text
stringlengths
0
61.5k
1. ಸ್ವದರ್ಶನ ಚಕ್ರಧಾರಿಗಳಾಗಿ 84 ಜನ್ಮಗಳ ಚಕ್ರವನ್ನು ಬುದ್ಧಿಯಲ್ಲಿ ತಿರುಗಿಸುತ್ತಾ ಇರಬೇಕಾಗಿದೆ. ಬೇಹದ್ದಿನ ತಂದೆಯನ್ನು ನೆನಪು ಮಾಡಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕು, ಪಾವನರಾಗಬೇಕಾಗಿದೆ.
2. ಯಾವುದೇ ಪದಾರ್ಥದ ಲೋಭವಿರಬಾರದು, ಏನು ಸಿಕ್ಕಿದೆಯೋ ಸಿಕ್ಕಿದೆಯೋ ಅದರಲ್ಲಿ ಖುಷಿಯಾಗಿರಬೇಕಾಗಿದೆ. ತುಂಡು ರೊಟ್ಟಿಯನ್ನು ತಿನ್ನಬೇಕು, ತಂದೆಯ ನೆನಪಿನಲ್ಲಿರಬೇಕಾಗಿದೆ.
ಮನನ ಶಕ್ತಿ ಮತ್ತು ಮಗ್ನ ಸ್ಥಿತಿ
ಇಂದು ಡಬಲ್ ಕಿರೀಟಧಾರಿ, ಡಬಲ್ ರಾಜ್ಯಾಧಿಕಾರಿಗಳನ್ನಾಗಿ ಮಾಡುವಂತಹ ತಂದೆಯು ವಿಶೇಷವಾಗಿ ತನ್ನ ಡಬಲ್ ವಿದೇಶಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಬಾಪ್ದಾದಾ ನೋಡುತ್ತಿದ್ದಾರೆ - ನಾಲ್ಕಾರು ಕಡೆಯ ಡಬಲ್ ವಿದೇಶಿ, ಸ್ನೇಹಿ-ಸಹಯೋಗಿಗಳು ಸದಾ ಸೇವೆಯ ಉಲ್ಲಾಸ-ಉತ್ಸಾಹದಿಂದ ಸ್ನೇಹ ಮತ್ತು ಸೇವೆ ಎರಡರಲ್ಲಿಯೂ ಮುಂದುವರೆಯುತ್ತಾ ಹೋಗುತ್ತಿದ್ದಾರೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಇದೇ ಉತ್ಸಾಹವಿದೆ - ನಾವು ಬಾಪ್ದಾದಾರವರ ಪ್ರತ್ಯಕ್ಷತೆಯ ಬಾವುಟವನ್ನು ಹಾರಿಸಬೇಕಾಗಿದೆ. ಪ್ರತೀ ದಿನವು ಉತ್ಸಾಹದ ಕಾರಣ ಸಂಗಮಯುಗದ ಉತ್ಸವದ ಪ್ರಮಾಣವನ್ನು ಅನುಭವ ಮಾಡಿ ಹಾರುತ್ತಾ ಹೋಗುತ್ತಿದ್ದಾರೆ, ಏಕೆಂದರೆ ಎಲ್ಲಿ ಪ್ರತೀ ಸಮಯ ಉತ್ಸಾಹವಿರುವುದು, ಬಾಪ್ದಾದಾರವರೊಂದಿಗೆ ನೆನಪಿನ ಮೂಲಕ ಮಿಲನವನ್ನು ಆಚರಿಸುವ ಉತ್ಸಾಹವಿರಲಿ, ಇಲ್ಲವೆ ಸೇವೆಯ ಮೂಲಕ ಪ್ರತ್ಯಕ್ಷ ಫಲವು ಪ್ರಾಪ್ತಿಯಾಗುವ ಅನುಭವದ ಉತ್ಸಾಹದಲ್ಲಿ ಎರಡೂ ಉತ್ಸಾಹವು ಪ್ರತೀ ಘಳಿಗೆ, ಪ್ರತೀ ದಿನ ಉತ್ಸವದ ಅನುಭವ ಮಾಡಿಸುತ್ತದೆ. ಪ್ರಪಂಚದವರು ವಿಶೇಷವಾಗಿ ಉತ್ಸವದ ದಿನದಂದು ಉತ್ಸಾಹದ ಅನುಭವ ಮಾಡುತ್ತಾರೆ ಆದರೆ ಬ್ರಾಹ್ಮಣ ಆತ್ಮರಿಗಾಗಿ ಸಂಗಮಯುಗವೇ ಉತ್ಸಾಹದ ದಿನವಾಗಿದೆ. ಪ್ರತೀ ದಿನ ಹೊಸ ಉತ್ಸಾಹ, ಉತ್ಸಾಹ-ಉಲ್ಲಾಸ ಉತ್ಸಾಹವು ಸ್ವತಹವಾಗಿಯೇ ಅನುಭವವಾಗುತ್ತಿರುತ್ತದೆ. ಆದ್ದರಿಂದ ಸಂಗಮಯುಗದ ಪ್ರತೀ ದಿನವು ಖುಷಿಯ ಔಷಧಿಯನ್ನು ಸೇವಿಸುತ್ತಾ ತಂದೆಯ ಮೂಲಕ ಅನೇಕ ಪ್ರಾಪ್ತಿಗಳ ಗುಣಗಾನ ಮಾಡುತ್ತಾ ಡಬಲ್ಲೈಟ್ ಆಗಿ ಸದಾ ಉತ್ಸಾಹದಲ್ಲಿ ನರ್ತಿಸುತ್ತಿರುತ್ತೀರಿ. ಉತ್ಸವದಲ್ಲಿ ಏನು ಮಾಡುತ್ತಾರೆ? ತಿನ್ನುತ್ತಾರೆ, ಕುಡಿಯುತ್ತಾರೆ, ಹಾಡುತ್ತಾರೆ, ನರ್ತಿಸುತ್ತಾರೆ. ಈಗ ವಿದೇಶದಲ್ಲಿ ವಿಶೇಷವಾಗಿ ಕ್ರಿಸ್ಮಸ್ನ್ನು ಆಚರಿಸುವ ತಯಾರಿ ಮಾಡುತ್ತಿದ್ದಾರೆ. ತಿನ್ನುವುದು-ಹಾಡುವುದು, ನರ್ತಿಸುವುದು ಇದನ್ನೇ ಮಾಡುತ್ತಾರಲ್ಲವೆ ಮತ್ತು ಮಿಲನ ಮಾಡುತ್ತಾರೆ. ತಾವು ಪ್ರತೀ ದಿನ ಏನು ಮಾಡುತ್ತೀರಿ? ಅಮೃತವೇಳೆಯಿಂದ ಹಿಡಿದು ರಾತ್ರಿಯವರೆಗೆ ಇದೇ ಕೆಲಸವನ್ನು ಮಾಡುತ್ತೀರಲ್ಲವೆ. ಸೇವೆಯನ್ನೂ ಮಾಡುತ್ತೀರಿ, ಸೇವೆ ಅರ್ಥಾತ್ ಜ್ಞಾನದ ನರ್ತನ ಮಾಡುತ್ತೀರಿ. ಬಾಪ್ದಾದಾರವರ ಗುಣಗಳ ಗೀತೆಯನ್ನು ಆತ್ಮಗಳಿಗೆ ತಿಳಿಸುತ್ತೀರಿ ಅಂದಮೇಲೆ ನಿತ್ಯವೂ ಉತ್ಸವವನ್ನು ಆಚರಿಸುತ್ತೀರಲ್ಲವೆ. ಸತ್ಯ ಬ್ರಾಹ್ಮಣರು ಈ ಕಾರ್ಯ ಮಾಡದೇ ಇರುವ ದಿನವೇ ಇಲ್ಲ. ಸಂಗಮಯುಗದ ಪ್ರತೀ ದಿನವು ಉತ್ಸಾಹ ತುಂಬಿದ ಉತ್ಸವದ ದಿನವಾಗಿದೆ. ಅವರಾದರೆ ಒಂದೆರಡು ದಿನ ಆಚರಿಸುತ್ತಾರೆ ಆದರೆ ಬಾಪ್ದಾದಾ ಎಲ್ಲಾ ಬ್ರಾಹ್ಮಣ ಮಕ್ಕಳನ್ನು ಇಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ, ಇಂತಹ ಗೋಲ್ಡನ್ ಗಿಫ್ಟನ್ನು ಕೊಡುತ್ತಾರೆ, ಅದರಿಂದ ನೀವು ಸದಾಕಾಲಕ್ಕಾಗಿ ಸಂಪನ್ನರಾಗಿ ಬಿಡುತ್ತೀರಿ. ಅವರು ಕ್ರಿಸ್ಮಸ್ನ ದಿನಕ್ಕಾಗಿ ಕಾಯುತ್ತಾರೆ - ಕ್ರಿಸ್ಮಸ್ ಫಾದರ್ ಬಂದು ಇಂದು ಗಿಫ್ಟ್ ಕೊಡುತ್ತಾರೆಂದು ಅವರು ಕ್ರಿಸ್ಮಸ್ ಫಾದರ್ನ್ನು ನೆನಪು ಮಾಡುತ್ತಾರೆ ಮತ್ತು ತಾವು ಕಿಸ್ಮಿಸ್ (ದ್ರಾಕ್ಷಿ) ತರಹ ಮಧುರರನ್ನಾಗಿ ಮಾಡುವ ತಂದೆಯನ್ನು ನೆನಪು ಮಾಡುತ್ತೀರಿ. ನಿಮಗೆ ಇಷ್ಟೊಂದು ಗಿಫ್ಟ್ ಸಿಗುತ್ತದೆ, ಅದು 21 ಜನ್ಮಗಳವರೆಗೆ ನಡೆಯುತ್ತಿರುತ್ತದೆ. ಆ ಅವಿನಾಶಿ ಉಡುಗೊರೆಯಾದರೂ ಸ್ವಲ್ಪ ಸಮಯ ನಡೆದು ಸಮಾಪ್ತಿ ಆಗಿ ಬಿಡುತ್ತದೆ ಆದರೆ ಈ ಅವಿನಾಶಿ ಉಡುಗೊರೆಯು ಅನೇಕ ಜನ್ಮಗಳವರೆಗೆ ತಮ್ಮ ಜೊತೆಯಿರುತ್ತದೆ. ಹೇಗೆ ಅವರು ಕ್ರಿಸ್ಮಸ್ ಟ್ರೀಯನ್ನು ಶೃಂಗರಿಸುತ್ತಾರೆ. ಬಾಪ್ದಾದಾ ಈ ಬೇಹದ್ದಿನ ಕಲ್ಪವೃಕ್ಷದಲ್ಲಿ ತಾವು ಹೊಳೆಯುತ್ತಿರುವ ನಕ್ಷತ್ರಗಳಿಗೆ, ಸಂಗಮಯುಗೀ ಶ್ರೇಷ್ಠ ಧರಣಿಯ ನಕ್ಷತ್ರಗಳಿಗೆ ಅವಿನಾಶಿ ಲೈಟ್ಮೈಟ್ ಸ್ವರೂಪದಲ್ಲಿ ಸ್ಥಿತರಾಗುವ ಅನುಭವ ಮಾಡಿಸುತ್ತಾರೆ. ಅವರೂ ಸಹ ನಕ್ಷತ್ರವನ್ನು ಒಪ್ಪುತ್ತಾರೆ, ನಕ್ಷತ್ರಗಳನ್ನು ಶೃಂಗರಿಸುತ್ತಾರೆ. ತಾವು ನಕ್ಷತ್ರಗಳ ನೆನಪಾರ್ಥವಾಗಿ ಸ್ಥೂಲ ಹೊಳೆಯುತ್ತಿರುವ ದೀಪಗಳ ರೂಪದಲ್ಲಿ ತೋರಿಸುತ್ತಾರೆ ಅಥವಾ ದೀಪಗಳಿಂದ ಶೃಂಗರಿಸುತ್ತಾರೆ ಇಲ್ಲವೆ ಹೂಗಳಿಂದ ಶೃಂಗರಿಸುತ್ತಾರೆ. ಇದು ಯಾರ ನೆನಪಾರ್ಥವಾಗಿದೆ? ತಾವು ಆತ್ಮಿಕ ಸುಗಂಧಭರಿತ ಹೂಗಳಾದ ಬ್ರಾಹ್ಮಣ ಆತ್ಮಗಳ ನೆನಪಾರ್ಥವಾಗಿದೆ. ಇವೆಲ್ಲಾ ಉತ್ಸವಗಳು ತಾವು ಸಂಗಮಯುಗೀ ಬ್ರಾಹ್ಮಣರ ಉತ್ಸಾಹದಿಂದ ಕೂಡಿದ ಉತ್ಸವಗಳ ನೆನಪಾರ್ಥವಾಗಿದೆ. ಸಂಗಮಯುಗದಲ್ಲಿ ಕಲ್ಪ ವೃಕ್ಷದ ಹೊಳೆಯುತ್ತಿರುವ ನಕ್ಷತ್ರಗಳು, ಆತ್ಮೀಯ ಗುಲಾಬಿಗಳು ತಾವು ಬ್ರಾಹ್ಮಣ ಆತ್ಮರಾಗಿದ್ದೀರಿ. ತಮ್ಮದೇ ನೆನಪಾರ್ಥವನ್ನು ಸ್ವಯಂ ನೋಡುತ್ತಿದ್ದೀರಿ. ಅವಿನಾಶಿ ತಂದೆಯ ಮೂಲಕ ಅವಿನಾಶಿ ರತ್ನಗಳಾಗುತ್ತೀರಿ. ಆದ್ದರಿಂದ ಅಂತಿಮ ಜನ್ಮದವರೆಗೂ ತಮ್ಮ ನೆನಪಾರ್ಥವನ್ನು ನೋಡುತ್ತಿದ್ದೀರಿ. ಡಬಲ್ ರೂಪದ ನೆನಪಾರ್ಥವನ್ನು ನೋಡುತ್ತಿದ್ದೀರಿ, ಸಂಗಮಯುಗದ ರೂಪದ ನೆನಪಾರ್ಥವನ್ನು ಭಿನ್ನ-ಭಿನ್ನರೂಪಗಳಿಂದ, ಭಿನ್ನ-ಭಿನ್ನ ರೀತಿಯಿಂದ ತೋರಿಸುತ್ತಾರೆ ಮತ್ತು ಎರಡನೆಯದಾಗಿ ಭವಿಷ್ಯ ದೇವ ಪದವಿಯ ನೆನಪಾರ್ಥವನ್ನೂ ನೋಡುತ್ತಿದ್ದೀರಿ. ಕೇವಲ ತನ್ನ ರೂಪದ ನೆನಪಾರ್ಥವನ್ನು ನೋಡುತ್ತಿಲ್ಲ ಆದರೆ ತಾವು ಶ್ರೇಷ್ಠ ಆತ್ಮಗಳ, ಶ್ರೇಷ್ಠ ಕರ್ಮಗಳ ನೆನಪಾರ್ಥವೂ ಇದೆ. ತಂದೆ ಮತ್ತು ಮಕ್ಕಳ ಚರಿತ್ರೆಯ ನೆನಪಾರ್ಥವೂ ಇದೆ ಅಂದಮೇಲೆ ತಮ್ಮ ನೆನಪಾರ್ಥವನ್ನು ನೋಡಿ ಪ್ರತೀ ಕಲ್ಪವೂ ನಾವು ಇಂತಹ ವಿಶೇಷ ಆತ್ಮಗಳಾಗುತ್ತೇವೆ, ಆಗಿದ್ದೆವು, ಆಗಿದ್ದೇವೆ ಮತ್ತು ಮುಂದೆಯೂ ಆಗುತ್ತಿರುತ್ತೇವೆ ಎಂದು ಸಹಜವಾಗಿ ನೆನಪು ಬರುತ್ತಿದೆಯಲ್ಲವೆ.
ಬಾಪ್ದಾದಾ ಸದಾ ಇಂತಹ ನೆನಪಿನಲ್ಲಿರುವವರು ಯಾರ ನೆನಪಾರ್ಥವು ಈಗಲೂ ಇದೆ, ಅಂತಹ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಇದು ನೆನಪಿನಲ್ಲಿರುವವರ ನೆನಪಾರ್ಥವಾಗಿದೆ. ನೆನಪಿನ ಮಹತ್ವಿಕೆಯ ನೆನಪಾರ್ಥವನ್ನು ನೋಡುತ್ತಿದ್ದೀರಿ ಅಂದಾಗ ಡಬಲ್ ವಿದೇಶಿ ಮಕ್ಕಳಿಗೆ ತಮ್ಮ ನೆನಪಾರ್ಥವನ್ನು ನೋಡಿ ಖುಷಿಯಾಗುತ್ತದೆಯಲ್ಲವೆ. ಬಾಪ್ದಾದಾರವರಿಗೂ ಡಬಲ್ ವಿದೇಶಿ ಮಕ್ಕಳನ್ನು ನೋಡಿ ಡಬಲ್ ಖುಷಿಯಾಗುತ್ತದೆ, ಏಕೆ? ಒಂದನೆಯದಾಗಿ ಮೂಲೆ-ಮೂಲೆಯಲ್ಲಿರುವ ಕಲ್ಪದ ಹಿಂದಿನ ಅಗಲಿ ಹೋಗಿರುವ, ತಪ್ಪಿಸಿಕೊಂಡು ಹೋಗಿರುವ ಮಕ್ಕಳು ಪುನಃ ಸಿಕ್ಕಿ ಬಿಟ್ಟಿರಿ. ಒಂದುವೇಳೆ ಕಳೆದುಹೋಗಿರುವ ವಸ್ತುವು ಮತ್ತೆ ಸಿಕ್ಕಿಬಿಟ್ಟರೆ ಖುಷಿಯಾಗುತ್ತದೆಯಲ್ಲವೆ. ತಂದೆಯಂತೂ ಎಲ್ಲಾ ಮಕ್ಕಳನ್ನು ನೋಡಿ ಖುಷಿಯಾಗುತ್ತಾರೆ ಭಾರತವಾಸಿಗಳಿರಬಹುದು, ವಿದೇಶಿಯರಿರಬಹುದು. ಎರಡನೆಯ ಮಾತು, ಡಬಲ್ ವಿದೇಶಿ ಮಕ್ಕಳದಾಗಿದೆ. ವಿಭಿನ್ನ ಧರ್ಮ, ವಿಭಿನ್ನ ರೀತಿ-ಪದ್ಧತಿಯ ಪರದೆಯೊಳಗೆ ಮರೆಯಲ್ಲಿದ್ದರೂ ಸಹ ಈ ಪರದೆಯನ್ನು ಸಹಜವಾಗಿ ಸಮಾಪ್ತಿ ಮಾಡಿ ತಂದೆಯವರಾಗಿ ಬಿಟ್ಟಿರಿ. ಇದು ಪರದೆಯನ್ನು ಸರಿಸುವ ವಿಶೇಷತೆಯಾಗಿದೆ. ಪರದೆಯೊಳಗಿಂದಲೂ ತಂದೆಯನ್ನು ಅರಿತುಕೊಳ್ಳುವ ವಿಶೇಷತೆಯು ಡಬಲ್ ವಿದೇಶಿಯರದಾಗಿದೆ ಅಂದಮೇಲೆ ಡಬಲ್ ಖುಷಿಯಾಯಿತಲ್ಲವೆ. ಡಬಲ್ ವಿದೇಶಿ ಮಕ್ಕಳಿಗೆ ತಮ್ಮ ಅಲೌಕಿಕ ನಿಶ್ಚಯ ಮತ್ತು ನಶೆಯಿದೆ. ಬಾಪ್ದಾದಾ ಇಂದು ನಾಲ್ಕಾರು ಕಡೆಯ ಡಬಲ್ ವಿದೇಶಿ ಮಕ್ಕಳಿಗೆ ವಿಶೇಷವಾಗಿ ಸದಾ ಉತ್ಸಾಹದಲ್ಲಿರುವ, ಪ್ರತೀ ದಿನ ಉತ್ಸವವನ್ನು ಆಚರಿಸುವ, ಪ್ರತೀ ದಿನ ವರದಾತ ತಂದೆಯ ಮೂಲಕ ವಿಶೇಷ ವರದಾನ ಹಾಗೂ ವಿಶೇಷ ಆಶೀರ್ವಾದಗಳನ್ನು ತೆಗೆದುಕೊಳ್ಳುವ ಡೈಮಂಡ್ ಗಿಫ್ಟ್ನ್ನು ದೊಡ್ಡ (ವಿಶಾಲ) ಹೃದಯದಿಂದ, ದೊಡ್ಡ ದಿನಕ್ಕಾಗಿ (ವಿಶೇಷ ದಿನ) ಕೊಡುತ್ತಿದ್ದೇವೆ - "ಸದಾ ಉತ್ಸವದಿಂದ ಕೂಡಿದ ಜೀವನ ಭವ", "ಸದಾ ಸಹಜ ಹಾರುವ ಕಲೆಯ ಅನುಭವೀ ಶ್ರೇಷ್ಠ ಜೀವನ ಭವ".
ಇಂದು ಬಾಪ್ದಾದಾ ವತನದಲ್ಲಿ ಮೂರು ಪ್ರಕಾರದ ಮಕ್ಕಳನ್ನು ನೋಡುತ್ತಿದ್ದರು. ಯಾವ ರೀತಿಯ ಮೂರು ಪ್ರಕಾರದವರನ್ನು ನೋಡಿದರು? 1. ವರ್ಣನೆ ಮಾಡುವವರು. 2. ಮನನ ಮಾಡುವವರು. 3. ಅನುಭವದಲ್ಲಿ ಮಗ್ನರಾಗಿರುವವರು. ದೇಶ-ವಿದೇಶದ ಎಲ್ಲಾ ಮಕ್ಕಳನ್ನು ನೋಡಿದರು. ವರ್ಣನೆ ಮಾಡುವಂತಹ ಬ್ರಾಹ್ಮಣರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೋಡಿದರು, ಮನನ ಮಾಡುವವರನ್ನು ಮಧ್ಯಮ ಸಂಖ್ಯೆಯಲ್ಲಿ ನೋಡಿದರು, ಅನುಭವದಲ್ಲಿ ಮಗ್ನರಾಗಿರುವವರನ್ನು ಅದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿ ನೋಡಿದರು. ವರ್ಣನೆ ಮಾಡುವುದು ಅತಿ ಸಹಜವಾಗಿದೆ ಏಕೆಂದರೆ 63 ಜನ್ಮಗಳ ಸಂಸ್ಕಾರವಿದೆ. ಒಂದು ಕೇಳುವುದು, ಇನ್ನೊಂದು ಏನನ್ನು ಕೇಳಿದಿರೋ ಅದನ್ನು ವರ್ಣನೆ ಮಾಡುವುದು, ಇದನ್ನಂತೂ ಮಾಡುತ್ತಾ ಬಂದಿದ್ದೀರಿ. ಭಕ್ತಿ ಮಾರ್ಗವೆಂದರೇ ಕೇಳುವುದು ಹಾಗೂ ಕೀರ್ತನೆಯ ಮೂಲಕ, ಪ್ರಾರ್ಥನೆಯ ಮೂಲಕ ವರ್ಣನೆ ಮಾಡುವುದಾಗಿದೆ. ಜೊತೆ ಜೊತೆಗೆ ದೇಹಾಭಿಮಾನದಲ್ಲಿ ಬರುವ ಕಾರಣ ವ್ಯರ್ಥವಾಗಿ ಮಾತನಾಡುವುದು ಪಕ್ಕಾ ಸಂಸ್ಕಾರವಾಗಿ ಉಳಿದಿದೆ. ಎಲ್ಲಿ ವ್ಯರ್ಥ ಮಾತಿರುವುದೋ ಅಲ್ಲಿ ವಿಸ್ತಾರವು ಸ್ವತಹವಾಗಿಯೇ ಆಗುತ್ತದೆ. ಸ್ವಚಿಂತನೆಯು ಅಂತರ್ಮುಖಿಯನ್ನಾಗಿ ಮಾಡುತ್ತದೆ. ಪರಚಿಂತನೆಯು ವರ್ಣನೆ ಮಾಡುವುದರ ವಿಸ್ತಾರದಲ್ಲಿ ತರುತ್ತದೆ. ಆದ್ದರಿಂದ ವರ್ಣನೆ ಮಾಡುವ ಸಂಸ್ಕಾರವು ಅನೇಕ ಜನ್ಮಗಳದಾಗಿರುವ ಕಾರಣ ಬ್ರಾಹ್ಮಣ ಜೀವನವು ಅಜ್ಞಾನದಿಂದ ಬದಲಾಗಿ ಜ್ಞಾನದಲ್ಲಂತೂ ಬಂದು ಬಿಡುತ್ತಾರೆ. ಜ್ಞಾನವನ್ನು ವರ್ಣನೆ ಮಾಡುವುದರಲ್ಲಿ ಬಹು ಬೇಗನೆ ಬುದ್ಧಿವಂತರು ಆಗಿ ಬಿಡುತ್ತಾರೆ. ವರ್ಣನೆ ಮಾಡುವವರು ವರ್ಣನೆ ಮಾಡುವ ಸಮಯದವರೆಗೆ ಮಾತ್ರ ಖುಷಿ ಹಾಗೂ ಶಕ್ತಿಯ ಅನುಭವ ಮಾಡುತ್ತಾರೆ ಆದರೆ ಸದಾಕಾಲಕ್ಕಾಗಿ ಅಲ್ಲ. ಬಾಯಿಂದ ಜ್ಞಾನ ದಾತನ ವರ್ಣನೆ ಮಾಡುವಕಾರಣ ಶಕ್ತಿ ಮತ್ತು ಖುಷಿಯು ಜ್ಞಾನದ ಪ್ರತ್ಯಕ್ಷಫಲವಾಗಿ ಪ್ರಾಪ್ತಿ ಆಗಿ ಬಿಡುತ್ತದೆ ಆದರೆ ಶಕ್ತಿಶಾಲಿ ಸ್ವರೂಪರು ಸದಾ ಖುಷಿ ಸ್ವರೂಪರಾಗಲು ಸಾಧ್ಯವಿಲ್ಲ. ಆದರೂ ಜ್ಞಾನ ರತ್ನಗಳಿವೆ ಮತ್ತು ಡೈರೆಕ್ಟ್ ಭಗವಾನುವಾಚವಾಗಿದೆ ಆದ ಕಾರಣ ಯಥಾಶಕ್ತಿ ಪ್ರಾಪ್ತಿ ಸ್ವರೂಪರಾಗಿ ಬಿಡುತ್ತಾರೆ.
ಮನನ ಮಾಡುವವರು ಸದಾ ಏನೆಲ್ಲವನ್ನೂ ಕೇಳುವರೋ ಅದನ್ನು ಮನನ ಮಾಡಿ ತಾವೂ ಪ್ರತಿಯೊಂದು ಜ್ಞಾನ ಬಿಂದುವಿನ ಸ್ವರೂಪರಾಗುತ್ತಾರೆ. ಮನನ ಶಕ್ತಿಯುಳ್ಳವರು ಗುಣ ಸ್ವರೂಪ, ಶಕ್ತಿ ಸ್ವರೂಪ, ಜ್ಞಾನ ಸ್ವರೂಪ ಮತ್ತು ನೆನಪಿನ ಸ್ವರೂಪರು ಸ್ವತಹವಾಗಿಯೇ ಆಗಿ ಬಿಡುತ್ತಾರೆ ಏಕೆಂದರೆ ಮನನ ಮಾಡುವುದು ಅರ್ಥಾತ್ ಬುದ್ಧಿಯ ಮೂಲಕ ಜ್ಞಾನದ ಭೋಜನವನ್ನು ಜೀರ್ಣಿಸಿಕೊಳ್ಳುವುದಾಗಿದೆ. ಹೇಗೆ ಸ್ಥೂಲ ಭೋಜನವು ಒಂದುವೇಳೆ ಜೀರ್ಣವಾಗದಿದ್ದರೆ ಅದು ಶಕ್ತಿಯಾಗಿ ಪರಿವರ್ತನೆ ಆಗುವುದಿಲ್ಲ. ಕೇವಲ ಬಾಯಿಯ ರುಚಿಯವರೆಗಷ್ಟೇ ಉಳಿಯುತ್ತದೆ. ಹಾಗೆಯೇ ವರ್ಣನೆ ಮಾಡುವವರಿಗೂ ಸಹ ಕೇವಲ ಜ್ಞಾನವು ಬಾಯಿಯ ವರ್ಣನೆಯವರೆಗಷ್ಟೇ ಉಳಿಯುತ್ತದೆ ಆದರೆ ಮನನ ಶಕ್ತಿಯವರು ಬುದ್ಧಿಯ ಮೂಲಕ, ಮನನ ಶಕ್ತಿಯ ಮೂಲಕ ಧಾರಣೆ ಮಾಡಿಕೊಂಡು ಶಕ್ತಿಶಾಲಿಗಳಾಗಿಬಿಡುತ್ತಾರೆ. ಮನನ ಶಕ್ತಿಯವರು ಸರ್ವ ಮಾತುಗಳಲ್ಲಿ ಶಕ್ತಿಶಾಲಿ ಆತ್ಮಗಳಾಗುತ್ತಾರೆ ಮತ್ತು ಸದಾ ಸ್ವ-ಚಿಂತನೆಯಲ್ಲಿ ತತ್ಫರರಾಗಿರುವ ಕಾರಣ ಮಾಯೆಯ ಅನೇಕ ವಿಘ್ನಗಳಿಂದ ಸಹಜವಾಗಿ ಮುಕ್ತರಾಗಿ ಬಿಡುತ್ತಾರೆ ಏಕೆಂದರೆ ಬುದ್ಧಿಯು ಬ್ಯುಸಿಯಾಗಿರುತ್ತದೆ. ಆದ್ದರಿಂದ ಮಾಯೆಯೂ ಸಹ ಬ್ಯುಸಿಯಾಗಿರುವುದನ್ನು ನೋಡಿ ದೂರ ಸರಿಯುತ್ತದೆ. ಎರಡನೆಯ ಮಾತೇನೆಂದರೆ ಮನನ ಮಾಡುವುದರಿಂದ ಶಕ್ತಿಶಾಲಿಗಳಾಗುವ ಕಾರಣ ಯಾವುದೇ ಪರಿಸ್ಥಿತಿಯಲ್ಲಿ ಸ್ವ-ಸ್ಥಿತಿಯು ಸೋಲನ್ನು ಉಂಟು ಮಾಡಿಸುವುದಿಲ್ಲ. ಆದ್ದರಿಂದ ಮನನ ಶಕ್ತಿಯವರು ಅಂತರ್ಮುಖಿ ಸದಾ ಸುಖಿಯಾಗಿರುತ್ತಾರೆ. ಅವರಲ್ಲಿ ಸಮಯ ಪ್ರಮಾಣ ಶಕ್ತಿಗಳನ್ನು ಕಾರ್ಯದಲ್ಲಿ ತೊಡಗಿಸುವ ಶಕ್ತಿಯಿರುವ ಕಾರಣ ಎಲ್ಲಿ ಶಕ್ತಿಯಿದೆಯೋ ಅಲ್ಲಿ ಮಾಯೆಯಿಂದ ಮುಕ್ತಿಯಿರುತ್ತದೆ. ಆದ್ದರಿಂದ ಇಂತಹ ಮಕ್ಕಳು ವಿಜಯೀ ಆತ್ಮಗಳ ಪಟ್ಟಿಯಲ್ಲಿ ಬರುತ್ತಾರೆ.
ಮೂರನೆಯ ಪ್ರಕಾರದ ಮಕ್ಕಳು - ಸದಾ ಸರ್ವ ಅನುಭವಗಳಲ್ಲಿ ಮಗ್ನರಾಗಿರುವವರು. ಮನನ ಮಾಡುವುದು ಒಂದು ಸೆಕೆಂಡಿನ ಸ್ಥಿತಿಯಾಗಿದೆ ಆದರೆ ಮನನ ಮಾಡುತ್ತಾ ಮಗ್ನರಾಗಿರುವುದು ಮೊದಲನೇ ಸ್ಥಿತಿಯಾಗಿದೆ. ಮಗ್ನರಾಗಿರುವವರು ಸ್ವತಹವಾಗಿ ನಿರ್ವಿಘ್ನರಂತೂ ಆಗಿಯೇ ಇರುತ್ತಾರೆ ಆದರೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಿತಿಯು ವಿಘ್ನ ವಿನಾಶಕ ಸ್ಥಿತಿಯಾಗಿದೆ ಅರ್ಥಾತ್ ಸ್ವಯಂ ನಿರ್ವಿಘ್ನರಾಗಿ ಅನ್ಯರಿಗೆ ವಿಘ್ನ ವಿನಾಶಕರಾಗಿ ಸಹಯೋಗಿಗಳಾಗುತ್ತಾರೆ. ಅನುಭವವು ಎಲ್ಲದಕ್ಕಿಂತ ದೊಡ್ಡ ಅಥಾರಿಟಿಯಾಗಿದೆ. ಅನುಭವ ಅಥಾರಿಟಿಯಿಂದ ತಂದೆಯ ಸಮಾನ ಮಾII ಆಲ್ಮೈಟಿ ಅಥಾರಿಟಿ ಸ್ಥಿತಿಯ ಅನುಭವ ಮಾಡುತ್ತಾರೆ. ಮಗ್ನ ಸ್ಥಿತಿಯಿರುವವರು ತನ್ನ ಅನುಭವದ ಆಧಾರದಿಂದ ಅನ್ಯರನ್ನು ನಿರ್ವಿಘ್ನ ಮಾಡುವುದರಲ್ಲಿ ಉದಾಹರಣಾ ಮೂರ್ತಿಗಳಾಗುತ್ತಾರೆ ಏಕೆಂದರೆ ನಿರ್ಬಲ ಆತ್ಮಗಳು ಅವರ ಅನುಭವವನ್ನು ನೋಡಿ ತಾವೂ ಸಾಹಸವನ್ನು ಇಡುತ್ತಾರೆ, ನಾವು ಈ ರೀತಿ ಆಗಬೇಕೆಂದು ಉತ್ಸಾಹದಲ್ಲಿ ಬರುತ್ತಾರೆ. ಮಗ್ನರಾಗಿರುವ ಆತ್ಮಗಳು ತಂದೆಯ ಸಮಾನರಾಗಿರುವ ಕಾರಣ ಬೇಹದ್ದಿನ ವೈರಾಗ್ಯ ವೃತ್ತಿಯವರು ಬೇಹದ್ದಿನ ಸೇವಾಧಾರಿಗಳು ಮತ್ತು ಬೇಹದ್ದಿನ ಪ್ರಾಪ್ತಿಯ ನಶೆಯಲ್ಲಿರುವವರು ಸಹಜವಾಗಿ ಆಗಿ ಬಿಡುತ್ತಾರೆ. ಮಗ್ನರಾಗಿರುವ ಆತ್ಮಗಳು ಸದಾ ಕರ್ಮಾತೀತ ಅರ್ಥಾತ್ ಕರ್ಮ ಬಂಧನದಿಂದ ಭಿನ್ನ ಮತ್ತು ಸದಾ ತಂದೆಗೆ ಪ್ರಿಯರಾಗಿರುತ್ತಾರೆ.
ಮಗ್ನ ಆತ್ಮನು ಸದಾ ತೃಪ್ತ ಆತ್ಮ, ಸಂತುಷ್ಟ ಆತ್ಮ, ಸಂಪನ್ನ ಆತ್ಮ, ಸಂಪೂರ್ಣತೆಯ ಅತಿ ಸಮೀಪ ಆತ್ಮನಾಗಿರುತ್ತಾರೆ. ಸದಾ ಅನುಭವದ ಅಥಾರಿಟಿಯ ಕಾರಣ ಸಹಜ ಯೋಗಿ, ಸ್ವತಹ ಯೋಗಿ ಶ್ರೇಷ್ಠ ಜೀವನ, ಭಿನ್ನ ಮತ್ತು ಪ್ರಿಯವಾದ ಜೀವನದ ಅನುಭವ ಮಾಡುತ್ತಾರೆ. ಅವರ ಬಾಯಿಂದ ಅನುಭವೀ ಮಾತುಗಳು ಹೊರಡುವ ಕಾರಣ ಅವು ಹೃದಯದಲ್ಲಿ ಸಮಾವೇಶವಾಗುತ್ತವೆ ಮತ್ತು ವರ್ಣನೆ ಮಾಡುವ ಮಾತುಗಳು ಕೇವಲ ಬುದ್ಧಿಯವರೆಗೆ ನಾಟುತ್ತದೆ ಅಂದಾಗ ಮೊದಲನೆಯ ಸ್ಥಿತಿ ಯಾವುದೆಂದು ತಿಳಿಯಿತೆ? ಮನನ ಮಾಡುವವರು ವಿಜಯಿಗಳಾಗುತ್ತಾರೆ ಆದರೆ ಸದಾ ಮತ್ತು ಸಹಜ - ಇವೆರಡರಲ್ಲಿ ಅಂತರವಿದೆ. ಮಗ್ನರಾಗಿರುವವರು ಸದಾ ತಂದೆಯ ನೆನಪಿನಲ್ಲಿ ಸಮಾವೇಶವಾಗಿರುತ್ತಾರೆ ಆದ್ದರಿಂದ ಅನುಭವವನ್ನು ಹೆಚ್ಚಿಸಿಕೊಳ್ಳಿ. ಆದರೆ ಮೊದಲು ವರ್ಣನೆಯಿಂದ ಮನನದಲ್ಲಿ ಬನ್ನಿ. ಮನನ ಶಕ್ತಿಯು ಮಗ್ನ ಸ್ಥಿತಿಯನ್ನು ಸಹಜವಾಗಿ ಪ್ರಾಪ್ತಿ ಮಾಡಿಸುತ್ತದೆ. ಮನನ ಮಾಡುತ್ತಾ-ಮಾಡುತ್ತಾ ಸ್ವತಹವಾಗಿ ಅನುಭವವು ಹೆಚ್ಚುತ್ತಾ ಹೋಗುವುದು. ಮನನ ಮಾಡುವ ಅಭ್ಯಾಸವು ಅತ್ಯವಶ್ಯಕವಾಗಿದೆ ಆದ್ದರಿಂದ ಮನನಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಹೇಳುವುದು ಮತ್ತು ಕೇಳುವುದಂತೂ ಅತಿ ಸಹಜವಾಗಿದೆ. ಮನನ ಶಕ್ತಿಯವರು ಮಗ್ನರಾಗಿರುವವರು ಸದಾ ಪೂಜ್ಯರಾಗುತ್ತಾರೆ. ವರ್ಣನೆ ಮಾಡುವವರು ಕೇವಲ ಗಾಯನ ಯೋಗ್ಯರಾಗುತ್ತಾರೆ ಅಂದಾಗ ಸದಾ ತಮ್ಮನ್ನು ಗಾಯನ ಯೋಗ್ಯ - ಪೂಜೆಗೆ ಯೋಗ್ಯರನ್ನಾಗಿ ಮಾಡಿಕೊಳ್ಳಿ. ತಿಳಿಯಿತೇ?
ಮೂರೂ ಪ್ರಕಾರದವರೂ ಸೇವಾಧಾರಿಗಳಾಗಿದ್ದಾರೆ ಆದರೆ ಸೇವೆಯ ಪ್ರಭಾವವು ನಂಬರ್ವಾರ್ ಆಗಿದೆ ಅಂದಾಗ ನಂಬರ್ವಾರ್ನಲ್ಲಿ ಬರಬೇಡಿ, ನಂಬರ್ವನ್ ಆಗಿರಿ. ಒಳ್ಳೆಯದು.
ಸದಾ ತಮ್ಮನ್ನು ಡಬಲ್ ರಾಜ್ಯಾಧಿಕಾರಿ, ಡಬಲ್ ಕಿರೀಟಧಾರಿ ಶ್ರೇಷ್ಠ ಆತ್ಮನ ರೂಪದಲ್ಲಿ ಅನುಭವ ಮಾಡುವವರು, ಸದಾ ಮನನ ಶಕ್ತಿಯ ಮೂಲಕ ಮಗ್ನ ಸ್ಥಿತಿಯ ಅನುಭವ ಮಾಡುವವರು, ಸದಾ ತಂದೆಯ ಸಮಾನ ಅನುಭವೀ, ಮಾII ಆಲ್ಮೈಟಿ ಅಥಾರಿಟಿ ಸ್ಥಿತಿಯ ಅನುಭವಿ ಮೂರ್ತಿಗಳಾಗುವವರು, ಸದಾ ತಮ್ಮ ಶಕ್ತಿಶಾಲಿ ಪೂಜ್ಯ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ನಂಬರ್ವನ್ ಸದಾ ವಿಜಯೀ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ವಿದೇಶಿ ಸಹೋದರ-ಸಹೋದರಿಯರ ಗ್ರೂಪ್ನೊಂದಿಗೆ:
ವಿದೇಶದಲ್ಲಿದ್ದರೂ ಸ್ವದೇಶ, ಸ್ವ-ಸ್ವರೂಪದ ಸ್ಮೃತಿಯಲ್ಲಿ ಸದಾ ಇರುವವರಲ್ಲವೇ? ತಂದೆಯವರು ಹೇಗೆ ಪರಮಧಾಮದಿಂದ ಈ ಹಳೆಯ ಪರರ ದೇಶದಲ್ಲಿ ಪ್ರವೇಶವಾಗಿ ಬರುತ್ತಾರೆ, ಹಾಗೆಯೇ ತಾವೆಲ್ಲರೂ ಸಹ ಪರಮಧಾಮ ನಿವಾಸಿ ಶ್ರೇಷ್ಠ ಆತ್ಮರು, ಸಹಜಯೋಗಿ ಆತ್ಮರಾಗಿರುವ ತಾವೂ ಸಹ ಇಂತಹ ಅನುಭವ ಮಾಡುತ್ತೀರಾ - ನಾವೂ ಸಹ ಪರಮಧಾಮ ನಿವಾಸಿ ಆತ್ಮರು, ಈ ಸಾಕಾರ ಶರೀರದಲ್ಲಿ ಪ್ರವೇಶವಾಗಿ ವಿಶ್ವದ ಕಾರ್ಯಾರ್ಥವಾಗಿ ನಿಮಿತ್ತರಾಗಿದ್ದೇವೆ? ತಾವೂ ಸಹ ಅವತರಣೆಯಾಗಿರುವ ಬ್ರಾಹ್ಮಣ ಆತ್ಮರಾಗಿದ್ದೀರಿ. ಶೂದ್ರ ಜೀವನವು ಸಮಾಪ್ತಿಯಾಯಿತು, ಈಗ ಶುದ್ಧ ಬ್ರಾಹ್ಮಣ ಆತ್ಮರಾಗಿದ್ದೀರಿ. ಬ್ರಾಹ್ಮಣರೆಂದಿಗೂ ಸಹ ಅಪವಿತ್ರರಾಗುವುದಿಲ್ಲ. ಬ್ರಾಹ್ಮಣನ ಅರ್ಥವೇ ಆಗಿದೆ ಪವಿತ್ರರು. ಅಂದಮೇಲೆ ಬ್ರಾಹ್ಮಣರಾಗಿದ್ದೀರಾ ಅಥವಾ ಬೆರಕೆ ಇದೆಯೇ? ಎರಡು ದೋಣಿಗಳಲ್ಲಿ ಕಾಲಿಡುವವರು ಆಗಿಲ್ಲವೇ? ಒಂದೇ ದೋಣಿಯಲ್ಲಿ ಎರಡೂ ಕಾಲಗಳನ್ನಿಡುವವರು ಆಗಿದ್ದೀರಿ. ಆದ್ದರಿಂದ ಬ್ರಾಹ್ಮಣ ಆತ್ಮರು ಅವತರಿತ ಆತ್ಮರಾಗಿದ್ದಾರೆ. ಅದೇರೀತಿ ಯಾವುದೇ ಆತ್ಮರು ಅವತರಿತನಾಗಿ ಬಂದರು, ಅವತರಿತ ರೂಪದಿಂದ ಪ್ರಸಿದ್ಧವಾದರು, ಅವರು ಬಂದಿರುವುದು ಏತಕ್ಕಾಗಿ? ಶ್ರೇಷ್ಠ ಪರಿವರ್ತನೆ ಮಾಡುವುದಕ್ಕಾಗಿ. ಅಂದಮೇಲೆ ತಾವು ಅವತರಿತ ಆತ್ಮರ ಕಾರ್ಯವೇನಾಗಿದೆ? ವಿಶ್ವ ಪರಿವರ್ತನೆ ಮಾಡುವುದು, ರಾತ್ರಿಯನ್ನು ಹಗಲನ್ನಾಗಿ ಮಾಡುವುದು, ನರಕವನ್ನು ಸ್ವರ್ಗವನ್ನಾಗಿ ಮಾಡುವುದು - ಇಷ್ಟು ದೊಡ್ಡ ಕಾರ್ಯವನ್ನು ಮಾಡುವುದಕ್ಕಾಗಿ ಅವತರಿತರಾದಿರಿ ಅಂದರೆ ಬ್ರಾಹ್ಮಣರಾಗಿದ್ದೀರಿ! ಈ ಕಾರ್ಯವು ನೆನಪಿರುತ್ತದೆಯೇ? ಲೌಕಿಕ ಸೇವೆಯನ್ನೂ ಏಕೆ ಮಾಡುತ್ತೀರಿ? ಆದಾಯವನ್ನೂ ಎಲ್ಲಿ ಉಪಯೋಗಿಸುವುದಕ್ಕಾಗಿ? ಸೇವಾಕೇಂದ್ರವನ್ನು ತೆರೆಯುವುದಕ್ಕಾಗಿ ಉಪಯೋಗಿಸುತ್ತೀರಾ ಅಥವಾ ಲೌಕಿಕ ಪರಿವಾರಕ್ಕಾಗಿ ಉಪಯೋಗಿಸುತ್ತೀರಾ? ಒಂದುವೇಳೆ ಸಂಪಾದನೆಯೂ ಈಶ್ವರೀಯ ಸೇವಾಕಾರ್ಯದಲ್ಲಿ ಉಪಯೋಗಿಸುವುದಕ್ಕಾಗಿ ಮಾಡುತ್ತೇವೆ ಎಂಬ ಲಕ್ಷ್ಯವೇ ಇದ್ದರೆ, ಲೌಕಿಕ ಕಾರ್ಯವನ್ನು ಮಾಡುತ್ತಿದ್ದರೂ ಸೇವೆಯೇ ನೆನಪಿರುತ್ತದೆ ಅಲ್ಲವೇ? ಹಾಗೆಯೇ ಯಾರ ನಿರ್ದೇಶನದನುಸಾರ ಮಾಡುತ್ತೀರಿ? ಯಾವಾಗ ತಂದೆಯ ಶ್ರೀಮತದನುಸಾರ ಮಾಡುತ್ತೀರೆಂದರೆ ಶ್ರೀಮತವನ್ನು ಕೊಡುವವರ ನೆನಪು ಬರುತ್ತದೆಯಲ್ಲವೇ? ಆದ್ದರಿಂದ ಬಾಪ್ದಾದಾರವರು ಹೇಳುತ್ತಾರೆ - ಲೌಕಿಕ ಕಾರ್ಯವನ್ನು ಮಾಡುತ್ತಿದ್ದರೂ ಸದಾ ತಮ್ಮನ್ನು ನಿಮಿತ್ತನೆಂದು ತಿಳಿಯಿರಿ. ನಿಮಿತ್ತರೂ ಹೌದು ಹಾಗೂ ವಾರಸುಧಾರರೂ ಆಗಿದ್ದೀರಿ. ಭಲೆ ಎಲ್ಲಿಯೇ ಇರಬಹುದು ಆದರೆ ಮನಸ್ಸಿನಿಂದ ಸಮರ್ಪಿತರಾಗಿದ್ದೀರೆಂದರೆ ವಾರಸುಧಾರರು ಆಗಿದ್ದೀರಿ. ಮಧುಬನದಲ್ಲಿ ಬಂದಿರುವುದೇ ವಾರಸುಧಾರನ ಅರ್ಥವಲ್ಲ. ಆದರೆ ಸೇವಾಕ್ಷೇತ್ರದಲ್ಲಿದ್ದರೂ ಮನಸ್ಸಿನಿಂದ ನನ್ನತನವಿಲ್ಲ ಎಂದರೆ ಸಮರ್ಪಿತರಾಗಿದ್ದೀರಿ, ವಾರಸುಧಾರರೂ ಆಗಿದ್ದೀರಿ. ಅಂದಾಗ ಸರ್ಮರ್ಪಿತರಾಗಿದ್ದೀರಾ ಅಥವಾ ಈಗಲೂ ಕರ್ಮ ಬಂಧನಗಳಲ್ಲಿಯೇ ಇದ್ದೀರಾ? ಯಾವಾಗ ಮನಸ್ಸಿನಿಂದ ಸಮರ್ಪಣೆ ಆಗಿದ್ದೀರೆಂದಾಗ ಬಂಧನವೆನಿಸುವುದಿಲ್ಲ. ಏಕೆಂದರೆ ಸಮರ್ಪಣೆಯಾಗಿದ್ದೀರಿ ಅಂದರೆ ಎಲ್ಲಾ ಬಂಧನಗಳನ್ನೂ ಸಮರ್ಪಣೆ ಮಾಡಿ ಬಿಟ್ಟಿದ್ದೀರಿ. ಒಂದುವೇಳೆ ಮನಸ್ಸನ್ನು ಯಾವುದೇ ಬಂಧನವು ಸೆಳೆಯುತ್ತಿದ್ದರೆ ತಿಳಿದುಕೊಳ್ಳಿರಿ - ಬಂಧನವಿದೆ. ಬಾಕಿ ಬರುತ್ತದೆ ಮತ್ತು ಹೊರಟು ಹೋಗುತ್ತದೆಯೆಂದರೆ ಬಂಧನವಿಲ್ಲ. ಹಾಗಾದರೆ ನಾವು ಅವತರಿತರು, ಮೇಲಿಂದ ಬಂದಿದ್ದೇವೆ- ಇದನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿರಿ. ಅವತರಿತ ಆತ್ಮರೆಂದಿಗೂ ಶರೀರದ ಲೆಕ್ಕಾಚಾರಗಳ ಬಂಧನದಲ್ಲಿ ಬರುವುದಿಲ್ಲ, ಅವರು ವಿದೇಹಿಯಾಗಿದ್ದು ಕಾರ್ಯವನ್ನು ಮಾಡುತ್ತಾರೆ. ಶರೀರದ ಆಧಾರವನ್ನು ಪಡೆಯುತ್ತಾರೆ ಆದರೆ ಶರೀರದ ಬಂಧನಗಳಲ್ಲಿ ಬಂಧಿತರಾಗುವುದಿಲ್ಲ. ಈ ರೀತಿ ಆಗಿದ್ದೀರಾ? ಸದಾ ತಮ್ಮನ್ನು ಶರೀರದ ಬಂಧನಗಳಿಂದ ಭಿನ್ನವಾಗುವುದಕ್ಕಾಗಿ ಅವತರಿತ ಆತ್ಮನೆಂದು ತಿಳಿಯಿರಿ. ಈ ವಿಧಿಯಿಂದ ನಡೆಯುತ್ತಿದ್ದರೆ ಸದಾ ಬಂಧನ-ಮುಕ್ತ ಭಿನ್ನ ಹಾಗೂ ಸದಾ ತಂದೆಯ ಪ್ರಿಯರಾಗುತ್ತೀರಿ.
ಓಂಶಾಂತಿ. ಮಕ್ಕಳಿಗೆ ತಿಳಿದಿದೆ - ಇದು ಆತ್ಮಿಕ ಪರಿವಾರವಾಗಿದೆ, ಅವೆಲ್ಲವೂ ದೈಹಿಕ ಪರಿವಾರಗಳಾಗಿವೆ. ಇದು ಆತ್ಮಿಕ ತಂದೆಯ ಪರಿವಾರವಾಗಿದೆ, ಹೇಗೆ ಲೌಕಿಕ ಮನೆಯಲ್ಲಿ ತಂದೆ-ತಾಯಿ, ಮಕ್ಕಳಿರುತ್ತಾರೆ, ಅದು ಹದ್ದಿನ ಪರಿವಾರವಾಯಿತು. ನೀವೀಗ ಬೇಹದ್ದಿನ ಪರಿವಾರದವರಾಗಿದಿರಿ. ನೀವು ಮಾತಾಪಿತಾ..... ಎಂದು ಮಕ್ಕಳು ಹಾಡುತ್ತಾರೆ ಅಂದಮೇಲೆ ಇದೊಂದು ಪರಿವಾರವಾಯಿತು, ರಚಯಿತನ ರಚನೆಯಾಯಿತು. ಹಾಗೆ ನೋಡಿದರೆ ಎಲ್ಲಾ ಮಕ್ಕಳು ಅವರ ರಚನೆಯಾಗಿದ್ದಾರೆ ಆದರೆ ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಇದು ಬೇಹದ್ದಿನ ತಂದೆಯ ಪರಿವಾರವಾಗಿದೆ, ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ವಿನಾಶಕಾಲೇ ಪ್ರೀತಿ ಬುದ್ಧಿ ವಿಜಯಂತಿ ಎಂದು ಇದಕ್ಕಾಗಿಯೇ ಹೇಳಲಾಗಿದೆ. ಇಂತಹ ಪರಿವಾರದ ಗಾಯನವನ್ನು ಎಂದೂ ಗೀತೆಯಲ್ಲಿ ಹಾಡಿಲ್ಲ. ನೀವು ಈಶ್ವರೀಯ ಪರಿವಾರದವರು ಗುಪ್ತ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ, ಇದು ಯಾರಿಗೂ ಅರ್ಥವಾಗುವುದಿಲ್ಲ, ನಿಮಗೆ ನಶೆಯಿದೆ. ಯಾರು-ಯಾರು ತಂದೆಯನ್ನು ನೆನಪು ಮಾಡುವರೋ ಅವರಿಗೆ ನಶೆಯಿರುವುದು. ದೇಹಾಭಿಮಾನದಲ್ಲಿ ಬರುವುದರಿಂದ ಆ ನಶೆಯು ಇಳಿದುಹೋಗುವುದು. ಇದು ಈಶ್ವರೀಯ ಪರಿವಾರವಾಗಿದೆ, ನಾವು ಮನೆಗೆ ಹೋಗಿ ನಂತರ ದೈವೀ ರಾಜಧಾನಿಯಲ್ಲಿ ಬರುತ್ತೇವೆ. ಅಲ್ಲಿ ದೈವೀ ಪರಿವಾರವಿರುತ್ತದೆ. ಅವರದು ಆಸುರೀ ಪರಿವಾರವಾಗಿದೆ. ಇಲ್ಲಿ ನಿಮ್ಮದು ಈಶ್ವರೀಯ ಪರಿವಾರವಾಗಿದೆ. ಆತ್ಮಿಕ ಬಾಪ್ದಾದಾರವರ ಮಕ್ಕಳು ಸಹೋದರ-ಸಹೋದರರಾಗಿದ್ದೀರಿ, ಇದು ಆತ್ಮಿಕ ಪ್ರವೃತ್ತಿ ಮಾರ್ಗವಾಗಿದೆ. ಸತ್ಯಯುಗದಲ್ಲಿ ಈಶ್ವರೀಯ ಪರಿವಾರವೆಂದು ಹೇಳುವುದಿಲ್ಲ, ಅಲ್ಲಿ ದೈವೀ ಪರಿವಾರವಾಗುತ್ತದೆ. ಈ ಈಶ್ವರೀಯ ಪರಿವಾರವು ಬಹಳ ಶಕ್ತಿಶಾಲಿಯಾಗಿದೆ. ನಾವೀಗ ಈಶ್ವರೀಯ ಪರಿವಾರದವರು ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಹೀಗೆ ತಮ್ಮ ಜೊತೆ ಮಾತನಾಡಿಕೊಳ್ಳುತ್ತಾ ವಿಚಾರ ಸಾಗರ ಮಂಥನ ಮಾಡಬೇಕು. ಮುಂಜಾನೆ ಎದ್ದು ನೆನಪಿನಲ್ಲಿ ಕುಳಿತುಕೊಂಡರೆ ವಿಚಾರ ಸಾಗರ ಮಂಥನ ಮಾಡುವ ಹವ್ಯಾಸವಾಗುವುದು. ಉಮ್ಮಂಗದಲ್ಲಿ ಬರುತ್ತೀರಿ. ಯಾವಾಗ ಎಲ್ಲಾ ಮನುಷ್ಯರು ನಿದ್ರೆಯಲ್ಲಿ ಮಲಗಿರುವರೋ ಆ ಸಮಯದಲ್ಲಿ ನೀವು ಜಾಗೃತರಾಗುತ್ತೀರಿ. ನೀವು ಬೆಳಗ್ಗೆ-ಬೆಳಗ್ಗೆ ಎದ್ದು ಹೀಗೆ ಚಿಂತನೆ ಮಾಡಿರಿ, ಆಗ ನೋಡಿ ನಿಮಗೆ ಎಷ್ಟೊಂದು ಖುಷಿಯಿರುತ್ತದೆ. ಯಾವುದೆಲ್ಲಾ ಶ್ರೀಮತವು ಸಿಗುತ್ತದೆಯೋ ಅದರನುಸಾರ ನಡೆಯುತ್ತದೆ ನಂತರ ನಿಮಗೆ ಬಹಳ ಖುಷಿಯಾಗುವುದು, ಈಶ್ವರೀಯ ಪರಿವಾರದ ನೆನಪು ಬರುವುದು ಮತ್ತು ಆಸುರೀ ಪರಿವಾರದಿಂದ ಮನಸ್ಸು ದೂರ ಸರಿಯುವುದು. ಹೇಗೆ ಹೊಸ ಮನೆಯು ಸಂಪೂರ್ಣ ತಯಾರಾಗಿ ಬಿಟ್ಟರೆ ಮತ್ತೆ ಹಳೆಯದರಿಂದ ಆಸಕ್ತಿಯು ಹೊರಟು ಹೋಗುತ್ತದೆ. ಎಲ್ಲಿಯವರೆಗೆ ಹೊಸದು ತಯಾರಾಗುವುದಿಲ್ಲವೋ ಅಲ್ಲಿಯವರೆಗೆ ಹಳೆಯ ಮನೆಯನ್ನು ಒಂದಲ್ಲ ಒಂದು ರಿಪೇರಿ ಮಾಡುತ್ತಲೇ ಇರುತ್ತಾರೆ. ನಂತರ ಅದರಿಂದ ಮನಸ್ಸು ದೂರ ಸರಿಯುತ್ತದೆ, ಈ ಹಳೆಯ ಪ್ರಪಂಚವೂ ಹಾಗೆಯೇ.
ನೀವೀಗ ತಿಳಿದುಕೊಂಡಿದ್ದೀರಿ - ಇದು ಹಳೆಯ ಮನೆಯಾಗಿದೆ, ನಾವು ಹೊಸ ಮನೆಗೆ ಹೋಗುತ್ತೇವೆ ನಂತರ ಹೊಸ ವಸ್ತ್ರವನ್ನು ಧರಿಸುತ್ತೇವೆ. ಈ ದೇಹವೂ ಹಳೆಯದಾಗಿದೆ, ನೀವೀಗ ಭವಿಷ್ಯ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ಇಲ್ಲಿ ರಾಜ್ಯಭಾರ ಮಾಡುವುದಿಲ್ಲ, ಇಲ್ಲಿ ಸ್ಥಾಪನೆಯಾಗುತ್ತದೆ. ಈ ಮಾತುಗಳನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ. ಇದು ಗೀತೆಯಾಗಿದೆ, ರಾಜಯೋಗವಲ್ಲವೆ. ಇದಕ್ಕೆ ಸಹಜ ರಾಜಯೋಗವೆಂದು ಹೇಳಲಾಗುತ್ತದೆ. ಅನೇಕ ಬಾರಿ ನೀವು ಈ ರಾಜಯೋಗದ ಭ್ಯಾಸದ ಮೂಲಕ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತೀರಿ, ಅಲ್ಲಿ ಈ ಮಾತುಗಳು ನೆನಪಿರುವುದಿಲ್ಲ. ಒಂದುವೇಳೆ ಅಲ್ಲಿಯೂ ಈ ಮಾತುಗಳು ನೆನಪಿರುವುದಾದರೆ ಅಲ್ಲಿನ ಸುಖವೇ ಭಾಸವಾಗುವುದಿಲ್ಲ, ಚಿಂತೆಯಾಗಿ ಬಿಡುವುದು. ಈ ಸಮಯದಲ್ಲಿ ನಿಮಗೆ ಗುಪ್ತನಶೆಯಿದೆ. ಇದು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಪರಿವಾರವಾಗಿದೆ, ಇದಕ್ಕೆ ಈಶ್ವರೀಯ ಗುಪ್ತ ಪರಿವಾರವೆಂದು ಹೇಳಲಾಗುವುದು. ಈಶ್ವರೀಯ ವಿಶ್ವ ವಿದ್ಯಾಲಯ, ಈಶ್ವರೀಯ ಯಜ್ಞವೆಂದೂ ಹೇಳಲಾಗುತ್ತದೆ. ಇದು ಪರಿವಾರವಾಗಿದೆ, ನಾವು ಬಹಳ ಪ್ರಿಯರಾಗಬೇಕಾಗಿದೆ. ಭವಿಷ್ಯದಲ್ಲಿ ಬಹಳ ಪ್ರಿಯರಾಗುತ್ತೀರಿ, ನೀವು ರೂಪ ಭಸಂತರಾಗಿದ್ದೀರಿ, ಆತ್ಮವು ರೂಪವೂ ಆಗಿದೆ, ಭಸಂತನೂ ಆಗಿದೆ. ಇಷ್ಟು ಚಿಕ್ಕ ಬಿಂದು ಅವಿನಾಶಿ ಪಾತ್ರವನ್ನು ಅಭಿನಯಿಸುತ್ತದೆ. ಈ ಸಮಯದಲ್ಲಿ ನೀವು ರೂಪ ಭಸಂತರಾಗಿದ್ದೀರಿ, ತಂದೆಯು ಜ್ಞಾನ ಸಾಗರನಾಗಿದ್ದಾರೆ, ಯಾವಾಗ ಈ ಶರೀರದಲ್ಲಿ ಬರುವರೋ ಆಗಲೇ ಅವಶ್ಯವಾಗಿ ಜ್ಞಾನವನ್ನು ಕೊಡುತ್ತಾರೆ. ಜ್ಞಾನದ ಮಳೆ ಸುರಿಸುತ್ತಾರೆ, ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳದಾಗಿದೆ. ಈಗ ನೀವಾತ್ಮರಿಗೆ ತಂದೆಯ ಪರಿಚಯ ಸಿಕ್ಕಿದೆ, ತಂದೆಯು ಸ್ಮೃತಿ ತರಿಸಿದ್ದಾರೆ, ಈ 84 ಜನ್ಮಗಳ ಚಕ್ರವು ಹೇಗೆ ಸುತ್ತುತ್ತದೆ ಎಂದು ನಿಮ್ಮ ಬುದ್ಧಿಯಲ್ಲಿದೆ ಆದ್ದರಿಂದ ನಿಮ್ಮ ಹೆಸರೇ ಆಗಿದೆ - ಸ್ವದರ್ಶನ ಚಕ್ರಧಾರಿಗಳು. ವಿಷ್ಣು ಅಥವಾ ಲಕ್ಷ್ಮೀ-ನಾರಾಯಣರು ಸ್ವದರ್ಶನ ಚಕ್ರಧಾರಿಗಳಾಗಿರಲಿಲ್ಲ, ಅವರಲ್ಲಿ ಈ ಜ್ಞಾನವಿರುವುದಿಲ್ಲ. ಈಗ ಆತ್ಮಕ್ಕೆ ಈ ಜ್ಞಾನವು ಸಿಗುತ್ತದೆ, ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ. ಭಲೆ ತ್ರಿಮೂರ್ತಿಯೆಂದು ಹೇಳುತ್ತಾರೆ, ಆದರೂ ಶಿವನನ್ನು ತೋರಿಸುವುದಿಲ್ಲ. ತ್ರಿಮೂರ್ತಿಯ ಚಿತ್ರವನ್ನು ಬಹಳ ನೋಡಿದ್ದೇವೆ ಅದರಲ್ಲಿ ಬಹುತೇಕವಾಗಿ ಬ್ರಹ್ಮನಿಗೆ ದಾಡಿ, ಮೀಸೆ ತೋರಿಸುತ್ತಾರೆ. ಸೂಕ್ಷ್ಮವತನದಲ್ಲಿ ದಾಡಿ, ಮೀಸೆಗಳಿರುವುದಿಲ್ಲ. ಇದು ಕೇವಲ ಬ್ರಹ್ಮನಿಗೇ ತೋರಿಸುತ್ತಾರೆ. ಪ್ರಜಾಪಿತನು ಇಲ್ಲಿಯೇ ಬೇಕಲ್ಲವೆ. ಇವರು ಆದಿ ಪಿತನಾದರು, ಬಹಳ ಹಳಬರಾದರು ಅಂದಾಗ ಇದು ಪ್ರಜಾಪಿತ ಬ್ರಹ್ಮನ ವಂಶಾವಳಿಯಾಯಿತು. ತಂದೆಯು ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆ ಅಂದಮೇಲೆ ಬ್ರಹ್ಮನು ಹಿರಿಯರಾದರಲ್ಲವೆ. ವೃದ್ಧನ ರೂಪದಲ್ಲಿ ತೋರಿಸುತ್ತಾರೆ, ಇವರು 84 ಜನ್ಮಗಳ ಚಕ್ರವನ್ನು ಸುತ್ತಿದ್ದಾರೆ, ನೀವೀಗ ಈ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಇದೂ ಸಹ ನಿಮಗೆ ತಿಳಿದಿದೆ - ತಂದೆಗೆ ಎಲ್ಲರೂ ಮಕ್ಕಳಾಗಿದ್ದಾರೆ, ಆತ್ಮರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈಗ ಭಾರತದ ಬಹಳ ದೊಡ್ಡ ಕಲ್ಯಾಣವಾಗುತ್ತಿದೆ, ಎಲ್ಲಾ ಆತ್ಮರು ಪವಿತ್ರರಾಗಿ ಮುಕ್ತಿಧಾಮಕ್ಕೆ ಹೊರಟು ಹೋಗುವರು. ನೀವು ಭಾರತದ ಸೇವೆಯಲ್ಲಿದ್ದೀರಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ. ನೀವೀಗ ಕೆಲವರೇ ಇದ್ದೀರಿ, ಯಾರು ಈ ಮಾತುಗಳನ್ನು ತಿಳಿದುಕೊಳ್ಳುತ್ತೀರಿ. ಮತ್ತೆ ಸಾರ ರೂಪದಲ್ಲಿ ತಿಳಿಸಲಾಗುತ್ತದೆ, ಮಕ್ಕಳೇ, ಮನ್ಮನಾಭವ. ಏನೆಲ್ಲವೂ ಇದೆಯೋ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ತೊಡಗಿಸಿ. ಗಾಂಧೀಜಿಯೂ ಸಹ ಏನು ಮಾಡುತ್ತಿದರು? ಅವರೂ ಸಹ ಏನನ್ನು ಬಯಸುತ್ತಿದ್ದರು, ಎಂತಹ ವಿಚಿತ್ರ ಆಟವಲ್ಲವೆ! ನೀವೀಗ ಸಾಕ್ಷಿಯಾಗಿ ಆಟವನ್ನು ನೋಡುತ್ತೀರಿ, ನಿಮಗೆ ನಗು ಬರುತ್ತದೆ. ಎಲ್ಲಿಯ ಮಾತುಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಾರೆ!
