text
stringlengths
0
61.5k
2) ಚೀರಾಡುವ-ಕೂಗುವ ಬದಲಾಗಿ ತಮ್ಮ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಬೇಕು. ಶಾಂತಿಯು ನಿಮ್ಮ ಕೊರಳಿನ ಹಾರವಾಗಿದೆ. ದೇಹಾಭಿಮಾನದಲ್ಲಿ ಬಂದು ನಾನು ಮತ್ತು ನನ್ನ ಶಬ್ಧವನ್ನು ಹೇಳಬಾರದು. ಸ್ವಯಂನ್ನು ಆತ್ಮ ನಿಶ್ಚಯ ಮಾಡಿಕೊಳ್ಳಬೇಕು.
ಓಂ ಶಾಂತಿ. ಆತ್ಮಿಕ ತಂದೆಯು ಕುಳಿತು ಮಧುರಾತಿ ಮಧುರ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದುಕೊಂಡು, ನಾನು ತಂದೆಯನ್ನು ನೆನಪು ಮಾಡುತ್ತೀರೆಂದರೆ, ನಿಮ್ಮ ಎಲ್ಲಾ ದುಃಖಗಳು ಸದಾಕಾಲಕ್ಕಾಗಿ ಸಮಾಪ್ತಿಯಾಗಿ ಬಿಡುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಎಲ್ಲರನ್ನೂ ಸಹೋದರ-ಸಹೋದರನ ದೃಷ್ಟಿಯಿಂದ ನೋಡುತ್ತೀರೆಂದರೆ, ಆನಂತರ ದೇಹದ ದೃಷ್ಟಿಯ ವೃತ್ತಿಯು ಪರಿವರ್ತನೆಯಾಗಿ ಬಿಡುತ್ತದೆ. ತಂದೆಯೂ ಸಹ ಅಶರೀರಿಯಾಗಿದ್ದಾರೆ, ನೀವು ಆತ್ಮವೂ ಅಶರೀರಿಯಾಗಿದ್ದೀರಿ. ತಂದೆಯು ಆತ್ಮರನ್ನೇ ನೋಡುತ್ತಾರೆ, ಎಲ್ಲರೂ ಅಕಾಲ ಸಿಂಹಾಸನದ ಮೇಲೆ ಕುಳಿತಿರುವ ಆತ್ಮನಾಗಿದ್ದಾರೆ. ನೀವೂ ಆತ್ಮ ಸಹೋದರ-ಸಹೋದರನ ದೃಷ್ಟಿಯಿಂದ ನೋಡಿರಿ, ಇದರಲ್ಲಿ ಬಹಳ ಪರಿಶ್ರಮವಿದೆ. ದೇಹದ ಭಾನದಲ್ಲಿ ಬರುವುದರಿಂದಲೇ ಮಾಯೆಯ ಬಿರುಗಾಳಿಗಳು ಬರುತ್ತವೆ. ಈ ದೇಹಾಭಿಮಾನದ ದ್ವಾರವನ್ನು ಬಂಧ್ ಮಾಡಿ ಬಿಡುತ್ತೀರೆಂದರೆ, ಮಾಯೆಯ ಬಿರುಗಾಳಿಗಳು ಬರುವುದು ಬಂಧ್ ಆಗಿ ಬಿಡುತ್ತದೆ. ಇಡೀ ಕಲ್ಪದಲ್ಲಿ ದೇಹೀ-ಅಭಿಮಾನಿಯಾಗುವ ಈ ಶಿಕ್ಷಣವು ಈ ಪುರಷೋತ್ತಮ ಸಂಗಮಯುಗದಲ್ಲಿ ತಂದೆಯೇ ನೀವು ಮಕ್ಕಳಿಗೆ ಕೊಡುತ್ತಾರೆ.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ನೀವು ತಿಳಿದಿದ್ದೀರಿ - ಈಗ ನಾವು ನರಕದ ದಡವನ್ನು ಬಿಟ್ಟು ಮುಂದೆ ಹೋಗುತ್ತಿದ್ದೇವೆ, ಮಧ್ಯದಲ್ಲಿರುವ ಈ ಪುರಷೋತ್ತಮ ಸಂಗಮಯುಗವು ಸಂಪೂರ್ಣವಾಗಿ ಭಿನ್ನವಾಗಿದೆ. ಸಮುದ್ರದ ಮಧ್ಯದಲ್ಲಿ ನಿಮ್ಮ ದೋಣಿಯಿದೆ. ನೀವು ಸತ್ಯಯುಗದವರೂ ಆಗಿಲ್ಲ, ಕಲಿಯುಗದವರೂ ಆಗಿಲ್ಲ. ನೀವು ಪುರಷೋತ್ತಮ ಸಂಗಮಯುಗಿ ಸರ್ವೋತ್ತಮ ಬ್ರಾಹ್ಮಣರಾಗಿದ್ದೀರಿ. ಸಂಗಮಯುಗವಾಗುವುದೇ ಬ್ರಾಹ್ಮಣರದು. ಬ್ರಾಹ್ಮಣರು ಶಿಖೆಯವರಾಗಿದ್ದಾರೆ. ಈ ಬ್ರಾಹ್ಮಣರದು ಬಹಳ ಚಿಕ್ಕದಾದ ಯುಗವಾಗಿದೆ. ಇದು ಒಂದೇ ಜನ್ಮದ ಯುಗವಾಗುತ್ತದೆ, ಇದು ನಿಮ್ಮ ಖುಷಿಯ ಯುಗವಾಗಿದೆ. ಖುಷಿಯು ಯಾವ ಮಾತಿನದಾಗಿದೆ? ಭಗವಂತನು ನಮಗೆ ಓದಿಸುತ್ತಾರೆ! ಇಂತಹ ವಿದ್ಯಾರ್ಥಿಗೆ ಎಷ್ಟೊಂದು ಖುಷಿಯಾಗುತ್ತದೆ! ನಿಮಗೆ ಈಗ ಇಡೀ ಚಕ್ರದ ಜ್ಞಾನವು ಬುದ್ಧಿಯಲ್ಲಿದೆ. ಈಗ ನಾವೇ ಬ್ರಾಹ್ಮಣರಾಗಿದ್ದೇವೆ, ನಂತರ ನಾವೇ ದೇವತೆಯಾಗುತ್ತೇವೆ. ಮೊದಲು ನಮ್ಮ ಮನೆ ಮಧುರ ಮನೆಗೆ ಹೋಗುತ್ತೇವೆ, ನಂತರ ಹೊಸ ಪ್ರಪಂಚದಲ್ಲಿ ಬರುತ್ತೇವೆ. ನಾವು ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಯಾಗಿದ್ದೇವೆ. ನಾವೇ ಈ ಬಾಜೋಲಿ ಆಡುತ್ತೇವೆ. ಈ ವಿರಾಟ ರೂಪವನ್ನೂ ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ, ಇಡೀ ದಿನದಲ್ಲಿ ಬುದ್ಧಿಯಲ್ಲಿ ಇದೇ ಮಾತಿನ ಸ್ಮರಣೆಯಾಗುತ್ತಿರಬೇಕು.
ಮಧುರ ಮಕ್ಕಳೇ, ನಿಮ್ಮ ಈ ಪರಿವಾರವು ಲವಲೀಯಾಗಿದೆ ಅಂದಮೇಲೆ ನೀವು ಪ್ರತಿಯೊಬ್ಬರಿಗೂ ಬಹಳ-ಬಹಳ ಲವಲೀಯಾಗಿರಬೇಕಾಗಿದೆ. ತಂದೆಯೂ ಸಹ ಮಧುರವಾಗಿದ್ದಾರೆ ಅಂದಮೇಲೆ ಮಕ್ಕಳನ್ನೂ ಸಹ ಈ ರೀತಿ ಮಧುರರನ್ನಾಗಿ ಮಾಡುತ್ತಾರೆ. ಎಂದೂ ಯಾರ ಮೇಲೂ ಕೋಪಿಸಿಕೊಳ್ಳಬಾರದು. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ತಂದೆಯು ಎಂದೂ ಯಾರಿಗೂ ದುಃಖವನ್ನು ಕೊಡುವುದಿಲ್ಲ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ, ಅಷ್ಟು ಮಧುರವಾಗುತ್ತಾ ಹೋಗುತ್ತೀರಿ. ಇಷ್ಟೇ, ಈ ನೆನಪಿನಿಂದಲೇ ದೋಣಿಯು ಪಾರಾಗುತ್ತದೆ - ಇದು ನೆನಪಿನ ಯಾತ್ರೆಯಾಗಿದೆ. ನೆನಪು ಮಾಡುತ್ತಾ-ಮಾಡುತ್ತಾ ಶಾಂತಿಧಾಮದಿಂದ ಸುಖಧಾಮದಲ್ಲಿ ಹೋಗಬೇಕಾಗಿದೆ. ತಂದೆಯು ಬಂದಿರುವುದೇ ಮಕ್ಕಳನ್ನು ಸದಾ ಸುಖಿಯನ್ನಾಗಿ ಮಾಡುವುದಕ್ಕಾಗಿ. ಭೂತಗಳನ್ನು ಓಡಿಸುವ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ, ಈ ಭೂತಗಳು ಹೊರಟು ಹೋಗುತ್ತವೆ. ಯಾವುದೇ ಭೂತವನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಬಾರದು. ಯಾರಲ್ಲಿಯೇ ಭೂತವಿದೆಯೆಂದರೆ ನನ್ನ ಬಳಿ ಬಿಟ್ಟು ಹೋಗಿರಿ. ನೀವು ಹೇಳುತ್ತಲೇ ಇರುತ್ತೀರಿ - ಬಾಬಾ, ತಾವು ಬಂದು ನಮ್ಮ ಭೂತಗಳನ್ನು ತೆಗೆದು, ಪತಿತರಿಂದ ಪಾವನರನ್ನಾಗಿ ಮಾಡಿರಿ. ಅಂದಮೇಲೆ ತಂದೆಯು ಎಷ್ಟೊಂದು ಸುಂದರರನ್ನಾಗಿ ಮಾಡುತ್ತಾರೆ. ಬಾಪ್ ಮತ್ತು ದಾದಾ ಇಬ್ಬರೂ ಸೇರಿ ನೀವು ಮಕ್ಕಳ ಶೃಂಗಾರವನ್ನು ಮಾಡುತ್ತಾರೆ. ಮಾತಾಪಿತರೇ ಮಕ್ಕಳ ಶೃಂಗಾರ ಮಾಡುತ್ತಾರಲ್ಲವೆ. ಅವರು ಅಲ್ಪಕಾಲದ ತಂದೆ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ಅಂದಮೇಲೆ ಮಕ್ಕಳು ಬಹಳ ಪ್ರೀತಿಯಿಂದ ನಡೆಯಬೇಕು ಮತ್ತು ನಡೆಸಬೇಕಾಗಿದೆ. ಎಲ್ಲಾ ವಿಕಾರಗಳನ್ನು ದಾನ ಕೊಡಬೇಕಾಗಿದೆ, ದಾನ ಕೊಟ್ಟರೆ ಗ್ರಹಣ ಬಿಡುವುದು. ಇದರಲ್ಲಿ ನೆಪ ಮುಂತಾದ ಯಾವುದೇ ಮಾತುಗಳಿಲ್ಲ. ನೀವು ಯಾರನ್ನಾದರೂ ಪ್ರೀತಿಯಿಂದ ವಶ ಮಾಡಿಕೊಳ್ಳಬಹುದು. ಪ್ರೀತಿಯಿಂದ ತಿಳುವಳಿಕೆಯನ್ನು ಕೊಡಿ, ಪ್ರೀತಿಯು ಬಹಳ ಮಧುರವಾದ ವಸ್ತುವಾಗಿದೆ - ಮನುಷ್ಯರು ಸಿಂಹವನ್ನು, ಆನೆಯನ್ನು, ಪ್ರಾಣಿಗಳನ್ನೂ ಸಹ ಪ್ರೀತಿಯಿಂದ ವಶ ಪಡಿಸಿಕೊಂಡು ಬಿಡುತ್ತಾರೆ. ಅವರಂತು ಆದರೂ ಆಸುರೀ ಮನುಷ್ಯರು, ನೀವೀಗ ದೇವತೆಯಾಗುತ್ತಿದ್ದೀರಿ. ಅಂದಮೇಲೆ ದೈವೀ ಗುಣಗಳ ಧಾರಣೆಯನ್ನು ಮಾಡಿ ಬಹಳ-ಬಹಳ ಮಧುರರಾಗಬೇಕು. ಒಬ್ಬರಿನ್ನೊಬ್ಬರಿಗೆ ಸಹೋದರ-ಸಹೋದರ ಅಥವಾ ಸಹೋದರ-ಸಹೋದರಿಯ ದೃಷ್ಟಿಯಿಂದ ನೋಡಿರಿ. ಆತ್ಮ-ಆತ್ಮಕ್ಕೆ ಎಂದೂ ಸಹ ದುಃಖವನ್ನು ಕೊಡಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ನಾನು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುವುದಕ್ಕಾಗಿ ಬಂದಿದ್ದೇನೆ. ಆದರೆ ನೀವು ಪರಿಶ್ರಮ ಪಡಬೇಕಾಗಿದೆ. ನಾನು ಯಾರ ಮೇಲೂ ಕಿರೀಟವನ್ನಿಡುವುದಿಲ್ಲ, ನೀವು ನಿಮ್ಮ ಪುರುಷಾರ್ಥದಿಂದಲೇ ತಮಗೆ ರಾಜ ತಿಲಕವನ್ನು ಕೊಡಬೇಕಾಗಿದೆ. ತಂದೆಯು ಪುರುಷಾರ್ಥದ ಯುಕ್ತಿಯನ್ನು ತಿಳಿಸುತ್ತಾರೆ - ಹೀಗೀಗೆ ವಿಶ್ವದ ಮಾಲೀಕ, ಡಬಲ್ ಕಿರೀಟಧಾರಿಯನ್ನಾಗಿ ತಮ್ಮನ್ನು ಮಾಡಿಕೊಳ್ಳಬಹುದು. ವಿದ್ಯೆಯ ಮೇಲೆ ಗಮನಕೊಡಿ. ಎಂದಿಗೂ ವಿದ್ಯೆಯನ್ನು ಬಿಡಬಾರದು. ಯಾವುದೇ ಕಾರಣದಿಂದ ಮುನಿಸಿಕೊಂಡು ವಿದ್ಯೆಯನ್ನು ಬಿಡುತ್ತೀರೆಂದರೆ ಬಹಳ-ಬಹಳ ನಷ್ಟವಾಗಿ ಬಿಡುತ್ತದೆ, ಲಾಭವನ್ನು ನೋಡುತ್ತಾ ಇರಿ ಎಂದು ತಿಳಿಸುತ್ತೇವೆ. ನೀವು ಈಶ್ವರೀಯ ವಿಶ್ವ ವಿದ್ಯಾಲಯದ ವಿದ್ಯಾರ್ಥಿಯಾಗಿದ್ದೀರಿ, ಈಶ್ವರ ತಂದೆಯಿಂದ ಓದುತ್ತಿದ್ದೀರಿ, ಓದಿಕೊಂಡು ಪೂಜ್ಯ ದೇವತೆ ಆಗುತ್ತಿದ್ದೀರಿ. ಅಂದಮೇಲೆ ವಿದ್ಯಾರ್ಥಿಯೂ ಸಹ ಈ ರೀತಿ ರೆಗ್ಯುಲರ್ ಆಗಬೇಕಾಗಿದೆ. ವಿದ್ಯಾರ್ಥಿ ಜೀವನವು ಉತ್ತಮ ಜೀವನವಾಗಿದೆ. ಎಷ್ಟು ಓದುತ್ತೀರಿ, ಓದಿಸುತ್ತೀರಿ ಮತ್ತು ಗುಣವನ್ನು ಸುಧಾರಣೆ ಮಾಡುತ್ತೀರಿ ಅಷ್ಟೇ ಉತ್ತಮವಾಗುತ್ತೀರಿ.
ಮಧುರ ಮಕ್ಕಳೇ, ಈಗ ನಿಮ್ಮದು ರಿಟರ್ನ್ ಜರ್ನಿಯಾಗಿದೆ, ಹೇಗೆ ಸತ್ಯಯುಗದಿಂದ ತ್ರೇತಾ, ದ್ವಾಪರ, ಕಲಿಯುಗದವರೆಗೂ ಕೆಳಗಿಳಿಯುತ್ತಾ ಬಂದಿದ್ದೀರಿ, ಹಾಗೆಯೇ ಈಗ ನೀವು ಕಬ್ಬಿಣದ ಯುಗದಿಂದ ಸ್ವರ್ಣೀಮ ಯುಗದವರೆಗೆ ಹೋಗಬೇಕಾಗಿದೆ. ಯಾವಾಗ ಬೆಳ್ಳಿಯ ಯುಗದವರೆಗೆ ತಲುಪುತ್ತೀರಿ, ಮತೆ ಈ ಕರ್ಮೇಂದ್ರಿಯಗಳ ಚಂಚಲತೆಯು ಸಮಾಪ್ತಿಯಾಗಿ ಬಿಡುತ್ತದೆ. ಆದ್ದರಿಂದ ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ ಅಷ್ಟೂ ನೀವು ಆತ್ಮರಿಂದ ರಜೋ, ತಮೋದ ತುಕ್ಕು ಬಿಟ್ಟು ಹೋಗುತ್ತದೆ ಮತ್ತು ತುಕ್ಕು ಎಷ್ಟು ಬಿಟ್ಟು ಹೋಗುತ್ತದೆಯೋ ಅಷ್ಟು ಅಯಸ್ಕಾಂತವಾದ ತಂದೆಯ ಕಡೆಗೆ ಆಕರ್ಷಣೆಯು ಹೆಚ್ಚಾಗುತ್ತಾ ಹೋಗುತ್ತದೆ. ಆಕರ್ಷಣೆಯಾಗುವುದಿಲ್ಲವೆಂದರೆ ಖಂಡಿತವಾಗಿಯೂ ತುಕ್ಕು ಹಿಡಿದು ಬಿಟ್ಟಿದೆ - ತುಕ್ಕು ಬಿಟ್ಟು ಹೋಗಿ ಅಪ್ಪಟ ಚಿನ್ನವಾಗಿ ಬಿಡುವುದಾಗಿದೆ - ಅಂತಿಮ ಕರ್ಮಾತೀತ ಸ್ಥಿತಿ.
ನೀವು ಗೃಹಸ್ಥ ವ್ಯವಹಾರದಲ್ಲಿ, ಪ್ರವೃತ್ತಿಯಲ್ಲಿರುತ್ತಿದ್ದರೂ ಕಮಲ ಪುಷ್ಫ ಸಮಾನವಾಗಬೇಕು. ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಮನೆ ಗೃಹಸ್ಥವನ್ನೂ ಸಂಭಾಲನೆ ಮಾಡಿರಿ, ಶರೀರ ನಿರ್ವಹಣೆಗಾಗಿ ಕಾರ್ಯ ವ್ಯವಹಾರವನ್ನೂ ಮಾಡಿರಿ. ಜೊತೆ ಜೊತೆಗೆ ಈ ವಿದ್ಯೆಯನ್ನೂ ಓದುತ್ತಾ ಇರಬೇಕು. ಗಾಯನವೂ ಇದೆ - ಕೈ ಕೆಲಸ ಮಾಡುತ್ತಿರಲಿ, ಹೃದಯವು ತಂದೆಯನ್ನು ನೆನಪು ಮಾಡಲಿ. ಕಾರ್ಯ ವ್ಯವಹಾರಗಳನ್ನು ಮಾಡುತ್ತಾ, ಒಬ್ಬ ಪ್ರಿಯತಮ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ನೌಧಾಭಕ್ತಿಯಲ್ಲಿಯೂ ನೋಡಿರಿ - ಕೃಷ್ಣ ಮುಂತಾದವರನ್ನು ಎಷ್ಟೊಂದು ಪ್ರೀತಿಯಿಂದ ನೆನಪು ಮಾಡುತ್ತಾರೆ. ಅದು ನೌಧಾಭಕ್ತಿ, ಅಟಲ ಭಕ್ತಿಯಾಗಿದೆ. ಕೃಷ್ಣನ ಅಟಲ ನೆನಪು ಇರುತ್ತದೆ ಆದರೆ ಅದರಿಂದಂತು ಯಾರಿಗೂ ಮುಕ್ತಿಯು ಸಿಗುವುದಿಲ್ಲ. ಇದು ನಿರಂತರ ನೆನಪು ಮಾಡುವ ಜ್ಞಾನವಾಗಿದೆ. ತಂದೆಯು ಹೇಳುತ್ತಾರೆ - ನಾನು ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತೀರೆಂದರೆ, ನಿಮ್ಮ ಪಾಪಗಳು ನಾಶವಾಗಿ ಬಿಡುತ್ತದೆ ಆದರೆ ಮಾಯೆಯೂ ಬಹಳ ಶಕ್ತಿಶಾಲಿಯಾಗಿದೆ. ಯಾರನ್ನೂ ಬಿಡುವುದಿಲ್ಲ. ಮಾಯೆಯಿಂದ ಮತ್ತೆ-ಮತ್ತೆ ಸೋಲನ್ನನುಭವಿಸುವುದಕ್ಕಿಂತಲೂ ಕತ್ತನ್ನು ಕೆಳ ಮುಖ ಮಾಡಿ ಪಶ್ಚಾತ್ತಾಪ ಪಡಬೇಕಾಗಿದೆ. ತಂದೆಯು ಮಧುರ ಮಕ್ಕಳಿಗೆ ಶ್ರೇಷ್ಠ ಮತವನ್ನು ಕೊಡುವುದೇ ಶ್ರೇಷ್ಠರಾಗುವುದಕ್ಕಾಗಿ. ಬಾಬಾರವರು ನೋಡುತ್ತಾರೆ - ಮಕ್ಕಳು ಇಷ್ಟೊಂದು ಪರಿಶ್ರಮ ಪಡುತ್ತಿಲ್ಲ. ಆದ್ದರಿಂದ ತಂದೆಗೆ ದಯೆ ಬರುತ್ತದೆ. ಒಂದುವೇಳೆ ಈಗ ಈ ಅಭ್ಯಾಸವನ್ನು ಮಾಡಲಿಲ್ಲವೆಂದರೆ, ಮತ್ತೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುತ್ತದೆ ಮತ್ತು ಕಲ್ಪಕಲ್ಪವೂ ನಯಾಪೈಸೆಯ ಪದವಿಯನ್ನು ಪಡೆಯುತ್ತಿರುತ್ತೀರಿ.
ಮೂಲ ಮಾತನ್ನು ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿ ಆಗಿರಿ. ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನೊಬ್ಬನನ್ನೇ ನೆನಪು ಮಾಡಿರಿ, ಖಂಡಿತವಾಗಿ ಪಾವನರೂ ಆಗಬೇಕಾಗಿದೆ. ಕುಮಾರಿಯು ಯಾವಾಗ ಪವಿತ್ರವಾಗಿರುತ್ತಾಳೆ, ಆಗ ಎಲ್ಲರೂ ಅವಳಿಗೆ ತಲೆ ಬಾಗಿಸುತ್ತಾರೆ. ವಿವಾಹ ಮಾಡಿಕೊಂಡ ನಂತರ ಪೂಜಾರಿಯಾಗಬೇಕಾಗುತ್ತದೆ. ಎಲ್ಲರ ಮುಂದೆ ತಲೆ ಬಾಗಿಸಬೇಕಾಗುತ್ತದೆ. ಕನ್ಯೆಯು ಒದಲು ತಂದೆಯ ಮನೆಯಲ್ಲಿರುತ್ತಾಳೆ, ಆಗ ಮಿತ್ರ ಸಂಬಂಧಿಗಳ ನೆನಪು ಇಷ್ಟೊಂದು ಬರುತ್ತಿರಲಿಲ್ಲ. ವಿವಾಹದ ನಂತರ ದೇಹದ ಸಂಬಂಧವೂ ಹೆಚ್ಚಾಗುತ್ತದೆ, ನಂತರ ಪತಿ-ಮಕ್ಕಳಲ್ಲಿ ಮೋಹವೂ ಹೆಚ್ಚಾಗಿ ಬಿಡುತ್ತದೆ. ಅತ್ತೆ-ಮಾವ ಮುಂತಾದವರೆಲ್ಲರ ನೆನಪು ಬರುತ್ತಿರುತ್ತದೆ. ಮೊದಲಂತು ಕೇವಲ ತಂದೆ-ತಾಯಿಯಲ್ಲಿಯೇ ಮೋಹವಿರುತ್ತದೆ, ಇಲ್ಲಂತು ಆ ಎಲ್ಲಾ ಸಂಬಂಧಗಳನ್ನು ಮರೆಯಬೇಕಾಗುತ್ತದೆ ಏಕೆಂದರೆ ಇವರೊಬ್ಬರೇ ನಿಮ್ಮ ಸತ್ಯ-ಸತ್ಯವಾದ ಮಾತಾಪಿತನಲ್ಲವೆ. ಇದು ಈಶ್ವರೀಯ ಸಂಬಂಧವಾಗಿದೆ. ಗಾಯನವೂ ಇದೆ - ತ್ವಮೇವ ಮಾತಾಶ್ಚ ಪಿತಾ ತ್ವಮೇವ....... ಈ ಮಾತಾಪಿತರಂತು ನಿಮ್ಮ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಬೇಹದ್ದಿನ ತಂದೆಯನ್ನು ನಿರಂತರವಾಗಿ ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಗಳೊಂದಿಗೆ ಮಮತ್ವವನ್ನಿಡಬಾರದು. ಸ್ತ್ರೀಗೆ ಕಲಿಯುಗದಲ್ಲಿರುವ ಪತಿಯು ಎಷ್ಟೊಂದು ನೆನಪಿರುತ್ತಾರೆ, ಅವರಂತು ಗುಂಡಿ(ನರಕ)ಯಲ್ಲಿ ಬೀಳಿಸುತ್ತಾರೆ. ಇವರು ಬೇಹದ್ದಿನ ತಂದೆ ಅಂದಮೇಲೆ ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಇಂತಹ ಮಧುರ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡುತ್ತಾ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇರಬೇಕು. ಇದೇ ನೆನಪಿನ ಬಲದಿಂದಲೇ ನಿಮ್ಮ ಆತ್ಮವು ಕಂಚನವಾಗಿ ಸ್ವರ್ಗದ ಮಾಲೀಕರನ್ನಾಗಿ ಮಾಡಿ ಬಿಡುತ್ತದೆ. ಸ್ವರ್ಗದ ಹೆಸರನ್ನು ಕೇಳಿಯೇ ಹೃದಯವು ಖುಷಿಯಾಗಿ ಬಿಡುತ್ತದೆ. ಯಾರು ನಿರಂತರ ನೆನಪು ಮಾಡುತ್ತಾರೆ ಮತ್ತು ಅನ್ಯರಿಗೂ ನೆನಪು ಮಾಡಿಸುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈ ಪುರುಷಾರ್ಥವನ್ನು ಮಾಡುತ್ತಾ-ಮಾಡುತ್ತಾ ಅಂತ್ಯದಲ್ಲಿ ಆ ಸ್ಥಿತಿಯು ನಿಮ್ಮದಾಗಿ ಬಿಡುತ್ತದೆ. ಇದಂತು ಪ್ರಪಂಚವೂ ಹಳೆಯದಾಗಿದೆ, ದೇಹವೂ ಹಳೆಯದಾಗಿದೆ, ದೇಹ ಸಹಿತ ದೇಹದ ಎಲ್ಲಾ ಸಂಬಂಧವೂ ಹಳೆಯದಾಗಿದೆ. ಅದೆಲ್ಲದರಿಂದ ಬುದ್ಧಿಯೋಗವನ್ನು ಸರಿದು, ಒಬ್ಬ ತಂದೆಯ ಸಂಗದೊಂದಿಗೆ ಜೋಡಿಸಬೇಕಾಗಿದೆ. ಅದರಿಂದ ಅಂತ್ಯ ಕಾಲದಲ್ಲಿಯೂ ಆ ಒಬ್ಬ ತಂದೆಯೇ ನೆನಪಿರಬೇಕು, ಮತ್ತ್ಯಾವುದೇ ಸಂಬಂಧದ ನೆನಪಿದೆಯೆಂದರೆ ಅಂತ್ಯದಲ್ಲಿಯೂ ಅವರ ನೆನಪು ಬಂದು ಬಿಡುತ್ತದೆ ಮತ್ತು ಪದವಿ ಭ್ರಷ್ಟ ಆಗಿ ಬಿಡುತ್ತದೆ. ಅಂತ್ಯ ಕಾಲದಲ್ಲಿ ಯಾರು ಬೇಹದ್ದಿನ ತಂದೆಯ ನೆನಪಿನಲ್ಲಿರುತ್ತಾರೆಯೋ, ಅವರೇ ನರನಿಂದ ನಾರಾಯಣನಾಗುವರು. ತಂದೆಯ ನೆನಪಿದೆಯೆಂದರೆ, ಮತ್ತೆ ಅವರಿಗಾಗಿ ಶಿವಾಲಯವು ದೂರವಿಲ್ಲ.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳು ಬೇಹದ್ದಿನ ತಂದೆಯ ಬಳಿ ಬರುವುದೇ ರಿಫ್ರೆಶ್ ಆಗುವುದಕ್ಕಾಗಿ, ಏಕೆಂದರೆ ಮಕ್ಕಳಿಗೆ ಗೊತ್ತಿದೆ - ಬೇಹದ್ದಿನ ತಂದೆಯಿಂದ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಇದನ್ನೆಂದಿಗೂ ಮರೆಯಬಾರದು. ಅದು ಸದಾ ನೆನಪಿದ್ದರೆ ಮಕ್ಕಳೂ ಸಹ ಅಪಾರ ಖುಷಿಯಲ್ಲಿರುತ್ತೀರಿ. ಈ ಬ್ಯಾಡ್ಜ್ ನಡೆಯುತ್ತಾ-ತಿರುಗಾಡುತ್ತಾ ಗಳಿಗೆ-ಗಳಿಗೆಗೂ ನೋಡುತ್ತಾ ಇರಿ - ಸಂಪೂರ್ಣವಾಗಿ ಹೃದಯಕ್ಕೆ ನಾಟಿ ಬಿಡಬೇಕು. ಓಹೋ! ಭಗವಂತನ ಶ್ರೀಮತದಿಂದ ನಾವು ಹೀಗಾಗುತ್ತಿದ್ದೇವೆ. ಬ್ಯಾಡ್ಜ್ ನ್ನು ನೋಡುತ್ತಾ, ಅದನ್ನು ಪ್ರೀತಿ ಮಾಡುತ್ತಾ ಇರಿ ಅಷ್ಟೇ. ಬಾಬಾ, ಬಾಬಾ ಎನ್ನುತ್ತಾ ಇರುತ್ತೀರೆಂದರೆ ಸದಾ ಸ್ಮೃತಿಯಿರುತ್ತದೆ - ನಾವು ತಂದೆಯ ಮೂಲಕ ಹೀಗಾಗುತ್ತಿದ್ದೇವೆ. ಅಂದಮೇಲೆ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ಮಧುರ ಮಕ್ಕಳದು ಬಹಳ ವಿಶಾಲ ಬುದ್ಧಿಯಿರಬೇಕು. ಇಡೀ ದಿನದಲ್ಲಿ ಸರ್ವೀಸಿನ ವಿಚಾರಗಳೇ ನಡೆಯುತ್ತಿರಲಿ. ಬಾಬಾರವರಿಗಂತು ಅಂತಹ ಮಕ್ಕಳು ಬೇಕು, ಯಾರು ಸೇವೆಯಿಲ್ಲ ಇರಲು ಸಾಧ್ಯವಿಲ್ಲ. ನೀವು ಮಕ್ಕಳು ಇಡೀ ವಿಶ್ವದ ಮೇಲೆ ಮುತ್ತಿಗೆಯನ್ನು ಹಾಕಬೇಕು ಅರ್ಥಾತ್ ಪತಿತ ಪ್ರಪಂಚವನ್ನು ಪಾವನ ಮಾಡಬೇಕಾಗಿದೆ. ಇಡೀ ವಿಶ್ವವನ್ನು ದುಃಖಧಾಮದಿಂದ ಸುಖಧಾಮವನ್ನಾಗಿ ಮಾಡಬೇಕಾಗಿದೆ. ಶಿಕ್ಷಕನಿಗೂ ಸಹ ಓದಿಸುವುದರಲ್ಲಿ ಮಜಾ ಬರುತ್ತದೆಯಲ್ಲವೆ. ನೀವಂತು ಈಗ ಬಹಳ ಶ್ರೇಷ್ಠವಾದ ಟೀಚರ್ ಆಗಿದ್ದೀರಿ. ಎಷ್ಟು ಒಳ್ಳೆಯ ಟೀಚರ್, ಅವರು ಅನೇಕನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ, ಎಂದಿಗೂ ಸುಸ್ತಾಗುವುದಿಲ್ಲ. ಈಶ್ವರನ ಸೇವೆಯಲ್ಲಿ ಬಹಳ ಖುಷಿಯಿರುತ್ತದೆ. ತಂದೆಯ ಸಹಯೋಗವು ಸಿಗುತ್ತದೆ. ಇದು ದೊಡ್ಡ ಬೇಹದ್ದಿನ ವ್ಯಾಪಾರವೂ ಆಗಿದೆ, ವ್ಯಾಪಾರಿ ಜನರೇ ಹಣವಂತರಾಗುತ್ತಾರೆ. ಅವರು ಈ ಜ್ಞಾನ ಮಾರ್ಗದಲ್ಲಿಯೂ ಹೆಚ್ಚು ಉತ್ಸುಕರಾಗಿರುತ್ತಾರೆ. ತಂದೆಯೂ ಸಹ ಬೇಹದ್ದಿನ ವ್ಯಾಪಾರಿಯಲ್ಲವೆ. ವ್ಯಾಪಾರವು ಬಹಳ ಫಸ್ಟ್ ಕ್ಲಾಸ್ ಆಗಿದೆ ಆದರೆ ಇದರಲ್ಲಿ ಬಹಳ ಸಾಹಸದ ಗುಣವನ್ನು ಧಾರಣೆ ಮಾಡಬೇಕಾಗುತ್ತದೆ. ಹೊಸ-ಹೊಸ ಮಕ್ಕಳು ಪುರುಷಾರ್ಥದಲ್ಲಿ ಹಳಬರಿಗಿಂತಲೂ ಮುಂದೆ ಹೋಗಬಹುದು. ಪ್ರತಿಯೊಬ್ಬರದೂ ಅವರವರ ಅದೃಷ್ಟವಿದೆ, ಅಂದಮೇಲೆ ಪುರುಷಾರ್ಥವೂ ಸಹ ಪ್ರತಿಯೊಬ್ಬರೂ ಮಾಡಬೇಕಾಗಿದೆ. ತಮ್ಮ ಪರಿಶೀಲನೆಯನ್ನು ಸಂಪೂರ್ಣವಾಗಿ ಮಾಡಿಕೊಳ್ಳಬೇಕಾಗಿದೆ. ಈ ರೀತಿ ಪರಿಶೀಲನೆ ಮಾಡುವವರು, ಹಗಲು-ರಾತ್ರಿ ಪುರುಷಾರ್ಥದಲ್ಲಿ ತೊಡಗಿಬಿಡುತ್ತಾರೆ. ಹೇಳುತ್ತಾರೆ - ನಾವು ನಮ್ಮ ಸಮಯವನ್ನೇಕೆ ವ್ಯರ್ಥ ಮಾಡುವುದು! ಸ್ಕಾಲರ್ಶಿಪ್ನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ. ಇಂತಹ ಮಕ್ಕಳಿಗೆ ನಂತರ ಸಹಯೋಗವೂ ಸಿಗುತ್ತದೆ. ಇದೇರೀತಿ ಹೊಸ-ಹೊಸ ಪುರುಷಾರ್ಥಿ ಮಕ್ಕಳು ನಿಮ್ಮನ್ನು ನೋಡುತ್ತಾರೆ. ಸಾಕ್ಷಾತ್ಕಾರವನ್ನು ಮಾಡುತ್ತಿರುತ್ತಾರೆ. ಹೇಗೆ ಪ್ರಾರಂಭದಲ್ಲಿ ಆಯಿತು, ಅದನ್ನೇ ನಂತರ ಅಂತ್ಯದಲ್ಲಿ ನೋಡುತ್ತೀರಿ. ಎಷ್ಟು ಸಮೀಪವಾಗುತ್ತಾ ಸಾಗುತ್ತದೆಯೋ, ಅಷ್ಟು ಖುಷಿಯಲ್ಲಿ ನರ್ತಿಸುತ್ತಿರುತ್ತೀರಿ. ಆ ಕಡೆ ರಕ್ತದ ಕೋಡಿಯ ಹರಿಯುವ ಆಟವೂ ನಡೆಯುತ್ತಿರುತ್ತದೆ.
ನೀವು ಮಕ್ಕಳದು ಈಶ್ವರೀಯ ರೇಸ್ ನಡೆಯುತ್ತಿದೆ, ಎಷ್ಟು ಮುಂದೆ ಓಡುತ್ತೀರಿ ಅಷ್ಟೂ ಹೊಸ ಪ್ರಪಂಚವೂ ಸಮೀಪದಲ್ಲಿ ಕಾಣಿಸುತ್ತಿರುತ್ತದೆ, ಖುಷಿಯು ಹೆಚ್ಚುತ್ತಿರುತ್ತದೆ. ಯಾರಿಗೆ ಕಾಣಿಸುವುದೇ ಇಲ್ಲ, ಅವರಿಗೆ ಖುಷಿಯೂ ಆಗುವುದಿಲ್ಲ. ಈಗಂತು ಕಲಿಯುಗಿ ಪ್ರಪಂಚದೊಂದಿಗೆ ವೈರಾಗ್ಯ ಮತ್ತು ಸತ್ಯಯುಗಿ ಹೊಸ ಪ್ರಪಂಚದೊಂದಿಗೆ ಬಹಳ ಪ್ರೀತಿಯಿರಬೇಕು. ಶಿವ ತಂದೆಯ ನೆನಪಿರುತ್ತದೆಯೆಂದರೆ, ಸ್ವರ್ಗದ ಆಸ್ತಿಯೂ ನೆನಪಿರುತ್ತದೆ. ಸ್ವರ್ಗದ ಆಸ್ತಿಯು ನೆನಪಿರುತ್ತದೆಯೆಂದರೆ ಶಿವ ತಂದೆಯೂ ನೆನಪಿರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ನಾವು ಸ್ವರ್ಗದ ಕಡೆ ಹೋಗುತ್ತಿದ್ದೇವೆ, ಕಾಲು ನರಕದ ಕಡೆಯಿದೆ, ಮುಖವು ಸ್ವರ್ಗದ ಕಡೆ ಇದೆ. ಈಗಂತು ಕಿರಿಯರು-ಹಿರಿಯರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಬಾಬಾರವರಿಗೆ ಸದಾ ಈ ನಶೆಯಿರುತ್ತದೆ - ಓಹೋ! ನಾವು ಹೋಗಿ ಈ ಬಾಲಕೃಷ್ಣನಾಗುವೆನು, ಅವರಿಗಾಗಿ ಮುಂಚಿತವಾಗಿಯೇ ಉಡುಗೊರೆಗಳನ್ನು ಕಳುಹಿಸುತ್ತಿರುತ್ತಾರೆ. ಯಾರಿಗೆ ಪೂರ್ಣ ನಿಶ್ಚಯವಿದೆಯೋ ಆ ಗೋಪಿಕೆಯರೇ ಉಡುಗೊರೆಗಳನ್ನು ಕಳುಹಿಸುತ್ತಾರೆ, ಅವರಿಗೆ ಅತೀಂದ್ರಿಯ ಸುಖದ ಅನುಭವವಾಗುತ್ತದೆ. ನಾವೇ ಅಮರಲೋಕದಲ್ಲಿ ದೇವತೆಯಾಗುತ್ತೇವೆ. ಕಲ್ಪದ ಮೊದಲೂ ಸಹ ನಾವೇ ಆಗಿದ್ದೆವು, ಮತ್ತೆ ನಾವೇ 84 ಪುನರ್ಜನಗಳಾಯಿತು. ಈ ಬಾಜೋಲಿಯು ನೆನಪಿರುತ್ತದೆಯೆಂದರೂ ಅಹೋ ಸೌಭಾಗ್ಯ - ಸದಾ ಅಪಾರ ಖುಷಿಯಲ್ಲಿರಿ, ಬಹಳ ದೊಡ್ಡ ಲಾಟರಿ ಸಿಗುತ್ತಿದೆ. 5000 ವರ್ಷಗಳ ಮೊದಲೂ ಸಹ ನಾವು ರಾಜ್ಯಭಾಗ್ಯವನ್ನು ಪಡೆದಿದ್ದೆವು, ನಂತರ ನಾಳೆಯೂ ಪಡೆಯುತ್ತೇವೆ. ಡ್ರಾಮಾದಲ್ಲಿ ನೊಂದಿತವಾಗಿದೆ. ಹೇಗೆ ಕಲ್ಪದ ಮೊದಲು ಜನ್ಮವನ್ನು ತೆಗೆದುಕೊಂಡಿದ್ದಿರಿ, ಹಾಗೆಯೇ ತೆಗೆದುಕೊಳ್ಳುತ್ತೀರಿ, ಅವರೇ ನಮ್ಮ ತಂದೆ-ತಾಯಿ ಆಗುತ್ತಾರೆ. ಯಾರು ಕೃಷ್ಣನ ತಂದೆಯಾಗಿದ್ದರು, ಅವರೇ ಮತ್ತೆ ಆಗುವರು. ಯಾರು ಇಡೀ ದಿನದಲ್ಲಿ ಇಂತಿಂತಹ ವಿಚಾರಗಳು ಮಾಡುತ್ತಿರುತ್ತಾರೆಯೋ, ಅವರು ಬಹಳ ರಮಣೀಕತೆಯಲ್ಲಿರುತ್ತಾರೆ. ವಿಚಾರ ಸಾಗರ ಮಥನ ಮಾಡುವುದಿಲ್ಲವೆಂದರೆ ಅನಾರೋಗ್ಯವಿದೆ ಎಂದರ್ಥವಾಗಿದೆ. ಹಸು ಭೋಜನ(ಹುಲ್ಲು)ವನ್ನು ತಿನ್ನುತ್ತದೆಯೆಂದರೆ, ಇಡೀ ದಿನದಲ್ಲಿ ಅದನ್ನು ಮೆಲುಕು ಹಾಕುತ್ತಿರುತ್ತದೆ. ಮುಖವು ಮೆಲುಕು ಹಾಕುತ್ತಿಲ್ಲವೆಂದರೆ ರೋಗಿಯಾಗಿದೆ ಎಂದರ್ಥ. ಇದೂ ಸಹ ಹಾಗೆಯೇ ಆಗಿದೆ. ಬೇಹದ್ದಿನ ತಂದೆ ಮತ್ತು ದಾದಾ ಇಬ್ಬರಿಗೂ ಮಧುರಾತಿ ಮಧುರ ಮಕ್ಕಳೊಂದಿಗೆ ಬಹಳ ಪ್ರೀತಿಯಿದೆ, ಎಷ್ಟೊಂದು ಪ್ರೀತಿಯಿಂದ ಓದಿಸುತ್ತಾರೆ. ಕಪ್ಪಾಗಿರುವವರಿಂದ ಸುಂದರರನ್ನಾಗಿ ಮಾಡುತ್ತಾರೆ. ಅಂದಮೇಲೆ ಮಕ್ಕಳೂ ಸಹ ಖುಷಿಯಲ್ಲಿ ನಶೆಯೇರಿರಬೇಕಾಗಿದೆ. ನೆನಪಿನ ಯಾತ್ರೆಯಿಂದ ನಶೆಯೇರುತ್ತದೆ. ತಂದೆಯು ಕಲ್ಪಕಲ್ಪವೂ ಬಹಳ ಪ್ರೀತಿಯಿಂದ ಲವ್ಲೀ ಸೇವೆಯನ್ನು ಮಾಡುತ್ತಾರೆ. 5 ತತ್ವಗಳ ಸಹಿತವಾಗಿ ಎಲ್ಲರನ್ನೂ ಪಾವನ ಮಾಡುತ್ತಾರೆ. ಎಷ್ಟೊಂದು ದೊಡ್ಡ ಬೇಹದ್ದಿನ ಸೇವೆಯಾಗಿದೆ. ಬಾಬಾರವರು ಬಹಳ ಪ್ರೀತಿಯಿಂದ ಮಕ್ಕಳಿಗೆ ಶಿಕ್ಷಣವನ್ನೂ ಕೊಡುತ್ತಿರುತ್ತಾರೆ ಏಕೆಂದರೆ ಮಕ್ಕಳನ್ನು ಸುಧಾರಣೆ ಮಾಡುವುದು ತಂದೆ ಅಥವಾ ಶಿಕ್ಷಕನದೇ ಕೆಲಸವಾಗಿದೆ. ತಂದೆಯದು ಶ್ರೀಮತವಿದೆ, ಅದರಿಂದಲೇ ಶ್ರೇಷ್ಠರಾಗುತ್ತೀರಿ. ಎಷ್ಟು ಪ್ರೀತಿಯಿಂದ ನೆನಪು ಮಾಡುತ್ತೀರಿ, ಅಷ್ಟೂ ಶ್ರೇಷ್ಠರಾಗುತ್ತೀರಿ. ಇದನ್ನೂ ಚಾರ್ಟ್ನಲ್ಲಿ ಬರೆಯಬೇಕಾಗಿದೆ - ನಾವು ಶ್ರೀಮತದಂತೆ ನಡೆಯುತ್ತೇವೆಯೇ ಅಥವಾ ನನ್ನ ಮತದಂತೆ ನಡೆಯುತ್ತೇನೆಯೇ? ಶ್ರೀಮತದಂತೆ ನಡೆಯುವುದರಿಂದಲೇ ನೀವು ಅಕ್ಯುರೇಟ್ ಆಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮೊಂದಿಗೆ ತಾವು ಪ್ರತಿಜ್ಞೆ ಮಾಡಬೇಕಾಗಿದೆ - ನಾವು ನಮ್ಮ ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಸಂಗಮದ ಪ್ರತೀ ಕ್ಷಣವನ್ನು ಸಫಲ ಮಾಡುತ್ತೇವೆ. ನಾವು ಬಾಬಾರವರನ್ನೆಂದಿಗೂ ಮರೆಯುವುದಿಲ್ಲ. ವಿದ್ಯಾರ್ಥಿ ವೇತನವನ್ನು ತೆಗೆದುಕೊಂಡೇ ತೆಗೆದುಕೊಳ್ಳುತ್ತೇವೆ.
2. ಸದಾ ಸ್ಮೃತಿಯಿರಲಿ - ಈಗ ನಮ್ಮದು ವಾನಪ್ರಸ್ಥ ಸ್ಥಿತಿಯಾಗಿದೆ. ಕಾಲು ನರಕದ ಕಡೆ, ಮುಖವು ಸ್ವರ್ಗದ ಕಡೆಯಿದೆ. ಬಾಜೋಲಿಯನ್ನು ನೆನಪು ಮಾಡುತ್ತಾ ಅಪಾರ ಖುಷಿಯಲ್ಲಿರಬೇಕಾಗಿದೆ. ದೇಹೀ-ಅಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ.
ಓಂ ಶಾಂತಿ. ತಂದೆಯು ಮಕ್ಕಳಿಗೂ ತಿಳಿಸಿದ್ದಾರೆ - ನೀವೂ ಓಂ ಶಾಂತಿ ಹೇಳುತ್ತೀರಿ. ತಂದೆಯೂ ಓಂ ಶಾಂತಿ ಅರ್ಥಾತ್ ನೀವು ಆತ್ಮರು ಶಾಂತ ಸ್ವರೂಪರಾಗಿದ್ದೀರಿ ಎಂದು ಹೇಳುತಾರೆ. ತಂದೆಯೂ ಶಾಂತ ಸ್ವರೂಪನಾಗಿದ್ದಾರೆ, ಆತ್ಮದ ಸ್ವಧರ್ಮವು ಶಾಂತಿಯಾಗಿದೆ. ಪರಮಾತ್ಮನದೂ ಸ್ವಧರ್ಮ ಶಾಂತಿಯಾಗಿದೆ. ನೀವೂ ಸಹ ಶಾಂತಿಧಾಮದಲ್ಲಿ ಇರುವವರಾಗಿದ್ದೀರಿ. ತಂದೆಯೂ ಸಹ ಹೇಳುತ್ತಾರೆ - ನಾನೂ ಕೂಡ ಅಲ್ಲಿರುವವನಾಗಿದ್ದೇನೆ. ನೀವು ಮಕ್ಕಳು ಪುನರ್ಜನ್ಮದಲ್ಲಿ ಬರುತ್ತೀರಿ, ನಾನು ಬರುವುದಿಲ್ಲ. ನಾನು ಈ ರಥದಲ್ಲಿ ಪ್ರವೇಶ ಮಾಡುತ್ತೇನೆ. ಇದು ನನ್ನ ರಥವಾಗಿದೆ. ಒಂದುವೇಳೆ ಶಂಕರನೊಂದಿಗೆ ಕೇಳುತ್ತೀರಿ, ಕೇಳುವುದಕ್ಕಂತು ಸಾಧ್ಯವಿಲ್ಲ. ಆದರೆ ತಿಳಿದುಕೊಳ್ಳಿರಿ - ಸೂಕ್ಷ್ಮವತದಲ್ಲಿ ಹೋಗಿ ಯಾರೇ ಕೇಳುತ್ತಾರೆಂದರೆ ಹೇಳುತ್ತಾರೆ - ಈ ಸೂಕ್ಷ್ಮ ಶರೀರ ನಮ್ಮದಾಗಿದೆ. ಶಿವ ತಂದೆಯು ಹೇಳುತ್ತಾರೆ - ಇದು ನಮ್ಮ ಶರೀರವಲ್ಲ. ಇದನ್ನು ನಾವು ಬಾಡಿಗೆಯಾಗಿ ತೆಗೆದುಕೊಂಡಿದ್ದೇವೆ ಏಕೆಂದರೆ ನನಗೂ ಸಹ ಕರ್ಮೇಂದ್ರಿಯಗಳ ಆಧಾರ ಬೇಕಾಗಿದೆ. ಮೊಟ್ಟ ಮೊದಲ ಮುಖ್ಯ ಮಾತನ್ನು ತಿಳಿಸಬೇಕಾಗಿದೆ - ಪತಿತ-ಪಾವನ, ಜ್ಞಾನ ಸಾಗರ ಕೃಷ್ಣನಲ್ಲ. ಶ್ರೀಕೃಷ್ಣನು ಸರ್ವ ಆತ್ಮರನ್ನು ಪತಿತರಿಂದ ಪಾವನರನ್ನಾಗಿ ಮಾಡುವುದಿಲ್ಲ, ಅವನಂತು ಪಾವನ ಪ್ರಪಂಚದಲ್ಲಿ ಬಂದು ರಾಜ್ಯ ಮಾಡುತ್ತಾನೆ. ಮೊದಲು ರಾಜಕುಮಾರನಾಗುತ್ತಾನೆ ನಂತರ ಮಹಾರಾಜ ಆಗುತ್ತಾರೆ. ಅವರಲ್ಲಿಯೂ ಜ್ಞಾನವಿರುವುದಿಲ್ಲ. ರಚನೆಯ ಜ್ಞಾನವಂತು ರಚಯಿತನಲ್ಲಿಯೇ ಇರುತ್ತದೆಯಲ್ಲವೆ. ಶ್ರೀಕೃಷ್ಣನನ್ನು ರಚನೆ ಎಂದು ಹೇಳಲಾಗುತ್ತದೆ, ರಚಯಿತ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ಈಗ ತಂದೆಯು ರಚಿಸುತ್ತಿದ್ದಾರೆ, ಹೇಳುತ್ತಾರೆ - ನೀವು ನಮ್ಮ ಮಕ್ಕಳಾಗಿದ್ದೀರಿ. ಬಾಬಾ ನಾವು ತಮ್ಮವರಾಗಿದ್ದೇವೆ ಎಂದು ನೀವೂ ಹೇಳುತ್ತೀರಿ. ಬ್ರಹ್ಮನ ಮೂಲಕ ಬ್ರಾಹ್ಮಣರ ಸ್ಥಾಪನೆ ಎಂದು ಹೇಳಲಾಗುತ್ತದೆ. ಇಲ್ಲವೆಂದರೆ ಬ್ರಾಹ್ಮಣರೆಲ್ಲಿಂದ ಬರುತ್ತಾರೆ? ಸೂಕ್ಷ್ಮವತನದಲ್ಲಿರುವ ಬ್ರಹ್ಮ ಬೇರೆ ಯಾರೋ ಇಲ್ಲ, ಮೇಲಿರುವಂತಹವರೇ ಕೆಳಗಿರುವಂತಹವರು, ಅವರೇ ಮೇಲಿರುವಂತಹವರಾಗಿದ್ದಾರೆ. ಒಬ್ಬರೇ ಆಗಿದ್ದಾರೆ. ಒಳ್ಳೆಯದು - ವಿಷ್ಣು ಮತ್ತು ಲಕ್ಷ್ಮೀ-ನಾರಾಯಣರದೂ ಒಂದೇ ಮಾತಾಗಿದೆ. ಅವರು ಎಲ್ಲಿಯವರಾಗಿದ್ದಾರೆ? ಬ್ರಹ್ಮಾ ಸೋ ವಿಷ್ಣುವಾಗುತ್ತಾರೆ. ಬ್ರಹ್ಮಾ-ಸರಸ್ವತಿಯೇ ಲಕ್ಷ್ಯೀ-ನಾರಾಯಣ ನಂತರ ಅವರೇ ಇಡೀ ಕಲ್ಪದ 84 ಜನ್ಮಗಳ ನಂತರ ಬಂದು ಸಂಗಮದಲ್ಲಿ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ಲಕ್ಷ್ಮೀ-ನಾರಾಯಣರೂ ಸಹ ಮನುಷ್ಯನಾಗಿದ್ದಾರೆ, ಅವರದು ದೇವಿ-ದೇವತಾ ಧರ್ಮವಾಗಿದೆ. ವಿಷ್ಣುವಿಗೆ 4 ಭುಜಗಳನ್ನು ಕೊಡಲಾಗಿದೆ. ಇದು ಪ್ರವೃತ್ತಿ ಮಾರ್ಗವನ್ನು ತೋರಿಸಲಾಗಿದೆ. ಭಾರತದಲ್ಲಿ ಪ್ರಾರಂಭದಿಂದಲೇ ಪ್ರವೃತ್ತಿ ಮಾರ್ಗ ನಡೆಯುತ್ತಾ ಬರುತ್ತದೆ ಆದ್ದರಿಂದ ವಿಷ್ಣುವಿಗೆ 4 ಭುಜಗಳನ್ನು ಕೊಟ್ಟಿದ್ದಾರೆ. ಇಲ್ಲಿ ಬ್ರಹ್ಮಾ-ಸರಸ್ವತಿ ಇದ್ದಾರೆ, ಆ ಸರಸ್ವತಿ ದತ್ತು ಮಗುವಾಗಿದ್ದಾರೆ. ಇವರ (ಬ್ರಹ್ಮಾ ಬಾಬಾ) ಅಸಲಾದ ಹೆಸರು ಲಕೀರಾಜ್ ಎಂದಿತ್ತು, ನಂತರ ಇವರ ಹೆಸರು ಬ್ರಹ್ಮಾ ಎಂದು ಇಡಲಾಯಿತು. ಶಿವ ತಂದೆಯು ಇವರಲ್ಲಿ ಪ್ರವೇಶ ಮಾಡಿದರು ಮತ್ತು ರಾಧೆಯನ್ನು ತನ್ನ ಮಗುವನ್ನಾಗಿ ಮಾಡಿಕೊಂಡರು, ಸರಸ್ವತಿ ಎಂದು ಹೆಸರಿಡಲಾಯಿತು. ಸರಸ್ವತಿಗೆ ಬ್ರಹ್ಮಾ ಯಾವುದೇ ಲೌಕಿಕ ತಂದೆಯಲ್ಲ. ಇವರಿಬ್ಬರ ಲೌಕಿಕ ತಂದೆ ಬೇರೆಯಿದ್ದರು, ಈಗ ಅವರಿಲ್ಲ. ಇವರನ್ನು ಶಿವ ತಂದೆಯು ಬ್ರಹ್ಮಾರವರ ಮುಖಾಂತರ ದತ್ತು ಮಾಡಿಕೊಂಡರು. ನೀವು ದತ್ತು ಮಕ್ಕಳಾಗಿದ್ದೀರಿ. ಬ್ರಹ್ಮನೂ ಸಹ ಶಿವ ತಂದೆಯ ಮಗನಾಗಿದ್ದಾರೆ. ಬ್ರಹ್ಮನ ಮುಖ ಕಮಲದಿಂದ ರಚಿಸುತ್ತಾರೆ ಆದ್ದರಿಂದ ಬ್ರಹ್ಮನನ್ನೂ ಸಹ ಮಾತಾ ಎಂದು ಹೇಳಲಾಗುತ್ತದೆ. ನೀವು ಮಾತಾಪಿತಾ ನಾವು ನಿಮ್ಮ ಬಾಲಕರು, ನಿಮ್ಮ ಕೃಪೆಯಿಂದ ಸುಖದ ಗಣಿ...... ಗಾಯನ ಮಾಡುತ್ತಾರಲ್ಲವೆ. ನೀವು ಬಾಲಕರು ಬಂದು ಬ್ರಾಹ್ಮಣರಾಗಿದ್ದೀರಿ. ಇದರಲ್ಲಿ ಬಹಳ ಚೆನ್ನಾಗಿ ತಿಳಿದುಕೊಳ್ಳುವ ಬುದ್ಧಿಯಿರಬೇಕು. ನೀವು ಮಕ್ಕಳು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಬ್ರಹ್ಮಾರವರೇನು ಸ್ವರ್ಗದ ರಚಯಿತ ಅಥವಾ ಜ್ಞಾನ ಸಾಗರನಲ್ಲ. ಜ್ಞಾನ ಸಾಗರ ಒಬ್ಬರೇ ತಂದೆಯಾಗಿದ್ದಾರೆ. ಆತ್ಮದ ತಂದೆಯೂ ಸಹ ಜ್ಞಾನ ಸಾಗರನಾಗಿದ್ದಾರೆ. ಆತ್ಮವೂ ಜ್ಞಾನ ಸಾಗರನಾಗುತ್ತದೆ ಆದರೆ ಇವರನ್ನು(ಬ್ರಹ್ಮಾ) ಜ್ಞಾನಸಾಗರನೆಂದು ಹೇಳುವುದಿಲ್ಲ ಏಕೆಂದರೆ ಸಾಗರನಂತು ಒಬ್ಬರೇ ಆಗಿದ್ದಾರೆ. ನೀವೆಲ್ಲರೂ ನದಿಗಳಾಗಿದ್ದೀರಿ. ಸಾಗರನಿಗೆ ತನ್ನದೇ ಆದ ಶರೀರವಿಲ್ಲ, ನದಿಗಳಿಗೆ ಇದೆ. ನೀವು ಜ್ಞಾನ ನದಿಗಳಾಗಿದ್ದೀರಿ. ಕಲ್ಕತ್ತಾದಲ್ಲಿ ಬ್ರಹ್ಮಪುತ್ರ ನದಿಯು ಬಹಳ ದೊಡ್ಡದಾಗಿದೆ ಏಕೆಂದರೆ ಅದರ ಸಂಬಂಧ ಸಾಗರದೊಂದಿಗಿದೆ. ಅದರ ಮೇಳ ಬಹಳ ದೊಡ್ಡದಾಗಿ ಆಗುತ್ತದೆ. ಇಲ್ಲಿಯೂ ಮೇಳ ಆಗುತ್ತದೆ. ಸಾಗರ ಮತ್ತು ಬ್ರಹ್ಮಪುತ್ರ ಇಬ್ಬರೂ ಕಂಬೈಂಡ್ ಆಗಿದ್ದಾರೆ. ಇದು ಚೈತನ್ಯ, ಅದು ಜಡ ಮೇಳವಾಗಿದೆ. ಈ ಮಾತನ್ನು ತಂದೆಯು ತಿಳಿಸುತ್ತಾರೆ, ಶಾಸ್ತ್ರಗಳಲ್ಲಿಲ್ಲ. ಶಾಸ್ತ್ರಗಳು ಭಕ್ತಿಮಾರ್ಗದ ವಿಭಾಗವಾಗಿದೆ. ಇದು ಜ್ಞಾನಮಾರ್ಗ, ಅದು ಭಕ್ತಿಮಾರ್ಗವಾಗಿದೆ. ಅರ್ಧಕಲ್ಪ ಭಕ್ತಿಮಾರ್ಗದ ವಿಭಾಗವು ನಡೆಯುತ್ತದೆ. ಅದರಲ್ಲಿ ಜ್ಞಾನ ಸಾಗರ ಇಲ್ಲವೇ ಇಲ್ಲ. ಪರಮಪಿತ ಪರಮಾತ್ಮ, ಜ್ಞಾನ ಸಾಗರ ತಂದೆಯು ಸಂಗಮದಲ್ಲಿ ಬಂದು ಜ್ಞಾನ ಸ್ನಾನದಿಂದ ಎಲ್ಲರ ಸದ್ಗತಿ ಮಾಡುತ್ತಾರೆ.
ನೀವು ತಿಳಿದಿದ್ದೀರಿ - ನಾವು ಬೇಹದ್ದಿನ ತಂದೆಯಿಂದ ಸ್ವರ್ಗದ ಸುಖದ ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೇವೆ. ಅವಶ್ಯವಾಗಿ ನಾವು ಸತ್ಯಯುಗ, ತ್ರೇತಾದಲ್ಲಿ ದೇವಿ-ದೇವತೆಗಳಾಗಿದ್ದೆವು, ಈಗ ನಾವು ಪೂಜಾರಿ ಮನುಷ್ಯರಾಗಿದ್ದೇವೆ. ಮತ್ತೆ ಮನುಷ್ಯರಿಂದ ನೀವು ದೇವತೆಗಳಾಗುತ್ತೀರಿ. ಬ್ರಾಹ್ಮಣರಿಂದ ದೇವತಾ ಧರ್ಮದಲ್ಲಿ ಬರುತ್ತೀರಿ, ನಂತರ ಕ್ಷತ್ರಿಯ, ವೈಶ್ಯ, ಶೂದ್ರರಾದಿರಿ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗಿಳಿಯಬೇಕಾಯಿತು. ಇದನ್ನೂ ಸಹ ನಿಮಗೆ ತಂದೆಯು ತಿಳಿಸಿದ್ದಾರೆ. ನೀವು ತಮ್ಮ ಜನ್ಮಗಳನ್ನು ತಿಳಿದುಕೊಂಡಿರಲಿಲ್ಲ, 84 ಜನ್ಮಗಳೂ ಸಹ ನೀವೇ ತೆಗೆದುಕೊಳ್ಳುತ್ತೀರಿ. ಯಾರು ಮೊಟ್ಟ ಮೊದಲು ಬರುತ್ತಾರೆ, ಅವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಯೋಗದಿಂದಲೇ ತುಕ್ಕು ಬಿಡುತ್ತದೆ, ಯೋಗದಲ್ಲಿಯೇ ಪರಿಶ್ರಮವಿದೆ. ಭಲೆ ಕೆಲವು ಮಕ್ಕಳು ಜ್ಞಾನದಲ್ಲಿ ಮುಂದೆ ಹೋಗುತ್ತಾರೆ ಆದರೆ ಯೋಗದಲ್ಲಿ ಕಚ್ಚಾ ಇದ್ದಾರೆ. ಬಂಧನ ಮುಕ್ತರಿಗಿಂತ ಬಂಧನದಲ್ಲಿರುವವರು ಯೋಗದಲ್ಲಿ ಚೆನ್ನಾಗಿದ್ದರೆ. ಅವರಂತು ಶಿವ ತಂದೆಯ ಮಿಲನಕ್ಕಾಗಿ ಚಡಪಡಿಸುತ್ತಿರುತ್ತಾರೆ. ನಿಮಗಂತು ಸಿಕ್ಕಿದ್ದಾರೆ. ನೆನಪು ಮಾಡಿ ಎಂದು ಹೇಳಲಾಗುತ್ತದೆ ಆದರೆ ನೀವು ಗಳಿಗೆ-ಗಳಿಗೆಗೂ ಮರೆತು ಹೋಗುತ್ತೀರಿ. ನಿಮಗೆ ಬಿರುಗಾಳಿಗಳು ಬಹಳ ಬರುತ್ತವೆ. ಅವರು ನೆನಪಿನಲ್ಲಂತು ಚಡಪಡಿಸುತ್ತಿರುತ್ತಾರೆ. ನೀವು ಚಡಪಡಿಸುವುದಿಲ್ಲ. ಅವರು ಮನೆಯಲ್ಲಿ ಕುಳಿತಿದ್ದಂತೆಯೇ ಶ್ರೇಷ್ಠ ಪದವಿಯಾಗುತ್ತದೆ, ನೀವು ತಿಳಿದಿದ್ದೀರಿ - ತಂದೆಯ ನೆನಪಿನಲ್ಲಿರುವುದರಿಂದ ನಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗುವುದು. ಹೇಗೆ ಮಗು ಗರ್ಭದಿಂದ ಹೊರಬರಲು ಚಡಪಡಿಸುತ್ತದೆ ಹಾಗೆಯೇ ಬಂಧನದಲ್ಲಿರುವವರು ಚಡಪಡಿಸುತ್ತಾ-ಚಡಪಡಿಸುತ್ತಾ, ಶಿವಬಾಬಾ ಈ ಬಂಧನದಿಂದ ಬಿಡಿಸಿ ಎಂದು ಕೂಗುತ್ತಿರುತ್ತಾರೆ. ಹಗಲು-ರಾತ್ರಿ ನೆನಪು ಮಾಡುತ್ತಾರೆ. ನಿಮಗೆ ತಂದೆಯು ಸಿಕ್ಕಿದ್ದಾರೆಂದರೆ ನೀವು ಹುಡುಗಾಟಿಕೆಯಲ್ಲಿದ್ದೀರಿ. ನಾವು ಬಾಬಾರವರ ಮಕ್ಕಳಾಗಿದ್ದೇವೆ, ನಾವು ಈ ಶರೀರವನ್ನು ಬಿಟ್ಟು ರಾಜಕುಮಾರರಾಗುತ್ತೇವೆ ಎನ್ನುವ ಸ್ಥಿರವಾದ ಖುಷಿಯು ಆಂತರ್ಯದಲ್ಲಿರಬೇಕು. ಆದರೆ ಮಾಯೆಯು ನೆನಪು ಮಾಡಲು ಬಿಡುವುದಿಲ್ಲ. ನೆನಪಿನಿಂದಲೇ ಬಹಳ ಖುಷಿಯಲ್ಲಿರುತ್ತೀರಿ, ನೆನಪು ಮಾಡುವುದಿಲ್ಲವೆಂದರೆ ಗುಟುಕರಿಸುತ್ತಿರುತ್ತೀರಿ. ಅರ್ಧಕಲ್ಪ ನೀವು ರಾವಣ ರಾಜ್ಯದಲ್ಲಿ ದುಃಖವನ್ನು ನೋಡಿದ್ದೀರಿ. ಅಕಾಲಮೃತ್ಯುವಾಗುತ್ತಾ ಬಂದಿದೆ. ದುಃಖವಂತು ಇದ್ದೇ ಇದೆ. ಭಲೆ ಎಷ್ಟೇ ಸಾಹುಕಾರರಿರಲಿ, ದುಃಖವಂತು ಇದೆ, ಅಕಾಲಮೃತ್ಯುವಾಗುತ್ತದೆ. ಸತ್ಯಯುಗದಲ್ಲಿ ಇಂತಹ ಅಕಾಲ ಮರಣವಾಗುವುದಿಲ್ಲ, ಎಂದೂ ಖಾಯಿಲೆಯಾಗುವುದಿಲ್ಲ. ಸಮಯದಲ್ಲಿ ಕುಳಿತು-ಕುಳಿತಿದ್ದಂತೆ ತಾನಾಗಿಯೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಬಿಡುತ್ತಾರೆ. ಅದರ ಹೆಸರೇ ಸುಖಧಾಮ ಎಂದಾಗಿದೆ. ಮನುಷ್ಯರಂತು ಸ್ವರ್ಗದ ಮಾತನ್ನು ಕಲ್ಪನೆಯೆಂದು ತಿಳಿಯುತ್ತಾರೆ. ಸ್ವರ್ಗ ಎಲ್ಲಿಂದ ಬರುತ್ತದೆ ಎಂದು ಹೇಳುತ್ತಾರೆ. ನೀವು ತಿಳಿದಿದ್ದೀರಿ - ನಾವಂತು ಸ್ವರ್ಗದಲ್ಲಿ ಇರುವವರಾಗಿದ್ದೇವೆ ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಪೂರ್ಣ ಆಟವು ಭಾರತದ ಮೇಲೆಯೇ ಮಾಡಲ್ಪಟ್ಟಿದೆ. ನಾವು 21 ಜನ್ಮಗಳು ಪಾವನ ದೇವತೆಗಳಾಗಿದ್ದೆವು ನಂತರ ನಾವು ಕ್ಷತ್ರಿಯ, ವೈಶ್ಯ, ಶೂದ್ರರಾದೆವು. ಈಗ ಮತ್ತೆ ಬ್ರಾಹ್ಮಣರಾಗಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಈ ಸ್ವದರ್ಶನ ಚಕ್ರವು ಬಹಳ ಸಹಜವಾಗಿದೆ. ಇದನ್ನು ಶಿವ ತಂದೆಯು ತಿಳಿಸುತ್ತಿದ್ದಾರೆ.
ಶಿವ ತಂದೆಯು ಬ್ರಹ್ಮನ ರಥದಲ್ಲಿ ಬಂದಿದ್ದಾರೆ ಎಂದು ತಿಳಿದಿದ್ದೀರಿ. ಯಾರು ಬ್ರಹ್ಮಾ ಆಗಿದ್ದಾರೆ ಅವರೇ ಸತ್ಯಯುಗದ ಆದಿಯಲ್ಲಿ ಶ್ರೀಕೃಷ್ಣನಾಗಿದ್ದನು. 84 ಜನ್ಮಗಳನ್ನು ತೆಗೆದುಕೊಂಡು ಪತಿತರಾದರು ನಂತರ ಇವರಲ್ಲಿ (ಬ್ರಹ್ಮಾ) ತಂದೆಯು ಪ್ರವೇಶ ಮಾಡಿ ದತ್ತು ಮಾಡಿಕೊಂಡಿದ್ದಾರೆ. ಸ್ವಯಂ ಹೇಳುತ್ತಾರೆ - ನಾನು ಈ ತನುವಿನ ಆಧಾರವನ್ನು ತೆಗೆದುಕೊಂಡು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದೇನೆ. ನಿಮ್ಮನ್ನು ಸ್ವರ್ಗದ ರಾಜಧಾನಿಗೆ ಯೋಗ್ಯರನ್ನಾಗಿ ಮಾಡುತ್ತೇನೆ, ಯಾರು ಯೋಗ್ಯರಾಗುತ್ತಾರೆಯೋ ಅವರೇ ರಾಜ್ಯಭಾಗ್ಯದಲ್ಲಿ ಬರುತ್ತಾರೆ. ಇದರಲ್ಲಿ ಒಳ್ಳೆಯ ಗುಣವಿರಬೇಕು. ಮುಖ್ಯವಾಗಿರುವುದೇ ಪವಿತ್ರತೆಯಾಗಿದೆ. ಈ ಮಾತಿನಲ್ಲಿ ಅಬಲೆಯರ ಹತ್ಯಾಚಾರವಾಗುತ್ತದೆ. ಕೆಲವು ಕಡೆ ಪುರುಷರ ಮೇಲೂ ಹತ್ಯಾಚಾರಗಳುತ್ತವೆ. ವಿಕಾರಕ್ಕಾಗಿ ಒಬ್ಬರಿಗೊಬ್ಬರು ಬೇಸರ ಪಡಿಸುತ್ತಾರೆ. ಇಲ್ಲಿ ಮಾತೆಯರು ಬಹಳ ಮಂದಿಯಿರುವ ಕಾರಣ ಶಕ್ತಿಸೇನೆ ಎಂಬ ಗಾಯನವಾಗಿದೆ. ವಂದೇ ಮಾತರಂ. ಸುಂದರರಾಗಲು ಈಗ ನೀವು ಕಾಮ ಚಿತೆಯಿಂದ ಇಳಿದು ಜ್ಞಾನ ಚಿತೆಯ ಮೇಲೆ ಕುಳಿತಿದ್ದೀರಿ. ದ್ವಾಪರದಿಂದ ಕಾಮ ಚಿತೆಯ ಮೇಲೆ ಕುಳಿತಿದ್ದಿರಿ, ಒಬ್ಬರಿಗೊಬ್ಬರು ವಿಕಾರ ಕೊಡುವ ಕಂಕಣವನ್ನು ವಿಕಾರಿ ಬ್ರಾಹ್ಮಣರು ಬಂಧಿಸುತ್ತಾರೆ. ನೀವು ನಿರ್ವಿಕಾರಿ ಬ್ರಾಹ್ಮಣರಾಗಿದ್ದೀರಿ. ನೀವು ಅದನ್ನು ಕ್ಯಾನ್ಸಲ್ ಮಾಡಿಸಿ ಜ್ಞಾನ ಚಿತೆಯ ಮೇಲೆ ಕೂರಿಸುತ್ತೀರಿ. ಕಾಮ ಚಿತೆಯಿಂದ ಕಪ್ಪಾದಿರಿ, ಜ್ಞಾನ ಚಿತೆಯಿಂದ ಸುಂದರರಾಗಿ ಬಿಡುತ್ತೀರಿ. ತಂದೆಯು ಹೇಳುತ್ತಾರೆ - ಭಲೆ ಒಟ್ಟಾಗಿ ಇರಿ ಆದರೆ ಪ್ರತಿಜ್ಞೆ ಮಾಡಿ - ನಾವು ವಿಕಾರದಲ್ಲಿ ಹೋಗುವುದಿಲ್ಲ ಎಂದು. ಆದ್ದರಿಂದ ಬಾಬಾ ಉಂಗುರವನ್ನೂ ತೊಡಿಸುತ್ತಾರೆ. ಶಿವ ತಂದೆಯು ತಂದೆಯೂ ಆಗಿದ್ದಾರೆ, ಪ್ರಿಯತಮನೂ ಆಗಿದ್ದಾರೆ. ಎಲ್ಲಾ ಸೀತೆಯರ ರಾಮನಾಗಿದ್ದಾರೆ, ಅವರೇ ಪತಿತ-ಪಾವನನೂ ಆಗಿದ್ದಾರೆ. ಬಾಕಿ ರಘುಪತಿ ರಾಘವ ರಾಜಾರಾಮನ ಮಾತಲ್ಲ. ಅವರು ಸಂಗಮದಲ್ಲಿಯೇ ಈ ಪ್ರಾಲಬ್ಧವನ್ನು ಪಡೆದಿದ್ದರು, ಅವರಿಗೆ (ತ್ರೇತಾದರಾಮ) ಹಿಂಸಕ ಬಾಣ ತೋರಿಸುವುದು ತಪ್ಪಾಗಿದೆ. ಚಿತ್ರದಲ್ಲಿಯೂ ಕೊಡಬಾರದು. ಕೇವಲ ಚಂದ್ರವಂಶಿ ಎಂದು ಬರೆಯಬೇಕಾಗಿದೆ. ಮಕ್ಕಳಿಗೆ ತಿಳಿಸಬೇಕಾಗಿದೆ – ಶಿವ ತಂದೆಯು ಇವರ ಮೂಲಕ ನಮಗೆ ಈ ಚಕ್ರದ ರಹಸ್ಯವನ್ನು ತಿಳಿಸುತಿದ್ದಾರೆ. ಸತ್ಯ ನಾರಾಯಣನ ಕಥೆ ಹೇಳುತ್ತಾರಲ್ಲವೆ. ಅದು ಮನುಷ್ಯರು ಮಾಡಿರುವ ಕಥೆಯಾಗಿದೆ. ನರನಿಂದ ನಾರಾಯಣನಂತು ಯಾರೂ ಆಗುವುದಿಲ್ಲ. ಸತ್ಯ ನಾರಾಯಣನ ಕಥೆಯ ಅರ್ಥವೇ ಆಗಿದೆ - ನರನಿಂದ ನಾರಾಯಣರಾಗುವುದು. ಅಮರ ಕಥೆಯೂ ಸಹ ತಿಳಿಸುತ್ತಾರೆ ಆದರೆ ಅಮರಪುರಿಯಲ್ಲಂತು ಯಾರೂ ಹೋಗುವುದಿಲ್ಲ. ಮೃತ್ಯುಲೋಕವು 2500 ವರ್ಷ ನಡೆಯುತ್ತದೆ. ಮೂರನೆಯ ನೇತ್ರದ ಕಥೆಯನ್ನು ಮಾತೆಯರು ಕೇಳುತ್ತಾರೆ. ವಾಸ್ತವದಲ್ಲಿ ಇದು ಮೂರನೆಯ ಜ್ಞಾನದ ನೇತ್ರವನ್ನು ಕೊಡುವ ಕಥೆಯಾಗಿದೆ. ಈಗ ಜ್ಞಾನದ ಮೂರನೇ ಆತ್ಮನಿಗೆ ಸಿಗುತ್ತದೆ ಅಂದಮೇಲೆ ಆತ್ಮಾಭಿಮಾನಿ ಆಗಬೇಕಾಗಿದೆ. ನಾನು ಈ ಶರೀರದ ಮೂಲಕ ಈಗ ದೇವತೆಯಾಗುತ್ತೇನೆ. ನನ್ನಲ್ಲಿಯೇ ಸಂಸ್ಕಾರವಿದೆ. ಮನುಷ್ಯರೆಲ್ಲರೂ ದೇಹಾಭಿಮಾನಿಯಾಗಿದ್ದಾರೆ. ತಂದೆಯು ಬಂದು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ಮತ್ತೆ ಮನುಷ್ಯರು ಆತ್ಮ-ಪರಮಾತ್ಮ ಒಂದೇ ಆಗಿದೆ, ಇವೆಲ್ಲಾ ರೂಪಗಳನ್ನು ಪರಮಾತ್ಮನೇ ಧಾರಣೆ ಮಾಡಿದ್ದಾರೆ ಎಂದು ಹೇಳಿಬಿಡುತ್ತಾರೆ. ತಂದೆಯು ಹೇಳುತ್ತಾರೆ - ಇದೆಲ್ಲಾ ರಾಂಗ್ ಆಗಿದೆ, ಇದಕ್ಕೆ ಮಿಥ್ಯ ಅಭಿಮಾನ, ಮಿಥ್ಯ ಜ್ಞಾನವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಬಿಂದುವಿನಂತೆ ಇದ್ದೇನೆ. ನೀವೂ ಸಹ ತಿಳಿದುಕೊಂಡಿರಲಿಲ್ಲ, ಇವರೂ ಸಹ (ಬ್ರಹ್ಮಾ ತಂದೆ) ತಿಳಿದುಕೊಂಡಿರಲಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಇದರಲ್ಲಿ ಸಂಶಯ ಬರಬಾರದು, ನಿಶ್ಚಯವಾಗಬೇಕು. ತಂದೆಯು ಅವಶ್ಯವಾಗಿ ಸತ್ಯವನ್ನೇ ಹೇಳುತ್ತಾರೆ, ಸಂಶಯಬುದ್ಧಿ ವಿನಃಶ್ಯಂತಿ. ಅಂತಹವರು ಪೂರ್ಣ ಆಸ್ತಿಯನ್ನು ಪಡೆಯುವುದಿಲ್ಲ. ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ಭೋಗವನ್ನು ತಯಾರು ಮಾಡುತ್ತಾ ಬುದ್ಧಿಯು ತಂದೆಯ ಕಡೆ ತೊಡಗಿರಲಿ - ಪ್ರತೀ ಮಾತಿನಲ್ಲಿ ಈ ಅಭ್ಯಾಸ ಮಾಡಬೇಕಾಗಿದೆ. ನೆನಪಿನಿಂದಲೇ ನೀವು ಸತೋಪ್ರಧಾನರಾಗುತ್ತೀರಿ. 8 ಗಂಟೆ ಕರ್ಮ ಮಾಡುವುದಕ್ಕಾಗಿ ಕೊಡಲಾಗಿದೆ. ಮಧ್ಯದಲ್ಲಿಯೂ ಸಹ ಏಕಾಂತದಲ್ಲಿ ಹೋಗಿ ಕುಳಿತುಕೊಳ್ಳಿ, ನೀವು ತಂದೆಯ ಪರಿಚಯವನ್ನು ಎಲ್ಲರಿಗೂ ತಿಳಿಸಿರಿ. ಇಂದು ಕೇಳುವುದಿಲ್ಲವೆಂದರೆ ನಾಲೆ ಕೇಳುತ್ತಾರೆ. ತಂದೆಯು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ನಾವು ಸ್ವರ್ಗದಲ್ಲಿದ್ದೆವು ಈಗ ಮತ್ತೆ ನರಕವಾಸಿಗಳಾಗಿದ್ದೇವೆ. ಈಗ ಮತ್ತೆ ತಂದೆಯ ಆಸ್ತಿ ಸಿಗಬೇಕಾಗಿದೆ. ಭಾರತವಾಸಿಗಳಿಗೇ ತಿಳಿಸಲಾಗುತ್ತದೆ. ತಂದೆಯು ಬರುವುದೂ ಭಾರತದಲ್ಲಿಯೇ ಆಗಿದೆ. ನೋಡಿ, ನಿಮ್ಮ ಬಳಿ ಮುಸಲ್ಮಾನರೂ ಬರುತ್ತಾರೆ, ಅವರೂ ಸಹ ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಾರೆ. ಹೇಳುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿರಿ. ಸಿಖ್ಖರೂ ಬರುತ್ತಾರೆ, ಕ್ರಿಶ್ಚಿಯನ್ನರೂ ಬರುತ್ತಾರೆ, ಮುಂದೆ ಹೋದಂತೆ ಬಹಳ ಬರುತ್ತಾರೆ. ಈ ಜ್ಞಾನವು ಎಲ್ಲರಿಗಾಗಿ ಇದೆ ಏಕೆಂದರೆ ಇದಾಗಿದೆ - ತಂದೆಯ ಸಹಜ ನೆನಪು ಮತ್ತು ಸಹಜ ಆಸ್ತಿ. ಆದರೆ ಅವಶ್ಯವಾಗಿ ಪವಿತ್ರರಂತು ಆಗಬೇಕಾಗುತ್ತದೆ. ದಾನ ಕೊಟ್ಟರೆ ಗ್ರಹಣ ಬಿಡುವುದು. ಈಗ ಭಾರತದಲ್ಲಿ ರಾಹುವಿನ ಗ್ರಹಣವಿದೆ ನಂತರ ಬೃಹಸ್ಪತಿ ದೆಶೆಯು ಪ್ರಾರಂಭವಾಗುತ್ತದೆ 21 ಜನ್ಮಗಳಿಗಾಗಿ. ಮೊದಲು ಬೃಹಸ್ಪತಿ ದೆಶೆಯಾಗುತ್ತದೆ ನಂತರ ಶುಕ್ರ ದೆಶೆಯಾಗುತ್ತದೆ. ಸೂರ್ಯವಂಶಿಯರ ಮೇಲೆ ಬೃಹಸ್ಪತಿ ದೆಶೆ, ಚಂದ್ರವಂಶಿಯರ ಮೇಲೆ ಶುಕ್ರ ದೆಶೆ ಎಂದು ಹೇಳಲಾಗುತ್ತದೆ. ನಂತರ ದೆಶೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಎಲ್ಲದಕ್ಕಿಂತ ಕೆಟ್ಟ ದೆಶೆಯಾಗಿದೆ - ರಾಹುದೆಶೆ. ಬೃಹಸ್ಪತಿಯು ಯಾವುದೇ ಗುರುವಾಗುವುದಿಲ್ಲ, ಈ ದೆಶೆಯಾಗಿದೆ - ವೃಕ್ಷಪತಿಯದು. ವೃಕ್ಷಪತಿ ತಂದೆಯು ಬರುತ್ತಾರೆ ಅಂದಮೇಲೆ ವೃಕ್ಷಪತಿ ಮತ್ತು ಶುಕ್ರದೆಶೆಯಾಗುತ್ತದೆ. ರಾವಣನು ಬರುತ್ತಾನೆಂದರೆ ರಾಹು ದೆಶೆಯಾಗಿ ಬಿಡುತ್ತದೆ. ನೀವು ಮಕ್ಕಳ ಮೇಲೆ ಈಗ ಬೃಹಸ್ಪತಿ ದೆಶೆಯು ಕುಳಿತುಕೊಳ್ಳುತ್ತದೆ. ಕೇವಲ ವೃಕ್ಷಪತಿಯನ್ನು ನೆನಪು ಮಾಡಿ, ಪವಿತ್ರರಾಗಿ, ಅಷ್ಟೇ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ:
1. ಪ್ರತಿಯೊಂದು ಕಾರ್ಯ ಮಾಡುತ್ತಾ ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ. ದೇಹದ ಅಹಂಕಾರವನ್ನು ಸಮಾಪ್ತಿಯಾಗಲಿ - ಇದಕ್ಕಾಗಿ ಪರಿಶ್ರಮ ಪಡಬೇಕು.
2. ಸತ್ಯಯುಗೀ ರಾಜ್ಯಭಾಗ್ಯದ ಯೋಗ್ಯರಾಗಲು ತಮ್ಮ ಮ್ಯಾನರ್ಸ್‍ನ್ನು ರಾಯಲ್ ಮಾಡಿಕೊಳ್ಳಬೇಕಾಗಿದೆ. ಪವಿತ್ರತೆಯೇ ಎಲ್ಲದಕ್ಕಿಂತ ಶ್ರೇಷ್ಠ ಚಲನೆಯಾಗಿದೆ. ಪವಿತ್ರರಾಗುವುದರಿಂದಲೇ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ.
ಸಂಗಮಯುಗೀ ಬ್ರಾಹ್ಮಣ ಜೀವನದ ಮೂರು ವಿಶೇಷತೆಗಳು
ಇಂದು ಬಾಪ್ದಾದಾರವರು ತನ್ನ ಸರ್ವ ಮಕ್ಕಳು, ಸದಾ ಜೊತೆಯಿರುವಂತಹ, ಸದಾ ಸಹಯೋಗಿಗಳಾಗಿ ಸೇವೆಯ ಜೊತೆಗಾರರಾಗಿ ಸೇವೆ ಮಾಡುವಂತಹ ಮತ್ತು ಜೊತೆ ನಡೆಯುವಂತಹ ಶ್ರೇಷ್ಠ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಜೊತೆಯಿರುವವರು ಎಂದರೆ ಸಹಜ ಸ್ವಾಭಾವಿಕ ಯೋಗಿ ಆತ್ಮಗಳು. ಸದಾ ಸೇವೆಯಲ್ಲಿ ಸಹಯೋಗಿ ಜೊತೆಗಾರರಾಗಿ ನಡೆಯುವವರು ಎಂದರೆ ಜ್ಞಾನಿ ಆತ್ಮಗಳು, ಸತ್ಯ ಸೇವಾಧಾರಿಗಳು. ಜೊತೆ ನಡೆಯುವವರು ಎಂದರೆ ಸಮಾನ ಮತ್ತು ಸಂಪನ್ನ, ಕರ್ಮಾತೀತ ಆತ್ಮಗಳು. ಬಾಪ್ದಾದಾ ಎಲ್ಲಾ ಮಕ್ಕಳಲ್ಲಿ ಈ ಮೂರು ವಿಶೇಷತೆಗಳನ್ನು ನೋಡುತ್ತಿದ್ದಾರೆ - ಮೂರು ಮಾತುಗಳಲ್ಲಿ ಎಲ್ಲಿಯವರೆಗೆ ಸಂಪೂರ್ಣರಾಗಿದ್ದಾರೆ? ಸಂಗಮಯುಗದ ಶ್ರೇಷ್ಠ ಬ್ರಾಹ್ಮಣ ಜೀವನದ ಈ ಮೂರೂ ವಿಶೇಷತೆಗಳು ಅವಶ್ಯಕವಾಗಿವೆ. ಯೋಗಿ ಆತ್ಮ, ಜ್ಞಾನಿ ಆತ್ಮ ಮತ್ತು ತಂದೆಯ ಸಮಾನ ಕರ್ಮಾತೀತ ಆತ್ಮ - ಈ ಮೂರರಲ್ಲಿ ಒಂದುವೇಳೆ ಒಂದು ವಿಶೇಷತೆಯು ಕಡಿಮೆಯಿದ್ದರೂ ಸಹ ಬ್ರಾಹ್ಮಣ ಜೀವನದ ವಿಶೇಷತೆಗಳ ಅನುಭವಿಗಳಾಗದೇ ಇರುವುದು ಅರ್ಥಾತ್ ಸಂಪೂರ್ಣ ಬ್ರಾಹ್ಮಣ ಜೀವನದ ಸುಖ ಹಾಗೂ ಪ್ರಾಪ್ತಿಗಳಿಂದ ವಂಚಿತರಾಗಿರುವುದಾಗಿದೆ ಏಕೆಂದರೆ ಬಾಪ್ದಾದಾ ಮಕ್ಕಳಿಗೆ ಸಂಪೂರ್ಣ ಜ್ಞಾನವನ್ನು ಕೊಡುತ್ತಾರೆ. ಯಥಾಶಕ್ತಿ ಯೋಗಿ ಭವ, ಯಥಾ ಶಕ್ತಿ ಜ್ಞಾನಿ ಆತ್ಮಾ ಭವ ಎಂಬ ವರದಾನವನ್ನು ಕೊಡುವುದಿಲ್ಲ. ಸಂಪೂರ್ಣ ವರದಾನವನ್ನು ಕೊಡುತ್ತಾರೆ ಜೊತೆ ಜೊತೆಗೆ ಸಂಗಮಯುಗ, ಇದು ಇಡೀ ಕಲ್ಪದಲ್ಲಿಯೇ ವಿಶೇಷ ಯುಗವಾಗಿದೆ. ಈ ಯುಗ ಅರ್ಥಾತ್ ಈ ಸಮಯಕ್ಕೂ ವರದಾನೀ ಸಮಯವೆಂದು ಹೇಳಲಾಗುತ್ತದೆ ಏಕೆಂದರೆ ಈ ಸಮಯದಲ್ಲಿಯೇ ವರದಾತಾ ತಂದೆಯು ವರದಾನವನ್ನು ಹಂಚುವುದಕ್ಕಾಗಿ ಬರುತ್ತಾರೆ. ವರದಾತನು ಬರುವ ಕಾರಣ ಸಮಯವೂ ವರದಾನಿಯಾಗಿದೆ, ಈ ಸಮಯಕ್ಕೆ ವರದಾನವಿದೆ - ಸರ್ವ ಪ್ರಾಪ್ತಿಗಳಲ್ಲಿಯೂ ಸಂಪೂರ್ಣ ಪ್ರಾಪ್ತಿಗಳ ಸಮಯವೂ ಇದೇ ಆಗಿದೆ. ಸಂಪೂರ್ಣ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕೂ ಇದೇ ವರದಾನೀ ಸಮಯವಾಗಿದೆ. ಇಡೀ ಕಲ್ಪದಲ್ಲಿ ಕರ್ಮದನುಸಾರ ಪ್ರಾಲಬ್ಧವನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಮತ್ತು ಎಂತಹ ಕರ್ಮವೋ ಅಂತಹ ಫಲವು ಸ್ವತಹವಾಗಿ ಪ್ರಾಪ್ತಿಯಾಗುತ್ತಾ ಇರುತ್ತದೆ. ಆದರೆ ಈ ವರದಾನಿ ಸಮಯದಲ್ಲಿ ತಮ್ಮ ಒಂದು ಹೆಜ್ಜೆಯ ಕರ್ಮಕ್ಕೆ ಪದುಮದಷ್ಟು ತಂದೆಯ ಮೂಲಕ ಸಹಯೋಗದ ರೂಪದಲ್ಲಿ ಸಹಜವಾಗಿ ಪ್ರಾಪ್ತಿಯಾಗುತ್ತದೆ. ಸತ್ಯಯುಗದಲ್ಲಿಯೂ ಸಹ ಒಂದಕ್ಕೆ ಪದುಮದಷ್ಟು ಪ್ರಾಪ್ತಿಯಾಗುವುದಿಲ್ಲ ಆದರೆ ಈಗ ಪ್ರಾಪ್ತಿಯಾಗಿರುವುದನ್ನು ಪ್ರಾಲಬ್ಧದ ರೂಪದಲ್ಲಿ ಭೋಗಿಸಲು ಅಧಿಕಾರಿಗಳಾಗುತ್ತೀರಿ. ಕೇವಲ ಜಮಾ ಮಾಡಿಕೊಂಡಿರುವುದನ್ನು ತಿನ್ನುತ್ತಾ ಕೆಳಗಿಳಿಯುತ್ತೀರಿ. ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಒಂದು ಯುಗವು ಕಳೆದರೆ 16 ಕಲೆಗಳಿಂದ 14 ಕಲೆಗಳಾಗಿ ಬಿಡುತ್ತವೆಯಲ್ಲವೆ ಆದರೆ ಸಂಪೂರ್ಣ ಪ್ರಾಪ್ತಿ ಯಾವ ಸಮಯದಲ್ಲಿ ಮಾಡಿಕೊಂಡಿರುವ ಕಾರಣ 16 ಕಲಾ ಸಂಪೂರ್ಣರಾದರು? ಆ ಪ್ರಾಪ್ತಿಯ ಸಮಯವು ಇದೇ ಸಂಗಮಯುಗವಾಗಿದೆ. ಈ ಸಮಯದಲ್ಲಿ ತಂದೆಯು ತೆರೆದ ಹೃದಯದಿಂದ ಸರ್ವ ಪ್ರಾಪ್ತಿಗಳ ಭಂಡಾರವನ್ನು ವರದಾನದ ರೂಪದಲ್ಲಿ, ಆಸ್ತಿಯ ರೂಪದಲ್ಲಿ ಮತ್ತು ವಿದ್ಯೆಯ ಫಲ ಸ್ವರೂಪ ಪ್ರಾಪ್ತಿಯ ರೂಪದಲ್ಲಿ ಮೂರೂ ಸಂಬಂಧಗಳಿಂದ, ಮೂರೂ ರೂಪಗಳಲ್ಲಿ ವಿಶೇಷವಾಗಿ ತೆರೆದ ಭಂಡಾರ, ಸಂಪನ್ನ ಭಂಡಾರವನ್ನು ಮಕ್ಕಳ ಮುಂದಿಡುತ್ತಾರೆ. ಇಷ್ಟು ಮಾಡಿದರೆ ಇಷ್ಟೇ ಎಂಬ ಲೆಕ್ಕವನ್ನಿಡುವುದಿಲ್ಲ. ಒಂದಕ್ಕೆ ಪದುಮದಷ್ಟು ಕೊಡುತ್ತಾರೆ, ಕೇವಲ ತಮ್ಮ ಪುರುಷಾರ್ಥ ಮಾಡಿದಿರಿ ಮತ್ತು ಪ್ರಾಲಬ್ಧವನ್ನು ಪಡೆದಿರಿ ಎಂದು ಹೇಳುವುದಿಲ್ಲ ಆದರೆ ದಯಾಸಾಗರನಾಗಿ ದಾತನಾಗಿ, ವಿದಾತನಾಗಿ, ಸರ್ವ ಸಂಬಂಧಿಯಾಗಿ ಸ್ವಯಂ ಪ್ರತೀ ಕ್ಷಣ ಮಕ್ಕಳಿಗೆ ಸಹಯೋಗಿಯಾಗುತ್ತಾರೆ. ಒಂದು ಸೆಕೆಂಡಿನ ಸಾಹಸ ಮತ್ತು ಅನೇಕ ವರ್ಷಗಳಿಗೆ ಸಮಾನ ಪರಿಶ್ರಮದ ಸಹಯೋಗದ ರೂಪದಲ್ಲಿ ಸದಾ ಸಹಯೋಗಿಯಾಗುತ್ತಾರೆ ಏಕೆಂದರೆ ತಂದೆಗೆ ಗೊತ್ತಿದೆ, ನೀವು ಅನೇಕ ಜನ್ಮಗಳಿಂದ ಅಲೆದಾಡಿರುವ ನಿರ್ಬಲ ಆತ್ಮಗಳಾಗಿದ್ದೀರಿ, ದಣಿದಿದ್ದೀರಿ ಆದ್ದರಿಂದ ಇಷ್ಟು ಸಹಯೋಗಿಯಾಗುತ್ತಾರೆ, ಸಹಯೋಗ ನೀಡುತ್ತಾರೆ. ಸರ್ವ ಪ್ರಕಾರದ ಹೊರೆಯನ್ನು ತಂದೆಗೆ ಕೊಟ್ಟು ಬಿಡಿ ಎಂದು ತಾವೇ ಬಂದು ಅವಕಾಶ ನೀಡುತ್ತಾರೆ. ಮಕ್ಕಳ ಹೊರೆಯನ್ನು ತಾನು ಹೊತ್ತುಕೊಳ್ಳುತ್ತೇನೆಂದು ಹೇಳುತ್ತಾರೆ. ಭಾಗ್ಯವಿದಾತನಾಗಿ ಜ್ಞಾನಪೂರ್ಣರನ್ನಾಗಿ ಶ್ರೇಷ್ಠ ಕರ್ಮಗಳ ಜ್ಞಾನವನ್ನು ಸ್ಪಷ್ಟವಾಗಿ ತಿಳಿಸಿ, ಭಾಗ್ಯದ ರೇಖೆಯನ್ನು ಎಳೆದುಕೊಳ್ಳುವ ಲೇಖನಿಯನ್ನು ತಮ್ಮ ಕೈಯಲ್ಲಿ ಕೊಡುತ್ತಾರೆ. ಭಾಗ್ಯದ ರೇಖೆಯನ್ನು ಎಷ್ಟು ಉದ್ದವಾಗಿ ಎಳೆದುಕೊಳ್ಳಬೇಕು, ಅಷ್ಟೂ ಎಳೆದುಕೊಳ್ಳಿ. ಸರ್ವ ತೆರೆದ ಖಜಾನೆಗಳ ಬೀಗದ ಕೈಯನ್ನು ತಮ್ಮ ಕೈಯಲ್ಲಿ ಕೊಟ್ಟಿದ್ದಾರೆ ಮತ್ತು ಈ ಬೀಗದಕೈ ಎಷ್ಟು ಸಹಜವಾಗಿದೆ. ಒಂದುವೇಳೆ ಮಾಯೆಯ ಬಿರುಗಾಳಿಗಳು ಬಂದರೂ ಸಹ ಛತ್ರಛಾಯೆಯಾಗಿ ಸದಾ ಮಕ್ಕಳನ್ನು ಸುರಕ್ಷಿತವಾಗಿಡುತ್ತಾರೆ. ಎಲ್ಲಿ ಛತ್ರಛಾಯೆಯಿದೆಯೋ ಅಲ್ಲಿ ಬಿರುಗಾಳಿಯೇನು ಮಾಡುವುದು! ಸೇವಾಧಾರಿಗಳನ್ನಾಗಿ ಮಾಡುತ್ತಾರೆ ಆದರೆ ಜೊತೆ-ಜೊತೆಗೆ ಬುದ್ಧಿವಂತರಿಗೂ ಬುದ್ಧಿವಂತನಾಗಿ ಆತ್ಮಗಳಿಗೆ ಪ್ರೇರಣೆ ಕೊಡಿಸುತ್ತಾರೆ. ಇದರಿಂದ ಹೆಸರು ಮಕ್ಕಳದು, ಕೆಲಸ ತಂದೆಯದು ಸಹಜವಾಗಿ ಆಗಿ ಬಿಡುತ್ತದೆ. ಇಷ್ಟು ಪ್ರೀತಿ ಮತ್ತು ಮುದ್ದಾಗಿ ಪಾಲನೆ ಮಾಡುತ್ತಾರೆ, ಯಾರು ಸದಾ ಅನೇಕ ಉಯ್ಯಾಲೆಗಳಲ್ಲಿ ಮಕ್ಕಳನ್ನು ತೂಗುತ್ತಿರುತ್ತಾರೆ! ಕಾಲನ್ನು ಕೆಳಗಿಡುವುದಕ್ಕೇ ಬಿಡುವುದಿಲ್ಲ. ಕೆಲವೊಮ್ಮೆ ಖುಷಿಯ ಉಯ್ಯಾಲೆ, ಕೆಲವೊಮ್ಮೆ ಸುಖದ ಉಯ್ಯಾಲೆ, ಇನ್ನೂ ಕೆಲವೊಮ್ಮೆ ತಂದೆಯ ಮಡಿಲಿನ ಉಯ್ಯಾಲೆಯಲ್ಲಿ, ಆನಂದ-ಪ್ರೇಮ-ಶಾಂತಿಯ ಉಯ್ಯಾಲೆಯಲ್ಲಿ ತೂಗುತ್ತಾ ಇರಿ. ತೂಗುವುದು ಅರ್ಥಾತ್ ಮೋಜನ್ನಾಚರಿಸುವುದು. ಈ ಸರ್ವ ಪ್ರಾಪ್ತಿಗಳು ಈ ವರದಾನೀ ಸಮಯದ ವಿಶೇಷತೆಯಾಗಿದೆ. ಈ ಸಂಗಮಯುಗದ ಸಮಯ ವರದಾತ-ವಿದಾತನಾಗಿರುವ ಕಾರಣ ತಂದೆ ಮತ್ತು ಸರ್ವ ಸಂಬಂಧವನ್ನೂ ನಿಭಾಯಿಸುವ ಕಾರಣ ತಂದೆಯು ದಯಾಹೃದಯಿಯಾಗಿದ್ದಾರೆ. ಒಂದಕ್ಕೆ ಪದುಮದಷ್ಟು ಕೊಡುವ ವಿಧಿಯು ಈ ಸಮಯಕ್ಕಿದೆ. ಅಂತಿಮದಲ್ಲಿ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳುವವರು ತಮ್ಮ ಜೊತೆಗಾರರಿಂದ ಕೆಲಸ ತೆಗೆದುಕೊಳ್ಳುತ್ತಾರೆ. ಜೊತೆಗಾರರು ಯಾರು? ತಿಳಿದುಕೊಂಡಿದ್ದೀರಲ್ಲವೆ? ನಂತರ ಈ ಒಂದಕ್ಕೆ ಪದುಮದಷ್ಟು ಲೆಕ್ಕವು ಸಮಾಪ್ತಿಯಾಗಿ ಬಿಡುವುದು. ಈ ತಂದೆಯು ದಯಾ ಸಾಗರನಾಗಿದ್ದಾರೆ ಆದರೆ ಕೊನೆಯಲ್ಲಿ ಲೆಕ್ಕಕ್ಕೆ ಲೆಕ್ಕವು ಆರಂಭವಾಗುವುದು. ಈ ಸಮಯದಲ್ಲಾದರೆ ತಂದೆಯು ಕ್ಷಮೆ ಮಾಡುತ್ತಾರೆ, ಕಠಿಣವಾದ ತಪ್ಪನ್ನು ಕ್ಷಮೆ ಮಾಡಿ, ಇನ್ನೂ ಸಹಯೋಗಿಯಾಗಿ, ಮುಂದೆ ಹಾರಿಸುತ್ತಾರೆ. ಕೇವಲ ಈಗ ಹೃದಯದಿಂದ ರಿಯಲೈಜ್ ಮಾಡುವ ಅರ್ಥಾತ್ ಕ್ಷಮೆ ಯಾಚಿಸಬೇಕು. ಹೇಗೆ ಪ್ರಪಂಚದವರು ಕ್ಷಮೆ ಕೇಳುತ್ತಾರೆ, ಇಲ್ಲಿ ಆ ರೀತಿಯಿಂದ ಕೇವಲ ತಪ್ಪಾಯಿತು ಎಂದು ಹೇಳುವುದಲ್ಲ. ಅದನ್ನು ರಿಯಲೈಜ್ ವಿಧಿಯೇ ಕ್ಷಮೆಯಾಗಿದೆ ಅಂದಾಗ ಹೃದಯದಿಂದ ಅನುಭೂತಿ ಮಾಡಬೇಕು. ಕೇವಲ ಹಾಗೆಯೇ ಕ್ಷಮಿಸಿ ಎಂದು ಹೇಳುವುದರಿಂದ ಇಲ್ಲವೆ ಸಮಯದಲ್ಲಿ ಕಾರ್ಯವನ್ನು ಗೆಲ್ಲುವ ಲಕ್ಷ್ಯದಿಂದ ಕ್ಷಮೆ ಯಾಚಿಸಿದರೆ ಈ ಕ್ಷಮೆಯು ಮಂಜೂರಾಗುವುದಿಲ್ಲ. ಕೆಲವು ಮಕ್ಕಳು ಚತುರರಾಗಿರುತ್ತಾರೆ, ವಾತಾವರಣವನ್ನು ನೋಡಿ - ಈಗಂತೂ ರಿಯಲೈಜ್ ಮಾಡಿಕೋ, ಕ್ಷಮೆಯಾಚು ಮುಂದೆ ನೋಡೋಣ ಎಂದು ಹೇಳುತ್ತಾರೆ. ತಂದೆಯೂ ಸಹ ಜ್ಞಾನಪೂರ್ಣನಾಗಿದ್ದಾರೆ. ತಂದೆಗೆ ಗೊತ್ತಿದೆ ಆದ್ದರಿಂದ ಮುಗುಳ್ನಗುತ್ತಾ ಬಿಟ್ಟು ಬಿಡುತ್ತಾರೆ ಆದರೆ ಈ ಕ್ಷಮೆಯನ್ನು ಮಂಜೂರು ಮಾಡುವುದಿಲ್ಲ. ವಿಧಿಯಿಲ್ಲದೆ ಸಿದ್ಧಿಯು ಸಿಗುವುದಿಲ್ಲ ಅಲ್ಲವೆ. ಒಂದು ಹೆಜ್ಜೆಯ ವಿಧಿಗೆ ಪದುಮದಷ್ಟು ಹೆಜ್ಜೆಗಳ ಸಿದ್ಧಿಯಾಗುವುದು ಆದರೆ ಆ ಒಂದು ಹೆಜ್ಜೆಯ ವಿಧಿಯಂತೂ ಯಥಾರ್ಥವಾಗಿರಬೇಕಲ್ಲವೆ ಅಂದಾಗ ಈ ಸಮಯದ ವಿಶೇಷತೆ ಎಷ್ಟೊಂದಿದೆ! ಹಾಗೂ ಸಮಯವು ಹೇಗೆ ವರದಾನಿಯಾಗಿದೆ ಎಂಬುದನ್ನು ತಿಳಿಸಿದೆವು.
ಓಂ ಶಾಂತಿ. ಮಕ್ಕಳಿಗೆ ಇವರು ತಂದೆಯಾಗಿದ್ದಾರೆಂದು ತಿಳಿದಿದೆ, ಇದರಲ್ಲಿ ಭಯಪಡುವ ಮಾತಿಲ್ಲ. ಯಾವುದೇ ಶಾಪ ಅಥವಾ ಕೋಪ ಮಾಡುವಂತಹ ಯಾವುದೇ ಸಾಧು-ಮಹಾತ್ಮರಿಲ್ಲ. ಗುರು ಮೊದಲಾದವರಲ್ಲಿ ಬಹಳ ಕೋಪವಿರುತ್ತದೆ ಆದ್ದರಿಂದ ಮನುಷ್ಯರು ಅವರೆಲ್ಲಿ ಶಾಪ ಕೊಡುತ್ತಾರೋ ಎಂದು ಭಯಪಡುತ್ತಾರೆ. ಇಲ್ಲಿ ಅಂತಹ ಮಾತಿಲ್ಲ. ಮಕ್ಕಳು ಎಂದಿಗೂ ಭಯಪಡುವ ಅವಶ್ಯಕತೆಯಿಲ್ಲ. ಸ್ವಯಂ ಚಂಚಲವಾಗಿರುವವರು ತಂದೆಯೊಂದಿಗೆ ಭಯ ಪಡುತ್ತಾರೆ. ಲೌಕಿಕ ತಂದೆಯಂತೂ ಕೋಪ ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯು ಎಂದಿಗೂ ಕೋಪ ಮಾಡಿಕೊಳ್ಳುವುದಿಲ್ಲ. ಕೇವಲ ತಂದೆಯನ್ನು ನೆನಪು ಮಾಡದಿದ್ದರೆ ವಿಕರ್ಮ ವಿನಾಶವಾಗುವುದಿಲ್ಲ ಎಂದು ತಿಳಿಸುತ್ತಾರೆ. ಇದರಿಂದ ನಿಮ್ಮ ಜನ್ಮ-ಜನ್ಮಾಂತರಕ್ಕೆ ನಷ್ಟ ಮಾಡಿಕೊಳ್ಳುತ್ತೀರಿ ಎಂದು ಮುಂದೆಯಾದರೂ ಸುಧಾರಣೆಯಾಗಲಿ ಎಂದು ತಂದೆಯು ತಿಳಿಸುತ್ತಾರೆ. ಆದರೆ ತಂದೆಯು ಬೇಸರಪಡುತ್ತಾರೆ ಎಂದು ತಿಳಿಯಬಾರದು. ತಂದೆಯಂತೂ ತಮ್ಮನ್ನು ಸುಧಾರಣೆ ಮಾಡಿಕೊಳ್ಳಲು ನೆನಪಿನ ಯಾತ್ರೆಯ ಕಡೆ ಗಮನ ಕೊಡಬೇಕೆಂದು ತಿಳಿಸುತ್ತಿರುತ್ತಾರೆ, ಜೊತೆಜೊತೆಯಲ್ಲಿ ಚಕ್ರವನ್ನೂ ಬುದ್ಧಿಯಲ್ಲಿಟ್ಟುಕೊಳ್ಳಿ, ದೈವೀಗುಣಗಳನ್ನು ಧಾರಣೆ ಮಾಡಿ. ನೆನಪು ಇಲ್ಲಿ ಮುಖ್ಯವಾಗಿದೆ. ಉಳಿದ ಚಕ್ರದ ಜ್ಞಾನವು ಬಹಳ ಸರಳವಾಗಿದೆ. ಜ್ಞಾನವು ಆದಾಯದ ಮೂಲಾಧಾರವಾಗಿದೆ. ಆದರೆ ಅದರ ಜೊತೆ ದೈವೀಗುಣಗಳನ್ನೂ ಧಾರಣೆ ಮಾಡಬೇಕಾಗಿದೆ. ಈ ಸಮಯದಲ್ಲಿ ಪೂರ್ತಿ ಅಸುರೀಗುಣಗಳಿವೆ, ಚಿಕ್ಕ ಮಕ್ಕಳಲ್ಲಿಯೂ ಸಹ ಅಸುರೀಗುಣಗಳಿರುತ್ತವೆ ಆದರೆ ಅವರನ್ನು ಎಂದೂ ಹೊಡೆಯಬಾರದು, ಇನ್ನೂ ಆಸುರಿಗುಣಗಳನ್ನು ಕಲಿಯುತ್ತಾರೆ. ಅಲ್ಲಿ ಸತ್ಯಯುಗದಲ್ಲಿ ಕಲಿಯುವ ಮಾತಿಲ್ಲ. ಇಲ್ಲಿ ತಾಯಿ-ತಂದೆಯಿಂದ ಮಕ್ಕಳು ಎಲ್ಲವನ್ನು ಕಲಿಯುತ್ತಾರೆ. ತಂದೆಯು ಬಡವರ ಮಾತನ್ನು ಹೇಳುತ್ತಾರೆ. ಶ್ರೀಮಂತರಿಗಾಗಿ ಸ್ವರ್ಗವು ಇಲ್ಲಿಯೇ ಇದೆ. ಅವರಿಗೆ ಜ್ಞಾನದ ಅವಶ್ಯಕತೆಯಿಲ್ಲ, ಇದು ವಿದ್ಯೆಯಾಗಿದೆ. ಸುಧಾರಣೆ ಮಾಡಲು, ಕಲಿಸಲು ಶಿಕ್ಷಕರು ಬೇಕಾಗುತ್ತದೆ. ತಂದೆಯು ಬಡವರ ಮಾತನ್ನು ಹೇಳುತ್ತಾರೆ. ಎಂತಹ ಸ್ಥಿತಿ ಆಗಿಬಿಟ್ಟಿದೆ. ಹೇಗೆ ಮಕ್ಕಳು ಹಾಳಾಗಿಬಿಡುತ್ತಾರೆ. ತಾಯಿ-ತಂದೆಯನ್ನು ಎಲ್ಲರೂ ನೋಡುತ್ತಿರುತ್ತಾರೆ. ನಂತರ ಚಿಕ್ಕವಯಸ್ಸಿನಲ್ಲಿಯೇ ಹಾಳಾಗಿಬಿಡುತ್ತಾರೆ. ಈ ಆತ್ಮಿಕ ತಂದೆಯು ನಾನು ಬಡವರ ಬಂಧುವಾಗಿದ್ದೇನೆಂದು ಹೇಳುತ್ತಾರೆ. ಅವರು ಈ ಪ್ರಪಂಚದ ಗತಿಯು ಏನಾಗಿದೆ ಎಂದು ತಿಳಿಸುತ್ತಾರೆ. ತಮೋಪ್ರಧಾನ ಪ್ರಪಂಚವಾಗಿದೆ, ತಮೋಪ್ರಧಾನತ್ವಕ್ಕೂ ಒಂದು ಮಿತಿಯಿರುತ್ತದೆಯಲ್ಲವೆ! 1250 ವರ್ಷಗಳು ಕಲಿಯುಗವಿರುತ್ತದೆ, ಒಂದು ದಿನವೂ ಹೆಚ್ಚು ಕಡಿಮೆಯಾಗುವುದಿಲ್ಲ. ಯಾವಾಗ ಪೂರ್ಣ ತಮೋಪ್ರಧಾನವಾಗುತ್ತದೆಯೋ ಆಗ ತಂದೆಯು ಬರಬೇಕಾಗುತ್ತದೆ. ನಾನು ನಾಟಕದನುಸಾರ ಬಂಧಿಸಲ್ಪಟ್ಟಿದ್ದೇನೆಂದು ತಂದೆಯು ತಿಳಿಸುತ್ತಾರೆ. ನಾನು ಬರಲೇಬೇಕಾಗುವುದು, ಪ್ರಾರಂಭದಲ್ಲಿ ಎಷ್ಟೊಂದು ಜನ ಬಡವರು ಬಂದರು, ಶ್ರೀಮಂತರೂ ಬಂದರು ಆದರೆ ಇಬ್ಬರೂ ಜೊತೆಯಲ್ಲಿಯೇ ಕುಳಿತುಕೊಳ್ಳುತ್ತಿದ್ದರು. ದೊಡ್ಡ-ದೊಡ್ಡ ಮನೆಯ ಹೆಣ್ಣು ಮಕ್ಕಳು ಓಡಿಬಂದರು ಆದರೆ ಏನೂ ತರಲಿಲ್ಲ ಆದರೆ ಎಷ್ಟೊಂದು ತೊಂದರೆಯಾಯಿತು. ನಾಟಕದಲ್ಲಿ ಏನು ಆಗಬೇಕಿತ್ತೋ ಅದು ಆಯಿತು, ಈ ರೀತಿ ಆಗುತ್ತದೆಯೆಂದು ಯೋಚನೆಯೂ ಇರಲಿಲ್ಲ. ತಂದೆಯು ಏನು ನಡೆಯುತ್ತಿದೆ ಎಂದು ಆಶ್ಚರ್ಯಪಡುತ್ತಿದ್ದರು. ಇವರ ಚರಿತ್ರೆಯು ಬಹಳ ವಿಚಿತ್ರವಾಗಿತ್ತು, ಇದೂ ಸಹ ನಾಟಕದಲ್ಲಿ ನೊಂದಾವಣೆಯಾಗಿದೆ. ತಂದೆಯು ಎಲ್ಲರಿಗೂ ನಾವು ಜ್ಞಾನಾಮೃತವನ್ನು ಕುಡಿಯಲು ಹೋಗುತ್ತೇವೆಂದು ಪತ್ರವನ್ನು ಬರೆಸಿಕೊಂಡು ಬರಲು ಹೇಳಿದರು. ಆಗ ಅವರ ಪತಿಯರು ವಿದೇಶದಿಂದ ಹಿಂತಿರುಗಿ ಬಂದುಬಿಟ್ಟರು. ಅವರು ವಿಷವನ್ನು ಬೇಕೆಂದು ಕೇಳುತ್ತಿದ್ದರು. ಇವರು ನಾವು ಜ್ಞಾನಾಮೃತವನ್ನು ಕುಡಿದಿದ್ದೇವೆ, ವಿಷವನ್ನು ಕೊಡಲು ಹೇಗೆ ಸಾಧ್ಯ ಎಂದು ಹೇಳುತ್ತಿದ್ದರು. ಇದನ್ನು ಕುರಿತು ಒಂದು ಹಾಡೂ ಸಹ ಇದೆ. ಇದನ್ನೇ ಚರಿತ್ರೆ ಎಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಕೃಷ್ಣನ ಚರಿತ್ರೆಯನ್ನು ಬರೆದಿದ್ದಾರೆ, ಕೃಷ್ಣನಿಗೆ ಆ ರೀತಿಯ ಮಾತುಗಳಿರಲು ಸಾಧ್ಯವಿಲ್ಲ. ಇವೆಲ್ಲಾ ಮಾತುಗಳು ನಾಟಕದಲ್ಲಿ ನಿಗಧಿಯಾಗಿದೆ. ನಾಟಕದಲ್ಲಿ ಇದೆಲ್ಲವೂ ನಡೆಯುತ್ತದೆ. ಹಾಸ್ಯ ಮೊದಲಾದವುಗಳಿರುತ್ತವೆ..... ಇಲ್ಲಿ ಇಬ್ಬರು ತಂದೆಯರೂ ತಿಳಿಸುತ್ತಾರೆ- ನಾವೇನೂ ಮಾಡಲಿಲ್ಲ, ಇದೆಲ್ಲವೂ ನಾಟಕದಲ್ಲಿ ಆಟ ನಡೆಯುತ್ತಿದೆ, ಚಿಕ್ಕ-ಚಿಕ್ಕ ಮಕ್ಕಳೂ ಸಹ ಬಂದುಬಿಟ್ಟರು, ಈಗ ಅವರೆಲ್ಲರೂ ಎಷ್ಟೊಂದು ದೊಡ್ಡವರಾಗಿಬಿಟ್ಟಿದ್ದಾರೆ. ಮಕ್ಕಳಿಗೆಲ್ಲಾ ಎಷ್ಟೊಂದು ಆಶ್ಚರ್ಯವಾದ ಹೆಸರುಗಳನ್ನು ಸಂದೇಶಿಪುತ್ರಿಯರು ತೆಗೆದುಕೊಂಡು ಬಂದಿದ್ದರು. ಆ ಹೆಸರನ್ನು ಪಡೆದವರೂ ಸಹ ಹೊರಟೇ ಹೋದರು. ಅವರ ಹೆಸರು ಇಂದು ಇಲ್ಲದಂತಾಯಿತು, ಮತ್ತೆ ಅವರಿಗೆ ತಮ್ಮ ಹಳೆಯ ಹೆಸರನ್ನೇ ಕರೆಯುವಂತಾಯಿತು ಆದ್ದರಿಂದ ಬ್ರಾಹ್ಮಣರ ಮಾಲೆಯನ್ನು ಮಾಡುವುದಿಲ್ಲ.
ನಿಮ್ಮ ಬಳಿ ಏನೂ ಇಲ್ಲ. ಮೊದಲು ನೀವು ಮಾಲೆಯನ್ನು ಜಪ ಮಾಡುತ್ತಿದ್ದಿರಿ, ಈಗ ನೀವು ಮಾಲೆಯ ಮಣಿಯಾಗುತ್ತೀರಿ. ಅಲ್ಲಿ ಭಕ್ತಿಯಿರುವುದಿಲ್ಲ, ಇದು ತಿಳುದುಕೊಳ್ಳುವಂತಹ ಜ್ಞಾನವಾಗಿದೆ, ಒಂದು ಸೆಕೆಂಡಿನ ಜ್ಞಾನವಾಗಿದೆ. ಮತ್ತೆ ಅವರಿಗೆ ಜ್ಞಾನಸಾಗರನೆಂದು ಕರೆಯಲಾಗುವುದು. ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಕಾಡನ್ನು ಲೇಖನಿಯನ್ನಾಗಿ ಮಾಡಿಕೊಂಡರೂ ಪೂರ್ಣವಾಗುವುದಿಲ್ಲವೆಂದು ಹೇಳುತ್ತಾರೆ ಮತ್ತೆ ಅದು ಒಂದು ಸೆಕೆಂಡಿನ ಮಾತಾಗಿದೆ. ತಂದೆಯನ್ನು ತಿಳಿದುಕೊಂಡರೆ ರಾಜ್ಯಭಾಗ್ಯವು ಸಿಗಲೇಬೇಕಾಗಿದೆ. ಹೀಗೆ ಸ್ಥಿತಿಯನ್ನು ಜಮಾ ಮಾಡಿಕೊಂಡು ಪತಿತರಿಂದ ಪಾವನರಾಗಲು ಪರಿಶ್ರಮಪಡಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ- ನಿಮ್ಮನ್ನು ಆತ್ಮನೆಂದು ತಿಳಿದು ನೀವು ಬೇಹದ್ದಿನ ತಂದೆಯಾದ ನನ್ನನ್ನು ನೆನಪು ಮಾಡಿ. ಇದರಲ್ಲಿಯೇ ಪರಿಶ್ರಮವಿದೆ. ಕರ್ಮವನ್ನು ಮಾಡಿಸುವಂತಹ ಶಿಕ್ಷಕನಿರುವಾಗ ಒಂದುವೇಳೆ ಯಾರ ಅದೃಷ್ಟದಲ್ಲಿ ಇಲ್ಲವೆಂದರೆ ಏನು ಮಾಡುತ್ತಾರೆ! ಶಿಕ್ಷಕನಂತೂ ಓದಿಸುತ್ತಾರೆ. ಲಂಚ ತೆಗೆದುಕೊಂಡು ಉತ್ತೀರ್ಣ ಮಾಡಿಬಿಡುತ್ತಾರೆಂದು ತಿಳಿಯಬಾರದು. ಇಲ್ಲಿ ಬಾಪ್ದಾದಾರವರಿಬ್ಬರೂ ಒಟ್ಟಿಗೆ ಇದ್ದಾರೆಂದು ಮಕ್ಕಳಿಗೆ ತಿಳಿದಿದೆ. ಬಾಪ್ದಾದಾರವರ ಹೆಸರಿನಲ್ಲಿ ಬಹಳಷ್ಟು ಪತ್ರಗಳನ್ನು ಮಕ್ಕಳು ಬರೆಯುತ್ತಾರೆ. ಶಿವಬಾಬಾ ಛಿ/o ಪ್ರಜಾಪಿತ ಬ್ರಹ್ಮಾ. ತಂದೆಯಿಂದ ಬ್ರಹ್ಮನ ಮೂಲಕ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ತ್ರಿಮೂರ್ತಿಗಳಲ್ಲಿ ಬ್ರಹ್ಮನಿಂದ ಸ್ಥಾಪನೆ ಮಾಡಿಸುತ್ತೀರಿ, ಬ್ರಹ್ಮನಿಗೆ ಕ್ರಿಯೇಟರ್ ಎಂದು ಹೇಳಲಾಗುವುದಿಲ್ಲ, ಬೇಹದ್ದಿನ ರಚಯಿತನಂತೂ ಆ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮಾರವರೂ ಸಹ ಬೇಹದ್ದಿನವರಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿರುವಾಗ ಬಹಳ ಪ್ರಜೆಗಳಾಗುತ್ತಾರೆ. ಎಲ್ಲರೂ ಸಹ ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಅವರು ಸರ್ವಆತ್ಮರಿಗೂ ತಂದೆಯಾಗಿದ್ದಾರೆ. ಆತ್ಮರೆಲ್ಲರೂ ಸಹೋದರ-ಸಹೋದರರಾಗಿದ್ದಾರೆ ನಂತರ ಸಹೋದರ-ಸಹೋದರಿಯರಾಗುತ್ತಾರೆ. ಪ್ರಜಾಪಿತ ಬ್ರಹ್ಮಾರವರು ಬೇಹದ್ದಿನ ವೃಕ್ಷದ ಮುಖ್ಯಸ್ಥರಾಗಿದ್ದಾರೆ. ಹೇಗೆ ವಂಶವೃಕ್ಷವಿರುತ್ತದೆಯಲ್ಲವೆ! ಇದು ಬೇಹದ್ದಿನ ವೃಕ್ಷವಾಗಿದೆ. ಆದಂ ಹಾಗೂ ಬೀಬಿ, ಆಡಂ ಹಾಗೂ ಈವ್ ಎಂದು ಯಾರಿಗೆ ಹೇಳುತ್ತಾರೆ? ಬ್ರಹ್ಮಾ-ಸರಸ್ವತಿಗೆ ಹೇಳುತ್ತಾರೆ. ಈಗ ವೃಕ್ಷವಂತೂ ಅತಿದೊಡ್ಡದಾಗಿಬಿಟ್ಟಿದೆ, ಇಡೀ ವೃಕ್ಷವೂ ಹಳೆಯದಾಗಿಬಿಟ್ಟಿದೆ ನಂತರ ಹೊಸವೃಕ್ಷ ಬೇಕಾಗಿದೆ, ಇದನ್ನು ವಿಭಿನ್ನ ಧರ್ಮಗಳ ವೃಕ್ಷವಾಗಿದೆ ಎಂದು ಹೇಳಲಾಗುವುದು. ವಿಭಿನ್ನ ಲಕ್ಷಣವುಳ್ಳದ್ದಾಗಿದೆ, ಒಂದು ಮತ್ತೊಂದನ್ನು ಹೋಲುವುದಿಲ್ಲ. ಪ್ರತಿಯೊಬ್ಬರ ಚಟುವಟಿಕೆಯ ಪಾತ್ರವು ಮತ್ತೊಬ್ಬರನ್ನು ಹೋಲುವುದಿಲ್ಲ. ಇವು ಬಹಳ ಗುಹ್ಯವಾದ ಮಾತುಗಳಾಗಿವೆ. ಸಂಕುಚಿತ ಬುದ್ಧಿಯುಳ್ಳವರು ಇದನ್ನು ತಿಳಿದುಕೊಳ್ಳಲು ಆಗುವುದಿಲ್ಲ, ಬಹಳ ಕಷ್ಟವಿದೆ. ನಾವಾತ್ಮ ಅತಿಸೂಕ್ಷ್ಮ ಬಿಂದುವಾಗಿದ್ದೇವೆ. ಪರಮಪಿತ ಪರಮಾತ್ಮನೂ ಸಹ ಅತಿಸೂಕ್ಷ್ಮ ಬಿಂದುವಾಗಿದ್ದಾರೆ, ಅವರು ಇವರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಆತ್ಮವು ಚಿಕ್ಕದು-ದೊಡ್ಡದು ಇರುವುದಿಲ್ಲ. ಬಾಪ್ದಾದಾರವರ ಜೊತೆಜೊತೆಯಿರುವ ಪಾತ್ರವು ಎಷ್ಟೊಂದು ಅದ್ಭುತವಾಗಿದೆ! ತಂದೆಯು ಅತಿದೊಡ್ಡ ಅನುಭವಿ ರಥವನ್ನು ತೆಗೆದುಕೊಂಡಿದ್ದಾರೆ. ಸ್ವಯಂ ತಂದೆಯು ತಿಳಿಸುತ್ತಾರೆ- ಇದು ಭಾಗ್ಯಶಾಲಿ ರಥವಾಗಿದೆ, ಈ ಮನೆ ಅಥವಾ ರಥದಲ್ಲಿ ಆತ್ಮವು ಕುಳಿತಿದೆ. ನಾವು ಇಂತಹ ತಂದೆಗೆ ಬಾಡಿಗೆಯ ಮೇರೆಗೆ ನಮ್ಮ ರಥವನ್ನು ಕೊಡುವುದಾದರೆ ಏನೆಂದು ತಿಳಿಯುತ್ತೀರಿ! ಆದ್ದರಿಂದ ಇವರನ್ನು ಭಾಗ್ಯಶಾಲಿ ರಥವೆಂದು ಕರೆಯಲಾಗುವುದು, ಯಾರಲ್ಲಿ ತಂದೆಯು ಕುಳಿತು ಮಕ್ಕಳನ್ನು ವಜ್ರಸಮಾನ ದೇವತೆಯನ್ನಾಗಿ ಮಾಡುತ್ತಾರೆ. ಮೊದಲು ನೀವೂ ಸಹ ತಿಳಿದುಕೊಂಡಿರಲಿಲ್ಲ, ಸಂಪೂರ್ಣ ತುಚ್ಛಬುದ್ಧಿಯವರಾಗಿದ್ದಿರಿ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಮತ್ತೆ ಉತ್ತಮ ಪುರುಷಾರ್ಥವನ್ನು ಮಾಡಬೇಕಾಗಿದೆ. ಸಮಯವನ್ನು ವ್ಯರ್ಥ ಮಾಡಬಾರದು. ಶಾಲೆಯಲ್ಲಿ ಸಮಯವನ್ನು ವ್ಯರ್ಥ ಮಾಡುವವರು ಅನುತ್ತೀರ್ಣರಾಗುತ್ತಾರೆ. ತಂದೆಯು ನಿಮಗೆ ಅತಿದೊಡ್ಡ ಲಾಟರಿ ಕೊಡುತ್ತಾರೆ. ಯಾರಾದರೂ ರಾಜನ ಮನೆಯಲ್ಲಿ ಜನ್ಮ ಪಡೆದರೆ ಅದು ಅವರಿಗೆ ಲಾಟರಿ ಸಿಕ್ಕಿದಂತೆ. ಬಡವರಾಗಿದ್ದರೆ ಅವರಿಗೆ ಲಾಟರಿಯೆಂದು ಹೇಳುತ್ತೀರೇನು! ಇದು ಅತಿದೊಡ್ಡ ಶ್ರೇಷ್ಠಲಾಟರಿಯಾಗಿದೆ, ಇದರಲ್ಲಿ ಸಮಯ ವ್ಯರ್ಥ ಮಾಡಬಾರದು, ಮಾಯೆಯ ಬಾಕ್ಸಿಂಗ್ ಆಗಿದೆಯೆಂದು ತಂದೆಯು ತಿಳಿದುಕೊಂಡಿದ್ದಾರೆ. ಪದೇ-ಪದೇ ಮಾಯೆಯು ದೇಹಾಭಿಮಾನದ ಬಾಕ್ಸಿಂಗ್ನಲ್ಲಿ ತರುತ್ತದೆ. ನಿಮ್ಮ ಡೈರೆಕ್ಟ್ ಸಂಬಂಧ ತಂದೆಯ ಜೊತೆಯಿದೆ. ಸನ್ಮುಖದಲ್ಲಿ ಕುಳಿತಿದ್ದಾರಲ್ಲವೆ ಆದುದರಿಂದ ಇಲ್ಲಿಗೆ ನಾಟಕದನುಸಾರವಾಗಿ ರಿಫ್ರೆಷ್ ಆಗಲು ಬರುತ್ತೀರಿ. ನಾನು ನಿಮಗೆ ಏನು ತಿಳಿಸುತ್ತೇನೆ, ಅದನ್ನು ಧಾರಣೆ ಮಾಡಬೇಕು, ಈ ಜ್ಞಾನವು ಈಗ ಮಾತ್ರ ಸಿಕ್ಕಿದೆ ಮತ್ತೆ ಪ್ರಾಯಲೋಪವಾಗಿಬಿಡುತ್ತದೆ. ಬಹಳ ಆತ್ಮರು ಹಿಂತಿರುಗಿ ಮನೆಗೆ ಹೋಗಿಬಿಡುತ್ತಾರೆ. ಅರ್ಧಕಲ್ಪದ ನಂತರ ಭಕ್ತಿಮಾರ್ಗವು ಪ್ರಾರಂಭವಾಗುತ್ತದೆ, ಅರ್ಧಕಲ್ಪದಿಂದ ನೀವು ವೇದ-ಶಾಸ್ತ್ರಗಳನ್ನು ಓದುತ್ತಾ, ಭಕ್ತಿ ಮಾಡುತ್ತಾ ಬಂದಿದ್ದೀರಿ. ಈಗ ಮೂಲಮಾತನ್ನು ತಿಳಿಸಿಕೊಡಲಾಗುತ್ತದೆ- ಈಗ ನೀವು ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪವು ಭಸ್ಮವಾಗುತ್ತದೆ. ಈ ಜ್ಞಾನವು ಆದಾಯದ ಮೂಲಾಧಾರವಾಗಿದೆ. ಇದರಿಂದ ನೀವು ಪದಮಾಪದಮ ಭಾಗ್ಯಶಾಲಿಗಳಾಗುತ್ತೀರಿ, ಸ್ವರ್ಗದ ಮಾಲೀಕರಾಗುತ್ತೀರಿ. ಅಲ್ಲಿ ಎಲ್ಲಾ ಪ್ರಕಾರದ ಸುಖವಿದೆ, ತಂದೆಯೇ ನೆನಪು ಮಾಡಿಸುತ್ತಾರೆ. ಸ್ವರ್ಗದಲ್ಲಿ ನಿಮಗೆ ಎಷ್ಟೊಂದು ಅಪಾರ ಸುಖವನ್ನು ಕೊಡಲಾಗಿತ್ತು, ನೀವು ವಿಶ್ವದ ಮಾಲೀಕರಾಗಿದ್ದು ಎಲ್ಲವನ್ನೂ ಕಳೆದುಕೊಂಡಿರಿ. ನೀವು ರಾವಣನಿಗೆ ಗುಲಾಮರಾಗಿದ್ದೀರಿ. ಇದು ರಾಮ-ರಾವಣರ ಅದ್ಭುತವಾದ ಆಟವಾಗಿದೆ! ಇದು ನಂತರವೂ ನಡೆಯುತ್ತದೆ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಸ್ವರ್ಗದಲ್ಲಿ ನೀವು ಸದಾ ಆರೋಗ್ಯ, ಐಶ್ವರ್ಯವಂತರಾಗಿರುತ್ತೀರಿ. ಇಲ್ಲಿ ಒಂದು ಜನ್ಮಕ್ಕಾಗಿ ಮನುಷ್ಯರನ್ನು ಆರೋಗ್ಯವಂತರನ್ನಾಗಿ ಮಾಡಲು ಎಷ್ಟೊಂದು ಖರ್ಚು ಮಾಡುತ್ತಾರೆ. ದೇವತೆಗಳು ಸದಾ ಆರೋಗ್ಯವಂತರಾಗಿರುತ್ತಾರಲ್ಲವೆ. ನೀವಿಲ್ಲಿಗೆ ಸದಾ ಆರೋಗ್ಯವಂತರಾಗಲು ಬಂದಿದ್ದೀರಿ. ಸರ್ವರನ್ನೂ ಸದಾ ಆರೋಗ್ಯವಂತರನ್ನಾಗಿ ಮಾಡಲು ಒಬ್ಬ ತಂದೆಯ ವಿನಃ ಬೇರೆ ಯಾರಿಂದಲೂ ಸಾಧ್ಯವಿಲ್ಲ. ನೀವೀಗ ಸರ್ವಗುಣ ಸಂಪನ್ನರಾಗುತ್ತಿದ್ದೀರಿ.... ಈಗ ನೀವು ಸಂಗಮಯುಗದಲ್ಲಿದ್ದೀರಿ, ತಂದೆಯು ನಿಮ್ಮನ್ನು ಹೊಸಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ನಾಟಕದನುಸಾರವಾಗಿ ಎಲ್ಲಿಯವರೆಗೆ ಬ್ರಾಹ್ಮಣರಾಗುವುದಿಲ್ಲ, ಅಲ್ಲಿಯವರೆಗೆ ದೇವತೆಯೂ ಆಗುವುದಿಲ್ಲ. ಎಲ್ಲಿಯವರೆಗೆ ಪುರುಷೋತ್ತಮ ಸಂಗಮಯುಗದಲ್ಲಿ ತಂದೆಯಿಂದ ಪುರುಷೋತ್ತಮರಾಗಲು ಬರಲಿಲ್ಲವೆಂದರೆ ದೇವತೆಗಳಾಗಲು ಆಗುವುದಿಲ್ಲ.
ಒಳ್ಳೆಯದು. ಇಂದು ತಂದೆಯು ಆತ್ಮಿಕ ಡ್ರಿಲ್ ಕಲಿಸಿದರು, ಜ್ಞಾನವನ್ನೂ ಹೇಳಿದರು, ಮಕ್ಕಳಿಗೆ ಎಚ್ಚರಿಕೆಯನ್ನೂ ಕೊಟ್ಟರು, ಆಲಸ್ಯ ಮಾಡಬೇಡಿ, ಉಲ್ಟಾ-ಸುಲ್ಟಾ ಮಾತನಾಡಬೇಡಿ, ಶಾಂತಿಯಲ್ಲಿರಿ ಹಾಗೂ ತಂದೆಯನ್ನು ನೆನಪು ಮಾಡಿ. ಒಳ್ಳೆಯದು-
ಧಾರಣೆಗಾಗಿ ಮುಖ್ಯಸಾರ:
1. ವಿಕರ್ಮ ವಿನಾಶ ಮಾಡಿ ಸ್ವಯಂನ್ನು ಸುಧಾರಣೆ ಮಾಡಿಕೊಳ್ಳಲು ನೆನಪಿನ ಯಾತ್ರೆಯ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ದೈವೀಗುಣವನು ಧಾರಣೆ ಮಾಡಬೇಕಾಗಿದೆ.
2. ದೇವತೆಯಾಗಲು ಸಂಗಮಯುಗದಲ್ಲಿ ಪುರುಷೋತ್ತಮರಾಗಲು ಪುರುಷಾರ್ಥ ಮಾಡಬೇಕಾಗಿದೆ, ಆಲಸ್ಯದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
ಓಂ ಶಾಂತಿ. ಇವರು ಪಾರಲೌಕಿಕ ಆತ್ಮಗಳ ತಂದೆಯಾಗಿದ್ದಾರೆ. ಆತ್ಮಗಳೊಂದಿಗೇ ಮಾತನಾಡುತ್ತಾರೆ. ಮಕ್ಕಳೇ ಮಕ್ಕಳೇ ಎನ್ನುವ ಅಭ್ಯಾಸವಾಗಿ ಬಿಟ್ಟಿದೆ. ಶರೀರವಂತೂ ಸ್ತ್ರೀಯಾಗಿರಬಹುದು ಆದರೆ ಆತ್ಮಗಳೆಲ್ಲರೂ ಪುರುಷರೆ ಆಗಿದ್ದಾರೆ. ಪ್ರತಿಯೊಂದು ಆತ್ಮವು ವಾರಸುಧಾರರಾಗಿದ್ದಾರೆ ಅರ್ಥಾತ್ ಆಸ್ತಿಗೆ ಹಕ್ಕುದಾರರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಪ್ರತಿಯೊಂದು ಮಗುವು ಆಸ್ತಿಯನ್ನು ತೆಗೆದುಕೊಳ್ಳುವ ಅಧಿಕಾರವಿದೆ. ಬೇಹದ್ದಿನ ತಂದೆಯನ್ನು ಬಹಳ ನೆನಪು ಮಾಡಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ತಂದೆಯು ಪರಮಧಾಮದಿಂದ ಬಂದು ನಮಗೆ ಓದಿಸುತ್ತಾರೆ. ಸಾಧು-ಸಂತರು ತಮ್ಮ ಮನೆಯನ್ನು ಬಿಟ್ಟು ಅಥವಾ ಯಾವುದೇ ಹಳ್ಳಿಯಿಂದ ಬರುತ್ತಾರೆ. ತಂದೆಯಂತೂ ಪರಮಧಾಮದಿಂದ ನಮಗೆ ಓದಿಸಲು ಬರುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಬೇಹದ್ದಿನ ತಂದೆಯು ಪತಿತ-ಪಾವನ, ಗಾಡ್ ಫಾದರ್ ಆಗಿದ್ದಾರೆ. ಅವರನ್ನು ಜ್ಞಾನ ಸಾಗರ ಎಂದು ಕರೆಯುತ್ತಾರೆ, ಅಥಾರಿಟಿಯಲ್ಲವೆ. ಇದು ಯಾವ ಜ್ಞಾನವಾಗಿದೆ? ಈಶ್ವರೀಯ ಜ್ಞಾನವಾಗಿದೆ. ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ, ಸತ್ಚಿತ್ ಆನಂದ ಸ್ವರೂಪನಾಗಿದ್ದಾರೆ. ಅವರದು ಬಹಳ ದೊಡ್ಡ ಮತ್ತು ಭಾರಿ ಮಹಿಮೆಯಿದೆ. ಅವರ ಬಳಿ ಸಾಮಾನುಗಳಿವೆ, ಯಾರ ಬಳಿಯಾದರೂ ಅಂಗಡಿಯಿದ್ದರೆ ನಮ್ಮಬಳಿ ವಿಧ ವಿಧವಾದ ಸಾಮಾನುಗಳಿವೆ ಎಂದು ಹೇಳುತ್ತಾರಲ್ಲವೆ. ತಂದೆಯೂ ಸಹ ಹೇಳುತ್ತಾರೆ - ನಾನು ಆನಂದ ಸಾಗರ, ಜ್ಞಾನ ಸಾಗರ, ಶಾಂತಿಯ ಸಾಗರ ಆಗಿದ್ದೇನೆ, ನನ್ನ ಬಳಿ ಈ ಸಾಮಾನುಗಳು ಇವೆ. ನಾನು ಸಂಗಮಯುಗದಲ್ಲಿ ಕೊಡಲು ಬರುತ್ತೇನೆ. ನನ್ನ ಬಳಿ ಇರುವುದೆಲ್ಲವನ್ನೂ ಕೊಡಲು ಬರುತ್ತೇನೆ. ಯಾರೆಷ್ಟಾದರೂ ಧಾರಣೆ ಮಾಡಬಹುದು ಅಥವಾ ಎಷ್ಟಾದರೂ ಪುರುಷಾರ್ಥ ಮಾಡಬಹುದು. ತಂದೆಯ ಬಳಿ ಏನೇನು ಸಾಮಾನುಗಳಿವೆ ಎಂದು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಇತ್ತೀಚೆಗೆ ಬೇರೆ ಯಾರಿಗೂ ಅವರ ಅಂತ್ಯವನ್ನು ತಿಳಿಸುವುದಿಲ್ಲ. ಗಾಯನವೂ ಇದೆ - ಕೆಲವರದು ಮಣ್ಣಿನ ಪಾಲಾಗುತ್ತದೆ..... ಇವೆಲ್ಲಾ ಮಾತುಗಳು ಈಗಿನದ್ದಾಗಿದೆ. ಬೆಂಕಿ ಬಿದ್ದಿತೆಂದರೆ ಇವೆಲ್ಲವೂ ಸಮಾಪ್ತಿಯಾಗುವುದು. ರಾಜರುಗಳ ಬಳಿ ಬಹಳ ದೊಡ್ಡ ಗುಹೆಗಳಿರುತ್ತವೆ, ಭೂಕಂಪವಾಯಿತೆಂದರೂ ಸಹ, ಜೋರಾಗಿ ಬೆಂಕಿ ಬಿದ್ದಿತೆಂದರೂ ಸಹ ಹೊರಗೆ ಬಂದು ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇಲ್ಲಿನ ಯಾವ ವಸ್ತುಗಳೂ ಸಹ ಅಲ್ಲಿಯ ಕೆಲಸಕ್ಕೆ ಬರುವುದಿಲ್ಲ. ಗಣಿಗಳೆಲ್ಲವೂ ಹೊಸದಾಗಿ ಸಂಪನ್ನವಾಗಿರುತ್ತದೆ. ವಿಜ್ಞಾನವು ಮುಂದುವರೆಯುತ್ತಿರುವುದೂ ಸಹ ನಿಮ್ಮ ಕೆಲಸಕ್ಕೆ ಬರುವುದು. ನೀವು ಮಕ್ಕಳ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ನೀವು ಮಕ್ಕಳು ಈಗ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ, ಉಳಿದ ಕೆಲವು ಭಾಗಗಳಿವೆ ಅದನ್ನೂ ತಿಳಿದುಕೊಳ್ಳುತ್ತೀರಿ. ತಂದೆಯು ಮೊದಲೇ ಹೇಗೆ ತಿಳಿಸುತ್ತಾರೆ, ನಾನು ಡ್ರಾಮಾದಲ್ಲಿ ಬಂಧಿತನಾಗಿದ್ದೇನೆ. ಇಲ್ಲಿಯವರೆಗೆ ಯಾವ ಜ್ಞಾನವು ಸಿಕ್ಕಿದೆಯೋ ಅದು ಡ್ರಾಮಾದಲ್ಲಿ ನೊಂದಾವಣೆಯಾಗಿದೆ. ಯಾವ ಸೆಕೆಂಡ್ ಪಾಸ್ ಆಯಿತು, ಅದಕ್ಕೆ ಡ್ರಾಮಾ ಎಂದು ತಿಳಿದುಕೊಳ್ಳಬೇಕಾಗಿದೆ. ಬಾಕಿ ಯಾವುದು ನಾಳೆ ಆಗುವುದಿದೆ ಅದನ್ನು ನೋಡಬಹುದು. ನಾಳೆಯ ಮಾತನ್ನು ಇಂದು ತಿಳಿಸುವುದಿಲ್ಲ. ಈ ಡ್ರಾಮಾದ ರಹಸ್ಯವನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ, ಕಲ್ಪದ ಆಯಸ್ಸನ್ನು ಎಷ್ಟೊಂದು ಉದ್ದಗಲವಾಗಿ ಮಾಡಿ ಬಿಟ್ಟಿದ್ದಾರೆ! ಈ ಡ್ರಾಮಾವನ್ನೂ ತಿಳಿದುಕೊಳ್ಳಲು ಸಾಹಸ ಬೇಕಾಗಿದೆ. ಅಮ್ಮ ಸತ್ತರೂ ಹಲ್ವ ತಿನ್ನಿ..... ಸತ್ತು ಹೋದರೆಂದರೆ ಮತ್ತೆ ಜನ್ಮ ಪಡೆಯುತ್ತಾರೆಂದು ತಿಳಿಯುತ್ತಾರೆ. ನಾವೇಕೆ ಅಳಬೇಕು? ಪತ್ರಿಕೆಗಳಲ್ಲಿ ಬರೆಯಬಹುದು - ಈ ಪ್ರದರ್ಶನಿಯು 5000 ವರ್ಷಗಳ ಮೊದಲಿನಂತೆ ಇದೇ ದಿನಾಂಕದಂದು, ಇದೇ ಸ್ಥಾನದಲ್ಲಿ, ಇದೇ ರೀತಿ ನಡೆದಿತ್ತು, ಈ ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುತ್ತಿದೆ ಎಂದು ತಂದೆಯು ತಿಳಿಸುತ್ತಾರೆ. ಈ ಪ್ರಪಂಚವು ಸ್ವಲ್ಪ ದಿನದ್ದಾಗಿದೆ, ಇನ್ನೇನು ಸಮಾಪ್ತಿಯಾಗುವುದು ಎಂದು ತಿಳಿದುಕೊಂಡಿದ್ದೀರಿ. ಈಗ ನಾವು ಪುರುಷಾರ್ಥ ಮಾಡಿ ವಿಕರ್ಮಾಜೀತರಾಗುತ್ತೇವೆ ನಂತರ ದ್ವಾಪರದಿಂದ ವಿಕ್ರಮ ಸಂವತ್ಸರ ಅರ್ಥಾತ್ ವಿಕರ್ಮಗಳನ್ನು ಮಾಡುವ ಸಂವತ್ಸರವು ಪ್ರಾರಂಭವಾಗುತ್ತದೆ. ನೀವು ವಿಕರ್ಮದ ಮೇಲೆ ಜಯ ಗಳಿಸುತ್ತೀರಿ, ವಿಕರ್ಮಾಜೀತ ಆಗಿ ಹೋಗುತ್ತೀರಿ. ಪಾಪಕರ್ಮಗಳನ್ನು ಶ್ರೀಮತದಿಂದ ಜಯ ಗಳಿಸಿ ವಿಕರ್ಮಾಜೀತರಾಗುತ್ತೀರಿ. ಅಲ್ಲಿ ನೀವು ಆತ್ಮಾಭಿಮಾನಿಯಾಗುತ್ತೀರಿ, ದೇಹಾಭಿಮಾನವಿರುವುದಿಲ್ಲ. ಕಲಿಯುಗದಲ್ಲಿ ದೇಹಾಭಿಮಾನವು ಇದೆ. ಸಂಗಮಯುಗದಲ್ಲಿ ನೀವು ದೇಹೀ ಅಭಿಮಾನಿಯಾಗುತ್ತೀರಿ, ಪರಮಪಿತ ಪರಮಾತ್ಮನನ್ನೂ ತಿಳಿದಿದ್ದೀರಿ. ಇದು ಶುದ್ಧ ಅಭಿಮಾನವಾಗಿದೆ. ನೀವು ಎಲ್ಲರಿಗಿಂತ ಶ್ರೇಷ್ಠರಾಗಿರುವ ಬ್ರಾಹ್ಮಣರಾಗಿದ್ದೀರಿ. ನೀವು ಸರ್ವೋತ್ತಮರಾದ ಬ್ರಾಹ್ಮಣ ಕುಲಭೂಷಣರು. ನಿಮ್ಮ ವಿನಃ ಬೇರೆ ಯಾರಿಗೂ ಜ್ಞಾನ ಸಿಗುವುದಿಲ್ಲ, ನಿಮ್ಮದು ಸರ್ವೋತ್ತಮ ಕುಲವಾಗಿದೆ. ಗಾಯನವೂ ಇದೆ - ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪಿ ವಲ್ಲಭನ ಮಕ್ಕಳೊಂದಿಗೆ ಕೇಳಿ. ನಿಮಗೆ ಈಗ ಲಾಟರಿಯು ಸಿಕ್ಕಿದೆ, ಯಾವಾಗ ಬಡವರಿಂದ ಸಾಹುಕಾರರಾಗುತ್ತೀರಿ ಅಷ್ಟು ಖುಷಿಯು ಯಾವುದೇ ವಸ್ತು ಸಿಕ್ಕಿದರೆ ಇಷ್ಟು ಖುಷಿಯಾಗುವುದಿಲ್ಲ. ಎಷ್ಟು ಪುರುಷಾರ್ಥ ಮಾಡುತ್ತೇವೆಯೋ ಅಷ್ಟು ತಂದೆಯಿಂದ ರಾಜಧಾನಿಯ ಆಸ್ತಿಯು ಸಿಗುತ್ತದೆ ಎಂದು ತಿಳಿದುಕೊಂಡಿದ್ದೀರಿ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟೇ ಸಿಗುವುದು. ಮುಖ್ಯ ಮಾತು ಅತಿ ಪ್ರಿಯ ತಂದೆಯನ್ನು ನೆನಪು ಮಾಡುವುದಾಗಿದೆ. ಅವರು ಎಲ್ಲರ ಅತಿ ಪ್ರಿಯ ತಂದೆಯಾಗಿದ್ದಾರೆ. ತಂದೆಯು ಬಂದು ಎಲ್ಲರಿಗೂ ಸುಖ-ಶಾಂತಿಯನ್ನು ಕೊಡುತ್ತಾರೆ. ಈಗ ದೇವಿ-ದೇವತೆಗಳ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಅಲ್ಲಿ ರಾಜ-ರಾಣಿಯಿರುವುದಿಲ್ಲ, ಅಲ್ಲಿರುವವರನ್ನು ಮಹಾರಾಜ-ಮಹಾರಾಣಿ ಎಂದು ಕರೆಯುತ್ತಾರೆ. ಒಂದುವೇಳೆ ಭಗವಾನ್-ಭಗವತಿ ಎಂದು ಕರೆದರೆ ನಂತರ ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ಭಗವಾನ್-ಭಗವತಿಯರಾಗಿ ಬಿಡುತ್ತಾರೆ ಆದ್ದರಿಂದ ಭಗವಾನ್-ಭಗವತಿ ಎಂದು ಕರೆಯುವುದಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಕರೆಯುವುದಿಲ್ಲ. ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರರಿಗೂ ಸಹ ದೇವತೆಯೆಂದು ಕರೆಯುತ್ತಾರೆ. ಸೂಕ್ಷ್ಮವತನವಾಸಿಯನ್ನು ಭಗವಾನ್-ಭಗವತಿ ಎಂದು ಹೇಗೆ ಕರೆಯುವುದು? ಶ್ರೇಷ್ಠಾತಿ ಶ್ರೇಷ್ಠವಾದುದು ಮೂಲವತನವಾಗಿದೆ ನಂತರ ಸೂಕ್ಷ್ಮವತನ, ಈ ಲೋಕವು ಮೂರನೇ ನಂಬರಿನದಾಗಿದೆ. ಇದು ನಿಮ್ಮ ಬುದ್ಧಿಯಲ್ಲಿರಬೇಕಾಗಿದೆ. ನಾವಾತ್ಮಗಳ ತಂದೆ ಶಿವ ತಂದೆಯು ಶಿಕ್ಷಕನೂ ಆಗಿದ್ದಾರೆ, ಗುರುವೂ ಆಗಿದ್ದಾರೆ, ಚಿನ್ನದ ಆಚಾರಿಯೂ ಆಗಿದ್ದಾರೆ, ವಕೀಲರೂ ಆಗಿದ್ದಾರೆ. ಎಲ್ಲರನ್ನೂ ರಾವಣ ಜೈಲಿನಿಂದ ಬಿಡಿಸುತ್ತಾರೆ. ಶಿವ ತಂದೆಯು ದೊಡ್ಡ ವಕೀಲರಾಗಿದ್ದಾರೆ, ಅಂತಹ ತಂದೆಯನ್ನು ಏಕೆ ಮರೆಯುತ್ತೀರಿ? ಬಾಬಾ ಮರೆತು ಹೋಗುತ್ತೇವೆಂದು ಏಕೆ ಮರೆಯುತ್ತೀರಿ. ಮಾಯೆಯು ಬಿರುಗಾಳಿಗಳು ಬಹಳ ಬರುತ್ತವೆ ಎನ್ನುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ಆಗಲೇಬೇಕಾಗಿದೆ, ಸ್ವಲ್ಪವಂತೂ ಪರಿಶ್ರಮ ಪಡಲೇಬೇಕು. ಇದು ಮಾಯೆಯೊಂದಿಗಿನ ಯುದ್ಧವಾಗಿದೆ. ನೀವು ಪಾಂಡವರು ಯಾವುದೇ ಕೌರವರರೊಂದಿಗೆ ಯುದ್ಧ ಮಾಡುವುದಿಲ್ಲ. ಪಾಂಡವರು ಯುದ್ಧ ಮಾಡಲು ಹೇಗೆ ಸಾಧ್ಯ! ಹಾಗೆಂದು ಹೇಳಿದರೆ ಹಿಂಸಾತ್ಮಕ ಯುದ್ಧವಾಗಿ ಬಿಡುತ್ತದೆ. ತಂದೆಯು ಯಾವುದೇ ಹಿಂಸೆಯನ್ನು ಕಲಿಸುವುದಿಲ್ಲ, ಸ್ವಲ್ಪವೂ ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ನಮ್ಮದು ಯಾವುದೇ ಯುದ್ಧವಲ್ಲ. ಕೇವಲ ನೆನಪು ಮಾಡಿ, ಮಾಯೆಯಿಂದ ಸೋಲಬೇಡಿ ಎಂದು ತಂದೆಯು ತಿಳಿಸುತ್ತಾರೆ. ಇದರ ಮೇಲೆಯೂ ಒಂದು ಕಥೆಯಿದೆ - ಮೊದಲು ಸುಖ ಬೇಕೋ ಅಥವಾ ದುಃಖವು ಬೇಕೋ ಎಂದು ಕೇಳಿದರೆ ಸುಖವು ಬೇಕೆಂದು ಹೇಳಿದರು. ಸತ್ಯಯುಗದಲ್ಲಿ ದುಃಖವಿರಲು ಸಾಧ್ಯವಿಲ್ಲ.
ಈ ಸಮಯದಲ್ಲಿ ಎಲ್ಲಾ ಸೀತೆಯರು ಶೋಕವಾಟಿಕೆಯಲ್ಲಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚವೆಂಬ ಸಾಗರದ ಮಧ್ಯೆ ಲಂಕೆಯಿದೆ, ಈಗ ಎಲ್ಲರೂ ರಾವಣನ ಜೈಲಿನಲ್ಲಿದ್ದಾರೆ. ಎಲ್ಲರ ಸದ್ಗತಿಯನ್ನು ಮಾಡಲು ತಂದೆಯು ಬಂದಿದ್ದಾರೆ, ಎಲ್ಲರೂ ಶೋಕವಾಟಿಕೆಯಲ್ಲಿದ್ದಾರೆ. ಸ್ವರ್ಗದಲ್ಲಿ ಸುಖವಿದೆ, ನರಕದಲ್ಲಿ ದುಃಖವಿದೆ. ಇದನ್ನು ಶೋಕವಾಟಿಕೆ, ಅದು ಅಶೋಕವಾಟಿಕೆ ಸ್ವರ್ಗವಾಗಿದೆ. ಇದರಲ್ಲಿ ಬಹಳ ದೊಡ್ಡ ಅಂತರವಿದೆ. ನೀವು ಮಕ್ಕಳು ಪ್ರಯತ್ನ ಪಟ್ಟು ನೆನಪು ಮಾಡಿದಿರೆಂದರೆ ಖುಷಿಯ ನಶೆಯೇರುತ್ತದೆ. ತಂದೆಯ ಮತದಂತೆ ನಡೆಯದಿದ್ದರೆ ಅವರು ಮಲ ತಾಯಿ ಮಕ್ಕಳಾಗಿದ್ದಾರೆ, ಮತ್ತೆ ಪ್ರಜೆಗಳಲ್ಲಿ ಹೊರಟು ಹೋಗುತ್ತಾರೆ. ಸ್ವಂತ ಮಕ್ಕಳು ರಾಜಧಾನಿಯಲ್ಲಿ ಹೊರಟು ಹೋಗುತ್ತಾರೆ. ರಾಜಧಾನಿಯಲ್ಲಿ ಬರಬೇಕೆಂದರೆ ಶ್ರೀಮತದಂತೆ ನಡೆಯಬೇಕು. ಕೃಷ್ಣನ ಮತವು ಇಲ್ಲಿ ಸಿಗುವುದಿಲ್ಲ, ಮತವಿರುವುದೇ ಎರಡು ರೀತಿಯಿದೆ. ಈಗ ನೀವು ಶ್ರೀಮತವನ್ನು ಪಡೆದು ನಂತರ ಅದರ ಫಲವನ್ನು ಸತ್ಯಯುಗದಲ್ಲಿ ಭೋಗಿಸುತ್ತೀರಿ. ನಂತರ ದ್ವಾಪರದಲ್ಲಿ ರಾವಣನ ಮತವು ಸಿಗುತ್ತದೆ. ಎಲ್ಲರೂ ರಾವಣನ ಮತದಂತೆ ಅಸುರರಾಗಿ ಬಿಟ್ಟಿದ್ದಾರೆ, ಈಗ ಎಲ್ಲರೂ ರಾವಣನ ಮತದಂತೆ ಅಸುರರಾಗಿ ಬಿಟ್ಟಿದ್ದಾರೆ. ನಿಮಗೆ ಈಶ್ವರೀಯ ಮತವು ಸಿಗುತ್ತದೆ. ಮತವನ್ನು ಕೊಡುವವರು ಒಬ್ಬರೇ ತಂದೆ, ಈಶ್ವರನಾಗಿದ್ದಾರೆ. ನೀವು ಈಶ್ವರೀಯ ಮತದಂತೆ ಎಷ್ಟೊಂದು ಪವಿತ್ರರಾಗುತ್ತಿದ್ದೀರಿ. ವಿಷಯ ಸಾಗರದಲ್ಲಿ ಮುಳುಗುವುದು ಮೊದಲ ಪಾಪವಾಗಿದೆ. ದೇವತೆಗಳು ವಿಷಯ ಸಾಗರದಲ್ಲಿ ಮುಳುಗುವುದಿಲ್ಲ. ಅಲ್ಲಿ ಮಕ್ಕಳಾಗುವುದಿಲ್ಲವೇ? ಎಂದು ಕೇಳುತ್ತಾರೆ. ಮಕ್ಕಳು ಏಕೆ ಆಗುವುದಿಲ್ಲ! ಆದರೆ ಅದು ನಿರ್ವಿಕಾರಿ ಪ್ರಪಂಚ, ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ಅಲ್ಲಿ ಯಾವುದೇ ವಿಕಾರವಿರುವುದಿಲ್ಲ. ದೇವತೆಗಳು ಆತ್ಮಾಭಿಮಾನಿಗಳಾಗಿರುತ್ತಾರೆ, ಪರಮಾತ್ಮಾಭಿಮಾನಿಗಳಲ್ಲ ಎಂದು ತಿಳಿಸುತ್ತಾರೆ. ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ಮೊದಲು ಎರಡೂ ಆಗಿರಲಿಲ್ಲ. ಸತ್ಯಯುಗದಲ್ಲಿ ಪರಮಾತ್ಮನನ್ನು ತಿಳಿದುಕೊಂಡಿರಲಿಲ್ಲ. ಆತ್ಮವೇ ತಿಳಿದುಕೊಂಡಿರುತ್ತದೆ - ನಾನು ಈ ಶರೀರವನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳುತ್ತೇನೆ. ಈಗ ಹಳೆಯದನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಮೊದಲೇ ತಿಳಿದುಕೊಂಡು ಬಿಡುತ್ತದೆ. ಮಕ್ಕಳ ಜನ್ಮವಾಗುತ್ತದೆಯೆಂದರೆ ಮೊದಲೇ ಸಾಕ್ಷಾತ್ಕಾರವಾಗುತ್ತದೆ. ಯೋಗಬಲದಿಂದ ನೀವು ಇಡೀ ವಿಶ್ವದ ಮೇಲೆ ಮಾಲೀಕರಾಗುತ್ತೀರಿ ಅಂದಮೇಲೆ ಯೋಗ ಬಲದಿಂದ ಮಕ್ಕಳಾಗುವುದಿಲ್ಲವೆ! ಯೋಗ ಬಲದಿಂದ ಯಾವುದೇ ವಸ್ತುವನ್ನು ನೀವು ಪಾವನ ಮಾಡಬಹುದು ಆದರೆ ನೆನಪನ್ನು ನೀವು ಮರೆತು ಹೋಗುತ್ತೀರಿ. ಕೆಲವರಿಗೆ ಅಭ್ಯಾಸವಾಗಿ ಬಿಡುತ್ತದೆ, ಬಹಳ ಸನ್ಯಾಸಿಗಳೂ ಇರುತ್ತಾರೆ ಯಾರಿಗೆ ಭೋಜನದ ಮೇಲೆ ಗಮನವಿರುತ್ತದೆಯೋ ಅವರು ಊಟದ ಸಮಯದಲ್ಲಿ ಮಂತ್ರ ಪಠಿಸಿ ನಂತರ ಸ್ವೀಕಾರ ಮಾಡುತ್ತಾರೆ. ನಿಮಗೂ ಸಹ ಪತ್ಯೆಯನ್ನು ತಿಳಿಸಲಾಗಿದೆ. ಯಾವುದೇ ರೀತಿಯ ಮಾಂಸ ಇತ್ಯಾದಿಗಳನ್ನು ಸ್ವೀಕರಿಸಬಾರದು ಏಕೆಂದರೆ ನೀವು ದೇವತೆಗಳಾಗುತ್ತಿದ್ದೀರಿ. ದೇವತೆಗಳು ಎಂದೂ ಕೊಳಕನ್ನು ತಿನ್ನುವುದಿಲ್ಲ. ಅಂತಹ ಪವಿತ್ರರಾಗಬೇಕಾಗಿದೆ. ನನ್ನ ಮೂಲಕ ನನ್ನನ್ನು ತಿಳಿದುಕೊಂಡರೆ ಎಲ್ಲವನ್ನೂ ತಿಳಿದುಕೊಳ್ಳುತ್ತೀರಿ, ಮತ್ತ್ಯಾವುದೇ ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ವಿದ್ಯೆಯೂ ಸಹ ಭಿನ್ನವಾಗಿರುತ್ತದೆ, ಈ ಮೃತ್ಯುಲೋಕದ ವಿದ್ಯೆಯು ಇಲ್ಲಿಯೇ ಅಂತ್ಯವಾಗುತ್ತದೆ. ಮೃತ್ಯುಲೋಕದ ಎಲ್ಲಾ ಕೆಲಸ ಕಾರ್ಯಗಳು ಸಮಾಪ್ತಿಯಾಗಿ ಅಮರ ಲೋಕವು ಪ್ರಾರಂಭವಾಗುತ್ತದೆ. ಮಕ್ಕಳಿಗೆ ಇಷ್ಟೊಂದು ನಶೆಯೇರಬೇಕಾಗಿದೆ. ನೀವು ಮಕ್ಕಳಿಗೆ ಅತೀಂದ್ರಿಯ ಸುಖ, ಪರಮ ಸುಖದಲ್ಲಿರಬೇಕಾಗಿದೆ. ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಾ ಅಥವಾ ವಿದ್ಯಾರ್ಥಿಗಳಾಗಿದ್ದೀರಾ. ಪರಮಪಿತ ಪರಮಾತ್ಮನು ನಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಪರಮಾನಂದ ಎಂದು ಹೇಳುತ್ತಾರೆ. ಸತ್ಯಯುಗದಲ್ಲಿ ಈ ಮಾತುಗಳು ಇರುವುದಿಲ್ಲ. ಈಗ ನೀವು ಇದನ್ನು ಕೇಳುತ್ತೀರಿ - ನೀವು ಈ ಸಮಯದಲ್ಲಿ ಈಶ್ವರೀಯ ಪರಿವಾರದವರಾಗಿದ್ದೀರಾ? ಈಗಿನ ಗಾಯನವು ಇದೆ - ಅತೀಂದ್ರಿಯ ಸುಖದ ಗಾಯನವನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರನ್ನು ಕೇಳಿ. ಪರಮಧಾಮದಲ್ಲಿರುವ ತಂದೆಯು ಬಂದು ನಮ್ಮ ತಂದೆ, ಶಿಕ್ಷಕ, ಗುರುವಾಗುತ್ತಾರೆ. ಮೂವರೂ ಸೇವಾಧಾರಿಗಳಲ್ಲವೆ. ಯಾರೂ ಸಹ ಅಭಿಮಾನವನ್ನಿಟ್ಟುಕೊಳ್ಳುವುದಿಲ್ಲ. ನಿಮ್ಮ ಸೇವೆಯನ್ನು ಮಾಡಿ ನಿಮಗೆ ಎಲ್ಲವನ್ನೂ ಕೊಟ್ಟು ನಿರ್ವಾಣ ಧಾಮದಲ್ಲಿ ಕುಳಿತುಕೊಳ್ಳುತ್ತೇನೆ ಎಂದರೆ ಸೇವಾಧಾರಿ ಆದೆನಲ್ಲವೆ ಎಂದು ತಿಳಿಸುತ್ತಾರೆ. ವೈಸರಾಯರು ಯಾವಾಗಲೂ ವಿಧೇಯ ಸೇವಾಧಾರಿಗಳೆಂದು ಸಹಿಯನ್ನು ಹಾಕುತ್ತಾರೆ. ತಂದೆಯೂ ಸಹ ನಿರಾಕಾರಿ, ನಿರಹಂಕಾರಿಯಾಗಿದ್ದಾರೆ, ಹೇಗೆ ಕುಳಿತು ಓದಿಸುತ್ತಾರೆ. ಈ ಶ್ರೇಷ್ಠ ವಿದ್ಯೆಯನ್ನು ಯಾರೂ ಓದಿಸಲು ಸಾಧ್ಯವಿಲ್ಲ, ಇಷ್ಟೊಂದು ವಿಷಯವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯರಿಗಂತೂ ಈ ಮಾತುಗಳು ಗೊತ್ತಿಲ್ಲ. ಇವರಿಗೆ ಯಾವುದೇ ಗುರು ಕಲಿಸಿಕೊಟ್ಟಿಲ್ಲ. ಗುರುಗಳಂತೂ ಅನೇಕರಿದ್ದಾರೆ, ಒಬ್ಬರಿರುತ್ತಾರೆಯೇ? ಈ ತಂದೆಯು ಪತಿತರನ್ನು ಪಾವನ ಮಾಡುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ತಂದೆಯೇ ನಾವು ಕಲ್ಪದ ಹಿಂದೆಯೂ ಮಿಲನ ಮಾಡಿದ್ದೆವೆಂದು ಹೇಳುತ್ತಾರಲ್ಲವೆ. ತಂದೆಯೇ ಬಂದು ಪತಿತರನ್ನು ಪಾವನ ಮಾಡುತ್ತಾರೆ. ನೀವು ಮಕ್ಕಳನ್ನು 21 ಜನ್ಮಗಳಿಗಾಗಿ ಪಾವನರನ್ನಾಗಿ ಮಾಡುತ್ತೇನೆ. ಇವೆಲ್ಲವನ್ನೂ ಧಾರಣೆ ಮಾಡಿ ತಂದೆಯು ಏನು ತಿಳಿಸದರೆಂದು ನೀವು ತಿಳಿಸಬೇಕು. ತಂದೆಯಿಂದ ನಾವು ಮುಂದೆ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೇವೆ. ಇದು ನೆನಪಿದ್ದರೆ ಖುಷಿಯಿರುತ್ತದೆ. ಇದೇ ಪರಮಾನಂದವಾಗಿದೆ. ಮಾII ಜ್ಞಾನ ಸಾಗರ, ಆನಂದ ಸಾಗರ, ಇದೆಲ್ಲವೂ ತಂದೆಯಿಂದ ವರದಾನವಾಗಿ ಸಿಗುತ್ತದೆ. ಸತ್ಯಯುಗದಲ್ಲಂತೂ ನೀವು ಬುದ್ಧುಗಳಾಗಿರುತ್ತೀರಿ. ಈ ಲಕ್ಷ್ಮೀ-ನಾರಾಯಣರಿಗೆ ಸ್ವಲ್ಪವೂ ಜ್ಞಾನವಿರುವುದಿಲ್ಲ. ಇವರಿಗೆ ಇದ್ದಿದ್ದರೆ ಪರಂಪರೆಯಾಗಿ ನಡೆದು ಬರುತ್ತಿತ್ತು. ನಿಮ್ಮಷ್ಟು ಪರಮಾನಂದವು ಈ ದೇವತೆಗಳಿಗೂ ಇರಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ದೇವತೆಗಳಾಗಲು ಆಹಾರ-ಪಾನೀಯಗಳಲ್ಲಿ ಬಹಳ ಶುದ್ಧವಾಗಿರಬೇಕಾಗಿದೆ, ಬಹಳ ಪತ್ಯೆಯಲ್ಲಿ ನಡೆಯಬೇಕಾಗಿದೆ. ಯೋಗಬಲದಿಂದ ಭೋಜನಕ್ಕೆ ದೃಷ್ಟಿಕೊಟ್ಟು ನಂತರ ಸ್ವೀಕಾರ ಮಾಡಬೇಕಾಗಿದೆ.
2) ಪರಮಪಿತ ಪರಮಾತ್ಮನ ಮಕ್ಕಳು ಅಥವಾ ವಿದ್ಯಾರ್ಥಿಗಳಾಗಿದ್ದೇವೆ. ಅವರು ನಮ್ಮನ್ನು ಹಿಂತಿರುಗಿ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ - ಇದೇ ನಶೆಯಲ್ಲಿ ಪರಮ ಸುಖ, ಪರಮ ಆನಂದದ ಅನುಭವ ಮಾಡಬೇಕಾಗಿದೆ.
ಓಂ ಶಾಂತಿ. ಆತ್ಮಗಳು ಮತ್ತು ಪರಮಾತ್ಮನ ಮೇಳವು ಎಷ್ಟು ವಿಚಿತ್ರವಾಗಿದೆ! ಇಂತಹ ಬೇಹದ್ದಿನ ತಂದೆಗೆ ನೀವೆಲ್ಲರೂ ಮಕ್ಕಳಾಗಿದ್ದೀರಿ ಅಂದಮೇಲೆ ಮಕ್ಕಳೂ ಸಹ ಎಷ್ಟೊಂದು ರಮಣೀಕರಾಗಬೇಕು! ದೇವತೆಗಳು ರಮಣೀಕರಾಗಿದ್ದಾರಲ್ಲವೆ ಆದರೆ ರಾಜಧಾನಿಯು ಬಹಳ ದೊಡ್ಡದಾಗಿದೆ. ಎಲ್ಲರೂ ಒಂದೇ ಸಮನಾಗಿ ರಮಣೀಕರಾಗಲು ಸಾಧ್ಯವಿಲ್ಲ. ಆದರೂ ಸಹ ಕೆಲಕೆಲವು ಮಕ್ಕಳು ಬಹಳ ರಮಣೀಕರಾಗಿದ್ದಾರೆ. ಯಾರು ರಮಣೀಕರಾಗುತ್ತಾರೆ? ಯಾರು ಸದಾ ಖುಷಿಯಲ್ಲಿರುವರೋ, ಯಾರಲ್ಲಿ ದೈವೀ ಗುಣಗಳಿವೆಯೋ ಅವರೇ ರಮಣೀಕರಾಗುತ್ತಾರೆ. ಈ ರಾಧೆ, ಕೃಷ್ಣ ಮೊದಲಾದವರು ರಮಣೀಕರಲ್ಲವೆ. ಅವರಲ್ಲಿ ಬಹಳ-ಬಹಳ ಆಕರ್ಷಣೆಯಿದೆ. ಯಾವ ಆಕರ್ಷಣೆ? ಪವಿತ್ರತೆಯ ಆಕರ್ಷಣೆಯಿದೆ ಏಕೆಂದರೆ ಇವರ ಆತ್ಮವೂ ಪವಿತ್ರ, ಶರೀರವೂ ಪವಿತ್ರವಾಗಿದೆ ಆದ್ದರಿಂದ ಪವಿತ್ರ ಆತ್ಮರು ಅಪವಿತ್ರರನ್ನು ಆಕರ್ಷಿಸುತ್ತಾರೆ. ಅಪವಿತ್ರರು ಅವರ ಚರಣಗಳಿಗೆ ಬೀಳುತ್ತಾರೆ. ದೇವತೆಗಳಲ್ಲಿ ಎಷ್ಟೊಂದು ಬಲವಿದೆ, ಭಲೆ ಸನ್ಯಾಸಿಗಳಿದ್ದಾರೆ ಆದರೆ ಅವರೂ ಸಹ ದೇವತೆಗಳ ಮುಂದೆ ಖಂಡಿತವಾಗಿ ತಲೆ ಬಾಗುತ್ತಾರೆ. ಭಲೆ ಕೆಲವರಿಗೆ ಬಹಳ ಗರ್ವವಿರುತ್ತದೆ ಆದರೂ ಸಹ ದೇವತೆಗಳು ಅಥವಾ ಶಿವನ ಮುಂದೆ ಖಂಡಿತ ಬಾಗುತ್ತಾರೆ. ದೇವಿಯರ ಚಿತ್ರದ ಮುಂದೆಯೂ ತಲೆ ಬಾಗುತ್ತಾರೆ ಏಕೆಂದರೆ ತಂದೆಯೂ ರಮಣೀಕರಾಗಿದ್ದಾರೆ ಅಂದಮೇಲೆ ತಂದೆಯಿಂದ ಮಾಡಲ್ಪಟ್ಟಿರುವ ದೇವಿ-ದೇವತೆಗಳೂ ಸಹ ರಮಣೀಕರಾಗಿದ್ದಾರೆ. ಅವರಲ್ಲಿ ಪವಿತ್ರತೆಯ ಆಕರ್ಷಣೆಯಿದೆ. ಅವರ ಆ ಆಕರ್ಷಣೆಯು ಇಲ್ಲಿಯವರೆಗೂ ನಡೆಯುತ್ತಿದೆ ಅಂದಮೇಲೆ ಅವರಲ್ಲಿ ಎಷ್ಟು ಆಕರ್ಷಣೆಯಿದೆಯೋ ಅಷ್ಟು ನಿಮ್ಮಲ್ಲಿಯೂ ಇರಬೇಕು. ಅವರೇ ಈ ಲಕ್ಷ್ಮೀ-ನಾರಾಯಣರ ತರಹ ನಾವಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ನಿಮ್ಮ ಈ ಸಮಯದ ಆಕರ್ಷಣೆಯು ಅವಿನಾಶಿಯಾಗಿ ಬಿಡುತ್ತದೆ, ಎಲ್ಲರದೂ ಆಗುವುದಿಲ್ಲ. ನಂಬರ್ವಾರಂತೂ ಇದೆಯಲ್ಲವೆ. ಭವಿಷ್ಯದಲ್ಲಿ ಯಾರು ಶ್ರೇಷ್ಠ ಪದವಿಯನ್ನು ಪಡೆಯುವವರಿದ್ದಾರೆಯೋ ಅವರಲ್ಲಿ ಇಲ್ಲಿಯೇ ಆಕರ್ಷಣೆಯಿರುವುದು ಏಕೆಂದರೆ ಆತ್ಮವು ಪವಿತ್ರವಾಗಿ ಬಿಡುತ್ತದೆ. ನಿಮ್ಮಲ್ಲಿ ಯಾರು ವಿಶೇಷವಾಗಿ ನೆನಪಿನ ಯಾತ್ರೆಯಲ್ಲಿರುವರೋ ಅವರಲ್ಲಿ ಹೆಚ್ಚು ಆಕರ್ಷಣೆಯಿರುತ್ತದೆ. ಯಾತ್ರೆಯಲ್ಲಿ ಪವಿತ್ರತೆಯು ಖಂಡಿತ ಇರುತ್ತದೆ. ಪವಿತ್ರತೆಯಲ್ಲಿಯೇ ಆಕರ್ಷಣೆಯಿದೆ. ಪವಿತ್ರತೆಯ ಆಕರ್ಷಣೆಯು ಮತ್ತೆ ವಿದ್ಯೆಯಲ್ಲಿಯೂ ಆಕರ್ಷಣೆಯನ್ನು ತರುತ್ತದೆ. ಇದು ಈಗ ನಮಗೆ ಅರ್ಥವಾಗಿದೆ, ನೀವು ಅವರ ಪರಿಚಯವನ್ನು ಅರಿತುಕೊಂಡಿದ್ದೀರಿ. ಅವರೂ ಸಹ ತಂದೆಯನ್ನು ಎಷ್ಟು ನೆನಪು ಮಾಡಿರಬಹುದು! ಯಾರು ಇಷ್ಟೂ ದೊಡ್ಡ ರಾಜ್ಯವನ್ನು ಪಡೆದಿದ್ದಾರೆಯೋ ಅವರು ಅವಶ್ಯವಾಗಿ ರಾಜಯೋಗದಿಂದಲೇ ಪಡೆದಿರಬೇಕಲ್ಲವೆ. ಈ ಸಮಯದಲ್ಲಿ ನೀವು ಈ ಪದವಿಯನ್ನು ಪಡೆಯುವುದಕ್ಕಾಗಿ ಬಂದಿದ್ದೀರಿ. ತಂದೆಯು ಕುಳಿತು ನಿಮಗೆ ರಾಜಯೋಗವನ್ನು ಕಲಿಸುತ್ತಾರೆ. ಇದನ್ನು ಪಕ್ಕಾ ನಿಶ್ಚಯ ಮಾಡಿಕೊಂಡು ಇಲ್ಲಿಗೆ ಬಂದಿದ್ದೀರಲ್ಲವೆ. ಅವರೇ ತಂದೆಯಾಗಿದ್ದಾರೆ, ಓದಿಸುವವರೂ ಅವರೇ ಆಗಿದ್ದಾರೆ ಮತ್ತು ಜೊತೆ ಕರೆದುಕೊಂಡು ಹೋಗುವವರೂ ಆಗಿದ್ದಾರೆ ಅಂದಮೇಲೆ ಸದಾ ಈ ಗುಣವಿರಬೇಕು. ಸದಾ ಹರ್ಷಿತಮುಖಿಯಾಗಿರಿ, ಯಾವಾಗ ತಂದೆಯ ನೆನಪಿನಲ್ಲಿರುತ್ತೀರೋ ಆಗ ಸದಾ ಹರ್ಷಿತರಾಗಿರುತ್ತೀರಿ ಮತ್ತು ಆಸ್ತಿಯ ನೆನಪೂ ಇರುವುದು. ಇದರಿಂದ ಬಹಳ ರಮಣೀಕರಾಗುತ್ತೀರಿ. ನೀವು ಮಕ್ಕಳಿಗೆ ತಿಳಿದಿದೆ - ನಾವಿಲ್ಲಿ ರಮಣೀಕರಾಗಿ ಭವಿಷ್ಯದಲ್ಲಿ ಇಂತಹ ರಮಣೀಕರಾಗುತ್ತೇವೆ. ಇಲ್ಲಿನ ವಿದ್ಯೆಯನ್ನೇ ಅಮರಪುರಿಗೆ ತೆಗೆದುಕೊಂಡು ಹೋಗುತ್ತೇವೆ. ಈ ಸತ್ಯ ತಂದೆಯೇ ನಿಮಗೇ ಸತ್ಯ ಸಂಪಾದನೆ ಮಾಡಿಸುತ್ತಿದ್ದಾರೆ. ಈ ಸತ್ಯ ಸಂಪಾದನೆಯೇ 21 ಜನ್ಮಗಳಿಗಾಗಿ ಜೊತೆ ಬರುತ್ತದೆ, ಮತ್ತೆ ಭಕ್ತಿಮಾರ್ಗದಲ್ಲಿ ಯಾವ ಸಂಪಾದನೆ ಮಾಡಿಕೊಳ್ಳುತ್ತೀರೋ ಅದು ಅಲ್ಪಕಾಲದ ಸುಖಕ್ಕಾಗಿ. ಅದು ಸದಾ ಜೊತೆ ಬರುವುದಿಲ್ಲ ಅಂದಾಗ ಈ ವಿದ್ಯೆಯಲ್ಲಿ ಮಕ್ಕಳು ಸದಾ ಎಚ್ಚರಿಕೆಯಿಂದಿರಬೇಕು. ನೀವು ಬಹಳ ಸಾಧಾರಣವಾಗಿದ್ದೀರಿ, ನಿಮಗೆ ಓದಿಸುವವರೂ ಸಹ ಬಹಳ ಸಾಧಾರಣ ರೂಪದಲ್ಲಿದ್ದಾರೆ ಅಂದಮೇಲೆ ಓದುವವರೂ ಸಾಧಾರಣವಾಗಿಯೇ ಇರುತ್ತೀರಿ. ಇಲ್ಲದಿದ್ದರೆ ಸಂಕೋಚವಾಗುವುದು. ನಾವು ಇಷ್ಟು ಅಧಿಕ ಬೆಲೆಯ ವಸ್ತ್ರಗಳನ್ನು ಹೇಗೆ ಧರಿಸುವುದು! ನಮ್ಮ ಮಮ್ಮಾ-ಬಾಬಾರವರು ಎಷ್ಟು ಸಾಧಾರಣವಾಗಿದ್ದಾರೆ ಆದ್ದರಿಂದ ನಾವೂ ಸಾಧಾರಣರಗಿದ್ದೇವೆ. ಇವರು ಏಕೆ ಸಾಧಾರಣವಾಗಿರುತ್ತಾರೆ? ಏಕೆಂದರೆ ವನವಾಸದಲ್ಲಿದ್ದಾರಲ್ಲವೆ. ನೀವೀಗ ಮರಳಿ ಹೋಗಬೇಕಲ್ಲವೆ. ಇಲ್ಲಿ ಯಾವುದೂ ವಿವಾಹ ಇತ್ಯಾದಿಗಳನ್ನು ಮಾಡಿಕೊಳ್ಳಬಾರದು. ಅವರಂತೂ ವಿವಾಹ ಮಾಡುವಾಗ ಕುಮಾರಿಯು ವನವಾಸದಲ್ಲಿರುತ್ತಾಳೆ. ಮೈಲಿಗೆ ಬಟ್ಟೆಗಳನ್ನು ಧರಿಸುತ್ತಾಳೆ. ತೈಲ ಇತ್ಯಾದಿಗಳನ್ನು ಹಚ್ಚುತ್ತಾಳೆ ಏಕೆಂದರೆ ಮಾವನ ಮನೆಗೆ ಹೋಗುತ್ತಾಳೆ. ಬ್ರಾಹ್ಮಣರ ಮೂಲಕ ನಿಶ್ಚಿತಾರ್ಥವಾಗುತ್ತದೆ. ನೀವೂ ಸಹ ಈಗ ಮಾವನ ಮನೆಗೆ ಹೋಗಬೇಕಾಗಿದೆ. ರಾವಣ ಪುರಿಯಿಂದ ರಾಮ ಪುರಿ ಅಥವಾ ವಿಷ್ಣು ಪುರಿಗೆ ಹೋಗಬೇಕಾಗಿದೆ. ಅಂದಾಗ ಈ ವನವಾಸದ ಪದ್ಧತಿಯನ್ನು ಏಕೆ ಇಟ್ಟಿದ್ದಾರೆಂದರೆ ಯಾವುದೇ ದೇಹದ ಅಥವಾ ವಸ್ತ್ರ ಮೊದಲಾದುವುಗಳ ಅಭಿಮಾನ ಬಾರದಿರಲಿ ಎಂದು. ಯಾರಿಗಾದರೂ ಕಡಿಮೆ ಬೆಲೆಯ ಸೀರೆಯಿದ್ದು ಅನ್ಯರನ್ನು ನೋಡುತ್ತಾರೆಂದರೆ ಇವರಬಳಿ ಎಷ್ಟು ಒಳ್ಳೆಯ ಸೀರೆಯಿದೆಯೆಂದು ಸಂಕಲ್ಪ ನಡೆಯುತ್ತದೆ. ಇವರಂತೂ ವನವಾಸದಲ್ಲಿಲ್ಲ ಎಂದುಕೊಳ್ಳುತ್ತಾರೆ ಆದರೆ ನೀವು ವನವಾಸದಲ್ಲಿ ಈ ರೀತಿ ಸಾಧಾರಣವಾಗಿರುತ್ತಲೂ ಅನ್ಯರಿಗೆ ಇಷ್ಟು ಶ್ರೇಷ್ಠ ಜ್ಞಾನವನ್ನು ಕೊಡಿ ಮತ್ತು ಇಷ್ಟು ನಶೆಯೇರಿರಲಿ ಅದರಿಂದ ಅವರಿಗೇ ಬಾಣವು ನಾಟಬೇಕು. ಭಲೆ ಪಾತ್ರೆ ತೊಳೆಯುತ್ತಾ ಇರಿ ಅಥವಾ ಬಟ್ಟೆಗಳನ್ನು ಒಗೆಯುತ್ತಾ ಇರಿ ಆದರೆ ಯಾರಾದರೂ ನಿಮ್ಮ ಸನ್ಮುಖದಲ್ಲಿ ಬಂದರೆ ನೀವು ಕೂಡಲೇ ಅವರಿಗೆ ತಂದೆಯ ನೆನಪು ತರಿಸಿ. ನಿಮಗೆ ಆ ನಶೆಯೇರಿರಲಿ ಮತ್ತು ಸಾಧಾರಣ ಉಡುಪಿನಲ್ಲಿದ್ದು ಕುಳಿತು ಯಾರಿಗಾದರೂ ಜ್ಞಾನವನ್ನು ತಿಳಿಸಿದ್ದೇ ಆದರೆ ಆಶ್ಚರ್ಯಚಕಿತರಾಗುತ್ತಾರೆ, ಇವರಲ್ಲಿ ಎಷ್ಟು ಶ್ರೇಷ್ಠ ಜ್ಞಾನವಿದೆ ಎಂದು. ಈ ಜ್ಞಾನವು ಗೀತೆಯದಾಗಿದೆ ಮತ್ತು ಭಗವಂತನೇ ಇದನ್ನು ತಿಳಿಸಿದ್ದಾರೆ. ರಾಜಯೋಗವು ಗೀತಾ ಜ್ಞಾನವೇ ಆಗಿದೆ ಅಂದಮೇಲೆ ಇಷ್ಟು ನಶೆಯಿರುತ್ತದೆಯೇ? ಹೇಗೆ ತಂದೆಯು ತಮ್ಮ ಉದಾಹರಣೆಯನ್ನು ಕೊಡುತ್ತಾರೆ - ತಿಳಿದುಕೊಳ್ಳಿ, ಮಕ್ಕಳ ಜೊತೆ ನಾನು ಆಟವಾಡುತ್ತಿರುತ್ತೇನೆ. ಅಂತಹ ಸಮಯದಲ್ಲಿ ಯಾರಾದರೂ ಜಿಜ್ಞಾಸು ಎದುರಿಗೆ ಬಂದರೆ ಅವರಿಗೆ ತಕ್ಷಣ ತಂದೆಯ ಪರಿಚಯವನ್ನು ಕೊಡುತ್ತೇನೆ. ಯೋಗದ ಶಕ್ತಿ, ಯೋಗ ಶಕ್ತಿಯಿರುವ ಕಾರಣ ಅವರು ಅಲ್ಲಿಯೇ ನಿಂತು ಆಶ್ಚರ್ಯ ಚಕಿತರಾಗುತ್ತಾರೆ. ಇಂತಹ ಸಾಧಾರಣವಾಗಿರುವವರಾಗಿದ್ದಾರೆ ಆದರೆ ಇವರಲ್ಲಿ ಇಷ್ಟೊಂದು ಶಕ್ತಿಯಿದೆಯಲ್ಲವೆ! ಆದರೂ ಸಹ ಅವರು ಏನೂ ಹೇಳಲು ಸಾಧ್ಯವಾಗುವುದಿಲ್ಲ. ಬಾಯಿಂದ ಯಾವುದೇ ಮಾತುಗಳೂ ಬರುವುದಿಲ್ಲ. ಹೇಗೆ ನೀವು ವಾಣಿಯಿಂದ ದೂರವಾಗುತ್ತೀರೋ ಹಾಗೆಯೇ ಅವರೂ ಸಹ ವಾಣಿಯಿಂದ ದೂರವಾಗುತ್ತಾರೆ. ಈ ನಶೆಯು ಸದಾ ಆಂತರ್ಯದಲ್ಲಿರಬೇಕಾಗಿದೆ. ಯಾವುದೇ ಸಹೋದರ ಅಥವಾ ಸಹೋದರಿಯು ಬಂದರೆ ಅವರನ್ನು ನಿಲ್ಲಿಸಿ ವಿಶ್ವದ ಮಾಲೀಕರಾಗುವ ಮತವನ್ನು ಕೊಡಬಹುದು. ಆಂತರ್ಯದಲ್ಲಿ ಇದೇ ನಶೆಯಿರಬೇಕು. ತಮ್ಮ ಲಗನ್ನಲ್ಲಿ ಮಗ್ನರಾಗಬೇಕಾಗಿದೆ. ತಂದೆಯು ಸದಾ ಹೇಳುತ್ತಾರೆ - ನಿಮ್ಮಲ್ಲಿ ಜ್ಞಾನವಂತೂ ಇದೆ ಆದರೆ ಯೋಗದ ಹರಿತವಿಲ್ಲ. ಪವಿತ್ರತೆ ಮತ್ತು ನೆನಪಿನಲ್ಲಿ ಇರುವುದರಿಂದಲೇ ಜ್ಞಾನದ ಹರಿತ ಬರುತ್ತದೆ. ನೆನಪಿನ ಯಾತ್ರೆಯಿಂದ ನೀವು ಪವಿತ್ರರಾಗುತ್ತೀರಿ, ಶಕ್ತಿಯೂ ಸಹ ಸಿಗುತ್ತದೆ. ಜ್ಞಾನವಂತೂ ಧನದ ಮಾತಾಗಿದೆ, ಹೇಗೆ ಶಾಲೆಯಲ್ಲಿ ಎಂ.ಎ., ಬಿ.ಎ., ಇತ್ಯಾದಿಗಳನ್ನು ಮಾಡಿದನಂತರ ಹಣ ಸಿಗುತ್ತದೆ, ಇಲ್ಲಿ ಬೇರೆ ಮಾತಾಗಿದೆ. ಇಲ್ಲಂತೂ ಬೇರೆ ಮಾತಾಗಿದೆ. ಭಾರತದ ಪ್ರಾಚೀನ ಯೋಗವು ಬಹಳ ಪ್ರಸಿದ್ಧವಾಗಿದೆ. ಇದೇ ನೆನಪಾಗಿದೆ. ತಂದೆಯು ಸರ್ವಶಕ್ತಿವಂತನಾಗಿರುವ ಕಾರಣ ಮಕ್ಕಳಿಗೆ ತಂದೆಯಿಂದ ಶಕ್ತಿ ಸಿಗುತ್ತದೆ. ಮಕ್ಕಳಿಗೆ ಆಂತರ್ಯದಲ್ಲಿರಬೇಕಾಗಿದೆ - ನಾವು ಮಕ್ಕಳು ತಂದೆಯ ಸಂತಾನರಾಗಿದ್ದೇವೆ ಆದರೆ ತಂದೆಯಷ್ಟು ಪವಿತ್ರರಾಗಿಲ್ಲ, ಈಗ ಆಗಬೇಕಾಗಿದೆ. ಇದು ನಮ್ಮ ಗುರಿ-ಉದ್ದೇಶವಾಗಿದೆ. ಯೋಗದಿಂದ ನೀವು ಪವಿತ್ರರಾಗುತ್ತೀರಿ, ಯಾರು ಅನನ್ಯ ಮಕ್ಕಳು ಇರುತ್ತಾರೆಯೋ ಅವರು ನಿತ್ಯವೂ ಇದೇ ಚಿಂತನೆಯನ್ನು ಮಾಡುತ್ತಿರುತ್ತಾರೆ. ಯಾರಾದರೂ ಬಂದರೆ ಅವರಿಗೆ ನಾವು ದಾರಿ ತೋರಿಸೋಣವೆಂಬ ದಯೆ ಬರಬೇಕು. ಪಾಪ! ಜ್ಞಾನವಿಲ್ಲದ ಕುರುಡರಾಗಿದ್ದಾರೆ ಎಂದು. ಕುರುಡರಿಗೆ ಊರುಗೋಲನ್ನು ಕೊಟ್ಟು ನಡೆಸುತ್ತಾರಲ್ಲವೆ. ಇವರೆಲ್ಲರೂ ಕುರುಡರಾಗಿದ್ದಾರೆ ಏಕೆಂದರೆ ಜ್ಞಾನದ ಚಕ್ಷುವಿಲ್ಲ.
ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ನೀವು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನೂ ಸಹ ನಾವೀಗ ತಿಳಿದುಕೊಂಡಿದ್ದೇವೆ, ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ನಿಮಗೆ ಮೊದಲೇ ತಿಳಿದುಕೊಂಡಿದ್ದೀರಿ, ಕೆಟ್ಟದ್ದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು..... ಈ ಚಿತ್ರಗಳನ್ನು ಏಕೆ ಮಾಡಿದ್ದಾರೆ? ಪ್ರಪಂಚದಲ್ಲಿ ಯಾರೂ ಇದರ ಅರ್ಥವನ್ನು ತಿಳಿದುಕೊಂಡಿಲ್ಲ ಆದರೆ ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಹೇಗೆ ಜ್ಞಾನ ಸಾಗರನಾಗಿದ್ದಾರೆಯೋ ಅದೇರೀತಿ ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಜ್ಞಾನ ಸಾಗರರಾಗುತ್ತಿದ್ದೀರಿ. ಕೆಲಕೆಲವರಿಗೆ ತುಂಬಾ ನಶೆಯೇರಿರುತ್ತದೆ - ವಾಹ್! ಬಾಬನಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳದೆ ಬಾಬನ ಮಗುವಾಗಿ ಏನು ಮಾಡಿದೆ! ಪ್ರತಿದಿನ ರಾತ್ರಿಯಲ್ಲಿ ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಬೇಕು, ಬಾಬಾ ವ್ಯಾಪಾರಿಯಾಗಿದ್ದಾರೆ. ವ್ಯಾಪಾರಿಗಳಿಗೆ ತಮ್ಮ ಲೆಕ್ಕ ಪತ್ರವನ್ನು ನೋಡುವುದು ಸಹಜವಾಗಿರುತ್ತದೆ. ಸರ್ಕಾರಿ ನೌಕರರಿಗೆ ಲೆಕ್ಕ ಪತ್ರವನ್ನು ತೆಗೆಯಲು ಬರುವುದಿಲ್ಲ, ಅವರು ಸೌಧಾಗರರೂ ಆಗಿರುವುದಿಲ್ಲ. ವ್ಯಾಪಾರಿಗಳು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ, ನೀವು ವ್ಯಾಪಾರಿಗಳಾಗಿದ್ದೀರಿ. ನೀವು ನಿಮ್ಮ ಲಾಭ-ನಷ್ಟದ ತಿಳಿದುಕೊಂಡಿದ್ದೀರಿ. ಪ್ರತಿದಿನ ತಮ್ಮ ಅನೂಕೂಲದಂತೆ ಖಾತೆಯನ್ನು ನೋಡಿಕೊಳ್ಳಿ – ಲಾಭವಾಗಿದೆಯೇ ಅಥವಾ ನಷ್ಟವಾಗಿದೆಯೋ? ನೀವಂತೂ ಸೌಧಾಗರರಲ್ಲವೆ. ಗಾಯನವಿದೆಯಲ್ಲವೆ - ತಂದೆಯು ಸೌಧಾಗಾರ್, ರತ್ನಾಗರ ಆಗಿದ್ದಾರೆ. ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರ ಮಾಡುತ್ತಾರೆ ಎಂಬುದನ್ನೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಎಲ್ಲರೂ ತೀಕ್ಷ್ಣ ಬುದ್ಧಿಯವರಾಗಿರುವುದಿಲ್ಲ. ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಹೊರಟು ಹೋಗುತ್ತದೆ. ಚೀಲದಲ್ಲಿ ರಂಧ್ರವಿದ್ದರೆ ಅದರಿಂದ ಸೋರಿ ಹೋಗುತ್ತದೆ, ಜೋಳಿಗೆ ತುಂಬುವುದಿಲ್ಲ. ತಂದೆಯು ತಿಳಿಸುತ್ತಾರೆ – ಧನ ದಾನ ಮಾಡುವುದರಿಂದ ಧನ ಖಾಲಿಯಾಗುವುದಿಲ್ಲ. ಅವಿನಾಶಿ ಜ್ಞಾನ ರತ್ನವಲ್ಲವೆ. ತಂದೆಯು ರೂಪಭಸಂತರಾಗಿದ್ದಾರೆ, ಆತ್ಮವೇನೋ ಹೌದು, ಅವರಲ್ಲಿ ಜ್ಞಾನವಿದೆ. ನೀವು ಮಕ್ಕಳೂ ಸಹ ರೂಪಭಸಂತರಾಗಿದ್ದೀರಿ, ಆತ್ಮದಲ್ಲಿ ಜ್ಞಾನವು ತುಂಬುತ್ತಾ ಇರುತ್ತದೆ. ಅವರಿಗೆ ರೂಪವಿದೆ, ಭಲೆ ಆತ್ಮವು ಚಿಕ್ಕದಾಗಿದೆ. ರೂಪವಂತೂ ಇದೆಯಲ್ಲವೆ, ಅವರನ್ನೂ ತಿಳಿದುಕೊಳ್ಳಬಹುದು, ಪರಮಾತ್ಮನನ್ನೂ ತಿಳಿದುಕೊಳ್ಳಬಹುದು. ಸೋಮನಾಥನ ಭಕ್ತಿಮಾಡುವವರು ಇಷ್ಟು ಚಿಕ್ಕ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಪೂಜೆ ಮಾಡಲು ಎಷ್ಟೊಂದು ಲಿಂಗಗಳನ್ನು ಮಾಡುತ್ತಾರೆ! ಶಿವ ತಂದೆಯನ್ನು ದೊಡ್ಡ-ದೊಡ್ಡದಾಗಿ ಮಾಡುತ್ತಾರೆ. ಇರುವುದೇನೂ ಚಿಕ್ಕ ರೂಪವಾಗಿದೆ ಆದರೆ ಅವರ ಸ್ಥಾನವಂತೂ ಬಹಳ ಶ್ರೇಷ್ಠವಲ್ಲವೆ.
ಈ ಜಪ-ತಪಗಳಿಂದ ಯಾವುದೇ ಲಾಭವಾಗುವುದಿಲ್ಲವೆಂದು ತಂದೆಯು ಕಲ್ಪದ ಹಿಂದೆ ತಿಳಿಸಿದ್ದರು. ಎಲ್ಲವನ್ನೂ ಮಾಡುತ್ತಾ ಕೆಳಗಿಳಿಯುತ್ತಾ ಹೋಗುತ್ತಾರೆ, ಏಣಿಯನ್ನು ಇಳಿಯುತ್ತಲೇ ಹೋಗುತ್ತಾರೆ. ನಿಮ್ಮದಂತೂ ಈಗ ಏರುವ ಕಲೆಯಾಗಿದೆ. ನೀವಂತೂ ಬ್ರಾಹ್ಮಣರು ಮೊದಲನೇ ನಂಬರಿನ ಜಿನ್ಹ್ ಆಗಿದ್ದೀರಿ. ಜಿನ್ಹ್ನ ಒಂದು ಕಥೆಯಿದೆಯಲ್ಲವೆ - ನನಗೆ ಕೆಲಸ ಕೊಡಿ, ಇಲ್ಲದಿದ್ದರೆ ನಿಮ್ಮನ್ನು ತಿಂದು ಬಿಡುತ್ತೇನೆ ಎಂದು ಹೇಳಿದನು, ಆದ್ದರಿಂದ ಏಣಿಯನ್ನು ಹತ್ತುವುದು-ಇಳಿಯುವ ಕೆಲಸ ಕೊಟ್ಟರು ಆದ್ದರಿಂದ ಅವನಿಗೆ ಕೆಲಸ ಸಿಕ್ಕಿತು. ಈ ಬೇಹದ್ದಿನ ಏಣಿಯನ್ನು ನೀವೇ ಇಳಿಯುತ್ತೀರಿ ಮತ್ತು ನೀವೇ ಹತ್ತುತ್ತೀರಿ ಎಂದು ತಂದೆಯೂ ತಿಳಿಸಿದ್ದಾರೆ. ನೀವೇ ಪೂರ್ಣ ಏಣಿಯನ್ನು ಇಳಿಯುತ್ತೀರಿ ಮತ್ತು ಹತ್ತುತ್ತೀರಿ, ನೀವೇ ಜಿನ್ಹ್ ಆಗಿದ್ದೀರಿ. ಬೇರೆ ಯಾರೂ ಸಹ ಏಣಿಯನ್ನು ಪೂರ್ಣ ಹತ್ತುವುದಿಲ್ಲ. ಏಣಿಯ ಪೂರ್ಣ ಜ್ಞಾನವನ್ನು ಪಡೆಯುವುದರಿಂದ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಮತ್ತೆ ಇಳಿಯುತ್ತೀರಿ, ಹತ್ತುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ತಂದೆಯಾಗಿದ್ದೇನೆ, ನನ್ನನ್ನು ನೀವು ಪತಿತ-ಪಾವನನೆಂದು ಕರೆಯುತ್ತೀರಲ್ಲವೆ. ನಾನು ಸರ್ವಶಕ್ತಿವಂತನಾಗಿದ್ದೇನೆ ಏಕೆಂದರೆ ನಾನಾತ್ಮ, ಸದಾ 100% ಪವಿತ್ರನಾಗಿದ್ದೇನೆ. ನಾನು ಬಿಂದು ರೂಪ ಅಥಾರಿಟಿಯಾಗಿದ್ದೇನೆ. ಎಲ್ಲಾ ಶಾಸ್ತ್ರಗಳ ರಹಸ್ಯವನ್ನು ತಿಳಿದುಕೊಂಡಿದ್ದೇನೆ, ಇದು ಎಷ್ಟು ಆಶ್ಚರ್ಯವಾಗಿದೆಯಲ್ಲವೆ. ಇವೆಲ್ಲವೂ ಬಹಳ ಆಶ್ಚರ್ಯಕರವಾದ ಜ್ಞಾನವಾಗಿದೆ, ಈ ರೀತಿ ಎಂದೂ ಕೇಳಿರುವುದಿಲ್ಲ – ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು ಅಡಕವಾಗಿದೆ. ಇದು ಎಂದೂ ಅಳಿಸಿ ಹೋಗುವುದಿಲ್ಲ, ನಡೆಯುತ್ತಲೇ ಇರುತ್ತದೆ. 84 ಜನ್ಮಗಳ ಚಕ್ರ ಸುತ್ತುತ್ತಾ ಬರುತ್ತದೆ. 84 ಜನ್ಮಗಳ ರೆಕಾರ್ಡ್ ಇದರಲ್ಲಿ ತುಂಬಿದೆ, ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು ಜ್ಞಾನವಿದೆ! ತಂದೆಯಲ್ಲಿಯೂ ಸಹ ಇದೆ ಅಂದಾಗ ನೀವು ಮಕ್ಕಳಲ್ಲಿಯೂ ಇದೆ. ಎಷ್ಟೊಂದು ಪಾತ್ರವನ್ನಭಿನಯಿಸುತ್ತಾರೆ ಆದರೆ ಈ ಪಾತ್ರವು ಎಂದೂ ಅಳಿಸಿ ಹೋಗುವುದಿಲ್ಲ. ಆತ್ಮವನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಆತ್ಮವಂತೂ ಬಿಂದುವೇ ಆಗಿದೆ ಅಂದಾಗ ತಂದೆಯೂ ಸಹ ಹೇಳುತ್ತಾರೆ - ನಾನೂ ಸಹ ಬಿಂದುವಾಗಿದ್ದೇನೆ. ಇದನ್ನು ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ. ನೀವು ಬೇಹದ್ದಿನ ತ್ಯಾಗಿ ಮತ್ತು ರಾಜಋಷಿಗಳಾಗಿದ್ದೀರಿ ಅಂದಾಗ ಎಷ್ಟೊಂದು ನಶೆಯೇರಿರಬೇಕಲ್ಲವೆ! ರಾಜ ಋಷಿಗಳು ಸಂಪೂರ್ಣ ಪವಿತ್ರರಾಗಿರುತ್ತಾರೆ. ರಾಜ ಋಷಿಗಳೆಂದರೆ ಸೂರ್ಯವಂಶಿ-ಚಂದ್ರವಂಶಿಗಳಾಗಿದ್ದಾರೆ ಯಾರು ಇಲ್ಲಿ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ. ಹೇಗೆ ನೀವೂ ಸಹ ಈಗ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೀರಿ. ಇದನ್ನು ಮಕ್ಕಳು ತಿಳಿದುಕೊಳ್ಳುತ್ತೀರಿ - ನಾವು ಹಿಂತಿರುಗಿ ಹೋಗುತ್ತೇವೆ. ಅಂಬಿಗನ ದೋಣಿಯಲ್ಲಿ ಕುಳಿತಿದ್ದೇವೆ ಮತ್ತು ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂದೂ ತಿಳಿದುಕೊಂಡಿದ್ದೀರಿ. ಅವಶ್ಯವಾಗಿ ಹೋಗಬೇಕಾಗಿದೆ, ಹಳೆಯ ಶಾಂತಿಧಾಮದ ಮೂಲಕ ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಯಾವಾಗಲೂ ಸಹ ಇದು ಮಕ್ಕಳ ಬುದ್ಧಿಯಲ್ಲಿ ಇರಬೇಕಾಗಿದೆ. ಸತ್ಯಯುಗದಲ್ಲಿ ನಾವು ಇದ್ದಾಗ ಯಾವುದೇ ಬೇರೆ ಖಂಡವಿರಲಿಲ್ಲ, ನಮ್ಮದೇ ರಾಜ್ಯವಿತ್ತು. ಪುನಃ ಈಗ ಯೋಗಬಲದಿಂದ ನಮ್ಮ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ ಏಕೆಂದರೆ ನಿಮಗೆ ತಿಳಿಸಲಾಗಿದೆ - ಯೋಗಬಲದಿಂದಲೇ ವಿಶ್ವದ ರಾಜ್ಯಭಾಗ್ಯವನ್ನು ಪಡೆಯಲು ಸಾಧ್ಯ, ಬಾಹುಬಲದಿಂದ ಪಡೆಯಲು ಸಾಧ್ಯವಿಲ್ಲ. ಇದು ಬೇಹದ್ದಿನ ನಾಟಕವಾಗಿದೆ, ಆಟವು ಮಾಡಲ್ಪಟ್ಟಿರುವುದಾಗಿದೆ. ಈ ಆಟದ ಜ್ಞಾನವನ್ನು ತಂದೆಯೇ ಕೊಡುತ್ತಾರೆ. ಪ್ರಾರಂಭದಿಂದ ಹಿಡಿದು ಇಡೀ ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ. ನೀವು ಸೂಕ್ಷ್ಮವತನ, ಮೂಲವತನದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಸ್ಥೂಲ ವತನದಲ್ಲಿ ಇವರ ರಾಜ್ಯವಿತ್ತು ಅರ್ಥಾತ್ ನಮ್ಮ ರಾಜ್ಯವಿತ್ತು. ಹೇಗೆ ನೀವು ಏಣಿಯನ್ನು ಇಳಿಯುತ್ತೀರೋ ಅದೂ ಸಹ ನೆನಪಿಗೆ ಬಂದಿದೆ. ಏಣಿಯನ್ನು ಏರುವುದು, ಇಳಿಯುವ ಆಟವು ಮಕ್ಕಳ ಬುದ್ಧಿಯಲ್ಲಿ ಕುಳಿತಿದೆ. ಈ ಪ್ರಪಂಚದ ಇತಿಹಾಸ-ಭೂಗೋಳವು ಹೇಗೆ ಪುನರಾವರ್ತನೆಯಾಗುವುದು ಎಂಬುದು ಬುದ್ಧಿಯಲ್ಲಿದೆ, ಇದರಲ್ಲಿ ನಮ್ಮದು ಹೀರೋ-ಹೀರೋಯಿನ್ನ ಪಾತ್ರವಿದೆ. ನಾವೇ ಸೋಲನ್ನನುಭಿಸುತ್ತೇವೆ ಮತ್ತು ನಾವೇ ಗೆಲುವನ್ನು ಪಡೆಯುತ್ತೇವೆ ಆದ್ದರಿಂದ ಹೀರೋ-ಹೀರೋಯಿನ್ ಎಂದು ಹೆಸರನ್ನಿಡಲಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಈಗ ನಾವು ವನವಾಸದಲ್ಲಿದ್ದೇವೆ ಆದುದರಿಂದ ಬಹಳ-ಬಹಳ ಸಾಧಾರಣವಾಗಿರಬೇಕಾಗಿದೆ. ದೇಹದ ಅಥವಾ ಯಾವುದೇ ವಸ್ತ್ರಗಳ ಅಭಿಮಾನವಿರಬಾರದು. ಯಾವುದೇ ಕಾರ್ಯವನ್ನು ಮಾಡುತ್ತಾ ತಂದೆಯ ನೆನಪಿನಲ್ಲಿದ್ದು ನಶೆಯೇರಿಸಿಕೊಳ್ಳಬೇಕಾಗಿದೆ.
2) ನಾವು ಬೇಹದ್ದಿನ ತ್ಯಾಗಿ ಮತ್ತು ರಾಜ ಋಷಿಯಾಗಿದ್ದೇವೆ, ಇದೇ ನಶೆಯಲ್ಲಿದ್ದು ಪವಿತ್ರರಾಗಬೇಕಾಗಿದೆ. ಜ್ಞಾನ ಧನದಿಂದ ಸಂಪನ್ನರಾಗಿ ದಾನ ಮಾಡಬೇಕಾಗಿದೆ. ಸತ್ಯ-ಸತ್ಯ ಸೌಧಾಗರರಾಗಿ ತಮ್ಮ ಲೆಕ್ಕ ಪತ್ರವನ್ನು ಇಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ಜನ್ಮ ಪಡೆಯುವಾಗ ತಮ್ಮ ಜೊತೆ ಕರ್ಮಗಳನುಸಾರ ಅದೃಷ್ಟವನ್ನು ತೆಗೆದುಕೊಂಡು ಬರುತ್ತಾರೆ. ಕೆಲವರು ಸಾಹುಕಾರರ ಬಳಿ, ಕೆಲವರು ಬಡವರ ಬಳಿ ಜನ್ಮ ಪಡೆಯುತ್ತಾರೆ. ವಾರಸುಧಾರ ಹುಟ್ಟಿದನೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಎಂತೆಂತಹ ದಾನ ಪುಣ್ಯಗಳನ್ನು ಮಾಡಿರುವರೋ ಅದರನುಸಾರ ಸಿಗುತ್ತದೆ. ನೀವೀಗ ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೇ ತಂದೆಯು ಕಲ್ಪದ ನಂತರ ಬಂದು ಪುನಃ ತಿಳಿಸಿದ್ದಾರೆ. ಮಕ್ಕಳಿಗೂ ತಿಳಿದಿದೆ - ನಾವು ನಮ್ಮ ಅದೃಷ್ಟವನ್ನು ತೆಗೆದುಕೊಂಡು ಬಂದಿದ್ದೇವೆ. ಸ್ವರ್ಗದ ರಾಜ್ಯ ಭಾಗ್ಯವನ್ನು ತಂದಿದ್ದೇವೆ ಯಾರು ಚೆನ್ನಾಗಿ ಅರಿತುಕೊಂಡಿದ್ದೀರಿ ಮತ್ತು ತಂದೆಯನ್ನು ನೆನಪು ಮಾಡುತ್ತಿದ್ದೀರಿ. ನೆನಪಿನ ಜೊತೆಗೆ ಅದೃಷ್ಟದ ಸಂಬಂಧವಿದೆ, ಜನ್ಮ ಪಡೆದಿದ್ದೀರೆಂದರೆ ತಂದೆಯ ನೆನಪೂ ಇರಬೇಕಲ್ಲವೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅದೃಷ್ಟವು ಶ್ರೇಷ್ಠವಾಗುತ್ತಿರುವುದು. ಎಷ್ಟು ಸಹಜ ಮಾತಾಗಿದೆ, ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ. ನೀವು ಸುಖಧಾಮದ ಅದೃಷ್ಟವನ್ನು ಪ್ರಾಪ್ತಿ ಮಾಡಿಕೊಳ್ಳಲು ಬಂದಿದ್ದೀರಿ. ಈಗ ಪ್ರತಿಯೊಬ್ಬರೂ ಪುರುಷಾರ್ಥ ಮಾಡುತ್ತಿದ್ದೀರಿ. ಪ್ರತಿಯೊಬ್ಬರೂ ತಮ್ಮನ್ನು ನೋಡಿಕೊಳ್ಳುತ್ತಿದ್ದಾರೆ - ನಾವು ಹೇಗೆ ಪುರುಷಾರ್ಥ ಮಾಡುತ್ತಿದ್ದೇವೆ ಎಂದು. ಹೇಗೆ ಮಮ್ಮಾ-ಬಾಬಾ ಮತ್ತು ಸೇವಾಧಾರಿ ಮಕ್ಕಳು ಪುರುಷಾರ್ಥ ಮಾಡುತ್ತಾರೆ. ಅವರನ್ನು ಫಾಲೋ ಮಾಡಬೇಕು. ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯ ಪರಿಚಯ ಕೊಟ್ಟರೆ ರಚನೆಯ ಆದಿ-ಮಧ್ಯ-ಅಂತ್ಯವು ಬಂದು ಬಿಡುವುದು. ಋಷಿ-ಮುನಿ ಮೊದಲಾದವರು ಯಾರೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಇಡೀ ಚಕ್ರವು ಸ್ಮೃತಿಯಲ್ಲಿರುತ್ತದೆ. ಪ್ರಪಂಚದಲ್ಲಿ ಯಾರೂ ಸಹ ತಂದೆ ಮತ್ತು ಆಸ್ತಿಯನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಂದೆ ಮತ್ತು ಅದೃಷ್ಟವನ್ನು ತಿಳಿದುಕೊಂಡಿದ್ದೀರಿ, ಆದ್ದರಿಂದ ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ನಿರ್ವಹಣಾರ್ಥ ಕರ್ಮವನ್ನೂ ಮಾಡಬೇಕು. ಮನೆಯನ್ನೂ ಸಂಭಾಲನೆ ಮಾಡಬೇಕಾಗಿದೆ. ಯಾರು ನಿರ್ಬಂಧನರಿದ್ದಾರೆಯೋ ಅವರು ಬಹಳ ಚೆನ್ನಾಗಿ ಸರ್ವೀಸ್ ಮಾಡಬಹುದು. ಮಕ್ಕಳು ಮರಿಯಿಲ್ಲವೆಂದರೆ ಅವರಿಗೆ ಸರ್ವೀಸ್ ಮಾಡಲು ಒಳ್ಳೆಯ ಅವಕಾಶವಿದೆ. ಸ್ತ್ರೀಗೆ ಪತಿ ಹಾಗೂ ಮಕ್ಕಳ ಬಂಧನವಿರುತ್ತದೆ. ಒಂದುವೇಳೆ ಮಕ್ಕಳಿಲ್ಲವೆಂದರೆ ಬಂಧನ ಮುಕ್ತರಾದರಲ್ಲವೆ. ಅವರು ಹೇಗೆ ವಾನಪ್ರಸ್ಥಿಗಳಿದ್ದಂತೆ. ಮತ್ತೆ ಮುಕ್ತಿಧಾಮದಲ್ಲಿ ಹೋಗುವುದಕ್ಕಾಗಿ ಸಂಗ ಬೇಕು. ಭಕ್ತಿಮಾರ್ಗದಲ್ಲಂತು ಸಾಧು ಮೊದಲಾದವರ ನಿವೃತ್ತಿ ಮಾರ್ಗದವರ ಸಂಗ ಸಿಗುತ್ತದೆ. ಆ ನಿವೃತ್ತಿ ಮಾರ್ಗದವರು ಪ್ರವೃತ್ತಿ ಮಾರ್ಗದ ಆಸ್ತಿಯನ್ನು ಕೊಡಿಸಲು ಸಾಧ್ಯವಿಲ್ಲ, ನೀವು ಮಕ್ಕಳೇ ಕೊಡಿಸಬಲ್ಲಿರಿ. ನಿಮಗೆ ತಂದೆಯು ಮಾರ್ಗವನ್ನು ತಿಳಿಸಿದ್ದಾರೆ, ಭಾರತದ 84 ಜನ್ಮಗಳ ಚರಿತ್ರೆ-ಭೂಗೋಳವನ್ನು ತಿಳಿಸಿ. ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಒಬ್ಬರ ಮಾತಲ್ಲ, ಸೂರ್ಯವಂಶಿಯರಿಂದ ಮತ್ತೆ ಚಂದ್ರವಂಶಿ ಮನೆತನದಲ್ಲಿ ಬರುತ್ತಾರೆ ಮತ್ತೆ ವೈಶ್ಯವಂಶಿಯಾಗುತ್ತಾರೆ... ನಂಬರ್ವಾರಂತೂ ಇರುತ್ತಾರಲ್ಲವೆ. ಭಾರತದ ಮೊಟ್ಟ ಮೊದಲನೇ ರಾಜಕುಮಾರನು ಶ್ರೀಕೃಷ್ಣನಾಗಿದ್ದಾನೆ ಯಾರನ್ನು ಉಯ್ಯಾಲೆಯಲ್ಲಿ ತೂಗುತ್ತಾರೆ. ಎರಡನೆಯವರನ್ನು ತೂಗುವುದೇ ಇಲ್ಲ ಏಕೆಂದರೆ ಕಲೆಯು ಕಡಿಮೆಯಾಯಿತು. ಯಾರು ಮೊದಲನೆಯವರಾಗಿದ್ದಾರೆಯೋ ಅವರ ಪೂಜೆ ನಡೆಯುತ್ತದೆ, ಕೃಷ್ಣನು ಒಬ್ಬನಾಗಿದ್ದಾನೆಯೇ ಅಥವಾ ಇಬ್ಬರು, ಮೂವರಿದ್ದಾರೆಯೇ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಕೃಷ್ಣನ ರಾಜಧಾನಿಯು ನಡೆಯುತ್ತದೆ ಎಂದು ಯಾರಿಗೂ ತಿಳಿದಿಲ್ಲ. ಕೇವಲ ಪೂಜೆಯು ಮೊಟ್ಟ ಮೊದಲನೆಯವರದೇ ಆಗುತ್ತದೆ. ಅಂಕಗಳಂತೂ ನಂಬರ್ವಾರ್ ಆಗಿ ಸಿಗುತ್ತದೆ ಅಂದಮೇಲೆ ಪುರುಷಾರ್ಥ ಮಾಡಿ ನಾವೇಕೆ ಮೊದಲ ನಂಬರಿನಲ್ಲಿ ಬರಬಾರದು! ಮಮ್ಮಾ-ಬಾಬಾರವರನ್ನು ಫಾಲೋ ಮಾಡಿ ಅವರ ರಾಜಧಾನಿಯನ್ನು ಪಡೆದುಕೊಳ್ಳಬಾರದು! ಯಾರು ಒಳ್ಳೆಯ ಸರ್ವೀಸ್ ಮಾಡುವರೋ ಅವರು ಒಳ್ಳೆಯ ಮಹಾರಾಜನ ಮನೆಯಲ್ಲಿ ಜನ್ಮ ಪಡೆಯುವರು. ಅಲ್ಲಂತೂ ಇರುವುದೇ ಮಹಾರಾಜ-ಮಹಾರಾಣಿ, ಆ ಸಮಯದಲ್ಲಿ ಯಾವುದೇ ರಾಜ-ರಾಣಿಯ ಬಿರುದು ಇರುವುದಿಲ್ಲ, ಅದು ನಂತರ ಆರಂಭವಾಗುತ್ತದೆ. ದ್ವಾಪರದಿಂದ ಯಾವಾಗ ಪತಿತರಾಗುತ್ತಾರೋ ಆಗ ಅವರಲ್ಲಿ ಹೆಚ್ಚು ಸಂಪತ್ತು ಇರುವವರಿಗೂ ರಾಜ ಎಂದು ಹೇಳಲಾಗುತ್ತದೆ. ಮತ್ತೆ ಮಹಾರಾಜನ ಹೆಸರು ಕಡಿಮೆಯಾಗಿ ಬಿಡುತ್ತದೆ, ಪ್ರಾಯಲೋಪವಾಗಿ ಬಿಡುತ್ತದೆ. ಯಾವಾಗ ಭಕ್ತಿಮಾರ್ಗವಾಗುವುದೋ ಬಡವರು, ಸಾಹುಕಾರರಲ್ಲಿ ಅಂತರವಂತೂ ಇರುತ್ತದೆಯಲ್ಲವೆ. ಈಗ ನೀವು ಮಕ್ಕಳೆ ಶಿವ ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಅನ್ಯ ಸತ್ಸಂಗಗಳಲ್ಲಿ ಮನುಷ್ಯರು ಕುಳಿತು ಕಥೆಯನ್ನು ಓದಿ ತಿಳಿಸುತ್ತಾರೆ, ಮನುಷ್ಯರು ಮನುಷ್ಯರಿಗೆ ಭಕ್ತಿ ಕಲಿಸುತ್ತಾರೆ. ಅವರು ಜ್ಞಾನವನ್ನು ಕೊಟ್ಟು ಸದ್ಗತಿ ಮಾಡಲು ಸಾಧ್ಯವಿಲ್ಲ. ವೇದಶಾಸ್ತ್ರ ಮೊದಲಾದುವುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಸದ್ಗತಿಯಂತೂ ಜ್ಞಾನದಿಂದಲೇ ಆಗುತ್ತದೆ. ಪುನರ್ಜನ್ಮವನ್ನೂ ಒಪ್ಪುತ್ತಾರೆ, ಮಧ್ಯದಲ್ಲಿ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಅಂತಿಮದಲ್ಲಿಯೇ ತಂದೆಯು ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಅಂದಮೇಲೆ ಇಷ್ಟೇಲ್ಲಾ ಆತ್ಮಗಳು ಎಲ್ಲಿ ಹೋಗುವರು? ಎಲ್ಲಾ ಧರ್ಮದವರ ವಿಭಾಗಗಳು ಬೇರೆ-ಬೇರೆಯಲ್ಲವೆ ಅಂದಾಗ ಇದನ್ನೂ ತಿಳಿಸಬೇಕಾಗಿದೆ. ಆತ್ಮಗಳದೂ ಸಹ ಒಂದು ವೃಕ್ಷವಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಇಡೀ ವೃಕ್ಷದ ಜ್ಞಾನವಿರುತ್ತದೆ. ಆತ್ಮರ ವೃಕ್ಷವೂ ಇದೆ, ಜೀವಾತ್ಮರ ವೃಕ್ಷವೂ ಇದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಈ ಹಳೆಯ ಶರೀರವನ್ನು ಬಿಟ್ಟು ಮನೆಗೆ ಹೋಗುತ್ತಿದ್ದೇವೆ “ನಾನಾತ್ಮ” ಈ ಶರೀರದಿಂದ ಭಿನ್ನನಾಗಿದ್ದೇನೆ - ಈ ರೀತಿ ತಿಳಿದುಕೊಳ್ಳುವುದು ಎಂದರೆ ಜೀವಿಸಿದ್ದಂತೆಯೇ ಸಾಯುವುದು. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ಮಿತ್ರ ಸಂಬಂಧಿ ಮೊದಲಾದವರೆಲ್ಲರನ್ನೂ ಬಿಟ್ಟು ಬಿಟ್ಟರೆ ಮೊದಲು ಪೂರ್ಣ ಶಿಕ್ಷಣವನ್ನು ತೆಗೆದುಕೊಂಡು ಪದವಿಗೆ ಅಧಿಕಾರಿಯಾಗಿ ನಂತರ ಹೋಗಬೇಕಾಗಿದೆ. ತಂದೆಯನ್ನು ನೆನಪು ಮಾಡುವುದು ಅತಿ ಸಹಜವಾಗಿದೆ. ಭಲೆ ಯಾರಾದರೂ ರೋಗಿಯಾಗಿದ್ದರೂ ಸಹ ಅವರಿಗೂ ಹೇಳುತ್ತಿರಬೇಕು – ಶಿವ ತಂದೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದು. ಯಾರು ಪಕ್ಕಾ ಯೋಗಿಗಳಿದ್ದಾರೆಯೋ ಅವರು ಬೇಗನೆ ಶರೀರ ಬಿಡುವುದು ಒಳ್ಳೆಯದಲ್ಲ ಏಕೆಂದರೆ ಅವರು ಯೋಗದಲ್ಲಿದ್ದು ಆತ್ಮಿಕ ಸೇವೆ ಮಾಡುತ್ತಾರೆ. ಶರೀರ ಬಿಟ್ಟರೂ ಸಹ ಅವರು ಸೇವೆ ಮಾಡಲು ಸಾಧ್ಯವಾಗುವುದಿಲ್ಲ. ಸೇವೆ ಮಾಡುವುದರಿಂದ ತಮ್ಮ ಶ್ರೇಷ್ಠ ಪದವಿಯನ್ನು ಮಾಡಿಕೊಳ್ಳುತ್ತಾ ಇರುತ್ತಾರೆ ಮತ್ತು ಸಹೋದರ-ಸಹೋದರಿಯರ ಸೇವೆಯೂ ಆಗುವುದು. ಅವರೂ ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುತ್ತಾರೆ. ನಾವು ಪರಸ್ಪರ ಸಹೋದರರಾಗಿದ್ದೇವೆ, ಒಬ್ಬ ತಂದೆಯ ಮಕ್ಕಳಾಗಿದ್ದೇವೆ.
ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವವು. ಮೊದಲೂ ಸಹ ಇದೇ ರೀತಿ ತಿಳಿಸಿದ್ದೇನೆ. ನೀವು ಯಾರಿಗೆ ಬೇಕಾದರೂ ಇದನ್ನು ತಿಳಿಸಬಹುದು - ಸಹೋದರ-ಸಹೋದರಿಯರೇ, ನಿಮ್ಮ ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ, ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ಪುನಃ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಸತೋಪ್ರಧಾನ ಪ್ರಪಂಚಕ್ಕೆ ಹೋಗಬೇಕಾಗಿದೆ. ಆತ್ಮವನ್ನು ನೆನಪಿನ ಯಾತ್ರೆಯಿಂದ ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ. ನೆನಪಿನ ಪೂರ್ಣ ಚಾರ್ಟ್ ಇಡಬೇಕು. ಜ್ಞಾನದ ಚಾರ್ಟನ್ನು ಇಡಲು ಸಾಧ್ಯವಿಲ್ಲ. ತಂದೆಯಂತೂ ಜ್ಞಾನವನ್ನು ಕೊಡುತ್ತಿರುತ್ತಾರೆ. ಪರಿಶೀಲನೆ ಮಾಡಿಕೊಳ್ಳಿ – ನಮ್ಮ ಮೇಲೆ ಯಾವ ವಿಕರ್ಮಗಳ ಹೊರೆಯಿದೆಯೋ ಅದು ಹೇಗೆ ಇಳಿಯುವುದು ಆದ್ದರಿಂದ ನೆನಪಿನ ಚಾರ್ಟ್ ಇಡಬೇಕಾಗಿದೆ - ನಾವು ಎಷ್ಟು ಗಂಟೆಗಳ ಕಾಲ ನೆನಪು ಮಾಡಿದೆವು? ಮೂಲವತನವನ್ನೂ ನೆನಪು ಮಾಡುತ್ತೀರಿ ಮತ್ತು ಹೊಸ ಪ್ರಪಂಚವನ್ನೂ ನೆನಪು ಮಾಡುತ್ತೀರಿ. ಅಲ್ಲೋಲ -ಕಲ್ಲೋಲವಾಗಲಿದೆ ಅದಕ್ಕಾಗಿ ತಯಾರಿ ನಡೆಯುತ್ತಿದೆ. ಬಾಂಬುಗಳೂ ತಯಾರಾಗುತ್ತಾ ಹೋಗುತ್ತವೆ. ಒಂದು ಕಡೆ ನಾವು ಮೃತ್ಯುವಿಗಾಗಿ ಇಂತಿಂತಹ ಸಾಮಗ್ರಿಗಳನ್ನ ತಯಾರು ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ ಮತ್ತು ಇನ್ನೊಂದು ಕಡೆ ಹೇಳುತ್ತಾರೆ - ಮೃತ್ಯುವಿನ ಸಾಮಗ್ರಿಗಳನ್ನು ತಯಾರು ಮಾಡಬೇಡಿ. ಸಮುದ್ರದ ತಳದಲ್ಲಿ ವಿನಾಶ ಮಾಡುವ ಸಾಮಗ್ರಿಗಳನ್ನಿಟ್ಟಿದ್ದಾರೆ, ಮೇಲೆ ಬಂದು ಬಾಂಬುಗಳನ್ನು ಹಾಕಿ ಮತ್ತೆ ಸಮುದ್ರದೊಳಗೆ ಹೊರಟು ಹೋಗುತ್ತಾರೆ. ಇಂತಿಂತಹ ವಸ್ತುಗಳನ್ನು ತಯಾರು ಮಾಡುತ್ತಿರುತ್ತಾರೆ. ತಮ್ಮದೇ ವಿನಾಶಕ್ಕಾಗಿ ತಯಾರು ಮಾಡುತ್ತಿದ್ದಾರೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ಇಷ್ಟು ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸುತ್ತಿದ್ದಾರೆ ಆದರೆ ನಿಮಗೆ ತಿಳಿದಿದೆ - ಇದೆಲ್ಲವೂ ಮಣ್ಣು ಪಾಲಾಗಲಿದೆ. ಕೆಲವರದು ಮಣ್ಣು ಪಾಲಾಯಿತು, ಕೆಲವರದು.... ಅವಶ್ಯವಾಗಿ ಆಗುವುದು. ಪ್ರಯತ್ನ ಪಟ್ಟು ಎಲ್ಲರ ಜೇಜುಗಳನ್ನು ಖಾಲಿ ಮಾಡುತ್ತಾರೆ, ಕಳ್ಳರೂ ಸಹ ಮನೆಗಳಿಗೆ ನುಗ್ಗುತ್ತಾರೆ. ಯುದ್ಧದಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ, ಇದೆಲ್ಲವೂ ಮಣ್ಣು ಪಾಲಾಗುವುದು. ಕಟ್ಟಡಗಳೆಲ್ಲವೂ ಬೀಳುತ್ತದೆ, ಬಾಂಬುಗಳು ಬಿದ್ದರೆ ಸೃಷ್ಟಿಯ ಮೂರುಭಾಗವು ಸಮಾಪ್ತಿಯಾಗುತ್ತದೆ. ಇನ್ನು ಒಂದು ಭಾಗವು ಮಾತ್ರವೇ ಉಳಿಯುತ್ತದೆ. ಭಾರತವು ಒಂದು ಭಾಗದಲ್ಲಿದೆಯಲ್ಲವೆ. ಉಳಿದೆಲ್ಲರೂ ನಂತರದಲ್ಲಿ ಬಂದಿದ್ದಾರೆ, ಈಗ ಭಾರತದ ಭಾಗವೇ ಉಳಿಯುವುದು, ಎಲ್ಲರ ಮೃತ್ಯುವಾಗಲೇಬೇಕಾಗಿದೆ ಅಂದಮೇಲೆ ನಾವೇಕೆ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬಾರದು! ಆದ್ದರಿಂದ ತಂದೆಯು ತಿಳಿಸುತ್ತಾರೆ - ಲೌಕಿಕ ಸಂಬಂಧಿಗಳೊಂದಿಗೂ ಸಂಬಂಧವನ್ನು ನಿಭಾಯಿಸಬೇಕಾಗಿದೆ. ಬಾಕಿ ಯಾವುದೇ ಬಂಧನವಿಲ್ಲದಿದ್ದರೆ ಅಂತಹವರಿಗೆ ಸರ್ವೀಸಿನಲ್ಲಿ ತೊಡಗಿರಿ ಎಂದು ತಂದೆಯು ಸಲಹೆ ಕೊಡುತ್ತಾರೆ. ಸ್ವತಂತ್ರರಾಗಿದ್ದರೆ ಅನೇಕರ ಕಲ್ಯಾಣ ಮಾಡಬಲ್ಲರು. ಎಲ್ಲಿಯೋ ಹೊರಗೆ ಹೋಗದಿದ್ದರೂ ತಮ್ಮ ಮಿತ್ರ ಸಂಬಂಧಿಗಳ ಮೇಲಾದರೂ ದಯೆ ತೋರಿಸಬೇಕಾಗಿದೆ. ಬಾಬಾ, ದಯೆ ತೋರಿಸಿ ಎಂದು ಮೊದಲು ಹೇಳುತ್ತಿದ್ದರಲ್ಲವೆ. ಈಗಂತೂ ನಿಮಗೆ ಮಾರ್ಗವು ಸಿಕ್ಕಿದೆಯೆಂದ ಮೇಲೆ ಹೇಗೆ ತಂದೆಯು ದಯೆ ತೋರಿಸುತ್ತಾರೆ ಹಾಗೆಯೇ ನೀವು ಅನ್ಯರ ಮೇಲೂ ದಯೆ ತೋರಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತದೆ. ಸನ್ಯಾಸಿಗಳು ಹಠಯೋಗ ಇತ್ಯಾದಿಗಳಲ್ಲಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ಇಲ್ಲಂತೂ ಅದೇನೂ ಇಲ್ಲ, ಕೇವಲ ನೆನಪು ಮಾಡಿದರೆ ಪಾಪಗಳು ಭಸ್ಮವಾಗಿ ಬಿಡುತ್ತದೆ. ಇದರಲ್ಲಿ ಯಾವುದೇ ಕಷ್ಟವಿಲ್ಲ, ಕೇವಲ ನೆನಪಿನ ಯಾತ್ರೆಯ ಮಾತಾಗಿದೆ. ಎದ್ದೇಳಿ, ಕುಳಿತುಕೊಳ್ಳಿ, ಕರ್ಮೇಂದ್ರಿಯಗಳಿಂದ ಭಲೆ ಕರ್ಮವನ್ನೂ ಮಾಡಿ, ಕೇವಲ ಬುದ್ಧಿಯೋಗವನ್ನು ತಂದೆಯೊಂದಿಗೆ ಜೋಡಿಸಿ. ಆ ಪ್ರಿಯತಮನಿಗೆ ಸತ್ಯ-ಸತ್ಯವಾದ ಪ್ರಿಯತಮೆಯರಾಗಬೇಕಾಗಿದೆ. ಹೇ ಪ್ರಿಯತಮೆಯರೇ, ಹೇ ಮಕ್ಕಳೇ! ಭಕ್ತಿಮಾರ್ಗದಲ್ಲಿ ಬಹಳ ನೆನಪು ಮಾಡಿದಿರಿ ಆದರೆ ಈಗ ನಾನು ಪ್ರಿಯತಮನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತದೆ, ನಾನು ಗ್ಯಾರಂಟಿ ಕೊಡುತ್ತೇನೆ ಎಂದು ಸ್ವಯಂ ಅವರೇ ತಿಳಿಸುತ್ತಾರೆ. ಕೆಲಕೆಲವು ಮಾತುಗಳು ಶಾಸ್ತ್ರಗಳಲ್ಲಿ ಬಂದು ಬಿಟ್ಟಿವೆ. ಭಗವಂತನ ಮೂಲಕ ಗೀತೆಯನ್ನು ಕೇಳುವುದರಿಂದ ನೀವು ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಮನುಷ್ಯರ ಮೂಲಕ ಗೀತೆಯನ್ನು ಕೇಳಿದ್ದರಿಂದ ಜೀವನ ಬಂಧನದಲ್ಲಿ ಬಂದಿದ್ದೀರಿ, ಏಣಿಯನ್ನು ಕೆಳಗಿಳಿಯುತ್ತಾ ಬಂದಿದ್ದೀರಿ. ಪ್ರತಿಯೊಂದು ಮಾತಿನಲ್ಲಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ, ತಮ್ಮ ಬುದ್ಧಿಯನ್ನು ಓಡಿಸಬೇಕಾಗಿದೆ. ಇದು ನೆನಪಿನ ಯಾತ್ರೆಯಾಗಿದೆ, ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ವೇದಶಾಸ್ತ್ರ, ಯಜ್ಞ, ತಪ ಇತ್ಯಾದಿಗಳನ್ನು ಮಾಡುವುದರಿಂದ ಪಾಪ ನಾಶವಾಗುವುದಿಲ್ಲ. ಕೆಳಗಿಳಿಯುತ್ತಲೇ ಬಂದಿರಿ, ನೀವೀಗ ಮೇಲೆ ಹೋಗಬೇಕಾಗಿದೆ. ಕೇವಲ ಏಣಿಯ ಚಿತ್ರದಿಂದ ನೀವು ತಿಳಿಸುವವರೆಗೆ ಯಾರಿಗೂ ಅರ್ಥವಾಗುವುದಿಲ್ಲ. ಹೇಗೆ ಚಿಕ್ಕ ಮಕ್ಕಳಿಗೆ ಚಿತ್ರವನ್ನು ತೋರಿಸಿ - ಇದು ಆನೆಯಾಗಿದೆ.... ಎಂದು ಕಲಿಸಬೇಕಾಗುತ್ತದೆ. ಯಾವಾಗ ಆನೆಯನ್ನು ನೋಡುವರು ಆಗ ಚಿತ್ರವೂ ನೆನಪಿಗೆ ಬರುವುದು ಹೇಗೆ ನಿಮ್ಮ ಬುದ್ಧಿಯಲ್ಲಿ ಬಂದು ಬಿಟ್ಟಿದೆ. ಚಿತ್ರದಲ್ಲಿ ಯಾವಾಗಲೂ ಚಿಕ್ಕ ವಸ್ತುವನ್ನು ತೋರಿಸಲಾಗುತ್ತದೆ. ನಿಮಗೆ ತಿಳಿದಿದೆ - ವೈಕುಂಠವಂತೂ ದೊಡ್ಡದಾಗಿರುತ್ತದೆ, ದೊಡ್ಡ ರಾಜಧಾನಿಯಿರುತ್ತದೆ. ಅಲ್ಲಿ ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ. ಅವು ಮತ್ತೆ ಪ್ರಾಯಲೋಪವಾಗಿ ಬಿಡುತ್ತದೆ. ಎಲ್ಲಾ ವಸ್ತುಗಳು ಮಾಯವಾಗಿ ಬಿಡುತ್ತದೆ. ಇಲ್ಲದಿದ್ದರೆ ಈ ಭಾರತವು ಹೇಗೆ ಬಡ ದೇಶವಾಯಿತು? ಸಾಹುಕಾರನಿಂದ ಬಡವ, ಬಡವನಿಂದ ಸಾಹುಕಾರನಾಗಬೇಕಾಗಿದೆ. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ ಆದ್ದರಿಂದ ಏಣಿಯ ಚಿತ್ರದಲ್ಲಿ ತಿಳಿಸಲಾಗುತ್ತದೆ, ಹೊಸ-ಹೊಸಬರು ಬರುತ್ತಾರೆಂದರೆ ಅವರಿಗೆ ತಿಳಿಸುವುದರಿಂದ ಅಭ್ಯಾಸವಾಗುವುದು, ಬಾಯಿ ತೆರೆಯುವುದು. ಮಕ್ಕಳನ್ನು ಸೇವೆಗೆ ಯೋಗ್ಯರನ್ನಾಗಿ ಮಾಡಲಾಗುತ್ತದೆ. ಕೆಲವು ಸೇವಾಕೇಂದ್ರಗಳಲ್ಲಿ ಅನೇಕ ಮಕ್ಕಳು ಅಶಾಂತಿಯನ್ನು ಹರಡುತ್ತಿರುತ್ತಾರೆ. ಬುದ್ಧಿಯೋಗವು ಹೊರಗೆ ಅಲೆಯುತ್ತದೆ ಅಂದಮೇಲೆ ನಷ್ಟವನ್ನುಂಟು ಮಾಡುತ್ತಾರೆ, ವಾಯುಮಂಡಲವನ್ನೂ ಹಾಳು ಮಾಡಿ ಬಿಡುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಮತ್ತೆ ತಂದೆಯು ಹೇಳುತ್ತಾರೆ, ನೀವು ಓದಲಿಲ್ಲ ಆದ್ದರಿಂದ ಈಗ ತಮ್ಮ ಸ್ಥಿತಿಯನ್ನು ನೋಡಿಕೊಳ್ಳಿ! ದಿನ-ಪ್ರತಿದಿನ ಹೆಚ್ಚು ಸಾಕ್ಷಾತ್ಕಾರಗಳಾಗುತ್ತಾ ಇರುತ್ತವೆ. ಪಾಪ ಮಾಡುವವರಿಗೆ ಶಿಕ್ಷೆಗಳೂ ಸಿಗುತ್ತಿರುತ್ತವೆ ಆಗ ಅಯ್ಯೊ! ನಾವು ಸುಮ್ಮನೆ ಪಾಪ ಮಾಡಿದೆವು ಎಂದು ಹೇಳುತ್ತಾರೆ. ತಂದೆಗೆ ತಿಳಿಸಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದರಿಂದ ಸ್ವಲ್ಪ ಕಡಿಮೆಯಾಗುತ್ತದೆ ಇಲ್ಲದಿದ್ದರೆ ಅದು ಇನ್ನೂ ವೃದ್ಧಿಯಾಗುತ್ತಾ ಇರುವುದು. ಈ ರೀತಿಯಾಗುತ್ತಿರುತ್ತದೆ. ಇವನ್ನು ಸ್ವಯಂ ಅನುಭವ ಮಾಡುತ್ತಾರೆ ಆದರೆ ಮತ್ತೆ ಹೇಳುತ್ತಾರೆ - ಏನು ಮಾಡುವುದು? ನಮ್ಮ ಈ ಹವ್ಯಾಸವು ಕಳೆಯುತ್ತಿಲ್ಲ. ಇದಕ್ಕಿಂತಲೂ ಮನೆಗೆ ಹೋಗಿ ಇರುತ್ತೇನೆ ಎಂದು. ಕೆಲವರಂತೂ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ, ಕೆಲವರು ಸೇವಾಭಂಗವನ್ನೂ ಮಾಡುತ್ತಾರೆ. ನಮ್ಮ ಸೈನ್ಯದಲ್ಲಿ ಯಾರ್ಯಾರು ಬಹದ್ದೂರರಿದ್ದಾರೆ ಎಂದು ತಂದೆಯು ಹೆಸರುಗಳನ್ನು ತಿಳಿಸುತ್ತಾರೆ ಬಾಕಿ ಯಾವುದೇ ಯುದ್ಧ ಇತ್ಯಾದಿಗಳ ಮಾತಿಲ್ಲ. ಇವು ಬೇಹದ್ದಿನ ಮಾತುಗಳಾಗಿವೆ. ಒಳ್ಳೆಯ ಮಕ್ಕಳಾಗಿದ್ದರೆ ತಂದೆಯು ಅವಶ್ಯವಾಗಿ ಅವರ ಮಹಿಮೆ ಮಾಡುತ್ತಾರೆ. ಮಕ್ಕಳ ಬಹಳ ದಯಾಹೃದಯಿಗಳು ಕಲ್ಯಾಣಕಾರಿಗಳಾಗಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ. ಎಲ್ಲರಿಗೆ ಮಾರ್ಗವನ್ನು ತಿಳಿಸಿ - ತಂದೆಯನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವುದು. ಪಾಪಾತ್ಮ ಮತ್ತು ಪುಣ್ಯಾತ್ಮನೆಂದು ಹೇಳುತ್ತಾರಲ್ಲವೆ. ಒಳಗಡೆ ಪರಮಾತ್ಮನಿದ್ದಾರೆ ಅಥವಾ ಆತ್ಮವು ಪರಮಾತ್ಮನಾಗಿ ಬಿಡುತ್ತದೆ ಎಂದು ಹೇಳುವುದಿಲ್ಲ. ಇದೆಲ್ಲವೂ ತಪ್ಪಾಗಿದೆ. ಪರಮಾತ್ಮನಿಗೆ ಪಾಪವು ಅಂಟುವುದಿಲ್ಲ. ಡ್ರಾಮಾದಲ್ಲಿ ಅವರದು ಸೇವೆ ಮಾಡುವ ಪಾತ್ರವಿದೆ. ಮನುಷ್ಯರೇ ಪಾಪಾತ್ಮ, ಪುಣ್ಯಾತ್ಮನಾಗುತ್ತಾರೆ. ಯಾರು ಸತೋಪ್ರಧಾನರಾಗಿದ್ದರೋ ಅವರೇ ತಮೋಪ್ರಧಾನರಾಗಿದ್ದಾರೆ, ಅವರ ತನುವಿನಲ್ಲಿ ತಂದೆಯು ಕುಳಿತು ಸತೋಪ್ರಧಾನರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಮತದಂತೆ ನಡೆಯಬೇಕಲ್ಲವೆ.
ಈಗ ತಂದೆಯು ನೀವು ಮಕ್ಕಳನ್ನು ವಿಶಾಲ ಬುದ್ಧಿಯವರನ್ನಾಗಿ ಮಾಡಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತಿದೆ, ತಂದೆಯೇ ಬ್ರಹ್ಮಾರವರ ತನುವಿನಲ್ಲಿ ಬಂದು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಿಗೆ ರಾಜಯೋಗವನ್ನು ಕಲಿಸಿ ದೇವಿ-ದೇವತೆಗಳನ್ನಾಗಿ ಮಾಡುತ್ತಾರೆ ಮತ್ತೆ ಪುನರ್ಜನ್ಮವನ್ನು ತೆಗೆದುಕೊಂಡು ಕೆಳಗಿಳಿಯುತ್ತೀರಿ. ಈಗ ಪುನಃ ಎಲ್ಲವನ್ನೂ ಪುನರಾವರ್ತಿಸಬೇಕಾಗಿದೆ. ತಂದೆಯು ಪುನಃ ಬ್ರಹ್ಮಾರವರ ಮೂಲಕ ಸ್ಥಾಪನಾ ಕಾರ್ಯವನ್ನು ಮಾಡಿಸುತ್ತಿದ್ದಾರೆ. ಯೋಗಬಲದಿಂದ ನೀವು ಪಂಚ ವಿಕಾರಗಳನ್ನು ಗೆದ್ದು ಜಗತ್ಜೀತರಾಗುತ್ತೀರಿ. ಬಾಕಿ ಯಾವುದೆ ಯುದ್ಧ ಇತ್ಯಾದಿಗಳ ಮಾತಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಬಂಧನಮುಕ್ತರಾಗಿ ತಂದೆಯ ಸೇವೆಯಲ್ಲಿ ತೊಡಗಬೇಕಾಗಿದೆ, ಆಗಲೇ ಶ್ರೇಷ್ಠ ಅದೃಷ್ಟವಾಗುವುದು. ದಯಾಹೃದಯಿಗಳಾಗಿ ಅನೇಕರಿಗೆ ಮಾರ್ಗ ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.
2) ಈ ಶರೀರದಿಂದ ಮಮತ್ವವನ್ನು ತೆಗೆದು ಜೀವಿಸಿದ್ದಂತೆಯೇ ಸಾಯಬೇಕಾಗಿದೆ ಏಕೆಂದರೆ ಈಗ ಮರಳಿ ಮನೆಗೆ ಹೋಗಬೇಕಾಗಿದೆ. ಕಾಯಿಲೆಯ ಸಮಯದಲ್ಲಿಯೂ ಒಬ್ಬ ತಂದೆಯ ನೆನಪಿರಲಿ ಆಗ ವಿಕರ್ಮಗಳು ವಿನಾಶವಾಗುವವು.
ಓಂ ಶಾಂತಿ. ಮೊಟ್ಟ ಮೊದಲು ಪ್ರತಿಯೊಬ್ಬ ಪುರುಷಾರ್ಥಿ ಮಕ್ಕಳು ಅವಶ್ಯವಾಗಿ ಅಂತರ್ಮುಖಿ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಅಂತರ್ಮುಖತೆಯಲ್ಲಿ ಶ್ರೇಷ್ಠವಾದ ಕಲ್ಯಾಣವೇ ಅಡಗಿದೆ, ಈ ಸ್ಥಿತಿಯಲ್ಲಿಯೇ ಅಚಲ, ಸ್ಥಿರ, ತಾಳ್ಮೆಯಿರುವ, ನಿರ್ಮಾಣ ಚಿತ್ತ ಇತ್ಯಾದಿ, ದೈವೀ ಗುಣಗಳ ಧಾರಣೆಯಾಗಲು ಸಾಧ್ಯ ಹಾಗೂ ಸಂಪೂರ್ಣ ಜ್ಞಾನಪೂರ್ಣ ಸ್ಥಿತಿಯು ಪ್ರಾಪ್ತಿಯಾಗಲು ಸಾಧ್ಯವಾಗುವುದು. ಅಂತರ್ಮುಖಿ ಆಗದಿರುವ ಕಾರಣದಿಂದ ಸಂಪೂರ್ಣ ಜ್ಞಾನರೂಪ ಸ್ಥಿತಿಯ ಪ್ರಾಪ್ತಿಯಾಗುವುದಿಲ್ಲ ಏಕೆಂದರೆ ಸನ್ಮುಖದಲ್ಲಿ ಏನೆಲ್ಲಾ ‘ಮಹಾವಾಕ್ಯ’ಗಳನ್ನು ಕೇಳಿಸಿಕೊಳ್ಳಲಾಗುತ್ತದೆ, ಅದನ್ನು ಆಳವಾದ ಚಿಂತನೆ ಮಾಡಿ ಗ್ರಹಿಸುವುದಿಲ್ಲ, ಮಹಾವಾಕ್ಯಗಳನ್ನು ಕೇಳಿಸಿಕೊಂಡು ಕೇವಲ ರಿಪೀಟ್ ಮಾಡುತ್ತೀರೆಂದರೆ ಮಹಾವಾಕ್ಯವು ವಾಕ್ಯವಾಗಿ ಬಿಡುತ್ತದೆ. ಮಹಾವಾಕ್ಯಗಳನ್ನು ಯಾರು ಜ್ಞಾನ ರೂಪ ಸ್ಥಿತಿಯಲ್ಲಿರುತ್ತಾ ಕೇಳುವುದಿಲ್ಲವೋ, ಆ ಮಹಾವಾಕ್ಯಗಳ ಮೇಲೆ ಮಾಯೆಯ ಛಾಯೆಯುಂಟಾಗುತ್ತದೆ. ಮಾಯೆಯ ಇಂತಹ ಅಶುದ್ಧ ಪ್ರಕಂಪನಗಳಿಂದ ಕೂಡಿರುವ ಆತ್ಮರೀಗ ಮಹಾವಾಕ್ಯಗಳನ್ನು ಕೇಳಿಸಿಕೊಂಡು, ಕೇವಲ ರಿಪೀಟ್ ಮಾಡುವುದರಿಂದ ತಮ್ಮ ಜೊತೆ ಅನ್ಯರ ಕಲ್ಯಾಣವಾಗುವುದಕ್ಕೆ ಬದಲು ಅಕಲ್ಯಾಣವೇ ಆಗಿ ಬಿಡುತ್ತದೆ. ಆದ್ದರಿಂದ ಮಕ್ಕಳೇ, ಸಂಪೂರ್ಣ ಅಂತರ್ಮುಖಿಗಳಾಗಿರಿ.
ತಮ್ಮ ಈ ಮನಸ್ಸು ಮಂದಿರವಾಗಿದೆ. ಹೇಗೆ ಮಂದಿರಗದಲ್ಲಿ ಸದಾ ಸುಗಂಧವೇ ಬರುತ್ತದೆ ಹಾಗೆಯೇ ಮನ ಮಂದಿರವೂ ಸಹ ಯಾವಾಗ ಪವಿತ್ರವಾಗುತ್ತದೆಯೋ ಆಗ ಸಂಕಲ್ಪದಲ್ಲಿಯೂ ಪವಿತ್ರವಾದ ಸ್ಮೃತಿಗಳ ಉತ್ಪನ್ನವಾಗುತ್ತದೆ. ಹೇಗೆ ಮಂದಿರಗಳಲ್ಲಿ ಕೇವಲ ಪವಿತ್ರ ದೇವತೆಗಳ ಚಿತ್ರಗಳನ್ನೇ ಇಟ್ಟಿರುತ್ತಾರೆ, ದೈತ್ಯರದನ್ನು ಇಟ್ಟಿರುವುದಿಲ್ಲ. ಹಾಗೆಯೇ ನೀವು ಮಕ್ಕಳು ತಮ್ಮ ಮನಸ್ಸು ಅಥವಾ ಹೃದಯವೆಂಬ ಮಂದಿರವನ್ನು ಸರ್ವ ಈಶ್ವರೀಯ ಗುಣಗಳ ಮೂರ್ತಿಗಳಿಂದ ಶೃಂಗಾರ ಮಾಡಿರಿ. ಆ ದೇವತೆಗಳು ನಿರ್ಮೋಹ, ನಿರ್ಲೋಭ, ನಿರ್ಭಯ, ತಾಳ್ಮೆಯುಳ್ಳ, ನಿರಹಂಕಾರಿ ಇತ್ಯಾದಿ, ಆಗಿರುವುದೇ ಅವರ ಗುಣಗಳಾಗಿವೆ ಏಕೆಂದರೆ ಇವೆಲ್ಲವೂ ನಿಮ್ಮದೇ ದಿವ್ಯ ಲಕ್ಷಣಗಳಾಗಿವೆ. ತಾವು ಮಕ್ಕಳು ತಮ್ಮ ಮನಸ್ಸು ಮಂದಿರವನ್ನು ಪ್ರಕಾಶಿತಗೊಳಿಸಿರಿ ಅರ್ಥಾತ್ ಸಂಪೂರ್ಣ ಶುದ್ಧಗೊಳಿಸಬೇಕು. ಯಾವಾಗ ಮನಸ್ಸು ಮಂದಿರವು ಪ್ರಕಾಶತೆಯಿಂದ ಸಂಪನ್ನವಾಗುವುದೋ ಆಗ ತಮ್ಮ ಪ್ರಕಾಶತೆಯಿಂದ ಕೂಡಿರುವ, ಪ್ರಿಯವಾದ ವೈಕುಂಠ ದೇಶದಲ್ಲಿ ಹೋಗಲು ಸಾಧ್ಯವಾಗುವುದು. ಹಾಗಾದರೆ ಈಗ ತಮ್ಮ ಮನಸ್ಸನ್ನು ಉಜ್ವಲವನ್ನಾಗಿ ಮಾಡುವ ಪ್ರಯತ್ನ ಪಡಬೇಕಾಗಿದೆ ಹಾಗೂ ಮನಸ್ಸಿನ ಸಹಿತವಾಗಿ ವಿಕಾರಿ ಕರ್ಮೇಂದ್ರಿಯಗಳನ್ನು ವಶದಲ್ಲಿಟ್ಟುಕೊಳ್ಳಬೇಕಾಗಿದೆ. ಆದರೆ ಕೇವಲ ಸ್ವಯಂನ ಸೇವೆಯನ್ನಷ್ಟೇ ಮಾಡುವುದಲ್ಲ ಆದರೆ ಅನ್ಯರ ಪ್ರತಿಯೂ ಇದೇ ದಿವ್ಯ ಸೇವೆಯನ್ನು ಮಾಡಬೇಕಾಗಿದೆ.
ವಾಸ್ತವದಲ್ಲಿ ಸೇವೆಯ ಅರ್ಥವು ಅತಿ ಸೂಕ್ಷ್ಮ ಮತ್ತು ಆಳವಾಗಿದೆ. ಕೇವಲ ಅನ್ಯರ ತಪ್ಪುಗಳಿಗೆ ಎಚ್ಚರಿಕೆ ಕೊಡುವವರೆಗಷ್ಟೇ ಸೇವೆ ಮಾಡುವುದಲ್ಲ. ಅವರಿಗೆ ಸೂಕ್ಷ್ಮವಾಗಿ ತಮ್ಮ ಯೋಗದ ಶಕ್ತಿಯನ್ನು ತಲುಪಿಸುತ್ತಾ, ಅವರ ಅಶುದ್ಧ ಸಂಕಲ್ಪಗಳನ್ನು ಭಸ್ಮ ಮಾಡಿ ಬಿಡಬೇಕು - ಸರ್ವೋತ್ತಮ ಸೇವೆಯು ಇದೇ ಆಗಿದೆ ಹಾಗೂ ಜೊತೆ-ಜೊತೆಗೆ ತಮ್ಮ ಬಗ್ಗೆ ಗಮನ ಇಡಬೇಕಾಗಿದೆ. ಕೇವಲ ವಾಚಾ ಅಥವಾ ಕರ್ಮದವರೆಗೆ ಗಮನವಿಡುವುದಲ್ಲ, ಆದರೆ ಮನಸ್ಸಿನಲ್ಲಿಯೂ ಯಾವುದೇ ಅಶುದ್ಧ ಸಂಕಲ್ಪಗಳ ಉತ್ಪನ್ನ ಆಗುತ್ತದೆಯೆಂದರೆ, ಅದರ ಪ್ರಕಂಪನಗಳು ಅನ್ಯರ ಬಳಿ ಹೋಗಿ ಸೂಕ್ಷವಾಗಿ ಅಕಲ್ಯಾಣವನ್ನು ಮಾಡುತ್ತದೆ, ಅದರ ಹೊರೆಯು ತಮ್ಮ ಮೇಲೆ ಬರುತ್ತದೆ, ನಂತರ ಅದೇ ಹೊರೆಯು ಬಂಧನವಾಗಿ ಬಿಡುತ್ತದೆ. ಆದ್ದರಿಂದ ಹೇ ಮಕ್ಕಳೇ, ಸ್ವಯಂ ತಾವು ಎಚ್ಚರಿಕೆಯಿಂದ ಇರಬೇಕು, ನಂತರ ಅನ್ಯರ ಬಗ್ಗೆ ಅದೇ ರೀತಿಯ ದಿವ್ಯ ಸೇವೆಯನ್ನು ಮಾಡಿರಿ - ಈ ಸೇವೆಯು ತಾವು ಸೇವಾಧಾರಿ ಮಕ್ಕಳ ಅಲೌಕಿಕ ಕರ್ತವ್ಯವಾಗಿದೆ. ಇಂತಹ ಸೇವೆ ಮಾಡುವವರು ತಮಗಾಗಿ ಯಾವುದೇ ಸೇವೆಯನ್ನು ತೆಗೆದುಕೊಳ್ಳಬಾರದು. ಭಲೆ ಯಾವುದೇ ಅಕಾರಣದಿಂದ ತಪ್ಪಾಗಿ ಬಿಡುತ್ತದೆಯೆಂದರೂ, ಅದನ್ನು ಸದಾ ತಮ್ಮ ಬುದ್ಧಿಯೋಗ ಬಲದಿಂದ ಸರಿಪಡಿಸಬೇಕಾಗಿದೆ. ಇಂತಹ ತೀವ್ರ ಪುರುಷಾರ್ಥಿಗಳಿಗೆ ಸ್ವಲ್ಪ ಸೂಚನೆ ಸಿಗುವುದರಿಂದಲೂ ಬಹಳ ಬೇಗನೆ ಅನುಭವ ಮಾಡುತ್ತಾ ಪರಿವರ್ತನೆ ಮಾಡಿಕೊಂಡು ಬಿಡುತ್ತಾರೆ ಮತ್ತು ಆನಂತರದಲ್ಲಿ ಬಹಳ ಗಮನವನ್ನಿಡುತ್ತಾ ನಡೆಯುತ್ತಾರೆ - ಇದು ವಿಶಾಲ ಬುದ್ಧಿಯಿರುವ ಮಕ್ಕಳ ಕರ್ತವ್ಯವೇ ಆಗಿದೆ.
ಹೇ ನನ್ನ ಪ್ರಾಣ ಪ್ರಿಯರೇ, ಪರಮಾತ್ಮನ ಮೂಲಕ ರಚನೆಯಾಗಿರುವ ಈ ಅವಿನಾಶಿ ರಾಜಸ್ವ ಜ್ಞಾನ ಯಜ್ಞಕ್ಕಾಗಿ ಸಂಪೂರ್ಣವಾಗಿ ತನು-ಮನ-ಧನವನ್ನು ಸ್ವಾಹಾ ಮಾಡುವುದರ ರಹಸ್ಯವು ಬಹಳ ಸೂಕ್ಷ್ಮವಾಗಿದೆ. ಯಾವ ಕ್ಷಣದಲ್ಲಿ ತಾವು ಹೇಳುತ್ತೀರಿ - ನನ್ನ ತನು-ಮನ-ಧನ ಸಹಿತವಾಗಿ ಯಜ್ಞದಲ್ಲಿ ಸ್ವಾಹಾ ಅರ್ಥಾತ್ ಅರ್ಪಣೆಯಾಗಿ ಸತ್ತು ಹೋಗಿರುತ್ತೀರಿ, ಆ ಕ್ಷಣದಿಂದ ತಮ್ಮದೇನೂ ಇರುವುದಿಲ್ಲ. ಅದರಲ್ಲಿಯೂ ಮೊದಲು ತನು, ಮನಸ್ಸನ್ನು ಸಂಪೂರ್ಣವಾಗಿ ಸೇವೆಯಲ್ಲಿ ಉಪಯೋಗಿಸಬೇಕಾಗಿದೆ. ಯಾವಾಗ ಎಲ್ಲವನ್ನೂ ಯಜ್ಞ ಅಥವಾ ಪರಮಾತ್ಮನದಾಯಿತು, ಅಂದಮೇಲೆ ತಮ್ಮದೇನೂ ಇರಲು ಸಾಧ್ಯವಿಲ್ಲ, ಧನವನ್ನೂ ವ್ಯರ್ಥವಾಗಿ ಕಳೆಯಲು ಸಾಧ್ಯವಿಲ್ಲ. ಮನಸ್ಸನ್ನೂ ಅಶುದ್ಧ ಸಂಕಲ್ಪ-ವಿಕಲ್ಪದ ಕಡೆಗೆ ಓಡಲು ಸಾಧ್ಯವಿಲ್ಲ ಏಕೆಂದರೆ ಪರಮಾತ್ಮನಿಗೆ ಅರ್ಪಣೆ ಮಾಡಿದ್ದೀರಿ. ಈಗ ಪರಮಾತ್ಮನಂತು ಶುದ್ಧ ಶಾಂತ ಸ್ವರೂಪನಾಗಿದ್ದಾರೆ, ಈ ಕಾರಣದಿಂದ ಸ್ವತಹವಾಗಿಯೇ ಅಶುದ್ಧ ಸಂಕಲ್ಪಗಳು ಶಾಂತವಾಗಿ ಬಿಡುತ್ತವೆ. ಒಂದುವೇಳೆ ತಮ್ಮ ಮನಸ್ಸನ್ನು ಮಾಯೆಯ ಕೈಯಲ್ಲಿ ಕೊಡುತ್ತೀರೆಂದರೆ, ಮಾಯೆಯ ವಿವಿಧ ರೂಪಗಳಿರುವ ಕಾರಣದಿಂದ ಅನೇಕ ವಿಕಲ್ಪಗಳನ್ನು ಉತ್ಪನ್ನಗೊಳಿಸುತ್ತಾ, ಮನಸ್ಸೆಂಬ ಕುದುರೆಯ ಮೇಲೆ ಸವಾರಿ ಮಾಡುತ್ತದೆ. ಒಂದುವೇಳೆ ಈಗಿನವರೆಗೂ ಯಾವುದೇ ಮಕ್ಕಳಲ್ಲಿ ಸಂಕಲ್ಪ-ವಿಕಲ್ಪಗಳು ಬರುತ್ತವೆಯೆಂದರೆ ತಿಳಿಯಬೇಕು - ಈಗ ನನ್ನ ಮನಸ್ಸು ಸಂಪೂರ್ಣವಾಗಿ ಸ್ವಾಹಾ ಆಗಿಲ್ಲ ಅರ್ಥಾತ್ ಈಶ್ವರೀಯ ಮನಸ್ಸಾಗಿಲ್ಲ ಆದ್ದರಿಂದ ಹೇ ಸರ್ವ ತ್ಯಾಗಿ ಮಕ್ಕಳೇ, ತಾವು ಈ ಗುಹ್ಯ ರಹಸ್ಯಗಳನ್ನು ತಿಳಿದುಕೊಂಡು, ಕರ್ಮ ಮಾಡುತ್ತಾ ಸಾಕ್ಷಿಯಾಗಿದ್ದು ಸ್ವಯಂನ್ನು ನೋಡುತ್ತಾ, ಬಹಳ ಎಚ್ಚರಿಕೆಯಿಂದ ನಡೆಸಬೇಕಾಗಿದೆ.
ಸ್ವಯಂ ಗೋಪಿ ವಲ್ಲಭನೇ ತನ್ನ ಪ್ರಿಯವಾದ ಗೋಪ-ಗೋಪಿಕೆಯರಾದ ನಿಮಗೆ ತಿಳಿಸುತ್ತಿದ್ದಾರೆ - ನೀವು ಪ್ರತಿಯೊಬ್ಬರ ವಾಸ್ತವಿಕ ಸತ್ಯ ಪ್ರೇಮವು ಯಾವುದು! ಹೇ ಪ್ರಾಣ ಪ್ರಿಯರೇ, ನೀವು ಪ್ರತಿಯೊಬ್ಬರೂ ಪರಸ್ಪರದಲ್ಲಿ ಪ್ರೇಮದಿಂದ ಕೂಡಿರುವ ಎಚ್ಚರಿಕೆಯನ್ನು ಸ್ವೀಕರಿಸಬೇಕಾಗಿದೆ ಏಕೆಂದರೆ ಎಷ್ಟು ಪ್ರಿಯವಾದ ಹೂವಾಗಿರುತ್ತದೆಯೋ ಅಷ್ಟೇ ಶ್ರೇಷ್ಠವಾದ ಪಾಲನೆ ಸಿಗುತ್ತದೆ. ಮಾಲಿಯು ಹೂವನ್ನು ಅತ್ಯಮೂಲ್ಯವನ್ನಾಗಿ ಮಾಡಲು, ಅದರ ಜೊತೆಯಿರುವ ಮುಳ್ಳನ್ನು ತೆಗೆಯಬೇಕಾಗುತ್ತದೆ. ಅದೇರೀತಿ ನಿಮಗೂ ಸಹ ಯಾರೇ ಎಚ್ಚರಿಕೆಯನ್ನು ಕೊಡುತ್ತಾರೆಂದರೆ ತಿಳಿಯಬೇಕಾಗಿದೆ - ಅವರು ನನ್ನ ಪಾಲನೆ ಮಾಡುತ್ತಿದ್ದಾರೆ ಅರ್ಥಾತ್ ನನ್ನ ಸೇವೆಯನ್ನು ಮಾಡಿದರು. ಅವರ ಆ ಸೇವೆಗೆ ಅಥವಾ ಪಾಲನೆಗೆ ಗೌರವ ಕೊಡಬೇಕಾಗುತ್ತದೆ - ಸಂಪೂರ್ಣರಾಗುವ ಯುಕ್ತಿಯೂ ಇದೇ ಆಗಿದೆ. ಇದು ಜ್ಞಾನ ಸಹಿತ ಆಂತರಿಕ ಸತ್ಯ ಪ್ರೇಮವಾಗಿದೆ, ಇದರಲ್ಲಿ ಪರಸ್ಪರದಲ್ಲಿ ಬಹಳ ಗೌರವವಿರಬೇಕು. ಪ್ರತಿಯೊಂದು ಮಾತಿನಲ್ಲಿ ಮೊದಲು ತಾವು ತಮಗೇ ಎಚ್ಚರಿಕೆ ಕೊಡಬೇಕು - ಇದು ನಿರ್ಮಾಣ ಚಿತ್ತರ ಅತಿ ಮಧುರವಾದ ಸ್ಥಿತಿಯಾಗಿದೆ. ಈ ರೀತಿ ಪ್ರೇಮದಿಂದ ನಡೆಯುವುದರಿಂದ ಆಂತರ್ಯದಲ್ಲಿ ಸತ್ಯಯುಗದ ಆ ಸೌಭಾಗ್ಯದ ದಿನಗಳಂತೆ ಇಲ್ಲಿಯೇ ಅನುಭವವಾಗುತ್ತದೆ. ಅಲ್ಲಂತು ಈ ಪ್ರೇಮವು ಸ್ವಾಭಾವಿಕವಾಗಿಯೇ ಇರುತ್ತದೆ ಆದರೆ ಈ ಸಂಗಮದ ಮಧುರಾತಿ ಮಧುರ ಸಮಯದಲ್ಲಿ, ಪರಸ್ಪರದಲ್ಲಿ ಇಂತಹ ಸೇವೆಯನ್ನು ಮಾಡುವುದರ ಅತಿಮಧುರ ರಮಣೀಕ ಪ್ರೇಮವಾಗಿದೆ, ಜಗತ್ತಿನಲ್ಲಿಯೂ ಈ ಶುದ್ಧ ಪ್ರೇಮದ ಮಹಿಮೆಯನ್ನೇ ಮಾಡುತ್ತಾರೆ.
ಪ್ರತೀ ಕ್ಷಣದಲ್ಲಿಯೂ ನೀವು ಪ್ರತಿಯೊಂದು ಚೈತನ್ಯ ಹೂಗಳು ಹರ್ಷಿತಮುಖಿಯಾಗಿ ಇರಬೇಕಾಗಿದೆ ಏಕೆಂದರೆ ನಿಶ್ಚಯಬುದ್ಧಿ ಆಗಿರುವ ಕಾರಣದಿಂದ ನಿಮ್ಮ ಶ್ವಾಸ-ಶ್ವಾಸದಲ್ಲಿಯೂ ಸಂಪೂರ್ಣವಾಗಿ ಈಶ್ವರನ ಶಕ್ತಿಗಳ ಸಮಾವೇಶವಾಗಿರುತ್ತದೆ. ತಮ್ಮ ದಿವ್ಯ ಚಮತ್ಕಾರದಿಂದ ಇಂತಹ ಆಕರ್ಷಣೆಯ ಶಕ್ತಿಯು ಅವಶ್ಯವಾಗಿ ಹೊರ ಹೊಮ್ಮುತ್ತವೆ. ಹೇಗೆ ಚಿಕ್ಕ ಮಗು ನಿರ್ದೋಷಿ, ಶುದ್ಧ ಪವಿತ್ರವಾಗಿರುವ ಕಾರಣ ಸದಾ ಹಸನ್ಮುಖಿ ಆಗಿರುತ್ತದೆ ಮತ್ತು ತನ್ನ ರಮಣೀಕ ಚರಿತ್ರೆಯಿಂದ ಎಲ್ಲರನ್ನೂ ಬಹಳ ಆಕರ್ಷಣೆ ಮಾಡುತ್ತದೆ. ಅದೇರೀತಿ ತಾವು ಪ್ರತಿಯೊಬ್ಬರ ಜೀವನವು ಈಶ್ವರೀಯ ರಮಣೀಕವಾದ ಜೀವನವಾಗಿರಬೇಕು, ಇದಕ್ಕಾಗಿ ನೀವು ತಮ್ಮದೇ ಅಸುರಿ ಸ್ವಭಾವಗಳ ಮೇಲೆ ಯುಕ್ತಿ ಮಾಡುತ್ತಾ ವಿಜಯ ಸಾಧಿಸಬೇಕಾಗಿದೆ. ಯಾವಾಗ ಯಾರೇ ಕ್ರೋಧಕ್ಕೆ ವಶರಾಗಿರುವುದನ್ನು ನೋಡುತ್ತೀರೆಂದರೆ, ಅವರ ಮುಂದೆ ತಾವು ಬಾಲ್ಯದ ಮಧುರ ರೀತಿಯ ಜ್ಞಾನ ರೂಪವುಳ್ಳವರಾಗಿ ಮುಗುಳ್ನಗುತ್ತಾ ಇರುತ್ತೀರೆಂದರೆ, ಅವರು ತಾವಾಗಿಯೇ ಶಾಂತ ಚಿತ್ತರಾಗುತ್ತಾರೆ ಅರ್ಥಾತ್ ವಿಸ್ಮೃತಿ ಸ್ವರೂಪದಿಂದ ಸ್ಮೃತಿಯಲ್ಲಿ ಬರುತ್ತಾರೆ. ಭಲೆ ಅವರಿಗೆ ಗೊತ್ತಾಗದಂತೆ ಸೂಕ್ಷ್ಮವಾಗಿಯೇ ವಿಜಯವನ್ನು ಪಡೆದು ಮಾಲೀಕರಾಗಬೇಕು - ಇದೇ ತಾವು ಮಾಲೀಕ ಮತ್ತು ಬಾಲಕರ ಸರ್ವೋಚ್ಚ ಶಿರೋಮಣಿ ವಿಧಿಯಾಗಿದೆ.
ಈಶ್ವರನ ಸಂಪೂರ್ಣ ಜ್ಞಾನ ರೂಪವು ಹೇಗಿದೆಯೋ ಹಾಗೆಯೇ ಸಂಪೂರ್ಣ ಪ್ರೇಮ ರೂಪವೂ ಇದೆ. ಈಶ್ವರನಲ್ಲಿ ಎರಡೂ ಗುಣಗಳೂ ಸಮಾವೇಶವಾಗಿದೆ ಆದರೆ ಮೊದಲು ಜ್ಞಾನ, ನಂತರ ಎರಡನೆಯದು ಪ್ರೇಮ ರೂಪವಿದೆ. ಒಂದುವೇಳೆ ಯಾರು ಜ್ಞಾನ ರೂಪರಾಗದೆ ಕೇವಲ ಪ್ರೇಮ ರೂಪರು ಆಗಿ ಬಿಡುತ್ತಾರೆಂದರೆ, ಅವರ ಪ್ರೇಮವು ಅಶುದ್ಧ ಖಾತೆಯಲ್ಲಿ ಕರೆದುಕೊಂಡು ಹೋಗುತ್ತದೆ. ಆದ್ದರಿಂದ ಪ್ರೇಮವನ್ನು ವಿಸ್ಮೃತಿ ಮಾಡಿಕೊಂಡು, ಅದಕ್ಕೆ ಮೊದಲು ಜ್ಞಾನ ರೂಪರಾಗಬೇಕು ಮತ್ತು ಬಂದಿರುವಂತಹ ಭಿನ್ನ-ಭಿನ್ನ ರೂಪಗಳ ಮಾಯೆಯ ಮೇಲೆ ವಿಜಯವನ್ನು ಪಡೆದ ನಂತರ ಪ್ರೇಮ ರೂಪವುಳ್ಳವರಾಗಬೇಕು. ಒಂದುವೇಳೆ ಜ್ಞಾನವಿಲ್ಲದೆ ಪ್ರೇಮದಲ್ಲಿ ಬರುತ್ತೀರೆಂದರೆ ವಿಚಲಿತರಾಗುತ್ತೀರಿ. ಹೇಗೆ ಯಾರಾದರೂ ಒಂದುವೇಳೆ ಜ್ಞಾನ ರೂಪರಾಗದೆ ಧ್ಯಾನದಲ್ಲಿ ಹೋಗುತ್ತಾರೆಂದರೆ, ಕೆಲವೊಮ್ಮೆ ಮಾಯೆಯಲ್ಲಿ ಸಿಲುಕಿ ಬಿಡುತ್ತಾರೆ. ಆದ್ದರಿಂದ ಬಾಬಾರವರು ಹೇಳುತ್ತಾರೆ - ಮಕ್ಕಳೇ, ಈ ಧ್ಯಾನವೂ ಸಹ ಒಂದು ಗಂಟಾಗಿರುವ ಸೂತ್ರದಂತೆ. ಆದರೆ ಜ್ಞಾನ ಸ್ವರೂಪರಾದ ನಂತರ ಧ್ಯಾನದಲ್ಲಿ ಹೋಗುವುದರಿಂದ ಅತ್ಯಂತ ಸ್ವಾರಸ್ಯದ ಅನುಭವವಾಗುತ್ತದೆ. ಅಂದಾಗ ಮೊದಲು ಜ್ಞಾನ, ನಂತರ ಧ್ಯಾನವಿರಲಿ. ಧ್ಯಾನ ಸ್ಥಿತಿಗಿಂತ ಜ್ಞಾನದ ಸ್ಥಿತಿಯು ಶ್ರೇಷ್ಠವಾಗಿದೆ ಆದ್ದರಿಂದ ಹೇ ಮಕ್ಕಳೇ, ಮೊದಲು ಜ್ಞಾನ ಸ್ವರೂಪರಾದ ನಂತರ ಪ್ರೇಮವನ್ನು ಪ್ರಕಟಗೊಳಿಸಬೇಕಾಗಿದೆ. ಈ ಪುರುಷಾರ್ಥಿ ಜೀವನದಲ್ಲಿ ಜ್ಞಾನವಿಲ್ಲದ ಪ್ರೇಮವು ವಿಘ್ನ ಹಾಕುತ್ತದೆ.
ಸಾಕ್ಷಿಯಾಗಿರುವ ಸ್ಥಿತಿಯು ಅತಿಮಧುರ, ರಮಣೀಕ ಹಾಗೂ ಸುಂದರವಾಗಿದೆ. ಮುಂದಿನ ಜೀವನದ ಆಧಾರವೂ ಈ ಸ್ಥಿತಿಯ ಮೇಲೆ ಆಧಾರಿತವಾಗಿದೆ. ಹೇಗೆ ಯಾರಾದರೂ ಶಾರೀರಿಕವಾಗಿ ಭೋಗಿಸುತ್ತಿದ್ದಾರೆಂದರೆ, ಆ ಸಮಾಯ್ದಲ್ಲೇನಾದರೂ ಸಾಕ್ಷಿ, ಸುಖ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುತ್ತಾರೆಂದರೆ, ಹಿಂದಿನ ಕರ್ಮಗಳ ಲೆಕ್ಕಾಚಾರವನ್ನೂ ಮುಕ್ತಗೊಳಿಸುತ್ತಾರೆ, ಹಾಗೆಯೇ ಜೊತೆ-ಜೊತೆಗೆ ಭವಿಷ್ಯಕ್ಕಾಗಿ ಸುಖದ ಲೆಕ್ಕಾಚಾರವೂ ರೂಪುಗೊಳ್ಳುತ್ತದೆ. ಈ ರಹಸ್ಯವನ್ನು ತಿಳಿಯುವುದರಿಂದ ಅವರೆಂದಿಗೂ ಹೀಗೆ ಹೇಳುವುದಿಲ್ಲ - ನನ್ನ ಈ ಸೌಭಾಗ್ಯದ ದಿನಗಳೆಲ್ಲವೂ ಕೇವಲ ಲೆಕ್ಕಾಚಾರ ಮುಗಿಸುವುದರಲ್ಲಿಯೇ ಹೊರಟು ಹೋಯಿತು. ಯಾವ ಸಮಯದಲ್ಲಿ ಸಂಪೂರ್ಣವಾಗಿ ಎರಡೂ ಕಾರ್ಯಗಳ ಸಿದ್ಧವಾಗುತ್ತದೆಯೋ, ಆ ಸೌಭಾಗ್ಯಶಾಲಿ ಪುರುಷಾರ್ಥದ ಸಮಯವು ಇದೇ ಆಗಿದೆ. ಇವರೆಡೂ ಕಾರ್ಯಗಳನ್ನು ಸಿದ್ಧ ಮಾಡುವ ತೀವ್ರ ಪುರುಷಾರ್ಥಿಗಳೇ ಅತೀಂದ್ರಿಯ ಸುಖ ಅಥವಾ ಆನಂದದ ಅನುಭವದಲ್ಲಿರುತ್ತಾರೆ.
ನೀವು ಮಕ್ಕಳಲ್ಲಿ ಈ ವಿಭಿನ್ನ ವಿರಾಟ ಡ್ರಾಮಾದ ಪ್ರತಿಯೊಂದು ಮಾತಿನಲ್ಲಿ ಸಂಪೂರ್ಣ ನಿಶ್ಚಯವಿರಬೇಕು. ಏಕೆಂದರೆ ಇದು ಮಾಡಿ-ಮಾಡಲ್ಪಟ್ಟಂತಹ ಡ್ರಾಮಾ ಖಚಿತವಾಗಿಯೇ ವಿಧೇಯನಾಗಿರುವ ಡ್ರಾಮಾ ಆಗಿದೆ. ಈ ಡ್ರಾಮಾದಲ್ಲಿ ಪ್ರತಿಯೊಂದು ಜೀವ ಜಂತುವಿನಿಂದಲೂ ಅದರ ಪಾತ್ರವನ್ನು ಪೂರ್ಣ ರೀತಿಯಿಂದ ಅಭಿನಯ ಮಾಡಿಸುತ್ತದೆ. ಅದರಲ್ಲಿ ಕೆಲವು ಅನ್ಯಾಯ ಮಾಡುವವರೇ ಇರಲಿ, ಆದರೂ ಅನ್ಯಾಯ ಮಾಡುವ ಪಾತ್ರವನ್ನೂ ಪೂರ್ಣ ರೀತಿಯಿಂದ ಅಭಿನಯ ಮಾಡಿಸುತ್ತದೆ - ಇದೂ ಸಹ ಡ್ರಾಮಾದಲ್ಲಿ ನೊಂದಣಿ ಆಗಿದೆ. ಯಾವಾಗ ಅನ್ಯಾಯ ಮತ್ತು ನ್ಯಾಯ ಎರಡೂ ಯೋಜನೆಗಳಲ್ಲಿ ನೊಂದಣಿ ಆಗಿದೆ ಅಂದಮೇಲೆ ಯಾವುದೇ ಮಾದಿನಲ್ಲಿ ಸಂಶಯ ಪಡುವುದನ್ನು ಜ್ಞಾನವೆಂದು ಹೇಳುವುದಿಲ್ಲ ಏಕೆಂದರೆ ಪ್ರತಿಯೊಬ್ಬ ಪಾತ್ರಧಾರಿಯೂ ತನ್ನ-ತನ್ನ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಹೇಗೆ ಚಲನಚಿತ್ರಗಳಲ್ಲಿ ಅನೇಕ ಭಿನ್ನ-ಭಿನ್ನ ರೂಪವುಳ್ಳ ಪಾತ್ರಧಾರಿಗಳಿರುತ್ತಾರೆ, ತನ್ನ-ತನ್ನ ಪಾತ್ರವನ್ನು ಅಭಿನಯಿಸುತ್ತಾರೆ, ಅದನ್ನು ನೋಡಿ ಅವರಿಂದ ತಿರಸ್ಕಾರ ಬರುತ್ತದೆ ಮತ್ತು ಇನ್ನೂ ಕೆಲವರಿಂದ ಖುಷಿಯಾಗುತ್ತಿದೆ ಎನ್ನುವುದಿಲ್ಲ. ಇದೊಂದು ಆಟವೆಂದು ಗೊತ್ತಿದೆ, ಇದರಲ್ಲಿ ಪ್ರತಿಯೊಬ್ಬರೂ ತನ್ನ-ತನ್ನ ಒಳ್ಳೆಯ ಅಥವ ಕೆಟ್ಟ ಪಾತ್ರವು ಸಿಕ್ಕಿರುತ್ತದೆ, ಅದೇರೀತಿಯಾಗಿ ಈ ಅನಾದಿ ಮಾಡಲ್ಪಟ್ಟಿರುವ ಡ್ರಾಮಾವನ್ನೂ ಸಹ ಸಾಕ್ಷಿಯಾಗಿರುತ್ತಾ ಏಕರಸ ಸ್ಥಿತಿಯಿಂದ ಹರ್ಷಿತಮುಖಿಯಾಗಿ ನೋಡುತ್ತಿರಬೇಕಾಗಿದೆ. ಈ ಅಂಶವನ್ನು ಸಂಘಟನೆಯಲ್ಲಿ ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಬ್ಬರಿನ್ನೊಬ್ಬರನ್ನು ಈಶ್ವರೀಯ ರೂಪದಿಂದ ನೋಡಬೇಕಾಗಿದೆ, ಅನುಭೂತಿಯಾಗುವ ಜ್ಞಾನದ ಅಂಶಗಳನ್ನು ತೆಗೆದುಕೊಂಡು ಈಶ್ವರೀಯ ಗುಣಗಳ ಧಾರಣೆ ಮಾಡಬೇಕಾಗಿದೆ. ತಮ್ಮ ಲಕ್ಷ್ಯ ಸ್ವರೂಪದ ಸ್ಮೃತಿಯಿಂದ ಶಾಂತಚಿತ್ತ, ನಿರ್ಮಾಣಚಿತ್ತ, ತಾಳ್ಮೆಯುಳ್ಳವರಾಗಿ, ಮಧುರ ಸ್ವಭಾವಿ, ಶೀತಲತೆ, ಇತ್ಯಾದಿ., ಸರ್ವ ದೈವೀ ಗುಣಗಳನ್ನು ಸ್ಮೃತಿಗೆ ತಂದುಕೊಳ್ಳಬೇಕಾಗಿದೆ.
ತಾಳ್ಮೆಯಿರುವ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಲು ಮುಖ್ಯ ಆಧಾರವಾಗಿದೆ - ವೇಟ್ ಅಂಡ್ ಸೀ (ಕಾದು ನೋಡಿರಿ). ಹೇ ನನ್ನ ಪ್ರೈಯವಾದ ಮಕ್ಕಳೇ, ವೇಟ್ ಅಂದರೆ ತಾಳ್ಮೆಯಿಂದ ಇರುವುದು, ಸೀ ಅರ್ಥಾತ್ ನೋಡಬೇಕು. ತಮ್ಮ ಹೃದಯದಲ್ಲಿ ಮೊದಲು ತಾಳ್ಮೆಯ ಗುಣವನ್ನು ಧಾರಣೆ ಮಾಡಿಕೊಂಡು, ಅದರ ನಂತರ ವಿಸ್ತಾರದಲ್ಲಿರುವ ವಿರಾಟ ಡ್ರಾಮಾವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ. ಎಲ್ಲಿಯವರೆಗೆ ಯಾವುದೇ ರಹಸ್ಯವನ್ನು ಕೇಳುವ ಸಮಯವು ಸಮೀಪಕ್ಕೆ ಬರುತ್ತದೆಯೋ, ಅಲ್ಲಿಯವರೆಗೆ ತಾಳ್ಮೆಯ ಗುಣವನ್ನು ಧಾರಣೆ ಮಾಡಿಕೊಳ್ಳಬೇಕು. ಸಮಯ ಬಂದಮೇಲೆ ತಾಳ್ಮೆವಹಿಸಿ ರಹಸ್ಯವನ್ನು ಕೇಳುವುದರಿಂದ ತಾವೆಂದಿಗೂ ವಿಚಲಿತರಾಗುವುದಿಲ್ಲ. ಆದ್ದರಿಂದ ಹೇ ಪುರುಷಾರ್ಥಿ ಪ್ರಾಣ ಪ್ರಿಯರೇ, ಸ್ವಲ್ಪ ನಿಲ್ಲಿರಿ (ತಾಳ್ಮೆಯಿಂದಿರಿ) ಹಾಗೂ ಮುಂದೆ ಸಾಗುತ್ತಾ ರಹಸ್ಯಗಳನ್ನು ನೋಡುತ್ತಾ ಮುಂದೆ ಸಾಗಿರಿ, ಈ ತಾಳ್ಮೆಯ ಸ್ಥಿತಿಯಿಂದ ಎಲ್ಲಾ ಕರ್ತವ್ಯಗಳು ಸಂಪೂರ್ಣವಾಗಿ ಸಿದ್ಧವಾಗುತ್ತದೆ. ಈ ಗುಣವು ನಿಶ್ಚಯದ ಆಧಾರದ ಮೇಲೆ ಬಂಧಿತವಾಗಿದೆ, ಪ್ರತಿಯೊಂದು ಆಟವನ್ನು ಇಂತಹ ನಿಶ್ಚಯ ಬುದ್ಧಿ ಸಾಕ್ಷಿ ದೃಷ್ಟರಾಗಿ, ಹರ್ಷಿತ ಚಹರೆಯಿಂದ ನೋಡುತ್ತೀರಿ, ಆಂತರ್ಯದಲ್ಲಿ ತಾಳ್ಮೆ ಮತ್ತು ಅಡೋಲ ಚಿತ್ತರು ಆಗಿರುತ್ತೀರಿ - ಇದು ಜ್ಞಾನ ಪರಿಪಕ್ವ ಸ್ಥಿತಿಯಾಗಿದೆ, ಈ ಸ್ಥಿತಿಯೇ ಅಂತ್ಯದಲ್ಲಿ ಸಂಪೂರ್ಣತೆಯ ಸಮಯವು ಪ್ರತ್ಯಕ್ಷವಾಗಿರುತ್ತದೆ. ಆದ್ದರಿಂದ ಬಹಳ ಸಮಯದಿಂದ ಈ ಸಾಕ್ಷಿಯಾಗಿರುವ ಸ್ಥಿತಿಯಲ್ಲಿ ಸ್ಥಿತರಾಗುವ ಪರಿಶ್ರಮ ಪಡಬೇಕಾಗಿದೆ.
ಹೇಗೆ ನಾಟಕದಲ್ಲಿ ಪಾತ್ರಧಾರಿಗೆ ಸಿಕ್ಕಿರುವ ತನ್ನ ಪಾತ್ರವನ್ನು ಸಂಪೂರ್ಣವಾಗಿ ಅಭಿನಯಿಸಬೇಕೆಂಬ ದೃಷ್ಟಿಯಿಂದ, ಅದನ್ನು ಮುಂಚಿತವಾಗಿಯೇ ಅಭ್ಯಾಸದ ರಿಹರ್ಸಲ್ ಮಾಡಬೇಕಾಗುತ್ತದೆ. ಹಾಗೆಯೇ ನೀವು ಪ್ರಿಯವಾದ ಹೂಗಳೂ ಸಹ ಯೋಗಬಲದಿಂದ ಬರುವಂತಹ ದೊಡ್ಡ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕೆಂದರೆ, ಬರುವ ಮೊದಲೇ ಅವಶ್ಯವಾಗಿ ಅಭ್ಯಾಸ ಮಾಡಬೇಕಾಗಿದೆ. ಆದರೆ ಬಹಳ ಸಮಯದಿಂದ ಈ ಪುರುಷಾರ್ಥವನ್ನು ಮಾಡದಿದ್ದರೆ, ಆ ಸಮಯದಲ್ಲಿ ಗಾಬರಿ ಪಡುತ್ತಾ ಸೋಲಾಗುತ್ತದೆ. ಆದ್ದರಿಂದ ಮೊದಲು ತಮ್ಮ ಈಶ್ವರೀಯ ಆಧಾರವನ್ನು ಪರಿಪಕ್ವ ಮಾಡಿಕೊಂಡು ದೈವೀ ಗುಣವುಳ್ಳವರು ಆಗಬೇಕಾಗಿದೆ.
ಜ್ಞಾನ ಸ್ವರೂಪ ಸ್ಥಿತಿಯಲ್ಲಿ ಸ್ಥಿತರಾಗುವುದರಿಂದ ಸ್ವತಹವಾಗಿಯೇ ಶಾಂತ ರೂಪ ಸ್ಥಿತಿಯಾಗಿ ಬಿಡುತ್ತದೆ. ಯಾವಾಗ ಜ್ಞಾನ ಆತ್ಮ ಮಕ್ಕಳೆಲ್ಲರೂ ಒಟ್ಟಿಗೆ ಕುಳಿತುಕೊಂಡು ಮುರುಳಿಯನ್ನು ಕೇಳುತ್ತಾರೆ, ಆಗ ನಾಲ್ಕೂ ಕಡೆಯಲ್ಲಿ ಶಾಂತಿಯ ವಾಯುಮಂಡಲವು ರೂಪುಗೊಳ್ಳುತ್ತದೆ ಏಕೆಂದರೆ ಜ್ಞಾನಿ ಆತ್ಮ ಮಕ್ಕಳು ಯಾವುದೇ ಮಹಾವಾಕ್ಯಗಳನ್ನು ಕೇಳುತ್ತಾರೆಂದರೆ, ಆಂತರಿಕವಾಗಿ ಗುಹ್ಯತೆಯಲ್ಲಿ ಹೊರಟು ಹೋಗುತ್ತಾರೆ. ಅದರ ಗುಹ್ಯತೆಯಲ್ಲಿ ಹೋಗುವ ಕಾರಣ, ಆಂತರ್ಯದ ಮಧುರ ಶಾಂತಿಯ ಅನುಭೂತಿಯಾಗುವುದು. ಈಗ ಇದಕ್ಕಾಗಿ ಯಾರೂ ಕೂಡ ವಿಶೇಷವಾಗಿ ಕುಳಿತು ಪರಿಶ್ರಮ ಪಡಬೇಕಾಗಿಲ್ಲ. ಆದರೆ ಜ್ಞಾನದ ಸ್ಥಿತಿಯಲ್ಲಿ ಸ್ಥಿತರಾಗುವುದರಿಂದ ಈ ಗುಣವು ಧಾರಣೆಯಾಗುತ್ತದೆ. ನೀವು ಮಕ್ಕಳು ಯಾವಾಗ ಮುಂಜಾನೆಯಲ್ಲಿ ಎದ್ದು ಏಕಾಂತದಲ್ಲಿ ಕುಳಿತುಕೊಳ್ಳುತ್ತೀರೆಂದರೆ ಶುದ್ಧ ವಿಚಾರಗಳೆಂಬ ಪ್ರಕಂಪನಗಳು ಉತ್ಪನ್ನಗೊಳ್ಳುತ್ತವೆ, ಆ ಸಮಯದಲ್ಲಿ ಬಹಳ ಉಪರಾಂ ಸ್ಥಿತಿಯಿರಬೇಕಾಗಿದೆ. ತಮ್ಮ ಸತ್ಯ-ಶುದ್ಧ ಸಂಕಲ್ಪಗಳಲ್ಲಿ ಸ್ಥಿತರಾಗುವುದರಿಂದ ಸ್ವತಹವಾಗಿಯೇ ಬೇರೆಲ್ಲಾ ಸಂಕಲ್ಪಗಳು ಶಾಂತವಾಗಿ ಬಿಡುತ್ತವೆ ಮತ್ತು ಮನಸ್ಸು ನಿಶ್ಚಿಂತವಾಗಿ ಬಿಡುತ್ತದೆ ಏಕೆಂದರೆ ಅವಶ್ಯವಾಗಿ ಮನಸ್ಸನ್ನು ವಶ ಮಾಡಿಕೊಟ್ಟುಕೊಳ್ಳುವ ಯಾವುದಾದರೂ ಶಕ್ತಿಯು ಬೇಕಾಗಿದೆ ಆದ್ದರಿಂದ ಮೊದಲು ತಮ್ಮ ಲಕ್ಷ್ಯ ಸ್ವರೂಪದ ಶುದ್ಧಸಂಕಲ್ಪವನ್ನು ಧಾರಣೆ ಮಾಡಿಕೊಳ್ಳಿರಿ. ಯಾವಾಗ ಆಂತರಿಕ ಬುದ್ಧಿಯೋಗವು ಕಾಯಿದೆಯನುಸಾರ ಇರುತ್ತದೆಯೆಂದರೆ, ನಿಮ್ಮ ಈ ನಿಸ್ಸಂಕಲ್ಪ ಸ್ಥಿತಿಯು ಸ್ವತಹವಾಗಿಯೇ ತಯಾರಾಗಿ ಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ, ಜ್ಞಾನ ಗುಲ್ಜಾರಿ, ಜ್ಞಾನ ನಕ್ಷತ್ರಗಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಲಕ್ಷ್ಯ ಸ್ವರೂಪದ ಸ್ಥಿತಿಯಿಂದ ಶಾಂತ ಚಿತ್ತ, ನಿರ್ಮಾಣ ಚಿತ್ತ, ತಾಳ್ಮೆಯುಳ್ಳ, ಮಧುರ ಸ್ವಭಾವ, ಶೀತಲತೆ ಇತ್ಯಾದಿ ಸರ್ವ ದೈವೀ ಗುಣಗಳ ಧಾರಣೆ ಮಾಡಿಕೊಳ್ಳಬೇಕಾಗಿದೆ.
2. ಈ ಆಟವನ್ನು ನಿಶ್ಚಯಬುದ್ಧಿ ಸಾಕ್ಷಿದೃಷ್ಟಾ ಆಗಿರುತ್ತಾ, ಹರ್ಷಿತ ಚಹರೆಯಿಂದ ನೋಡುತ್ತಾ, ಆಂತರಿಕವಾಗಿ ತಾಳ್ಮೆಯುಳ್ಳವರು ಹಾಗೂ ಅಡೋಲ ಚಿತ್ತರಾಗಿ ಇರಬೇಕಾಗಿದೆ. ಬಹಳ ಸಮಯದಿಂದ ಈ ಸಾಕ್ಷಿ ಸ್ಥಿತಿಯಲ್ಲಿರುವ ಪರಿಶ್ರಮ ಪಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ಗೀತೆಯ ಎರಡು ಸಾಲುಗಳನ್ನು ಕೇಳಿದರಲ್ಲವೆ. ಯಾರು ಪ್ರಿಯತಮನ ಜೊತೆಯಲ್ಲಿದ್ದಾರೆ.... ಈಗ ಪ್ರಿಯತಮ ಯಾರು ಎಂಬುದು ಈ ಪ್ರಪಂಚದವರಿಗೆ ತಿಳಿದಿಲ್ಲ. ಭಲೆ ಬಹಳ ಮಂದಿ ಮಕ್ಕಳಿದ್ದಾರೆ ಅವರಲ್ಲಿಯೂ ಬಹಳ ಮಂದಿ ಮಕ್ಕಳಿಗೆ ತಂದೆಯನ್ನು ನೆನಪು ಮಾಡುವುದು ಹೇಗೆಂದು ತಿಳಿದೇ ಇಲ್ಲ, ಘಳಿಗೆ-ಘಳಿಗೆಗೆ ಮರೆತು ಹೋಗುತ್ತಾರೆ. ನಿಮ್ಮನ್ನು ನೀವು ಆತ್ಮ ಬಿಂದುವೆಂದು ತಿಳಿದುಕೊಳ್ಳಿ, ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರನ್ನು ನೆನಪು ಮಾಡಬೇಕಾಗಿದೆ. ನೆನಪು ಮಾಡವಂತಹ ಅಭ್ಯಾಸವು ಹೀಗಿರಬೇಕು, ಅದು ನಿರಂತರವಾಗಿ ನೆನಪು ಉಳಿದು ಬಿಡಬೇಕು. ಅಂತ್ಯದಲ್ಲಿ ನಾವು ಆತ್ಮ, ಶರೀರವಂತೂ ಇದೆ ಆದರೆ ಬುದ್ಧಿಯಲ್ಲಿ ನಾನಾತ್ಮನು ಎನ್ನುವ ಜ್ಞಾನವಿರಬೇಕಾಗಿದೆ. ತಂದೆಯ ಡೈರೆಕ್ಷನ್ ಸಿಕ್ಕಿದೆ - ನಾನು ಹೇಗಿದ್ದೇನೆಯೋ ಅದೇರೀತಿ ಕೆಲವರು ನೆನಪು ಮಾಡುತ್ತಾಎರ್. ದೇಹಾಭಿಮಾನದಲ್ಲಿರುವ ಮಕ್ಕಳು ಬಹಳ ಮಂದಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೂ ತಂದೆಯ ಪರಿಚಯ ಸಿಗುವುದಿಲ್ಲವೋ ಅಲ್ಲಿಯವರೆಗೆ ಏನೂ ಅರ್ಥವಾಗುವುದಿಲ್ಲ. ಮೊದಲು ನಿರಾಕಾರನು ನಮ್ಮ ತಂದೆಯಾಗಿದ್ದಾರೆ, ಗೀತೆಯ ಭಗವಂತನಾಗಿದ್ದಾನೆ. ಅವರೇ ಎಲ್ಲರ ಸರ್ವರ ಸದ್ಗತಿದಾತನಾಗಿದ್ದಾರೆ ಅಂದಾಗ ಈ ಸಮಯದಲ್ಲಿ ಎಲ್ಲರಿಗೂ ಸದ್ಗತಿ ಕೊಡುವ ಪಾತ್ರವನ್ನು ಅಭಿನಯಿಸುತ್ತಿದ್ದಾರೆ. ಈ ಮಾತುಗಳು ಬುದ್ಧಿಯಲ್ಲಿ, ನಿಶ್ಚಯವಾದರೆ ಎಲ್ಲಾ ಸಾಧು-ಸಂತರು ಒಂದೇ ಸೆಕೆಂಡಿನಲ್ಲಿ ಬಂದು ಬಿಡುತ್ತದೆ, ಭಾರತದಲ್ಲಿ ದೊಡ್ಡ ಹಂಗಾಮ ಉಂಟಾಗುತ್ತದೆ. ಈಗ ಈ ಪ್ರಪಂಚವು ವಿನಾಶವಾಗಲಿದೆ, ಈ ಮಾತಿನ ನಿಶ್ಚಯವಾದರೆ ಬಾಂಬೆಯಿಂದ ಅಬುವಿನವರೆಗೆ ಸಾಲು ನಿಲ್ಲುತ್ತದೆ ಆದರೆ ಇಷ್ಟು ಬೇಗನೆ ನಿಶ್ಚಯವಾಗಲು ಸಾಧ್ಯವಿಲ್ಲ. ವಿನಾಶವಾಗಲಿದೆ ಆದರೆ ಎಲ್ಲರೂ ಘೋರ ನಿದ್ರೆಯಲ್ಲಿದ್ದಾರೆ ಎಂದು ನೀವು ತಿಳಿದಿದ್ದೀರಿ ನಂತರ ಅಂತ್ಯದಲ್ಲಿ ನಿಮ್ಮ ಪ್ರಭಾವ ಬೀರುವುದು. ಗೀತೆಯ ಭಗವಂತ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ ಎಂದು ನಿಶ್ಚಯವಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಇದು ಪ್ರಸಿದ್ಧವಾದಾಗ ಇಡೀ ಪ್ರಪಂಚದಲ್ಲಿ ಎಲ್ಲರಿಗೂ ತಿಳಿದು ಬಿಡುತ್ತದೆ. ಈಗ ನೀವು ಒಬ್ಬರಿಗೆ ತಿಳಿಸಿದರೆ ಇನ್ನೊಬ್ಬರು ನಿಮಗೆ ಜಾದು ಹಿಡಿದಿದೆ ಎಂದು ಹೇಳುತ್ತಾರೆ. ಈ ವೃಕ್ಷವು ಬಹಳ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತದೆ. ಈಗ ಸ್ವಲ್ಪ ಸಮಯವಿದೆ, ಆದರೂ ಪುರುಷಾರ್ಥ ಮಾಡುವುದಕ್ಕೆ ಅಡ್ಡಿಯಿಲ್ಲ. ನೀವು ದೊಡ್ಡ-ದೊಡ್ಡವ್ಯಕ್ತಿಗಳಿಗೆ ತಿಳಿಸುತ್ತೀರೆಂದರೆ ಅವರು ತಿಳಿಯುತ್ತಾರೆಯೇ! ಮಕ್ಕಳಲ್ಲಿಯೂ ಸಹ ಈ ಜ್ಞಾನವು ಕೆಲವರಲ್ಲಿ ಇಲ್ಲ. ತಂದೆಯ ನೆನಪಿರುವುದಿಲ್ಲ ಎಂದರೆ ಈ ಸ್ಥಿತಿಯು ಇರುವುದಿಲ್ಲ. ನಿಶ್ಚಯವೆಂದರೆ ಏನು ಎಂಬುದನ್ನು ತಂದೆಯು ತಿಳಿಸುತ್ತಾರೆ. ಈಗ ಕೆಲವರು 1-2% ಮಾತ್ರವೇ ಬಹಳ ಕಷ್ಟ ಪಟ್ಟು ತಂದೆಯನ್ನು ನೆನಪು ಮಾಡುತ್ತಾರೆ. ಇಲ್ಲಿ ಕುಳಿತಿದ್ದರೂ ಸಹ ತಂದೆಯ ಜೊತೆ ಪ್ರೀತಿಯೇ ಇರುವುದಿಲ್ಲ. ಇದರಲ್ಲಿ ಪ್ರೀತಿಯೂ ಬೇಕು, ಅದೃಷ್ಟವೂ ಬೇಕು. ತಂದೆಯೊಂದಿಗೆ ಪ್ರೀತಿಯಿದ್ದಾಗ ನಾವು ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕು. ನಾವು ವಿಶ್ವದ ಮಾಲೀಕರಾಗುತ್ತೇವೆ ಎಂಬುದನ್ನು ತಿಳಿದುಕೊಳ್ಳವರು. ಅರ್ಧಕಲ್ಪದ ದೇಹಾಭಿಮಾನವು ಕುಳಿತಿದೆ ಆದ್ದರಿಂದ ಈಗ ದೇಹೀ-ಅಭಿಮಾನಿಗಳಾಗುವುದರಲ್ಲಿ ಬಹಳ ಪರಿಶ್ರಮವಾಗುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಅತಿ ಪ್ರಿಯ ತಂದೆಯನ್ನು ನೆನಪು ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ. ಅವರ ಚಹರೆಯಲ್ಲಿಯೇ ಕಾಂತಿಯು ಬಂದು ಬಿಡುವುದು. ಕನ್ಯೆಯು ವಿವಾಹ ಮಾಡಿಕೊಳ್ಳುವಾಗ ಆಭರಣಗಳನ್ನು ಧರಿಸುತ್ತಾಳೆ ಆಗ ಚಹರೆಯಲ್ಲಿ ಒಮ್ಮೆಲೆ ಖುಷಿಯು ಬಂದು ಬಿಡುತ್ತದೆ. ಆದರೆ ಇಲ್ಲಂತೂ ಪ್ರಿಯತಮನನ್ನು ನೆನಪೇ ಮಾಡುವುದಿಲ್ಲ. ಆದ್ದರಿಂದ ಚಹರೆಯು ಬಾಡಿ ಹೋಗಿರುತ್ತದೆ. ಅದರ ಮಾತೇ ಕೇಳಬೇಡಿ! ಕನ್ಯೆಯು ವಿವಾಹವಾಗುವಾಗ ಚಹರೆಯು ಪ್ರಸನ್ನಚಿತ್ತವಾಗಿ ಬಿಡುತ್ತದೆ. ಕೆಲವರಿಗೆ ವಿವಾಹದ ನಂತರವೂ ಸಹ ಚಹರೆಯು ಬಾಡಿ ಹೋಗಿರುತ್ತದೆ. ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ಕೆಲವರಂತೂ ಇನ್ನೊಂದು ಮನೆಗೆ ಹೋಗಿ ತಬ್ಬಿಬ್ಬಾಗುತ್ತಾರೆ ಅಂದಾಗ ಇಲ್ಲಿಯೂ ಹಾಗೆಯೇ ತಂದೆಯನ್ನು ನೆನಪು ಮಾಡುವ ಪರಿಶ್ರಮವಿದೆ. ಅತೀಂದ್ರಿಯ ಸುಖವನ್ನು ಗೋಪಿವಲ್ಲಭನ ಗೋಪ-ಗೋಪಿಕೆಯರೊಂದಿಗೆ ಕೇಳಿ ಎಂಬುದು ಅಂತಿಮದ ಗಾಯನವಾಗಿದೆ. ತಮ್ಮನ್ನು ಗೋಪ-ಗೋಪಿಕೆಯರೆಂದು ತಿಳಿದುಕೊಳ್ಳುವುದು ಮತ್ತು ನಿರಂತರ ತಂದೆಯನ್ನು ನೆನಪು ಮಾಡುವುದು - ಈ ಸ್ಥಿತಿಯು ಬರಬೇಕಾಗಿದೆ. ತಂದೆಯ ಪರಿಚಯವನ್ನು ಎಲ್ಲರಿಗೆ ಕೊಡಬೇಕಾಗಿದೆ - ತಂದೆಯು ಬಂದಿದ್ದಾರೆ, ಅವರು ಆಸ್ತಿಯನ್ನು ಕೊಡುತ್ತಿದ್ದಾರೆ. ಇದರಲ್ಲಿ ಇಡೀ ಜ್ಞಾನವು ಬಂದು ಬಿಡುತ್ತದೆ. ಲಕ್ಷ್ಮೀ-ನಾರಾಯಣರು ಯಾವಾಗ 84 ಜನ್ಮಗಳನ್ನು ಪೂರ್ಣ ಮಾಡಿದರೋ ಆಗ ತಂದೆಯು ಅಂತಿಮದಲ್ಲಿ ಬಂದು ಅವರಿಗೆ ರಾಜಯೋಗವನ್ನು ಕಲಿಸಿ ರಾಜ್ಯಭಾಗ್ಯವನ್ನು ಕೊಟ್ಟರು. ಈ ಲಕ್ಷ್ಮೀ-ನಾರಾಯಣರ ಚಿತ್ರವು ನಂಬರ್ವನ್ ಆಗಿದೆ. ನೀವು ತಿಳಿದುಕೊಂಡಿದ್ದೀರಿ - ಅವರ ಮೊದಲ ಜನ್ಮದಲ್ಲಿ ಇಂತಹ ಕರ್ಮ ಮಾಡಿದ್ದಾರೆ, ಅಂತಹ ಕರ್ಮವನ್ನು ಈಗ ತಂದೆಯು ಕಲಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ಪವಿತ್ರರಾಗಿರಿ. ಯಾವುದೇ ಪಾಪ ಮಾಡಬೇಡಿ ಏಕೆಂದರೆ ನೀವೀಗ ಸ್ವರ್ಗದ ಮಾಲೀಕರು ಪುಣ್ಯಾತ್ಮರಾಗುತ್ತೀರಿ. ಅರ್ಧಕಲ್ಪ ಮಾಯಾ ರಾವಣನು ಪಾಪ ಮಾಡಿಸುತ್ತಾ ಬಂದಿದ್ದಾನೆ. ಈಗ ತಮ್ಮೊಂದಿಗೆ ಕೇಳಿಕೊಳ್ಳಿ - ನನ್ನಿಂದ ಯಾವುದೇ ಪಾಪ ಆಗುತ್ತಿಲ್ಲವೆ? ಪುಣ್ಯದ ಕರ್ಮವನ್ನು ಮಾಡುತ್ತಾ ಇರುತ್ತೇವೆಯೇ? ಅಂದರಿಗೆ ಊರು ಗೋಲಾಗಿದ್ದೇನೆಯೇ? ತಂದೆಯು ತಿಳಿಸುತ್ತಾರೆ - ಮನ್ಮನಾಭವ. ಇದನ್ನೂ ಸಹ ಕೇಳಲಾಗುತ್ತದೆ - ಮನ್ಮನಾಭವ ಎಂಬುದನ್ನು ಯಾರು ಹೇಳಿದರು? ಕೃಷ್ಣನು ಹೇಳಿದನೆಂದು ಅವರು ಹೇಳುತ್ತಾರೆ. ಪರಮಪಿತ ಪರಮಾತ್ಮ ಶಿವನು ಹೇಳಿದರೆಂದು ನೀವು ಒಪ್ಪುತ್ತೀರಿ. ರಾತ್ರಿ-ಹಗಲಿನ ಅಂತರವಿದೆ. ಶಿವ ಜಯಂತಿಯ ಜೊತೆ ಗೀತಾ ಜಯಂತಿಯಾಗುತ್ತದೆ. ಗೀತಾ ಜಯಂತಿಯ ಜೊತೆ ಕೃಷ್ಣ ಜಯಂತಿ.
ನೀವು ತಿಳಿದುಕೊಂಡಿದ್ದೀರಿ - ನಾವು ಭವಿಷ್ಯದಲ್ಲಿ ರಾಜಕುಮಾರರಾಗುತ್ತೇವೆ. ಭಿಕಾರಿಗಳಿಂದ ರಾಜಕುಮಾರರಾಗಬೇಕಾಗಿದೆ. ಈ ಗುರಿ-ಧ್ಯೇಯವೇ ರಾಜಯೋಗದ್ದಾಗಿದೆ. ನೀವು ಇದನ್ನು ಸಿದ್ಧ ಮಾಡಿ ತಿಳಿಸಿ - ಗೀತೆಯ ಭಗವಂತನು ಶ್ರೀಕೃಷ್ಣನಾಗಿರಲಿಲ್ಲ, ಅವರು ನಿರಾಕಾರನಾಗಿದ್ದರು, ಆಗ ಸರ್ವವ್ಯಾಪಿಯೆಂಬ ಜ್ಞಾನವು ಹೊರಟು ಹೋಗುವುದು. ಸರ್ವರ ಸದ್ಗತಿದಾತ, ಪತಿತ-ಪಾವನನು ತಂದೆಯಾಗಿದ್ದಾರೆ, ಮುಕ್ತಿದಾತನೆಂದು ಹೇಳುತ್ತಾರೆ. ಮತ್ತೆ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಏನೆಲ್ಲವನ್ನೂ ಹೇಳುತ್ತಾರೆಯೋ ಅದನ್ನು ತಿಳಿದುಕೊಂಡಿಲ್ಲ. ಧರ್ಮವನ್ನು ಕುರಿತು ಏನು ಬಂದರೆ ಅದನ್ನು ಹೇಳಿ ಬಿಡುತ್ತಾರೆ. ಮುಖ್ಯವಾಗಿ ಮೂರು ಧರ್ಮಗಳಿವೆ, ದೇವಿ-ದೇವತಾ ಧರ್ಮವಂತೂ ಅರ್ಧಕಲ್ಪ ನಡೆಯುತ್ತದೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಬ್ರಾಹ್ಮಣ-ದೇವತಾ-ಕ್ಷತ್ರಿಯ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಇದನ್ನು ಪ್ರಪಂಚವು ತಿಳಿದುಕೊಂಡಿಲ್ಲ. ಅವರಂತೂ ಸತ್ಯಯುಗಕ್ಕೇ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಇವರು ತಮ್ಮ ಧರ್ಮವನ್ನು ಮರೆತು ಧರ್ಮ ಭ್ರಷ್ಟರಾಗಿ ಬಿಡುತ್ತಾರೆ. ಕ್ರಿಶ್ಚಿಯನ್ನರು ತಮ್ಮ ಧರ್ಮವನ್ನು ಬಿಡುವುದಿಲ್ಲ, ಕ್ರಿಸ್ತನು ನಮ್ಮ ಧರ್ಮ ಸ್ಥಾಪನೆ ಮಾಡಿದ್ದರೆಂದು ಅವರಿಗೆ ತಿಳಿದಿದೆ. ಇಸ್ಲಾಮಿ, ಬೌದ್ಧಿ ಮತ್ತು ಕ್ರಿಶ್ಚಿಯನ್ - ಇವು ಮುಖ್ಯ ಧರ್ಮಗಳಾಗಿವೆ. ಉಳಿದಂತೆ ಚಿಕ್ಕ-ಚಿಕ್ಕ ಧರ್ಮಗಳು ಬಹಳಷ್ಟಿವೆ, ಎಲ್ಲಿಂದ ವೃದ್ದಿಯಾಯಿತು ಇದನ್ನು ಯಾರೂ ತಿಳಿದುಕೊಂಡಿಲ್ಲ. ಮಹಮ್ಮದ್ನಿಗೆ ಇನ್ನೂ ಸ್ವಲ್ಪ ಸಮಯವಾಗಿದೆ. ಇಸ್ಲಾಮಿಗಳು ಹಳಬರಾಗಿದ್ದಾರೆ, ಕ್ರಿಶ್ಚಿಯನ್ನರು ಪ್ರಸಿದ್ಧರಾಗಿದ್ದಾರೆ, ಉಳಿದಂತೆ ಅನೇಕರಿದ್ದಾರೆ. ಎಲ್ಲರದೂ ತಮ್ಮ-ತಮ್ಮ ಧರ್ಮವಿದೆ. ತಮ್ಮ ಭಿನ್ನ-ಭಿನ್ನ ಧರ್ಮ, ಭಿನ್ನ-ಭಿನ್ನ ಹೆಸರುಗಳೇ ಇರುವ ಕಾರಣ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ಮುಖ್ಯ ಧರ್ಮ ಶಾಸ್ತ್ರಗಳಿರುವುದೇ ನಾಲ್ಕು, ಅದರಲ್ಲಿ ದೇವತಾ ಧರ್ಮ, ಬ್ರಾಹ್ಮಣ ಧರ್ಮವು ಬಂದು ಬಿಡುತ್ತದೆ. ಬ್ರಾಹ್ಮಣರಿಂದ ದೇವತೆ, ದೇವತೆಗಳಿಂದ ಕ್ಷತ್ರಿಯರು, ಇದು ಯಾರಿಗೂ ತಿಳಿದಿಲ್ಲ. ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ, ಪರಮಪಿತನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆ ಮಾಡಿದರು. ಈ ಶಬ್ಧಗಳಿವೆ ಆದರೆ ಕೇವಲ ಗಿಳಿಯ ಪಾಠದಂತೆ ಓದುತ್ತಾರೆ.
ಇದು ಮುಳ್ಳುಗಳ ಕಾಡಾಗಿದೆ. ಭಾರತವು ಉದ್ಯಾನವನವಾಗಿತ್ತು, ಇದನ್ನೂ ಒಪ್ಪುತ್ತಾರೆ ಆದರೆ ಅದು ಹೇಗೆ, ಯಾವಾಗ, ಯಾರು ಸ್ಥಾಪನೆ ಮಾಡಿದರು? ಪರಮಾತ್ಮ ಯಾರು? ಎಂಬುದೇನನ್ನೂ ತಿಳಿದುಕೊಂಡಿಲ್ಲ. ಅಂದಮೇಲೆ ಅನಾಥರಾದರಲ್ಲವೆ ಆದ್ದರಿಂದಲೇ ಜಗಳ, ಕಲಹ ಇತ್ಯಾದಿಗಳಿವೆ. ಭಕ್ತಿಯಲ್ಲಿ ಕೇವಲ ಖುಷಿ ಪಡುತ್ತಿರುತ್ತಾರೆ, ಈಗ ತಂದೆಯು ಪುನಃ ಬೆಳಕು ನೀಡಲು ಬಂದಿದ್ದಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತರನ್ನಾಗಿ ಮಾಡಿ ಬಿಡುತ್ತಾರೆ. ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ನೀವು ತಿಳಿದುಕೊಂಡಿದ್ದೀರಿ - ನಾವು ಬೆಳಕಿನಲ್ಲಿದ್ದೇವೆ, ತಂದೆಯು ಮೂರನೇ ನೇತ್ರವನ್ನು ಕೊಟ್ಟಿದ್ದಾರೆ. ಭಲೆ ದೇವತೆಗಳಿಗೆ ಮೂರನೇ ನೇತ್ರವನ್ನು ತೋರಿಸುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ವಾಸ್ತವದಲ್ಲಿ ಮೂರನೇ ನೇತ್ರವು ನಿಮಗಿದೆ. ಇದನ್ನು ಅವರು ದೇವತೆಗಳಿಗೆ ತೋರಿಸಿದ್ದಾರೆ. ಗೀತೆಯಲ್ಲಿ ಬ್ರಾಹ್ಮಣರ ಯಾವುದೇ ಮಾತಿಲ್ಲ ಅದರಲ್ಲಿ ಕೌರವರು, ಪಾಂಡವರು ಮೊದಲಾದವರ ಯುದ್ಧ, ಕುದುರೆ ಗಾಡಿ ಇತ್ಯಾದಿಗಳನ್ನು ಬರೆದು ಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವು ಇದನ್ನು ತಿಳಿಸಿದರೆ ನೀವು ಶಾಸ್ತ್ರಗಳನ್ನು ಒಪ್ಪುವುದಿಲ್ಲವೆಂದು ಹೇಳುತ್ತಾರೆ. ನೀವು ಹೇಳಬಹುದು - ಶಾಸ್ತ್ರಗಳನ್ನು ನಾವೇಕೆ ಒಪ್ಪುವುದಿಲ್ಲ! ನಮಗೆ ತಿಳಿದಿದೆ - ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಜ್ಞಾನ ಮತ್ತು ಭಕ್ತಿಯ ಗಾಯನವಾಗಿದೆ, ಯಾವಾಗ ರಾವಣ ರಾಜ್ಯವಾಗುತ್ತದೆಯೋ ಆಗ ಭಕ್ತಿಯು ಪ್ರಾರಂಭವಾಗುತ್ತದೆ. ಭಾರತವಾಸಿಗಳು ವಾಮಮಾರ್ಗದಲ್ಲಿ ಹೋಗಿ ಧರ್ಮ ಭ್ರಷ್ಟರು, ಕರ್ಮ ಭ್ರಷ್ಟರಾಗಿ ಬಿಡುತ್ತಾರೆ ಆದ್ದರಿಂದ ಈಗ ಹಿಂದೂಗಳೆಂದು ಕರೆಸಿಕೊಂಡಿದ್ದಾರೆ, ಪತಿತರಾಗಿ ಬಿಟ್ಟಿದ್ದಾರೆ. ಪತಿತರನ್ನಾಗಿ ಯಾರು ಮಾಡಿದರು? ರಾವಣ. ರಾವಣನನ್ನು ಸುಡುತ್ತಾರೆ, ಇದು ಪರಂಪರೆಯಿಂದ ನಡೆದು ಬಂದಿದೆ ಎಂದು ತಿಳಿಯುತ್ತಾರೆ ಆದರೆ ಸತ್ಯಯುಗದಲ್ಲಂತೂ ರಾವಣ ರಾಜ್ಯವೇ ಇರುವುದಿಲ್ಲ. ಮನುಷ್ಯರು ಇದೇನನ್ನೂ ತಿಳಿದುಕೊಳ್ಳುವುದಿಲ್ಲ. ಮಾಯೆಯು ಕಲ್ಲು ಬುದ್ಧಿಯವರನ್ನಾಗಿ ಮಾಡಿ ಬಿಡುತ್ತದೆ. ಕಲ್ಲಿನಿಂದ ಪಾರಸವನ್ನಾಗಿ ತಂದೆಯೇ ಮಾಡುತ್ತಾರೆ. ಯಾವಾಗ ತಮೋಪ್ರಧಾನತೆಯಲ್ಲಿ ಬರುವರೋ ಆಗಲೇ ಬಂದು ಸತೋಪ್ರಧಾನತೆಯ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ ಆದರೂ ಸಹ ಇದು ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು ಬಹಳ ವಿರಳ.
ನೀವು ಕುಮಾರಿಯರಿಗೆ ಈಗ ನಿಶ್ಚಿತಾರ್ಥವಾಗುತ್ತದೆ. ನಿಮ್ಮನ್ನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳುತ್ತಾರೆ. ನಿಮ್ಮನ್ನು ಓಡಿಸಿಕೊಂಡು ಹೋದರು ಅರ್ಥಾತ್ ನೀವಾತ್ಮರಿಗೆ ತಂದೆಯು ತಿಳಿಸುತ್ತಾರೆ - ನೀವು ನನ್ನವರಾಗಿದ್ದಿರಿ, ಮತ್ತೆ ನನ್ನನ್ನೇ ಮರೆತು ಹೋಗಿದ್ದೀರಿ. ದೇಹಾಭಿಮಾನಿಗಳಾಗಿ ಮಾಯೆಗೆ ವಶವಾಗಿ ಬಿಟ್ಟಿದ್ದೀರಿ. ಬಾಕಿ ಓಡಿಸಿಕೊಂಡು ಹೋಗುವ ಮಾತಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿ. ನೆನಪಿನದೇ ಪರಿಶ್ರಮವಿದೆ. ಬಹಳ ದೇಹಾಭಿಮಾನದಲ್ಲಿ ಬಂದು ವಿಕರ್ಮ ಮಾಡುತ್ತಾರೆ. ತಂದೆಗೆ ಗೊತ್ತಿದೆ - ಈ ಆತ್ಮವು ನನ್ನನ್ನು ನೆನಪೇ ಮಾಡುವುದಿಲ್ಲ. ದೇಹಾಭಿಮಾನದಲ್ಲಿ ಬಂದು ಬಹಳ ಪಾಪ ಮಾಡುತ್ತಾರೆ ಆಗ ಪಾಪದ ಕೊಡ ನೂರರಷ್ಟು ತುಂಬುತ್ತದೆ. ಅನ್ಯರಿಗೆ ಮಾರ್ಗವನ್ನು ತಿಳಿಸುವ ಬದಲಾಗಿ ತಾವೇ ಮರೆತುಹೋಗುತ್ತಾರೆ. ಇನ್ನೂ ಹೆಚ್ಚು ದುರ್ಗತಿಯನ್ನು ಹೊಂದುತ್ತಾರೆ. ಇದು ಉನ್ನತ ಗುರಿಯಾಗಿದೆ. ಏರಿದರೆ ವೈಕುಂಠ ರಸ, ಬಿದ್ದರೆ ಪುಡಿ ಪುಡಿ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ನೋಡಿ, ಎಷ್ಟೊಂದು ಅಂತರವಾಗುತ್ತದೆ! ಕೆಲವರು ಓದಿ ಆಕಾಶದೆತ್ತರಕ್ಕೆ ಏರುತ್ತಾರೆ, ಇನ್ನೂ ಕೆಲವರು ನೆ ಲಹಿಡಿಯುತ್ತಾರೆ. ಬುದ್ಧಿಯು ಮಂಧವಾಗಿ ಬಿಡುತ್ತದೆ, ಆಗ ಅವರು ಓದಲು ಸಾಧ್ಯವಿಲ್ಲ. ಬಾಬಾ, ನಾವು ಯಾರಿಗೂ ತಿಳಿಸಲು ಆಗುತ್ತಿಲ್ಲವೆಂದು ಕೆಲವರು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಒಳ್ಳೆಯದು, ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ ಆಗ ನಿಮಗೆ ಸುಖ ಕೊಡುವೆನು, ಆದರೆ ನೆನಪೇ ಮಾಡುವುದಿಲ್ಲ. ಸ್ವಯಂ ನೆನಪು ಮಾಡುತ್ತಿದ್ದರೆ ಅನ್ಯರಿಗೂ ನೆನಪು ತರಿಸುತ್ತಾ ಇರುವರು. ತಂದೆಯನ್ನು ನೆನಪು ಮಾಡಿದಾಗಲೇ ಪಾಪ ನಷ್ಟವಾಗುವುದು. ಅವರ ನೆನಪಿಲ್ಲದೆ ಸುಖಧಾಮದಲ್ಲಿ ಹೋಗಲು ಸಾಧ್ಯವಿಲ್ಲ. 21 ಜನ್ಮಗಳ ಆಸ್ತಿಯು ನಿರಾಕಾರ ತಂದೆಯಿಂದಲೇ ಸಿಗುತ್ತದೆ, ಉಳಿದೆಲ್ಲರೂ ಅಲ್ಪಕಾಲದ ಸುಖ ಕೊಡುವವರಾಗಿದ್ದಾರೆ. ಯಾರಿಗಾದರೂ ರಿದ್ಧಿ-ಸಿದ್ಧಿಯಿಂದ ಮಕ್ಕಳಾಗಿ ಬಿಟ್ಟರೆ ಅಥವಾ ಆಶೀರ್ವಾದದಿಂದ ಲಾಟರಿ ಹೊಡೆದರೆ ಸಾಕು ವಿಶ್ವಾಸ ಕುಳಿತು ಬಿಡುತ್ತದೆ. ಕೆಲವರಿಗೆ 2-4 ಕೋಟಿ ಲಾಭವಾಗಿ ಬಿಟ್ಟರೆ ಸಾಕು ಬಹಳ ಮಹಿಮೆ ಮಾಡುತ್ತಾರೆ ಆದರೆ ಅದೆಲ್ಲವೂ ಅಲ್ಪಕಾಲಕ್ಕಾಗಿ. ಅದರಿಂದ 21 ಜನ್ಮಗಳಿಗಾಗಿ ಆರೋಗ್ಯಭಾಗ್ಯವಂತೂ ಸಿಗಲು ಸಾಧ್ಯವಿಲ್ಲ ಅಲ್ಲವೆ ಆದರೆ ಮನುಷ್ಯರಿಗೆ ಇದು ಗೊತ್ತಿಲ್ಲ, ಯಾರ ಮೇಲೂ ದೋಷ ಹೊರಿಸುವಂತಿಲ್ಲ. ಅಲ್ಪಕಾಲದ ಸುಖದಲ್ಲಿಯೇ ಖುಷಿಯಾಗಿ ಬಿಡುತ್ತಾರೆ.
ತಂದೆಯು ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಎಷ್ಟು ಸಹಜವಾಗಿದೆ. ಕೆಲವರಂತೂ ಯಾರಿಗೂ ತಿಳಿಸುವುದೇ ಇಲ್ಲ. ಕೆಲವರು ತಿಳಿಸಿ ಕೊಡುತ್ತಾರೆ ಆದರೆ ಪೂರ್ಣ ಯೋಗವಿಲ್ಲದ ಕಾರಣ ಯಾರಿಗೂ ಬಾಣವು ನಾಟುವುದಿಲ್ಲ. ದೇಹಾಭಿಮಾನದಲ್ಲಿ ಬರುವುದರಿಂದ ಒಂದಲ್ಲ ಒಂದು ಪಾಪಗಳಾಗುತ್ತಿರುತ್ತವೆ. ಯೋಗವೇ ಮುಖ್ಯವಾಗಿದೆ. ನೀವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಪ್ರಾಚೀನ ಯೋಗವನ್ನು ಭಗವಂತನೇ ಕಲಿಸಿದ್ದರು, ಶ್ರೀಕೃಷ್ಣನಲ್ಲ. ನೆನಪಿನ ಯಾತ್ರೆಯು ಬಹಳ ಒಳ್ಳೆಯದಾಗಿದೆ, ನೀವು ನಾಟಕವನ್ನು ನೋಡಿ ಬರುತ್ತೀರೆಂದರೆ ಬುದ್ಧಿಯಲ್ಲಿ ಎಲ್ಲವೂ ಸನ್ಮುಖದಲ್ಲಿ ಬಂದು ಬಿಡುತ್ತದೆ. ಯಾರಿಗಾದರೂ ತಿಳಿಸಲು ಸಮಯ ಹಿಡಿಸುತ್ತದೆ. ಇದು ಹಾಗೆಯೇ ಬೀಜ ಮತ್ತು ವೃಕ್ಷ. ಈ ಚಕ್ರವು ಬಹಳ ಸ್ಪಷ್ಟವಾಗಿದೆ. ಶಾಂತಿಧಾಮ, ಸುಖಧಾಮ, ದುಃಖಧಾಮ.... ಸೆಕೆಂಡಿನ ಕೆಲಸವಾಗಿದೆ. ಆದರೆ ನೆನಪಿರಬೇಕಲ್ಲವೆ. ತಂದೆಯ ಪರಿಚಯ ಕೊಡುವುದು ಮುಖ್ಯವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ಎಲ್ಲವನ್ನೂ ಅರಿತುಕೊಳ್ಳುವಿರಿ. ಒಳ್ಳೆಯದು.
ಶಿವ ತಂದೆಯು ನೀವು ಮಕ್ಕಳನ್ನು ನೆನಪು ಮಾಡಿಕೊಳ್ಳುತ್ತಾರೆ, ಬ್ರಹ್ಮಾ ತಂದೆಯು ನೆನಪು ಮಾಡಿಕೊಳ್ಳುವುದಿಲ್ಲ. ನನ್ನ ಸುಪುತ್ರ ಮಕ್ಕಳು ಯಾರು, ಯಾರು ಎಂಬುದನ್ನು ಶಿವ ತಂದೆಯು ತಿಳಿದುಕೊಂಡಿದ್ದಾರೆ. ಸೇವಾಧಾರಿ ಸುಪುತ್ರರನ್ನು ತಂದೆಯು ನೆನಪು ಮಾಡಿಕೊಳ್ಳುತ್ತಾರೆ. ಈ ಬ್ರಹ್ಮಾರವರು ಯಾರನ್ನಾದರೂ ನೆನಪು ಮಾಡುವರೇ? ಇವರ ಆತ್ಮಕ್ಕಂತೂ ಶಿವ ತಂದೆಯ ಆದೇಶವಿದೆ - ನನ್ನೊಬ್ಬನನ್ನೇ ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಅದೃಷ್ಟವಂತರಾಗಲು ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನು ಇಡಬೇಕಾಗಿದೆ. ಪ್ರೀತಿಯನ್ನು ಇಡುವುದು ಎಂದರೆ ಹೆಜ್ಜೆ-ಹೆಜ್ಜೆಯಲ್ಲಿ ಅವರೊಬ್ಬರ ಶ್ರೀಮತದನುಸಾರವೇ ನಡೆಯುತ್ತಿರುವುದು.
2) ಪ್ರತಿ ನಿತ್ಯವೂ ಪುಣ್ಯದ ಕಾರ್ಯವನ್ನು ಅವಶ್ಯವಾಗಿ ಮಾಡಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡ ಪುಣ್ಯವಾಗಿದೆ - ಎಲ್ಲರಿಗೆ ತಂದೆಯ ಪರಿಚಯ ಕೊಡುವುದು. ತಂದೆಯನ್ನು ನೆನಪು ಮಾಡುವುದು ಮತ್ತು ಎಲ್ಲರಿಗೆ ತಂದೆಯ ನೆನಪು ತರಿಸುವುದು.
ಓಂ ಶಾಂತಿ. ಇದನ್ನು ಮಕ್ಕಳಿಗೆ ಯಾರು ಹೇಳಿದರು? ಏಕೆಂದರೆ ಶಾಲೆಯಲ್ಲಿ ಕುಳಿತಿದ್ದೀರಿ ಅಂದಮೇಲೆ ಅವಶ್ಯವಾಗಿ ಶಿಕ್ಷಕರು ಹೇಳಿದರು. ಈಗ ಪ್ರಶ್ನೆ ಬರುತ್ತದೆ - ಇದನ್ನು ಶಿಕ್ಷಕರು ಹೇಳಿದರೋ, ತಂದೆಯು ಹೇಳಿದರೋ ಅಥವಾ ಸದ್ಗುರುವು ಹೇಳಿದರೋ? ಈ ಮಹಾವಾಕ್ಯಗಳನ್ನು ಯಾರು ಹೇಳಿದರು? ಮಕ್ಕಳಿಗೆ ಬುದ್ಧಿಯಲ್ಲಿ ಇದು ಮೊಟ್ಟ ಮೊದಲಿಗೆ ಬರಬೇಕು – ನಮ್ಮ ತಂದೆಯು ಬೇಹದ್ದಿನ ತಂದೆಯೂ ಆಗಿದ್ದಾರೆ, ಅವರಿಗೇ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ ಅಂದಾಗ ತಂದೆಯೂ ಹೇಳಿದರು, ಶಿಕ್ಷಕನೂ ಹೇಳಿದರು ಜೊತೆ ಜೊತೆಗೆ ಸದ್ಗುರುವೂ ಹೇಳಿದರು. ಇದು ನಿಮ್ಮ ಬುದ್ಧಿಯಲ್ಲಿದೆ - ನೀವು ವಿದ್ಯಾರ್ಥಿಗಳಾಗಿದ್ದೀರಿ. ಅನ್ಯ ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು ಓದಿಸುತ್ತಾರೆ, ಅವರಿಗೆ ತಂದೆ ಅಥವಾ ಗುರುವೆಂದು ಹೇಳುವುದಿಲ್ಲ. ಇದು ಪಾಠಶಾಲೆಯಾಗಿದೆ. ಇದಕ್ಕೆ ಯುನಿವರ್ಸಿಟಿ ಎಂದಾದರೂ ಹೇಳಿ ಅಥವಾ ಕಾಲೇಜು ಎಂದಾದರೂ ಹೇಳಿ, ಅಂತು ವಿದ್ಯೆಯಲ್ಲವೆ. ಮೊಟ್ಟ ಮೊದಲು ಇದನ್ನು ತಿಳಿದುಕೊಳ್ಳಬೇಕಾಗಿದೆ, ಪಾಠಶಾಲೆಯಲ್ಲಿ ನಮಗೆ ಯಾರು ಓದಿಸುತ್ತಾರೆ? ಮಕ್ಕಳಿಗೆ ತಿಳಿದಿದೆ - ಆ ನಿರಾಕಾರನು ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಸರ್ವರ ಸದ್ಗತಿದಾತನಾಗಿದ್ದಾರೆ, ಅವರೇ ನಮಗೆ ಓದಿಸುತ್ತಿದ್ದಾರೆ. ಈ ಇಡೀ ರಚನೆಯು ಆ ಒಬ್ಬ ರಚಯಿತನ ಆಸ್ತಿಯಾಗಿದೆ ಅಂದಾಗ ತಾವೇ ಕುಳಿತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ನೀವು ಮಕ್ಕಳು ತಂದೆಯ ಬಳಿ ಜನ್ಮ ಪಡೆದಿದ್ದೀರಿ. ನೀವು ಬುದ್ಧಿಯಿಂದ ತಿಳಿದು ಕೊಂಡಿದ್ದೀರಿ – ಅವರು ನಾವೆಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರಿಗೆ ಜ್ಞಾನ ಸಾಗರ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ಜ್ಞಾನ ಸಾಗರ, ಪತಿತ ಪಾವನನಾಗಿದ್ದಾರೆ. ಜ್ಞಾನದಿಂದಲೇ ಸದ್ಗತಿ ಯಾಗುತ್ತದೆ, ಮನುಷ್ಯರು ಪತಿತರಿಂದ ಪಾವನರಾಗುತ್ತಾರೆ. ಈಗ ನೀವು ಮಕ್ಕಳು ಇಲ್ಲಿ ಕುಳಿತಿದ್ದೀರಿ, ಮತ್ತ್ಯಾವುದೇ ಶಾಲೆಯಲ್ಲಿ ನಮಗೆ ಜ್ಞಾನ ಸಾಗರ, ನಿರಾಕಾರ ತಂದೆಯು ಓದಿಸುತ್ತಿದ್ದಾರೆಂದು ಯಾರಿಗೂ ಬುದ್ಧಿಯಲ್ಲಿರುವುದಿಲ್ಲ. ಇದನ್ನು ಇಲ್ಲಿಯೇ ನೀವು ತಿಳಿದುಕೊಂಡಿದ್ದೀರಿ. ನಿಮಗೇ ತಿಳಿಸಲಾಗುತ್ತದೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದಲ್ಲಿ ನಮಗೆ ನಿರಾಕಾರ ಪರಮಾತ್ಮನು ಓದಿಸುತ್ತಾರೆಂದು ಯಾರೂ ತಿಳಿದುಕೊಳ್ಳುವುದಿಲ್ಲ. ಅವರಿಗೆ ಮನುಷ್ಯ ಶಿಕ್ಷಕರೇ ಓದಿಸುತ್ತಾರೆ ಮತ್ತು ನಾವಾತ್ಮರಾಗಿದ್ದೇವೆ ಎಂದು ತಿಳಿದುಕೊಳ್ಳುವಂತಹ ಜ್ಞಾನವು ಮತ್ತ್ಯಾವುದೂ ಇಲ್ಲ. ಆತ್ಮವೇ ಓದುತ್ತದೆ, ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಆತ್ಮವೇ ಕರ್ಮೇಂದ್ರಿಯಗಳ ಮೂಲಕ ನೌಕರಿ ಮಾಡುತ್ತದೆ. ನಾನು ಇಂತಹವನಾಗಿದ್ದೇನೆಂದು ಅದಕ್ಕೆ ಸ್ಮೃತಿಯಿರುತ್ತದೆ, ಕೂಡಲೇ ತನ್ನ ನಾಮ - ರೂಪವು ನೆನಪಿಗೆ ಬಂದು ಬಿಡುತ್ತದೆ. ನಾನು ಇದನ್ನು ಮಾಡುತ್ತೇನೆ, ನಾನು ಹೀಗೆ ಮಾಡುತ್ತೇನೆ ಎಂದು ಶರೀರದ ಹೆಸರೇ ನೆನಪಿಗೆ ಬಂದು ಬಿಡುತ್ತದೆ ಆದರೆ ಅದು ತಪ್ಪಾಗಿದೆ, ನಾವಂತೂ ಮೊದಲು - ಆತ್ಮರಲ್ಲವೆ ನಂತರ, ಈ ಶರೀರವನ್ನು ತೆಗೆದುಕೊಂಡಿದ್ದೇವೆ. ಶರೀರದ ಹೆಸರು ಬದಲಾಗುತ್ತಿರುತ್ತದೆ, ಆತ್ಮದ ಹೆಸರು ಬದಲಾಗುವುದಿಲ್ಲ. ಆತ್ಮವು ಒಂದೇ ಆಗಿದೆ. ತಂದೆಯು ತಿಳಿಸುತ್ತಾರೆ - ನಾನಾತ್ಮನಿಗೆ ಒಂದೇ ಹೆಸರಾಗಿದೆ - ಶಿವ. ಇದನ್ನು ಇಡೀ ಪ್ರಪಂಚವು ತಿಳಿದುಕೊಳ್ಳುತ್ತದೆ ಬಾಕಿ ಇಷ್ಟೆಲ್ಲಾ ಹೆಸರುಗಳನ್ನು ಶರೀರಗಳಿಗೆ ಇಡಲಾಗುತ್ತದೆ. ಶಿವ ತಂದೆಗೆ ಕೇವಲ ಶಿವನೆಂದೇ ಹೇಳುತ್ತಾರೆ, ಅವರಿಗೆ ಯಾವುದೇ ಶರೀರವಿಲ್ಲ. ಮನುಷ್ಯರಿಗಾದರೆ ನಾನು ಇಂತಹವನಾಗಿದ್ದೇನೆ ಎಂದು ಶರೀರಕ್ಕೆ ಹೆಸರಿಡಲಾಗುತ್ತದೆ. ನಮಗೆ ಇಂತಹ ಶಿಕ್ಷಕರು ಓದಿಸುತ್ತಾರೆಂದು ಶರೀರದ ಹೆಸರು ತೆಗೆದುಕೊಳ್ಳುತ್ತಾರಲ್ಲವೆ. ವಾಸ್ತವದಲ್ಲಿ ಆತ್ಮವು ಶರೀರದ ಮೂಲಕ ಶಿಕ್ಷಕನ ಕೆಲಸ ಮಾಡುತ್ತದೆ. ಅವರ ಆತ್ಮಕ್ಕೆ ಓದಿಸುತ್ತದೆ, ಸಂಸ್ಕಾರವು ಆತ್ಮದಲ್ಲಿರುತ್ತದೆ. ಕರ್ಮೇಂದ್ರಿಯಗಳ ಮೂಲಕ ಸಂಸ್ಕಾರದ ಅನುಸಾರ ಓದಿಸುತ್ತದೆ, ಪಾತ್ರವನ್ನು ಅಭಿನಯಿಸುತ್ತದೆ ಆದರೆ ದೇಹದ ಮೇಲೆ ಯಾವ ಹೆಸರಿದೆಯೋ ಅದರ ಆಧಾರದಿಂದಲೇ ಉದ್ಯೋಗ-ವ್ಯವಹಾರಗಳು ನಡೆಯುತ್ತವೆ. ಇಲ್ಲಿ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ನಿರಾಕಾರ ತಂದೆಯು ಓದಿಸುತ್ತಾರೆ. ನಿಮ್ಮ ಬುದ್ಧಿ ಎಲ್ಲಿ ಹೋಯಿತು! ನಾವಾತ್ಮರು ಆ ತಂದೆಯ ಮಕ್ಕಳಾಗಿದ್ದೇವೆ. ಆತ್ಮವು ತಿಳಿದುಕೊಳ್ಳುತ್ತದೆ - ನಿರಾಕಾರ ತಂದೆಯು ಬಂದು ಈ ಸಾಕಾರದ ಮೂಲಕ ನಮಗೆ ಓದಿಸುತ್ತಾರೆ. ಅವರ ಹೆಸರಾಗಿದೆ - ಶಿವ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಶಿವನಂತೂ ಬೇಹದ್ದಿನ ತಂದೆಯಾಗಿದ್ದಾರೆ. ಆದ್ದರಿಂದ ಅವರಿಗೇ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ, ಈಗ ಅವರ ಜಯಂತಿಯನ್ನು ಹೇಗೆ ಆಚರಿಸುತ್ತಾರೆ! ಆತ್ಮವು ಶರೀರದಲ್ಲಿ ಪ್ರವೇಶ ಮಾಡುತ್ತದೆ ಅಥವಾ ಗರ್ಭದಲ್ಲಿ ಬರುತ್ತದೆ. ಮೇಲಿನಿಂದ ಬರುತ್ತದೆ, ಇದು ಯಾರಿಗೂ ತಿಳಿಯುವುದಿಲ್ಲ. ಕ್ರಿಸ್ತನನ್ನು ಧರ್ಮ ಸ್ಥಾಪಕನೆಂದು ಹೇಳುತ್ತಾರೆ, ಅವರ ಆತ್ಮವು ಮೊಟ್ಟ ಮೊದಲು ಮೇಲಿನಿಂದ ಬರಬೇಕು, ಸತೋಪ್ರಧಾನ ಆತ್ಮವು ಬರುತ್ತದೆ. ಅದು ಯಾವುದೇ ವಿಕರ್ಮ ಮಾಡಿರುವುದಿಲ್ಲ. ಮೊದಲು ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ ಆಗ ವಿಕರ್ಮಗಳಾಗುತ್ತವೆ. ಮೊದಲು ಯಾವ ಆತ್ಮವು ಬರುವುದೋ ಆಗ ಸತೋಪ್ರಧಾನವಾಗಿರುವ ಕಾರಣ ಯಾವುದೇ ದುಃಖವನ್ನು ಅನುಭವಿಸುವುದಿಲ್ಲ. ಅರ್ಧ ಸಮಯವು ಕಳೆದ ನಂತರ ವಿಕರ್ಮ ಮಾಡಲು ತೊಡಗುತ್ತದೆ.
ಇಂದಿಗೆ 5000 ವರ್ಷಗಳ ಮೊದಲು ಅವಶ್ಯವಾಗಿ ಸೂರ್ಯವಂಶಿ ರಾಜ್ಯವಿತ್ತು, ಮತ್ತೆಲ್ಲಾ ಧರ್ಮದವರು ನಂತರದಲ್ಲಿ ಬಂದರು. ಭಾರತವಾಸಿಗಳೇ ವಿಶ್ವದ ಮಾಲೀಕರಾಗಿದ್ದರು. ಭಾರತಕ್ಕೆ ಅವಿನಾಶಿ ಖಂಡವೆಂದು ಹೇಳಲಾಗುತ್ತದೆ, ಮತ್ತ್ಯಾವುದೇ ಖಂಡವಿರಲಿಲ್ಲ. ಅಂದಾಗ ಶಿವ ತಂದೆಯು ಹಾಳಾಗಿರುವುದನ್ನು ಸರಿ ಪಡಿಸುವವರಾಗಿದ್ದಾರೆ. ಭೋಲಾನಾಥನೆಂದು ಶಿವನಿಗೇ ಹೇಳಲಾಗುತ್ತದೆ, ಶಂಕರನಿಗಲ್ಲ. ಭೋಲಾನಾಥ ಶಿವನು ಹಾಳಾಗಿರುವುದನ್ನು ಸುಧಾರಣೆ ಮಾಡುವವರಾಗಿದ್ದಾರೆ. ಶಿವ-ಶಂಕರ ಒಂದೇ ಅಲ್ಲ, ಬೇರೆ-ಬೇರೆಯಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ಯಾವುದೇ ಮಹಿಮೆಯಿಲ್ಲ. ಮಹಿಮೆಯು ಕೇವಲ ಒಬ್ಬ ಶಿವನದಾಗಿದೆ. ಯಾರು ಹಾಳಾಗಿರುವುದನ್ನು ಸರಿಪಡಿಸುತ್ತಾರೆ. ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ. ಇವರು 84 ಜನ್ಮಗಳನ್ನು ಪೂರ್ಣ ಮಾಡಿದರು, ಈಗ ಆಟವು ಮುಕ್ತಾಯವಾಯಿತು. ಈ ಹಳೆಯ ವಸ್ತ್ರ, ಹಳೆಯ ಸಂಬಂಧಗಳೂ ಸಮಾಪ್ತಿಯಾಗಲಿವೆ ಅಂದಮೇಲೆ ಈಗ ಯಾರನ್ನು ನೆನಪು ಮಾಡುವುದು? ಸಮಾಪ್ತಿಯಾಗಲಿರುವ ವಸ್ತುವನ್ನು ಎಂದೂ ನೆನಪು ಮಾಡುವುದಿಲ್ಲ. ಹೊಸ ಮನೆಯು ತಯಾರಾದರೆ ಹಳೆಯ ಮನೆಯಿಂದ ಮನಸ್ಸು ದೂರವಾಗುತ್ತದೆ ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಸರ್ವರ ಸದ್ಗತಿಯಾಗುತ್ತದೆ ಅರ್ಥಾತ್ ರಾವಣ ರಾಜ್ಯದಿಂದ ಎಲ್ಲರಿಗೆ ಬಿಡುಗಡೆ ಸಿಗುತ್ತದೆ. ರಾವಣನು ಎಲ್ಲರನ್ನೂ ಹಾಳು ಮಾಡಿದ್ದಾನೆ. ಭಾರತವು ಸಂಪೂರ್ಣ ಕಂಗಾಲ, ಭ್ರಷ್ಟಾಚಾರಿಯಾಗಿದೆ. ಮನುಷ್ಯರು ಲಂಚ ಖೋರತನ, ಕಳ್ಳತನ, ಮೋಸಕ್ಕೆ ಭ್ರಷ್ಟಾಚಾರವೆಂದು ತಿಳಿಯುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ - ವಿಕಾರದಲ್ಲಿ ಹೋಗುವುದು ಮೊದಲ ಭ್ರಷ್ಟಾಚಾರವಾಗಿದೆ. ಶರೀರವು ವಿಕಾರದಿಂದಲೇ ಜನ್ಮ ಪಡೆಯುತ್ತದೆ ಅದಕ್ಕಾಗಿ ಇದನ್ನು ವಿಕಾರೀ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಾವು ಸತ್ಯಯುಗದಲ್ಲಿ ಪ್ರವೃತ್ತಿ ಮಾರ್ಗದ ದೇವಿ-ದೇವತೆಗಳಾಗಿದ್ದೆವು, ಪವಿತ್ರರಾದರೆ ವಿಕಾರವಿಲ್ಲದೆ ಮಕ್ಕಳು ಹೇಗೆ ಜನಿಸುವರು ಎಂದು ಕೇಳುತ್ತಾರೆ, ಆಗ ತಿಳಿಸಿ - ನಾವು ನಮ್ಮ ರಾಜಧಾನಿಯನ್ನು ಬಾಹುಬಲದಿಂದ ಅಲ್ಲ, ಯೋಗಬಲದಿಂದ ಸ್ಥಾಪನೆ ಮಾಡುತ್ತೇವೆ ಅಂದಮೇಲೆ ಯೋಗಬಲದಿಂದ ಮಕ್ಕಳಾಗಲು ಸಾಧ್ಯವಿಲ್ಲವೆ! ಅಲ್ಲಿರುವುದೇ ನಿರ್ವಿಕಾರಿ ಪ್ರಪಂಚ, ಪವಿತ್ರ ಗೃಹಸ್ಥಾಶ್ರಮ, ಯಥಾರಾಜ-ರಾಣಿ, ಸಂಪೂರ್ಣ ನಿರ್ವಿಕಾರಿ ತಥಾ ಪ್ರಜೆ. ಇಲ್ಲಿ ಸಂಪೂರ್ಣ ವಿಕಾರಿಗಳಾಗಿದ್ದಾರೆ. ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ, ಅದಕ್ಕೆ ಈಶ್ವರೀಯ ರಾಜ್ಯವೆಂದು ಹೇಳಲಾಗುತ್ತದೆ, ಅದು ಈಶ್ವರನಿಂದ ಸ್ಥಾಪಿಸಲ್ಪಟ್ಟಿರುವುದಾಗಿದೆ. ಈಗಂತೂ ರಾವಣ ರಾಜ್ಯವಾಗಿದೆ. ಯಾರು ಸ್ವರ್ಗ ಸ್ಥಾಪನೆ ಮಾಡಿದರೋ ಆ ಶಿವ ತಂದೆಯ ಪೂಜೆಯು ನಡೆಯುತ್ತದೆ, ಯಾರು ನರಕವನ್ನಾಗಿ ಮಾಡಿದರೋ ಆ ರಾವಣನನ್ನು ಸುಡುತ್ತಾ ಬರುತ್ತಾರೆ. ದ್ವಾಪರವು ಯಾವಾಗ ಆರಂಭವಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಇದೂ ಸಹ ತಿಳುವಳಿಕೆಯ ಮಾತಾಗಿದೆ, ಇದು ತಮೋಪ್ರಧಾನ, ಆಸುರೀ ಪ್ರಪಂಚವಾಗಿದೆ. ಅದು ಈಶ್ವರೀಯ ಪ್ರಪಂಚವಾಗಿದೆ. ಅದಕ್ಕೆ ಸ್ವರ್ಗ, ದೈವೀ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಇದು ನರಕ ಪತಿತ ಪ್ರಪಂಚವಾಗಿದೆ. ಯಾರು ಪ್ರತಿನಿತ್ಯವೂ ಓದುವರೋ ಅವರೇ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ನಾವಿರುವ ಜಾಗದಲ್ಲಿ ಶಾಲೆಯಿಲ್ಲವಲ್ಲ ಎಂದು ಹೇಳುತ್ತಾರೆ. ಅರೆ! ಪ್ರಧಾನಕೇಂದ್ರವಂತೂ ಇದೆಯಲ್ಲವೆ, ನೀವು ಬಂದು ಇಲ್ಲಿ ಸಲಹೆ ತೆಗೆದುಕೊಂಡು ಹೋಗುವುದು ದೊಡ್ಡ ಮಾತೇನಲ್ಲ. ಸೃಷ್ಟಿಚಕ್ರವನ್ನು ಸೆಕೆಂಡಿನಲ್ಲಿ ತಿಳಿಸಲಾಗುತ್ತದೆ. ಸತ್ಯ, ತ್ರೇತಾಯುಗವು ಕಳೆಯಿತು ನಂತರ ದ್ವಾಪರ, ಕಲಿಯುಗವೂ ಕಳೆಯಿತು, ಈಗ ಸಂಗಮಯುಗವಾಗಿದೆ. ಹೊಸ ಪ್ರಪಂಚಕ್ಕೆ ಹೋಗುವುದಕ್ಕಾಗಿ ಪ್ರತಿಯೊಬ್ಬರಿಗೂ ಓದಲು ಹಕ್ಕಿದೆ. ಬಾಬಾ, ನಾವು ನೌಕರಿ ಮಾಡುತ್ತೇವೆ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಒಳ್ಳೆಯದು, ಒಂದು ವಾರದವರೆಗೆ ಜ್ಞಾನವನ್ನು ತಿಳಿದುಕೊಂಡು ಮತ್ತೆ ಎಲ್ಲಿಯಾದರೂ ಹೋಗಿ, ಅಲ್ಲಿಯೇ ಮುರುಳಿ ಸಿಗುತ್ತಿರುವುದು. ಮೊದಲು 7 ದಿನಗಳವರೆಗೆ ಭಟ್ಟಿಯಲ್ಲಿ ಅವಶ್ಯವಾಗಿ ಇರಬೇಕಾಗಿದೆ. ಭಲೆ 7 ದಿನಗಳ ಕಾಲ ಬರುತ್ತಾರೆ ಆದರೆ ಎಲ್ಲರ ಬುದ್ಧಿಯು ಒಂದೇ ರೀತಿ ಇರುವುದಿಲ್ಲ. 7 ದಿನಗಳ ಭಟ್ಟಿಯೆಂದರೆ ಯಾರದೇ ನೆನಪು ಬರಬಾರದು, ಯಾರೊಂದಿಗೂ ಪತ್ರ ವ್ಯವಹಾರವೂ ಇರಬಾರದು. ಎಲ್ಲರೂ ಒಂದೇರೀತಿ ತಿಳಿದುಕೊಳ್ಳುವುದಿಲ್ಲ. ಇಲ್ಲಿ ಪತಿತರಿಂದ ಪಾವನರಾಗಬೇಕಾಗಿದೆ, ಇದೂ ಸಹ ರೋಗವಾಗಿದೆ. ಮನುಷ್ಯರು ಅರ್ಧಕಲ್ಪದ ಮಹಾರೋಗಿಯಾಗಿದ್ದಾರೆ. ಅವರಿಗೆ ಪ್ರತ್ಯೇಕವಾಗಿ ಕೂರಿಸಬೇಕಾಗುತ್ತದೆ. ಯಾರದೇ ಸಂಗ ಇರಬಾರದು. ಅವರನ್ನು ಹೊರಗಡೆ ಕಳುಹಿಸಿದರೆ ಅಂತಿಂತಹ ಪದಾರ್ಥಗಳನ್ನು ತಿನ್ನುತ್ತಾರೆ, ಪತಿತರ ಕೈಯಿಂದ ತಿನ್ನುತ್ತಾರೆ. ಸತ್ಯಯುಗದಲ್ಲಿ ದೇವತೆಗಳು ಪಾವನರಿರುತ್ತಾರಲ್ಲವೆ. ಅದಕ್ಕಾಗಿ ನೋಡಿ, ಅವರ ಮಂದಿರಗಳನ್ನು ವಿಶೇಷವಾಗಿ ಕಟ್ಟಿಸುತ್ತಾರೆ. ದೇವತೆಗಳನ್ನು ಪತಿತರು ಸ್ಪರ್ಷಿಸುವುದಕ್ಕೂ ಸಾಧ್ಯವಿಲ್ಲ. ಈ ಸಮಯದಲ್ಲಂತೂ ಮನುಷ್ಯರು ಸಂಪೂರ್ಣ ಪತಿತ, ಭ್ರಷ್ಟಾಚಾರಿಗಳಾಗಿದ್ದಾರೆ. ಶರೀರವು ವಿಕಾರದಿಂದಲೇ ಜನ್ಮ ಪಡೆಯುತ್ತದೆ, ಆದ್ದರಿಂದ ಭ್ರಷ್ಟಾಚಾರಿಗಳೆಂದು ಹೇಳಲಾಗುತ್ತದೆ. ಸನ್ಯಾಸಿಗಳ ಶರೀರವೂ ಸಹ ವಿಕಾರದಿಂದಲೇ ಆಗಿದೆ. ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ಆತ್ಮವು ಪವಿತ್ರವಾಗಬೇಕಾಗಿದೆ ನಂತರ ಶರೀರವು ಪವಿತ್ರವಾದುದೇ ಬೇಕು. ಆದುದರಿಂದ ಹಳೆಯ ಅಪವಿತ್ರ ಶರೀರಗಳೆಲ್ಲವೂ ವಿನಾಶವಾಗಲಿದೆ. ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಇದು ಅಂತಿಮ ಸಮಯವಾಗಿದೆ, ಎಲ್ಲರೂ ಪವಿತ್ರರಾಗಿ ಹಿಂತಿರುಗಿ ಹೋಗಬೇಕಾಗಿದೆ. ಭಾರತದಲ್ಲಿಯೇ ಹೋಲಿಯನ್ನಾಚರಿಸುತ್ತಾರೆ. ಇಲ್ಲಿ ಪಂಚ ತತ್ವಗಳ ಶರೀರವು ತಮೋಪ್ರಧಾನವಾಗಿದೆ, ಸತ್ಯಯುಗದಲ್ಲಿ ಶರೀರವೂ ಸಹ ಸತೋಪ್ರಧಾನವಾಗಿರುತ್ತದೆ, ಶ್ರೀಕೃಷ್ಣನ ಚಿತ್ರವಿದೆಯಲ್ಲವೆ. ನರಕವನ್ನು ಒದೆಯಲಾಗುತ್ತದೆ ಏಕೆಂದರೆ ಸತ್ಯಯುಗದಲ್ಲಿ ಹೋಗಬೇಕಾಗಿದೆ. ಶವವನ್ನೂ ಸಹ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವಾಗ ಮೊದಲು ಮುಖವನ್ನು ನಗರದ ಕಡೆ ಕಾಲನ್ನು ಸ್ಮಶಾನದ ಕಡೆ ತಿರುಗಿಸುತ್ತಾರೆ. ನಂತರ ಸ್ಮಶಾನದಲ್ಲಿ ಪ್ರವೇಶಿಸುವಾಗ ಮುಖವನ್ನು ಸ್ಮಶಾನದ ಕಡೆ ಮಾಡುತ್ತಾರೆ. ನೀವೀಗ ಸ್ವರ್ಗದಲ್ಲಿ ಹೋಗುತ್ತೀರಿ, ಆದ್ದರಿಂದ ನಿಮ್ಮ ಮುಖವು ಸ್ವರ್ಗದ ಕಡೆಯಿದೆ. ಕಾಲು ದುಖುಧಾಮದ ಕಡೆಯಿದೆ. ಅದಂತೂ ಶವದ ಮಾತಾಗಿದೆ. ಇಲ್ಲಿ ನೀವು ಪುರುಷಾರ್ಥ ಮಾಡಬೇಕಾಗಿದೆ. ಮಧುರ ಮನೆಯನ್ನು ನೆನಪು ಮಾಡುತ್ತಾ, ಮಾಡುತ್ತಾ ನೀವಾತ್ಮರು ಮಧುರ ಮನೆಗೆ ಹೊರಟು ಹೋಗುತ್ತೀರಿ. ಇದು ಬುದ್ಧಿಯ ಅಭ್ಯಾಸವಾಗಿದೆ. ತಂದೆಯು ಕುಳಿತು ಇದೆಲ್ಲಾ ರಹಸ್ಯವನ್ನು ತಿಳಿಸುತ್ತಾರೆ. ನಿಮಗೆ ತಿಳಿದಿದೆ - ನಾವಾತ್ಮರು ಈಗ ಮನೆಗೆ ಹೋಗಬೇಕಾಗಿದೆ, ಇದು ಹಳೆಯ ವಸ್ತ್ರ, ಹಳೆಯ ಪ್ರಪಂಚವಾಗಿದೆ. ಈಗ ನಾಟಕವು ಮುಕ್ತಾಯವಾಯಿತು ಎಂದರೆ 84 ಜನ್ಮಗಳ ಪಾತ್ರವನ್ನು ಅಭಿನಯಿಸಿದೆವು. ತಂದೆಯು ಇದನ್ನೂ ತಿಳಿಸಿದ್ದಾರೆ - ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಯಾರು ಅನ್ಯ ಧರ್ಮಗಳಲ್ಲಿ ಕೊನೆಯಲ್ಲಿ ಬರುವರೊ ಅವರಿಗೆ ಅವಶ್ಯವಾಗಿ ಕಡಿಮೆ ಜನ್ಮಗಳಿರುತ್ತವೆ. ಇಸ್ಲಾಮಿಗಳಿಗಿಂತಲೂ ಬೌದ್ಧಿಯರ ಜನ್ಮಗಳು ಇನ್ನೂ ಕಡಿಮೆ. ಅವರಿಗಿಂತಲೂ ಕ್ರಿಶ್ಚಿಯನ್ನರದು ಕಡಿಮೆ ಜನ್ಮಗಳಾಗಿವೆ. ಗುರುನಾನಕರು ಸಿಖ್ಖರಂತೂ ಈಗೀಗ ಬಂದಿದ್ದಾರೆ. ಗುರುನಾನಕರು ಬಂದು 500 ವರ್ಷಗಳಾಯಿತು ಅಂದಮೇಲೆ ಅವರು 84 ಜನ್ಮಗಳನ್ನು ತೆಗೆದುಕೊಳ್ಳುವರೇ! ಲೆಕ್ಕವನ್ನು ಮಾಡಲಾಗುತ್ತದೆ, 5000 ವರ್ಷಗಳಲ್ಲಿ ಇಷ್ಟು ಜನ್ಮಗಳಾದರೆ 500 ವರ್ಷಗಳಲ್ಲಿ ಎಷ್ಟು ಜನ್ಮಗಳಿರಬಹುದು? 12-13 ಜನ್ಮಗಳು. ಕ್ರಿಸ್ತನಿಗೆ 2000 ವರ್ಷಗಳಾಯಿತು ಅಂದಮೇಲೆ ಅವರಿಗೆ ಎಷ್ಟು ಜನ್ಮಗಳಾಯಿತು? ಅರ್ಧಕ್ಕಿಂತಲೂ ಕಡಿಮೆ, ಲೆಕ್ಕವಿದೆಯಲ್ಲವೆ. ಇದರಲ್ಲಿ ಕೆಲಕೆಲವರು ಕೆಲವೊಂದು ರೀತಿಯಲ್ಲಿ ಜನ್ಮವನ್ನು ತೆಗೆದುಕೊಳ್ಳುತ್ತಾರೆ, ನಿಖರವಾಗಿ ಹೇಳಲು ಸಾಧ್ಯವಿಲ್ಲ. ಈ ಮಾತುಗಳನ್ನು ವಾದ ಮಾಡುವುದರಲ್ಲಿ ಸಮಯವನ್ನು ವ್ಯರ್ಥ ಮಾಡಬಾರದು. ನಿಮ್ಮ ಕರ್ತವ್ಯವಾಗಿದೆ - ತಂದೆಯನ್ನು ನೆನಪು ಮಾಡುವುದು. ವ್ಯರ್ಥ ಮಾತುಗಳಲ್ಲಿ ಬುದ್ದಿಯು ಹೋಗಬಾರದು, ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಬೇಕು, ಚಕ್ರವನ್ನು ಅರಿತುಕೊಳ್ಳಬೇಕಾಗಿದೆ ಆದರೆ ನೆನಪಿನಿಂದಲೇ ಪಾಪ ನಾಶವಾಗುತ್ತದೆ. ಇದರಲ್ಲಿಯೇ ಪರಿಶ್ರಮವಿದೆ ಆದ್ದರಿಂದ ಭಾರತದ ಪ್ರಾಚೀನ ಯೋಗವೆಂದು ಹೇಳುತ್ತಾರೆ, ಇದನ್ನು ತಂದೆಯೇ ಕಲಿಸುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಯೋಗದ ಮಾತೇ ಇರುವುದಿಲ್ಲ. ಮತ್ತೆ ಭಕ್ತಿಮಾರ್ಗದಲ್ಲಿ ಹಠಯೋಗವು ಪ್ರಾರಂಭವಾಗುತ್ತದೆ. ಇದು ಸಹಜ ರಾಜಯೋಗವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ಪಾವನರಾಗುತ್ತೀರಿ. ಮೂಲ ಮಾತು ನೆನಪಿನದಾಗಿದೆ. ಯಾವುದೇ ಪಾಪ ಮಾಡಬಾರದು. ದೇವಿ-ದೇವತೆಗಳ ಮಂದಿರಗಳಿವೆ ಏಕೆಂದರೆ ಅವರು ಪಾವನರಾಗಿದ್ದಾರೆ. ಪೂಜಾರಿಗಳು ಪತಿತರಾಗಿದ್ದಾರೆ,ಪಾವನ ದೇವತೆಗಳಿಗೆ ಸ್ನಾನ ಇತ್ಯಾದಿಗಳನ್ನು ಮಾಡಿಸುತ್ತಾರೆ. ವಾಸ್ತವದಲ್ಲಿ ದೇವತೆಗಳಿಗೆ ಪತಿತರ ಕೈ ತಗುಲಬಾರದು, ಇವೆಲ್ಲವೂ ಭಕ್ತಿಮಾರ್ಗದ ರೀತಿ-ನೀತಿಯಾಗಿದೆ. ಈಗಂತೂ ನಾವು ಪಾವನರಾಗುತ್ತಿದ್ದೇವೆ, ಪಾವನರಾಗಿ ಬಿಟ್ಟರೆ ನಂತರ ದೇವತೆಗಳಾಗುತ್ತೀರಿ. ಅಲ್ಲಂತೂ ಪೂಜೆ ಇತ್ಯಾದಿಗಳ ಅವಶ್ಯಕತೆಯಿರುವುದಿಲ್ಲ. ಸರ್ವರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ, ಅವರಿಗೇ ಭೋಲಾನಾಥನೆಂದು ಹೇಳುತ್ತಾರೆ. ನಾನು ಪತಿತ ಪ್ರಪಂಚ, ಪತಿತ ಶರೀರದಲ್ಲಿ ಹಳೆಯ ರಾವಣ ರಾಜ್ಯದಲ್ಲಿ ಬರುತ್ತೇನೆ. ನಾನು ಯಾರದೇ ತನುವಿನಲ್ಲಿ ಪ್ರವೇಶ ಮಾಡಿ ಮುರುಳಿಯನ್ನು ನುಡಿಸಬಲ್ಲೆನು ಆದರೆ ಇದರ ಅರ್ಥ - ನಾನು ಸರ್ವವ್ಯಾಪಿ ಎಂದಲ್ಲ. ಪ್ರತಿಯೊಬ್ಬರಲ್ಲಿ ತಮ್ಮ-ತಮ್ಮ ಆತ್ಮವಿದೆ, ಫಾರ್ಮ್ನಲ್ಲಿಯೂ ನಿಮ್ಮ ತಂದೆಯು ಯಾರು? ಎಂಬುದನ್ನು ಬರೆಸಲಾಗುತ್ತದೆ ಆದರೆ ತಿಳಿದುಕೊಳ್ಳುವುದಿಲ್ಲ. ಆತ್ಮಗಳ ತಂದೆಯಂತೂ ಒಬ್ಬರೇ ಇರುವರು, ಆದರೆ ನಾವು ಸಹೋದರರಾಗಿದ್ದೇವೆ, ತಂದೆಯು ಒಬ್ಬರೇ ಇದ್ದಾರೆ. ಅವರಿಂದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ, ಅವರೇ ಮುಕ್ತಿದಾತ, ಮಾರ್ಗದರ್ಶಕನಾಗಿದ್ದಾರೆ. ಎಲ್ಲಾ ಆತ್ಮರನ್ನು ಮಧುರ ಮನೆಗೆ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಹಳೆಯ ಪ್ರಪಂಚದ ವಿನಾಶವಾಗುತ್ತದೆ ಅಂದರೆ ಹೋಲಿಕಾ ಆಗುತ್ತದೆಯಲ್ಲವೆ, ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ. ಬಾಕಿ ಆತ್ಮಗಳೆಲ್ಲರೂ ಹಿಂತಿರುಗಿ ಹೋಗುವರು. ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ, ಅಂದಮೇಲೆ ತಿಳಿದುಕೊಳ್ಳಬೇಕು - ಸ್ವರ್ಗದ ಸ್ಥಾಪನೆಯನ್ನು ಯಾರು ಮಾಡಿಸುತ್ತಾರೆ, ಕಲಿಯುಗದ ವಿನಾಶವನ್ನು ಯಾರು ಮಾಡಿಸುತ್ತಾರೆ? ಇದನ್ನು ಸ್ಪಷ್ಟವಾಗಿ ಬರೆಯಲಾಗಿದೆ. ಪ್ರೀತಿ ಮಾಡಿದರೆ ಪ್ರೀತಿ ಸಿಗುವುದು ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರು ನನ್ನ ಅರ್ಥವಾಗಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುವ ಬಹಳ ಸೇವೆ ಮಾಡುವರೋ ಅವರು ನನಗೆ ಹೆಚ್ಚು ಪ್ರಿಯರೆನಿಸುತ್ತಾರೆ.
ಯಾರು ಪುರುಷಾರ್ಥ ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಆತ್ಮಗಳು ಪರಮಾತ್ಮ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಆತ್ಮಾಭಿಮಾನಿಯಾಗ ಬೇಕಾಗಿದೆ. ಕೆಲವರು ಬಹಳ ತಪ್ಪುಗಳನ್ನು ಮಾಡುತ್ತಾರೆ, ಹಳೆಯ ಹವ್ಯಾಸಗಳು ಪಕ್ಕಾ ಆಗಿ ಬಿಟ್ಟಿದೆ. ಆದ್ದರಿಂದ ಎಷ್ಟಾದರೂ ತಿಳಿಸಿ ಅವು ಬಿಟ್ಟು ಹೋಗುವುದೇ ಇಲ್ಲ. ಅದರಿಂದ ತಮ್ಮದೇ ಪದವಿಯನ್ನು ನಷ್ಟ ಮಾಡಿಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಯಾವುದೇ ಮಾತಿನ ವಾದ-ವಿವಾದದಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ವ್ಯರ್ಥ ಮಾತುಗಳಲ್ಲಿ ಬುದ್ಧಿಯು ಹೋಗಬಾರದು. ಎಷ್ಟು ಸಾಧ್ಯವೋ ನೆನಪಿನ ಯಾತ್ರೆಯಿಂದ ವಿಕರ್ಮವನ್ನು ವಿನಾಶ ಮಾಡಿಕೊಳ್ಳಬೇಕಾಗಿದೆ. ಆತ್ಮಾಭಿಮಾನಿಯಾಗಿರುವ ಹವ್ಯಾಸ ಮಾಡಿ ಕೊಳ್ಳಬೇಕಾಗಿದೆ.
2) ಹಳೆಯ ಪ್ರಪಂಚದಿಂದ ತಮ್ಮ ಮುಖವನ್ನು ತಿರುಗಿಸಿಕೊಳ್ಳಬೇಕಾಗಿದೆ. ಶಾಂತಿ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಹೊಸ ಮನೆಯು ತಯಾರಾಗುತ್ತಿದೆ, ಆದ್ದರಿಂದ ಹಳೆಯ ಮನೆಯೊಂದಿಗಿನ ಮನಸ್ಸನ್ನು ತೆಗೆಯಬೇಕಾಗಿದೆ.
“ತನು, ಮನ, ಧನ ಮತ್ತು ಸಂಬಂಧದ ಶ್ರೇಷ್ಠ ವ್ಯವಹಾರ”
ಇಂದು ಸರ್ವ ಖಜಾನೆಗಳ ಸಾಗರ ರತ್ನಾಗರ ತಂದೆಯು ತನ್ನ ಮಕ್ಕಳನ್ನು ನೋಡಿ ಮುಗುಳ್ನಗುತ್ತಿದ್ದಾರೆ – ಸರ್ವ ಖಜಾನೆಗಳ ರತ್ನಾಗರ ತಂದೆಯ ಸೌಧಾಗಾರ ಮಕ್ಕಳು ಅರ್ಥಾತ್ ಸೌಧ (ವ್ಯಾಪಾರ) ಮಾಡುವವರು ಯಾರಾಗಿದ್ದಾರೆ ಮತ್ತು ಯಾರೊಂದಿಗೆ ವ್ಯಾಪಾರ ಮಾಡಿದ್ದಾರೆ? ಪರಮಾತ್ಮನೊಂದಿಗೆ ವ್ಯಾಪಾರ ಮಾಡುವಂತಹ ಮುಖಗಳು ಇಷ್ಟು ಮುಗ್ಧವಾಗಿವೆ ಮತ್ತು ಎಷ್ಟೊಂದು ಶ್ರೇಷ್ಠವಾದ ವ್ಯಾಪಾರ ಮಾಡಿದ್ದಾರೆ? ಇವರು ಇಷ್ಟು ಶ್ರೇಷ್ಠ ವ್ಯಾಪಾರ ಮಾಡುವಂತಹ ವ್ಯಾಪಾರಿ ಆತ್ಮಗಳಾಗಿದ್ದಾರೆ ಎಂಬುದು ಪ್ರಪಂಚದ ಮನುಷ್ಯರಿಗೆ ಅರ್ಥವಾಗುವುದಿಲ್ಲ. ಯಾವ ಆತ್ಮಗಳನ್ನು ಪ್ರಪಂಚದವರು ನಿರಾಶಾವಾಧಿಗಳು, ಅತಿ ಬಡವರು, ಈ ಕನ್ಯೆಯರು-ಮಾತೆಯರು ಪರಮಾತ್ಮನ ಪ್ರಾಪ್ತಿಗೆ ಅಧಿಕಾರಿಗಳು ಎಲ್ಲಾಗುತ್ತಾರೆ, ಇದು ಅಸಂಭವವೆಂದು ಅವರನ್ನು ದೂರ ಮಾಡಿದರು ಆದರೆ ತಂದೆಯು ಮೊದಲು ಮಾತೆಯರು ಮತ್ತು ಕನ್ಯೆಯರನ್ನೇ ಇಷ್ಟು ದೊಡ್ಡ ವ್ಯಾಪಾರ ಮಾಡುವಂತಹ ಶ್ರೇಷ್ಠ ವ್ಯಕ್ತಿಗಳನ್ನಾಗಿ ಮಾಡಿ ಬಿಟ್ಟರು. ಜ್ಞಾನದ ಕಳಶವನ್ನು ಮೊದಲು ಮಾತೆಯರು ಮತ್ತು ಕನ್ಯೆಯರ ಮೇಲಿಟ್ಟರು. ಬಡ ಕನ್ಯೆಯನ್ನು ಯಜ್ಞ ಮಾತೆ ಜಗದಂಬೆಯನ್ನಾಗಿ ನಿಮಿತ್ತ ಮಾಡಿದರು. ಮಾತೆಯರ ಬಳಿಯಾದರೂ ತಮ್ಮ ಬಳಿ ಬಚ್ಚಿಟ್ಟುಕೊಂಡಿರುವ ಅಲ್ಪಸ್ವಲ್ಪ ಹಣವಿರುತ್ತದೆ, ಆದರೆ ಕನ್ಯೆಯರು ಮಾತೆಯರಿಗಿಂತಲೂ ಬಡವರಾಗಿರುತ್ತಾರೆ. ಆದ್ದರಿಂದ ತಂದೆಯು ಅತಿ ಬಡವರನ್ನೇ ಮೊದಲು ಸೌಧಾಗರ (ವ್ಯಾಪಾರ) ರನ್ನಾಗಿ ಮಾಡಿದರು ಮತ್ತು ಎಷ್ಟು ಶ್ರೇಷ್ಠವಾದ ವ್ಯಾಪಾರ ಮಾಡಿದರು! ಬಡಕುಮಾರಿಯಿಂದ ಜಗದಂಬೆ ಸೋ ಧನ ದೇವಿ ಲಕ್ಷ್ಮಿಯನ್ನಾಗಿ ಮಾಡಿದರು! ಇಲ್ಲಿ ಇಂದಿನವರೆಗೂ ಸಹ ಭಲೆ ಎಷ್ಟೇ ದೊಡ್ಡ ಕೋಟ್ಯಾಧೀಶ್ವರು ಇರಬಹುದು ಆದರೆ ಅವರೂ ಸಹ ಲಕ್ಷ್ಮಿಯಿಂದ ಹಣವನ್ನು ಅವಶ್ಯವಾಗಿ ಕೇಳುತ್ತಾರೆ, ಪೂಜೆ ಮಾಡುತ್ತಾರೆ. ಅಂದಾಗ ರತ್ನಾಗಾರ ತಂದೆಯು ತಮ್ಮ ವ್ಯಾಪಾರಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಈ ಒಂದು ಜನ್ಮದ ವ್ಯಾಪಾರ ಮಾಡುವುದರಿಂದ ಅನೇಕ ಜನ್ಮಗಳು ಸಂಪನ್ನರಾಗಿ ಬಿಡುತ್ತೀರಿ ಮತ್ತು ವ್ಯಾಪಾರ ಮಾಡುವವರು ಭಲೆ ಎಷ್ಟು ದೊಡ್ಡ ವ್ಯಾಪಾರಿಯಾಗಿರಬಹುದು. ಆದರೆ ಅವರು ಕೇವಲ ಹಣದ ವ್ಯಾಪಾರ, ವಸ್ತುವಿನ ವ್ಯಾಪಾರ ಮಾಡುತ್ತಾರೆ. ಆದರೆ ಒಬ್ಬ ಬೇಹದ್ದಿನ ತಂದೆಯು ತನು, ಮನ, ಧನ ಮತ್ತು ಸದಾ ಶ್ರೇಷ್ಠ ಸಂಬಂಧದ ವ್ಯಾಪಾರ ಮಾಡಿದ್ದಾರೆ. ಇಂತಹ ದಾತನನ್ನು ಯಾರಾದರೂ ನೋಡಿದ್ದೀರಾ? ನಾಲ್ಕೂ ಪ್ರಕಾರದ ವ್ಯಾಪಾರ ಮಾಡಿದ್ದಾರಲ್ಲವೆ? ತನುವು ಸದಾ ಸ್ವಸ್ಥವಾಗಿರುವುದು, ಮನಸ್ಸು ಸದಾ ಖುಷಿ. ಧನದ ಭಂಡಾರವು ಸಂಪನ್ನ ಮತ್ತು ಸಂಬಂಧದಲ್ಲಿ ನಿಸ್ವಾರ್ಥ ಸ್ನೇಹ ಮತ್ತು ಗ್ಯಾರಂಟಿಯಿದೆ. ಇಂದು ಯಾವುದು ಮೌಲ್ಯವುಳ್ಳ ವಸ್ತುವಾಗಿರುವುದೋ ಅದಕ್ಕೆ ಗ್ಯಾರಂಟಿ ಕೊಡುವರು - ಐದು ವರ್ಷ, ಹತ್ತು ವರ್ಷ ಗ್ಯಾರಂಟಿ ಕೊಡುತ್ತಾರೆ, ಮತ್ತೇನು ಮಾಡುತ್ತಾರೆ? ಆದರೆ ರತ್ನಾಗಾರ ತಂದೆಯು ಎಷ್ಟು ಸಮಯದ ಗ್ಯಾರಂಟಿ ಕೊಡುತ್ತಾರೆ? ಅನೇಕ ಜನ್ಮಗಳ ಗ್ಯಾರಂಟಿ ಕೊಡುತ್ತಾರೆ. ನಾಲ್ಕರಲ್ಲಿಯೂ ಯಾವ ಒಂದರ ಕೊರತೆಯೂ ಇರುವುದಿಲ್ಲ. ಭಲೆ ಪ್ರಜೆಗಳಿಗೆ ಪ್ರಜೆಗಳಾದರೂ ಸಹ ಅವರಿಗೂ ಅಂತಿಮ ಜನ್ಮದವರೆಗೆ ಅರ್ಥಾತ್ ತ್ರೇತಾದ ಅಂತ್ಯದವರೆಗೂ ಸಹ ಈ ನಾಲ್ಕೂ ಪ್ರಕಾರದ ಮಾತುಗಳು ಪ್ರಾಪ್ತಿ (ತನು, ಮನ, ಧನ, ಮತ್ತು ಸಂಬಂಧ) ಯಾಗುತ್ತವೆ. ಇಂತಹ ವ್ಯಾಪಾರವನ್ನು ಎಂದಾದರೂ ಮಾಡಿದ್ದಿರಾ? ಈಗಂತೂ ವ್ಯಾಪಾರ ಮಾಡಿದಿರಲ್ಲವೆ? ಪಕ್ಕಾ ವ್ಯಾಪಾರ ಮಾಡಿದ್ದೀರಾ ಅಥವಾ ಕಚ್ಚಾ? ಪರಮಾತ್ಮನಿಂದ ಎಷ್ಟು ಸಸ್ತಾ ವ್ಯಾಪಾರ ಮಾಡಿದ್ದೀರಿ! ಅದಕ್ಕೆ ಬದಲಾಗಿ ನೀವು ಏನು ಕೊಟ್ಟಿರಿ, ಯಾವುದೇ ಕೆಲಸಕ್ಕೆ ಬರುವ ವಸ್ತುವನ್ನು ಕೊಟ್ಟಿರಾ?
ವಿದೇಶಿಯರು ಬಾದಾದಾರವರಿಗೆ ಸದಾ ಹೃದಯವನ್ನು (ಚಿತ್ರಣ) ಮಾಡಿ ಕಳುಹಿಸುತ್ತಾರೆ. ಪತ್ರವನ್ನೂ ಹೃದಯದ ಚಿತ್ರದೊಳಗೆ ಬರೆಯುತ್ತಾರೆ, ಹೃದಯದ ಚಿತ್ರವಿರುವ ಉಡುಗೊರೆಯನ್ನೇ ಕಳುಹಿಸುತ್ತಾರೆ ಅಂದಮೇಲೆ ತಮ್ಮ ಹೃದಯವನ್ನು ಕೊಟ್ಟಿದ್ದೀರಲ್ಲವೆ ಆದರೆ ಯಾವ ಹೃದಯವನ್ನು ಕೊಟ್ಟಿದ್ದೀರಿ? ಒಂದು ಹೃದಯ - ಅದು ಎಷ್ಟೊಂದು ಹರಿದು ಹಂಚಿ ಹೋಗಿತ್ತು, ತಂದೆ-ತಾಯಿ, ಚಿಕ್ಕಪ್ಪ-ದೊಡ್ಡಪ್ಪ ಎಷ್ಟು ದೊಡ್ಡ ಪಟ್ಟಿಯಿದೆ! ಒಂದುವೇಳೆ ಸಂಬಂಧ ಪಟ್ಟಿಯನ್ನು ತೆಗೆದರೆ ಕಲಿಯುಗದಲ್ಲಿ ಎಷ್ಟು ದೊಡ್ಡ ಪಟ್ಟಿಯಾಗುವುದು! ಒಂದು - ಸಂಬಂಧದಲ್ಲಿ ತಮ್ಮ ಹೃದಯವನ್ನು ಹಂಚಿದಿರಿ ಮತ್ತು ಇನ್ನೊಂದು - ವಸ್ತುಗಳಲ್ಲಿಯೂ ಹೃದಯವನ್ನು ಕೊಟ್ಟಿದ್ದಿರಿ...... ಅಂದಾಗ ಹೃದಯವನ್ನು ಹಂಚಿರುವ ವಸ್ತುಗಳು ಎಷ್ಟಿವೆ, ವ್ಯಕ್ತಿಗಳು ಎಷ್ಟೊಂದು ಮಂದಿಯಿದ್ದಾರೆ? ಎಲ್ಲದರಲ್ಲಿ ಹೃದಯವನ್ನಿಟ್ಟು ಹೃದಯವನ್ನೇ ತುಂಡು-ತುಂಡು ಮಾಡಿಕೊಂಡಿರಿ. ಎಲ್ಲದರಲ್ಲಿ ಹೃದಯವನ್ನು ಹಂಚಿದಿರಿ. ತಂದೆಯು ಅನೇಕ ಭಾಗಗಳಾಗಿರುವ ಹೃದಯವನ್ನು ಒಂದು ಕಡೆ ಜೋಡಿಸಿದರು ಅಂದಾಗ ಏನನ್ನು ಕೊಟ್ಟಿರಿ ಮತ್ತು ಏನನ್ನು ಪಡೆದಿರಿ! ಮತ್ತು ವ್ಯಾಪಾರ ಮಾಡುವ ವಿಧಿಯು ನೋಡಿ, ಎಷ್ಟು ಸಹಜವಾಗಿದೆ! ಸೆಕೆಂಡಿನ ವ್ಯಾಪಾರವಲ್ಲವೆ. “ಬಾಬಾ" ಶಬ್ಧವೇ ವಿಧಿಯಾಗಿದೆ. ಒಂದು ಶಬ್ದದ ವಿಧಿಯಾಗಿದೆ, ಇದರಲ್ಲಿ ಎಷ್ಟು ಸಮಯ ಹಿಡಿಸುತ್ತದೆ? ಕೇವಲ ಹೃದಯದಿಂದ "ಬಾಬಾ" ಎಂದು ಹೇಳಿದರೆ ಸೆಕೆಂಡಿನಲ್ಲಿ ವ್ಯಾಪಾರವಾಗಿ ಬಿಟ್ಟಿತು. ಎಷ್ಟು ಸಹಜವಾದ ವಿಧಿಯಾಗಿದೆ! ಎಷ್ಟೊಂದು ಸಸ್ತಾ ವ್ಯಾಪಾರವನ್ನು ಈ ಸಂಗಮಯುಗದ ವಿನಃ ಮತ್ತ್ಯಾವುದೇ ಯುಗದಲ್ಲಿ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂದಾಗ ಇಂದು ವ್ಯಾಪಾರಿ ಮಕ್ಕಳ ಚಹರೆಯನ್ನು ನೋಡುತ್ತಿದ್ದರು. ಪ್ರಪಂಚದ ಅಂತರದಲ್ಲಿ ಎಷ್ಟೊಂದು ಮುಗ್ಧರಾಗಿದ್ದೀರಿ! ಆದರೆ ಈ ಮುಗ್ಧರೇ ಚಮತ್ಕಾರ ಮಾಡಿದ್ದೀರಿ. ವ್ಯಾಪಾರ ಮಾಡುವುದರಲ್ಲಿ ಬುದ್ಧಿವಂತರಾದಿರಲ್ಲವೆ. ಇಂದಿನ ದೊಡ್ಡ-ದೊಡ್ಡ ಪ್ರಸಿದ್ಧ ಧನವಂತರು ಧನವನ್ನು ಸಂಪಾದನೆ ಮಾಡುವ ಬದಲು ಅದನ್ನು ಸಂಭಾಲನೆ ಮಾಡುವ ಗೊಂದಲದಲ್ಲಿದ್ದಾರೆ. ಅದೇ ಗೊಂದಲದಲ್ಲಿ ತಂದೆಯನ್ನು ಅರಿತುಕೊಳ್ಳುವುದಕ್ಕೂ ಬಿಡುವಿಲ್ಲ. ತಮ್ಮನ್ನು ರಕ್ಷಿಸಿಕೊಳ್ಳುವುದರಲ್ಲಿ, ಹಣವನ್ನು ರಕ್ಷಿಸಿಕೊಳ್ಳುವುದರಲ್ಲಿಯೇ ಸಮಯವು ಹೊರಟು ಹೋಗುತ್ತಿದೆ. ಒಂದುವೇಳೆ ಚಕ್ರವರ್ತಿಗಳಾಗಿದ್ದರೂ ಸಹ ಅವರು ಚಿಂತಿತ ಚಕ್ರವರ್ತಿಗಳಾಗಿದ್ದಾರೆ ಏಕೆಂದರೆ ಇದು ಕಪ್ಪು ಹಣ (ಅಪವಿತ್ರ ಧನ) ವಲ್ಲವೆ. ಆದ್ದರಿಂದ ಚಿಂತಿತ ಚಕ್ರವರ್ತಿಗಳಾಗಿದ್ದಾರೆ ಮತ್ತು ತಾವು ಹೊರಗಿನಿಂದ ನೋಡಿದರೆ, ನಿಮ್ಮ ಬಳಿ ಕವಡೆಯೂ ಇಲ್ಲ ಆದರೆ ನಿಶ್ಚಿಂತ ಚಕ್ರವರ್ತಿಗಳಾಗಿದ್ದೀರಿ. ಭಿಕಾರಿಗಳಾಗಿದ್ದರೂ ಚಕ್ರವರ್ತಿಗಳು. ಪ್ರಾರಂಭದಲ್ಲಿ ಏನೆಂದು ಸಹಿ ಮಾಡುತ್ತಿದ್ದಿರಿ? ಬೆಗ್ಗರ್ ಟು ಪ್ರಿನ್ಸ್ (ಭಿಕಾರಿಯಿಂದ ರಾಜಕುಮಾರ). ಈಗಲೂ ಸಹ ಚಕ್ರವರ್ತಿಗಳು, ಭವಿಷ್ಯದಲ್ಲಿಯೂ ಚಕ್ರವರ್ತಿಗಳಾಗುತ್ತೀರಿ. ಈಗಿನ ಯಾರು ನಂಬರ್ವನ್ ಧನವಂತ ವ್ಯಕ್ತಿಯಾಗಿದ್ದಾರೆಯೋ ಅವರ ಮುಂದೆ ತಮ್ಮ ತ್ರೇತಾಯುಗದ ಅಂತ್ಯದ ಪ್ರಜೆಯೂ ಸಹ ಹೆಚ್ಚು ಧನವಂತರಾಗಿರುವರು. ಈಗಿನ ಸಂಖ್ಯೆಯ ಲೆಕ್ಕದಿಂದ ಆಲೋಚಿಸಿ - ಹಣವಂತು ಅದೇ ಆಗಿದೆ, ಇನ್ನೂ ಮುಚ್ಚಿಟ್ಟಿರುವ ಹಣವು ಹೊರ ಬರುವುದು ಅಂದಾಗ ಎಷ್ಟು ದೊಡ್ಡ ಸಂಖ್ಯೆಯೋ ಅಷ್ಟೇ ಹಣವು ಹಂಚಲ್ಪಟ್ಟಿದೆ ಮತ್ತು ಅಲ್ಲಿ ಸಂಖ್ಯೆಯು ಎಷ್ಟಿರುವುದು? ಆ ಲೆಕ್ಕದಿಂದ ಹಣವು ಎಷ್ಟಿರಬೇಕು? ಪ್ರಜೆಗಳಿಗೂ ಸಹ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ ಅಂದಮೇಲೆ ಚಕ್ರವರ್ತಿಗಳಾದರಲ್ಲವೆ. ಚಕ್ರವರ್ತಿಗಳೆಂದರೆ ಅಂದರೆ ಅರ್ಥ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಲ್ಲ. ಚಕ್ರವರ್ತಿ ಅರ್ಥಾತ್ ಸಂಪನ್ನರು, ಯಾವುದೇ ಅಪ್ರಾಪ್ತಿಯಿಲ್ಲ, ಕೊರತೆಯಿಲ್ಲ ಅಂದಾಗ ಇಂತಹ ವ್ಯಾಪಾರವನ್ನು ಮಾಡಿ ಬಿಟ್ಟಿದ್ದೀರೋ ಅಥವಾ ಮಾಡುತ್ತಿದ್ದಿರೋ? ಇಲ್ಲವೆ ಇನ್ನೂ ಯೋಚಿಸುತ್ತಿದ್ದೀರಾ? ಯಾವಾಗಲಾದರೂ ಯಾವುದೇ ದೊಡ್ಡ ವಸ್ತುವು ಅಗ್ಗವಾಗಿ ಮತ್ತು ಸಹಜವಾಗಿ ಸಿಕ್ಕಿ ಬಿಡುತ್ತದೆಯೆಂದರೂ ಸಹ ಈ ವಸ್ತು ಸರಿಯಿದೆಯೋ ಅಥವಾ ಇಲ್ಲವೋ ಎಂದು ಗೊಂದಲದಲ್ಲಿ ಬರುತ್ತಾರೆ. ನೀವಂತೂ ಇಂತಹ ಗೊಂದಲದಲ್ಲಿ ಇಲ್ಲ ತಾನೆ? ಏಕೆಂದರೆ ಭಕ್ತಿಮಾರ್ಗದವರು ಸಹಜವಾಗಿರುವುದನ್ನು ಇಷ್ಟು ಕಷ್ಟಪಟ್ಟು ಇನ್ನೂ ಸುರುಳಿಯಲ್ಲಿ ಹಾಕಿದ್ದಾರೆ. ಆದ್ದರಿಂದ ಇಂದಿಗೂ ತಂದೆಯನ್ನು ಅದೇ ರೂಪದಿಂದ ಹುಡುಕುತ್ತಿರುತ್ತಾರೆ. ಚಿಕ್ಕ ಮಾತನ್ನು ದೊಡ್ಡ ಮಾತನ್ನಾಗಿ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಗೊಂದಲದಲ್ಲಿ ಸಿಲುಕುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ ಆದ್ದರಿಂದ ಅವರು ಸಿಗುವಂತಹ ವಿಧಿಯನ್ನೂ ಬಹಳ ಉದ್ದಗಲವಾಗಿ ಹೇಳಿ ಬಿಟ್ಟಿದ್ದಾರೆ. ಅದೇ ಚಕ್ರದಲ್ಲಿ ಭಕ್ತಾತ್ಮರು ಇನ್ನೂ ಆಲೋಚಿಸುವುದರಲ್ಲಿ ಮುಳುಗಿ ಬಿಟ್ಟಿದ್ದಾರೆ. ಭಗವಂತನು ಭಕ್ತಿಯ ಫಲವನ್ನು ಕೊಡಲು ಬಂದು ಬಿಟ್ಟಿದ್ದಾರೆ ಆದರೆ ಭಕ್ತಾತ್ಮರು ಗೊಂದಲದ ಕಾರಣ ಎಲೆ-ಎಲೆಗೂ ನೀರು ಕೊಡುವುದರಲ್ಲಿಯೇ (ಪೂಜಾರಿಗಳಿಗೆ ಪೂಜಾರಿಗಳಾಗಿಯೇ) ಬ್ಯುಸಿಯಾಗಿದ್ದಾರೆ. ತಾವು ಇಷ್ಟೊಂದು ಸಂದೇಶ ಕೊಡುತ್ತೀರಿ, ಇದಕ್ಕೆ ಏನು ಹೇಳುತ್ತಾರೆ? ಅಷ್ಟು ಶ್ರೇಷ್ಠ ಭಗವಂತ ಇಷ್ಟು ಸಹಜ ರೂಪದಲ್ಲಿ ಬರಲು ಸಾಧ್ಯವೇ ಇಲ್ಲ ಎಂದು ಬಿಡುತ್ತಾರೆ. ಆದ್ದರಿಂದ ತಂದೆಯು ಮುಗುಳ್ನಗುತ್ತಿದ್ದರು - ಈಗಿನ ಭಕ್ತಿಯಲ್ಲಿ ಪ್ರಖ್ಯಾತರಾದವರಿರಬಹುದು, ಹಣದಲ್ಲಿ ಪ್ರಸಿದ್ಧರಾದವರು ಯಾವುದೇ ಸ್ಥಾನದಲ್ಲಿ ಪ್ರಸಿದ್ಧರಾದವರು ಸಹ ತಮ್ಮದೇ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ತಾವು ಸಾಧಾರಣ ಆತ್ಮಗಳು ತಂದೆಯೊಂದಿಗೆ ವ್ಯಾಪಾರ ಮಾಡಿದಿರಿ, ಪಾಂಡವರು (ಅಣ್ಣಂದಿರು) ಪಕ್ಕಾ ವ್ಯಾಪಾರ ಮಾಡಿದಿರಲ್ಲವೇ? ಡಬಲ್ ವಿದೇಶಿಯರು ವ್ಯಾಪಾರ ಮಾಡುವುದರಲ್ಲಿ ಬುದ್ಧಿವಂತರಾಗಿದ್ದಾರೆ. ವ್ಯಾಪಾರವನ್ನು ಎಲ್ಲರೂ ಮಾಡಿದಿರಿ ಆದರೆ ಎಲ್ಲಾ ಮಾತುಗಳಲ್ಲಿ ನಂಬರ್ವಾರ್ ಇರುತ್ತಾರೆ. ತಂದೆಯಂತೂ ಎಲ್ಲರಿಗೆ ಸರ್ವ ಖಜಾನೆಗಳನ್ನು ಒಂದೇ ಸಮನಾಗಿ ಕೊಟ್ಟಿದ್ದಾರೆ ಏಕೆಂದರೆ ಅಕೂಟ ಸಾಗರನಾಗಿದ್ದಾರೆ. ತಂದೆಯು ಕೊಡುವುದರಲ್ಲಿ ನಂಬರ್ವಾರ್ ಆಗಿ ಕೊಡುವ ಅವಶ್ಯಕತೆಯಿಲ್ಲ.
ಹೇಗೆ ಈಗಿನ ವಿನಾಶಕಾರಿ ಆತ್ಮಗಳು ಹೇಳುತ್ತಾರೆ - ವಿನಾಶಕ್ಕಾಗಿ ಇಷ್ಟೊಂದು ಸಾಮಗ್ರಿಗಳನ್ನು ತಯಾರು ಮಾಡಿದ್ದೇವೆ ಅದರಿಂದ ಇಂತಹ ಅನೇಕ ಪ್ರಪಂಚಗಳನ್ನೇ ವಿನಾಶ ಮಾಡಬಹುದಾಗಿದೆ. ತಂದೆಯೂ ತಿಳಿಸುತ್ತಾರೆ - ತಂದೆಯ ಬಳಿಯೂ ಎಷ್ಟೊಂದು ಖಜಾನೆಗಳಿವೆ, ಇಡೀ ವಿಶ್ವದ ಆತ್ಮಗಳೆಲ್ಲರೂ ತಮ್ಮ ಹಾಗೆ ಬುದ್ಧಿವಂತರಾಗಿ ನನ್ನೊಂದಿಗೆ ವ್ಯಾಪಾರ ಮಾಡಿದರೂ ಮುಗಿಯುವುದಿಲ್ಲ. ತಾವು ಬ್ರಾಹ್ಮಣರ ಸಂಖ್ಯೆಯು ಎಷ್ಟಿದೆಯೋ ಅದಕ್ಕಿಂತ ಇನ್ನೂ ಪದಮದಷ್ಟು ಆತ್ಮಗಳು ಬಂದರೂ ಸಹ ನನ್ನಿಂದ ತೆಗೆದುಕೊಳ್ಳಬಹುದಾಗಿದೆ, ಇಷ್ಟು ಅಪಾರವಾದ ಖಜಾನೆಗಳಿವೆ ಆದರೆ ತೆಗೆದುಕೊಳ್ಳುವವರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ತೆರೆದ ಹೃದಯದಿಂದ ವ್ಯಾಪಾರ ಮಾಡುವಂತಹ ಸಾಹಸವಂತರು ಕೆಲವರೇ ಇದ್ದಾರೆ ಆದ್ದರಿಂದ ಎರಡು ಪ್ರಕಾರದ ಮಾಲೆಯು ಪೂಜಿಸಲ್ಪಡುತ್ತದೆ. ಅಷ್ಟ ರತ್ನಗಳೆಲ್ಲ, 16 ಸಾವಿರದ ಕೊನೆಯ ಮಣಿಯೆಲ್ಲಿ! ಎಷ್ಟು ಅಂತರವಾಯಿತಲ್ಲವೆ. ವ್ಯಾಪಾರ ಮಾಡುವುದರಲ್ಲಂತೂ ಒಂದೇ ತರಹವಿದ್ದಾರೆ. ಕೊನೆಯ ನಂಬರಿನವರೂ ಸಹ ಬಾಬಾ ಎಂದು ಹೇಳುತ್ತಾರೆ ಮತ್ತು ಮೊದಲಿನವರೂ ಬಾಬಾ ಎಂದೇ ಹೇಳುತ್ತಾರೆ. ಶಬ್ಧದಲ್ಲಿ ಅಂತರವಿಲ್ಲ. ವ್ಯಾಪಾರ ಮಾಡುವ ವಿಧಿಯೂ ಒಂದೇ ರೀತಿಯಿದೆ ಮತ್ತು ಕೊಡುವಂತಹ ದಾತನೂ ಒಂದೇ ರೀತಿಯಾಗಿ ಕೊಡುತ್ತಾರೆ. ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಯಾವುದೆಲ್ಲಾ ಸಂಗಮಯುಗದ ಖಜಾನೆಗಳನ್ನು ತಿಳಿದುಕೊಂಡಿದ್ದೀರೋ ಎಲ್ಲರ ಬಳಿ ಒಂದೇ ರೀತಿಯಿವೆ. ಕೆಲವರಿಗೆ ಸರ್ವ ಶಕ್ತಿಗಳನ್ನು ಕೊಟ್ಟು, ಕೆಲವರಿಗೆ ಒಂದು ಶಕ್ತಿಯನ್ನು ಕೊಟ್ಟಿಲ್ಲ ಅಥವಾ ಕೆಲವರಿಗೆ ಒಂದು ಗುಣ, ಇನ್ನೂ ಕೆಲವರಿಗೆ ಸರ್ವ ಗುಣಗಳನ್ನು ಕೊಟ್ಟಿಲ್ಲ, ಇದರಲ್ಲಿ ಅಂತರವಿಲ್ಲ. ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಂಡಿರುವ ತ್ರಿಕಾಲದರ್ಶಿಗಳು, ಮಾII ಸರ್ವಶಕ್ತಿವಂತರೆಂದು ಎಲ್ಲರ ಬಿರುದು ಒಂದೇ ಆಗಿದೆ. ಕೆಲವರು ಸರ್ವಶಕ್ತಿವಂತರು, ಇನ್ನೂ ಕೆಲವರು ಕೇವಲ ಶಕ್ತಿವಂತರಲ್ಲ, ಎಲ್ಲರಿಗೆ ಸರ್ವಗುಣ ಸಂಪನ್ನರಾಗುವ ದೇವಾತ್ಮನೆಂದೇ ಹೇಳುತ್ತಾರೆ, ಗುಣಮೂರ್ತಿಯೆಂದು ಹೇಳುತ್ತಾರೆ. ಖಜಾನೆಯು ಎಲ್ಲರ ಬಳಿಯಿದೆ. ಒಂದು ತಿಂಗಳಿನಿಂದ ವಿದ್ಯೆಯನ್ನು ಓದುವವರೂ ಸಹ ಜ್ಞಾನದ ಖಜಾನೆಯನ್ನು 50 ವರ್ಷದವರು ವರ್ಣನೆ ಮಾಡುವ ರೀತಿಯೇ ಮಾಡುತ್ತಾರೆ. ಒಂದುವೇಳೆ ಒಂದೊಂದು ಗುಣ, ಶಕ್ತಿಗಳ ಮೇಲೆ ಭಾಷಣ ಮಾಡಲು ಹೇಳಿದರೆ ಬಹಳ ಚೆನ್ನಾಗಿ ಭಾಷಣ ಮಾಡುತ್ತಾರೆ. ಬುದ್ಧಿಯಲ್ಲಿದೆ ಆದ್ದರಿಂದಲೇ ಮಾಡುತ್ತಾರಲ್ಲವೆ ಅಂದಾಗ ಖಜಾನೆಯೂ ಎಲ್ಲರ ಬಳಿ ಇದೆ ಆದರೆ ಅಂತರವೇನಾಯಿತು? ನಂಬರ್ ವನ್ಸೌಧಾಗರರು ಖಜಾನೆಯನ್ನು ಸ್ವಯಂನ ಪ್ರತಿ ಮನನ ಮಾಡುವುದರಿಂದ ಕಾರ್ಯದಲ್ಲಿ ತೊಡಗಿಸುತ್ತಾರೆ. ಅದೇ ಅನುಭವದ ಅಥಾರಿಟಿಯಿಂದ ಅನುಭವಿಗಳಾಗಿ ಅನ್ಯರಿಗೆ ಹಂಚುತ್ತಾರೆ. ಕಾರ್ಯದಲ್ಲಿ ತೊಡಗಿಸುವುದು ಎಂದರೆ ಖಜಾನೆಯನ್ನು ಹೆಚ್ಚಿಸಿಕೊಳ್ಳುವುದು. ಒಂದು ಪ್ರಕಾರದವರು ಕೇವಲ ವರ್ಣನೆ ಮಾಡುವವರು, ಎರಡನೆಯವರು ಮನನ ಮಾಡುವವರು ಅಂದಾಗ ಮನನ ಮಾಡುವವರು ಯಾರಿಗೆ ಕೊಡುತ್ತಾರೆಂದರೆ ಅವರು ಸ್ವಯಂ ಅನುಭವಿಯಾಗಿರುವ ಕಾರಣ , ಅನ್ಯರನ್ನೂ ಅನುಭವಿಯನ್ನಾಗಿ ಮಾಡುತ್ತಾರೆ. ವರ್ಣನೆ ಮಾಡುವವರು ಅನ್ಯರನ್ನೂ ವರ್ಣನೆ ಮಾಡುವವರನ್ನಾಗಿ ಮಾಡಿ ಬಿಡುತ್ತಾರೆ. ಮಹಿಮೆ ಮಾಡುತ್ತಿರುತ್ತಾರೆ ಆದರೆ ಅನುಭವಿಗಳಾಗುವುದಿಲ್ಲ. ಸ್ವಯಂ ಮಹಾನ್ ಆಗುವುದಿಲ್ಲ ಆದರೆ ಮಹಿಮೆ ಮಾಡುವವರಾಗುತ್ತಾರೆ.
ಅಂದಾಗ ನಂಬರ್ವನ್ ಅರ್ಥಾತ್ ಮನನ ಶಕ್ತಿಯಿಂದ ಖಜಾನೆಯ ಅನುಭವಿಗಳಾಗಿ ಅನುಭವಿಗಳನ್ನಾಗಿ ಮಾಡುವವರು ಅಂದರೆ ಅನ್ಯರನ್ನೂ ಧನವಂತರನ್ನಾಗಿ ಮಾಡುವವರು. ಆದ್ದರಿಂದ ಅವರ ಖಜಾನೆಯು ಸದಾ ಹೆಚ್ಚುತ್ತಾ ಹೋಗುತ್ತದೆ ಮತ್ತು ಸಮಯ ಪ್ರಮಾಣ ಸ್ವಯಂನ ಪ್ರತಿ ಮತ್ತು ಅನ್ಯರ ಪ್ರತಿ ಕಾರ್ಯದಲ್ಲಿ ತೊಡಗಿಸುವುದರಿಂದ ಸದಾ ಸಫಲತಾ ಸ್ವರೂಪರಾಗಿರುತ್ತಾರೆ. ಕೇವಲ ವರ್ಣನೆ ಮಾಡುವವರೇ ಅನ್ಯರನ್ನೂ ಧನವಂತರನ್ನಾಗಿ ಮಾಡಲು ಸಾಧ್ಯವಿಲ್ಲ ಮತ್ತು ತನ್ನ ಪ್ರತಿಯೂ ಸಮಯ ಪ್ರಮಾಣ ಯಾವ ಶಕ್ತಿ, ಗುಣ, ಜ್ಞಾನದ ಮಾತುಗಳನ್ನೇ ಉಪಯೋಗಿಸಬೇಕೋ ಅವನ್ನು ಸಮಯದಲ್ಲಿ ಉಪಯೋಗಿಸುವುದಿಲ್ಲ. ಆದುದರಿಂದ ಖಜಾನೆಯ ಸಂಪನ್ನ ಸ್ವರೂಪದ ಸುಖ ಮತ್ತು ದಾತನಾಗಿ ನೀಡುವ ಅನುಭವ ಮಾಡಲು ಸಾಧ್ಯವಿಲ್ಲ. ಹಣವಿದ್ದರೂ ಹಣದಿಂದ ಸುಖವನ್ನು ಪಡೆಯಲು ಸಾಧ್ಯವಿಲ್ಲ. ಶಕ್ತಿಯಿದ್ದರೂ ಸಮಯದಲ್ಲಿ ಶಕ್ತಿಯ ಮೂಲಕ ಸಫಲತೆ ಹೊಂದುವುದಿಲ್ಲ, ಗುಣವಿದ್ದರೂ ಸಮಯ ಪ್ರಮಾಣ ಆ ಗುಣವನ್ನು ಉಪಯೋಗಿಸುವುದಿಲ್ಲ, ಕೇವಲ ವರ್ಣನೆ ಮಾಡುತ್ತಾರೆ. ಹಣವು ಎಲ್ಲರ ಬಳಿಯಿದೆ ಆದರೆ ಹಣದ ಸುಖವು ಅದನ್ನು ಸಮಯದಲ್ಲಿ ಉಪಯೋಗಿಸುವುದರಿಂದಲೇ ಅನುಭವವಾಗುತ್ತದೆ. ಹೇಗೆ ಈಗಿನ ಸಮಯದಲ್ಲಿಯೂ ಕೆಲವರು ವಿನಾಶೀ ಧನವಂತರ ಬಳಿಯೂ ಹಣವು ಬ್ಯಾಂಕ್ನಲ್ಲಿರಬಹುದು, ಅಲಮಾರಿನಲ್ಲಿರುವುದು, ಇಲ್ಲವೆ ದಿಂಬಿನ ಕೆಳಗಿರಬಹುದು ಆದರೆ ತಾನೂ ಕಾರ್ಯದಲ್ಲಿ ಉಪಯೋಗಿಸುವುದಿಲ್ಲ, ಅನ್ಯರೂ ಉಪಯೋಗಿಸಲು ಬಿಡುವುದಿಲ್ಲ. ತಾನೂ ಲಾಭ ಪಡೆಯುವುದಿಲ್ಲ, ಅನ್ಯರಿಗೂ ಲಾಭ ಮಾಡಿಸುವುದಿಲ್ಲ ಅಂದಾಗ ಹಣವಿದ್ದರೂ ಸುಖವನ್ನು ಪಡೆಯಲಿಲ್ಲ ಅಲ್ಲವೆ. ಹಣವು ದಿಂಬಿನ ಕೆಳಗಡೆಯೇ ಉಳಿದು ಬಿಡುವುದು ತಾನು ಹೊರಟು ಹೋಗುವರು ಅಂದಾಗ ಈ ವರ್ಣನೆ ಮಾಡುವುದೆಂದರೆ ಉಪಯೋಗಿಸದೇ ಇರುವುದು. ಸದಾ ಬಡವರಾಗಿಯೇ ಕಾಣಿಸುತ್ತಾರೆ. ಈ ಧನವನ್ನೂ ಸಹ ಒಂದುವೇಳೆ ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ಸಮಯ ಪ್ರಮಾಣ ಉಪಯೋಗಿಸುವುದಿಲ್ಲ ಕೇವಲ ಬುದ್ಧಿಯಲ್ಲಿಟ್ಟುಕೊಂಡರೆ ತಾನೂ ಅವಿನಾಶಿ ಧನದ ಖುಷಿ-ನಶೆಯಲ್ಲಿರುವುದಿಲ್ಲ, ಅನ್ಯರಿಗೂ ಕೊಡುವುದಿಲ್ಲ. ಸದಾ ಏನು ಮಾಡುವುದು? ಹೇಗೆ ಮಾಡುವುದು.......? ಈ ವಿಧಿಯಿಂದ ನಡೆಯುತ್ತಿರುತ್ತಾರೆ ಆದ್ದರಿಂದಲೇ ಎರಡು ಮಾಲೆಗಳಾಗಿ ಬಿಡುತ್ತವೆ. ಒಂದನೆಯವರು ಮನನ ಮಾಡುವವರು, ಎರಡನೆಯವರು ಕೇವಲ ವರ್ಣನೆ ಮಾಡುವವರು ಅಂದಾಗ ಎಂತಹ ವ್ಯಾಪಾರಿಗಳಾಗಿದ್ದೀರಿ? ನಂಬರ್ವನ್ ಆಗುವವರೋ ಅಥವಾ ಎರಡನೆಯವರೋ? ಈ ಖಜಾನೆಯ ಷರತ್ತು ಏನೆಂದರೆ ಅನ್ಯರಿಗೆ ಎಷ್ಟು ಕೊಡುತ್ತೀರೋ, ಎಷ್ಟು ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ಹೆಚ್ಚುವುದು, ಇದು ವೃದ್ಧಿಯಾಗುವ ವಿಧಿಯಾಗಿದೆ. ಇದರಲ್ಲಿ ವಿಧಿಯನ್ನು ಅಳವಡಿಸಿಕೊಳ್ಳದ ಕಾರಣ ಸ್ವಯಂನಲ್ಲಿಯೂ ವೃದ್ಧಿಯಿಲ್ಲ ಮತ್ತು ಅನ್ಯರ ಸೇವೆ ಮಾಡುವುದರಲ್ಲಿಯೂ ವೃದ್ಧಿಯಿಲ್ಲ. ಸಂಖ್ಯೆಯ ವೃದ್ಧಿಯ ಮಾತನ್ನು ಹೇಳುತ್ತಿಲ್ಲ, ಸಂಪನ್ನರನ್ನಾಗಿ ಮಾಡುವ ವೃದ್ಧಿಯಾಗಿದೆ. ಕೆಲವರು ವಿದ್ಯಾರ್ಥಿಗಳು ಸಂಖ್ಯೆಯಲ್ಲಿ ಎಣಿಕೆಗೆ ಬರುತ್ತಾರೆ ಆದರೆ ಇಲ್ಲಿಯವರೆಗೂ ಯೋಗವೆಂದರೇನು, ತಂದೆಯನ್ನು ಹೇಗೆ ನೆನಪು ಮಾಡುವುದೆಂತಲೂ ಹೇಳುತ್ತಾರೆ. ಈಗ ಶಕ್ತಿಯಿಲ್ಲ ಅಂದಾಗ ವಿದ್ಯಾರ್ಥಿಗಳ ಸಾಲಿನಲ್ಲಂತೂ ಇದ್ದಾರೆ, ರಿಜಿಸ್ಟರ್ನಲ್ಲಿ ಹೆಸರಿರುತ್ತದೆ ಆದರೆ ಧನವಂತರಾಗಲಿಲ್ಲ ಅಲ್ಲವೆ. ಬೇಡುತ್ತಲೇ ಇರುತ್ತಾರೆ. ಕೆಲವರು ಶಿಕ್ಷಕರ ಬಳಿ ಹೋಗಿ ಸಹಯೋಗ ಕೊಡಿ ಎಂದು ಅಥವಾ ಕೆಲವೊಮ್ಮೆ ತಂದೆಯೊಂದಿಗೆ ವಾರ್ತಾಲಾಪದಲ್ಲಿ ನನಗೆ ಸಹಾಯ ಮಾಡಿ ಎಂದು ಹೇಳುತ್ತಿರುತ್ತಾರೆ ಅಂದಮೇಲೆ ಸಂಪನ್ನರಾಗಲಿಲ್ಲ ಅಲ್ಲವೆ. ಯಾರು ಸ್ವಯಂ ತನ್ನ ಪ್ರತಿ ಮನನ ಶಕ್ತಿಯಿಂದ ಜ್ಞಾನ ಧನವನ್ನು ಹೆಚ್ಚಿಸಿಕೊಳ್ಳುವರೋ ಅವರು ಅನ್ಯರನ್ನೂ ಧನದಲ್ಲಿ ಮುಂದುವರೆಸುತ್ತಾರೆ. ಮನನ ಶಕ್ತಿ ಅರ್ಥಾತ್ ಜ್ಞಾನ ಧನವನ್ನು ಹೆಚ್ಚಿಸಿಕೊಳ್ಳುವುದು. ಆದ್ದರಿಂದ ಧನವಂತನ ಖುಷಿ, ಧನವಂತನ ಸುಖದ ಅನುಭವ ಮಾಡಿ. ತಿಳಿಯಿತೆ? ಮನನ ಶಕ್ತಿಯ ಮಹತ್ವಿಕೆ ಬಹಳಷ್ಟಿದೆ, ಮೊದಲೂ ಸಹ ಸ್ವಲ್ಪ ಸೂಚನೆಯಿಂದ ತಿಳಿಸಿದ್ದೇವೆ. ಇನ್ನೂ ಮನನ ಶಕ್ತಿಯ ಮಹತ್ವಿಕೆಯನ್ನು ಮತ್ತೆಂದಾದರೂ ತಿಳಿಸಿ ಕೊಡುತ್ತೇವೆ. ಪರಿಶೀಲನೆ ಮಾಡಿಕೊಳ್ಳುವ ಕೆಲಸವನ್ನು ಕೊಡುತ್ತಿರುತ್ತೇನೆ. ಕೊನೆಯಲ್ಲಿ ಫಲಿತಾಂಶವು ಹೊರಬಂದಾಗ ನಮಗೆ ತಿಳಿದೇ ಇರಲಿಲ್ಲ, ಈ ಮಾತನ್ನು ಬಾಪ್ದಾದಾರವರು ತಿಳಿಸಿಯೇ ಇರಲಿಲ್ಲ ಎಂದು ಹೇಳುವಂತಾಗಬಾರದು. ಆದ್ದರಿಂದ ನಿತ್ಯವೂ ತಿಳಿಸುತ್ತಿರುತ್ತೇವೆ ಅಂದಾಗ ಪರಿಶೀಲನೆ ಮಾಡಿಕೊಳ್ಳುವುದೆಂದರೆ ಪರಿವರ್ತನೆ ಮಾಡಿಕೊಳ್ಳುವುದು. ಒಳ್ಳೆಯದು.
ಸರ್ವ ಶ್ರೇಷ್ಠ ಸೌಧಾಗಾರ ಆತ್ಮಗಳಿಗೆ, ಸದಾ ಸರ್ವ ಖಜಾನೆಗಳನ್ನು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುವಂತಹ ಮಹಾನ್ ವಿಶಾಲ ಬುದ್ಧಿಯುಳ್ಳ ಮಕ್ಕಳಿಗೆ, ಸದಾ ಸ್ವಯಂನ್ನು ಮತ್ತು ಸರ್ವರಿಗೆ ಸಂಪನ್ನ ಅನುಭವ ಮಾಡಿ, ಅನುಭವಿಗಳನ್ನಾಗಿ ಮಾಡಿಸುವಂತಹ ಅನುಭವದ ಅಥಾರಿಟಿ ಮಕ್ಕಳಿಗೆ ಆಲ್ಮೈಟಿ ಅಥಾರಿಟಿ ಬಾದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಈಸ್ಟರ್ನ್ ಜೋನಿನ ಸಹೋದರ-ಸಹೋದರಿಯರೊಂದಿಗೆ ಅವ್ಯಕ್ತ ಬಾಪ್ ದಾದಾರವರ ವಾರ್ತಾಲಾಪ:-
ಪೂರ್ವದಿಂದ ಸೂರ್ಯನ ಉದಯವಾಗುತ್ತದೆ ಅಲ್ಲವೆ. ಅಂದಮೆಲೆ ಈಸ್ಟರ್ನ್ ಜೋನ್ ಅಂದರೆ ಅವಶ್ಯವಾಗಿ ಸದಾ ಜ್ಞಾನ ಸೂರ್ಯನ ಉದಯವಾಗಿಯೇ ಇರುತ್ತಾನೆ. ಈಸ್ಟರ್ನ್ನವರು ಅಂದರೆ ಸದಾ ಜ್ಞಾನ ಸೂರ್ಯನ ಪ್ರಕಾಶದ ಮೂಲಕ ಪ್ರತಿಯೊಂದು ಆತ್ಮವನ್ನೂ ಪ್ರಕಾಶತೆಯಲ್ಲಿ ತರುವವರು, ಅಂಧಕಾರವನ್ನು ಸಮಾಪ್ತಿಗೊಳಿಸುವವರು. ಸೂರ್ಯನ ಕಾರ್ಯವೇ ಆಗಿದೆ - ಅಂಧಕಾರವನ್ನು ಸಮಾಪ್ತಿ ಮಾಡುವುದು. ಅಂದಮೇಲೆ ತಾವೆಲ್ಲರೂ ಮಾಸ್ಟರ್ ಜ್ಞಾನ ಸೂರ್ಯ ಅಂದರೆ ನಾಲ್ಕೂ ಕಡೆಯಲ್ಲಿರುವ ಅಜ್ಞಾನವನ್ನು ಸಮಾಪ್ತಿ ಮಾಡುವವರು ಆಗಿದ್ದೀರಿ ಅಲ್ಲವೆ. ಎಲ್ಲರೂ ಇದೇ ಸೇವೆಯಲ್ಲಿ ವ್ಯಸ್ತವಾಗಿ ಇರುತ್ತೀರಾ ಅಥವ ತಮ್ಮ ಅಥವಾ ಪ್ರವೃತ್ತಿಯ ಪರಿಸ್ಥಿತಿಗಳ ಜಂಜಾಟಗಳಲ್ಲಿಯೇ ಸಿಲುಕಿರುತ್ತೀರಾ? ಸೂರ್ಯನ ಕಾರ್ಯವಾಗಿದೆ -ಪ್ರಕಾಶತೆಯನ್ನು ಕೊಡುವ ಕಾರ್ಯದಲ್ಲಿ ವ್ಯಸ್ತವಾಗಿ ಇರುವುದು, ಅದು ಭಲೆ ಪ್ರವೃತ್ತಿಯಲ್ಲಿ ಅಥವಾ ಯಾವುದೇ ವ್ಯವಹಾರದಲ್ಲಿ ಇರಬಹುದು, ಅಥವ ಯಾವುದೇ ಪರಿಸ್ಥಿತಿಗಳೇ ತಮ್ಮ ಮುಂದೆ ಬರುತ್ತದೆ ಆದರೆ ಸೂರ್ಯನು ಪ್ರಕಾಶತೆಯನ್ನು ಕೊಡುವ ಕಾರ್ಯ ಮಾಡದೆ ಇರಲು ಸಾಧ್ಯವಿಲ್ಲ. ಅಂದಾಗ ಇಂತಹ ಮಾಸ್ಟರ್ ಜ್ಞಾನಸೂರ್ಯ ಆಗಿದ್ದೀರಾ ಅಥವಾ ಕೆಲವೊಮ್ಮೆ ಗೊಂದಲಗಳಲ್ಲಿ ಬಂದು ಬಿಡುವಿರಾ? ಮೊದಲ ಕರ್ತವ್ಯವಾಗಿದೆ-ಜ್ಞಾನದ ಪ್ರಕಾಶತೆ ಕೊಡುವುದು. ಪರಮಾರ್ಥದ ಮೂಲಕ ವ್ಯವಹಾರ ಮತ್ತು ಪರಿವಾರ ಎರಡನ್ನೂ ಶ್ರೇಷ್ಠಗೊಳಿಸಬೇಕು ಎಂಬ ಸ್ಮೃತಿಯು ಇರುತ್ತದೆಯೆಂದರೆ, ಈ ಸೇವೆಯು ಸ್ವತಹವಾಗಿಯೇ ಆಗುತ್ತದೆ. ಎಲ್ಲಿ ಪರಮಾರ್ಥವಿದೆಯೋ ಅಲ್ಲಿ ವ್ಯವಹಾರವು ಸಿದ್ಧವಾಗುತ್ತದೆ ಅಥವ ಸಹಜವಾಗಿ ಬಿಡುತ್ತದೆ. ಮತ್ತು ಪರಮಾರ್ಥದ ಭಾವನೆಯಿಂದ ಪರಿವಾರದಲ್ಲಿಯೂ ಸತ್ಯತೆ ಹಾಗೂ ಏಕತೆಯು ಸ್ವತಹವಾಗಿಯೇ ಬಂದು ಬಿಡುತ್ತದೆ. ಹಾಗಾದರೆ ಪರಿವಾರವೂ ಶ್ರೇಷ್ಠ ಮತ್ತು ವ್ಯವಹಾರವೂ ಶ್ರೇಷ್ಟವಾಯಿತು. ಪರಮಾರ್ಥವು ವ್ಯವಹಾರದಿಂದ ದೂರ ಮಾಡುವುದಿಲ್ಲ, ಇನ್ನೂ ಪರಮಾರ್ಥದ ಕಾರ್ಯದಲ್ಲಿ ವ್ಯಸ್ತವಾಗಿ ಇರುವುದರಿಂದ ಪರಿವಾರ ಮತ್ತು ವ್ಯವಹಾರದಲ್ಲಿ ಆಶ್ರಯವು ಸಿಗುತ್ತದೆ. ಅಂದಮೇಲೆ ಪರಮಾರ್ಥದಲ್ಲಿ ಸದಾ ಮುಂದುವರೆಯುತ್ತಾ ಸಾಗಿರಿ. ನೇಪಾಳದವರ ಸಂಕೇತದಲ್ಲಿಯೂ ಸೂರ್ಯನನ್ನು ತೋರಿಸುತ್ತಾರಲ್ಲವೆ. ಅದೇ ರೀತಿ ರಾಜರುಗಳಲ್ಲಿ ಸೂರ್ಯ ವಂಶಿಯರು ಪ್ರಸಿದ್ಧವಿದ್ದಾರೆ, ಶ್ರೇಷ್ಠರೆಂಬ ಮಾನ್ಯತೆಯಿದೆ ಅಂದಮೇಲೆ ತಾವೂ ಸಹ ಮಾಸ್ಟರ್ ಜ್ಞಾನಸೂರ್ಯರು ಎಲ್ಲರಿಗೂ ಪ್ರಕಾಶತೆಯನ್ನು ಕೊಡುವವರು ಆಗಿದ್ದೀರಿ. ಒಳ್ಳೆಯದು.
ಓಂ ಶಾಂತಿ. ಮಕ್ಕಳು ಬೇಹದ್ದಿನ ತಂದೆಯ ಆದೇಶವನ್ನು ಕೇಳಿದಿರಿ. ಈ ಜಗತ್ತಿನ ಯಾವ ತಂದೆ - ತಾಯಿಯಿದ್ದಾರೆ, ಇಲ್ಲಿ ಯಾವ ನಿಮ್ಮ ಸಂಬಂಧವಿದೆಯೋ ಅದು ದೇಹದ ಜೊತೆಗಿದೆ ಏಕೆಂದರೆ ದೇಹದೊಂದಿಗೆ ಮೊಟ್ಟ ಮೊದಲು ತಾಯಿಯ ನಂತರ ತಂದೆಯ ಸಂಬಂಧವೇರ್ಪಡುತ್ತದೆ ನಂತರ ಸಹೋದರ-ಸಹೋದರಿ, ಬಂಧುಗಳ ಸಂಬಂಧ ಬೆಳೆಯುತ್ತದೆ. ಅಂದಾಗ ಬೇಹದ್ದಿನ ತಂದೆಯ ಹೇಳಿಕೆಯೇನೆಂದರೆ ಈ ಜಗತ್ತಿನಲ್ಲಿ ನಿಮಗೆ ಯಾವ ತಂದೆ-ತಾಯಿಯಿದ್ದಾರೆಯೋ ಅವರೊಂದಿಗೂ ಸಹ ಬುದ್ದಿಯೋಗವನ್ನು ಇಡಬೇಡಿ. ಈ ಜಗತ್ತಿನೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಬೇಡಿ ಏಕೆಂದರೆ ಕಲಿಯುಗೀ ಛೀ ಛೀ ಸಂಬಂಧಗಳಾಗಿವೆ. ಈ ಪತಿತ ಪ್ರಪಂಚದೊಂದಿಗಿನ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನೊಂದಿಗೆ ಜೋಡಿಸಿ ಮತ್ತು ಹೊಸ ಜಗತ್ತಿನೊಂದಿಗೆ ಜೋಡಿಸಿ ಏಕೆಂದರೆ ನೀವೀಗ ನನ್ನ ಬಳಿ ಬರಬೇಕಾಗಿದೆ. ಕೇವಲ ಸಂಬಂಧವನ್ನು ಜೋಡಿಸುವ ಮಾತಾಗಿದೆ, ಮತ್ತ್ಯಾವುದೇ ಕಷ್ಟವಿಲ್ಲ. ಯಾರಿಗೆ ಸೂಚನೆ ಸಿಗುವುದೋ ಅವರು ಸಂಬಂಧವನ್ನು ಜೋಡಿಸುತ್ತಾರೆ. ಸತ್ಯಯುಗದಲ್ಲಿ ಮೊದಲು ಸಂಬಂಧವು ಬಹಳ ಚೆನ್ನಾಗಿರುತ್ತದೆ. ಸತೋಪ್ರಧಾನರೇ ನಂತರ ಕೆಳಗಿಳಿಯತೊಡಗುತ್ತಾರೆ ಆಗ ಸುಖದ ಸಂಬಂಧವು ಕಳೆಯುತ್ತಾ-ಕಳೆಯುತ್ತಾ ಕಡಿಮೆ ಆಗ ತೊಡಗುತ್ತದೆ. ಈಗಂತೂ ಈ ಹಳೆಯ ಪ್ರಪಂಚದಿಂದ ಈಗ ಬುದ್ದಿಯೋಗವನ್ನು ಸಂಪೂರ್ಣ ತೆಗೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನನ್ನ ಜೊತೆ ಸಂಬಂಧವನ್ನು ಇಡಿ, ಶ್ರೀಮತದಂತೆ ನಡೆಯಿರಿ ಮತ್ತು ಯಾವುದೆಲ್ಲಾ ದೇಹದ ಸಂಬಂಧಗಳಿವೆಯೋ ಅವೆಲ್ಲವನ್ನೂ ಬಿಟ್ಟು ಬಿಡಿ. ಇವೆಲ್ಲವೂ ಖಂಡಿತ ವಿನಾಶವಾಗುವವು. ಮಕ್ಕಳಿಗೆ ತಿಳಿದಿದೆ - ಯಾವ ತಂದೆಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆಯೋ ಅವರೂ ಸಹ ಡ್ರಾಮಾನುಸಾರ ಸರ್ವಿಸ್ ಮಾಡುತ್ತಾರೆ, ಅವರೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. ಭಗವಂತನು ಸರ್ವಶಕ್ತಿವಂತನೆಂದು ಮನುಷ್ಯರು ತಿಳಿಯುತ್ತಾರೆ. ಹೇಗೆ ಕೃಷ್ಣನನ್ನೂ ಸಹ ಸರ್ವಶಕ್ತಿವಂತನೆಂದು ಒಪ್ಪುತ್ತಾರೆ, ಅವರಿಗೆ ಸ್ವದರ್ಶನ ಚಕ್ರವನ್ನು ತೋರಿಸಿದ್ದಾರೆ. ಅದರಿಂದ ಅಸುರರ ತಲೆ ಕತ್ತರಿಸುತ್ತಾನೆಂದು ತಿಳಿಯುತ್ತಾರೆ ಆದರೆ ದೇವತೆಗಳು ಹಿಂಸಾಕೃತ್ಯವನ್ನು ಹೇಗೆ ಮಾಡುವರು ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ದೇವತೆಗಳಂತೂ ಈ ರೀತಿ ಮಾಡಲು ಸಾಧ್ಯವಿಲ್ಲ. ದೇವತೆಗಳಿಗೆ ಹೇಳಲಾಗುತ್ತದೆ - ಅವರದು ಅಹಿಂಸಾ ಪರಮೋ ಧರ್ಮವಾಗಿತ್ತು, ಅವರಲ್ಲಿ ಹಿಂಸೆಯು ಎಲ್ಲಿಂದ ಬಂದಿತು? ಯಾರಿಗೆ ಏನು ಬಂದಿತೋ ಅದನ್ನು ಕುಳಿತು ಬರೆದು ಬಿಟ್ಟಿದ್ದಾರೆ. ಎಷ್ಟೊಂದು ಧರ್ಮ ಗ್ಲಾನಿ ಮಾಡಿದ್ದಾರೆ! ತಂದೆಯು ತಿಳಿಸುತ್ತಾರೆ - ಈ ಶಾಸ್ತ್ರಗಳಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಸತ್ಯವಿದೆ. ಇದನ್ನೂ ಬರೆದಿದ್ದಾರೆ – ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದರು, ಅದರಲ್ಲಿ ಅಸುರರು ವಿಘ್ನಗಳನ್ನು ಹಾಕುತ್ತಿದ್ದರು, ಅಬಲೆಯರ ಮೇಲೆ ಅತ್ಯಾಚಾರವಾಗುತ್ತಿತ್ತು. ಇದನ್ನಂತೂ ಸರಿಯಾಗಿ ಬರೆದಿದ್ದಾರೆ. ಶಾಸ್ತ್ರಗಳಲ್ಲಿ ಸತ್ಯವೇನು, ಅಸತ್ಯವೇನಿದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಸ್ವಯಂ ಭಗವಂತನೇ ಹೇಳುತ್ತಾರೆ - ಈ ರುದ್ರಜ್ಞಾನ ಯಜ್ಞದಲ್ಲಿ ವಿಘ್ನಗಳು ಖಂಡಿತ ಬೀಳುತ್ತವೆ, ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಪರಮಾತ್ಮನು ಜೊತೆಯಿರುವ ಕಾರಣ ವಿಘ್ನಗಳನ್ನು ದೂರ ಸರಿಸುತ್ತಾರೆ ಎಂದಲ್ಲ. ಇದರಲ್ಲಿ ತಂದೆಯು ಏನು ಮಾಡುವರು! ಡ್ರಾಮಾದಲ್ಲಿ ಇದೆಲ್ಲವೂ ಆಗಲೇಬೇಕಾಗಿದೆ. ಇವರೆಲ್ಲರೂ ವಿಘ್ನಗಳನ್ನು ಹಾಕಿದಾಗಲೇ ಪಾಪದ ಕೊಡ ತುಂಬುವುದಲ್ಲವೆ. ತಂದೆಯು ತಿಳಿಸುತ್ತಾರೆ - ಡ್ರಾಮಾದಲ್ಲಿ ಯಾವುದು ನಿಗಧಿಯಾಗಿದೆಯೋ ಅದೇ ಆಗುವುದು. ಅಸುರರ ವಿಘ್ನಗಳು ಖಂಡಿತ ಬೀಳುತ್ತವೆ. ತಮ್ಮ ರಾಜಧಾನಿಯು ಸ್ಥಾಪನೆಯಾಗುತ್ತದೆ. ಅರ್ಧಕಲ್ಪ ಮಾಯೆಯ ರಾಜ್ಯದಲ್ಲಿ ಮನುಷ್ಯರು ಎಷ್ಟೊಂದು ತಮೋಪ್ರಧಾನ ಬುದ್ಧಿಯವರು, ಭ್ರಷ್ಟಾಚಾರಿಗಳಾಗಿ ಬಿಡುತ್ತಾರೆ. ಮತ್ತೆ ಅವರನ್ನು ಶ್ರೇಷ್ಟಾಚಾರಿಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವಲ್ಲವೆ. ಭ್ರಷ್ಟಾಚಾರಿಗಳಾಗುವುದರಲ್ಲಿ ಅರ್ಧಕಲ್ಪ ಹಿಡಿಸುತ್ತದೆ ಮತ್ತೆ ಸೆಕೆಂಡಿನಲ್ಲಿ ತಂದೆಯು ಶ್ರೇಷ್ಠಾಚಾರಿಗಳನ್ನಾಗಿ ಮಾಡುತ್ತಾರೆ. ನಿಶ್ಚಯವಾಗಲು ಸಮಯ ಹಿಡಿಸುವುದಿಲ್ಲ. ಒಳ್ಳೊಳ್ಳೆಯ ಮಕ್ಕಳಿದ್ದಾರೆ, ಅವರಿಗೆ ಬಹುಬೇಗನೆ ನಿಶ್ಚಯವಾಗುತ್ತದೆ. ಕೂಡಲೇ ಪ್ರತಿಜ್ಞೆ ಮಾಡುತ್ತಾರೆ ಆದರೆ ಮಾಯೆಯೂ ಸಹ ಶಕ್ತಿಶಾಲಿಯಲ್ಲವೆ, ಮನಸ್ಸಿನಲ್ಲಿ ಒಂದಲ್ಲ ಒಂದು ಬಿರುಗಾಳಿ ತರುತ್ತದೆ ಆದರೆ ಪುರುಷಾರ್ಥ ಮಾಡಿ ಅದನ್ನು ಕರ್ಮದಲ್ಲಿ ತರಬಾರದು. ಎಲ್ಲರೂ ಪುರುಷಾರ್ಥ ಮಾಡುತ್ತಿದ್ದಾರೆ, ಕರ್ಮಾತೀತ ಸ್ಥಿತಿಯಂತೂ ಯಾರದೂ ಆಗಿಲ್ಲ. ಕರ್ಮೇಂದ್ರಿಯಗಳಿಂದ ಒಂದಲ್ಲ ಒಂದು ತಪ್ಪಾಗಿ ಬಿಡುತ್ತದೆ. ಕರ್ಮಾತೀತ ಸ್ಥಿತಿಯನ್ನು ತಲುಪುವುದರಲ್ಲಿ ಮಧ್ಯದಲ್ಲಿ ವಿಘ್ನಗಳು ಖಂಡಿತ ಬರುತ್ತವೆ. ತಂದೆಯು ತಿಳಿಸಿದ್ದಾರೆ – ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಅಂತ್ಯದಲ್ಲಿ ಹೋಗಿ ಕರ್ಮಾತೀತ ಸ್ಥಿತಿಯಾಗುತ್ತದೆ, ಆಗ ಈ ಶರೀರವೇ ಇರುವುದಿಲ್ಲ. ಆದ್ದರಿಂದ ಸಮಯ ಹಿಡಿಸುತ್ತದೆ. ಒಂದಲ್ಲ ಒಂದು ವಿಘ್ನಗಳು ಬೀಳುತ್ತವೆ, ಕೆಲವೊಮ್ಮೆ ಮಾಯೆಯು ಸೋಲಿಸಿ ಬಿಡುತ್ತದೆ, ಮಲ್ಲ ಯುದ್ದವಲ್ಲವೆ. ತಂದೆಯ ನೆನಪಿನಲ್ಲಿ ಇರಬೇಕೆಂದು ಬಯಸುತ್ತಾರೆ ಆದರೆ ಇರಲು ಸಾಧ್ಯವಾಗುವುದಿಲ್ಲ. ಇನ್ನೂ ಅಲ್ಪಸ್ವಲ್ಪ ಯಾವ ಸಮಯವು ಉಳಿದಿದೆಯೋ ಅಲ್ಲಿಯವರೆಗೆ ನಿಧಾನ-ನಿಧಾನವಾಗಿ ಆ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾರೂ ಸಹ ಜನ್ಮ ಪಡೆದ ಕೂಡಲೇ ರಾಜಕುಮಾರನಾಗುವುದಿಲ್ಲ. ಚಿಕ್ಕಮಗು ನಿಧಾನ-ನಿಧಾನವಾಗಿ ಬೆಳವಣಿಗೆ ಆಗುತ್ತದೆಯಲ್ಲವೆ. ಇದರಲ್ಲಿಯೂ ಸಮಯ ಹಿಡಿಸುತ್ತದೆ. ಇನ್ನೂ ಸ್ವಲ್ಪ ಸಮಯ ಉಳಿದಿದೆ. ಎಲ್ಲವೂ ಪುರುಷಾರ್ಥದ ಮೇಲೆ ಆಧಾರಿತವಾಗಿದೆ. ಗಮನ ಕೊಡಬೇಕಾಗಿದೆ, ನಾವು ಹೇಗಾದರೂ ಮಾಡಿ ತಂದೆಯಿಂದ ಆಸ್ತಿಯನ್ನು ಖಂಡಿತ ತೆಗೆದುಕೊಳ್ಳುತ್ತೇವೆ. ಮಾಯೆಯನ್ನು ಖಂಡಿತ ಎದುರಿಸುತ್ತೇವೆ ಆದ್ದರಿಂದ ಪ್ರತಿಜ್ಞೆ ಮಾಡುತ್ತೇವೆ. ಮಾಯೆಯೂ ಕಡಿಮೆಯಿಲ್ಲ, ಬಹಳ ಚಿಕ್ಕ ರೂಪದಲ್ಲಿಯೂ ಬರುತ್ತದೆ. ಶಕ್ತಿಶಾಲಿಗಳ ಮುಂದೆ ಶಕ್ತಿಶಾಲಿಯಾಗಿಯೂ ಬರುತ್ತದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳಿಗೆ ಈಗ ತಿಳಿಸುತ್ತೇನೆ. ತಂದೆಯ ಮೂಲಕ ನೀವು ಸದ್ಗತಿಯನ್ನು ಪಡೆಯುತ್ತೀರಿ ನಂತರ ಈ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ, ಜ್ಞಾನದಿಂದ ಸದ್ಗತಿಯಾಗುತ್ತದೆ. ಸತ್ಯಯುಗಕ್ಕೆ ಸದ್ಗತಿಯೆಂದು ಹೇಳಲಾಗುತ್ತದೆ.
ಮಧುರಾತಿ ಮಧುರ ಮಕ್ಕಳಿಗೆ ಲಕ್ಷ್ಯವೂ ಸಿಕ್ಕಿದೆ - ಇದನ್ನೂ ತಿಳಿದುಕೊಂಡಿದ್ದೀರಿ - ಡ್ರಾಮಾ ಅನುಸಾರ ವೃಕ್ಷವು ವೃದ್ಧಿಯಾಗುವುದರಲ್ಲಿ ಸಮಯವಂತೂ ಹಿಡಿಸುತ್ತದೆ, ವಿಘ್ನಗಳು ಬಹಳ ಬರುತ್ತವೆ. ಪರಿವರ್ತನೆ ಆಗಬೇಕಾಗುತ್ತದೆ, ಕವಡೆಯಿಂದ ವಜ್ರ ಸಮಾನ ಆಗಬೇಕಾಗಿದೆ. ರಾತ್ರಿ-ಹಗಲಿನ ಅಂತರವಿದೆ. ದೇವತೆಗಳ ಮಂದಿರಗಳನ್ನು ಈಗಲೂ ಕಟ್ಟಿಸುತ್ತಿರುತ್ತಾರೆ, ನೀವು ಬ್ರಾಹ್ಮಣರು ಈಗ ಮಂದಿರಗಳನ್ನು ಕಟ್ಟಿಸುವುದಿಲ್ಲ ಏಕೆಂದರೆ ಅದು ಭಕ್ತಿಮಾರ್ಗವಾಗಿದೆ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗಿ ಜ್ಞಾನಮಾರ್ಗಕ್ಕೆ ಜಯವಾಗಲಿದೆ ಎಂದು ಪ್ರಪಂಚದವರಿಗೆ ಗೊತ್ತೇ ಇಲ್ಲ. ಇದು ಕೇವಲ ನೀವು ಮಕ್ಕಳಿಗೇ ತಿಳಿದಿದೆ - ಮನುಷ್ಯರಂತೂ ಕಲಿಯುಗವು ಇನ್ನೂ ಮಗುವಾಗಿದೆ ಎಂದು ತಿಳಿಯುತ್ತಾರೆ. ಅವರದೆಲ್ಲವೂ ಶಾಸ್ತ್ರಗಳ ಮೇಲೆ ಆಧಾರಿತವಾಗಿದೆ. ನೀವು ಮಕ್ಕಳಿಗೆ ತಂದೆಯು ಕುಳಿತು ಎಲ್ಲಾ ವೇದಶಾಸ್ತ್ರಗಳ ರಹಸ್ಯವನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ಇಲ್ಲಿಯವರೆಗೆ ನೀವು ಏನೆಲ್ಲವನ್ನೂ ಓದಿದ್ದೀರೋ ಅದೆಲ್ಲವನ್ನೂ ಮರೆತು ಹೋಗಿ, ಅದರಿಂದ ಯಾರದೇ ಸದ್ಗತಿಯಾಗುವುದಿಲ್ಲ. ಭಲೆ ಅಲ್ಪಕಾಲದ ಸುಖ ಸಿಗುತ್ತಾ ಬಂದಿದೆ. ಸದಾ ಸುಖವೇ ಸುಖ ಸಿಗಲು ಸಾಧ್ಯವಿಲ್ಲ. ಇದು ಕ್ಷಣ ಭಂಗುರ ಸುಖವಾಗಿದೆ. ಮನುಷ್ಯರು ದುಃಖದಲ್ಲಿರುತ್ತಾರೆ, ಸತ್ಯಯುಗದಲ್ಲಿ ದುಃಖದ ಹೆಸರೇ ಇರುವುದಿಲ್ಲ ಎಂಬುದು ಮನುಷ್ಯರಿಗೆ ಗೊತ್ತಿಲ್ಲ. ಅವರು ಅಲ್ಲಿಯೂ ಸಹ ಇಂತಹ ಮಾತುಗಳನ್ನು ತಿಳಿಸಿದ್ದಾರೆ – ಕೃಷ್ಣ ಪುರಿಯಲ್ಲಿ ಕಂಸನಿದ್ದನು..... ಕೃಷ್ಣನು ಜೈಲಿನಲ್ಲಿ ಜನ್ಮ ಪಡೆದನು...... ಹೀಗೆ ಅನೇಕ ಮಾತುಗಳನ್ನು ಬರೆದಿದ್ದಾರೆ. ಶ್ರೀಕೃಷ್ಣನು ಸ್ವರ್ಗದ ಮೊದಲ ರಾಜಕುಮಾರ, ಅಂದಮೇಲೆ ಕೃಷ್ಣನು ಏನು ಪಾಪ ಮಾಡಿದನು? ಇವು ದಂತ ಕಥೆಗಳಾಗಿವೆ. ಇದನ್ನೂ ಸಹ ತಂದೆಯು ಬಂದು ಸತ್ಯವನ್ನು ತಿಳಿಸಿರುವ ಕಾರಣ ನೀವೀಗ ತಿಳಿದುಕೊಂಡಿದ್ದೀರಿ, ತಂದೆಯೇ ಬಂದು ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ. ಸತ್ಯ ಖಂಡದಲ್ಲಿ ಎಷ್ಟೊಂದು ಸುಖವಿತ್ತು, ಅಸತ್ಯಖಂಡದಲ್ಲಿ ಎಷ್ಟೊಂದು ದುಃಖವಿದೆ. ಇದನ್ನು ಎಲ್ಲರೂ ಮರೆತು ಹೋಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ- ನಾವು ಶ್ರೀಮತದಂತೆ ಸತ್ಯ ಖಂಡವನ್ನು ಸ್ಥಾಪನೆ ಮಾಡಿ ಅದರ ಮಾಲೀಕರಾಗುತ್ತೇವೆ.
ತಂದೆಯು ತಿಳಿಸುತ್ತಾರೆ - ಹೀಗೆ ಶ್ರೀಮತದನುಸಾರ ನಡೆಯುವುದರಿಂದ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮಕ್ಕಳಿಗೆ ಇದು ತಿಳಿದಿದೆ - ನಾವು ಈ ವಿದ್ಯೆಯನ್ನು ಓದಿ ಸೂರ್ಯವಂಶಿ ಮಹಾರಾಜ-ಮಹಾರಾಣಿ ಆಗಬೇಕಾಗಿದೆ. ಶ್ರೇಷ್ಠ ಪದವಿಯನ್ನು ಪಡೆಯಲು ಎಲ್ಲರಿಗೂ ಮನಸ್ಸಾಗುತ್ತದೆ. ಎಲ್ಲರ ಪುರುಷಾರ್ಥವು ನಡೆಯುತ್ತದೆ, ಯಾರು ಪಕ್ಕಾ ಭಕ್ತರಿರುವರೋ ಅವರು ಚಿತ್ರವನ್ನು ಜೊತೆಯಿಟ್ಟುಕೊಳ್ಳುತ್ತಾರೆ. ಅದರಿಂದ ಪದೇ-ಪದೇ ಅವರ ನೆನಪು ಬರುತ್ತಿರುವುದು. ಹಾಗೆಯೇ ತಂದೆಯೂ ಸಹ ಹೇಳುತ್ತಾರೆ - ತ್ರಿಮೂರ್ತಿಯ ಚಿತ್ರವನ್ನು ಜೊತೆಯಿಟ್ಟುಕೊಳ್ಳಿ ಆಗ ಪದೇ-ಪದೇ ನೆನಪು ಬರುವುದು - ತಂದೆಯನ್ನು ನೆನಪು ಮಾಡುವುದರಿಂದ ನಾವು ಸೂರ್ಯವಂಶಿ ಮನೆತನದಲ್ಲಿ ಬರುತ್ತೇವೆ ಎಂದು. ಕೋಣೆಯಲ್ಲಿ ತ್ರಿಮೂರ್ತಿ ಚಿತ್ರವನ್ನು ಹಾಕಿರಿ ಆಗ ಅದರ ಕಡೆ ಪದೇ-ಪದೇ ದೃಷ್ಟಿಯು ಹೋಗುವುದು, ತಂದೆಯ ಮೂಲಕ ನಾವು ಈ ಸೂರ್ಯವಂಶಿ ಮನೆತನದಲ್ಲಿ ಬರುತ್ತೇವೆ. ಮುಂಜಾನೆ ಏಳುತ್ತಿದ್ದಂತೆಯೇ ದೃಷ್ಟಿಯು ಅದರ ಕಡೆ ಹೋಗುವುದು, ಇದೂ ಸಹ ಪುರುಷಾರ್ಥವಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಒಳ್ಳೊಳ್ಳೆಯ ಭಕ್ತರು ಬಹಳ ಪುರುಷಾರ್ಥ ಮಾಡುತ್ತಾರೆ. ಕಣ್ಣು ತೆರೆಯುತ್ತಿದ್ದಂತೆಯೇ ಕೃಷ್ಣನ ನೆನಪು ಬರಲಿ ಎಂದು ಕೃಷ್ಣನ ಚಿತ್ರವನ್ನು ಮುಂದಿಟ್ಟುಕೊಳ್ಳುತ್ತಾರೆ. ನಿಮಗೋಸ್ಕರವಂತೂ ಇನ್ನೂ ಸಹಜವಾಗಿದೆ. ಒಂದುವೇಳೆ ಸಹಜವಾಗಿ ನೆನಪು ಬರುವುದಿಲ್ಲ, ಮಾಯೆಯು ಸತಾಯಿಸುತ್ತದೆ ಎಂದರೆ ಆ ಸಮಯದಲ್ಲಿ ಈ ಚಿತ್ರಗಳು ಸಹಯೋಗ ನೀಡುತ್ತವೆ. ಶಿವ ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ನಾವು ತಂದೆಯಿಂದ ವಿಶ್ವದ ಮಾಲೀಕರಾಗುತ್ತಿದ್ದೇವೆ. ಈ ಸ್ಮರಣೆಯಿಂದ ಇರುವುದರಿಂದಲೂ ಬಹಳ ಸಹಯೋಗ ಸಿಗುವುದು. ಬಾಬಾ, ಪದೇ-ಪದೇ ನೆನಪು ಮರೆತುಹೋಗುತ್ತದೆ ಎಂದು ಹೇಳುವ ಮಕ್ಕಳಿಗೆ ತಂದೆಯು ಸಲಹೆ ನೀಡುತ್ತಾರೆ, ಚಿತ್ರವನ್ನು ಸಮ್ಮುಖದಲ್ಲಿಟ್ಟುಕೊಳ್ಳಿ ಆಗ ತಂದೆ ಹಾಗೂ ಆಸ್ತಿಯ ನೆನಪು ಬರುವುದು ಆದರೆ ಬ್ರಹ್ಮಾರವರನ್ನು ನೆನಪು ಮಾಡಬಾರದು. ನಿಶ್ಚಿತಾರ್ಥವಾದಾಗ ದಲ್ಲಾಳಿ ನೆನಪು ಬರುತ್ತದೆಯೇ! ನೀವು ತಂದೆಯನ್ನು ಚೆನ್ನಾಗಿ ನೆನಪು ಮಾಡಿ ಆಗ ತಂದೆಯೂ ಸಹ ನಿಮ್ಮನ್ನು ನೆನಪು ಮಾಡುವರು. ನೆನಪಿನಿಂದಲೇ ನೆನಪು ಸಿಗುತ್ತದೆ. ಈಗ ಪ್ರಿಯತಮನ ಬಗ್ಗೆ ನಿಮಗೆ ತಿಳಿದಿದೆ - ಶಿವನಿಗೆ ಎಷ್ಟೊಂದು ಮಂದಿ ಭಕ್ತರಿರುತ್ತಾರೆ, ಶಿವ-ಶಿವ ಎಂದು ಹೇಳುತ್ತಿರುತ್ತಾರೆ. ಆದರೆ ಅದು ತಪ್ಪಾಗಿದೆ. ಶಿವಕಾಶಿ ವಿಶ್ವನಾಥ ಎಂದು ಹೇಳಿ ಮತ್ತೆ ಗಂಗೆಯೆಂದು ಹೇಳಿ ಬಿಡುತ್ತಾರೆ. ನದಿಯ ತೀರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಜ್ಞಾನ ಸಾಗರನು ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಕಾಶಿಯನ್ನು ನೋಡುವುದಕ್ಕಾಗಿ ಎಷ್ಟೊಂದು ಮಂದಿ ವಿದೇಶಿಯರು ಹೋಗುತ್ತಾರೆ. ದೊಡ್ಡ-ದೊಡ್ಡ ಕಲ್ಯಾಣಿಗಳಿವೆ, ಆದರೂ ಸಹ ತಂದೆಯ ಮಂದಿರವು ಎಲ್ಲರನ್ನೂ ಸೆಳೆಯುತ್ತದೆ. ಶಿವ ತಂದೆಯು ಸೆಳೆಯುತ್ತಾರೆ, ನಂಬರ್ವನ್ ಶಿವ ತಂದೆಯಾಗಿದ್ದಾರೆ ನಂತರ ಬ್ರಹ್ಮಾ-ಸರಸ್ವತಿ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ. ಬ್ರಾಹ್ಮಣರಿಂದ ವಿಷ್ಣು ಪುರಿಯ ದೇವತೆಗಳು, ವಿಷ್ಣು ಪುರಿಯ ದೇವತೆಗಳಿಂದ ಮತ್ತೆ ಬ್ರಾಹ್ಮಣರು. ಈಗ ನಿಮ್ಮದು ಇದೇ ವ್ಯವಹಾರವಾಯಿತು, ನಾವೇ ದೇವತೆಗಳಾಗುತ್ತಿದ್ದೇವೆ ಅಂದಮೇಲೆ ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಮತ್ತೆಲ್ಲರೂ ಕಾಡಿಗೆ ಕರೆದುಕೊಂಡು ಹೋಗುವವರಾಗಿದ್ದಾರೆ, ನೀವೆಲ್ಲರೂ ಕಾಡಿನಿಂದ ಉದ್ಯಾನವನಕ್ಕೆ ಕರೆದುಕೊಂಡು ಹೋಗುತ್ತೀರಿ. ಶಿವ ತಂದೆಯು ಬಂದು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ, ನೀವೂ ಸಹ ಇದೇ ಕಾರ್ಯವನ್ನು ಮಾಡುತ್ತೀರಿ. ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ. ಈಗಂತೂ ಅವರಿಗೆ ತಿಳಿಸಿಕೊಡಲು ಯಾವುದೇ ರಾಜ-ರಾಣಿಯಿಲ್ಲ. ಪಾಂಡವರಿಗೆ ಮೂರು ಹೆಜ್ಜೆಗಳಷ್ಟು ಭೂಮಿಯೂ ಸಿಗುತ್ತಿರಲಿಲ್ಲ. ತಂದೆಯು ಸಮರ್ಥನಾಗಿದ್ದರು ಆದ್ದರಿಂದ ಅವರಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟರೆಂದು ಗಾಯನವಿದೆ. ಈಗಲೂ ಅದೇ ಪಾತ್ರವು ನಡೆಯುತ್ತದೆಯಲ್ಲವೆ. ತಂದೆಯು ಗುಪ್ತವಾಗಿದ್ದಾರೆ, ಕೃಷ್ಣನಿಗಂತೂ ಯಾವುದೇ ವಿಘ್ನ ಬೀಳಲು ಸಾಧ್ಯವಿಲ್ಲ. ಈಗ ತಂದೆಯು ಬಂದಿದ್ದಾರೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದಕ್ಕಾಗಿ ಪರಿಶ್ರಮ ಪಡಬೇಕಾಗಿದೆ. ದಿನ-ಪ್ರತಿದಿನ ಒಳ್ಳೊಳ್ಳೆಯ ವಿಚಾರಗಳು ಸಿಗುತ್ತಿರುತ್ತವೆ. ತಿಳಿಸುವುದರಿಂದಲೇ ಬಹಳ ಪ್ರಭಾವ ಬೀರುತ್ತದೆ. ಪ್ರದರ್ಶನಿಯು ಒಳ್ಳೆಯದೋ ಅಥವಾ ಪ್ರೊಜೆಕ್ಟರ್ ಒಳ್ಳೆಯದೋ? ಬುದ್ಧಿಗೆ ಕೆಲಸ ಕೊಡಬೇಕಾಗಿದೆ. ಪ್ರದರ್ಶನಿಯಿಂದ ಚೆನ್ನಾಗಿ ಸೇವೆಯಾಗುತ್ತದೆ, ಪ್ರದರ್ಶನಿಯಲ್ಲಿ ತಿಳಿಸುವಾಗ ಚಹರೆಯನ್ನು ನೋಡಿ ತಿಳಿಸಲಾಗುತ್ತದೆ. ಗೀತೆಯ ಭಗವಂತನು ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೀರಿ ಅಂದಮೇಲೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ಏಳುದಿನಗಳ ಸಮಯ ಕೊಡಬೇಕಾಗಿದೆ, ಬರೆದು ಕೊಡಿ. ಇಲ್ಲದಿದ್ದರೆ ಹೊರಗೆ ಹೋಗುತ್ತಿದ್ದಂತೆಯೇ ಮಾಯೆಯು ಮರೆಸಿ ಬಿಡುತ್ತದೆ. ನಿಮ್ಮ ಬುದ್ಧಿಯಲ್ಲಿ ಬಂದು ಬಿಟ್ಟಿತು – ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ, ಈಗ ಹೋಗಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಈ ಚಿತ್ರವಂತೂ ಜೊತೆಯಲ್ಲಿಯೇ ಇರಬೇಕಾಗಿದೆ. ಬಹಳ ಚೆನ್ನಾಗಿದೆ, ಈ ಲಕ್ಷ್ಮೀ-ನಾರಾಯಣರು ರಾಜ್ಯಭಾಗ್ಯವನ್ನು ಯಾವಾಗ ಮತ್ತು ಹೇಗೆ ಪಡೆದರು ಎಂಬುದನ್ನು ಬಿರ್ಲಾದವರೂ ಸಹ ತಿಳಿದುಕೊಂಡಿಲ್ಲ. ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ನಿಮಗೆ ಬಹಳ ಖುಷಿಯಿರಬೇಕು. ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆದುಕೊಂಡು ಯಾರಿಗಾದರೂ ತಿಳಿಸಿಕೊಡಿ - ಅವರು ಈ ಪದವಿಯನ್ನು ಹೇಗೆ ಪಡೆದರು? ಈ ಮಾತುಗಳು ಬುದ್ದಿಯಿಂದ ತಿಳಿದುಕೊಳ್ಳುವ ಹಾಗೂ ತಿಳಿಸುವಂತದ್ದಾಗಿದೆ. ಗುರಿಯು ಉನ್ನತವಾಗಿದೆ. ಯಾರು ಎಂತಹ ಶಿಕ್ಷಕರೋ ಅವರು ಅದೇರೀತಿ ಸರ್ವಿಸ್ ಮಾಡುತ್ತಾರೆ. ನೋಡುತ್ತೇವೆ - ಯಾರು ಯಾರು ತಮ್ಮ ಸ್ಥಿತಿಯನುಸಾರ ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುತ್ತಿದ್ದಾರೆ, ನಶೆಯಂತೂ ಎಲ್ಲರಿಗೂ ಇದೆ ಆದರೆ ವಿವೇಕವು ಹೇಳುತ್ತದೆ - ತಿಳಿಸುವವರು ಎಷ್ಟು ಬುದ್ಧಿವಂತರಾಗಿರುವರೋ ಅಷ್ಟು ಚೆನ್ನಾಗಿ ಸರ್ವಿಸ್ ಆಗುವುದು. ಎಲ್ಲರೂ ಬುದ್ಧಿವಂತರಾಗಿರಲು ಸಾಧ್ಯವಿಲ್ಲ. ಎಲ್ಲರಿಗೆ ಒಂದೇ ರೀತಿಯ ಶಿಕ್ಷಕರು ಸಿಗಲು ಸಾಧ್ಯವಿಲ್ಲ. ಕಲ್ಪದ ಮೊದಲು ಹೇಗೆ ನಡೆಯುತ್ತಿತ್ತೋ ಹಾಗೆಯೇ ನಡೆಯುತ್ತಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳುತ್ತಾ ಇರಿ. ಇದು ಕಲ್ಪ-ಕಲ್ಪದ ಆಟವಾಗಿದೆ. ಕಲ್ಪದ ಹಿಂದಿನ ತರಹ ಪ್ರತಿಯೊಬ್ಬರ ಪುರುಷಾರ್ಥವು ನಡೆಯುತ್ತಿದೆ. ಏನೆಲ್ಲವೂ ಆಗುತ್ತದೆಯೋ ಕಲ್ಪದ ಮೊದಲೂ ಸಹ ಇದೇ ರೀತಿಯಾಗಿತ್ತು ಎಂದು ನಾವು ಹೇಳುತ್ತೇವೆ. ಆಗ ಖುಷಿಯೂ ಇರುತ್ತದೆ, ಶಾಂತಿಯೂ ಇರುತ್ತದೆ. ತಂದೆಯು ತಿಳಿಸುತ್ತಾರೆ – ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡಿ. ಬುದ್ಧಿಯೋಗವು ಅಲ್ಲಿಯೇ ತಗುಲಿ ಹಾಕಿಕೊಂಡಿರಲಿ ಆಗ ಅನೇಕರ ಕಲ್ಯಾಣವಾಗುವುದು. ಯಾರು ಮಾಡುವರೋ ಅವರು ಪಡೆಯುವರು. ಒಳ್ಳೆಯದನ್ನು ಮಾಡಿದರೆ ಒಳ್ಳೆಯದನ್ನೇ ಪಡೆಯುವರು. ಮಾಯೆಯ ಮತದಂತೆ ಎಲ್ಲರೂ ಕೆಟ್ಟದ್ದನ್ನೇ ಮಾಡುತ್ತಾ ಬಂದಿದ್ದಾರೆ, ಈಗ ಶ್ರೀಮತವು ಸಿಗುತ್ತದೆ, ಒಳ್ಳೆಯದನ್ನು ಮಾಡಿದರೆ ಒಳ್ಳೆಯದೇ ಆಗುವುದು. ಪ್ರತಿಯೊಬ್ಬರೂ ತನಗಾಗಿ ಪರಿಶ್ರಮ ಪಡುತ್ತಾರೆ. ಹೇಗೆ ಮಾಡುವರೋ ಹಾಗೆಯೇ ಪಡೆಯುವರು. ನಾವೇಕೆ ಯೋಗವನ್ನಿಡುತ್ತಾ ಸರ್ವಿಸ್ ಮಾಡಬಾರದು! ಯೋಗದಿಂದ ಆಯಸ್ಸು ಹೆಚ್ಚುವುದು. ನೆನಪಿನ ಯಾತ್ರೆಯಿಂದ ನಿರೋಗಿಗಳಾಗಬೇಕಾಗಿದೆ ಅಂದಮೇಲೆ ನಾವೇಕೆ ತಂದೆಯ ನೆನಪಿನಲ್ಲಿ ಇರಬಾರದು! ಯಥಾರ್ಥ ಮಾತಾಗಿದೆ ಅಂದಮೇಲೆ ನಾವೇಕೆ ಪ್ರಯತ್ನ ಪಡಬಾರದು! ಜ್ಞಾನವು ಬಹಳ ಸಹಜವಾಗಿದೆ, ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳುತ್ತಾರೆ ಮತ್ತು ತಿಳಿಸುತ್ತಾರೆ. ಆದರೆ ಅವರು ಯೋಗಿಗಳಾಗಲಿಲ್ಲ. ಇದನ್ನು ಪಕ್ಕಾ ಮಾಡಿಸಬೇಕಾಗಿದೆ - ತಂದೆಯನ್ನು ನೆನಪು ಮಾಡಿ. ಪದೇ-ಪದೇ ಮರೆತು ಹೋಗುತ್ತದೆ ಎಂದು ಯಾರು ತಿಳಿಯುವರೋ ಅವರು ಚಿತ್ರಗಳನ್ನಿಟ್ಟುಕೊಳ್ಳಿ. ಇದೂ ಒಳ್ಳೆಯದೇ ಆಗಿದೆ. ಮುಂಜಾನೆ ಚಿತ್ರವನ್ನು ನೋಡಿದಕೂಡಲೇ ನೆನಪಿಗೆ ಬಂದು ಬಿಡುತ್ತದೆ – ಶಿವ ತಂದೆಯಿಂದ ನಾವು ವಿಷ್ಣು ಪುರಿಯ ಆಸ್ತಿಯನ್ನು ಪಡೆಯುತ್ತಿದ್ದೇವೆ. ಈ ತ್ರಿಮೂರ್ತಿಯ ಚಿತ್ರವೇ ಮುಖ್ಯವಾಗಿದೆ. ಇದರ ಅರ್ಥವನ್ನು ನೀವೀಗ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಇಂತಹ ತ್ರಿಮೂರ್ತಿ ಚಿತ್ರವು ಮತ್ತ್ಯಾರ ಬಳಿಯೂ ಇಲ್ಲ. ನಾವು ಬರೆಯಲಿ, ಬರೆಯದೇ ಇರಲಿ ಇದಂತೂ ಎಲ್ಲರಿಗೂ ಗೊತ್ತಿದೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಾಯೆಯ ಬಾಕ್ಸಿಂಗ್ನಲ್ಲಿ ಎಂದೂ ಸೋಲುಂಟಾಗಬಾರದು. ಇದರ ಮೇಲೆ ಗಮನ ಇಡಬೇಕಾಗಿದೆ. ಕಲ್ಪದ ಮೊದಲಿನ ಸ್ಮೃತಿಯಿಂದ ತಮ್ಮ ಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳಬೇಕಾಗಿದೆ. ಖುಷಿ ಮತ್ತು ಶಾಂತಿಯಲ್ಲಿರಬೇಕಾಗಿದೆ.
2. ತಮ್ಮ ಉನ್ನತಿ ಮಾಡಿಕೊಳ್ಳುವುದಕ್ಕಾಗಿ ಶ್ರೀಮತದಂತೆ ನಡೆಯಬೇಕಾಗಿದೆ. ಈ ಹಳೆಯ ಪ್ರಪಂಚದೊಂದಿಗಿನ ಸಂಬಂಧವನ್ನು ತೆಗೆಯಬೇಕಾಗಿದೆ. ಮಾಯೆಯ ಬಿರುಗಾಳಿಗಳಿಂದ ಪಾರಾಗಲು ಚಿತ್ರಗಳನ್ನು ಸಮ್ಮುಖದಲ್ಲಿಟ್ಟುಕೊಂಡು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ.
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ- ಈಗ ಇದಂತೂ ಮಕ್ಕಳು ತಿಳಿದುಕೊಂಡಿದ್ದೀರಿ- ದೈವೀ ಸ್ವರಾಜ್ಯದ ಉದ್ಘಾಟನೆಯಂತೂ ಆಗಿಬಿಟ್ಟಿದೆ. ಅಲ್ಲಿಗೆ ಹೋಗಲು ಈಗ ತಯಾರಿಯಾಗುತ್ತಿದೆ. ಎಲ್ಲಿಯಾದರೂ ಯಾವುದೇ ಶಾಖೆಗಳನ್ನು (ಸೇವಾಕೇಂದ್ರ) ತೆರೆಯುತ್ತಾರೆಂದರೆ ಗಣ್ಯವ್ಯಕ್ತಿಗಳ ಮೂಲಕ ಉದ್ಘಾಟನೆ ಮಾಡಿಸಲು ಪ್ರಯತ್ನಪಡಲಾಗುತ್ತದೆ. ಗಣ್ಯವ್ಯಕ್ತಿಗಳನ್ನು ನೋಡಿ ಅವರ ಕೆಳಗಿನ ಆಫೀಸರ್ ಮುಂತಾದವರೆಲ್ಲರೂ ಬಂದುಬಿಡುತ್ತಾರೆ. ಒಂದುವೇಳೆ ಗವರ್ನರ್ ಬರುತ್ತಾರೆಂದರೆ ದೊಡ್ಡ-ದೊಡ್ಡ ಮಂತ್ರಿಗಳು ಮುಂತಾದವರು ಬಂದುಬಿಡುತ್ತಾರೆ. ಒಂದುವೇಳೆ ಕಲೆಕ್ಟರ್ಗೆ ನೀವು ಕರೆ ನೀಡುತ್ತೀರೆಂದರೆ ಗಣ್ಯವ್ಯಕ್ತಿಗಳು ಬರುವುದಿಲ್ಲ ಆದ್ದರಿಂದ ಗಣ್ಯವ್ಯಕ್ತಿಗಳು ಬರಬೇಕೆಂದರೆ ಪ್ರಯತ್ನಪಡಬೇಕಾಗುತ್ತದೆ. ಒಂದಲ್ಲ ಒಂದು ನೆಪದಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಪರಿಶ್ರಮಪಡಬೇಕಾಗುತ್ತದೆ. ಒಂದಲ್ಲ ಒಂದು ನೆಪದಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಹೇಗೆ ಸಿಗುತ್ತಿದೆ ಎಂದು ಅವರಿಗೆ ಮಾರ್ಗವನ್ನು ತೋರಿಸಿ. ನಿಮ್ಮ ವಿನಃ ಬೇರೆ ಯಾರೂ ಸಹ ಇದನ್ನು ತಿಳಿದುಕೊಂಡಿರುವ ಮನುಷ್ಯರು ಯಾರೂ ಇರುವುದಿಲ್ಲ. ಭಗವಂತ ಬಂದಿದ್ದಾರೆಂದೂ ಸಹ ಹೇಳಬಾರದು. ಕೆಲವರು ಭಗವಂತ ಬಂದುಬಿಟ್ಟಿದ್ದಾರೆಂದು ಹೇಳಿಬಿಡುತ್ತಾರೆ. ಆ ರೀತಿ ಹೇಳಬಾರದು ಏಕೆಂದರೆ ನಾನೇ ಭಗವಂತನೆಂದು ಹೇಳಿಕೊಳ್ಳುವವರು ಬಹಳ ಇದ್ದಾರೆ. ಬೇಹದ್ದಿನ ತಂದೆಯು ಬಂದು ಬೇಹದ್ದಿನ ನಾಟಕದನುಸಾರ ಆಸ್ತಿಯನ್ನು ಕೊಡುತ್ತಿದ್ದಾರೆಂದು ತಿಳಿಸಬೇಕು. ಈ ವಾಕ್ಯವನ್ನು ಸಂಪೂರ್ಣವಾಗಿ ಬರೆಯಬೇಕು. ಮನುಷ್ಯರು ಬರೆದಿರುವುದನ್ನು ಓದುತ್ತಾರೆ ಅವರ ಅದೃಷ್ಟದಲ್ಲಿದ್ದಾಗ ಪ್ರಯತ್ನಪಡುತ್ತಾರೆ. ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ನಿಮಗೆ ಗೊತ್ತಿದೆಯಲ್ಲವೆ. ಇಲ್ಲಿಗೆ ನಿಶ್ಚಯಬುದ್ಧಿ ಮಕ್ಕಳು ಮಾತ್ರ ಬರುತ್ತಾರೆ. ನಿಶ್ಚಯಬುದ್ಧಿ ಮಕ್ಕಳೇ ಮತ್ತೆ ಕೆಲವೊಮ್ಮೆ ಸಂಶಯ ಬುದ್ಧಿಯವರಾಗಿಬಿಡುತ್ತಾರೆ. ಮಾಯೆಯು ಹಿಂದೆ ಬೀಳುತ್ತದೆ. ನಡೆಯುತ್ತಾ-ನಡೆಯುತ್ತಾ ಸೋತುಬಿಡುತ್ತಾರೆ. ಒಂದೇ ಕಡೆ ಗೆಲ್ಲುವಂಥಹ ನಿಯಮವೂ ಇಲ್ಲ. ಸೋಲಬಾರದೆಂಬ ಮಾತೂ ಇಲ್ಲ. ಸೋಲು-ಗೆಲುವು ಎರಡೂ ನಡೆಯುತ್ತದೆ. ಯುದ್ಧದಲ್ಲಿಯೂ ಮೂರು ಪ್ರಕಾರದಲ್ಲಿರುತ್ತದೆ - ಫಸ್ಟ್ಕ್ಲಾಸ್, ಸೆಕೆಂಡ್, ಥರ್ಡ್..... ಒಮ್ಮೊಮ್ಮೆ ಯುದ್ಧ ಮಾಡದವರನ್ನೂ ನೋಡಲಾಗುತ್ತದೆ. ಅವರನ್ನೂ ಸಹ ಸೇರಿಸಿಕೊಳ್ಳಲಾಗುವುದು. ಬಹುಷಃ ಅವರಿಗೂ ಸೈನ್ಯದಲ್ಲಿದ್ದು ಯುದ್ಧ ಮಾಡುವಂತಹ ವಿಧಿ ಬರಬಹುದು, ಆಗ ಸೇನೆಯಲ್ಲಿ ಸೇರಿಸಿಕೊಳ್ಳಬಹುದು ಏಕೆಂದರೆ ಪ್ರಪಂಚದವರಿಗೆ ನೀವು ಮಹಾರಥಿ ಯೋಧರೆಂದು ಅವರಿಗೆ ತಿಳಿದಿಲ್ಲ. ಆದರೆ ನಿಮ್ಮ ಕೈಯಲ್ಲಿ ಯಾವುದೇ ರೀತಿಯ ಆಯುಧಗಳಿಲ್ಲ. ನಿಮ್ಮ ಕೈಯಲ್ಲಿ ಆಯುಧಗಳು ಶೋಭಿಸುವುದಿಲ್ಲ ಆದರೆ ತಂದೆಯು ತಿಳಿಸುತ್ತಾರೆ - ಜ್ಞಾನವು ಖಡ್ಗವಾಗಿದೆ, ಜ್ಞಾನವೇ ಕಠಾರಿಯಾಗಿದೆ ಆದರೆ ಅವರು ಸ್ಥೂಲ ಆಯುಧಗಳೆಂದು ತಿಳಿದುಕೊಂಡುಬಿಟ್ಟಿದ್ದಾರೆ. ನೀವು ಮಕ್ಕಳಿಗೆ ತಂದೆಯು ಜ್ಞಾನದ ಅಸ್ತಶಸ್ತ್ರಗಳನ್ನು ಕೊಡುತ್ತಾರೆ ಇದರಲ್ಲಿ ಹಿಂಸೆಯ ಮಾತಿಲ್ಲ ಆದರೆ ಇದನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ದೇವಿಯರಿಗೆ ಸ್ತೂಲ ಅಸ್ತ್ರಶಸ್ತ್ರಗಳನ್ನೆಲ್ಲಾ ಕೊಟ್ಟುಬಿಟ್ಟಿದ್ದಾರೆ, ಅವರನ್ನೂ ಹಿಂಸಕರನ್ನಾಗಿ ಮಾಡಿಬಿಟ್ಟಿದ್ದಾರೆ. ಇದು ಅವಶ್ಯವಾಗಿ ಬುದ್ಧಿಹೀನ ಕಾರ್ಯವಾಗಿದೆ. ಯಾರು-ಯಾರು ಹೂವಾಗುತ್ತಿದ್ದಾರೆಂದು ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ ಆದ್ದರಿಂದ ಸ್ವಯಂ ತಂದೆಯು ಹೂಗಳನ್ನು ಮುಂದೆ ಇರುವಂತೆ ಹೇಳಿದ್ದಾರೆ. ಇವರು ಸದಾ ಹೂವಾಗುವವರಾಗಿದ್ದಾರೆ. ತಂದೆಯು ಯಾರ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ ಇಲ್ಲವೆಂದರೆ ಅನ್ಯರು ಕೇಳುತ್ತಾರೆ- ನಾವು ಮುಳ್ಳಾಗುತ್ತೇವೆಯೇ? ನರನಿಂದ ನಾರಾಯಣ ಯಾರಾಗುತ್ತೀರೆಂದರೆ ಎಲ್ಲರೂ ಕೈಯೆತ್ತುತ್ತಾರೆ. ನೀವೂ ಸಹ ಸ್ವಯಂ ತಿಳಿದುಕೊಂಡಿದ್ದೀರಿ- ಯಾರು ಹೆಚ್ಚು ಸೇವೆಯನ್ನು ಮಾಡುತ್ತಾರೆ ಹಾಗೂ ತಂದೆಯನ್ನು ನೆನಪು ಮಾಡುತ್ತಾರೆಯೋ ಅವರು ನಾರಾಯಣರಾಗುತ್ತಾರೆ. ನೆನಪು ಮಾಡದೇ ಇದ್ದರೆ ಪ್ರೀತಿಯಿಲ್ಲವೆಂದರ್ಥ. ಪ್ರೀತಿಯಿರುವ ವಸ್ತುವನ್ನು ಬಹಳ ನೆನಪು ಮಾಡಲಾಗುವುದು. ಮಕ್ಕಳು ಪ್ರಿಯವಾಗಿದ್ದಾಗ ತಂದೆ-ತಾಯಿ ತಮ್ಮ ಮಡಿಲಿನಲ್ಲಿಯೇ ಬೆಳೆಸುತ್ತಾರೆ. ಚಿಕ್ಕಮಕ್ಕಳೂ ಸಹ ಹೂವಾಗಿದ್ದಾರೆ! ನೀವು ಮಕ್ಕಳಿಗೂ ಸಹ ಶಿವತಂದೆಯ ಬಳಿಗೆ ಹೋಗಲು ಮನಸ್ಸಾಗುತ್ತದೆ. ಹಾಗೆಯೇ ಚಿಕ್ಕಮಕ್ಕಳೂ ಸಹ ಆಕರ್ಷಣೆ ಮಾಡುತ್ತಾರೆ. ತಕ್ಷಣ ಮಕ್ಕಳನ್ನು ಎತ್ತಿಕೊಂಡು ಮಡಿಲಿನಲ್ಲಿ ಕುಳ್ಳರಿಸಿಕೊಂಡು ಪ್ರೀತಿ ಮಾಡುತ್ತಾರೆ.
ಈ ಬೇಹದ್ದಿನ ತಂದೆಯು ಬಹಳ ಪ್ರಿಯರಾಗಿದ್ದಾರೆ, ಎಲ್ಲರ ಶುಭಕಾಮನೆಗಳನ್ನು ಪೂರ್ಣ ಮಾಡುತ್ತಾರೆ, ಮನುಷ್ಯರಿಗೆ ಏನು ಬೇಕು? ಆರೋಗ್ಯ ಚೆನ್ನಾಗಿರಲಿ ಎಂದು ಬಯಸುತ್ತಾರೆ ಎಂದೂ ರೋಗ ಬರದಿರಲಿ ಎಲ್ಲದಕ್ಕಿಂತ ಉತ್ತಮವಾದುದು ಆರೋಗ್ಯವಾಗಿದೆ. ಆರೋಗ್ಯ ಚೆನ್ನಾಗಿದ್ದು ಹಣವಿಲ್ಲದಿದ್ದರೆ ಆ ಆರೋಗ್ಯವು ಯಾವ ಕೆಲಸಕ್ಕೆ ಬರುತ್ತದೆ? ಆದ್ದರಿಂದ ಧನವೂ ಬೇಕಾಗುತ್ತದೆ, ಅದರಿಂದ ಸುಖವು ಪ್ರಾಪ್ತಿಯಾಗುತ್ತದೆ. ತಂದೆಯು ತಿಳಿಸುತ್ತಾರೆ - ನಿಮಗೆ ಆರೋಗ್ಯ, ಐಶ್ವರ್ಯಗಳೆರಡೂ ಸಹ ಸಿಗುತ್ತದೆ. ಇದ್ಯಾವುದೂ ಸಹ ಹೊಸಮಾತಲ್ಲ. ಇದು ಬಹಳ ಹಳೆಯ ಮಾತಾಗಿದೆ. ನೀವು ಯಾವಾಗ ಮಿಲನ ಮಾಡುತ್ತೀರಿ ಆಗ ಎಲ್ಲರೂ ಈ ರೀತಿಯಾಗಿ ಹೇಳುತ್ತೀರಿ ಆದರೆ ಲಕ್ಷಾಂತರ ಅಥವಾ ಪದಮಗಳಷ್ಟು ವರ್ಷಗಳಾಗಿವೆ ಎಂದು ಹೇಳುವುದಿಲ್ಲ. ಇಲ್ಲ ಈ ಪ್ರಪಂಚವು ಯಾವಾಗ ಹೊಸದಾಗುತ್ತದೆ, ಯಾವಾಗ ಹಳೆಯದಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ನಾವಾತ್ಮಗಳು ಹೊಸಪ್ರಪಂಚಕ್ಕೆ ಹೋಗುತ್ತೇವೆ ಮತ್ತೆ ಹಳೆಯ ಪ್ರಪಂಚದಲ್ಲಿ ಬರುತ್ತೇವೆ. ನಿಮಗೆ ಆಲ್ರೌಂಡರ್ ಎಂದು ಹೆಸರನ್ನಿಡಲಾಗಿದೆ. ತಂದೆಯು ನೀವು ಆಲ್ರೌಂಡರ್ ಎಂದು ತಿಳಿಸಿದ್ದಾರೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಅಂತಿಮ ಜನ್ಮದಲ್ಲಿ ಬಂದು ತಲುಪಿದ್ದೀರಿ. ಮೊಟ್ಟಮೊದಲು ನೀವು ಪಾತ್ರವನ್ನಭಿನಯಿಸಲು ಬರುತ್ತೀರಿ. ಅದು ಮಧುರ ಶಾಂತಿಯ ಮನೆಯಾಗಿದೆ. ಮನುಷ್ಯರು ಶಾಂತಿಗಾಗಿ ಎಷ್ಟೊಂದು ಕಷ್ಟಪಡುತ್ತಾರೆ. ನಾವು ಶಾಂತಿಧಾಮದಲ್ಲಿರುವವರು ಅಲ್ಲಿಂದ ಪಾತ್ರವನ್ನಭಿನಯಿಸಲು ಬಂದಿದ್ದೇವೆಂದು ಅವರು ತಿಳಿದುಕೊಂಡಿಲ್ಲ. ಪಾತ್ರ ಪೂರ್ಣವಾದ ನಂತರ ಪುನಃ ನಾವು ಎಲ್ಲಿಂದ ಬಂದಿದ್ದೇವೋ ಅಲ್ಲಿಗೆ ಅವಶ್ಯವಾಗಿ ಹೋಗುತ್ತೇವೆ ಎಲ್ಲರೂ ಶಾಂತಿಧಾಮದಿಂದ ಬರುತ್ತಾರೆ ಎಲ್ಲರ ಮನೆಯು ಆ ಬಹ್ಮ್ಲೋಕ, ಬ್ರಹ್ಮಾಂಡವಾಗಿದೆ. ಎಲ್ಲಿ ಎಲ್ಲಾ ಆತ್ಮಗಳು ವಾಸಮಾಡುತ್ತಾರೆ. ರುದ್ರನನ್ನು ಬಹಳ ದೊಡ್ಡದಾಗಿ, ಅಂಡಾಕಾರದಲ್ಲಿ ಮಾಡುತ್ತಾರೆ. ಅವರಿಗೆ ಆತ್ಮವು ಅತಿಸೂಕ್ಷ್ಮವಾಗಿದೆ ಎಂದು ತಿಳಿದಿಲ್ಲ. ನಕ್ಷತ್ರದಂತೆಯೇ ಇದೆಯೆಂದು ಹೇಳುತ್ತಾರೆ ಆದರೆ ಪೂಜೆಗಾಗಿ ದೊಡ್ಡದಾಗಿ ಮಾಡಲಾಗುತ್ತದೆ. ಇಷ್ಟು ಚಿಕ್ಕಬಿಂದುವಿಗೆ ಪೂಜೆ ಮಾಡಲು ಆಗುವುದಿಲ್ಲವೆಂದು ನೀವು ತಿಳಿದುಕೊಂಡಿದ್ದೀರಿ ಆದ್ದರಿಂದ ದೊಡ್ದದಾಗಿ ಮಾಡಿ ಪೂಜಿಸುತ್ತಾರೆ, ಹಾಲನ್ನೂ ಅರ್ಪಣೆ ಮಾಡುತ್ತಾರೆ. ವಾಸ್ತವದಲ್ಲಿ ಶಿವ ಅಭೋಕನಾಗಿದ್ದಾರೆ ಹಾಗಾದರೆ ಅವರಿಗೆ ಹಾಲನ್ನು ಏಕೆ ಅರ್ಪಿಸುತ್ತಾರೆ? ಹಾಲನ್ನು ಕುಡಿಯುವುದಾದರೆ ಅವರು ಪುನಃ ಭೋಕ್ತರಾದರು. ಇದೊಂದು ಆಶ್ಚರ್ಯದ್ದಾಗಿದೆ! ಎಲ್ಲರೂ ಸಹ ಅವರು ನಮ್ಮ ಮಗನಾಗಿದ್ದಾರೆ, ನಾವು ಅವರಿಗೆ ಮಗುವಾಗಿದ್ದಾರೆಂದು ಹೇಳಿ ಅವರ ಮೇಲೆ ಬಲಿಹಾರಿಯಾಗುತ್ತಾರೆ. ಹೇಗೆ ತಂದೆಯು ಮಕ್ಕಳಿಗೆ ಬಲಿಹಾರಿಯಾಗಿ ತನ್ನೆಲ್ಲಾ ಆಸ್ತಿಯನ್ನು ಅವರಿಗೆ ಕೊಟ್ಟು ನಂತರ ಸ್ವಯಂ ವಾನಪ್ರಸ್ಥದಲ್ಲಿ ಹೊರಟುಹೋಗುತ್ತಾರೆ. ಇಲ್ಲಿ ನೀವು ತಂದೆಯ ಬಳಿ ಜಮಾ ಮಾಡಿದರೆ ನಮ್ಮದು ಸುರಕ್ಷಿತವಾಗಿರುತ್ತದೆಯೆಂದು ನೀವು ತಿಳಿದಿದ್ದೀರಿ. ಗಾಯನವೂ ಇದೆ- ಕೆಲವರದು ಮಣ್ಣುಪಾಲಾಯಿತು....... ಇದ್ಯಾವುದೂ ಇರುವುದಿಲ್ಲವೆಂದು ನೀವು ಮಕ್ಕಳಿಗೆ ತಿಳಿದಿದೆ. ಎಲ್ಲವೂ ಭಸ್ಮವಾಗಿಬಿಡುತ್ತದೆ. ಈ ರೀತಿಯೂ ತಿಳಿದುಕೊಳ್ಳಬಾರದು- ವಿಮಾನವು ಬಿತ್ತು, ವಿಮಾನವು ಬಿದ್ದಾಗ ಕಳ್ಳರಿಗೆ ಮಾಲು ಸಿಗುತ್ತದೆ ಆದರೆ ವಿನಾಶದ ಸಮಯದಲ್ಲಿ ಕಳ್ಳರೂ ಸಹ ಸಮಾಪ್ತಿಯಾಗಿಬಿಡುತ್ತಾರೆ. ಆ ಸಮಯದಲ್ಲಿ ಕಳ್ಳರು ಮೊದಲಾದವರಿರುವುದಿಲ್ಲ ಇಲ್ಲದಿದ್ದರೆ ವಿಮಾನವೇನಾದರೂ ಬಿದ್ದಲ್ಲಿ ಎಲ್ಲಾ ಸಾಮಾನು ಕಳ್ಳರ ಕೈಗೆ ಹೋಗಿಬಿಡುತ್ತದೆ. ಅವರು ಅಲ್ಲಿಯೇ ಕಾಡುಗಳಲ್ಲಿ ಅದೆಲ್ಲವನ್ನೂ ಬಚ್ಚಿಟ್ಟುಬಿಡುತ್ತಾರೆ, ಒಂದು ಸೆಕೆಂಡಿನಲ್ಲಿ ಎಲ್ಲವನ್ನೂ ಮಾಡಿ ಮುಗಿಸುತ್ತಾರೆ. ಅನೇಕ ಪ್ರಕಾರದಿಂದ ಕೆಲಸ ಮಾಡಿಮುಗಿಸುತ್ತಾರೆ. ಕೆಲವರು ಘನತೆ (ರಾಯಲ್ಟಿ) ಯಿಂದ ಕೆಲವರು ಘನತೆಗೆ ವಿರುದ್ಧವಾದ (ಅನ್-ರಾಯಲ್ಟಿ) ಕೆಲಸ ಮಾಡುತ್ತಾರೆ. ನಿಮಗೆ ಗೊತ್ತಿದೆ- ಎಲ್ಲವೂ ವಿನಾಶವಾಗುತ್ತದೆ ನಂತರ ನೀವು ವಿಶ್ವದ ಮಾಲೀಕರಾಗಿಬಿಡುತ್ತೀರಿ. ಆಗ ನೀವು ಎಲ್ಲಿಯೂ ಏನೂ ಹುಡುಕುವ ಅವಶ್ಯಕತೆಯಿರುವುದಿಲ್ಲ, ಶ್ರೇಷ್ಠಮನೆಯಲ್ಲಿ ಜನ್ಮಪಡೆಯುತ್ತೀರಿ, ಅಲ್ಲಿ ಹಣದ ಕೊರತೆಯೂ ಇರುವುದಿಲ್ಲ. ರಾಜರಿಗೆ ಎಂದಿಗೂ ಹಣವನ್ನು ಪಡೆಯುವ ವಿಚಾರವು ಬರುವುದಿಲ್ಲ. ದೇವತೆಗಳಿಗಂತೂ ಕಿಂಚಿತ್ತೂ ಇರುವುದಿಲ್ಲ. ಈ ರೀತಿಯಾಗಿ ತಂದೆಯು ನಿಮಗೆ ಎಂದಿಗೂ ಕಳ್ಳತನ ನಡೆಯದಂತಹ ಅಸೂ0iÉುಪಡದಂತಹ ರೀತಿಯಲ್ಲಿ ಎಲ್ಲವನ್ನೂ ಕೊಟ್ಟುಬಿಡುತ್ತಾರೆ. ನೀವು ಸಂಪೂರ್ಣ ಹೂವಾಗಿಬಿಡುತ್ತೀರಿ. ಮುಳ್ಳು ಮತ್ತು ಹೂಗಳಿವೆಯಲ್ಲವೆ. ಇಲ್ಲಿ ಎಲ್ಲರೂ ಮುಳ್ಳೇ ಮುಳ್ಳಾಗಿದ್ದಾರೆ. ಯಾರು ವಿಕಾರದ ವಿನಃ ಇರುವುದಿಲ್ಲವೋ ಅವರಿಗೆ ಮುಳ್ಳೆಂದು ಹೇಳಬೇಕಾಗುತ್ತದೆ. ರಾಜನಿಂದ ಹಿಡಿದು ಎಲ್ಲರೂ ಮುಳ್ಳಾಗಿದ್ದಾರೆ ಆದ್ದರಿಂದ ನಿಮ್ಮನ್ನು ಈ ಲಕ್ಷ್ಮೀ-ನಾರಾಯಣರಂತೆ ಮಾಡುತ್ತೇನೆ ಅರ್ಥಾತ್ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆಂದು ತಿಳಿಸುತ್ತಾರೆ. ಇಲ್ಲಿಯ ಮುಳ್ಳುಗಳು ಹೂಗಳ ಮುಂದೆಹೋಗಿ ತಲೆಬಾಗುತ್ತಾರೆ. ಈ ಲಕ್ಷ್ಮೀ-ನಾರಾಯಣರಂತೂ ಬುದ್ಧಿವಂತರಲ್ಲವೆ. ಸತ್ಯಯುಗದವರಿಗೆ ಮಹಾರಾಜರೆಂದು, ತ್ರೇತಾದವರಿಗೆ ರಾಜರೆಂದು ಕರೆಯಲಾಗುತ್ತದೆ ಎಂಬ ಮಾತುಗಳನ್ನು ತಂದೆಯು ತಿಳಿಸಿಕೊಟ್ಟಿದ್ದಾರೆ. ದೊಡ್ಡ ಮನುಷ್ಯನಿಗೆ ಮಹಾರಾಜನೆಂದು, ಚಿಕ್ಕವ್ಯಕ್ತಿಗೆ ರಾಜನೆಂದು ಕರೆಯಲಾಗುತ್ತದೆ. ಮೊದಲು ಮಹಾರಾಜನ ಸಭೆಯು ನಡೆಯುತ್ತದೆ, ಪದವಿಯಿರುತ್ತದೆಯಲ್ಲವೆ. ಕುರ್ಚಿಯೂ ಸಹ ನಂಬರ್ವಾರ್ ಸಿಗುತ್ತದೆ. ಒಂದುವೇಳೆ ಎಂದೂ ಬಾರದವರು ಬಂದಾಗ ಮೊದಲು ಅವರಿಗೆ ಕುರ್ಚಿಯನ್ನು ಕೊಡುತ್ತೀರಲ್ಲವೆ. ಗೌರವ ಕೊಡಬೇಕಾಗುತ್ತದೆ.
ನಮ್ಮ ಮಾಲೆಯಾಗುತ್ತದೆ ಎಂದು ನೀವು ತಿಳಿದಿದ್ದೀರಿ. ಇದೂ ಸಹ ನಿಮ್ಮ ವಿನಃ ಬೇರೆ ಯಾರ ಬುದ್ಧಿಯಲ್ಲಿಯೂ ಇರಲು ಸಾಧ್ಯವಿಲ್ಲ. ರುದ್ರಮಾಲೆಯನ್ನು ತೆಗೆದುಕೊಂಡು ಜಪ ಮಾಡುತ್ತಾರೆ. ನೀವೂ ಸಹ ಜಪ ಮಾಡುತ್ತಿದ್ದಿರಲ್ಲವೆ! ಅನೇಕ ಮಂತ್ರಗಳನ್ನು ಜಪಿಸುತ್ತಿದ್ದಿರಿ. ಇದೆಲ್ಲವೂ ಭಕ್ತಿಯೆಂದು ತಂದೆಯು ತಿಳಿಸುತ್ತಾರೆ. ಇಲ್ಲಿ ನೀವು ಒಬ್ಬರನ್ನೇ ನೆನಪು ಮಾಡಬೇಕು ಹಾಗೂ ಆ ತಂದೆಯು ವಿಶೇಷವಾಗಿ ಹೇಳುತ್ತಾರೆ- ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಭಕ್ತಿಮಾರ್ಗದಲ್ಲಿ ದೇಹಾಭಿಮಾನದ ಕಾರಣ ನೀವು ಎಲ್ಲರನ್ನೂ ನೆನಪು ಮಾಡುತ್ತಿದ್ದಿರಿ, ಈಗ ನನ್ನೊಬ್ಬನನ್ನೇ ನೆನಪು ಮಾಡಿ. ಒಬ್ಬ ತಂದೆಯು ಸಿಕ್ಕಿರುವಾಗ ಏಳುತ್ತಾ-ಕುಳಿತುಕೊಳ್ಳುತ್ತಾ ತಂದೆಯನ್ನೇ ನೆನಪು ಮಾಡಿದಾಗ ಬಹಳ ಖುಷಿಯಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ವಿಶ್ವ ರಾಜ್ಯಭಾಗ್ಯ ಸಿಗುತ್ತದೆ. ಎಷ್ಟೆಷ್ಟು ಸಮಯ ಕಡಿಮೆಯಾಗುತ್ತಾ ಹೋಗುತ್ತದೆ ಅಷ್ಟಷ್ಟು ಬೇಗ-ಬೇಗ ನೆನಪು ಮಾಡುತ್ತಿರುತ್ತೀರಿ. ದಿನೇ-ದಿನೇ ಹೆಜ್ಜೆಯನ್ನು ಬೇಗನೆ ಮುಂದಿಡುತ್ತಾ ಹೋಗುತ್ತೀರಿ. ಆತ್ಮವೆಂದಿಗೂ ಸುಸ್ತಾಗುವುದಿಲ್ಲ. ಶರೀರದೊಂದಿಗೆ ಬೆಟ್ಟ ಮೊದಲಾದವುಗಳನ್ನು ಹತ್ತಲು ಹೋದರೆ ಸುಸ್ತಾಗಿಬಿಡುತ್ತಾರೆ. ತಂದೆಯನ್ನು ನೆನಪು ಮಾಡುವುದರಿಂದ ಯಾವುದೇ ರೀತಿಯ ಆಯಾಸವಾಗುವುದಿಲ್ಲ, ಖುಷಿಯಾಗಿರುತ್ತೀರಿ. ತಂದೆಯನ್ನು ನೆನಪು ಮಾಡಿ ಮುಂದುವರೆಯುತ್ತಿರುತ್ತೀರಿ. ಶಾಂತಿಧಾಮಕ್ಕೆ ಹೋಗಲು ನೀವು ಮಕ್ಕಳು ಅರ್ಧಕಲ್ಪ ಶ್ರಮಪಟ್ಟಿರಿ. ಗುರಿ-ಉದ್ದೇಶವಂತೂ ಸ್ವಲ್ಪವೂ ತಿಳಿದಿರಲಿಲ್ಲ. ಈಗ ಮಕ್ಕಳಿಗೆ ಪರಿಚಯವಿದೆ- ಭಕ್ತಿಮಾರ್ಗದಲ್ಲಿ ಯಾರಿಗಾಗಿ ಇಷ್ಟೆಲ್ಲಾ ನೆನಪು ಮಾಡುತ್ತಾ ಬಂದಿದ್ದೀರಿ ಅವರು ಈಗ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ತಂದೆಯು ಸರಿಯಾಗಿ ಹೇಳುತ್ತಿದ್ದಾರೆಯೇ ಅಥವಾ ಇಲ್ಲವೆ ಎಂದು ನೀವೇ ಯೋಚಿಸಿ. ಅವರು ನೀರಿನಿಂದ ಪಾವನರಾಗುತ್ತೇವೆಂದು ತಿಳಿದಿದ್ದಾರೆ. ನೀರಂತೂ ಇಲ್ಲಿಯೂ ಇದೆ, ಗಂಗೆಯಲ್ಲಿರುವುದೇ ನೀರಾಗಿದೆಯೇನು? ಆ ರೀತಿಯಿಲ್ಲ. ಅದೆಲ್ಲವೂ ಮಳೆಯಿಂದ ಒಂದುಕಡೆ ಸೇರಿರುವ ನೀರಾಗಿದೆ. ಎತ್ತರ ಪ್ರದೇಶಗಳಿಂದ ಜರಿಗಳಿಂದ ಹರಿದುಬರುತ್ತಿರುತ್ತದೆ. ಅದನ್ನು ಗಂಗಾನದಿಯ ನೀರೆಂದು ಹೇಳಲಾಗುವುದಿಲ್ಲ. ಅದು ಹರಿಯುವುದೆಂದೂ ನಿಲ್ಲಲು ಸಾಧ್ಯವಿಲ್ಲ, ಅದೂ ಸಹ ಪ್ರಕೃತಿದತ್ತವಾಗಿದೆ. ಮಳೆ ಬಾರದಿದ್ದರೂ ಸಹ ಆ ನೀರು ಹರಿಯುತ್ತಲೇ ಇರುತ್ತದೆ. ವೈಷ್ಣವರು ಸಾಮಾನ್ಯವಾಗಿ ಬಾವಿಯ ನೀರನ್ನು ಕುಡಿಯುತ್ತಾರೆ. ಒಂದುಕಡೆ ಆ ಬಾವಿಯ ನೀರು ಪವಿತ್ರವೆಂದು, ಇನ್ನೊಂದುಕಡೆ ಪತಿತ-ಪಾವನಿ ಎಂದು ಸ್ನಾನ ಮಾಡುತ್ತಾರೆ. ಇದನ್ನು ಅಜ್ಞಾನವೆಂದು ಹೇಳಲಾಗುತ್ತದೆ. ಮಳೆಯ ನೀರು ಚೆನ್ನಾಗಿರುತ್ತದೆ ಇದನು ನಾಟಕದ ಲೀಲೆಯೆಂದು ಕರೆಯಲಾಗುವುದು. ಇದೆಲ್ಲವೂ ಈಶ್ವರನ ಪ್ರಕೃತಿದತ್ತವಾದ ಲೀಲೆಯಾಗಿದೆ. ಬೀಜವು ಎಷ್ಟೊಂದು ಚಿಕ್ಕದಾಗಿರುತ್ತದೆ, ಅದರಿಂದ ಎಷ್ಟು ದೊಡ್ಡವೃಕ್ಷವಾಗುತ್ತದೆ! ಯಾವಾಗ ಭೂಮಿಯು ಬಂಜರು ಭೂಮಿಯಾಗುತ್ತದೆ ಆಗ ಶಕ್ತಿಯನ್ನು ಕಳೆದುಕೊಂಡು ರುಚಿಯಿರುವುದಿಲ್ಲವೆಂದು ನೀವು ತಿಳಿದುಕೊಂಡಿದ್ದೀರಿ. ಸ್ವರ್ಗವು ಹೇಗಿರುತ್ತದೆ ಎಂದು ತಂದೆಯು ಮಕ್ಕಳಿಗೆ ಎಲ್ಲಾ ಅನುಭವಗಳನ್ನು ಇಲ್ಲಿಯೇ ಮಾಡಿಸುತ್ತಾರೆ. ಈಗಂತೂ ಸ್ವರ್ಗವಿಲ್ಲ. ನಾಟಕದಲ್ಲಿ ಎಲ್ಲವೂ ನೊಂದಾವಣೆಯಾಗಿದೆ. ಮಕ್ಕಳಿಗೆ ಎಲ್ಲವೂ ಸಾಕ್ಷಾತ್ಕಾರವಾಗಿದೆ, ಅಲ್ಲಿಯ ಫಲ-ವೃಕ್ಷವು ಹೇಗಿರುತ್ತದೆ, ಸಿಹಿಯಾಗಿರುತ್ತದೆ ಎಂದು ಧ್ಯಾನದಲ್ಲಿ ನೋಡಿ ಬಂದು ಹೇಳುತ್ತೀರಿ. ಆಮೇಲೆ ಇಲ್ಲಿ ಸಾಕ್ಷಾತ್ಕಾರವಾಗುವುದೆಲ್ಲವೂ ಪ್ರತ್ಯಕ್ಷವಾಗಿ ತಿನ್ನುತ್ತೀರಿ. ಏನೆಲ್ಲವೂ ಸಾಕ್ಷಾತ್ಕಾರವಾಗುತ್ತದೆ ಅದನ್ನು ಈ ಕಣ್ಣುಗಳಿಂದ ನೋಡುತ್ತೀರಿ, ಉಳಿದೆಲ್ಲವೂ ಪುರುಷಾರ್ಥದ ಮೇಲಿದೆ. ಒಂದುವೇಳೆ ಪುರುಷಾರ್ಥ ಮಾಡದಿದ್ದರೆ ಎಂತಹ ಪದವಿಯು ಸಿಗುತ್ತದೆ? ಈಗ ನಿಮ್ಮ ಪುರುಷಾರ್ಥ ನಡೆಯುತ್ತಿದೆ, ಈಗ ನೀವು ಹೀಗಾಗುತ್ತೀರಿ. ಈ ವಿನಾಶದ ನಂತರ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ಇದೆಲ್ಲವೂ ನಿಮಗೇ ತಿಳಿದಿದೆ ಆದರೆ ಪಾವನರಾಗಲು ಸಮಯ ಹಿಡಿಸುತ್ತದೆ. ಅದಕ್ಕಾಗಿ ನೆನಪಿನ ಯಾತ್ರೆಯು ಮುಖ್ಯವಾಗಿದೆ. ಸಹೋದರ-ಸಹೋದರಿಯೆಂದು ತಿಳಿಯುವುದರಿಂದಲೂ ದೂರವಿರಲು ಸಾಧ್ಯವಿಲ್ಲದಿದ್ದರೆ ಆಗ ಸಹೋದರ-ಸಹೋದರ ಎಂದು ತಿಳಿದುಕೊಳ್ಳಿ ಎಂದು ಹೇಳುತ್ತಾರೆ. ಸಹೋದರ-ಸಹೋದರಿಯೆಂದು ತಿಳಿದುಕೊಳ್ಳುವುದರಿಂದ ದೃಷ್ಟಿಯು ಪರಿವರ್ತನೆಯಾಗುವುದಿಲ್ಲ. ಸಹೋದರ-ಸಹೋದರರನ್ನು ನೋಡುವುದರಿಂದ ಈ ಶರೀರವೇ ಇರುವುದಿಲ್ಲ. ನಾವೆಲ್ಲರೂ ಆತ್ಮಗಳಾಗಿದ್ದೇವೆ, ಶರೀರವಲ್ಲ. ಇಲ್ಲಿ ನೋಡುವುದೆಲ್ಲವೂ ವಿನಾಶವಾಗಿಬಿಡುತ್ತದೆ. ಈಗ ನೀವು ಈ ಶರೀರವನ್ನು ಬಿಟ್ಟು ಅಶರೀರಿಯಾಗಿ ಹೋಗಬೇಕು. ನಾವು ಶರೀರವನ್ನು ಬಿಟ್ಟು ಹೇಗೆ ಹೋಗಬೇಕೆಂದು ಕಲಿಯಲು ನೀವು ಇಲ್ಲಿಗೆ ಬಂದಿದ್ದೀರಿ. ಇದೇ ಗುರಿಯಾಗಿದೆ. ಶರೀರವಂತೂ ಆತ್ಮನಿಗೆ ಬಹಳ ಪ್ರಿಯವಾಗಿದೆ. ಶರೀರವನ್ನು ಬಿಡಬಾರದೆಂದು ಆತ್ಮವು ಎಷ್ಟೊಂದು ಪ್ರಬಂಧವನ್ನು ಮಾಡುತ್ತದೆ. ನಮ್ಮ ಈ ಶರೀರ ಹೋಗಬಾರದು. ಆತ್ಮನಿಗೆ ಈ ಶರೀರದೊಂದಿಗೆ ಬಹಳ ಪ್ರೀತಿಯಿದೆ. ಈ ಶರೀರವು ತುಂಬಾ ಹಳೆಯದಾಗಿದೆ ಎಂದು ತಂದೆಯು ತಿಳಿಸುತ್ತಾರೆ, ನೀವೂ ತಮೋಪ್ರಧಾನರಾಗಿದ್ದೀರಿ ಮತ್ತು ನಿಮ್ಮ ಆತ್ಮವು ಅಪವಿತ್ರವಾಗಿದೆ ಆದ್ದರಿಂದ ನೀವು ದುಃಖಿಗಳು, ರೋಗಿಗಳಾಗುತ್ತಿರುತ್ತೀರಿ. ತಂದೆಯು ತಿಳಿಸುತ್ತಾರೆ- ಈಗ ನೀವು ಶರೀರದೊಂದಿಗೆ ಪ್ರೀತಿಯಿಡಬಾರದು. ಇದು ಹಳೆಯ ಶರೀರವಾಗಿದೆ. ಈಗ ನೀವು ಹೊಸಶರೀರವನ್ನು ಕೊಂಡುಕೊಳ್ಳಬೇಕು. ಕೊಂಡುಕೊಳ್ಳುವ ಯಾವುದೇ ಅಂಗಡಿಯೂ ಇಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದಾಗ ನೀವು ಪಾವನರಾಗುತ್ತೀರಿ. ನಂತರ ನಿಮಗೆ ಪಾವನ ಶರೀರವು ಸಿಗುತ್ತದೆ. ಪಂಚತತ್ವಗಳೂ ಪಾವನವಾಗಿಬಿಡುತ್ತವೆ, ತಂದೆಯು ಎಲ್ಲಾ ಮಾತುಗಳನ್ನು ತಿಳಿಸಿ ಮತ್ತೆ ಮನ್ಮನಾಭವ ಎಂದು ಹೇಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.