text
stringlengths 0
61.5k
|
---|
ಧಾರಣೆಗಾಗಿ ಮುಖ್ಯಸಾರ: |
1. ನಾವು ಶಿವತಂದೆಯ ವಾರಸುಧಾರರಾಗಿದ್ದೇವೆ, ಅವರು ನಮ್ಮ ವಾರಸುಧಾರರಾಗಿದ್ದಾರೆ, ಈ ನಿಶ್ಚಯದಿಂದ ತಂದೆಯ ಮೇಲೆ ಪೂರ್ಣ ಬಲಿಹಾರಿಯಾಗಬೇಕಾಗಿದೆ. ತಂದೆಯ ಬಳಿ ಎಷ್ಟು ಜಮಾ ಮಾಡುತ್ತೀರಿ ಅಷ್ಟು ಸುರಕ್ಷಿತವಾಗುತ್ತದೆ. ಕೆಲವರದು ಮಣ್ಣುಪಾಲಾಯಿತು..... ಎಂದು ಹೇಳಲಾಗುತ್ತದೆ. |
2. ಮುಳ್ಳಿನಿಂದ ಹೂ ಈಗಲೇ ಆಗಬೇಕಾಗಿದೆ. ಏಕರಸ ನೆನಪು ಮತ್ತು ಸರ್ವೀಸಿನಿಂದ ತಂದೆಯ ಪ್ರೀತಿಯ ಅಧಿಕಾರಿಗಳಾಗಬೇಕಾಗಿದೆ. ದಿನ-ಪ್ರತಿದಿನ ನೆನಪಿನಲ್ಲಿ ಹೆಜ್ಜೆಯನ್ನು ಮುಂದುವರೆಸುತ್ತಾ ಇರಬೇಕಾಗಿದೆ. |
ಓಂ ಶಾಂತಿ . ಮಕ್ಕಳು ನೆನಪಿನ ಯಾತ್ರೆಯಲ್ಲಿ ಕುಳಿತಿದ್ದೀರಿ. ಇದಕ್ಕೆ ಧ್ಯಾನದಲ್ಲಿ ಅಥವಾ ಶಾಂತಿಯಲ್ಲಿ ಕುಳಿತುಕೊಳ್ಳುವುದು ಎಂದು ಹೇಳುತ್ತಾರೆ ಕೇವಲ ಶಾಂತಿಯಲ್ಲಿ ಕುಳಿತುಕೊಳ್ಳುವುದಲ್ಲ, ಅನುಭವ ಮಾಡುತ್ತಿದ್ದೀರಿ, ಸ್ವಧರ್ಮದಲ್ಲಿ ಸ್ಥಿತರಾಗಿದ್ದೀರಿ ಆದರೆ ಯಾತ್ರೆಯಲ್ಲಿಯೂ ಇದ್ದೀರಿ, ಈ ಯಾತ್ರೆಯನ್ನು ಕಲಿಸುವಂತಹ ತಂದೆಯು ಜೊತೆಯಲ್ಲಿಯೂ ಕರೆದುಕೊಂಡು ಹೋಗುತ್ತಾರೆ. ಆ ಬ್ರಾಹ್ಮಣರು ದೈಹಿಕ ಯಾತ್ರೆಗೆ ಕರೆದುಕೊಂಡು ಹೋಗುವ ಮಾರ್ಗದರ್ಶಕರಾಗಿದ್ದಾರೆ. ನೀವು ಆತ್ಮಿಕ ಬ್ರಾಹ್ಮಣರಾಗಿದ್ದೀರಿ, ಬ್ರಾಹ್ಮಣ ವರ್ಣ ಅಥವಾ ಕುಲವೆಂದು ಹೇಳುತ್ತಾರೆ. ಈಗ ಮಕ್ಕಳು ನೆನಪಿನ ಯಾತ್ರೆಯಲ್ಲಿ ಕುಳಿತಿದ್ದೀರಿ, ಅನ್ಯ ಸತ್ಸಂಗಗಳಲ್ಲಿ ಅವರು ಕುಳಿತುಕೊಂಡರೂ ಸಹ ಗುರುವಿನ ನೆನಪು ಬರುವುದು. ಗುರುಗಳು ಬಂದು ಪ್ರವಚನವನ್ನು ತಿಳಿಸಲಿ ಎಂದು ಬುದ್ದಿಯಲ್ಲಿರುತ್ತದೆ. ಅದೆಲ್ಲವೂ ಭಕ್ತಿಮಾರ್ಗವಾಗಿದೆ, ಇದು ನೆನಪಿನ ಯಾತ್ರೆಯಾಗಿದೆ, ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ. ನೀವು ತುಕ್ಕನ್ನು ಇಳಿಸಿಕೊಳ್ಳಲು ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ. ತಂದೆಯ ಆದೇಶವಾಗಿದೆ - ನೆನಪಿನಿಂದಲೇ ತುಕ್ಕು ಇಳಿಯುವುದು ಏಕೆಂದರೆ ನಾನೇ ಪತಿತ-ಪಾವನನಾಗಿದ್ದೇನೆ, ನಾನು ಯಾರದೇ ನೆನಪಿನಿಂದ ಬರುವುದಿಲ್ಲ. ನಾನು ಬರುವ ಸಮಯವೂ ಸಹ ನಾಟಕದಲ್ಲಿ ನಿಗಧಿಯಾಗಿದೆ. ಯಾವಾಗ ಪತಿತ ಪ್ರಪಂಚವು ಪರಿವರ್ತನೆಯಾಗಿ ಪಾವನ ಪ್ರಪಂಚವಾಗಬೇಕೋ, ಆದಿ ಸನಾತನ ದೇವಿ-ದೇವತಾ ಧರ್ಮವು ಯಾವುದು ಪ್ರಾಯಃಲೋಪವಾಗಿದೆಯೋ ಅದನ್ನು ಪುನಃ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತೇನೆ. ಈ ಬ್ರಹ್ಮಾರವರಿಗಾಗಿಯೇ ತಿಳಿಸಲಾಗಿದೆ - ಬ್ರಹ್ಮಾ ಸೋ ವಿಷ್ಣು, ಸೆಕೆಂಡಿನಲ್ಲಿ ಆಗುತ್ತಾರೆ ಮತ್ತೆ ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತದೆ. ಇವೂ ಸಹ ಬುದ್ಧಿಯಿಂದ ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಶೂದ್ರರಾಗಿದ್ದವರೇ ಈಗ ಬ್ರಾಹ್ಮಣ ವರ್ಣದಲ್ಲಿ ಬಂದಿದ್ದೀರಿ. ನೀವು ಬ್ರಾಹ್ಮಣರಾಗುತ್ತೀರಿ. ಆಗ ನಿಮ್ಮಲ್ಲಿರುವ ತುಕ್ಕು ತೆಗೆಯಲು ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮಗೆ ಈ ನೆನಪಿನ ಯಾತ್ರೆಯನ್ನು ಕಲಿಸಿಕೊಡುತ್ತಾರೆ. ಈ ರಚನೆಯ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನಂತೂ ತಿಳಿದುಕೊಂಡಿರಿ. ಇದರಲ್ಲಿ ನಿಧಾನವಾಗುವುದಿಲ್ಲ. ಈಗ ಇರುವುದೂ ಸಹ ಕಲಿಯುಗವೇ, ಈಗ ಕಲಿಯುಗದ ಆದಿಯೆಂದು ಅವರು ಕೇವಲ ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಇದು ಕಲಿಯುಗದ ಅಂತ್ಯವಾಗಿದೆ, ಘೋರ ಅಂಧಕಾರವಿದೆ. ನಿಮಗೆ ಇವೆಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. |
ನೀವು ಮಕ್ಕಳು ಮುಂಜಾನೆಯಲ್ಲಿ ಕುಳಿತುಕೊಳ್ಳುತ್ತೀರೆಂದರೆ ನೆನಪಿನಲ್ಲಿ ಕುಳಿತುಕೊಳ್ಳಿ. ಇಲ್ಲದಿದ್ದರೆ ಮಾಯೆಯ ಬಿರುಗಾಳಿ ಬರುತ್ತದೆ. ಉದ್ಯೋಗ-ವ್ಯವಹಾರಗಳ ಕಡೆ ಬುದ್ಧಿಯೋಗವು ಹೋಗುತ್ತದೆ. ಇದೆಲ್ಲವೂ ಹೊರಗಿನ ಪಂಚಾಯಿತಿ ಅಲ್ಲವೆ. ಹೇಗೆ ಜೇಡರ ಹುಳು ಎಷ್ಟೊಂದು ಜಾಲವನ್ನು ಕಟ್ಟುತ್ತದೆ. ಎಲ್ಲವನ್ನೂ ಆವರಿಸಿಕೊಳ್ಳುತ್ತದೆ. ದೇಹದ ಪ್ರಪಂಚವು ಎಷ್ಟೊಂದಿದೆ, ಚಿಕ್ಕಪ್ಪ, ದೊಡ್ಡಪ್ಪ, ಗುರು-ಗೋಸಾಯಿ..... ಎಷ್ಟು ದೊಡ್ಡ ಜಾಲವು ಕಂಡು ಬರುತ್ತದೆ. ದೇಹ ಸಹಿತವಾಗಿ ಇದೆಲ್ಲವನ್ನೂ ದೂರ ಸರಿಸಬೇಕಾಗಿದೆ. ಒಂಟಿ ದೇಹೀ ಆಗಬೇಕಾಗಿದೆ. ಮನುಷ್ಯರು ಶರೀರವನ್ನು ಬಿಟ್ಟಾಗ ಎಲ್ಲವನ್ನೂ ಮರೆತು ಹೋಗುತ್ತಾರೆ. ತಾವು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ಈ ಪ್ರಪಂಚವು ಸಮಾಪ್ತಿಯಾಗಲಿದೆ ಎಂಬ ಜ್ಞಾನವು ಬುದ್ಧಿಯಲ್ಲಿದೆ. ತಂದೆಯು ತಿಳಿಸುತ್ತಾರೆ - ಜ್ಞಾನವನ್ನು ಹೇಳಲು ಬರದಿದ್ದರೆ ಕೇವಲ ನೆನಪು ಮಾಡಿ. ಹೇಗೆ ಈ ಬ್ರಹ್ಮಾ ತಂದೆಯು ತಂದೆಯನ್ನು ನೆನಪು ಮಾಡುತ್ತಾರೆ ಕನ್ಯೆಯು ಪತಿಯನ್ನು ನೆನಪು ಮಾಡುತ್ತಾಳೆ ಏಕೆಂದರೆ ಪತಿಯೇ ಪರಮೇಶ್ವರನಾಗಿ ಬಿಡುತ್ತಾರೆ. ಆದ್ದರಿಂದ ತಂದೆಯೊಂದಿಗಿನ ಬುದ್ಧಿಯು ಪತಿಯ ಕಡೆಗೆ ಹೊರಟು ಹೋಗುತ್ತದೆ. ಇಲ್ಲಂತೂ ಇವರು ಪತಿಯರಿಗೂ ಪತಿ ವರನಾಗಿದ್ದಾರಲ್ಲವೆ. ನೀವೆಲ್ಲರೂ ವಧುಗಳಾಗಿದ್ದೀರಿ, ಎಲ್ಲರೂ ಭಗವಂತನ ಭಕ್ತಿ ಮಾಡುತ್ತಾರೆ. ಎಲ್ಲಾ ಭಕ್ತಿನಿಯರು ರಾವಣನ ಪಹರೆಯಲ್ಲಿ ಬಂಧನದಲ್ಲಿದ್ದಾರೆ ಅಂದಾಗ ಅವಶ್ಯವಾಗಿ ತಂದೆಗೆ ದಯೆ ಬರುತ್ತದೆಯಲ್ಲವೆ. ತಂದೆಯು ದಯಾ ಹೃದಯಿಯಾಗಿದ್ದಾರೆ, ಅವರಿಗೇ ದಯಾ ಸಾಗರನೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಗುರುಗಳಂತೂ ಅನೇಕ ಪ್ರಕಾರದವರಿದ್ದಾರೆ. ಯಾರು ಸ್ವಲ್ಪ ಶಿಕ್ಷಣ ಕೊಡುವರೋ ಅವರಿಗೆ ಗುರುವೆಂದು ಹೇಳಿ ಬಿಡುತ್ತಾರೆ. ಇಲ್ಲಂತೂ ತಂದೆಯು ಸಮ್ಮುಖದಲ್ಲಿ ರಾಜಯೋಗವನ್ನು ಕಲಿಸುತ್ತಾರೆ, ಪರಮಾತ್ಮನ ಹೊರತು ಮತ್ತ್ಯಾರಿಗೂ ರಾಜಯೋಗವನ್ನು ಕಲಿಸುವುದು ಬರುವುದೇ ಇಲ್ಲ. ಪರಮಾತ್ಮನೇ ಬಂದು ರಾಜಯೋಗವನ್ನು ಕಲಿಸಿದ್ದರು ಮತ್ತೆ ಅದರಿಂದೇನಾಯಿತು? ಇದು ಯಾರಿಗೂ ತಿಳಿದಿಲ್ಲ. ಗೀತೆಯ ಪ್ರಮಾಣವನ್ನು ಅನೇಕರು ಕೊಡುತ್ತಾರೆ. ಚಿಕ್ಕ ಕುಮಾರಿಯರೂ ಸಹ ಗೀತೆಯನ್ನು ಕಂಠಪಾಠ ಮಾಡಿಕೊಳ್ಳುತ್ತಾರೆ ಆಗ ಅವರದು ಸ್ವಲ್ಪ ಮಹಿಮೆಯಾಗುತ್ತದೆ. ಗೀತೆಯೇನೂ ಮರೆಯಾಗಿಲ್ಲ, ಗೀತೆಗೆ ಬಹಳ ಮಹಿಮೆಯಿದೆ. ಗೀತಾ ಜ್ಞಾನದಿಂದಲೇ ತಂದೆಯು ಇಡೀ ಪ್ರಪಂಚವನ್ನು ಪರಿವರ್ತನೆ ಮಾಡುತ್ತಾರೆ. ನಿಮ್ಮ ಕಾಯವನ್ನು ಕಲ್ಪತರು, ಕಲ್ಪವೃಕ್ಷದ ಸಮಾನ ಅಥವಾ ಅಮರವನ್ನಾಗಿ ಮಾಡಿ ಬಿಡುತ್ತಾರೆ. |
ಮಕ್ಕಳು ತಂದೆಯ ನೆನಪಿನಲ್ಲಿರುತ್ತೀರಿ, ತಂದೆಯ ಆಹ್ವಾನ ಮಾಡುವುದಿಲ್ಲ. ನೀವು ತಂದೆಯ ನೆನಪಿನಲ್ಲಿದ್ದು ಉನ್ನತಿ ಮಾಡಿಕೊಳ್ಳುತ್ತಿದ್ದೀರಿ. ತಂದೆಯ ಆದೇಶದಂತೆ ನಡೆಯುವ ಉಮ್ಮಂಗವೂ ಇರಬೇಕು. ನಾವು ಶಿವ ತಂದೆಯನ್ನು ನೆನಪು ಮಾಡಿಯೇ ಭೋಜನವನ್ನು ಸ್ವೀಕರಿಸುತ್ತೇವೆ ಅಂದರೆ ಶಿವ ತಂದೆಯ ಜೊತೆ ಸೇವಿಸುತ್ತೇವೆ. ಅಂಗಡಿಯಲ್ಲಿಯೂ ಅಲ್ಪಸ್ವಲ್ಪ ಸಮಯವು ಸಿಕ್ಕಿಯೇ ಸಿಗುತ್ತದೆ. ತಂದೆಗೆ ಪತ್ರ ಬರೆಯುತ್ತಾರೆ, ಕುರ್ಚಿಯ ಮೇಲೆ ಕುಳಿತುಕೊಂಡಾಗ ನೆನಪಿನಲ್ಲಿ ಕುಳಿತು ಬಿಡುತ್ತೇವೆ. ಅಧಿಕಾರಿಗಳು ಬಂದು ನೋಡುತ್ತಾರೆ, ಆಗ ಕುಳಿತು-ಕುಳಿತಿದ್ದಂತೆಯೇ ಇವರು ಮಾಯವಾಗಿ ಬಿಡುತ್ತಾರೆ ಅರ್ಥಾತ್ ಅಶರೀರಿಯಾಗಿ ಬಿಡುತ್ತಾರೆ. ಕೆಲವರ ಕಣ್ಣುಗಳು ಮುಚ್ಚಲ್ಪಡುತ್ತವೆ, ಇನ್ನೂ ಕೆಲವರ ಕಣ್ಣುಗಳು ತೆರೆದಿರುತ್ತವೆ. ಇನ್ನೂ ಕೆಲವರು ಈ ರೀತಿ ಕುಳಿತಿರುತ್ತಾರೆ, ಅವರಿಗೆ ಏನೂ ಕಾಣುವುದಿಲ್ಲ. ಹೇಗೆ ಮಾಯವಾದಂತೆ ಇರುತ್ತಾರೆ ಅಂದರೆ ತಂದೆಯು ಅವರ ಬುದ್ಧಿಯ ದಾರವನ್ನು ಸೆಳೆದರು, ಅವರು ಮೋಜಿನಲ್ಲಿ ಕುಳಿತಿರುತ್ತಾರೆ. ಅವರೊಂದಿಗೆ ನಿಮಗೆ ಏನಾಯಿತೆಂದರೆ ಯಾರಾದರೂ ಕೇಳುತ್ತಾರೆ ಆಗ ನಾವು ತಂದೆಯ ನೆನಪಿನಲ್ಲಿ ಕುಳಿತಿದ್ದೆವು ಎಂದು ಹೇಳುತ್ತಾರೆ. ನಾವು ತಂದೆಯ ಬಳಿಗೆ ಹೋಗಬೇಕೆಂದು ಬುದ್ಧಿಯಲ್ಲಿರುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗುವುದರಿಂದ ನೀವು ನನ್ನ ಬಳಿಗೆ ಬಂದು ಬಿಡುತ್ತೀರಿ. ಪವಿತ್ರರಾಗದೇ ಅಲ್ಲಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಈಗ ಪವಿತ್ರರಾಗುವುದು ಹೇಗೆ? ಅದನ್ನು ತಂದೆಯೇ ತಿಳಿಸುತ್ತಾರೆ, ಮನುಷ್ಯರು ತಿಳಿಸಲು ಸಾಧ್ಯವಿಲ್ಲ. ನೀವು ಅಲ್ಪಸಲ್ಪ ತಿಳಿದುಕೊಂಡಿದ್ದರೆ ಅನ್ಯರ ಕಲ್ಯಾಣವನ್ನೂ ಮಾಡುವಿರಿ. ನೀವು ಅನ್ಯರ ಕಲ್ಯಾಣ ಮಾಡುವ ತಂದೆಯ ಪರಿಚಯವನ್ನು ಕೊಡುವ ಪುರುಷಾರ್ಥವನ್ನು ಅವಶ್ಯವಾಗಿ ಮಾಡಬೇಕಾಗಿದೆ. ಭಕ್ತಿಮಾರ್ಗದಲ್ಲಿಯೂ ಸಹ ಓ ಗಾಡ್ ಫಾದರ್, ದಯೆ ತೋರಿಸಿ ಎಂದು ಹೇಳಿ ನೆನಪು ಮಾಡುತ್ತಾರೆ. ಹೀಗೆ ಕೂಗುವುದು ಒಂದು ಹವ್ಯಾಸವಾಗಿ ಬಿಟ್ಟಿದೆ. ತಂದೆಯು ನೀವು ಮಕ್ಕಳನ್ನು ತಮ್ಮ ಸಮಾನ ಕಲ್ಯಾಣಕಾರಿಗಳನ್ನಾಗಿ ಮಾಡುತ್ತಾರೆ.ಮಾಯೆಯು ಎಲ್ಲರನ್ನೂ ಎಷ್ಟು ಬುದ್ದಿಹೀನರನ್ನಾಗಿ ಮಾಡಿ ಬಿಟ್ಟಿದೆ. ಲೌಕಿಕ ತಂದೆಯೂ ಸಹ ಮಕ್ಕಳ ನಡವಳಿಕೆಯು ಸರಿಯಿಲ್ಲದಿರುವುದನ್ನು ನೋಡಿದರೆ ನೀನು ಬುದ್ಧಿ ಹೀನನಾಗಿದ್ದೀಯಾ ಎಂದು ಹೇಳುತ್ತಾರೆ. ಒಂದು ವರ್ಷದಲ್ಲಿಯೇ ತಂದೆಯ ಎಲ್ಲಾ ಆಸ್ತಿಯನ್ನು ಕಳೆದು ಬಿಡುತ್ತಾರೆ. ಅದೇರೀತಿ ಬೇಹದ್ದಿನ ತಂದೆಯೂ ಸಹ ಹೇಳುತ್ತಾರೆ - ನಿಮ್ಮನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡಿದ್ದೆ, ಈಗ ನಿಮ್ಮ ಚಲನೆಯನ್ನಾದರೂ ನೋಡಿಕೊಳ್ಳಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಎಷ್ಟು ಅದ್ಭುತವಾದ ಆಟವಾಗಿದೆ. ಭಾರತದ ಎಷ್ಟೊಂದು ಅವನತಿಯಾಗಿ ಬಿಡುತ್ತದೆ. ಇದು ಭಾರತವಾಸಿಗಳ ಅವನತಿಯಾಗಿದೆ. ನಾವು ಬಹಳ ಕೆಳಗಿಳಿದಿದ್ದೇವೆ, ಕಲಿಯುಗೀ ತಮೋಪ್ರಧಾನರಾಗಿದ್ದೇವೆ ಎಂಬುದನ್ನು ಅವರು ತಿಳಿದುಕೊಳ್ಳುವುದೇ ಇಲ್ಲ. ಭಾರತವು ಸ್ವರ್ಗವಾಗಿತ್ತು ಅರ್ಥಾತ್ ಮನುಷ್ಯರು ಸ್ವರ್ಗವಾಸಿಗಳಾಗಿದ್ದರು. ಈಗ ಅದೇ ಮನುಷ್ಯರು ನರಕವಾಸಿಗಳಾಗಿದ್ದಾರೆ. ಈ ಜ್ಞಾನವು ಯಾರಲ್ಲಿಯೂ ಇಲ್ಲ. ಬ್ರಹ್ಮಾ ತಂದೆಗೂ ಸಹ ತಿಳಿದಿರಲಿಲ್ಲ, ಈಗ ಬುದ್ಧಿಯಲ್ಲಿ ಚಮತ್ಕಾರ ಬಂದಿದೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಏಣಿಯನ್ನು ಅವಶ್ಯವಾಗಿ ಕೆಳಗಿಳಿಯಬೇಕಾಗುವುದು. ಮೇಲೇರಲು ಸ್ಥಳವು ಇಲ್ಲ, ಇಳಿಯುತ್ತಾ-ಇಳಿಯುತ್ತಾ ಪತಿತರಾಗಬೇಕಾಗಿದೆ. ಈ ಮಾತು ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ನೀವು ಮಕ್ಕಳಿಗೆ ತಿಳಿಸಿದ್ದಾರೆ, ಮತ್ತೆ ನೀವು ಭಾರತವಾಸಿಗಳಿಗೆ ತಿಳಿಸುತ್ತೀರಿ - ನೀವು ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಯಾಗಿದ್ದೀರಿ. ನಿಮಗೇ 84 ಜನ್ಮಗಳಿದೆ. ಪುನರ್ಜನ್ಮವನ್ನಂತೂ ಎಲ್ಲರೂ ಒಪ್ಪುತ್ತಾರಲ್ಲವೆ ಅಂದಾಗ ಎಲ್ಲರೂ ಅವಶ್ಯವಾಗಿ ಕೆಳಗಿಳಿಯಬೇಕಾಗಿದೆ. ಎಷ್ಟು ಪುನರ್ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನೂ ಸಹ ತಂದೆಯು ತಿಳಿಸಿದ್ದಾರೆ. ಈ ಸಮಯದಲ್ಲಿ ನೀವು ಅನುಭವ ಮಾಡುತ್ತೀರಿ - ನಾವು ಪಾವನ ದೇವಿ-ದೇವತೆಗಳಾಗಿದ್ದೆವು ನಂತರ ರಾವಣನು ಪತಿತರನ್ನಾಗಿ ಮಾಡಿದರು. ಮತ್ತೆ ಶೂದ್ರರಿಂದ ದೇವತೆಗಳನ್ನಾಗಿ ಮಾಡುವುದಕ್ಕಾಗಿ ತಂದೆಯೇ ಬಂದು ಓದಿಸಬೇಕಾಗುತ್ತದೆ. ತಂದೆಗೆ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಈಗ ಆ ಸಮಯವು ಬಹು ಬೇಗನೆ ಬರಲಿದೆ. ಯಾವಾಗ ಎಲ್ಲರಿಗೂ ಸಹ ಇದು ಅರ್ಥವಾಗುವುದು, ಹೇಗಿದ್ದವರು ಏನಾಗಿ ಬಿಟ್ಟಿದ್ದಾರೆ! ನಾಟಕವು ಹೇಗೆ ಮಾಡಲ್ಪಟ್ಟಿದೆ. ನಾವು ಲಕ್ಷ್ಮೀ-ನಾರಾಯಣರಂತೆ ಆಗಬಹುದೆಂದು ಯಾರಿಗೂ ಸ್ವಪ್ನದಲ್ಲಿಯೂ ಇರಲಿಲ್ಲ. ತಂದೆಯು ಎಷ್ಟೊಂದು ಸ್ಮೃತಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ತಂದೆಯಿಂದ ಈಗ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ಶ್ರೀಮತದಂತೆ ನಡೆಯಬೇಕಾಗಿದೆ. ನೆನಪಿನ ಯಾತ್ರೆಯ ಅಭ್ಯಾಸ ಮಾಡಬೇಕಾಗಿದೆ. ನಿಮಗೆ ತಿಳಿದಿದೆ - ಪಾದ್ರಿಗಳು ತಿರುಗಾಡಲು ಹೋಗುತ್ತಾರೆಂದರೆ ಎಷ್ಟೊಂದು ಶಾಂತಿಯುತವಾಗಿ ನಡೆಯುತ್ತಾರೆ, ಅವರು ಕ್ರಿಸ್ತನ ನೆನಪಿನಲ್ಲಿರುತ್ತಾರೆ. ಕ್ರಿಸ್ತನ ಜೊತೆ ಅವರ ಪ್ರೀತಿಯಿದೆ. ನೀವು ಆತ್ಮಿಕ ಮಾರ್ಗದರ್ಶಕರ ಪ್ರೀತಿ ಬುದ್ಧಿಯು ಪರಮ ಪ್ರಿಯ, ಪರಮಪಿತ ಪರಮಾತ್ಮನ ಜೊತೆ ಇದೆ. ಇದನ್ನೂ ತಿಳಿದುಕೊಂಡಿದ್ದೀರಿ - ನಂಬರ್ವಾರ್ ಪುರುಷಾರ್ಥದನುಸಾರ ಕಲ್ಪದ ಹಿಂದಿನ ತರಹ ರಾಜಧಾನಿಯು ಅವಶ್ಯವಾಗಿ ಸ್ಥಾಪನೆಯಾಗುವುದು. ಯಾರೆಷ್ಟು ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆಯುವರೋ ಅವರೇ ಪಡೆಯುವರು. ತಂದೆಯು ಬಹಳ ಒಳ್ಳೊಳ್ಳೆಯ ಮತವನ್ನು ಕೊಡುತ್ತಾರೆ, ಆದರೂ ಸಹ ಗ್ರಹಚಾರವು ಈ ರೀತಿ ಕುಳಿತುಕೊಳ್ಳುತ್ತದೆ ಶ್ರೀಮತದಂತೆ ನಡೆಯುವುದೇ ಇಲ್ಲ. ನಿಮಗೆ ತಿಳಿದಿದೆ - ಶ್ರೀಮತದಂತೆ ನಡೆಯುವುದರಲ್ಲಿಯೇ ವಿಜಯವಿದೆ. ನಿಶ್ಚಯದಲ್ಲಿಯೇ ವಿಜಯವಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನ ಮತದಂತೆ ನಡೆಯಿರಿ. ಈ ಬ್ರಹ್ಮಾರವರು ಮತ ಕೊಡುತ್ತಾರೆಂದು ಏಕೆ ತಿಳಿಯುತ್ತೀರಿ? ಯಾವಾಗಲೂ ಶಿವ ತಂದೆಯು ಸಲಹೆ ನೀಡುತ್ತಾರೆಂದೇ ತಿಳಿಯಿರಿ. ಅವರಂತೂ ಸೇವೆಯ ಮತವನ್ನೇ ಕೊಡುತ್ತಾರೆ. ಬಾಬಾ, ಈ ವ್ಯಾಪಾರ ಮಾಡುವುದೇ? ಎಂದು ಕೆಲವರು ಕೇಳುತ್ತಾರೆ. ತಂದೆಯು ಈ ಮಾತುಗಳಿಗಾಗಿ ಮತ ಕೊಡುವುದಿಲ್ಲ. ಹೇ ಪತಿತ-ಪಾವನ, ಬಂದು ನಮ್ಮನ್ನು ಪಾವನ ಮಾಡಿ ಎಂದೇ ನನ್ನನ್ನು ಕರೆಯುತ್ತೀರಿ ಆದ್ದರಿಂದ ನಾನು ಆ ಯುಕ್ತಿಯನ್ನು ತಿಳಿಸುತ್ತೇನೆ. ಇದು ಬಹಳ ಸಹಜವಾಗಿದೆ. ನಿಮ್ಮ ಹೆಸರೇ ಆಗಿದೆ – ಗುಪ್ತ ಸೇನೆ. ಇದಕ್ಕೆ ಅವರು ಸ್ಥೂಲ ಬಾಣ ಇತ್ಯಾದಿಗಳನ್ನು ತೋರಿಸಿದ್ದಾರೆ ಆದರೆ ಇದರಲ್ಲಿ ಬಾಣ ಇತ್ಯಾದಿಗಳ ಮಾತಿಲ್ಲ. ಇದೆಲ್ಲವೂ ಭಕ್ತಿ ಮಾರ್ಗವಾಗಿದೆ. |
ತಂದೆಯು ಬಂದು ಸತ್ಯವಾದ ಮಾರ್ಗವನ್ನು ತಿಳಿಸುತ್ತಾರೆ, ಇದರಿಂದ ನೀವು ಅರ್ಧಕಲ್ಪ ಸತ್ಯ ಖಂಡದಲ್ಲಿ ಹೋಗುತ್ತೀರಿ. ಅಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ. ಯಾರಿಗೆ ತಿಳಿಸಿದರೂ ಸಹ ಅವರು ಒಪ್ಪುವುದೇ ಇಲ್ಲ. ಕೇವಲ ಭಾರತವೇ ಇರಲು ಹೇಗೆ ಸಾಧ್ಯ ಎನ್ನುತ್ತಾರೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಆಗ ಮತ್ತ್ಯಾವುದೇ ಧರ್ಮಗಳಿರಲಿಲ್ಲ ನಂತರ ವೃಕ್ಷವು ವೃದ್ಧಿ ಹೊಂದುತ್ತಾ ಇರುತ್ತದೆ. ನೀವು ಕೇವಲ ತಮ್ಮ ತಂದೆಯನ್ನು, ತಮ್ಮ ಧರ್ಮ-ಕರ್ಮವನ್ನು ಮರೆತು ಹೋಗಿದ್ದೀರಿ. ಒಂದುವೇಳೆ ತನ್ನನ್ನು ದೇವಿ-ದೇವತಾ ಧರ್ಮದವನೆಂದು ತಿಳಿದುಕೊಂಡಿದ್ದೇ ಆದರೆ ಅಶುದ್ಧ ಪದಾರ್ಥಗಳನ್ನು ಸೇವಿಸುವುದೇ ಇಲ್ಲ, ಆದರೂ ಸೇವಿಸುತ್ತಾರೆ ಏಕೆಂದರೆ ಆ ಗುಣವಿಲ್ಲ. ಆ ಕಾರಣ ತಮ್ಮನ್ನು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಇಲ್ಲವಾದರೆ ನಮ್ಮ ಹಿರಿಯರು ಇಷ್ಟು ಪವಿತ್ರರಾಗಿದ್ದಾರೆ ಮತ್ತು ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಸಂಕೋಚವಾಗಬೇಕು ಆದರೆ ತಮ್ಮ ಧರ್ಮವನ್ನೇ ಮರೆತು ಬಿಟ್ಟಿದ್ದಾರೆ. ನೀವೀಗ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಯಾವುದೇ ಮಾತಿದ್ದರೆ ನೀವು ಇದನ್ನು ಹೇಳಬಹುದು - ಈ ಮಾತನ್ನು ತಂದೆಯು ನಮಗೆ ಇನ್ನೂ ತಿಳಿಸಿಲ್ಲ. ಇಲ್ಲದಿದ್ದರೆ ವ್ಯರ್ಥ ಮಾತುಗಳಲ್ಲಿ ತಬ್ಬಿಬ್ಬಾಗುತ್ತಾರೆ ಆದ್ದರಿಂದ ತಿಳಿಸಿ - ನಾವಿನ್ನೂ ಓದುತ್ತಿದ್ದೇವೆ, ಎಲ್ಲವನ್ನೂ ಈಗಲೇ ಅರಿತುಕೊಂಡರೆ ಮತ್ತೆ ವಿನಾಶವಾಗಿ ಬಿಡುವುದು ಆದರೆ ಇಲ್ಲ ಇನ್ನೂ ಸಮಯವಿದೆ, ನಾವು ಓದುತ್ತಿದ್ದೇವೆ. ಅಂತಿಮದಲ್ಲಿ ಸಂಪೂರ್ಣ ಪವಿತ್ರರಾಗಿ ಬಿಡುತ್ತೇವೆ. ನಂಬರ್ವಾರ್ ಪುರುಷಾರ್ಥದನುಸಾರ ತುಕ್ಕು ಕಳೆಯುತ್ತಾ ಹೋಗುವುದು, ಸತೋಪ್ರಧಾನರಾಗಿ ಬಿಡುತ್ತೀರಿ ಮತ್ತೆ ಈ ಪತಿತ ಪ್ರಪಂಚದ ವಿನಾಶವಾಗುವುದು. ಪರಮಾತ್ಮನು ಎಲ್ಲಿಯೋ ಅವಶ್ಯವಾಗಿ ಬಂದಿದ್ದಾರೆ, ಮತ್ತೆ ಗುಪ್ತವಾಗಿದ್ದಾರೆ ಎಂಬ ಮಾತನ್ನು ಇತ್ತೀಚೆಗೆ ಕೆಲವರು ಹೇಳುತ್ತಾರೆ. ಸಮಯವಂತೂ ಖಂಡಿತವಾಗಿ ವಿನಾಶದ ಸಮಯವಾಗಿದೆಯಲ್ಲವೆ. ತಂದೆಯು ಮುಕ್ತಿದಾತ, ಮಾರ್ಗದರ್ಶಕ ಆಗಿದ್ದಾರೆ. ಇವರು ಹಿಂತಿರುಗಿ ಕರೆದುಕೊಂಡು ಹೋಗುತ್ತಾರೆ ಆಗ ಎಲ್ಲರೂ ಸೊಳ್ಳೆಗಳೋಪಾದಿಯಲ್ಲಿ ಶರೀರವನ್ನು ಬಿಡುತ್ತಾರೆ. ಇದನ್ನೂ ತಿಳಿದುಕೊಂಡಿದ್ದಾರೆ - ಎಲ್ಲರೂ ಏಕರಸವಾಗಿ ನೆನಪಿನಲ್ಲಿ ಕುಳಿತುಕೊಳ್ಳುವುದಿಲ್ಲ. ಕೆಲವರ ಯೋಗವು ಅಕ್ಯುರೇಟ್ ಆಗಿ ಇರುತ್ತದೆ. ಕೆಲವರದು ಅರ್ಧಗಂಟೆ, ಕೆಲವರದು 15 ನಿಮಿಷ. ಇನ್ನೂ ಕೆಲವರಂತೂ ಒಂದು ನಿಮಿಷವೂ ನೆನಪಿನಲ್ಲಿರುವುದಿಲ್ಲ. ನಾವು ಇಡೀ ಸಮಯ ತಂದೆಯ ನೆನಪಿನಲ್ಲಿರುತ್ತೇವೆ ಎಂದು ಕೆಲವರು ಹೇಳುತ್ತಾರೆ ಅಂದಮೇಲೆ ಅವರ ಚಹರೆಯು ಸದಾ ಖುಷಿಯಿಂದ ಹೊಳೆಯುತ್ತಿರುವುದು. ಇಂತಹ ಮಕ್ಕಳಿಗೆ ಅತೀಂದ್ರಿಯ ಸುಖವಿರುತ್ತದೆ. ಬುದ್ಧಿಯು ಎಲ್ಲಿಯೂ ಅಲೆದಾಡುವುದಿಲ್ಲ. ಅವರು ಸುಖದ ಅನುಭವ ಮಾಡುತ್ತಾರೆ. ಬುದ್ಧಿಯೂ ಸಹ ಹೇಳುತ್ತದೆ - ಒಬ್ಬ ಪ್ರಿಯತಮನ ನೆನಪಿನಲ್ಲಿ ಕುಳಿತಿದ್ದರೆ ಎಷ್ಟೊಂದು ತುಕ್ಕು ಕಳೆಯಬಹುದು ಮತ್ತು ಅದೇ ಹವ್ಯಾಸವಾಗಿ ಬಿಡುವುದು. ನೆನಪಿನ ಯಾತ್ರೆಯಿಂದ ನೀವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ಚಕ್ರದ ನೆನಪೂ ಬಂದು ಬಿಡುತ್ತದೆ. ಕೇವಲ ನೆನಪಿನಲ್ಲಿರುವುದೇ ಪರಿಶ್ರಮವಾಗಿದೆ. ಬುದ್ಧಿಯಲ್ಲಿ ಚಕ್ರವೂ ಸುತ್ತುತ್ತಿರುತ್ತದೆ. |
ನೀವೀಗ ಮಾ: ಬೀಜರೂಪರಾಗಿದ್ದೀರಿ, ನೆನಪಿನ ಜೊತೆಗೆ ಸ್ವದರ್ಶನ ಚಕ್ರವನ್ನೂ ತಿರುಗಿಸಬೇಕಾಗಿದೆ. ನೀವು ಭಾರತವಾಸಿಗಳೇ ಲೈಟ್ಹೌಸ್ ಆಗಿದ್ದೀರಿ. ಆಧ್ಯಾತ್ಮಿಕ ಲೈಟ್ಹೌಸ್ ಆಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸುತ್ತೀರಿ. ಅದನ್ನೂ ತಿಳಿಸಬೇಕಲ್ಲವೆ. ನೀವು ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುತ್ತೀರಿ ಆದ್ದರಿಂದ ನೀವು ಆಧ್ಯಾತ್ಮಿಕ ಲೈಟ್ಹೌಸ್ ಆಗಿದ್ದೀರಿ. ನಿಮ್ಮ ಸ್ವದರ್ಶನ ಚಕ್ರವು ಸುತ್ತುತ್ತಿರುತ್ತದೆ. ಹೆಸರನ್ನು ಬರೆಯಬೇಕಾಗಿದೆ ಅಂದಮೇಲೆ ತಿಳಿಸಲು ಬೇಕಲ್ಲವೆ. ತಂದೆಯು ತಿಳಿಸುತ್ತಿರುತ್ತಾರೆ - ನೀವು ಸಮ್ಮುಖದಲ್ಲಿ ಕುಳಿತಿದ್ದೀರಿ. ಯಾರು ತಂದೆ ಜೊತೆಯಿದ್ದಾರೆಯೋ ಅವರಿಗಾಗಿಯೇ ಸಮ್ಮುಖದಲ್ಲಿ ಜ್ಞಾನದ ಮಳೆಯಾಗುವುದು. ಎಲ್ಲದಕ್ಕಿಂತ ಹೆಚ್ಚಿನದಾಗಿ ಸಮ್ಮುಖದಲ್ಲಿ ಕೇಳುವಾಗ ಆನಂದವಾಗುತ್ತದೆ, ಎರಡನೆಯದಾಗಿ ಕ್ಯಾಸೆಟ್ನ ಮೂಲಕ ಕೇಳುವುದು, ಮೂರನೆಯದಾಗಿ ಮುರುಳಿ ಓದುವುದು. ಶಿವ ತಂದೆಯು ಬ್ರಹ್ಮಾರವರ ಮೂಲಕ ಎಲ್ಲವನ್ನೂ ತಿಳಿಸುತ್ತಾರೆ. ಈ ಬ್ರಹ್ಮಾರವರೂ ಸಹ ತಿಳಿದುಕೊಂಡಿದ್ದಾರಲ್ಲವೆ ಆದರೂ ಸಹ ನೀವು ಇದನ್ನೇ ತಿಳಿದುಕೊಳ್ಳಿ - ನಮಗೆ "ಶಿವ ತಂದೆಯು ತಿಳಿಸುತ್ತಾರೆ", ಈ ರೀತಿ ತಿಳಿದುಕೊಳ್ಳದೇ ಇರುವ ಕಾರಣ ಬಹಳ ಉಲ್ಲಂಘನೆ ಮಾಡುತ್ತಾರೆ. ಶಿವ ತಂದೆಯು ಏನು ಹೇಳುವರು ಅದು ಕಲ್ಯಾಣಕಾರಿಯೇ ಆಗಿದೆ. ಭಲೆ ಅಕಲ್ಯಾಣವಾಗಬಹುದು ಅದೂ ಸಹ ಕಲ್ಯಾಣದ ರೂಪದಲ್ಲಿ ಬದಲಾಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಪ್ರತೀ ಆದೇಶದಂತೆ ನಡೆದು ತಮ್ಮ ಉನ್ನತಿ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನಿಡಬೇಕಾಗಿದೆ. ನೆನಪಿನಲ್ಲಿಯೇ ಭೋಜನವನ್ನು ತಯಾರಿಸಬೇಕು ಹಾಗೂ ಸ್ವೀಕರಿಸಬೇಕಾಗಿದೆ. |
2. ಆತ್ಮಿಕ ಲೈಟ್ಹೌಸ್ ಆಗಿ ಎಲ್ಲರಿಗೆ ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಬೇಕಾಗಿದೆ. ಅವಶ್ಯವಾಗಿ ತಂದೆಯ ಸಮಾನ ಕಲ್ಯಾಣಕಾರಿಗಳಾಗಬೇಕಾಗಿದೆ. |
ಓಂ ಶಾಂತಿ. ಹೇಗೆ ಯಾರಾದರೂ ರೋಗಿಯಾಗಿದ್ದರೆ ಆ ರೋಗಿಯು ದುಃಖದಿಂದ ಬೇಗನೆ ಮುಕ್ತನಾಗುವ ಆಸೆಯನ್ನಿಟ್ಟುಕೊಳ್ಳುತ್ತಾರೆ, ವೈದ್ಯರೊಂದಿಗೆ ಕೇಳುತ್ತಾರೆ - ಈ ಖಾಯಿಲೆಯು ಯಾವಾಗ ಕಳೆಯುವುದು ಎಂದು. ಅವು ಹದ್ದಿನ ಮಾತುಗಳಾಗಿವೆ, ಇದು ಬೇಹದ್ದಿನ ಮಾತಾಗಿದೆ. ತಂದೆಯೇ ಬಂದು ಮಕ್ಕಳಿಗೆ ಸಲಹೆ ನೀಡುತ್ತಾರೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಇದು ಸುಖ ಮತ್ತು ದುಃಖದ ಆಟವಾಗಿದೆ. ಹಾಗೆ ಹೇಳುವುದಾದರೆ ನೀವು ಮಕ್ಕಳಿಗೆ ಸತ್ಯಯುಗದಲ್ಲಿ ಹೋಗುವುದಕ್ಕಿಂತಲೂ ಹೆಚ್ಚು ಲಾಭವು ಇಲ್ಲಿದೆ. ನೀವು ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ನಾವು ಈಶ್ವರನ ಮಡಿಲಿನಲ್ಲಿದ್ದೇವೆ, ಈಶ್ವರೀಯ ಸಂತಾನರಾಗಿದ್ದೇವೆ. ಈ ಸಮಯದಲ್ಲಿ ನಮ್ಮದು ಬಹಳ ಶ್ರೇಷ್ಠಾತಿ ಶ್ರೇಷ್ಠ ಗುಪ್ತ ಮಹಿಮೆ ಆಗಿದೆ. ಮನುಷ್ಯ ಮಾತ್ರರು ತಂದೆಯನ್ನು ಶಿವ, ಈಶ್ವರ, ಭಗವಂತನೆಂದೂ ಹೇಳುತ್ತಾರೆ ಆದರೆ ಅರಿತುಕೊಂಡಿಲ್ಲ, ಕೇವಲ ಕರೆಯುತ್ತಿರುತ್ತಾರೆ. ಡ್ರಾಮಾನುಸಾರವೇ ಈ ರೀತಿಯಾಗಿದೆ, ಜ್ಞಾನ ಮತ್ತು ಅಜ್ಞಾನ, ದಿನ ಮತ್ತು ರಾತ್ರಿ. ಹಾಡುತ್ತಾ ಬರುತ್ತಾರೆ ಆದರೆ ತಮೋಪ್ರಧಾನ ಬುದ್ಧಿಯವರು ಈ ರೀತಿಯಾಗಿ ಬಿಟ್ಟಿದ್ದಾರೆ ತಮ್ಮನ್ನು ತಮೋಪ್ರಧಾನರೆಂದು ತಿಳಿದುಕೊಳ್ಳುವುದೇ ಇಲ್ಲ. ಯಾರ ಅದೃಷ್ಟದಲ್ಲಿ ತಂದೆಯ ಆಸ್ತಿಯಿದೆಯೋ ಅವರ ಬುದ್ದಿಯಲ್ಲಿ ಇದು ಕುಳಿತುಕೊಳ್ಳುವುದು. ಮಕ್ಕಳಿಗೆ ತಿಳಿದಿದೆ - ನಾವು ಸಂಪೂರ್ಣ ಘೋರ ಅಂಧಕಾರದಲ್ಲಿದ್ದೆವು, ಈಗ ತಂದೆಯು ಬಂದಿದ್ದಾರೆ ಆದ್ದರಿಂದ ಎಷ್ಟು ಬೆಳಕು ಸಿಕ್ಕಿದೆ! ತಂದೆಯು ಯಾವ ಜ್ಞಾನವನ್ನು ತಿಳಿಸುತ್ತಾರೆಯೋ ಅದು ಯಾವುದೇ ವೇದ, ಶಾಸ್ತ್ರ ಇತ್ಯಾದಿಗಳಲ್ಲಿ ಇಲ್ಲ. ಅದನ್ನೂ ಸಹ ತಂದೆಯು ಸಿದ್ಧ ಮಾಡಿ ತಿಳಿಸುತ್ತಾರೆ. ನೀವು ಮಕ್ಕಳಿಗೆ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಬೆಳಕನ್ನು ಕೊಡುತ್ತೇನೆ ಅದು ನಂತರ ಪ್ರಾಯಃಲೋಪವಾಗಿ ಬಿಡುತ್ತದೆ. ನನ್ನ ವಿನಃ ಮತ್ತ್ಯಾರಿಗೂ ಜ್ಞಾನ ಸಿಗಲು ಸಾಧ್ಯವಿಲ್ಲ. ಈ ಜ್ಞಾನವು ಮತ್ತೆ ಪ್ರಾಯಃಲೋಪವಾಗಿ ಬಿಡುತ್ತದೆ. ಬುದ್ದಿಯಲ್ಲಿ ಬರುತ್ತದೆ - ಕಲಿಯುಗವು ಕಳೆದು ಪುನಃ 5000 ವರ್ಷಗಳನಂತರ ಪುನರಾವರ್ತನೆಯಾಗುವುದು, ಇದು ಹೊಸ ಮಾತಾಗಿದೆ, ಶಾಸ್ತ್ರಗಳಲ್ಲಿಲ್ಲ. |
ತಂದೆಯು ಈ ಜ್ಞಾನವನ್ನು ಎಲ್ಲರಿಗೂ ಒಂದೇ ಸಮನಾಗಿ ಓದಿಸುತ್ತಾರೆ, ಆದರೆ ಧಾರಣೆಯಲ್ಲಿ ನಂಬರ್ ವಾರ್ ಇದೆ. ಕೆಲವರು ಒಳ್ಳೆಯ ಸೇವಾಧಾರಿ ಮಕ್ಕಳು ಬರುತ್ತಾರೆ. ಆಗ ತಂದೆಯ ನರ್ತನವೂ ಸಹ ಅದೇರೀತಿ ನಡೆಯುತ್ತದೆ. ನೃತ್ಯ ಮಾಡುವವರನ್ನು ನೋಡುವವರು ಬಹಳ ಉಮ್ಮಂಗದಲ್ಲಿದ್ದಾಗ ನರ್ತನ ಮಾಡುವವರೂ ಸಹ ಬಹಳ ಚೆನ್ನಾಗಿ ನರ್ತಿಸುತ್ತಾರೆ. ಕೆಲವರೇ ಕುಳಿತಿದ್ದರೆ ಸಾಮಾನ್ಯ ರೀತಿಯಿಂದ ಜ್ಞಾನ ನರ್ತನ ನಡೆಯುತ್ತದೆ. ವಾಹ್! ವಾಹ್! ಎನ್ನುವವರು ಅನೇಕರಿದ್ದರೆ ಅವರ ಉಲ್ಲಾಸವು ಹೆಚ್ಚುವುದು. ಇಲ್ಲಿಯೂ ಸಹ ಹಾಗೆಯೇ, ಮುರುಳಿಯನ್ನಂತೂ ಎಲ್ಲಾ ಮಕ್ಕಳು ಕುಳಿತು ಕೇಳಿಸಿಕೊಳ್ಳುತ್ತಾರೆ, ಆದರೆ ಸನ್ಮುಖದಲ್ಲಿ ಕೇಳುವ ಮಾತೇ ಬೇರೆಯಿರುತ್ತದೆಯಲ್ಲವೆ. ಕೃಷ್ಣನು ನರ್ತನ ಮಾಡುತ್ತಿದ್ದನೆಂದು ತೋರಿಸುತ್ತಾರೆ ಆದರೆ ಆ ನರ್ತನವಲ್ಲ. ವಾಸ್ತವದಲ್ಲಿ ಜ್ಞಾನದ ನರ್ತನವಾಗಿದೆ, ಶಿವ ತಂದೆಯು ಸ್ವಯಂ ತಿಳಿಸುತ್ತಾರೆ - ನಾನು ಜ್ಞಾನ ನರ್ತನ ಮಾಡಲು ಬರುತ್ತೇನೆ. ನಾನು ಜ್ಞಾನ ಸಾಗರನಾಗಿದ್ದೇನೆ ಅಂದಾಗ ಒಳ್ಳೊಳ್ಳೆಯ ಮಾತುಗಳು ಹೊರ ಬರುತ್ತವೆ. ಇದು ಜ್ಞಾನದ ಮುರುಳಿಯಾಗಿದೆ, ಯಾವುದೇ ಕಟ್ಟಿಗೆಯ ಮುರುಳಿಯಲ್ಲ. ಪತಿತ-ಪಾವನನು ಬಂದು ಸ್ವಯಂ ರಾಜಯೋಗವನ್ನು ಕಲಿಸುವರೋ ಅಥವಾ ಕೇವಲ ಕಟ್ಟಿಗೆಯ ಮುರುಳಿಯನ್ನು ನುಡಿಸುವರೋ? ತಂದೆಯು ಬಂದು ಈ ರೀತಿ ರಾಜಯೋಗವನ್ನು ಕಲಿಸುತ್ತಾರೆಂಬುದು ಯಾರ ವಿಚಾರದಲ್ಲಿಯೂ ಇರುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಉಳಿದ ಯಾವುದೇ ಮನುಷ್ಯ ಮಾತ್ರರಿಗೆ ಇದು ಬುದ್ಧಿಯಲ್ಲಿ ಬರಲು ಸಾಧ್ಯವಿಲ್ಲ. ಬರುವವರಲ್ಲಿಯೂ ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ಕಲ್ಪದ ಮೊದಲು ಹೇಗೆ ಮಾಡಿದ್ದಾರೆಯೋ ಅದರನುಸಾರವೇ ಪುರುಷಾರ್ಥ ಮಾಡುತ್ತಾ ಇರುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲಿನ ತರಹ ತಂದೆಯು ಬಂದು ಎಲ್ಲಾ ರಹಸ್ಯಗಳನ್ನು ಸ್ಪಷ್ಟವಾಗಿ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ನಾನೂ ಸಹ ಬಂಧನದಲ್ಲಿ ಬಂಧಿತನಾಗಿದ್ದೇನೆ. ಪ್ರತಿಯೊಬ್ಬರೂ ಈ ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. ಸತ್ಯಯುಗದಲ್ಲಿ ಏನೆಲ್ಲವೂ ಆಗಿತ್ತೋ ಅದೇ ಆಗುವುದು . ಎಷ್ಟು ಪ್ರಕಾರದ ಯೋನಿಗಳಿವೆ? ಸತ್ಯಯುಗದಲ್ಲಿ ಇಷ್ಟೊಂದು ಯೋನಿಗಳಿರುವುದಿಲ್ಲ. ಅಲ್ಲಿ ವಿಭಿನ್ನತೆಯಿರುತ್ತದೆ ನಂತರ ವೃದ್ಧಿ ಹೊಂದುತ್ತಾ ಇರುತ್ತಾರೆ. ಹೇಗೆ ಧರ್ಮಗಳೂ ಸಹ ಹೆಚ್ಚುತ್ತಾ ಹೋಗುತ್ತವೆಯಲ್ಲವೆ. ಸತ್ಯಯುಗದಲ್ಲಂತೂ ಇರಲಿಲ್ಲ, ಯಾವುದು ಸತ್ಯಯುಗದಲ್ಲಿತ್ತೋ ಅದನ್ನು ಪುನಃ ಸತ್ಯಯುಗದಲ್ಲಿಯೇ ಮಾಡುವರು. ಸತ್ಯಯುಗದಲ್ಲಿ ಯಾವುದೇ ಕೊಳಕು ಮಾಡುವಂತಹ ವಸ್ತುಗಳಿರುವುದಿಲ್ಲ. ಆ ದೇವಿ-ದೇವತೆಗಳಿಗೆ ಭಗವಾನ್-ಭಗವತಿಯೆಂದು ಹೇಳುತ್ತಾರೆ. ಮತ್ತ್ಯಾವುದೇ ಖಂಡದಲ್ಲಿ ಎಂದೂ ಯಾರಿಗೂ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಆ ದೇವತೆಗಳು ಅವಶ್ಯವಾಗಿ ಸ್ವರ್ಗದಲ್ಲಿ ರಾಜ್ಯ ಮಾಡುತ್ತಿದ್ದರು. ನೋಡಿ ಅವರಿಗೆ ಎಷ್ಟು ಗಾಯನವಿದೆ! |
ನೀವು ಮಕ್ಕಳಿಗೆ ಈಗ ಧೈರ್ಯವು ಬಂದು ಬಿಟ್ಟಿದೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಪದವಿಯು ಎಷ್ಟು ಶ್ರೇಷ್ಠವಾಗಿದೆ ಅಥವಾ ಕನಿಷ್ಠವಾಗಿದೆಯೇ? ನಾವು ಎಷ್ಟು ಅಂಕಗಳಿಂದ ತೇರ್ಗಡೆಯಾಗಬಹುದು. ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಳ್ಳಬಹುದು - ಇಂತಹವರು ಚೆನ್ನಾಗಿ ಸರ್ವೀಸ್ ಮಾಡುತ್ತಿದ್ದಾರೆ. ಹಾ! ನಡೆಯುತ್ತಾ-ನಡೆಯುತ್ತಾ ಕೆಲವೊಮ್ಮೆ ಬಿರುಗಾಳಿಗಳೂ ಬಂದು ಬಿಡುತ್ತವೆ. ತಂದೆಯಂತೂ ತಿಳಿಸುತ್ತಾರೆ - ಮಕ್ಕಳಿಗೆ ಯಾವುದೇ ಗ್ರಹಚಾರ, ಬಿರುಗಾಳಿ ಇತ್ಯಾದಿ ಬರದಿರಲಿ ಎಂದು. ಮಾಯೆಯು ಒಳ್ಳೊಳ್ಳೆಯ ಮಕ್ಕಳನ್ನೂ ಸಹ ಬೀಳಿಸಿ ಬಿಡುತ್ತದೆ. ಆದ್ದರಿಂದ ತಂದೆಯು ಧೈರ್ಯ ತರಿಸುತ್ತಾ ಇರುತ್ತಾರೆ - ಮಕ್ಕಳೇ, ಇನ್ನು ಸ್ವಲ್ಪವೇ ಸಮಯವಿದೆ, ನೀವು ಬಹಳ ಸೇವೆಯನ್ನು ಮಾಡಬೇಕಾಗಿದೆ. ಪೂರ್ಣ ಸ್ಥಾಪನೆಯಾಗಿ ಬಿಟ್ಟರೆ ಮತ್ತೆ ಹೊರಟು ಹೋಗಲೇಬೇಕಾಗಿದೆ. ಇದರಲ್ಲಿ ಒಂದು ಕ್ಷಣವೂ ಹಿಂದೆ-ಮುಂದೆ ಆಗಲು ಸಾಧ್ಯವಿಲ್ಲ. ಈ ರಹಸ್ಯವನ್ನು ಮಕ್ಕಳೇ ತಿಳಿದುಕೊಳ್ಳುತ್ತೀರಿ, ನಾವು ಸೃಷ್ಟಿ ನಾಟಕದ ಪಾತ್ರಧಾರಿಗಳಾಗಿದ್ದೇವೆ , ಇದರಲ್ಲಿ ನಮ್ಮದು ಮುಖ್ಯ ಪಾತ್ರವಾಗಿದೆ. ಭಾರತದ ಮೇಲೆ ಸೋಲು ಮತ್ತು ಗೆಲುವಿನ ಆಟವು ಮಾಡಲ್ಪಟ್ಟಿದೆ. ಭಾರತವೇ ಪಾವನವಾಗಿತ್ತು, ಎಷ್ಟೊಂದು ಶಾಂತಿ, ಪವಿತ್ರತೆಯಿತ್ತು. ಇದು ಕೇವಲ ನೆನ್ನೆಯ ಮಾತಾಗಿದೆ. ನೆನ್ನೆ ನಾವೇ ಪಾತ್ರವನ್ನಭಿನಯಿಸಿದ್ದೇವೆ. 5000 ವರ್ಷಗಳ ಪಾತ್ರವೆಲ್ಲವೂ ನಿಗಧಿಯಾಗಿದೆ. ನಾವು ಚಕ್ರವನ್ನು ಸುತ್ತಿ ಬಂದಿದ್ದೇವೆ. ಈಗ ಪುನಃ ತಂದೆಯೊಂದಿಗೆ ಬುದ್ಧಿಯೋಗವನ್ನೀಡುತ್ತೇವೆ. ಇದರಿಂದಲೇ ತುಕ್ಕು ಕಳೆಯುತ್ತದೆ. ತಂದೆಯ ನೆನಪು ಬರುವುದು ಮತ್ತು ಆಸ್ತಿಯು ಅವಶ್ಯವಾಗಿ ನೆನಪಿಗೆ ಬರುವುದು. ಮೊಟ್ಟ ಮೊದಲು ತಂದೆಯನ್ನು ಅರಿತುಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಅರಿತುಕೊಳ್ಳುವುದರಿಂದ ಎಲ್ಲವನ್ನೂ ಅರಿತುಕೊಳ್ಳುವಿರಿ. ಜ್ಞಾನವು ಬಹಳ ಸಹಜವಾಗಿದೆ, ಒಂದು ಸೆಕೆಂಡಿನದ್ದಾಗಿದೆ, ಆದರೂ ಸಹ ತಂದೆಯು ತಿಳಿಸುತ್ತಲೇ ಇರುತ್ತಾರೆ. ಜ್ಞಾನದ ಅಂಶಗಳನ್ನೂ ಕೊಡುತ್ತಲೇ ಇರುತ್ತಾರೆ. ಮುಖ್ಯ ಮಾತಾಗಿದೆ - ಮನ್ಮನಾಭವ. ಇದರಲ್ಲಿಯೂ ವಿಘ್ನಗಳು ಬರುತ್ತವೆ. ದೇಹಾಭಿಮಾನವು ಬರುವುದರಿಂದ ಮತ್ತೆ ಅನೇಕ ಪ್ರಕಾರದ ತೊಂದರೆಗಳು ಬಂದು ಬಿಡುತ್ತವೆ, ಯೋಗದಲ್ಲಿರುವುದಕ್ಕೂ ಬಿಡುವುದಿಲ್ಲ, ಹೇಗೆ ಭಕ್ತಿಮಾರ್ಗದಲ್ಲಿ ಕೃಷ್ಣನ ನೆನಪಿನಲ್ಲಿ ಕುಳಿತುಕೊಂಡಾಗ ಬುದ್ಧಿಯು ಎಲ್ಲೆಲ್ಲಿಯೋ ಓಡಿ ಹೋಗುತ್ತದೆ. ಭಕ್ತಿಯ ಅನುಭವವಂತೂ ಎಲ್ಲರಿಗೂ ಇದೆ. ಈ ಜನ್ಮದ ಮಾತಾಗಿದೆ. ಈ ಜನ್ಮವನ್ನು ಅರಿತುಕೊಂಡಾಗ ಹಿಂದಿನ ಜನ್ಮಗಳನ್ನೂ ಅಲ್ಪಸ್ವಲ್ಪ ಅರಿತುಕೊಳ್ಳಬಹುದು. ಮಕ್ಕಳಿಗೆ ತಂದೆಯನ್ನು ನೆನಪು ಮಾಡುವುದು ಹವ್ಯಾಸವಾಗಿ ಬಿಟ್ಟಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯು ಹೆಚ್ಚುತ್ತದೆ. ಜೊತೆ ಜೊತೆಗೆ ದಿವ್ಯ ಅಲೌಕಿಕ ಕರ್ಮವನ್ನೂ ಮಾಡಬೇಕಾಗಿದೆ. ನೀವು ಬ್ರಾಹ್ಮಣರಾಗಿದ್ದೀರಿ. ಸತ್ಯ ನಾರಾಯಣನ ಕಥೆಯನ್ನು, ಅಮರ ಕಥೆಯನ್ನು ನೀವು ತಿಳಿಸುತ್ತೀರಿ. ಮೂಲ ಮಾತು ಒಂದೇ ಆಗಿದೆ, ಅದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಇದೊಂದೇ ಆತ್ಮಿಕ ಹವ್ಯಾಸವಾಗಿದೆ. ತಂದೆಯು ತಿಳಿಸುತ್ತಾರೆ - ಜ್ಞಾನವು ಬಹಳ ಸಹಜವಾಗಿದೆ. ಕನ್ಯೆಯರ ಹೆಸರಿನ ಗಾಯನವಿದೆ. ಅಧರ್ ಕುಮಾರಿ, ಕನ್ಯೆ, ಕುಮಾರಿಯ ಹೆಸರು ಎಲ್ಲದಕ್ಕಿಂತ ಹೆಚ್ಚು ಪ್ರಸಿದ್ಧವಾಗಿದೆ. ಅವರಿಗೆ ಯಾವುದೇ ಬಂಧನವಿರುವುದಿಲ್ಲ. ಆ ಪತಿಯಂತೂ ವಿಕಾರಿಯನ್ನಾಗಿ ಮಾಡಿಬಿಡುತ್ತಾರೆ ಆದರೆ ಈ ತಂದೆಯು ಸ್ವರ್ಗದಲ್ಲಿ ಹೋಗುವುದಕ್ಕಾಗಿ ಶೃಂಗರಿಸುತ್ತಾರೆ. ಮಧುರ ಸಾಗರದಲ್ಲಿ ಕರೆದುಕೊಂಡು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚವನ್ನು ಹಳೆಯ ದೇಹ ಸಹಿತವಾಗಿ ಸಂಪೂರ್ಣ ಮರೆತು ಬಿಡಿ. ಆತ್ಮವು ಹೇಳುತ್ತದೆ - ನಾವು 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ. ಈಗ ಪುನಃ ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಸಾಹಸವನ್ನೂ ಇಡುತ್ತೇವೆ. ಆದರೂ ಮಾಯೆಯೊಂದಿಗೆ ಯುದ್ಧವಂತೂ ಇದೆ. ಮೊಟ್ಟ ಮೊದಲಿಗೆ ಈ ಬ್ರಹ್ಮಾ ತಂದೆಯಿದ್ದಾರೆ, ಇವರ ಬಳಿ ಮಾಯೆಯ ಹೆಚ್ಚು ಬಿರುಗಾಳಿಗಳು ಬರುತ್ತವೆ. ಅನೇಕರು ಹೋಗಿ ಬಾಬಾ, ನಮಗೆ ಈ ರೀತಿ ಆಗುತ್ತದೆ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೌದು ಮಕ್ಕಳೇ ಈ ಬಿರುಗಾಳಿಗಳಂತೂ ಬಂದೇ ಬರುತ್ತವೆ. ಇವೆಲ್ಲವೂ ಮೊದಲು ನನ್ನ ಬಳಿ ಬರುತ್ತವೆ. ಎಲ್ಲರೂ ಅಂತಿಮದಲ್ಲಿಯೇ ಕರ್ಮಾತೀತ ಸ್ಥಿತಿಯನ್ನು ಹೊಂದುವರು. ಇದೇನೂ ಹೊಸ ಮಾತಲ್ಲ. ಕಲ್ಪದ ಮೊದಲೂ ಆಗಿತ್ತು. ನಾಟಕದಲ್ಲಿ ಪಾತ್ರವನ್ನಭಿನಯಿಸಿದಿರಿ. ಈಗ ಹಿಂತಿರುಗಿ ಮನೆಗೆ ಹೋಗುತ್ತೀರಿ. ಇದು ಚೈತನ್ಯ ನಾಟಕವಾಗಿದೆ. ಮಕ್ಕಳಿಗೆ ತಿಳಿದಿದೆ - ಈ ಹಳೆಯ ಪ್ರಪಂಚವು ನರಕವಾಗಿದೆ. ಈ ಲಕ್ಷ್ಮಿ - ನಾರಾಯಣರು ಕ್ಷೀರ ಸಾಗರದಲ್ಲಿದ್ದರು ಎಂದು ಹೇಳಿ ಇವರಿಗೆ ಎಷ್ಟು ಒಳ್ಳೊಳ್ಳೆಯ ಮಂದಿರಗಳನ್ನು ಕಟ್ಟಿಸುತ್ತಾರೆ. ಮೊಟ್ಟ ಮೊದಲು ಮಂದಿರವನ್ನು ಕಟ್ಟಿಸುವಾಗ ಕ್ಷೀರ ಸರೋವರನ್ನು ಮಾಡಿ ವಿಷ್ಣುವಿನ ಮೂರ್ತಿಯನ್ನು ಕೂರಿಸಿರಬೇಕು. ಬಹಳ ಒಳ್ಳೊಳ್ಳೆಯ ಚಿತ್ರಗಳನ್ನು ಮಾಡಿ ಪೂಜೆ ಮಾಡುತ್ತಿದ್ದರು. ಆ ಸಮಯದಲ್ಲಂತೂ ಎಲ್ಲವೂ ಬಹಳ ಅಗ್ಗವಾಗಿತ್ತು. ಈ ಬಾಬಾರವರು ಎಲ್ಲವನ್ನೂ ನೋಡಿದ್ದಾರೆ. ಅವಶ್ಯವಾಗಿ ಈ ಭಾರತವು ಎಷ್ಟೊಂದು ಪವಿತ್ರ, ಕ್ಷೀರ ಸಾಗರವಾಗಿತ್ತು! ಹಾಲು, ತುಪ್ಪದ ನದಿಗಳು ಹರಿಯುತ್ತಿತ್ತು ಅಂದರೆ ಅಲ್ಲಿನ ಸಮೃದ್ಧಿಯನ್ನು ಮಹಿಮೆ ಮಾಡಿದ್ದಾರೆ. ಸ್ವರ್ಗದ ಹೆಸರು ಹೇಳುತ್ತಿದ್ದಂತೆಯೇ ಬಾಯಲ್ಲಿ ನೀರು ಬರುತ್ತದೆ. ನೀವು ಮಕ್ಕಳಿಗೆ ಈಗ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ ಆದ್ದರಿಂದ ಅರಿವು ಮೂಡಿದೆ. ಬುದ್ಧಿಯು ತನ್ನ ಮನೆಗೆ ಹೊರಟು ಹೋಗುತ್ತದೆ ನಂತರ ಸ್ವರ್ಗದಲ್ಲಿ ಬರುತ್ತೇವೆ. ಅಲ್ಲಿ ಎಲ್ಲವೂ ಹೊಸದೇ ಹೊಸದಾಗಿರುವುದು. ಈ ಬಾಬಾರವರು ಶ್ರೀನಾರಾಯಣನ ಮೂರ್ತಿಯನ್ನು ನೋಡಿ ಬಹಳ ಖುಷಿ ಪಡುತ್ತಿದ್ದರು, ಬಹಳ ಪ್ರೀತಿಯಿಂದ ಇಟ್ಟುಕೊಳ್ಳುತ್ತಿದ್ದರು. ನಾನೇ ಈ ರೀತಿಯಾಗುತ್ತೇನೆ ಎಂಬುದು ಇವರಿಗೆ ತಿಳಿದಿರಲಿಲ್ಲ. ಈ ಜ್ಞಾನವಂತೂ ಈಗ ತಂದೆಯಿಂದ ಸಿಕ್ಕಿದೆ. ನಿಮಗೆ ಬ್ರಹ್ಮಾಂಡ ಮತ್ತು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನಾವು ಹೇಗೆ ಚಕ್ರವನ್ನು ಸುತ್ತುತ್ತೇವೆ, ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂಬುದೆಲ್ಲವನ್ನೂ ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಇನ್ನು ಸ್ವಲ್ಪವೇ ಸಮಯವಿದೆ, ಶರೀರಕ್ಕೆ ಒಂದಲ್ಲ ಒಂದು ಆಗುತ್ತಿರುತ್ತದೆ. ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಡ್ರಾಮಾ ಪ್ಲಾನನುಸಾರ ಈಗ ನಿಮ್ಮ ಸುಖದ ದಿನಗಳು ಬರುತ್ತಿದೆ. ನೀವು ನೋಡುತ್ತಿದ್ದೀರಿ, ವಿನಾಶವು ಸಮ್ಮುಖದಲ್ಲಿ ನಿಂತಿದೆ. ನಿಮಗೆ ಮೂರನೇ ನೇತ್ರ ಸಿಕ್ಕಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನವನ್ನು ಚೆನ್ನಾಗಿ ಅರಿತುಕೊಂಡಿದ್ದೀರಿ. ಈ ಸ್ವದರ್ಶನ ಚಕ್ರವು ನಿಮ್ಮ ಬುದ್ಧಿಯಲ್ಲಿ ಸುತ್ತುತ್ತಿರುತ್ತದೆ, ಖುಷಿಯಾಗುತ್ತದೆ. ಈ ಸಮಯದಲ್ಲಿ ನಮಗೆ ಬೇಹದ್ದಿನ ತಂದೆಯು ಶಿಕ್ಷಕನಾಗಿ ಓದಿಸುತ್ತಾರೆ ಆದರೆ ಹೊಸ ಮಾತಾಗಿರುವ ಕಾರಣ ಪದೇ-ಪದೇ ಮರೆತು ಹೋಗುತ್ತೀರಿ, ಇಲ್ಲವಾದರೆ ಬಾಬಾ ಎಂದು ಹೇಳಿದೊಡನೆಯೇ ಖುಷಿಯ ನಶೆಯೇರಿ ಬಿಡಬೇಕು. ರಾಮ ತೀರ್ಥರು ಶ್ರೀಕೃಷ್ಣನ ಭಕ್ತರಾಗಿದ್ದರು. ಕೃಷ್ಣನ ದರ್ಶನಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಿದ್ದರು. ಅವರಿಗೆ ಸಾಕ್ಷಾತ್ಕಾರವಾಯಿತು ಮತ್ತು ಖುಷಿಯಾಯಿತು ಆದರೆ ಅದರಿಂದೇನಾಯಿತು? ಏನೂ ಸಿಗಲಿಲ್ಲ. ಇಲ್ಲಂತೂ ನೀವು ಮಕ್ಕಳಿಗೆ ಖುಷಿಯೂ ಇದೆ ಏಕೆಂದರೆ 21 ಜನ್ಮಗಳಿಗಾಗಿ ನಾವು ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಮುಕ್ಕಾಲು ಭಾಗ ನೀವು ಸುಖಿಯಾಗಿರುತ್ತೀರಿ, ಒಂದುವೇಳೆ ಸುಖ-ದುಃಖವು ಸರಾಸರಿ ಇದ್ದರೂ ಸಹ ಲಾಭವಿಲ್ಲ. ನೀವು ಮೂರು ಭಾಗ ಸುಖದಲ್ಲಿರುತ್ತೀರಿ, ನಿಮ್ಮಂತಹ ಸುಖವನ್ನು ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ನಿಮಗಾಗಿ ಅಪಾರ ಸುಖವಿದೆ. ಮಹಾನ್ ಸುಖದಲ್ಲಿ ದುಃಖದ ಬಗ್ಗೆ ತಿಳಿಯುವುದೇ ಇಲ್ಲ. ಸಂಗಮದಲ್ಲಿ ನೀವು ಎರಡನ್ನೂ ತಿಳಿದುಕೊಳ್ಳುತ್ತೀರಿ - ನಾವೀಗ ದುಃಖದಿಂದ ಸುಖದಲ್ಲಿ ಹೋಗುತ್ತಿದ್ದೇವೆ. ಮುಖವು ದಿನದ ಕಡೆಯೂ ಮತ್ತು ಕಾಲು ರಾತ್ರಿಯ ಕಡೆಯೂ ಇದೆ. ಈ ಪ್ರಪಂಚವನ್ನು ಕಾಲಿನಿಂದ ಒದೆಯಬೇಕು ಅರ್ಥಾತ್ ಬುದ್ಧಿಯಿಂದ ಮರೆಯಬೇಕಾಗಿದೆ. ಆತ್ಮಕ್ಕೆ ಗೊತ್ತಿದೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಬಹಳ ಪಾತ್ರವನ್ನಭಿನಯಿಸಿದ್ದೀರಿ. ಹೀಗೆ ತನ್ನ ಜೊತೆ ಮಾತನಾಡಿಕೊಳ್ಳಬೇಕಾಗಿದೆ. ಈಗ ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟೇ ತುಕ್ಕು ಕಳೆಯುವುದು. ಎಷ್ಟು ತಂದೆಯ ಸೇವೆಯಲ್ಲಿದ್ದು ಸಮಾನರನ್ನಾಗಿ ಮಾಡಿಕೊಳ್ಳುವಿರೋ ಅಷ್ಟೇ ತಂದೆಯನ್ನು ಪ್ರತ್ಯಕ್ಷ ಮಾಡುತ್ತೀರಿ. ಈಗ ಮನೆಗೆ ಹೋಗಬೇಕಾಗಿದೆ ಎಂಬುದು ಬುದ್ದಿಯಲ್ಲಿದೆ. ಆದ್ದರಿಂದ ಮನೆಯನ್ನೇ ನೆನಪು ಮಾಡಬೇಕು. ಹಳೆಯ ಮನೆಯು ಬೀಳುತ್ತಿರುತ್ತದೆ. ಈಗ ಹೊಸ ಮನೆಯಲ್ಲಿ! ಹಳೆಯ ಮನೆಯೆಲ್ಲಿ! ಇದು ವಿಷಯ ವೈತರಣೀ ನದಿಯಾಗಿದೆ. ಒಬ್ಬರು ಇನ್ನೊಬ್ಬರನ್ನು ಹೊಡೆಯುತ್ತಾ, ಜಗಳವಾಡುತ್ತಾ ಇರುತ್ತಾರೆ. ಅದರಲ್ಲಿ ತಂದೆಯು ಬಂದಾಗಿನಿಂದ ಯುದ್ಧ ಜಗಳ ಆರಂಭವಾಗಿ ಬಿಟ್ಟಿದೆ. ಒಂದು ವೇಳೆ ಸ್ತ್ರೀಯು ವಿಕಾರದಲ್ಲಿ ಭಾಗಿಯಾಗದಿದ್ದರೆ ಎಷ್ಟೊಂದು ತೊಂದರೆ ಕೊಡುತ್ತಾರೆ, ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಕಲ್ಪದ ಮೊದಲೂ ಅತ್ಯಾಚಾರವಾಗಿತ್ತು, ಅದು ಈಗಿನ ಮಾತು ಗಾಯನ ಮಾಡಲ್ಪಟ್ಟಿದೆ. ನೋಡುತ್ತೀರಿ - ಎಷ್ಟೊಂದು ಕೂಗುತ್ತಾರೆ, ಸೃಷ್ಟಿ ನಾಟಕದ ಅದೇ ಪಾತ್ರವು ಅಭಿನಯಿಸಲ್ಪಡುತ್ತಿದೆ. ಇದು ತಂದೆಗೆ ಗೊತ್ತು ಮತ್ತು ಮಕ್ಕಳಿಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ಮುಂದೆ ಹೋದಂತೆ ಎಲ್ಲರೂ ತಿಳಿದುಕೊಳ್ಳುವರು. ಪತಿತ-ಪಾವನ, ಸರ್ವರ ಸದ್ಗತಿದಾತನು ತಂದೆಯಾಗಿದ್ದಾರೆಂದು ಹಾಡುತ್ತಾರೆ. ನೀವು ಇದನ್ನು ಯಾರಿಗೆ ಬೇಕಾದರೂ ತಿಳಸಬಲ್ಲಿರಿ. ಭಾರತವು ಸ್ವರ್ಗ ಮತ್ತು ನರಕ ಹೇಗಾಗುತ್ತದೆ ಎಂಬುದನ್ನು ತಾವು ಬಂದರೆ ನಿಮಗೆ ಇಡೀ ವಿಶ್ವದ ಚರಿತ್ರೆ- ಭೂಗೋಳವನ್ನು ನಾವು ತಿಳಿಸುತ್ತೇವೆ. ಈ ಬೇಹದ್ದಿನ ಚರಿತ್ರೆ-ಭೂಗೋಳವು ಈಶ್ವರನಿಗೇ ಗೊತ್ತು ಮತ್ತು ಈಶ್ವರನ ಮಕ್ಕಳಾದ ನಿಮಗೇ ಗೊತ್ತು. ಪವಿತ್ರತೆ, ಸುಖ-ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬ ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳುವುದರಿಂದ ನೀವು ಮತ್ತೆಲ್ಲವನ್ನೂ ಅರಿತುಕೊಳ್ಳುವಿರಿ. ಬೇಹದ್ದಿನ ತಂದೆಯಿಂದ ನೀವು ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವಿರಿ, ಇದನ್ನು ಬಂದು ತಿಳಿದುಕೊಳ್ಳಿ. ಭಾಷಣದ ವಿಷಯಗಳು ಬಹಳಷ್ಟಿವೆ. ನೀವು ಮಕ್ಕಳ ಬುದ್ಧಿಯೇ ಈಗ ಸಂಪನ್ನವಾಗಿ ಬಿಟ್ಟಿದೆ. ಎಷ್ಟೊಂದು ಖುಷಿಯ ನಶೆಯೇರುತ್ತದೆ! ಸಂಪೂರ್ಣ ಜ್ಞಾನವು ನೀವು ಮಕ್ಕಳ ಬಳಿ ಇದೆ. ಜ್ಞಾನಪೂರ್ಣ ತಂದೆಯಿಂದ ಜ್ಞಾನವು ಸಿಗುತ್ತಿದೆ, ಮತ್ತೆ ನಾವೇ ಹೋಗಿ ಲಕ್ಷ್ಮೀ-ನಾರಾಯಣರಾಗುತ್ತೇವೆ. ನಂತರ ಸತ್ಯಯುಗದಲ್ಲಿ ಈ ಜ್ಞಾನವೇನೂ ಇರುವುದಿಲ್ಲ. ತಿಳಿದುಕೊಳ್ಳುವ ಎಷ್ಟೊಂದು ಗುಹ್ಯ ಮಾತುಗಳಿವೆ. ಮಕ್ಕಳು ಏಣಿಯನ್ನು ಬಹಳ ಚೆನ್ನಾಗಿ ತಿಳಿದುಕೊಂಡಿದ್ದಿರಿ ಅಂದಾಗ ಈ ಚಕ್ರವು 84 ಜನ್ಮಗಳದಾಗಿದೆ. ಈಗ ಮನುಷ್ಯರಿಗೂ ಸಹ ಸ್ಪಷ್ಟ ಮಾಡಿ ತಿಳಿಸಬೇಕಾಗಿದೆ. ಈಗ ಇದಕ್ಕೆ ಸ್ವರ್ಗ ಅಥವಾ ಪಾವನ ಪ್ರಪಂಚವೆಂದು ಹೇಳುವುದಿಲ್ಲ. ಸತ್ಯಯುಗವೇ ಬೇರೆ, ಕಲಿಯುಗವೇ ಬೇರೆಯಾಗಿದೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಿಳಿಸಲು ಬಹಳ ಸಹಜವಾಗಿದೆ! ತಿಳುವಳಿಕೆಯು ಬಹಳ ಚೆನ್ನಾಗಿದೆ ಆದರೆ ಪುರುಷಾರ್ಥ ಮಾಡಿ ನೆನಪಿನ ಯಾತ್ರೆಯಲ್ಲಿ ಇರಬೇಕು - ಇದು ಬಹಳ ಮಕ್ಕಳಿಂದ ಆಗುತ್ತಿಲ್ಲ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಹಳೆಯ ದೇಹ ಮತ್ತು ಪ್ರಪಂಚವನ್ನು ಬುದ್ಧಿಯಿಂದ ಮರೆತು ತಂದೆ ಮತ್ತು ಮನೆಯನ್ನು ನೆನಪು ಮಾಡಬೇಕಾಗಿದೆ. ಸದಾ ಇದೇ ಖುಷಿಯಲ್ಲಿರಿ – ಈಗ ನಮ್ಮ ಸುಖದ ದಿನಗಳು ಬಂದಿತೆಂದರೆ ಬಂದಿತು. |
2. ಜ್ಞಾನಪೂರ್ಣ ತಂದೆಯಿಂದ ಸಿಕ್ಕಿರುವ ಜ್ಞಾನವನ್ನು ಸ್ಮರಣೆ ಮಾಡಿ, ಬುದ್ಧಿಯನ್ನು ಸಂಪನ್ನವನ್ನಾಗಿ ಇಟ್ಟುಕೊಳ್ಳಬೇಕಾಗಿದೆ. ದೇಹಾಭಿಮಾನದಲ್ಲಿ ಬಂದು ಎಂದೂ ಯಾವುದೇ ಪ್ರಕಾರದ ಗುಟುಕರಿಸಬಾರದು. |
ಓಂ ಶಾಂತಿ. ಮಕ್ಕಳಿಗೆ ಇದು ಅರ್ಥವಾಗಿದೆ, ಇದು ಜ್ಞಾನ ಮಾರ್ಗವಾಗಿದೆ. ಅದು ಭಕ್ತಿ ಮಾರ್ಗವಾಗಿದೆ. ಈಗ ಪ್ರಶ್ನೆ ಉದ್ಭವಿಸುತ್ತದೆ - ಭಕ್ತಿಮಾರ್ಗವು ಒಳ್ಳೆಯದೋ ಅಥವಾ ಜ್ಞಾನ ಮಾರ್ಗವು ಒಳ್ಳೆಯದೋ? ಎರಡು ಮಾತುಗಳು ಇದೆಯಲ್ಲವೆ? ಜ್ಞಾನದಿಂದ ಸದ್ಗತಿಯಾಗುತ್ತದೆ ಎಂದು ಹೇಳಲಾಗುತ್ತದೆ. ಅವಶ್ಯವಾಗಿ ಭಕ್ತಿ ಮತ್ತು ಜ್ಞಾನ ಎರಡೂ ಬೇರೆ-ಬೇರೆ ಎಂದು ಹೇಳಲಾಗುತ್ತದೆ. ಮನುಷ್ಯರು ತಿಳಿದುಕೊಳ್ಳುತ್ತಾರೆ - ಭಕ್ತಿ ಮಾಡುವುದರಿಂದ ಜ್ಞಾನ ಸಿಗುವುದು ಆಗ ಸದ್ಗತಿಯಾಗುವುದು. ಭಕ್ತಿಯ ಮಧ್ಯದಲ್ಲಿ ಜ್ಞಾನವು ಬರಲು ಸಾಧ್ಯವಿಲ್ಲ. ಭಕ್ತಿಯು ಎಲ್ಲರಿಗಾಗಿ ಇದೆ, ಜ್ಞಾನವೂ ಎಲ್ಲರಿಗಾಗಿ ಇದೆ. ಈ ಸಮಯವು ಕಲಿಯುಗದ ಅಂತ್ಯವಾಗಿದೆ ಅಂದಮೇಲೆ ಅವಶ್ಯವಾಗಿ ಎಲ್ಲರ ದುರ್ಗತಿಯಾಗುವುದು. ಆದ್ದರಿಂದಲೇ ಕೂಗುತ್ತಾರೆ ಮತ್ತು ಅನ್ಯ ಸಂಗಗಳನ್ನು ಬಿಟ್ಟು ಈಗ ನಿಮ್ಮ ಸಂಗವನ್ನು ಸೇರುವೆನು ಎಂದು ಹಾಡುತ್ತಾರೆ. ಈಗ ಅವರು ಯಾರು? ಯಾರ ಜೊತೆ ಜೋಡಿಸಬೇಕು ಎಂಬುದನ್ನು ತಿಳಿದುಕೊಂಡಿಲ್ಲ. ಬಹುತೇಕವಾಗಿ ಬುದ್ದಿಯು ಕೃಷ್ಣನ ಕಡೆಯೇ ಹೋಗುತ್ತದೆ. ನಾವು ಸತ್ಯ ಪ್ರೀತಿಯನ್ನು ನಿಮ್ಮೊಂದಿಗೆ ಜೋಡಿಸುವೆವು ಎಂದು ಹೇಳುತ್ತಾರೆ. ಯಾವಾಗ ಕೃಷ್ಣನೊಂದಿಗೆ ಪ್ರೀತಿಯನ್ನು ಜೋಡಿಸುತ್ತಾರೆಂದಮೇಲೆ ಮತ್ತೆ ಗುರು-ಗೋಸಾಯಿ ಯಾರದೇ ಅವಶ್ಯಕತೆಯಿಲ್ಲ. ಕೃಷ್ಣನನ್ನೇ ನೆನಪು ಮಾಡಬೇಕಾಗಿದೆ. ಕೃಷ್ಣನ ಚಿತ್ರವಂತೂ ಎಲ್ಲರ ಬಳಿಯಿರುತ್ತದೆ. ಕೃಷ್ಣ ಜಯಂತಿಯನ್ನೂ ಆಚರಿಸುತ್ತಾರೆ, ಮತ್ತ್ಯಾರ ಬಳಿಯೂ ಹೋಗುವ ಅವಶ್ಯಕತೆಯಿಲ್ಲ. ಹೇಗೆ ಭಕ್ತಮೀರಾ ಒಬ್ಬರ ಸಂಗವನ್ನು ಸೇರಿದರು, ಕೆಲಸ-ಕಾರ್ಯಗಳನ್ನು ಮಾಡುತ್ತಾ ಕೃಷ್ಣನನ್ನೇ ನೆನಪು ಮಾಡಿದರು. ಮನೆಯಲ್ಲಿ ತಿನ್ನುವುದು, ಕುಡಿಯುವುದು, ಮಾಡುವುದು ಇದ್ದೇ ಇರುತ್ತದೆ. ಆದರೆ ಸತ್ಯ ಪ್ರೀತಿಯನ್ನು ಒಬ್ಬ ಕೃಷ್ಣನ ಜೊತೆ ಜೋಡಿಸಿದೆವು. ಹೇಗೆ ಅವರು ಪ್ರಿಯತಮ-ಪ್ರಿಯತಮೆಯಾಗಿ ಬಿಟ್ಟರು. ಕೃಷ್ಣನನ್ನು ನೆನಪು ಮಾಡುವುದರಿಂದ ಫಲವು ಸಿಗುತ್ತದೆ. ಕೃಷ್ಣನನ್ನಂತೂ ಎಲ್ಲರೂ ತಿಳಿದುಕೊಂಡಿದ್ದಾರೆ. ನಾವು ಸತ್ಯ ಪ್ರೀತಿಯನ್ನು ನಿಮ್ಮೊಂದಿಗೆ ಜೋಡಿಸಿದೆವು ಎಂದು ಹಾಡುತ್ತಾರೆ. ಸರ್ವ ಶ್ರೇಷ್ಠ ಸತ್ಯವಂತನಂತೂ ಪರಮಪಿತನೇ ಆಗಿದ್ದಾರೆ. ಎಲ್ಲರಿಗೆ ಆಸ್ತಿಯನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರನ್ನು ಯಾರೂ ಅರಿತುಕೊಂಡಿಲ್ಲ. ಭಲೆ ಪರಮಪಿತ ಪರಮಾತ್ಮ ಶಿವನೆಂದು ಹೇಳುತ್ತಾರೆ, ಆದರೆ ಅವರು ಯಾವಾಗ ಬರುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಶಿವ ಜಯಂತಿಯಾಗುತ್ತದೆ ಎಂದರೆ ಅವಶ್ಯವಾಗಿ ಅವರು ಬರುತ್ತಾರೆ, ಆದರೆ ಯಾವಾಗ ಹೇಗೆ ಬರುತ್ತಾರೆ, ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ಸರ್ವರ ಸದ್ಗತಿ ಮಾಡುತ್ತಾರೆ ಎಂಬುದನ್ನು ಯಾವುದೇ ಮನುಷ್ಯ ಮಾತ್ರರು ಅರಿತುಕೊಂಡಿಲ್ಲ. ಹೇಗೆ ಮಾಡುತ್ತಾರೆ, ಸದ್ಗತಿಯ ಅರ್ಥವೇನು ಏನನ್ನೂ ತಿಳಿದು ಕೊಳ್ಳುವುದಿಲ್ಲ. ಶಿವ ತಂದೆಯು ಅವಶ್ಯವಾಗಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟಿರಬೇಕಲ್ಲವೆ. ನೀವು ಮಕ್ಕಳು ಆ ಧರ್ಮದವರಾಗಿದ್ದೀರಿ. ನಿಮಗಿದು ತಿಳಿದಿದೆ, ನೀವೇ ಮರೆತು ಹೋಗಿದ್ದೀರಿ ಅಂದಮೇಲೆ ಮತ್ತ್ಯಾರು ತಿಳಿದುಕೊಳ್ಳುವರು! ಈಗ ಶಿವ ತಂದೆಯ ಮೂಲಕ ಅರಿತಿದ್ದೀರಿ ಮತ್ತು ಅನ್ಯರಿಗೆ ತಿಳಿಸುತ್ತೀರಿ. ನೀವು ಈಶ್ವರೀಯ ರಕ್ಷಣಾ ಸೈನಿಕರಾಗಿದ್ದೀರಿ, ರಕ್ಷಣಾ ಸೈನಿಕರೆಂದಾದರೂ ಹೇಳಿ ಅಥವಾ ಸದ್ಗತಿಯ ಸೈನಿಕರೆಂದಾದರೂ ಹೇಳಿ. ಈಗ ನೀವು ಮಕ್ಕಳ ಮೇಲೆ ಜವಾಬ್ದಾರಿಯಿದೆ, ನೀವು ಚಿತ್ರಗಳಲ್ಲಿಯೂ ತಿಳಿಸುತ್ತೀರಿ. ಭಾಷೆಗಳು ಅನೇಕ ಇವೆ, ಮುಖ್ಯ ಭಾಷೆಗಳಲ್ಲಿ ಚಿತ್ರಗಳನ್ನು ಮಾಡಿಸಬೇಕಾಗಿದೆ. ಭಾಷೆಗಳಲ್ಲಿಯೂ ಬಹಳ ಜಂಜಾಟವಿದೆ ಆದ್ದರಿಂದ ಪ್ರದರ್ಶನಿ ಮಾಡಿಸಬೇಕು. ಚಿತ್ರಗಳನ್ನಿಟ್ಟು ತಿಳಿಸುವುದು ಬಹಳ ಸಹಜವಾಗುತ್ತದೆ. ಗೋಲದ ಚಿತ್ರದಲ್ಲಿಯೂ ಸಂಪೂರ್ಣ ಜ್ಞಾನವಿದೆ. ಏಣಿಯು ಕೇವಲ ಭಾರತವಾಸಿಗಳಿಗಾಗಿ ಇದೆ, ಇದರಲ್ಲಿ ಮತ್ತ್ಯಾವುದೇ ಧರ್ಮವಿಲ್ಲ. ಹಾಗೆಂದು ಹೇಳಿ ಕೇವಲ ಭಾರತವೇ ತಮೋಪ್ರಧಾನವಾಗುತ್ತದೆ, ಮತ್ತ್ಯಾವುದೂ ಆಗುವುದಿಲ್ಲವೆಂದಲ್ಲ, ತಮೋಪ್ರಧಾನರಂತೂ ಎಲ್ಲರೂ ಆಗುತ್ತಾರೆ ಅಂದಮೇಲೆ ಅವರಿಗಾಗಿಯೂ ಇರಬೇಕು. ಬುದ್ಧಿಯಲ್ಲಿ ಇವೆಲ್ಲಾ ಸೇವೆಯ ವಿಚಾರಗಳು ಬರಬೇಕು. ಇಬ್ಬರು ತಂದೆಯರ ರಹಸ್ಯವನ್ನೂ ತಿಳಿಸಬೇಕಾಗಿದೆ. ಆಸ್ತಿಯು ರಚಯಿತನಿಂದ ಸಿಗುತ್ತದೆ. ಇದೂ ಸಹ ಎಲ್ಲಾ ಧರ್ಮದವರಿಗೆ ಗೊತ್ತಿದೆ ಲಕ್ಷ್ಮೀ-ನಾರಾಯಣರು ಭಾರತದ ಮೊದಲ ಮಹಾರಾಜ-ಮಹಾರಾಣಿಯಾಗಿದ್ದರು ಅಥವಾ ಭಗವಾನ್-ಭಗವತಿಯಾಗಿದ್ದರು ಅಂದಾಗ ಅವರಿಗೆ ಈ ಸ್ವರ್ಗದ ರಾಜ್ಯವು ಹೇಗೆ ಸಿಕ್ಕಿತು? ಅವಶ್ಯವಾಗಿ ಭಗವಂತನ ಮೂಲಕ ಸಿಕ್ಕಿತು, ಇದು ಯಾವಾಗ ಹೇಗೆ ಸಿಕ್ಕಿತು ಎಂಬುದು ಯಾರಿಗೂ ತಿಳಿದಿಲ್ಲ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಪ್ರಳಯವನ್ನು ತೋರಿಸಿದ್ದಾರೆ, ಫಲಿತಾಂಶವೇನೂ ಇಲ್ಲ. ಇದನ್ನು ನೀವು ಮಕ್ಕಳು ತಿಳಿಸಬೇಕಾಗಿದೆ. ಚಿತ್ರಗಳಂತೂ ಎಲ್ಲಾ ಕಡೆಯೂ ಇದೆ. ಲಕ್ಷ್ಮೀ-ನಾರಾಯಣರ ಚಿತ್ರವೂ ಇರುತ್ತದೆ. ಭಲೆ ಅವರ ಉಡುಪು, ಮುಖ ಲಕ್ಷಣಗಳು ಬೇರೆಯಿರಬಹುದು ಏಕೆಂದರೆ ಯಾರಿಗೆ ಏನು ಕಂಡಿತೋ ಅದರಂತೆ ಕುಳಿತು ಮಾಡಿದ್ದಾರೆ. ಶ್ರೀನಾಥ-ಶ್ರೀನಾಥಿನಿ ಈ ರಾಧೆ-ಕೃಷ್ಣರಲ್ಲವೆ. ಶ್ರೀ ರಾಧೆ-ಶ್ರೀ ಕೃಷ್ಣನಂತೂ ಕಿರೀಟಧಾರಿಗಳಲ್ಲ ಅಥವಾ ಪತಿತರೂ ಅಲ್ಲ. ರಾಜಧಾನಿಯು ಲಕ್ಷ್ಮೀ-ನಾರಾಯಣನದಾಗಿದೆ, ರಾಧೆ-ಕೃಷ್ಣನದಲ್ಲ. ಅನೇಕ ಪ್ರಕಾರದ ಮಂದಿರಗಳನ್ನು ಕಟ್ಟಿಸಿದ್ದಾರೆ, ಹೆಸರನ್ನಂತೂ ಒಂದೇ ಇಡುತ್ತಾರೆ - ಲಕ್ಷ್ಮೀ-ನಾರಾಯಣ ಎಂದು. ಲಕ್ಷ್ಮೀ-ನಾರಾಯಣರ ರಾಜಧಾನಿಯೆಂದೇ ಹೇಳುತ್ತಾರೆ. ರಾಮ-ಸೀತೆಯರ ಮನೆತನ, ಲಕ್ಷ್ಮೀ-ನಾರಾಯಣರ ಮನೆತನ, ರಾಧೆ-ಕೃಷ್ಣರ ಮನೆತನ ಎಂದು ಇರುವುದಿಲ್ಲ. ಈ ಮಾತುಗಳು ಮನುಷ್ಯರ ವಿಚಾರದಲ್ಲಿಯೂ ಬರುವುದಿಲ್ಲ. ನೀವು ಮಕ್ಕಳೂ ಸಹ ನಂಬರ್ವಾರ್ ಪುರುಷಾರ್ಥದ ಅನುಸಾರ ಅರಿತುಕೊಂಡಿದ್ದೀರಿ. ಯಾರಿಗೆ ಸೇವೆಯ ಉಮಂಗವಿದೆಯೋ ಅವರು ಕಾತರಿಸುತ್ತಾರೆ. ನಾವು ತಿಳಿದುಕೊಂಡಿದ್ದೇವೆಂದು ಕೆಲವರು ಹೇಳುತ್ತಾರೆ ಆದರೆ ನಿಧಾನ-ನಿಧಾನವಾಗಿ ಬಾಯಿ ತೆರೆಯುವ (ಜ್ಞಾನ ಹೇಳುವ) ಯುಕ್ತಿಗಳನ್ನೂ ರಚಿಸಬೇಕಾಗುತ್ತದೆ. ವೇದ-ಶಾಸ್ತ್ರ ಅಧ್ಯಯನ ಮಾಡುವುದರಿಂದ ಯಜ್ಞ, ತಪ ಇತ್ಯಾದಿಗಳನ್ನು ಮಾಡುವುದರಿಂದ, ತೀರ್ಥ ಯಾತ್ರೆ ಮಾಡುವುದರಿಂದ ಪರಮಾತ್ಮನನ್ನು ಪಡೆಯಬಹುದೆಂದು ತಿಳಿಯುತ್ತಾರೆ. ಆದರೆ ಭಗವಂತನು ತಿಳಿಸುತ್ತಾರೆ - ಇವೆಲ್ಲವೂ ನನ್ನಿಂದ ದೂರ ಮಾಡುವ ಮಾರ್ಗವಾಗಿದೆ. ಡ್ರಾಮಾದಲ್ಲಿ ಎಲ್ಲರೂ ದುರ್ಗತಿಯನ್ನು ಹೊಂದಲೇಬೇಕಾಗಿದೆ ಆದ್ದರಿಂದ ಇಂತಹ ಮಾತುಗಳನ್ನು ತಿಳಿಸುತ್ತಾರೆ. ಮೊದಲು ನಾವೂ ಸಹ ಹೇಳುತ್ತಿದ್ದೆವು – ಭಗವಂತನ ಶಿಖೆಯಿದ್ದಂತೆ. ಯಾರು ಎಲ್ಲಿಂದಲಾದರೂ ಹೋಗಬಹುದು ಎಂದು. ಆದ್ದರಿಂದ ಮನುಷ್ಯರು ಅನೇಕ ಪ್ರಕಾರದ ಮಾರ್ಗಗಳನ್ನು ಹಿಡಿದಿದ್ದಾರೆ. ಭಕ್ತಿಮಾರ್ಗದ ಮಾರ್ಗಗಳನ್ನು ಹಿಡಿದು-ಹಿಡಿದು ಯಾವಾಗ ಸುಸ್ತಾಗಿ ಬಿಡುವರೋ ಆಗ ಕೊನೆಗೆ ಈ ಪತಿತ-ಪಾವನ ಬಂದು ಪಾವನರಾಗುವ ಮಾರ್ಗ ತಿಳಿಸಿ, ತಮ್ಮ ವಿನಃ ಪಾವನರಾಗಲು ಸಾಧ್ಯವಿಲ್ಲ, ಸುಸ್ತಾಗಿ ಬಿಟ್ಟಿದ್ದೇವೆಂದು ಭಗವಂತನನ್ನೇ ಕರೆಯುತ್ತಾರೆ. ದಿನ-ಪ್ರತಿದಿನ ಭಕ್ತಿಯು ಸಂಪೂರ್ಣ ಸುಸ್ತು ಮಾಡಿಸುತ್ತದೆ. ಈಗಂತೂ ಮೇಳ ಇತ್ಯಾದಿಗಳಲ್ಲಿ ಎಷ್ಟು ಲಕ್ಷಾಂತರ ಮಂದಿ ಹೋಗಿ ಸೇರುತ್ತಾರೆ! ಅಲ್ಲಿ ಎಷ್ಟೊಂದು ಕೊಳಕಾಗುತ್ತದೆ. ಈಗಂತೂ ಅಂತ್ಯವಾಗಿದೆ. ಪ್ರಪಂಚವು ಬದಲಾಗಲಿದೆ. ವಾಸ್ತವದಲ್ಲಿ ಪ್ರಪಂಚವು ಒಂದೇ ಆಗಿದೆ, ಎರಡು ಭಾಗಗಳನ್ನು ಮಾಡಿದ್ದಾರೆ ಆದ್ದರಿಂದ ಮನುಷ್ಯರು ಸ್ವರ್ಗ ಮತ್ತು ನರಕ ಬೇರೆ-ಬೇರೆ ಪ್ರಪಂಚಗಳಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಇದು ಅರ್ಧ-ಅರ್ಧ ಭಾಗವಾಗಿದೆ. ಮೇಲೆ ಸತ್ಯ - ತ್ರೇತಾಯುಗ, ನಂತರ ದ್ವಾಪರ-ಕಲಿಯುಗ, ಕಲಿಯುಗದಲ್ಲಿ ತಮೋಪ್ರಧಾನರಾಗಲೇಬೇಕಾಗಿದೆ. ಸೃಷ್ಟಿಯು ಹಳೆಯದಾಗುತ್ತದೆ. ಈ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಬ್ಬಿಬ್ಬಾಗುತ್ತಾರೆ. ಕೆಲವರು ಕೃಷ್ಣನನ್ನು ಕೆಲವರು ರಾಮನನ್ನು ಭಗವಂತನೆಂದು ಹೇಳುತ್ತಾರೆ. ಇತ್ತೀಚೆಗಂತೂ ಮನುಷ್ಯರು ತನ್ನನ್ನೇ ಭಗವಂತನೆಂದು, ನಾನು ಈಶ್ವರನ ಅವತಾರವೆಂದು ಹೇಳಿ ಹೋಗುತ್ತಾರೆ. ಇದರಲ್ಲಿ ಮನುಷ್ಯರು ದೇವತೆಗಳಿಗಿಂತಲೂ ಮುಂದೆ ಹೋಗುತ್ತಾರೆ. ದೇವತೆಗಳಿಗಾದರೂ ದೇವತೆಗಳೆಂದೇ ಹೇಳುತ್ತಾರೆ, ಇಲ್ಲಂತೂ ಮನುಷ್ಯರು ತನ್ನನ್ನೇ ಭಗವಂತನೆಂದು ಹೇಳಿಕೊಳ್ಳುತ್ತಾರೆ, ಇದು ಭಕ್ತಿಮಾರ್ಗವಾಗಿದೆ. ದೇವತೆಗಳು ಸ್ವರ್ಗವಾಸಿಗಳಾಗಿದ್ದರು. ಈಗ ಕಲಿಯುಗದಲ್ಲಿ ಮನುಷ್ಯರು ಭಗವಂತನಾಗಲು ಹೇಗೆ ಸಾಧ್ಯ? ತಂದೆಯು ತಿಳಿಸುತ್ತಾರೆ - ನಾನು ಸಂಗಮದಲ್ಲಿಯೇ ಬರುತ್ತೇನೆ, ಯಾವಾಗ ನಾನು ಬಂದು ಪ್ರಪಂಚವನ್ನು ಪರಿವರ್ತನೆ ಮಾಡಬೇಕಾಗಿದೆ, ಕಲಿಯುಗದಿಂದ ಸತ್ಯಯುಗವಾದಾಗ ಉಳಿದೆಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಅದು ನಿರಾಕಾರಿ ಪ್ರಪಂಚ, ಇದು ಸಾಕಾರಿ ಪ್ರಪಂಚವಾಗಿದೆ. ತಿಳಿಸುವುದಕ್ಕಾಗಿ ನಿರಾಕಾರಿ ವೃಕ್ಷವನ್ನು ದೊಡ್ಡ ಗಾತ್ರದಲ್ಲಿ ಮಾಡಿಸಬೇಕಾಗಿದೆ. ಬ್ರಹ್ಮ್ ಮಹಾತತ್ವವೂ ಸಹ ಆಕಾಶದಷ್ಟೇ ದೊಡ್ಡದಾಗಿದೆ. ಎರಡರ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ, ಭಲೆ ಪ್ರಯತ್ನ ಪಡುತ್ತಾರೆ, ವಿಮಾನ ಇತ್ಯಾದಿಗಳಲ್ಲಿ ಹೋಗುತ್ತಾರೆ ಆದರೆ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ. ಸಮುದ್ರವೇ ಸಮುದ್ರ... ಆಕಾಶವೇ ಆಕಾಶವಿದೆ... ಅಲ್ಲಂತೂ ಏನೂ ಇಲ್ಲ, ಭಲೆ ಬಹಳ ಪ್ರಯತ್ನ ಪಡುತ್ತಾರೆ. ಆದರೆ ಇವೆಲ್ಲಾ ಮಾತುಗಳಿಂದೇನು ಲಾಭ! ನಾವು ನಮ್ಮ ಬುದ್ಧಿವಂತಿಕೆಯನ್ನು ಉಪಯೋಗಿಸುತ್ತೇವೆಂದು ತಿಳಿದುಕೊಳ್ಳುತ್ತಾರೆ. ಇದು ಮನುಷ್ಯರ ಬುದ್ಧಿಯಾಗಿದೆ. ವಿಜ್ಞಾನದ ಅಹಂಕಾರವು ಮನುಷ್ಯರದಾಗಿದೆ. ಭಲೆ ಯಾರೆಷ್ಟಾದರೂ ಅಂತ್ಯವನ್ನು ಪಡೆಯಲಿ ಆದರೆ ಅವರನ್ನು ಇಡೀ ಪ್ರಪಂಚವು ಪೂಜಿಸುವುದಿಲ್ಲ. ದೇವತೆಗಳಿಗಂತೂ ಪೂಜೆ ನಡೆಯುತ್ತದೆ. ತಂದೆಯು ನೀವು ಮಕ್ಕಳನ್ನು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಎಲ್ಲರನ್ನೂ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ನಾವು ಮೂಲವತನದಿಂದ ಬರುತ್ತೇವೆಂದು, ಭಲೆ ಎಲ್ಲರಿಗೂ ತಿಳಿದಿದೆ ಆದರೆ ಯಾವ ಪ್ರಕಾರದಲ್ಲಿ ನೀವು ತಿಳಿದುಕೊಂಡಿದ್ದೀರೋ ಆ ರೀತಿ ಪ್ರಪಂಚವು ತಿಳಿದುಕೊಂಡಿಲ್ಲ. ಅದು ಏನು, ಹೇಗೆ ಆತ್ಮರು ಅಲ್ಲಿರುತ್ತಾರೆ, ಮತ್ತೆ ನಂಬರ್ವಾರ್ ಬರುತ್ತಾರೆ, ಇದು ಯಾರಿಗೂ ಗೊತ್ತಿಲ್ಲ. ಬ್ರಹ್ಮ್ ಮಹಾತತ್ವದಲ್ಲಿ ನಿರಾಕಾರಿ ವೃಕ್ಷವಿದೆ. ಇದನ್ನೂ ತಿಳಿದುಕೊಂಡಿಲ್ಲ - ಸತ್ಯಯುಗದಲ್ಲಿ ಕೆಲವರೇ ಇರುತ್ತಾರೆ, ಉಳಿದೆಲ್ಲಾ ಆತ್ಮರು ಮೂಲವತನದಲ್ಲಿರುತ್ತಾರೆ. ಹೇಗೆ ಇದು ಸಾಕಾರಿ ವತನವಾಗಿದೆಯೋ ಅದೇರೀತಿ ಮೂಲವತನವಿದೆ. ವತನವೆಂದೂ ಖಾಲಿಯಾಗುವುದಿಲ್ಲ, ಇದಾಗಲಿ, ಅದಾಗಲಿ, ಖಾಲಿಯಾಗುವುದಿಲ್ಲ. ಯಾವಾಗ ಅಂತ್ಯವಾಗುವುದೋ ಆಗ ವರ್ಗಾಯಿತರಾಗುತ್ತೀರಿ. ಕೆಲವರು ಈ ವತನದಲ್ಲಿರುತ್ತಾರೆ. ಇಡೀ ವತನವೇ ಖಾಲಿಯಾಗಿ ಬಿಟ್ಟರೆ ಅದು ಪ್ರಳಯವಾದಂತೆ ಆದರೆ ಪ್ರಳಯವಾಗುವುದಿಲ್ಲ. ಅವಿನಾಶಿ ಖಂಡವಲ್ಲವೆ. ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಇಡೀ ದಿನ ನಾವು ಯಾರ ಕಲ್ಯಾಣ ಮಾಡುವುದು? ಎಂಬುದು ಚಿಂತನೆಯೇ ನಡೆಯುತ್ತಿರಲಿ, ತಂದೆಯ ಜೊತೆ ಪ್ರೀತಿಯು ಜೋಡಣೆ ಆಗಿರುವುದೇ ಆದರೆ ಅವರ ಪರಿಚಯ ಕೊಡಬೇಕಲ್ಲವೆ. ಅವರು ತಂದೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುತ್ತದೆ. ಅದು ಹೇಗೆ ಸಿಗುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ ಎಂದು ತಿಳಿಸುವುದರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರು ಬಹಳ ಚೆನ್ನಾಗಿ ಭಾಷಣ ಮಾಡುತ್ತಾರೆ, ಕೆಲವರು ಮಾಡುವುದಿಲ್ಲ, ಆದ್ದರಿಂದ ಕಲಿಯಬೇಕಾಗಿದೆ. ಪ್ರತಿಯೊಬ್ಬ ಮಗುವು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಮಾರ್ಗ ಸಿಕ್ಕಿದೆ ಅಂದಮೇಲೆ ಒಬ್ಬರು ಇನ್ನೊಬ್ಬರ ಕಲ್ಯಾಣ ಮಾಡಬೇಕಾಗಿದೆ. ಅನ್ಯರಿಗೂ ತಂದೆಯಿಂದ ಆಸ್ತಿಯನ್ನು ಕೊಡಿಸೋಣ, ಆತ್ಮಿಕ ಸೇವೆ ಮಾಡೋಣವೆಂದು ಮನಸ್ಸಾಗುತ್ತದೆ. ಎಲ್ಲರೂ ಒಬ್ಬರು ಇನ್ನೊಬ್ಬರ ಸೇವೆ ಮಾಡುತ್ತಾರೆ. |
ತಂದೆಯು ಬಂದು ಆತ್ಮಿಕ ಸೇವೆಯನ್ನು ಕಲಿಸುತ್ತಾರೆ. ಈ ಸೇವೆಯನ್ನು ಮತ್ತ್ಯಾರೂ ಅರಿತುಕೊಂಡಿಲ್ಲ. ಆತ್ಮಿಕ ತಂದೆಯೇ ಆತ್ಮಗಳ ಸೇವೆ ಮಾಡುತ್ತಾರೆ. ದೈಹಿಕ ಸೇವೆಯನ್ನಂತೂ ಜನ್ಮ-ಜನ್ಮಾಂತರ ಬಹಳಷ್ಟು ಮಾಡಿದಿರಿ, ಈಗ ಅಂತಿಮ ಜನ್ಮದಲ್ಲಿ ಆತ್ಮಿಕ ಸೇವೆ ಮಾಡಬೇಕಾಗಿದೆ ಯಾವುದನ್ನು ತಂದೆಯು ತಿಳಿಸಿದ್ದಾರೆ. ಇದರಲ್ಲಿಯೂ ಕಲ್ಯಾಣವಿದೆ, ಮತ್ತ್ಯಾವುದರಲ್ಲಿಯೂ ಲಾಭವಿಲ್ಲ. ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ. ಸಂಬಂಧಗಳನ್ನು ನಿಭಾಯಿಸಬೇಕಾಗಿದೆ. ಅವರಿಗೂ ಸಹ ಇದನ್ನೇ ತಿಳಿಸಿ ಕಲ್ಯಾಣ ಮಾಡಬೇಕಾಗಿದೆ. ಪ್ರೀತಿಯಿದ್ದರೆ ಸ್ವಲ್ಪವಾದರೂ ಕೇಳುತ್ತಾರೆ. ಇನ್ನೂ ಕೆಲವರು ನಾವೂ ಸನ್ಯಾಸ ಮಾಡಬೇಕಾಗುತ್ತದೆಯೇನೋ ಎಂದು ಹೆದರುತ್ತಾರೆ. ಇತ್ತೀಚೆಗೆ ಸನ್ಯಾಸಿಗಳೂ ಅನೇಕರಿದ್ದಾರಲ್ಲವೆ. ಕಾವಿಯನ್ನು ಧರಿಸಿ ಕೆಲವು ಶಬ್ದಗಳನ್ನು ತಿಳಿಸಿದರೆ ಸಾಕು, ಎಲ್ಲಿಂದಲಾದರೂ ಹೊಟ್ಟೆ ಪಾಡು ನಡೆಯುತ್ತದೆ. ಯಾವುದಾದರೂ ಅಂಗಡಿಯ ಬಳಿ ಹೋದರೆ ಎರಡು ಪೂರಿಯನ್ನು ಕೊಡುತ್ತಾರೆ ಮತ್ತೆ ಇನ್ನೊಬ್ಬರ ಬಳಿ ಹೋಗುತ್ತಾರೆ, ಹೊಟ್ಟೆ ಪೂಜೆಯಾಗಿ ಬಿಡುತ್ತದೆ. ಭಿಕ್ಷೆ ಬೇಡುವವರಲ್ಲಿಯೂ ಅನೇಕ ಪ್ರಕಾರದವರಿರುತ್ತಾರೆ. ಈ ತಂದೆಯ ಬಳಿ ಒಂದೇ ಪ್ರಕಾರದ ಆಸ್ತಿಯು ಸಿಗುತ್ತದೆ. ಬೇಹದ್ದಿನ ರಾಜ್ಯಭಾಗ್ಯ ಸಿಗುತ್ತದೆ, ಸದಾ ನಿರೋಗಿಗಳಾಗುತ್ತೀರಿ. ಸಾಹುಕಾರರು ಬಹಳ ಕಷ್ಟದಿಂದ ಮೇಲೇಳುತ್ತಾರೆ ಆದ್ದರಿಂದ ಬಡವರ ಕಲ್ಯಾಣವನ್ನು ಮಾಡಬೇಕಾಗಿದೆ. ತಂದೆಯು ಬಹಳಷ್ಟು ಪ್ರದರ್ಶನಿಗಳನ್ನು ಮಾಡಿಸುತ್ತಿದ್ದಾರೆ ಏಕೆಂದರೆ ಗ್ರಾಮಾಂತರ ಜನ ಅನೇಕರಿದ್ದಾರಲ್ಲವೆ, ಈ ಜ್ಞಾನವು ಬಹಳ ಚೆನ್ನಾಗಿದೆ ಎಂದು ಮಂತ್ರಿಗಳು ಮೊದಲಾದವರು ತಿಳಿದುಕೊಂಡರೆ ಸಾಕು, ಇದನ್ನು ಎಲ್ಲರೂ ಕೇಳತೊಡಗುತ್ತಾರೆ. ಹಾ! ಮುಂದೆ ಹೋದಂತೆ ನಿಮ್ಮದು ಬಹಳ ಪ್ರಸಿದ್ಧವಾಗುವುದು. ಆಗ ಅನೇಕರು ಬರುತ್ತಾರೆ. ಆತ್ಮದಲ್ಲಿನ ತುಕ್ಕು ಕಳೆಯುವುದರಲ್ಲಿ ಸಮಯ ಹಿಡಿಸುತ್ತದೆ, ಇದರಲ್ಲಿ ಯಾರಾದರೂ ಹಗಲು ರಾತ್ರಿ ತೊಡಗಿದರೆ ಅವರಲ್ಲಿ ಬಹುಷಃ ಬೇಗನೆ ತುಕ್ಕು ಕಳೆದು ಆತ್ಮವು ಪವಿತ್ರವಾದರೆ ಅದು ಈ ಶರೀರವನ್ನು ಬಿಟ್ಟು ಬಿಡುವುದು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಪ್ರದರ್ಶನಿಯಲ್ಲಿಯೂ ತಿಳಿಸಬೇಕಾಗಿದೆ. ಮುಖ್ಯವಾಗಿ ಎಲ್ಲವೂ ಭಾರತದ ಮಾತಾಗಿದೆ. ಭಾರತದ ಉನ್ನತಿಯಾದರೆ ಎಲ್ಲರ ಉನ್ನತಿಯಾಗಿ ಬಿಡುತ್ತದೆ. ಪ್ರೊಜೆಕ್ಟರ್ಗಿಂತಲೂ ಪ್ರದರ್ಶನಿಯಲ್ಲಿ ಹೆಚ್ಚು ಸೇವೆ ನಡೆಯುತ್ತದೆ. ನಿಧಾನ-ನಿಧಾನವಾಗಿ ವೃದ್ಧಿ ಹೊಂದುತ್ತಾ ಹೋಗುತ್ತದೆ. ದಿನ-ಪ್ರತಿದಿನ ನಿಮ್ಮ ಹೆಸರು ಪ್ರಸಿದ್ಧವಾಗುತ್ತಾ ಹೋಗುವುದು. ಇದನ್ನೂ ಸಹ ಬರೆಯಬೇಕು - ಇಂದಿಗೆ 5000 ವರ್ಷಗಳ ಮೊದಲೂ ಸಹ ಇದೇ ರೀತಿ ಆಗಿತ್ತು, ಇವು ಬಹಳ ಅದ್ಭುತ ಮಾತುಗಳಾಗಿವೆ. ತಂದೆಯು ಸಲಹೆಯನ್ನಿಡುತ್ತಾರೆ ಆದರೆ ಮಕ್ಕಳು ಅನೇಕ ಮಾತುಗಳನ್ನು ಮರೆತು ಹೋಗುತ್ತಾರೆ. ಏನಾದರೂ ಆದರೆ ಇಂದಿಗೆ 5000 ವರ್ಷಗಳ ಮೊದಲೂ ಸಹ ಇದೇರೀತಿ ಆಗಿತ್ತೆಂದು ಹೇಳುತ್ತಾರೆ. ಬಹಳ ಸ್ಪಷ್ಟ ಮಾತಾಗಿದೆ ಆದರೆ ಇದು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕಷ್ಟೆ, ಪತ್ರಿಕೆಗಳಲ್ಲಿಯೂ ಸಹ ಹಾಕಿಸಿದರೆ ಯಾರಾದರೂ ತಿಳಿದುಕೊಳ್ಳಬೇಕಷ್ಟೆ, ಜ್ಞಾನ ಮಾರ್ಗದಲ್ಲಿ ಸ್ಥಿತಿಯು ಬಹಳ ಚೆನ್ನಾಗಿರಬೇಕು. ಇಂತಿಂತಹ ಮಾತುಗಳನ್ನು ಕೇಳಿ ಹರ್ಷಿತರಾಗಬೇಕು. ಅಭ್ಯಾಸವಾಗಿ ಬಿಟ್ಟರೆ ಮತ್ತೆ ಸ್ಥಿತಿಯು ಬಹಳ ಪ್ರಸನ್ನವಾಗಿರುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮತ್ತೆಲ್ಲರಿಂದ ಬುದ್ಧಿಯ ಪ್ರೀತಿಯನ್ನು ತೆಗೆದು ಒಬ್ಬ ತಂದೆಯೊಂದಿಗೆ ಜೋಡಿಸಬೇಕಾಗಿದೆ ಮತ್ತು ಎಲ್ಲರ ಪ್ರೀತಿಯನ್ನು ಒಬ್ಬರೊಂದಿಗೆ ಜೋಡಿಸುವ ಸೇವೆ ಮಾಡಬೇಕಾಗಿದೆ. |
2. ಸತ್ಯ-ಸತ್ಯವಾದ ಆತ್ಮಿಕ ಸೇವಾಧಾರಿಗಳಾಗಬೇಕಾಗಿದೆ. ತಮ್ಮ ಕಲ್ಯಾಣವನ್ನೂ ಮಾಡಿ ಕೊಳ್ಳಬೇಕು ಮತ್ತು ಅನ್ಯರಿಗೂ ಮಾರ್ಗ ತಿಳಿಸಬೇಕಾದರೆ ಸ್ಥಿತಿಯನ್ನು ಬಹಳ ಪ್ರಸನ್ನಚಿತ್ತವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಅನೇಕರು ಓಂ ಶಾಂತಿ ಎಂದು ಹೇಳುತ್ತಾರೆ ಅರ್ಥಾತ್ ತಮ್ಮ ಆತ್ಮದ ಪರಿಚಯವನ್ನು ಕೊಡುತ್ತಾರೆ ಆದರೆ ಸ್ವಯಂ ತಿಳಿದುಕೊಂಡಿಲ್ಲ, ಓಂ ಶಾಂತಿ ಎಂಬುದಕ್ಕೆ ಅನೇಕ ಅರ್ಥಗಳನ್ನು ಹೇಳುತ್ತಾರೆ. ಓಂ ಎಂದರೆ ಭಗವಂತನೆಂದು ಕೆಲವರು ಹೇಳುತ್ತಾರೆ. ಆದರೆ ಇಲ್ಲ, ಓಂ ಶಾಂತಿ ಎಂದು ಆತ್ಮವೇ ಹೇಳುತ್ತದೆ. ನಾನು ಆತ್ಮನ ಸ್ವಧರ್ಮವೇ ಶಾಂತಿಯಾಗಿದೆ. ಆದ್ದರಿಂದ ನಾನು ಶಾಂತ ಸ್ವರೂಪನಾಗಿದ್ದೇನೆಂದು ಹೇಳುತ್ತಾರೆ. ಇದು ನನ್ನ ಶರೀರವಾಗಿದೆ ಯಾವುದರ ಮೂಲಕ ನಾವು ಕರ್ಮ ಮಾಡುತ್ತೇವೆ. ಎಷ್ಟು ಸಹಜವಾಗಿದೆ! ಹಾಗೆಯೇ ತಂದೆಯೂ ಸಹ ಹೇಳುತ್ತಾರೆ – ಓಂ ಶಾಂತಿ ಆದರೆ ನಾನು ಎಲ್ಲರ ತಂದೆಯಾಗಿರುವ ಕಾರಣ, ಬೀಜರೂಪನಾಗಿರುವ ಕಾರಣ ಯಾವ ರಚನಾರೂಪಿ ವೃಕ್ಷವಿದೆಯೋ ಆ ಕಲ್ಪವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ. ಹೇಗೆ ನೀವು ಯಾವುದೇ ವೃಕ್ಷವನ್ನು ನೋಡಿದಾಗ ಅದರ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುತ್ತೀರಿ, ಆ ಬೀಜವಂತೂ ಜಡವಾಗಿದೆ. ತಂದೆಯು ತಿಳಿಸುತ್ತಾರೆ - ಈ ಕಲ್ಪವೃಕ್ಷದ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಾನು ತಿಳಿದುಕೊಂಡಿದ್ದೇನೆ. ನನಗೇ ಜ್ಞಾನ ಸಾಗರನೆಂದು ಹೇಳುತ್ತಾರೆ, ನಾನು ನೀವು ಮಕ್ಕಳಿಗೆ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಿದ್ದೇನೆ. ಈ ನಾಟಕಕ್ಕೆ ಡ್ರಾಮಾ ಎಂದು ಹೇಳಲಾಗುತ್ತದೆ. ನೀವು ಇದರಲ್ಲಿ ಪಾತ್ರಧಾರಿಗಳಾಗಿದ್ದೀರಿ, ನಾನೂ ಸಹ ಪಾತ್ರಧಾರಿಯಾಗಿದ್ದೇನೆ. ಮಕ್ಕಳು ಹೇಳುತ್ತಾರೆ - ಹೇ ತಂದೆಯೇ, ಪತಿತ-ಪಾವನನೇ ಪಾತ್ರಧಾರಿಯಾಗಿ ಬನ್ನಿ, ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು. ಅದಕ್ಕಾಗಿ ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನನ್ನ ಪಾತ್ರವನ್ನು ಮಾಡುತ್ತಿದ್ದೇನೆ, ನನ್ನ ಪಾತ್ರವು ಕೇವಲ ಈ ಸಂಗಮದ ಸಮಯದಲ್ಲಿಯೇ ಇದೆ. ಅದರಲ್ಲಿಯೂ ನನಗೆ ನನ್ನದೇ ಆದ ಶರೀರವಿಲ್ಲ. ನಾನು ಈ ಶರೀರದ ಮೂಲಕ ಪಾತ್ರ ಮಾಡುತ್ತೇನೆ. ನನ್ನ ಹೆಸರಾಗಿದೆ - ಶಿವ. ಮಕ್ಕಳಿಗೇ ತಿಳಿಸುತ್ತಾರಲ್ಲವೆ. ಯಾವುದೇ ಕೋತಿಗಳು ಅಥವಾ ಪ್ರಾಣಿಗಳ ಪಾಠಶಾಲೆಯಿರುವುದಿಲ್ಲ, ಆದರೆ ತಂದೆಯು ತಿಳಿಸುತ್ತಾರೆ - ಈ ಪಂಚ ವಿಕಾರಗಳಿರುವ ಕಾರಣ ಭಲೆ ಚಹರೆಯು ಮನುಷ್ಯನದಾಗಿದೆ, ಕರ್ತವ್ಯವು ಕೋತಿಯಂತಿದೆ. ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಎಲ್ಲರೂ ತಮ್ಮನ್ನು ಪತಿತರೆಂದು ಕರೆಸಿಕೊಳ್ಳುತ್ತಾರೆ ಆದರೆ ನಮ್ಮನ್ನು ಯಾರು ಪತಿತರನ್ನಾಗಿ ಮಾಡುತ್ತಾರೆ ಮತ್ತು ಪಾವನರನ್ನಾಗಿ ಯಾರು ಮಾಡುತ್ತಾರೆ? ಪತಿತ-ಪಾವನ ಯಾರೆಂಬುದನ್ನೇ ತಿಳಿದುಕೊಂಡಿಲ್ಲ. ಯಾರನ್ನು ಕರೆಯುತ್ತೇವೆ ಎಂಬುದೇನೂ ಗೊತ್ತಿಲ್ಲ. ನಾವೆಲ್ಲರೂ ಪಾತ್ರಧಾರಿಗಳಾಗಿದ್ದೇವೆ, ನಾವಾತ್ಮರು ಈ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇವೆ ಎಂಬುದೇನನ್ನೂ ತಿಳಿದುಕೊಂಡಿಲ್ಲ. ಆತ್ಮವು ಪರಮಧಾಮದಿಂದ ಬರುತ್ತದೆ, ಬಂದು ಪಾತ್ರವನ್ನಭಿನಯಿಸುತ್ತದೆ. ಇಡೀ ಆಟವು ಭಾರತದ ಮೇಲೆ ಮಾಡಲ್ಪಟ್ಟಿದೆ. ಪಾವನ ಭಾರತವನ್ನು ಪತಿತ ಭಾರತವನ್ನಾಗಿ ಯಾರು ಮಾಡಿದರು? ರಾವಣ. ರಾವಣನು ಲಂಕೆಯಲ್ಲಿ ರಾಜ್ಯ ಮಾಡುತ್ತಿದ್ದನು ಎಂದು ಹೇಳುತ್ತಾರೆ. ತಂದೆಯು ಈಗ ನಮ್ಮನ್ನು ಬೇಹದ್ದಿನಲ್ಲಿ ಕರೆದುಕೊಂಡು ಹೋಗುತ್ತಾರೆ - ಹೇ ಮಕ್ಕಳೇ, ಇಡೀ ಸೃಷ್ಟಿಯೇ ಬೇಹದ್ದಿನ ದ್ವೀಪವಾಗಿದೆ ಅದಂತೂ ಹದ್ದಿನ ಲಂಕೆಯಾಗಿದೆ. ಈ ಬೇಹದ್ದಿನ ದ್ವೀಪದಲ್ಲಿ ರಾವಣ ರಾಜ್ಯವಿದೆ. ಮೊದಲು ರಾಮ ರಾಜ್ಯವಿತ್ತು, ಈಗ ರಾವಣ ರಾಜ್ಯವಾಗಿದೆ. ಬಾಬಾ, ರಾಮ ರಾಜ್ಯವು ಎಲ್ಲಿತ್ತು ಎಂದು ಮಕ್ಕಳು ಕೇಳುತ್ತಾರೆ, ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅದು ಇಲ್ಲಿಯೇ ಇತ್ತಲ್ಲವೆ ಯಾವುದನ್ನು ಎಲ್ಲರೂ ಬಯಸುತ್ತಾರೆ. |
ನೀವು ಭಾರತವಾಸಿಗಳು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ, ಹಿಂದೂ ಧರ್ಮದವರಲ್ಲ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿದ ಮುದ್ದಾದ ಮಕ್ಕಳೇ, ನೀವೇ ಮೊಟ್ಟ ಮೊದಲು ಭಾರತದಲ್ಲಿದ್ದಿರಿ, ನಿಮಗೆ ಆ ಸತ್ಯಯುಗದ ರಾಜ್ಯವನ್ನು ಯಾರು ಕೊಟ್ಟಿದ್ದರು? ಅವಶ್ಯವಾಗಿ ಸ್ವರ್ಗದ ರಚಯಿತನೇ ಈ ಆಸ್ತಿಯನ್ನು ಕೊಟ್ಟಿದ್ದರು. ತಂದೆಯು ತಿಳಿಸುತ್ತಾರೆ – ಎಷ್ಟೊಂದು ಮಂದಿ ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಮುಸಲ್ಮಾನರ ರಾಜ್ಯವಿದ್ದಾಗ ಅನೇಕರನ್ನು ಮುಸಲ್ಮಾನರನ್ನಾಗಿ ಮಾಡಿಕೊಂಡರು. ಕ್ರಿಶ್ಚಿಯನ್ನರ ರಾಜ್ಯವಿದ್ದಾಗ ಅನೇಕರನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಂಡರು. ಬೌದ್ಧಿಯರ ರಾಜ್ಯವು ಇಲ್ಲಿ ಇರಲಿಲ್ಲ, ಆದರೂ ಸಹ ಅನೇಕರನ್ನು ಬೌದ್ಧಿಯರನ್ನಾಗಿ ಮಾಡಿಕೊಂಡರು. ತಮ್ಮ ಧರ್ಮದಲ್ಲಿ ಸೇರಿಸಿಕೊಂಡರು. ಆದಿ ಸನಾತನ ಧರ್ಮವು ಯಾವಾಗ ಪ್ರಾಯಲೋಪವಾಗಿ ಬಿಡುವುದೋ ಆಗಲೇ ಪುನಃ ಆ ಧರ್ಮದ ಸ್ಥಾಪನೆಯಾಗುವುದು. ಅಂದಾಗ ತಂದೆಯು ನೀವೆಲ್ಲಾ ಭಾರತವಾಸಿಗಳಿಗೆ ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ನೀವೆಲ್ಲರೂ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ನೀವು 84 ಜನ್ಮಗಳನ್ನು ತೆಗೆದುಕೊಂಡಿರಿ. ಬ್ರಾಹ್ಮಣ, ದೇವತಾ, ಕ್ಷತ್ರಿಯ..... ವರ್ಣದಲ್ಲಿ ಬಂದಿರಿ. ಈಗ ಪುನಃ ದೇವತಾವರ್ಣದಲ್ಲಿ ಹೋಗುವುದಕ್ಕಾಗಿ ಬ್ರಾಹ್ಮಣ ವರ್ಣದಲ್ಲಿ ಬಂದಿದ್ದೀರಿ. ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ. ಮೊದಲು ಬ್ರಾಹ್ಮಣರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಬ್ರಾಹ್ಮಣರೇ ಭಾರತವನ್ನು ಸ್ವರ್ಗವನ್ನಾಗಿ ಮಾಡಿದ್ದೀರಿ, ಇದು ಭಾರತದ ಪ್ರಾಚೀನ ಯೋಗವಾಗಿದೆ. ಮೊಟ್ಟ ಮೊದಲು ಯಾವ ರಾಜಯೋಗವಿತ್ತೋ ಅದರ ವರ್ಣನೆಯು ಗೀತೆಯಲ್ಲಿದೆ. ಗೀತೆಯ ಯೋಗವನ್ನು ಯಾರು ಕಲಿಸಿದ್ದರು? ಇದನ್ನು ಭಾರತವಾಸಿಗಳು ಮರೆತು ಹೋಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆ ಯೋಗವನ್ನು ನಾನೇ ಕಲಿಸಿದ್ದೆನು, ಇದು ಆತ್ಮಿಕ ಯೋಗವಾಗಿದೆ. ಉಳಿದೆಲ್ಲವೂ ದೈಹಿಕ ಯೋಗಗಳಾಗಿವೆ, ಸನ್ಯಾಸಿಗಳು ಬ್ರಹ್ಮ್ ತತ್ವದೊಂದಿಗೆ ಯೋಗವನ್ನಿಡಿ ಎಂದು ದೈಹಿಕ ಯೋಗಗಳನ್ನು ಕಲಿಸುತ್ತಾರೆ ಆದರೆ ಅದು ತಪ್ಪಾಗಿದೆ, ಬ್ರಹ್ಮ್ ತತ್ವವು ಇರುವ ಸ್ಥಾನವಾಗಿದೆ ಅಂದಮೇಲೆ ಅದು ಪರಮಾತ್ಮನಾಗಲಿಲ್ಲ, ತಂದೆಯನ್ನೇ ಮರೆತು ಹೋಗಿದ್ದಾರೆ. ನೀವೂ ಸಹ ಮರೆತು ಹೋಗಿದ್ದಿರಿ, ನೀವು ತಮ್ಮ ಧರ್ಮವನ್ನೂ ಮರೆತು ಬಿಟ್ಟಿದ್ದೀರಿ. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ವಿದೇಶದಲ್ಲಿ ಯೋಗವು ಇರಲೇ ಇಲ್ಲ, ಹಠಯೋಗ ಮತ್ತು ರಾಜಯೋಗವು ಇಲ್ಲಿಯದೇ ಆಗಿದೆ, ಆ ನಿವೃತ್ತಿ ಮಾರ್ಗದ ಸನ್ಯಾಸಿಗಳು ಎಂದೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ, ಯಾರು ಅರಿತಿರುವರೋ ಅವರೇ ಕಲಿಸುವರು. ಸನ್ಯಾಸಿಗಳಾದರೂ ರಾಜ್ಯವನ್ನೇ ಬಿಟ್ಟು ಹೋಗುತ್ತಾರೆ. ಗೋಪಿಚಂದ ರಾಜನ ಉದಾಹರಣೆಯಿದೆಯಲ್ಲವೆ. ರಾಜ್ಯವನ್ನು ಬಿಟ್ಟು ಕಾಡಿಗೆ ಹೊರಟು ಹೋದರು, ಅವರ ಕಥೆಯಿದೆ. ಸನ್ಯಾಸಿಗಳಂತೂ ರಾಜ್ಯವನ್ನು ಬಿಡಿಸುವವರಾಗಿದ್ದಾರೆ ಅಂದಮೇಲೆ ಅವರು ರಾಜಯೋಗವನ್ನು ಕಲಿಸಲು ಹೇಗೆ ಸಾಧ್ಯ? ಈ ಸಮಯದಲ್ಲಿ ಇಡೀ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಈಗ ಇದು ಬಿದ್ದಿತೆಂದರೆ ಬಿದ್ದಿತು. ಯಾವುದೇ ವೃಕ್ಷವು ಅಂತಿಮ ಸ್ಥಿತಿಯನ್ನು ತಲುಪಿದಾಗ ಅಂತ್ಯದಲ್ಲಿ ಅದನ್ನು ಬೀಳಿಸಲಾಗುತ್ತದೆ ಹಾಗೆಯೇ ಈ ಮನುಷ್ಯ ಸೃಷ್ಟಿರೂಪಿ ವೃಕ್ಷವೂ ಸಹ ತಮೋಪ್ರಧಾನವಾಗಿದೆ, ಇದರಲ್ಲಿ ಏನೂ ಸಾರವಿಲ್ಲ, ಇದರ ವಿನಾಶವು ಖಂಡಿತ ಆಗುವುದು. ಅದಕ್ಕೆ ಮೊದಲೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಇಲ್ಲಿ ಮಾಡಬೇಕಾಗುವುದು. ಸತ್ಯಯುಗದಲ್ಲಿ ಯಾರೂ ದುರ್ಗತಿಯಲ್ಲಿರುವುದಿಲ್ಲ. ಇವರು ವಿದೇಶದಲ್ಲಿ ಹೋಗಿ ಯೋಗವನ್ನು ಕಲಿಸುತ್ತಾರೆ ಆದರೆ ಅವರದು ಅನೇಕ ಪ್ರಕಾರದ ಹಠಯೋಗಗಳಾಗಿವೆ, ಇದು ರಾಜಯೋಗವಾಗಿದೆ. ಇದಕ್ಕೆ ಆತ್ಮಿಕ ಯೋಗವೆಂದು ಹೇಳಲಾಗುತ್ತದೆ. ಅವೆಲ್ಲವೂ ದೈಹಿಕ ಯೋಗಗಳಾಗಿವೆ. ಮನುಷ್ಯರೇ ಮನುಷ್ಯರಿಗೆ ಕಲಿಸುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಾನು ನಿಮಗೆ ಒಂದೇ ಬಾರಿ ಈ ರಾಜಯೋಗವನ್ನು ಕಲಿಸುತ್ತೇನೆ. ಖಡಾಖಂಡಿತವಾಗಿ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಕಲಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮೆಲ್ಲಾ ಪಾಪಗಳು ಕಳೆಯುತ್ತವೆ. ಹಠಯೋಗಿಗಳೆಂದೂ ಈ ರೀತಿ ಹೇಳಲು ಸಾಧ್ಯವಿಲ್ಲ. ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ. ಇದು ಹೊಸ ಮಾತಾಗಿದೆ. ತಂದೆಯೇ ಈಗ ನಿಮ್ಮನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಿದ್ದಾರೆ. ತಂದೆಗೆ ದೇಹವಿಲ್ಲ, ಇವರ ತನುವಿನಲ್ಲಿ ಬರುತ್ತಾರೆ, ಬಂದು ಇವರ ಹೆಸರನ್ನು ಬದಲಾಯಿಸುತ್ತಾರೆ ಏಕೆಂದರೆ ಇವರು (ಬ್ರಹ್ಮಾ) ಮರುಜೀವಿಯಾಗಿದ್ದಾರೆ. ಹೇಗೆ ಗೃಹಸ್ಥಿಗಳು ಸನ್ಯಾಸಿಯಾದಾಗ ಮರುಜೀವಿಯಾದರು. ಗೃಹಸ್ಥಾಶ್ರಮವನ್ನು ಬಿಟ್ಟು ನಿವೃತ್ತಿ ಮಾರ್ಗವನ್ನು ತೆಗೆದುಕೊಂಡರು ಎಂದರ್ಥ. ನೀವೂ ಸಹ ಮರುಜೀವಿಗಳಾಗುವುದರಿಂದ ಹೆಸರು ಬದಲಾಗುತ್ತದೆ. ಯಜ್ಞದ ಆದಿಯಲ್ಲಿ ಎಲ್ಲರಿಗೆ ಅಲೌಕಿಕ ಹೆಸರುಗಳನ್ನಿಡಲಾಗಿತ್ತು ನಂತರ ಕೆಲವರು ಜ್ಞಾನವನ್ನು ಬಿಟ್ಟು ಹೋದರು ಆದ್ದರಿಂದ ಹೆಸರಿಡುವುದನ್ನು ನಿಲ್ಲಿಸಲಾಯಿತು. ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಹೆಸರನ್ನಿಟ್ಟ ನಂತರ ಮತ್ತೆ ಓಡಿ ಹೋದರೆ ಅದು ವ್ಯರ್ಥವಾಗಿ ಬಿಡುತ್ತದೆ. ಮೊದಲು ಬಂದವರಿಗೆ ಇಟ್ಟಿದ್ದ ಹೆಸರುಗಳು ಬಹಳ ರಮಣೀಕವಾಗಿತ್ತು, ಈಗ ಯಾರಿಗೂ ಇಡುವುದಿಲ್ಲ. ಯಾರು ಸದಾ ನನ್ನ ಮಗುವಾಗಿರುವರೋ ಅವರಿಗೇ ಹೆಸರನ್ನಿಡಲಾಗುವುದು. ಅನೇಕರಿಗೆ ಹೆಸರುಗಳನ್ನಿಟ್ಟೆವು ಆದರೆ ಮತ್ತೆ ತಂದೆಗೆ ವಿಚ್ಛೇದನ ನೀಡಿ ಹೊರಟು ಹೋದರು. ಆದ್ದರಿಂದ ಈಗ ಹೆಸರುಗಳನ್ನು ಬದಲಾಯಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ಈ ಜ್ಞಾನವು ಕ್ರಿಶ್ಚಿಯನ್ನರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದು. ಇಷ್ಟಾದರೂ ತಿಳಿದುಕೊಳ್ಳುತ್ತಾರೆ - ಭಾರತದ ಯೋಗವನ್ನು ನಿರಾಕಾರ ತಂದೆಯೇ ಬಂದು ಕಲಿಸಿದ್ದರು, ತಂದೆಯನ್ನು ನೆನಪು ಮಾಡುವುದರಿಂದಲೇ ಪಾಪಗಳು ಭಸ್ಮವಾಗುತ್ತವೆ ಮತ್ತು ನಾವು ನಮ್ಮ ಮನೆಗೆ ಹೊರಟು ಹೋಗುತ್ತೇವೆ. ಯಾರು ಈ ಧರ್ಮದವರು ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆಯೋ ಅವರೇ ಮತ್ತೆ ಹಿಂತಿರುಗಿ ಬರುವರು. ನಿಮಗೆ ತಿಳಿದಿದೆ - ಮನುಷ್ಯರು ಯಾರೂ ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ. ಈ ದಾದಾರವರೂ ಸಹ ಮನುಷ್ಯನಾಗಿದ್ದಾರೆ, ಇವರೂ ಸಹ ಹೇಳುತ್ತಾರೆ - ನಾನು ಯಾರದೇ ಸದ್ಗತಿ ಮಾಡಲು ಸಾಧ್ಯವಿಲ್ಲ. ಈ ತಂದೆಯು (ಶಿವ ತಂದೆ) ನಮಗೆ ಕಲಿಸುತ್ತಾರೆ - ನಿನ್ನ ಸದ್ಗತಿಯೂ ಸಹ ನೆನಪಿನಿಂದಲೇ ಆಗುವುದು ಎಂದು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೇ ಆತ್ಮಗಳೇ, ನನ್ನೊಂದಿಗೇ ಯೋಗವನ್ನಿಡಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವು ಮೊದಲು ಸತೋಪ್ರಧಾನ ಪವಿತ್ರರಾಗಿದ್ದಿರಿ ನಂತರ ತುಕ್ಕು ಸೇರ್ಪಡೆಯಾಗಿದೆ. ನೀವು ಮೊದಲು ದೇವಿ-ದೇವತೆಗಳು ಅಂದರೆ 24 ಕ್ಯಾರೇಟ್ ಚಿನ್ನವಾಗಿದ್ದಿರಿ, ಈಗ ಸಂಪೂರ್ಣ ಕಬ್ಬಿಣದಂತೆ ಆಗಿ ಬಿಟ್ಟಿದ್ದೀರಿ. ಈ ಯೋಗವನ್ನು ಕಲ್ಪ-ಕಲ್ಪವೂ ನೀವು ಕಲಿಯಬೇಕಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ, ನಿಮ್ಮಲ್ಲಿಯೂ ಕೆಲವರು ಪೂರ್ಣ ತಿಳಿದುಕೊಂಡಿಲ್ಲ. ಕೆಲವರು ಅಲ್ಪಸ್ವಲ್ಪ ತಿಳಿದುಕೊಂಡಿದ್ದಾರೆ. ಇನ್ನು ಕೆಲವರಂತೂ ಕೇವಲ ಇಲ್ಲಿ ಏನು ಕಲಿಸುತ್ತಾರೆಂದು ನೋಡಲು ಬರುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರಂತೂ ಅನೇಕರಿದ್ದಾರೆ ಅಂದಮೇಲೆ ಅವಶ್ಯವಾಗಿ ಪ್ರಜಾಪಿತ ಬ್ರಹ್ಮನೂ ಇರಬೇಕಲ್ಲವೆ. ಅವರಿಗೆ ಇಷ್ಟೊಂದು ಮಂದಿ ಬಂದು ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಏನೋ ಇರಬೇಕು ಎಂದು ಹೋಗಿ ಅಲ್ಲಿ ಕೇಳಬೇಕು. ನಿಮಗೆ ಪ್ರಜಾಪಿತ ಬ್ರಹ್ಮನಿಂದ ಏನು ಸಿಗುತ್ತದೆ ಎಂದು ಕೇಳಬೇಕಲ್ಲವೆ ಆದರೆ ಮನುಷ್ಯರಿಗೆ ಇಷ್ಟಾದರೂ ಬುದ್ಧಿಯಿಲ್ಲ. ವಿಶೇಷವಾಗಿ ಭಾರತಕ್ಕಾಗಿಯೇ ಹೇಳುತ್ತಾರೆ. ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರು, ಪಾರಸ ಬುದ್ಧಿಯವರಿಂದ ಕಲ್ಲು ಬುದ್ಧಿಯವರೆಂದು ಗಾಯನವಿದೆ. ಸತ್ಯ-ತ್ರೇತಾಯುಗದಲ್ಲಿ ಪಾರಸ ಬುದ್ಧಿಯವರಾಗಿದ್ದಿರಿ ನಂತರ ಬೆಳ್ಳಿಯ ಸಮಾನರಾದಿರಿ ಆಗ ಎರಡು ಕಲೆಯು ಕಡಿಮೆಯಾಯಿತು ಆದ್ದರಿಂದ ಚಂದ್ರವಂಶಿಯರೆಂದು ಹೆಸರು ಬಂದಿತು ಏಕೆಂದರೆ ಅನುತ್ತೀರ್ಣರಾದರು. ಇದೂ ಸಹ ಪಾಠಶಾಲೆಯಾಗಿದೆ, 33 ಅಂಕಗಳಿಗಿಂತ ಯಾರು ಕೆಳಗಿರುವರೋ ಅವರು ಅನುತ್ತೀರ್ಣರಾಗುತ್ತಾರೆ. ರಾಮ-ಸೀತೆ ಮತ್ತು ಅವರ ರಾಜ್ಯದಲ್ಲಿರುವವರು ಸಂಪೂರ್ಣರಲ್ಲ, ಆದ್ದರಿಂದ ಸೂರ್ಯವಂಶಿಯರಾಗಲು ಸಾಧ್ಯವಿಲ್ಲ. ಇಷ್ಟು ದೊಡ್ಡ ಪರೀಕ್ಷೆಯಿದೆ ಅಂದಮೇಲೆ ಯಾರಾದರೂ ಅನುತ್ತೀರ್ಣರಾಗಿಯೇ ಆಗುತ್ತಾರಲ್ಲವೇ. ಮೊದಲು ಐ.ಸಿ.ಎಸ್.,ನ ಪರೀಕ್ಷೆಯು ಬಹಳ ಕ್ಲಿಷ್ಟವಾಗಿರುತ್ತಿತ್ತು, ಎಲ್ಲರೂ ಓದಲು ಸಾಧ್ಯವಾಗುತ್ತಿರಲಿಲ್ಲ, ಕೆಲವರೇ ತೇರ್ಗಡೆಯಾಗುತ್ತಿದ್ದರು. ನಾವು ಸೂರ್ಯವಂಶಿ ಮಹಾರಾಜ-ಮಹಾರಾಣಿಯಾಗಬೇಕೆಂದು ಯಾರಾದರೂ ಬಯಸುವುದಾದರೆ ಅದರಲ್ಲಿಯೂ ಬಹಳ ಪರಿಶ್ರಮಬೇಕು. ಮಮ್ಮಾ-ಬಾಬಾರವರೂ ಸಹ ಶ್ರೀಮತದಂತೆ ಓದುತ್ತಿದ್ದಾರೆ. ಅವರು ಮೊದಲ ನಂಬರಿನಲ್ಲಿ ಓದುತ್ತಾರೆ ಮತ್ತೆ ಯಾರು ಆ ಮಾತಾ ಪಿತರನ್ನು ಫಾಲೋ ಮಾಡುವರೋ ಅವರೇ ಮಾತಾಪಿತರ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾರೆ. ಸೂರ್ಯವಂಶಿಯರದು 8 ಪೀಳಿಗೆಗಳು ನಡೆಯುತ್ತವೆ. ಹೇಗೆ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್, ರಾಜಧಾನಿಯು ನಡೆಯುತ್ತದೆಯಲ್ಲವೆ. ಈ ಕ್ರಿಶ್ಚಿಯನ್ನರೊಂದಿಗೆ ನಿಮ್ಮದು ಹೆಚ್ಚು ಸಂಬಂಧವಿದೆ. ಕ್ರಿಶ್ಚಿಯನ್ ಮನೆತನದವರೇ ಭಾರತದ ರಾಜ್ಯವನ್ನು ಕಸಿದುಕೊಂಡರು. ಭಾರತದ ಅಪಾರ ಧನವನ್ನು ತೆಗೆದುಕೊಂಡು ಹೋದರು ಅಂದಮೇಲೆ ವಿಚಾರ ಮಾಡಿ - ಸತ್ಯಯುಗದಲ್ಲಿ ಇನ್ನೆಷ್ಟು ಹಣವಿರಬಹುದು, ಅದರ ಹೋಲಿಕೆಯಲ್ಲಿ ಇಲ್ಲಿ ಏನೂ ಇಲ್ಲ. ಸತ್ಯಯುಗದಲ್ಲಿ ಎಲ್ಲಾ ಗಣಿಗಳು ಸಂಪನ್ನವಾಗಿ ಬಿಡುತ್ತವೆ. ಈಗಂತೂ ಪ್ರತಿಯೊಂದು ವಸ್ತುವಿನ ಗಣಿಗಳು ಖಾಲಿಯಾಗ ತೊಡಗುತ್ತಿವೆ ಮತ್ತೆ ಚಕ್ರವು ಪುನರಾವರ್ತನೆಯಾದಾಗ ಎಲ್ಲಾ ಗಣಿಗಳು ಸಂಪನ್ನವಾಗಿ ಬಿಡುತ್ತವೆ. |
ಮಧುರಾತಿ ಮಧುರ ಮಕ್ಕಳೇ, ನೀವೀಗ ರಾವಣನ ಮೇಲೆ ಜಯ ಗಳಿಸಿ ರಾಜ್ಯವನ್ನು ಪಡೆಯುತ್ತಿದ್ದೀರಿ, ಮತ್ತೆ ಅರ್ಧಕಲ್ಪದ ನಂತರ ಈ ರಾವಣನು ಬರುವನು ಹಾಗೂ ಪುನಃ ನೀವು ರಾಜ್ಯವನ್ನು ಕಳೆದುಕೊಂಡು ಕುಳಿತುಕೊಳ್ಳುತ್ತೀರಿ. ಈಗ ನೀವು ಭಾರತವಾಸಿಗಳು ಕವಡೆಯಂತೆ ಆಗಿ ಬಿಟ್ಟಿದ್ದೀರಿ, ನಾನು ನಿಮ್ಮನ್ನು ವಜ್ರ ಸಮಾನರನ್ನಾಗಿ ಮಾಡಿದೆನು, ಮತ್ತೆ ರಾವಣನು ಕವಡೆಯಂತೆ ಮಾಡಿ ಬಿಟ್ಟಿದ್ದಾನೆ. ಈ ರಾವಣನು ಯಾವಾಗ ಬಂದನು, ನಾವೇಕೆ ಅವನನ್ನು ಸುಡುತ್ತೇವೆ? ಎಂಬುದನ್ನು ತಿಳಿದುಕೊಂಡಿಲ್ಲ. ಈ ರಾವಣನು ಪರಂಪರೆಯಿಂದಲೂ ಇದ್ದಾನೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಅರ್ಧಕಲ್ಪದ ನಂತರ ಈ ರಾವಣ ರಾಜ್ಯವು ಆರಂಭವಾಗುತ್ತದೆ, ವಿಕಾರಿಗಳಾಗುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ, ನೀವು ನೋಡುವಷ್ಟು ಸುಖವನ್ನು ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ಎಲ್ಲರಿಗಿಂತ ತೀರಾ ಬಡವರೂ ಸಹ ನೀವೇ ಆಗಿದ್ದೀರಿ. ಅನ್ಯ ಧರ್ಮದವರು ನಂತರದಲ್ಲಿ ವೃದ್ಧಿ ಹೊಂದುತ್ತಾರೆ. ಕ್ರೈಸ್ಟ್ ಬಂದಾಗ ಮೊದಲು ಬಹಳ ಕಡಿಮೆ ಸಂಖ್ಯೆಯಲ್ಲಿದ್ದರು, ಯಾವಾಗ ಅನೇಕರಾಗಿ ಬಿಡುವರೋ ಆಗ ರಾಜ್ಯಭಾರ ಮಾಡುವರು. ನಿಮಗಂತೂ ಮೊಟ್ಟ ಮೊದಲು ರಾಜ್ಯವು ಸಿಗುತ್ತದೆ, ಇವೆಲ್ಲವೂ ಜ್ಞಾನದ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ತಂದೆಯಾದ ನನ್ನನ್ನು ನೆನಪು ಮಾಡಿ, ಅರ್ಧಕಲ್ಪ ನೀವು ದೇಹಾಭಿಮಾನಿಯಾಗಿದ್ದೀರಿ, ಈಗ ದೇಹಿ-ಅಭಿಮಾನಿಯಾಗಿ. ಪದೇ-ಪದೇ ಇದನ್ನು ಮರೆತು ಬಿಡುತ್ತೀರಿ ಏಕೆಂದರೆ ಅರ್ಧಕಲ್ಪದಿಂದ ಆತ್ಮದಲ್ಲಿ ತುಕ್ಕು ಏರಿದೆ. ಈ ಸಮಯದಲ್ಲಿ ನೀವು ಬ್ರಾಹ್ಮಣರು ಶಿಖೆಯಾಗಿದ್ದೀರಿ, ನೀವು ಎಲ್ಲರಿಗಿಂತ ಉತ್ತಮರಾಗಿದ್ದೀರಿ. ಸನ್ಯಾಸಿಗಳು ಬ್ರಹ್ಮ ತತ್ವದೊಂದಿಗೆ ಯೋಗವನ್ನಿಡುತ್ತಾರೆ. ಅದರಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಪ್ರತಿಯೊಬ್ಬರೂ ಸತೋ, ರಜೋ, ತಮೋದಲ್ಲಿ ಖಂಡಿತ ಬರಬೇಕಾಗಿದೆ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಯಾವಾಗ ಎಲ್ಲರೂ ತಮೋಪ್ರಧಾನರಾಗಿ ಬಿಡುವರೋ ಆಗ ತಂದೆಯು ಬಂದು ಎಲ್ಲರನ್ನೂ ಸತೋಪ್ರಧಾನರನ್ನಾಗಿ ಮಾಡುತ್ತಾರೆ ಅರ್ಥಾತ್ ಎಲ್ಲರ ಜ್ಯೋತಿಯು ಜಾಗೃತವಾಗುತ್ತದೆ. ಪ್ರತಿಯೊಂದು ಆತ್ಮನಿಗೆ ತನ್ನ ತನ್ನದೇ ಆದ ಪಾತ್ರವು ಸಿಕ್ಕಿದೆ. ನೀವು ಹೀರೋ ಪಾತ್ರಧಾರಿಗಳಾಗಿದ್ದೀರಿ. ನೀವು ಭಾರತವಾಸಿಗಳು ಎಲ್ಲರಿಗಿಂತ ಶ್ರೇಷ್ಠರಾಗಿದ್ದೀರಿ, ನೀವೇ ರಾಜ್ಯವನ್ನು ಪಡೆಯುತ್ತೀರಿ ಮತ್ತು ಕಳೆದುಕೊಳ್ಳುತ್ತೀರಿ, ಮತ್ತ್ಯಾರೂ ರಾಜ್ಯವನ್ನು ಪಡೆಯುವುದಿಲ್ಲ. ಅವರಂತೂ ಬಾಹುಬಲದಿಂದ ರಾಜ್ಯ ತೆಗೆದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರು ವಿಶ್ವದ ಮಾಲೀಕರಾಗಿದ್ದರೋ ಅವರೇ ಆಗುವರು ಆದ್ದರಿಂದ ಸತ್ಯವಾದ ರಾಜಯೋಗವನ್ನು ತಂದೆಯ ವಿನಃ ಮತ್ತ್ಯಾರೂ ಕಲಿಸಲು ಸಾಧ್ಯವಿಲ್ಲ. ಏನೆಲ್ಲವನ್ನು ಕಲಿಸುತ್ತಾರೆಯೋ ಅವೆಲ್ಲವೂ ಆಯಥಾರ್ಥ ಯೋಗಗಳಾಗಿವೆ, ಅದರಿಂದ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ಅಂತ್ಯವಾಗಿದೆ, ಎಲ್ಲರೂ ದುಃಖದಿಂದ ಮುಕ್ತರಾಗುತ್ತಾರೆ. ಮತ್ತೆ ನಂಬರ್ವಾರ್ ಬರಬೇಕಾಗಿದೆ. ಮೊದಲು ಸುಖವನ್ನು ನೋಡುವರು ನಂತರ ದುಃಖವನ್ನು ನೋಡುವರು. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಕೈ ಕೆಲಸ ಮಾಡುತ್ತಿರಲಿ, ಬುದ್ದಿಯು ನೆನಪು ಮಾಡುತ್ತಿರಲಿ ಎಂದು ಹೇಳಲಾಗುತ್ತದೆ. ಕೈಗಳಿಂದ ಕೆಲಸ ಕಾರ್ಯಗಳನ್ನು ಮಾಡುತ್ತಾ ಇರಿ ಆದರೆ ಬುದ್ಧಿಯು ಮಾತ್ರ ತಂದೆಯೊಂದಿಗಿರಲಿ. |
ನೀವಾತ್ಮರು ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ, ಆ ಪ್ರಿಯತಮನು ಈಗ ಬಂದಿದ್ದಾರೆ. ಎಲ್ಲಾ ಪ್ರಿಯತಮೆಯರನ್ನು ಹೂ (ಪವಿತ್ರ) ಗಳನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಬೇಹದ್ದಿನ ಪ್ರಿಯತಮನಿಗೆ ಎಲ್ಲರೂ ಬೇಹದ್ದಿನ ಪ್ರಿಯತಮೆಯರಾಗಿದ್ದೀರಿ. ನಾನು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು ತಿಳಿಸುತ್ತಾರೆ ನಂತರ ನಂಬರ್ ವಾರ್ ಪುರುಷಾರ್ಥದನುಸಾರ ಹೋಗಿ ಪದವಿಯನ್ನು ಪಡೆಯುತ್ತೀರಿ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ, ಮಕ್ಕಳನ್ನೂ ಸಂಭಾಲನೆ ಮಾಡಿ, ಹೇ ಆತ್ಮ ನಿನ್ನ ಮನಸ್ಸು ತಂದೆಯ ಕಡೆಯಿರಲಿ. ಇದೇ ನೆನಪಿನ ಅಭ್ಯಾಸ ಮಾಡುತ್ತಾ ಇರಿ. ಮಕ್ಕಳಿಗೆ ತಿಳಿದಿದೆ - ನಾವೀಗ ತಂದೆಯನ್ನು ನೆನಪು ಮಾಡುವುದರಿಂದ ಸ್ವರ್ಗವಾಸಿಗಳಾಗುತ್ತೇವೆ. ವಿದ್ಯಾರ್ಥಿಗಳಂತೂ ಬಹಳ ಖುಷಿಯಲ್ಲಿರಬೇಕು. ಇದು ಬಹಳ ಸಹಜವಾಗಿದೆ. ಡ್ರಾಮಾನುಸಾರ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ಯಾರೊಂದಿಗೂ ವಾದ-ವಿವಾದ ಮಾಡುವ ಅವಶ್ಯಕತೆಯಿಲ್ಲ. ಬುದ್ಧಿಯಲ್ಲಿ ಈ ಸಂಪೂರ್ಣ ಜ್ಞಾನ ಬಂದು ಬಿಟ್ಟಿದೆ. ಮನುಷ್ಯರು ಖಾಯಿಲೆಯಿಂದ ಮುಕ್ತರಾದಾಗ ಅಭಿನಂದನೆಗಳನ್ನು ತಿಳಿಸುತ್ತಾರೆ. ಇಲ್ಲಂತೂ ಇಡೀ ಪ್ರಪಂಚವೇ ರೋಗಿಯಾಗಿದೆ. ಸ್ವಲ್ಪ ಸಮಯದಲ್ಲಿಯೇ ಎಲ್ಲರೂ ರೋಗಗಳಿಂದ ಮುಕ್ತರಾಗಿ ಬಿಡುತ್ತೀರಿ, ಆಗ ಜಯ-ಜಯಕಾರ ಆಗಿ ಬಿಡುವುದು, ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸತ್ಯ-ಸತ್ಯವಾದ ಪ್ರಿಯತಮೆಯರಾಗಿ ಕೈಗಳಿಂದ ಕೆಲಸ ಮಾಡುತ್ತಾ ಬುದ್ಧಿಯಿಂದ ಪ್ರಿಯತಮನನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ತಂದೆಯ ನೆನಪಿನಿಂದ ನಾವು ಸ್ವರ್ಗವಾಸಿಗಳಾಗುತ್ತಿದ್ದೇವೆ ಎಂಬ ಖುಷಿಯಲ್ಲಿರಬೇಕಾಗಿದೆ. |
2. ಸೂರ್ಯವಂಶಿ ರಾಜಧಾನಿಯಲ್ಲಿ ಸಿಂಹಾಸನಾಧಿಕಾರಿಗಳಾಗಲು ಮಾತಾಪಿತರನ್ನು ಸಂಪೂರ್ಣ ಫಾಲೋ ಮಾಡಬೇಕಾಗಿದೆ. ತಂದೆಯ ಸಮಾನ ಜ್ಞಾನಪೂರ್ಣರಾಗಿ ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳೇ, ಈ ಶಬ್ಧಗಳನ್ನು ಕೇಳಿದಿರಿ ಮತ್ತು ಕೂಡಲೆ ಖುಷಿಯಲ್ಲಿ ರೋಮಾಂಚನವಾಗಿ ಬಿಟ್ಟಿರುತ್ತೀರಿ. ಏಕೆಂದರೆ ಮಕ್ಕಳಿಗೆ ತಿಳಿದಿದೆ - ಇಲ್ಲಿ ಸೌಭಾಗ್ಯ, ಸ್ವರ್ಗದ ಅದೃಷ್ಟವನ್ನು ಪಡೆಯಲು ಬಂದಿದ್ದೀರಿ, ಹೀಗೆ ಮತ್ತೆಲ್ಲಿಯೂ ಹೇಳುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವು ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅರ್ಥಾತ್ ಸ್ವರ್ಗವನ್ನಾಗಿ ಮಾಡುವ ಪುರುಷಾರ್ಥ ಮಾಡುತ್ತಿದ್ದೇವೆ. ಕೇವಲ ಸ್ವರ್ಗವಾಸಿಗಳಾಗುವುದಲ್ಲ ಆದರೆ ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೇವೆ. ಸ್ವರ್ಗದ ಸಾಕ್ಷಾತ್ಕಾರ ಮಾಡಿಸುವ ತಂದೆಯೇ ನಮಗೆ ಓದಿಸುತ್ತಿದ್ದಾರೆ. ಇದೂ ಸಹ ಮಕ್ಕಳಿಗೆ ನಶೆಯಿರಬೇಕು. ಭಕ್ತಿಯು ಈಗ ಮುಗಿಯಲಿದೆ. ಭಗವಂತನು ಭಕ್ತರ ಉದ್ಧಾರ ಮಾಡಲು ಬರುತ್ತಾರೆಂದು ಹೇಳಲಾಗುತ್ತದೆ ಏಕೆಂದರೆ ರಾವಣನ ಬಂಧನಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅನೇಕ ಮನುಷ್ಯರ ಅನೇಕ ಮತಗಳಿವೆ. ನೀವಂತೂ ಅರಿತುಕೊಂಡಿದ್ದೀರಿ. ಸೃಷ್ಟಿಚಕ್ರದ ಈ ಅನಾದಿ ಆಟವು ಮಾಡಲ್ಪಟ್ಟಿದೆ. ಇದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ನಾವು ಪ್ರಾಚೀನ ಹೊಸ ಪ್ರಪಂಚದ ನಿವಾಸಿಗಳಾಗಿದ್ದೆವು, ಈಗ ಹಳೆಯ ಪ್ರಪಂಚದ ನಿವಾಸಿಗಳಾಗಿದ್ದೇವೆ. ತಂದೆಯು ಸ್ವರ್ಗ ಹೊಸ ಪ್ರಪಂಚವನ್ನಾಗಿ ಮಾಡಿದರು ಮತ್ತೆ ರಾವಣನು ನರಕವನ್ನಾಗಿ ಮಾಡಿದ್ದಾನೆ. ಬಾಪ್ ದಾದಾರವರ ಮತದಂತೆ ನೀವೀಗ ತಮಗಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೀರಿ, ಹೊಸ ಪ್ರಪಂಚಕ್ಕಾಗಿ ಓದುತ್ತಿದ್ದೀರಿ. ಯಾರು ಓದಿಸುತ್ತಾರೆ? ಜ್ಞಾನ ಸಾಗರ, ಪತಿತ - ಪಾವನ, ಅವರಿಗೆ ಮಹಿಮೆಯಿದೆ. ಆ ಒಬ್ಬರ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ. ಅವರೇ ಪತಿತ-ಪಾವನನಾಗಿದ್ದಾರೆ. ನಾವೆಲ್ಲರೂ ಪತಿತರಾಗಿದ್ದೇವೆ. ಯಾರಿಗೂ ಪಾವನ ಪ್ರಪಂಚದ ನೆನಪು ಇಲ್ಲ, ನೀವೀಗ ತಿಳಿದುಕೊಂಡಿದ್ದೀರಿ - ಅವಶ್ಯವಾಗಿ 5000 ವರ್ಷಗಳ ಮೊದಲು ಪಾವನ ಪ್ರಪಂಚವಿತ್ತು, ಈ ಭಾರತವೇ ಇತ್ತು. ಉಳಿದೆಲ್ಲಾ ಧರ್ಮದವರು ಶಾಂತಿಯಲ್ಲಿದ್ದರು. ನಾವು ಭಾರತವಾಸಿಗಳು ಸುಖಧಾಮದಲ್ಲಿದ್ದೆವು. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಆದರೆ ಇಲ್ಲಂತೂ ಯಾರೂ ಶಾಂತವಾಗಿರಲು ಸಾಧ್ಯವಿಲ್ಲ. ಇದು ಶಾಂತಿಧಾಮವಲ್ಲ. ಅದು ನಿರಾಕಾರಿ ಪ್ರಪಂಚವಾಗಿದೆ, ಅಲ್ಲಿಂದ ನಾವು ಬರುತ್ತೇವೆ. ಬಾಕಿ ಸತ್ಯಯುಗವು ಸುಖಧಾಮವಾಗಿದೆ, ಅದಕ್ಕೆ ಶಾಂತಿಧಾಮವೆಂದು ಹೇಳುವುದಿಲ್ಲ. ಅಲ್ಲಿ ನೀವು ಪವಿತ್ರತೆ, ಸುಖ, ಶಾಂತಿಯಲ್ಲಿರುತ್ತೀರಿ, ಯಾವುದೇ ಏರುಪೇರುಗಳು ಇರುವುದಿಲ್ಲ. ಮನೆಯಲ್ಲಿ ಮಕ್ಕಳು ಜಗಳ-ಕಲಹ ಮಾಡಿಕೊಂಡರೂ ಅವರಿಗೆ ಶಾಂತವಾಗಿರಿ ಎಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವಾತ್ಮರು ಆ ಶಾಂತಿ ದೇಶದವರಾಗಿದ್ದೀರಿ. ಈಗ ಈ ಜಗಳದ ಪ್ರಪಂಚದಲ್ಲಿ ಬಂದು ಕುಳಿತಿದ್ದೀರಿ. ಈ ಮಾತು ನಿಮ್ಮ ಬುದ್ಧಿಯಲ್ಲಿದೆ. ನೀವು ತಂದೆಯ ಮೂಲಕ ಪುನಃ ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೀರಿ. ಈ ಶಾಲೆಯು ಕಡಿಮೆಯೇ? ಇದು ಪರಮಾತ್ಮನ ವಿಶ್ವ ವಿದ್ಯಾಲಯವಾಗಿದೆ. ಇಡೀ ಪ್ರಪಂಚದಲ್ಲಿ, ಇದೇ ಅತಿ ದೊಡ್ಡ ವಿಶ್ವ ವಿದ್ಯಾಲಯವಾಗಿದೆ. ಇದರಲ್ಲಿ ಎಲ್ಲರೂ ತಂದೆಯಿಂದ ಶಾಂತಿ ಮತ್ತು ಸುಖದ ಆಸ್ತಿಯನ್ನು ಪಡೆಯುತ್ತಾರೆ. ಒಬ್ಬ ತಂದೆಯ ವಿನಃ ಮತ್ತ್ಯಾರಿಗೂ ಮಹಿಮೆಯಿಲ್ಲ. ಬ್ರಹ್ಮನಿಗೂ ಮಹಿಮೆಯಿಲ್ಲ. ತಂದೆಯೇ ಈ ಸಮಯದಲ್ಲಿ ಬಂದು ಆಸ್ತಿಯನ್ನು ಕೊಡುತ್ತಾರೆ ನಂತರ ಸುಖವೇ ಸುಖವಿರುತ್ತದೆ. ಸುಖ-ಶಾಂತಿಯನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರದೇ ಮಹಿಮೆಯಿದೆ. ಸತ್ಯ-ತ್ರೇತಾಯುಗದಲ್ಲಿ ಯಾರದೇ ಮಹಿಮೆಯಾಗುವುದಿಲ್ಲ. ಅಲ್ಲಂತೂ ರಾಜಧಾನಿಯು ನಡೆಯುತ್ತಿರುತ್ತದೆ. ನೀವು ಆಸ್ತಿಯನ್ನು ಪಡೆದುಕೊಳ್ಳುತ್ತೀರಿ ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ, ಯಾರಿಗೂ ಮಹಿಮೆಯಿಲ್ಲ. ಭಲೆ ಕ್ರಿಸ್ತನು ಧರ್ಮ ಸ್ಥಾಪನೆ ಮಾಡುತ್ತಾರೆ ಆದರೆ ಅದನ್ನಂತೂ ಮಾಡಲೇಬೇಕಾಗಿದೆ. ಧರ್ಮ ಸ್ಥಾಪನೆ ಮಾಡಿದರೂ ಸಹ ಮತ್ತೆ ಕೆಳಗಿಳಿಯತೊಡಗುತ್ತಾರೆ ಅಂದ ಮೇಲೆ ಅವರ ಮಹಿಮೆಯೇನಾಯಿತು? ಮಹಿಮೆಗೆ ಯೋಗ್ಯರಾದವರು ಒಬ್ಬರೇ ಆಗಿದ್ದಾರೆ. ಅವರಿಗೆ ಪತಿತ-ಪಾವನ, ಮುಕ್ತಿದಾತನೆಂದು ಹೇಳಿ ಕರೆಯುತ್ತಾರೆ. ಅವರಿಗೆ ಕ್ರಿಸ್ತ, ಬುದ್ಧ ಮೊದಲಾದವರು ನೆನಪು ಬರುತ್ತಾ ಇರುತ್ತಾರೆಂದಲ್ಲ. ಓ ಗಾಡ್ ಫಾದರ್ ಎಂದು ನೆನಪೂ ಸಹ ಒಬ್ಬರನ್ನೇ ಮಾಡುತ್ತಾರೆ. ಸತ್ಯಯುಗದಲ್ಲಿ ಯಾರದೇ ಮಹಿಮೆಯಾಗುವುದಿಲ್ಲ. ಕೊನೆಯಲ್ಲಿ ಈ ಧರ್ಮಗಳು ಆರಂಭವಾದಾಗ ತಂದೆಯ ಮಹಿಮೆಯನ್ನು ಹಾಡುತ್ತಾರೆ ಮತ್ತು ಭಕ್ತಿಯು ಆರಂಭವಾಗುತ್ತದೆ. ನಾಟಕವು ಹೇಗೆ ಮಾಡಲ್ಪಟ್ಟಿದೆ, ಹೇಗೆ ಚಕ್ರವು ಸುತ್ತುತ್ತದೆ ಎಂಬುದನ್ನು ಯಾರು ತಂದೆಯ ಮಕ್ಕಳಾಗಿದ್ದಾರೆಯೋ ಅವರೇ ತಿಳಿದುಕೊಂಡಿದ್ದಾರೆ ತಂದೆಯು ರಚಯಿತನಾಗಿದ್ದಾರೆ. ಹೊಸ ಸೃಷ್ಟಿ ಸ್ವರ್ಗವನ್ನು ರಚಿಸುತ್ತಾರೆ ಆದರೆ ಎಲ್ಲರೂ ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ. ಡ್ರಾಮಾದ ರಹಸ್ಯವನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ತಂದೆಯಿಂದ ಸುಖದ ಆಸ್ತಿಯು ಸಿಗುತ್ತದೆ. ಈ ಸಮಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ. ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ ಮತ್ತೆ ಸುಖದಲ್ಲಿ ಬರುತ್ತಾರೆ. ನೀವು ಮಕ್ಕಳಿಗೆ ಬಹಳ ಒಳ್ಳೆಯ ಪಾತ್ರವು ಸಿಕ್ಕಿದೆ, ಯಾವ ತಂದೆಗೆ ಇಷ್ಟೊಂದು ಮಹಿಮೆಯಿದೆಯೋ ಅವರು ಈಗ ಬಂದು ಸನ್ಮುಖದಲ್ಲಿ ಕುಳಿತಿದ್ದಾರೆ ಮತ್ತು ಮಕ್ಕಳಿಗೆ ತಿಳಿಸಿಕೊಡುತ್ತಾರೆ, ಎಲ್ಲರೂ ಮಕ್ಕಳಲ್ಲವೆ. ತಂದೆಯಂತೂ ಸದಾ ಸಂತೋಷವಾಗಿರುತ್ತಾರೆ. ವಾಸ್ತವದಲ್ಲಿ ತಂದೆಗೆ ಇದನ್ನು ಹೇಳುವಂತಿಲ್ಲ. ಒಂದುವೇಳೆ ಅವರು ಸಂತೋಷವಾಗಿದ್ದಾರೆ ಎಂದು ಹೇಳುವುದಾದರೆ ಅಸಂತೋಷವೂ ಆಗಬೇಕಾಗುತ್ತದೆ ಆದರೆ ತಂದೆಯು ಇವೆಲ್ಲದರಿಂದ ಭಿನ್ನವಾಗಿದ್ದಾರೆ. ಯಾವುದು ತಂದೆಯ ಮಹಿಮೆಯಿದೆ ಅದೇ ಈ ಸಮಯದಲ್ಲಿ ನಿಮ್ಮ ಮಹಿಮೆಯಾಗಿದೆ. ಮತ್ತೆ ಭವಿಷ್ಯದಲ್ಲಿ ನಿಮ್ಮ ಮಹಿಮೆಯು ಬೇರೆಯಾಗಿರುವುದು. ಹೇಗೆ ತಂದೆಯು ಜ್ಞಾನ ಸಾಗರನಾಗಿದ್ದಾರೆಯೋ ಹಾಗೆಯೇ ನೀವೂ ಆಗಿದ್ದೀರಿ, ನಿಮ್ಮ ಬುದ್ಧಿಯಲ್ಲಿ ಸೃಷ್ಟಿಚಕ್ರದ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಸುಖದ ಸಾಗರನಾಗಿದ್ದಾರೆ, ಅವರಿಂದ ಅಪಾರ ಸುಖವು ಸಿಗುತ್ತದೆ. ಈ ಸಮಯದಲ್ಲಿ ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ತಂದೆಯು ಮಕ್ಕಳಿಗೆ ಈಗ ಶ್ರೇಷ್ಠ ಕರ್ಮವನ್ನು ಕಲಿಸುತ್ತಿದ್ದಾರೆ. ಹೇಗೆ ಈ ಲಕ್ಷ್ಮೀ-ನಾರಾಯಣರಿದ್ದಾರೆ ಇವರು ಅವಶ್ಯವಾಗಿ ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿದ್ದಾರೆ ಆದ್ದರಿಂದ ಈ ಪದವಿ ಪಡೆದಿದ್ದಾರೆ. ಇವರು ರಾಜ್ಯವನ್ನು ಹೇಗೆ ಪಡೆದರು ಎಂದು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. |
ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಈಗ ಇಂತಹ ದೇವತೆಗಳಾಗುತ್ತಿದ್ದೀರಿ, ನಿಮ್ಮ ಬುದ್ಧಿಯಲ್ಲಿ ಬರುತ್ತದೆ - ನಾವೇ ಈ ರೀತಿಯಾಗಿದ್ದೆವು ಈಗ ಪುನಃ ಆಗುತ್ತೇವೆ. ತಂದೆಯು ಕುಳಿತು ಕರ್ಮ - ಅಕರ್ಮ - ವಿಕರ್ಮದ ಗತಿಯನ್ನು ತಿಳಿಸುತ್ತಾರೆ, ಇದರಿಂದ ನಾವು ಈ ರೀತಿಯಾಗುತ್ತೇವೆ. ಶ್ರೀಮತವನ್ನು ಕೊಡುತ್ತಾರೆ ಅಂದಮೇಲೆ ಶ್ರೀಮತವನ್ನು ಅರಿತುಕೊಳ್ಳಬೇಕಲ್ಲವೆ. ಶ್ರೀಮತದಿಂದ ಇಡೀ ಪ್ರಪಂಚವು ತತ್ವಗಳ ಸಹಿತ ಎಲ್ಲರನ್ನೂ ಶ್ರೇಷ್ಟರನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಶ್ರೇಷ್ಠರಾಗಿದ್ದೀರಿ, ಅಲ್ಲಿ ಯಾವುದೇ ಏರುಪೇರು ಅಥವಾ ಬಿರುಗಾಳಿ ಇತ್ಯಾದಿಗಳೇನೂ ಇರುವುದಿಲ್ಲ. ಹೆಚ್ಚು ಬಿಸಿಲಾಗಲಿ, ಚಳಿಯಾಗಲೀ ಇರುವುದಿಲ್ಲ. ಸದಾ ವಸಂತ ಋತು ಇರುತ್ತದೆ. ಅಲ್ಲಿ ನೀವು ಎಷ್ಟೊಂದು ಸುಖಿಯಾಗಿರುತ್ತೀರಿ! ಅವರಂತೂ ಖುದಾನು ಹೆವೆನ್ ಅಥವಾ ಬಹಿಷ್ತ್ ಸ್ವರ್ಗ ಸ್ಥಾಪನೆ ಮಾಡುತ್ತಾರೆಂದು ಹಾಡುತ್ತಾರೆ ಅಂದಮೇಲೆ ಅದರಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕು. ಯಾವಾಗಲೂ ಮಾತಾಪಿತರನ್ನು ಫಾಲೋ ಮಾಡಿ ಎಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ತಂದೆಯ ಜೊತೆ ನಾವಾತ್ಮರು ಒಟ್ಟಿಗೆ ಹೋಗುತ್ತೇವೆ. ಶ್ರೀಮತದಂತೆ ನಡೆದು ಪ್ರತಿಯೊಬ್ಬರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. |
ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಈಗಂತೂ ನರಕವಾಗಿದೆ ಅಂದಮೇಲೆ ಅವಶ್ಯವಾಗಿ ನರಕದಲ್ಲಿಯೇ ಸ್ವರ್ಗದ ಆಸ್ತಿಯನ್ನು ಕೊಟ್ಟಿರಬೇಕು. ಈಗ 84 ಜನ್ಮಗಳು ಪೂರ್ಣವಾಗುತ್ತವೆ ಮತ್ತೆ ನಾವು ಮೊದಲ ಜನ್ಮವನ್ನು ಸ್ವರ್ಗದಲ್ಲಿ ತೆಗೆದುಕೊಳ್ಳಬೇಕಾಗಿದೆ. ನಿಮ್ಮ ಗುರಿ - ಧ್ಯೇಯವು ಸಮ್ಮುಖದಲ್ಲಿ ನಿಂತಿದೆ. ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕಾಗಿದೆ. ನಾವೇ ಲಕ್ಷ್ಮೀ - ನಾರಾಯಣರಾಗುತ್ತೇವೆ. ವಾಸ್ತವದಲ್ಲಿ ಈ ಚಿತ್ರಗಳ ಅವಶ್ಯಕತೆಯೂ ಇಲ್ಲ. ಯಾರು ಕಚ್ಛಾ ಇದ್ದಾರೆ, ಪದೇ-ಪದೇ ಮರೆತು ಹೋಗುತ್ತಾರೆಯೋ ಅವರಿಗಾಗಿ ಚಿತ್ರಗಳನ್ನಿಡಲಾಗುತ್ತದೆ. ಕೆಲವರು ಕೃಷ್ಣನ ಚಿತ್ರವನ್ನಿಟ್ಟುಕೊಳ್ಳುತ್ತಾರೆ. ಕೃಷ್ಣನನ್ನು ನೋಡದೆ ನೆನಪು ಮಾಡಲು ಆಗುವುದಿಲ್ಲ. ಎಲ್ಲರ ಬುದ್ದಿಯಲ್ಲಿ ಚಿತ್ರವಂತೂ ಇರುತ್ತದೆ. ನಿಮಗೆ ಯಾವುದೇ ಚಿತ್ರವನ್ನು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ನೀವು ತಮ್ಮನ್ನು ಆತ್ಮನೆಂದು ತಿಳಿಯುತ್ತೀರಿ. ನೀವು ತನ್ನ ಚಿತ್ರ (ಶರೀರ) ವನ್ನೂ ಸಹ ಮರೆಯಬೇಕಾಗಿದೆ. ದೇಹ ಸಹಿತ ಎಲ್ಲಾ ಸಂಬಂಧಗಳನ್ನು ಮರೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ನನ್ನನ್ನು ನೆನಪು ಮಾಡಿ ಆಗ ವಿಕರ್ಮಗಳು ವಿನಾಶವಾಗುವವು. ಇಂತಹ ಸ್ಥಿತಿಯಿರಲಿ ಯಾವುದೇ ಸಮಯದಲ್ಲಿ ಶರೀರ ಬಿಟ್ಟರೂ ಸಹ ನಾವು ಈ ಹಳೆಯ ಪ್ರಪಂಚವನ್ನು ಬಿಟ್ಟು ಈಗ ತಂದೆಯ ಬಳಿ ಹೋಗುತ್ತೇವೆಂದು ತಿಳಿದುಕೊಳ್ಳಬೇಕು. 84 ಜನ್ಮಗಳು ಪೂರ್ಣವಾಯಿತು, ಈಗ ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ಆದೇಶ ನೀಡಿದ್ದಾರೆ - ನನ್ನನ್ನು ನೆನಪು ಮಾಡಿ, ಕೇವಲ ತಂದೆಯನ್ನೂ ಮತ್ತು ಮಧುರ ಮನೆಯನ್ನೂ ನೆನಪು ಮಾಡಿ ಬುದ್ಧಿಯಲ್ಲಿದೆ ನಾನಾತ್ಮ ಅಶರೀರಿಯಾಗಿದ್ದೆನು ನಂತರ ಇಲ್ಲಿ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಶರೀರವನ್ನು ಧಾರಣೆ ಮಾಡಿದ್ದೇನೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತನಾಗಿ ಬಿಟ್ಟಿದ್ದೇನೆ. ಈ ಶರೀರವಂತೂ ಹಳೆಯ ಪಾದರಕ್ಷೆಯಾಗಿದೆ. ಆತ್ಮವು ಪವಿತ್ರವಾಗುತ್ತಿದೆ. ಪವಿತ್ರ ಶರೀರವಂತೂ ಇಲ್ಲಿ ಸಿಗಲು ಸಾಧ್ಯವಿಲ್ಲ, ನಾವಾತ್ಮರು ಈಗ ಹಿಂತಿರುಗಿ ಮನೆಗೆ ಹೋಗುತ್ತೇವೆ. ಮೊದಲು ರಾಜಕುಮಾರ-ಕುಮಾರಿಯರಾಗುತ್ತೇವೆ ಮತ್ತೆ ಸ್ವಯಂವರದ ನಂತರ ಲಕ್ಷ್ಮಿ - ನಾರಾಯಣರಾಗುತ್ತೇವೆ. ರಾಧೆ-ಕೃಷ್ಣರು ಯಾರೆಂಬುದು ಗೊತ್ತೇ ಇಲ್ಲ. ಇಬ್ಬರೂ ಬೇರೆ-ಬೇರೆ ರಾಜಧಾನಿಯವರಾಗಿದ್ದರು ನಂತರ ಅವರ ಸ್ವಯಂವರವಾಯಿತು. ನೀವು ಮಕ್ಕಳಲ್ಲಿಯೂ ಕೆಲವರು ಧ್ಯಾನದಲ್ಲಿ ಸ್ವಯಂವರವನ್ನು ನೋಡಿದ್ದಾರೆ. ಆರಂಭದಲ್ಲಿ ಬಹಳ ಸಾಕ್ಷಾತ್ಕಾರಗಳಾಗುತ್ತಿತ್ತು ಏಕೆಂದರೆ ನಿಮ್ಮನ್ನು ಪಾಕಿಸ್ತಾನದಲ್ಲಿ ಖುಷಿಯಲ್ಲಿಡಲು ಇವೆಲ್ಲಾ ಪಾತ್ರಗಳು ನಡೆಯುತ್ತಿತ್ತು. ಕೊನೆಯಲ್ಲಂತೂ ಹೊಡೆದಾಟಗಳು, ಭೂಕಂಪ ಬಹಳಷ್ಟು ನಡೆಯುವುದು. ನಿಮಗೆ ಸಾಕ್ಷಾತ್ಕಾರವಾಗುತ್ತಾ ಇರುತ್ತದೆ. ನಾನು ಯಾವ ಪದವಿಯನ್ನು ಪಡೆಯುತ್ತೇನೆಂದು ಪ್ರತಿಯೊಬ್ಬರಿಗೆ ಅರ್ಥವಾಗುತ್ತದೆ. ನಂತರ ಕಡಿಮೆ ಓದಿರುವವರು ಬಹಳ ಪಶ್ಚಾತ್ತಾಪ ಪಡುತ್ತಾರೆ. ಆಗ ತಂದೆಯು ಹೇಳುತ್ತಾರೆ - ನೀವೇ ಓದಲಿಲ್ಲ ಅನ್ಯರಿಗೂ ಓದಿಸಲಿಲ್ಲ, ನೆನಪಿನಲ್ಲಿಯೂ ಇರುತ್ತಿರಲಿಲ್ಲ. ನೆನಪಿನಿಂದಲೇ ಸತೋಪ್ರಧಾನರಾಗಲು ಸಾಧ್ಯ. ಪತಿತ-ಪಾವನನಂತೂ ತಂದೆಯೇ ಆಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ತುಕ್ಕು ಬಿಟ್ಟು ಹೋಗುವುದು. ನೆನಪಿನ ಯಾತ್ರೆಯ ಪುರುಷಾರ್ಥ ಮಾಡಬೇಕಾಗಿದೆ. ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿ, ಕರ್ಮವನ್ನಂತೂ ಮಾಡಲೇಬೇಕಲ್ಲವೆ ಆದರೆ ಬುದ್ಧಿಯೋಗವು ಮೇಲಿರಲಿ. ತಮೋಪ್ರಧಾನರಿಂದ ಸತೋಪ್ರಧಾನರು ಇಲ್ಲಿಯೇ ಆಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ನೀವು ನನ್ನನ್ನು ನೆನಪು ಮಾಡಿ ಆಗಲೇ ನೀವು ಹೊಸ ಪ್ರಪಂಚದ ಮಾಲೀಕರಾಗುವಿರಿ. ತಂದೆಯು ಮತ್ತೇನೂ ಕಷ್ಟವನ್ನು ಕೊಡುವುದಿಲ್ಲ. ನಿಮಗೆ ಬಹಳ ಸಹಜ ಉಪಾಯವನ್ನು ತಿಳಿಸುತ್ತಾರೆ. ಸುಖಧಾಮದ ಮಾಲೀಕರಾಗಲು ನನ್ನೊಬ್ಬನನ್ನೇ ನೆನಪು ಮಾಡಿ. ಈಗ ನೀವು ನೆನಪು ಮಾಡಿಕೊಳ್ಳಿ, ತಂದೆಯೂ ಸಹ ನಕ್ಷತ್ರ ಮಾದರಿಯಾಗಿ ಇದ್ದಾರೆ. ಅವರು ಸರ್ವಶಕ್ತಿವಂತನಾಗಿದ್ದಾರೆ. ಬಹಳ ತೇಜೋಮಯನಾಗಿದ್ದಾರೆಂದು ಮನುಷ್ಯರು ತಿಳಿಯುತ್ತಾರೆ. ಆದರೆ ತಂದೆಯು ಹೇಳುತ್ತಾರೆ - ನಾನು ಮನುಷ್ಯ ಸೃಷ್ಟಿಯ ಚೈತನ್ಯ ಬೀಜರೂಪನಾಗಿದ್ದೇನೆ, ಬೀಜವಾಗಿರುವ ಕಾರಣ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ. ನೀವಂತೂ ಬೀಜವಲ್ಲ, ನಾನು ಬೀಜವಾಗಿದ್ದೇನೆ ಆದ್ದರಿಂದ ನನಗೆ ಜ್ಞಾನ ಸಾಗರನೆಂದು ಹೇಳುತ್ತಾರೆ. ಮನುಷ್ಯ ಸೃಷ್ಟಿಯ ಚೈತನ್ಯ ಬೀಜವೆಂದಮೇಲೆ ಅವರಿಗೆ ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಅವಶ್ಯವಾಗಿ ತಿಳಿದಿರುತ್ತದೆ. ಋಷಿ-ಮುನಿ ಮೊದಲಾದವರು ಯಾರೂ ಸಹ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ಮಕ್ಕಳು ಒಂದುವೇಳೆ ತಿಳಿದುಕೊಂಡಿದ್ದರೆ ಅವರ ಬಳಿ ಹೋಗುವುದರಲ್ಲಿ ತಡವಾಗುವುದಿಲ್ಲ ಆದರೆ ತಂದೆಯ ಬಳಿ ಹೋಗುವ ಮಾರ್ಗವನ್ನು ಯಾರೂ ತಿಳಿದುಕೊಂಡಿಲ್ಲ. ಪಾವನ ಪ್ರಪಂಚಕ್ಕೆ ಪತಿತರು ಹೋಗುವುದಕ್ಕಾದರೂ ಹೇಗೆ ಸಾಧ್ಯ! ಆದ್ದರಿಂದ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಿ, ಇದೇ ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ನೀವು ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಯಾವುದೇ ಕಷ್ಟವಿಲ್ಲ, ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ತಂದೆಯ ನೆನಪು ಅರ್ಥಾತ್ ಯೋಗದಿಂದ ಪಾಪಗಳು ಭಸ್ಮವಾಗುತ್ತವೆ. ತಂದೆಯಿಂದಲೇ ಸೆಕೆಂಡಿನಲ್ಲಿ ರಾಜ್ಯಭಾಗ್ಯವು ಸಿಗುತ್ತದೆ. ಮಕ್ಕಳು ಭಲೆ ಸ್ವರ್ಗದಲ್ಲಂತೂ ಬರುತ್ತೀರಿ ಆದರೆ ಸ್ವರ್ಗದಲ್ಲಿಯೂ ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ಸ್ವರ್ಗದಲ್ಲಂತೂ ಹೋಗಲೇಬೇಕಾಗಿದೆ. ಸ್ವಲ್ಪ ಕೇಳಿದರೂ ಸಹ ತಂದೆಯು ಬಂದಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಈಗಲೂ ಸಹ ಹೇಳುತ್ತಾರೆ - ಇದು ಅದೇ ಮಹಾಭಾರತ ಯುದ್ಧವಾಗಿದೆ. ಅವಶ್ಯವಾಗಿ ತಂದೆಯೂ ಇರುವರು. ಅವರೇ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಾರೆ. ನೀವು ಎಲ್ಲರನ್ನೂ ಜಾಗೃತಗೊಳಿಸುತ್ತಾ ಇರುತ್ತೀರಿ. ಯಾರು ಅನೇಕರನ್ನು ಜಾಗೃತಗೊಳಸುವರೋ ಅವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಪುರುಷಾರ್ಥ ಮಾಡಬೇಕಾಗಿದೆ. ಎಲ್ಲರೂ ಒಂದೇ ತರಹ ಪುರುಷಾರ್ಥಿಗಳಿರಲು ಸಾಧ್ಯವಿಲ್ಲ. ಶಾಲೆಯು ಬಹಳ ದೊಡ್ಡದಾಗಿದೆ. ಇದು ವಿಶ್ವ ವಿದ್ಯಾಲಯವಾಗಿದೆ. ಇಡೀ ವಿಶ್ವವನ್ನು ಸುಖಧಾಮ ಮತ್ತು ಶಾಂತಿಧಾಮವನ್ನಾಗಿ ಮಾಡಬೇಕಾಗಿದೆ. ಇಂತಹ ಶಿಕ್ಷಕರು ಎಂದಾದರೂ ಇರುತ್ತಾರೆಯೇ? ವಿಶ್ವವೆಂದು ಇಡೀ ಪ್ರಪಂಚಕ್ಕೆ ಹೇಳಲಾಗುತ್ತದೆ. ತಂದೆಯೇ ಇಡೀ ವಿಶ್ವದ ಮನುಷ್ಯ ಮಾತ್ರರನ್ನು ಸತೋಪ್ರಧಾನರನ್ನಾಗಿ ಮಾಡುತ್ತಾರೆ ಅರ್ಥಾತ್ ಸ್ವರ್ಗವನ್ನಾಗಿ ಮಾಡುತ್ತಾರೆ. |
ಭಕ್ತಿ ಮಾರ್ಗದಲ್ಲಿ ಏನೆಲ್ಲಾ ಹಬ್ಬಗಳನ್ನು ಆಚರಿಸುವರೋ ಅವೆಲ್ಲವೂ ಈ ಸಂಗಮಯುಗದ್ದಾಗಿದೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಹಬ್ಬಗಳಿರುವುದಿಲ್ಲ. ಅಲ್ಲಂತೂ ಪ್ರಾಲಬ್ದವನ್ನು ಭೋಗಿಸುತ್ತಾರೆ. ಹಬ್ಬಗಳೆಲ್ಲವನ್ನೂ ಇಲ್ಲಿಯೇ ಆಚರಿಸುತ್ತಾರೆ. ಹೋಲಿ ಮತ್ತು ದುರಿಯಾ ಇವು ಜ್ಞಾನದ ಮಾತುಗಳಾಗಿವೆ. ಏನು ಕಳೆದು ಹೋಯಿತೋ ಅದೆಲ್ಲವನ್ನೂ ಹಬ್ಬಗಳ ರೂಪದಲ್ಲಿ ಆಚರಿಸುತ್ತಾ ಬಂದಿದ್ದಾರೆ. ಎಲ್ಲವೂ ಈ ಸಮಯದ್ದಾಗಿದೆ. ಈ ನೂರು ವರ್ಷಗಳಲ್ಲಿ ಎಲ್ಲಾ ಕೆಲಸಗಳು ಆಗಿ ಬಿಡುತ್ತವೆ. ಸೃಷ್ಟಿಯು ಹೊಸದಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವು ಅನೇಕ ಬಾರಿ ಸುಖದ ಆಸ್ತಿಯನ್ನು ಪಡೆದುಕೊಂಡಿದ್ದೇವೆ ಮತ್ತು ಕಳೆದುಕೊಂಡಿದ್ದೇವೆ. ನಾವೀಗ ಪುನಃ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ಖುಷಿಯಾಗುತ್ತೇವೆ. ಅನ್ಯರಿಗೂ ಮಾರ್ಗವನ್ನು ತಿಳಿಸಬೇಕಾಗಿದೆ. ಡ್ರಾಮಾನುಸಾರ ಸ್ವರ್ಗದ ಸ್ಥಾಪನೆಯು ಖಂಡಿತ ಆಗುವುದು. ಹೇಗೆ ಹಗಲಿನ ನಂತರ ರಾತ್ರಿ, ರಾತ್ರಿಯ ನಂತರ ಹಗಲಾಗುತ್ತದೆ ಹಾಗೆಯೇ ಕಲಿಯುಗದ ನಂತರ ಖಂಡಿತವಾಗಿಯೂ ಸತ್ಯಯುಗವಾಗಬೇಕಾಗಿದೆ. ಮಧುರಾತಿ ಮಧುರ ಮಕ್ಕಳ ಬುದ್ಧಿಯಲ್ಲಿ ಖುಷಿಯ ಗಂಟೆಯು ಮೊಳಗಬೇಕು. ಈಗ ಸಮಯವು ಪೂರ್ಣವಾಗುತ್ತದೆ. ನಾವು ಶಾಂತಿಧಾಮಕ್ಕೆ ಹೋಗುತ್ತೇವೆ, ಇದು ಅಂತಿಮ ಜನ್ಮವಾಗಿದೆ. ಖುಷಿಯಲ್ಲಿದ್ದಾಗ ಕರ್ಮಭೋಗವೂ ಸಹ ಹಗುರವಾಗಿ ಬಿಡುತ್ತದೆ. ನೋವನ್ನನುಭವಿಸಿ ಮತ್ತು ಇನ್ನು ಸ್ವಲ್ಪ ಲೆಕ್ಕಾಚಾರವು ಯೋಗಬಲದಿಂದ ಸಮಾಪ್ತಿಯಾಗುವುದು. ತಂದೆಯು ಮಕ್ಕಳಿಗೆ ಧೈರ್ಯವನ್ನು ಕೊಡುತ್ತಾರೆ. ನಿಮ್ಮ ಸುಖದ ದಿನಗಳು ಬರುತ್ತಿವೆ. ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕಾಗಿದೆ. ಶರೀರ ನಿರ್ವಹಣೆಗಾಗಿ ಹಣವಂತೂ ಬೇಕಲ್ಲವೆ. ತಂದೆಯು ತಿಳಿಸಿದ್ದಾರೆ - ವ್ಯಾಪಾರಿಗಳು ಧರ್ಮಕ್ಕಾಗಿ ಹಣವನ್ನು ತೆಗೆಯುತ್ತಾರೆ. ಹೆಚ್ಚು ಹಣವಿದ್ದರೆ ಬಹಳ ದಾನ ಮಾಡುತ್ತೇವೆಂದು ತಿಳಿಯುತ್ತಾರೆ. ಇಲ್ಲಿಯೂ ಸಹ ತಂದೆಯು ತಿಳಿಸುತ್ತಾರೆ - ಯಾರಾದರೂ ಎರಡು ಪೈಸೆಯನ್ನು ಕೊಟ್ಟರೂ ಸಹ ಅದಕ್ಕೆ ಪ್ರತಿಫಲವಾಗಿ 21 ಜನ್ಮಗಳಿಗಾಗಿ ಬಹಳಷ್ಟು ಪ್ರಾಪ್ತಿಯಾಗುತ್ತದೆ. ಮೊದಲು ನೀವು ಯಾವ ದಾನ-ಪುಣ್ಯಗಳನ್ನು ಮಾಡುತ್ತಿದ್ದಿರೋ ಅದಕ್ಕೆ ಪ್ರತಿಯಾಗಿ ಇನ್ನೊಂದು ಜನ್ಮದಲ್ಲಿ ಸಿಗುತ್ತಿತ್ತು. ಈಗಂತೂ 21 ಜನ್ಮಗಳಿಗಾಗಿ ಪ್ರತಿಫಲ ಸಿಗುತ್ತದೆ. ಸಾಧು-ಸಂತ ಮೊದಲಾದವರಿಗೆ ಕೊಡುತ್ತಿದ್ದಿರಿ. ಈಗ ನಿಮಗೆ ತಿಳಿದಿದೆ - ಇದೆಲ್ಲವೂ ಸಮಾಪ್ತಿಯಾಗುವುದಿದೆ. ಈಗ ನಾನು ಸನ್ಮುಖದಲ್ಲಿ ಬಂದಿದ್ದೇನೆ ಅಂದಮೇಲೆ ಈ ಕಾರ್ಯದಲ್ಲಿ ತೊಡಗಿಸಿ ಆಗ ನಿಮಗೆ 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ಮೊದಲು ನೀವು ಪರೋಕ್ಷವಾಗಿ ಕೊಡುತ್ತಿದ್ದಿರಿ, ಇದು ಪ್ರತ್ಯಕ್ಷವಾಗಿದೆ. ಉಳಿದಂತೆ ನಿಮ್ಮದೆಲ್ಲವೂ ಸಮಾಪ್ತಿಯಾಗುವುದು. ತಂದೆಯು ಹೇಳುತ್ತಿರುತ್ತಾರೆ - ಹಣವಿದ್ದರೆ ಸೇವಾಕೇಂದ್ರವನ್ನು ತೆರೆಯುತ್ತಾ ಹೋಗಿ, ಈ ಶಬ್ದಗಳನ್ನು ಬರೆಯಿರಿ - ಸತ್ಯ ಗೀತಾ ಪಾಠಶಾಲೆ, ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಕ ಮಕ್ಕಳಿಗೆ ಆತ್ಮೀಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ಮಹಿಮಾ ಯೋಗ್ಯರಾಗಲು ತಂದೆಯನ್ನು ಫಾಲೋ ಮಾಡಬೇಕಾಗಿದೆ. |
2. ಇದು ಅಂತಿಮ ಜನ್ಮವಾಗಿದೆ, ಈಗ ಮನೆಗೆ ಹೋಗಬೇಕಾಗಿದೆ. ಆದ್ದರಿಂದ ಒಳಗಿಂದೊಳಗೆ ಖುಷಿಯ ವಾದ್ಯವು ಮೊಳಗುತ್ತಿರಲಿ. ಕರ್ಮ ಭೋಗವನ್ನು ಕರ್ಮ ಯೋಗದಿಂದ ಅರ್ಥಾತ್ ತಂದೆಯ ನೆನಪಿನಿಂದ ಖುಷಿ-ಖುಷಿಯಾಗಿ ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಜ್ಞಾನ ಮತ್ತು ವಿಜ್ಞಾನ, ಇದಕ್ಕೆ ತಂದೆ ಮತ್ತು ಆಸ್ತಿ ಎಂದು ಹೇಳುತ್ತಾರೆ. ತಂದೆಯು ತಂದೆ ಮತ್ತು ಆಸ್ತಿಯ ಜ್ಞಾನವನ್ನು ಹೇಳುತ್ತಾರೆ. ದೆಹಲಿಯಲ್ಲಿ ವಿಜ್ಞಾನ ಭವನವಿದೆ, ಆದರೆ ಅವರು ಅರ್ಥವನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಜ್ಞಾನ ಮತ್ತು ಯೋಗ. ಯೋಗದಿಂದ ನಾವು ಪವಿತ್ರರಾಗುತ್ತೇವೆ, ಜ್ಞಾನದಿಂದ ನಮ್ಮ ಶರೀರವು ಪವಿತ್ರವಾಗುತ್ತದೆ, ನಾವು ಇಡೀ ಚಕ್ರವನ್ನು ಅರಿತುಕೊಳ್ಳುತ್ತೇವೆ. ಯೋಗದ ಯಾತ್ರೆಗಾಗಿ ಈ ಜ್ಞಾನವು ಸಿಗುತ್ತದೆ. ಮತ್ತ್ಯಾರೂ ಯೋಗ ಮಾಡುವುದಕ್ಕಾಗಿ ಜ್ಞಾನವನ್ನು ತಿಳಿಸುವುದಿಲ್ಲ. ಅವರು ಸ್ಥೂಲ ವ್ಯಾಯಾಮಗಳನ್ನು ಕಲಿಸುತ್ತಾರೆ. ಇದು ಸೂಕ್ಷ್ಮ ಮತ್ತು ಮೂಲ ಮಾತಾಗಿದೆ. ಗೀತೆಯೂ ಸಹ ಅದರೊಂದಿಗೆ ಸಂಬಂಧವನ್ನಿಡುತ್ತದೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ಹೇ ಮೂಲವತನದ ಪ್ರಯಾಣಿಕರೇ, ಪತಿತ- ಪಾವನ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ. ಅವರೇ ಎಲ್ಲರಿಗೆ ಮನೆಗೆ ಹೋಗುವ ಮಾರ್ಗವನ್ನು ತಿಳಿಸುತ್ತಾರೆ. ನಿಮ್ಮ ಬಳಿ ತಿಳಿದುಕೊಳ್ಳುವುದಕ್ಕಾಗಿ ಮನುಷ್ಯರು ಬರುತ್ತಾರೆ. ಯಾರ ಬಳಿ ಬರುತ್ತಾರೆ? ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರ ಬಳಿ ಬರುತ್ತಾರೆ. ಅಂದಾಗ ನೀವು ಅವರೊಂದಿಗೆ ಕೇಳಿರಿ - ನೀವು ಯಾರ ಬಳಿ ಬಂದಿದ್ದೀರಿ? ಮನುಷ್ಯರು ಸಾಧು-ಸಂತ ಮಹಾತ್ಮರ ಬಳಿ ಬರುತ್ತಾರೆ. ಇಂತಹ ಮಹಾತ್ಮರು ಎಂದು ಅವರು ಹೆಸರೂ ಇರುತ್ತದೆ. ಇಲ್ಲಂತೂ ಹೆಸರೇ ಆಗಿದೆ - ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು. ಬಿ.ಕೆ.ಗಳಂತೂ ಅನೇಕರಿದ್ದಾರೆ, ಆದ್ದರಿಂದ ನೀವು ಕೇಳಿರಿ - ಯಾರ ಬಳಿ ಬಂದಿದ್ದೀರಿ, ಪ್ರಜಾಪಿತ ಬ್ರಹ್ಮಾರವರೊಂದಿಗೆ ನಿಮ್ಮ ಸಂಬಂಧವೇನು? ಅವರು ಎಲ್ಲರ ತಂದೆಯಾದರಲ್ಲವೆ. ನಿಮ್ಮ ಮಹಾತ್ಮರ, ಗುರೂಜಿಯ ದರ್ಶನ ಮಾಡಬೇಕೆಂದು ಕೆಲವರು ಹೇಳುತ್ತಾರೆ ಆಗ ಹೇಳಿರಿ, ನೀವು ಗುರುಗಳೆಂದು ಹೇಗೆ ಹೇಳುತ್ತೀರಿ? ಪ್ರಜಾಪಿತ ಬ್ರಹ್ಮಾಕುಮಾರಿಯರೆಂದು ಹೆಸರನ್ನಿಡಲಾಗಿದೆ ಅಂದಮೇಲೆ ಅವರು ತಂದೆಯಾದರಲ್ಲವೆ, ಗುರುಗಳಲ್ಲ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯೆಂದರೆ ಇವರಿಗೆ ಯಾರೋ ತಂದೆಯಿದ್ದಾರೆ. ಅವರು ನಿಮಗೂ ತಂದೆಯಾದರು ಆದ್ದರಿಂದ ನಾವು ಬಿ.ಕೆ.ಗಳ ತಂದೆಯೊಂದಿಗೆ ಮಿಲನ ಮಾಡಲು ಬಯಸುತ್ತೇವೆಂದು ಹೇಳಿರಿ ಎಂದು ಅವರಿಗೆ ತಿಳಿಸಬೇಕು. ಪ್ರಜಾಪಿತನ ಹೆಸರನ್ನು ಎಂದಾದ್ದರೂ ಕೇಳಿದ್ದೀರಾ? ಇಷ್ಟೊಂದು ಮಂದಿ ಮಕ್ಕಳಿದ್ದಾರೆ. ತಂದೆಯ ಬಗ್ಗೆ ಅರ್ಥವಾದಾಗಲೇ ಇವರು ಬೇಹದ್ದಿನ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿಗೂ ಅವಶ್ಯವಾಗಿ ಯಾರೋ ತಂದೆಯಿರುವರು ಎಂಬುದು ಅರ್ಥವಾಗುತ್ತದೆ. ಆದ್ದರಿಂದ ಯಾರೇ ಬರಲಿ ಅವರನ್ನು ಕೇಳಿರಿ, ತಾವು ಯಾರ ಬಳಿ ಬಂದಿದ್ದೀರಿ? ಬೋರ್ಡಿನ ಮೇಲೆ ಏನು ಬರೆಯಲ್ಪಟ್ಟಿದೆ? ಇಷ್ಟೊಂದು ಸೇವಾ ಕೇಂದ್ರಗಳಿವೆ, ಇಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ ಅಂದಮೇಲೆ ಅವಶ್ಯವಾಗಿ ಅವರಿಗೆ ತಂದೆಯಿರುವರು, ಗುರುಗಳಾಗಲು ಸಾಧ್ಯವಿಲ್ಲ. ಮೊದಲು ಇದು ಬುದ್ಧಿಯಿಂದ ಹೊರಡಲಿ. ಆಗ ಇದು ಮನೆಯಾಗಿದೆ, ನಾನು ಪರಿವಾರದಲ್ಲಿ ಬಂದಿದ್ದೇನೆ ಎಂಬುದು ಅವರಿಗೆ ಅರ್ಥವಾಗುವುದು. ನಾವು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೇವೆ ಅಂದಾಗ ಅವಶ್ಯವಾಗಿ ನೀವೂ ಆಗಿರುವಿರಿ. ಒಳ್ಳೆಯದು - ಬ್ರಹ್ಮನು ಯಾರ ಮಗನಾಗಿದ್ದಾರೆ? ಬ್ರಹ್ಮಾ-ವಿಷ್ಣು-ಶಂಕರನಿಗೂ ರಚಯಿತನು ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಅವರು ಬಿಂದುವಾಗಿದ್ದಾರೆ, ಅವರ ಹೆಸರಾಗಿದೆ ಶಿವ. ಅವರು ನಮ್ಮ ತಾತನಾಗಿದ್ದಾರೆ. ನೀವಾತ್ಮರೂ ಅವರ ಸಂತಾನರಾಗಿದ್ದೀರಿ, ಬ್ರಹ್ಮನಿಗೆ ನೀವೆಲ್ಲರೂ ಸಂತಾನರಾಗಿದ್ದೀರಿ ಅಂದಮೇಲೆ ನಾವು ಬಾಪ್ ದಾದಾರವರೊಂದಿಗೆ ಮಿಲನ ಮಾಡಲು ಬಯಸುತ್ತೇವೆಂದು ನೀವು ಈ ರೀತಿ ಹೇಳಿರಿ. ಅವರಿಗೆ ತಿಳಿಸಬೇಕಾದರೆ ಅವರ ಬುದ್ಧಿಯು ತಂದೆಯ ಕಡೆ ಹೊರಟು ಹೋಗುವಂತೆ ತಿಳಿಸಬೇಕು. ನಾನು ಯಾರ ಬಳಿ ಬಂದಿದ್ದೇನೆ ಎಂಬುದು ಅವರಿಗೆ ಅರ್ಥವಾಗಲಿ. ಪ್ರಜಾಪಿತ ಬ್ರಹ್ಮನು ನಮ್ಮ ತಂದೆಯಾಗಿದ್ದಾರೆ, ಶಿವ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ ಅಂದಮೇಲೆ ಮೊದಲು ನಾವು ಯಾರ ಬಳಿ ಬಂದಿದ್ದೇವೆಂಬುದನ್ನು ತಿಳಿದುಕೊಳ್ಳಿ. ಹೀಗೆ ಯುಕ್ತಿಯಿಂದ ತಿಳಿಸಬೇಕು ಅದರಿಂದ ಇವರು ಶಿವ ತಂದೆಯ ಸಂತಾನರಾಗಿದ್ದಾರೆ, ಇದೊಂದು ಪರಿವಾರವಾಗಿದೆ ಎಂದು ಅವರಿಗೆ ಅರ್ಥವಾಗಲಿ. ಅವರಿಗೆ ತಂದೆ ಮತ್ತು ದಾದಾರವರ ಪರಿಚಯವಾಗಲಿ. ಸರ್ವರ ಸದ್ಗತಿದಾತನು ನಿರಾಕಾರ ತಂದೆಯಾಗಿದ್ದಾರೆ. ಅವರು ಪ್ರಜಾಪಿತ ಬ್ರಹ್ಮಾರವರ ಮೂಲಕ ಸರ್ವರ ಸದ್ಗತಿ ಮಾಡುತ್ತಾರೆ. ಅವರನ್ನೇ ಎಲ್ಲರೂ ಕರೆಯುತ್ತಾರೆಂಬುದನ್ನು ನೀವು ತಿಳಿಸಿಕೊಡಿ. ನೋಡುತ್ತಾರಲ್ಲವೆ – ಎಷ್ಟೊಂದು ಮಂದಿ ಮಕ್ಕಳು ಬಂದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಮೊದಲು ಅವರಿಗೆ ತಂದೆಯ ಪರಿಚಯ ಸಿಗಲಿ ಆಗ ನಾವು ಬಾಪ್ದಾದಾರವರೊಂದಿಗೆ ಮಿಲನ ಮಾಡಲು ಬಂದಿದ್ದೇವೆಂದು ಅರ್ಥವಾಗುವುದು ಆದ್ದರಿಂದ ಹೇಳಿರಿ, ನಾವು ಇವರಿಗೆ ಬಾಪ್ ದಾದಾ ಎಂದು ಹೇಳುತ್ತೇವೆ. ಜ್ಞಾನಪೂರ್ಣ, ಪತಿತ- ಪಾವನ ಈ ಶಿವ ತಂದೆಯಾಗಿದ್ದಾರೆ. ಭಗವಂತನು ಸರ್ವರ ಸದ್ಗತಿದಾತ, ನಿರಾಕಾರನಾಗಿದ್ದಾರೆ, ಅವರು ಜ್ಞಾನ ಸಾಗರನಾಗಿದ್ದಾರೆ. ಬ್ರಹ್ಮಾರವರ ಮೂಲಕ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಈ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಸಂತಾನರಾಗಿದ್ದಾರೆ. ಅವರೇ ಎಲ್ಲರ ತಂದೆಯಾಗಿದ್ದಾರೆ ಎಂಬುದನ್ನು ಅವರು ತಿಳಿದುಕೊಳ್ಳುವರು. ಭಗವಂತನು ಒಬ್ಬರೇ ಆಗಿದ್ದಾರೆ, ಅವರೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಅವರು ಸ್ವರ್ಗದ ರಚಯಿತ, ಸರ್ವರ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ ಅರ್ಥಾತ್ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಅವರನ್ನು ನೋಡಿ ತಿಳಿದುಕೊಳ್ಳಲು ಯೋಗ್ಯರಾಗಿದ್ದರೆ ಅವರಿಗೆ ಇದನ್ನು ತಿಳಿಸಿಕೊಡಬೇಕು – ಮೊಟ್ಟ ಮೊದಲಿಗೆ ಕೇಳಿರಿ - ನಿಮಗೆ ಎಷ್ಟು ಮಂದಿ ತಂದೆಯರಿದ್ದಾರೆ? ಲೌಕಿಕ ಮತ್ತು ಪಾರಲೌಕಿಕ. ತಂದೆಯಂತೂ ಸರ್ವವ್ಯಾಪಿಯಾಗಿರಲು ಸಾಧ್ಯವಿಲ್ಲ. ಲೌಕಿಕ ತಂದೆಯಿಂದ ಈ ಆಸ್ತಿಯು ಸಿಗುತ್ತದೆ, ಪಾರಲೌಕಿಕ ತಂದೆಯಿಂದ ಆ ಆಸ್ತಿಯು ಸಿಗುತ್ತದೆ ಅಂದಮೇಲೆ ಅವರಿಗೆ ಸರ್ವವ್ಯಾಪಿಯೆಂದು ಹೇಗೆ ಹೇಳುವಿರಿ? ಈ ಶಬ್ಧವನ್ನು ಬರೆದುಕೊಂಡು ಧಾರಣೆ ಮಾಡಿಕೊಳ್ಳಿ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ತಿಳಿಸುವವರಂತೂ ನೀವಾಗಿದ್ದೀರಿ, ಇದು ಮನೆಯಾಗಿದೆ, ಇವರು ನಮ್ಮ ಗುರುಗಳಲ್ಲ, ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ನಮಗೆ ಆಸ್ತಿಯನ್ನು ನಿರಾಕಾರ ಶಿವ ತಂದೆಯೇ ಕೊಡುತ್ತಾರೆ. ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ಬ್ರಹ್ಮನಿಗೆ ಸರ್ವರ ಸದ್ಗತಿದಾತ, ಪತಿತ-ಪಾವನ, ಮುಕ್ತಿದಾತನೆಂದು ಹೇಳಲಾಗುವುದಿಲ್ಲ. ಇದು ಶಿವ ತಂದೆಯದೇ ಮಹಿಮೆಯಾಗಿದೆ. ಯಾರೇ ಬರಲಿ ಅವರಿಗೆ ಇದನ್ನೇ ತಿಳಿಸಿ - ಇವರು ಸರ್ವರ ಬಾಪ್ದಾದಾ ಆಗಿದ್ದಾರೆ. ಆ ತಂದೆಯೇ ಸ್ವರ್ಗದ ರಚಯಿತನಾಗಿದ್ದಾರೆ. ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಾರೆ. ನೀವು ಈ ರೀತಿ ಯಾರಿಗಾದರೂ ತಿಳಿಸಿದ್ದೇ ಆದರೆ ಅವರು ತಂದೆಯ ಬಳಿ ಬರುವ ಅವಶ್ಯಕತೆಯೇ ಇರುವುದಿಲ್ಲ, ಎಲ್ಲವೂ ಅರ್ಥವಾಗಿ ಬಿಡುತ್ತದೆ. ನಾವು ಗುರೂಜಿಯ ದರ್ಶನ ಮಾಡಬೇಕೆಂದು ಅವರು ಹೇಳುತ್ತಾರೆ ಏಕೆಂದರೆ ಭಕ್ತಿ ಮಾರ್ಗದಲ್ಲಿ ಗುರುಗಳಿಗೆ ಬಹಳ ಮಹಿಮೆ ಮಾಡುತ್ತಾರೆ. ವೇದಶಾಸ್ತ್ರ, ಯಾತ್ರೆ ಇತ್ಯಾದಿಗಳೆಲ್ಲವನ್ನೂ ಗುರುಗಳೇ ಕಲಿಸುತ್ತಾರೆ. ಆದ್ದರಿಂದ ನೀವು ತಿಳಿಸಿ, ಮನುಷ್ಯರು ಗುರುಗಳಾಗಲು ಸಾಧ್ಯವಿಲ್ಲ. ನಾವು ಈ ಬ್ರಹ್ಮಾರವರಿಗೂ ಸಹ ಗುರುವೆಂದು ಹೇಳುವುದಿಲ್ಲ. ಸರ್ವರ ಸದ್ಗುರು ಒಬ್ಬರೇ ಆಗಿದ್ದಾರೆ. ಯಾವುದೇ ಮನುಷ್ಯರು ಜ್ಞಾನ ಸಾಗರನಾಗಲು ಸಾಧ್ಯವಿಲ್ಲ. ಅವರೆಲ್ಲರೂ ಭಕ್ತಿಮಾರ್ಗದ ಶಾಸ್ತ್ರಗಳನ್ನು ಓದುವವರಾಗಿದ್ದಾರೆ. ಅದಕ್ಕೆ ಶಾಸ್ತ್ರಗಳ ಜ್ಞಾನವೆಂದು ಹೇಳಲಾಗುತ್ತದೆ. ಇಲ್ಲಿ ನಮಗೆ ಜ್ಞಾನ ಸಾಗರ ತಂದೆಯು ಓದಿಸುತ್ತಾರೆ, ಇದು ಆಧ್ಯಾತ್ಮಿಕ ಜ್ಞಾನವಾಗಿದೆ. ಬ್ರಹ್ಮಾ, ವಿಷ್ಣು, ಶಂಕರನಿಗೆ ಜ್ಞಾನ ಸಾಗರನೆಂದು ಹೇಳಲು ಸಾಧ್ಯವಿಲ್ಲ ಅಂದಮೇಲೆ ಮತ್ತೆ ಮನುಷ್ಯರಿಗೆ ಹೇಳಲು ಹೇಗೆ ಸಾಧ್ಯ! ಮನುಷ್ಯರು ಜ್ಞಾನದ ಅಥಾರಿಟಿಯಾಗಲು ಸಾಧ್ಯವಿಲ್ಲ. ಶಾಸ್ತ್ರಗಳ ಅಥಾರಿಟಿಯೆಂದೂ ಸಹ ಪರಮಪಿತ ಪರಮಾತ್ಮನಿಗೇ ಹೇಳಲಾಗುತ್ತದೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ ಎಂದು ತೋರಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಯಾರೂ ಅರಿತುಕೊಂಡಿಲ್ಲ ಅಂದಮೇಲೆ ಅವರಿಗೆ ಆಸ್ತಿಯು ಎಲ್ಲಿಂದ ಸಿಗುವುದು? ಬೇಹದ್ದಿನ ಆಸ್ತಿಯು ಬೇಹದ್ದಿನ ತಂದೆಯ ಮೂಲಕವೇ ಸಿಗುತ್ತದೆ. ಈಗ ಈ ತಂದೆಯು ಏನು ಮಾಡುತ್ತಿದ್ದಾರೆ? ಇದು ಹೋಲಿ ಮತ್ತು ದುರಿಯಾ ಆಗಿದೆಯಲ್ಲವೆ. ಜ್ಞಾನ ಮತ್ತು ವಿಜ್ಞಾನ ಕೇವಲ ಎರಡು ಶಬ್ಧಗಳಿವೆ. ತಂದೆಯು ಮನ್ಮನಾಭವದ ಜ್ಞಾನವನ್ನು ಕೊಡುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಅಂದಾಗ ಈ ಜ್ಞಾನ - ವಿಜ್ಞಾನವು ಹೋಲಿ ಮತ್ತು ದುರಿಯಾ ಆಗಿದೆ. ಮನುಷ್ಯರಲ್ಲಿ ಜ್ಞಾನವಿಲ್ಲದೇ ಇರುವ ಕಾರಣ ಒಬ್ಬರು ಇನ್ನೊಬ್ಬರ ಬಾಯಲ್ಲಿ ಧೂಳನ್ನೇ ಎರಚುತ್ತಾರೆ. ಇರುವುದೇ ಹೀಗೆ. ಯಾರದೂ ಗತಿ - ಸದ್ಗತಿಯಾಗುವುದಿಲ್ಲ. ಬಾಯಲ್ಲಿ ಮಣ್ಣನ್ನೇ ಹಾಕುತ್ತಾರೆ. ಜ್ಞಾನದ ಮೂರನೇ ನೇತ್ರವು ಯಾರಿಗೂ ಇಲ್ಲ. ದಂತ ಕಥೆಗಳನ್ನು ಕೇಳುತ್ತಾ ಬಂದಿದ್ದಾರೆ, ಇದಕ್ಕೆ ಅಂಧಶ್ರದ್ಧೆಯೆಂದು ಹೇಳಲಾಗುತ್ತದೆ. |
ಈಗ ನೀವಾತ್ಮರಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ನೀವು ಮಕ್ಕಳು ತಂದೆಯಿಂದ ಆಸ್ತಿಯ ಪ್ರಾಪ್ತಿಗಾಗಿ ಸಲಹೆಯನ್ನು ಕೊಡಬೇಕಾಗಿದೆ. ಆಗ ಅವರಿಗೆ ಅರ್ಥವಾಗುತ್ತದೆ. ಬ್ರಹ್ಮಾರವರ ಮೂಲಕ ಇವರು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅದು ಮತ್ತ್ಯಾರ ಮೂಲಕವೂ ಸಿಗಲು ಸಾಧ್ಯವಿಲ್ಲ . ಎಲ್ಲಾ ಸೇವಾಕೇಂದ್ರಗಳಲ್ಲಿ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಹೆಸರನ್ನು ಬರೆಯಲಾಗಿದೆ. ಒಂದುವೇಳೆ ಗೀತಾ ಪಾಠಶಾಲೆ ಎಂದು ಬರೆದರೆ ಅದು ಸಾಮಾನ್ಯ ಮಾತಾಗಿ ಬಿಡುತ್ತದೆ. ಈಗ ನೀವೂ ಸಹ ಬಿ.ಕೆ. ಎಂದು ಬರೆದಾಗಲೇ ತಂದೆಯ ಪರಿಚಯ ಕೊಡಲು ಸಾಧ್ಯ. ಮನುಷ್ಯರು ಬಿ.ಕೆ. ಹೆಸರನ್ನು ಕೇಳಿ ಹೆದರುತ್ತಾರೆ ಆದ್ದರಿಂದ ಗೀತಾ ಪಾಠಶಾಲೆ ಎಂದು ಹೆಸರನ್ನು ಬರೆಯುತ್ತಾರೆ. ಆದರೆ ಇದರಲ್ಲಿ ಯಾವುದೇ ಹೆದರುವ ಮಾತಿಲ್ಲ. ತಿಳಿಸಿ ಕೊಡಿ - ಇದು ಮನೆಯಾಗಿದೆ. ಯಾರ ಮನೆಗೆ ಬಂದಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಇವರೆಲ್ಲರ ತಂದೆಯು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಭಾರತವಾಸಿಗಳು ಪ್ರಜಾಪಿತ ಬ್ರಹ್ಮನನ್ನು ಒಪ್ಪುತ್ತಾರೆ. ಕ್ರಿಶ್ಚಿಯನ್ನರೂ ಸಹ ಆದಿ ದೇವನು ಬಂದು ಹೋಗಿದ್ದಾರೆ. ಅವರದು ಈ ಮನುಷ್ಯ ವಂಶಾವಳಿಯಾಗಿದೆ ಎಂದು ತಿಳಿಯುತ್ತಾರೆ ಆದರೆ ಅವರು ತಮ್ಮ ಕ್ರಿಸ್ತನನ್ನೇ ಅನುಸರಿಸುತ್ತಾರೆ. ಕ್ರಿಸ್ತನನ್ನು, ಬುದ್ಧನನ್ನು ತಂದೆಯೆಂದು ತಿಳಿಯುತ್ತಾರೆ. ಅವರದೇ ವಂಶಾವಳಿಯಲ್ಲವೆ. ವಾಸ್ತವದಲ್ಲಿ ತಂದೆಯು ಬ್ರಹ್ಮಾರವರ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿದ್ದಾರೆ. ಅವರು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಆಗಿದ್ದಾರೆ. ಮೊದಲು ತಂದೆಯ ಪರಿಚಯ ಕೋಡಬೇಕಾಗಿದೆ. ನಾವು ನಿಮ್ಮ ತಂದೆಯೊಂದಿಗೆ ಮಿಲನ ಮಾಡಲು ಬಯಸುತ್ತೇವೆ ಎಂದು ಹೇಳಿದರೆ ತಿಳಿಸಿ, ಆಸ್ತಿಯು ಶಿವ ತಂದೆಯಿಂದ ಸಿಗುತ್ತದೆ. ಬ್ರಹ್ಮ ತಂದೆಯಿಂದಲ್ಲ. ಸತ್ಯ ತಂದೆ ಯಾರು? ಗೀತೆಯ ಭಗವಂತ ಯಾರು? ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯನ್ನು ಯಾರು ಮಾಡಿದರು? ತಂದೆ. ಈ ರೀತಿ ಹೇಳಿದರೆ ಇವರೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಸಂತಾನರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವರು. ಶಿವನಿಂದ ಬಹ್ಮಾರವರ ಮೂಲಕ ಗತಿ-ಸದ್ಗತಿಯ ಆಸ್ತಿಯು ಸಿಗುತ್ತದೆ. ಅವರು ಈ ಸಮಯದಲ್ಲಿ ನಮಗೆ ಜೀವನ್ಮುಕ್ತಿಯನ್ನು ಕೊಡುತ್ತಿದ್ದಾರೆ, ಉಳಿದೆಲ್ಲರೂ ಮುಕ್ತಿಯಲ್ಲಿ ಹೋಗುತ್ತಾರೆ. ಈ ಜ್ಞಾನವು ನೀವು ಮಕ್ಕಳ ಬುದ್ದಿಯಲ್ಲಿರಬೇಕು. ಯಾರಾದರೂ ಬರಲಿ ಅವರಿಗೆ ತಿಳಿಸಿ, ಯಾರನ್ನು ಮಿಲನ ಮಾಡಲು ಬಯಸುತ್ತೀರಿ, ಅವರಂತೂ ನಮಗೂ ತಂದೆಯಾಗಿದ್ದಾರೆ ಮತ್ತು ನಿಮಗೂ ತಂದೆಯಾಗಿದ್ದಾರೆ, ಇಲ್ಲಿ ಯಾವುದೇ ಗುರು-ಗೋಸಾಯಿಗಳಿಲ್ಲ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಹೇಗೆ ಹೋಲಿ - ದುರಿಯಾ ಮಾಡಿಸುತ್ತೀರಿ. ದುರಿಯಾ ಎಂಬುದಕ್ಕೆ ಮತ್ತ್ಯಾವುದೇ ಅರ್ಥವಿಲ್ಲ, ಜ್ಞಾನದಿಂದ ಬಣ್ಣವನ್ನು ಹಾಕುತ್ತೀರಿ. ಆತ್ಮವು ಈ ಶರೀರದಲ್ಲಿದೆ, ಅದು ಪವಿತ್ರವಾದರೆ ಅದಕ್ಕೆ ಪವಿತ್ರ ಶರೀರವೇ ಸಿಗುವುದು. ಇದಂತೂ ಪವಿತ್ರ ಶರೀರವಲ್ಲ. ಇದು ಈಗ ಸಮಾಪ್ತಿಯಾಗಬೇಕಾಗಿದೆ. ಶರೀರಕ್ಕೆ ಗಂಗಾ ಸ್ನಾನ ಮಾಡಿಸುತ್ತಾರೆ ಆದರೆ ಪತಿತ-ಪಾವನ ತಂದೆಯ ವಿನಃ ಮತ್ತ್ಯಾರೂ ಇಲ್ಲ. ಆತ್ಮವೇ ಪತಿತವಾಗುತ್ತದೆ ಅಂದಾಗ ಆತ್ಮವು ನೀರಿನ ಸ್ನಾನದಿಂದ ಪಾವನವಾಗಲು ಸಾಧ್ಯವಿಲ್ಲ. ಇದು ಯಾರಿಗೂ ತಿಳಿದಿಲ್ಲ. ಅವರಂತೂ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಆತ್ಮ ನಿರ್ಲೆಪವೆಂದು ಹೇಳುತ್ತಾರೆ. ಈಗ ಯಾರು ಬುದ್ಧಿವಂತರಾಗಿದ್ದಾರೆಯೋ ಅವರೇ ಧಾರಣೆ ಮಾಡಿ ಅನ್ಯರಿಗೂ ಧಾರಣೆ ಮಾಡಿಸಬಲ್ಲರು. ಯಾವ ಮಕ್ಕಳ ಬಾಯಿಂದ ಸದಾ ರತ್ನಗಳೇ ಹೊರಬರುತ್ತವೆಯೋ ಅವರಿಗೆ ರೂಪ ಭಸಂತರೆಂದು ಹೇಳಲಾಗುತ್ತದೆ. ಜ್ಞಾನ-ವಿಜ್ಞಾನವನ್ನು ಬಿಟ್ಟು ಪರಸ್ಪರ ಮತ್ತೇನಾದರೂ ಲೇವಾದೇವಿ ಮಾಡುತ್ತಾರೆಂದರೆ ಅವರ ಬಾಯಿಂದ ಕಲ್ಲುಗಳು ಬರುತ್ತಿವೆ ಎಂದರ್ಥ. ಸೇವೆಯ ಬದಲು ಸೇವಾಭಂಗ ಮಾಡುತ್ತಾರೆ. 63 ಜನ್ಮಗಳಿಂದಲೂ ಒಬ್ಬರು ಇನ್ನೊಬ್ಬರಿಗೆ ಕಲ್ಲುಗಳನ್ನು ಹೊಡೆಯುತ್ತಲೇ ಬಂದರು. ಈಗ ತಂದೆಯು ತಿಳಿಸುತ್ತಾರೆ - ನೀವು ಜ್ಞಾನ-ವಿಜ್ಞಾನದ ಮಾತುಗಳನ್ನಾಡಿ ಮನಸ್ಸನ್ನು ಖುಷಿ ಪಡಿಸಬೇಕಾಗಿದೆ. ಅಲ್ಲಸಲ್ಲದ ಮಾತುಗಳನ್ನು ಕೇಳಬಾರದು. ಇದು ಜ್ಞಾನವಲ್ಲವೆ. ಇಡೀ ಪ್ರಪಂಚವಂತೂ ಒಬ್ಬರು ಇನ್ನೊಬ್ಬರಿಗೆ ಕಲ್ಲುಗಳನ್ನೇ ಹೊಡೆಯುತ್ತಾರೆ. ನೀವು ಮಕ್ಕಳು ರೂಪ ಭಸಂತರಾಗಿದ್ದೀರಿ ಅಂದಮೇಲೆ ನೀವು ಜ್ಞಾನ-ವಿಜ್ಞಾನವನ್ನು ಬಿಟ್ಟು ಮತ್ತೇನನ್ನೂ ಕೇಳಬಾರದು, ಹೇಳಲೂಬಾರದು. ಯಾರು ಉಲ್ಟಾ ಮಾತನಾಡುವರೋ ಅವರ ಸಂಗವೇ ಕೆಟ್ಟದ್ದಾಗಿದೆ. ಯಾರು ಬಹಳ ಸೇವೆ ಮಾಡುವವರಿದ್ದಾರೆ ಅವರ ಸಂಗವು ಒಳ್ಳೆಯದಾಗಿದೆ. ಕೆಲವರು ಬ್ರಾಹ್ಮಣರು ರೂಪಭಸಂತರಾಗಿದ್ದಾರೆ. ಇನ್ನೂ ಕೆಲವರು ಬ್ರಾಹ್ಮಣರಾಗಿಯೂ ಉಲ್ಟಾ-ಸುಲ್ಟಾ ಮಾತನ್ನಾಡುತ್ತಾರೆ, ಇಂತಹವರ ಸಂಗ ಮಾಡಬಾರದು. ಅವರು ಇನ್ನೂ ನಷ್ಟವನ್ನೇ ಉಂಟು ಮಾಡುತ್ತಾರೆ, ಆದ್ದರಿಂದ ತಂದೆಯು ಪದೇ-ಪದೇ ಸಾವಧಾನ ನೀಡುತ್ತಾರೆ. ಎಂದೂ ಪರಸ್ಪರ ಉಲ್ಟಾ-ಸುಲ್ಟಾ ಮಾತುಗಳನ್ನಾಡಬೇಡಿ. ಇಲ್ಲವಾದರೆ ತಮ್ಮದೂ ಸತ್ಯ ನಾಶ, ಅನ್ಯರದೂ ಸತ್ಯ ನಾಶ ಮಾಡುತ್ತೀರಿ ಮತ್ತೆ ಪದವಿ ಭ್ರಷ್ಟವಾಗುತ್ತದೆ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ಬಾಬಾ, ನಾವು ಹೋಗಿ ಅನೇಕರಿಗೆ ಈ ಜ್ಞಾನವನ್ನು ತಿಳಿಸುತ್ತೇವೆ ಎನ್ನುವಷ್ಟು ಉಮ್ಮಂಗವಿರಬೇಕು. ಅವರೇ ತಂದೆಯ ಸತ್ಯ ಮಕ್ಕಳಾಗಿದ್ದಾರೆ. ತಂದೆಯೂ ಸಹ ಸೇವಾಧಾರಿ ಮಕ್ಕಳ ಮಹಿಮೆ ಮಾಡುತ್ತಾರೆ. ಅಂತಹವರ ಸಂಗ ಮಾಡಬೇಕು. ಯಾರು ಒಳ್ಳೆಯ ವಿದ್ಯಾರ್ಥಿಯ ಸಂಗ ಮಾಡುತ್ತಾರೆ ಎಂಬುದನ್ನು ತಂದೆಯೊಂದಿಗೆ ಕೇಳಿದರೆ ತಿಳಿಸಬಲ್ಲರು. ಎಂತಹವರ ಸಂಗ ಮಾಡಬೇಕು? ಯಾರು ತಂದೆಯ ಹೃದಯವನ್ನೇರಿದ್ದಾರೆ ಎಂಬುದನ್ನು ಕೂಡಲೇ ತಿಳಿಸಬಲ್ಲರು. ಸೇವಾಧಾರಿ ಮಕ್ಕಳ ಪ್ರತಿ ತಂದೆಗೂ ಗೌರವವಿದೆ. ಕೆಲವರಂತೂ ಸೇವೆಯನ್ನೂ ಮಾಡುವುದಿಲ್ಲ. ಹೀಗೆ ಅನೇಕರಿಗೆ ಕೆಟ್ಟ ಸಂಗವು ಸಿಗುವುದರಿಂದ ಸ್ಥಿತಿಯೇ ಏರುಪೇರಾಗಿ ಬಿಡುತ್ತದೆ. ಕೆಲವರು ಸ್ಥೂಲ ಸೇವೆಯಲ್ಲಿ ಬಹಳ ಚೆನ್ನಾಗಿದ್ದಾರೆ, ಅವರೂ ಸಹ ಒಳ್ಳೆಯ ಆಸ್ತಿಯನ್ನು ಪಡೆಯುತ್ತಾರೆ. ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ. ಕೇವಲ ಇಷ್ಟನ್ನೇ ತಿಳಿಸಿ - ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಎರಡೇ ಶಬ್ಧಗಳಿವೆ, ತಂದೆ ಮತ್ತು ಆಸ್ತಿ. ಯಾರೇ ಬಂದರೂ ಸಹ ಅವರಿಗೆ ತಿಳಿಸಿ - ತಂದೆಯ ಆದೇಶವಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿ. ಎಲ್ಲದಕ್ಕಿಂತ ದೊಡ್ಡ ಅದ್ಭುತ ಇದಾಗಿದೆ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮಗೆ ಸ್ವರ್ಗದ ಆಸ್ತಿಯು ಸಿಗುವುದು. ಪ್ರತೀ ಸೇವಾಕೇಂದ್ರದಲ್ಲಿ ಹೀಗೆ ನಂಬರ್ವಾರ್ ಇದ್ದಾರೆ. ಕೆಲವರು ವಿವರವಾಗಿ ತಿಳಿಸಿಕೊಡುತ್ತಾರೆ. ಯಾರಿಗಾದರೂ ಹೀಗೆ ತಿಳಿಸಲು ಬರಲಿಲ್ಲವೆಂದರೆ ಕೇವಲ ಇಷ್ಟನ್ನೇ ತಿಳಿಸಿ, ಕಲ್ಪದ ಮೊದಲೂ ಸಹ ತಂದೆಯು ಹೇಳಿದ್ದರು. ನನ್ನೊಬ್ಬನನ್ನೇ ನೆನಪು ಮಾಡಿ, ಮತ್ತ್ಯಾವುದೇ ದೇಹಧಾರಿ, ದೇವತೆ ಯಾರನ್ನೂ ನೆನಪು ಮಾಡಬೇಡಿ. ಇಂತಹವರು ಹೀಗೆ ಮಾಡುತ್ತಾರೆ. ಹಾಗೆ ಮಾಡುತ್ತಾರೆ... ಇಂತಹ ಪರಚಿಂತನೆಯನ್ನೇ ಮಾಡಬೇಡಿ. ತಂದೆಯು ನಿಮಗೆ ಹೋಲಿ ಮತ್ತು ದುರಿಯಾ ತಿನ್ನಿಸಿದರು, ಬಾಕಿ ಸ್ಥೂಲ ಬಣ್ಣವನ್ನು ಹಾಕುವುದು ಆ ಮನುಷ್ಯರ ಕೆಲಸವಾಗಿದೆ. ಯಾರು ಯಾರದೇ ನಿಂದನೆಯ ಮಾತುಗಳನ್ನು ತಿಳಿಸಿದರೂ ನೀವು ಕೇಳಬಾರದು. ತಂದೆಯು ಎಷ್ಟು ಒಳ್ಳೆಯ ಮಾತನ್ನು ತಿಳಿಸುತ್ತಾರೆ - ಮನ್ಮನಾಭವ, ಮಧ್ಯಾಜೀಭವ. ಯಾರೇ ಬಂದರೂ ಸಹ ಅವರಿಗೆ ತಿಳಿಸಿಕೊಡಿ, ಶಿವ ತಂದೆಯು ಎಲ್ಲರ ತಂದೆಯಾಗಿದ್ದಾರೆ. ಅವರು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಆಸ್ತಿಯು ಸಿಗುವುದು. ಗೀತೆಯ ಭಗವಂತನೂ ಅವರಾಗಿದ್ದಾರೆ. ಈ ಮೃತ್ಯು ಸಮ್ಮುಖದಲ್ಲಿ ನಿಂತಿದೆ ಅಂದಾಗ ಸರ್ವಿಸ್ ಮಾಡುವುದು, ತಂದೆಯ ನೆನಪು ತರಿಸುವುದು ನೀವು ಮಕ್ಕಳ ಕರ್ತವ್ಯವಾಗಿದೆ. ಇದು ಮಹಾನ್ ಮಂತ್ರವಾಗಿದೆ. ಇದರಿಂದ ರಾಜಧಾನಿಯ ತಿಲಕ ಸಿಗುವುದು. ಎಷ್ಟು ಸಹಜ ಮಾತಾಗಿದೆ - ತಂದೆಯನ್ನು ನೆನಪು ಮಾಡಿ ಮತ್ತು ಮಾಡಿಸಿ ಆಗ ದೋಣಿಯು ಪಾರಾಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬುದ್ಧಿವಂತರಾಗಿ ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಬಾಯಿಂದ ಎಂದೂ ಕಲ್ಲುಗಳಂತೆ ಮಾತನಾಡಿ ಸೇವಾಭಂಗ ಮಾಡಬಾರದು. ಜ್ಞಾನ-ಯೋಗವನ್ನು ಬಿಟ್ಟು ಮತ್ತೇನೂ ಚರ್ಚೆ ಮಾಡಬಾರದು. |
2. ಯಾರು ರೂಪ ಭಸಂತರಾಗಿದ್ದಾರೆ. ಯಾರು ಸೇವಾಧಾರಿಗಳಾಗಿದ್ದಾರೆಯೋ ಅಂತಹವರ ಸಂಗವನ್ನೇ ಮಾಡಬೇಕಾಗಿದೆ. ಉಲ್ಟಾ-ಸುಲ್ಟಾ ಮಾತುಗಳನ್ನು ತಿಳಿಸುವವರ ಸಂಗ ಮಾಡಬಾರದು. |
ಓಂ ಶಾಂತಿ. ತಂದೆಯು ತಿಳಿಸುತ್ತಾರೆ- ಆತ್ಮಾಭಿಮಾನಿಯಾಗಿ ಅಥವಾ ದೇಹಿ-ಅಭಿಮಾನಿಯಾಗಿ ಕುಳಿತುಕೊಳ್ಳಿ ಏಕೆಂದರೆ ಆತ್ಮನಲ್ಲಿಯೇ ಉತ್ತಮ ಮತ್ತು ಕನಿಷ್ಠ ಸಂಸ್ಕಾರ ತುಂಬುತ್ತದೆ. ಎಲ್ಲದರ ಪ್ರಭಾವವು ಆತ್ಮದ ಮೇಲೆ ಬೀಳುತ್ತದೆ. ಆತ್ಮನಿಗೇ ಪತಿತ ಎಂದು ಕರೆಯಲಾಗುತ್ತದೆ, ಪತಿತ ಆತ್ಮನೆಂದು ಹೇಳಲಾಗುತ್ತದೆ, ಅವಶ್ಯವಾಗಿ ಅವರು ಜೀವಾತ್ಮ ಆಗಿರುತ್ತಾರೆ. ಆತ್ಮವು ಶರೀರದೊಂದಿಗೆ ಇರುತ್ತದೆ. ಮೊಟ್ಟಮೊದಲು ಆತ್ಮನೆಂದು ತಿಳಿದು ಕುಳಿತುಕೊಳ್ಳಿ ಎಂದು ಹೇಳುತ್ತಾರೆ, ತಮ್ಮನ್ನು ಶರೀರವಲ್ಲ ಆತ್ಮನೆಂದು ತಿಳಿದು ಕುಳಿತುಕೊಳ್ಳಿ. ಆತ್ಮವೇ ಈ ಕರ್ಮೇಂದ್ರಿಯಗಳನ್ನು ನಡೆಸುತ್ತದೆ. ಪದೇ-ಪದೇ ಆತ್ಮನೆಂದು ತಿಳಿದುಕೊಳ್ಳುವುದರಿಂದ ಪರಮಾತ್ಮನ ನೆನಪು ಬರುತ್ತದೆ. ಒಂದುವೇಳೆ ದೇಹದ ನೆನಪು ಬಂದರೆ ಜನ್ಮ ಕೊಟ್ಟಿರುವ ತಂದೆಯ ನೆನಪು ಬರುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ- ಆತ್ಮಾಭಿಮಾನಿಗಳಾಗಿ. ತಂದೆಯು ಓದಿಸುತ್ತಿದ್ದಾರೆ, ಇದು ಮೊದಲನೇ ಪಾಠವಾಗಿದೆ. ನೀವಾತ್ಮ ಅವಿನಾಶಿಯಾಗಿದ್ದೀರಿ, ಈ ಶರೀರ ವಿನಾಶಿಯಾಗಿದೆ. ನಾನು ಆತ್ಮನಾಗಿದ್ದೇನೆ- ಈ ಮೊದಲನೇ ಶಬ್ಧವು ನೆನಪು ಮಾಡಿಕೊಳ್ಳದಿದ್ದರೆ ಕಚ್ಚಾ ಆಗಿಬಿಡುತ್ತೀರಿ. ನಾನು ಆತ್ಮನಾಗಿದ್ದೇನೆ ಶರೀರವಲ್ಲ- ಈ ಶಬ್ಧವನ್ನು ತಂದೆಯು ಈ ಸಮಯದಲ್ಲಿ ಓದಿಸುತ್ತಿದ್ದಾರೆ, ಮೊದಲು ಯಾರೂ ಓದಿಸುತ್ತಿರಲಿಲ್ಲ. ಆತ್ಮಾಭಿಮಾನಿಯನ್ನಾಗಿ ಮಾಡಿ ಜ್ಞಾನವನ್ನು ಕೊಡಲು ತಂದೆಯು ಬಂದಿದ್ದಾರೆ. ಮೊದಲನೇ ದಿನದ ಜ್ಞಾನವಾಗಿದೆ- ಹೇ ಆತ್ಮವೇ ನೀನು ಪತಿತನಾಗಿದ್ದೀಯಾ ಏಕೆಂದರೆ ಇದು ಹಳೆಯ ಪ್ರಪಂಚವಾಗಿದೆ. ಪ್ರದರ್ಶನಿಯಲ್ಲಿ ನೀವು ಮಕ್ಕಳು ಬಹಳ ಜನಕ್ಕೆ ತಿಳಿಸುತ್ತೀರಿ. ಪ್ರಶ್ನೋತ್ತರ ಮಾಡುತ್ತೀರಿ. ಹಗಲಿನ ವಿಶ್ರಾಂತಿ ಸಮಯದಲ್ಲಿ ನೀವೆಲ್ಲರೂ ಸೇರಿ ಸಮಾಚಾರವನ್ನು ಕೇಳಬೇಕು. ಪರಸ್ಪರ ಸಮಾಚಾರವನ್ನು ಕೇಳಬೇಕು. ಯಾರ್ಯಾರು ಯಾವ-ಯಾವ ಪ್ರಶ್ನೆಯನ್ನು ಕೇಳಿದರು, ನಾವು ಹೇಗೆ ಉತ್ತರ ಕೊಟ್ಟೆವೆ? ನಂತರ ಅವರಿಗೆ ತಿಳಿಸಿಕೊಡಬೇಕು- ಆ ಪ್ರಶ್ನೆಗೆ ಇದು ಉತ್ತರವಲ್ಲ, ಇದು ಉತ್ತರವಾಗಿದೆ. ತಿಳಿಸಿಕೊಡುವ ಯುಕ್ತಿ ಎಲ್ಲರದೂ ಒಂದೇ ಆಗಿರುವುದಿಲ್ಲ. ಮುಖ್ಯ ಮಾತು ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುತ್ತೀರಾ ಅಥವಾ ದೇಹವೆಂದು ತಿಳಿಯುತ್ತೀರಾ? ಎಲ್ಲರಿಗೂ ಇಬ್ಬರು ತಂದೆಯರಿದ್ದಾರೆ. ದೇಹಧಾರಿಗಳಿಗೆಲ್ಲಾ ಲೌಕಿಕ ತಂದೆಯಿದ್ದಾರೆ, ಪಾರಲೌಕಿಕ ತಂದೆಯೂ ಇದ್ದಾರೆ. ಅಲ್ಪಕಾಲದ ತಂದೆಯಂತೂ ಸಾಮಾನ್ಯವಾಗಿದ್ದಾರೆ, ಇಲ್ಲಿ ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ. ಅವರು ನಾವಾತ್ಮಗಳಿಗೆ ಕುಳಿತು ತಿಳಿಸುತ್ತಾರೆ ಅವರೊಬ್ಬರೇ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ ಇದನ್ನು ಪಕ್ಕಾ ಮಾಡಿಕೊಳ್ಳಬೇಕು. ಯಾವಾಗ ನೀವು ಯಾರಿಗಾದರೂ ತಿಳಿಸುತ್ತೀರಿ, ಅವರು ಯಾವ-ಯಾವ ಪ್ರಶ್ನೆಗಳನ್ನು ಕೇಳುತ್ತಾರೆಂದು ನೀವು ಪರಸ್ಪರ ಕುಳಿತುಕೊಳ್ಳಬೇಕು, ಬುದ್ಧಿವಂತರೂ ಸಹ ಕುಳಿತುಕೊಳ್ಳಬೇಕು, ನಿಮಗೆ ಹಗಲಿನ ವೇಳೆಯಲ್ಲಿ ಸಮಯ ಸಿಗುತ್ತದೆ, ಊಟ ಮಾಡಿದ ನಂತರ ನಿದ್ರೆಯ ನಶೆಯು ಬರುತ್ತದೆಯೆಂದು ತಿಳಿಯಬಾರದು. ಯಾರು ಬಹಳ ಊಟ ಮಾಡುತ್ತಾರೆಯೋ ಅವರಿಗೆ ನಿದ್ರೆಯು ಆಲಸ್ಯ ಬರುತ್ತದೆ. ಆ ದಿನದಲ್ಲಿ ಯಾರ್ಯಾರು ಯಾವ-ಯಾವ ಪ್ರಶ್ನೆಗಳನ್ನು ಕೇಳಿದರೆಂಬ ಚರ್ಚೆಯನ್ನು ಮಾಡಬೇಕು. ಪ್ರಶ್ನೆಗಳನ್ನಂತೂ ಭಿನ್ನ-ಭಿನ್ನವಾಗಿ ಕೇಳುತ್ತಾರೆ ಅದಕ್ಕೆ ಸರಿಯಾದ ಉತ್ತರ ಬೇಕಾಗುತ್ತದೆ. ನೋಡಬೇಕು- ಅವರನ್ನು ತಂದೆಯ ಆಕರ್ಷಣೆಯಲ್ಲಿ ತಂದಿದ್ದೇವೆಯೇ? ಸಮಾಧಾನವಾಯಿತೇ? ಇಲ್ಲದಿದ್ದರೆ ನಂತರ ತಿದ್ದಬೇಕು. ಯಾರು ಬುದ್ಧಿವಂತರಿದ್ದಾರೆಯೋ ಅವರು ಕುಳಿತುಕೊಳ್ಳಬೇಕು, ಊಟ ಮಾಡಿ ಬೇಗ ನಿದ್ರೆ ಬಂದಿತೆಂದು ಹೇಳಬಾರದು. ದೇವತೆಗಳು ಬಹಳ ಕಡಿಮೆ ಊಟ ಮಾಡುತ್ತಾರೆ ಏಕೆಂದರೆ ಖುಷಿಯಿರುತ್ತದೆಯಲ್ಲವೆ ಆದ್ದರಿಂದ ಖುಷಿಯಂತಹ ಔಷಧಿಯಿಲ್ಲವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ಅಪಾರವಾದ ಖುಷಿಯಾಗಬೇಕು. ಬ್ರಾಹ್ಮಣರಾಗುವುದರಲ್ಲಿ ಬಹಳ ಖುಷಿಯಿದೆ, ಅವರಿಗೆ ಖುಷಿಯಾದಾಗಲೇ ಬ್ರಾಹ್ಮಣರಾಗುತ್ತಾರೆ. ದೇವತೆಗಳಿಗೆ ಖುಷಿಯಿದೆಯಲ್ಲವೆ ಆದ್ದರಿಂದ ಅವರ ಬಳಿ ಧನ-ಸಂಪತ್ತೆಲ್ಲವೂ ಬಹಳ ಇರುತ್ತದೆ. ಅವರಿಗೆ ಖುಷಿಯು ಸಾಕಷ್ಟಿರುತ್ತದೆ, ಖುಷಿಯಿರುವಾಗ ಊಟವನ್ನು ಬಹಳ ಕಡಿಮೆ ತಿನ್ನುತ್ತಾರೆ. ಇದೊಂದು ನಿಯಮವಾಗಿದೆ. ಹೆಚ್ಚು ಊಟ ಮಾಡುವವರಿಗೆ ಹೆಚ್ಚು ನಿದ್ರೆ ಬರುತ್ತದೆ, ಯಾರಿಗೆ ನಿದ್ರೆಯ ನಶೆಯಿರುತ್ತದೆಯೋ ಅವರು ಯಾರಿಗೂ ತಿಳಿಸಲು ಸಾಧ್ಯವಾಗುವುದಿಲ್ಲ, ಬಲವಂತವಾಗಿ ಹೇಳುತ್ತಾರೆ ವಿವಶವಾಗಿರುತ್ತಾರೆ. ಈ ಜ್ಞಾನದ ಅಂಶಗಳನ್ನು ಬಹಳ ಖುಷಿಯಿಂದ ಕೇಳಬೇಕು ಹಾಗೂ ಹೇಳಬೇಕಾಗಿದೆ. ತಿಳಿಸಿಕೊಡಲು ಬಹಳ ಸಹಜವಾಗಿರುತ್ತದೆ. |
ಮೂಲ ಮಾತು ತಂದೆಯ ಪರಿಚಯ ಕೊಡುವುದಾಗಿದೆ. ಬ್ರಹ್ಮನನ್ನಂತೂ ಯಾರೂಸಹ ತಿಳಿದಿಲ್ಲ. ಪ್ರಜಾಪಿತ ಬ್ರಹ್ಮನು ಇದ್ದಾರೆ, ಅನೇಕಾನೇಕ ಪ್ರಜೆಗಳಿದ್ದಾರೆ. ಪ್ರಜಾಪಿತ ಬ್ರಹ್ಮಾ ಹೇಗಾಗುತ್ತಾರೆ ಎನ್ನುವುದರ ಕುರಿತು ಬಹಳ ಚೆನ್ನಾಗಿ ತಿಳಿಸಬೇಕು. ತಂದೆಯು ತಿಳಿಸುತ್ತಾರೆ- ಇವರ ಅನೇಕ ಜನ್ಮಗಳ ಅಂತ್ಯದ ಜನ್ಮದಲ್ಲಿಯೂ ಅಂತ್ಯದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿ ನಾನು ಪ್ರವೇಶ ಮಾಡುತ್ತೇನೆ. ಇಲ್ಲದಿದ್ದರೆ ರಥವೆಲ್ಲಿಂದ ಬರಬೇಕು! ರಥವು ಶಿವತಂದೆಗಾಗಿಯೇ ಗಾಯನವಿದೆ, ಅವರ ರಥದಲ್ಲಿ ಹೇಗೆ ಬರುತ್ತಾರೆಂದು ಗೊಂದಲವಾಗುತ್ತಾರೆ. ರಥವಂತೂ ಅವಶ್ಯವಾಗಿ ಬೇಕು. ಕೃಷ್ಣನಂತೂ ಆಗಲು ಸಾಧ್ಯವಿಲ್ಲ ಆದ್ದರಿಂದ ವಶ್ಯವಾಗಿ ಈ ಬ್ರಹ್ಮನ (ರಥ) ಮೂಲಕವೇ ತಿಳಿಸುತ್ತಾರೆ. ಮೇಲಿಂದಂತೂ ಹೇಳುವುದಿಲ್ಲ ಹಾಗಾದರೆ ಬ್ರಹ್ಮನು ಎಲ್ಲಿಂದ ಬಂದರು? ತಂದೆಯೇ ತಿಳಿಸುತ್ತಾರೆ- ಯಾರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರಲ್ಲಿ ನಾನು ಪ್ರವೇಶಿಸುತ್ತೇನೆ. ಅವರು ಸ್ವಯಂನ್ನೂ ತಿಳಿದುಕೊಂಡಿಲ್ಲ ಆದರೆ ನಾನೇ ತಿಳಿಸುತ್ತೇನೆ. ಕೃಷ್ಣನಿಗೆ ರಥದ ಅವಶ್ಯಕತೆಯಿಲ್ಲ. ಕೃಷ್ಣನೆಂದು ಹೇಳಿದರೆ ಭಗೀರಥನ ಹೆಸರು ಲೋಪವಾಗಿಬಿಡುತ್ತದೆ. ಕೃಷ್ಣನಿಗೆ ಭಗೀರಥನೆಂದು ಹೇಳಲು ಆಗುವುದಿಲ್ಲ. ಕೃಷ್ಣನ ಮೊದಲನೇ ಜನ್ಮ ರಾಜಕುಮಾರನಾಗುವುದಾಗಿದೆ. ಮಕ್ಕಳ ಆಂತರ್ಯದಲ್ಲಿ ವಿಚಾರಸಾಗರ ಮಂಥನ ನಡೆಯಬೇಕಾಗಿದೆ. ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಈ ಮಾತುಗಳನ್ನು ಶಾಸ್ತ್ರಗಳಲ್ಲಿ ಬರೆದಿಲ್ಲ. ಉಳಿದಂತೆ ವಿಚಾರಸಾಗರ ಮಂಥನ ಮಾಡಿದ ಕಳಸವನ್ನು ಲಕ್ಷ್ಮಿಗೆ ಕೊಟ್ಟರೆಂಬ ಮಾತು ಸರಿಯಾಗಿದೆ. ಅವರು ನಂತರ ಅನ್ಯರಿಗೆ ಅಮೃತವನ್ನು ಕುಡಿಸಿದಾಗ ಸ್ವರ್ಗದ ಬಾಗಿಲು ತೆರೆಯುತ್ತದೆ ಆದರೆ ಪರಮಪಿತ ಪರಮಾತ್ಮನಿಗೆ ವಿಚಾರಸಾಗರ ಮಂಥನ ಮಾಡುವ ಅವಶ್ಯಕತೆಯಿಲ್ಲ. ಅವರಂತೂ ಬೀಜರೂಪನಾಗಿದ್ದಾರೆ, ಅವರಲ್ಲಿ0iÉುೀ ಜ್ಞಾನವಿದೆ. ಅವರೂ ತಿಳಿದುಕೊಂಡಿದ್ದಾರೆ, ನೀವೂ ತಿಳಿದುಕೊಂಡಿದ್ದೀರಿ. ಇದನ್ನು ನೀವು ಬಹಳ ಚೆನ್ನಾಗಿ ತಿಳಿಸಿಕೊಡಬೇಕು. ತಿಳಿಸಿಕೊಡದೆ ದೇವತಾ ಪದವಿಯನ್ನು ಹೇಗೆ ಪಡೆಯುತ್ತೀರಿ! ಇದು ಆತ್ಮಗಳಿಗೆ ಉಲ್ಲಾಸಪಡಿಸುವುದಕ್ಕಾಗಿ ತಂದೆಯು ತಿಳಿಸುತ್ತಾರೆ. ಬಾಕಿ ಏನನ್ನೂ ತಿಳಿದುಕೊಂಡಿರಲಿಲ್ಲ, ತಂದೆಯೇ ಬಂದು ತಿಳಿಸಿಕೊಡುತ್ತಾರೆ. ಈಗ ನಿಮ್ಮ ಲಂಗರು ಭಕ್ತಿಮಾರ್ಗದಿಂದ ಹೊರಬಂದಿದೆ. ಈ ಜ್ಞಾನಮಾರ್ಗದಲ್ಲಿ ನಡೆಯುತ್ತಿದೆ, ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಯಾವ ಜ್ಞಾನವನ್ನು ಕೊಡುತ್ತೇನೆಯೋ ಅದು ಪ್ರಾಯಲೋಪವಾಗಿಬಿಡುತ್ತದೆ. |
ಒಬ್ಬರು ನಿರಾಕಾರ ತಂದೆ, ಇನ್ನೊಬ್ಬರು ಸಾಕಾರಿ ತಂದೆಯಾಗಿದ್ದಾರೆ. ಚೆನ್ನಾಗಿ ತಿಳಿಸಿಕೊಡಲಾಗುತ್ತದೆ ಆದರೆ ಮಾಯೆಯು ಆಕರ್ಷಣೆ ಮಾಡಿ ಕೊಳಕಿನಲ್ಲಿ ತೆಗೆದುಕೊಂಡು ಹೋಗುತ್ತದೆ, ಪತಿತರಾಗಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಕಾಮಚಿತೆಯ ಮೇಲೇರಿ ಒಮ್ಮೆಯೇ ಸ್ಮಶಾನದಲ್ಲಿ ಬಂದುಬಿಟ್ಟಿದ್ದೀರಿ ನಂತರ ಇಲ್ಲಿಯೇ ಸ್ವರ್ಗವಾಗುತ್ತದೆ. ಅರ್ಧಕಲ್ಪ ಪರಿಸ್ತಾನ (ಸ್ವರ್ಗ) ನಡೆಯುತ್ತದೆ, ಇನ್ನರ್ಧಕಲ್ಪ ಕಬರಿಸ್ತಾನ (ಸ್ಮಶಾನ) ನಡೆಯುತ್ತದೆ. ಈಗ ಎಲ್ಲರೂ ಸ್ಮಶಾನವಾಸಿಗಳಾಗುವವರಾಗಿದ್ದಾರೆ. ಏಣಿ ಚಿತ್ರವನ್ನು ಕುರಿತು ನೀವು ಚೆನ್ನಾಗಿ ತಿಳಿಸಬಹುದು. ಇದು ಪತಿತ ರಾಜ್ಯವಾಗಿದೆ, ಇದರ ವಿನಾಶವಂತೂ ಅವಶ್ಯವಾಗಿ ಆಗಲಿದೆ. ಈ ಭೂಮಿಯ ಮೇಲೆ ಈಗ ಸ್ಮಶಾನವಿದೆ ನಂತರ ಇದೇ ಭೂಮಿಯೇ ಪರಿವರ್ತನೆಯಾಗುತ್ತದೆ ಅರ್ಥಾತ್ ಕಬ್ಬಿಣದ ಯುಗದಿಂದ ಚಿನ್ನದ ಯುಗವುಳ್ಳ ಪ್ರಪಂಚವಾಗುತ್ತದೆ ನಂತರ ಎರಡುಕಲೆ ಕಡಿಮೆಯಾಗುತ್ತದೆ. ತತ್ವಗಳಲ್ಲಿಯೂ ಕಲೆ ಕಡಿಮೆಯಾಗುತ್ತಾ ಹೋಗುತ್ತದೆ ಆಗ ಆಪತ್ತುಗಳು ಉಲ್ಬಣಗೊಳ್ಳುತ್ತದೆ. ನೀವು ಎಲ್ಲರಿಗೂ ಬಹಳ ಚೆನ್ನಾಗಿ ತಿಳಿಸಿಕೊಡುತ್ತೀರಿ. ಒಂದುವೇಳೆ ಅವರು ತಿಳಿದುಕೊಳ್ಳದಿದ್ದರೆ ಅವರು ಕವಡೆಯಂತೆ ಅವರಿಗೆ ಏನೂ ಬೆಲೆಯಿರುವುದಿಲ್ಲ. ಇದರ ಬೆಲೆಯನ್ನು ತಂದೆಯೇ ಕುಳಿತು ತಿಳಿಸುತ್ತಾರೆ. ವಜ್ರದಂತಹ ಜನ್ಮವೆಂದು ಗಾಯನ ಮಾಡಲಾಗುತ್ತದೆ. ನೀವೂ ಸಹ ಮೊದಲು ತಂದೆಯನ್ನರಿಯದ ಕಾರಣ ಕವಡೆಯಂತೆ ಇದ್ದಿರಿ. ಈಗ ತಂದೆಯು ಬಂದು ವಜ್ರಸಮಾನ ಮಾಡುತ್ತಾರೆ ತಂದೆಯಿಂದ ಮಾತ್ರ ವಜ್ರದಂತಹ ಜನ್ಮ ಸಿಗುತ್ತದೆ ನಂತರ ಕವಡೆಯಂತೆ ಏಕೆ ಆಗುತ್ತೀರಿ? ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ. ಆತ್ಮಗಳು ಮತ್ತು ಪರಮಾತ್ಮ ಬಹಳಕಾಲದಿಂದ ಅಗಲಿಹೋಗಿದ್ದರು..... ಎಂದು ಗಾಯನವಿದೆ. ಶಾಂತಿಧಾಮದಲ್ಲಿರುವ ಮಿಲನದಲ್ಲಿ ಯಾವ ಲಾಭವೂ ಇಲ್ಲ, ಅದು ಕೇವಲ ಪವಿತ್ರತೆ ಹಾಗೂ ಶಾಂತಿಯ ಸ್ಥಾನವಾಗಿದೆ. ಇಲ್ಲಿ ನೀವು ಜೀವಾತ್ಮಗಳಿದ್ದೀರಿ, ಪರಮಾತ್ಮ ತಂದೆಗೆ ತಮ್ಮದೇ ಆದ ಶರೀರವಿಲ್ಲ. ಅವರು ಶರೀರ ಧಾರಣೆ ಮಾಡಿ ಮಕ್ಕಳಿಗೆ ಓದಿಸುತ್ತಾರೆ. ನೀವು ತಂದೆಯನ್ನು ತಿಳಿದುಕೊಂಡಿದ್ದೀರಿ ಮತ್ತು ನೀವು ತಂದೆಯೆಂದು ಹೇಳುತ್ತೀರಿ, ತಂದೆಯು ಓ ಮಕ್ಕಳೇ ಎಂದು ಹೇಳುತ್ತಾರೆ. ಲೌಕಿಕ ತಂದೆಯೂ ಸಹ ಹೇಳುತ್ತಾರಲ್ಲವೆ- ಹೇ ಮಕ್ಕಳೇ ಬನ್ನಿ, ನಿಮಗೆ ತಿಂಡಿ ತಿನ್ನುಸುತ್ತೇನೆಂದರೆ ತಕ್ಷಣ ಎಲ್ಲರೂ ಓಡಿಬರುತ್ತಾರೆ. ಈ ತಂದೆಯೂ ಹೇಳುತ್ತಾರೆ- ಮಕ್ಕಳೇ ಬನ್ನಿ ನಿಮಗೆ ವೈಕುಂಠದ ಮಾಲೀಕರನ್ನಾಗಿ ಮಾಡುತ್ತೇನೆ ಆಗ ಎಲ್ಲರೂ ಅಗತ್ಯವಾಗಿ ಓಡಿಬರುತ್ತಾರೆ. ಪತಿತರನ್ನು ಪಾವನ ಮಾಡಿ, ಪಾವನ ಪ್ರಪಂಚ ವಿಶ್ವದ ಮಾಲೀಕರನ್ನಾಗಿ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಈಗ ನಿಶ್ಚಯವಿದೆ ಅಂದಾಗ ಒಪ್ಪಿಕೊಳ್ಳಬೇಕು. ಕರೆದವರು ಮಕ್ಕಳಲ್ಲವೆ! ನಾವು ಮಕ್ಕಳಿಗಾಗಿಯೇ ಬರುತ್ತೇನೆ. ನೀವೇ ನನ್ನನ್ನು ಕರೆದಿದ್ದೀರಿ ಎಂದು ಮಕ್ಕಳಿಗೆ ತಿಳಿಸುತ್ತಾರೆ. ನಾನು ಬಂದಿದ್ದೇನೆ, ಪತಿತ-ಪಾವನ ಎಂದು ತಂದೆಗೇ ಹೇಳಲಾಗುತ್ತದೆ. ಗಂಗೆ ಮುಂತಾದವುಗಳಿಂದ ನೀವು ಪಾವನರಾಗುವುದಿಲ್ಲ. ನೀವು ಅರ್ಧಕಲ್ಪ ತಪ್ಪಾಗಿ ನಡೆದಿದ್ದೀರಿ. ಭಗವಂತನನ್ನು ಹುಡುಕುತ್ತೀರಿ ಆದರೆ ಯಾರ ಅರಿವಿಗೂ ಬರುವುದಿಲ್ಲ. ತಂದೆಯು ತಿಳಿಸುತ್ತಾರೆ- ಹೇ ಮಕ್ಕಳೇ ಎಂದರೆ ಮಕ್ಕಳೂ ಸಹ ಬಹಳ ಉಲ್ಲಾಸದಿಂದ ಹೇ ತಂದೆಯೇ ಎಂದು ಹೇಳಬೇಕು ಆದರೆ ಅಷ್ಟು ಉಲ್ಲಾಸದಿಂದ ಮಕ್ಕಳು ಹೇಳುವುದಿಲ್ಲ. ಇದನ್ನು ದೇಹಾಭಿಮಾನ ಎಂದು ಹೇಳಲಾಗುವುದು. ಇದಕ್ಕೆ ದೇಹೀ-ಅಭಿಮಾನಿಯೆಂದು ಕರೆಯುವುದಿಲ್ಲ. ಈಗ ನೀವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ನೀವು ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ಬೇಹದ್ದಿನ ರಾಜ್ಯಭಾಗ್ಯವೂ ಅಗತ್ಯವಾಗಿ ನೆನಪಿಗೆ ಬರುತ್ತದೆ. ಇಂತಹ ತಂದೆಗೆ ಎಷ್ಟೊಂದು ಪ್ರೀತಿಯಿಂದ ಉತ್ತರವನ್ನು ಕೊಡಬೇಕು. ತಂದೆಯು ನಿಮ್ಮ ಕೂಗನ್ನು ಕೇಳಿ ಬಂದಿದ್ದಾರೆ. ತಂದೆಯ ಆಗಮನವೂ ನಾಟಕದನುಸಾರ ಒಂದು ಸೆಕೆಂಡ್, ಒಂದು ಘಳಿಗೆಯೂ ಹೆಚ್ಚು-ಕಡಿಮೆಯಾಗುವುದಿಲ್ಲ. ಎಲ್ಲರೂ ಓ ಫಾದರ್, ದಯೆ ತೋರಿ, ಮುಕ್ತ ಮಾಡಿ, ನಾವೆಲ್ಲರೂ ರಾವಣನ ಸಂಕೋಲೆಯಲ್ಲಿದ್ದೇವೆ. ನೀವು ನಮ್ಮ ಮಾರ್ಗದರ್ಶಕರಾಗಿ ತಂದೆ ಗೈಡ್ ಸಹ ಆಗುತ್ತಾರೆ ಎಲ್ಲರೂ ಅವರನ್ನು ಕರೆಯುತ್ತಾರೆ. ಓ ಲಿಬರೇಟರ್, ಓ ಗೈಡ್ ಬಂದು ನಮ್ಮ ಮಾರ್ಗದರ್ಶಕರಾಗಿ ನಮ್ಮನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಈಗ ನೀವು ಸಂಗಮಯುಗದಲ್ಲಿ ನಿಂತಿದ್ದೀರಿ, ತಂದೆಯು ಸತ್ಯಯುಗದ ಸ್ಥಾಪನೆಯನ್ನು ಮಾಡುತ್ತಿದ್ದಾರೆ, ಇದು ಕಲಿಯುಗವಾಗಿದೆ, ಕೋಟ್ಯಾಂತರ ಮನುಷ್ಯರಿದ್ದಾರೆ, ಸತ್ಯಯುಗದಲ್ಲಿ ಕೇವಲ ದೇವಿ-ದೇವತೆಗಳು ಮಾತ್ರ ಇರುತ್ತಾರೆ. ಹಾಗಾದರೆ ಅವಶ್ಯವಾಗಿ ವಿನಾಶವಾಗಿರಬೇಕು! ವಿನಾಶವೂ ನಮ್ಮ ಮುಂದೆ ನಿಂತಿದೆ. ಅದಕ್ಕಾಗಿಯೇ ಗಾಯನವಿದೆ- ವಿಜ್ಞಾನದ ಬಲದಿಂದ ಎಷ್ಟು ಬುದ್ಧಿಯನ್ನು ಉಪಯೋಗಿಸುತ್ತಿರುತ್ತಾರೆ. ಅದು ಯಾದವ ಸಂಪ್ರದಾಯವಾಗಿದೆ. ಮತ್ತೆ ಚರಿತ್ರೆಯು ಪುನರಾವರ್ತನೆಯಾಗಬೇಕಾಗಿದೆ. ಈಗ ಸತ್ಯಯುಗದ ಚರಿತ್ರೆ ಪುನರಾವರ್ತನೆಯಾಗುತ್ತದೆ. |
ನೀವು ತಿಳಿದುಕೊಂಡಿದ್ದೀರಿ- ನಾವು ಹೊಸ ಪ್ರಪಂಚದಲ್ಲಿ ಶ್ರೇಷ್ಠಪದವಿಗಾಗಿ ಪುರುಷಾರ್ಥ ಮಾಡುತ್ತಿದ್ದೇವೆ ಆದ್ದರಿಂದ ಅಗತ್ಯವಾಗಿ ಪವಿತ್ರರಾಗಬೆಕು. ಈ ಪತಿತಪ್ರಪಂಚದ ವಿನಾಶವೂ ಸಹ ಆಗಲೇಬೇಕೆಂದು ನೀವು ತಿಳಿದಿದ್ದೀರಿ. ನಿಮ್ಮ ಮಕ್ಕಳು-ಮರಿಗಳು ಯಾರೂ ಉಳಿಯುವುದಿಲ್ಲ. ಯಾರೂ ಸಹ ನಿಮ್ಮ ಆಸ್ತಿಗೆ ವಾರಸುದಾರರಾಗುವುದಿಲ್ಲ, ಮದುವೆ-ಮುಂಜಿಯನ್ನು ಮಾಡಿಕೊಳ್ಳುವುದಿಲ್ಲ. ಬಹಳಷ್ಟು ಕಳೆದು ಹೋಗಿದೆ ಸ್ವಲ್ಪವೇ ಉಳಿದಿದೆ. ಆ ಸ್ವಲ್ಪ ಸಮಯಕ್ಕೂ ಲೆಕ್ಕವಿದೆ. ಮೊದಲು ಈ ರೀತಿ ಹೇಳುತ್ತಿರಲಿಲ್ಲ, ಈಗ ಬಹಳ ಕಡಿಮೆ ಸಮಯವಿದೆ. ಮೊದಲು ಶರೀರ ಬಿಟ್ಟು ಹೋದವರೆಲ್ಲಾ ನಂಬರ್ವಾರ್ ಪುರುಷಾರ್ಥನುಸಾರ ಜನ್ಮ ಪಡೆದಿದ್ದಾರೆ. ಕೆಲವರಂತೂ ಇಲ್ಲಿಗೆ ಬಂದಿರಬೇಕು. ಹೇಗೆ ಇಲ್ಲಿಂದ ಅಗಲಿಹೋಗಿದ್ದಾರೆಂದು ತಿಳಿಯುತ್ತದೆ ಅವರಿಗೆ ಜ್ಞಾನದ ವಿನಃ ಮಜಾ ಎನಿಸುವುದಿಲ್ಲ. ನಾವಂತೂ ಅಲ್ಲಿಗೆ ಹೋಗುತ್ತೇವೆಂದು ತಂದೆ-ತಾಯಿಗೂ ಹೇಳುತ್ತಾರೆ. ಇದ್ಲೆಲವೂ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಅವಶ್ಯವಾಗಿ ವಿನಾಶವಾಗಲೇಬೇಕು. ಯುದ್ಧದ ತಯಾರಿಯನ್ನು ನೋಡುತ್ತಿದ್ದೀರಿ. ಇವರ ಯುದ್ಧದ ಸಾಮಾನುಗಳಿಗಾಗಿ ಅರ್ಧ ಖರ್ಚಾಗಿಬಿಡುತ್ತದೆ. ಹೇಗೆ ವಿಮಾನಗಳನ್ನು ತಯಾರಿಸುತ್ತಾರೆ, ಮನೆಯಲ್ಲಿ0iÉುೀ ಕುಳಿತೇ ನಾಶ ಮಾಡುತ್ತೇವೆಂದು ಹೇಳುತ್ತಾರೆ. ಅಂಥಹ ವಸ್ತುಗಳನ್ನು ಮಾಡುತ್ತಿರುತ್ತಾರೆ.ಏಕೆಂದರೆ ಆಸ್ಪತ್ರೆ ಮೊದಲಾದುವುಗಳು ಇರುವುದಿಲ್ಲ. ಡ್ರಾಮದಲ್ಲಿ ತಂದೆಯಿಂದ ಇದೆಲ್ಲದರ ಸೂಚನೆ ಸಿಗುತ್ತಿರುತ್ತದೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ರೋಗಿಗಳಾಗಿಬಿಡಬಾರದು, ಎಲ್ಲರೂ ಅವಶ್ಯವಾಗಿ ಸಾಯಲೇಬೇಕು. ರಾಮನೂ ಹೋದ, ರಾವಣನೂ ಹೋದ...... ಯಾರು ಯೋಗದಲ್ಲಿರುತ್ತಾರೆ ಅವರ ಆಯಸ್ಸು ವೃದ್ಧಿಯಾಗುತ್ತದೆ. ಖುಷಿಯಿಂದ ಶರೀರ ಬಿಡುತ್ತಾರೆ. ಹೇಗೆ ಈ ರೀತಿ ಉದಾಹರಣೆ ಕೊಡುತ್ತಾರೆ- ಬ್ರಹ್ಮ್ತತ್ವದಲ್ಲಿ ಹೋಗುವುದರಿಂದ ಖುಷಿಯಿಂದ ಶರೀರ ಬಿಡುತ್ತೇವೆ ಆದರೆ ಬ್ರಹ್ಮ್ತತ್ವದಲ್ಲಿ ಯಾರೂ ಹೋಗುವುದಿಲ್ಲ, ಪಾಪವೂ ನಾಶವಾಗುವುದಿಲ್ಲ. ಇಲ್ಲಿಯೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಪಾಪನಾಶ ಮಾಡುವ ಉಪಾಯವನ್ನು ತಂದೆಯೇ ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ ಬೇರೆ ಯಾರನ್ನೂ ನೆನಪು ಮಾಡಬೇಡಿ, ಲಕ್ಷ್ಮೀ-ನಾರಾಯಣರನ್ನೂ ನೆನಪು ಮಾಡಬೇಡಿ. ನಿಮಗೆ ತಿಳಿದಿದೆ- ಈ ಪುರುಷಾರ್ಥದಿಂದ ನಾವು ಇಂತಹ ಪದವಿಯನ್ನು ಪಡೆಯುತ್ತೇವೆ. ಸ್ವರ್ಗದ ಸ್ಥಾಪನೆಯಾಗುತ್ತಿದೆ, ನಂಬರ್ವಾರ್ ಪುರುಷಾರ್ಥದನುಸಾರ ಪದವಿಯನ್ನು ಪಡೆಯಲು ಓದುತ್ತಿದ್ದೇವೆ. ಅವರ ರಾಜಧಾನಿಯನ್ನು ತಂದೆಯು ಸಂಗಮಯುಗದಲ್ಲಿ ಸ್ಥಾಪನೆ ಮಾಡುತ್ತಿದ್ದಾರೆ. ಬುದ್ಧಿಗೆ ನಾಟುವಂತೆ ಭಾಷಣ ಮಾಡಬೇಕು. ನಾವು ಈ ಸಮಯದಲ್ಲಿ ಈಶ್ವರೀಯ ಸಂಪ್ರದಾಯ ಹಾಗೂ ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಸಹೋದರ-ಸಹೋದರಿಯಾಗಿದ್ದೇವೆ. ನಾವಾತ್ಮಗಳೆಲ್ಲರೂ ಸಹೋದರ-ಸಹೋದರಿಯರಾಗಿದ್ದೇವೆ. ಬ್ರಹ್ಮಾಕುಮಾರ-ಕುಮಾರಿಯರ ವಿವಾಹವಾಗುವುದಿಲ್ಲ. ತಂದೆಯು ಇದನ್ನೂ ತಿಳಿಸುತ್ತಾರೆ- ಹೇಗೆ ಕೆಳಗೆ ಬೀಳುತ್ತಾರೆ? ಕಾಮಾಗ್ನಿ ಸುಡುತ್ತದೆ. ಆದರೂ ಒಮ್ಮೆ ಕೆಳಗೆ ಬಿದ್ದರೆ ಸಂಪಾದನೆ ನಷ್ಟವಾಗುತ್ತದೆಯೆಂದು ಭಯವಿರುತ್ತದೆ. ಕಾಮವಿಕಾರಕ್ಕೆ ಸೋತರೆ ಪದವಿಭ್ರಷ್ಟವಾಗಿಬಿಡುತ್ತದೆ. ಇದು ಎಷ್ಟೊಂದು ದೊಡ್ಡ ಸಂಪಾದನೆಯಾಗಿದೆ! ಮನುಷ್ಯರಂತೂ ಪದಮ-ಕೋಟಿಗಳಷ್ಟು ಸಂಪಾದನೆ ಮಾಡುತ್ತಾರೆ. ಅವರಿಗೆ ಇದೆಲ್ಲವೂ ಸ್ವಲ್ಪ ಸಮಯದಲ್ಲಿಯೇ ನಾಶವಾಗುತ್ತದೆ ಎಂದು ತಿಳಿದಿದೆಯೇನು? ಬಾಂಬುಗಳನ್ನು ತಯಾರಿಸುವವರು ಈ ಪ್ರಪಂಚವು ವಿನಾಶವಾಗಿಬಿಡುತ್ತದೆ, ನಮಗೆ ಯಾರೋ ಪ್ರೇರಣೆ ಕೊಡುತ್ತಿದ್ದಾರೆ, ನಾವು ಮಾಡುತ್ತಿರುತ್ತೇವೆ ಎಂದು ತಿಳಿದುಕೊಂಡಿದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನವನ್ನು ಆಂತರ್ಯದಲ್ಲಿ ಅಭ್ಯಾಸ ಮಾಡಿ ಅರ್ಥಾತ್ ವಿಚಾರಸಾಗರ ಮಂಥನ ಮಾಡಬೇಕು. ಪರಸ್ಪರ ಜ್ಞಾನದ ವಾರ್ತಾಲಾಪ ಮಾಡಿ ಅನ್ಯರಿಗೆ ತಿಳಿಸಬೇಕು. ಸುಸ್ತು ಅಥವಾ ಆಲಸ್ಯವನ್ನು ಬಿಡಬೇಕು. |
2. ದೇಹೀ-ಅಭಿಮಾನಿಯಾಗಿ ಬಹಳ ಉಲ್ಲಾಸದಿಂದ ತಂದೆಯನ್ನು ನೆನಪು ಮಾಡಬೇಕು. ಸದಾ ನಶೆ ಇರಬೇಕು ನಾವು ಕವಡೆಯಿಂದ ವಜ್ರವಾಗಲು ತಂದೆಯ ಬಳಿಗೆ ಬಂದಿದ್ದೇವೆ, ನಾವು ಈಶ್ವರನ ಸಂತಾನರಾಗಿದ್ದೇವೆ |
“ಬೇಹದ್ದಿನ ವೈರಾಗಿಯೇ ಸತ್ಯವಾದ ರಾಜಋಷಿ” |
ಇಂದು ಬಾಪ್ದಾದಾ ಸರ್ವ ರಾಜಋಷಿಗಳ ದರ್ಬಾರನ್ನು ನೋಡುತ್ತಿದ್ದಾರೆ. ಇಡೀ ಕಲ್ಪದಲ್ಲಿ ರಾಜರುಗಳ ದರ್ಬಾರು ಅನೇಕ ಬಾರಿ ಆಗುತ್ತದೆ. ಆದರೆ ಈ ರಾಜಋಷಿಗಳ ದರ್ಬಾರು ಸಂಗಮಯುಗದಲ್ಲಿಯೇ ಆಗುತ್ತದೆ. ರಾಜರೂ ಆಗಿದ್ದೀರಿ ಮತ್ತು ಋಷಿಗಳೂ ಆಗಿದ್ದೀರಿ. ಈ ವಿಶೇಷತೆಯು ಈ ಸಮಯದ ಈ ದರ್ಬಾರಿನ ಗಾಯನ ಮಾಡಲ್ಪಟ್ಟಿದೆ. ಒಂದು ಕಡೆ ದರ್ಬಾರು ಅರ್ಥಾತ್ ಸರ್ವ ಪ್ರಾಪ್ತಿಗಳ ಅಧಿಕಾರಿ ಮತ್ತು ಇನ್ನೊಂದು ಕಡೆ ಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿಯವರು. ಒಂದು ಕಡೆ ಸರ್ವ ಪ್ರಾಪ್ತಿಗಳ ಅಧಿಕಾರಿ ಮತ್ತು ಇನ್ನೊಂದು ಕಡೆ ಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿಯವರು. ಒಂದು ಕಡೆ ಸರ್ವ ಪ್ರಾಪ್ತಿಗಳ ಅಧಿಕಾರದ ನಶೆ ಮತ್ತು ಇನ್ನೊಂದು ಕಡೆ ಬೇಹದ್ದಿನ ವೈರಾಗ್ಯದ ಅಲೌಕಿಕ ನಶೆಯಾಗಿದೆ. ಎಷ್ಟು ಶ್ರೇಷ್ಠ ಭಾಗ್ಯವೋ ಅಷ್ಟು ಶ್ರೇಷ್ಠ ತ್ಯಾಗ, ಎರಡರ ಸಮತೋಲನೆಯಾಗಿದೆ. ಇದಕ್ಕೆ ರಾಜಋಷಿ ಎಂದು ಹೇಳಲಾಗುತ್ತದೆ. ಇಂತಹ ರಾಜಋಷಿ ಮಕ್ಕಳ ಸಮತೋಲನೆಯನ್ನು ನೋಡುತ್ತಿದ್ದೇವೆ. ಈಗೀಗ ಅಧಿಕಾರಿತನದ ನಶೆ ಮತ್ತು ಈಗೀಗ ವೈರಾಗ್ಯ ವೃತ್ತಿಯ ನಶೆ - ಈ ಅನುಭವದಲ್ಲಿ ಎಲ್ಲಿಯವರೆಗೆ ಸ್ಥಿತರಾಗಲು ಸಾಧ್ಯವಿದೆ ಅರ್ಥಾತ್ ಎರಡೂ ಸ್ಥಿತಿಯ ಸಮಾನತೆಯ ಅಭ್ಯಾಸವನ್ನು ಎಲ್ಲಿಯವರೆಗೆ ಮಾಡುತ್ತಿದ್ದೀರಿ? ಇದನ್ನು ಪರಿಶೀಲನೆ ಮಾಡುತ್ತಿದ್ದೇವೆ. ಎಲ್ಲಾ ಮಕ್ಕಳು ನಂಬರ್ವಾರ್ ಅಭ್ಯಾಸಿಗಳಂತೂ ಹೌದು ಆದರೆ ಸಮಯ ಪ್ರಮಾಣ ಇವೆರಡರ ಅಭ್ಯಾಸವನ್ನು ಇನ್ನೂ ಹೆಚ್ಚಿನದಾಗಿ ವೃದ್ದಿ ಮಾಡಿಕೊಳ್ಳುತ್ತಾ ನಡೆಯಿರಿ. ಬೇಹದ್ದಿನ ವೈರಾಗ್ಯ ವೃತ್ತಿಯ ಅರ್ಥವೇ ಆಗಿದೆ - ವೈರಾಗ್ಯ ಅರ್ಥಾತ್ ದೂರ ಮಾಡುವುದಲ್ಲ, ಆದರೆ ಸರ್ವ ಪ್ರಾಪ್ತಿಗಳಿದ್ದರೂ ಹದ್ದಿನ ಆಕರ್ಷಣೆ ಮನಸ್ಸನ್ನು ಮತ್ತು ಬುದ್ಧಿಯನ್ನು ಆಕರ್ಷಣೆಯಲ್ಲಿ ತರಬಾರದು. ಬೇಹದ್ದ್ ಅರ್ಥಾತ್ ಬೇಹದ್ದ್, ನಾನು ಸಂಪೂರ್ಣ ಸಂಪನ್ನ ಆತ್ಮ ತಂದೆಯ ಸಮಾನ ಸದಾ ಸರ್ವ ಕರ್ಮೇಂದ್ರಿಯಗಳ ರಾಜ್ಯಾಧಿಕಾರಿ. ಈ ಸೂಕ್ಷ್ಮ ಶಕ್ತಿಗಳ ಮನಸ್ಸು-ಬುದ್ಧಿ-ಸಂಸ್ಕಾರಕ್ಕೂ ಅಧಿಕಾರಿ. ಸಂಕಲ್ಪ ಮಾತ್ರದಲ್ಲಿಯೂ ಅಧೀನತೆ ಇರಬಾರದು. ಇದಕ್ಕೆ ರಾಜಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿ ಎಂದು ಹೇಳಲಾಗುತ್ತದೆ. ಈ ಹಳೆಯ ದೇಹ ಮತ್ತು ದೇಹದ ಹಳೆಯ ಪ್ರಪಂಚ, ಅಥವಾ ವ್ಯಕ್ತ ಭಾವ, ವೈಭವದ ಭಾವ - ಇವೆಲ್ಲಾ ಆಕರ್ಷಣೆಗಳಿಂದ ಸದಾ ಮತ್ತು ಸಹಜವಾಗಿ ದೂರವಿರುವಂತಹವರು. |
ಹೇಗೆ ವೈಜ್ಞಾನಿಕ ಶಕ್ತಿಯು ಧರಣಿಯ ಆಕರ್ಷಣೆಯಿಂದ ದೂರ ಮಾಡುತ್ತದೆ, ಹಾಗೆಯೇ ಶಾಂತಿಯ ಶಕ್ತಿಯು ಇವೆಲ್ಲಾ ಹದ್ದಿನ ಆಕರ್ಷಣೆಗಳಿಂದ ದೂರ ಕರೆದುಕೊಂಡು ಹೋಗುತ್ತದೆ. ಇದಕ್ಕೆ ಸಂಪೂರ್ಣ ಸಂಪನ್ನ ತಂದೆಯ ಸಮಾನ ಸ್ಥಿತಿಯೆಂದು ಹೇಳುತ್ತಾರೆ ಅಂದಾಗ ಈ ಸ್ಥಿತಿಯ ಅಭ್ಯಾಸಿ ಆಗಿದ್ದೀರಾ? ಸ್ಥೂಲ ಕರ್ಮೇಂದ್ರಿಯಗಳದಾದರೂ ಬಹಳ ಕಾಣುವ (ಸ್ಥೂಲ) ಮಾತಾಗಿದೆ, ಕರ್ಮೇಂದ್ರಿಯಾಜೀತರು ಆಗುವುದಾದರೂ ಸಹಜ ಮಾತಾಗಿದೆ. ಆದರೆ ಮನ-ಬುದ್ಧಿ-ಸಂಸ್ಕಾರ - ಈ ಸೂಕ್ಷ್ಮ ಶಕ್ತಿಗಳ ಮೇಲೆ ವಿಜಯಿಗಳಾಗುವುದು ಬಹಳ ಸೂಕ್ಷ್ಮ ಅಭ್ಯಾಸವಾಗಿದೆ. ಯಾವ ಸಮಯದಲ್ಲಿ ಯಾವ ಸಂಕಲ್ಪ, ಸಂಸ್ಕಾರವನ್ನು ಇಮರ್ಜ್ ಮಾಡಿಕೊಳ್ಳಬೇಕೋ ಅದೇ ಸಂಕಲ್ಪ, ಅದೇ ಸಂಸ್ಕಾರವನ್ನು ಸಹಜವಾಗಿ ಅಳವಡಿಸಿಕೊಳ್ಳಬೇಕು. ಇದಕ್ಕೆ ಸೂಕ್ಷ್ಮ ಶಕ್ತಿಗಳ ಮೇಲೆ ವಿಜಯ ಅರ್ಥಾತ್ ರಾಜಋಷಿಯೆಂದು ಹೇಳುತ್ತಾರೆ. ಹೇಗೆ ಸ್ಥೂಲ ಕರ್ಮೇಂದ್ರಿಯಗಳಿಗೆ ಇದನ್ನು ಮಾಡು, ಇದನ್ನು ಬೇಡವೆಂದು ಆಜ್ಞೆ ಮಾಡುತ್ತೀರಲ್ಲವೆ. ಒಂದುವೇಳೆ ಕೈಗಳಿಗೆ ಆಜ್ಞೆ ಮಾಡಿದರೆ ಮೇಲೆತ್ತಬೇಕೆಂದರೆ ಅಥವಾ ಕೆಳಗೆ ಇಳಿಸಬೇಕೆಂದರೆ ಅದೇ ರೀತಿ ಮಾಡುತ್ತವೆಯಲ್ಲವೆ. ಹಾಗೆಯೇ ಸಂಕಲ್ಪ ಮತ್ತು ಸಂಸ್ಕಾರ ಹಾಗೂ ನಿರ್ಣಯ ಶಕ್ತಿ ಅರ್ಥಾತ್ 'ಬುದ್ಧಿ' ಯು ಅದೇ ರೀತಿ ಆಜ್ಞೆಯ ಪ್ರಮಾಣ ನಡೆಯಲಿ. ಆತ್ಮ ಅರ್ಥಾತ್ ರಾಜನು ಮನಸ್ಸು ಅರ್ಥಾತ್ ಸಂಕಲ್ಪ ಶಕ್ತಿಗೆ ಈಗೀಗ ಏಕಾಗ್ರ ಚಿತ್ತ ಹಾಗೂ ಒಂದು ಸಂಕಲ್ಪದಲ್ಲಿ ಸ್ಥಿತವಾಗಿ ಬಿಡು ಎಂದು ಆಜ್ಞೆ ಮಾಡಿದರೆ ಕೂಡಲೆ ರಾಜನ ಆಜ್ಞೆಯನ್ನು ಅದೇ ಘಳಿಗೆ, ಅದೇ ಪ್ರಕಾರದಿಂದ ಪಾಲಿಸುವುದು ರಾಜ್ಯಾಧಿಕಾರಿಯ ಲಕ್ಷಣವಾಗಿದೆ. 3-4 ನಿಮಿಷಗಳ ಅಭ್ಯಾಸದ ನಂತರ ಮನಸ್ಸು ಆಜ್ಞೆಯನ್ನು ಪಾಲಿಸುವುದು ಅಥವಾ ಒಮ್ಮೆಲೆ ಏಕಾಗ್ರತೆಯ ಬದಲು ಸ್ವಲ್ಪ ಏರಿಳಿತವಾದ ಮೇಲೆ ಏಕಾಗ್ರವಾಗುವುದು, ಇದಕ್ಕೆ ಏನು ಹೇಳುವರು? ಅಧಿಕಾರಿ ಎಂದು ಹೇಳುವರೇ? ಆದ್ದರಿಂದ ಇಂತಹ ಪರಿಶೀಲನೆ ಮಾಡಿಕೊಳ್ಳಿ ಏಕೆಂದರೆ ಮೊದಲೇ ತಿಳಿಸಿದ್ದೇವೆ - ಅಂತಿಮ ಸಮಯದ ಅಂತಿಮ ಫಲಿತಾಂಶದ ಸಮಯವು ಒಂದು ಸೆಕೆಂಡಿನ ಒಂದೇ ಪ್ರಶ್ನೆಯಾಗಿರುವುದು. ಈ ಸೂಕ್ಷ್ಮ ಶಕ್ತಿಗಳ ಅಧಿಕಾರಿಗಳಾಗುವ ಅಭ್ಯಾಸವು ಒಂದುವೇಳೆ ಇಲ್ಲವೆಂದರೆ ಅರ್ಥಾತ್ ತಮ್ಮ ಮನಸ್ಸು, ತಾವು ರಾಜನ ಆಜ್ಞೆಯನ್ನು ಒಂದು ಕ್ಷಣದ ಬದಲು ಮೂರು ಕ್ಷಣಗಳು ಆದಮೇಲೆ ಪಾಲಿಸುತ್ತದೆ ಎಂದರೆ ರಾಜ್ಯಾಧಿಕಾರಿಗಳೆಂದು ಕರೆಸಿಕೊಳ್ಳುತ್ತೀರಾ? ಹಾಗೂ ಒಂದು ಸೆಕೆಂಡಿನ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತೀರಾ? ಎಷ್ಟು ಅಂಕಗಳು ಸಿಗಬಹುದು? |
ಹಾಗೆಯೇ ಬುದ್ದಿ ಅರ್ಥಾತ್ ನಿರ್ಣಯ ಶಕ್ತಿಯ ಮೇಲೂ ಸಹ ಅಧಿಕಾರವಿರಲಿ ಅಂದರೆ ಯಾವ ಸಮಯದಲ್ಲಿ ಯಾವ ಪರಿಸ್ಥಿತಿಯಿದೆಯೋ ಅದೇ ಪ್ರಮಾಣ, ಅದೇ ಘಳಿಗೆಯಲ್ಲಿ ನಿರ್ಣಯ ಮಾಡುವುದಕ್ಕೇ ಬುದ್ಧಿಯ ಮೇಲೆ ಅಧಿಕಾರವೆಂದು ಹೇಳುತ್ತಾರೆ. ಪರಿಸ್ಥಿತಿ ಅಥವಾ ಸಮಯವು ಕಳೆದು ಹೋದ ಮೇಲೆ ಇದಾಗಬಾರದಿತ್ತು ಅಥವಾ ಈ ರೀತಿ ನಿರ್ಣಯ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎಂದು ಹೇಳುವುದಲ್ಲ. ಸಮಯದಲ್ಲಿ ಮತ್ತು ಯಥಾರ್ಥ ನಿರ್ಣಯ ತೆಗೆದುಕೊಳ್ಳುವುದು ರಾಜ್ಯಾಧಿಕಾರಿ ಆತ್ಮನ ಚಿಹ್ನೆಯಾಗಿದೆ ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಇಡೀ ದಿನದಲ್ಲಿ ರಾಜ್ಯಾಧಿಕಾರಿ ಅರ್ಥಾತ್ ಈ ಸೂಕ್ಷ್ಮ ಶಕ್ತಿಗಳನ್ನೂ ಸಹ ಎಲ್ಲಿಯವರೆಗೆ ಆಜ್ಞೆಯ ಪ್ರಮಾಣ ನಡೆಸಿದೆನು? ನಿತ್ಯವೂ ತಮ್ಮ ಕರ್ಮಚಾರಿಗಳ ದರ್ಬಾರನ್ನು ನಡೆಸಿ ಪರಿಶೀಲನೆ ಮಾಡಿಕೊಳ್ಳಿ - ಸ್ಥೂಲ ಕರ್ಮೇಂದ್ರಿಯಗಳು ಹಾಗೂ ಸೂಕ್ಷ್ಮ ಶಕ್ತಿಗಳು - ಈ ಕರ್ಮಚಾರಿಗಳು ನಿಯಂತ್ರಣದಲ್ಲಿ ಇದ್ದರೆ ಅಥವಾ ಇಲ್ಲವೆ? ಈಗಿನಿಂದ ರಾಜ್ಯಾಧಿಕಾರಿಗಳಾಗುವ ಸಂಸ್ಕಾರವು ಅನೇಕ ಜನ್ಮಗಳವರೆಗೆ ರಾಜ್ಯಾಧಿಕಾರಿಗಳನ್ನಾಗಿ ಮಾಡುತ್ತದೆ. ತಿಳಿಯಿತೆ? ಅದೇ ಪ್ರಕಾರ ಸಂಸ್ಕಾರವು ಎಲ್ಲಿಯೂ ಮೋಸಗೊಳಿಸುತ್ತಿಲ್ಲವೆ? ಆದಿ, ಅನಾದಿ ಸಂಸ್ಕಾರವು ಅನಾದಿ ಶುದ್ಧ ಶ್ರೇಷ್ಠ ಪಾವನ ಸಂಸ್ಕಾರವಾಗಿದೆ, ಸರ್ವ ಗುಣ ಸ್ವರೂಪ ಸಂಸ್ಕಾರವಾಗಿದೆ ಮತ್ತು ಆದಿದೇವ ಆತ್ಮನ ರಾಜ್ಯಾಧಿಕಾರಿತನದ ಸಂಸ್ಕಾರವು ಸರ್ವ ಪ್ರಾಪ್ತಿ ಸ್ವರೂಪದ ಸಂಸ್ಕಾರವಾಗಿದೆ. ಸಂಪನ್ನ ಸಂಪೂರ್ಣತೆಯ ಸ್ವಾಭಾವಿಕ ಸಂಸ್ಕಾರವಾಗಿದೆ ಅಂದಾಗ ಸಂಸ್ಕಾರ ಶಕ್ತಿಯ ಮೇಲೆ ರಾಜ್ಯಾಧಿಕಾರಿಗಳು ಅರ್ಥಾತ್ ಸದಾ ಅನಾದಿ, ಆದಿ ಸಂಸ್ಕಾರವು ಸ್ಮೃತಿಯಲ್ಲಿ ಬರಲಿ, ಸ್ವಾಭಾವಿಕ ಸಂಸ್ಕಾರವಾಗಲಿ. ಮಧ್ಯ ಅರ್ಥಾತ್ ದ್ವಾಪರದಿಂದ ಪ್ರವೇಶವಾಗುವ ಸಂಸ್ಕಾರವು ತನ್ನ ಕಡೆ ಆಕರ್ಷಣೆ ಮಾಡದಿರಲಿ. ಸಂಸ್ಕಾರಗಳ ವಶರಾಗಿ ನಿರ್ಬಲರಾಗಬೇಡಿ. ಹೇಗೆ ಇದು ನನ್ನ ಹಳೆಯ ಸಂಸ್ಕಾರವೆಂದು ಹೇಳುತ್ತೀರಲ್ಲವೆ. ವಾಸ್ತವದಲ್ಲಿ ಅನಾದಿ ಹಾಗೂ ಆದಿ ಸಂಸ್ಕಾರವೇ ಹಳೆಯ ಸಂಸ್ಕಾರವಾಗಿದೆ. ಅವಗುಣಗಳ ಸಂಸ್ಕಾರವು ಮಧ್ಯ ಅಥವಾ ದ್ವಾಪರದಿಂದ ಬಂದ ಸಂಸ್ಕಾರವಾಗಿದೆ ಅಂದಮೇಲೆ ಹಳೆಯ ಸಂಸ್ಕಾರವು ಆದಿಯದಾಯಿತೋ ಅಥವಾ ಮಧ್ಯ ಕಾಲದ್ದಾಯಿತೋ? ಯಾವುದೇ ಹದ್ದಿನ ಆಕರ್ಷಣೆಯ ಸಂಸ್ಕಾರವು ಒಂದುವೇಳೆ ಆಕರ್ಷಣೆ ಮಾಡುತ್ತಿದೆಯೆಂದರೆ ಸಂಸ್ಕಾರಗಳ ಮೇಲೆ ರಾಜ್ಯಾಧಿಕಾರಿಗಳೆಂದು ಹೇಳುತ್ತಾರೆಯೇ? ರಾಜ್ಯದೊಳಗೆ ಒಂದು ಶಕ್ತಿ ಅಥವಾ ಒಂದು ಕರ್ಮಾಚಾರಿ 'ಕರ್ಮೇಂದಿಯ' ವೂ ಸಹ ಒಂದುವೇಳೆ ಆಜ್ಞೆಯ ಪ್ರಮಾಣ ನಡೆಯುತ್ತಿಲ್ಲವೆಂದರೆ ಅವರಿಗೆ ಸಂಪೂರ್ಣ ರಾಜ್ಯಾಧಿಕಾರಿಯೆಂದು ಹೇಳಲಾಗುತ್ತದೆಯೆ? ತಾವೆಲ್ಲಾ ಮಕ್ಕಳು ನಾವು ಒಂದು ರಾಜ್ಯ, ಒಂದು ಧರ್ಮ, ಒಂದು ಮತವನ್ನು ಸ್ಥಾಪನೆ ಮಾಡುವವರಾಗಿದ್ದೇವೆಂದು ಚಾಲೆಂಜ್ ಮಾಡುತ್ತಾರೆ. ಈ ಚಾಲೆಂಜ್ ನ್ನು ಎಲ್ಲಾ ಬ್ರಹ್ಮಾಕುಮಾರ - ಕುಮಾರಿಯರೆಲ್ಲರೂ ಮಾಡುತ್ತೀರಲ್ಲವೆ ಅಂದಾಗ ಅದು ಯಾವಾಗ ಸ್ಥಾಪನೆಯಾಗುವುದು? ಭವಿಷ್ಯದಲ್ಲಿ ಸ್ಥಾಪನೆಯಾಗುವುದೇ? ಸ್ಥಾಪನೆಗೆ ನಿಮಿತ್ತರು ಯಾರು? ಬಹ್ಮನೋ ಅಥವಾ ವಿಷ್ಣುವೋ? ಬ್ರಹ್ಮಾರವರ ಮೂಲಕವೇ ಸ್ಥಾಪನೆಯಾಗುತ್ತದೆಯಲ್ಲವೆ. ಎಲ್ಲಿ ಬ್ರಹ್ಮನಿದ್ದಾರೆಯೋ ಅಲ್ಲಿ ಬ್ರಾಹ್ಮಣರೂ ಸಹ ಜೊತೆಯಿದ್ದೀರಿ. ಬ್ರಹ್ಮಾರವರ ಮೂಲಕ ಅರ್ಥಾತ್ ಬ್ರಾಹ್ಮಣರ ಮೂಲಕ ಸ್ಥಾಪನೆಯು ಯಾವಾಗ ಆಗುವುದು? ಸಂಗಮಯುಗದಲ್ಲಿಯೋ ಅಥವಾ ಸತ್ಯಯುಗದಲ್ಲಿಯೋ? ಸತ್ಯಯುಗದಲ್ಲಂತೂ ಪಾಲನೆಯ ಕಾರ್ಯವು ನಡೆಯುವುದು. ಬ್ರಹ್ಮಾ ಹಾಗೂ ಬ್ರಾಹ್ಮಣರ ಮೂಲಕ ಸ್ಥಾಪನೆಯು ಈಗಲೇ ಆಗಬೇಕು ಅಂದಮೇಲೆ ಮೊದಲು ಸ್ವಯಂನ (ತನ್ನಲ್ಲಿ) ರಾಜ್ಯದಲ್ಲಿ ನೋಡಿಕೊಳ್ಳಿ - ಒಂದು ರಾಜ್ಯ, ಒಂದು ಧರ್ಮ(ಧಾರಣೆ), ಒಂದು (ಏಕ) ಮತವಿದೆಯೇ? ಒಂದುವೇಳೆ ಒಂದು ಕರ್ಮೇಂದ್ರಿಯವೂ ಸಹ ಮಾಯೆಯ ಅನ್ಯ ಮತದಂತೆ ನಡೆಯುತ್ತಿದ್ದರೆ ಅಲ್ಲಿ ಒಂದು ರಾಜ್ಯ, ಒಂದು ಮತವೆಂದು ಹೇಳುವುದಿಲ್ಲ. ಆದ್ದರಿಂದ ಮೊದಲು ಇದನ್ನು ನೋಡಿಕೊಳ್ಳಿ – ಒಂದು ರಾಜ್ಯ, ಒಂದು ಧರ್ಮವನ್ನು ಸ್ವಯಂನ ರಾಜ್ಯದಲ್ಲಿ ಸ್ಥಾಪನೆ ಮಾಡಿಕೊಂಡಿದ್ದೀರೋ ಅಥವಾ ಕೆಲವೊಮ್ಮೆ ಮಾಯೆಯು ಸಿಂಹಾಸನದ ಮೇಲೆ ಕುಳಿತು ಬಿಡುತ್ತದೆ, ಕೆಲವೊಮ್ಮೆ ತಾವು ಕುಳಿತು ಬಿಡುತ್ತೀರೋ? ಚಾಲೆಂಜನ್ನು ಕಾರ್ಯ ರೂಪದಲ್ಲಿ ತಂದಿದ್ದೇವೆಯೇ ಅಥವಾ ಇಲ್ಲವೆ ಎಂಬುದನ್ನು ಪರಿಶೀಲನೆ ಮಾಡಿಕೊಳ್ಳಿ. ಅನಾದಿ ಸಂಸ್ಕಾರವನ್ನು ತಾವು ಬಯಸಿದಾಗ ಮಧ್ಯದ ಸಂಸ್ಕಾರವು ಇಮರ್ಜ್ ಆಗಿ ಬಿಟ್ಟರೆ ಇದು ಅಧಿಕಾರಿತನವಾಗಲಿಲ್ಲ ಅಲ್ಲವೆ? |
ರಾಜಋಷಿ ಅರ್ಥಾತ್ ಸರ್ವರ ರಾಜ್ಯಾಧಿಕಾರಿಗಳು. ಯಾವಾಗ ಋಷಿ ಅರ್ಥಾತ್ ಬೇಹದ್ದಿನ ವೈರಾಗ್ಯ ವೃತ್ತಿಯ ಅಭ್ಯಾಸಿಗಳಾಗುತ್ತೀರೋ ಆಗ ಸದಾ ಮತ್ತು ಸಹಜ ರಾಜ್ಯಾಧಿಕಾರಿಗಳಾಗುತ್ತೀರಿ. ವೈರಾಗ್ಯವೆಂದರೆ ಯಾವುದೇ ಸೆಳೆತವಿಲ್ಲ, ಸದಾ ತಂದೆಗೆ ಪ್ರಿಯರು. ಈ ಪ್ರಿಯವಾಗಿರುವುದೇ ಭಿನ್ನರನ್ನಾಗಿ ಮಾಡುತ್ತದೆ. ತಂದೆಗೆ ಪ್ರಿಯರಾಗಿ ನಂತರ ಭಿನ್ನರಾಗಿ ಕಾರ್ಯದಲ್ಲಿ ಬರುವವರಿಗೆ ಬೇಹದ್ದಿನ ವೈರಾಗಿಗಳೆಂದು ಹೇಳಲಾಗುವುದು. ತಂದೆಗೆ ಪ್ರಿಯರಾಗದಿದ್ದರೆ ಮತ್ತೆಲ್ಲದರಿಂದ ಭಿನ್ನರಾಗುವುದಕ್ಕೂ ಸಾಧ್ಯವಿಲ್ಲ, ಸೆಳೆತದಲ್ಲಿ ಬಂದು ಬಿಡುತ್ತೀರಿ. ತಂದೆಗೆ ಪ್ರಿಯರು ಮತ್ತ್ಯಾವುದೇ ವ್ಯಕ್ತಿ ಅಥವಾ ವೈಭವಕ್ಕೆ ಪ್ರಿಯರಾಗಲು ಸಾಧ್ಯವಿಲ್ಲ. ಅವರು ಸದಾ ಆಕರ್ಷಣೆಗಳಿಂದ ದೂರ ಅರ್ಥಾತ್ ಭಿನ್ನವಾಗಿರುತ್ತಾರೆ. ಇದಕ್ಕೆ ನಿರ್ಲೇಪ ಸ್ಥಿತಿಯೆಂದು ಹೇಳುತ್ತಾರೆ. ಯಾವುದೇ ಹದ್ದಿನ ಆಕರ್ಷಣೆಯ ಲೇಪದಲ್ಲಿ ಬರುವವರಲ್ಲ. ರಚನೆ ಅಥವಾ ಸಾಧನಗಳನ್ನು ನಿರ್ಲೆಪವಾಗಿ ಕಾರ್ಯದಲ್ಲಿ ತರುವವರು. ಇಂತಹ ಬೇಹದ್ದಿನ ವೈರಾಗಿ ಸತ್ಯವಾದ ರಾಜಋಷಿಗಳಾಗಿದ್ದೀರಾ? ಕೇವಲ ಒಂದು ಇಲ್ಲವೆ ಎರಡು ನಿರ್ಬಲತೆಗಳು ಮಾತ್ರ ಉಳಿದುಕೊಂಡಿವೆ. ಕೇವಲ ಒಂದು ಸೂಕ್ಷ್ಮ ಶಕ್ತಿ ಅಥವಾ ಕರ್ಮೇಂದ್ರಿಯವು ಕಡಿಮೆ ನಿಯಂತ್ರಣದಲ್ಲಿದೆ. ಉಳಿದೆಲ್ಲವೂ ಸರಿಯಾಗಿದೆ ಎಂದು ಯೋಚಿಸಬೇಡಿ. ಎಲ್ಲಿ ಒಂದು ನಿರ್ಬಲತೆಯಿದ್ದರೂ ಸಹ ಅದು ಮಾಯೆಯ ದ್ವಾರವಾಗಿದೆ. ದ್ವಾರವು ಭಲೆ ಚಿಕ್ಕದಿರಲಿ, ದೊಡ್ಡದಿರಲಿ ಆದರೆ ದ್ವಾರವೇ ಅಲ್ಲವೆ. ಒಂದುವೇಳೆ ದ್ವಾರವು ತೆರೆದಿದ್ದರೆ ಮಾಯಾಜೀತರು, ಜಗತ್ಜೀತರು ಹೇಗಾಗುತ್ತೀರಿ? |
ಒಂದು ಕಡೆ ಒಂದು ರಾಜ್ಯ, ಒಂದು ಧರ್ಮದ ಸ್ವರ್ಣಿಮ ಪ್ರಪಂಚದ ಆಹ್ವಾನ ಮಾಡುತ್ತಿದ್ದೀರಿ ಮತ್ತು ಜೊತೆ ಜೊತೆಗೆ ಇನ್ನೊಂದು ಕಡೆ ನಿರ್ಬಲತೆ ಅರ್ಥಾತ್ ಮಾಯೆಯ ಆಹ್ವಾನವನ್ನೂ ಮಾಡುತ್ತಿದ್ದೀರೆಂದರೆ ಫಲಿತಾಂಶವು ಏನಾಗುವುದು? ದುವಿದೆ (ದ್ವಂದ್ದ) ಯಲ್ಲಿ ಉಳಿದು ಬಿಡುತ್ತೀರಿ ಆದ್ದರಿಂದ ಇದನ್ನು ಚಿಕ್ಕ ಮಾತೆಂದು ತಿಳಿಯಬೇಡಿ. ಇನ್ನೂ ಸಮಯವಿದೆ, ಮಾಡಿ ಬಿಡುತ್ತೇವೆ. ಅನ್ಯರಲ್ಲಿಯೂ ಇನ್ನೂ ಬಹಳಷ್ಟು ನಿರ್ಬಲತೆಗಳಿವೆ, ನನ್ನಲ್ಲಾದರೂ ಕೇವಲ ಒಂದೇ ಒಂದು ನಿರ್ಬಲತೆಯಿದೆ ಎಂದು ತಿಳಿಯಬೇಡಿ, ಅನ್ಯರನ್ನು ನೋಡುತ್ತಾ - ನೋಡುತ್ತಾ ತಾನು ಹಿಂದುಳಿಯದಿರಿ. 'ಬ್ರಹ್ಮಾ ತಂದೆಯನ್ನು ನೋಡಿ' ಎಂದು ಹೇಳಲಾಗಿದೆ. ಫಾಲೋ ಫಾದರ್ ಎಂದು ಹೇಳಲಾಗಿದೆ ಅಂದಾಗ ಸರ್ವರ ಸಹಯೋಗಿ ಸ್ನೇಹಿಗಳು ಅವಶ್ಯವಾಗಿ ಆಗಿ, ಗುಣಗ್ರಾಹಕರಾಗಿ. ತಂದೆಯನ್ನು ಅನುಸರಿಸಿ. ಬ್ರಹ್ಮಾ ತಂದೆಯ ಅಂತಿಮದ ರಾಜಋಷಿ ಸ್ಥಿತಿಯನ್ನು ನೋಡಿದಿರಿ. ಮಕ್ಕಳಿಗೆ ಇಷ್ಟೊಂದು ಪ್ರಿಯರಾಗಿದ್ದರೂ ಸಹ ಸನ್ಮುಖದಲ್ಲಿ ನೋಡುತ್ತಿದ್ದರೂ ಸಹ ಅವರಲ್ಲಿ ಭಿನ್ನತೆಯನ್ನೇ ನೋಡಿದಿರಲ್ಲವೆ. ಬೇಹದ್ದಿನ ವೈರಾಗ್ಯ, ಇದೇ ಸ್ಥಿತಿಯನ್ನು ಪ್ರತ್ಯಕ್ಷದಲ್ಲಿ ನೋಡಿದಿರಿ. ಕರ್ಮ ಭೋಗವಿದ್ದರೂ ಸಹ ಕರ್ಮೇಂದ್ರಿಯಗಳ ಮೇಲೆ ಅಧಿಕಾರಿಯಾಗಿ, ರಾಜಋಷಿಯಾಗಿ ಸಂಪೂರ್ಣ ಸ್ಥಿತಿಯ ಅನುಭವ ಮಾಡಿಸಿದರು ಆದ್ದರಿಂದ ಫಾಲೋ ಫಾದರ್ ಎಂದು ಹೇಳುತ್ತಾರೆ ಅಂದಮೇಲೆ ತಮ್ಮ ರಾಜ್ಯಾಧಿಕಾರಿಗಳು, ರಾಜ್ಯ ಕಾರ್ಯಕರ್ತರನ್ನು ಸದಾ ನೋಡಿಕೊಳ್ಳಿ. ಯಾವುದೇ ರಾಜ್ಯ ಕಾರ್ಯಕರ್ತನು ಎಲ್ಲಿಯೂ ಮೋಸಗೊಳಿಸದಿರಲಿ. ತಿಳಿಯಿತೆ? ಒಳ್ಳೆಯದು. |
ಇಂದು ಭಿನ್ನ-ಭಿನ್ನ ಸ್ಥಾನಗಳಿಂದ ಒಂದು ಸ್ಥಾನದಲ್ಲಿ ಬಂದು ತಲುಪಿದ್ದೀರಿ, ಇದಕ್ಕೆ ಸಾಗರ ನದಿಗಳ ಮೇಳವೆಂದು ಹೇಳಲಾಗುತ್ತದೆ. ಮೇಳದಲ್ಲಿ ಮಿಲನವೂ ನಡೆಯುತ್ತದೆ ಮತ್ತು ಮಾಲು (ಸರಕು) ಸಿಗುತ್ತದೆ. ಆದ್ದರಿಂದ ಎಲ್ಲರೂ ಮೇಳದಲ್ಲಿ ಬಂದು ತಲುಪಿದ್ದೀರಿ. ಹೊಸ ಮಕ್ಕಳ ಸೀಜನ್ನಿನ ಇದು ಕೊನೆಯ ಗ್ರೂಪ್ ಆಗಿದೆ. ಹೊಸಬರ ಜೊತೆ ಹಳಬರಿಗೂ ಅವಕಾಶ ಸಿಕ್ಕಿ ಬಿಟ್ಟಿದೆ. ಪ್ರಕೃತಿಯೂ ಸಹ ಇಲ್ಲಿಯವರೆಗೂ ಸಹಯೋಗ ಕೊಡುತ್ತಿದೆ ಆದರೆ ಇದರ ದುರುಪಯೋಗ ಮಾಡಿಕೊಳ್ಳಬೇಡಿ. ಇಲ್ಲವಾದರೆ ಪ್ರಕೃತಿಯು ಬುದ್ಧಿವಂತನಾಗಿದೆ. ಒಳ್ಳೆಯದು. |
ನಾಲ್ಕಾರು ಕಡೆಯ ಸದಾ ರಾಜಋಷಿ ಮಕ್ಕಳಿಗೆ, ಸದಾ ಸ್ವಯಂನ ಮೇಲೆ ರಾಜ್ಯ ಮಾಡುವಂತಹ ಸದಾ ವಿಜಯಿಯಾಗಿ ನಿರ್ವಿಘ್ನ ರಾಜ್ಯ ಕಾರೋಬಾರನ್ನು ನಡೆಸುವಂತಹ ರಾಜ್ಯಾಧಿಕಾರಿ ಮಕ್ಕಳಿಗೆ, ಸದಾ ಬೇಹದ್ದಿನ ವೈರಾಗ್ಯ ವೃತ್ತಿಯಲ್ಲಿರುವಂತಹ ಎಲ್ಲಾ ಋಷಿ ಕುಮಾರ-ಕುಮಾರಿಯರಿಗೆ ಸದಾ ತಂದೆಗೆ ಪ್ರಿಯರಾಗಿ ಎಲ್ಲದರಿಂದ ಭಿನ್ನರಾಗಿ ಕಾರ್ಯ ಮಾಡುವಂತಹ ಭಿನ್ನ ಮತ್ತು ಪ್ರಿಯ ಮಕ್ಕಳಿಗೆ, ಸದಾ ಬ್ರಹ್ಮಾ ತಂದೆಯನ್ನು ಅನುಸರಿಸುವಂತಹ ಪ್ರಾಮಾಣಿಕ ಮಕ್ಕಳಿಗೆ ಬಾಪ್ ದಾದಾ ರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ: |
1. ಅನೇಕ ಬಾರಿ ವಿಜಯಿ ಆತ್ಮರಾಗಿದ್ದೇವೆ - ಇಂತಹ ಅನುಭವ ಮಾಡುತ್ತೀರಾ? ವಿಜಯಿ ಆಗುವುದು ಕಷ್ಟವೆನಿಸುತ್ತದೆಯೇ ಅಥವಾ ಸಹಜವೇ? ಏಕೆಂದರೆ ಯಾವುದು ಸಹಜ ಮಾತಾಗಿರುತ್ತದೆಯೋ ಅದು ಸದಾ ಆಗಲು ಸಾಧ್ಯವಿದೆ, ಕಷ್ಟದ ಮಾತು ಸದಾ ಇರುವುದಿಲ್ಲ. ಯಾವ ಕಾರ್ಯವನ್ನು ಅನೇಕ ಬಾರಿ ಮಾಡಲಾಗಿದೆಯೋ ಅದು ಸ್ವತಹವಾಗಿಯೇ ಸಹಜವಾಗಿ ಬಿಡುತ್ತದೆ. ಯಾವಾಗ ಯಾವುದೇ ಹೊಸ ಕಾರ್ಯವನ್ನು ಮಾಡಲಾಗುತ್ತದೆಯೆಂದರೆ ಅದು ಮೊದಲು ಕಷ್ಟವೆನಿಸುತ್ತದೆ ಆದರೆ ಯಾವಾಗ ಮಾಡಿ ಬಿಡುತ್ತೀರಿ, ಆಗ ಆ ಕಷ್ಟದ ಕಾರ್ಯವೇ ಸಹಜವೆನಿಸುತ್ತದೆ. ಅಂದಮೇಲೆ ತಾವೆಲ್ಲರೂ ಈ ಒಂದು ಬಾರಿ ವಿಜಯಿ ಆಗಿರುವುದಿಲ್ಲ, ಅನೇಕ ಬಾರಿಯ ವಿಜಯಿಗಳು ಆಗಿದ್ದೀರಿ. ಅನೇಕ ಬಾರಿಯ ವಿಜಯಿ ಅಥವಾ ಸದಾ ಸಹಜ ವಿಜಯದ ಅನುಭವ ಮಾಡುವವರು. ಯಾರು ಸಹಜ ವಿಜಯಿ ಆಗಿದ್ದಾರೆಯೋ ಅವರಿಗೆ ಪ್ರತೀ ಹೆಜ್ಜೆಯಲ್ಲಿ ಇದೇ ರೀತಿಯ ಅನುಭವವಾಗುತ್ತದೆ - ಇವೆಲ್ಲಾ ಕಾರ್ಯಗಳು ಆಗಿ ಬಿಟ್ಟಿದೆ, ಪ್ರತೀ ಹೆಜ್ಜೆಯಲ್ಲಿ ವಿಜಯವು ಆಗಿ ಬಿಟ್ಟಿದೆ. ಆಗುತ್ತದೆಯೋ ಇಲ್ಲವೋ ಎಂಬ ಸಂಕಲ್ಪವೂ ಸಹ ಉತ್ಪನ್ನವಾಗಲು ಸಾಧ್ಯವಿಲ್ಲ. ಯಾವಾಗ ಅನೇಕ ಬಾರಿ ವಿಜಯಿಗಳು ಆಗಿದ್ದೇವೆಂಬ ನಿಶ್ಚಯವಿದೆ ಅಂದಮೇಲೆ ಆಗುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಯೇ ಇಲ್ಲ. ನಿಶ್ಚಯದ ಚಿಹ್ನೆಯಾಗಿದೆ - ನಶೆ ಮತ್ತು ನಶೆಯ ಚಿಹ್ನೆಯಾಗಿದೆ - ಖುಷಿ. ಯಾರಿಗೆ ನಶೆಯಿರುತ್ತದೆಯೋ ಅವರು ಸದಾ ಖುಷಿಯಾಗಿ ಇರುತ್ತಾರೆ. ಅಲ್ಪಕಾಲದ ವಿಜಯದಲ್ಲಿಯೂ ಎಷ್ಟೊಂದು ಖುಷಿಯಾಗುತ್ತದೆ! ಯಾವಾಗ ಎಲ್ಲಿ ವಿಜಯ ಪ್ರಾಪ್ತಿಯಾಗುತ್ತದೆ ಎಂದರೆ ವಾದ್ಯಗಳನ್ನು ಮೊಳಗಿಸುತ್ತಾರೆ ಅಲ್ಲವೆ! ಅಂದಮೇಲೆ ಯಾರಿಗೆ ನಿಶ್ಚಯ ಮತ್ತು ನಶೆಯಿರುತ್ತದೆಯೋ, ಅವರಿಗೆ ಅವಶ್ಯವಾಗಿ ಖುಷಿಯಿರುತ್ತದೆ. ಅವರು ಸದಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಶರೀರದಿಂದ ಕೆಲವರು ನರ್ತಿಸಬಹುದು, ಕೆಲವರು ನರ್ತಿಸದೇ ಇರಬಹುದು ಆದರೆ ಮನಸ್ಸಿನಲ್ಲಿ ಖುಷಿಯ ನರ್ತನವನ್ನಂತು ಬೆಡ್ನಲ್ಲಿರುವ ರೋಗಿಗಳೂ ನರ್ತಿಸಬಹುದು. ಯಾರಿಗಾದರೂ ಸಹ ಈ ನರ್ತನವು ಬಹಳ ಸಹಜವಾಗಿದೆ ಏಕೆಂದರೆ ವಿಜಯಿ ಆಗುವುದು ಅರ್ಥಾತ್ ಸ್ವತಹವಾಗಿಯೇ ಖುಷಿಯ ವಾದ್ಯಗಳು ಮೊಳಗುವುದು. ವಾದ್ಯಗಳು ಮೊಳಗುತ್ತವೆಯೆಂದರೆ ಸ್ವತಹವಾಗಿಯೇ ಕಾಲುಗಳು ನರ್ತಿಸುತ್ತವೆ. ಯಾರಿಗೆ ನರ್ತಿಸುವುದು ಬರುವುದಿಲ್ಲವೋ ಅವರೂ ಸಹ ಕುಳಿತಿದ್ದ ಕಡೆಯಿಂದಲೇ ನರ್ತಿಸುತ್ತಾ ಇರುತ್ತಾರೆ. ಕಾಲುಗಳೂ ನರ್ತಿಸುತ್ತದೆ, ಕುತ್ತಿಗೆಯೂ ನರ್ತಿಸುತ್ತದೆ ಅಂದಮೇಲೆ ತಾವೆಲ್ಲರೂ ಅನೇಕ ಬಾರಿಯ ವಿಜಯಿ ಆಗಿದ್ದೀರಿ - ಇದೇ ಖುಷಿಯಲ್ಲಿ ಸದಾ ಮುಂದೆ ಸಾಗುತ್ತಾ ನಡೆಯಿರಿ. ಪ್ರಪಂಚದಲ್ಲಿ ಎಲ್ಲರಿಗೂ ಖುಷಿಯ ಅವಶ್ಯಕತೆಯೇ ಇದೆ. ಭಲೆ ಎಲ್ಲಾ ಪ್ರಾಪ್ತಿಗಳೂ ಇರಬಹುದು ಆದರೆ ಖುಷಿಯ ಪ್ರಾಪ್ತಿ ಇಲ್ಲ. ಅಂದಾಗ ಪ್ರಪಂಚದವರಿಗೆ ಯಾವ ಅವಿನಾಶಿ ಬುದ್ಧಿಯ ಅವಶ್ಯಕತೆಯೂ ಇದೆಯೋ ಆ ಖುಷಿಯನ್ನು ಸದಾ ಹಂಚುತ್ತಿರಿ. |
2. ತಮ್ಮನ್ನು ಭಾಗ್ಯಶಾಲಿ ಎಂದು ತಿಳಿದುಕೊಂಡು ಪ್ರತೀ ಹೆಜ್ಜೆಯಲ್ಲಿ ಶ್ರೇಷ್ಠ ಭಾಗ್ಯದ ಅನುಭವ ಮಾಡುತ್ತೀರಾ? ಏಕೆಂದರೆ ಈ ಸಮಯದಲ್ಲಿ ತಂದೆಯು ಭಾಗ್ಯವಿದಾತನಾಗಿದ್ದು ಭಾಗ್ಯವನ್ನು ಕೊಡುವುದಕ್ಕಾಗಿ ಬಂದಿದ್ದಾರೆ. ಭಾಗ್ಯವಿದಾತನು ಭಾಗ್ಯವನ್ನು ಹಂಚುತ್ತಿದ್ದಾರೆ. ಹಂಚುವಂತಹ ಸಮಯದಲ್ಲಿ ಯಾರೆಷ್ಟು ಬೇಕಾದರೂ ತೆಗೆದುಕೊಳ್ಳಬಹುದು. ಇದರಲ್ಲಿ ಎಲ್ಲರಿಗೂ ಅಧಿಕಾರವಿದೆ. ಯಾರಿಗೆಷ್ಟು ಬೇಕು ಅಷ್ಟು ತೆಗೆದುಕೊಳ್ಳಿರಿ. ಅಂದಮೇಲೆ ಇಂತಹ ಸಮಯದಲ್ಲಿ ತಾವೆಷ್ಟು ಭಾಗ್ಯವನ್ನು ಮಾಡಿಕೊಂಡಿದ್ದೀರಿ - ಇದನ್ನು ಪರಿಶೀಲನೆ ಮಾಡಿಕೊಳ್ಳಿರಿ ಏಕೆಂದರೆ ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ ಆದ್ದರಿಂದ ಎಲ್ಲಾ ಮಕ್ಕಳಿಗೂ ತಂದೆಯವರು ಪ್ರತೀ ಹೆಜ್ಜೆಯಲ್ಲಿಯೂ ಭಾಗ್ಯದ ರೇಖೆಯನ್ನೆಳೆದುಕೊಳ್ಳುವ ಲೇಖನಿಯನ್ನೂ ಸಹ ಕೊಟ್ಟಿದ್ದಾರೆ. ಲೇಖನಿಯು ಕೈಯಲ್ಲಿದೆ ಮತ್ತು ಅನುಮತಿಯೂ ಇದೆ - ಯಾರೆಷ್ಟು ಬೇಕಾದರೂ ಎಳೆದುಕೊಳ್ಳಬಹುದು. ಇದೆಷ್ಟು ಶ್ರೇಷ್ಠವಾದ ಅವಕಾಶವಾಗಿದೆ! ಅಂದಮೇಲೆ ಸದಾ ಈ ಭಾಗ್ಯಶಾಲಿ ಸಮಯದ ಮಹತ್ವವನ್ನು ತಿಳಿದುಕೊಳ್ಳುತ್ತಾ, ಅಷ್ಟೂ ಜಮಾ ಮಾಡಿಕೊಳ್ಳುತ್ತೀರಿ ಅಲ್ಲವೇ? ಈ ಸಮಯದಲ್ಲಿ ಹೀಗಾಗಬಾರದು - ನಾವು ಬಹಳ ಬಯಸುತ್ತಿದ್ದೆವು ಆದರೆ ಮಾಡಲಾಗಲಿಲ್ಲ, ಮಾಡಬೇಕಾಗಿರುವುದು ಬಹಳಷ್ಟಿತ್ತು ಆದರೆ ಇಷ್ಟೇ ಮಾಡಿಕೊಂಡೆನು. ಇಂತಹ ದೂರುಗಳು ತಮ್ಮ ಪ್ರತಿ ಉಳಿದುಕೊಳ್ಳಬಾರದು. ತಿಳಿಯಿತೇ? ಅಂದಾಗ ಸದಾ ಭಾಗ್ಯದ ರೇಖೆಯನ್ನು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತಾ ಸಾಗಿರಿ ಮತ್ತು ಅನ್ಯರಿಗೂ ಈ ಶ್ರೇಷ್ಠ ಭಾಗ್ಯದ ಪರಿಚಯವನ್ನು ಕೊಡುತ್ತಾ ಸಾಗಿರಿ. 'ವಾಹ್ ನನ್ನ ಶ್ರೇಷ್ಠ ಭಾಗ್ಯವೇ!' ಇದೇ ಖುಷಿಯ ಹಾಡನ್ನು ಸದಾ ಹಾಡುತ್ತಿರಿ. |
3. ಸದಾ ತಮ್ಮನ್ನು ಸ್ವದರ್ಶನ ಚಕ್ರಧಾರಿ ಶ್ರೇಷ್ಠ ಆತ್ಮರೆಂದು ಅನುಭವ ಮಾಡುತ್ತೀರಾ? ಸ್ವದರ್ಶನ-ಚಕ್ರ ಅರ್ಥಾತ್ ಸದಾ ಮಾಯೆಯ ಅನೇಕ ಚಕ್ರಗಳಿಂದ ಮುಕ್ತರನ್ನಾಗಿಸುವುದು. ಸ್ವದರ್ಶನ ಚಕ್ರವು ಸದಾಕಾಲಕ್ಕಾಗಿ ಚಕ್ರವರ್ತಿ ರಾಜ್ಯ ಭಾಗ್ಯದ ಅಧಿಕಾರಿಯನ್ನಾಗಿ ಮಾಡಿ ಬಿಡುತ್ತದೆ. ಈ ಸ್ವದರ್ಶನ ಚಕ್ರದ ಜ್ಞಾನವು ಈ ಸಂಗಮಯುಗದಲ್ಲಿಯೇ ಪ್ರಾಪ್ತಿಯಾಗುತ್ತದೆ. ಬ್ರಾಹ್ಮಣ ಆತ್ಮರಾಗಿದ್ದೀರಿ ಆದ್ದರಿಂದ ಸ್ವದರ್ಶನ ಚಕ್ರಧಾರಿ ಆಗಿದ್ದೀರಿ. ಬ್ರಾಹ್ಮಣರನ್ನು ಸದಾ ಶಿಖೆಯಲ್ಲಿ ತೋರಿಸುತ್ತಾರೆ, ಶಿಖೆ ಎಂದರೆ ಶ್ರೇಷ್ಠ ಎಂದರ್ಥ. ಬ್ರಾಹ್ಮಣನೆಂದರೆ ಸದಾ ಶ್ರೇಷ್ಠ ಕರ್ಮವನ್ನು ಮಾಡುವವನು, ಸದಾ ಶ್ರೇಷ್ಠ ಕರ್ಮದಲ್ಲಿ ಇರುವವರು - ಇಂತಹ ಬ್ರಾಹ್ಮಣರಾಗಿದ್ದೀರಿ ಅಲ್ಲವೇ ಹೆಸರಿಗಷ್ಟೇ ಬ್ರಾಹ್ಮಣರಲ್ಲ, ಕಾರ್ಯವನ್ನು ಮಾಡುವಂತಹ ಬ್ರಾಹ್ಮಣರು ಏಕೆಂದರೆ ಈಗ ಅಂತ್ಯದಲ್ಲಿಯೂ ಸಹ ಬ್ರಾಹ್ಮಣರ ಹೆಸರೆಷ್ಟಿದೆ! ತಾವು ಸತ್ಯ ಬ್ರಾಹ್ಮಣರದೇ ನೆನಪಾರ್ಥವು ಈಗಿನವರೆಗೂ ನಡೆಯುತ್ತಾ ಇದೆ. ಯಾವುದೇ ಶ್ರೇಷ್ಠ ಕಾರ್ಯವಿದ್ದರೆ ಬ್ರಾಹ್ಮಣರನ್ನೇ ಕರೆಸುತ್ತಾರೆ ಏಕೆಂದರೆ ಬ್ರಾಹ್ಮಣರೇ ಅಷ್ಟು ಶ್ರೇಷ್ಠರಾಗಿದ್ದಾರೆ. ಅಂದಮೇಲೆ ಯಾವ ಸಮಯದಲ್ಲಿ ಇಷ್ಟು ಶ್ರೇಷ್ಠರಾಗಿದ್ದೀರಿ? ಈಗ ಆಗಿದ್ದೀರಿ. ಆದ್ದರಿಂದ ಈಗಿನವರೆಗೂ ಶ್ರೇಷ್ಠ ಕಾರ್ಯದ ನೆನಪಾರ್ಥವು ನಡೆಯುತ್ತಾ ಬಂದಿದೆ. ಪ್ರತೀ ಸಂಕಲ್ಪ, ಪ್ರತೀ ಮಾತು, ಪ್ರತೀ ಕರ್ಮವನ್ನು ಶ್ರೇಷ್ಠವನ್ನಾಗಿ ಮಾಡುವವರು - ಇಂತಹ ಸ್ವದರ್ಶನ ಚಕ್ರಧಾರಿ ಶ್ರೇಷ್ಠರಾಗಿದ್ದೇವೆ - ಈ ಸ್ಮೃತಿಯಲ್ಲಿಯೇ ಸದಾ ಇರಬೇಕು. ಒಳ್ಳೆಯದು. |
ಓಂ ಶಾಂತಿ. ನಿರಾಕಾರ ಭಗವಾನುವಾಚ - ಈಗ ನಿರಾಕಾರ ಭಗವಂತನೆಂದು ಶಿವನಿಗೆ ಹೇಳಲಾಗುತ್ತದೆ. ಭಲೆ ಭಕ್ತಿಮಾರ್ಗದಲ್ಲಿ ಅವರಿಗೆ ಎಷ್ಟಾದರೂ ಹೆಸರುಗಳನ್ನಿಟ್ಟಿರಬಹುದು, ಅನೇಕ ಹೆಸರುಗಳಿವೆ ಆದ್ದರಿಂದಲೇ ವಿಸ್ತಾರವಿದೆ. ಸ್ವಯಂ ತಂದೆಯೇ ಬಂದು ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ತಮ್ಮ ತಂದೆಯಾದ ಶಿವನನ್ನು ಹೇ ಪತಿತ ಪಾವನ ಎಂದು ನೆನಪು ಮಾಡುತ್ತಾ ಬಂದಿದ್ದೀರಿ. ಹೆಸರಂತೂ ಅವಶ್ಯವಾಗಿ ಒಂದೇ ಇರುವುದು, ಅನೇಕ ಹೆಸರುಗಳು ನಡೆಯಲು ಸಾಧ್ಯವಿಲ್ಲ. ಶಿವಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಶಿವ ಎಂಬುದೊಂದೇ ಹೆಸರಾಯಿತು. |
ರಚಯಿತನೂ ಒಬ್ಬರೇ ಆದರು, ಅನೇಕ ಹೆಸರುಗಳಿಂದ ತಬ್ಬಿಬ್ಬಾಗುವರು. ಹೇಗೆ ನಿಮ್ಮ ಹೆಸರಾಗಿದೆ - ಪುಷ್ಪ ಅದಕ್ಕೆ ಬದಲಾಗಿ ನಿಮಗೆ ಶೀಲ ಎಂದು ಹೇಳಿದರೆ ನೀವು ಪ್ರತ್ಯುತ್ತರ ನೀಡುವಿರಾ? ಇಲ್ಲ. ಮತ್ತಾರನ್ನೋ ಕರೆಯುತ್ತಿದ್ದಾರೆಂದು ತಿಳಿಯುತ್ತಾರೆ. ಇದೂ ಸಹ ಅದೇ ರೀತಿಯಾಯಿತು. ತಂದೆಯ ಹೆಸರು ಒಂದೇ ಆಗಿದೆ ಆದರೆ ಭಕ್ತಿಮಾರ್ಗವಿರುವ ಕಾರಣ ಬಹಳ ಮಂದಿರಗಳನ್ನು ಕಟ್ಟಿಸುವ ಕಾರಣ ಭಿನ್ನ-ಭಿನ್ನ ಹೆಸರುಗಳನ್ನಿಟ್ಟಿದ್ದಾರೆ. ಇಲ್ಲವಾದರೆ ಪ್ರತಿಯೊಬ್ಬರಿಗೂ ಒಂದೇ ಹೆಸರಿರುತ್ತದೆ. ಗಂಗಾ ನದಿಗೆ ಜಮುನಾ ನದಿ ಎಂದು ಹೇಳುವುದಿಲ್ಲ. ಯಾವುದೇ ವಸ್ತುವಿಗೆ ಒಂದು ಹೆಸರು ಪ್ರಸಿದ್ಧವಾಗುತ್ತದೆ. ಈ ಶಿವ ಎಂಬ ಹೆಸರು ಪ್ರಸಿದ್ಧವಾಗಿದೆ. ಶಿವಾಯ ನಮಃ ಎಂದು ಗಾಯನವಿದೆ. ಬ್ರಹ್ಮ ದೇವತಾಯ ನಮಃ ಎಂದು ಗಾಯನವಿದೆ, ವಿಷ್ಣು ದೇವತಾಯ ನಮಃ ಎಂದು ಹೇಳಿ ನಂತರ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಏಕೆಂದರೆ ಶಿವನು ಸರ್ವ ಶ್ರೇಷ್ಠನಾಗಿದ್ದಾರೆ. ಸರ್ವ ಶ್ರೇಷ್ಠನೆಂದು ನಿರಾಕಾರನಿಗೇ ಹೇಳುತ್ತೇವೆಂದು ಮನುಷ್ಯರ ಬುದ್ದಿಯಲ್ಲಿರುತ್ತದೆ. ಅವರ ಹೆಸರು ಒಂದೇ ಆಗಿದೆ. ಬ್ರಹ್ಮನಿಗೆ ಬ್ರಹ್ಮನೆಂದು, ವಿಷ್ಣುವಿಗೆ ವಿಷ್ಣುವೆಂದೇ ಹೇಳುತ್ತಾರೆ. ಅನೇಕ ಹೆಸರುಗಳನ್ನಿಟ್ಟಿರುವುದರಿಂದ ತಬ್ಬಿಬ್ಬಾಗುತ್ತಾರೆ. ಪ್ರತ್ಯುತ್ತರವೇ ಸಿಗುವುದಿಲ್ಲ ಮತ್ತು ಅವರ ರೂಪವನ್ನೂ ತಿಳಿದುಕೊಂಡಿಲ್ಲ. ತಂದೆಯು ಬಂದು ಮಕ್ಕಳೊಂದಿಗೆ ಮಾತನಾಡುತ್ತಾರೆ ಶಿವಾಯ ನಮಃ ಎಂದು ಹೇಳುತ್ತಾರೆ ಅಂದಾಗ ಒಂದು ಹೆಸರು ಸರಿಯಾಗಿದೆ. ಆದರೆ ಶಿವ - ಶಂಕರನೆಂದು ಹೇಳುವುದೂ ಸಹ ತಪ್ಪಾಗಿ ಬಿಡುತ್ತದೆ. ಶಿವ-ಶಂಕರ ಹೆಸರು ಬೇರೆ-ಬೇರೆಯಾಗಿದೆ. ಹೇಗೆ ಲಕ್ಷ್ಮಿ - ನಾರಾಯಣ ಎಂಬ ಹೆಸರು ಬೇರೆ - ಬೇರೆಯಾಗಿದೆ. ಹೇಗೆ ಲಕ್ಷ್ಮಿ - ನಾರಾಯಣ ಎಂಬ ಹೆಸರು ಬೇರೆ-ಬೇರೆಯಾಗಿದೆ. ಅಲ್ಲಿ ನಾರಾಯಣನಿಗೆ ಲಕ್ಷ್ಮಿ-ನಾರಾಯಣ ಎಂದು ಹೇಳುವುದಿಲ್ಲ. ಇತ್ತೀಚೆಗಂತೂ ತಮಗೆ ಎರಡೆರಡು ಹೆಸರುಗಳನ್ನು ಇಟ್ಟುಕೊಳ್ಳುತ್ತಾರೆ. ದೇವತೆಗಳಿಗೆ ಈ ರೀತಿ ಡಬಲ್ ಹೆಸರುಗಳಿರಲಿಲ್ಲ. ರಾಧೆಯದೇ ಬೇರೆ, ಕೃಷ್ಣನದೇ ಬೇರೆ. ಇಲ್ಲಂತೂ ಒಬ್ಬೊಬ್ಬರಿಗೆ ರಾಧಾಕೃಷ್ಣ, ಲಕ್ಷ್ಮೀ ನಾರಾಯಣ ಎಂದು ಇಟ್ಟುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ರಚಯಿತನು ಒಬ್ಬರೇ ಆಗಿದ್ದಾರೆ, ಅವರ ಹೆಸರೂ ಒಂದೇ ಆಗಿದೆ, ಅವರನ್ನೇ ಅರಿತುಕೊಳ್ಳಬೇಕಾಗಿದೆ. ಆತ್ಮವು ಒಂದು ನಕ್ಷತ್ರ ಮಾದರಿಯಾಗಿದೆ. ಭೃಕುಟಿಯ ಮಧ್ಯದಲ್ಲಿ ಹೊಳೆಯುತ್ತದೆ ಎಂದು ಹೇಳುತ್ತಾರೆ. ಮತ್ತೆ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ಅಂದಾಗ ಪರಮಾತ್ಮನೂ ಸಹ ನಕ್ಷತ್ರವಾದರಲ್ಲವೆ. ಆತ್ಮವು ಚಿಕ್ಕದು, ದೊಡ್ಡದಾಗಿರುತ್ತದೆ ಎಂದಲ್ಲ. ಬಹಳ ಸಹಜ ಮಾತುಗಳಾಗಿವೆ. |
ತಂದೆಯು ತಿಳಿಸುತ್ತಾರೆ - ಹೇ ಪತಿತ ಪಾವನ ಬನ್ನಿ ಎಂದು ಕರೆಯುತ್ತಿದ್ದಿರಿ, ಆದರೆ ಅವರು ಹೇಗೆ ಪಾವನರನ್ನಾಗಿ ಮಾಡುತ್ತಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಗಂಗೆಯನ್ನು ಪತಿತ - ಪಾವನಿ ಎಂದು ತಿಳಿದುಕೊಳ್ಳುತ್ತಾರೆ ಆದರೆ ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಮೊದಲೂ ಸಹ ಹೇಳಿದ್ದೇನು - ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿ. ಕೇವಲ ಹೆಸರನ್ನು ಬದಲಾಯಿಸಿ ಬಿಟ್ಟಿದ್ದಾರೆ. ಮಕ್ಕಳಿಗೆ ತಿಳಿದಿದೆ- ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಇದ್ದೇ ಇದೆ. ಮನ್ಮನಾಭವ ಎಂದು ಹೇಳುವ ಅವಶ್ಯಕತೆಯೂ ಇಲ್ಲ ಆದರೆ ತಂದೆಯನ್ನು ಮತ್ತು ಆಸ್ತಿಯನ್ನು ಸಂಪೂರ್ಣ ಮರೆತು ಹೋಗಿದ್ದಾರೆ. ಆದ್ದರಿಂದ ತಂದೆಯಾದ ನನ್ನನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ಹೇಳುತ್ತೇನೆ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ, ಅಂದಮೇಲೆ ಅವಶ್ಯವಾಗಿ ತಂದೆಯನ್ನು ನೆನಪು ಮಾಡುವುದರಿಂದ ನಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗುವುದು. ಹೇಗೆ ಮಗನು ಜನ್ಮ ಪಡೆದರೆ ವಾರಸುಧಾರನು ಬಂದನೆಂದು ತಂದೆಯು ಹೇಳುತ್ತಾರೆ. ಮಗಳಿಗಾಗಿ ಈ ರೀತಿ ಹೇಳುವುದಿಲ್ಲ ಆದರೆ ನೀವಾತ್ಮರೆಲ್ಲರೂ ಮಕ್ಕಳಾಗಿದ್ದೀರಿ. ಆತ್ಮವು ಒಂದು ನಕ್ಷತ್ರವಾಗಿದೆ ಎಂದು ಹೇಳುತ್ತಾರೆ ಅಂದಮೇಲೆ ಅದು ಅಂಗುಷ್ಟಾಕಾರವಾಗಿರಲು ಹೇಗೆ ಸಾಧ್ಯ! ಆತ್ಮವು ಬಹಳ ಸೂಕ್ಷ ವಾಗಿದೆ. ಅದು ಕಣ್ಣುಗಳಿಗೆ ಕಾಣಿಸುವುದಿಲ್ಲ. ಅದನ್ನು ದಿವ್ಯ ದೃಷ್ಟಿಯಿಂದ ನೋಡಬಹುದು ಏಕೆಂದರೆ ಅವ್ಯಕ್ತ ವಸ್ತುವಾಗಿದೆ. ದಿವ್ಯ ದೃಷ್ಟಿಯಲ್ಲಿ ಚೈತನ್ಯವಾಗಿ ಕಂಡು ಬರುತ್ತದೆ ಮತ್ತು ಮಾಯವಾಗಿ ಬಿಡುತ್ತದೆ. ಸಿಗುವುದೇನೂ ಇಲ್ಲ. ಕೇವಲ ಖುಷಿಯಾಗಿ ಬಿಡುತ್ತಾರೆ, ಇದಕ್ಕೆ ಭಕ್ತಿಯ ಅಲ್ಪ ಸುಖವೆಂದು ಹೇಳುತ್ತಾರೆ. ಇದು ಭಕ್ತಿಯ ಫಲವಾಗಿದೆ, ಯಾರು ಬಹಳ ಭಕ್ತಿ ಮಾಡಿರುವರೋ ಅವರಿಗೆ ಕಾಯಿದೆಯನುಸಾರ ಈ ಜ್ಞಾನದಿಂದ ಫಲ ಸಿಗುತ್ತದೆ. ಬ್ರಹ್ಮಾ ಮತ್ತು ವಿಷ್ಣುವನ್ನು ಒಟ್ಟಿಗೆ ತೋರಿಸುತ್ತಾರೆ. ಬ್ರಹ್ಮಾ ಸೋ ವಿಷ್ಣು, ಭಕ್ತಿಯ ಫಲವಾಗಿ ರಾಜ್ಯಭಾಗ್ಯವು ವಿಷ್ಣುವಿನ ರೂಪದಲ್ಲಿ ಸಿಗುತ್ತಿದೆ. ವಿಷ್ಣು ಹಾಗೂ ಕೃಷ್ಣನ ಸಾಕ್ಷಾತ್ಕಾರವನ್ನು ಅನೇಕರು ಮಾಡಿರುವರು. ಆದರೆ ತಿಳಿಸಲಾಗುತ್ತದೆ - ಭಿನ್ನ-ಭಿನ್ನ ನಾಮ - ರೂಪಗಳಲ್ಲಿ ಭಕ್ತಿ ಮಾಡಿದ್ದಾರೆ, ಸಾಕ್ಷಾತ್ಕಾರಕ್ಕೆ ಯೋಗ ಅಥವಾ ಜ್ಞಾನವೆಂದು ಹೇಳಲಾಗುವುದಿಲ್ಲ. ನೌಧಾಭಕ್ತಿಯಿಂದ ಸಾಕ್ಷಾತ್ಕಾರವಾಯಿತು, ಈಗ ಸಾಕ್ಷಾತ್ಕಾರವಾಗದಿದ್ದರೂ ಪರವಾಗಿಲ್ಲ, ಮನುಷ್ಯರಿಂದ ದೇವತೆಗಳಾಗುವುದೇ ಗುರಿ-ಧ್ಯೇಯವಾಗಿದೆ. ನೀವು ದೇವಿ- ದೇವತಾ ಧರ್ಮದವರಾಗುತ್ತೀರಿ, ಬಾಕಿ ಪುರುಷಾರ್ಥ ಮಾಡಿಸುವುದಕ್ಕಾಗಿ ತಂದೆಯು ಕೇವಲ ಇದನ್ನೇ ತಿಳಿಸುತ್ತಾರೆ - ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು, ದೇಹದಿಂದಲೂ ತೆಗೆದು ತಂದೆಯನ್ನು ನೆನಪು ಮಾಡಿ. ಹೇಗೆ ಪ್ರಿಯತಮ, ಪ್ರಿಯತಮೆಯರು ಕೆಲಸವನ್ನೂ ಮಾಡುತ್ತಿರುತ್ತಾರೆ ಆದರೆ ಮನಸ್ಸು ಪ್ರಿಯತಮನೊಂದಿಗೆ ತೊಡಗಿರುತ್ತದೆ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ಆದರೂ ಸಹ ಬುದ್ಧಿಯು ಬೇರೆ-ಬೇರೆಯ ಕಡೆ ಓಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಇಳಿಯುವುದರಲ್ಲಿ ಒಂದು ಕಲ್ಪವು ಹಿಡಿಸಿತು. ಸತ್ಯಯುಗದಿಂದ ಹಿಡಿದು ಏಣಿಯನ್ನು ಇಳಿಯುತ್ತೇವೆ. ಸಲ್ಪ-ಸ್ವಲ್ಪವೇ ತುಕ್ಕು ಬೀಳುತ್ತಿರುತ್ತದೆ, ಸತೋದಿಂದ ತಮೋ ಆಗಿ ಬಿಡುತ್ತೀರಿ. ಪುನಃ ಈಗ ತಮೋದಿಂದ ಸತೋ ಆಗುವುದಕ್ಕಾಗಿ ತಂದೆಯು ಜಂಪ್ ಮಾಡಿಸುತ್ತಾರೆ. ಸೆಕೆಂಡಿನಲ್ಲಿ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. |
ಅಂದಾಗ ಮಧುರಾತಿ ಮಧುರ ಮಕ್ಕಳು ಪುರುಷಾರ್ಥ ಮಾಡಬೇಕಾಗಿದೆ, ತಂದೆಯಂತೂ ಶಿಕ್ಷಣವನ್ನು ಕೊಡುತ್ತಲೇ ಇರುತ್ತಾರೆ. ಒಳ್ಳೊಳ್ಳೆಯ ಬುದ್ಧಿವಂತ ಮಕ್ಕಳೂ ಸಹ ಇದನ್ನು ಅನುಭವ ಮಾಡುತ್ತಾರೆ. ಖಂಡಿತವಾಗಿಯೂ ಬಹಳ ಪರಿಶ್ರಮವಿದೆ, ಕೆಲವರು ತಿಳಿಸುತ್ತಾರೆ, ಕೆಲವರು ತಿಳಿಸುವುದೇ ಇಲ್ಲ. ತಮ್ಮ ಸ್ಥಿತಿಯ ಬಗ್ಗೆ ತಿಳಿಸಬೇಕು. ತಂದೆಯನ್ನು ನೆನಪೇ ಮಾಡದಿದ್ದರೆ ಆಸ್ತಿಯು ಹೇಗೆ ಸಿಗುವುದು? ಸರಿಯಾಗಿ ನೆನಪು ಮಾಡುವುದಿಲ್ಲ, ನಾವಂತೂ ಶಿವ ತಂದೆಯ ಮಕ್ಕಳು ಆಗಿಯೇ ಇದ್ದೇವೆ ಎಂದು ತಿಳಿದುಕೊಳ್ಳುತ್ತಾರೆ. ನೆನಪು ಮಾಡದೆ ಇರುವುದರಿಂದ ಬಿದ್ದು ಹೋಗುತ್ತಾರೆ. ತಂದೆಯನ್ನು ನಿರಂತರ ನೆನಪು ಮಾಡಿದರೆ ತುಕ್ಕು ಬಿಡುತ್ತದೆ, ಆದ್ದರಿಂದ ಗಮನ ಕೊಡಬೇಕಾಗುತ್ತದೆ. ಎಲ್ಲಿಯವರೆಗೆ ಈ ಶರೀರವಿದೆಯೋ ಅಲ್ಲಿಯವರೆಗೆ ಪುರುಷಾರ್ಥವು ನಡೆಯುತ್ತಾ ಇರುವುದು. ಬುದ್ಧಿಯೂ ಸಹ ಹೇಳುತ್ತದೆ - ಪದೇ-ಪದೇ ನೆನಪು ಮರೆತು ಹೋಗುತ್ತದೆ. ಈ ಯೋಗಬಲದಿಂದ ನೀವು ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಎಲ್ಲರೂ ಒಂದೇ ತರಹ ಓಟವನ್ನು ಓಡುವುದಿಲ್ಲ. ಇದು ನಿಯಮವಿಲ್ಲ. ಸ್ಪರ್ಧೆಯಲ್ಲಿಯೂ ಸಹ ಸ್ವಲ್ಪವಾದರೂ ಅಂತರವಾಗುತ್ತದೆ. ನಂಬರ್ವನ್, ಮತ್ತೆ ಪ್ಲಸ್ನಲ್ಲಿ ಬಂದು ಬಿಡುತ್ತಾರೆ. ಇಲ್ಲಿಯೂ ಸಹ ಮಕ್ಕಳದು ಸ್ಪರ್ಧೆಯಾಗಿದೆ. ನೆನಪು ಮಾಡುವುದು ಮುಖ್ಯ ಮಾತಾಗಿದೆ. ನಾವು ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತೇವೆ ಎಂಬುದನ್ನಂತೂ ತಿಳಿದುಕೊಳ್ಳುತ್ತೀರಿ. ತಂದೆಯು ಆದೇಶ ನೀಡಿದ್ದಾರೆ, ಈಗ ಪಾಪ ಮಾಡಿದರೆ ಅದು ನೂರರಷ್ಟಾಗುವುದು. ಬಹಳ ಮಕ್ಕಳು ಪಾಪ ಮಾಡುತ್ತಾರೆ ಆದರೆ ತಿಳಿಸುವುದಿಲ್ಲ. ನಂತರ ಅದು ವೃದ್ಧಿಯಾಗುತ್ತಾ ಹೋಗುತ್ತದೆ ಮತ್ತೆ ಅಂತಿಮದಲ್ಲಿ ಅನುತ್ತೀರ್ಣರಾಗಿ ಬಿಡುತ್ತಾರೆ. ತಿಳಿಸಲು ಸಂಕೋಚವಾಗುತ್ತದೆ. ಸತ್ಯವನ್ನು ತಿಳಿಸದೇ ಹೋದರೆ ತಮಗೆ ಮೋಸಮಾಡಿಕೊಳ್ಳುತ್ತಾರೆ. ತಂದೆಯು ಈ ಮಾತನ್ನು ಕೇಳಿದರೆ ಏನು ಹೇಳುವರು ಎಂದು ಕೆಲವರಿಗೆ ಭಯವಾಗುತ್ತದೆ. ಇನ್ನೂ ಕೆಲವರು ಚಿಕ್ಕ ತಪ್ಪನ್ನೂ ಸಹ ತಿಳಿಸಲು ಬಂದುಬಿಡುತ್ತಾರೆ. ಆದರೆ ತಂದೆ ಅವರಿಗೆ ಹೇಳುತ್ತಾರೆ-ದೊಡ್ಡ ದೊಡ್ಡ ತಪ್ಪುಗಳನ್ನೂ ಬಹಳ ಒಳ್ಳೆಯ ಮಕ್ಕಳೂ ಮಾಡುತ್ತಾರೆ ಒಳ್ಳೆ ಒಳ್ಳೆ ಮಹಾರಥಿಗಳನ್ನೂ ಸಹ ಮಾಯೆ ಬಿಡುವುದಿಲ್ಲ, ಮಾಯೆಯು ಪೈಲ್ವಾನರನ್ನೂ ಸಹ ಚಕ್ರದಲ್ಲಿ ತರುತ್ತದೆ. ಇದರಲ್ಲಿ ಬಹದ್ದೂರರಾಗಬೇಕಾಗಿದೆ. ಇಲ್ಲಿ ಅಸತ್ಯವು ನಡೆಯುವುದಿಲ್ಲ. ಸತ್ಯವನ್ನು ತಿಳಿಸುವುದರಿಂದ ಹಗುರವಾಗಿಡುತ್ತೀರಿ. ತಂದೆಯು ಎಷ್ಟಾದರೂ ತಿಳಿಸಲಿ ಒಂದಲ್ಲ ಒಂದು ನಡೆಯುತ್ತದೆ. ಅನೇಕ ಪ್ರಕಾರದ ಮಾತುಗಳಿರುತ್ತವೆ. ಈಗ ತಂದೆಯಿಂದ ರಾಜ್ಯವನ್ನು ಪಡೆಯಬೇಕಾಗಿದೆ ಅಂದಮೇಲೆ ಬುದ್ದಿಯನ್ನು ಮತ್ತೆಲ್ಲಾ ಕಡೆಯಿಂದ ತೆಗೆಯಿರಿ ಎಂದು ತಂದೆಯು ತಿಳಿಸುತ್ತಾರೆ. ನೀವು ಮಕ್ಕಳಿಗೆ ಈಗ ಜ್ಞಾನ ಸಿಕ್ಕಿದೆ. 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ನೀವು ತಮ್ಮ ಜನ್ಮಗಳನ್ನೂ ಅರಿತುಕೊಂಡಿದ್ದೀರಿ. ಕೆಲವರದು ಉಲ್ಲ್ಟಾ-ಸುಲ್ಲ್ಟಾ ಜನ್ಮವಾಗುತ್ತದೆ. ಅದಕ್ಕೆ ಅಂಗವಿಕಲತೆಯೆಂದು ಹೇಳಲಾಗುತ್ತದೆ. ತಮ್ಮ ಕರ್ಮಗಳನುಸಾರವೇ ಹೀಗಾಗುತ್ತದೆ. ಬಾಕಿ ಮನುಷ್ಯರಂತೂ ಮನುಷ್ಯರೇ ಆಗುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮೊದಲನೆಯದಾಗಿ ಪವಿತ್ರರಾಗಿರಬೇಕು. ಎರಡನೆಯದಾಗಿ ಸುಳ್ಳು, ಪಾಪ ಮಾಡಬಾರದು ಇಲ್ಲದಿದ್ದರೆ ಬಹಳ ನಷ್ಟವುಂಟಾಗುವುದು. ನೋಡಿ, ಒಬ್ಬರಿಂದ ಸ್ವಲ್ಪ ತಪ್ಪಾಯಿತು, ಬಾಬಾ ಕ್ಷಮಿಸಿ ಇಂತಹ ಕೆಲಸವನ್ನು ಇನ್ನೆಂದೂ ಮಾಡುವುದಿಲ್ಲವೆಂದು ತಂದೆಯ ಬಳಿ ಬಂದರು. ತಂದೆಯು ತಿಳಿಸಿದರು - ಇಂತಹ ತಪ್ಪುಗಳು ಅನೇಕರಿಂದ ಆಗುವುದು, ನೀವಂತೂ ಸತ್ಯವಾಗಿ ತಿಳಿಸುವಿರಿ, ಕೆಲವರು ತಿಳಿಸುವುದೇ ಇಲ್ಲ. ಕೆಲಕೆಲವರು ಬಹಳ ಒಳ್ಳೆಯ ಮಕ್ಕಳಿದ್ದಾರೆ. ಅವರ ಬುದ್ಧಿಯು ಎಂದೂ ಎಲ್ಲಿಯೂ ಹೋಗುವುದೇ ಇಲ್ಲ. ಹೇಗೆ ಬಾಂಬೆಯಲ್ಲಿ ಡಾ:ನಿರ್ಮಲ, ನಂ.1 ಸಂಪೂರ್ಣ ಸ್ವಚ್ಛ ಹೃದಯಿ ಆಗಿದ್ದಾರೆ, ಎಂದೂ ಮನಸ್ಸಿನಲ್ಲಿ ಉಲ್ಟಾ ಸಂಕಲ್ಪವು ಬರುವುದಿಲ್ಲ. ಆದ್ದರಿಂದ ಹೃದಯವನ್ನೇರಿದ್ದಾರೆ. ಹೀಗೆ ಇನ್ನೂ ಅನೇಕ ಮಕ್ಕಳಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಕೇವಲ ಸತ್ಯ ಹೃದಯದಿಂದ ತಂದೆಯನ್ನು ನೆನಪು ಮಾಡಿ, ಕರ್ಮವನ್ನಂತೂ ಮಾಡಲೇಬೇಕಾಗಿದೆ. ಬುದ್ಧಿಯೋಗವು ತಂದೆಯೊಂದಿಗಿರಲಿ, ಕೈ ಕೆಲಸದ ಕಡೆ, ಬುದ್ಧಿಯು ತಂದೆಯ ಕಡೆ ಇರಲಿ. ಈ ಸ್ಥಿತಿಯು ಅಂತಿಮದ್ದಾಗಿದೆ. ಅದಕ್ಕಾಗಿಯೇ ಅತೀಂದ್ರಿಯ ಸುಖವನ್ನು ಗೋಪ - ಗೋಪಿಯರಿಂದ ಕೇಳಿ, ಯಾರು ಈ ಸ್ಥಿತಿಯನ್ನು ಹೊಂದುತ್ತಾರೆಂದು ಹಾಡುತ್ತಾರೆ. ಯಾರು ಪಾಪಕರ್ಮ ಮಾಡುವರೋ ಅವರದು ಈ ಸ್ಥಿತಿಯಾಗುವುದಿಲ್ಲ. ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಆದ್ದರಿಂದಲೇ ಭಕ್ತಿಮಾರ್ಗದಲ್ಲಿಯೂ ಸಹ ಒಳ್ಳೆಯ ಅಥವಾ ಕೆಟ್ಟ ಕರ್ಮಕ್ಕೆ ಫಲ ಸಿಗುತ್ತದೆ. ಕೊಡುವವರಂತೂ ತಂದೆಯಲ್ಲವೆ. ಯಾರು ಅನ್ಯರಿಗೆ ದುಃಖ ಕೊಡುವರು ಅವರು ಅವಶ್ಯವಾಗಿ ದುಃಖವನ್ನು ಅನುಭವಿಸುವರು. ಎಂತಹ ಕರ್ಮ ಮಾಡುವರೋ ಅದರಂತೆ ಅನುಭವಿಸಲೇಬೇಕಾಗುವುದು. ಇಲ್ಲಂತೂ ತಂದೆಯು ಪ್ರತ್ಯಕ್ಷವಾಗಿದ್ದಾರೆ. ತಿಳಿಸುತ್ತಿದ್ದಾರೆ - ಮಕ್ಕಳೇ, ಧರ್ಮರಾಜನೂ ನನ್ನ ಜೊತೆ ಇದ್ದಾರೆ. ಈ ಸಮಯದಲ್ಲಿ ನನ್ನೊಂದಿಗೆ ಏನನ್ನೂ ಮುಚ್ಚಿಡಬೇಡಿ. ತಂದೆಗೆ ಎಲ್ಲವೂ ಗೊತ್ತಿದೆ, ನಾವು ಶಿವ ತಂದೆಯೊಂದಿಗೆ ಆಂತರ್ಯದಲ್ಲಿ ಕ್ಷಮೆ ಕೇಳುತ್ತೇವೆ ಎಂದಲ್ಲ. ಏನೂ ಕ್ಷಮೆಯಾಗುವುದಿಲ್ಲ. ಯಾರದೇ ಪಾಪವು ಮುಚ್ಚಿಡಲ್ಪಡುವುದಿಲ್ಲ. ಪಾಪ ಮಾಡುವುದರಿಂದ ದಿನ-ಪ್ರತಿದಿನ ಪಾಪಾತ್ಮರಾಗುತ್ತಾ ಹೋಗುತ್ತೀರಿ. ಅದೃಷ್ಟದಲ್ಲಿಲ್ಲದಿದ್ದರೆ ಇದೇ ರೀತಿಯಾಗುತ್ತದೆ. ರಿಜಿಸ್ಟರ್ ಹಾಳಾಗಿ ಬಿಡುತ್ತದೆ. ಒಂದು ಬಾರಿ ಸುಳ್ಳು ಹೇಳುತ್ತಾರೆ, ಸತ್ಯವನ್ನು ತಿಳಿಸಲಿಲ್ಲವೆಂದರೆ ಇವರು ಇದೇರೀತಿ ಕೆಲಸ ಮಾಡುತ್ತಿರುತ್ತಾರೆ ಎಂದು ತಿಳಿಯಲಾಗುತ್ತದೆ. ಅಸತ್ಯವನ್ನೆಂದೂ ಮುಚ್ಚಿಡಲು ಸಾಧ್ಯವಿಲ್ಲ. ತಂದೆಯು ಮತ್ತೆ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳನೆಂದು ಹೇಳಲಾಗುತ್ತದೆ. ಆದ್ದರಿಂದ ಬಾಬಾ, ನಮ್ಮಿಂದ ಈ ದೋಷವಾಯಿತೆಂದು ಹೇಳಬೇಕಲ್ಲವೆ. ತಂದೆಯು ಕೇಳಿದಾಗ ಬಾಬಾ, ತಪ್ಪಾಯಿತು ಎಂದು ಹೇಳುತ್ತಾರೆ. ತಾವಾಗಿಯೇ ಏಕೆ ತಿಳಿಸುವುದಿಲ್ಲ? ತಂದೆಗೆ ತಿಳಿದಿದೆ. ಅನೇಕ ಮಕ್ಕಳು ಮುಚ್ಚಿಡುತ್ತಾರೆ. ತಂದೆಗೆ ತಿಳಿಸುವುದರಿಂದ ಅವರಿಂದ ಶ್ರೀಮತ ಸಿಗುವುದು. ಕೆಲವೊಂದು ಕಡೆಯಿಂದ ಪತ್ರಗಳು ಬರುತ್ತವೆ, ಅವಕ್ಕೆ ಏನು ಉತ್ತರ ನೀಡಬೇಕು ಎಂದು ಕೇಳಿರಿ. ನೀವು ತಿಳಿಸುವುದರಿಂದ ಶ್ರೀಮತವು ಸಿಗುವುದು. ಅನೇಕರಿಗೆ ಕೆಟ್ಟ ಹವ್ಯಾಸವಿದೆ. ಅದನ್ನು ಮಚ್ಚಿಡುತ್ತಾರೆ, ಕೆಲವರಿಗೆ ಲೌಕಿಕ ಮನೆಯಿಂದ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಭಲೆ ಧರಿಸಿ, ಆದರೆ ಜವಾಬ್ದಾರನು ತಂದೆಯಾದರು. ಸ್ಥಿತಿಯನ್ನು ನೋಡಿ ಕೆಲವರಿಗೆ ತಿಳಿಸುತ್ತೇನೆ - ಮಕ್ಕಳೇ, ನೀವು ಯಜ್ಞದಲ್ಲಿ ಕಳುಹಿಸಿ ನೀವು ಮನೆಯಿಂದ ಕೊಟ್ಟಿರುವ ವಸ್ತುವನ್ನು ಅದಲು-ಬದಲು ಮಾಡಿಕೊಂಡರೆ ಒಳ್ಳೆಯದು ಇಲ್ಲದಿದ್ದರೆ ಅದೇ ನೆನಪಿಗೆ ಬರುವುದು. ತಂದೆಯು ಬಹಳ ಎಚ್ಚರ ವಹಿಸುತ್ತಾರೆ. ಮಾರ್ಗವು ಬಹಳ ಉನ್ನತವಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ಸರ್ಜನ್ನ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು ಶಿಕ್ಷಣವನ್ನೇ ಕೊಡುತ್ತಾರೆ- ಮಕ್ಕಳೇ, ಹೀಗೀಗೆ ಪತ್ರ ಬರೆದರೆ ಬಾಣವು ನಾಟುತ್ತದೆ ಆದರೆ ಅನೇಕರಲ್ಲಿ ದೇಹಾಭಿಮಾನವಿದೆ. ಶ್ರೀಮತದಂತೆ ನಡೆಯದೇ ಇದ್ದರೆ ತಮ್ಮ ಖಾತೆಯನ್ನೇ ಕೆಡಿಸಿಕೊಳ್ಳುತ್ತಾರೆ. ಶ್ರೀಮತದಂತೆ ನಡೆಯುವುದರಿಂದ ಪ್ರತೀ ಮಾತಿನಲ್ಲಿ ಲಾಭವಿದೆ. ಮಾರ್ಗವು ಎಷ್ಟು ಸಹಜವಾಗಿದೆ! ಕೇವಲ ನೆನಪಿನಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ವೃದ್ಧರಿಗಾಗಿ ತಂದೆಯು ತಿಳಿಸುತ್ತಾರೆ - ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಪ್ರಜೆಗಳನ್ನು ಮಾಡಿಕೊಳ್ಳದಿದ್ದರೆ ರಾಜ-ರಾಣಿಯಾಗುವುದಕ್ಕೂ ಸಾಧ್ಯವಿಲ್ಲ. ಆದರೂ ಸಹ ಯಾರು ತಪ್ಪು ಮಾಡಿ ಮುಚ್ಚಿಡುವರೋ ಅವರಿಗಿಂತಲೂ ಶ್ರೇಷ್ಠ ಪದವಿಯನ್ನು ಪಡೆಯಬಹುದು. ತಿಳಿಸುವುದು ತಂದೆಯ ಕರ್ತವ್ಯವಾಗಿದೆ ನಂತರ ನಮಗೆ ತಿಳಿದಿರಲಿಲ್ಲವೆಂದು ಹೇಳುವಂತಾಗಬಾರದು. ಆದ್ದರಿಂದ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ, ತಪ್ಪನ್ನು ಕೂಡಲೇ ತಿಳಿಸಬೇಕು. ತಪ್ಪಾದರೂ ಪರವಾಗಿಲ್ಲ ಮತ್ತೆ ಮಾಡಬಾರದು. ಇದರಲ್ಲಿ ಹೆದರುವ ಮಾತಿಲ್ಲ. ಪ್ರೀತಿಯಿಂದ ತಿಳಿಸಲಾಗುತ್ತದೆ, ತಂದೆಗೆ ತಿಳಿಸುವುದರಲ್ಲಿ ಕಲ್ಯಾಣವಿದೆ. ತಂದೆಯು ಮುದ್ದು ಮಾಡಿ ಪ್ರೀತಿಯಿಂದ ತಿಳಿಸುತ್ತಾರೆ. ಇಲ್ಲದಿದ್ದರೆ ಒಮ್ಮೆಲೆ ಹೃದಯದಿಂದ ಬಿದ್ದು ಹೋಗುತ್ತಾರೆ. ಇವರ ಹೃದಯದಿಂದ ಬಿದ್ದರೆ ಶಿವ ತಂದೆ ಹೃದಯದಿಂದಲೂ ಬಿದ್ದರು. ನಾವು ಡೈರೆಕ್ಟ್ ಶಿವ ತಂದೆಯಿಂದ ತೆಗೆದುಕೊಳ್ಳುತ್ತೇವೆ ಎಂದಲ್ಲ, ಏನೂ ಸಾಧ್ಯವಿಲ್ಲ. ತಂದೆಯನ್ನು ನೆನಪು ಮಾಡಿ ಎಂದು ಎಷ್ಟು ತಿಳಿಸಿದರೆ ಅಷ್ಟು ಬುದ್ಧಿಯು ಇನ್ನೂ ಹೊರಗಡೆ ಅಲೆಯುತ್ತಿರುತ್ತದೆ. ಇವೆಲ್ಲಾ ಮಾತುಗಳನ್ನು ಡೈರೆಕ್ಟ್ ತಂದೆಯು ತಿಳಿಸುತ್ತಾರೆ ನಂತರದಲ್ಲಿ ಇದರ ಶಾಸ್ತ್ರಗಳಾಗುತ್ತವೆ. ಇದರಲ್ಲಿ ಗೀತೆಯೇ ಸರ್ವೋತ್ತಮ ಶಾಸ್ತ್ರವಾಗಿದೆ. ಸರ್ವಶಾಸ್ತಮಯಿ ಶಿರೋಮಣಿ ಗೀತೆಯೆಂದು ಗಾಯನವಿದೆ, ಅದನ್ನು ಭಗವಂತನು ಹಾಡಿದ್ದಾರೆ. ಉಳಿದೆಲ್ಲಾ ಧರ್ಮಗಳು ನಂತರದಲ್ಲಿ ಬರುತ್ತವೆ. ಗೀತೆಯು ಮಾತಾಪಿತಾ ಉಳಿದೆಲ್ಲರೂ ಮಕ್ಕಳಾದರು. ಗೀತೆಯಲ್ಲಿಯೇ ಭಗವಾನುವಾಚವಿದೆ. ಕೃಷ್ಣನಿಗೆ ದೈವೀ ಸಂಪ್ರದಾಯದವನೆಂದು ಹೇಳುತ್ತಾರೆ. ದೇವತೆಗಳಂತೂ ಕೇವಲ ಬ್ರಹ್ಮಾ, ವಿಷ್ಣು, ಶಂಕರನಾಗಿದ್ದಾರೆ. ಭಗವಂತನು ದೇವತೆಗಳಿಗಿಂತಲೂ ಶ್ರೇಷ್ಠರಾದರು. ಬ್ರಹ್ಮಾ-ವಿಷ್ಣು-ಶಂಕರ ಮೂವರನ್ನೂ ರಚಿಸುವವರು ಶಿವನಾದರು, ಬಹಳ ಸ್ಪಷ್ಟವಾಗಿದೆ. ಬ್ರಹ್ಮನ ಮೂಲಕ ಸ್ಥಾಪನೆ, ಕೃಷ್ಣನ ಮೂಲಕ ಸ್ಥಾಪನೆಯೆಂದು ಎಂದಿಗೂ ಹೇಳುವುದಿಲ್ಲ, ಬ್ರಹ್ಮನ ರೂಪವನ್ನು ತೋರಿಸಿದ್ದಾರೆ ಅಂದಾಗ ಯಾವುದರ ಸ್ಥಾಪನೆ? ವಿಷ್ಣು ಪುರಿಯ ಸ್ಥಾಪನೆ. ಈ ಚಿತ್ರವು ಹೃದಯದಲ್ಲಿ ಮುದ್ರಿತವಾಗಿ ಬಿಡಬೇಕು. ನಾವು ಶಿವ ತಂದೆಯಿಂದ ಇವರ ಮೂಲಕ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯಿಲ್ಲದೆ ತಾತನ ಆಸ್ತಿಯು ಸಿಗಲು ಸಾಧ್ಯವಿಲ್ಲ. ಯಾರಾದರೂ ಸಿಗಲಿ ಅವರಿಗೆ ಇದನ್ನು ತಿಳಿಸಿ - ತಂದೆಯು ತಿಳಿಸುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ, ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಗುರಿಯು ಬಹಳ ಉನ್ನತವಾಗಿದೆ ಆದ್ದರಿಂದ ಹೆಜ್ಜೆ - ಹೆಜ್ಜೆಯಲ್ಲಿ ಸರ್ಜನ್ನಿಂದ ಸಲಹೆ ತೆಗೆದುಕೊಳ್ಳಬೇಕಾಗಿದೆ. ಶ್ರೀಮತದಂತೆ ನಡೆಯುವುದರಲ್ಲಿಯೇ ಲಾಭವಿದೆ. ತಂದೆಯೊಂದಿಗೆ ಏನನ್ನೂ ಮುಚ್ಚಿಡಬಾರದು. |
2. ದೇಹ ಮತ್ತು ದೇಹಧಾರಿಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ತಂದೆಯೊಂದಿಗೆ ಇಡ ಬೇಕಾಗಿದೆ. ಕರ್ಮ ಮಾಡುತ್ತಲೂ ಒಬ್ಬ ತಂದೆಯ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. |
ಓಂ ಶಾಂತಿ. ಪ್ರಯಾಣಿಕನ ಅರ್ಥವನ್ನು ಮಕ್ಕಳು ಕೇಳಿದಿರಿ, ನೀವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಯಾರು ದೇವಿ-ದೇವತೆಗಳಾಗಿದ್ದಿರೋ ವಾಸ್ತವದಲ್ಲಿ ಮನುಷ್ಯರೇ ಆಗಿದ್ದಿರಿ ಆದರೆ ನಿಮ್ಮ ಗುಣಗಳು ಬಹಳ ಒಳ್ಳೆಯದಾಗಿತ್ತು, ನೀವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದೀರಿ, ನೀವು ವಿಶ್ವದ ಮಾಲೀಕರಾಗಿದ್ದೀರಿ. ವಜ್ರದಿಂದ ಕವಡೆಯ ತರಹ ಹೇಗಾದಿರಿ ಎಂಬುದನ್ನು ಯಾವ ಮನುಷ್ಯರೂ ತಿಳಿದುಕೊಂಡಿಲ್ಲ. ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಪರಿವರ್ತನೆಯಾಗಿದ್ದೀರಿ. ನೀವಿನ್ನೂ ದೇವತೆಗಳಾಗಿಲ್ಲ, ಬದಲಾಗುತ್ತಿದ್ದೀರಿ. ಕೆಲವರು ಸ್ವಲ್ಪ ಬದಲಾಗಿದ್ದಾರೆ, ಕೆಲವರು 5%, ಇನ್ನೂ ಕೆಲವರು 10%.... ಹೀಗೆ ಗುಣಗಳು ಬದಲಾಗುತ್ತಾ ಹೋಗುತ್ತವೆ. ಭಾರತವೇ ಸ್ವರ್ಗವಾಗಿತ್ತು ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಇದನ್ನೂ ಹೇಳುತ್ತಾರೆ - ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತದಲ್ಲಿ ದೇವಿ- ದೇವತೆಗಳಿದ್ದರು, ಅವರಲ್ಲಿ ಇಂತಹ ಗುಣಗಳಿತ್ತು ಆ ಕಾರಣದಿಂದ ಅವರಿಗೆ ಭಗವಾನ್-ಭಗವತಿ ಎಂದು ಹೇಳುತ್ತಿದ್ದರು. ಈಗಂತೂ ಆ ಗುಣಗಳಿಲ್ಲ. ಯಾವ ಭಾರತವು ಇಷ್ಟು ಸಾಹುಕಾರನಾಗಿತ್ತೋ, ಹೇಗೆ ಅದರ ಅವನತಿಯಾಯಿತು ಎಂಬುದು ಮನುಷ್ಯರಿಗೆ ಅರ್ಥವೇ ಆಗುವುದಿಲ್ಲ. ಅದನ್ನೂ ಸಹ ತಂದೆಯೇ ತಿಳಿಸುತ್ತಾರೆ. ನಿಮ್ಮಲ್ಲಿ ಯಾರ ಚಲನೆಯು ಸುಧಾರಣೆಯಾಗಿದೆಯೋ ಅವರೂ ಸಹ ತಿಳಿಸುತ್ತೀರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ದೇವಿ-ದೇವತೆಗಳಾಗಿದ್ದಿರಿ ಆತ್ಮಾಭಿಮಾನಿಯಾಗಿದ್ದಿರಿ, ನಂತರ ರಾವಣ ರಾಜ್ಯವು ಆರಂಭವಾಯಿತು ಆಗಿನಿಂದ ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ. ಈ ದೇಹಾಭಿಮಾನದ ಎಲ್ಲದಕ್ಕಿಂತ ದೊಡ್ಡ ಖಾಯಿಲೆಯು ನಿಮಗೆ ಅಂಟಿದೆ. ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಗಳಾಗಿದ್ದಿರಿ, ಬಹಳ ಸುಖಿಯಾಗಿದ್ದಿರಿ, ಯಾರು ನಿಮ್ಮನ್ನು ಈ ರೀತಿ ಮಾಡಿದರು ಎಂಬುದು ಯಾರಿಗೂ ಗೊತ್ತಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮದು ಏಕೆ ಅವನತಿಯಾಯಿತು? ತಮ್ಮ ಧರ್ಮವನ್ನು ಮರೆತು ಬಿಟ್ಟಿದ್ದೀರಿ. ಭಾರತವು ಬಹಳ ಕನಿಷ್ಟವಾಯಿತು, ಅದಕ್ಕೆ ಮೂಲ ಕಾರಣವೇನು? ದೇಹಾಭಿಮಾನ. ಡ್ರಾಮಾದಲ್ಲಿ ಇದೂ ಸಹ ಮಾಡಲ್ಪಟ್ಟಿದೆ. ಯಾವ ಭಾರತವು ಇಷ್ಟು ಸಾಹುಕಾರನಾಗಿತ್ತೋ ಅದು ಹೇಗೆ ಬಡ ದೇಶವಾಯಿತು? ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದ ನಾವು ಹೇಗೆ ಧರ್ಮ ಭ್ರಷ್ಟ, ಕರ್ಮ ಭ್ರಷ್ಟರಾದೆವು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ರಾವಣ ರಾಜ್ಯವಾದಾಗಿನಿಂದ ನೀವು ದೇಹಾಭಿಮಾನಿಗಳಾದಿರಿ ಆದ್ದರಿಂದ ನಿಮ್ಮದು ಈ ಗತಿಯಾಗತೊಡಗಿತು. ಹೇಗೆ ಅವನತಿಯಾಯಿತೆಂದು ಏಣಿಯ ಚಿತ್ರದಲ್ಲಿಯೂ ತೋರಿಸಿದ್ದಾರೆ. ಕನಿಷ್ಟರಾಗುವುದಕ್ಕೂ ಮುಖ್ಯ ಕಾರಣ ದೇಹಾಭಿಮಾನವಾಗಿದೆ. ಇದನ್ನೂ ಸಹ ತಂದೆಯು- ತಿಳಿಸುತ್ತಾರೆ, ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ಈಗಿನ ಬುದ್ಧಿವಂತರು ಕ್ರಿಶ್ಚಿಯನ್ನರಾಗಿದ್ದಾರೆ. ಅವರೂ ಸಹ ಹೇಳುತ್ತಾರೆ - ಕ್ರಿಸ್ತನಿಗೆ 3000 ವರ್ಷಗಳ ಮೊದ ಲು ಸ್ವರ್ಗವಿತ್ತು. ಪ್ರಾಚೀನ ಭಾರತವೇ ಆಗಿತ್ತು, ಯಾವುದಕ್ಕೆ ಸ್ವರ್ಗ, ಹೆವೆನ್ ಎಂದು ಹೇಳಲಾಗುತ್ತದೆ ಎಂಬುದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ. ಈಗಂತೂ ಭಾರತದ ಪೂರ್ಣ ಚರಿತ್ರೆ ಭೂಗೋಳವನ್ನು ತಿಳಿದುಕೊಂಡೇ ಇಲ್ಲ. ಕೆಲವು ಮಕ್ಕಳಲ್ಲಿ ಸ್ವಲ್ಪ ಜ್ಞಾನವಿದ್ದರೂ ಸಹ ದೇಹಾಭಿಮಾನವು ಬಂದು ಬಿಡುತ್ತದೆ. ನಮ್ಮ ಹಾಗೆ ಯಾರೂ ಇಲ್ಲವೆಂದು ತಿಳಿದುಕೊಳ್ಳುತ್ತಾರೆ. ಭಾರತದ ಇಂತಹ ದುರ್ದೆಶೆ ಏಕಾಯಿತು ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಪತಿತ - ಪಾವನ ಬನ್ನಿ, ಬಂದು ರಾಮ ರಾಜ್ಯವನ್ನು ಸ್ಥಾಪನೆ ಮಾಡಿ ಎಂದು ಬಾಪೂಜಿಯೂ ಸಹ ಹೇಳುತ್ತಿದ್ದರು. ಆತ್ಮಕ್ಕೆ ಅವಶ್ಯವಾಗಿ ತಂದೆಯಿಂದ ಎಂದಾದರೂ ಸುಖ ಸಿಕ್ಕಿದೆ, ಆದ್ದರಿಂದಲೇ ಪತಿತ-ಪಾವನನನ್ನು ನೆನಪು ಮಾಡುತ್ತಾರೆ. |
ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳು ಯಾರು ಶೂದ್ರರಿಂದ ಬ್ರಾಹ್ಮಣರಾಗುವರೋ ಅವರೂ ಸಹ ಪೂರ್ಣ ಆತ್ಮಾಭಿಮಾನಿಗಳಾಗುವುದಿಲ್ಲ. ಪದೇ-ಪದೇ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಇದು ಎಲ್ಲದಕ್ಕಿಂತ ಹಳೆಯ ರೋಗವಾಗಿದೆ. ಇದರಿಂದಲೇ ಈ ಗತಿಯುಂಟಾಗಿದೆ. ದೇಹೀ-ಅಭಿಮಾನಿಗಳಾಗುವುದರಲ್ಲಿ ಬಹಳ ಪರಿಶ್ರಮವಿದೆ. ಎಷ್ಟು ದೇಹೀ-ಅಭಿಮಾನಿಗಳಾಗುತ್ತೀರೋ ಅಷ್ಟು ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ಅಪಾರ ಖಷಿಯಿರಬೇಕು. ಗಾಯನವೂ ಇದೆ - ಪರಬ್ರಹ್ಮ್ ದಲ್ಲಿರುವ ಪರಮಾತ್ಮನನ್ನು ಪಡೆಯುವ ಇಚ್ಛೆಯಿತ್ತು, ಅವರು ಸಿಕ್ಕಿ ಬಿಟ್ಟರು, ಅವರಿಂದ 21 ಜನ್ಮಗಳ ಆಸ್ತಿಯು ಸಿಗುತ್ತದೆ ಅಂದಮೇಲೆ ಇನ್ನೇನು ಬೇಕು. ನೀವು ಕೇವಲ ದೇಹೀ - ಅಭಿಮಾನಿಯಾಗಿ, ನನ್ನೊಬ್ಬನನ್ನೇ ನೆನಪು ಮಾಡಿ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ. ಇಡೀ ಪ್ರಪಂಚವು ದೇಹಾಭಿಮಾನದಲ್ಲಿದೆ. ಯಾವ ಭಾರತವು ಇಷ್ಟು ಶ್ರೇಷ್ಠವಾಗಿತ್ತೋ ಅದರ ಅವನತಿ ಹೇಗಾಯಿತು? ಚರಿತ್ರೆ, ಭೂಗೋಳವೇನು ಎಂಬುದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ದೇವತೆಗಳು ಆತ್ಮಾಭಿಮಾನಿಗಳಾಗಿದ್ದರು. ಅವರಿಗೆ ತಿಳಿದಿತ್ತು - ಒಂದು ದೇಹವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕು ಎಂದು. ಆದರೆ ಅವರು ಪರಮಾತ್ಮಾಭಿಮಾನಿ ಆಗಿರಲಿಲ್ಲ, ಎಷ್ಟು ನೀವು ತಂದೆಯನ್ನು ನೆನಪು ಮಾಡುತ್ತೀರೋ, ದೇಹೀ ಅಭಿಮಾನಿಯಾಗಿರುತ್ತೀರೋ ಅಷ್ಟು ಮಧುರರಾಗಿರುತ್ತೀರಿ. ದೇಹಾಭಿಮಾನವು ಬಂದಾಗಲೇ ಹೊಡೆದಾಡುವುದು, ಜಗಳವಾಡುವುದು, ಕೋತಿಯ ಗುಣಗಳು ಬಂದು ಬಿಡುತ್ತವೆ. ಇದನ್ನು ತಂದೆಯು ತಿಳಿಸುತ್ತಾರೆ. ಈ ಬ್ರಹ್ಮಾ ತಂದೆಯೂ ತಿಳಿದುಕೊಳ್ಳುತ್ತಿದ್ದಾರೆ. ಮಕ್ಕಳು ದೇಹಾಭಿಮಾನದಲ್ಲಿ ಬಂದು ಶಿವ ತಂದೆಯನ್ನು ಮರೆತು ಹೋಗುತ್ತಾರೆ. ಒಳ್ಳೊಳ್ಳೆಯ ಮಕ್ಕಳು ದೇಹಾಭಿಮಾನದಲ್ಲಿರುತ್ತಾರೆ, ದೇಹೀ-ಅಭಿಮಾನಿಗಳಾಗುವುದೇ ಇಲ್ಲ. ನೀವು ಯಾರಿಗೇ ಬೇಕಾದರೂ ಈ ಬೇಹದ್ದಿನ ಚರಿತ್ರೆ- ಭೂಗೋಳವನ್ನು ತಿಳಿಸಬಲ್ಲಿರಿ. ಅವಶ್ಯವಾಗಿ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯಿತ್ತು, ಡ್ರಾಮಾದ ಬಗ್ಗೆ ಯಾರಿಗೂ ತಿಳಿದಿಲ್ಲ. ಯಾವ ಭಾರತವು ಇಷ್ಟೊಂದು ಕೆಳಗಿಳಿಯಿತೋ ಅವನತಿಯಾಯಿತೋ ಅದಕ್ಕೆ ಮೂಲವು ದೇಹಾಭಿಮಾನವಾಗಿದೆ. ಮಕ್ಕಳಲ್ಲಿಯೂ ದೇಹಾಭಿಮಾನ ಬಂದು ಬಿಡುತ್ತದೆ. ನಮಗೆ ಯಾರು ಆದೇಶ ನೀಡುತ್ತಾರೆ ಎಂಬುದೂ ಸಹ ತಿಳಿದುಕೊಳ್ಳುವುದಿಲ್ಲ. ಯಾವಾಗಲೂ ಶಿವ ತಂದೆಯು ಹೇಳುತ್ತಾರೆಂದೇ ತಿಳಿಯಿರಿ. ಶಿವ ತಂದೆಯನ್ನು ನೆನಪು ಮಾಡದೇ ಇರುವುದರಿಂದಲೇ ದೇಹಾಭಿಮಾನಿದಲ್ಲಿ ಬಂದು ಬಿಡುತ್ತಾರೆ. ಇಡೀ ಪ್ರಪಂಚವು ದೇಹಾಭಿಮಾನಿ ಆಗಿ ಬಿಟ್ಟಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ತಮ್ಮನ್ನು ಆತ್ಮನೆಂದು ತಿಳಿಯಿರಿ. ಆತ್ಮವು ಈ ದೇಹದ ಮೂಲಕ ಕೇಳಿಸಿಕೊಳ್ಳುತ್ತದೆ, ಪಾತ್ರವನ್ನಭಿನಯಿಸುತ್ತದೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಭಲೆ ಭಾಷಣವನ್ನಂತೂ ಬಹಳ ಚೆನ್ನಾಗಿ ಮಾಡಿ ಬಿಡುತ್ತಾರೆ. ಆದರೆ ಚಲನೆಯೂ ಸಹ ಚೆನ್ನಾಗಿರಬೇಕಲ್ಲವೆ, ದೇಹಾಭಿಮಾನ ಇರುವ ಕಾರಣ ಅನುತ್ತೀರ್ಣರಾಗಿ ಬಿಡುತ್ತಾರೆ. ಆ ಖುಷಿ ಅಥವಾ ನಶೆಯಿರುವುದಿಲ್ಲ ಮತ್ತೆ ಅವರಿಂದ ದೊಡ್ಡ ವಿಕರ್ಮಗಳೂ ಆಗುತ್ತವೆ. ಯಾವ ಕಾರಣ ಬಹಳ ದೊಡ್ಡ ಶಿಕ್ಷೆಗೆ ಭಾಗಿಗಳಾಗಿ ಬಿಡುತ್ತಾರೆ. ದೇಹಾಭಿಮಾನಿಗಳಾಗುವುದರಿಂದ ಬಹಳ ನಷ್ಟ ಹೊಂದುತ್ತಾರೆ. ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ಇದು ಈಶ್ವರೀಯ ಸರ್ಕಾರವಲ್ಲವೆ. ಪರಮಾತ್ಮನಾದ ನನ್ನ ಸರ್ಕಾರದ ಬಲ ಭುಜವು ಧರ್ಮ ರಾಜನಾಗಿದ್ದಾರೆ. ನೀವು ಒಳ್ಳೆಯ ಕರ್ಮ ಮಾಡುತ್ತೀರೆಂದರೆ ಅದಕ್ಕೆ ಒಳ್ಳೆಯ ಫಲ ಸಿಗುತ್ತದೆ. ಕೆಟ್ಟ ಕರ್ಮ ಮಾಡಿದರೆ ಅದರ ಶಿಕ್ಷೆಯನ್ನನುಭವಿಸುತ್ತೀರಿ. ಎಲ್ಲರೂ ಗರ್ಭ ಜೈಲಿನಲ್ಲಿಯೂ ಶಿಕ್ಷೆಗಳನ್ನನುಭವಿಸುತ್ತಾರೆ. ಅದರ ಮೇಲೆ ಒಂದು ಕಥೆಯೂ ಇದೆ. ಇವೆಲ್ಲಾ ಮಾತುಗಳು ಈ ಸಮಯದ್ದಾಗಿದೆ. ಮಹಿಮೆಯೂ ಸಹ ಒಬ್ಬ ತಂದೆಯದಾಗಿದೆ. ಮತ್ತ್ಯಾರಿಗೂ ಮಹಿಮೆಯಿಲ್ಲ. ಆದ್ದರಿಂದ ಬರೆಯಲಾಗುತ್ತದೆ - ತ್ರಿಮೂರ್ತಿ ಶಿವ ಜಯಂತಿಯು ವಜ್ರ ಸಮಾನವಾಗಿ ಉಳಿದೆಲ್ಲವೂ ಕವಡೆಯ ಸಮಾನವಾಗಿದೆ. ಶಿವ ತಂದೆಯ ವಿನಃ ಮತ್ತ್ಯಾರೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಪಾವನರಾಗುತ್ತೀರಿ ಮತ್ತೆ ರಾವಣನು ಪತಿತರನ್ನಾಗಿ ಮಾಡುತ್ತಾನೆ, ಆ ಕಾರಣದಿಂದ ಎಲ್ಲರೂ ದೇಹಾಭಿಮಾನಿಗಳಾಗಿ ಬಿಟ್ಟಿದ್ದಾರೆ. ನೀವೀಗ ದೇಹಿ-ಅಭಿಮಾನಿಗಳಾಗುತ್ತೀರಿ. ಈ ದೇಹೀ-ಅಭಿಮಾನಿ ಸ್ಥಿತಿಯು 21 ಜನ್ಮಗಳವರೆಗೆ ನಡೆಯುತ್ತದೆ. ಆದ್ದರಿಂದ ಒಬ್ಬ ತಂದೆಯದು ಬಲಿಹಾರಿಯೆಂದು ಗಾಯನವಿದೆ. ಭಾರತವನ್ನು ಸ್ವರ್ಗವನ್ನಾಗಿ ಮಾಡುವವರು ಶಿವ ತಂದೆ ಆಗಿದ್ದಾರೆ. ಅವರು ಯಾವಾಗ ಬಂದರು ಎಂಬುದು ಯಾರಿಗೂ ತಿಳಿದಿಲ್ಲ. ಅವರ ಚರಿತ್ರೆಯಂತೂ ಮೊಟ್ಟ ಮೊದಲು ಇರಬೇಕು. ಪರಮಪಿತ ಪರಮಾತ್ಮನಿಗೇ ಶಿವನೆಂದು ಹೇಳಲಾಗುತ್ತದೆ. |
ನೀವು ತಿಳಿದುಕೊಂಡಿದ್ದೀರಿ, ದೇಹಾಭಿಮಾನದ ಕಾರಣವೇ ಅವನತಿಯಾಗುತ್ತದೆ. ಈ ರೀತಿಯಾದಾಗಲೇ ಮತ್ತೆ ಉನ್ನತಿಯಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಉತ್ಥಾನ ಮತ್ತು ಪಥನ, ದಿನ ಮತ್ತು ರಾತ್ರಿ, ಜ್ಞಾನ ಸೂರ್ಯ ಪ್ರಕಟ ಅಜ್ಞಾನ ಅಂಧಕಾರ ವಿನಾಶ. ಎಲ್ಲದಕ್ಕಿಂತ ಹೆಚ್ಚು ಅಜ್ಞಾನವು ಈ ದೇಹಾಭಿಮಾನವಾಗಿದೆ. ಆತ್ಮದ ಬಗ್ಗೆ ಯಾರಿಗೂ ಗೊತ್ತಿಲ್ಲ ಆತ್ಮವೇ ಪರಮಾತ್ಮನೆಂದು ಹೇಳಬಡುತ್ತಾರೆ ಅಂದಾಗ ಎಷ್ಟು ಪಾಪಾತ್ಮರಾಗಿ ಬಿಟ್ಟಿದ್ದಾರೆ! ಆದ್ದರಿಂದಲೇ ಪಥನವಾಗಿದೆ. 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಏಣಿಯನ್ನು ಕೆಳಗಿಳಿಯುತ್ತಾ ಬಂದಿದ್ದೀರಿ. ಈ ಆಟವು ಮಾಡಲ್ಪಟ್ಟಿದೆ. ವಿಶ್ವದ ಈ ಚರಿತ್ರೆ-ಭೂಗೋಳವನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ವಿಶ್ವದ ಅವನತಿ ಹೇಗಾಯಿತು? ವಿಜ್ಞಾನದಿಂದ ಬಹಳಷ್ಟು ಅನ್ವೇಷಣೆ ಆಗಿದೆಯೆಂದು ಅವರು ತಿಳಿಯುತ್ತಾರೆ. ಆದರೆ ಪ್ರಪಂಚವು ಇನ್ನೂ ಪತಿತ, ನರಕವಾಗಿ ಬಿಟ್ಟಿದೆ. ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ದೇಹಾಭಿಮಾನವು ಬಹಳ ಇದೆ, ತಂದೆಯು ತಿಳಿಸುತ್ತಾರೆ - ನೀವೀಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಒಳ್ಳೊಳ್ಳೆಯ ಮಹಾರಥಿಗಳು ಅನೇಕರಿದ್ದಾರೆ, ಬಹಳ ಚೆನ್ನಾಗಿ ಜ್ಞಾನವನ್ನು ತಿಳಿಸುತ್ತಾರೆ ಆದರೆ ದೇಹಾಭಿಮಾನವು ಕಳೆದಿಲ್ಲ. ದೇಹಾಭಿಮಾನದ ಕಾರಣ ಕೆಲವರಲ್ಲಿ ಕ್ರೋಧದ ಅಂಶ, ಕೆಲವರಲ್ಲಿ ಮೋಹದ ಅಂಶ ಒಂದಲ್ಲ ಒಂದು ಇರುತ್ತದೆ. ಗುಣಗಳನ್ನು ಸುಧಾರಣೆ ಮಾಡಿಕೊಳ್ಳಬೇಕಲ್ಲವೆ. ಬಹಳ-ಬಹಳ ಮಧುರರಾಗಬೇಕು ಆದ್ದರಿಂದಲೇ ಸತ್ಯಯುಗದಲ್ಲಿ ಹಸು-ಹುಲಿ ಒಂದೇ ಕಡೆ ನೀರು ಕುಡಿಯುತ್ತವೆ ಎಂದು ಉದಾಹರಣೆ ಕೊಡುತ್ತಾರೆ. ಅಲ್ಲಿ ಇಂತಹ ದುಃಖ ಕೊಡುವ ಪ್ರಾಣಿಗಳು ಇರುವುದೇ ಇಲ್ಲ. ಈ ಮಾತುಗಳನ್ನು ಕೆಲವರೇ ತಿಳಿದುಕೊಳ್ಳುತ್ತಾರೆ. ತಿಳಿದುಕೊಳ್ಳುವವರು ನಂಬರ್ವಾರ್ ಇದ್ದಾರೆ. ಕರ್ಮ ಭೋಗವು ಕಳೆದು ಕರ್ಮಾತೀತ ಸ್ಥಿತಿಯಾಗುವುದು ಪರಿಶ್ರಮವಿದೆ. ಬಹಳ ದೇಹಾಭಿಮಾನದಲ್ಲಿ ಬರುತ್ತಾರೆ, ನಮಗೆ ಈ ಮತವನ್ನು ಯಾರು ಕೊಡುತ್ತಾರೆ. ಶ್ರೀಮತವು ಶ್ರೀ ಕೃಷ್ಣನ ಮೂಲಕ ಹೇಗೆ ಸಿಗುತ್ತದೆ ಎಂಬುದೇ ಅರ್ಥವಾಗುವುದಿಲ್ಲ. ಶಿವ ತಂದೆಯು ತಿಳಿಸುತ್ತಾರೆ - ನಾನು ಈ ಬ್ರಹ್ಮನಿಲ್ಲದೆ ಶ್ರೀಮತವನ್ನು ಹೇಗೆ ಕೊಡಲಿ? ನನ್ನ ಶಾಶ್ವತ ರಥವು ಇವರಾಗಿದ್ದಾರೆ, ಅಂದಾಗ ದೇಹಾಭಿಮಾನದಲ್ಲಿ ಬಂದು ಉಲ್ಟಾ-ಸುಲ್ಟಾ ಕಾರ್ಯಗಳನ್ನು ಮಾಡಿ ಸುಮ್ಮನೆ ತಮಗೆ ನಷ್ಟ ಮಾಡಿಕೊಳ್ಳಬೇಡಿ. ಹಾಗಿದ್ದರೆ ಗತಿಯೇನಾಗುವುದು! ಬಹಳ ಕಡಿಮೆ ಪದವಿ ಪಡೆಯುತ್ತೀರಿ. ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆ ಬಾಗುತ್ತಾರೆ. ಭಾರತದ ಚರಿತ್ರೆ-ಭೂಗೋಳ ಯಾವುದು ಪೂರ್ಣ ಇರಬೇಕೋ ಅದು ಇಲ್ಲವೆಂದು ಅನೇಕರು ಹೇಳುತ್ತಾರೆ ಆಗ ಅವರಿಗೆ ತಿಳಿಸಬೇಕಾಗಿದೆ. ನಿಮ್ಮ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ ಆದರೆ ದೇಹಿ-ಅಭಿಮಾನಿ ಸ್ಥಿತಿಯು ಬೇಕು. ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗಂತು ಯಾರದೂ ಕರ್ಮಾತೀತ ಸ್ಥಿತಿಯಾಗಿಲ್ಲ. ಇವರಿಗಂತೂ (ಬ್ರಹ್ಮಾ) ಬಹಳ ಜಂಜಾಟವಿದೆ. ಎಷ್ಟೊಂದು ಚಿಂತೆಯಿರುತ್ತದೆ. ಎಲ್ಲವೂ ಡ್ರಾಮಾನುಸಾರ ಆಗುತ್ತದೆಯೆಂದು ಭಲೆ ತಿಳಿದುಕೊಳ್ಳುತ್ತಾರೆ. ಆದರೂ ಸಹ ತಿಳಿಸುವುದಕ್ಕಾಗಿ ಯುಕ್ತಿಗಳನ್ನು ರಚಿಸಬೇಕಲ್ಲವೆ. ಆದ್ದರಿಂದ ಈ ತಂದೆಯು ಹೇಳುತ್ತಾರೆ - ನನಗಿಂತಲೂ ನೀವು ಹೆಚ್ಚು ದೇಹಿ-ಅಭಿಮಾನಿಗಳಾಗಬಹುದು, ನಿಮಗೆ ಯಾವುದೇ ಹೊರೆಯಿಲ್ಲ. ತಂದೆಯ ಮೇಲಂತೂ ಬಹಳ ಹೊರೆಯಿದೆ, ಈ ಪ್ರಜಾಪಿತ ಬ್ರಹ್ಮನೇ ಮುಖ್ಯಸ್ಥರಲ್ಲವೆ. ಆದರೆ ಇವರಲ್ಲಿ ಶಿವ ತಂದೆಯು ಕುಳಿತಿದ್ದಾರೆ ಎಂಬುದು ಯಾರಿಗೂ ಗೊತ್ತಿಲ್ಲ, ನಿಮ್ಮಲ್ಲಿಯೂ ಸಹ ಕೆಲವರೇ ಈ ನಿಶ್ಚಯದಲ್ಲಿರುತ್ತಾರೆ. ಅಂದಮೇಲೆ ವಿಶ್ವದ ಈ ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳಬೇಕಲ್ಲವೆ. ಭಾರತದಲ್ಲಿ ಸ್ವರ್ಗವು ಯಾವಾಗ ಇತ್ತು, ಮತ್ತೆ ಎಲ್ಲಿ ಹೋಯಿತು? ಹೇಗೆ ಪಥನವಾಯಿತು? ಇದು ಯಾರಿಗೂ ತಿಳಿದಿಲ್ಲ. ಎಲ್ಲಿಯವರೆಗೆ ನೀವು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಯಾರಿಗೂ ಅರ್ಥವಾಗುವುದಿಲ್ಲ, ಆದ್ದರಿಂದ ತಂದೆಯು ಆದೇಶ ನೀಡುತ್ತಾರೆ. ಶಾಲೆಗಳಲ್ಲಿಯೂ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಬೇಕು ಅವನತಿಯನ್ನು ಕುರಿತು ಭಾಷಣ ಮಾಡಬೇಕು. ಭಾರತವು ವಜ್ರ ಸಮಾನವಾಗಿತ್ತು, ಅದು ಹೇಗೆ ಕವಡೆಯಂತೆ ಆಯಿತು? ಎಷ್ಟು ವರ್ಷಗಳು ಹಿಡಿಸಿತು? ಎಂಬುದನ್ನು ನಾವು ತಿಳಿಸುತ್ತೇವೆ. ಹೀಗೆ ಬಿತ್ತಿ ಪತ್ರಗಳನ್ನು ವಿಮಾನಗಳಿಂದ ನೀವು ಹಾಕಿಸಬಹುದು. ತಿಳಿಸುವವರು ಬಹಳ ಬುದ್ದಿವಂತರಿರಬೇಕು. ಸರ್ಕಾರವು ಒಪ್ಪಿದರೆ ಸರ್ಕಾರದ ದೆಹಲಿಯಲ್ಲಿರುವ ವಿಜ್ಞಾನ ಭವನದಲ್ಲಿ ಎಲ್ಲರಿಗೆ ನಿಮಂತ್ರಣ ನೀಡಿ ಕರೆಸಬೇಕು. ಅದು ಪತ್ರಿಕೆಗಳಲ್ಲಿಯೂ ಬರಲಿ. ಎಲ್ಲರಿಗೆ ಕಾರ್ಡುಗಳನ್ನು ಕಳುಹಿಸಿ - ನಾವು ತಮಗೆ ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ಆದಿಯಿಂದ ಅಂತ್ಯದವರೆಗೆ ತಿಳಿಸುತ್ತೇವೆ. ಅವರು ತಾವಾಗಿಯೇ ಬರುತ್ತಾರೆ, ಹೋಗುತ್ತಾರೆಹಣದ ಮಾತೇ ಇಲ್ಲ. ತಿಳಿದುಕೊಳ್ಳಿ - ನಮಗೆ ಯಾರಾದರೂ ಸಿಕ್ಕಿದರೆ ಉಡುಗೊರೆ ಕೊಟ್ಟರೆ ನಾವು ತೆಗೆದುಕೊಳ್ಳುವುದಿಲ್ಲ. ಸರ್ವಿಸ್ ಮಾಡುವುದಕ್ಕಾಗಿ ಅದನ್ನು ಉಪಯೋಗಿಸುತ್ತೇವೆ ಬಾಕಿ ನಾವು ತೆಗೆದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮಿಂದ ದಾನವನ್ನು ತೆಗೆದುಕೊಂಡು ಏನು ಮಾಡಲಿ ಏಕೆಂದರೆ ನಾನು ಮತ್ತೆ ಅದಕ್ಕೆ ತುಂಬಿ ಕೊಡಬೇಕಾಗುತ್ತದೆ. ನಾನು ಪಕ್ಕಾ ಅಕ್ಕಸಾಲಿಗನಾಗಿದ್ದೇನೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ದೇಹಾಭಿಮಾನದಲ್ಲಿ ಬಂದು ಯಾವುದೇ ಉಲ್ಟಾ-ಸುಲ್ಟಾ ಕಾರ್ಯ ಮಾಡಬಾರದು. ದೇಹಿ ಅಭಿಮಾನಿಗಳಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಚಲನೆಯನ್ನು ಸುಧಾರಣೆ ಮಾಡಿಕೊಳ್ಳುತ್ತಾ ಇರಬೇಕಾಗಿದೆ. |
2. ಬಹಳ-ಬಹಳ ಮಧುರ ಶೀತಲರಾಗಬೇಕಾಗಿದೆ. ಒಳಗೆ ಕ್ರೋಧ, ಮೋಹದ ಯಾವ ಭೂತವಿದೆಯೋ ಅದನ್ನು ತೆಗೆದು ಹಾಕಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯಿಂದ ಈಗ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು. ಮಕ್ಕಳು ಹೇಳುತ್ತೀರಿ - ಬಾಬಾ, ತಮ್ಮ ಶ್ರೀಮತದನುಸಾರ ನಾವು ಪುನಃ ತಮ್ಮಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಇದು ಹೊಸ ಮಾತಲ್ಲ. ಮಕ್ಕಳಿಗೆ ಜ್ಞಾನ ಸಿಕ್ಕಿದೆ ಮತ್ತು ತಿಳಿದುಕೊಂಡಿದ್ದೀರಿ ನಾವು ಕಲ್ಪ-ಕಲ್ಪವೂ ಸುಖಧಾಮದ ಆಸ್ತಿಯನ್ನು ಕಲ್ಪ-ಕಲ್ಪವೂ ಪಡೆಯುತ್ತಾ ಇರುತ್ತೇವೆ. ಕಲ್ಪ-ಕಲ್ಪವೂ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಅವಶ್ಯವಾಗಿ ನಾವು ಬೇಹದ್ದಿನ ತಂದೆಯ ಮೂಲಕ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೇವೆ ಮತ್ತೆ ನಿಧಾನ-ನಿಧಾನವಾಗಿ ಕಳೆದುಕೊಳ್ಳುತ್ತೇವೆ. ತಂದೆಯು ತಿಳಿಸಿದ್ದಾರೆ - ಇದು ಅನಾದಿ ಮಾಡಿ-ಮಾಡಲ್ಪಟ್ಟ ಆಟವಾಗಿದೆ. ನೀವು ಮಕ್ಕಳಿಗಾಗಿ ಇದು ಬಹಳ ಒಳ್ಳೆಯದಾಗಿದೆ. ಇದನ್ನೂ ತಿಳಿದುಕೊಂಡಿದ್ದೀರಿ - ಡ್ರಾಮಾದಲ್ಲಿ ಬಹಳಷ್ಟು ಸುಖವಿದೆ. ಅಂತಿಮದಲ್ಲಿ ಬಂದು ರಾವಣನ ಮೂಲಕ ದುಃಖವನ್ನು ಪಡೆಯುತ್ತೀರಿ. ಈಗಿನ್ನೂ ನೀವು ಕೆಲವರೇ ಇದ್ದೀರಿ. ಮುಂದೆ ಹೋದಂತೆ ಬಹಳ ವೃದ್ಧಿಯಾಗುತ್ತಾ ಹೋಗುವುದು. ಮನುಷ್ಯರಿಂದ ದೇವತೆಗಳಾಗುತ್ತೀರಿ. ಅವಶ್ಯವಾಗಿ ಹೃದಯದಲ್ಲಿ ಇದನ್ನು ತಿಳಿದುಕೊಳ್ಳುವಿರಿ - ನಾವು ಕಲ್ಪ-ಕಲ್ಪವೂ ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ಯಾರು ಯಾರು ಬಂದು ಜ್ಞಾನವನ್ನು ತೆಗೆದುಕೊಳ್ಳುವರೋ ಅವರು ತಿಳಿದುಕೊಳ್ಳುತ್ತಾರೆ - ಈಗ ಜ್ಞಾನ ಸಾಗರ ತಂದೆಯ ಮೂಲಕ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಪಡೆದಿದ್ದೇವೆ. ತಂದೆಯು ಜ್ಞಾನ ಸಾಗರ, ಪತಿತರನ್ನು ಪಾವನ ಮಾಡುವವರಾಗಿದ್ದಾರೆ ಅರ್ಥಾತ್ ಮುಕ್ತಿ-ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ. ಇದನ್ನೂ ಸಹ ನೀವು ಈಗಲೇ ತಿಳಿದುಕೊಂಡಿದ್ದೀರಿ. ಅನೇಕರು ಗುರುಗಳನ್ನು ಮಾಡಿಕೊಂಡಿದ್ದಾರಲ್ಲವೆ. ಕೊನೆಗೆ ಗುರುಗಳನ್ನೂ ಸಹ ಬಿಟ್ಟು ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ನಿಮಗೂ ಸಹ ಈ ಜ್ಞಾನ ಈಗ ಸಿಕ್ಕಿದೆ. ನೀವು ತಿಳಿದುಕೊಂಡಿದ್ದೀರಿ - ಇದಕ್ಕಿಂತ ಮೊದಲು ಅಜ್ಞಾನಿಗಳಾಗಿದ್ದೆವು, ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ? ಶಿವ ತಂದೆ, ಬ್ರಹ್ಮಾ-ವಿಷ್ಣು-ಶಂಕರ ಯಾರೆಂಬುದನ್ನೂ ತಿಳಿದುಕೊಂಡಿರಲಿಲ್ಲ. ನಾವೇ ವಿಶ್ವದ ಮಾಲೀಕರಾಗಿದ್ದೆವು ಎಂದು ಈಗ ಅರ್ಥವಾಗಿದೆ. ಅಂದಮೇಲೆ ನಿಮ್ಮ ಬುದ್ದಿಯಲ್ಲಿ ಬಹಳ ಒಳ್ಳೆಯ ನಶೆಯಿರಬೇಕು. ತಂದೆ ಮತ್ತು ಸೃಷ್ಟಿಚಕ್ರವನ್ನು ನೆನಪು ಮಾಡುತ್ತಿರಬೇಕು. ತಂದೆ ಮತ್ತು ಆಸ್ತಿ. ತಂದೆಯು ತಿಳಿಸುತ್ತಾರೆ - ಇದಕ್ಕಿಂತ ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ತಂದೆಯನ್ನಾಗಲಿ, ಅವರ ರಚನೆಯನ್ನಾಗಲಿ ಅರಿತುಕೊಂಡಿರಲಿಲ್ಲ. ಇಡೀ ಸೃಷ್ಟಿಯ ಮನುಷ್ಯ ಮಾತ್ರರು ತಂದೆಯನ್ನು, ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ. ನೀವೀಗ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ, ತಂದೆಯು ಎಲ್ಲಾ ಮಕ್ಕಳೊಂದಿಗೆ ಮಾತನಾಡುತ್ತಿದ್ದಾರೆ. ಎಷ್ಟೊಂದುಮಂದಿ ಮಕ್ಕಳಿದ್ದಾರೆ! ಎಷ್ಟೊಂದು ಸೇವಾಕೇಂದ್ರಗಳಿವೆ. ಇನ್ನೂ ಸೇವಾಕೇಂದ್ರಗಳು - ತೆರೆಯಲ್ಪಡುತ್ತವೆ ಅಂದಾಗ ತಂದೆಯು ತಿಳಿಸುತ್ತಾರೆ - ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ಈಗ ನಂಬರ್ ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ನಾವೀಗ ತಂದೆಯ ಮೂಲಕ ಪತಿತರಿಂದ ಪಾವನರಾಗುತ್ತಿದ್ದೇವೆ ಎಂಬುದನ್ನೂ ತಿಳಿದುಕೊಂಡಿದ್ದೀರಿ. ಉಳಿದವರೆಲ್ಲರೂ ಕೂಗುತ್ತಿರುತ್ತಾರೆ. ನೀವು ಗುಪ್ತವಾಗಿದ್ದೀರಿ, ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳುತ್ತಾರೆ ಆದರೆ ಇವರಿಗೆ ಓದಿಸುವವರು ಯಾರು ಎಂಬುದನ್ನು ಅರಿತುಕೊಂಡಿಲ್ಲ. ಇದನ್ನು ಶಾಸ್ತ್ರಗಳಲ್ಲಿಯೂ ಬರೆದಿಲ್ಲ. ಗೀತೆಯ ಭಗವಂತ ಶಿವನೇ ಬಂದು ಮಕ್ಕಳಿಗೆ ರಾಜಯೋಗವನ್ನು ಕಲಿಸಿದ್ದಾರೆ. ಇದು ನಿಮ್ಮ ಬುದ್ಧಿಯಲ್ಲಿ ಬರುತ್ತದೆಯಲ್ಲವೆ. ಗೀತೆಯನ್ನು ನೀವು ಓದಿರುತ್ತೀರಿ, ಈಗ ನಿಮಗೆ ತಿಳಿದಿದೆ – ಜ್ಞಾನ ಮಾರ್ಗವೇ ಬೇರೆಯಾಗಿದೆ. ವಿದ್ವತ್ ಮಂಡಳಿಯಿಂದ ಯಾರು ಶಾಸ್ತ್ರ ಇತ್ಯಾದಿಗಳನ್ನು ಓದಿ ಬಿರುದು ತೆಗೆದುಕೊಳ್ಳುವರೋ ಅವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಈ ಜ್ಞಾನವು ಅವರಲಿಲ್ಲ. ತಂದೆಯೇ ಬಂದು ಈ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ತಂದೆಯೇ ನಿಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ. |
ನೀವು ತಿಳಿದುಕೊಂಡಿದ್ದೀರಿ - ಮೊದಲು ನಾವು ಹೇಗಿದ್ದೆವು, ಈಗ ಏನಾಗಿದ್ದೇವೆ. ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವು ಬಂದು ಬಿಟ್ಟಿದೆ. ಆರಂಭದಲ್ಲಿ ಇದನ್ನು ತಿಳಿದುಕೊಂಡಿರಲಿಲ್ಲ. ದಿನ-ಪ್ರತಿದಿನ ಜ್ಞಾನದ ಮೂರನೇಯ ನೇತ್ರವು ಚೆನ್ನಾಗಿ ತೆರೆಯುತ್ತಾ ಹೋಗುತ್ತದೆ. ಭಗವಂತನು ಯಾವಾಗ ಬಂದರು, ಅವರು ಯಾರಾಗಿದ್ದರು, ಯಾರು ಬಂದು ಗೀತಾ ಜ್ಞಾನವನ್ನು ತಿಳಿಸಿದರು ಎಂಬುದು ಯಾರಿಗೂ ಗೊತ್ತಿಲ್ಲ. ನೀವು ಮಕ್ಕಳು ಅರಿತುಕೊಂಡಿದ್ದೀರಿ. ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವಿದೆ, ಯಾವಾಗಿನಿಂದ ನಾವು ಸೋಲನ್ನನುಭವಿಸುತ್ತೇವೆ ಮತ್ತು ಹೇಗೆ ವಾಮಮಾರ್ಗದಲ್ಲಿ ಹೋಗುತ್ತೇವೆ, ಹೇಗೆ ಕೆಳಗಿಳಿಯುತ್ತೇವೆ ಎಂದು. ಚಿತ್ರದಲ್ಲಿ ಇದನ್ನು ಎಷ್ಟು ಸಹಜವಾಗಿ ತಿಳಿಸಿದ್ದಾರೆ! ಇದು 84 ಜನ್ಮಗಳ ಏಣಿಯಾಗಿದೆ. ಹೇಗೆ ಇಳಿಯುತ್ತಾರೆ ಮತ್ತೆ ಹತ್ತುತ್ತಾರೆ, ಪತಿತ-ಪಾವನ ಯಾರು? ಪತಿತರನ್ನಾಗಿ ಯಾರು ಮಾಡಿದರು? ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಅವರಂತೂ ಪತಿತ- ಪಾವನ ಎಂದು ಕೇವಲ ಹಾಡುತ್ತಿರುತ್ತಾರೆ ಆದರೆ ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ, ಯಾವಾಗಿನಿಂದ ಪತಿತರಾದೆವು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಈ ಜ್ಞಾನವು ಆದಿ ಸನಾತನ ದೇವಿ-ದೇವತಾ ಧರ್ಮದವರಿಗಾಗಿಯೇ ಇದೆ. ತಂದೆಯು ತಿಳಿಸುತ್ತಾರೆ - ನಾನೇ ಆದಿ ಸನಾತನ ದೇವಿ-ದೇವತಾ ಧರ್ಮ ಸ್ಥಾಪನೆ ಮಾಡಿದ್ದೇನೆ, ಈ ವಿಶ್ವದ ಚರಿತ್ರೆ, ಭೂಗೋಳವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನಿಮಗೆ ಇದೊಂದು ಕಥೆಯಾಗಿದೆ - ಹೇಗೆ ರಾಜ್ಯವನ್ನು ಪಡೆಯುತ್ತೇವೆ, ಹೇಗೆ ಕಳೆದುಕೊಳ್ಳುತ್ತೇವೆ. ಆ ಚರಿತ್ರೆ, ಭೂಗೋಳವನ್ನು ನಾವು ಓದುತ್ತೇವೆ. ಇದು ಬೇಹದ್ದಿನ ಮಾತಾಗಿದೆ. ನಾವು 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತುತ್ತೇವೆ, ನಾವೇ ವಿಶ್ವದ ಮಾಲೀಕರಾಗಿದ್ದೆವು, ನಂತರ ರಾವಣನು ರಾಜ್ಯವನ್ನು ಕಸಿದುಕೊಂಡನು, ಈ ಜ್ಞಾನವನ್ನು ತಂದೆಯೇ ಕೊಟ್ಟಿದ್ದಾರೆ. ಮನುಷ್ಯರು ದಸರಾ ಇತ್ಯಾದಿ ಹಬ್ಬಗಳನ್ನು ಆಚರಿಸುತ್ತಾರೆ ಆದರೆ ಸ್ವಲ್ಪವೂ ಜ್ಞಾನವಿಲ್ಲ. ಹೇಗೆ ನಿಮಗೂ ಸಹ ಈ ಜ್ಞಾನವಿರಲಿಲ್ಲ, ಈಗ ಜ್ಞಾನವು ಸಿಗುತ್ತಿದೆ. ಆದ್ದರಿಂದ ನೀವು ಖುಷಿಯಲ್ಲಿರುತ್ತೀರಿ. ಜ್ಞಾನವು ಖುಷಿ ಕೊಡುತ್ತದೆ. ಬೇಹದ್ದಿನ ಜ್ಞಾನವು ಬುದ್ಧಿಯಲ್ಲಿದೆ. ತಂದೆಯು ನಿಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ. ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರಲ್ಲವೆ. ಯಾರಿಗೆ ಹೇಳುತ್ತಾರೆ? ಸಾಧು-ಸಂತ ಮೊದಲಾದವರಿಗೆ ಹೇಳುವುದಿಲ್ಲ. ಶಿವನಿಗೇ ಭೋಲಾನಾಥನೆಂದು ಹೇಳುತ್ತಾರೆ. ಅವರಿಂದಲೇ ಭಿಕ್ಷೆಯನ್ನು ಬೇಡುತ್ತಾರೆ. ಈಗ ನಿಮ್ಮ ಖುಷಿಗೆ ಪಾರವೇ ಇಲ್ಲ. ನಿಮಗೆ ಬಹಳ ಖುಷಿಯಿರಬೇಕು ಬುದ್ಧಿಯಲ್ಲಿ ಎಷ್ಟೊಂದು ಜ್ಞಾನವು ಬಂದು ಬಿಟ್ಟಿದೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅಂದಮೇಲೆ ಈಗ ತನ್ನ ಹಾಗೂ ಅನ್ಯರ ಕಲ್ಯಾಣವನ್ನೂ ಮಾಡಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಮೊದಲಂತು ಒಬ್ಬರು ಇನ್ನೊಬ್ಬರಿಗೆ ಅಕಲ್ಯಾಣವನ್ನೇ ಮಾಡುತ್ತಿದ್ದೀರಿ ಏಕೆಂದರೆ ಆಸುರೀ ಮತವಿತ್ತು. ನೀವೀಗ ಶ್ರೀಮತದ ಮೇಲಿದ್ದೀರಿ, ಆದ್ದರಿಂದ ತನ್ನ ಕಲ್ಯಾಣವನ್ನೂ ಮಾಡಿಕೊಳ್ಳಬೇಕಾಗಿದೆ. ಈ ಬೇಹದ್ದಿನ ವಿದ್ಯೆಯನ್ನು ಎಲ್ಲರೂ ಓದಲಿ, ಸೇವಾಕೇಂದ್ರಗಳು ತೆರೆಯುತ್ತಾ ಹೋಗಲಿ ಎಂದು ನಿಮಗೆ ಮನಸ್ಸಾಗುತ್ತದೆ. ಬಾಬಾ, ಪ್ರದರ್ಶನಿ ಕೊಡಿ, ಪ್ರೊಜೆಕ್ಟರ್ ಕೊಡಿ, ನಾವು ಸೇವಾಕೇಂದ್ರವನ್ನು ತೆರೆಯುತ್ತೇವೆ. ನಮಗೆ ಯಾವ ಜ್ಞಾನ ಸಿಕ್ಕಿದೆಯೋ ಯಾವುದರಿಂದ ಬೇಹದ್ದಿನ ಖುಷಿಯ ನಶೆಯೇರಿದೆಯೋ ಅದನ್ನು ಅನ್ಯರಿಗೂ ಅನುಭವ ಮಾಡಿಸುತ್ತೇವೆಂದು ಹೇಳುತ್ತಾರೆ. ಡ್ರಾಮಾನುಸಾರ ಈ ಪುರುಷಾರ್ಥವೂ ನಡೆಯುತ್ತಿರುತ್ತದೆ. ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ಮೊದಲು ನರಕವಾಸಿಗಳಾಗಿದ್ದೆವು, ಈಗ ಸ್ವರ್ಗವಾಸಿಗಳಾಗುತ್ತಿದ್ದೇವೆ. ಈ ಚಕ್ರವು ನಿಮ್ಮ ಬುದ್ಧಿಯಲ್ಲಿ ಸದಾ ತಿರುಗುತ್ತಿರಬೇಕು. ಇದರಿಂದ ನೀವು ಸದಾ ಖುಷಿಯಲ್ಲಿರಿ. ಅನ್ಯರಿಗೆ ತಿಳಿಸುವುದಕ್ಕೂ ನಶೆಯಿರಲಿ. ನಾವು ತಂದೆಯಿಂದ ಜ್ಞಾನವನ್ನು ಪಡೆಯುತ್ತಿದ್ದೇವೆ. ನಿಮ್ಮ ಅನ್ಯ ಸಹೋದರ-ಸಹೋದರಿಯರು ಯಾರು ತಿಳಿದುಕೊಂಡಿಲ್ಲವೋ ಅವರಿಗೂ ಸಹ ಮಾರ್ಗವನ್ನು ತಿಳಿಸುವುದು ನಿಮ್ಮ ಧರ್ಮವಾಗಿದೆ. ಹೇಗೆ ಎಲ್ಲರ ಕಲ್ಯಾಣ ಮಾಡುವುದು ತಂದೆಯ ಪಾತ್ರವಾಗಿದೆಯೋ ಹಾಗೆಯೇ ಎಲ್ಲರ ಕಲ್ಯಾಣಕಾರಿಗಳಾಗುವುದು ನಮ್ಮದೂ ಪಾತ್ರವಿದೆ. ತಂದೆಯು ಕಲ್ಯಾಣಕಾರಿಗಳನ್ನಾಗಿ ಮಾಡಿದ್ದಾರೆ ಅಂದಮೇಲೆ ತನ್ನ ಹಾಗೂ ಅನ್ಯರ ಕಲ್ಯಾಣವನ್ನೂ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ಇಂತಹ ಸೇವಾಕೇಂದ್ರಕ್ಕೆ ಹೋಗಿ ಅಲ್ಲಿ ಸರ್ವಿಸ್ ಮಾಡಿ. ಒಂದು ಜಾಗದಲ್ಲಿ ಕುಳಿತು ಸರ್ವಿಸ್ ಮಾಡುವುದಲ್ಲ. ಯಾರೆಷ್ಟು ಬುದ್ಧಿವಂತರಾಗಿದ್ದಾರೆಯೋ ಅವರಿಗೆ ಅಷ್ಟು ನಾವು ಹೋಗಿ ಸರ್ವಿಸ್ ಮಾಡಬೇಕು, ಇಂತಹ ಹೊಸ ಸೇವಾಕೇಂದ್ರವು ತೆರೆದಿದೆ ಎಂದು ಆಸಕ್ತಿಯಿರುತ್ತದೆ. ಯಾರು ಯಾರು ಸೇವಾಧಾರಿಗಳಾಗಿದ್ದಾರೆ, ಯಾರು ಯಾರು ಆಜ್ಞಾಕಾರಿ, ಪ್ರಾಮಾಣಿಕರಾಗಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಅಜ್ಞಾನ ಕಾಲದಲ್ಲಿಯೂ ಕುಪುತ್ರರ ಮೇಲೆ ತಂದೆಯು ಬೇಸರ ಪಡುತ್ತಾರೆ. ಇಲ್ಲಂತೂ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನಾನು ಸಂಪೂರ್ಣ ಸಾಧಾರಣ ರೀತಿಯಿಂದ ತಿಳಿಸುತ್ತೇನೆ. ಇದರಲ್ಲಿ ಯಾವುದೇ ಹೆದರುವ ಮಾತಿಲ್ಲ. ಇದನ್ನು ಯಾರು ಮಾಡುವರೋ ಅವರು ಪಡೆಯುವರು. ಶಾಪ ಅಥವಾ ಬೇಸರ ಪಡುವ ಮಾತಿಲ್ಲ ಅಂದಮೇಲೆ ತಂದೆಯು ತಿಳಿಸುತ್ತಾರೆ - ಇಂತಹ ಒಳ್ಳೆಯ ಸೇವೆ ಮಾಡಿ ತನ್ನ ಮತ್ತು ಅನ್ಯರ ಕಲ್ಯಾಣವನ್ನು ಏಕೆ ಮಾಡಬಾರದು! ಯಾರು ಅನೇಕರ ಕಲ್ಯಾಣ ಮಾಡುವರೋ ಅವರನ್ನು ನೋಡಿ ತಂದೆಯೂ ಸಹ ಅಷ್ಟೇ ಖುಷಿ ಪಡುತ್ತಾರೆ. ಈ ಹೂವು ಎಷ್ಟು ಒಳ್ಳೆಯದಾಗಿದೆ! ಎಂದು ತಂದೆಯು ಉದ್ಯಾನ ವನದಲ್ಲಿ ನೋಡುತ್ತಾರೆ. ಇದು ಉದ್ಯಾನ ವನವಾಗಿದೆ. ಉದ್ಯಾನ ವನವನ್ನು ನೋಡುವುದಕ್ಕಾಗಿ ಬಾಬಾ, ನಾವು ಸೇವಾಕೇಂದ್ರಗಳನ್ನು ನೋಡಿಕೊಂಡು ಬರುತ್ತೇವೆ. ಎಂತೆಂತಹ ಹೂಗಳಿವೆ, ಹೇಗೆ ಸರ್ವಿಸ್ ಮಾಡುತ್ತಿದ್ದಾರೆ ಎಂಬುದನ್ನು ನೋಡಿ ಬರುತ್ತೇವೆ ಎಂದು ಹೇಳುತ್ತಾರೆ. ಹೋಗಿ ನೋಡುವುದರಿಂದ ಅರ್ಥವಾಗುತ್ತದೆ, ಹೇಗೆ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ. ಬಾಬಾ, ನಾವು ಇಂತಹವರಿಗೆ ಈ ರೀತಿ ತಿಳಿಸಿದೆವು. ಇಂದು ನನ್ನ ಪತಿಯನ್ನು ಸಹೋದರರನ್ನು ಕರೆದುಕೊಂಡು ಬಂದಿದ್ದೇನೆಂದು ತಂದೆಗೂ ಸಹ ಬಂದು ತಿಳಿಸುತ್ತಿದ್ದರು. ಮಕ್ಕಳಿಗೆ ತಿಳಿಸಲಾಗಿದೆ - ತಂದೆಯು ಬಂದಿದ್ದಾರೆ, ಅವರು ಹೇಗೆ ವಜ್ರ ಸಮಾನ ಜೀವನವನ್ನಾಗಿ ಮಾಡಿಕೊಳ್ಳುತ್ತಾರೆ ಎಂಬುದನ್ನು ಕೇಳಿದಾಗ ನಾವೂ ಸಹ ನೋಡಬೇಕೆಂದು ಇಚ್ಚಿಸುತ್ತಾರೆ. ಆಗ ಮಕ್ಕಳಲ್ಲಿ ಉಮ್ಮಂಗ ಬರುತ್ತದೆ, ಕರೆ ತರುತ್ತಾರೆ. ವಿಶ್ವದ ಚರಿತ್ರೆ-ಭೂಗೋಳವನ್ನು ಅರಿತುಕೊಳ್ಳಬೇಕು. ನೀವು ಪರಿಶೀಲನೆ ಮಾಡಿ, ಭಾರತವು ಇಡೀ ವಿಶ್ವದ ಮಾಲೀಕನಾಗಿತ್ತು, ಈಗ ಯಾವ ಗತಿಯಾಗಿದೆ! ಸತ್ಯ-ತ್ರೇತಾಯುಗದಲ್ಲಿ ಎಷ್ಟೊಂದು ಸುಖವಿತ್ತು, ಈಗ ಪುನಃ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಇದನ್ನೂ ತಿಳಿದುಕೊಂಡಿದ್ದೀರಿ - ಪ್ರಪಂಚದಲ್ಲಿ ಅಂತಿಮ ಸಮಯದಲ್ಲಿ ಬಹಳ ಏರುಪೇರುಗಳಾಗಲಿವೆ. ಯುದ್ಧವೇನೂ ನಿಂತು ಹೋಗುವುದಿಲ್ಲ. ಒಂದಲ್ಲ ಒಂದು ಕಡೆ ನಡೆಯುತ್ತಲೇ ಇರುತ್ತದೆ. ಎಲ್ಲಿ ನೋಡಿದರಲ್ಲಿ ಕಲಹಗಳೇ ಇವೆ, ಎಷ್ಟೊಂದು ಗಲಾಟೆಯಿದೆ, ವಿದೇಶದಲ್ಲಿ ನೋಡಿ, ಏನೇನಾಗುತ್ತಿದೆ! ನಾವು ಏನು ಮಾಡುತ್ತಿದ್ದೇವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ, ಎಷ್ಟೊಂದು ಬಿರುಗಾಳಿಗಳು ಬರುತ್ತಿರುತ್ತವೆ, ಮನುಷ್ಯರು ಸಾಯುತ್ತಿರುತ್ತಾರೆ. ಎಷ್ಟು ದುಃಖದ ಪ್ರಪಂಚವಾಗಿದೆ! ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಈ ದುಃಖದ ಪ್ರಪಂಚದಿಂದ ಹೋದೆವು ಎಂದರೆ ಹೋದೆವು. ತಂದೆಯು ಧೈರ್ಯವನ್ನು ನೀಡುತ್ತಿದ್ದಾರೆ. ಇದು ಛೀ ಛೀ ಪ್ರಪಂಚವಾಗಿದೆ, ಇನ್ನು ಸ್ವಲ್ಪವೇ ದಿನಗಳಲ್ಲಿ ನಾವು ವಿಶ್ವದಲ್ಲಿ ಶಾಂತಿಯಿಂದ ರಾಜ್ಯ ಮಾಡುತ್ತೇವೆ. ಇದರಲ್ಲಿ ಳ ಖುಷಿಯಾಗಬೇಕಲ್ಲವೆ. ಸೇವಾಕೇಂದ್ರಗಳು ತೆರೆಯುತ್ತಿರುತ್ತವೆ. ಈಗ ನೋಡಿ, ಸೇವಾಕೇಂದ್ರಗಳು ತೆರೆಯಲ್ಪಡುತ್ತವೆ. ಒಳೊಳ್ಳೆಯ ಮಕ್ಕಳು ಹೋಗಿ ಯಾರು ಹೃದಯವನ್ನು ಏರಿದ್ದಾರೆಯೋ ಅಂತಹವರ ಹೆಸರನ್ನೂ ತಂದೆಯು ಬರೆಯುತ್ತಾರೆ. ಅನೇಕರ ಕಲ್ಯಾಣವಾಗುತ್ತದೆ. ಹೀಗೆ ಅನೇಕರು ಬರೆಯುತ್ತಾರೆ - ಬಾಬಾ, ನಾವಂತೂ ಬಂಧನದಲ್ಲಿದ್ದೇವೆ. ಒಳ್ಳೆಯ ಸೇವಾಕೇಂದ್ರವನ್ನು ತೆರೆದರೆ ಅನೇಕರು ಬಂದು ಆಸ್ತಿಯನ್ನು ಪಡೆಯುವರು. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಇದೆಲ್ಲವೂ ವಿನಾಶವಾಗಲಿದೆ ಅಂದಮೇಲೆ ಅನೇಕರ ಕಲ್ಯಾಣಾರ್ಥವಾಗಿ ಏಕೆ ತೊಡಗಿಸಬಾರದು! ಡ್ರಾಮಾದಲ್ಲಿ ಅವರ ಪಾತ್ರವೇ ಹೀಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಪಾತ್ರವನ್ನಭಿನಯಿಸುತ್ತಿದ್ದಾರೆ. ಅನ್ಯರನ್ನೂ ಬಂಧನ ಮುಕ್ತರನ್ನಾಗಿ ಮಾಡಲು ಸಹಯೋಗ ನೀಡೋಣ, ಅವರೂ ಸಹ ಆಸ್ತಿಯನ್ನು ತೆಗೆದುಕೊಳ್ಳಲಿ ಎಂದು ದಯೆ ಬರುತ್ತದೆ. ತಂದೆಗೆ ಎಷ್ಟೊಂದು ಚಿಂತೆಯಿರುತ್ತದೆ, ಎಲ್ಲರೂ ಕಾಮ ಚಿತೆಯನ್ನೇರಿ ಸುಟ್ಟು ಹೋಗಿದ್ದಾರೆ. ಎಲ್ಲವೂ ಸ್ಮಶಾನವಾಗಿ ಬಿಟ್ಟಿದೆ. ಅಲ್ಲಾಹ್ ಬಂದು ಸ್ಮಶಾನದಿಂದ ಏಳಿಸಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆಂದು ಹೇಳುತ್ತಾರೆ. |
ರಾವಣನು ಹೇಗೆ ಸೋಲಿಸಿದ್ದಾನೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ, ಮೊದಲು ತಿಳಿದುಕೊಂಡಿರಲಿಲ್ಲ. ನಾವು ವಜ್ರ ವ್ಯಾಪಾರಿ ಲಕ್ಷಾಧೀಶ್ವರರಾಗಿದ್ದೇವೆ, ಇಷ್ಟು ಮಂದಿ ಮಕ್ಕಳಿದ್ದಾರೆ, ಎಂಬ ನಶೆಯಂತೂ ಇರುತ್ತದೆಯಲ್ಲವೆ. ಆದರೆ ಈಗ ಅರ್ಥವಾಗಿದೆ - ನಾವು ಪೂರ್ಣ ಪತಿತರಾಗಿದ್ದೆವು, ಭಲೆ ಹಳೆಯ ಪ್ರಪಂಚದಲ್ಲಿ ಎಷ್ಟಾದರೂ ಲಕ್ಷಾಧೀಶ್ವರ, ಕೋಟ್ಯಾಧೀಶ್ವರ ಇರಬಹುದು ಆದರೆ ಇದೆಲ್ಲವೂ ಕವಡೆಯ ಸಮಾನವಾಗಿದೆ. ಈಗ ಹೋಯಿತೆಂದರೆ ಹೋಯಿತು. ಮಾಯೆಯೂ ಸಹ ಎಷ್ಟು ಪ್ರಬಲವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸೇವಾಕೇಂದ್ರವನ್ನು ತೆರೆಯಿರಿ ಅದರಿಂದ ಅನೇಕರ ಕಲ್ಯಾಣವಾಗುವುದು. ಬಡವರು ಬೇಗನೆ ಜಾಗೃತರಾಗುತ್ತಾರೆ, ಧನವಂತರು ಮೇಲೇಳುವುದು ಸ್ವಲ್ಪ ಪರಿಶ್ರಮವಿದೆ. ಅವರು ತನ್ನದೇ ಖುಷಿಯಲ್ಲಿ ಮಸ್ತರಾಗಿರುತ್ತಾರೆ. ಮಾಯೆಯು ಒಮ್ಮೆಲೆ ತನ್ನ ವಶ ಮಾಡಿಕೊಂಡಿದೆ. ತಿಳಿಸಿದಾಗ ಅವರಿಗೆ ಅರ್ಥವೂ ಆಗುತ್ತದೆ ಆದರೆ ಬಿಡುವುದು ಹೇಗೆ? ಇವರ ತರಹ ಎಲ್ಲವನ್ನೂ ಬಿಡಬೇಕಾಗುವುದೇನೋ ಎಂಬ ಭಯವಿರುತ್ತದೆ. ಅದೃಷ್ಟದಲ್ಲಿಲ್ಲವೆಂದರೆ ಅವರು ನಡೆಯಲು ಸಾಧ್ಯವಿಲ್ಲ, ಅವರು ಅದರಿಂದ ಮುಕ್ತರಾಗುವುದೇ ಕಷ್ಟವಾಗುತ್ತಿದೆ. ಕೇಳುವ ಸಮಯದಲ್ಲಿ ಇದು ಛೀ ಛೀ ಪ್ರಪಂಚವೆಂದು ವೈರಾಗ್ಯ ಬರುತ್ತದೆ. ಆದರೆ ಹೊರಗೆ ಬಂದಮೇಲೆ ಅಲ್ಲಿಯದು ಅಲ್ಲಿಯೇ ಉಳಿಯುತ್ತದೆ. ಕೋಟಿಯಲ್ಲಿ ಕೆಲವರೇ ಬರುತ್ತಾರೆ, ಬಾಂಬೆಯಲ್ಲಿ ಸಾವಿರಾರು ಮಂದಿ ಬರುತ್ತಾರೆ. ಕೆಲಕೆಲವರಿಗೆ ಜ್ಞಾನದ ಬಣ್ಣವು ಅಂಟುತ್ತದೆ. ಭವಿಷ್ಯಕ್ಕಾಗಿ ಏನಾದರೂ ಭಾಗ್ಯ ಮಾಡಿಕೊಳ್ಳೋಣ, ಕವಡೆಯ ಬದಲು ನಮಗೆ ವಜ್ರಗಳು ಸಿಗುವುದೆಂದು ತಿಳಿದುಕೊಳ್ಳುತ್ತಾರೆ. ನಿಮ್ಮದೆಲ್ಲವನ್ನೂ ಸ್ವರ್ಗಕ್ಕೆ ವರ್ಗಾವಣೆ ಮಾಡಿ ಅಲ್ಲಿ 21 ಜನ್ಮಗಳಿಗಾಗಿ ನಿಮಗೆ ರಾಜ್ಯಭಾಗ್ಯ ಸಿಗುವುದೆಂದು ತಂದೆಯು ತಿಳಿಸುತ್ತಾರಲ್ಲವೆ. ಕೆಲವರು ಒಂದು ರೂಪಾಯಿ ಅಥವಾ ಎಂಟಾಣಿಯನ್ನು ಕಳುಹಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಿಮ್ಮ ಒಂದು ರೂಪಾಯಿಯು ಸಹ ಶಿವ ತಂದೆಯ ಖಜಾನೆಯಲ್ಲಿ ಜಮಾ ಆಯಿತು, ನಿಮಗೆ 21 ಜನ್ಮಗಳಿಗಾಗಿ ಮಹಲು ಸಿಗುವುದು. ಸುಧಾಮನ ಉದಾಹರಣೆಯಿದೆಯಲ್ಲವೆ. ಇಂತಿಂತಹವರನ್ನು ನೋಡಿ ತಂದೆಗೆ ಬಹಳ ಖುಷಿಯಾಗುತ್ತದೆ. ಕವಡೆಯೂ ಖರ್ಚಿಲ್ಲದೆ ನೀವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ. ಇಲ್ಲಿ ಯುದ್ಧ ಇತ್ಯಾದಿಗಳೇನೂ ಇಲ್ಲ, ಅವರು ತುಂಡು ಜಾಗಕ್ಕಾಗಿ ಎಷ್ಟೊಂದು ಹೊಡೆದಾಡುತ್ತಾರೆ. ತಂದೆಯು ನಿಮಗೆ ಕೇವಲ ಇಷ್ಟನ್ನೇ ಹೇಳುತ್ತಾರೆ - ಮಕ್ಕಳೇ, ಮನ್ಮನಾಭವ. ಇಲ್ಲಿಯೇ ಕುಳಿತು ಬಿಡುವ ಅವಶ್ಯಕತೆಯಿಲ್ಲ. ನಡೆಯುತ್ತಾ - ತಿರುಗಾಡುತ್ತಾ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಖುಷಿಯಲ್ಲಿರಿ, ಆಹಾರ-ಪಾನೀಯಗಳನ್ನೂ ಸಹ ಶುದ್ಧವಾಗಿಟ್ಟುಕೊಳ್ಳಬೇಕು. ನಮ್ಮ ಆತ್ಮವು ಎಲ್ಲಿಯವರೆಗೆ ಪವಿತ್ರವಾಗಿದೆ, ಯಾವ ಆತ್ಮರು ಹೋಗಿ ರಾಜಕುಮಾರರ ಜನ್ಮವನ್ನು ಪಡೆಯುತ್ತವೆ ಎಂದು ನೀವು ತಿಳಿದುಕೊಂಡಿದ್ದೀರಿ. ಮುಂದೆ ಹೋದಂತೆ ಪ್ರಪಂಚದ ಸ್ಥಿತಿಯು ಇನ್ನೂ ಹದಗೆಡುವುದು, ತಿನ್ನಲು ಆಹಾರವು ಸಿಗುವುದಿಲ್ಲ, ಆಗ ಹುಲ್ಲು ತಿನ್ನತೊಡಗುತ್ತಾರೆ. ಆಗ ಬೆಣ್ಣಿಯಿಲ್ಲದೆ ನಾವು ಇರುವುದಕ್ಕೆ ಆಗುವುದಿಲ್ಲವೆಂದು ಹೇಳಲು ಸಾಧ್ಯವೇ ! ಆ ಸಮಯದಲ್ಲಿ ಏನೂ ಸಿಗುವುದಿಲ್ಲ. ಈಗಲೂ ಸಹ ಎಷ್ಟೊಂದು ಸ್ಥಳಗಳಲ್ಲಿ ಮನುಷ್ಯರು ಹುಲ್ಲನ್ನು ತಿಂದು ಜೀವನ ಕಳೆಯುತ್ತಿದ್ದಾರೆ. ನೀವಂತೂ ತಂದೆಯ ಮನೆಯಲ್ಲಿ ಬಹಳ ಮೋಜಿನಲ್ಲಿ ಕುಳಿತಿದ್ದೀರಿ. ಮನೆಯಲ್ಲಿ ತಂದೆಯು ಮೊದಲು ಮಕ್ಕಳಿಗೆ ತಿನ್ನಿಸುತ್ತಾರಲ್ಲವೆ. ಈಗಿನ ಸಮಯವು ಬಹಳ ಹದಗೆಟ್ಟಿದೆ. ಇಲ್ಲಿ ನೀವು ಬಹಳ ಸುಖಿಯಾಗಿ ಕುಳಿತಿದ್ದೀರಿ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ತನ್ನ ಮತ್ತು ಅನ್ಯರ ಕಲ್ಯಾಣವನ್ನೂ ಮಾಡಬೇಕಾಗಿದೆ. ಮುಂದೆ ಹೋದಂತೆ ತಾವೇ ಬರುತ್ತಾರೆ. ಅದೃಷ್ಟವು ಜಾಗೃತವಾಗುತ್ತದೆ, ಆಗಲೇಬೇಕಲ್ಲವೆ. ಬೇಹದ್ದಿನ ರಾಜಧಾನಿಯು ಸ್ಥಾಪನೆಯಾಗುವುದು. ಪ್ರತಿಯೊಬ್ಬರೂ ಕಲ್ಪದ ಹಿಂದಿನ ತರಹ ಪುರುಷಾರ್ಥ ಮಾಡುತ್ತಾರೆ. ನೀವು ಮಕ್ಕಳಂತೂ ಬಹಳ ಖುಷಿಯಲ್ಲಿರಬೇಕು. ಬಾಪ್ದಾದಾರವರ ಚಿತ್ರವಂತೂ ನೋಡುತ್ತಿದ್ದಂತೆಯೇ ಖುಷಿಯಲ್ಲಿ ರೋಮಾಂಚನವಾಗಿ ಬಿಡಬೇಕು ಮತ್ತು ಅಪಾರ ಖುಷಿಯು ಸ್ಥಿರವಾಗಿರಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನವು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸದಾ ಅಪಾರ ಖುಷಿಯಲ್ಲಿರಲು ಬೇಹದ್ದಿನ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ತನ್ನ ಹಾಗೂ ಸರ್ವರ ಕಲ್ಯಾಣ ಮಾಡಬೇಕಾಗಿದೆ. ಜ್ಞಾನದಲ್ಲಿ ಬಹಳ-ಬಹಳ ಬುದ್ಧಿವಂತರಾಗಬೇಕಾಗಿದೆ. |
2. ಭವಿಷ್ಯ 21 ಜನ್ಮಗಳ ರಾಜ್ಯಭಾಗ್ಯದ ಅಧಿಕಾರವನ್ನು ತೆಗೆದುಕೊಳ್ಳಲು ತನ್ನದೆಲ್ಲವನ್ನೂ ವರ್ಗಾವಣೆ ಮಾಡಬೇಕಾಗಿದೆ. ಈ ಛೀ ಛೀ ಪ್ರಪಂಚದಿಂದ ಬಿಡುಗಡೆ ಹೊಂದುವ ಯುಕ್ತಿಯನ್ನು ರಚಿಸಬೇಕಾಗಿದೆ. |
ಓಂ ಶಾಂತಿ. ಮಕ್ಕಳು ತಿಳಿದುಕೊಂಡಿರಿ - ಯಾರು ತಂದೆಯ ಜೊತೆಯಿದ್ದಾರೆಯೋ ಅವರು ಬಾಪ್ದಾದಾರವರ ಜೊತೆಯಿದ್ದಾರೆ. ಈಗಂತೂ ಡಬಲ್ ಇದ್ದಾರಲ್ಲವೆ. ಇದನ್ನು ಚೆನ್ನಾಗಿ ತಿಳಿಸಲಾಗುತ್ತದೆ - ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮ ಶಿವನು ಹೇಗೆ ಸ್ಥಾಪನೆ ಮಾಡುತ್ತಾರೆ? ಅವರಂತೂ ಇದನ್ನು ತಿಳಿದುಕೊಂಡಿಲ್ಲ, ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪರಮಾತ್ಮನಿಗೆ ತನ್ನ ಶರೀರವಿಲ್ಲ. ಕೃಷ್ಣನಿಗಂತೂ ತನ್ನ ಶರೀರವಿದೆ, ಪರಮಾತ್ಮನು ಶ್ರೀಕೃಷ್ಣನ ಶರೀರದಮೂಲಕ ಬರುತ್ತಾರೆ...... ಎಂದು ಹೇಳಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ, ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸುತ್ತಾರೆ. ಆದ್ದರಿಂದ ಅವಶ್ಯವಾಗಿ ಬ್ರಹ್ಮಾರವರಲ್ಲಿ ಪ್ರವೇಶ ಮಾಡಬೇಕಾಗುತ್ತದೆ, ಮತ್ತ್ಯಾವುದೇ ಉಪಾಯವಿಲ್ಲ. ಪ್ರೇರಣೆ ಇತ್ಯಾದಿಗಳ ಮಾತಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ಎಲ್ಲವನ್ನೂ ತಿಳಿಸುತ್ತಾರೆ. ವಿಜಯ ಮಾಲೆ ಯಾವುದಕ್ಕೆ ರುದ್ರ ಮಾಲೆ ಎಂದು ಹೇಳಲಾಗುತ್ತದೆಯೋ ಅದನ್ನು ಮನುಷ್ಯರು ಪೂಜಿಸುತ್ತಾರೆ, ಸ್ಮರಣೆ ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಈ ರುದ್ರ ಮಾಲೆಯು ಕೇವಲ ಸ್ಮರಣೆ ಮಾಡಲ್ಪಡುತ್ತದೆ. ಮೇರು ಎಂದು ಬ್ರಹ್ಮಾ-ಸರಸ್ವತಿಗೆ ಹೇಳಲಾಗುತ್ತದೆ. ಉಳಿದಂತೆ ಮಾಲೆಯು ಮಕ್ಕಳದಾಗಿದೆ. ವಿಷ್ಣುವಿನ ಮಾಲೆಯೊಂದೇ ಪೂಜಿಸಲ್ಪಡುತ್ತದೆ. ಈ ಸಮಯದಲ್ಲಿ ನೀವು ಪುರುಷಾರ್ಥಿಗಳಾಗಿದ್ದೀರಿ. ನಿಮ್ಮದು ಅಂತಿಮದಲ್ಲಿ ಸ್ಮರಣೆಯಾಗುತ್ತದೆ. ಆತ್ಮಗಳ ಮಾಲೆಯೋ ಅಥವಾ ಜೀವಾತ್ಮರದೋ? ಪ್ರಶ್ನೆ ಬರುತ್ತದೆಯಲ್ಲವೆ? ವಿಷ್ಣುವಿನ ಮಾಲೆಯು ಚೈತನ್ಯ ಜೀವಾತ್ಮರ ಮಾಲೆಯೆಂದೇ ಹೇಳಬಹುದು. ಲಕ್ಷ್ಮಿ - ನಾರಾಯಣರು ಪೂಜಿಸಲ್ಪಡುತ್ತಾರಲ್ಲವೆ ಏಕೆಂದರೆ ಅವರ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿದೆ. ರುದ್ರ ಮಾಲೆಯು ಕೇವಲ ಆತ್ಮರದಾಗಿದೆ ಏಕೆಂದರೆ ಶರೀರವು ಅಪವಿತ್ರವಾಗಿದೆ. ಅದನ್ನು ಪೂಜಿಸಲು ಸಾಧ್ಯವಿಲ್ಲ. ಆತ್ಮವು ಹೇಗೆ ಪೂಜಿಸಲ್ಪಡುತ್ತದೆ? ರುದ್ರ ಮಾಲೆಯು ಪೂಜಿಸಲ್ಪಡುತ್ತದೆಯೆಂದು ನೀವು ಹೇಳುತ್ತೀರಿ ಆದರೆ ಪೂಜಿಸಲ್ಪಡುವುದಿಲ್ಲ. ಹೆಸರೇ ಆಗಿದೆ - ಸಿಮರಣಿ. ಅಂದಾಗ ಯಾರೆಲ್ಲಾ ಮಣಿಗಳದ್ದಾರೆಯೋ ಅವರು ಶರೀರದಲ್ಲಿದ್ದಾಗ ಸ್ಮರಣೆ ಮಾಡಲ್ಪಡುತ್ತಾರೆ. ಮಣಿಗಳು ನೀವು ಬ್ರಾಹ್ಮಣರದಾಗಿದೆ. ಯಾರನ್ನು ಸ್ಮರಣೆ ಮಾಡುತ್ತೇವೆಂದು ಯಾರಿಗೂ ಗೊತ್ತಿಲ್ಲ. ಇವರು ಬ್ರಾಹ್ಮಣರಾಗಿದ್ದಾರೆ, ಭಾರತದ ಸೇವೆ ಮಾಡುತ್ತಾರೆಯೋ ಅವರನ್ನು ನೆನಪು ಮಾಡುತ್ತಾರೆ. ಜಗದಂಬಾ, ದೇವಿಯರು ಅನೇಕರಿದ್ದಾರೆ. ಅವರನ್ನು ನೆನಪು ಮಾಡಬೇಕೇ? ಲಕ್ಷ್ಮಿ - ನಾರಾಯಣರು ಪೂಜೆಗೆ ಅರ್ಹರಾಗುತ್ತಾರೆ, ನೀವಲ್ಲ ಏಕೆಂದರೆ ನಿಮ್ಮ ಶರೀರವು ಪತಿತವಾಗಿದೆ, ಆತ್ಮವು ಪವಿತ್ರವಾಗಿದೆ ಆದರೆ ಅದು ಪೂಜಿಸಲ್ಪಡುವುದಿಲ್ಲ. ಸ್ಮರಣೆಗೆ ಯೋಗ್ಯವಾಗಿದೆ. ಯಾರಾದರೂ ನಿಮ್ಮೊಂದಿಗೆ ಕೇಳಿದರೆ ನೀವು ತಿಳಿಸುವಂತಿರಬೇಕು. ನೀವು ಬ್ರಾಹ್ಮಣಿಯರಾಗಿದ್ದೀರಿ, ನಿಮ್ಮ ನೆನಪಾರ್ಥವು ದೇವಿಯರ ರೂಪದಲ್ಲಿದೆ. ನೀವು ಶ್ರೀಮತದಂತೆ ಸ್ವಯಂ ಪಾವನರಾಗುತ್ತೀರಿ ಆದ್ದರಿಂದ ಈ ಮಾಲೆಯು ಮೊದಲು ಬ್ರಾಹ್ಮಣರದೆಂದು ತಿಳಿದುಕೊಳ್ಳಬೇಕು ನಂತರ ದೇವತೆಗಳದು. ವಿಚಾರ ಸಾಗರ ಮಂಥನ ಮಾಡಿದಾಗ ಫಲಿತಾಂಶ ಸಿಗುವುದು. ಯಾವಾಗ ಆತ್ಮರು ಸಾಲಿಗ್ರಾಮ ರೂಪದಲ್ಲಿರುವವರೋ ಆಗ ಪೂಜಿಸಲ್ಪಡುತ್ತಾರೆ. ಶಿವನ ಪೂಜೆಯಾದಾಗ ಸಾಲಿಗ್ರಾಮಗಳಿಗೂ ಪೂಜೆ ನಡೆಯುತ್ತದೆ ಏಕೆಂದರೆ ಆತ್ಮವೂ ಪವಿತ್ರವಾಗಿದೆ, ಶರೀರವಲ್ಲ. ಕೇವಲ ನಿಮ್ಮದೇ ಸ್ಮರಣೆಯಾಗುತ್ತದೆ - ಏಕೆ? ನೀವು ಶರೀರದ ಜೊತೆ ಸೇವೆ ಮಾಡುತ್ತೀರಿ. ಆದ್ದರಿಂದ ನಿಮ್ಮದು ಪೂಜೆಯು ನಡೆಯುವುದಿಲ್ಲ ನಂತರ ಯಾವಾಗ ಶರೀರ ಬಿಡುತ್ತೀರೋ ಆಗ ನೀವೂ ಸಹ ಶಿವನ ಜೊತೆ ಪೂಜಿಸಲ್ಪಡುತ್ತೀರಿ, ವಿಚಾರ ಮಾಡಬೇಕಲ್ಲವೆ. ನೀವು ಈ ಸಮಯದಲ್ಲಿ ಬ್ರಾಹ್ಮಣರಾಗಿದ್ದೀರಿ. ಶಿವ ತಂದೆಯೂ ಸಹ ಬ್ರಹ್ಮಾರವರಲ್ಲಿ ಬರುತ್ತಾರೆ ಅಂದಾಗ ಬ್ರಹ್ಮಾರವರು ಸಾಕಾರದಲ್ಲಿದ್ದಾರೆ. ನೀವು ಪರಿಶ್ರಮ ಪಡುತ್ತೀರಿ. ಈ ಮಾಲೆಯು ಹೇಗೆ ಸಾಕಾರಿಯಾಗಿದೆ, ಬ್ರಹ್ಮಾ-ಸರಸ್ವತಿ ಮತ್ತು ನೀವು ಜ್ಞಾನ ಗಂಗೆಯರು. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡಿದಿರಿ, ಈ ರುದ್ರ ಯಜ್ಞವನ್ನು ರಚಿಸಿದಿರಿ. ಪೂಜೆ ಮಾಡುವಾಗ ಅದರಲ್ಲಿ ಕೇವಲ ಶಿವ ಮತ್ತು ಸಾಲಿಗ್ರಾಮಗಳಿರುತ್ತವೆ. ಅದರಲ್ಲಿ ಬ್ರಹ್ಮಾ-ಸರಸ್ವತಿಯ ಅಥವಾ ನೀವು ಮಕ್ಕಳ ಹೆಸರಿಲ್ಲ. ಇಲ್ಲಂತೂ ಎಲ್ಲರ ಹೆಸರೂ ಇದೆ. ನಿಮ್ಮ ಸ್ಮರಣೆ ಮಾಡುತ್ತಾರೆ. ಯಾರು ಯಾರು ಜ್ಞಾನ ಗಂಗೆಯರಿದ್ದರು! ತಂದೆಯಂತೂ ಜ್ಞಾನ ಸಾಗರನಾಗಿದ್ದಾರೆ, ಇವರು ಬ್ರಹ್ಮ ಪುತ್ರ ದೊಡ್ಡ ನದಿಯಾಗಿದ್ದಾರೆ. ಈ ಬ್ರಹ್ಮಾರವರು ತಾಯಿಯೂ ಆಗಿದ್ದಾರೆ. ಸಾಗರವು ಒಂದೇ ಆಗಿದೆ, ಆದರೆ ಗಂಗೆಯರು ಭಿನ್ನ-ಭಿನ್ನ ಪ್ರಕಾರದವರಿರುತ್ತಾರೆ. ನಂಬರ್ವಾರ್ ಯಾರಲ್ಲಿ ಒಳ್ಳೆಯ ಜ್ಞಾನವಿದೆಯೋ ಅವರಿಗೆ ಸರೋವರವೆಂದು ಹೇಳಲಾಗುತ್ತದೆ. ಮಹಿಮೆಯೂ ಇದೆ, ಮಾನಸ ಸರೋವರದಲ್ಲಿ ಮಿಂದರೆ ಫರಿಗಳಾಗಿ ಬಿಡುತ್ತಾರೆಂದು ಹೇಳುತ್ತಾರೆ, ಅಂದಾಗ ನಿಮ್ಮ ಮಾಲೆಯು ಸ್ಮರಣೆ ಮಾಡಲ್ಪಡುತ್ತದೆ. ಸಿಮಿರಣಿ ಎಂದು ಹೇಳುತ್ತಾರಲ್ಲವೆ. ಸ್ಮರಣೆ ಮಾಡಿ, ಅವರಂತೂ ಕೇವಲ ರಾಮ-ರಾಮ ಎಂದು ಹೇಳುತ್ತಾರೆ ಆದರೆ ಯಾರ ಸ್ಮರಣೆಯಾಗುವುದು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾರು ಹೆಚ್ಚು ಸರ್ವಿಸ್ ಮಾಡುವರೋ ಅವರದೇ ಆಗುತ್ತದೆ. ಮೊದಲು ತಂದೆ ಹೂವಾಗಿದ್ದಾರೆ ನಂತರ ಜೋಡಿ ಮಣಿಗಳು. ಇವರು ಬಹಳ ಪರಿಶ್ರಮ ಪಡುತ್ತಾರೆ ಅನಂತರ ರುದ್ರ ಮಾಲೆಯೇ ವಿಷ್ಣುವಿನ ಮಾಲೆಯಾಗುತ್ತದೆ. ನೀವಾತ್ಮಗಳು ಕೇವಲ ಪೂಜಿಸಲ್ಪಡುತ್ತೀರಿ. ನೀವೀಗ ಗಾಯನ ಯೋಗ್ಯರಾಗಿದ್ದೀರಿ. ನಿಮ್ಮದೇ ಸ್ಮರಣೆಯಿದೆ. ಬಾಕಿ ಈಗ ನಿಮಗೆ ಪೂಜೆ ನಡೆಯಲು ಸಾಧ್ಯವಿಲ್ಲ ಏಕೆಂದರೆ ಆತ್ಮವು ಪವಿತ್ರ, ಶರೀರವು ಅಪವಿತ್ರವಾಗಿದೆ. ಅಪವಿತ್ರ ವಸ್ತುವೆಂದೂ ಪೂಜಿಸಲ್ಪಡುವುದಿಲ್ಲ. ಯಾವಾಗ ರುದ್ರ ಮಾಲೆಯಾಗಲು ಯೋಗ್ಯರಾಗಿಬಿಡುತ್ತೀರೋ ಆಗ ಅಂತ್ಯದಲ್ಲಿ ನೀವು ಶುದ್ಧವಾಗಿ ಬಿಡುತ್ತೀರಿ. ಯಾರು ಯಾರು ಗೌರವ ಪೂರ್ಣವಾಗಿ ತೇರ್ಗಡೆಯಾಗುವರೆಂದು ನಿಮಗೆ ಸಾಕ್ಷಾತ್ಕಾರವಾಗುತ್ತದೆ. ಸರ್ವಿಸ್ ಮಾಡುವುದರಿಂದ ಹೆಸರು ಬಹಳ ಪ್ರಸಿದ್ಧವಾಗುತ್ತದೆ. ವಿಜಯ ಮಾಲೆಯಲ್ಲಿ ನಂಬರ್ವಾರ್ ಯಾರು ಯಾರು ಬರುತ್ತಾರೆಂದು ತಿಳಿಯುತ್ತಾ ಹೋಗುವುದು. ಈ ಮಾತುಗಳು ಬಹಳ ಗುಹ್ಯವಾಗಿದೆ. |
ಮನುಷ್ಯರು ಕೇವಲ ರಾಮ-ರಾಮ ಎಂದು ಹೇಳುತ್ತಾರೆ. ಕ್ರಿಶ್ಚಿಯನ್ನರು ಕ್ರಿಸ್ತನನ್ನು ನೆನಪು ಮಾಡುತ್ತಾರೆ. ಮಾಲೆಯು ಯಾರದಿರಬಹುದು? ಭಗವಂತನು ಒಬ್ಬರೇ ಆಗಿದ್ದಾರೆ ಬಾಕಿ ಯಾರು ಸನ್ಮುಖದಲ್ಲಿ ಕುಳಿತಿದ್ದಾರೆಯೋ ಅವರದೇ ಮಾಲೆಯಾಗುತ್ತದೆ. ಈ ಮಾಲೆಯನ್ನು ನೀವೀಗ ತಿಳಿದುಕೊಂಡಿದ್ದೀರಿ. ತಮ್ಮ ಆದಿ ಸನಾತನ ದೇವಿ-ದೇವತಾಧರ್ಮದವರೇ ತಿಳಿದುಕೊಂಡಿಲ್ಲವೆಂದರೆ ಅನ್ಯರು ಹೇಗೆ ತಿಳಿದುಕೊಳ್ಳುವರು. ಎಲ್ಲರನ್ನೂ ಪತಿತರಿಂದ ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಕ್ರಿಸ್ತನಿಗೆ ಪತಿತರನ್ನು ಪಾವನ ಮಾಡುವವರೆಂದು ಹೇಳುವುದಿಲ್ಲ. ಅವರು ಜನನ-ಮರಣದಲ್ಲಿ ಬಂದು ಕೆಳಗಿಳಿಯಲೇಬೇಕಾಗಿದೆ. ವಾಸ್ತವದಲ್ಲಿ ಅವರಿಗೆ ಗುರುವೆಂದೂ ಹೇಳುವುದಿಲ್ಲ. ಏಕೆಂದರೆ ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಯಾವಾಗ ಅಂತ್ಯವಾಗುವುದು, ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ತಲುಪುವುದೋ ಆಗ ತಂದೆಯು ಬಂದು ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಆತ್ಮವು ಧರ್ಮ ಸ್ಥಾಪನೆ ಮಾಡಲು ಮೇಲಿನಿಂದ ಬರುತ್ತಾರೆ. ಅವರಂತೂ ಜನನ-ಮರಣದಲ್ಲಿ ಬರಲೇಬೇಕಾಗಿದೆ. ಸದ್ಗುರು ಒಬ್ಬರೇ ಆಗಿದ್ದಾರೆ. ಅವರು ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಯಾರೂ ಸತ್ಯವಾದ ಸದ್ಗುರುವಾಗಲು ಸಾಧ್ಯವಿಲ್ಲ. ಅವರಂತೂ ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಅವರ ಹಿಂದೆ ಪಾತ್ರವನ್ನಭಿನಯಿಸಲು ಎಲ್ಲರೂ ಬರತೊಡಗುತ್ತಾರೆ. ಯಾವಾಗ ಎಲ್ಲರೂ ತಮೋಪ್ರಧಾನ ಸ್ಥಿತಿಯನ್ನು ಹೊಂದುವರೋ ಆಗ ನಾನು ಬಂದು ಸರ್ವರ ಸದ್ಗತಿ ಮಾಡುತ್ತೇನೆ. ಎಲ್ಲರೂ ಹಿಂತಿರುಗಿ ಹೋಗುತ್ತಾರೆ ನಂತರ ಹೊಸದಾಗಿ ಚಕ್ರವು ಆರಂಭವಾಗುತ್ತದೆ. ನೀವು ರಾಜಯೋಗವನ್ನು ಕಲಿಯುತ್ತೀರಿ, ಅವರೇ ರಾಜ್ಯ ಪದವಿಯನ್ನು ಪಡೆಯುತ್ತಾರೆ. ಅದರಲ್ಲಿ ರಾಜರಾದರೂ ಆಗಬಹುದು, ಪ್ರಜೆಗಳಾದರೂ ಆಗಬಹುದು. ಪ್ರಜೆಗಳಂತೂ ಅನೇಕರಾಗುತ್ತಾರೆ, ರಾಜ್ಯ ಪದವಿಯನ್ನು ಪಡೆಯುವುದರಲ್ಲಿಯೇ ಪರಿಶ್ರಮವಿದೆ. ಅಂತಿಮದಲ್ಲಿ ಎಲ್ಲವೂ ತಿಳಿಯುತ್ತಾ ಹೋಗುವುದು ಯಾರು ವಿಜಯ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ ಎಂದು. ಅವಿದ್ಯಾವಂತರು ವಿದ್ಯಾವಂತರ ಮುಂದೆ ತಲೆ ಬಾಗುವರು. ಸತ್ಯಯುಗದಲ್ಲಂತೂ ಬರುತ್ತಾರೆ ಆದರೆ ನೌಕರ-ಚಾಕರರಾಗಬೇಕಾಗುತ್ತದೆ. ಇದು ಎಲ್ಲರಿಗೆ ಅರ್ಥವಾಗಿ ಬಿಡುತ್ತದೆ. ಹೇಗೆ ಪರೀಕ್ಷೆಯ ದಿನಗಳಲ್ಲಿ ಯಾರು ಯಾರು ತೇರ್ಗಡೆಯಾಗುತ್ತಾರೆ ಎಂಬುದು ಎಲ್ಲರಿಗೆ ಗೊತ್ತಾಗಿ ಬಿಡುತ್ತದೆ. ವಿದ್ಯೆಯ ಮೇಲೆ ಗಮನವಿಲ್ಲದಿದ್ದರೆ ಅನುತ್ತೀರ್ಣರಾಗಿ ಬಿಡುತ್ತಾರೆ. ನಿಮ್ಮದು ಇದು ಬೇಹದ್ದಿನ ವಿದ್ಯೆಯಾಗಿದೆ. ಈಶ್ವರೀಯ ವಿಶ್ವ ವಿದ್ಯಾಲಯವು ಒಂದೇ ಆಗಿದೆ. ಇಲ್ಲಿ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಇದರಲ್ಲಿ ನಂಬರ್ವಾರ್ ತೇರ್ಗಡೆಯಾಗುತ್ತಾರೆ. ರಾಜಯೋಗದ ವಿದ್ಯೆಯು ಒಂದೇ ಆಗಿದೆ, ರಾಜ್ಯ ಪದವಿಯನ್ನು ಪಡೆಯುವುದರಲ್ಲಿ ಪರಿಶ್ರಮವಿದೆ ಮತ್ತು ಸರ್ವಿಸನ್ನೂ ಮಾಡಬೇಕಾಗಿದೆ. ಯಾರು ರಾಜರಾಗುವರೋ ಅವರು ತಮ್ಮ ಪ್ರಜೆಗಳನ್ನೂ ಮಾಡಿಕೊಳ್ಳಬೇಕಾಗಿದೆ. ಒಳ್ಳೊಳ್ಳೆಯ ಮಕ್ಕಳು ದೊಡ್ಡ-ದೊಡ್ಡ ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುತ್ತಾರೆ, ಪ್ರಜೆಗಳನ್ನು ಮಾಡಿಕೊಳ್ಳುತ್ತಾರೆ. ತಂದೆಯೂ ತಿಳಿಸುತ್ತಾರೆ - ದೊಡ್ಡ ಉದ್ಯಾನವನವನ್ನು ತಯಾರು ಮಾಡಿ ಆಗ ತಂದೆಯು ಬಂದು ನೋಡುವರು. ಈಗಿನ್ನೂ ಬಹಳ ಚಿಕ್ಕದಾಗಿದೆ. ಬಾಂಬೆಯಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ವೃದ್ಧಿಯಾಗುತ್ತಾರೆ. ಸೂರ್ಯವಂಶಿ ರಾಜಧಾನಿಯು ತಯಾರಾಗಬೇಕಾಗಿದೆ ಅಂದಮೇಲೆ ಅನೇಕರು ತಯಾರಾಗುತ್ತಾರೆ. ಯಾರು ಪರಿಶ್ರಮ ಪಡುವರೋ ಅವರು ರಾಜರಾಗುತ್ತಾರೆ, ಉಳಿದವರು ಪ್ರಜೆಗಳಾಗುತ್ತಾ ಹೋಗುವರು. ಹೇ ಪ್ರಭು, ನಿನ್ನ ಸದ್ಗತಿಯ ಲೀಲೆಯು ಅಪರಮಪಾರ..... ಎಂದು ಗಾಯನವೂ ಇದೆ. ವಾಹ್! ಬಾಬಾ ತಮ್ಮ ಗತಿ ಮತವು...... ಸರ್ವರ ಸದ್ಗತಿ ಮಾಡುವ ಶ್ರೀಮತವು ಎಲ್ಲದಕ್ಕಿಂತ ಭಿನ್ನವಾಗಿದೆ ಎಂದು ನೀವು ಹೇಳುತ್ತೀರಿ. ತಂದೆಯು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ, ಬಿಟ್ಟು ಹೋಗುವುದಿಲ್ಲ. ನಿರಾಕಾರಿ, ಆಕಾರಿ, ಸಾಕಾರಿ ಲೋಕವನ್ನೂ ತಿಳಿದುಕೊಂಡಿಲ್ಲ. ಕೇವಲ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದು ಸಂಪೂರ್ಣ ಜ್ಞಾನವಲ್ಲ. ಮೊದಲು ಮೂಲವತನವನ್ನು ತಿಳಿದುಕೊಳ್ಳಬೇಕಾಗಿದೆ, ಎಲ್ಲಿ ನಾವಾತ್ಮರಿರುತ್ತೇವೆ. ಇಡೀ ಸೃಷ್ಟಿಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಇವೆಲ್ಲವೂ ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಅವರಂತೂ ಶಿವನು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳಿ ಬಿಡುತ್ತಾರೆ. ಚಿತ್ರವೂ ಇದೆ ಆದರೂ ಸಹ ನಾಮ - ರೂಪದಿಂದ ಭಿನ್ನವೆಂದು ಹೇಳುತ್ತಾರೆ ಮತ್ತು ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಒಬ್ಬ ಪ್ರಧಾನ ಮಂತ್ರಿಯು ಹೇಳಿದ್ದರು - ಈಶ್ವರ ಸರ್ವವ್ಯಾಪಿಯೆಂಬುದನ್ನು ನಾನು ಒಪ್ಪುವುದಿಲ್ಲ, ಮನುಷ್ಯರು ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಾರೆ ಅಂದಮೇಲೆ ಇದು ಈಶ್ವರನ ಕೆಲಸವೇ? ಮುಂದೆ ಹೋದಂತೆ ಈ ಮಾತುಗಳನ್ನು ತಿಳಿದುಕೊಳ್ಳುವರು ಆಗ ನಿಮ್ಮದೂ ವೃದ್ಧಿಯಾಗುವುದು. ತಂದೆಯು ರಾತ್ರಿಯೂ ತಿಳಿಸಿದ್ದರು, ಯಾರು ತಮ್ಮನ್ನು ಬುದ್ದಿವಂತರೆಂದು ತಿಳಿಯುವರೋ ಅವರು ಇಂತಿಂತಹ ಪತ್ರಗಳನ್ನು ಬರೆಯಿರಿ, ಈ ಸಂಪೂರ್ಣ ಜ್ಞಾನವೇನೆಂಬುದನ್ನು ಅವರಿಗೆ ತಿಳಿಸಬೇಕು. ಇದನ್ನೂ ಬರೆಯಿರಿ - ನಾವು ಸಂಪೂರ್ಣ ಜ್ಞಾನವನ್ನು ಕೊಡಬಲ್ಲೆವು. ಮೂಲವತನದ ಜ್ಞಾನವನ್ನು ಕೊಡುತ್ತೇವೆ, ನಿರಾಕಾರ ತಂದೆಯ ಪರಿಚಯವನ್ನೂ ಹೇಳುತ್ತೇವೆ. ಮತ್ತೆ ಪ್ರಜಾಪಿತ ಬ್ರಹ್ಮಾ ಹಾಗೂ ಅವರ ಬ್ರಾಹ್ಮಣ ಧರ್ಮವನ್ನು ಕುರಿತು ತಿಳಿಸಬಲ್ಲೆವು. ಲಕ್ಷ್ಮಿ-ನಾರಾಯಣರು ಮತ್ತು ರಾಮ-ಸೀತೆಯರ ರಾಜ್ಯವು ಹೇಗೆ ನಡೆಯುತ್ತದೆ ಮತ್ತೆ ಅವರಿಂದ ರಾಜ್ಯವನ್ನು ಯಾರು ಕಸಿದುಕೊಂಡರು? ಆ ಸ್ವರ್ಗವು ಎಲ್ಲಿ ಹೋಯಿತು? ಎಂಬುದನ್ನು ತಿಳಿಸುತ್ತೇವೆ. ಹೇಗೆ ಹೇಳಲಾಗುತ್ತದೆ - ನರಕವು ಎಲ್ಲಿ ಹೋಯಿತು? ಸಮಾಪ್ತಿಯಾಯಿತು. ಸ್ವರ್ಗವೂ ಸಹ ಸಮಾಪ್ತಿಯಾಗಿ ಬಿಡುವುದು. ಆ ಸಮಯದಲ್ಲಿಯೂ ಭೂಕಂಪ ಇತ್ಯಾದಿಗಳಾಗುತ್ತವೆ. ಆ ವಜ್ರ ವೈಡೂರ್ಯದ ಮಹಲುಗಳು ಮತ್ತೆ ತೆಗೆಯಲಾರದಂತೆ ಹೊರಟು ಹೋಯಿತು. ಚಿನ್ನ, ವಜ್ರ-ವೈಡೂರ್ಯಗಳ ಮಹಲುಗಳೆಂದೂ ಕೆಳಗಿನಿಂದ ಹೊರ ಬಂದಿಲ್ಲ. ಸೋಮನಾಥ ಮೊದಲಾದ ಮಂದಿರವಂತೂ ನಂತರದಲ್ಲಿ ಆಯಿತು. ಅಂದಮೇಲೆ ಅದಕ್ಕಿಂತಲೂ ಮೊದಲಿನವರ ಮನೆಗಳು ಬಹಳ ಚೆನ್ನಾಗಿರುತ್ತವೆ. ಲಕ್ಷ್ಮಿ - ನಾರಾಯಣರ ಮನೆಯು ಹೇಗಿರಬಹುದು, ಅವರ ಎಲ್ಲಾ ಸಂಪತ್ತು ಎಲ್ಲಿಗೆ ಹೋಯಿತು? ಈ ರೀತಿಯ ಮಾತುಗಳನ್ನು ಯಾವಾಗ ವಿದ್ವಾಂಸರು ಕೇಳಿಸಿಕೊಳ್ಳುವರೋ ಆಗ ಆಶ್ಚರ್ಯ ಚಕಿತರಾಗುತ್ತಾರೆ. ಆಗ ಇವರ ಜ್ಞಾನವು ಬಹಳ ಶಕ್ತಿಶಾಲಿಯಾಗಿದೆ ಎಂದು ಹೇಳುತ್ತಾರೆ. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ, ಕೇವಲ ಸರ್ವವ್ಯಾಪಿಯೆಂದು ಹೇಳುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮತ್ತು ತಿಳಿಸುವ ಮಾತುಗಳಾಗಿವೆ. ನಿಮಗೆ ಧನ ಸಿಗುತ್ತದೆ ಅಂದಮೇಲೆ ಅದನ್ನು ದಾನ ಮಾಡಬೇಕಾಗಿದೆ. ತಂದೆಯು ನಿಮಗೆ ಕೊಡುತ್ತಾ ಹೋಗುತ್ತಾರೆ. ಮತ್ತೆ ನೀವೂ ಸಹ ಕೊಡುತ್ತಾ ಹೋಗಿ. ಇದು ಅಕೂಟ ಖಜಾನೆಯಾಗಿದೆ, ಎಲ್ಲವೂ ಧಾರಣೆಯ ಮೇಲೆ ಆಧಾರಿತವಾಗಿದೆ. ಯಾರೆಷ್ಟು ಧಾರಣೆ ಮಾಡುವರೋ ಅಷ್ಟು ಶ್ರೇಷ್ಠ ಪದವಿ ಪಡೆಯುತ್ತಾರೆ. ವಿಚಾರ ಮಾಡಿ - ಕವಡೆಯಲ್ಲಿ! ವಜ್ರಗಳೆಲ್ಲಿ! ಎಲ್ಲದಕ್ಕಿಂತ ಹೆಚ್ಚಿನ ಮೌಲ್ಯವು ವಜ್ರಕ್ಕಿದೆ. ಕವಡೆಯ ಮೌಲ್ಯವು ಎಲ್ಲದಕ್ಕಿಂತ ಕಡಿಮೆಯಾಗಿದೆ. ನೀವೀಗ ಕವಡೆಯಿಂದ ವಜ್ರ ಸಮಾನ ಆಗುತ್ತೀರಿ, ಈ ಮಾತುಗಳು ಎಂದೂ ಯಾರ ಸ್ವಪ್ನದಲ್ಲಿಯೂ ಬರುವುದಿಲ್ಲ, ಕೇವಲ ಇಷ್ಟನ್ನು ತಿಳಿದುಕೊಳ್ಳುತ್ತಾರೆ - ಅವಶ್ಯವಾಗಿ ಲಕ್ಷ್ಮಿ - ನಾರಾಯಣರ ರಾಜ್ಯವಿತ್ತು, ಅವರು ಇದ್ದು ಹೋಗಿದ್ದಾರೆ. ಆದರೆ ಈ ರಾಜ್ಯವನ್ನು ಯಾವಾಗ ಯಾರು ಕೊಟ್ಟರು? ಎಂಬುದನ್ನು ತಿಳಿದುಕೊಂಡಿಲ್ಲ. ರಾಜ್ಯವನ್ನು ಯಾರು ಕೊಟ್ಟರು? ಇಲ್ಲಂತೂ ಏನೂ ಇಲ್ಲ. ರಾಜಯೋಗದಿಂದ ಸ್ವರ್ಗದ ರಾಜ್ಯ ಪದವಿಯು ಸಿಗುತ್ತದೆ. ಇದು ಅದ್ಭುತವಲ್ಲವೆ. ಮಕ್ಕಳ ಬುದ್ಧಿಯಲ್ಲಿ ಚೆನ್ನಾಗಿ ನಶೆಯಿರಬೇಕು ಆದರೆ ಮಾಯೆಯು ಸ್ಥಿರವಾಗಿ ನಶೆಯಿರಲು ಬಿಡುವುದಿಲ್ಲ. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಈ ಜ್ಞಾನವನ್ನು ಓದಿ ನಾವು ವಿಶ್ವದ ಮಾಲೀಕರಾಗುತ್ತೇವೆ, ಇದು ಎಂದಾದರೂ ಯಾರ ಬುದ್ಧಿಯಲ್ಲಾದರೂ ಬರುತ್ತದೆಯೇ? ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳು ಎಷ್ಟೊಂದು ಪರಿಶ್ರಮ ಪಡಬೇಕು! ಗುರುವಿನ ನಿಂಧಕರಿಗೆ ನೆಲೆಯಿಲ್ಲ. ಇದು ಇಲ್ಲಿನ ಮಾತಾಗಿದೆ. ಅವರಿಗಂತೂ ಅಲ್ಲಿ ಗುರಿ-ಧ್ಯೇಯವೇ ಇರುವುದಿಲ್ಲ. ನಿಮಗೆ ಗುರಿ-ಧ್ಯೇಯವಿದೆ. ತಂದೆ, ಶಿಕ್ಷಕ, ಗುರು ಮೂವರೂ ಇದ್ದಾರೆ, ನೀವು ತಿಳಿದುಕೊಂಡಿದ್ದೀರಿ - ಈ ವಿದ್ಯೆಯಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ ಅಂದಾಗ ಎಚ್ಚರ ವಹಿಸಿ ಓದಬೇಕು ಮತ್ತು ಓದಿಸಬೇಕಾಗಿದೆ. ನಿಂದನೆ ಮಾಡಿಸುವಂತಹ ಯಾವುದೇ ಮಾತು ಇರಬಾರದು. ಯಾರೊಂದಿಗೂ ಜಗಳ - ಕಲಹ ಮಾಡಬಾರದು. ಎಲ್ಲರೊಂದಿಗೆ ಮಧುರವಾಗಿ ಮಾತನಾಡಬೇಕಾಗಿದೆ. ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಜ್ಞಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು. ನಂಬರ್ವನ್ ದಾನವು ದೇಹಾಭಿಮಾನದ್ದಾಗಿದೆ, ಈ ಸಮಯದಲ್ಲಿ ನೀವು ಆತ್ಮಾಭಿಮಾನಿ ಮತ್ತು ಪರಮಾತ್ಮಾಭಿಮಾನಿಗಳಾಗುತ್ತೀರಿ. ಇದು ಅಮೂಲ್ಯ ಜೀವನವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ನಿಮಗೆ ಈ ರೀತಿ ಓದಿಸಲು ಬರುತ್ತೇನೆ ಮತ್ತು ನೀವು ಮರೆತು ಹೋಗುತ್ತೀರಿ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ, ಜ್ಞಾನ ರತ್ನಗಳನ್ನು ಧಾರಣೆ ಮಾಡುವ ಮತ್ತು ಸರ್ವಿಸ್ ಮಾಡುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಲ್ಲರೊಂದಿಗೆ ಮಧುರವಾಗಿ ಮಾತನಾಡಬೇಕಾಗಿದೆ. ತಂದೆಯ ನಿಂದನೆಯಾಗುವಂತಹ ಯಾವುದೇ ಮಾತುಗಳನ್ನಾಡಬಾರದು. ದೇಹಾಭಿಮಾನದ ದಾನ ಮಾಡಿ ಆತ್ಮಾಭಿಮಾನಿ ಮತ್ತು ಪರಮಾತ್ಮಾಭಿಮಾನಿ ಆಗಬೇಕು. |
2. ಯಾವ ಜ್ಞಾನ ಧನ ಸಿಗುತ್ತಿದೆಯೋ ಅದರ ದಾನ ಮಾಡಬೇಕಾಗಿದೆ. ವಿದ್ಯೆಯಿಂದ ರಾಜ್ಯಭಾಗ್ಯ ಸಿಗುತ್ತದೆ. ಈ ನಶೆಯಲ್ಲಿ ಸ್ಥಿರವಾಗಿರಬೇಕಾಗಿದೆ. ಗಮನವನ್ನಿಟ್ಟು ವಿದ್ಯೆಯನ್ನು ಓದಬೇಕು. |
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಸುಪ್ರಭಾತ. ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಸದಾ ಗುಡ್ ಮಾರ್ನಿಂಗ್, ಗುಡ್ ಡೇ, ಗುಡ್ ಎವರಿತಿಂಗ್, ಗುಡ್ನೈಟ್, ಎಲ್ಲವೂ ಶುಭವೇ ಶುಭವಾಗಿರುತ್ತದೆ. ಇಲ್ಲಿ ಗುಡ್ ಮಾರ್ನಿಂಗ್, ಗುಡ್ನೈಟ್ ಯಾವುದೂ ಇಲ್ಲ. ಎಲ್ಲದಕ್ಕಿಂತ ಅಶುಭವಾಗಿದೆ ರಾತ್ರಿ ಅಂದಮೇಲೆ ಎಲ್ಲದಕ್ಕಿಂತ ಒಳ್ಳೆಯದು ಯಾವುದು? ಮುಂಜಾನೆ. ಇದಕ್ಕೆ ಅಮೃತವೇಳೆಯೆಂದೂ ಹೇಳಲಾಗುತ್ತದೆ. ನಿಮ್ಮದು ಪ್ರತೀ ಸಮಯ ಶುಭವೇ ಶುಭವಾಗಿದೆ. ಮಕ್ಕಳಿಗೆ ತಿಳಿದಿದೆ - ಈ ಸಮಯದಲ್ಲಿ ನಾವು ಯೋಗ-ಯೋಗೇಶ್ವರ ಮತ್ತು ಯೋಗ-ಯೋಗೇಶ್ವರಿ ಆಗಿದ್ದೇವೆ. ಈಶ್ವರನು ನಿಮ್ಮ ತಂದೆಯಾಗಿದ್ದಾರೆ, ಅವರೇ ಬಂದು ಯೋಗವನ್ನು ಕಲಿಸುತ್ತಾರೆ ಅರ್ಥಾತ್ ಒಬ್ಬ ಈಶ್ವರನೊಂದಿಗೆ ನೀವು ಮಕ್ಕಳ ಯೋಗವಿದೆ. ನೀವು ಮಕ್ಕಳಿಗೆ ಯೋಗೇಶ್ವರನ ನಂತರ ಜ್ಞಾನ-ಜ್ಞಾನೇಶ್ವರನ ಬಗ್ಗೆ ಅರ್ಥವಾಗಿದೆ. ಯೋಗ ಹಿಡಿಸಿತೆಂದರೆ ಮತ್ತೆ ತಂದೆಯು ನಿಮಗೆ ಇಡೀ ಚಕ್ರದ ಜ್ಞಾನವನ್ನು ತಿಳಿಸುತ್ತಾರೆ. ಇದರಿಂದ ನೀವೂ ಸಹ ಜ್ಞಾನ-ಜ್ಞಾನೇಶ್ವರರಾಗುತ್ತೀರಿ. ಈಶ್ವರ ತಂದೆಯು ಬಂದು ಮಕ್ಕಳಿಗೆ ಜ್ಞಾನ ಮತ್ತು ಯೋಗವನ್ನು ಕಲಿಸುತ್ತಾರೆ. ಯಾವ ಈಶ್ವರ? ನಿರಾಕಾರ ತಂದೆ. ಈಗ ಬುದ್ದಿಗೆ ಕೆಲಸ ಕೊಡಿ - ಗುರುಗಳದು ಅನೇಕ ಮತಗಳಿವೆ, ಕೆಲವರು ಕೃಷ್ಣನೊಂದಿಗೆ ಯೋಗವನ್ನಿಡಿ ಎಂದು ಹೇಳಿ ಅವರ ಚಿತ್ರವನ್ನೂ ಕೊಡುತ್ತಾರೆ, ಕೆಲವರು ಸಾಯಿಬಾಬಾ, ಕೆಲವರು ಮಹರ್ಷಿ ಬಾಬಾ, ಇನ್ನೂ ಕೆಲವರು ಮುಸಲ್ಮಾನರ ಮತ್ತು ಕೆಲವರು ಪಾರಸಿಗಳ, ಹೀಗೆ ಎಲ್ಲರನ್ನೂ ಬಾಬಾ, ಬಾಬಾ ಎಂದು ಹೇಳುತ್ತಿರುತ್ತಾರೆ. ಎಲ್ಲರೂ ಭಗವಂತರೆ ಎಂದು ಹೇಳುತ್ತಾರೆ. ಈಗ ನಿಮಗೆ ತಿಳಿದಿದೆ - ಮನುಷ್ಯರು ಭಗವಂತನಾಗಲು ಸಾಧ್ಯವಿಲ್ಲ. ವಾಸ್ತವದಲ್ಲಿ ಈ ಲಕ್ಷ್ಮೀ-ನಾರಾಯಣರಿಗೂ ಸಹ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಭಗವಂತನು ಒಬ್ಬ ನಿರಾಕಾರನಾಗಿದ್ದಾರೆ. ಅವರು ನೀವೆಲ್ಲಾ ಆತ್ಮರ ತಂದೆಯಾಗಿದ್ದಾರೆ. ಅವರಿಗೆ ಶಿವ ತಂದೆಯೆಂದು ಹೇಳಲಾಗುತ್ತದೆ. ನೀವೇ ಜನ್ಮ-ಜನ್ಮಾಂತರದಿಂದ ಸತ್ಸಂಗವನ್ನು ಮಾಡುತ್ತಾ ಬಂದಿದ್ದೀರಿ. ಯಾರಾದರೂ ಸನ್ಯಾಸಿ, ಸಾಧು, ಪಂಡಿತ ಮೊದಲಾದವರು ಖಂಡಿತ ಇರುತ್ತಾರೆ. ಇವರು ನಮ್ಮ ಗುರುವಾಗಿದ್ದಾರೆ, ನಮಗೆ ಕಥೆಯನ್ನು ಹೇಳುತ್ತಿದ್ದಾರೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಸತ್ಯಯುಗದಲ್ಲಿ ಕಥೆ ಇತ್ಯಾದಿಗಳೇನೂ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಕೇವಲ ಭಗವಂತ ಅಥವಾ ಈಶ್ವರನೆಂದು ಹೇಳಿದಾಗ ಆ ರಸವು ಬರುವುದಿಲ್ಲ, ಅವರು ತಂದೆಯಾಗಿದ್ದಾರೆ. ಆದ್ದರಿಂದ ಬಾಬಾ ಎಂದು ಹೇಳಿದಾಗ ಸಂಬಂಧವು ಸ್ನೇಹಪೂರ್ಣವಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ, ನಾವು ಮಮ್ಮಾ ಬಾಬಾರವರ ಮಕ್ಕಳಾಗಿದ್ದೇವೆ. ಅವರಿಂದ ನಮಗೆ ಸ್ವರ್ಗದ ಸುಖ ಸಿಗುತ್ತದೆ. ನಾವು ಈ ಸತ್ಸಂಗದಿಂದ ಮನುಷ್ಯನಿಂದ ದೇವತೆ, ನರಕವಾಸಿಗಳಿಂದ ಸ್ವರ್ಗವಾಸಿಗಳೆಂದು ತಿಳಿಯುವಂತಹ ಇಂತಹ ಸತ್ಸಂಗವು ಬೇರೆ ಯಾವುದೂ ಇರಲು ಸಾಧ್ಯವಿಲ್ಲ. ಈಗ ನಿಮ್ಮದು ಸತ್ಯ ತಂದೆಯ ಜೊತೆ ಸಂಗವಿದೆ ಮತ್ತೆಲ್ಲರದೂ ಅಸತ್ಯವಂತರ ಜೊತೆ ಸಂಗವೆಂದು ಹೇಳಲಾಗುತ್ತದೆ. ಸತ್ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಬೀಳಿಸುವುದೆಂದು ಗಾಯನವಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ -ಆತ್ಮಾಭಿಮಾನಿಯಾಗಿರಿ, ನಾನು ನೀವು ಮಕ್ಕಳು ಅರ್ಥಾತ್ ಆತ್ಮರಿಗೇ ಕಲಿಸುತ್ತೇನೆ. ಈ ಆತ್ಮಿಕ ಜ್ಞಾನವನ್ನು ಆತ್ಮಗಳ ಪ್ರತಿ ಪರಮಾತ್ಮನೇ ಬಂದು ತಿಳಿಸುತ್ತಾರೆ. ಉಳಿದೆಲ್ಲವೂ ಭಕ್ತಿಮಾರ್ಗವಾಗಿದೆ. ಅದು ಜ್ಞಾನಮಾರ್ಗವಲ್ಲ. ತಂದೆಯು ತಿಳಿಸುತ್ತಾರೆ - ನಾನು ಎಲ್ಲಾ ವೇದ ಶಾಸ್ತ್ರಗಳನ್ನು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೇನೆ. ನಾನು ಅಥಾರಿಟಿಯಾಗಿದ್ದೇನೆ. ಆ ಮನುಷ್ಯರು ಭಕ್ತಿಮಾರ್ಗದ ಅಥಾರಿಟಿಯಾಗಿದ್ದಾರೆ. ಅನೇಕ ಶಾಸ್ತ್ರ ಮೊದಲಾದುವುಗಳನ್ನು ಓದುತ್ತಾರೆ. ಆದ್ದರಿಂದ ಅವರಿಗೆ ಶಾಸ್ತ್ರಗಳ ಅಥಾರಿಟಿಯೆಂದು ಹೇಳುತ್ತಾರೆ. ನಿಮಗೆ ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ – ಸತ್ಯ ಸಂಗವು ಮೇಲೆತ್ತುವುದು, ಕೆಟ್ಟ ಸಂಗವು ಮುಳುಗಿಸುವುದು. ಈಗ ತಂದೆಯು ನೀವು ಮಕ್ಕಳ ಮೂಲಕ ಭಾರತವನ್ನು ರಕ್ಷಣೆ ಮಾಡುತ್ತಿದ್ದಾರೆ. ನೀವು ಆತ್ಮೀಕ ರಕ್ಷಣಾ ಸೈನಿಕರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ಯಾವ ಭಾರತವು ಸ್ವರ್ಗವಾಗಿತ್ತೋ ಅದು ಈಗ ನರಕವಾಗಿದೆ ಅರ್ಥಾತ್ ಮುಳುಗಿದೆ ಅಂದರೆ ಅದೇನೂ ಸ್ಥೂಲವಾಗಿ ಸಾಗರದ ಕೆಳಗಡೆಯಿಲ್ಲ. ನೀವು ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ. ಸತ್ಯ-ತ್ರೇತಾ ಯುಗವು ಸತೋಪ್ರಧಾನವಾಗಿದೆ. ಇದು ದೊಡ್ಡ ಹಡಗು(ಸ್ಟೀಮರ್) ಆಗಿದೆ ನೀವೀಗ ಹಡಗಿನಲ್ಲಿ ಕುಳಿತಿದ್ದೀರಿ. ಇದು ಪಾಪದ ನಗರವಾಗಿದೆ ಏಕೆಂದರೆ ಇಲ್ಲಿ ಎಲ್ಲರೂ ಪಾಪಾತ್ಮರಿದ್ದಾರೆ, ವಾಸ್ತವದಲ್ಲಿ ಗುರು ಒಬ್ಬರೇ ಆಗಿದ್ದಾರೆ, ಅವರನ್ನು ಯಾರೂ ತಿಳಿದುಕೊಂಡಿಲ್ಲ. ಯಾವಾಗಲೂ ಓ ಗಾಡ್ ಫಾದರ್ ಎಂದು ಹೇಳುತ್ತಾರೆ. ಗಾಡ್ ಫಾದರ್ಕಮ್ ಪ್ರಿಸಪ್ಟರ್ ಹೇಳುವುದಿಲ್ಲ. ಕೇವಲ ಫಾದರ್ ಎಂದು ಹೇಳುತ್ತಾರೆ. ಅವರು ಪತಿತ-ಪಾವನನಾಗಿದ್ದಾರೆ. ಅಂದಮೇಲೆ ಗುರುವೂ ಆದರು. ಸರ್ವರ ಪತಿತ-ಪಾವನ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಈ ಪತಿತ ಪ್ರಪಂಚದಲ್ಲಿ ಯಾವುದೆ ಮನುಷ್ಯರು ಸದ್ಗತಿದಾತ ಅಥವಾ ಪತಿತ-ಪಾವನರಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಇಲ್ಲಿ ಎಷ್ಟೊಂದು ಕಲುಷಿತ ಭ್ರಷ್ಟಾಚಾರವಿದೆ. ನಾನೀಗ ಕನ್ಯೆಯರು, ಮಾತೆಯರ ಮೂಲಕ ಎಲ್ಲರ ಉದ್ಧಾರ ಮಾಡಬೇಕಾಗಿದೆ. |
ನೀವೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯರಾದಿರಿ. ಇಲ್ಲವೆಂದರೆ ತಾತನ ಆಸ್ತಿಯು ಹೇಗೆ ಸಿಗುವುದು! ತಾತನಿಂದ 21 ಜನ್ಮಗಳ ಅರ್ಥಾತ್ ಸ್ವರ್ಗದ ರಾಜಧಾನಿಯ ಆಸ್ತಿಯು ಸಿಗುತ್ತದೆ. ಎಷ್ಟು ದೊಡ್ಡ ಸಂಪಾದನೆಯಾಗಿದೆ! ಇದು ಸತ್ಯ ತಂದೆಯ ಮೂಲಕ ಸತ್ಯ ಸಂಪಾದನೆಯಾಗಿದೆ. ತಂದೆ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಪ್ರತ್ಯಕ್ಷದಲ್ಲಿ ಮಾಡಿ ತೋರಿಸುವವರಾಗಿದ್ದಾರೆ. ಗುರುವು ಮರಣ ಹೊಂದಿದರೆ ಶಿಷ್ಯನಿಗೆ ಅವರ ಸಿಂಹಾಸನ ಸಿಗುವುದು ಎಂದಲ್ಲ. ಅವರಂತೂ ದೈಹಿಕ ಗುರುಗಳಾದರು. ಇವರು ಆತ್ಮಿಕ ಗುರುವಾಗಿದ್ದಾರೆ. ಈ ಮಾತನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ, ಇವು ಹೊಸ ಮಾತುಗಳಾಗಿವೆ. ನೀವು ತಿಳಿದುಕೊಂಡಿದ್ದೀರಿ - ನಮಗೆ ಯಾವುದೇ ಮನುಷ್ಯರು ಓದಿಸುವುದಿಲ್ಲ, ನಮಗೆ ಶಿವ ತಂದೆ, ಜ್ಞಾನ ಸಾಗರ, ಪತಿತ-ಪಾವನನು ಈ ಶರೀರದ ಮೂಲಕ ಓದಿಸುತ್ತಾರೆ. ನಿಮ್ಮ ಬುದ್ದಿಯು ಶಿವ ತಂದೆಯ ಕಡೆ ಇದೆ. ಆ ಸತ್ಸಂಗಗಳಲ್ಲಿ ಬುದ್ಧಿಯು ಮನುಷ್ಯರ ಕಡೆ ಹೋಗುತ್ತದೆ. ಅದೆಲ್ಲವೂ ಭಕ್ತಿಮಾರ್ಗವಾಗಿದೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕನೆಂದು ನೀವು ಹಾಡುತ್ತೀರಿ. ಇಲ್ಲಂತೂ ಒಬ್ಬರೇ ತಂದೆಯಲ್ಲವೆ. ಆದರೆ ತಂದೆಯು ತಿಳಿಸುತ್ತಾರೆ - ನಾನು ಬಂದು ನಿಮ್ಮನ್ನು ಹೇಗೆ ನನ್ನವರನ್ನಾಗಿ ಮಾಡಿಕೊಳ್ಳಲಿ! ನಾನು ನಿಮ್ಮ ಪಿತನಾಗಿದ್ದೇನೆ. ಆದ್ದರಿಂದ ಇವರ ತನುವಿನ ಆಧಾರ ತೆಗೆದುಕೊಳ್ಳುತ್ತೇನೆ ಅಂದಾಗ ಇವರು (ಬ್ರಹ್ಮಾ) ನನ್ನ ಸ್ತ್ರೀಯೂ ಆಗಿದ್ದಾರೆ ಮತ್ತು ಮಗನೂ ಆಗಿದ್ದಾರೆ. ಇವರ ಮೂಲಕ ಶಿವ ತಂದೆಯು ಮಕ್ಕಳನ್ನು ದತ್ತು ಮಾಡಿಕೊಳ್ಳುವ ಕಾರಣ ಇವರು ದೊಡ್ಡ ತಾಯಿಯೂ ಆದರು, ಇವರಿಗೆ ಯಾರೂ ತಾಯಿಯಿಲ್ಲ, ಸರಸ್ವತಿಗೆ ಜಗದಂಬೆ ಎಂದು ಹೇಳಲಾಗುತ್ತದೆ. ನಿಮ್ಮ ಪಾಲನೆಗಾಗಿ ಅವರನ್ನು ನಿಗಧಿ ಪಡಿಸಿದ್ದಾರೆ. ಸರಸ್ವತಿಯು ಜ್ಞಾನ ಜ್ಞಾನೇಶ್ವರಿಯಾಗಿದ್ದಾರೆ. ಇವರು ಚಿಕ್ಕ ತಾಯಿಯಾಗಿದ್ದಾರೆ. ಇವು ಬಹಳ ಗುಹ್ಯ ಮಾತುಗಳಾಗಿವೆ. ನೀವೀಗ ಈ ಗುಹ್ಯ ವಿದ್ಯೆಯನ್ನು ಓದುತ್ತಿದ್ದೀರಿ. ನೀವು ಗೌರವಪೂರ್ಣವಾಗಿ ತೇರ್ಗಡೆಯಾಗಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರು ಗೌರವಪೂರ್ಣವಾಗಿ ತೇರ್ಗಡೆಯಾಗಿದ್ದಾರೆ. ಅವರಿಗೆ ಎಲ್ಲರಿಗಿಂತ ದೊಡ್ಡ ಸ್ಕಾಲರ್ಶಿಪ್ ಸಿಕ್ಕಿದೆ, ಯಾವುದೇ ಶಿಕ್ಷೆಯನ್ನು ಅನುಭವಿಸಬೇಕಾಗಲಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಷ್ಟು ಸಾಧ್ಯವೋ ಅಷ್ಟು ನೆನಪು ಮಾಡಿ, ಇದಕ್ಕೆ ಭಾರತದ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಿಮಗೆ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ನಾನು ನಿಮಗೆ ರಾಜಯೋಗವನ್ನು ಕಲಿಸಿದೆನು ಅದರಿಂದ ನೀವು ಪ್ರಾಲಬ್ದವನ್ನು ಪಡೆದಿರಿ ನಂತರ ಜ್ಞಾನವು ಸಮಾಪ್ತಿಯಾಯಿತು ಅಂದಮೇಲೆ ಇದು ಪರಂಪರೆಯಿಂದ ನಡೆದು ಬರಲು ಹೇಗೆ ಸಾಧ್ಯ! ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ. ಅನ್ಯ ಧರ್ಮದವರಾದ ಇಸ್ಲಾಮಿಗಳು, ಬೌದ್ಧಿ ಮೊದಲಾದವರ ಜ್ಞಾನವು ಪ್ರಾಯಃಲೋಪವಾಗುವುದಿಲ್ಲ. ಅವರದೂ ಪರಂಪರೆ ನಡೆಯುತ್ತದೆ. ಎಲ್ಲರಿಗೂ ತಿಳಿದಿದೆ ಆದರೆ ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಯಾವ ಜ್ಞಾನವನ್ನು ತಿಳಿಸುತ್ತೇನೆಯೋ ಅದನ್ನು ಯಾರೂ ತಿಳಿದುಕೊಂಡಿಲ್ಲ. ಭಾರತವು ದುಃಖಿಯಾಗಿ ಬಿಡುತ್ತದೆ. ನಾನು ಬಂದು ಅದನ್ನು ಸದಾ ಸುಖಿಯನ್ನಾಗಿ ಮಾಡುತ್ತೇನೆ. |
ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಕುಳಿತಿದ್ದೇನೆ. ನಿಮ್ಮ ಬುದ್ಧಿಯೋಗವು ತಂದೆಯ ಜೊತೆಯಲ್ಲಿಯೇ ಇರಲಿ, ಆತ್ಮಗಳ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಸರ್ವ ಮಕ್ಕಳ ತಂದೆಯಾಗಿದ್ದಾರೆ, ಅಂದಮೇಲೆ ಅವರಿಗೆ ಎಲ್ಲರೂ ಮಕ್ಕಳಾದರು. ಎಲ್ಲಾ ಆತ್ಮರು ಈ ಸಮಯದಲ್ಲಿ ಪತಿತರಾಗಿದ್ದಾರೆ, ನಾನೀಗ ಪ್ರತ್ಯಕ್ಷವಾಗಿ ಬಂದಿದ್ದೇನೆ. ವಿನಾಶವು ಸಮ್ಮುಖದಲ್ಲಿ ನಿಂತಿದೆ. ನಿಮಗೆ ತಿಳಿದಿದೆ - ಇದಕ್ಕೆ ಬೆಂಕಿ ಬೀಳುವುದು. ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ಎಲ್ಲಾ ಆತ್ಮರು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಬ್ರಹ್ಮ್ ದಲ್ಲಿ ಲೀನವಾಗುತ್ತಾರೆ ಅಥವಾ ಜ್ಯೋತಿಯಲ್ಲಿ ಸಮಾವೇಶವಾಗುತ್ತಾರೆ ಎಂದಲ್ಲ. ಬ್ರಹ್ಮ ಸಮಾಜಿಗಳು ಜ್ಯೋತಿಯನ್ನು ಬೆಳಗಿಸುತ್ತಾರೆ, ಅದಕ್ಕೆ ಬ್ರಹ್ಮ ಮಂದಿರವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಬ್ರಹ್ಮ್ ಮಹಾತತ್ವವಾಗಿದೆ, ಅಲ್ಲಿ ಎಲ್ಲಾ ಆತ್ಮರು ಇರುತ್ತಾರೆ. ನಮ್ಮ ಮೊದಲ ಮಂದಿರವು ಅದಾಗಿದೆ. ಅಲ್ಲಿ ಪವಿತ್ರ ಆತ್ಮರಿರುತ್ತಾರೆ, ಈ ಮಾತುಗಳನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಜ್ಞಾನಸಾಗರ ತಂದೆಯು ಕುಳಿತು ನೀವು ಮಕ್ಕಳಿಗೆ ತಿಳಿಸುತ್ತಾರೆ - ನೀವೀಗ ಜ್ಞಾನ-ಜ್ಞಾನೇಶ್ವರರಾಗಿದ್ದೀರಿ ನಂತರ ರಾಜ-ರಾಜೇಶ್ವರರಾಗುತ್ತೀರಿ. ನಿಮ್ಮ ಬುದ್ಧಿಯಲ್ಲಿದೆ - ಪತಿತ-ಪಾವನ ಅತೀ ಪ್ರಿಯ ತಂದೆಯು ಬಂದು ನಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ. ಕೆಲವರ ಬುದ್ಧಿಯಲ್ಲಿ ಇದೂ ಸಹ ಕುಳಿತುಕೊಳ್ಳುವುದಿಲ್ಲ. ಎಷ್ಟೊಂದು ಮಂದಿ ಕುಳಿತ್ತಿದ್ದಾರೆ, ಇವರಲ್ಲಿ ಯಾರು 100% ನಿಶ್ಚಯ ಬುದ್ದಿಯವರಿಲ್ಲ. ಕೆಲವರು 80%, ಕೆಲವರು 50% ಇದ್ದಾರೆ. ಕೆಲವರು ಅದೂ ಇಲ್ಲ. ಅವರು ಸಂಪೂರ್ಣ ಕನಿಷ್ಟರಾದರು. ನಂಬರ್ವಾರ್ ಅವಶ್ಯವಾಗಿ ಇರುತ್ತಾರೆ. ಬಹಳ ಮಂದಿ ಮಕ್ಕಳಿಗೆ ನಿಶ್ಚಯವಿಲ್ಲ, ನಿಶ್ಚಯವಾಗಬೇಕೆಂದು ಪ್ರಯತ್ನ ಪಡುತ್ತಾರೆ. ಒಂದುವೇಳೆ ನಿಶ್ಚಯವಾಗಲೂಬಹುದು ಆದರೆ ಮಾಯೆಯು ಕಠಿಣವಾಗಿದೆ. ತಂದೆಯನ್ನು ಮರೆತು ಹೋಗುತ್ತಾರೆ, ಈ ಬ್ರಹ್ಮಾರವರೂ ಸಹ ಹೇಳುತ್ತಾರೆ - ನಾನು ಪೂರ್ಣ ಭಕ್ತನಾಗಿದ್ದೆನು. 63 ಜನ್ಮಗಳವರೆಗೆ ಭಕ್ತಿ ಮಾಡಿದ್ದೇನೆ, ತತ್ ತ್ವಂ. ನೀವೂ ಸಹ 63 ಜನ್ಮಗಳು ಭಕ್ತಿ ಮಾಡಿದ್ದೀರಿ, 21 ಜನ್ಮಗಳವರೆಗೆ ಸುಖ ಪಡೆದಿರಿ ನಂತರ ಭಕ್ತರಾಗಿದ್ದೀರಿ. ಭಕ್ತಿಯ ನಂತರ ವೈರಾಗ್ಯ, ಸನ್ಯಾಸಿಗಳೂ ಸಹ ಈ ಶಬ್ದವನ್ನು ಎಲ್ಲರೂ ಹೇಳುತ್ತಾರೆ - ಜ್ಞಾನ, ಭಕ್ತಿ ಮತ್ತು ವೈರಾಗ್ಯ. ಅವರಿಗೆ ಗೃಹಸ್ಥದಿಂದ ವೈರಾಗ್ಯ ಬರುತ್ತದೆ, ಅದಕ್ಕೆ ಹದ್ದಿನ ವೈರಾಗ್ಯವೆಂದು ಹೇಳಲಾಗುತ್ತದೆ, ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ. ಸನ್ಯಾಸಿಗಳು ಮನೆ ಮಠವನ್ನು ಬಿಟ್ಟು ಕಾಡಿಗೆ ಹೊರಟು ಹೋಗುತ್ತಿದ್ದರು, ಈಗಂತೂ ಯಾರೂ ಕಾಡಿನಲ್ಲಿಲ್ಲ. ಎಲ್ಲಾ ಕುಟೀರಗಳು ಖಾಲಿ ಬಿದ್ದಿವೆ. ಏಕೆಂದರೆ ಮೊದಲು ಸತೋಪ್ರಧಾನರಾಗಿದ್ದರು, ಈಗ ಅವರು ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಈಗ ಅವರಲ್ಲಿ ಯಾವುದೇ ಬಲವಿಲ್ಲ, ಲಕ್ಷ್ಮಿ - ನಾರಾಯಣರ ರಾಜಧಾನಿಯಲ್ಲಿ ಯಾವ ಬಲವಿತ್ತೋ ಅದು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ನೋಡಿ, ಎಲ್ಲಿ ಬಂದು ತಲುಪಿದ್ದಾರೆ! ಏನೂ ಶಕ್ತಿಯಿಲ್ಲ, ಇಲ್ಲಿಯ ಸರ್ಕಾರವೂ ಸಹ ಹೇಳುತ್ತದೆ - ನಾವು ಧರ್ಮವನ್ನು ನಂಬುವುದಿಲ್ಲ. ಧರ್ಮದಲ್ಲಿಯೇ ಬಹಳ ನಷ್ಟವಿದೆ. ಹೊಡೆದಾಡುತ್ತಾ - ಜಗಳವಾಡುತ್ತಿರುತ್ತಾರೆ ಮತ್ತೆ ಎಲ್ಲಾ ಧರ್ಮದವರು ಸೇರಿ ಒಂದಾಗಲಿ ಎಂದು ಸಮ್ಮೇಳನಗಳನ್ನು ಮಾಡುತ್ತಿರುತ್ತಾರೆ. ಆದರೆ ನೀವು ಕೇಳಿರಿ – ಎಲ್ಲರೂ ಸೇರಿ ಒಂದಾಗಲು ಹೇಗೆ ಸಾಧ್ಯ! ಈಗಂತೂ ಎಲ್ಲರೂ ಹಿಂತಿರುಗಿ ಹೋಗುವವರಿದ್ದಾರೆ. ತಂದೆಯು ಬಂದಿದ್ದಾರೆ - ಈ ಪ್ರಪಂಚವು ಈಗ ಸ್ಮಶಾನವಾಗಲಿದೆ. ಬಾಕಿ ಇದಂತೂ ವಿಭಿನ್ನ ವೃಕ್ಷವಾಗಿದೆ ಅಂದಮೇಲೆ ಇದು ಹೇಗೆ ಒಂದಾಗುವುದು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಭಾರತದಲ್ಲಿ ಒಂದು ಧರ್ಮವಿತ್ತು, ಅವರಿಗೆ ಅದ್ವೈತ ಮತದ ದೇವತೆಗಳೆಂದು ಹೇಳಲಾಗುತ್ತಿತ್ತು. ದ್ವೈತ ಎಂದರೆ ದೈತ್ಯರು. ತಂದೆಯು ಹೇಳುತ್ತಾರೆ - ನಿಮ್ಮ ಈ ಧರ್ಮವೇ ಬಹಳ ಸುಖ ಕೊಡುವಂತದ್ದಾಗಿದೆ. ನೀವು ತಿಳಿದುಕೊಂಡಿದ್ದೀರಿ - ಪುನರ್ಜನ್ಮವನ್ನು ತೆಗೆದುಕೊಂಡು ನಾವು ಪುನಃ 84 ಜನ್ಮಗಳನ್ನು ಭೋಗಿಸಬೇಕಾಗಿದೆ. ಈ ನಿಶ್ಚಯವಿರಲಿ - ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ನಾವೇ ಹೋಗಬೇಕಾಗಿದೆ ಮತ್ತೆ ಬರಬೇಕಾಗಿದೆ. ತಂದೆಯು ಭಾರತವಾಸಿಗಳಿಗೆ ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ. ಈಗ ನಿಮ್ಮದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಕೇವಲ ಒಬ್ಬರಿಗೇ ಹೇಳುತ್ತಿಲ್ಲ, ಪಾಂಡವ ಸೈನ್ಯಕ್ಕೆ ತಿಳಿಸುತ್ತಾರೆ - ನೀವು ಪಂಡರಾಗಿದ್ದೀರಿ. ನೀವು ಆತ್ಮಿಕ ಯಾತ್ರೆಯನ್ನು ಕಲಿಸುತ್ತೀರಿ. ಆದ್ದರಿಂದ ಪಾಂಡವ ಸೇನೆ ಎಂದು ಹೇಳಲಾಗುತ್ತದೆ. ಈಗ ರಾಜ್ಯವು ಕೌರವರಿಗೂ ಇಲ್ಲ, ಪಾಂಡವರಿಗೂ ಇಲ್ಲ. ಅವರೂ ಪ್ರಜೆಗಳು, ನೀವೂ ಪ್ರಜೆಗಳಾಗಿದ್ದೀರಿ. ಕೌರವ, ಪಾಂಡವರು ಸಹೋದರ-ಸಹೋದರರಾಗಿದ್ದಾರೆ. ಪಾಂಡವರ ಕಡೆ ಪರಮಪಿತ ಪರಮಾತ್ಮನಿದ್ದಾರೆಂದು ಹೇಳುತ್ತಾರೆ. ತಂದೆಯೇ ಬಂದು ಮಾಯೆಯ ಮೇಲೆ ಜಯ ಗಳಿಸುವುದನ್ನು ಕಲಿಸುತ್ತಾರೆ. ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರು ಅಹಿಂಸಕರಾಗಿದ್ದೀರಿ. ಅಹಿಂಸಾ ಪರಮೋ ಧರ್ಮ. ಮುಖ್ಯ ಮಾತೇನೆಂದರೆ ಕಾಮ ಕಟಾರಿಯನ್ನು ನಡೆಸಬಾರದು. ಭಾರತವಾಸಿಗಳು ತಿಳಿಯುತ್ತಾರೆ - ಗೋವಿನ ಹತ್ಯೆ ಮಾಡಬಾರದು. ಇದೇ ಅಹಿಂಸೆಯಾಗಿದೆ ಎಂದು ಆದರೆ ತಂದೆಯು ತಿಳಿಸುತ್ತಾರೆ - ಕಾಮಕಟಾರಿಯನ್ನೂ ನಡೆಸಬೇಡಿ, ಇದಕ್ಕೆ ಅತಿದೊಡ್ಡ ಹಿಂಸೆಯೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಕಾಮ ಕಟಾರಿಯಾಗಲಿ, ಜಗಳ-ಕಲಹಗಳಾಗಲಿ ನಡೆಯುವುದಿಲ್ಲ. ಇಲ್ಲಂತೂ ಎರಡೂ ಇದೆ. ಕಾಮ ಕಟಾರಿಯೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ನೀವು ಏಣಿಯನ್ನಿಳಿಯುತ್ತೀರಿ. ನೀವು ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈ ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು ನಂತರ ಪುನರ್ಜನ್ಮವನ್ನು ಎಂದು ತೆಗೆದುಕೊಳ್ಳುತ್ತೀರಿ. ಒಂದೊಂದು ಜನ್ಮವು ಒಂದೊಂದು ಮೆಟ್ಟಿಲು ಆಗಿದೆ. ಇಲ್ಲಿಂದ ನೀವು ಒಮ್ಮೆಲೆ ಮೇಲೆ ಜಿಗಿಯುತ್ತೀರಿ, ಮೆಟ್ಟಿಲುಗಳನ್ನು ಇಳಿಯುವುದರಲ್ಲಿ ನಿಮಗೆ 5000 ವರ್ಷಗಳೂ ಹಿಡಿಸುತ್ತವೆ ಮತ್ತೆ ಇಲ್ಲಿಂದ ಸೆಕೆಂಡಿನಲ್ಲಿ ಮೇಲೇರುತ್ತೀರಿ. ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಯಾರು ಕೊಡುವರು? ತಂದೆ. ಈಗ ಎಲ್ಲರೂ ಒಮ್ಮೆಲೆ ನೆಲ ತಲುಪಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿ, ಇದನ್ನು ಬುದ್ದಿಯಲ್ಲಿ ನೆನಪಿಟ್ಟುಕೊಳ್ಳಿ - ಈಗ ನಾಟಕವು ಪೂರ್ಣವಾಯಿತು, ನಾವು ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನಾವು ನಮ್ಮ ಮನೆಯನ್ನೂ ಮತ್ತು ತಂದೆಯನ್ನೂ ನೆನಪು ಮಾಡಬೇಕಾಗಿದೆ. ಮೊದಲು ತಂದೆಯನ್ನು ನೆನಪು ಮಾಡಿ, ಅವರೇ ನಿಮಗೆ ಮನೆಯ ಮಾರ್ಗವನ್ನು ತಿಳಿಸುತ್ತಾರೆ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ಬ್ರಹ್ಮತತ್ವವನ್ನು ನೆನಪು ಮಾಡುವುದರಿಂದ ಒಂದು ಪಾಪವೂ ಕಳೆಯುವುದಿಲ್ಲ. ಪತಿತ-ಪಾವನನು ಪರಮಾತ್ಮನೇ ಆಗಿದ್ದಾರೆ. ಅವರು ಹೇಗೆ ಪಾವನರನ್ನಾಗಿ ಮಾಡುತ್ತಾರೆ ಎಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ಖಂಡಿತವಾಗಿಯೂ ಸ್ವರ್ಗದ ಸ್ಥಾಪನೆ ಮಾಡಬೇಕಾಗಿದೆ. ತಂದೆಯು ಬಂದಿದ್ದಾರೆ ಆದ್ದರಿಂದಲೇ ನೀವು ಮಕ್ಕಳು ಜಯಂತಿಯನ್ನು ಆಚರಿಸುತ್ತೀರಿ. ಯಾವಾಗ ಬಂದರು, ಈ ತಿಥಿ-ತಾರೀಖಿನಂದು ಬಂದರೆಂದು ಹೇಳಲು ಸಾಧ್ಯವಿಲ್ಲ. ಶಿವ ತಂದೆಯು ಯಾವಾಗ ಬಂದರೆಂದು ಹೇಗೆ ಹೇಳಲು ಸಾಧ್ಯ? ಬಹಳ ಸಾಕ್ಷಾತ್ಕಾರಗಳಾಗುತ್ತವೆ. ಮೊದಲು ನಾವು ಸರ್ವವ್ಯಾಪಿಯೆಂದು ತಿಳಿಯುತ್ತಿದ್ದೆವು ಅಥವಾ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಿದ್ದೆವು. ಈಗ ಯಥಾರ್ಥವು ಅರ್ಥವಾಗಿದೆ. ತಂದೆಯು ದಿನ-ಪ್ರತಿದಿನ ಗುಹ್ಯ ಮಾತುಗಳನ್ನು ತಿಳಿಸುತ್ತಾ ಇರುತ್ತಾರೆ. ನೀವು ಸಾಧಾರಣ ಮಕ್ಕಳು ಎಷ್ಟು ದೊಡ್ಡ ಜ್ಞಾನವನ್ನು ಓದುತ್ತಿದ್ದೀರಿ, ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
Subsets and Splits
No community queries yet
The top public SQL queries from the community will appear here once available.