ತಂದೆಯು ತಿಳಿಸುತ್ತಾರೆ - ಡ್ರಾಮಾ ಅನುಸಾರ ಪ್ರಪಂಚದ ಗತಿಯು ಹಾಳಾಗಿ ಬಿಟ್ಟಿದೆ, ಮತ್ತೆ ತಂದೆಯು ಸದ್ಗತಿ ಮಾಡುತ್ತಾರೆ. ನೀವು ಮಕ್ಕಳಿಗೆ ನಶೆಯೇರಿದೆ. ಇವರು ಇಡೀ ವಿಶ್ವದ ನಿರಾಕಾರ ಬಾಪೂಜಿಯಾಗಿದ್ದಾರೆ. ಈ ಬ್ರಹ್ಮನೂ ಸಹ ಯಾರ ಮಗನಾಗಿದ್ದಾರೆ? ಶಿವ ತಂದೆಯ ಮಗು. ಶಿವ ತಂದೆಯು ಯಾರ ಮಗು? ಶಿವ ತಂದೆಯು ನಮ್ಮ ಮಗುವಾಗಿದ್ದಾರೆಂದು ಮಾತೆಯರು ಹೇಳುತ್ತಾರೆ. ಇದು ಶಿವ ತಂದೆಯ ಆಟಪಾಠವಾಗಿದೆ ಬಾಕಿ ಧ್ಯಾನದಲ್ಲಂತೂ ಬಹಳ ಮಾಯೆಯ ಪ್ರವೇಶತೆಯಾಗುತ್ತದೆ. ನಮ್ಮಲ್ಲಿ ಶಿವ ತಂದೆಯು ಬರುತ್ತಾರೆ, ಶಿವ ತಂದೆಯು ಇದನ್ನು ಹೇಳುತ್ತಾರೆ ಎಂದು ಏನೆಲ್ಲವನ್ನೂ ಹೇಳುವರೋ ಇದು ಭೂತ ಪ್ರವೇಶತೆಯಾಗಿದೆ. ಇದರಲ್ಲಿ ನೀವು ಮಕ್ಕಳು ಬಹಳ ಎಚ್ಚರಿಕೆಯಿಂದ ಇರಬೇಕಾಗಿದೆ. ಈ ಭೂತದ ರೋಗವು ಇಂತಹದ್ದಾಗಿದೆ ಯಾವುದು ಎರಡೂ ಕಡೆಗಳಿಂದ ಹಾರಿಸಿ ಬಿಡುತ್ತದೆ. ಆದ್ದರಿಂದ ನಮಗೆ ಸಾಕ್ಷಾತ್ಕಾರವಾಗಬೇಕು ಎಂಬ ಸಂಕಲ್ಪವು ಎಂದಿಗೂ ಬರಬಾರದು. ಇದೆಲ್ಲವೂ ಭಕ್ತಿಯ ವಿಚಾರವಾಗಿದೆ, ಜ್ಞಾನಮಾರ್ಗವನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಮಾಯೆಯು ಅನೇಕ ಪ್ರಕಾರದಿಂದ ಮೋಸ ಮಾಡುತ್ತದೆ. ಸಾಕ್ಷಾತ್ಕಾರ ಮೊದಲಾದುವುಗಳಿಂದ ಯಾವುದೇ ಲಾಭವಿಲ್ಲ. ತಂದೆಯು ತಿಳಿಸುತ್ತಾರೆ - ಇವರ ಮೂಲಕ ನಿಶ್ಚಿತಾರ್ಥ ಮಾಡಿಸುತ್ತೇನೆ. ತಂದೆಯ ಆದೇಶವಾಗಿದೆ, ನೀವು ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ತನ್ನ ಕಲ್ಯಾಣಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದು ತಿಳುವಳಿಕೆಯ ಮಾತಾಗಿದೆ. ತಂದೆಗೆ ಯಾರು ಬೇಕಾದರೂ ಪತ್ರವನ್ನು ಬರೆಯಬಹುದಾಗಿದೆ. ಕೆಲವು ಮಕ್ಕಳಿಗೆ ಇಷ್ಟಾದರೂ ಬುದ್ಧಿಯಿಲ್ಲ, ಬೇಹದ್ದಿನ ತಂದೆಗೆ ಪತ್ರದಲ್ಲಿ ನಮ್ಮ ಕ್ಷೇಮ ಸಮಾಚಾರವನ್ನು ಬರೆಯಬೇಕು ಎಂದು. ಹೇಗೆ ಲೌಕಿಕ ತಂದೆಗೆ ಪತ್ರ ಬರೆಯದಿದ್ದರೆ ಅವರಿಗೆ ಚಿಂತೆಯಾಗಿ ಬಿಡುತ್ತದೆ, ವಿಶ್ರಾಂತಿಯೇ ಸಿಗುವುದಿಲ್ಲ. ಇವರೂ ಸಹ ಬೇಹದ್ದಿನ ತಂದೆಯಾಗಿದ್ದಾರೆ, ಒಂದು, ಒಂದುವರೆ ತಿಂಗಳಿನವರೆಗೆ ಪತ್ರ ಬರಲಿಲ್ಲವೆಂದರೆ ಬಹುಷಃ ಇವರನ್ನು ಮಾಯೆಯು ತಿಂದು ಬಿಟ್ಟಿತು, ಪಾರಲೌಕಿಕ ತಂದೆಗೂ ಪತ್ರ ಬರೆಯುವುದಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಆದ್ದರಿಂದ ಇಷ್ಟಾದರೂ ಬರೆಯಬೇಕು - ಬಾಬಾ, ನಾವು ನಾರಾಯಣೀ ನಶೆಯಲ್ಲಿ ಸದಾ ಇರುತ್ತೇವೆ. ತಾವು ಕೊಟ್ಟಿರುವ ಯುಕ್ತಿಯಲ್ಲಿಯೇ ನಾವು ತತ್ಪರರಾಗಿದ್ದೇವೆ, ಹೀಗೆ ತಿಳಿಸಿದಾಗ ಮಕ್ಕಳು ಖುಷಿಯಿಂದ ಇದ್ದಾರೆಂದು ತಂದೆಗೆ ಅರ್ಥವಾಗುವುದು. ಪತ್ರ ಬರೆಯದೇ ಇದ್ದರೆ ಇವರು ರೋಗಿಯಾಗಿರಬೇಕು, ನೆನಪಿನಲ್ಲಿಯೇ ಇರುವುದಿಲ್ಲ, ಇಲ್ಲದಿದ್ದರೆ ತಂದೆಗೆ ಸಮಾಚಾರ ತಿಳಿಸಬೇಕಲ್ಲವೆ. ಬಾಬಾ, ನಾವು ಈ ಸರ್ವೀಸ್ ಮಾಡಿದ್ದೇವೆ, ಇವರಿಗೆ ತಿಳಿಸಿದೆವು - ಇಂತಹವರ ಬುದ್ಧಿಯಲ್ಲಿ ಪೂರ್ಣ ಕುಳಿತುಕೊಳ್ಳಲಿಲ್ಲ, ಹೀಗೆ ತಂದೆಗೆ ಸಮಾಚಾರವನ್ನು ತಿಳಿಸಿದಾಗ ಮಕ್ಕಳೇ, ಈ ರೀತಿ ತಿಳಿಸಿಕೊಡಿ ಎಂದು ತಂದೆಯೂ ಹೇಳುವರು.
ಮಕ್ಕಳು ಗೀತೆಯನ್ನು ಕೇಳಿದಿರಿ, ಯಾರು ಈ ಗೀತೆಯನ್ನು ರಚಿಸಿದ್ದಾರೆಯೋ ಅವರು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿಲ್ಲ, ಅದೆಲ್ಲವೂ ಭಕ್ತಿಮಾರ್ಗವಾಗಿದೆ. ಏನೆಲ್ಲವನ್ನೂ ಹೇಳುವರೋ ಏನನ್ನೂ ತಿಳಿದುಕೊಂಡಿಲ್ಲ. ಮುಖ್ಯ ಮಾತೇನೆಂದರೆ ತಂದೆಯನ್ನೇ ತಿಳಿದುಕೊಂಡಿಲ್ಲ. ತಂದೆಯನ್ನು ಅರಿತುಕೊಳ್ಳುವುದರಿಂದ ಭಾರತವು ಸದ್ಗತಿಯನ್ನು ಪಡೆಯುತ್ತದೆ. ತಂದೆಯನ್ನು ಅರಿತುಕೊಳ್ಳದ ಕಾರಣ ಭಾರತವು ದುರ್ಗತಿ ಹೊಂದುತ್ತದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ನಿಮ್ಮನ್ನು ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಉಳಿದೆಲ್ಲರನ್ನೂ ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತೇನೆ. ಭಾರತವು ಜೀವನ್ಮುಕ್ತಿಯಲ್ಲಿದ್ದಾಗ ಉಳಿದೆಲ್ಲರೂ ಮುಕ್ತಿಯಲ್ಲಿರುತ್ತಾರೆ. ಈ ಪರಿವರ್ತನೆಯನ್ನು ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಸರ್ವರ ಸದ್ಗತಿಯು ಅವಶ್ಯವಾಗಿ ಆಗುತ್ತದೆ. ಕಲ್ಪ-ಕಲ್ಪವೂ ಸಂಗಮದಲ್ಲಿಯೇ ಆಗುವುದು.
ನಾವಾತ್ಮರ ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ, ಅವರನ್ನು ಆತ್ಮವೇ ನೆನಪು ಮಾಡುತ್ತದೆ ಎಂಬುದು ನಿಮಗೆ ತಿಳಿದಿದೆ - ನಿಮಗೆ ಭಕ್ತಿಮಾರ್ಗದಲ್ಲಿ ಇಬ್ಬರು ತಂದೆಯರು ಇರುತ್ತಾರೆ. ಸತ್ಯಯುಗದಲ್ಲಿ ಒಬ್ಬರು ತಂದೆಯಿರುತ್ತಾರೆ, ಸಂಗಮದಲ್ಲಿ ಮೂರು ಜನ ತಂದೆಯರಿದ್ದಾರೆ. ಪ್ರಜಾಪಿತ ಬ್ರಹ್ಮನೂ ಸಹ ತಂದೆಯಾದರಲ್ಲವೆ. ಶಿವನೂ ತಂದೆಯಾಗಿದ್ದಾರೆ, ಅವರು ಸರ್ವ ಆತ್ಮರ ತಂದೆಯಾಗಿದ್ದಾರೆ, ಅವರಿಂದಲೇ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಅವರನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಬ್ರಹ್ಮನನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದಿಲ್ಲ. ಆದ್ದರಿಂದ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ನಾವು ಅವರ ಮಕ್ಕಳಾಗಿದ್ದೇವೆ, ಇದು ಸತ್ಯ-ಸತ್ಯವಾದ ಯಥಾರ್ಥ ಜ್ಞಾನವಾಗಿದೆ, ಇದು ಆತ್ಮಿಕ ತಂದೆಯ ಆತ್ಮಿಕ ಮಕ್ಕಳ ಪ್ರತಿ. ಉಳಿದೆಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ದೇಹಾಭಿಮಾನಿ ಪತಿತ ಮನುಷ್ಯರು ಪತಿತ ಕರ್ತವ್ಯವನ್ನೇ ಮಾಡುತ್ತಾರೆ. ದಾನ-ಪುಣ್ಯ ಇತ್ಯಾದಿಯೇನೆಲ್ಲವನ್ನೂ ಮಾಡುತ್ತಾರೆಯೋ ಅದೆಲ್ಲವನ್ನೂ ಪತಿತವಾದುದನ್ನೇ ಮಾಡುತ್ತಾರೆ. ರಾವಣ ರಾಜ್ಯದಲ್ಲಿ ಇದು ಆಗಿಯೇ ಆಗುತ್ತದೆ. ಈಗ ತಂದೆಯು ಬಂದು ಆದೇಶ ಹೊರಡಿಸುತ್ತಾರೆ, ತಿಳಿಸುತ್ತಾರೆ - ಮಕ್ಕಳೇ, ಎಚ್ಚರಿಕೆಯಿಂದಿರಿ, ವಿಕಾರದಲ್ಲಿ ಹೋಗಬಾರದು. ಕಾಮದ ಮೇಲೆ ಜಯ ಗಳಿಸಬೇಕಾಗಿದೆ. ಬಿರುಗಾಳಿಗಳಂತೂ ಬಹಳ ಬರುತ್ತದೆ, ಇದಕ್ಕೆ ವಶವಾಗಬಾರದು. ಜ್ಞಾನವಿಲ್ಲದ ಸಮಯದಲ್ಲಿಯೂ ಬಂದಿರುವುದಿಲ್ಲ, ಅಷ್ಟು ಮಾಯೆಯ ವಿಕಲ್ಪಗಳು ಬರುತ್ತವೆ. ಆದ್ದರಿಂದ ಬಾಬಾ, ಭಕ್ತಿಮಾರ್ಗದಲ್ಲಿ ಬಹಳ ಖುಷಿಯಿರುತ್ತದೆ, ಈಗ ತಮ್ಮನ್ನು ನೆನಪು ಮಾಡಬೇಕೆಂದರೂ ಸಹ ಮಾಡಲು ಆಗುತ್ತಿಲ್ಲ. ಬಿಂದುವು ನೆನಪಿರುವುದಿಲ್ಲ, ದೊಡ್ಡ ವಸ್ತುವಾಗಿದ್ದರೆ ನೆನಪು ಮಾಡಬಹುದು ಎಂದು ಹೇಳುತ್ತಾರೆ.
ತಂದೆಯು ತಿಳಿಸುತ್ತಾರೆ - ನೀವು ಶಿವ ತಂದೆಯೆಂದು ಹೇಳಿ ನೆನಪು ಮಾಡಿ. ಈ ಹಳೆಯ ಪ್ರಪಂಚವನ್ನು ಮರೆತು ಹೋಗಿ ಶಾಂತಿಧಾಮದಲ್ಲಿ ನೆನಪು ಮಾಡಿ. ಕೇವಲ ಶಾಂತಿಧಾಮವನ್ನು ನೆನಪು ಮಾಡಬಾರದು, ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಆತ್ಮಕ್ಕೆ ಮಧುರ ತಂದೆಯೊಂದಿಗೆ ಪ್ರೀತಿಯಿರಬೇಕು. ತಂದೆಯು ಅರ್ಧಕಲ್ಪದ ಪ್ರಿಯತಮನಾಗಿದ್ದಾರೆ, ನಾವು ಅರ್ಧಕಲ್ಪ ತಮ್ಮನ್ನು ಮರೆತುಹೋಗಿದ್ದೇವೆ ಎಂದು ಆತ್ಮವು ಹೇಳುತ್ತದೆ. ಬ್ರಾಹ್ಮಣಿಯರು ಯಾರನ್ನು ಕರೆ ತರುತ್ತಾರೆಯೋ ಅವರು ಬಹಳ ಎಚ್ಚರವಹಿಸಿ ನಿಶ್ಚಯ ಬುದ್ಧಿಯವರನ್ನೂ ಕರೆತರಬೇಕಾಗಿದೆ. ಒಂದುವೇಳೆ ಇಲ್ಲಿ ಬಂದು ಮತ್ತೆ ಹೋಗಿ ಪತಿತರಾದರೆ ಬ್ರಾಹ್ಮಣಿಯ ಮೇಲೆ ಅದು ಶಿಕ್ಷೆಯಾಗುವುದು ಆದ್ದರಿಂದ ಬ್ರಾಹ್ಮಣಿಯರ ಮೇಲೆ ಬಹಳ ಜವಾಬ್ದಾರಿಯಿರುವುದು. ತಂದೆಯು ಈ ರಥವನ್ನು ತೆಗೆದುಕೊಂಡಿದ್ದಾರೆ, ಇವರು ಎಲ್ಲಾ ಮಾತುಗಳ ಅನುಭವಿಯಾಗಿದ್ದಾರೆ, ಇಲ್ಲಂತೂ ಯಾವುದೇ ಕೊಳಕಿನ ಮಾತಿಲ್ಲ. ಪರಸ್ಪರ ಆಟವಾಡುವುದು, ನಗುವುದು, ಮಾತನಾಡುವುದು ಇದನ್ನು ನಿರಾಕಾರಿಸುವುದಿಲ್ಲ. ಬಾಕಿ ಯಾವುದೇ ಆತ್ಮನೊಂದಿಗೆ ಸ್ವಲ್ಪ ಪ್ರೀತಿಯನ್ನಿಟ್ಟರೂ ಮತ್ತೆ ಅದು ಹೆಚ್ಚು ವೃದ್ಧಿಯಾಗುತ್ತಾ ಹೋಗುವುದು. ಅವರ ನೆನಪು ಬರುತ್ತಾ ಇರುವುದು, ಆದ್ದರಿಂದ ಇದರಿಂದಲೂ ದೂರ ಹೋಗಬೇಕಾಗಿದೆ.
ಈಗ ನೀವು ಮನೆಯಲ್ಲಿ ಕುಳಿತಿದ್ದೀರಾ ಅಥವಾ ಸತ್ಯಯುಗದಲ್ಲಿ ಕುಳಿತಿದ್ದೀರಾ? (ಮನೆಯಲ್ಲಿ) ತಂದೆಯು ಮಕ್ಕಳಿಗೆ ಮನೆಯಲ್ಲಿ ಓದಿಸುತ್ತಾರೆ, ಇದು ನಿಮ್ಮೆಲ್ಲರ ಮನೆಯಾಗಿದೆ. ಹೊರಗಡೆ ಹೋಗುತ್ತೀರೆಂದರೆ ಈ ರೀತಿ ಹೇಳುವುದಿಲ್ಲ. ಇಲ್ಲಿ ಬಹಳ ನಶೆಯಿರುತ್ತದೆ, ದೇಹಾಭಿಮಾನವನ್ನು ಬಿಡಬೇಕಾಗಿದೆ. ದೇಹೀ-ಅಭಿಮಾನಿಯಾಗಿರಿ ಆಗ ಜಾತಿಪಾತಿಯ ಬೇಧವೆಲ್ಲವೂ ಹೊರಟು ಹೋಗುವುದು. ಹಳೆಯ ಪ್ರಪಂಚವು ತಮೋಪ್ರಧಾನವಾಗಿದೆ, ಅದರಲ್ಲಿ ಭೇದಭಾವವು ಇನ್ನೂ ಹೆಚ್ಚುತ್ತಾ ಹೋಗುವುದು. ಮೊದಲು ಬ್ರಿಟಿಷ್ ಸರ್ಕಾರದ ಸಮಯದಲ್ಲಿ ಭಾಷೆಗಳ ಕಿರಿಕಿರಿಯಿರಲಿಲ್ಲ. ಈಗ ದಿನ-ಪ್ರತಿದಿನ ಒಡಕುಂಟಾಗುತ್ತಾ ಇದೆ. ಮತ್ತೆ ಸತ್ಯಯುಗದಲ್ಲಿ ಒಂದೇ ಭಾಷೆಯಿರುವುದು, ಯಾವುದೇ ಭೇದಭಾವವಿರುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ದೇಹಧಾರಿಯ ನೆನಪು ಬರಬಾರದು, ಅದಕ್ಕಾಗಿ ಯಾರೊಂದಿಗೂ ಪ್ರೀತಿ ಮಾಡಬಾರದು. ಇದರಿಂದಲೂ ದೂರ ಹೋಗಬೇಕಾಗಿದೆ. ಬಹಳ ಎಚ್ಚರಿಕೆಯನ್ನು ಇಡಬೇಕಾಗಿದೆ. ಮಾಯೆಯ ವಿಕಲ್ಪಗಳಿಗೆ ಗಾಬರಿಯಾಗಬಾರದು. ವಿಜಯಿಗಳಾಗಬೇಕಾಗಿದೆ.
2. ಧ್ಯಾನದಲ್ಲಿ ಮಾಯೆಯ ಬಹಳ ಪ್ರವೇಶತೆಯಾಗುತ್ತದೆ, ಈ ಭೂತ ಪ್ರವೇಶತೆಯಿಂದ ತನ್ನನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ. ತಂದೆಗೆ ತನ್ನ ಸತ್ಯ-ಸತ್ಯ ಸಮಾಚಾರವನ್ನು ತಿಳಿಸಬೇಕಾಗಿದೆ.
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನಂತು ಮಕ್ಕಳಿಗೆ ಪದೇ-ಪದೇ ತಿಳಿಸಲಾಗಿದೆ. ಓಂ ಎಂದರೆ ನಾನು ಆತ್ಮ ಆಗಿದ್ದೇನೆ ಮತ್ತು ಇದು ನನ್ನ ಶರೀರ ಆಗಿದೆ. ಶರೀರವೂ ಸಹ ಹೇಳುತ್ತದೆ - ಇದು ನನ್ನ ಆತ್ಮವಾಗಿದೆ. ಶಿವ ತಂದೆಯೂ ಹೇಳುತ್ತಾರಲ್ಲವೆ - ನೀವು ನನ್ನವರಾಗಿದ್ದೀರಿ. ಮಕ್ಕಳೂ ಸಹ ತಂದೆಯು ನನ್ನವರಾಗಿದ್ದೀರಿ ಎಂದು ಹೇಳುತ್ತಾರೆ. ಅದೇರೀತಿ ಆತ್ಮವೂ ಸಹ ಇದು ನನ್ನ ಶರೀರ ಎಂದು ಹೇಳುತ್ತದೆ. ಶರೀರವೂ ಸಹ ನನ್ನ ಆತ್ಮವೆಂದು ಹೇಳುತ್ತದೆ. ಈಗ ಆತ್ಮವು ನಾನು ಅವಿನಾಶಿ ಆಗಿದ್ದೇನೆ ಎಂದು ತಿಳಿದುಕೊಂಡಿದೆ. ಆತ್ಮವಿಲ್ಲದೆ ಶರೀರವೇನೂ ಮಾಡುವುದಕ್ಕೆ ಆಗುವುದಿಲ್ಲ. ಶರೀರವಂತು ಇದೆ ಆದರೆ ಹೇಳುತ್ತಾರೆ - ನಾನಾತ್ಮನಿಗೆ ಕಷ್ಟ ಕೊಡಬೇಡಿ, ನಾನಾತ್ಮನು ಪಾಪಾತ್ಮ ಆಗಿದ್ದೇನೆ ಅಥವಾ ಪುಣ್ಯಾತ್ಮನಾಗಿದ್ದೇನೆ ಎಂದು ಹೇಳುತ್ತಾರೆ. ನೀವು ಹೇಳುತ್ತೀರಿ - ನಾನಾತ್ಮನು ಸತ್ಯಯುಗದಲ್ಲಿ ಪುಣ್ಯಾತ್ಮನಾಗಿದ್ದೆನು. ನಾನು ಸತ್ಯಯುಗದಲ್ಲಿ ಸತೋಪ್ರಧಾನ ಅಥವಾ ಶುದ್ಧ ಚಿನ್ನವಾಗಿದ್ದೆನು ಎಂದು ಸ್ವಯಂ ಆತ್ಮವೇ ಹೇಳುತ್ತದೆ. ಚಿನ್ನವೆಂದರೆ ಚಿನ್ನವಲ್ಲ, ಇದೊಂದು ಉದಾಹರಣೆ ಕೊಡಲಾಗುತ್ತದೆ ಅಷ್ಟೆ. ನಮ್ಮ ಆತ್ಮವು ಪವಿತ್ರವಾಗಿತ್ತು, ಪರಿಶುದ್ಧವಾದ ಚಿನ್ನದ ಸಮಾನವಿತ್ತು, ಈಗಂತು ಹೇಳುತ್ತಾರೆ - ಅಶುದ್ಧವಾಗಿದ್ದೇನೆ. ಪ್ರಪಂಚದವರು ಇದನ್ನು ತಿಳಿದುಕೊಂಡಿಲ್ಲ. ನಿಮಗಂತು ಶ್ರೀಮತ ಸಿಗುತ್ತದೆ, ನೀವೀಗ ಇದನ್ನು ತಿಳಿದಿದ್ದೀರಿ - ನಮ್ಮ ಆತ್ಮವು ಸತೋಪ್ರಧಾನವಿತ್ತು, ಈಗ ತಮೋಪ್ರಧಾನವಾಗಿದೆ. ಬಾಲ್ಯಾವಸ್ಥೆ, ಯುವ, ವೃದ್ಧಾಪ್ಯ..... ಹೀಗೆ ಪ್ರತಿಯೊಂದು ವಸ್ತುವೂ ಆಗುತ್ತದೆ, ಪ್ರತಿಯೊಂದು ವಸ್ತುವು ಹೊಸದರಿಂದ ಹಳೆಯದಂತು ಆಗುತ್ತದೆ. ಪ್ರಪಂಚದವೂ ಸಹ ಮೊದಲು ಚಿನ್ನದ ಸಮಾನ ಸತೋಪ್ರಧಾನವಾಗಿತ್ತು ನಂತರ ತಮೋಪ್ರಧಾನ ಕಬ್ಬಿಣದ ಸಮಾನವಾಗಿದೆ, ಆದ್ದರಿಂದಲೇ ದುಃಖಿಗಳಾಗಿದ್ದಾರೆ. ಸತೋಪ್ರಧಾನದ ಅರ್ಥವೇ ಆಗಿದೆ - ಸುಧಾರಣೆ ಆಗಿರುವವರು (ಪರಿಶುದ್ಧ), ತಮೋಪ್ರಧಾನವೆಂದರೆ ದೋಷವುಳ್ಳವರು. ಗೀತೆಯಲ್ಲಿಯೂ ಹೇಳುತ್ತಾರೆ - ಹಾಳಾಗಿರುವವರನ್ನು ಸುಧಾರಣೆ ಮಾಡುವವರು.... ಹಳೆಯ ಪ್ರಪಂಚದಲ್ಲಿ ದೋಷವುಂಟಾಗಿದೆ ಏಕೆಂದರೆ ರಾವಣ ರಾಜ್ಯವಿದೆ ಮತ್ತು ಎಲ್ಲರೂ ಪತಿತರಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ ಪಾವನರಿದ್ದರು, ಅದಕ್ಕೆ ನವ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಇದು ಹಳೆಯ ವಿಕಾರಿ ಪ್ರಪಂಚವಾಗಿದೆ. ಕಲಿಯುಗವೂ ಸಹ ಈಗ ಕಬ್ಬಿಣದ ಯುಗವಾಗಿದೆ, ಇವೆಲ್ಲಾ ಮಾತುಗಳನ್ನು ಯಾವುದೇ ಶಾಲೆ, ಕಾಲೇಜುಗಳಲ್ಲಿಯೂ ಓದಿಸುವುದಿಲ್ಲ. ಭಗವಂತನೇ ಬಂದು ಓದಿಸುತ್ತಾರೆ ಹಾಗೂ ರಾಜಯೋಗದ ವಿದ್ಯೆಯನ್ನು ಕಲಿಸುತ್ತಾರೆ. ಗೀತೆಯಲ್ಲಿಯೂ ಭಗವಾನುವಾಚ ಬರೆಯಲಾಗಿದೆ - ಶ್ರೀಮತ್ ಭಗವತ್ ಗೀತಾ. ಶ್ರೀಮತವೆಂದರೆ ಶ್ರೇಷ್ಠ ಮತ ಎಂದಾಗಿದೆ. ಶ್ರೇಷ್ಠಕ್ಕಿಂತಲೂ ಶ್ರೇಷ್ಠವಾದ ಸರ್ವೋಚ್ಛನು ಭಗವಂತನಾಗಿದ್ದಾರೆ, ಅವರ ಹೆಸರು ಯಥಾರ್ಥವಾಗಿ ಶಿವ ಎಂದಿದೆ. ಎಂದಿಗೂ ರುದ್ರ ಜಯಂತಿ ಅಥವಾ ರುದ್ರ ರಾತ್ರಿಯೆಂದು ಕೇಳಿರುವುದಿಲ್ಲ, ಶಿವರಾತ್ರಿ ಎಂದು ಹೇಳುತ್ತಾರೆ. ಶಿವನಂತು ನಿರಾಕಾರ, ಈಗ ನಿರಾಕಾರನ ರಾತ್ರಿ ಅಥವಾ ಜಯಂತಿಯನ್ನು ಆಚರಿಸುವುದಾದರೂ ಹೇಗೆ? ಕೃಷ್ಣ ಜಯಂತಿ ಎನ್ನುವುದು ಸರಿಯಾಗಿದೆ. ಇಂತಹವರ ಮಗು, ಅವರ ತಿಥಿ-ತಾರೀಖನ್ನು ತೋರಿಸುತ್ತಾರೆ. ಶಿವನ ಜನ್ಮವು ಯಾವಾಗ ಆಯಿತು ಎಂದು ಯಾರೂ ತಿಳಿದುಕೊಂಡಿಲ್ಲ, ಇದನ್ನಂತು ತಿಳಿದುಕೊಳ್ಳಬೇಕಲ್ಲವೆ. ಈಗ ನಿಮಗೆ ಆ ತಿಳುವಳಿಕೆಯು ಸಿಕ್ಕಿದೆ - ಶ್ರೀಕೃಷ್ಣನು ಸತ್ಯಯುಗದ ಆದಿಯಲ್ಲಿ ಜನ್ಮವನ್ನು ಹೇಗೆ ಪಡೆದನು. ಅವನ ಜನ್ಮವಾಗಿ 5000 ವರ್ಷಗಳಾಯಿತು ಎಂದು ನೀವು ಹೇಳುತ್ತೀರಿ. ಅವರೂ(ಕ್ರಿಶ್ಚಿಯನ್ನರು) ಹೇಳುತ್ತಾರೆ- ಕ್ರೈಸ್ತ ಬರುವುದಕ್ಕೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು. ಇಸ್ಲಾಮಿಗಳು ಬರುವುದಕ್ಕೆ ಮೊದಲು ಚಂದ್ರವಂಶಿ, ಅವರಿಗೂ ಮುಂಚೆ ಸೂರ್ಯವಂಶಿಗಳಿದ್ದರು. ಶಾಸ್ತ್ರಗಳಲ್ಲಿ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳನ್ನು ಕೊಟ್ಟಿದ್ದಾರೆ, ಇದಕ್ಕಾಗಿ ಗೀತೆಯು ಮುಖ್ಯವಾಗಿದೆ. ಗೀತೆಯಿಂದಲೇ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು. ಅದು ಸತಯುಗ-ತ್ರೇತಾದವರೆಗೂ ನಡೆಯಿತು ಅರ್ಥಾತ್ ಗೀತಾ ಶಾಸ್ತ್ರದಿಂದ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಪರಮಪಿತ ಪರಮಾತ್ಮನೇ ಸ್ಥಾಪಿಸಿದರು. ಆ ಅರ್ಧಕಲ್ಪದಲ್ಲಂತು ಯಾವುದೇ ಶಾಸ್ತ್ರಗಳೂ ತಯಾರಾಗಲಿಲ್ಲ, ಯಾವುದೇ ಧರ್ಮ ಸ್ಥಾಪಕರೂ ಇರಲಿಲ್ಲ. ತಂದೆಯೇ ಬಂದು ಬ್ರಾಹ್ಮಣರನ್ನು ದೇವತಾ-ಕ್ಷತ್ರಿಯರನ್ನಾಗಿ ತಯಾರು ಮಾಡಿದರು ಅಂದರೆ ತಂದೆಯು 3 ಧರ್ಮಗಳ ಸ್ಥಾಪನೆ ಮಾಡುತ್ತಾರೆ, ಇದು ಗುಪ್ತ ಧರ್ಮವಾಗಿದೆ. ಇದರ ಆಯಸ್ಸು ಸ್ವಲ್ಪವೇ ಇರುತ್ತದೆ ಅಂದಾಗ ಸರ್ವಶಾಸ್ತ್ರಗಳ ಶಿರೋಮಣಿ ಗೀತೆಯನ್ನು ಭಗವಂತನೇ ನುಡಿಸಲಾಗಿದೆ. ತಂದೆಯು ಪುನರ್ಜನ್ಮದಲ್ಲಿ ಬರುವುದಿಲ್ಲ, ಜನ್ಮವಿದೆ ಆದರೆ ತಂದೆಯವರು ಹೇಳುತ್ತಾರೆ - ನಾನು ಗರ್ಭದಲ್ಲಿ ಬರಬೇಕಾಗಿರುವುದಿಲ್ಲ. ಪಾಪಗಳನ್ನು ಜೈಲಿನಲ್ಲಿ ಅನುಭವಿಸುತ್ತಾರೆ, ಗರ್ಭದಲ್ಲಿ ಪ್ರತಿಜೆಯನ್ನೂ ಮಾಡುತ್ತಾರೆ - ಇನ್ನು ನಾವು ಪಾಪಗಳನ್ನು ಮಾಡುವುದಿಲ್ಲ... ಆದರೆ ಇದಂತು ಪಾಪಾತ್ಮರ ಪ್ರಪಂಚವೇ ಆಗಿದೆ. ಹೊರಬಂದ ನಂತರ ಪಾಪಗಳನ್ನು ಮಾಡತೊಡಗುತ್ತಾರೆ. ಅಲ್ಲಿನ ಪ್ರತಿಜ್ಞೆಯು ಅಲ್ಲಿಯೇ ಉಳಿಯಿತು.... ಇಲ್ಲಿಯೂ ಸಹ ನಾವು ಪಾಪಗಳನ್ನು ಮಾಡುವುದಿಲ್ಲ, ಪರಸ್ಪರದಲ್ಲಿ ಕಾಮ ವಿಕಾರವನ್ನು ನಡೆಸುವುದಿಲ್ಲವೆಂದು ಬಹಳಷ್ಟು ಪ್ರತಿಜ್ಞೆಗಳನ್ನು ಮಾಡುತ್ತಾರೆ. ಏಕೆಂದರೆ ಈ ವಿಕಾರಗಳು ಆದಿ-ಮಧ್ಯ-ಅಂತ್ಯದಲ್ಲಿ ದುಃಖ ಕೊಡುತ್ತದೆ. ಸತ್ಯಯುಗದಲ್ಲಿ ಈ ವಿಕಾರಗಳೇ ಇರುವುದಿಲ್ಲ ಅಂದಮೇಲೆ ಮನುಷ್ಯನು ಆದಿ- ಮಧ್ಯ-ಅಂತ್ಯದ 21 ಜನ್ಮಗಳಲ್ಲಿ ದುಃಖವನ್ನು ಅನುಭವಿಸುವುದಿಲ್ಲ ಏಕೆಂದರೆ ಅಲ್ಲಿ ರಾಮ ರಾಜ್ಯವಿರುತ್ತದೆ. ಅದರ ಸ್ಥಾಪನೆಯನ್ನೀಗ ತಂದೆಯು ಮತ್ತೆ ಸ್ಥಾಪಿಸುತ್ತಿದ್ದಾರೆ. ಸಂಗಮಯುಗದಲ್ಲಿಯೇ ಸ್ಥಾಪನೆ ಆಗುತ್ತದೆಯಲ್ಲವೆ. ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅವರು ಯಾವುದೇ ಪಾಪವನ್ನು ಮಾಡಬಾರದು. ಅರ್ಧ ಸಮಯ ಪುಣ್ಯಾತ್ಮನಾಗಿರುತ್ತಾರೆ, ಅರ್ಥ ಸಮಯದ ನಂತರ ಪಾಪಾತ್ಮನಾಗುತ್ತಾರೆ. ನೀವು ಸತ್ಯಯುಗ-ತ್ರೇತಾದಲ್ಲಿ ಪುಣಾತ್ಮನಾಗಿ ಇರುತ್ತೀರಿ, ನಂತರದಲ್ಲಿ ಪಾಪಾತ್ಮನಾಗುತ್ತೀರಿ. ಯಾವಾಗ ಸತೋಪ್ರಧಾನ ಆತ್ಮನು ಮೇಲಿಂದ ಬರುವನು, ಆಗ ಅವರು ಶಿಕ್ಷೆಯನ್ನು ಅನುಭವಿಸಲು ಸಾಧ್ಯವಿಲ್ಲ. ಕ್ರೈಸ್ತನ ಆತ್ಮವು ಧರ್ಮ ಸ್ಥಾಪನೆ ಮಾಡುವುದಕ್ಕಾಗಿ ಬಂದಿತು, ಅವರಿಗೆ ಯಾವುದೇ ಶಿಕ್ಷೆಯು ಸಿಗಲು ಸಾಧ್ಯವಿಲ್ಲ. ಹೇಳುವುದೇನು - ಕ್ರೈಸ್ತನನ್ನು ಶಿಲುಬೆಗೇರಿಸಿದರು ಆದರೆ ಅವರ ಆತ್ಮವಂತು ಯಾವುದೇ ವಿಕರ್ಮಗಳನ್ನೇ ಮಾಡಿರಲಿಲ್ಲ, ಯಾವ ಶರೀರದಲ್ಲಿ ಅವರು ಪ್ರವೇಶ ಮಾಡುತ್ತಾರೆಯೋ ಅವರಿಗೆ ದುಃಖವಾಗುತ್ತದೆ, ಶರೀರದಲ್ಲಿರುವವರು ಸಹನೆ ಮಾಡುತ್ತಾರೆ. ಹೇಗೆ ಇದರಲ್ಲಿ (ಬ್ರಹ್ಮಾ) ತಂದೆಯು ಬರುತ್ತಾರೆ, ಅವರಂತು ಇರುವುದೇ ಸತೋಪ್ರಧಾನ. ಯಾವುದೇ ದುಃಖ, ಕಷ್ಟಗಳು ಇವರ ಆತ್ಮನಿಗಾಗುತ್ತದೆ, ಶಿವ ತಂದೆಗೆ ಆಗುವುದಿಲ್ಲ. ಶಿವ ತಂದೆಯಂತು ಸದಾ ಸುಖ-ಶಾಂತಿಯಲ್ಲಿ ಇರುತ್ತಾರೆ, ಅವರಂತು ಸದಾ ಸತೋಪ್ರಧಾನ ಆದರೆ ಬರುವುದಂತು ಈ ಹಳೆಯ ಶರೀರದಲ್ಲಿ ಬರುತ್ತಾರಲ್ಲವೆ. ಅದೇರೀತಿ ಕ್ರೈಸ್ತನ ಆತ್ಮವು ಯಾವ ಶರೀರದಲ್ಲಿ ಪ್ರವೇಶ ಮಾಡಿತು, ಆ ಶರೀರಕ್ಕೆ ದುಃಖವಾಗಬಹುದು, ಕ್ರೈಸ್ತನ ಆತ್ಮವು ದುಃಖವನ್ನು ಅನುಭವಿಸಲು ಸಾಧ್ಯವಿಲ್ಲ ಏಕೆಂದರೆ ಸತೋ-ರಜೋ-ತಮೋದಲ್ಲಿ ಬರುತ್ತದೆ. ಹೊಸ-ಹೊಸ ಆತ್ಮಗಳೂ ಸಹ ಬರುತ್ತಾರಲ್ಲವೆ. ಅವರಿಗೆ ಮೊದಲು ಅವಶ್ಯವಾಗಿ ಸುಖ ಭೋಗಿಸಬೇಕಾಗುತ್ತದೆ, ದುಃಖವನ್ನಲ್ಲ. ದುಃಖವನ್ನು ಅನುಭವಿಸಲು ನಿಯಮವೇ ಹೇಳುವುದಿಲ್ಲ. ಇದರಲ್ಲಿ ಬಾಬಾರವರು ಕುಳಿತಿದ್ದಾರೆ, ಆದರೆ ಯಾವುದೇ ಕಷ್ಟ-ನೋವುಗಳು ಇವರಿಗಾಗುತ್ತದೆ, ಶಿವ ತಂದೆಗೆ ಆಗುವುದಿಲ್ಲ. ಆದರೆ ಈ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾರಿಗೂ ಗೊತ್ತಿಲ್ಲ.
ಇವೆಲ್ಲಾ ರಹಸ್ಯಗಳನ್ನೀಗ ತಂದೆಯು ಕುಳಿತು ತಿಳಿಸುತ್ತಿದ್ದಾರೆ. ಈ ಸಹಜ ರಾಜಯೋಗದಿಂದಲೇ ಸ್ಥಾಪನೆಯು ಆಗಿತ್ತು, ನಂತರ ಭಕ್ತಿಮಾರ್ಗದಲ್ಲಿಯೂ ಇದೇ ಮಾತುಗಳನ್ನು ಮಹಿಮೆ ಮಾಡಲಾಗುತ್ತದೆ. ಈ ಸಂಗಮದಲ್ಲಿ ಏನೆಲ್ಲಾ ಆಯಿತು, ಅದೆಲ್ಲದರ ಮಹಿಮೆಯಾಗುತ್ತದೆ. ಭಕ್ತಿಮಾರ್ಗದ ಆರಂಭ ಆಗುತ್ತಿದ್ದಂತೆಯೇ ಶಿವ ತಂದೆಯ ಪೂಜೆಯಾಗುತ್ತದೆ. ಮೊಟ್ಟ ಮೊದಲು ಭಕ್ತಿಯನ್ನು ಯಾರು ಮಾಡುವರೊ, ಅದೇ ಲಕ್ಷ್ಮೀ-ನಾರಾಯಣರು ಯಾವಾಗ ರಾಜ್ಯಾಡಳಿತ ಮಾಡುತ್ತಿದ್ದರೋ ಆ ಸಮಯದಲ್ಲಿ ಪೂಜ್ಯರಾಗಿದ್ದರು, ಅವರೇ ನಂತರ ಯಾವಾಗ ವಾಮಮಾರ್ಗದಲ್ಲಿ ಬರುತ್ತಾರೆಯೋ ಆಗ ಪೂಜ್ಯರಿದ್ದವರು ಪೂಜಾರಿ ಆಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳ ಬುದ್ಧಿಯಲ್ಲಿ ಮೊಟ್ಟ ಮೊದಲು ಇದೇ ಬರಬೇಕು - ನಿರಾಕಾರ ಪರಮಪಿತ ಪರಮಾತ್ಮನು ಇವರ (ಬ್ರಹ್ಮಾ ತಂದೆ) ಮೂಲಕ ನಮಗೆ ಓದಿಸುತ್ತಿದ್ದಾರೆ. ಇಡೀ ವಿಶ್ವದಲ್ಲಿ ಇಲ್ಲಿ ತಿಳಿಸುವಂತೆ ಮತ್ತ್ಯಾವುದೇ ಸ್ಥಾನಗಳಲ್ಲಿಯೂ ತಿಳಿಸುವುದಿಲ್ಲ. ತಂದೆಯೇ ಬಂದು ಭಾರತಕ್ಕೆ ಪುನಃ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಇದನ್ನು ತ್ರಿಮೂರ್ತಿಯ ಕೆಳಗೆ ಬರೆಯಲಾಗಿದೆ - ಡೀಟಿ ವರ್ಲ್ಡ್ ಸಾವರಾನಿಟಿ ಈಜ್ ಯುವರ್ ಗಾಡ್ ಫಾದರ್ಲಿ ಬರ್ಥ್ ರೈಟ್ (ದೈವೀ ಪ್ರಪಂಚದ (ಸ್ವರ್ಗ) ಆಸ್ತಿಯು ನಿಮ್ಮ ಜನ್ಮ ಸಿದ್ಧ ಅಧಿಕಾರವಾಗಿದೆ). ನೀವು ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ, ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ನೀವೂ ತಿಳಿದಿದ್ದೀರಿ - ಬಾಬಾರವರು ನಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ ಏಕೆಂದರೆ ನಾವು ಪತಿರರಾಗಿದ್ದೆವು. ಪಾವನರಾಗುತ್ತೀರೆಂದರೆ ಈ ಶರೀರವು ಇರುವುದಿಲ್ಲ. ರಾವಣನಿಂದ ನಾವು ಪತಿತರಾದೆವು, ಮತ್ತೆ ಪರಮಪಿತ ಪರಮಾತ್ಮನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಅವರು ಜ್ಞಾನ ಸಾಗರನೂ ಆಗಿದ್ದಾರೆ ಮತ್ತು ಪತಿತ-ಪಾವನನೂ ಆಗಿದ್ದಾರೆ. ಇದನ್ನು ನಿರಾಕಾರ ತಂದೆಯೇ ನಮಗೆ ಓದಿಸುತ್ತಿದ್ದಾರೆ, ಒಂದೇ ಸಾರಿ ಎಲ್ಲರೂ ಓದುವುದಕ್ಕೂ ಸಾಧ್ಯವಿಲ್ಲ. ನೀವು ಸನ್ಮುಖದಲ್ಲಿ ಸ್ವಲ್ಪವೇ ಮಕ್ಕಳು ಕುಳಿತಿದ್ದೀರಿ, ಉಳಿದ ಎಲ್ಲಾ ಮಕ್ಕಳು ತಿಳಿದುಕೊಂಡಿದ್ದಾರೆ - ಈಗ ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಕುಳಿತುಕೊಂಡು, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿರಬಹುದು. ಅದನ್ನು ಮುರುಳಿಯು ಬರವಣಿಗೆಯ ಮೂಲಕ ಬರುತ್ತದೆ. ಅನ್ಯ ಸತ್ಸಂಗಗಳಲ್ಲಿ ಈ ರೀತಿ ತಿಳಿದುಕೊಳ್ಳುತ್ತಾರೆಯೇ! ವರ್ತಮಾನದಲ್ಲಿ ಟೇಪ್ರೆಕಾರ್ಡ್ ಸಹ ಬಂದಿದೆ. ಆದ್ದರಿಂದ ಅದರಲ್ಲಿಯೂ ರೆಕಾರ್ಡ್ ಮಾಡಿ ಕಳುಹಿಸುತ್ತಾರೆ. ಅವರುಗಳಂತು ಇಂತಹ ಹೆಸರಿನ ಗುರುಗಳು ತಿಳಿಸುತ್ತಾರೆಂದು ಹೇಳುತ್ತಾರೆ, ಬುದ್ಧಿಯಲ್ಲಿ ಮನುಷ್ಯರೇ ಇರುತ್ತಾರೆ, ಇಲ್ಲಂತು ಆ ಮಾತಿರುವುದಿಲ್ಲ. ಇಲ್ಲಂತು ನಿರಾಕಾರ ತಂದೆಯಾದ ಜ್ಞಾನ ಸಾಗರನಿದ್ದಾರೆ. ಮನುಷ್ಯರನ್ನು ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಮಹಿಮೆಯಲ್ಲಿ ಹಾಡುತ್ತಾರೆ - ಗಾಡ್ ಫಾದರ್ ಈಸ್ ನಾಲೆಡ್ಜ್ಫುಲ್, ಪೀಸ್ಫುಲ್, ಬ್ಲಿಸ್ಫುಲ್ ಎಂದು ಹಾಡುತ್ತಾರೆ, ಅಂದಮೇಲೆ ಆಸ್ತಿಯೂ ಇರಬೇಕಲ್ಲವೆ. ಅವರಲ್ಲಿ ಯಾವ ಗುಣಗಳಿವೆಯೋ ಅವು ಮಕ್ಕಳಿಗೂ ಸಿಗಬೇಕು, ಅದೀಗ ಸಿಗುತ್ತಿದೆ. ಗುಣಗಳನ್ನು ಧಾರಣೆ ಮಾಡಿಕೊಂಡು ನಾವು ಇಂತಹ ಲಕ್ಷೀ-ನಾರಾಯಣ ಆಗುತ್ತಿದ್ದೇವೆ. ಆದರೆ ಎಲ್ಲರೂ ರಾಜ-ರಾಣಿಯರು ಆಗುವುದಿಲ್ಲ. ಗಾಯನ ಮಾಡುತ್ತಾರೆ - ರಾಜಾ-ರಾಣಿ, ಮಂತ್ರಿ..... ಅಲ್ಲಂತು ಮಂತ್ರಿಯೇ ಇರುವುದಿಲ್ಲ. ಅಲ್ಲಿನ (ಸತ್ಯ-ತ್ರೇತಾ) ಮಹಾರಾಜಾ -ಮಹಾರಾಣಿಯಲ್ಲಿ ಅಂತಹ ಪವರ್ ಇರುತ್ತದೆ, ಆದರೆ ಯಾವಾಗ ವಿಕಾರಿಗಳಾಗುವರೋ ಆಗ ಮಂತ್ರಿ ಮುಂತಾದವರು ಇರುತ್ತಾರೆ. ಮುಂಚೆ ಮಂತ್ರಿ ಮುಂತಾದವರೇ ಇರಲಿಲ್ಲ. ಅಲ್ಲಂತು ರಾಜಾ-ರಾಣಿಯ ರಾಜ್ಯವೇ ನಡೆಯುತ್ತಿತ್ತು, ಅವರೇ ಮಾಲೀಕರಾಗಿದ್ದಾಗ ಮಂತ್ರಿಗಳ ಅವಶ್ಯಕತೆ ಅಥವಾ ಸಲಹೆ ತೆಗೆದುಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ - ಇದೆಲ್ಲವೂ ಚರಿತ್ರೆ-ಭೂಗೋಳವಾಗಿದೆ. ಆದರೆ ಮೊಟ್ಟ ಮೊದಲು ತಾವು ಏಳುತ್ತಾ-ಕುಳಿತುಕೊಳ್ಳುತ್ತಾ ಬುದ್ಧಿಯಲ್ಲಿ ಇದಿರಬೇಕು - ನಮಗಂತು ತಂದೆಯು ಓದಿಸುತ್ತಿದ್ದಾರೆ, ಯೋಗ ಕಲಿಸುತ್ತಿದ್ದಾರೆ. ಈಗ ನಾಟಕವು ಪೂರ್ಣವಾಗುತ್ತದೆ, ನಾವು ಸಂಪೂರ್ಣ ಪತಿತರಾಗಿದ್ದೇವೆ ಏಕೆಂದರೆ ವಿಕಾರಗಳಲ್ಲಿ ಹೋಗಿರುವ ಕಾರಣದಿಂದ ಪಾಪಾತ್ಮನೆಂದು ಹೇಳಲಾಗುತ್ತದೆ. ಅದಕ್ಕಾಗಿ ನಾವೀಗ ನೆನಪಿನ ಯಾತ್ರೆಯಲ್ಲಿ ನಾವಿರಬೇಕಾಗಿದೆ. ಸತ್ಯಯುಗದಲ್ಲಿ ಪಾಪಾತ್ಮರೇ ಇರುವುದಿಲ್ಲ, ಅಲ್ಲಂತು ಪುಣ್ಯಾತ್ಮರಿರುತ್ತಾರೆ ಮತ್ತು ಅದು ಪ್ರಾಲಬ್ಧವಾಗಿದೆ, ಅದಕ್ಕಾಗಿಯೇ ನೀವೀಗ ಪುರುಷಾರ್ಥವನ್ನು ಮಾಡುತ್ತಿದ್ದೀರಿ. ಇದು ನಿಮ್ಮ ನೆನಪಿನ ಯಾತ್ರೆಯಾಗಿದೆ, ಇದನ್ನೇ ಭಾರತದ ಯೋಗವೆಂದೂ ಹೇಳುತ್ತಾರೆ. ಆದರೆ ಯೋಗ ಎಂದರೆ ನೆನಪು, ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ ನಂತರ ಈ ಶರೀರವನ್ನು ಬಿಟ್ಟು ಹೊರಟು ಹೋಗುತ್ತೇವೆ ಯಾವುದಕ್ಕೆ ಮಧುರ ಮನೆ ಎಂದು ಹೇಳಲಾಗುತ್ತದೆ - ಇದರ ಅರ್ಥವನ್ನೂ ಸಹಾ ಅವರು ತಿಳಿದುಕೊಂಡಿಲ್ಲ. ಆತ್ಮವು ಹೇಳುತ್ತದೆ - ನಾವು ಆ ಶಾಂತಿಧಾಮದ ನಿವಾಸಿ ಆಗಿದ್ದೇವೆ. ನಾವು ಅಲ್ಲಿಂದ ಅಶರೀರಿಯಾಗಿ ಬಂದಿದ್ದೇವೆ, ಇಲ್ಲಿ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಶರೀರವನ್ನು ಪಡೆದೆವು. ಇದನ್ನೂ ತಿಳಿಸಲಾಗಿದೆ - ಮಾಯೆ ಎಂದು 5 ವಿಕಾರಗಳಿಗೆ ಹೇಳಲಾಗುತ್ತದೆ, ಈ ಕಾಮದ ಭೂತ, ಕ್ರೋಧದ ಭೂತ......ಇವು ಪಂಚ ಭೂತಗಳಾವಿದೆ. ಮೊದಲ ನಂಬರಿನನಲ್ಲಿದೆ - ದೇಹಾಭಿಮಾನದ ಭೂತ. ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ಈ ವಿಕಾರಗಳೇ ಇರಲಿಲ್ಲ, ಆ ಪ್ರಪಂಚಕ್ಕೆ ನಿರ್ವಿಕಾರಿ ಜಗತ್ತು ಎಂದು ಹೇಳಲಾಗುತ್ತದೆ. ವಿಕಾರಿ ಪ್ರಪಂಚವನ್ನು ನಿರ್ವಿಕಾರಿಯನ್ನಾಗಿ ಮಾಡುವುದಂತು ತಂದೆಯವರ ಕಾರ್ಯವೇ ಆಗಿದೆ. ಅವರನ್ನೇ ಸರ್ವಶಕ್ತಿವಂತ, ಜ್ಞಾನದ ಸಾಗರ, ಪತಿತ-ಪಾವನನೆಂದು ಹೇಳಲಾಗುತ್ತದೆ, ಈ ಸಮಯದಲ್ಲಿ ಎಲ್ಲರೂ ಭ್ರಷ್ಟಾಚಾರದಿಂದ ಜನ್ಮ ಪಡೆಯುವರು. ಸತ್ಯಯುಗದಲ್ಲಿಯೇ ನಿರ್ವಿಕಾರಿ ಪ್ರಪಂಚವಿರುತ್ತದೆ. ಅದಕ್ಕಾಗಿ ತಂದೆಯು ಹೇಳುತ್ತಾರೆ - ನೀವೀಗ ವಿಕಾರಿಗಳಿಂದ ನಿರ್ವಿಕಾರಿಗಳು ಆಗಬೇಕಾಗಿದೆ, ಮನುಷ್ಯರು ಹೇಳುತ್ತಾರೆ – ಇದಿಲ್ಲದೆ (ವಿಕಾರ) ಮಕ್ಕಳ ಜನ್ಮ ಹೇಗಾಗುತ್ತದೆ. ತಂದೆಯು ತಿಳಿಸುತ್ತಾರೆ - ಈಗ ನಿಮ್ಮದು ಅಂತಿಮ ಜನ್ಮವಾಗಿದೆ, ಮೃತ್ಯುಲೋಕವೇ ಸಮಾಪ್ತಿಯಾಗುವುದಿದೆ, ಇದರ ನಂತರ ವಿಕಾರಿ ಜನರಿರುವುದಿಲ್ಲ. ಆದ್ದರಿಂದ ತಂದೆಯ ಬಳಿ ಪವಿತ್ರರಾಗುವ ಪ್ರತಿಜ್ಞೆ ಮಾಡಬೇಕು. ಮಕ್ಕಳು ಹೇಳುತ್ತಾರೆ - ಬಾಬಾ, ನಾವು ತಮ್ಮಿಂದ ಅವಶ್ಯವಾಗಿ ಆಸ್ತಿಯನ್ನು ಪಡೆಯುತ್ತೇವೆ. ಅವರಂತು (ಪ್ರಪಂಚದವರು) ಅಸತ್ಯವಾದ ಪ್ರತಿಜ್ಞೆ ಮಾಡುತ್ತಾರೆ. ಯಾರ ಮುಂದೆ ಪ್ರತಿಜ್ಞೆ ಮಾಡುತ್ತಾರೆಯೋ, ಅವರು ಯಾವಾಗ ಹೇಗೆ ಬರುತ್ತಾರೆ, ಅವರ ನಾಮ-ರೂಪ-ದೇಶ-ಕಾಲವೇನಾಗಿದೆ ಏನನ್ನೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ, ಈಗ ನಿಮಗಂತು ಪರಿಚಯ ಸಿಗುತಿದೆ. ಪ್ರಪಂಚದಲ್ಲಿ ಯಾರೂ ಸಹ ಪರಮಪಿತನನ್ನು ತಿಳಿದುಕೊಂಡಿಲ್ಲ, ಭಲೆ ಕರೆಯುತ್ತಾರೆ ಪೂಜೆಯನ್ನೂ ಮಾಡುತ್ತಾರೆ ಆದರೆ ಅವರ ಕರ್ತವ್ಯವನ್ನೇ ತಿಳಿದಿಲ್ಲ. ಈಗ ನೀವು ತಿಳಿದಿದ್ದೀರಿ - ಪರಮಪಿತ ಪರಮಾತ್ಮನು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಈ ತಂದೆಯು ಸ್ವಯಂ ತನ್ನ ಪರಿಚಯವನ್ನು ಕೊಡುತ್ತಾರೆ- ಮಕ್ಕಳೆ, ನಾನು ನಿಮ್ಮ ತಂದೆಯಾಗಿರುವೆನು. ನಾನು ಈ ಶರೀರದಲ್ಲಿ ಪ್ರವೇಶ ಮಾಡಿದ್ದೇನೆ. ಪ್ರಜಾಪಿತ ಬ್ರಹ್ಮಾನ ಮೂಲಕ ಸ್ಥಾಪನೆಯಾಗುತ್ತದೆ. ಯಾವುದರ ಸ್ಥಾಪನೆ? ಬ್ರಾಹ್ಮಣರ ಸ್ಥಾಪನೆ. ನೀವು ಬ್ರಾಹ್ಮಣರು ಓದಿದ ನಂತರ ದೇವತೆಗಳಾಗುವಿರಿ. ನಾನು ಬಂದು ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ತಂದೆಯು ಹೇಳುತ್ತಾರೆ- ಮಕ್ಕಳೇ, ನಾನು ಬರುವುದೇ ಕಲ್ಪದ ಸಂಗಮಯುಗದಲ್ಲಿ. ಕಲ್ಪವಿರುವುದೇ 5 ವರ್ಷಗಳು. ಈ ಸೃಷ್ಟಿಚಕ್ರವಂತು ಸುತ್ತುತ್ತಾ ಇರುತ್ತದೆ, ನಾನು ಈ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುವುದಕ್ಕಾಗಿ ಬರುತ್ತೇನೆ. ನೀವು 21 ಜನ್ಮಗಳಿಗಾಗಿ ಮನುಷ್ಯರಿಂದ ದೇವತೆಗಳಾಗುತ್ತೀರಿ. ದೇವತೆಗಳಂತು ಸೂರ್ಯವಂಶಿ, ಚಂದ್ರವಂಶಿ, ಪ್ರಜೆಗಳು ಎಲ್ಲರೂ ಇರುತ್ತಾರೆ, ಉಳಿದಂತೆ ಪುರುಷಾರ್ಥದನುಸಾರ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗ ಯಾರೆಷ್ಟು ಪುರುಷಾರ್ಥ ಮಾಡುವಿರಿ. ಅದೇರೀತಿ ಕಲ್ಪ-ಕಲ್ಪವೂ ನಡೆಯುತ್ತದೆ. ಮಕ್ಕಳೂ ಸಹ ತಿಳಿಯುತ್ತಾರೆ - ಕಲ್ಪ-ಕಲ್ಪವೂ ಇಂತಹ ಪುರುಷಾರ್ಥ ಮಾಡುತ್ತೇವೆ, ಇಂತಹ ಪದವಿಯನ್ನೇ ಪಡೆಯುತ್ತೇವೆ. ನೀವು ಮಕ್ಕಳ ಬುದ್ಧಿಯಲ್ಲಿದೆ - ನಮಗೆ ನಿರಾಕಾರ ತಂದೆಯು ಓದಿಸುತಿದ್ದಾರೆ, ಅದನ್ನು ನೆನಪಿಟ್ಟುಕೊಳ್ಳುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೆನಪಿಡದೆ ವಿಕರ್ಮಗಳ ವಿನಾಶವಾಗುವುದಿಲ್ಲ. ಮನುಷ್ಯರಿಗೆ ಇದೂ ಗೊತ್ತಿಲ್ಲ - ನಾವೆಷ್ಟು ಜನ್ಮಗಳನ್ನು ಪಡೆಯುತ್ತೇವೆ. ಇದರ ಬಗ್ಗೆ ಶಾಸ್ತ್ರಗಳಲ್ಲಿ ಅಸತ್ಯವನ್ನು ಬರೆದು ಬಿಟ್ಟಿದ್ದಾರೆ - 84 ಲಕ್ಷ ಜನ್ಮಗಳಾಗುತ್ತವೆ ಎಂದು. ಈಗ ನೀವು ತಿಳಿದುಕೊಂಡಿದ್ದೀರಿ - ನಮ್ಮದು 84 ಜನ್ಮಗಳಾಗುವುದು. ಇದು ಅಂತಿಮ ಜನ್ಮವಾಗಿದೆ, ನಂತರ ನಾವು ಸ್ವರ್ಗದಲ್ಲಿ ಹೋಗಬೇಕಾಗಿದೆ. ಮೊದಲು ಮೂಲವತನಕ್ಕೆ ಹೋಗಿ, ನಂತರ ಸ್ವರ್ಗದಲ್ಲಿ ಬರುತ್ತೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯೊಂದಿಗೆ ಪವಿತ್ರರಾಗುತ್ತೇವೆಂಬ ಯಾವ ಪ್ರತಿಜ್ಞೆ ಮಾಡಲಾಗಿದೆಯೋ, ಅದರಂತೆ ಪರಿಪಕ್ವವಾಗಿ ಇರಬೇಕಾಗಿದೆ. ಕಾಮ, ಕ್ರೋಧ, ಇತ್ಯಾದಿ ಭೂತಗಳ ಮೇಲೆ ಖಂಡಿತ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.
2. ನಡೆಯುತ್ತಾ-ಸುತ್ತಾಡುತ್ತಾ ಪ್ರತಿಯೊಂದು ಕಾರ್ಯವನ್ನು ಮಾಡುತ್ತಿದ್ದರೂ, ಓದಿಸುವಂತಹ ತಂದೆಯನ್ನು ನೆನಪಿಟ್ಟುಕೊಳ್ಳಬೇಕು. ಈಗ ನಾಟಕ ಪೂರ್ಣವಾಗುತ್ತಿದೆ, ಆದ್ದರಿಂದ ಈ ಅಂತಿಮ ಜನ್ಮದಲ್ಲಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಮಕ್ಕಳು ಬಹಳ ಮೋಸ ಹೋಗಿದ್ದೀರಿ. ಭಕ್ತಿಮಾರ್ಗದಲ್ಲಿ ಬಹಳ ಭಾವನೆಯಿಂದ ಯಾತ್ರೆಯನ್ನು ಮಾಡಲು ಹೋಗುತ್ತಾರೆ, ರಾಮಾಯಣ ಇತ್ಯಾದಿಗಳಗನ್ನು ಕೇಳುತ್ತಾರೆ. ಇಷ್ಟು ಪ್ರೀತಿಯಿಂದ ಕಥೆಗಳನ್ನು ಕೇಳುತ್ತಾ-ಕೇಳುತ್ತಾ ಕಣ್ಣೀರು ಬಂದು ಬಿಡುತ್ತದೆ. ನಮ್ಮ ಭಗವಂತನ ಸೀತೆ, ಭಗವತಿಯನ್ನು ರಾವಣನು ಕದ್ದುಕೊಂಡು ಹೋದನು ಎಂಬುದನ್ನು ಕೇಳುವ ಸಮಯದಲ್ಲಿ ಅಳುತ್ತಾರೆ. ಇವೆಲ್ಲವೂ ದಂತ ಕಥೆಗಳಾಗಿವೆ, ಇವುಗಳಿಂದ ಯಾವುದೇ ಲಾಭವಿಲ್ಲ. ಪತಿತ-ಪಾವನ ಬಾ, ಬಂದು ನಾವು ದುಃಖಿಗಳನ್ನು ಸುಖಿಯನ್ನಾಗಿ ಮಾಡು ಎಂದು ಕರೆಯುತ್ತಾರೆ. ಆತ್ಮವು ದುಃಖಿಯಾಗುತ್ತದೆ ಎಂದು ತಿಳಿಯುವುದಿಲ್ಲ ಏಕೆಂದರೆ ಆತ್ಮವು ನಿರ್ಲೇಪವೆಂದು ತಿಳಿದಿದ್ದಾರೆ. ಇದನ್ನು ಏಕೆ ಹೇಳುತ್ತಾರೆ? ಏಕೆಂದರೆ ಪರಮಾತ್ಮನು ದುಃಖ-ಸುಖದಿಂದ ಭಿನ್ನವಾಗಿದ್ದಾರೆ ಅಂದಮೇಲೆ ಮಕ್ಕಳು ಸುಖ-ದುಃಖದಲ್ಲಿ ಬರಲು ಹೇಗೆ ಸಾಧ್ಯ ಎಂದು ತಿಳಿಯುತ್ತಾರೆ. ಈ ಮಾತುಗಳನ್ನು ಈಗ ಮಕ್ಕಳು ತಿಳಿದುಕೊಂಡಿದ್ದೀರಿ. ಈ ಜ್ಞಾನಮಾರ್ಗದಲ್ಲಿ ಕೆಲವೊಮ್ಮೆ ಗ್ರಹಚಾರಿಯು ಕುಳಿತು ಬಿಡುತ್ತದೆ, ಕೆಲವೊಮ್ಮೆ ಇನ್ನೇನೋ ಆಗುತ್ತದೆ. ಕೆಲವೊಮ್ಮೆ ಹೂವಿನಂತೆ ಅರಳಿರುತ್ತಾರೆ, ಕೆಲವೊಮ್ಮೆ ಬಾಡಿದ ಮುಖವಿರುತ್ತದೆ. ಇದು ಮಾಯೆಯೊಂದಿಗಿನ ಯುದ್ಧವಾಗಿದೆ. ಮಾಯೆಯ ಮೇಲೆ ವಿಜಯ ಪಡೆಯಬೇಕಾಗಿದೆ. ಯಾವಾಗ ಮೂರ್ಛೆ ಹೋಗುವರೋ ಆಗ ಸಂಜೀವಿನಿ ಮೂಲಿಕೆಯನ್ನು ಕೊಡಲಾಗುತ್ತದೆ - ಮನ್ಮನಾಭವ ಎಂದು. ಭಕ್ತಿಮಾರ್ಗದಲ್ಲಿ ಬಹಳ ಜಂಜಾಟವಿದೆ. ದೇವತೆಗಳು ಮೂರ್ತಿಗಳನ್ನು ಎಷ್ಟೊಂದು ಶೃಂಗಾರ ಮಾಡುತ್ತಾರೆ, ಸತ್ಯವಾದ ಆಭರಣಗಳನ್ನು ತೊಡಿಸುತ್ತಾರೆ. ಆ ಆಭರಣಗಳಂತೂ ಠಾಕೂರನ ಸಂಪತ್ತು ಆಗುತ್ತದೆ. ಠಾಕೂರನ ಆಸ್ತಿ ಸೋ ಪೂಜಾರಿ ಅಥವಾ ನಿಮಿತ್ತರದಾಗಿ ಬಿಡುತ್ತದೆ. ನಾವು ಚೈತನ್ಯದಲ್ಲಿ ಬಹಳ ವಜ್ರ ವೈಡೂರ್ಯಗಳಿಂದ ಶೃಂಗರಿತರಾಗಿದ್ದೆವು ನಂತರ ಯಾವಾಗ ಪೂಜಾರಿಗಳಾಗುತ್ತೇವೆಯೋ ಆಗಲೂ ಬಹಳ ಆಭರಣಗಳನ್ನು ತೊಡಿಸುತ್ತಾರೆ. ಈಗ ಏನೂ ಇಲ್ಲ, ಚೈತನ್ಯ ರೂಪದಲ್ಲಿಯೂ ಧರಿಸಿದಿರಿ ಮತ್ತು ಜಡ ರೂಪದಲ್ಲಿಯೂ ಧರಿಸಿದಿರಿ, ಈಗ ಯಾವುದೇ ಆಭರಣಗಳಿಲ್ಲ, ಸಂಪೂರ್ಣ ಸಾಧಾರಣರಾಗಿದ್ದೀರಿ, ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆ, ಯಾವುದೇ ರಾಜಾಯಿಯ ಆಡಂಬರವಿಲ್ಲ. ಸನ್ಯಾಸಿಗಳೂ ಸಹ ಬಹಳ ಆಡಂಬರದಿಂದ ಇರುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಸತ್ಯಯುಗದಲ್ಲಿ ಹೇಗೆ ನಾವಾತ್ಮರು ಪವಿತ್ರರಾಗಿದ್ದೆವು, ಶರೀರವು ಪವಿತ್ರವಾಗಿತ್ತು, ಅವರ ಶೃಂಗಾರವು ಬಹಳ ಚೆನ್ನಾಗಿರುತ್ತದೆ. ಯಾರಾದರೂ ಸುಂದರವಾಗಿದ್ದರೆ ಅವರಿಗೆ ಶೃಂಗಾರದ ಆಸಕ್ತಿಯಿರುತ್ತದೆ. ನೀವೂ ಸಹ ಸುಂದರರಾಗಿದ್ದಾಗ ಬಹಳ ಒಳ್ಳೊಳ್ಳೆಯ ಆಭರಣಗಳನ್ನು ಧರಿಸಿದಿರಿ, ವಜ್ರಗಳ ದೊಡ್ಡಹಾರಗಳನ್ನು ಧರಿಸುತ್ತಿದ್ದಿರಿ, ಇಲ್ಲಿ ಪ್ರತಿಯೊಂದು ವಸ್ತುವೂ ಕಪ್ಪಾಗಿದೆ. ನೋಡಿ, ಹಸುಗಳೂ ಸಹ ಕಪ್ಪಾಗುತ್ತಾ (ಪತಿತ) ಹೋಗಿವೆ. ಬ್ರಹ್ಮಾ ತಂದೆಯು ಶ್ರೀನಾಥ ದ್ವಾರಕ್ಕೆ ಹೋದಾಗ ಬಹಳ ಒಳ್ಳೆಯ ಹಸುಗಳಿತ್ತು, ಕೃಷ್ಣನ ಹಸುವನ್ನು ಬಹಳ ಸುಂದರವಾಗಿ ತೋರಿಸುತ್ತಾರೆ. ಇಲ್ಲಂತೂ ಕೆಲಕೆಲವು ಕೆಲವೊಂದು ರೀತಿಯಿರುತ್ತದೆ ಎಕೆಂದರೆ ಕಲಿಯುಗವಾಗಿದೆ. ಇಂತಹ ಹಸುಗಳು ಅಲ್ಲಿರುವುದಿಲ್ಲ. ನೀವು ವಿಶ್ವದ ಮಾಲೀಕರಾಗುತ್ತೀರಿ, ನಿಮ್ಮ ಶೃಂಗಾರವೂ ಸಹ ಅಲ್ಲಿ ಸುಂದರವಾಗಿರುತ್ತದೆ. ವಿಚಾರ ಮಾಡಿದಾಗ ಹಸುಗಳೂ ಸಹ ಅಲ್ಲಿ ಸುಂದರವಾಗಿರಬೇಕಲ್ಲವೆ! ಅಲ್ಲಿಯ ಹಸುಗಳ ಗೊಬ್ಬರವು ಬಹಳ ಚೆನ್ನಾಗಿರುತ್ತದೆ, ಅದರಲ್ಲಿ ಎಷ್ಟೊಂದು ಶಕ್ತಿಯಿರುತ್ತದೆ! ಹೊಲ ಗದ್ದೆಗಳಿಗೆ ಗೊಬ್ಬರ ಬೇಕಾಗುತ್ತದೆಯಲ್ಲವೆ. ಒಳ್ಳೆಯ ಗೊಬ್ಬರವನ್ನು ಹಾಕಿದರೆ ಬಹಳ ಒಳ್ಳೆಯ ಫಲವು ಸಿಗುವುದು. ಅಲ್ಲಿ ಎಲ್ಲಾ ವಸ್ತುಗಳು ಬಹಳ ಶಕ್ತಿಶಾಲಿಯಾಗಿರುತ್ತದೆ. ಇಲ್ಲಿರುವ ಯಾವುದೇ ವಸ್ತುವಿನಲ್ಲಿ ಶಕ್ತಿಯಿಲ್ಲ. ಇಲ್ಲಿ ಅವಶ್ಯವಾಗಿ ಎಲ್ಲವೂ ಶಕ್ತಿಹೀನವಾಗಿದೆ. ಯಜ್ಞದ ಆರಂಭದಲ್ಲಿ ಕನ್ಯೆಯರು ಸೂಕ್ಷ್ಮವತನಕ್ಕೆ ಹೋಗುತ್ತಿದ್ದರು, ಎಷ್ಟು ಒಳ್ಳೊಳ್ಳೆಯ ಹಣ್ಣುಗಳನ್ನು ಸೇವಿಸುತ್ತಿದ್ದರು. ಶೂಬೀರಸ ಇತ್ಯಾದಿಗಳನ್ನು ಕುಡಿಯುತ್ತಿದ್ದರು, ಇದೆಲ್ಲವನ್ನೂ ಸಾಕ್ಷಾತ್ಕಾರ ಮಾಡುತ್ತಿದ್ದರು. ಅಲ್ಲಿ ಮಾಲಿಯು ಹೇಗೆ ಹಣ್ಣುಗಳನ್ನು ಕಿತ್ತು ಕೊಡುತ್ತಾರೆ, ಸೂಕ್ಷ್ಮವತನದಲ್ಲಂತೂ ಹೊಲ ಇತ್ಯಾದಿಗಳಿರಲು ಸಾಧ್ಯವಿಲ್ಲ. ಇದು ಕೇವಲ ಸಾಕ್ಷಾತ್ಕಾರವಾಗುತ್ತದೆ. ವೈಕುಂಠವಂತೂ ವಾಸ್ತವದಲ್ಲಿ ಇಲ್ಲಿಯೇ ಇರುತ್ತದೆಯಲ್ಲವೆ. ವೈಕುಂಠವು ಮೇಲಿರಬಹುದೆಂದು ಮನುಷ್ಯರು ತಿಳಿಯುತ್ತಾರೆ. ವೈಕುಂಠವು ಸೂಕ್ಷ್ಮವತನದಲ್ಲಾಗಲಿ, ಮೂಲವತನದಲ್ಲಾಗಲಿ ಇರುವುದಿಲ್ಲ. ಇಲ್ಲಿಯೇ ಸ್ಥಾಪನೆಯಾಗುತ್ತದೆ. ಕನ್ಯೆಯರು ಯಾವುದನ್ನು ಸಾಕ್ಷಾತ್ಕಾರದಲ್ಲಿ ನೋಡುವರೋ ಅದನ್ನು ಮತ್ತೆ ಈ ಸ್ಥೂಲಕಣ್ಣುಗಳಿಂದ ನೋಡುತ್ತೀರಿ. ಎಂತಹ ಸ್ಥಾನಮಾನವೋ ಅಂತಹ ಸಾಮಗ್ರಿಗಳಿರುತ್ತವೆ. ರಾಜರ ಮಹಲುಗಳನ್ನು ನೋಡಿ, ಎಷ್ಟು ಚೆನ್ನಾಗಿರುತ್ತವೆ! ಜೈಪುರದಲ್ಲಿ ಬಹಳ ಒಳ್ಳೊಳ್ಳೆಯ ಮಹಲುಗಳನ್ನು ಕಟ್ಟಿಸಿದ್ದಾರೆ. ಕೇವಲ ಮಹಲುಗಳನ್ನು ನೋಡುವುದಕ್ಕಾಗಿ ಮನುಷ್ಯರು ಹೋದರೂ ಸಹ ಅದಕ್ಕೆ ಟಿಕೇಟು ಇರುತ್ತದೆ. ವಿಶೇಷವಾಗಿ ಆ ಮಹಲನ್ನು ನೋಡುವುದಕ್ಕಾಗಿಯೇ ಇಡುತ್ತಾರೆ. ಅವರು ಮತ್ತೆ ಬೇರೆ ಮಹಲುಗಳಲ್ಲಿ ಇರುತ್ತಾರೆ, ಅದೂ ಸಹ ಈ ಕಲಿಯುಗದಲ್ಲಿ. ಇದಂತೂ ಪತಿತ ಪ್ರಪಂಚವಾಗಿದೆ. ಯಾರಾದರೂ ತಮ್ಮನ್ನು ಪತಿತರೆಂದು ತಿಳಿದುಕೊಳ್ಳುತ್ತಾರೆಯೇ! ನೀವೀಗ ತಿಳಿದುಕೊಳ್ಳುತ್ತೀರಿ - ನಾವು ಪತಿತರಾಗಿದ್ದೆವು, ಯಾವುದೇ ಪ್ರಯೋಜನಕ್ಕಿರಲಿಲ್ಲ, ಈಗ ಪುನಃ ನಾವು ಸುಂದರರಾಗುತ್ತೇವೆ, ಆ ಪ್ರಪಂಚವೇ ಬಹಳ ಸುಂದರವಾಗಿರುವುದು. ಇಲ್ಲಿ ಭಲೆ ಅಮೇರಿಕಾ ಮೊದಲಾದ ದೇಶಗಳಲ್ಲಿ ಬಹಳ ಒಳ್ಳೊಳ್ಳೆಯ ಮಹಲುಗಳಿವೆ ಆದರೆ ಅಲ್ಲಿನ ಹೋಲಿಕೆಯಲ್ಲಿ ಇದೇನೂ ಇಲ್ಲ ಏಕೆಂದರೆ ಇವಂತೂ ಅಲ್ಪಕಾಲದ ಸುಖ ಕೊಡುವಂತಹವಾಗಿವೆ. ಅಲ್ಲಂತೂ ಬಹಳ ಸುಂದರ ಮಹಲುಗಳಿರುತ್ತವೆ. ಹಸುಗಳು ಸುಂದರವಾಗಿರುತ್ತವೆ, ಅಲ್ಲಿ ಗೊಲ್ಲರೂ ಇರುತ್ತಾರೆ. ಶ್ರೀಕೃಷ್ಣನಿಗೆ ಗೊಲ್ಲಬಾಲಕನೆಂದು ಹೇಳುತ್ತಾರಲ್ಲವೆ. ಇಲ್ಲಿ ಯಾರು ಹಸುಗಳನ್ನು ಸಂಭಾಲನೆ ಮಾಡುವವರಿದ್ದಾರೆಯೋ ಅವರೂ ಸಹ ನಾವು ಗೊಲ್ಲರಾಗಿದ್ದೇವೆ, ಕೃಷ್ಣನ ವಂಶಾವಳಿಯಾಗಿದ್ದೇವೆ. ವಾಸ್ತವದಲ್ಲಿ ಕೃಷ್ಣನ ವಂಶಾವಳಿಯೆಂದು ಹೇಳುವುದಿಲ್ಲ. ಕೃಷ್ಣನ ರಾಜಧಾನಿಯವರೆಂದು ಹೇಳುತ್ತಾರೆ. ಸಾಹುಕಾರರ ಬಳಿ ಹಸುಗಳಿದ್ದರೆ ಅವುಗಳನ್ನು ಸಂಭಾಲನೆ ಮಾಡಲು ಗೊಲ್ಲರೂ ಇರುತ್ತಾರೆ. ಈ ಗೊಲ್ಲ ಎಂಬ ಹೆಸರು ಸತ್ಯಯುಗದ್ದಾಗಿದೆ. ಇದು ನೆನ್ನೆಯ ಮಾತಾಗಿದೆ. ನೆನ್ನೆಯ ದಿನ ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ನಂತರ ಪತಿತರಾಗಿದ್ದರಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ. ಕೇಳಿರಿ, ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರೋ ಅಥವಾ ಹಿಂದೂ ಧರ್ಮದವರೋ? ಇತ್ತೀಚೆಗೆ ಎಲ್ಲರೂ ಹಿಂದೂಗಳೆಂದು ಬರೆದು ಬಿಡುತ್ತಾರೆ. ಹಿಂದೂ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ದೇವಿ-ದೇವತಾ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಈ ಪ್ರಶ್ನೆಯನ್ನು ಕೇಳುತ್ತಾರೆ - ತಿಳಿಸಿ, ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಯಾರು ಸ್ಥಾಪನೆ ಮಾಡಿದರು? ಶಿವ ತಂದೆಯು ಬ್ರಹ್ಮಾರವರ ಮೂಲಕ ಮಾಡುತ್ತಿದ್ದಾರೆ. ರಾಮ ಅಥವಾ ಶಿವ ತಂದೆಯ ಶ್ರೀಮತದಂತೆ ಆದಿಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು ನಂತರದಲ್ಲಿ ರಾವಣ ರಾಜ್ಯವು ಸ್ಥಾಪನೆಯಾಗುತ್ತದೆ, ವಿಕಾರಗಳಲ್ಲಿ ಹೋಗುತ್ತಾರೆ. ಭಕ್ತಿಮಾರ್ಗವು ಆರಂಭವಾಗಿ ಬಿಡುತ್ತದೆ, ಆಗ ಹಿಂದೂಗಳೆಂದು ಕರೆಸಿಕೊಳ್ಳತೊಡಗುತ್ತಾರೆ. ಈಗ ತಮ್ಮನ್ನು ಯಾರೂ ಸಹ ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ರಾವಣನು ವಿಕಾರಿಗಳನ್ನಾಗಿ ಮಾಡಿದನು, ತಂದೆಯು ಬಂದು ನಿರ್ವಿಕಾರಿಗಳನ್ನಾಗಿ ಮಾಡುತ್ತಾಎರೆ. ನೀವು ಈಶ್ವರೀಯ ಮತದಿಂದ ದೇವತೆಗಳಾಗುತ್ತೀರಿ. ತಂದೆಯೇ ಬಂದು ನಿಮ್ಮನ್ನು ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಏಣಿಯನ್ನು ಹೇಗೆ ಇಳಿಯುತ್ತೀರೆಂದು ನೀವು ಮಕ್ಕಳ ಬುದ್ಧಿಯಲ್ಲಿ ನಂಬರ್ವಾರ್ ಆಗಿ ಕುಳಿತುಕೊಳ್ಳುತ್ತದೆ. ಬೇರೆಲ್ಲರೂ ಮನುಷ್ಯರು ಆಸುರೀ ಮತದಂತೆ ನಡೆಯುತ್ತಿದ್ದಾರೆ, ನೀವು ಮಕ್ಕಳು ಈಶ್ವರೀಯ ಮತದಂತೆ ನಡೆಯುತ್ತಿದ್ದೀರಿ. ರಾವಣನ ಮತದಂತೆ ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ. 84 ಜನ್ಮಗಳ ನಂತರ ಪುನಃ ಮೊದಲ ನಂಬರಿನಲ್ಲಿ ಜನ್ಮವಾಗುತ್ತದೆ. ಈಶ್ವರೀಯ ಬುದ್ಧಿಯಿಂದ ನೀವು ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದು ಬಿಡುತ್ತೀರಿ. ಇದು ನಿಮ್ಮದು ಬಹಳ ಅಮೂಲ್ಯ ಜೀವನವಾಗಿದೆ, ಇದು ಇವರ ಸಾಹಸವಾಗಿದೆ ಯಾವಾಗ ತಂದೆಯು ಬಂದು ನಮ್ಮನ್ನು ಈ ರೀತಿ ಪಾವನರನ್ನಾಗಿ ಮಾಡುತ್ತಾರೆ. ನಾವು ಆತ್ಮಿಕ ಸೇವೆಗೆ ಯೋಗ್ಯರಾಗುತ್ತೇವೆ. ಅವರು ಶರೀರದ ಸಮಾಜ ಸೇವಕರು ಯಾರು ಸದಾ ದೇಹಾಭಿಮಾನಿಗಳಾಗಿರುತ್ತಾರೆ. ನೀವು ದೇಹೀ-ಅಭಿಮಾನಿಗಳು ಆಗಿದ್ದೀರಿ. ಆತ್ಮಗಳನ್ನು ಆತ್ಮಿಕ ಯಾತ್ರೆಯಲ್ಲಿ ಕರೆದುಕೊಂಡು ಹೋಗುತ್ತೀರಿ. ತಂದೆಯು ತಿಳಿಸುತ್ತಾರೆ - ನೀವು ಸತೋಪ್ರಧಾನರಾಗಿದ್ದೀರಿ, ಈಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಸತೋಪ್ರಧಾನರಿಗೆ ಪಾವನರು, ತಮೋಪ್ರಧಾನರಿಗೆ ಪತಿತರೆಂದು ಹೇಳಲಾಗುತ್ತದೆ. ಆತ್ಮದಲ್ಲಿಯೇ ತುಕ್ಕು ಹಿಡಿದಿದೆ. ಆತ್ಮವೇ ಸತೋಪ್ರಧಾನವಾಗಬೇಕಾಗಿದೆ. ನೆನಪಿನಲ್ಲಿ ಎಷ್ಟಿರುತ್ತೀರೋ ಅಷ್ಟು ಪಾವನರಾಗುತ್ತೀರಿ. ಇಲ್ಲದಿದ್ದರೆ ಸ್ವಲ್ಪ ಪವಿತ್ರರಾಗುತ್ತೀರಿ, ತಲೆಯ ಮೇಲೆ ಪಾಪಗಳ ಹೊರೆಯು ಉಳಿದು ಬಿಡುತ್ತದೆ. ಆತ್ಮಗಳಂತೂ ಎಲ್ಲರೂ ಪವಿತ್ರರೇ ಆಗಿದ್ದಾರೆ ಆದರೆ ಅವರ ಪಾತ್ರವು ಬೇರೆ-ಬೇರೆಯಾಗಿದೆ. ಎಲ್ಲರ ಪಾತ್ರವು ಒಂದೇರೀತಿಯಿರಲು ಸಾಧ್ಯವಿಲ್ಲ. ಎಲ್ಲರಿಗಿಂತ ತಂದೆಯ ಪಾತ್ರವು ಮೊದಲಾಗಿದೆ, ನಂತರ ಬ್ರಹ್ಮಾ-ಸರಸ್ವತಿಯದಾಗಿದೆ. ಯಾರು ಸ್ಥಾಪನೆ ಮಾಡುತ್ತಾರೆಯೋ ಅವರೇ ಪಾಲನೆ ಮಾಡಬೇಕಾಗುತ್ತದೆ. ಬಹಳ ದೊಡ್ಡ ಪಾತ್ರವು ಅವರದಾಗಿದೆ. ಮೊದಲು ಶಿವ ತಂದೆಯದು, ನಂತರ ಬ್ರಹ್ಮಾ-ಸರಸ್ವತಿ ಯಾರು ಪುನರ್ಜನ್ಮದಲ್ಲಿ ಬರುತ್ತಾರೆ. ಶಂಕರನಂತೂ ಸೂಕ್ಷ್ಮ ರೂಪವನ್ನು ಧಾರಣೆ ಮಾಡುತ್ತಾರೆ. ಶಂಕರನು ಯಾವುದೋ ಶರೀರವನ್ನು ಸಾಲ ತೆಗೆದುಕೊಳ್ಳುತ್ತಾನೆ ಎಂದಲ್ಲ. ಕೃಷ್ಣನಿಗೆ ತನ್ನದೇ ಆದ ಶರೀರವಿದೆ. ಇಲ್ಲಿ ಕೇವಲ ಶಿವ ತಂದೆಯು ಸಾಲವಾಗಿ ಶರೀರವನ್ನು ಪಡೆಯುತ್ತಾರೆ. ಮುಕ್ತಿ-ಜೀವನ್ಮುಕ್ತಿಯನ್ನು ಕೊಡಲು ಪತಿತ ಶರೀರದಲ್ಲಿ, ಪತಿತ ಪ್ರಪಂಚದಲ್ಲಿ ಬಂದು ಸೇವೆಯನ್ನು ಮಾಡುತ್ತಾರೆ. ಮೊದಲು ಮುಕ್ತಿಯಲ್ಲಿ ಹೋಗಬೇಕಾಗಿದೆ. ಒಬ್ಬ ತಂದೆಯೇ ಜ್ಞಾನಸಾಗರ, ಪತಿತ-ಪಾವನ, ಅವರನ್ನು ಶಿವ ತಂದೆ ಎಂದು ಕರೆಯುತ್ತಾರೆ. ಶಂಕರನಿಗೆ ತಂದೆಯೆಂದು ಹೇಳುವುದು ಶೋಭಿಸುವುದಿಲ್ಲ. ಶಿವ ತಂದೆ ಎಂಬ ಅಕ್ಷರವು ಬಹಳ ಮಧುರವಾಗಿದೆ. ಶಿವಲಿಂಗದ ಮೇಲೆ ಎಕ್ಕದ ಹೂವನ್ನು ಹಾಕುತ್ತಾರೆ. ಕೆಲವರು ಏನೇನೋ ಹಾಕುತ್ತಾರೆ. ಕೆಲವರು ಹಾಲನ್ನೂ ಎರೆಯುತ್ತಾರೆ.
ತಂದೆಯು ಮಕ್ಕಳಿಗೆ ಅನೇಕ ಪ್ರಕಾರವಾಗಿ ತಿಳುವಳಿಕೆ ಕೊಡುತ್ತಾರೆ. ಎಲ್ಲದರ ಆಧಾರವು ಯೋಗವಾಗಿದೆ ಎಂದು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಯೋಗದಿಂದಲೇ ವಿಕರ್ಮ ವಿನಾಶವಾಗುವುದು. ಯೋಗವಿರುವವರಿಗೆ ಜ್ಞಾನವು ಬಹಳ ಚೆನ್ನಾಗಿ ಧಾರಣೆಯಾಗುವುದು. ತಾನು ಧಾರಣೆಯಲ್ಲಿ ನಡೆಯುತ್ತಾರೆ ಎಂದರೆ ಅನ್ಯರಿಗೆ ತಿಳಿಸಬೇಕಾಗುತ್ತದೆ. ಇದು ಹೊಸ ಮಾತಾಗಿದೆ. ಭಗವಂತನೇ ಯಾರಿಗೆ ಡೈರೆಕ್ಟ್ ತಿಳಿಸಿದರು, ಅದನ್ನು ಕೇಳುತ್ತಾರೆ ನಂತರ ಈ ಜ್ಞಾನವು ಇರುವುದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಈಗಲೇ ಇದನ್ನು ಕೇಳುತ್ತೀರಿ. ಧಾರಣೆಯಾಗುತ್ತದೆ ನಂತರ ಪ್ರಾಲಬ್ಧದ ಪಾತ್ರವನ್ನಭಿನಯಿಸಬೇಕಾಗುತ್ತದೆ. ಜ್ಞಾನವನ್ನು ಕೇಳುವುದು, ಹೇಳುವುದು ಈಗಲೇ ಆಗುತ್ತದೆ, ಸತ್ಯಯುಗದಲ್ಲಿ ಈ ಪಾತ್ರವಿರುವುದಿಲ್ಲ. ಅಲ್ಲಂತೂ ಪ್ರಾಲಬ್ಧದ ಪಾತ್ರವಿರುತ್ತದೆ. ಮನುಷ್ಯರು ಬ್ಯಾರಿಸ್ಟರಿ ಓದುತ್ತಾರೆ ಬ್ಯಾರಿಸ್ಟರ್ ಆಗಿ ಸಂಪಾದನೆ ಮಾಡುತ್ತಾರೆ. ಇದು ಎಷ್ಟು ದೊಡ್ಡ ಸಂಪಾದನೆಯಾಗಿದೆ, ಇದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ತಂದೆಯು ನಮಗೆ ಸತ್ಯವಾದ ಸಂಪಾದನೆ ಮಾಡಿಸುತ್ತಿದ್ದಾರೆಂದು ನೀವು ತಿಳಿದಿದ್ದೀರಿ. ಇದರ ದಿವಾಳಿಯಾಗಲು ಸಾಧ್ಯವಿಲ್ಲ. ಈಗ ನೀವು ಸತ್ಯವಾದ ಸಂಪಾದನೆ ಮಾಡುತ್ತೀರಿ. ಪುನಃ ಅದು 21 ಜನ್ಮಗಳು ಜೊತೆಯಲ್ಲಿರುತ್ತದೆ. ಆ ಸಂಪಾದನೆಯು ಜೊತೆ ಕೊಡುವುದಿಲ್ಲ, ಈ ಸಂಪಾದನೆಯು ಜೊತೆ ಕೊಡುತ್ತದೆ. ಇಂತಹ ಜೊತೆ ಕೊಡುವ ಸಂಪಾದನೆಗೆ ನೀವು ಜೊತೆಯಲ್ಲಿರಬೇಕಾಗಿದೆ. ಈ ಮಾತನ್ನು ನೀವು ಮಕ್ಕಳ ವಿನಃ ಬೇರೆ ಯಾರ ಬುದ್ಧಿಯಲ್ಲಿಯೂ ಇಲ್ಲ. ನಿಮ್ಮಲ್ಲಿಯೂ ಸಹ ಇದನ್ನು ಘಳಿಗೆ-ಘಳಿಗೆಗೆ ಮರೆತು ಹೋಗುತ್ತಾರೆ. ತಂದೆ ಮತ್ತು ಆಸ್ತಿಯನ್ನು ಮರೆಯಬಾರದು. ಒಂದು ಮಾತು ಆಗಿದೆ - ತಂದೆಯನ್ನು ನೆನಪು ಮಾಡಿ. ಯಾವ ತಂದೆಯಿಂದ ನಿಮಗೆ 21 ಜನ್ಮ ನಿರೋಗಿ ಶರೀರವಿರುತ್ತದೆ. ವೃದ್ಧಾಪ್ಯದವರೆಗೂ ಅಕಾಲ ಮೃತ್ಯುವಾಗುವುದಿಲ್ಲ. ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕಾಗಿದೆ. ತಂದೆಯ ನೆನಪು ಮುಖ್ಯವಾದುದಾಗಿದೆ, ಇದರಲ್ಲಿಯೇ ಮಾಯೆಯು ವಿಘ್ನವನ್ನು ಹಾಕುತ್ತದೆ, ಬಿರುಗಾಳಿಯನ್ನೂ ತರುವುದು. ಅನೇಕ ಪ್ರಕಾರದ ಬಿರುಗಾಳಿಯೂ ಬರುತ್ತದೆ. ತಂದೆಯನ್ನು ನೆನಪು ಮಾಡಬೇಕೆಂದು ತಿಳಿಯುತ್ತೀರಿ ಆದರೆ ಮಾಡಲು ಆಗುವುದಿಲ್ಲ. ನೆನಪಿನಲ್ಲಿಯೇ ಎಲ್ಲರೂ ಬಹಳ ನಾಪಾಸಾಗುತ್ತಾರೆ. ಎಲ್ಲರಲ್ಲಿಯೂ ಯೋಗವೇ ಬಹಳ ಕಡಿಮೆಯಿದೆ. ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ. ಬಾಕಿ ಬೀಜ ಮತ್ತು ವೃಕ್ಷದ ಜ್ಞಾನವು ದೊಡ್ಡ ಮಾತೇನಲ್ಲ. ನನ್ನನ್ನು ನೆನಪು ಮಾಡುವುದರಿಂದ, ನನ್ನನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿಯುತ್ತೀರಿ. ನೆನಪಿನಲ್ಲಿಯೇ ಎಲ್ಲವೂ ಇದೆ. ಮಧುರ ತಂದೆ, ಶಿವ ತಂದೆಯನ್ನು ನೆನಪು ಮಾಡಬೇಕು. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ. ಶ್ರೇಷ್ಠರಲ್ಲಿ ಶ್ರೇಷ್ಠರು ತಂದೆಯು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯನ್ನು 21 ಜನ್ಮಕ್ಕಾಗಿ ಕೊಟ್ಟು ಸದಾ ಸುಖಿ ಅಮರರನ್ನಾಗಿ ಮಾಡುತ್ತಾರೆ. ನೀವು ಅಮರಪುರಿಯ ಮಾಲೀಕರಾಗುತ್ತೀರಿ ಅಂದಮೇಲೆ ಅಂತಹ ತಂದೆಯನ್ನು ಬಹಳ ನೆನಪು ಮಾಡಬೇಕಲ್ಲವೆ! ತಂದೆಯನ್ನು ನೆನಪು ಮಾಡದೇ ಇದ್ದರೆ ಬೇರೆಲ್ಲವೂ ನೆನಪಿಗೆ ಬರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಈ ಈಶ್ವರೀಯ ಜೀವನವು ಬಹಳ-ಬಹಳ ಅಮೂಲ್ಯವಾಗಿದೆ, ಈ ಜೀವನದಲ್ಲಿ ಆತ್ಮ ಮತ್ತು ಶರೀರ ಎರಡನ್ನೂ ಪಾವನವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಆತ್ಮಿಕ ಯಾತ್ರೆಯಲ್ಲಿದ್ದು ಅನ್ಯರಿಗೆ ಇದೇ ಯಾತ್ರೆಯನ್ನು ಕಲಿಸಬೇಕಾಗಿದೆ.
2) ಎಷ್ಟು ಸಾಧ್ಯವೋ ಅಷ್ಟು ಸತ್ಯ ಸಂಪಾದನೆಯಲ್ಲಿ ತೊಡಗಬೇಕಾಗಿದೆ. ನಿರೋಗಿಯಾಗಲು ನೆನಪಿನಲ್ಲಿ ಧೃಡವಾಗಬೇಕಾಗಿದೆ.
ಓಂ ಶಾಂತಿ. ಇದನ್ನು ಯಾರು ಯಾರಿಗೆ ಹೇಳಿದರು? ತಂದೆಯು ಮಕ್ಕಳಿಗೆ ಹೇಳಿದರು. ಯಾವ ಮಕ್ಕಳು ಪತಿತರಿಂದ ಪಾವನರಾಗುತ್ತಿದ್ದಾರೆಯೋ ಅವರಿಗೆ ಹೇಳುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಭಾರತವಾಸಿಗಳು ದೇವಿ-ದೇವತೆಗಳಾಗಿದ್ದೆವು, ಈಗ 84 ಜನ್ಮಗಳ ಚಕ್ರವನ್ನು ಸುತ್ತಿ ಸತೋಪ್ರಧಾನದಿಂದ ಈಗ ಸತೋ, ರಜೋ, ತಮೋಪ್ರಧಾನರಾಗಿದ್ದೇವೆ. ಪತಿತರನ್ನು ಪಾವನ ಮಾಡುವಂತಹ ಒಬ್ಬ ತಂದೆಯು ಹೇಳುತ್ತಾರೆ - ನೀವು ನಿಮ್ಮ ಹೃದಯದಿಂದ ಕೇಳಿಕೊಳ್ಳಿ - ನಾನು ಎಲ್ಲಿಯವರೆಗೆ ಪುಣ್ಯಾತ್ಮನಾಗಿದ್ದೇನೆ? ನೀವು ಸತೋಪ್ರಧಾನ, ಪವಿತ್ರ ಆತ್ಮಗಳಾಗಿದ್ದಿರಿ, ಮೊಟ್ಟ ಮೊದಲು ನಿಮ್ಮನ್ನು ದೇವಿ-ದೇವತೆಗಳೆಂದೂ ಕರೆಯಲಾಗುತ್ತಿತ್ತು ಯಾವುದನ್ನು ಆದಿ ಸನಾತನ ದೇವಿ-ದೇವತಾ ಧರ್ಮವೆಂದು ಕರೆಯಲಾಗುತ್ತಿತ್ತು. ಈಗ ಯಾವುದೇ ಭಾರತವಾಸಿಯು ತನ್ನನ್ನು ದೇವಿ-ದೇವತಾ ಧರ್ಮದವರೆಂದು ಹೇಳಿಕೊಳ್ಳುವುದಿಲ್ಲ. ಹಿಂದೂ ಧರ್ಮವೆನ್ನುವುದು ಯಾವುದೂ ಇಲ್ಲ, ಆದರೆ ಪತಿತರಾಗಿರುವ ಕಾರಣ ತಮ್ಮನ್ನು ತಾವು ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ. ಸತ್ಯಯುಗದಲ್ಲಿ ದೇವತೆಗಳು ಪವಿತ್ರರಾಗಿದ್ದರು, ಪವಿತ್ರ ಪ್ರವೃತ್ತಿ ಮಾರ್ಗವಿತ್ತು. ಯಥಾ ರಾಜ-ರಾಣಿ ತಥಾ ಪ್ರಜೆಗಳಾಗಿದ್ದರು. ಭಾರತವಾಸಿಗಳಿಗೆ ತಂದೆಯು ನೆನಪು ತರಿಸುತ್ತಾರೆ - ನೀವು ಪವಿತ್ರ ಪ್ರವೃತ್ತಿ ಮಾರ್ಗದವರು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ಅದನ್ನು ಸ್ವರ್ಗವೆಂದು ಹೇಳಲಾಗುತ್ತಿತ್ತು. ಅಲ್ಲಿ ಒಂದೇ ಒಂದು ಧರ್ಮವಿತ್ತು. ಮೊದಲ ನಂಬರಿನ ಮಹಾರಾಜ-ಮಹಾರಾಣಿ ಲಕ್ಷ್ಮೀ-ನಾರಾಯಣರಾಗಿದ್ದರು, ಅವರ ವಂಶವಿತ್ತು. ಭಾರತವು ಬಹಳ ಸಂಪದ್ಭರಿತವಾಗಿತ್ತು, ಅದು ಸತ್ಯಯುಗವಾಗಿತ್ತು. ನಂತರ ತ್ರೇತಾದಲ್ಲಿಯೂ ಸಹ ಪೂಜ್ಯ ದೇವಿ-ದೇವತೆಗಳು ಅಥವಾ ಕ್ಷತ್ರಿಯರೆಂದು ಕರೆಯಲಾಗುತ್ತಿತ್ತು. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯ, ಅಲ್ಲಿ ಸೀತಾ-ರಾಮರ ರಾಜ್ಯ, ಅಲ್ಲಿ ವಂಶಾವಳಿಯು ನಡೆಯಿತು. ಹೇಗೆ ಕ್ರಿಶ್ಚಿಯನ್ನರಲ್ಲಿ ಎಡ್ವರ್ಡ್ ಧಿ ಫಸ್ಟ್, ಸೆಕೆಂಡ್....... ಅದೇರೀತಿ ಭಾರತದಲ್ಲಿಯೂ ನಡೆಯುತ್ತದೆ. 5000 ವರ್ಷದ ಮಾತು ಅಂದರೆ 5000 ವರ್ಷಗಳ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಆದರೆ ಅವರಿಗೆ ಈ ರಾಜ್ಯವು ಯಾವಾಗ, ಹೇಗೆ ಸಿಕ್ಕಿತೆಂದು ಯಾರಿಗೂ ಗೊತ್ತಿಲ್ಲ. ಅದೇ ಸೂರ್ಯವಂಶಿ ಪುನಃ ಚಂದ್ರವಂಶಿಯಲ್ಲಿ ಬಂದರು, ಏಕೆಂದರೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇಳಿಯಲೇಬೇಕು. ಈ ಭಾರತದ ಇತಿಹಾಸ-ಭೂಗೋಳವು ಯಾರಿಗೂ ತಿಳಿದಿಲ್ಲ. ರಚಯಿತ ತಂದೆಯೆಂದರೆ ಅವಶ್ಯವಾಗಿ ಸತ್ಯಯುಗ, ಹೊಸ ಪ್ರಪಂಚದ ರಚನೆ ಮಾಡಿರಬೇಕು. ತಂದೆಯು ತಿಳಿಸುತ್ತಾರೆ - ಇಂದಿಗೆ 5000 ವರ್ಷಗಳ ಹಿಂದೆ ಸ್ವರ್ಗದಲ್ಲಿದ್ದೀರಿ. ಈ ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ. ಈ ಪ್ರಪಂಚದವರಿಗಂತೂ ಪ್ರಪಂಚದ ಇತಿಹಾಸ-ಭೂಗೋಳದ ಬಗ್ಗೆ ತಿಳಿದುಕೊಂಡಿಲ್ಲ. ಅವರಿಗಂತೂ ಅಪೂರ್ಣವಾದ ಕಡೆಯ ಅರ್ಧ ಇತಿಹಾಸವು ಗೊತ್ತಿದೆ. ಸತ್ಯಯುಗ-ತ್ರೇತಾದ ಇತಿಹಾಸ-ಭೂಗೋಳವು ಯಾರಿಗೂ ಗೊತ್ತಿಲ್ಲ. ಋಷಿ-ಮುನಿಗಳೂ ಸಹ ಹೇಳುತ್ತಿದ್ದರು - ನಮಗೆ ರಚಯಿತ, ರಚನೆಯ ಆದಿ-ಮಧ್ಯವು ಗೊತ್ತಿಲ್ಲ ಎಂದು. ತಿಳಿದುಕೊಳ್ಳಲೂ ಹೇಗೆ ಸಾಧ್ಯ! ತಂದೆಯು ಕುಳಿತು ನಿಮಗೇ ತಿಳಿಸುತ್ತಾರೆ. ಶಿವ ತಂದೆಯು ಭಾರತದಲ್ಲಿಯೇ ದಿವ್ಯವಾದ ಜನ್ಮವನ್ನು ತೆಗೆದುಕೊಳ್ಳುತ್ತಾರೆ, ಇಲ್ಲಿಯೇ ಶಿವ ಜಯಂತಿಯೂ ಆಗುತ್ತದೆ. ಶಿವ ಜಯಂತಿಯ ನಂತರ ಗೀತಾ ಜಯಂತಿಯಾಗಬೇಕು. ನಂತರ ಜೊತೆ ಜೊತೆಯಲ್ಲಿಯೂ ಆಗಬೇಕು. ಆದರೆ ಈ ಶಿವ ಜಯಂತಿಯು ಯಾವಾಗ ಆಯಿತು? ಈ ರಹಸ್ಯವನ್ನು ಭಾರತವಾಸಿಗಳು ತಿಳಿದುಕೊಂಡಿಲ್ಲ. ಬುದ್ಧ ಜಯಂತಿ, ಕ್ರೈಸ್ಟ್ ಜಯಂತಿ ಯಾವಾಗ ಆಯಿತು ಎಂದು ಬೇರೆ ಧರ್ಮದವರು ತಕ್ಷಣ ತಿಳಿಸುತ್ತಾರೆ. ಶಿವ ಜಯಂತಿ ಯಾವಾಗ ಆಯಿತು ಎಂದು ಯಾವುದೇ ಭಾರತವಾಸಿಯನ್ನು ಕೇಳಿದರೆ ಯಾರೂ ತಿಳಿಸಲು ಸಾಧ್ಯವಿಲ್ಲ. ಭಾರತದಲ್ಲಿಯೇ ಶಿವನು ಬಂದು ಏನು ಮಾಡಿದರು ಎಂದು ಯಾರಿಗೂ ಗೊತ್ತಿಲ್ಲ. ಶಿವ ಎಲ್ಲಾ ಆತ್ಮರುಗಳ ತಂದೆಯಾಗಿದ್ದಾರೆ. ಆತ್ಮವು ಅವಿನಾಶಿಯಾಗಿದೆ, ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಇದು 84 ಜನ್ಮಗಳ ಚಕ್ರವಾಗಿದೆ. ಶಾಸ್ತ್ರಗಳಲ್ಲಂತೂ 84 ಲಕ್ಷಜನ್ಮಗಳೆಂದು ಸುಳ್ಳು ಹೇಳಿ ಬಿಟ್ಟಿದ್ದಾರೆ. ತಂದೆಯು ಬಂದು ಸತ್ಯವಾದ ಮಾತನ್ನು ತಿಳಿಸುತ್ತಾರೆ. ತಂದೆಯ ಬಿಟ್ಟರೆ ಯಾರೂ ರಚಯಿತ, ರಚನೆಯ ಬಗ್ಗೆ ಸುಳ್ಳನ್ನೇ ಹೇಳುತ್ತಾರೆ ಏಕೆಂದರೆ ಇದು ಮಾಯೆಯ ರಾಜ್ಯವಾಗಿದೆ. ಮೊದಲು ನೀವೆಲ್ಲರೂ ಪಾರಸ ಬುದ್ಧಿಯವರಾಗಿದ್ದಿರಿ, ಭಾರತವು ವಜ್ರ ಸಮಾನವಾಗಿತ್ತು. ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳಿತ್ತು, ತಂದೆಯು ಕುಳಿತು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯ ಅರ್ಥಾತ್ ಇತಿಹಾಸ-ಭೂಗೋಳವನ್ನು ತಿಳಿಸುತ್ತಾರೆ. ಭಾರತವಾಸಿಗಳಿಗೆ ಇದು ಗೊತ್ತಿಲ್ಲ - ನಾವು ಮೊಟ್ಟ ಮೊದಲು ದೇವಿ-ದೇವತೆಗಳಾಗಿದ್ದೆವು, ಈಗ ಪತಿತ, ಕಂಗಾಲರು, ಅಧರ್ಮಿಗಳಾಗಿದ್ದೇವೆ, ನಮ್ಮ ಧರ್ಮವನ್ನು ಮರೆತು ಹೋಗಿದ್ದೇವೆ ಎಂದು. ಇದು ಡ್ರಾಮಾನುಸಾರ ನಡೆಯಲೇಬೇಕಾಗಿದೆ. ಈ ಪ್ರಪಂಚದ ಇತಿಹಾಸ-ಭೂಗೋಳವು ಬುದ್ಧಿಯಲ್ಲಿರಬೇಕಾಗಿದೆ, ಶ್ರೇಷ್ಠಾತಿ ಶ್ರೇಷ್ಠವಾದ ಎಲ್ಲಾ ಆತ್ಮರ ತಂದೆಯು ಮೂಲವತನದಲ್ಲಿರುತ್ತಾರೆ ನಂತರ ಸೂಕ್ಷ್ಮವತನವಿರುತ್ತದೆ. ಇದು ಸ್ಥೂಲವತನವಾಗಿದೆ. ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರನು ಮಾತ್ರವೇ ಇರುತ್ತಾರೆ. ಅವರದು ಯಾವುದೇ ಇತಿಹಾಸ-ಭೂಗೋಳವಿಲ್ಲ. ಇವು ಮೂರು ಲೋಕಗಳಾಗಿವೆ. ಭಗವಂತನು ಒಬ್ಬರೇ ಆಗಿದ್ದಾರೆ, ಅವರ ರಚನೆಯು ಒಂದೇ ಆಗಿದೆ. ಯಾವ ಚಕ್ರವು ತಿರುತ್ತಲೇ ಇರುವುದು, ಸತ್ಯಯುಗದಿಂದ ತ್ರೇತಾ, ತ್ರೇತಾದಿಂದ ನಂತರ ದ್ವಾಪರ-ಕಲಿಯುಗದಲ್ಲಿ ಬರಲೇಬೇಕಾಗಿದೆ. 84 ಜನ್ಮಗಳ ಲೆಕ್ಕ ಬೇಕಲ್ಲವೆ. ಇದು ಯಾರಿಗೂ ಗೊತ್ತಿಲ್ಲ. ಇದ್ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. 84 ಜನ್ಮಗಳ ಪಾತ್ರವನ್ನು ನೀವು ಮಕ್ಕಳೇ ಅಭಿನಯಿಸುತ್ತೀರಿ. ತಂದೆಯಂತೂ ಈ ಚಕ್ರದಲ್ಲಿ ಬರುವುದೇ ಇಲ್ಲ, ಮಕ್ಕಳು ಪಾವನರಿಂದ ಪತಿತರಾಗುತ್ತಾರೆ. ಆದ್ದರಿಂದಲೇ ಕೂಗುತ್ತಾರೆ - ಬಾಬಾ, ಬಂದು ನಮ್ಮನ್ನು ಪುನಃ ಪಾವನರನ್ನಾಗಿ ಮಾಡಿ. ರಾವಣ ರಾಜ್ಯದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ, ಅವರನ್ನು ಮತ್ತೆ ಮುಕ್ತರನ್ನಾಗಿ ಮಾಡಿ ರಾಮ ರಾಜ್ಯಕ್ಕೆ ಕರೆದುಕೊಂಡು ಹೋಗು ಒಬ್ಬನನ್ನೇ ಎಲ್ಲರೂ ಕರೆಯುತ್ತಾರೆ. ಅರ್ಧಕಲ್ಪ ರಾಮ ರಾಜ್ಯ, ಅರ್ಧಕಲ್ಪ ರಾವಣ ರಾಜ್ಯವಾಗಿದೆ. ಭಾರತವಾಸಿಗಳು ಯಾರು ಪಾವನರಾಗಿದ್ದರೋ ಅವರೇ ಪತಿತರಾಗುತ್ತಾರೆ. ವಾಮ ಮಾರ್ಗದಲ್ಲಿ ಹೋಗುವುದರಿಂದಲೇ ಪತಿತರಾಗುವುದು ಆರಂಭವಾಗುತ್ತದೆ. ಭಕ್ತಿಮಾರ್ಗ ಆರಂಭವಾಗುತ್ತದೆ. ಈಗ ನೀವು ಮಕ್ಕಳಿಗೆ ಜ್ಞಾನವನ್ನು ತಿಳಿಸಲಾಗುತ್ತದೆ, ಇದರಿಂದ ಅರ್ಧಕಲ್ಪ, 21 ಜನ್ಮಗಳಿಗೆ ಸುಖದ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ. ಅರ್ಧಕಲ್ಪ ಜ್ಞಾನದ ಪ್ರಾಲಬ್ಧ ನಡೆಯುತ್ತದೆ ನಂತರ ರಾವಣ ರಾಜ್ಯವಾಗುತ್ತದೆ, ಕೆಳಗಿಳಿಯುವುದು ಪ್ರಾರಂಭವಾಗುತ್ತದೆ. ನೀವು ದೈವೀ ರಾಜ್ಯದಲ್ಲಿದ್ದಿರಿ ನಂತರ ಈಗ ಆಸುರೀ ರಾಜ್ಯದಲ್ಲಿ ಬಂದಿದ್ದೀರಿ, ಇದನ್ನೇ ನರಕವೆಂದು ಕರೆಯಲಾಗುತ್ತದೆ. ನೀವು ಸ್ವರ್ಗದಲ್ಲಿದ್ದಿರಿ, ನಂತರ 84 ಜನ್ಮಗಳನ್ನು ಮುಗಿಸಿಕೊಂಡು ಈಗ ನರಕದಲ್ಲಿದ್ದೀರಿ. ಅದು ಸುಖಧಾಮವಾಗಿತ್ತು, ಇದು ದುಃಖಧಾಮ, 100% ದಿವಾಳಿಯಾಗಿದೆ. 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಅದೇ ಭಾರತವಾಸಿಗಳು ಪೂಜ್ಯರಿಂದ ಪೂಜಾರಿಗಳಾಗಿದ್ದೀರಿ. ಇದಕ್ಕೆ ಪ್ರಪಂಚದ ಇತಿಹಾಸ-ಭೂಗೋಳವೆಂದು ಹೇಳಲಾಗುತ್ತದೆ. ಇದು ನೀವೆಲ್ಲಾ ಭಾರತವಾಸಿಯರ ಚಕ್ರವಾಗಿದೆ, ಅನ್ಯ ಧರ್ಮದವರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಅವರು ಸತ್ಯಯುಗದಲ್ಲಿ ಇರುವುದಿಲ್ಲ, ಸತ್ಯಯುಗ-ತ್ರೇತಾದಲ್ಲಿ ಭಾರತವೇ ಇರುತ್ತದೆ. ಸೂರ್ಯವಂಶಿ, ಚಂದ್ರವಂಶಿ ನಂತರ ವೈಶ್ಯವಂಶಿ, ಶೂದ್ರವಂಶಿ, ಈಗ ನೀವು ದೇವತಾ ವಂಶಿಗಳಾಗಲು ಬ್ರಾಹ್ಮಣ ವಂಶಿಯರಾಗಿದ್ದೀರಿ. ಇವೆಲ್ಲವೂ ಭಾರತದ ವರ್ಣಗಳಾಗಿವೆ. ನೀವು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಬ್ರಾಹ್ಮಣರಾಗಿದ್ದೀರಿ. 5000 ವರ್ಷಗಳ ಹಿಂದಿನ ಹಾಗೆಯೇ ನಿಮಗೆ ತಂದೆಯು ಓದಿಸುತ್ತಿದ್ದಾರೆ. ಕಲ್ಪ-ಕಲ್ಪವೂ ನೀವು ಪಾವನರಾಗಿ ಮತ್ತೆ ಪತಿತರಾಗುತ್ತೀರಿ. ಸುಖಧಾಮದಲ್ಲಿ ಹೋಗಿ ನಂತರ ದುಃಖಧಾಮದಲ್ಲಿ ಬರುತ್ತೀರಿ ಮತ್ತೆ ಶಾಂತಿಧಾಮದಲ್ಲಿ ಹೋಗಬೇಕಾಗಿದೆ ಯಾವುದನ್ನು ನಿರಾಕಾರಿ ಪ್ರಪಂಚವೆಂದು ಕರೆಯಲಾಗುತ್ತದೆ. ಆತ್ಮ ಎಂದರೆ ಏನು, ಪರಮಾತ್ಮನೆಂದರೆ ಏನು - ಇದು ಯಾವುದೇ ಮನುಷ್ಯನಿಗೆ ಗೊತ್ತಿಲ್ಲ. ಆತ್ಮವು ಒಂದು ನಕ್ಷತ್ರರೂಪಿ ಬಿಂದುವಾಗಿದೆ. ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವ ನಕ್ಷತ್ರ, ಚಿಕ್ಕದಾದ ಬಿಂದುವೆಂದು ಯಾವುದನ್ನು ದಿವ್ಯ ದೃಷ್ಟಿಯಿಂದ ನೋಡಲಾಗುತ್ತದೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ನಕ್ಷತ್ರವೆಂದೂ ಹೇಳುವುದು ಸರಿಯಿಲ್ಲ. ನಕ್ಷತ್ರವೂ ಸಹ ಬಹಳ ದೊಡ್ಡದಾಗಿಯೇ ಇರುತ್ತದೆ, ದೂರದಲ್ಲಿರುವ ಕಾರಣ ಚಿಕ್ಕದಾಗಿ ಕಾಣುತ್ತದೆ. ಇದು ಒಂದು ಉದಾಹರಣೆಗಾಗಿ ಕೊಡಲಾಗುತ್ತದೆ. ಹೇಗೆ ಮೇಲಿರುವ ಚಿಕ್ಕದಾಗಿಯೇ ಕಾಣುತ್ತದೆಯೋ ಹಾಗೆಯೇ ಆತ್ಮವು ಚಿಕ್ಕದಾಗಿದೆ, ತಂದೆಯೂ ಸಹ ಒಂದು ಬಿಂದು ಸಮಾನವಾಗಿದ್ದಾರೆ. ಅವರಿಗೆ ಸುಪ್ರೀಂ ಆತ್ಮವೆಂದು ಹೇಳಲಾಗುತ್ತದೆ. ಅವರ ಮಹಿಮೆಯೇ ಭಿನ್ನವಾಗಿದೆ. ಮನುಷ್ಯ ಸೃಷ್ಟಿಯ ಚೈತನ್ಯ ಬೀಜರೂಪವಾಗಿರುವ ಕಾರಣ ಅವರಲ್ಲಿ ಎಲ್ಲದರ ಜ್ಞಾನವಿದೆ. ನೀವು ಆತ್ಮಗಳಿಗೂ ಸಹ ಈಗ ಜ್ಞಾನವು ಸಿಗುತ್ತಿದೆ. ಆತ್ಮವೇ ಜ್ಞಾನವನ್ನು ಗ್ರಹಣ ಮಾಡುತ್ತಿದೆ. ಇಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮದ ಪಾತ್ರವು ಅಡಕವಾಗಿದೆ. ಅದೂ ಸಹ ಅವಿನಾಶಿಯಾಗಿದೆ, 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಬರುತ್ತೀರಿ. ಇದರ ಅಂತ್ಯ ಆಗುವುದಕ್ಕೆ ಸಾಧ್ಯವೇ ಇಲ್ಲ. ದೇವತೆಗಳಾಗಿದ್ದಿರಿ, ದೈತರಾಗಿ ನಂತರ ದೇವತೆಗಳಾಗಬೇಕಾಗಿದೆ. ಈ ಚಕ್ರವು ನಡೆಯುತ್ತಲೇ ಬರುತ್ತದೆ. ಬಾಕಿ ಬೇರೆಲ್ಲವೂ ಬೈಪ್ಲಾಟ್ಗಳಾಗಿವೆ. ಇಸ್ಲಾಮಿ, ಬೌದ್ಧಿ ಮುಂತಾದವರು ಯಾರೂ ಸಹ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಇದೇ ಸತ್ಯಯುಗ ಭಾರತದಲ್ಲಿ ಧಾರ್ಮಿಕ, ಸಂಪದ್ಭರಿತವಾಗಿತ್ತು, 84 ಜನ್ಮಗಳನ್ನು ಪಡೆಯುತ್ತಾ ವಿಕಾರಿಗಳಾಗಿದ್ದಾರೆ. ಇದು ವಿಕಾರಿ ಪ್ರಪಂಚವಾಗಿದೆ, 5000 ವರ್ಷಗಳಹಿಂದೆ ಪವಿತ್ರತೆ, ಶಾಂತಿ ಮತ್ತು ಸಂಪತ್ತು ಇತ್ತು. ತಂದೆಯು ಮಕ್ಕಳಿಗೆ ನೆನಪು ತರಿಸುತ್ತಾರೆ. ಮುಖ್ಯವಾದುದು ಪವಿತ್ರತೆಯಾಗಿದೆ. ಅದಕ್ಕಾಗಿಯೇ ವಿಕಾರಿಗಳನ್ನು ನಿರ್ವಿಕಾರಿಯನ್ನಾಗಿ ಮಾಡುವವನೇ ಬಾ ಎಂದು ಕರೆಯುತ್ತಾರೆ. ಅವರೇ ಸದ್ಗತಿ ಕೊಡುವವರು ಆದ್ದರಿಂದ ಅವರೇ ಸದ್ಗುರುವಾಗಿದ್ದಾರೆ. ನೀವೀಗ ತಂದೆಯ ಮುಖಾಂತರ ಬೆಗ್ಗರ್ ಟು ಪ್ರಿನ್ಸ್ ಅಥವಾ ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುತ್ತಿದ್ದೀರಿ. ನಿಮ್ಮದು ಇದು ರಾಜಯೋಗವಾಗಿದೆ, ತಂದೆಯ ಮುಖಾಂತರ ರಾಜ್ಯಭಾಗ್ಯವು ಸಿಗುತ್ತದೆ. ಆತ್ಮವೇ 84 ಜನ್ಮವನ್ನು ಪಡೆಯುತ್ತದೆ. ಆತ್ಮವೇ ಶರೀರದ ಮುಖಾಂತರ ಓದುತ್ತದೆ, ಶರೀರವು ಓದುವುದಿಲ್ಲ. ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ, ಆತ್ಮವು ಈ ಶರೀರದ ಮೂಲಕ ಓದುತ್ತೇನೆಂದು ಹೇಳುತ್ತದೆ, ಇದಕ್ಕೇ ದೇಹೀ-ಅಭಿಮಾನಿ ಎಂದು ಹೇಳಲಾಗುತ್ತದೆ. ಆತ್ಮವು ಶರೀರದ ಭಿನ್ನವಾದರೆ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಈಗ ನಾನು ಪುಣ್ಯಾತ್ಮನಾಗುತ್ತಿದ್ದೇನೆಂದು ಆತ್ಮವೇ ಹೇಳುತ್ತದೆ. ಮನುಷ್ಯನು ದೇಹಾಭಿಮಾನದಲ್ಲಿ ಬಂದು ನಾನು ಇದನ್ನು ಮಾಡುತ್ತೇನೆಂದು ಹೇಳುತ್ತಾರೆ. ಈಗ ನಿಮಗೆ ತಿಳಿದಿದೆ - ನಾವೆಲ್ಲರೂ ಆತ್ಮರಾಗಿದ್ದೇವೆ, ಇದು ನನ್ನ ದೊಡ್ಡ ಶರೀರವಾಗಿದೆ. ನಾನಾತ್ಮನು ಪರಮಾತ್ಮನಿಂದ ಓದುತ್ತಿದ್ದೇನೆಂದು ಹೇಳುತ್ತದೆ. ನನ್ನನ್ನೇ ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ನೀವು ಚಿನ್ನದ ಯುಗದಲ್ಲಿ ಸತೋಪ್ರಧಾನರಾಗಿದ್ದಿರಿ ನಂತರ ನಿಮ್ಮಲ್ಲಿ ತುಕ್ಕು ಬೆರಕೆಯಾಗುತ್ತದೆ. ತುಕ್ಕು ಹಿಡಿಯುತ್ತಾ-ಹಿಡಿಯುತ್ತಾ ನೀವು ಪಾವನರಿಂದ ಪತಿತರಾಗಿದ್ದೀರಿ ಆದ್ದರಿಂದ ಪುನಃ ಪಾವನವಾಗಬೇಕಾಗಿದೆ. ಹೇಳುತ್ತಾರೆ - ಪತಿತ-ಪಾವನ ಬಾ, ಬಂದು ನಮ್ಮೆಲ್ಲರನ್ನೂ ಪಾವನ ಮಾಡು ಎಂದು ಕರೆಯುತ್ತಾರೆ. ಆದ್ದರಿಂದ ತಂದೆಯು ಸಲಹೆ ಕೊಡುತ್ತಾರೆ. ಹೇ ಪತಿತ ಆತ್ಮ ನನ್ನನ್ನು ನೆನಪು ಮಾಡು, ನನ್ನನ್ನು ನೆನಪು ಮಾಡುವುದರಿಂದ ನಿನ್ನಲ್ಲಿರುವ ತುಕ್ಕು ಬಿಟ್ಟು ಹೋಗುತ್ತದೆ ಮತ್ತು ನೀನು ಪಾವನನಾಗುತ್ತೀಯಾ ಎಂದು ತಂದೆಯು ಸಲಹೆ ಕೊಡುತ್ತಾರೆ. ಇದಕ್ಕೆ ಪ್ರಾಚೀನ ಯೋಗವೆಂದು ಕರೆಯಲಾಗುತ್ತದೆ. ಈ ನೆನಪು ಎಂದರೆ ಯೋಗಾಗ್ನಿಯಿಂದ ತುಕ್ಕು ಭಸ್ಮವಾಗುತ್ತದೆ. ಮೂಲ ಮಾತಾಗಿದೆ - ಪತಿತರಿಂದ ಪಾವನರಾಗುವುದು. ಸಾಧು-ಸಂತರು ಎಲ್ಲರೂ ಸಹ ಪತಿತರಾಗಿದ್ದಾರೆ. ನನ್ನೊಬ್ಬನನ್ನು ನೆನಪು ಮಾಡುವುದೇ ಪಾವನರಾಗುವುದಕ್ಕಾಗಿ ಉಪಾಯವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿ. ನಾನು ನಿಮ್ಮೆಲ್ಲರ ಪ್ರಿಯತಮನಾಗಿದ್ದೇನೆ, ಆದ್ದರಿಂದ ಕುಡಿಯುತ್ತಾ-ತಿನ್ನುತ್ತಾ, ನಡೆಯುತ್ತಾ ನನ್ನೊಬ್ಬನನ್ನೇ ನೆನಪು ಮಾಡಿ. ನಾನು ನಿಮ್ಮೆಲ್ಲರನ್ನೂ ಪಾವನ ಮಾಡಿದ್ದೆನು. ನಂತರ ನೀವೆಲ್ಲರೂ ಪತಿತರಾಗಿದ್ದೀರಿ. ನೀವೆಲ್ಲರೂ ಭಕ್ತರು ನನ್ನ ಪ್ರಿಯತಮೆಯರಾಗಿದ್ದೀರಿ. ಕರ್ಮವನ್ನೂ ಭಲೆ ಮಾಡಿ ಎಂದು ಪ್ರಿಯತಮನು ಹೇಳುತ್ತಾನೆ. ಬುದ್ಧಿಯಿಂದ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ಇದರಲ್ಲಿಯೇ ಪರಿಶ್ರಮವಿದೆ. ಅಂದಾಗ ಆಸ್ತಿಯನ್ನು ಪಡೆಯಲು ತಂದೆಯನ್ನು ನೆನಪು ಮಾಡಬೇಕಲ್ಲವೆ. ಯಾರು ಹೆಚ್ಚಾಗಿ ನೆನಪು ಮಾಡುತ್ತೀರೋ ಅವರಿಗೆ ಹೆಚ್ಚಿನ ಆಸ್ತಿಯು ಸಿಗುತ್ತದೆ. ಇದು ನೆನಪಿನ ಯಾತ್ರೆಯಾಗಿದೆ. ಯಾರೆಷ್ಟು ನೆನಪು ಮಾಡುತ್ತಾರೆ ಅವರೇ ಪಾವನರಾಗಿ ನನ್ನ ಕೊರಳಿನ ಹಾರವಾಗುತ್ತಾರೆ. ನಿರಾಕಾರಿ ಪ್ರಪಂಚದಲ್ಲಿ ಎಲ್ಲಾ ಆತ್ಮಗಳ ಒಂದು ವೃಕ್ಷವು ಮಾಡಲ್ಪಟ್ಟಿದೆ, ಅದನ್ನು ನಿರಾಕಾರಿ ವೃಕ್ಷವೆಂದು ಕರೆಯಲಾಗುತ್ತದೆ. ಇದು ಸಾಕಾರಿ ವೃಕ್ಷವಾಗಿದೆ, ನಿರಾಕಾರಿ ಪ್ರಪಂಚದಿಂದ ಎಲ್ಲರೂ ನಂಬರ್ವಾರ್ ಆಗಿ ಬರಲೇಬೇಕು, ಬರುತ್ತಾ ಇರುತ್ತಾರೆ. ವೃಕ್ಷವು ಎಷ್ಟು ದೊಡ್ಡದಾಗಿದೆ! ಆತ್ಮವು ಇಲ್ಲಿ ಅಭಿನಯ ಮಾಡಲು ಬರುತ್ತದೆ. ಯಾರೆಲ್ಲಾ ಆತ್ಮರಿದ್ದಾರೆಯೋ ಎಲ್ಲಾ ಆತ್ಮರು ಡ್ರಾಮಾದಲ್ಲಿ ಪಾತ್ರಧಾರಿಗಳಾಗಿದ್ದಾರೆ. ಆತ್ಮವು ಅವಿನಾಶಿಯಾಗಿದೆ, ಇದರಲ್ಲಿರುವ ಪಾತ್ರವೂ ಸಹ ಅವಿನಾಶಿಯಾಗಿದೆ. ಡ್ರಾಮಾವು ಯಾವಾಗ ಮಾಡಿದರು ಎಂದು ಹೇಳಲು ಸಾಧ್ಯವಿಲ್ಲ, ಇದು ನಡೆಯುತ್ತಲೇ ಇರುತ್ತದೆ. ಮೊಟ್ಟ ಮೊದಲು ಭಾರತವಾಸಿಗಳು ಸುಖದಲ್ಲಿದ್ದರು ನಂತರ ದುಃಖದಲ್ಲಿ ಬಂದರು ಮತ್ತೆ ಶಾಂತಿಧಾಮಕ್ಕೆ ಹೋಗುತ್ತಾರೆ. ತಂದೆಯು ನಂತರ ಸುಖಧಾಮಕ್ಕೆ ಕಳುಹಿಸಿ ಕೊಡುತ್ತಾರೆ. ತಂದೆಯು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ ಅಂದಾಗ ಅದರಲ್ಲಿ ಯಾರೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಇದರಲ್ಲಿ ಪುರುಷಾರ್ಥದನುಸಾರ ರಾಜ್ಯಭಾಗ್ಯವನ್ನು ಪಡೆಯುತ್ತಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ಕೆಲವರೇ ಮನುಷ್ಯರಿರುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮದ ವೃಕ್ಷವು ಚಿಕ್ಕದಾಗಿರುತ್ತದೆ ಬಾಕಿ ಎಲ್ಲವೂ ವಿನಾಶವಾಗಿ ಹೋಗುತ್ತದೆ. ಈ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ ಅರ್ಥಾತ್ ಸ್ವರ್ಗದ ಗೇಟ್ ತೆರೆಯುತ್ತಿದೆ. 5000 ವರ್ಷಗಳ ಮೊದಲೂ ಈ ರೀತಿ ಸ್ವರ್ಗದ ಸ್ಥಾಪನೆಯಾಗಿತ್ತು, ಅನೇಕ ಧರ್ಮಗಳ ವಿನಾಶವೂ ಆಗಿತ್ತು. ಈ ಯುದ್ಧವನ್ನು ಕಲ್ಯಾಣಕಾರಿ ಯುದ್ಧವೆಂದು ಹೇಳಲಾಗುತ್ತದೆ. ಈಗ ನರಕದ ಗೇಟ್ ತೆರೆಯಲ್ಪಟ್ಟಿದೆ ನಂತರ ಸ್ವರ್ಗದ ಗೇಟ್ ತೆರೆಯಲಾಗುತ್ತದೆ. ಸ್ವರ್ಗದ ಬಾಗಿಲು ತಂದೆಯ ಮೂಲಕ ತೆಗೆಯಲಾಗುತ್ತದೆ, ನರಕದ ಬಾಗಿಲು ರಾವಣನ ಮೂಲಕ ತೆರೆಯಲಾಗುತ್ತದೆ. ತಂದೆಯು ಆಸ್ತಿಯನ್ನು ಕೊಡುತ್ತಾರೆ, ರಾವಣನು ಶಾಪವನ್ನು ಕೊಡುತ್ತಾನೆ. ಈ ಮಾತು ಪ್ರಪಂಚದವರಿಗೆ ತಿಳಿದಿಲ್ಲ, ನೀವು ಮಕ್ಕಳಿಗೆ ತಿಳಿಸುತ್ತೇನೆ. ವಿದ್ಯಾ ಮಂತ್ರಿಗಳೂ ಸಹ ಈ ಬೇಹದ್ದಿನ ಜ್ಞಾನವನ್ನು ಇಷ್ಟ ಪಡುತ್ತಾರೆ ಅದನ್ನು ನೀವೇ ಕೊಡಲು ಸಾಧ್ಯ. ಆದರೆ ನೀವು ಗುಪ್ತವಾಗಿದ್ದೀರಿ. ನಿಮ್ಮನ್ನು ಯಾರೂ ಗುರುತಿಸುವುದೂ ಇಲ್ಲ. ನೀವು ಯೋಗಬಲದಿಂದ ನಿಮ್ಮ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಲಕ್ಷ್ಮೀ-ನಾರಾಯಣರು ಹೇಗೆ ರಾಜ್ಯಭಾಗ್ಯವನ್ನು ಪಡೆದುಕೊಂಡರು ಎಂದು ನೀವು ತಿಳಿದುಕೊಂಡಿದ್ದೀರಿ. ಇದಕ್ಕೆ ಶುಭಕಾರಿ-ಕಲ್ಯಾಣಕಾರಿಯುಗವಾಗಿದೆ. ತಂದೆಯು ಬಂದು ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರೆ. ಕೃಷ್ಣನನ್ನು ಎಲ್ಲರ ತಂದೆಯೆಂದು ಕರೆಯಲು ಸಾಧ್ಯವಿಲ್ಲ. ನಿರಾಕಾರನನ್ನು ತಂದೆ ಎಂದು ಕರೆಯಲಾಗುತ್ತದೆ, ಆ ತಂದೆಯನ್ನು ನೆನಪು ಮಾಡಬೇಕಾಗಿದೆ, ಪಾವನರೂ ಆಗಬೇಕಾಗಿದೆ. ವಿಕಾರಗಳನ್ನು ಅವಶ್ಯವಾಗಿ ಬಿಡಬೇಕಾಗಿದೆ. ಭಾರತವು ನಿರ್ವಿಕಾರಿ ಸುಖಧಾಮವಾಗಿತ್ತು, ಈಗ ವಿಕಾರಿ ದುಃಖಧಾಮವಾಗಿದೆ. ಒಂದು ಪೈಸೆಗೂ ಬೆಲೆಯಿಲ್ಲದಂತಾಗಿದೆ. ಇದು ಡ್ರಾಮಾದ ಆಟವಾಗಿದೆ, ಇದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಬೇರೆಯವರಿಗೂ ಮಾಡಿಸಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ನೆನಪಿನಿಂದಲೇ ತಂದೆಯ ಕೊರಳಿನ ಹಾರವಾಗಬೇಕಾಗಿದೆ. ಕರ್ಮವನ್ನು ಮಾಡುತ್ತಾ ತಂದೆಯ ನೆನಪಿನಲ್ಲಿದ್ದು ವಿಕರ್ಮಾಜೀತರಾಗಬೇಕಾಗಿದೆ.
2) ಪುಣ್ಯಾತ್ಮರಾಗಲು ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಬೇಕಾಗಿದೆ.
ಓಂ ಶಾಂತಿ. ತಂದೆಯು ಮಕ್ಕಳನ್ನು ಕೇಳುತ್ತಾರೆ- ಆತ್ಮವು ಕೇಳುತ್ತದೆಯೋ ಅಥವಾ ಶರೀರ ಕೇಳುತ್ತದೆಯೇ? ಆತ್ಮ. ಅವಶ್ಯವಾಗಿ ಶರೀರದ ಮೂಲಕ ಆತ್ಮವು ಕೇಳುತ್ತದೆ. ಇಂತಹ ಆತ್ಮವು ಬಾಪ್ದಾದಾರವರನ್ನು ನೆನಪು ಮಾಡುತ್ತದೆಯೆಂದು ಮಕ್ಕಳು ಬರೆಯುತ್ತಾರೆ. ಇಂತಹ ಆತ್ಮವು ಇಂತಹಕಡೆ, ಇಂತಹ ಸ್ಥಾನಕ್ಕೆ ಹೋಗುತ್ತದೆ. ಇಂತಹ ಅಭ್ಯಾಸವಾಗಿಬಿಡಬೇಕು- ನಾವು ಆತ್ಮ ಆಗಿದ್ದೇವೆ ಏಕೆಂದರೆ ಮಕ್ಕಳು ಆತ್ಮಾಭಿಮಾನಿಗಳಾಗಬೇಕು. ಎಲ್ಲಿಯೇ ನೋಡಿದರೂ ಆತ್ಮ ಹಾಗೂ ಶರೀರವಿದೆಯೆಂದು ತಿಳಿದಿದ್ದೀರಿ ಹಾಗೂ ಇವರಲ್ಲಿ ಎರಡು ಆತ್ಮಗಳಿವೆ. ಒಬ್ಬರಿಗೆ ಆತ್ಮ ಮತ್ತೊಬ್ಬರಿಗೆ ಪರಮಾತ್ಮ ಎಂದು ಹೇಳುತ್ತಾರೆ. ಪರಮಾತ್ಮ ಸ್ವಯಂ ಹೇಳುತ್ತಾರೆ- ನಾನು ಈ ಶರೀರದಲ್ಲಿ ಇವರ ಆತ್ಮವೂ ಪ್ರವೇಶ ಮಾಡಿರುತ್ತದೆ, ನಾನೂ ಪ್ರವೇಶಿಸುತ್ತೇನೆ. ಶರೀರದ ವಿನಃ ಆತ್ಮವು ಇರಲಾರದು. ಈಗ ತಂದೆಯು ತಮ್ಮನ್ನು ಆತ್ಮ ಎಂದು ತಿಳಿದುಕೊಳ್ಳಿ ಎಂದು ತಿಳಿಸುತ್ತಾರೆ. ತಮ್ಮನ್ನು ಆತ್ಮನೆಂದು ತಿಳಿದುಕೊಂಡಾಗ ತಂದೆಯನ್ನು ನೆನಪು ಮಾಡುತ್ತೀರಿ, ಪವಿತ್ರರಾಗಿ ಶಾಂತಿಧಾಮಕ್ಕೆ ಹೋಗುತ್ತೀರಿ ಮತ್ತು ದೈವೀಗುಣಗಳನ್ನು ಎಷ್ಟು ಧಾರಣೆ ಮಾಡುತ್ತೀರಿ ಮತ್ತು ಅನ್ಯರಿಗೆ ಮಾಡಿಸುತ್ತೀರಿ, ಸ್ವದರ್ಶನ ಚಕ್ರಧಾರಿಯಾಗಿದ್ದು ಅನ್ಯರನ್ನೂ ಅದೇರೀತಿ ಮಾಡುತ್ತೀರಿ ಅಂದಾಗ ಅಷ್ಟೇ ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಇದರಲ್ಲಿ ಯಾರಾದರೂ ಗೊಂದಲಕ್ಕೊಳಗಾದರೆ ಕೇಳಬಹುದು. ನಾವು ಅವಶ್ಯವಾಗಿ ಆತ್ಮರಂತೂ ಆಗಿದ್ದೇವೆ, ತಂದೆಯು ಬ್ರಾಹ್ಮಣರಾಗಿರುವಂತಹ ಮಕ್ಕಳಿಗೇ ತಿಳಿಸುತ್ತಾರೆ ಆದರೆ ಅನ್ಯರಿಗೆ ತಿಳಿಸುವುದಿಲ್ಲ, ಅವರಿಗೆ ಮಕ್ಕಳೇ ಪ್ರಿಯರಾಗುತ್ತಾರೆ. ಪ್ರತಿಯೊಬ್ಬ ತಂದೆಗೂ ಮಕ್ಕಳು ಪ್ರಿಯವಾಗುತ್ತಾರೆ, ಹೊರಗಡೆ ಅನ್ಯರಿಗೆ ಬಾಹ್ಯರೂಪದಲ್ಲಿ ಪ್ರೀತಿಮಾಡುತ್ತಾರೆ ಆದರೆ ಇವರು ನಮ್ಮ ಮಕ್ಕಳಲ್ಲವೆಂದು ಅವರ ಬುದ್ಧಿಯಲ್ಲಿರುತ್ತದೆ. ನಾನು ಮಕ್ಕಳೊಂದಿಗೇ ಮಾತನಾಡುತ್ತೇನೆ ಏಕೆಂದರೆ ಮಕ್ಕಳಿಗೇ ಓದಿಸುತ್ತೇನೆ ಆದರೆ ಹೊರಗಿನವರಿಗೆ ಓದಿಸುವುದು ನಿಮ್ಮ ಕರ್ತವ್ಯವಾಗಿದೆ. ಕೆಲವರು ತಕ್ಷಣ ತಿಳಿದುಕೊಳ್ಳುತ್ತಾರೆ, ಇನ್ನೂ ಕೆಲವರು ಸ್ವಲ್ಪಮಾತ್ರ ತಿಳಿದುಕೊಂಡು ಹೊರಟುಹೋಗುತ್ತಾರೆ. ಮತ್ತೆ ಯಾವಾಗ ಇಲ್ಲಿ ವೃದ್ಧಿಯಾಗಿರುವುದನ್ನು ಕಂಡು ನೋಡೋಣವೆಂದು ಬರುತ್ತಾರೆ. ನೀವು ಎಲ್ಲರಿಗೂ ಇದನ್ನೇ ತಿಳಿಸುತ್ತೀರಿ- ತಂದೆಯನ್ನು ನೆನಪು ಮಾಡಬೇಕು. ಎಲ್ಲಾ ಆತ್ಮಗಳನ್ನೂ ತಂದೆಯು ಪಾವನ ಮಾಡುತ್ತಾರೆ. ಅವರು ನನ್ನ ವಿನಃ ಬೇರೆ ಯಾರನ್ನೂ ನೆನಪು ಮಾಡಬೇಡಿ ಎಂದು ತಿಳಿಸುತ್ತಾರೆ. ನೀವು ನನ್ನನ್ನೇ (ಅವ್ಯಭಿಚಾರಿ ನೆನಪು) ನೆನಪು ಮಾಡಿದಾಗ ನಿಮ್ಮ ಆತ್ಮವು ಪಾವನವಾಗಿಬಿಡುತ್ತದೆ. ನನ್ನ ನೆನಪಿನಿಂದ ಆತ್ಮವು ಪಾವನವಾಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ. ತಂದೆಯೇ ಪತಿತರಾಜ್ಯದಿಂದ ಪಾವನರಾಜ್ಯವನ್ನು ಮಾಡುತ್ತಾರೆ, ಬಿಡುಗಡೆ ಮಾಡುತ್ತಾರೆ ಅಂದಾಗ ಬಿಡುಗಡೆ ಮಾಡಿ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ? ಶಾಂತಿಧಾಮ ಮತ್ತು ಸುಖಧಾಮ.
ಪಾವನರಾಗುವುದೇ ಮುಖ್ಯಮಾತಾಗಿದೆ. 84 ಜನ್ಮಗಳ ಚಕ್ರವನ್ನು ತಿಳಿಸುವುದು ಸಹಜವಾಗಿದೆ. ಚಿತ್ರವನ್ನು ನೋಡುತ್ತಿದ್ದಂತೆಯೇ ನಿಶ್ಚಯವಾಗಿಬಿಡುತ್ತದೆ ಆದ್ದರಿಂದ ತಂದೆಯು ವಿಜೃಂಭಣೆಯಿಂದ ಮ್ಯೂಜಿಯಂನ್ನು ತೆರೆಯಿರಿ ಎಂದು ಹೇಳುತ್ತಾರೆ. ಮನುಷ್ಯರು ಅದು ಬಹಳ ಆಕರ್ಷಣೆ ಮಾಡುತ್ತದೆ. ಬಹಳ ಜನ ಬರುತ್ತಾರೆ, ಬಂದು ನಾವು ಶ್ರೀಮತದಂತೆ ಈ ರೀತಿ ಆಗುತ್ತಿದ್ದೇವೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ ಹಾಗೂ ದೈವೀಗುಣಗಳನ್ನು ಧಾರಣೆ ಮಾಡಿ. ಬ್ಯಾಡ್ಜ್ ಅವಶ್ಯವಾಗಿ ಜೊತೆಯಲ್ಲಿರಬೇಕು. ನಾವೀಗ ಬೆಗ್ಗರ್ ಟು ಪ್ರಿನ್ಸ್ ಆಗುತ್ತಿದ್ದೇವೆಂದು ನೀವು ತಿಳಿದಿದ್ದೀರಿ. ಮೊದಲು ಕೃಷ್ಣನಾಗುತ್ತಾನೆ, ಎಲ್ಲಿಯವರೆಗೆ ಕೃಷ್ಣನಾಗುವುದಿಲ್ಲ ಅಲ್ಲಿಯವರೆಗೆ ನಾರಾಯಣನಾಗುವುದಿಲ್ಲ. ಬಾಲ್ಯದಿಂದ ದೊಡ್ಡವನಾದ ನಂತರ ನಾರಾಯಣ ಎಂಬ ಹೆಸರು ಸಿಗುತ್ತದೆ ಆದ್ದರಿಂದ ಇಲ್ಲಿ ಎರಡೂ ಚಿತ್ರಗಳಿವೆ- ನೀವು ಹೀಗಾಗುತ್ತೀರಿ. ಈಗ ನೀವೆಲ್ಲರೂ ಬಡವರಾಗಿದ್ದೀರಿ, ಈ ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ಬಡವರಾಗಿದ್ದೀರಿ, ಇವರ ಬಳಿ ಏನೂ ಇಲ್ಲ. ಬಡವರು ಅರ್ಥಾತ್ ಅವರ ಬಳಿ ಏನೂ ಇರಬಾರದು. ಕೆಲಕೆಲವರಿಗೆ ನಾವು ಬಡವರೆಂದು ಹೇಳಲು ಆಗುವುದಿಲ್ಲ, ಈ ತಂದೆ (ಬ್ರಹ್ಮಾ) ಎಲ್ಲರಿಗಿಂತಲೂ ಅತಿಬಡವರಾಗಿದ್ದಾರೆ. ಇಲ್ಲಿ (ಬ್ರಾಹ್ಮಣ ಜೀವನದಲ್ಲಿ) ಪೂರ್ಣ ಬಡವರಾಗಬೇಕು. ಗೃಹಸ್ಥವ್ಯವಹಾದಲ್ಲಿರುತ್ತಾ ಆಸಕ್ತಿಯನ್ನು ದೂರ ಮಾಡಿಕೊಳ್ಳಬೇಕು. ನೀವು ನಾಟಕದನುಸಾರವಾಗಿ ಆಸಕ್ತಿಯನ್ನು ದೂರ ಮಾಡಿಕೊಂಡಿದ್ದೀರಿ, ನಿಶ್ಚಯಬುದ್ಧಿಯವರು ಇದನ್ನು ತಿಳಿದುಕೊಂಡಿದ್ದಾರೆ. ನಮ್ಮದೆಲ್ಲವನ್ನೂ ತಂದೆಗೆ ಕೊಟ್ಟಿದ್ದೇವೆ. ಹೇ ಭಗವಂತ, ನೀವು ಏನೂ ಕೊಟ್ಟಿದ್ದೀರಿ ಅದು ನಿಮ್ಮದೇ ಆಗಿದೆ ನಮ್ಮದೇನೂ ಇಲ್ಲ ಎಂದು ಹೇಳುತ್ತೀರಲ್ಲವೆ. ಇದೆಲ್ಲವೂ ಭಕ್ತಿಮಾರ್ಗದಲ್ಲಿ ನಡೆಯುತ್ತದೆ. ಆ ಸಮಯದಲ್ಲಿ ತಂದೆಯು ದೂರವಿದ್ದರು, ಈಗ ತಂದೆಯು ಬಹಳ ಸಮೀಪವಿದ್ದಾರೆ. ಅವರ ಸನ್ಮುಖದಲ್ಲಿಯೇ ಅವರಿಗೆ ಮಕ್ಕಳಾಗುತ್ತೇವೆ.
ಓ ಬಾಬಾ ಎಂದು ನೀವು ಹೇಳುತ್ತೀರಿ. ತಂದೆಯ (ಬ್ರಹ್ಮಾ) ಶರೀರವನ್ನು ನೋಡಬಾರದು ಆಗ ಬುದ್ಧಿಯು ಮೇಲೆ ಹೊರಟುಹೋಗುತ್ತದೆ. ಇದು ಲೋನ್ ತೆಗೆದುಕೊಂಡಿರುವ ಶರೀರವಾಗಿದೆ ಆದರೆ ನಿಮ್ಮ ಬುದ್ಧಿಯು ನಾವು ಶಿವತಂದೆಯೊಂದಿಗೆ ಮಾತನಾಡುತ್ತಿದ್ದೇವೆಂದು ಇರುತ್ತದೆ. ಇದಂತೂ ಬಾಡಿಗೆಯಾಗಿ ತೆಗೆದುಕೊಂಡಿರುವ ರಥವಾಗಿದೆ. ಇದು ಶಿವತಂದೆಯ ರಥವಲ್ಲ, ಅಗತ್ಯವಾಗಿ ಎಷ್ಟೆಷ್ಟು ದೊಡ್ಡ ವ್ಯಕ್ತಿಯಾಗಿರುತ್ತಾರೆ, ಬಾಡಿಗೆಯೂ ಸಹ ಅದೇ ರೀತಿ ಸಿಗುತ್ತದೆ. ಮನೆಯ ಮಾಲೀಕನೂ ಸಹ ನೋಡುತ್ತಾನೆ- ರಾಜನು ಮನೆಯನ್ನು ತೆಗೆದುಕೊಳ್ಳುವುದಾದರೆ 1000 ಬಾಡಿಗೆಯ ಬದಲಾಗಿ 4000 ಬಾಡಿಗೆ ಎಂದು ಹೇಳಿಬಿಡುತ್ತಾರೆ ಏಕೆಂದರೆ ಇವನು ಶ್ರೀಮಂತನೆಂದು ತಿಳಿದುಕೊಳ್ಳುತ್ತಾರೆ. ರಾಜರೂ ಸಹ ಎಂದಿಗೂ ಹೆಚ್ಚು ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆಂದು ಹೇಳುವುದಿಲ್ಲ ಏಕೆಂದರೆ ಅವರಿಗೆ ಹಣದ ಕೊರತೆಯಿರುವುದಿಲ್ಲ. ಅವರಿಗಾಗಿಯೇ ಯಾರೊಂದಿಗೂ ಮಾತನಾಡುವುದಿಲ್ಲ. ಅವರ ಪ್ರತಿಯಾಗಿ ಅವರ ಪ್ರೈವೇಟ್ ಸೆಕ್ರೆಟರಿಯೇ ಮಾತನಾಡುತ್ತಾರೆ. ಇಂದು ಲಂಚ ಪಡೆಯದೇ ಯಾವುದೇ ಕೆಲಸ ನಡೆಯುವುದಿಲ್ಲ, ಇದರಲ್ಲಿ ಬ್ರಹ್ಮಾತಂದೆಯು ಅನುಭವಿಯಾಗಿದ್ದಾರೆ. ರಾಜರು ಬಹಳ ರಾಯಲ್ ಆಗಿರುತ್ತಾರೆ, ಯಾವುದೇ ವಸ್ತುವನ್ನು ಇಷ್ಟಪಟ್ಟ ನಂತರ ಸೆಕ್ರೆಟರಿಗೆ ಹೇಳುತ್ತಾರೆ ಫೈನಲ್ ಮಾಡಿ ತೆಗೆದುಕೊಂಡು ಬನ್ನಿ ಎನ್ನುತ್ತಾರೆ. ಮಾರಾಟ ಮಾಡುವವರೂ ಸಹ ಇದನ್ನು ನೋಡಿ ರಾಜಾ-ರಾಣಿ ಬಂದು ಈ ವಸ್ತುವನ್ನು ಇಷ್ಟಪಡುತ್ತಾರೆಂದು ತೆರೆದಿಟ್ಟಿರುತ್ತಾರೆ. ರಾಜನು ಕೇವಲ ಕಣ್ಣಿನಿಂದ ಸನ್ನೆ ಮಾಡುತ್ತಾನೆ, ಆಗ ಸೆಕ್ರೆಟರಿಯೇ ಮಾತನಾಡಿ ಮಧ್ಯದಲ್ಲಿ ತನ್ನ ಪಾಲನ್ನೂ ತೆಗೆದುಕೊಳ್ಳುತ್ತಾನೆ. ಕೆಲಕೆಲವು ರಾಜರು ತಮ್ಮ ಜೊತೆಯಲ್ಲಿ ಹಣವನ್ನು ತಂದು ಅದನ್ನು ಸೆಕ್ರೆಟರಿಗೆ ಕೊಡಲು ಒಪ್ಪಿಸುತ್ತಾರೆ. ಬ್ರಹ್ಮಾತಂದೆಯು ಇಂತಹ ವ್ಯಕ್ತಿಗಳ ಸಂಬಂಧದಲ್ಲಿ ಬಂದಿದ್ದಾರೆ. ಹೇಗೆ ಅವರು ನಡೆದುಕೊಳ್ಳುತ್ತಿದ್ದರೆಂದು ಇವರಿಗೆ ತಿಳಿದಿದೆ, ಹೇಗೆ ರಾಜರ ಬಳಿ ಖಜಾಂಚಿಯೂ ಇರುತ್ತಿದ್ದರು ಹಾಗೆಯೇ ಬ್ರಹ್ಮಾತಂದೆಯು ಶಿವತಂದೆಯ ಖಜಾಂಚಿಯಾಗಿದ್ದಾರೆ, ಇವರಂತೂ ಟ್ರಸ್ಟಿಯಾಗಿದ್ದಾರೆ. ಬ್ರಹ್ಮಾತಂದೆಗೆ ಈ ಶರೀರದ ಮೇಲೆ ಮೋಹವಿಲ್ಲ. ಇವರು ತಮ್ಮ ಹಣದ ಮೇಲೂ ಮೋಹವನ್ನಿಡಲಿಲ್ಲ ಎಲ್ಲವನ್ನೂ ಶಿವತಂದೆಗೆ ಕೊಟ್ಟುಬಿಟ್ಟರು. ಆಗ ಶಿವತಂದೆಯ ಹಣದ ಮೇಲೆ ಹೇಗೆ ಮೋಹವನ್ನಿಡುತ್ತಾರೆ! ಇವರು ಟ್ರಸ್ಟಿಯಾಗಿದ್ದಾರೆ. ಇಂದು ಯಾರ ಬಳಿ ಹಣವಿರುವಿದೋಅವರನ್ನು ಸರ್ಕಾರವು ಗಮನಿಸುತ್ತದೆ. ವಿದೇಶದಿಂದ ಬರುವವರನ್ನು ಚೆನ್ನಾಗಿ ಪರಿಶೀಲನೆ ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ಹೇಗೆ ಬಡವರಾಗಬೇಕು? ಯಾವುದೇ ನೆನಪು ಬರಬಾರದು. ಆತ್ಮವು ಅಶರೀರಿಯಾಗಿಬಿಡಬೇಕು, ತನ್ನದೆಂದು ತಿಳಿಯಬಾರದು. ನಮ್ಮದೇನೂ ಇರಬಾರದು. ತಂದೆಯೂ ಸಹ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿಯಿರಿ, ಈಗ ನೀವು ಮನೆಗೆ ಹಿಂತಿರುಗಬೇಕಾಗಿದೆ. ನಾವು ಹೇಗೆ ಬಡವರಾಗಬೇಕೆಂದು ನೀವು ಮಕ್ಕಳಿಗೆ ಗೊತ್ತಿದೆ, ಶರೀರದೊಂದಿಗೂ ಮಮತೆಯಿರಬಾರದು. ನಾವು ಸತ್ತರೆ ನಮ್ಮ ಪಾಲಿಗೆ ಪ್ರಪಂಚವೇ ಸತ್ತಂತೆ-ಇದೇ ಗುರಿಯಾಗಿದೆ. ತಂದೆಯು ಯಥಾರ್ಥವಾಗಿ ಹೇಳುತ್ತಿದ್ದಾರೆಂದು ತಿಳಿದುಕೊಳ್ಳುತ್ತೀರಿ. ಈಗ ನಾವು ಮನೆಗೆ ಹಿಂತಿರುಗಬೇಕಾಗಿದೆ. ನೀವು ಶಿವತಂದೆಗೆ ಕೊಡುವುದು ಮುಂದಿನ ಜನ್ಮದಲ್ಲಿ ಅದು ರಿಟರ್ನ್ ಸಿಗುತ್ತದೆ ಆದ್ದರಿಂದ ಇವರು ಎಲ್ಲವನ್ನೂ ಈಶ್ವರನಿಗೆ ಕೊಟ್ಟುಬಿಟ್ಟರು. ಅವರ ಹಿಂದಿನ ಜನ್ಮದಲ್ಲಿಯೂ ಅಂತಹ ಕರ್ಮ ಮಾಡಿರುವಕಾರಣ ಅವರಿಗೆ ಇಂತಹ ಫಲ ದೊರಕಿದೆ. ಶಿವತಂದೆಯು ಯಾರದನ್ನೂ ಇಟ್ಟುಕೊಳ್ಳುವುದಿಲ್ಲ. ದೊಡ್ಡ-ದೊಡ್ಡರಾಜರು, ಜಮೀನ್ದಾರರು ಮುಂತಾದವರಿಗೆ ಕಾಣಿಕೆಯನ್ನು ನೀಡುತ್ತಾರೆ. ಕೆಲವರು ಕಾಣಿಕೆಯನ್ನು ತೆಗೆದುಕೊಳ್ಳುತ್ತಾರೆ ಕೆಲವರು ತೆಗೆದುಕೊಳ್ಳುವುದಿಲ್ಲ. ಅಲ್ಲಿ ನೀವು ದಾನ-ಪುಣ್ಯ ಸ್ವಲ್ಪವೂ ಮಾಡುವುದಿಲ್ಲ ಏಕೆಂದರೆ ಅಲ್ಲಿ ನಿಮ್ಮ ಬಳಿ ಬಹಳ ಹಣವಿರುತ್ತದೆ ಅಂದಾಗ ಯಾರಿಗೆ ದಾನ ಮಾಡುತ್ತೀರಿ? ಅಲ್ಲಿ ಬಡವರಿರುವುದಿಲ್ಲ. ನೀವೇ ಬಡವರಿಂದ ಶ್ರೀಮಂತರು ಹಾಗೂ ಶ್ರೀಮಂತರಿಂದ ಬಡವರಾಗುತ್ತೀರಿ. ಇವರಿಗೆ ಆರೋಗ್ಯ ಭಾಗ್ಯ ಸಿಗಲಿ, ಕೃಪೆತೋರಿಸಿ ಎಂದು ಹೇಳುತ್ತಾರಲ್ಲವೆ! ಮೊದಲೆಲ್ಲಾ ಶಿವತಂದೆಯಿಂದಲೇ ಬೇಡುತ್ತಿದ್ದರು ನಂತರ ಭಕ್ತಿಯು ವ್ಯಭಿಚಾರಿ ಆದಕಾರಣ ಎಲ್ಲರಮುಂದೆ ಹೋಗಿ ನನ್ನ ಜೋಳಿಗೆಯನ್ನು ತುಂಬಿ ಎಂದು ಬೇಡುತ್ತಾರೆ. ಎಷ್ಟೊಂದು ಕಲ್ಲುಬುದ್ಧಿಯವರಾಗಿದ್ದಾರೆ! ಕಲ್ಲುಬುದ್ಧಿಯವರಿಂದ ಪಾರಸಬುದ್ಧಿಯವರನ್ನಾಗಿ ಮಾಡುತ್ತಾರೆಂದು ತಿಳಿಸುತ್ತಾರೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು ಏಕೆಂದರೆ ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪಿವಲ್ಲಭನ ಗೋಪ-ಗೋಪಿಯರನ್ನು ಕೇಳಿ ಎಂಬ ಗಾಯನವಿದೆ. ಯಾರಿಗಾದರೂ ಬಹಳ ಲಾಭವಾದರೆ ಖುಷಿಯಾಗುತ್ತದೆ ಆದ್ದರಿಂದ ಮಕ್ಕಳೂ ಸಹ ಬಹಳ ಖುಷಿಯಲ್ಲಿರಬೇಕು. ನಿಮಗೆ 100% ಖುಷಿಯಿತ್ತು ನಂತರ ಕಡಿಮೆಯಾಗುತ್ತಾ ಹೋಯಿತು, ಈಗಂತೂ ಸ್ವಲ್ಪವೂ ಇಲ್ಲ. ಮೊದಲು ಬೇಹದ್ದಿನ ರಾಜ್ಯಭಾಗ್ಯವಿತ್ತು ನಂತರ ಹದ್ದಿನ ರಾಜ್ಯಭಾಗ್ಯವು ಅಲ್ಪಕಾಲಕ್ಕಾಗಿ ಇರುತ್ತದೆ. ಈಗ ಬಿರ್ಲಾನ ಬಳಿ ಎಷ್ಟೊಂದು ಸಂಪತ್ತಿದೆ. ಮಂದಿರಗಳನ್ನು ಕಟ್ಟಿಸುತ್ತಾನೆ ಅದರಿಂದ ಲಾಭವೇನೂ ಇಲ್ಲ. ಬಡವರಿಗೇನಾದರೂ ಕೊಡುತ್ತಾನೇನು? ಮಂದಿರ ಮಾಡಿದರೆ ಅಲ್ಲಿಗೆ ಮನುಷ್ಯರು ಹೋಗಿ ತಲೆಬಾಗುತ್ತಾರೆ. ಬಡವರಿಗೆ ಕೊಟ್ಟರೆ ಅದಕ್ಕೆ ರಿಟರ್ನ್ ದೊರೆಯುತ್ತದೆ. ಧರ್ಮಶಾಲೆಯನ್ನು ಕಟ್ಟಿಸಿದರೆ ಅಲ್ಲಿಗೆ ಅನೇಕ ಮನುಷ್ಯರು ಹೋಗಿ ವಿಶ್ರಾಂತಿಯನ್ನು ತೆಗೆದುಕೊಳ್ಳುತ್ತಾರೆ. ಅದಕ್ಕೆ ರಿಟರ್ನ್ ಮುಂದಿನ ಜನ್ಮದಲ್ಲಿ ಅಲ್ಪಕಾಲದ ಸುಖ ಸಿಗುತ್ತದೆ. ಯಾರಾದರೂ ಆಸ್ಪತ್ರೆಯನ್ನು ಕಟ್ಟಿಸಿದರೆ ಒಂದುಜನ್ಮಕ್ಕೆ ಅಲ್ಪಕಾಲದ ಸುಖ ಸಿಗುತ್ತದೆ. ಬೇಹದ್ದಿನ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಈ ಪುರುಷೋತ್ತಮ ಸಂಗಮಯುಗಕ್ಕೆ ಬಹಳ ಮಹಿಮೆಯಿದೆ, ನಿಮಗೂ ಸಹ ಬಹಳ ಮಹಿಮೆಯಿರುವುದರಿಂದ ಪುರುಷೋತ್ತಮರಾಗುತ್ತೀರಿ. ನೀವು ಬ್ರಾಹ್ಮಣರಿಗೆ ಮಾತ್ರ ಭಗವಂತ ಬಂದು ಓದಿಸುತ್ತಾರೆ, ಅವರೇ ಜ್ಞಾನಸಾಗರನಾಗಿದ್ದಾರೆ, ಅವರು ಮನುಷ್ಯ ಸೃಷ್ಟಿರೂಪಿ ವೃಕ್ಷಕ್ಕೆ ಬೀಜರೂಪನಾಗಿದ್ದಾರೆ. ನಾಟಕದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ನಿಮಗೆ ಯಾರು ಓದಿಸುತ್ತಿದ್ದಾರೆಂದು ಯಾರಾದರೂ ಕೇಳಿದರೆ - ನೀವು ಇದನ್ನು ಮರೆತುಬಿಟ್ಟಿದ್ದೀರಿ, ಗೀತೆಯಲ್ಲಿ ಭಗವಾನುವಾಚ ಇದೆಯಲ್ಲವೆ- ನಾನು ರಾಜರಿಗೂ ರಾಜರನ್ನಾಗಿ ಮಾಡಲು ಓದಿಸುತ್ತೇನೆ. ಇದರ ಅರ್ಥವನ್ನು ನೀವು ಈಗ ತಿಳಿದಿದ್ದೀರಿ. ಪತಿತರಾಜರು ಪಾವನ ರಾಜರಿಗೆ ಪೂಜೆ ಮಾಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು. ಸ್ವರ್ಗದ ದೇವತೆಗಳನ್ನು ದ್ವಾಪರ-ಕಲಿಯುಗದಲ್ಲಿ ಎಲ್ಲರೂ ನಮನ ಹಾಗೂ ಪೂಜೆ ಮಾಡುತ್ತಾರೆ. ಈ ಎಲ್ಲಾ ಮಾತುಗಳನ್ನು ಈಗ ನೀವು ತಿಳಿದಿದ್ದೀರಿ. ಭಕ್ತರು ಏನಾದರೂ ತಿಳಿದುಕೊಂಡಿದ್ದಾರೆಯೇ! ಅವರು ಕೇವಲ ಶಾಸ್ತ್ರಗಳ ಕಥೆಯನ್ನು ಓದುತ್ತಾ, ಕೇಳುತ್ತಾ ಇರುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ಯಾವ ಗೀತೆಯನ್ನು ಅರ್ಧಕಲ್ಪದಿಂದ ಓದುತ್ತಾ-ಕೇಳುತ್ತಾ ಬಂದಿದ್ದೀರಿ ಅದರಿಂದ ನಿಮಗೆ ಏನಾದರೂ ಪ್ರಾಪ್ತಿಯಾಗಿದೆಯೇ? ಸ್ವಲ್ಪವೂ ಹೊಟ್ಟೆಯು ತುಂಬಲಿಲ್ಲ, ಈಗ ನಿಮ್ಮ ಹೊಟ್ಟೆ ತುಂಬುತ್ತಿದೆ. ಈ ಪಾತ್ರವು ಒಮ್ಮೆಯೇ ನಡೆಯುತ್ತದೆಯೆಂದು ನೀವು ತಿಳಿದಿದ್ದೀರಿ. ನಾನು ಇವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ತಂದೆ ಇವರ ಮೂಲಕ ಹೇಳುತ್ತಾರೆಂದರೆ ಅವಶ್ಯವಾಗಿ ಇವರಲ್ಲಿ ಮಾಡುತ್ತಾರೆ ಮೇಲಿಂದ ಆದೇಶ ಕೊಡುತ್ತಾರೇನು! ತಂದೆಯು ತಿಳಿಸುತ್ತಾರೆ- ನಾನು ಸನ್ಮುಖದಲ್ಲಿ ಬರುತ್ತೇನೆ. ಈಗ ನೀವು ಸನ್ಮುಖದಲ್ಲಿ ಕೇಳುತ್ತಿದ್ದೀರಿ. ಈ ಬ್ರಹ್ಮನೂ ಸಹ ಏನೂ ತಿಳಿದುಕೊಂಡಿರಲಿಲ್ಲ, ಈಗ ತಿಳಿದುಕೊಳ್ಳುತ್ತಿದ್ದಾರೆ ಆದರೆ ಗಂಗೆಯ ನೀರು ಪಾವನ ಮಾಡುವುದಿಲ್ಲ. ಇದು ಜ್ಞಾನದ ಮಾತಾಗಿದೆ. ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆಂದು ನೀವು ತಿಳಿದಿದ್ದೀರಿ. ನಿಮ್ಮ ಬುದ್ಧಿಯು ಈಗ ಪರಮಧಾಮಕ್ಕೆ ಹೋಗುವುದಿಲ್ಲ, ಇದು ಇವರ ರಥವಾಗಿದೆ. ತಂದೆಯು ಇದನ್ನು ಬೂಟ್ ಎಂದೂ ಹೇಳುತ್ತಾರೆ, ಡಬ್ಬ ಎಂದೂ ಹೇಳುತ್ತಾರೆ. ಈ ಡಬ್ಬದಲ್ಲಿ ಆ ವಜ್ರವಿದೆ. ಎಷ್ಟೊಂದು ಫಸ್ಟ್ ಕ್ಲಾಸ್ ವಸ್ತುವಾಗಿದೆ! ಇದನ್ನು ಚಿನ್ನದ ಡಬ್ಬದಲ್ಲಿಡಬೇಕಾಗಿದೆ. ತಂದೆಯು ಸತೋಪ್ರಧಾನ ಡಬ್ಬ (ಶರೀರ) ವನ್ನಾಗಿ ಮಾಡುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ- ಛೂ ಎಂದತಕ್ಷಣ ದೋಬಿ (ಅಗಸ) ಮನೆಯಿಂದ ಹೊರಟುಹೋಯಿತು. ಇದನ್ನು ಛೂ ಮಂತ್ರವೆಂದು ಕರೆಯಲಾಗುವುದು. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಆದ್ದರಿಂದ ಅವರನ್ನು ಜಾದೂಗಾರ್ ಎಂದು ಹೇಳಲಾಗುತ್ತದೆ. ಒಂದು ಸೆಕೆಂಡಿನಲ್ಲಿ ನಾವು ಹೀಗಾಗುತ್ತೇವೆಂದು ನಿಶ್ಚಯವಾಗಿಬಿಡುತ್ತದೆ. ಈ ಮಾತುಗಳನ್ನು ನೀವೀಗ ಪ್ರತ್ಯಕ್ಷದಲ್ಲಿ ಕೇಳುತ್ತಿದ್ದೀರಿ. ಮೊದಲು ಸತ್ಯನಾರಾಯಣನ ಕಥೆಯನ್ನು ಕೇಳುವಾಗ ಇದೆಲ್ಲವೂ ತಿಳಿದಿತ್ತೇ? ಆ ಸಮಯದಲ್ಲಿ ಕಥೆ ಕೇಳುವಾಗ ವಿದೇಶ, ಹಡಗು ಮೊದಲಾದವು ನೆನಪಿರುತ್ತಿತ್ತು. ಸತ್ಯನಾರಾಯಣನ ಕಥೆಯನ್ನು ಕೇಳಿ ನಂತರ ಯಾತ್ರೆಯಲ್ಲಿ ಹೋಗುತ್ತಿದ್ದರು, ಅವರು ಪುನಃ ಹಿಂತಿರುಗಿ ಬರುತ್ತಿದ್ದರು. ತಂದೆಯು ತಿಳಿಸುತ್ತಾರೆ- ನೀವು ಈ ಛೀ! ಛೀ! ಪ್ರಪಂಚಕ್ಕೆ ಹಿಂತಿರುಗಬಾರದು. ಭಾರತದಲ್ಲಿ ಅಮರಲೋಕ, ಸ್ವರ್ಗ, ದೇವಿ-ದೇವತೆಗಳ ರಾಜ್ಯವಿತ್ತು, ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರಲ್ಲವೆ! ಅವರ ರಾಜ್ಯದಲ್ಲಿ ಸುಖ-ಶಾಂತಿ-ಪವಿತ್ರತೆಯಿತ್ತು. ಪ್ರಪಂಚವೂ ಸಹ ವಿಶ್ವದಲ್ಲಿ ಶಾಂತಿ ಬೇಕು, ಎಲ್ಲರೂ ಒಂದಾಗಬೇಕು ಎಂದು ಬೇಡುತ್ತಿದೆ. ಎಲ್ಲರೂ ಸೇರಿ ಒಂದಾಗಬೇಕೆಂದು ಇಷ್ಟಪಡುತ್ತದೆ. ಈಗ ಈ ಎಲ್ಲಾ ಧರ್ಮಗಳು ಸೇರಿ ಒಂದಾಗುತ್ತುತ್ತದೆಯೇ? ಪ್ರತಿಯೊಬ್ಬರ ಧರ್ಮವೂ ಬೇರೆಯಾಗಿದೆ, ಲಕ್ಷಣಗಳೂ ಬೇರೆ-ಬೇರೆಯಾಗಿದ್ದು ಒಂದಾಗಿರಲು ಹೇಗೆ ಸಾಧ್ಯ. ಅದು ಶಾಂತಿಧಾಮ, ಸುಖಧಾಮವಾಗಿದೆ. ಅಲ್ಲಿ ಒಂದೇಧರ್ಮ, ಒಂದೇ ರಾಜ್ಯವಿರುತ್ತದೆ, ಅಲ್ಲಿ ಪರಸ್ಪರ ಜಗಳವಾಗುವ ಬೇರೆ ಯಾವುದೇ ಧರ್ಮವಿರುವುದಿಲ್ಲ. ಅದನ್ನೇ ವಿಶ್ವದಲ್ಲಿ ಶಾಂತಿಯೆಂದು ಹೇಳಲಾಗುವುದು. ಈಗ ಮಕ್ಕಳಿಗೆ ತಂದೆಯು ಓದಿಸುತ್ತಿದ್ದಾರೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ- ಎಲ್ಲಾ ಮಕ್ಕಳು ಏಕರಸವಾಗಿ ಓದುವುದಿಲ್ಲ, ನಂಬರ್ವಾರ್ ಆಗಿರುತ್ತಾರೆ. ಈ ರಾಜಧಾನಿಯೂ ಸಹ ಸ್ಥಾಪನೆಯಾಗುತ್ತಿದೆ. ಮಕ್ಕಳನ್ನು ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡಲಾಗುವುದು. ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ, ಆದರೆ ಇದನ್ನು ಭಕ್ತರು ತಿಳಿದುಕೊಂಡಿಲ್ಲ. ಅನೇಕ ಬಾರಿ ಭಗವಾನುವಾಚ ಎಂದು ಕೇಳಿದ್ದಾರೆ. ಗೀತೆಗೆ ಅಪರಮಪಾರವಾದ ಮಹಿಮೆಯಿದೆ. ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ. ಶಿರೋಮಣಿ ಅರ್ಥಾತ್ ಸರ್ವಶ್ರೇಷ್ಠವಾಗಿದೆ. ಪತಿತ-ಪಾವನ ಸದ್ಗತಿದಾತ ಒಬ್ಬ ಭಗವಂತ ಆಗಿದ್ದಾರೆ ಅವರೇ ಸರ್ವರಿಗೂ ಸದ್ಗತಿದಾತನಾಗಿದ್ದಾರೆ. ಭಾರತವಾಸಿ ಎಂಬುದರ ಅರ್ಥವನ್ನು ತಿಳಿದುಕೊಂಡಿಲ್ಲ. ಅರಿವಿಲ್ಲದೆ ನಾವು ಸಹೋದರ-ಸಹೋದರನೆಂದು ಹೇಳಿಬಿಡುತ್ತಾರೆ. ಈಗ ತಂದೆಯು ತಿಳಿಸಿದ್ದಾರೆ- ನಾವು ಸಹೋದರ-ಸಹೋದರರಾಗಿದ್ದೇವೆ, ಶಾಂತಿಧಾಮದಲ್ಲಿ ಇರುವವರಾಗಿದ್ದೇವೆ. ಇಲ್ಲಿ ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ತಂದೆಯನ್ನು ಮರೆತುಹೋಗಿದ್ದೇವೆ, ಮನೆಯನ್ನೂ ಮರೆತುಹೋಗಿದ್ದೇವೆ. ತಂದೆಯು ಭಾರತಕ್ಕೆ ಯಾವ ವಿಶ್ವರಾಜ್ಯಭಾಗ್ಯವನ್ನು ಕೊಡುತ್ತಾರೆ ಅದನ್ನು ಎಲ್ಲರೂ ಮರೆತುಹೋಗಿದ್ದಾರೆ. ಈ ಎಲ್ಲಾ ರಹಸ್ಯಗಳನ್ನು ತಂದೆಯು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅತೀಂದ್ರಿಯ ಸುಖದ ಅನುಭವ ಮಾಡಲು ಇದೇ ಪುರುಷೋತ್ತಮ ಸಂಗಮಯುಗವಾಗಿದೆ. ಈಗ ತಂದೆಯೇ ಓದಿಸುತ್ತಿದ್ದಾರೆ, ನಾವು ರಾಜರಿಗೂ ರಾಜರಾಗುತ್ತಿದ್ದೇವೆಂದು ಸದಾ ಸ್ಮೃತಿಯಿರಬೇಕು. ಈಗ ಮಾತ್ರ ನಮಗೆ ನಾಟಕದ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ.
ಈಗ ಮನೆಗೆ ಹಿಂತಿರುಗಬೇಕಾಗಿದೆ ಆದ್ದರಿಂದ ಈ ಶರೀರದಿಂದಲೂ ಬಡವರಾಗಬೇಕು ಇದನ್ನು ಮರೆತು ತಮ್ಮನ್ನು ಅಶರೀರಿ ಆತ್ಮನೆಂದು ತಿಳಿಯಬೇಕು.
ಓಂ ಶಾಂತಿ. ತಂದೆಯು ತಿಳಿಸುತ್ತಾರೆ - ಇದು ಪಾಪಾತ್ಮರ ಪ್ರಪಂಚವಾಗಿದೆ ಹಾಗೂ ಭಾರತವೇ ಪುಣ್ಯಾತ್ಮರ ಪ್ರಪಂಚವಾಗಿತ್ತು ಎಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು. ಈ ಭಾರತ ಸುಖಧಾಮವಾಗಿತ್ತು ಮತ್ತ್ಯಾವುದೇ ಖಂಡವಿರಲಿಲ್ಲ, ಒಂದೇ ಭಾರತವಿತ್ತು. ಸುಖ-ಶಾಂತಿ ಸತ್ಯಯುಗದಲ್ಲಿತ್ತು ಯಾವುದನ್ನು ಸ್ವರ್ಗವೆಂದು ಕರೆಯುತ್ತಿದ್ದರು, ಇದು ನರಕವಾಗಿದೆ. ಭಾರತವೇ ಸ್ವರ್ಗವಾಗಿತ್ತು, ಈಗ ನರಕವಾಗಿದೆ. ನರಕದಲ್ಲಿ ಸುಖ-ಶಾಂತಿ ಎಲ್ಲಿಂದ ಬರಲು ಸಾಧ್ಯ? ಕಲಿಯುಗಕ್ಕೆ ನರಕ ಎಂದು ಹೇಳಲಾಗುತ್ತದೆ. ಕಲಿಯುಗದ ಅಂತ್ಯವನ್ನು ರೌರವ ನರಕವೆಂದು ಕರೆಯಲಾಗುತ್ತದೆ, ದುಃಖಧಾಮವೆಂದು ಹೇಳಲಾಗುತ್ತದೆ. ಭಾರತವೇ ಸುಖಧಾಮವಾಗಿತ್ತು ಯಾವಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಾರತವಾಸಿಗಳು ಪವಿತ್ರ ಗೃಹಸ್ಥ ಧರ್ಮದಲ್ಲಿದ್ದರು, ಪವಿತ್ರತೆಯೂ ಇತ್ತು, ಸುಖ-ಶಾಂತಿಯೂ ಇತ್ತು, ಸಂಪತ್ತು ಸಮೃದ್ಧಿಯಾಗಿತ್ತು, ಈಗ ಅದೇ ಭಾರತ ಪತಿತವಾಗಿದೆ. ಎಲ್ಲರೂ ವಿಕಾರಿಗಳಾಗಿದ್ದಾರೆ. ಇದು ದುಃಖಧಾಮವಾಗಿದೆ, ಭಾರತ ಸುಖಧಾಮವಾಗಿತ್ತು. ಮತ್ತು ನಾವಾತ್ಮಗಳು ಎಲ್ಲಿ ನಿವಾಸ ಮಾಡುತ್ತೇವೆಯೋ ಅದು ಶಾಂತಿಧಾಮವಾಗಿದೆ. ಶಾಂತಿಯು ಶಾಂತಿಧಾಮದಲ್ಲಿಯೇ ಸಿಗಲು ಸಾಧ್ಯ. ಆತ್ಮವು ಶಾಂತವಾಗಿ ಅಲ್ಲಿರಲು ಸಾಧ್ಯ ಯಾವುದನ್ನು ಸ್ವೀಟ್ಹೋಮ್, ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಅದು ಆತ್ಮಗಳ ಮನೆಯಾಗಿದೆ. ಅಲ್ಲಿ ಇರುವಾಗ ಆತ್ಮವು ಶಾಂತವಾಗಿರುತ್ತದೆ, ಬಾಕಿ ಶಾಂತಿಯು ಯಾವುದೇ ಕಾಡಿಗೆ ಹೋಗುವುದರಿಂದ ಸಿಗುವುದಿಲ್ಲ. ಶಾಂತಿಧಾಮವಂತೂ ಅದೇ ಆಗಿದೆ, ಸತ್ಯಯುಗದಲ್ಲಿ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಈ ದುಃಖಧಾಮದಲ್ಲಿ ಶಾಂತಿಯಿರಲು ಸಾಧ್ಯವೇ ಇಲ್ಲ. ಶಾಂತಿಧಾಮದಲ್ಲಿ ಶಾಂತಿಯು ಸಿಗಲು ಸಾಧ್ಯ. ಸುಖಧಾಮದಲ್ಲಿ ಕರ್ಮವು ನಡೆಯುತ್ತದೆ, ಶರೀರದಿಂದ ಪಾತ್ರವನ್ನಭಿನಯಿಸಲಾಗುತ್ತದೆ, ಈ ದುಃಖಧಾಮದಲ್ಲಿ ಸುಖ-ಶಾಂತಿಯಿರುವ ಒಬ್ಬ ಮನುಷ್ಯನೂ ಇಲ್ಲ. ಇದು ಭ್ರಷ್ಠಾಚಾರಿ, ಪತಿತಧಾಮವಾಗಿದೆ ಆದ್ದರಿಂದ ಪತಿತ-ಪಾವನನನ್ನು ಕರೆಯುತ್ತಾರೆ. ಆದರೆ ತಂದೆಯನ್ನು ಯಾರೂ ತಿಳಿದುಕೊಳ್ಳದೆ ನಿರ್ಧನಿಕರಾಗಿ ಬಿಟ್ಟಿದ್ದಾರೆ. ಅನಾಥರಾಗಿರುವ ಕಾರಣ ಪರಸ್ಪರದಲ್ಲಿ ಜಗಳವಾಡುತ್ತಿರುತ್ತಾರೆ. ಎಷ್ಟೊಂದು ದುಃಖ, ಅಶಾಂತಿ, ಹೊಡೆದಾಟಗಳಿವೆ. ಇದು ರಾವಣ ರಾಜ್ಯವಾಗಿದೆ. ರಾಮರಾಜ್ಯವು ಬೇಕೆಂದು ಬಯಸುತ್ತಿರುತ್ತಾರೆ. ರಾವಣ ರಾಜ್ಯದಲ್ಲಿ ಸುಖವೂ ಇಲ್ಲ, ಶಾಂತಿಯೂ ಇಲ್ಲ. ರಾಮ ರಾಜ್ಯದಲ್ಲಿ ಸುಖ-ಶಾಂತಿ ಎರಡೂ ಇರುತ್ತದೆ. ಪರಸ್ಪರದಲ್ಲಿ ಎಂದೂ ಜಗಳವಿರುವುದಿಲ್ಲ, ಅಲ್ಲಿ 5 ವಿಕಾರಗಳೇ ಇರುವುದಿಲ್ಲ. ಇಲ್ಲಿ 5 ವಿಕಾರಗಳೂ ಇವೆ, ಮುಖ್ಯವಾಗಿ ಮೊದಲನೆಯದು ದೇಹಾಭಿಮಾನವಾಗಿದೆ ನಂತರ ಕಾಮ, ಕ್ರೋಧ ವಿಕಾರವಾಗಿದೆ. ಭಾರತವು ಯಾವಾಗ ಸ್ವರ್ಗವಾಗಿತ್ತೋ ಆಗ ಈ ವಿಕಾರಗಳಿರಲಿಲ್ಲ. ಅಲ್ಲಿ ಎಲ್ಲರೂ ದೇಹೀ-ಅಭಿಮಾನಿಗಳಾಗಿರುತ್ತಾರೆ. ಈಗ ಎಲ್ಲಾ ಮನುಷ್ಯರು ದೇಹಾಭಿಮಾನಿಗಳಾಗಿದ್ದಾರೆ. ದೇವತೆಗಳು ದೇಹೀ-ಅಭಿಮಾನಿಗಳಾಗಿದ್ದರು, ದೇಹಾಭಿಮಾನಿ ಮನುಷ್ಯರು ಎಂದೂ ಯಾರಿಗೂ ಸುಖವನ್ನು ಕೊಡಲು ಸಾಧ್ಯವೇ ಇಲ್ಲ, ಒಬ್ಬರಿಗೊಬ್ಬರು ದುಃಖವನ್ನೇ ಕೊಡುತ್ತಾರೆ. ಲಕ್ಷಾಧೀಶ್ವರ, ಕೋಟ್ಯಾಧೀಶ್ವರರು, ಪದಮಾಪತಿಗಳು ಸುಖಿಯಾಗಿದ್ದಾರೆಂದು ತಿಳಿದುಕೊಳ್ಳಬೇಡಿ. ಇದೆಲ್ಲವೂ ಮಾಯೆಯ ಆಡಂಬರವಾಗಿದೆ, ಇದು ಮಾಯೆಯ ರಾಜ್ಯವಾಗಿದೆ. ಈಗ ಈ ಮಾಯೆಯ ರಾಜ್ಯವನ್ನು ವಿನಾಶ ಮಾಡಲು ಮಹಾಭಾರತ ಯುದ್ಧ ಸನ್ಮುಖದಲ್ಲಿ ನಿಂತಿದೆ. ಇದರ ನಂತರ ಸ್ವರ್ಗದ ಬಾಗಿಲು ತೆರೆಯಲ್ಪಡುತ್ತದೆ. ಅರ್ಧಕಲ್ಪದ ನಂತರ ಮತ್ತೆ ನರಕದ ಬಾಗಿಲು ತೆರೆಯುತ್ತದೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ಭಕ್ತಿಯನ್ನು ಮಾಡುವುದರಿಂದ ಭಗವಂತನು ಸಿಗುತ್ತಾರೆ ಎಂದು ಭಾರತವಾಸಿಗಳು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಭಕ್ತಿ ಮಾಡುತ್ತಾ-ಮಾಡುತ್ತಾ ಕೆಳಗೇ ಬರುತ್ತೀರಿ, ಆಗ ನಾನು ಸ್ವರ್ಗದ ಸ್ಥಾಪನೆ ಅರ್ಥಾತ್ ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಬರಬೇಕಾಗುತ್ತದೆ. ಭಾರತವು ಸ್ವರ್ಗವಾಗಿತ್ತು, ಅದು ನರಕವು ಹೇಗಾಯಿತು? ರಾವಣನು ಮಾಡಿದನು. ಗೀತೆಯ ಭಗವಂತನಿಂದ ರಾಜ್ಯ ಸಿಕ್ಕಿತು, 21 ಜನ್ಮ ಸ್ವರ್ಗದ ರಾಜ್ಯ ಮಾಡಿದಿರಿ ನಂತರ ಭಾರತವು ದ್ವಾಪರದಿಂದ ಕಲಿಯುಗದಲ್ಲಿ ಬಂದು ಅರ್ಥಾತ್ ಇಳಿಯುವ ಕಲೆಯಲ್ಲಿ ಬಂದಿತು. ಆದ್ದರಿಂದ ಎಲ್ಲರೂ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಪತಿತ ಮನುಷ್ಯರಿಗೆ ಸುಖ-ಶಾಂತಿ ಪತಿತ ಪ್ರಪಂಚದಲ್ಲಿ ಸಿಗಲು ಸಾಧ್ಯವೇ ಇಲ್ಲ!! ಎಷ್ಟೊಂದು ದುಃಖಗಳನ್ನನುಭವಿಸುತ್ತಾರೆ. ಇಂದು ಹಣದ ಕಳ್ಳತನವಾಯಿತು, ಒಬ್ಬರು ದಿವಾಳಿಯಾದರು, ಇಂದು ರೋಗಿಯಾದರು, ದುಃಖವೇ ದುಃಖವಿದೆ. ಈಗ ನೀವು ಸುಖ-ಶಾಂತಿಯ ಆಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ - ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತಿದ್ದೀರಿ. ಸದಾ ಸುಖಿಯನ್ನಾಗಿ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಸದಾ ದುಃಖಿಯನ್ನಾಗಿ ಮಾಡುವವನು ರಾವಣನಾಗಿದ್ದಾನೆ. ಈ ಮಾತುಗಳು ಭಾರತವಾಸಿಗಳಿಗೆ ಗೊತ್ತಿಲ್ಲ. ಸತ್ಯಯುಗದಲ್ಲಿ ದುಃಖದ ಮಾತೇ ಇರುವುದಿಲ್ಲ, ಅಲ್ಲಿ ಎಂದೂ ಅಳಬೇಕಾಗಿಲ್ಲ. ಸದಾ ಸುಖವೇ ಸುಖವಿರುತ್ತದೆ. ಅಲ್ಲಿ ದೇಹಾಭಿಮಾನ ಅಥವಾ ಕಾಮ-ಕ್ರೋಧ ಇತ್ಯಾದಿಗಳಿರುವುದಿಲ್ಲ, ಎಲ್ಲಿಯವರೆಗೆ 5 ವಿಕಾರಗಳ ದಾನ ಮಾಡುವುದಿಲ್ಲವೋ ಅಲ್ಲಿಯವರೆಗೂ ದುಃಖದ ಗ್ರಹಣ ಬಿಟ್ಟು ಹೋಗುವುದಿಲ್ಲ. ದಾನ ಕೊಟ್ಟರೆ ಗ್ರಹಣ ಬಿಟ್ಟು ಬಿಡುತ್ತದೆ ಎಂದು ಹೇಳುತ್ತಾರಲ್ಲವೆ. ಈ ಸಮಯದಲ್ಲಿ ಭಾರತವನ್ನು 5 ವಿಕಾರಗಳರೂಪಿ ಗ್ರಹಣ ಹಿಡಿದಿದೆ. ಎಲ್ಲಿಯವರೆಗೆ 5 ವಿಕಾರಗಳ ದಾನ ಮಾಡುವುದಿಲ್ಲವೋ ಅಲ್ಲಿಯವರೆಗೂ 16 ಕಲಾಸಂಪೂರ್ಣರಾಗಲು ಸಾಧ್ಯವಿಲ್ಲ. ತಂದೆಯು ಎಲ್ಲರ ಸದ್ಗತಿ ದಾತನಾಗಿದ್ದಾರೆ, ಗುರುವಿಲ್ಲದೆ ಸದ್ಗತಿಯಿಲ್ಲ ಎಂದು ಹೇಳುತ್ತಾರೆ ಆದರೆ ಗತಿಯ ಅರ್ಥವನ್ನು ತಿಳಿದುಕೊಂಡೇ ಇಲ್ಲ. ಮನುಷ್ಯರ ಗತಿ-ಸದ್ಗತಿ ಎಂದರೆ ಮುಕ್ತಿ-ಜೀವನ್ಮುಕ್ತಿ ಯಾವುದನ್ನು ತಂದೆಯೇ ಕೊಡಲು ಸಾಧ್ಯ. ಈ ಸಮಯದಲ್ಲಿ ಎಲ್ಲರ ಸದ್ಗತಿಯಾಗಬೇಕಾಗಿದೆ.
ದೆಹಲಿಯನ್ನು ಹೊಸ ದೆಹಲಿ, ಹಳೆಯ ದೆಹಲಿ ಎಂದು ಹೇಳುತ್ತಾರೆ ಆದರೆ ಅದು ಹೊಸದಲ್ಲ. ಹೊಸ ಪ್ರಪಂಚದಲ್ಲಿ ಹೊಸ ದೆಹಲಿಯಿರುತ್ತದೆ. ಹಳೆಯ ಪ್ರಪಂಚದಲ್ಲಿ ಹಳೆಯ ದೆಹಲಿಯಿದೆ. ಅವಶ್ಯವಾಗಿ ಜಮುನಾ ತೀರವಿತ್ತು, ದೆಹಲಿ ಫರಿಸ್ತಾನವಾಗಿತ್ತು. ಸತ್ಯಯುಗವಾಗಿತ್ತಲ್ಲವೆ! ದೇವಿ-ದೇವತೆಗಳು ರಾಜ್ಯಭಾರ ಮಾಡುತ್ತಿದ್ದರು. ಈಗಂತೂ ಹಳೆಯ ಪ್ರಪಂಚ, ಹಳೆಯ ದೆಹಲಿಯಾಗಿದೆ, ಹೊಸ ದೆಹಲಿಯಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಭಾರತವಾಸಿಗಳು ಇದನ್ನು ಮರೆತು ಹೋಗಿದ್ದಾರೆ. ಹೊಸ ಭಾರತ, ಹೊಸ ದೆಹಲಿಯಿತ್ತು, ಅವರ ರಾಜ್ಯವಿತ್ತು ಬೇರೆ ಯಾವುದೇ ಖಂಡವಿರಲಿಲ್ಲ. ಇದು ಯಾರಿಗೂ ತಿಳಿದಿಲ್ಲ. ಇದನ್ನು ಸರ್ಕಾರದವರು ಓದಿಸುವುದಿಲ್ಲ. ಇದೂ ಗೊತ್ತಿದೆ, ಇದು ಅಪೂರ್ಣ ಇತಿಹಾಸವಾಗಿದೆ. ಯಾವಾಗಿನಿಂದ ಇಸ್ಲಾಮಿ, ಬೌದ್ಧಿಯರು ಬಂದರು, ಲಕ್ಷ್ಮೀ-ನಾರಾಯಣರ ರಾಜ್ಯದ ಬಗ್ಗೆ ಯಾರಿಗೂ ಗೊತ್ತಿಲ್ಲ. ಇಡೀ ಸೃಷ್ಟಿಯ ಚಕ್ರವು ಹೇಗೆ ಸುತ್ತುತ್ತದೆಯೆಂದು ತಂದೆಯು ತಿಳಿಸುತ್ತಾರೆ. ಯಾವಾಗ ಭಾರತ ಸ್ವರ್ಗವಾಗಿತ್ತೋ ಆಗ ಚಿನ್ನದ ಯುಗವಾಗಿತ್ತು, ನೋಡಿ, ಈಗ ಅದೇ ಭಾರತವು ಏನಾಗಿದೆ! ಭಾರತವನ್ನು ಪುನಃ ವಜ್ರ ಸಮಾನವನ್ನಾಗಿ ಯಾರು ಮಾಡಿದರು? ನೀವು ಪಾಪವನ್ನು ಮಾಡಿದಾಗ ನಾನು ಪುಣ್ಯಾತ್ಮರನ್ನಾಗಿ ಮಾಡಲು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಇದು ಮಾಡಿ-ಮಾಡಲ್ಪಟ್ಟ ಡ್ರಾಮ ಆಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಈ ಜ್ಞಾನವನ್ನು ತಂದೆಯ ವಿನಃ ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರೇ ಬಂದು ಓದಿಸುತ್ತಾರೆ. ಮನುಷ್ಯನು ಮನುಷ್ಯನಿಗೆ ಎಂದೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ಯಾವಾಗ ದೇವಿ-ದೇವತೆಗಳಿದ್ದರೋ ಆಗ ಒಬ್ಬರಿಗೊಬ್ಬರು ಸುಖವನ್ನೇ ಕೊಡುತ್ತಿದ್ದರು. ಯಾವುದೇ ರೋಗವಾಗಲೀ, ರೋಗಿಗಳಾಗಲೀ ಇರಲಿಲ್ಲ, ಇಲ್ಲಿ ಎಲ್ಲರೂ ರೋಗಿಗಳೇ ಆಗಿದ್ದಾರೆ. ಈಗ ತಂದೆಯು ಪುನಃ ಸ್ವರ್ಗವನ್ನಾಗಿ ಮಾಡಲು ಬಂದಿದ್ದಾರೆ. ತಂದೆಯು ಸ್ವರ್ಗವನ್ನಾಗಿ ಮಾಡುತ್ತಾರೆ, ರಾವಣನು ನರಕವನ್ನಾಗಿ ಮಾಡುತ್ತಾನೆ. ಈ ಆಟವನ್ನು ಯಾರೂ ತಿಳಿದುಕೊಂಡಿಲ್ಲ. ಶಾಸ್ತ್ರಗಳ ಜ್ಞಾನವಾಗಿದೆ - ಫಿಲಾಸಫಿ, ಭಕ್ತಿಮಾರ್ಗ. ಅದ್ಯಾವುದೇ ಸದ್ಗತಿಯ ಮಾರ್ಗವಲ್ಲ. ಇದು ಯಾವುದೇ ಶಾಸ್ತ್ರಗಳ ಫಿಲಾಸಫಿಯಲ್ಲ. ತಂದೆಯು ಯಾವುದೇ ಶಾಸ್ತ್ರಗಳನ್ನು ತಿಳಿಸುವುದಿಲ್ಲ. ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ತಂದೆಯನ್ನು ಸ್ಪಿರಿಚ್ಯುಯಲ್ ಫಾದರ್ ಎಂದು ಕರೆಯಲಾಗುತ್ತದೆ. ಅವರು ಎಲ್ಲಾ ಆತ್ಮಗಳ ತಂದೆಯಾಗಿದ್ದಾರೆ. ತಂದೆಯು ಮನುಷ್ಯ ಸೃಷ್ಟಿಯ ಬೀಜರೂಪನಾಗಿರುವುದರಿಂದ ಜ್ಞಾನಸಾಗರನಾಗಿದ್ದಾರೆ. ಈ ಮನುಷ್ಯ ಸೃಷ್ಟಿರೂಪಿ ವೃಕ್ಷದ ಆಯಸ್ಸು ಎಷ್ಟಿದೆ, ಹೇಗೆ ವೃದ್ಧಿಯಾಗುತ್ತದೆ ಮತ್ತು ಹೇಗೆ ಭಕ್ತಿ ಪ್ರಾರಂಭವಾಗುತ್ತದೆ, ಇದೆಲ್ಲವನ್ನೂ ನಾನು ತಿಳಿದುಕೊಂಡಿದ್ದೇನೆ. ನೀವು ಮಕ್ಕಳಿಗೆ ಜ್ಞಾನವನ್ನು ಕೊಟ್ಟು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ನಂತರ ನೀವು ಮಾಲೀಕರಾಗಿ ಬಿಡುತ್ತೀರಿ. ಈ ಜ್ಞಾನವು ನಿಮಗೆ ಒಂದೇ ಬಾರಿ ಸಿಗುತ್ತದೆ ನಂತರ ಪ್ರಾಯಲೋಪವಾಗಿ ಬಿಡುತ್ತದೆ. ಮತ್ತೆ ಸತ್ಯಯುಗ-ತ್ರೇತಾದಲ್ಲಿ ಈ ಜ್ಞಾನದ ಅವಶ್ಯಕತೆಯಿಲ್ಲ. ಈ ಜ್ಞಾನವು ಬ್ರಾಹ್ಮಣರಾದ ನಿಮ್ಮಲ್ಲಿ ಮಾತ್ರವೇ ಇದೆ, ದೇವತೆಗಳಲ್ಲಿಲ್ಲ ಆದ್ದರಿಂದ ಈ ಜ್ಞಾನವು ಪರಂಪರೆಯಾಗಿ ಬರಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ಮಾತ್ರ ಈ ಜ್ಞಾನವು ಒಂದು ಬಾರಿ ಸಿಗುತ್ತದೆ ಯಾವುದರಿಂದ ನೀವು ಜೀವನ್ಮುಕ್ತರಾಗಿ ಬಿಡುತ್ತೀರಿ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ, ನಿಮ್ಮ ಬಳಿ ಬಹಳಷ್ಟು ಮಂದಿ ಬರುತ್ತಾರೆ, ಮನಸ್ಸಿಗೆ ಶಾಂತಿ ಸಿಗುತ್ತದೆ ಎಂದು ಕೇಳುತ್ತಾರೆ. ಆದರೆ ಹೀಗೆ ಹೇಳುವುದೂ ತಪ್ಪಾಗಿದೆ. ಹೇಗೆ ಶರೀರದ ಅಂಗಗಳಿವೆಯೋ ಅದೇರೀತಿ ಮನಸ್ಸು-ಬುದ್ಧಿ ಆತ್ಮದ ಅಂಗಗಳಾಗಿವೆ. ಆತ್ಮವನ್ನು ಕಲ್ಲು ಬುದ್ಧಿಯಿಂದ ವಜ್ರ ಸಮಾನವನ್ನಾಗಿ ತಂದೆಯೇ ಮಾಡುತ್ತಾರೆ ಯಾವುದು ಸತ್ಯ-ತ್ರೇತಾಯುಗದವರೆಗೂ ನಡೆಯುತ್ತದೆ. ಪುನಃ ಕಲ್ಲು ಬುದ್ಧಿಯವರಾಗಿ ಬಿಡುತ್ತಾರೆ. ಈಗ ಪುನಃ ನೀವು ಕಲ್ಲು ಬುದ್ಧಿಯವರಿಂದ ವಜ್ರ ಸಮಾನರಾಗುತ್ತೀರಿ. ನಿಮ್ಮಲ್ಲಿದ್ದ ವಜ್ರ ಸಮಾನ ಬುದ್ಧಿಯಲ್ಲಿ ತುಕ್ಕು ಬೆರಕೆಯಾಗಿ ಬಿಟ್ಟಿದೆ. ಈಗ ಪುನಃ ಪಾರಸ ಬುದ್ಧಿಯವರಾಗಲು ತಂದೆಯು ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ನೆನಪಿನ ಯಾತ್ರೆಯಿಂದಲೇ ನೀವು ಪವಿತ್ರರಾಗಿ ನನ್ನ ಬಳಿ ಬಂದು ಬಿಡುತ್ತೀರಿ. ಬಾಕಿ ಮನಸ್ಸಿನ ಶಾಂತಿಯು ಹೇಗೆ ಸಿಗುತ್ತದೆ ಎಂದು ಕೇಳುವವರಿಗೆ ತಿಳಿಸಿ - ಇಲ್ಲಿ ಶಾಂತಿಯು ಹೇಗೆ ಸಿಗುತ್ತದೆ? ಎಂದು. ಇದು ದುಃಖಧಾಮವಾಗಿದೆ ಏಕೆಂದರೆ ಇಲ್ಲಿ ವಿಕಾರಗಳ ಪ್ರವೇಶತೆಯಿದೆ. ಬೇಹದ್ದಿನ ತಂದೆಯಿಂದಲೇ ಈ ಆಸ್ತಿಯು ಸಿಗಲು ಸಾಧ್ಯ. ನಂತರ ರಾವಣನ ಜೊತೆ ಸೇರುವುದರಿಂದ ಪತಿತರಾಗುತ್ತೀರಿ ಪುನಃ ತಂದೆಯ ಮೂಲಕ ಪಾವನರಾಗಲು ಒಂದು ಸೆಕೆಂಡ್ ಹಿಡಿಸುತ್ತದೆ. ಈಗ ನೀವು ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ತಂದೆಯು ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆ ಮತ್ತು ರಾವಣನು ಜೀವನ ಬಂಧನದ ಶಾಪ ಕೊಡುತ್ತಾನೆ. ಆದ್ದರಿಂದ ಇಲ್ಲಿ ದುಃಖವೇ ದುಃಖವಿದೆ. ಡ್ರಾಮಾವನ್ನು ತಿಳಿದುಕೊಳ್ಳಬೇಕಾಗಿದೆ. ದುಃಖಧಾಮದಲ್ಲಿ ಯಾರಿಗೂ ಸುಖ-ಶಾಂತಿ ಸಿಗಲು ಸಾಧ್ಯವಿಲ್ಲ. ಹಾ! ಶಾಂತಿ ನಾವೆಲ್ಲಾ ಆತ್ಮರ ಸ್ವಧರ್ಮವಾಗಿದೆ. ಶಾಂತಿಧಾಮ ಆತ್ಮದ ಮನೆಯಾಗಿದೆ. ನಮ್ಮ ಸ್ವಧರ್ಮ ಶಾಂತಿಯೆಂದು ಆತ್ಮವು ಹೇಳುತ್ತದೆ. ಈ ಶರೀರವು ಪಾತ್ರವನ್ನು ಮಾಡುವುದಿಲ್ಲ ಆದರೆ ಇದರಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಎಲ್ಲಿಯವರೆಗೆ ಕುಳಿತುಕೊಳ್ಳುವುದು! ಕರ್ಮವನ್ನಂತೂ ಮಾಡಲೇಬೇಕಾಗಿದೆ, ಎಲ್ಲಿಯವರೆಗೆ ಮನುಷ್ಯನು ಡ್ರಾಮಾವನ್ನು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೂ ದುಃಖಿಯಾಗಿಯೇ ಇರುತ್ತಾನೆ. ನಾನಂತೂ ಬಡವರ ಬಂಧುವಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಇಲ್ಲಿಗೆ ಬಡವರೇ ಬರುತ್ತಾರೆ, ಸಾಹುಕಾರರಿಗಂತೂ ಸ್ವರ್ಗವು ಇಲ್ಲಿಯೇ ಇದೆ, ಅವರ ಅದೃಷ್ಟದಲ್ಲಿ ಸ್ವರ್ಗದ ಸುಖವಿಲ್ಲ. ನಾನು ಬಡವರ ಬಂಧುವಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಸಾಹುಕಾರರನ್ನು ಬಡವರನ್ನಾಗಿ, ಬಡವರನ್ನು ಸಾಹುಕಾರರನ್ನಾಗಿ ಮಾಡುತ್ತೇನೆ. ಸಾಹುಕಾರರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಏಕೆಂದರೆ ಅವರಿಗೆ ಸಾಹುಕಾರಿತನದ ನಶೆಯಿದೆ. ಹಾ! ಪ್ರಜೆಗಳಲ್ಲಿ ಬರುತ್ತಾರೆ, ಸ್ವರ್ಗದಲ್ಲಂತೂ ಅವಶ್ಯವಾಗಿ ಬರುತ್ತಾರೆ ಆದರೆ ಬಡವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಬಡವರು ಸಾಹುಕಾರರಾಗುತ್ತಾರೆ. ಅವರಿಗೆ ನಾವು ಸಾಹುಕಾರರೆಂಬ ದೇಹಾಭಿಮಾನವಿದೆಯಲ್ಲವೆ! ಆದರೆ ತಂದೆಯು ತಿಳಿಸುತ್ತಾರೆ - ಈ ಹಣ-ಸಂಪತ್ತು ಎಲ್ಲವೂ ಮಣ್ಣಿನ ಪಾಲಾಗುತ್ತದೆ ಎಂದು. ವಿನಾಶವಂತೂ ಆಗಲೇಬೇಕಾಗಿದೆ, ದೇಹೀ-ಅಭಿಮಾನಿಯಾಗುವುದರಲ್ಲಿಯೇ ಬಹಳ ಪರಿಶ್ರಮವಿದೆ. ಈ ಸಮಯದಲ್ಲಿ ಎಲ್ಲರೂ ದೇಹಾಭಿಮಾನಿಗಳಾಗಿದ್ದಾರೆ. ಈಗ ನೀವು ದೇಹೀ-ಅಭಿಮಾನಿಯಾಗಬೇಕಾಗಿದೆ. 84 ಜನ್ಮಗಳನ್ನು ಪೂರ್ಣ ಮಾಡಿದೆನೆಂದು ಆತ್ಮವೇ ಹೇಳುತ್ತದೆ. ನಾಟಕವು ಪೂರ್ಣವಾಯಿತು, ಈಗ ಹಿಂತಿರುಗಿ ಹೋಗಬೇಕಾಗಿದೆ. ಈಗ ಕಲಿಯುಗದ ಅಂತ್ಯ, ಸತ್ಯಯುಗದ ಆದಿ ಸಂಗಮವಾಗಿದೆ. 5000 ವರ್ಷಗಳ ನಂತರ ನಾನು ಬಂದು ವಜ್ರ ಸಮಾನ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಇತಿಹಾಸ-ಭೂಗೋಳವನ್ನು ತಂದೆಯೇ ತಿಳಿಸಲು ಸಾಧ್ಯ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ತಂದೆಯಿಂದ ಜೀವನ್ಮುಕ್ತಿಯ ಆಸ್ತಿಯನ್ನು ಪಡೆಯಲು ಅವಶ್ಯವಾಗಿ ಪಾವನರಾಗಬೇಕಾಗಿದೆ. ಡ್ರಾಮಾದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ದುಃಖಧಾಮದಲ್ಲಿದ್ದರೂ ಸಹ ದುಃಖದಿಂದ ಮುಕ್ತರಾಗಬೇಕಾಗಿದೆ.
2) ಧನ, ಸಂಪತ್ತು ಅಥವಾ ಸಾಹುಕಾರಿತನದ ನಶೆಯನ್ನು ಬಿಟ್ಟು ದೇಹೀ-ಅಭಿಮಾನಿಯಾಗುವ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ - ನಮ್ಮ ಜೀವನವು ವಜ್ರ ಸಮಾನವಾಗಿತ್ತು, ಈಗ ಕವಡೆಯಂತಾಗಿ ಬಿಟ್ಟಿದೆ. ಇದಂತೂ ಸಾಮಾನ್ಯ ಮಾತಾಗಿದೆ. ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳುತ್ತಾರೆ - ತಂದೆಯು ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳುವಷ್ಟು ಸಹಜ ರೀತಿಯಿಂದ ತಿಳಿಸುತ್ತಾರೆ. ಸತ್ಯ ನಾರಾಯಣನ ಕಥೆಯನ್ನು ತಿಳಿಸುವಾಗ ಚಿಕ್ಕ-ಚಿಕ್ಕ ಮಕ್ಕಳೂ ಸಹ ಕುಳಿತುಕೊಳ್ಳುತ್ತಾರೆ. ಆದರೆ ಆ ಸತ್ಸಂಗಗಳಲ್ಲಿ ಏನೆಲ್ಲವನ್ನೂ ತಿಳಿಸುತ್ತಾರೆಯೋ ಅವೆಲ್ಲವೂ ಕಥೆಗಳಾಗಿವೆ. ಕಥೆಯು ಜ್ಞಾನವಲ್ಲ, ಇವು ಮಾಡಿ-ಮಾಡಲ್ಪಟ್ಟ ಕಥೆಗಳಾಗಿವೆ. ಗೀತೆಯ ಕಥೆ, ರಾಮಾಯಣದ ಕಥೆ, ಭಿನ್ನ-ಭಿನ್ನ ಶಾಸ್ತ್ರಗಳಿವೆ. ಅದರ ಕಥೆಗಳನ್ನು ಕುಳಿತು ತಿಳಿಸುತ್ತಾರೆ, ಅವೆಲ್ಲವೂ ಕಥೆಗಳಾಗಿವೆ. ಕಥೆಗಳಿಂದ ಏನಾದರೂ ಲಾಭವಾಗುತ್ತದೆಯೇ? ಇದು ಸತ್ಯ ನಾರಾಯಣನ ಅರ್ಥಾತ್ ನರನಿಂದ ನಾರಾಯಣನಾಗುವ ಸತ್ಯ ಕಥೆಯಾಗಿದೆ, ಇದನ್ನು ಕೇಳುವುದರಿಂದ ನೀವು ನರನಿಂದ ನಾರಾಯಣರಾಗಿ ಬಿಡುತ್ತೀರಿ. ಇದು ಅಮರ ಕಥೆಯೂ ಆಗಿದೆ. ನೀವು ನಿಮಂತ್ರಣ ನೀಡುತ್ತೀರಿ - ಬನ್ನಿರಿ, ನಿಮಗೆ ಅಮರ ಕಥೆಯನ್ನು ತಿಳಿಸುತ್ತೇವೆ, ಇದರಿಂದ ನೀವು ಅಮರಲೋಕದಲ್ಲಿ ಹೋಗುತ್ತೀರಿ. ಆದರೆ ಯಾರೂ ತಿಳಿದುಕೊಳ್ಳುವುದಿಲ್ಲ, ಶಾಸ್ತ್ರಗಳ ಕಥೆಯನ್ನೇ ಕೇಳುತ್ತಾ ಬರುತ್ತಾರೆ, ಸಿಗುವುದೇನೂ ಇಲ್ಲ. ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ದರ್ಶನ ಮಾಡಿಕೊಂಡು ಬರೋಣವೆಂದು ಹೋಗುತ್ತಾರೆ, ಮಹಾತ್ಮರ ದರ್ಶನ ಮಾಡಿಕೊಂಡು ಬಂದೆವೆಂದು ಹೇಳುತ್ತಾರೆ. ಇದೊಂದು ಪದ್ಧತಿಯು ನಡೆಯುತ್ತಾ ಬಂದಿದೆ. ಋಷಿ-ಮುನಿ ಮೊದಲಾದವರು ಯಾರೆಲ್ಲರೂ ಇದ್ದು ಹೋಗಿದ್ದಾರೆಯೋ ಅವರಿಗೆ ತಲೆ ಬಾಗುತ್ತಾ ಬಂದಿದ್ದಾರೆ. ರಚಯಿತ ಮತ್ತು ರಚನೆಯ ಕಥೆಯು ತಿಳಿದಿದೆಯೋ ಎಂದು ಕೇಳಿದರೆ ಇಲ್ಲವೆಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ರಚಯಿತ ಮತ್ತು ರಚನೆಯ ಕಥೆಯು ಬಹಳ ಸಹಜವಾಗಿದೆ, ತಂದೆ ಮತ್ತು ಆಸ್ತಿಯ ಕಥೆಯಾಗಿದೆ. ಭಲೆ ಯಾರು ಪ್ರದರ್ಶನಿಗೆ ಬರುವರೋ ಅವರು ಕಥೆಯನ್ನಂತೂ ಚೆನ್ನಾಗಿ ಕೇಳಿಸಿಕೊಳ್ಳುತ್ತಾರೆ ಆದರೆ ಪವಿತ್ರರಾಗುವುದಿಲ್ಲ. ಈ ವಿಕಾರಗಳಲ್ಲಿ ಹೋಗುವ ಪದ್ಧತಿಯೂ ಸಹ ಅನಾದಿಯಾಗಿದೆಯೆಂದು ತಿಳಿದುಕೊಳ್ಳುತ್ತಾರೆ, ಮಂದಿರಗಳಲ್ಲಿ ದೇವತೆಗಳ ಮುಂದೆ ಹೋಗಿ ತಾವು ಸಂಪೂರ್ಣ ನಿರ್ವಿಕಾರಿಗಳಾಗಿದ್ದೀರಿ.... ಎಂದು ಹಾಡುತ್ತಾರೆ. ಮತ್ತೆ ಹೊರಗೆ ಬಂದು ವಿಕಾರದಲ್ಲಿ ಹೋಗುವರು, ಇದು ಅನಾದಿಯಾಗಿದೆ, ಇದು ಇಲ್ಲದೆ ಪ್ರಪಂಚವು ಹೇಗೆ ನಡೆಯುವುದು ಎಂದು ಕೇಳುತ್ತಾರೆ. ಲಕ್ಷ್ಮೀ-ನಾರಾಯಣ ಮೊದಲಾದವರಿಗೂ ಮಕ್ಕಳಿದ್ದರಲ್ಲವೆ ಎನ್ನುತ್ತಾರೆ, ಇಂತಹವರಿಗೆ ಏನು ಹೇಳುವುದು. ಮನುಷ್ಯನ ಪದವಿಯಂತೂ ಕೊಡಲು ಸಾಧ್ಯವಿಲ್ಲ. ದೇವತೆಗಳೂ ಸಹ ಮನುಷ್ಯರಾಗಿದ್ದರು, ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಎಷ್ಟು ಸುಖಿಯಾಗಿದ್ದರು! ನೀವು ಮಕ್ಕಳಿಗೆ ತಂದೆಯು ಬಹಳ ಸಹಜವಾದ ಮಾತನ್ನು ತಿಳಿಸುತ್ತಾರೆ. ಅವಶ್ಯವಾಗಿ ಇದೇ ಭಾರತದಲ್ಲಿಯೇ ಸ್ವರ್ಗವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದನ್ನಂತೂ ಎಲ್ಲರೂ ಒಪ್ಪುತ್ತಾರೆ - ಸತ್ಯಯುಗದಲ್ಲಿ ಇವರ ರಾಜ್ಯವಿತ್ತು. ಅಲ್ಲಿ ಯಾರೂ ದುಃಖಿಯಾಗಿರಲಿಲ್ಲ. ಸಂಪೂರ್ಣ ನಿರ್ವಿಕಾರಿಗಳಿದ್ದರು, ಅವರ ಮಂದಿರಗಳು ದೊಡ್ಡ-ದೊಡ್ಡದಾಗಿ ಮಾಡಲ್ಪಟ್ಟಿವೆ. ಅವರಿಗೆ 5000 ವರ್ಷಗಳಾಯಿತು, ಅವರು ಈಗ ಇಲ್ಲ. ಈಗಂತೂ ಕಲಿಯುಗದ ಅಂತ್ಯವಾಗಿದೆ. ಮನುಷ್ಯರು ಪರಸ್ಪರ ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಭಗವಂತನಂತೂ ಮೇಲೆ ನಿರ್ವಾಣಧಾಮದಲ್ಲಿಯೇ ಇರುತ್ತಾರೆ. ಮೂಲತಃ ನಾವಾತ್ಮರೂ ಅಲ್ಲಿಯೇ ಇರುತ್ತೇವೆ, ಪಾತ್ರವನ್ನಭಿನಯಿಸಲು ಇಲ್ಲಿಗೆ ಬರುತ್ತೇವೆ. ಮೊದಲು ನಾವು ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿದ್ದೆವು, ಅಲ್ಲಿ ಬಹಳ ಸುಖ, ಆನಂದವಿತ್ತು. ನಂತರ ನಾವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. 84 ಜನ್ಮಗಳ ಚಕ್ರವೆಂದು ಗಾಯನವೂ ಇದೆ. ನಾವು ಸೂರ್ಯವಂಶದಲ್ಲಿ 1250 ವರ್ಷಗಳ ಕಾಲ ರಾಜ್ಯಭಾರ ಮಾಡಿದೆವು, ಅಲ್ಲಿ ಅಪಾರ ಸುಖವಿತ್ತು, ಸಂಪೂರ್ಣ ನಿರ್ವಿಕಾರಿಗಳಾಗಿದ್ದೆವು. ವಜ್ರ ವೈಡೂರ್ಯಗಳ ಮಹಲುಗಳಿತ್ತು. ನಾವೇ ರಾಜ್ಯಭಾರ ಮಾಡಿದೆವು ನಂತರ 84 ಜನ್ಮಗಳಲ್ಲಿ ಬರಬೇಕಾಯಿತು. ಈ ವಿಶ್ವದ ಚರಿತ್ರೆ-ಭೂಗೋಳದ ಚಕ್ರವು ಸುತ್ತುತ್ತಾ ಇರುತ್ತದೆ. ಅರ್ಧಕಲ್ಪ ಸುಖವಿತ್ತು, ರಾಮ ರಾಜ್ಯದಲ್ಲಿದ್ದೆವು ನಂತರ ಮನುಷ್ಯರು ವೃದ್ಧಿಯಾಗುತ್ತಾ ಹೋಯಿತು. ಸತ್ಯಯುಗದಲ್ಲಿ ಕೇವಲ 9 ಲಕ್ಷಜನ ಇದ್ದರು. ಸತ್ಯಯುಗದ ಅಂತ್ಯದಲ್ಲಿ ವೃದ್ಧಿಯಾಗಿ 9 ಲಕ್ಷದಿಂದ ಎರಡು ಕೋಟಿಯಾಗಿ ಬಿಟ್ಟರು. ನಂತರ 12 ಜನ್ಮಗಳು ತ್ರೇತಾಯುಗದಲ್ಲಿ ಬಹಳ ಸುಖ-ಶಾಂತಿಯಲ್ಲಿದ್ದಿರಿ, ಒಂದೇ ಧರ್ಮವಿತ್ತು ನಂತರ ಏನಾಯಿತು? ರಾವಣ ರಾಜ್ಯವು ಆರಂಭವಾಯಿತು. ರಾಮ ರಾಜ್ಯ ಮತ್ತು ರಾವಣ ರಾಜ್ಯವನ್ನು ನೋಡಿ! ಬಹಳ ಸಹಜ ರೀತಿಯಿಂದ ತಿಳಿಸುತ್ತೇನೆ. ಚಿಕ್ಕ ಚಿಕ್ಕ ಮಕ್ಕಳಿಗೂ ಸಹ ಹೀಗೆ ತಿಳಿಸಬೇಕು. ಮತ್ತೇನಾಯಿತು? ದೊಡ್ಡ-ದೊಡ್ಡ ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳು ಭೂಕಂಪದಲ್ಲಿ ಕೆಳಗೆ ಹೊರಟು ಹೋದವು. ಭಾರತವಾಸಿಗಳು ವಿಕಾರಿಯಾದುದರಿಂದಲೇ ಭೂಕಂಪವಾಯಿತು ನಂತರ ರಾವಣ ರಾಜ್ಯವು ಆರಂಭವಾಯಿತು. ಪವಿತ್ರರಿಂದ ಅಪವಿತ್ರರಾಗಿ ಬಿಟ್ಟರು. ಇದಕ್ಕೆ ಚಿನ್ನದ ಲಂಕೆಯು ಕೆಳಗಡೆ ಹೊರಟು ಹೋಯಿತೆಂದು ಹೇಳುತ್ತಾರೆ. ಸ್ವಲ್ಪವಾದರೂ ಉಳಿದಿರಬೇಕಲ್ಲವೆ ಅದರಿಂದ ಮಂದಿರ ಇತ್ಯಾದಿಗಳನ್ನು ಕಟ್ಟಿಸಿರುತ್ತಾರೆ. ಭಕ್ತಿಮಾರ್ಗವು ಆರಂಭವಾಯಿತು, ಮನುಷ್ಯರು ವಿಕಾರಿಯಾಗತೊಡಗಿದರು. ನಂತರ ರಾವಣ ರಾಜ್ಯವು ನಡೆಯಿತು, ಆಗಿನಿಂದ ಆಯಸ್ಸೂ ಕಡಿಮೆಯಾಯಿತು, ನಾವು ನಿರ್ವಿಕಾರಿ, ಯೋಗಿಗಳಿಂದ ವಿಕಾರಿ ಭೋಗಿಗಳಾಗಿ ಬಿಟ್ಟೆವು. ಯಥಾರಾಜ-ರಾಣಿ ತಥಾ ಪ್ರಜಾ ಎಲ್ಲರೂ ವಿಕಾರಿಗಳಾಗಿ ಬಿಟ್ಟರು. ಈ ಕಥೆಯು ಎಷ್ಟು ಸಹಜವಾಗಿದೆ! ಚಿಕ್ಕ ಚಿಕ್ಕ ಕನ್ಯೆಯರು ಈ ಕಥೆಯನ್ನು ತಿಳಿಸಿದ್ದೇ ಆದರೆ ದೊಡ್ಡ ದೊಡ್ಡ ವ್ಯಕ್ತಿಗಳೂ ಸಹ ತಲೆ ತಗ್ಗಿಸುವರು. ಈಗ ತಂದೆಯು ಕುಳಿತು ತಿಳಿಸುತ್ತಾರೆ - ಅವರೇ ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ಒಳ್ಳೆಯದು - ದ್ವಾಪರದಲ್ಲಿ ಭೋಗಿ, ಪತಿತರಾಗಿ ಬಿಟ್ಟರು ಆಗ ಅನ್ಯ ಧರ್ಮಗಳು ಪ್ರಾರಂಭವಾಗುತ್ತಾ ಹೋಯಿತು. ಯಾವ ಅಮೃತದ ನಶೆಯಿತ್ತು ಅದು ಸಮಾಪ್ತಿಯಾಯಿತು. ಜಗಳ-ಕಲಹಗಳಾಗತೊಡಗಿತು. ದ್ವಾಪರದಿಂದ ಹಿಡಿದು ನಾವು ಕೆಳಗಿಳಿಯುತ್ತಲೇ ಬಂದೆವು, ಕಲಿಯುಗದಲ್ಲಿ ನಾವು ಇನ್ನೂ ವಿಕಾರಿಗಳಾದೆವು. ಕಲ್ಲಿನ ಮೂರ್ತಿಗಳನ್ನು ಮಾಡುತ್ತಲೇ ಬಂದೆವು. ಹನುಮಂತ, ಗಣೇಶನ....... ಕಲ್ಲು ಬುದ್ಧಿಯವರಾದ ಕಾರಣ ಕಲ್ಲಿನ ಪೂಜೆಯನ್ನೇ ಮಾಡಲು ಆರಂಭಿಸಿದೆವು. ಭಗವಂತನು ಕಲ್ಲು-ಮಣ್ಣಿನಲ್ಲಿದ್ದಾರೆಂದು ತಿಳಿದುಕೊಂಡಿದ್ದೆವು. ತಂದೆಯು ತಿಳಿಸುತ್ತಾರೆ - ಹೀಗೆ ಮಾಡುತ್ತಾ-ಮಾಡುತ್ತಾ ಭಾರತದ ಸ್ಥಿತಿಯು ಹೇಗಾಯಿತು, ಮತ್ತೆ ಪುನಃ ತಂದೆಯು ಬಂದು ವಿಷವನ್ನು ಬಿಡಿ, ಅಮೃತವನ್ನು ಪಾನ ಮಾಡಿ ಮತ್ತೆ ರಾಜ್ಯಭಾಗ್ಯವನ್ನು ಪಡೆಯಿರಿ. ವಿಷವನ್ನು ಬಿಟ್ಟು ನೀವು ಮನುಷ್ಯರಿಂದ ದೇವತೆಗಳಾಗುವಿರಿ ಆದರೆ ವಿಷವನ್ನು ಬಿಡುವುದೇ ಇಲ್ಲ. ವಿಷಕ್ಕಾಗಿ ಎಷ್ಟೊಂದು ಹೊಡೆಯುತ್ತಾರೆ, ತೊಂದರೆ ಕೊಡುತ್ತಾರೆ. ಆದ್ದರಿಂದಲೇ ದ್ರೌಪದಿಯು ಕರೆದಳಲ್ಲವೆ! ನೀವೀಗ ತಿಳಿದುಕೊಂಡಿದ್ದೀರಿ - ಅಮೃತವನ್ನು ಕುಡಿಯದ ವಿನಃ ನಾವು ದೇವತೆಗಳಾಗುವುದು ಹೇಗೆ! ಸತ್ಯಯುಗದಲ್ಲಂತೂ ರಾವಣನಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ಶ್ರೇಷ್ಠಾಚಾರಿಗಳಾಗುವುದಿಲ್ಲವೋ ಅಲ್ಲಿಯವರೆಗೆ ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಯಾರು ಶ್ರೇಷ್ಠಾಚಾರಿಗಳಾಗಿದ್ದರೋ ಅವರು ಭ್ರಷ್ಟಾಚಾರಿಗಳಾಗಿದ್ದಾರೆ ಪುನಃ ಈಗ ಅಮೃತವನ್ನು ಕುಡಿದು ಶ್ರೇಷ್ಠಾಚಾರಿಗಳಾಗಬೇಕಾಗಿದೆ. ನನ್ನನ್ನೇ ನೆನಪು ಮಾಡಿ ಎಂದು ತಂದೆಯು ಹೇಳುತ್ತಾರೆ. ಗೀತೆಯನ್ನು ಮರೆದು ಬಿಟ್ಟಿರಾ? ಗೀತೆಯನ್ನು ರಚನೆಯನ್ನು ನಾನು ಮಾಡಿದೆನು, ಹೆಸರನ್ನಂತೂ ಕೃಷ್ಣನದನ್ನು ಹಾಕಿ ಬಿಟ್ಟಿರಿ. ಈ ಲಕ್ಷ್ಮೀ-ನಾರಾಯಣರಿಗೆ ಯಾರು ರಾಜ್ಯ ಪದವಿಯನ್ನು ಕೊಟ್ಟರು? ಅವಶ್ಯವಾಗಿ ಭಗವಂತನೇ ಕೊಟ್ಟಿರಬೇಕು. ಹಿಂದಿನ ಜನ್ಮದಲ್ಲಿ ಭಗವಂತನು ರಾಜಯೋಗವನ್ನು ಕಲಿಸಿದರು ನಂತರ ಹೆಸರನ್ನು ಕೃಷ್ಣನದನ್ನು ಹಾಕಿದರು ಅಂದಾಗ ತಿಳಿಸಿಕೊಡಲು ಅಭ್ಯಾಸ ಮಾಡಬೇಕಾಗಿದೆ. ಬಹಳ ಸಹಜವಾದ ಕಥೆಯಾಗಿದೆ. ಇದನ್ನು ತಿಳಿಸಲು ತಂದೆಗೆ ಎಷ್ಟು ಸಮಯ ಹಿಡಿಸಿತು? ಅರ್ಧ ಗಂಟೆಯಲ್ಲಿ ಇಷ್ಟೂ ಸಹಜವಾದ ಮಾತೂ ಸಹ ಅರ್ಥವಾಗುವುದಿಲ್ಲವೆ? ಆದ್ದರಿಂದ ತಂದೆಯು ತಿಳಿಸುತ್ತಾರೆ - ಕೇವಲ ಒಂದು ಚಿಕ್ಕ ಕಥೆಯನ್ನಾಗಿ ಮಾಡಿ ಅನ್ಯರಿಗೆ ತಿಳಿಸಿಕೊಡಬೇಕು. ಕೈಯಲ್ಲಿ ಚಿತ್ರವನ್ನು ಹಿಡಿದುಕೊಳ್ಳಿ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯ ನಂತರ ರಾಮ-ಸೀತೆಯರ ರಾಜ್ಯ,...... ನಂತರ ದ್ವಾಪರಯುಗದಲ್ಲಿ ರಾವಣ ರಾಜ್ಯವು ಪ್ರಾರಂಭವಾಯಿತು. ಎಷ್ಟು ಸಹಜವಾದ ಕಥೆಯಾಗಿದೆ! ಅವಶ್ಯವಾಗಿ ನಾವು ದೇವತೆಗಳಾಗಿದ್ದೆವು, ಕ್ಷತ್ರಿಯರು, ವೈಶ್ಯ ನಂತರ ಶೂದ್ರರಾದೆವು. ಈಗ ತಮ್ಮನ್ನು ದೇವತೆಗಳು ಎಂದು ತಿಳಿಯದ ಕಾರಣ ಹಿಂದೂ ಎಂದು ಹೇಳಿ ಬಿಡುತ್ತಾರೆ. ಧರ್ಮಶ್ರೇಷ್ಠ, ಕರ್ಮಶ್ರೇಷ್ಠದಿಂದ ಕರ್ಮಭ್ರಷ್ಟರಾಗಿದ್ದೇವೆ. ಹೀಗೆ ಚಿಕ್ಕ-ಚಿಕ್ಕ ಮಕ್ಕಳೂ ಸಹ ಭಾಷಣ ಮಾಡಿ ಸಭೆಯಲ್ಲಿ ಮತ್ತೊಮ್ಮೆ ಹೇಳಿ ಎಂದು ಹೇಳಿಸಿಕೊಳ್ಳಬೇಕು.
ತಂದೆಯು ಎಲ್ಲಾ ಸೇವಾಕೇಂದ್ರದವರಿಗೂ ತಿಳಿಸುತ್ತಿದ್ದಾರೆ. ಈಗ ದೊಡ್ಡ-ದೊಡ್ಡವರು ಕಲಿಯದಿದ್ದರೆ ಚಿಕ್ಕ-ಚಿಕ್ಕ ಕುಮಾರಿಯರಿಗೆ ಕಲಿಸಿಕೊಡಿ. ಕುಮಾರಿಯರ ಹೆಸರೂ ಸಹ ಇದೆ. ದೆಹಲಿ ಮತ್ತು ಬಾಂಬೆಯಲ್ಲಿ ಬಹಳ ಒಳ್ಳೊಳ್ಳೆಯ ಕುಮಾರಿಯರಿದ್ದಾರೆ, ವಿದ್ಯಾವಂತರೂ ಆಗಿದ್ದಾರೆ. ಅವರೀಗ ಎದ್ದು ನಿಲ್ಲಬೇಕಾಗಿದೆ. ಎಷ್ಟೊಂದು ಸೇವೆ ಮಾಡಬಹುದು! ಕುಮಾರಿಯರು ಎದ್ದು ನಿಂತರೆ ಹೆಸರು ಪ್ರಸಿದ್ಧವಾಗಿ ಬಿಡುವುದು. ಸಾಹುಕಾರ ಮನೆಯವರು ಧೈರ್ಯವನ್ನಿಡುವುದು ಬಹಳ ವಿರಳ, ಅವರಿಗೆ ಸಾಹುಕಾರತನದ ನಶೆಯಿರುತ್ತದೆ, ವರದಕ್ಷಿಣೆ ಸಿಗುತ್ತದೆಯೆಂದರೆ ಸಾಕು. ಕುಮಾರಿಯರು ವಿವಾಹ ಮಾಡಿಕೊಂಡು ಮುಖ ಕಪ್ಪು ಮಾಡಿಕೊಂಡು ಎಲ್ಲರ ಮುಂದೆ ತಲೆ ಬಾಗಬೇಕಾಗುತ್ತದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ ಆದರೆ ಪಾರಸ ಬುದ್ಧಿಯಾಗುವ ವಿಚಾರವೇ ಬರುವುದಿಲ್ಲ. ನೋಡಿ, ಕೆಲವರು ಓದುವುದೇ ಬರುವುದಿಲ್ಲ ಅಂತಹವರೂ ಸಹ ಎಂ.ಪಿ., ಎಂ.ಎಲ್.ಎ., ಗಳಾಗಿದ್ದಾರೆ. ವಿದ್ಯೆಯಿಂದ ಏನೆನೆಲ್ಲಾ ಆಗಿ ಬಿಡುತ್ತಾರೆ! ಈ ವಿದ್ಯೆಯು ಬಹಳ ಸಹಜವಾಗಿದೆ, ಬಹಳ ಒಳ್ಳೊಳ್ಳೆಯ ಕುಮಾರಿಯರಿದ್ದಾರೆ ಆದರೆ ಅವರಿಗೆ ಅವರದೇ ನಶೆಯೇರಿದೆ. ಸ್ವಲ್ಪ ಕೆಲಸ ಮಾಡಿದರೂ ಸಹ ನಾವು ತುಂಬಾ ಕೆಲಸ ಮಾಡಿದೆವೆಂದು ತಿಳಿದುಕೊಳ್ಳುತ್ತಾರೆ. ಈಗಂತೂ ಬಹಳಷ್ಟು ಸೇವೆಯಿದೆ. ಇತ್ತೀಚೆಗೆ ಕುಮಾರಿಯರು ಬಹಳ ಫ್ಯಾಷನ್ನಲ್ಲಿಯೇ ಇರುತ್ತಾರೆ. ಅಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ, ಇಲ್ಲಿ ಎಷ್ಟೊಂದು ಕೃತಕವಾದ ಸೌಂದರ್ಯವನ್ನು ಮಾಡಿಕೊಳ್ಳುತ್ತಿರುತ್ತಾರೆ. ಕೇವಲ ಕೂದಲಿಗಾಗಿಯೇ ಎಷ್ಟೊಂದು ಹಣವನ್ನು ಕೊಡುತ್ತಾರೆ, ಇದು ಮಾಯೆಯ ಪಾಂಪ್ (ಶೋ) ಆಗಿದೆ. ಮಾಯಾ ರಾವಣ ರಾಜ್ಯದ ಪಥನ ಮತ್ತೆ ರಾಮ ರಾಜ್ಯದ ಉತ್ಥಾನ. ಈಗ ರಾಮ ರಾಜ್ಯವು ಸ್ಥಾಪನೆಯಾಗುತ್ತಿದೆ ಆದರೆ ಸ್ವಲ್ಪ ಪರಿಶ್ರಮ ಪಡಬೇಕಾಗಿದೆ. ನೀವು ಏನಾಗುತ್ತೀರಿ, ವಿದ್ಯೆಯನ್ನು ಓದದೇ ಇದ್ದರೆ ಅಲ್ಲಿ ಹೋಗಿ ಚಿಕ್ಕ ಪದವಿಯ ಪ್ರಜೆಗಳಾಗಿ ಬಿಡುತ್ತೀರಿ. ಇತ್ತೀಚಿನ ದೊಡ್ಡ-ದೊಡ್ಡ ಮನುಷ್ಯರು ಅಲ್ಲಿಗೆ ಹೋಗಿ ಪ್ರಜೆಗಳಾಗಿ ಬರುತ್ತಾರೆ. ಸಾಹುಕಾರರು ಕೇವಲ ಚೆನ್ನಾಗಿದೆ-ಚೆನ್ನಾಗಿದೆ ಎಂದು ತಮ್ಮ ವ್ಯಾಪಾರದಲ್ಲಿಯೇ ಇರುತ್ತಾರೆ. ಬಹಳ ಒಳ್ಳೆಯ ಪ್ರಭಾವ ಬೀರುತ್ತದೆ ಆದರೆ ಮತ್ತೇನು? ಕೊನೆಯಲ್ಲಿ ಏನಾಗುವುದು? ಅಲ್ಲಿಗೆ ಹೋಗಿ ಪ್ರಜೆಗಳಾಗುತ್ತಾರೆ. ಪ್ರಭಾವಿತರಾಗುವುದು ಎಂದರೆ ಪ್ರಜೆಗಳಾಗುವುದಾಗಿದೆ. ಯಾರು ಪರಿಶ್ರಮ ಪಡುತ್ತಾರೆಯೋ ಅವರು ರಾಮ ರಾಜ್ಯದಲ್ಲಿ ಬರುತ್ತಾರೆ. ತಿಳಿದುಕೊಳ್ಳುವುದು ಸಹಜವಾಗಿದೆ, ಈ ಕಥೆಯ ನಶೆಯಲ್ಲಿ ಯಾರಿದ್ದರೂ ಸಹ ದೋಣಿಯು ಪಾರಾಗಿ ಬಿಡುವುದು. ನಾವು ಶಾಂತಿಧಾಮಕ್ಕೆ ಹೋಗುತ್ತೇವೆ ನಂತರ ಸುಖಧಾಮಕ್ಕೆ ಬರುತ್ತೇವೆ ಎಂದು ನೆನಪು ಮಾಡುತ್ತಾ- ಮಾಡಿಸುತ್ತಾ ಇದ್ದರೆ ಸಾಕು ಶ್ರೇಷ್ಠ ಪದವಿಯನ್ನು ಪಡೆಯಬಹುದು. ವಿದ್ಯೆಯ ಮೇಲೆ ಗಮನ ಕೊಡಬೇಕಾಗಿದೆ, ಚಿತ್ರವು ಕೈಯಲ್ಲಿರಬೇಕಾಗಿದೆ. ಹೇಗೆ ಬಾಬಾರವರು ಲಕ್ಷ್ಮೀ-ನಾರಾಯಣನ ಪೂಜೆ ಮಾಡುತ್ತಿದ್ದಾಗ ಅವರ ಜೇಬಿನಲ್ಲಿ ಚಿತ್ರವಿರುತ್ತಿತ್ತು ಹಾಗೆಯೇ. ಚಿತ್ರ ಚಿಕ್ಕದಾಗಿಯೂ ಇದೆ ಹಾಗೂ ಲಾಕೆಟ್ನಲ್ಲಿಯೂ ಸಹ ಇದೆ. ಇದರ ಬಗ್ಗೆ ತಿಳಿಸಬೇಕಾಗಿದೆ. ಇವರು ತಂದೆಯಾಗಿದ್ದಾರೆ, ಇವರ ಮೂಲಕ ಆಸ್ತಿಯು ಸಿಗುತ್ತಿದೆ. ಈಗ ಪವಿತ್ರರಾಗಿ ತಂದೆಯನ್ನು ನೆನಪು ಮಾಡಬೇಕು. ಈ ಬ್ಯಾಡ್ಜ್ನಲ್ಲಿ ಎಷ್ಟೊಂದು ಜ್ಞಾನವಿದೆ, ಇದರಲ್ಲಿ ಸಂಪೂರ್ಣ ಜ್ಞಾನವಿದೆ. ಇದರ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ಸೆಕೆಂಡಿನಲ್ಲಿ ತಂದೆಯಿಂದ ಸ್ವರ್ಗದ ಜೀವನ್ಮುಕ್ತಿಯ ಆಸ್ತಿಯು ಸಿಗುತ್ತದೆ. ಇದನ್ನು ಯಾರು ತಿಳಿಸಿದರೂ ಸಹ ಜೀವನ್ಮುಕ್ತಿ ಪದವಿಯ ಅಧಿಕಾರಿಗಳಾಗಿ ಬಿಡುತ್ತಾರೆ. ಬಾಕಿ ವಿದ್ಯೆಯನುಸಾರ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಸ್ವರ್ಗದಲ್ಲಂತೂ ಬರುತ್ತೀರಲ್ಲವೆ. ಕೊನೆಯಲ್ಲಂತೂ ಬರಬೇಕಲ್ಲವೆ, ವೃದ್ಧಿ ಆಗಲೇಬೇಕಾಗಿದೆ. ದೇವಿ-ದೇವತಾ ಧರ್ಮವು ಶ್ರೇಷ್ಠವಾಗಿದೆ, ಅವರಂತೂ ಆಗುತ್ತಾರಲ್ಲವೆ. ಲಕ್ಷಾಂತರ ಲೆಕ್ಕದಲ್ಲಿ ಪ್ರಜೆಗಳಾಗುತ್ತಾರೆ. ಸೂರ್ಯವಂಶಿಯಾಗುವುದರಲ್ಲಿಯೇ ಪರಿಶ್ರಮವಿದೆ, ಸರ್ವೀಸ್ ಮಾಡುವವರೇ ಒಳ್ಳೆಯ ಪದವಿಯನ್ನು ಪಡೆಯುತ್ತಾರೆ. ಇವರ ಹೆಸರುಗಳೂ ಸಹ ಪ್ರಸಿದ್ಧವಾಗಿದೆ, ಕುಮಾರಿಕಾ ದಾದೀಜಿ, ಜಾನಕಿ ದಾದೀಜಿ ಚೆನ್ನಾಗಿ ಸೇವಾಕೇಂದ್ರವನ್ನು ಸಂಭಾಲನೆ ಮಾಡುತ್ತಿದ್ದಾರೆ. ಯಾವುದೇ ತರಹದ ತೊಂದರೆಯಿಲ್ಲ.
ತಂದೆಯು ತಿಳಿಸುತ್ತಾರೆ - ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದನ್ನು ಮಾತನಾಡಬೇಡಿ ಎಂದು ಹೇಳುತ್ತಾರೆ ಆದರೂ ಸಹ ಏನೇನೋ ಮಾತನಾಡುತ್ತಾರೆ. ಅಂತಹವರು ಅಲ್ಲಿ ಹೋಗಿ ಏನಾಗುತ್ತಾರೆ. ಇಷ್ಟು ಸಹಜವಾದ ಸರ್ವೀಸನ್ನೂ ಸಹ ಮಾಡುವುದಿಲ್ಲ. ಚಿಕ್ಕ-ಚಿಕ್ಕ ಮಕ್ಕಳೂ ಸಹ ಇದನ್ನು ಅರ್ಥ ಮಾಡಿಸಬಹುದು, ಅನ್ಯರಿಗೂ ತಿಳಿಸಲೂಬಹುದು. ಮಂಗಗಳ ಸೈನ್ಯಯು ಪ್ರಸಿದ್ಧವಾಗಿದೆಯಲ್ಲವೆ. ರಾವಣನ ಜೈಲಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ಸೀತೆಯರನ್ನು ಬಿಡಿಸಬೇಕಾಗಿದೆ. ಏನೆನೆಲ್ಲಾ ಕಥೆಗಳನ್ನು ಮಾಡಿ ಬಿಟ್ಟಿದ್ದಾರೆ. ಈ ರೀತಿ ಯಾರಾದರೂ ಭಾಷಣ ಮಾಡಬೇಕಾಗಿದೆ. ಉಳಿದಂತೆ ಇಂತಹವರು ಬಹಳ ಪ್ರಭಾವಿತರಾದರು ಎಂದು ಹೇಳುತ್ತಾರಷ್ಟೆ . ನೀವು ಏನಾಗಲು ಬಯಸುತ್ತೀರೆಂದು ಕೇಳಿರಿ, ಕೇವಲ ಜ್ಞಾನವು ಚೆನ್ನಾಗಿದೆ ಎಂದು ಹೇಳುತ್ತಾರೆ. ತಾವು ಏನನ್ನೂ ತಿಳಿದುಕೊಳ್ಳುವುದಿಲ್ಲವೆಂದರೆ ಇದರಿಂದ ಲಾಭವೇನು! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಪಾರಸ ಬುದ್ಧಿಯವರಾಗಲು ವಿದ್ಯೆಯ ಮೇಲೆ ಸಂಪೂರ್ಣ ಗಮನವನ್ನಿಡಬೇಕಾಗಿದೆ. ಶ್ರೀಮತದಂತೆ ಓದಿ ಮತ್ತು ಓದಿಸಬೇಕಾಗಿದೆ. ಅಲ್ಪಕಾಲದ ಸಾಹುಕಾರಿ ನಶೆ, ಫ್ಯಾಷನ್ನ್ನು ಬಿಟ್ಟು ಬೇಹದ್ದಿನ ಸೇವೆಯಲ್ಲಿ ತೊಡಗಬೇಕಾಗಿದೆ.
2) ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ...... ಯಾವುದೇ ವ್ಯರ್ಥ ಮಾತು ಮಾತನಾಡಬಾರದು. ಯಾರಮೇಲೆಯೂ ಪ್ರಭಾವಿತರಾಗಬಾರದು. ಎಲ್ಲರಿಗೂ ಸತ್ಯ ನಾರಾಯಣನ ಚಿಕ್ಕ ಕಥೆಯನ್ನು ತಿಳಿಸಬೇಕಾಗಿದೆ.
ಕರ್ಮಾತೀತ ಸ್ಥಿತಿಯ ಗುಹ್ಯ ಪರಿಭಾಷೆ
ಇಂದು ವಿದೇಹಿ ಬಾಪ್ದಾದಾರವರು ತಮ್ಮ ವಿದೇಹಿ ಸ್ಥಿತಿಯಲ್ಲಿ ಸ್ಥಿತರಾಗಿರುವ ಶ್ರೇಷ್ಠ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ವಿದೇಹಿಯಾಗುವ ಹಾಗೂ ಕರ್ಮಾತೀತರಾಗುವ ಶ್ರೇಷ್ಠ ಲಕ್ಷ್ಯವನ್ನಿಟ್ಟುಕೊಂಡು ಸಂಪೂರ್ಣ ಸ್ಥಿತಿಗೆ ಸಮೀಪ ತಲುಪುತ್ತಿದ್ದಾರೆ. ಅಂದಾಗ ಇಂದು ಬಾಪ್ದಾದಾರವರು ಮಕ್ಕಳ ಕರ್ಮಾತೀತ, ವಿದೇಹಿ ಸ್ಥಿತಿಯ ಸಮೀಪತೆಯನ್ನು ನೋಡುತ್ತಿದ್ದರು - ಯಾರ್ಯಾರೂ ಎಷ್ಟು ಸಮೀಪ ತಲುಪಿದ್ದಾರೆ? ಬ್ರಹ್ಮಾ ತಂದೆಯನ್ನು ಎಷ್ಟು ಫಾಲೋ ಮಾಡಿದ್ದಾರೆ ಹಾಗೂ ಮಾಡುತ್ತಿದ್ದಾರೆ? ಎಲ್ಲರ ಲಕ್ಷ್ಯವೂ ಸಹ ತಂದೆಯ ಸಮೀಪ ಮತ್ತು ಸಮಾನರಾಗುವುದೇ ಆಗಿದೆ ಆದರೆ ಕಾರ್ಯದಲ್ಲಿ ಬಂದಾಗ ನಂಬರ್ವಾರ್ ಆಗಿ ಬಿಡುತ್ತಾರೆ. ಈ ದೇಹದಲ್ಲಿರುತ್ತಾ ವಿದೇಹಿ ಅರ್ಥಾತ್ ಕರ್ಮಾತೀತರಾಗುವ ಉದಾಹರಣೆಯು ಸಾಕಾರದಲ್ಲಿ ಬ್ರಹ್ಮಾ ತಂದೆಯನ್ನು ನೋಡಿದಿರಿ ಅಂದಾಗ ಕರ್ಮಾತೀತರಾಗುವ ವಿಶೇಷತೆಯೇನಾಗಿದೆ? ಎಲ್ಲಿಯವರೆಗೆ ಈ ದೇಹವಿರುವುದೋ, ಕರ್ಮೇಂದ್ರಿಯಗಳ ಜೊತೆ ಈ ಕರ್ಮಕ್ಷೇತ್ರದಲ್ಲಿ ಪಾತ್ರವನ್ನು ಅಭಿನಯಿಸುತ್ತೀರೋ ಅಲ್ಲಿಯವರೆಗೆ ಕರ್ಮವಿಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ. ಕರ್ಮಾತೀತ ಅರ್ಥಾತ್ ಕರ್ಮ ಮಾಡುತ್ತಾ ಕರ್ಮದ ಬಂಧನದಿಂದ ದೂರವಿರುವುದು. ಒಂದು ಬಂಧನ, ಇನ್ನೊಂದು ಸಂಬಂಧವಾಗಿದೆ. ಕರ್ಮೇಂದ್ರಿಯಗಳ ಮೂಲಕ ಕರ್ಮದ ಸಂಬಂಧದಲ್ಲಿ ಬರುವುದು ಬೇರೆ, ಆದರೆ ಕರ್ಮದ ಬಂಧನದಲ್ಲಿ ಬಂಧಿತರಾಗುವುದು ಬೇರೆ ಮಾತಾಗಿದೆ. ಕರ್ಮಬಂಧನವು ಕರ್ಮದ ಅಲ್ಪಕಾಲದ (ವಿನಾಶಿ) ಫಲಕ್ಕೆ ವಶರನ್ನಾಗಿ ಮಾಡಿ ಬಿಡುತ್ತದೆ. ವಿವಶತೆ ಎಂಬ ಶಬ್ಧವೇ ಸಿದ್ಧ ಮಾಡುತ್ತದೆ, ಅವರು ಅನ್ಯರ ವಶದಲ್ಲಿ ಬಂದು ಬಿಡುತ್ತಾರೆ. ವಶದಲ್ಲಿ ಬರುವವರು ಭೂತದ ಸಮಾನ ಅಲೆಯುವವರು ಆಗಿ ಬಿಡುತ್ತಾರೆ. ಹೇಗೆ ಅಶುದ್ಧ ಆತ್ಮವು ಭೂತವಾಗಿ ಪ್ರವೇಶವಾಗುತ್ತದೆಯೆಂದರೆ ಮನುಷ್ಯಾತ್ಮನ ಸ್ಥಿತಿಯು ಏನಾಗಿ ಬಿಡುತ್ತದೆ? ಪರವಶರಾಗಿ ಅಲೆಯುತ್ತಿರುತ್ತಾರೆ. ಹಾಗೆಯೇ ಕರ್ಮಕ್ಕೆ ವಿವಶರಾಗಿರುವವರು ಅರ್ಥಾತ್ ಕರ್ಮದ ವಿನಾಶಿ ಫಲದ ಇಚ್ಛೆಗೆ ವಶರಾಗಿದ್ದರೆ, ಕರ್ಮವೂ ಸಹ ಬಂಧನದಲ್ಲಿ ಬಂಧಿಸುತ್ತಾ, ಬುದ್ಧಿಯ ಮೂಲಕ ಅಲೆದಾಡಿಸುತ್ತಾ ಇರುತ್ತದೆ - ಇದಕ್ಕೆ ಕರ್ಮ ಬಂಧನವೆಂದು ಹೇಳಲಾಗುತ್ತದೆ. ಕರ್ಮ ಬಂಧನದ ಆತ್ಮಗಳು ಸ್ವಯಂನ್ನು ಬೇಸರ ಪಡಿಸಿಕೊಳ್ಳುತ್ತಾರೆ ಮತ್ತು ಅನ್ಯರನ್ನೂ ಬೇಸರಗೊಳಿಸುತ್ತಾರೆ. ಕರ್ಮಾತೀತ ಅರ್ಥಾತ್ ಕರ್ಮಕ್ಕೆ ವಶರಾಗುವವರಲ್ಲ, ಆದರೆ ಮಾಲೀಕನಾಗಿದ್ದು, ಅಧಿಕಾರಿಯಾಗಿದ್ದು ಕರ್ಮೇಂದ್ರಿಯಗಳ ಸಂಬಂಧದಲ್ಲಿ ಬರುವವರು, ವಿನಾಶಿ ಕಾಮನೆಯಿಂದ ಭಿನ್ನರಾಗಿ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸುವವರು. ಮಾಲೀಕನಾದ ಆತ್ಮನನ್ನು ಕರ್ಮವು ತನ್ನ ಅಧೀನ ಮಾಡಿಕೊಳ್ಳಬಾರದು, ಅಧಿಕಾರಿಯಾಗಿ ಕರ್ಮ ಮಾಡಿಸುತ್ತಾ ಇರಬೇಕು. ಕರ್ಮೇಂದ್ರಿಯಗಳು ತನ್ನ ಆಕರ್ಷಣೆಯಲ್ಲಿ ಆಕರ್ಷಿತ ಮಾಡುತ್ತದೆಯೆಂದರೆ ಕರ್ಮಕ್ಕೆ ವಶರಾಗುತ್ತಾರೆ, ಅಧೀನರಾಗುತ್ತಾರೆ, ಬಂಧನದಲ್ಲಿ ಬಂಧಿತರಾಗುತ್ತಾರೆ. ಕರ್ಮಾತೀತ ಅರ್ಥಾತ್ ಕರ್ಮ ಬಂಧನಗಳಿಂದ ಅತೀತ ಅರ್ಥಾತ್ ಭಿನ್ನ. ಕಣ್ಣುಗಳ ಕೆಲಸವು ನೋಡುವುದಾಗಿದೆ ಆದರೆ ನೋಡುವ ಕರ್ಮವನ್ನು ಮಾಡಿಸುವವರು ಯಾರು? ಕಣ್ಣುಗಳು ಕರ್ಮ ಮಾಡುವವನು ಮತ್ತು ಆತ್ಮವು ಕರ್ಮವನ್ನು ಮಾಡಿಸುವವನಾಗಿದೆ ಅಂದಮೇಲೆ ಮಾಡಿಸುವ ಆತ್ಮನು ಮಾಡುವಂತಹ ಕರ್ಮೇಂದ್ರಿಯಗಳಿಗೇ ವಶರಾಗಿ ಬಿಟ್ಟರೆ ಕರ್ಮ ಬಂಧನವೆಂದು ಹೇಳಲಾಗುತ್ತದೆ. ಮಾಡಿಸುವವನಾಗಿ ಕರ್ಮ ಮಾಡಿಸುವುದಕ್ಕೆ ಕರ್ಮದ ಸಂಬಂಧದಲ್ಲಿ ಬರುವುದೆಂದು ಹೇಳುತ್ತಾರೆ. ಕರ್ಮಾತೀತ ಆತ್ಮರು ಸಂಬಂಧದಲ್ಲಿ ಬರುತ್ತಾರೆಯೇ ಹೊರತು ಬಂಧನದಲ್ಲಿ ಇರುವುದಿಲ್ಲ. ಮಾತನಾಡಬೇಕು ಅಂದುಕೊಳ್ಳಲಿಲ್ಲ ಆದರೆ ಮಾತನಾಡಿ ಬಿಟ್ಟೆನು, ಮಾಡಬೇಕೆಂದು ಅಂದುಕೊಳ್ಳಲಿಲ್ಲ ಆದರೆ ಮಾಡಿ ಬಿಟ್ಟೆನು - ಈ ರೀತಿ ಕೆಲಕೆಲವೊಮ್ಮೆ ಹೇಳುತ್ತೀರಲ್ಲವೆ, ಇದಕ್ಕೆ ಕರ್ಮ ಬಂಧನದಲ್ಲಿ ವಶರಾದ ಆತ್ಮನೆಂದು ಹೇಳಲಾಗುತ್ತದೆ. ಇಂತಹ ಆತ್ಮನು ಕರ್ಮಾತೀತ ಸ್ಥಿತಿಗೆ ಸಮೀಪವಿದ್ದಾರೆಂದು ಹೇಳುವುದೋ ಅಥವಾ ದೂರವೆಂದು ಹೇಳುವುದೇ?
ಕರ್ಮಾತೀತ ಅರ್ಥಾತ್ ದೇಹ, ದೇಹದ ಸಂಬಂಧ, ಪದಾರ್ಥ, ಲೌಕಿಕ ಅಥವಾ ಅಲೌಕಿಕ ಎರಡೂ ಸಂಬಂಧಗಳ ಬಂಧನದಿಂದ ಅತೀತ ಅರ್ಥಾತ್ ಭಿನ್ನವಾಗಿರುವುದು. ಭಲೆ ಹೇಳುವಾಗ ಸಂಬಂಧವೆಂಬ ಶಬ್ಧವು ಬರುತ್ತದೆ - ದೇಹದ ಸಂಬಂಧ, ದೇಹದ ಸಂಬಂಧಿಗಳ ಸಂಬಂಧವೆಂದು, ಆದರೆ ಒಂದುವೇಳೆ ದೇಹದಲ್ಲಿ ಅಥವಾ ಸಂಬಂಧಗಳಲ್ಲಿ ಅಧೀನರಾಗಿದ್ದರೆ ಸಂಬಂಧವೂ ಸಹ ಅಧೀನವಾಗಿ ಬಿಡುತ್ತದೆ. ಸಂಬಂಧ ಶಬ್ಧವು ಭಿನ್ನ ಮತ್ತು ಪ್ರಿಯವಾದ ಅನುಭವವನ್ನು ಮಾಡಿಸುವಂತದ್ದಾಗಿದೆ. ಇಂದಿನ ಸರ್ವ ಆತ್ಮಗಳ ಸಂಬಂಧವು ಬಂಧನದ ರೂಪದಲ್ಲಿ ಬದಲಾಗಿ ಬಿಟ್ಟಿದೆ. ಎಲ್ಲಿ ಸಂಬಂಧವು ಬಂಧನ ರೂಪವಾಗಿ ಬಿಡುವುದೋ ಆ ಬಂಧನವು ಸದಾ ಸ್ವಯಂನಲ್ಲಿ ಯಾವುದಾದರೊಂದು ಪ್ರಕಾರದಿಂದ ಬೇಸರ ಮಾಡುತ್ತಿರುವುದು, ದುಃಖದ ಅಲೆಯ ಅನುಭವ ಮಾಡಿಸುವುದು, ವ್ಯಾಕುಲತೆಯ ಅನುಭವ ಮಾಡಿಸುವುದು. ವಿನಾಶಿ ಪ್ರಾಪ್ತಿಗಳಿದ್ದರೂ ಸಹ ಆ ಪ್ರಾಪ್ತಿಗಳ ಸುಖವು ಅಲ್ಪಕಾಲಕ್ಕಾಗಿ ಅನುಭವ ಮಾಡುವರು. ಸುಖದ ಜೊತೆ ಜೊತೆಗೆ ಈಗೀಗ ಪ್ರಾಪ್ತಿ ಸ್ವರೂಪದ ಅನುಭವವಾಗುತ್ತದೆ ಮತ್ತು ಈಗೀಗ ಪ್ರಾಪ್ತಿಗಳಿದ್ದರೂ ಸಹ ಅಪ್ರಾಪ್ತ ಸ್ಥಿತಿಯ ಅನುಭವವಾಗುವುದು. ಸಂಪನ್ನವಾಗಿದ್ದರೆ ತನ್ನನ್ನು ಖಾಲಿ-ಖಾಲಿ ಎಂಬ ಅನುಭವ ಮಾಡುತ್ತಾರೆ. ಎಲ್ಲವೂ ಇದ್ದರೂ ಸಹ ‘ಇನ್ನೇನೋ ಬೇಕು' ಎಂಬ ಅನುಭವ ಮಾಡುತ್ತಾ ಇರುತ್ತಾರೆ ಮತ್ತು ಎಲ್ಲಿ ‘ಬೇಕು-ಬೇಕು' ಎಂಬುದು ಇದೆಯೋ ಅಲ್ಲಿ ಎಂದಿಗೂ ಸಂತುಷ್ಟತೆಯಿರುವುದಿಲ್ಲ. ತನುವೂ ಖುಷಿಯಾಗಿರಲಿ, ಮನವೂ ಖುಷಿಯಾಗಿರಲಿ ಮತ್ತು ಅನ್ಯರೂ ಸಹ ಖುಷಿಯಾಗಿರಲಿ - ಈ ರೀತಿ ಸದಾಕಾಲ ಇರಲು ಸಾಧ್ಯವಿಲ್ಲ. ಯಾವುದಾದರೊಂದು ಮಾತಿನಲ್ಲಿ ಸ್ವಯಂನೊಂದಿಗೆ ಬೇಸರ ಮತ್ತು ಅನ್ಯರೊಂದಿಗೂ ಬೇಸರ ಬಯಸದಿದ್ದರೂ ಆಗುತ್ತಿರುವುದು ಏಕೆಂದರೆ ನಾರಾಜ್ (ಬೇಸರ) ಅರ್ಥಾತ್ ನಾ-ರಾಜ್, ರಹಸ್ಯವನ್ನು ತಿಳಿದುಕೊಳ್ಳದೇ ಇರುವುದು. ಅಧಿಕಾರಿಯಾಗಿ ಕರ್ಮೇಂದ್ರಿಯಗಳಿಂದ ಕರ್ಮ ಮಾಡಿಸುವ ರಹಸ್ಯವನ್ನೂ ತಿಳಿದುಕೊಂಡಿಲ್ಲ ಅಂದಮೇಲೆ ನಾರಾಜ್ ಆಗುವರಲ್ಲವೆ? ಕರ್ಮಾತೀತರು ಎಂದಿಗೂ ನಾರಾಜ್ (ಬೇಸರ) ಆಗುವುದಿಲ್ಲ ಏಕೆಂದರೆ ಅವರು ಕರ್ಮ ಸಂಬಂಧ ಮತ್ತು ಕರ್ಮ ಬಂಧನದ ರಹಸ್ಯವನ್ನು ತಿಳಿದುಕೊಂಡಿರುತ್ತಾರೆ. ಭಲೆ ಕರ್ಮವನ್ನು ಮಾಡಿ ಆದರೆ ವಶರಾಗಿದ್ದು ಮಾಡುವುದಲ್ಲ, ಅಧಿಕಾರಿ ಮಾಲೀಕನಾಗಿ ಕರ್ಮ ಮಾಡಿರಿ. ಕರ್ಮಾತೀತ ಅರ್ಥಾತ್ ತನ್ನ ಹಿಂದಿನ ಕರ್ಮಗಳ ಲೆಕ್ಕಾಚಾರದ ಬಂಧನದಿಂದಲೂ ಮುಕ್ತ. ಭಲೆ ಹಿಂದಿನ ಕರ್ಮಗಳ ಲೆಕ್ಕಾಚಾರದ ಫಲ ಸ್ವರೂಪ ತನುವಿನ ರೋಗವಿರಬಹುದು, ಅನ್ಯ ಆತ್ಮಗಳ ಸಂಸ್ಕಾರದ ಜೊತೆ, ತಮ್ಮ ಮನಸ್ಸಿನ ಸಂಸ್ಕಾರದ ಘರ್ಷಣೆಯಾಗುತ್ತಿರಬಹುದು ಆದರೆ ಕರ್ಮಾತೀತರು ಕರ್ಮಭೋಗಕ್ಕೆ ವಶರಾಗದೆ ಮಾಲೀಕನಾಗಿರುತ್ತಾ, ಎಲ್ಲವನ್ನೂ ಸಮಾಪ್ತಿ ಮಾಡಿಕೊಳ್ಳುತ್ತಾರೆ. ಕರ್ಮಯೋಗಿಗಳಾಗಿ ಕರ್ಮಭೋಗವನ್ನು ಕಳೆಯುವುದೇ ಕರ್ಮಾತೀತರಾಗುವ ಚಿಹ್ನೆಯಾಗಿದೆ. ಯೋಗದಿಂದ ಕರ್ಮ ಭೋಗವನ್ನು ಮುಗುಳ್ನಗುತ್ತಾ ಶೂಲದಿಂದ ಮುಳ್ಳಿನ ಸಮಾನ ಮಾಡುತ್ತಾ, ನಂತರ ಅದನ್ನು ಭಸ್ಮ ಮಾಡುವುದು ಅರ್ಥಾತ್ ಕರ್ಮ ಭೋಗವನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. ಅದು ವ್ಯಾಧಿಯ ರೂಪವಾಗಬಾರದು. ಯಾರು ವ್ಯಾಧಿಯ ರೂಪವಾಗಿ ಬಿಡುವರೋ ಅವರು ಸ್ವಯಂ ಸದಾ ವ್ಯಾಧಿಯ ವರ್ಣನೆಯನ್ನೇ ಮಾಡುತ್ತಿರುವರು. ಮನಸ್ಸಿನಲ್ಲಿಯೂ ವರ್ಣನೆ ಮಾಡುತ್ತಿರುವರು, ಬಾಯಿಂದಲೂ ವರ್ಣನೆ ಮಾಡುತ್ತಿರುವರು. ಎರಡನೆಯ ಮಾತು - ವ್ಯಾಧಿಯ ರೂಪವಾಗುವ ಕಾರಣ ಸ್ವಯಂ ಸಹ ಬೇಸರವಾಗುವರು ಹಾಗೂ ಅನ್ಯರನ್ನೂ ಬೇಸರಗೊಳಿಸುವರು ಮತು ಅವರು ಚೀರಾಡುವರು. ಕರ್ಮಾತೀತರು ಶರೀರವನ್ನು ನಡೆಸುತ್ತಾ ಸಾಗುವರು. ಕೆಲವರಿಗೆ ಸ್ವಲ್ಪ ನೋವಾದರೂ ಸಹ ಬಹಳ ಚೀರಾಡುತ್ತಾರೆ, ಇನ್ನೂ ಕೆಲವರು ಹೆಚ್ಚು ನೋವಿದ್ದರೂ ಸಹ ಖುಷಿಯಿಂದ ನಡೆಸುತ್ತಾ ಸಾಗುತ್ತಾರೆ. ಕರ್ಮಾತೀತ ಸ್ಥಿತಿಯವರೇ ದೇಹದ ಮಾಲೀಕರಾಗಿರುವ ಕಾರಣ ಕರ್ಮ ಭೋಗವಿದ್ದರೂ ಅದರಿಂದ ಭಿನ್ನರಾಗುವ ಅಭ್ಯಾಸಿಗಳಾಗುತ್ತಾರೆ. ಮಧ್ಯ-ಮಧ್ಯದಲ್ಲಿ ಅಶರೀರಿ ಸ್ಥಿತಿಯ ಅನುಭವವು ರೋಗದಿಂದ ದೂರ ಮಾಡಿ ಬಿಡುತ್ತದೆ. ಹೇಗೆ ವೈಜ್ಞಾನಿಕ ಸಾಧನಗಳ ಮೂಲಕ ರೋಗಿಯನ್ನು ಮೂರ್ಛಿತನನ್ನಾಗಿ ಮಾಡಿದಾಗ ನೋವಿದ್ದರೂ ಸಹ ಮರೆತು ಹೋಗುತ್ತಾರೆ, ನೋವಿನ ಅನುಭವವಾಗುವುದಿಲ್ಲ ಏಕೆಂದರೆ ಔಷಧಿಯ ಪ್ರಭಾವವಿರುತ್ತದೆ. ಅದೇರೀತಿ ಕರ್ಮಾತೀತ ಸ್ಥಿತಿಯುಳ್ಳವರು ಅಶರೀರಿಯಾಗುವ ಅಭ್ಯಾಸಿಗಳಾಗುವ ಕಾರಣ ಮಧ್ಯ-ಮಧ್ಯದಲ್ಲಿ ಈ ಆತ್ಮಿಕ ಇಂಜೆಕ್ಷನ್ ಹಾಕಿಕೊಳ್ಳುತ್ತಾರೆ. ಇದರ ಕಾರಣದಿಂದ ಅವರಿಗೆ ಶೂಲದಿಂದ ಮುಳ್ಳಿನ ಸಮಾನ ಅನುಭವವಾಗುತ್ತದೆ. ಇನ್ನೊಂದು ಮಾತು - ಫಾಲೋ ಫಾದರ್ ಮಾಡುವ ಕಾರಣ ವಿಶೇಷ ಆಜ್ಞಾಕಾರಿಗಳಾಗಿ, ಪ್ರತ್ಯಕ್ಷ ಫಲದ ರೂಪದಲ್ಲಿ ತಂದೆಯಿಂದ ವಿಶೇಷವಾಗಿ ಹೃದಯದ ಆಶೀರ್ವಾದಗಳ ಪ್ರಾಪ್ತಿಯಾಗುತ್ತದೆ. ಒಂದು - ತನ್ನ ಅಶರೀರಿಯಾಗುವ ಅಭ್ಯಾಸ, ಇನ್ನೊಂದು - ಆಜ್ಞಾಕಾರಿಗಳಾಗುವ ಪ್ರತ್ಯಕ್ಷ ಫಲವಾಗಿ ತಂದೆಯ ಆಶೀರ್ವಾದಗಳು, ಇವೆರಡೂ ಆ ರೋಗ ಅರ್ಥಾತ್ ಕರ್ಮಭೋಗವನ್ನು ಶೂಲದಿಂದ ಮುಳ್ಳಿನ ಸಮಾನ ಹಗುರವನ್ನಾಗಿ ಮಾಡಿ ಬಿಡುತ್ತದೆ. ಕರ್ಮಾತೀತ ಶ್ರೇಷ್ಠ ಆತ್ಮನು ಕರ್ಮಭೋಗವನ್ನು ಕರ್ಮಯೋಗದ ಸ್ಥಿತಿಯಲ್ಲಿ ಪರಿವರ್ತನೆ ಮಾಡಿಕೊಳ್ಳುವರು ಅಂದಮೇಲೆ ಇಂತಹ ಅನುಭವವಿದೆಯೇ ಅಥವಾ ಬಹಳ ದೊಡ್ಡ ಮಾತೆಂದು ತಿಳಿದುಕೊಳ್ಳುತ್ತೀರಾ? ಸಹಜವೇ ಅಥವಾ ಕಷ್ಟವೇ? ಚಿಕ್ಕದನ್ನು ದೊಡ್ಡದನ್ನಾಗಿ ಮಾಡುವುದು ಮತ್ತು ದೊಡ್ಡದನ್ನು ಚಿಕ್ಕ ಮಾತನ್ನಾಗಿ ಮಾಡುವುದು - ಇದು ತಮ್ಮ ಸ್ಥಿತಿಯ ಮೇಲೆ ಆಧಾರಿತವಾಗಿದೆ. ಬೇಸರವಾಗುವುದು ಹಾಗೂ ತನ್ನ ಅಧಿಕಾರೀತನದ ಸ್ಥಿತಿಯಲ್ಲಿರುವುದು, ಇದು ತನ್ನ ಮೇಲೆ ಆಧಾರಿತವಾಗಿದೆ. ಇದೇನಾಗಿ ಬಿಟ್ಟಿತು! ಅಥವಾ ಏನಾಯಿತೋ ಒಳ್ಳೆಯದೇ ಆಯಿತು. - ಇವೆರಡೂ ತಮ್ಮ ಮೇಲೆ ಆಧಾರಿತವಾಗಿದೆ. ಈ ನಿಶ್ಚಯವು ಕೆಟ್ಟದ್ದನ್ನೂ ಸಹ ಒಳ್ಳೆಯದರಲ್ಲಿ ಪರಿವರ್ತನೆ ಮಾಡಬಲ್ಲದು ಏಕೆಂದರೆ ಲೆಕ್ಕಾಚಾರಗಳು ಸಮಾಪ್ತಿಯಾಗುವುದರಿಂದ ಹಾಗೂ ಸಮಯ-ಪ್ರತಿ ಸಮಯ ಪ್ರಾಕ್ಟಿಕಲ್ ಪೇಪರ್ ಡ್ರಾಮಾನುಸಾರ ಬರುವುದರಿಂದ, ಕೆಲವೊಂದು ಮಾತುಗಳು ಒಳ್ಳೆಯ ರೂಪದಲ್ಲಿ ಮುಂದೆ ಬರುತ್ತದೆ, ಇನ್ನೂ ಕೆಲವೊಮ್ಮೆ ಒಳ್ಳೆಯ ರೂಪವಾಗಿದ್ದರೂ ಸಹ ಹೊರಗಿನ ರೂಪವು ನಷ್ಟದ ರೂಪದಲ್ಲಿ ಕಾಣುತ್ತದೆ ಅಥವಾ ಇದು ಈ ರೂಪದಿಂದ ಒಳ್ಳೆಯದಾಗಲಿಲ್ಲ ಎಂದು ತಾವು ಹೇಳುತ್ತೀರಿ. ಮಾತುಗಳು ಬರುತ್ತವೆ, ಇಲ್ಲಿಯವರೆಗೆ ಇಂತಹ ರೂಪದ ಮಾತುಗಳು ಬರುತ್ತಿವೆ ಮತ್ತು ಬರುತ್ತಲೇ ಇರುತ್ತವೆ ಆದರೆ ನಷ್ಟದ ಪರದೆಯೊಳಗೆ ಲಾಭವು ಅಡಗಿರುತ್ತದೆ. ಭಲೆ ಹೊರಗಿನ ಪರದೆಯು ನಷ್ಟದ ರೂಪದಲ್ಲಿ ಕಾಣಿಸುತ್ತದೆ ಆದರೆ ಒಂದುವೇಳೆ ಸ್ವಲ್ಪ ಸಮಯ ತಾಳ್ಮೆಯಿಂದ ಸಹನಶೀಲ ಸ್ಥಿತಿಯಿಂದ ಅಂತರ್ಮುಖಿಯಾಗಿ ನೋಡಿದರೆ ಆ ಪರದೆಯೊಳಗೆ ಯಾವ ಲಾಭವು ಅಡಗಿರುವುದೋ ಅದೇ ತಮಗೆ ಕಂಡು ಬರುವುದು. ಮೇಲಿನ ಪರದೆಯನ್ನು ನೋಡಿಯೂ ನೋಡದಂತಿರುತ್ತೀರಿ. ಪವಿತ್ರ ಹಂಸಗಳಾಗಿದ್ದೀರಲ್ಲವೆ. ಯಾವಾಗ ಆ ಹಂಸವೇ ಕಲ್ಲು ಮತ್ತು ರತ್ನಗಳನ್ನು ಬೇರ್ಪಡಿಸುತ್ತದೆ ಅಂದಮೇಲೆ ಪವಿತ್ರ ಹಂಸಗಳು ತನ್ನ ಲಾಭವನ್ನು ಪಡೆದುಕೊಳ್ಳುವರು, ನಷ್ಟದ ಮಧ್ಯದಲ್ಲಿಯೂ ಲಾಭವನ್ನೇ ಹುಡುಕುವರು. ತಿಳಿಯಿತೆ? ಬಹು ಬೇಗನೆ ಗಾಬರಿಯಾಗಿ ಬಿಡುತ್ತೀರಲ್ಲವೆ. ಇದರಿಂದ ಏನಾಗುತ್ತದೆ? ಒಳ್ಳೆಯದನ್ನೇನು ಆಲೋಚಿಸಬೇಕೋ ಅದೂ ಸಹ ಗಾಬರಿಯಾಗುವ ಕಾರಣ ಬದಲಾಗಿ ಬಿಡುತ್ತದೆ. ಆದ್ದರಿಂದ ಗಾಬರಿಯಾಗಬೇಡಿ, ಕರ್ಮವನ್ನು ನೋಡಿ ಕರ್ಮ ಬಂಧನದಲ್ಲಿ ಸಿಕ್ಕಿ ಹಾಕಿಕೊಳ್ಳಬೇಡಿ. ಏನಾಯಿತು, ಹೇಗಾಯಿತು, ಈ ರೀತಿ ಆಗಬಾರದಿತ್ತು, ನನ್ನಿಂದಲೇ ಏಕಾಗುತ್ತದೆ, ಬಹುಷಃ ನನ್ನ ಭಾಗ್ಯವೇ ಹೀಗಿದೆ, ಈ ಹಗ್ಗಗಳನ್ನು ಬಂಧಿಸುತ್ತಾ ಹೋಗುತ್ತೀರಿ - ಈ ಸಂಕಲ್ಪಗಳೇ ಹಗ್ಗಗಳಾಗಿವೆ ಆದ್ದರಿಂದ ಕರ್ಮ ಬಂಧನದಲ್ಲಿ ಬಂದು ಬಿಡುತ್ತೀರಿ. ವ್ಯರ್ಥ ಸಂಕಲ್ಪಗಳೇ ಕರ್ಮ ಬಂಧನದ ಸೂಕ್ಷ್ಮ ಹಗ್ಗಗಳಾಗಿವೆ. ಕರ್ಮಾತೀತ ಆತ್ಮನು ಹೀಗೆ ಹೇಳುತ್ತಾರೆ - ಏನಾಗುವುದೋ ಅದು ಒಳ್ಳೆಯದೇ ಆಗುತ್ತದೆ. ನಾನೂ ಒಳ್ಳೆಯವನು, ತಂದೆಯೂ ಒಳ್ಳೆಯವರು, ನಾಟಕವೂ ಒಳ್ಳೆಯದೆಂದು ಹೇಳುತ್ತಾರೆ. ಈ ಸಂಕಲ್ಪವು ಬಂಧನವನ್ನು ಕತ್ತರಿಸುವ ಕತ್ತರಿಯ ಕೆಲಸ ಮಾಡುತ್ತದೆ. ಬಂಧನವು ಕತ್ತರಿಸಲ್ಪಟ್ಟ ನಂತರ ಕರ್ಮಾತೀತರಾಗಿ ಬಿಟ್ಟಿರಲ್ಲವೆ. ಕಲ್ಯಾಣಕಾರಿ ತಂದೆಯ ಮಕ್ಕಳಾಗಿರುವ ಕಾರಣ ಸಂಗಮಯುಗದ ಪ್ರತೀ ಕ್ಷಣವು ಕಲ್ಯಾಣಕಾರಿಯಾಗಿದೆ. ಪ್ರತೀಕ್ಷಣ ತಮ್ಮ ಕರ್ತವ್ಯವೇ ಕಲ್ಯಾಣ ಮಾಡುವುದು, ಸೇವೆಯೇ ಕಲ್ಯಾಣ ಮಾಡುವುದಾಗಿದೆ. ಬ್ರಾಹ್ಮಣರ ಕರ್ತವ್ಯವೇ ಆಗಿದೆ – ವಿಶ್ವ ಪರಿವರ್ತಕರು, ವಿಶ್ವ ಕಲ್ಯಾಣಿಗಳು. ಇಂತಹ ನಿಶ್ಚಯಬುದ್ಧಿ ಆತ್ಮನಿಗೆ ಪ್ರತಿಯೊಂದು ಗಳಿಗೆ ನಿಶ್ಚಿತ ಕಲ್ಯಾಣಕಾರಿಯಾಗಿದೆ. ತಿಳಿಯಿತೆ?
ಕರ್ಮಾತೀತ ಸ್ಥಿತಿಯ ಪರಿಭಾಷೆಯು ಇನ್ನೂ ಬಹಳಷ್ಟಿದೆ. ಹೇಗೆ ಕರ್ಮಗಳ ಗತಿಯು ಗುಹ್ಯವಾಗಿದೆಯೋ ಹಾಗೆಯೇ ಕರ್ಮಾತೀತ ಸ್ಥಿತಿಯ ಪರಿಭಾಷೆಯೂ ಸಹ ಮಹಾನ್ ಆಗಿದೆ ಮತ್ತು ಕರ್ಮಾತೀತರಾಗುವುದು ಅವಶ್ಯಕವಾಗಿದೆ. ಕರ್ಮಾತೀತರಾಗದೇ ತಂದೆಯ ಜೊತೆಯಲ್ಲಿಯೇ ಹೋಗಲು ಸಾಧ್ಯವಿಲ್ಲ. ಜೊತೆಯಲ್ಲಿ ಯಾರು ಹೋಗುವರು? ಯಾರು ಸಮಾನರಾಗಿರುವರೋ ಅವರೇ ಜೊತೆಯಲ್ಲಿ ಹೋಗುತ್ತಾರೆ. ಬ್ರಹ್ಮಾ ತಂದೆಯನ್ನು ನೋಡಿದಿರಿ, ಕರ್ಮಾತೀತ ಸ್ಥಿತಿಯನ್ನು ಹೇಗೆ ಪ್ರಾಪ್ತಿ ಮಾಡಿಕೊಂಡರು? ಕರ್ಮಾತೀತರಾಗುವುದನ್ನು ಫಾಲೋ ಮಾಡುವುದು ಅರ್ಥಾತ್ ಜೊತೆಯಲ್ಲಿ ನಡೆಯಲು ಯೋಗ್ಯರಾಗುವುದು. ಇಂದು ಇಷ್ಟನ್ನೇ ತಿಳಿಸುತ್ತೇವೆ, ಇಷ್ಟನ್ನು ಪರಿಶೀಲನೆ ಮಾಡಿಕೊಳ್ಳಿ ಉಳಿದುದನ್ನು ಮತ್ತೆಂದಾದರೂ ತಿಳಿಸುತ್ತೇವೆ. ಒಳ್ಳೆಯದು.
ಸರ್ವ ಅಧಿಕಾರಿ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ, ಕರ್ಮ ಬಂಧನವನ್ನು ಕರ್ಮದ ಸಂಬಂಧದಲ್ಲಿ ಪರಿವರ್ತನೆ ಮಾಡಿಕೊಳ್ಳುವಂತಹ, ಕರ್ಮ ಭೋಗವನ್ನು ಕರ್ಮಯೋಗದ ಸ್ಥಿತಿಯಲ್ಲಿ ಶೂಲದಿಂದ ಮುಳ್ಳಿನ ಸಮಾನ ಪರಿವರ್ತನೆ ಮಾಡಿಕೊಳ್ಳುವಂತಹ, ಪ್ರತಿಕ್ಷಣ ಕಲ್ಯಾಣ ಮಾಡುವಂತಹ, ಸದಾ ಬ್ರಹ್ಮಾ ತಂದೆಯ ಸಮಾನ ಕರ್ಮಾತೀತ ಸ್ಥಿತಿಯ ಅನುಭವ ಮಾಡುವಂತಹ ವಿಶೇಷ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:
1. ಸದಾ ತಮ್ಮನ್ನು ಸಮರ್ಥ ತಂದೆಯ ಸಮರ್ಥ ಮಕ್ಕಳೆಂದು ಅನುಭವ ಮಾಡುತ್ತೀರಾ? ಕೆಲವೊಮ್ಮೆ ಸಮರ್ಥ, ಕೆಲವೊಮ್ಮೆ ಬಲಹೀನ - ಈ ರೀತಿಯಂತು ಇರುವುದಿಲ್ಲವೇ? ಸಮರ್ಥ ಎಂದರೆ ಸದಾ ವಿಜಯಿ. ಸಮರ್ಥನೆಂದಿಗೂ ಸಹ ಸೋಲಲು ಸಾಧ್ಯವಿಲ. ಸ್ವಪ್ನದಲ್ಲಿಯೂ ಸೋಲುಂಟಾಗಲು ಸಾಧ್ಯವಿಲ್ಲ. ಸ್ವಪ್ನ, ಸಂಕಲ್ಪ ಮತ್ತು ಕರ್ಮ - ಎಲ್ಲದರಲ್ಲಿ ಸದಾ ವಿಜಯಿ ಆಗಿರುವವರಿಗೆ ಸಮರ್ಥನೆಂದು ಹೇಳಲಾಗುತ್ತದೆ. ಈ ರೀತಿ ಸಮರ್ಥರಾಗಿದ್ದೀರಾ? ಏಕೆಂದರೆ ಈಗ ಯಾರು ಬಹಳ ಕಾಲದಿಂದ ವಿಜಯಿ ಆಗಿರುತ್ತಾರೆ, ಅವರೇ ವಿಜಯ ಮಾಲೆಯಲ್ಲಿ ಗಾಯನ-ಪೂಜ್ಯನೀಯ ಯೋಗ್ಯರಾಗುತ್ತಾರೆ. ಒಂದುವೇಳೆ ಬಹಳ ಕಾಲದ ವಿಜಯಿಯಲ್ಲ, ಸಮರ್ಥನಲ್ಲವೆಂದರೆ ಬಹಳ ಕಾಲದ ಗಾಯನ-ಪೂಜ್ಯನೀಯ ಯೋಗ್ಯರು ಆಗುವುದಿಲ್ಲ. ಯಾರು ಸದಾ ಮತ್ತು ಬಹಳ ಕಾಲದ ವಿಜಯಿ ಆಗಿದ್ದಾರೆಯೋ ಅವರೇ ಬಹಳ ಸಮಯ ವಿಜಯ ಮಾಲೆಯಲ್ಲಿ ಗಾಯನ ಮತ್ತು ಪೂಜ್ಯನೀಯ ಯೋಗ್ಯರಾಗುತ್ತಾರೆ ಮತ್ತು ಯಾರು ಕೆಲವೊಮ್ಮೆ ವಿಜಯಿ ಆಗಿದ್ದಾರೆ, ಅವರು ಕೆಲವೊಮ್ಮೆಗೆ ಅಂದರೆ 16 ಸಾವಿರದ ಮಾಲೆಯಲ್ಲಿ ಬರುವರು. ಅಂದಮೇಲೆ ಬಹಳ ಕಾಲದ ಲೆಕ್ಕವಿದೆ ಮತ್ತು ಸದಾಕಾಲದ ಲೆಕ್ಕವೂ ಇದೆ. 16 ಸಾವಿರದ ಮಾಲೆಯನ್ನು ಎಲ್ಲಾ ಮಂದಿರಗಳಲ್ಲಿ ಇರುವುದಿಲ್ಲ, ಕೆಲಕೆಲವು ಮಂದಿರಗಳಲ್ಲಿ ಇಡುತ್ತಾರೆ.
2. ಎಲ್ಲರೂ ತಮ್ಮನ್ನು ಈ ವಿಶಾಲ ಡ್ರಾಮಾದಲ್ಲಿ ಹೀರೋ ಪಾತ್ರಧಾರಿ ಆತ್ಮರೆಂದು ಅನುಭವ ಮಾಡುತ್ತೀರಾ? ತಮ್ಮೆಲ್ಲರ ಹೀರೋ ಪಾತ್ರವಿದೆ. ಹೀರೋ ಪಾತ್ರಧಾರಿ ಏಕೆ ಆಗಬೇಕು? ಏಕೆಂದರೆ ಯಾವ ಸರ್ವ ಶ್ರೇಷ್ಠ ತಂದೆಯ ಜೀರೋ ಆಗಿದ್ದಾರೆ, ಅವರ ಜೊತೆ ಪಾತ್ರವನ್ನು ಅಭಿನಯಿಸುವವರು ಆಗಿದ್ದೀರಿ. ತಾವೂ ಜೀರೋ ಹಾಗೂ ಬಿಂದು ಆಗಿದ್ದೀರಿ. ಆದರೆ ತಾವು ಶರೀರವುಳ್ಳವರು ಆಗುತ್ತೀರಿ ಮತ್ತು ತಂದೆಯು ಸದಾ ಜೀರೋ ಆಗಿದ್ದಾರೆ. ಅಂದಮೇಲೆ ಜೀರೋ ಜೊತೆಗೆ ಪಾತ್ರವನ್ನಭಿನಯಿಸುವ ಹೀರೋ ಪಾತ್ರಧಾರಿ ಆಗಿದ್ದೇವೆ ಎಂಬುದು ಎಷ್ಟು ಸ್ಪಷ್ಟವಿರುತ್ತದೆಯೆಂದರೆ ಸದಾ ಯಥಾರ್ಥ ಪಾತ್ರವನ್ನು ಅಭಿನಯಿಸುವಿರಿ, ಸ್ವತಹವಾಗಿಯೇ ಗಮನ ಹರಿಯುತ್ತದೆ. ಹೇಗೆ ಅಲ್ಪಕಾಲದ ಡ್ರಾಮಾದಲ್ಲಿ ಹೀರೊ ಪಾತ್ರಧಾರಿಗಳಲ್ಲಿ ಎಷ್ಟೊಂದು ಗಮನವಿರುತ್ತದೆ. ಅತಿ ಶ್ರೇಷ್ಠವಾದ ಹೀರೋ ಪಾತ್ರವು ತಮ್ಮೆಲ್ಲರದಾಗಿದೆ. ಸದಾ ಈ ನಶೆ ಹಾಗೂ ಖುಷಿಯಲ್ಲಿರಿ - ವಾಹ್ ನನ್ನ ಹೀರೋ ಪಾತ್ರವೇ! ಅದರಿಂದ ಇಡೀ ವಿಶ್ವದ ಆತ್ಮರು ಮತ್ತೆ-ಮತ್ತೆ ಮಹಿಮೆ ಮಾಡುತ್ತಾರೆಯೇ? ದ್ವಾಪರದಿಂದ ಯಾವ ಕೀರ್ತನೆಯನ್ನು ಮಾಡುತ್ತಾರೆಯೋ ಅದು ತಮ್ಮ ಈ ಸಮಯದ ಹೀರೊ ಪಾತ್ರದ ನೆನಪಾರ್ಥವೇ ಆಗಿದೆ. ಇದೆಷ್ಟು ಒಳ್ಳೆಯ ನೆನಪಾರ್ಥವಾಗಿದೆ! ತಾವು ಸ್ವಯಂ ಹೀರೊ ಆಗಿದ್ದೀರಿ. ಆದ್ದರಿಂದ ತಮ್ಮ ಹಿಂದೆ ಈಗಿನವರೆಗೂ ತಮ್ಮ ಗಾಯನವು ನಡೆಯುತ್ತಿರುತ್ತದೆ. ಅಂತಿಮ ಜನ್ಮದಲ್ಲಿಯೂ ತಮ್ಮ ಗಾಯನವನ್ನು ಕೇಳುತ್ತಿದ್ದೀರಾ! ಗೋಪಿವಲ್ಲಭನದೇ ಗಾಯನವಿದೆ ಅಂದಮೇಲೆ ಗೊಲ್ಲ ಬಾಲನ ಗಾಯನವೂ ಇದೆ, ಗೋಪಿಕೆಯರ ಗಾಯನವೂ ಇದೆ. ತಂದೆಯದು ಶಿವನ ರೂಪದಲ್ಲಿ ಗಾಯನವಿದೆ, ಅಂದಾಗ ಮಕ್ಕಳ ಗಾಯನವು ಶಕ್ತಿಯರ ರೂಪದಲ್ಲಿ ಆಗುತ್ತದೆ. ಸದಾ ಹೀರೋ ಪಾತ್ರವನ್ನಭಿನಯಿಸುವ ಶ್ರೇಷ್ಠ ಆತ್ಮರಾಗಿದ್ದೇವೆ - ಇದೇ ಸ್ಮೃತಿಯಲ್ಲಿ ಸದಾ ಖುಷಿಯಲ್ಲಿ ಮುಂದೆ ಸಾಗುತ್ತಾ ನಡೆಯುತ್ತಿರಿ.
ಕುಮಾರರೊಂದಿಗೆ:
1. ಸಹಜಯೋಗಿ ಕುಮಾರರು ಆಗಿದ್ದೀರಲ್ಲವೇ? ನಿರಂತರ ಯೋಗಿ ಕುಮಾರ, ಕರ್ಮಯೋಗಿ ಕುಮಾರ ಏಕೆಂದರೆ ಕುಮಾರರು ಎಷ್ಟು ತಮ್ಮನ್ನು ವೃದ್ಧಿ ಮಾಡಿಕೊಳ್ಳಬೇಕೆಂದು ಬಯಸುತ್ತೀರಿ ಅಷ್ಟೂ ವೃದ್ಧಿ ಮಾಡಿಕೊಳ್ಳಬಹುದು. ಏಕೆ? ನಿರ್ಬಂಧನರಾಗಿದ್ದಾರೆ, ಹೊರೆಯಿಲ್ಲ ಮತ್ತು ಜವಾಬ್ದಾರಿ ಇಲ್ಲ ಆದ್ದರಿಂದ ಸಹಜತೆಯಿದೆ. ಸಹಜತೆಯಿಂದ ಇರುವ ಕಾರಣದಿಂದ ತಾವೆಷ್ಟು ಶ್ರೇಷ್ಠ ಮಟ್ಟಕ್ಕೆ ಹೋಗಬೇಕೆಂದು ಬಯಸುತ್ತೀರಿ ಅಷ್ಟೂ ಹೋಗಬಹುದು. ನಿರಂತರ ಯೋಗಿ, ಸಹಜ ಯೋಗಿ - ಇದು ಶ್ರೇಷ್ಠ ಸ್ಥಿತಿ ಆಗಿದೆ ಹಾಗೂ ಇದು ಶ್ರೇಷ್ಠ ಮಟ್ಟಕ್ಕೆ ಹೋಗುವುದಾಗಿದೆ. ಇಂತಹ ಶ್ರೇಷ್ಠ ಸ್ಥಿತಿಯವರಿಗೆ ಹೇಳಲಾಗುತ್ತದೆ - ವಿಜಯಿ ಕುಮಾರು. ವಿಜಯಿಗಳು ಆಗಿದ್ದೀರಾ ಅಥವಾ ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವು - ಇದೇ ಆಟದಲ್ಲಂತು ಆಡುವುದಿಲ್ಲವೇ? ಒಂದುವೇಳೆ ಕೆಲವೊಮ್ಮೆ ಸೋಲು, ಕೆಲವೊಮ್ಮೆ ಗೆಲುವಿನ ಸಂಸ್ಕಾರವಿರುತ್ತದೆಯೆಂದರೆ ಏಕರಸ ಸ್ಥಿತಿಯ ಅನುಭವ ಆಗುವುದಿಲ್ಲ. ಒಂದೇ ಲಗನ್ನಿನಲ್ಲಿ ಮಗ್ನರಾಗಿರುವ ಅನುಭವ ಮಾಡುವುದಿಲ್ಲ.
2. ಸದಾ ಪ್ರತೀ ಕರ್ಮದಲ್ಲಿ ಚಮತ್ಕಾರ ಮಾಡುವಂತಹ ಕುಮಾರರು ಆಗಿದ್ದೀರಲ್ಲವೇ? ಯಾವುದೇ ಕರ್ಮವು ಸಾಧಾರಣ ಆಗಬಾರದು, ಚಮತ್ಕಾರ ಮಾಡುವಂತದ್ದಾಗಿರಲಿ. ಹೇಗೆ ತಂದೆಯ ಮಹಿಮೆಯನ್ನು ಮಾಡುತ್ತೀರಿ, ತಂದೆಯ ಚಮತ್ಕಾರದ ಗಾಯನ ಮಾಡುತ್ತೀರಿ. ಹಾಗೆಯೇ ಕುಮಾರರು ಅರ್ಥಾತ್ ಪ್ರತೀ ಕರ್ಮದಲ್ಲಿ ಚಮತ್ಕಾರ ತೋರಿಸುವವರು. ಕೆಲವೊಮ್ಮೆ ಒಂದುರೀತಿ, ಕೆಲವೊಮ್ಮೆ ಇನ್ನೊಂದು ರೀತಿ ಇರುವವರಲ್ಲ. ಹೀಗೂ ಆಗಬಾರದು - ಎಲ್ಲಿ ಯಾವುದೇ ಸೆಳೆಯುತ್ತದೆ ಅಲ್ಲಿಯೇ ಸೆಳೆದು ಬಿಡುತ್ತೀರಿ, ಕೆಲವೊಮ್ಮೆಗೂ ಬೀಳುವವರು ಆಗಬಾರದು, ಚಮತ್ಕಾರ ಮಾಡುವವರಾಗಿರಿ. ಅವಿನಾಶಿ ಆಗಿರುವವರು, ಅನ್ಯರನ್ನೂ ಅವಿನಾಶಿ ಮಾಡುವವರಾಗಿದ್ದೇವೆ - ಈ ರೀತಿ ಚಾಲೆಂಜ್ ಮಾಡುವವರಾಗಿರಿ. ಇಂತಹ ಕಮಾಲ್ ಮಾಡಿ ತೋರಿಸಿರಿ - ಪ್ರತಿಯೊಬ್ಬ ಕುಮಾರರೂ ನಡೆಯುವಾಗ-ಸುತ್ತಾಡುವಾಗ ಫರಿಶ್ತೆಯಂತೆ ಆಗಿರಬೇಕು, ದೂರದಿಂದಲೂ ಫರಿಶ್ತೆಯ ಹೊಳಪಿನ ಅನುಭವವಾಗಲಿ. ವಾಣಿಯಿಂದ ಸೇವೆಯ ಕಾರ್ಯಕ್ರಮಗಳನ್ನು ಬಹಳಷ್ಟು ಮಾಡಿದ್ದೀರಿ, ಅದನ್ನಂತು ಮಾಡುತ್ತಲೇ ಇರುತ್ತೀರಿ ಆದರೆ ವರ್ತಮಾನದಲ್ಲಿ ಪ್ರತ್ಯಕ್ಷ ಪ್ರಮಾಣವನ್ನು ಬಯಸುತ್ತಾರೆ. ಪ್ರತ್ಯಕ್ಷ ಪ್ರಮಾಣವು ಬಹಳ ಶ್ರೇಷ್ಠವಾದ ಪ್ರಮಾಣವಾಗಿದೆ. ಪ್ರತ್ಯಕ್ಷ ಪ್ರಮಾಣವಂತು ಇಷ್ಟೆಲ್ಲರೂ ಆಗಿ ಬಿಟ್ಟಿರಿ ಎಂದರೆ ಸಹಜ ಸೇವೆಯು ಆಗಿ ಬಿಡುತ್ತದೆ. ಫರಿಶ್ತಾ ಸ್ಥಿತಿಯ ಸೇವೆಯನ್ನು ಮಾಡುತ್ತೀರೆಂದರೆ ಪರಿಶ್ರಮವೂ ಕಡಿಮೆ, ಸಫಲತೆಯೂ ಹೆಚ್ಚಾಗಿ ಸಿಗುತ್ತದೆ. ಕೇವಲ ವಾಣಿಯಿಂದ ಸೇವೆಯನ್ನು ಮಾಡುವುದಲ್ಲ, ಆದರೆ ಮನ, ವಾಣಿ ಮತ್ತು ಕರ್ಮ ಮೂರರಿಂದಲೂ ಒಟ್ಟಿಗೆ ಸೇವೆಯಾಗಲಿ - ಇದಕ್ಕೆ ಚಮತ್ಕಾರ ಎಂದು ಹೇಳಲಾಗುತ್ತದೆ. ಒಳ್ಳೆಯದು.
ವಿದಾಯಿಯ ಸಮಯದಲ್ಲಿ:
ನಾಲ್ಕೂ ಕಡೆಯಲ್ಲಿರುವ ತೀವ್ರ ಪುರುಷಾರ್ಥಿ, ಸದಾ ಸೇವಾಧಾರಿ, ಸದಾ ಡಬಲ್ ಲೈಟ್ ಆಗಿದ್ದು ಅನ್ಯರನ್ನೂ ಡಬಲ್ ಲೈಟ್ ಮಾಡುವಂತಹ, ಸಫಲತೆಯನ್ನು ಅಧಿಕಾರದಿಂದ ಪ್ರಾಪ್ತಿ ಮಾಡಿಕೊಳ್ಳುವಂತಹ, ಸದಾ ತಂದೆಯ ಸಮಾನ ಮುಂದುವರೆಯುವ ಹಾಗೂ ಅನ್ಯರನ್ನೂ ಮುಂದುವರೆಸುವ, ಇದೇರೀತಿ ಸದಾ ಒಲವು-ಉತ್ಸಾಹದಲ್ಲಿರುವ ಶ್ರೇಷ್ಠ ಆತ್ಮರಿಗೆ, ಸ್ನೇಹಿ ಮಕ್ಕಳಿಗೆ ಬಾಪ್ದಾದಾರವರ ಬಹಳ-ಬಹಳ ಪ್ರೀತಿಪೂರ್ವಕವಾಗಿ ನೆನಪು-ಪ್ರೀತಿ ಹಾಗೂ ಸುಪ್ರಭಾತ.
ಓಂ ಶಾಂತಿ. ಗೀತೆಯನ್ನು ಕೇಳಿದ ಕೂಡಲೇ ಮಕ್ಕಳಿಗೆ ರೋಮಾಂಚನವಾಗಬೇಕು ಏಕೆಂದರೆ ಸನ್ಮುಖದಲ್ಲಿ ಕುಳಿತಿದ್ದೀರಿ. ಇಡೀ ಪ್ರಪಂಚದಲ್ಲಿ ಎಷ್ಟೊಂದು ಮಂದಿ ಆಚಾರ್ಯರು, ವಿದ್ವಾನರು, ಪಂಡಿತರಿದ್ದಾರೆ. ಆದರೆ ಮನುಷ್ಯರಿಗೆ 5000 ವರ್ಷಗಳಿಗೊಮ್ಮೆ ಭಗವಂತ ಬರುತ್ತಾರೆಂದು ಗೊತ್ತಿಲ್ಲ ಆದರೆ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಾವು ಹೇಗಿದ್ದೆವೋ ಹಾಗೆಯೇ ನಿಮ್ಮವರೂ ಇದ್ದಾರೆ ಎಂದು ಹೇಳುತ್ತಾರೆ. ನೀವು ಹೇಗಿದ್ದೀರೋ ಹಾಗೆಯೇ ನಾನೂ ಇದ್ದೇನೆಂದು ತಂದೆಯೂ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಎಲ್ಲಾ ಆತ್ಮರುಗಳ ತಂದೆಯು ಅವರಾಗಿದ್ದಾರೆ ಎಂದು. ಎಲ್ಲರೂ ಕೂಗುತ್ತಾರೆ. ಅಂದಾಗ ನೋಡಿ, ರಾವಣನ ನೆರಳು ಎಷ್ಟು ದೊಡ್ಡದಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಯಾರನ್ನು ನಾವು ಪರಮಪಿತ ಪರಮಾತ್ಮ ಎಂದು ಹೇಳುತ್ತೇವೆಯೋ ಅವರ ಬಗ್ಗೆ ಯಾರಿಗೂ ತಿಳಿದಿಲ್ಲ. ನಂತರ ತಂದೆ ಎಂದು ಹೇಳುವುದರಿಂದ ಏಕೆ ಖುಷಿಯಾಗುವುದಿಲ್ಲ! ಇದನ್ನು ಮರೆತು ಹೋಗಿದ್ದಾರೆ. ಆ ತಂದೆಯೇ ನಮಗೆ ಆಸ್ತಿಯನ್ನು ಕೊಡುತ್ತಾರೆ, ಇಷ್ಟು ಸಹಜವಾದ ಮಾತನ್ನು ಯಾರೂ ತಿಳಿದುಕೊಂಡಿಲ್ಲವೆಂದು ಸ್ವಯಂ ತಂದೆಯೇ ತಿಳಿಸಿಕೊಡುತ್ತಾರೆ. ಓ ಖುದಾ, ಹೇ ರಾಮ ಎಂದು ಕರೆಯುತ್ತಾ-ಕರೆಯುತ್ತಾ ಪ್ರಾಣ ಬಿಡುತ್ತಾರೆ. ಯಾರನ್ನು ಇಡೀ ಪ್ರಪಂಚವು ಕರೆಯುತ್ತದೆಯೋ ಆ ತಂದೆಯು ನಮಗೆ ತಿಳಿಸುತ್ತಾರೆ. ಈಗ ನಿಮ್ಮ ಬುದ್ಧಿಗೆ ಅಲ್ಲಿಗೆ ಹೊರಟು ಹೋಗಲಿ. ಕಲ್ಪದ ಹಿಂದಿನ ತರಹ ತಂದೆಯು ಈಗ ಬಂದಿದ್ದಾರೆ, ತಂದೆಯು ಬಂದು ಕಲ್ಪ-ಕಲ್ಪವೂ ಪತಿತರಿಂದ ಪಾವನ ಮಾಡಿ, ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಪತಿತ-ಪಾವನ ತಂದೆಯೆಂದು ಗಾಯನವೂ ಮಾಡುತ್ತಾರೆ, ನೀವೀಗ ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನೀವು ಅತಿ ಪ್ರಿಯವಾದ ಮಧುರ ಮಕ್ಕಳಾಗಿದ್ದೀರಿ ಅಂದಾಗ ಭಾರತವಾಸಿಗಳದ್ದೇ ಮಾತಾಗಿದೆ. ತಂದೆಯು ಭಾರತದಲ್ಲಿಯೇ ಜನ್ಮ ಪಡೆಯುತ್ತಾರೆ. ನಾನು ಭಾರತದಲ್ಲಿಯೇ ಜನ್ಮ ತೆಗೆದುಕೊಳ್ಳುತ್ತೇನೆ, ಅವಶ್ಯವಾಗಿ ಭಾರತವೇ ನನಗೆ ಇಷ್ಟವಿದೆಯೆಂದು ತಂದೆಯು ಹೇಳುತ್ತಾರೆ. ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ, ಯಾರು-ಯಾರು ಯಾವ ಧರ್ಮ ಸ್ಥಾಪಕರಿದ್ದಾರೆಯೋ ಅವರನ್ನು ನೆನಪು ಮಾಡುತ್ತಾರೆ. ಆದರೆ ನಾವು ಆದಿ ಸನಾತನ ಧರ್ಮದವರಾಗಿದ್ದೆವು ಎಂದು ಭಾರತವಾಸಿಗಳಿಗೆ ಗೊತ್ತಿಲ್ಲ. ಭಾರತವು ಪ್ರಾಚೀನ ದೇಶವಾಗಿದೆ ಅಂದಾಗ ಕೇವಲ ಭಾರತ ಒಂದೇ ಆಗಿತ್ತು ಎಂದು ಅನೇಕಾನೇಕ ಮಾತುಗಳನ್ನು ಹೇಳುತ್ತಿರುತ್ತಾರೆ. ಕೆಲವರು ಕೆಲವನ್ನು, ಇನ್ನೂ ಕೆಲವರು ಇನ್ನೇನನ್ನೋ ಹೇಳುತ್ತಿರುತ್ತಾರೆ. ಗೀತೆಯು ಶಿವ ಪರಮಾತ್ಮನು ಹಾಡಿದರೆಂದು ಯಾರು ಎಂದು ಕೆಲವರು ಕೇಳುತ್ತಾರೆ. ಕೃಷ್ಣನೇ ಪರಮಾತ್ಮನಾಗಿದ್ದನು, ಅವನೇ ಹಾಡಿದನೆಂದು ಹೇಳುತ್ತಾರೆ. ಪರಮಾತ್ಮ ಸರ್ವವ್ಯಾಪಿಯಾಗಿದ್ದಾನೆ, ಇದೆಲ್ಲಾ ಆಟವು ಅವನದೇ ಆಗಿದೆ ಎಂದು ಹೇಳುತ್ತಾರೆ. ಇವೆಲ್ಲಾ ರೂಪಗಳು ಭಗವಂತನದೇ ಆಗಿದೆ, ಭಗವಂತನೇ ಅನೇಕ ರೂಪಗಳನ್ನು ಧರಿಸಿ ಲೀಲೆಯನ್ನು ತೋರಿಸುತ್ತಾರೆ. ಭಗವಂತನು ಏನು ಮಾಡಲು ಸಾಧ್ಯವಿದೆ ಎಂದು ಹೇಳುತ್ತಾರೆ. ಮಾಯೆಯು ಎಷ್ಟು ಪ್ರಬಲವಾಗಿದೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಬಾಬಾ, ನಾವು ನರನಿಂದ ನಾರಾಯಣನಾಗುವ ಆಸ್ತಿಯನ್ನು ಪಡೆದೇ ಪಡೆಯುತ್ತೇವೆಂದು ಇಂದು ಹೇಳಿ ನಾಳೆ ನೋಡಿದರೆ ಇಲ್ಲವೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ – ಎಷ್ಟೊಂದು ಮಂದಿ ಹೊರಟು ಹೋದರು ಮತ್ತು ಬಹಳ ಮಂದಿ ವಿಚ್ಛೇದನವನ್ನೂ ಕೊಟ್ಟು ಬಿಟ್ಟರು. ಮಮ್ಮಾರವರನ್ನು ಮೋಟಾರಿನಲ್ಲಿ ಓಡಾಡಿಸುತ್ತಿದ್ದವರು ಇಂದು ಇಲ್ಲವೇ ಇಲ್ಲ. ಇಷ್ಟು ಒಳ್ಳೊಳ್ಳೆಯವರು ಮಾಯೆಯ ಸಂಗದಲ್ಲಿ ಬಂದು ಈ ರೀತಿ ಬಿದ್ದು ಬಿಡುತ್ತಾರೆ. ಒಂದೇ ಸಾರಿ ಕೆಳಗೆ ಹೋಗಿ ಬಿಡುತ್ತಾರೆ. ಯಾರು ಕಲ್ಪದ ಹಿಂದೆ ತಿಳಿದುಕೊಂಡಿದ್ದರೋ ಅವರೇ ಈಗಲೂ ತಿಳಿದುಕೊಳ್ಳುತ್ತಾರೆ. ಇತ್ತೀಚಿನ ಪ್ರಪಂಚದವರು ಏನಾಗುತ್ತಿದೆ ಮತ್ತು ನೀವು ಏನಾಗುತ್ತಿದ್ದೀರಿ! ಗೀತೆಯನ್ನು ಕೇಳಿದಿರಲ್ಲವೆ ಅಂದಾಗ ನಾವು ವಿಶ್ವದ ಮಾಲೀಕರಾಗುವ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಅಲ್ಲಿ ಯಾವುದೇ ಅಲ್ಪಕಾಲದ ಮಾತಿಲ್ಲ, ಇಲ್ಲಂತೂ ಕೇವಲ ಇತಿಮಿತಿಗಳ ಮಾತೇ ಆಗಿದೆ, ಎಲ್ಲದರಲ್ಲಿ ಮಿತಿಯಿದೆ. ನಮ್ಮ ಆಕಾಶದ ಮೇಲೆ ನಿಮ್ಮ ವಿಮಾನವು ಬಂದರೆ ಶೂಟ್ ಮಾಡುತ್ತೇವೆಂದು ಹೇಳಿ ಬಿಡುತ್ತಾರೆ ಆದರೆ ಅಲ್ಲಂತೂ ಯಾವುದೇ ಪರಿಮಿತಿಯಿಲ್ಲ. ಗೀತೆಯನ್ನಂತೂ ಹೇಳುತ್ತಾರೆ ಆದರೆ ಅದರ ಅರ್ಥವಂತೂ ಏನೂ ಗೊತ್ತಿಲ್ಲ. ಪುನಃ ನಮ್ಮನ್ನು ವಿಶ್ವದ ಮಾಲೀಕರ ಅವಶ್ಯವಾಗಿ ಮಾಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. 84 ಜನ್ಮಗಳ ಚಕ್ರವನ್ನು ಅನೇಕ ಬಾರಿ ಸುತ್ತಿದ್ದೀರಿ. ಸ್ವಲ್ಪ ಸಮಯವು ದುಃಖವನ್ನನುಭವಿಸಿದ್ದೇವೆ, ಸುಖವಂತೂ ಬಹಳ ಇದೆ. ಆದರೆ ತಂದೆಯು ತಿಳಿಸುತ್ತಾರೆ - ನೀವು ಮಕ್ಕಳಿಗೆ ಬಹಳ ಸುಖ ಕೊಡುತ್ತೇನೆ. ಈಗ ಮಾಯೆಯಿಂದ ಸೋಲಬಾರದು. ನೀವು ತಂದೆಯ ಮಕ್ಕಳಾಗಿದ್ದೀರಿ, ಎಲ್ಲರೂ ಒಂದೇರೀತಿ ಒಳ್ಳೆಯ ಮಕ್ಕಳಾಗಲು ಸಾಧ್ಯವಿಲ್ಲ. ಕೆಲವರಿಗೆ 5-7 ಮಕ್ಕಳಿದ್ದರೆ ಅವರಲ್ಲಿ 1-2 ಕೆಟ್ಟ ಮಕ್ಕಳು ತಲೆಯನ್ನೇ ಕೆಡಿಸಿ ಬಿಡುತ್ತಾರೆ. ಲಕ್ಷ-ಕೋಟಿ ಗಟ್ಟಲೆ ಹಣವನ್ನು ವ್ಯರ್ಥ ಮಾಡಿ ಬಿಡುತ್ತಾರೆ. ತಂದೆಯು ಧರ್ಮಾತ್ಮರಾಗಿರುತ್ತಾರೆ, ಮಕ್ಕಳು ಪ್ರಯೋಜನ ಬರದವರಾಗಿರುತ್ತಾರೆ. ಇಂತಹ ಉದಾಹರಣೆಗಳನ್ನು ತಂದೆಯು ಬಹಳಷ್ಟು ನೋಡಿದ್ದಾರೆ.
ಇಡೀ ಪ್ರಪಂಚದವರು ಬೇಹದ್ದಿನ ತಂದೆಯ ಮಕ್ಕಳಾಗಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಭಾರತವು ನನ್ನ ಜನ್ಮ ಸ್ಥಾನವಾಗಿದೆ ಎಂದು ತಂದೆಯು ಹೇಳುತ್ತಾರೆ. ಪ್ರತಿಯೊಬ್ಬರಿಗೂ ಅವರ ಮಾತೃಭೂಮಿಯ ಬಗ್ಗೆ ಕಾಳಜಿಯಿರುತ್ತದೆ. ಬೇರೆ ಎಲ್ಲಾದರೂ ಶರೀರ ಬಿಟ್ಟರೆ ಅವರನ್ನು ಅವರ ಮಾತೃಭೂಮಿಗೇ ಕರೆದುಕೊಂಡು ಹೋಗುತ್ತಾರೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ. ನೀವು ಭಾರತವಾಸಿಗಳಿಗೆ ಪುನಃ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ನೀವು ಮಕ್ಕಳು ಪುನಃ ನಾವು ದೇವತೆಗಳು ಅರ್ಥಾತ್ ವಿಶ್ವದ ಮಾಲೀಕರಾಗುತ್ತಿದ್ದೇವೆಂದು ಹೇಳುತ್ತೀರಿ. ನಾವೇ ಮಾಲೀಕರಾಗಿದ್ದೆವು, ಈಗ ನಮ್ಮ ಗತಿಯೇನಾಗಿ ಬಿಟ್ಟಿದೆ! ಎಲ್ಲಿದ್ದವರು ಎಲ್ಲಿಗೆ ಬಂದಿದ್ದೇವೆ, 84 ಜನ್ಮಗಳನ್ನು ಅನುಭವಿಸಿ ಈ ಗತಿಯಲ್ಲಿ ಬಂದು ಬಿಟ್ಟಿದೆ. ಡ್ರಾಮವನ್ನು ತಿಳಿದುಕೊಳ್ಳಬೇಕಾಗಿದೆ, ಇದಕ್ಕೆ ಸೋಲು-ಗೆಲುವಿನ ಆಟವೆಂದು ಹೇಳಲಾಗುತ್ತದೆ. ಇದು ಭಾರತದ್ದೇ ಆಟವಾಗಿದೆ, ಇದರಲ್ಲಿ ನಿಮ್ಮ ಪಾತ್ರವೂ ಇದೆ. ಈ ಡ್ರಾಮಾದಲ್ಲಿ ನೀವು ಬ್ರಾಹ್ಮಣರ ಪಾತ್ರವು ಎಲ್ಲದಕ್ಕಿಂತ ಶ್ರೇಷ್ಠಾತಿ ಶ್ರೇಷ್ಠವಾಗಿದೆ. ನೀವು ಇಡೀ ಪ್ರಪಂಚದ ಮಾಲೀಕರಾಗುತ್ತೀರಿ, ಎಷ್ಟೊಂದು ಸುಖವನ್ನನುಭವಿಸುತ್ತೀರಿ, ನಿಮ್ಮಷ್ಟು ಸುಖ ಮತ್ತ್ಯಾರೂ ಭೋಗಿಸಲು ಸಾಧ್ಯವಿಲ್ಲ. ಹೆಸರೇ ಆಗಿದೆ ಸ್ವರ್ಗ, ಇದಾಗಿದೆ ನರಕ. ಇಲ್ಲಿಯ ಸುಖವು ಕಾಗವಿಷ್ಟ ಸಮಾನವಾಗಿದೆ, ಈಗಿನ ಲಕ್ಷಾಧೀಪತಿ ಮುಂದಿನ ಜನ್ಮದಲ್ಲಿ ಏನಾಗುತ್ತಾನೆ ಎಂದು ತಿಳಿದಿರುತ್ತದೆಯೇ? ಇದು ಪಾಪಾತ್ಮರ ಪ್ರಪಂಚವಾಗಿದೆ, ಸತ್ಯಯುಗವು ಪುಣ್ಯಾತ್ಮರ ಪ್ರಪಂಚವಾಗಿದೆ. ನೀವು ಪುಣ್ಯಾತ್ಮರಾಗುತ್ತಿದ್ದೀರಿ ಅಂದಮೇಲೆ ಎಂದೂ ಪಾಪವನ್ನು ಮಾಡಬಾರದು. ಸದಾ ತಂದೆಯ ಜೊತೆ ನೇರವಾಗಿ ನಡೆಯಬೇಕು. ದ್ವಾಪರದಿಂದ ಹಿಡಿದು ನನ್ನ ಜೊತೆಯಲ್ಲಿ ಸದಾ ಧರ್ಮರಾಜನಿರುತ್ತಾನೆಂದು ತಂದೆಯು ತಿಳಿಸುತ್ತಾರೆ. ನನ್ನ ಜೊತೆಯಲ್ಲಿ ಧರ್ಮರಾಜನು ಸತ್ಯ-ತ್ರೇತಾಯುಗದಲ್ಲಿ ಇರುವುದಿಲ್ಲ. ದ್ವಾಪರದಿಂದ ನೀವು ನನ್ನ ಹೆಸರಿನಲ್ಲಿ ದಾನ-ಪುಣ್ಯವನ್ನು ಮಾಡುತ್ತಲೇ ಬಂದಿದ್ದೀರಿ, ಈಶ್ವರಾರ್ಪಣಂ ಎಂದು ಹೇಳುತ್ತೀರಲ್ಲವೆ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಶ್ರೀಕೃಷ್ಣಾರ್ಪಣಂ ಎನ್ನುತ್ತಾರೆ. ಅದಕ್ಕೆ ರಿಟರ್ನ್ ಕೊಡುವಂತಹವರು ಒಬ್ಬರೇ ತಂದೆಯಾಗಿದ್ದಾರೆ. ಆದ್ದರಿಂದ ಶ್ರೀಕೃಷ್ಣಾರ್ಪಣಂ ಎಂದು ಹೇಳುವುದೂ ತಪ್ಪಾಗಿದೆ. ಈಶ್ವರಾರ್ಪಣಂ ಎಂದು ಹೇಳುವುದು ಸರಿಯಾಗಿದೆ, ಶ್ರೀ ಗಣೇಶಾರ್ಪಣಂ ಎಂದು ಹೇಳುವುದರಿಂದ ಸ್ವಲ್ಪವೂ ಸಿಗುವುದಿಲ್ಲ. ಆದರೂ ಸಹ ಭಾವನೆಗಾಗಿ ನಾನೇ ಅಲ್ಪಸ್ವಲ್ಪವಾದರೂ ಕೊಡುತ್ತಾ ಬಂದಿದ್ದೇನೆ, ನನ್ನನ್ನು ಯಾರೂ ತಿಳಿದುಕೊಂಡಿಲ್ಲ. ನನ್ನನ್ನು ಈಗ ನೀವು ಮಕ್ಕಳು ತಿಳಿದುಕೊಂಡು ಎಲ್ಲವನ್ನೂ ಶಿವ ತಂದೆಗೆ ಅರ್ಪಣೆ ಮಾಡುತ್ತಿದ್ದೀರಿ. ನಾವು 21 ಜನ್ಮಗಳ ಆಸ್ತಿಯನ್ನು ಪಡೆಯಲು ಬಂದಿದ್ದೇನೆಂದು ತಂದೆಯು (ಬ್ರಹ್ಮಾ) ಹೇಳುತ್ತಾರೆ. ಈಗಿರುವುದೇ ಇಳಿಯುವ ಕಲೆಯಾಗಿದೆ. ರಾವಣ ರಾಜ್ಯದಲ್ಲಿ ಏನೇ ದಾನ-ಪುಣ್ಯ ಮಾಡಿದರೂ ಸಹ ಪಾಪಾತ್ಮರಿಗೇ ಕೊಡುತ್ತಾರೆ. ಇಳಿಯುವ ಕಲೆಯಲ್ಲಿಯೇ ಹೋಗುತ್ತಾರೆ. ಮಾಡಿದ್ದರೂ ಸಹ ಸ್ವಲ್ಪಕಾಲಕ್ಕಾಗಿ ಪ್ರಾಪ್ತಿಯಾಗುತ್ತದೆ. ನಿಮಗೆ ಈಗ 21 ಜನ್ಮಗಳಿಗಾಗಿ ಸಿಗುತ್ತದೆ. ಅದಕ್ಕೆ ರಾಮ ರಾಜ್ಯವೆಂದು ಹೇಳುತ್ತಾರೆ. ಅಲ್ಲಿ ಈಶ್ವರನ ರಾಜ್ಯವೆಂದು ಹೇಳುವುದಿಲ್ಲ, ರಾಜ್ಯವಂತೂ ದೇವಿ-ದೇವತೆಗಳದ್ದಾಗಿದೆ. ನಾನು ರಾಜ್ಯ ಮಾಡುವುದಿಲ್ಲವೆಂದು ತಂದೆಯು ತಿಳಿಸುತ್ತಾರೆ. ನಿಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವುದಿತ್ತೋ ಅದು ಪ್ರಾಯಲೋಪವಾಗಿದೆ, ಈಗ ಮತ್ತೆ ಅದು ಸ್ಥಾಪನೆಯಾಗುತ್ತಿದೆ. ತಂದೆಯಂತೂ ಕಲ್ಯಾಣಕಾರಿಯಂತೂ ಹೌದು, ಅವರಿಗೆ ಸತ್ಯವಾದ ತಂದೆಯೆಂದು ಹೇಳುತ್ತಾರೆ. ನಿಮಗೇ ತಮ್ಮ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಸತ್ಯವಾದ ಜ್ಞಾನವನ್ನು ಕೊಡುತ್ತಿದ್ದಾರೆ. ತಂದೆಯು ನಿಮಗೆ ಬೇಹದ್ದಿನ ಇತಿಹಾಸ ಮತ್ತು ಭೂಗೋಳವನ್ನು ತಿಳಿಸುತ್ತಾರೆ. ಎಷ್ಟೊಂದು ಶಕ್ತಿಶಾಲಿ ಸಂಪಾದನೆಯಾಗಿದೆ, ನೀವು ಚಕ್ರವರ್ತಿ ರಾಜರಾಗುತ್ತೀರಿ. ಅವರು ಹಿಂಸೆಯ ಚಕ್ರವನ್ನು ಕೊಟ್ಟು ಬಿಟ್ಟಿದ್ದಾರೆ. ಇದು ಅಸಲಾಗಿ ಜ್ಞಾನದ ಚಕ್ರವಾಗಿದೆ ಆದರೆ ಜ್ಞಾನವಂತೂ ಪ್ರಾಯಲೋಪವಾಗಿ ಬಿಡುತ್ತದೆ. ನಿಮ್ಮದು ಇದು ಮುಖ್ಯವಾದ ಚಿತ್ರವಾಗಿದೆ. ಒಂದು ಕಡೆ ತ್ರಿಮೂರ್ತಿ, ಇನ್ನೊಂದು ಕಡೆ ಚಕ್ರ ಮತ್ತು ವೃಕ್ಷವಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆಂದು ತಂದೆಯು ತಿಳಿಸುತ್ತಾರೆ. ಇಡೀ ಸೂತ್ರವೇ ಗಂಟಾಗಿ ಬಿಟ್ಟಿದೆ. ತಂದೆಯನ್ನು ಬಿಟ್ಟರೆ ಮತ್ತ್ಯಾರಿಂದಲೂ ಗಂಟನ್ನು ಬಿಡಿಸಲು ಸಾಧ್ಯವಿಲ್ಲ. ತಂದೆಯು ಸನ್ಮುಖದಲ್ಲಿ ಸ್ವಯಂ ಬಂದಿದ್ದಾರೆ. ಡ್ರಾಮಾನುಸಾರವಾಗಿ ನಾನು ಬರಲೇಬೇಕಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ನಾನು ಈ ಡ್ರಾಮಾದಲ್ಲಿ ಬಂಧಿತನಾಗಿದ್ದೇನೆ, ನಾನು ಬರದೇ ಇರಲು ಸಾಧ್ಯವೇ ಇಲ್ಲ. ಸತ್ತಿರುವವರನ್ನು ಬದುಕಿಸುತ್ತೇನೆ, ರೋಗದಿಂದ ಬಿಡಿಸುತ್ತೇನೆಂದು ಎಂದಲ್ಲ. ಬಾಬಾ, ನಮ್ಮ ಮೇಲೆ ಕೃಪೆ ತೋರಿ ಎಂದು ಬಹಳ ಮಕ್ಕಳು ಕೇಳುತ್ತಿರುತ್ತಾರೆ ಆದರೆ ಇಲ್ಲಿ ಯಾವುದೇ ಕೃಪೆಯ ಮಾತಿಲ್ಲ. ನೀವು ನನಗೆ ಆಶೀರ್ವಾದ ಕೊಡಿ, ನಮಗೆ ಯಾವುದೇ ನಷ್ಟವಾಗದಿರಲೆಂದು ಕರೆಯಲಿಲ್ಲವಲ್ಲವೆ. ನೀವು ಪತಿತ-ಪಾವನ, ದುಃಖಹರ್ತ-ಸುಖಕರ್ತ ಬನ್ನಿ ಎಂದು ಕರೆದಿರಿ. ಶರೀರದ ದುಃಖಹರ್ತನು ವೈದ್ಯನೂ ಆಗುತ್ತಾನೆ. ನಾನು ಇದಕ್ಕಾಗಿಯೇ ಬರುತ್ತೇನೆಯೇ! ಹೊಸ ಪ್ರಪಂಚದ ಮಾಲೀಕರನ್ನಾಗಿ ಮಾಡಿ, ಶಾಂತಿ ಕೊಡಿ ಎಂದು ನೀವೇ ಕರೆಯುತ್ತೀರಿ. ನಮ್ಮನ್ನು ರೋಗದಿಂದ ಮುಕ್ತರನ್ನಾಗಿ ಮಾಡಿ ಎಂದೇನೂ ಹೇಳುವುದಿಲ್ಲ. ಸದಾಕಾಲಕ್ಕಾಗಿ ಶಾಂತಿ ಅಥವಾ ಮುಕ್ತಿ ಸಿಗುವುದಿಲ್ಲ, ಪಾತ್ರವನ್ನಂತೂ ಅಭಿನಯಿಸಲೇಬೇಕಾಗಿದೆ. ಅಂತ್ಯದಲ್ಲಿ ಬರುವವರಿಗೆ ಎಷ್ಟೊಂದು ಶಾಂತಿ ಸಿಗುತ್ತದೆ. ಇಲ್ಲಿಯವರೆಗೂ ಬರುತ್ತಲೇ ಇದ್ದಾರೆ. ಇಷ್ಟು ಸಮಯದವರೆಗೂ ಅವರು ಶಾಂತಿಧಾಮದಲ್ಲಿರುತ್ತಾರಲ್ಲವೆ. ಡ್ರಾಮಾನುಸಾರವಾಗಿ ಯಾರ ಪಾತ್ರವಿದೆಯೋ ಅವರು ಬರುತ್ತಲೇ ಇರುತ್ತಾರೆ, ಪಾತ್ರವನ್ನು ಬದಲಾಯಿಸಲು ಸಾಧ್ಯವಿಲ್ಲ. ಶಾಂತಿಧಾಮದಲ್ಲಿ ಬಹಳಷ್ಟು ಆತ್ಮಗಳಿರುತ್ತಾರೆ ಅವರು ಅಂತ್ಯದಲ್ಲಿ ಬರುತ್ತಾರೆಂದು ತಂದೆಯು ತಿಳಿಸುತ್ತಾರೆ. ಈ ಡ್ರಾಮವು ಮಾಡಿ-ಮಾಡಲ್ಪಟ್ಟಿದೆ. ಅಂತ್ಯದಲ್ಲಿ ಬರುವವರು ಅಂತ್ಯದಲ್ಲಿಯೇ ಬರಬೇಕಾಗಿದೆ. ಈ ವೃಕ್ಷವು ಮಾಡಲ್ಪಟ್ಟಿರುವುದಾಗಿದೆ, ನೀವು ತಿಳಿದುಕೊಳ್ಳುವುದಕ್ಕಾಗಿ ಈ ಚಿತ್ರಗಳನ್ನು ಮಾಡಿದ್ದಾರೆ. ಕಲ್ಪದ ಹಿಂದಿನ ರೀತಿ ಇನ್ನೂ ಅನೇಕ ಚಿತ್ರಗಳು ಬರುತ್ತಲೇ ಇರುತ್ತವೆ. 84 ಜನ್ಮಗಳ ವಿಸ್ತಾರವು ವೃಕ್ಷದ ಚಿತ್ರದಲ್ಲಿದೆ, ಡ್ರಾಮಾದ ಚಕ್ರದಲ್ಲಿಯೂ ಇದೆ. ಈಗ ಮತ್ತೆ ಏಣಿಯ ಚಿತ್ರವು ಬಂದಿದೆ, ಇದು ಮನುಷ್ಯರಿಗೆ ಗೊತ್ತಿಲ್ಲ. ಸಂಪೂರ್ಣ ಮಂಧಬುದ್ಧಿಯವರಾಗಿದ್ದಾರೆ. ಪರಮಪಿತ ಪರಮಾತ್ಮ ಜ್ಞಾನ ಸಾಗರ, ಶಾಂತಿಯ ಸಾಗರ ನಮಗೆಲ್ಲರಿಗೂ ಈ ಶರೀರದ (ಬ್ರಹ್ಮಾ) ಮೂಲಕ ಓದಿಸುತ್ತಿದ್ದಾರೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಯಾರು ಮೊಟ್ಟ ಮೊದಲು ವಿಶ್ವದ ಮಾಲೀಕರಾಗಿದ್ದರೋ ಅವರ ಶರೀರದಲ್ಲಿ ನಾನು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಅವಶ್ಯವಾಗಿ ನಾವು ಬ್ರಹ್ಮನ ಮೂಲಕ ಬ್ರಾಹ್ಮಣರಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಗೀತೆಯಲ್ಲಿ ಈ ಮಾತುಗಳೇ ಇಲ್ಲ. ಇವರು ಸ್ವಯಂ ನಾರಾಯಣ ಪೂಜೆ ಮಾಡುತ್ತಿದ್ದರು, ರೈಲಿನಲ್ಲಿ ಪ್ರಯಾಣವೂ ಮಾಡುತ್ತಿದ್ದರು, ಗೀತೆಯನ್ನೂ ಓದುತ್ತಿದ್ದರೆಂದು ತಂದೆಯು ತಿಳಿಸುತ್ತಾರೆ. ಇವರು ದೊಡ್ಡ ಧರ್ಮಾತ್ಮರೆಂದು ಮನುಷ್ಯರು ತಿಳಿದುಕೊಂಡಿದ್ದರು. ಈಗ ಈ ಎಲ್ಲಾ ಮಾತುಗಳನ್ನು ಮರೆತು ಬಿಟ್ಟಿದ್ದಾರೆ ಆದರೂ ಸಹ ಇವರು ಗೀತೆಯನ್ನು ಓದಿದ್ದಾರಲ್ಲವೆ! ತಂದೆಯು ತಿಳಿಸುತ್ತಾರೆ - ನಾನು ಎಲ್ಲವನ್ನೂ ತಿಳಿದಿದ್ದೇನೆ, ಈಗ ನೀವು ಮಕ್ಕಳು ವಿಚಾರ ಮಾಡಿ - ನಾವು ಯಾರ ಮುಂದೆ ಕುಳಿತಿದ್ದೇವೆ, ಯಾವುದರಿಂದ ವಿಶ್ವದ ಮಾಲೀಕರಾಗುತ್ತೀರಿ ಆದರೂ ಸಹ ಘಳಿಗೆ-ಘಳಿಗೆಗೂ ಏಕೆ ಮರೆತು ಹೋಗುತ್ತೀರಿ? ನಿಮಗೆ 16 ಗಂಟೆಗಳ ಕಾಲವನ್ನು ಉಚಿತವಾಗಿ ಕೊಡುತ್ತೇನೆ ಬಾಕಿ ಉಳಿದ ಸಮಯದಲ್ಲಿ ನನ್ನ ಸೇವೆಯನ್ನು ಮಾಡಿ. ನಿಮ್ಮ ಸೇವೆ ಮಾಡಿಕೊಳ್ಳುತ್ತೀರೆಂದರೆ ವಿಶ್ವದ ಸೇವೆಯೂ ಮಾಡಿದಂತಾಯಿತು. ಕೊನೆಪಕ್ಷ 8 ಗಂಟೆಗಳಕಾಲ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಿ. ಈಗ ಇಡೀ ದಿನದಲ್ಲಿ 8 ಗಂಟೆಗಳು ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲವೆ? ಯಾವಾಗ ಈ ಸ್ಥಿತಿಯನ್ನು ತಲುಪುವಿರೋ ಆಗ ಇವರು ಬಹಳ ಸರ್ವೀಸ್ ಮಾಡುತ್ತಾರೆ ತಿಳಿದುಕೊಳ್ಳುತ್ತಾರೆ. ನಾವು ತುಂಬಾ ಸೇವೆ ಮಾಡುತ್ತೇವೆಂದು ನೀವು ತಿಳಿದುಕೊಳ್ಳಬಾರದು. ಭಾಷಣವನ್ನಂತೂ ಬಹಳ ಚೆನ್ನಾಗಿ ಮಾಡುತ್ತಾರೆ ಆದರೆ ಯೋಗವಂತೂ ಇಲ್ಲ. ಯೋಗದ ಯಾತ್ರೆಯೇ ಮುಖ್ಯವಾಗಿದೆ.
ತಂದೆಯು ತಿಳಿಸುತ್ತಾರೆ - ವಿಕರ್ಮಗಳ ಹೊರೆಯು ಬಹಳ ಇದೆ ಆದ್ದರಿಂದ ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ. ಎರಡು ಗಂಟೆಯಿಂದ ಐದು ಗಂಟೆಯವರೆಗೆ ಬಹಳ ಒಳ್ಳೆಯ ವಾಯುಮಂಡಲವಿರುತ್ತದೆ. ರಾತ್ರಿಯಲ್ಲಿ ಆತ್ಮಾಭಿಮಾನಿಯಾಗುತ್ತದೆ, ಇದಕ್ಕೆ ನಿದ್ರೆಯೆಂದು ಹೇಳಲಾಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಿ. ಈಗ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ಇದು ಏರುವ ಕಲೆಯ ಮಂತ್ರವಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ತಂದೆಯ ಜೊತೆ ಸೀದಾ ಮತ್ತು ಸತ್ಯವಾಗಿ ನಡೆಯಬೇಕಾಗಿದೆ. ಕಲ್ಯಾಣಕಾರಿ ತಂದೆಯ ಮಕ್ಕಳಾಗಿರುವುದರಿಂದ ಸರ್ವರ ಕಲ್ಯಾಣ ಮಾಡಬೇಕಾಗಿದೆ. ಸುಪುತ್ರ ಮಕ್ಕಳಾಗಬೇಕಾಗಿದೆ.
2) ಕರ್ಮವನ್ನು ಮಾಡುತ್ತಾ ಕೊನೆಪಕ್ಷ 8 ಗಂಟೆಗಳ ಕಾಲ ಅವಶ್ಯವಾಗಿ ನೆನಪು ಮಾಡಬೇಕಾಗಿದೆ. ನೆನಪೇ ಮುಖ್ಯವಾಗಿದೆ, ಇದರಿಂದಲೇ ವಿಕರ್ಮಗಳ ಹೊರೆಯನ್ನು ಇಳಿಸಿಕೊಳ್ಳಬೇಕಾಗಿದೆ.
ಓಂ ಶಾಂತಿ. ಈಗ ಮಕ್ಕಳು ಬೇಹದ್ದಿನ ತಂದೆಯ ಸನ್ಮುಖದಲ್ಲಿದ್ದಾರೆ. ಇವರು ಬೇಹದ್ದಿನ ತಂದೆಯೆಂದೂ ಹೇಳಬಹುದು, ಬೇಹದ್ದಿನ ತಾತನೆಂದೂ ಹೇಳಬಹುದು, ಅದರಲ್ಲಿ ಬೇಹದ್ದಿನ ಮಕ್ಕಳೂ ಸಹ ಕುಳಿತಿದ್ದಾರೆ ಮತ್ತು ತಂದೆಯು ಬೇಹದ್ದಿನ ಜ್ಞಾನವನ್ನು ಕೊಡುತ್ತಿದ್ದಾರೆ. ಹದ್ದಿನ ಮಾತುಗಳು ಈಗ ಬಿಟ್ಟು ಹೋಯಿತು. ಈಗ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ. ಈಗ ಒಂದು ಅಂಗಡಿಯು ಮಾತ್ರವೇ ಇದೆ. ನಾವು ಏನನ್ನು ಬಯಸುತ್ತೇವೆಂದು ಮನುಷ್ಯರಿಗೆ ಗೊತ್ತಿಲ್ಲ. ಅವರಿಗೆ ಸುಖದ ಸಾಗರ, ಪವಿತ್ರತೆಯ ಸಾಗರ, ಆನಂದ ಸಾಗರ, ಜ್ಞಾನ ಸಾಗರ...... ಯಾವುದೇ ಅಂಗಡಿ ವ್ಯಾಪಾರಿಯಿದ್ದರೆ ಬಹಳ ವಿಧವಾದ ಸಾಮಾನುಗಳಿರುತ್ತವೆ ಅಂದಮೇಲೆ ಇವರು ಬೇಹದ್ದಿನ ತಂದೆಯಾಗಿದ್ದಾರೆ. ಇವರ ಬಳಿಯೂ ಸಹ ವಿಧವಿಧವಾದ ಸಾಮಗ್ರಿಗಳಿವೆ. ಏನೇನಿದೆ? ತಂದೆಯು ಜ್ಞಾನ ಸಾಗರ, ಸುಖದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಇವರ ಬಳಿ ಅದ್ಭುತವಾದ ಅಲೌಕಿಕವಾದ ಸಾಮಗ್ರಿಗಳಿವೆ. ಆದ್ದರಿಂದ ಗಾಯನವೂ ಇದೆ - ಸುಖಕರ್ತ. ಇದೊಂದೇ ಅಂಗಡಿಯಾಗಿದೆ, ಇಂತಹ ಅಂಗಡಿಯು ಯಾವುದೂ ಇಲ್ಲ. ಬ್ರಹ್ಮಾ-ವಿಷ್ಣು-ಶಂಕರನ ಬಳಿ ಯಾವ ಸಾಮಗ್ರಿಯಿದೆ, ಏನೂ ಇಲ್ಲ. ಅತಿ ಶ್ರೇಷ್ಠವಾದ ಸಾಮಗ್ರಿಯು ತಂದೆಯ ಬಳಿಯಿದೆ ಅದರಿಂದಲೇ ಅವರ ಮಹಿಮೆ ಮಾಡುತ್ತಾರೆ - ತ್ವಮೇವ ಮಾತಾಶ್ಚ ಪಿತಾ... ಇಂತಹ ಮಹಿಮೆಯು ಬೇರೆ ಯಾರದೂ ಆಗುವುದಿಲ್ಲ. ಮನುಷ್ಯರು ಶಾಂತಿಗಾಗಿ ಅಲೆದಾಡುತ್ತಾರೆ, ಕೆಲವರಿಗೆ ಶಾಂತಿಯು ಬೇಕು, ಕೆಲವರಿಗೆ ಇನ್ನೇನೋ ಬೇಕು. ಅವುಗಳೆಲ್ಲವೂ ಅಲ್ಪಕಾಲದ ಅಂಗಡಿಗಳಾಗಿವೆ. ಇಡೀ ಪ್ರಪಂಚದವರೆಲ್ಲರ ಬಳಿ ಹದ್ದಿನ ಸಾಮಾನುಗಳಿವೆ. ಈ ಒಬ್ಬ ತಂದೆಯ ಬಳಿಯೇ ಬೇಹದ್ದಿನ ಸಾಮಾನುಗಳಿವೆ ಆದ್ದರಿಂದಲೇ ಇವರ ಮಹಿಮೆಯನ್ನು ಪತಿತ-ಪಾವನ, ಲಿಬರೇಟರ್, ಜ್ಞಾನ ಸಾಗರ, ಆನಂದ ಸಾಗರ ಎಂದು ಕರೆಯುತ್ತಾರೆ. ಇವೆಲ್ಲವೂ ವಿಧ ವಿಧವಾದ ಸಾಮಾನುಗಳಾಗಿವೆ. ಪಟ್ಟಿ ಬರೆದರೆ ಬಹಳ ಆಗುತ್ತದೆ. ಈ ತಂದೆಯ ಬಳಿಯಿರುವ ಎಲ್ಲಾ ಸಾಮಾನುಗಳ ಮೇಲೂ ಮಕ್ಕಳಿಗೂ ಅಧಿಕಾರವಿದೆ. ತಂದೆಯ ಮಕ್ಕಳಾದ ಮೇಲೆ ಈ ಎಲ್ಲಾ ಸಾಮಗ್ರಿಗಳ ಮೇಲೆ ಮಾಲೀಕರಾಗುತ್ತೇವೆಂದು ಯಾರಿಗೂ ತಿಳಿದಿಲ್ಲ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ತಂದೆಯ ಬಳಿ ಏನು ಸಾಮಗ್ರಿಗಳಿವೆಯೋ ಅದನ್ನು ಅವಶ್ಯವಾಗಿ ತರುತ್ತಾರೆ. ಅವರ ಬಳಿ ಪಡೆದುಕೊಳ್ಳಲು ಹೋಗಲು ಸಾಧ್ಯವಿಲ್ಲ, ಕಲ್ಪ-ಕಲ್ಪವೂ, ಕಲ್ಪದ ಸಂಗಮದಲ್ಲಿ ನಾನೇ ಬರಬೇಕಾಗುತ್ತದೆಯೆಂದು ತಂದೆಯು ತಿಳಿಸುತ್ತಾರೆ. ನಾನು ಬಂದು ನಿಮಗೆ ಎಲ್ಲಾ ವಸ್ತುಗಳನ್ನು ಕೊಟ್ಟು ಹೋಗುತ್ತೇನೆ. ಎಂದೂ ಸಿಗದೇ ಇರುವ ವಸ್ತುಗಳನ್ನು ನಾನು ನಿಮಗೆ ಕೊಡುತ್ತೇನೆ. ಅರ್ಧ ಕಲ್ಪದವರೆಗೆ ನಿಮ್ಮ ಭಂಡಾರವು ತುಂಬುತ್ತದೆ, ಯಾವುದೇ ಅಪ್ರಾಪ್ತವಾದ ವಸ್ತುವು ಇಲ್ಲವೆಂದರೆ ಕರೆಯಬೇಕಾಗುವುದಿಲ್ಲ. ಡ್ರಾಮಾ ಪ್ಲಾನನುಸಾರವಾಗಿ ನೀವು ನಿಮ್ಮ ಆಸ್ತಿಯನ್ನು ಪಡೆದು ನಿಧಾನವಾಗಿ ಕೆಳಗಿಳಿಯಲೇಬೇಕಾಗಿದೆ. ಪುನರ್ಜನ್ಮವನ್ನೂ ಸಹ ಅವಶ್ಯವಾಗಿ ತೆಗೆದುಕೊಳ್ಳಲೇಬೇಕು, 84 ಜನ್ಮಗಳನ್ನು ಪಡೆಯಲೇಬೇಕಾಗಿದೆ. 84 ಜನ್ಮದ ಚಕ್ರವೆಂದು ಹೇಳುತ್ತಾರೆ ಆದರೆ ಅರ್ಥವನ್ನಂತೂ ತಿಳಿದುಕೊಂಡಿಲ್ಲ. 84ರ ಬದಲಾಗಿ 84 ಲಕ್ಷ ಜನ್ಮವೆಂದು ಹೇಳುತ್ತಾರೆ. ಮಾಯೆಯು ತಪ್ಪನ್ನು ಮಾಡಿಸಿ ಬಿಡುತ್ತದೆ. ಇದು ನೀವೀಗ ತಿಳಿದುಕೊಳ್ಳುತ್ತೀರೆಂದಮೇಲೆ ಬೇರೆಲ್ಲವನ್ನೂ ಮರೆತು ಬಿಡುತ್ತೀರಿ. ಈ ಸಮಯದಲ್ಲಿ ಸಾಮಗ್ರಿಗಳನ್ನು ತೆಗೆದುಕೊಳ್ಳುತ್ತೀರಿ, ಸತ್ಯಯುಗದಲ್ಲಿ ರಾಜ್ಯಭಾರ ಮಾಡುತ್ತೀರಿ ಆದರೆ ಅವರಿಗೆ ಇದು ತಿಳಿದಿಲ್ಲ - ಈ ರಾಜ್ಯಭಾಗ್ಯವನ್ನು ಯಾರು ಕೊಟ್ಟರು? ಲಕ್ಷ್ಮೀ-ನಾರಾಯಣರು ಯಾವಾಗ ಇದ್ದರು? ಸ್ವರ್ಗದ ಸುಖದ ಬಗ್ಗೆಯೂ ಹಾಡುತ್ತಾರೆ. ಎಲ್ಲಾ ತರಹದ ಸುಖವನ್ನೂ ಕೊಡುತ್ತಾರೆ, ಇದಕ್ಕಿಂತ ಹೆಚ್ಚಾಗಿ ಸುಖವಿರಲು ಸಾಧ್ಯವಿಲ್ಲ. ಆದರೆ ಆ ಸುಖವು ಪ್ರಾಯಲೋಪವಾಗಿ ಬಿಡುತ್ತದೆ. ಅರ್ಧಕಲ್ಪದ ನಂತರ ರಾವಣನು ಬಂದು ಎಲ್ಲಾ ಸುಖವನ್ನು ಕಸಿದುಕೊಳ್ಳುತ್ತಾನೆ. ಯಾರಾದರೂ ಕೋಪ ಮಾಡಿಕೊಂಡರೆಂದರೆ ನಿಮ್ಮ ಕಲೆಯು ಸಮಾಪ್ತಿಯಾಗುತ್ತದೆ. ನೀವೂ ಸಹ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದಿರಿ, ಆ ಕಲೆಗಳು ಈಗ ಸಮಾಪ್ತಿಯಾಗಿ ಬಿಟ್ಟಿವೆ. ಒಬ್ಬ ತಂದೆಯ ವಿನಃ ಬೇರೆ ಯಾರದೂ ಸಹ ಮಹಿಮೆಯಿಲ್ಲ. ಹಣವಿದ್ದರೆ ಪ್ರಪಂಚವನ್ನೆಲ್ಲಾ ಸುತ್ತಿಕೊಂಡು ಬನ್ನಿ ಎಂದು ಹೇಳುತ್ತಾರಲ್ಲವೆ!
ನೀವು ವಿಚಾರ ಮಾಡಿ - ಸ್ವರ್ಗದಲ್ಲಿ ಎಷ್ಟೊಂದು ಸಮೃದ್ಧಿಯಾದ ಧನ-ಸಂಪತ್ತು ಇತ್ತು! ಈಗ ಅದು ಇದೆಯೇ? ಎಲ್ಲವೂ ಪ್ರಾಯಲೋಪವಾಗಿ ಬಿಡುತ್ತದೆ. ಧರ್ಮ ಭ್ರಷ್ಟ, ಕರ್ಮ ಭ್ರಷ್ಟರಾಗುತ್ತೀರಿ. ಧನ ಸಂಪತ್ತು ಪ್ರಾಯಲೋಪವಾಗುತ್ತದೆ ಮತ್ತು ಕೆಳಗಿಳಿದು ಬಿಡುತ್ತೀರಿ. ನಿಮಗೆ ಎಷ್ಟೊಂದು ಹಣವನ್ನು ಕೊಟ್ಟಿದ್ದೆನು, ವಜ್ರ ಸಮಾನ ಮಾಡಿದ್ದೆನು. ಆದರೆ ಆ ಧನ ಸಂಪತ್ತೆಲ್ಲವನ್ನೂ ಎಲ್ಲಿ ಕಳೆದು ಬಿಟ್ಟಿರಿ? ಎಂದು ತಂದೆಯು ತಿಳಿಸುತ್ತಾರೆ. ಈಗ ತಂದೆಯು ಪುನಃ ನಿಮ್ಮ ಆಸ್ತಿಯನ್ನು ಪಡೆಯಬೇಕೆಂದರೆ ಪುರುಷಾರ್ಥ ಮಾಡಿ ಎಂದು ಹೇಳುತ್ತಾರೆ. ಬಾಬಾ ನಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಮೇಲಿರುವ ತುಕ್ಕು ಬಿಟ್ಟು ಹೋಗುವುದು. ಬಾಬಾ, ನೆನಪು ಮರೆತು ಹೋಗುತ್ತದೆ ಎಂದು ಮಕ್ಕಳು ಹೇಳುತ್ತಾರೆ. ಕನ್ಯೆಯ ವಿವಾಹವಾದ ಮೇಲೆ ತನ್ನ ಪತಿಯನ್ನು ಮರೆತು ಬಿಡುತ್ತಾಳೆಯೇ? ತಂದೆಯನ್ನು ಮಕ್ಕಳು ಮರೆಯುತ್ತಾರೆಯೇ? ತಂದೆಯಾದರೂ ದಾತನಾಗಿದ್ದಾರೆ. ಮಕ್ಕಳು ಆಸ್ತಿಯನ್ನು ಪಡೆಯಲು ನೆನಪು ಮಾಡಲೇಬೇಕಾಗಿದೆ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ, ವಿಕರ್ಮವನ್ನು ವಿನಾಶ ಮಾಡಿಕೊಳ್ಳಲು ನೆನಪಿನ ಯಾತ್ರೆಯ ವಿನಃ ಬೇರೆ ಯಾವುದೇ ಉಪಾಯವಿಲ್ಲ. ಭಕ್ತಿಮಾರ್ಗದಲ್ಲಿ ತೀರ್ಥ ಯಾತ್ರೆ, ಗಂಗಾಸ್ನಾನ ಮಾಡುತ್ತಾ ಏಣಿಯನ್ನಿಳಿಯುತ್ತಲೇ ಬಂದಿದ್ದೀರಿ. ಯಾರೂ ಸಹ ಮೇಲೇರಲು ಸಾಧ್ಯವಿಲ್ಲ, ಕಾಯಿದೆಯೂ ಇಲ್ಲ. ಎಲ್ಲರದೂ ಇಳಿಯುವ ಕಲೆಯಾಗಿದೆ. ಇಂತಹವರು ಮುಕ್ತಿಯಲ್ಲಿ ಹೋದರೆಂದು ಅಸತ್ಯವನ್ನೇ ಹೇಳುತ್ತಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಂದೆಯು ನಿಮ್ಮನ್ನು 16 ಕಲಾ ಸಂಪೂರ್ಣರನ್ನಾಗಿ ಮಾಡಲು ಬಂದಿದ್ದಾರೆ. ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ನೀವು ಹೇಳುತ್ತೀರಿ. ಈಗ ನಿಮ್ಮನ್ನು ಗುಣವಂತರನ್ನಾಗಿ ಮಾಡುತ್ತಿದ್ದಾರೆ ಎಂದು ತಂದೆಯು ತಿಳಿಸುತ್ತಾರೆ. ನಾವೇ ಗುಣವಂತರು, ಪೂಜ್ಯರಾಗಿದ್ದೆವು, ನಾವೇ 5000 ವರ್ಷಗಳ ಹಿಂದೆ ಆಸ್ತಿಯನ್ನೂ ಪಡೆದಿದ್ದೆವು. ತಂದೆಯೂ ತಿಳಿಸುತ್ತಾರೆ - ನಾನು ನಿಮಗೆ ಆಸ್ತಿಯನ್ನು ಕೊಟ್ಟು ಹೋಗಿದ್ದೆನು, ಶಿವ ಜಯಂತಿ, ರಕ್ಷಾ ಬಂಧನ, ದಸರಾ ಇವೆಲ್ಲವನ್ನೂ ಮಾಡುತ್ತಲೇ ಬಂದಿರಿ ಆದರೂ ಸಹ ಏನನ್ನೂ ತಿಳಿದಿರಲಿಲ್ಲ. ಎಲ್ಲವನ್ನೂ ಮರೆತು ಹೋಗಿದ್ದೀರಿ. ತಂದೆಯು ಬಂದು ನೆನಪು ತರಿಸುತ್ತಾರೆ. ನೀವೇ ಇದ್ದಿರಿ ನಂತರ ನೀವೇ ರಾಜ್ಯಭಾಗ್ಯವನ್ನು ಕಳೆದುಕೊಂಡಿರಿ. ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚವು ಹಳೆಯದು, ಜಡಜಡೀಭೂತವಾಗಿದೆ. ಪ್ರಪಂಚದವಂತೂ ಇದೇ ರೀತಿಯಾಗಿದೆ, ಇದೇ ಹೊಸ ಭಾರತವಾಗಿತ್ತು, ಈಗ ಹಳೆಯದಾಗಿದೆ. ಸ್ವರ್ಗದಲ್ಲಿ ಸದಾ ಸುಖವಿರುತ್ತದೆ. ದ್ವಾಪರದ ನಂತರ ದುಃಖ ಪ್ರಾರಂಭವಾಗುತ್ತದೆಯೆಂದರೆ ವೇದ, ಶಾಸ್ತ್ರ ಇತ್ಯಾದಿಗಳೆಲ್ಲವನ್ನೂ ಮಾಡುತ್ತಾರೆ. ಯಾವಾಗ ಭಕ್ತಿಯನ್ನು ಮಾಡುತ್ತೀರೋ ಆಗ ಭಗವಂತನು ಬಂದರಲ್ಲವೆ! ಬ್ರಹ್ಮನ ದಿನ, ಬ್ರಹ್ಮನ ರಾತ್ರಿ ಎಂದು ತಿಳಿಸುತ್ತಾರೆ ಅಂದಾಗ ಅರ್ಧ-ಅರ್ಧವಾಯಿತಲ್ಲವೆ. ಜ್ಞಾನವು ದಿನವಾಗಿದೆ, ಭಕ್ತಿಯು ರಾತ್ರಿಯಾಗಿದೆ. ಅವರು ಕಲ್ಪದ ಆಯಸ್ಸನ್ನು ಉಲ್ಟಾ-ಸುಲ್ಟಾ ಮಾಡಿದ್ದಾರೆ. ಮೊಟ್ಟ ಮೊದಲು ನೀವೇ ಎಲ್ಲರಿಗೂ ತಂದೆಯ ಮಹಿಮೆಯನ್ನು ತಿಳಿಸಿರಿ. ತಂದೆಯು ಜ್ಞಾನದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಕೃಷ್ಣನಿಗೆ ನಿರಾಕಾರ, ಪತಿತ-ಪಾವನ, ಸುಖದ ಸಾಗರ ಎಂದು ಹೇಳಲಾಗುತ್ತದೆಯೇ! ಅವರ ಮಹಿಮೆಯೇ ಭಿನ್ನವಾಗಿದೆ. ಹಗಲು-ರಾತ್ರಿಯ ವ್ಯತ್ಯಾಸವಿದೆ. ಶಿವನಿಗೇ ತಂದೆಯೆಂದು ಕರೆಯುತ್ತಾರೆ, ಕೃಷ್ಣನಿಗೆ ತಂದೆಯೆಂಬ ಮಾತು ಶೋಭಿಸುವುದಿಲ್ಲ. ಎಷ್ಟು ದೊಡ್ಡ ತಪ್ಪಾಗಿದೆ! ಚಿಕ್ಕ-ಚಿಕ್ಕ ತಪ್ಪುಗಳನ್ನು ಮಾಡುತ್ತಾ 100% ತಪ್ಪು ಆಗಿ ಬಿಟ್ಟಿದೆ. ಸನ್ಯಾಸಿಗಳೊಂದಿಗೆ ಎಂದೂ ಸಹ ವ್ಯವಹಾರ ನಡೆಸಲು ಸಾಧ್ಯವಿಲ್ಲ, ಅವರು ನಿವೃತ್ತಿ ಮಾರ್ಗದವರಾಗಿದ್ದಾರೆ, ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ. ನೀವು ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ. ಇದು ವಿಕಾರಿ ಪ್ರಪಂಚವಾಗಿದೆ. ಅಂದಾಗ ಸತ್ಯಯುಗದಲ್ಲಿ ಮಕ್ಕಳ ಜನ್ಮವಾಗುವುದಿಲ್ಲವೆ? ಅಲ್ಲಿಯೂ ಸಹ ವಿಕಾರವಿತ್ತು. ಅರೆ! ಅದಂತೂ ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ, ಸಂಪೂರ್ಣ ನಿರ್ವಿಕಾರಿಗಳು ವಿಕಾರಿಗಳಾಗಲು ಹೇಗೆ ಸಾಧ್ಯ! ಮತ್ತೆ ಸತ್ಯಯುಗದಲ್ಲಿ ಇಷ್ಟೊಂದು ಮನುಷ್ಯರು ಹೇಗಿರಲು ಸಾಧ್ಯ. ಅಲ್ಲಿ ಇಷ್ಟೊಂದು ಜನಸಂಖ್ಯೆಯಿರಲು ಸಾಧ್ಯವೇ! ಭಾರತದ ವಿನಃ ಮತ್ತ್ಯಾವುದೇ ಖಂಡವಿರುವುದಿಲ್ಲ. ಇದನ್ನೂ ತಿಳಿಸಿದರೂ ಸಹ ನಾವು ನಂಬುವುದಿಲ್ಲವೆಂದು ಹೇಳುತ್ತಾರೆ. ಪ್ರಪಂಚವಂತೂ ಸದಾ ತುಂಬಿಯೇ ಇರುತ್ತದೆ, ಸ್ವಲ್ಪವೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ಭಾರತವು ಚಿನ್ನದ ಯುಗವಾಗಿತ್ತು, ಈಗ ಕಲ್ಲು ಬುದ್ಧಿ, ಕಬ್ಬಿಣದ ಯುಗವಾಗಿದೆ. ಈಗ ನೀವು ಮಕ್ಕಳು ಡ್ರಾಮವನ್ನು ತಿಳಿದುಕೊಂಡಿದ್ದೀರಿ. ಗಾಂಧೀಜಿಯವರು ರಾಮ ರಾಜ್ಯವನ್ನು ಬಯಸುತ್ತಿದ್ದರು ಆದರೆ ಮಹಾಭಾರತ ಯುದ್ಧವು ನಡೆಯಿತೆಂದು ತಿಳಿಸುತ್ತಾರೆ. ನಂತರ ಆಟವು ಮುಗಿದು ಹೋಯಿತು. ಆದ ನಂತರ ಏನಾಯಿತೆಂದು ತೋರಿಸುವುದಿಲ್ಲ. ತಂದೆಯು ಕುಳಿತು ತಿಳಿಸುತ್ತಾರೆ - ಇದಂತೂ ಅವಶ್ಯವಾಗಿ ಸಹಜವಾಗಿದೆ, ಶಿವ ಜಯಂತಿಯನ್ನು ಆಚರಿಸುತ್ತಾರೆಂದರೆ ಅವಶ್ಯವಾಗಿ ಶಿವ ತಂದೆಯು ಬರುತ್ತಾರಲ್ಲವೆ. ಅವರು ಸ್ವರ್ಗದ ರಚಯಿತ ಅಂದಮೇಲೆ ಸ್ವರ್ಗದ ಬಾಗಿಲನ್ನು ತೆರೆಯಲು ಬರುತ್ತಾರೆ. ಬರುವುದೂ ಸಹ ಯಾವಾಗ ಈ ಪ್ರಪಂಚ ನರಕವಾಗುತ್ತದೆಯೋ ಆಗ ಸ್ವರ್ಗದ ಬಾಗಿಲನ್ನು ತೆರೆದು ನರಕದ ಬಾಗಿಲನ್ನು ಮುಚ್ಚುತ್ತಾರೆ. ಸ್ವರ್ಗದ ಬಾಗಿಲನ್ನು ತೆಗೆದರು ಎಂದರೆ ಸ್ವರ್ಗದಲ್ಲಿ ಎಲ್ಲರೂ ಬರಬೇಕಲ್ಲವೆ. ಇದು ಅಷ್ಟೊಂದು ಕಠಿಣವಾದ ಮಾತಲ್ಲ, ಮಹಿಮೆಯಂತೂ ಒಬ್ಬ ತಂದೆಯದಾಗಿದೆ. ಶಿವ ತಂದೆಯ ಅಂಗಡಿಯು ಒಂದೇ ಇದೆ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ಬೇಹದ್ದಿನ ತಂದೆಯ ಮೂಲಕ ಭಾರತಕ್ಕೆ ಸ್ವರ್ಗದ ಸುಖ ಸಿಗುತ್ತದೆ. ಬೇಹದ್ದಿನ ತಂದೆಯು ಸ್ವರ್ಗದ ಸ್ಥಾಪನೆಯನ್ನು ಮಾಡುತ್ತಿದ್ದಾರೆ ಅಂದಾಗ ಅವಶ್ಯವಾಗಿ ಬೇಹದ್ದಿನ ಸುಖವಿತ್ತು. ನಂತರ ನಾವು ನರಕದಲ್ಲಿ ಏಕೆ ಇದ್ದೇವೆ ಎಂದು ಯಾರಿಗೂ ತಿಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೇ ಇದ್ದಿರಿ, ಈಗ ನೀವೇ ಕೆಳಗಿಳಿದಿದ್ದೀರಿ. ದೇವತೆಗಳು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ಈಗ ಬಂದು ಪತಿತರಾಗಿದ್ದಾರೆ ಮತ್ತೆ ಅವರನ್ನು ಪಾವನ ಮಾಡಬೇಕಾಗಿದೆ. ತಂದೆಯ ಜನ್ಮವಿದೆಯೆಂದಮೇಲೆ ರಾವಣನ ಜನ್ಮವೂ ಇದೆ. ಇದು ಯಾರಿಗೂ ಗೊತ್ತಿಲ್ಲ. ರಾವಣನನ್ನು ಯಾವಾಗಿನಿಂದ ಸುಡುತ್ತೀರಿ ಎಂದು ಯಾರನ್ನಾದರೂ ಕೇಳಿದರೆ ಇದು ಅನಾದಿಯಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಇವೆಲ್ಲಾ ರಹಸ್ಯಗಳನ್ನು ತಂದೆಯು ತಿಳಿಸುತ್ತಾರೆ. ಆ ತಂದೆಯ ಒಂದು ಅಂಗಡಿಯ ಮಹಿಮೆಯೇ ಇದೆ. ಸುಖ-ಶಾಂತಿ-ಪವಿತ್ರತೆಯನ್ನು ಮನುಷ್ಯರು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ. ಕೇವಲ ಒಬ್ಬರಿಗೇ ಮಾತ್ರವೇ ಶಾಂತಿ ಸಿಕ್ಕಿತೇ! ಇಂತಹವರಿಗೆ ಶಾಂತಿಯು ಸಿಕ್ಕಿತೆಂದು ಕೇವಲ ಸುಳ್ಳನ್ನೇ ಹೇಳುತ್ತಾರೆ. ಅರೆ! ಶಾಂತಿಯಂತು ಶಾಂತಿಧಾಮದಲ್ಲಿಯೇ ಸಿಗುತ್ತದೆ. ಇಲ್ಲಂತೂ ಒಬ್ಬರಿಗೆ ಶಾಂತಿಯಿದ್ದರೆ, ಇನ್ನೊಬ್ಬರು ಅಶಾಂತಿ ಉಂಟು ಮಾಡುವುದರಿಂದ ಶಾಂತಿಯಿಂದ ಇರಲು ಸಾಧ್ಯವಿಲ್ಲ. ಸುಖ, ಶಾಂತಿ, ಪವಿತ್ರತೆ ಎಲ್ಲಾ ಸಾಮಗ್ರಿಗಳ ವ್ಯಾಪಾರಿಯು ಒಬ್ಬ ಶಿವ ತಂದೆಯಾಗಿದ್ದಾರೆ. ಅವರೊಂದಿಗೆ ಯಾರು ಬೇಕಾದರೂ ಸಹ ವ್ಯಾಪಾರ ಮಾಡಬಹುದು. ಅವರನ್ನು ಸೌಧಾಗಾರ ಎಂದು ಕರೆಯುತ್ತಾರೆ. ಅವರ ಬಳಿ ಪವಿತ್ರತೆ, ಸುಖ-ಶಾಂತಿ, ಸಂಪತ್ತೆಲ್ಲವೂ ಇದೆ, ಅಪ್ರಾಪ್ತಿಯ ವಸ್ತು ಯಾವುದೂ ಇಲ್ಲ. ಸ್ವರ್ಗದ ರಾಜ್ಯವನ್ನು ನೀವು ಪಡೆಯುತ್ತೀರಿ, ತಂದೆಯು ಕೊಡಲು ಬಂದಿದ್ದಾರೆ. ಪಡೆಯುವವರು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸುಸ್ತಾಗಿ ಬಿಡುತ್ತಾರೆ. ನಾನು ಬರುವುದೇ ಕೊಡುವುದಕ್ಕಾಗಿ ಅಂದಮೇಲೆ ನೀವೇಕೆ ಪಡೆಯಲು ತಣ್ಣಗಾಗುತ್ತೀರಿ. ಬಾಬಾ, ಮಾಯೆಯ ಬಿರುಗಾಳಿಯು ಬರುತ್ತದೆಯೆಂದು ಮಕ್ಕಳು ತಿಳಿಸುತ್ತಾರೆ. ಹೌದು! ಬಹಳ ದೊಡ್ಡ ಪದವಿಯಾಗಿದೆ. ಸ್ವರ್ಗದ ಮಾಲೀಕರಾಗುವ ಮಾತು ಕಡಿಮೆ ಮಾತಾಗಿದೆಯೇ? ಪರಿಶ್ರಮವಂತೂ ಪಡಲೇಬೇಕು. ಶ್ರೀಮತದಂತೆ ನಡೆಯಿರಿ. ಸಿಗುವಂತಹ ಸಾಮಗ್ರಿಗಳನ್ನು ಹಂಚಬೇಕಾಗಿದೆ, ದಾನ ಮಾಡಬೇಕಾಗಿದೆ. ಪವಿತ್ರರಾಗಬೇಕೆಂದರೆ ಪಂಚ ವಿಕಾರಗಳ ದಾನವನ್ನು ಅವಶ್ಯವಾಗಿ ಮಾಡಬೇಕಾಗಿದೆ, ಪರಿಶ್ರಮ ಪಡಬೇಕಾಗಿದೆ. ತಂದೆಯನ್ನು ನೆನಪು ಮಾಡಿದಾಗಲೇ ತುಕ್ಕು ಬಿಟ್ಟು ಹೋಗುವುದು, ನೆನಪೇ ಮುಖ್ಯವಾಗಿದೆ. ವಿಕಾರದಲ್ಲಿ ಹೋಗುವುದಿಲ್ಲ, ಯಾರ ಮೇಲೂ ಕೋಪ ಮಾಡಿಕೊಳುವುದಿಲ್ಲವೆಂದು ಭಲೆ ಪ್ರತಿಜ್ಞೆಯಂತೂ ಮಾಡಿ ಆದರೆ ನೆನಪಿನಲ್ಲಂತೂ ಇರಲೇಬೇಕು. ಇಲ್ಲದಿದ್ದರೆ ಇಷ್ಟೊಂದು ಪಾಪವು ವಿನಾಶವಾಗಬೇಕು! ಬಾಕಿ ಜ್ಞಾನವಂತೂ ಬಹಳ ಸಹಜವಾಗಿದೆ. 84 ಜನ್ಮಗಳ ಚಕ್ರವನ್ನು ಹೇಗೆ ತಿರುಗಿಸುವುದು, ಇದನ್ನು ಯಾರಿಗೆ ಬೇಕಾದರೂ ತಿಳಿಸಬಹುದು ಬಾಕಿ ನೆನಪಿನ ಯಾತ್ರೆಯಲ್ಲಿರುವುದೇ ಪರಿಶ್ರಮವಿದೆ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಜ್ಞಾನವು ಏನು ಕೊಡುತ್ತದೆ? ಮನ್ಮನಾಭವ ಎಂದರೆ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ. ನೀವು ಗಾಯನವೂ ಹಾಡುತ್ತಿದ್ದಿರಿ - ನೀವು ಬಂದರೆ ಮತ್ತೆಲ್ಲಾ ಸಂಗವನ್ನು ಬಿಟ್ಟು ನಿಮ್ಮ ಸಂಗದಲ್ಲಿ ಇರುತ್ತೇವೆ, ನಿಮ್ಮಮೇಲೆ ಬಲಿಹಾರಿಯಾಗುತ್ತೇವೆ, ನಿಮ್ಮ ವಿನಃ ಬೇರೆ ಯಾರನ್ನೂ ನೆನಪು ಮಾಡುವುದಿಲ್ಲ ಎಂದು. ಪ್ರತಿಜ್ಞೆಯನ್ನು ಮಾಡಿರುವುದು ಮರೆತು ಹೋಯಿತೆ! ಹೇಳುತ್ತಾರಲ್ಲವೆ – ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನೆನಪು ಮಾಡುತ್ತಿರಲಿ.... ನೀವು ಕರ್ಮಯೋಗಿಗಳಂತೂ ಆಗಿದ್ದೀರಲ್ಲವೆ. ವ್ಯಾಪಾರ ವ್ಯವಹಾರವನ್ನು ಮಾಡುತ್ತಲೂ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ಪ್ರಿಯತಮ ತಂದೆಯು ಸ್ವಯಂ ಹೇಳುತ್ತಾರೆ - ನೀವು ಪ್ರಿಯತಮೆಯರು ಅರ್ಧಕಲ್ಪ ನೆನಪು ಮಾಡಿದಿರಿ. ಈಗ ನಾನು ಬಂದಿದ್ದೇನೆ ನೆನಪು ಮಾಡಿ. ಈಗ ಘಳಿಗೆ-ಘಳಿಗೆಗೆ ನೆನಪು ಮರೆತು ಹೋಗುತ್ತದೆ, ಇದರಲ್ಲಿಯೇ ಪರಿಶ್ರಮವಿದೆ. ಕರ್ಮಾತೀತ ಸ್ಥಿತಿಯಾದರೆ ಈ ಶರೀರವನ್ನು ಬಿಡಬೇಕಾಗುತ್ತದೆ. ರಾಜಧಾನಿಯು ಸ್ಥಾಪನೆಯಾಯಿತೆಂದರೆ ಕರ್ಮಾತೀತ ಸ್ಥಿತಿಯನ್ನು ಪಡೆದುಕೊಳ್ಳುತ್ತೀರಿ. ನೀವಂತೂ ಈಗ ಎಲ್ಲರೂ ಪುರುಷಾರ್ಥಿಗಳಾಗಿದ್ದೀರಿ. ಎಲ್ಲರಿಗಿಂತ ಹೆಚ್ಚು ಮಮ್ಮಾ-ಬಾಬಾ ನೆನಪು ಮಾಡುತ್ತಾರೆ, ಸೂಕ್ಷ್ಮವತನದಲ್ಲಿಯೂ ಕಂಡು ಬರುತ್ತದೆ.
ನಾನು ಯಾರಲ್ಲಿ ಪ್ರವೇಶಿಸುತ್ತೇನೆಯೋ ಅವರು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಇದ್ದಾರೆ. ಅವರೂ ಪುರುಷಾರ್ಥ ಮಾಡುತ್ತಾರೆಂದು ತಂದೆಯು ತಿಳಿಸುತ್ತಾರೆ. ಕರ್ಮಾತೀತ ಸ್ಥಿತಿಯಂತೂ ಯಾರೂ ಸಹ ಈಗಲೇ ತಲುಪಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯು ಬಂದು ಬಿಟ್ಟಿತೆಂದರೆ ಈ ಶರೀರವಿರಲು ಸಾಧ್ಯವಿಲ್ಲ. ತಂದೆಯಂತು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ, ಇದೆಲ್ಲವೂ ತಿಳಿದುಕೊಳ್ಳುವವರ ಬುದ್ಧಿಯ ಮೇಲೆ ಆಧಾರಿತವಾಗಿದೆ. ಸ್ವರ್ಗದ ರಚಯಿತನು ಒಬ್ಬರೇ ಆಗಿದ್ದಾರೆ, ಅವರ ಬಳಿಯೇ ಜ್ಞಾನದ ಎಲ್ಲಾ ಸಾಮಗ್ರಿಗಳಿವೆ, ಅವರೇ ಜಾದೂಗಾರನಾಗಿದ್ದಾರೆ, ಬೇರೆ ಯಾರಿಂದಲೂ ಸುಖ, ಶಾಂತಿ, ಪವಿತ್ರತೆಯ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ಕುಳಿತು ಬಹಳ ಚೆನ್ನಾಗಿ ತಿಳಿಸುತ್ತಾರೆ. ಮಕ್ಕಳು ಧಾರಣೆ ಮಾಡಿ ಅನ್ಯರಿಗೂ ಧಾರಣೆ ಮಾಡಿಸಬೇಕಾಗಿದೆ. ಎಷ್ಟು ಧಾರಣೆ ಮಾಡುತ್ತೀರೋ ಅಷ್ಟು ಆಸ್ತಿಯು ಸಿಗುತ್ತದೆ. ದಿನ-ಪ್ರತಿದಿನ ಬಹಳ ವಿಧವಿಧವಾದ ಸಾಮಗ್ರಿಗಳನ್ನು ಸಿಗುತ್ತವೆ. ಲಕ್ಷ್ಮೀ-ನಾರಾಯಣರನ್ನು ನೋಡಿ, ಎಷ್ಟು ಮಧುರವಾಗಿದ್ದಾರೆ! ಅವರಂತೆಯೇ ಮಧುರರಾಗಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತ್ಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಗುಡ್ಮಾರ್ನಿಂಗ್. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ. ಬೇರೆ ಯಾವುದೇ ಸತ್ಸಂಗಗಳಲ್ಲಿ ಈ ರೀತಿ ಹೇಳುತ್ತಾರೆಯೇ? ಇದಂತೂ ಅವಶ್ಯವಾಗಿ ನಮ್ಮದು ಹೊಸ ಭಾಷೆಯಾಗಿದೆ. ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ:
1) ತಂದೆಯ ಮೂಲಕ ಸುಖ, ಶಾಂತಿ, ಪವಿತ್ರತೆಯ ಯಾವ ಸಾಮಗ್ರಿಗಳು ಸಿಗುತ್ತವೆ, ಅವುಗಳನ್ನು ಅನ್ಯರಿಗೂ ದಾನ ಮಾಡಬೇಕು. ಮೊದಲು ವಿಕಾರಗಳನ್ನು ದಾನ ಮಾಡಿ ಪವಿತ್ರರಾಗಬೇಕು ನಂತರ ಅವಿನಾಶಿ ಜ್ಞಾನ ಧನದ ದಾನ ಮಾಡಬೇಕಾಗಿದೆ.
2) ದೇವತೆಗಳಂತೆ ಮಧುರರಾಗಬೇಕಾಗಿದೆ. ಬಾಪ್ದಾದಾರವರ ಜೊತೆ ಯಾವ ಪ್ರತಿಜ್ಞೆ ಮಾಡಿದ್ದೀರೋ ಅದನ್ನು ಸದಾ ನೆನಪಿನಲ್ಲಿಟ್ಟುಕೊಂಡು ಮತ್ತು ತಂದೆಯ ನೆನಪಿನಲ್ಲಿದ್ದು ವಿಕರ್ಮ ವಿನಾಶ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಮಕ್ಕಳಿಗೆ ಇದನ್ನು ತಿಳಿಸಲಾಗಿದೆ - ಈ ಭಾರತವೇ ಅವಿನಾಶಿ ಖಂಡವಾಗಿದೆ ಮತ್ತು ಇದರ ಮೂಲ ಹೆಸರಾಗಿದೆ – ಭಾರತ ಖಂಡ. ಹಿಂದೂಸ್ತಾನವೆಂಬ ಹೆಸರು ನಂತರದಲ್ಲಿ ಬಂದಿದೆ, ಭಾರತಕ್ಕೆ ಆಧ್ಯಾತ್ಮಿಕ ಖಂಡವೆಂದೂ ಹೇಳಲಾಗುತ್ತದೆ. ಇದು ಪ್ರಾಚೀನ ಖಂಡವಾಗಿದೆ, ಹೊಸ ಪ್ರಪಂಚದಲ್ಲಿ ಭಾರತ ಖಂಡವಿದ್ದಾಗ ಮತ್ತ್ಯಾವುದೇ ಖಂಡವಿರಲಿಲ್ಲ, ಮುಖ್ಯವಾದವರು ಇಸ್ಲಾಮಿಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರು. ಈಗಂತೂ ಬಹಳಷ್ಟು ಖಂಡಗಳಾಗಿ ಬಿಟ್ಟಿವೆ ಆದರೆ ಭಾರತವೇ ಅವಿನಾಶಿ ಖಂಡವಾಗಿದೆ. ಅದಕ್ಕೆ ಸ್ವರ್ಗ, ಹೆವೆನ್ ಎಂದು ಹೇಳುತ್ತಾರೆ. ಹೊಸ ಪ್ರಪಂಚದಲ್ಲಿ ಹೊಸ ಖಂಡವು ಭಾರತವೊಂದೇ ಆಗಿದೆ, ಹೊಸ ಪ್ರಪಂಚವನ್ನು ರಚಿಸುವವರು ಪರಮಪಿತ ಪರಮಾತ್ಮ, ಸ್ವರ್ಗದ ರಚಯಿತನಾಗಿದ್ದಾರೆ. ಭಾರತವಾಸಿಗಳಿಗೆ ತಿಳಿದಿದೆ - ಈ ಭಾರತವು ಅವಿನಾಶಿ ಖಂಡವಾಗಿದೆ. ಭಾರತವೇ ಸ್ವರ್ಗವಾಗಿತ್ತು, ಯಾರಾದರೂ ಮರಣ ಹೊಂದಿದರೆ ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ. ಸ್ವರ್ಗವು ಎಲ್ಲಿಯೋ ಮೇಲಿರಬೇಕೆಂದು ತಿಳಿಯುತ್ತಾರೆ. ದಿಲ್ವಾಡಾ ಮಂದಿರದಲ್ಲಿ ವೈಕುಂಠದ ಚಿತ್ರವನ್ನು ಮೇಲೆ ತೋರಿಸಿದ್ದಾರೆ. ಭಾರತವೇ ಸ್ವರ್ಗವಾಗಿತ್ತು, ಈಗ ಇಲ್ಲ. ಈಗಂತೂ ನರಕವಾಗಿದೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಅಂದಮೇಲೆ ಇದು ಅಜ್ಞಾನವಾಯಿತಲ್ಲವೆ. ಜ್ಞಾನ ಮತ್ತು ಅಜ್ಞಾನ, ಎರಡು ಮಾತುಗಳಿರುತ್ತವೆ. ಜ್ಞಾನಕ್ಕೆ ದಿನ, ಅಜ್ಞಾನಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಘೋರ ಪ್ರಕಾಶ ಮತ್ತು ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಪ್ರಕಾಶವೆಂದರೆ ಉತ್ಥಾನ, ಅಂಧಕಾರವೆಂದರೆ ಪಥನ. ಮನುಷ್ಯರು ಸೂರ್ಯಾಸ್ತವನ್ನು ನೋಡಲು ಸನ್ಸೆಟ್ಗೆ ಹೋಗುತ್ತಾರೆ, ಅದಂತೂ ಹದ್ದಿನ ಮಾತಾಗಿದೆ. ಇಲ್ಲಿ ಬ್ರಹ್ಮನ ದಿನ, ಬ್ರಹ್ಮನ ರಾತ್ರಿಯೆಂದು ಹೇಳಲಾಗುತ್ತದೆ. ಬ್ರಹ್ಮನು ಪ್ರಜಾಪಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಪ್ರಜೆಗಳಿಗೆ ಪಿತನಾದರು. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು, ಈ ಮಾತುಗಳನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದು ಹೊಸ ಪ್ರಪಂಚಕ್ಕಾಗಿ ಹೊಸ ಜ್ಞಾನವಾಗಿದೆ, ಸ್ವರ್ಗಕ್ಕಾಗಿ ಸ್ವರ್ಗದ ರಚಯಿತ ತಂದೆಯ ಜ್ಞಾನವು ಬೇಕು. ತಂದೆಯು ಜ್ಞಾನ ಸಾಗರನೆಂದೂ ಹಾಡುತ್ತಾರೆ ಅಂದಮೇಲೆ ಅವರು ಶಿಕ್ಷಕರಾದರು, ಆ ತಂದೆಗೇ ಪತಿತ-ಪಾವನ ಎಂದು ಹೇಳಲಾಗುತ್ತದೆ, ಮತ್ತ್ಯಾರಿಗೂ ಪತಿತ-ಪಾವನರೆಂದು ಹೇಳಲು ಸಾಧ್ಯವಿಲ್ಲ. ಶ್ರೀಕೃಷ್ಣನಿಗೂ ಹೇಳುವಂತಿಲ್ಲ. ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ, ಶ್ರೀಕೃಷ್ಣನು ಎಲ್ಲರಿಗೆ ತಂದೆಯಲ್ಲ. ಶ್ರೀಕೃಷ್ಣನು ಯಾವಾಗ ಬೆಳೆದು ದೊಡ್ಡವನಾಗಿ ವಿವಾಹವಾಗುವುದೋ ಆಗ ಒಬ್ಬರು ಅಥವಾ ಇಬ್ಬರು ಮಕ್ಕಳಿಗೆ ತಂದೆಯಾಗುವರು. ರಾಧೆ-ಕೃಷ್ಣರನ್ನು ರಾಜಕುಮಾರ-ರಾಜಕುಮಾರಿಯೆಂದು ಹೇಳಲಾಗುತ್ತದೆ. ಅವರಿಗೆ ನಂತರ ಸ್ವಯಂವರವೂ ಆಗಿರಬೇಕು. ವಿವಾಹದ ನಂತರವೇ ತಂದೆ-ತಾಯಿಯಾಗುತ್ತಾರೆ. ಅವರಿಗೆಂದೂ ವಿಶ್ವ ಪಿತನೆಂದು ಹೇಳಲು ಸಾಧ್ಯವಿಲ್ಲ. ಕೇವಲ ಒಬ್ಬ ನಿರಾಕಾರ ತಂದೆಗೇ ವಿಶ್ವಪಿತನೆಂದು ಹೇಳಲಾಗುತ್ತದೆ. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಶಿವ ತಂದೆಗೆ ಹೇಳಲು ಸಾಧ್ಯವಿಲ್ಲ. ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಪ್ರಜಾಪಿತ ಬ್ರಹ್ಮನಾಗಿದ್ದಾರೆ, ಅವರಿಂದ ವಂಶಾವಳಿಯಾಗುತ್ತದೆ. ಶಿವ ತಂದೆಯು ನಿರಾಕಾರ ಪರಮಾತ್ಮನಾಗಿದ್ದಾರೆ, ಅವರು ನಿರಾಕಾರ ಆತ್ಮರ ತಂದೆಯಾಗಿದ್ದಾರೆ. ನಿರಾಕಾರಿ ಆತ್ಮರು ಇಲ್ಲಿ ಶರೀರದಲ್ಲಿದ್ದಾಗ ಭಕ್ತಿಮಾರ್ಗದಲ್ಲಿ ತಂದೆಯನ್ನು ಕರೆಯುತ್ತಾರೆ, ಇವೆಲ್ಲಾ ಹೊಸ ಮಾತುಗಳನ್ನು ನೀವು ಹೇಳುತ್ತೀರಿ. ಯಥಾರ್ಥ ರೀತಿಯಿಂದ ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸನ್ಮುಖದಲ್ಲಿ ಕುಳಿತು ನೀವು ಮಕ್ಕಳಿಗೆ ತಿಳಿಸುತ್ತೇನೆ, ನಂತರ ಈ ಜ್ಞಾನವೆಲ್ಲವೂ ಪ್ರಾಯಲೋಪವಾಗಿ ಬಿಡುತ್ತದೆ. ತಂದೆಯು ಬಂದಾಗಲೇ ಯಥಾರ್ಥ ಜ್ಞಾನವನ್ನು ತಿಳಿಸುವರು. ಮಕ್ಕಳಿಗೇ ಸನ್ಮುಖದಲ್ಲಿ ತಿಳಿಸಿ ಆಸ್ತಿಯನ್ನು ಕೊಡುತ್ತಾರೆ ನಂತರ ಶಾಸ್ತ್ರಗಳು ರಚಿಸಲ್ಪಡುತ್ತವೆ, ಅವೂ ಸಹ ಯಥಾರ್ಥವಾಗಿ ರಚಿಸಲ್ಪಡುವುದಿಲ್ಲ ಏಕೆಂದರೆ ಸತ್ಯದ ಪ್ರಪಂಚವೇ ಸಮಾಪ್ತಿಯಾಗಿ ಅಸತ್ಯ ಖಂಡವಾಗಿ ಬಿಡುತ್ತದೆ ಅಂದಮೇಲೆ ಅಸತ್ಯ ವಸ್ತುಗಳೇ ಇರುವುದು ಏಕೆಂದರೆ ಇಳಿಯುವ ಕಲೆಯಾಗುತ್ತದೆ. ಸತ್ಯದಿಂದ ಏರುವ ಕಲೆಯಾಗಿದೆ. ಭಕ್ತಿಯು ರಾತ್ರಿಯಾಗಿದೆ, ಅಂಧಕಾರದಲ್ಲಿ ಮೋಸ ಹೋಗುತ್ತಿರುತ್ತಾರೆ. ತಲೆ ಬಾಗುತ್ತಾ ಇರುತ್ತಾರೆ, ಇಂತಹ ಘೋರ ಅಂಧಕಾರವಿದೆ. ಮನುಷ್ಯರಿಗೆ ಏನೂ ಗೊತ್ತಾಗುವುದೇ ಇಲ್ಲ, ಅಲ್ಲಿ-ಇಲ್ಲಿ ಅಲೆಯುತ್ತಿರುತ್ತಾರೆ. ಸ್ಥೂಲ ಸೂರ್ಯನಿಗೂ ಉದಯ ಮತ್ತು ಹಸ್ತವಾಗುತ್ತದೆ. ಅದನ್ನು ಮಕ್ಕಳು ಹೋಗಿ ನೋಡುತ್ತಾರೆ. ಈಗಂತೂ ನೀವು ಮಕ್ಕಳು ಜ್ಞಾನ ಸೂರ್ಯನ ಉದಯವನ್ನು ನೋಡಬೇಕಾಗಿದೆ. ಭಾರತದ ಉತ್ಥಾನ ಮತ್ತು ಪಥನ, ಭಾರತವು ಸೂರ್ಯನು ಮುಳುಗಿದಂತೆ ಮುಳುಗಿ ಹೋಗುತ್ತದೆ. ಸತ್ಯ ನಾರಾಯಣನ ಕಥೆಯಲ್ಲಿ ಇದನ್ನು ತೋರಿಸುತ್ತಾರೆ - ಭಾರತದ ದೋಣಿಯು ಕೆಳಗಡೆ ಹೊರಟು ಹೋಗುತ್ತದೆ ಮತ್ತು ತಂದೆಯು ಬಂದು ಅದನ್ನು ರಕ್ಷಣೆ ಮಾಡುತ್ತಾರೆ. ನೀವು ಈ ಭಾರತವನ್ನು ಪುನಃ ರಕ್ಷಣೆ ಮಾಡುತ್ತೀರಿ, ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ನೀವು ನಿಮಂತ್ರಣ ಕೊಡುತ್ತೀರಿ, ನವ ನಿರ್ಮಾಣ ಪ್ರದರ್ಶನಿ ಎಂಬ ಹೆಸರು ಸರಿಯಾಗಿದೆ. ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ - ಅದರ ಪ್ರದರ್ಶನಿಯಾಗಿದೆ. ಹೀಗೆ ಚಿತ್ರಗಳ ಮೂಲಕ ತಿಳುವಳಿಕೆ ನೀಡಲಾಗುತ್ತದೆ. ಆದ್ದರಿಂದ ಅದೇ ಹೆಸರು ನಡೆದುಬಂದರೆ ಒಳ್ಳೆಯದು. ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ ಹಾಗೂ ಹೇಗೆ ಉತ್ಥಾನವಾಗುತ್ತದೆ ಎಂಬುದನ್ನು ನೀವು ತೋರಿಸುತ್ತೀರಿ. ಅವಶ್ಯವಾಗಿ ಹಳೆಯ ಪ್ರಪಂಚವು ಅವನತಿಯಾಗುತ್ತದೆ ಆದ್ದರಿಂದಲೇ ಹೇಗೆ ಉನ್ನತಿಯಾಗುತ್ತದೆ ಎಂಬುದನ್ನು ತೋರಿಸುತ್ತೇವೆ. ರಾಜ್ಯವನ್ನು ಪಡೆಯುವುದು ಮತ್ತು ಪಡೆದುಕೊಳ್ಳುವುದು - ಇದೂ ಸಹ ಒಂದು ಕಥೆಯಾಗಿದೆ. 5000 ವರ್ಷಗಳ ಮೊದಲು ಏನಿತ್ತು? ಸೂರ್ಯವಂಶಿಯರ ರಾಜ್ಯವಿತ್ತು ಮತ್ತೆ ಚಂದ್ರವಂಶಿಯರ ರಾಜ್ಯವು ಸ್ಥಾಪನೆಯಾಯಿತೆಂದು ಹೇಳುತ್ತಾರೆ. ಅವರು ಒಬ್ಬರು ಇನ್ನೊಬ್ಬರಿಂದ ರಾಜ್ಯವನ್ನು ತೆಗೆದುಕೊಳ್ಳುತ್ತಾರೆ. ಇಂತಹವರಿಗೆ ರಾಜ್ಯ ಪಡೆದರು ಎಂದು ತೋರಿಸುತ್ತಾರೆ. ಅವರು ಏಣಿಯ ಬಗ್ಗೆ ತಿಳಿದುಕೊಳ್ಳುವುದಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ - ನೀವು ಸತ್ಯಯುಗದಿಂದ ತ್ರೇತಾಯುಗಕ್ಕೆ ಬಂದಿರಿ, ಏಣಿಯನ್ನು ಇಳಿಯುತ್ತಾ ಬಂದಿರಿ. ಇದು 84 ಜನ್ಮಗಳ ಏಣಿಯಾಗಿದೆ. ಏಣಿಯನ್ನು ಇಳಿಯಲಾಗುತ್ತದೆ ಮತ್ತೆ ಹತ್ತಲಾಗುತ್ತದೆ. ಅವನತಿಯ ರಹಸ್ಯವನ್ನೂ ತಿಳಿಸಬೇಕಾಗಿದೆ. ಭಾರತದ ಅವನತಿಯು ಎಷ್ಟು ಸಮಯ ಮತ್ತು ಉನ್ನತಿ ಎಷ್ಟು ಸಮಯ? ಭಾರತವಾಸಿಗಳ ಉತ್ಥಾನ ಹಾಗೂ ಪಥನ. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ - ಮನುಷ್ಯರನ್ನು ಇದು ಕಾತುರತೆಯಲ್ಲಿ ಹೇಗೆ ತರುವುದು ಎಂದು. ಅವರಿಗೆ ನಿಮಂತ್ರಣವನ್ನೂ ಕೊಡಬೇಕಾಗಿದೆ – ಸಹೋದರ -ಸಹೋದರಿಯರೇ ಬಂದು ತಿಳಿದುಕೊಳ್ಳಿ. ಮೊದಲು ತಂದೆಯ ಮಹಿಮೆಯನ್ನು ತಿಳಿಸಬೇಕಾಗಿದೆ. ಶಿವ ತಂದೆಯ ಮಹಿಮೆಯ ಒಂದು ಪಲಕವಿರಲಿ. ಪತಿತ-ಪಾವನ, ಜ್ಞಾನ ಸಾಗರ, ಪವಿತ್ರತೆ-ಸುಖ, ಶಾಂತಿಯ ಸಾಗರ, ಸಂಪತ್ತಿನ ಸಾಗರ, ಸರ್ವರ ಸದ್ಗತಿದಾತ, ಜಗತ್ಪಿತ, ಜಗತ್ಶಿಕ್ಷಕ, ಜಗದ್ಗುರು ಶಿವ ತಂದೆಯಿಂದ ಬಂದು ತಮ್ಮ ಸೂರ್ಯವಂಶಿ-ಚಂದ್ರವಂಶಿ ಆಸ್ತಿಯನ್ನು ತೆಗೆದುಕೊಳ್ಳಿ ಎಂಬ ಬರವಣಿಗೆಯಿದ್ದಾಗ ಮನುಷ್ಯರಿಗೆ ತಂದೆಯ ಬಗ್ಗೆ ಅರ್ಥವಾಗುವುದು. ತಂದೆ ಮತ್ತು ಶ್ರೀಕೃಷ್ಣನ ಮಹಿಮೆಯು ಬೇರೆ-ಬೇರೆಯಾಗಿದೆ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಂಡಿದೆ. ಸೇವಾಧಾರಿ ಮಕ್ಕಳು ಇಡೀ ದಿನ ಸೇವೆಗಾಗಿ ಓಡುತ್ತಿರುತ್ತಾರೆ. ತಮ್ಮ ಲೌಕಿಕ ಸೇವೆಯಿದ್ದರೂ ಸಹ ರಜಾ ತೆಗೆದುಕೊಂಡು ಸರ್ವೀಸಿನಲ್ಲಿ ತೊಡಗುತ್ತಾರೆ. ಇದು ಈಶ್ವರೀಯ ಸರ್ಕಾರವಾಗಿದೆ. ವಿಶೇಷವಾಗಿ ಕನ್ಯೆಯರು ಒಂದುವೇಳೆ ಇಂತಹ ಸರ್ವೀಸಿನಲ್ಲಿ ತೊಡಗಿದರೆ ಹೆಸರನ್ನು ಬಹಳ ಪ್ರಸಿದ್ಧ ಮಾಡಬಲ್ಲರು. ಸೇವಾಧಾರಿ ಮಕ್ಕಳ ಪಾಲನೆಯು ಚೆನ್ನಾಗಿ ನಡೆಯುತ್ತಿರುತ್ತದೆ ಏಕೆಂದರೆ ಶಿವ ತಂದೆಯ ಭಂಡಾರವು ಬರ್ಫೂರ್ ಆಗಿದೆ. ಯಾವ ಭಂಡಾರದಿಂದ ತಿಂದರು ಆ ಭಂಡಾರವು ಬರ್ಪೂರ್, ಕಾಲಕಂಟಕ ದೂರವಾಗುವುದು.
ನೀವು ಶಿವವಂಶಿಯರಾಗಿದ್ದೀರಿ, ಅವರು ರಚಯಿತ, ನೀವು ರಚನೆಯಾಗಿದ್ದೀರಿ. ಬಬುಲ್ನಾಥ ಎಂಬ ಹೆಸರು ಬಹಳ ಮಧುರವಾಗಿದೆ, ಶಿವನು ಪ್ರಿಯತಮನೂ ಆಗಿದ್ದಾರಲ್ಲವೆ. ಶಿವ ತಂದೆಯ ಮಹಿಮೆಯೇ ಬೇರೆಯಾಗಿದೆ, ನಿರಾಕಾರ ಎಂಬ ಅಕ್ಷರವನ್ನು ಬರೆಯುವುದರಿಂದ ಅವರಿಗೆ ಯಾವುದೇ ಆಕಾರವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಪ್ರಿಯಾತಿ ಪ್ರಿಯ ಶಿವ ತಂದೆಯಾಗಿದ್ದಾರೆ. ಪರಮಪ್ರಿಯ ಎಂಬ ಶಬ್ಧವನ್ನು ಬರೆಯಲೇಬೇಕಾಗಿದೆ. ಈ ಸಮಯದಲ್ಲಿ ಅವರಿಗೂ ಯುದ್ಧದ ಮೈದಾನವಾಗಿದೆ, ನಿಮಗೂ ಆಗಿದೆ. ಶಿವ ಶಕ್ತಿಯರು ಅಹಿಂಸಕರೆಂದು ಗಾಯನ ಮಾಡಲಾಗುತ್ತದೆ ಆದರೆ ಚಿತ್ರಗಳಲ್ಲಿ ದೇವಿಯರಿಗೂ ಸಹ ಆಯುಧಗಳನ್ನು ಕೊಟ್ಟು ಹಿಂಸೆಯನ್ನು ತೋರಿಸಿ ಬಿಟ್ಟಿದ್ದಾರೆ. ವಾಸ್ತವದಲ್ಲಿ ನೀವು ಯೋಗ ಅಥವಾ ನೆನಪಿನ ಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಆಯುಧಗಳ ಮಾತಿಲ್ಲ. ಗಂಗೆಯ ಪ್ರಭಾವವು ಬಹಳಷ್ಟಿದೆ, ಅನೇಕರಿಗೆ ಸಾಕ್ಷಾತ್ಕಾರವೂ ಆಗುವುದು. ಭಕ್ತಿಮಾರ್ಗದಲ್ಲಿ ಗಂಗಾಜಲವು ಸಿಕ್ಕಿದರೆ ಆಗ ಉದ್ಧಾರವಾಗುವುದೆಂದು ತಿಳಿಯುತ್ತಾರೆ ಆದ್ದರಿಂದ ಗುಪ್ತ ಗಂಗೆಯೆಂದು ಹೇಳುತ್ತಿರುತ್ತಾರೆ. ಬಾಣವು ಹೊಡೆದರು, ಗಂಗೆಯು ಹೊರ ಬಂದಿತೆಂದು ಹೇಳುತ್ತಾರೆ. ಗೋಮುಖದಿಂದಲೂ ಗಂಗೆಯನ್ನು ತೋರಿಸುತ್ತಾರೆ. ನೀವು ಕೇಳಿದರೆ ಗುಪ್ತ ಗಂಗೆಯು ಹೊರ ಬರುತ್ತಿದೆ ಎಂದು ಹೇಳುತ್ತಾರೆ. ಏಣಿಯಲ್ಲಿಯೂ ಸರಸ್ವತಿಯನ್ನು ಗುಪ್ತವಾಗಿ ತೋರಿಸಿದ್ದಾರೆ. ಮನುಷ್ಯರಂತೂ ಅನೇಕ ಮಾತುಗಳನ್ನು ಬರೆದು ಬಿಟ್ಟಿದ್ದಾರೆ, ಇಲ್ಲಂತೂ ಒಂದೇ ಮಾತಾಗಿದೆ. ಕೇವಲ ತಂದೆ ಅಷ್ಟೇ. ಅಲ್ಲಾನು ಬಂದು ಬಹಿಶ್ತ್ನ್ನು ಸ್ಥಾಪನೆ ಮಾಡುತ್ತಾರೆ, ಖುದನು ಹೆವೆನ್ ಸ್ಥಾಪನೆ ಮಾಡುತ್ತಾರೆ, ಈಶ್ವರನು ಸ್ವರ್ಗ ಸ್ಥಾಪನೆ ಮಾಡುತ್ತಾರೆ. ವಾಸ್ತವದಲ್ಲಿ ಈಶ್ವರನು ಒಬ್ಬರೇ ಆಗಿದ್ದಾರೆ. ಇವರು ತಮ್ಮ-ತಮ್ಮ ಭಾಷೆಗಳಲ್ಲಿ ಭಿನ್ನ-ಭಿನ್ನ ಹೆಸರುಗಳನ್ನಿಟ್ಟುಕೊಂಡಿದ್ದಾರೆ ಆದರೆ ಇದನ್ನು ತಿಳಿದುಕೊಳ್ಳುತ್ತಾರೆ - ಅಲ್ಲಾನಿಂದ ಅವಶ್ಯವಾಗಿ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಇಲ್ಲಂತೂ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಖಂಡಿತ ನೆನಪಿಗೆ ಬರುವುದು. ರಚಯಿತನ ರಚನೆಯೇ ಸ್ವರ್ಗವಾಗಿದೆ. ರಾಮನು ನರಕವನ್ನು ರಚಿಸಿದರೆಂದು ಹೇಳುವುದಿಲ್ಲ. ಭಾರತವಾಸಿಗಳಿಗೆ ನಿರಾಕಾರ ರಚಯಿತನು ಯಾರೆಂಬುದು ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನರಕದ ರಚಯಿತನು ರಾವಣನಾಗಿದ್ದಾನೆ, ಅವನನ್ನು ಸುಡುತ್ತಾರೆ. ರಾವಣ ರಾಜ್ಯದಲ್ಲಿ ಭಕ್ತಿಮಾರ್ಗದ ನಾಟಿಯು ಎಷ್ಟು ದೊಡ್ಡದಾಗಿದೆ! ರಾವಣನ ರೂಪವನ್ನೂ ಸಹ ಎಷ್ಟು ಭಯಂಕರವಾಗಿ ತೋರಿಸಿದ್ದಾರೆ. ರಾವಣನು ನಮ್ಮ ಶತ್ರುವೆಂದು ಹೇಳುತ್ತಾರೆ. ತಂದೆಯು ಅರ್ಥವನ್ನು ತಿಳಿಸಿದ್ದಾರೆ - ವಿಸ್ತಾರವು ದೊಡ್ಡದಾಗಿರುವುದರಿಂದ ರಾವಣನ ಶರೀರವನ್ನೂ ದೊಡ್ಡದನ್ನಾಗಿ ಮಾಡುತ್ತಾರೆ. ಶಿವ ತಂದೆಯಂತೂ ಬಿಂದುವಾಗಿದ್ದಾರೆ ಆದರೆ ತಂದೆಯ ಚಿತ್ರವನ್ನು ದೊಡ್ಡರೂಪದಲ್ಲಿ ಮಾಡಿದ್ದಾರೆ ಇಲ್ಲದಿದ್ದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಪೂಜಾರಿಗಳಂತೂ ಆಗಬೇಕಲ್ಲವೆ. ಆತ್ಮವನ್ನು ಕುರಿತು ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತಿರುವ ನಕ್ಷತ್ರವೆಂದು ಹೇಳುತ್ತಾರೆ ಮತ್ತೆ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ ಅಂದಮೇಲೆ ತಂದೆಯು ಕೋಟಿ ಸೂರ್ಯನಿಗಿಂತಲೂ ಹೆಚ್ಚು ತೇಜೋಮಯನು ಹೇಗಾಗುವನು! ಆತ್ಮದ ವರ್ಣನೆ ಮಾಡುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ಒಂದುವೇಳೆ ಪರಮಾತ್ಮನು ಕೋಟಿ ಸೂರ್ಯ ತೇಜೋಮಯನಾಗಿದ್ದರೆ ಪ್ರತಿಯೊಬ್ಬರಲ್ಲಿಯೂ ಹೇಗೆ ಪ್ರವೇಶ ಮಾಡುವರು? ಎಷ್ಟು ಅಯಥಾರ್ಥ ಮಾತುಗಳಾಗಿವೆ! ಯಾವುದನ್ನು ಕೇಳಿ ಮನುಷ್ಯರು ಏನಾಗಿ ಬಿಟ್ಟಿದ್ದಾರೆ. ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ ಅಂದಮೇಲೆ ತಂದೆಯ ರೂಪವೂ ಇದೇ ರೀತಿಯಿರಬೇಕಲ್ಲವೆ. ಆದರೆ ಪೂಜೆಗಾಗಿ ದೊಡ್ಡ ರೂಪವನ್ನು ಮಾಡಿದ್ದಾರೆ. ಕಲ್ಲಿನಿಂದ ಎಷ್ಟು ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿಸುತ್ತಾರೆ. ಹೇಗೆ ಗುಹೆಯಲ್ಲಿ ದೊಡ್ಡ-ದೊಡ್ಡ ರೂಪದಲ್ಲಿ ಪಾಂಡವರನ್ನು ತೋರಿಸಿದ್ದಾರೆ, ಏನನ್ನೂ ಅರಿತುಕೊಂಡಿಲ್ಲ. ಇದು ವಿದ್ಯೆಯಾಗಿದೆ. ವ್ಯಾಪಾರ ಮತ್ತು ವಿದ್ಯೆಯು ಬೇರೆ-ಬೇರೆಯಾಗಿದೆ. ತಂದೆಯು ಓದಿಸುತ್ತಾರೆ ಹಾಗೂ ವ್ಯಾಪಾರವನ್ನೂ ಕಲಿಸುತ್ತಾರೆ. ಬೋರ್ಡಿನ ಮೇಲೂ ಮೊದಲು ತಂದೆಯ ಮಹಿಮೆಯಿರಬೇಕು. ತಂದೆಯ ಪೂರ್ಣ ಮಹಿಮೆಯನ್ನು ಬರೆಯಬೇಕಾಗಿದೆ.ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಬರುತ್ತದೆ. ಆದ್ದರಿಂದ ಮಹಾರಥಿ, ಕುದುರೆ ಸವಾರರೆಂದು ಹೇಳಲಾಗುತ್ತದೆ. ಆಯುಧ ಇತ್ಯಾದಿಗಳ ಮಾತಿಲ್ಲ. ತಂದೆಯು ಬುದ್ಧಿಯ ಬೀಗವನ್ನು ತೆರೆಯುತ್ತಾರೆ. ಈ ಗಾಡ್ರೇಜ್ನ ಬೀಗವನ್ನು ಯಾರೂ ತೆರೆಯಲು ಸಾಧ್ಯವಿಲ್ಲ. ತಂದೆಯ ಬಳಿ ಮಿಲನ ಮಾಡಲು ಬಂದಾಗ ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ - ಮೊದಲು ಎಂದಾದರೂ ಮಿಲನ ಮಾಡಿದ್ದೀರಾ? ಈ ಸ್ಥಾನದಲ್ಲಿ, ಈ ದಿನದಂದು ಯಾವಾಗ ಮಿಲನ ಮಾಡಿದ್ದಿರಿ? ಆಗ ಮಕ್ಕಳು ಹೇಳುತ್ತಾರೆ - ಹೌದು ಬಾಬಾ, 5000 ವರ್ಷಗಳ ಮೊದಲು ಮಿಲನ ಮಾಡಿದ್ದೆವು, ಇಂತಹ ಮಾತುಗಳನ್ನು ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ಇವು ತಿಳಿದುಕೊಳ್ಳುವ ಎಷ್ಟೊಂದು ಗುಹ್ಯ ಮಾತುಗಳಾಗಿವೆ! ಎಷ್ಟೊಂದು ಜ್ಞಾನದ ಯುಕ್ತಿಗಳನ್ನು ತಂದೆಯು ತಿಳಿಸುತ್ತಾರೆ ಆದರೆ ಧಾರಣೆಯು ನಂಬರ್ವಾರ್ ಆಗುತ್ತದೆ. ಶಿವ ತಂದೆಯ ಮಹಿಮೆಯು ಬೇರೆಯಾಗಿದೆ. ಬ್ರಹ್ಮಾ-ವಿಷ್ಣು-ಶಂಕರನ ಮಹಿಮೆಯೇ ಬೇರೆಯಾಗಿದೆ. ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ. ಒಬ್ಬರ ಪಾತ್ರವು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದು ಅನಾದಿ ನಾಟಕವಾಗಿದೆ. ಇದೇ ಮತ್ತೆ ಪುನರಾವರ್ತನೆಯಾಗುವುದು. ನಾವು ಹೇಗೆ ಮೂಲವತನಕ್ಕೆ ಹೋಗುತ್ತೇವೆ ಮತ್ತೆ ಪಾತ್ರವನ್ನಭಿನಯಿಸಲು ಬರುತ್ತೇವೆ ಎಂಬುದು ಈಗ ನಿಮ್ಮ ಬುದ್ಧಿಯಲ್ಲಿ ಕುಳಿತುಕೊಂಡಿದೆ. ಸೂಕ್ಷ್ಮವತನದ ಮೂಲಕ ಹೋಗುತ್ತೀರಿ, ಬರುವ ಸಮಯದಲ್ಲಿ ಸೂಕ್ಷ್ಮವತನವಿರುವುದಿಲ್ಲ. ಎಂದೂ ಯಾರಿಗೂ ಸೂಕ್ಷ್ಮವತನದ ಸಾಕ್ಷಾತ್ಕಾರವಾಗುವುದಿಲ್ಲ. ಸೂಕ್ಷ್ಮವತನದ ಸಾಕ್ಷಾತ್ಕಾರಕ್ಕಾಗಿ ಯಾರೂ ತಪ್ಪಸ್ಸು ಮಾಡುವುದಿಲ್ಲ ಏಕೆಂದರೆ ಅದನ್ನು ಯಾರೂ ತಿಳಿದುಕೊಂಡಿಲ್ಲ. ಯಾರು ಸೂಕ್ಷ್ಮವತನದ ಭಕ್ತರಿರುವುದಿಲ್ಲ, ಸೂಕ್ಷ್ಮವತನವನ್ನು ಈಗಲೇ ರಚಿಸಲಾಗುತ್ತದೆ. ಸೂಕ್ಷ್ಮವತನದ ಮೂಲಕ ಹೋಗಿ ನಂತರ ಹೊಸ ಪ್ರಪಂಚದಲ್ಲಿ ಬರುತ್ತೀರಿ. ಈ ಸಮಯದಲ್ಲಿ ನೀವು ಅಲ್ಲಿಗೆ ಬಂದು ಹೋಗುತ್ತಾ ಇರುತ್ತೀರಿ. ನಿಮ್ಮದು ನಿಶ್ಚಿತಾರ್ಥವಾಗಿದೆ, ಇದು ತಂದೆಯ ಮನೆಯಾಗಿದೆ. ವಿಷ್ಣುವಿಗೆ ಪಿತನೆಂದು ಹೇಳುವುದಿಲ್ಲ. ವಿಷ್ಣುಪುರಿಯು ಮಾವನ ಮನೆಯಾಗಿದೆ. ಕನ್ಯೆಯು ಮಾವನ ಮನೆಗೆ ಹೋಗುವಾಗ ಹಳೆಯ ವಸ್ತ್ರಗಳೆಲ್ಲವನ್ನೂ ಬಿಟ್ಟು ಹೋಗುತ್ತಾರೆ, ನೀವು ಹಳೆಯ ಪ್ರಪಂಚವನ್ನೇ ಬಿಟ್ಟು ಬಿಡುತ್ತೀರಿ. ನಿಮ್ಮ ಹಾಗೂ ಅವರ ವನವಾಸದಲ್ಲಿ ಎಷ್ಟೊಂದು ಅಂತರವಿದೆ. ನೀವೂ ಸಹ ಬಹಳ ಅನಾಸಕ್ತರಾಗಿರಬೇಕು, ದೇಹಾಭಿಮಾನವನ್ನು ಬಿಡಬೇಕಾಗಿದೆ. ಹೆಚ್ಚು ಬೆಲೆಯ ಸೀರೆಯನ್ನು ಧರಿಸುತ್ತೀರೆಂದರೆ ಕೂಡಲೇ ದೇಹಾಭಿಮಾನವು ಬಂದು ಬಿಡುವುದು, ನಾನಾತ್ಮನಾಗಿದ್ದೇನೆ ಎಂಬುದೇ ಮರೆತು ಹೋಗುತ್ತದೆ. ಈ ಸಮಯದಲ್ಲಿ ನೀವು ವನವಾಸದಲ್ಲಿದ್ದೀರಿ. ವನವಾಸ ಮತ್ತು ವಾನಪ್ರಸ್ಥ ಒಂದೇ ಮಾತಾಗಿದೆ. ಶರೀರವನ್ನೂ ಬಿಡಬೇಕಾಗಿದೆ ಅಂದಮೇಲೆ ಸೀರೆಯನ್ನು ಬಿಡುವುದಿಲ್ಲವೆ! ಕಡಿಮೆ ಬೆಲೆಯ ಸೀರೆ ಸಿಕ್ಕಿದರೆ ಹೃದಯವೇ ಚಿಕ್ಕದಾಗಿ ಬಿಡುತ್ತದೆ. ಇದರಲ್ಲಿ ಇನ್ನೂ ಖುಷಿಯಾಗಬೇಕು - ಕಡಿಮೆ ಬೆಲೆಯ ವಸ್ತ್ರ ಸಿಕ್ಕಿರುವುದು ಒಳ್ಳೆಯದೇ ಆಯಿತು ಎಂದು. ಹೆಚ್ಚು ಬೆಲೆಯ ವಸ್ತುವನ್ನಂತೂ ಬಹಳ ಸಂಭಾಲನೆ ಮಾಡಬೇಕಾಗುತ್ತದೆ. ಈ ಧರಿಸುವ, ತಿನ್ನುವ ಚಿಕ್ಕ-ಚಿಕ್ಕ ಮಾತುಗಳೂ ಸಹ ಶ್ರೇಷ್ಠ ಗುರಿಯನ್ನು ತಲುಪುವುದರಲ್ಲಿ ಅಡಚಣೆ ಮಾಡುತ್ತವೆ, ಗುರಿಯು ಬಹಳ ದೊಡ್ಡದಾಗಿದೆ. ಕಥೆಯಲ್ಲಿಯೂ ಸಹ ಹೇಳುತ್ತಾರಲ್ಲವೆ - ಈ ಲಾಠಿಯನ್ನು ಬಿಟ್ಟು ಬಿಡಿ ಎಂದು ಪತಿಗೆ ಹೇಳಿದಳು. ತಂದೆಯು ತಿಳಿಸುತ್ತಾರೆ - ಈ ಹಳೆಯ ವಸ್ತ್ರ, ಹಳೆಯ ಪ್ರಪಂಚ ಎಲ್ಲವೂ ಸಮಾಪ್ತಿಯಾಗುವುದು. ಆದ್ದರಿಂದ ಈ ಹಳೆಯ ಪ್ರಪಂಚದಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ. ಇದಕ್ಕೆ ಬೇಹದ್ದಿನ ಸನ್ಯಾಸವೆಂದು ಹೇಳಲಾಗುತ್ತದೆ. ಸನ್ಯಾಸಿಗಳು ಹದ್ದಿನ ಸನ್ಯಾಸ ಮಾಡಿದ್ದಾರೆ, ಈಗಂತೂ ಅವರೂ ಸಹ ಮತ್ತೆ ಗ್ರಾಮಗಳಿಗೆ ಬಂದು ಬಿಟ್ಟಿದ್ದಾರೆ. ಮೊದಲು ಅವರಲ್ಲಿ ಬಹಳ ಶಕ್ತಿಯಿರುತ್ತಿತ್ತು. ಇಳಿಯುವವರ ಮಹಿಮೆಯೇನಿರುತ್ತದೆ. ಹೊಸ-ಹೊಸ ಆತ್ಮಗಳೂ ಸಹ ಕೊನೆಯವರೆಗೆ ಪಾತ್ರವನ್ನಭಿನಯಿಸಲು ಬರುತ್ತಾ ಇರುತ್ತಾರೆ. ಅವರಲ್ಲಿ ಶಕ್ತಿಯು ಏನಿರುತ್ತದೆ! ನೀವಂತೂ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಇದೆಲ್ಲವನ್ನೂ ತಿಳಿದುಕೊಳ್ಳಲು ಎಷ್ಟು ಒಳ್ಳೆಯ ಬುದ್ಧಿಯು ಬೇಕು. ಸೇವಾಧಾರಿ ಮಕ್ಕಳು ಸರ್ವೀಸಿನಲ್ಲಿ ಆಸಕ್ತಿಯುಳ್ಳವರಾಗಿರುತ್ತಾರೆ. ಜ್ಞಾನ ಸಾಗರನ ಮಕ್ಕಳು ಹೀಗೆ ಭಾಷಣ ಮಾಡಬೇಕು ಹೇಗೆ ತಂದೆಯು ಉಮ್ಮಂಗದಲ್ಲಿರುತ್ತಾರೆ. ಇದರಲ್ಲಿ ಅವಕ್ಕಾಗಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ಬುದ್ಧಿಯಿಂದ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ. ಹಿಂತಿರುಗಿ ಮನೆಗೆ ಹೋಗುವ ಸಮಯವಾಗಿದೆ, ಆದ್ದರಿಂದ ಹಳೆಯ ಪ್ರಪಂಚ ಮತ್ತು ಹಳೆಯ ಶರೀರದಿಂದ ಅನಾಸಕ್ತರಾಗಿರಬೇಕಾಗಿದೆ.
2) ಡ್ರಾಮಾದ ಪ್ರತೀ ದೃಶ್ಯವನ್ನು ನೋಡುತ್ತಾ ಸದಾ ಹರ್ಷಿತರಾಗಿರಬೇಕಾಗಿದೆ.
ಓಂ ಶಾಂತಿ. ಮಕ್ಕಳು ಏನು ಹೇಳಿದರು ಮತ್ತು ಯಾರನ್ನು ಕರೆದರು? ಹೇ ಜ್ಞಾನ ಸಾಗರ, ಜ್ಞಾನ ಸೂರ್ಯ ತಂದೆ........ ಭಗವಂತನೆಂದು ತಂದೆಗೆ ಹೇಳಲಾಗುತ್ತದೆ. ಭಗವಂತನು ತಂದೆಯಾದರೆ ನೀವೆಲ್ಲರೂ ಅವರ ಮಕ್ಕಳಾಗಿದ್ದೀರಿ. ನಾವೆಲ್ಲರೂ ಕತ್ತಲೆಯಲ್ಲಿ ಬಂದಿದ್ದೇವೆ, ನೀವು ನಮ್ಮನ್ನು ಬೆಳಕಿನಲ್ಲಿ ಕರೆದುಕೊಂಡು ಹೋಗಿ ಎಂದು ನೀವು ಮಕ್ಕಳು ಹೇಳುತ್ತೀರಿ. ಬಾಬಾ ಎಂದು ಹೇಳುವುದರಿಂದ ತಂದೆಯನ್ನೇ ಕರೆಯುತ್ತಿದ್ದಾರೆಂದು ಸಿದ್ಧವಾಗುತ್ತದೆ. ಬಾಬಾ ಅಕ್ಷರವನ್ನು ಹೇಳುವುದರಿಂದ ಪ್ರೀತಿಯುಂಟಾಗುತ್ತದೆ ಏಕೆಂದರೆ ತಂದೆಯಿಂದ ಆಸ್ತಿಯನ್ನು ಪಡೆದಿದ್ದೀರಿ. ಕೇವಲ ಈಶ್ವರ ಅಥವಾ ಪ್ರಭು ಎನ್ನುವುದರಿಂದ ತಂದೆಯ, ಆಸ್ತಿಯ ರುಚಿ ಬರುವುದಿಲ್ಲ. ಬಾಬಾ ಎನ್ನುವುದರಿಂದ ಆಸ್ತಿಯ ನೆನಪು ಬರುತ್ತದೆ. ನಾವು ಕತ್ತಲಿನಲ್ಲಿ ಬಂದಿದ್ದೇವೆಂದು ನೀವು ತಂದೆಯನ್ನು ಕರೆಯುತ್ತೀರಿ. ನೀವು ಮತ್ತೆ ಬಂದು ನಮ್ಮನ್ನು ಜ್ಞಾನದ ಮೂಲಕ ನಮ್ಮ ದೀಪಗಳನ್ನು ಬೆಳಗಿಸಿ ಏಕೆಂದರೆ ಆತ್ಮಗಳ ದೀಪವು ನಂದಿ ಹೋಗಿದೆ. ಮನುಷ್ಯರು ಶರೀರ ಬಿಡುತ್ತಾರೆಂದರೆ 12 ದಿನಗಳು ದೀಪವನ್ನಚಿಡುತ್ತಾರೆ. ದೀಪವು ನಂದಿ ಹೋಗದಿರಲೆಂದು ಒಬ್ಬರು ಎಣ್ಣೆಯನ್ನು ಹಾಕಲೆಂದು ಕುಳಿತಿರುತ್ತಾರೆ.
ತಂದೆಯು ತಿಳಿಸುತ್ತಾರೆ - ನೀವು ಭಾರತವಾಸಿಗಳು ಬೆಳಕಿನಲ್ಲಿ ಅರ್ಥಾತ್ ದಿನದಲ್ಲಿದ್ದಿರಿ, ಈಗ ರಾತ್ರಿಯಲ್ಲಿದ್ದೀರಿ. 12 ಗಂಟೆ ದಿನ, 12 ಗಂಟೆ ರಾತ್ರಿ - ಅದಾಗಿದೆ ಹದ್ದಿನ ಮಾತು, ಇದು ಬೇಹದ್ದಿನ ದಿನ, ಬೇಹದ್ದಿನ ರಾತ್ರಿ ಯಾವುದಕ್ಕೆ ಬ್ರಹ್ಮನ ದಿನ - ಸತ್ಯಯುಗ-ತ್ರೇತಾ, ಬ್ರಹ್ಮನ ರಾತ್ರಿ- ದ್ವಾಪರ-ಕಲಿಯುಗವಾಗಿದೆ. ರಾತ್ರಿಯಲ್ಲಿ ಬಹಳ ಕತ್ತಲಿರುತ್ತದೆ, ಮನುಷ್ಯರು ತಡವರಿಸಿ ಬೀಳುತ್ತಾರೆ. ಭಗವಂತನನ್ನು ಹುಡುಕಲು ನಾಲ್ಕೂ ಕಡೆಯೂ ತಿರುಗುತ್ತಾರೆ ಆದರೆ ಪರಮಾತ್ಮನನ್ನು ಪಡೆಯಲು ಸಾಧ್ಯವಿಲ್ಲ. ಪರಮಾತ್ಮನನ್ನು ಪಡೆಯಲು ಭಕ್ತಿಯನ್ನೂ ಮಾಡುತ್ತಾರೆ. ದ್ವಾಪರದಿಂದ ಭಕ್ತಿಯು ಆರಂಭವಾಗುತ್ತದೆ ಅರ್ಥಾತ್ ರಾವಣನ ರಾಜ್ಯವು ಆರಂಭವಾಗುತ್ತದೆ. ದಸರಾ ಹಬ್ಬವನ್ನೂ ಸಹ ಒಂದು ಕಥೆಯನ್ನಾಗಿ ಮಾಡಿದ್ದಾರೆ. ಹೇಗೆ ಸಿನೆಮಾ ನಾಟಕಗಳಿವೆಯೋ ಅದೇರೀತಿ ಕಥೆಗಳನ್ನು ಮನೋರಂಜನೆಗಾಗಿ ಮಾಡಿರುತ್ತಾರೆ. ಶ್ರೀಮತ್ಭಗವದ್ಗೀತಾ ಎನ್ನುವುದು ಸತ್ಯವಾಗಿದೆ, ಪರಮಾತ್ಮನೇ ಮಕ್ಕಳಿಗೆ ರಾಜಯೋಗವನ್ನು ಕಲಿಸಿಕೊಟ್ಟು ರಾಜ್ಯಭಾಗ್ಯವನ್ನು ಕೊಟ್ಟರು. ಮತ್ತೆ ಭಕ್ತಿಮಾರ್ಗದಲ್ಲಿ ಕುಳಿತು ಇದನ್ನೇ ಕಥೆಯನ್ನಾಗಿ ಮಾಡುತ್ತಾರೆ. ವ್ಯಾಸನೇ ಗೀತೆಯನ್ನು ಮಾಡಿದರು ಅರ್ಥಾತ್ ಕಥೆಯನ್ನು ಮಾಡಿದರು. ಸತ್ಯವಾದ ಮಾತನ್ನಂತೂ ನೀವೀಗ ತಂದೆಯಿಂದ ಕೇಳುತ್ತಿದ್ದೀರಿ. ಯಾವಾಗಲೂ ಬಾಬಾ, ಬಾಬಾ ಎಂದು ಹೇಳುತ್ತಿರಬೇಕು. ಪರಮಾತ್ಮನು ನಮ್ಮ ಬಾಬಾ ಆಗಿದ್ದಾರೆ, ಹೊಸ ಪ್ರಪಂಚದ ರಚಯಿತನಾಗಿದ್ದಾರೆ. ಅವಶ್ಯವಾಗಿ ಅವರಿಂದ ಸ್ವರ್ಗದ ಆಸ್ತಿಯು ಸಿಗಬೇಕಾಗಿದೆ. ಈಗಂತೂ ನಾವು 84 ಜನ್ಮಗಳನ್ನು ಭೋಗಿಸಿ ನರಕದಲ್ಲಿ ಬಂದಿದ್ದೀರಿ, ನೀವು ಭಾರತವಾಸಿಗಳು ಸೂರ್ಯವಂಶಿ, ಚಂದ್ರವಂಶಿಗಳಾಗಿದ್ದಿರಿ ಎಂದು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ. ವಿಶ್ವದ ಮಾಲೀಕರಾಗಿದ್ದಿರಿ ಆಗ ಯಾವುದೇ ಬೇರೆ ಧರ್ಮವಿರಲಿಲ್ಲ ಅದಕ್ಕೆ ಸ್ವರ್ಗ ಅಥವಾ ಕೃಷ್ಣ ಪುರಿಯೆಂದು ಹೇಳಲಾಗುತ್ತದೆ. ಇದು ಕಂಸ ಪುರಿಯಾಗಿದೆ. ಬಾಪ್ದಾದಾ ನೆನಪು ತರಿಸುತ್ತಾರೆ - ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ತಂದೆಯೇ ಜ್ಞಾನ ಸಾಗರ, ಶಾಂತಿಯ ಸಾಗರ, ಪತಿತ-ಪಾವನನಾಗಿದ್ದಾರೆ, ಗಂಗೆಯ ನೀರಲ್ಲ. ಎಲ್ಲಾ ವಧುಗಳ ವರನು ಒಬ್ಬರೇ ಭಗವಂತನಾಗಿದ್ದಾನೆಂದು ಮನುಷ್ಯರಿಗೆ ಗೊತ್ತಿಲ್ಲ. ಆತ್ಮಗಳ ತಂದೆಯು ಯಾರು ಎಂದು ಕೇಳಿದರೆ ಎಲ್ಲರೂ ತಬ್ಬಿಬ್ಬಾಗಿ ಬಿಡುತ್ತಾರೆ. ನಮಗೆ ಗೊತ್ತಿಲ್ಲವೆಂದು ಹೇಳಿ ಬಿಡುತ್ತಾರೆ. ಅರೆ ಆತ್ಮ! ನಿಮ್ಮ ತಂದೆಯ ಬಗ್ಗೆಯೇ ನಿಮಗೆ ಗೊತ್ತಿಲ್ಲ. ಗಾಡ್ ಫಾದರ್ ಎನ್ನುತ್ತೀರೆಂದರೆ ಅವರ ನಾಮ-ರೂಪವೇನು, ತಂದೆಯ ಪರಿಚಯವಿದೆಯೆಂದರೆ ಅವರು ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಅರೆ! ಮಕ್ಕಳ ತಂದೆಯು ಎಲ್ಲಿಯಾದರೂ ಸರ್ವವ್ಯಾಪಿಯಾಗಲು ಸಾಧ್ಯವೇ? ರಾವಣನ ಅಸುರೀ ಮತದಂತೆ ನಡೆದು ಎಷ್ಟೊಂದು ಅಜ್ಞಾನಿಗಳಾಗಿದ್ದಾರೆ. ದೇಹಾಭಿಮಾನವೇ ನಂಬರ್ವನ್ ಆಗಿದೆ. ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಳ್ಳುವುದಿಲ್ಲ, ನಾನು ಇಂತಹವನೆಂದು ಹೇಳುತ್ತಾರೆ ಅಷ್ಟೆ. ಇದು ಶರೀರದ ಮಾತಾಗಿದೆ. ಅಸಲಾಗಿ ತಾವು ಯಾರು ಎಂದು ಗೊತ್ತಿಲ್ಲ. ನಾನು ನ್ಯಾಯಾಧೀಶನಾಗಿದ್ದೇನೆ, ಇದಾಗಿದ್ದೇನೆ...... ಎಂದು ಹೇಳುತ್ತಿರುತ್ತಾರೆ ಆದರೆ ಇದು ತಪ್ಪಾಗಿದೆ. ನಾನು ಮತ್ತು ನನ್ನದು ಎಂಬ ಎರಡು ವಸ್ತುಗಳಿವೆ, ಆತ್ಮವು ಅವಿನಾಶಿಯಾಗಿದೆ ಶರೀರವು ವಿನಾಶಿಯಾಗಿದೆ. ಹೆಸರನ್ನು ಶರೀರಕ್ಕೇ ಇಡಲಾಗುತ್ತದೆ. ಆತ್ಮಕ್ಕೆ ಯಾರೂ ಹೆಸರನ್ನಿಡುವುದಿಲ್ಲ. ನನ್ನ ಹೆಸರಂತೂ ಶಿವ ಎಂದಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಶಿವ ಜಯಂತಿಯನ್ನೂ ಸಹ ಆಚರಿಸುತ್ತಾರೆ. ಆ ನಿರಾಕಾರನ ಜಯಂತಿಯು ಹೇಗಾಗಲು ಸಾಧ್ಯ, ಅವರು ಯಾವುದರಲ್ಲಿ ಬರುತ್ತಾರೆ - ಇದು ಯಾರಿಗೂ ಗೊತ್ತಿಲ್ಲ. ಎಲ್ಲಾ ಆತ್ಮಗಳ ಹೆಸರು ಆತ್ಮ, ಪರಮಾತ್ಮನ ಹೆಸರು ಮಾತ್ರ ಶಿವ ಎಂದಾಗಿದೆ. ಬಾಕಿ ಎಲ್ಲರೂ ಸಾಲಿಗ್ರಾಮಗಳಾಗಿದ್ದಾರೆ, ಆತ್ಮಗಳೆಲ್ಲರೂ ಮಕ್ಕಳಾಗಿದ್ದಾರೆ. ಎಲ್ಲಾ ಆತ್ಮರುಗಳ ತಂದೆಯು ಒಬ್ಬ ಶಿವ ತಂದೆಯಾಗಿದ್ದಾರೆ. ಅವರು ಬೇಹದ್ದಿನ ತಂದೆಯೂ ಆಗಿದ್ದಾರೆ, ಅವರನ್ನು ಎಲ್ಲರೂ ಪಾವನ ಮಾಡು ಎಂದು ಕರೆಯುತ್ತಾರೆ. ನಾವೆಲ್ಲರೂ ದುಃಖಿಗಳಾಗಿದ್ದೇವೆ, ಆತ್ಮವು ಕರೆಯುತ್ತದೆ. ದುಃಖದಲ್ಲಿ ಎಲ್ಲಾ ಮಕ್ಕಳು ನೆನಪು ಮಾಡುತ್ತಾರೆ ಮತ್ತೆ ಈ ಮಕ್ಕಳೇ ಸುಖದಲ್ಲಿದ್ದಾಗ ನೆನಪೇ ಮಾಡುವುದಿಲ್ಲ. ರಾವಣನು ದುಃಖಿಯನ್ನಾಗಿ ಮಾಡಿದನು.
ರಾವಣನು ನಿಮ್ಮ ಹಳೆಯ ಶತ್ರುವಾಗಿದ್ದಾನೆಂದು ತಂದೆಯು ತಿಳಿಸುತ್ತಾರೆ. ಇದು ಡ್ರಾಮಾದ ಆಟವು ಮಾಡಲ್ಪಟ್ಟಿದೆ. ಎಲ್ಲರೂ ಈಗ ಅಂಧಕಾರದಲ್ಲಿದ್ದಾರೆ ಆದ್ದರಿಂದ ಜ್ಞಾನಸೂರ್ಯನೇ ಬನ್ನಿ, ನಮ್ಮನ್ನು ಬೆಳಕಿನಲ್ಲಿ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆ. ಭಾರತವು ಸುಖಧಾಮವಾಗಿದ್ದಾಗ ಯಾರೂ ಕರೆಯುತ್ತಿರಲಿಲ್ಲ, ಅಲ್ಲಿ ಯಾವುದೇ ಅಪ್ರಾಪ್ತ ವಸ್ತುವೂ ಇರುವುದಿಲ್ಲ. ಇಲ್ಲಂತೂ ಶಾಂತಿ ದೇವ ಎಂದು ಚೀರಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಶಾಂತಿಯಂತೂ ನಿಮ್ಮ ಸ್ವಧರ್ಮವಾಗಿದೆ, ನಿಮ್ಮ ಕೊರಳಿನ ಹಾರವಾಗಿದೆ, ಆತ್ಮವು ಶಾಂತಿಧಾಮದ ನಿವಾಸಿಯಾಗಿದೆ, ಶಾಂತಿಧಾಮದಿಂದ ಮತ್ತೆ ಸುಖಧಾಮಕ್ಕೆ ಹೋಗುತ್ತದೆ. ಅಲ್ಲಂತೂ ಸುಖವೇ ಸುಖವಿದೆ, ನಿಮಗೆ ಅಲ್ಲಿ ಚೀರಾಡುವ ಗೋಜಿಲ್ಲ. ದುಃಖದಲ್ಲಿಯೇ ದಯೆ ತೋರಿಸಿ, ದುಃಖಹರ್ತ-ಸುಖಕರ್ತ ಬಾಬಾ ಬಾ ಎಂದು ಕೂಗುತ್ತೀರಿ. ಶಿವಬಾಬಾ, ಮಧುರ ಬಾಬಾ ಬನ್ನಿ ಎಂದು ಕರೆಯುತ್ತೀರಿ, ಬರುತ್ತಾರೆ. ಆದ್ದರಿಂದ ಶಿವ ಜಯಂತಿಯನ್ನಾಚರಿಸುತ್ತೀರಿ. ಶ್ರೀಕೃಷ್ಣನು ಸ್ವರ್ಗದ ರಾಜಕುಮಾರನಾಗಿದ್ದನು, ಅವರ ಜಯಂತಿಯನ್ನೂ ಸಹ ಆಚರಿಸುತ್ತಾರೆ ಆದರೆ ಕೃಷ್ಣನು ಯಾವಾಗ ಬಂದನೆಂದು ಯಾರಿಗೂ ಗೊತ್ತಿಲ್ಲ. ರಾಧೆ-ಕೃಷ್ಣರ ಸ್ವಯಂವರದ ನಂತರವೇ ಲಕ್ಷ್ಮೀ-ನಾರಾಯಣರಾಗುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಓ ಗಾಡ್ ಫಾದರ್ ಎಂದು ಕೂಗುತ್ತಾರೆ. ಒಳ್ಳೆಯದು, ಅವರ ನಾಮ-ರೂಪ ಏನೆಂದು ಕೇಳಿದರೆ ಅವರು ನಾಮ-ರೂಪದಿಂದ ಭಿನ್ನವೆಂದು ಹೇಳಿ ಬಿಡುತ್ತಾರೆ. ಅರೆ! ಗಾಡ್ ಫಾದರ್ ಎಂದು ಕರೆಯುತ್ತೀರಿ, ನಾಮ-ರೂಪದಿಂದ ಭಿನ್ನವೆಂದು ಹೇಳುತ್ತೀರಿ. ಆಕಾಶವು ಪೋಲಾರ್ ಆಗಿದೆ, ಅದರ ಹೆಸರೂ ಸಹ ಆಕಾಶವೆಂದು ಇದೆಯಲ್ಲವೆ. ನೀವು ತಂದೆಯ ನಾಮ-ರೂಪ ಗೊತ್ತಿಲ್ಲವೆಂದು ಹೇಳುತ್ತೀರಿ ಅಂದಮೇಲೆ ನಿಮ್ಮ ಬಗ್ಗೆ ನಿಮಗೆ ಗೊತ್ತಿದೆಯೇ ಎಂದು ಕೇಳಿದರೆ ಹೌದು ನಾವಾತ್ಮಗಳಾಗಿದ್ದೇವೆ ಎಂದು ಹೇಳುತ್ತಾರೆ. ಒಳ್ಳೆಯ ಆತ್ಮದ ನಾಮ-ರೂಪವನ್ನು ತಿಳಿಸಿರಿ ಎಂದು ಕೇಳಿದಾಗ ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಆತ್ಮವು ನಾಮ-ರೂಪದಿಂದ ಭಿನ್ನವಾಗಿರಲು ಸಾಧ್ಯವೇ ಇಲ್ಲ. ಆತ್ಮವು ಒಂದು ಬಿಂದು ರೂಪ, ನಕ್ಷತ್ರದ ಸಮಾನವಾಗಿದೆ. ಭೃಕುಟಿಯ ಮಧ್ಯದಲ್ಲಿರುತ್ತದೆ. ಈ ಚಿಕ್ಕ ಆತ್ಮದಲ್ಲಿ 84 ಜನ್ಮಗಳ ಪಾತ್ರವು ನೊಂದಾವಣೆಯಾಗಿದೆ, ಇದು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಆದ್ದರಿಂದ 7 ದಿನದ ಭಟ್ಟಿಯ ಮಾತಿನ ಗಾಯನವಿದೆ. ದ್ವಾಪರದಿಂದ ರಾವಣ ರಾಜ್ಯವು ಪ್ರಾರಂಭವಾದಾಗಿನಿಂದ ವಿಕಾರಗಳ ಪ್ರವೇಶತೆಯಾಯಿತು. ಏಣಿಯನ್ನು ಇಳಿಯುತ್ತಲೇ ಬಂದಿರಿ, ಈಗ ಎಲ್ಲರಿಗೂ ಗ್ರಹಣ ಹಿಡಿದಿರುವುದರಿಂದ ಕಪ್ಪಾಗಿ ಬಿಟ್ಟಿದ್ದಾರೆ. ಆದ್ದರಿಂದ ಜ್ಞಾನಸೂರ್ಯ ಬನ್ನಿ, ಬಂದು ನಮ್ಮೆಲ್ಲರನ್ನೂ ಬೆಳಕಿನಲ್ಲಿ ಕರೆದುಕೊಂಡು ಹೋಗು ಎಂದು ಕರೆಯುತ್ತಾರೆ. ಜ್ಞಾನಾಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರ ವಿನಾಶವಾಯಿತು... ಬುದ್ಧಿಯಲ್ಲಿ ತಂದೆಯೇ ಬರುತ್ತಾರೆ. ಜ್ಞಾನಾಂಜನ ಗುರು ಕೊಟ್ಟರೆಂದಲ್ಲ ಏಕೆಂದರೆ ಗುರುಗಳು ಅನೇಕರಿದ್ದಾರೆ, ಅವರಲ್ಲಿ ಜ್ಞಾನವೆಲ್ಲಿದೆ? ಇದು ಅವರ ಗಾಯನವಲ್ಲ. ಜ್ಞಾನ ಸಾಗರ, ಪತಿತ-ಪಾವನ ಸರ್ವರ ಸದ್ಗತಿದಾತ ಒಬ್ಬರೇ ತಂದೆಯಾಗಿದೆ. ಬೇರೆ ಯಾರೂ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಸಾಧುಗಳು ಭಗವಂತನನ್ನು ಮಿಲನ ಮಾಡಲು ಅನೇಕ ಮಾರ್ಗಗಳನ್ನು ತಿಳಿಸುತ್ತಾರೆ. ಶಾಸ್ತ್ರವನ್ನು ಓದುವುದು, ಯಜ್ಞ, ತಪ ಇತ್ಯಾದಿಗಳನ್ನು ಮಾಡುವುದು ಇವೆಲ್ಲವೂ ಭಗವಂತನನ್ನು ಮಿಲನ ಮಾಡುವುದಕ್ಕೆ ಮಾರ್ಗಗಳೆಂದು ಹೇಳುತ್ತಾರೆ ಆದರೆ ಪತಿತರು ಮತ್ತೆ ಪಾವನ ಪ್ರಪಂಚಕ್ಕೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಸ್ವಯಂ ನಾನೇ ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರನು ದೇವತೆಯಾಗಿದ್ದಾರೆ, ಅವರನ್ನು ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ. ಎಲ್ಲಾ ದೇವತೆಗಳ ತಂದೆಯು ಶಿವನಾಗಿದ್ದಾನೆ. ಪ್ರಜಾಪಿತ ಬ್ರಹ್ಮನೂ ಸಹ ಇಲ್ಲಿಯೇ ಇರಬೇಕಲ್ಲವೆ ಅಂದಾಗ ಪ್ರಜೆಗಳೂ ಇಲ್ಲಿಯೇ ಇದ್ದಾರೆ. ಹೆಸರನ್ನು ಬರೆಯಲ್ಪಟ್ಟಿದೆ - ಪ್ರಜಾಪಿತ ಬ್ರಹ್ಮಾಕುಮಾರೀಸ್ ಸಂಸ್ಥೆ. ಇವರೆಲ್ಲರೂ ಮಕ್ಕಳಾಗಿದ್ದಾರೆ, ಬೇಕಾದಷ್ಟು ಬಿ.ಕೆ.ಗಳಿದ್ದಾರೆ. ಆಸ್ತಿಯು ಶಿವ ತಂದೆಯಿಂದ ಸಿಗುತ್ತದೆ, ಬ್ರಹ್ಮನಿಂದಲ್ಲ. ಆಸ್ತಿಯು ತಾತನಿಂದ ಸಿಗುತ್ತದೆ. ಬ್ರಹ್ಮನ ಮೂಲಕ ಕುಳಿತುಕೊಂಡು ಯೋಗ್ಯರನ್ನಾಗಿ ಮಾಡುತ್ತಾರೆ. ಬ್ರಹ್ಮನ ಮೂಲಕ ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಬಾಬಾ, ನಾವು ನಿಮ್ಮವರು, ನಿಮ್ಮಿಂದ ಆಸ್ತಿಯನ್ನು ಪಡೆಯುತ್ತೇವೆಂದು ನೀವು ಮಕ್ಕಳೂ ಹೇಳುತ್ತೀರಿ. ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ಶ್ರೀಮತ ಅಥವಾ ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಗೀತೆಯಾಗಿದೆ. ಭಗವಂತ ಒಬ್ಬ ನಿರಾಕಾರಿಯಾಗಿದ್ದಾರೆ. ಮಕ್ಕಳಿಗೆ ನೀವು 84 ಜನ್ಮಗಳಿದ್ದೀರೆಂದು ತಂದೆಯೇ ತಿಳಿಸುತ್ತಾರೆ. ಆತ್ಮ, ಪರಮಾತ್ಮನು ಬಹಳ ಕಾಲ ಅಗಲಿದ್ದರು ಎಂದು...... ಬಹಳ ಕಾಲ ಭಾರತವಾಸಿಗಳೇ ಇದ್ದರು, ಬೇರೆ ಯಾವುದೇ ಧರ್ಮವು ಇರಲಿಲ್ಲ. ಮೊಟ್ಟ ಮೊದಲು ಅವರೇ ಅಗಲಿದವರಾಗಿದ್ದಾರೆ. ತಂದೆಯಿಂದ ಅಗಲಿ ಪಾತ್ರವನ್ನಭಿನಯಿಸಲು ಬಂದಿದ್ದಾರೆ. ಹೇ ಆತ್ಮಗಳೇ, ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದು ನೆನಪಿನ ಯಾತ್ರೆ ಅಥವಾ ಯೋಗಾಗ್ನಿಯಾಗಿದೆ. ತಲೆಯ ಮೇಲೆ ಯಾವ ಪಾಪಗಳ ಹೊರೆಯಿದೆಯೋ ಅದು ಯೋಗದ ಅಗ್ನಿಯಿಂದಲೇ ಭಸ್ಮವಾಗುವುದು. ನೀವು ಚಿನ್ನದ ಯುಗದಲ್ಲಿದ್ದಿರಿ, ಈಗ ಕಬ್ಬಿಣದ ಯುಗದಲ್ಲಿ ಬಂದಿದ್ದೀರಿ. ಮಧುರ ಮಕ್ಕಳೇ, ಈಗ ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ಇದು ಬುದ್ಧಿಯ ಕೆಲಸವಾಗಿದೆ, ದೇಹ ಸಹಿತವಾಗಿ ದೇಹದ ಎಲ್ಲಾ ಸಂಬಂಧವನ್ನು ಮರೆತು ನನ್ನನ್ನು ನೆನಪು ಮಾಡಿ, ನೀವು ಆತ್ಮರಾಗಿದ್ದೀರಲ್ಲವೆ. ಇದು ನಿಮ್ಮ ಶರೀರವಾಗಿದೆ. ನಾನು, ನಾನು ಎಂದು ಆತ್ಮವೇ ಹೇಳುತ್ತದೆ, ರಾವಣನು ನಿಮ್ಮನ್ನು ಪತಿತರನ್ನಾಗಿ ಮಾಡಿದ್ದಾನೆ. ಈ ಆಟವು ಮಾಡಲ್ಪಟ್ಟಿದೆ, ಪಾವನ ಭಾರತ ಮತ್ತು ಪತಿತ ಭಾರತವಾಗಿರುತ್ತದೆ. ನೀವು ಪತಿತರಾದಾಗ ರಾಮ ರಾಜ್ಯ ಬೇಕೆಂದು ಕೂಗುತ್ತೀರಿ. ಹೇಳುವುದೇನೋ ಹೇಳುತ್ತಾರೆ ಆದರೆ ಅದರ ಅರ್ಥವಂತೂ ಗೊತ್ತಿಲ್ಲ. ಜ್ಞಾನವನ್ನು ಕೊಡುವವರು ಜ್ಞಾನದ ಸಾಗರನಾಗಿದ್ದಾರೆ. ತಂದೆಯು ಬಂದು ಸೆಕೆಂಡಿನಲ್ಲಿ ಆಸ್ತಿಯನ್ನು ಕೊಡುತ್ತಾರೆ, ನೀವು ಈಗ ಸೂರ್ಯವಂಶಿ, ಚಂದ್ರವಂಶಿಯ ಆಸ್ತಿಯನ್ನು ಪಡೆಯಲು ತಂದೆಯ ಮಕ್ಕಳಾಗಿದ್ದೀರಿ. ನಂತರ ಸತ್ಯ-ತ್ರೇತಾಯುಗದಲ್ಲಿ ಅಮರರಾಗಿ ಹೋಗುತ್ತೀರಿ. ಇಂತಹವರು ಶರೀರ ಬಿಟ್ಟರೆಂದು ಅಲ್ಲಿ ಹೇಳುವುದಿಲ್ಲ, ಸತ್ಯಯುಗದಲ್ಲಿ ಅಕಾಲ ಮೃತ್ಯುವಾಗುವುದಿಲ್ಲ. ನೀವು ಕಾಲನ ಮೇಲೆ ವಿಜಯವನ್ನು ಪಡೆಯುತ್ತೀರಿ, ದುಃಖದ ಹೆಸರಿರುವುದಿಲ್ಲ. ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ನಾವಂತೂ ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆಂದು ತಂದೆಯು ಹೇಳುತ್ತಾರೆ. ಅಲ್ಲಂತೂ ಬಹಳ ವೈಭವಗಳಿರುತ್ತವೆ, ಭಕ್ತಿಮಾರ್ಗದಲ್ಲಿ ಮಂದಿರಗಳನ್ನು ಕಟ್ಟಿಸುವಾಗಲೂ ನಿಮ್ಮಲ್ಲಿ ಎಷ್ಟೊಂದು ಹಣವಿತ್ತು, ಭಾರತವು ಏನಾಗಿತ್ತು! ಉಳಿದ ಬೇರೆಲ್ಲಾ ಆತ್ಮಗಳು ನಿರಾಕಾರಿ ಪ್ರಪಂಚದಲ್ಲಿದ್ದರು. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಈಗ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ಮೊದಲಿಗೆ ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯಾಗಿದ್ದಾರೆ, ನಂತರ ಬ್ರಹ್ಮಾ-ವಿಷ್ಣು-ಶಂಕರ ನಂತರ ಈ ಪ್ರಪಂಚ. ಜ್ಞಾನದಿಂದ ನೀವು ಮಕ್ಕಳಿಗೆ ಸದ್ಗತಿಯಾಗುತ್ತದೆ. ಗಾಯನವೂ ಇದೆ - ಜ್ಞಾನ, ಭಕ್ತಿ, ವೈರಾಗ್ಯ. ಹಳೆಯ ಪ್ರಪಂಚದಿಂದ ವೈರಾಗ್ಯವುಂಟಾಗುತ್ತದೆ ಏಕೆಂದರೆ ಸತ್ಯಯುಗದ ರಾಜ್ಯಭಾಗ್ಯ ಸಿಗುತ್ತದೆ. ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ. ನನ್ನನ್ನು ನೆನಪು ಮಾಡುವುದರಿಂದ ನನ್ನಬಳಿ ಬರುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1) ತಲೆಯ ಮೇಲಿರುವ ಹೊರೆಯನ್ನು ಯೋಗಾಗ್ನಿಯಿಂದ ಭಸ್ಮ ಮಾಡಬೇಕಾಗಿದೆ. ಬುದ್ದಿಯಿಂದ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕು.