text
stringlengths
0
61.5k
1. ಗೌರವಪೂರ್ಣವಾಗಿ ತೇರ್ಗಡೆಯಾಗಲು ಶಿಕ್ಷೆಗಳಿಂದ ಮುಕ್ತರಾಗುವ ಪುರುಷಾರ್ಥ ಮಾಡಬೇಕಾಗಿದೆ. ನೆನಪಿನಲ್ಲಿರುವುದರಿಂದಲೇ ಸ್ಕಾಲರ್ಶಿಪ್ ತೆಗೆದುಕೊಳ್ಳಲು ಅಧಿಕಾರಿಗಳಾಗುವಿರಿ.
2. ಸತ್ಯ-ಸತ್ಯ ಪಾಂಡವರಾಗಿ ಎಲ್ಲರಿಗೆ ಆತ್ಮಿಕ ಯಾತ್ರೆಯನ್ನು ಮಾಡಿಸಬೇಕಾಗಿದೆ. ಯಾವುದೇ ಪ್ರಕಾರದ ಹಿಂಸೆ ಮಾಡಬಾರದು.
ಓಂ ಶಾಂತಿ. ಮಕ್ಕಳು ಇದನ್ನು ತಿಳಿದುಕೊಂಡಿದ್ದೀರಿ - ಗಾಡ್ ಈಜ್ ಒನ್. ಭಗವಂತನು ಒಬ್ಬರೇ ಆಗಿದ್ದಾರೆ. ಎಲ್ಲಾ ಆತ್ಮರ ಪಿತನು ಒಬ್ಬರೇ ಆಗಿದ್ದಾರೆ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಸೃಷ್ಟಿಯ ರಚಯಿತನೂ ಒಬ್ಬರೇ ಆಗಿದ್ದಾರೆ, ಅನೇಕರಾಗಿರಲು ಸಾಧ್ಯವಿಲ್ಲ. ಈ ಸಿದ್ಧಾಂತದನುಸಾರ ಮನುಷ್ಯರು ತಮ್ಮನ್ನು ಭಗವಂತನೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವೀಗ ಈಶ್ವರೀಯ ಸೇವೆಗೆ ನಿಮಿತ್ತರಾಗಿದ್ದೀರಿ, ಈಶ್ವರನು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ, ಅದಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ. ಅದಕ್ಕಾಗಿ ನೀವು ಯೋಗ್ಯರಾಗುತ್ತಿದ್ದೀರಿ. ಸತ್ಯಯುಗದಲ್ಲಿ ಯಾರೂ ಪತಿತರಿರುವುದಿಲ್ಲ. ನೀವೀಗ ಪಾವನರಾಗುತ್ತಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ಪತಿತ-ಪಾವನನಾಗಿದ್ದೇನೆ, ಮತ್ತು ನೀವು ಮಕ್ಕಳಿಗೆ ಶ್ರೇಷ್ಠ ಮತವನ್ನು ಕೊಡುತ್ತೇನೆ - ನಿರಾಕಾರ ತಂದೆಯಾದ ನನ್ನನ್ನು ನೆನಪು ಮಾಡುವುದರಿಂದ ನೀವು ಪತಿತ, ತಮೋಪ್ರಧಾನರಿಂದ ಪಾವನ ಸತೋಪ್ರಧಾನರಾಗಿ ಬಿಡುತ್ತೀರಿ. ನೆನಪು ಎಂಬ ಯೋಗಾಗ್ನಿಯಿಂದ ನಿಮ್ಮ ಪಾಪಗಳು ನಾಶವಾಗುತ್ತವೆ. ಸಾಧು ಮೊದಲಾದವರು ಈಶ್ವರನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಒಂದು ಕಡೆ ಅವರು ಒಬ್ಬರೇ ಆಗಿದ್ದಾರೆಂದು ಹೇಳುತ್ತಾರೆ. ಇಲ್ಲಂತೂ ಅನೇಕರು ತನ್ನನ್ನೇ ಭಗವಂತನೆಂದು ತಿಳಿದುಕೊಳ್ಳುತ್ತಾರೆ. ಶ್ರೀ ಶ್ರೀ 108 ಎಂದೂ ಕರೆಸಿಕೊಳ್ಳುತ್ತಾರೆ. ವಾಸ್ತವದಲ್ಲಿ ಜಗತ್ತಿನ ಗುರು ಒಬ್ಬರೇ ಆಗಿದ್ದಾರೆ. ಇಡೀ ಜಗತ್ತನ್ನು ಪಾವನ ಮಾಡುವವರು ಒಬ್ಬರೇ ಪರಮಾತ್ಮ ಇಡೀ ಪ್ರಪಂಚವನ್ನು ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ, ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ. ಮನುಷ್ಯರಿಗೆ ಇದನ್ನು ಹೇಳಲು ಸಾಧ್ಯವಿಲ್ಲ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಪತಿತ ಪ್ರಪಂಚವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಪಾವನ ಪ್ರಪಂಚದಲ್ಲಿ ಯಥಾ ರಾಜ-ರಾಣಿ ತಥಾ ಪ್ರಜಾ ಆಗಿರುತ್ತಾರೆ. ಸತ್ಯಯುಗದಲ್ಲಿ ಪೂಜ್ಯ ಮಹಾರಾಜ, ಮಹಾರಾಣಿಯರಾಗಿರುತ್ತೀರಿ ನಂತರ ಭಕ್ತಿಮಾರ್ಗದಲ್ಲಿ ಪೂಜಾರಿಗಳಾಗಿ ಬಿಡುತ್ತೀರಿ. ಸತ್ಯಯುಗದಲ್ಲಿ ಯಾರು ಮಹಾರಾಜ, ಯಾರು ಮಹಾರಾಣಿಯಿದ್ದರೋ ಅವರಲ್ಲಿ ಎರಡು ಕಲೆಗಳು ಕಡಿಮೆಯಾದಾಗ ಕೇವಲ ರಾಜ-ರಾಣಿಯೆಂದು ಹೇಳಲಾಗುತ್ತದೆ. ಇವು ಬಹಳ ವಿಸ್ತಾರದ ಮಾತುಗಳಾಗಿವೆ. ಇಲ್ಲವಾದರೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂಬ ಗಾಯನವಿದೆ. ತಂದೆಯು ತಿಳಿಸುತ್ತಾರೆ - ಭಲೆ ಗೃಹಸ್ಥ ವ್ಯವಹಾರದಲ್ಲಿರಿ ಆದರೆ ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿರಿ. ಈಗ ವಾನಪ್ರಸ್ಥ ಸ್ಥಿತಿಯಾಗಿದೆ. ವಾನಪ್ರಸ್ಥ ಅಥವಾ ಶಾಂತಿಧಾಮ ಒಂದೇ ಮಾತಾಗಿದೆ. ಅಲ್ಲಿ ಆತ್ಮರು ಬ್ರಹ್ಮ್ ತತ್ವದಲ್ಲಿರುತ್ತಾರೆ ಅದಕ್ಕೆ ಬ್ರಹ್ಮಾಂಡವೆಂದು ಹೇಳುತ್ತಾರೆ. ವಾಸ್ತವದಲ್ಲಿ ಆತ್ಮಗಳು ಅಂಡಾಕಾರದಲ್ಲಿ ಇರುವುದಿಲ್ಲ ಆತ್ಮವೂ ಬಿಂದುವಾಗಿದೆ. ತಂದೆಯು ತಿಳಿಸುತ್ತಾರೆ - ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲಾ ಈ ಡ್ರಾಮಾದಲ್ಲಿ ಪಾತ್ರಧಾರಿಗಳು. ಹೇಗೆ ಪಾತ್ರಧಾರಿಗಳು ನಾಟಕದಲ್ಲಿ ವೇಷವನ್ನು ಬದಲಾಯಿಸುತ್ತಾರೆ, ಭಿನ್ನ-ಭಿನ್ನ ಪಾತ್ರವನ್ನಭಿನಯಿಸುತ್ತಾರೆ, ಹಾಗೆಯೇ ಇದೂ ಸಹ ಬೇಹದ್ದಿನ ನಾಟಕವಾಗಿದೆ. ಆತ್ಮರು ಸೃಷ್ಟಿಯಲ್ಲಿ ಪಂಚ ತತ್ವಗಳಿಂದಾದ ಶರೀರದಲ್ಲಿ ಪ್ರವೇಶ ಮಾಡಿ ಆದಿಯಿಂದ ಹಿಡಿದು ಪಾತ್ರವನ್ನಭಿನಯಿಸುತ್ತಾರೆ. ಪರಮಾತ್ಮ ಮತ್ತು ಬ್ರಹ್ಮಾ, ವಿಷ್ಣು, ಶಂಕರ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. ನಾಟಕದಲ್ಲಿ ಪಾತ್ರವನ್ನಭಿನಯಿಸಲು ಭಿನ್ನ-ಭಿನ್ನ ಪ್ರಕಾರದ ಉಡುಪು ಸಿಗುತ್ತದೆಯಲ್ಲವೆ. ಮನೆಯಲ್ಲಿ ಆತ್ಮರೆಲ್ಲರೂ ಅಶರೀರಿಯಾಗಿರುತ್ತಾರೆ. ನಂತರ ಯಾವಾಗ ಪಂಚ ತತ್ವಗಳ ಶರೀರವು ತಯಾರಾಗುತ್ತದೆ ಆಗ ಅದರಲ್ಲಿ ಆತ್ಮವು ಪ್ರವೇಶ ಮಾಡುತ್ತದೆ. 84 ಶರೀರಗಳು ಸಿಗುತ್ತವೆ. ಅದಕ್ಕೆ ಹೆಸರುಗಳೂ ಅಷ್ಟೇ ಬದಲಾಗುತ್ತದೆ. ಆತ್ಮದ ಹೆಸರು ಒಂದೇ ಆಗಿದೆ. ಶಿವ ತಂದೆಯಂತೂ ಪತಿತ-ಪಾವನನಾಗಿದ್ದಾರೆ, ಅವರಿಗೆ ತಮ್ಮದೇ ಆದ ಶರೀರವಿಲ್ಲ. ಶರೀರದ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ನನ್ನ ಹೆಸರಾಗಿದೆ - ಶಿವ. ಭಲೆ ಹಳೆಯ ಶರೀರದಲ್ಲಿ ಬರುತ್ತೇನೆ ಆದರೆ ಇವರ ಶರೀರದ ಹೆಸರೇ ಬೇರೆಯಾಗಿದೆ. ಅವರಿಗೆ ವ್ಯಕ್ತ ಹೆಸರಿದೆ ನಾನು ಪ್ರವೇಶ ಮಾಡಿದ ನಂತರ ಅವ್ಯಕ್ತ ಹೆಸರು ಬಂದಿದೆ. ಹೇಗೆ ಒಂದು ಧರ್ಮದವರು ಇನ್ನೊಂದು ಧರ್ಮದಲ್ಲಿ ಹೋದರೆ ಹೆಸರು ಬದಲಾಗುತ್ತದೆ. ನೀವೂ ಸಹ ಶೂದ್ರ ಧರ್ಮದಿಂದ ಬ್ರಾಹ್ಮಣ ಧರ್ಮದಲ್ಲಿ ಬಂದಿದ್ದೀರಿ ಆದ್ದರಿಂದ ಹೆಸರು ಬದಲಾಗಿದೆ. ಬರೆಯುತ್ತೀರಿ ಶಿವಬಾಬಾ ಥ್ರೂ ಕೇರ್ ಆಫ್ ಬ್ರಹ್ಮಾ. ಶಿವ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಅವರಿಗೆ ಹೆಸರು ಬದಲಾಗುವುದಿಲ್ಲ. ಶಿವ ತಂದೆಯು ಬ್ರಹ್ಮಾರವರ ಮೂಲಕ ಆದಿ ಸನಾತನ ದೇವಿ ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಿದ್ದಾರೆ. ಯಾವ ಧರ್ಮವು ಈಗ ಪ್ರಾಯಲೋಪವಾಗಿ ಬಿಟ್ಟಿದೆ. ಯಾರು ಪಾವನ ಪೂಜ್ಯರಾಗಿದ್ದರೋ ಅವರೇ ಪತಿತ ಪೂಜಾರಿಗಳಾಗಿದ್ದಾರೆ. 84 ಜನ್ಮಗಳನ್ನು ಪೂರ್ಣ ಮಾಡಿದ್ದಾರೆ. ಈಗ ಪುನಃ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಪರಮಪಿತ ಪರಮಾತ್ಮನು ಬಂದು ಬ್ರಹ್ಮಾರವರ ಮೂಲಕ ಪುನಃ ಸ್ಥಾಪನೆ ಮಾಡಿಸುತ್ತಾರೆಂದು ಗಾಯನವಿದೆ ಅಂದಮೇಲೆ ಬ್ರಾಹ್ಮಣರು ಅವಶ್ಯವಾಗಿ ಬೇಕು. ಬ್ರಹ್ಮಾ ಮತ್ತು ಬ್ರಾಹ್ಮಣರು ಎಲ್ಲಿಂದ ಬಂದರು? ಶಿವ ತಂದೆಯು ಬಂದು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ನೀವು ನನ್ನವರಾಗಿದ್ದೀರಿ ಎಂದು ಹೇಳುತ್ತಾರೆ. ಶಿವ ತಂದೆಯ ಮಕ್ಕಳಂತೂ ಆಗಿಯೇ ಇದ್ದೀರಿ ಮತ್ತು ಬ್ರಹ್ಮಾರವರ ಮೂಲಕ ನೋಡಿದಾಗ ನೀವು ಮೊಮ್ಮಕ್ಕಳಾಗುತ್ತೀರಿ. ಎಲ್ಲಾ ಪ್ರಜೆಗಳಿಗೆ ಪಿತನು ಒಬ್ಬರೇ ಆಗಿದ್ದಾರೆ. ಎಷ್ಟೊಂದು ಮಂದಿ ಮಕ್ಕಳು ಕುಮಾರ-ಕುಮಾರಿಯರಾಗಿದ್ದಾರೆ. ಅವರನ್ನು ಶಿವ ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ಮನುಷ್ಯರಿಗೆ ಇದು ಗೊತ್ತಿಲ್ಲ. ತಂದೆಯು ಬಂದು ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ ಅಂದರೆ ಹೊಸದಾಗಿ ಬರುತ್ತಿರುತ್ತಾರೆ ಎಂದಲ್ಲ. ಹೇಗೆ ಪ್ರಳಯವಾಯಿತು ನಂತರ ಸಾಗರದಲ್ಲಿ ಎಲೆಯ ಮೇಲೆ ಕೃಷ್ಣನು ತೇಲಿ ಬಂದನೆಂದು ತೋರಿಸುತ್ತಾರೆ, ಆದರೆ ಇವೆಲ್ಲವೂ ಕಲ್ಪನೆಯ ಕಥೆಗಳಾಗಿವೆ. ಈ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಿರುತ್ತದೆ. ಆತ್ಮವು ಅಮರವಾಗಿದೆ, ಅದರಲ್ಲಿ ಪಾತ್ರವೂ ಅಮರವಾಗಿದೆ. ಪಾತ್ರವೆಂದೂ ಸವೆಯುವುದಿಲ್ಲ. ಸತ್ಯಯುಗದಲ್ಲಿ ಅದೇ ಲಕ್ಷ್ಮಿ - ನಾರಾಯಣರ ಸೂರ್ಯವಂಶಿ ರಾಜಧಾನಿಯು ನಡೆದು ಬರುತ್ತದೆ, ಅದೆಂದೂ ಬದಲಾಗುವುದಿಲ್ಲ. ಪ್ರಪಂಚವು ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತಿರುತ್ತದೆ. ಪ್ರತಿಯೊಬ್ಬರಿಗೆ ಅವಿನಾಶಿ ಪಾತ್ರವು ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ಭಕ್ತರು ಯಾವ-ಯಾವ ಭಾವನೆಯಿಂದ ಭಕ್ತಿ ಮಾಡುವರೋ ಅದರದನುಸಾರವೇ ಸಾಕ್ಷಾತ್ಕಾರ ಮಾಡಿಸುತ್ತೇನೆ. ಕೆಲವರಿಗೆ ಹನುಮಂತನ, ಕೆಲವರಿಗೆ ಗಣೇಶನ ಸಾಕ್ಷಾತ್ಕಾರವನ್ನು ಮಾಡಿಸುತ್ತೇನೆ. ಅವರ ಆ ಶುಭ ಭಾವನೆಯನ್ನು ಪೂರ್ಣಗೊಳಿಸುತ್ತೇನೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಭಗವಂತನು ಎಲ್ಲರಲ್ಲಿದ್ದಾರೆಂದು ಮನುಷ್ಯರು ತಿಳಿದು ಅವರನ್ನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಭಕ್ತಮಾಲೆಯೂ ಇದೆ. ಪುರುಷರಲ್ಲಿ ಶಿರೋಮಣಿ ನಾರದನೆಂದು ಗಾಯನವಿದೆ, ಸ್ತ್ರೀಯರಲ್ಲಿ ಮೀರಾ ಶಿರೋಮಣಿಯಾಗಿದ್ದಾಳೆ. ಭಕ್ತಮಾಲೆಯೇ ಬೇರೆ, ರುದ್ರ ಮಾಲೆಯೇ ಬೇರೆ, ಜ್ಞಾನದ ಮಾಲೆಯೇ ಬೇರೆಯಾಗಿದೆ. ಭಕ್ತರ ಮಾಲೆಯನ್ನೆಂದೂ ಪೂಜಿಸುವುದಿಲ್ಲ, ರುದ್ರ ಮಾಲೆಯನ್ನು ಪೂಜಿಸಲಾಗುತ್ತದೆ. ಮೇಲೆ ಹೂ, ನಂತರ ಜೋಡಿ ಮಣಿಗಳು.... ಅನಂತರ ನೀವು ಮಕ್ಕಳು ಯಾರು ರಾಜ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತೀರೋ ಅವರ ಸೂಚಕವಾಗಿ ಮಣಿಗಳ ಮಾಲೆಯಿದೆ. ರುದ್ರ ಮಾಲೆಯೇ ವಿಷ್ಣುವಿನ ಮಾಲೆಯಾಗಿದೆ. ಭಕ್ತರ ಮಾಲೆಗೆ ಕೇವಲ ಗಾಯನವಾಗುತ್ತದೆ. ಈ ರುದ್ರ ಮಾಲೆಯನ್ನು ಎಲ್ಲರೂ ತಿರುಗಿಸುತ್ತಾರೆ. ನೀವು ಭಕ್ತರಲ್ಲ, ಜ್ಞಾನಿಗಳಾಗಿದ್ದೀರಿ, ತಂದೆಯು ತಿಳಿಸುತ್ತಾರೆ - ನನಗೆ ಜ್ಞಾನಿ ಆತ್ಮಗಳೇ ಪ್ರಿಯರಾಗಿದ್ದಾರೆ. ತಂದೆಯೇ ಜ್ಞಾನ ಸಾಗರನಾಗಿದ್ದಾರೆ, ನೀವು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಿದ್ದಾರೆ. ನಿಮ್ಮ ಮಾಲೆಯು ಪೂಜೆ ಮಾಡಲ್ಪಡುತ್ತದೆ. 8 ರತ್ನಗಳಿಗೂ ಪೂಜೆಯಾಗುತ್ತದೆ. ಏಕೆಂದರೆ ಜ್ಞಾನಿ ಆತ್ಮಗಳಾಗಿರುವುದರಿಂದ ಅವರ ಪೂಜೆ ನಡೆಯುತ್ತದೆ. ನವ ರತ್ನಗಳ ಉಂಗುರವನ್ನು ಮಾಡಿಸಿ ಧರಿಸುತ್ತಾರೆ ಏಕೆಂದರೆ ಇವರು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ, ಪಾಸ್-ವಿತ್-ಆನರ್ ಆಗುತ್ತಾರೆ ಆದ್ದರಿಂದ ಅವರ ಗಾಯನವಿದೆ. 9ನೇ ಮಣಿಯಾಗಿ ಮಧ್ಯದಲ್ಲಿ ಶಿವ ತಂದೆಯನ್ನಿಡುತ್ತಾರೆ, ಅದಕ್ಕೆ ನವರತ್ನಗಳೆಂದು ಹೇಳುತ್ತಾರೆ. ಇದು ವಿವರವಾದ ಜ್ಞಾನವಾಗಿದೆ. ತಂದೆಯಂತೂ ಕೇವಲ ಇಷ್ಟನ್ನೇ ಹೇಳುತ್ತಾರೆ - ಮಕ್ಕಳೇ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಹೊರಟು ಹೋಗುವಿರಿ. ಪತಿತ ಆತ್ಮರು ಪಾವನ ಪ್ರಪಂಚದಲ್ಲಿ ಹೋಗಲು ಸಾಧ್ಯವಿಲ್ಲ, ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ. ದೇವತೆಗಳ ಶರೀರವಂತೂ ಪವಿತ್ರ, ನಿರ್ವಿಕಾರಿಯಾಗಿರುತ್ತದೆ. ಅವರು ಪೂಜ್ಯರಾಗಿದ್ದಾರೆ, ಯಥಾ ರಾಜ-ರಾಣಿ ತಥಾ ಪ್ರಜೆ. ಎಲ್ಲರೂ ಪೂಜ್ಯರಾಗಿರುತ್ತಾರೆ, ಇಲ್ಲಿ ಎಲ್ಲರೂ ಪೂಜಾರಿಗಳಾಗಿದ್ದಾರೆ. ಅಲ್ಲಿ ದುಃಖದ ಮಾತಿರುವುದಿಲ್ಲ ಅದಕ್ಕೆ ಸ್ವರ್ಗ, ಸುಖಧಾಮವೆಂದು ಹೇಳಲಾಗುತ್ತದೆ. ಅಲ್ಲಿ ಸುಖ, ಶಾಂತಿ, ಸಂಪತ್ತು ಎಲ್ಲವೂ ಇತ್ತು ಈಗಂತೂ ಏನೂ ಇಲ್ಲ, ಆದ್ದರಿಂದ ಇದಕ್ಕೆ ನರಕ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತೇವೆ. ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಈಗ ದುಃಖಧಾಮವಾಗಿದೆ ನಂತರ ನಾವು ಶಾಂತಿಧಾಮಕ್ಕೆ ಹೋಗಿ ಅಲ್ಲಿಂದ ಸುಖಧಾಮದಲ್ಲಿ ಬರುತ್ತೇವೆ. ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡಲು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಪುರುಷಾರ್ಥ ಮಾಡಿಸುತ್ತಿದ್ದಾರೆ. ನಿಮ್ಮದು ಇದು ಸಂಗಮಯುಗವಾಗಿದೆ. ತಂದೆಯು ತಿಳಿಸುತ್ತಾರೆ, ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಯುಗ ಯುಗಗಳಲ್ಲಿ ಅಲ್ಲ. ನಾನು ಸಂಗಮಯುಗದಲ್ಲಿ ಒಂದೇ ಬಾರಿ ಸೃಷ್ಟಿಯನ್ನು ಪರಿವರ್ತನೆ ಮಾಡಲು ಬರುತ್ತೇನೆ. ಸತ್ಯಯುಗವಿತ್ತು, ಈಗ ಕಲಿಯುಗವಾಗಿದೆ, ಪುನಃ ಸತ್ಯಯುಗ ಬರಬೇಕು. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ. ಎಲ್ಲರ ಕಲ್ಯಾಣವಾಗಬೇಕಾಗಿದೆ. ಎಲ್ಲರನ್ನೂ ರಾವಣನ ಬಂಧನದಿಂದ ಬಿಡಿಸುತ್ತಾರೆ. ಆದ್ದರಿಂದ ಅವರಿಗೆ ದುಃಖಹರ್ತ, ಸುಖಕರ್ತನೆಂದು ಹೇಳಲಾಗುತ್ತದೆ. ಇಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ ನೀವು ಸುಖಧಾಮದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತೀರಿ. ಸುಖಧಾಮದಲ್ಲಿ ಹೋಗಬೇಕೆಂದರೆ ಮೊದಲು ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ನೀವು -ಪಾತ್ರವನ್ನಭಿನಯಿಸುತ್ತಾ - ಅಭಿನಯಿಸುತ್ತಾ 5000 ವರ್ಷಗಳಾಗಿದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮ ಮನೆಯನ್ನು ಬಿಟ್ಟು 5000 ವರ್ಷಗಳಾಯಿತು, ಅದರಲ್ಲಿ ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ನಿಮ್ಮದು ಅಂತಿಮ ಜನ್ಮವಾಗಿದೆ, ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಎಲ್ಲರೂ ಹೋಗಬೇಕಾಗಿದೆ, ಜ್ಞಾನ ಸಾಗರ ಅಥವಾ ರುದ್ರನೆಂದೂ ಗಾಯನವಿದೆ. ಇದು ಶಿವ ಜ್ಞಾನ ಯಜ್ಞವಾಗಿದೆ, ಪತಿತ-ಪಾವನನು ಶಿವನಾಗಿದ್ದಾರೆ, ಪರಮಾತ್ಮನೂ ಶಿವನಾಗಿದ್ದಾರೆ. ರುದ್ರ ಎಂಬ ಹೆಸರನ್ನು ಭಕ್ತರು ಇಟ್ಟಿದ್ದಾರೆ, ಆದರೆ ಅವರ ಮೂಲ ಹೆಸರು ಒಂದೇ ಆಗಿದೆ - ಶಿವ. ಶಿವ ತಂದೆಯು ಪ್ರಜಾಪಿತ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ. ಬ್ರಹ್ಮನು ಒಬ್ಬರೇ ಆಗಿದ್ದಾರೆ. ಇವರು ಪತಿತ, ಮತ್ತೆ ಇವರೇ ಪಾವನ ಬ್ರಹ್ಮನಾಗುತ್ತಾರೆ ಆಗ ಫರಿಶ್ತೆಯಾಗುತ್ತಾರೆ. ಸೂಕ್ಷ್ಮ ವತನದಲ್ಲಿ ಯಾವ ಬ್ರಹ್ಮನನ್ನು ತೋರಿಸುತ್ತಾರೆಯೋ ಅವರು ಬೇರೆ ಅಲ್ಲ, ಬ್ರಹ್ಮನು ಒಬ್ಬರೇ ಆಗಿದ್ದಾರೆ, ಇಲ್ಲಿದ್ದಾಗ ವ್ಯಕ್ತ ಬ್ರಹ್ಮಾ, ಫರಿಶ್ತೆಯಾದ ಮೇಲೆ ಅವ್ಯಕ್ತ ಬ್ರಹ್ಮಾ, ಇವರು ಸಂಪೂರ್ಣ ಪಾವನರಾಗಿ ಬಿಟ್ಟರೆ ಸೂಕ್ಷ ವತನದಲ್ಲಿ ನೋಡುತ್ತೀರಿ, ಅಲ್ಲಿ ಮೂಳೆ-ಮಾಂಸ ಏನೂ ಇರುವುದಿಲ್ಲ. ಹೇಗೆ ತಂದೆಯು ತಿಳಿಸಿದ್ದರು, ಯಾವ ಆತ್ಮಕ್ಕೆ ಶರೀರ ಸಿಗುವುದಿಲ್ಲವೋ ಅಲ್ಲಿಯವರೆಗೆ ಅಲೆದಾಡುತ್ತಿರುತ್ತದೆ. ಅದಕ್ಕೆ ಭೂತವೆಂದು ಹೇಳುತ್ತಾರೆ. ಶರೀರವು ಸಿಗುವವರೆಗೆ ಅಲೆದಾಡುತ್ತದೆ. ಕೆಲವು ಆತ್ಮಗಳು ಒಳ್ಳೆಯವರಿರುತ್ತಾರೆ, ಕೆಲವರು ಕೆಟ್ಟವರಿರುತ್ತಾರೆ. ತಂದೆಯು ಪ್ರತಿಯೊಂದು ಮಾತಿನ ತಿಳುವಳಿಕೆ ನೀಡುತ್ತಾರೆ. ಅವರು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ತಿಳಿಸುತ್ತಾರಲ್ಲವೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿದರೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಆಸ್ತಿಯು ಸಿಗುವುದು. ಇದು ಎಷ್ಟು ಸಹಜವಾಗಿದೆ ! ಹೆಸರೇ ಆಗಿದೆ - ಸಹಜ ರಾಜಯೋಗ. ಭಾರತದ ಯೋಗವು ಇದಾಗಿತ್ತು ಎಂದು ಅವರು ತಿಳಿಯುತ್ತಾರೆ ಆದರೆ ಆ ಸನ್ಯಾಸಿಗಳು ಮಾಡುವುದು ಹಠಯೋಗವಾಗಿದೆ. ಈ ರಾಜಯೋಗವು ಬಹಳ ಸಹಜವಾಗಿದೆ. ಯೋಗವೆಂದರೆ ನೆನಪು. ಅವರದು ಹಠಯೋಗವಾಗಿದೆ. ಇದು ಸಹಜ ಯೋಗವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಬಹಳ ಸಹಜ ರೀತಿಯಲ್ಲಿ ನೆನಪು ಮಾಡಿ. ಯಾವುದೇ ಲಾಕೆಟ್ ಇತ್ಯಾದಿಗಳನ್ನು ಧರಿಸುವ ಅವಶ್ಯಕತೆಯೂ ಇಲ್ಲ. ನೀವಂತೂ ತಂದೆಯ ಮಕ್ಕಳಾಗಿದ್ದೀರಿ. ತಂದೆಯನ್ನು ಕೇವಲ ನೆನಪು ಮಾಡಿ. ನೀವಿಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಈಗ ಎಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಮತ್ತೆ ಅದೇ ಪಾತ್ರವನ್ನಭಿನಯಿಸಬೇಕಾಗಿದೆ. ಭಾರತವಾಸಿಗಳೇ ಸೂರ್ಯವಂಶಿ, ಚಂದ್ರವಂಶಿ, ವೈಶ್ಯವಂಶಿ, ಶೂದ್ರವಂಶಿಯರಾಗುತ್ತಾರೆ. ಈ ಮಧ್ಯದಲ್ಲಿ ಅನ್ಯ ಧರ್ಮದವರೂ ಬರುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಮತ್ತೆ ನೀವೇ ಮೊಟ್ಟ ಮೊದಲಿಗೆ ಬರಬೇಕಾಗಿದೆ. ನೀವು ಸತ್ಯಯುಗದಲ್ಲಿ ಬಂದಾಗ ಮತ್ತೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಅನ್ಯ ಧರ್ಮದವರ ವರ್ಣಗಳಿಲ್ಲ, ಭಾರತದ್ದೇ ವರ್ಣಗಳಿವೆ. ನೀವೇ ಸೂರ್ಯವಂಶಿ, ಚಂದ್ರವಂಶಿಯರಾಗಿದ್ದೀರಿ, ಈಗ ಬ್ರಾಹ್ಮಣ ವರ್ಣದಲ್ಲಿದ್ದೀರಿ. ಬ್ರಹ್ಮಾವಂಶಿ ಬ್ರಾಹ್ಮಣರಾಗಿದ್ದೀರಿ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಯಾರ ಬುದ್ಧಿಯಲ್ಲಿ ಧಾರಣೆಯಾಗುವುದಿಲ್ಲವೋ ಅವರಿಗೆ ಕೇವಲ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಹೇಗೆ ತಂದೆಯನ್ನು ಅರಿತುಕೊಳ್ಳುವುದರಿಂದ ಮಕ್ಕಳಿಗೆ ಇದು ತಂದೆಯ ಆಸ್ತಿಯೆಂಬುದು ಅರ್ಥವಾಗಿ ಬಿಡುತ್ತದೆ. ಮಗಳಿಗಂತೂ ಆಸ್ತಿಯು ಸಿಗುವುದಿಲ್ಲ, ಇಲ್ಲಿ ನೀವು ಶಿವ ತಂದೆಯ ಮಕ್ಕಳಾಗಿದ್ದೀರಿ. ಎಲ್ಲರಿಗೂ ಅಧಿಕಾರವಿದೆ. ಸ್ತ್ರೀ, ಪುರುಷರೆಲ್ಲರಿಗೂ ಹಕ್ಕಿದೆ. ಎಲ್ಲರಿಗೂ ಕಲಿಸಬೇಕಾಗಿದೆ – ಶಿವ ತಂದೆಯನ್ನು ನೆನಪು ಮಾಡಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟೇ ವಿಕರ್ಮಗಳು ವಿನಾಶವಾಗುತ್ತವೆ, ಪತಿತರಿಂದ ಪಾವನರಾಗುತ್ತೀರಿ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದು ಬಿಡುವುದು ಹೇಗೆ? ತಂದೆಯು ತಿಳಿಸುತ್ತಾರೆ - ಯೋಗದಿಂದಲೇ ನಿಮ್ಮಲ್ಲಿರುವ ತುಕ್ಕು ಸಮಾಪ್ತಿಯಾಗುತ್ತದೆ. ಈ ಪತಿತ ಶರೀರವನ್ನಂತೂ ಇಲ್ಲಿಯೇ ಬಿಡಬೇಕಾಗಿದೆ. ಆತ್ಮವು ಪವಿತ್ರವಾಗಿ ಬಿಡುತ್ತದೆ. ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಹೋಗುತ್ತಾರೆ. ಬುದ್ದಿಯೂ ಹೇಳುತ್ತದೆ - ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಈ ವಿನಾಶದಲ್ಲಿ ಎಷ್ಟೊಂದು ಮಂದಿ ಸಾವನ್ನಪ್ಪುತ್ತಾರೆ, ಕೆಲವರೇ ಉಳಿಯುತ್ತಾರೆ. ರಾಜರಂತೂ ಕೆಲವರೇ ಇರುತ್ತಾರೆ. ಬಾಕಿ 9 ಲಕ್ಷ ಮಂದಿ ಪ್ರಜೆಗಳು ಸತ್ಯಯುಗದಲ್ಲಿರುತ್ತಾರೆ. ಇದರಮೇಲೆ ಗೀತೆಯೂ ಇದೆಯಲ್ಲವೆ - 9 ಲಕ್ಷ ನಕ್ಷತ್ರಗಳು...... ಅಂದರೆ ಪ್ರಜೆಗಳು. ಗಿಡವು ಮೊದಲು ಚಿಕ್ಕದಾಗಿರುತ್ತದೆ ನಂತರ ವೃದ್ಧಿ ಹೊಂದುತ್ತದೆ. ಈಗಂತೂ ಎಷ್ಟೊಂದು ಮಂದಿ ಆತ್ಮರಿದ್ದಾರೆ, ತಂದೆಯು ಎಲ್ಲರಿಗೆ ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯೋಗಾಗ್ನಿಯಿಂದ ವಿಕರ್ಮಗಳ ತುಕ್ಕನ್ನು ಭಸ್ಮ ಮಾಡಿಕೊಂಡು ಪಾವನರಾಗಬೇಕಾಗಿದೆ. ಈಗ ವಾನಪ್ರಸ್ಥ ಸ್ಥಿತಿಯಾಗಿದೆ, ಆದ್ದರಿಂದ ಹಿಂತಿರುಗಿ ಮನೆಗೆ ಹೋಗಲು ಸಂಪೂರ್ಣ ಸತೋಪ್ರಧಾನರಾಗಬೇಕಾಗಿದೆ.
2. ಈ ಕಲ್ಯಾಣಕಾರಿ ಯುಗದಲ್ಲಿ ತಂದೆಯ ಸಮಾನ ದುಃಖಹರ್ತ, ಸುಖಕರ್ತರಾಗಬೇಕಾಗಿದೆ.
ಸಹಯೊಗದ ಸಾಗರನಿಂದ ಪದಮಾಗುಣ ಸಹಯೋಗವನ್ನು ಪಡೆದುಕೊಳ್ಳುವ ವಿಧಿ
ಇಂದು ಬಾಪ್ದಾದಾ ತನ್ನ ನಾಲ್ಕೂ ಕಡೆಯ ಸಾಹಸವಂತ ಮಕ್ಕಳನ್ನು ನೋಡುತ್ತಿದ್ದಾರೆ. ಆದಿಯಿಂದ ಇಲ್ಲಿಯ ತನಕ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಧೈರ್ಯದ ಆಧಾರದಿಂದ ಬಾಪ್ದಾದಾರವರ ಸಹಯೋಗಕ್ಕೆ ಪಾತ್ರರಾಗಿದ್ದಾರೆ ಹಾಗೂ 'ಧೈರ್ಯ ಮಕ್ಕಳದು, ಸಹಯೋಗ ತಂದೆಯದು' ಈ ವರದಾನದ ಪ್ರಮಾಣ ಪುರುಷಾರ್ಥದಲ್ಲಿ ನಂಬರ್ವಾರ್ ಆಗಿ ಮುಂದುವರೆಯುತ್ತಿದ್ದಾರೆ. ಮಕ್ಕಳ ಒಂದು ಹೆಜ್ಜೆಯ ಧೈರ್ಯ ಹಾಗೂ ತಂದೆಯ ಪದಮದಷ್ಟು ಹೆಜ್ಜೆಗಳ ಸಹಯೋಗ ಪ್ರತಿಯೊಬ್ಬ ಮಗುವಿಗೆ ಪ್ರಾಪ್ತಿಯಾಗಿದೆ ಏಕೆಂದರೆ ಇದು ಬಾಪ್ ದಾದಾರವರ ಪ್ರತಿಜ್ಞೆಯೆಂದಾದರೂ ಹೇಳಿ, ಆಸ್ತಿಯೆಂದಾದರೂ ಹೇಳಿ, ಇದು ಎಲ್ಲಾ ಮಕ್ಕಳ ಪ್ರತಿ ಇದೆ ಹಾಗೂ ಈ ಶ್ರೇಷ್ಠ ಸಹಜ ಪ್ರಾಪ್ತಿಗಳೇ 63 ಜನ್ಮಗಳ ನಿರ್ಬಲ ಆತ್ಮಗಳು ಶಕ್ತಿಶಾಲಿಯಾಗಿ ಮುಂದುವರೆಯುತ್ತಿದ್ದಾರೆ. ಬ್ರಾಹ್ಮಣ ಜನ್ಮವು ಪಡೆದಾಕ್ಷಣವೇ ಮೊದಲನೆಯದಾಗಿ ಯಾವ ಧೈರ್ಯ ಧಾರಣೆಯಾಗುವುದಾಗಿದೆ! ಮೊದಲ ಧೈರ್ಯ - ಪವಿತ್ರತೆಯ ವಿಶೇಷ ಧಾರಣೆಯಿಂದ ಅಸಂಭವವನ್ನು ಸಂಭವ ಮಾಡಿ ತೋರಿಸಿದಿರಿ. ಧೈರ್ಯದಿಂದ ನಾವು ಪವಿತ್ರರಾಗಲೇಬೇಕೆಂದು ಧೃಡ ಸಂಕಲ್ಪ ಮಾಡಿದಿರಿ ಹಾಗೂ ತಂದೆಯು ಪದಮಾಗುಣ ಸಹಯೋಗ ಕೊಟ್ಟಿದ್ದಾರೆ. ನೀವು ಆತ್ಮಗಳೇ ಅನಾದಿ, ಆದಿಯಲ್ಲಿ ಪವಿತ್ರರಾಗಿದ್ದಿರಿ. ಅನೇಕ ಬಾರಿ ಪವಿತ್ರರಾಗಿದ್ದೀರಿ ಹಾಗೂ ಆಗುತ್ತಿರುತ್ತೀರಿ. ಇದೇನೂ ಹೊಸ ಮಾತಲ್ಲ. ಅನೇಕ ಬಾರಿಯ ಶ್ರೇಷ್ಠ ಸ್ಥಿತಿಯನ್ನು ಮತ್ತೆ ಕೇವಲ ಪುನರಾವರ್ತಿಸುತ್ತಿದ್ದೀರಿ. ಈಗಲೂ ನೀವು ಪವಿತ್ರ ಆತ್ಮಗಳ ಭಕ್ತರು ನಿಮ್ಮ ಜಡ ಮೂರ್ತಿಗಳ ಮುಂದೆ ಪವಿತ್ರತೆಯ ಶಕ್ತಿಯನ್ನು ಬೇಡುತ್ತಿರುತ್ತಾರೆ. ನಿಮ್ಮ ಪವಿತ್ರತೆಯ ಗೀತೆಯನ್ನು ಹಾಡುತ್ತಾರೆ ಜೊತೆ ಜೊತೆಗೆ ನಿಮ್ಮ ಪವಿತ್ರತೆಯ ಗುರುತು ಪ್ರತಿಯೊಬ್ಬ ಪೂಜ್ಯಾತ್ಮನ ಮೇಲೆ ಪ್ರಕಾಶದ ಕಿರೀಟವಿದೆ. ಇಂತಹ ಸ್ಮೃತಿಯ ಮುಖಾಂತರ ಸಮರ್ಥ ಮಾಡಿದ್ದಾರೆಂದರೆ ತಂದೆಯ ಸಹಯೋಗದಿಂದ ತಾವು ನಿರ್ಬಲರಿಂದ ಬಲವಂತರಾಗಿದ್ದೀರಿ. ಇಷ್ಟು ಶಕ್ತಿಶಾಲಿಗಳಾಗಿದ್ದೀರಿ, ಏನೇ ಆಗಲಿ ನಾವು ವಿಶ್ವವನ್ನು ಪಾವನವನ್ನಾಗಿ ಮಾಡಿಯೇ ತೋರಿಸುತ್ತೇವೆಂದು ಚಾಲೆಂಜ್ ಮಾಡಲು ನಿಮಿತ್ತರಾಗಿದ್ದೀರಲ್ಲವೆ. ನಿರ್ಬಲರಿಂದ ಇಷ್ಟು ಶಕ್ತಿಶಾಲಿಗಳಾಗಿದ್ದೀರಿ ಯಾರು ದ್ವಾಪರ ಯುಗದ ಹೆಸರುವಾಸಿ ಋಷಿ-ಮುನಿ, ಮಹಾತ್ಮರು ಯಾವ ಮಾತನ್ನು ಖಂಡಿತವೆಂದು ಹೇಳಿದ್ದರು, ಪ್ರವೃತ್ತಿಯಲ್ಲಿದ್ದು ಪವಿತ್ರರಾಗುವುದು ಅಸಂಭವವೆಂದು ಹಾಗೂ ಸ್ವಯಂ ಇತ್ತೀಚಿನ ಸಮಯದ ಪ್ರಮಾಣ ತಮ್ಮ ಸಲುವಾಗಿ ಕಠಿಣವೆಂದು ತಿಳಿದಿದ್ದರು ಆದರೆ ನೀವು ಅವರ ಮುಂದೆ ಸ್ವಾಭಾವಿಕ ರೂಪದಲ್ಲಿ ವರ್ಣನೆ ಮಾಡುತ್ತೀರಿ - ಇದು ನಾವು ಆತ್ಮಗಳಿಗೆ ಅನಾದಿ, ಆದಿ ವಿಧಿಸ್ವರೂಪವಾಗಿದೆ. ಇದರಲ್ಲಿ ಕಷ್ಟವೇನಿದೆ? ಇದಕ್ಕೆ ಧೈರ್ಯ ಮಕ್ಕಳದು, ಸಹಯೋಗ ತಂದೆಯದು ಎಂದು ಹೇಳಲಾಗುತ್ತದೆ. ಅಸಂಭವವನ್ನು ಸಹಜ ಅನುಭವ ಮಾಡಿದ್ದೀರಿ ಹಾಗೂ ಮಾಡುತ್ತಿದ್ದೀರಿ. ಅವರು ಎಷ್ಟು ಅಸಂಭವವೆಂದು ಹೇಳಿದ್ದರೋ ಅಷ್ಟೇ ನಿಮಗೆ ಸಹಜವಾಗಿದೆ. ತಂದೆಯು ಜ್ಞಾನದ ಶಕ್ತಿಯ ಸಹಯೋಗ ಹಾಗೂ ನೆನಪಿನ ಮುಖಾಂತರ ಆತ್ಮಕ್ಕೆ ಪಾವನ ಸ್ಥಿತಿಯ ಅನುಭೂತಿಯ ಶಕ್ತಿಯ ಸಹಯೋಗದಿಂದ ಪರಿವರ್ತನೆ ಮಾಡಿದ್ದಾರೆ. ಇದು ಮೊದಲ ಹೆಜ್ಜೆಯ ಧೈರ್ಯಕ್ಕೆ ತಂದೆಯ ಪದಮಾಗುಣದ ಸಹಯೋಗವಾಗಿದೆ.
ಇದೇ ರೀತಿ ಮಾಯಾಜೀತರಾಗುವುದಕ್ಕೆ ಯಾವುದೇ ಭಿನ್ನ-ಭಿನ್ನ ರೂಪದಿಂದ ಮಾಯೆಯು ದಾಳಿ ಮಾಡುವುದಕ್ಕೆ ಆದಿಯಿಂದ ಇಲ್ಲಿಯವರೆಗೆ ಬರುತ್ತಿದೆ, ಕೆಲವೊಮ್ಮೆ ರಾಯಲ್ ರೂಪದಿಂದ, ಕೆಲವೊಮ್ಮೆ ಪ್ರತ್ಯಕ್ಷ ರೂಪದಿಂದ, ಕೆಲವೊಮ್ಮೆ ಗುಪ್ತ ರೂಪದಿಂದ ಹಾಗೂ ಕೆಲವೊಮ್ಮೆ ಕೃತಕ ಈಶ್ವರೀಯ ರೂಪದಲ್ಲಿ ಬರುತ್ತದೆ. 63 ಜನ್ಮಗಳು ಮಾಯೆಗೆ ಜೊತೆಗಾರರಾಗಿದ್ದಿರಲ್ಲವೆ. ಇಂತಹ ಪಕ್ಕಾ ಜೊತೆಗಾರರನ್ನು ಬಿಟ್ಟು ಬಿಡುವುದು ಕಷ್ಟವಾಗುತ್ತದೆ. ಆ ಕಾರಣವಾಗಿ ಭಿನ್ನ - ಭಿನ್ನ ರೂಪದಿಂದ ನಿಮ್ಮ ಮೇಲೆ ಯುದ್ದ ಮಾಡುವುದರಲ್ಲಿ ಅದು ಶಕ್ತಿ ಹೀನವಾಗಿದೆ ಮತ್ತು ತಾವಿಲ್ಲಿ ಶಕ್ತಿಶಾಲಿಯಾಗಿದ್ದಿರಿ. ಇಷ್ಟೊಂದು ಯುದ್ಧ ಮಾಡುತ್ತಿದ್ದರೂ ಯಾರು ಧೈರ್ಯವಂತ ಮಕ್ಕಳಿದ್ದಾರೆ ಹಾಗೂ ತಂದೆಯ ಪದಮಗುಣ ಸಹಯೋಗದ ಪಾತ್ರಧಾರಿ ಮಕ್ಕಳಿದ್ದಾರೆ, ಸಹಯೋಗದ ಕಾರಣ ಮಾಯೆಯ ಯುದ್ಧದ ಪ್ರತಿ ಚಾಲೆಂಜ್ ಮಾಡುತ್ತಾರೆ - ನಿನ್ನ ಕೆಲಸ ಬರುವುದು, ನಮ್ಮ ಕೆಲಸ ವಿಜಯ ಪ್ರಾಪ್ತಿ ಮಾಡಿಕೊಳ್ಳುವುದು. ಯುದ್ಧವನ್ನು ಆಟವೆಂದು ತಿಳಿಯುತ್ತಾರೆ. ಮಾಯೆಯ ಹುಲಿಯ ರೂಪವನ್ನು ಇರುವೆಯೆಂದು ತಿಳಿಯುತ್ತಾರೆ. ಏಕೆಂದರೆ ಈ ಮಾಯೆಯ ರಾಜ್ಯವು ಈಗ ಸಮಾಪ್ತಿ ಆಗುತ್ತದೆ ಮತ್ತು ಅನೇಕ ಬಾರಿ ವಿಜಯಿ ಅತ್ಮಗಳಿಗೆ ನಿಶ್ಚಯ 100% ನಿಶ್ಚಿತವಾಗಿದೆ ಎಂದು ತಿಳಿದಿದೆ. ಆದ್ದರಿಂದ ಇದೇ 'ನಿಶ್ಚಿತ' ದ ನಶೆಯು ತಂದೆಯ ಪದಮಾಗುಣದ ಅಧಿಕಾರವನ್ನು ಪ್ರಾಪ್ತಿ ಮಾಡಿಸುತ್ತದೆ. ಅಂದಾಗ ಧೈರ್ಯವಂತ ಮಕ್ಕಳಿಗೆ, ಸಹಯೋಗವು ಸರ್ವಶಕ್ತಿವಂತ ತಂದೆಯದಾಗಿರುತ್ತದೆ. ಅಲ್ಲಿ ಅಸಂಭವವನ್ನೂ ಸಂಭವ ಮಾಡುವುದು ಮಾಯೆಗೆ, ವಿಶ್ವಕ್ಕೆ ಚಾಲೆಂಜ್ ಮಾಡುವುದು ದೊಡ್ಡ ಮಾತೇನಲ್ಲ - ಈ ರೀತಿ ತಿಳಿಯುತ್ತೀರಲ್ಲವೆ?
ಬಾಪ್ದಾದಾರವರು ಈ ಫಲಿತಾಂಶವನ್ನು ನೋಡುತ್ತಿದ್ದಾರೆ - ಆದಿಯಿಂದ ಇಲ್ಲಿಯ ತನಕ ಪ್ರತಿಯೊಬ್ಬ ಮಗುವು ಧೈರ್ಯದ ಆಧಾರದ ಮೇಲೆ ಸಹಯೋಗದ ಪಾತ್ರಧಾರಿಗಳಾಗಿ, ಎಲ್ಲಿಯ ತನಕ ಸಹಜ ಪುರುಷಾರ್ಥಿಗಳಾಗಿ ಮುಂದುವರೆಯುತ್ತಿದ್ದಾರೆ, ಎಲ್ಲಿಯ ತನಕ ತಲುಪಿದ್ದಾರೆ. ಅಂದಾಗ ಏನನ್ನು ನೋಡಿರಬಹುದು? ತಂದೆಯ ಸಹಯೋಗವೆಂದರೆ ದಾತನ ಕೊಡುಗೆಯಾಗಿದೆ. ವರದಾತನ ವರದಾನ ಸಾಗರಕ್ಕೆ ಸಮಾನವಾಗಿದೆ, ಆದರೆ ಸಾಗರನಿಂದ ಪಡೆಯುವ ಕೆಲವು ಮಕ್ಕಳು ಸಾಗರನ ಸಮಾನ ಸಂಪನ್ನರಾಗಿ ಅನ್ಯರನ್ನೂ ಸಂಪನ್ನರನ್ನಾಗಿ ಮಾಡುತ್ತಿದ್ದಾರೆ ಹಾಗೂ ಕೆಲವು ಮಕ್ಕಳು ಸಹಯೋಗದ ವಿಧಿಯನ್ನು ತಿಳಿಯದೇ ಇರುವುದರಿಂದ ಸಹಯೋಗವನ್ನು ಪಡೆಯುವುದಕ್ಕೆ ಬದಲಾಗಿ ತಮ್ಮದೇ ಪರಿಶ್ರಮದಲ್ಲಿ, ಕೆಲವೊಮ್ಮೆ ತೀವ್ರ ಗತಿಯಲ್ಲಿ, ಕೆಲವೊಮ್ಮೆ ಹೃದಯ ವಿಧೀರ್ಣ ಆಟದಲ್ಲಿ ಏರುಪೇರಾಗುತ್ತಿದ್ದಾರೆ ಹಾಗೂ ಕೆಲವು ಮಕ್ಕಳು ಕೆಲವೊಮ್ಮೆ ಸಹಯೋಗ, ಕೆಲವೊಮ್ಮೆ ಪರಿಶ್ರಮ ಪಡುತ್ತಿದ್ದಾರೆ. ಬಹಳ ಸಮಯದ ಸಹಯೋಗವೂ ಇದೆ, ಆದರೆ ಅಲ್ಲಲ್ಲಿ ಹುಡುಗಾಟಿಕೆಯ ಕಾರಣ ಸಹಯೋಗದ ವಿಧಿಯನ್ನು ಸಮಯದಲ್ಲಿ ಮರೆತು ಬಿಡುತ್ತಾರೆ ಮತ್ತು ಧೈರ್ಯವನ್ನು ಇಡುವುದಕ್ಕೆ ಬದಲಾಗಿ ಹುಡುಗಾಟಿಕೆಯ ಕಾರಣ ಅಭಿಮಾನದಲ್ಲಿ ಬರುತ್ತಾರೆ. ನಾವಂತೂ ಸದಾ ಪವಿತ್ರವಾಗಿಯೇ ಇದ್ದೇವೆ, ತಂದೆಯು ನಮಗೆ ಸಹಯೋಗ ಕೊಡದೆ ಇನ್ಯಾರಿಗೆ ಕೊಡುತ್ತಾರೆ! ತಂದೆಯು ಬಂಧಿತರಾಗಿದ್ದಾರೆ ಎಂಬ ಅಭಿಮಾನದ ಕಾರಣ ಧೈರ್ಯದ ಮುಖಾಂತರ ಸಹಯೋಗದ ವಿಧಿಯನ್ನು ಮರೆತು ಬಿಡುತ್ತಾರೆ. ಹುಡುಗಾಟಿಕೆಯ ಅಭಿಮಾನ ಹಾಗೂ ಸ್ವಯಂ ಪ್ರತಿ ಗಮನ ಕೊಡುವ ಅಭಿಮಾನವು ಸಹಯೋಗದಿಂದ ವಂಚಿತರನ್ನಾಗಿ ಮಾಡಿ ಬಿಡುತ್ತದೆ. ಈಗ ಬಹಳ ಯೋಗ ಮಾಡಿ ಬಿಟ್ಟಿದ್ದೇವೆಂದು ತಿಳಿಯುತ್ತಾರೆ. ಜ್ಞಾನಿ ಆತ್ಮರೂ ಆಗಿ ಬಿಟ್ಟಿದ್ದೇವೆ, ಯೋಗಿ ಆತ್ಮಗಳೂ ಆಗಿ ಬಿಟ್ಟಿದ್ದೇವೆ, ಸೇವೆಯಲ್ಲಿಯೂ ಹೆಸರು ಗಳಿಸಿದ್ದೇವೆ, ಸೇವಾಕೇಂದ್ರದ ಇಂಚಾರ್ಜ್ ಸಹ ಆಗಿ ಬಿಟ್ಟೆವು, ಸೇವೆಯ ರಾಜಧಾನಿಯೂ ಆಗಿ ಬಿಟ್ಟಿತು, ಪ್ರಕೃತಿಯು ಸೇವೆಗೆ ಯೋಗ್ಯವಾಗಿ ಬಿಟ್ಟಿತು ಎಂದು ತಿಳಿದು ಆರಾಮದಿಂದ ಜೀವನವನ್ನು ಸಾಗಿಸುತ್ತಿದ್ದಾರೆ. ಇದರ ಗಮನ ಕೊಡುವುದರಲ್ಲಿ ಹುಡುಗಾಟಿಕೆಯಾಗಿದೆ. ಆದ್ದರಿಂದ ಎಲ್ಲಿಯ ತನಕ ಬದುಕಿರುತ್ತೇವೆಯೋ ಅಲ್ಲಿಯ ತನಕ ವಿದ್ಯಾಭ್ಯಾಸ ಹಾಗೂ ಸಂಪೂರ್ಣ ಆಗುವುದರ ಕಡೆ, ಬೇಹದ್ದಿನ ವೈರಾಗ್ಯ ವೃತ್ತಿಯ ಕಡೆಗೆ ಗಮನ ಕೊಡುವುದನ್ನು ಮರೆತು ಬಿಡುತ್ತಾರೆ. ಬ್ರಹ್ಮಾ ತಂದೆಯನ್ನು ನೋಡಿದ್ದಿರಲ್ಲವೆ, ಅಂತಿಮ ಸಂಪೂರ್ಣ ಕರ್ಮತೀತಾ ಸ್ಥಿತಿಯವರೆಗೆ ಸ್ವಯಂ ಪ್ರತೀ, ಸೇವೆಯ ಪ್ರತಿ, ಬೇಹದ್ದಿನ ವೈರಾಗ್ಯ ವೃತ್ತಿಯ ಪ್ರತಿ ವಿದ್ಯಾರ್ಥಿ ಜೀವನದ ರೀತಿಯಿಂದ ಗಮನಕೊಟ್ಟು ನಿಮಿತ್ತರಾಗಿ ಮಾಡಿ ತೋರಿಸಿದರು. ಆದ್ದರಿಂದ ಆದಿಯಿಂದ ಅಂತಿಮ ತನಕ ಧೈರ್ಯದಿಂದಿದ್ದು ಧೈರ್ಯ ಕೊಡುವುದಕ್ಕೆ ನಿಮಿತ್ತರಾದರು. ತಂದೆಯ ನಂಬರ್ ವನ್ಸಹಯೋಗಕ್ಕೆ ಪಾತ್ರಧಾರರಾಗಿ ನಂಬರ್ವನ್ ಪ್ರಾಪ್ತಿಯನ್ನು ಪ್ರಾಪ್ತಿ ಮಾಡಿಕೊಂಡರು. ಭವಿಷ್ಯ ನಿಶ್ಚಿತವಾಗಿದ್ದರೂ ಹುಡುಗಾಟಿಕೆಯಲ್ಲಿ ಬರಲಿಲ್ಲ. ಸದಾ ತನ್ನ ತೀವ್ರ ಪುರುಷಾರ್ಥದ ಅನುಭವವನ್ನು ಮಕ್ಕಳ ಮುಂದೆ ಅಂತಿಮದ ತನಕ ಹೇಳುತ್ತಿದ್ದರು, ಸಹಯೋಗದ ಸಾಗರದಲ್ಲಿ ಈ ರೀತಿ ಸಮಾವೇಶವಾಗಿ ಈಗಲೂ ತಂದೆಯ ಸಮಾನ ಪ್ರತಿಯೊಬ್ಬ ಮಗುವಿಗೂ ಅವ್ಯಕ್ತ ರೂಪದಿಂದಲೂ ಸಹಯೋಗ ಕೊಡುತ್ತಿದ್ದಾರೆ. ಇದಕ್ಕೆ ಒಂದು ಹೆಜ್ಜೆಯ ಧೈರ್ಯ ಹಾಗೂ ಪದಮಾಗುಣ ಸಹಯೋಗಕ್ಕೆ ಪಾತ್ರರಾಗುವುದು ಎಂದು ಹೇಳಲಾಗುತ್ತದೆ.
ಬಾಪ್ದಾದಾ ನೋಡುತ್ತಿದ್ದರು - ಕೆಲವು ಮಕ್ಕಳು ಸಹಯೋಗಕ್ಕೆ ಪಾತ್ರರಾಗಿದ್ದರೂ ಸಹಯೋಗದಿಂದ ವಂಚಿತರಾಗುತ್ತಾರೆ - ಏಕೆ? ಇದಕ್ಕೆ ಕಾರಣ ತಂದೆಯು ತಿಳಿಸಿದ್ದಾರೆ - ಧೈರ್ಯದ ವಿಧಿಯನ್ನು ಮರೆತಿರುವುದು, ಅಭಿಮಾನ ಎಂದರೆ ಹುಡುಗಾಟಿಕೆ ಹಾಗೂ ಸ್ವಯಂ ಪ್ರತಿ ಗಮನದ ಕೊರತೆಯ ಕಾರಣದಿಂದಾಗಿದೆ. ವಿಧಿಯಿಲ್ಲವೆಂದರೆ ವರದಾನದಿಂದ ವಂಚಿತರಾಗುತ್ತಾರೆ. ಸಾಗರನ ಮಕ್ಕಳಾಗಿದ್ದರೂ ಚಿಕ್ಕ-ಚಿಕ್ಕ ಕೊಳಗಳಂತಾಗಿ ಬಿಡುತ್ತಾರೆ, ಹೇಗೆ ಕೊಳದ ನೀರು ನಿಂತಿರುತ್ತದೆ, ಹಾಗೆಯೇ ಪುರುಷಾರ್ಥದ ನಡುವೆ ನಿಂತು ಬಿಡುತ್ತಾರೆ ಆದ್ದರಿಂದ ಒಮ್ಮೆ ಪರಿಶ್ರಮ ಪಡುವುದು, ಒಮ್ಮೆ ಮೋಜಿನಲ್ಲಿರುತ್ತಾರೆ. ಇಂದು ನೋಡಿದಾಗ ಬಹಳ ಖುಷಿಯಲ್ಲಿ ಇರುತ್ತಾರೆ. ನಾಳೆ ನೋಡಿದರೆ ಚಿಕ್ಕ ಕಲ್ಲಿನ ಕಾರಣ ಅದನ್ನು ಪಕ್ಕಕ್ಕೆ ಸರಿಸುವುದರಲ್ಲಿಯೇ ಪರಿಶ್ರಮ ಪಡುತ್ತಿರುತ್ತಾರೆ. ಬೆಟ್ಟವೇನಲ್ಲ. ಚಿಕ್ಕ ಕಲ್ಲಾಗಿರುತ್ತದೆಯಷ್ಟೆ. ಮಹಾವೀರ ಪಾಂಡವ ಸೈನ್ಯ ಆಗಿದ್ದಾರೆ. ಆದರೆ ಚಿಕ್ಕ ಕವಡೆಯ ಸಮಾನ ಕಲ್ಲನ್ನು ಬೆಟ್ಟವನ್ನಾಗಿ ಮಾಡಿಕೊಂಡು ಬಿಡುತ್ತಾರೆ. ಆ ಪರಿಶ್ರಮದಲ್ಲಿಯೇ ತೊಡಗಿರುತ್ತಾರೆ ಮತ್ತೆ ಬಹಳ ನಗಿಸುತ್ತಾರೆ. ಒಂದುವೇಳೆ ಯಾರಾದರೂ ಇದು ಚಿಕ್ಕ ಕವಡೆಯಾಗಿದೆ ಎಂದು ಅವರಿಗೆ ಹೇಳುತ್ತಾರೆ ಆಗ ಹಾಸ್ಯದ ಮಾತು ಏನು ಹೇಳುತ್ತಾರೆ? ನಿಮಗೇನು ಗೊತ್ತು, ನಿಮ್ಮ ಮುಂದೆ ಬಂದಿದ್ದರೆ ಗೊತ್ತಾಗುತ್ತಿತ್ತು. ಬಾಬಾ, ನೀವು ನಿರಾಕಾರನಾಗಿದ್ದೀರಿ, ನಿಮಗೇನು ಗೊತ್ತು? ನಿಮಗಂತೂ ತಂದೆಯಿಂದ ಲಿಫ್ಟ್ ಸಿಕ್ಕಿದೆ ನಿಮಗೇನು ಗೊತ್ತಾಗಬೇಕೆಂದು ಬ್ರಹ್ಮಾ ತಂದೆಗೂ ಹೇಳುತ್ತಾರೆ. ಹೀಗೆ ಬಹಳ ಒಳ್ಳೊಳ್ಳೆಯ ಮಾತುಗಳನ್ನು ಆಡುತ್ತಾರೆ ಆದರೆ ಇದಕ್ಕೆ ಕಾರಣ ಚಿಕ್ಕ ತಪ್ಪಾಗಿದೆ. ಧೈರ್ಯ ಮಕ್ಕಳದು, ಸಹಯೋಗ ತಂದೆಯದು ಎಂಬ ಮಾತನ್ನು ಮರೆತು ಬಿಡುತ್ತಾರೆ. ಇದು ಡ್ರಾಮಾದ ಒಂದು ಗುಹ್ಯ ಕರ್ಮದ ಗತಿಯಾಗಿದೆ. ಧೈರ್ಯ ಮಕ್ಕಳದು, ಸಹಯೋಗ ತಂದೆಯದು. ಒಂದುವೇಳೆ ಈ ವಿಧಿ-ವಿಧಾನದಲ್ಲಿ ಬರಲಿಲ್ಲವೆಂದರೆ ಎಲ್ಲರೂ ವಿಶ್ವದ ಮೊದಲನೇ ರಾಜನಾಗಿ ಬಿಡುತ್ತಿದ್ದರು. ಒಂದೇ ಸಮಯದಲ್ಲಿ ಎಲ್ಲರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೇನು? ನಂಬರ್ವಾರ್ ಆಗುವ ವಿಧಾನವು ಈ ವಿಧಿಯ ಕಾರಣದಿಂದಲೇ ಆಗುತ್ತದೆ. ಇಲ್ಲವೆಂದರೆ ಎಲ್ಲರೂ ತಂದೆಗೆ ದೂರುತ್ತಾರೆ. ಬ್ರಹ್ಮಾ ತಂದೆಗೆ ಮೊದಲ ನಂಬರನ್ನು ಏಕೆ ಕೊಟ್ಟಿದ್ದಾರೆ? ನಮ್ಮನ್ನೂ ಮಾಡಬಹುದಲ್ಲವೆ? ಆದ್ದರಿಂದ ಈ ಈಶ್ವರೀಯ ವಿಧಾನವು ನಿಯಮದ ಅನುಸಾರವಾಗಿ ಮಾಡಲ್ಪಟ್ಟಿದೆ. ನಿಮಿತ್ತ ಮಾತ್ರ ಈ ವಿಧಾನವು ನಿಗಧಿತವಾಗಿದೆ - ಒಂದು ಹೆಜ್ಜೆ ಧೈರ್ಯದ್ದು, ಪದಮ ಹೆಜ್ಜೆ ಸಹಯೋಗದ್ದಾಗಿದೆ. ಸಹಯೋಗದ ಸಾಗರನಿದ್ದರೂ ಈ ವಿಧಾನದ ವಿಧಿಯು ಡ್ರಾಮಾ ಅನುಸಾರ ನಿಗಧಿತಯಾಗಿದೆ. ಸಾಧ್ಯವಾದಷ್ಟು ಧೈರ್ಯವನ್ನಿಡಿ, ಸಹಯೋಗವನ್ನು ಪಡೆಯಿರಿ. ಇದರಲ್ಲಿ ಕಡಿಮೆ ಮಾಡುವುದಿಲ್ಲ. ಒಂದು ವರ್ಷದ ಮಗುವಾಗಿರಬಹುದು, 50 ವರ್ಷದ ಮಗುವಾಗಿರಬಹುದು. ಸಮರ್ಪಿತ ಆಗಿರಬಹುದು, ಪ್ರವೃತ್ತಿಯಲ್ಲಿ ಇರುವವರಾಗಿರಬಹುದು, ಎಲ್ಲರಿಗೂ ಅಧಿಕಾರವಂತೂ ಸಮಾನವಿದೆ ಆದರೆ ವಿಧಿಯಿಂದ ಪ್ರಾಪ್ತಿಯಿದೆ. ಈಶ್ವರೀಯ ವಿಧಾನವನ್ನು ತಿಳಿದುಕೊಂಡಿರಲ್ಲವೆ?
ಧೈರ್ಯವನ್ನಂತೂ ಬಹಳ ಚೆನ್ನಾಗಿಟ್ಟಿದ್ದೀರಿ. ಇಲ್ಲಿಯ ತನಕ ತಲುಪಲು ಧೈರ್ಯವನ್ನೂ ಇಟ್ಟಿದ್ದೀರಿ, ಆದ್ದರಿಂದಲೇ ತಲುಪಿದ್ದೀರಲ್ಲವೆ. ತಂದೆಯ ಮಕ್ಕಳಾಗುವುದರಲ್ಲಿಯೂ ಧೈರ್ಯವನ್ನು ಇಟ್ಟಿದ್ದೀರಿ ಆದ್ದರಿಂದಲೇ ಆಗಿದ್ದೀರಿ. ಸದಾ ಧೈರ್ಯದ ವಿಧಿಯಿಂದ ಸಹಯೋಗಕ್ಕೆ ಪಾತ್ರರಾಗಿ ನಡೆಯುವುದು ಹಾಗೂ ಕೆಲವೊಮ್ಮೆ ವಿಧಿಯಿಂದ ಸಿದ್ಧಿ ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿ ಅಂತರ ಬಂದು ಬಿಡುತ್ತದೆ. ಸದಾ ಪ್ರತಿಯೊಂದು ಹೆಜ್ಜೆಯಲ್ಲಿ ಧೈರ್ಯದಿಂದ ಸಹಯೋಗಕ್ಕೆ ಪಾತ್ರರಾಗಿ ನಂಬರ್ವನ್ ಬರುವಂತಹ ಲಕ್ಷ್ಯವನ್ನು ಪ್ರಾಪ್ತಿ ಮಾಡಿಕೊಳ್ಳಿ. ನಂಬರ್ವನ್ ಒಬ್ಬ ಬ್ರಹ್ಮಾರವರಾದರು ಆದರೆ ಮೊದಲ ದರ್ಜೆಯಲ್ಲಿ ಇನ್ನೂ ಸಂಖ್ಯೆಯಿದೆ, ಆದ್ದರಿಂದ ನಂಬರ್ವನ್ ಎಂದು ಹೇಳುತ್ತಾರೆ ತಿಳಿದುಕೊಂಡಿರಾ? ಮೊದಲ ದರ್ಜೆಯಲ್ಲಂತೂ ಬರಬಹುದಲ್ಲವೆ. ಇದಕ್ಕೆ ನಂಬರ್ವನ್ ನಲ್ಲಿ ಬರುವುದು ಎಂದು ಹೇಳಲಾಗುತ್ತದೆ. ಇನ್ನೆಂದಾದರೂ ಮಕ್ಕಳ ಹುಡುಗಾಟಿಕೆಯ ಲೀಲೆಯನ್ನು ತಿಳಿಸುತ್ತೇನೆ. ಬಹಳ ಚೆನ್ನಾಗಿ ಲೀಲೆಯನ್ನು ತೋರಿಸುತ್ತಾರೆ. ಬಾಪ್ದಾದಾ ಸದಾ ಮಕ್ಕಳ ಲೀಲೆಯನ್ನು ನೋಡುತ್ತಲೇ ಇರುತ್ತಾರೆ. ಒಮ್ಮೆ ತೀವ್ರ ಪುರುಷಾರ್ಥದ ಲೀಲೆ ನೋಡಿದರೆ ಇನ್ನೊಮ್ಮೆ ಹುಡುಗಾಟಿಕೆಯ ಲೀಲೆಯನ್ನು ನೋಡುತ್ತಾರೆ.
ಕರ್ನಾಟಕದವರ ವಿಶೇಷತೆ ಏನಾಗಿದೆ? ಪ್ರತಿಯೊಂದು ಜೋನಿನದೂ ತನ್ನದೇ ಆದ ವಿಶೇಷತೆ ಇರುತ್ತದೆ. ಕರ್ನಾಟಕದವರದು ಬಹಳ ಒಳ್ಳೆಯ ಭಾಷೆ ಇದಾಗಿದೆ - ಭಾವನೆಯ ಭಾಷೆಯಲ್ಲಿ ಬುದ್ಧಿವಂತರಾಗಿದ್ದಾರೆ. ಹಾಗೆ ನೋಡಿದರೆ ಹಿಂದಿಯನ್ನು ಕಡಿಮೆ ಅರ್ಥ ಮಾಡಿಕೊಳ್ಳುತ್ತಾರೆ ಆದರೆ ಕರ್ನಾಟಕದ ಭಾಷೆ ಭಾವನೆಯ ಭಾಷೆಯಲ್ಲಿ ನಂಬರ್ವನ್. ಆದ್ದರಿಂದ ಭಾವನೆಯ ಫಲವು ಸದಾ ಸಿಗುತ್ತದೆ ಹಾಗೂ ಬೇರೆ ಏನನ್ನೂ ಹೇಳದಿದ್ದರೂ ಸದಾ ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ.ಈ ಭಾವನೆಯ ಶ್ರೇಷ್ಠ ಭಾಷೆಯನ್ನು ತಿಳಿದಿದ್ದಾರೆ. ಭಾವನೆಯ ಧರಣಿಯಲ್ಲವೆ. ಒಳ್ಳೆಯದು.
ನಾಲ್ಕೂ ಕಡೆಯ ಧೈರ್ಯವಂತ ಮಕ್ಕಳಿಗೆ, ಸದಾ ತಂದೆಯ ಸಹಯೋಗವನ್ನು ಪ್ರಾಪ್ತಿ ಮಾಡಿಕೊಳ್ಳುವ ಪಾತ್ರಧಾರಿ ಆತ್ಮಗಳಿಗೆ, ಸದಾ ವಿಧಾನವನ್ನು ತಿಳಿದು ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಶ್ರೇಷ್ಠಾತ್ಮಗಳಿಗೆ, ಸದಾ ಬ್ರಹ್ಮಾ ತಂದೆಯ ಸಮಾನ ಅಂತಿಮದ ತನಕ ವಿಧ್ಯಾಭ್ಯಾಸ ಹಾಗೂ ಪುರುಷಾರ್ಥದ ವಿಧಿಯಲ್ಲಿ ನಡೆಯುವ ಶ್ರೇಷ್ಠ ಮಹಾನ್ ತಂದೆಯ ಸಮಾನ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ ದಾದಾರವರ ವಾರ್ತಾಲಾಪ:
1. ತಮ್ಮನ್ನು ಡಬಲ್ ಲೈಟ್ ಫರಿಶ್ತಾ ಎಂದು ಅನುಭವ ಮಾಡುವಿರಾ? ಡಬಲ್ ಲೈಟ್ ಸ್ಥಿತಿಯು ಫರಿಶ್ತಾತನದ ಸ್ಥಿತಿಯಾಗಿದೆ.
ಫರಿಶ್ತಾ ಎಂದರೆ ಲೈಟ್ ಎಂದರ್ಥವಾಗಿದೆ. ಯಾವಾಗ ತಂದೆಯ ಮಕ್ಕಳಾದಿರಿ ಆಗ ತಮ್ಮೆಲ್ಲಾ ಹೊರೆಯನ್ನು ತಂದೆಯವರಿಗೆ ಕೊಟ್ಟಿದ್ದೀರಲ್ಲವೇ? ಯಾವಾಗ ಹೊರೆಯಿಂದ ಹಗುರವಾಗಿ ಬಿಟ್ಟಿರಿ ಆಗಲೇ ಫರಿಶ್ತೆ ಆಗಿ ಬಿಟ್ಟಿದ್ದೀರಿ. ತಂದೆಯು ಬರುವುದೇ ಹೊರೆಯನ್ನು ಸಮಾಪ್ತಿ ಮಾಡುವುದಕ್ಕಾಗಿ. ಅಂದಮೇಲೆ ಯಾವಾಗ ತಂದೆಯು ಸಮಾಪ್ತಿ ಮಾಡುವವರು ಆಗಿದ್ದಾರೆ ಅಂದಾಗ ತಾವೆಲ್ಲರೂ ಹೊರೆಯನ್ನು ಸಮಾಪ್ತಿ ಮಾಡಿದಿರಲ್ಲವೆ? ಯಾವುದೇ ಚಿಕ್ಕದಾದ ಗಂಟನ್ನೂ ಬಚ್ಚಿಟ್ಟಿಲ್ಲ ಅಲ್ಲವೆ? ಎಲ್ಲವನ್ನೂ ಕೊಟ್ಟಿದಿರಾ ಅಥವಾ ಸಮಯದಲ್ಲಿ ಇರಬೇಕೆಂದು ಸ್ವಲ್ಪ ಸಲ್ಪ ಇಟ್ಟುಕೊಂಡಿದ್ದೀರಾ? ಸ್ವಲ್ಪ-ಸ್ವಲ್ಪ ಹಳೆಯ ಸಂಸ್ಕಾರ ಇದೆಯೋ ಅಥವಾ ಅದೂ ಸಮಾಪ್ತಿ ಆಗಿ ಬಿಟ್ಟಿದೆಯೇ? ಹಳೆಯ ಸ್ವಭಾವ ಅಥವಾ ಹಳೆಯ ಸಂಸ್ಕಾರ - ಇದೂ ಸಹ ಖಜಾನೆ ಆಗಿದೆಯಲ್ಲವೆ. ಇದನ್ನೂ ಕೊಟ್ಟಿದ್ದೀರಾ? ಒಂದು ವೇಳೆ ಸ್ವಲ್ಪವೇನಾನಾದರೂ ಉಳಿದುಕೊಂಡಿದೆಯೆಂದರೆ ಮೇಲಿಂದ (ಶ್ರೇಷ್ಠ ಮಟ್ಟ) ಕೆಳಗೆ ತೆಗೆದುಕೊಂಡು ಬರುತ್ತದೆ, ಫರಿಶ್ತಾ ಆಗಿರುತ್ತಾ ಹಾರುವ ಕಲೆಯ ಅನುಭವ ಮಾಡುವುದಕ್ಕೆ ಬಿಡುವುದಿಲ್ಲ. ಕೆಲವೊಮ್ಮೆ ಶ್ರೇಷ್ಠವಾದ ಅನುಭವವಿದ್ದರೆ, ಕೆಲವೊಮ್ಮೆ ಕೆಳಗೆ ಕರೆ ತರುತ್ತದೆ. ಫರಿಶ್ತಾ ಅರ್ಥಾತ್ ಅಂಶದಷ್ಟೂ ರಾವಣನ ಆಸ್ತಿಯಿರಬಾರದು. ಹಳೆಯ ಸ್ವಭಾವ ಅಥವಾ ಸಂಸ್ಕಾರವು ಬರುತ್ತದೆ ಅಲ್ಲವೆ? ಹೇಳುತ್ತೀರಲ್ಲವೆ - ನಾವಂತು ಬಯಸುವುದಿಲ್ಲ ಆದರೆ ಆಗಿ ಬಿಟ್ಟಿತು, ಮಾಡಿ ಬಿಟ್ಟೆವು ಅಥವಾ ಆಗಿ ಬಿಡುತ್ತದೆ. ಅಂದಾಗ ಇದರಿಂದ ಸಿದ್ಧವಾಗುತ್ತದೆ – ತಮ್ಮ ಬಳಿ ಚಿಕ್ಕದಾದ ಹಳೆಯ ಗಂಟನ್ನು ಇಟ್ಟುಕೊಂಡಿದ್ದೀರಿ, ಕೊಳಕಿನ ಗಂಟಿದೆ. ಅಂದಮೇಲೆ ಸದಾಕಾಲಕ್ಕಾಗಿ ಫರಿಶ್ತೆ ಆಗುವುದೇ ಬ್ರಾಹ್ಮಣ ಜೀವನ ಆಗಿದೆ. ಹಳೆಯದನ್ನು ಸಮಾಪ್ತಿ ಮಾಡಿದಿರಿ, ಹಳೆಯ ಖಾತೆಯನ್ನು ಸಮಾಪ್ತಿ ಮಾಡಿ ಬಿಟ್ಟಿರಿ, ಈಗ ಹೊಸ ಮಾತು, ಹೊಸ ಖಾತೆಯಾಗಿದೆ. ಒಂದುವೇಳೆ ಹಳೆಯ ಸಾಲವು ಸ್ವಲ್ಪವಿದ್ದರೂ ಸದಾಕಾಲಕ್ಕಾಗಿ ಮಾಯೆಯ ಬಡ್ಡಿ ಏರುತ್ತಿರುತ್ತದೆ ಏಕೆಂದರೆ ಸಾಲವನ್ನು ಬಡ್ಡಿ ಎಂದು ಹೇಳಲಾಗುತ್ತದೆ. ಆದ್ದರಿಂದ ಖಾತೆಯನ್ನೇ ಸಮಾಪ್ತಿ ಮಾಡಿರಿ. ಹೊಸ ಜೀವನವು ಸಿಕ್ಕಿದೆ ಅಂದಮೇಲೆ ಹಳೆಯದೆಲ್ಲವೂ ಸಮಾಪ್ತಿ.
2. ಸದಾ 'ವಾಹ್-ವಾಹ್'ನ ಹಾಡನ್ನು ಹಾಡುವವರಲ್ಲವೇ? 'ಅಯ್ಯೋ ಅಯ್ಯೋ' ಎನ್ನುವದಂತು ಸಮಾಪ್ತಿಯಾಯಿತು ಮತ್ತು ಮನಸ್ಸಿನಲ್ಲಿ 'ವಾಹ್-ವಾಹ್'ನ ಹಾಡನ್ನು ಸದಾ ಹಾಡುತ್ತಾ ಇರುತ್ತೀರಿ. ಯಾವುದೇ ಶ್ರೇಷ್ಠ ಕರ್ಮವನ್ನು ಮಾಡುತ್ತೀರೆಂದರೆ ಮನಸ್ಸಿನಿಂದ ಯಾವ ಶಬ್ಧವು ಬರುತ್ತದೆ? ವಾಹ್ ನನ್ನ ಶ್ರೇಷ್ಠ ಕರ್ಮವೇ! ಅಥವ ವಾಹ್ ಶ್ರೇಷ್ಠ ಕರ್ಮವನ್ನು ಕಲಿಸುವವರೇ! ಅಥವ ವಾಹ್ ಶ್ರೇಷ್ಠ ಸಮಯ, ಶ್ರೇಷ್ಠ ಕರ್ಮವನ್ನು ಮಾಡಿಸುವವರೇ! ಹೀಗೆ ಸದಾ 'ವಾಹ್ - ವಾಹ್ !' ಹಾಡು ಹಾಡುವಂತಹ ಆತ್ಮರಾಗಿದ್ದೀರಿ ಅಲ್ಲವೇ? ಕೆಲವೊಮ್ಮೆ ಮರೆತೂ ಸಹ 'ಅಯ್ಯೋ' ಎಂದು ಬರುವುದಿಲ್ಲವೇ? ಅಯ್ಯೋ ಇದೇನಾಯಿತು ಎನ್ನುವುದಿರಬಾರದು. ಯಾವುದೇ ದುಃಖಮಯ ದೃಶ್ಯವನ್ನು ನೋಡುವಾಗಲೂ 'ಅಯ್ಯೋ' ಶಬ್ದವು ಬರಬಾರದು. ನೆನ್ನೆ 'ಅಯ್ಯೋ-ಅಯ್ಯೋ' ಎನ್ನುತ್ತಿದ್ದಿರಿ ಮತ್ತು ಇಂದು 'ವಾಹ್-ವಾಹ್' ಹಾಡನ್ನು ಹಾಡುತ್ತೀರಿ, ಎಷ್ಟೊಂದು ಅಂತರವಾಯಿತು! ಇದು ಯಾರ ಶಕ್ತಿಯಾಗಿದೆ? ತಂದೆಯ ಶಕ್ತಿಯೇ ಅಥವಾ ಡ್ರಾಮಾದ ಶಕ್ತಿಯೇ? (ತಂದೆಯವರದು) ತಂದೆಯವರೂ ಸಹ ಡ್ರಾಮಾದ ಕಾರಣದಿಂದಲೇ ಬಂದರಲ್ಲವೆ. ಅಂದಾಗ ಡ್ರಾಮಾ ಸಹ ಶಕ್ತಿಶಾಲಿ ಆಗಿದೆ. ಡ್ರಾಮಾದಲ್ಲಿ ಏನಾದರೂ ಪಾತ್ರವಿಲ್ಲದಿದ್ದರೆ ತಂದೆಯೂ ಸಹ ಏನು ಮಾಡುತ್ತಾರೆ. ತಂದೆಯೂ ಶಕ್ತಿಶಾಲಿ ಹಾಗೂ ಡ್ರಾಮಾ ಸಹ ಶಕ್ತಿಶಾಲಿ ಆಗಿದೆ. ಅಂದಮೇಲೆ ಎರಡರ ಬಗ್ಗೆಯೂ ಹಾಡುಗಳನ್ನು ಹಾಡುತ್ತಿರಿ - ವಾಹ್ ಡ್ರಾಮಾ ವಾಹ್! ಯಾವುದು ಸ್ವಪ್ನದಲ್ಲಿಯೂ ಇರಲಿಲ್ಲ, ಅದು ಸಾಕಾರವಾಯಿತು. ಮನೆಯಲ್ಲಿ ಕುಳಿತಿದ್ದಂತೆಯೇ ಎಲ್ಲವೂ ಸಿಕ್ಕಿತು. ಮನೆಯಲ್ಲಿ ಕುಳಿತಿದ್ದಂತೆಯೇ ಭಾಗ್ಯವು ಸಿಕ್ಕಿತು. ಇದಕ್ಕೇ ಡೈಮಂಡ್ ಲಾಟರಿ ಎಂದು ಹೇಳಲಾಗುತ್ತದೆ.
3. ಸಂಗಮಯುಗಿ ಸ್ವರಾಜ್ಯ ಅಧಿಕಾರಿ ಆತ್ಮರು ಆಗಿದ್ದೀರಲ್ಲವೇ? ಪ್ರತಿಯೊಂದು ಕರ್ಮೇಂದ್ರಿಯದ ಮೇಲೆ ತಮ್ಮ ರಾಜ್ಯಾಡಳಿತವಿದೆಯೇ? ಯಾವುದೇ ಕರ್ಮೇಂದ್ರಿಯವೂ ಮೋಸವನ್ನಂತು ಮಾಡುವುದಿಲ್ಲವೇ? ಕೆಲವೊಮ್ಮೆ ಸಂಕಲ್ಪದಲ್ಲಿಯೂ ಸೋಲುಂಟಾಗುವುದಿಲ್ಲವೇ? ಕೆಲವೊಮ್ಮೆ ವ್ಯರ್ಥ ಸಂಕಲ್ಪಗಳು ನಡೆಯುತ್ತದೆಯೇ? 'ಸ್ವರಾಜ್ಯ ಅಧಿಕಾರಿ ಆತ್ಯರಾಗಿದ್ದೇವೆ' ಈ ನಶೆ ಮತ್ತು ನಿಶ್ಚಯದಿಂದ ಸದಾ ಶಕ್ತಿಶಾಲಿ ಆಗಿರುತ್ತಾ ಮಾಯಾಜೀತನಿಂದ ಜಗತ್ ಜೀತರು ಆಗಿ ಬಿಡುತ್ತೀರಿ. ಸ್ವರಾಜ್ಯ ಅಧಿಕಾರಿ ಆತ್ಮರು ಸಹಯೋಗಿ, ನಿರಂತರ ಯೋಗಿಗಳೂ ಆಗಬಹುದು. ಸ್ವರಾಜ್ಯ ಅಧಿಕಾರಿ ನಶೆ ಮತ್ತು ನಿಶ್ಚಯದಿಂದ ಮುಂದೆ ಸಾಗುತ್ತಾ ನಡೆಯಿರಿ. ಮಾತೆಯರು ನಷ್ಟಮೋಹರು ಆಗಿದ್ದೀರಾ ಅಥವಾ ಮೋಹವಿದೆಯೇ? ಪಾಂಡವರಲ್ಲಿ ಕೆಲವೊಮ್ಮೆ ಕ್ರೋಧ ಅಂಶವಾದ ಆವೇಶವು ಬರುತ್ತದೆಯೇ? ಕೆಲವೊಮ್ಮೆ ಯಾರಾದರೂ ಏರುಪೇರು ಮಾಡಿದರೆ ಕ್ರೋಧ ಬರುತ್ತದೆಯೇ? ಸ್ವಲ್ಪ ಸೇವೆಯ ಅವಕಾಶವು ಕಡಿಮೆ ಸಿಕ್ಕಿತು, ಅನ್ಯರಿಗೆ ಹೆಚ್ಚಾಗಿ ಸಿಕ್ಕಿತೆಂದರೆ, ಸಹೋದರಿಯರ ಮೇಲೆ ಸ್ವಲ್ಪ ಆವೇಶ ಬರುತ್ತದೆಯೇ - ಇದೇನು ಮಾಡುತ್ತಾರೆ? ಎಂದು. ಪರೀಕ್ಷೆಯು ಬರುತ್ತದೆ ನೋಡಿ ಏಕೆಂದರೆ ಸ್ವಲ್ಪ ದೇಹಾಭಿಮಾನ ಬಂದರೂ ಸಹ, ಅದರಲ್ಲಿ ಆವೇಶ ಅಥವ ಕ್ರೋಧವು ಸಹಜವಾಗಿ ಬಂದು ಬಿಡುತ್ತದೆ, ಆದ್ದರಿಂದ ಸದಾ ಸ್ವರಾಜ್ಯ ಅಧಿಕಾರಿ ಅರ್ಥಾತ್ ಸದಾಕಾಲದ ನಿರಹಂಕಾರಿ ಆಗಿರುವುದು. ಹೀಗೆ ಇರುತ್ತಾ ಸೇವಾಧಾರಿ ಆಗಿರುವವರು, ಮೋಹದ ಬಂಧನವೂ ಸಮಾಪ್ತಿಯಾಗಿರಬೇಕು. ಒಳ್ಳೆಯದು.
ಓಂ ಶಾಂತಿ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ...... ಇದಂತೂ ಪರಮಪಿತ ಪರಮಾತ್ಮನ ಮಹಿಮೆ ಗಾಯನ ಮಾಡಲ್ಪಟ್ಟಿದೆ. ಇದು ಸ್ಪಷ್ಟ ಮಹಿಮೆಯಾಗಿದೆ ಏಕೆಂದರೆ ಅವರು ರಚಯಿತನಾಗಿದ್ದಾರೆ. ಲೌಕಿಕ ತಂದೆ-ತಾಯಿಯೂ ಸಹ ಮಕ್ಕಳಿಗೆ ರಚಯಿತರಾಗಿದ್ದಾರೆ, ಪಾರಲೌಕಿಕ ತಂದೆಗೂ ಸಹ ರಚಯಿತನೆಂದು ಹೇಳಲಾಗುತ್ತದೆ. ಬಂಧು-ಸಹಾಯಕ..... ಎಂದು ಅವರಿಗೆ ಬಹಳ ಮಹಿಮೆ ಹಾಡುತ್ತಾರೆ. ಲೌಕಿಕ ತಂದೆಗೆ ಇಷ್ಟೊಂದು ಮಹಿಮೆಯಿರುವುದಿಲ್ಲ, ಪರಮಪಿತ ಪರಮಾತ್ಮನ ಮಹಿಮೆಯೇ ಬೇರೆಯಾಗಿದೆ. ಜ್ಞಾನ ಸಾಗರ, ಜ್ಞಾನ ಪೂರ್ಣನೆಂದು ಮಕ್ಕಳೂ ಸಹ ಮಹಿಮೆ ಮಾಡುತ್ತೀರಿ, ಅವರಲ್ಲಿ ಸಂಪೂರ್ಣ ಜ್ಞಾನವಿದೆ. ಇದು ಯಾವುದೇ ಶರೀರ ನಿರ್ವಹಣೆಯ ವಿದ್ಯೆಯ ಜ್ಞಾನವಲ್ಲ. ತಂದೆಗೆ ಜ್ಞಾನ ಸಾಗರ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ ಅಂದಮೇಲೆ ಯಾವುದರ ಜ್ಞಾನ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದರ ತಿಳುವಳಿಕೆಗೆ ಜ್ಞಾನವೆಂದು ಹೇಳಲಾಗುತ್ತದೆ ಅಂದಾಗ ತಂದೆಯಲ್ಲಿ ಸಂಪೂರ್ಣ ಜ್ಞಾನವಿದೆ, ಜ್ಞಾನ ಸಾಗರ, ಪತಿತ -ಪಾವನನಾಗಿದ್ದಾರೆ. ಕೃಷ್ಣನಿಗೆ ಎಂದೂ ಸಹ ಪತಿತ-ಪಾವನ ಅಥವಾ ಜ್ಞಾನ ಸಾಗರನೆಂದು ಹೇಳುವುದಿಲ್ಲ. ಅವರ ಮಹಿಮೆಯು ಸಂಪೂರ್ಣ ಭಿನ್ನವಾಗಿದೆ. ಇಬ್ಬರೂ ಭಾರತದ ನಿವಾಸಿಗಳಾಗಿದ್ದಾರೆ. ಶಿವ ತಂದೆಯದೂ ಸಹ ಭಾರತದಲ್ಲಿ ಮಹಿಮೆಯಿದೆ. ಶಿವ ಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ, ಕೃಷ್ಣನ ಜಯಂತಿಯನ್ನು ಮತ್ತು ಗೀತಾ ಜಯಂತಿಯನ್ನೂ ಆಚರಿಸುತ್ತಾರೆ. ಮೂರು ಜಯಂತಿಗಳು ಮುಖ್ಯವಾಗಿವೆ ಅಂದಮೇಲೆ ಈಗ ಪ್ರಶ್ನೆಯು ಬರುತ್ತದೆ - ಮೊದಲು ಯಾರ ಜಯಂತಿಯಾಗುವುದು? ಶಿವನದೇ ಅಥವಾ ಕೃಷ್ಣನದೇ? ಮನುಷ್ಯರಂತೂ ತಂದೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕೃಷ್ಣನ ಜಯಂತಿಯನ್ನು ಬಹಳ ಪ್ರೀತಿಯಿಂದ, ವಿಜೃಂಭಣೆಯಿಂದ ಆಚರಿಸುತ್ತಾರೆ. ಶಿವ ಜಯಂತಿಯ ಬಗ್ಗೆ ಯಾರಿಗೂ ಅಷ್ಟು ತಿಳಿದಿಲ್ಲ, ಗಾಯನವೂ ಇಲ್ಲ. ಶಿವನು ಬಂದು ಏನು ಮಾಡಿದರು? ಅವರ ಚರಿತ್ರೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಕೃಷ್ಣನಿಗಾಗಿ ಅನೇಕ ಮಾತುಗಳನ್ನು ಬರೆದಿದ್ದಾರೆ, ಗೋಪಿಕೆಯರನ್ನು ಓಡಿಸಿಕೊಂಡು ಹೋದನು, ಇದನ್ನು ಮಾಡಿದನು, ಅದನ್ನು ಮಾಡಿದನು ಎಂದು. ಕೃಷ್ಣನ ಚರಿತ್ರೆಗಳ ಬಗ್ಗೆ ವಿಶೇಷವಾಗಿ ಒಂದು ಪುಸ್ತಕವು ಹೊರಡುತ್ತದೆ. ಶಿವನ ಚರಿತ್ರೆಯೇನೂ ಇಲ್ಲ. ಕೃಷ್ಣ ಜಯಂತಿ ಯಾವಾಗ ಆಯಿತು ಮತ್ತು ಗೀತಾ ಜಯಂತಿ ಯಾವಾಗ ಆಯಿತು? ಕೃಷ್ಣನು ದೊಡ್ಡವನಾದಾಗಲೇ ಜ್ಞಾನವನ್ನು ತಿಳಿಸಬೇಕಲ್ಲವೆ. ಕೃಷ್ಣನ ಬಾಲ್ಯವನ್ನಂತೂ ತೋರಿಸುತ್ತಾರೆ. ಅವನನ್ನು ಬುಟ್ಟಿಯಲ್ಲಿ ತೆಗೆದುಕೊಂಡು ಹೋಗಿ ಪಾರು ಮಾಡಿದರು ಎಂದು ಬಾಲ್ಯವನ್ನು ತೋರಿಸುತ್ತಾರೆ. ಇನ್ನೊಂದು ಕಡೆ ರಥದ ಮೇಲೆ ನಿಂತು ಚಕ್ರವನ್ನು ತಿರುಗಿಸುತ್ತಿರುವ ಯೌವ್ವನದ ಚಿತ್ರವನ್ನೂ ತೋರಿಸುತ್ತಾರೆ. 16-17 ವರ್ಷದ್ದಿರಬಹುದು ಬಾಕಿ ಬಾಲ್ಯದ ಚಿತ್ರವನ್ನು ತೋರಿಸಿದ್ದಾರೆ. ಈಗ ಗೀತೆಯನ್ನು ಯಾವಾಗ ತಿಳಿಸಿದರು? ಅದೇ ಸಮಯದಲ್ಲಂತೂ ತಿಳಿಸಿರುವುದಿಲ್ಲ. ಇಂತಹವರನ್ನು ಓಡಿಸಿಕೊಂಡು ಹೋದನೆಂದು ಬರೆಯುತ್ತಾರೆ ಅಂದಮೇಲೆ ಆ ಸಮಯದಲ್ಲಿ ಜ್ಞಾನವಂತೂ ಶೋಭಿಸುವುದಿಲ್ಲ. ಜ್ಞಾನವನ್ನು ಯಾವಾಗ ವಯಸ್ಸಾಗುವುದೋ ಆಗ ತಿಳಿಸಬೇಕು. ಗೀತೆಯನ್ನೂ ಸಹ ಸ್ವಲ್ಪ ಸಮಯದ ನಂತರ ತಿಳಿಸಿರಬೇಕು ಆದರೆ ಈ ರೀತಿಯಲ್ಲ. ಶಿವನು ಏನು ಮಾಡಿದನು ಎಂಬುದು ಮನುಷ್ಯರಿಗೆ ಗೊತ್ತಿಲ್ಲ. ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಚರಿತ್ರೆಯ ಬಗ್ಗೆ ಯಾರಿಗೂ ತಿಳಿದಿಲ್ಲ, ನಾನೇನು ಮಾಡಿದೆನು, ನನಗೇ ಪತಿತ-ಪಾವನನೆಂದು ಹೇಳುತ್ತಾರೆ. ನಾನು ಬರುತ್ತೇನೆ ಅಂದರೆ ನನ್ನ ಜೊತೆಯಲ್ಲಿ ಗೀತೆಯಿದೆ. ನಾನು ಸಾಧಾರಣ ವೃದ್ಧ ಅನುಭವೀ ತನುವಿನಲ್ಲಿ ಬರುತ್ತೇನೆ. ನೀವು ಭಾರತದಲ್ಲಿಯೇ ಶಿವ ಜಯಂತಿಯನ್ನಾಚರಿಸುತ್ತೀರಿ. ಕೃಷ್ಣ ಜಯಂತಿ, ಗೀತಾ ಜಯಂತಿ, ಇವು ಮುಖ್ಯವಾಗಿದೆ. ರಾಮನ ಜಯಂತಿಯಂತೂ ಕೊನೆಯಲ್ಲಿ ಆಗುತ್ತದೆ. ಈ ಸಮಯದಲ್ಲಿ ಏನೆಲ್ಲವೂ ಆಗುತ್ತದೆಯೋ ಅದೆಲ್ಲವೂ ನಂತರದಲ್ಲಿ ಆಚರಣೆ ಮಾಡಲಾಗುತ್ತದೆ. ಸತ್ಯ - ತ್ರೇತಾಯುಗದಲ್ಲಿ ಜಯಂತಿಗಳೇನೂ ಇರುವುದಿಲ್ಲ. ಸೂರ್ಯವಂಶಿಯರಿಂದ ಚಂದ್ರವಂಶಿಯರು ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಮತ್ತೇನೂ ಮಹಿಮೆಯಿಲ್ಲ. ಕೇವಲ ರಾಜರ ಪಟ್ಟಾಭಿಷೇಕದ ದಿನಗಳನ್ನು ಆಚರಿಸುತ್ತಾರೆ. ಇತ್ತೀಚೆಗೆ ಜನ್ಮ ದಿನವನ್ನಂತೂ ಎಲ್ಲರೂ ಆಚರಿಸುತ್ತಾರೆ, ಅದು ಸಾಮಾನ್ಯ ಮಾತಾಯಿತು. ಕೃಷ್ಣನು ಜನ್ಮ ಪಡೆದನು ನಂತರ ದೊಡ್ಡವನಾಗಿ ರಾಜಧಾನಿಯನ್ನು ನಡೆಸಿದನು, ಅದರಲ್ಲಿ ಮಹಿಮೆಯ ಮಾತೇ ಇಲ್ಲ. ಸತ್ಯ-ತ್ರೇತಾಯುಗದಲ್ಲಿ ಸುಖದ ರಾಜ್ಯವು ನಡೆಯುತ್ತಾ ಬಂದಿದೆ. ಅದು ಯಾವಾಗ, ಹೇಗೆ ಸ್ಥಾಪನೆಯಾಯಿತು? ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ನಾನು ಬರುತ್ತೇನೆ. ಕಲಿಯುಗದ ಅಂತಿಮವು ಪತಿತ - ಪ್ರಪಂಚವಾಗಿದೆ. ಸತ್ಯಯುಗದ ಆದಿ ಪಾವನ ಪ್ರಪಂಚವಾಗಿರುವುದು. ನಾನು ತಂದೆಯೂ ಆಗಿದ್ದೇನೆ, ನೀವು ಮಕ್ಕಳಿಗೆ ಆಸ್ತಿಯನ್ನೂ ಕೊಡುತ್ತೇನೆ. ಕಲ್ಪದ ಮೊದಲೂ ಸಹ ನಿಮಗೆ ಆಸ್ತಿಯನ್ನು ಕೊಟ್ಟಿದ್ದೆನು. ಆದ್ದರಿಂದ ನೀವು ಆಚರಿಸುತ್ತಾ ಬಂದಿದ್ದೀರಿ ಆದರೆ ಹೆಸರನ್ನು ಮರೆತಿರುವ ಕಾರಣ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಎಲ್ಲರಿಗಿಂತ ದೊಡ್ಡವರು ಶಿವನಾಗಿದ್ದಾರೆ, ಮೊಟ್ಟ ಮೊದಲು ಅವರ ಜಯಂತಿಯಾದಾಗಲೇ ನಂತರ ಸಾಕಾರ ಮನುಷ್ಯರದಾಗುವುದು. ಆತ್ಮರೆಲ್ಲರೂ ವಾಸ್ತವದಲ್ಲಿ ಮೇಲಿನಿಂದ ಇಳಿಯುತ್ತಾರೆ, ನನ್ನದೂ ಅವತರಣೆಯಾಗಿದೆ. ಕೃಷ್ಣನು ತಾಯಿ ಗರ್ಭದಿಂದ ಜನ್ಮ ಪಡೆದನು, ಪಾಲನೆ ಪಡೆದುಕೊಂಡನು. ಎಲ್ಲರೂ ಪುನರ್ಜನ್ಮದಲ್ಲಿ ಬರಲೇಬೇಕಾಗಿದೆ. ಶಿವ ತಂದೆಯು ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಅವರು ಬರುತ್ತಾರಲ್ಲವೆ. ಅಂದಾಗ ತಂದೆಯು ಇದೆಲ್ಲವನ್ನೂ ತಿಳಿಸುತ್ತಾರೆ - ಬ್ರಹ್ಮಾ, ವಿಷ್ಣು, ಶಂಕರರ ತ್ರಿಮೂರ್ತಿ ಚಿತ್ರವನ್ನು ತೋರಿಸುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ಏಕೆಂದರೆ ಶಿವನಿಗಂತೂ ತನ್ನದೇ ಆದ ಶರೀರವಿಲ್ಲ. ಆದ್ದರಿಂದ ಸ್ವಯಂ ಬಂದು ತಿಳಿಸುತ್ತಾರೆ. ನಾನು ಇವರ (ಬ್ರಹ್ಮಾ) ವೃದ್ಧ ತನುವಿನಲ್ಲಿ ಬರುತ್ತೇನೆ, ಇವರ ತಮ್ಮ ಜನ್ಮಗಳ ಬಗ್ಗೆಯೂ ತಿಳಿದುಕೊಂಡಿಲ್ಲ. ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಆದ್ದರಿಂದ ಮೊಟ್ಟ ಮೊದಲು ತಿಳಿಸಬೇಕು – ಶಿವ ಜಯಂತಿ ದೊಡ್ಡದೋ ಅಥವಾ ಕೃಷ್ಣ ಜಯಂತಿ ದೊಡ್ಡದೋ? ಒಂದುವೇಳೆ ಕೃಷ್ಣನು ಗೀತೆಯನ್ನು ತಿಳಿಸಿದ್ದರೆ ಗೀತಾ ಜಯಂತಿಯಂತೂ ಶ್ರೀಕೃಷ್ಣನ ಬಹಳ ವರ್ಷಗಳ ನಂತರ ಯಾವಾಗ ದೊಡ್ಡವನಾಗುವನೋ ಆಗ ಆಗಬೇಕು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಲ್ಲವೆ ಆದರೆ ವಾಸ್ತವದಲ್ಲಿ ಶಿವ ಜಯಂತಿಯ ನಂತರ ಕೂಡಲೇ ಗೀತಾ ಜಯಂತಿಯಾಯಿತು, ಈ ಮಾತುಗಳನ್ನೂ ಸಹ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಮಾತುಗಳಂತೂ ಬಹಳಷ್ಟಿದೆ. ಇವನ್ನು ಬರೆದಿಟ್ಟುಕೊಳ್ಳದೇ ನೆನಪಿರಲು ಸಾಧ್ಯವಿಲ್ಲ. ತಂದೆಯು ಎಷ್ಟು ಸಮೀಪವಿದ್ದಾರೆ, ಅವರಿಗೆ ರಥವೂ ಇದೆ. ತಂದೆಯು ತಿಳಿಸುತ್ತಾರೆ - ಇವೆಲ್ಲಾ ಜ್ಞಾನ ಬಿಂದುಗಳು ಸಮಯದಲ್ಲಿ ನೆನಪಿಗೆ ಬರುವುದು ಅಸಂಭವವಾಗಿದೆ. ತಂದೆಯು ತಿಳಿಸಿದ್ದಾರೆ - ಎಲ್ಲರಿಗೆ ಇಬ್ಬರು ತಂದೆಯರ ರಹಸ್ಯವನ್ನು ತಿಳಿಸಿ. ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಬಂದಿರಬೇಕು. ಹೇಗೆ ಕ್ರಿಸ್ತ, ಬುದ್ಧ ಮೊದಲಾದವರು ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಈಗಲೂ ಸಹ ಆತ್ಮವು ಬಂದು ಪ್ರವೇಶ ಮಾಡಿ ಧರ್ಮ ಸ್ಥಾಪನೆ ಮಾಡುತ್ತದೆ. ಇವರು ಸ್ವರ್ಗದ ರಚಯಿತ, ಸೃಷ್ಟಿಯ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಹೊಸ ಸೃಷ್ಟಿಯನ್ನು ರಚಿಸುತ್ತಾರೆ, ಹಳೆಯದನ್ನು ರಚಿಸುವುದಿಲ್ಲ. ಹೊಸ ಸೃಷ್ಟಿಗೆ ಸ್ವರ್ಗವೆಂದು ಹೇಳಲಾಗುತ್ತದೆ, ಈಗ ನರಕವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮದಲ್ಲಿ ಬಂದು ನೀವು ಮಕ್ಕಳಿಗೆ ರಾಜಯೋಗದ ಜ್ಞಾನವನ್ನು ಕೊಡುತ್ತೇನೆ. ಇದು ಭಾರತದ ಪ್ರಾಚೀನ ಯೋಗವಾಗಿದೆ, ಇದನ್ನು ಯಾರು ಕಲಿಸಿದರು? ಶಿವ ತಂದೆಯ ಹೆಸರನ್ನಂತೂ ಮರೆ ಮಾಡಿ ಬಿಟ್ಟಿದ್ದಾರೆ. ಮೊದಲನೆಯದಾಗಿ ಗೀತೆಯ ಭಗವಂತನು ಶ್ರೀಕೃಷ್ಣನೆಂದು ಹೇಳುತ್ತಾರೆ ಮತ್ತು ವಿಷ್ಣು ಮೊದಲಾದ ಹೆಸರುಗಳನ್ನು ಕೊಟ್ಟು ಬಿಡುತ್ತಾರೆ. ಶಿವ ತಂದೆಯು ರಾಜಯೋಗವನ್ನು ಕಲಿಸಿದ್ದರು. ಇದು ಯಾರಿಗೂ ತಿಳಿದಿಲ್ಲ. ಶಿವ ಜಯಂತಿಯು ನಿರಾಕಾರನ ಜಯಂತಿಯನ್ನೇ ತೋರಿಸುತ್ತಿರುತ್ತಾರೆ, ಅವರು ಹೇಗೆ ಬಂದರು, ಬಂದು ಏನು ಮಾಡಿದರು? ಅವರು ಸರ್ವರ ಸದ್ಗತಿದಾತ, ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಈಗ ಸರ್ವ ಆತ್ಮರಿಗೆ ಪರಮಾತ್ಮ ಮಾರ್ಗದರ್ಶಕನು ಬೇಕಾಗಿದೆ. ಅವರೂ ಆತ್ಮನೇ ಆಗಿದ್ದಾರೆ. ಹೇಗೆ ಮನುಷ್ಯರ ಮಾರ್ಗದರ್ಶಕರು ಮನುಷ್ಯರೇ ಆಗಿರುತ್ತಾರೆ ಹಾಗೆಯೇ ಆತ್ಮರಿಗೂ ಮಾರ್ಗದರ್ಶಕನು ಆತ್ಮನೇ ಆಗಿರಬೇಕು. ಅವರಿಗೆ ಪರಮಾತ್ಮನೆಂದೇ ಹೇಳಲಾಗುತ್ತದೆ. ಮನುಷ್ಯರೆಲ್ಲರೂ ಪುನರ್ಜನ್ಮವನ್ನು ತೆಗೆದುಕೊಂಡು ಪತಿತರಾಗಿದ್ದಾರೆ. ಮತ್ತೆ ಪಾವನರನ್ನಾಗಿ ಮಾಡಿ ಮರಳಿ ಕರೆದುಕೊಂಡು ಹೋಗುವವರು ಯಾರು? ತಂದೆಯು ತಿಳಿಸುತ್ತಾರೆ - ಮಕ್ಕಳೇ ನಾನೇ ಬಂದು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತೇನೆ. ನೀವು ನನ್ನನ್ನು ನೆನಪು ಮಾಡಿ. ದೇಹದ ಸಂಬಂಧಗಳನ್ನು ಬಿಡಿ ಎಂದು ಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನಂತೂ 84 ಜನ್ಮಗಳನ್ನು ತೆಗೆದುಕೊಂಡು ಎಲ್ಲಾ ಸಂಬಂಧಗಳಲ್ಲಿ ಬರುತ್ತಾನೆ. ತಂದೆಗೆ ತನ್ನ ಶರೀರವಿಲ್ಲ. ನಿಮಗೆ ಈ ಆತ್ಮಿಕ ಯಾತ್ರೆಯನ್ನು ತಂದೆಯೇ ಕಲಿಸುತ್ತಾರೆ. ಇದು ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಜ್ಞಾನವಾಗಿದೆ. ಕೃಷ್ಣನು ಆತ್ಮಿಕ ತಂದೆಯಲ್ಲ. ಎಲ್ಲರಿಗೆ ಆತ್ಮಿಕ ತಂದೆಯು ನಾನಾಗಿದ್ದೇನೆ. ನಾನೇ ಮಾರ್ಗದರ್ಶಕನಾಗಬಲ್ಲೆನು, ಮುಕ್ತಿದಾತ, ಮಾರ್ಗದರ್ಶಕ, ಆನಂದ ಸಾಗರ, ಶಾಂತಿಯ ಸಾಗರ, ಪತಿತ ಪಾವನ ಎಲ್ಲಾ ಹೆಸರುಗಳನ್ನು ನನಗಾಗಿಯೇ ಹೇಳುತ್ತಾರೆ. ಈಗ ನೀವಾತ್ಮರಿಗೆ ಆ ತಂದೆಯೇ ಜ್ಞಾನವನ್ನು ಕೊಡುತ್ತಿದ್ದಾರೆ. ನಾನು ಈ ಶರೀರದ ಮೂಲಕ ಜ್ಞಾನವನ್ನು ಕೊಡುತ್ತಿದ್ದೇನೆ. ನೀವೂ ಸಹ ಶರೀರದ ಮೂಲಕ ಜ್ಞಾನವನ್ನು ಪಡೆಯುತ್ತಿದ್ದೀರಿ. ಅವರು ಪರಮ ಆತ್ಮನಾಗಿದ್ದಾರೆ. ಅವರ ರೂಪವನ್ನೂ ತಿಳಿಸಿದ್ದಾರೆ. ಹೇಗೆ ಆತ್ಮವು ಬಿಂದುವಾಗಿದೆಯೋ ಹಾಗೆಯೇ ಪರಮಾತ್ಮನೂ ಬಿಂದುವಾಗಿದ್ದಾರೆ. ಇದು ಸೃಷ್ಟಿಯಲ್ಲವೆ. ವಾಸ್ತವದಲ್ಲಿ ಇದು ಅತಿ ದೊಡ್ಡ ಸೃಷ್ಟಿ (ಲೀಲೆ) ಯು ಇದಾಗಿದೆ. ಎಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮಗಳ ಪಾತ್ರವಿದೆ. ಇದು ಸೃಷ್ಟಿಯ ಲೀಲೆಯಾಗಿದೆ. ತಂದೆಯದೂ ಡ್ರಾಮಾದಲ್ಲಿ ಪಾತ್ರವಿದೆ. ಭಕ್ತಿಮಾರ್ಗದಲ್ಲಿಯೂ ನಿಮ್ಮ ಸೇವೆ ಮಾಡುತ್ತಾರೆ. ನೀವಾತ್ಮರಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವಿದೆ. ಇದಕ್ಕೆ ವಿಧಿ ಲೀಲೆಯೆಂದು ಹೇಳಲಾಗುತ್ತದೆ. ಇದರ ವರ್ಣನೆಯನ್ನು ಹೇಗೆ ಮಾಡುವುದು! ಇಷ್ಟು ಸೂಕ್ಷ್ಮ ಆತ್ಮವಾಗಿದೆ. ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆಶ್ಚರ್ಯ ಚಕಿತರಾಗುತ್ತಾರೆ. ಆತ್ಮವಿರುವುದೇ ಬಿಂದುವಿನ ತರಹ ಆದರೆ ಅದು , 84 ಜನ್ಮಗಳನ್ನು ಆಕ್ಯುರೇಟ್ ಅನುಭವಿಸುತ್ತದೆ. ಸುಖವನ್ನೂ ಸಹ ಅದು ನಿಖರವಾಗಿ ಭೋಗಿಸುತ್ತದೆ. ಇದು ಸೃಷ್ಟಿಯ ಲೀಲೆಯಾಗಿದೆ. ತಂದೆಯೂ ಆತ್ಮನಾಗಿದ್ದಾರೆ ಆದರೆ ಪರಮ ಆತ್ಮನಾಗಿದ್ದಾರೆ. ಅವರಲ್ಲಿ ಸಂಪೂರ್ಣ ಜ್ಞಾನವು ಅಡಕವಾಗಿದೆ, ಅದನ್ನು ಮಕ್ಕಳಿಗೆ ತಿಳಿಸುತ್ತಾರೆ. ಇವು ಹೊಸ ಮಾತುಗಳಾಗಿವೆ. ಹೊಸ ಮನುಷ್ಯರು ಕೇಳಿ ಇವರ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲವೆಂದು ಹೇಳುತ್ತಾರೆ. ಆದರೂ ಸಹ ಯಾರು ಕಲ್ಪದ ಹಿಂದೆ ಕೇಳಿದ್ದಾರೆಯೋ ಆಸ್ತಿಯನ್ನು ತೆಗೆದುಕೊಂಡಿದ್ದಾರೆಯೋ ಅವರೇ ವೃದ್ಧಿಯಾಗುತ್ತಿರುತ್ತಾರೆ. ಸಮಯ ಹಿಡಿಸುತ್ತದೆ. ಪ್ರಜೆಗಳು ಅನೇಕರು ತಯಾರಾಗುತ್ತಾರೆ. ಅದಂತೂ ಸಹಜವಾಗಿದೆ, ರಾಜರಾಗುವುದರಲ್ಲಿ ಪರಿಶ್ರಮವಿದೆ. ಮನುಷ್ಯರು ಯಾರು ಬಹಳ ಧನದಾನ ಮಾಡುವರೋ ಅವರು ರಾಜನ ಮನೆಯಲ್ಲಿ ಜನ್ಮ ಪಡೆಯುತ್ತಾರೆ. ಬಡವರೂ ಸಹ ತನ್ನ ಶಕ್ತಿಯನುಸಾರ ದಾನ-ಧರ್ಮಗಳನ್ನು ಮಾಡುವರು. ಅವರೂ ಸಹ ರಾಜರಾಗುತ್ತಾರೆ. ಯಾರು ಪೂರ್ಣ ಭಕ್ತರಾಗಿರುವರೋ ಅವರು ದಾನ ಪುಣ್ಯಗಳನ್ನು ಮಾಡುತ್ತಾರೆ. ಸಾಹುಕಾರರಿಂದ ಹೆಚ್ಚು ಪಾಪಗಳಾಗುತ್ತಿರುತ್ತವೆ. ಬಡವರಲ್ಲಿ ಬಹಳ ಶ್ರದ್ಧೆಯಿರುತ್ತದೆ. ಅವರು ಬಹಳ ಪ್ರೀತಿಯಿಂದ ಸ್ವಲ್ಪವಾದರೂ ದಾನ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ಬಹಳಷ್ಟು ಸಿಗುತ್ತದೆ. ಬಡವರು ಭಕ್ತಿಯನ್ನೂ ಸಹ ಬಹಳ ಮಾಡುತ್ತಾರೆ. ದರ್ಶನ ನೀಡಿ ಇಲ್ಲವಾದರೆ ನಾವು ನಮ್ಮ ತಲೆಯನ್ನು ತೆಗೆದಿಡುತ್ತೇವೆ ಎನ್ನುವುದಕ್ಕೂ ಸಿದ್ಧರಿರುತ್ತಾರೆ. ಸಾಹುಕಾರರು ಈ ರೀತಿ ಮಾಡುವುದಿಲ್ಲ. ಬಡವರಿಗೇ ಸಾಕ್ಷಾತ್ಕಾರವಾಗುತ್ತದೆ. ಅವರೇ ದಾನ ಪುಣ್ಯ ಮಾಡುತ್ತಾರೆ, ಅವರೇ ರಾಜರಾಗುತ್ತಾರೆ. ಹಣವಿರುವವರಿಗೆ ಅಹಂಕಾರವಿರುತ್ತದೆ, ಬಡವರಿಗೆ ಇಲ್ಲಿಯೂ 21 ಜನ್ಮದ ಸುಖ ಸಿಗುತ್ತದೆ. ಹೆಚ್ಚು ಬಡವರಿದ್ದಾರೆ, ಸಾಹುಕಾರರು ಕೊನೆಯಲ್ಲಿ ಬರುತ್ತಾರೆ. ಯಾವ ಭಾರತವು ಇಷ್ಟು ಶ್ರೇಷ್ಠವಾಗಿತ್ತು ಅದು ಹೇಗೆ ಬಡ ದೇಶವಾಯಿತು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭೂಕಂಪ ಇತ್ಯಾದಿಗಳಲ್ಲಿ ಎಲ್ಲಾ ಮಹಲುಗಳು ಹೊರಟು ಹೋಗುತ್ತವೆ ಮತ್ತೆ ಭಾರತವು ಬಡದೇಶವಾಗಿ ಬಿಡುತ್ತದೆ. ರಾವಣ ರಾಜ್ಯವಾಗುವುದರಿಂದ ಹಾಹಾಕಾರವಾಗಿ ಬಿಡುತ್ತದೆ ಮತ್ತು ಅಂತಹ ವಸ್ತುಗಳಿರಲು ಸಾಧ್ಯವಿಲ್ಲ. ಪ್ರತಿಯೊಂದು ವಸ್ತುವಿಗೂ ಆಯಸ್ಸು ಇರುತ್ತದೆಯಲ್ಲವೆ. ಅಲ್ಲಿ ಹೇಗೆ ಮನುಷ್ಯರದು ಧೀರ್ಘಾಯಸ್ಸು ಇರುತ್ತದೆಯೋ ಹಾಗೆಯೇ ಮನೆಗೂ ಧೀರ್ಘಾಯಸ್ಸು ಇರುತ್ತದೆ. ಚಿನ್ನ ಮತ್ತು ಮಾರ್ಬಲ್ನಿಂದ ದೊಡ್ಡ-ದೊಡ್ಡ ಮನೆಗಳನ್ನು ಕಟ್ಟಿಸುತ್ತಾರೆ. ಚಿನ್ನದ್ದಂತೂ ಇನ್ನೂ ಬಲವಾಗಿರುತ್ತದೆ. ನಾಟಕದಲ್ಲಿ ತೋರಿಸುತ್ತಾರಲ್ಲವೆ - ಯುದ್ಧವಾದಾಗ ಮನೆಗಳೆಲ್ಲವೂ ಒಡೆದು ಬಿದ್ದು ಹೋಗುತ್ತದೆ, ಮತ್ತೆ ಆಗಿ ಬಿಡುತ್ತದೆ. ಕೇವಲ ಚಿತ್ರಗಳಲ್ಲಿ ಕೃತಕವಾಗಿ ತೋರಿಸುತ್ತಾರೆ ಆದರೆ ಯಾವ ಸ್ವರ್ಗದ ಮಹಲು ಇತ್ಯಾದಿಗಳನ್ನು ಕಟ್ಟಿಸುತ್ತಾರೆಯೋ ಅವರು ಮೇಸ್ತ್ರಿಗಳು ಮನೆಯನ್ನು ಹೇಗೆ ಕಟ್ಟುವರೆಂದು ತೋರಿಸುವುದಿಲ್ಲ ಕೇವಲ ಹಾಗೆಯೇ ತೋರಿಸುತ್ತಾರೆ. ಮುಂದೆ ಹೋದಂತೆ ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಹೀಗೆ ವಿವೇಕವು ಹೇಳುತ್ತದೆ. ಈ ಮಾತುಗಳೊಂದಿಗೆ ಮಕ್ಕಳಿಗೆ ಸಂಬಂಧವಿಲ್ಲ, ನೀವು ಮಕ್ಕಳಂತೂ ಓದಬೇಕಾಗಿದೆ, ಸ್ವರ್ಗದ ಮಾಲೀಕರಾಗಬೇಕಾಗಿದೆ. ಸ್ವರ್ಗ ಮತ್ತು ನರಕವು ಅನೇಕ ಬಾರಿ ಕಳೆದಿದೆ. ಈಗ ಎರಡೂ ಇಲ್ಲ. ಇದು ಸಂಗಮವಾಗಿದೆ. ಸತ್ಯಯುಗದಲ್ಲಿ ಈ ಜ್ಞಾನವಿರುವುದಿಲ್ಲ. ನೀವು ಮಕ್ಕಳಿಗೆ ಈಗ ಸಂಪೂರ್ಣ ಜ್ಞಾನವಿದೆ. ಲಕ್ಷ್ಮಿ - ನಾರಾಯಣರಿಗೆ ಈ ರಾಜ್ಯವನ್ನು ಯಾರು ಕೊಟ್ಟಿದ್ದರು ಎಂಬುದು ಈಗ ನೀವು ಮಕ್ಕಳಿಗೆ ಅರ್ಥವಾಗಿದೆ. ಇವರು ಈ ಆಸ್ತಿಯನ್ನು ಯಾರಿಂದ ಪಡೆದರು? ಇಲ್ಲಿಯೇ ವಿದ್ಯೆಯನ್ನು ಓದಿ ಸ್ವರ್ಗದ ಮಾಲೀಕರಾಗುತ್ತಾರೆ ನಂತರ ಅಲ್ಲಿಗೆ ಹೋಗಿ ಮಹಲು ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಸರ್ಜನ್ಗಳು ದೊಡ್ಡ-ದೊಡ್ಡ ಆಸ್ಪತ್ರೆಗಳನ್ನು ಕಟ್ಟಿಸುತ್ತಾರಲ್ಲವೆ.
ತಂದೆಯು ನೀವು ಮಕ್ಕಳಿಗೆ ದಿನ-ಪ್ರತಿದಿನ ಒಳೊಳ್ಳೆಯ ಮಾತುಗಳನ್ನು ತಿಳಿಸುತ್ತಿದ್ದಾರೆ. ನಿಮ್ಮ ಕರ್ತವ್ಯವೇ ಆಗಿದೆ – ಮನುಷ್ಯರನ್ನು ಜಾಗೃತಗೊಳಿಸುವುದು, ಮಾರ್ಗವನ್ನು ತಿಳಿಸುವುದು. ಹೇಗೆ ತಂದೆಯು ಎಷ್ಟು ಪ್ರೀತಿಯಿಂದ ತಿಳಿಸಿಕೊಡುತ್ತಾರೆ ಅಂದಾಗ ದೇಹಾಭಿಮಾನದ ಅವಶ್ಯಕತೆಯೇ ಇಲ್ಲ. ತಂದೆಗೆ ಎಂದೂ ದೇಹಾಭಿಮಾನವಿರಲು ಸಾಧ್ಯವಿಲ್ಲ. ದೇಹಿ-ಅಭಿಮಾನಿ ಆಗುವುದರಲ್ಲಿಯೇ ನಿಮಗೆ ಪರಿಶ್ರಮವಾಗುತ್ತದೆ. ಯಾರು ದೇಹಿ ಅಭಿಮಾನಿಯಾಗಿ ತಂದೆಯ ಪರಿಚಯ ಕೊಡುವರೋ ಅವರು ಅನೇಕರ ಕಲ್ಯಾಣ ಮಾಡುತ್ತಾರೆಂದರ್ಥ. ಮೊದಲು ದೇಹಾಭಿಮಾನವು ಬರುವುದರಿಂದ ಮತ್ತೆಲ್ಲಾ ವಿಕಾರಗಳು ಬರುತ್ತವೆ. ಹೊಡೆದಾಡುವುದು, ಜಗಳವಾಡುವುದು, ಸ್ವ ಪ್ರತಿಷ್ಠೆಯಿಂದ ನಡೆಯುವುದು, ದೇಹಾಭಿಮಾನವಾಗಿದೆ. ಭಲೆ ನಿಮ್ಮದು ರಾಜಯೋಗವಾಗಿದೆ, ಆದರೂ ಸಹ ಬಹಳ ಸಾಧಾರಣವಾಗಿರಬೇಕಾಗಿದೆ. ಚಿಕ್ಕ ವಸ್ತುಗಳಲ್ಲಿಯೇ ಅಹಂಕಾರವು ಬಂದು ಬಿಡುತ್ತದೆ, ಬಹಳ ಫ್ಯಾಷನ್ ಆಗಿರುವ ಗಡಿಯಾರವನ್ನು ನೋಡಿದರೆ ಅದನ್ನು ಧರಿಸೋಣವೆಂದು ಮನಸ್ಸಾಗುತ್ತದೆ, ಸಂಕಲ್ಪ ನಡೆಯುತ್ತಿರುತ್ತದೆ. ಇದಕ್ಕೂ ಸಹ ದೇಹಾಭಿಮಾನವೆಂದು ಹೇಳಲಾಗುತ್ತದೆ. ಬಹಳ ಒಳ್ಳೆಯ ಉನ್ನತ ವಸ್ತುವಾಗಿದ್ದರೆ ಅದನ್ನು ಸಂಭಾಲನೆ ಮಾಡಬೇಕಾಗಿದೆ ಏಕೆಂದರೆ ಒಂದುವೇಳೆ ಯಾರಾದರೂ ಅದನ್ನು ಕಳ್ಳತನ ಮಾಡಿದರೆ ಸಂಕಲ್ಪ ನಡೆಯುತ್ತದೆ. ಅಂತಿಮ ಸಮಯದಲ್ಲಿ ಏನು ನೆನಪಿಗೆ ಬಂದರೂ ಸಹ ಪದವಿ ಭ್ರಷ್ಟವಾಗುವುದು. ಇದು ದೇಹಾಭಿಮಾನದ ಹವ್ಯಾಸಗಳಾಗಿವೆ. ಅಂತಹವರು ಸೇವೆಯ ಬದಲು ಸೇವಾಭಂಗ ಮಾಡುತ್ತಾರೆ. ರಾವಣನು ನಿಮ್ಮನ್ನು ದೇಹಾಭಿಮಾನಿಗಳನ್ನಾಗಿ ಮಾಡಿದ್ದಾನೆ. ನೀವು ನೋಡುತ್ತೀರಿ – ಬ್ರಹ್ಮ ತಂದೆಯು ಎಷ್ಟು ಸಾಧಾರಣವಾಗಿ ನಡೆಯುತ್ತಾರೆ! ಪ್ರತಿಯೊಬ್ಬರ ಸೇವೆಯನ್ನು ನೋಡಲಾಗುತ್ತದೆ. ಮಹಾರಥಿ ಮಕ್ಕಳು ತಮ್ಮ ಪ್ರತ್ಯಕ್ಷತೆ ಮಾಡಬೇಕಾಗಿದೆ. ನೀವು ಇಂತಹ ಸ್ಥಳಕ್ಕೆ ಹೋಗಿ ಭಾಷಣ ಮಾಡಿ ಎಂದು ಮಹಾರಥಿಗಳಗೇ ಹೇಳಲಾಗುತ್ತದೆ. ಒಬ್ಬರು ಇನ್ನೊಬ್ಬರನ್ನು ಕರೆಸುತ್ತಾರೆ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿರುತ್ತದೆ. ಭಾಷಣದಲ್ಲಿ ಭಲೆ ಚೆನ್ನಾಗಿದ್ದಾರೆ ಆದರೆ ಪರಸ್ಪರ ಆತ್ಮಿಕ ಸ್ನೇಹವಿಲ್ಲ. ದೇಹಾಭಿಮಾನವು ಉಪ್ಪು ನೀರನ್ನಾಗಿ ಮಾಡಿ ಬಿಡುತ್ತದೆ. ಯಾವುದೇ ಮಾತಿನಲ್ಲಿ ಕೂಡಲೇ ಮುನಿಸಿಕೊಳ್ಳುವುದೂ ಇರಬಾರದು. ಆದ್ದರಿಂದ ತಂದೆಯು ಹೇಳುತ್ತಾರೆ - ಯಾರಾದರೂ ಕೇಳುವುದಿದ್ದರೆ ಬಂದು ತಂದೆಯೊಂದಿಗೆ ಕೇಳಿರಿ. ಬಾಬಾ, ತಮಗೆ ಎಷ್ಟು ಮಂದಿ ಮಕ್ಕಳು ಎಂದು ಯಾರಾದರೂ ಕೇಳಿದರೆ ಹೇಳುತ್ತೇನೆ - ಮಕ್ಕಳಂತೂ ಎಣಿಸಲಾರದಷ್ಟು ಮಂದಿ ಮಕ್ಕಳಿದ್ದಾರೆ. ಆದರೆ ಕೆಲವರು ಕುಪುತ್ರರು, ಕೆಲವರು ಒಳ್ಳೊಳ್ಳೆಯ ಸುಪುತ್ರರಿದ್ದಾರೆ. ಇಂತಹ ತಂದೆಗೆ ಆಜ್ಞಾಕಾರಿಗಳು ಪ್ರಾಮಾಣಿಕರಾಗಬೇಕಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದೇಹಾಭಿಮಾನದಲ್ಲಿ ಬಂದು ಯಾವುದೇ ಪ್ರಕಾರದ ಫ್ಯಾಷನ್ ಮಾಡಬಾರದು. ಹೆಚ್ಚು ಆಸಕ್ತಿ ಇಡಬಾರದು. ಬಹಳ-ಬಹಳ ಸಾಧಾರಣವಾಗಿ ನಡೆಯಬೇಕಾಗಿದೆ.
2. ಪರಸ್ಪರ ಬಹಳ-ಬಹಳ ಆತ್ಮಿಕ ಸ್ನೇಹದಿಂದ ನಡೆಯಬೇಕು. ಎಂದೂ ಉಪ್ಪು ನೀರಾಗಬಾರದು. ತಂದೆಯ ಸುಪುತ್ರ ಮಗುವಾಗಬೇಕು. ಅಹಂಕಾರದಲ್ಲಿ ಎಂದೂ ಬರಬಾರದು.
ಓಂ ಶಾಂತಿ. ಈ ಗೀತೆಯಲ್ಲಿ ಹೇಗೆ ತಮ್ಮ ಮಹಿಮೆ ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ತನ್ನ ಮಹಿಮೆ ಮಾಡಿಕೊಳ್ಳುವುದಿಲ್ಲ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾವ ಭಾರತವಾಸಿಗಳು ಬಹಳ ಬುದ್ಧಿವಂತರಾಗಿದ್ದರೋ ಅವರೇ ಈಗ ಬುದ್ದಿಹೀನರಾಗಿದ್ದಾರೆ ಅಂದಮೇಲೆ ಈಗ ಬುದ್ದಿವಂತರು ಯಾರೆಂದು ಪ್ರಶ್ನೆ ಉದ್ಭವಿಸುತ್ತದೆ. ಇದನ್ನು ಎಲ್ಲಿಯೂ ಬರೆದಿಲ್ಲ, ನೀವು ಗುಪ್ತವಾಗಿದ್ದೀರಿ. ಎಷ್ಟೊಂದು ಅದ್ಭುತ ಮಾತುಗಳಾಗಿವೆ! ಒಂದಂತೂ ತಂದೆಯು ತಿಳಿಸುತ್ತಾರೆ - ನನ್ನ ಮೂಲಕವೇ ನನ್ನನ್ನು ಮಕ್ಕಳು ಅರಿತುಕೊಳ್ಳಬಹುದಾಗಿದೆ. ಮತ್ತೆ ನನ್ನ ಮೂಲಕ ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಯಾವ ಆಟವಿದೆಯೋ ಅದನ್ನೂ ತಿಳಿದುಕೊಳ್ಳುತ್ತಾರೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ ಮತ್ತು ಮುಖ್ಯವಾಗಿ ಒಂದು ತಪ್ಪನ್ನು ಮಾಡಿದ್ದಾರೆ, ನಿರಾಕಾರ ಪರಮಪಿತ ಪರಮಾತ್ಮ ಶಿವನ ಬದಲು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮೊದಲ ನಂಬರಿನ ಶಾಸ್ತ್ರ ಯಾವುದಕ್ಕೆ ಶ್ರೀ ಮತ್ಭಗವದ್ಗೀತೆ ಎಂದು ಹೇಳುವರೋ ಅದೇ ತಪ್ಪಾಗಿ ಬಿಟ್ಟಿದೆ. ಆದ್ದರಿಂದ ಮೊಟ್ಟ ಮೊದಲು ಸಿದ್ಧ ಮಾಡಬೇಕಾಗಿದೆ - ಭಗವಂತನು ಒಬ್ಬರೇ ಆಗಿದ್ದಾರೆ, ಅಂದಮೇಲೆ ಕೇಳಿರಿ - ಗೀತೆಯ ಭಗವಂತ ಯಾರು? ಭಾರತದ ಆದಿಸನಾತನ ದೇವಿ-ದೇವತಾಧರ್ಮವಾಗಿದೆ. ಒಂದುವೇಳೆ ಹೊಸಧರ್ಮವೆಂದು ಹೇಳುವುದಾದರೆ ಬ್ರಾಹ್ಮಣ ಧರ್ಮವೆಂದೇ ಹೇಳಬಹುದು. ಮೊದಲು ಶಿಖೆಗೆ ಸಮಾನ ಬ್ರಾಹ್ಮಣರಾಗಿದ್ದಾರೆ, ನಂತರ ದೇವತೆಗಳು. ಬ್ರಾಹ್ಮಣ ಧರ್ಮವು ಸರ್ವ ಶ್ರೇಷ್ಠವಾಗಿದೆ. ಯಾವ ಬ್ರಾಹ್ಮಣರನ್ನು ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮನೇ ರಚಿಸುತ್ತಾರೆ ಮತ್ತೆ ಅದೇ ಬ್ರಾಹ್ಮಣರು ನಂತರ ದೇವತೆಗಳಾಗುತ್ತಾರೆ. ಮುಖ್ಯ ಮಾತೇನೆಂದರೆ ಭಗವಂತನು ಎಲ್ಲರ ತಂದೆಯಾಗಿದ್ದಾರೆ, ಹೊಸ ಪ್ರಪಂಚದ ರಚಯಿತನಾಗಿದ್ದಾರೆ. ಅಂದಮೇಲೆ ಅವಶ್ಯವಾಗಿ ಹೊಸ ಪ್ರಪಂಚವನ್ನೇ ರಚಿಸುತ್ತಾರಲ್ಲವೆ, ಹೊಸ ಪ್ರಪಂಚದಲ್ಲಿ ಹೊಸ ಭಾರತವಿರುತ್ತದೆ. ಭಾರತದಲ್ಲಿಯೇ ಅವತರಿಸಿದ್ದಾರೆ. ಭಾರತವನ್ನೇ ಬ್ರಹ್ಮಾರವರ ಮೂಲಕ ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಓದಿಸುತ್ತಾರೆ. ಮೊದಲು ನೀವು ಶೂದ್ರ ವರ್ಣದವರಾಗಿದ್ದಿರಿ, ನಂತರ ಬ್ರಾಹ್ಮಣ ವರ್ಣದಲ್ಲಿ, ಅನಂತರ ದೈವೀ ವರ್ಣದಲ್ಲಿ ಬಂದಿರಿ. ಕೊನೆಯಲ್ಲಿ ವೃದ್ಧಿಯಾಗುತ್ತಿರುತ್ತದೆ. ಒಂದು ಧರ್ಮದಿಂದ ಅನೇಕ ಧರ್ಮಗಳಾಗಿ ಬಿಡುತ್ತವೆ. ಎಲ್ಲಾ ಧರ್ಮಗಳ ರೆಂಬೆ-ಕೊಂಬೆಗಳು ಬಂದು ಬಿಡುತ್ತವೆ. ಪ್ರತಿಯೊಂದು ಧರ್ಮದಿಂದ ಅನೇಕ ಶಾಖೆಗಳು ಹೊರಡುತ್ತವೆ. ಮೂರು ಧರ್ಮಗಳು ಸ್ಥಾಪನೆಯಾಗುತ್ತವೆಯಲ್ಲವೆ. ಇದು ಮುಖ್ಯವಾಗಿದೆ. ಪ್ರತಿಯೊಂದು ಧರ್ಮದಿಂದ ತನ್ನ ತನ್ನದೆ ಶಾಖೆಗಳು ಹೊರಡುತ್ತವೆ. ಮುಖ್ಯ ತಳಪಾಯವು ಒಂದು ಆಗಿದೆ, ಮತ್ತೆ ಅದರಿಂದ ಮುಖ್ಯ ಮೂರು ಶಾಖೆಗಳವೆ. ಬುಡವು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ ಯಾರು ಈಗ ರಾಜಯೋಗವನ್ನು ಕಲಿಯುತ್ತಿದ್ದೀರಿ. ದಿಲ್ವಾಡಾ ಮಂದಿರವು ಬಹಳ ಚೆನ್ನಾಗಿ ಮಾಡಲ್ಪಟ್ಟಿದೆ, ಅದರಲ್ಲಿ ಎಲ್ಲವನ್ನೂ ತಿಳಿಸಬೇಕಾಗಿದೆ. ಮಕ್ಕಳು ಇಲ್ಲಿ ಕುಳಿತಿದ್ದೀರಿ, ಕಲ್ಪದ ಮೊದಲೂ ಸಹ ನೀವು ರಾಜಯೋಗದ ತಪಸ್ಸು ಮಾಡಿದ್ದಿರಿ, ಹೇಗೆ ಕ್ರಿಸ್ತನ ನೆನಪಾರ್ಥವು ಕ್ರಿಶ್ಚಿಯನ್ ದೇಶದಲ್ಲಿದೆ ಹಾಗೆಯೇ ನೀವು ಮಕ್ಕಳೂ ಇಲ್ಲಿ ತಪಸ್ಸು ಮಾಡಿದ್ದೀರಿ, ಆದ್ದರಿಂದ ನಿಮ್ಮ ನೆನಪಾರ್ಥವೂ ಇಲ್ಲಿಯೇ ಇದೆ. ಬಹಳ ಸಹಜವಾಗಿದೆ ಆದರೆ ಯಾರೂ ತಿಳಿದುಕೊಂಡಿಲ್ಲ. ಇದೆಲ್ಲವೂ ಕಲ್ಪನೆಯಾಗಿದೆ, ಯಾರು ಹೇಗಾದರೂ ಕಲ್ಪನೆ ಮಾಡಿಕೊಳ್ಳಬಹುದೆಂದು ಸನ್ಯಾಸಿಗಳು ಹೇಳಿಬಿಡುತ್ತಾರೆ. ನಿಮಗೂ ಸಹ ಹೇಳುತ್ತಾರೆ - ನಿಮ್ಮ ಚಿತ್ರಗಳೆಲ್ಲವೂ ಕಲ್ಪನೆಯಿಂದ ಮಾಡಿಸಿದ್ದೀರಿ ಎಂದು. ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಕಲ್ಪನೆಯೆಂದೇ ತಿಳಿದುಕೊಳ್ಳುತ್ತಾರೆ. ಜ್ಞಾನಪೂರ್ಣನು ತಂದೆಯೇ ಅಲ್ಲವೆ ಆದ್ದರಿಂದ ಮುಖ್ಯವಾಗಿ ತಂದೆಯ ಪರಿಚಯ ಕೊಡಬೇಕಾಗಿದೆ. ಆ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಕಲ್ಪದ ಹಿಂದೆಯೂ ಕೊಟ್ಟಿದ್ದರು ನಂತರ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಮತ್ತೆ ಸಂಗಮಯುಗದಲ್ಲಿ ತಂದೆಯು ಬಂದು ರಾಜಧಾನಿಯ ಸ್ಥಾಪನೆ ಮಾಡುತ್ತಾರೆ. ನೀವು ಮಕ್ಕಳು ತಂದೆಯ ಮೂಲಕ ಅರಿತುಕೊಂಡಿದ್ದೀರಿ. ಯಾವಾಗ ಚೆನ್ನಾಗಿ ತಿಳಿದುಕೊಂಡು ಬುದ್ಧಿಯಲ್ಲಿ ಕುಳಿತುಕೊಳ್ಳುವುದೋ ಆಗ ಖುಷಿಯೂ ಇರುವುದು. ಈ ವಿದ್ಯೆಯು ಬಹಳ ಆದಾಯದ ಮೂಲವಾಗಿದೆ. ವಿದ್ಯೆಯಿಂದಲೇ ಮನುಷ್ಯರು ವಕೀಲ ಇತ್ಯಾದಿಯಾಗುತ್ತಾರೆ ಆದರೆ ಈ ವಿದ್ಯೆಯು ಮನುಷ್ಯನಿಂದ ದೇವತೆಯಾಗುವುದಾಗಿದೆ. ಪ್ರಾಪ್ತಿಯು ಎಷ್ಟು ದೊಡ್ಡದಾಗಿದೆ. ಇಂತಹ ಪ್ರಾಪ್ತಿಯನ್ನು ಮತ್ತ್ಯಾರೂ ಮಾಡಿಸಲು ಸಾಧ್ಯವಿಲ್ಲ. ಮನುಷ್ಯರಿಂದ ದೇವತೆಯನ್ನಾಗಿ ಮಾಡಿದರು ಎಂದು ಗ್ರಂಥ ಸಾಹೇಬ್ನಲ್ಲಿ ಬರೆಯಲ್ಪಟ್ಟಿದೆ. ಆದರೆ ಮನುಷ್ಯರ ಬುದ್ಧಿಯು ಕೆಲಸ ಮಾಡುವುದಿಲ್ಲ. ಅವಶ್ಯವಾಗಿ ಆ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಗಿ ಬಿಟ್ಟಿದೆ. ಆದ್ದರಿಂದಲೇ ಮನುಷ್ಯನಿಂದ ದೇವತೆಯಾಗಬೇಕು ಎಂದು ಬರೆಯುತ್ತಾರೆ. ದೇವತೆಗಳು ಸತ್ಯಯುಗದಲ್ಲಿದ್ದರು ಅಂದಮೇಲೆ ಅವಶ್ಯವಾಗಿ ಭಗವಂತನು ಅವರನ್ನು ಸಂಗಮದಲ್ಲಿಯೇ ರಚಿಸಿರುವರು. ಹೇಗೆ ರಚಿಸಿದರು ಎಂಬುದನ್ನು ತಿಳಿದುಕೊಂಡಿಲ್ಲ. ಗುರುನಾನಕರೂ ಸಹ ಪರಮಾತ್ಮನ ಮಹಿಮೆಯನ್ನು ಹಾಡಿದ್ದಾರೆ. ಅವರ ತರಹ ಮಹಿಮೆಯನ್ನು ಮತ್ತ್ಯಾರೂ ಮಾಡಿಲ್ಲ ಆದ್ದರಿಂದ ಭಾರತದಲ್ಲಿ ಗ್ರಂಥವನ್ನು ಓದಿದ್ದಾರೆ. ಕಲಿಯುಗದಲ್ಲಿ ಗುರುನಾನಕರ ಅವತಾರವಾಗುತ್ತದೆ. ಅವರು ಧರ್ಮ ಸ್ಥಾಪಕನಾಗಿದ್ದಾರೆ. ಅವರ ರಾಜಧಾನಿಯಂತೂ ಕೊನೆಯಲ್ಲಿ ನಡೆಯಿತು. ತಂದೆಯು ಈ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದ್ದಾರೆ. ವಾಸ್ತವದಲ್ಲಿ ಹೊಸ ಪ್ರಪಂಚವು ಬ್ರಾಹ್ಮಣರದು ಎಂದೇ ಹೇಳಬಹುದು. ಶಿಖೆಯು ಭಲೆ ಬ್ರಾಹ್ಮಣರದಾಗಿದೆ ಆದರೆ ರಾಜಧಾನಿಯು ದೇವಿ-ದೇವತೆಗಳಿಂದ ಆರಂಭವಾಗುತ್ತದೆ. ನೀವು ಬ್ರಾಹ್ಮಣರು ರಚಿಸಲ್ಪಟ್ಟಿದ್ದೀರಿ. ನಿಮ್ಮ ರಾಜಧಾನಿಯಿಲ್ಲ, ನೀವು ತಮಗಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ. ಇವು ಅದ್ಭುತ ಮಾತುಗಳಾಗಿವೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಮೊಟ್ಟ ಮೊದಲು ತನಗೆ ಅರ್ಥವಾದರೆ ತನ್ನ ಮೂಲಕ ಅನ್ಯರಿಗೂ ಅರ್ಥವಾಗುತ್ತದೆ. ನೀವು ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ಬ್ರಹ್ಮಾರವರಿಗೂ ಈಗ ತಂದೆಯ ಮೂಲಕ ಅರ್ಥವಾಗಿದೆ. ಒಬ್ಬರಿಗೆ ತಿಳಿಸಿದರೆ ಮಕ್ಕಳಿಗೂ ತಿಳಿಸಬೇಕಾಗುತ್ತದೆ. ಅವರ ತನುವಿನ ಮೂಲಕ ನೀವು ಮಕ್ಕಳಿಗೂ ತಿಳಿಸಿಕೊಡುತ್ತೇನೆ, ಇವು ಅನುಭವದ ಮಾತುಗಳಾಗಿವೆ. ಶಾಸ್ತ್ರಗಳಿಂದ ಯಾರೂ ಏನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಇಡೀ ಕಲ್ಪದಲ್ಲಿ ಒಂದೇ ಬಾರಿ ನಾನು ಇದೇ ರೀತಿ ಬಂದು ತಿಳಿಸಿಕೊಡುತ್ತೇನೆ ಮತ್ತು ಅನೇಕ ಧರ್ಮಗಳ ವಿನಾಶ, ಒಂದು ಧರ್ಮದ ಸ್ಥಾಪನೆ ಮಾಡಿಸುತ್ತೇನೆ. ಇದು 5000 ವರ್ಷಗಳ ಆಟವಾಗಿದೆ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ನೀವು ಮಕ್ಕಳುತಿಳಿದುಕೊಂಡಿದ್ದೀರಿ. ವಿಷ್ಣುವಿನ ನಾಭಿಯಿಂದ ಬ್ರಹ್ಮನನ್ನು ತೋರಿಸುತ್ತಾರೆ. ಬ್ರಹ್ಮಾ ಮತ್ತು ವಿಷ್ಣು ಯಾರ ಮಕ್ಕಳಾಗಿದ್ದಾರೆ. ಇಬ್ಬರೂ ಶಿವನ ಮಕ್ಕಳಾಗಿದ್ದಾರೆ. ಶಿವನು ರಚಯಿತ ಮತ್ತು ಇವರಿಬ್ಬರು ರಚನೆಯಾಗಿದ್ದಾರೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಇದು ಸಂಪೂರ್ಣ ಹೊಸ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಇವು ಹೊಸ ಮಾತುಗಳಾಗಿವೆ, ಯಾವುದೇ ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ. ಜ್ಞಾನ ಸಾಗರನು ತಂದೆಯಾಗಿದ್ದಾರೆ, ಅವರೇ ಗೀತೆಯ ಭಗವಂತನಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಶಿವ ಜಯಂತಿಯನ್ನಾಚರಿಸುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಆಚರಿಸುವುದಿಲ್ಲ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ, ಈ ಮಾತುಗಳನ್ನು ನೀವು ತಿಳಿದುಕೊಳ್ಳುತ್ತಾ ಅನ್ಯರಿಗೂ ತಿಳಿಸುತ್ತಾ ಇರುತ್ತೀರಿ. ತಿಳಿಸುವಂತಹ ತಂದೆಯ ಮಹಿಮೆಯೇ ಮಕ್ಕಳಿಗೂ ಇರಬೇಕು. ನೀವೂ ಸಹ ಮಾII ಜ್ಞಾನ ಸಾಗರರಾಗಬೇಕಾಗಿದೆ. ಇಲ್ಲಿಯೇ ಪ್ರೇಮ ಸಾಗರ, ಸುಖದ ಸಾಗರರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು, ಬಹಳ ಮಧುರರಾಗಬೇಕಾಗಿದೆ. ನೀವು ಬಹಳ ಕಹಿ ಅಂದರೆ ವಿಷದ ಸಮಾನರಿದ್ದವರು ಈಗ ನಿರ್ವಿಕಾರಿ ಬ್ರಾಹ್ಮಣರಾಗುತ್ತಿದ್ದೀರಿ. ಈಶ್ವರನ ಸಂತಾನರಾಗುತ್ತಿದ್ದೀರಿ. ವಿಕಾರಿಗಳಿಂದ ನಿರ್ವಿಕಾರಿ ದೇವತೆಗಳಾಗುತ್ತಿದ್ದೀರಿ. ಅರ್ಧಕಲ್ಪ ನೀವು ಪತಿತರಾಗುತ್ತಾ ಆಗುತ್ತಾ ಈಗ ಸಂಪೂರ್ಣ ಜಡಜಡೀಭೂತ ಸ್ಥಿತಿಯನ್ನು ತಲುಪಿದ್ದೀರಿ. ಹೇಗೆ ಸವೆದಿರುವ ಬಟ್ಟೆಗಳನ್ನು ಒಗೆದರೆ ಒಮ್ಮೆಲೆ ಹರಿದು ಹೋಗುತ್ತದೆ. ಇಲ್ಲಿಯೂ ಸಹ ಜ್ಞಾನದ ಒಗೆತವನ್ನು ಒಗೆದಾಗ ಪುಡಿ ಪುಡಿಯಾಗಿ ಬಿಡುತ್ತಾರೆ. ಕೆಲವು ಬಟ್ಟೆಗಳಂತೂ ಇಷ್ಟು ಮೈಲಿಗೆಯಾಗಿದೆ, ಅವನ್ನು ಸ್ವಚ್ಛ ಮಾಡುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಅಂತಹವರಿಗೆ ಅಲ್ಲಿಯೂ ಸಹ ಬಹಳ ಕಡಿಮೆ ಪದವಿ ಸಿಗುತ್ತದೆ. ತಂದೆಯು ಅಗಸನಾಗಿದ್ದಾರೆ. ಜೊತೆಯಲ್ಲಿ ನೀವೂ ಸಹಯೋಗಿಗಳಾಗಿದ್ದೀರಿ ಅಗಸರಲ್ಲಿಯೂ ನಂಬರ್ವಾರ್ ಇರುತ್ತಾರೆ, ಹಾಗೆಯೇ ಇಲ್ಲಿಯೂ ಇದ್ದಾರೆ. ಅಗಸನು ಬಟ್ಟೆಯನ್ನು ಚೆನ್ನಾಗಿ ಒಗೆಯದಿದ್ದರೆ ಇವನು ಹಜಾಮನಿದ್ದ ಹಾಗೆ ಎಂದು ಹೇಳೂವರಲ್ಲವೇ ಇತ್ತೀಚೆಗೆ ಬಟ್ಟೆ ಚೆನ್ನಾಗಿ ಒಗೆಯುವುದನ್ನು ಕಲಿತಿದ್ದಾರೆ. ಮೊದಲು ಹಳ್ಳಿಗಳಲ್ಲಿ ಬಹಳ ಮೈಲಿಗೆ ಬಟ್ಟೆಗಳನ್ನು ಸ್ವಚ್ಛ ಮಾಡಲಾಗುತ್ತಿತ್ತು. ಈ ಕಲೆಯನ್ನೂ ಸಹ ಹೊರಗಿನವರಿಂದ ಕಲಿತಿದ್ದಾರೆ. ಹೊರಗಿನವರು ಸ್ವಲ್ಪ ಗೌರವ ಕೊಡುತ್ತಾರೆ. ಹಣದ ಸಹಯೋಗ ನೀಡುತ್ತಾರೆ ಏಕೆಂದರೆ ಅವರಿಗೆ ತಿಳಿದಿದೆ - ಇವರು ಬಹಳ ದೊಡ್ಡ ವಂಶಾವಳಿಯವರಾಗಿದ್ದಾರೆ, ಈಗ ಕೆಳಗಿಳಿದಿದ್ದಾರೆ. ಕೆಳಗಿಳಿಯುವವರ ಮೇಲೆ ದಯೆ ಬರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ – ನಿಮ್ಮನ್ನು ಎಷ್ಟೊಂದು ಧನವಂತರನ್ನಾಗಿ ಮಾಡಿದ್ದೆನು, ಮಾಯೆಯು ಯಾವ ಗತಿ ಮಾಡಿಬಿಟ್ಟಿದೆ! ನೀವೀಗ ತಿಳಿದುಕೊಂಡಿದ್ದೀರಿ, ನಾವು ವಿಜಯ ಮಾಲೆಯ ಮಣಿಯಾಗಿದ್ದೇವೆ. 84 ಜನ್ಮಗಳನ್ನು ತೆಗೆದುಕೊಂಡು ಯಾವ ಸ್ಥಿತಿಗೆ ಬಂದಿದ್ದೇವೆ! ಆಶ್ಚರ್ಯವಲ್ಲವೆ. ನೀವಿದನ್ನು ತಿಳಿಸಿ, ನೀವು ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದಿರಿ, ಭಾರತವೇ ಸ್ವರ್ಗವಾಗಿತ್ತು, ನಂತರ ಕೆಳಗಿಳಿಯುತ್ತಾ-ಇಳಿಯುತ್ತಾ ನರಕವಾಸಿಗಳಾಗಬೇಕಾಯಿತು. ಈಗ ತಂದೆಯು ತಿಳಿಸುತ್ತಾರೆ - ಪವಿತ್ರರಾಗಿ ಸ್ವರ್ಗವಾಸಿಗಳಾಗಿ, ಮನ್ಮನಾಭವ. ಶಿವ ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ. ನೆನಪಿನ ಯಾತ್ರೆಯಿಂದ ನಿಮ್ಮ ಎಲ್ಲಾ ಪಾಪಗಳು ನಷ್ಟವಾಗುತ್ತವೆ. ಕೃಷ್ಣನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು ಓಡಿಸಿಕೊಂಡು ಹೋದನೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ವಾಸ್ತವದಲ್ಲಿ ನೀವೆಲ್ಲರೂ ಓದುತ್ತಿದ್ದೀರಿ. ಪಟ್ಟದ ರಾಣಿಯರು ಆಗುತ್ತಿದ್ದೀರಿ ಆದರೆ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಈಗ ತಂದೆಯು ಬಂದು ಮಕ್ಕಳಗೆ ತಿಳಿಸಿದ್ದಾರೆ. ನಾನು ಕಲ್ಪ-ಕಲ್ಪವೂ ನಿಮಗೆ ತಿಳಿಸಲು ಬರುತ್ತೇನೆ, ಮೊಟ್ಟ ಮೊದಲು ಭಗವಂತನು ಒಬ್ಬರೇ ಆಗಿದ್ದಾರೆ ಎಂಬುದನ್ನು ಸಿದ್ಧ ಮಾಡಿ ತಿಳಿಸಿ ನಂತರ ಗೀತೆಯ ಭಗವಂತ ಯಾರು ಎಂಬುದನ್ನು ತಿಳಿಸಿ. ರಾಜಯೋಗವನ್ನು ಯಾರು ಕಲಿಸಿದ್ದಾರೆ? ಭಗವಂತನೇ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ ಮತ್ತು ವಿನಾಶ ನಂತರ ಪಾಲನೆ ಮಾಡಿಸುತ್ತಾರೆ. ಈ ಬ್ರಾಹ್ಮಣರೇ ಮತ್ತೆ ದೇವತೆಗಳಾಗುವರು. ಯಾರು ಕಲ್ವದ ಹಿಂದೆ ತಿಳಿದುಕೊಂಡಿದ್ದರೋ ಅವರಿಗೇ ಈ ಮಾತುಗಳು ಅರ್ಥವಾಗುತ್ತದೆ. ಈ ಸಮಯದವರೆಗೆ ಯಾವ ಕ್ಷಣ ಪ್ರತಿ ಕ್ಷಣ ಕಳೆಯಿತೋ ಅದೆಲ್ಲವನ್ನೂ ತಿಳಿದುಕೊಳ್ಳುತ್ತಾರೆ. ಡ್ರಾಮಾದಲ್ಲಿ ನೀವು ಬಹಳ ಪುರುಷಾರ್ಥ ಮಾಡಬೇಕಾಗಿದೆ. ಇದಂತೂ ಮಕ್ಕಳಿಗೆ ತಿಳಿದಿದೆ - ಈಗಿನ್ನೂ ನಮ್ಮ ಸ್ಥಿತಿಯು ಅಲ್ಲಿಯವರೆಗೆ ತಲುಪಿಲ್ಲ, ಸಮಯ ಹಿಡಿಸುತ್ತದೆ. ಕರ್ಮಾತೀತರಾಗಿ ಬಿಟ್ಟರೆ ಮತ್ತೆ ಎಲ್ಲರೂ ನಂಬರ್ವನ್ ತೇರ್ಗಡೆಯಾಗಿ ಬಿಡುವರು, ಮತ್ತೆ ಯುದ್ಧವೂ ಆರಂಭವಾಗಿ ಬಿಡುತ್ತಿತ್ತು. ಈಗಿನ್ನೂ ಪರಸ್ಪರ ಕಿರಿಕಿರಿ ನಡೆಯುತ್ತಲೇ ಇರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಎಲ್ಲಿ ನೋಡಿದರಲ್ಲಿ ಯುದ್ಧಕ್ಕಾಗಿ ತಯಾರು ಮಾಡುತ್ತಿದ್ದಾರೆ. ಇತ್ತ ಕಡೆಯೂ ತಯಾರಿಗಳು ನಡೆಯುತ್ತಿದೆ, ನೀವು ಯಾವುದೆಲ್ಲವನ್ನೂ ದಿವ್ಯ ದೃಷ್ಟಿಯಿಂದ ನೋಡಿದ್ದೀರೋ ಅದನ್ನು ಮತ್ತೆ ಈ ಕಣ್ಣುಗಳಿಂದ ನೋಡುವಿರಿ. ಯಾವ ವಿನಾಶದ ಸಾಕ್ಷಾತ್ಕಾರ ಮಾಡಿದ್ದೀರೋ ಅದನ್ನು ಈ ಸ್ಥೂಲ ಕಣ್ಣುಗಳಿಂದ ನೋಡುತ್ತೀರಿ. ಸ್ಥಾಪನೆಯ ಸಾಕ್ಷಾತ್ಕಾರವನ್ನೂ ನೋಡಿದ್ದೀರಿ ಮತ್ತೆ ಅದನ್ನು ಪ್ರತ್ಯಕ್ಷದಲ್ಲಿ ರಾಜಧಾನಿಯನ್ನೂ ನೋಡುತ್ತೀರಿ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು. ಇದಂತೂ ಹಳೆಯ ಶರೀರವಾಗಿದೆ, ಯೋಗದಿಂದ ಆತ್ಮವು ಪವಿತ್ರವಾಗುವುದು. ನಂತರ ಈ ಹಳೆಯ ಶರೀರವನ್ನೂ ಬಿಡಬೇಕಾಗಿದೆ. 84 ಜನ್ಮಗಳ ಚಕ್ರವು ಪೂರ್ಣವಾಗುತ್ತದೆ ಆಗ ಎಲ್ಲರಿಗೆ ಹೊಸ ಶರೀರವು ಸಿಗುತ್ತದೆ. ಇವೂ ಸಹ ತಿಳಿದುಕೊಳ್ಳುವ ಬಹಳ ಸಹಜ ಮಾತುಗಳಾಗಿವೆ. ಇದನ್ನೂ ತಿಳಿಸಬಹುದು - ಕಲಿಯುಗದ ನಂತರ ಸತ್ಯಯುಗವು ಅವಶ್ಯವಾಗಿ ಆಗುವುದು. ಅನೇಕ ಧರ್ಮಗಳ ವಿನಾಶವೂ ಆಗುವುದು. ನಂತರ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನಾರ್ಥವಾಗಿ ತಂದೆಯು ಬರಬೇಕಾಗುತ್ತದೆ. ದೇವತೆಗಳಾಗುವುದಕ್ಕಾಗಿ ನೀವೀಗ ಬ್ರಾಹ್ಮಣರಾಗಿದ್ದೀರಿ, ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ನಮಗೆ ತಂದೆಯು ಆಸ್ತಿಯನ್ನು ಕೊಡುತ್ತಿದ್ದಾರೆಂದು ನಿಮಗೆ ತಿಳಿದಿದೆ.
ಶಿವ ಜಯಂತಿ ಎಂದರೆ ಭಾರತಕ್ಕೆ ಆಸ್ತಿಯು ಸಿಕ್ಕಿತು ಎಂದರ್ಥ. ಶಿವ ತಂದೆಯು ಬಂದರು, ಬಂದು ಏನು ಮಾಡಿದರು? ಇಸ್ಲಾಮಿ, ಬೌದ್ಧರು ಮೊದಲಾದವರು ಬಂದು ತಮ್ಮ ಧರ್ಮವನ್ನು ಸ್ಥಾಪನೆ ಮಾಡಿದರು. ಅಂದಾಗ ತಂದೆಯು ಬಂದು ಏನು ಮಾಡಿದರು? ಅವಶ್ಯವಾಗಿ ಸ್ವರ್ಗ ಸ್ಥಾಪನೆ ಮಾಡಿದರು. ಹೇಗೆ ಸ್ಥಾಪನೆ ಮಾಡಿದರು? ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ ಮತ್ತೆ ಸತ್ಯಯುಗದಲ್ಲಿ ಇದೆಲ್ಲವನ್ನೂ ಮರೆತು ಹೋಗುತ್ತೀರಿ. ಈಗ ಇದನ್ನೂ ತಿಳಿದುಕೊಂಡಿದ್ದೀರಿ, ನಾವೀಗ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಂಡು ಹೋಗುತ್ತೇವೆ. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ, ಭಲೆ ಅಲ್ಲಿ ಇವರು ತಂದೆಯಾಗಿದ್ದಾರೆ, ಇವರು ಮಕ್ಕಳಿಗೆ ಆಸ್ತಿಯು ಸಿಗುತ್ತದೆ ಎಂಬುದು ತಿಳಿದಿರುತ್ತದೆ. ಆದರೆ ಆ ಪ್ರಾಲಬ್ದವು ಈಗಿನದಾಗಿದೆ. ಸತ್ಯ ಸಂಪಾದನೆ ಮಾಡಿ 21 ಜನ್ಮಗಳಿಗಾಗಿ ನೀವು ಆಸ್ತಿಯನ್ನು ಪಡೆಯುತ್ತಿದ್ದೀರಿ. 84 ಜನ್ಮಗಳನ್ನಂತೂ ತೆಗೆದುಕೊಳ್ಳಲೇಬೇಕಾಗಿದೆ. ಸತೋಪ್ರಧಾನರಿಂದ ಮತ್ತೆ ಸತೋ, ರಜೋ, ತಮೋದಲ್ಲಿ ಬರುತ್ತೀರಿ, ಇದನ್ನು ಚೆನ್ನಾಗಿ ನೆನಪಿಟ್ಟುಕೊಂಡಾಗ ಖುಷಿಯಲ್ಲಿರುತ್ತೀರಿ. ತಿಳಿಸುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ಯಾವಾಗ ತಿಳಿದುಕೊಳ್ಳುವರೋ ಆಗ ಅವರಿಗೆ ಬಹಳ ಖುಷಿಯಾಗುತ್ತದೆ. ಯಾವ ಮಕ್ಕಳು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಅನೇಕರಿಗೆ ತಿಳಿಸುತ್ತಾ ಇರುತ್ತಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಿರುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ. ಬೇಹದ್ದಿನ ಆಸ್ತಿಯೇ ಸಿಗುತ್ತದೆ. ಅಂದಮೇಲೆ ಇದರಲ್ಲಿ ತ್ಯಾಗವೂ ಬೇಹದ್ದಿನದಾಗಿದೆ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಇಡೀ ಪ್ರಪಂಚದ ತ್ಯಾಗ ಮಾಡಬೇಕಾಗಿದೆ ಏಕೆಂದರೆ ನಿಮಗೆ ತಿಳಿದಿದೆ - ಈ ಹಳೆಯ ಪ್ರಪಂಚವೇ ಸಮಾಪ್ತಿಯಾಗುವುದು, ಈಗ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ ಆದ್ದರಿಂದ ಬೇಹದ್ದಿನ ಸನ್ಯಾಸ ಮಾಡಿಸುತ್ತಾರೆ. ಸನ್ಯಾಸಿಗಳದು ಹದ್ದಿನ ಸನ್ಯಾಸವಾಗಿದೆ ಮತ್ತು ಅವರದು ಹಠಯೋಗವಾಗಿದೆ. ಇಲ್ಲಿ ಯಾವುದೇ ಹಠದ ಮಾತಿರುವುದಿಲ್ಲ. ಇದು ವಿದ್ಯೆಯಾಗಿದೆ. ಈ ಪಾಠಶಾಲೆಯಲ್ಲಿ ಮನುಷ್ಯರಿಂದ ದೇವತೆಗಳಾಗಲು ಓದಬೇಕಾಗಿದೆ. ಶಿವ ಭಗವಾನುವಾಚ - ಕೃಷ್ಣನು ಭಗವಂತನಾಗಲು ಸಾಧ್ಯವಿಲ್ಲ. ಕೃಷ್ಣನು ಹೊಸ ಪ್ರಪಂಚದ ಸ್ಥಾಪನೆ ಮಾಡಲೂ ಸಾಧ್ಯವಿಲ್ಲ. ಸ್ವರ್ಗದ ರಚಯಿತನೆಂದೂ ಹೇಳುವುದಿಲ್ಲ. ಕೃಷ್ಣನಿಗೆ ಸ್ವರ್ಗದ ರಾಜಕುಮಾರನೆಂದು ಹೇಳುತ್ತಾರೆ. ಇವು ಎಷ್ಟು ಮಧುರಾತಿ ಮಧುರ ಮಾತುಗಳು ತಿಳಿದುಕೊಳ್ಳುವ ಮತ್ತು ಧಾರಣೆ ಮಾಡುವಂತದ್ದಾಗಿದೆ, ದೈವೀ ಲಕ್ಷಣಗಳೂ ಇರಬೇಕಾಗಿದೆ. ಎಂದೂ ಹೇಳಿಕೆ-ಕೇಳಿಕೆ ಮಾತುಗಳಲ್ಲಿ ತೊಡಗಬಾರದು. ವ್ಯಾಸನು ಬರೆದಿರುವ ಮಾತುಗಳಂತೆ ನಡೆಯುತ್ತಾ-ನಡೆಯುತ್ತಾ ಕೆಟ್ಟ ಗತಿಯೇ ಆಯಿತಲ್ಲವೆ. ಆದ್ದರಿಂದ ಜ್ಞಾನದ ಮಾತುಗಳನ್ನು ಬಿಟ್ಟು ಬೇರೇನಾದರೂ ತಿಳಿಸಿದರೆ ಇವರು ನಮ್ಮ ಶತ್ರುವಾಗಿದ್ದಾರೆ, ದುರ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆಂದು ತಿಳಿಯಿರಿ. ಎಂದೂ ಸಹ ಪರಮತದಂತೆ ನಡೆಯಬಾರದು. ಮನಮತ, ಪರಮತದಂತೆ ನಡೆದರೆ ಅವರು ಸತ್ತರು ಎಂದರ್ಥ. ತಂದೆಯು ತಿಳಿಸುತ್ತಿರುತ್ತಾರೆ – ಸುಳ್ಳು ಮಾತುಗಳಂತೂ ಹೇಳುವವರು ಅನೇಕರಿದ್ದಾರೆ, ನೀವು ಮಕ್ಕಳು ತಂದೆಯಿಂದಲೇ ಕೇಳಬೇಕಾಗಿದೆ. ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಕೇಳಬೇಡಿ..... ತಂದೆಯು ಬಂದಿರುವುದೇ ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
ಇಲ್ಲಿ ತಂದೆಯ ಸಮಾನ ಸುಖದ ಸಾಗರ, ಪ್ರೇಮದ ಸಾಗರರಾಗಬೇಕಾಗಿದೆ. ಸರ್ವ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು.
ಹೇಳಿಕೆ-ಕೇಳಿಕೆ ಮಾತುಗಳ ಮೇಲೆ ಎಂದೂ ವಿಶ್ವಾಸವನ್ನಿಡಬಾರದು. ಪರಮತದಂತೆ ನಡೆಯಬಾರದು, ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ.
ಓಂ ಶಾಂತಿ. ಮಕ್ಕಳು ನಾವು ವಿದ್ಯಾರ್ಥಿಗಳೆಂದು ತಿಳಿದುಕೊಂಡಿದ್ದೀರಿ. ತಂದೆಯ ವಿದ್ಯಾರ್ಥಿಗಳು ಏನು ಓದುತ್ತಿದ್ದಾರೆ? ನಾವು ಮನುಷ್ಯರಿಂದ ದೇವತೆಗಳಾಗುವ ಟ್ಯೂಷನ್ ತೆಗೆದುಕೊಳ್ಳುತ್ತಿದ್ದೇವೆ. ನಾವಾತ್ಮರು ಪರಮಪಿತ ಪರಮಾತ್ಮನಿಂದ ಟ್ಯೂಷನ್ ತೆಗೆದುಕೊಳ್ಳುತ್ತಿದ್ದೇವೆ. ಈಗ ನಾವು ಜನ್ಮ-ಜನ್ಮಾಂತರದಿಂದ ಆತ್ಮವನ್ನು ಮರೆತು ದೇಹವೆಂದು ತಿಳಿಯುತ್ತಾ ಬಂದಿದ್ದೇವೆ. ಆ ಲೌಕಿಕ ತಂದೆಯಂತೂ ಟ್ಯೂಷನ್ಗಾಗಿ ಬೇರೆ ಸ್ಥಾನಕ್ಕೆ ಕಳುಹಿಸಿಕೊಡುತ್ತಾರೆ, ಸದ್ಗತಿಗಾಗಿ ಇನ್ನೊಂದು ಸ್ಥಾನಕ್ಕೆ ಕಳುಹಿಸಿಕೊಡುತ್ತಾರೆ. ತಂದೆಯು ವೃದ್ಧರಾದಾಗ ವಾನಪ್ರಸ್ಥದಲ್ಲಿ ಹೋಗಬೇಕೆಂದು ಮನಸ್ಸಾಗುತ್ತದೆ ಆದರೆ ವಾನಪ್ರಸ್ಥದ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ವಾಣಿಯಿಂದ ದೂರ ಹೋಗಲು ಹೇಗೆ ಸಾಧ್ಯ! ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಾವೀಗ ಪತಿತರಾಗಿದ್ದೇವೆ. ಎಲ್ಲಿಂದ ನಾವಾತ್ಮಗಳು ಇಲ್ಲಿಗೆ ಬಂದಿದ್ದೇವೆ, ಅಲ್ಲಿ ನೀವು ಪಾವನರಾಗಿದ್ದೀರಿ, ಪಾವನರಾಗಿದ್ದವರು ನೀವು ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತರಾಗಿಬಿಟ್ಟಿದ್ದೀರಿ. ಈಗ ಮತ್ತೆ ಪಾವನರನ್ನಾಗಿ ಯಾರು ಮಾಡುತ್ತಾರೆ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ. ಗುರುಗಳಿಗಂತೂ ಪತಿತ-ಪಾವನನೆಂದು ಯಾರೂ ಹೇಳುವುದಿಲ್ಲ. ಗುರುಗಳನ್ನು ಮಾಡಿಕೊಂಡರೂ ಸಹ ಒಬ್ಬ ಗುರುವಿನಲ್ಲಿಯೇ ನಿಶ್ಚಯವಿರುವುದಿಲ್ಲ ಆದ್ದರಿಂದ ಮನೆ ಅಥವಾ ವಾನಪ್ರಸ್ಥಕ್ಕೆ ತಲುಪಿಸುವ ಗುರುವನ್ನು ಹುಡುಕುತ್ತಿರುತ್ತಾರೆ ಅದಕ್ಕಾಗಿ ಬಹಳ ಉಪಾಯಗಳನ್ನು ರಚಿಸುತ್ತಿರುತ್ತಾರೆ. ಯಾರದ್ದಾದರೂ ಯಾವುದಾದರೂ ಗುರುವಿನ ಮಹಿಮೆ ಕೇಳಿದತಕ್ಷಣ ಅಲ್ಲಿಗೆ ಹೊರಟುಹೋಗುತ್ತಾರೆ. ಯಾರು ಈ ವೃಕ್ಷದ ಸಸಿಯಾಗಿರುತ್ತಾರೆ ಅವರಿಗೆ ಜ್ಞಾನದ ಬಾಣ ನಾಟುತ್ತದೆ. ಇದು ಸ್ಪಷ್ಟವಾದ ಮಾತಾಗಿದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಈಗ ನಿಜವಾಗಿಯೂ ವಾನಪ್ರಸ್ಥ ಸ್ಥಿತಿಯಲ್ಲಿ ಹೋಗುತ್ತೀರಲ್ಲವೆ. ದೊಡ್ಡಮಾತೇನಿಲ್ಲ. ಶಿಕ್ಷಕರಿಗೆ ಸ್ಕೂಲಿನಲ್ಲಿ ಓದಿಸುವುದು ದೊಡ್ಡಮಾತೇನಿಲ್ಲ. ಭಕ್ತರಿಗೆ ಏನು ಬೇಕಾಗಿದೆ? ಇದು ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ಈ ನಾಟಕದ ಚಕ್ರವನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ. ನಿಮಗೆ ತಿಳಿದಿದೆ- ಹೌದು! ತಂದೆಯೇ ಆಸ್ತಿಯನ್ನು ಕೊಟ್ಟಿದ್ದರು ಈಗ ಕೊಡುತ್ತಿದ್ದಾರೆ. ಪುನಃ ನಾವು ಅದೇ ಸ್ಥಿತಿಯಲ್ಲಿ ಹೋಗುತ್ತೇವೆಂದು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಮೊದಲನೇ ಮುಖ್ಯಮಾತಾಗಿದೆ- ಪಾವನರಾಗಲು ತಂದೆಯನ್ನು ನೆನಪು ಮಾಡಬೇಕು. ಲೌಕಿಕ ತಂದೆಯಂತೂ ಎಲ್ಲರಿಗೂ ನೆನಪಿದೆ ಆದರೆ ಪಾರಲೌಕಿಕ ತಂದೆಯನ್ನಂತೂ ಯಾರೂ ತಿಳಿದುಕೊಂಡಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುವುದು ಅತಿ ಸಹಜವಾಗಿದೆ, ಅತಿ ಕಷ್ಟವೂ ಆಗಿದೆ.
ಆತ್ಮವು ಅತಿಸೂಕ್ಷ್ಮ ನಕ್ಷತ್ರವಾಗಿದೆ, ತಂದೆಯೂ ನಕ್ಷತ್ರವಾಗಿದ್ದಾರೆ. ತಂದೆಯು ಸಂಪೂರ್ಣ ಪವಿತ್ರ ಆತ್ಮ ಆಗಿದ್ದಾರೆ ಹಾಗೂ ಆತ್ಮರು ಸಂಪೂರ್ಣ ಅಪವಿತ್ರವಾಗಿದೆ. ಸಂಪೂರ್ಣ ಪವಿತ್ರ ಸಂಗ ಮೇಲೆತ್ತುತ್ತದೆ, ಅದೂ ಸಹ ಒಬ್ಬರಿಂದ ಮಾತ್ರ ಆ ಸಂಗ ಸಿಗುತ್ತದೆ. ಅಗತ್ಯವಾಗಿ ಸಂಗ ಬೇಕಾಗುತ್ತದೆ ನಂತರ ಪಂಚವಿಕಾರಗಳೆಂಬ ರಾವಣನ ಕೆಟ್ಟಸಂಗವು ಸಿಗುತ್ತದೆ. ಅವರಿಗೆ ರಾವಣ ಸಂಪ್ರದಾಯದವರೆಂದು ಹೇಳಲಾಗುವುದು, ಈಗ ನೀವು ರಾಮನ ಸಂಪ್ರದಾಯದವರಾಗುತ್ತಿದ್ದೀರಿ. ನೀವು ರಾಮನ ಸಂಪ್ರದಾಯದವರಾದ ನಂತರ ರಾವಣನ ಸಂಪ್ರದಾಯವಿರುವುದಿಲ್ಲ. ಈ ಜ್ಞಾನ ಬುದ್ಧಿಯಲ್ಲಿದೆ, ರಾಮನೆಂದು ಭಗವಂತನಿಗೆ ಹೇಳಲಾಗುತ್ತದೆ, ಭಗವಂತನೇ ಬಂದು ರಾಮರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ ಅರ್ಥಾತ್ ಸೂರ್ಯವಂಶಿ ರಾಜ್ಯ ಸ್ಥಾಪನೆ ಮಾಡುತ್ತಾರೆ. ರಾಮರಾಜ್ಯವೆಂದು ಹೇಳಬಾರದು ಆದರೆ ರಾಮರಾಜ್ಯ ಮತ್ತು ರಾವಣರಾಜ್ಯವೆಂದು ತಿಳಿಸಿಕೊಡುವಾಗ ಸಹಜವಾಗಿರುತ್ತದೆ. ವಾಸ್ತವದಲ್ಲಿ ಅದು ಸೂರ್ಯವಂಶಿ ರಾಜ್ಯವಾಗಿದೆ. ವಜ್ರದಂತಹ ಜೀವನವು ಹೇಗಾಗುತ್ತದೆ? ಎಂಬ ಚಿಕ್ಕದೊಂದು ಪುಸ್ತಕವಿದೆ. ಈ ವಜ್ರದಂತಹ ಜೀವನ ಯಾರಿಗೆ ಹೇಳಲಾಗುತ್ತದೆ? ಎಂದು ನಿಮ್ಮ ವಿನಃ ಮನುಷ್ಯರಿಗೇನು ಗೊತ್ತಿದೆ! ಆದ್ದರಿಂದ ವಜ್ರದಂತಹ ದೇವತಾ ಜೀವನವು ಹೇಗಾಗುತ್ತದೆ ಎಂದು ಬರೆಯಬೇಕು. ದೇವತಾ ಎಂಬ ಅಕ್ಷರ ಅದರೊಂದಿಗೆ ಸೇರ್ಪಡೆಯಾಗಿರಬೇಕು. ನೀವು ನಮ್ಮ ಜೀವನ ವಜ್ರದಂತೆ ಆಗುತ್ತಿದೆ ಎಂದು ಇಲ್ಲಿ ಅನುಭವ ಮಾಡುತ್ತೀರಿ. ಅದನ್ನು ತಂದೆಯ ವಿನಃ ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ಪುಸ್ತಕವೇನೋ ಬಹಳ ಚೆನ್ನಾಗಿದೆ ಅದರಲ್ಲಿ ಕೇವಲ ಈ ಅಕ್ಷರವನ್ನು ಸೇರಿಸಿ. ನೀವು ಆಸುರೀ ಕವಡೆಯಂತಹ ಜನ್ಮದಿಂದ ಒಂದು ಪೈಸೆಯೂ ಖರ್ಚಿಲ್ಲದೆ ದೇವತಾ ವಜ್ರದಂತಹ ಜನ್ಮವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು. ಮಗು ತಂದೆಯ ಬಳಿ ಜನ್ಮಪಡೆದಾಗ ತಂದೆಯ ಆಸ್ತಿಗೆ ಅಧಿಕಾರಿಯಾಗುತ್ತದೆ. ಆಗ ಮಗುವಿಗೆ ಏನು ಖರ್ಚಾಗುತ್ತದೆ? ಮಡಿಲಿಗೆ ಬಂದಿತೆಂದರೆ ಆಸ್ತಿಗೆ ಅಧಿಕಾರಿಯಾಯಿತು. ಕೇವಲ ತಂದೆಯು ಖರ್ಚು ಮಾಡಬೇಕಾಗುತ್ತದೆ ಆದರೆ ಮಗುವಲ್ಲ. ಈಗ ನೀವು ಏನನ್ನು ಖರ್ಚು ಮಾಡಿದ್ದೀರಿ? ತಂದೆಯ ಮಗುವಾಗಲು ಏನಾದರೂ ಖರ್ಚಾಗುತ್ತದೆಯೇನು? ಇಲ್ಲ. ಲೌಕಿಕ ತಂದೆಗೂ ಮಗುವಾಗುವುದರಲ್ಲಿಯೂ ಖರ್ಚಾಗುವುದಿಲ್ಲ. ಹಾಗೆಯೇ ಪಾರಲೌಕಿಕ ತಂದೆಗೆ ಮಗುವಾಗುವುದರಲ್ಲಿಯೂ ಏನೂ ಖರ್ಚಾಗುವುದಿಲ್ಲ. ಇಲ್ಲಂತೂ ತಂದೆಯೇ ಕುಳಿತು ಓದಿಸುತ್ತಾರೆ, ಓದಿಸಿ ನಿಮ್ಮನ್ನು ದೇವತೆಯನ್ನಾಗಿ ಮಾಡುತ್ತಾರೆ. ನೀವೇನೂ ಚಿಕ್ಕಮಕ್ಕಳಲ್ಲ ದೊಡ್ದವರಾಗಿದ್ದೀರಿ. ತಂದೆಗೆ ಮಗುವಾಗುವುದರಿಂದ ತಂದೆಯು ಸಲಹೆ ಕೊಡುತ್ತಾರೆ. ನೀವು ನಿಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡಬೇಕು ಅದಕ್ಕಾಗಿ ಅಗತ್ಯವಾಗಿ ಪವಿತ್ರರಾಗಬೇಕು. ಹೀಗೆ ಇಲ್ಲಿ ಸ್ವಲ್ಪವೂ ಖರ್ಚಾಗುವುದಿಲ್ಲ. ಗಂಗೆಯಲ್ಲಿ ಹೋಗಿ ತೀರ್ಥಯಾತ್ರೆಯಲ್ಲಿ ಸ್ನಾನ ಮಾಡಲು ಖರ್ಚಾಗುತ್ತದೆಯಲ್ಲವೆ ಆದರೆ ನಿಮಗೆ ತಂದೆಯ ಬಗ್ಗೆ ನಿಶ್ಚಯವಾಗಲು ಖರ್ಚಾಯಿತೇನು? ನಿಮ್ಮ ಬಳಿ ಸೇವಾಕೇಂದ್ರಕ್ಕೆ ಬರುತ್ತಾರೆ, ನೀವು ಅವರಿಗೆ ಬೇಹದ್ದಿನ ತಂದೆಯನ್ನು ನೆನಪು ಮಾಡಿ ಆಸ್ತಿಯನ್ನು ಪಡೆಯಿರಿ ಎಂದು ಹೇಳುತ್ತೀರಿ. ತಂದೆಯು ಸ್ವಯಂ ಹೇಳುತ್ತಾರೆ- ನಿಮಗೆ ನನ್ನ ಆಸ್ತಿಯು ಬೇಕಾದರೆ ಪತಿತರಿಂದ ಪಾವನರಾಗಿ ಆಗ ಪಾವನ ವಿಶ್ವಕ್ಕೆ ಮಾಲೀಕರಾಗುತ್ತೀರಿ. ತಂದೆಯು ವೈಕುಂಠದ ಸ್ಥಾಪನೆಯನ್ನು ಮಾಡುತ್ತಿದಾರೆಂದೂ ಸಹ ತಿಳಿದಿದ್ದೀರಿ. ಬುದ್ಧಿವಂತ ಮಕ್ಕಳು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಆ ವಿದ್ಯೆಗೆ ಎಷ್ಟೊಂದು ಖರ್ಚಾಗುತ್ತದೆ ಆದರೆ ಇಲ್ಲಿ ಸ್ವಲ್ಪವೂ ಖರ್ಚಾಗುವುದಿಲ್ಲ. ಆತ್ಮವು ಹೇಳುತ್ತದೆ- ನಾವು ಅವಿನಾಶಿಯಾಗಿದ್ದೇವೆ, ಈ ಶರೀರವು ವಿನಾಶವಾಗಿಬಿಡುತ್ತದೆ. ಮಕ್ಕಳು-ಮರಿ ಎಲ್ಲರೂ ವಿನಾಶವಾಗಿಬಿಡುತ್ತಾರೆ ಒಳ್ಳೆಯದು- ನಂತರ ಇಷ್ಟೊಂದು ಹಣವನ್ನು ಸೇರಿಸಿ ಏನು ಮಾಡುತ್ತೀರಿ? ಯೋಚನೆ ಇರುತ್ತದೆಯಲ್ಲವೆ. ಯಾರಾದರೂ ಶ್ರೀಮಂತರಾಗಿದ್ದು ಅವರಿಗೆ ಮಕ್ಕಳಿಲ್ಲದಿರುವಾಗ, ಒಂದುವೇಳೆ ಅವರಿಗೆ ಜ್ಞಾನ ಪ್ರಾಪ್ತಿಯಾದರೆ ಈ ಸ್ಥಿತಿಯಲ್ಲಿ ಹಣವನ್ನು ಏನು ಮಾಡಬೇಕೆಂದು ತಿಳಿಯುತ್ತಾರೆ? ವಿದ್ಯೆಯಂತೂ ಸಂಪಾದನೆಯಾಗಿದೆ. ತಂದೆ ತಿಳಿಸಿದ್ದಾರೆ- ಒಬ್ಬ ಅಬ್ರಾಹಂ ಲಿಂಕನ್ ಇದ್ದ. ಅವನು ಬಡವನಾಗಿದ್ದನು. ಅವನು ರಾತ್ರಿಯೆಲ್ಲಾ ಓದುತ್ತಿದ್ದನು. ಓದಿ-ಓದಿ ಅಧ್ಯಕ್ಷನಾಗುವಷ್ಟು ಬುದ್ಧಿವಂತನಾಗಿಬಿಟ್ಟನು. ಅದಕ್ಕೆ ಖರ್ಚಾಯಿತೇನು? ಏನೂ ಇಲ್ಲ. ಬಹಳಷ್ಟು ಬಡವರಿಗೆ ಓದಲು ಹಣ ತೆಗೆದುಕೊಳ್ಳುವುದಿಲ್ಲ. ಹೀಗೆ ಬಹಳ ಜನ ಶುಲ್ಕವಿಲ್ಲದೆ ಓದಿ ಅಧ್ಯಕ್ಷರಾಗಿದ್ದಾರೆ, ಎಷ್ಟೊಂದು ದೊಡ್ಡ ಪದವಿಯನ್ನು ಪಡೆದಿರುತ್ತಾರೆ. ಈ ಈಶ್ವರೀಯ ಸರ್ಕಾರವೂ ಸಹ ಯಾವುದೇ ಖರ್ಚನ್ನು ತೆಗೆದುಕೊಳ್ಳುವುದಿಲ್ಲ, ಇಡೀ ಪ್ರಪಂಚವೇ ಬಡತನದಲ್ಲಿದೆ ಎಂದು ತಿಳಿದುಕೊಂಡಿದೆ. ಒಂದುವೇಳೆ ಎಷ್ಟೇ ಶ್ರೀಮಂತರಿರಬಹುದು, ಲಕ್ಷಾಧಿಪತಿಗಳಿರಬಹುದು, ಕೋಟ್ಯಾಧಿಪತಿಗಳಿರಬಹುದು ಅವರೂ ಸಹ ಬಡವರಾಗಿದ್ದಾರೆ, ನಾವು ಅವರನ್ನು ಶ್ರೀಮಂತರನ್ನಾಗಿ ಮಾಡುತ್ತೇವೆ. ಭಲೆ ಅವರ ಬಳಿ ಎಷ್ಟೇ ಹಣವಿರಬಹುದು, ಇದು ಸ್ವಲ್ಪ ದಿನಕ್ಕಾಗಿ ಎಂದು ತಿಳಿದುಕೊಂಡಿದ್ದೀರಿ. ಇದೆಲ್ಲವೂ ಮಣ್ಣುಪಾಲಾಗಿಬಿಡುತ್ತದೆ ಅಂದಾಗ ಎಲ್ಲರೂ ಬಡವರಲ್ಲವೆ! ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ತಂದೆಯು ಮಕ್ಕಳಿಂದ ವಿದ್ಯಾಭ್ಯಾಸಕ್ಕಾಗಿ ಏನು ತೆಗೆದುಕೊಳ್ಳುತ್ತಾರೆ? ತಂದೆಯಂತೂ ವಿಶ್ವದ ಮಾಲೀಕರಾಗಿದ್ದಾರೆ, ಮಕ್ಕಳೂ ಸಹ ನಾವು ಭವಿಷ್ಯದಲ್ಲಿ ಹೀಗಾಗುತ್ತೇವೆಂದು ತಿಳಿದುಕೊಂಡಿದ್ದಾರೆ. ನಾನು ಇದನ್ನು ಸ್ಥಾಪನೆ ಮಾಡುವುದಕ್ಕೆ ಬಂದಿದ್ದೇನೆ, ಬ್ಯಾಡ್ಜ್ನಲ್ಲಿಯೂ ಇದರ ತಿಳುವಳಿಕೆಯಿದೆ. ಹೊಸ-ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ. ಶಿವತಂದೆಯು ಹೇಳುತ್ತಾರೆ- ನನ್ನ ಆತ್ಮದಲ್ಲಿ ಎಲ್ಲವೂ ನಿಗಧಿಯಾಗಿದೆ. ಯಾರು ವಿಕಾರಿ ಪತಿತರಾಗಿದ್ದಾರೆ ಅವರನ್ನು ತಂದೆಯು ಬಂದು ಪಾವನ ಮಾಡುತ್ತಾರೆ. 5000 ವರ್ಷಗಳ ಹಿಂದೆ ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆದಿದ್ದೆವೆಂದು ನೀವು ತಿಳಿದುಕೊಂಡಿದ್ದೀರಿ. ಮುಖ್ಯಮಾತು ನನ್ನೊಬ್ಬನನ್ನೇ ನೆನಪು ಮಾಡಿ (ಮಾಮೇಕಂ ಯಾದ್ ಕರೋ) ಎಂದು ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ. ರಥ ಸಿಕ್ಕಿರುವುದರಿಂದ ತಂದೆಯು ಬಂದುಬಿಟ್ಟರು. ಒಂದೇ ರಥವು ನಿಗಧಿಯಾಗಿದೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದು ಪರಿವರ್ತನೆ ಆಗುವುದಿಲ್ಲ. ವಜ್ರದ ವ್ಯಾಪಾರಿಯಾಗಿದ್ದವರು ಹೇಗೆ ಪ್ರಜಾಪಿತ ಆದರೆಂದು ಹೇಳುತ್ತಾರೆ! ಇವರು ವಜ್ರದ ವ್ಯಾಪಾರಿಯಾಗಿದ್ದಾರೆಂದು ತಿಳಿದುಕೊಂಡಿದ್ದರು. ವಜ್ರದ ವ್ಯಾಪಾರ ಒಂದು ಅಸಲಿ ಇನ್ನೊಂದು ನಕಲಿ ವ್ಯಾಪಾರವಾಗಿದೆ ಮತ್ತು ಸ್ಥೂಲ ವಜ್ರದ ವ್ಯಾಪಾರವಾಗಿದೆ. ಇದರಲ್ಲಿಯೂ ಅಸಲಿ ವಜ್ರಗಳನ್ನು ತಂದೆಯು ಕೊಡುತ್ತಾರೆ ಆದ್ದರಿಂದ ಆ ವಜ್ರಗಳು ಯಾವ ಕೆಲಸಕ್ಕೆ ಬರುತ್ತವೆ! ಇವು ಜ್ಞಾನರತ್ನಗಳಾಗಿವೆ, ಈ ವಜ್ರಗಳ ಮುಂದೆ ಆ ವಜ್ರಗಳಿಗೆ ಬೆಲೆಯೇ ಇಲ್ಲ. ಯಾವಾಗ ಈ ರತ್ನಗಳು ಅವರಿಗೆ ದೊರೆತವು, ಆಗ ಆ ವಜ್ರಗಳ ವ್ಯಾಪಾರವು ಕೆಲಸಕ್ಕೆ ಬಾರದೆಂದು ತಿಳಿದು ತೊರೆದುಬಿಟ್ಟರು. ಈ ಅವಿನಾಶಿ ಜ್ಞಾನರತ್ನಗಳು ಒಂದೊಂದು ಲಕ್ಷ ರೂಪಾಯಿಯದ್ದಾಗಿದೆ. ನಿಮಗೆ ಎಷ್ಟೊಂದು ರತ್ನಗಳು ಸಿಗುತ್ತವೆ. ಈ ಜ್ಞಾನರತ್ನಗಳೇ ಸತ್ಯವಾಗುತ್ತವೆ. ನಿಮಗೆ ಗೊತ್ತಿದೆ, ತಂದೆಯು ಈ ರತ್ನಗಳನ್ನು ಜೋಳಿಗೆ ತುಂಬಲು ಕೊಡುತ್ತಿದ್ದಾರೆ, ಇವು ಉಚಿತವಾಗಿ ಸಿಗುತ್ತಿವೆ, ಏನೂ ಖರ್ಚಾಗುತ್ತಿಲ್ಲ. ಅಲ್ಲಿ (ಸತ್ಯಯುಗ) ಗೋಡೆ, ಛಾವಣಿ ಎಲ್ಲದರ ಮೇಲೆ ವಜ್ರ-ವೈಡೂರ್ಯಗಳಿಂದ ಶೃಂಗರಿಸಿರುತ್ತಾರೆ, ಅವುಗಳ ಬೆಲೆ ಏನಿರುತ್ತದೆ! ನಂತರ ಹೆಚ್ಚುತ್ತದೆ. ಸತ್ಯಯುಗದಲ್ಲಿ ನಿಮಗಾಗಿ ವಜ್ರ-ವೈಡೂರ್ಯಗಳು ಬಹಳ ಸುಲಭ ಎನಿಸುತ್ತದೆ. ಇದು ಮಕ್ಕಳಿಗೆ ನಿಶ್ಚಯವಿರಬೇಕಾಗಿದೆ-ತಂದೆ ತಿಳಿಸಿದ್ದಾರೆ ಇವರು ರೂಪನೂ ಆಗಿದ್ದಾರೆ, ಭಸಂತನೂ ಆಗಿದ್ದಾರೆ. ತಂದೆಯದು ಅತಿಸೂಕ್ಷ್ಮ ರೂಪವಾಗಿದೆ, ಅವರಿಗೆ ಜ್ಞಾನಸಾಗರನೆಂದು ಕರೆಯಲಾಗುವುದು. ಇವು ಜ್ಞಾನರತ್ನಗಳಾಗಿವೆ, ಇವುಗಳಿಂದ ನೀವು ಬಹಳ ಧನವಂತರಾಗುತ್ತೀರಿ ಬಾಕಿ ಯಾವುದೇ ಅಮೃತ ಅಥವಾ ನೀರಿನ ಮಳೆಯಲ್ಲ. ವಿದ್ಯೆಯಲ್ಲಿ ಮಳೆಯ ಮಾತು ಬರುವುದಿಲ್ಲ. ಪಾವನರಾಗಲು ಖರ್ಚೂ ಸಹ ಆಗುವುದಿಲ್ಲ. ಈಗ ನಿಮಗೆ ತಿಳುವಳಿಕೆ ಬಂದಿದೆ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆಂದು ನೀವು ತಿಳಿದಿದ್ದೀರಿ. ನಿಮ್ಮ ಯೋಗಬಲದಿಂದ ನೀವು ಪಾವನರಾಗುತ್ತಿದ್ದೀರಿ. ಪಾವನರಾಗಿ ಪಾವನ ಪ್ರಪಂಚದಲ್ಲಿ ಹೊರಟುಹೋಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಈಗ ಯಾವುದು ಸರಿಯಾಗಿದೆ? ಈ ಎಲ್ಲಾ ಮಾತುಗಳಲ್ಲಿ ಬುದ್ಧಿಯು ವಿಚಾರ ಮಾಡುತ್ತಿರಬೇಕು. ನಾಟಕದಲ್ಲಿ ಈ ಭಕ್ತಿಯ ಪಾತ್ರವು ಖಂಡಿತ ನಡೆಯುತ್ತದೆ. ಈಗ ತಂದೆಯು ಹೇಳುತ್ತಾರೆ- ಈಗ ನೀವು ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗಬೇಕು. ಈಗ ಯಾರು ಪಾವನರಾಗುತ್ತಾರೆ ಅವರು ಹೋಗುತ್ತಾರೆ. ಯಾರು ಇಲ್ಲಿಯ ಸಸಿಯಾಗಿರುತ್ತಾರೆ ಅವರೇ ಹೊರಟುಬರುತ್ತಾರೆ. ಉಳಿದವರೆಲ್ಲರೂ ತಿಳಿದುಕೊಳ್ಳುವುದಿಲ್ಲ ಅವರಂತೂ ಕೆಸರಿನಲ್ಲಿಯೇ ಸಿಕ್ಕಿಹಾಕಿಕೊಳ್ಳುತ್ತಾರೆ. ಯಾವಾಗ ಇದನ್ನೆಲ್ಲಾ ಕೇಳುತ್ತಾರೆ ಆಗ ಅಂತ್ಯದಲ್ಲಿ ಹೀಗೆ ಹೇಳುತ್ತಾರೆ- ಅಹೋ ಪ್ರಭು! ನಿನ್ನ ಲೀಲೆ......ಹೇಗೆ ನೀವು ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಮಾಡುತ್ತೀರಿ? ನಿಮ್ಮ ಈ ಜ್ಞಾನ ಸಮಾಚಾರ ಪತ್ರಿಕೆಗಳಲಿಯೂ ಸಹ ಬಹಳಷ್ಟು ಬರುತ್ತಿರುತ್ತದೆ. ವಿಶೇಷವಾಗಿ ಈ ಚಿತ್ರವನ್ನು ಬಣ್ಣದಲ್ಲಿ ಮಾಡಿಸಿ ಸಮಾಚಾರ ಪತ್ರಿಕೆಯಲ್ಲಿ ಹಾಕಿಸಿ ಹಾಗೂ ಶಿವತಂದೆಯು ಪ್ರಜಾಪಿತ ಬ್ರಹ್ಮನ ಮೂಲಕ ಓದಿಸಿ ಸ್ವರ್ಗದ ಮಾಲೀಕರ (ಲಕ್ಷ್ಮೀ-ನಾರಾಯಣ) ನ್ನಾಗಿ ಮಾಡುತ್ತಾರೆಂದು ಬರೆಯಿರಿ. ಹೇಗೆ ಮಾಡುತ್ತಾರೆ? ನೆನಪಿನ ಯಾತ್ರೆಯಿಂದ. ನೆನಪನ್ನು ಮಾಡುತ್ತಾ ನಿಮ್ಮ ಪಾಪವು ನಾಶವಾಗಿಬಿಡುತ್ತದೆ. ನೀವು ನಿಂತು-ನಿಂತಲ್ಲಿಯೇ ಎಲ್ಲರಿಗೂ ಈ ಮಾರ್ಗವನ್ನು ತೋರಿಸಬಹುದು...... ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಪದೇ-ಪದೇ ನೆನಪು ತರಿಸುತ್ತಾ ಅವರ ಚಹರೆಯನ್ನು ನೋಡಿ ಅವರಲ್ಲಿ ಏನಾದರೂ ಪರಿವರ್ತನೆಯಾಗುತ್ತದೆಯೇ? ನಯನಗಳು ನೀರಿನಿಂದ ತೇವವಾಗುತ್ತವೆಯೇ? ಆಗ ತಿಳಿದುಕೊಳ್ಳಿ- ಇವರ ಬುದ್ಧಿಯಲ್ಲಿ ಕುಳಿತಿದೆ. ಮೊಟ್ಟಮೊದಲು ಈ ಒಂದು ಮಾತನ್ನೆ ತಿಳಿಸಿಕೊಡಬೇಕು. 5000 ವರ್ಷಗಳ ಹಿಂದೆ ತಂದೆಯು ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳಿದ್ದರು. ಶಿವತಂದೆಯು ಈ ಸೃಷ್ಟಿಯಲ್ಲಿ ಬಂದಿರುವ ಕಾರಣ ಶಿವಜಯಂತಿಯನ್ನು ಆಚರಿಸುತ್ತಾರೆ. ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಅವರು ಇದನ್ನೇ ತಿಳಿಸಿದರು- ನನ್ನೊಬ್ಬನನ್ನೇ ನೆನಪು ಮಾಡಿದಾಗ ನೀವು ಪಾವನರಾಗಿಬಿಡುತ್ತೀರಿ. ಚಿಕ್ಕ-ಚಿಕ್ಕ ಮಕ್ಕಳೂ ಸಹ ಹೀಗೆ ಕುಳಿತು ತಿಳಿಸಬಹುದು. ಬೇಹದ್ದಿನ ತಂದೆಯು ಶಿವತಂದೆ0iÉುೀ ಹೀಗೆ ತಿಳಿಸುತ್ತಾರೆ. ಬಾಬಾ ಎಂಬ ಶಬ್ಧವು ಬಹಳ ಮಧುರವಾಗಿದೆ. ತಂದೆ ಹಾಗೂ ಆಸ್ತಿ- ಈ ನಿಶ್ಚಯದಲ್ಲಿ ಮಕ್ಕಳಿರಬೇಕು. ಇದು ಮನುಷ್ಯರಿಂದ ದೇವತೆಗಳಾಗುವ ವಿದ್ಯಾಲಯವಾಗಿದೆ. ದೇವತೆಗಳು ಪಾವನರಾಗಿರುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ, ಮನ್ಮನಾಭವ. ಅಕ್ಷರವನ್ನು ಕೇಳಿರುತ್ತಾರೆ, ಕೇಳದೇ ಇರುವವರಿಗೆ ತಂದೆಯು ತಿಳಿಸುತ್ತಾರೆ- ನಾನೇ ಪತಿತ-ಪಾವನನಾಗಿದ್ದೇನೆ. ನೀವು ನನ್ನನ್ನು ನೆನಪು ಮಾಡಿದಾಗ ನಿಮ್ಮ ಅಪವಿತ್ರತೆಯು ಸಮಾಪ್ತಿಯಾಗಿ ನೀವು ಸತೋಪ್ರಧಾನರಾಗಿಬಿಡುತ್ತೀರಿ. ಇದೇ ಶ್ರಮವಾಗಿದೆ. ಜ್ಞಾನವನ್ನು ಎಲ್ಲರೂ ಹೇಳುತ್ತಾರೆ ಬಹಳ ಚೆನ್ನಾಗಿದೆ ಫಸ್ಟ್ಕ್ಲಾಸ್ ಜ್ಞಾನವಾಗಿದೆ ಆದರೆ ಪ್ರಾಚೀನ ರಾಜಯೋಗದ ಮಾತನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಪಾವನರಾಗುವ ಮಾತನ್ನು ತಿಳಿಸಿದರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ- ಈಗ ನೀವೆಲ್ಲರೂ ತಮೋಪ್ರಧಾನ, ಪತಿತರಾಗಿಬಿಟ್ಟಿದ್ದೀರಿ. ಈಗ ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಮೂಲತಃ ನೀವಾತ್ಮರು ನನ್ನ ಜೊತೆಯಲ್ಲಿದ್ದವರಲ್ಲವೆ! ನೀವು ನನ್ನನ್ನು ಕರೆಯುವುದೂ ಸಹ ಓ ಗಾಡ್ ಫಾದರ್ ಬನ್ನಿ ಎಂದು. ಈಗ ನಾನು ಬಂದಿದ್ದೇನೆ, ಈಗ ನೀವು ನನ್ನ ಮತದಂತೆ ನಡೆಯಿರಿ. ಇದಾಗಿದೆ- ಪತಿತರಿಂದ ಪಾವನರಾಗುವ ಮತ. ನಾನು ಸರ್ವಶಕ್ತಿವಂತನಾಗಿದ್ದೇನೆ, ಸದಾ ಪಾವನನಾಗಿದ್ದೇನೆ. ಈಗ ನೀವು ನನ್ನನ್ನು ನೆನಪು ಮಾಡಿ. ಇದನ್ನೇ ಪ್ರಾಚೀನ ರಾಜಯೋಗವೆಂದು ಕರೆಯಲಾಗುವುದು. ನೀವು ವ್ಯವಹಾರದಲ್ಲಿ ಭಲೆ ಇರಿ, ಮಕ್ಕಳು-ಮರಿ ಎಲ್ಲರನ್ನೂ ಸಂಭಾಲನೆ ಮಾಡಿ ಕೇವಲ ಬುದ್ಧಿಯೋಗವನ್ನು ಮಾತ್ರ ನನ್ನ ಜೊತೆ ಜೋಡಿಸಿ. ಇದು ಎಲ್ಲದಕ್ಕಿಂತ ಮುಖ್ಯವಾದ ಮಾತಾಗಿದೆ. ಇದನ್ನು ತಿಳಿದುಕೊಳ್ಳದೇ ಇದ್ದರೆ ಬೇರೆ ಏನೂ ತಿಳಿದುಕೊಂಡಿಲ್ಲ ಎಂದರ್ಥ. ಜ್ಞಾನಕ್ಕಾಗಿ ಬಹಳ ಒಳ್ಳೆಯ ಜ್ಞಾನವನ್ನು ಕೊಡುತ್ತಿದ್ದೀರಿ, ಪವಿತ್ರತೆಯೂ ಚೆನ್ನಾಗಿದೆ ಆದರೆ ನಾವು ಹೇಗೆ ಪವಿತ್ರರಾಗುವುದು? ಸದಾಕಾಲಕ್ಕಾಗಿ ಈ ಮಾತುಗಳನ್ನು ತಿಳಿದುಕೊಳ್ಳುವುದೇ ಇಲ್ಲ. ದೇವತೆಗಳು ಸದಾ ಪವಿತ್ರರಾಗಿದ್ದರಲ್ಲವೆ! ಹೇಗಾದರು? ಈ ಮಾತುಗಳನ್ನು ಮೊಟ್ಟಮೊದಲು ತಿಳಿಸಬೇಕು. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ನನ್ನನ್ನು ನೆನಪು ಮಾಡಿ. ನೆನಪಿನಿಂದ ಪಾಪವು ಅಳಿಸಿಹೋಗುತ್ತದೆ ಮತ್ತು ದೇವತೆಯಾಗಿಬಿಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂನ್ನು ಬಡವರಿಂದ ಶ್ರೀಮಂತರನ್ನಾಗಿ ಮಾಡಿಕೊಳ್ಳಲು ತಂದೆಯಿಂದ ಅವಿನಾಶಿ ಜ್ಞಾನರತ್ನಗಳನ್ನು ತೆಗೆದುಕೊಳ್ಳಬೇಕು. ಈ ಒಂದೊಂದು ಜ್ಞಾನರತ್ನಗಳು ಲಕ್ಷಾಂತರ ರೂಪಾಯಿಗಳಾಗಿವೆ. ಇದರ ಬೆಲೆಯನ್ನರಿತು ವಿದ್ಯೆಯನ್ನು ಓದಬೇಕು. ಈ ವಿದ್ಯೆಯು ಸಂಪಾದನೆಯಾಗಿದೆ. ಇದರಿಂದಲೇ ಶ್ರೇಷ್ಠಪದವಿಯನ್ನು ಪಡೆಯಬೇಕು.
2. ರಾಮನ ಸಂಪ್ರದಾಯದಲ್ಲಿ ಬರುವ ಸಲುವಾಗಿ ಸಂಪೂರ್ಣ ಪವಿತ್ರರಾಗಿರುವಂತಹ ಒಬ್ಬ ತಂದೆಯ ಸಂಗವನ್ನು ಮಾಡಬೇಕು. ಕೆಟ್ಟಸಂಗದಿಂದ ಸದಾ ದೂರವಿರಬೇಕು. ಎಲ್ಲಾ ಕಡೆಯಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ತಂದೆಯಲ್ಲಿ ತೊಡಗಿಸಬೇಕು.
ಓಂ ಶಾಂತಿ. ತಂದೆಯು ಎಲ್ಲಾ ಮಕ್ಕಳಿಗೆ ಮೊಟ್ಟ ಮೊದಲು ಇಲ್ಲಿ ಕುಳಿತುಕೊಂಡು ಲಕ್ಷದಲ್ಲಿ ಸ್ಥಿತರಾಗಲು ದೃಷ್ಟಿಯನ್ನು ಕೊಡುತ್ತಾರೆ – ಹೇಗೆ ನಾನು ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೇನೆಯೋ ಹಾಗೆಯೇ ನೀವೂ ಶಿವ ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಿರಿ. ಪ್ರಶ್ನೆ ಉದ್ಭವಿಸುತ್ತದೆ - ಯಾರು ಸಮ್ಮುಖದಲ್ಲಿ ಯೋಗ ಮಾಡಿಸಲು ಕುಳಿತಿದ್ದಾರೆಯೋ ಅವರು ಇಡೀ ಸಮಯ ಶಿವ ತಂದೆಯ ನೆನಪಿನಲ್ಲಿ ಇರುತ್ತಾರೆಯೇ? ಯಾವುದು ಅನ್ಯರಿಗೂ ಆಕರ್ಷಣೆಯಾಗಬೇಕು. ನೆನಪಿನಲ್ಲಿದ್ದಾಗ ಬಹಳ ಶಾಂತಿಯಲ್ಲಿರುತ್ತೀರಿ, ಅಶರೀರಿಯಾಗಿ ಶಿವ ತಂದೆಯ ನೆನಪಿನಲ್ಲಿದ್ದಾಗ ಅನ್ಯರನ್ನೂ ಶಾಂತಿಯಲ್ಲಿ ತೆಗೆದುಕೊಂಡು ಹೋಗುತ್ತೀರಿ ಏಕೆಂದರೆ ಶಿಕ್ಷಕರಾಗಿ ಕುಳಿತುಕೊಳ್ಳುತ್ತೀರಲ್ಲವೆ. ಒಂದುವೇಳೆ ಶಿಕ್ಷಕರೇ ಸರಿಯಾದ ರೀತಿಯಲ್ಲಿ ನೆನಪಿನಲ್ಲಿ ಇಲ್ಲದಿದ್ದರೆ ಅನ್ಯರೂ ಇರಲು ಸಾಧ್ಯವಿಲ್ಲ. ಮೊದಲು ಈ ಸಂಕಲ್ಪ ಮಾಡಬೇಕು - ನಾನು ಯಾವ ಪ್ರಿಯತಮ ತಂದೆಗೆ ಪ್ರಿಯತಮೆಯಾಗಿದ್ದೇನೆ, ಅವರ ನೆನಪಿನಲ್ಲಿಯೇ ಕುಳಿತಿದ್ದೇನೆಯೇ? ಪ್ರತಿಯೊಬ್ಬರೂ ಈ ರೀತಿ ತಮ್ಮೊಂದಿಗೆ ಕೇಳಿಕೊಳ್ಳಿ. ಒಂದುವೇಳೆ ಬುದ್ಧಿಯು ಬೇರೆ ಕಡೆ ಹೊರಟು ಹೋಗುತ್ತದೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತೀರೆಂದರೆ ಅವರು ಸೇವೆಯನ್ನಲ್ಲ, ಸೇವಾಭಂಗ ಮಾಡಲು ಕುಳಿತಿದ್ದಾರೆಂದರ್ಥ. ಇದು ತಿಳುವಳಿಕೆಯ ಮಾತಲ್ಲವೆ. ಅವರು ಸ್ವಲ್ಪವೂ ಸೇವೆ ಮಾಡಿದಂತಾಗಲಿಲ್ಲ. ಹಾಗೆಯೇ ಕುಳಿತಿದ್ದಾರೆಂದರೆ ನಷ್ಟವನ್ನೇ ಮಾಡಿಕೊಳ್ಳುತ್ತಾರೆ. ಶಿಕ್ಷಕರ (ಸಹೋದರ/ಸಹೋದರಿ) ಬುದ್ದಿಯೋಗವೇ ಅಲೆಯುತ್ತಿದ್ದರೆ ಅವರು ಏನು ಸಹಯೋಗ ನೀಡುತ್ತಾರೆ? ಯಾರು ಶಿಕ್ಷಕರಾಗಿ ಕುಳಿತುಕೊಳ್ಳುವರೋ ಅವರು ತಮ್ಮೊಂದಿಗೆ ಕೇಳಿಕೊಳ್ಳಿ - ನಾನು ಪುಣ್ಯದ ಕಾರ್ಯವನ್ನೇ ಮಾಡುತ್ತಿದ್ದೇನೆಯೇ? ಒಂದುವೇಳೆ ಪಾಪದ ಕರ್ಮವನ್ನು ಮಾಡುತ್ತಿದ್ದರೆ ದುರ್ಗತಿ ಹೊಂದುವರು, ಪದವಿ ಭ್ರಷ್ಟವಾಗುವುದು. ಒಂದುವೇಳೆ ಅಂತಹವರನ್ನು ಗದ್ದುಗೆಯ ಮೇಲೆ ಕೂರಿಸುತ್ತೀರೆಂದರೆ ಅದಕ್ಕೆ ನೀವೂ ಜವಾಬ್ದಾರರಾಗುವಿರಿ. ಶಿವ ತಂದೆಯು ಎಲ್ಲರನ್ನೂ ತಿಳಿದುಕೊಂಡಿದ್ದಾರೆ. ಈ ಬಾಬಾರವರೂ ಸಹ ಎಲ್ಲರ ಸ್ಥಿತಿಯನ್ನು ಅರಿತುಕೊಂಡಿದ್ದಾರೆ. ಶಿವ ತಂದೆಯು ಹೇಳುತ್ತಾರೆ - ಇವರು ಶಿಕ್ಷಕರಾಗಿ ಕುಳಿತಿದ್ದಾರೆ ಮತ್ತು ಇವರ ಬುದ್ಧಿಯೋಗವು ಅಲೆಯುತ್ತಿರುತ್ತದೆ ಅಂದಮೇಲೆ ಇವರು ಅನ್ಯರಿಗೇನು ಸಹಯೋಗ ನೀಡುತ್ತಾರೆ! ನೀವು ಬ್ರಾಹ್ಮಣ ಮಕ್ಕಳು ಶಿವ ತಂದೆಯ ಮಕ್ಕಳಾಗಿ ಅವರಿಂದ ಆಸ್ತಿಯನ್ನು ಪಡೆಯಲು ನಿಮಿತ್ತರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ಹೇ ಆತ್ಮರೇ, ನನ್ನೊಬ್ಬನನ್ನೇ ನೆನಪು ಮಾಡಿ. ಶಿಕ್ಷಕರಾಗಿ ಕುಳಿತುಕೊಳ್ಳುತ್ತೀರೆಂದರೆ ಇನ್ನೂ ಚೆನ್ನಾಗಿ ಆ ಸ್ಥಿತಿಯಲ್ಲಿ ಕುಳಿತುಕೊಳ್ಳಿ. ವಾಸ್ತವದಲ್ಲಿ ಪ್ರತಿಯೊಬ್ಬರೂ ತಂದೆಯನ್ನು ನೆನಪು ಮಾಡಬೇಕಾಗಿದೆ. ವಿದ್ಯಾರ್ಥಿಯು ತನ್ನ ಸ್ಥಿತಿಯನ್ನು ಅರಿತುಕೊಳ್ಳಬಹುದು. ಪ್ರತಿಯೊಬ್ಬರಿಗೆ ತಿಳಿದಿದೆ - ನಾನು ತೇರ್ಗಡೆಯಾಗುತ್ತೇನೆಯೇ ಅಥವಾ ಇಲ್ಲವೇ? ಶಿಕ್ಷಕರೂ ತಿಳಿದುಕೊಂಡಿರುತ್ತಾರೆ - ಒಂದುವೇಳೆ ಖಾಸಗಿ ಶಿಕ್ಷಕರನ್ನು ಇಟ್ಟುಕೊಂಡರೆ ಅವರಿಗೂ ತಿಳಿದಿರುತ್ತದೆ. ಆ ವಿದ್ಯೆಯಲ್ಲಿ ಯಾರಾದರೂ ವಿಶೇಷ ಶಿಕ್ಷಕರನ್ನು ಇಟ್ಟುಕೊಳ್ಳುವುದಾದರೆ ಇಟ್ಟುಕೊಳ್ಳಬಹುದು. ಇಲ್ಲಿ ಒಂದುವೇಳೆ ಯಾರಾದರೂ ನಮ್ಮನ್ನು ಯೋಗದಲ್ಲಿ ಕೂರಿಸಿ ಎಂದು ಕೇಳಿದರೆ, ತಂದೆಯ ಆದೇಶವೇ ಆಗಿದೆ - ಮಕ್ಕಳೇ ನನ್ನೊಬ್ಬನನ್ನೇ ನೆನಪು ಮಾಡಿ, ನೀವು ಪ್ರಿಯತಮೆಯರಾಗಿದ್ದೀರಿ. ನಡೆಯುತ್ತಾ-ತಿರುಗಾಡುತ್ತಾ ತಮ್ಮ ಪ್ರಿಯತಮನನ್ನು ನೆನಪು ಮಾಡಿ. ಸನ್ಯಾಸಿಗಳಾದರೆ ಬ್ರಹ್ಮ್ ತತ್ವವನ್ನು ನೆನಪು ಮಾಡುತ್ತಾರೆ. ನಾವು ಹೋಗಿ ಬ್ರಹ್ಮ್ ದಲ್ಲಿ ಲೀನವಾಗುತ್ತೇವೆಂದು ತಿಳಿಯುತ್ತಾರೆ. ಯಾರು ಹೆಚ್ಚು ನೆನಪು ಮಾಡುತ್ತಿರುವರೋ ಅವರ ಸ್ಥಿತಿಯೂ ಚೆನ್ನಾಗಿರುವುದು. ಪ್ರತಿಯೊಬ್ಬರಲ್ಲಿಯೂ ಯಾವುದಾದರೊಂದು ವಿಶೇಷತೆಯಂತೂ ಇರುತ್ತದೆಯಲ್ಲವೆ. ನೆನಪಿನ ಯಾತ್ರೆಯಲ್ಲಿರಿ ಎಂದು ಹೇಳುತ್ತಾರೆ, ಸ್ವಯಂ ಕೂಡ ನೆನಪಿನಲ್ಲಿರಬೇಕಾಗಿದೆ. ತಂದೆಯ ಬಳಿ ಕೆಲವರು ಸತ್ಯವಂತರು, ಇನ್ನೂ ಕೆಲವರು ಅಸತ್ಯವಂತರು ಇದ್ದಾರೆ. ಸ್ವಯಂ ನಿರಂತರ ನೆನಪಿನಲ್ಲಿರುವುದು ಬಹಳ ವಿರಳ. ಕೆಲವರಂತೂ ತಂದೆಯೊಂದಿಗೆ ಬಹಳ ಸತ್ಯವಾಗಿರುತ್ತಾರೆ. ಈ ಬ್ರಹ್ಮಾ ತಂದೆಯೂ ತಮ್ಮ ಅನುಭವವನ್ನು ನೀವು ಮಕ್ಕಳಿಗೆ ತಿಳಿಸುತ್ತಾರೆ. ನಾನು ಸ್ವಲ್ಪ ಸಮಯ ನೆನಪಿನಲ್ಲಿರುತ್ತೇನೆ ಮತ್ತೆ ಮರೆತು ಬಿಡುತ್ತೇನೆ ಏಕೆಂದರೆ ಇವರ ಮೇಲೆ ಬಹಳ ಜವಾಬ್ದಾರಿಯಿದೆ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ! ನೀವು ಮಕ್ಕಳಿಗೆ ಇದೂ ಸಹ ಅರ್ಥವಾಗುವುದಿಲ್ಲ - ಈ ಮುರುಳಿಯನ್ನು ಶಿವ ತಂದೆಯು ನುಡಿಸಿದರೇ ಅಥವಾ ಬ್ರಹ್ಮಾ ತಂದೆಯು ನುಡಿಸುತ್ತಾರೆಯೇ? ಏಕೆಂದರೆ ಇಬ್ಬರೂ ಒಟ್ಟಿಗೆ ಇದ್ದಾರಲ್ಲವೆ. ನಾನೂ ಸಹ ಶಿವ ತಂದೆಯನ್ನು ನೆನಪು ಮಾಡುತ್ತೇನೆಂದು ಈ ಬ್ರಹ್ಮಾರವರು ಹೇಳುತ್ತಾರೆ. ಇವರೂ ಸಹ ಮಕ್ಕಳಿಗೆ ಯೋಗ ಮಾಡಿಸುತ್ತಾರೆ. ಇವರು ಕುಳಿತುಕೊಂಡಾಗ ನೋಡುತ್ತೀರಿ - ಎಷ್ಟು ಆಳವಾದ ಶಾಂತಿಯು ಏರ್ಪಡುತ್ತದೆ! ಅನೇಕರನ್ನು ಸೆಳೆಯುತ್ತಾರೆ. ತಂದೆಯಲ್ಲವೆ ಆದ್ದರಿಂದಲೇ ಹೇಳುತ್ತಾರೆ - ಮಕ್ಕಳೇ, ನೆನಪಿನ ಯಾತ್ರೆಯಲ್ಲಿರಿ. ಮೊದಲು ಸ್ವಯಂ ನೆನಪಿನಲ್ಲಿರಬೇಕಾಗಿದೆ, ಕೇವಲ ಪಂಡಿತರಾಗಬಾರದು. ನೆನಪಿನಲ್ಲಿ ಇಲ್ಲವೆಂದರೆ ಅಂತಿಮದಲ್ಲಿ ಅನುತ್ತೀರ್ಣರಾಗಿ ಬಿಡುತ್ತೀರಿ. ಮಮ್ಮಾ-ಬಾಬಾರವರದಂತೂ ಶ್ರೇಷ್ಠ ಪದವಿಯಾಗಿದೆ. ಉಳಿದಂತೆ ಇನ್ನೂ ಮಾಲೆಯಾಗಿಲ್ಲ. ಒಂದು ಮಣಿಯೂ ಸಹ ಇನ್ನೂ ಸಂಪೂರ್ಣವಾಗಿಲ್ಲ. ಮೊದಲು ಮಕ್ಕಳಿಗೆ ಲಿಫ್ಟ್ ಕೊಡುವುದಕ್ಕಾಗಿ ಮಾಲೆಯನ್ನು ಮಾಡುತ್ತಿದ್ದರು. ಆದರೆ ತೀಕ್ಷ್ಣವಾಗಿದ್ದವರನ್ನೂ ಸಹ ಮಾಯೆಯು ಸಮಾಪ್ತಿ ಮಾಡಿ ಬಿಟ್ಟಿತು. ಎಲ್ಲವೂ ಸೇವೆಯ ಮೇಲೆ ಅವಲಂಭಿಸಿದೆ. ಆದ್ದರಿಂದ ಯಾರು ಸಮ್ಮುಖದಲ್ಲಿ ಯೋಗ ಮಾಡಿಸಲು ಕುಳಿತುಕೊಳ್ಳುವರೋ ಅವರು ಇದನ್ನು ತಿಳಿದುಕೊಳ್ಳಬೇಕು - ನಾನು ಸತ್ಯ ಶಿಕ್ಷಕನಾಗಿ ಕುಳಿತುಕೊಳ್ಳಬೇಕು, ಇಲ್ಲದಿದ್ದರೆ ನನ್ನ ಬುದ್ಧಿಯು ಅಲ್ಲಿ - ಇಲ್ಲಿ ಹೊರಟು ಹೋಗುತ್ತದೆ ಎಂದು ಹೇಳಬೇಕು. ನಾನು ಇಲ್ಲಿ ಕುಳಿತುಕೊಳ್ಳಲು ಯೋಗ್ಯವಲ್ಲವೆಂದು ಸ್ವಯಂ ನೇರವಾಗಿ ಹೇಳಬೇಕು. ತಾವೇ ಹೋಗಿ ಕುಳಿತುಕೊಳ್ಳುವುದಲ್ಲ, ಕೆಲವರು ಭಲೆ ಮುರುಳಿಯನ್ನು ಓದಿ ಹೇಳುವುದಿಲ್ಲ ಆದರೆ ನೆನಪಿನಲ್ಲಿರುತ್ತಾರೆ. ಇಲ್ಲಂತೂ ಎರಡರಲ್ಲಿಯೂ ತೀಕ್ಷ್ಣವಾಗಿ ಮುಂದೆ ಹೋಗಬೇಕು. ಬಹಳ ಒಳ್ಳೆಯ ಪ್ರಿಯತಮನಾಗಿದ್ದಾರೆ ಅಂದಮೇಲೆ ಅವರನ್ನು ಬಹಳ ನೆನಪು ಮಾಡಬೇಕು. ಇದರಲ್ಲಿಯೇ ಪರಿಶ್ರಮವಿದೆ ಬಾಕಿ ಪ್ರಜೆಗಳಾಗುವುದು ಸಹಜವಾಗಿದೆ. ದಾಸ -ದಾಸಿಯರಾಗುವುದು ದೊಡ್ಡ ಮಾತಲ್ಲ, ಅಂತಹವರು ಹೆಚ್ಚು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ. ಹೇಗೆ ನೋಡಿ, ಯಜ್ಞದ ಭಂಡಾರಿ (ಭೋಲಿ ದಾದಿ) ಎಲ್ಲರನ್ನೂ ಬಹಳ ಖುಷಿ ಪಡಿಸುತ್ತಾರೆ. ಯಾರಿಗೂ ದುಃಖ ಕೊಡುವುದಿಲ್ಲ, ಎಲ್ಲರೂ ಮಹಿಮೆ ಮಾಡುತ್ತಾರೆ - ವಾಹ್! ಶಿವ ತಂದೆಯ ಭಂಡಾರಿಯು ನಂಬರ್ವನ್ ಆಗಿದ್ದಾರೆ. ಅನೇಕರ ಮನಸ್ಸನ್ನು ಖುಷಿ ಪಡಿಸುತ್ತಾರೆ. ತಂದೆಯೂ ಸಹ ಮಕ್ಕಳ ಮನಸ್ಸನ್ನು ಖುಷಿ ಪಡಿಸುತ್ತಾ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ ಮತ್ತು ಈ ಚಕ್ರವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಿ. ಈಗ ಪ್ರತಿಯೊಬ್ಬರೂ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಅವಿಶ್ರಾಂತ ಸೇವೆ ಮಾಡಬೇಕು, ಬಹಳ ದಯಾಹೃದಯಿಗಳಾಗಬೇಕಾಗಿದೆ. ಮನುಷ್ಯರು ಮುಕ್ತಿ-ಜೀವನ್ಮುಕ್ತಿಗಾಗಿ ಬಹಳ ಅಲೆದಾಡುತ್ತಾರೆ. ಯಾರಿಗೂ ಸದ್ಗತಿಯ ಬಗ್ಗೆ ತಿಳಿದೇ ಇಲ್ಲ. ಎಲ್ಲಿಂದ ಬಂದೆವೋ ಅಲ್ಲಗೆ ಹಿಂತಿರುಗಿ ಹೋಗಬೇಕೆಂದು ತಿಳಿಯುತ್ತಾರೆ. ನಾಟಕವೆಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ಅದರಂತೆ ನಡೆಯುವುದಿಲ್ಲ. ನೋಡಿ, ತರಗತಿಗೆ ಕೆಲವೊಂದು ಕಡೆ ಮುಸಲ್ಮಾನರು ಬರುತ್ತಾರೆ. ಅವರೇ ಹೇಳುತ್ತಾರೆ - ನಾವು ಮೂಲತಃ ದೇವಿ-ದೇವತಾ ಧರ್ಮದವರಾಗಿದ್ದೆವು ನಂತರ ಹೋಗಿ ನಾವು ಮುಸಲ್ಮಾನ ಧರ್ಮದಲ್ಲಿ ಹೋಗಿ ಸೇರಿದೆವು, ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ಸಿಂಗ್ನಲ್ಲಿಯೂ 5-6 ಮಂದಿ ಮುಸಲ್ಮಾನರು ಬರುತ್ತಿದ್ದರು, ಈಗಲೂ ಬರುತ್ತಾರೆ. ಮುಂದೆ ನಡೆಯುವರೆ ಅಥವಾ ಇಲ್ಲವೇ ಎಂದು ನೋಡಬೇಕು ಏಕೆಂದರೆ ಮಾಯೆಯು ಸಹ ಪರೀಕ್ಷೆಯನ್ನು ತೆಗೆದುಕೊಳ್ಳುತ್ತದೆ. ಕೆಲವರು ಬಲವಾಗಿ ನಿಲ್ಲುತ್ತಾರೆ, ಕೆಲವರು ನಿಲ್ಲುವುದಿಲ್ಲ. ಯಾರು ಮೂಲ ಬ್ರಾಹ್ಮಣ ಧರ್ಮದವರಾಗಿರುವರೋ, ಯಾರು 84 ಜನ್ಮಗಳನ್ನು ತೆಗೆದುಕೊಂಡಿರುವರೋ ಅವರೆಂದೂ ಅಲುಗಾಡುವುದಿಲ್ಲ. ಇನ್ನೂ ಕೆಲವರು ಕಾರಣವಿಲ್ಲದೆ ಹೊರಟು ಹೋಗುತ್ತಾರೆ. ದೇಹಾಭಿಮಾನವು ಬಂದು ಬಿಡುತ್ತದೆ. ನೀವು ಮಕ್ಕಳಂತೂ ಅನೇಕರ ಕಲ್ಯಾಣ ಮಾಡಬೇಕಾಗಿದೆ, ಇಲ್ಲವೆಂದರೆ ಯಾವ ಪದವಿಯನ್ನು ಪಡೆಯುತ್ತೀರಿ! ತಮ್ಮ ಕಲ್ಯಾಣಕ್ಕಾಗಿ ಮನೆ-ಮಠವನ್ನು ಬಿಟ್ಟಿದ್ದೀರಿ. ಹಾಗೆಂದು ಹೇಳಿ ನೀವೇನೂ ತಂದೆಯ ಮೇಲೆ ದಯೆ ತೋರಿಸಿಲ್ಲ. ತಂದೆಯ ಮಕ್ಕಳಾಗಿದ್ದೀರೆಂದರೆ ಅದೇರೀತಿ ಸೇವೆಯನ್ನೂ ಮಾಡಬೇಕು. ನಿಮಗಂತೂ ರಾಜ್ಯ ಪದಕವು ಸಿಗುತ್ತದೆ. 21 ಜನ್ಮಗಳು ಸದಾ ಸುಖದ ರಾಜ್ಯವು ಸಿಗುತ್ತದೆ. ಕೇವಲ ಈಗ ಮಾಯೆಯ ಮೇಲೆ ಜಯ ಗಳಿಸಬೇಕು ಮತ್ತು ಅನ್ಯರಿಗೂ ಕಲಿಸಬೇಕಾಗಿದೆ. ಕೆಲವರಂತೂ ಅನುತ್ತೀರ್ಣರಾಗಿ ಬಿಡುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವುದು ಬಹಳ ಕಷ್ಟವೆಂದು ತಿಳಿದುಕೊಳ್ಳುತ್ತಾರೆ. ಇದಕ್ಕೆ ತಂದೆಯು ಹೇಳುತ್ತಾರೆ - ಈ ರೀತಿ ತಿಳಿದುಕೊಳ್ಳುವುದು ನಿರ್ಬಲತೆಯಾಗಿದೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದಂತೂ ಬಹಳ ಸಹಜವಾಗಿದೆ. ಮಕ್ಕಳಲ್ಲಿ ರಾಜ್ಯವನ್ನೂ ಪಡೆಯುವ ಸಾಹಸವಿಲ್ಲ ಆದ್ದರಿಂದ ಉದಾಸೀನರಾಗಿ ಕುಳಿತು ಬಿಡುತ್ತಾರೆ. ತಾನೂ ತೆಗೆದುಕೊಳ್ಳುವುದಿಲ್ಲ, ಅನ್ಯರೂ ತೆಗೆದುಕೊಳ್ಳಲು ಬಿಡುವುದಿಲ್ಲ ಅಂದಾಗ ಪರಿಣಾಮವೇನಾಯಿತು? ತಂದೆಯು ತಿಳಿಸುತ್ತಾರೆ - ಹಗಲು-ರಾತ್ರಿ ಸರ್ವಿಸ್ ಮಾಡಿ. ಕಾಂಗ್ರೆಸ್ಸಿನವರು ಪರಿಶ್ರಮ ಪಟ್ಟರು. ಎಷ್ಟೊಂದು ಕಷ್ಟವನ್ನು ಸಹನೆ ಮಾಡಿದರು ಆದ್ದರಿಂದಲೇ ಬ್ರಿಟಿಷರಿಂದ ರಾಜ್ಯವನ್ನು ಪಡೆದುಕೊಂಡರು. ನೀವೀಗ ರಾವಣನಿಂದ ರಾಜ್ಯವನ್ನು ಪಡೆಯಬೇಕಾಗಿದೆ. ರಾವಣನಂತೂ ಎಲ್ಲರ ಶತ್ರುವಾಗಿದ್ದಾನೆ. ನಾವು ರಾವಣನ ಮತದಂತೆ ನಡೆಯುತ್ತಿದ್ದೇವೆ ಆದ್ದರಿಂದಲೇ ದುಃಖಿಯಾಗಿದ್ದೇವೆಂದು ಪ್ರಪಂಚದವರಿಗೆ ಗೊತ್ತಿಲ್ಲ. ಯಾರಿಗೂ ಸತ್ಯವಾದ ಸ್ಥಿರವಾದ ಸುಖವಿಲ್ಲ. ಶಿವ ತಂದೆಯು ಹೇಳುತ್ತಾರೆ, ನಾನು ನೀವು ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡಲು ಬಂದಿದ್ದೇನೆ. ಈಗ ಶ್ರೀಮತದಂತೆ ನಡೆದು ಶ್ರೇಷ್ಠರಾಗಬೇಕಾಗಿದೆ. ಯಾರೆಲ್ಲಾ ಭಾರತವಾಸಿಗಳಿದ್ದಾರೆಯೋ ಅವರು ತಮ್ಮ ಧರ್ಮವನ್ನು ಮರೆತು ಬಿಟ್ಟಿದ್ದಾರೆ. ಯಥಾ ರಾಜ-ರಾಣಿ ತಥಾ ಪ್ರಜಾ. ಈಗ ನೀವು ಮಕ್ಕಳಿಗೆ ಸೃಷ್ಟಿಚಕ್ರವು ಹೇಗೆ ನಡೆಯುತ್ತದೆ ಎಂದು ತಿಳುವಳಿಕೆ ಸಿಗುತ್ತಿದೆ ಆದರೂ ಸಹ ಪದೇ-ಪದೇ ಮರೆತು ಹೋಗುತ್ತಾರೆ. ಬುದ್ಧಿಯಲ್ಲಿ ನಿಲ್ಲುವುದೇ ಇಲ್ಲ. ಭಲೆ ಬ್ರಾಹ್ಮಣರಂತೂ ಅನೇಕರಾಗುತ್ತಾರೆ ಆದರೆ ಕೆಲವರು ಕಚ್ಚಾ ಆಗಿರುವ ಕಾರಣ ವಿಕಾರದಲ್ಲಿಯೂ ಹೋಗುತ್ತಿರುತ್ತಾರೆ. ನಾವು ಬಿ.ಕೆ. ಆಗಿದ್ದೇವೆಂದು ಹೇಳುತ್ತಾರೆ ಆದರೆ ಇಲ್ಲ. ಯಾರು ಪೂರ್ಣ ರೀತಿಯಲ್ಲಿ ತಂದೆಯ ಆದೇಶದಂತೆ ನಡೆಯುವರೋ, ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾ ಇರುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯಬಲ್ಲರು. ವಿಘ್ನಗಳಂತೂ ಬೀಳುತ್ತವೆ, ಅಮೃತವನ್ನು ಕುಡಿಯುತ್ತಾ - ಕುಡಿಯುತ್ತಾ ಮತ್ತೆ ಹೋಗಿ ವಿಘ್ನಗಳನ್ನು ಹಾಕುತ್ತಾರೆ. ಇದೂ ಗಾಯನವಿದೆ. ಅಂತಹವರ ಪದವಿ ಏನಾಗುವುದು? ಕೆಲವರು ಹೆಣ್ಣು ಮಕ್ಕಳು ವಿಕಾರದ ಕಾರಣ ಪೆಟ್ಟುಗಳನ್ನು ತಿನ್ನುತ್ತಾರೆ. ಬಾಬಾ, ಈ ದುಃಖವನ್ನು ಸ್ವಲ್ಪ ಸಹನೆ ಮಾಡುತ್ತೇನೆ. ನಮ್ಮ ಪ್ರಿಯತಮನು ತಂದೆಯಲ್ಲವೆ, ಪೆಟ್ಟು ತಿನ್ನುತ್ತಿದ್ದರೂ ಸಹ ಶಿವ ತಂದೆಯನ್ನು ನೆನಪು ಮಾಡುತ್ತೇವೆಂದು ಹೇಳುತ್ತಾರೆ. ಅಂತಹವರು ಬಹಳ ಖುಷಿಯಲ್ಲಿರುತ್ತಾರೆ. ಈ ಅಪಾರ ಖುಷಿಯಲ್ಲಿರಬೇಕು - ತಂದೆಯಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಅನ್ಯರನ್ನೂ ನಮ್ಮ ಸಮಾನ ಮಾಡಿಕೊಳ್ಳುತ್ತಾ ಇರುತ್ತೇವೆ.
ತಂದೆಯ ಬುದ್ದಿಯಲ್ಲಂತೂ ಈ ಏಣಿಯ ಚಿತ್ರವು ಬಹಳ ಇರುತ್ತದೆ. ಇದಕ್ಕೆ ಬಹಳ ಮಹತ್ವಿಕೆ ಕೊಡುತ್ತಾರೆ. ಯಾವ ಮಕ್ಕಳು ವಿಚಾರ ಸಾಗರ ಮಂಥನ ಮಾಡಿ ಇಂತಿಂತಹ ಚಿತ್ರಗಳನ್ನು ಮಾಡಿಸುತ್ತಾರೆಯೋ ಅಂತಹವರಿಗೆ ತಂದೆಯೂ ಸಹ ಅಭಿನಂದನೆಗಳನ್ನು ತಿಳಿಸುತ್ತಾರೆ ಅಥವಾ ಈ ರೀತಿ ಹೇಳಬಹುದು - ತಂದೆಯು ಅಂತಹ ಮಕ್ಕಳಿಗೆ ಪ್ರೇರಣೆ ನೀಡಿದ್ದಾರೆ. ಏಣಿಯ ಚಿತ್ರವನ್ನೂ ಸಹ ಬಹಳ ಚೆನ್ನಾಗಿ ಮಾಡಿದ್ದಾರೆ. 84 ಜನ್ಮಗಳನ್ನು ಅರಿತುಕೊಂಡಿರುವುದರಿಂದ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಇದು ಬಹಳ ಒಳ್ಳೆಯ ಚಿತ್ರವಾಗಿದೆ. ತ್ರಿಮೂರ್ತಿ, ಗೋಲದ ಚಿತ್ರಕ್ಕಿಂತಲೂ ಇದರಲ್ಲಿ ಜ್ಞಾನವು ಚೆನ್ನಾಗಿದೆ. ನಾವೀಗ ಮೇಲೇರುತ್ತಿದ್ದೇವೆ. ಎಷ್ಟು ಸಹಜವಾಗಿದೆ. ತಂದೆಯು ಬಂದು ಲಿಫ್ಟ್ ಕೊಡುತ್ತಾರೆ. ತಂದೆಯಿಂದ ಶಾಂತಿ ಪೂರ್ವಕವಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಏಣಿಯ ಚಿತ್ರದ ಜ್ಞಾನವು ಬಹಳ ಚೆನ್ನಾಗಿದೆ. ಇದರಲ್ಲಿ ತಿಳಸಬೇಕು, ನೀವು ಹಿಂದೂಗಳಲ್ಲ. ದೇವಿ-ದೇವತಾ ಧರ್ಮದವರಾಗಿದ್ದೀರಿ. ಒಂದುವೇಳೆ ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಯೇ ಎಂದು ಕೇಳಿದರೆ ತಿಳಿಸಿ - ಅರೆ! ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಏಕೆ ತಿಳಿದುಕೊಳ್ಳುವುದಿಲ್ಲ. ಈಗ ಪುನಃ ನೆನಪು ಮಾಡಿಕೊಳ್ಳಿ ಆಗ ನೀವು ಪುನಃ ಮೊದಲ ನಂಬರಿನಲ್ಲಿ ಬಂದು ಬಿಡುತ್ತೀರಿ. ತಮ್ಮ ಕುಲದವರಾಗಿದ್ದರೆ ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವೇ ಎಂಬ ಪ್ರಶ್ನೆಯು ಅವರಿಗೆ ಬರಲು ಸಾಧ್ಯವಿಲ್ಲ. ಅರೆ! ನಾವು ತಡವಾಗಿ ಬಂದಿದ್ದೇವೆ ಎಂದು ನೀವೇಕೆ ತಿಳಿದುಕೊಳ್ಳುತ್ತೀರಿ? ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ - ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಈಗ ಪುನಃ ಆಸ್ತಿಯನ್ನು ತೆಗೆದುಕೊಳ್ಳಿ, ಸ್ವರ್ಗಕ್ಕೆ ನಡೆಯಿರಿ. ನೀವು ಮಕ್ಕಳು ಯೋಗದಲ್ಲಿ ಕುಳಿತುಕೊಳ್ಳುತ್ತೀರಿ, ಏಣಿಯನ್ನು ನೆನಪು ಮಾಡುತ್ತೀರೆಂದರೆ ಬಹಳ ಖುಷಿಯಲ್ಲಿರುತ್ತೀರಿ - ನಾವು 84 ಜನ್ನಗಳನ್ನು ಪೂರ್ಣಗೊಳಿಸಿದ್ದೇವೆ. ನಾವೀಗ ಹಿಂತಿರುಗಿ ಹೋಗುತ್ತೇವೆ, ಎಷ್ಟೊಂದು ಖುಷಿಯಾಗುತ್ತದೆ! ಸೇವೆ ಮಾಡುವ ಉಲ್ಲಾಸವೂ ಇರಬೇಕು, ತಿಳಿಸಿ ಕೊಡುವ ಬಹಳಷ್ಟು ವಿಧಾನಗಳೂ ನಿಮಗೆ ಸಿಗುತ್ತಿವೆ. ಏಣಿಯ ಚಿತ್ರದಲ್ಲಿಯೂ ತಿಳಿಸಿ. ಚಿತ್ರಗಳೆಲ್ಲವೂ ಬೇಕಲ್ಲವೆ. ತ್ರಿಮೂರ್ತಿ ಚಿತ್ರವೂ ಬೇಕು, ತಂದೆಯು ತಿಳಿಸುತ್ತಾರೆ - ನೀವು ನನ್ನ ಭಕ್ತರ ಬಳಿ ಹೋಗಿ ನೀವು ಈ ಜ್ಞಾನವನ್ನು ತಿಳಸಿ - ಅವರು ಮಂದಿರಗಳಲ್ಲಿ ಸಿಗುತ್ತಾರೆ. ಮಂದಿರಗಳಲ್ಲಿಯೂ ಈ ಏಣಿಯ ಚಿತ್ರದ ಬಗ್ಗೆ ತಿಳಿಸಿಕೊಡಿ. ಇಡೀ ದಿನ ನಾವು ತಂದೆಯ ಪರಿಚಯವನ್ನು ಕೊಟ್ಟು ಯಾರ ಕಲ್ಯಾಣ ಮಾಡಬೇಕೆಂಬುದೇ ಬುದ್ಧಿಯಲ್ಲಿರಲಿ. ದಿನ - ಪ್ರತಿದಿನ ಬುದ್ಧಿಯ ಬೀಗವು ತೆರೆಯುತ್ತಾ ಹೋಗುವುದು. ಯಾರು ಆಸ್ತಿಯನ್ನು ಪಡೆಯಬೇಕಾಗಿದೆಯೋ ಅವರು ಬರುತ್ತಾರೆ. ದಿನ-ಪ್ರತಿದಿನ ಕಲಿಯುತ್ತಲೇ ಇರುತ್ತಾರೆ. ಕೆಲವರ ಮೇಲೆ ಗ್ರಹಚಾರ ಕುಳಿತುಕೊಳ್ಳುತ್ತದೆಯೆಂದರೆ ತಂದೆಗೆ ತಿಳಿಸಬೇಕಾಗುತ್ತದೆ. ನಮ್ಮ ಮೇಲೆ ಗ್ರಹಚಾರವಿದೆ, ಆದ್ದರಿಂದ ನಮ್ಮಿಂದ ಸೇವೆಯಾಗುತ್ತಿಲ್ಲ ಎಂಬುದನ್ನು ಅವರು ತಿಳಿದುಕೊಳ್ಳುವುದೇ ಇಲ್ಲ. ನೀವು ಮಕ್ಕಳ ಮೇಲೆ ಎಲ್ಲಾ ಜವಾಬ್ದಾರಿಯಿದೆ. ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುತ್ತಾ ಇರಿ. ಸೇವೆಯಲ್ಲಿರುವುದರಿಂದ ಬಹಳ ಖುಷಿಯಿರುತ್ತದೆ, ಅನೇಕರ ಕಲ್ಯಾಣವಾಗುತ್ತದೆ. ಬಾಬಾರವರಿಗೆ ಬಾಂಬೆಯಲ್ಲಿ ಸರ್ವಿಸ್ ಮಾಡಲು ಬಹಳ ಮಜಾ ಬರುತ್ತಿತ್ತು, ಅನೇಕರು ಹೊಸ-ಹೊಸಬರು ಬರುತ್ತಿದ್ದರು. ಬಾಬಾರವರಿಗೆ ಸರ್ವಿಸ್ ಮಾಡಬೇಕೆಂದು ಬಹಳ ಮನಸ್ಸಾಗುತ್ತದೆ ಹಾಗೆಯೇ ಮಕ್ಕಳೂ ಸಹ ದಯಾ ಹೃದಯಿಗಳಾಗಬೇಕು, ಸರ್ವಿಸಿನಲ್ಲಿ ತೊಡಗಬೇಕು. ಇದು ಮನಸ್ಸಿನಲ್ಲಿರಲಿ – ಎಲ್ಲಿಯವರೆಗೆ ನಾವು ಯಾರನ್ನೂ ತಮ್ಮ ಸಮಾನ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಭೋಜನವನ್ನೂ ಸೇವಿಸಬಾರದು. ಮೊದಲು ನಾನು ಪುಣ್ಯ ಕರ್ಮವನ್ನು ಮಾಡಬೇಕು, ಪಾಪತ್ಮರನ್ನು ಪುಣ್ಯಾತ್ಮರಾಗಿ ಮಾಡಿ ನಂತರ ರೊಟ್ಟಿಯನ್ನು ತಿನ್ನುವೇನು. ಹೀಗೆ ಸರ್ವೀಸ್ ನಲ್ಲಿ ತೊಡಗಿರಬೇಕು. ಅನ್ಯರ ಜೀವನವನ್ನು ಸಫಲ ಮಾಡಿಸಿ ಆಗ ರೊಟ್ಟಿ ತಿನ್ನುವೆನು. ಹೀಗೆ ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುವ ಪ್ರಯತ್ನ ಪಡಬೇಕು.
ಮಕ್ಕಳಿಗಾಗಿ ಈ ಮಾಸ ಪತ್ರಿಕೆ ಬರುತ್ತದೆ ಆದರೆ ಬಿ.ಕೆ.ಗಳು ಇಷ್ಟೊಂದು ಓದುವುದಿಲ್ಲ. ನಾವೇನೂ ಓದುವುದು, ಇದು ಹೊರಗಿನವರಿಗಾಗಿ ಎಂದು ತಿಳಿಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಶಿಕ್ಷಕರಿಲ್ಲದೆ ಹೊರಗಿನವರಿಗೆ ಏನೂ ಅರ್ಥವಾಗುವುದಿಲ್ಲ. ಇದನ್ನು ಓದಿ ರಿಫ್ರೆಷ್ ಆಗಲಿ ಎಂದು. ಇದು ಬ್ರಹ್ಮಾಕುಮಾರ - ಕುಮಾರಿಯರಿಗಾಗಿಯೇ ಇದೆ ಆದರೆ ಅವರೇ ಓದುವುದಿಲ್ಲ. ಎಲ್ಲಾ ಸೇವಾಕೇಂದ್ರಗಳವರೊಂದಿಗೆ ತಂದೆಯು ಕೇಳುತ್ತಾರೆ - ಎಲ್ಲಾ ಪತ್ರಿಕೆಗಳನ್ನು ಯಾರು ಓದುತ್ತೀರಿ? ಪತ್ರಿಕೆಗಳಿಂದ ಏನು ತಿಳಿದುಕೊಳ್ಳುತ್ತೀರಿ? ಎಲ್ಲಿಯವರೆಗೆ ಸರಿಯಾಗಿದೆ? ಪತ್ರಿಕೆಯನ್ನು ಹೊರಡಿಸುವವರಿಗೂ ಸಹ ಉಮ್ಮಂಗವನ್ನು ತರಿಸಬೇಕು - ತಾವು ಬಹಳ ಒಳ್ಳೆಯ ಪತ್ರಿಕೆಯನ್ನು ಹೊರಡಿಸಿದ್ದೀರಿ. ತಮಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಪರಿಶ್ರಮಪಟ್ಟು ಮಾಸ ಪತ್ರಿಕೆಯನ್ನು ಓದಬೇಕು. ಇದು ಮಕ್ಕಳು ರಿಫ್ರೆಷ್ ಆಗುವುದಕ್ಕಾಗಿ ಇದೆ ಆದರೆ ಮಕ್ಕಳೇ ಓದುವುದಿಲ್ಲ. ಯಾರ ಹೆಸರು ಪ್ರಸಿದ್ಧವಾಗಿದೆಯೋ ಅವರನ್ನು ಬಾಬಾ ಭಾಷಣ ಮಾಡುವುದಕ್ಕಾಗಿ ಇಂತಹವರನ್ನು ನಮ್ಮ ಬಳಿ ಕಳುಹಿಸಿ ಎಂದು ನಿಮಂತ್ರಣ ಕೊಡುತ್ತಾರೆ. ಆಗ ತಂದೆಯು ತಿಳಿದುಕೊಳ್ಳುತ್ತಾರೆ - ಇವರು ತಾನು ಭಾಷಣ ಮಾಡುವುದನ್ನು ಕಲಿತಿಲ್ಲ. ಆದ್ದರಿಂದಲೇ ಕಳುಹಿಸಿ ಎಂದು ಕೇಳುತ್ತಾರೆ ಅಂದಮೇಲೆ ಸೇವಾಧಾರಿಗಳಿಗೆ ಎಷ್ಟೊಂದು ಗೌರವ ಕೊಡಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ರಾಜ್ಯ ಪದಕವನ್ನು ತೆಗೆದುಕೊಳ್ಳಲು ಎಲ್ಲರ ಮನಸ್ಸನ್ನು ಖುಷಿ ಪಡಿಸಬೇಕು. ಬಹಳ-ಬಹಳ ದಯಾಹೃದಯಿಗಳಾಗಿ ತನ್ನ ಮತ್ತು ಸರ್ವರ ಕಲ್ಯಾಣ ಮಾಡಬೇಕಾಗಿದೆ. ಅವಿಶ್ರಾಂತ ಸೇವೆ ಮಾಡಬೇಕಾಗಿದೆ.
2. ದೇಹಾಭಿಮಾನದಲ್ಲಿ ಬಂದು ಸೇವಾಭಂಗ ಮಾಡಬಾರದು. ಸದಾ ಪುಣ್ಯದ ಕರ್ಮವನ್ನೇ ಮಾಡಬೇಕು. ತಮ್ಮ ಸಮಾನ ಬ್ರಾಹ್ಮಣರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಸೇವಾಧಾರಿಗಳ ಪ್ರತಿ ಗೌರವವನ್ನಿಡಬೇಕಾಗಿದೆ.
ಓಂ ಶಾಂತಿ, ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ, ಮತ್ತ್ಯಾವುದೇ ದೇಹಧಾರಿಯ ನೆನಪಿನಲ್ಲಿ ಕುಳಿತುಕೊಳ್ಳಬಾರದು. ಯಾರು ಹೊಸ-ಹೊಸ ಮಕ್ಕಳು ಬರುವರೋ ಅವರು ತಂದೆಯನ್ನಂತೂ ತಿಳಿದುಕೊಂಡಿಲ್ಲ. ತಂದೆಯ ಹೆಸರಂತೂ ಬಹಳ ಸಹಜವಾಗಿದೆ – ಶಿವ ತಂದೆ. ತಂದೆಯನ್ನು ಮಕ್ಕಳೇ ಅರಿತುಕೊಂಡಿಲ್ಲ, ಇದು ಎಷ್ಟು ಆಶ್ಚರ್ಯಕರವಾಗಿದೆ! ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠ ಸರ್ವರ ಸದ್ಗತಿದಾತನಾಗಿದ್ದಾರೆ. ಸರ್ವ ಪತಿತರ ಪಾವನ ಕರ್ತ ಸರ್ವರ ದುಃಖ ಹರ್ತನೆಂದೂ ಹೇಳುತ್ತಾರೆ. ಆದರೆ ಅವರು ಯಾರು ಎಂಬುದನ್ನು ನೀವು ಬ್ರಹ್ಮಾಕುಮಾರ ಕುಮಾರಿಯರ ವಿನಃ ಮತ್ತ್ಯಾರೂ ಅರಿತುಕೊಂಡಿಲ್ಲ. ನೀವು ಅವರಿಗೆ ಮೊಮ್ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ತಮ್ಮ ತಂದೆ ಹಾಗೂ ಅವರ ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುತ್ತೀರಿ. ತಂದೆಯ ಮೂಲಕ ಮಕ್ಕಳು ಎಲ್ಲವನ್ನೂ ಅರಿತುಕೊಳ್ಳುತ್ತಾರೆ. ಇದಂತೂ ಪತಿತ ಪ್ರಪಂಚವಾಗಿದೆ, ಸರ್ವ ಕಲಿಯುಗೀ ಪತಿತರನ್ನು ಹೇಗೆ ಸತ್ಯಯುಗೀ ಪಾವನರನ್ನಾಗಿ ಮಾಡುತ್ತಾರೆ ಎಂಬುದು ನೀವು ಬಿ.ಕೆ.ಗಳ ವಿನಃ ಪ್ರದಾದಲ್ಲಿ ಮತ್ತ್ಯಾರಿಗೂ ಗೊತ್ತಿಲ್ಲ. ಕಲಿಯುಗಿ ದುರ್ಗತಿಯಿಂದ ಹೊರ ತೆಗೆಯುವ ಸತ್ಯಯುಗೀ ಸದ್ಗತಿದಾತನು ತಂದೆಯೇ ಆಗಿದ್ದಾರೆ. ಶಿವ ಜಯಂತಿಯೂ ಭಾರತದಲ್ಲಿಯೇ ಆಗುತ್ತದೆ ಅಂದಮೇಲೆ ಅವರು ಅವಶ್ಯವಾಗಿ ಭಾರತದಲ್ಲಿಯೇ ಬರುತ್ತಾರೆ ಆದರೆ ಬಂದು ಭಾರತಕ್ಕೆ ಏನು ಕೊಡುತ್ತಾರೆ ಎಂಬುದನ್ನು ಭಾರತವಾಸಿಗಳು ತಿಳಿದುಕೊಂಡಿಲ್ಲ. ಪ್ರತೀ ವರ್ಷ ಶಿವ ಜಯಂತಿಯನ್ನು ಆಚರಿಸುತ್ತಾರೆ, ಆದರೆ ಜ್ಞಾನದ ಮೂರನೆಯ ನೇತ್ರವಿಲ್ಲ, ಆದ್ದರಿಂದ ತಂದೆಯನ್ನು ಅರಿತುಕೊಂಡಿಲ್ಲ.
ನಾವೆಲ್ಲರೂ ನಯನಹೀನರಾಗಿದ್ದೇವೆ ಎಂದು ಇದು ಮನುಷ್ಯರು ರಚಿಸಿರುವ ಗೀತೆಯಾಗಿದೆ. ಈ ಸ್ಥೂಲ ನಯನಗಳಂತೂ ಎಲ್ಲರಿಗೂ ಇವೆ ಆದರೆ ತಮ್ಮನ್ನು ನಯನಹೀನರೆಂದು ಏಕೆ ಹೇಳಿಕೊಳ್ಳುತ್ತಾರೆ? ಅದನ್ನು ತಂದೆಯೇ ಕುಳಿತು ತಿಳಿಸುತ್ತಾರೆ - ಜ್ಞಾನದ ಮೂರನೆಯ ನೇತ್ರವು ಯಾರಿಗೂ ಇಲ್ಲ. ತಂದೆಯನ್ನು ಅರಿಯದೇ ಇರುವುದು ಅಜ್ಞಾನವಾಯಿತು. ತಂದೆಯನ್ನು ತಂದೆಯ ಮೂಲಕವೇ ಅರಿತುಕೊಳ್ಳುವುದಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ತಂದೆಯು ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಾರೆ, ಇದರಿಂದ ನೀವು ಇಡೀ ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೀರಿ. ಜ್ಞಾನ ಸಾಗರನ ಮಕ್ಕಳು ನೀವು ಮಾಸ್ಟರ್ ಜ್ಞಾನ ಸಾಗರರಾಗಿ ಬಿಡುತ್ತೀರಿ. ಮೂರನೆಯ ನೇತ್ರವೆಂದರೆ ತ್ರಿನೇತ್ರಿ, ತ್ರಿಕಾಲದರ್ಶಿ, ತ್ರಿಲೋಕಿನಾಥರಾಗಿ ಬಿಡುತ್ತೀರಿ. ಈ ಲಕ್ಷ್ಮಿ - ನಾರಾಯಣರು ಯಾರು ಸತ್ಯಯುಗದ ಮಾಲೀಕರಾಗಿದ್ದರೋ ಇವರಿಗೆ ಈ ಆಸ್ತಿಯು ಹೇಗೆ ಸಿಕ್ಕಿತು? ಅವರು ಯಾವಾಗ ಬಂದರು ಮತ್ತು ಎಲ್ಲಿ ಹೋದರು? ಮತ್ತೆ ಹೇಗೆ ರಾಜ್ಯವನ್ನು ಪಡೆದರು? ಎಂಬುದೇನನ್ನೂ ಭಾರತವಾಸಿಗಳು ಅರಿತುಕೊಂಡಿಲ್ಲ. ಈ ದೇವತೆಗಳು ಪಾವನರಲ್ಲವೆ ಅಂದಮೇಲೆ ಅವಶ್ಯವಾಗಿ ತಂದೆಯೇ ಪಾವನರನ್ನಾಗಿ ಮಾಡುತ್ತಾರೆ. ನೀವು ಭಾರತವಾಸಿಗಳಿಗೆ ತಂದೆಯು ತಿಳಿಸಿ ಕೊಡುತ್ತಾರೆ, ಏಕೆಂದರೆ ಭಾರತವಾಸಿಗಳೇ ದೇವತೆಗಳನ್ನು, ಶಿವನನ್ನು ಒಪ್ಪುತ್ತಾರೆ. ಶಿವನ ಜನ್ಮವೂ ಸಹ ಭಾರತದಲ್ಲಿಯೇ ಆಗಿದೆ. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ. ಶಿವ ಜಯಂತಿಯನ್ನೂ ಇಲ್ಲಿಯೇ ಆಚರಣೆ ಮಾಡುತ್ತಾರೆ. ಜಗದಂಬಾ, ಜಗತ್ ಪಿತಾ ಬ್ರಹ್ಮ ಮತ್ತು ಸರಸ್ವತಿಯ ಜನ್ಮವು ಇಲ್ಲಿಯೇ ಆಗಿದೆ. ಭಾರತದಲ್ಲಿಯೇ ಆಚರಣೆ ಮಾಡಲಾಗುತ್ತದೆ. ಲಕ್ಷ್ಮೀ-ನಾರಾಯಣರ ಜನ್ಮವೂ ಸಹ ಇಲ್ಲಿಯೇ ಆಗುತ್ತದೆ, ಅವರೇ ರಾಧೆ-ಕೃಷ್ಣರಾಗಿದ್ದಾರೆ. ಇದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿಲ್ಲ. ಪತಿತ ಪಾವನನೇ ಬನ್ನಿ ಎಂದರೆ ಅವಶ್ಯವಾಗಿ ಎಲ್ಲರೂ ಪತಿತರಾಗಿದ್ದಾರೆ. ಸಾಧು-ಸಂತ, ಋಷಿ-ಮುನಿಗಳೆಲ್ಲರೂ ಸಹ ನಮ್ಮನ್ನು ಪಾವನ ಮಾಡಲು ಬನ್ನಿ ಎಂದು ಒಂದು ಕಡೆ ಕರೆಯುತ್ತಾರೆ, ಇನ್ನೊಂದು ಕಡೆ ಕುಂಭಮೇಳದಲ್ಲಿ ಪಾಪವನ್ನು ತೊಳೆಯಲು ಹೋಗುತ್ತಾರೆ. ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ .ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಮನುಷ್ಯರು ಯಾರನ್ನು ಹೇಗೆ ಪಾವನ ಮಾಡಬಲ್ಲರು? ತಂದೆಯು ತಿಳಿಸುತ್ತಾರೆ - ನೀವು ಮೊದಲು ದೇವಿ-ದೇವತಾ ಧರ್ಮದವರಾಗಿದ್ದೀರಿ, ಆಗ ಎಲ್ಲರೂ ಪಾವನರಾಗಿದ್ದರು, ಈಗ ಪತಿತರಾಗಿದ್ದಾರೆ. ಮಾರ್ಗ ತೋರಿಸು ಪ್ರಭು ಎಂದು ಹೇಳುತ್ತಾರೆ ಅಂದಾಗ ಎಲ್ಲಿಯ ಮಾರ್ಗ? ಬಾಬಾ ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಿ, ನಮ್ಮಲ್ಲಿ ಪಂಚ ವಿಕಾರಗಳಿವೆ. ನಾವೆಲ್ಲರೂ ಸ್ವರ್ಗದಲ್ಲಿದ್ದಾಗ ನಿರ್ವಿಕಾರಿಗಳಾಗಿದ್ದೆವು, ಈಗ ವಿಕಾರಿ ಪತಿತರಾಗಿ ಬಿಟ್ಟಿದ್ದೇವೆ. ಇದರ ರಹಸ್ಯವನ್ನಾದರೂ ತಿಳಿಸಿ ಎಂದು ಹೇಳುತ್ತಾರೆ. ಇದೇನೂ ದಂತ ಕಥೆಗಳಲ್ಲ, ತಂದೆಯು ತಿಳಿಸುತ್ತಾರೆ – ಶ್ರೀ ಮದ್ಭಗವದ್ಗೀತೆ ಅಥವಾ ಪರಮಾತ್ಮನಿಂದ ಉಚ್ಚರಿಸಲ್ಪಟ್ಟ ಗೀತೆಯಾಗಿದೆ. ಪತಿತರನ್ನು ಪಾವನ ಮಾಡುವವರು ನಿರಾಕಾರ ಭಗವಂತನಾಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಇಷ್ಟು ದೊಡ್ಡ-ದೊಡ್ಡ ಗುರುಗಳಿದ್ದರೂ ಸಹ ಭಾರತವು ಏಕೆ ಇಷ್ಟೊಂದು ಪತಿತ, ಕವಡೆಯಂತೆ ಆಗಿ ಬಿಟ್ಟಿದೆ! ಭಾರತವು ಸ್ವರ್ಗವಾಗಿತ್ತು, ಇದು ನೆನ್ನೆಯ ಮಾತಾಗಿದೆ. ತಂದೆಯು ಭಾರತಕ್ಕೆ ಸ್ವರ್ಗದ ಉಡುಗೊರೆಯನ್ನು ಕೊಟ್ಟಿದ್ದರು, ಭಾರತವಾಸಿ ಪತಿತರಿಗೆ ಬಂದು ರಾಜಯೋಗವನ್ನು ಕಲಿಸಿ ಪಾವನರನ್ನಾಗಿ ಮಾಡಿದ್ದರು. ಈಗ ಪುನಃ ತಂದೆಯು ಸೇವಾಧಾರಿಯಾಗಿ ಮಕ್ಕಳ ಬಳಿ ಬಂದಿದ್ದಾರೆ. ತಂದೆಯು ಆತ್ಮಿಕ ಸೇವಾಧಾರಿಯಾಗಿದ್ದಾರೆ. ಉಳಿದೆಲ್ಲಾ ಮನುಷ್ಯ ಮಾತ್ರರು ದೈಹಿಕ ಸೇವಾಧಾರಿಗಳಾದರು. ಸನ್ಯಾಸಿಗಳೂ ಸಹ ದೈಹಿಕ ಸೇವಾಧಾರಿಗಳಾಗಿದ್ದಾರೆ. ಅವರು ಪುಸ್ತಕ ಇತ್ಯಾದಿಗಳನ್ನು ಓದಿ ತಿಳಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ, ನಾನು ನಿರಾಕಾರನು ಸಾಕಾರ ಸಾಧಾರಣ ವೃದ್ಧನ ತನುವಿನಲ್ಲಿ ಪ್ರವೇಶ ಮಾಡಿ ಬಂದು ಮಕ್ಕಳಿಗೆ ತಿಳಿಸುತ್ತೇನೆ. ಹೇ ಭಾರತವಾಸಿ ಮಕ್ಕಳೇ, ನೋಡಿ- ಆತ್ಮಿಕ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ. ಈ ಬ್ರಹ್ಮಾರವರು ತಿಳಿಸುವುದಿಲ್ಲ ಆದರೆ ನಿರಾಕಾರ ತಂದೆಯು ಈ ತನುವಿನ ಆಧಾರವನ್ನು ತೆಗೆದುಕೊಳ್ಳುತ್ತಾರೆ. ಶಿವನಿಗಂತೂ ತನ್ನ ಶರೀರವಿಲ್ಲ. ಸಾಲಿಗ್ರಾಮ ಆತ್ಮರಿಗೆ ತಮ್ಮ-ತಮ್ಮದೇ ಆದ ಶರೀರವಿದೆ, ಪುನರ್ಜನ್ಮದಲ್ಲಿ ಬರುತ್ತಾ-ಬರುತ್ತಾ ಪತಿತರಾಗಿ ಬಿಡುತ್ತಾರೆ. ಈಗಂತೂ ಇಡೀ ಪ್ರಪಂಚವು ಪತಿತವಾಗಿದೆ. ಯಾರೊಬ್ಬರೂ ಪಾವನರಿಲ್ಲ. ನೀವು ಸತೋಪ್ರಧಾನರಾಗಿದ್ದಿರಿ ನಂತರ ತುಕ್ಕು ಹಿಡಿಯುವ ಕಾರಣ ಸತೋದಿಂದ ರಜೋ, ತಮೋದಲ್ಲಿ ಬಂದಿದ್ದೀರಿ. ನೀವು ಭಾರತವಾಸಿಗಳ ಬಳಿ ಶಿವ ತಂದೆಯು ಬಂದು ಶರೀರ ಧಾರಣೆ ಮಾಡಿಕೊಳ್ಳುತ್ತಾರೆ, ಅವರಿಗೆ ಭಗೀರಥನೆಂದೂ ಹೇಳುತ್ತಾರೆ. ಮಂದಿರಗಳಲ್ಲಿ ಶಂಕರನ ಚಿತ್ರವನ್ನು ತೋರಿಸುತ್ತಾರೆ ಏಕೆಂದರೆ ಅವರು ಶಿವ-ಶಂಕರ ಒಂದೇ ಎಂದು ತಿಳಿದುಕೊಳ್ಳುತ್ತಾರೆ. ಅವರಿಗೆ ಇದು ಗೊತ್ತಿಲ್ಲ - ಶಿವನು ನಿರಾಕಾರನಾಗಿದ್ದಾರೆ, ಶಂಕರನಂತೂ ಆಕಾರಿಯಾಗಿದ್ದಾರೆ ಅಂದಮೇಲೆ ಶಿವ-ಶಂಕರ ಒಂದೇ ಎಂದು ಹೇಗೆ ಹೇಳುತ್ತಾರೆ! ಮತ್ತು ಎತ್ತಿನ ಮೇಲೆ ಯಾರು ಸವಾರಿ ಮಾಡುತ್ತಾರೆ - ಶಿವನೋ, ಶಂಕರನೋ? ಸೂಕ್ಷ್ಮ ವತನದಲ್ಲಿ ಎತ್ತು ಎಲ್ಲಿಂದ ಬರುವುದು? ಶಿವನು ಮೂಲವತನದಲ್ಲಿರುತ್ತಾನೆ, ಶಂಕರನು ಸೂಕ್ಷ್ಮವತನದಲ್ಲಿರುತ್ತಾನೆ. ಮೂಲವತನದಲ್ಲಿ ಎಲ್ಲಾ ಆತ್ಮರಿರುತ್ತಾರೆ. ಸೂಕ್ಷ್ಮ ವತನದಲ್ಲಿ ಕೇವಲ ಬ್ರಹ್ಮ, ವಿಷ್ಣು, ಶಂಕರರಿರುತ್ತಾರೆ, ಅಲ್ಲಿ ಯಾವುದೇ ಪ್ರಾಣಿಗಳಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಪ್ರವೇಶ ಮಾಡಿ ನಿಮಗೆ ತಿಳಿಸುತ್ತೇನೆ. ನೀವು ಮಕ್ಕಳು ತನ್ನ ಜನ್ಮಗಳನ್ನು ಅರಿತುಕೊಂಡಿಲ್ಲ. ಸತ್ಯಯುಗದಿಂದ ಹಿಡಿದು ನೀವು ಎಷ್ಟು ಜನ್ಮಗಳನ್ನು ತೆಗೆದುಕೊಂಡಿರಿ? 84 ಜನ್ಮಗಳನ್ನು ಪಡೆದಿದ್ದೀರಿ. ಈಗ ಇದು ಅಂತಿಮ ಜನ್ಮವಾಗಿದೆ, ಯಾವ ಭಾರತವು ಅಮರಲೋಕ ಪಾವನವಾಗಿತ್ತೋ ಅದು ಈಗ ಮೃತ್ಯುಲೋಕ, ಪತಿತವಾಗಿದೆ. ಸರ್ವರ ಸದ್ಗತಿದಾತನು ಒಬ್ಬರೇ ಅಲ್ಲವೆ. ರುದ್ರ ಮಾಲೆಯು ಪರಮಪಿತ ಪರಮಾತ್ಮ ನಿರಾಕಾರ ಶಿವನದಾಗಿದೆ. ಶ್ರೀ ಶ್ರೀ 108 ರುದ್ರ ಮಾಲೆಯೆಂದು ಹೇಳಲಾಗುತ್ತದೆ, ಎಲ್ಲರೂ ಶಿವನ ಕೊರಳಿನ ಹಾರವಾಗುತ್ತಾರೆ. ತಂದೆಯು ಪತಿತ-ಪಾವನ, ಸರ್ವರ ಸದ್ಗತಿದಾತ, ಸರ್ವರಿಗೆ ಆಸ್ತಿಯನ್ನು ನೀಡುವವರಾಗಿದ್ದಾರೆ. ಲೌಕಿಕ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ ಯಾವುದನ್ನು ಸನ್ಯಾಸಿಗಳು ಕಾಗವಿಷ್ಟ ಸಮಾನ ಸುಖವೆಂದು ತಿಳಿಯುತ್ತಾರೆ. ತಂದೆಯು ತಿಳಿಸುತ್ತಾರೆ - ಅವಶ್ಯವಾಗಿಯೂ ಈಗಿನ ನಿಮ್ಮ ಸುಖವು ಕಾಗವಿಷ್ಟ ಸಮಾನವಾಗಿದೆ. ತಂದೆಯೇ ಬಂದು ಜ್ಞಾನದಿಂದ ನೀವು ಪತಿತರನ್ನು ಪಾವನ ಅಥವಾ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ. ಇದು ಗೀತಾ ಜ್ಞಾನವಾಗಿದೆ, ಈ ಜ್ಞಾನವನ್ನು ಯಾವುದೇ ಮನುಷ್ಯರು ತಿಳಿಸಲು ಸಾಧ್ಯವಿಲ್ಲ. ಇದನ್ನು ಜ್ಞಾನ ಸಾಗರ, ಪತಿತ-ಪಾವನ ತಂದೆಯೇ ತಿಳಿಸುತ್ತಾರೆ. ತಂದೆಯಿಂದಲೇ ಆಸ್ತಿಯು ಸಿಗುತ್ತದೆ, ಅದನ್ನು ನೀವು ತೆಗೆದುಕೊಳ್ಳುತ್ತಿದ್ದೀರಿ. ಕೇವಲ ನೀವೇ ಸದ್ಗತಿಯ ಕಡೆ ಸಾಗುತ್ತಿದ್ದೀರಿ. ನೀವೀಗ ಸಂಗಮದಲ್ಲಿದ್ದೀರಿ, ಅವರು ಕಲಿಯುಗದಲ್ಲಿದ್ದಾರೆ. ಈಗ ಕಲಿಯುಗದ ಅಂತ್ಯವಾಗಿದೆ. ಮಹಾಭಾರತ ಯುದ್ಧವು ಸಮ್ಮುಖದಲ್ಲಿ ನಿಂತಿದೆ. 5000 ವರ್ಷಗಳ ಮೊದಲೂ ಸಹ ನೀವು ರಾಜಯೋಗವನ್ನು ಕಲಿತಿದ್ದಿರಿ. ಆಗ ಬಿದಿರಿನ ಕಾಡಿಗೆ ಬೆಂಕಿ ಬಿದ್ದಿತ್ತು. ಈಗಲೂ ಸಹ ನೀವು ಈ ಲಕ್ಷ್ಮಿ -ನಾರಾಯಣರಾಗಲು ರಾಜಯೋಗವನ್ನು ಕಲಿಯುತ್ತಿದ್ದೀರಿ. ಉಳಿದೆಲ್ಲವೂ ಭಕ್ತಿಮಾರ್ಗವಾಗಿದೆ, ಯಾವಾಗ ತಂದೆಯು ಬರುತ್ತಾರೆಯೋ ಆಗ ಸ್ವರ್ಗದ ಬಾಗಿಲನ್ನು ತೆರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಶಿವ ಶಕ್ತಿ ಭಾರತ ಮಾತೆಯರು ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡುತ್ತಾರೆ. ನೀವು ಶಿವ ಶಕ್ತಿ ಭಾರತ ಮಾತೆಯರಾಗಿದ್ದೀರಿ, ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ. ನೀವು ಶಿವನ ಸಂತಾನರಾಗಿದ್ದೀರಿ, ಶಿವನಿಂದ ಶಕ್ತಿಯನ್ನು ಪಡೆದುಕೊಂಡು ಪಂಚ ವಿಕಾರಗಳೆಂಬ ಶತ್ರುಗಳ ಮೇಲೆ ಜಯ ಗಳಿಸುತ್ತೀರಿ. ನೀವು ಮಕ್ಕಳು 5000 ವರ್ಷಗಳ ಮೊದಲೂ ಸಹ ಭಾರತದ ಆತ್ಮಿಕ ಸೇವೆ ಮಾಡಿದ್ದಿರಿ, ಆ ಸಮಾಜ ಸೇವಕರು ದೈಹಿಕ ಸೇವೆ ಮಾಡಿದ್ದಾರೆ. ಇದು ಆತ್ಮಿಕ ಸೇವೆಯಾಗಿದೆ. ಪರಮಾತ್ಮನೇ ಬಂದು ಆತ್ಮಕ್ಕೆ ಇಂಜೆಕ್ಷನ್ ಹಾಕುತ್ತಾರೆ, ಓದಿಸುತ್ತಾರೆ. ಆತ್ಮವೇ ಕೇಳಿಸಿಕೊಳ್ಳುತ್ತದೆ, ನೀವು ಆತ್ಮರಾಗಿದ್ದೀರಿ. ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೀರಿ, 84 ಜನ್ಮಗಳನ್ನು ತೆಗೆದುಕೊಂಡು 84 ತಂದೆ -ತಾಯಿಯರನ್ನು ಮಾಡಿಕೊಂಡಿದ್ದೀರಿ. ಸತ್ಯ-ತ್ರೇತಾಯುಗದಲ್ಲಿ ನೀವು ಸ್ವರ್ಗದ ಸುಖವನ್ನು ಪಡೆದಿರಿ, ಈಗ ಪುನಃ ಬೇಹದ್ದಿನ ತಂದೆಯ ಮೂಲಕ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ಅವಶ್ಯವಾಗಿ ಭಾರತಕ್ಕೆ ಈ ಆಸ್ತಿಯಿತ್ತು, ಭಾರತದಲ್ಲಿ ಈ ಲಕ್ಷ್ಮಿ -ನಾರಾಯಣರ ರಾಜ್ಯವಿತ್ತು. ಅಲ್ಲಿ ದೈತ್ಯರಿರಲ್ಲ. ನಿಮಗೆ ತಿಳಿದಿದೆ - ಈಗ ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ನಾನು ಬಂದು ಜ್ಞಾನ ಯಜ್ಞವನ್ನು ರಚಿಸುತ್ತೇನೆ. ನೀವೆಲ್ಲರೂ ಪವಿತ್ರ ದೇವತೆಗಳಾಗುತ್ತೀರಿ. ಸಾವಿರಾರು ಮಂದಿ ದೇವತೆಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯು ಮಕ್ಕಳ ಸದ್ಗತಿ ಮಾಡಲು ಬಂದಿದ್ದಾರೆ. ನೀವು ಮಕ್ಕಳನ್ನು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಿದ್ದಾರೆ. ನಿಮಗೆ ಜ್ಞಾನದ ಮೂರನೆಯ ನೇತ್ರವನ್ನು ಕೊಡುತ್ತಿದ್ದಾರೆ. ಇದರಿಂದ ನಿಮಗೆ ಇಡೀ ಸೃಷ್ಟಿ ನಾಟಕವನ್ನು ಮತ್ತು ಶಿವ ತಂದೆಯ ಪಾತ್ರವೇನೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಬ್ರಹ್ಮಾ ಮತ್ತು ವಿಷ್ಣುವಿನ ಸಂಬಂಧವೇನೆಂಬುದನ್ನು ತಿಳಿದಿದ್ದೀರಿ. ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಬಂದನೆಂದು ಅವರು ತೋರಿಸುತ್ತಾರೆ, ಅಂದರೆ ಬ್ರಹ್ಮನೇ ಹೋಗಿ ವಿಷ್ಣುವಾಗುತ್ತಾರೆ. ಬ್ರಾಹ್ಮಣರಿಂದ ದೇವತೆಗಳು, ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸಿತು. ಇದು ನಿಮಗೆ ಜ್ಞಾನವಿದೆ. ನೀವು ಬ್ರಾಹ್ಮಣರ ನಾಭಿ ಕಮಲದಿಂದ ವಿಷ್ಣು ಪುರಿಯು ಪ್ರಕಟವಾಗುತ್ತಿದೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನು ಮತ್ತು ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸಿದನೆಂದು ಅವರು ಚಿತ್ರಗಳನ್ನು ತೋರಿಸಿದ್ದಾರೆ. ನೀವೀಗ ವಾಸ್ತವದಲ್ಲಿ ಬ್ರಹ್ಮಾವರ ಮೂಲಕ ಎಲ್ಲಾ ಸಾರವನ್ನು ತಿಳಿದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾಲ್ಕು ಮುಖ್ಯ ಧರ್ಮ ಶಾಸ್ತ್ರಗಳಿವೆ, ಮೊದಲ ದೈವೀ ಧರ್ಮದ ಶಾಸ್ತ್ರವು ಗೀತೆಯಾಗಿದೆ. ಗೀತೆಯನ್ನು ಯಾರು ತಿಳಿಸಿದರು? ಶಿವ ತಂದೆ. ಜ್ಞಾನ ಸಾಗರ, ಪತಿತ-ಪಾವನ ಸುಖದ ಸಾಗರನು ಶಿವ ತಂದೆಯಾಗಿದ್ದಾರೆ. ಅವರೇ ಕುಳಿತು ಭಾರತವನ್ನು ಸ್ವರ್ಗವನ್ನಾಗಿ ಮಾಡಿದರು, ಕೃಷ್ಣನಲ್ಲ. ಕೃಷ್ಣನಂತೂ ನನ್ನ ಮುಖಾಂತರವೇ ಜ್ಞಾನವನ್ನು ಕೇಳಿ ಮತ್ತೆ ಕೃಷ್ಣನಾದನು ಅಂದಾಗ ಇದು ಗುಪ್ತ ಮಾತಾಯಿತಲ್ಲವೆ. ಹೊಸ-ಹೊಸ ಮಕ್ಕಳು ಈ ಮಾತುಗಳನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಇದಕ್ಕೇ ನರಕವೆಂದು ಹೇಳಲಾಗುತ್ತದೆ. ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಶಿವ ತಂದೆಯು ಸ್ವರ್ಗದ ಸ್ಥಾಪನೆ ಮಾಡಿದರು ಅದರಲ್ಲಿ ಈ ಲಕ್ಷ್ಮಿ -ನಾರಾಯಣರು ರಾಜ್ಯ ಮಾಡುತ್ತಿದ್ದರು, ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಈ ಮೃತ್ಯುಲೋಕ, ದುಃಖಧಾಮದಲ್ಲಿ ನಿಮ್ಮದು ಅಂತಿಮ ಜನ್ಮವಾಗಿದೆ. ಭಾರತವೇ ಅಮರ ಲೋಕವಾಗಿತ್ತು, ಅಲ್ಲಿ ದುಃಖದ ಹೆಸರಿರಲಿಲ್ಲ. ಭಾರತವು ಫರಿಸ್ತಾನವಾಗಿತ್ತು, ಈಗ ಸ್ಮಶಾನವಾಗಿದೆ. ಇದು ಪುನಃ ಫರಿಸ್ತಾನವಾಗುವುದು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಇದು ಮನುಷ್ಯನಿಂದ ದೇವತೆಯಾಗುವ ಪಾಠಶಾಲೆಯಾಗಿದೆ. ಇದು ಯಾವುದೇ ಸನ್ಯಾಸಿಗಳ ಸತ್ಸಂಗವಲ್ಲ, ಅಲ್ಲಿ ಶಾಸ್ತ್ರಗಳನ್ನು ತಿಳಿಸುತ್ತಾರೆ. ಈ ಮಾತುಗಳನ್ನು ಎಲ್ಲಿಯವರೆಗೆ 7 ದಿನಗಳ ಕೋರ್ಸ್ ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಹೊಸಬರು ಅರಿತುಕೊಳ್ಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ಎಲ್ಲಾ ಮನುಷ್ಯ ಮಾತ್ರರು ಭಕ್ತರಾಗಿದ್ದಾರೆ. ಅವರ ಆತ್ಮವೂ ನೆನಪು ಮಾಡುತ್ತದೆ.ಒಬ್ಬ ಪರಮಾತ್ಮ ಪ್ರಿಯತಮನಿಗೆ ಎಲ್ಲರೂ ಪ್ರಿಯತಮೆಯರಾಗಿದ್ದಾರೆ. ತಂದೆಯು ಬಂದು ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ. ಅರ್ಧ ಕಲ್ಪದ ನಂತರ ಮತ್ತೆ ರಾವಣನು ಬಂದು ಅಸತ್ಯ ಖಂಡವನ್ನಾಗಿ ಮಾಡುತ್ತಾನೆ. ಈಗ ಸಂಗಮವಾಗಿದೆ, ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಶ್ರೀಮತದಂತೆ ಭಾರತದ ಸತ್ಯ-ಸತ್ಯವಾದ ಆತ್ಮಿಕ ಸೇವೆ ಮಾಡಬೇಕಾಗಿದೆ. ಸರ್ವಶಕ್ತಿವಂತ ತಂದೆಯಿಂದ ಶಕ್ತಿಯನ್ನು ಪಡೆದುಕೊಂಡು ಪಂಚ ವಿಕಾರರೂಪಿ ಶತ್ರುಗಳ ಮೇಲೆ ವಿಜಯಗೊಳಿಸಬೇಕಾಗಿದೆ.
2. ಮನುಷ್ಯರಿಂದ ದೇವತೆಗಳಾಗಲು ಖಂಡಿತ ಪವಿತ್ರರಾಗಬೇಕಾಗಿದೆ. ಜ್ಞಾನವನ್ನು ಧಾರಣೆ ಮಾಡಿಕೊಂಡು ಮುಳ್ಳುಗಳಿಂದ ಹೂಗಳಾಗಬೇಕು ಮತ್ತು ಅನ್ಯರನ್ನೂ ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ, ಯಾರು ಇದನ್ನು ರಚಿಸಿದ್ದಾರೆಯೋ ಅವರಂತೂ ಈ ತಾಯಿಯ ಬಗ್ಗೆ ತಿಳದುಕೊಂಡೇ ಇಲ್ಲ. ಜಗದಂಬೆ ಎಂಬ ಹೆಸರನ್ನು ಕೇಳಿದ್ದಾರೆ ಆದರೆ ಅವರು ಯಾರಾಗಿದ್ದರು. ಏನು ಮಾಡಿ ಹೋದರು ಎಂಬುದು ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ. ಜಗದಂಬೆ ಇದ್ದಾರೆ ಅಂದಮೇಲೆ ಅವಶ್ಯವಾಗಿ ತಂದೆಯೂ ಇದ್ದಾರೆ. ಮಕ್ಕಳೂ ಇದ್ದಾರೆ. ಯಾರು ಜಗದಂಬೆಯ ಬಳಿ ಹೋಗುವರೋ ಅವರ ಬುದ್ಧಿಯಲ್ಲಿ ಈ ತಿಳುವಳಿಕೆಯಿಲ್ಲ. ಕೇವಲ ಮೂರ್ತಿಯ ಪೂಜಾರಿಗಳಾಗಿದ್ದಾರೆ. ದೇವಿಯ ಮುಂದೆ ಹೋಗಿ ಬೇಡುತ್ತಾರೆ. ಈಗ ಇದು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವಾಗಿದೆ. ಇದರ ರಚಯಿತರೂ ಮಾತಾಪಿತರಾಗಿದ್ದಾರೆ. ತತ್ತ್ವಂ. ನೀವೂ ಸಹ ಯಜ್ಞದ ರಚಾಯಿತರಾಗಿದ್ದೀರಿ. 'ನಿವೇಲ್ಲರೂ, ಈ ಯಜ್ಞದ ಸಂಭಾಲನೆ ಮಾಡಬೇಕಾಗಿದೆ. ಯಜ್ಞದ ಪ್ರತಿ ಬಹಳ ಗೌರವವಿರಬೇಕು. ಯಜ್ಞದ ಪೂರ್ಣ ಸಂಭಾಲನೆ ಮಾಡಬೇಕಾಗಿದೆ. ಇದು ಪ್ರಧಾನ ಕೇಂದ್ರವಾಗಿದೆ. ಇನ್ನೂ ಶಾಖೆಗಳಿವೆ. ಮಮ್ಮಾ, ಬಾಬಾ ಮತ್ತು ನೀವು ಮಕ್ಕಳು. ನೀವೆಲ್ಲರೂ ಈ ಯಜ್ಞದ ಮೂಲಕ ಭವಿಷ್ಯದಲ್ಲಿ ವಜ್ರ ಸಮಾನರಾಗುತ್ತಿದ್ದೀರಿ ಅಂದಮೇಲೆ ಇಂತಹ ಯಜ್ಞವನ್ನು ಎಷ್ಟು ಸಂಭಾಲನೆ ಮಾಡಬೇಕು ಮತ್ತು ಗೌರವವಿಡಬೇಕು? ಎಷ್ಟೊಂದು ಪ್ರೀತಿಯಿರಬೇಕು! ಇದು ನಮ್ಮ ತಾಯಿಯಾದ ಜಗದಂಬಾರವರ ಯಜ್ಞವಾಗಿದೆ. ಮಮ್ಮಾ-ಬಾಬಾರವರ ಯಜ್ಞವೆಂದರೆ ನಮ್ಮ ಯಜ್ಞವೂ ಆಗಿದೆ. ಯಜ್ಞದ ವೃದ್ಧಿ ಮಾಡಬೇಕಾಗಿದೆ – ಯಜ್ಞದಲ್ಲಿ ಅನೇಕ ಮಕ್ಕಳು ಬಂದು ತಮ್ಮ ತಂದೆಯಿಂದ ಆಸ್ತಿಯನ್ನು ಪಡೆಯಲು ಭಲೇ ತಾನು ತೆಗೆದುಕೊಳ್ಳಲು ಸಾಧ್ಯವಿಲ್ಲ, ಬಿಡುವಿಲ್ಲವೆಂದರೆ ಅನ್ಯರಿಗಾದರೂ ನಿಮಂತ್ರಣ ಕೊಡಬೇಕು. ಇದರ ಹೆಸರೇ ಆಗಿದೆ ರಾಜಸ್ವ ಅಶ್ವಮೇಧ ಜ್ಞಾನ ಯಜ್ಞ. ಇದರಿಂದ ಸ್ವರಾಜ್ಯ ಸಿಗುತ್ತದೆ. ಈ ಯಜ್ಞದಲ್ಲಿ ಹಳೆಯ ಶರೀರವನ್ನೂ ಸಹ ಸ್ವಾಹಾ ಮಾಡಲಾಗುತ್ತದೆ. ಬಲಹಾರಿಯಾಗಬೇಕಾಗಿದೆ. ಯಜ್ಞವೆಂದರೆ ಯಾವುದೇ ಮನೆಯಲ್ಲ, ಇದು ಬೇಹದ್ದಿನ ಮಾತಾಗಿದೆ ಯಾವ ಯಜ್ಞದಲ್ಲಿ ಇಡೀ ವಿಶ್ವವೇ ಸ್ವಾಹಾ ಆಗುವುದು. ಮುಂದೆ ಹೋದಂತೆ ನೀವು ನೋಡುವಿರಿ - ಈ ಯಜ್ಞಕ್ಕೆ ಎಷ್ಟೊಂದು ಗೌರವ ಕೊಡುತ್ತಾರೆ!. ಇಲ್ಲಿ ಅನೇಕರಿಗೆ ಇದರ ಪ್ರತಿ ಗೌರವವೇ ಇಲ್ಲ. ಇಷ್ಟೊಂದು ಮಂದಿ ಯಜ್ಞದ ಮಕ್ಕಳಿದ್ದಾರೆ. ಹೊಸ-ಹೊಸ ಮಕ್ಕಳು ಜನ್ಮ ಪಡೆಯುತ್ತಿರುತ್ತಾರೆ ಅಂದಮೇಲೆ ಈ ಯಜ್ಞದ ಪ್ರತಿ ಎಷ್ಟೊಂದು ಗೌರವಿಡಬೇಕು! ಆದರೆ ಅನೇಕರಿಗೆ ಇದರ ಪ್ರತಿ ಬೆಲೆಯೇ ಇಲ್ಲ. ಇದು ಇಷ್ಟು ದೊಡ್ಡ ಯಜ್ಞವಾಗಿದೆ! ಯಾವುದರಿಂದ ಮನುಷ್ಯರು ಕವಡೆಯಿಂದ ವಜ್ರ ಸಮಾನ, ಭ್ರಷ್ಟಾಚಾರಿಯಿಂದ ಶ್ರೇಷ್ಠಾಚಾರಿಯಾಗುತ್ತಾರೆ. ಆದ್ದರಿಂದ ತಂದೆಯ ತಿಳಿಸುತ್ತಾರೆ – ಭಲೆ ಯಜ್ಞವನ್ನು ರಚಿಸುತ್ತಾ ಇರಿ, ಅದರಲ್ಲಿ ಒಬ್ಬರು ಶ್ರೇಷ್ಠಾಚಾರಿಯಾದರೂ ಸಹ ಅಹೋ ಸೌಭಾಗ್ಯ. ಎಷ್ಟೊಂದು ಲಕ್ಷಾಂತರ ಮಂದಿರಗಳಿವೆ ಆದರೆ ಅಲ್ಲಿ ಯಾರು ಶ್ರೇಷ್ಠಾಚಾರಿಯಾಗುವುದಿಲ್ಲ. ಇಲ್ಲಾದರೆ ಕೇವಲ ಮೂರು ಹೆಜ್ಜೆಗಳಷ್ಟು ಭೂಮಿ ಬೇಕು. ಯಾರೇ ಬಂದರೂ ಸಹ ಒಮ್ಮೇಲೆ ಅವರ ಜೀವನವು ಸುಧಾರಣೆಯಾಗಲಿ. ಯಜ್ಞದ ಪ್ರತಿ ಎಷ್ಟೊಂದು ಗೌರವವಿರಬೇಕು! ಬಾಬಾ, ನಾವು ನಮ್ಮ ಮನೆಯಲ್ಲಿ ಸೇವಾಕೇಂದ್ರವನ್ನು ತೆರೆಯುವುದೇ ಎಂದು ಅನೇಕ ಮಕ್ಕಳು ತಂದೆಗೆ ಪತ್ರ ಬರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಒಳ್ಳೆಯದು ಮಕ್ಕಳೇ ಭಲೆ ಯಜ್ಞ ಭೂಮಿಯನ್ನು ಮಾಡಿ. ಕೆಲವರ ಕಲ್ಯಾಣವಾದರೂ ಆಗುವುದು. ಈ ಯಜ್ಞದ ಮಹಿಮೆಯು ಬಹಳ ಭಾರಿಯಾಗಿದೆ, ಯಜ್ಞದ ಭೂಮಿಯಾಗಿದೆ. ಇಲ್ಲಿ ಮಕ್ಕಳು ಅನ್ಯರ ಕಲ್ಯಾಣ ಮಾಡುತ್ತಿರುತ್ತಾರೆ. ಇಂತಹ ಯಜ್ಞಕ್ಕೆ ಬಹಳ ಮಾನ್ಯತೆ ಬೇಕು ಆದರೆ ಪೂರ್ಣ ಜ್ಞಾನವಿಲ್ಲದ ಕಾರಣ ಇಷ್ಟೊಂದು ಗೌರವವನ್ನಿಡುವುದಿಲ್ಲ. ಯಜ್ಞದಲ್ಲಿ ವಿಘ್ನಗಳನ್ನು ಹಾಕುವವರು ಅನೇಕರಿದ್ದಾರೆ. ಇದು ಶಿವ ತಂದೆಯ ಯಜ್ಞವಾಗಿದೆ ಅಂದಮೇಲೆ ಮಾತಾಪಿತರು ಒಟ್ಟಿಗೆ ಇದ್ದಾರೆ. ಈ ಮಮ್ಮಾ - ಬಾಬಾರವರಿಂದ ಏನೂ ಸಿಗುವುದಿಲ್ಲ. ಎಲ್ಲವೂ ಬೇಹದ್ದಿನ ತಂದೆಯಿಂದಲೇ ಸಿಗುತ್ತದೆ. ಅವರು ಒಬ್ಬರೇ ಆಗಿದ್ದಾರೆ, ಶರೀರಧಾರಿಗಳಿಗೆ ಮಮ್ಮಾ-ಬಾಬಾ ಎಂದು ಹೇಳಲಾಗುತ್ತದೆ. ನಿರಾಕಾರನಿಗಂತೂ ಶರೀರವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಸಾಕಾರಿ ತಂದೆಯನ್ನೂ ನೀವು ನೋಡಬೇಡಿ, ನನ್ನೊಬ್ಬನನ್ನೇ ನೆನಪು ಮಾಡಿ. ಈ ಬ್ರಹ್ಮಾರವರೂ ಸಹ ನನ್ನನ್ನೇ ನೆನಪು ಮಾಡುತ್ತಾರೆ, ಚಿತ್ರಗಳಲ್ಲಿ ತೋರಿಸುತ್ತಾರೆ – ರಾಮ, ಕೃಷ್ಣ, ಬ್ರಹ್ಮಾ ಮೊದಲಾದವರೆಲ್ಲರೂ ಭಗವಂತನನ್ನೇ ನೆನಪು ಮಾಡುತ್ತಾರೆ, ವಾಸ್ತವದಲ್ಲಿ ಅಲ್ಲಿ ಯಾರೂ ನೆನಪು ಮಾಡುವುದಿಲ್ಲ. ಅವರಿಗೆ ಪ್ರಲಾಬ್ದ ಸಿಕ್ಕಿರುತ್ತದೆ ಅಂದಮೇಲೆ ಭಗವಂತನನ್ನು ನೆನಪು ಮಾಡುವ ಅವಶ್ಯಕತೆಯೇನಿದೆ? ನಾವು ಪತಿತರಾಗಿದ್ದೇವೆ ಆದ್ದರಿಂದ ಪಾವನರಾಗುವುದಕ್ಕಾಗಿ ನಾವೇ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಹಿಮೆಯೂ ಸಹ ಅವರೊಬ್ಬರದೇ ಆಗಿದೆ. ಅವರ ಕಾರಣ ಇವರಿಗೆ (ಬ್ರಹ್ಮಾ) ಮಾನ್ಯತೆಯಿದೆ. ಈಗಂತೂ ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ದೇಹಧಾರಿಯಿಂದ ಅವರ ಪರಿಚಯ ಸಿಗುತ್ತದೆ ಆದರೆ ನೆನಪು ಮಾತ್ರ ಶಿವ ತಂದೆಯನ್ನೇ ಮಾಡಬೇಕಾಗಿದೆ. ಈ ಬ್ರಹ್ಮನೂ ದೇಹಧಾರಿಯಾಗಿದ್ದಾರೆ. ಎಲ್ಲರೂ ಪರಿಚಯ ಕೊಡುತ್ತಾರೆ ಆದರೆ ಇಂತಹ ತಿಳುವಳಿಕೆ ಹೀನ ಮಕ್ಕಳು ಅನೇಕರಿದ್ದಾರೆ, ಅವರು ನೇರವಾಗಿ ಶಿವ ತಂದೆಯ ಪ್ರೇರಣೆಯಿಂದ ನಾವು ಜ್ಞಾನವನ್ನು ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ. ಒಂದುವೇಳೆ ಆ ರೀತಿ ಇದ್ದಿದ್ದರೆ ಈ ರಥದಲ್ಲಿ ತಂದೆಯು ಬರುವ ಅವಶ್ಯಕತೆಯಾದರೂ ಏನು? ಈ ಸಾಕಾರಿ ತಂದೆಯೊಂದಿಗೆ ನಮಗೇನು ಕೆಲಸ ಎಂದು ತಿಳಿದುಕೊಳ್ಳುವವರೂ ಇದ್ದಾರೆ ಆದರೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿ ಆದರೆ ನಾನೂ ಸಹ ಇವರ ಮೂಲಕವೇ ತಿಳಿಸುತ್ತೇನಲ್ಲವೆ ಅಂದಮೇಲೆ ಇವರಿಗೂ ಗೌರವ ಕೊಡಬೇಕು. ಯಾರು ನಂಬರ್ವಾರ್ ಸಿಂಹಾಸನದ ಮೇಲೆ ಕುಳಿತುಕೊಳ್ಳುವವರಿದ್ದಾರೆಯೋ ಅವರೇ ಗೌರವ ಕೊಡುತ್ತಾರೆ. ಮಮ್ಮಾ-ಬಾಬಾರವರು ಮೊದಲು ರಾಜ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಾರೆ ಮತ್ತೆ ಅವರನ್ನು ಫಾಲೋ ಮಾಡಬೇಕಾಗಿದೆ. ಬಹಳ ಪ್ರಜೆಗಳನ್ನು ತಯಾರು ಮಾಡಬೇಕಾಗಿದೆ ಪದವಿಯು ಬಹಳ ಉನ್ನತವಾಗಿದೆ. ಯಾವುದೇ ಹೆದರುವ ಮಾತಿಲ್ಲ. ವಿಮಾನದಲ್ಲಿ ಯಾರಾದರು ಹೊಸಬರು ಕುಳಿತುಕೊಂಡರೆ ಹೆದರುತ್ತಾರೆ, ಇನ್ನೂ ಕೆಲವರು ನೋಡಿ ಚಂದ್ರ ಗ್ರಹದವರೆಗೂ ಹೋಗುತ್ತಿರುತ್ತಾರೆ. ಎಲ್ಲವೂ ಅಭ್ಯಾಸದ ಮಾತಲ್ಲವೆ ಆದರೆ ಅದರಿಂದೇನೂ ಲಾಭವಾಗುವುದಿಲ್ಲ, ಇದನ್ನೂ ನೀವು ತಿಳಿದುಕೊಂಡಿದ್ದಿರಿ. ಚಂದ್ರ ಗ್ರಹದಲ್ಲಿಯೂ ನಾವು ರಾಜಧಾನಿಯನ್ನು ಕಟ್ಟುತ್ತೇವೆಂದು ಅವರು ತಿಳಿಯುತ್ತಾರೆ ಆದರೆ ಎದೇನು ಆಗುವುದಿಲ್ಲ. ಇದು ಅವನತಿ ಅಲ್ಲವೇ. ಉತ್ಥಾನ ಮತ್ತು ಪತನವನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ. ಈ ಲಕ್ಷಿ - ನಾರಾಯಣರು ರಾಜ್ಯಭಾರ ಮಾಡುತ್ತಿದ್ದರೆಂದು ಚಿತ್ರಗಳೂ ಇವೆ.
ಇತ್ತೀಚೆಗಂತೂ ನೋಡಿ, ಭಾರತವು ಎಷ್ಟು ಬಡದೇಶವಾಗಿದೆ! ಇದು ಸತ್ಯ ಮಾತಾಗಿದೆ. ಅವರೂ ಸಹ ಇದನ್ನು ಸ್ಪಷ್ಟವಾಗಿ ಬರೆದಿದ್ದಾರೆ ಅಂದಮೇಲೆ ಏಣಿ ಚಿತ್ರದಲ್ಲಿ ತೋರಿಸಬೇಕು. ಸತ್ಯಯುಗದಲ್ಲಿ ವಜ್ರ-ವೈಡೂರ್ಯಗಳ ಮಹಲುಗಳು ಹೊಳೆಯುತ್ತವೆ. ಇಲ್ಲಿ ಕವಡೆಗಳು ಎಂಬುದನ್ನು ತೋರಿಸಬೇಕು. ಮೊದಲು ಕವಡೆಗಳು ಚಲಾವಣೆಯಲ್ಲಿತ್ತು, ಗುರು ದ್ವಾರದಲ್ಲಿ ಕವಡೆಗಳನ್ನು ಇಡುತ್ತಿದ್ದರು. ಈಗಂತೂ ಯಾರೂ ಹಣವನ್ನೂ ಸಹ ಇಡುವುದಿಲ್ಲ. ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಇದರಲ್ಲಿ ನೀವು ಬಹಳಷ್ಟು ಬರೆಯಬಹುದು. ಮಮ್ಮಾ-ಬಾಬಾರವರ ಜೊತೆ ಮಕ್ಕಳ ಚಿತ್ರವೂ ಇರಲಿ ಮತ್ತು ಮೇಲ್ಭಾಗದಲ್ಲಿ ಆತ್ಮಗಳ ವೃಕ್ಷವನ್ನು ತೋರಿಸಿ. ಹೊಸ-ಹೊಸ ಚಿತ್ರಗಳು ತಯಾರಾಗುತ್ತಾ ಹೋಗುತ್ತವೆ. ಇದರಿಂದ ತಿಳಿಸುವುದಕ್ಕೂ ಸಹಜವಾಗುವುದು. ಹೇಗೆ ಉತ್ಥಾನ ಮತ್ತು ಪಥನವಾಗುತ್ತದೆ, ನಾವು ನಿರಾಕಾರಿ ಪ್ರಪಂಚದಲ್ಲಿ ಹೋಗಿ ಮತ್ತೆ ಸಾಕಾರಿ ಪ್ರಪಂಚದಲ್ಲಿ ಬರುತ್ತೇವೆ ಮತ್ತೆ ತಿಳಿಸಲು ಬಹಳ ಸಹಜವಾಗುತ್ತದೆ. ಒಂದುವೇಳೆ ಅರ್ಥವಾಗಲಿಲ್ಲವೆಂದರೆ ಅವರ ಅದೃಷ್ಟದಲ್ಲಿಲ್ಲವೆಂದು ತಿಳಿಯಿರಿ, ನಾಟಕವನ್ನು ಸಾಕ್ಷಿಯಾಗಿದ್ದು ನೋಡಬೇಕಾಗಿದೆ. ಮಕ್ಕಳಿಗೆ ಯಜ್ಞದ ಪ್ರತಿ ಬಹಳ ಗೌರವವಿರಬೇಕು. ಯಜ್ಞದ ಒಂದು ಪೈಸೆಯನ್ನೂ ಸಹ ಅನುಮತಿಯಿಲ್ಲದೆ ತೆಗೆದುಕೊಳ್ಳಬಾರದು. ಮಾತಾಪಿತರ ಅನುಮತಿಯಿಲ್ಲದೆ ಅನ್ಯರಿಗೆ ಕೊಡುವುದು ಮಹಾನ್ ಪಾಪವಾಗಿದೆ. ನೀವಂತೂ ಮಕ್ಕಳಾಗಿದ್ದೀರಿ ಅಂದಮೇಲೆ ಯಾವ ಸಮಯದಲ್ಲಿ ಏನು ಬೇಕಾದರೂ ಸಿಗುತ್ತದೆ ಆದ್ದರಿಂದ ಹೆಚ್ಚಿಗೆ ತೆಗೆದುಕೊಂಡು ಇಟ್ಟುಕೊಳ್ಳುವುದೇಕೆ? ಸಿಗುತ್ತದೆಯೋ, ಇಲ್ಲವೋ ಎಂದು ಆಲೋಚಿಸುತ್ತಾರೆ ಆದರೆ ಹೀಗೆ ತಿಳಿದು ಇಟ್ಟುಕೊಳ್ಳುವುದರಿಂದ ಮತ್ತೆ ಮನಸ್ಸು ತಿನ್ನುತ್ತದೆ ಏಕೆಂದರೆ ಇದು ನಿಯಮಕ್ಕೆ ವಿರುದ್ಧವಾದ ಕೆಲಸವಲ್ಲವೆ. ನಿಮಗೆ ಯಾವಾಗ ಏನು ಬೇಕಾದರೂ ಯಜ್ಞದಿಂದ ಸಿಗುತ್ತದೆ. ತಂದೆಯು ತಿಳಿಸಿದ್ದಾರೆ – ಅಂತ್ಯ ಕಾಲದಲ್ಲಿ ಯಾರು ಬೇಕಾದರೂ ಸಾವನ್ನಪ್ಪುತ್ತಾರೆ ಆದ್ದರಿಂದ ಅಂತ್ಯ ಸಮಯದಲ್ಲಿ ಯಾರು ಪಾಪ ಮಾಡಿರುತ್ತಾರೆಯೋ ಅವರಿಗೆ ಆ ಕೆಟ್ಟದ್ದೆಲ್ಲವೂ ಸನ್ಮುಖದಲ್ಲಿ ನೆನಪು ಬರುತ್ತಿರುತ್ತದೆ ಆದ್ದರಿಂದ ತಂದೆಯು ಯಾವಾಗಲೂ ತಿಳಿಸುತ್ತಾರೆ - ಮಕ್ಕಳೇ, ಒಳಗೆ ಯಾವುದೇ ದ್ವಂದ್ವವಿರಬಾರದು. ಹೃದಯವು ಸ್ವಚ್ಛವಾಗಿದ್ದರೆ ಅಂತಿಮ ಕ್ಷಣದಲ್ಲಿ ಏನೂ ಮುಂದೆ ಬರುವುದಿಲ್ಲ. ಯಜ್ಞದಿಂದ ಎಲ್ಲವೂ ಸಿಗುತ್ತಿರುತ್ತದೆ. ಅನೇಕ ಮಕ್ಕಳಿದ್ದಾರೆ, ಯಾರ ಬಳಿ ಬಹಳಷ್ಟು ಹಣವಿದೆ, ಅವರಿಗೆ ತಂದೆಯು ಹೇಳುತ್ತಾರೆ – ಅವಶ್ಯಕತೆಯಿದ್ದಾಗ ಕೇಳಿ ತರಿಸಿಕೊಳ್ಳುತ್ತೇವೆ. ಬಾಬಾ, ಅವಶ್ಯಕತೆ ಬಿದ್ದಾಗ ತಿಳಿಸಿ, ನಾವು ಕುಳಿತಿದ್ದೇವೆ ಎಂದು ಹೇಳುತ್ತಾರೆ. ಭಲೆ ಪವಿತ್ರರಾ’ಗಿರುವುದ್ದಿಲ್ಲ, ಆಹಾರ ಪಾನೀಯ ಪಥ್ಯವನ್ನೂ ಇಡುವುದಿಲ್ಲ ಆದರೆ ಈ ಪ್ರತಿಜ್ಞೆ ಮಾಡುತ್ತಾರೆ - ಬಾಬಾ, ನಮ್ಮ ಬಳಿ ಬಹಳಷ್ಟು ಹಣವಿದೆ, ಅದು ಹಾಗೆಯೇ ಸಮಾಪ್ತಿಯಾಗುತ್ತದೆ, ಮಧ್ಯದಲ್ಲಿ ಯಾರಾದರೂ ತಿಂದು ಬಿಡುತ್ತಾರೆ. ಆದ್ದರಿಂದ ತಮಗೆ ಯಾವಾಗ ಬೇಕೋ ಆಗ ಕೇಳಿ ಪಡೆಯಿರಿ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ಹೇಳುತ್ತಾರೆ – ತೆಗೆದುಕೊಂಡು ನಾವಾದರೂ ಏನು ಮಾಡುವುದು? ಮನೆ ಕಟ್ಟಿಸಬೇಕಾದರೆ ಹಣವು ತಾನಾಗಿಯೇ ಬರುತ್ತದೆ. ಮನೆಯಲ್ಲಿ ಅನೇಕ ಮಕ್ಕಳು ಕುಳಿತಿದ್ದಾರೆ ಅಂದಮೇಲೆ ಅಂತಹ ಮಕ್ಕಳೂ ಸಹ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಪ್ರಜೆಗಳಲ್ಲಿಯೂ ಸಹ ಯಾವುದೇ ಕಡಿಮೆ ಪದವಿಯಿಲ್ಲ. ರಾಜರಿಗಿಂತಲೂ ಕೆಲವರು ಸಾಹುಕಾರರು ಬಹಳ ಧನವಂತರಾಗಿರುತ್ತಾರೆ ಆದ್ದರಿಂದ ಒಳಗೆ ಯಾವುದೇ ಇಂತಹ ವಿಚಾರ ಮಾಡಬಾರದು. ನಿಮ್ಮ ಪ್ರತಿಜ್ಞೆಯಾಗಿದೆ - ಬಾಬಾ ತಾವು ಏನನ್ನು ತಿನ್ನಿಸುತ್ತೀರೋ ಅದನ್ನೇ ತಿನ್ನುವೆವು... ಈ ರೀತಿ ಹೇಳಿದ ನಂತರ ಅದರಂತೆ ನಡೆಯಲಿಲ್ಲವೆಂದರೆ ದುರ್ಗತಿಯಾಗಿ ಬಿಡುತ್ತದೆ. ತಂದೆಯು ಸದ್ಗತಿ ನೀಡಲು ಬಂದಿದ್ದಾರೆ. ಒಂದುವೇಳೆ ಶ್ರೇಷ್ಠ ಪದವಿಯನ್ನು ಪಡೆಯಲಿಲ್ಲವೆಂದರೆ ದುರ್ಗತಿಯಂದೆ ಹೇಳಲಾಗುತ್ತದೆಯಲ್ಲವೆ. ಸತ್ಯಯುಗದಲ್ಲಿಯೂ ಸಹ ಬಹಳ ಸಾಹುಕಾರರು ಕೆಲವರು ಕಡಿಮೆ ಪದವಿಯವರು, ಕೆಲವರು ಉನ್ನತ ಪದವಿಯವರು ಇರುತ್ತಾರಲ್ಲವೆ. ನೀವು ಮಕ್ಕಳು ಶ್ರೀಮತದಂತೆ ಪುರುಷಾರ್ಥ ಮಾಡಬೇಕಾಗಿದೆ. ತನ್ನ ಮತದಂತೆ ನಡೆದರೆ ತಮಗೆ ಮೋಸ ಮಾಡಿಕೊಳ್ಳುತ್ತೀರಿ, ಇದು ಶಿವ ತಂದೆಯು ರಚಿಸಿರುವ ಜ್ಞಾನ ಯಜ್ಞವಾಗಿದೆ. ಇದರ ಹೆಸರೇ ಆಗಿದೆ – ರಾಜಸ್ವ ಅಸ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞ, ಶಿವ ತಂದೆಯು ಬಂದು ಸ್ವರಾಜ್ಯವನ್ನು ಕೊಡುತ್ತಾರೆ. ಯಾರ ಅದೃಷ್ಟದಲ್ಲಿಲ್ಲವೋ, ಹೆಸರು ಪ್ರಸಿದ್ಧವಾಗುವುದಿಲ್ಲವೋ ಅಂತಹವರ ಬಾಯಿಂದ ಒಳ್ಳೊಳ್ಳೆಯ ವಿಚಾರಗಳು ಹೊರ ಬರುವುದಿಲ್ಲ. ಯಾರಿಗೂ ತಿಳಿಸುವುದೂ ಇಲ್ಲ. ಹೆಸರು ಪ್ರತ್ಯಕ್ಷವಾಗಲು ಇನ್ನೂ ಸಮಯವಿದೆ, ಆ ಕಾರಣ ತಿಳಿಸುವ ಸಮಯದಲ್ಲಿ ಮುಖ್ಯ-ಮುಖ್ಯ ಮಾತುಗಳು ಮರೆತು ಹೋಗುತ್ತವೆ. ಇದನ್ನೂ ಸಹ ತಿಳಿಸಬೇಕು - ಸ್ವರಾಜ್ಯವನ್ನು ಪಡೆಯುವುದಕ್ಕಾಗಿ ಇದು ರಾಜಸ್ವ ಅಶ್ವಮೇಧ ಅವಿನಾಶಿ ರುದ್ರ ಜ್ಞಾನ ಯಜ್ಞವಾಗಿದೆ. ಇದನ್ನು ಬೋರ್ಡಿನ ಮೇಲೂ ಬರೆಯುರಿ. ಈ ಯಜ್ಞದಲ್ಲಿ ಹಳೆಯ ಪ್ರಪಂಚವೆಲ್ಲವೂ ಸ್ವಾಹಾ ಆಗಿ ಬಿಡುತ್ತದೆ. ಇದಕ್ಕಾಗಿಯೇ ಈ ಮಹಾಭಾರತ ಯುದ್ಧವು ನಿಂತಿದೆ. ವಿನಾಶಕ್ಕೆ ಮೊದಲು ಈ ಸ್ವರಾಜ್ಯದ ಪದವಿಯನ್ನು ಪಡೆದುಕೊಳ್ಳಬೇಕೆಂದರೆ ಬಂದು ಪಡೆದುಕೊಳ್ಳಿ. ಬೋರ್ಡಿನ ಮೇಲಂತೂ ನೀವು ಬಹಳಷ್ಟು ಬರೆಯಬಹುದು, ಅದರಲ್ಲಿ ಗುರಿ-ಧ್ಯೆಯವೂ ಸಹ ಬಂದು ಬಿಡಬೇಕು. ಕೆಳಭಾಗದಲ್ಲಿ ಬರೆಯಿರಿ - ಸ್ವರಾಜ್ಯ ಪದವಿ ಸಿಗುತ್ತದೆ. ಎಷ್ಟು ಸಾಧ್ಯವೋ ಅಷ್ಟು ಸ್ಪಷ್ಟ ಬರವಣಿಗೆಯಿರಲಿ ಯಾವುದನ್ನು ಯಾರೇ ಓದಿದರೂ ಸಹ ಅರ್ಥವಾಗುವಂತಿರಲಿ. ಹೀಗೀಗೆ ಬೋರ್ಡನ್ನು ಮಾಡಿಸಿ. ಈ ಶಬ್ದಗಳನ್ನು ಅವಶ್ಯವಾಗಿ ಬರೆಯಿರಿ ಎಂದು ತಂದೆಯು ಆದೇಶ ನೀಡುತ್ತಾರೆ. ಮುಂದೆ ಹೋದಂತೆ ಬಹಳಷ್ಟು ಈ ಯಜ್ಞದ ಪ್ರಭಾವ ಬೀರುವುದು. ಬಿರುಗಾಳಿಗಳಂತೂ ಬಹಳ ಬರುತ್ತವೆ. ಸತ್ಯದ ದೋಣಿಯು ಅಲುಗಾಡುವುದೇ ಹೊರತು ಮುಳುಗುವುದಿಲ್ಲವೆಂದು ಹೇಳುತ್ತಾರೆ ಅಂದಾಗ ಈಗ ಕ್ಷೀರ ಸಾಗರದ ಕಡೆ ಹೋಗಬೇಕಾಗಿದೆ. ಆದ್ದರಿಂದ ವಿಷಯ ಸಾಗರದ ಕಡೆ ಮನಸ್ಸಿರಬಾರದು. ಯಾರು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲವೋ ಅವರ ಹಿಂದೆ ಬಿದ್ದು ತನ್ನ ಸಮಯವನ್ನು ವ್ಯರ್ಥ ಮಾಡಬಾರದು. ತಿಳುವಳಿಕೆಯಂತೂ ಬಹಳ-ಬಹಳ ಸಹಜವಾಗಿದೆ.
ನೀವೇ ಪೂಜ್ಯ ದೇವಿ-ದೇವತೆಗಳಾಗಿದ್ದಿರಿ, ಈಗ ಪೂಜಾರಿಗಳಾಗಿದ್ದೀರಿ. ಪುನಃ ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ತುಕ್ಕು ಬಿಟ್ಟು ಹೋಗುವುದು. ನಿಮ್ಮ ಪಾಪಗಳು ಭಸ್ಮವಾಗುವವು, ಮತ್ತ್ಯಾವುದೇ ಉಪಾಯವಿಲ್ಲ. ಇದೇ ಸತ್ಯ-ಸತ್ಯವಾದ ಉಪಾಯವಾಗಿದೆ ಆದರೆ ಮಕ್ಕಳು ಯೋಗದಲ್ಲಿರುವುದಿಲ್ಲ. ಬಹಳ ದೇಹಾಭಿಮಾನವಿದೆ. ದೇಹಾಭಿಮಾನವು ಕಳೆದಾಗಲೇ ಯೋಗದಲ್ಲಿರಲು ಸಾಧ್ಯ ಮತ್ತೆ ಕರ್ಮಾತೀತ ಸ್ಥಿತಿಯಾಗುವುದು. ಅಂತಿಮದಲ್ಲಿ ಯಾವುದೇ ವಸ್ತು ನೆನಪಿಗೆ ಬರಬಾರದು. ಕೆಲವು ಮಕ್ಕಳಿಗಂತೂ ಕೆಲವೊಂದು ವಸ್ತುಗಳಲ್ಲಿ ಇಷ್ಟೊಂದು ಮೋಹವುಂಟಾಗಿ ಬಿಡುತ್ತದೆ ಅದರ ಮಾತೇ ಕೇಳಬೇಡಿ. ಶಿವ ತಂದೆಯನ್ನು ಎಂದೂ ನೆನೆಪು ಮಾಡುವುದಿಲ್ಲ. ವಾಸ್ತವದಲ್ಲಿ ಇಂತಹ ತಂದೆಯನ್ನು ಬಹಳ ವಿಶೇಷವಾಗಿ ನೆನಪು ಮಾಡಬೇಕಾಗಿದೆ ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯ ನೆನಪು ಮಾಡಲಿ ಎಂದು ಹೇಳಲಾಗುತ್ತದೆ ಆದರೆ ಈ ರೀತಿ ನೆನಪಿರುವವರು ಬಹಳ ವಿರಳ. ನಡವಳಿಕೆಯಿಂದಲೇ ಅರ್ಥವಾಗುತ್ತದೆ - ಯಜ್ಞದ ಪ್ರತಿ ಗೌರವವಿರುವುದಿಲ್ಲ, ಈ ಯಜ್ಞವನ್ನು ಬಹಳ ಸಂಭಾಲನೆ ಮಾಡಬೇಕು. ಸಂಭಾಲನೆ ಮಾಡಿದಿರಿ ಎಂದರೆ ತಂದೆಯನ್ನು ಖುಷಿ ಪಡಿಸಿದಿರಿ ಎಂದರ್ಥ. ಪ್ರತಿಯೊಂದು ಮಾತಿನಲ್ಲಿ ಎಚ್ಚರ ವಹಿಸಬೇಕು. ಬಡವರ ಒಂದೊಂದು ಪೈಸೆಯೂ ಈ ಯಜ್ಞದಲ್ಲಿ ಬೀಳುತ್ತದೆ ಆದ್ದರಿಂದ ಅವರು ಪದಮಾಪತಿಗಳಾಗುತ್ತಾರೆ. ಮಾತೆಯರು ಯಾರ ಬಳಿ ಏನೂ ಇರುವುದಿಲ್ಲವೋ ಅವರೂ ಸಹಾ ಒಂದೆರಡು ರೂಪಾಯಿ, ಎಂಟಾಣಿಯನ್ನು ಈ ಯಜ್ಞದಲ್ಲಿ ಕೊಡುತ್ತಾರೆ, ಇದರಿಂದ ಅವರು ಪದಮಾಪತಿಗಳಾಗಿ ಬಿಡುತ್ತಾರೆ ಏಕೆಂದರೆ ಬಹಳ ಭಾವನೆಯಿಂದ, ಖುಷಿಯಿಂದ ತರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ನೀವು ಮಕ್ಕಳಿಗಾಗಿಯೇ ಬಂದಿದ್ದೇನೆ. ಕೆಲವರು ಎಂಟಾಣಿಯನ್ನು ತೆಗೆದುಕೊಂಡು ಬರುತ್ತಾರೆ. ಬಾಬಾ, ಮನೆ ಕಟ್ಟಿಸುವುದರಲ್ಲಿ ಈ ಒಂದು ಇಟ್ಟಿಗೆಯನ್ನು ಹಾಕಿ ಎಂದು ಹೇಳುತ್ತಾರೆ. ಕೆಲವೊಮ್ಮೆ ಎರಡು ಹಿಡಿ ಧಾನ್ಯಗಳನ್ನೂ ತರುತ್ತಾರೆ. ಅವರ ಭಾವನೆಯ ಕಾರಣ ಅದು ಬಹಳಷ್ಟಾಗಿ ಬಿಡುತ್ತದೆ. ಒಂದೊಂದು ಕಣವೂ ಸಹ. ಕಣಜದಷ್ಟಾಗಿ ಬಿಡುತ್ತದೆ. ನೀವು ಕುಳಿತು ಬಡವರಿಗೆ ದಾನ ಮಾಡಬೇಕೆಂದಲ್ಲ. ಬಡವರಿಗಂತೂ ಮನುಷ್ಯರು ದಾನ ಮಾಡುತ್ತಾರೆ. ಪ್ರಪಂಚದಲ್ಲಿ ಹೀಗೆ ಅನೇಕರು ಬಡವರಿದ್ದಾರೆ. ಎಲ್ಲರೂ ಬಂದು ಇಲ್ಲಿ ಕುಳಿತು ಬಿಟ್ಟರೆ ತಲೆಯೇ ಕೆಡಿಸಿ ಬಿಡುವರು. ನಾವು ಯಜ್ಞದಲ್ಲಿ ಸಮರ್ಪಣೆಯಾಗುತ್ತೇವೆ ಎಂದು ಅನೇಕರು ಹೇಳುತ್ತಾರೆ ಆದರೆ ಬಹಳ ಸಂಭಾಲನೆಯಿಂದ ಇಟ್ಟುಕೊಳ್ಳಬೇಕಾಗುತ್ತದೆ. ಯಜ್ಞದಲ್ಲಿ ಬಂದು ಏರುಪೇರು ಮಾಡುವಂತಾಗಬಾರದು. ಈ ಯಜ್ಞದಲ್ಲಂತೂ ಬಹಳ ಪುಣ್ಯಾತ್ಮರಾಗಬೇಕು. ಬಹಳ ಸಂಭಾಲನೆ ಮಾಡಬೇಕು. ಪ್ರಶಸ್ತಿ ಯಜ್ಞದ ಪ್ರತಿ ಗೌರವವಿರಬೇಕು. ಯಾವ ಈಶ್ವರೀಯ ಯಜ್ಞದಿಂದ ನಾವು ನಮ್ಮ ಶರೀರ ನಿರ್ವಹಣೆ ಮಾಡುತ್ತೇವೆ, ಆದ್ದರಿಂದ ಯಜ್ಞದ ಹಣವನ್ನು ಯಾರಿಗಾದರೂ ಕೊಡುವುದು ಬಹಳ ಪಾಪವಾಗಿದೆ. ಯಾರು ಕವಡೆಯಿಂದ ವಜ್ರ ಸಮಾನರಾಗುವರೋ ಈಶ್ವರೀಯ ಸೇವೆಯಲ್ಲಿರುವರೋ ಅವರಿಗಾಗಿ ಈ ಹಣವಿದೆ. ಬಾಕಿ ಬಡವರು ಅಥವಾ ಯಾರೆಂದರೆ ಅವರಿಗೆ ಕೊಡುವ ಈ ದಾನ-ಪುಣ್ಯವನ್ನಂತೂ ನೀವು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ಇಳಿಯುತ್ತಾ-ಇಳಿಯುತ್ತಾ ಪಾಪಾತ್ಮರೇ ಆಗತೊಡಗಿದಿರಿ.
ನೀವು ಮಕ್ಕಳು ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡುವುದಕ್ಕಾಗಿ ಚಿಕ್ಕ-ಚಿಕ್ಕ ಗ್ರಾಮಗಳಲ್ಲಿಯೂ ಪ್ರದರ್ಶನ ಮಾಡುತ್ತಾ ಇರಿ. ಒಬ್ಬರು ಬಡವರು ಬಂದು ಜ್ಞಾನಿಯಾದರೂ ಸಹ ಒಳ್ಳೆಯದೇ. ಇದರಲ್ಲೇನೂ ಖರ್ಚು ಇಲ್ಲ, ಲಕ್ಷ್ಮಿ-ನಾರಾಯಣರು ಈ ರಾಜ್ಯವನ್ನು ಪಡೆದರು, ಅವರು ಏನು ಖರ್ಚು ಮಾಡಿದರು? ಏನೂ ಇಲ್ಲ. ವಿಶ್ವದ ರಾಜ್ಯವನ್ನು ಪಡೆಯಲು ಏನೂ ಖರ್ಚು ಮಾಡಲಿಲ್ಲ. ಆ ಮನುಷ್ಯರಾದರೆ ಪರಸ್ಪರ ಎಷ್ಟೊಂದು ಹೊಡೆದಾಡುತ್ತಾರೆ. ಸಿಡಿ ಮದ್ದಿಗಾಗಿ ಎಷ್ಟೊಂದು ಖರ್ಚು ಮಾಡುತ್ತಾರೆ ಆದರೆ ಇಲ್ಲಿ ಯಾವುದೇ ಖರ್ಚಿನ ಮಾತಿಲ್ಲ. ಕವಡೆಯೂ ಖರ್ಚಿಲ್ಲದೆ ಸೆಕೆಂಡಿನಲ್ಲಿ ವಿಶ್ವದ ರಾಜ್ಯಭಾಗ್ಯವನ್ನು ಪಡೆದುಕೊಳ್ಳಿ, ತಂದೆಯನ್ನು ನೆನಪು ಮಾಡಿ ಆಗ ಅವರ ಆಸ್ತಿಯು ಇದ್ದೇ ಇದೆ. ಎಷ್ಟು ಸಾಧ್ಯವೋ ಅಷ್ಟು ಸತ್ಯ ಹೃದಯದಿಂದ ಸತ್ಯ ಸಾಹೇಬನನ್ನು ರಾಜಿ ಮಾಡಿಕೊಳ್ಳಿ ಆಗ ಸತ್ಯ ಖಂಡದ ಮಾಲೀಕರಾಗುವಿರಿ. ಇಲ್ಲಿ ಸುಳ್ಳು ನಡೆಯುವುದಿಲ್ಲ, ನೆನಪು ಮಾಡಬೇಕಾಗಿದೆ. ನಾವಂತೂ ಮಕ್ಕಳಾಗಿಯೇ ಇದ್ದೇವೆ ಎಂದಲ್ಲ. ನೆನಪು ಮಾಡುವುದರಲ್ಲಿ ಬಹಳ ಪರಿಶ್ರಮವಿದೆ. ಯಾವುದೇ ವಿಕರ್ಮ ಮಾಡಿದರೆ ಬಹಳ ಗೊಂದಲದಲ್ಲಿ ಬಂದು ಬಿಡುವಿರಿ, ಬುದ್ಧಿಯು ಸ್ಥಿರವಾಗುವುದಿಲ್ಲ, ತಂದೆಯಂತೂ ಅನುಭವಿಯಲ್ಲವೆ. ಎಲ್ಲವನ್ನೂ ತಿಳಿಸುತ್ತಿರುತ್ತಾರೆ. ಕೆಲವು ಮಕ್ಕಳು ತನ್ನನ್ನು ಎಲ್ಲಾ ಬಲ್ಲವನೆಂದು ತಿಳಿದುಕೊಳ್ಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಬಹಳ ಪರಿಶ್ರಮವಿದೆ, ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಈ ರುದ್ರ ಯಜ್ಞದ ಪ್ರತಿ ಬಹಳ-ಬಹಳ ಗೌರವವನ್ನಿಡಬೇಕು. ಯಜ್ಞದ ವಾತಾವರಣವನ್ನು ಬಹಳ ಶುದ್ಧ, ಶಕ್ತಿಶಾಲಿಯನ್ನಾಗಿ ಮಾಡುವುದರಲ್ಲಿ ಸಹಯೋಗಿಗಳಾಗಬೇಕಾಗಿದೆ. ಇದನ್ನು ಪ್ರೀತಿಯಿಂದ ಸಂಭಾಲನೆ ಮಾಡಬೇಕಾಗಿದೆ.
2. ತನ್ನ ಬಳಿ ಏನನ್ನೂ ಮುಚ್ಚಿಟ್ಟುಕೊಂಡಿರಬಾರದು. ಹೃದಯ ಸ್ವಚ್ಛವಾಗಿದ್ದರೆ ಎಲ್ಲಾ ಬಯಕೆಗಳು ಈಡೇರುವವು. ಈ ಯಜ್ಞದ ಒಂದೊಂದು ಕವಡೆಯೂ ಸಹ ಅಮೂಲ್ಯವಾಗಿದೆ, ಆದ್ದರಿಂದ ಒಂದು ಕವಡೆಯನ್ನೂ ಸಹ ವ್ಯರ್ಥವಾಗಿ ಕಳೆಯಬಾರದು. ಯಜ್ಞದ ವೃದ್ಧಿಯಲ್ಲಿ ಸಹಯೋಗ ನೀಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಎಲ್ಲಾ ಸೇವಾಕೇಂದ್ರಗಳ ಮಕ್ಕಳು ಗೀತೆಯನ್ನು ಕೇಳಿದಿರಿ, ಈಗ ತಮ್ಮನ್ನು ನೋಡಿಕೊಳ್ಳಿ - ಎಷ್ಟು ಪುಣ್ಯವಾಗಿದೆ ಮತ್ತು ಎಷ್ಟು ಪಾಪವು ಕಳೆದಿದೆ? ಇಡೀ ಪ್ರಪಂಚದಲ್ಲಿ ಸಾಧು-ಸಂತ ಮೊದಲಾದವರೆಲ್ಲರೂ ಹೇ ಪತಿತ-ಪಾವನ ಎಂದು ಕರೆಯುತ್ತಾರೆ. ಒಬ್ಬರೇ ಪತಿತರಿಂದ ಪಾವನರನ್ನಾಗಿ ಮಾಡುವ ತಂದೆಯಾಗಿದ್ದಾರೆ ಉಳಿದೆಲ್ಲರಲ್ಲಿ ಪಾಪವಿದೆ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ - ಆತ್ಮದಲ್ಲಿಯೇ ಪಾಪವಿದೆ, ಪುಣ್ಯವೂ ಆತ್ಮದಲ್ಲಿದೆ. ಆತ್ಮವೇ ಪಾವನ, ಆತ್ಮವೇ ಪತಿತವಾಗುತ್ತದೆ. ಇಲ್ಲಿ ಎಲ್ಲಾ ಆತ್ಮರು ಪತಿತರಾಗಿದ್ದಾರೆ. ಪಾಪಗಳ ಕಲೆಯುಂಟಾಗಿದೆ ಆದ್ದರಿಂದ ಪಾಪಾತ್ಮನೆಂದು ಹೇಳಲಾಗುತ್ತದೆ. ಈಗ ಪಾಪವು ಕಳೆಯುವುದಾದರೂ ಹೇಗೆ? ಯಾವುದೇ ವಸ್ತುವಿನ ಮೇಲೆ ಶಾಹಿ ಅಥವಾ ತೈಲವು ಬಿದ್ದರೆ ಅದರ ಮೇಲೆ ಬ್ಲಾಟಿಂಗ್ ಪೇಪರ್ನ್ನು ಇಡುತ್ತಾರೆ. ಅದು ಎಲ್ಲವನ್ನೂ ಹೀರಿಕೊಳ್ಳುತ್ತದೆ. ಈಗ ಎಲ್ಲಾ ಮನುಷ್ಯರು ಒಬ್ಬರನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರೇ ಬ್ಲಾಟಿಂಗ್ ಪೇಪರ್ ಆಗಿದ್ದಾರೆ, ಪತಿತ-ಪಾವನನಾಗಿದ್ದಾರೆ. ಅವರೊಬ್ಬರ ವಿನಃ ಮತ್ತ್ಯಾರೂ ಬ್ಯಾಟಿಂಗ್ ಪೇಪರ್ ಅಲ್ಲ. ಮನುಷ್ಯರಂತೂ ಜನ್ಮ-ಜನ್ಮಾಂತರದಿಂದ ಗಂಗಾ ಸ್ನಾನ ಮಾಡುತ್ತಾ ಇನ್ನೂ ಪತಿತರಾಗಿದ್ದಾರೆ. ಪತಿತರನ್ನು ಪಾವನ ಮಾಡುವವರು ಒಬ್ಬರೇ ಶಿವ ತಂದೆಯು ಬ್ಲಾಟಿಂಗ್ ಪೇಪರ್ ಆಗಿದ್ದಾರೆ. ಅವರು ಅತೀ ಚಿಕ್ಕ ಬಿಂದುವಾಗಿದ್ದಾರೆ. ಎಲ್ಲರ ಪಾಪವನ್ನು ನಷ್ಟ ಮಾಡುತ್ತಾರೆ. ಯಾವ ಯುಕ್ತಿಯಿಂದ? ಕೇವಲ ಹೇಳುತ್ತಾರೆ - ನಾನು ಬ್ಲಾಟಿಂಗ್ ಪೇಪರನ್ನು ನೆನಪು ಮಾಡಿ, ನಾನಂತೂ ಚೈತನ್ಯವಾಗಿದ್ದೇನೆ ಅಲ್ಲವೆ. ನಿಮಗೆ ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ. ನೀವಾತ್ಮರೂ ಬಿಂದು, ತಂದೆಯೂ ಬಿಂದುವಾಗಿದ್ದಾರೆ. ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿದರೆ ನಿಮ್ಮ ಎಲ್ಲಾ ಪಾಪಗಳು ಕಳೆಯುತ್ತವೆ. ಈಗ ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಿ - ನೆನಪಿನಿಂದ ಎಷ್ಟು ಪಾಪಗಳು ಕಳೆದಿವೆ? ಮತ್ತು ಇನ್ನೆಷ್ಟು ಪಾಪವು ಉಳಿದಿದೆ? ಇದು ತಿಳಿಯುವುದು ಹೇಗೆ? ಅನ್ಯರಿಗೂ ಸಹ ಮಾರ್ಗವನ್ನು ತಿಳಿಸುತ್ತಾ ಇರಿ - ಒಬ್ಬ ಬ್ಲಾಟಿಂಗ್ ಪೇಪರ್ ತಂದೆಯನ್ನು ನೆನಪು ಮಾಡಿ, ಎಲ್ಲರಿಗೆ ಈ ಸಲಹೆಯನ್ನು ಕೊಡುವುದು ಒಳ್ಳೆಯದಲ್ಲವೆ? ಇದೂ ಸಹ ಆಶ್ಚರ್ಯವಾಗಿದೆ, ಯಾರಿಗೆ ಸಲಹೆ ಕೊಡುತ್ತಾರೆಯೋ ಅವರಂತೂ ತಂದೆಯನ್ನು ನೆನಪು ಮಾಡುವುದರಲ್ಲಿ ತೊಡಗಿ ಬಿಡುತ್ತಾರೆ ಮತ್ತು ಸಲಹೆಯನ್ನು ಕೊಡುವವರು ನೆನಪು ಮಾಡುವುದಿಲ್ಲ. ಆದ್ದರಿಂದ ಪಾಪಗಳು ತುಂಡಾಗುವುದಿಲ್ಲ. ಪತಿತ-ಪಾವನನೆಂದು ಒಬ್ಬರಿಗೇ ಹೇಳಲಾಗುತ್ತದೆ. ಅನೇಕ ಪಾಪಗಳಾಗಿದೆ. ಕಾಮದ ಪಾಪ, ದೇಹಾಭಿಮಾನದ ಪಾಪವಂತೂ ಮೊದಲ ನಂಬರಿನ ಪಾಪವಾಗಿದೆ. ಇದು ಎಲ್ಲದಕ್ಕಿಂತ ಕೆಟ್ಟದ್ದಾಗಿದೆ ಈಗ ತಂದೆ ತಿಳಿಸುತ್ತಾರೆ - ದೇಹೀ ಅಭಿಮಾನಿಯಾಗಿ. ಎಷ್ಟು ನನ್ನೊಬ್ಬನನ್ನೇ ನೆನಪು ಮಾಡುತ್ತೀರೋ ಅಷ್ಟು ನಿಮ್ಮಲ್ಲಿ ಹಿಡಿದಿರುವ ತುಕ್ಕು ಭಸ್ಮವಾಗುವುದು. ಆದ್ದರಿಂದ ನೆನಪು ಮಾಡಬೇಕು. ಅನ್ಯರಿಗೂ ಈ ಮಾರ್ಗವನ್ನು ತಿಳಿಸಬೇಕಾಗಿದೆ. ಎಷ್ಟು ಅನ್ಯರಿಗೆ ತಿಳಿಸುತ್ತೀರೋ ಅಷ್ಟು ನಿಮ್ಮದೂ ಕಲ್ಯಾಣವಾಗುವುದು. ಈ ಉದ್ಯೋಗದಲ್ಲಿಯೇ ತೊಡಗಿರಿ. ಅನ್ಯರಿಗೂ ಇದನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿದರೆ ಪುಣ್ಯಾತ್ಮರಾಗಿ ಬಿಡುತ್ತೀರಿ. ಪತಿತ-ಪಾವನನು ಒಬ್ಬರೇ ಆಗಿದ್ದಾರೆ ಎಂದು ಅನ್ಯರಿಗೂ ಇದನ್ನು ತಿಳಿಸುವುದು ನಿಮ್ಮ ಕರ್ತವ್ಯವಾಗಿದೆ. ಭಲೆ ನೀವು ಜ್ಞಾನ ನದಿಗಳು ಅನೇಕರಿದ್ದೀರಿ ಆದರೆ ನೀವು ಎಲ್ಲರಿಗೆ ಹೇಳುತ್ತೀರಿ - ಒಬ್ಬ ತಂದೆಯನ್ನು ನೆನಪು ಮಾಡಿ, ಅವರೊಬ್ಬರೇ ಪತಿತ-ಪಾವನನಾಗಿದ್ದಾರೆ. ಅವರದು ಬಹಳ ಮಹಿಮೆಯಿದೆ. ಜ್ಞಾನ ಸಾಗರನೂ ಅವರೇ ಆಗಿದ್ದಾರೆ. ಆ ಒಬ್ಬ ತಂದೆಯನ್ನು ನೆನಪು ಮಾಡುವುದು, ದೇಹೀ-ಅಭಿಮಾನಿಯಾಗಿರುವುದೊಂದೇ ಕಷ್ಟದ ಮಾತಾಗಿದೆ. ತಂದೆಯು ಕೇವಲ ನಿಮಗಾಗಿ ಹೇಳುವುದಿಲ್ಲ. ತಂದೆಯ ಬುದ್ದಿಯಲ್ಲಿ ಎಲ್ಲಾ ಸೇವಾಕೇಂದ್ರಗಳ ಮಕ್ಕಳಿದ್ದಾರೆ. ತಂದೆಯು ಎಲ್ಲಾ ಮಕ್ಕಳನ್ನು ನೋಡುತ್ತಾರಲ್ಲವೆ, ಎಲ್ಲಿ ಒಳ್ಳೆಯ ಸೇವಾಧಾರಿ ಮಕ್ಕಳಿರುತ್ತಾರೆ ಅಲ್ಲಿ ತಂದೆಯ ಗಮನ ಹೋಗುತ್ತದೆ. ಶಿವ ತಂದೆಯ ಹೂದೋಟವಲ್ಲವೇ. ಎಲ್ಲಿ ಒಳ್ಳೆಯ ಹೂ ಇರುವುದೋ ಅವರನ್ನು ತಂದೆಯು ನೆನಪು ಮಾಡುತ್ತಾರೆ ಸಾಹುಕಾರ ವ್ಯಕ್ತಿಗೆ ನಾಲೈದು ಮಂದಿ ಮಕ್ಕಳಿದ್ದರೆ ಯಾರು ಹಿರಿಯ ಮಗನಾಗಿರುವರೋ ಅವರನ್ನು ನೆನಪು ಮಾಡುತ್ತಾರೆ. ಹೂಗಳಲ್ಲಿಯೂ ಅನೇಕ ಪ್ರಕಾರವಿದೆಯಲ್ಲವೆ. ಅಂದಾಗ ತಂದೆಯೂ ಸಹ ತಮ್ಮ ದೊಡ್ಡ ಹೂದೋಟಗಳನ್ನು ನೆನಪು ಮಾಡುತ್ತಾರೆ. ಯಾರಿಗಾದರೂ ಈ ಮಾರ್ಗವನ್ನು ತಿಳಿಸುವುದು ಸಹಜವಾಗಿದೆ - ಒಬ್ಬ ಶಿವ ತಂದೆಯನ್ನು ನೆನಪು ಮಾಡಿ, ಅವರೇ ಪತಿತ ಪಾವನನಾಗಿದ್ದಾರೆ. ಸ್ವಯಂ ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಇಡೀ ಪ್ರಪಂಚಕ್ಕಾಗಿ ಎಷ್ಟು ಒಳ್ಳೆಯ ಬ್ಲಾಟಿಂಗ್ ಪೇಪರ್ ಆಗಿದ್ದಾರೆ. ಎಲ್ಲರೂ ಅವರನ್ನೇ ನೆನಪು ಮಾಡುತ್ತಾರೆ. ಶಿವ ತಂದೆಯನ್ನು ನೆನಪು ಮಾಡಿ ಎಂದು ಯಾರಿಗಾದರೂ ಈ ಮಾರ್ಗವನ್ನು ತಿಳಿಸುವುದು ಬಹಳ ಸಹಜವಾಗಿದೆ.
ತಂದೆಯು ಯುಕ್ತಿಯನ್ನು ತಿಳಿಸಿದ್ದಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮಲ್ಲಿರುವ ದೇಹಾಭಿಮಾನದ ಕಲೆಗಳು ಮಾಯವಾಗುತ್ತವೆ. ದೇಹೀ-ಅಭಿಮಾನಿಯಾಗುವುದು ಪರಿಶ್ರಮವಿದೆ, ತಂದೆಗೆ ಯಾರೂ ಸತ್ಯವನ್ನು ತಿಳಿಸುವುದಿಲ್ಲ. ಕೆಲಕೆಲವರು ಚಾರ್ಟ್ ಬರೆದು ಕಳುಹಿಸುತ್ತಾರೆ ಮತ್ತೆ ಸುಸ್ತಾಗಿ ಬಿಡುತ್ತಾರೆ. ಇದು ಉನ್ನತ ಗುರಿಯಾಗಿದೆ. ಮಾಯೆಯು ಒಮ್ಮೆಲೆ ನಶೆಯನ್ನು ಹಾರಿಸಿ ಬಿಡುತ್ತದೆ ಆಗ ಬರೆಯುವುದನ್ನೇ ಬಿಟ್ಟು ಬಿಡುತ್ತಾರೆ. ಅರ್ಧಕಲ್ಪದ ದೇಹಾಭಿಮಾನವಿದೆ, ಅದು ಕಳೆಯುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ಕೇವಲ ಇದೇ ವ್ಯಾಪಾರವನ್ನು ಮಾಡುತ್ತಾ ಇರಿ. ತಂದೆಯನ್ನು ನೆನಪು ಮಾಡಿ ಮತ್ತು ಅನ್ಯರಿಗೂ ಮಾಡಿಸಿ. ಎಲ್ಲದಕ್ಕಿಂತ ಶ್ರೇಷ್ಠ ವ್ಯಾಪಾರವು ಇದಾಗಿದೆ. ಯಾರು ಸ್ವಯಂ ನೆನಪು ಮಾಡುವುದಿಲ್ಲವೋ ಅವರು ಈ ವ್ಯಾಪಾರವನ್ನೂ ಮಾಡುವುದಿಲ್ಲ. ತಂದೆಯ ನೆನಪು ಯೋಗ ಅಗ್ನಿಯಾಗಿದೆ, ಇದರಿಂದಲೇ ಪಾಪಗಳು ಭಸ್ಮವಾಗುತ್ತವೆ. ಆದ್ದರಿಂದಲೇ ತಂದೆಯು ಕೇಳುತ್ತಾರೆ - ಪಾಪವು ಎಲ್ಲಿಯವರೆಗೆ ಭಸ್ಮವಾಗಿದೆ? ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯ ನಶೆಯೇರಿರುವುದು. ಪ್ರತಿಯೊಬ್ಬರ ಮನಸ್ಸನ್ನು ಅರಿತುಕೊಳ್ಳಬಹುದು. ಅನ್ಯರನ್ನೂ ಸಹ ಅವರ ಸೇವೆಯಿಂದಲೇ ಅರಿತುಕೊಳ್ಳಬಹುದು. ಅನ್ಯರಿಗೂ ಮಾರ್ಗವನ್ನು ತಿಳಿಸುತ್ತಾರೆ - ತಂದೆಯನ್ನು ನೆನಪು ಮಾಡಿ, ಅವರು ಪತಿತ- ಪಾವನನಾಗಿದ್ದಾರೆ. ಇಲ್ಲಿ ಇದಂತೂ ಪತಿತ, ತಮೋಪ್ರಧಾನ ಪ್ರಪಂಚವಾಗಿದೆ. ಎಲ್ಲಾ ಆತ್ಮರು ಮತ್ತು ಶರೀರ ತಮೋಪ್ರಧಾನವಾಗಿದೆ. ಈಗ ಹಿಂತಿರುಗಿ ಹೋಗಬೇಕಾಗಿದೆ. ಅಲ್ಲಿ ಎಲ್ಲಾ ಆತ್ಮರು ಪವಿತ್ರರಾಗಿರುತ್ತಾರೆ. ಯಾವಾಗ ಪವಿತ್ರರಾಗುವಿರೋ ಆಗಲೇ ಮನೆಗೆ ಹೋಗುವಿರಿ, ಅನ್ಯರಿಗೂ ಸಹ ಇದೇ ಮಾರ್ಗವನ್ನು ತೋರಿಸಬೇಕು. ತಂದೆಯಂತೂ ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ಶಿವ ತಂದೆಯನ್ನು ನೆನಪು ಮಾಡಿ, ಇದೇ ಬ್ಲಾಟಿಂಗ್ ಪೇಪರನ್ನು ಇಟ್ಟುಕೊಳ್ಳಿ ಆಗ ಎಲ್ಲಾ ಪಾಪಗಳನ್ನು ಹೀರಿ ಬಿಡುತ್ತದೆ. ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಪಾವನರಾಗುವುದು ಮೂಲ ಮಾತಾಗಿದೆ. ಮನುಷ್ಯರು ಪತಿತರಾಗಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬಂದು ಎಲ್ಲರನ್ನೂ ಪಾವನ ಮಾಡಿ ಜೊತೆ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಎಲ್ಲಾ ಆತ್ಮರನ್ನೂ ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆಂದು ಬರೆಯಲ್ಪಟ್ಟಿದೆ ನಂತರ ಯಾವುದೇ ಪತಿತ ಆತ್ಮನು ಇರುವುದಿಲ್ಲ. ತಂದೆಯು ಇದನ್ನೂ ತಿಳಿಸಿದ್ದಾರೆ – ಮೊಟ್ಟ ಮೊದಲಿಗೆ ಸ್ವರ್ಗವಾಸಿಗಳೇ ಬರುತ್ತಾರೆ. ತಂದೆಯು ಎಲ್ಲರಿಗಾಗಿ ಔಷಧಿಯನ್ನು ಕೊಡುತ್ತಾರೆ. ಯಾರು ಸಿಕ್ಕಿದರೂ ಅವರಿಗೆ ಇದೇ ಔಷಧಿಯನ್ನು ಕೊಡಿ. ನೀವು ತಂದೆಯ ಬಳಿ ಹೋಗಲು ಬಯಸುತ್ತೀರಿ ಆದರೆ ಆತ್ಮವು ಪತಿತನಾಗಿದೆ ಆದ್ದರಿಂದ ಹೋಗಲು ಸಾಧ್ಯವಿಲ್ಲ. ಪಾವನರಾಗಿ ಆಗ ಮನೆಗೆ ಹೋಗುವಿರಿ. ಹೇ ಆತ್ಮರೇ, ನನ್ನನ್ನು ನೆನಪು ಮಾಡಿರಿ ಆಗ ನಾನು ಕರೆದುಕೊಂಡು ಹೋಗುತ್ತೇನೆ ಮತ್ತೆ ಅಲ್ಲಿಂದ ನಿಮ್ಮನ್ನು ಸುಖದಲ್ಲಿ ಕಳುಹಿಸುತ್ತೇನೆ ನಂತರ ಯಾವಾಗ ಹಳೆಯ ಪ್ರಪಂಚವಾಗುವುದೋ ಆಗ ನೀವು ದುಃಖವನ್ನು ಪಡೆಯುತ್ತೀರಿ. ನಾನು ಯಾರಿಗೂ ದುಃಖವನ್ನು ಕೊಡುವುದಿಲ್ಲ. ಪ್ರತಿಯೊಬ್ಬರೂ ತಮ್ಮನ್ನು ನೋಡಿಕೊಳ್ಳಿ, ನಾನು ನೆನಪು ಮಾಡುತ್ತೇನೆಯೇ? ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯ ನಶೆಯಿರುವುದು. ಇದು ಎಷ್ಟು ಸಹಜ ಔಷಧಿಯಾಗಿದೆ! ಇದನ್ನು ಯಾವುದೇ ಸಾಧು-ಸಂತ ಮೊದಲಾದವರು ತಿಳಿದುಕೊಂಡಿಲ್ಲ. ಇದು ಎಲ್ಲಿಯೂ ಬರೆಯಲ್ಪಟ್ಟಿಲ್ಲ. ಸಂಪೂರ್ಣ ಹೊಸ ಮಾತಾಗಿದೆ. ಪಾಪಗಳ ಖಾತೆಯು ಶರೀರದಲ್ಲಿ ಅಂಟಿಲ್ಲ. ಇಷ್ಟು ಚಿಕ್ಕ ಆತ್ಮ ಬಿಂದುವಿನಲ್ಲಿಯೇ ಎಲ್ಲಾ ಪಾತ್ರವು ಅಡಕವಾಗಿದೆ. ಆತ್ಮವು ಪತಿತವಾದಾಗ ಅದು ಶರೀರದ ಮೇಲೂ ಪ್ರಭಾವ ಬೀರುತ್ತದೆ. ಆತ್ಮವು ಪಾವನವಾಗಿ ಬಿಟ್ಟರೆ ಶರೀರವೂ ಪವಿತ್ರವಾಗಿರುವುದೇ ಸಿಗುತ್ತದೆ. ಆತ್ಮವೇ ದುಃಖ, ಸುಖಿಯಾಗುತ್ತದೆ. ಶರೀರಕ್ಕೆ ಪೆಟ್ಟು ಬಿದ್ದರೆ ಆತ್ಮಕ್ಕೆ ದುಃಖದ ಅನುಭೂತಿಯಾಗುತ್ತದೆ. ಇವರು ದುಃಖಿ ಆತ್ಮ, ಇವರು ಸುಖಿ ಆತ್ಮ ಎಂದು ಹೇಳಲಾಗುತ್ತದೆ. ಇಷ್ಟು ಚಿಕ್ಕ ಆತ್ಮವು ಎಷ್ಟೊಂದು ಪಾತ್ರವನ್ನಭಿನಯಿಸುತ್ತದೆಯಲ್ಲವೆ. ಆಶ್ಚರ್ಯವಲ್ಲವೆ, ತಂದೆಯೇ ಸುಖ ಕೊಡುವವರಾಗಿದ್ದಾರೆ ಆದ್ದರಿಂದ ನೆನಪು ಮಾಡುತ್ತಾರೆ. ದುಃಖ ಕೊಡುವವರು ರಾವಣನಾಗಿದ್ದಾರೆ. ಎಲ್ಲದಕ್ಕಿಂತ ಮೊದಲು ದೇಹಾಭಿಮಾನವು ಬರುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನೀವು ಆತ್ಮಾಭಿಮಾನಿಯಾಗಬೇಕಾಗಿದೆ. ಇದರಲ್ಲಿ ಬಹಳ ಪರಿಶ್ರಮವಿದೆ. ತಂದೆಗೆ ಗೊತ್ತಿದೆ, ಸತ್ಯ ಹೃದಯದಿಂದ ಯಾವ ಯುಕ್ತಿಯಿಂದ ನೆನಪು ಮಾಡಬೇಕೋ ಹಾಗೆಯೇ ನೆನಪು ಮಾಡುವವರು ಬಹಳ ವಿರಳ. ಇಲ್ಲಿಯೇ ಇದ್ದರೂ ಸಹ ಬಹಳ ಮರೆತು ಹೋಗುತ್ತಾರೆ. ಒಂದುವೇಳೆ ದೇಹೀ-ಅಭಿಮಾನಿಯಾಗಿದ್ದರೆ ಯಾವುದೇ ಪಾಪ ಮಾಡುವುದಿಲ್ಲ. ಕೆಟ್ಟದ್ದನ್ನು ಕೇಳಬೇಡಿ..... ಇದು ತಂದೆಯ ಆದೇಶವಾಗಿದೆ. ಇದು ಕೋತಿಗಳಿಗಾಗಿ ಅಲ್ಲ, ಮನುಷ್ಯರಿಗೆ ಸಲ್ಲುತ್ತದೆ. ಮನುಷ್ಯರು ಮಂಗನಂತಾಗಿದ್ದಾರೆ ಆದ್ದರಿಂದ ಕೋತಿಯ ಚಿತ್ರವನ್ನು ತೋರಿಸಿದ್ದಾರೆ. ಇಂತಹವರು ಅನೇಕರಿದ್ದಾರೆ ಇಡೀ ದಿನ ಪರಚಿಂತನೆ ಮಾಡುತ್ತಾರೆ. ಆದ್ದರಿಂದ ತಂದೆಯು ತಿಳುವಳಿಕೆ ನೀಡುತ್ತಾರೆ - ಕೆಲವು ಸೇವಾಕೇಂದ್ರಗಳಲ್ಲಿ ಈ ರೀತಿ ಇರುತ್ತಾರೆ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಕೆಲವರು ಒಳ್ಳೆಯವರೂ ಇದ್ದಾರೆ, ತಂದೆಯ ನೆನಪಿನಲ್ಲಿರುತ್ತಾರೆ. ತಿಳಿದುಕೊಳ್ಳುತ್ತಾರೆ, ಮನಸ್ಸಾ ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ವಾಚಾದಿಂದಲೂ ಯಾರಿಗಾದರೂ ದುಃ ಖಕೊಟ್ಟರೆ ದುಃಖಿಯಾಗಿ ಸಾಯುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಎಲ್ಲರಿಗೆ ಸುಖ ಕೊಡಬೇಕಾಗಿದೆ. ಎಲ್ಲರಿಗೆ ಹೇಳಿರಿ - ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ ಮತ್ತ್ಯಾವುದೇ ಹಣದ ಲೇವಾದೇವಿಯ ಮಾತಿಲ್ಲ. ಕೇವಲ ಪ್ರಿಯ ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ಭಸ್ಮವಾಗುತ್ತವೆ. ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಭಗವಾನುವಾಚ - ಮನ್ಮನಾಭವ, ಒಬ್ಬ ತಂದೆಯನ್ನು ಹಾಗೂ ಆಸ್ತಿಯನ್ನು ನೆನಪು ಮಾಡಿ. ಪರಸ್ಪರ ಮತ್ತೇನನ್ನೂ ಮಾತನಾಡಬೇಡಿ, ಕೇವಲ ತಂದೆಯನ್ನು ನೆನಪು ಮಾಡಿ, ಅನ್ಯರ ಕಲ್ಯಾಣ ಮಾಡಿ. ನಿಮ್ಮ ಸ್ಥಿತಿಯು ಈ ರೀತಿ ಮಧುರವಾಗಿರಲಿ ಯಾರೇ ಬಂದು ನೋಡಿದರೂ ಸಹ ತಂದೆಯೂ ಮಕ್ಕಳು ಬ್ಲಾಟಿಂಗ್ ಪೇಪರ್ ಆಗಿದ್ದಾರೆಂದು ಹೇಳುವಂತಿರಲಿ. ಇನ್ನೂ ಆ ಸ್ಥಿತಿಯಿಲ್ಲ. ತಂದೆಯೊಂದಿಗೆ ಯಾರಾದರೂ ಕೇಳಿದರೆ ಹೇಳಬಲ್ಲರು - ಬ್ಲಾಟಿಂಗ್ ಪೇಪರ್ ಏನು! ಇನ್ನೂ ಕಾಗದವೇ ಆಗಿಲ್ಲ. ತಂದೆಯು ಎಲ್ಲಾ ಸೇವಾಕೇಂದ್ರಗಳ ಮಕ್ಕಳಿಗೆ ತಿಳಿಸುತ್ತಾರೆ - ಬಾಂಬೆ, ಕಲ್ಕತ್ತಾ, ದೆಹಲಿ.... ಎಲ್ಲಾ ಜಾಗಗಳಲ್ಲಿ ಮಕ್ಕಳಿದ್ದಾರಲ್ಲವೆ. ಬಾಬಾ, ಇಂತಹವರು ಬಹಳ ತೊಂದರೆ ಕೊಡುತ್ತಾರೆಂದು ದೂರು ಬರುತ್ತದೆ. ಪುಣ್ಯಾತ್ಮರನ್ನಾಗಿ ಮಾಡುವ ಬದಲು ಇನ್ನೂ ಪಾಪಾತ್ಮರನ್ನಾಗಿ ಮಾಡಿ ಬಿಡುತ್ತಾರೆ. ತಂದೆಯೊಂದಿಗೆ ಕೇಳಿದರೆ ಕೂಡಲೆ ತಿಳಿಸಬಲ್ಲರು. ಶಿವ ತಂದೆಯಂತೂ ಎಲ್ಲವನ್ನೂ ತಿಳಿದುಕೊಂಡಿದ್ದಾರೆ, ಅವರ ಬಳಿ ಎಲ್ಲರ ಎಲ್ಲಾ ಲೆಕ್ಕಾಚಾರವಿದೆ. ಈ ತಂದೆಯೂ ಸಹ ತಿಳಿಸಬಲ್ಲರು, ಎಲ್ಲವೂ ಚಹರೆಯಿಂದಲೇ ಅರ್ಥವಾಗುತ್ತದೆ. ಇವರು ತಂದೆಯ ನೆನಪಿನಲ್ಲಿ ಮಸ್ತರಾಗಿದ್ದಾರೆ, ಇವರ ಚಹರೆಯೇ ಖುಷಿಯಿಂದ ದೇವತೆಗಳ ತರಹವಿದೆ. ಆತ್ಮವು ಖುಷಿಯಾಗಿದ್ದರೆ ಶರೀರವೂ ಸಹ ಖುಷಿಯಾಗಿ ಕಾಣುತ್ತದೆ. ಶರೀರಕ್ಕೆ ದುಃಖವಾದರೆ ಆತ್ಮಕ್ಕೂ ದುಃಖದ ಅನುಭವವಾಗುತ್ತದೆ. ಒಂದು ಮಾತನ್ನು ಎಲ್ಲರಿಗೂ ತಿಳಿಸುತ್ತಾ ಇರಿ – ಶಿವ ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ವಿನಾಶವಾಗುತ್ತವೆ. ಅವರು ಕೃಷ್ಣ ಭಗವಾನುವಾಚ ಎಂದು ಬರೆದಿದ್ದಾರೆ, ಕೃಷ್ಣನನ್ನಂತೂ ಅನೇಕರು ನೆನಪು ಮಾಡುತ್ತಾರೆ ಆದರೆ ಪಾಪವಂತೂ ಕಳೆಯುವುದೇ ಇಲ್ಲ, ಇನ್ನೂ ಪತಿತರಾಗಿ ಬಿಟ್ಟಿದ್ದಾರೆ. ಯಾರನ್ನು ನೆನಪು ಮಾಡಬೇಕು. ಪರಮಾತ್ಮನ ರೂಪವೇನೆಂದು ಅವರಿಗೆ ತಿಳಿದೇ ಇಲ್ಲ. ಒಂದುವೇಳೆ ಸರ್ವವ್ಯಾಪಿ ಎಂದು ಹೇಳಿದರೂ ಸಹ ಹೇಗೆ ಆತ್ಮವು ನಕ್ಷತ್ರವಾಗಿದೆಯೋ ಹಾಗೆಯೇ ಪರಮಾತ್ಮನೂ ಸಹ ನಕ್ಷತ್ರ ಸಮಾನವಾಗಿದ್ದಾರೆ ಏಕೆಂದರೆ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ ಅಂದಮೇಲೆ ಈ ಲೆಕ್ಕದಿಂದಲೂ ಸಹ ತಂದೆಯು ಬಿಂದುವಾದರು. ಚಿಕ್ಕ ಬಿಂದುವು ಪ್ರವೇಶ ಮಾಡುತ್ತದೆ. ಎಲ್ಲಾ ಬಿಂದುಗಳಿಗೆ ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಕರ್ಮೇಂದ್ರಿಯಗಳ ಮೂಲಕ ಮಾತನಾಡುತ್ತಾರೆ. ಆತ್ಮವು ಕರ್ಮೇಂದ್ರಿಯಗಳಿಲ್ಲದೆ ಶಬ್ದ ಮಾಡಲು ಸಾಧ್ಯವಿಲ್ಲ. ನೀವು ಇದನ್ನು ಹೇಳಬಲ್ಲಿರಿ - ಆತ್ಮ, ಪರಮಾತ್ಮನ ರೂಪವು ಒಂದೇ ಆಗಿದೆಯಲ್ಲವೆ. ಪರಮಾತ್ಮನಿಗೆ ದೊಡ್ಡ ರೂಪವೆಂದು ಹೇಳಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನೂ ಸಹ ಬಿಂದುವಾಗಿದ್ದೇನೆ ಆದರೆ ನಾನು ಪತಿತ - ಪಾವನನಾಗಿದ್ದೇನೆ ಮತ್ತು ನೀವೆಲ್ಲಾ ಆತ್ಮರು ಪತಿತರಾಗಿದ್ದೀರಿ. ಇದು ನೇರ ಮಾತಾಗಿದೆ. ಈಗ ದೇಹಿ-ಅಭಿಮಾನಿಯಾಗಿ ತಂದೆಯಾದ ನನ್ನನ್ನು ನೆನಪು ಮಾಡಿ, ಅನ್ಯರಿಗೂ ಮಾರ್ಗವನ್ನು ತಿಳಿಸಿ. ನಾನು ಎರಡೇ ಶಬ್ದಗಳನ್ನು ಹೇಳುತ್ತೇನೆ - ಮನ್ಮನಾಭವ, ನಂತರ ಸ್ವಲ್ಪ ವಿಸ್ತಾರದಲ್ಲಿ ತಿಳಿಸುತ್ತೇನೆ - ಇವು ರೆಂಬೆ-ಕೊಂಬೆಗಳಾಗಿವೆ. ಮೊದಲು ಸತೋಪ್ರಧಾನ, ಸತೋ, ರಜೋ, ತಮೋ....ದಲ್ಲಿ ಬರುತ್ತೀರಿ, ಪಾಪಾತ್ಮರಾಗುವುದರಿಂದ ಎಷ್ಟೊಂದು ಕಲೆಗಳುಂಟಾಗುತ್ತವೆ. ಆ ಕಲೆಗಳನ್ನು ಅಳಿಸುವುದಾದರೂ ಹೇಗೆ? ಗಂಗಾ ಸ್ನಾನ ಮಾಡಿದರೆ ಪಾಪವು ಕಳೆಯುವುದೆಂದು ಅವರು ತಿಳಿದುಕೊಳ್ಳುತ್ತಾರೆ. ಆದರೆ ಅದು ಶಾರೀರಿಕ ಸ್ನಾನವಾಗಿದೆ. ಆತ್ಮವು ತಂದೆಯನ್ನು ನೆನಪು ಮಾಡುವುದರಿಂದಲೇ ಪಾವನವಾಗಲು ಸಾಧ್ಯ. ಇದಕ್ಕೆ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ. ಎಷ್ಟು ಸಹಜ ಮಾತಾಗಿದೆ! ಇದನ್ನು ತಂದೆಯು ಪ್ರತಿನಿತ್ಯವೂ ತಿಳಿಸುತ್ತಿರುತ್ತಾರೆ. ಗೀತೆಯಲ್ಲಿಯೂ ಸಹ ಇದನ್ನೇ ಒತ್ತುಕೊಟ್ಟು ಹೇಳಿದ್ದಾರೆ - ಮನ್ಮನಾಭವ, ಆಸ್ತಿಯಂತೂ ಸಿಕ್ಕೇ ಸಿಗುವುದು. ಕೇವಲ ನನ್ನನ್ನು ನೆನಪು ಮಾಡಿರಿ ಆಗ ಪಾಪಗಳು ಕಳೆಯುವವು. ತಂದೆಯು ಅವಿನಾಶಿ ಬ್ಲಾಟಿಂಗ್ ಪೇಪರ್ ಅಲ್ಲವೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನೀವು ಪಾವನರಾಗಿ ಬಿಡುತ್ತೀರಿ ಮತ್ತು ರಾವಣನು ಪತಿತರನ್ನಾಗಿ ಮಾಡುತ್ತಾನೆ ಅಂದಾಗ ಇಂತಹ ತಂದೆಯನ್ನು ನೆನಪು ಮಾಡಬೇಕಲ್ಲವೆ. ಇಂತಹವರೂ ಇದ್ದಾರೆ ಯಾರು ನೆನಪು ಮಾಡುವುದೇ ಇಲ್ಲ ಅವರ ಗತಿಯೇನಾಗುವುದು! ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಬಿಡಿ ಕೇವಲ ಒಂದು ಮಾತೇನೆಂದರೆ ಆತ್ಮಾಭಿಮಾನಿಯಾಗಿ, ನನ್ನನ್ನು ನೆನಪು ಮಾಡಿ ಸಾಕು. ಇದಂತೂ ನಿಮಗೆ ತಿಳಿದಿದೆ - ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮವೇ ಸುಖ-ದುಃಖವನ್ನು ಅನುಭವಿಸುತ್ತದೆ. ಎಂದೂ ಸಹ ಒಬ್ಬರು ಇನ್ನೊಬ್ಬರ ಮನಸ್ಸನ್ನು ದುಃಖಿಯನ್ನಾಗಿ ಮಾಡಬಾರದು, ಒಬ್ಬರು ಇನ್ನೊಬ್ಬರಿಗೆ ಸುಖ ಕೊಡಬೇಕು - ಇದೇ ನಿಮ್ಮ ವ್ಯಾಪಾರವಾಗಿದೆ. ಅನೇಕರು ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಒಬ್ಬರು ಇನ್ನೊಬ್ಬರ ದೇಹದಲ್ಲಿ ಸಿಲುಕಿರುತ್ತಾರೆ. ಇಡೀ ದಿನ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಿರುತ್ತಾರೆ. ಮಾಯೆಯೂ ಸಹ ತೀಕ್ಷ್ಣವಾಗಿದೆ. ತಂದೆಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿ ಭವ, ಜ್ಞಾನವು ಬಹಳ ಸಹಜವಾಗಿದೆ, ನೆನಪೇ ಬಹಳ ಕಷ್ಟವಾಗಿದೆ. ಆ ಜ್ಞಾನವಾದರೆ 15-20 ವರ್ಷಗಳವರೆಗೆ ಓದುತ್ತಾರೆ. ಎಷ್ಟೊಂದು ವಿಷಯಗಳಿರುತ್ತವೆ. ಈ ಜ್ಞಾನವು ಬಹಳ ಸಹಜವಾಗಿದೆ. ನಾಟಕದ ಬಗ್ಗೆ ಅರಿತುಕೊಳ್ಳುವುದು ಒಂದು ಕಥೆಯಾಗಿದೆ. ಮುರುಳಿಯನ್ನು ಓದಿ ಹೇಳುವುದು ದೊಡ್ಡ ಮಾತಲ್ಲ, ನೆನಪಿನದೇ ಬಹಳ ಪರಿಶ್ರಮವಾಗಿದೆ. ತಂದೆಯು ಹೇಳುತ್ತಾರೆ - ಡ್ರಾಮಾ. ಆದರೂ ಪುರುಷಾರ್ಥ ಮಾಡುತ್ತಾ ಇರಿ, ತಂದೆಯನ್ನು ನೆನಪು ಮಾಡಿರಿ ಆಗ ಯೋಗಾಗ್ನಿಯಿಂದ ನಿಮ್ಮ ಪಾಪಗಳು ಭಸ್ಮವಾಗುತ್ತದೆ. ಒಳ್ಕೊಳ್ಳೆಯ ಮಕ್ಕಳು ಇದರಲ್ಲಿ ಅನುತ್ತೀರ್ಣರಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಯಾರದೇ ಮನಸ್ಸನ್ನು ದುಃಖಿಯನ್ನಾಗಿ ಮಾಡಬಾರದು. ಎಲ್ಲರಿಗೆ ಸುಖ ಕೊಡಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿದ್ದು ಅನ್ಯರಿಗೂ ನೆನಪು ತರಿಸಬೇಕಾಗಿದೆ.
2. ಪಾಪಗಳ ಕಲೆಗಳನ್ನು ಅಳಿಸಲು ದೇಹೀ-ಅಭಿಮಾನಿಯಾಗಿ, ಅವಿನಾಶಿ ಬ್ಲಾಟಿಂಗ್ ಪೇಪರ್ ತಂದೆಯನ್ನು ನೆನಪು ಮಾಡಬೇಕಾಗಿದೆ. ಎಲ್ಲರ ಕಲ್ಯಾಣವಾಗುತ್ತಿರಲಿ - ಇಂತಹ ಮಧುರ ಸ್ಥಿತಿಯನ್ನು ಮಾಡಿಕೊಳ್ಳಬೇಕಾಗಿದೆ.
ಶಾಂತಿಯ ಶಕ್ತಿಯನ್ನು ಜಮಾ ಮಾಡಿಕೊಳ್ಳುವ ಸಾಧನ - 'ಅಂತರ್ಮುಖಿ ಮತ್ತು ಏಕಾಂತವಾಸಿ ಸ್ಥಿತಿ'
ಇಂದು ಸರ್ವಶಕ್ತಿವಂತ ಬಾಪ್ದಾದಾ ತಮ್ಮ ಶಕ್ತಿ ಸೈನ್ಯವನ್ನು ನೋಡುತ್ತಿದ್ದಾರೆ. ಈ ಆತ್ಮಿಕ ಶಕ್ತಿ ಸೈನ್ಯವು ವಿಚಿತ್ರ ಸೇನೆಯಾಗಿದೆ. ಹೆಸರಂತೂ ಆತ್ಮಿಕ ಸೈನ್ಯವಾಗಿದೆ ಆದರೆ ವಿಶೇಷವಾಗಿ ಶಾಂತಿಯ ಶಕ್ತಿಯಿದೆ. ಶಾಂತಿಯನ್ನು ಕೊಡುವಂತಹ ಅಹಿಂಸಕ ಸೈನ್ಯವಾಗಿದೆ ಅಂದಾಗ ಇಂದು ಬಾಪ್ದಾದಾ ಪ್ರತಿಯೊಬ್ಬ ಶಾಂತಿ ದೇವ ಮಕ್ಕಳನ್ನು ಪ್ರತಿಯೊಬ್ಬರೂ ಶಾಂತಿಯ ಶಕ್ತಿಯನ್ನು ಎಲ್ಲಿಯವರೆಗೆ ಜಮಾ ಮಾಡಿಕೊಂಡಿದ್ದಾರೆ? ಎಂಬುದನ್ನು ನೋಡುತ್ತಿದ್ದಾರೆ. ಈ ಶಾಂತಿಯ ಶಕ್ತಿಯು ಈ ಆತ್ಮೀಕ ಸೇನೆಯ ವಿಶೇಷ ಶಸ್ತ್ರವಾಗಿದೆ. ಎಲ್ಲರೂ ಶಸ್ತ್ರಧಾರಿಗಳೇ, ಆದರೆ ನಂಬರ್ವಾರ್ ಇದ್ದಾರೆ. ಶಾಂತಿಯ ಶಕ್ತಿಯು ಇಡೀ ವಿಶ್ವವನ್ನು ಅಶಾಂತಿಯಿಂದ ಶಾಂತವನ್ನಾಗಿ ಮಾಡುವಂತದ್ದಾಗಿದೆ. ಕೇವಲ ಮನುಷ್ಯ ಆತ್ಮರನ್ನು ಅಷ್ಟೆ ಅಲ್ಲ, ಪ್ರಕೃತಿಯನ್ನೂ ಸಹ ಪರಿವರ್ತನೆ ಮಾಡುವಂತದ್ದಾಗಿದೆ. ಶಾಂತಿಯ ಶಕ್ತಿಯನ್ನು ಈಗ ಇನ್ನೂ ಗುಪ್ತ ರೂಪದಿಂದ ಅರಿತುಕೊಳ್ಳಬೇಕು ಮತ್ತು ಅನುಭವ ಮಾಡಬೇಕಾಗಿದೆ. ಈ ಶಕ್ತಿಯಲ್ಲಿ ಎಷ್ಟು ಶಕ್ತಿಶಾಲಿಗಳಾಗುವಿರೋ ಅಷ್ಟೇ ಶಾಂತಿಯ ಶಕ್ತಿಯ ಮಹತ್ವಿಕೆ ಮತ್ತು ಮಹಾನತೆಯ ಅನುಭವವನ್ನು ಹೆಚ್ಚಾಗಿ ಮಾಡುತ್ತಾ ಹೋಗುತ್ತೀರಿ. ಈಗ ವಾಣಿಯ ಶಕ್ತಿಯಿಂದ ಸೇವಾ ಸಾಧನಗಳ ಶಕ್ತಿಯ ಅನುಭವ ಮಾಡುತ್ತಿದ್ದೀರಿ ಮತ್ತು ಈ ಅನುಭವದ ಮೂಲಕ ಸಫಲತೆಯನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ ಆದರೆ ವಾಣಿಯ ಶಕ್ತಿ ಹಾಗೂ ಸ್ಥೂಲ ಸೇವೆಯ ಸಾಧನಗಳಿಗಿಂತಲೂ ಶಾಂತಿಯ ಶಕ್ತಿಯು ಅತಿ ಶ್ರೇಷ್ಠವಾಗಿದೆ. ಶಾಂತಿಯ ಶಕ್ತಿಯ ಸಾಧನಗಳು ಶ್ರೇಷ್ಠವಾಗಿದೆ. ಹೇಗೆ ವಾಚಾ ಸೇವೆಯ ಸಾಧನಗಳು ಚಿತ್ರ, ಪ್ರೊಜೆಕ್ಟರ್, ವೀಡಿಯೋ ಇತ್ಯಾದಿಗಳನ್ನು ಮಾಡುತ್ತೀರಿ ಹಾಗೆಯೇ ಶಾಂತಿಯ ಶಕ್ತಿಯ ಸಾಧನವು ಶುಭ ಸಂಕಲ್ಪ, ಶುಭ ಭಾವನೆ ಮತ್ತು ನಯನಗಳ ಭಾಷೆಯಾಗಿದೆ. ಹೇಗೆ ಮುಖದ ಭಾಷೆಯ ಮೂಲಕ ತಂದೆಯ ಹಾಗೂ ರಚನೆಯ ಪರಿಚಯವನ್ನು ಕೊಡುತ್ತೀರಿ ಹಾಗೆಯೇ ಶಾಂತಿಯ ಶಕ್ತಿಯ ಆಧಾರದ ಮೇಲೆ ನಯನಗಳ ಭಾಷೆಯಿಂದ ನಯನಗಳ ಮೂಲಕ ತಂದೆಯ ಅನುಭವ ಮಾಡಿಸಬಲ್ಲಿರಿ. ಹೇಗೆ ಪ್ರೊಜೆಕ್ಟರ್ನ ಮೂಲಕ ಚಿತ್ರಗಳನ್ನು ತೋರಿಸುತ್ತೀರಿ ಹಾಗೆಯೇ ತಮ್ಮ ಮಸ್ತಕದ ನಡುವೆ ಹೊಳೆಯುತ್ತಿರುವ ತಮ್ಮ ಹಾಗೂ ತಂದೆಯ ಚಿತ್ರವನ್ನು ಸ್ಪಷ್ಟವಾಗಿ ತೋರಿಸಿ. ಹೇಗೆ ವರ್ತಮಾನ ಸಮಯದಲ್ಲಿ ವಾಣಿಯ ಮೂಲಕ ನೆನಪಿನ ಯಾತ್ರೆಯ ಅನುಭವ ಮಾಡಿಸುತ್ತೀರಿ ಹಾಗೆಯೇ ಶಾಂತಿಯ ಶಕ್ತಿಯ ಮೂಲಕ ತಮ್ಮ ಚಹರೆ (ಯಾವುದನ್ನು ಮುಖವೆಂದು ಹೇಳುತ್ತೀರಿ) ತಮ್ಮ ಮೂಲಕ ಭಿನ್ನ-ಭಿನ್ನ ನೆನಪಿನ ಸ್ಥಿತಿಗಳನ್ನು ಸ್ವತಹವಾಗಿಯೇ ಅನುಭವ ಮಾಡಿಸುವುದು. ಅನುಭವ ಮಾಡುವವರಿಗೂ ಸಹ ಇದು ಸಹಜವಾಗಿ ಅನುಭೂತಿ ಮಾಡಿಸುವುದು - ಈ ಸಮಯದಲ್ಲಿ ಬೀಜ ರೂಪ ಸ್ಥಿತಿಯ ಅನುಭವವಾಗುತ್ತಿದೆ ಅಥವಾ ಫರಿಶ್ತಾ ರೂಪದ ಅನುಭವವಾಗುತ್ತಿದೆ ಅಥವಾ ಭಿನ್ನ-ಭಿನ್ನ ಗುಣಗಳ ಅನುಭವಗಳು ತಮ್ಮ ಈ ಶಕ್ತಿಶಾಲಿ ಚಹರೆಯಿಂದ ಸ್ವತಹವಾಗಿ ಆಗುತ್ತಿರುವುದು.
ಹೇಗೆ ವಾಣಿಯ ಮೂಲಕ ಆತ್ಮಗಳಿಗೆ ಸ್ನೇಹ, ಸಹಯೋಗದ ಭಾವನೆಯನ್ನು ಉತ್ಪನ್ನ ಮಾಡಿಸುತ್ತೀರಿ ಹಾಗೆಯೇ ಯಾವಾಗ ತಾವು ಶುಭ ಭಾವನೆ, ಸ್ನೇಹದ ಭಾವನೆಯಲ್ಲಿ ಸ್ವಯಂ ಸ್ಥಿತರಾಗಿರುತ್ತೀರೋ ಆಗ ತಮ್ಮ ಭಾವನೆಯು ಹೇಗಿರುವುದೋ ಅದೇ ಭಾವನೆಯೂ ಅದರಲ್ಲಿ ಉತ್ಪನ್ನವಾಗುವುದು. ತಮ್ಮ ಶುಭ ಭಾವನೆಯು ಅವರ ಭಾವನೆಯನ್ನು ಪ್ರಜ್ವಲಿತ ಮಾಡುವುದು. ಹೇಗೆ ದೀಪವು ದೀಪವನ್ನು ಬೆಳಗಿಸುತ್ತದೆ ಹಾಗೆಯೇ ತಮ್ಮ ಶಕ್ತಿಶಾಲಿ ಶುಭ ಭಾವನೆಯು ಅನ್ಯರಲ್ಲಿಯೂ ಸರ್ವ ಶ್ರೇಷ್ಠ ಭಾವನೆಯನ್ನು ಸಹಜವಾಗಿ ಉತ್ಪನ್ನ ಮಾಡಿಸುವುದು. ಹೇಗೆ ವಾಣಿಯ ಮೂಲಕ ಈಗ ಇಡೀ ಸ್ಥೂಲ ಕಾರ್ಯವನ್ನು ಮಾಡುತ್ತಿರುತ್ತೀರಿ. ಹಾಗೆಯೇ ಶಾಂತಿಯ ಶಕ್ತಿಯ ಶ್ರೇಷ್ಠ ಸಾಧನವಾದ ಶುಭ ಸಂಕಲ್ಪದ ಶಕ್ತಿಯಿಂದ ಸ್ಥೂಲ ಕಾರ್ಯವನ್ನೂ ಇದೇ ರೀತಿ ಸಹಜವಾಗಿ ಮಾಡಬಲ್ಲರಿ ಮತ್ತು ಮಾಡಿಸಬಲ್ಲಿರಿ. ಹೇಗೆ ವೈಜ್ಞಾನಿಕ ಶಕ್ತಿಯ ಸಾಧನಗಳು ದೂರವಾಣಿ, ವೈರ್ಲೆಸ್ ಇವೆ. ಹಾಗೆಯೇ ಈ ಶುಭ ಸಂಕಲ್ಪವು ಸನ್ಮುಖದಲ್ಲಿ ಮಾತನಾಡುವ ಹಾಗೂ ದೂರವಾಣಿ, ವೈರ್ಲೆಸ್ನ ಮೂಲಕ ಕಾರ್ಯ ಮಾಡುವ ಅನುಭವ ಮಾಡಿಸುವುದು. ಹೀಗೆ ಶಾಂತಿಯ ಶಕ್ತಿಯಲ್ಲಿ ವಿಶೇಷತೆಗಳಿವೆ. ಶಾಂತಿಯ ಶಕ್ತಿಯು ಕಡಿಮೆಯೇನಿಲ್ಲ. ಆದರೆ ಈಗ ವಾಣಿಯ ಶಕ್ತಿಗೆ ಸ್ಥೂಲ ಸಾಧನಗಳನ್ನು ಹೆಚ್ಚಿನದಾಗಿ ಕಾರ್ಯದಲ್ಲಿ ತೊಡಗಿಸುತ್ತೀರಿ. ಆದ್ದರಿಂದ ಇದು ಸಹಜವೆನಿಸುತ್ತದೆ. ಶಾಂತಿಯ ಶಕ್ತಿಯ ಸಾಧನಗಳನ್ನು ಪ್ರಯೋಗದಲ್ಲಿ ತಂದಿಲ್ಲ, ಆದ್ದರಿಂದ ಇದರ ಅನುಭವವಿಲ್ಲ. ವಾಣಿಯ ಸೇವೆಯು ಸಹಜವೆನಿಸುತ್ತದೆ. ಇದು ಕಷ್ಟವೆನಿಸುತ್ತದೆ. ಆದರೆ ಸಮಯ ಪರಿವರ್ತನೆಯ ಪ್ರಮಾಣ ಈ ಶಾಂತಿಯ ಶಕ್ತಿಯ ಸಾಧನವನ್ನು ಪ್ರಯೋಗದಲ್ಲಿ ತರಲೇ ಬೇಕಾಗುವುದು.
ಆದ್ದರಿಂದ ಈ ಶಾಂತಿದೇವ ಶ್ರೇಷ್ಠ ಆತ್ಮಗಳೇ, ಈ ಶಾಂತಿಯ ಶಕ್ತಿಯನ್ನು ಅನುಭವದಲ್ಲಿ ತಂದುಕೊಳ್ಳಿ. ಹೇಗೆ ವಾಣಿಯ ಅಭ್ಯಾಸವನ್ನು ಮಾಡುತ್ತಾ - ಮಾಡುತ್ತಾ ವಾಣಿಯಲ್ಲಿ ಶಕ್ತಿಶಾಲಿಗಳಾಗಿ ಬಿಟ್ಟಿದ್ದೀರಿ. ಹಾಗೆಯೇ ಶಾಂತಿಯ ಶಕ್ತಿಯ ಅಭ್ಯಾಸಿಗಳಾಗುತ್ತಾ ಹೋಗಿರಿ. ಮುಂದೆ ಹೋದಂತೆ ವಾಣಿ ಹಾಗೂ ಸ್ಥೂಲ ಸಾಧನಗಳ ಮೂಲಕ ಸೇವೆ ಮಾಡಲು ಸಮಯ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಶಾಂತಿಯ ಶಕ್ತಿಯ ಸಾಧನಗಳು ಅವಶ್ಯಕವಾಗುತ್ತವೆ ಏಕೆಂದರೆ ಯಾವುದೆಷ್ಟು ಮಹಾನ್ ಶಕ್ತಿಶಾಲಿಯಾಗಿರುವುದೋ ಅದು ಅತಿ ಸೂಕ್ಷ್ಮವಾಗಿರುತ್ತದೆ ಅಂದಾಗ ವಾಣಿಗಿಂತಲೂ ಶುದ್ಧ ಸಂಕಲ್ಪವು ಸೂಕ್ಷ್ಮವಾಗಿದೆ ಆದ್ದರಿಂದ ಸೂಕ್ಷ್ಮದ ಪ್ರಭಾವವು ಶಕ್ತಿಶಾಲಿಯಾಗಿರುವುದು. ಈಗಲೂ ಅನುಭವಿಗಳಾಗಿದ್ದೀರಿ, ಎಲ್ಲಿಯಾದರೂ ವಾಣಿಯ ಮೂಲಕ ಯಾವುದೇ ಕಾರ್ಯವು ಸಿದ್ಧವಾಗಲಿಲ್ಲವೆಂದರೆ ಇವರು ವಾಣಿಯಿಂದ ತಿಳಿದುಕೊಳ್ಳುವುದಿಲ್ಲ, ಶುಭ ಭಾವನೆಯಿಂದ ಪರಿವರ್ತನೆ ಆಗುತ್ತಾರೆಂದು ತಿಳಿದುಕೊಳ್ಳುತ್ತೀರಿ. ಎಲ್ಲಿ ವಾಣಿಯು ಕಾರ್ಯವನ್ನು ಸಫಲ ಮಾಡಲು ಸಾಧ್ಯವಾಗುವುದಿಲ್ಲವೋ ಅಲ್ಲಿ ಶಾಂತಿಯ ಶಕ್ತಿಯ ಸಾಧನವಾದ ಶುಭ ಸಂಕಲ್ಪ, ಶುಭ ಭಾವನೆ, ನಯನಗಳ ಭಾಷೆಯ ಮೂಲಕ ದಯೆ ಮತ್ತು ಸ್ನೇಹದ ಅನುಭೂತಿಯು ಕಾರ್ಯವನ್ನು ಸಿದ್ಧ ಮಾಡಲು ಸಾಧ್ಯತೆಯಿದೆ. ಹೇಗೆ ಈಗಲೂ ಸಹ ಯಾರಾದರೂ ವಾದ-ವಿವಾದ ಮಾಡುವವರು ಬರುತ್ತಾರೆಂದರೆ ವಾಣಿಯಿಂದ ಇನ್ನೂ ಹೆಚ್ಚಿನದಾಗಿ ವಾದ - ವಿವಾದದಲ್ಲಿ ಬಂದು ಬಿಡುತ್ತಾರೆ. ಅಂತಹವರನ್ನು ನೆನಪಿನಲ್ಲಿ ಕುಳ್ಳರಿಸಿ ಶಾಂತಿಯ ಶಕ್ತಿಯ ಅನುಭವ ಮಾಡಿಸುತ್ತೀರಲ್ಲವೆ. ಒಂದುವೇಳೆ ಒಂದು ಕ್ಷಣವಾದರೂ ನೆನಪಿನ ಮೂಲಕ ಶಾಂತಿಯ ಅನುಭವ ಮಾಡಿ ಬಿಡುತ್ತಾರೆಂದರೆ ಸ್ವಯಂ ತಮ್ಮ ವಾದ-ವಿವಾದದ ಬುದ್ಧಿಯನ್ನು ಶಾಂತಿಯ ಅನುಭೂತಿಯ ಮುಂದೆ ಸಮರ್ಪಣೆ ಮಾಡಿ ಬಿಡುತ್ತಾರೆ. ಆದ್ದರಿಂದ ಈ ಶಾಂತಿಯ ಶಕ್ತಿಯ ಅನುಭವವನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ. ಇನ್ನು ಈ ಶಾಂತಿಯ ಶಕ್ತಿಯ ಅನುಭೂತಿಯು ಬಹಳ ಕಡಿಮೆಯಿದೆ, ಶಾಂತಿಯ ಶಕ್ತಿಯ ರಸವು ಇಲ್ಲಿಯವರೆವಿಗೂ ಅನೇಕರು ಕೇವಲ ಅಂಚಲಿ ಮಾತ್ರವಷ್ಟೆ ಅನುಭವ ಮಾಡಿದ್ದಾರೆ. ಹೇ ಶಾಂತಿದೇವ, ತಮ್ಮ ಭಕ್ತರು ತಮ್ಮ ಜಡ ಚಿತ್ರಗಳಿಂದ ಶಾಂತಿಯನ್ನೇ ಹೆಚ್ಚು ಬೇಡುತ್ತಾರೆ ಏಕೆಂದರೆ ಶಾಂತಿಯಲ್ಲಿಯೇ ಸುಖವು ಸಮಾವೇಶವಾಗಿದೆ. ಅವರು ಅಲ್ಪಕಾಲದ ಅನುಭವವನ್ನೂ ಮಾಡುತ್ತಾರೆ ಅಂದಾಗ ಬಾಪ್ದಾದಾ ನೋಡುತ್ತಿದ್ದರು, ಶಾಂತಿಯ ಶಕ್ತಿಯ ಅನುಭವಿ ಆತ್ಮಗಳು ಎಷ್ಟು ಮಂದಿ ಇದ್ದಾರೆ, ವರ್ಣನೆ ಮಾಡುವವರು ಎಷ್ಟು ಮಂದಿ ಇದ್ದಾರೆ ಮತ್ತು ಪ್ರಯೋಗ ಮಾಡುವವರು ಎಷ್ಟು ಮಂದಿ ಇದ್ದಾರೆ. ಇದಕ್ಕಾಗಿ ಅಂತರ್ಮುಖತೆ ಮತ್ತು ಏಕಾಂತವಾಸಿಯಾಗುವ ಅವಶ್ಯಕತೆಯಿದೆ. ಬಾಹರ್ಮುಖತೆಯಲ್ಲಿ ಬರುವುದು ಸಹಜವಾಗಿದೆ ಆದರೆ ಅಂತರ್ಮುಖಿಯಾಗುವ ಅಭ್ಯಾಸವು ಈಗ ಸಮಯ ಪ್ರಮಾಣ ಬಹಳಷ್ಟು ಬೇಕು...! ಏಕಾಂತವಾಸಿಗಳಾಗಲು ಸಮಯ ಸಿಗುವುದಿಲ್ಲ, ಅಂತರ್ಮುಖಿ ಸ್ಥಿತಿಯ ಅನುಭವ ಮಾಡಲು ಸಮಯ ಸಿಗುವುದಿಲ್ಲ ಏಕೆಂದರೆ ಸೇವೆಯ ಪ್ರವೃತ್ತಿ, ವಾಣಿಯ ಶಕ್ತಿಯ ಪ್ರವೃತ್ತಿಯು ಬಹಳ ಹೆಚ್ಚಾಗಿ ಬಿಟ್ಟಿದೆ ಎಂದು ಕೆಲವು ಮಕ್ಕಳು ಹೇಳುತ್ತಾರೆ. ಆದರೆ ಇದಕ್ಕಾಗಿ ಪ್ರತ್ಯೇಕವಾಗಿ ಅರ್ಧ ಗಂಟೆ, ಒಂದು ಗಂಟೆಯ ಸಮಯವನ್ನು ತೆಗೆಯುವ ಅವಶ್ಯಕತೆಯಿಲ್ಲ. ಸೇವೆಯ ಪ್ರವೃತ್ತಿಯಲ್ಲಿರುತ್ತಾ ಮಧ್ಯ-ಮಧ್ಯದಲ್ಲಿ ಇಷ್ಟು ಸಮಯ ಸಿಗುತ್ತದೆ ಅದರಲ್ಲಿ ಏಕಾಂತವಾಸಿಗಳಾಗುವ ಅನುಭವ ಮಾಡಿರಿ.
ಏಕಾಂತವಾಸಿ ಅರ್ಥಾತ್ ಯಾವುದಾದರೂ ಒಂದು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತರಾಗುವುದು. ಬೀಜ ರೂಪ ಸ್ಥಿತಿಯಲ್ಲಾದರೂ ಸ್ಥಿತರಾಗಿ ಅಥವಾ ಲೈಟ್ಹೌಸ್ಮೈಟ್ ಹೌಸ್ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ ಅರ್ಥಾತ್ ವಿಶ್ವಕ್ಕೆ ಬೆಳಕು ಮತ್ತು ಶಕ್ತಿಯನ್ನು ಕೊಡುವಂತಹ ಅನುಭೂತಿಯಲ್ಲಿ ಸ್ಥಿತರಾಗಿ ಬಿಡಿ ಇಲ್ಲವೆ ಫರಿಶ್ತಾ ಸ್ವರೂಪದ ಸ್ಥಿತಿಯ ಮೂಲಕ ಅನ್ಯರಿಗೂ ಅವ್ಯಕ್ತ ಸ್ಥಿತಿಯ ಅನುಭವ ಮಾಡಿಸಿ. ಒಂದು ಕ್ಷಣ ಅಥವಾ ಒಂದು ನಿಮಿಷವಾದರೂ ಒಂದುವೇಳೆ ಈ ಸ್ಥಿತಿಯಲ್ಲಿ ಏಕಾಗ್ರವಾಗಿ ಸ್ಥಿತರಾಗಿ ಬಿಟ್ಟರೆ ಈ ಒಂದು ನಿಮಿಷದ ಸ್ಥಿತಿಯು ಸ್ವಯಂ ತಮಗೆ ಮತ್ತು ಅನ್ಯರಿಗೂ ಬಹಳ ಲಾಭವನ್ನು ತರುತ್ತದೆ. ಕೇವಲ ಇದರ ಅಭ್ಯಾಸ ಬೇಕು. ಈಗ ಒಂದು ನಿಮಿಷವೂ ಬಿಡುವು ಸಿಗದೇ ಇರುವಂತಹವರು ಯಾರಿದ್ದಾರೆ? ಮೊದಲು ಟ್ರಾಫಿಕ್ ಕಂಟ್ರೋಲ್ನ್ ಕಾರ್ಯಕ್ರಮವನ್ನು ಜಾರಿಗೆ ತಂದಾಗ ಇದು ಹೇಗೆ ಸಾಧ್ಯ? ಸೇವೆಯ ಪ್ರವೃತ್ತಿಯು ಬಹಳ ದೊಡ್ಡದಾಗಿದೆ. ಬ್ಯುಸಿ ಆಗಿರುತ್ತೇವೆಂದು ಕೆಲವರು ಯೋಚಿಸುತ್ತಿದ್ದರು ಆದರೆ ಲಕ್ಷವನ್ನಿಟ್ಟಿದ್ದರಿಂದ ಈಗ ಆಗುತ್ತಿದೆಯಲ್ಲವೆ. ಕಾರ್ಯಕ್ರಮವು ನಡೆಯುತ್ತಿದೆಯಲ್ಲವೆ. ಸೇವಾಕೇಂದ್ರಗಳಲ್ಲಿಯೂ ಈ ಟ್ರಾಫಿಕ್ ಕಂಟ್ರೋಲ್ನ ನಿಯಮವನ್ನು ಪಾಲಿಸುತ್ತೀರೋ ಅಥವಾ ಕೆಲವೊಮ್ಮೆ ಪಾಲಿಸುತ್ತಾ, ಕೆಲವೊಮ್ಮೆ ತಪ್ಪಿಸಿ ಬಿಡುತ್ತೀರೋ? ಇದೊಂದು ಬ್ರಾಹ್ಮಣ ಕುಲದ ರೀತಿಯಾಗಿದೆ, ನಿಯಮವಾಗಿದೆ. ಹೇಗೆ ಅನ್ಯನಿಯಮಗಳನ್ನು ಅವಶ್ಯಕವೆಂದು ತಿಳಿಯುತ್ತೀರೋ ಹಾಗೆಯೇ ಇದೂ ಸಹ ಸ್ವ-ಉನ್ನತಿಗಾಗಿ ಹಾಗೂ ಸೇವೆಯ ಸಫಲತೆಗಾಗಿ, ಸೇವಾಕೇಂದ್ರದ ವಾತಾವರಣಕ್ಕಾಗಿ ಬಹಳ ಅವಶ್ಯಕವಾಗಿದೆ. ಹೀಗೆ ಅಂತರ್ಮುಖಿ, ಏಕಾಂತವಾಸಿಗಳಾಗುವ ಅಭ್ಯಾಸವನ್ನು ಇಟ್ಟುಕೊಂಡು ತಮ್ಮ ಹೃದಯದ ಲಗನ್ನಿನಿಂದ ಮಧ್ಯ-ಮಧ್ಯದಲ್ಲಿ ಸಮಯವನ್ನು ತೆಗೆಯಿರಿ. ಮಹತ್ವವನ್ನು ಅರಿತುಕೊಂಡಿರುವವರಿಗೆ ಸಮಯವು ಸ್ವತಹವಾಗಿ ಸಿಕ್ಕಿ ಬಿಡುತ್ತದೆ. ಮಹತ್ವಿಕೆ ಇಲ್ಲವೆಂದರೆ ಸಮಯವೂ ಸಿಗುವುದಿಲ್ಲ. ಮನಸ್ಸು, ಬುದ್ಧಿಯನ್ನು ಒಂದು ಶಕ್ತಿಶಾಲಿ ಸ್ಥಿತಿಯಲ್ಲಿ ಸ್ಥಿತ ಮಾಡುವುದೇ ಏಕಾಂತವಾಸಿಗಳಾಗುವುದಾಗಿದೆ. ಹೇಗೆ ಸಾಕಾರದಲ್ಲಿ ಬ್ರಹ್ಮಾ ತಂದೆಯನ್ನು ನೋಡಿದಿರಿ, ಸಂಪೂರ್ಣತೆಯ ಸಮೀಪತೆಯ ಚಿಹ್ನೆಯು ಸೇವೆಯಲ್ಲಿರುತ್ತಾ ಸಮಾಚಾರಗಳನ್ನೂ ಕೇಳುತ್ತಾ-ಕೇಳುತ್ತಾ ಏಕಾಂತವಾಸಿ ಆಗಿ ಬಿಡುತ್ತಿದ್ದರು. ಈ ಅನುಭವ ಮಾಡಿದಿರಲ್ಲವೆ. ಒಂದು ಗಂಟೆಯ ಸಮಾಚಾರವನ್ನೂ ಸಹ 5 ನಿಮಿಷಗಳಲ್ಲಿ ಸಾರ ರೂಪದಲ್ಲಿ ತಿಳಿದುಕೊಂಡು ಮಕ್ಕಳನ್ನು ಖುಷಿ ಪಡಿಸಿದರು ಮತ್ತು ತಮ್ಮ ಅಂತರ್ಮುಖಿ, ಏಕಾಂತವಾಸಿ ಸ್ಥಿತಿಯನ್ನು ಅನುಭವ ಮಾಡಿಸಿದರು. ಸಂಪೂರ್ಣತೆಯ ಚಿಹ್ನೆಯು ಅಂತರ್ಮುಖಿ, ಏಕಾಂತವಾಸಿ ಸ್ಥಿತಿಯನ್ನು ನಡೆಯುತ್ತಾ-ತಿರುಗಾಡುತ್ತಾ, ಕೇಳುತ್ತಾ-ಮಾಡುತ್ತಾ ಅನುಭವ ಮಾಡಿದರು. ಅಂದಮೇಲೆ ಫಾಲೋ ಫಾದರ್ ಮಾಡಲು ಸಾಧ್ಯವಿಲ್ಲವೆ? ಬ್ರಹ್ಮಾ ತಂದೆಗಿಂತಲೂ ಹೆಚ್ಚಿನ ಜವಾಬ್ದಾರಿಯು ಯಾರಿಗಾದರೂ ಇದೆಯೇ? ನಾನು ಬಹಳ ವ್ಯಸ್ಥನಾಗಿದ್ದೇನೆಂದು ಬ್ರಹ್ಮಾ ತಂದೆಯು ಎಂದಿಗೂ ಹೇಳಲ್ಲಿಲ್ಲ ಆದರೆ ಮಕ್ಕಳ ಮುಂದೆ ಉದಾಹರಣ ಮೂರ್ತಿ ಆದರೂ. ಹೀಗೆ ಈಗ ಸಮಯ ಪ್ರಮಾಣ ಅಭ್ಯಾಸದ ಅವಶ್ಯಕತೆ ಇದೆ. ಎಲ್ಲಾ ಸೇವಾ ಸಾಧನಗಳಿದ್ದರೂ ಸಹ ಶಾಂತಿಯ ಶಕ್ತಿಯ ಸೇವೆಯ ಅವಶ್ಯಕತೆಯಿರುವುದು ಏಕೆಂದರೆ ಶಾಂತಿಯ ಶಕ್ತಿಯು ಅನುಭೂತಿ ಮಾಡಿಸುವ ಶಕ್ತಿಯಾಗಿದೆ. ವಾಣಿಯ ಶಕ್ತಿಯ ಬಾಣವು ಹೆಚ್ಚೆಂದರೆ ಬುದ್ಧಿಯವರೆಗೆ ನಾಟುತ್ತದೆ ಆದರೆ ಅನುಭೂತಿಯ ಬಾಣವು ಹೃದಯದ ತನಕ ನಾಟುತ್ತದೆ. ಅಂದಾಗ ಸಮಯ ಪ್ರಮಾಣ ಒಂದು ಸೆಕೆಂಡಿನಲ್ಲಿ ಅನುಭೂತಿ ಮಾಡಿಸಿ, ಇದೇ ಸುದ್ದಿಯು ಹರಡುವುದು. ಕೇಳುವ ಹೇಳುವುದರಿಂದ ಸುಸ್ತಾಗಿ ಬರುತ್ತಾರೆ. ಶಾಂತಿಯ ಶಕ್ತಿಯ ಸಾಧನಗಳ ಮೂಲಕ ದೃಷ್ಟಿಯಿಂದ ಪರಿವರ್ತನೆ ಮಾಡಿ ಬಿಡಿ. ಶುಭ ಸಂಕಲ್ಪದಿಂದ ಆತ್ಮಗಳ ವ್ಯರ್ಥ ಸಂಕಲ್ಪಗಳನ್ನು ಸಮಾಪ್ತಿ ಮಾಡಿರಿ. ಶುಭ ಭಾವನೆಯಿಂದ ತಂದೆಯ ಕಡೆ ಸ್ನೇಹದ ಭಾವನೆಯನ್ನು ಉತ್ಪನ್ನ ಮಾಡಿಸಿ. ಆ ಆತ್ಮಗಳನ್ನು ಹೀಗೆ ಶಾಂತಿಯ ಶಕ್ತಿಯಿಂದ ಸಂತುಷ್ಟ ಮಾಡಿದಾಗ ತಾವು ಚೈತನ್ಯ ಶಾಂತಿದೇವ ಆತ್ಯಗಳ ಮುಂದೆ 'ಶಾಂತಿ ದೇವ, ಶಾಂತಿ ದೇವ' ಎಂದು ಹೇಳಿ ಮಹಿಮೆ ಮಾಡುತ್ತಾರೆ ಮತ್ತು ಇದೇ ಅಂತಿಮ ಸಂಸ್ಕಾರವನ್ನು ತೆಗೆದುಕೊಂಡು ಹೋಗುವ ಕಾರಣ ದ್ವಾಪರದಲ್ಲಿ ಭಕ್ತಾತ್ಮರಾಗಿ ತಮ್ಮ ಜಡ ಚಿತ್ರಗಳ ಮಹಿಮೆ ಮಾಡುತ್ತಾರೆ. ಈ ಟ್ರಾಫಿಕ್ ಕಂಟ್ರೋಲ್ನ ಮಹತ್ವಿಕೆಯು ಬಹಳ ದೊಡ್ಡದಾಗಿದೆ ಮತ್ತು ಎಷ್ಟು ಅವಶ್ಯಕವಾಗಿದೆ - ಇದನ್ನು ಮತ್ತೆಂದಾದರೂ ತಿಳಿಸುತ್ತೇವೆ. ಆದರೆ ಶಾಂತಿಯ ಶಕ್ತಿಯ ಮಹತ್ವವನ್ನು ಸ್ವಯಂ ಅರಿತುಕೊಳ್ಳಿ ಮತ್ತು ಸೇವೆಯಲ್ಲಿ ತೊಡಗಿಸಿ. ತಿಳಯಿತೆ? ಒಳ್ಳೆಯದು ನಾಲ್ಕಾರು ಕಡೆಯ ಶಾಂತಿ ದೇವ ಶ್ರೇಷ್ಠ ಆತ್ಮರಿಗೆ, ನಾಲ್ಕಾರು ಕಡೆಯ ಅಂತರ್ಮುಖಿ ಮಹಾನ್ ಆತ್ಮಗಳಗೆ, ಸದಾ ಏಕಾಂತವಾಸಿಗಳಾಗಿ ಕರ್ಮದಲ್ಲಿ ಬರುವಂತಹ ಕರ್ಮಯೋಗಿ ಶ್ರೇಷ್ಠಾತ್ಮಗಳಿಗೆ, ಸದಾ ಶಾಂತಿಯ ಶಕ್ತಿಯನ್ನು ಪ್ರಯೋಗ ಮಾಡುವಂತಹ ಶ್ರೇಷ್ಠ ಯೋಗಿ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ದಾದೀಜಿಯವರು ಒಂದು ದಿನಕ್ಕಾಗಿ ಗುಜರಾತಿನ ಮೇಳದಲ್ಲಿ ಹೋಗುವುದಕ್ಕಾಗಿ ಅನುಮತಿ ತೆಗೆದುಕೊಳ್ಳುತ್ತಿದ್ದಾರೆ:
ವಿಶೇಷ ಆತ್ಮರ ಪ್ರತೀ ಹೆಜ್ಜೆಯಲ್ಲಿ ಪದಮಗಳ ಸಂಪಾದನೆಯಿದೆ. ಹಿರಿಯರ ಸಹಯೋಗವೂ ಸಹ ಛತ್ರಛಾಯೆಯಾಗಿ ಸಂಪೂರ್ಣತೆಯಲ್ಲಿ ತರುತ್ತಾರೆ. ಎಲ್ಲಿಯೇ ಹೋಗಿರಿ, ಅಲ್ಲಿ ಎಲ್ಲರಿಗೂ ಒಬ್ಬೊಬ್ಬರ ಹೆಸರಿನಿಂದ ನೆನಪು-ಪ್ರೀತಿಯನ್ನು ಸ್ವೀಕಾರ ಮಾಡಿಸಿರಿ. ಹೆಸರ ಮಾಲೆಯಂತು ಭಕ್ತಿಯಲ್ಲಿಯೂ ಮಕ್ಕಳು ಬಹಳ ಜಪ ಮಾಡಿದ್ದಾರೆ. ಈಗ ಈ ಮಾಲೆಯನ್ನು ತಂದೆಯು ಪ್ರಾರಂಭಿಸಿದರೆ ಬಹಳ ದೊಡ್ಡ ಮಾಲೆಯೇ ಆಗಿ ಬಿಡುತ್ತದೆ. ಆದ್ದರಿಂದ ಎಲ್ಲಿ ಯಾವುದೇ ಮಕ್ಕಳು (ವಿಶೇಷ ಆತ್ಮರು) ಹೋಗುತ್ತಾರೆ, ಅಲ್ಲಿ ವಿಶೇಷವಾದ ಒಲವು-ಉತ್ಸಾಹವು ಹೆಚ್ಚಾಗುತ್ತದೆ. ವಿಶೇಷ ಆತ್ಮರು ಹೋಗುವುದು ಅಂದರೆ ಸೇವೆಯಲ್ಲಿ ಮತ್ತಷ್ಟು ವಿಶೇಷತೆ ಬರುವುದಾಗಿದೆ. ಇಲ್ಲಿಂದ ಪ್ರಾರಂಭವಾಗುತ್ತದೆ, ಕೇವಲ ಧರಣಿಯಲ್ಲಿ ಚರಣವನ್ನು ಸುತ್ತಾಡಿಸಿ ಹೋಗಬೇಕು. ಚರಣವನ್ನು ಸುತ್ತಾಡಿಸುವುದು ಅಂದರೆ ಪರಿಕ್ರಮಣ ಹಾಕುವುದು. ಇಲ್ಲಿ ಸೇವೆಯಲ್ಲಿ ಪರಿಕ್ರಮಣ ಹಾಕುವಿರಿ, ಅಲ್ಲಿ ಭಕ್ತಿಯಲ್ಲಿ ಅವರುಗಳು ಚರಣವನ್ನು ಇಡುವ ಮಹತ್ವವನ್ನು ಮಾಡಿದ್ದಾರೆ ಆದರೆ ಎಲ್ಲವೂ ಇಲ್ಲಿಂದಲೇ ಆರಂಭವಾಗುತ್ತದೆ. ಭಲೆ ಎಲ್ಲಿಗಾದರೂ ಅರ್ಧ ಗಂಟೆಗಾಗಲಿ, ಒಂದು ಗಂಟೆಗಾದರೂ ಹೋಗುತ್ತೀರೆಂದರೆ ಎಲ್ಲರೂ ಖುಷಿಯಾಗಿ ಬಿಡುವರು. ಆದರೆ ಇಲ್ಲಿ ಸೇವೆಯಾಗುತ್ತದೆ. ಭಕ್ತಿಯಲ್ಲಿ ಕೇವಲ ಚರಣವನ್ನು ಇಡುವುದರಿಂದ ಖುಷಿಯ ಅನುಭವ ಮಾಡುತ್ತಾರೆ. ಎಲ್ಲಾ ಸ್ಥಾಪನೆಯೂ ಇಲ್ಲಿಂದಲೇ ಆಗುತ್ತಿದೆ. ಭಕ್ತಿ ಮಾರ್ಗದ ತಳಪಾಯವೂ ಇಲ್ಲಿಂದ ಬೀಳುತ್ತದೆ, ಕೇವಲ ರೂಪವಷ್ಟೇ ಬದಲಾಗಿ ಬಿಡುತ್ತದೆ. ಅಂದಮೇಲೆ ಈ ಮೇಳಕ್ಕಾಗಿ ಯಾರೆಲ್ಲರೂ ನಿಮಿತ್ತರಾಗಿದ್ದಾರೆ ಅರ್ಥಾತ್ ಮಿಲನ ಮಾಡುವ ಸೇವೆಗೆ ನಿಮಿತ್ತರಾಗಿದ್ದಾರೆ. ಅವರೆಲ್ಲರಿಗೂ ಬಾಪ್ದಾದಾರವರ ಮಿಲನಕ್ಕೆ ಮೊದಲೇ ಮೇಳವನ್ನು ಆಚರಿಸುತ್ತಾ ಇದ್ದಾರೆ. ಇದು ತಂದೆ ಹಾಗೂ ಮಕ್ಕಳ ಮೇಳವಾಗಿದೆ. ಅದು ಸೇವೆಯ ಹೇಳಲಾಗಿದೆ. ಅಂದ ಮೇಲೆ ಎಲ್ಲರಿಗೂ ಹೃದಯದಿಂದ ನೆನಪು - ಪ್ರೀತಿ. ಒಳ್ಳೆಯದು.
ಪ್ರಪಂಚದಲ್ಲಿ ನೈಟ್ ಕ್ಲಬ್ ಆಗುತ್ತದೆ ಮತ್ತು ಇದು ಅಮೃತವೇಳೆಯ ಕ್ಲಬ್ ಆಗಿದೆ.( ದಾದಿಯವರೊಂದಿಗೆ) ತಾವೆಲ್ಲರೂ ಅಮೃತವೇಳೆಯ ಕ್ಲಬ್ ನ ಸದಸ್ಯರಾಗಿದ್ದೀರಿ. ಎಲ್ಲರೂ ತಮ್ಮನ್ನು ನೋಡಿ ಖುಷಿಯಾಗುವರು. ವಿಶೇಷ ಆತ್ಮರನ್ನು ನೋಡುತ್ತಿದ್ದರೂ ಖುಷಿಯಾಗುತ್ತದೆ. ಒಳ್ಳೆಯದು.
ಬೀಳ್ಕೊಡುಗೆಯ ಸಮಯ - ಸದ್ಗುರುವಾರದ ನೆನಪು-ಪ್ರೀತಿ (ಪ್ರಾತಃ 6 ಗಂಟೆ)
ವೃಕ್ಷಪತಿ ದಿನದಂದು ವೃಕ್ಷದ ಮೊದಲ ಆದಿ ಅಮೂಲ್ಯವಾದ ಎಲೆಗಳಿಗೆ ಬಾಬಾರವರ ನೆನಪು - ಪ್ರೀತಿ ಹಾಗೂ ನಮಸ್ತೆ. ವೃಕ್ಷಪತಿ ದೆಶೆಯಂತು ಎಲ್ಲಾ ಶ್ರೇಷ್ಠಾತ್ಮರ ಮೇಲೆ ಅವಶ್ಯವಾಗಿ ಇದೆ. ರಾಹು ದೆಶೆ ಮತ್ತು ಅನೇಕ ದೇಶಗಳೆಲ್ಲವೂ ಸಮಾಪ್ತಿಯಾಯಿತು. ಈಗ ಒಂದೇ ಒಂದು ವೃಕ್ಷಪತಿ ದೆಶೆಯು ಪ್ರತಿಯೊಬ್ಬ ಬ್ರಾಹ್ಮಣ ಆತ್ಮರಿಗೆ ಸದಾ ಇರುತ್ತದೆ. ಅಂದಮೇಲೆ ಬೃಹಸ್ಪತಿ ದೆಶೆಯೂ ಇದೆ ಮತ್ತು ದಿನವೂ ಬೃಹಸ್ಪತಿ ದಿನವಾಗಿದೆ ಮತ್ತು ವೃಕ್ಷ ಪತಿಯು ತನ್ನ ವೃಕ್ಷದ ಆದಿ ಎಲೆಗಳೊಂದಿಗೆ ಮಿಲನ ಮಾಡುತ್ತಿದ್ದಾರೆ. ಅಂದಾಗ ಸದಾ ನೆನಪುಗಳಿದೆ ಮತ್ತು ಸದಾ ನೆನಪಿರುತ್ತದೆ. ಸದಾ ಪ್ರೀತಿಯಲ್ಲಿ ಸಮಾವೇಶವಾಗಿರಿ ಮತ್ತು ಸದಾ ಪ್ರಿಯವಾಗಿರುತ್ತೀರಿ, ತಿಳಿಯಿತೆ!
ಓಂ ಶಾಂತಿ. ಗೀತೆಯಲ್ಲಿ ಗ್ಯಾರಂಟಿಯು ಯಾರದಾಗಿತ್ತು? ಮಾತಾಪಿತರ ಜೊತೆ ಮಕ್ಕಳ ಗ್ಯಾರಂಟಿಯಾಗಿದೆ - ಬಾಬಾ, ನಮ್ಮವರು ತಮ್ಮ ವಿನಃ ಬೇರೆ ಯಾರೂ ಇಲ್ಲ. ಎಷ್ಟು ಉನ್ನತ ಗುರಿಯಾಗಿದೆ! ಇಂತಹ ಶ್ರೇಷ್ಠ ತಂದೆಯ ಶ್ರೀಮತದಂತೆ ಯಾರಾದರೂ ನಡೆದಿದ್ದೇ ಆದರೆ ಅದಕ್ಕೆ ಗ್ಯಾರಂಟಿಯೇನೆಂದರೆ ಅವರು ಶ್ರೇಷ್ಠ ಆಸ್ತಿಯನ್ನು ಖಂಡಿತ ಪಡೆಯುತ್ತಾರೆ. ಆದರೆ ಬುದ್ಧಿಯು ಹೇಳುತ್ತದೆ - ಗುರಿಯು ಬಹಳ ಉನ್ನತವಾಗಿದೆ. ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರೇ ಮಾಲೆಯ ಮಣಿಯಾಗುತ್ತಾರೆ. ನೀವು ಮಾತಾಪಿತಾ ಎಂದು ಹೇಳುತ್ತಾರೆ ಆದರೆ ಮಾಯೆಯು ಇಷ್ಟು ಶಕ್ತಿಶಾಲಿಯಾಗಿದೆ, ಕೆಲವರೇ ಕೊಟ್ಟ ಮಾತಿನಂತೆ ನಡೆಯುತ್ತಾರೆ. ಪ್ರತಿಯೊಬ್ಬರೂ ತಮ್ಮನ್ನು ಕೇಳಿಕೊಳ್ಳಬಹುದು - ಸತ್ಯ-ಸತ್ಯವಾಗಿಯೂ ನಾನು ಮಾತಾಪಿತರ ಮಗುವಾಗಿದ್ದೇನೆಯೇ ತಂದೆಯು ಹೇಳುತ್ತಾರೆ - ಇಲ್ಲ. ಅಂತಹವರು ಬಹಳ ಕೆಲವರೇ ಇದ್ದಾರೆ, ಆದ್ದರಿಂದಲೇ ನೋಡಿ ಎಷ್ಟು ಮಂದಿಯ ಮಾಲೆಯಾಗುತ್ತದೆ! ಇಷ್ಟು ಕೋಟಿಗಳಲ್ಲಿ ಕೇವಲ 8 ಮಂದಿಯದೇ ವೈಜಯಂತಿ ಮಾಲೆಯಾಗುತ್ತದೆ. ಕೆಲವರು ಹೇಳುವುದೊಂದು, ಮಾಡುವುದು ಇನ್ನೊಂದು. ಆದ್ದರಿಂದ ತಂದೆಯು ಹೇಳುತ್ತಾರೆ - ನೋಡಿ, ಎಷ್ಟು ವಿಚಿತ್ರವಾಗಿದೆ! ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ ಆದರೆ ಬಹಳ ಕೆಲವರೇ ಸುಪುತ್ರ (ಮಾಲೆಯ ಮಣಿ) ರಾಗುತ್ತಾರೆ. ಶ್ರೀಮತದಂತೆ ನಡೆಯಲು ಮಕ್ಕಳಲ್ಲಿ ಅಷ್ಟು ಶಕ್ತಿಯಿಲ್ಲ ಅಂದಾಗ ಅವಶ್ಯವಾಗಿ ರಾವಣನ ಮತದ ಮೇಲಿದ್ದಾರೆ ಆದ್ದರಿಂದಲೇ ಇಷ್ಟು ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಮಾಲೆಯ ಮಣಿಯಾಗುವವರು ಕೆಲವರೇ ವಿರಳ. ಅಂತಹ ಮುದ್ದು ಮಕ್ಕಳು ಮುಚ್ಚಿಡಲ್ಪಡುವುದಿಲ್ಲ. ಅಂತಹವರು ಹೃದಯವನ್ನೇರಿರುತ್ತಾರೆ. ಹಗಲು-ರಾತ್ರಿ ಸೇವೆಯದೇ ಚಿಂತೆಯಿರುತ್ತದೆ. ಈಶ್ವರೀಯ ಸಂಬಂಧದೊಂದಿಗೆ ಪ್ರೀತಿಯಿರುತ್ತದೆ. ಅವರ ಬುದ್ಧಿಯು ಹೊರಗಡೆ ಎಲ್ಲಿಯೂ ಹೋಗುವುದಿಲ್ಲ. ಇಂತಹ ಪ್ರೀತಿಯನ್ನು ದೈವೀ ಪರಿವಾರದೊಂದಿಗೆ ಇಟ್ಟುಕೊಳ್ಳಬೇಕಾಗಿದೆ. ಅಜ್ಞಾನ ಕಾಲದಲ್ಲಿಯೂ ತಂದೆಯೊಂದಿಗೆ ಮಕ್ಕಳಿಗೆ ಸಹೋದರ-ಸಹೋದರಿಯರಲ್ಲಿ ಪರಸ್ಪರ ಬಹಳ ಪ್ರೀತಿಯಿರುತ್ತದೆ. ಇಲ್ಲಂತೂ ಕೆಲವು ಮಕ್ಕಳದು ಅಂಶ ಮಾತ್ರವೂ ತಂದೆಯೊಂದಿಗೆ ಯೋಗವಿಲ್ಲ. ಬಹಳ ಗ್ಯಾರಂಟಿ ಕೊಡುತ್ತಾರೆ. ಭಕ್ತಿಮಾರ್ಗದಲ್ಲಿ ಹಾಡುತ್ತಾರೆ, ಈಗಂತೂ ಮಕ್ಕಳು ಸಮ್ಮುಖದಲ್ಲಿದ್ದೀರಿ ಅಂದಮೇಲೆ ವಿಚಾರ ಮಾಡಬೇಕು - ಭಕ್ತಿಮಾರ್ಗದಲ್ಲಿ ಹಾಡುತ್ತಿರುತ್ತಾರೆ, ಎಷ್ಟೊಂದು ಪ್ರೀತಿಯಿಂದ ನೆನಪು ಮಾಡುತ್ತಾರೆ ಆದರೆ ಇಲ್ಲಿ ಕೆಲವರು ನೆನಪೇ ಮಾಡುವುದಿಲ್ಲ. ತಂದೆಯ ಮಕ್ಕಳಾದರೆ ಮಾಯೆಯು ಶತ್ರುವಾಗಿ ಬಿಡುತ್ತದೆ. ಬುದ್ದಿಯು ಹೊರಗೆ ಅಲೆದಾಡುತ್ತದೆ ಆದ್ದರಿಂದ ಮಾಯೆಯು ಚೆನ್ನಾಗಿ ಬೀಳಿಸಿ ಬಿಡುತ್ತದೆ. ನಾವು ಏನೆಲ್ಲಾ ಮಾಡುತ್ತೇವೆಯೋ ಬೀಳುವುದಕ್ಕಾಗಿಯೇ ಮಾಡುತ್ತೇವೆ ಎಂಬುದು ಅವರು ತಿಳಿದುಕೊಳ್ಳುವುದಿಲ್ಲ. ತನ್ನ ಮತದಂತೆ ಬೀಳುತ್ತಿರುತ್ತಾರೆ. ನಾವು ಏನು ಮಾಡುತ್ತಿದ್ದೇವೆ ಎಂಬುದು ಅವರಿಗೆ ಅರ್ಥವಾಗುವುದೇ ಇಲ್ಲ. ಮಕ್ಕಳಲ್ಲಿ ಕೆಲವು ಬಲಹೀನತೆಗಳು ಇರುತ್ತವೆಯಲ್ಲವೆ. ಒಂದು ಹೇಳಿ ಇನ್ನೊಂದನ್ನು ಮಾಡುತ್ತಾರೆ. ಇಲ್ಲವಾದರೆ ತಂದೆಯಿಂದ ಎಷ್ಟು ಶ್ರೇಷ್ಠ ಆಸ್ತಿಯು ಸಿಗುತ್ತದೆ! ಎಷ್ಟು ಸತ್ಯತೆಯಿಂದ ತಂದೆಯ ಸೇವೆಯಲ್ಲಿ ತೊಡಗಬೇಕು ಆದರೆ ಮಾಯೆಯು ಬಹಳ ಬಲಶಾಲಿಯಾಗಿದೆ. ಕೋಟೆಯಲ್ಲಿ ಕೆಲವರೇ ತಂದೆಯನ್ನು ಪೂರ್ಣ ಅರ್ಥ ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ, ಕಲ್ಪ-ಕಲ್ಪವೂ ಇದೇ ರೀತಿಯಾಗುತ್ತದೆ. ಪೂರ್ಣ ಆಜ್ಞಾಕಾರಿ, ಪ್ರಾಮಾಣಿಕರಾಗದೇ ಇರುವ ಕಾರಣವೇ ಪಾಪ! ಅವರ ಪದವಿಯು ಈ ರೀತಿಯಾಗಿ ಬಿಡುತ್ತದೆ. ಬಾಬಾ, ನಾವು ರಾಜಯೋಗವನ್ನು ಕಲಿತು ನರನಿಂದ ನಾರಾಯಣ ನಾರಿಯಿಂದ ಲಕ್ಷ್ಮಿಯಾಗುತ್ತೇವೆಂದು ಹೇಳುತ್ತೇವೆ, ರಾಮ-ಸೀತೆಯಾಗುವುದಿಲ್ಲ ಎಂದು ಕೈಯನ್ನೆತ್ತುತ್ತಾರೆ. ಆದರೆ ಚಲನೆಯೂ ಅದೇರೀತಿ ಇರಬೇಕಲ್ಲವೆ. ಬೇಹದ್ದಿನ ತಂದೆಯು ಆಸ್ತಿಯನ್ನು ಕೊಡುವುದಕ್ಕಾಗಿ ಬಂದಿದ್ದಾರೆ ಅಂದಮೇಲೆ ಎಷ್ಟೊಂದು ಶ್ರೀಮತದಂತೆ ನಡೆಯಬೇಕು! ಅನೇಕ ಮಕ್ಕಳು ಹೇಗೆ ನಾವು ಶ್ರೀಮತದಂತೆ ನಡೆಯುವುದಿಲ್ಲವೆಂದು ಪ್ರತಿಜ್ಞೆ ಮಾಡಿರುವರೇನೋ ಎನ್ನುವಂತೆ ಇರುತ್ತಾರೆ. ಅಂತಹವರನ್ನು ಮುಚ್ಚಿಡಲಾಗುವುದಿಲ್ಲ. ಯಾರ ಅದೃಷ್ಟದಲ್ಲಿ ಇಲ್ಲವೋ ಅವರಿಗೆ ದೇಹಾಭಿಮಾನವು ಮೊದಲು ಪೆಟ್ಟು ಕೊಡುತ್ತದೆ ನಂತರ ಕಾಮ ವಿಕಾರವು ಪೆಟ್ಟು ಕೊಡುತ್ತದೆ. ಕಾಮವಿಲ್ಲವೆಂದರೆ ಕ್ರೋಧ, ಲೋಭವಿರುತ್ತದೆ. ಎಲ್ಲವೂ ಶತ್ರುಗಳೇ ಅಲ್ಲವೆ. ಮೋಹವೂ ಸಹ ಒಮ್ಮೆಲೆ ಸತ್ಯ ನಾಶ ಮಾಡಿ ಬಿಡುತ್ತದೆ ಹಾಗೆಯೇ ಲೋಭವೂ ಕಡಿಮೆಯಿಲ್ಲ. ಬಹಳ ಕಠಿಣ ಶತ್ರುಗಳಾಗಿವೆ. ಬಿಡುಗಾಸಿನ ವಸ್ತುವನ್ನು ಕಳ್ಳತನ ಮಾಡುತ್ತಾರೆ, ಇದೂ ಸಹ ಲೋಭವಲ್ಲವೆ. ಕಳ್ಳತನದ ಹವ್ಯಾಸವು ಬಹಳ ಕೆಟ್ಟದ್ದಾಗಿದೆ. ಅಂತಹವರಿಗೆ ಮನಸ್ಸು ತಿನ್ನಬೇಕು - ನಾವು ಪಾಪ ಮಾಡುತ್ತಾ ಇರುತ್ತೇವೆಂದರೆ ಏನು ಪದವಿ ಪಡೆಯುತ್ತೇವೆ? ಶಿವ ತಂದೆಯ ಯಜ್ಞದಲ್ಲಿ ಬಂದು ತಂದೆಯ ಬಳಿ ನಾವು ಇಂತಹ ಕೆಲಸವನ್ನು ಮಾಡಬಹುದೇ? ಮಾಯೆಯು ಬಹಳ ಉಲ್ಟಾ ಕರ್ಮವನ್ನು ಮಾಡಿಸುತ್ತದೆ. ಎಷ್ಟಾದರೂ ತಿಳಿಸಿ ಆದರೂ ಹವ್ಯಾಸವು ಕಳೆಯುವುದಿಲ್ಲ. ಯಾರದೇ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ, ದೇಹಾಭಿಮಾನದ ಕಾರಣ ನಾಮ-ರೂಪದಲ್ಲಿಯೂ ಬಂದು ಬಿಡುತ್ತಾರೆ. ತಂದೆಗೆ ಪ್ರತಿಯೊಂದು ಸೇವಾಕೇಂದ್ರದ ಬಗ್ಗೆ ತಿಳಿದಿರುತ್ತದೆಯಲ್ಲವೆ. ತಂದೆಯಾದರೂ ಏನು ಮಾಡುವರು? ತಿಳಸಲೇಬೇಕಾಗುತ್ತದೆ. ಎಷ್ಟೊಂದು ಸೇವಾಕೇಂದ್ರಗಳಿವೆ, ತಂದೆಯ ಬಳಿ ಎಷ್ಟೊಂದು ಸಮಾಚಾರಗಳು ಬರುತ್ತವೆ. ಚಿಂತೆಯಂತೂ ಇರುತ್ತದೆಯಲ್ಲವೆ. ನಂತರ ಅಂತಹವರಿಗೆ ತಿಳಿಸಬೇಕಾಗುತ್ತದೆ - ಮಾಯೆಯೂ ಕಡಿಮೆಯಿಲ್ಲ, ಬಹಳ ತೊಂದರೆ ಕೊಡುತ್ತದೆ. ಒಳ್ಳೊಳ್ಳೆಯ ಮಕ್ಕಳಿಗೆ ಹೇಳಲಾಗುತ್ತದೆ - ದೊಡ್ಡವರೆಂದು ಕರೆಸಿಕೊಳ್ಳುವುದು ಎಂದರೆ ದೊಡ್ಡ ದುಃಖವನ್ನು ಪಡೆಯುವುದು. ಇಲ್ಲಂತೂ ದುಃಖದ ಯಾವುದೇ ಮಾತಿಲ್ಲ ಏಕೆಂದರೆ ನಿಮಗೆ ತಿಳಿದಿದೆ - ಕಲ್ಪದ ಮೊದಲೂ ಸಹ ಇದೇ ರೀತಿಯಾಗಿತ್ತು, ಈಶ್ವರನ ಮಕ್ಕಳಾಗಿಯೂ ಮಾಯೆಗೆ ವಶವಾಗಿ ಬಿಡುತ್ತಾರೆ, ಒಂದಲ್ಲ ಒಂದು ವಿಕರ್ಮ ಮಾಡಿ ಬಿಡುತ್ತಾರೆ. ಆದ್ದರಿಂದಲೇ ತಂದೆಯು ಹೇಳುತ್ತಾರೆ - ಬಾಬಾ, ನಾವು ತಮ್ಮ ಶ್ರೀಮತದಂತೆ ಖಂಡಿತ ನಡೆಯುತ್ತೇವೆ ಎಂದು ಮಕ್ಕಳು ಬಹಳ ಪ್ರತಿಜ್ಞೆ ಮಾಡುತ್ತಾರೆ ಆದರೆ ನಡೆಯುವುದಿಲ್ಲ. ಆದ್ದರಿಂದಲೇ ನೋಡಿ, ಇಷ್ಟೊಂದು ಮಂದಿ ಮಕ್ಕಳಿದ್ದರೂ ಸಹ ಎಷ್ಟು ಚಿಕ್ಕ ಮಾಲೆಯಾಗುತ್ತದೆ, ಉಳಿದೆಲ್ಲರೂ ಪ್ರಜೆಗಳಾಗುತ್ತಾರೆ. ಎಷ್ಟು ದೊಡ್ಡ ಗುರಿಯಾಗಿದೆ! ಇದರಲ್ಲಿ ಹೃದಯದ ಸ್ವಚ್ಛತೆಯಿರಬೇಕು. ಸತ್ಯ ಹೃದಯದವರನ್ನು ಮುಚ್ಚಿಡಲು ಸಾಧ್ಯವಿಲ್ಲವೆಂದು ಗಾದೆಯಿದೆ. ಒಂದುವೇಳೆ ತಂದೆಯ ಜೊತೆ ಸತ್ಯವಾಗಿ ನಡೆಯುತ್ತಿದ್ದರೆ ಸತ್ಯಯುಗದಲ್ಲಿ ಕೃಷ್ಣನ ಜೊತೆ ನರ್ತನ ಮಾಡುತ್ತಾರೆ. ಸತ್ಯಯುಗದಲ್ಲಿ ಕೃಷ್ಣನ ನೃತ್ಯವೇ ಪ್ರಸಿದ್ಧವಾಗಿದೆ. ರಾಸ ಲೀಲೆ, ರಾಧೆ-ಕೃಷ್ಣರದನ್ನೇ ತೋರಿಸುತ್ತಾರೆ ನಂತರ ರಾಮ ಲೀಲೆಯನ್ನು ತೋರಿಸುತ್ತಾರೆ ಆದರೆ ನಂಬರ್ವನ್ನಲ್ಲಿ ರಾಧೆ-ಕೃಷ್ಣರ ರಾಸ ಲೀಲೆಯಾಗಿದೆ ಏಕೆಂದರೆ ಈ ಸಮಯದಲ್ಲಿ ಅವರು ತಂದೆಯೊಂದಿಗೆ ಬಹಳ ಸತ್ಯವಂತರಾಗುತ್ತಾರೆ ಆದ್ದರಿಂದ ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಕೈಯನ್ನಂತೂ ಅನೇಕರು ಎತ್ತುತ್ತಾರೆ ಆದರೆ ಮಾಯೆಯು ಹೇಗಿದೆ! ಪ್ರತಿಜ್ಞೆ ಮಾಡುತ್ತಾರೆ ಅಂದಮೇಲೆ ಅದರಂತೆ ನಡೆಯಬೇಕಲ್ಲವೆ. ಮಾಯೆಯ ಭೂತಗಳನ್ನು ಓಡಿಸಬೇಕಾಗಿದೆ. ದೇಹಾಭಿಮಾನದ ಹಿಂದೆ ಎಲ್ಲಾ ಭೂತಗಳು ಅಂಟಿಕೊಳ್ಳುತ್ತದೆ. ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ, ಅದರಲ್ಲಿಯೂ ಬೆಳಗ್ಗೆ ಬೆಳಗ್ಗೆ ಕುಳಿತು ಮಾತನಾಡಿ. ತಂದೆಯ ಮಹಿಮೆ ಮಾಡಿ. ಭಕ್ತಿಮಾರ್ಗದಲ್ಲಿ ಭಲೆ ಮಹಿಮೆ ಮಾಡುತ್ತಾರೆ ಆದರೆ ಮಹಿಮೆಯಂತೂ ಯಾರಿಗೂ ಇಲ್ಲ. ಕೃಷ್ಣನನ್ನು ನೆನಪು ಮಾಡುತ್ತಾರೆ, ಬೆಣ್ಣೆ ಕದ್ದ, ಗೋಪಿಕೆಯರನ್ನು ಓಡಿಸಿಕೊಂಡು ಹೋದ, ಅಕಾಸುರ ಬಕಾಸುರರನ್ನು ಕೊಂದ, ಹೀಗೆ ಮಾಡಿದ, ಹಾಗೆ ಮಾಡಿದ... ಎಂದು ಮಹಿಮೆ ಮಾಡುತ್ತಾರೆ. ಅಷ್ಟೇ ಇನ್ನೇನು ಮಾಡುತ್ತಾರೆ! ಇದೆಲ್ಲವೂ ಸುಳ್ಳಾಗಿದೆ. ಸತ್ಯವು ಅಂಶ ಮಾತ್ರವೂ ಇಲ್ಲ ಅಂದಮೇಲೆ ಮತ್ತೆ ಮಾರ್ಗವನ್ನೇನು ತಿಳಿಸುತ್ತಾರೆ? ಮುಕ್ತಿಯನ್ನೇ ತಿಳಿದುಕೊಂಡಿಲ್ಲ. ಈ ಸಮಯದಲ್ಲಿ ಇಡೀ ವಿಶ್ವದ ಮೇಲೆ ರಾವಣ ರಾಜ್ಯವಿದೆ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಮನುಷ್ಯರು ಭ್ರಷ್ಟಾಚಾರಿ ಎಂಬುದರ ಅರ್ಥವನ್ನೂ ತಿಳಿದುಕೊಳ್ಳುವುದಿಲ್ಲ. ಸತ್ಯಯುಗದಲ್ಲಿ ನಿರ್ವಿಕಾರಿ ದೇವತೆಗಳಿದ್ದರು ಎಂಬುದನ್ನೂ ತಿಳಿದುಕೊಂಡಿಲ್ಲ. ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರೆಂದು ಹಾಡುತ್ತಾರೆ ಆದರೆ ಮತ್ತೆ ಅಲ್ಲಿಯೂ ರಾವಣ, ಕಂಸ, ಜರಾಸಂದ ಮೊದಲಾದವರು ಇದ್ದರು ಎಂದು ಹೇಳಿ ಬಿಡುತ್ತಾರೆ. ಪವಿತ್ರರಾಗಿರಿ ಎಂದು ಹೇಳಿದಾಗ ದೇವತೆಗಳಿಗೂ ಸಹ ಮಕ್ಕಳು ಮೊದಲಾದವರಿದ್ದರಲ್ಲವೆ ಎಂದು ಹೇಳುತ್ತಾರೆ. ಅರೆ! ನೀವು ಹಾಡುತ್ತೀರಿ - ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳು..... ಅಂದಮೇಲೆ ಅಲ್ಲಿ ವಿಕಾರದ ಮಾತಿರಲು ಹೇಗೆ ಸಾಧ್ಯ. ನೀವೂ ಸಹ ನಿರ್ವಿಕಾರಿಗಳಾಗಿ ಎಂದು ಹೇಳಿದಾಗ ನಿರ್ವಿಕಾರಿಗಳಾದರೆ ಸೃಷ್ಟಿಯು ಹೇಗೆ ವೃದ್ಧಿಯಾಗುವುದು, ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆ ಎಂದು ಕೇಳುತ್ತಾರೆ. ಮಂದಿರಗಳಲ್ಲಿ ಹೋಗಿ ಮಹಿಮೆಯನ್ನು ಹಾಡುತ್ತಾರೆ. ಮತ್ತೆ ಮನೆಗೆ ಬಂದ ನಂತರ ಆ ಮಹಿಮೆಯನ್ನೂ ಮರೆತು ಹೋಗುತ್ತಾರೆ. ಭಲೆ ನೀವು ಹೋಗಿ ಪರಿಶೀಲನೆ ಮಾಡಿ ನೋಡಿ, ಮನೆಯಲ್ಲಿ ಹೋಗಿ ತಿಳಿಸಿದರೆ ಅವರು ಒಪ್ಪುವುದಿಲ್ಲ. ಅಲ್ಲಿಯ ಮಾತು ಅಲ್ಲಿಯೇ ಉಳಿದು ಬಿಡುತ್ತದೆ. ಪವಿತ್ರರಾಗುವುದಕ್ಕಾಗಿ ಹೇಳಿದರೆ ವಾಹ್! ಈ ಪ್ರಪಂಚವು ಹೇಗೆ ನಡೆಯುವುದು ಎಂದು ಕೇಳುತ್ತಾರೆ. ನಿರ್ವಿಕಾರಿ ಪ್ರಪಂಚವು ಹೇಗೆ ನಡೆಯುತ್ತದೆ ಎಂಬುದು ಅವರಿಗೆ ಗೊತ್ತೇ ಇಲ್ಲ.
ಮಕ್ಕಳು ಗೀತೆಯನ್ನು ಕೇಳಿದಿರಿ. ನಿಮ್ಮ ಮತದಂತೆ ನಡೆಯುತ್ತೇವೆಂದು ಹಾಡುತ್ತಾರೆ ಏಕೆಂದರೆ ಶ್ರೀಮತದಂತೆ ನಡೆಯುವುದರಲ್ಲಿ ಕಲ್ಯಾಣವಿದೆ. ತಂದೆಯಂತೂ ಹೇಳುತ್ತಿರುತ್ತಾರೆ - ಮಕ್ಕಳೇ, ಶ್ರೀಮತದಂತೆ ನಡೆಯಿರಿ. ಇಲ್ಲದಿದ್ದರೆ ಕೊನೆಗೆ ಮೃತ್ಯು ಬಂದು ಬಿಡುತ್ತದೆ ನಂತರ ಧರ್ಮರಾಜನ ಮುಂದೆ ಎಲ್ಲವನ್ನೂ ತಿಳಿಸಬೇಕಾಗುವುದು. ನೀವೇ ಈ ಪಾಪ ಮಾಡಿದ್ದೀರಿ. ತನ್ನ ಮತದಂತೆ ನಡೆದು ಮತ್ತೆ ಕಲ್ಪ-ಕಲ್ಪದ ಕಲೆಯುಂಟಾಗಿ ಬಿಡುವುದು. ಒಂದು ಬಾರಿ ಅನುತ್ತೀರ್ಣರಾದರೆ ಎರಡನೇ ಅಥವಾ ಮೂರನೇ ವರ್ಷದಲ್ಲಿ ಓದುವರೆಂದಲ್ಲ. ಈಗ ಅನುತ್ತೀರ್ಣರಾದರೆ ಕಲ್ಪ-ಕಲ್ಬವೂ ಆಗುತ್ತಿರುತ್ತಾರೆ ಆದ್ದರಿಂದ ಬಹಳ ಪುರುಷಾರ್ಥ ಮಾಡಬೇಕಾಗಿದೆ. ಹೆಜ್ಜೆ ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಿರಿ. ಒಳಗೇನೂ ಕೊಳಕು ಇರಬಾರದು. ಹೃದಯವನ್ನು ಶುದ್ಧ ಮಾಡಿಕೊಳ್ಳಬೇಕಾಗಿದೆ. ನಾರದನಿಗೂ ಸಹ ತಮ್ಮ ಮುಖವನ್ನು ಕನ್ನಡಿಯಲ್ಲಿ ನೋಡಿಕೊ ಎಂದು ಹೇಳಿದರಲ್ಲವೆ. ನೋಡಿಕೊಂಡಾಗ ನಾನು ಮಂಗನಂತೆ ಇದ್ದೇನೆ ಎಂಬುದು ಅರ್ಥವಾಯಿತು. ಇದೊಂದು ಉದಾಹರಣೆಯಿದೆ. ತಮ್ಮೊಂದಿಗೆ ತಾವು ಕೇಳಿಕೊಳ್ಳಬೇಕು - ನಾವು ಎಲ್ಲಿಯವರೆಗೆ ಶ್ರೀಮತದಂತೆ ನಡೆಯುತ್ತಿದ್ದೇವೆ? ಬುದ್ಧಿಯೋಗವು ಎಲ್ಲಿಯೂ ಹೊರಗಡೆ ಅಲೆಯುತ್ತಿಲ್ಲವೆ? ದೇಹಾಭಿಮಾನದಲ್ಲಂತೂ ಇಲ್ಲವೆ? ದೇಹೀ-ಅಭಿಮಾನಿಗಳು ಸೇವೆಯಲ್ಲಿ ತೊಡಗಿರುವರು, ಎಲ್ಲವೂ ಯೋಗದ ಮೇಲಿದೆ. ಭಾರತದ ಯೋಗವು ಪ್ರಸಿದ್ಧವಾಗಿದೆ. ಅದನ್ನು ನಿರಾಕಾರ ತಂದೆಯೇ ನಿರಾಕಾರ ಮಕ್ಕಳಿಗೆ ತಿಳಿಸುತ್ತಾರೆ, ಇದಕ್ಕೆ ಸಹಜ ರಾಜಯೋಗವೆಂದು ಹೇಳಲಾಗುತ್ತದೆ. ಇದುವೂ ಬರೆಯಲ್ಪಟ್ಟಿದೆ - ನಿರಾಕಾರ ತಂದೆಯು ಸಹಜ ರಾಜಯೋಗವನ್ನು ಕಲಿಸಿದರು. ಕೇವಲ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ನಿಮಗೆ ತಿಳಿದಿದೆ - ನಾವೀಗ ಈ ಲಕ್ಷ್ಮಿ -ನಾರಾಯಣರಂತೆ ಆಗಬೇಕಾಗಿದೆ, ಪುಣ್ಯಾತ್ಮರಾಗಬೇಕಾಗಿದೆ. ಪಾಪದ ಯಾವುದೇ ಮಾತಿಲ್ಲ. ತಂದೆಯ ನೆನಪಿನಲ್ಲಿಯೇ ಇದ್ದು ಅವರ ಸೇವೆಯಲ್ಲಿರಬೇಕಾಗಿದೆ. ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ಸ್ವಲ್ಪ ಪರಿಶ್ರಮ ಪಡಬೇಕಲ್ಲವೆ. ಸನ್ಯಾಸಿಗಳು ಗೃಹಸ್ಥ ವ್ಯವಹಾರದಲ್ಲಿದ್ದು ಕಮಲ ಪುಷ್ಪದಂತೆ ಇರಲು ಹೇಗೆ ಸಾಧ್ಯ! ಎನ್ನುತ್ತಾರೆ. ಸಂರ್ಪೂಣರಾಗುವುದರಲ್ಲಿ ಅನೇಕರು ಅನುತ್ತೀರ್ಣರಾಗುತ್ತಾರೆ ಏಕೆಂದರೆ ನೆನಪು ಮಾಡುವುದಿಲ್ಲ. ಈಗ ಪ್ರಾಚೀನ ಯೋಗವನ್ನು ತಂದೆಯ ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಯೋಗವನ್ನಂತೂ ನಾನೇ ಸ್ವಯಂ ಬಂದು ಕಲಸಿ ಕೊಡುತ್ತೇನೆ. ಈಗ ನನ್ನನ್ನು ನೆನಪು ಮಾಡಿ, ನೀವು ನನ್ನ ಬಳಿಗೆ ಬರಬೇಕಾಗಿದೆ. ಇದು ನೆನಪಿನ ಯಾತ್ರೆಯಾಗಿದೆ. ನಿಮ್ಮ ಮಧುರ ಶಾಂತಿಯ ಮನೆಯು ಆದಾಗಿದೆ, ಇದೂ ಸಹ ತಿಳಿದಿದೆ - ನಾವು ಭಾರತವಾಸಿಗಳೇ ಭಾರತದಲ್ಲಿ ಬರುತ್ತೇವೆ ಮತ್ತು ಪೂರ್ಣ ಆಸ್ತಿಯನ್ನು ಪಡೆಯುತ್ತೇವೆ. ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ, ಮಕ್ಕಳೇ ಪ್ರತಿಜ್ಞೆಯಂತೆ ಪೂರ್ಣ ನಡೆಯಿರಿ. ಮರೆತು ಹೋದರೆ ತಂದೆಯೊಂದಿಗೆ ಕ್ಷಮೆ ಯಾಚಿಸಬೇಕು. ನೋಡಿ, ಈ ಮಗು ಕ್ಷಮೆ ಯಾಚಿಸುವುದಕ್ಕಾಗಿ ವಿಶೇಷವಾಗಿ ತಂದೆಯ ಬಳಿ ಒಂದು ದಿನಕ್ಕಾಗಿ ಬಂದಿದ್ದಾರೆ. ಸ್ವಲ್ಪ ತಪ್ಪಾದ ಕಾರಣ ಓಡಿ ಬಂದಿದ್ದಾರೆ, ಏಕೆಂದರೆ ಮನಸ್ಸು ತಿನ್ನುತ್ತದೆ ಅದರಿಂದ ಸಮ್ಮುಖದಲ್ಲಿ ಹೋಗಿ ತಂದೆಗೆ ತಿಳಿಸಬೇಕು ಎಂದುಕೊಂಡರು. ತಂದೆಯ ಪ್ರತಿ ಎಷ್ಟು ಗೌರವವಿದೆ! ಕೆಲವು ಮಕ್ಕಳಂತೂ ಇದಕ್ಕಿಂತಲೂ ಹೆಚ್ಚು ವಿಕರ್ಮ ಮಾಡುತ್ತಿರುತ್ತಾರೆ. ಅದು ಗೊತ್ತಾಗುವುದೇ ಇಲ್ಲ. ವಾಹ್! ಬಹಳ ಒಳ್ಳೆಯ ಮಗುವಾಗಿದ್ದಾರೆ, ಸ್ವಲ್ಪ ತಪ್ಪು ಮಾಡಿದ ಕಾರಣ ಕ್ಷಮೆ ಯಾಚಿಸಲು ಬಂದಿದ್ದಾರೆ ಎಂದು ನಾವು ಹೇಳುತ್ತೇವೆ. ತಂದೆಯ ಹೇಳಿಕೆಯಾಗಿದೆ - ಮಕ್ಕಳೇ, ಆದ ತಪ್ಪನ್ನು ಹೇಳಿ, ಕ್ಷಮೆ ಯಾಚಿಸಿ ಇಲ್ಲವಾದರೆ ಆ ಪಾಪವು ವೃದ್ಧಿಯಾಗುತ್ತಾ ಇರುತ್ತದೆ. ಇದರಿಂದ ಕೆಳಗೆ ಬಿಳುತ್ತೀರಿ. ಮುಖ್ಯವಾಗಿ ಯೋಗದಿಂದಲೇ ರಕ್ಷಿಸಲ್ಪಡುತ್ತೀರಿ. ಈಗಿನ್ನೂ ಆ ಯೋಗದಲ್ಲಿ ಬಹಳ ನಿರ್ಬಲರಾಗಿದ್ದೀರಿ. ಜ್ಞಾನವಂತೂ ಬಹಳ ಸಹಜವಾಗಿದೆ. ಇದಂತೂ ಒಂದು ಕಥೆಯಾಗಿದೆ. ಇಂದಿಗೆ 5000 ವರ್ಷಗಳ ಮೊದಲೂ ಯಾರ ರಾಜ್ಯವಿತ್ತು? ಹೇಗೆ ರಾಜ್ಯ ಮಾಡಿದರು? ಎಷ್ಟು ಸಮಯ ಮಾಡಿದರು? ಮತ್ತೆ ರಾಜ್ಯ ಮಾಡುತ್ತಾ - ಮಾಡುತ್ತಾ ಹೇಗೆ ವಿಕಾರದಲ್ಲಿ ಸಿಲುಕಿದರು? ಯಾರೂ ಸಹ ಬಂದು ಮುತ್ತಿಗೆ ಹಾಕಲಿಲ್ಲ ನಂತರ ಯಾವಾಗ ವೈಶ್ಯರಾದರೋ ಆಗ ಮುತ್ತಿಗೆ ಹಾಕಿದರು. ಅವರಿಂದಂತು ರಾವಣನು ರಾಜ್ಯವನ್ನು ಕಸಿದುಕೊಂಡ. ನೀವೀಗ ಮತ್ತೆ ರಾವಣನ ಮೇಲೆ ಜಯ ಗಳಿಸಿ ರಾಜ್ಯವನ್ನು ಪಡೆಯುತ್ತೀರಿ, ಇದು ಸಹ ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ವಿರಳ. ಯಾರು ತಂದೆಯ ಜೊತೆ ಪೂರ್ಣ ಆಜ್ಞಾಕಾರಿ ಪ್ರಾಮಾಣಿಕರಾಗಿದ್ದಾರೆಯೋ ಅವರ ಬುದ್ದಿಯಲ್ಲಿ ಕುಳಿತುಕೊಳ್ಳುತ್ತದೆ. ಅಜ್ಞಾನ ಕಾಲದಲ್ಲಿಯೂ ಸಹ ಕೆಲವರು ಪ್ರಾಮಾಣಿಕರು, ಆಜ್ಞಾಕಾರಿಗಳಾಗಿರುತ್ತಾರೆ, ಕೆಲವರು ನೌಕರರೂ ಸಹ ಬಹಳ ಪ್ರಾಮಾಣಿಕರಾಗಿರುತ್ತಾರೆ. ಲಕ್ಷಾಂತರ ರೂಪಾಯಿಗಳು ಬಿದ್ದಿದ್ದರು ಸಹ ಎಂದು ಒಂದು ಪೈಸೆಯನ್ನೂ ಮುಟ್ಟುವುದಿಲ್ಲ. ಸೇಟ್ ಜೀ ತಾವು ಬೀಗದ ಕೈಯನ್ನು ಬಿಟ್ಟು ಹೊರಟು ಹೋಗಿದ್ದಿರಿ, ನಾವು ಅದನ್ನು ಸಂಭಾಲನೆ ಮಾಡುವುದಕ್ಕಾಗಿ ಕುಳಿತಿದ್ದೇವೆ ಎಂದು ಹೇಳುತ್ತಾರೆ. ಇಂತಹ ಪ್ರಾಮಾಣಿಕರೂ ಇರುತ್ತಾರೆ. ತಂದೆಯಂತೂ ಬಹಳ ಚೆನ್ನಾಗಿ ತಿಳಿಸುತ್ತಿರುತ್ತಾರೆ. ವಿವೇಕವು ಹೇಳುತ್ತದೆ, ಈ ಕಾರಣದಿಂದಲೇ ಮಾಲೆಯ ಮಣಿಯಾಗುವುದಿಲ್ಲ. ಅಂತಹವರು ಅಲ್ಲಿ ಹೋಗಿ ದಾಸ-ದಾಸಿಯರಾಗುತ್ತಾರೆ. ಓದದಿದ್ದರೆ ಅವಶ್ಯವಾಗಿ ಇದೇ ಗತಿಯಾಗುವುದು. ಶ್ರೀಮತದಂತೆ ನಡೆಯುವುದಿಲ್ಲ, ತಂದೆಯು ತಿಳಿಸುತ್ತಾರೆ - ನಿಮ್ಮ ಗುರಿಯೆಲ್ಲವೂ ಯೋಗದ್ದಾಗಿದೆ. ಮಾಯೆಯೂ ಒಮ್ಮೆಲೆ ಉಸಿರು ಕಟ್ಟಿಸಿ ಯೋಗ ಮಾಡಲು ಬಿಡುವುದಿಲ್ಲ. ಯೋಗವು ಇದ್ದಿದ್ದೇ ಆದರೆ ಬಹಳ ಚೆನ್ನಾಗಿ ಸೇವೆ ಮಾಡುವರು, ಪಾಪಗಳ ಬಗ್ಗೆ ಭಯವಿರುವುದು. ಹೇಗೆ ಈ ಮಗು ಬಹಳ ಒಳ್ಳೆಯವರಾಗಿದ್ದಾರೆ. ಸತ್ಯತೆಯಿದ್ದರೆ ಈ ರೀತಿಯಿರಬೇಕು. ಒಳ್ಳೊಳ್ಳೆಯ ಮಕ್ಕಳಿಗಿಂತ ಇವರ ಪದವಿಯು ಒಳ್ಳೆಯದಾಗಿದೆ. ಯಾರು ಸರ್ವಿಸ್ ಮಾಡುತ್ತಿರುತ್ತಾರೆಯೋ ಅವರು ಒಂದಲ್ಲ ಒಂದು ಕಡೆ ಸಿಕ್ಕಿ ಹಾಕಿಕೊಂಡಿರುತ್ತಾರೆ, ಏನನ್ನೂ ತಿಳಿಸುವುದಿಲ್ಲ. ಹೇಳುವುದರಿಂದ ಬಿಡುವುದೂ ಇಲ್ಲ. ಗೀತೆಯಲ್ಲಿ ನೋಡಿ, ಏನೇ ಆಗಲಿ ನಾವೆಂದೂ ಇಂತಹ ತಪ್ಪನ್ನು ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತಾರೆ. ಮೂಲ ಮಾತು ದೇಹಾಭಿಮಾನದ್ದಾಗಿದೆ. ದೇಹಾಭಿಮಾನದಿಂದಲೇ ತಪ್ಪುಗಳಾಗುತ್ತವೆ. ಬಹಳ ತಪ್ಪುಗಳನ್ನು ಮಾಡುತ್ತಾರೆ ಆದ್ದರಿಂದ ಸಾವಧಾನ ನೀಡಲಾಗುತ್ತದೆ. ತಂದೆಯ ಆದೇಶವಾಗಿದೆ - ತಿಳಿಸುವುದು. ತಿಳಿಸದೇ ಹೋದರೆ ನಮಗೆ ಯಾರೂ ತಿಳಿಸಲೇ ಇಲ್ಲವೆಂದು ಹೇಳಿ ಬಿಡುತ್ತಾರೆ. ಇದರಮೇಲೆ ಒಂದು ಕಥೆಯೂ ಇದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಎಚ್ಚರಿಕೆಯಿಂದಿರಿ ಇಲ್ಲವಾದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ನಂತರ ನಮಗೇಕೆ ತಿಳಿಸಲಿಲ್ಲ ಎಂದು ಹೇಳುವಂತಿಲ್ಲ, ಆದ್ದರಿಂದ ತಂದೆಯು ಸ್ಪಷ್ಟವಾಗಿ ತಿಳಿಸುತ್ತಾರೆ. ಸ್ವಲ್ಪ ಪಾಪ ಮಾಡಿದರೂ ಸಹ ಅದು ಬಹಳ ವೃದ್ಧಿಯಾಗಿ ಬಿಡುತ್ತದೆ. ಮತ್ತೆ ತಂದೆಯ ಮುಂದೆ ತಲೆ ಎತ್ತುವುದಕ್ಕೂ ಸಾಧ್ಯವಿಲ್ಲ. ಸುಳ್ಳು ಹೇಳಿದರೆ ನೀವು ಅಯ್ಯೊ ಅಯ್ಯೊ ಎನ್ನಬೇಕು. ಶಿವ ತಂದೆಯು ನಮ್ಮನ್ನು ಎಲ್ಲಿ ನೋಡುತ್ತಾರೆ ಎಂದು ತಿಳಿದುಕೊಳ್ಳಬೇಡಿ. ಅರೆ! ಅಜ್ಞಾನ ಕಾಲದಲ್ಲಿಯೂ ಸಹ ಅವರಿಗೆ ಎಲ್ಲವೂ ತಿಳಿದಿರುತ್ತದೆ. ಆದ್ದರಿಂದಲೇ ಪಾಪ ಮತ್ತು ಪುಣ್ಯದ ಫಲವನ್ನು ಕೊಡುತ್ತಾರೆ. ನೇರವಾಗಿ ತಿಳಿಸುತ್ತಾರೆ - ನೀವು ಪಾಪ ಮಾಡಿದರೆ ನಿಮಗಾಗಿ ಬಹಳ ದೊಡ್ಡ ಕಠಿಣ ಶಿಕ್ಷೆಯಿದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ, ಅಂದಮೇಲೆ ಅದನ್ನು ಬಿಟ್ಟು ಎರಡು ಕಿವಿಗಳನ್ನು ಕತ್ತರಿಸಿಕೊಳ್ಳುವಂತೆ ಮಾಡಬಾರದಲ್ಲವೆ? ಹೇಳುವುದು ಒಂದು, ನೆನಪು ಇನ್ನೊಬ್ಬರನ್ನು ಮಾಡುತ್ತಾರೆ. ತಂದೆಯನ್ನು ನೆನಪು ಮಾಡದಿದ್ದರೆ ಹೇಳಿ, ಅಂತಹವರ ಗತಿಯೇನಾಗುತ್ತದೆ? ಸತ್ಯವಾದುದನ್ನೇ ತಿನ್ನಬೇಕು, ಸತ್ಯವನ್ನೇ ಹೇಳಬೇಕು, ಸತ್ಯವಾದುದನ್ನೇ ತೊಡಬೇಕು. ಇದೂ ಸಹ ಈಗಿನ ಮಾತಾಗಿದೆ. ಯಾವಾಗ ತಂದೆಯು ಕಲಿಸುತ್ತಾರೆ ಅಂದ ಮೇಲೆ ಅವರೊಂದಿಗೆ ಪ್ರತಿ ಮಾತಿನಲ್ಲಿ ಸತ್ಯವಾಗಿರಬೇಕು. ಒಳ್ಳೆಯದು.
ಇಂತಹ ಸತ್ಯ ಆಜ್ಞಾಕಾರಿ, ಪ್ರಾಮಾಣಿಕ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸತ್ಯತೆಯಿಂದ ತಂದೆಯ ಸೇವೆಯಲ್ಲಿ ತೊಡಗಬೇಕಾಗಿದೆ. ಸಂಪೂರ್ಣ ಆಜ್ಞಾಕಾರಿ ಪ್ರಾಮಾಣಿಕರಾಗಬೇಕಾಗಿದೆ. ಈಶ್ವರೀಯ ಪರಿವಾರದೊಂದಿಗೆ ಸತ್ಯವಾದ ಪ್ರೀತಿಯನ್ನಿಡಬೇಕಾಗಿದೆ.
2. ಶ್ರೀಮತದಲ್ಲಿ ಮನ ಮತ ಅಥವಾ ರಾವಣನ ಮತವನ್ನು ಬೆರಕೆ ಮಾಡಬಾರದು, ಒಬ್ಬ ತಂದೆಯ ವಿನಃ ಬೇರೆ ಯಾರೂ ಇಲ್ಲ. ಈ ಪ್ರತಿಜ್ಞೆಯಲ್ಲಿ ಪಕ್ಕಾ ಇರಬೇಕಾಗಿದೆ. ಹೃದಯವನ್ನು ಶುದ್ಧ, ಪವಿತ್ರ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಎಲ್ಲಾ ಸೇವಾಕೇಂದ್ರಗಳ ಮಕ್ಕಳು ಗೀತೆಯನ್ನು ಕೇಳಿದಿರಿ, ಎಲ್ಲರಿಗೂ ತಿಳಿದಿದೆ - ಬೇಹದ್ದಿನ ತಂದೆಯಿಂದ ಪುನಃ 5000 ವರ್ಷಗಳ ಮೊದಲಿನ ತರಹ ನಾವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ. ಕಲ್ಪ-ಕಲ್ಪವೂ ನಾವು ಪಡೆಯುತ್ತಾ ಬಂದಿದ್ದೇವೆ. ರಾಜ್ಯವನ್ನು ಪಡೆಯುತ್ತೇವೆ ಮತ್ತು ಕಳೆದುಕೊಳ್ಳುತ್ತೇವೆ. ಮಕ್ಕಳಿಗೆ ತಿಳಿದಿದೆ - ನಾವೀಗ ಬೇಹದ್ದಿನ ತಂದೆಯ ಮಡಿಲನ್ನು ತೆಗೆದುಕೊಂಡಿದ್ದೇವೆ ಅಥವಾ ಅವರ ಮಕ್ಕಳಾಗಿದ್ದೇವೆ. ಇದು ಖಂಡಿತವಾಗಿದೆ. ಮನೆಯಲ್ಲಿ ಕುಳಿತಿದ್ದರೂ ಸಹ ಪುರುಷಾರ್ಥ ಮಾಡುತ್ತಾರೆ. ಬೇಹದ್ದಿನ ತಂದೆಯಿಂದ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಪುರುಷಾರ್ಥ ನಡೆಯುತ್ತಿದೆ. ಮಕ್ಕಳು ತಿಳಿದುಕೊಂಡಿದ್ದೀರಿ – ಜ್ಞಾನ ಸಾಗರ, ಪತಿತ-ಪಾವನ, ಸರ್ವರ ಸದ್ಗತಿದಾತ ಶಿವ ತಂದೆಯೇ ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಮತ್ತು ಸದ್ಗುರುವೂ ಆಗಿದ್ದಾರೆ. ಅವರಿಂದ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಅಂದಮೇಲೆ ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಎಷ್ಟೊಂದು ಪುರುಷಾರ್ಥ ಮಾಡಬೇಕು! ಅಜ್ಞಾನ ಕಾಲದಲ್ಲಿಯೂ ಶಾಲೆಯಲ್ಲಿ ಓದುತ್ತಾರೆಂದರೆ ತನ್ನ ವಿದ್ಯಾಭ್ಯಾಸದನುಸಾರ ನಂಬರ್ವಾರ್ ಅಂಕಗಳಿಂದ ತೇರ್ಗಡೆಯಾಗುತ್ತಾರೆ. ಅಲ್ಲಿ ಯಾರೂ ಸಹ ಮಾಯೆಯು ನಮಗೆ ವಿಘ್ನ ಹಾಕುತ್ತದೆ ಅಥವಾ ಬಿರುಗಾಳಿ ಬರುತ್ತದೆಯೆಂದು ಹೇಳುವುದಿಲ್ಲ. ಸರಿಯಾಗಿ ಓದುವುದಿಲ್ಲ ಅಥವಾ ಕೆಟ್ಟ ಸಂಗದಲ್ಲಿ ಹೋಗಿ ಸಿಲುಕುತ್ತಾರೆ. ಆಟಗಳಲ್ಲಿ ತೊಡಗುತ್ತಾರೆ ಆದ್ದರಿಂದ ಓದುವುದಿಲ್ಲ, ಅನುತ್ತೀರ್ಣರಾಗಿ ಬಿಡುತ್ತಾರೆ. ಆದರೆ ಇದಕ್ಕೆ ಮಾಯೆಯ ಬಿರುಗಾಳಿ ಎಂದು ಹೇಳುವುದಿಲ್ಲ. ನಡವಳಿಕೆಯು ಸರಿಯಿರುವುದಿಲ್ಲವೆಂದರೆ ಶಿಕ್ಷಕರೂ ಸಹ ಇವರ ಚಲನೆಯು ಸರಿಯಿಲ್ಲವೆಂದು ಸರ್ಟಿಫಿಕೇಟ್ ಕೊಡುತ್ತಾರೆ. ಕೆಟ್ಟ ಸಂಗದಲ್ಲಿ ಕೆಟ್ಟು ಹೋಗಿದ್ದಾರೆ, ಇದರಲ್ಲಿ ಮಾಯಾ ರಾವಣನನ್ನು ದೋಷಿಯನ್ನಾಗಿ ಮಾಡುವ ಮಾತಿಲ್ಲ. ದೊಡ್ಡ-ದೊಡ್ಡ ಒಳ್ಳೊಳ್ಳೆಯ ವ್ಯಕ್ತಿಗಳ ಮಕ್ಕಳೂ ಸಹ ಕೆಲವರು ಚೆನ್ನಾಗಿ ಮೇಲೆ ಬರುತ್ತಾರೆ, ಇನ್ನೂ ಕೆಲವರು ಸಾರಾಯಿ ಕುಡಿಯುವುದರಲ್ಲಿ ತೊಡಗುತ್ತಾರೆ. ಕೆಟ್ಟ ಮಾರ್ಗದಲ್ಲಿ ಹೊರಟು ಹೋಗುತ್ತಾರೆ, ಆಗ ಇವರು ಕುಪುತ್ರರಾಗಿ ಬಿಟ್ಟರು ಎಂದು ತಂದೆಯೂ ಹೇಳುತ್ತಾರೆ. ಆ ವಿದ್ಯೆಯಲ್ಲಾದರೆ ಬಹಳ ಸಬ್ಜೆಕ್ಟ್ ಗಳಿರುತ್ತವೆ, ಇಲ್ಲಿಯೂ ಒಂದೇ ಪ್ರಕಾರದ ವಿದ್ಯೆಯಾಗಿದೆ. ಅಲ್ಲಿ ಮನುಷ್ಯರು ಓದಿಸುತ್ತಾರೆ, ಇಲ್ಲಿ ಮಕ್ಕಳಿಗೆ ಗೊತ್ತಿದೆ - ನಮಗೆ ಭಗವಂತನೇ ಓದಿಸುತ್ತಾರೆ, ನಾವು ಚೆನ್ನಾಗಿ ಓದಿದ್ದೇ ಆದರೆ ವಿಶ್ವದ ಮಾಲೀಕರಾಗಬಹುದು. ಅನೇಕ ಮಕ್ಕಳಿದ್ದಾರೆ, ಕೆಲವರು ಸಂಗದೋಷದಲ್ಲಿ ಬಂದು ಓದುವುದಿಲ್ಲ, ಇದಕ್ಕೆ ಮಾಯೆಯ ಬಿರುಗಾಳಿ ಎಂದು ಏಕೆ ಹೇಳುವುದು? ಸಂಗದೋಷದಲ್ಲಿ ಯಾರಾದರೂ ಓದುವುದಿಲ್ಲವೆಂದರೆ ಇದರಲ್ಲಿ ಮಾಯೆ, ಶಿಕ್ಷಕ ಅಥವಾ ತಂದೆಯೇನು ಮಾಡುತ್ತಾರೆ? ಓದಲಿಲ್ಲವೆಂದರೆ ತಮ್ಮ ಮನೆಗೆ ಹೊರಟು ಹೋದರು. ಡ್ರಾಮಾನುಸಾರ ಮೊದಲು ಭಟ್ಟಿಯಲ್ಲಿ ಎಲ್ಲರೂ ಬರಲೇಬೇಕಾಗಿತ್ತು, ಬಂದು ಆಶ್ರಯವನ್ನು ಪಡೆದರು. ಕೆಲವರನ್ನು ಪತಿಯು ಹೊಡೆದರು, ತೊಂದರೆ ಕೊಟ್ಟರು. ಆದ್ದರಿಂದ ಕೆಲವರಿಗೆ ವೈರಾಗ್ಯ ಬಂದು ಬಿಟ್ಟಿತು. ಮನೆಯಲ್ಲಿ ನಡೆಯಲಾಗಲಿಲ್ಲ ಆದ ಕಾರಣ ಕೆಲವರು ಇಲ್ಲಿಗೆ ಬಂದು ಬಿಟ್ಟರು, ಆದರೂ ಸಹ ಮತ್ತೆ ಹೊರಟು ಹೋದರು. ಹೋಗಿ ನೌಕರಿ ಇತ್ಯಾದಿಗಳಲ್ಲಿ ತೊಡಗಿದರು, ವಿವಾಹ ಮಾಡಿಕೊಂಡರು. ಮಾಯೆಯ ಬಿರುಗಾಳಿಯಿಂದ ಓದುತ್ತಿಲ್ಲ ಎಂಬುದು ಕೇವಲ ನೆಪವಾಗಿದೆ ಆದರೆ ಇದು ಅರ್ಥವಾಗುವುದಿಲ್ಲ - ಸಂಗದೋಷದಲ್ಲಿ ಬಂದ ಕಾರಣ ಈ ಗತಿಯಾಗಿದೆ ಮತ್ತು ನಮ್ಮಲ್ಲಿ ವಿಕಾರಗಳು ಬಲವಾಗಿವೆ ಅಂದಮೇಲೆ ಮಾಯೆಯ ಬಿರುಗಾಳಿ ಬಂದಿತು. ಆದ್ದರಿಂದ ಬಿದ್ದು ಹೋಯಿತು ಎಂದು ಮಾಯೆಯ ಮೇಲೆ ಏಕೆ ಹೇಳುತ್ತೀರಿ, ಇದು ತಮ್ಮ ಮೇಲೆ ಆಧಾರಿತವಾಗಿದೆ. ತಂದೆ, ಶಿಕ್ಷಕ, ಸದ್ಗುರುವಿನ ಯಾವ ಶಿಕ್ಷಣ ಸಿಗುತ್ತದೆಯೋ ಅದರಂತೆಯೇ ನಡೆಯಬೇಕು. ನಡೆಯಲಿಲ್ಲವೆಂದರೆ ಯಾವುದೇ ಕೆಟ್ಟ ಸಂಗವಿದೆ ಅಥವಾ ಕಾಮದ ನಶೆ ಇಲ್ಲವೆ ದೇಹಾಭಿಮಾನದ ನಶೆಯಿದೆ, ಎಲ್ಲಾ ಸೇವಾಕೇಂದ್ರದವರು ತಿಳಿದುಕೊಂಡಿದ್ದೀರಿ - ನಾವು ಬೇಹದ್ದಿನ ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಓದುತ್ತಿದ್ದೇವೆ. ಒಂದುವೇಳೆ ನಿಶ್ಚಯವಿಲ್ಲವೆಂದರೆ ಕುಳಿತು ಕೊಳ್ಳುವುದಾದರೂ ಏಕೆ, ಇನ್ನೂ ಬಹಳಷ್ಟು ಆಶ್ರಮಗಳಿವೆ. ಆದರೆ ಅಲ್ಲಂತೂ ಏನೂ ಪ್ರಾಪ್ತಿಯೂ ಇಲ್ಲ, ಗುರಿ-ಧ್ಯೇಯವೂ ಇಲ್ಲ. ಅವೆಲ್ಲವೂ ಚಿಕ್ಕ-ಚಿಕ್ಕ ಮಠ ಪಂಥಗಳು ರೆಂಬೆ-ಕೊಂಬೆಗಳಾಗಿವೆ. ವೃಕ್ಷವು ವೃದ್ಧಿಯನ್ನು ಹೊಂದಲೇಬೇಕಾಗಿದೆ. ಇಲ್ಲಂತೂ ಪರಸ್ಪರ ಸಂಬಂಧವಿದೆ. ಮಧುರ ದೈವೀ ವೃಕ್ಷದವರು ಯಾರಿರುವರೋ ಅವರು ಬಂದೇ ಬರುವರು. ಎಲ್ಲರಿಗಿಂತ ಮಧುರರು ಯಾರಾಗಿರುತ್ತಾರೆ? ಯಾರು ಸತ್ಯಯುಗದ ಮಹಾರಾಜ-ಮಹಾರಾಣಿಯಾಗುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಯಾರು ಮೊದಲ ನಂಬರಿನಲ್ಲಿ ಬರುವರೋ ಅವರು ಅವಶ್ಯವಾಗಿ ಒಳ್ಳೆಯ ವಿದ್ಯೆಯನ್ನು ಓದಿರುವರು. ಅವರೇ ಸೂರ್ಯವಂಶಿ ಮನೆತನದಲ್ಲಿ ಹೋದರು. ಇಂತಹವರೂ ಇದ್ದಾರೆ, ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ಅವರ ಜೀವನವು ಅರ್ಪಣಮಯವಾಗಿದೆ, ಬಹಳ ಸೇವೆ ಮಾಡುತ್ತಿದ್ದಾರೆ. ಅಂತರವಿದೆಯಲ್ಲವೆ. ಭಲೆ ಇಲ್ಲಿದ್ದರೂ ಸಹ ಓದಲು ಆಗಲಿಲ್ಲವೆಂದರೆ ಅನ್ಯ ಸೇವೆಯಲ್ಲಿ ತೊಡಗುತ್ತಾರೆ. ಕೊನೆಯಲ್ಲಿ ಬಂದು ಸ್ವಲ್ಪ ರಾಜ್ಯ ಪದವಿಯನ್ನು ಪಡೆದುಕೊಳ್ಳುತ್ತಾರೆ. ನೋಡಿದಾಗ ಹೊರಗಡೆ ಗೃಹಸ್ಥ ವ್ಯವಹಾರದಲ್ಲಿರುವವರೇ ಕೆಲವರು ಓದುವ ಮತ್ತು ಓದಿಸುವುದರಲ್ಲಿ ಬಹಳ ತೀಕ್ಷ್ಣವಾಗಿ ಬಿಡುತ್ತಾರೆ. ಕನ್ಯೆ ಅಥವಾ ಕುಮಾರಿಗೆ ಗೃಹಸ್ಥಿ ಎಂದು ಹೇಳುವುದಿಲ್ಲ ಮತ್ತು ಯಾರು ವಾನಪ್ರಸ್ಥಿಗಳಿದ್ದಾರೆಯೋ ಅವರು 60 ವರ್ಷಗಳ ನಂತರ ಎಲ್ಲವನ್ನೂ ಮಕ್ಕಳಿಗೆ ಕೊಟ್ಟು ತಾನು ಯಾವುದಾದರೂ ಸಾಧು ಮೊದಲಾದವರ ಸಂಗದಲ್ಲಿ ಹೋಗಿ ಇರುತ್ತಾರೆ. ಇತ್ತೀಚೆಗಂತೂ ತಮೋಪ್ರಧಾನರಾಗಿದ್ದಾರೆ, ಆ ಕಾರಣ ಸಾಯುವವರೆಗೂ ಉದ್ಯೋಗ-ವ್ಯವಹಾರವನ್ನು ಬಿಡುವುದಿಲ್ಲ ಮೊದಲಿಗೆ 60 ವರ್ಷಗಳಿಗೆ ವಾನಪ್ರಸ್ಥ ಸ್ಥಿತಿಯಲ್ಲಿ ಹೊರಟು ಹೋಗುತ್ತಿದ್ದರು, ಹೋಗಿ ಕಾಶಿಯಲ್ಲಿರುತ್ತಿದ್ದರು. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಸದ್ಗತಿಯನ್ನು ಪಡೆಯಲು ಸಾಧ್ಯವಿಲ್ಲ.
ತಂದೆಯೇ ಮುಕ್ತಿ-ಜೀವನ್ಮುಕ್ತಿದಾತನಾಗಿದ್ದಾರೆ, ಅದರಲ್ಲಿಯೂ ಎಲ್ಲರೂ ಜೀವನ್ಮುಕ್ತಿಯನ್ನು ಪಡೆಯುವುದಿಲ್ಲ. ಕೆಲವರು ಮುಕ್ತಿಯಲ್ಲಿ ಹೋಗುತ್ತಾರೆ, ಈಗ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ. ಯಾರೆಷ್ಟಾದರೂ ಪುರುಷಾರ್ಥ ಮಾಡಬಹುದು, ಅದರಲ್ಲಿಯೂ ಕುಮಾರಿಯರಿಗೆ ಒಳ್ಳೆಯ ಅವಕಾಶವಿದೆ. ಪಾರಲೌಕಿಕ ತಂದೆಗೆ ವಾರಸುಧಾರರಾಗಿ ಬಿಡುತ್ತಾರೆ. ಇಲ್ಲಂತೂ ಎಲ್ಲಾ ಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗಿದ್ದಾರೆ.
ಲೌಕಿಕ ದಲ್ಲಾದರೆ ಕನ್ಯೆಯರಿಗೆ ಆಸ್ತಿಯು ಸಿಗುವುದಿಲ್ಲ. ಮಕ್ಕಳಿಗೆ ಲಾಲಸೆ ಇರುತ್ತದೆ. ಭಲೆ ಇಂತಹವರೂ ಇದ್ದಾರೆ, ಇದು ಆಸ್ತಿಯು ಸಿಗುತ್ತದೆ. ಅದನ್ನೂ ತೆಗೆದುಕೊಳ್ಳೋಣ, ಅದನ್ನೂ ಏಕೆ ಬಿಡುವುದು ಎಂದು ತಿಳಿದುಕೊಳ್ಳುತ್ತಾರೆ. ಎರಡೂ ಕಡೆ ಓದುತ್ತಾರೆ. ಹೀಗೆ ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ಈಗ ಇದನ್ನಂತೂ ತಿಳಿದುಕೊಂಡಿದ್ದೀರಿ - ಯಾರು ಚೆನ್ನಾಗಿ ಓದುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಪ್ರಜೆಗಳಲ್ಲಿಯೂ ಬಹಳ ಸಾಹುಕಾರರಾಗಿ ಬಿಡುತ್ತಾರೆ. ಇಲ್ಲಿರುವವರಂತೂ ಒಳಗೇ ಇರಬೇಕಾಗುತ್ತದೆ. ಆದ್ದರಿಂದ ಆಗುವುದಾದರೆ ರಾಜ-ರಾಣಿ ಇಲ್ಲವೆಂದರೆ ದಾಸ-ದಾಸಿಯರಾಗಿ ಬಿಡುತ್ತಾರೆ. ಮತ್ತೆ ತ್ರೇತಾದ ಅಂತ್ಯದಲ್ಲಿ 3, 4, 5 ಜನ್ಮಗಳು ರಾಜ್ಯ ಪದವಿ ಸಿಗಬಹುದೇನೋ ಅಷ್ಟೇ! ಅದಕ್ಕಿಂತಲೂ ಆ ಸಾಹುಕಾರರದ್ದೇ ಒಳ್ಳೆಯದು, ಯಾರು ಸತ್ಯಯುಗದಿಂದ ಹಿಡಿದು ಅವರ ಸಾಹುಕಾರಿತನವು ಸ್ಥಿರವಾಗಿರುತ್ತದೆ. ಗೃಹಸ್ಥ ವ್ಯವಹಾರದಲ್ಲಿದ್ದು ಸಾಹುಕಾರಿ ಪದವಿಯನ್ನು ಏಕೆ ಪಡೆಯಬಾರದು? ನಾವು ರಾಜ್ಯ ಪದವಿಯನ್ನು ಪಡೆಯಬೇಕೆಂದು ಪ್ರಯತ್ನ ಪಡುತ್ತಾರೆ ಆದರೆ ಒಂದುವೇಳೆ ಜಾರಿ ಬಿದ್ದರೆ ಪ್ರಜೆಗಳಲ್ಲಿಯಾದರೂ ಒಳ್ಳೆಯ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು, ಅದು ಒಳ್ಳೆಯ ಪದವಿಯಾಯಿತಲ್ಲವೆ. ಇಲ್ಲಿರುವವರಿಗಿಂತಲೂ ಹೊರಗಿರುವವರು ಬಹಳ ಶ್ರೇಷ್ಠ ಪದವಿಯನ್ನು ಪಡೆಯಬಲ್ಲರು. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಪುರುಷಾರ್ಥವನ್ನೆಂದೂ ಮುಚ್ಚಿಡಲು ಸಾಧ್ಯವಿಲ್ಲ. ಪ್ರಜೆಗಳಲ್ಲಿ ಯಾರು ಅತಿ ದೊಡ್ಡ ಸಾಹುಕಾರರಾಗುವರೋ ಅವರೂ ಸಹ ಮುಚ್ಚಿಡಲ್ಪಡಲು ಸಾಧ್ಯವಿಲ್ಲ. ಹೊರಗಿರುವವರಿಗೆ ಕಡಿಮೆ ಪದವಿ ಸಿಗುತ್ತದೆ ಎಂದಲ್ಲ. ಕೊನೆಯಲ್ಲಿ ರಾಜ್ಯ ಪದವಿಯನ್ನು ಪಡೆಯುವುದು ಒಳ್ಳೆಯದೋ ಅಥವಾ ಪ್ರಜೆಗಳಲ್ಲಿ ಆರಂಭದಿಂದ ಹಿಡಿದು ಶ್ರೇಷ್ಠ ಪದವಿಯನ್ನು ಪಡೆಯುವುದು ಒಳ್ಳೆಯದೋ? ಗೃಹಸ್ಥ ವ್ಯವಹಾರದಲ್ಲಿರುವವರಿಗೆ ಇಷ್ಟೊಂದು ಮಾಯೆಯ ಬಿರುಗಾಳಿಗಳು ಬರುವುದಿಲ್ಲ. ಇಲ್ಲಿರುವವರಿಗೆ ಬಹಳ ಬಿರುಗಾಳಿಗಳು ಬರುತ್ತವೆ. ನಾವು ಶಿವ ತಂದೆಯ ಮಡಿಲಿನಲ್ಲಿ ಕುಳಿತಿದ್ದೇವೆಂದು ಸಾಹಸವನ್ನಿಡುತ್ತಾರೆ ಆದರೆ ಸಂಗದೋಷದಲ್ಲಿ ಬಂದು ಓದುವುದಿಲ್ಲ. ಅಂತಿಮದಲ್ಲಿ ಎಲ್ಲವೂ ಅರ್ಥವಾಗಿ ಬಿಡುತ್ತದೆ. ಯಾರು ಯಾವ ಪದವಿಯನ್ನು ಪಡೆಯುತ್ತಾರೆಂದು ಸಾಕ್ಷಾತ್ಕಾರವಾಗುತ್ತದೆ. ನಂಬರ್ವಾರ್ ಓದುತ್ತಾರಲ್ಲವೆ! ಕೆಲವರಂತೂ ತಾವೇ ಸೇವಾಕೇಂದ್ರವನ್ನು ನಡೆಸುತ್ತಾರೆ, ಕೆಲವೊಂದೆಡೆ ಸೇವಾಕೇಂದ್ರವನ್ನು ನಡೆಸುವವರಿಗಿಂತಲೂ ಓದುವವರು ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಮಾಯೆಯ ಬಿರುಗಾಳಿಗಳು ಬರುತ್ತವೆ ಎಂದು ಹೇಳುವುದಲ್ಲ. ವಾಸ್ತವದಲ್ಲಿ ತನ್ನ ಚಲನೆ ಸರಿಯಿಲ್ಲ, ಶ್ರೀಮತದಂತೆ ನಡೆಯುವುದಿಲ್ಲ. ಲೌಕಿಕದಲ್ಲಿಯೂ ಇದೇ ರೀತಿಯಾಗುತ್ತದೆ, ಶಿಕ್ಷಕರು ಅಥವಾ ತಂದೆ-ತಾಯಿಯ ಮತದಂತೆ ನಡೆಯುವುದಿಲ್ಲ. ನೀವಂತೂ ಇಂತಹ ತಂದೆಯ ಮಕ್ಕಳಾಗಿದ್ದೀರಿ, ಅವರಿಗೆ ಯಾರೂ ತಂದೆಯಿಲ್ಲ, ಅಲ್ಲಂತೂ ಹೊರಗಡೆ ಬಹಳ ಹೋಗಬೇಕಾಗುತ್ತದೆ. ಕೆಲವು ಮಕ್ಕಳು ಸಂಗದೋಷದಲ್ಲಿ ಸಿಲುಕುತ್ತಾರೆ ಆದ್ದರಿಂದ ಅನುತ್ತೀರ್ಣರಾಗಿ ಬಿಡುತ್ತಾರೆ. ಮಾಯೆಯ ಬಿರುಗಾಳಿಗಳು ಬರುತ್ತವೆಯೆಂದು ಏಕೆ ಹೇಳುತ್ತೀರಿ, ಇದು ತನ್ನದೇ ಮೂರ್ಖತೆಯಾಗಿದೆ. ತಂದೆಯ ಆದೇಶದಂತೆ ನಡೆಯುವುದಿಲ್ಲ, ಈ ರೀತಿಯ ಚಲನೆಯಿಂದ ಅನುತ್ತೀರ್ಣರಾಗಿ ಬಿಡುತ್ತಾರೆ. ಅನೇಕರಿಗೆ ಲಾಲಸೆಯಿರುತ್ತದೆ. ಕೆಲವರಲ್ಲಿ ಕ್ರೋಧ, ಕೆಲವರಲ್ಲಿ ಕಳ್ಳತನದ ಹವ್ಯಾಸವಿರುತ್ತದೆ. ಕೊನೆಯಲ್ಲಿ ಎಲ್ಲವೂ ಅರ್ಥವಾಗುತ್ತದೆ. ಇಂತಿಂತಹವರು ಇಂತಿಂತಹ ಚಲನೆಯ ಕಾರಣ ಹೊರಟು ಹೋದರು. ಶೂದ್ರ ಕುಲದವರಾಗಿ ಬಿಟ್ಟರು ಎಂದು ತಿಳಿಯಲಾಗುತ್ತದೆ. ಅಂತಹವರಿಗೆ ಮತ್ತೆ ಬ್ರಾಹ್ಮಣರು ಎಂದು ಹೇಳುವುದಿಲ್ಲ, ಅವರು ಹೋಗಿ ಶೂದ್ರರಾದರು. ವಿದ್ಯಾಭ್ಯಾಸವನ್ನೇ ಬಿಟ್ಟು ಬಿಟ್ಟರು. ಸ್ವಲ್ಪ ಜ್ಞಾನವನ್ನು ಕೇಳಿದರೂ ಸಹ ಪ್ರಜೆಗಳಲ್ಲಿ ಬಂದು ಬಿಡುತ್ತಾರೆ. ದೊಡ್ಡ ವೃಕ್ಷವಾಗಿದೆ, ಎಲ್ಲೆಲ್ಲಿಂದಲೋ ಬರುತ್ತಾರೆ. ಯಾರು ದೇವಿ-ದೇವತಾ ಧರ್ಮದವರು ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆಯೋ ಅವರು ಪುನಃ ಬರುತ್ತಾರೆ. ಅನೇಕರು ಬರುತ್ತಾರೆ, ಆಗ ಎಲ್ಲರಿಗೂ ಆಶ್ಚರ್ಯವಾಗುತ್ತದೆ. ಅನ್ಯ ಧರ್ಮದವರೂ ಸಹ ಮುಕ್ತಿಯ ಆಸ್ತಿಯನ್ನಂತೂ ತೆಗೆದುಕೊಳ್ಳುತ್ತಾರಲ್ಲವೆ. ಇಲ್ಲಿ ಯಾರು ಬೇಕಾದರೂ ಬರಬಹುದು, ತಮ್ಮ ಮನೆತನದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವುದಿದ್ದರೆ ಅವರೂ ಸಹ ಬಂದು ಲಕ್ಷ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ತಂದೆಯು ನಿಮಗೆ ಸಾಕ್ಷಾತ್ಕಾರ ಮಾಡಿಸಿದ್ದರು - ಅವರೂ ಸಹ ಬಂದು ಕೊನೆಗೆ ಲಕ್ಷ್ಯವನ್ನು ತೆಗೆದುಕೊಂಡು ಹೋಗುತ್ತಾರೆ. ಇಲ್ಲಿದ್ದು ಲಕ್ಷ್ಯದಂತೆ ಇರಲು ಸಾಧ್ಯವಿಲ್ಲ ಎಂದಲ್ಲ. ಯಾವುದೇ ಧರ್ಮದವರು ಲಕ್ಷ್ಯವನ್ನಿಡಬಹುದು, ತಂದೆಯನ್ನು ನನೆಪು ಮಾಡಿ ಮತ್ತು ಶಾಂತಿಧಾಮವನ್ನು ನೆನಪು ಮಾಡಿದರೆ ತಮ್ಮ ಧರ್ಮದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಎಂದು ಲಕ್ಷ್ಯವು ಸಿಗುತ್ತದೆ. ಅವರಿಗೆ ಜೀವನ್ಮುಕ್ತಿಯಂತೂ ಸಿಗುವುದಿಲ್ಲ. ಅವರು ಅಲ್ಲಿ ಬರುವುದೂ ಇಲ್ಲ. ಅವರಿಗೆ ಇದು ಇಷ್ಟವಾಗುವುದೇ ಇಲ್ಲ. ಯಾರು ಇಲ್ಲಿಯವರಾಗಿದ್ದಾರೆಯೋ ಅವರಿಗೆ ಹೃದಯಕ್ಕೆ ನಾಟುತ್ತದೆ. ಕೊನೆಯಲ್ಲಿ ಆತ್ಮರು ತನ್ನ ತಂದೆಯನ್ನಾದರೂ ಅರಿತುಕೊಳ್ಳಲಿ. ಅನೇಕ ಸೇವಾಕೇಂದ್ರಗಳಲ್ಲಿ ಇಂತಹವರೂ ಇದ್ದಾರೆ ಯಾರಿಗೆ ವಿದ್ಯೆಯ ಮೇಲೂ ಗಮನವಿಲ್ಲ ಅಂದಾಗ ಅಂತಹವರು ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ ಎಂದು ತಿಳಿಯಲಾಗುತ್ತದೆ. ಒಂದುವೇಳೆ ನಿಶ್ಚಯವಿದ್ದಿದ್ದೇ ಆದರೆ ನಮಗೆ ಬಿಡುವಿಲ್ಲವೆಂದು ಹೇಳಲು ಸಾಧ್ಯವಿಲ್ಲ. ಅದೃಷ್ಟದಲ್ಲಿಲ್ಲ ಆದ್ದರಿಂದಲೇ ನಮಗೆ ಬಿಡುವಿಲ್ಲ, ಈ ಕೆಲಸವಿದೆ ಎಂದು ಹೇಳುತ್ತಾರೆ. ಅದೃಷ್ಟದಲ್ಲಿದ್ದರೆ ದಿನ - ರಾತ್ರಿ ಪುರುಷಾರ್ಥ ಮಾಡತೊಡಗುತ್ತಾರೆ. ನಡೆಯುತ್ತಾ-ನಡೆಯುತ್ತಾ ಸಂಗದಲ್ಲಿ ಕೆಟ್ಟು ಹೋಗುತ್ತಾರೆ ಅದಕ್ಕೆ ಗ್ರಹಚಾರಿಯೆಂದೂ ಹೇಳಬಹುದು. ಬೃಹಸ್ಪತಿಯು ದೆಶೆಗೆ ಬದಲಾಗಿ ಮಂಗಳದೆಶೆಯಾಗಿ ಬಿಡುತ್ತದೆ. ಅಂತಹವರು ಮುಂದೆ ಕೆಳಗಿಳಿಯಲೂಬಹುದು. ಕೆಲವರಿಗಂತೂ ತಂದೆಯು ಹೇಳುತ್ತಾರೆ - ಇವರಿಗೆ ರಾಹು ದೆಶೆ ಕುಳಿತಿದೆ, ಭಗವಂತನನ್ನೂ ಒಪ್ಪುವುದಿಲ್ಲವೆಂದು ಹೇಳುತ್ತಾರೆ. ಕೆಲವರು ಈ ಬ್ರಹ್ಮಾರವರೇ ಹೇಳುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಯಾರು ಆದೇಶ ನೀಡುತ್ತಾರೆ ಎಂಬುದು ಮಕ್ಕಳಿಗೆ ಅರ್ಥವಾಗುವುದಿಲ್ಲ, ದೇಹಾಭಿಮಾನ ಇರುವ ಕಾರಣ ಈ ಸಾಕಾರಿ ತಂದೆಯೇ ತಿಳಿಸುತ್ತಾರೆಂದು ತಿಳಿದುಕೊಳ್ಳುತ್ತಾರೆ. ದೇಹೀ-ಅಭಿಮಾನಿಯಾಗಿದ್ದರೆ ಶಿವ ತಂದೆಯು ಏನೆಲ್ಲವನ್ನೂ ಮಾಡುತ್ತಾರೆಯೋ ಅದನ್ನು ನಾವು ಮಾಡಬೇಕೆಂದು ತಿಳಿಯುತ್ತಾರೆ. ಜವಾಬ್ದಾರಿಯು ತಂದೆಯ ಮೇಲಿದೆ. ಶಿವ ತಂದೆಯ ಮತದಂತೆ ನಡೆಯಬೇಕಲ್ಲವೆ. ದೇಹಾಭಿಮಾನದಲ್ಲಿ ಬರುವುದರಿಂದ ಶಿವ ತಂದೆಯನ್ನು ಮರೆತು ಹೋಗುತ್ತಾರೆ. ಅಂದಮೇಲೆ ಮತ್ತೆ ಶಿವ ತಂದೆಯು ಜವಾಬ್ದಾರನಾಗಿರಲು ಸಾಧ್ಯವಿಲ್ಲ. ಅವರ ಆದೇಶವನ್ನಂತೂ ತಲೆಯ ಮೇಲಿಟ್ಟುಕೊಂಡು ಧಾರಣೆ ಮಾಡಬೇಕು ಆದರೆ ಯಾರು ತಿಳಿಸುತ್ತಾರೆಂದು ತಿಳಿದುಕೊಳ್ಳುವುದೇ ಇಲ್ಲ. ಅದರಲ್ಲಿಯೂ ಮತ್ತ್ಯಾರೂ ನಿಮಗೆ ಆಜ್ಞೆ ಮಾಡುವುದಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ - ನಾನೇ ನಿಮಗೆ ಶ್ರೀಮತ ಕೊಡುತ್ತೇನೆ. ಮೊದಲನೆಯದಾಗಿ ನನ್ನನ್ನು ನೆನಪು ಮಾಡಿ ಮತ್ತು ನಾನು ಯಾವ ಜ್ಞಾನವನ್ನು ತಿಳಿಸುತ್ತೇನೆಯೋ ಅದನ್ನು ಧಾರಣೆ ಮಾಡಿಕೊಳ್ಳಿ ಮತ್ತು ಮಾಡಿಸಿ. ಕೇವಲ ಇದೇ ಕಾರ್ಯ ಮಾಡುತ್ತಾ ಇರಿ, ಒಳ್ಳೆಯದು ಬಾಬಾ ತಮ್ಮ ಆಜ್ಞೆಯಂತೆ. ರಾಜರ ಮುಂದೆ ಇರುವವರು “ಆಜ್ಞೆ ಮಹಾಪ್ರಭು" ಎಂದು ಹೇಳುತ್ತಾರೆ, ಆ ರಾಜರು ಆಜ್ಞೆ ಮಾಡುತ್ತಿದ್ದರು. ಇಲ್ಲಂತೂ ಇದು ಶಿವ ತಂದೆಯ ಆಜ್ಞೆಯಾಗಿದೆ. ಪದೇ-ಪದೇ ಹೇಳಬೇಕು -ಬಾಬಾ "ತಮ್ಮ ಆಜ್ಞೆ”. ಆಗ ನಿಮಗೆ ಖುಷಿಯೂ ಇರುವುದು. ಶಿವ ತಂದೆಯು ಆಜ್ಞೆ ನೀಡುತ್ತಾರೆಂದು ತಿಳಿಯುತ್ತೀರಿ, ಶಿವ ತಂದೆಯ ನೆನಪಿದ್ದಾಗ ಬುದ್ಧಿಯ ಬೀಗವು ತೆರೆಯುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದು ಅಭ್ಯಾಸವಾಗಿ ಬಿಟ್ಟರೆ ದೋಣಿಯು ಪಾರಾಗುವುದು ಆದರೆ ಇದೇ ಪರಿಶ್ರಮವಾಗಿದೆ, ಪದೇ-ಪದೇ ಮರೆತು ಹೋಗುತ್ತಾರೆ. ಮಾಯೆಯು ಮರೆಸುತ್ತದೆ ಎಂದು ಏಕೆ ಹೇಳಬೇಕು? ನಾವೇ ಮರೆತು ಹೋಗುತ್ತೇವೆ. ಆದ್ದರಿಂದ ಉಲ್ಟಾ ಕೆಲಸಗಳು ಆಗುತ್ತಿರುತ್ತವೆ. ಅನೇಕ ಕನ್ಯೆಯರಿದ್ದಾರೆ, ಜ್ಞಾನವನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಯೋಗವಿಲ್ಲ ಯಾವುದರಿಂದ ವಿಕರ್ಮ ವಿನಾಶವಾಗುತ್ತದೆ. ಹೀಗೆ ಅನೇಕರು ಒಳ್ಳೊಳ್ಳೆಯ ಮಕ್ಕಳಿದ್ದಾರೆ ಆದರೆ ಯೋಗವಿಲ್ಲ. ಇವರು ಯೋಗದಲ್ಲಿರುವುದಿಲ್ಲ ಮತ್ತೆ ಪಾಪವಾಗಿ ಬಿಡುತ್ತದೆ, ಅದನ್ನು ಅನುಭವಿಸಬೇಕಾಗುತ್ತದೆ ಎಂದು ಚಲನೆಯಿಂದಲೇ ತಿಳಿಯಲಾಗುತ್ತದೆ. ಇದರಲ್ಲಿ ಬಿರುಗಾಳಿಯ ಮಾತಿಲ್ಲ. ತಿಳಿದುಕೊಳ್ಳಿ, ಇದು ನನ್ನ ತಪ್ಪಾಗಿದೆ, ನಾನು ಶ್ರೀಮತದಂತೆ ನಡೆಯುವುದಿಲ್ಲ. ಇಲ್ಲಿ ನೀವು ರಾಜಯೋಗವನ್ನು ಕಲಿಯುವುದಕ್ಕಾಗಿ ಬಂದಿದ್ದೀರಿ. ಪ್ರಜಾಯೋಗವನ್ನು ಕಲಿಸಲಾಗುವುದಿಲ್ಲ. ತಂದೆಯನ್ನು ಅನುಸರಿಸಿ ಆಗ ಸಿಂಹಾಸನಾಧಿಕಾರಿಗಳಾಗುವಿರಿ. ಅವರದಂತೂ ನಿಶ್ಚಿತವಾಗಿದೆ. ಇವರು ಲಕ್ಷ್ಮಿ -ನಾರಾಯಣರಾಗುತ್ತಾರೆ ಅಂದಮೇಲೆ ಆ ಮಾತಾಪಿತರನ್ನು ಫಾಲೋ ಮಾಡಿ. ಅನ್ಯ ಧರ್ಮದವರು ಮಾತಾಪಿತರನ್ನು ಫಾಲೋ ಮಾಡುವುದಿಲ್ಲ. ಅವರು ತಂದೆಯನ್ನೇ ಒಪ್ಪುತ್ತಾರೆ, ಇಲ್ಲಂತೂ ಇಬ್ಬರೂ ಇದ್ದಾರೆ. ತಂದೆಯು ರಚಯಿತನಾಗಿದ್ದಾರೆ, ತಾಯಿಯದೆಲ್ಲವೂ ಗುಪ್ತ ರಹಸ್ಯವಾಗಿದೆ. ತಂದೆ-ತಾಯಿಯು ಓದಿಸುತ್ತಾ ಇರುತ್ತಾರೆ, ಹೀಗೆ ಮಾಡಿ, ಹೀಗೆ ಮಾಡಬೇಡಿ ಎಂದು ತಿಳಿಸುತ್ತಾರೆ. ಶಿಕ್ಷಕರು ಯಾವುದೇ ಶಿಕ್ಷೆ ಕೊಡುವುದಾದರೆ ಶಾಲೆಯ ಮಧ್ಯದಲ್ಲಿಯೇ ಕೊಡುತ್ತಾರಲ್ಲವೆ. ಆದರೆ ನನ್ನ ಗೌರವವನ್ನು ಕಳೆಯುತ್ತೀರಿ ಎಂದು ಮಕ್ಕಳು ಹೇಳುವರೇ? ತಂದೆಯು 5-6 ಮಂದಿ ಮಕ್ಕಳ ಮುಂದೆಯೇ ಪೆಟ್ಟು ಕೊಡುವರು ಆದರೆ 5-6 ಮಂದಿ ಮುಂದೆ ಏಕೆ ಹೊಡೆದಿರಿ ಎಂದು ಮಗುವು ಹೇಳುವುದಿಲ್ಲ. ಇಲ್ಲಂತೂ ಮಕ್ಕಳಿಗೆ ಶಿಕ್ಷಣ ಕೊಡಲಾಗುವುದು, ಆದರೂ ನಡೆಯಲಿಲ್ಲವೆಂದರೆ ಹೋಗಿ ಗೃಹಸ್ಥ ವ್ಯವಹಾರದಲ್ಲಿದ್ದು ಪುರುಷಾರ್ಥ ಮಾಡಿ. ಒಂದುವೇಳೆ ಇಲ್ಲಿ ಕುಳಿತು ಸೇವಾಭಂಗ ಮಾಡಿದರೆ ಇರುವ ಅಲ್ಪಸ್ವಲ್ಪ ಪುಣ್ಯವೂ ಸಹ ಸಮಾಪ್ತಿಯಾಗುವುದು. ಆದ್ದರಿಂದ ಓದದಿದ್ದರೆ ಬಿಟ್ಟು ಬಿಡಿ. ನಾವಿನ್ನು ನಡೆಯಲಾಗುವುದಿಲ್ಲ ಎಂದು ಹೇಳಿರಿ. ಅದಕ್ಕೆ ಬದಲಾಗಿ ನಿಂದನೆಯನ್ನೇಕೆ ಮಾಡಬೇಕು! ಅನೇಕ ಮಕ್ಕಳಿದ್ದಾರೆ, ಕೆಲವರು ಓದುತ್ತಾರೆ, ಕೆಲವರು ಬಿಟ್ಟು ಬಿಡುತ್ತಾರೆ. ಪ್ರತಿಯೊಬ್ಬರೂ ತನ್ನ ವಿದ್ಯೆಯಲ್ಲಿ ಮಸ್ತರಾಗಿರಬೇಕು. ತಂದೆಯು ತಿಳಿಸುತ್ತಾರೆ - ಒಬ್ಬರು ಇನ್ನೊಬ್ಬರಿಂದ ಸೇವೆಯನ್ನು ತೆಗೆದುಕೊಳ್ಳಬೇಡಿ. ಇನ್ನೊಬ್ಬರಿಂದ ಸೇವೆಯನ್ನು ತೆಗೆದುಕೊಳ್ಳುವುದೂ ಸಹ ದೇಹ ಅಹಂಕಾರವಾಗಿದೆ. ತಂದೆಯು ತಿಳಿಸಬೇಕಾಗುತ್ತದೆಯಲ್ಲವೆ. ಇಲ್ಲದಿದ್ದರೆ ಕೊನೆಯಲ್ಲಿ ಧರ್ಮರಾಜ ಸಭೆಯು ಕುಳಿತಾಗ ನಮಗೆ ಕಾಯಿದೆ-ಕಾನೂನಿನ ಬಗ್ಗೆ ಗೊತ್ತೇ ಇರಲಿಲ್ಲವೆಂದು ಹೇಳಿ ಬಿಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಸಾಕ್ಷಾತ್ಕಾರ ಮಾಡಿಸಿ ಶಿಕ್ಷೆ ಕೊಡುತ್ತೇನೆ. ಸಾಕ್ಷಿಯಿಲ್ಲದೆ ಶಿಕ್ಷೆ ಸಿಗುವುದಿಲ್ಲ, ಕಲ್ಪದ ಹಿಂದಿನ ತರಹ ಚೆನ್ನಾಗಿ ತಿಳಸುವವರು ಅನೇಕರಿದ್ದಾರೆ. ಪ್ರತಿಯೊಬ್ಬರ ಅದೃಷ್ಟವನ್ನು ನೋಡಲಾಗುತ್ತದೆ. ಕೆಲವರು ಸರ್ವಿಸ್ ಮಾಡಿ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಅದೃಷ್ಟಕ್ಕೆ ಬರೆಯೆಳೆದುಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಕ ಮಕ್ಕಳಿಗೆ ಆತ್ಮೀಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆ, ಶಿಕ್ಷಕ, ಸದ್ಗುರುವಿನ ಮೂಲಕ ಯಾವ ಶಿಕ್ಷಣ ಸಿಗುತ್ತದೆಯೋ ಅದರಂತೆಯೇ ನಡೆಯಬೇಕಾಗಿದೆ. ಮಾಯೆಯನ್ನು ದೋಷಿಯನ್ನಾಗಿ ಮಾಡದೆ ತನ್ನ ನಿರ್ಬಲತೆಗಳನ್ನು ಪರಿಶೀಲನೆ ಮಾಡಿ ಅವನ್ನು ತೆಗೆಯಬೇಕಾಗಿದೆ.
2. ಅಹಂಕಾರದ ತ್ಯಾಗ ಮಾಡಿ ತನ್ನ ವಿದ್ಯಾಭ್ಯಾಸದಲ್ಲಿ ಮಸ್ತರಾಗಿರಬೇಕಾಗಿದೆ. ಎಂದೂ ಅನ್ಯರಿಂದ ಸೇವೆ ತೆಗೆದುಕೊಳ್ಳಬಾರದು. ಸಂಗದೋಷದಿಂದ ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ . ಇಂದು ತ್ರಿಮೂರ್ತಿ ಶಿವ ಜಯಂತಿ ಸೋ ಬ್ರಾಹ್ಮಣ ಜಯಂತಿ ಸೋ ಸಂಗಮಯುಗ ಜಯಂತಿಯ ಶುಭ ದಿವಸವಾಗಿದೆ. ಇಂತಹವರು ಅನೇಕರಿದ್ದಾರೆ - ಯಾರಿಗೆ ತಂದೆಯು ಈಶ್ವರೀಯ ಜನ್ಮಸಿದ್ಧ ಅಧಿಕಾರದ ಶುಭಾಷಯಗಳನ್ನೂ ಕೊಡಲು ಸಾಧ್ಯವಿಲ್ಲ. ಏಕೆಂದರೆ ಶಿವ ತಂದೆ ಯಾರು? ಅವರಿಂದ ಏನು ಸಿಗುತ್ತದೆ? ಎಂಬುದೇ ಅನೇಕರಿಗೆ ಗೊತ್ತಿಲ್ಲ ಅಂದಮೇಲೆ ಅವರು ಶುಭಾಷಯಗಳನ್ನೇನು ತಿಳಿದುಕೊಳ್ಳುವರು? ಹೊಸ ಮಕ್ಕಳು ಏನನ್ನೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಜ್ಞಾನದ ನರ್ತನವಾಗಿದೆ. ಶ್ರೀಕೃಷ್ಣನು ನರ್ತನ ಮಾಡುತ್ತಿದ್ದನೆಂದು ಹೇಳುತ್ತಾರಲ್ಲವೆ. ಇಲ್ಲಿ ಮಕ್ಕಳು ರಾಧೆ-ಕೃಷ್ಣರಾಗಿ ನರ್ತನ ಮಾಡುತ್ತಾರೆ ನೃತ್ಯದ ಮಾತೇ ಇಲ್ಲ. ಅದು ಕೇವಲ ಸತ್ಯಯುಗದಲ್ಲಿ ಬಾಲ್ಯದಲ್ಲಿ ರಾಜಕುಮಾರ-ಕುಮಾರಿಯರ ಜೊತೆ ನರ್ತನ ಮಾಡುತ್ತಾರೆ. ಮಕ್ಕಳಿಗೆ ತಿಳಿದಿದೆ - ಇವರು ಬಾಪ್ದಾದಾ ಆಗಿದ್ದಾರೆ ದಾದಾರವರಿಗೆ ಗ್ರಾಂಡ್ ಫಾದರ್ ಎಂದು ಹೇಳಲಾಗುತ್ತದೆ. ಈ ದಾದಾರವರಂತೂ ಸಾಕಾರ ತಂದೆಯಾದರು. ಇಲ್ಲಿ ಬಹಳ ವಿಚಿತ್ರ ಮಾತಾಗಿದೆ. ಅವರು ಆತ್ಮಿಕ ದಾದಾ (ತಾತ) ಮತ್ತು ಇವರು ಶಾರೀರಿಕ ದಾದಾ ಆಗಿದ್ದಾರೆ. ಇವರಿಗೆ ಬಾಪ್ ದಾದಾ ಎಂದು ಹೇಳುತ್ತಾರೆ. ತಂದೆಯಿಂದ ದಾದಾರವರ ಮೂಲಕ ಆಸ್ತಿಯು ಸಿಗುತ್ತದೆ. ಇದು ತಾತನ ಆಸ್ತಿಯಾಗಿದೆ. ಎಲ್ಲಾ ಆತ್ಮ ಸಹೋದರರಾಗಿದ್ದೀರಿ ಆದ್ದರಿಂದ ಆಸ್ತಿಯು ತಂದೆಯಿಂದ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನೀವಾತ್ಮರಿಗೆ ತಮ್ಮ ಶರೀರ, ತಮ್ಮ ಕರ್ಮೇಂದ್ರಿಯಗಳಿವೆ. ನನಗೆ ನಿರಾಕಾರನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಶರೀರವು ಬೇಕಲ್ಲವೆ. ಆಗಲೇ ಮಕ್ಕಳಿಗೆ ರಾಜಯೋಗವನ್ನು ಕಲಿಸುವೆನು ಅಥವಾ ಮನುಷ್ಯರಿಂದ ದೇವತೆ, ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುವೆನು ಹಾಗೂ ಕೊಳಕಾದ ಬಟ್ಟೆಯನ್ನು ಒಗೆಯುವೆನು.... ಅಂದಾಗ ತಂದೆಯು ಅವಶ್ಯವಾಗಿ ದೊಡ್ಡ ದೋಬಿ (ಅಗಸ) ಯಾಗಿರುವರು. ಇಡೀ ವಿಶ್ವದ ಆತ್ಮರನ್ನು ಮತ್ತು ಶರೀರವನ್ನು ತೊಳೆಯುತ್ತಾರೆ. ಜ್ಞಾನ ಮತ್ತು ಯೋಗದಿಂದ ನೀವು ಆತ್ಮರನ್ನು ಸ್ವಚ್ಚ ಮಾಡಲಾಗುತ್ತದೆ. ಇಂದು ನೀವು ಮಕ್ಕಳು ಬಂದಿದ್ದೀರಿ, ನಿಮಗೆ ತಿಳಿದಿದೆ - ನಾವು ಶಿವ ತಂದೆಗೆ ಶುಭಾಶಯಗಳನ್ನು ನೀಡಲು ಬಂದಿದ್ದೇವೆ. ಮತ್ತೆ ತಂದೆಯು ತಿಳಿಸುತ್ತಾರೆ - ನೀವು ಯಾರಿಗೆ ಶುಭಾಷಯಗಳನ್ನು ಹೇಳುತ್ತೀರೋ ಆ ತಂದೆಯೂ ಸಹ ನೀವು ಮಕ್ಕಳಿಗೆ ಶುಭಾಷಯಗಳನ್ನು ಹೇಳುವರು ಏಕೆಂದರೆ ನೀವು ಬಹಳ ಸರ್ವೋತ್ತಮ ಸೌಭಾಗ್ಯಶಾಲಿ ಬ್ರಾಹ್ಮಣ ಕುಲಭೂಷಣ ಆಗಿದ್ದೀರಿ. ನೀವೆಷ್ಟು ಉತ್ತಮರಾಗಿದ್ದೀರೋ ಅಷ್ಟು ದೇವತೆಗಳೂ ಸಹ ಉತ್ತಮರಾಗಿರುವುದಿಲ್ಲ. ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ, ಮತ್ತೆ ಅವರು ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ. ಅವರ ಮಕ್ಕಳು ನೀವು ಬಹಳ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣರಾಗುತ್ತೀರಿ. ಬ್ರಾಹ್ಮಣರದು ಶಿಖೆಯಾಗಿದೆ, ಅದರ ಕೆಳಗೆ ದೇವತೆಗಳಿದ್ದಾರೆ. ಎಲ್ಲರಿಗಿಂತ ಮೇಲೆ ತಂದೆಯಿದ್ದಾರೆ, ತಂದೆಯು ನೀವು ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡಲು ನಿಮ್ಮನ್ನು ಬ್ರಾಹ್ಮಣ-ಬ್ರಾಹ್ಮಣಿಯರನ್ನಾಗಿ ಮಾಡಿದ್ದಾರೆ. ನೋಡಿ! ಈ ಲಕ್ಷ್ಮಿ - ನಾರಾಯಣರಿಗೆ ಎಷ್ಟೊಂದು ಮಂದಿರಗಳನ್ನು ಕಟ್ಟಿಸಿದ್ದಾರೆ, ತಲೆ ಬಾಗುತ್ತಾರೆ. ಭಾರತ ವಾಸಿಗಳಿಗೆ ಇದು ತಿಳಿದಿರಬೇಕು - ಇವರೂ ಮನುಷ್ಯರಾಗಿದ್ದಾರೆ, ಲಕ್ಷ್ಮೀ-ನಾರಾಯಣ ಇಬ್ಬರೂ ಬೇರೆ-ಬೇರೆಯಾಗಿದ್ದಾರೆ. ಇಲ್ಲಂತೂ ಒಬ್ಬ ಮನುಷ್ಯನಿಗೆ ಎರಡು ಹೆಸರುಗಳನ್ನು ಇಟ್ಟಿರುತ್ತಾರೆ. ಒಬ್ಬರ ಹೆಸರೇ ಲಕ್ಷ್ಮಿ -ನಾರಾಯಣ ಅರ್ಥಾತ್ ತಮ್ಮನ್ನು ವಿಷ್ಣು ಚತುರ್ಭುಜನೆಂದು ಹೇಳುತ್ತಾರೆ. ಲಕ್ಷ್ಮೀ ನಾರಾಯಣ ಅಥವಾ ರಾಧಾ ಕೃಷ್ಣ ಎಂದು ಹೆಸರನ್ನಿಟ್ಟುಕೊಂಡರೆ ಚತುರ್ಭುಜನಾದರಲ್ಲವೆ. ಈ ವಿಷ್ಣು ಚಿತ್ರವು ಸೂಕ್ಷ್ಮ ವತನದ ಗುರಿ-ಧ್ಯೇಯವಾಗಿದೆ. ನೀವು ಈ ವಿಷ್ಣು ಪುರಿಯ ಮಾಲೀಕರಾಗುತ್ತೀರಿ, ಲಕ್ಷ್ಮಿ - ನಾರಾಯಣನು ವಿಷ್ಣು ಪುರಿಯ ಮಾಲೀಕರಾಗಿದ್ದಾರೆ. ವಿಷ್ಣುವಿಗೆ ನಾಲ್ಕು ಭುಜಗಳಿವೆ, ಎರಡು ಲಕ್ಷ್ಮಿಯದು, ಎರಡು ನಾರಾಯಣನದು. ನಾವು ವಿಷ್ಣು ಪುರಿಯ ಮಾಲೀಕರಾಗುತ್ತಿದ್ದೇವೆಂದು ನೀವು ಹೇಳುತ್ತೀರಿ.
ಒಳ್ಳೆಯದು - ತಂದೆಯ ಮಹಿಮೆಯ ಗೀತೆಯನ್ನು ತಿಳಿಸಿ. ಇಡೀ ಪ್ರಪಂಚದಲ್ಲಿ ಆದಿಯಿಂದ ಹಿಡಿದು ಇಲ್ಲಿನವರೆಗೆ ಒಬ್ಬ ತಂದೆಯನ್ನು ಬಿಟ್ಟರೆ ಬೇರೆ ಯಾರಿಗೂ ಇಷ್ಟೊಂದು ಮಹಿಮೆಯಿಲ್ಲ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಎಲ್ಲರಿಗಿಂತ ಹೆಚ್ಚು ಸರ್ವೋತ್ತಮ ಮಹಿಮೆಯು ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನಿಗಿದೆ. ನೀವೆಲ್ಲರೂ ಅವರ ಮಕ್ಕಳಾಗಿದ್ದೀರಿ. ನಾವು ಈಶ್ವರನ ಸಂತಾನರೆಂದು ಹೇಳುತ್ತೀರಿ, ಈಶ್ವರನಂತೂ ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ನೀವೇಕೆ ನರಕದಲ್ಲಿದ್ದೀರಿ! ಇಲ್ಲಿ ಈಶ್ವರನ ಜನ್ಮವಾಗಿದೆ. ನಾವು ಕ್ರಿಶ್ಚಿಯನ್ನರಾಗಿದ್ದೇವೆಂದು ಕ್ರಿಶ್ಚಿಯನ್ನರು ಹೇಳುತ್ತಾರೆ. ಭಾರತವಾಸಿಗಳಿಗೆ ನಾವು ಪರಮಪಿತ ಪರಮಾತ್ಮ ಶಿವನ ಡೈರೆಕ್ಟ್ ಮಕ್ಕಳಾಗಿದ್ದೇವೆ ಎಂಬುದೇ ಮರೆತು ಹೋಗಿದೆ. ತಂದೆಯು ಮಕ್ಕಳನ್ನು ತನ್ನವರನ್ನಾಗಿ ಮಾಡಿಕೊಂಡು ರಾಜ್ಯಭಾಗ್ಯವನ್ನು ಕೊಡಲು ಇಲ್ಲಿಗೆ ಬರುತ್ತಾರೆ. ಇಂದು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ ಏಕೆಂದರೆ ಬಹಳ ಮಂದಿ ಹೊಸಬರಿದ್ದಾರೆ. ಇವರಿಗೆ ತಿಳಿದುಕೊಳ್ಳುವುದು ಕಷ್ಟವಾಗುತ್ತದೆ, ಆದರೂ ಸಹ ಸ್ವರ್ಗವಾಸಿಗಳಂತೂ ಆಗುತ್ತಾರೆ. ಸ್ವರ್ಗದಲ್ಲಿ ಸೂರ್ಯವಂಶಿಯರೂ ಇರುತ್ತಾರೆ. ದಾಸ ದಾಸಿಯರೂ ಇರುತ್ತಾರೆ. ಪ್ರಜೆಗಳೂ ಇರುತ್ತಾರೆ. ಅದರಲ್ಲಿ ಕೆಲವರು ಬಡವರು, ಕೆಲವರು ಸಾಹುಕಾರರಿರುತ್ತಾರೆ. ಅವರಿಗೂ ದಾಸ-ದಾಸಿಯರಿರುತ್ತಾರೆ. ಇಡೀ ರಾಜಧಾನಿಯು ಇಲ್ಲಿ ಸ್ಥಾಪನೆಯಾಗುತ್ತಿದೆ. ಇದು ಮತ್ತ್ಯಾರಿಗೂ ತಿಳಿದಿಲ್ಲ. ಎಲ್ಲರ ಆತ್ಮವು ತಮೋಪ್ರಧಾನವಾಗಿದೆ. ಯಾರಿಗೂ ಜ್ಞಾನದ ಮೂರನೇ ನೇತ್ರವಿಲ್ಲ. (ಹಾಡು) ಈಗ ತಂದೆಯ ಮಹಿಮೆಯನ್ನು ಕೇಳಿದಿರಿ. ಅವರು ಎಲ್ಲರ ತಂದೆಯಾಗಿದ್ದಾರೆ. ಭಗವಂತನಿಗೆ ಬೇಹದ್ದಿನ ಸುಖ ಕೊಡುವಂತಹ ಪಿತನೆಂದು ಹೇಳುತ್ತಾರೆ, ಇದೇ ಭಾರತದಲ್ಲಿಯೇ ಬೇಹದ್ದಿನ ಸುಖವಿತ್ತು, ಲಕ್ಷ್ಮಿ - ನಾರಾಯಣರ ರಾಜ್ಯವಿತ್ತು. ಈ ಲಕ್ಷ್ಮಿ -ನಾರಾಯಣರು ಬಾಲ್ಯದಲ್ಲಿ ರಾಧೆ-ಕೃಷ್ಣರಾಗಿರುತ್ತಾರೆ. ಮತ್ತೆ ಸ್ವಯಂವರದ ನಂತರ ಲಕ್ಷ್ಮಿ - ನಾರಾಯಣರೆಂಬ ಹೆಸರು ಬರುತ್ತದೆ. ಈ ಭಾರತದಲ್ಲಿ 5000 ವರ್ಷಗಳ ಮೊದಲು ದೇವತೆಗಳ ರಾಜ್ಯವಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಬಿಟ್ಟು ಮತ್ತಾವುದೇ ರಾಜ್ಯವಿರಲಿಲ್ಲ, ಯಾವುದೇ ಖಂಡವಿರಲಿಲ್ಲ ಅಂದಮೇಲೆ ಈಗ ಭಾರತವಾಸಿಗಳಿಗೂ ಸಹ ಅವಶ್ಯವಾಗಿ ಇದು ಅರ್ಥವಾಗಬೇಕು - ಲಕ್ಷ್ಮೀ-ನಾರಾಯಣರು ಮೊದಲ ಜನ್ಮದಲ್ಲಿ ಯಾವ ಕರ್ಮ ಮಾಡಿದರು? ಹೇಗೆ ಬಿರ್ಲಾದವರು ಯಾವ ಕರ್ಮ ಮಾಡಿದ ಕಾರಣ ಇಷ್ಟು ಧನವಂತರಾದರು! ಎಂದು ಹೇಳುತ್ತಾರೆ. ಅವಶ್ಯವಾಗಿ ಮೊದಲ ಜನ್ಮದಲ್ಲಿ ದಾನ-ಪುಣ್ಯವನ್ನು ಮಾಡಿರಬೇಕು. ಕೆಲವರ ಬಳಿ ಬಹಳಷ್ಟು ಹಣವಿದೆ. ಇನ್ನೂ ಕೆಲವರಿಗೆ ತಿನ್ನುವುದಕ್ಕೂ ಸಿಗುವುದಿಲ್ಲ ಏಕೆಂದರೆ ಅಂತಹ ಕರ್ಮ ಮಾಡಿದ್ದಾರೆ. ಕರ್ಮಗಳನ್ನಂತೂ ನೀವು ಒಪ್ಪುತ್ತೀರಿ. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ಗೀತೆಯ ಭಗವಂತನು ತಿಳಿಸಿದ್ದರು ಯಾರ ಮಹಿಮೆಯನ್ನು ನೀವೀಗ ಕೇಳಿದಿರಿ. ಶಿವ ಭಗವಂತನು ಒಬ್ಬರೇ ಆಗಿದ್ದಾರೆ, ಮನುಷ್ಯರಿಗೆ ಭಗವಂತನೆಂದು ಹೇಳುವುದಿಲ್ಲ. ಈಗ ತಂದೆಯು ಎಲ್ಲಿ ಬಂದಿದ್ದಾರೆ ! ತಿಳಿಸುತ್ತಾರೆ - ಸನ್ಮುಖದಲ್ಲಿ ಮಹಾಭಾರತ ಯುದ್ಧವು ನಿಂತಿದೆ. ಆದ್ದರಿಂದ ಮಧುರಾತಿ ಮಧುರ ತಂದೆಯು ತಿಳಿಸುತ್ತಾರೆ, ಇವರನ್ನು ದುಃಖದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಇಲ್ಲ.... ಶಿವ ತಂದೆಯನ್ನು ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಸುಖದಲ್ಲಿ ಮಾಡುವುದಿಲ್ಲ. ಸ್ವರ್ಗದಲ್ಲಂತೂ ದುಃಖವಿರಲಿಲ್ಲ. ಅಲ್ಲಿ ತಂದೆಯಿಂದ ಪಡೆದ ಆಸ್ತಿಯಿತ್ತು 5000 ವರ್ಷಗಳ ಮೊದಲು ಶಿವ ತಂದೆಯು ಬಂದಾಗ ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದರು, ಈಗ ನರಕವಾಗಿದೆ. ಪುನಃ ಸ್ವರ್ಗವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಪ್ರಪಂಚದವರಿಗಂತೂ ಏನೂ ತಿಳಿದಿಲ್ಲ. ನಾವೆಲ್ಲರೂ ಅಂಧರಾಗಿದ್ದೇವೆ. ಅಂಧರಿಗೆ ಊರುಗೋಲಾಗಿರುವ ಪ್ರಭುವೇ ಬನ್ನಿ, ಬಂದು ನಮಗೆ ಕಣ್ಣುಗಳನ್ನು ಪ್ರಧಾನಿಸಿ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ಎಲ್ಲಿ ನಾವಾತ್ಮರು ಇರುತ್ತೇವೆಯೋ ಅದು ಶಾಂತಿಧಾಮವಾಗಿದೆ, ತಂದೆಯೂ ಅಲ್ಲಿರುತ್ತಾರೆ. ನೀವಾತ್ಮರು ಮತ್ತು ನಾನು ಅಲ್ಲಿರುತ್ತೇವೆ. ಇವರ ಆತ್ಮನಿಗೆ ತಂದೆಯು ತಿಳಿಸುತ್ತಾರೆ - ನೀವೆಲ್ಲಾ ಆತ್ಮರ ತಂದೆಯಾದ ನಾನು ಪರಮಧಾಮದಲ್ಲಿರುತ್ತೇನೆ, ನೀವು ಪುನರ್ಜನ್ಮದ ಪಾತ್ರವನ್ನು ಅಭಿನಯಿಸುತ್ತೀರಿ, ನಾನು ಅಭಿನಯಿಸುವುದಿಲ್ಲ, ನೀವು ವಿಶ್ವದ ಮಾಲೀಕರಾಗುತ್ತೀರಿ, ನಾನಾಗುವುದಿಲ್ಲ. ನೀವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಿಮಗೆ ತಿಳಿಸಿದ್ದೇನೆ, ಹೇ ಮಕ್ಕಳೇ, ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಮನುಷ್ಯರು 84 ಲಕ್ಷ ಜನ್ಮಗಳೆಂದು ಹೇಳುತ್ತಾರೆ. ಇವು ಅಸತ್ಯ ಮಾತುಗಳಾಗಿವೆ. ನಾನು ಜ್ಞಾನ ಸಾಗರ, ಪತಿತ - ಪಾವನನಾಗಿದ್ದೇನೆ, ಯಾವಾಗ ಎಲ್ಲರೂ ಪತಿತರಾಗುವರೋ ಆಗ ನಾನು ಬರುತ್ತೇನೆ. ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತೇನೆ. ಮೊಟ್ಟ ಮೊದಲು ಮನುಷ್ಯರನ್ನು ಹೇಗೆ ರಚಿಸಿದರು? ಭಗವಂತನು ಸೃಷ್ಟಿಯನ್ನು ಹೇಗೆ ರಚಿಸಿದರು? ಎಂದು ಅನೇಕರು ಕೇಳುತ್ತಾರೆ. ಶಾಸ್ತ್ರದಲ್ಲಿಯೂ ತೋರಿಸುತ್ತಾರೆ-ಪ್ರಳಯವಾಯಿತು ನಂತರ ಕೃಷ್ಣನು ಸಾಗರದ ಆಲದ ಎಲೆಯ ಮೇಲೆ ತೇಲಿ ಬಂದನು. ಆದರೆ ತಂದೆಯು ತಿಳಿಸುತ್ತಾರೆ - ಇಂತಹ ಯಾವುದೇ ಮಾತಿಲ್ಲ. ಇದು ಬೇಹದ್ದಿನ ನಾಟಕವಾಗಿದೆ. ಸತ್ಯ-ತ್ರೇತಾಯುಗವು ದಿನವಾಗಿದೆ. ದ್ವಾಪರ-ಕಲಿಯುಗವು ರಾತ್ರಿಯಾಗಿದೆ.
ಮಕ್ಕಳು ತಂದೆಗೆ ಶುಭಾಷಯಗಳನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ತತ್ತ್ವಂ. ನೀವೂ ಸಹ 100% ದೌರ್ಭಾಗ್ಯಶಾಲಿಗಳಿಂದ 100% ಸೌಭಾಗ್ಯಶಾಲಿಗಳಾಗುತ್ತೀರಿ. ನೀವು ಭಾರತವಾಸಿಗಳೇ ಆ ರೀತಿ ಆಗಿದ್ದಿರಿ, ಆದರೆ ನಿಮಗೆ ತಿಳಿದಿಲ್ಲ, ತಂದೆಯು ಬಂದು ತಿಳಿಸುತ್ತಾರೆ. ನೀವು ತಮ್ಮ ಜನ್ಮಗಳನ್ನೂ ಅರಿತುಕೊಂಡಿಲ್ಲ. ನಾನು ಬಂದು ತಿಳಿಸುತ್ತೇನೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ತಂದೆಯು ನಿಮಗೆ ಸಂಗಮದಲ್ಲಿ ಇಡೀ ಸೃಷ್ಟಿಯ ಸಮಾಚಾರವನ್ನು ತಿಳಿಸುತ್ತಾರೆ, ಸತ್ಯಯುಗದಲ್ಲಿ ತಿಳಿಸುವುದಿಲ್ಲ. ಯಾವ ಸಮಯದಲ್ಲಿ ಇನ್ನೂ ಸೃಷ್ಟಿಯ ಆದಿ-ಮಧ್ಯ-ಅಂತ್ಯವೇ ಮುಗಿಯಲ್ಲಿಲ್ಲವೋ ಅದರ ಸಮಾಚಾರವನ್ನು ಹೇಗೆ ತಿಳಿಸುವುದು? ನಾನು, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಶಾಸ್ತ್ರಗಳಲ್ಲಿ ಯುಗೇ ಯುಗೇ ಎಂದು ಬರೆದು ಬಿಟ್ಟಿದ್ದಾರೆ, ಕೃಷ ಭಗವಾನುವಾಚವೆಂದು ಗೀತೆಯಲ್ಲಿ ಬರೆದಿದ್ದಾರೆ. ಎಲ್ಲಾ ಧರ್ಮದವರು ಕೃಷ್ಣನಿಗೆ ಭಗವಂತ ನೆಂದು ಒಪ್ಪುವುದಿಲ್ಲ, ಭಗವಂತನು ನಿರಾಕಾರನಲ್ಲವೆ, ಅವರು ಎಲ್ಲಾ ಆತ್ಮರ ತಂದೆ ಆಗಿದ್ದಾರೆ. ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವೆಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದೀರಿ, ಪರಮಾತ್ಮನಿಗೆ ಸರ್ವವ್ಯಾಪಿಯೆಂದು ಹೇಳುವುದಾದರೆ ವಿಶ್ವ ಪಿತೃತ್ವವಾಗಿ ಬಿಡುತ್ತದೆ. ತಂದೆಗೆ ಎಂದಾದರೂ ಆಸ್ತಿಯು ಸಿಗುತ್ತದೆಯೇ? ಆಸ್ತಿಯು ಮಕ್ಕಳಿಗೆ ಸಿಗುತ್ತದೆ. ನೀವಾತ್ಮರೆಲ್ಲ ಮಕ್ಕಳಾಗಿದ್ದೀರಿ ಅಂದಮೇಲೆ ತಂದೆಯ ಆಸ್ತಿಯು ಖಂಡಿತ ಬೇಕು. ಲೌಕಿಕ ಆಸ್ತಿಯಿಂದ ನೀವು ಖುಷಿಯಾಗುವುದಿಲ್ಲ. ಆದ್ದರಿಂದಲೇ ಕರೆಯುತ್ತೀರಿ, ಬಾಬಾ ನಿಮ್ಮ ಕೃಪೆಯಿಂದ ಅಪಾರ ಸುಖವು ಸಿಕ್ಕಿತ್ತು ಎಂದು. ಈಗ ಪುನಃ ರಾವಣನ ಮೂಲಕ ದುಃಖ ಸಿಗುವುದರಿಂದ ನೀವು ಕೂಗಲಾರಂಭಿಸುತ್ತೀರಿ, ಎಲ್ಲಾ ಆತ್ಮರು ಕರೆಯುತ್ತಾರೆ ಏಕೆಂದರೆ ದುಃಖವಿದೆ ಆದ್ದರಿಂದ ಬಾಬಾ, ಬಂದು ಸುಖವನ್ನು ಕೊಡಿ ಎಂದು ನೆನಪು ಮಾಡುತ್ತಾರೆ. ನೀವೀಗ ಈ ಜ್ಞಾನದಿಂದ ಸ್ವರ್ಗದ ಮಾಲೀಕರಾಗುತ್ತೀರಿ. ನಿಮ್ಮ ಸದ್ಗತಿಯಾಗುತ್ತದೆ ಆದ್ದರಿಂದ ಸರ್ವರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ ಎಂದು ಗಾಯನವಿದೆ. ಈಗ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಮತ್ತೆ ಸರ್ವರ ಸದ್ಗತಿಯಾಗುತ್ತದೆ. ಲಕ್ಷ್ಮೀ ನಾರಾಯಣರಿದ್ದಾಗ ನೀವು ಸ್ವರ್ಗದಲ್ಲಿದ್ದಿರಿ ಉಳಿದೆಲ್ಲರೂ ಮುಕ್ತಿಧಾಮದಲ್ಲಿದ್ದರು. ನಾವೀಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತೇವೆ. ತಂದೆಯು ತಿಳಿಸುತ್ತಾರೆ - ಕಲ್ಪದ ಸಂಗಮಯುಗದಲ್ಲಿ ನಾನು ನಿಮಗೆ ಓದಿಸುತ್ತೇನೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ. ಈಗ ನೀವು ಮಕ್ಕಳಿಗೆ ಇಡೀ ರಹಸ್ಯವನ್ನು ತಿಳಿಸುತ್ತೇನೆ. ಶಿವ ರಾತ್ರಿಯು ಯಾವಾಗ ಆಯಿತು, ಇದು ತಿಳಿದಿರಬೇಕಲ್ಲವೆ. ಏನಾಯಿತು, ಶಿವ ತಂದೆಯು ಯಾವಾಗ ಬಂದರು? ಏನನ್ನೂ ತಿಳಿದುಕೊಂಡಿಲ್ಲ ಅಂದಮೇಲೆ ಕಲ್ಲು ಬುದ್ಧಿಯವರಾದರಲ್ಲವೆ. ನೀವೀಗ ಪಾರಸ ಬುದ್ಧಿಯವರಾಗಿದ್ದೀರಿ, ನಮ್ಮ ಪಾರಸ ಪುರಿಯು ಸತ್ಯಯುಗವಾಗಿತ್ತು, ಲಕ್ಷ್ಮಿ - ನಾರಾಯಣರಿಗೂ ಸಹ ಭಗವಾನ್-ಭಗವತಿಯೆಂದು ಹೇಳುತ್ತಾರೆ. ಅವರಿಗೆ ಆಸ್ತಿಯನ್ನು ಭಗವಂತನು ಕೊಟ್ಟಿದ್ದರು, ಈಗ ಪುನಃ ಕೊಡುತ್ತಿದ್ದಾರೆ. ನಿಮ್ಮನ್ನು ಪುನಃ ಭಗವಾನ್ ಭಗವತಿಯನ್ನಾಗಿ ಮಾಡುತ್ತಿದ್ದಾರೆ. ಈಗ ನಿಮ್ಮದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ತಂದೆಯು ತಿಳಿಸುತ್ತಾರೆ - ವಿನಾಶವು ಸಮ್ಮುಖದಲ್ಲಿ ನಿಂತಿದೆ. ಇದಕ್ಕೆ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ. ಅವೆಲ್ಲವೂ ಸ್ಥೂಲ ಯಜ್ಞಗಳಾಗಿರುತ್ತವೆ, ಇದು ಜ್ಞಾನದ ಮಾತಾಗಿದೆ. ಇದರಲ್ಲಿ ತಂದೆಯು ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ. ನೀವು ಶಿವ ತಂದೆಯ ಅವತರಣೆಗಾಗಿ ಶುಭಾಷಯಗಳನ್ನು ನೀಡುತ್ತೀರಿ ಮತ್ತೆ ತಂದೆಯು ಹೇಳುತ್ತಾರೆ - ಮಕ್ಕಳೇ, ನಾನೊಬ್ಬನೇ ಬರುತ್ತೇನೆಯೇ? ನನಗೂ ಶರೀರ ಬೇಕು ಅಂದಮೇಲೆ ಬ್ರಹ್ಮಾರವರ ತನುವಿನಲ್ಲಿ ಬರಬೇಕಾಗುತ್ತದೆ. ಮೊಟ್ಟ ಮೊದಲು ಸೂಕ್ಷ್ಮವತನವನ್ನು ರಚಿಸಬೇಕಾಗುತ್ತದೆ ಆದ್ದರಿಂದ ಇವರಲ್ಲಿ ಪ್ರವೇಶ ಮಾಡಿದ್ದೇನೆ, ಇವರಂತೂ ಪತಿತನಾಗಿದ್ದರು. 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದಾರೆ. ಎಲ್ಲರೂ ಕರೆಯುತ್ತಿದ್ದಿರಿ, ನಾನೀಗ ಪುನಃ ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ. ತಂದೆಯೇ ಭಾರತಕ್ಕೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಸ್ವರ್ಗದ ಉಡುಗೊರೆಯನ್ನೇ ಕೊಡುತ್ತಾರೆ. ನೀವೀಗ ಸ್ವರ್ಗದ ಮಾಲೀಕರಾಗುತ್ತಿದ್ದೀರಿ. ಭವಿಷ್ಯದಲ್ಲಿ ಮನುಷ್ಯರಿಂದ 21 ಜನ್ಮಗಳಿಗಾಗಿ ದೇವತೆಗಳಾಗುವ ಪಾಠಶಾಲೆಯು ಇದಾಗಿದೆ. ನೀವು ಸ್ವರ್ಗದ ಮಾಲೀಕರಾಗುತ್ತಿದ್ದೀರಿ. 21 ಪೀಳಿಗೆಗಳವರೆಗೆ ನೀವು ಸುಖ ಪಡೆಯುತ್ತೀರಿ, ಅಲ್ಲಿ ಅಕಾಲ ಮೃತ್ಯುವೆಂದೂ ಆಗುವುದಿಲ್ಲ. ಯಾವಾಗ ಶರೀರದ ಆಯಸ್ಸು ಮುಗಿಯುವುದೋ ಆಗ ಸಾಕ್ಷಾತ್ಕಾರವಾಗುತ್ತದೆ. ಸರ್ಪದಂತೆ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈಗ ನೀವು ಮಕ್ಕಳು ತಂದೆಗೆ ಶುಭಾಷಯಗಳನ್ನು ತಿಳಿಸುತ್ತೀರಿ ಮತ್ತೆ ತಂದೆಯು ನಿಮಗೆ ಶುಭಾಷಯಗಳನ್ನು ತಿಳಿಸುತ್ತಾರೆ. ನೀವೀಗ ದೌರ್ಭಾಗ್ಯಶಾಲಿಗಳಿಂದ ಸೌಭಾಗ್ಯಶಾಲಿಗಳಾಗುತ್ತಿದ್ದೀರಿ. ಪತಿತ ಮನುಷ್ಯರಿಂದ ಪಾವನ ದೇವತೆಗಳಾಗುತ್ತೀರಿ, ಚಕ್ರವು ಸುತ್ತುತ್ತದೆ. ಇದನ್ನೇ ನೀವು ಮಕ್ಕಳು ತಿಳಿಸಬೇಕಾಗಿದೆ ಮತ್ತೆ ಈ ಜ್ಞಾನವು ಪ್ರಾಯಲೋಪವಾಗಿ ಬಿಡುತ್ತದೆ. ಸತ್ಯಯುಗದಲ್ಲಿ ಜ್ಞಾನದ ಅವಶ್ಯಕತೆಯಿರುವುದಿಲ್ಲ. ನೀವೀಗ ದುರ್ಗತಿಯಲ್ಲಿದ್ದೀರಿ ಆದ್ದರಿಂದ ಈ ಜ್ಞಾನದಿಂದ ಸದ್ಗತಿ ಸಿಗುತ್ತದೆ. ತಂದೆಯೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಸರ್ವರ ಸದ್ಗುರು ಒಬ್ಬರೇ ತಂದೆಯಾಗಿದ್ದಾರೆ. ಬಾಕಿ ಭಕ್ತಿಮಾರ್ಗದ ಕರ್ಮ ಕಾಂಡದಿಂದ ಯಾರ ಸದ್ಗತಿಯೂ ಆಗುವುದಿಲ್ಲ. ಎಲ್ಲರೂ ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ಭಾರತವು ಸತೋಪ್ರಧಾನವಾಗಿತ್ತು ನಂತರ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು, ಈಗ ಪುನಃ ನೀವು ಮೇಲೇರಬೇಕಾಗಿದೆ. ತಮ್ಮ ಮನೆಯಾದ ಮುಕ್ತಿಧಾಮಕ್ಕೆ ಹೋಗಬೇಕಾಗಿದೆ. ಈಗ ನಾಟಕವು ಪೂರ್ಣವಾಗುತ್ತದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಡುವುದು. ಭಾರತಕ್ಕೆ ಅವಿನಾಶಿ ಖಂಡವೆಂದು ಹೇಳಲಾಗುತ್ತದೆ. ತಂದೆಯ ಜನ್ಮ ಸ್ಥಾನವೆಂದೂ ಸಮಾಪ್ತಿಯಾಗುವುದಿಲ್ಲ. ನೀವು ಶಾಂತಿಧಾಮದಲ್ಲಿ ಹೋಗಿ ಮತ್ತೆ ಬರುತ್ತೀರಿ. ಬಂದು ರಾಜ್ಯ ಮಾಡುತ್ತೀರಿ. ಪಾವನ ಮತ್ತು ಪತಿತರು ಭಾರತದಲ್ಲಿಯೇ ಆಗುತ್ತಾರೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ, ಯೋಗಿಗಳಿಂದ ಭೋಗಿಗಳಾಗಿದ್ದೀರಿ. ಇದು ರೌರವ ನರಕವಾಗಿದೆ, ಮಹಾನ್ ದುಃಖದ ಸಮಯವಾಗಿದೆ. ಈಗಂತೂ ಬಹಳ ದುಃಖವು ಬರುವುದಿದೆ. ರಕ್ತ ಕ್ರಾಂತಿಯಾಗುವುದು, ಕುಳಿತು-ಕುಳಿತಿದ್ದಂತೆಯೇ ಬಾಂಬುಗಳು ಬೀಳುತ್ತವೆ. ನೀವೇನು ಅಪರಾಧ ಮಾಡಿದಿರಿ? ಪಾಪ! ಯಾವುದೇ ಅಪರಾಧವಿಲ್ಲದೆ ಎಲ್ಲರ ವಿನಾಶವಾಗಿ ಬಿಡುವುದು. ವಿನಾಶದ ಸಾಕ್ಷಾತ್ಕಾರವನ್ನಂತೂ ಮಕ್ಕಳು ಮಾಡಿದ್ದೀರಿ, ನೀವೀಗ ಸೃಷ್ಟಿಚಕ್ರದ ಜ್ಞಾನವನ್ನು ಅರಿತುಕೊಂಡಿದ್ದೀರಿ. ನಿಮ್ಮ ಬಳಿ ಜ್ಞಾನದ ಖಡ್ಗವಿದೆ. ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಪ್ರಜಾಪಿತನು ತಂದೆಯಾಗಿದ್ದಾರೆ. ಕಲ್ಪದ ಮೊದಲೂ ಸಹ ಇವರು ಮುಖವಂಶಾವಳಿಯನ್ನು ರಚನೆ ಮಾಡಿದ್ದರು. ತಂದೆಯು ತಿಳಿಸುತ್ತಾರೆ- ನಾನು ಕಲ್ಪ-ಕಲ್ಪವೂ ಬರುತ್ತೇನೆ. ಇವರಲ್ಲಿ ಪ್ರವೇಶ ಮಾಡಿ ನಿಮ್ಮನ್ನು ಮುಖ ವಂಶಾವಳಿಯನ್ನಾಗಿ ಮಾಡುತ್ತೇನೆ. ಬ್ರಹ್ಮಾರವರ ಮೂಲಕ ಸ್ವರ್ಗವನ್ನು ಸ್ಥಾಪನೆ ಮಾಡಿಸುತ್ತೇನೆ. ಸ್ವರ್ಗಕ್ಕಂತೂ ಭವಿಷ್ಯದಲ್ಲಿ ಹೋಗುತ್ತೀರಿ. ಛೀ ಛೀ ಪ್ರಪಂಚವು ಸಮಾಪ್ತಿಯಾಗಬೇಕು. ಬೇಹದ್ದಿನ ತಂದೆಯು ಹೊಸ ಪ್ರಪಂಚವನ್ನು ರಚಿಸುವುದಕ್ಕಾಗಿಯೇ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳಿಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತೆಗೆದುಕೊಂಡು ಬಂದಿದ್ದೇನೆ. ನಿಮಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ನೀವೆಲ್ಲರೂ ದ್ರೌಪದಿಯರಾಗಿದ್ದೀರಿ, ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೊಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದೇವತೆಗಳಿಗಿಂತಲೂ ಶ್ರೇಷ್ಠರು ನಾವು ಸರ್ವೋತ್ತಮ ಬ್ರಾಹ್ಮಣರಾಗಿದ್ದೇವೆ - ಈ ಆತ್ಮಿಕ ನಶೆಯಲ್ಲಿರಬೇಕಾಗಿದೆ. ಜ್ಞಾನ ಮತ್ತು ಯೋಗದಿಂದ ಆತ್ಮವನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ.
2. ಎಲ್ಲರಿಗೆ ಶಿವ ತಂದೆಯ ಅವತರಣಿಯ ಶುಭಾಷಯಗಳನ್ನು ತಿಳಿಸಬೇಕಾಗಿದೆ. ತಂದೆಯ ಪರಿಚಯವನ್ನು ಕೊಟ್ಟು ಪತಿತರಿಂದ ಪಾವನರನ್ನಾಗಿ ಮಾಡಬೇಕಾಗಿದೆ. ರಾವಣ ಶತ್ರುವಿನಿಂದ ಮುಕ್ತ ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ನಾವು ಮೂಲವತನದಲ್ಲಿದ್ದಾಗ ತಂದೆಯವರಾಗಿದ್ದೆವು ಮತ್ತು ತಂದೆಯು ನಮ್ಮವರಾಗಿದ್ದರು. ನೀವು ಮಕ್ಕಳಿಗೆ ಬಹಳ ಚೆನ್ನಾಗಿ ಜ್ಞಾನವು ಸಿಕ್ಕಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ಚಕ್ರವನ್ನು ಸುತ್ತಿದ್ದೇವೆ, ಈಗ ಪುನಃ ನಾವು ತಂದೆಯ ಮಕ್ಕಳಾಗಿದ್ದೇವೆ. ರಾಜಯೋಗವನ್ನು ಕಲಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಕಲ್ಪದ ಹಿಂದಿನ ತರಹ ಪುನಃ ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ ಎಂದು. ಹಾಗೆಂದು ಹೇಳಿ ಮಕ್ಕಳಾಗಿ ಇಲ್ಲಿ ಮಧುಬನದಲ್ಲಿ ಕುಳಿತು ಬಿಡುವಂತಿಲ್ಲ. ನೀವು ತಮ್ಮ ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ. ಕಮಲ ಪುಷ್ಫವು ನೀರಿನಲ್ಲಿರುತ್ತದೆ ಆದರೆ ನೀರಿಗೆ ಅಂಟದಂತೆ ಮೇಲಿರುತ್ತದೆ, ಅದಕ್ಕೆ ನೀರು ಸ್ಪರ್ಷಿಸುವುದೇ ಇಲ್ಲ. ತಂದೆಯು ತಿಳಿಸುತ್ತಾರೆ - ನೀವೂ ಸಹ ಮನೆಯಲ್ಲಿಯೇ ಇರಿ, ಕೇವಲ ಪವಿತ್ರರಾಗಿರಿ. ಇದು ನಿಮ್ಮ ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಅವರೆಲ್ಲರನ್ನೂ ಪಾವನ ಮಾಡಲು ನಾನು ಬಂದಿದ್ದೇನೆ. ಪತಿತ-ಪಾವನ, ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಅವರ ವಿನಃ ಮತ್ತ್ಯಾರೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ – ಅರ್ಧಕಲ್ಪದಿಂದ ನಾವು ಏಣಿಯನ್ನಿಳಿಯುತ್ತಾ ಬಂದಿದ್ದೇವೆ. ನೀವು 84 ಜನ್ಮಗಳನ್ನು ಅವಶ್ಯವಾಗಿ ಪೂರ್ಣ ಮಾಡಬೇಕಾಗಿದೆ ಮತ್ತು 84 ಜನ್ಮಗಳ ಚಕ್ರವನ್ನು ಮುಗಿಸಿ ಯಾವಾಗ ಅಂತಿಮ ಸ್ಥಿತಿಯನ್ನು ತಲುಪುತ್ತೀರೋ ಆಗ ನಾನು ಬರಬೇಕಾಗುತ್ತದೆ. ಮಧ್ಯದಲ್ಲಿ ಮತ್ತ್ಯಾರೂ ಪತಿತರಿಂದ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾರೂ ಸಹ ತಂದೆಯನ್ನಾಗಲಿ, ರಚನೆಯನ್ನಾಗಲಿ ಅರಿತುಕೊಂಡಿಲ್ಲ. ಡ್ರಾಮಾನುಸಾರ ಎಲ್ಲರೂ ಕಲಿಯುಗದಲ್ಲಿ ಪತಿತರು, ತಮೋಪ್ರಧಾನರಾಗಲೇಬೇಕಾಗಿದೆ. ತಂದೆಯು ಬಂದು ಎಲ್ಲರನ್ನೂ ಪಾವನ ಮಾಡಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ ಮತ್ತು ತಂದೆಯಿಂದ ಸುಖಧಾಮದ ಆಸ್ತಿಯನ್ನು ಪಡೆಯುತ್ತೀರಿ. ಸತ್ಯಯುಗದಲ್ಲಿ ಯಾವುದೇ ದುಃಖವಿರುವುದಿಲ್ಲ. ನೀವೀಗ ಜೀವಿಸಿದ್ದಂತೆಯೇ ತಂದೆಯವರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ನೀವು ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕು. ನೀವು ಗೃಹಸ್ಥವನ್ನು ಬಿಟ್ಟು ಬಿಡಿ ಎಂದು ತಂದೆಯು ಯಾರಿಗೂ ಹೇಳುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕೇವಲ ಅಂತಿಮ ಜನ್ಮ ಪವಿತ್ರರಾಗಬೇಕಾಗಿದೆ. ನೀವು ಮನೆ-ಮಠವನ್ನು ಬಿಟ್ಟು ಬಿಡಿ ಎಂದು ತಂದೆಯು ಎಂದಾದರೂ ಹೇಳಿದ್ದಾರೆಯೇ? ನೀವು ಈಶ್ವರೀಯ ಸೇವಾರ್ಥವಾಗಿ ತಾವಾಗಿಯೇ ಬಿಟ್ಟು ಬಂದಿದ್ದೀರಿ. ಕೆಲವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿದ್ದರೂ ಈಶ್ವರೀಯ ಸೇವೆ ಮಾಡುತ್ತಾರೆ. ಯಾರನ್ನೂ ಇಲ್ಲಿ ಬಿಡಿಸಲಾಗುವುದಿಲ್ಲ. ತಂದೆಯು ಯಾರನ್ನೂ ಬಿಡಿಸುವುದಿಲ್ಲ. ನೀವೆಲ್ಲರೂ ತಾವಾಗಿಯೇ ಸರ್ವೀಸಿಗಾಗಿ ಬಂದು ಬಿಟ್ಟಿದ್ದೀರಿ. ತಂದೆಯು ಯಾರನ್ನೂ ಬಿಡಿಸಲಿಲ್ಲ. ನಿಮ್ಮ ಲೌಕಿಕ ತಂದೆಯು ವಿವಾಹ ಮಾಡಿಕೊಳ್ಳಲು ಹೇಳುತ್ತಾರೆ, ನೀವು ಮಾಡಿಕೊಳ್ಳುವುದಿಲ್ಲ ಏಕೆಂದರೆ ನಿಮಗೆ ತಿಳಿದಿದೆ – ಈಗ ಮೃತ್ಯುಲೋಕದ ಅಂತ್ಯವಾಗಿದೆ. ಮದುವೆಯಿಂದ ನಷ್ಟವೇ ಆಗುವುದು ಮತ್ತೆ ನಾವು ಪಾವನರಾಗುವುದು ಹೇಗೆ? ಅಂದಾಗ ನಾವೇಕೆ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ತೊಡಗಬಾರದು! ರಾಮ ರಾಜ್ಯವಾಗಲಿ ಎಂದು ತಂದೆಯು ಬಯಸುತ್ತಾರೆ. ಹೇ ಪತಿತ-ಪಾವನ ಸೀತಾರಾಂ. ಹೇ ರಾಮನೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡಿ ಎಂದು ಕರೆಯುತ್ತಾರಲ್ಲವೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಈ ಸಮಯದ ಸುಖವು ಕಾಗವಿಷ್ಟ ಸಮಾನವಾಗಿದೆ ಎಂದು ಸನ್ಯಾಸಿಗಳೂ ಸಹ ಹೇಳುತ್ತಾರೆ. ಅದು ನಿಜವಾಗಿದೆ. ಇಲ್ಲಿ ಸುಖವಂತೂ ಇಲ್ಲವೇ ಇಲ್ಲ. ಹೇಳುತ್ತಿರುತ್ತಾರೆ ಆದರೆ ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ದುಃಖಕ್ಕಾಗಿ ಈ ಸೃಷ್ಟಿಯನ್ನು ರಚಿಸುವುದಿಲ್ಲ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ಮರೆತು ಹೋಗಿದ್ದೀರಾ, ಸ್ವರ್ಗದಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ಅಲ್ಲಿ ಕಂಸ ಮೊದಲಾದವರು ಎಲ್ಲಿಂದ ಬರುವರು!
ಈಗ ಬೇಹದ್ದಿನ ತಂದೆಯು ಏನನ್ನು ತಿಳಿಸುತ್ತಾರೆಯೋ ಅವರ ಮತದಂತೆ ನಡೆಯಬೇಕಾಗಿದೆ. ತನ್ನ ಮನಮತದಂತೆ ನಡೆಯುವುದರಿಂದ ನಷ್ಟ ಮಾಡಿಕೊಳ್ಳುತ್ತೀರಿ. ಆಶ್ಚರ್ಯವೆನಿಸುವಂತೆ ಜ್ಞಾನವನ್ನು ಕೇಳಿ-ಹೇಳಿ ನಡೆಯುತ್ತಾ ಮತ್ತೆ ವಿರೋಧಿಗಳಾಗಿ ಹೋಗಿ ಸೇವಾಭಂಗ ಮಾಡುತ್ತಾರೆ. ಅಂತಹವರದು ಏನಾಗುವುದು? ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುವ ಬದಲು ಕವಡೆಯಂತೆ ಮಾಡಿಕೊಳ್ಳುತ್ತಾರೆ. ಅಂತಿಮದಲ್ಲಿ ನಿಮಗೆ ತಮ್ಮದೆಲ್ಲವೂ ಸಾಕ್ಷಾತ್ಕಾರವಾಗುವುದು – ಇಂತಹ ಚಲನೆಯ ಕಾರಣ ಈ ಪದವಿಯನ್ನು ಪಡೆದೆವು ಎಂದು. ಇಲ್ಲಂತೂ ನೀವು ಯಾವುದೇ ಪಾಪ ಮಾಡಬಾರದು ಏಕೆಂದರೆ ನೀವು ಪುಣ್ಯಾತ್ಮರಾಗುತ್ತಿದ್ದೀರಿ. ಪಾಪ ಮಾಡಿದರೆ ನೂರರಷ್ಟು ಶಿಕ್ಷೆಯಾಗಿ ಬಿಡುವುದು. ಭಲೆ ಸ್ವರ್ಗದಲ್ಲಿ ಬರುತ್ತೀರಿ ಆದರೆ ಬಹಳ ಕಡಿಮೆ ಪದವಿ. ಇಲ್ಲಿ ನೀವು ರಾಜಯೋಗವನ್ನು ಕಲಿಯಲು ಬಂದಿದ್ದೀರಿ ಮತ್ತೆ ಪ್ರಜೆಗಳಾಗಿ ಬಿಡುತ್ತಾರೆ. ಪದವಿಗಳಲ್ಲಿ ಬಹಳ ಅಂತರವಿದೆಯಲ್ಲವೆ. ಇದನ್ನೂ ತಿಳಿಸಿದ್ದಾರೆ – ಯಜ್ಞದಲ್ಲಿ ಏನಾದರೂ ನೀಡಿ ಮತ್ತೆ ಅದನ್ನು ಹಿಂತೆಗೆದುಕೊಂಡರೆ ಚಂಡಾಲರ ಜನ್ಮ ಸಿಗುತ್ತದೆ. ಕೆಲವು ಮಕ್ಕಳು ಇಂತಹ ಚಲನೆಯಲ್ಲಿ ನಡೆಯುತ್ತಾರೆ ಅವರ ಪದವಿಯೇ ಕಡಿಮೆಯಾಗಿ ಬಿಡುತ್ತದೆ.
ತಂದೆಯು ತಿಳಿಸುತ್ತಾರೆ – ಮಕ್ಕಳೇ, ರಾಜ-ರಾಣಿಯ ಬದಲು ಪ್ರಜೆಗಳಲ್ಲಿಯೂ ಕಡಿಮೆ ಪದವಿ ಸಿಗುವವಂತಹ ಯಾವುದೇ ಕರ್ಮ ಮಾಡಬೇಡಿ. ಯಜ್ಞದಲ್ಲಿ ಸ್ವಾಹಾ ಆಗಿ ಮತ್ತೆ ಬಿಟ್ಟು ಹೋದರೆ ಅಂತಹವರು ಏನಾಗುವರು? ಇದನ್ನೂ ಸಹ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಯಾವುದೇ ವಿಕರ್ಮ ಮಾಡಬೇಡಿ. ಇಲ್ಲದಿದ್ದರೆ ನೂರು ಪಟ್ಟು ಶಿಕ್ಷೆ ಸಿಗುವುದು ಅಂದಮೇಲೆ ಏಕೆ ನಷ್ಟ ಮಾಡಿಕೊಳ್ಳಬೇಕು. ಇಲ್ಲಿರುವವರಿಗಿಂತಲೂ ಯಾರು ಗೃಹಸ್ಥದಲ್ಲಿದ್ದು ಸೇವೆ ಮಾಡುವರೋ ಅವರು ಬಹಳ ಉನ್ನತ ಪದವಿಯನ್ನು ಪಡೆಯುತ್ತಾರೆ. ಹೀಗೆ ಅನೇಕರು ಬಡವರಿದ್ದಾರೆ, ಎಂಟಾಣೆ ಅಥವಾ ಒಂದು ರೂಪಾಯಿಯನ್ನು ಕಳುಹಿಸುತ್ತಾರೆ ಮತ್ತೆ ಯಾರು ಇಲ್ಲಿ ಭಲೆ ಸಾವಿರಾರು ರೂಪಾಯಿಗಳನ್ನು ಕೊಟ್ಟರೂ ಸಹ ಬಡವರದು ಶ್ರೇಷ್ಠ ಪದವಿಯಾಗಿ ಬಿಡುತ್ತದೆ ಏಕೆಂದರೆ ಅವರು ಯಾವುದೇ ಪಾಪಕರ್ಮ ಮಾಡುವುದಿಲ್ಲ. ಪಾಪ ಮಾಡುವುದರಿಂದ ನೂರುಪಟ್ಟು ಶಿಕ್ಷೆಯಾಗುವುದು. ನೀವು ಪುಣ್ಯಾತ್ಮರಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ. ದುಃಖ ಕೊಟ್ಟರೆ ಕೊನೆಯಲ್ಲಿ ಟ್ರಿಬ್ಯುನಲ್ ಕುಳಿತುಕೊಳ್ಳುತ್ತದೆ. ನೀವು ಹೀಗ್ಹೀಗೆ ಮಾಡಿದಿರಿ, ಈಗ ಶಿಕ್ಷೆಯನ್ನನುಭವಿಸಿ ಎಂದು ಸಾಕ್ಷಾತ್ಕಾರವಾಗುತ್ತದೆ, ಪದವಿಯೂ ಭ್ರಷ್ಟವಾಗುತ್ತದೆ. ಕೇಳಿಸಿಕೊಳ್ಳುತ್ತಲೂ ಇರುತ್ತಾರೆ ಆದರೂ ಸಹ ಕೆಲವು ಮಕ್ಕಳು ಮತ್ತೆ ಉಲ್ಟಾ ಚಲನೆಯಲ್ಲಿ ನಡೆಯುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ – ಯಾವಾಗಲೂ ಕ್ಷೀರ ಖಂಡವಾಗಿ ಇರಿ. ಒಂದುವೇಳೆ ಉಪ್ಪು ನೀರಾಗಿ ವರ್ತಿಸುತ್ತೀರಿ ಎಂದರೆ ಬಹಳ ಸೇವಾಭಂಗ ಮಾಡುತ್ತೀರಿ. ಯಾರದೇ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಂಡರೆ ಇದೂ ಸಹ ಬಹಳ ಪಾಪವಾಗಿ ಬಿಡುತ್ತದೆ. ಮಾಯೆಯು ಇಲಿ ಇದ್ದಂತೆ. ಅದು ಗಾಳಿಯನ್ನೂ ಊದುತ್ತದೆ, ಕಚ್ಚುತ್ತಲೂ ಇರುತ್ತದೆ, ರಕ್ತ ಹೊರ ಬಂದರೂ ಸಹ ಗೊತ್ತಾಗುವುದೇ ಇಲ್ಲ. ಮಾಯೆಯೂ ಸಹ ರಕ್ತವನ್ನು ತೆಗೆದು ಬಿಡುತ್ತದೆ. ಇಂತಹ ಕರ್ಮಗಳನ್ನು ಮಾಡಿಸಿ ಬಿಡುತ್ತದೆ ಅದು ಅರ್ಥವಾಗುವುದೇ ಇಲ್ಲ. ಪಂಚ ವಿಕಾರಗಳು ಒಮ್ಮೆಲೆ ತಲೆಯನ್ನೇ ತಿರುಗಿಸಿ ಬಿಡುತ್ತದೆ. ತಂದೆಯು ಎಚ್ಚರಿಕೆಯನ್ನಂತೂ ಕೊಡುತ್ತಾರಲ್ಲವೆ. ಕೊನೆಯಲ್ಲಿ ನ್ಯಾಯ ತೀರ್ಮಾನವಾಗುವಾಗ ನಮಗೆ ಸಾವಧಾನ ನೀಡಲಿಲ್ಲ ಎಂದು ಹೇಳುವಂತಾಗಬಾರದು. ನಿಮಗೆ ತಿಳಿದಿದೆ – ಈಶ್ವರನೇ ಓದಿಸುತ್ತಾರೆ, ಎಷ್ಟು ನಿರಹಂಕಾರಿಯಾಗಿದ್ದಾರೆ. ಮಕ್ಕಳೇ, ನಾನು ವಿಧೇಯ ಸೇವಕನಾಗಿದ್ದೇನೆಂದು ಹೇಳುತ್ತಾರೆ. ಕೆಲಕೆಲವು ಮಕ್ಕಳಲ್ಲಿ ಎಷ್ಟೊಂದು ಅಹಂಕಾರವಿರುತ್ತದೆ. ತಂದೆಯ ಮಕ್ಕಳಾಗಿಯೂ ಇಂತಿಂತಹ ಕರ್ಮಗಳನ್ನು ಮಾಡುತ್ತಾರೆ ಅದರ ಮಾತೇ ಕೇಳಬೇಡಿ. ಇದಕ್ಕಿಂತಲೂ ಯಾರು ಗೃಹಸ್ಥ ವ್ಯವಹಾರದಲ್ಲಿ ಇರುವರೋ ಅವರು ಬಹಳ ಮುಂದೆ ಹೊರಟು ಹೋಗುತ್ತಾರೆ. ದೇಹಾಭಿಮಾನವು ಬರುತ್ತಿದ್ದಂತೆಯೇ ಮಾಯೆಯು ಬಹಳ ಚೆನ್ನಾಗಿ ಪೆಟ್ಟು ಕೊಡುತ್ತದೆ. ದೇಹಾಭಿಮಾನವನ್ನು ಕಳೆಯುವುದು ಬಹಳ ದೊಡ್ಡ ಗುರಿಯಾಗಿದೆ. ದೇಹಾಭಿಮಾನವು ಬಂದಿತೆಂದರೆ ಪೆಟ್ಟು ಬಿದ್ದಿತು ಅಂದಮೇಲೆ ಪದವಿ ಭ್ರಷ್ಟವಾಗಲು ದೇಹಾಭಿಮಾನದಲ್ಲಿ ಬರುವುದಾದರೂ ಏಕೆ? ಸತ್ಯಯುಗದಲ್ಲಿ ಹೋಗಿ ಕಸ ಗುಡಿಸುವಂತಾಗಬಾರದು. ಈಗ ಒಂದುವೇಳೆ ತಂದೆಯೊಂದಿಗೆ ಯಾರಾದರೂ ಕೇಳಿದರೆ ತಂದೆಯು ಸ್ಪಷ್ಟವಾಗಿ ತಿಳಿಸಿ ಬಿಡುತ್ತಾರೆ. ನಾನು ಎಷ್ಟು ಸೇವೆ ಮಾಡುತ್ತೇನೆ, ಎಷ್ಟು ಮಂದಿಗೆ ಸುಖ ನೀಡಿದ್ದೇನೆಂದು ಪ್ರತಿಯೊಬ್ಬರೂ ತಮ್ಮ ಬಗ್ಗೆ ತಿಳಿದುಕೊಳ್ಳಬಹುದಾಗಿದೆ. ಮಮ್ಮಾ-ಬಾಬಾ ಎಲ್ಲರಿಗೆ ಸುಖ ಕೊಡುತ್ತಾರೆ. ಎಷ್ಟೊಂದು ಖುಷಿ ಪಡುತ್ತಾರೆ! ತಂದೆಯು ಬಾಂಬೆಯಲ್ಲಿ ಎಷ್ಟೊಂದು ಜ್ಞಾನದ ನರ್ತನ ಮಾಡುತ್ತಿದ್ದರು. ಬಹಳ ಮಂದಿ ಚಾತ್ರಕರಿದ್ದರಲ್ಲವೆ. ತಂದೆಯು ತಿಳಿಸುತ್ತಾರೆ - ಬಹಳ ಚಾತ್ರಕರ ಮುಂದೆ ಜ್ಞಾನದ ನರ್ತನ ಮಾಡುತ್ತೇನೆ ಆಗ ಒಳ್ಳೊಳ್ಳೆಯ ಮಾತುಗಳು ಹೊರಬರುತ್ತವೆ. ಚಾತ್ರಕರು ಸೆಳೆಯುತ್ತಾರೆ. ನೀವೂ ಸಹ ಆ ರೀತಿಯಾಗಬೇಕು. ಆಗಲೇ ಫಾಲೋ ಮಾಡುವರು. ಶ್ರೀಮತದಂತೆ ನಡೆಯಬೇಕಾಗಿದೆ, ತನ್ನ ಮತದಂತೆ ನಡೆದು ಕೆಟ್ಟ ಹೆಸರು ತಂದರೆ ಬಹಳ ನಷ್ಟವುಂಟಾಗುವುದು. ಈಗ ತಂದೆಯು ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಭಾರತವು ಸ್ವರ್ಗವಾಗಿತ್ತಲ್ಲವೆ. ಈಗ ಈ ರೀತಿ ಯಾರಾದರೂ ತಿಳಿದುಕೊಳ್ಳುವರೇ? ಭಾರತದಂತಹ ಪಾವನ ದೇಶವು ಮತ್ತ್ಯಾವುದೂ ಇಲ್ಲ. ಈ ಮಾತನ್ನೂ ಹೇಳುತ್ತಾರೆ ಆದರೆ ನಾವು ಭಾರತವಾಸಿಗಳೇ ಸ್ವರ್ಗವಾಸಿಗಳಾಗಿದ್ದೆವು, ಅಲ್ಲಿ ಅಪಾರ ಸುಖವಿತ್ತೆಂಬುದನ್ನು ತಿಳಿದುಕೊಳ್ಳುವುದಿಲ್ಲ. ಭಗವಂತನು ಬಂದು ಕೊಳಕಾದ ಬಟ್ಟೆಯನ್ನು ಒಗೆಯುತ್ತಾರೆ ಎಂದು ಗುರುನಾನಕರು ಭಗವಂತನ ಮಹಿಮೆಯನ್ನು ಹಾಡಿದ್ದಾರೆ. ಏಕ್ ಓಂಕಾರ್… ಎಚಿದು ಅವರದೇ ಮಹಿಮೆಯಿದೆ. ಶಿವಲಿಂಗದ ಬದಲು ಅಕಾಲ ಸಿಂಹಾಸನ ಹೆಸರನ್ನಿಟ್ಟು ಬಿಟ್ಟಿದ್ದಾರೆ. ಈಗ ತಂದೆಯು ನಿಮಗೆ ಇಡೀ ಸೃಷ್ಟಿಯ ರಹಸ್ಯವನ್ನು ತಿಳಿಸುತ್ತಾರೆ – ಮಕ್ಕಳೇ, ಒಂದು ಪಾಪವನ್ನೂ ಮಾಡಬಾರದು. ಇಲ್ಲದಿದ್ದರೆ ನೂರರಷ್ಟು ಶಿಕ್ಷೆಯಾಗುವುದು. ನನ್ನ ನಿಂದನೆ ಮಾಡಿಸಿದರೆ ಪದವಿಯು ಭ್ರಷ್ಟವಾಗಿ ಬಿಡುವುದು. ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತನ್ನ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಿ ಇಲ್ಲದಿದ್ದರೆ ಬಹಳ ಪಶ್ಚಾತ್ತಾಪ ಪಡುತ್ತೀರಿ. ಏನೆಲ್ಲಾ ವಿರುದ್ಧವಾಗಿ ಮಾಡಿದ್ದೀರೋ ಅದು ಒಳಗೆ ತಿನ್ನುತ್ತಿರುತ್ತದೆ – ಕಲ್ಪ-ಕಲ್ಪವೂ ನಾವು ಇದೇ ರೀತಿ ಮಾಡುತ್ತೇವೆಯೇ? ಯಾವುದರಿಂದ ನೀಚ ಪದವಿಯನ್ನು ಪಡೆಯುತ್ತೇವೆ ಎಂದು. ತಂದೆಯು ತಿಳಿಸುತ್ತಾರೆ – ಮಾತಾಪಿತರನ್ನು ಅನುಸರಿಸಬೇಕೆಂದರೆ ಸತ್ಯತೆಯಿಂದ ಸೇವೆ ಮಾಡಿ, ಮಾಯೆಯಂತೂ ಒಂದಲ್ಲ ಒಂದು ಕಡೆಯಿಂದ ನುಸುಳಿ ಬರುತ್ತದೆ. ಸೇವಾಕೇಂದ್ರಗಳ ಸಂಚಾಲಕರು ಬಹಳ ನಿರಹಂಕಾರಿಯಾಗಿರಬೇಕಾಗಿದೆ. ತಂದೆಯು ನೋಡಿ, ಎಷ್ಟು ನಿರಹಂಕಾರಿಯಾಗಿದ್ದಾರೆ. ಕೆಲವು ಮಕ್ಕಳು ಅನ್ಯರಿಂದ ಸೇವೆ ತೆಗೆದುಕೊಳ್ಳುತ್ತಾರೆ. ತಂದೆಯು ಎಷ್ಟೊಂದು ನಿರಹಂಕಾರಿಯಾಗಿದ್ದಾರೆ. ಎಂದೂ ಯಾರ ಮೇಲೂ ಕೋಪಿಸಿಕೊಳ್ಳುವುದಿಲ್ಲ. ಮಕ್ಕಳು ಒಂದುವೇಳೆ ಆಜ್ಞಾಕಾರಿಗಳಾಗಿದ್ದರೆ ತಂದೆಯು ಅವರಿಗೆ ತಿಳಿಸುತ್ತಾರೆ. ನೀವು ಏನು ಮಾಡುತ್ತೀರಿ ಎಂಬುದನ್ನು ಬೇಹದ್ದಿನ ತಂದೆಯೇ ತಿಳಿದುಕೊಂಡಿದ್ದಾರೆ. ಎಲ್ಲಾ ಮಕ್ಕಳು ಒಂದೇ ಸಮನಾಗಿ ಸುಪುತ್ರರಾಗಿರುವುದಿಲ್ಲ, ಕುಪುತ್ರರೂ ಇರುತ್ತಾರೆ. ತಂದೆಯು ತಿಳುವಳಿಕೆ ನೀಡುತ್ತಾರೆ. ಅನೇಕ ಮಕ್ಕಳಿದ್ದಾರೆ, ಇವರು ವೃದ್ಧಿಯಾಗುತ್ತಾ ಲಕ್ಷಾಂತರ ಅಂದಾಜಿನಲ್ಲಿ ಮಕ್ಕಳು ವೃದ್ಧಿಯಾಗುತ್ತಾರೆ. ಆದ್ದರಿಂದ ತಂದೆಯು ಮಕ್ಕಳಿಗೆ ಎಚ್ಚರಿಕೆ ನೀಡುತ್ತಾರೆ – ಮಕ್ಕಳೇ, ಯಾವುದೇ ತಪ್ಪು ಮಾಡಬೇಡಿ. ಇಲ್ಲಿ ಪತಿತರಿಂದ ಪಾವನರಾಗಲು ಬಂದಿದ್ದೀರಿ ಅಂದಮೇಲೆ ಯಾವುದೇ ಪತಿತ ಕೆಲಸವನ್ನು ಮಾಡಬೇಡಿ. ನಾಮ-ರೂಪದಲ್ಲಿ ಸಿಲುಕಬೇಡಿ. ದೇಹಾಭಿಮಾನದಲ್ಲಿ ಬರಬೇಡಿ. ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡುತ್ತಾ ಇರಿ. ಶ್ರೀಮತದಂತೆ ನಡೆಯುತ್ತಾ ಇರಿ. ಮಾಯೆಯು ಬಹಳ ಪ್ರಬಲವಾಗಿದೆ, ತಂದೆಯು ಎಲ್ಲವನ್ನೂ ತಿಳಿಸಿ ಬಿಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರ ತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ: