text
stringlengths 0
61.5k
|
---|
1. ತಂದೆ ಸಮಾನ ನಿರಹಂಕಾರಿಗಳಾಗಬೇಕಾಗಿದೆ. ಯಾರಿಂದಲೂ ಸೇವೆ ತೆಗೆದುಕೊಳ್ಳಬಾರದು. ಯಾರಿಗೂ ದುಃಖವನ್ನು ಕೊಡಬಾರದಾಗಿದೆ. ಶಿಕ್ಷೆಯನ್ನು ಅನುಭವಿಸುವಂತಹ ಯಾವುದೇ ಪಾಪಕರ್ಮವಾಗಬಾರದು. ಪರಸ್ಪರ ಕ್ಷೀರ ಖಂಡವಾಗಿರಬೇಕಾಗಿದೆ. |
2. ಒಬ್ಬ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ, ತನ್ನ ಮತದಂತೆ ಅಲ್ಲ. |
ಓಂ ಶಾಂತಿ. ಮೊಟ್ಟ ಮೊದಲು ಮಕ್ಕಳಿಗೆ ಸಾವಧಾನ ಸಿಗುತ್ತದೆ - ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಮನ್ಮನಾಭವ. ಈ ಶಬ್ಧವನ್ನೂ ಸಹ ವ್ಯಾಸರು ಬರೆದಿದ್ದಾರೆ. ಸಂಸ್ಕೃತದಲ್ಲಂತೂ ತಂದೆಯು ತಿಳಿಸಲಿಲ್ಲ. ತಂದೆಯು ಹಿಂದಿ ಭಾಷೆಯಲ್ಲಿಯೇ ತಿಳಿಸುತ್ತಾರೆ. ಮಕ್ಕಳೇ, ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ಹೇ ಮಕ್ಕಳೇ, ತಂದೆಯಾದ ನನ್ನನ್ನು ನೆನಪು ಮಾಡಿ ಎಂಬುದು ಎಷ್ಟು ಸಹಜವಾದ ಶಬ್ಧವಾಗಿದೆ. ಲೌಕಿಕ ತಂದೆಯು ಹೇ ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು ಹೇಳುವುದಿಲ್ಲ. ಇದು ಹೊಸ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿರಾಕಾರ ತಂದೆಯನ್ನು ನೆನಪು ಮಾಡಿ. ಇದೂ ಸಹ ಮಕ್ಕಳಿಗೆ ತಿಳಿದಿದೆ, ಆತ್ಮಿಕ ತಂದೆಯು ನಾವು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಪದೇ-ಪದೇ ಮಕ್ಕಳಿಗೆ ತಂದೆಯನ್ನು ನೆನಪು ಮಾಡಿ ಎಂದು ಹೇಳುವುದು ಶೋಭಿಸುವುದಿಲ್ಲ, ಏಕೆಂದರೆ ಮಕ್ಕಳಿಗೆ ಇದು ತಿಳಿದಿದೆ – ಆತ್ಮಿಕ ತಂದೆಯನ್ನು ನೆನಪು ಮಾಡುವುದು ನಮ್ಮ ಕರ್ತವ್ಯವಾಗಿದೆ ಆಗಲೇ ವಿಕರ್ಮಗಳು ವಿನಾಶವಾಗುತ್ತವೆ. ಮಕ್ಕಳು ನಿರಂತರ ನೆನಪು ಮಾಡುವ ಪ್ರಯತ್ನ ಪಡಬೇಕಾಗಿದೆ. ಈ ಸಮಯದಲ್ಲಿ ಯಾರೂ ನಿರಂತರ ನೆನಪು ಮಾಡಲು ಸಾಧ್ಯವಿಲ್ಲ. ಸಮಯ ಹಿಡಿಸುತ್ತದೆ. ಈ ತಂದೆಯು ತಿಳಿಸುತ್ತಾರೆ - ನಾನೂ ಸಹ ನಿರಂತರ ನೆನಪು ಮಾಡುವುದಿಲ್ಲ, ಆ ಸ್ಥಿತಿಯು ಕೊನೆಯಲ್ಲಿಯೇ ಬರುವುದು. ನೀವು ಮಕ್ಕಳು ಮೊಟ್ಟ ಮೊದಲನೆಯದಾಗಿ ತಂದೆಯನ್ನು ನೆನಪು ಮಾಡುವ ಪುರುಷಾರ್ಥವನ್ನೇ ಮಾಡಬೇಕಾಗಿದೆ. ಶಿವ ತಂದೆಯಿಂದ ಆಸ್ತಿಯು ಸಿಗುತ್ತದೆ. ಇದು ಭಾರತವಾಸಿಗಳದೇ ಮಾತಾಗಿದೆ. ಇಲ್ಲಿ ದೈವೀ ರಾಜಧಾನಿಯು ಸ್ಥಾಪನೆಯಾಗುತ್ತದೆ. ಅನ್ಯ ಧರ್ಮದವರಾದರೆ ಧರ್ಮ ಸ್ಥಾಪನೆ ಮಾಡುವುದರಲ್ಲಿ ಅವರಿಗೆ ಕಷ್ಟವಾಗುವುದಿಲ್ಲ. ಅವರು ಬಂದ ಕೂಡಲೇ ಆ ಧರ್ಮದ ಆತ್ಮಗಳು ಬರತೊಡಗುತ್ತಾರೆ. ಇಲ್ಲಿ ಯಾರು ದೇವಿ-ದೇವತಾ ಧರ್ಮದವರು ಇದ್ದಾರೆಯೋ ಅವರನ್ನು ಜ್ಞಾನದಿಂದ ಮೇಲೆತ್ತಬೇಕಾಗುತ್ತದೆ, ಪರಿಶ್ರಮವಾಗುತ್ತದೆ. ತಂದೆಯು ಸಂಗಮದಲ್ಲಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ ಎಂಬುದು ಗೀತಾ, ಭಾಗವತ ಶಾಸ್ತ್ರಗಳಲ್ಲಿಲ್ಲ. ಪಾಂಡವರು ಪರ್ವತಗಳ ಮೇಲೆ ಹೋಗಿ ಕರಗಿ ಹೋದರು, ಪ್ರಳಯವಾಯಿತು ಇತ್ಯಾದಿ, ಇತ್ಯಾದಿ.... ಎಂದು ಗೀತೆಯಲ್ಲಿ ಬರೆದಿದ್ದಾರೆ. ವಾಸ್ತವದಲ್ಲಿ ಈ ಮಾತಿಲ್ಲ. ನೀವೀಗ ಭವಿಷ್ಯ 21 ಜನ್ಮಗಳಿಗಾಗಿ ಓದುತ್ತಿದ್ದೀರಿ. ಅನ್ಯ ಶಾಲೆಗಳಲ್ಲಿ ಇಲ್ಲಿಗಾಗಿಯೇ ಓದಿಸುತ್ತಾರೆ. ಸಾಧು-ಸಂತ ಮೊದಲಾದವರು ಭವಿಷ್ಯಕ್ಕಾಗಿ ಓದಿಸುತ್ತಾರೆ ಏಕೆಂದರೆ ಅವರು ತಿಳಿದುಕೊಳ್ಳುತ್ತಾರೆ. ನಾವು ಶರೀರವನ್ನು ಬಿಟ್ಟು ಮುಕ್ತಿಧಾಮಕ್ಕೆ ಹೊರಟು ಹೋಗುತ್ತೇವೆ, ಬ್ರಹ್ಮ್ತತ್ವದಲ್ಲಿ ಲೀನವಾಗುತ್ತೇವೆ. ಆತ್ಮವು ಪರಮಾತ್ಮನಲ್ಲಿ ಸೇರಿ ಹೋಗುವುದು ಎಂದು ತಿಳಿಯುತ್ತಾರೆ, ಆದ್ದರಿಂದ ಅವರದೂ ಸಹ ಭವಿಷ್ಯಕ್ಕಾಗಿ ಆಯಿತು ಆದರೆ ಭವಿಷ್ಯಕ್ಕಾಗಿ ಓದಿಸುವವರು ಒಬ್ಬರೇ ಆತ್ಮಿಕ ತಂದೆಯಾಗಿದ್ದಾರೆ, ಬೇರೆ ಯಾರೂ ಇಲ್ಲ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ ಗಾಯನವೂ ಇದೆ ಆದರೆ ಅದೆಲ್ಲವೂ ಆಯಥಾರ್ಥವಾಗಿ ಬಿಡುತ್ತದೆ. ಯಥಾರ್ಥವಾಗಿ ತಂದೆಯೇ ಬಂದು ತಿಳಿಸುತ್ತಾರೆ. ಅವರೂ ಸಹ ಬ್ರಹ್ಮ್ದಲ್ಲಿ ಲೀನವಾಗುವ ಸಾಧನೆ ಮಾಡುತ್ತಿರುತ್ತಾರೆ ಆದರೆ ಇದು ಅಯಥಾರ್ಥ ಸಾಧನೆಯಾಗಿದೆ. ಯಾರೂ ಲೀನವಾಗುವುದಿಲ್ಲ. ಬ್ರಹ್ಮ್ ಮಹಾತತ್ವವು ಭಗವಂತನಲ್ಲ, ಇದೆಲ್ಲವೂ ತಪ್ಪಾಗಿದೆ. ಅಸತ್ಯ ಖಂಡದಲ್ಲಿ ಎಲ್ಲರೂ ಅಸತ್ಯ ಹೇಳುವವರಿದ್ದಾರೆ, ಸತ್ಯ ಖಂಡದಲ್ಲಿ ಎಲ್ಲರೂ ಸತ್ಯ ಹೇಳುವವರಿರುತ್ತಾರೆ. ನಿಮಗೆ ತಿಳಿದಿದೆ – ಸತ್ಯ ಖಂಡವು ಭಾರತದಲ್ಲಿತ್ತು, ಈಗ ಅಸತ್ಯ ಖಂಡವಾಗಿದೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿಯನ್ನಾಚರಿಸುತ್ತಾರೆ ಆದರೆ ಶಿವನೇ ಬಂದು ಭಾರತವನ್ನು ಸತ್ಯ ಖಂಡವನ್ನಾಗಿ ಮಾಡಿದ್ದಾರೆಂಬುದು ಅವರಿಗೆ ತಿಳಿದಿದೆಯೇ! ಅವರು ಬರುವುದೇ ಇಲ್ಲ, ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ. ಕೇವಲ ಪತಿತ-ಪಾವನ, ಜ್ಞಾನ ಸಾಗರ ಎಂದು ಯಾವ ಮಹಿಮೆ ಹಾಡುತ್ತಾರೆಯೋ ಅದು ಕೇವಲ ಗಿಳಿ ಪಾಠದಂತೆ ಹೇಳಿ ಬಿಡುತ್ತಾರೆ. ತಂದೆಯೇ ಬಂದು ತಿಳಿಸುತ್ತಾರೆ, ಕೃಷ್ಣ ಜಯಂತಿಯನ್ನಾಚರಿಸುತ್ತಾರೆ, ಗೀತಾ ಜಯಂತಿಯೂ ಇದೆ. ಕೃಷ್ಣನು ಬಂದು ಗೀತೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಆದರೆ ಶಿವ ಜಯಂತಿಯ ಬಗ್ಗೆ ಶಿವನು ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ ಅಂದಮೇಲೆ ಅವರು ಬರುವುದಾದರೂ ಹೇಗೆ? ತಂದೆಯು ತಿಳಿಸುತ್ತಾರೆ - ನಾನೇ ಕುಳಿತು ಮಕ್ಕಳಿಗೆ ತಿಳಿಸಿ ಕೊಡುತ್ತೇನೆ ನಂತರ ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಬಂದು ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡುತ್ತೇನೆ. ಯಾರಾದರೂ ಪತಿತ-ಪಾವನನಿರಬೇಕಲ್ಲವೆ. ಮುಖ್ಯವಾಗಿ ಇದು ಭಾರತದ ಮಾತಾಗಿದೆ. ಭಾರತವೇ ಪತಿತವಾಗಿದೆ, ಪತಿತ-ಪಾವನನನ್ನೂ ಸಹ ಭಾರತದಲ್ಲಿಯೇ ಕರೆಯುತ್ತಾರೆ ಮತ್ತು ವಿಶ್ವದಲ್ಲಿ ರಾವಣ ರಾಜ್ಯ ನಡೆಯುತ್ತಿದೆ, ಬಾಂಬು ಇತ್ಯಾದಿಗಳನ್ನು ತಯಾರಿಸುತ್ತಾರೆ, ಇದರಿಂದ ವಿನಾಶವಾಗುತ್ತದೆ ಎಂಬುದನ್ನೂ ಹೇಳುತ್ತಾರೆ. ತಯಾರಿಗಳೆಲ್ಲವನ್ನೂ ಮಾಡುತ್ತಿದ್ದಾರೆ. ಹೇಗೆ ಅವರಿಗೆ ರಾವಣನು ಪ್ರೇರಕನಾಗಿದ್ದಾನೆ. ರಾವಣ ರಾಜ್ಯವು ಯಾವಾಗ ಸಮಾಪ್ತಿಯಾಗುವುದು? ಕೃಷ್ಣನು ಬಂದಾಗ ಎಂದು ಭಾರತವಾಸಿಗಳು ಹೇಳುತ್ತಾರೆ. ನೀವು ತಿಳಿಸುತ್ತೀರಿ – ಶಿವ ತಂದೆಯು ಬಂದಿದ್ದಾರೆ, ಅವರೇ ಸರ್ವರ ಸದ್ಗತಿದಾತನಾಗಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಈ ಶಬ್ಧವನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ತಂದೆಯೇ ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು. ನೀವು ಸತೋಪ್ರಧಾನರಾಗಿದ್ದಿರಿ, ಈಗ ನಿಮ್ಮ ಆತ್ಮದಲ್ಲಿ ತುಕ್ಕು ಹಿಡಿದಿದೆ. ಅದು ನೆನಪಿನಿಂದಲೇ ಬಿಡುವುದು, ಇದಕ್ಕೆ ನೆನಪಿನ ಯಾತ್ರೆಯೆಂದು ಹೇಳಲಾಗುತ್ತದೆ. ನಾನೇ ಪತಿತ-ಪಾವನನಾಗಿದ್ದೇನೆ. ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ. ಚಿನ್ನವನ್ನು ಬೆಂಕಿಯಲ್ಲಿ ಹಾಕಿ ಅದರಲ್ಲಿನ ಲೋಹವನ್ನು ತೆಗೆಯುತ್ತಾರೆ. ಮತ್ತೆ ಚಿನ್ನದಲ್ಲಿ ಲೋಹವನ್ನು ಬೆರೆಸುವುದಕ್ಕಾಗಿಯೇ ಬೆಂಕಿಯಲ್ಲಿ ಹಾಕುತ್ತಾರೆ. ತಂದೆಯು ತಿಳಿಸುತ್ತಾರೆ - ಅದು ಕಾಮ ಚಿತೆಯಾಗಿದೆ, ಇದು ಜ್ಞಾನದ ಚಿತೆಯಾಗಿದೆ. ಈ ಯೋಗಾಗ್ನಿಯಿಂದ ತುಕ್ಕು ಬಿಟ್ಟು ಹೋಗುವುದು ಮತ್ತು ನೀವು ಕೃಷ್ಣ ಪುರಿಯಲ್ಲಿ ಹೋಗಲು ಯೋಗ್ಯರಾಗುತ್ತೀರಿ. ಕೃಷ್ಣ ಜಯಂತಿಯಂದು ಕೃಷ್ಣನನ್ನು ಆಹ್ವಾನ ಮಾಡುತ್ತೀರಿ. ನೀವು ತಿಳಿದುಕೊಂಡಿದ್ದೀರಿ - ಕೃಷ್ಣನಿಗೂ ಸಹ ತಂದೆಯಿಂದ ಆಸ್ತಿಯು ಸಿಗುತ್ತದೆ. ಕೃಷ್ಣನು ಸ್ವರ್ಗದ ಮಾಲೀಕನಾಗಿದ್ದನು. ತಂದೆಯು ಕೃಷ್ಣನಿಗೆ ಈ ಪದವಿಯನ್ನು ಕೊಟ್ಟರು. ರಾಧೆ-ಕೃಷ್ಣರು ಮತ್ತೆ ಲಕ್ಷ್ಮೀ-ನಾರಾಯಣರಾಗುತ್ತಾರೆ. ರಾಧೆ-ಕೃಷ್ಣರ ಜನ್ಮ ದಿನವನ್ನಾಚರಿಸುತ್ತಾರೆ. ಲಕ್ಷ್ಮೀ-ನಾರಾಯಣರ ಬಗ್ಗೆ ಯಾರಿಗೂ ತಿಳಿದಿಲ್ಲ. ಮನುಷ್ಯರು ಬಹಳ ತಬ್ಬಿಬ್ಬಾಗುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಅನ್ಯರಿಗೂ ತಿಳಿಸಬೇಕಾಗಿದೆ. ಮೊಟ್ಟ ಮೊದಲು ಕೇಳಿರಿ - ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಗೀತೆಯಲ್ಲಿ ಯಾವ ಮಾತನ್ನು ಹೇಳಿದ್ದಾರೆಯೋ ಇದನ್ನು ಯಾರು ಹೇಳಿದ್ದಾರೆ? ಕೃಷ್ಣನು ಹೇಳಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಭಗವಂತನು ನಿರಾಕಾರನಾಗಿದ್ದಾರೆ, ಅವರಿಂದಲೇ ಶ್ರೇಷ್ಠ ಮತ ಸಿಗುತ್ತದೆ. ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಅವರದೇ ಅವಶ್ಯವಾಗಿ ಶ್ರೇಷ್ಠಾತಿ ಶ್ರೇಷ್ಠ ಮತವಾಯಿತು. ಅವರೊಬ್ಬರ ಶ್ರೀಮತದಿಂದಲೇ ಸರ್ವರ ಸದ್ಗತಿಯಾಗುತ್ತದೆ. ಬ್ರಹ್ಮಾ-ವಿಷ್ಣು-ಶಂಕರರಿಗೂ ಗೀತೆಯ ಭಗವಂತನೆಂದು ಹೇಳಲು ಸಾಧ್ಯವಿಲ್ಲ ಅಂದಮೇಲೆ ಇವರು ಶರೀರಧಾರಿ ಶ್ರೀಕೃಷ್ಣನಿಗೆ ಭಗವಂತನೆಂದು ಹೇಳಿ ಬಿಡುತ್ತಾರೆ, ಇದರಿಂದಲೇ ಖಂಡಿತವಾಗಿ ಎಲ್ಲಿಯೋ ತಪ್ಪಾಗಿದೆ ಎಂಬುದು ಸಿದ್ಧವಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಮನುಷ್ಯರದು ದೊಡ್ಡ ತಪ್ಪಾಗಿದೆ, ರಾಜಯೋಗವನ್ನು ತಂದೆಯು ಕಲಿಸಿದ್ದಾರೆ, ಅವರೇ ಪತಿತ-ಪಾವನನಾಗಿದ್ದಾರೆ. ಯಾವ ದೊಡ್ಡ-ದೊಡ್ಡ ತಪ್ಪುಗಳಾಗಿವೆಯೋ ಅದರಮೇಲೆ ಒತ್ತುಕೊಟ್ಟು ಹೇಳಬೇಕಾಗಿದೆ. ಮೊದಲನೆಯದು - ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳಿರುವುದು, ಎರಡನೆಯದು - ಕೃಷ್ಣನಿಗೆ ಗೀತೆಯ ಭಗವಂತನೆಂದು ಹೇಳಿರುವುದು, ಮೂರನೆಯದು - ಕಲ್ಪವನ್ನು ಲಕ್ಷಾಂತರ ವರ್ಷಗಳೆಂದು ಹೇಳುವುದು, ಇವು ಬಹಳ ದೊಡ್ಡ ತಪ್ಪಾಗಿದೆ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಪರಮಾತ್ಮನು ಸರ್ವವ್ಯಾಪಿಯಾಗುವುದಕ್ಕೂ ಸಾಧ್ಯವಿಲ್ಲ. ಅವರು ಪ್ರೇರಣೆಯಿಂದ ಎಲ್ಲವನ್ನೂ ಮಾಡುತ್ತಾರೆಂದು ಹೇಳುತ್ತಾರೆ ಆದರೆ ಇಲ್ಲ. ಪ್ರೇರಣೆಯಿಂದ ಪಾವನರನ್ನಾಗಿ ಮಾಡಿಬಿಡುವರೇ! ಇಲ್ಲಂತೂ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಪ್ರೇರಣೆ ಶಬ್ಧವು ತಪ್ಪಾಗಿದೆ. ಭಲೆ ಶಂಕರನ ಪ್ರೇರಣೆಯಿಂದ ಬಾಂಬುಗಳನ್ನು ತಯಾರಿಸುತ್ತಾರೆಂದು ಹೇಳಲಾಗುತ್ತದೆ ಆದರೆ ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ಯಜ್ಞದಿಂದಲೇ ವಿನಾಶ ಜ್ವಾಲೆಯು ಹೊರಟಿದೆ. ಪ್ರೇರಣೆಯ ಮಾತಿಲ್ಲ. ಇವೆಲ್ಲವೂ ವಿನಾಶಾರ್ಥವಾಗಿ ನಿಮಿತ್ತವಾಗಿದೆ. ಡ್ರಾಮಾದಲ್ಲಿ ನಿಗಧಿಯಾಗಿದೆ. ಎಲ್ಲವೂ ಶಿವ ತಂದೆಯದೇ ಪಾತ್ರವಾಗಿದೆ. ಅವರ ನಂತರ ಬ್ರಹ್ಮಾ-ವಿಷ್ಣು-ಶಂಕರನ ಪಾತ್ರವಿದೆ. ಬ್ರಹ್ಮನು ಬ್ರಾಹ್ಮಣರನ್ನು ರಚಿಸುತ್ತಾರೆ ಅವರೇ ಮತ್ತೆ ವಿಷ್ಣು ಪುರಿಯ ಮಾಲೀಕನಾಗುತ್ತಾರೆ. ನಂತರ 84 ಜನ್ಮಗಳ ಚಕ್ರವನ್ನು ಸುತ್ತಿ ನೀವು ಬಂದು ಬ್ರಹ್ಮಾವಂಶಿಯಾಗಿದ್ದೀರಿ. ಲಕ್ಷ್ಮೀ-ನಾರಾಯಣರೇ ಮತ್ತೆ ಬ್ರಹ್ಮಾ-ಸರಸ್ವತಿಯಾಗಿದ್ದಾರೆ. ಇದನ್ನೂ ತಿಳಿಸಿದ್ದಾರೆ - ಇವರ ಮೂಲಕವೇ ದತ್ತು ಮಾಡಿಕೊಳ್ಳುತ್ತಾರೆ. ಆದ್ದರಿಂದ ಇವರಿಗೆ (ಬ್ರಹ್ಮಾ) ದೊಡ್ಡ ತಾಯಿಯೆಂದು ಹೇಳುತ್ತಾರೆ. ಎಲ್ಲರ ಪಾಲನೆಗಾಗಿ ಮಮ್ಮಾರವರು ನಿಮಿತ್ತರಾಗಿದ್ದಾರೆ. ಕಳಶವನ್ನು ಮಾತೆಯರಿಗೇ ಕೊಡಲಾಗುತ್ತದೆ. ಎಲ್ಲದಕ್ಕಿಂತ ದೊಡ್ಡ ವೀಣೆಯನ್ನು ಸರಸ್ವತಿಗೆ ತೋರಿಸಿದ್ದಾರೆ ಏಕೆಂದರೆ ಎಲ್ಲರಿಗಿಂತ ತೀಕ್ಷ್ಣವಾಗಿದ್ದಾರೆ ಆದರೆ ಸ್ಥೂಲವಾಗಿ ಯಾವುದು ವೀಣೆ ಅಥವಾ ವಾದ್ಯಗಳೇನೂ ಇಲ್ಲ. ವಾಸ್ತವದಲ್ಲಿ ಸರಸ್ವತಿಯ ಜ್ಞಾನ ಮುರುಳಿಯು ಚೆನ್ನಾಗಿರುತ್ತಿತ್ತು. ಅವರ ಮಹಿಮೆಯು ಚೆನ್ನಾಗಿತ್ತು. ಹೆಸರುಗಳಂತೂ ಬಹಳ ಇಟ್ಟು ಬಿಟ್ಟಿದ್ದಾರೆ. ದೇವಿಯರಿಗೆ ಪೂಜೆಯಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವೇ ಇಲ್ಲಿ ಪೂಜ್ಯರಾಗುತ್ತೇವೆ ಮತ್ತೆ ಪೂಜಾರಿಗಳಾಗಿ ನಮ್ಮದೇ ಪೂಜೆ ಮಾಡಿಕೊಳ್ಳುತ್ತೇವೆ. ನಾವೀಗ ಬ್ರಾಹ್ಮಣರಾಗಿದ್ದೇವೆ ಮತ್ತೆ ನಾವೇ ಯಥಾ ರಾಜ-ರಾಣಿ ತಥಾ ಪ್ರಜಾ ಪೂಜ್ಯ ದೇವಿ-ದೇವತೆಗಳಾಗುತ್ತೇವೆ. ದೇವಿಯರಲ್ಲಿ ಯಾರು ಶ್ರೇಷ್ಠ ಪದವಿಯನ್ನು ಪಡೆಯುವರೋ ಅವರಿಗೆ ಬಹಳಷ್ಟು ಮಂದಿರಗಳಾಗುತ್ತವೆ. ಯಾರು ಚೆನ್ನಾಗಿ ಓದಿ-ಓದಿಸುವರೋ ಅವರ ಹೆಸರು ಪ್ರಸಿದ್ಧವಾಗುತ್ತದೆ ಅಂದಾಗ ಈಗ ನಿಮಗೆ ತಿಳಿದಿದೆ - ನಾವೇ ಪೂಜ್ಯ-ಪೂಜಾರಿಗಳಾಗುತ್ತೇವೆ. ಶಿವ ತಂದೆಯಂತೂ ಸದಾ ಪೂಜ್ಯನಾಗಿದ್ದಾರೆ. ಸೂರ್ಯವಂಶಿ ದೇವಿ-ದೇವತೆಗಳು, ಮತ್ತೆ ಪೂಜಾರಿ ಭಕ್ತರಾಗುತ್ತಾರೆ. ತಾವೇ ಪೂಜ್ಯ, ತಾವೇ ಪೂಜಾರಿಯ ಏಣಿಯನ್ನು ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ನೀವು ಚಿತ್ರವಿಲ್ಲದೆಯೂ ಅನ್ಯರಿಗೆ ತಿಳಿಸಬಹುದು. ಯಾರು ಇಲ್ಲಿ ಕಲಿತು ಹೋಗುವರೋ ಅವರ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿರುತ್ತದೆ. 84 ಜನ್ಮಗಳ ಏಣಿಯನ್ನು ಭಾರತವಾಸಿಗಳೇ ಹತ್ತುತ್ತಾರೆ ಮತ್ತು ಇಳಿಯುತ್ತಾರೆ. ಅವರದೇ 84 ಜನ್ಮಗಳಿವೆ. ಪೂಜ್ಯರಾಗಿದ್ದೆವು ಮತ್ತೆ ನಾವೇ ಪೂಜಾರಿಗಳಾದೆವು. ಹಮ್ ಸೋ, ಸೋ ಹಮ್ನ ಅರ್ಥವನ್ನು ನೀವು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ. ಆತ್ಮವೇ ಪರಮಾತ್ಮನಾಗಲು ಸಾಧ್ಯವಿಲ್ಲ. ತಂದೆಯು ಹಮ್ ಸೋ ಸೋ ಹಮ್ನ ಅರ್ಥವನ್ನು ತಿಳಿಸಿದ್ದಾರೆ. ನಾವೇ ದೇವತೆ, ನಾವೇ ಕ್ಷತ್ರಿಯ...... ಆದೆವು. ಹಮ್ ಸೋ, ಸೋ ಹಮ್ ಎಂಬುದಕ್ಕೆ ಮತ್ತ್ಯಾವುದೇ ಅರ್ಥವಿಲ್ಲ. ಭಾರತವಾಸಿಗಳೇ ಪೂಜ್ಯ-ಪೂಜಾರಿಗಳಾಗುತ್ತಾರೆ. ಅನ್ಯ ಧರ್ಮದಲ್ಲಿ ಯಾರೂ ಪೂಜ್ಯ-ಪೂಜಾರಿಗಳಾಗುವುದಿಲ್ಲ. ನೀವೇ ಸೂರ್ಯವಂಶಿ-ಚಂದ್ರವಂಶಿಯರಾಗುತ್ತೀರಿ. ಎಷ್ಟು ಒಳ್ಳೆಯ ತಿಳುವಳಿಕೆ ಸಿಕ್ಕಿದೆ - ನಾವೇ ದೇವಿ-ದೇವತೆಗಳಾಗಿದ್ದೆವು. ನಾವಾತ್ಮರು ನಿರ್ವಾಣಧಾಮದ ನಿವಾಸಿಗಳಾಗಿದ್ದೇವೆ. ಈ ಚಕ್ರವು ಸುತ್ತುತ್ತಿರುತ್ತದೆ. ಯಾವಾಗ ದುಃಖವಾಗುತ್ತದೆಯೋ ಆಗ ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ದುಃಖದ ಸಮಯದಲ್ಲಿಯೇ ಬಂದು ಸೃಷ್ಟಿಯನ್ನು ಪರಿವರ್ತನೆ ಮಾಡುತ್ತೇನೆ, ಹೊಸ ಸೃಷ್ಟಿಯನ್ನು ರಚಿಸುತ್ತೇನೆ ಎಂದಲ್ಲ. ಹಳೆಯದನ್ನು ಹೊಸದನ್ನಾಗಿ ಮಾಡಲು ಬರುತ್ತೇನೆ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಈಗ ಹೊಸ ಪ್ರಪಂಚವಾಗುತ್ತಿದೆ, ಹಳೆಯದು ಸಮಾಪ್ತಿಯಾಗಲಿದೆ. ಇದು ಬೇಹದ್ದಿನ ಮಾತಾಗಿದೆ. |
ನೀವು ತಯಾರಾಗಿ ಬಿಟ್ಟರೆ ಇಡೀ ರಾಜಧಾನಿಯೇ ತಯಾರಾಗಿ ಬಿಡುವುದು. ಕಲ್ಪ-ಕಲ್ಪವೂ ಯಾರು ಯಾವ ಪದವಿಯನ್ನು ಪಡೆಯುತ್ತಾರೆಯೋ ಅದರನುಸಾರ ಪುರುಷಾರ್ಥ ನಡೆಯುತ್ತಿರುತ್ತದೆ. ಡ್ರಾಮಾದಲ್ಲಿ ಯಾವ ಪುರುಷಾರ್ಥ ಮಾಡಿದ್ದೆವೋ ಅದೇ ನಡೆಯುವುದು ಎಂದಲ್ಲ. ಪುರುಷಾರ್ಥ ಮಾಡಬೇಕಾಗಿದೆ. ಮಾಡಿದ ನಂತರ ಕಲ್ಪದ ಮೊದಲೂ ಇದೇ ರೀತಿ ಪುರುಷಾರ್ಥ ಮಾಡಿದ್ದೆವು ಎಂದು ಹೇಳಲಾಗುತ್ತದೆ. ಯಾವಾಗಲೂ ಪುರುಷಾರ್ಥವನ್ನು ಮೇಲಿಡಲಾಗುತ್ತದೆ. ಪ್ರಾಲಬ್ಧವೆಂದು ತಿಳಿದು ಕುಳಿತು ಬಿಡಬಾರದು. ಪುರುಷಾರ್ಥವಿಲ್ಲದೆ ಪ್ರಾಲಬ್ಧ ಸಿಗಲು ಸಾಧ್ಯವಿಲ್ಲ. ಪುರುಷಾರ್ಥ ಮಾಡದೇ ನೀರು ಕುಡಿಯುವುದಕ್ಕೂ ಸಾಧ್ಯವಿಲ್ಲ. ಕರ್ಮ ಸನ್ಯಾಸ ಎಂಬ ಶಬ್ಧವು ತಪ್ಪಾಗಿದೆ. ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿಯೂ ಇರಿ. ತಂದೆಯು ಎಲ್ಲರನ್ನೂ ಇಲ್ಲಿಯೇ ಇಟ್ಟುಕೊಳ್ಳುವುದಿಲ್ಲ. ಶರಣಾಗತಿ ಎಂದು ಗಾಯನವಿದೆ. ಯಜ್ಞದ ಆದಿಯಲ್ಲಿ ಭಟ್ಟಿಯು ನಡೆಯಬೇಕಿತ್ತು ಏಕೆಂದರೆ ಅವರಿಗೆ ಬಹಳ ತೊಂದರೆ ಕೊಟ್ಟರು ಆಗ ಬಂದು ತಂದೆಯ ಬಳಿ ಆಶ್ರಯ ಪಡೆದರು. ಒಬ್ಬ ಪರಮಪಿತ ಪರಮಾತ್ಮನ ಆಶ್ರಯವನ್ನು ತೆಗೆದುಕೊಳ್ಳಲಾಗುತ್ತದೆ. ಯಾವುದೇ ಗುರು ಮೊದಲಾದವರಿಂದಲ್ಲ. ಯಾವಾಗ ಬಹಳ ದುಃಖವಾಗುವುದೋ ಆಗ ಬೇಸರವಾಗಿ ಬಂದು ಆಶ್ರಯ (ಶರಣು) ಪಡೆಯುತ್ತಾರೆ. ಗುರುಗಳ ಬಳಿ ಯಾರೂ ಬೇಸರವಾಗಿ ಹೋಗುವುದಿಲ್ಲ. ಅಲ್ಲಂತೂ ಹಾಗೆಯೇ ಹೋಗುತ್ತಾರೆ. ನೀವು ರಾವಣನಿಂದ ಬಹಳ ಬೇಸತ್ತು ಹೋಗಿದ್ದೀರಿ. ಈಗ ರಾವಣನಿಂದ ಬಿಡಿಸಲು ರಾಮನು ಬಂದಿದ್ದಾರೆ. ಅವರು ನಿಮ್ಮನ್ನು ತನ್ನ ಮಡಿಲಿಗೆ ತೆಗೆದುಕೊಳ್ಳುತ್ತಾರೆ. ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ನೀವು ಹೇಳುತ್ತೀರಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಶಿವ ತಂದೆಯ ಮಡಿಲನ್ನು ತೆಗೆದುಕೊಂಡಿದ್ದೇವೆ. ಬಾಬಾ, ನಾವು ತಮ್ಮ ಮತವನ್ನೇ ತೆಗೆದುಕೊಳ್ಳುತ್ತೇವೆ. |
ತಂದೆಯು ಶ್ರೀಮತ ಕೊಡುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ನನ್ನನ್ನು ನೆನಪು ಮಾಡಿ, ಮತ್ತೆಲ್ಲರ ನೆನಪನ್ನು ಬಿಟ್ಟು ಬಿಡಿ. ನನ್ನ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಕೇವಲ ಶರಣು ಪಡೆಯುವ ಮಾತಿಲ್ಲ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ತಂದೆಯ ವಿನಃ ಮತ್ತ್ಯಾರೂ ಈ ರೀತಿ ತಿಳಿಸಿಕೊಡಲು ಸಾಧ್ಯವಿಲ್ಲ. ಮಕ್ಕಳಿಗೆ ತಿಳಿದಿದೆ - ತಂದೆಯ ಬಳಿ ಇಷ್ಟೊಂದು ಲಕ್ಷ ಮಂದಿ ಮಕ್ಕಳು ಬಂದು ಎಲ್ಲಿರುವುದು! ಪ್ರಜೆಗಳೂ ಸಹ ತಮ್ಮ-ತಮ್ಮ ಮನೆಯಲ್ಲಿಯೇ ಇರುತ್ತಾರೆ ವಿನಃ ರಾಜನ ಬಳಿ ಇರುತ್ತಾರೇನು. ಅಂದಾಗ ನಿಮಗೆ ಇಷ್ಟನ್ನೇ ಹೇಳಲಾಗುತ್ತದೆ - ಒಬ್ಬ ತಂದೆಯನ್ನು ನೆನಪು ಮಾಡಿ. ಬಾಬಾ, ನಾವು ತಮ್ಮವರಾಗಿದ್ದೇವೆ, ತಾವೇ ಸೆಕೆಂಡಿನಲ್ಲಿ ಸದ್ಗತಿಯ ಆಸ್ತಿಯನ್ನು ಕೊಡುವವರಾಗಿದ್ದೀರಿ. ರಾಜಯೋಗವನ್ನು ಕಲಿಸಿ ರಾಜರಿಗೂ ರಾಜರನ್ನಾಗಿ ಮಾಡುತ್ತೀರಿ. ತಂದೆಯು ತಿಳಿಸುತ್ತಾರೆ - ಯಾರು ಕಲ್ಪದ ಮೊದಲು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಬಂದು ತೆಗೆದುಕೊಳ್ಳುತ್ತಾರೆ. ಅಂತಿಮ ಸಮಯದೊಳಗೆ ಎಲ್ಲರೂ ಬಂದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಈಗ ನೀವು ಪತಿತರಾಗಿರುವ ಕಾರಣ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ನನ್ನ ಕಣ್ಮಣಿಗಳೇ, ಯಾವಾಗ ನೀವು ಸತ್ಯಯುಗದಲ್ಲಿ ಬರುತ್ತೀರೋ ಆಗ 01-01-01ರಿಂದ ರಾಜ್ಯಭಾರ ಮಾಡಲಾರಂಭಿಸುತ್ತೀರಿ. ಅನ್ಯ ಧರ್ಮದವರಂತೂ ಯಾವಾಗ ಅವರದು ಲಕ್ಷಾಂತರ ಅಂದಾಜಿನಲ್ಲಿ ಸಂಖ್ಯೆ ವೃದ್ಧಿಯಾಗುವುದೋ ಆಗ ರಾಜ್ಯಭಾರ ನಡೆಯುವುದು. ನೀವಂತೂ ಯುದ್ಧ ಮಾಡುವ ಅವಶ್ಯಕತೆಯಿಲ್ಲ. ನೀವು ಯೋಗಬಲದಿಂದ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಕೇವಲ ಮೌನವಾಗಿದ್ದು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಅಂತಿಮದಲ್ಲಿ ನೀವು ಮೌನದಲ್ಲಿರುತ್ತೀರಿ ಆಗ ಈ ಚಿತ್ರ ಇತ್ಯಾದಿಗಳೇನೂ ಕೆಲಸಕ್ಕೆ ಬರುವುದಿಲ್ಲ, ನೀವು ಬುದ್ಧಿವಂತರಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಈಗ ಮಾಡಿ ಅಥವಾ ಬಿಡಿ ಅದು ನಿಮ್ಮಿಷ್ಟ. ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳಬೇಡಿ. ತಂದೆಯನ್ನು ನೆನಪು ಮಾಡಿ ಆಗ ಅಂತಿಮ ಗತಿ ಸೋ ಗತಿಯಾಗುವುದು. ನೀವು ನನ್ನ ಬಳಿ ಬಂದು ಬಿಡುತ್ತೀರಿ. ಪೂರ್ಣ ತೇರ್ಗಡೆಯಾಗುವವರಿಗೆ ರಾಜ್ಯಭಾರ ಸಿಗುವುದು. ಎಲ್ಲವೂ ನೆನಪಿನ ಯಾತ್ರೆಯ ಮೇಲೆ ಆಧಾರಿತವಾಗಿದೆ. ಮುಂದೆ ಹೋದಂತೆ ಹೊಸಬರೂ ಸಹ ಬಹಳ ತೀಕ್ಷ್ಣವಾಗಿ ಮುಂದೆ ಬರ ತೊಡಗುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳಬಾರದು. ಒಬ್ಬ ತಂದೆಯ ಶ್ರೀಮತದಂತೆ ನಡೆದು ಸದ್ಗತಿಯನ್ನು ಪಡೆಯಬೇಕಾಗಿದೆ. ಮೌನವಾಗಿರಬೇಕಾಗಿದೆ. |
2. ಭವಿಷ್ಯ 21 ಜನ್ಮಗಳಿಗಾಗಿ ಚೆನ್ನಾಗಿ ಓದಬೇಕು ಮತ್ತು ಅನ್ಯರಿಗೂ ಓದಿಸಬೇಕಾಗಿದೆ. ಓದುವ ಮತ್ತು ಓದಿಸುವುದರಿಂದಲೇ ಹೆಸರು ಪ್ರಸಿದ್ಧವಾಗುವುದು. |
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯ ಶ್ರೀಮತವಾಗಿದೆ - ಈಗ ನಾನು ಎಲ್ಲಾ ಸೇವಾಕೇಂದ್ರಗಳ ಮಕ್ಕಳೊಂದಿಗೆ ಮಾತನಾಡುತ್ತಿದ್ದೇನೆ. ನಿಮ್ಮ ಬಳಿ ತ್ರಿಮೂರ್ತಿ, ಗೋಲ, ಕಲ್ಪವೃಕ್ಷ, ಏಣಿ, ಲಕ್ಷ್ಮೀ-ನಾರಾಯಣ ಮತ್ತು ಶ್ರೀಕೃಷ್ಣನ ಚಿತ್ರ ಈ ಆರು ಚಿತ್ರಗಳು ಮುಖ್ಯವಾಗಿದೆ. ಇದು ಪೂರ್ಣ ಪ್ರದರ್ಶನಿಯಾಗಿದೆ. ಇದರಲ್ಲಿ ಎಲ್ಲಾ ಸಾರವು ಬಂದು ಬಿಡುತ್ತದೆ. ಹೇಗೆ ಜಾಹೀರಾತಿಗಾಗಿ ನಾಟಕದ ಪರದೆಗಳನ್ನು ಮಾಡಲಾಗುತ್ತದೆ. ಅದೆಂದೂ ಮಳೆ ಇತ್ಯಾದಿಗಳಿಗೆ ಹಾಳಾಗುವುದಿಲ್ಲ. ಅದೇರೀತಿ ಈ ಮುಖ್ಯ ಚಿತ್ರಗಳನ್ನು ಮಾಡಿಸಬೇಕು. ಆತ್ಮಿಕ ಸೇವೆಯನ್ನು ವೃದ್ಧಿ ಮಾಡುವುದಕ್ಕಾಗಿ ಭಾರತವಾಸಿ ಮನುಷ್ಯರ ಕಲ್ಯಾಣ ಮಾಡುವುದಕ್ಕಾಗಿ ಮಕ್ಕಳಿಗೆ ಶ್ರೀಮತ ಸಿಗುತ್ತದೆ. ಕಲ್ಯಾಣಕಾರಿ ಬೇಹದ್ದಿನ ತಂದೆಯಾಗಿದ್ದಾರೆ ಎಂದು ಹಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಯಾರೋ ಅಕಲ್ಯಾಣಕಾರಿಯು ಇರಬೇಕಲ್ಲವೆ. ಆ ಕಾರಣದಿಂದಲೇ ತಂದೆಯು ಬಂದು ಮತ್ತೆ ಕಲ್ಯಾಣ ಮಾಡಬೇಕಾಗುತ್ತದೆ. ಆತ್ಮಿಕ ಮಕ್ಕಳು ಯಾರ ಕಲ್ಯಾಣವಾಗುತ್ತಿದೆಯೋ ಅವರೇ ಈ ಮಾತುಗಳನ್ನು ಅರಿತುಕೊಳ್ಳುತ್ತಾರೆ. ಹೇಗೆ ನಮ್ಮ ಕಲ್ಯಾಣವಾಗಿದೆಯೋ ಅದೇರೀತಿ ನಾವು ಅನ್ಯರ ಕಲ್ಯಾಣವನ್ನೂ ಮಾಡಬೇಕು. ಹೇಗೆ ತಂದೆಗೂ ಸಹ ಹೇಗೆ ಮಕ್ಕಳ ಕಲ್ಯಾಣ ಮಾಡುವುದು ಎಂದು ಚಿಂತನೆ ನಡೆಯುತ್ತದೆ. ಯುಕ್ತಿಗಳನ್ನು ತಿಳಿಸುತ್ತಿದ್ದಾರೆ. 6’/9’ ಸೈಜ್ ನ ಶೀಟ್ನ ಮೇಲೆ ಈ ಚಿತ್ರಗಳನ್ನು ಮಾಡಿಸಬೇಕು. ದೆಹಲಿಯಂತಹ ನಗರಗಳಲ್ಲಿ ಬಹಳಷ್ಟು ಮಂದಿ ಬರುತ್ತಾರೆ. ಅಲ್ಲಿ ಸರ್ಕಾರದ ಸಭೆ ಸೇರುತ್ತದೆ. ಅಂತಹ ಕಡೆ ಅನೇಕ ಮನುಷ್ಯರು ಬರುತ್ತಾರೆ. ಅಲ್ಲಿ ಈ ಚಿತ್ರಗಳನ್ನು ಹಾಕಬೇಕು. ಅನೇಕರ ಕಲ್ಯಾಣ ಮಾಡುವ ಅರ್ಥವಾಗಿ ತಂದೆಯು ಮತ ಕೊಡುತ್ತಾರೆ. ಇಂತಹ ಥಿನ್ ಶೀಟ್ನ ಮೇಲೆ ಬಹಳ ಚಿತ್ರಗಳನ್ನು ಮಾಡಿಸಬಹುದು. ದೇಹೀ-ಅಭಿಮಾನಿಯಾಗಿ ತಂದೆಯ ಸರ್ವೀಸ್ನಲ್ಲಿ ತೊಡಗಬೇಕಾಗಿದೆ. ತಂದೆಯು ಸಲಹೆ ನೀಡುತ್ತಾರೆ - ಇಂತಹ ಚಿತ್ರಗಳನ್ನು ಹಿಂದಿ ಮತ್ತು ಆಂಗ್ಲ ಭಾಷೆಯಲ್ಲಿ ಮಾಡಿಸಬೇಕು. ಈ ಆರು ಚಿತ್ರಗಳನ್ನು ಮುಖ್ಯ ಸ್ಥಾನಗಳಲ್ಲಿ ಹಾಕಬೇಕಾಗಿದೆ. ಒಂದುವೇಳೆ ಇಂತಹ ಮುಖ್ಯ ಸ್ಥಾನಗಳಲ್ಲಿ ಚಿತ್ರಗಳನ್ನು ಹಾಕಿದ್ದೇ ಆದರೆ ತಿಳಿದುಕೊಳ್ಳುವುದಕ್ಕಾಗಿ ನಿಮ್ಮಬಳಿ ಸಾವಿರಾರು ಮಂದಿ ಬರುತ್ತಾರೆ. ಆದರೆ ಮಕ್ಕಳಲ್ಲಿ ದೇಹಾಭಿಮಾನವಿರುವ ಕಾರಣ ಬಹಳ ತಪ್ಪುಗಳಾಗುತ್ತವೆ. ನಾನು ಪಕ್ಕಾ ಆತ್ಮಾಭಿಮಾನಿಯಾಗಿದ್ದೇನೆ ಎಂದು ಯಾರೂ ತಿಳಿದುಕೊಳ್ಳಬೇಡಿ. ತಪ್ಪುಗಳಂತೂ ಬಹಳಷ್ಟು ಆಗುತ್ತಿರುತ್ತವೆ, ಸತ್ಯವನ್ನು ತಿಳಿಸುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಅನ್ಯರಿಗೆ ಇವರಲ್ಲಿ ದೇಹಾಭಿಮಾನವಿದೆ ಎಂದು ಕೆಟ್ಟ ಅಭಿಪ್ರಾಯವನ್ನು ತರುವಂತಹ ಯಾವುದೇ ಕರ್ತವ್ಯವನ್ನು ಮಾಡಬೇಡಿ. ಸದಾ ಯುದ್ಧದ ಮೈದಾನದಲ್ಲಿದ್ದೀರಿ. ಅನ್ಯ ಸ್ಥಳಗಳಲ್ಲಿ 10-20 ವರ್ಷಗಳವರೆಗೆ ಯುದ್ಧ ನಡೆಯುತ್ತದೆ. ಆದರೆ ಮಾಯೆಯೊಂದಿಗಿನ ನಿಮ್ಮ ಯುದ್ಧವು ಅಂತ್ಯದವರೆಗೂ ನಡೆಯಲಿದೆ ಆದರೆ ಇದು ಗುಪ್ತವಾಗಿದೆ. ಯಾರಿಗೂ ಅರ್ಥವಾಗುವುದಿಲ್ಲ. ಗೀತೆಯಲ್ಲಿ ಯಾವ ಮಹಾಭಾರತ ಯುದ್ಧವಿದೆಯೋ ಅದನ್ನು ಸ್ಥೂಲವಾಗಿ ತೋರಿಸಿದ್ದಾರೆ ಆದರೆ ಇದು ಆತ್ಮಿಕ ಯುದ್ಧವಾಗಿದೆ. ಪಾಂಡವರ ಆತ್ಮಿಕ ಯುದ್ಧವಾಗಿದೆ. ಪರಮಪಿತ ಪರಮಾತ್ಮನೊಂದಿಗೆ ಯಾರು ವಿಪರೀತ ಬುದ್ಧಿಯವರಾಗಿದ್ದಾರೆಯೋ ಅವರದು ಸ್ಥೂಲ ಯುದ್ಧವಾಗಿದೆ. ನೀವು ಬ್ರಾಹ್ಮಣ ಕುಲಭೂಷಣರದು ಪ್ರೀತಿ ಬುದ್ಧಿಯಾಗಿದೆ. ನೀವು ಅನ್ಯ ಸಂಗಗಳನ್ನು ಬಿಟ್ಟು ಒಬ್ಬ ತಂದೆಯ ಸಂಗವನ್ನು ಸೇರಿದ್ದೀರಿ. ಅನೇಕ ಬಾರಿ ದೇಹಾಭಿಮಾನವು ಬರುವ ಕಾರಣ ಮರೆತು ಹೋಗುತ್ತಾರೆ ಮತ್ತೆ ತಮ್ಮದೇ ಪದವಿ ಭ್ರಷ್ಟ ಮಾಡಿಕೊಳ್ಳುತ್ತಾರೆ. ಮತ್ತೆ ಅಂತ್ಯದಲ್ಲಿ ಬಹಳ ಪಶ್ಚಾತ್ತಾಪ ಪಡಬೇಕಾಗುತ್ತದೆ. ಏನೂ ಮಾಡಲು ಸಾಧ್ಯವಾಗುವುದಿಲ್ಲ. ಇದು ಕಲ್ಪ-ಕಲ್ಪದ ಆಟವಾಗಿದೆ. ಈ ಸಮಯದಲ್ಲಿ ಯಾವುದೇ ಅಕರ್ತವ್ಯ ಕಾರ್ಯ ಮಾಡಿದರೆ ಕಲ್ಪ-ಕಲ್ಪಾಂತರಕ್ಕಾಗಿ ಪದವಿಯು ಭ್ರಷ್ಟವಾಗಿ ಬಿಡುತ್ತದೆ. ಬಹಳ ನಷ್ಟವುಂಟಾಗುತ್ತದೆ. |
ತಂದೆಯು ತಿಳಿಸುತ್ತಾರೆ-ಮೊದಲು ನೀವು 100% ನಷ್ಟದ ಖಾತೆಯಲ್ಲಿದ್ದಿರಿ, ಈಗ ತಂದೆಯು 100% ಲಾಭದಲ್ಲಿ ತೆಗೆದುಕೊಂಡು ಹೋಗುತ್ತಾರೆ ಆದ್ದರಿಂದ ಶ್ರೀಮತದಂತೆ ನಡೆಯಬೇಕಾಗಿದೆ. ಪ್ರತಿಯೊಬ್ಬ ಮಗುವು ಕಲ್ಯಾಣಕಾರಿಯಾಗಬೇಕಾಗಿದೆ. ಎಲ್ಲರಿಗೆ ಸುಖದ ಮಾರ್ಗವನ್ನು ತಿಳಿಸಬೇಕಾಗಿದೆ. ಸುಖವಿರುವುದೇ ಸ್ವರ್ಗದಲ್ಲಿ, ದುಃಖವು ನರಕದಲ್ಲಿದೆ - ಏಕೆ? ಏಕೆಂದರೆ ಇದು ವಿಕಾರಿ ಪ್ರಪಂಚವಾಗಿದೆ. ಅದು ನಿರ್ವಿಕಾರಿ ಪ್ರಪಂಚವಾಗಿತ್ತು, ಈಗ ವಿಕಾರಿ ಪ್ರಪಂಚವಾಗಿದೆ. ಮತ್ತೆ ತಂದೆಯು ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ಈ ಮಾತುಗಳನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ಈ ಮುಖ್ಯ ಚಿತ್ರಗಳನ್ನು ಒಳ್ಳೊಳ್ಳೆಯ ಸ್ಥಾನಗಳಲ್ಲಿ ಹಾಕಬೇಕು. ಮೊಟ್ಟ ಮೊದಲನೆಯದಾಗಿ ದೆಹಲಿಯಲ್ಲಿ, ಎರಡನೆಯದಾಗಿ ಬಾಂಬೆ ಮತ್ತು ಕಲ್ಕತ್ತಾದಲ್ಲಿ ಹಾಕಬೇಕು. ಆಗ್ರಾದಲ್ಲಿಯೂ ಪ್ರವಾಸಿಗರು ಬಹಳ ಹೋಗುತ್ತಾರೆ. ಮಕ್ಕಳು ಸೇವೆಯನ್ನಂತೂ ಬಹಳ ಚೆನ್ನಾಗಿ ಮಾಡುತ್ತಿದ್ದೀರಿ, ಈಗ ಇನ್ನೂ ಯಾವುದಾದರೂ ಅಂತಹ ಕರ್ತವ್ಯವನ್ನು ಮಾಡಿ ತೋರಿಸಿ. ಈ ಚಿತ್ರಗಳನ್ನು ಮಾಡಿಸುವುದರಲ್ಲಿ ಯಾವುದೇ ಕಷ್ಟವಿಲ್ಲ ಕೇವಲ ಅನುಭವ ಬೇಕು. ಒಳ್ಳೆಯ ದೊಡ್ಡ-ದೊಡ್ಡ ಚಿತ್ರಗಳಾಗಿರಲಿ ಯಾವುದು ದೂರದಿಂದಲೇ ಓದುವಂತಿರಬೇಕು. ಗೋಲದ ಚಿತ್ರವನ್ನೂ ದೊಡ್ಡದಾಗಿ ಮಾಡಿಸಿ ಅದನ್ನು ಬಹಳ ಸುರಕ್ಷಿತವಾಗಿಟ್ಟುಕೊಳ್ಳಬೇಕಾಗುತ್ತದೆ. ಯಾರೂ ಹಾಳು ಮಾಡದಿರಲಿ. ಯಜ್ಞದಲ್ಲಿ ಅಸುರರ ವಿಘ್ನಗಳು ಬೀಳುತ್ತವೆ ಏಕೆಂದರೆ ಇವು ಹೊಸ ಮಾತುಗಳಾಗಿವೆ. ಎಲ್ಲರೂ ತಮ್ಮ-ತಮ್ಮ ಅಂಗಡಿಗಳನ್ನು ತೆರೆದು ಕುಳಿತಿದ್ದಾರೆ. ಎಲ್ಲರಿಗೂ ಕೊನೆಗೊಂದು ದಿನ ಅರ್ಥವಾಗುತ್ತದೆ - ನಾವು ಕೆಳಗಿಳಿಯುತ್ತಾ ಬಂದಿದ್ದೇವೆ ಅಂದಮೇಲೆ ಏನೋ ಕೊರತೆಯಿದೆ. ತಂದೆಯೇ ಕಲ್ಯಾಣಕಾರಿಯಾಗಿದ್ದಾರೆ. ಅವರೇ ತಿಳಿಸುತ್ತಾರೆ - ಭಾರತದ ಅಕಲ್ಯಾಣ ಹೇಗೆ ಮತ್ತು ಏಕೆ ಆಗಿದೆ? ಭಾರತವನ್ನು ತಮೋಪ್ರಧಾನವನ್ನಾಗಿ ಯಾರು ಮಾಡುತ್ತಾರೆ ಮತ್ತು ಸತೋಪ್ರಧಾನವನ್ನಾಗಿ ಯಾರು ಮಾಡುತ್ತಾರೆ? ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಸಂಗಮಯುಗವನ್ನೂ ತಿಳಿದುಕೊಂಡಿಲ್ಲ. ಭಗವಂತನು ಯುಗ ಯುಗಗಳಲ್ಲಿ ಬರುತ್ತಾರೆಂದು ಹೇಳುತ್ತಾರೆ, ಇನ್ನೂ ಕೆಲವೊಮ್ಮೆ ಭಗವಂತನು ನಾಮ-ರೂಪದಿಂದ ಭಿನ್ನವಾಗಿದ್ದಾರೆ ಎಂದೂ ಹೇಳುತ್ತಾರೆ. ಭಾರತವು ಪ್ರಾಚೀನ ಸ್ವರ್ಗವಾಗಿತ್ತು, ಕ್ರಿಸ್ತನಿಗೆ ಮೂರು ಸಾವಿರ ವರ್ಷಗಳ ಮೊದಲು ದೇವತೆಗಳ ರಾಜ್ಯವಿತ್ತೆಂಬುದನ್ನೂ ಹೇಳುತ್ತಾರೆ. ಮತ್ತೆ ಕಲ್ಪದ ಆಯಸ್ಸನ್ನು ಬಹಳ ಉದ್ದಗಲವಾಗಿ ಬರೆದು ಬಿಟ್ಟಿದ್ದಾರೆ. ಆದ್ದರಿಂದ ಮಕ್ಕಳು ಆತ್ಮಾಭಿಮಾನಿಗಳಾಗುವ ಬಹಳ ಪರಿಶ್ರಮ ಪಡಬೇಕಾಗಿದೆ. ಅರ್ಧಕಲ್ಪ ಸತ್ಯ-ತ್ರೇತಾಯುಗದಲ್ಲಿ ನೀವು ಆತ್ಮಾಭಿಮಾನಿಗಳಾಗಿದ್ದಿರಿ ಆದರೆ ಪರಮಾತ್ಮ ಅಭಿಮಾನಿಗಳಾಗಿರಲಿಲ್ಲ. ಇಲ್ಲಂತೂ ನೀವು ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ, ಈಗ ಪುನಃ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಯಾತ್ರೆ ಎಂಬ ಶಬ್ಧವೂ ಇದೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಮನ್ಮನಾಭವದ ಅರ್ಥವಾಗಿದೆ - ಆತ್ಮಿಕ ಯಾತ್ರೆಯಲ್ಲಿರಿ. ಹೇ ಆತ್ಮಗಳೇ, ತಂದೆಯಾದ ನನ್ನನ್ನು ನೆನಪು ಮಾಡಿ. ಕೃಷ್ಣನಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಕೃಷ್ಣನು ಗೀತೆಯ ಭಗವಂತನಾಗಲು ಹೇಗೆ ಸಾಧ್ಯ! ಅವರ ಮೇಲೆ ಯಾರೂ ಕಳಂಕ ಹೊರಿಸಲು ಸಾಧ್ಯವಿಲ್ಲ. ಇದನ್ನೂ ತಂದೆಯು ತಿಳಿಸಿದ್ದಾರೆ, ಏಣಿಯನ್ನು ಇಳಿಯುವಾಗ ಅರ್ಧಕಲ್ಪ ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿ ಬಿಡುತ್ತೀರಿ. ಈಗ ಕಬ್ಬಿಣದ ಯುಗವಾಗಿದೆ. ಅವರ ಸಂಪ್ರದಾಯಗಳೂ ಸಹ ಕಪ್ಪಾಗಿಯೇ ಇದೆ ಆದರೆ ಎಲ್ಲರ ರೂಪವನ್ನು ಕಪ್ಪಾಗಿ ಹೇಗೆ ತೋರಿಸುವುದು! ಚಿತ್ರಗಳನ್ನೂ ಸಹ ತಿಳುವಳಿಕೆಯಿಲ್ಲದೆ ಮಾಡಿಸಿ ಬಿಟ್ಟಿದ್ದಾರೆ. ಕೃಷ್ಣನನ್ನೇ ಶ್ಯಾಮ ಮತ್ತು ಸುಂದರ ಎಂದು ಹೇಳುವುದು.... ಇದು ಹೇಗೆ ಸಾಧ್ಯ! ಇಂತಹವರಿಗೆ ಅಂಧಶ್ರದ್ಧೆಯಿಂದ ಗೊಂಬೆ ಪೂಜೆ ಮಾಡುವವರೆಂದು ಹೇಳಲಾಗುತ್ತದೆ. ಗೊಂಬೆಗಳಿಗೆ ಯಾವುದೆ ನಾಮ-ರೂಪ, ಕರ್ತವ್ಯವಿರುವುದಿಲ್ಲ ಹಾಗೆಯೇ ನೀವೂ ಸಹ ಮೊದಲು ಗೊಂಬೆ ಪೂಜೆ ಮಾಡುತ್ತಿದ್ದಿರಿ, ಅರ್ಥವೇನನ್ನೂ ತಿಳಿದುಕೊಂಡಿರಲಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಪ್ರದರ್ಶನಿಯ ಮುಖ್ಯ ಚಿತ್ರಗಳನ್ನು ಮಾಡಿಸಿ ಕಮಿಟಿ ಮಾಡಿ. ಪ್ರದರ್ಶನಿಯ ಹಿಂದೆ ಪ್ರದರ್ಶನಿ ನಡೆಯುತ್ತಿರಲಿ. ಬಂಧನ ಮುಕ್ತರಂತೂ ಅನೇಕರಿದ್ದಾರೆ. ಕನ್ಯೆಯರು, ವಾನಪ್ರಸ್ಥಿಗಳು ಬಂಧನ ಮುಕ್ತರಾಗಿದ್ದಾರೆ ಅಂದಮೇಲೆ ನೀವು ಮಕ್ಕಳು ಆದೇಶವನ್ನು ಕಾರ್ಯದಲ್ಲಿ ತರಬೇಕು. ಇವರು ಗುಪ್ತ ಪಾಂಡವರಾಗಿದ್ದಾರೆ, ಇದು ಯಾರಿಗೂ ಅರ್ಥವಾಗುವುದಿಲ್ಲ. ತಂದೆಯೂ ಗುಪ್ತ, ಜ್ಞಾನವೂ ಗುಪ್ತವಾಗಿದೆ. ಅಲ್ಲಿ ಮನುಷ್ಯರು ಮನುಷ್ಯರಿಗೆ ಜ್ಞಾನ ಕೊಡುತ್ತಾರೆ. ಇಲ್ಲಿ ಪರಮಾತ್ಮನು ಆತ್ಮರಿಗೆ ಜ್ಞಾನ ಕೊಡುತ್ತಾರೆ, ಆತ್ಮವೇ ಜ್ಞಾನವನ್ನು ತೆಗೆದುಕೊಳ್ಳುತ್ತದೆ ಆದರೆ ಇದು ಅರ್ಥವಾಗುವುದೇ ಇಲ್ಲ. ಏಕೆಂದರೆ ಅವರು ಆತ್ಮವನ್ನು ನಿರ್ಲೇಪವೆಂದು ಹೇಳುತ್ತಾರೆ. ವಾಸ್ತವದಲ್ಲಿ ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಆತ್ಮವೇ ಕರ್ಮಗಳನುಸಾರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ತಂದೆಯು ಇವೆಲ್ಲಾ ಮಾತುಗಳನ್ನು ಚೆನ್ನಾಗಿ ಬುದ್ಧಿಯಲ್ಲಿ ಹಾಕುತ್ತಾರೆ. ಎಲ್ಲಾ ಸೇವಾಕೇಂದ್ರಗಳಲ್ಲಿ ನಂಬರ್ವಾರ್ ದೇಹೀ-ಅಭಿಮಾನಿಗಳಿದ್ದಾರೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಮತ್ತೆ ಅನ್ಯರಿಗೆ ತಿಳಿಸುತ್ತಾರೆ. ದೇಹಾಭಿಮಾನಿಗಳು ತಿಳಿದುಕೊಳ್ಳುವುದೂ ಇಲ್ಲ, ತಿಳಿಸುವುದೂ ಇಲ್ಲ. ನನಗೇನೂ ಅರ್ಥವಾಗುವುದಿಲ್ಲ ಎಂದು ಹೇಳುವುದೂ ಸಹ ದೇಹಾಭಿಮಾನವಾಗಿದೆ. ಅರೆ! ನೀವಂತೂ ಆತ್ಮರಾಗಿದ್ದೀರಿ, ತಂದೆಯು ಆತ್ಮರಿಗೆ ಕುಳಿತು ತಿಳಿಸುತ್ತಾರೆ. ಬುದ್ಧಿಯು ತೆರೆದು ಬಿಡಬೇಕು. ಅದೃಷ್ಟದಲ್ಲಿಲ್ಲವೆಂದರೆ ಬುದ್ಧಿಯ ಬೀಗವು ತೆರೆಯುವುದಿಲ್ಲ. ಆದ್ದರಿಂದ ತಂದೆಯು ಪುರುಷಾರ್ಥ ಮಾಡಿಸುತ್ತಾರೆ ಆದರೆ ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವೂ ಇಲ್ಲ. ಇದು ಬಹಳ ಸಹಜವಾಗಿದೆ. ಕೇವಲ ತಂದೆ ಮತ್ತು ಆಸ್ತಿಯನ್ನು ತಿಳಿದುಕೊಳ್ಳಬೇಕಾಗಿದೆ. ಬೇಹದ್ದಿನ ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವು ಭಾರತವಾಸಿಗಳೆಲ್ಲರೂ ದೇವಿ-ದೇವತೆಗಳಾಗಿದ್ದಿರಿ, ಪ್ರಜೆಗಳೂ ಅದೇರೀತಿಯಿದ್ದಾರೆ, ಈ ಸಮಯದಲ್ಲಿ ಪತಿತರಾಗಿ ಬಿಟ್ಟಿದ್ದಾರೆ. ಎಷ್ಟೊಂದು ತಿಳಿಸಲಾಗುತ್ತದೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ನಾನು ನಿಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡಿದ್ದೆನು, ನೀವೀಗ ಏನಾಗಿ ಬಿಟ್ಟಿದ್ದೀರಿ! ಇದು ಕುಂಭಿಪಾಕ ನರಕವಾಗಿದೆ. ವಿಷಯ ವೈತರಣಿ ನದಿಯಲ್ಲಿ ಮನುಷ್ಯರನ್ನು ಪ್ರಾಣಿ-ಪಕ್ಷಿ ಇತ್ಯಾದಿಯಲ್ಲವನ್ನೂ ಒಂದೇ ಸಮಾನವಾಗಿ ತೋರಿಸುತ್ತಾರೆ. ಇಲ್ಲಂತೂ ಮನುಷ್ಯರು ಇನ್ನೂ ಕೆಟ್ಟು ಹೋಗಿದ್ದಾರೆ. ಮನುಷ್ಯರಲ್ಲಿ ಕ್ರೋಧವು ನೋಡಿ ಎಷ್ಟೊಂದಿದೆ. ಲಕ್ಷಾಂತರ ಜನರನ್ನು ಸಾಯಿಸುತ್ತಾರೆ. ಯಾವ ಭಾರತವು ವೇಶ್ಯಾಲಯವಾಗಿದೆ, ಇದನ್ನು ಶಿವಾಲಯವನ್ನಾಗಿ ಶಿವ ತಂದೆಯೇ ಮಾಡುತ್ತಾರೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಹೀಗೀಗೆ ಮಾಡಿ ಎಂದು ಸಲಹೆ ನೀಡುತ್ತಾರೆ. ಮಕ್ಕಳೇ, ಚಿತ್ರಗಳನ್ನು ಮಾಡಿಸಿ ಮತ್ತು ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ತಿಳಿಸಿ - ಈ ಪ್ರಾಚೀನ ಯೋಗ, ಪ್ರಾಚೀನ ಜ್ಞಾನವನ್ನು ಎಲ್ಲರೂ ಕೇಳಬೇಕಾಗಿದೆ ಆದ್ದರಿಂದ ಹಾಲ್ ತೆಗೆದುಕೊಂಡು ಪ್ರದರ್ಶನಿಯನ್ನಿಡಿ. ಅವರಿಂದ ಹಣ ಇತ್ಯಾದಿಗಳೇನನ್ನೂ ಪಡೆಯಬೇಡಿ. ಆದರೂ ಯಾರಾದರೂ ಸರಿಯಾಗಿ ತಿಳಿದುಕೊಂಡರೆ ಅವರಿಂದ ಬಾಡಿಗೆಯನ್ನು ತೆಗೆದುಕೊಳ್ಳಿ. ತಾವು ಚಿತ್ರಗಳನ್ನು ನೋಡಿದರೆ ಹಣವನ್ನು ಕೂಡಲೇ ಹಿಂತಿರುಗಿಸಿ ಬಿಡುವರು. ಕೇವಲ ಯುಕ್ತಿಯಿಂದ ತಿಳಿಸಬೇಕು. ತಮ್ಮ ಕೈಯಲ್ಲಿ ಅಧಿಕಾರವಿರುತ್ತದೆಯಲ್ಲವೆ. ಏನು ಬೇಕಾದರೂ ಮಾಡಬಹುದು ಆದರೆ ಅವರು ತಿಳಿದುಕೊಳ್ಳುವರೇ? ವಿನಾಶಕಾಲೇ ವಿಪರೀತ ಬುದ್ಧಿಯವರಂತೂ ವಿನಾಶವನ್ನೇ ಪ್ರಾಪ್ತಿ ಹೊಂದಿದರು. ಪಾಂಡವರಂತೂ ಭವಿಷ್ಯದಲ್ಲಿ ಪದವಿಯನ್ನು ಪಡೆದರು. ಆದರೂ ರಾಜ್ಯವು ಕೊನೆಯಲ್ಲಿ ಭವಿಷ್ಯದಲ್ಲಿರುವುದು, ಈಗ ಇರುವುದಿಲ್ಲ. ಈ ಮನೆ ಇತ್ಯಾದಿಗಳೆಲ್ಲವೂ ಮಣ್ಣು ಪಾಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಪ್ರದರ್ಶನಿಯನ್ನು ಮಾಡಬೇಕು. ಬಹಳ ಚೆನ್ನಾಗಿ ಕಾರ್ಡಿನ ಮೇಲೆ ನಿಮಂತ್ರಣ ಕೊಡಬೇಕು. ನೀವು ಮೊದಲು ದೊಡ್ಡ-ದೊಡ್ಡವರಿಗೆ ತಿಳಿಸಿ ಆಗ ಅವರು ಸಹಯೋಗ ನೀಡುತ್ತಾರೆ ಬಾಕಿ ನೀವೇ ಮಲಗಿರಬಾರದು. ಕೆಲವು ಮಕ್ಕಳು ದೇಹಾಭಿಮಾನದಲ್ಲಿ ಮಲಗಿರುತ್ತಾರೆ. ಕಮಿಟಿ ಮಾಡಿ ಕ್ಷೀರ ಖಂಡವಾಗಿ ಯುಕ್ತಿಗಳನ್ನು ರಚಿಸಬೇಕು ಬಾಕಿ ಮುರುಳಿಯನ್ನೇ ಓದದಿದ್ದರೆ ಧಾರಣೆ ಹೇಗಾಗುವುದು? ಹೀಗೆ ನಿರ್ಲಕ್ಷ್ಯ ಮಾಡುವವರು ಅನೇಕರಿದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ದೇಹೀ-ಅಭಿಮಾನಿಯಾಗಿ ಸರ್ವೀಸಿನ ಭಿನ್ನ-ಭಿನ್ನ ಯುಕ್ತಿಗಳನ್ನು ರಚಿಸಬೇಕಾಗಿದೆ. ಪರಸ್ಪರ ಕ್ಷೀರ ಖಂಡವಾಗಿ ಸರ್ವೀಸ್ ಮಾಡಬೇಕಾಗಿದೆ. ಹೇಗೆ ತಂದೆಯು ಕಲ್ಯಾಣಕಾರಿಯಾಗಿದ್ದಾರೆ ಅದೇರೀತಿ ಕಲ್ಯಾಣಕಾರಿಗಳಾಗಬೇಕಾಗಿದೆ. |
2. ಪ್ರೀತಿ ಬುದ್ಧಿಯವರಾಗಿ ಅನ್ಯ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರಬೇಕಾಗಿದೆ. ಕಲ್ಪ-ಕಲ್ಪಾಂತರಕ್ಕಾಗಿ ನಷ್ಟವಾಗುವಂತಹ ಯಾವುದೇ ಅಕರ್ತವ್ಯ ಮಾಡಬಾರದು. |
ಪೂಜ್ಯ ದೇವಾತ್ಮ ಆಗುವ ಸಾಧನ - ಪವಿತ್ರತೆಯ ಶಕ್ತಿ |
ಇಂದು ಆತ್ಮಿಕ ಜ್ಯೋತಿಯು ತನ್ನ ಆತ್ಮಿಕ ಪತಂಗಗಳನ್ನು ನೋಡುತ್ತಿದ್ದಾರೆ. ಪ್ರತಿಯೊಂದು ಆತ್ಮಿಕ ಪತಂಗವು ತನ್ನ ಒಲವು-ಉತ್ಸಾಹದ ರೆಕ್ಕೆಗಳಿಂದ ಹಾರುತ್ತಾ-ಹಾರುತ್ತಾ, ಈ ಆತ್ಮಿಕ ಮಹಾ ಸಭೆಯಲ್ಲಿ ತಲುಪಿವೆ. ಈ ಆತ್ಮಿಕ ಮಹಾ ಸಭೆಯು ವಿಚಿತ್ರ ಅಲೌಕಿಕ ಮಹಾಸಭೆ ಆಗಿದೆ ಎನ್ನುವುದು ಆತ್ಮಿಕ ತಂದೆ ಗೊತ್ತಿದೆ ಮತ್ತು ಆತ್ಮಿಕ ಮಕ್ಕಳಿಗೆ ಗೊತ್ತಿದೆ. ಈ ಆತ್ಮಿಕ ಆಕರ್ಷಣೆಯ ಮುಂದೆ ಮಾಯೆಯ ಅನೇಕ ಪ್ರಕಾರದ ಆಕರ್ಷಣೆಗಳು ಕನಿಷ್ಟ ಎನಿಸುತ್ತದೆ, ನಿಸ್ಸಾರವಾಗಿರುವುದು ಎಂಬ ಅನುಭವ ಆಗುತ್ತದೆ. ಈ ಆತ್ಮಿಕ ಆಕರ್ಷಣೆಯು ಸದಾಕಾಲಕ್ಕಾಗಿ ವರ್ತಮಾನ ಮತ್ತು ಭವಿಷ್ಯದ ಅನೇಕ ಜನ್ಮಗಳಿಗಾಗಿ ಹರ್ಷಿತರನ್ನಾಗಿ ಮಾಡುವಂತಹ ಆಕರ್ಷಣೆ ಆಗಿದೆ. ಅನೇಕ ಪ್ರಕಾರದ ದುಃಖ-ಅಶಾಂತಿಯ ಪ್ರಕಂಪನಗಳಿಂದ ದೂರ ಮಾಡುವಂತಹದ್ದಾಗಿದೆ. ಆದ್ದರಿಂದ ಎಲ್ಲಾ ಆತ್ಮಿಕ ಪತಂಗಗಳು ಈ ಮಹಾಸಭೆಯಲ್ಲಿ ತಲುಪಿವೆ. |
ಬಾಪ್ದಾದಾರವರು ಎಲ್ಲಾ ಪತಂಗಗಳನ್ನು ನೋಡುತ್ತಾ ಹರ್ಷಿತವಾಗುತ್ತಾ ಇದ್ದಾರೆ. ಎಲ್ಲರ ಮಸ್ತಕದಲ್ಲಿ ಪವಿತ್ರ ಸ್ನೇಹ, ಪವಿತ್ರ ಸ್ನೇಹದ ಸಂಬಂಧ, ಪವಿತ್ರ ಜೀವನದ ಪವಿತ್ರ ದೃಷ್ಟಿ-ವೃತ್ತಿಯ ಲಕ್ಷಣಗಳು ಹೊರ ಹೊಮ್ಮುತ್ತಿವೆ. ಎಲ್ಲರ ಮೇಲೆ ಇವೆಲ್ಲಾ ಪವಿತ್ರ ಚಿಹ್ನೆಗಳ ಸಂಕೇತ ಅಥವಾ ಸೂಚಕವಾಗಿ “ಪ್ರಕಾಶತೆಯ ಕಿರೀಟ” ಹೊಳೆಯುತ್ತಿದೆ. ಸಂಗಮಯುಗದ ಬ್ರಾಹ್ಮಣ ಜೀವನ ವಿಶೇಷತೆ ಆಗಿದೆ - ಪವಿತ್ರತೆಯ ಚಿಹ್ನೆಯಾಗಿ ಈ ಪ್ರಕಾಶತೆಯ ಕಿರೀಟವಿದೆ, ಇದು ಪ್ರತಿಯೊಂದು ಆತ್ಮನಿಗೂ ತಂದೆಯ ಮೂಲಕ ಪ್ರಾಪ್ತಿ ಆಗಿರುತ್ತದೆ. ಮಹಾನ್ ಆತ್ಮ, ಪರಮಾತ್ಮ-ಭಾಗ್ಯವಂತ ಆತ್ಮ, ಶ್ರೇಷ್ಠಾತಿ ಶ್ರೇಷ್ಠ ಆತ್ಮರ ಚಿಹ್ನೆಯಾಗಿ ಈ ಕಿರೀಟವಿದೆ. ಅಂದಮೇಲೆ ತಾವೆಲ್ಲರೂ ಇಂತಹ ಕಿರೀಟಧಾರಿ ಆಗಿರುವಿರಾ? ಬಾಪ್ದಾದಾ ಅಥವಾ ಮಾತಾಪಿತ ಪ್ರತಿಯೊಂದು ಮಕ್ಕಳ ಜನ್ಮವಾಗುತ್ತಿದ್ದಂತೆಯೇ “ಪವಿತ್ರ ಭವ”ದ ವರದಾನವನ್ನು ಕೊಡುತ್ತಾರೆ. ಪವಿತ್ರತೆ ಇಲ್ಲದಿದ್ದರೆ ಬ್ರಾಹ್ಮಣ ಜೀವನವೇ ಇಲ್ಲದಂತೆ ಆಗುತ್ತದೆ. ಆದಿ ಸ್ಥಾಪನೆಯಿಂದ ಈಗಿನವರೆಗೂ ಪವಿತ್ರತೆಯ ಮಾತಿನಲ್ಲಿಯೇ ವಿಘ್ನಗಳು ಉಂಟಾಗುತ್ತಾ ಬಂದಿದೆ ಏಕೆಂದರೆ ಪವಿತ್ರತೆಯ ಬುನಾದಿಯೇ 21 ಜನ್ಮಗಳ ಬುನಾದಿ ಆಗಿದೆ. ಪವಿತ್ರತೆಯ ಪ್ರಾಪ್ತಿಯು ತಾವು ಬ್ರಾಹ್ಮಣ ಆತ್ಮರನ್ನು ಹಾರುವ ಕಲೆಯ ಕಡೆಗೆ ಸಹಜವಾಗಿ ಕರೆದುಕೊಂಡು ಹೋಗಲು ಆಧಾರವಾಗಿದೆ. |
ಹೇಗೆ ಕರ್ಮಗಳ ಗತಿಯು ಅತಿ ಗುಹ್ಯವೆಂದು ಮಹಿಮೆಯಿದೆ, ಅಂದಮೇಲೆ ಪವಿತ್ರತೆಯ ಪರಿಭಾಷೆಯೂ ಸಹ ಅತಿ ಗುಹ್ಯವಾಗಿದೆ. ಪವಿತ್ರತೆಯು ಮಾಯೆಯ ಅನೇಕ ವಿಘ್ನಗಳಿಂದ ಪಾರಾಗುವ ಛತ್ರಛಾಯೆ ಆಗಿದೆ. ಪವಿತ್ರತೆಯನ್ನೇ ಸುಖ-ಶಾಂತಿಯ ಜನನಿ ಎಂದು ಹೇಳಲಾಗುತ್ತದೆ. ಯಾವುದೇ ಪ್ರಕಾರದ ಅಪವಿತ್ರತೆಯು ದುಃಖ ಅಥವಾ ಅಶಾಂತಿಯ ಅನುಭೂತಿ ಮಾಡಿಸುತ್ತದೆ ಅಂದಾಗ ಇಡೀ ದಿನದಲ್ಲಿ ಪರಿಶೀಲನೆ ಮಾಡಿಕೊಳ್ಳಿರಿ - ಯಾವುದೇ ಸಮಯದಲ್ಲಿ ದುಃಖ ಅಥವಾ ಅಶಾಂತಿಯ ಪ್ರಕಂಪನಗಳ ಅನುಭವ ಆಗುತ್ತದೆಯೇ? ಅದರ ಬೀಜವಾಗಿದೆ - ಅಪವಿತ್ರತೆ. ಭಲೆ ಮುಖ್ಯವಾದ ವಿಕಾರಗಳ ಕಾರಣದಿಂದ ಇರಬಹುದು ಅಥವಾ ವಿಕಾರಗಳ ಸೂಕ್ಷ್ಮ ರೂಪದ ಕಾರಣ ಇರಬಹುದು, ಪವಿತ್ರ ಜೀವನ ಅಂದರೆ ದುಃಖ-ಅಶಾಂತಿಯ ಚಿಹ್ನೆಯೇ ಇರಬಾರದು. ಯಾವುದೇ ಕಾರಣದಿಂದ ಅಂಶದಷ್ಟು ದುಃಖದ ಅನುಭವವಾಗುತ್ತದೆ ಎಂದರೆ ಸಂಪೂರ್ಣ ಪವಿತ್ರತೆಯಲ್ಲಿ ಕೊರತೆಯಿದೆ. ಪವಿತ್ರ ಜೀವನ ಎಂದರೆ ಬಾಪ್ದಾದಾರವರ ಮೂಲಕ ಪ್ರಾಪ್ತಿಯಾಗಿರುವ ವರದಾನಿ ಜೀವನವಾಗಿದೆ. ಬ್ರಾಹ್ಮಣ ಸಂಕಲ್ಪದಲ್ಲಿ ಅಥವಾ ಮುಖದಿಂದ ಈ ಶಬ್ಧವೆಂದಿಗೂ ಬರಬಾರದು - ಈ ಮಾತಿನ ಕಾರಣ ಅಥವಾ ಈ ವ್ಯಕ್ತಿಯ ವ್ಯವಹಾರದ ಕಾರಣ ನನಗೆ ದುಃಖವಾಯಿತು. ಕೆಲವೊಮ್ಮೆಗೂ ಸಾಧಾರಣ ರೀತಿಯಲ್ಲಿ ಇಂತಹ ಮಾತನ್ನು ಮಾತನಾಡಬಹುದು ಅಥವಾ ಅನುಭವವನ್ನೂ ಮಾಡುತ್ತೀರಿ - ಇದು ಪವಿತ್ರ ಬ್ರಾಹ್ಮಣ ಜೀವನದ ಮಾತಲ್ಲ. ಬ್ರಾಹ್ಮಣ ಜೀವನ ಎಂದರೆ ಪ್ರತೀ ಸೆಕೆಂಡ್ ಸಹ ಸುಖಮಯವಾದ ಜೀವನ. ಭಲೆ ದುಃಖದ ದೃಶ್ಯವೇ ಇರಬಹುದು ಆದರೆ ಎಲ್ಲಿ ಪವಿತ್ರತೆಯ ಶಕ್ತಿಯಿದೆ, ಅವರೆಂದಿಗೂ ದುಃಖದ ದೃಶ್ಯದಲ್ಲಿಯೂ ದುಃಖದ ಅನುಭವವನ್ನು ಮಾಡುವುದಿಲ್ಲ ಆದರೆ ದುಃಖಹರ್ತ ಸುಖ-ಕರ್ತ ತಂದೆಯ ಸಮಾನ ದುಃಖದ ವಾಯುಮಂಡಲದಲ್ಲಿ ದುಃಖಮಯ ವ್ಯಕ್ತಿಗಳಿಗೂ ಸುಖ-ಶಾಂತಿಯ ವರದಾನಿಯಾಗಿ, ಸುಖ-ಶಾಂತಿಯ ಹನಿಯನ್ನು ಕೊಡುವರು, ಮಾಸ್ಟರ್ ಸುಖಕರ್ತ ಆಗಿರುತ್ತಾ ದುಃಖವನ್ನು ಆತ್ಮಿಕ ಸುಖದ ವಾಯುಮಂಡಲದಲ್ಲಿ ಪರಿವರ್ತನೆ ಮಾಡುವರು - ಇವರಿಗೇ ದುಃಖ-ಹರ್ತ ಸುಖ-ಕರ್ತ ಎಂದು ಹೇಳಲಾಗುತ್ತದೆ. |
ಯಾವಾಗ ವಿಜ್ಞಾನ ಶಕ್ತಿಯು ಅಲ್ಪಕಾಲಕ್ಕಾಗಿ ಯಾವುದೇ ದುಃಖ-ನೋವುಗಳನ್ನು ಸಮಾಪ್ತಿ ಮಾಡಿ ಬಿಡುತ್ತದೆ ಅಂದಮೆಲೆ ಪವಿತ್ರತೆಯ ಶಕ್ತಿ ಅರ್ಥಾತ್ ಶಾಂತಿಯ ಶಕ್ತಿಯು ದುಃಖ-ನೋವುಗಳನ್ನು ಸಮಾಪ್ತಿ ಮಾಡಲು ಸಾಧ್ಯವಿಲ್ಲವೇ? ವಿಜ್ಞಾನದ ಔಷಧಿಗಳಲ್ಲಿ ಅಲ್ಪಕಾಲದ ಶಕ್ತಿಯಿದೆ, ಅಂದಮೇಲೆ ಪವಿತ್ರತೆಯ ಶಕ್ತಿಯಲ್ಲಿ- ಪವಿತ್ರತೆಯ ವರದಾನದಲ್ಲಿ ಇನ್ನೆಷ್ಟು ಶ್ರೇಷ್ಠ ಶಕ್ತಿಯಿದೆ? ಸಮಯದ ಅನುಸಾರವಾಗಿ ವರ್ತಮಾನದಲ್ಲಿ ಈಗಿನ ವ್ಯಕ್ತಿಯು ಔಷಧಿಗಳಿಂದ ಕಾರಣ-ಅಕಾರಣದಿಂದ ಬೇಸರವಾಗುತ್ತಾರೆ, ರೋಗಗಳು ಅತಿಯಲ್ಲಿ ಹೋಗುತ್ತಿವೆ ಅಂದಾಗ ಸಮಯದಲ್ಲಿ ತಾವು ಪವಿತ್ರ ದೇವ ಅಥವಾ ದೇವಿಯರ ಬಳಿ ಆಶೀರ್ವಾದಕ್ಕಾಗಿ ಬರುತ್ತಾರೆ - ನಮ್ಮನ್ನು ದುಃಖ-ಅಶಾಂತಿಯಿಂದ ಸದಾಕಾಲಕ್ಕಾಗಿ ದೂರಗೊಳಿಸಿ ಎಂದು. ಪವಿತ್ರತೆಯ ದೃಷ್ಟಿ-ವೃತ್ತಿಯು ಸಾಧಾರಣ ಶಕ್ತಿಯಲ್ಲ, ಇದು ಸ್ವಲ್ಪ ಸಮಯದ ಶಕ್ತಿಶಾಲಿ ದೃಷ್ಟಿ ಅಥವಾ ವೃತ್ತಿಯು ಸದಾಕಾಲದ ಪ್ರಾಪ್ತಿಯನ್ನು ಮಾಡಿಸುವುದಾಗಿದೆ. ಹೇಗೆ ಈಗ ಶರೀರದ ವೈದ್ಯರು ಹಾಗೂ ಶರೀರದ ಆಸ್ಪತ್ರೆಯು ಸಮಯ-ಸಮಯದಲ್ಲಿ ಹೆಚ್ಚುತ್ತಾ ಇವೆ, ಇಷ್ಟಾದರೂ ವೈದ್ಯರುಗಳಿಗೆ ಬಿಡುವೇ ಇಲ್ಲ ಮತ್ತು ಆಸ್ಪತ್ರೆಗಳಲ್ಲಿ ಸ್ಥಾನವೂ ಇಲ್ಲ. ರೋಗಿಗಳ ಕ್ಯೂ ಸದಾ ನಿಂತಿರುತ್ತದೆ. ಇದೇ ರೀತಿ ಮುಂದೆ ನಡೆದಂತೆ ಆಸ್ಪತ್ರೆ ಅಥವಾ ವೈದ್ಯರುಗಳ ಬಳಿ ಹೋಗುವ, ಗುಣಮುಖರಾಗುವ ಬಯಕೆ ಇದ್ದರೂ ಹೋಗಲು ಸಾಧ್ಯವಾಗುವುದಿಲ್ಲ. ಮೆಜಾರಿಟಿ ನಿರಾಶೆಗೊಳ್ಳುವರು ಆಗ ಏನು ಮಾಡುವಿರಿ? ಯಾವಾಗ ಔಷಧಿಯಿಂದ ನಿರಾಶೆಯಾಗುವರು ಅಂದಾಗ ಮತ್ತೆಲ್ಲಿಗೆ ಹೋಗುವರು? ತಾವುಗಳ ಬಳಿಯೂ ಕ್ಯೂ ನಿಲ್ಲುತ್ತದೆ. ಹೇಗೆ ಈಗ ತಮ್ಮ ಅಥವಾ ತಂದೆಯವರ ಜಡ ಚಿತ್ರಗಳ ಮುಂದೆ “ಓ ದಯಾಸಾಗರ, ದಯೆ ತೋರಿಸು” ಎನ್ನುತ್ತಾ ದಯೆ ಅಥವಾ ಕೃಪೆಯನ್ನು ಬೇಡುತ್ತಿರುತ್ತಾರೆ, ಹಾಗೆಯೇ ತಾವು ಚೈತನ್ಯ, ಪವಿತ್ರ, ಪೂಜ್ಯ ಆತ್ಮರುಗಳ ಬಳಿ `ಓ ಪವಿತ್ರ ದೇವಿಯರೇ ಅಥವಾ ಪವಿತ್ರ ದೇವತೆಗಳೇ! ನಮ್ಮ ಮೇಲೆ ದಯೆ ತೋರಿಸಿ' ಎಂದು ಬೇಡುವುದಕ್ಕಾಗಿ ಬರುವರು. ಇಂದು ಅಲ್ಪಕಾಲದ ಸಿದ್ಧಿಯವರ ಬಳಿ ಚಿಕಿತ್ಸೆ ಪಡೆಯುವುದಕ್ಕಾಗಿ ಅಥವಾ ಸುಖ-ಶಾಂತಿಯ ದಯೆ ಪಡೆಯುವುದಕ್ಕಾಗಿ ಎಷ್ಟೊಂದು ಅಲೆದಾಡುತ್ತಾರೆ. ಅವರು ತಿಳಿಯುತ್ತಾರೆ - ನಮ್ಮ ಮೇಲೆ ಭಲೆ ದೂರದಿಂದಲೇ ದೃಷ್ಟಿ ಬೀಳಲಿ. ಅಂದಾಗ ತಾವು ಪರಮಾತ್ಮ-ವಿಧಿಯ ಮೂಲಕ ಸಿದ್ಧಿ-ಸ್ವರೂಪರು ಆಗಿದ್ದೀರಿ. ಆ ಅಲ್ಪಕಾಲದ ಆಶ್ರಯವು ಯಾವಾಗ ಸಮಾಪ್ತಿ ಆಗುವುದೋ ಆಗ ಎಲ್ಲಿಗೆ ಹೋಗುವರು? |
ಯಾರೆಲ್ಲಾ ಈ ಅಲ್ಪಕಾಲದ ಸಿದ್ಧಿಯವರು ಇದ್ದಾರೆ, ಅಲ್ಪಕಾಲದ ಅಲ್ಪಸ್ವಲ್ಪ ಪವಿತ್ರತೆಯ ವಿಧಿಗಳಿಂದ ಅಲ್ಪಕಾಲದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಇದು ಸದಾಕಾಲ ನಡೆಯಲು ಸಾಧ್ಯವಿಲ್ಲ. ಇದೂ ಸಹ ಗೋಲ್ಡನೇಜಡ್ ಆತ್ಮರಿಗೆ ಅರ್ಥಾತ್ ಅಂತ್ಯದಲ್ಲಿ ಮೇಲಿಂದ ಬಂದಿರುವ ಆತ್ಮರು, ಪವಿತ್ರ ಮುಕ್ತಿಧಾಮದಿಂದ ಬಂದಿರುವ ಕಾರಣ ಹಾಗೂ ಡ್ರಾಮಾದ ನಿಯಮಯದ ಅನುಸಾರ ಸತೋಪ್ರಧಾನ ಸ್ಥಿತಿಯ ಅನುಸಾರವಾಗಿ, ಪವಿತ್ರತೆಯ ಫಲಸ್ವರೂಫವಾಗಿ ಅಲ್ಪಕಾಲದ ಸಿದ್ಧಿಗಳು ಪ್ರಾಪ್ತಿಯಾಗುತ್ತವೆ. ಆದರೆ ಸ್ವಲ್ಪ ಸಮಯದಲ್ಲಿಯೇ ಸತೋ, ರಜೋ, ತಮೋ- ಮೂರೂ ಹಂತಗಳನ್ನು ಪಾರು ಮಾಡುವಂತಹ ಆತ್ಮರಾಗಿರುತ್ತಾರೆ ಆದ್ದರಿಂದ ಸದಾಕಾಲದ ಸಿದ್ಧಿ ಇರುವುದಿಲ್ಲ. ಪರಮಾತ್ಮ-ವಿಧಿಯಿಂದ ಸಿದ್ಧಿಯಾಗುವುದಿಲ್ಲ ಆದ್ದರಿಂದ ಎಲ್ಲಾದರೂ ಒಂದು ಕಡೆ ಸ್ವಾರ್ಥ ಅಥವಾ ಅಭಿಮಾನವು ಸಿದ್ಧಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಆದರೆ ತಾವು ಪವಿತ್ರ ಆತ್ಮರು ಸದಾ ಸಿದ್ಧಿ ಸ್ವರೂಪರಾಗಿದ್ದೀರಿ, ಸದಾಕಾಲದ ಪ್ರಾಪ್ತಿ ಮಾಡಿಕೊಳ್ಳುವವರು ಆಗಿದ್ದೀರಿ. ಕೇವಲ ಚಮತ್ಕಾರವನ್ನೇ ತೋರಿಸುವವರಲ್ಲ ಆದರೆ ಹೊಳೆಯುತ್ತಿರುವ ಜ್ಯೋತಿ ಸ್ವರೂಪರನ್ನಾಗಿ ಮಾಡುವವರು ಆಗಿದ್ದೀರಿ, ಅವಿನಾಶಿ ಭಾಗ್ಯದಿಂದ ಹೊಳೆಯುತ್ತಿರುವ ನಕ್ಷತ್ರವನ್ನಾಗಿ ಮಾಡುವವರು ಆಗಿದ್ದೀರಿ. ಆದ್ದರಿಂದ ಇವೆಲ್ಲಾ ಆಶ್ರಯಗಳು ಈಗಷ್ಟೇ ಸ್ವಲ್ಪ ಸಮಯಕ್ಕಾಗಿ ಇವೆ, ಮತ್ತೆ ಕೊನೆಯಲ್ಲಿ ತಾವು ಪವಿತ್ರ ಆತ್ಮರ ಬಳಿಯೇ ಹನಿಯಷ್ಟು ತೆಗೆದುಕೊಳ್ಳುವುದಕ್ಕಾಗಿ ಬರುವರು. ಅಂದಮೇಲೆ ಇಷ್ಟೂ ಸುಖ-ಶಾಂತಿಯ ಜನನಿ ಪವಿತ್ರ ಆತ್ಮರು ಆಗಿದ್ದೀರಾ? ಇಷ್ಟೂ ಆಶೀರ್ವಾದಗಳ ಸ್ಟಾಕ್ನ್ನು ಜಮಾ ಮಾಡಿಕೊಂಡಿದ್ದೀರಾ ಅಥವಾ ಈಗಿನವರೆಗೂ ತಮಗಾಗಿಯೇ ಆಶೀರ್ವಾದಗಳನ್ನು ಬೇಡುತ್ತಾ ಇರುತ್ತೀರಾ? |
ಹಲವು ಮಕ್ಕಳು ಈಗಲೂ ಸಮಯ-ಸಮಯದಲ್ಲಿ ತಂದೆಯಿಂದ ಬೇಡುತ್ತಾ ಇರುತ್ತಾರೆ- ಈ ಮಾತಿನಲ್ಲಿ ನನಗೆ ಸ್ವಲ್ಪ ಆಶೀರ್ವಾದ ಮಾಡಿಬಿಡಿ, ಆಶೀರ್ವಾದ ಕೊಡಿ. ಹಾಗಾದರೆ ಬೇಡುವವರು ಹೇಗೆ ದಾತಾ ಆಗುವರು? ಆದ್ದರಿಂದ ಈಗಿನಿಂದಲೇ ಪವಿತ್ರತೆಯ ಶಕ್ತಿಯ ಮಹಾನತೆಯನ್ನು ತಿಳಿದುಕೊಂಡು ಪವಿತ್ರ ಅರ್ಥಾತ್ ಪೂಜ್ಯ ದೇವಾತ್ಮರು ಆಗಿರಿ. ಅಂತ್ಯದಲ್ಲಿ ಆಗಿ ಬಿಡುತ್ತೇವೆ ಎನ್ನಬಾರದು. ಬಹಳ ಸಮಯದಿಂದ ಜಮಾ ಆಗಿರುವ ಶಕ್ತಿಯೇ ಅಂತ್ಯದಲ್ಲಿ ಕೆಲಸಕ್ಕೆ ಬರುತ್ತದೆ. ಅಂದಾಗ ಪವಿತ್ರತೆಯ ಗುಹ್ಯಗತಿ ಏನೆಂದು ತಿಳಿಯಿತೆ? ಇದು ಸದಾ ಸುಖ-ಶಾಂತ್ಯ ಜನನಿ ಆತ್ಮರ ಪವಿತ್ರತೆಯ ಗುಹ್ಯಗತಿ ಆಗಿದೆ! ಇದು ಸಾಧಾರಣ ಮಾತಲ್ಲ! ಬ್ರಹ್ಮಚಾರಿ ಆಗಿರುತ್ತೇವೆ, ಪವಿತ್ರರಾಗಿದ್ದೀರಿ ಆದರೆ ಪವಿತ್ರತೆಯು ಜನನಿ ಆಗಿದೆ. ಭಲೆ ಸಂಕಲ್ಪದಿಂದ, ಭಲೆ ವೃತ್ತಿಯಿಂದ, ಭಲೆ ವಾಯುಮಂಡಲದಿಂದ, ವಾಣಿಯಿಂದ, ಸಂಪರ್ಕದಿಂದ ಸುಖ-ಶಾಂತಿಯ ಜನನಿ ಆಗಬೇಕು - ಇವರಿಗೆ ಪವಿತ್ರ ಆತ್ಮರೆಂದು ಹೇಳಲಾಗುತ್ತದೆ. ಅಂದಾಗ ತಮ್ಮನ್ನು ತಾವು ಎಲ್ಲಿಯವರೆಗೆ ತಯಾರಾಗಿದ್ದೇವೆ ಎಂದು ಪರಿಶೀಲನೆ ಮಾಡಿಕೊಳ್ಳಿರಿ. ಒಳ್ಳೆಯದು. |
ಇಂದು ಬಹಳಷ್ಟು ಬಂದಿದ್ದಾರೆ. ಹೇಗೆ ನೀರಿನ ಬಂಧನವು (ಸೇತುವೆ) ಮುರಿದು ಬಿಡುತ್ತದೆಯೋ ಹಾಗೆಯೇ ಇವರು ಕಾಯಿದೆಯ ಬಂಧನವನ್ನು ಮುರಿದು ಬಂದು ಬಿಟ್ಟಿದ್ದಾರೆ. ಆದರೂ ಕಾಯಿದೆಯಲ್ಲಿ ಲಾಭವಂತು ಇದ್ದೇ ಇದೆ. ಯಾರು ಕಾಯಿದೆಯ ಅನುಸಾರ ಬರುತ್ತಾರೆಯೋ ಅವರಿಗೆ ಹೆಚ್ಚು ಸಿಗುತ್ತದೆ ಮತ್ತು ಯಾರು ಆಕರ್ಷಣೆಯಲ್ಲಿ ಬರುತ್ತಾರೆಯೋ ಅವರಿಗೆ ಸಮಯದ ಅನುಸಾರ ಅಷ್ಟೇ ಸಿಗುತ್ತದೆ ಅಲ್ಲವೆ. ಆದರೂ ನೋಡಿ, ಬಂಧನಮುಕ್ತ ಬಾಪ್ದಾದಾರವರು ಬಂಧನದಲ್ಲಿ ಬರುತ್ತಾರೆ! ಸ್ನೇಹದ ಬಂಧನವಿದೆ. ಸ್ನೇಹದ ಜೊತೆಗೆ ಸಮಯದ ಬಂಧನವೂ ಇದೆ, ಶರೀರದ ಬಂಧನವೂ ಇದೆ ಅಲ್ಲವೆ. ಆದರೆ ಪ್ರಿಯವಾದ ಬಂಧನವಾಗಿದೆ ಆದ್ದರಿಂದ ಬಂಧನದಲ್ಲಿ ಇದ್ದರೂ ಸಹ ಸ್ವತಂತ್ರ ಆಗಿದ್ದೇವೆ. ಬಾಪ್ದಾದಾರವರಂತು ಹೇಳುತ್ತಾರೆ - ಭಲೆ ಬಂದಿದ್ದೀರಿ, ತಮ್ಮ ಮನೆಯಲ್ಲಿ ತಲುಪಿದ್ದೀರಿ. ಒಳ್ಳೆಯದು. |
ನಾಲ್ಕೂ ಕಡೆಯಲ್ಲಿ ಇರುವಂತಹ ಸರ್ವ ಪರಮ ಪವಿತ್ರ ಆತ್ಮರಿಗೆ, ಸದಾ ಸುಖ-ಶಾಂತಿಯ ಜನನಿ ಪಾವನ ಆತ್ಮರಿಗೆ, ಸದಾ ಪವಿತ್ರತೆಯ ಶಕ್ತಿಯ ಮೂಲಕ ಅನೇಕ ಅತ್ಮರ ದುಃಖ-ನೋವನ್ನು ದೂರಗೊಳಿಸುವ ದೇವಾತ್ಮರಿಗೆ, ಸದಾ ಪರಮಾತ್ಮ-ವಿಧಿಯ ಮೂಲಕ ಸಿದ್ಧಿ-ಸ್ವರೂಪ ಆತ್ಮರಿಗೆ ಬಾಪ್ದಾದಾರವರ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ. |
ಹಾಸ್ಟೆಲ್ನ ಕುಮಾರಿಯರೊಂದಿಗೆ (ಇಂದೋರ್ ಗ್ರೂಪ್):- ಎಲ್ಲರೂ ಪವಿತ್ರ ಮಹಾನ್ ಆತ್ಮರಾಗಿದ್ದೀರಿ ಅಲ್ಲವೇ? ವರ್ತಮಾನದಲ್ಲಿ ಮಹಾತ್ಮರೆಂದು ಕರೆಸಿಕೊಳ್ಳುವವರಿಗಿಂತಲೂ ಅನೇಕ ಬಾರಿ ಶ್ರೇಷ್ಠರಾಗಿದ್ದೀರಿ. ಪವಿತ್ರ ಕುಮಾರಿಯರದು ಸದಾ ಪೂಜೆಯಾಗುತ್ತದೆ. ಅಂದಾಗ ತಾವೆಲ್ಲರೂ ಪಾವನ, ಪೂಜ್ಯರು ಸದಾ ಶುದ್ಧ ಆತ್ಮರಾಗಿದ್ದೀರಿ ಅಲ್ಲವೇ? ಯಾವುದೇ ಅಶುದ್ಧಿಯಂತು ಇಲ್ಲವೇ? ಸದಾ ಪರಸ್ಪರದಲ್ಲಿ ಏಕಮತ, ಸ್ನೇಹಿ, ಸಹಯೋಗಿ ಆಗಿರುವ ಆತ್ಮರಾಗಿದ್ದೀರಿ ಅಲ್ಲವೇ? ಸಂಸ್ಕಾರ ಮಿಲನ ಮಾಡುವುದು ಬರುತ್ತದೆಯಲ್ಲವೆ ಏಕೆಂದರೆ ಸಂಸ್ಕಾರ ಮಿಲನವಾಗುವುದೂ ಸಹ ಮಹಾನತೆ ಆಗಿದೆ. ಸಂಸ್ಕಾರಗಳ ಘರ್ಷಣೆ ಆಗಬಾರದು ಆದರೆ ಸದಾ ಸಂಸ್ಕಾರ ಮಿಲನದ ರಾಸ್ ಮಾಡುತ್ತಿರಿ. ಬಹಳ ಒಳ್ಳೆಯ ಭಾಗ್ಯವು ಸಿಕ್ಕಿದೆ - ಬಾಲ್ಯದಲ್ಲಿಯೇ ಮಹಾನ್ ಆಗಿ ಬಿಟ್ಟಿರಿ! ಸದಾ ಖುಷಿಯಾಗಿ ಇರುತ್ತೀರಲ್ಲವೇ? ಎಂದಿಗೂ ಸಹ ಮನಸ್ಸಿನಲ್ಲಿಯೂ ಅಳುವುದಿಲ್ಲವೇ? ನಿರ್ಮೋಹಿ ಆಗಿದ್ದೀರಾ? ಕೆಲವೊಮ್ಮೆ ಲೌಕಿಕ ಪರಿವಾರದ ನೆನಪು ಬರುತ್ತದೆಯೇ? ಎರಡು ವಿದ್ಯಾಭ್ಯಾಸಗಳಲ್ಲಿ ಬುದ್ಧಿವಂತರಿದ್ದೀರಾ? ಎರಡೂ ವಿದ್ಯಾಭ್ಯಾಸಗಳಲ್ಲಿ ಸದಾ ನಂಬರ್ವನ್ ಆಗಿರಬೇಕು. ಹೇಗೆ ತಂದೆಯು ವನ್ ಆಗಿದ್ದಾರೆ, ಹಾಗೆಯೇ ಮಕ್ಕಳೂ ಸಹ ನಂಬರ್ವನ್ ಆಗಿರಬೇಕು. ಎಲ್ಲರಿಗಿಂತಲೂ ನಂಬರ್ವನ್ ಆಗಿರುವ ಮಕ್ಕಳು ಸದಾ ತಂದೆಗೆ ಪ್ರಿಯರಾಗುವರು. ತಿಳಿಯಿತೆ? ಒಳ್ಳೆಯದು. |
ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:- ಸದಾ ತಮ್ಮನ್ನು ಶ್ರೇಷ್ಠ ಭಾಗ್ಯವಂತರು ಎಂದು ತಿಳಿಯುತ್ತೀರಾ? ಮನೆಯಲ್ಲಿ ಕುಳಿತಿದ್ದಂತೆಯೇ ಭಾಗ್ಯವಿದಾತನ ಮೂಲಕ ಶ್ರೇಷ್ಠ ಭಾಗ್ಯವು ಸಿಕ್ಕಿತು. ಮನೆಯಲ್ಲಿ ಕುಳಿತಿದ್ದಂತೆಯೇ ಭಾಗ್ಯವು ಸಿಗುವುದೆಷ್ಟು ಖುಷಿಯ ಮಾತಾಗಿದೆ! ಅವಿನಾಶಿ ತಂದೆಯು ಅವಿನಾಶಿ ಪ್ರಾಪ್ತಿಯನ್ನು ಮಾಡಿಸುತ್ತಾರೆ ಅಂದಮೇಲೆ ಅವಿನಾಶಿ ಅರ್ಥಾತ್ ಸದಾಕಾಲದ ಪ್ರಾಪ್ತಿ, ಕೆಲವೊಮ್ಮೆಯ ಪ್ರಾಪ್ತಿ ಅಲ್ಲ. ಅಂದಮೇಲೆ ಭಾಗ್ಯವನ್ನು ನೋಡುತ್ತಾ ಸದಾ ಖುಷಿಯಾಗಿ ಇರುತ್ತೀರಾ? ಪ್ರತೀ ಸಮಯದಲ್ಲಿಯೂ ಭಾಗ್ಯ ಮತ್ತು ಭಾಗ್ಯವಿದಾತನೇ ಸ್ವತಹವಾಗಿ ನೆನಪಿರಲಿ. ಸದಾ `ವಾಹ್, ನನ್ನ ಶ್ರೇಷ್ಠ ಭಾಗ್ಯವೇ!' ಎಂಬ ಹಾಡನ್ನೇ ಹಾಡುತ್ತಿರಿ. ಇದು ಮನಸ್ಸಿನ ಹಾಡಾಗಿದೆ. ಈ ಹಾಡನ್ನೆಷ್ಟು ಹಾಡುತ್ತೀರಿ ಅಷ್ಟು ಸದಾ ಹಾರುವ ಕಲೆಯ ಅನುಭವ ಮಾಡುತ್ತಾ ಇರುತ್ತೀರಿ. ಇಡೀ ಕಲ್ಪದಲ್ಲಿ ಇಂತಹ ಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವ ಸಮಯವು ಇದೊಂದೇ ಆಗಿದೆ ಆದ್ದರಿಂದ ಸ್ಲೋಗನ್ ಸಹ ಇದೆ - `ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ' ಯಾವುದೇ ಶ್ರೇಷ್ಠ ಕಾರ್ಯವನ್ನು ಮಾಡಬೇಕೆಂದರೆ, ಈಗ ಮಾಡಬೇಕು. ಪ್ರತಿಯೊಂದು ಕಾರ್ಯದಲ್ಲಿ, ಪ್ರತೀ ಸಮಯದಲ್ಲಿಯೂ ಇದನ್ನು ನೆನಪಿಟ್ಟುಕೊಳ್ಳಿರಿ - ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ. ಯಾರಲ್ಲಿ ಈ ಸ್ಮೃತಿಯಿರುತ್ತದೆಯೋ ಅವರೆಂದಿಗೂ ಸಹ ಸಮಯ, ಸಂಕಲ್ಪ ಅಥವಾ ಕರ್ಮವನ್ನು ವ್ಯರ್ಥವಾಗುವುದಕ್ಕೆ ಬಿಡುವುದಿಲ್ಲ, ಸದಾ ಜಮಾ ಮಾಡಿಕೊಳ್ಳುತ್ತಾ ಇರುತ್ತಾರೆ. ವಿಕರ್ಮದ ಮಾತಂತು ಇಲ್ಲವೇ ಇಲ್ಲ ಆದರೆ ವ್ಯರ್ಥ ಕರ್ಮವೂ ಸಹ ಮೋಸ ಮಾಡಿ ಬಿಡುತ್ತದೆ. ಆದ್ದರಿಂದ ಪ್ರತೀ ಸೆಕೆಂಡಿನ ಪ್ರತೀ ಸಂಕಲ್ಪದ ಮಹತ್ವವನ್ನು ತಿಳಿದಿದ್ದೀರಲ್ಲವೆ. ಜಮಾದ ಖಾತೆಯು ಸದಾ ಸಂಪನ್ನವಾಗಿರಲಿ. ಒಂದುವೇಳೆ ಪ್ರತೀ ಸೆಕೆಂಡಿನ ಅಥವಾ ಪ್ರತೀ ಸಂಕಲ್ಪವನ್ನು ಶ್ರೇಷ್ಠವಾಗಿ ಜಮಾ ಮಾಡುತ್ತೀರಿ, ಅದನ್ನು ವ್ಯರ್ಥವಾಗಿ ಕಳೆಯದಿದ್ದರೆ 21 ಜನ್ಮಗಳಿಗಾಗಿ ತಮ್ಮ ಖಾತೆಯು ಶ್ರೇಷ್ಠವನ್ನಾಗಿ ಮಾಡಿಕೊಳ್ಳುತ್ತೀರಿ. ಅಂದಾಗ ಎಷ್ಟು ಜಮಾ ಮಾಡಿಕೊಳ್ಳಬೇಕು ಅಷ್ಟು ಮಾಡಿಕೊಳ್ಳುತ್ತಾ ಇದ್ದೀರಾ? ಈ ಮಾತಿನಲ್ಲಿ ಇನ್ನೂ ಒತ್ತು ಕೊಡಬೇಕು - ಒಂದು ಸೆಕೆಂಡ್ ಸಹ, ಸಂಕಲ್ಪವೂ ಸಹ ವ್ಯರ್ಥವಾಗಬಾರದು. ವ್ಯರ್ಥವು ಸಮಾಪ್ತಿ ಆಗಿ ಬಿಡುತ್ತದೆ ಎಂದರೆ ಸದಾ ಸಮರ್ಥರು ಆಗಿ ಬಿಡುವಿರಿ. ಒಳ್ಳೆಯದು – ಆಂಧ್ರ ಪ್ರದೇಶದಲ್ಲಿ ಬಡತನ ಬಹಳ ಇದೆಯಲ್ಲವೆ. ಮತ್ತು ತಾವಿಷ್ಟು ಸಾಹುಕಾರರು ಆಗಿದ್ದೀರಿ! ನಾಲ್ಕೂ ಕಡೆಗಳಲ್ಲಿ ಬಡತನ ಹೆಚ್ಚಾಗುತ್ತಿದೆ ಮತ್ತು ಇಲ್ಲಿ ತಮ್ಮ ಶ್ರೀಮಂತಿಕೆಯು ಹೆಚ್ಚಾಗುತ್ತಿದೆ ಏಕೆಂದರೆ ಜ್ಞಾನ ಧನವು ಬರುವುದರಿಂದ, ಈ ಸ್ಥೂಲ ಧನವೂ ಸಹ ಸ್ವತಹವಾಗಿಯೇ ದಾಲ್-ರೋಟಿ ಸಿಗುವಷ್ಟಾದರೂ ಬಂದು ಬಿಡುತ್ತದೆ. ಯಾವುದೇ ಬ್ರಾಹ್ಮಣರು ಹಸಿವಿನಿಂದ ಇರುತ್ತಾರೆಯೇ? ಅಂದಮೇಲೆ ಸ್ಥೂಲ ಧನದ ಬಡತನವೂ ಸಮಾಪ್ತಿ ಆಗಿ ಬಿಡುತ್ತದೆ ಏಕೆಂದರೆ ಬುದ್ಧಿವಂತರು ಆಗಿ ಬಿಡುತ್ತಾರೆ. ಕೆಲಸ ಮಾಡುತ್ತಾ ಸ್ವಯಂ ತಿನ್ನುವುದಕ್ಕಾಗಿ ಅಥವಾ ಪರಿವಾರದವರಿಗೆ ತಿನ್ನಿಸುವುದಕ್ಕಾಗಿಯೂ ತಿಳುವಳಿಕೆ ಬಂದು ಬಿಡುತ್ತದೆ. ಆದ್ದರಿಂದ ಡಬಲ್ ಶ್ರೀಮಂತಿಕೆಯು ಬಂದು ಬಿಡುತ್ತದೆ. ಇದು ಶರೀರಕ್ಕೂ ಒಳ್ಳೆಯದು ಮತ್ತು ಮನಸ್ಸಿಗೂ ಒಳ್ಳೆಯದು. ದಾಲ್-ರೋಟಿ ಆರಾಮವಾಗಿ ಸಿಗುತ್ತಿದೆ ಅಲ್ಲವೆ. ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಆಗುವುದರಿಂದ ರಾಯಲ್ ಸಹ ಆಗಿಬಿಟ್ಟಿರಿ, ಸಾಹುಕಾರರೂ ಆಗಿದ್ದೀರಿ ಮತ್ತು ಅನೇಕ ಜನ್ಮಗಳಿಗಾಗಿ ಸಂಪನ್ನರು ಆಗಿರುತ್ತೀರಿ. ಮೊದಲು ಹೇಗೆ ನಡೆಯುತ್ತಿದ್ದಿರಿ, ಇರುತ್ತಿದ್ದಿರಿ, ತೊಡುಗೆ... ಎಲ್ಲದಕ್ಕಿಂತಲೂ ಈಗೆಷ್ಟು ರಾಯಲ್ ಆಗಿ ಬಿಟ್ಟಿದ್ದೀರಿ! ಈಗ ಸದಾಕಾಲವೂ ಸ್ವಚ್ಛವಾಗಿ ಇರುತ್ತೀರಿ. ಮುಂಚೆ ಬಟ್ಟೆಗಳನ್ನೂ ಮೈಲಿಗೆ ಆಗಿರುವುದೇ ತೊಡುತ್ತಿದ್ದಿರಿ, ಈಗ ಆಂತರ್ಯದಿಂದಲೂ ಮತ್ತು ಬಾಹ್ಯದಿಂದಲೂ ಸ್ವಚ್ಛವಾಗಿ ಬಿಟ್ಟಿರಿ. ಅಂದಾಗ ಬ್ರಹ್ಮಾಕುಮಾರ ಆಗುವುದರಿಂದ ಲಾಭವಾಯಿತು ಅಲ್ಲವೆ. ಎಲ್ಲವೂ ಬದಲಾಗಿ ಬಿಡುತ್ತದೆ, ಪರಿವರ್ತನೆ ಆಗಿ ಬಿಡುತ್ತದೆ. ಮುಂಚೆಯ ಆ ಮುಖ, ಬುದ್ಧಿಯನ್ನು ನೋಡಿ ಮತ್ತು ಈಗಿನದನ್ನೂ ನೋಡಿಕೊಳ್ಳುತ್ತೀರೆಂದರೆ ಅಂತರವೇನೆಂದು ತಿಳಿದು ಬರುತ್ತದೆ. ಈಗ ಆತ್ಮೀಯತೆಯ ಹೊಳಪು ಬಂದಿದೆ, ಆದ್ದರಿಂದ ಚಹರೆಯೇ ಬದಲಾಗಿ ಬಿಟ್ಟಿದೆ. ಸದಾ ಇದೇ ರೀತಿ ಖುಷಿಯಲ್ಲಿ ನರ್ತಿಸುತ್ತಿರಿ. ಒಳ್ಳೆಯದು. |
ಡಬಲ್ ವಿದೇಶಿ ಸಹೋದರ-ಸಹೋದರಿಯರೊಂದಿಗೆ:- ಡಬಲ್ ವಿದೇಶಿ ಆಗಿದ್ದೀರಾ? ಹಾಗೆ ನೋಡಿದರೆ ಎಲ್ಲರೂ ಬ್ರಾಹ್ಮಣ ಆತ್ಮರು, ಇದೇ ಭಾರತ ದೇಶದವರಾಗಿದ್ದಾರೆ. ಅನೇಕ ಜನ್ಮಗಳಲ್ಲಿ ಭಾರತವಾಸಿಗಳು ಆಗಿದ್ದಿರಿ, ಇದಂತು ಸೇವೆಗಾಗಿ ಅನೇಕ ಸ್ಥಾನಗಳಲ್ಲಿ ತಲುಪಿದ್ದೀರಿ ಆದ್ದರಿಂದ ಇದು ಸಂಕೇತವಾಗಿದೆ - ಯಾವಾಗ ಭಾರತದಲ್ಲಿ ಬರುತ್ತೀರಿ ಅರ್ಥಾತ್ ಮಧುಬನದ ಧರಣಿಯಲ್ಲಿ ಅಥವಾ ಬ್ರಾಹ್ಮಣ ಪರಿವಾರದಲ್ಲಿ ಬರುತ್ತೀರೆಂದರೆ, ಇದು ನಮ್ಮದೆಂದು ಅನುಭವ ಮಾಡುತ್ತೀರಿ. ಅದೇ ರೀತಿ ವಿದೇಶದ ವಿದೇಶಿ ಆತ್ಮರೆಷ್ಟು ಸಮೀಪ ಸಂಪರ್ಕದವರು ಆಗಿದ್ದೀರಿ, ಸಂಬಂಧದವರು ಆಗಿದ್ದೀರಿ ಆದರೆ ಇಲ್ಲಿ ಹೇಗೆ ಆತ್ಮರಿಗೆ ನಮ್ಮದು ಎನಿಸುತ್ತದೆಯೋ ಮತ್ತೆಲ್ಲಿಯೂ ಹಾಗೆನಿಸುವುದಿಲ್ಲ. ಎಷ್ಟು ಸಮೀಪದ ಆತ್ಮರಾಗುವರು ಅಷ್ಟು ನಮ್ಮದೆನ್ನುವ ಅನುಭವವು ಹೆಚ್ಚಾಗುತ್ತದೆ. ನಾನು ಇಲ್ಲಿದ್ದೆನು ಅಥವಾ ನಾನು ಇರಲು ಸಾಧ್ಯವೇ ಎಂದು ಯೋಚಿಸಬೇಕಾಗಿರುವುದಿಲ್ಲ. ಪ್ರತಿಯೊಂದು ಸ್ಥೂಲ ವಸ್ತುವೂ ಸಹ ಅತಿ ಪ್ರಿಯವೆನಿಸುತ್ತದೆ. ಹೇಗೆ ವಸ್ತುವು ತಮ್ಮದಾಗಿರುತ್ತದೆ ಎಂದರೆ, ಸದಾ ಅದು ಪ್ರಿಯವೆನಿಸುತ್ತದೆ. ಅಂದಾಗ ಇದು ಸಂಕೇತವಾಗಿದೆ. ಬಾಪ್ದಾದಾರವರು ನೋಡುತ್ತಿದ್ದಾರೆ - ದೂರದಲ್ಲಿದ್ದರೂ ಹೃದಯದಿಂದ ಸದಾ ಸಮೀಪ ಇರುವವರಾಗಿದ್ದಾರೆ. ಇಡೀ ಪರಿವಾರವು ತಮ್ಮನ್ನು ಶ್ರೇಷ್ಠ ಭಾಗ್ಯವಂತರೆಂಬ ದೃಷ್ಟಿಯಿಂದ ನೋಡುತ್ತಾರೆ. ಒಳ್ಳೆಯದು. |
ಓಂ ಶಾಂತಿ. ಮಕ್ಕಳಿಗೆ ಓಂ ಶಾಂತಿಯ ಅರ್ಥವು ತಿಳಿದಿದೆ - ನಾನಾತ್ಮನಾಗಿದ್ದೇನೆ ಮತ್ತು ನಾನಾತ್ಮನ ಸ್ವಧರ್ಮವು ಶಾಂತಿಯಾಗಿದೆ. ನಾನಾತ್ಮ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದ್ದೇನೆ. ಈ ಪಾಠವನ್ನು ಪಕ್ಕಾ ಮಾಡಿಕೊಳ್ಳುತ್ತಾ ಹೋಗಿ. ಇದನ್ನು ಯಾರು ತಿಳಿಸುತ್ತಾರೆ? ಶಿವ ತಂದೆ. ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ, ಅವರಿಗೆ ತಮ್ಮದೇ ಆದ ರಥವಿಲ್ಲ. ಆದ್ದರಿಂದ ಅವರಿಗೆ ಎತ್ತನ್ನು ತೋರಿಸುತ್ತಾರೆ. ಮಂದಿರದಲ್ಲಿಯೂ ಬಸವನ್ನಿಟ್ಟಿದ್ದಾರೆ, ಇದಕ್ಕೆ ಪೂರ್ಣ ಅಜ್ಞಾನವೆಂದು ಹೇಳಲಾಗುತ್ತದೆ. ತಂದೆಯು ಮಕ್ಕಳಿಗೆ ಅಥವಾ ಆತ್ಮರಿಗೆ ತಿಳಿಸುತ್ತಾರೆ. ಇವರು ಆತ್ಮಗಳ ತಂದೆ ಶಿವನಾಗಿದ್ದಾರೆ, ಇವರಿಗೆ ಅನೇಕ ಹೆಸರುಗಳಿವೆ ಆದರೆ ಅನೇಕ ಹೆಸರುಗಳ ಕಾರಣ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ವಾಸ್ತವದಲ್ಲಿ ಅವರ ಸತ್ಯವಾದ ಹೆಸರು ಶಿವ ಎಂದಾಗಿದೆ. ಶಿವ ಜಯಂತಿಯನ್ನೂ ಭಾರತದಲ್ಲಿಯೇ ಆಚರಣೆ ಮಾಡಲಾಗುತ್ತದೆ, ಅವರು ನಿರಾಕಾರ ತಂದೆಯಾಗಿದ್ದಾರೆ, ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಕೆಲವರು ಭಗೀರಥ, ಕೆಲವರು ನಂದೀಗಣವೆಂದು ಹೇಳಿ ಬಿಟ್ಟಿದ್ದಾರೆ. ತಂದೆಯೇ ತಿಳಿಸುತ್ತಾರೆ - ನಾನು ಯಾವ ಭಾಗ್ಯಶಾಲಿ ರಥದಲ್ಲಿ ಬರುತ್ತೇನೆ, ನಾನು ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಬ್ರಹ್ಮಾರವರ ಮೂಲಕ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇನೆ. ನೀವೆಲ್ಲಾ ಭಾರತವಾಸಿಗಳು ತಿಳಿದುಕೊಂಡಿದ್ದೀರಿ - ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರು ಸ್ವರ್ಗವಾಸಿಗಳಾಗಿದ್ದೆವು. 5000 ವರ್ಷಗಳ ಮೊದಲೂ ಯಾವಾಗ ನಾನು ಬಂದಿದ್ದೆನೋ ಆಗ ಎಲ್ಲರನ್ನೂ ಸತೋಪ್ರಧಾನ ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದೆನು ನಂತರ ಪುನರ್ಜನ್ಮವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಯಿತು. ತಂದೆಯು ಎಷ್ಟು ನೇರವಾಗಿ ತಿಳಿಸುತ್ತಾರೆ. ಈಗ ಜಯಂತಿಯನ್ನಾಚರಿಸುತ್ತೀರಿ, 80ನೇ ಶಿವ ಜಯಂತಿ, ತಂದೆಯ ಅವತರಣೆಯಾಗಿ 80 ವರ್ಷಗಳಾಯಿತು ಎಂದು ಬರೆಯುತ್ತೀರಿ (1936-2016) ಮತ್ತೆ ಜೊತೆ ಜೊತೆಗೆ ಬ್ರಹ್ಮಾ, ವಿಷ್ಣು, ಶಂಕರನ ಅವತರಣೆಯೂ ಆಗಿದೆ. ತ್ರಿಮೂರ್ತಿ ಬ್ರಹ್ಮನ ಜಯಂತಿಯನ್ನು ಯಾರೂ ತೋರಿಸುವುದಿಲ್ಲ. ಇದು ಅವಶ್ಯವಾಗಿ ತೋರಿಸಬೇಕಾಗಿದೆ ಏಕೆಂದರೆ ತಂದೆಯು ತಿಳಿಸುತ್ತಾರೆ - ನಾನು ಬ್ರಹ್ಮಾರವರ ಮೂಲಕ ಪುನಃ ಸ್ಥಾಪನೆ ಮಾಡುತ್ತೇನೆ. ಬ್ರಾಹ್ಮಣರನ್ನಾಗಿ ಮಾಡುತ್ತಾ ಹೋಗುತ್ತೇನೆ ಅಂದಾಗ ಬ್ರಹ್ಮಾ ಮತ್ತು ಬ್ರಾಹ್ಮಣ ವಂಶಿಯರದೂ ಜನ್ಮವಾಯಿತು. ನಂತರ ನೀವೇ ವಿಷ್ಣು ಪುರಿಯ ಮಾಲೀಕರಾಗುತ್ತೀರಿ ಎಂಬುದನ್ನು ತೋರಿಸುತ್ತೇನೆ. ತಂದೆಯ ನೆನಪಿನಿಂದಲೇ ನಿಮ್ಮ ತುಕ್ಕು ಬಿಟ್ಟು ಹೋಗುವುದು. ಭಲೆ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ ಆದರೆ ಅದನ್ನು ಯಾರು ಕಲಿಸಿದ್ದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ತಮ್ಮ ತಂದೆಯನ್ನು ನೆನಪು ಮಾಡಿ, ಆಸ್ತಿಯು ನಿಮಗೆ ನನ್ನಿಂದಲೇ ಸಿಗುತ್ತದೆ. ನಾನು ನಿಮ್ಮ ತಂದೆಯಾಗಿದ್ದೇನೆ, ನಾನು ಕಲ್ಪ-ಕಲ್ಪವೂ ಬರುತ್ತೇನೆ. ಬಂದು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ ಏಕೆಂದರೆ ನೀವು ದೇವಿ-ದೇವತೆಗಳಾಗಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗಿದ್ದೀರಿ. ರಾವಣನ ಮತದಂತೆ ನಡೆಯುತ್ತಿದ್ದೀರಿ. ಈಶ್ವರೀಯ ಮತದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ. |
ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಮೊದಲೂ ಸಹ ಬಂದಿದ್ದೆನು, ಏನೆಲ್ಲವೂ ಕಳೆಯುತ್ತದೆಯೋ ಅದು ಕಲ್ಪ-ಕಲ್ಪವೂ ಆಗುತ್ತಲೇ ಇರುವುದು. ತಂದೆಯು ಪುನಃ ಬಂದು ಇವರಲ್ಲಿ ಪ್ರವೇಶ ಮಾಡುತ್ತಾರೆ. ಈ ದಾದಾರವನ್ನು ಬಿಡಿಸುತ್ತಾರೆ ನಂತರ ಇವರೆಲ್ಲರ ಪಾಲನೆ ಮಾಡಿಸುತ್ತಾರೆ. ನಾವೇ ಸತ್ಯಯುಗದಲ್ಲಿದ್ದೆವು, ನಾವು ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೊಟ್ಟ ಮೊದಲು ನೀವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದಿರಿ. ಯಥಾ ರಾಜ-ರಾಣಿ, ತಥಾ ಪ್ರಜಾ ನಂಬರ್ವಾರ್...... ಎಲ್ಲರೂ ರಾಜರಾಗಲು ಸಾಧ್ಯವಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ. ನಿಮ್ಮದು ಸತ್ಯಯುಗದಲ್ಲಿ 8 ಜನ್ಮಗಳು, ತ್ರೇತಾಯುಗದಲ್ಲಿ 12 ಜನ್ಮಗಳು.... ಇದೇ ರೀತಿ ತಮ್ಮನ್ನು ತಿಳಿದುಕೊಳ್ಳಿ... ನಾವು ಈ ಪಾತ್ರವನ್ನು ಅಭಿನಯಿಸಿದ್ದೇವೆ. ಮೊದಲು ಸೂರ್ಯವಂಶಿ ರಾಜಧಾನಿಯಲ್ಲಿ ಪಾತ್ರವನ್ನಭಿನಯಿಸಿದೆವು ನಂತರ ಚಂದ್ರವಂಶದಲ್ಲಿ ಮತ್ತೆ ಕೆಳಗಿಳಿಯುತ್ತಾ ವಾಮ ಮಾರ್ಗದಲ್ಲಿ ಬಂದೆವು. 63 ಜನ್ಮಗಳನ್ನು ತೆಗೆದುಕೊಂಡೆವು. ಭಾರತವಾಸಿಗಳೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ ಮತ್ತ್ಯಾವ ಧರ್ಮದವರೂ ಇಷ್ಟು ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಗುರುನಾನಕರಿಗೆ 500 ವರ್ಷಗಳಾಯಿತು, ಅವರದು ಸುಮಾರು 12-14 ಜನ್ಮಗಳಿರಬಹುದು. ಕ್ರಿಶ್ಚಿಯನ್ನರು 2000 ವರ್ಷಗಳಲ್ಲಿ 60 ಪುನರ್ಜನ್ಮಗಳನ್ನು ತೆಗೆದುಕೊಂಡಿರುತ್ತಾರೆ, ವೃದ್ಧಿಯಾಗುತ್ತಾ ಹೋಗುತ್ತದೆ. ಪುನರ್ಜನ್ಮಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತಾರೆ. ಬುದ್ಧಿಯಲ್ಲಿ ಇದನ್ನು ವಿಚಾರ ಮಾಡಿ - ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ಮತ್ತೆ ಸತೋಪ್ರಧಾನರಾಗಬೇಕಾಗಿದೆ. ಏನೆಲ್ಲವೂ ಕಳೆಯಿತೋ ಅದು ಡ್ರಾಮಾ. ಡ್ರಾಮಾದಲ್ಲಿ ಏನು ಮಾಡಲ್ಪಟ್ಟಿದೆಯೋ ಅದೇ ಪುನರಾವರ್ತನೆಯಾಗುವುದು. ನಿಮ್ಮನ್ನು ಬೇಹದ್ದಿನ ಚರಿತ್ರೆಯಲ್ಲಿ ಕರೆದುಕೊಂಡು ಹೋಗುತ್ತೇನೆ. ನೀವು ಪುನರ್ಜನ್ಮವನ್ನು ತೆಗೆದುಕೊಂಡು ಬಂದಿದ್ದೀರಿ. ನೀವೀಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈಗ ಪುನಃ ತಂದೆಯು ನೆನಪು ತರಿಸಿದರು - ಮಕ್ಕಳೇ, ನಿಮ್ಮ ಮನೆಯು ಶಾಂತಿಧಾಮವಾಗಿದೆ, ಆತ್ಮದ ರೂಪವೇನಾಗಿದೆ? ಬಿಂದು. ಅಲ್ಲಿ ಹೇಗೆ ಬಿಂದುಗಳ ವೃಕ್ಷವಿರುತ್ತದೆ, ಆತ್ಮಗಳದೂ ನಂಬರ್ವಾರ್ ವೃಕ್ಷವಾಗಿದೆ, ನಂಬರ್ವಾರ್ ಆಗಿ ಕೆಳಗೆ ಬರುತ್ತಾರೆ. ಪರಮಾತ್ಮನೂ ಬಿಂದುವಾಗಿದ್ದಾರೆ. ಅವರು ಇಷ್ಟು ದೊಡ್ಡ ಲಿಂಗವಾಗಿದ್ದಾರೆ ಎಂದಲ್ಲ. ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗುತ್ತೀರೆಂದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಮೊದಲು ನೀವು ನನ್ನವರಾದರೆ ನಾನು ನಿಮಗೆ ಓದಿಸುತ್ತೇನೆ. ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ಹೇಳುತ್ತೀರಿ, ಜೊತೆ ಜೊತೆಗೆ ಓದಲೂಬೇಕಾಗಿದೆ. ನನ್ನವರಾದ ಕೂಡಲೇ ನಿಮ್ಮ ವಿದ್ಯಾಭ್ಯಾಸವು ಆರಂಭವಾಗಿ ಬಿಟ್ಟಿತು. |
ತಂದೆಯು ತಿಳಿಸುತ್ತಾರೆ - ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಆದ್ದರಿಂದ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ. ಬಾಬಾ, ನಾವು ತಮ್ಮಿಂದ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ ಎಂದಿಗೂ ಪತಿತರಾಗುವುದಿಲ್ಲ ಎಂದು ಮಕ್ಕಳು ಪ್ರತಿಜ್ಞೆ ಮಾಡುತ್ತಾರೆ. 63 ಜನ್ಮಗಳಂತೂ ಪತಿತರಾದಿರಿ, ಇದು 84 ಜನ್ಮಗಳ ಕಥೆಯಾಗಿದೆ. ತಂದೆಯು ಬಂದು ಸಹಜ ಮಾಡಿ ತಿಳಿಸುತ್ತಾರೆ. ಹೇಗೆ ಲೌಕಿಕ ತಂದೆಯು ತಿಳಿಸುತ್ತಾರಲ್ಲವೆ ಹಾಗೆಯೇ ಇವರು ಬೇಹದ್ದಿನ ತಂದೆಯಾಗಿದ್ದಾರೆ. ಬಂದು ಆತ್ಮಗಳೊಂದಿಗೆ ಮಕ್ಕಳೇ, ಮಕ್ಕಳೇ ಎಂದು ಮಾತನಾಡುತ್ತಾರೆ. ಶಿವರಾತ್ರಿಯನ್ನೂ ಆಚರಿಸುತ್ತಾರಲ್ಲವೆ. ಇದು ಅರ್ಧಕಲ್ಪದ ದಿನ ಮತ್ತು ಅರ್ಧಕಲ್ಪದ ರಾತ್ರಿಯಾಗಿದೆ. ಈಗ ರಾತ್ರಿಯ ಅಂತ್ಯ ಮತ್ತು ದಿನದ ಆದಿಯ ಸಂಗಮವಾಗಿದೆ. ಭಾರತವು ಸತ್ಯಯುಗವಾಗಿದ್ದಾಗ ದಿನವಾಗಿತ್ತು, ಸತ್ಯ-ತ್ರೇತಾಯುಗಕ್ಕೆ ಬ್ರಹ್ಮನ ದಿನವೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರಾಗಿದ್ದೀರಲ್ಲವೆ. ನೀವು ಬ್ರಾಹ್ಮಣರಿಗೆ ತಿಳಿದಿದೆ - ಈಗ ನಮ್ಮ ರಾತ್ರಿಯು ಪೂರ್ಣವಾಗುತ್ತಿದೆ. ಈಗ ತಮೋಪ್ರಧಾನ ಭಕ್ತಿಯಾಗಿದೆ. ಗುಡಿ-ಗೋಪುರಗಳನ್ನು ಸುತ್ತುತ್ತಿರುತ್ತಾರೆ, ಎಲ್ಲರ ಪೂಜೆ ಮಾಡುತ್ತಾರೆ. ಮೂರು ದಾರಿಗಳು ಸೇರುವ ಸ್ಥಾನ(ಟಿವಾಟೆ)ವನ್ನೂ ಪೂಜಿಸುತ್ತಾರೆ. ಮನುಷ್ಯರ ಶರೀರಕ್ಕೂ ಪೂಜೆ ಮಾಡುತ್ತಾರೆ. ಸನ್ಯಾಸಿಗಳು ತಮ್ಮನ್ನು ಶಿವೋಹಂ ಎಂದು ಹೇಳಿ ಕುಳಿತು ಬಿಡುತ್ತಾರೆ ಮತ್ತೆ ಮಾತೆಯರು ಹೋಗಿ ಅವರ ಪೂಜೆ ಮಾಡುತ್ತಾರೆ. ಬ್ರಹ್ಮಾ ತಂದೆಯು ಬಹಳ ಅನುಭವಿಯಾಗಿದ್ದಾರೆ. ತಿಳಿಸುತ್ತಾರೆ - ನಾನೂ ಸಹ ಬಹಳ ಪೂಜೆ ಮಾಡಿದೆನು ಆದರೆ ಆ ಸಮಯದಲ್ಲಿ ಜ್ಞಾನವಂತೂ ಇರಲಿಲ್ಲ. ಹೂಗಳನ್ನು ಎರಚುತ್ತಿದ್ದೆವು, ಇದೂ ಸಹ ಮೋಸವಾಯಿತಲ್ಲವೆ ಆದರೆ ಇದೆಲ್ಲವೂ ಫುನಃ ಆಗುವುದು. ಭಕ್ತರ ರಕ್ಷಕನು ಭಗವಂತನಾಗಿದ್ದಾರೆ ಏಕೆಂದರೆ ಎಲ್ಲರೂ ದುಃಖಿಯಾಗಿದ್ದಾರಲ್ಲವೆ. ತಂದೆಯು ತಿಳಿಸುತ್ತಾರೆ - ದ್ವಾಪರದಿಂದ ಹಿಡಿದು ನೀವು ಗುರುಗಳನ್ನು ಮಾಡಿಕೊಳ್ಳುತ್ತಾ ಬಂದಿರಿ ಮತ್ತು ಭಕ್ತಿಮಾರ್ಗದಲ್ಲಿ ಇಳಿಯುತ್ತಾ ಬಂದಿದ್ದೀರಿ. ಇಲ್ಲಿಯವರೆಗೂ ಸಾಧು-ಸಂತರು ಸಾಧನೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಅವರ ಉದ್ಧಾರವನ್ನೂ ಮಾಡುತ್ತೇನೆ, ಸಂಗಮದಲ್ಲಿ ನಿಮ್ಮದು ಸದ್ಗತಿಯಾಗಿ ಬಿಡುತ್ತದೆ ನಂತರ ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ತಂದೆಗೆ ಜ್ಞಾನ ಸಾಗರ, ಮನುಷ್ಯ ಸೃಷ್ಟಿಯ ಬೀಜ ರೂಪನೆಂದು ಹೇಳಲಾಗುತ್ತದೆ. ಸತ್ಚಿತ್ ಆನಂದ ಸ್ವರೂಪನಾಗಿದ್ದಾರೆ. ಅವರೆಂದೂ ವಿನಾಶ ಹೊಂದುವುದಿಲ್ಲ. ಅವರಲ್ಲಿ ಜ್ಞಾನವಿದೆ, ಜ್ಞಾನಸಾಗರ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ಅವರಿಂದ ಅವಶ್ಯವಾಗಿ ಆಸ್ತಿ ಸಿಗಬೇಕಾಗಿದೆ. ಈಗ ನೀವು ಮಕ್ಕಳಿಗೆ ಆಸ್ತಿಯು ಸಿಗುತ್ತಿದೆ, ಶಿವ ತಂದೆಯಲ್ಲವೆ. ಅವರೂ (ಬ್ರಹ್ಮಾ) ತಂದೆಯಾಗಿದ್ದಾರೆ ಇವರೂ ನಿಮ್ಮ ತಂದೆಯಾಗಿದ್ದಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮಗೆ ಓದಿಸುತ್ತಾರೆ, ಆದ್ದರಿಂದ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಲಾಗುತ್ತದೆ. ಎಷ್ಟೊಂದು ಮಂದಿ ಬಿ.ಕೆ.ಗಳಿದ್ದಾರೆ, ನಮಗೆ ತಂದೆಯಿಂದ ಆಸ್ತಿ ಸಿಗುತ್ತದೆ, ತಂದೆಯು ನಮ್ಮನ್ನು ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ತಲೆಯ ಮೇಲಿರುವ ಪಾಪಗಳ ಹೊರೆಯು ಭಸ್ಮವಾಗುವುದು ಮತ್ತು ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ನೀವು ಸತ್ಯ ಚಿನ್ನ, ಸತ್ಯ ಆಭರಣಗಳಾಗಿದ್ದಿರಿ, ಆತ್ಮ ಮತ್ತು ಶರೀರ ಎರಡೂ ಸತೋಪ್ರಧಾನವಾಗಿತ್ತು, ಆತ್ಮವು ಮತ್ತೆ ಸತೋ-ರಜೋ-ತಮೋ ಆದಾಗ ಶರೀರವೂ ಅಂತಹ ತಮೋ ಗುಣವಾದದ್ದೇ ಸಿಗುತ್ತದೆ. ತಂದೆಯು ನಿಮಗೆ ಸಲಹೆ ನೀಡುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ. ಹೇ ಪತಿತ-ಪಾವನ ಬನ್ನಿ ಎಂದು ನನ್ನನ್ನು ಕರೆಯುತ್ತೀರಲ್ಲವೆ. ಭಾರತದ ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ, ಈಗ ನಿಮಗೆ ಆ ರಾಜಯೋಗವನ್ನು ಕಲಿಸುತ್ತಿದ್ದೇನೆ, ನನ್ನೊಂದಿಗೆ ಬುದ್ಧಿಯೋಗವನ್ನು ಇಟ್ಟಿದ್ದೇ ಆದರೆ ಅದರಿಂದ ನಿಮ್ಮಲ್ಲಿರುವ ತುಕ್ಕು ಭಸ್ಮವಾಗುತ್ತದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ತುಕ್ಕು ಬಿಡುತ್ತಾ ಹೋಗುವುದು. ನೆನಪಿನದೇ ಮುಖ್ಯ ಮಾತಾಗಿದೆ. ಜ್ಞಾನವನ್ನು ತಂದೆಯು ಕೊಟ್ಟಿದ್ದಾರೆ, ಸತ್ಯಯುಗದಲ್ಲಿ ಯಥಾ ರಾಜ-ರಾಣಿ ತಥಾ ಪ್ರಜಾ ಎಲ್ಲರೂ ಪವಿತ್ರರಾಗಿದ್ದರು, ಈಗ ಎಲ್ಲರೂ ಪತಿತರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಇವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ಇವರಿಗೆ ಭಾಗ್ಯಶಾಲಿ ರಥವೆಂದು ಹೇಳಲಾಗುತ್ತದೆ. ಇವರು ಓದಿ ನಂತರ ಮೊದಲ ನಂಬರಿನಲ್ಲಿ ಹೋಗುತ್ತಾರೆ. ನಂಬರ್ವಾರ್ ಆಗುತ್ತಾರಲ್ಲವೆ ಆದರೆ ಮುಖ್ಯವಾಗಿ ಒಬ್ಬರ ಹೆಸರಿರುತ್ತದೆ. ತಂದೆಯು ಮಕ್ಕಳಿಗೆ 84 ಜನ್ಮಗಳ ರಹಸ್ಯವನ್ನು ಚೆನ್ನಾಗಿ ತಿಳಿಸಿದ್ದಾರೆ. ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೀರಿ, ಹಿಂದೂ ಧರ್ಮದವರಲ್ಲ. ನೀವು ಧರ್ಮ ಶ್ರೇಷ್ಠ, ಕರ್ಮ ಶ್ರೇಷ್ಠವಾಗಿದ್ದಿರಿ ನಂತರ ರಾವಣನ ಪ್ರವೇಶತೆಯಾಗಿದ್ದರಿಂದ ಕರ್ಮ ಭ್ರಷ್ಟ, ಧರ್ಮ ಭ್ರಷ್ಟರಾಗಿದ್ದೀರಿ. ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳುವುದರಲ್ಲಿ ಸಂಕೋಚವಾಗುತ್ತದೆ. ಆದ್ದರಿಂದ ಹಿಂದೂ ಎಂದು ಹೆಸರಿಟ್ಟು ಬಿಟ್ಟಿದ್ದಾರೆ. ವಾಸ್ತವದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ. ನೀವು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿ ಬಿಟ್ಟಿದ್ದೀರಿ. ಭಾರತವಾಸಿಗಳಿಗಾಗಿಯೇ 84 ಜನ್ಮಗಳ ಚಕ್ರವಿದೆ. ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಮೊದಲು ನೀವು ಹೋಗುತ್ತೀರಿ, ಹೇಗೆ ದಿಬ್ಬಣವು ಹೊರಡುತ್ತದೆಯಲ್ಲವೆ. ಶಿವ ತಂದೆಗೆ ಪ್ರಿಯತಮನೆಂತಲೂ ಹೇಳುತ್ತಾರೆ. ಈ ಸಮಯದಲ್ಲಿ ನೀವು ಪ್ರಿಯತಮೆಯರು ಛೀ ಛೀ, ತಮೋಪ್ರಧಾನರಾಗಿದ್ದೀರಿ. ನಿಮ್ಮನ್ನು ಪವಿತ್ರರನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಆತ್ಮರನ್ನು ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆ. ಇವರಿಗೆ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳಲಾಗಿದೆ. ಬೇಹದ್ದಿನ ತಂದೆಯು ಕರೆದುಕೊಂಡು ಹೋಗುತ್ತಾರೆ. ಅವರ ಹೆಸರೇನು? ಶಿವ ತಂದೆ. ಹೆಸರು ಶರೀರಕ್ಕೆ ಬರುತ್ತದೆ ಆದರೆ ಪರಮಾತ್ಮನೆಂದೇ ಹೆಸರಿದೆ. ಬ್ರಹ್ಮಾ-ವಿಷ್ಣು-ಶಂಕರನಿಗಾದರೂ ಸೂಕ್ಷ್ಮ ಶರೀರವಿದೆ. ಶಿವ ತಂದೆಗೆ ಯಾವುದೇ ಶರೀರವಿಲ್ಲ, ಅವರಿಗೆ ಶಿವ ತಂದೆಯೆಂತಲೇ ಹೇಳಲಾಗುತ್ತದೆ. ಓ ಮಾತಾಪಿತಾ ನಾವು ನಿಮ್ಮ ಬಾಲಕರಾಗಿದ್ದೇವೆ ಎಂದು ಮಕ್ಕಳು ಹೇಳುತ್ತೀರಿ. ಅನ್ಯರಂತೂ ಕೇವಲ ಕೂಗುತ್ತಿರುತ್ತಾರೆ ಏಕೆಂದರೆ ಅವರಿಗೆ ತಿಳಿದೇ ಇಲ್ಲ. ಒಂದುವೇಳೆ ಇದು ಎಲ್ಲರಿಗೆ ಅರ್ಥವಾಗಿ ಬಿಟ್ಟರೆ ಏನಾಗುವುದೋ ಗೊತ್ತಿಲ್ಲ. ಈಗ ದೈವೀ ವೃಕ್ಷದ ನಾಟಿಯಾಗುತ್ತದೆ. ವಜ್ರ ಸಮಾನರಿಂದ ಕವಡೆಯಂತೆ ಆಗುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ ಮತ್ತೆ ಹೊಸದಾಗಿ ಆರಂಭವಾಗುವುದು. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ತಂದೆಯು ತಿಳಿಸುತ್ತಾರೆ - ನೀವು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. 84 ಲಕ್ಷ ಜನ್ಮಗಳಿರಲು ಸಾಧ್ಯವಿಲ್ಲ. ಇದು ದೊಡ್ಡ ತಪ್ಪಾಗಿದೆ. 84 ಲಕ್ಷ ಜನ್ಮಗಳೆಂದು ತಿಳಿದುಕೊಂಡಿರುವ ಕಾರಣ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ಇದು ಪೂರ್ಣ ಅಸತ್ಯವಾಗಿದೆ. ಭಾರತವು ಈಗ ಅಸತ್ಯ ಖಂಡವಾಗಿದೆ. ನೀವು ಸತ್ಯ ಖಂಡದಲ್ಲಿ ಸದಾ ಸುಖಿಯಾಗಿದ್ದಿರಿ, ಈ ಸಮಯದಲ್ಲಿ ನೀವು 21 ಜನ್ಮಗಳ ಆಸ್ತಿಯನ್ನು ಪಡೆದುಕೊಳ್ಳುತ್ತೀರಿ. ಎಲ್ಲವೂ ನಿಮ್ಮ ಪುರುಷಾರ್ಥದ ಮೇಲೆ ಅವಲಂಭಿಸಿದೆ. ರಾಜಧಾನಿಯಲ್ಲಿ ಯಾವ ಪದವಿಯನ್ನು ಬೇಕಾದರೂ ಪಡೆದುಕೊಳ್ಳಿ. ಅದರಲ್ಲಿ ಜಾದು ಮುಂತಾದುದರ ಮಾತಿಲ್ಲ. ಮನುಷ್ಯರಿಂದ ದೇವತೆಗಳು ಅವಶ್ಯವಾಗಿ ಆಗುತ್ತೀರಿ. ಇದಂತೂ ಒಳ್ಳೆಯ ಜಾದು ಅಲ್ಲವೆ. ನಾವು ತಂದೆಯ ಮಕ್ಕಳಾಗಿದ್ದೇವೆ. ಕಲ್ಪ-ಕಲ್ಪವೂ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಎಂಬುದನ್ನು ನೀವು ಸೆಕೆಂಡಿನಲ್ಲಿ ಅರಿತುಕೊಳ್ಳುತ್ತೀರಿ. ಅರ್ಧಕಲ್ಪ ಅಲೆದಾಡುತ್ತಾ ಬಂದಿದ್ದೀರಿ ಆದರೆ ಯಾರೂ ಸ್ವರ್ಗವಾಸಿಗಳಂತೂ ಆಗಲಿಲ್ಲ. ತಂದೆಯು ಬಂದು ನೀವು ಮಕ್ಕಳನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ಅವಶ್ಯವಾಗಿ ಅಲ್ಲಿ ಮಹಾಭಾರತ ಯುದ್ಧವು ನಡೆದಿತ್ತು ಮತ್ತು ರಾಜಯೋಗವನ್ನು ಕಲಿಸಿದ್ದರು. ಶಿವ ತಂದೆಯು ತಿಳಿಸುತ್ತಾರೆ - ನಾನೇ ಬಂದು ನಿಮಗೆ ಕಲಿಸಿಕೊಡುತ್ತೇನೆ, ಕ್ರಿಸ್ತನಲ್ಲ. ಈಗ ನಿಮ್ಮದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಇದರಲ್ಲಿ ನೀವು ತಬ್ಬಿಬ್ಬಾಗಬೇಡಿ. ನೀವು ಭಾರತವಾಸಿಗಳಾಗಿದ್ದೀರಿ, ನಿಮ್ಮ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಅನ್ಯ ಧರ್ಮದವರಂತೂ ವೈಕುಂಠದಲ್ಲಿ ಬರಲು ಸಾಧ್ಯವಿಲ್ಲ. ಈ ನಾಟಕವು ಅನಾದಿಯಾಗಿ ನಡೆಯುತ್ತಿರುತ್ತದೆ. ಯಾವಾಗ ಆಯಿತು ಎಂದು ಹೇಳುವಂತಿಲ್ಲ. ಇದಕ್ಕೆ ಅಂತ್ಯವಿಲ್ಲ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಾ ಇರುತ್ತದೆ. ಇದು ಸಂಗಮಯುಗ ಚಿಕ್ಕಯುಗವಾಗಿದೆ. ಬ್ರಾಹ್ಮಣರದು ಶಿಖೆಯಾಗಿದೆ, ತಂದೆಯು ನೀವು ಬ್ರಾಹ್ಮಣರನ್ನು ದೇವತೆಗಳನ್ನಾಗಿ ಮಾಡುತ್ತಿದ್ದಾರೆ ಅಂದಮೇಲೆ ಬ್ರಹ್ಮನ ಮಕ್ಕಳು ಅವಶ್ಯವಾಗಿ ಆಗಬೇಕಾಗಿದೆ. ನಿಮಗೆ ತಾತನಿಂದ ಆಸ್ತಿಯು ಸಿಗುತ್ತದೆ. ಎಲ್ಲಿಯವರೆಗೆ ತನ್ನನ್ನು ಬಿ.ಕೆ., ಎಂದು ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆಸ್ತಿಯು ಹೇಗೆ ಸಿಗುವುದು! ಆದರೂ ಸಹ ಯಾರಾದರೂ ಅಲ್ಪಸ್ವಲ್ಪ ಜ್ಞಾನವನ್ನು ಕೇಳಿದರೂ ಸಾಧಾರಣ ಪ್ರಜೆಗಳಲ್ಲಿ ಬರುತ್ತಾರೆ. ಬರುವುದಂತೂ ಖಂಡಿತವಾಗಿದೆ, ಶಿವ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆ ಮಾಡುತ್ತಾರೆ. ಗೀತೆಯನ್ನು ಬಿಟ್ಟರೆ ಮತ್ತ್ಯಾವುದೇ ಶಾಸ್ತ್ರವಿಲ್ಲ. ಗೀತೆಯು ಸರ್ವೋತ್ತಮ ದೈವೀ ಧರ್ಮದ ಶಾಸ್ತ್ರವಾಗಿದೆ, ಇದರಿಂದ ಮೂರು ಧರ್ಮಗಳು ಸ್ಥಾಪನೆಯಾಗುತ್ತವೆ. ಬ್ರಾಹ್ಮಣರೂ ಇಲ್ಲಿಯೇ ಆಗಬೇಕಾಗಿದೆ, ದೇವತೆಗಳೂ ಇಲ್ಲಿಯೇ ಆಗುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪ್ರತಿಯೊಬ್ಬರ ನಿಶ್ಚಿತ ಪಾತ್ರವನ್ನರಿತು ಸದಾ ನಿಶ್ಚಿಂತವಾಗಿರಬೇಕಾಗಿದೆ. ಮಾಡಿ-ಮಾಡಲ್ಪಟ್ಟಿರುವುದೇ ಆಗುತ್ತಿದೆ...... ಡ್ರಾಮಾದ ಮೇಲೆ ಅಡೋಲರಾಗಿರಬೇಕಾಗಿದೆ. |
2. ಈ ಚಿಕ್ಕದಾದ ಸಂಗಮಯುಗದಲ್ಲಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೆನಪಿನ ಬಲದಿಂದ ತುಕ್ಕನ್ನು ತೆಗೆದು ಸ್ವಯಂನ್ನು ಕವಡೆಯಿಂದ ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ. ಮಧುರ ವೃಕ್ಷದಲ್ಲಿ ಹೋಗುವುದಕ್ಕಾಗಿ ಯೋಗ್ಯರಾಗಬೇಕಾಗಿದೆ. |
ಓಂ ಶಾಂತಿ. ಮಕ್ಕಳೇ, ಇದನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ - ತಂದೆಯಿಂದ ಆಸ್ತಿಯನ್ನು ಖಂಡಿತ ತೆಗೆದುಕೊಳ್ಳಬೇಕಾಗಿದೆ. ಅದು ಹೇಗೆ? ಶ್ರೀಮತದಂತೆ. ತಂದೆಯು ತಿಳಿಸಿದ್ದಾರೆ - ಒಂದೇ ಗೀತಾ ಶಾಸ್ತ್ರವಾಗಿದೆ ಯಾವುದರಲ್ಲಿ ಶ್ರೀ ಮತ್ಭಗವಾನುವಾಚ ಇದೆ. ಭಗವಂತನು ಎಲ್ಲರ ತಂದೆಯಾಗಿದ್ದಾರೆ. ಶ್ರೀ ಮತ್ಭಗವಾನುವಾಚ ಅಂದಾಗ ಅವಶ್ಯವಾಗಿ ಭಗವಂತನೇ ಬಂದು ಶ್ರೇಷ್ಠರನ್ನಾಗಿ ಮಾಡಿರಬೇಕು ಆದ್ದರಿಂದಲೇ ಅವರ ಮಹಿಮೆಯಿದೆ. ಶ್ರೀ ಮತ್ಭಗವದ್ಗೀತೆ ಅರ್ಥಾತ್ ಶ್ರೀ ಮತ್ಭಗವಾನುವಾಚ. ಭಗವಂತನಂತೂ ಅವಶ್ಯವಾಗಿ ಸರ್ವಶ್ರೇಷ್ಠನಾದರು. ಶ್ರೀಮತವೂ ಸಹ ಅದೊಂದೇ ಶಾಸ್ತ್ರದಲ್ಲಿ ಗಾಯನವಿದೆ, ಮತ್ತ್ಯಾವುದೇ ಶಾಸ್ತ್ರದಲ್ಲಿ ಶ್ರೀ ಮತ್ಭಗವಾನುವಾಚವಿಲ್ಲ. ಶ್ರೀಮತವು ಯಾರದಾಗಿರಬೇಕು ಎಂಬುದನ್ನೂ ಬರೆಯುವವರೂ ಸಹ ತಿಳಿದುಕೊಂಡಿರುವುದಿಲ್ಲ. ಅದರಲ್ಲಿ ಏಕೆ ತಪ್ಪಾಗಿದೆ ಅದನ್ನೂ ಸಹ ತಂದೆಯು ಬಂದು ತಿಳಿಸುತ್ತಾರೆ. ರಾವಣ ರಾಜ್ಯವು ಆರಂಭವಾಗುವುದರಿಂದಲೇ ರಾವಣನ ಮತದಂತೆ ನಡೆಯತೊಡಗುತ್ತಾರೆ. ಮೊದಲು ಬಹಳ ಕಠಿಣವಾದ ತಪ್ಪನ್ನು ಈ ರಾವಣ ಮತದವರೇ ಮಾಡಿದ್ದಾರೆ. ರಾವಣನ ಪೆಟ್ಟು ಬೀಳುತ್ತದೆ. ಹೇಗೆ ಶಂಕರನು ಪ್ರೇರಕನಾಗಿದ್ದಾನೆ, ಬಾಂಬು ಇತ್ಯಾದಿಗಳನ್ನು ಮಾಡಿಸಿದ್ದಾನೆ ಎಂದು ಹೇಳಲಾಗುತ್ತದೆಯೋ ಹಾಗೆಯೇ ಪಂಚ ವಿಕಾರ ರೂಪಿ ರಾವಣನು ಮನುಷ್ಯರನ್ನು ಪತಿತರನ್ನಾಗಿ ಮಾಡಲು ಪ್ರೇರಕನಾಗಿದ್ದಾನೆ ಆದ್ದರಿಂದಲೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಪತಿತ-ಪಾವನನು ಒಬ್ಬರೇ ಆದರಲ್ಲವೆ. ಇದರಿಂದಲೇ ಸಿದ್ಧವಾಗುತ್ತದೆ - ಪತಿತರನ್ನಾಗಿ ಮಾಡುವವರೇ ಬೇರೆ ಮತ್ತು ಪಾವನರನ್ನಾಗಿ ಮಾಡುವವರೇ ಬೇರೆಯಾಗಿದ್ದಾರೆ. ಇಬ್ಬರೂ ಒಂದಾಗಲು ಸಾಧ್ಯವಿಲ್ಲ. ಈ ಮಾತುಗಳನ್ನು ನಂಬರ್ವಾರ್ ಪುರುಷಾರ್ಥದನುಸಾರ ನೀವೇ ತಿಳಿದುಕೊಂಡಿದ್ದೀರಿ. ಎಲ್ಲರಿಗೂ ನಿಶ್ಚಯವಿದೆಯೆಂದು ತಿಳಿದುಕೊಳ್ಳಬೇಡಿ. ನಂಬರ್ವಾರ್ ಇದ್ದಾರೆ. ಎಷ್ಟು ನಿಶ್ಚಯವೋ ಅಷ್ಟು ಖುಷಿಯು ಹೆಚ್ಚುತ್ತದೆ. ತಂದೆಯ ಮತದಂತೆ ನಡೆಯುತ್ತಾರೆ. ಶ್ರೀಮತದಂತೆ ನಾವು ಸ್ವರಾಜ್ಯ ಪದವಿಯನ್ನು ಪಡೆಯಬೇಕಾಗಿದೆ. ಮನುಷ್ಯರಿಂದ ದೇವತೆಗಳಾಗುವುದರಲ್ಲಿ ತಡವಾಗುವುದಿಲ್ಲ. ನೀವು ಪುರುಷಾರ್ಥ ಮಾಡುತ್ತೀರಿ, ಮಮ್ಮಾ-ಬಾಬಾರವರನ್ನು ಫಾಲೋ ಮಾಡುತ್ತೀರಿ. ಹೇಗೆ ಅವರು ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡುತ್ತಿದ್ದಾರೆ ನೀವೂ ಸಹ ತಿಳಿದುಕೊಂಡಿದ್ದೀರಿ - ನಾವೇನು ಸೇವೆ ಮಾಡುತ್ತಿದ್ದೇವೆ ಮತ್ತು ಮಮ್ಮಾ-ಬಾಬಾರವರು ಯಾವ ಸೇವೆ ಮಾಡುತ್ತಿದ್ದಾರೆ. ಶಿವ ತಂದೆ ಮತ್ತು ಬ್ರಹ್ಮಾ ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ ಅಂದಾಗ ತಿಳಿದುಕೊಳ್ಳಬೇಕು - ಎಲ್ಲರಿಗಿಂತ ಸಮೀಪವಿದ್ದಾರೆ. ಇವರದೇ ಸಂಪೂರ್ಣ ರೂಪವನ್ನು ಸೂಕ್ಷ್ಮವತನದಲ್ಲಿ ನೋಡುತ್ತೀರಿ ಅಂದಮೇಲೆ ಅವಶ್ಯವಾಗಿ ಮುಂದಿರುವರು ಆದರೆ ಹೇಗೆ ತಂದೆಯು ನಿರಹಂಕಾರಿ, ದೇಹೀ-ಅಭಿಮಾನಿಯಾಗಿದ್ದಾರೆಯೋ ಹಾಗೆಯೇ ಈ ದಾದಾರವರೂ ಸಹ ನಿರಹಂಕಾರಿಯಾಗಿದ್ದಾರೆ. ಎಲ್ಲವನ್ನೂ ಶಿವ ತಂದೆಯೇ ತಿಳಿಸುತ್ತಿರುತ್ತಾರೆ ಎಂದು ಹೇಳುತ್ತಾರೆ. ಮುರುಳಿಯನ್ನು ನುಡಿಸುವಾಗ ಇವರು ಹೇಳುತ್ತಾರೆ – ಶಿವ ತಂದೆಯು ಇವರ ಮೂಲಕ ನಿಮಗೆ ತಿಳಿಸುತ್ತಾರೆ. ಬ್ರಹ್ಮನೂ ಸಹ ಕೇಳುತ್ತಿರುವರು. ಇವರು ಕೇಳದೇ ಅನ್ಯರಿಗೆ ಹೇಳದೇ ಇದ್ದರೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವರು! ಆದರೆ ತಮ್ಮ ದೇಹಾಭಿಮಾನವನ್ನು ಬಿಟ್ಟು ಹೇಳುತ್ತಾರೆ - ಮಕ್ಕಳೇ, ಶಿವ ತಂದೆಯೇ ತಿಳಿಸುತ್ತಾರೆಂದು ತಿಳಿಯಿರಿ, ನಾವು ಪುರುಷಾರ್ಥ ಮಾಡುತ್ತಿರುತ್ತೇವೆ. ಶಿವ ತಂದೆಯೇ ತಿಳಿಸುತ್ತಾರೆ - ಇವರಂತೂ ಪತಿತತನವನ್ನು ಪಾರು ಮಾಡಿದ್ದಾರೆ. ಮಮ್ಮಾರವರಾದರೆ ಕುಮಾರಿಯಾಗಿದ್ದರು ಆದ್ದರಿಂದ ಎಲ್ಲರಿಗಿಂತ ಮುಂದೆ ಹೊರಟು ಹೋದರು. ನೀವು ಕುಮಾರಿಯರೂ ಸಹ ಮಮ್ಮಾರವರನ್ನು ಫಾಲೋ ಮಾಡಿ, ಗೃಹಸ್ಥಿಗಳು ಬಾಬಾರವರನ್ನು ಫಾಲೋ ಮಾಡಬೇಕು. ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು - ನಾನು ಪತಿತನಾಗಿದ್ದೇನೆ, ನಾನೀಗ ಪಾವನನಾಗಬೇಕಾಗಿದೆ. ಮುಖ್ಯ ಮಾತೇನೆಂದರೆ ತಂದೆಯು ನೆನಪಿನ ಯಾತ್ರೆಯನ್ನು ಕಲಿಸಿದ್ದಾರೆ, ಇದರಲ್ಲಿ ದೇಹಾಭಿಮಾನವಿರಬಾರದು. ಯಾರಿಗಾದರೂ ಮುರುಳಿಯನ್ನು ಓದಿ ಹೇಳಲು ಬರಲಿಲ್ಲವೆಂದರೆ ನೆನಪಿನ ಯಾತ್ರೆಯಲ್ಲಿರಿ. ಯಾತ್ರೆಯಲ್ಲಿರುತ್ತಾ ಮುರುಳಿಯನ್ನು ತಿಳಿಸಬಹುದು. ಆದರೆ ಆ ಸಮಯದಲ್ಲಿ ಯಾತ್ರೆಯನ್ನು ಮರೆತು ಹೋದರೂ ಪರವಾಗಿಲ್ಲ, ಮುರುಳಿಯನ್ನು ನುಡಿಸಿ ನಂತರ ಯಾತ್ರೆಯಲ್ಲಿ ತೊಡಗಿರಿ ಏಕೆಂದರೆ ಅದು ವಾಣಿಯಿಂದ ದೂರ ವಾನಪ್ರಸ್ಥ ಸ್ಥಿತಿಯಾಗಿದೆ. ಮೂಲ ಮಾತೇನೆಂದರೆ ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡುತ್ತಾ ಇರಿ ಮತ್ತು ಚಕ್ರವನ್ನು ನೆನಪು ಮಾಡುತ್ತಾ ಇರಿ. ಯಾರಿಗೂ ದುಃಖವನ್ನು ಕೊಡಬೇಡಿ. ಇದನ್ನೇ ತಿಳಿಸುತ್ತಾ ಇರಿ - ತಂದೆಯನ್ನು ನೆನಪು ಮಾಡಿ. ಇದು ಯಾತ್ರೆಯಾಗಿದೆ. ಮನುಷ್ಯರು ಸಾವನ್ನಪ್ಪಿದಾಗ ಸ್ವರ್ಗಸ್ಥರಾದರೆಂದು ಹೇಳುತ್ತಾರೆ. ಅಜ್ಞಾನ ಕಾಲದಲ್ಲಿ ಯಾರು ಸ್ವರ್ಗವನ್ನು ನೆನಪು ಮಾಡಿಕೊಳ್ಳುವುದಿಲ್ಲ. ಸ್ವರ್ಗವನ್ನು ನೆನಪು ಮಾಡುವುದು ಎಂದರೆ ಇಲ್ಲಿಂದ ಸಾಯುವುದು. ಈ ರೀತಿಯಂತೂ ಯಾರೂ ನೆನಪು ಮಾಡುವುದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಹಿಂತಿರುಗಿ ಹೋಗಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಎಷ್ಟು ನೀವು ನೆನಪು ಮಾಡುತ್ತೀರೋ ಅಷ್ಟು ಖುಷಿಯ ನಶೆಯೇರುವುದು, ಆಸ್ತಿಯ ನೆನಪಿರುವುದು. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟೇ ಹರ್ಷಿತರಾಗಿರುತ್ತೀರಿ. ತಂದೆಯನ್ನು ನೆನಪು ಮಾಡದಿದ್ದರೆ ತಬ್ಬಿಬ್ಬಾಗುತ್ತಾರೆ, ಗುಟುಕರಿಸುತ್ತಿರುತ್ತಾರೆ. ನೀವು ಅಷ್ಟೊಂದು ಸಮಯ ನೆನಪು ಮಾಡಲು ಸಾಧ್ಯವಿಲ್ಲ. ತಂದೆಯು ಪ್ರಿಯತಮ-ಪ್ರಿಯತಮೆಯರ ಉದಾಹರಣೆಯನ್ನೂ ತಿಳಿಸುತ್ತಾರೆ. ಅವರು ಭಲೆ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾರೆ ಮತ್ತು ಇವರು ಭಲೆ ಚರಕವನ್ನು ತಿರುಗಿಸುತ್ತಿದ್ದರೂ ಸಹ ಅವರ ಸನ್ಮುಖದಲ್ಲಿ ಪ್ರಿಯತಮನು ಬಂದು ನಿಂತು ಬಿಡುತ್ತಾರೆ. ಪ್ರಿಯತಮೆಯು ಪ್ರಿಯತಮನನ್ನೂ, ಪ್ರಿಯತಮನು ಪ್ರಿಯತಮೆಯನ್ನೂ ನೆನಪು ಮಾಡುತ್ತಿರುತ್ತಾರೆ. ಇಲ್ಲಂತೂ ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯಂತೂ ನಿಮ್ಮನ್ನು ನೆನಪು ಮಾಡಬೇಕಾಗಿಲ್ಲ, ಅವರು ಎಲ್ಲರ ಪ್ರಿಯತಮನಾಗಿದ್ದಾರೆ. ಬಾಬಾ, ತಾವು ನಮ್ಮನ್ನು ನೆನಪು ಮಾಡಿಕೊಳ್ಳುತ್ತೀರಾ ಎಂದು ಮಕ್ಕಳು ಕರೆಯುತ್ತಾರೆ. ಅರೆ! ಯಾರು ಎಲ್ಲರ ಪ್ರಿಯತಮನಾಗಿದ್ದಾರೆ ಅವರು ನೀವು ಪ್ರಿಯತಮೆಯರನ್ನು ಹೇಗೆ ನೆನಪು ಮಾಡುವರು? ಇದು ಸಾಧ್ಯವಿಲ್ಲ. ಅವರು ಪ್ರಿಯತಮನಾಗಿದ್ದಾರೆ, ಪ್ರಿಯತಮೆಯಾಗಲು ಸಾಧ್ಯವಿಲ್ಲ. ನೀವೇ ಅವರನ್ನು ನೆನಪು ಮಾಡಬೇಕಾಗಿದೆ. ನೀವು ಪ್ರತಿಯೊಬ್ಬರೂ ಆ ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಬೇಕಾಗಿದೆ. ಒಂದುವೇಳೆ ಅವರು ಪ್ರಿಯತಮೆಯಾದರೆ ಎಷ್ಟು ಮಂದಿಯನ್ನು ನೆನಪು ಮಾಡುವುದು! ಇದು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಯಾರನ್ನಾದರೂ ನೆನಪು ಮಾಡಲು ನನ್ನ ಮೇಲೆ ಪಾಪದ ಹೊರೆಯಿದೆಯೇ! ನಿಮ್ಮ ಮೇಲಂತೂ ಹೊರೆಯಿದೆ. ತಂದೆಯನ್ನು ನೆನಪು ಮಾಡದಿದ್ದರೆ ಪಾಪದ ಹೊರೆ ಇಳಿಯುವುದಿಲ್ಲ. ನಾನು ಯಾರನ್ನೇಕೆ ನೆನಪು ಮಾಡಲಿ! ನೆನಪು ಮಾಡಬೇಕಾಗಿರುವುದು ನೀವು ಆತ್ಮಗಳು. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪುಣ್ಯಾತ್ಮರಾಗುತ್ತೀರಿ, ಪಾಪಗಳು ಕಳೆಯುತ್ತಾ ಹೋಗುತ್ತದೆ. ಉನ್ನತ ಗುರಿಯಾಗಿದೆ. ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. ಈ ಜ್ಞಾನವೆಲ್ಲವೂ ನಿಮಗೆ ಸಿಗುತ್ತಿದೆ. ನಂಬರ್ವಾರ್ ಪುರುಷಾರ್ಥದನುಸಾರ ನೀವು ತ್ರಿಕಾಲದರ್ಶಿಗಳಾಗಿದ್ದೀರಿ. ಇಡೀ ಚಕ್ರವು ನಿಮ್ಮ ಬುದ್ಧಿಯಲ್ಲಿರಬೇಕು. ತಂದೆಯು ತಿಳಿಸುತ್ತಾರೆ - ನೀವು ಲೈಟ್ಹೌಸ್ ಆಗಿದ್ದೀರಲ್ಲವೆ. ಪ್ರತಿಯೊಬ್ಬರಿಗೆ ಶಾಂತಿಧಾಮ ಮತ್ತು ಸುಖಧಾಮದ ಮಾರ್ಗವನ್ನು ತಿಳಿಸುವವರಾಗಿದ್ದೀರಿ. ಇವೆಲ್ಲಾ ಹೊಸ ಮಾತುಗಳನ್ನು ನೀವು ಕೇಳುತ್ತೀರಿ. ನಿಮಗೆ ತಿಳಿದಿದೆ - ಅವಶ್ಯವಾಗಿ ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಇಲ್ಲಿಗೆ ಪಾತ್ರವನ್ನಭಿನಯಿಸಲು ಬರುತ್ತೇವೆ. ನಾವು ಪಾತ್ರಧಾರಿಗಳಾಗಿದ್ದೇವೆ, ಇದೇ ಚಿಂತನೆ ಬುದ್ಧಿಯಲ್ಲಿ ನಡೆಯುತ್ತಿದ್ದರೆ ನಶೆಯಿರುವುದು. ತಂದೆಯು ತಿಳಿಸಿದ್ದಾರೆ - ಆದಿಯಿಂದ ಹಿಡಿದು ಅಂತ್ಯದವರೆಗೆ ನಿಮ್ಮದು ಪಾತ್ರವಿದೆ. ಈಗ ಕರ್ಮಾತೀತ ಸ್ಥಿತಿಯಲ್ಲಿ ಖಂಡಿತ ಹೋಗಬೇಕಾಗಿದೆ ನಂತರ ಸತ್ಯಯುಗದಲ್ಲಿ ಬರಬೇಕಾಗಿದೆ. ಈ ಗುಂಗಿನಲ್ಲಿರುತ್ತಾ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ, ಕೇವಲ ಪಂಡಿತರಾಗಬಾರದು. ಅನ್ಯರಿಗೆ ಕಲಿಸುತ್ತಾ ಇರುತ್ತೀರಿ. ತಾನು ಆ ಸ್ಥಿತಿಯಲ್ಲಿ ಇರುವುದಿಲ್ಲವೆಂದರೆ ಅದು ಪ್ರಭಾವ ಬೀರುವುದಿಲ್ಲ. ತಾನೂ ಪುರುಷಾರ್ಥ ಮಾಡಬೇಕಾಗಿದೆ. ಬ್ರಹ್ಮಾ ತಂದೆಯೂ ಹೇಳುತ್ತಾರೆ - ನಾನೂ ಕೂಡ ನೆನಪು ಮಾಡುವ ಪ್ರಯತ್ನಪಡುತ್ತೇನೆ. ಕೆಲವೊಮ್ಮೆ ಮಾಯೆಯ ಬಿರುಗಾಳಿಗಳೂ ಈ ರೀತಿ ಬರುತ್ತವೆ ಅವು ಬುದ್ಧಿ ಯೋಗವನ್ನೇ ತುಂಡರಿಸಿ ಬಿಡುತ್ತವೆ. ಅನೇಕ ಮಕ್ಕಳು ಚಾರ್ಟನ್ನು ಕಳುಹಿಸುತ್ತಾರೆ. ನನಗೆ ಆಶ್ಚರ್ಯವೆನಿಸುತ್ತದೆ - ಇವರಂತೂ ನನಗಿಂತಲೂ ತೀಕ್ಷ್ಣವಾಗಿ ಹೋಗುತ್ತಾರೆ. ಬಹುಷಃ ತೀವ್ರವಾಗಿ ಹೋದಾಗ ಚಾರ್ಟ್ ಬರೆಯತೊಡಗುತ್ತಾರೆ ಆದರೆ ಒಂದುವೇಳೆ ಇದೇ ತೀವ್ರತೆಯಿಂದ ಮುಂದೆ ಹೋದರೆ ನಂಬರ್ವನ್ನಲ್ಲಿ ಹೊರಟು ಹೋಗುವರು ಆದರೆ ಇಲ್ಲ, ಅದು ಕೇವಲ ಚಾರ್ಟ್ ಬರೆಯುವವರೆಗೆ ಮಾತ್ರ. ಬಾಬಾ, ನಾನು ಇಷ್ಟು ಮಂದಿಯನ್ನು ತನ್ನ ಸಮಾನರನ್ನಾಗಿ ಮಾಡಿಕೊಂಡೆನು ಎಂಬುದನ್ನು ಬರೆಯುವುದಿಲ್ಲ ಮತ್ತು ಅವರೂ ಸಹ ಬಾಬಾ, ಇವರು ಈ ಮಾರ್ಗವನ್ನು ತಿಳಿಸಿದ್ದಾರೆಂದು ಸಮಾಚಾರ ಬರುವುದಿಲ್ಲ ಅಂದಮೇಲೆ ತಂದೆಯು ಏನು ತಿಳಿದುಕೊಳ್ಳುವರು? ಕೇವಲ ಚಾರ್ಟ್ ಕಳುಹಿಸುವುದರಿಂದ ಕೆಲಸ ನಡೆಯುವುದಿಲ್ಲ. ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳಬೇಕಾಗಿದೆ. ರೂಪ ಮತ್ತು ಭಸಂತ ಎರಡೂ ಆಗಬೇಕಾಗಿದೆ. (ರೂಪ - ಆತ್ಮದ ಸ್ಮೃತಿ, ಭಸಂತ - ಜ್ಞಾನದ ಮಳೆ ಸುರಿಸುವುದು) ಇಲ್ಲದಿದ್ದರೆ ಅವರು ತಂದೆಯ ಸಮಾನ ಆಗಲಿಲ್ಲ. ರೂಪ ಭಸಂತರು ಆಕ್ಯುರೇಟ್ ಆಗಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ದೇಹಾಭಿಮಾನವು ಬೀಳಿಸುತ್ತದೆ, ರಾವಣನು ದೇಹಾಭಿಮಾನಿಗಳನ್ನಾಗಿ ಮಾಡಿದ್ದಾನೆ, ನೀವೀಗ ದೇಹೀ-ಅಭಿಮಾನಿಯಾಗುತ್ತೀರಿ ಮತ್ತೆ ಅರ್ಧ ಕಲ್ಪದ ನಂತರ ಮಾಯಾ ರಾವಣನು ದೇಹಾಭಿಮಾನಿಯನ್ನಾಗಿ ಮಾಡುತ್ತಾನೆ. ದೇಹೀ-ಅಭಿಮಾನಿಗಳು ಬಹಳ ಮಧುರರಾಗಿ ಬಿಡುತ್ತಾರೆ. ಇನ್ನು ಯಾರೂ ಸಂಪೂರ್ಣರಾಗಿಲ್ಲ. ಆದ್ದರಿಂದ ತಂದೆಯು ಯಾವಾಗಲೂ ಹೇಳುತ್ತಾರೆ - ಮಕ್ಕಳೇ, ಯಾರ ಮನಸ್ಸನ್ನು ಬೇಸರ ಪಡಿಸಬಾರದು, ದುಃಖ ಕೊಡಬಾರದು, ಎಲ್ಲರಿಗೆ ತಂದೆಯ ಪರಿಚಯ ಕೊಡಿ. ಮಾತನಾಡುವುದರಲ್ಲಿಯೂ ಬಹಳ ಘನತೆಯಿರಬೇಕು. ಈಶ್ವರನ ಸಂತಾನರ ಬಾಯಿಂದ ಸದಾ ರತ್ನಗಳೇ ಹೊರ ಬರಬೇಕು. ನೀವು ಮನುಷ್ಯರಿಗೆ ಜೀವ ದಾನ ನೀಡುತ್ತೀರಿ. ಮಾರ್ಗ ತಿಳಿಸಬೇಕಾಗಿದೆ, ನೀವು ಪರಮಾತ್ಮನ ಮಕ್ಕಳಲ್ಲವೆ. ಅವರಿಂದ ನಿಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗಬೇಕು ಅಂದಮೇಲೆ ಅದು ಈಗ ಏಕೆ ಇಲ್ಲ. ನೆನಪು ಮಾಡಿಕೊಳ್ಳಿ - ಅವಶ್ಯವಾಗಿ ತಂದೆಯಿಂದ ಆಸ್ತಿಯು ಸಿಕ್ಕಿತ್ತಲ್ಲವೆ! ನೀವು ಭಾರತವಾಸಿಗಳು ದೇವಿ-ದೇವತೆಗಳಾಗಿದ್ದಿರಿ, ನೀವೇ 84 ಜನ್ಮಗಳನ್ನು ತೆಗೆದುಕೊಂಡಿರಿ. ನೀವು ತಿಳಿದುಕೊಳ್ಳಿ - ನಾವೇ ಲಕ್ಷ್ಮೀ-ನಾರಾಯಣರ ಕುಲದವರಾಗಿದ್ದೆವು, ತಮ್ಮನ್ನೇಕೆ ಕಡಿಮೆಯೆಂದು ತಿಳಿದುಕೊಳ್ಳುತ್ತೀರಿ. ಬಾಬಾ, ಎಲ್ಲರೂ ಆಗಲು ಸಾಧ್ಯವೇ ಎಂದು ಒಂದುವೇಳೆ ಯಾರಾದರೂ ಹೇಳಿದರೆ ಇದರಿಂದಲೇ ತಂದೆಯು ಇವರು ನಮ್ಮ ಕುಲದವರಲ್ಲ ಎಂದು ತಿಳಿದುಕೊಳ್ಳುತ್ತಾರೆ. ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ತಂದೆಯು 21 ಜನ್ಮಗಳ ಪ್ರಾಲಬ್ಧವನ್ನು ಜಮಾ ಮಾಡಿಸಿದರು. ಅದನ್ನು ತಿಂದು ಬಿಟ್ಟಿರಿ ನಂತರ ಸಮಾಪ್ತಿಯಾಗತೊಡಗಿತು. ತುಕ್ಕು ಏರುತ್ತಾ-ಏರುತ್ತಾ ತಮೋಪ್ರಧಾನ ಕವಡೆಯಂತೆ ಆಗಿ ಬಿಟ್ಟಿದ್ದೀರಿ. ಭಾರತವೇ 100% ಸಾಹುಕಾರವಾಗಿತ್ತು, ಅವರಿಗೆ ಈ ಆಸ್ತಿಯು ಎಲ್ಲಿಂದ ಸಿಕ್ಕಿತ್ತು? ಪಾತ್ರಧಾರಿಗಳೇ ತಿಳಿಸಲು ಸಾಧ್ಯವಲ್ಲವೆ? ಮನುಷ್ಯರೇ ಪಾತ್ರಧಾರಿಗಳಾಗಿದ್ದಾರೆ, ಅವರಿಗೆ ಇದು ತಿಳಿದಿರಬೇಕು - ಈ ಲಕ್ಷ್ಮೀ-ನಾರಾಯಣರಿಗೆ ರಾಜ್ಯಭಾಗ್ಯವು ಎಲ್ಲಿಂದ ಸಿಕ್ಕಿತ್ತು? ಎಷ್ಟು ಒಳ್ಳೊಳ್ಳೆಯ ವಿಚಾರಗಳಿವೆ! ಅವಶ್ಯವಾಗಿ ಅವರು ಹಿಂದಿನ ಜನ್ಮದಲ್ಲಿಯೇ ಈ ರಾಜ್ಯಭಾಗ್ಯವನ್ನು ಪಡೆದಿರಬೇಕು. |
ತಂದೆಯೇ ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಕರ್ಮ, ಅಕರ್ಮ ಮತ್ತು ವಿಕರ್ಮದ ಗತಿಯನ್ನು ತಿಳಿಸುತ್ತೇನೆ. ರಾವಣ ರಾಜ್ಯದಲ್ಲಿ ಮನುಷ್ಯರ ಕರ್ಮಗಳು ವಿಕರ್ಮಗಳಾಗಿ ಬಿಡುತ್ತವೆ. ಸತ್ಯಯುಗದಲ್ಲಿ ನಿಮ್ಮ ಕರ್ಮವು ಅಕರ್ಮವಾಗುತ್ತದೆ. ಅದು ದೈವೀ ಸೃಷ್ಟಿಯಾಗಿದೆ. ನಾನೇ ರಚಿಸುತ್ತೇನೆ ಅಂದಮೇಲೆ ಅವಶ್ಯವಾಗಿ ನಾನು ಸಂಗಮದಲ್ಲಿಯೇ ಬರಬೇಕಾಗುತ್ತದೆ. ಇದು ರಾವಣ ರಾಜ್ಯವಾಗಿದೆ, ಅದು ಈಶ್ವರೀಯ ರಾಜ್ಯವಾಗಿದೆ. ಈಶ್ವರನು ಈಗ ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವೆಲ್ಲರೂ ಈಶ್ವರನ ಮಕ್ಕಳಾಗಿದ್ದೀರಿ. ನಿಮಗೆ ಆಸ್ತಿಯು ಸಿಗುತ್ತಿದೆ, ಭಾರತವಾಸಿಗಳೇ ಸಾಹುಕಾರರಾಗಿದ್ದಿರಿ, ಈಗ ಬಡವರಾಗಿಬಿಟ್ಟಿದ್ದೀರಿ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಎಲ್ಲರ ವೃಕ್ಷವು ಬೇರೆ-ಬೇರೆಯಾಗಿದೆ. ವಿಭಿನ್ನ ವೃಕ್ಷವಲ್ಲವೆ. ದೇವತಾ ಧರ್ಮದವರೇ ಪುನಃ ದೇವತಾ ಧರ್ಮದಲ್ಲಿ ಬರುತ್ತಾರೆ. ಕ್ರಿಶ್ಚಿಯನ್ ಧರ್ಮದವರು ತಮ್ಮ ಧರ್ಮದಲ್ಲಿ ಖುಷಿಯಾಗಿದ್ದಾರೆ, ಅನ್ಯರನ್ನೂ ತಮ್ಮ ಧರ್ಮಕ್ಕೆ ಸೆಳೆದಿದ್ದಾರೆ. ಭಾರತವಾಸಿಗಳು ತಮ್ಮ ಧರ್ಮವನ್ನು ಮರೆತಿರುವ ಕಾರಣ ಆ ಧರ್ಮವೇ ಒಳ್ಳೆಯದೆಂದು ತಿಳಿದು ಹೊರಟು ಹೋಗುತ್ತಾರೆ. ನೌಕರಿಗಾಗಿ ವಿದೇಶಕ್ಕೆ ಎಷ್ಟೊಂದು ಮಂದಿ ಹೋಗುತ್ತಾರೆ ಏಕೆಂದರೆ ಅಲ್ಲಿ ಬಹಳ ಸಂಪಾದನೆಯಿದೆ, ನಾಟಕವು ಬಹಳ ವಿಚಿತ್ರವಾಗಿ ಮಾಡಲ್ಪಟ್ಟಿದೆ, ಇದನ್ನು ತಿಳಿದುಕೊಳ್ಳಲು ಒಳ್ಳೆಯ ಬುದ್ಧಿ ಬೇಕು. ವಿಚಾರ ಸಾಗರ ಮಂಥನ ಮಾಡುವುದರಿಂದ ಎಲ್ಲವೂ ಅರ್ಥವಾಗತೊಡಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ಅನಾದಿ ನಾಟಕವಾಗಿದೆ. ಆದ್ದರಿಂದ ನೀವು ಮಕ್ಕಳು ತಮ್ಮ ಸಮಾನ ಸದಾ ಸುಖಿಯನ್ನಾಗಿ ಮಾಡಬೇಕಾಗಿದೆ. ಪತಿತರಿಂದ ಪಾವನರನ್ನಾಗಿ ಮಾಡುವುದು ನಿಮ್ಮ ಕರ್ತವ್ಯವಾಗಿದೆ. ತಂದೆಯ ಕರ್ತವ್ಯವೇ ನಿಮ್ಮ ಕರ್ತವ್ಯ. ನಿಮ್ಮ ಮುಖವು ಸದಾ ದೇವತೆಗಳಂತೆ ಖುಷಿಯಲ್ಲಿ ಹರ್ಷಿತವಾಗಿರಬೇಕು. ನಿಮಗೆ ತಿಳಿದಿದೆ - ನಾವು ವಿಶ್ವದ ಮಾಲೀಕರಾಗುತ್ತೇವೆ. ನೀವು ಅತೀ ಪ್ರಿಯ ಮಕ್ಕಳಾಗಿದ್ದೀರಿ. ಕ್ರೋಧದ ಮೇಲೆ ಬಹಳ ಎಚ್ಚರಿಕೆಯಿರಲಿ. ತಂದೆಯು ಮಕ್ಕಳಿಗೆ ಸುಖದ ಆಸ್ತಿಯನ್ನು ಕೊಡಲು ಬಂದಿದ್ದಾರೆ, ಸ್ವರ್ಗದ ಮಾರ್ಗವನ್ನು ಎಲ್ಲರಿಗೂ ತಿಳಿಸಬೇಕಾಗಿದೆ. ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ ಅಂದಮೇಲೆ ನೀವೂ ಸಹ ಸುಖಕರ್ತರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದು. ದುಃಖ ಕೊಡುತ್ತೀರೆಂದರೆ ನಿಮ್ಮ ಶಿಕ್ಷೆಯು ನೂರು ಪಟ್ಟು ಹೆಚ್ಚಾಗುವುದು. ಯಾರೂ ಶಿಕ್ಷೆಯಿಂದ ಪಾರಾಗಲು ಸಾಧ್ಯವಿಲ್ಲ. ನೀವು ಮಕ್ಕಳಿಗಂತೂ ವಿಶೇಷವಾಗಿ ನ್ಯಾಯಾಲಯವು ಕುಳಿತುಕೊಳ್ಳುತ್ತದೆ. ತಂದೆಯು ತಿಳಿಸುತ್ತಾರೆ - ನೀವು ವಿಘ್ನಗಳನ್ನು ಹಾಕಿದರೆ ಬಹಳ ಶಿಕ್ಷೆಗಳನ್ನನುಭವಿಸುತ್ತೀರಿ. ಕಲ್ಪ-ಕಲ್ಪಾಂತರ ಇಂತಹವರು ಈ ರೀತಿಯಾಗುತ್ತಾರೆ ಎಂಬುದನ್ನು ನೀವು ಸಾಕ್ಷಾತ್ಕಾರ ಮಾಡುತ್ತೀರಿ. ಮೊದಲು ಸಾಕ್ಷಾತ್ಕಾರದಲ್ಲಿ ಶಿಕ್ಷೆಯನ್ನು ನೋಡುತ್ತಿದ್ದಾಗ ತಂದೆಯು ನನಗೆ ಹೇಳಬೇಡಿ ಎಂದು ಸುಮ್ಮನಿರಿಸಿ ಬಿಡುತ್ತಿದ್ದರು. ಅಂತ್ಯದಲ್ಲಂತೂ ಎಲ್ಲವೂ ಅರ್ಥವಾಗುತ್ತಾ ಹೋಗುವುದು. ಮುಂದೆ ಹೋದಂತೆ ಬಹಳ ಸಾಕ್ಷಾತ್ಕಾರವಾಗುತ್ತದೆ, ವೃದ್ಧಿಯಾಗುತ್ತಾ ಹೋಗುತ್ತದೆ, ಅಬು ಪರ್ವತದವರೆಗೆ ಸಾಲು ನಿಲ್ಲುವುದು. ತಂದೆಯೊಂದಿಗೆ ಯಾರೂ ಮಿಲನ ಮಾಡಲು ಆಗುವುದಿಲ್ಲ ಆಗ ಓಹೋ ಪ್ರಭು! ನಿನ್ನ ಲೀಲೆ ಅಪರಮಪಾರ ಎಂದು ಹೇಳುತ್ತಾರೆ. ಇದೂ ಸಹ ಗಾಯನವಿದೆಯಲ್ಲವೆ. ವಿದ್ವಾಂಸ, ಪಂಡಿತ ಮೊದಲಾದವರೂ ಸಹ ಕೊನೆಯಲ್ಲಿ ಬರುತ್ತಾರೆ. ಅವರ ಸಿಂಹಾಸನಗಳೂ ಅಲುಗಾಡುತ್ತವೆ, ನೀವು ಮಕ್ಕಳು ಆಗ ಬಹಳ ಖುಷಿಯಲ್ಲಿರುತ್ತೀರಿ. |
ಒಳ್ಳೆಯದು. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ. ಇಂತಹ ನೆನಪು-ಪ್ರೀತಿಯು ಒಂದೇ ಬಾರಿ ಸಿಗುತ್ತದೆ. ನೀವು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪ್ರೀತಿಯನ್ನು ಪಡೆಯುತ್ತೀರಿ, ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಧಾರಣೆಯೂ ಆಗುತ್ತದೆ. ಮಕ್ಕಳಿಗೆ ಖುಷಿಯ ನಶೆಯೇರಿರಬೇಕು. ಯಾರೇ ಬರಲಿ ಅವರಿಗೆ ಮಾರ್ಗವನ್ನು ತಿಳಿಸಬೇಕು. ಬೇಹದ್ದಿನ ಆಸ್ತಿಯನ್ನು ಬೇಹದ್ದಿನ ತಂದೆಯಿಂದ ಪಡೆಯಬೇಕಾಗಿದೆ. ಇದು ಕಡಿಮೆ ಮಾತೇನು? ಇಂತಹ ಪುರುಷಾರ್ಥ ಮಾಡಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮಾತು-ಚಲನೆಯಲ್ಲಿ ಬಹಳ ರಾಯಲ್ ಆಗಬೇಕಾಗಿದೆ. ಮುಖದಿಂದ ಸದಾ ರತ್ನಗಳೇ ಹೊರಬರಬೇಕಾಗಿದೆ. ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಯಾರ ಮನಸ್ಸನ್ನೂ ಬೇಸರ ಪಡಿಸಬಾರದು. |
2. ಕ್ರೋಧದ ಮೇಲೆ ಬಹಳ ಎಚ್ಚರಿಕೆಯಿರಬೇಕಾಗಿದೆ. ಮುಖವು ಸದಾ ದೇವತೆಗಳಂತೆ ಹರ್ಷಿತವಾಗಿರಬೇಕು. ಸ್ವಯಂನ್ನು ಜ್ಞಾನ-ಯೋಗಬಲದಿಂದ ದೇವತೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಗೀತೆಯ ಎರಡು ಶಬ್ಧಗಳನ್ನು ಕೇಳಿದಿರಿ. ಇದಂತೂ ನಿಶ್ಚಯ ಮಾಡಿಕೊಳ್ಳುತ್ತೀರಿ - ಬೇಹದ್ದಿನ ತಂದೆಯು ಈಗ ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಿದ್ದಾರೆ. ಇಂತಹ ತಂದೆಗೆ ನಾವು ಮಕ್ಕಳಾಗಿದ್ದೇವೆ ಅಂದಮೇಲೆ ತಂದೆಯ ಶ್ರೀಮತದನುಸಾರವೂ ನಡೆಯಬೇಕಾಗಿದೆ, ಇಲ್ಲವೆಂದರೆ ಏನಾಗುವುದು! ಈಗೀಗ ನಗುತ್ತೀರಿ, ನಾವು ಮಹಾರಾಜ-ಮಹಾರಾಣಿ ಆಗಬೇಕೆಂದು ಹೇಳುತ್ತೀರಿ, ಅಥವಾ ಒಂದುವೇಳೆ ಕೈ ಬಿಟ್ಟರೆ ಮತ್ತೆ ಹೋಗಿ ಸಾಧಾರಣ ಪ್ರಜೆಯಾಗುತ್ತೀರಿ. ಸ್ವರ್ಗದಲ್ಲಂತೂ ಖಂಡಿತ ಬರುತ್ತೀರಿ ಆದರೆ ಎಲ್ಲರೂ ಸ್ವರ್ಗದಲ್ಲಿ ಬರುತ್ತಾರೆ ಎಂದೂ ಅಲ್ಲ, ಯಾರು ಸತ್ಯ-ತ್ರೇತಾಯುಗದಲ್ಲಿ ಬರುವವರಿದ್ದಾರೆಯೋ ಅವರೇ ಬರುತ್ತಾರೆ. ಸತ್ಯ-ತ್ರೇತಾಯುಗ ಎರಡನ್ನೂ ಸೇರಿಸಿ ಸ್ವರ್ಗವೆಂದು ಹೇಳಲಾಗುತ್ತದೆ. ಆದರೂ ಯಾರು ಮೊಟ್ಟ ಮೊದಲು ಹೊಸ ಪ್ರಪಂಚದಲ್ಲಿ ಬರುತ್ತಾರೆಯೋ ಅವರು ಒಳ್ಳೆಯ ಸುಖವನ್ನು ಪಡೆಯುತ್ತಾರೆ ಬಾಕಿ ಯಾರು ಕೊನೆಯಲ್ಲಿ ಬರುವರೋ ಅವರು ಬಂದು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ. ಜ್ಞಾನವನ್ನು ಪಡೆಯುವವರು ಸತ್ಯ-ತ್ರೇತಾಯುಗದಲ್ಲಿ ಬರುತ್ತಾರೆ. ಉಳಿದವರಂತೂ ರಾವಣ ರಾಜ್ಯದಲ್ಲಿ ಬರುತ್ತಾರೆ. ಅವರು ಅಲ್ಪಸ್ವಲ್ಪ ಸುಖವನ್ನು ಪಡೆಯುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಬಹಳ ಸುಖವಿರುತ್ತದೆಯಲ್ಲವೆ ಆದ್ದರಿಂದ ಪುರುಷಾರ್ಥ ಮಾಡಿ ತಂದೆಯಿಂದ ಬೇಹದ್ದಿನ ಸುಖದ ಆಸ್ತಿಯನ್ನು ಪಡೆದುಕೊಳ್ಳಬೇಕು ಮತ್ತು ಈ ಮಹಾನ್ ಖುಷಿಯ ಸಂದೇಶವನ್ನೂ ಬರೆಯಿರಿ, ಕಾರ್ಡುಗಳನ್ನು ಮುದ್ರಿಸುವಾಗಲೂ ಇದನ್ನು ಬರೆಯಬೇಕು – ಶ್ರೇಷ್ಠಾತಿ ಶ್ರೇಷ್ಠ ಬೇಹದ್ದಿನ ತಂದೆಯ ಖುಷಿಯ ಸಂದೇಶ. ಪ್ರದರ್ಶನಿಯಲ್ಲಿಯೂ ಹೊಸ ಪ್ರಪಂಚವು ಹೇಗೆ ಸ್ಥಾಪನೆಯಾಗುತ್ತದೆ ಎಂದು ನೀವು ತೋರಿಸುತ್ತೀರಿ ಅಂದಾಗ ಇದನ್ನು ಸ್ಪಷ್ಟ ಮತ್ತು ದೊಡ್ಡ-ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು. ಬೇಹದ್ದಿನ ತಂದೆಯು ಜ್ಞಾನ ಸಾಗರ, ಪತಿತ-ಪಾವನ, ಸದ್ಗತಿದಾತ, ಗೀತೆಯ ಭಗವಂತ ಶಿವನು ಹೇಗೆ ಬ್ರಹ್ಮಾಕುಮಾರ-ಕುಮಾರಿಯರ ಮೂಲಕ ಪುನಃ ಕಲಿಯುಗೀ, ಸಂಪೂರ್ಣ ವಿಕಾರಿ ಭ್ರಷ್ಟಾಚಾರಿ ಪತಿತ ಪ್ರಪಂಚವನ್ನು, ಸತ್ಯಯುಗೀ ಸಂಪೂರ್ಣ ನಿರ್ವಿಕಾರಿ ಪಾವನ ಶ್ರೇಷ್ಟಾಚಾರಿ ಪ್ರಪಂಚವನ್ನಾಗಿ ಮಾಡುತ್ತಿದ್ದಾರೆ. ಆ ಖುಷಿಯ ಸಂದೇಶವನ್ನು ಬಂದು ಕೇಳಿರಿ ಅಥವಾ ತಿಳಿದುಕೊಳ್ಳಿ. ಸರ್ಕಾರದೊಂದಿಗೂ ನಿಮ್ಮದು ಇದು ಪ್ರತಿಜ್ಞೆಯಿದೆ - ನಾವು ಭಾರತದಲ್ಲಿ ಪುನಃ ಸತ್ಯಯುಗೀ ಶ್ರೇಷ್ಠಾಚಾರಿ 100% ಪವಿತ್ರತೆ, ಸುಖ, ಶಾಂತಿಯ ದೈವೀ ಸ್ವರಾಜ್ಯವನ್ನು ಹೇಗೆ ಸ್ಥಾಪನೆ ಮಾಡುತ್ತಿದ್ದೇವೆ ಮತ್ತು ಈ ವಿಕಾರಿ ಪ್ರಪಂಚದ ವಿನಾಶವು ಹೇಗಾಗುವುದು ಎಂದು ಬಂದು ತಿಳಿದುಕೊಳ್ಳಿ. ಹೀಗೆ ಸ್ಪಷ್ಟವಾಗಿ ಬರೆಯಬೇಕು. ಕಾರ್ಡುಗಳಲ್ಲಿಯೂ ಈ ರೀತಿ ಬರೆಯಿರಿ - ಯಾವುದು ಮನುಷ್ಯರಿಗೆ ಚೆನ್ನಾಗಿ ಅರ್ಥವಾಗಲಿ. ಈ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಕಲ್ಪದ ಹಿಂದಿನ ತರಹ ಡ್ರಾಮಾ ಪ್ಲಾನನುಸಾರ ಪರಮಪಿತ ಪರಮಾತ್ಮ ಶಿವನ ಶ್ರೀಮತದಂತೆ ಸಹಜ ರಾಜಯೋಗ ಮತ್ತು ಪವಿತ್ರತೆಯ ಬಲದಿಂದ, ತಮ್ಮ ತನು-ಮನ-ಧನದಿಂದ ಭಾರತವನ್ನು ಇಂತಹ ಶ್ರೇಷ್ಠಾಚಾರಿ ಪಾವನವನ್ನಾಗಿ ಹೇಗೆ ಮಾಡುತ್ತಿದ್ದಾರೆ ಎಂಬುದನ್ನು ಬಂದು ತಿಳಿದುಕೊಳ್ಳಿ. ಸ್ಪಷ್ಟ ಮಾಡಿ ಕಾರ್ಡುಗಳಲ್ಲಿ ಮುದ್ರಿಸಬೇಕು. ಯಾವುದು ಎಂತಹವರಿಗಾದರೂ ಅರ್ಥವಾಗುವಂತಿರಲಿ. ಈ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯ ಮತದಂತೆ ರಾಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಯಾವುದು ಮಹಾತ್ಮ ಗಾಂಧೀಜಿಯ ಬಯಕೆಯೂ ಆಗಿತ್ತು, ಪತ್ರಿಕೆಗಳಲ್ಲಿ ಹೀಗೆ ಪೂರ್ಣ ನಿಮಂತ್ರಣವಿರಲಿ. ಇದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ - ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ತಮ್ಮ ತನು-ಮನ-ಧನದಿಂದ ಈ ಕಾರ್ಯವನ್ನು ಮಾಡುತ್ತಿದ್ದಾರೆ. ಇದರಿಂದ ಇವರು ಯಾವುದೇ ಭಿಕ್ಷೆ ಅಥವಾ ಶುಲ್ಕವನ್ನು ಕೇಳುತ್ತಾರೆ ಎಂದು ಮನುಷ್ಯರು ಎಂದೂ ತಿಳಿದುಕೊಳ್ಳಬಾರದು. ಪ್ರಪಂಚದಲ್ಲಂತೂ ಎಲ್ಲವೂ ಡೊನೇಷನ್ ಮೇಲೆಯೇ ನಡೆಯುತ್ತದೆ. ಇಲ್ಲಿ ನೀವು ಹೇಳುತ್ತೀರಿ - ನಾವು ಬಿ.ಕೆ.ಗಳು ನಮ್ಮದೇ ತನು-ಮನ-ಧನದಿಂದ ಮಾಡುತ್ತಿದ್ದೇವೆ. ನೀವು ಸ್ವಯಂ ಸ್ವರಾಜ್ಯವನ್ನು ಪಡೆಯುತ್ತೀರಿ ಅಂದಮೇಲೆ ಅವಶ್ಯವಾಗಿ ತಮ್ಮದೇ ಖರ್ಚು ಮಾಡುತ್ತೀರಿ. ಯಾರು ಪರಿಶ್ರಮ ಪಡುವರೋ ಅವರಿಗೇ 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ಭಾರತವಾಸಿಗಳೇ 21 ಜನ್ಮಗಳಿಗಾಗಿ ಶ್ರೇಷ್ಠಾಚಾರಿ, ಡಬಲ್ ಕಿರೀಟಧಾರಿಗಳಾಗುತ್ತೀರಿ. ಈ ಲಕ್ಷ್ಮೀ-ನಾರಾಯಣರು ಡಬಲ್ ಕಿರೀಟಧಾರಿಗಳಲ್ಲವೆ. ಈಗಂತೂ ಯಾವುದೇ ಕಿರೀಟವಿಲ್ಲ ಅಂದಾಗ ಇದನ್ನು ಚೆನ್ನಾಗಿ ತಿಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ರೀತಿಯಾಗಿ ಬರೆಯಿರಿ ಅದರಿಂದ ಈ ಬ್ರಹ್ಮಾಕುಮಾರ-ಕುಮಾರಿಯರು ಏನು ಮಾಡುತ್ತಿದ್ದಾರೆಂಬುದು ಅವರಿಗೆ ಅರ್ಥವಾಗಲಿ. ದೊಡ್ಡ-ದೊಡ್ಡವರಿಂದ ಕೇಳಿದಾಗ ಮತ್ತೆ ಬಡವರ ಮಾತನ್ನೂ ಹೇಳುತ್ತಾರೆ. ಇಲ್ಲವೆಂದರೆ ಬಡವರ ಮಾತನ್ನು ಯಾರೂ ಕೇಳುವುದಿಲ್ಲ. ಸಾಹುಕಾರರ ಕೂಗು ಬಹು ಬೇಗನೆ ಕೇಳಿ ಬರುತ್ತದೆ. ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ನಾವು ವಿಶೇಷವಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ. ಉಳಿದೆಲ್ಲರನ್ನೂ ಶಾಂತಿಧಾಮಕ್ಕೆ ಕಳುಹಿಸುತ್ತೇವೆ. ಈ ರೀತಿಯಾಗಿಯೇ ತಿಳಿಸಬೇಕಾಗಿದೆ, ಭಾರತವು 5000 ವರ್ಷಗಳ ಮೊದಲು ಈ ರೀತಿ ಸ್ವರ್ಗವಾಗಿತ್ತು, ಈಗಂತೂ ಕಲಿಯುಗವಾಗಿದೆ. ಅದು ಸತ್ಯವಾಗಿತ್ತು, ಈಗ ಹೇಳಿ ಸತ್ಯಯುಗದಲ್ಲಿ ಎಷ್ಟು ಜನಸಂಖ್ಯೆಯಿತ್ತು? ಈಗ ಕಲಿಯುಗದ ಅಂತ್ಯವಾಗಿದೆ. ಇದು ಅದೇ ಮಹಾಭಾರಿ ಮಹಾಭಾರತ ಯುದ್ಧವಾಗಿದೆ. ಮತ್ತ್ಯಾವುದೇ ಸಮಯದಲ್ಲಿ ಇಂತಹ ಯುದ್ಧಗಳು ಆಗಿಯೇ ಇಲ್ಲ. ಇದು ಕೊನೆಯಲ್ಲಿ ಮೂರನೆಯ ಮಹಾ ಯುದ್ಧವಾಗಿದೆ. ಈಗಂತೂ ಅಣು ಬಾಂಬುಗಳನ್ನು ತಯಾರಿಸುತ್ತಿದ್ದಾರೆ, ಯಾರ ಮಾತನ್ನೂ ಕೇಳುವುದಿಲ್ಲ. ಯಾವ ಬಾಂಬುಗಳನ್ನು ಮಾಡಿದ್ದಾರೆಯೋ ಅವನ್ನು ಸಮುದ್ರದಲ್ಲಿ ಹಾಕಿ ಬಿಡಿ ಆಗ ನಾವೂ ಸಹ ಮುಂದೆ ಮಾಡುವುದಿಲ್ಲ. ನೀವು ಇಟ್ಟುಕೊಂಡೇ ಇದ್ದರೆ ನಾವು ತಯಾರಿಸದೇ ಇರಲು ಹೇಗೆ ಸಾಧ್ಯವೆಂದು ಅವರು ಹೇಳುತ್ತಾರೆ ಆದರೆ ನೀವು ಮಕ್ಕಳಿಗೆ ತಿಳಿದಿದೆ - ಇದಂತೂ ಪೂರ್ವ ನಿಶ್ಚಿತವಾಗಿದೆ. ಎಷ್ಟಾದರೂ ಅವರಿಗೆ ಮತ ಕೊಡಲು ಅವರಿಗೆ ಅರ್ಥವಾಗುವುದಿಲ್ಲ. ವಿನಾಶವಾಗದಿದ್ದರೆ ನೀವು ರಾಜ್ಯಭಾರ ಹೇಗೆ ಮಾಡುವಿರಿ! ನೀವು ಮಕ್ಕಳಿಗಂತೂ ನಿಶ್ಚಯವಿದೆಯಲ್ಲವೆ. ಸಂಶಯ ಬುದ್ಧಿಯವರಂತೂ ಬಿಟ್ಟು ಹೋಗುತ್ತಾರೆ, ವಿರೋಧಿಗಳಾಗಿ ಬಿಡುತ್ತಾರೆ. ತಂದೆಯ ಮಕ್ಕಳಾಗಿ ಮತ್ತೆ ವಿರೋಧಿಗಳಾಗಬಾರದು. ನೀವಂತೂ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ, ಅನ್ಯ ಮಾತುಗಳಿಂದೇನು ಲಾಭ? ಸತ್ಯ ತಂದೆಯ ಜೊತೆ ಸತ್ಯವಂತರಾಗಬೇಕಾಗಿದೆ. ಒಳಗೊಂದು ಹೊರಗೊಂದು ಇಟ್ಟುಕೊಳ್ಳುತ್ತಾರೆಂದರೆ ಅವರು ತಮ್ಮ ಪದವಿ ಭ್ರಷ್ಟ ಮಾಡಿಕೊಳ್ಳುತ್ತಾರೆ. ತಮ್ಮದೇ ನಷ್ಟ ಮಾಡಿಕೊಳ್ಳುತ್ತಾರೆ. ಕಲ್ಪ-ಕಲ್ಪಾಂತರಕ್ಕಾಗಿ ಎಂದೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಆದ್ದರಿಂದ ಈ ಸಮಯದಲ್ಲಿ ಬಹಳ ಆಕ್ಯುರೇಟ್ ಆಗಬೇಕಾಗಿದೆ, ಯಾವುದೇ ತಪ್ಪು ಮಾಡಬಾರದು. ಸಾಧ್ಯವಾದಷ್ಟು ಶ್ರೀಮತದಲ್ಲಿರಬೇಕಾಗಿದೆ. ನಿರಂತರ ನೆನಪಂತೂ ಅಂತಿಮದಲ್ಲಿ ಇರುವುದು, ಒಬ್ಬ ತಂದೆಯ ವಿನಃ ಮತ್ತ್ಯಾರ ನೆನಪೂ ಇರಬಾರದು. ಅಂತ್ಯ ಕಾಲದಲ್ಲಿ ಯಾರು ಸ್ತ್ರೀ ಸ್ಮರಣೆ ಮಾಡಿದರೋ ಅವರು.......... ಎಂದು ಗಾಯನವೂ ಇದೆ ಅಂದರೆ ಯಾರಲ್ಲಿ ಮೋಹವಿರುವುದೋ ಅವರ ನೆನಪೇ ಬಂದು ಬಿಡುವುದು. ಮುಂದೆ ಹೋದಂತೆ ನೀವು ಎಷ್ಟು ಸಮೀಪ ಬರುತ್ತಾ ಹೋಗುವಿರೋ ಅಷ್ಟು ಸಾಕ್ಷಾತ್ಕಾರವಾಗುತ್ತಾ ಇರುವುದು. ತಂದೆಯು ಪ್ರತಿಯೊಬ್ಬರಿಗೆ ನೀವು ಇಂತಿಂತಹ ಕೆಲಸವನ್ನೇ ಮಾಡಿದಿರಿ ಎಂದು ತೋರಿಸುತ್ತಾರೆ. ಆರಂಭದಲ್ಲಿಯೂ ಸಹ ನೀವು ಸಾಕ್ಷಾತ್ಕಾರ ಮಾಡಿದ್ದೀರಿ, ಯಾರು ಶಿಕ್ಷೆಗಳನ್ನನುಭವಿಸುತ್ತಿದರು ಅವರು ಬಹಳ ಚೀರಾಡುತ್ತಿದ್ದರು. ತಂದೆಯು ಹೇಳುತ್ತಾರೆ - ನಿಮಗೆ ತೋರಿಸುವುದಕ್ಕಾಗಿ ಇವರ 100ರಷ್ಟು ಶಿಕ್ಷೆಯನ್ನು ತುಂಡರಿಸಿದೆನು. ಆದ್ದರಿಂದ ತಂದೆಯ ಸೇವೆಯಲ್ಲಿ ವಿಘ್ನ ಬರುವಂತಹ ಕೆಲಸ ಮಾಡಬಾರದು. ಕೊನೆಯಲ್ಲಿ ಎಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು - ಹೀಗೀಗೆ ತಂದೆಯ ಸೇವೆಯಲ್ಲಿ ಬಹಳ ವಿಘ್ನಗಳನ್ನು ಹಾಕಿ ನಷ್ಟ ಮಾಡಿದ್ದೀರಿ ಎಂದು. ಆಸುರೀ ಸಂಪ್ರದಾಯವಲ್ಲವೆ. ಯಾರು ವಿಘ್ನಗಳನ್ನು ಹಾಕಿದ್ದಾರೆಯೋ ಅವರಿಗೆ ಬಹಳ ಶಿಕ್ಷೆ ಸಿಗುತ್ತದೆ. ಶಿವ ತಂದೆಯದು ಬಹಳ ದೊಡ್ಡ ದರ್ಬಾರು ಆಗಿದೆ. ಬಲ ಭುಜವಾಗಿ ಧರ್ಮರಾಜನೂ ಇದ್ದಾರೆ, ಅವು ಹದ್ದಿನ ಶಿಕ್ಷೆಗಳಾಗಿವೆ. ಇಲ್ಲಂತೂ 21 ಜನ್ಮಗಳಿಗಾಗಿ ನಷ್ಟವಾಗುತ್ತದೆ, ಪದವಿಯು ಭ್ರಷ್ಟವಾಗಿ ಬಿಡುತ್ತದೆ. ಪ್ರತಿಯೊಂದು ಮಾತಿನಲ್ಲಿ ತಂದೆಯು ತಿಳಿಸುತ್ತಿರುತ್ತಾರೆ ಏಕೆಂದರೆ ಕೊನೆಯಲ್ಲಿ ನಮಗೆ ಗೊತ್ತಿರಲಿಲ್ಲವೆಂದು ಯಾರೂ ಹೇಳುವಂತಿಲ್ಲ. ಆದ್ದರಿಂದ ತಂದೆಯು ಎಲ್ಲಾ ಎಚ್ಚರಿಕೆಯನ್ನು ಕೊಡುತ್ತಿರುತ್ತಾರೆ. ಪ್ರತಿಯೊಂದು ಸೇವಾಕೇಂದ್ರದಲ್ಲಿ ಎಷ್ಟೊಂದು ಮಂದಿ ಬಿಟ್ಟು ಹೋಗುತ್ತಾರೆ, ತೊಂದರೆ ಕೊಡುತ್ತಾರೆ ವಿಕಾರಿಗಳಾಗಿ ಬಿಡುತ್ತಾರೆ. ಶಾಲೆಯಲ್ಲಿ ಪೂರ್ಣ ರೀತಿಯಲ್ಲಿ ಓದಬೇಕು. ಇಲ್ಲವಾದರೆ ಏನು ಪದವಿ ಪಡೆಯುವಿರಿ! ಪದವಿಯಲ್ಲಿ ಬಹಳ ಅಂತರವಾಗಿ ಬಿಡುತ್ತದೆ. ಹೇಗೆ ಇಲ್ಲಿ ದುಃಖಧಾಮದಲ್ಲಿ ಕೆಲವರು ರಾಷ್ಟ್ರಪತಿಯಾಗಿದ್ದಾರೆ, ಕೆಲವರು ಸಾಹುಕಾರ, ಕೆಲವರು ಬಡವರಿದ್ದಾರೆ ಹಾಗೆಯೇ ಸುಖಧಾಮದಲ್ಲಿಯೂ ಪದವಿಗಳು ನಂಬರ್ವಾರ್ ಇರುತ್ತವೆ. ಯಾರು ರಾಯಲ್ ಬುದ್ಧಿವಂತ ಮಕ್ಕಳಿರುವರೋ ಅವರು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಪ್ರಯತ್ನ ಪಡುತ್ತಾರೆ. ಮಾಯೆಯ ಯುದ್ಧವಾಗಿದೆಯಲ್ಲವೆ. ಮಾಯೆಯು ಬಹಳ ಪ್ರಬಲವಾಗಿದೆ. ಸೋಲು-ಗೆಲುವು ಆಗುತ್ತಿರುತ್ತದೆ. ಎಷ್ಟೊಂದು ಮಂದಿ ಬರುತ್ತಾರೆ ಮತ್ತೆ ವಿರೋಧಿಗಳಾಗಿ ಬಿಡುತ್ತಾರೆ. ನಡೆಯುತ್ತಾ-ನಡೆಯುತ್ತಾ ಅನುತ್ತೀರ್ಣರಾಗಿ ಬಿಡುತ್ತಾರೆ. ಅನೇಕರು ಕೇಳುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬಹುದು ಎಂಬ ಮಾತನ್ನು ನಾವೆಂದೂ ಕೇಳಿಲ್ಲ ಅಂದಮೇಲೆ ಇದು ಹೇಗೆ ಸಾಧ್ಯ ಎನ್ನುತ್ತಾರೆ. ಅರೆ! ಕಾಮ ಮಹಾಶತ್ರುವೆಂದು ಭಗವಾನುವಾಚವಿದೆಯಲ್ಲವೆ. ಗೀತೆಯಲ್ಲಿಯೂ ಇದೆಯಲ್ಲವೆ! ಕೇವಲ ಭಗವಂತನ ಬದಲು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಕೃಷ್ಣನಿಗೆ ದೇವತೆಯೆಂದೂ ಹೇಳುವುದಿಲ್ಲ, ಅದು ದೇವತಾ ಧರ್ಮವಲ್ಲವೆ. ಕೇವಲ ಸೂಕ್ಷ್ಮವತನವಾಸಿಗಳೇ ದೇವತೆಗಳಾಗಿದ್ದಾರೆ. ಉಳಿದೆಲ್ಲರೂ ದೈವೀ ಗುಣವಂತ ಮನುಷ್ಯರಾಗಿದ್ದಾರೆ. ಸತ್ಯಯುಗದಲ್ಲಿ ದೈವೀ ಗುಣವುಳ್ಳವರು, ಕಲಿಯುಗದಲ್ಲಿ ಆಸುರೀ ಅವಗುಣವುಳ್ಳವರಾಗಿದ್ದಾರೆ. ಆಸುರೀ ಗುಣವಿರುವವರು ದೈವೀ ಗುಣವಂತರ ಮಹಿಮೆ ಹಾಡುತ್ತಾರೆ, ಎಷ್ಟೊಂದು ಅಂತರವಿದೆ! ನೀವೀಗ ತಿಳಿದುಕೊಂಡಿದ್ದೀರಿ - ನಾವು ಹೇಗಿದ್ದೆವು, ಏನಾಗುತ್ತಿದ್ದೇವೆ! ನೀವಿಲ್ಲಿ ಎಲ್ಲಾ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತೋಗುಣಿ ಆಹಾರ ಪದಾರ್ಥಗಳನ್ನೇ ಸೇವಿಸಬೇಕಾಗಿದೆ. ನೋಡಿ, ದೇವತೆಗಳು ಏನನ್ನು ಸೇವಿಸುತ್ತಾರೆ. ಶ್ರೀನಾಥ ದ್ವಾರದಲ್ಲಿಯೂ ಹೋಗಿ ನೋಡಿ, ಎಷ್ಟು ಶುದ್ಧ ಭೋಜನವು ತಯಾರಾಗುತ್ತದೆ! ಅಲ್ಲಿರುವವರೇ ವೈಷ್ಣವರು. ಮತ್ತು ಜಗನ್ನಾಥ ಪುರಿಯಲ್ಲಿ ಹೋಗಿ ನೋಡಿ, ಏನು ಸಿಗುತ್ತದೆ? ಕೇವಲ ಅನ್ನ. ಅಲ್ಲಿ ವಾಮಮಾರ್ಗದ ಬಹಳ ಕೊಳಕು ಚಿತ್ರಗಳಿವೆ. ಯಾವಾಗ ರಾಜಧಾನಿಯಿತ್ತೋ ಆಗ 36 ಪ್ರಕಾರದ ಭೋಜನ ಸಿಗುತ್ತಿತ್ತು. ಆದ್ದರಿಂದ ಶ್ರೀನಾಥ ದ್ವಾರದಲ್ಲಿ ಅನೇಕ ಪ್ರಕಾರದ ಪದಾರ್ಥಗಳು ತಯಾರಾಗುತ್ತವೆ. ಜಗನ್ನಾಥ ಪುರಿ ಮತ್ತು ಶ್ರೀನಾಥ ದ್ವಾರದ ಮಂದಿರವು ಬೇರೆಯಾಗಿದೆ. ಜಗನ್ನಾಥ ಪುರಿಯ ಮಂದಿರದಲ್ಲಿ ದೇವತೆಗಳ ಉಡುಪಿನಲ್ಲಿ ಬಹಳ ಕೊಳಕು ಚಿತ್ರಗಳಿವೆ. ಆದ್ದರಿಂದ ಅಲ್ಲಿನ ನೈವೇದ್ಯವೂ ಸಹ ಚೆನ್ನಾಗಿರುವುದಿಲ್ಲ. ಕೇವಲ ಅನ್ನದ ನೈವೇದ್ಯವನ್ನಿಡುತ್ತಾರೆ. ತುಪ್ಪವನ್ನೂ ಹಾಕುವುದಿಲ್ಲ. ಸತೋಪ್ರಧಾನ ಮತ್ತು ತಮೋಪ್ರಧಾನರು ಇರುವಾಗಿನ ಅಂತರವನ್ನು ತೋರಿಸುತ್ತಾರೆ. ಭಾರತವು ಹೇಗಿತ್ತು ಮತ್ತೆ ಏನಾಗಿ ಬಿಟ್ಟಿತು, ಈಗಂತೂ ನೋಡಿ ಯಾವ ಗತಿಯಾಗಿದೆ! ಪೂರ್ಣ ಅನ್ನವೂ ಸಿಗುವುದಿಲ್ಲ. ಅವರ ಪ್ಲಾನ್ ಮತ್ತು ಶಿವ ತಂದೆಯ ಪ್ಲಾನ್ನಲ್ಲಿ ರಾತ್ರಿ-ಹಗಲಿನ ವ್ಯತ್ಯಾಸವಿದೆ. ಅವೆಲ್ಲವೂ ಮಣ್ಣು ಪಾಲಾಗುತ್ತವೆ, ಪ್ರಾಕೃತಿಕ ವಿಕೋಪಗಳಾಗುವುದು, ದವಸ-ಧಾನ್ಯಗಳೇನೂ ಸಿಗುವುದಿಲ್ಲ. ಮಳೆಯು ಕೆಲವೊಂದೆಡೆ ಅತಿಯಾಗಿ ಬೀಳುತ್ತದೆ, ಕೆಲವೊಂದು ಕಡೆ ಬೀಳುವುದೇ ಇಲ್ಲ. ಎಷ್ಟೊಂದು ನಷ್ಟವನ್ನುಂಟು ಮಾಡುತ್ತದೆ. ಈ ಸಮಯದಲ್ಲಿ ತತ್ವಗಳು ತಮೋಪ್ರಧಾನವಾಗಿರುವುದರಿಂದ ಮಳೆಯೂ ಸಹ ಸಮಯವಲ್ಲದ ಸಮಯದಲ್ಲಿ ಬೀಳುತ್ತಿರುತ್ತದೆ. ಬಿರುಗಾಳಿಯು ತಮೋಪ್ರಧಾನ, ಸೂರ್ಯನ ತಾಪವೂ ಸಹ ಈ ರೀತಿಯಿರುತ್ತದೆ ಅದರ ಮಾತೇ ಕೇಳಬೇಡಿ. ಈ ಪ್ರಾಕೃತಿಕ ವಿಕೋಪಗಳು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರದು ವಿನಾಶ ಕಾಲದಲ್ಲಿ ವಿಪರೀತ ಬುದ್ಧಿಯಾಗಿದೆ. ನಿಮ್ಮದು ತಂದೆಯ ಜೊತೆ ಪ್ರೀತಿ ಬುದ್ದಿಯಾಗಿದೆ. ಅಜ್ಞಾನ ಕಾಲದಲ್ಲಿಯೂ ಸುಪುತ್ರ ಮಕ್ಕಳ ಮೇಲೆ ತಂದೆ-ತಾಯಿಗೆ ಪ್ರೀತಿಯಿರುತ್ತದೆ. ಆದ್ದರಿಂದ ಇಲ್ಲಿ ತಂದೆಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ನೆನಪು-ಪ್ರೀತಿ ಎಂದು ಹೇಳುತ್ತಾರೆ. ಎಷ್ಟೆಷ್ಟು ಸೇವೆ ಮಾಡುವರೋ ಅಷ್ಟಷ್ಟು ನೆನಪು-ಪ್ರೀತಿ..... ಸೇವೆಯನ್ನಂತೂ ಮಾಡಬೇಕಲ್ಲವೆ. ಇಡೀ ಪ್ರಪಂಚ ಮತ್ತು ವಿಶೇಷವಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ. ಉಳಿದೆಲ್ಲರನ್ನು ಶಾಂತಿಧಾಮಕ್ಕೆ ಕಳುಹಿಸಬೇಕಾಗಿದೆ. ಭಾರತಕ್ಕೆ ಸ್ವರ್ಗದ ಆಸ್ತಿಯು ಸಿಗುತ್ತದೆ. ಉಳಿದೆಲ್ಲರಿಗೆ ಮುಕ್ತಿಯ ಆಸ್ತಿಯು ಸಿಗುತ್ತದೆ. ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಹಾಹಾಕಾರದ ನಂತರ ಜಯ ಜಯಕಾರವಾಗುವುದು. ಎಷ್ಟೊಂದು ಹಾಹಾಕಾರವು ಏಳುತ್ತದೆ, ಇದು ನಿರಪರಾಧಿಗಳ ಕೊಲೆಯ ಆಟವಾಗಿದೆ. ಎಲ್ಲರ ಮೃತ್ಯುವಾಗಲೇಬೇಕಾಗಿದೆ. |
ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಪೂರ್ಣ ಪುರುಷಾರ್ಥ ಮಾಡಿ. ತಂದೆಯ ಜೊತೆ ಸದಾ ಆಜ್ಞಾಕಾರಿ, ಪ್ರಾಮಾಣಿಕರಾಗಬೇಕಾಗಿದೆ. ಸೇವಾಧಾರಿಗಳಾಗಬೇಕಾಗಿದೆ. ಯಾರು ಕಲ್ಪದ ಮೊದಲು ಎಂತಹ ಸೇವೆ ಮಾಡಿದ್ದಾರೆಯೋ ಅದರ ಸಾಕ್ಷಾತ್ಕಾರವಾಗುತ್ತಾ ಇರುವುದು, ನೀವು ಸಾಕ್ಷಿಯಾಗಿ ನೋಡುತ್ತಾ ಇರುತ್ತೀರಿ. ನೀವೀಗ ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ಆದ್ದರಿಂದ ಸದಾ ಬುದ್ಧಿಯಲ್ಲಿ ಸ್ವದರ್ಶನ ಚಕ್ರವು ಸುತ್ತುತ್ತಿರಬೇಕು - ನಾವು ಹೀಗ್ಹೀಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ನಾವೀಗ ಹಿಂತಿರುಗಿ ಮನೆಗೆ ಹೋಗುತ್ತೇವೆ. ತಂದೆಯ ನೆನಪು ಇರಲಿ, ಮನೆ ಮತ್ತು ಸತ್ಯಯುಗವು ನೆನಪಿರಲಿ. ಇಡೀ ದಿನ ಬುದ್ಧಿಯಲ್ಲಿ ಇದೇ ಚಿಂತನೆ ಮಾಡಬೇಕಾಗಿದೆ - ನಾವೀಗ ವಿಶ್ವದ ಮಹಾರಾಜಕುಮಾರರಾಗುತ್ತೇವೆ. ನಾವು ಶ್ರೀ ಲಕ್ಷ್ಮೀ ಹಾಗೂ ಶ್ರೀ ನಾರಾಯಣನಾಗುತ್ತೇವೆ. ನಶೆಯೇರಬೇಕಲ್ಲವೆ. ಈ ಬಾಬಾರವರಿಗೆ ನಶೆಯಿರುತ್ತದೆ. ಇವರು ನಿತ್ಯವೂ ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡುತ್ತಾರೆ, ಆಂತರ್ಯದಲ್ಲಿ ನಶೆಯಿರುತ್ತದೆಯಲ್ಲವೆ - ನಾನು ಹೋಗಿ ನಾಳೆ ಇಂತಹ ಶ್ರೀಕೃಷ್ಣನಾಗುತ್ತೇನೆ, ಮತ್ತೆ ಸ್ವಯಂವರದ ನಂತರ ಶ್ರೀನಾರಾಯಣನಾಗುತ್ತೇನೆ, ತತ್ತ್ವಂ. ನೀವೂ ಆಗುತ್ತೀರಲ್ಲವೆ. ಇದು ರಾಜಯೋಗವಾಗಿದೆ, ಪ್ರಜಾಯೋಗವಲ್ಲ. ಆತ್ಮರಿಗೆ ಪುನಃ ತಮ್ಮ ರಾಜ್ಯಭಾಗ್ಯವು ಸಿಗುತ್ತದೆ. ಮಕ್ಕಳು ರಾಜ್ಯವನ್ನು ಕಳೆದುಕೊಂಡಿದ್ದಿರಿ, ಈಗ ಪುನಃ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ನೀವು ಮಕ್ಕಳಿಗೆ ನೋಡಿ ಖುಷಿಯಾಗಲೆಂದೇ ತಂದೆಯು ಈ ಚಿತ್ರಗಳನ್ನು ಮಾಡಿಸುತ್ತಾರೆ. 21 ಜನ್ಮಗಳಿಗಾಗಿ ನಾವು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ. ಎಷ್ಟು ಸಹಜವಾಗಿದೆ! ಈ ಶಿವ ತಂದೆಯು ಈ ಪ್ರಜಾಪಿತ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಾರೆ ನಂತರ ನಾವು ಹೋಗಿ ಇಂತಹ ದೇವತೆಗಳಾಗುತ್ತೇವೆ. ನೋಡುತ್ತಿದ್ದಂತೆಯೇ ಖುಷಿಯ ನಶೆಯೇರುತ್ತದೆ. ನಾವು ತಂದೆಯ ನೆನಪಿನಲ್ಲಿರುವುದರಿಂದ ವಿಶ್ವದ ರಾಜಕುಮಾರರಾಗುತ್ತೇವೆ ಎಂದು ಎಷ್ಟೊಂದು ಖುಷಿಯಿರಬೇಕು! ನಾನೂ ಓದುತ್ತಿದ್ದೇನೆ, ನೀವೂ ಓದುತ್ತಿದ್ದೀರಿ, ಈ ವಿದ್ಯಾಭ್ಯಾಸದ ನಂತರ ನಾನು ಹೋಗಿ ಈ ರೀತಿಯಾಗುತ್ತೇನೆ. ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ಎಷ್ಟು ಓದುವಿರೋ ಅಷ್ಟು ಸಂಪಾದನೆಯಾಗುತ್ತದೆಯಲ್ಲವೆ. ತಂದೆಯು ತಿಳಿಸಿದ್ದಾರೆ - ಕೆಲವು ಸರ್ಜನ್ಗಳು ಇಷ್ಟು ಬುದ್ಧಿವಂತರಿರುತ್ತಾರೆ, ಒಂದು ಕೇಸಿನಿಂದ ಲಕ್ಷಾಂತರ ರೂಪಾಯಿಗಳನ್ನೇ ಸಂಪಾದಿಸುತ್ತಾರೆ. ವಕೀಲರಲ್ಲಿಯೂ ಇದೇ ರೀತಿಯಿರುತ್ತಾರೆ. ಕೆಲವರು ಬಹಳ ಸಂಪಾದನೆ ಮಾಡುತ್ತಾರೆ, ಇನ್ನೂ ಕೆಲವರನ್ನು ನೋಡಿದರೆ ಹರಿದ ಕೋಟನ್ನು ಧರಿಸಿರುತ್ತಾರೆ, ಇಲ್ಲಿಯೂ ಹಾಗೆಯೇ. ಆದ್ದರಿಂದ ತಂದೆಯು ಮತ್ತೆ-ಮತ್ತೆ ಹೇಳುತ್ತಾರೆ - ಮಕ್ಕಳೇ, ಯಾವುದೇ ತಪ್ಪು ಮಾಡಬೇಡಿ, ಸದಾ ಶ್ರೀಮತದಂತೆ ನಡೆಯಿರಿ. ಶ್ರೀ ಶ್ರೀ ಶಿವ ತಂದೆಯಿಂದ ನೀವು ಶ್ರೇಷ್ಠರಾಗುತ್ತೀರಿ. ನೀವು ಮಕ್ಕಳು ತಂದೆಯಿಂದ ಅನೇಕ ಬಾರಿ ಆಸ್ತಿಯನ್ನು ತೆಗೆದುಕೊಂಡಿದ್ದೀರಿ, ಕಳೆದುಕೊಂಡಿದ್ದೀರಿ. ಅರ್ಧಕಲ್ಪಕ್ಕಾಗಿ 21 ಜನ್ಮಗಳ ಆಸ್ತಿಯು ಸಿಗುತ್ತದೆ. ಅರ್ಧಕಲ್ಪ 2500 ವರ್ಷಗಳಕಾಲ ನೀವು ಸುಖ ಪಡೆಯುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಳಗೆ-ಹೊರೆಗೂ ಸತ್ಯವಾಗಿರಬೇಕು. ವಿದ್ಯೆಯಲ್ಲೆಂದೂ ಹುಡುಗಾಟಿಕೆ ಮಾಡಬಾರದು. ಸಂಶಯ ಬುದ್ಧಿಯವರಾಗಿ ವಿದ್ಯಾಭ್ಯಾಸವನ್ನೆಂದೂ ಬಿಡಬಾರದು. ಸರ್ವೀಸಿನಲ್ಲಿ ವಿಘ್ನ ರೂಪವಾಗಬಾರದು. |
2. ಎಲ್ಲರಿಗೆ ಇದೇ ಖುಷಿಯ ಸಂದೇಶ ತಿಳಿಸಿ - ನಾವು ಪವಿತ್ರತೆಯ ಬಲದಿಂದ ಶ್ರೀಮತದಂತೆ ನಮ್ಮ ತನು-ಮನ-ಧನದ ಸಹಯೋಗದಿಂದ 21 ಜನ್ಮಗಳಿಗಾಗಿ ಭಾರತವನ್ನು ಶ್ರೇಷ್ಟಾಚಾರಿ ಡಬಲ್ ಕಿರೀಟಧಾರಿಯನ್ನಾಗಿ ಮಾಡುವ ಸೇವೆ ಮಾಡುತ್ತಿದ್ದೇವೆ. |
ಓಂ ಶಾಂತಿ. ಇದು ಕಲಿಯುಗೀ ಪ್ರಪಂಚವಾಗಿದೆ. ಎಲ್ಲರೂ ಅಂಧಕಾರದಲ್ಲಿದ್ದಾರೆ, ಇದೇ ಭಾರತವು ಪ್ರಕಾಶತೆಯಲ್ಲಿತ್ತು, ಆಗ ಈ ಭಾರತವು ಸ್ವರ್ಗವಾಗಿತ್ತು. ಇದೇ ಭಾರತವಾಸಿಗಳು ಯಾರು ಈಗ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುವರೋ ಅವರು ಮೂಲತಃ ದೇವಿ-ದೇವತೆಗಳಾಗಿದ್ದರು. ಭಾರತವಾಸಿಗಳೇ ಸ್ವರ್ಗವಾಸಿಯಾಗಿದ್ದರು. ಆಗ ಯಾವುದೇ ಧರ್ಮವಿರಲಿಲ್ಲ, ಒಂದೇ ಧರ್ಮವಿತ್ತು, ಸ್ವರ್ಗ-ವೈಕುಂಠ-ಬಹಿಶ್ತ್-ಹೆವೆನ್ ಇವೆಲ್ಲವೂ ಭಾರತದ ಹೆಸರುಗಳಾಗಿತ್ತು. ಭಾರತವು ಪ್ರಾಚೀನ ಪವಿತ್ರ, ಬಹಳ-ಬಹಳ ಧನವಂತವಾಗಿತ್ತು. ಈಗಂತೂ ಭಾರತವು ಕಂಗಾಲಾಗಿದೆ ಏಕೆಂದರೆ ಈಗ ಕಲಿಯುಗಿಯಾಗಿದ್ದಾರೆ. ಅದು ಸತ್ಯಯುಗವಾಗಿತ್ತು, ನೀವೆಲ್ಲರೂ ಭಾರತವಾಸಿಗಳಿದ್ದೀರಿ, ನಿಮಗೆ ತಿಳಿದಿದೆ - ನಾವು ಅಂಧಕಾರದಲ್ಲಿದ್ದೇವೆ. ಸ್ವರ್ಗದಲ್ಲಿದ್ದಾಗ ಪ್ರಕಾಶತೆಯಲ್ಲಿದ್ದೇವು. ಸ್ವರ್ಗದ ರಾಜ ರಾಜೇಶ್ವರ-ರಾಜ ರಾಜೇಶ್ವರಿಯು ಲಕ್ಷ್ಮೀ-ನಾರಾಯಣರಾಗಿದ್ದರು, ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ಹೊಸ-ಹೊಸಬರು ಬರುತ್ತಾರೆ, ಆದ್ದರಿಂದ ತಂದೆಯು ಪುನಃ ತಿಳಿಸುತ್ತಾರೆ. ತಂದೆಯಿಂದಲೇ ನೀವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ಅದಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಈಗ ಎಲ್ಲರು ಜೀವನ ಬಂಧನದಲ್ಲಿದ್ದಾರೆ. ಇಡೀ ಪ್ರಪಂಚ ಮತ್ತು ವಿಶೇಷವಾಗಿ ಭಾರತವು ರಾವಣನ ಶೋಕವಾಟಿಕೆಯಲ್ಲಿದೆ. ಕೇವಲ ರಾವಣನು ಲಂಕೆಯಲ್ಲಿದ್ದನು ಮತ್ತು ರಾಮನು ಭಾರತದಲ್ಲಿದ್ದನು, ರಾವಣನು ಬಂದು ಸೀತೆಯನ್ನು ಅಪಹರಿಸಿದನು ಎಂದಲ್ಲ. ಇವೆಲ್ಲವೂ ದಂತ ಕಥೆಗಳಾಗಿವೆ. ಗೀತೆಯು ಮುಖ್ಯವಾಗಿದೆ. ಸರ್ವಶಾಸ್ತ್ರಗಳಲ್ಲಿ ಶಿರೋಮಣಿಯು ಶ್ರೀಮತ ಅರ್ಥಾತ್ ಭಗವಂತನು ತಿಳಿಸಿರುವ ಗೀತೆಯಾಗಿದೆ. ಮನುಷ್ಯರು ಯಾರದೇ ಸದ್ಗತಿ ಮಾಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಜೀವನ್ಮುಕ್ತ ದೇವಿ-ದೇವತೆಗಳಿದ್ದರು, ಅವರು ಈ ಆಸ್ತಿಯನ್ನು ಕಲಿಯುಗದ ಅಂತ್ಯದಲ್ಲಿ ಪಡೆದಿದ್ದರು. ಭಾರತವಾಸಿಗಳಿಗೆ ಇದು ತಿಳಿದಿರಲಿಲ್ಲ ಅಥವಾ ಯಾವುದೇ ಶಾಸ್ತ್ರಗಳಲ್ಲಿಯೂ ಇಲ್ಲ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗಕ್ಕಾಗಿ. ಅದೆಲ್ಲವೂ ಭಕ್ತಿಮಾರ್ಗದ ಜ್ಞಾನವಾಗಿದೆ, ಸದ್ಗತಿ ಮಾರ್ಗದ ಜ್ಞಾನವು ಮನುಷ್ಯ ಮಾತ್ರರಲ್ಲಿ ಇಲ್ಲ. ತಂದೆಯು ತಿಳಿಸುತ್ತಾರೆ - ಮನುಷ್ಯರು ಮನುಷ್ಯರಿಗೇ ಗುರುಗಳಾಗಲು ಸಾಧ್ಯವಿಲ್ಲ, ಯಾವ ಗುರುವೂ ಸದ್ಗತಿ ನೀಡಲು ಸಾಧ್ಯವಿಲ್ಲ. ಆ ಗುರುವು ಭಕ್ತಿ ಮಾಡಿ, ದಾನ ಪುಣ್ಯ ಮಾಡಿ ಎಂದು ಹೇಳುತ್ತಾರೆ. ಭಕ್ತಿಯು ದ್ವಾಪರದಿಂದ ನಡೆದು ಬಂದಿದೆ. ಸತ್ಯ-ತ್ರೇತಾಯುಗದಲ್ಲಿ ಜ್ಞಾನದ ಪ್ರಾಲಬ್ಧವಿರುತ್ತದೆ ಅಂದರೆ ಅಲ್ಲಿ ಈ ಜ್ಞಾನವು ನಡೆದು ಬರುತ್ತದೆಯೆಂದಲ್ಲ. ಯಾವ ಆಸ್ತಿಯು ಭಾರತಕ್ಕೆ ಇತ್ತು ಅದು ತಂದೆಯಿಂದ ಅವರಿಗೆ ಸಂಗಮದಲ್ಲಿಯೇ ಸಿಕ್ಕಿತ್ತು. ಅದು ಪುನಃ ಈಗ ನಿಮಗೆ ಸಿಗುತ್ತಿದೆ. ಭಾರತವಾಸಿಗಳೇ ಯಾವಾಗ ನರಕವಾಸಿಗಳು, ಮಹಾನ್ ದುಃಖಿಯಾಗಿ ಬಿಡುವರೋ ಆಗ ಹೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಕರೆಯುತ್ತಾರೆ. ಯಾರ ದುಃಖಹರ್ತ? ಸರ್ವರ ದುಃಖಹರ್ತನಾಗಿದ್ದಾರೆ ಏಕೆಂದರೆ ಇಡೀ ಪ್ರಪಂಚ ವಿಶೇಷವಾಗಿ ಭಾರತದಲ್ಲಿ ಪಂಚ ವಿಕಾರಗಳಿವೆ. ತಂದೆಯು ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ ಮತ್ತು ಸರ್ವರ ಸದ್ಗತಿದಾತನಾಗುತ್ತೇನೆ. ಅಬಲೆಯರು, ಅಹಲ್ಯೆಯರು, ಗಣಿಕೆಯರು ಮತ್ತು ಗುರುಗಳು ಯಾರೆಲ್ಲರೂ ಇದ್ದಾರೆಯೋ ಅವರ ಉದ್ಧಾರವನ್ನೂ ಸಹ ನಾನೇ ಮಾಡಬೇಕಾಗಿದೆ ಏಕೆಂದರೆ ಇದು ಪತಿತ ಪ್ರಪಂಚವಾಗಿದೆ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರು ಸ್ವರ್ಗದ ಮಾಲೀಕರಾಗಿದ್ದರು ಎಂಬುದನ್ನು ಭಾರತವಾಸಿಗಳು ತಿಳಿದುಕೊಂಡಿಲ್ಲ. ಪತಿತ ಖಂಡವೆಂದರೆ ಅಸತ್ಯ ಖಂಡ, ಪಾವನ ಖಂಡವು ಸತ್ಯ ಖಂಡವಾಗಿದೆ. ಭಾರತವೇ ಪಾವನ ಖಂಡವಾಗಿತ್ತು. ಈ ಲಕ್ಷ್ಮೀ-ನಾರಾಯಣರ ಸೂರ್ಯವಂಶಿ ರಾಜಧಾನಿಯಿತ್ತು, ಈ ಭಾರತವು ಅವಿನಾಶಿ ಖಂಡವಾಗಿದೆ. ಇದೆಂದೂ ವಿನಾಶವಾಗುವುದಿಲ್ಲ. ಯಾವಾಗ ಇವರ ರಾಜ್ಯವಿತ್ತೋ ಆಗ ಮತ್ತೆಯಾವುದೇ ಖಂಡವಿರಲಿಲ್ಲ. ಅವೆಲ್ಲವೂ ನಂತರದಲ್ಲಿ ಬರುತ್ತವೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಎಲ್ಲದಕ್ಕಿಂತ ದೊಡ್ಡ ತಪ್ಪು ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಸತ್ಯಯುಗವೂ ಸಹ ಲಕ್ಷಾಂತರ ವರ್ಷಗಳಿರಲು ಸಾಧ್ಯವಿಲ್ಲ. ಕಲ್ಪದ ಆಯಸ್ಸು ಕೇವಲ 5000 ವರ್ಷಗಳಾಗಿದೆ, ಇದಕ್ಕೆ ಮನುಷ್ಯರು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಹೇಳಿ ಬಿಡುತ್ತಾರೆ. ಮನುಷ್ಯರನ್ನು ನಾಯಿ, ಬೆಕ್ಕು ಇತ್ಯಾದಿಗಳನ್ನಾಗಿ ಮಾಡಿ ಬಿಟ್ಟಿದ್ದಾರೆ ಆದರೆ ಅವುಗಳ ಜನ್ಮವೇ ಬೇರೆಯಾಗಿದೆ. 84 ಲಕ್ಷ ಪ್ರಕಾರದ ಜೀವ ಜಂತುಗಳಿವೆ. ಮನುಷ್ಯರ ಯೋನಿಯು ಒಂದೇ ಆಗಿದೆ, ಅವರದೇ 84 ಜನ್ಮಗಳಿವೆ. |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ, ಭಾರತವಾಸಿಗಳು ಡ್ರಾಮಾ ಪ್ಲಾನನುಸಾರ ತಮ್ಮ ಧರ್ಮ ಮರೆತು ಹೋಗಿದ್ದೀರಿ. ಕಲಿಯುಗದ ಅಂತ್ಯದಲ್ಲಿ ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ಪುನಃ ತಂದೆಯು ಬಂದು ಸಂಗಮದಲ್ಲಿ ಪಾವನರನ್ನಾಗಿ ಮಾಡುತ್ತಾರೆ. ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ ನಂತರ ಪಾತ್ರವು ಸುಖಧಾಮದಲ್ಲಿರುವುದು. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ಭಾರತವಾಸಿಗಳೇ ಸ್ವರ್ಗವಾಸಿಯಾಗಿದ್ದಿರಿ. ನಂತರ ನೀವು 84 ಜನ್ಮಗಳ ಏಣಿಯನ್ನು ಇಳಿಯುತ್ತೀರಿ. ಸತೋದಿಂದ ರಜೋ, ತಮೋದಲ್ಲಿ ಖಂಡಿತ ಬರಬೇಕಾಗಿದೆ. ನೀವು ದೇವತೆಗಳಷ್ಟು ಧನವಂತರು, ಆರೋಗ್ಯವಂತರು, ಐಶ್ವರ್ಯವಂತರು ಮತ್ತ್ಯಾರೂ ಆಗಲು ಸಾಧ್ಯವಿಲ್ಲ. ಭಾರತವು ಎಷ್ಟು ಸಾಹುಕಾರವಾಗಿತ್ತು, ವಜ್ರ ರತ್ನಗಳಂತೂ ದೊಡ್ಡ-ದೊಡ್ಡ ಕಲ್ಲುಗಳ ತರಹ ಇದ್ದವು. ತಂದೆಯು ನೀವು ಮಕ್ಕಳಿಗೆ ಸ್ಮೃತಿ ತರಿಸುತ್ತಿದ್ದಾರೆ - ಮಕ್ಕಳೇ, ನಾನು ನಿಮ್ಮನ್ನು ಎಷ್ಟೊಂದು ಸಾಹುಕಾರರನ್ನಾಗಿ ಮಾಡಿದ್ದೆನು, ನೀವು ಸರ್ವ ಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದಿರಿ, ಯಥಾ ರಾಜ-ರಾಣಿ ತಥಾ ಪ್ರಜಾ..... ಇವರಿಗೆ ಭಗವಾನ್-ಭಗವತಿಯೆಂದು ಹೇಳಬಹುದು. ಆದರೆ ತಂದೆಯು ತಿಳಿಸಿದ್ದಾರೆ - ಭಗವಂತನು ಒಬ್ಬರೇ ಆಗಿದ್ದಾರೆ. ಕೇವಲ ಈಶ್ವರ ಅಥವಾ ಪ್ರಭು ಎಂದು ಹೇಳಿದಾಗ ಅವರು ಎಲ್ಲಾ ಆತ್ಮರ ತಂದೆಯೆಂದು ನೆನಪು ಬರುವುದಿಲ್ಲ. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ. ಅವರು ತಿಳಿಸುತ್ತಾರೆ - ನೀವು ಭಾರತವಾಸಿಗಳು ಜಯಂತಿಯನ್ನಾಚರಿಸುತ್ತೀರಿ. ಆದರೆ ಮೂಲತಃ ತಂದೆಯು ಯಾವಾಗ ಬಂದಿದ್ದರು ಎಂಬುದು ಯಾರಿಗೂ ಗೊತ್ತಿಲ್ಲ. ಈಗ ಇರುವುದೇ ಕಲಿಯುಗ, ಕಲ್ಲು ಬುದ್ಧಿಯವರು. ಪಾರಸ ನಾಥರಾಗಿದ್ದಿರಿ, ಈ ಸಮಯದಲ್ಲಿ ಕಲ್ಲು ಬುದ್ಧಿಯವರಾಗಿದ್ದಿರಿ. ನಾಥ ಎಂದು ಹೇಳುವುದಿಲ್ಲ ಏಕೆಂದರೆ ರಾಜ-ರಾಣಿಯಂತೂ ಇಲ್ಲ. ಮೊದಲು ಇಲ್ಲಿ ದೈವೀ ರಾಜಾಸ್ಥಾನವಿತ್ತು, ನಂತರ ಆಸುರೀ ರಾಜ್ಯವಾಗಿ ಬಿಡುತ್ತದೆ. ಇದು ಆಟವಾಗಿದೆ ಆದರೆ ಅದು ಹದ್ದಿನ ಡ್ರಾಮಾ, ಇದು ಬೇಹದ್ದಿನ ಡ್ರಾಮಾ ಆಗಿದೆ. ವಿಶ್ವದ ಚರಿತ್ರೆ, ಭೂಗೋಳವನ್ನು ಆದಿಯಿಂದ ಅಂತ್ಯದವರೆಗೆ ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾರೂ ತಿಳಿದುಕೊಂಡಿಲ್ಲ. ಭಾರತದಲ್ಲಿ ದೇವಿ-ದೇವತೆಗಳಿದ್ದಾಗ ಇಡೀ ಸೃಷ್ಟಿಯ ಮಾಲೀಕರಾಗಿದ್ದರು ಮತ್ತು ಭಾರತದಲ್ಲಿಯೇ ಇದ್ದರು. ತಂದೆಯು ಭಾರತವಾಸಿಗಳಿಗೆ ಸ್ಮೃತಿ ತರಿಸುತ್ತಾರೆ - ಸತ್ಯಯುಗದಲ್ಲಿ ಆದಿ ಸನಾತನ ದೇವಿ-ದೇವತೆಗಳ ಧರ್ಮ-ಕರ್ಮ ಶ್ರೇಷ್ಠವಾಗಿತ್ತು ನಂತರ 84 ಜನ್ಮಗಳಲ್ಲಿ ಇಳಿಯಬೇಕಾಯಿತು. ಇದನ್ನು ತಂದೆಯು ಕುಳಿತು ಕಥೆಯಂತೆ ತಿಳಿಸುತ್ತಾರೆ - ಈಗ ನಿಮ್ಮದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಕೇವಲ ಒಬ್ಬರ ಮಾತಲ್ಲ ಅಥವಾ ಯುದ್ಧದ ಮೈದಾನವೂ ಇಲ್ಲ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೆಂದೂ ಸಹ ಭಾರತವಾಸಿಗಳು ಮರೆತು ಹೋಗಿದ್ದಾರೆ. ಸತ್ಯಯುಗದ ಆಯಸ್ಸನ್ನು ಬಹಳ ಉದ್ದಗಲವಾಗಿ ಬರೆದಿರುವುದರಿಂದ ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. |
ತಂದೆಯು ತಿಳಿಸುತ್ತಾರೆ - ಮನುಷ್ಯರಿಗೆ ಭಗವಂತನೆಂದು ತಿಳಿಯಲು ಸಾಧ್ಯವಿಲ್ಲ. ಮನುಷ್ಯರು ಮನುಷ್ಯರ ಸದ್ಗತಿ ಮಾಡಲು ಸಾಧ್ಯವಿಲ್ಲ. ಸರ್ವರ ಸದ್ಗತಿದಾತ, ಪತಿತರಿಂದ ಪಾವನಕರ್ತ ಒಬ್ಬರೇ ಆಗಿದ್ದಾರೆಂದು ಗಾಯನವಿದೆ. ಇದು ಅಸತ್ಯ ಖಂಡವಾಗಿದೆ, ಸತ್ಯ ತಂದೆಯು ಸತ್ಯ ಖಂಡವನ್ನು ಸ್ಥಾಪನೆ ಮಾಡುವವರಾಗಿದ್ದಾರೆ. ಭಕ್ತರು ಪೂಜೆ ಮಾಡುತ್ತಾರೆ ಆದರೆ ಭಕ್ತಿಮಾರ್ಗದಲ್ಲಿ ಯಾರದೆಲ್ಲಾ ಪೂಜೆ ಮಾಡುತ್ತಾ ಬಂದಿರುವರೋ ಅವರಲ್ಲಿ ಒಬ್ಬರ ಚರಿತ್ರೆಯನ್ನೂ ಸಹ ತಿಳಿದುಕೊಂಡಿಲ್ಲ. ಶಿವ ಜಯಂತಿಯನ್ನಾಚರಿಸುತ್ತಾರೆ, ತಂದೆಯು ಹೊಸ ಪ್ರಪಂಚದ ರಚಯಿತ, ಪರಮಪಿತ ಪರಮಾತ್ಮ, ಬೇಹದ್ದಿನ ಸುಖ ಕೊಡುವವರಾಗಿದ್ದಾರೆ. ಸತ್ಯಯುಗದಲ್ಲಿ ಸುಖವಿತ್ತು, ಅದನ್ನು ಯಾರು ಮತ್ತು ಹೇಗೆ ಸ್ಥಾಪನೆ ಮಾಡಿದರು? ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದರು. ಭ್ರಷ್ಟಾಚಾರಿಗಳನ್ನು ಶ್ರೇಷ್ಠಾಚಾರಿ ದೇವತೆಗಳನ್ನಾಗಿ ಮಾಡಿದರು. ಇದಂತೂ ತಂದೆಯ ಕರ್ತವ್ಯವೇ ಆಗಿದೆ. ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ನೀವು ಸ್ವರ್ಗದ ಮಾಲೀಕರಾಗುತ್ತೀರಿ ಮತ್ತೆ ನಿಮ್ಮನ್ನು ಪತಿತರನ್ನಾಗಿ ಯಾರು ಮಾಡುತ್ತಾರೆ? ಈ ರಾವಣ. ಸುಖ-ದುಃಖವನ್ನು ಈಶ್ವರನೇ ಕೊಡುತ್ತಾರೆಂದು ಮನುಷ್ಯರು ಹೇಳಿ ಬಿಡುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ನಾನಂತೂ ಎಲ್ಲರಿಗೆ ಸುಖವನ್ನೇ ಕೊಡುತ್ತೇನೆ. ನಂತರ ಅರ್ಧಕಲ್ಪ ನೀವು ತಂದೆಯನ್ನೇ ಸ್ಮರಣೆ ಮಾಡುವುದಿಲ್ಲ. ಮತ್ತೆ ಯಾವಾಗ ರಾವಣ ರಾಜ್ಯವಾಗುವುದೋ ಆಗ ಎಲ್ಲರ ಪೂಜೆ ಮಾಡತೊಡಗುತ್ತೀರಿ. ನಿಮ್ಮದು ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಬಾಬಾ, ನಾವು ಎಷ್ಟು ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ನೀವು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ನೀವು 21 ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು ಅರ್ಥಾತ್ ಸತ್ಯ-ಸತ್ಯ ತಂದೆಯಿಂದ ಸತ್ಯ ಕಥೆ, ನರನಿಂದ ನಾರಾಯಣನಾಗುವ ಕಥೆಯನ್ನು ಕೇಳುತ್ತೀರಿ. ಇದು ಜ್ಞಾನ, ಅದು ಭಕ್ತಿಯಾಗಿದೆ. ಈ ಆತ್ಮಿಕ ಜ್ಞಾನವನ್ನು ಪರಮಾತ್ಮನೇ ಬಂದು ಕೊಡುತ್ತಾರೆ. ಈಗ ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ. ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ನನ್ನೊಬ್ಬನನ್ನೇ ನೆನಪು ಮಾಡಿ. ಶಿವ ತಂದೆಯಂತೂ ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಆತ್ಮಗಳೆಲ್ಲರೂ ಪರಮಧಾಮದಿಂದ ಪಾತ್ರವನ್ನಭಿನಯಿಸಲು ಶರೀರದಲ್ಲಿ ಬರುತ್ತೀರಿ, ಇದಕ್ಕೆ ಕರ್ಮ ಕ್ಷೇತ್ರವೆಂದು ಹೇಳಲಾಗುತ್ತದೆ. ಬಹಳ ದೊಡ್ಡ ಆಟವಾಗಿದೆ, ಆತ್ಮದಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ, ಅದರನುಸಾರವೇ ಮನುಷ್ಯರಿಗೆ ಒಳ್ಳೆಯ ಅಥವಾ ಕೆಟ್ಟ ಜನ್ಮವು ಸಿಗುತ್ತದೆ. ಇವರು ಯಾರು ಪಾವನರಾಗಿದ್ದರೋ ಈಗ ಪತಿತರಾಗಿದ್ದಾರೆ. ತತ್ತ್ವಂ. ತಂದೆಯಾದ ನಾನು ಈ ಪರ ರಾವಣನ ಪ್ರಪಂಚ, ಪತಿ ತಶರೀರದಲ್ಲಿ ಬರಬೇಕಾಗುತ್ತದೆ ಮತ್ತು ಯಾರು ಮೊದಲ ನಂಬರಿನಲ್ಲಿ ಹೋಗಬೇಕಾಗಿದೆಯೋ ಅವರ ಶರೀರದಲ್ಲಿಯೇ ಬರುತ್ತೇನೆ. ಸೂರ್ಯವಂಶಿಗಳೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಬ್ರಹ್ಮಾ ಮತ್ತು ಬ್ರಾಹ್ಮಣರಾಗಿದ್ದಾರೆ. ತಂದೆಯು ನಿತ್ಯವೂ ತಿಳಿಸುತ್ತಾರೆ ಆದರೆ ಕಲ್ಲು ಬುದ್ಧಿಯವರನ್ನು ಪಾರಸ ಬುದ್ಧಿಯವರನ್ನಾಗಿ ಮಾಡುವುದು ಚಿಕ್ಕಮ್ಮನ ಮನೆಯಂತಲ್ಲ. ಹೇ ಆತ್ಮರೇ, ಈಗ ದೇಹೀ-ಅಭಿಮಾನಿಯಾಗಿರಿ. ಒಬ್ಬ ತಂದೆಯನ್ನು ನೆನಪು ಮಾಡಿ ಮತ್ತು ರಾಜಧಾನಿಯನ್ನು ನೆನಪು ಮಾಡಿ. ದೇಹದ ಸಂಬಂಧಗಳನ್ನು ಬಿಡಿ ಆಗ ಪಾರಸ ಬುದ್ಧಿಯವರಾಗಿ ಬಿಡುತ್ತೀರಿ. ಎಲ್ಲರೂ ಸಾಯಲೇಬೇಕಾಗಿದೆ. ಎಲ್ಲರದೂ ಈಗ ವಾನಪ್ರಸ್ಥ ಸ್ಥಿತಿಯಾಗಿದೆ. ಒಬ್ಬ ಸದ್ಗುರುವಿನ ವಿನಃ ಮತ್ತ್ಯಾರೂ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಹೇ ಭಾರತವಾಸಿ ಮಕ್ಕಳೇ, ನೀವು ಮೊದಲು ಪಾರಸ ಬುದ್ಧಿಯವರಾಗಿದ್ದಿರಿ, ಆತ್ಮರು ಪರಮಾತ್ಮನಿಂದ ಬಹಳ ಕಾಲ ಅಗಲಿದ್ದರು..... ಎಂದು ಗಾಯನವಿದೆ. ಅಂದಾಗ ಮೊಟ್ಟ ಮೊದಲನೇ ಭಾರತವಾಸಿ ದೇವಿ-ದೇವತಾ ಧರ್ಮದವರು ಬಂದಿದ್ದೀರಿ, ಅನ್ಯ ಧರ್ಮದವರು ಕೊನೆಯಲ್ಲಿ ಬಂದಿದ್ದಾರೆ. ಮತ್ತೆ ಅವರ ಜನ್ಮಗಳೂ ಕಡಿಮೆಯಿರುತ್ತವೆ. ಇಡೀ ಸೃಷ್ಟಿಯ ವೃಕ್ಷವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ಯಾರು ಧಾರಣೆ ಮಾಡುವರೋ ಅವರಿಗಾಗಿ ಬಹಳ ಸಹಜವಾಗಿದೆ. ಆತ್ಮವು ಧಾರಣೆ ಮಾಡಿಕೊಳ್ಳುತ್ತದೆ, ಆತ್ಮವೇ ಪಾಪಾತ್ಮ, ಪುಣ್ಯಾತ್ಮನಾಗುತ್ತದೆ. ನಿಮ್ಮದು ಅಂತಿಮ 84ನೇ ಜನ್ಮವಾಗಿದೆ. ನೀವು ವಾನಪ್ರಸ್ಥ ಸ್ಥಿತಿಯಲ್ಲಿದ್ದೀರಿ. ವಾನಪ್ರಸ್ಥ ಸ್ಥಿತಿಯವರು ಮಂತ್ರಕ್ಕಾಗಿ ಗುರುಗಳನ್ನು ಮಾಡಿಕೊಳ್ಳುತ್ತಾರೆ. ನೀವೀಗ ಹೊರಗಿನ ಮನುಷ್ಯರನ್ನು ಗುರುಗಳನ್ನಾಗಿ ಮಾಡುವಂತಿಲ್ಲ. ನೀಮ್ಮೆಲ್ಲರ ತಂದೆ, ಶಿಕ್ಷಕ, ಸದ್ಗುರು ನಾನಾಗಿದ್ದೇನೆ. ಹೇ ಪತಿತ-ಪಾವನ ಶಿವ ತಂದೆಯೆಂದು ನನಗೇ ಹೇಳುತ್ತಾರೆ. ಈಗ ಸ್ಮೃತಿ ಬಂದಿದೆ - ಎಲ್ಲಾ ಆತ್ಮರಿಗೆ ಅವರು ತಂದೆಯಾಗಿದ್ದಾರೆ, ಆತ್ಮವು ಸತ್ಯ ಚೈತನ್ಯವಾಗಿದೆ ಏಕೆಂದರೆ ಅಮರನಾಗಿದೆ. ಎಲ್ಲಾ ಆತ್ಮರಲ್ಲಿ ಪಾತ್ರವು ತುಂಬಲ್ಪಟ್ಟಿದೆ. ತಂದೆಯೂ ಸಹ ಸತ್ಯ, ಚೈತನ್ಯವಾಗಿದ್ದಾರೆ. ಮನುಷ್ಯ ಸೃಷ್ಟಿಯ ಬೀಜ ರೂಪನಾಗಿರುವ ಕಾರಣ ನಾನು ಇಡೀ ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ ಆದ್ದರಿಂದ ನನಗೆ ಜ್ಞಾನಪೂರ್ಣನೆಂದು ಹೇಳುತ್ತಾರೆ. ನಿಮಗೂ ಸಹ ಬೀಜದಿಂದ ಹೇಗೆ ವೃಕ್ಷವಾಗುತ್ತದೆ ಎಂಬುದರ ಸಂಪೂರ್ಣ ಜ್ಞಾನವಿದೆ. ವೃಕ್ಷವು ವೃದ್ಧಿಯಾಗುವುದರಲ್ಲಿ ಸಮಯ ಹಿಡಿಸುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಬೀಜ ರೂಪನಾಗಿದ್ದೇನೆ, ಅಂತಿಮದಲ್ಲಿ ಎಲ್ಲವೂ ಜಡಜಡೀಭೂತ ಸ್ಥಿತಿಯನ್ನು ಹೊಂದುತ್ತದೆ. ಈಗ ನೋಡಿ, ದೇವಿ-ದೇವತಾ ಧರ್ಮದ ಬುನಾದಿಯೇ ಇಲ್ಲ, ಪ್ರಾಯಲೋಪವಾಗಿದೆ. ಯಾವಾಗ ದೇವಿ-ದೇವತಾ ಧರ್ಮವು ಮರೆಯಾಗುವುದೋ ಆಗ ತಂದೆಯು ಬರಬೇಕಾಗುತ್ತದೆ. ಒಂದು ಧರ್ಮದ ಸ್ಥಾಪನೆ ಮಾಡಿ ಉಳಿದೆಲ್ಲದರ ವಿನಾಶ ಮಾಡಿಸುತ್ತಾರೆ. ಪ್ರಜಾಪಿತ ಬ್ರಹ್ಮನ ಮೂಲಕ ತಂದೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವು ಭ್ರಷ್ಟಾಚಾರಿಗಳಿಂದ ಶ್ರೇಷ್ಠಾಚಾರಿ ದೇವತೆಗಳಾಗಲು ಬಂದಿದ್ದೀರಿ. ಈ ನಾಟಕವು ಮಾಡಲ್ಪಟ್ಟಿದೆ. ಇದೆಂದೂ ಅಂತ್ಯವಾಗುವುದಿಲ್ಲ. ತಂದೆಯು ಬರುತ್ತಾರೆ ಆತ್ಮರೆಲ್ಲರೂ ಮೂಲವತನದ ನಿವಾಸಿಗಳು ಪರಸ್ಪರ ಸಹೋದರರಾಗಿದ್ದೀರಿ, ಆ ಒಬ್ಬ ತಂದೆಯನ್ನೇ ಎಲ್ಲರೂ ನೆನಪು ಮಾಡುತ್ತಾರೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು. ರಾವಣ ರಾಜ್ಯದಲ್ಲಿ ದುಃಖವಿದೆ. ಇಲ್ಲಿ ಸ್ಮರಣೆ ಮಾಡುತ್ತಾರೆ ಅಂದಾಗ ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಅವರ ಮಹಿಮೆಯಿದೆ. ತಂದೆಯು ಬರದೇ ಇದ್ದರೆ ಪಾವನರನ್ನಾಗಿ ಯಾರು ಮಾಡುವರು? ಕ್ರಿಶ್ಚಿಯನ್, ಇಸ್ಲಾಮಿ, ಮೊದಲಾದ ಯಾರೆಲ್ಲಾ ಇದ್ದಾರೆಯೋ ಎಲ್ಲರೂ ಈ ಸಮಯದಲ್ಲಿ ತಮೋಪ್ರಧಾನರಾಗಿದ್ದಾರೆ. ಎಲ್ಲರೂ ಪುನರ್ಜನ್ಮವನ್ನು ಅವಶ್ಯವಾಗಿ ತೆಗೆದುಕೊಳ್ಳಬೇಕಾಗಿದೆ. ಈಗ ಪುನರ್ಜನ್ಮವು ನರಕದಲ್ಲಿಯೇ ಸಿಗುತ್ತದೆ. ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆಂದಲ್ಲ. ಹೇಗೆ ಹಿಂದೂ ಧರ್ಮದವರು ಯಾರಾದರೂ ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಅಂದಮೇಲೆ ಅವಶ್ಯವಾಗಿ ನರಕದಲ್ಲಿದ್ದರಲ್ಲವೆ. ಈಗ ಸ್ವರ್ಗದಲ್ಲಿ ಹೋದರು ಅಂದಮೇಲೆ ನಿಮ್ಮ ಬಾಯಲ್ಲಿ ಗುಲಾಬ್ ಜಾಮೂನ್. ಯಾವಾಗ ಅವರು ಸ್ವರ್ಗವಾಸಿಯಾದರು ಅವರಿಗೆ ನರಕದ ಆಸುರೀ ವೈಭವವನ್ನು ಏಕೆ ತಿನ್ನಿಸುತ್ತೀರಿ? ಶ್ರಾದ್ಧ ಮಾಡುತ್ತಾರಲ್ಲವೆ. ಬಂಗಾಳದಲ್ಲಿ ಮೀನು, ಮೊಟ್ಟೆ ಇತ್ಯಾದಿಗಳೆಲ್ಲವನ್ನೂ ತಿನ್ನಿಸುತ್ತಾರೆ. ಅರೆ! ಅವರಿಗೆ ಇದೆಲ್ಲವನ್ನೂ ತಿನ್ನುವ ಅವಶ್ಯಕತೆಯಾದರೂ ಏನಿದೆ? ಯಾವಾಗ ಮೊದಲ ನಂಬರಿನವರೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಅಂದಮೇಲೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈ ಜ್ಞಾನದಲ್ಲಿ ಯಾವುದೇ ಕಷ್ಟವಿಲ್ಲ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಪರಿಶ್ರಮವಿದೆ. ರಾಮ, ರಾಮ ಎಂದು ಜಪಿಸುತ್ತಾ ರೋಮಾಂಚನವಾಗಿ ನಿಂತು ಬಿಡುತ್ತಾರೆ. ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಈ ಸೂರ್ಯ, ಚಂದ್ರ ಮೊದಲಾದ ಯಾವ ಪ್ರಕಾಶವನ್ನು ನೀಡುವವರಿದ್ದಾರೆ, ಇವರೇನೂ ದೇವತೆಗಳಲ್ಲ. ವಾಸ್ತವದಲ್ಲಿ ಜ್ಞಾನ ಸೂರ್ಯ, ಜ್ಞಾನ ಚಂದ್ರಮ ಮತ್ತು ಜ್ಞಾನ ನಕ್ಷತ್ರಗಳೆಂಬುದು ಇಲ್ಲಿನ ಮಹಿಮೆಯಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರ ತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಅಂತಿಮ 84ನೇ ಜನ್ಮದಲ್ಲಿ ಯಾವುದೇ ಪಾಪಕರ್ಮ (ವಿಕರ್ಮ) ಮಾಡಬಾರದು. ಪುಣ್ಯಾತ್ಮರಾಗುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ಸಂಪೂರ್ಣ ಪಾವನರಾಗಬೇಕಾಗಿದೆ. |
2. ತನ್ನ ಬುದ್ಧಿಯನ್ನು ಪಾರಸವನ್ನಾಗಿ ಮಾಡಿಕೊಳ್ಳಲು ದೇಹದ ಎಲ್ಲಾ ಸಂಬಂಧಿಗಳನ್ನು ಮರೆತು ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ. |
ಓಂ ಶಾಂತಿ. ಭಕ್ತರು ಹೇಳುತ್ತಾರೆ - ನಾವು ಬಹಳ ಕಂಗಾಲರಾಗಿದ್ದೇವೆ. ಹೇ ತಂದೆಯೇ ನಮ್ಮೆಲ್ಲರ ಜೋಳಿಗೆಯನ್ನು ತುಂಬಿಸಿ. ಜನ್ಮ-ಜನ್ಮಗಳಿಂದಲೂ ಭಕ್ತರು ಹಾಡುತ್ತಿರುತ್ತಾರೆ, ಸತ್ಯಯುಗದಲ್ಲಿ ಭಕ್ತಿಯಿರುವುದಿಲ್ಲ. ಅಲ್ಲಿ ಪಾವನ ದೇವಿ-ದೇವತೆಗಳಿರುತ್ತಾರೆ. ಭಕ್ತರಿಗೆಂದೂ ದೇವತೆಯೆಂದು ಹೇಳಲಾಗುವುದಿಲ್ಲ. ಯಾರು ಸ್ವರ್ಗವಾಸಿ ದೇವಿ-ದೇವತೆಗಳಾಗುವರೋ ಅವರೇ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನರಕವಾಸಿಗಳು, ಪೂಜಾರಿಗಳು, ಭಕ್ತರು ಕಂಗಾಲರಾಗುತ್ತಾರೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ತಂದೆಯನ್ನು ಯಾರೊಬ್ಬರೂ ಅರಿತುಕೊಂಡಿಲ್ಲ. ಸ್ವಯಂ ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡುವರು. ಭಗವಂತನಿಗೇ ತಂದೆಯೆಂದು ಹೇಳಲಾಗುತ್ತದೆ. ಎಲ್ಲಾ ಭಕ್ತರಿಗೆ ಒಬ್ಬರೇ ಭಗವಂತನಿರುತ್ತಾರೆ, ಉಳಿದೆಲ್ಲರೂ ಭಕ್ತರಾಗಿದ್ದಾರೆ. ಚರ್ಚ್ ಮೊದಲಾದುವುಗಳಿಗೆ ಹೋಗುತ್ತಾರೆಂದರೆ ಅವಶ್ಯವಾಗಿ ಭಕ್ತರಾದರಲ್ಲವೆ. ಈ ಸಮಯದಲ್ಲಿ ಎಲ್ಲರೂ ಪತಿತ, ತಮೋಪ್ರಧಾನವಾಗಿದ್ದಾರೆ ಆದ್ದರಿಂದ ಹೇ ಪತಿತರನ್ನು ಪಾವನ ಮಾಡುವ ತಂದೆಯೇ ಬನ್ನಿ. ನಾವು ಭಕ್ತರ ಜೋಳಿಗೆಯನ್ನು ತುಂಬಿಸಿ ಎಂದು ಕರೆಯುತ್ತಾರೆ. ಭಕ್ತರು ಭಗವಂತನಿಂದ ಹಣವನ್ನು ಬೇಡುತ್ತಾರೆ. ನೀವು ಮಕ್ಕಳು ಏನು ಬೇಡುತ್ತೀರಿ? ತಂದೆಯೇ ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿ ಎಂದು ನೀವು ಹೇಳುತ್ತೀರಿ. ಅಲ್ಲಂತೂ ಅಪಾರ ಧನವಿರುತ್ತದೆ. ವಜ್ರ ವೈಡೂರ್ಯಗಳ ಮಹಲುಗಳಿರುತ್ತವೆ. ನೀವೀಗ ತಿಳಿದುಕೊಂಡಿದ್ದೀರಿ - ಭಗವಂತನ ಮೂಲಕ ನಾವು ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ಇದು ಸತ್ಯವಾದ ಗೀತೆಯಾಗಿದೆ, ಆ ಗೀತೆಯಲ್ಲ. ಅವರಂತೂ ಪುಸ್ತಕ ಇತ್ಯಾದಿಗಳನ್ನು ಭಕ್ತಿಮಾರ್ಗಕ್ಕಾಗಿ ಮಾಡಿಸಿದ್ದಾರೆ. ಅವರಿಗೆ ಭಗವಂತನು ಜ್ಞಾನವನ್ನು ಕೊಡಲಿಲ್ಲ. ಭಗವಂತನು ಈ ಸಮಯದಲ್ಲಿಯೇ ನರನಿಂದ ನಾರಾಯಣರನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ರಾಜನ ಜೊತೆ ಪ್ರಜೆಗಳೂ ಅವಶ್ಯವಾಗಿ ಇರುವರು. ಕೇವಲ ಲಕ್ಷ್ಮೀ-ನಾರಾಯಣರೇ ಆಗುವುದಿಲ್ಲ, ಇಡೀ ರಾಜಧಾನಿಯೇ ತಯಾರಾಗುತ್ತದೆ. ಭಗವಂತ ಯಾರೆಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಮತ್ತ್ಯಾವ ಮನುಷ್ಯ ಮಾತ್ರರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಓ ಗಾಡ್ ಫಾದರ್ ಎಂದು ನೀವು ಹೇಳುತ್ತೀರಿ ಅಂದಮೇಲೆ ತಿಳಿಸಿ, ನಿಮ್ಮ ತಂದೆಯು ನಾಮ-ರೂಪ, ದೇಶ, ಕಾಲವು ಏನಾಗಿದೆ? ಭಗವಂತನನ್ನಾಗಲಿ, ಅವರ ರಚನೆಯನ್ನಾಗಲಿ ಅರಿತುಕೊಂಡಿಲ್ಲ, ತಂದೆಯು ಬಂದು ತಿಳಿಸುತ್ತಾರೆ. ಕಲ್ಪ-ಕಲ್ಪದ ಸಂಗಮದಲ್ಲಿ ಬರುತ್ತೇನೆ. ಇಡೀ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ನಾನು “ರಚಯಿತ'' ನು ಬಂದು ತಿಳಿಸುತ್ತೇನೆ. ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆ, ಬರಲು ಸಾಧ್ಯವಿಲ್ಲವೆಂದು ಕೆಲವರು ಹೇಳುತ್ತಾರೆ ಆದರೆ ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ, ನಿರಾಕಾರನ ಶಿವ ಜಯಂತಿಯ ಗಾಯನವಿದೆ ಮತ್ತು ಕೃಷ್ಣ ಜಯಂತಿಯ ಗಾಯನವೂ ಇದೆ. ಈಗ ಶಿವ ಜಯಂತಿಯು ಯಾವಾಗ ಆಗುತ್ತದೆ ಎಂಬುದು ತಿಳಿದಿರಬೇಕಲ್ಲವೆ. ಹೇಗೆ ಕ್ರಿಸ್ತನ ಜನ್ಮವು ಯಾವಾಗ ಆಯಿತು? ಕ್ರಿಶ್ಚಿಯನ್ ಧರ್ಮವು ಯಾವಾಗ ಆಯಿತು ಎಂಬುದು ಕ್ರಿಶ್ಚಿಯನ್ನರಿಗೆ ತಿಳಿದಿದೆ. ಇದಂತೂ ಭಾರತದ ಮಾತಾಗಿದೆ ಅಂದಾಗ ಭಗವಂತನು ಭಾರತದ ಜೋಳಿಗೆಯನ್ನು ಯಾವಾಗ ತುಂಬಿಸುತ್ತಾರೆ? ಹೇ ಭಗವಂತನೇ, ಜೋಳಿಗೆಯನ್ನು ತುಂಬಿಸಿ, ಸದ್ಗತಿಯಲ್ಲಿ ಕರೆದುಕೊಂಡು ಹೋಗು ಏಕೆಂದರೆ ನಾವು ದುರ್ಗತಿಯಲ್ಲಿದ್ದೇವೆ, ತಮೋಪ್ರಧಾನರಾಗಿದ್ದೇವೆ ಎಂದು ಭಕ್ತರು ಕೂಗುತ್ತಾರೆ. ಆತ್ಮವೇ ಶರೀರದ ಜೊತೆ ಅನುಭವಿಸುತ್ತದೆ. ಆತ್ಮವು ನಿರ್ಲೇಪವೆಂದು ಕೆಲವರು ಮನುಷ್ಯರು, ಸಾಧು-ಸಂತರು ಹೇಳುತ್ತಾರೆ. ಮತ್ತೆ ಇದನ್ನೂ ಹೇಳುತ್ತಾರೆ - ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವು ಆತ್ಮದಲ್ಲಿರುತ್ತದೆ, ಅದರ ಆಧಾರದ ಮೇಲೆ ಆತ್ಮವು ಜನ್ಮ ಪಡೆಯುತ್ತದೆ. ಮತ್ತೆ ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ. ಇದನ್ನು ಅರ್ಥ ಮಾಡಿಸಿಲು ಯಾರೂ ಬುದ್ಧಿವಂತ ಮನುಷ್ಯರಿಲ್ಲ. ಅವರಲ್ಲಿಯೂ ಅನೇಕ ಮತಗಳಿವೆ. ಯಾರು ಮನೆಯಿಂದ ಮುನಿಸಿಕೊಂಡು ಹೋಗುವರೋ ಅವರು ಶಾಸ್ತ್ರಗಳನ್ನು ರಚಿಸುತ್ತಾರೆ. ಶ್ರೀಮತ್ಭಗವದ್ಗೀತೆಯು ಒಂದೇ ಆಗಿದೆ. ವ್ಯಾಸನು ಯಾವ ಶ್ಲೋಕ ಇತ್ಯಾದಿಗಳನ್ನು ರಚಿಸಿದರೋ ಅದೇನೂ ಭಗವಂತನು ತಿಳಿಸಿರುವುದಲ್ಲ. ಭಗವಂತ ನಿರಾಕಾರ ಯಾರು ಜ್ಞಾನ ಸಾಗರನಾಗಿದ್ದಾರೆಯೋ ಅವರು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಭಗವಂತನು ಒಬ್ಬರೇ ಆಗಿದ್ದಾರೆ, ಇದು ಭಾರತವಾಸಿಗಳಿಗೆ ತಿಳಿದಿಲ್ಲ. ಈಶ್ವರನ ಗತಿಮತವು ಭಿನ್ನವೆಂದು ಹಾಡುತ್ತಾರೆ ಅಂದಮೇಲೆ ಯಾವ ಗತಿ ಮತವು ಭಿನ್ನವಾಗಿದೆ. ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಯಾರು ಹೇಳಿದರು? ಆತ್ಮವು ಹೇಳುತ್ತದೆ - ಅದರ ಸದ್ಗತಿಗಾಗಿ ಯಾವ ಮತವಿದೆಯೋ ಅದಕ್ಕೆ ಶ್ರೀಮತವೆಂದು ಹೇಳಲಾಗುತ್ತದೆ. ಕಲ್ಪ-ಕಲ್ಪವೂ ಬಂದು ನಿಮಗೆ ತಿಳಿಸುತ್ತೇನೆ - ಮನ್ಮನಾಭವ. ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ ಆತ್ಮಾಭಿಮಾನಿಯಾಗಿ ನನ್ನೊಬ್ಬನನ್ನೇ ನೆನಪು ಮಾಡಿರಿ. ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಈ ರಾಜಯೋಗದ ಗುರಿ-ಧ್ಯೇಯವೇ ಆಗಿದೆ - ಲಕ್ಷ್ಮೀ-ನಾರಾಯಣರಾಗುವುದು. ವಿದ್ಯೆಯಿಂದ ಯಾರೂ ರಾಜರಾಗುವುದಿಲ್ಲ, ಇಂತಹ ಯಾವುದೇ ಶಾಲೆಯಿಲ್ಲ. ಗೀತೆಯಲ್ಲಿಯೇ ಇದೆ, ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತೇನೆ, ಯಾವಾಗ ಯಾವುದೇ ರಾಜನ ರಾಜ್ಯವಿರುವುದಿಲ್ಲವೋ ಆಗ ನಾನು ಬರುತ್ತೇನೆ. ನನ್ನನ್ನು ಯಾರೊಬ್ಬರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಇಷ್ಟು ದೊಡ್ಡ ಲಿಂಗ ರೂಪದಲ್ಲಿ ತೋರಿಸಿದ್ದೀರಿ ಆದರೆ ಇದೇನೂ ನನ್ನ ರೂಪವಲ್ಲ. ಅಖಂಡ ಜ್ಯೋತಿ ರೂಪ ಪರಮಾತ್ಮನು ತೇಜೋಮಯನಾಗಿದ್ದಾರೆ. ಅರ್ಜುನನು ನೋಡಿ ನಾನು ಸಹನೆ ಮಾಡಲು ಸಾಧ್ಯವಿಲ್ಲ, ಸಾಕು ಮಾಡಿ ಎಂದನು ಎಂದು ಹೇಳುತ್ತಾರೆ. ಅರೆ! ಮಕ್ಕಳು ತಂದೆಯ ರೂಪವನ್ನೇ ನೋಡಿ ಸಹನೆ ಮಾಡದಿರಲು ಸಾಧ್ಯವೇ! ಮಕ್ಕಳಂತೂ ತಂದೆಯನ್ನು ನೋಡಿ ಖುಷಿ ಪಡುವರಲ್ಲವೆ. ತಂದೆಯು ತಿಳಿಸುತ್ತಾರೆ - ನನಗೇನೂ ಇಂತಹ ಭಯಂಕರ ರೂಪವಿಲ್ಲ. ನಾನು ಪರಮಾತ್ಮನಾಗಿದ್ದೇನೆ ಅರ್ಥಾತ್ ಅತಿ ದೂರ ಇರುವಂತಹ ಪರಮ ಆತ್ಮ ಅಂದರೆ ಪರಮಾತ್ಮನಾಗಿದ್ದೇನೆ. ಅವರು ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ ಎಂದು ಹಾಡುತ್ತಾರೆ. ಭಕ್ತರು ಅವರ ಮಹಿಮೆ ಹಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಯಾರೂ ಮಹಿಮೆ ಮಾಡುವುದಿಲ್ಲ ಏಕೆಂದರೆ ಅಲ್ಲಿ ಸುಖ ಇರುತ್ತದೆ. ದುಃಖದಲ್ಲಿ ಎಲ್ಲರೂ ಸ್ಮರಿಸುವರು, ಸುಖದಲ್ಲಿ ಯಾರೂ ಮಾಡುವುದಿಲ್ಲವೆಂದು ಹಾಡುತ್ತಾರೆ ಆದರೆ ಇದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಗಿಳಿಯಂತೆ ಹಾಡುತ್ತಿರುತ್ತಾರೆ. ಯಾವಾಗ ಸುಖವಿರುತ್ತದೆ, ಯಾವಾಗ ದುಃಖವಾಗುತ್ತದೆ, ಇದು ಭಾರತದ ಮಾತೇ ಅಲ್ಲವೆ. 5000 ವರ್ಷಗಳ ಮೊದಲು ಸ್ವರ್ಗವಿತ್ತು, ನಂತರ ತ್ರೇತಾದಲ್ಲಿ ಎರಡು ಕಲೆಗಳು ಕಡಿಮೆಯಾಯಿತು. ಸತ್ಯ-ತ್ರೇತಾಯುಗದಲ್ಲಿ ದುಃಖದ ಹೆಸರಿರುವುದಿಲ್ಲ, ಅದು ಸುಖಧಾಮವಾಗಿದೆ. ಸ್ವರ್ಗವೆಂದು ಹೇಳಿದೊಡನೆಯೇ ಬಾಯಿ ಸಿಹಿಯಾಗುತ್ತದೆ. ಸ್ವರ್ಗದಲ್ಲಿ ದುಃಖವೆಲ್ಲಿಂದ ಬರುವುದು! ಅಲ್ಲಿಯೂ ಸಹ ಕಂಸ, ಜರಾಸಂಧ ಮೊದಲಾದವರಿದ್ದರೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. |
ನಾವು ನೌಧಾಭಕ್ತಿ ಮಾಡಿದರೆ ಸಾಕ್ಷಾತ್ಕಾರವಾಗುತ್ತದೆ. ಸಾಕ್ಷಾತ್ಕಾರವಾಯಿತೆಂದರೆ ನಮಗೆ ಭಗವಂತ ಸಿಕ್ಕಿದರೆಂದು ಭಕ್ತರು ತಿಳಿದುಕೊಳ್ಳುತ್ತಾರೆ. ಲಕ್ಷ್ಮಿಯ ಪೂಜೆ ಮಾಡಿ ಅವರ ದರ್ಶನವಾಯಿತೆಂದರೆ ನಾವಂತೂ ಪಾರಾಗಿ ಬಿಟ್ಟೆವು ಎಂದು ಹೇಳಿ ಖುಷಿಯಾಗಿ ಬಿಡುತ್ತಾರೆ ಆದರೆ ಏನೂ ಇಲ್ಲ. ಅಲ್ಪಕಾಲಕ್ಕಾಗಿ ಸುಖ ಸಿಗುತ್ತದೆ, ದರ್ಶನವಾಯಿತು ಅಷ್ಟೇ. ಇದರಿಂದ ಮುಕ್ತಿ-ಜೀವನ್ಮುಕ್ತಿ ಪಡೆದುಕೊಂಡರು ಎಂದಲ್ಲ. ತಂದೆಯು ಏಣಿಯ ಚಿತ್ರದಲ್ಲಿಯೂ ತಿಳಿಸಿದ್ದಾರೆ - ಭಾರತವು ಬಹಳ ಶ್ರೇಷ್ಠವಾಗಿತ್ತು, ಭಗವಂತನು ಸರ್ವ ಶ್ರೇಷ್ಠನಾಗಿದ್ದಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರದು ಶ್ರೇಷ್ಠಾತಿ ಶ್ರೇಷ್ಠ ಆಸ್ತಿಯಾಗಿದೆ. ಆಗ ಸ್ವರ್ಗವಿತ್ತು, ಸತೋಪ್ರಧಾನರಾಗಿದ್ದರು ನಂತರ ಕಲಿಯುಗದ ಅಂತಿಮದಲ್ಲಿ ಎಲ್ಲರೂ ತಮೋಪ್ರಧಾನರಾಗುತ್ತಾರೆ. ನಾವು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗದಲ್ಲಿ ನಿಮಗೆ ರಾಜಯೋಗವನ್ನು ಕಲಿಸಲು ಬರುತ್ತೇನೆ. ನಾನು ಹೇಗಿದ್ದೇನೆ, ಯಾರಾಗಿದ್ದೇನೆ ಎಂಬುದನ್ನು ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದಾರೆ. ಏಣಿಯ ಚಿತ್ರವನ್ನು ತೋರಿಸಬೇಕಾಗಿದೆ, ಇದು ಭಾರತದ ಏಣಿಯಾಗಿದೆ. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು, 5000 ವರ್ಷಗಳ ಮೊದಲು ಭಾರತವು ಹೀಗಿತ್ತು. ಶಾಸ್ತ್ರಗಳಲ್ಲಿ ಕಲ್ಪವು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ಕಲ್ಪವು 5000 ವರ್ಷಗಳಾಗಿದೆ, ಲಕ್ಷಾಂತರ ವರ್ಷಗಳಲ್ಲ. ಸತ್ಯ-ತ್ರೇತಾಯುಗವು ಹೊಸ ಪ್ರಪಂಚ, ದ್ವಾಪರ-ಕಲಿಯುಗವು ಹಳೆಯ ಪ್ರಪಂಚ. ಅರ್ಧ-ಅರ್ಧ ಭಾಗವಿದೆಯಲ್ಲವೆ. ಹೊಸ ಪ್ರಪಂಚದಲ್ಲಿ ನೀವು ಭಾರತವಾಸಿಗಳಿದ್ದಿರಿ, ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನ ಆ ರೂಪವನ್ನು ದಿವ್ಯ ದೃಷ್ಟಿಯ ವಿನಃ ನೋಡಲು ಸಾಧ್ಯವಿಲ್ಲ. ಚೈತನ್ಯ ರೂಪದಿಂದಂತೂ ಕೃಷ್ಣನು ಸತ್ಯಯುಗದಲ್ಲಿದ್ದನು, ಮತ್ತೆಂದೂ ಆ ರೂಪವು ಸಿಗಲು ಸಾಧ್ಯವಿಲ್ಲ. ನಂತರ ನಾಮ, ರೂಪ, ದೇಶ, ಕಾಲವು ಬದಲಾಗುತ್ತದೆ. 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, 84 ಜನ್ಮಗಳಲ್ಲಿ 84 ಮಂದಿ ತಂದೆ-ತಾಯಿಯರು ಸಿಗುತ್ತಾರೆ. ಭಿನ್ನ-ಭಿನ್ನ ನಾಮ, ರೂಪ, ಕರ್ತವ್ಯವಿರುತ್ತದೆ. ಇದು ಭಾರತದ್ದೇ ಏಣಿಯಾಗಿದೆ. ನೀವೀಗ ಬ್ರಾಹ್ಮಣ ಕುಲ ಭೂಷಣರಾಗಿದ್ದೀರಿ. ತಂದೆಯು ಕಲ್ಪದ ಮೊದಲೂ ಸಹ ಬಂದು ನಿಮ್ಮನ್ನು ದೇವಿ-ದೇವತೆಗಳನ್ನಾಗಿ ಮಾಡಿದ್ದರು, ಅಲ್ಲಿ ನೀವು ಸರ್ವೋತ್ತಮ ಕರ್ಮ ಮಾಡುತ್ತಿದ್ದಿರಿ, 21 ಜನ್ಮಗಳವರೆಗೆ ನೀವು ಸದಾ ಸುಖಿಯಾಗಿದ್ದಿರಿ. ಮತ್ತೆ ನಿಮ್ಮನ್ನು ಈ ದುರ್ಗತಿಯಲ್ಲಿ ಯಾರು ತಂದರು? ನಾನು ಕಲ್ಪದ ಮೊದಲೂ ನಿಮಗೆ ಸದ್ಗತಿ ನೀಡಿದ್ದೆನು, ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಇಳಿಯಬೇಕಾಗಿದೆ. ಸೂರ್ಯವಂಶದಲ್ಲಿ 8 ಜನ್ಮಗಳು, ಚಂದ್ರವಂಶದಲ್ಲಿ 12 ಜನ್ಮಗಳು ಹೀಗೆ ಇಳಿಯುತ್ತಾ ಬಂದಿದ್ದೀರಿ. ನೀವೇ ಪೂಜ್ಯ ದೇವತೆಗಳಾಗಿದ್ದಿರಿ, ನೀವೇ ಪೂಜಾರಿ ಪತಿತರಾಗಿದ್ದೀರಿ. ಭಾರತವು ಈಗ ಕಂಗಾಲಾಗಿದೆ. ಭಗವಾನುವಾಚ - ನೀವು 100% ಪವಿತ್ರರು, ಸಾಹುಕಾರರಾಗಿದ್ದಿರಿ. ಯಾವುದೇ ರೋಗ, ದುಃಖದ ಮಾತಿರಲಿಲ್ಲ, ಸುಖಧಾಮವಾಗಿತ್ತು ಅದಕ್ಕೆ ಭಗವಂತನ ಹೂದೋಟವೆಂದು ಹೇಳುತ್ತಾರೆ. ಭಗವಂತನು ಹೂದೋಟವನ್ನು ಸ್ಥಾಪನೆ ಮಾಡಿದರು, ಯಾರು ದೇವಿ-ದೇವತೆಗಳಾಗಿದ್ದರೋ ಅವರು ಈಗ ಮುಳ್ಳುಗಳಾಗಿದ್ದಾರೆ. ಈಗ ಅರಣ್ಯವಾಗಿ ಬಿಟ್ಟಿದೆ. ಅರಣ್ಯದಲ್ಲಿ ಮುಳ್ಳುಗಳಿರುತ್ತವೆ, ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿ, ಇದೇ ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಟ್ಟಿದೆ. ಒಬ್ಬರು ಇನ್ನೊಬ್ಬರ ಮೇಲೆ ಕಾಮದ ಕಟಾರಿಯನ್ನು ನಡೆಸುವುದು. ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ. ತಂದೆಯು ಕುಳಿತು ತಮ್ಮ ಪರಿಚಯ ಕೊಡುತ್ತಾರೆ - ನಾನು ಪರಮಧಾಮದಲ್ಲಿರುವ ಪರಮಾತ್ಮನಾಗಿದ್ದೇನೆ. ನನಗೆ ಸೃಷ್ಟಿಯ ಬೀಜರೂಪ ಪರಮ ಆತ್ಮನೆಂದು ಹೇಳುತ್ತಾರೆ, ನಾನು ಎಲ್ಲರ ತಂದೆಯಾಗಿದ್ದೇನೆ. ಹೇ ಪರಮಪಿತ ಪರಮಾತ್ಮ ಎಂದು ಎಲ್ಲಾ ಆತ್ಮರು ತಂದೆಯನ್ನು ಕೂಗುತ್ತಾರೆ. ಹೇಗೆ ನಿಮ್ಮ ಆತ್ಮವು ನಕ್ಷತ್ರ ಮಾದರಿಯಾಗಿದೆಯೋ ಹಾಗೆಯೇ ತಂದೆ ಪರಮಾತ್ಮನೂ ಸಹ ನಕ್ಷತ್ರವಾಗಿದ್ದಾರೆ. ಚಿಕ್ಕದು ಅಥವಾ ದೊಡ್ಡ ಗಾತ್ರದಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಅಂಗುಷ್ಟಾಕಾರದಲ್ಲಿಯೂ ಇಲ್ಲ, ನಿಮ್ಮೆಲ್ಲರ ತಂದೆಯಾಗಿದ್ದೇನೆ. ನಾನು ಪರಮ ಆತ್ಮನಾಗಿದ್ದೇನೆ. ಅವರಿಗೆ ಪರಮ ಆತ್ಮ, ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಜ್ಞಾನ ಪೂರ್ಣ, ಮನುಷ್ಯ ಸೃಷ್ಟಿ ವೃಕ್ಷದ ಬೀಜರೂಪನಾಗಿದ್ದೇನೆ. ಪರಮಾತ್ಮನು ಸತ್ಚಿತ್ಆನಂದ ಸ್ವರೂಪನಾಗಿದ್ದಾರೆ, ಜ್ಞಾನ ಸಾಗರ, ಸುಖದ ಸಾಗರನಾಗಿದ್ದಾರೆಂದು ನನಗೆ ಭಕ್ತರು ಹೇಳುತ್ತಾರೆ. ಎಷ್ಟೊಂದು ಮಹಿಮೆಯಿದೆ! ಒಂದುವೇಳೆ ನಾಮ, ರೂಪ, ದೇಶ, ಕಾಲವೇ ಇಲ್ಲವೆಂದರೆ ಯಾರನ್ನು ಕರೆಯುತ್ತಾರೆ! ಸಾಧು-ಸಂತ ಮೊದಲಾದವರೆಲ್ಲರೂ ನಿಮಗೆ ಭಕ್ತಿಮಾರ್ಗದ ಶಾಸ್ತ್ರಗಳನ್ನೇ ತಿಳಿಸುತ್ತಾರೆ. ನಾನು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. |
ತಂದೆಯು ತಿಳಿಸುತ್ತಾರೆ - ನೀವು ಪತಿತ-ಪಾವನನೆಂದು ಜ್ಞಾನ ಸಾಗರ ತಂದೆಯಾದ ನನಗೆ ಹೇಳುತ್ತೀರಿ, ನೀವೂ ಸಹ ಮಾ||ಜ್ಞಾನ ಸಾಗರರಾಗುತ್ತೀರಿ. ಜ್ಞಾನದಿಂದ ಸದ್ಗತಿ ಸಿಗುತ್ತದೆ. ಭಾರತಕ್ಕೆ ಸದ್ಗತಿಯನ್ನು ತಂದೆಯೇ ನೀಡುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ ಅಂದಮೇಲೆ ಮತ್ತೆ ಸರ್ವರ ದುರ್ಗತಿಯನ್ನು ಯಾರು ಮಾಡುತ್ತಾರೆ? ರಾವಣ. ಈಗ ನಿಮಗೆ ಇದನ್ನು ಯಾರು ತಿಳಿಸುತ್ತಿದ್ದಾರೆ? ಇವರು ಪರಮಾತ್ಮನಾಗಿದ್ದಾರೆ. ಆತ್ಮವಂತೂ ಒಂದು ನಕ್ಷತ್ರದಂತೆ ಅತಿ ಸೂಕ್ಷ್ಮವಾಗಿದೆ. ಪರಮಾತ್ಮನೂ ಸಹ ಡ್ರಾಮಾದಲ್ಲಿ ಪಾತ್ರವನ್ನಭಿನಯಿಸುತ್ತಾರೆ. ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠ ಪಾತ್ರಧಾರಿ ಯಾರು? ಶ್ರೇಷ್ಠಾತಿ ಶ್ರೇಷ್ಠ ಭಗವಂತ. ಯಾರ ಜೊತೆಯಲ್ಲಿ ನೀವಾತ್ಮರೆಲ್ಲರೂ ಇರುತ್ತೀರಿ, ಪರಮಾತ್ಮನು ಎಲ್ಲರನ್ನೂ ಕಳುಹಿಸುತ್ತಾರೆ ಎಂದು ಹೇಳುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಡ್ರಾಮ ಅನಾದಿಯಾಗಿ ಮಾಡಲ್ಪಟ್ಟಿದೆ. ತಂದೆಯು ತಿಳಿಸುತ್ತಾರೆ - ನೀವು ನನಗೆ ಜ್ಞಾನ ಸಾಗರ, ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತಿರುವವರೆಂದು ಹೇಳುತ್ತೀರಿ. ಈಗ ಯಾವ ಶಾಸ್ತ್ರ ಇತ್ಯಾದಿಗಳನ್ನು ಓದುತ್ತೀರೋ ಇದನ್ನು ತಂದೆಯು ತಿಳಿದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ಪ್ರಜಾಪಿತ ಬ್ರಹ್ಮನ ಮೂಲಕ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ತೋರಿಸುತ್ತಾರೆ ಅಂದಾಗ ಎಲ್ಲಿ ಬಂದನು? ಮನುಷ್ಯರಂತೂ ಅವಶ್ಯವಾಗಿ ಇಲ್ಲಿಯೇ ಇರುತ್ತಾರಲ್ಲವೆ. ಇವರ ನಾಭಿಯಿಂದ ಬ್ರಹ್ಮನು ಬಂದನು, ಮತ್ತೆ ಭಗವಂತನು ಕುಳಿತು ಇವರ ಮೂಲಕ ಎಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸಿದರು. ತಮ್ಮ ನಾಮ, ರೂಪ, ದೇಶ, ಕಾಲವನ್ನೂ ತಿಳಿಸಿದ್ದಾರೆ. ಮನುಷ್ಯ ಸೃಷ್ಟಿಯ ಬೀಜ ರೂಪನಲ್ಲವೆ. ಈ ವೃಕ್ಷದ ಉತ್ಪತ್ತಿ, ಪಾಲನೆ, ವಿನಾಶವು ಹೇಗಾಗುತ್ತದೆ ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ಇದಕ್ಕೆ ವಿಭಿನ್ನವಾದ ವೃಕ್ಷವೆಂದು ಹೇಳಲಾಗುತ್ತದೆ. ಎಲ್ಲರೂ ನಂಬರ್ವಾರ್ ತಮ್ಮ ಸಮಯದಲ್ಲಿ ಬರುತ್ತಾರೆ. ಮೊಟ್ಟ ಮೊದಲನೆಯದಾಗಿ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತೇನೆ ಏಕೆಂದರೆ ಆ ಧರ್ಮವು ಈಗಿಲ್ಲ. ಎಷ್ಟೊಂದು ತುಚ್ಛ ಬುದ್ಧಿಯವರಾಗಿ ಬಿಟ್ಟಿದ್ದಾರೆ. ದೇವತೆಗಳ, ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಾರೆ ಆದರೆ ಅವರ ರಾಜ್ಯವು ಸೃಷ್ಟಿಯಲ್ಲಿ ಯಾವಾಗ ಇತ್ತೆಂಬುದನ್ನು ತಿಳಿದುಕೊಂಡಿಲ್ಲ. ಈಗ ಭಾರತದ ಆ ದೇವತಾ ಧರ್ಮವೇ ಇಲ್ಲ. ಕೇವಲ ಚಿತ್ರಗಳು ಉಳಿದುಕೊಂಡಿವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮಾII ಜ್ಞಾನ ಸಾಗರರಾಗಿ ಪತಿತರಿಂದ ಪಾವನರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಂದೆಯು ಯಾವ ಎಲ್ಲಾ ವೇದ ಶಾಸ್ತ್ರಗಳ ಸಾರವನ್ನು ತಿಳಿಸಿದ್ದಾರೆಯೋ ಅದನ್ನು ಬುದ್ಧಿಯಲ್ಲಿಟ್ಟುಕೊಂಡು ಸದಾ ಹರ್ಷಿತರಾಗಿರಬೇಕಾಗಿದೆ. |
2. ಪ್ರತೀ ಹೆಜ್ಜೆಯಲ್ಲಿ ಒಬ್ಬ ತಂದೆಯ ಶ್ರೀಮತವನ್ನು ಪಾಲನೆ ಮಾಡಬೇಕಾಗಿದೆ. ದೇಹದ ಎಲ್ಲಾ ಧರ್ಮಗಳನ್ನು ತ್ಯಜಿಸಿ ಆತ್ಮಾಭಿಮಾನಿಯಾಗುವ ಪರಿಶ್ರಮ ಪಡಬೇಕಾಗಿದೆ. |
ಓಂ ಶಾಂತಿ. ನೀವು ಮಕ್ಕಳು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ಮೊದಲು ಆಸುರೀ ಸಂಪ್ರದಾಯದವರಾಗಿದ್ದಿರಿ. ಯಾರಿಗೆ ಭೋಲಾನಾಥನೆಂದು ಹೇಳಲಾಗುತ್ತದೆ ಎಂಬುದು ಆಸುರೀ ಸಂಪ್ರದಾಯದವರಿಗೆ ತಿಳಿದೇ ಇಲ್ಲ ಮತ್ತು ಶಿವ-ಶಂಕರ ಬೇರೆ-ಬೇರೆಯಾಗಿದ್ದಾರೆ. ಶಂಕರ ದೇವತೆಯಾಗಿದ್ದಾನೆ, ಶಿವನು ತಂದೆಯಾಗಿದ್ದಾರೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ನೀವೀಗ ಈಶ್ವರೀಯ ಸಂಪ್ರದಾಯ ಅಥವಾ ಈಶ್ವರೀಯ ಪರಿವಾರದವರಾಗಿದ್ದೀರಿ. ಅವರು ರಾವಣನ ಆಸುರೀ ಪರಿವಾರದವರಾಗಿದ್ದಾರೆ. ಎಷ್ಟೊಂದು ಅಂತರವಿದೆ! ನೀವೀಗ ಈಶ್ವರೀಯ ಪರಿವಾರದಲ್ಲಿ ಈಶ್ವರನ ಮೂಲಕ ಪರಸ್ಪರ ಹೇಗೆ ಆತ್ಮಿಕ ಪ್ರೀತಿಯಿರಬೇಕು ಎಂಬುದನ್ನು ಕಲಿಯುತ್ತಿದ್ದೀರಿ. ಬ್ರಾಹ್ಮಣ ಕುಲದಲ್ಲಿ ಪರಸ್ಪರ ಈ ಆತ್ಮಿಕ ಪ್ರೀತಿಯನ್ನು ಇಲ್ಲಿಂದಲೇ ತುಂಬಿಸಿಕೊಳ್ಳಬೇಕಾಗಿದೆ. ಯಾರಿಗೆ ಪೂರ್ಣ ಪ್ರೀತಿಯಿರುವುದಿಲ್ಲವೋ ಅವರು ಪೂರ್ಣ ಪದವಿಯನ್ನೂ ಪಡೆಯುವುದಿಲ್ಲ. ಅಲ್ಲಂತೂ ಒಂದು ಧರ್ಮ, ಒಂದು ರಾಜ್ಯವಿರುತ್ತದೆ. ಪರಸ್ಪರ ಯಾವುದೇ ಕಲಹವಿರುವುದಿಲ್ಲ. ಇಲ್ಲಾದರೆ ರಾಜ್ಯವೇ ಇಲ್ಲ. ಬ್ರಾಹ್ಮಣರಲ್ಲಿಯೂ ದೇಹಾಭಿಮಾನವಿರುವ ಕಾರಣ ಮತಭೇದದಲ್ಲಿ ಬಂದು ಬಿಡುತ್ತಾರೆ. ಇಂತಹ ಮತಭೇದದಲ್ಲಿ ಬರುವವರು ಶಿಕ್ಷೆಗಳನ್ನನುಭವಿಸಿ ನಂತರ ತೇರ್ಗಡೆಯಾಗುತ್ತಾರೆ ನಂತರ ಸತ್ಯಯುಗದಲ್ಲಿ ಒಂದು ಧರ್ಮದಲ್ಲಿರುತ್ತಾರೆ, ಆದ್ದರಿಂದ ಅಲ್ಲಿ ಶಾಂತಿಯಿರುತ್ತದೆ. ಒಂದು ಕಡೆ ಆಸುರೀ ಸಂಪ್ರದಾಯ ಅಥವಾ ಆಸುರೀ ಪರಿವಾರದವರಿದ್ದಾರೆ. ಇಲ್ಲಿ ಈಶ್ವರೀಯ ಪರಿವಾರವಿದೆ, ಭವಿಷ್ಯಕ್ಕಾಗಿ ದೈವೀ ಗುಣಗಳನ್ನು ಧಾರಣೆ ಮಾಡುತ್ತಿದ್ದೀರಿ. ತಂದೆಯು ಸರ್ವಗುಣ ಸಂಪನ್ನರನ್ನಾಗಿ ಮಾಡುತ್ತಾರೆ. ಎಲ್ಲರೂ ಆಗುವುದಿಲ್ಲ. ಯಾರು ಶ್ರೀಮತದಂತೆ ನಡೆಯುವರೋ ಅವರೇ ವಿಜಯ ಮಾಲೆಯ ಮಣಿಯಾಗುತ್ತಾರೆ. ಯಾರು ಆಗುವುದಿಲ್ಲವೋ ಅವರು ಪ್ರಜೆಗಳಲ್ಲಿ ಬಂದು ಬಿಡುತ್ತಾರೆ. ಅಲ್ಲಂತೂ ದೈವೀ ರಾಜಧಾನಿಯಿರುತ್ತದೆ. 100% ಸುಖ-ಶಾಂತಿ, ಪವಿತ್ರತೆಯಿರುತ್ತದೆ. ಈ ಬ್ರಾಹ್ಮಣ ಕುಲದಲ್ಲಿ ಈಗ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಕೆಲವರಂತೂ ಬಹಳ ಚೆನ್ನಾಗಿ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತಾ, ಅನ್ಯರಿಗೂ ಮಾಡಿಸುತ್ತಾ ಇರುತ್ತಾರೆ. ಯಾವಾಗ ದೇಹೀ-ಅಭಿಮಾನಿಯಾಗಿರುವರೋ ಆಗಲೇ ಈಶ್ವರೀಯ ಕುಲದಲ್ಲಿ ಪರಸ್ಪರ ಆತ್ಮಿಕ ಸ್ನೇಹವೂ ಇರುವುದು. ಆದ್ದರಿಂದ ಪುರುಷಾರ್ಥ ಮಾಡುತ್ತಾ ಇರುತ್ತಾರೆ, ಅಂತ್ಯದಲ್ಲಿಯೂ ಎಲ್ಲರ ಸ್ಥಿತಿಯು ಏಕರಸ, ಒಂದೇ ರೀತಿಯಿರಲು ಸಾಧ್ಯವಿಲ್ಲ. ನಂತರ ಶಿಕ್ಷೆಗಳನ್ನನುಭವಿಸಿ ಪದವಿ ಭ್ರಷ್ಟರಾಗಿ ಬಿಡುತ್ತಾರೆ, ಕಡಿಮೆ ಪದವಿಯನ್ನು ಪಡೆಯುತ್ತಾರೆ. ಬ್ರಾಹ್ಮಣರಲ್ಲಿಯೂ ಒಂದುವೇಳೆ ಯಾರಾದರೂ ಕ್ಷೀರ ಖಂಡವಾಗಿರುವುದಿಲ್ಲ, ಪರಸ್ಪರ ಉಪ್ಪು ನೀರಾಗಿ ವರ್ತಿಸುತ್ತಾರೆ, ದೈವೀ ಗುಣಗಳನ್ನು ಧಾರಣೆ ಮಾಡಲಿಲ್ಲವೋ ಅವರು ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವರು? ಉಪ್ಪು ನೀರಾಗಿರುವ ಕಾರಣ ಇಲ್ಲಿ ಈಶ್ವರೀಯ ಸೇವೆಯಲ್ಲಿಯೂ ವಿಘ್ನ ರೂಪವಾಗುತ್ತಿರುತ್ತಾರೆ. ಅಂತಹವರ ಅದೃಷ್ಟವೇನಾಗುತ್ತದೆ? ಅವರು ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಂದು ಕಡೆ ಕ್ಷೀರ ಖಂಡವಾಗುವ ಪುರುಷಾರ್ಥ ಮಾಡುತ್ತಾರೆ. ಇನ್ನೊಂದು ಕಡೆ ಮಾಯೆಯು ಉಪ್ಪು ನೀರನ್ನಾಗಿ ಮಾಡಿ ಬಿಡುತ್ತದೆ, ಆ ಕಾರಣದಿಂದ ಸೇವೆಯ ಬದಲು ಸೇವಾ ಭಂಗ ಮಾಡುತ್ತಾರೆ. ತಂದೆಯು ಕುಳಿತು ತಿಳಿಸುತ್ತಾರೆ - ನೀವು ಈಶ್ವರೀಯ ಪರಿವಾರದವರಾಗಿದ್ದೀರಿ, ಈಶ್ವರನ ಜೊತೆಯಲ್ಲಿಯೇ ಇರುತ್ತೀರಿ. ಕೆಲವರು ಜೊತೆಯಿರುತ್ತಾರೆ, ಇನ್ನೂ ಕೆಲವರು ಬೇರೆ-ಬೇರೆ ಗ್ರಾಮಗಳಲ್ಲಿರುತ್ತಾರೆ ಆದರೆ ಒಟ್ಟಿಗೆ ಇದ್ದೀರಲ್ಲವೆ. ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ. ಶಿವ ತಂದೆಯು ಯಾವಾಗ ಬರುತ್ತಾರೆ, ಬಂದು ಏನು ಮಾಡುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ನಿಮಗೆ ತಂದೆಯ ಮೂಲಕ ಈಗ ಪರಿಚಯ ಸಿಕ್ಕಿದೆ, ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನೀವೀಗ ತಿಳಿದುಕೊಂಡಿದ್ದೀರಿ. ಈ ಚಕ್ರವು ಹೇಗೆ ಸುತ್ತುತ್ತದೆ, ಈಗ ಯಾವ ಸಮಯವಾಗಿದೆ ಎಂದು ಪ್ರಪಂಚದವರಿಗೆ ತಿಳಿದಿಲ್ಲ, ಅವರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. |
ನೀವು ಮಕ್ಕಳಿಗೆ ರಚಯಿತ ತಂದೆಯು ಬಂದು ಪೂರ್ಣ ಸಮಾಚಾರವನ್ನು ತಿಳಿಸುತ್ತಾರೆ. ಜೊತೆ ಜೊತೆಯಲ್ಲಿ ಹೇ! ಸಾಲಿಗ್ರಾಮಗಳೇ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಶಿವ ತಂದೆಯು ತಮ್ಮ ಮಕ್ಕಳಿಗೆ ಹೇಳುತ್ತಾರೆ. ನೀವು ಪಾವನರಾಗಲು ಇಷ್ಟ ಪಡುತ್ತೀರಲ್ಲವೆ, ಕರೆಯುತ್ತಾ ಬಂದಿರಿ. ಈಗ ನಾನು ಬಂದಿದ್ದೇನೆ. ಶಿವ ತಂದೆಯು ಭಾರತವನ್ನು ಪುನಃ ಶಿವಾಲಯವನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ, ರಾವಣನು ವೇಶ್ಯಾಲಯವನ್ನಾಗಿ ಮಾಡುತ್ತಾನೆ. ಸ್ವಯಂ ತಾವೇ ಹಾಡುತ್ತಾರೆ - ನಾವು ಪತಿತರಾಗಿದ್ದೇವೆ. ಭಾರತವು ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಯಾಗಿತ್ತು, ನಿರ್ವಿಕಾರಿ ದೇವತೆಗಳಿಗೆ ವಿಕಾರಿ ಮನುಷ್ಯರು ಪೂಜಿಸುತ್ತಾರೆ ಪುನಃ ವಿಕಾರಿಗಳಾಗುತ್ತಾರೆ. ಆಗ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ನಿರ್ವಿಕಾರಿಯನ್ನಾಗಿ ಮಾಡಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮದಲ್ಲಿ ನೀವು ಪವಿತ್ರರಾಗಿ, ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ಪಾಪಗಳು ತುಂಡಾಗುತ್ತವೆ ಮತ್ತು ನೀವು ತಮೋಪ್ರಧಾನರಿಂದ ಸತೋಪ್ರಧಾನ ದೇವತೆಗಳಾಗಿ ಬಿಡುತ್ತೀರಿ ನಂತರ ಚಂದ್ರವಂಶಿ, ಕ್ಷತ್ರಿಯ ಪರಿವಾರದಲ್ಲಿ ಬರುತ್ತೀರಿ. ಈ ಸಮಯದಲ್ಲಿ ಈಶ್ವರೀಯ ಪರಿವಾರದವರಾಗಿದ್ದೀರಿ ನಂತರ ದೈವೀ ಪರಿವಾರದಲ್ಲಿ 21 ಜನ್ಮಗಳವರೆಗೆ ಇರುತ್ತೀರಿ. ನೀವು ಈ ಅಂತಿಮ ಜನ್ಮವನ್ನು ಈ ಈಶ್ವರೀಯ ಪರಿವಾರದಲ್ಲಿ ಕಳೆಯುತ್ತೀರಿ. ಇದರಲ್ಲಿ ನೀವು ಪುರುಷಾರ್ಥ ಮಾಡಿ ಸರ್ವಗುಣ ಸಂಪನ್ನರಾಗಬೇಕಾಗಿದೆ. ನೀವು ಪೂಜ್ಯರಾಗಿದ್ದಿರಿ - ಅವಶ್ಯವಾಗಿ ರಾಜ್ಯವನ್ನು ಮಾಡುತ್ತಿದ್ದಿರಿ ನಂತರ ಪೂಜಾರಿಗಳಾದಿರಿ, ಇದನ್ನು ತಿಳಿಸಬೇಕಾಗುತ್ತದೆಯಲ್ಲವೆ. ಭಗವಂತ ತಂದೆಯಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಾಗ ಪರಿವಾರವಾಯಿತಲ್ಲವೆ. ಗಾಯನವೂ ಇದೆ - ನೀವು ಮಾತಾಪಿತ ನಾವು ನಿಮ್ಮ ಬಾಲಕರು....... ಅಂದಾಗ ಪರಿವಾರವಾಯಿತಲ್ಲವೆ! ಈಗ ತಂದೆಯ ಅಪಾರ ಸುಖದ ಗಣಿಯೇ ಸಿಗುತ್ತಿದೆ. ತಂದೆಯು ತಿಳಿಸುತ್ತಾರೆ - ನಿಸ್ಸಂದೇಹವಾಗಿ ನೀವು ನಮ್ಮ ಪರಿವಾರದವರಾಗಿದ್ದೀರಿ. ಆದರೆ ಡ್ರಾಮಾ ಪ್ಲಾನನುಸಾರವಾಗಿ ರಾವಣ ರಾಜ್ಯದಲ್ಲಿ ಬಂದ ನಂತರ ಪುನಃ ನೀವು ದುಃಖದಲ್ಲಿ ಬರುತ್ತೀರಿ ಆಗ ಕೂಗುತ್ತೀರಿ. ಈ ಸಮಯದಲ್ಲಿ ನೀವು ಸತ್ಯವಾದ ಪರಿವಾರದವರಾಗಿದ್ದೀರಿ, ನಂತರ ನಿಮಗೆ ಭವಿಷ್ಯ 21 ಜನ್ಮಗಳಿಗಾಗಿ ಆಸ್ತಿಯನ್ನು ಕೊಡುತ್ತೇನೆ. ಈ ಆಸ್ತಿ ಪುನಃ ದೈವೀ ಪರಿವಾರದಲ್ಲಿ 21 ಜನ್ಮಗಳಿಗಾಗಿ ಖಾಯಂ ಆಗಿರುತ್ತದೆ. ದೈವೀ ಪರಿವಾರವು ಸತ್ಯ-ತ್ರೇತಾಯುಗದವರೆಗೂ ನಡೆಯುತ್ತದೆ ನಂತರ ರಾವಣ ರಾಜ್ಯವಾಗುವುದರಿಂದ ನಾವು ದೈವೀ ಪರಿವಾರದವರಾಗಿದ್ದೆವೆಂಬುದನ್ನು ಮರೆತು ಹೋಗುತ್ತೀರಿ. ವಾಮ ಮಾರ್ಗದಲ್ಲಿ ಹೋಗುವುದರಿಂದ ಅಸುರೀ ಪರಿವಾರದವರಾಗಿ ಬಿಡುತ್ತೀರಿ. 63 ಜನ್ಮಗಳು ಏಣಿಯನ್ನು ಇಳಿಯುತ್ತಾ ಬಂದಿರಿ. ಈ ಇಡೀ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ ಅಂದಾಗ ನೀವು ಯಾರಿಗಾದರೂ ತಿಳಿಸಬಲ್ಲಿರಿ. ಮೂಲತಃ ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ, ಸತ್ಯಯುಗಕ್ಕೆ ಮೊದಲು ಕಲಿಯುಗವಿತ್ತು. ಸಂಗಮಯುಗದಲ್ಲಿ ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲಾಗುತ್ತದೆ. ಮಧ್ಯದಲ್ಲಿ ಈ ಸಂಗಮವಿದೆ. ನಿಮ್ಮನ್ನು ಬ್ರಾಹ್ಮಣ ಧರ್ಮದಿಂದ ಪುನಃ ದೈವೀ ಧರ್ಮದಲ್ಲಿ ಕರೆ ತರುತ್ತಾರೆ. ಲಕ್ಷ್ಮೀ-ನಾರಾಯಣರು ಈ ರಾಜ್ಯವನ್ನು ಹೇಗೆ ಪಡೆದರೆಂಬುದನ್ನು ತಿಳಿಸುತ್ತಾರೆ. ಅದಕ್ಕೆ ಮೊದಲು ಆಸುರೀ ರಾಜ್ಯವಿತ್ತು ಅಂದಮೇಲೆ ಮತ್ತೆ ದೈವೀ ರಾಜ್ಯವು ಯಾವಾಗ ಮತ್ತು ಹೇಗೆ ಆಯಿತು! ತಂದೆಯು ತಿಳಿಸುತ್ತಾರೆ - ಕಲ್ಪ-ಕಲ್ಪವೂ ಸಂಗಮದಲ್ಲಿ ಬಂದು ನಿಮ್ಮನ್ನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದಲ್ಲಿ ಕರೆದುಕೊಂಡು ಹೋಗುತ್ತೇನೆ. ಇದು ಭಗವಂತನ ಪರಿವಾರವಾಗಿದೆ. ಎಲ್ಲರೂ ಗಾಡ್ ಫಾದರ್ ಎಂದು ಹೇಳುತ್ತಾರೆ ಆದರೆ ತಂದೆಯನ್ನು ತಿಳಿಯದೇ ಇರುವ ಕಾರಣ ನಿರ್ಧನಿಕರಾಗಿದ್ದಾರೆ. ಆದ್ದರಿಂದ ತಂದೆಯು ಬಂದು ಘೋರ ಅಂಧಕಾರದಿಂದ ಪ್ರಕಾಶವನ್ನಾಗಿ ಮಾಡುತ್ತಾರೆ. ಈಗ ಸ್ವರ್ಗದ ಸ್ಥಾಪನೆಯಾಗುತ್ತಾ ಇದೆ, ನೀವು ಮಕ್ಕಳು ಓದುತ್ತಿದ್ದೀರಿ, ದೈವೀ ಗುಣಗಳನ್ನು ಧಾರಣೆ ಮಾಡುತ್ತೀರಿ. ಇದೂ ಸಹ ತಿಳಿದುಕೊಳ್ಳಬೇಕಾಗಿದೆ – ಶಿವ ಜಯಂತಿಯನ್ನು ಆಚರಿಸುತ್ತಾರೆ, ಶಿವ ಜಯಂತಿಯ ನಂತರ ಏನಾಗುತ್ತದೆ? ಅವಶ್ಯವಾಗಿ ದೈವೀ ರಾಜ್ಯದ ಜಯಂತಿ ಆಗುತ್ತದೆಯಲ್ಲವೆ. ಹೆವೆನ್ಲೀ ಗಾಡ್ಫಾದರ್ ಸ್ವರ್ಗವನ್ನು ಸ್ಥಾಪನೆ ಮಾಡಲು ಸ್ವರ್ಗದಲ್ಲಂತೂ ಬರುವುದಿಲ್ಲ. ನಾನು ನರಕ ಮತ್ತು ಸ್ವರ್ಗದ ಮಧ್ಯದ ಸಮಯದಲ್ಲಿ ಬರುತ್ತೇನೆಂದು ಹೇಳುತ್ತಾರೆ. ಶಿವರಾತ್ರಿ ಎಂದು ಹೇಳುತ್ತಾರಲ್ಲವೆ ಅಂದಾಗ ರಾತ್ರಿಯಲ್ಲಿ ನಾನು ಬರುತ್ತೇನೆ. ಇದನ್ನು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಯಾರು ತಿಳಿದುಕೊಳ್ಳುವರೋ ಅವರು ಅನ್ಯರಿಗೂ ಧಾರಣೆ ಮಾಡಿಸುತ್ತಾರೆ. ಯಾರು ಮನಸ್ಸಾ-ವಾಚಾ-ಕರ್ಮಣಾ ಸೇವೆಯಲ್ಲಿ ತತ್ಪರರಾಗಿರುತ್ತಾರೆಯೋ ಅವರು ಹೃದಯದಲ್ಲಿಯೂ ಇರುತ್ತಾರೆ. ಎಷ್ಟೆಷ್ಟು ಸೇವೆಯೋ ಅಷ್ಟು ಹೃದಯದಲ್ಲಿ ಏರುತ್ತಾರೆ. ಕೆಲವರು ಆಲ್ರೌಂಡ್ ವರ್ಕರ್ಸ್ ಇರುತ್ತಾರೆ. ನೀವೂ ಸಹ ಎಲ್ಲಾ ಸೇವೆಯನ್ನು ಕಲಿಯಬೇಕಾಗಿದೆ. ಅಡಿಗೆ ಮಾಡುವುದು, ರೊಟ್ಟಿ ಮಾಡುವುದು, ಪಾತ್ರೆ ತೊಳೆಯುವುದು...... ಇದೂ ಸಹ ಸೇವೆಯಲ್ಲವೆ. ಮೊದಲು ತಂದೆಯ ನೆನಪು ಇರಬೇಕು. ಅವರ ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ. ಇಲ್ಲಿ ಆಸ್ತಿಯು ಸಿಗುತ್ತದೆ. ಅಲ್ಲಿ ಸರ್ವಗುಣ ಸಂಪನ್ನರಾಗಿರುತ್ತೀರಿ. ಯಥಾ ರಾಜ-ರಾಣಿ ತಥಾ ಪ್ರಜಾ. ದುಃಖದ ಮಾತಿರುವುದಿಲ್ಲ. ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಎಲ್ಲರದೂ ಇಳಿಯುವ ಕಲೆಯಾಗಿದೆ. ಮತ್ತೆ ಈಗ ಏರುವ ಕಲೆಯಾಗುವುದು. ತಂದೆಯು ಎಲ್ಲರನ್ನೂ ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ, ಆದ್ದರಿಂದ ತಂದೆಯನ್ನು ಮುಕ್ತಿದಾತ ಎಂದು ಕರೆಯಲಾಗುತ್ತದೆ. ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಯೋಗ್ಯರಾಗುತ್ತಿದ್ದೇವೆಂದು ಇಲ್ಲಿ ನಿಮಗೆ ನಶೆಯಿರುತ್ತದೆ. ಯಾರು ಅನ್ಯರಿಗೂ ರಾಜ್ಯಪದವಿಯನ್ನು ಪಡೆಯಲು ಯೋಗ್ಯರನ್ನಾಗಿ ಮಾಡುತ್ತಾರೆಯೋ ಅವರನ್ನು ಯೋಗ್ಯರೆಂದು ಹೇಳಲಾಗುತ್ತದೆ. ಇದನ್ನೂ ಸಹ ತಂದೆಯು ತಿಳಿಸುತ್ತಾರೆ - ಓದುವವರು ಬಹಳ ಮಂದಿ ಬರುತ್ತಾರೆ ಆದರೆ 84 ಜನ್ಮಗಳನ್ನು ಎಲ್ಲರೂ ಪಡೆಯುತ್ತಾರೆ ಎಂದಲ್ಲ. ಯಾರು ಸ್ವಲ್ಪ ಓದುತ್ತಾರೆಯೋ ಅವರು ತಡವಾಗಿ ಬರುತ್ತಾರೆ ಅಂದಾಗ ಜನ್ಮಗಳೂ ಸಹ ಕಡಿಮೆಯಾಗುತ್ತವೆಯಲ್ಲವೆ. ಕೆಲವರು 80 ಜನ್ಮ, ಕೆಲವರದು 82 ಜನ್ಮ, ಯಾರು ಬೇಗ ಬರುತ್ತಾರೆ, ಯಾರು ಕೊನೆಯಲ್ಲಿ ಬರುತ್ತಾರೆ...... ಎಲ್ಲದಕ್ಕೂ ಆಧಾರ ವಿದ್ಯೆಯಾಗಿದೆ. ಸಾಧಾರಣ ಪ್ರಜೆಗಳು ಕೊನೆಯಲ್ಲಿ ಬರುತ್ತಾರೆ. ಅವರದು 84 ಜನ್ಮಗಳಾಗಲು ಸಾಧ್ಯವಿಲ್ಲ, ಅಂತ್ಯದಲ್ಲಿ ಬರುತ್ತಾರಲ್ಲವೆ. ಯಾರು ಸಂಪೂರ್ಣ ಕೊನೆಯಲ್ಲಿರುವರೋ ಅವರು ತ್ರೇತಾದ ಅಂತ್ಯದಲ್ಲಿ ಬಂದು ಜನ್ಮವನ್ನು ತೆಗೆದುಕೊಳ್ಳುತ್ತಾರೆ. ನಂತರ ವಾಮ ಮಾರ್ಗದಲ್ಲಿ ಹೋಗುತ್ತಾರೆ, ಇಳಿಯುವ ಕಲೆ ಪ್ರಾರಂಭವಾಗುತ್ತದೆ. ಭಾರತವಾಸಿಗಳು ಹೇಗೆ 84 ಜನ್ಮಗಳನ್ನು ತೆಗೆದುಕೊಂಡರು ಎಂಬುದಕ್ಕೆ ಈ ಏಣಿ ಚಿತ್ರವಿದೆ. ಡ್ರಾಮಾದ ರೂಪದಲ್ಲಿ ಈ ಗೋಲದ ಚಿತ್ರವಿದೆ. ಯಾರು ಪಾವನರಿದ್ದರು ಅವರೇ ಈಗ ಪತಿತರಾಗಿ ಬಿಟ್ಟಿದ್ದಾರೆ ಪುನಃ ಪಾವನ ದೇವತೆಗಳಾಗುತ್ತಾರೆ. ತಂದೆಯು ಬಂದಾಗ ಎಲ್ಲರ ಕಲ್ಯಾಣವಾಗುತ್ತದೆ ಆದ್ದರಿಂದ ಇದಕ್ಕೆ ಅಧಿಕ ಯುಗವೆಂದು ಹೇಳಲಾಗುತ್ತದೆ. ಬಲಿಹಾರಿಯು ತಂದೆಯದಾಗಿದೆ ಏಕೆಂದರೆ ಅವರು ಎಲ್ಲರ ಕಲ್ಯಾಣ ಮಾಡುತ್ತಾರೆ. ಸತ್ಯಯುಗದಲ್ಲಿ ಎಲ್ಲರ ಕಲ್ಯಾಣವಾಗಿತ್ತು, ಯಾವುದೇ ದುಃಖವಿರಲಿಲ್ಲ. ಇದನ್ನು ತಿಳಿಸಬೇಕಾಗಿದೆ - ನಾವು ಈಶ್ವರೀಯ ಪರಿವಾರದವರಾಗಿದ್ದೇವೆ, ಈಶ್ವರನು ಎಲ್ಲರ ತಂದೆಯಾಗಿದ್ದಾರೆ, ಇಲ್ಲಿಯೇ ನೀವು ಮಾತಾಪಿತಾ ಎಂದು ಹಾಡುತ್ತೀರಿ. ಅಲ್ಲಂತೂ ಕೇವಲ ತಂದೆಯೆಂದು ಹೇಳಲಾಗುತ್ತದೆ. ಇಲ್ಲಿ ನೀವು ಮಕ್ಕಳಿಗೆ ತಂದೆ-ತಾಯಿ ಸಿಗುತ್ತಾರೆ. ಇಲ್ಲಿ ನೀವು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ರಚಯಿತ ತಂದೆಯಿದ್ದಾರೆಂದರೆ ತಾಯಿಯೂ ಇರುವರು. ಇಲ್ಲವೆಂದರೆ ರಚನೆಯು ಹೇಗಾಗುವುದು? ಸ್ವರ್ಗದ ರಚಯಿತ ತಂದೆಯು ಹೇಗೆ ಸ್ವರ್ಗ ಸ್ಥಾಪನೆ ಮಾಡುತ್ತಾರೆ ಎಂಬುದನ್ನು ಭಾರತವಾಸಿಗಳೇ ತಿಳಿದುಕೊಂಡಿಲ್ಲ ಮತ್ತು ವಿದೇಶದವರೂ ತಿಳಿದುಕೊಂಡಿಲ್ಲ. ಇಲ್ಲಿ ನಿಮಗೆ ತಿಳಿದಿದೆ – ಹೊಸ ಪ್ರಪಂಚದ ಸ್ಥಾಪನೆ ಮತ್ತು ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಸಂಗಮದಲ್ಲಿಯೇ ಆಗುವುದು. ನೀವೀಗ ಸಂಗಮದಲ್ಲಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮವು ಪರಮಪಿತ ಪರಮಾತ್ಮನನ್ನು ನೆನಪು ಮಾಡಬೇಕಾಗಿದೆ. ಆತ್ಮಗಳು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರು....... ಸುಂದರ ಮೇಳವು ಎಲ್ಲಿ ಆಗುವುದು! ಆ ಸುಂದರ ಮೇಳವು ಅವಶ್ಯವಾಗಿ ಇಲ್ಲಿಯೇ ಸೇರುವುದು. ಪರಮಾತ್ಮ ತಂದೆಯು ಇಲ್ಲಿಯೇ ಬರುತ್ತಾರೆ, ಇದಕ್ಕೇ ಕಲ್ಯಾಣಕಾರಿ ಸುಂದರ ಮೇಳವೆಂದು ಹೇಳಲಾಗುತ್ತದೆ. ಜೀವನ್ಮುಕ್ತಿಯ ಆಸ್ತಿಯನ್ನು ಎಲ್ಲರಿಗೆ ಕೊಡುತ್ತಾರೆ ಆಗ ಎಲ್ಲರೂ ಜೀವನ ಬಂಧನದಿಂದ ಮುಕ್ತರಾಗಿ ಬಿಡುತ್ತಾರೆ. ಎಲ್ಲರೂ ಶಾಂತಿಧಾಮಕ್ಕೆ ಹೋಗುತ್ತಾರೆ ಮತ್ತೆ ಬಂದಾಗ ಸತೋಪ್ರಧಾನರಿರುತ್ತಾರೆ. ಧರ್ಮ ಸ್ಥಾಪನಾರ್ಥವಾಗಿ ಧರ್ಮಾತ್ಮರು ಕೆಳಗಡೆ ಬಂದಾಗ ಅವರ ಸಂಖ್ಯೆಯು ಹೆಚ್ಚಿನದಾಗಿ ವೃದ್ಧಿಯಾದಾಗ ರಾಜ್ಯಭಾರಕ್ಕಾಗಿ ಪುರುಷಾರ್ಥ ಮಾಡುವರು. ಅಲ್ಲಿಯವರೆಗೆ ಯಾವುದೇ ಜಗಳ, ಕಲಹಗಳಿರುವುದಿಲ್ಲ. ಸತೋಪ್ರಧಾನರಿಂದ ಯಾವಾಗ ರಜೋದಲ್ಲಿ ಬರುವರೋ ಆಗ ಜಗಳ ಕಲಹಗಳನ್ನು ಆರಂಭಿಸುತ್ತಾರೆ. ಮೊದಲು ಸುಖ, ನಂತರ ದುಃಖ. ಈಗ ಸಂಪೂರ್ಣ ದುರ್ಗತಿಯನ್ನು ಹೊಂದಿದ್ದಾರೆ, ಈ ಕಲಿಯುಗೀ ಪ್ರಪಂಚದ ವಿನಾಶ ಮತ್ತು ಸತ್ಯಯುಗೀ ಪ್ರಪಂಚದ ಸ್ಥಾಪನೆಯಾಗಬೇಕಾಗಿದೆ. ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ, ನಂತರ ಯಾರು ಹೇಗೆ ಪುರುಷಾರ್ಥ ಮಾಡುವರೋ ಅದರನುಸಾರ ವಿಷ್ಣು ಪುರಿಯಲ್ಲಿ ಬಂದು ಪ್ರಾಲಬ್ಧವನ್ನು ಪಡೆಯುತ್ತಾರೆ. ಇವು ಬಹಳ-ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಾವು ಈಶ್ವರನಿಂದ ಭವಿಷ್ಯ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂದು ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ಯಾರೆಷ್ಟಾದರೂ ಪುರುಷಾರ್ಥ ಮಾಡಿ ಈಗ ತನ್ನನ್ನು ಆಕ್ಯುರೇಟ್ ಮಾಡಿಕೊಳ್ಳಬಹುದು....... ನೀವೀಗ ಅಕ್ಯುರೇಟ್ ಆಗಬೇಕಾಗಿದೆ. ಗಡಿಯಾರಗಳಲ್ಲಿಯೂ ಸಹ ಲಿವರ್ ಮತ್ತು ಸಲೆಂಡರ್ ಇರುತ್ತವೆ. ಲಿವರ್ ಗಡಿಯಾರವು ಬಹಳ ಅಕ್ಯುರೇಟ್ ಆಗಿರುತ್ತದೆ. ಮಕ್ಕಳಲ್ಲಿಯೂ ಕೆಲವರು ಅಕ್ಯುರೇಟ್ ಆಗಿ ಬಿಡುತ್ತಾರೆ, ಇನ್ನೂ ಕೆಲವರು ಅನ್ಅಕ್ಯುರೇಟ್ ಆಗಿ ಬಿಡುತ್ತಾರೆ ಅವರದು ಕಡಿಮೆ ಪದವಿಯಾಗುತ್ತದೆ. ಆದ್ದರಿಂದ ಪುರುಷಾರ್ಥ ಮಾಡಿ ಅಕ್ಯುರೇಟ್ ಆಗಬೇಕು. ಈಗ ಎಲ್ಲರೂ ಅಕ್ಯುರೇಟ್ ಆಗಿ ನಡೆಯುತ್ತಿಲ್ಲ. ಪುರುಷಾರ್ಥ ಮಾಡಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಅದೃಷ್ಟವನ್ನು ರೂಪಿಸಿಕೊಳ್ಳುವ ಪುರುಷಾರ್ಥದಲ್ಲಿ ಕೊರತೆಯಿದೆ ಆದ್ದರಿಂದಲೇ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಶ್ರೀಮತದಂತೆ ನಡೆಯದ ಕಾರಣ ಆಸುರೀ ಗುಣವನ್ನು ಬಿಡದೇ ಇರುವ ಕಾರಣ ಯೋಗದಲ್ಲಿ ಇಲ್ಲದಿರುವ ಕಾರಣವೇ ಇವೆಲ್ಲವೂ ಆಗುತ್ತದೆ. ಯೋಗದಲ್ಲಿ ಇಲ್ಲವೆಂದರೆ ಅಂತಹವರು ಪಂಡಿತರಿದ್ದಂತೆ. ಯೋಗವು ಕಡಿಮೆಯಿದೆ ಆದ್ದರಿಂದ ಶಿವ ತಂದೆಯ ಕಡೆ ಪ್ರೀತಿಯಿರುವುದಿಲ್ಲ, ಧಾರಣೆಯೂ ಕಡಿಮೆಯಾಗುತ್ತದೆ, ಆ ಖುಷಿಯಿರುವುದಿಲ್ಲ. ಚಹರೆಯೇ ಶವದಂತೆ ಬಾಡಿರುತ್ತದೆ. ನಿಮ್ಮ ಚಹರೆಯಂತೂ ದೇವತೆಗಳ ಚಹರೆಯಂತೆ ಸದಾ ಹರ್ಷಿತವಾಗಿರಬೇಕು. ತಂದೆಯು ನಿಮಗೆ ಎಷ್ಟೊಂದು ಆಸ್ತಿಯನ್ನು ಕೊಡುತ್ತಾರೆ. ಯಾರಾದರೂ ಬಡವರ ಮಗು ಸಾಹುಕಾರರ ಬಳಿ ಬಂದರೆ ಅವರಿಗೆ ಎಷ್ಟೊಂದು ಖುಷಿಯಿರುತ್ತದೆ. ನೀವೂ ಸಹ ಬಹಳ ಬಡವರಾಗಿದ್ದಿರಿ, ಈಗ ತಂದೆಯು ದತ್ತು ಮಾಡಿಕೊಂಡಿದ್ದಾರೆ ಅಂದಮೇಲೆ ಖುಷಿಯಿರಬೇಕು - ನಾವು ಈಶ್ವರೀಯ ಸಂಪ್ರದಾಯದವರಾಗಿದ್ದೇವೆ ಎಂದು, ಆದರೆ ಅದೃಷ್ಟದಲ್ಲಿಲ್ಲವೆಂದರೆ ಏನು ಮಾಡುವುದು! ಅಂತಹವರ ಪದವಿಯು ಭ್ರಷ್ಟವಾಗುತ್ತದೆ. ಪಟ್ಟದ ರಾಣಿಯರಾಗುವುದಿಲ್ಲ. ತಂದೆಯು ಪಟ್ಟದ ರಾಣಿಯರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತಾರೆ. ನೀವು ಮಕ್ಕಳು ಯಾರಿಗಾದರೂ ಇದನ್ನು ತಿಳಿಸಬಹುದು - ಬ್ರಹ್ಮಾ, ವಿಷ್ಣು, ಶಂಕರ ಮೂವರು ಶಿವನ ಮಕ್ಕಳಾಗಿದ್ದಾರೆ. ತಂದೆಯು ಬ್ರಹ್ಮಾರವರ ಮೂಲಕ ಭಾರತವನ್ನು ಪುನಃ ಸ್ವರ್ಗವನ್ನಾಗಿ ಮಾಡುತ್ತಾರೆ, ಶಂಕರನ ಮೂಲಕ ಹಳೆಯ ಪ್ರಪಂಚದ ವಿನಾಶವಾಗುತ್ತದೆ. ಭಾರತದಲ್ಲಿಯೇ ಬಹಳ ಕೆಲವರು ಮಾತ್ರ ಉಳಿಯುತ್ತಾರೆ. ಪ್ರಳಯವಂತೂ ಆಗುವುದಿಲ್ಲ ಆದರೆ ಬಹಳ ಕಡಿಮೆ ಜನಸಂಖ್ಯೆ ಮಾತ್ರವೇ ಉಳಿಯುತ್ತದೆ. ಆದ್ದರಿಂದ ಅದು ಪ್ರಳಯವಾದ ಹಾಗೆ. ರಾತ್ರಿ-ಹಗಲಿನ ಅಂತರವಾಗಿ ಬಿಡುತ್ತದೆ, ಅವರೆಲ್ಲರೂ ಮುಕ್ತಿಧಾಮದಲ್ಲಿ ಹೊರಟು ಹೋಗುತ್ತಾರೆ. ಇದು ಪತಿತ-ಪಾವನ ತಂದೆಯದೇ ಕರ್ತವ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಯಾಗಿರಿ ಇಲ್ಲದಿದ್ದರೆ ಹಳೆಯ ಸಂಬಂಧಿಗಳು ನೆನಪಿಗೆ ಬರುತ್ತಿರುತ್ತಾರೆ. ಎಲ್ಲವನ್ನೂ ಬಿಟ್ಟಿದ್ದೀರಿ ಆದರೂ ಸಹ ಬುದ್ಧಿಯು ಹೋಗುತ್ತಿರುತ್ತದೆ. ನಷ್ಟಮೋಹಿಯಾಗಿಲ್ಲ, ಆದ್ದರಿಂದ ಅದಕ್ಕೆ ವ್ಯಭಿಚಾರಿ ನೆನಪೆಂದು ಹೇಳಲಾಗುತ್ತದೆ. ಸದ್ಗತಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ ಏಕೆಂದರೆ ದುರ್ಗತಿಯವರನ್ನೇ ನೆನಪು ಮಾಡುತ್ತಿರುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಾಪ್ದಾದಾರವರ ಹೃದಯವನ್ನೇರಲು ಮನಸ್ಸಾ-ವಾಚಾ-ಕರ್ಮಣಾ ಸೇವೆ ಮಾಡಬೇಕಾಗಿದೆ. ಆಕ್ಯುರೇಟ್ ಮತ್ತು ಆಲ್ರೌಂಡರ್ ಆಗಬೇಕಾಗಿದೆ. |
2. ಯಾವುದೇ ಹಳೆಯ ಮಿತ್ರ ಸಂಬಂಧಿಗಳು ನೆನಪಿಗೆ ಬರಬಾರದು - ಈ ರೀತಿ ಆತ್ಮಾಭಿಮಾನಿಗಳಾಗಬೇಕು. ಪರಸ್ಪರ ಬಹಳ-ಬಹಳ ಆತ್ಮಿಕ ಪ್ರೀತಿಯಿಂದ ಇರಬೇಕಾಗಿದೆ, ಉಪ್ಪು-ನೀರಾಗಿ ವರ್ತಿಸಬಾರದು. |
ಓಂ ಶಾಂತಿ. ಇದು ತಂದೆ ಮತ್ತು ಮಕ್ಕಳ ಮಿಲನವಾಗಿದೆ. ಗುರುಗಳು ಮತ್ತು ಶಿಷ್ಯರ ಮೇಳವಂತು ಅಲ್ಲ. ಗುರುಗಳಿಗೆ ಈ ದೃಷ್ಟಿಯಿರುತ್ತದೆ- ಇವರು ನಮ್ಮ ಶಿಷ್ಯರು ಅಥವಾ ಇವರು ಅನುಯಾಯಿಯಾಗಿದ್ದಾರೆ ಅಥವಾ ಜಿಜ್ಞಾಸು ಆಗಿದ್ದಾರೆ, ಇದು ಕನಿಷ್ಟದೃಷ್ಟಿಯಾಯಿತಲ್ಲವೆ. ಅವರು ಆ ದೃಷ್ಟಿಯಿಂದಲೇ ನೋಡುತ್ತಿರುತ್ತಾರೆ, ಆತ್ಮವನ್ನು ನೋಡುವುದಿಲ್ಲ. ಅವರು ಶರೀರಗಳನ್ನೇ ನೋಡುತ್ತಾರೆ ಮತ್ತು ಶಿಷ್ಯರೂ ಸಹ ದೇಹಾಭಿಮಾನಿಯಾಗಿಯೇ ಕುಳಿತುಕೊಂಡಿರುತ್ತಾರೆ. ಅವರನ್ನು ತನ್ನ ಗುರುಗಳೆಂದು ತಿಳಿಯುತ್ತಾರೆ. ಇವರು ನಮ್ಮ ಗುರುವಾಗಿದ್ದಾರೆ ಎಂಬ ದೃಷ್ಟಿಯೇ ಇರುತ್ತದೆ. ಗುರುಗಳಿಗೆ ಬಹಳ ಗೌರವವನ್ನು ಕೊಡುತ್ತಾರೆ. ಇಲ್ಲಂತೂ ಬಹಳ ವ್ಯತ್ಯಾಸವಿದೆ, ಇಲ್ಲಿ ತಂದೆಯೇ ಮಕ್ಕಳಿಗೆ ಗೌರವ ಕೊಡುತ್ತಾರೆ ಏಕೆಂದರೆ ಈ ಮಕ್ಕಳಿಗೆ ಓದಿಸಬೇಕು ಎಂಬುದು ತಂದೆಗೆ ಗೊತ್ತಿದೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಬೇಹದ್ದಿನ ಚರಿತ್ರೆ-ಭೂಗೋಳವನ್ನು ತಿಳಿಸಬೇಕಾಗಿದೆ ಆದರೆ ಆ ಗುರುಗಳ ಮನಸ್ಸಿನಲ್ಲಿ ಮಕ್ಕಳೆಂಬ ಪ್ರೀತಿಯಿರುವುದಿಲ್ಲ. ತಂದೆಯ ಬಳಿಯಂತು ಮಕ್ಕಳೆಂಬ ಪ್ರೀತಿಯಿರುತ್ತದೆ ಮತ್ತು ಮಕ್ಕಳಿಗೂ ಸಹ ತಂದೆಯ ಪ್ರತಿ ಪ್ರೀತಿಯಿರುತ್ತದೆ. ನೀವು ತಿಳಿದುಕೊಳ್ಳುತ್ತೀರಿ- ನಿಮಗೆ ತಂದೆಯು ಸೃಷ್ಟಿಚಕ್ರದ ಜ್ಞಾನವನ್ನು ತಿಳಿಸುತ್ತಾರೆ. ಆ ಗುರುಗಳು ಏನನ್ನು ಕಲಿಸುತ್ತಾರೆ? ಅರ್ಧಕಲ್ಪದಿಂದ ಶಾಸ್ತ್ರ ಇತ್ಯಾದಿಗಳನ್ನೇ ತಿಳಿಸುತ್ತಾರೆ, ಭಕ್ತಿಮಾರ್ಗದ ಕರ್ಮವನ್ನು ಮಾಡುತ್ತಾ ಗಾಯಿತ್ರಿಮಂತ್ರ, ಸಂಧ್ಯಾವಂದನೆ ಇತ್ಯಾದಿಯನ್ನು ಕಲಿಸುತ್ತಾರೆ. ಇಲ್ಲಿ ತಂದೆಯು ಬಂದು ತನ್ನ ಪರಿಚಯವನ್ನು ಕೊಡುತ್ತಿದ್ದಾರೆ. ನಾವು ತಂದೆಯನ್ನು ಅರಿತುಕೊಂಡೇ ಇರಲಿಲ್ಲ, ಅವರನ್ನು ನಾವು ಸರ್ವವ್ಯಾಪಿ ಎಂದು ಹೇಳುತ್ತಿದ್ದೆವು, ಪರಮಾತ್ಮನು ಎಲ್ಲಿದ್ದಾನೆ ಎಂದು ಯಾವಾಗ ಕೇಳಿದರೂ ಸಹ ಸರ್ವವ್ಯಾಪಿಯಾಗಿದ್ದಾರೆಂದು ಕ್ಷಣದಲ್ಲಿಯೇ ಹೇಳಿಬಿಡುತ್ತಾರೆ. ತಮ್ಮಬಳಿ ಯಾರಾದರೂ ಬಂದರೆ ಇಲ್ಲಿ ಏನನ್ನು ಕಲಿಸುತ್ತೀರಿ ಎಂದು ಕೇಳಿದರೆ ತಿಳಿಸಿ- ನಾವು ರಾಜಯೋಗವನ್ನು ಕಲಿಸುತ್ತೇವೆ, ಯಾವುದರಿಂದ ತಾವು ಮನುಷ್ಯರಿಂದ ದೇವತೆಗಳು ಅರ್ಥಾತ್ ರಾಜರಾಗಬಹುದು, ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವ ಸತ್ಸಂಗ ವiತ್ತ್ಯಾವುದೇ ಸತ್ಸಂಗ ಇರುವುದಿಲ್ಲ. ದೇವತೆಗಳು ಇರುವುದು ಸತ್ಯಯುಗದಲ್ಲಿ. ಕಲಿಯುಗದಲ್ಲಿ ಇರುವುದು ಮನುಷ್ಯರು. ಈಗ ನಾವು ನಿಮಗೆ ಇಡೀ ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತೇನೆ, ಇದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ, ಹಾಗೂ ಪಾವನರಾಗುವ ಬಹಳಷ್ಟು ಯುಕ್ತಿಯನ್ನು ನಿಮಗೆ ತಿಳಿಸುತ್ತೇನೆ. ಇಂತಹ ಯುಕ್ತಿಯನ್ನೆಂದೂ ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಇದು ಸಹಜ ರಾಜಯೋಗವಾಗಿದೆ. ತಂದೆಯು ಪತಿತ-ಪಾವನನಾಗಿದ್ದಾರೆ, ಅವರು ಸರ್ವಶಕ್ತಿವಂತನೂ ಆಗಿದ್ದಾರೆ ಅಂದಮೇಲೆ ಅವರನ್ನು ನೆನಪು ಮಾಡುವುದರಿಂದ ಪಾಪಗಳು ತುಂಡಾಗುತ್ತವೆ ಏಕೆಂದರೆ ಯೋಗಾಗ್ನಿ ಆಗಿದೆಯಲ್ಲವೆ. ಅಂದಾಗ ಇಲ್ಲಿ ಹೊಸಮಾತನ್ನು ಕಲಿಸುತ್ತೇವೆ. |
ಇದು ಜ್ಞಾನಮಾರ್ಗವಾಗಿದೆ. ಜ್ಞಾನಸಾಗರ ತಂದೆಯೊಬ್ಬರೇ ಆಗಿದ್ದಾರೆ, ಜ್ಞಾನ ಮತ್ತು ಭಕ್ತಿಯು ಬೇರೆ-ಬೇರೆಯಾಗಿದೆ. ಜ್ಞಾನವನ್ನು ಕಲಿಸಲು ತಂದೆಯೇ ಬರಬೇಕಾಗುತ್ತದೆ ಏಕೆಂದರೆ ಅವರೇ ಜ್ಞಾನಸಾಗರನಾಗಿದ್ದಾರೆ. ಅವರು ತಾನಾಗಿಯೇ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ- ನಾನು ಎಲ್ಲರ ತಂದೆಯಾಗಿದ್ದೇನೆ. ಬ್ರಹ್ಮಾರವರ ಮೂಲಕ ಇಡೀ ಸೃಷ್ಟಿಯನ್ನು ಪಾವನ ಮಾಡುತ್ತೇನೆ. ಪಾವನಪ್ರಪಂಚವು ಸತ್ಯಯುಗವಾಗಿದೆ, ಪತಿತಪ್ರಪಂಚವು ಕಲಿಯುಗವಾಗಿದೆ ಅಂದಮೇಲೆ ಇದು ಸತ್ಯಯುಗದ ಆದಿ, ಕಲಿಯುಗದ ಅಂತ್ಯದ ಸಂಗಮವಾಗಿದೆ. ಇದನ್ನು ಅತಿಚಿಕ್ಕದಾದ ಯುಗವೆಂದು ಹೇಳಲಾಗುತ್ತದೆ. ಇದರಲ್ಲಿ ನಾವು ಜಂಪ್ ಮಾಡುತ್ತೇವೆ. ಎಲ್ಲಿಗೆ? ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಒಮ್ಮೆಲೆ ಜಿಗಿಯುತ್ತೇವೆ. ಸತ್ಯಯುಗದಿಂದ ನಿಧಾನ-ನಿಧಾನವಾಗಿ ಏಣಿಯನ್ನು ಕೆಳಗಿಳಿಯುತ್ತಾ ಬಂದೆವು ಆದರೆ ಇಲ್ಲಿ ನಾವು ಈ ಛೀ ಛೀ ಪ್ರಪಂಚದಿಂದ ಹೊಸಪ್ರಪಂಚದಲ್ಲಿ ಹೋಗುತ್ತೇವೆ. ನೇರವಾಗಿ ಅತಿ ಎತ್ತರದಲ್ಲಿ ಹೋಗುತ್ತೇವೆ. ಹಳೆಯ ಪ್ರಪಂಚವನ್ನು ಬಿಟ್ಟು ನಾವು ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ಇದು ಬೇಹದ್ದಿನ ಮಾತಾಗಿದೆ. ಬೇಹದ್ದಿನ ಹಳೆಯ ಪ್ರಪಂಚದಲ್ಲಿ ಅನೇಕ ಮನುಷ್ಯರಿದ್ದಾರೆ, ಹೊಸ ಪ್ರಪಂಚದಲ್ಲಿ ಕೆಲವರೇ ಇರುತ್ತಾರೆ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿ ಎಲ್ಲರೂ ಪವಿತ್ರರಾಗಿರುತ್ತಾರೆ, ಕಲಿಯುಗದಲ್ಲಿ ಎಲ್ಲರೂ ಅಪವಿತ್ರರಾಗಿದ್ದಾರೆ. ರಾವಣನು ಅಪವಿತ್ರರನ್ನಾಗಿ ಮಾಡುತ್ತಾನೆ. ತಂದೆಯು ಎಲ್ಲರಿಗೂ ತಿಳಿಸುತ್ತಾರೆ- ಮಕ್ಕಳೇ, ನೀವೀಗ ರಾವಣರಾಜ್ಯ ಅಥವ ಹಳೆಯ ಪ್ರಪಂಚದಲ್ಲಿದ್ದೀರಿ. ನೀವು ಮೊದಲು ರಾಮರಾಜ್ಯದಲ್ಲಿದ್ದಿರಿ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ನಂತರ 84 ಜನ್ಮಗಳ ಚಕ್ರವನ್ನು ಸುತುತ್ತಾ ಹೇಗೆ ಕೆಳಗೆ ಬಂದಿದ್ದೀರೆನ್ನುವುದನ್ನು ನಾನು ತಿಳಿಸುತ್ತೇನೆ. ಯಾರು ಒಳ್ಳೆಯ ಬುದ್ಧಿವಂತರಿರುವರೋ ಅವರು ತಕ್ಷಣದಲ್ಲಿ ತಿಳಿದುಕೊಳ್ಳುತ್ತಾರೆ. ಯಾರಿಗೆ ಬುದ್ಧಿಯಲ್ಲಿ ಬರುವುದಿಲ್ಲವೋ ಅವರು ಬಿಸಿತವೆಯ ಮೇಲೆ ನೀರು ಹಾಕಿದಂತೆ, ಆಕಡೆ-ಈಕಡೆ ನೋಡುತ್ತಿರುತ್ತಾರೆ, ಗಮನವಿಟ್ಟು ಕೇಳುವುದಿಲ್ಲ. ಈ ರೀತಿ ಹೇಳುತ್ತಾರಲ್ಲವೆ- ಬಿಸಿತವೆಯಂತಿದ್ದೀರಿ, ಏನು ಹೇಳಿದರೂ ಹಾರಿಹೋಗುತ್ತಿದೆ. ಸನ್ಯಾಸಿಗಳೂ ಸಹ ಕಥೆಯನ್ನು ಹೇಳುವಾಗ ಯಾರಾದರೂ ತೂಕಡಿಸಿದಾಗ ಅಥವ ಗಮನವು ಬೇರೆಕಡೆಯಲ್ಲಿ ಇರುತ್ತದೆಯೆಂದರೆ ತಕ್ಷಣವೇ ಕೇಳುತ್ತಾರೆ- ಈಗ ನಾವು ಏನು ತಿಳಿಸಿದ್ದೇವೆ? ಇಲ್ಲಿ ತಂದೆಯೂ ಸಹ ಎಲ್ಲರನ್ನೂ ನೋಡುತ್ತಿರುತ್ತಾರೆ- ಚಂಚಲಬುದ್ಧಿಯವರಾಗಿ ಯಾರೂ ಸಹ ಕುಳಿತಿಲ್ಲವೇ ಎಂದು ನೋಡುತ್ತಾರೆ. ಯಾರು ಸೂಕ್ಷ್ಮ ಬುದ್ಧಿಯವರಿರುತ್ತಾರೆಯೋ ಅವರು ವಿದ್ಯಾಭ್ಯಾಸದ ಸಮಯದಲ್ಲಿ ಆಕಳಿಸುವುದಿಲ್ಲ. ಶಾಲೆಯಲ್ಲಿ ಯಾರೂ ಸಹ ಕಣ್ಣುಗಳನ್ನು ಮುಚ್ಚಿ ಕುಳಿತುಕೊಳ್ಳುವ ನಿಯಮವಿಲ್ಲ. ಜ್ಞಾನವನ್ನು ಸ್ವಲ್ಪವೂ ಅರ್ಥಮಾಡಿಕೊಳ್ಳುವುದಿಲ್ಲ. ಅವರಿಗೆ ತಂದೆಯ ನೆನಪು ಮಾಡುವುದು ಬಹಳ ಕಷ್ಟವಾಗುತ್ತದೆ ಅಂದಮೇಲೆ ಪಾಪವು ಹೇಗೆ ಭಸ್ಮವಾಗುತ್ತದೆ! ಸೂಕ್ಷ್ಮಬುದ್ಧಿಯವರು ಬಹಳಚೆನ್ನಾಗಿ ಧಾರಣೆ ಮಾಡಿಕೊಂಡು, ಅನ್ಯರಿಗೂ ತಿಳಿಸುವ ಉಮ್ಮಂಗವನ್ನಿಡುತ್ತಾರೆ, ಜ್ಞಾನವಿಲ್ಲದಿದ್ದರೆ ಬುದ್ಧಿಯು ಮಿತ್ರಸಂಬಂಧಿಗಳಕಡೆ ಅಲೆಯುತ್ತಿರುತ್ತದೆ. ಇಲ್ಲಿ ತಂದೆಯು ತಿಳಿಸುತ್ತಾರೆ- ಎಲ್ಲವನ್ನೂ ಮರೆಯಬೇಕಾಗಿದೆ. ಅಂತ್ಯದಲ್ಲಿ ಯಾವುದೇ ನೆನಪು ಬರಬಾರದು. ಈ ಬ್ರಹ್ಮಾರವರು ಗುರುಗಳು ಮುಂತಾದವರನ್ನು ನೋಡಿದ್ದಾರೆ, ಯಾರು ಪರಿಪಕ್ವ ಬ್ರಹ್ಮಜ್ಞಾನಿಗಳಿದ್ದಾರೆಯೋ ಅವರು ಮುಂಜಾನೆಯ ಸಮಯದಲ್ಲಿ ಕುಳಿತು-ಕುಳಿತಿದ್ದಂತೆಯೇ ಬ್ರಹ್ಮತತ್ಮವನ್ನು ನೆನಪು ಮಾಡುತ್ತಾ-ಮಾಡುತ್ತಾ ಶರೀರವನ್ನು ಬಿಟ್ಟುಬಿಡುತ್ತಾರೆ. ಅಲ್ಲಿ ಬಹಳ ಶಾಂತಿಯ ಪ್ರಕಂಪನಗಳಿರುತ್ತವೆ. ಅವರು ಬ್ರಹ್ಮತತ್ವದಲ್ಲಿ ಲೀನವಾಗಲು ಸಾಧ್ಯವಿಲ್ಲ, ಪುನಃ ತಾಯಿಯ ಗರ್ಭದಿಂದ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. |
ತಂದೆಯು ತಿಳಿಸಿದ್ದಾರೆ- ವಾಸ್ತವದಲ್ಲಿ ಮಹಾತ್ಮನೆಂದು ಕೃಷ್ಣನಿಗೆ ಹೇಳಲಾಗುತ್ತದೆ. ಮನುಷ್ಯರು ಅರ್ಥವನ್ನು ತಿಳಿದುಕೊಳ್ಳದೇ ಸುಮ್ಮನೇ ಹೇಳಿಬಿಡುತ್ತಾರೆ. ತಂದೆಯು ತಿಳಿಸುತ್ತಾರೆ- ಶ್ರೀಕೃಷ್ಣನು ಸಂಪೂರ್ಣ ನಿರ್ವಿಕಾರಿಯಾಗಿದ್ದಾನೆ ಆದರೆ ಅವರನ್ನು ಸನ್ಯಾಸಿ ಎಂದಲ್ಲ, ದೇವತೆಯೆಂದು ಹೇಳಲಾಗುತ್ತದೆ. ಸನ್ಯಾಸಿಯೆಂದು ಹೇಳುವುದರಲ್ಲಿ ಮತ್ತು ದೇವತೆಯೆಂದು ಹೇಳುವುದರಲ್ಲಿ ಅರ್ಥವಿದೆ. ಇವರು ಹೇಗೆ ದೇವತೆಯಾದರು? ಸನ್ಯಾಸಿಯಿಂದ ದೇವತೆಯಾದರೇನು? ಬೇಹದ್ದಿನ ಸನ್ಯಾಸ ಮಾಡಿದರು ನಂತರ ಹೊಸಪ್ರಪಂಚದಲ್ಲಿ ಹೊರಟುಹೋದರು. ಆ ಮನುಷ್ಯರಂತು ಅಲ್ಪಕಾಲದ ಸನ್ಯಾಸ ಮಾಡುತ್ತಾರೆ, ಬೇಹದ್ದಿನಲ್ಲಿ ಹೋಗಲು ಸಾಧ್ಯವಿಲ್ಲ. ಮತ್ತೆ ಹದ್ದಿನಲ್ಲಿಯೇ ವಿಕಾರದಿಂದ ಜನ್ಮವನ್ನು ತೆಗೆದುಕೊಳ್ಳಬೇಕಾಗುತ್ತದೆ. ಬೇಹದ್ದಿನ ಮಾಲೀಕರಾಗಲು ಸಾಧ್ಯವಿಲ್ಲ, ಎಂದೂ ರಾಜ-ರಾಣಿಯಾಗಲು ಸಾಧ್ಯವಿಲ್ಲ ಏಕೆಂದರೆ ಅವರ ಧರ್ಮವೇ ಭಿನ್ನವಾಗಿದೆ. ಸನ್ಯಾಸಧರ್ಮವು ದೇವಿ-ದೇವತಾಧರ್ಮವಲ್ಲ. ಸನ್ಯಾಸಧರ್ಮದವರು ದೇವಿ-ದೇವತಾ ಧರ್ಮದ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಅಂದಮೇಲೆ ಗೀತೆ ಇತ್ಯಾದಿಯನ್ನೇಕೆ ತೆಗೆದುಕೊಳ್ಳುತ್ತಾರೆ. ಇದೆಲ್ಲವೂ ಅಧರ್ಮವಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾನು ಅಧರ್ಮದ ವಿನಾಶ ಮಾಡಿ, ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಉಳಿದಂತೆ ಇವರೆಲ್ಲರೂ ಅಧರ್ಮವನ್ನೇ ಮಾಡುತ್ತಿರುತ್ತಾರೆ. ವಿಕಾರವು ಅಧರ್ಮವಲ್ಲವೆ! ಆದ್ದರಿಂದ ತಂದೆಯು ತಿಳಿಸುತ್ತಾರೆ- ಇದೆಲ್ಲದರ ವಿನಾಶ ಮತ್ತು ಒಂದು ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆ ಮಾಡುತ್ತಿದ್ದೀರಿ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುತ್ತಾರೆ. ತಮ್ಮನ್ನು ಆತ್ಮವೆಂದು ನಿಶ್ಚಯ ಮಾಡಿಕೊಳ್ಳಬೇಕಾಗಿದೆ. ಭಲೆ ಗೃಹಸ್ಥವ್ಯವಹಾರದಲ್ಲಿರಿ, ಅದರಲ್ಲಿಯೂ ಎಷ್ಟು ಸಾಧ್ಯವೋ ಅಷ್ಟು ಏಳುತ್ತಾ-ಕುಳಿತುಕೊಳ್ಳುತ್ತಾ ಪರಿಪಕ್ವ ಮಾಡಿಕೊಳ್ಳಬೇಕು. ಹೇಗೆ ಭಕ್ತರು ಮುಂಜಾನೆಯಲ್ಲಿ ಎದ್ದು, ಏಕಾಂತದಲ್ಲಿ ಮಾಲೆಯನ್ನು ಜಪಿಸುತ್ತಾರೆ. ನೀವು ಇಡೀ ದಿನದ ಲೆಕ್ಕವನ್ನು ತೆಗೆಯುತ್ತೀರಿ. ಈ ಸಮಯದಲ್ಲಿ ಇಷ್ಟು ನೆನಪಿತ್ತು, ಇಡೀ ದಿನದಲ್ಲಿ ಇಷ್ಟು ನೆನಪಿತ್ತು ಎಂಬುದರ ಲೆಕ್ಕವನ್ನು ತೆಗೆಯಬೇಕು. ಭಕ್ತರು ಮುಂಜಾನೆಯಲ್ಲಿ ಮಾಲೆಯನ್ನು ಜಪಿಸುತ್ತಾರೆ, ಭಲೆ ಕೆಲವರು ಸತ್ಯಭಕ್ತರಾಗಿರುವುದಿಲ್ಲ. ಕೆಲವರ ಬುದ್ಧಿಯಂತು ಹೊರಗೆ ಅಲ್ಲಿ-ಇಲ್ಲಿ ಅಲೆಯುತ್ತಿರುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ- ಭಕ್ತಿಯಿಂದ ಯಾವುದೇ ಲಾಭವು ಸಿಗುವುದಿಲ್ಲ. ಇದು ಜ್ಞಾನವಾಗಿದೆ, ಇದರಿಂದ ಬಹಳ ಲಾಭವಾಗುತ್ತದೆ. ಈಗ ನಿಮ್ಮದು ಏರುವಕಲೆಯಾಗಿದೆ. ತಂದೆಯು ಪದೇ-ಪದೇ ತಿಳಿಸುತ್ತಾರೆ- ಮನ್ಮನಾಭವ. ಗೀತೆಯಲ್ಲಿಯೂ ಈ ಅಕ್ಷರವಿದೆ ಆದರೆ ಅದರ ಅರ್ಥವನ್ನು ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಉತ್ತರವನ್ನು ತಿಳಿಸುವುದು ಬರುವುದೇ ಇಲ್ಲ, ವಾಸ್ತವದಲ್ಲಿ ಅದರ ಅರ್ಥವನ್ನೂ ಬರೆಯಲಾಗಿದೆ- ತಾವು ತಮ್ಮನ್ನು ಆತ್ಮವೆಂದು ತಿಳಿದು, ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿರಿ. ಭಗವಾನುವಾಚ ಇದೆಯಲ್ಲವೆ. ಆದರೆ ಅವರ ಬುದ್ಧಿಯಲ್ಲಿ ಕೃಷ್ಟಭಗವಂತನಿದ್ದಾನೆ. ಕೃಷ್ಣನಂತು ದೇಹಧಾರಿ, ಪುನರ್ಜನ್ಮದಲ್ಲಿ ಬರುವವನಾಗಿದ್ದಾನಲ್ಲವೆ. ಅಂದಮೇಲೆ ಕೃಷ್ಣನನ್ನು ಭಗವಂತನೆಂದು ಹೇಳಲು ಹೇಗೆ ಸಾಧ್ಯ! ಸನ್ಯಾಸಿಗಳು ಮೊದಲಾದವರ ದೃಷ್ಟಿಯು ತಂದೆ ಮತ್ತು ಮಕ್ಕಳೆಂಬ ದೃಷ್ಟಿಯಿರಲು ಸಾಧ್ಯವಿಲ್ಲ. ಭಲೆ ಗಾಂಧೀಜಿಯನ್ನೂ ಸಹ ಬಾಪೂಜಿಯೆಂದು ಹೇಳುತ್ತಿದ್ದರು ಆದರೆ ತಂದೆ ಮತ್ತು ಮಕ್ಕಳ ಸಂಬಂಧವೆಂದು ಹೇಳುವುದಿಲ್ಲ. ಅವರು ಸಾಕಾರಿಯಾದರಲ್ಲವೆ. ನಿಮಗೆ ತಿಳಿಸಲಾಗಿದೆ- ತಮ್ಮನ್ನು ಆತ್ಮವೆಂದು ತಿಳಿಯಿರಿ. ಇವರಲ್ಲಿ ಯಾವ ತಂದೆಯು ಕುಳಿತಿದ್ದಾರೆಯೋ ಅವರು ಬೇಹದ್ದಿನ ಬಾಪೂಜಿಯಾಗಿದ್ದಾರೆ. ಲೌಕಿಕ ಮತ್ತು ಪಾರಲೌಕಿಕ ಇಬ್ಬರೂ ತಂದೆಯರಿಂದ ಆಸ್ತಿಯು ಸಿಗುತ್ತದೆ. ಬಾಪೂಜಿಯಿಂದಂತು ಏನೂ ಸಿಗುವುದಿಲ್ಲ. ಹಾ! ಭಾರತದ ರಾಜಧಾನಿಯು ಮರಳಿ ಸಿಕ್ಕಿತು ಆದರೆ ಇದನ್ನು ಆಸ್ತಿಯೆಂದು ಹೇಳುವುದಿಲ್ಲ, ಅದರಲ್ಲಿ ಸುಖವೂ ಸಿಗಬೇಕಲ್ಲವೆ. |
ಇವೆರಡು ಆಸ್ತಿಗಳಿವೆ - ಒಂದು ಲೌಕಿಕ ತಂದೆಯ ಆಸ್ತಿ. ಇನ್ನೊಂದು ಅಲೌಕಿಕ ತಂದೆಯ ಆಸ್ತಿ. ಬ್ರಹ್ಮಾರವರಿಂದ ಯಾವುದೇ ಆಸ್ತಿಯು ಸಿಗುವುದಿಲ್ಲ. ಭಲೆ ಅವರು ಎಲ್ಲಾ ಪ್ರಜೆಗಳ ಪಿತನಾಗಿದ್ದಾರೆ, ಅವರನ್ನು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ ಎಂದು ಹೇಳುತ್ತಾರೆ. ಅವರೇ ಸ್ವಯಂ ಹೇಳುತ್ತಾರೆ - ನನ್ನಿಂದ ನಿಮಗೆ ಯಾವುದೇ ಆಸ್ತಿಯು ಸಿಗುವುದಿಲ್ಲ. ನನ್ನಿಂದ ಆಸ್ತಿಯು ಸಿಗುವುದಿಲ್ಲ ಎಂದು ಇವರೇ ಹೇಳುತ್ತಾರೆಂದರೆ ಲೌಕಿಕ ತಂದೆಯಿಂದ ಆಸ್ತಿಯೇನು ಸಿಗುತ್ತದೆ? ಏನೂ ಸಿಗುವುದಿಲ್ಲ. ಬ್ರಿಟಿಷರಂತು ಹೊರಟುಹೋದರು. ಅವರ ರಾಜಧಾನಿಯಲ್ಲಾದರೂ ಸ್ವಲ್ಪ ಸುಖವಿತ್ತು, ಈಗೇನಿದೆ? ಉಪವಾಸ ಸತ್ಯಾಗ್ರಹ, ಪಿಕೆಟಿಂಗ್, ಮುಷ್ಕರ ಮುಂತಾದವುಗಳಿರುತ್ತವೆ. ಎಷ್ಟೊಂದು ಹೊಡೆದಾಟಗಳಾಗುತ್ತವೆ, ಯಾರ ಭಯವೂ ಇಲ್ಲ, ದೊಡ್ಡ-ದೊಡ್ಡ ಅಧಿಕಾರಿಗಳನ್ನೂ ಸಹ ಸಾಯಿಸಿಬಿಡುತ್ತಾರೆ. ಸುಖಕ್ಕಿಂತಲೂ ದುಃಖವೇ ಇದೆ ಅಂದಮೇಲೆ ಇಲ್ಲಿಯೇ ಬೇಹದ್ದಿನ ಮಾತಿದೆ. ತಂದೆಯು ತಿಳಿಸುತ್ತಾರೆ- ಮೊದಲು ಇದನ್ನು ನಿಶ್ಚಯ ಮಾಡಿಕೊಳ್ಳಿರಿ ನಾನು ಆತ್ಮನಾಗಿದ್ದೇನೆ, ಶರೀರವಲ್ಲ. ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ನಾವು ದತ್ತು ಮಕ್ಕಳಾಗಿದ್ದೇವೆ. ನಿಮಗೆ ತಿಳಿಸಲಾಗುತ್ತದೆ- ಜ್ಞಾನಸಾಗರ ತಂದೆಯು ಬಂದಿದ್ದಾರೆ ಮತ್ತು ಸೃಷ್ಟಿಚಕ್ರದ ರಹಸ್ಯವನ್ನು ತಿಳಿಸುತ್ತಾರೆ, ಇದನ್ನು ಮತ್ತ್ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ದೇಹಸಹಿತವಾಗಿ ದೇಹದ ಎಲ್ಲಾ ಧರ್ಮಗಳನ್ನು ಮರೆತು, ನನ್ನೊಬ್ಬನನ್ನೇ ನೆನಪು ಮಾಡಿ. ಅವಶ್ಯವಾಗಿ ಸತೋಪ್ರಧಾನರಾಗಬೇಕು ಎಂಬುದು ನಿಮಗೆ ಗೊತ್ತಿದೆ. ಈ ಹಳೆಯ ಪ್ರಪಂಚದ ವಿನಾಶವಂತು ಆಗಲೇಬೇಕಾಗಿದೆ. ಹೊಸಪ್ರಪಂಚದಲ್ಲಂತು ಕೆಲವರೇ ಇರುತ್ತಾರೆ, ಇಷ್ಟು ಕೋಟ್ಯಾಂತರ ಆತ್ಮರೆಲ್ಲಿ! 9 ಲಕ್ಷವೆಲ್ಲಿ! ಅಂದಮೇಲೆ ಇವರೆಲ್ಲರೂ ಎಲ್ಲಿಗೆ ಹೋಗುತ್ತಾರೆ? ಈಗ ನಿಮ್ಮ ಬುದ್ಧಿಯಲ್ಲಿದೆ- ನಾವೆಲ್ಲಾ ಆತ್ಮರೂ ಮೇಲಿದ್ದೆವು, ನಂತರ ಪಾತ್ರವನ್ನಭಿನಯಿಸಲು ಇಲ್ಲಿಗೆ ಬಂದೆವು, ಆತ್ಮವನ್ನು ಪಾತ್ರಧಾರಿಯೆಂದು ಹೇಳುತ್ತಾರೆ. ಆತ್ಮವು ಈ ಶರೀರದ ಜೊತೆ ಪಾತ್ರವನ್ನಭಿನಯಿಸುತ್ತದೆ. ಆತ್ಮಕ್ಕೆ ಕರ್ಮೇಂದ್ರಿಯಗಳಂತು ಇರಬೇಕಲ್ಲವೆ. ಆತ್ಮವು ಎಷ್ಟೊಂದು ಸೂಕ್ಷ್ಮವಾಗಿದೆ! 84 ಲಕ್ಷ ಜನ್ಮಗಳಲ್ಲ. 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ನಂತರ ಪಾತ್ರವನ್ನು ಹೇಗೆ ಪುನರಾವರ್ತನೆ ಮಾಡುತ್ತದೆ, ಅದು ನೆನಪಿರುವುದಕ್ಕೇ ಸಾಧ್ಯವಿಲ್ಲ. ಸ್ಮೃತಿಯಿಂದ ಹೊರಟುಹೋಗುತ್ತದೆ. 84 ಜನ್ಮಗಳೇ ನಿಮಗೆ ನೆನಪಿರುವುದಿಲ್ಲ, ಮರೆತುಹೋಗುತ್ತೀರಿ ಅಂದಮೇಲೆ 84 ಲಕ್ಷ ಜನ್ಮಗಳಿರಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಂದೆಯನ್ನು ನೆನಪು ಮಾಡಿ ಪವಿತ್ರರಾಗಬೇಕಾಗಿದೆ. ಈ ಯೋಗಾಗ್ನಿಯಿಂದ ವಿಕರ್ಮಗಳು ವಿನಾಶವಾಗುತ್ತದೆ. ಮಕ್ಕಳಿಗೆ ಈ ನಿಶ್ಚಯವೂ ಇದೆ- ನಾವು ಕಲ್ಪ-ಕಲ್ಪವೂ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಸ್ವರ್ಗವಾಸಿಯಾಗಲು ತಂದೆಯು ತಿಳಿಸಿದ್ದಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಏಕೆಂದರೆ ನಾನೇ ಪತಿತ-ಪಾವನನಾಗಿದ್ದೇನೆ. ನೀವು ತಂದೆಯನ್ನು ಕರೆದಿದ್ದೀರಲ್ಲವೆ ಆದ್ದರಿಂದ ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ದೇವತೆಗಳು ಪಾವನರಾಗಿರುತ್ತಾರೆ, ಮನುಷ್ಯರು ಪತಿತರಾಗಿದ್ದಾರೆ. ಈಗ ಪುನಃ ಪಾವನರಾಗಿ ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನೀವು ಶಾಂತಿಧಾಮಕ್ಕೆ ಹೋಗಲು ಬಯಸುತ್ತೀರೋ ಅಥವ ಸುಖಧಾಮದಲ್ಲಿ ಬರಲು ಬಯಸುತ್ತೀರಾ? ಸುಖವು ಕಾಗೆಯ ಎಂಜಲಿಗೆ ಸವi ವಾಗಿದೆ, ನಮಗೆ ಶಾಂತಿಯೇ ಬೇಕೆಂದು ಸನ್ಯಾಸಿಗಳು ಹೇಳುತ್ತಾರೆ ಆದ್ದರಿಂದ ಅವರು ಸತ್ಯಯುಗದಲ್ಲಿ ಬರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಪ್ರವೃತ್ತಿಮಾರ್ಗದ ಪ್ರೀತಿಯಿತ್ತು. ದೇವತೆಗಳು ನಿರ್ವಿಕಾರಿಗಳಾಗಿದ್ದರು, ಅವರೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತರಾಗುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೆ, ನಿರ್ವಿಕಾರಿಗಳಾಗಬೇಕಾಗಿದೆ. ಸ್ವರ್ಗದಲ್ಲಿ ಹೋಗಬೇಕೆಂದರೆ ನನ್ನನ್ನು ನೆನಪು ಮಾಡುತ್ತೀರೆಂದರೆ ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗಿ ಪುಣ್ಯಾತ್ಮರಾಗಿಬಿಡುತ್ತೀರಿ. ನಂತರ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೀರಿ. ಅಲ್ಲಿ ಶಾಂತಿಯೂ ಇತ್ತು, ಸುಖವೂ ಇತ್ತು. ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಿರ್ವಿಕಾರಿಗಳಾಗಿರಿ, ಸ್ವರ್ಗದಲ್ಲಿ ಹೋಗಬೇಕೆಂದರೆ ನನ್ನನ್ನು ನೆನಪು ಮಾಡಿದಾಗ ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗಿ ಪುಣ್ಯಾತ್ಮರಾಗಿಬಿಡುತ್ತೀರಿ, ನಂತರ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೀರಿ. ಅಲ್ಲಿ ಶಾಂತಿಯೂ ಇತ್ತು, ಸುಖವೂ ಇತ್ತು. ಈಗ ದುಃಖಧಾಮವಾಗಿದೆ, ಈಗ ತಂದೆಯು ಬಂದು ದುಃಖಧಾಮದ ವಿನಾಶ, ಸುಖಧಾಮದ ಸ್ಥಾಪನೆ ಮಾಡುತ್ತಾರೆ. ಚಿತ್ರಗಳೂ ಸಹ ಸನ್ಮುಖದಲ್ಲಿ ನಿಂತಿದೆ. ನಂತರ ಸತ್ಯಯುಗದಲ್ಲಿ ಸ್ವಲ್ಪಭಾಗವೇ ಉಳಿಯುತ್ತದೆ, ಇಷ್ಟೆಲ್ಲಾ ಖಂಡಗಳು ಅಲ್ಲಿರುವುದಿಲ್ಲ. ವಿಶ್ವದ ಇತಿಹಾಸ-ಭೂಗೋಳವೆಲ್ಲವನ್ನೂ ತಂದೆಯೇ ತಿಳಿಸಿಕೊಡುತ್ತಾರೆ. ಇದು ಪಾಠಶಾಲೆಯಾಗಿದೆ, ಭಗವಾನುವಾಚ- ಮೊಟ್ಟಮೊದಲನೆಯದಾಗಿ ತಂದೆಯ ಪರಿಚಯವನ್ನು ಕೊಡಬೇಕಾಗುತ್ತದೆ. ಈಗ ಕಲಿಯುಗವಿದೆ ಮತ್ತೆ ಸತ್ಯಯುಗದಲ್ಲಿ ಹೋಗಬೇಕಾಗಿದೆ, ಆನಂತರ ಸುಖವೇ ಸುಖವಿರುತ್ತದೆ. ಒಬ್ಬರನ್ನೇ ನೆನಪು ಮಾಡುವುದು ಅವ್ಯಭಿಚಾರಿ ನೆನಪಾಗಿದೆ. ಶರೀರವನ್ನೂ ಸಹ ಮರೆತುಬಿಡಬೇಕು. ಶಾಂತಿಧಾಮದಿಂದ ಬಂದಿದ್ದೀರಿ, ಈಗ ಮತ್ತೆ ಶಾಂತಿಧಾಮಕ್ಕೆ ಹೊರಟುಹೋಗುತ್ತೀರಿ. ಈಗ ನೀವು ಕುಳಿತುಕೊಂಡು ಬಹಳಚೆನ್ನಾಗಿ ತಿಳಿಸಬೇಕಾಗುತ್ತದೆ. ಮೊದಲು ಇಷ್ಟೊಂದು ಚಿತ್ರಗಳಿರಲಿಲ್ಲ, ಚಿತ್ರಗಳಿಲ್ಲದೆಯೂ ಸಹ ಸಾರರೂಪದಲ್ಲಿ ತಿಳಿಸಲಾಗುತ್ತಿತ್ತು. ಈ ಪಾಠಶಾಲೆಯಲ್ಲಿ ಮನುಷ್ಯರಿಂದ ದೇವತೆಗಳಾಗಿಬಿಡಬೇಕು. ಈ ಜ್ಞಾನವು ಹೊಸಪ್ರಪಂಚಕ್ಕಾಗಿ ಇದೆ, ಅದನ್ನು ತಂದೆಯೇ ಕೊಡುತ್ತಾರಲ್ಲವೆ. ತಂದೆಯ ದೃಷ್ಟಿಯು ಮಕ್ಕಳ ಮೇಲಿರುತ್ತದೆ, ನಾನು ಆತ್ಮರಿಗೆ ಓದಿಸುತ್ತೇನೆಂದು ತಂದೆಯು ತಿಳಿಸುತ್ತಾರೆ. ನೀವೂ ಸಹ ಬೇಹದ್ದಿನ ತಂದೆಯು ನಮಗೆ ತಿಳಿಸುತ್ತಾರೆಂದು ತಿಳಿದುಕೊಳ್ಳುತ್ತೀರಿ. ಅವರ ಹೆಸರಾಗಿದೆ- ಶಿವ. ಕೇವಲ ಬೇಹದ್ದಿನ ಬಾಬಾ ಎಂದು ಹೇಳುವುದರಿಂದ ತಬ್ಬಿಬ್ಬಾಗುತ್ತಾರೆ ಏಕೆಂದರೆ ವರ್ತಮಾನದಲ್ಲಿ ಬಾಬಾ ಎನ್ನುವವರು ಅನೇಕರಿದ್ದಾರೆ. ಮುನ್ಸಿಪಾಲಿಟಿಯ ಮೇಯರ್ನ್ನೂ ಸಹ ಬಾಬಾ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಇವರಲ್ಲಿ ಬಂದಾಗಲೂ ಸಹ ನನ್ನ ಹೆಸರು ಶಿವ ಎಂದೇ ಆಗಿದೆ, ನಾನು ಈ ರಥದ ಮೂಲಕ ನಿಮಗೆ ಜ್ಞಾನವನ್ನು ಕೊಡುತ್ತೇನೆ. ಇವರನ್ನು ದತ್ತು ಮಾಡಿಕೊಂಡಿದ್ದೇನೆ. ಇವರಿಗೆ ಪ್ರಜಾಪಿತ ಬ್ರಹ್ಮನೆಂದು ಹೆಸರನ್ನಿಟ್ಟಿದ್ದೇನೆ. ಇವರಿಗೂ ಸಹ ನನ್ನಿಂದಲೇ ಆಸ್ತಿಯು ಸಿಗುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈಗ ಹಳೆಯ ಪ್ರಪಂಚದಿಂದ ಹೊಸಪ್ರಪಂಚಕ್ಕೆ ಜಂಪ್ ಮಾಡುವ ಸಮಯವಾಗಿದೆ ಆದ್ದರಿಂದ ಈ ಹಳೆಯ ಪ್ರಪಂಚದಿಂದ ಬೇಹದ್ದಿನ ಸನ್ಯಾಸವನ್ನು ಮಾಡಬೇಕಾಗಿದೆ. ಇದನ್ನು ಬುದ್ಧಿಯಿಂದ ಮರೆಯಬೇಕಾಗಿದೆ. |
2. ವಿದ್ಯೆಯ ಮೇಲೆ ಪೂರ್ಣಗಮನವನ್ನು ಕೊಡಬೇಕಾಗಿದೆ. ಶಾಲೆಯಲ್ಲಿ ಕಣ್ಣುಮುಚ್ಚಿ ಕುಳಿತುಕೊಳ್ಳುವ ನಿಯಮವಿಲ್ಲ. ಗಮನವಿರಲಿ- ವಿದ್ಯಾಭ್ಯಾಸದ ಸಮಯದಲ್ಲಿ ಬುದ್ಧಿಯು ಆಕಡೆ-ಈಕಡೆ ಅಲೆಯಬಾರದು. ಆಕಳಿಕೆ ಬರಬಾರದು. ಏನನ್ನು ಕೇಳುತ್ತೀರಿ ಅದು ಧಾರಣೆಯಾಗುತ್ತಾ ಇರಬೇಕು. |
ಓಂ ಶಾಂತಿ. ನಮ್ಮದು ಡಬಲ್ ಓಂಶಾಂತಿಯಾಗಿದೆ ಏಕೆಂದರೆ ಎರಡು ಆತ್ಮಗಳಿವೆ. ಎರಡೂ ಆತ್ಮಗಳ ಸ್ವಧರ್ಮವೂ ಶಾಂತಿಯಾಗಿದೆ, ತಂದೆಯ ಸ್ವಧರ್ಮವೂ ಶಾಂತಿಯಾಗಿದೆ. ಮಕ್ಕಳೂ ಸಹ ಅಲ್ಲಿ ಶಾಂತಿಯಲ್ಲಿರುತ್ತಾರೆ, ಅದನ್ನು ಶಾಂತಿಧಾಮವೆಂದು ಕರೆಯಲಾಗುವುದು. ತಂದೆಯೂ ಸಹ ಅಲ್ಲಿಯೇ ಇರುತ್ತಾರೆ. ತಂದೆಯು ಸದಾ ಪಾವನರಾಗಿದ್ದಾರೆ. ಬಾಕಿ ಮನುಷ್ಯ ಮಾತ್ರರೆಲ್ಲರೂ ಪುನರ್ಜನ್ಮವನ್ನು ಪಡೆದು ಅಪವಿತ್ರರಾಗುತ್ತಾರೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ, ಪರಮಪಿತ ಪರಮಾತ್ಮ ಜ್ಞಾನಸಾಗರ, ಶಾಂತಿಯ ಸಾಗರನಾಗಿದ್ದಾರೆ ಎಂದು ಆತ್ಮವು ತಿಳಿದುಕೊಂಡಿದೆ. ಇದು ಅವರ ಮಹಿಮೆಯಾಗಿದೆಯಲ್ಲವೆ. ಅವರು ಸರ್ವರಿಗೂ ಪಿತ ಹಾಗೂ ಸರ್ವರ ಸದ್ಗತಿದಾತನೂ ಆಗಿದ್ದಾರೆ ಆದುದರಿಂದ ಎಲ್ಲರಿಗೂ ತಂದೆಯ ಆಸ್ತಿಯ ಮೇಲೆ ಅಧಿಕಾರವಿರುತ್ತದೆ. ತಂದೆಯಿಂದ ಯಾವ ಆಸ್ತಿಯು ಸಿಗುತ್ತದೆ? ಮಕ್ಕಳಿಗೆ ತಿಳಿದಿದೆ- ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಆದ್ದರಿಂದ ಅಗತ್ಯವಾಗಿ ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರೆ ಮತ್ತು ಅದನ್ನೂ ನರಕದಲ್ಲಿಯೇ ಕೊಡುತ್ತಾರೆ. ನರಕದ ಆಸ್ತಿಯನ್ನು ರಾವಣನೇ ಕೊಟ್ಟಿದ್ದಾನೆ, ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ ಆದುದರಿಂದ ಅಗತ್ಯವಾಗಿ ರಾವಣನಿಂದ ಈ ಆಸ್ತಿಯು ಸಿಕ್ಕಿದೆ. ನರಕ ಹಾಗೂ ಸ್ವರ್ಗವೆರಡೂ ಇರುತ್ತವೆ. ಇದನ್ನು ಕೇಳುತ್ತಿರುವವರು ಯಾರು? ಆತ್ಮ. ಅಜ್ಞಾನಕಾಲದಲ್ಲಿಯೂ ಎಲ್ಲವನ್ನೂ ಆತ್ಮವೇ ಮಾಡುತ್ತದೆಯೆಂದು ಹೇಳುತ್ತಾರೆ ಆದರೆ ದೇಹಾಭಿಮಾನದ ಕಾರಣ ಶರೀರವೇ ಮಾಡುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ನಮ್ಮ ಸ್ವಧರ್ಮ ಶಾಂತಿಯಾಗಿದೆ ಎನ್ನುವುದನ್ನು ಮರೆತುಹೋಗುತ್ತಾರೆ. ನಾವು ಶಾಂತಿಧಾಮದಲ್ಲಿ ಇರುವವರಾಗಿದ್ದೇವೆ, ಸತ್ಯಖಂಡವೇ ನಂತರ ಅಸತ್ಯಖಂಡವಾಗುತ್ತದೆ ಎಂದು ತಿಳಿಸಬೇಕು. ಭಾರತ ಸತ್ಯಖಂಡವಾಗಿತ್ತು ನಂತರ ಅಸತ್ಯಖಂಡವಾಗುತ್ತದೆ. ಇದು ಸಾಮಾನ್ಯ ಮಾತಾಗಿದೆ ಅಂದಾಗ ಮನುಷ್ಯರೇಕೆ ತಿಳಿದುಕೊಳ್ಳುವುದಿಲ್ಲ? ಏಕೆಂದರೆ ಆತ್ಮವು ತಮೋಪ್ರಧಾನವಾಗಿಬಿಟ್ಟಿದೆ, ಅದನ್ನು ಕಲ್ಲುಬುದ್ಧಿಯೆಂದು ಹೇಳಲಾಗುತ್ತದೆ. ಯಾರು ಭಾರತವನ್ನು ಸ್ವರ್ಗವನ್ನಾಗಿ ಮಾಡಿದರು, ಪೂಜ್ಯವನ್ನಾಗಿ ಮಾಡಿದರು ಅವರನ್ನೇ ಪೂಜಾರಿಯನ್ನಾಗಿ ಮಾಡಿ ಅವರನ್ನು ಅವಹೇಳನ ಮಾಡುತ್ತೇವೆ. ಇದರಲ್ಲಿ ಯಾರ ದೋಷವೂ ಇಲ್ಲ. ಈ ನಾಟಕವು ಹೇಗೆ ಮಾಡಲ್ಪಟ್ಟಿದೆ ಎಂದು ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ. ಹೇಗೆ ಪೂಜ್ಯರಿಂದ ಪೂಜಾರಿಯಾದರು. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇಂದಿಗೆ 5000 ವರ್ಷಗಳ ಮೊದಲು ಭಾರತದಲ್ಲಿ ಆದಿಸನಾತನ ದೇವಿ-ದೇವತಾ ಧರ್ಮವಿತ್ತು, ಇದು ನೆನ್ನೆಯ ಮಾತಾಗಿದೆ ಆದರೆ ಮನುಷ್ಯರು ಸಂಪೂರ್ಣವಾಗಿ ಮರೆತಿದ್ದಾರೆ. ಈ ಶಾಸ್ತ್ರ ಮೊದಲಾದವುಗಳನ್ನು ಭಕ್ತಿಮಾರ್ಗಕ್ಕಾಗಿ ಮಾಡಿದ್ದಾರೆ. ಶಾಸ್ತ್ರಗಳಿರುವುದೇ ಭಕ್ತಿಮಾರ್ಗಕ್ಕಾಗಿ, ಜ್ಞಾನಮಾರ್ಗಕ್ಕಾಗಿ ಅಲ್ಲ. ತಂದೆಯು ಕಲ್ಪ-ಕಲ್ಪ ಬಂದು ದೇವತಾ ಪದವಿಗಾಗಿ ಜ್ಞಾನವನ್ನು ಕೊಡುತ್ತಾರೆ. ತಂದೆಯು ವಿದ್ಯೆಯನ್ನು ಓದಿಸುತ್ತಾರೆ ನಂತರ ಈ ಜ್ಞಾನವು ಪ್ರಾಯಲೋಪವಾಗಿಬಿಡುತ್ತದೆ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ ಏಕೆಂದರೆ ಅದು ಜ್ಞಾನಮಾರ್ಗದ ಪ್ರಾಲಬ್ಧವಾಗಿದೆ. 21 ಜನ್ಮಗಳಿಗಾಗಿ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಅದರ ನಂತರ ಅಲ್ಪಕಾಲಕ್ಕಾಗಿ ರಾವಣನ ಆಸ್ತಿಯು ಸಿಗುತ್ತದೆ ಅದನ್ನು ಸನ್ಯಾಸಿಗಳು ಕಾಗವಿಷ್ಟ ಸಮಾನ ಸುಖವೆಂದು ಹೇಳಿಬಿಡುತ್ತಾರೆ. ದುಃಖವೇ ದುಃಖವಿದೆ, ದುಃಖಧಾಮ ಎಂಬುದು ಇದರ ಹೆಸರಾಗಿದೆ. ಕಲಿಯುಗಕ್ಕೆ ಮೊದಲು ದ್ವಾಪರಯುಗವಿದೆ ಅದನ್ನು ಸೆಮಿ-ದುಃಖಧಾಮವೆಂದು ಕರೆಯಲಾಗುವುದು, ಇದು ಅಂತಿಮದ ದುಃಖಧಾಮವಾಗಿದೆ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಂಡು ಕೆಳಗಡೆ ಇಳಿಯುತ್ತದೆ. ತಂದೆಯು ಮೇಲೆ ಹತ್ತಿಸುತ್ತಾರೆ ಏಕೆಂದರೆ ಚಕ್ರವು ಅವಶ್ಯವಾಗಿ ಸುತ್ತಲೇಬೇಕಾಗಿದೆ. ಹೊಸ ಪ್ರಪಂಚವಿತ್ತು, ದೇವಿ-ದೇವತೆಗಳ ರಾಜ್ಯವಿತ್ತು ಆಗ ದುಃಖದ ಹೆಸರು-ಚಿಹ್ನೆಯೂ ಇರಲಿಲ್ಲ ಆದ್ದರಿಂದ ಹುಲಿ-ಕುರಿ ಜೊತೆಯಾಗಿ ನೀರು ಕುಡಿಯುವುದನ್ನು ತೋರಿಸುತ್ತಾರೆ. ಅಲ್ಲಿ ಯಾವುದೇ ಹಿಂಸೆಯ ಮಾತಿರುವುದಿಲ್ಲ. ಅದನ್ನು ಅಹಿಂಸಾ ಪರಮೋಧರ್ಮವೆಂದು ಕರೆಯಲಾಗುವುದು. ಇಲ್ಲಿ ಹಿಂಸೆಯಿದೆ, ಮೊಟ್ಟಮೊದಲನೆ ಹಿಂಸೆ ಕಾಮವಿಕಾರದ್ದಾಗಿದೆ. ಸತ್ಯಯುಗದಲ್ಲಿ ಯಾರೂ ವಿಕಾರಿಗಳಿರುವುದಿಲ್ಲ ಆದ್ದರಿಂದ ಅವರ ಮಹಿಮೆಯನ್ನು ಹಾಡುತ್ತಾರೆ. ಲಕ್ಷ್ಮೀ-ನಾರಾಯಣರ ಮಹಿಮೆಯನ್ನು ಸಂಪೂರ್ಣ ನಿರ್ವಿಕಾರಿ...... ಎಂದು ಹಾಡುತ್ತಾರೆ. ಈ ಕಲಿಯುಗ ಕಬ್ಬಿಣದ ಯುಗವಾಗಿದೆ. ಇದನ್ನು ಯಾರೂ ಸಹ ಸ್ವರ್ಣೀಮಯುಗವೆಂದು ಹೇಳಲು ಸಾಧ್ಯವಿಲ್ಲ. ನಾಟಕವೇ ಈ ರೀತಿ ಮಾಡಲ್ಪಟ್ಟಿದೆ. ಸತ್ಯಯುಗ ಶಿವಾಲಯವಾಗಿದೆ, ಅಲ್ಲಿ ಎಲ್ಲರೂ ಪಾವನವಾಗಿರುತ್ತಾರೆ, ಅವರ ಚಿತ್ರಗಳೂ ಇವೆ. ಶಿವಾಲಯವನ್ನಾಗಿ ಮಾಡುವ ಶಿವತಂದೆಯ ಚಿತ್ರವೂ ಆಗಿದೆ. ತಂದೆಗೆ ಅವರದೇ ಆದ ಶರೀರವಿಲ್ಲ. ನಾನು ನನ್ನ ಪರಿಚಯವನ್ನು ನೀಡಲು ಅಥವಾ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಲು ಸ್ವಯಂ ಬರಬೇಕಾಗುತ್ತದೆ. ನಾನು ಬಂದು ನಿಮ್ಮ ಸೇವೆ ಮಾಡಬೇಕಾಗುವುದು. ಹೇ ಪತಿತ-ಪಾವನ ಬನ್ನಿ ಎಂದು ನೀವು ಕರೆಯುತ್ತೀರಿ. ನೀವು ಸತ್ಯಯುಗದಲ್ಲಂತೂ ಕರೆಯುವುದಿಲ್ಲ. ವಿನಾಶವು ಮುಂದೆ ನಿಂತಿರುವ ಕಾರಣ ಈ ಸಮಯದಲ್ಲಿ ಎಲ್ಲರೂ ಕರೆಯುತ್ತಾರೆ. ಇದು ಅದೇ ಮಹಾಭಾರತ ಯುದ್ಧವಾಗಿದೆ ಎಂದು ಭಾರತವಾಸಿಗಳು ತಿಳಿದುಕೊಂಡಿದ್ದಾರೆ. ಈ ಯುದ್ಧದ ನಂತರ ಆದಿಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ತಂದೆಯು ತಿಳಿಸುತ್ತಾರೆ- ನಾನು ರಾಜರಿಗೂ ರಾಜರನ್ನಾಗಿ ಮಾಡಲು ಬಂದಿದ್ದೇನೆ. ಇಂದಿನ ಸಮಯದಲ್ಲಿ ಮಹಾರಾಜ-ಚಕ್ರವರ್ತಿ ಮೊದಲಾದವರಿಲ್ಲ. ಈಗ ಪ್ರಜೆಗಳ ಮೇಲೆ ಪ್ರಜೆಗಳ ರಾಜ್ಯವಾಗಿದೆ. ನಾವು ಭಾರತವಾಸಿಗಳು ಸಂಪದ್ಭರಿತವಾಗಿದ್ದು ವಜ್ರ-ವೈಡೂರ್ಯಗಳ ಮಹಲಿನಲ್ಲಿದ್ದೆವು. ಹೊಸ ಪ್ರಪಂಚವಾಗಿತ್ತು ಮತ್ತೆ ಹೊಸ ಪ್ರಪಂಚವೇ ಹಳೆಯ ಪ್ರಪಂಚವಾಗಿದೆ ಎಂದು ಮಕ್ಕಳು ತಿಳಿದುಕೊಂಡಿದ್ದೀರಿ. ಪ್ರತಿಯೊಂದು ವಸ್ತುವು ಹಳೆಯದಾಗಲೇಬೇಕಾಗಿದೆ. ಹೇಗೆ ಮನೆಯು ಹೊಸದಾಗಿ ಮಾಡಿದ ನಂತರ ಅಂತ್ಯದಲ್ಲಿ ಅದರ ಆಯಸ್ಸು ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಇದು ಹೊಸಮನೆಯಾಗಿತ್ತು, ಈಗ ಅರ್ಧ ಹಳೆಯದು, ಈಗ ಮಧ್ಯಮ ಸ್ಥಿತಿಯಲ್ಲಿದೆ ಎಂದು ಹೇಳಲಾಗುತ್ತದೆ. ಪ್ರತಿಯೊಂದು ವಸ್ತು ಸತೋ, ರಜೋ, ತಮೋ ಆಗುತ್ತದೆ. ಭಗವಾನುವಾಚ ಆಗಿದೆಯಲ್ಲವೆ. ಭಗವಂತಅಂದರೆ ಭಗವಂತನಾಗಿದ್ದಾರೆ. ಭಗವಂತನೆಂದು ಯಾರಿಗೆ ಕರೆಯಲಾಗುವುದೆಂದು ತಿಳಿದುಕೊಂಡಿಲ್ಲ. ಇಲ್ಲಿ ರಾಜ-ರಾಣಿ ಯಾರೂ ಇಲ್ಲದಂತಾಗಿದೆ. ಇಲ್ಲಿ ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ ಮತ್ತು ಅವರಿಗೆ ಅನೇಕ ಮಂತ್ರಿಗಳಿದ್ದಾರೆ...... ಸತ್ಯಯುಗದಲ್ಲಿ ಯಥಾರಾಜ-ರಾಣಿ ತಥಾ ಪ್ರಜೆಗಳಿರುತ್ತಾರೆ, ಈ ಅಂತರವನ್ನು ತಂದೆ0iÉುೀ ತಿಳಿಸಿದ್ದಾರೆ. ಸತ್ಯಯುಗದಲ್ಲಿ ಯಾರು ಮಾಲೀಕರಾಗಿರುತ್ತಾರೆ ಅವರಿಗೆ ಮಂತ್ರಿಗಳಾಗಲಿ, ಸಲಹೆಗಾರರ ಅವಶ್ಯಕತೆಯಿರುವುದಿಲ್ಲ. ಈ ಸಮಯದಲ್ಲಿ0iÉುೀ ಶಿವತಂದೆಯಿಂದ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಂಡು ಅಂತಹ ಪದವಿಯನ್ನು ಪಡೆಯುತ್ತಾರೆ. ಈ ಸಮಯ ತಂದೆಯಿಂದ ಉನ್ನತವಾದ ಸಲಹೆ ಸಿಗುತ್ತದೆ ಅದರಿಂದ ಅಂತಹ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನಂತರ ಯಾವುದೇ ಸಲಹೆಯನ್ನು ತೆಗೆದುಕೊಳ್ಳುವುದಿಲ್ಲ, ಅಲ್ಲಿ ಮಂತ್ರಿಗಳಿರುವುದಿಲ್ಲ. ಯಾವಾಗ ವಾಮಮಾರ್ಗದಲ್ಲಿ ಹೋಗುತ್ತಾರೆ ಆಗ ಮಂತ್ರಿಯಿರುತ್ತಾರೆ ಏಕೆಂದರೆ ಬುದ್ಧಿಯು ಕನಿಷ್ಟ ಬುದ್ಧಿಯಾಗಿಬಿಡುತ್ತದೆ. ಮುಖ್ಯಮಾತು ವಿಕಾರದ್ದಾಗಿದೆ. ದೇಹಾಭಿಮಾನದಲ್ಲಿ ಬರುವುದರಿಂದ ವಿಕಾರವು ಉತ್ಪನ್ನವಾಗುತ್ತದೆ. ಅದರಲ್ಲಿ ಕಾಮವಿಕಾರವು ನಂಬರ್ವನ್ ಆಗಿದೆ. ತಂದೆಯು ತಿಳಿಸುತ್ತಾರೆ- ಈ ಕಾಮ ವಿಕಾರವು ಮಹಾಶತ್ರುವಾಗಿದೆ, ಅದರ ಮೇಲೆ ವಿಜಯ ಪಡೆಯಬೇಕು. ಅದಕ್ಕಾಗಿ ತಂದೆಯು ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ ಎಂದು ಬಹಳಷ್ಟು ಬಾರಿ ತಿಳಿಸಿದ್ದಾರೆ. ಉತ್ತಮ ಹಾಗೂ ಕನಿಷ್ಟ ಸಂಸ್ಕಾರವು ಆತ್ಮದಲ್ಲಿಯೇ ಆಗುತ್ತದೆ. ಇಲ್ಲಿಯೇ ಕರ್ಮಹಳೀಯುವುದಾಗಿದೆ, ಅದು ಸತ್ಯಯುಗದಲ್ಲಿ ಆಗುವುದಿಲ್ಲ. ಅದು ಸುಖಧಾಮವಾಗಿದೆ. ತಂದೆಯು ಬಂದು ಸುಖಧಾಮ-ಶಾಂತಿಧಾಮದ ನಿವಾಸಿಯನ್ನಾಗಿ ಮಾಡುತ್ತಾರೆ. ತಂದೆಯು ನೇರವಾಗಿ ಆತ್ಮಗಳೊಂದಿಗೇ ಮಾತನಾಡುತ್ತಾರೆ. ಎಲ್ಲರೂ ಆತ್ಮನಿಶ್ಚಯ ಮಾಡಿಕೊಂಡು ಕುಳಿತುಕೊಳ್ಳಿ, ದೇಹಾಭಿಮಾನವನ್ನು ಬಿಡಿ ಎಂದು ಹೇಳುತ್ತಾರೆ. ಈ ದೇಹ ವಿನಾಶಿಯಾಗಿದೆ, ನೀವಾತ್ಮರು ಅವಿನಾಶಿಯಾಗಿದ್ದೀರಿ. ಈ ಜ್ಞಾನವು ಬೇರೆ ಯಾರಲ್ಲಿಯೂ ಇರಲು ಸಾಧ್ಯವೇ ಇಲ್ಲ. ಜ್ಞಾನವಿಲ್ಲದ ಕಾರಣ ಭಕ್ತಿಯನ್ನೇ ಜ್ಞಾನವೆಂದು ತಿಳಿದುಕೊಂಡಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಭಕ್ತಿಯೇ ಬೇರೆಯಾಗಿದೆ, ಜ್ಞಾನದಿಂದ ಸದ್ಗತಿ ಸಿಗುತ್ತದೆ. ಭಕ್ತಿಯ ಸುಖ ಅಲ್ಪಕಾಲದ್ದು ಏಕೆಂದರೆ ಪಾಪಾತ್ಮರಾಗಿಬಿಡುತ್ತಾರೆ, ವಿಕಾರದಲ್ಲಿ ಹೋಗಿಬಿಡುತ್ತಾರೆ. ಅರ್ಧಕಲ್ಪಕ್ಕಾಗಿ ಬೇಹದ್ದಿನ ಆಸ್ತಿ ದೊರೆತು ಅದು ಪೂರ್ಣವಾಗಿಬಿಟ್ಟಿದೆ ಮತ್ತೆ ತಂದೆಯು ಆಸ್ತಿಯನ್ನು ಕೊಡಲು ಬಂದಿದ್ದಾರೆ. ಅದರಲ್ಲಿ ಪವಿತ್ರತೆ, ಸುಖ, ಶಾಂತಿ ಎಲ್ಲವೂ ಸೇರಿರುತ್ತದೆ. ಮಕ್ಕಳೇ, ನಿಮಗೆ ಗೊತ್ತಿದೆ- ಈ ಹಳೆಯ ಪ್ರಪಂಚವು ಸ್ಮಶಾನವಾಗಿಯೇ ಆಗುತ್ತದೆ. ಈಗ ಈ ಸ್ಮಶಾನದಿಂದ ಮನಸ್ಸನ್ನು ತೆಗೆದು ಸ್ವರ್ಗವಾದ ಹೊಸ ಪ್ರಪಂಚದೊಂದಿಗೆ ಮಮತೆಯನ್ನಿಡಿ. ಹೇಗೆ ಲೌಕಿಕ ತಂದೆಯು ಹೊಸ ಮನೆಯನ್ನು ಕಟ್ಟುವಾಗ ಮಕ್ಕಳಿಗೆ ಹಳೆಯ ಮನೆಯಿಂದ ಮನಸ್ಸು ದೂರವಾಗಿ ಹೊಸಮನೆಯಲ್ಲಿ ತೊಡಗಿಸುತ್ತಾರೆ. ಒಂದುವೇಳೆ ಕಛೇರಿಯಲ್ಲಿ ಕುಳಿತಿದ್ದರೂ ಸಹ ಬುದ್ಧಿಯಲ್ಲಿ ಹೊಸ ಮನೆಯೇ ಇರುತ್ತದೆ. ಅದು ಹದ್ದಿನ ಮಾತಾಗಿದೆ. ಬೇಹದ್ದಿನ ತಂದೆಯಂತೂ ಹೊಸ ಪ್ರಪಂಚದ ಸ್ವರ್ಗವನ್ನು ರಚನೆ ಮಾಡುತ್ತಿದ್ದಾರೆ. ಈಗ ಅವರು ಈ ಹಳೆಯ ಪ್ರಪಂಚದ ಸಂಬಂಧವನ್ನು ಬಿಟ್ಟು ನನ್ನೊಬ್ಬನಲ್ಲಿ ಜೋಡಿಸುವಂತೆ ತಿಳಿಸುತ್ತಿದ್ದಾರೆ. ನಿಮಗಾಗಿ ನಾನು ಹೊಸಪ್ರಪಂಚ ಸ್ವರ್ಗವನ್ನು ಸ್ಥಾಪನೆ ಮಾಡಲು ಬಂದಿದ್ದೇನೆ. ಈಗ ಈ ಎಲ್ಲಾ ಹಳೆಯ ಪ್ರಪಂಚವು ಸ್ವಾಹಾ ಆಗುವುದಿದೆ. ಈಗ ಇಡೀ ವೃಕ್ಷವು ತಮೋಪ್ರಧಾನ, ನಿಸ್ಸಾರವಾಗಿಬಿಟ್ಟಿದೆ, ಈಗ ಪುನಃ ಹೊಸದಾಗುತ್ತದೆ. ಆದುದರಿಂದ ತಂದೆಯು ತಿಳಿಸುತ್ತಾರೆ- ಇದು ಹೊಸಪ್ರಪಂಚದ ಮಾತುಗಳಾಗಿವೆ. ಮನುಷ್ಯರು ಹೇಗೆ ಖಾಯಿಲೆಯ ಸಮಯದಲ್ಲಿ ಭರವಸೆಯನ್ನು ಕಳೆದುಕೊಳ್ಳುತ್ತಾರೆ, ಇವರು ಇನ್ನು ಬದುಕುಳಿಯುವುದು ಕಷ್ಟವೆಂದು ತಿಳಿದುಕೊಳ್ಳುತ್ತಾರೆ, ಹಾಗೆಯೇ ಈ ಪ್ರಪಂಚವು ಈಗ ಭರವಸೆಯಿಲ್ಲದಂತಾಗಿದೆ. ಇದು ಸ್ಮಶಾನವಾಗುವುದರಿಂದ ಇದನ್ನು ಏಕೆ ನೆನಪು ಮಾಡಬೇಕು. ಇದು ಬೇಹದ್ದಿನ ಸನ್ಯಾಸವಾಗಿದೆ. ಆ ಹಠಯೋಗಿ ಸನ್ಯಾಸಿಗಳು ಕೇವಲ ಮನೆ-ಮಠವನ್ನು ಬಿಟ್ಟುಹೋಗುತ್ತಾರೆ. ನೀವು ಈ ಹಳೆಯ ಪ್ರಪಂಚದಿಂದ ಸನ್ಯಾಸ ಮಾಡುತ್ತೀರಿ ಆಗ ಈ ಹಳೆಯ ಪ್ರಪಂಚವು ಹೊಸ ಪ್ರಪಂಚವಾಗಿಬಿಡುವುದು. |
ತಂದೆಯು ತಿಳಿಸುತ್ತಾರೆ- ನಾವಂತೂ ವಿಧೇಯ ಸೇವಕರಾಗಿದ್ದೇವೆ, ನಾನು ಮಕ್ಕಳ ಸೇವೆಯಲ್ಲಿ ಆಗಮಿಸಿದ್ದೇನೆ. ಈ ಪತಿತ ಪ್ರಪಂಚದಲ್ಲಿ, ಪತಿತರಾಗಿರುವವರನ್ನು ಪಾವನ ಮಾಡು, ಪತಿತ ಶರೀರದಲ್ಲಿ ಬಾ ಎಂದು ನನ್ನನ್ನು ಕರೆದಿದ್ದಿರಿ, ನೋಡಿ! ತಂದೆಗೆ ಎಂತಹ ಆಮಂತ್ರಣವನ್ನು ಕೊಡುತ್ತೀರಿ. ಪತಿತ ಮಾಡುವವನು ರಾವಣನಾಗಿದ್ದಾನೆ, ಅವನನ್ನು ಸುಡುತ್ತಿರುತ್ತೀರಿ, ಈ ರಾವಣ ಅತಿದೊಡ್ಡ ಶತ್ರುವಾಗಿದ್ದಾನೆ. ಎಂದಿನಿಂದ ರಾವಣನು ಬರುತ್ತಾನೆಯೋ ಅಂದಿನಿಂದ ನಿಮಗೆ ಆದಿ-ಮಧ್ಯ-ಅಂತ್ಯ ದುಃಖವು ಪ್ರಾಪ್ತಿಯಾಗಿದೆ. ವಿಷಯಸಾಗರದಲ್ಲಿ ಮುಳುಗುತ್ತಿರುತ್ತಾರೆ. ಈಗ ತಂದೆಯು ತಿಳಿಸುತ್ತಿರುತ್ತಾರೆ- ವಿಷವನ್ನು ಬಿಟ್ಟು ಜ್ಞಾನಾಮೃತವನ್ನು ಕುಡಿಯಿರಿ. ಅರ್ಧಕಲ್ಪ ರಾವಣರಾಜ್ಯದಲ್ಲಿ ನೀವು ವಿಕಾರಗಳ ಕಾರಣ ಎಷ್ಟೊಂದು ದುಃಖಿಯಾಗಿಬಿಟ್ಟಿರಿ. ನೀವು ಅನೇಕ ಮತವುಳ್ಳವರಾಗಿ ಕುಳಿತು ನಿಂದನೆ ಮಾಡುತ್ತೀರಿ. ನಿಂದನೆಯನ್ನೂ ಇಷ್ಟೊಂದು ಮಾಡುತ್ತೀರಿ, ನಿಮ್ಮನ್ನು ಪಾವನ ವಿಶ್ವದ ಮಾಲೀಕರನ್ನಾಗಿ ಮಾಡುವ ತಂದೆಯನ್ನೇ ಎಲ್ಲದಕ್ಕಿಂತ ಹೆಚ್ಚು ನಿಂದನೆ ಮಾಡುವುದು ನಿಮ್ಮ ಕಮಾಲ್ ಆಗಿದೆ. ಮನುಷ್ಯರಿಗಾಗಿ ಕೇವಲ 84 ಲಕ್ಷ ಯೋನಿಗಳೆಂದು ಹೇಳುತ್ತಾರೆ ಆದರೆ ನನ್ನನ್ನು ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಇದೂ ಸಹ ನಾಟಕವಾಗಿದೆ. ಇದನ್ನು ನಿಮಗೆ ತಮಾಷೆಗಾಗಿ ತಿಳಿಸುತ್ತಿದ್ದೇನೆ. ಉತ್ತಮ ಹಾಗೂ ಕನಿಷ್ಟ ಸ್ವಭಾವ-ಸಂಸ್ಕಾರಗಳು ಆತ್ಮದಲ್ಲಿಯೇ ಆಗುತ್ತದೆ. ಆತ್ಮವೇ ಹೇಳುತ್ತದೆ- ನಾವು 84 ಜನ್ಮಗಳನ್ನು ಪಡೆಯುತ್ತೇವೆ, ಆತ್ಮವೇ ಬಂದು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತದೆ. ಇದನ್ನೂ ಸಹ ಈಗ ತಂದೆಯು ತಿಳಿಸಿಕೊಟ್ಟಿದ್ದಾರೆ. ನಾಟಕದನುಸಾರ ಮತ್ತೆ ತಂದೆಯು ಬಂದು ಉಲ್ಟಾ ಆಗಿರುವವರನ್ನು ಸುಲ್ಟಾ ಮಾಡುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ತಂದೆಯು ತಿಳಿಸುತ್ತಾರೆ- ನೀವಿಲ್ಲಿ ಉಲ್ಟಾ (ದೇಹಾಭಿಮಾನ) ಆಗಿ ಕುಳಿತುಕೊಳ್ಳಬೇಡಿ, ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ. ಈಗ ನಿಮಗೆ ಭಗವಂತ ಸಿಕ್ಕಿದ್ದಾರೆ ಅವರು ಸುಲ್ಟಾ ಮಾಡುತ್ತಾರೆ, ರಾವಣನು ಉಲ್ಟಾ ಮಾಡುತ್ತಾನೆ ನಂತರ ನೀವು ಸುಲ್ಟಾ ಆಗುವುದರಿಂದ ಸರಿಯಾಗಿಬಿಡುತ್ತೀರಿ (ದೇವತೆ). ಇದು ಒಂದು ನಾಟಕವಾಗಿದೆ. ಈ ಜ್ಞಾನವನ್ನು ತಂದೆಯೇ ಬಂದು ತಿಳಿಸುತ್ತಾರೆ. ಭಕ್ತಿಯು ಭಕ್ತಿಯೇ ಆಗಿದೆ, ಜ್ಞಾನವು ಜ್ಞಾನವೇ ಆಗಿದೆ. ಭಕ್ತಿಯು ಸಂಪೂರ್ಣ ಭಿನ್ನವಾಗಿದೆ. ಒಂದು ಕೊಳ ಇದೆ, ಅಲ್ಲಿ ಸ್ನಾನ ಮಾಡುವುದರಿಂದ ದೇವತೆಯಾಗುತ್ತೇವೆಂದು ಹೇಳುತ್ತಾರೆ ನಂತರ ಪಾರ್ವತಿಗೆ ಅಮರಕಥೆಯನ್ನೂ ಹೇಳಿದರೆಂದು ಹೇಳಿಬಿಡುತ್ತಾರೆ ಅಂದಾಗ ಈಗ ನೀವು ಅಮರಕಥೆಯನ್ನು ಕೇಳುತ್ತಿದ್ದೀರಿ. ಕೇವಲ ಪಾರ್ವತಿಗೆ ಮಾತ್ರ ಕಥೆಯನ್ನು ಹೇಳಿದರೇನು! ಇದು ಬೇಹದ್ದಿನ ಮಾತಾಗಿದೆ. ಸತ್ಯಯುಗ ಅಮರಲೋಕವಾಗಿದೆ, ಇದು ಮೃತ್ಯುಲೋಕವಾಗಿದೆ ಮತ್ತು ಇದನ್ನು ಮುಳ್ಳುಗಳ ಕಾಡು ಎಂದೂ ಕರೆಯುತ್ತಾರೆ. ತಂದೆಯನ್ನು ತಿಳಿದುಕೊಂಡೇ ಇಲ್ಲ. ನೀವೂ ಸಹ ತಿಳಿದುಕೊಂಡಿರಲಿಲ್ಲ, ನಿಮಗೆ ತಂದೆಯೇ ಬಂದು ಸುಲ್ಟಾ ಮಾಡಿದ್ದಾರೆ. ಭಗವಂತನಿಗೆ ಅಲ್ಲಾ ಎಂದು ಕರೆಯಲಾಗುವುದು. ಅಲ್ಲಾಹ್ ನಮಗೆ ಓದಿಸಿ ಅಲ್ಲಾಹ್ ಪದವಿಯನ್ನು ಕೊಡುತ್ತಾರಲ್ಲವೆ ಆದರೆ ಪರಮಾತ್ಮ ಒಬ್ಬರೇ ಆಗಿದ್ದಾರೆ. ಇವರನ್ನು (ಲಕ್ಷ್ಮೀ-ನಾರಾಯಣ) ಭಗವಾನ್-ಭಗವತಿಯೆಂದು ಹೇಳಲಾಗುವುದಿಲ್ಲ. ಇವರು ಪುನರ್ಜನ್ಮದಲ್ಲಿ ಬರುತ್ತಾರಲ್ಲವೆ, ನಾನೇ ಇವರಿಗೆ ಓದಿಸಿ ದೈವೀಗುಣವುಳ್ಳವರನ್ನಾಗಿ ಮಾಡಿದ್ದೇನೆ. |
ನೀವೆಲ್ಲರೂ ಸಹೋದರರಾಗಿದ್ದೀರಿ. ತಂದೆಯ ಆಸ್ತಿಗೆ ಹಕ್ಕುದಾರರಾಗಿದ್ದೀರಿ, ಮನುಷ್ಯರಂತೂ ಘೋರ ಅಂಧಕಾರದಲ್ಲಿ ಮುಳುಗಿದ್ದಾರೆ. ಆಸುರೀ ಸಂಪ್ರದಾಯವಲ್ಲವೆ! ಕಲಿಯುಗ ಇನ್ನೂ ಚಿಕ್ಕಮಗುವಾಗಿದೆ ಎಂದು ಹೇಳುತ್ತಾರೆ, ಇನ್ನೂ ಬಹಳ ವರ್ಷಗಳು ಉಳಿದಿವೆ ಎಂದು ಹೇಳುತ್ತಾರೆ. ಎಷ್ಟೊಂದು ಅಜ್ಞಾನ ಅಂಧಕಾರದಲ್ಲಿ ಮಲಗಿಬಿಟ್ಟಿದ್ದಾರೆ! ಇದೂ ಸಹ ನಾಟಕವಾಗಿದೆ. ಬೆಳಕಿನಲ್ಲಿ ದುಃಖವಿರುವುದಿಲ್ಲ, ಕತ್ತಲಾದ ರಾತ್ರಿಯಲ್ಲಿ ದುಃಖವಿರುತ್ತದೆ. ಇದನ್ನು ನೀವು ಮಾತ್ರ ತಿಳಿದುಕೊಂಡಿದ್ದೀರಿ ಹಾಗೂ ತಿಳಿಸಿಕೊಡುತ್ತೀರಿ. ಮೊಟ್ಟಮೊದಲು ಪ್ರತಿಯೊಬ್ಬ ಮನುಷ್ಯನಿಗೂ ತಂದೆಯ ಪರಿಚಯವನ್ನು ಕೊಡಬೇಕು. ಪ್ರತಿಯೊಬ್ಬರಿಗೂ ಇಬ್ಬರು ತಂದೆಯರಿರುತ್ತಾರೆ, ಹದ್ದಿನ ತಂದೆಯು ಹದ್ದಿನ ಸುಖ ಕೊಡುತ್ತಾರೆ, ಬೇಹದ್ದಿನ ತಂದೆಯು ಬೇಹದ್ದಿನ ಸುಖವನ್ನು ಕೊಡುತ್ತಾರೆ. ಶಿವರಾತ್ರಿಯನ್ನು ಆಚರಿಸುವಾಗ ಅಗತ್ಯವಾಗಿ ತಂದೆಯು ಸ್ವರ್ಗಸ್ಥಾಪನೆ ಮಾಡಲು ಬರುತ್ತಾರೆ. ಸ್ವರ್ಗವು ಹಿಂದೆ ಆಗಿಹೋಗಿತ್ತು, ಈಗ ಪುನಃ ಸ್ಥಾಪನೆ ಮಾಡುತ್ತಿದ್ದಾರೆ. ಈಗ ಇದು ತಮೋಪ್ರಧಾನ ಪ್ರಪಂಚ, ನರಕವಾಗಿದೆ. ನಾಟಕದನುಸಾರವಾಗಿ ಎಲ್ಲವೂ ತನ್ನದೇ ಆದಂತಹ ಸಮಯದಲ್ಲಾಗುತ್ತದೆ. ಆಗ ನಾನು ಬಂದು ನನ್ನ ಪಾತ್ರವನ್ನಭಿನಯಿಸುತ್ತೇನೆ. ನಾನು ನಿರಾಕಾರನಾಗಿದ್ದೇನೆ, ನನಗೆ ಅಗತ್ಯವಾಗಿ ಮುಖ ಬೇಕಾಗುತ್ತದೆ. ಹಾಗಾದರೆ ನಂದಿಯ ಮುಖವಿರಲು ಸಾಧ್ಯವೇ! ನಾನು ಇವರ ಮುಖವನ್ನು ತೆಗೆದುಕೊಳ್ಳುತ್ತೇನೆ, ಆಗ ಅವರು ಅನೇಕ ಜನ್ಮಗಳ ಅಂತ್ಯದಲ್ಲಿ ವಾನಪ್ರಸ್ಥ ಸ್ಥಿತಿಯಲ್ಲಿರುತ್ತಾರೆ. ಯಾರು ತನ್ನ ಜನ್ಮಗಳನ್ನು ತಿಳಿದುಕೊಂಡಿರುವುದಿಲ್ಲವೋ ಇವರ ಶರೀರದಲ್ಲಿ ನಾನು ಪ್ರವೇಶ ಮಾಡುತ್ತೇನೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಹೇಗೆ ತಂದೆಯು ಆತ್ಮಗಳೊಂದಿಗೆ ನೇರವಾಗಿ ಮಾತನಾಡುತ್ತಾರೆಯೋ ಹಾಗೆಯೇ ಆತ್ಮನಿಶ್ಚಯ ಮಾಡಿಕೊಳ್ಳಬೇಕು. ಈ ಸ್ಮಶಾನದಿಂದ ಮಮತ್ವವನ್ನು ತೆಗೆಯಬೇಕು. ಎಂದೂ ಕನಿಷ್ಟಕರ್ಮವಾಗದೇ ಇರುವಂತೆ ಸಂಸ್ಕಾರವನ್ನು ಧಾರಣೆ ಮಾಡಬೇಕು. |
2. ತಂದೆಗೆ ಡ್ರಾಮಾದ ಮೇಲೆ ನಿಶ್ಚಯವಿರುವ ಕಾರಣ ಯಾರಿಗೂ ದೋಷವನ್ನು ಹೊರಿಸುವುದಿಲ್ಲ. ನಿಂದನೆ ಮಾಡುವ ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆ. ಈ ರೀತಿ ತಂದೆಯ ಸಮಾನರಾಗಬೇಕು. ಈ ನಾಟಕದಲ್ಲಿ ಯಾರ ದೋಷವೂ ಇಲ್ಲ, ಇದು ನಿಖರವಾಗಿ ಮಾಡಲ್ಪಟ್ಟಿದೆ. |
ಓಂ ಶಾಂತಿ. ಆತ್ಮಿಕ ಮಕ್ಕಳ ಬಳಿ ತಂದೆಯು ಶ್ರೀಮತವನ್ನು ಕೊಡಲು ಅಥವಾ ತಿಳಿಸಲು ಬಂದಿದ್ದಾರೆ. ಇದಂತೂ ಮಕ್ಕಳಿಗೆ ಅರ್ಥವಾಗಿದೆ - ಡ್ರಾಮಾಪ್ಲಾನನುಸಾರ ಎಲ್ಲಾ ಕಾರ್ಯವು ಆಗುವುದು, ಇನ್ನು ಸ್ವಲ್ಪವೇ ಸಮಯವಿದೆ, ಈ ಭಾರತವನ್ನು ರಾವಣ ಪುರಿಯಿಂದ ವಿಷ್ಣು ಪುರಿಯನ್ನಾಗಿ ಮಾಡಬೇಕಾಗಿದೆ. ತಂದೆಯೂ ಗುಪ್ತವಾಗಿದ್ದಾರೆ, ವಿದ್ಯೆಯೂ ಗುಪ್ತವಾಗಿದೆ. ಸೇವಾಕೇಂದ್ರಗಳಂತೂ ಬಹಳಷ್ಟಿವೆ, ಚಿಕ್ಕ-ದೊಡ್ಡ ಹಳ್ಳಿಗಳಲ್ಲಿ ಸೇವಾಕೇಂದ್ರಗಳಿವೆ ಮತ್ತು ಅನೇಕ ಮಕ್ಕಳೂ ಇದ್ದಾರೆ, ಈಗ ಮಕ್ಕಳು ಚಾಲೆಂಜ್ ಮಾಡಿದ್ದೀರಿ ಮತ್ತು ಬರೆಯಲೂಬೇಕಾಗಿದೆ, ಯಾವುದೇ ಪುಸ್ತಕಗಳನ್ನು ಮಾಡಿಸುವಾಗ ಅದರಲ್ಲಿ ಬರೆಯಬೇಕು - ನಾವು ಈ ನಮ್ಮ ಭಾರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಿಯೇ ಮಾಡುತ್ತೇವೆ. ನಿಮಗೂ ಸಹ ತಮ್ಮ ಭಾರತ ಭೂಮಿಯು ಬಹಳ ಪ್ರಿಯವಾಗಿದೆ ಏಕೆಂದರೆ ನಿಮಗೆ ತಿಳಿದಿದೆ - ಈ ಭಾರತವೇ ಸ್ವರ್ಗವಾಗಿತ್ತು, ಇದಕ್ಕೆ 5000 ವರ್ಷಗಳಾಗಿದೆ. ಭಾರತವು ಬಹಳ ಶೋಭನೀಕವಾಗಿತ್ತು, ಇದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ನೀವು ಬ್ರಹ್ಮಾಮುಖ ವಂಶಾವಳಿ ಬ್ರಾಹ್ಮಣರಿಗೇ ಜ್ಞಾನವಿದೆ. ಈ ಭಾರತವನ್ನು ಶ್ರೀಮತದಂತೆ ನಾವು ಖಂಡಿತ ಸ್ವರ್ಗವನ್ನಾಗಿ ಮಾಡಬೇಕಾಗಿದೆ. ಎಲ್ಲರಿಗೆ ಮಾರ್ಗ ತಿಳಿಸಬೇಕಾಗಿದೆ. ಮತ್ತ್ಯಾವುದೇ ಕಿರಿಕಿರಿಯ ಮಾತಿಲ್ಲ. ಪರಸ್ಪರ ಕುಳಿತು ಸಲಹೆ ತೆಗೆದುಕೊಳ್ಳಬೇಕು - ಈ ಪ್ರದರ್ಶನಿ ಚಿತ್ರಗಳ ಮೂಲಕ ನಾವು ಇಂತಹ ಯಾವ ಜಾಹೀರಾತನ್ನು ಮಾಡಬೇಕೋ ಅದನ್ನು ಪತ್ರಿಕೆಗಳಲ್ಲಿಯೂ ಕೊಡಬೇಕು ಎಂದು ಪರಸ್ಪರ ಈ ಚರ್ಚೆ ಮಾಡಬೇಕು. ಹೇಗೆ ಕಾಂಗ್ರೆಸ್ಸಿನವರು ಪರಸ್ಪರ ಸೇರಿ ಭಾರತವನ್ನು ನಾವು ಹೇಗೆ ಸುಧಾರಣೆ ಮಾಡುವುದೆಂದು ಸಲಹೆ ತೆಗೆದುಕೊಳ್ಳುತ್ತಾರೆ. ಈಗ ಇಷ್ಟೊಂದು ಕ್ರಿಶ್ಚಿಯನ್ನರು ಮೊದಲಾದವರು ಎಷ್ಟೊಂದು ಮಂದಿಯಾಗಿ ಬಿಟ್ಟಿದ್ದಾರೆ! ಅವರನ್ನು ನಾವು ಪರಸ್ಪರ ಸೇರಿ ಸರಿ ಪಡಿಸಬೇಕು ಮತ್ತು ಭಾರತದಲ್ಲಿ ಶಾಂತಿ-ಸುಖವನ್ನು ಹೇಗೆ ಸ್ಥಾಪಿಸುವುದು? ಆ ಸರ್ಕಾರದ ಪುರುಷಾರ್ಥವೂ ನಡೆಯುತ್ತದೆ, ಹಾಗೇ ನೀವೂ ಸಹ ಪಾಂಡವ ಸರ್ಕಾರವೆಂದು ಗಾಯನವಿದೆ. ಇದು ದೊಡ್ಡ ಈಶ್ವರೀಯ ಸರ್ಕಾರವಾಗಿದೆ. ಇದಕ್ಕೆ ವಾಸ್ತವದಲ್ಲಿ ಪಾವನ ಈಶ್ವರೀಯ ಸರ್ಕಾರವೆಂದು ಹೇಳಲಾಗುತ್ತದೆ. ಪತಿತ-ಪಾವನ ತಂದೆಯೇ ಪತಿತ ಮಕ್ಕಳನ್ನು ಕುಳಿತು ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ, ಇದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಮುಖ್ಯವಾದುದು ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಇದು ರುದ್ರ ಜ್ಞಾನ ಯಜ್ಞವಾಗಿದೆ. ರುದ್ರನೆಂದು ಈಶ್ವರ ತಂದೆ, ಶಿವನಿಗೆ ಹೇಳಲಾಗುತ್ತದೆ. ಅವಶ್ಯವಾಗಿ ತಂದೆಯು ಬಂದು ರುದ್ರ ಜ್ಞಾನ ಯಜ್ಞವನ್ನೇ ರಚಿಸಿದರೆಂದು ಗಾಯನವಿದೆ. ಅವರಂತೂ ಅದಕ್ಕೆ ಬಹಳ ಸುಧೀರ್ಘವಾದ ಸಮಯವನ್ನು ಕೊಟ್ಟು ಬಿಟ್ಟಿದ್ದಾರೆ. ಅಜ್ಞಾನ ನಿದ್ರೆಯಲ್ಲಿ ಮಲಗಿದ್ದಾರೆ. ಈಗ ನಿಮ್ಮನ್ನು ತಂದೆಯು ಜಾಗೃತಗೊಳಿಸಿದ್ದಾರೆ ಮತ್ತೆ ನೀವು ಅನ್ಯರನ್ನೂ ಜಾಗೃತಗೊಳಿಸಬೇಕಾಗಿದೆ. ಡ್ರಾಮಾಪ್ಲಾನನುಸಾರ ನೀವು ಜಾಗೃತಗೊಳಿಸುತ್ತಾ ಇರುತ್ತೀರಿ. ಈ ಸಮಯದವರೆಗೆ ಯಾರು ಹೇಗೇಗೆ ಎಷ್ಟೆಷ್ಟು ಪುರುಷಾರ್ಥ ಮಾಡಿದ್ದಾರೆಯೋ ಅಷ್ಟೇ ಕಲ್ಪದ ಮೊದಲೂ ಮಾಡಿದ್ದರು, ಆ ಯುದ್ಧದ ಮೈದಾನದಲ್ಲಿ ಏರಿಳಿತಗಳಂತೂ ಆಗಿಯೇ ಆಗುತ್ತವೆ. ಕೆಲವೊಮ್ಮೆ ಮಾಯೆಯ ಪ್ರಭಾವ ಹೆಚ್ಚಾಗುತ್ತದೆ. ಕೆಲವೊಮ್ಮೆ ಈಶ್ವರೀಯ ಸಂತಾನರ ಪ್ರಭಾವ ಹೆಚ್ಚಾಗುತ್ತದೆ. ಇನ್ನೂ ಕೆಲವೊಮ್ಮೆ ಬರುತ್ತವೆ. ಮಾಯೆಯು ಒಮ್ಮೆಲೆ ಮೂರ್ಛಿತರನ್ನಾಗಿ ಮಾಡಿ ಬಿಡುತ್ತದೆ. ಯುದ್ಧದ ಮೈದಾನವಲ್ಲವೆ. ರಾವಣ ಮಾಯೆಯು ರಾಮನ ಸಂತಾನರನ್ನು ಮೂರ್ಛಿತರನ್ನಾಗಿ ಮಾಡಿ ಬಿಡುತ್ತದೆ. ಲಕ್ಷ್ಮಣನ ಕಥೆಯೂ ಇದೆಯಲ್ಲವೆ. |
ನೀವು ಹೇಳುತ್ತೀರಿ - ಎಲ್ಲಾ ಮನುಷ್ಯರು ಕುಂಭ ಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ, ನೀವು ಈಶ್ವರೀಯ ಸಂಪ್ರದಾಯದವರೇ ಈ ರೀತಿ ಹೇಳುತ್ತೀರಿ- ಯಾರಿಗೆ ಜ್ಞಾನ ಸೂರ್ಯನು ಸಿಕ್ಕಿದ್ದಾರೆಯೋ ಮತ್ತು ಜಾಗೃತರಾಗಿದ್ದಾರೆಯೋ ಅವರೇ ತಿಳಿದುಕೊಳ್ಳುವರು. ಇದರಲ್ಲಿ ಒಬ್ಬರು ಇನ್ನೊಬ್ಬರಿಗೆ ಹೇಳುವ ಯಾವುದೇ ಮಾತಿಲ್ಲ. ನಿಮಗೆ ತಿಳಿದಿದೆ - ಅವಶ್ಯವಾಗಿ ನಾವು ಈಶ್ವರೀಯ ಸಂಪ್ರದಾಯದವರು ಜಾಗೃತರಾಗಿದ್ದೇವೆ, ಉಳಿದೆಲ್ಲರೂ ಮಲಗಿದ್ದಾರೆ. ಪರಮಪಿತ ಪರಮಾತ್ಮನು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆಂದು ಅವರು ತಿಳಿದುಕೊಂಡಿಲ್ಲ. ಇದನ್ನು ಸಂಪೂರ್ಣ ಮರೆತು ಬಿಟ್ಟಿದ್ದಾರೆ. ತಂದೆಯು ಭಾರತದಲ್ಲಿಯೇ ಬಂದಿದ್ದಾರೆ, ಬಂದು ಭಾರತವನ್ನು ಸ್ವರ್ಗದ ಮಾಲೀಕನನ್ನಾಗಿ ಮಾಡುತ್ತಾರೆ. ಭಾರತವು ಸ್ವರ್ಗದ ಮಾಲೀಕನಾಗಿತ್ತು, ಇದರಲ್ಲಿ ಯಾವುದೇ ಸಂಶಯವಿಲ್ಲ. ಪರಮಪಿತ ಪರಮಾತ್ಮನ ಜನ್ಮವೂ ಇಲ್ಲಿಯೇ ಆಗುತ್ತದೆ. ಶಿವ ಜಯಂತಿಯನ್ನು ಆಚರಿಸುತ್ತಾರಲ್ಲವೆ. ಅವಶ್ಯವಾಗಿ ಅವರು ಬಂದು ಏನನ್ನೋ ಮಾಡಿರಬೇಕಲ್ಲವೆ! ಬುದ್ಧಿಯು ಹೇಳುತ್ತದೆ - ತಂದೆಯು ಬಂದು ಅವಶ್ಯವಾಗಿ ಸ್ವರ್ಗದ ಸ್ಥಾಪನೆ ಮಾಡಿರುವರು. ಕೇವಲ ಪ್ರೇರಣೆಯಿಂದ ಸ್ಥಾಪನೆಯಾಗುವುದಿಲ್ಲ. ಇಲ್ಲಿ ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲಾಗುತ್ತದೆ. ನೆನಪಿನ ಯಾತ್ರೆಯನ್ನು ತಿಳಿಸಲಾಗುತ್ತದೆ. ಪ್ರೇರಣೆಯಿಂದ ಯಾವುದೇ ಶಬ್ಧವು ಕೇಳಿಬರುವುದಿಲ್ಲ. ಶಂಕರನ ಪ್ರೇರಣೆಯಾಗುತ್ತದೆ, ಆಗ ಈ ಯಾದವರು ಅಣ್ವಸ್ತ್ರಗಳನ್ನು ತಯಾರಿಸುತ್ತಾರೆಂದು ಹೇಳುತ್ತಾರೆ ಆದರೆ ಇದರಲ್ಲಿ ಯಾವುದೇ ಪ್ರೇರಣೆಯ ಮಾತಿಲ್ಲ. ಈಗ ನಿಮಗೆ ಅರ್ಥವಾಗಿದೆ - ಡ್ರಾಮಾದಲ್ಲಿ ಈ ಅಣ್ವಸ್ತ್ರ ಮೊದಲಾದುವುಗಳನ್ನು ತಯಾರಿಸುವುದು ಅವರ ಪಾತ್ರವಿದೆ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಡ್ರಾಮಾನುಸಾರ ವಿನಾಶವಂತೂ ಆಗಲೇಬೇಕಾಗಿದೆ. ಮಹಾಭಾರತ ಯುದ್ಧದಲ್ಲಿ ಅಣ್ವಸ್ತ್ರಗಳು ಕೆಲಸಕ್ಕೆ ಬಂದಿತೆಂದು ಗಾಯನವಿದೆ. ಯಾವುದು ಕಳೆದು ಹೋಯಿತೋ ಅದು ಮತ್ತೆ ಪುನರಾವರ್ತನೆಯಾಗುವುದು. ನೀವು ಗ್ಯಾರಂಟಿ ಕೊಡುತ್ತೀರಿ, ನಾವು ಭಾರತದಲ್ಲಿ ಸ್ವರ್ಗ ಸ್ಥಾಪನೆ ಮಾಡುತ್ತೇವೆ, ಅಲ್ಲಿ ಒಂದೇ ಧರ್ಮವಿರುವುದು. ಅನೇಕ ಧರ್ಮಗಳ ವಿನಾಶವಾಗುತ್ತದೆ ಎಂದು ನೀವು ಬರೆಯುವುದಿಲ್ಲ. ಅದನ್ನಂತೂ ಚಿತ್ರದಲ್ಲಿ ಬರೆಯಲಾಗಿದೆ, ಸ್ವರ್ಗದ ಸ್ಥಾಪನೆಯಾದಾಗ ಬೇರೆ ಯಾವುದೇ ಧರ್ಮವಿರುವುದಿಲ್ಲ. ಈಗ ನಿಮಗೆ ಅರ್ಥವಾಗುತ್ತದೆ. ಎಲ್ಲರಿಗಿಂತ ಹೆಚ್ಚಿನ ಪಾತ್ರವು ಶಿವನದು ಹಾಗೂ ಬ್ರಹ್ಮಾ ಮತ್ತು ವಿಷ್ಣುವಿನದಾಗಿದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ - ಇವು ಬಹಳ ಗುಹ್ಯವಾದ ಮಾತುಗಳಾಗಿವೆ. ವಿಷ್ಣುವಿನಿಂದ ಹೇಗೆ ಬ್ರಹ್ಮನಾಗುತ್ತಾರೆ, ಬ್ರಹ್ಮನಿಂದ ಮತ್ತೆ ಹೇಗೆ ವಿಷ್ಣುವಾಗುತ್ತಾರೆ! ಈ ಮಾತುಗಳು ಸೂಕ್ಷ್ಮ ಬುದ್ಧಿಯುಳ್ಳ ಮಕ್ಕಳಿಗೇ ಅರ್ಥವಾಗುತ್ತದೆ. ದೈವೀ ಸಂಪ್ರದಾಯವಂತೂ ಆಗಿಯೇ ಆಗುತ್ತದೆ. ಒಬ್ಬರ ಮಾತಿಲ್ಲ. ರಾಜಧಾನಿಯ ಸ್ಥಾಪನೆಯಾಗುತ್ತದೆ, ಈ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಯಾವ ಮನುಷ್ಯನೂ ತಿಳಿದುಕೊಂಡಿಲ್ಲ. ಭಲೆ ಲಕ್ಷ್ಮೀ-ನಾರಾಯಣ ಅಥವಾ ವಿಷ್ಣುವಿನ ಪೂಜೆ ಮಾಡುತ್ತಾರೆ ಆದರೆ ವಿಷ್ಣುವಿನ ಎರಡು ರೂಪಗಳೇ ಲಕ್ಷ್ಮೀ-ನಾರಾಯಣನಾಗಿದ್ದಾರೆ, ಅವರು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತಾರೆಂಬುದು ಅವರಿಗೆ ತಿಳಿದಿಲ್ಲ. ಬಾಕಿ 4 ಭುಜಗಳುಳ್ಳ ಯಾವುದೇ ಮನುಷ್ಯನಿರುವುದಿಲ್ಲ. ಸೂಕ್ಷ್ಮವತನದಲ್ಲಿ ಕೇವಲ ಪ್ರವೃತ್ತಿ ಮಾರ್ಗದ ಗುರಿ-ಧ್ಯೇಯವನ್ನು ತೋರಿಸುತ್ತಾರೆ. ಇಡೀ ವಿಶ್ವದ ಇತಿಹಾಸ-ಭೂಗೋಳವು ಹೇಗೆ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯನ್ನೇ ಅರಿತಿಲ್ಲವೆಂದರೆ ತಂದೆಯ ರಚನೆಯನ್ನು ಹೇಗೆ ಅರಿತುಕೊಳ್ಳುವರು! ತಂದೆಯೇ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಋಷಿ-ಮುನಿಗಳೂ ಸಹ ನಮಗೂ ಗೊತ್ತಿಲ್ಲವೆಂದು ಹೇಳುತ್ತಿದ್ದರು. ತಂದೆಯನ್ನು ಅರಿತುಕೊಂಡರೆ ರಚನೆಯ ಆದಿ-ಮಧ್ಯ-ಅಂತ್ಯವನ್ನೂ ಅರಿತುಕೊಳ್ಳುವರು. ತಂದೆಯು ತಿಳಿಸುತ್ತಾರೆ - ನಾನು ಒಂದೇ ಬಾರಿ ಬಂದು ನೀವು ಮಕ್ಕಳಿಗೂ ಇಡೀ ಜ್ಞಾನವನ್ನು ತಿಳಿಸುತ್ತೇನೆ. ಮತ್ತೆ ನಾನು ಬರುವುದೇ ಇಲ್ಲ ಅಂದಾಗ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವುದಾದರೂ ಹೇಗೆ? ತಂದೆಯೇ ಸ್ವಯಂ ಹೇಳುತ್ತಾರೆ - ನಾನು ಸಂಗಮಯುಗವನ್ನು ಬಿಟ್ಟು ಮತ್ತೆಂದೂ ಬರುವುದಿಲ್ಲ, ನನ್ನನ್ನು ಸಂಗಮಯುಗದಲ್ಲಿಯೇ ಕರೆಯುತ್ತೀರಿ. ಪಾವನವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಅವಶ್ಯವಾಗಿ ನಾನು ಪತಿತ ಪ್ರಪಂಚದ ಅಂತ್ಯದಲ್ಲಿಯೇ ಬರುತ್ತೇನೆ. ಕಲಿಯುಗದ ಅಂತಿಮದಲ್ಲಿ ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತೇನೆ. ಸತ್ಯಯುಗದ ಆದಿಯಲ್ಲಿ ಪಾವನರಿರುತ್ತಾರೆ, ಇದು ಸಹಜ ಮಾತಲ್ಲವೆ. ಪತಿತ-ಪಾವನ ತಂದೆಯು ಯಾವಾಗ ಬರುತ್ತಾರೆ? ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಈಗಂತೂ ಕಲಿಯುಗದ ಅಂತ್ಯವೆಂದು ಹೇಳಲಾಗುತ್ತದೆ. ಒಂದುವೇಳೆ ಕಲಿಯುಗದಲ್ಲಿ ಇನ್ನೂ 40 ಸಾವಿರ ವರ್ಷಗಳಿವೆ ಎಂದು ಹೇಳುವುದಾದರೆ ಇನ್ನೆಷ್ಟು ಪತಿತರಾಗಬಹುದು! ಇನ್ನೆಷ್ಟು ದುಃಖವಾಗುವುದು! ಸುಖವಂತೂ ಇರುವುದೇ ಇಲ್ಲ, ಏನೂ ತಿಳಿಯದಿರುವ ಕಾರಣ ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ, ನೀವು ಅರ್ಥ ಮಾಡಿಕೊಳ್ಳುತ್ತೀರಿ ಅಂದಾಗ ಮಕ್ಕಳು ಪರಸ್ಪರ ಸೇರಬೇಕು, ಚಿತ್ರಗಳ ಬಗ್ಗೆ ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಡ್ರಾಮಾನುಸಾರ ಈ ಚಿತ್ರಗಳೆಲ್ಲವೂ ತಯಾರು ಮಾಡಿದ್ದಾರೆ. ಯಾವ ಸಮಯವು ಕಳೆಯುವುದು, ಅದು ಚಾಚೂ ತಪ್ಪದೆ ಡ್ರಾಮಾ ನಡೆಯುತ್ತಿರುತ್ತದೆ. ಮಕ್ಕಳ ಸ್ಥಿತಿಗಳೂ ಸಹ ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ ಆಗುತ್ತಿರುತ್ತದೆ. ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಕೆಲವೊಮ್ಮೆ ಗ್ರಹಚಾರವು ಬಂದು ಕುಳಿತಾಗ ಎಷ್ಟೊಂದು ಪ್ರಯತ್ನ ಪಡುತ್ತಾರೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ಮಕ್ಕಳೇ, ನೀವು ದೇಹಾಭಿಮಾನದಲ್ಲಿ ಬರುತ್ತೀರಿ ಆದ್ದರಿಂದಲೇ ಘರ್ಷಣೆಯಾಗುತ್ತದೆ. ಇಲ್ಲಂತೂ ಆತ್ಮಾಭಿಮಾನಿಯಾಗಬೇಕಾಗಿದೆ. ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ನೀವು ದೇಹೀ-ಅಭಿಮಾನಿಯಾದರೆ ತಂದೆಯ ನೆನಪಿರುವುದು ಮತ್ತು ಸೇವೆಯಲ್ಲಿ ಉನ್ನತಿ ಪಡೆಯುತ್ತಾ ಇರುತ್ತೀರಿ. ಯಾರು ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆಯೋ ಅವರು ಸದಾ ಸರ್ವೀಸಿನಲ್ಲಿ ತೊಡಗಿರುತ್ತಾರೆ. ಅದೃಷ್ಟದಲ್ಲಿಲ್ಲವೆಂದರೆ ಮತ್ತೆ ಪುರುಷಾರ್ಥವನ್ನೂ ಮಾಡುವುದಿಲ್ಲ. ಬಾಬಾ, ನಮಗೆ ಧಾರಣೆಯಾಗುತ್ತಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ತಾವೇ ಹೇಳುತ್ತಾರೆ. ಯಾರಿಗೆ ಧಾರಣೆಯಾಗುವುದೋ ಅವರಿಗೆ ಬಹಳ ಖುಷಿಯಿರುತ್ತದೆ. ತಿಳಿದುಕೊಳ್ಳುತ್ತಾರೆ – ಶಿವ ತಂದೆಯು ಬಂದಿದ್ದಾರೆ ಈಗ ತಂದೆಯು ತಿಳಿಸುತ್ತಾರೆ, ಮಕ್ಕಳೇ ನೀವು ಚೆನ್ನಾಗಿ ತಿಳಿದುಕೊಂಡು ಮತ್ತೆ ಅನ್ಯರಿಗೂ ತಿಳಿಸಿಕೊಡಿ. ಕೆಲವರಂತೂ ಸೇವೆಯಲ್ಲಿಯೇ ತೊಡಗಿರುತ್ತಾರೆ, ಪುರುಷಾರ್ಥ ಮಾಡುತ್ತಿರುತ್ತಾರೆ. ಇದನ್ನೂ ಮಕ್ಕಳು ತಿಳಿದುಕೊಂಡಿದ್ದೀರಿ - ಯಾವ ಸೆಕೆಂಡ್ ಕಳೆಯಿತೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ, ಮತ್ತೆ ಅದೇರೀತಿ ಪುನರಾವರ್ತನೆಯಾಗುವುದು. ಮಕ್ಕಳಿಗೆ ತಿಳಿಸಲಾಗಿದೆ - ಹೊರಗಡೆ ಭಾಷಣ ಇತ್ಯಾದಿ ಮಾಡುವಾಗ ಕೇಳುವುದಕ್ಕಾಗಿ ಅನೇಕ ಪ್ರಕಾರದ ಹೊಸಬರು ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಗೀತೆ, ವೇದ-ಶಾಸ್ತ್ರ ಇತ್ಯಾದಿಗಳನ್ನು ಕುರಿತು ಎಷ್ಟೊಂದು ಮಂದಿ ಭಾಷಣ ಮಾಡುತ್ತಾರೆ. ಆದರೆ ಇಲ್ಲಿ ಈಶ್ವರನು ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆಂಬುದು ಅವರಿಗೇ ಗೊತ್ತಿಲ್ಲ. ರಚಯಿತನೇ ಬಂದು ಇಡೀ ಜ್ಞಾನವನ್ನು ತಿಳಿಸುತ್ತಾರೆ. ತ್ರಿಕಾಲದರ್ಶಿಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ. ಶಾಸ್ತ್ರಗಳಲ್ಲಿ ಈ ಮಾತುಗಳಿಲ್ಲ, ಇವು ಹೊಸ ಮಾತುಗಳಾಗಿವೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ಯಾರಿಗಾದರೂ ಮೊಟ್ಟ ಮೊದಲು ಇದನ್ನೂ ತಿಳಿಸಿ - ಗೀತೆಯ ಭಗವಂತ ಯಾರು? ಶ್ರೀಕೃಷ್ಣನೋ ಅಥವಾ ನಿರಾಕಾರ ಶಿವನೋ? ಈ ಮಾತುಗಳನ್ನು ಪ್ರೋಜೆಕ್ಟರ್ನಲ್ಲಿ ನೀವು ತಿಳಿಸಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಚಿತ್ರಗಳು ಸಮ್ಮುಖದಲ್ಲಿಟ್ಟಿರುತ್ತಾರೆ. ಅದನ್ನು ತೋರಿಸುತ್ತಾ ನೀವು ಅವರನ್ನು ಕೇಳಬಹುದು, ಈಗ ತಿಳಿಸಿ - ಗೀತೆಯ ಭಗವಂತ ಯಾರು, ಜ್ಞಾನ ಸಾಗರನು ಯಾರು? ಕೃಷ್ಣನಿಗಂತೂ ಹೇಳಲು ಸಾಧ್ಯವಿಲ್ಲ. ಪವಿತ್ರತೆ, ಸುಖ-ಶಾಂತಿಯ ಸಾಗರ, ಮುಕ್ತಿದಾತ, ಮಾರ್ಗದರ್ಶಕ ಯಾರು? ಮೊಟ್ಟ ಮೊದಲು ಅವರಿಂದ ಇದನ್ನು ಬರೆಸಬೇಕು - ಫಾರ್ಮ್ ತುಂಬಿಸಬೇಕು ನಂತರ ಎಲ್ಲರಿಂದ ಸಹಿಯನ್ನು ತೆಗೆದುಕೊಳ್ಳಬೇಕು. |
(ಪಕ್ಷಿಗಳ ಶಬ್ಧವಾಯಿತು) ನೋಡಿ ಎಷ್ಟೊಂದು ಜಗಳವಾಡುತ್ತವೆ. ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜಗಳ-ಕಲಹವೇ ಇದೆ. ಮನುಷ್ಯರೂ ಸಹ ಪರಸ್ಪರ ಹೊಡೆದಾಡುತ್ತಾರೆ. ಮನುಷ್ಯನಲ್ಲಿಯೇ ತಿಳಿದುಕೊಳ್ಳುವ ಬುದ್ಧಿಯಿದೆ. ಮನುಷ್ಯನಲ್ಲಿರುವ ಪಂಚ ವಿಕಾರಗಳ ಗಾಯನವೇ ಇದೆ, ಪ್ರಾಣಿಗಳ ಮಾತಿಲ್ಲ. ಇದು ವಿಕಾರಿ ಪ್ರಪಂಚವಾಗಿದೆ. ಪ್ರಪಂಚವೆಂದು ಮನುಷ್ಯರಿರುವ ಸ್ಥಾನಕ್ಕೇ ಹೇಳಲಾಗುತ್ತದೆ. ಕಲಿಯುಗದಲ್ಲಿ ಆಸುರೀ ಸಂಪ್ರದಾಯ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿರುತ್ತದೆ. ಈಗ ನಿಮಗೆ ಇದೆಲ್ಲದರ ವ್ಯತ್ಯಾಸ ಗೊತ್ತಿದೆ. ನೀವು ಸಿದ್ಧ ಮಾಡಿ ತಿಳಿಸಬಹುದು. ಏಣಿ ಚಿತ್ರದಲ್ಲಿಯೂ ಬಹಳ ಸ್ಪಷ್ಟ ಮಾಡಿ ತೋರಿಸಿದ್ದಾರೆ. ಕೆಳಗೆ ಪತಿತರಿದ್ದಾರೆ, ಮೇಲೆ ಪಾವನರಿದ್ದಾರೆ. ಇದರಲ್ಲಿ ಬಹಳ ಸ್ಪಷ್ಟವಾಗಿದೆ. ಇಳಿಯುವ ಕಲೆ ಮತ್ತು ಏರುವ ಕಲೆ – ಏಣಿ ಚಿತ್ರವೇ ಮುಖ್ಯವಾಗಿದೆ. ಇದರಲ್ಲಿ ಅವಶ್ಯವಾಗಿ ಇದು ಪತಿತ ಪ್ರಪಂಚವಾಗಿದೆ, ಪಾವನ ಪ್ರಪಂಚವು ಸ್ವರ್ಗವಾಗಿತ್ತು ಎಂದು ಮನುಷ್ಯರಿಗೆ ಅರ್ಥವಾಗಬೇಕೆಂದರೆ ಇನ್ನು ಯಾವ ರೀತಿ ಬರೆಯುವುದು. ವಿಚಾರ ಮಾಡಬೇಕಾಗಿದೆ. ಇಲ್ಲಿ ಎಲ್ಲರೂ ಪತಿತರಿದ್ದಾರೆ, ಯಾರೊಬ್ಬರೂ ಪಾವನರಿರಲು ಸಾಧ್ಯವಿಲ್ಲ. ರಾತ್ರಿ-ಹಗಲು ಈ ಚಿಂತನೆ ನಡೆಯಬೇಕು. ಆತ್ಮ ಪ್ರಕಾಶ ಮಗು ಬರೆಯುತ್ತಾರೆ - ಬಾಬಾ, ಈ ಚಿತ್ರವನ್ನು ಮಾಡಿಸುವುದೇ? ತಂದೆಯು ತಿಳಿಸುತ್ತಾರೆ – ವಿಚಾರ ಸಾಗರ ಮಂಥನ ಮಾಡಿ ಯಾವುದೇ ಚಿತ್ರವನ್ನು ಮಾಡಿಸಿ ಆದರೆ ಏಣಿ ಚಿತ್ರವು ಬಹಳ ಚೆನ್ನಾಗಿರಬೇಕು. ಇದನ್ನು ತೋರಿಸಿ ನೀವು ಬಹಳಷ್ಟು ತಿಳಿಸಬಹುದು. 84 ಜನ್ಮಗಳನ್ನು ಪೂರ್ಣ ಮಾಡಿ ಮತ್ತೆ ಮೊದಲ ನಂಬರಿನ ಜನ್ಮ ತೆಗೆದುಕೊಂಡಿದ್ದಾರೆ ಮತ್ತೆ ಇಳಿಯುವ ಕಲೆಯಿಂದ ಏರುವ ಕಲೆಯಲ್ಲಿ ಹೋಗಬೇಕಾಗಿದೆ. ಇದರಲ್ಲಿ ಪ್ರತಿಯೊಬ್ಬರಿಗೇ ವಿಚಾರ ನಡೆಯಬೇಕು ಇಲ್ಲವೆಂದರೆ ಹೇಗೆ ಸರ್ವೀಸ್ ಮಾಡುವಿರಿ! ಚಿತ್ರಗಳನ್ನು ಕುರಿತು ತಿಳಿಸುವುದು ಬಹಳ ಸಹಜವಾಗುತ್ತದೆ. ಸತ್ಯಯುಗದ ನಂತರ ಏಣಿಯನ್ನು ಇಳಿಯಲಾಗುತ್ತದೆ. ಇದೂ ಸಹ ಮಕ್ಕಳಿಗೆ ಗೊತ್ತಿದೆ - ನಾವು ಪಾತ್ರಧಾರಿಗಳಾಗಿದ್ದೇವೆ, ಇಲ್ಲಿಂದ ವರ್ಗಾವಣೆಯಾಗಿ ನೇರವಾಗಿ ಸತ್ಯಯುಗಕ್ಕೆ ಹೋಗುವುದಿಲ್ಲ, ಮೊದಲು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ಹಾ! ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ, ಯಾರು ತಮ್ಮನ್ನು ಈ ಡ್ರಾಮಾದಲ್ಲಿ ಪಾತ್ರಧಾರಿಯೆಂದು ತಿಳಿದುಕೊಳ್ಳುತ್ತಾರೆ. ಈ ಪ್ರಪಂಚದಲ್ಲಿ ಮತ್ತ್ಯಾರೂ ಸಹ ನಾವು ಪಾತ್ರಧಾರಿಗಳೆಂದು ಹೇಳಲು ಸಾಧ್ಯವಿಲ್ಲ. ನಾವು ಬರೆಯುತ್ತೇವೆ - ಪಾತ್ರಧಾರಿಗಳಾಗಿಯೂ ಡ್ರಾಮಾದ ರಚಯಿತ, ನಿರ್ದೇಶಕ, ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದರೆ ಅವರು ಅತೀ ಬುದ್ಧಿಹೀನರಾಗಿದ್ದಾರೆ. ಇದಂತೂ ಭಗವಾನುವಾಚವಾಗಿದೆ. ಶಿವ ಭಗವಾನುವಾಚ ಬ್ರಹ್ಮಾರವರ ತನುವಿನ ಮೂಲಕ. ಜ್ಞಾನ ಸಾಗರನು ನಿರಾಕಾರನಾಗಿದ್ದಾರೆ, ಅವರಿಗೆ ತನ್ನ ಶರೀರವಿಲ್ಲ, ಬಹಳ ತಿಳಿದುಕೊಳ್ಳುವ ಯುಕ್ತಿಗಳಾಗಿವೆ. ನೀವು ಮಕ್ಕಳಿಗೆ ಬಹಳ ನಶೆಯಿರಬೇಕು, ನಾವು ಯಾರದೇ ನಿಂದನೆ ಮಾಡುವುದಿಲ್ಲ. ಇದಂತೂ ಸರಿಯಾದ ಮಾತಲ್ಲವೆ. ಯಾರೆಲ್ಲಾ ದೊಡ್ಡ-ದೊಡ್ಡವರಿದ್ದಾರೆ ಅವರೆಲ್ಲರ ಚಿತ್ರವನ್ನು ನೀವು ಹಾಕಬಹುದು, ಏಣಿ ಚಿತ್ರವನ್ನು ಯಾರಿಗೆ ಬೇಕಾದರೂ ತೋರಿಸಬಹುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಭಾರತದಲ್ಲಿ ಸುಖ-ಶಾಂತಿಯ ಸ್ಥಾಪನೆ ಮಾಡಲು ಅಥವಾ ಭಾರತವನ್ನು ಸ್ವರ್ಗವನ್ನಾಗಿ ಮಾಡಲು ಪರಸ್ಪರ ಚರ್ಚೆ ಮಾಡಬೇಕಾಗಿದೆ. ಶ್ರೀಮತದನುಸಾರ ಭಾರತದ ಇಂತಹ ಸೇವೆ ಮಾಡಬೇಕಾಗಿದೆ. |
2. ಸರ್ವೀಸಿನಲ್ಲಿ ಉನ್ನತಿ ಮಾಡಿಕೊಳ್ಳಲು ಹಾಗೂ ಸರ್ವೀಸಿನಿಂದ ಶ್ರೇಷ್ಠ ಪದವಿಯನ್ನು ಪಡೆಯಲು ದೇಹೀ-ಅಭಿಮಾನಿಯಾಗಿರುವ ಪರಿಶ್ರಮ ಪಡಬೇಕಾಗಿದೆ. ಜ್ಞಾನದ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಂದೆಯು ತಿಳಿಸಿದ್ದಾರೆ. ನಾನಾತ್ಮನ ಸ್ವಧರ್ಮವು ಶಾಂತಿಯಾಗಿದೆ. ಶಾಂತಿಧಾಮಕ್ಕೆ ಹೋಗುವುದಕ್ಕಾಗಿ ಯಾವುದೇ ಪುರುಷಾರ್ಥ ಮಾಡಬೇಕಾಗುವುದಿಲ್ಲ, ಆತ್ಮವು ಸ್ವಯಂ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದೆ. ಹಾ! ಸ್ವಲ್ಪ ಸಮಯ ಶಾಂತಿಯಲ್ಲಿರಬಹುದಾಗಿದೆ. ಆತ್ಮವೇ ಹೇಳುತ್ತದೆ- ನಾನು ಕರ್ಮೇಂದ್ರಿಯಗಳ ಹೊರೆಯಿಂದ ಸುಸ್ತಾಗಿ ಬಿಟ್ಟಿದ್ದೇನೆ. ನಾನು ನನ್ನ ಸ್ವಧರ್ಮದಲ್ಲಿ ಸ್ಥಿತನಾಗುತ್ತೇನೆ, ಶರೀರದಿಂದ ಭಿನ್ನವಾಗಿ ಬಿಡುತ್ತೇನೆ, ಆದರೆ ಕರ್ಮವನ್ನಂತೂ ಮಾಡಲೇಬೇಕಾಗಿದೆ. ಎಲ್ಲಿಯವರೆಗೆ ಶಾಂತಿಯಲ್ಲಿ ಕುಳಿತುಕೊಂಡಿರುತ್ತೀರಿ! ಆತ್ಮವು ಹೇಳುತ್ತದೆ - ನಾನು ಶಾಂತಿ ದೇಶದ ನಿವಾಸಿಯಾಗಿದ್ದೇನೆ, ಕೇವಲ ಇಲ್ಲಿ ಶರೀರದಲ್ಲಿ ಬರುವುದರಿಂದ ನಾನು ಟಾಕಿ (ಶಬ್ಧ) ಯಾಗಿದ್ದೇನೆ. ನಾನು ಆತ್ಮ ಅವಿನಾಶಿ, ನನ್ನ ಶರೀರವು ವಿನಾಶಿಯಾಗಿದೆ. ಆತ್ಮವು ಪಾವನ ಮತ್ತು ಪತಿತವಾಗುತ್ತದೆ. ಸತ್ಯಯುಗದಲ್ಲಿ ಪಂಚ ತತ್ವಗಳೂ ಸಹ ಸತೋಪ್ರಧಾನವಾಗಿರುತ್ತವೆ. ಇಲ್ಲಿ ಪಂಚ ತತ್ವಗಳೂ ತಮೋಪ್ರಧಾನವಾಗಿವೆ. ಚಿನ್ನದಲ್ಲಿ ತುಕ್ಕು ಬೀಳುವುದರಿಂದ ಚಿನ್ನವು ಪತಿತವಾಗಿ ಬಿಡುತ್ತದೆ ಮತ್ತೆ ಅದನ್ನು ಸ್ವಚ್ಛ ಮಾಡಲು ಭಟ್ಟಿಯಲ್ಲಿ ಹಾಕಲಾಗುತ್ತದೆ. ಇದರ ಹೆಸರೇ ಆಗಿದೆ- ಯೋಗಾಗ್ನಿ. ಪ್ರಪಂಚದಲ್ಲಂತೂ ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ, ಅದಕ್ಕೆ ಯೋಗಾಗ್ನಿಯೆಂದು ಹೇಳುವುದಿಲ್ಲ ಯೋಗಾಗ್ನಿಯು ಇದಾಗಿದೆ ಯಾವುದರಿಂದ ಪಾಪಗಳು ಸುಟ್ಟು ಹೋಗುತ್ತವೆ. ಆತ್ಮವನ್ನು ಪತಿತನಿಂದ ಪಾವನ ಮಾಡುವವರು ಪರಮಾತ್ಮನಾಗಿದ್ದಾರೆ, ಹೇ ಪತಿತ-ಪಾವನ ಬನ್ನಿ ಎಂದು ಅವರನ್ನೇ ಕರೆಯುತ್ತಾರೆ. ಡ್ರಾಮಾ ಪ್ಲಾನನುಸಾರ ಎಲ್ಲರೂ ಪತಿತ, ತಮೋಪ್ರಧಾನರಾಗಲೇಬೇಕಾಗಿದೆ. ಇದು ವೃಕ್ಷವಾಗಿದೆ, ಇದರ ಬೀಜ ರೂಪನು ಮೇಲಿದ್ದಾರೆ, ತಂದೆಯನ್ನು ಕರೆಯುವಾಗ ಬುದ್ಧಿಯು ಮೇಲೆ ಹೋಗುತ್ತದೆ ಯಾರಿಂದ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರೋ ಅವರು ಈಗ ಕೆಳಗಡೆ ಬಂದಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ನಾನು ಬರಲೇಬೇಕಾಗುತ್ತದೆ. ಅನೇಕ ಧರ್ಮಗಳ ಮನುಷ್ಯ ಸೃಷ್ಟಿಯ ವೃಕ್ಷವು ಈಗ ತಮೋಪ್ರಧಾನ, ಪತಿತವಾಗಿದೆ, ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಸತ್ಯಯುಗದಲ್ಲಿ ದೇವತೆಗಳು, ಕಲಿಯುಗದಲ್ಲಿ ಅಸುರರಿದ್ದಾರೆ. ಬಾಕಿ ಅಸುರರು ಮತ್ತು ದೇವತೆಗಳ ಯುದ್ಧವಾಗಲಿಲ್ಲ. ನೀವು ಯೋಗಬಲದಿಂದ ಆಸುರೀ ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ ಬಾಕಿ ಯಾವುದೇ ಹಿಂಸಕ ಯುದ್ಧದ ಮಾತಿಲ್ಲ. ನೀವು ಯಾವುದೇ ಪ್ರಕಾರದಿಂದ ಹಿಂಸೆ ಮಾಡುವುದಿಲ್ಲ, ಎಂದೂ ಯಾರನ್ನೂ ಹೊಡೆಯುವುದೂ ಇಲ್ಲ. ನೀವು ಡಬ್ಬಲ್ ಅಹಿಂಸಕರಾಗಿದ್ದೀರಿ. ಕಾಮ ಕಟಾರಿಯನ್ನು ನಡೆಸುವುದು ಬಹಳ ದೊಡ್ಡ ಪಾಪವಾಗಿದೆ. ತಂದೆಯು ತಿಳಿಸುತ್ತಾರೆ - ಈ ಕಾಮ ಕಟಾರಿಯೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ, ಆದ್ದರಿಂದ ವಿಕಾರದಲ್ಲಿ ಹೋಗಬಾರದು. ತಾವು ಸರ್ವಗುಣ ಸಂಪನ್ನರು..... ಎಂದು ದೇವತೆಗಳ ಮುಂದೆ ಮಹಿಮೆ ಮಾಡುತ್ತಾರಲ್ಲವೆ. ಆತ್ಮವು ಹೇಳುತ್ತದೆ - ನಾವು ಪತಿತರಾಗಿದ್ದೇವೆ, ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಪಾವನರಿದ್ದಾಗ ಯಾರನ್ನೂ ಕರೆಯುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇಲ್ಲಂತೂ ಸಾಧು-ಸಂತ ಮೊದಲಾದವರು ಹೇ ಪತಿತ-ಪಾವನ ಸೀತಾರಾಂ ಎಂದು ಎಷ್ಟೊಂದು ಹಾಡುತ್ತಾರೆ. ತಂದೆಯು ತಿಳಿಸುತ್ತಾರೆ- ಈ ಸಮಯದಲ್ಲಿ ಇಡೀ ಪ್ರಪಂಚವು ಪತಿತವಾಗಿದೆ, ಇದರಲ್ಲಿಯೂ ಯಾರದೂ ದೋಷವಿಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ನಾನು ಬರುವವರೆಗೆ ಇವರು ತಮ್ಮ ಪಾತ್ರವನ್ನಭಿನಯಿಸಬೇಕಾಗಿದೆ. ಜ್ಞಾನ ಮತ್ತು ಭಕ್ತಿ ನಂತರ ವೈರಾಗ್ಯ ಬರುವುದು. ಹಳೆಯ ಪ್ರಪಂಚದಿಂದ ವೈರಾಗ್ಯ. ಇದು ಬೇಹದ್ದಿನ ವೈರಾಗ್ಯವಾಗಿದೆ, ಅವರದು ಹದ್ದಿನ ವೈರಾಗ್ಯವಾಗಿದೆ. |
ನೀವು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ಹೊಸ ಮನೆಯನ್ನು ಕಟ್ಟಿಸುತ್ತಾರೆಂದರೆ ಹಳೆಯ ಮನೆಯೊಂದಿಗೆ ವೈರಾಗ್ಯವುಂಟಾಗಿ ಬಿಡುತ್ತದೆಯಲ್ಲವೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ಈಗ ನಿಮಗೆ ಸ್ವರ್ಗವೆಂಬ ಮನೆಯನ್ನು ಕಟ್ಟಿಸಿ ಕೊಡುತ್ತೇನೆ. ಈಗ ಇದು ನರಕವಾಗಿದೆ, ಸ್ವರ್ಗ-ಹೊಸ ಪ್ರಪಂಚವಾಗಿದೆ. ನರಕವು ಹಳೆಯ ಪ್ರಪಂಚವಾಗಿದೆ. ನಾವೀಗ ಹಳೆಯ ಪ್ರಪಂಚದಲ್ಲಿದ್ದು ಹೊಸ ಪ್ರಪಂಚವನ್ನು ಕಟ್ಟಿಸುತ್ತಿದ್ದೇವೆ. ಹಳೆಯ ಸ್ಮಶಾನದಲ್ಲಿ ನಾವು ಸ್ವರ್ಗವನ್ನು ಸ್ಥಾಪಿಸುತ್ತೇವೆ. ಇದೇ ಜಮುನಾ ನದಿಯ ತೀರದಲ್ಲಿ ಮಹಲುಗಳು ತಯಾರಾಗುತ್ತವೆ. ಇದೇ ದೆಹಲಿ, ಜಮುನಾ ನದಿ ಇತ್ಯಾದಿಗಳಿರುವವು ಬಾಕಿ ಪಾಂಡವರ ಕೋಟೆಗಳಿತ್ತು ಎಂದು ಏನನ್ನು ತೋರಿಸುತ್ತಾರೆಯೋ ಇವೆಲ್ಲವೂ ದಂತ ಕಥೆಗಳಾಗಿವೆ. ಡ್ರಾಮಾ ಪ್ಲಾನನುಸಾರ ಅವಶ್ಯವಾಗಿ ಪುನಃ ಇವು ಆಗುತ್ತವೆ. ಹೇಗೆ ನೀವು ಯಜ್ಞ, ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದೀರಿ, ಇವು ಪುನಃ ಮಾಡಬೇಕಾಗುವುದು. ಮೊದಲು ನೀವು ಶಿವನ ಭಕ್ತಿ ಮಾಡುತ್ತೀರಿ, ಸುಂದರವಾದ ಮಂದಿರಗಳನ್ನು ಕಟ್ಟಿಸುತ್ತೀರಿ, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ನೀವೀಗ ಜ್ಞಾನ ಮಾರ್ಗದಲ್ಲಿದ್ದೀರಿ, ಇದು ಅವ್ಯಭಿಚಾರಿ ಜ್ಞಾನವಾಗಿದೆ. ಒಬ್ಬ ಶಿವ ತಂದೆಯಿಂದಲೇ ಕೇಳುತ್ತೀರಿ, ಇವರಿಗೇ ಮೊಟ್ಟ ಮೊದಲು ನೀವು ಭಕ್ತಿಯನ್ನು ಆರಂಭಿಸಿದಿರಿ. ಆ ಸಮಯದಲ್ಲಿ ಮತ್ತ್ಯಾರೂ ಇರುವುದಿಲ್ಲ, ನೀವೇ ಇರುತ್ತೀರಿ. ನೀವು ಬಹಳ ಸುಖಿಯಾಗಿರುತ್ತೀರಿ. ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಬಾಯಿ ಸಿಹಿಯಾಗಿ ಬಿಡುತ್ತದೆ. ಅಂದಾಗ ನೀವು ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳುತ್ತೀರಿ. ತಂದೆಯು ತಿಳಿಸುತ್ತಾರೆ - ಮತ್ತ್ಯಾರಿಂದಲೂ ಕೇಳಬೇಡಿ, ನಿಮ್ಮದು ಇದು ಅವ್ಯಭಿಚಾರಿ ಜ್ಞಾನವಾಗಿದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ, ತಂದೆಯಿಂದಲೇ ನಂಬರ್ವಾರ್ ಪುರುಷಾರ್ಥದನುಸಾರ ಆಸ್ತಿ ಸಿಗುವುದು. ತಂದೆಯೂ ಸ್ವಲ್ಪ ಸಮಯಕ್ಕಾಗಿ ಸಾಕಾರದಲ್ಲಿ ಬಂದಿದ್ದಾರೆ, ತಿಳಿಸುತ್ತಾರೆ - ನಾನೇ ನೀವು ಮಕ್ಕಳಿಗೆ ಜ್ಞಾನವನ್ನು ಕೊಡಬೇಕಾಗಿದೆ. ನನಗೆ ಸ್ಥಿರವಾದ ಶರೀರವಿಲ್ಲ, ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ. ಶಿವ ಜಯಂತಿಯಾದ ಕೂಡಲೇ ಗೀತಾ ಜಯಂತಿಯಾಗಿ ಬಿಡುತ್ತದೆ. ಆಗಿನಿಂದಲೇ ಜ್ಞಾನ ಕೊಡುವುದನ್ನು ಆರಂಭಿಸಿ ಬಿಡುತ್ತಾರೆ. ಈ ಆತ್ಮಿಕ ವಿದ್ಯೆಯನ್ನು ನಿಮಗೆ ಪರಮ ಆತ್ಮನೇ ಕೊಡುತ್ತಿದ್ದಾರೆ. ನೀರಿನ ಮಾತಿಲ್ಲ, ನೀರಿಗೆ ಜ್ಞಾನವೆಂದು ಹೇಳುವುದಿಲ್ಲ. ಜ್ಞಾನದಿಂದಲೇ ನೀವು ಪತಿತರಿಂದ ಪಾವನರಾಗುತ್ತೀರಿ. ಸ್ಥೂಲ ನೀರಿನಿಂದ ಪಾವನರಾಗುವುದಿಲ್ಲ. ನದಿಗಳಂತೂ ಇಡೀ ಪ್ರಪಂಚದಲ್ಲಿ ಇದ್ದೇ ಇದೆ. ಜ್ಞಾನ ಸಾಗರ ತಂದೆಯೇ ಬಂದು ಇವರಲ್ಲಿ ಪ್ರವೇಶ ಮಾಡಿ ಜ್ಞಾನವನ್ನು ತಿಳಿಸುತ್ತಾರೆ. ಇಲ್ಲಿ ಯಾರಾದರೂ ಮರಣ ಹೊಂದಿದಾಗ ಬಾಯಲ್ಲಿ ಜಲವನ್ನು ಹಾಕುತ್ತಾರೆ. ಈ ಜಲವು ಪತಿತರಿಂದ ಪಾವನ ಮಾಡುವಂತದ್ದಾಗಿದೆ ಆದ್ದರಿಂದ ಸ್ವರ್ಗದಲ್ಲಿ ಹೊರಟು ಹೋಗುವರೆಂದು ತಿಳಿಯುತ್ತಾರೆ. ಇಲ್ಲಿಯೂ ಗೋಮುಖಕ್ಕೆ ಹೋಗುತ್ತಾರೆ. ವಾಸ್ತವದಲ್ಲಿ ನೀವು ಚೈತನ್ಯ ಗೋಮುಖವಾಗಿದ್ದೀರಿ, ನಿಮ್ಮ ಬಾಯಿಂದ ಜ್ಞಾನಾಮೃತವು ಹೊರ ಬರುತ್ತದೆ. ಗೋವಿನಿಂದ ಹಾಲು ಸಿಗುತ್ತದೆಯೇ ಹೊರತು ನೀರಿನ ಮಾತಿಲ್ಲ. ಈಗ ನಿಮಗೆ ಅರ್ಥವಾಗಿದೆ. ನೀವು ತಿಳಿದುಕೊಂಡಿದ್ದೀರಿ, ಡ್ರಾಮಾದಲ್ಲಿ ಯಾವುದು ಒಂದು ಬಾರಿ ಆಗಿ ಹೋಯಿತೋ ಅದು ಮತ್ತೆ 5000 ವರ್ಷಗಳ ನಂತರ ಚಾಚೂ ತಪ್ಪದೆ ಪುನರಾವರ್ತನೆಯಾಗುವುದು. ಇದನ್ನು ತಂದೆಯೇ ತಿಳಿಸುತ್ತಾರೆ, ಅವರು ಎಲ್ಲರ ಸದ್ಗತಿದಾತನಾಗಿದ್ದಾರೆ. ಈಗಂತೂ ಎಲ್ಲರೂ ದುರ್ಗತಿಯಲ್ಲಿದ್ದಾರೆ, ರಾವಣನನ್ನು ಏಕೆ ಸುಡುತ್ತಾರೆಂದು ನೀವು ಮೊದಲು ತಿಳಿದುಕೊಂಡಿರಲಿಲ್ಲ. ಈಗ ನಿಮಗೆ ತಿಳಿದಿದೆ, ಬೇಹದ್ದಿನ ದಶಹರ ಆಗಲಿದೆ, ಇಡೀ ಸೃಷ್ಟಿಯಲ್ಲಿ ರಾವಣ ರಾಜ್ಯವಿದೆಯಲ್ಲವೆ. ಇಡೀ ಪೃಥ್ವಿಯೇ ಲಂಕೆಯಾಗಿದೆ. ರಾವಣನು ಯಾವುದೇ ಹದ್ದಿನಲ್ಲಿರುವುದಿಲ್ಲ. ಇಡೀ ಸೃಷ್ಟಿಯಲ್ಲಿಯೇ ರಾವಣನ ರಾಜ್ಯವಿದೆ. ಭಕ್ತಿಯು ಅರ್ಧಕಲ್ಪ ನಡೆಯುತ್ತದೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿ ಭಕ್ತಿಯು ಆರಂಭವಾಗುತ್ತದೆ. ದಶಹರ, ರಕ್ಷಾಬಂಧನ ಮೊದಲಾದುವುಗಳೆಲ್ಲವೂ ಈಗಿನ ಹಬ್ಬಗಳಾಗಿವೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ, ಈಗ ಕೃಷ್ಣ ಪುರಿಯ ಸ್ಥಾಪನೆಯಾಗುತ್ತಿದೆ. ಇಂದು ಕಂಸ ಪುರಿಯಲ್ಲಿದ್ದೀರಿ, ನಾಳೆ ಕೃಷ್ಣ ಪುರಿಯಲ್ಲಿರುತ್ತೀರಿ. ಕೃಷ್ಣನು ಇಲ್ಲಿರಲು ಸಾಧ್ಯವೇ! ಕೃಷ್ಣನು ಸತ್ಯಯುಗದಲ್ಲಿಯೇ ಜನ್ಮ ಪಡೆಯುತ್ತಾನೆ, ಕೃಷ್ಣನು ಮೊಟ್ಟ ಮೊದಲ ರಾಜಕುಮಾರನಾಗಿದ್ದಾನೆ. ಓದಲು ಶಾಲೆಗೆ ಹೋಗುತ್ತಾನೆ ಮತ್ತೆ ದೊಡ್ಡವನಾದ ಮೇಲೆ ಸಿಂಹಾಸನದ ಮಾಲೀಕನಾಗುತ್ತಾನೆ. ಉಳಿದಂತೆ ಈ ರಾಸ ಲೀಲೆ ಎಂದರೆ ಸತ್ಯಯುಗದಲ್ಲಿ ಅವರು ಪರಸ್ಪರ ಖುಷಿಯನ್ನಾಚರಿಸುವುದಾಗಿದೆ. ಬಾಕಿ ಕೃಷ್ಣನು ಯಾರಿಗೂ ಕುಳಿತು ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ. ಮಹಿಮೆಯಲ್ಲವೂ ಒಬ್ಬ ಶಿವ ತಂದೆಯದಾಗಿದೆ ಯಾರನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ನೀವು ಯಾರಾದರೂ ದೊಡ್ಡ ಅಧಿಕಾರಿಗಳಿಗೆ ತಿಳಿಸಿದರೆ ತಾವು ಸತ್ಯವನ್ನು ಹೇಳುತ್ತೀರೆಂದು ಹೇಳುತ್ತಾರೆ ಆದರೆ ಅವರು ಯಾರಿಗೂ ತಿಳಿಸಲು ಸಾಧ್ಯವಿಲ್ಲ, ಅವರ ಮಾತನ್ನು ಯಾರೂ ಕೇಳುವುದಿಲ್ಲ. ಬಿ.ಕೆ ಆದರೆಂದರೆ ಇವರಿಗಂತೂ ಬಿ.ಕೆ.ಗಳ ಜಾದು ಹಿಡಿದು ಬಿಟ್ಟಿದೆಯೆಂದು ಎಲ್ಲರೂ ಹೇಳ ತೊಡಗುತ್ತಾರೆ. ಬಿ.ಕೆ.ಗಳ ಹೆಸರನ್ನು ಕೇಳಿದರೆಂದರೆ ಸಾಕು ಇವರು ಜಾದು ಮಾಡುವರೆಂದು ತಿಳಿಯುತ್ತಾರೆ. ಯಾರಿಗಾದರೂ ಸ್ವಲ್ಪ ಜ್ಞಾನ ಹೇಳಿದರೆ ಸಾಕು ಈ ಬಿ.ಕೆ.ಗಳು ಜಾದು ಮಾಡುತ್ತಾರೆ, ಇವರು ತಮ್ಮ ದಾದಾರವರ ವಿನಃ ಮತ್ತ್ಯಾರನ್ನೂ ಒಪ್ಪುವುದಿಲ್ಲ. ಭಕ್ತಿ ಇತ್ಯಾದಿಗಳನ್ನೂ ಮಾಡುವುದಿಲ್ಲವೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಭಕ್ತಿ ಮಾಡಬೇಡಿ ಎಂದು ಯಾರನ್ನೂ ನಿರಾಕರಿಸಬಾರದು. ಭಕ್ತಿಯು ತಾನಾಗಿಯೇ ಬಿಟ್ಟು ಹೋಗುವುದು. ನೀವು ಭಕ್ತಿ ಬಿಡುತ್ತೀರಿ, ವಿಕಾರವನ್ನು ಬಿಡುತ್ತೀರಿ, ಇದರಿಂದಲೇ ಏರುಪೇರುಗಳಾಗುತ್ತವೆ. ತಂದೆಯು ತಿಳಿಸಿದ್ದಾರೆ - ನಾನು ರುದ್ರ ಜ್ಞಾನ ಯಜ್ಞವನ್ನು ರಚಿಸುತ್ತೇನೆ, ಇದರಲ್ಲಿ ಆಸುರೀ ಸಂಪ್ರದಾಯದವರ ವಿಘ್ನಗಳು ಬೀಳುತ್ತವೆ, ಇದು ಶಿವ ತಂದೆಯ ಬೇಹದ್ದಿನ ಯಜ್ಞವಾಗಿದೆ. ಇದರಲ್ಲಿ ಮನುಷ್ಯರಿಂದ ದೇವತೆಗಳಾಗುತ್ತೀರಿ. ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆಯು ಪ್ರಜ್ವಲಿತವಾಯಿತೆಂದು ಗಾಯನವಿದೆ, ಯಾವಾಗ ಹಳೆಯ ಪ್ರಪಂಚದ ವಿನಾಶವಾಗುವುದೋ ಆಗ ನೀವು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ಮನುಷ್ಯರು ಹೇಳುತ್ತಾರೆ - ನಾವು ಶಾಂತಿ ಸ್ಥಾಪನೆಯಾಗಲಿ ಎಂದು ಹೇಳುತ್ತೇವೆ ಮತ್ತು ಈ ಬಿ.ಕೆ.ಗಳು ವಿನಾಶವಾಗಲಿ ಎಂದು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಈ ಇಡೀ ಹಳೆಯ ಪ್ರಪಂಚವು ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುತ್ತದೆ. ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುವುದು. ಪ್ರಾಕೃತಿಕ ವಿಕೋಪಗಳೂ ಆಗುವವು. ವಿನಾಶವಂತೂ ಆಗಲೇಬೇಕಾಗಿದೆ. ಎಲ್ಲಾ ಮನುಷ್ಯರು ಸಾಸಿವೆ ಒಡೆದಂತೆ ಪುಡಿಪುಡಿಯಾಗಿ ಸಮಾಪ್ತಿಯಾಗುತ್ತಾರೆ. ಆತ್ಮಗಳು ಉಳಿದುಕೊಳ್ಳುತ್ತಾರೆ. ಇದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು - ಆತ್ಮವು ಅವಿನಾಶಿಯಾಗಿದೆ, ಈಗ ಈ ಬೇಹದ್ದಿನ ಹೋಲಿಕಾ ಆಗುವುದು, ಇದರಲ್ಲಿ ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ ಬಾಕಿ ಆತ್ಮರು ಪವಿತ್ರರಾಗಿ ಮನೆಗೆ ಹೊರಟು ಹೋಗುವರು. ಅಗ್ನಿಯಲ್ಲಿ ವಸ್ತು ಶುದ್ಧವಾಗುತ್ತದೆಯಲ್ಲವೆ. ಶುದ್ಧತೆಗಾಗಿ ಹೋಮ ಮಾಡುತ್ತಾರೆ, ಅವೆಲ್ಲವೂ ಸ್ಥೂಲ ಮಾತುಗಳಾಗಿವೆ. ಈಗಂತೂ ಇಡೀ ಪ್ರಪಂಚವೇ ಸ್ವಾಹಾ ಆಗುವುದು ಆದ್ದರಿಂದ ವಿನಾಶಕ್ಕೆ ಮೊದಲು ಅವಶ್ಯವಾಗಿ ಸ್ಥಾಪನೆಯಾಗಿ ಬಿಡಬೇಕು. ಯಾರಿಗಾದರೂ ತಿಳಿಸುವಾಗ ಮೊದಲು ಸ್ಥಾಪನೆ ನಂತರ ವಿನಾಶವೆಂದು ಹೇಳಿರಿ. ಬ್ರಹ್ಮಾರವರ ಮೂಲಕ ಸ್ಥಾಪನೆ, ಪ್ರಜಾಪಿತ ಬ್ರಹ್ಮನು ಪ್ರಸಿದ್ಧನಾಗಿದ್ದಾರಲ್ಲವೆ. ಆದಿ ದೇವ ಮತ್ತು ಆದಿ ದೇವಿ, ಜಗದಂಬೆಯ ಲಕ್ಷಾಂತರ ಮಂದಿರಗಳಿವೆ. ಎಷ್ಟೊಂದು ಮೇಳಗಳಾಗುತ್ತವೆ! ನೀವು ಜಗದಂಬೆಯ ಮಕ್ಕಳು ಜ್ಞಾನ ಜ್ಞಾನೇಶ್ವರಿಯಾಗಿದ್ದೀರಿ ನಂತರ ರಾಜ ರಾಜೇಶ್ವರಿಯಾಗುತ್ತೀರಿ. ನೀವು ಬಹಳ ಧನವಂತರಾಗುತ್ತೀರಿ, ಮತ್ತೆ ಭಕ್ತಿಮಾರ್ಗದಲ್ಲಿ ದೀಪಾವಳಿಯಂದು ಲಕ್ಷ್ಮಿಯಿಂದ ವಿನಾಶೀ ಧನವನ್ನು ಬೇಡುತ್ತಾರೆ. ಇಲ್ಲಂತೂ ಎಲ್ಲವೂ ಸಿಕ್ಕಿ ಬಿಡುತ್ತದೆ. ಆಯುಷ್ಯವಾನ್ಭವ, ಪುತ್ರವಾನ್ಭವ. ನಿಮ್ಮ ಆಯಸ್ಸು 150 ವರ್ಷಗಳಿರುತ್ತವೆ. ತಂದೆಯು ತಿಳಿಸುತ್ತಾರೆ - ಎಷ್ಟು ಯೋಗ ಮಾಡುವಿರೋ ಅಷ್ಟು ಆಯಸ್ಸು ಹೆಚ್ಚುತ್ತಿರುವುದು. ನೀವು ಈಶ್ವರನೊಂದಿಗೆ ಯೋಗವನ್ನಿಟ್ಟು ಯೋಗೇಶ್ವರರಾಗುತ್ತೀರಿ. ಮನುಷ್ಯರಂತೂ ಭೋಗೇಶ್ವರರಾಗಿದ್ದಾರೆ, ಭಿಕಾರಿಗಳೆಂದು ಹೇಳಲಾಗುತ್ತದೆ. ಕೊಳಕಾದ ಬಟ್ಟೆಯನ್ನು ಒಗೆದರು..... ತಂದೆಯು ತಿಳಿಸುತ್ತಾರೆ - ನನ್ನನ್ನು ದೋಬಿಯೆಂತಲೂ ಹೇಳುತ್ತಾರೆ, ನಾನು ಬಂದು ಎಲ್ಲಾ ಆತ್ಮರನ್ನು ಸ್ವಚ್ಛ ಮಾಡುತ್ತೇನೆ ಮತ್ತೆ ಶರೀರವೂ ಸಹ ಹೊಸ ಶುದ್ಧವಾದದ್ದು ಸಿಗುವುದು. ನಾನು ಸೆಕೆಂಡಿನಲ್ಲಿ ಇಡೀ ಪ್ರಪಂಚದ ವಸ್ತ್ರಗಳನ್ನು (ಆತ್ಮಗಳು) ಸ್ವಚ್ಛ ಮಾಡಿ ಬಿಡುತ್ತೇನೆ. ಕೇವಲ ಮನ್ಮನಾಭವ ಆಗಿ ಬಿಟ್ಟರೆ ಆತ್ಮ ಮತ್ತು ಶರೀರ ಪವಿತ್ರವಾಗಿ ಬಿಡುತ್ತದೆ. ಛೂ ಮಂತ್ರವಲ್ಲವೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ, ಎಷ್ಟು ಸಹಜ ಉಪಾಯವಾಗಿದೆ. ತಂದೆಯನ್ನು ನೆನಪು ಮಾಡಿದರೆ ಪಾವನರಾಗಿ ಬಿಡುತ್ತೀರಿ. ನಡೆಯುತ್ತಾ-ತಿರುಗಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಿ. ನಾನು ಮತ್ತೇನೂ ಕಷ್ಟವನ್ನು ನಿಮಗೆ ಕೊಡುವುದಿಲ್ಲ, ಕೇವಲ ನೆನಪು ಮಾಡಬೇಕಾಗಿದೆ. ಈಗ ಒಂದೊಂದು ಸೆಕೆಂಡಿನಲ್ಲಿ ನಿಮ್ಮದು ಏರುವ ಕಲೆಯಾಗುತ್ತದೆ. |
ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳ ಸೇವಕನಾಗಿ ಬಂದಿದ್ದೇನೆ. ಹೇ ಪತಿತ ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ ಎಂದು ನೀವು ಕರೆದಿರಿ. ಮಕ್ಕಳೇ, ನಾನೀಗ ಬಂದಿದ್ದೇನೆ ಅಂದಮೇಲೆ ಸೇವಕನಾದರಲ್ಲವೆ. ಯಾವಾಗ ನೀವು ಬಹಳ ಪತಿತರಾಗುತ್ತೀರೋ ಆಗ ನೀವು ಬಹಳ ಜೋರಾಗಿ ಚೀರಾಡುತ್ತೀರಿ. ಈಗ ನಾನು ಬಂದಿದ್ದೇನೆ, ನಾನು ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ಮಂತ್ರವನ್ನು ಕೊಡುತ್ತೇನೆ. ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ಮನ್ಮನಾಭವದ ಅರ್ಥವೇ ಆಗಿದೆ - ಮನ್ಮನಾಭವ, ಮಧ್ಯಾಜೀಭವ ಅರ್ಥಾತ್ ತಂದೆಯನ್ನು ನೆನಪು ಮಾಡಿದರೆ ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ನೀವು ವಿಷ್ಣು ಪುರಿಯ ರಾಜ್ಯವನ್ನು ತೆಗೆದುಕೊಳ್ಳಲು ಬಂದಿದ್ದೀರಿ. ರಾವಣ ಪುರಿಯ ನಂತರ ವಿಷ್ಣು ಪುರಿಯಾಗುವುದು. ಕಂಸ ಪುರಿಯ ನಂತರ ಕೃಷ್ಣ ಪುರಿಯಾಗುವುದು. ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ! ಈ ಹಳೆಯ ಪ್ರಪಂಚದಿಂದ ಮಮತ್ವವನ್ನು ಕಳೆಯಿರಿ. ಈಗ 84 ಜನ್ಮಗಳನ್ನು ಪೂರ್ಣ ಮಾಡಿದ್ದೀರಿ, ಈ ಹಳೆಯ ಶರೀರವನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ಹೋಗುತ್ತೀರಿ. ನೆನಪಿನಿಂದಲೇ ನಿಮ್ಮ ಪಾಪಗಳು ಕಳೆಯುತ್ತವೆ. ಇಷ್ಟು ಧೈರ್ಯವನ್ನಿಡಬೇಕು. ಅವರಂತೂ ಬ್ರಹ್ಮ್ತತ್ವವನ್ನು ನೆನಪು ಮಾಡುತ್ತಾರೆ, ನಾವು ಬ್ರಹ್ಮ್ತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಆದರೆ ಬ್ರಹ್ಮತತ್ವವು ಇರುವ ಸ್ಥಾನವಾಗಿದೆ. ಆ ಸಾಧು-ಸನ್ಯಾಸಿಗಳು ತಪಸ್ಸಿನಲ್ಲಿ ಕುಳಿತು ಬಿಡುತ್ತಾರೆ, ನಾವೀಗ ಹೋಗಿ ಲೀನವಾಗಿ ಬಿಡುತ್ತೇವೆಂದು ತಿಳಿಯುತ್ತಾರೆ. ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಬ್ರಹ್ಮ್ ತತ್ವದೊಂದಿಗೆ ಯೋಗವನಡುವುದರಿಂದ ಪಾವನರಂತೂ ಆಗುವುದಿಲ್ಲ, ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪುನರ್ಜನ್ಮವನ್ನಂತೂ ತೆಗೆದುಕೊಳ್ಳಲೇಬೇಕಾಗಿದೆ. ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ. ಸತ್ಯ ತಂದೆಯು ಸತ್ಯ ಖಂಡವನ್ನು ಸ್ಥಾಪನೆ ಮಾಡುತ್ತಾರೆ. ರಾವಣನು ಬಂದು ಅಸತ್ಯ ಖಂಡವನ್ನಾಗಿ ಮಾಡುತ್ತಾನೆ. ಈಗ ಇದು ಸಂಗಮಯುಗವಾಗಿದೆ, ಇದರಲ್ಲಿ ನೀವು ಉತ್ತಮರಿಗಿಂತಲೂ ಉತ್ತಮರಾಗುತ್ತೀರಿ ಆದ್ದರಿಂದ ಇವರಿಗೆ ಪುರುಷೋತ್ತಮರೆಂದು ಹೇಳಲಾಗುತ್ತದೆ. ನೀವು ಕವಡೆಯಿಂದ ವಜ್ರ ಸಮಾನರಾಗುತ್ತೀರಿ. ಇದು ಬೇಹದ್ದಿನ ಮಾತಾಗಿದೆ. ಉತ್ತಮರಿಗಿಂತಲೂ ಉತ್ತಮ ಮನುಷ್ಯರು ದೇವತೆಗಳಾಗಿದ್ದಾರೆ, ನೀವೀಗ ಪುರುಷೋತ್ತಮ ಸಂಗಮಯುಗದಲ್ಲಿ ಕುಳಿತಿದ್ದೀರಿ. ನಿಮ್ಮನ್ನು ಪುರುಷೋತ್ತಮರನ್ನಾಗಿ ಮಾಡುವವರು ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಸ್ವರ್ಗದ ಆಸ್ತಿಯನ್ನು ನಿಮಗೆ ಕೊಡುತ್ತಾರೆ, ಮತ್ತೆ ನೀವೇಕೆ ಮರೆತು ಹೋಗುತ್ತೀರಿ? ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ ಎಂದು. ಮತ್ತೆ ಮಕ್ಕಳೂ ಹೇಳುತ್ತಾರೆ - ಬಾಬಾ, ನಾವು ಮರೆಯದಿರುವಂತೆ ಕೃಪೆ ಮಾಡಿ. ಆದರೆ ಇದು ಹೇಗೆ ಸಾಧ್ಯ? ತಂದೆಯ ಆದೇಶದಂತೆ ನಡೆಯಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ, ಆದೇಶದಂತೆ ನಡೆಯಬೇಕಲ್ಲವೆ. ಬಾಕಿ ನಾನೇನು ಆಶೀರ್ವಾದ ಮಾಡಲಿ! ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಪ್ರತೀ ಆದೇಶದಂತೆ ನಡೆದು ಸ್ವಯಂನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯ ನೆನಪಿನಲ್ಲಿದ್ದು ಸ್ವಯಂನ ವಸ್ತ್ರಗಳನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ. |
2. ಈಗ ಹೊಸ ಮನೆಗೆ ಹೋಗಬೇಕಾಗಿದೆ ಆದ್ದರಿಂದ ಈ ಹಳೆಯ ಮನೆಯಿಂದ ಬೇಹದ್ದಿನ ವೈರಾಗ್ಯವಿರಬೇಕಾಗಿದೆ. ನಶೆಯಿರಲಿ - ಈ ಹಳೆಯ ಸ್ಮಶಾನದಲ್ಲಿ ನಾವು ಪರಿಸ್ಥಾನವನ್ನು ಸ್ಥಾಪನೆ ಮಾಡುತ್ತೇವೆ. |
ಓಂ ಶಾಂತಿ. ತಂದೆಯು ಮಕ್ಕಳಿಗೆ ಪ್ರತಿನಿತ್ಯವೂ ಬಹಳ ಸಹಜ ಮಾತುಗಳನ್ನು ತಿಳಿಸುತ್ತಾರೆ - ಇದು ಈಶ್ವರೀಯ ಪಾಠಶಾಲೆಯಾಗಿದೆ. ಅವಶ್ಯವಾಗಿ ಗೀತೆಯಲ್ಲಿಯೂ ಸಹ ಹೇಳುತ್ತಾರೆ - ಭಗವಾನುವಾಚ, ಭಗವಂತ ತಂದೆಯು ಎಲ್ಲರಿಗೆ ಒಬ್ಬರೇ ಆಗಿದ್ದಾರೆ, ಎಲ್ಲರೂ ಭಗವಂತರಾಗಲು ಸಾಧ್ಯವಿಲ್ಲ. ಹಾ! ಎಲ್ಲರೂ ಒಬ್ಬ ತಂದೆಯ ಮಕ್ಕಳಾಗುವರು ಅಂದಾಗ ಇದು ಖಂಡಿತ ಬುದ್ಧಿಯಲ್ಲಿ ಬರಬೇಕು - ತಂದೆಯು ಸ್ವರ್ಗ, ಹೊಸ ಪ್ರಪಂಚದ ಸ್ಥಾಪನೆ ಮಾಡುವವರಾಗಿದ್ದಾರೆ. ಆ ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಖಂಡಿತ ಸಿಕ್ಕಿರಬೇಕು. ಭಾರತದಲ್ಲಿಯೂ ಶಿವ ಜಯಂತಿಯ ಗಾಯನವಿದೆ ಆದರೆ ಹೇಗೆ ಶಿವ ಜಯಂತಿಯಾಗುತ್ತದೆ ಎಂಬುದನ್ನು ತಂದೆಯೇ ಬಂದು ತಿಳಿಸುತ್ತಾರೆ. ತಂದೆಯು ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ ಮಕ್ಕಳನ್ನು ಪುನಃ ಪತಿತರಿಂದ ಪಾವನರನ್ನಾಗಿ ಮಾಡಲು ಅರ್ಥಾತ್ ಆಸ್ತಿಯನ್ನು ಕೊಡಲು. ಈ ಸಮಯದಲ್ಲಿ ಎಲ್ಲರಿಗೆ ರಾವಣನ ಶಾಪವಿದೆ. ಆದ್ದರಿಂದ ಎಲ್ಲರೂ ದುಃಖಿಯಾಗಿದ್ದಾರೆ. ಈಗ ಕಲಿಯುಗೀ ಹಳೆಯ ಪ್ರಪಂಚವಾಗಿದೆ. ಇದನ್ನು ಸದಾ ನೆನಪಿಟ್ಟುಕೊಳ್ಳಿ, ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೇವೆ. ಯಾರೆಲ್ಲಾ ತಮ್ಮನ್ನು ಬ್ರಹ್ಮಾಕುಮಾರ-ಕುಮಾರಿಯೆಂದು ತಿಳಿದುಕೊಳ್ಳುವರೋ ಅವರಿಗೆ ಇದನ್ನು ಖಂಡಿತ ತಿಳಿಸಬೇಕು - ಕಲ್ಪ-ಕಲ್ಪವೂ ನಾವು ತಾತನಿಂದ ಬ್ರಹ್ಮಾರವರ ಮೂಲಕ ಆಸ್ತಿಯನ್ನು ಪಡೆಯುತ್ತೇವೆ. ಇಷ್ಟೊಂದು ಮಂದಿ ಮಕ್ಕಳು ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಇವರು ಎಲ್ಲರ ತಂದೆಯಾಗಿದ್ದಾರೆ, ಬ್ರಹ್ಮಾರವರೂ ಸಹ ಅವರ ಮಗನಾಗಿದ್ದಾರೆ. ಎಲ್ಲಾ ಮಕ್ಕಳಿಗೆ ಆಸ್ತಿಯು ಅವರಿಂದ ಸಿಗುತ್ತದೆ. ಸತ್ಯಯುಗದ ರಾಜಧಾನಿಯೇ ಅವರ ಆಸ್ತಿಯಾಗಿದೆ. ಈ ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ನಮಗೆ ಸ್ವರ್ಗದ ರಾಜ್ಯಭಾಗ್ಯವಿರಬೇಕು ಆದರೆ ಇದನ್ನು ಮರೆತು ಬಿಟ್ಟಿದ್ದಾರೆ. ನಮಗೆ ಸ್ವರ್ಗದ ರಾಜ್ಯಭಾಗ್ಯವಿತ್ತು ಆದರೆ ನಿರಾಕಾರ ತಂದೆಯು ಹೇಗೆ ಕೊಡುತ್ತಾರೆ? ಅವಶ್ಯವಾಗಿ ಅವರು ಬ್ರಹ್ಮಾರವರ ಮೂಲಕವೇ ಕೊಡುತ್ತಾರೆ. ಭಾರತದಲ್ಲಿ ಇವರ ರಾಜ್ಯವಿತ್ತು, ಈಗ ಕಲ್ಪದ ಸಂಗಮವಾಗಿದೆ. ಸಂಗಮದಲ್ಲಿ ಬ್ರಹ್ಮನಿದ್ದಾರೆ ಆದ್ದರಿಂದಲೇ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ, ಇದರಲ್ಲಿ ಯಾವುದೇ ಅಂಧಶ್ರದ್ಧೆಯ ಮಾತಿಲ್ಲ. ಇದು ತಂದೆಯ ರಚನೆಯಾಗಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಬ್ರಹ್ಮಾರವರು ಶಿವ ತಂದೆಯ ಮಗನಾಗಿದ್ದಾರೆ, ನಮಗೆ ಶಿವ ತಂದೆಯಿಂದ ಪುನಃ ಸ್ವರ್ಗದ ಆಸ್ತಿಯು ಸಿಗುತ್ತಿದೆ. ಮೊದಲೂ ಸಿಕ್ಕಿತ್ತು, ಅದಕ್ಕೆ 5000 ವರ್ಷಗಳಾಯಿತು. ನಾವು ದೇವಿ-ದೇವತಾ ಧರ್ಮದವರಾಗಿದ್ದೇವೆ. ಕೊನೆಯವರೆಗೂ ವೃದ್ಧಿಯಾಗುತ್ತಿರುತ್ತದೆ. ಹೇಗೆ ಕ್ರಿಸ್ತನು ಬಂದನು, ಕ್ರಿಶ್ಚಿಯನ್ ಧರ್ಮವು ಇಲ್ಲಿಯವರೆಗೂ ಇದೆ, ವೃದ್ಧಿ ಹೊಂದುತ್ತಿರುತ್ತದೆ. ಕ್ರಿಸ್ತನ ಮೂಲಕ ನಾವು ಕ್ರಿಶ್ಚಿಯನ್ನರಾದೆವು ಎಂದು ಅವರಿಗೆ ತಿಳಿದಿದೆ. ಇಂದಿಗೆ 2000 ವರ್ಷಗಳ ಮೊದಲು ಕ್ರಿಸ್ತನು ಬಂದಿದ್ದರು, ಈಗ ವೃದ್ಧಿಯಾಗುತ್ತಿದೆ. ಮೊಟ್ಟ ಮೊದಲು ಸತೋಪ್ರಧಾನ ಮತ್ತೆ ರಜೋ, ತಮೋದಲ್ಲಿ ಬರಬೇಕಾಗಿದೆ. ನೀವು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ ನಂತರ ರಜೋ ತಮೋದಲ್ಲಿ ಬಂದಿದ್ದೀರಿ, ತಮೋಪ್ರಧಾನ ಸೃಷ್ಠಿಯಿಂದ ನಂತರ ಸತೋಪ್ರಧಾನ ಖಂಡಿತ ಆಗುತ್ತದೆ. ಹೊಸ ಪ್ರಪಂಚದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಮುಖ್ಯವಾಗಿ ನಾಲ್ಕು ಧರ್ಮಗಳಿವೆ. ನಿಮ್ಮ ಧರ್ಮವು ಅರ್ಧಕಲ್ಪ ನಡೆಯುತ್ತದೆ. ಇಲ್ಲಿಯೂ ಸಹ ನೀವು ಆ ಧರ್ಮದವರಾಗಿದ್ದೀರಿ ಆದರೆ ಭಿಕಾರಿಗಳಾಗಿರುವ ಕಾರಣ ನೀವು ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳುವುದಿಲ್ಲ. ನೀವೇ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದಿರಿ ಆದರೆ ವಾಮ ಮಾರ್ಗದಲ್ಲಿ ಇಳಿದ ಕಾರಣ ನೀವು ಪತಿತರಾಗಿದ್ದೀರಿ. ಆದ್ದರಿಂದ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತೀರಿ. ನೀವೀಗ ಬ್ರಾಹ್ಮಣರಾಗಿದ್ದೀರಿ, ಶ್ರೇಷ್ಠಾತಿ ಶ್ರೇಷ್ಠನು ಶಿವ ತಂದೆಯಾಗಿದ್ದಾರೆ ನಂತರ ನೀವು ಬ್ರಾಹ್ಮಣರಿದ್ದೀರಿ. ನೀವು ಬ್ರಾಹ್ಮಣರದು ಶ್ರೇಷ್ಠಾತಿ ಶ್ರೇಷ್ಠ ವರ್ಣವಾಗಿದೆ, ಬ್ರಹ್ಮನ ಮಕ್ಕಳಾಗಿದ್ದೀರಿ ಆದರೆ ಆಸ್ತಿಯು ಬ್ರಹ್ಮಾರವರಿಂದ ಸಿಗುವುದಿಲ್ಲ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ನಿಮ್ಮ ಆತ್ಮವು ಈಗ ತಂದೆಯನ್ನು ಅರಿತುಕೊಂಡಿದೆ. ತಂದೆಯು ತಿಳಿಸುತ್ತಾರೆ - ನನ್ನ ಮೂಲಕ ನನ್ನನ್ನು ಅರಿತುಕೊಳ್ಳುವುದರಿಂದ ನೀವು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಅರಿತುಕೊಳ್ಳುವಿರಿ. ಆ ಜ್ಞಾನವು ನನ್ನಲ್ಲಿಯೇ ಇದೆ. ನಾನು ಜ್ಞಾನ ಸಾಗರ, ಆನಂದ ಸಾಗರ, ಪವಿತ್ರತೆಯ ಸಾಗರನಾಗಿದ್ದೇನೆ. ನೀವು 21 ಜನ್ಮಗಳು ಪವಿತ್ರವಾಗಿರುತ್ತೀರಿ ನಂತರ ವಿಷಯ ಸಾಗರದಲ್ಲಿ ಬಂದು ಬಿಡುತ್ತೀರಿ. ಈಗ ಜ್ಞಾನ ಸಾಗರ ತಂದೆಯು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಯಾವುದೇ ಸ್ಥೂಲ ನೀರು ಪಾವನ ಮಾಡಲು ಸಾಧ್ಯವಿಲ್ಲ. ಸ್ನಾನ ಮಾಡಲು ಹೋಗುತ್ತಾರೆ ಆದರೆ ಆ ನೀರು ಪತಿತ-ಪಾವನಿಯಲ್ಲ. ನದಿಗಳಂತೂ ಸತ್ಯಯುಗದಲ್ಲಿಯೇ ಇರುತ್ತದೆ, ಕಲಿಯುಗದಲ್ಲಿಯೂ ಇವೆ. ನೀರಿನದು ವ್ಯತ್ಯಾಸವಿರುವುದಿಲ್ಲ. “ಸರ್ವರ ಸದ್ಗತಿದಾತನು ಒಬ್ಬರೇ ರಾಮನಾಗಿದ್ದಾರೆ” ಎಂದು ಹೇಳುತ್ತಾರೆ. ಅವರೇ ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. |
ತಂದೆಯು ಬಂದು ಜ್ಞಾನವನ್ನು ತಿಳಿಸುತ್ತಾರೆ. ಇದರಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಸತ್ಯ-ತ್ರೇತಾಯುಗದಲ್ಲಿ ಭಕ್ತಿ, ಶಾಸ್ತ್ರ ಇತ್ಯಾದಿಗಳೇನೂ ಇರುವುದಿಲ್ಲ. ನೀವು ತಂದೆಯಿಂದ ಸದಾ ಸುಖದ ಆಸ್ತಿಯನ್ನು ಪಡೆಯುತ್ತೀರಿ. ಅಲ್ಲಿ ನೀವು ಗಂಗಾ ಸ್ನಾನ ಮಾಡಬೇಕು ಅಥವಾ ಯಾವುದೇ ಯಾತ್ರೆ ಮಾಡಬೇಕೆಂದಲ್ಲ. ನಿಮ್ಮದು ಇದು ಆತ್ಮಿಕ ಯಾತ್ರೆಯಾಗಿದೆ. ಇದನ್ನು ಯಾವುದೇ ಮನುಷ್ಯರು ಕಲಿಸಿಕೊಡಲು ಸಾಧ್ಯವಿಲ್ಲ. ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಲೌಕಿಕ ತಂದೆಯರಂತೂ ಅನೇಕರಿದ್ದಾರೆ, ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ, ಇದನ್ನು ಪಕ್ಕಾ-ಪಕ್ಕಾ ನೆನಪಿಟ್ಟುಕೊಳ್ಳಿ. ತಂದೆಯೂ ಕೇಳುತ್ತಾರೆ - ನಿಮಗೆ ಎಷ್ಟು ಜನ ತಂದೆಯರಿದ್ದಾರೆ? ಆಗ ಇವರೇನು ಕೇಳುತ್ತಾರೆ ಎಂದು ಕೆಲವರು ತಬ್ಬಿಬ್ಬಾಗುತ್ತಾರೆ. ತಂದೆಯಂತೂ ಎಲ್ಲರಿಗೂ ಒಬ್ಬರೇ ಇರುತ್ತಾರೆ. ಇಬ್ಬರು, ಮೂವರು ತಂದೆಯರು ಹೇಗಿರಲು ಸಾಧ್ಯ? ತಂದೆಯು ತಿಳಿಸುತ್ತಾರೆ - ಆ ಪರಮಾತ್ಮ ತಂದೆಯನ್ನು ದುಃಖದಲ್ಲಿ ನೆನಪು ಮಾಡುತ್ತೀರಿ. ದುಃಖದಲ್ಲಿ ಯಾವಾಗಲೂ ಹೇ ಪರಮಪಿತ ಪರಮಾತ್ಮ ನಮ್ಮನ್ನು ದುಃಖದಿಂದ ಬಿಡಿಸಿ ಎಂದು ಹೇಳುತ್ತೀರಿ ಅಂದಮೇಲೆ ಇಬ್ಬರು ತಂದೆಯರಾದರಲ್ಲವೆ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಆತ್ಮಿಕ ತಂದೆ. ಅವರಿಗಾಗಿಯೇ ನೀವು ಮಾತಾಪಿತಾ ನಾನು ನಿಮ್ಮ ಬಾಲಕನಾಗಿದ್ದೇನೆ. ನಿಮ್ಮ ಕೃಪೆಯಿಂದ ಅಪಾರ ಸುಖ ಸಿಗುತ್ತದೆಯೆಂದು ಮಹಿಮೆಯನ್ನು ಹಾಡುತ್ತಾರೆ. ಲೌಕಿಕ ತಂದೆ, ತಾಯಿಯಿಂದ ಅಪಾರ ಸುಖ ಸಿಗುವುದಿಲ್ಲ. ಯಾವಾಗ ದುಃಖವಾಗುವುದೋ ಆಗ ಆ ತಂದೆಯ ಸ್ಮರಣೆ ಮಾಡುತ್ತಾರೆ. ಆದ್ದರಿಂದ ಆ ತಂದೆಯೇ ಈ ಪ್ರಶ್ನೆಯನ್ನು ಕೇಳುತ್ತಾರೆ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. |
ಭಕ್ತಿಮಾರ್ಗದಲ್ಲಿ ನೀವು ಹಾಡುತ್ತೀರಿ - ಬಾಬಾ, ತಾವು ಬಂದರೆ ತಮ್ಮ ವಿನಃ ಮತ್ತ್ಯಾರ ಮಾತನ್ನೂ ಕೇಳುವುದಿಲ್ಲ, ಮತ್ತೆಲ್ಲರೂ ದುಃಖವನ್ನೇ ಕೊಡುತ್ತಾರೆ ತಾವೇ ಸುಖವನ್ನು ಕೊಡುತ್ತೀರಿ ಎಂದು ಹೇಳುತ್ತೀರಿ ಅಂದಾಗ ತಂದೆಯು ಬಂದು ನೀವು ಏನು ಹೇಳುತ್ತಿದ್ದಿರಿ ಎಂಬುದನ್ನು ನೆನಪು ತರಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನೀವೇ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಮನುಷ್ಯರು ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ, ಅವರಿಗೆ ಈ ಬಿ.ಕೆ.ಗಳು ಯಾರು? ಈ ಮಮ್ಮಾ-ಬಾಬಾ ಯಾರು ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಇವರು ಯಾವುದೇ ಸಾಧು-ಸಂತ ಅಲ್ಲ. ಸಾಧು-ಸನ್ಯಾಸಿಗಳಿಗೆ ಗುರುಗಳೆಂದು ಹೇಳುತ್ತಾರೆಯೇ ಹೊರತು ಮಾತಾಪಿತರೆಂದು ಹೇಳುವುದಿಲ್ಲ. ಈ ತಂದೆಯಂತೂ ಬಂದು ದೈವೀ ಧರ್ಮದ ರಾಜ್ಯವನ್ನು ಸ್ಥಾಪನೆ ಮಾಡುತ್ತಾರೆ. ಇಲ್ಲಿ ಈ ಲಕ್ಷ್ಮೀ-ನಾರಾಯಣ ರಾಜ-ರಾಣಿಯು ರಾಜ್ಯ ಮಾಡುತ್ತಿದ್ದರು. ಮೊದಲು ಪವಿತ್ರರಾಗಿದ್ದರು ನಂತರ ಅಪವಿತ್ರರಾಗುತ್ತಾರೆ. ಯಾರು ಪೂಜ್ಯರಾಗಿದ್ದರೋ ಅವರು ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಮೊದಲು ಬೇಹದ್ದಿನ ತಂದೆಯ 21 ಜನ್ಮಗಳ ಸುಖದ ಆಸ್ತಿಯು ಸಿಗುತ್ತದೆ. ಯಾರು 21 ಕುಲದ ಉದ್ಧಾರ ಮಾಡುವರೋ ಅವರು ಕುಮಾರಿಯಾಗಿದ್ದಾರೆ. ಇದು ನಿಮ್ಮ ಗಾಯನವಾಗಿದೆ. ನೀವು ಕುಮಾರಿಯರಾಗಿದ್ದೀರಿ, ಗೃಹಸ್ಥಿಗಳಲ್ಲ. ಭಲೆ ದೊಡ್ಡವರಾಗಿದ್ದೀರಿ ಆದರೆ ಮರುಜೀವಿಗಳಾಗಿ ಎಲ್ಲರೂ ತಂದೆಯ ಮಕ್ಕಳಾಗಿದ್ದೀರಿ. ಪ್ರಜಾಪಿತ ಬ್ರಹ್ಮನಿಗೆ ಅನೇಕ ಮಕ್ಕಳಿದ್ದಾರೆ, ಇನ್ನೂ ವೃದ್ಧಿ ಹೊಂದುತ್ತಿರುತ್ತಾರೆ ನಂತರ ಇವರೆಲ್ಲರೂ ದೇವತೆಗಳಾಗುತ್ತಾರೆ. ಇದು ಶಿವ ತಂದೆಯ ಯಜ್ಞವಾಗಿದೆ, ಇದಕ್ಕೆ ರಾಜಸ್ವ ಯಜ್ಞ, ಸ್ವರಾಜ್ಯ ಪಡೆಯುವ ಯಜ್ಞವೆಂದು ಹೇಳಲಾಗುತ್ತದೆ. ಆತ್ಮರಿಗೆ ತಂದೆಯಿಂದ ಸ್ವರ್ಗದ ರಾಜ್ಯದ ಆಸ್ತಿಯು ಸಿಗುತ್ತದೆ. ಈ ರಾಜಸ್ವ ಅಶ್ವಮೇಧ ಜ್ಞಾನ ಯಜ್ಞದಲ್ಲಿ ಏನು ಮಾಡಬೇಕಾಗಿದೆ? ಶರೀರ ಸಹಿತವಾಗಿ ಏನೆಲ್ಲವೂ ಇದೆಯೋ ಅದನ್ನು ಬಲಿಹಾರಿ ಮಾಡಬೇಕಾಗಿದೆ ಅಥವಾ ಸ್ವಾಹಾ ಮಾಡಬೇಕಾಗಿದೆ. ಈ ಯಜ್ಞದಿಂದಂತೂ ನೀವು ರಾಜ್ಯವನ್ನು ಪಡೆಯುತ್ತೀರಿ. ತಂದೆಯು ನೆನಪು ತರಿಸುತ್ತಾರೆ - ಭಕ್ತಿಮಾರ್ಗದಲ್ಲಿ ನೀವು ಹಾಡುತ್ತಿದ್ದಿರಿ, ಹೇ ತಂದೆಯೇ ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ. ನೀವೀಗ ತಮ್ಮನ್ನು ಬ್ರಹ್ಮಾಕುಮಾರಿಯರೆಂದು ತಿಳಿದುಕೊಳ್ಳುತ್ತೀರಿ. ಭಲೆ ತಮ್ಮ ಗೃಹಸ್ಥ ವ್ಯವಹಾರದಲ್ಲಿಯೇ ಇರಿ ಆದರೆ ಕಮಲ ಪುಷ್ಫ ಸಮಾನ ಪಾವನರಾಗಿರಬೇಕಾಗುವುದು. ತಮ್ಮನ್ನು ಆತ್ಮನೆಂದು ತಿಳಿಯಿರಿ, ನಾವು ತಂದೆಯ ಮಕ್ಕಳಾಗಿದ್ದೇವೆ, ನೀವಾತ್ಮರು ಪ್ರಿಯತಮೆಯರಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನೊಬ್ಬನೇ ಪ್ರಿಯತಮನಾಗಿದ್ದೇನೆ, ಪ್ರಿಯತಮನಾದ ನನ್ನನ್ನು ನೀವು ಕರೆಯುತ್ತಾ ಇರುತ್ತೀರಿ. ನೀವು ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ತಂದೆಗೆ ಪರಮಪಿತ ಪರಮಾತ್ಮನೆಂದು ಕರೆಯಲಾಗುತ್ತದೆ, ಅವರು ನಿರಾಕಾರನಾಗಿದ್ದಾರೆ, ಆತ್ಮವೂ ನಿರಾಕಾರಿಯಾಗಿದೆ ಅದು ಈ ಶರೀರದ ಮೂಲಕ ಪಾತ್ರವನ್ನಭಿನಯಿಸುತ್ತದೆ. ಭಕ್ತಿಮಾರ್ಗದಲ್ಲಿಯೂ ನೀವು ಪಾತ್ರವನ್ನಭಿನಯಿಸಬೇಕಾಗಿದೆ. ಭಕ್ತಿ ಎಂದರೆ ರಾತ್ರಿಯಾಗಿದೆ, ಅಂಧಕಾರದಲ್ಲಿ ಮನುಷ್ಯರು ಮೋಸ ಹೋಗುತ್ತಾರೆ. ದ್ವಾಪರದಿಂದ ಹಿಡಿದು ನೀವು ಮೋಸ ಹೋಗಿದ್ದೀರಿ. ಈ ಸಮಯದಲ್ಲಿ ಮಹಾದುಃಖಿಯಾಗಿ ಬಿಟ್ಟಿದ್ದೀರಿ. ಈಗ ಹಳೆಯ ಪ್ರಪಂಚದ ಅಂತ್ಯವಾಗಿದೆ, ಈ ಹಣ ಇತ್ಯಾದಿಗಳೆಲ್ಲವೂ ಮಣ್ಣು ಪಾಲಾಗುವುದು. ಭಲೆ ಕೆಲವರು ಕೋಟ್ಯಾಧೀಶ್ವರರಿದ್ದಾರೆ. ರಾಜರಿದ್ದಾರೆ. ಮಕ್ಕಳು ಜನ್ಮ ಪಡೆದರೆ ಈ ಧನವು ನಮ್ಮ ಮಕ್ಕಳಿಗಾಗಿ, ನಮ್ಮ ಮೊಮ್ಮಕ್ಕಳು-ಮರಿ ಮಕ್ಕಳು ತಿನ್ನುವರು ಎಂದು ತಿಳಿಯುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ಯಾರೂ ತಿನ್ನುವುದಿಲ್ಲ, ಈ ಪ್ರಪಂಚವೇ ಸಮಾಪ್ತಿಯಾಗಲಿದೆ. ಇನ್ನು ಸ್ವಲ್ಪವೇ ಸಮಯವಿದೆ, ಬಹಳಷ್ಟು ವಿಘ್ನಗಳು ಬರುತ್ತವೆ, ಪರಸ್ಪರ ಹೊಡೆದಾಡುತ್ತಾರೆ. ಅಂತಿಮದಲ್ಲಿ ಈ ರೀತಿ ಹೊಡೆದಾಡುತ್ತಾರೆ ರಕ್ತದ ನದಿಗಳು ಹರಿಯುತ್ತವೆ. ನಿಮಗಂತೂ ಯಾರೊಂದಿಗೂ ಯುದ್ಧವಿಲ್ಲ, ನೀವು ಯೋಗಬಲದಲ್ಲಿರುತ್ತೀರಿ, ನೀವು ನೆನಪಿನಲ್ಲಿರುತ್ತೀರೆಂದರೆ ಯಾರೇ ನಿಮ್ಮ ಸನ್ಮುಖದಲ್ಲಿ ಕೆಟ್ಟ ವಿಚಾರದಿಂದ ಬಂದರೂ ಸಹ ಅವರಿಗೆ ಭಯಂಕರ ಸಾಕ್ಷಾತ್ಕಾರವಾಗಿ ಬಿಡುವುದು ಮತ್ತು ಕೂಡಲೇ ಓಡಿ ಹೋಗುವರು. ನೀವು ಶಿವ ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ಅವರು ಓಡಿ ಹೋಗುತ್ತಾರೆ. ಯಾರು ಪಕ್ಕಾ ಮಕ್ಕಳಿದ್ದಾರೆಯೋ ಅವರು ಒಬ್ಬ ಶಿವ ತಂದೆಯ ವಿನಃ ನನ್ನವರು ಬೇರೆ ಯಾರೂ ಇಲ್ಲವೆಂಬ ಪುರುಷಾರ್ಥದಲ್ಲಿರುತ್ತಾರೆ. ತಂದೆಯು ತಿಳಿಸುತ್ತಾರೆ – ಕೈ ಕೆಲಸ ಮಾಡಲಿ ಬುದ್ಧಿಯು ತಂದೆಯನ್ನು ನೆನಪು ಮಾಡುತ್ತಿರಲಿ......... ಮನೆ, ಮಕ್ಕಳನ್ನೂ ಸಂಭಾಲನೆ ಮಾಡಬೇಕಾಗಿದೆ ಆದರೆ ನೀವಾತ್ಮರು ತಂದೆಯನ್ನು ನೆನಪು ಮಾಡಿರಿ ಆಗ ಪಾಪಗಳ ಹೊರೆಯು ಇಳಿಯುವುದು. ಕೇವಲ ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ, ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ನಂತರ ನೀವೆಲ್ಲರೂ ಈ ಶರೀರವನ್ನು ಬಿಡುತ್ತೀರಿ. ತಂದೆಯು ಎಲ್ಲಾ ಆತ್ಮರನ್ನು ಸೊಳ್ಳೆಗಳೋಪಾದಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಉಳಿದಂತೆ ಇಡೀ ಪ್ರಪಂಚವು ಶಿಕ್ಷೆಗಳನ್ನನುಭವಿಸುವುದು. ಭಾರತದಲ್ಲಿ ಕೆಲವರು ಮಾತ್ರವೇ ಉಳಿಯುತ್ತಾರೆ ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ. ಇಲ್ಲಂತೂ ಬಹಳ ವೃದ್ಧಿಯಾಗುವುದು. ಪ್ರದರ್ಶನಿ, ಪ್ರೋಜೆಕ್ಟರ್ ಇತ್ಯಾದಿಗಳ ಮೂಲಕ ಎಷ್ಟೊಂದು ಮಂದಿ ಕೇಳುತ್ತಾರೆ, ಅವರು ಪ್ರಜೆಗಳಾಗುತ್ತಾ ಹೋಗುತ್ತಾರೆ, ರಾಜನಂತೂ ಒಬ್ಬರೇ ಇರುತ್ತಾರೆ. ಉಳಿದೆಲ್ಲರೂ ಪ್ರಜೆಗಳಿರುತ್ತಾರೆ. ಮಂತ್ರಿಯೂ ಸಹ ಪ್ರಜೆಗಳ ಸಾಲಿನಲ್ಲಿ ಬರುತ್ತಾರೆ. ಅನೇಕರು ಪ್ರಜೆಗಳಾಗುತ್ತಾರೆ, ಒಬ್ಬ ರಾಜನಿಗೆ ಲಕ್ಷಾಂತರ ಮಂದಿ ಪ್ರಜೆಗಳಿರುತ್ತಾರೆ. ಅಂದಮೇಲೆ ರಾಜ-ರಾಣಿಯಾಗಲು ಪರಿಶ್ರಮ ಪಡಬೇಕಲ್ಲವೆ? |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಲ್ಲವನ್ನೂ ಮಾಡುತ್ತಾ ನಿರಂತರ ನನ್ನನ್ನು ನೆನಪು ಮಾಡಿ. ಹೇಗೆ ಪ್ರಿಯತಮ-ಪ್ರಿಯತಮೆಯರಿರುತ್ತಾರೆ ಅವರಿಗೆ ಎಷ್ಟೊಂದು ದೈಹಿಕ ಪ್ರೀತಿಯಿರುತ್ತದೆ. ನೀವು ಮಕ್ಕಳು ಈ ಸಮಯದ ಪ್ರಿಯತಮೆಯರಾಗಿದ್ದೀರಿ. ನಿಮ್ಮ ಪ್ರಿಯತಮನು ಬಂದಿದ್ದಾರೆ. ನಿಮಗೆ ಓದಿಸುತ್ತಿದ್ದಾರೆ. ಓದುತ್ತಾ-ಓದುತ್ತಾ ನೀವು ದೇವತೆಗಳಾಗಿ ಬಿಡುತ್ತೀರಿ. ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಸದಾ ನಿರೋಗಿಗಳಾಗಿ ಬಿಡುತ್ತೀರಿ. ಮತ್ತೆ 84 ಜನ್ಮಗಳ ಚಕ್ರವನ್ನೂ ನೆನಪು ಮಾಡಬೇಕಾಗಿದೆ - ಸತ್ಯಯುಗದಲ್ಲಿ ಇಷ್ಟು ಜನ್ಮಗಳು, ತ್ರೇತಾದಲ್ಲಿ ಇಷ್ಟು ಜನ್ಮಗಳು..... ನಾವು ದೇವಿ-ದೇವತಾ ಧರ್ಮದವರು ಪೂರ್ಣ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಮುಂದೆ ಹೋದಂತೆ ನೀವು ಬಹಳ ವೃದ್ಧಿ ಹೊಂದುತ್ತೀರಿ. ನಿಮ್ಮ ಸೇವಾಕೇಂದ್ರಗಳು ಸಾವಿರಾರು ಅಂದಾಜಿನಲ್ಲಿ ಸ್ಥಾಪನೆಯಾಗುತ್ತವೆ. ಗಲ್ಲಿ-ಗಲ್ಲಿಯಲ್ಲಿ ತಿಳಿಸುತ್ತಾ ಇರುತ್ತಾರೆ - ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಈಗ ಮನೆಗೆ ಹಿಂತಿರುಗಿ ನಡೆಯಿರಿ. ಇದಂತೂ ಛೀ ಛೀ ವಸ್ತ್ರವಾಗಿದೆ, ಇದು ಬೇಹದ್ದಿನ ವೈರಾಗ್ಯವಾಗಿದೆ. ಸನ್ಯಾಸಿಗಳಂತೂ ಕೇವಲ ಹದ್ದಿನ ಮನೆ-ಮಠವನ್ನು ಬಿಟ್ಟು ಬಿಡುತ್ತಾರೆ. ಅವರು ಹಠಯೋಗಿಗಳಾಗಿದ್ದಾರೆ, ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಈ ಭಕ್ತಿಯೂ ಸಹ ಅನಾದಿಯಾಗಿದೆ ಎಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಈ ಭಕ್ತಿಯು ದ್ವಾಪಾರದಿಂದ ಆರಂಭವಾಗುತ್ತದೆ. 84 ಪೀಳಿಗೆಗಳಲ್ಲಿ ಬಂದು ನೀವೀಗ ತಮೋಪ್ರಧಾನರಾಗಿದ್ದೀರಿ. ನೀವೇ ದೇವಿ-ದೇವತೆಗಳಾಗಿದ್ದಿರಿ, ನಾವೇ ಕ್ರಿಶ್ಚಿಯನ್ನರಾಗಿದ್ದೆವು ಎಂದು ಕ್ರಿಶ್ಚಿಯನ್ನರು ಹೇಳುತ್ತಾರೆ ಹಾಗೆಯೇ ನಾವು ಸತ್ಯಯುಗದಲ್ಲಿದ್ದೆವು, ತಂದೆಯು ದೇವಿ-ದೇವತ ಧರ್ಮವನ್ನು ಸ್ಥಾಪನೆ ಮಾಡಿದ್ದರು, ಯಾರು ಲಕ್ಷ್ಮೀ-ನಾರಾಯಣರಾಗಿದ್ದರೋ ಅವರೀಗ ಬ್ರಾಹ್ಮಣರಾಗಿದ್ದಾರೆಂದು ನೀವೀಗ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಒಬ್ಬರೇ ರಾಜ-ರಾಣಿಯಿದ್ದರು, ಒಂದು ಭಾಷೆಯಿತ್ತು. ಇದನ್ನೂ ಸಹ ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ. ನೀವೆಲ್ಲರೂ ಆದಿ ಸನಾತನ ಧರ್ಮದವರಾಗಿದ್ದೀರಿ. ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಆತ್ಮವು ನಿರ್ಲೇಪವಾಗಿದೆ ಹಾಗೂ ಈಶ್ವರನು ಸರ್ವವ್ಯಾಪಿಯಾಗಿದ್ದಾರೆಂದು ಅವರು ಹೇಳುತ್ತಾರೆ ಆದರೆ ಇದು ತಪ್ಪಾಗಿದೆ. ಎಲ್ಲರಲ್ಲಿ ಆತ್ಮವಿದೆ ಅಂದಮೇಲೆ ನಮ್ಮಲ್ಲಿ ಪರಮಾತ್ಮನಿದ್ದಾರೆಂದು ಹೇಗೆ ಹೇಳುತ್ತೀರಿ? ಆ ರೀತಿ ಇದ್ದಿದ್ದೇ ಆದರೆ ಎಲ್ಲರೂ ತಂದೆಯರಾಗಿ ಬಿಡುವರು. ಮನುಷ್ಯರು ಎಷ್ಟೊಂದು ತಮೋಪ್ರಧಾನರಾಗಿ ಬಿಟ್ಟಿದ್ದಾರೆ! ಮೊದಲು ಏನು ಕೇಳುತ್ತಿದ್ದಿರೋ ಅದನ್ನೇ ನಂಬಿ ಬಿಡುತ್ತಿದ್ದಿರಿ, ಈಗ ತಂದೆಯು ಬಂದು ಸತ್ಯವನ್ನು ತಿಳಿಸುತ್ತಾರೆ. ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಾರೆ. ಇದರಿಂದ ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ಅಮರ ಕಥೆಯೂ ಇದಾಗಿದೆ ಬಾಕಿ ಸೂಕ್ಷ್ಮವತನದಲ್ಲಿ ಕಥೆ, ಇತ್ಯಾದಿಗಳಿಲ್ಲ. ಇದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ನೀವು ಅಮರರಾಗುವುದಕ್ಕಾಗಿ ಅಮರ ಕಥೆಯನ್ನು ಕೇಳುತ್ತಿದ್ದೀರಿ. ಅಲ್ಲಿ ನೀವು ಖುಷಿಯಿಂದ ಒಂದು ಶರೀರವನ್ನು ಬಿಟ್ಟು ಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತೀರಿ. ಇಲ್ಲಂತೂ ಯಾರಾದರೂ ಸತ್ತರೆ ಅಳುತ್ತಾರೆ, ಚೀರಾಡುತ್ತಾರೆ. ಸತ್ಯಯುಗದಲ್ಲಿ ಖಾಯಿಲೆ ಇತ್ಯಾದಿಗಳಿರುವುದಿಲ್ಲ, ಸದಾ ಆರೋಗ್ಯವಂತರಾಗಿರುತ್ತಾರೆ. ಧೀರ್ಘಾಯಸ್ಸು ಇರುತ್ತದೆ. ಅಲ್ಲಿ ಪತಿತತನವೇ ಇರುವುದಿಲ್ಲ. ಈಗ ಇದನ್ನು ಪಕ್ಕಾ ಮಾಡಿಕೊಳ್ಳಿ - ನಾವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದ್ದೇವೆ, ಈಗ ನಮ್ಮನ್ನು ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಪಾವನರಾಗುವ ಯುಕ್ತಿಗಳನ್ನು ನಿಮಗೆ ತಿಳಿಸುತ್ತಾರೆ - ಮಕ್ಕಳೇ, ಕೇವಲ ತಂದೆಯಾದ ನನ್ನನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ಸತ್ಯಯುಗದಲ್ಲಿ 16 ಕಲಾ ಸಂಪೂರ್ಣರು ನಂತರ ಕಲೆಗಳು ಕಡಿಮೆಯಾಗತೊಡಗುತ್ತವೆ. ಈಗ ನಿಮ್ಮಲ್ಲಿ ಯಾವುದೇ ಕಲೆಯಿಲ್ಲ. ತಂದೆಯೇ ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಮುಕ್ತಿದಾತನೆಂದು ಹೇಳಲಾಗುತ್ತದೆ. ಎಲ್ಲರನ್ನೂ ತಮ್ಮ ಜೊತೆ ಕರೆದುಕೊಂಡು ಹೋಗುತ್ತಾರೆ. ನಿಮ್ಮ ಗುರುಗಳು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುವರೇ? ಆ ಗುರುಗಳಂತು ಹೊರಟು ಹೋದರೆ ಅವರ ಶಿಷ್ಯರು ಅವರ ಸ್ಥಾನದಲ್ಲಿ ಕುಳಿತುಕೊಳ್ಳುತ್ತಾರೆ ಮತ್ತೆ ಶಿಷ್ಯರಲ್ಲಿ ಬಹಳ ಗಡಿಬಿಡಿಯಾಗುತ್ತದೆ. ಸ್ಥಾನಕ್ಕಾಗಿ ಪರಸ್ಪರ ಹೊಡೆದಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನೀವಾತ್ಮರನ್ನು ಜೊತೆ ಕರೆದುಕೊಂಡು ಹೋಗುತ್ತೇನೆ. ನೀವು ಸಂಪೂರ್ಣರಾಗದಿದ್ದರೆ ಶಿಕ್ಷೆಗಳನ್ನನುಭವಿಸುವಿರಿ. ಮತ್ತು ಪದವಿ ಭ್ರಷ್ಟವಾಗುವುದು. ಇಲ್ಲಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಒಳ್ಳೆಯದು. |
Subsets and Splits
No community queries yet
The top public SQL queries from the community will appear here once available.