text
stringlengths
0
61.5k
ಇನ್ನು ಸ್ವಲ್ಪ ದಿನಗಳು ಮಾತ್ರ ಬಾಕಿ ಉಳಿದಿವೆ, ನಾವು ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಈ ರೀತಿ ನೆನಪು ಮಾಡಿದರೂ ಸಹ ಖುಶಿಯ ನಶೆ ಏರುತ್ತದೆ. ಬೆಳಗ್ಗೆ ಚಿಂತನೆ ನಡೆಯುತ್ತದೆ ಎಂದರೆ ದಿನದಲ್ಲೂ ಕೂಡ ಖುಶಿ ಇರುತ್ತದೆ. ಒಂದುವೇಳೆ ಖುಶಿ ಇಲ್ಲ ಎಂದರೆ ತಂದೆಯ ಜೊತೆ ಪ್ರೀತಿ ಇಲ್ಲ ಎಂದರ್ಥ. ಅಮೃತವೇಳೆಯಲ್ಲಿ ಏಕಾಂತ ಚೆನ್ನಾಗಿರುತ್ತದೆ, ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ಖುಶಿಯ ನಶೆ ಏರಿರುತ್ತದೆ. ಈ ಓದಿನಲ್ಲಿ ಗ್ರಹಚಾರಿ ಕುಳಿತುಕೊಳ್ಳುತ್ತದೆ ಏಕೆಂದರೆ ತಂದೆಯನ್ನು ಮರೆತು ಬಿಡುತ್ತಾರೆ. ತಂದೆಯಿಂದ ಆಸ್ತಿಯನ್ನು ಪಡೆಯಬೇಕಾದರೆ ಮನಸಾ-ವಾಚಾ-ಕರ್ಮಣಾ ಸೇವೆಯನ್ನು ಮಾಡಬೇಕು. ಈ ಸೇವೆಯಲ್ಲಿಯೇ ಈ ಅಂತಿಮ ಜನ್ಮವನ್ನು ಕಳೆಯಬೇಕು. ಒಂದುವೇಳೆ ಪ್ರಾಪಂಚಿಕ ಮಾತುಗಳಿಗೆ ಏನಾದರೂ ಅಂಟಿಕೊಂಡರೆ ಈ ಸೇವೆಯನ್ನು ಯಾವಾಗ ಮಾಡುತ್ತೀರಿ? ನಾಳೆ, ನಾಳೆ ಎನ್ನುತ್ತಾ ಶರೀರವನ್ನು ಬಿಟ್ಟು ಬಿಡುತ್ತಾರೆ. ಸ್ವರ್ಗಕ್ಕೆ ಕರೆದುಕೊಂಡು ಹೋಗಲು ತಂದೆ ಬಂದಿದ್ದಾರೆ. ಇಲ್ಲಂತು ಯುದ್ಧಗಳಲ್ಲಿ ಎಷ್ಟೊಂದು ಜನ ಸಾಯುತ್ತಾರೆ, ಎಷ್ಟೊಂದು ಜನರಿಗೆ ದು:ಖವಾಗುತ್ತದೆ. ಅಲ್ಲಂತೂ ಜಗಳ ಇತ್ಯಾದಿ ಇರುವುದೇ ಇಲ್ಲ. ಇದೆಲ್ಲಾ ಅಂತ್ಯದಲ್ಲಿ ಆಗಬೇಕಾಗಿದೆ. ನಿರ್ಧನಿಕರು ಸಾಯುತ್ತಾರೆ, ಆದರೆ ದಣಿಯನ್ನು ತಿಳಿದಿರುವವರು ರಾಜ್ಯಭಾಗ್ಯವನ್ನು ಪಡೆಯುವರು.
ನಾವು ನಮ್ಮ ಸಂಪಾದನೆಯನ್ನು, ನಮ್ಮದೇ ತನು-ಮನ-ಧನದಿಂದ ನಮ್ಮ ರಾಜ್ಯವನ್ನು ಸ್ಥಾಪಿಸುತ್ತಿದ್ದೇವೆ ಎಂದು ಪ್ರದರ್ಶನಗಳಲ್ಲಿ ತಿಳಿಸಬೇಕು, ಭಿಕ್ಷೆ ಬೇಡುವ ಅಗತ್ಯವಿಲ್ಲ. ಅನೇಕ ಸಹೋದರ-ಸಹೋದರಿಯರು ಒಟ್ಟುಗೂಡಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿರುವರು. ನೀವು ಕೋಟಿ ಗಟ್ಟಲೆ ಒಟ್ಟು ಸೇರಿಸಿ ವಿನಾಶ ಮಾಡುತ್ತೀರಿ, ನಾವು ಒಂದೊಂದು ಪೈಸೆಯನ್ನು ಒಟ್ಟುಗೂಡಿಸಿ ವಿಶ್ವದ ಮಾಲಿಕರಾಗುತ್ತೇವೆ. ಎಷ್ಟು ಅಧ್ಭುತವಾದ ಮಾತಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅಮೃತವೇಳೆ ಏಕಾಂತದಲ್ಲಿ ಕುಳಿತು ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕು. ಪ್ರಾಪಂಚಿಕ ಮಾತುಗಳಲ್ಲನ್ನು ಬಿಟ್ಟು ಈಶ್ವರೀಯ ಸೇವೆಯಲ್ಲಿ ತೊಡಗಬೇಕು.
2. ತಂದೆಯ ಜೊತೆ ಸತ್ಯವಾದ ಹೃದಯವನ್ನು ಇಡಬೇಕು. ಪರಸ್ಪರದಲ್ಲಿ ಒಬ್ಬರಿಗೊಬ್ಬರು ಪ್ರಿಯತಮ-ಪ್ರಿಯತಮೆಯರಾಗಬಾರದು. ಯಾವುದೇ ದೇಹಧಾರಿಯ ಜೊತೆ ಪ್ರೀತಿ ಇಡಬೇಡಿ. ಒಬ್ಬ ತಂದೆಯ ಜೊತೆ ಪ್ರೀತಿಯನ್ನು ಇಡಬೇಕಾಗಿದೆ.
ಓಂ ಶಾಂತಿ. ನೀವು ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಎಲ್ಲರಿಗೆ ಶಿವ ತಂದೆಯನ್ನು ನೆನಪು ಮಾಡಿ ಎಂದು ಹೇಳಬೇಕಾಗಿದೆ. ಇವರನ್ನಂತೂ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯಾಗಿದ್ದಾರೆ, ಅವರ ಮಂದಿರಕ್ಕೂ ಹೋಗುತ್ತಾರೆ. ಆದರೆ ಶಿವ ತಂದೆಯು ಯಾರು ಎಂಬುದನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದ ಶಿವ ತಂದೆಯ ನೆನಪು ತರಿಸಬೇಕಾಗಿದೆ. ಇಲ್ಲಿ ಕುಳಿತಿದ್ದರೂ ಸಹ ಕೆಲವರ ಬುದ್ಧಿಯೋಗವು ಎಲ್ಲೆಲ್ಲಿಯೋ ಅಲೆದಾಡುತ್ತಿರುವುದು. ಆದ್ದರಿಂದ ನೆನಪು ತರಿಸುವುದು ನಿಮ್ಮ ಕರ್ತವ್ಯವಾಗಿದೆ - ಸಹೋದರ-ಸಹೋದರಿಯರೇ, ತಂದೆಯನ್ನು ನೆನಪು ಮಾಡಿ, ಆ ತಂದೆಯಿಂದಲೇ ಆಸ್ತಿಯು ಸಿಗುವುದು. ನೀವೀಗ ಸತ್ಯವಾದ ಸಹೋದರ-ಸಹೋದರಿಯರಾಗಿದ್ದೀರಿ. ಅವರಂತೂ ಕೇವಲ ಸ್ತ್ರೀ-ಪುರುಷರ ಕಾರಣ ಸಹೋದರ-ಸಹೋದರಿಯೆಂದು ಹೇಳುತ್ತಾರೆ. ಭಾಷಣದಲ್ಲಿಯೂ ಬ್ರದರ್ಸ್ ಅಂಡ್ ಸಿಸ್ಟರ್ಸ್.... ಎಂದು ಅವರು ಶರೀರದ ಸಂಬಂಧದಿಂದ ಸಹೋದರ-ಸಹೋದರಿಯರಾಗಿದ್ದಾರೆ, ಇಲ್ಲಿ ಆ ಮಾತಿಲ್ಲ. ಇಲ್ಲಂತೂ ಆತ್ಮರಿಗೆ ತಮ್ಮ ರಚಯಿತ ತಂದೆಯನ್ನು ನೆನಪು ಮಾಡಿ ಎಂದು ತಿಳಿಸಲಾಗುತ್ತದೆ. ಅವರಿಂದಲೇ ಆಸ್ತಿಯೂ ಸಿಗುವುದು. ಅಂತರವಿದೆಯಲ್ಲವೆ. ಸಹೋದರ-ಸಹೋದರಿ ಅಕ್ಷರವಂತೂ ಸಾಮಾನ್ಯವಾಗಿದೆ. ಇಲ್ಲಿ ತಂದೆಯು ಮಕ್ಕಳಿಗೆ - ಮಕ್ಕಳೇ, ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳುತ್ತಾರೆ. ಆ ಶಿವ ತಂದೆಯು ಆತ್ಮಿಕ ತಂದೆಯಾಗಿದ್ದಾರೆ ಮತ್ತು ಪ್ರಜಾಪಿತ ಬ್ರಹ್ಮಾ ಸಾಕಾರ ತಂದೆಯಾಗಿದ್ದಾರೆ. ಆದ್ದರಿಂದ ಬಾಪ್ದಾದಾ ಇಬ್ಬರೂ ಸಹ ಹೇಳುತ್ತಾರೆ - ಮಕ್ಕಳೇ, ತಂದೆಯನ್ನು ನೆನಪು ಮಾಡಿ, ಮತ್ತೆಲ್ಲಿಯೂ ಬುದ್ಧಿಯು ಹೋಗದಿರಲಿ. ಬುದ್ಧಿಯು ಬಹಳ ಅಲೆದಾಡುತ್ತದೆ, ಭಕ್ತಿಮಾರ್ಗದಲ್ಲಿಯೂ ಇದೇರೀತಿ ಆಗುತ್ತದೆ. ಕೃಷ್ಣನ ಮುಂದೆ ಅಥವಾ ಯಾವುದೇ ದೇವತೆಯ ಮುಂದೆ ಕುಳಿತುಕೊಂಡು ಹೇಳುತ್ತಾರೆ, ಮಾಲೆಯನ್ನು ಜಪಿಸುತ್ತಾರೆಂದರೆ ಬುದ್ಧಿಯು ಎಲ್ಲೆಲ್ಲಿಯೋ ಓಡುತ್ತಿರುತ್ತದೆ. ದೇವತೆಗಳು ಯಾರು? ಅವರಿಗೆ ಈ ರಾಜ್ಯವು ಹೇಗೆ ಸಿಕ್ಕಿತು, ಯಾವಾಗ ಸಿಕ್ಕಿತು! ಇದು ಯಾರಿಗೂ ತಿಳಿದಿಲ್ಲ. ಗುರುನಾನಕರು ಸಿಖ್ಖ್ಪಂಥವನ್ನು ಸ್ಥಾಪನೆ ಮಾಡಿದರೆಂದು ಸಿಖ್ಖರು ತಿಳಿದುಕೊಂಡಿದ್ದಾರೆ. ನಂತರ ಅವರ ಗುರುಗಳು ಅವರ ವಂಶಾವಳಿ ನಡೆದು ಬರುತ್ತದೆ. ಅವರು ಪುನರ್ಜನ್ಮದಲ್ಲಿ ಬರುತ್ತಾ ಇರುತ್ತಾರೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ಅವರು ಸದಾ ಗುರುನಾನಕರನ್ನು ನೆನಪು ಮಾಡುವರೇ! ಒಳ್ಳೆಯದು - ತಿಳಿದುಕೊಳ್ಳಿ, ಗುರುನಾನಕರನ್ನು ಅಥವಾ ಬುದ್ಧನನ್ನು ಇಲ್ಲವೆ ಯಾರೇ ತಮ್ಮ ಧರ್ಮ ಸ್ಥಾಪಕರನ್ನು ನೆನಪು ಮಾಡುತ್ತಾರೆ ಆದರೆ ಅವರು ಈಗ ಎಲ್ಲಿದ್ದಾರೆಂದು ಯಾರಿಗೂ ತಿಳಿದಿರುವುದಿಲ್ಲ. ಅವರಂತೂ ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು, ವಾಣಿಯಿಂದ ದೂರ ಹೊರಟು ಹೋದರೆಂದು ಹೇಳುತ್ತಾರೆ, ಇಲ್ಲವೆ ಕೃಷ್ಣನು ಪ್ರತ್ಯಕ್ಷವಾಗಿದ್ದಾನೆ, ಎಲ್ಲಿ ನೋಡಿದರೂ ಕೃಷ್ಣನೇ ಕೃಷ್ಣ, ರಾಧೆಯೇ ರಾಧೆ ಎಂದು ಹೇಳುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಭಾರತವಾಸಿಗಳು ದೇವತೆಗಳಾಗಿದ್ದಿರಿ, ನಿಮ್ಮ ಚಹರೆಯು ಮನುಷ್ಯನದು, ಗುಣಗಳು ದೇವತೆಯಾಗಿತ್ತು. ದೇವತೆಗಳ ಚಿತ್ರವಂತೂ ಇದೆಯಲ್ಲವೆ. ಚಿತ್ರಗಳು ಇಲ್ಲದೇ ಹೋಗಿದ್ದರೆ ಇದನ್ನೂ ತಿಳಿದುಕೊಳ್ಳುತ್ತಿರಲಿಲ್ಲ. ರಾಧೆ-ಕೃಷ್ಣರ ಜೊತೆ ಲಕ್ಷ್ಮೀ-ನಾರಾಯಣರ ಸಂಬಂಧವೇನು ಎಂಬುದನ್ನೂ ಸಹ ತಂದೆಯೇ ಬಂದು ತಿಳಿಸುತ್ತಾರೆ. ನೀವು ಯಾರಿಗೆ ಬೇಕಾದರೂ ತಿಳಿಸಬಹುದು - ಈ ನಿರಾಕಾರ ತಂದೆಯು ನಮಗೆ ತಿಳಿಸುತ್ತಾರೆ ಎಂದು. ವಾಸ್ತವದಲ್ಲಿ ಎಲ್ಲರೂ ನಿರಾಕಾರಿಯೇ, ಆತ್ಮವೂ ನಿರಾಕಾರನಾಗಿದೆ ಮತ್ತೆ ಸಾಕಾರದ ಮೂಲಕ ಮಾತನಾಡುತ್ತದೆ. ಶರೀರವಿಲ್ಲದೆ ನಿರಾಕಾರಿ ಆತ್ಮವಂತೂ ಮಾತನಾಡಲು ಸಾಧ್ಯವಿಲ್ಲ. ನೀವು ತಿಳಿಸಿ, ನಮ್ಮ ತಂದೆಯೇ ನಿಮ್ಮ ತಂದೆಯಾಗಿದ್ದಾರೆ. ಶಿವ ತಂದೆಯು ಜ್ಞಾನ ಸಾಗರ, ಶಾಂತಿಯ ಸಾಗರನಾಗಿದ್ದಾರೆ, ಬೇಹದ್ದಿನ ತಂದೆಯಾಗಿದ್ದಾರೆ. ಅವರಿಗೂ ಸಹ ಶರೀರವು ಬೇಕಲ್ಲವೆ ಆದ್ದರಿಂದ ತಿಳಿಸುತ್ತಾರೆ - ನಾನು ಈ ಬ್ರಹ್ಮಾರವರ ತನುವಿನಲ್ಲಿ ಬರುತ್ತೇನೆ ಆಗಲೇ ಈ ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುವುದು. ಬ್ರಹ್ಮಾರವರ ಮೂಲಕ ಬ್ರಾಹ್ಮಣರದೇ ರಚನೆಯಾಗುತ್ತದೆ ಆದ್ದರಿಂದ ತಂದೆಯು ಬ್ರಾಹ್ಮಣ ಮಕ್ಕಳಿಗೇ ತಿಳಿಸುತ್ತಾರೆ ಮತ್ತ್ಯಾರಿಗೂ ತಿಳಿಸುವುದಿಲ್ಲ. ಮಕ್ಕಳಿಗೇ ತಿಳಿಸುತ್ತಾರೆ. ನಾವು ಶಿವ ತಂದೆಯ ಮಕ್ಕಳಾಗಿರುವ ಕಾರಣ ನಾವೂ ಸಹ ಭಗವಂತರಾಗಿದ್ದೇವೆ ಎಂದಲ್ಲ. ತಂದೆಯು ತಂದೆಯೇ, ಮಕ್ಕಳು ಮಕ್ಕಳೇ ಆಗಿದ್ದೀರಿ. ಮಗುವು ಯಾವಾಗ ಬೆಳೆದು ದೊಡ್ಡವನಾಗಿ ತಂದೆಯಾಗಿ ಮಕ್ಕಳಿಗೆ ಜನ್ಮ ನೀಡುವರೋ ಆಗ ಅವರಿಗೆ ತಂದೆಯೆಂದು ಹೇಳಲಾಗುವುದು. ಈ ತಂದೆಗಂತೂ ಅನೇಕ ಮಕ್ಕಳಿದ್ದಾರಲ್ಲವೆ! ಯಾರು ನಿಶ್ಚಯ ಬುದ್ಧಿಯವರು ಆಗಿದ್ದಾರೆಯೋ ಅಂತಹ ಮಕ್ಕಳಿಗೇ ತಿಳಿಸುತ್ತಾರೆ. ನಿಶ್ಚಯ ಬುದ್ಧಿಯವರು ತಂದೆಯ ಆಜ್ಞೆಯಂತೆ ನಡೆಯುತ್ತಾರೆ ಏಕೆಂದರೆ ಶ್ರೀಮತದಿಂದಲೇ ಶ್ರೇಷ್ಠರಾಗಲು ಸಾಧ್ಯ.
ನೀವೀಗ ತಿಳಿದುಕೊಂಡಿದ್ದೀರಿ - ನಾವು ಆ ದೇವತೆಗಳ ತರಹ ಆಗುತ್ತಿದ್ದೇವೆ. ಜನ್ಮ-ಜನ್ಮಾಂತರದಿಂದ ನಾವು ದೇವತೆಗಳ ಮಹಿಮೆಯನ್ನು ಹಾಡುತ್ತಾ ಬಂದಿದ್ದೇವೆ. ನಾವೀಗ ಶ್ರೀಮತದಂತೆ ಈ ರೀತಿಯಾಗಬೇಕಾಗಿದೆ. ರಾಜಧಾನಿಯು ಸ್ಥಾಪನೆಯಾಗಬೇಕಾಗಿದೆ. ಎಲ್ಲರೂ ಸಂಪೂರ್ಣವಾಗಿ ಶ್ರೀಮತದಂತೆ ನಡೆಯುವುದಿಲ್ಲ, ನಂಬರ್ವಾರ್ ನಡೆಯುತ್ತಾರೆ ಏಕೆಂದರೆ ಬಹಳ ದೊಡ್ಡ ರಾಜಧಾನಿಯಾಗಿದೆ. ಆ ರಾಜಧಾನಿಯಲ್ಲಿ ಪ್ರಜೆ, ನೌಕರ-ಚಾಕರ, ಚಂಡಾಲ ಮೊದಲಾದವರೆಲ್ಲರೂ ಬೇಕು. ಅಂತಹ ಚಲನೆಯಲ್ಲಿ ನಡೆಯುವವರಿಗೆ ಇವರು ಚಂಡಾಲರ ಕುಟುಂಬದಲ್ಲಿ ಹೋಗುವರೆಂದು ಸಾಕ್ಷಾತ್ಕಾರವಾಗುವುದು. ಚಂಡಾಲರೂ ಸಹ ಒಬ್ಬರೇ ಇರುವುದಿಲ್ಲ, ಅವರದೂ ಪರಿವಾರವಿರುತ್ತದೆ. ಚಂಡಾಲರದು ಒಕ್ಕೂಟವಿರುತ್ತದೆ, ಎಲ್ಲರೂ ಪರಸ್ಪರ ಸೇರುತ್ತಾರೆ, ಮುಷ್ಕರ ಇತ್ಯಾದಿಗಳನ್ನು ಹೂಡಿದರೆ ಎಲ್ಲರೂ ಕೆಲಸವನ್ನು ಬಿಟ್ಟು ಬಿಡುತ್ತಾರೆ ಆದರೆ ಸತ್ಯಯುಗದಲ್ಲಿ ಈ ರೀತಿಯ ಮಾತಿರುವುದಿಲ್ಲ. ನಿಮ್ಮ ಬಳಿ ಒಂದು ಚಿತ್ರವೂ ಇದೆ ಯಾವುದರಲ್ಲಿ ನೀವು ಕೇಳುತ್ತೀರಿ. ನೀವು ಏನಾಗ ಬಯಸುತ್ತೀರಿ - ವಕೀಲರೋ ಅಥವಾ ದೇವತೆಯಾಗುತ್ತೀರೋ? ನಿಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಕಡಿಮೆಯೇನಲ್ಲ. ಬೇಹದ್ದಿನ ತಂದೆಯು ಬೇಹದ್ದಿನ ಮಾತುಗಳನ್ನು ತಿಳಿಸುತ್ತಾರೆ. ಇವು ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು - ನಾವು ಭವಿಷ್ಯಕ್ಕಾಗಿ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆ. ಶ್ರೀಮತದಂತೆ ನಾವು ಶ್ರೇಷ್ಠಾತಿ ಶ್ರೇಷ್ಠ ರಾಜ್ಯ ಪದವಿಯನ್ನೇ ಪಡೆಯುತ್ತೇವೆ ಮತ್ತೆ ಅನ್ಯರನ್ನೂ ಸಹ ತಮ್ಮ ಸಮಾನ ಮಾಡಿಕೊಂಡಾಗಲೇ ಈಶ್ವರೀಯ ಸೇವಾಧಾರಿಗಳೆಂದು ಹೇಳಲಾಗುತ್ತದೆ. ಯಾರದು ಏನನ್ನೂ ಮುಚ್ಚಿಡಲು ಸಾಧ್ಯವಿಲ್ಲ, ಮುಂದೆ ಹೋದಂತೆ ಎಲ್ಲವೂ ತಿಳಿದು ಬರುತ್ತದೆ, ಇದಕ್ಕೇ ಜ್ಞಾನ ಪ್ರಕಾಶವೆಂದು ಹೇಳಲಾಗುತ್ತದೆ, ಬೆಳಕು ಸಿಗುತ್ತಾ ಹೋಗುತ್ತದೆ. ಇದು ಮನುಷ್ಯರಿಗೆ ಅರ್ಥವಾಗಿದೆಯೇ! ಒಳಗೊಳಗೆ ಬಾಂಬುಗಳನ್ನು ತಯಾರು ಮಾಡುತ್ತಿರುತ್ತಾರೆ, ಯಾವುದೇ ವಸ್ತುಗಳನ್ನು ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರು ಮಾಡುತ್ತಿಲ್ಲ. ಮೊದಲು ಕತ್ತಿಗಳಿಂದ ಯುದ್ಧವು ನಡೆಯುತ್ತಿತ್ತು ನಂತರ ಬಂದೂಕುಗಳನ್ನು ತಯಾರಿಸಿದರು, ಅವನ್ನು ಕಾರ್ಯದಲ್ಲಿ ತರುವುದಕ್ಕಾಗಿ, ಕೇವಲ ಇಟ್ಟುಕೊಳ್ಳುವುದಕ್ಕಾಗಿ ಅಲ್ಲ. ಇದರಿಂದ ಮೃತ್ಯುವಾಗುವುದೆಂದು ಅವರಿಗೂ ತಿಳಿದಿದೆ. ಪ್ರಯೋಗವನ್ನೂ ಮಾಡಿದರಲ್ಲವೆ. ಹಿರೋಶಿಮಾದಲ್ಲಿ ಒಂದು ಬಾಂಬಿನಿಂದ ಎಷ್ಟೊಂದು ಮಂದಿ ಸತ್ತು ಹೋದರು. ಅದರ ನಂತರ ನೋಡಿ, ಎಷ್ಟು ಉನ್ನತಿ ಮಾಡಿದ್ದಾರೆ. ಎಷ್ಟೊಂದು ಕಟ್ಟಡಗಳನ್ನು ಕಟ್ಟಿಸಿದ್ದಾರೆ! ಮುಂಬರಲಿರುವ ವಿನಾಶವು ಆಸ್ಪತ್ರೆಯಲ್ಲಿ ಬಿದ್ದು ನರಳುವಂತಹ ವಿನಾಶವು ಈಗ ಆಗುವುದಿಲ್ಲ, ಏಕೆಂದರೆ ಆಸ್ಪತ್ರೆ ಇತ್ಯಾದಿಗಳು ಇರುವುದೇ ಇಲ್ಲ. ಆದ್ದರಿಂದ ಭೂಕಂಪವೂ ಜೊತೆ ಕೊಡುತ್ತದೆ. ಪ್ರಾಕೃತಿಕ ವಿಕೋಪಗಳನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಇದೆಲ್ಲವೂ ಈಶ್ವರನ ಕೈಯಲ್ಲಿದೆ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ವಿನಾಶವಂತೂ ಆಗಲೇಬೇಕಾಗಿದೆ, ಬರಗಾಲ ಬರುವುದು, ನೀರೂ ಸಹ ಸಿಗುವುದಿಲ್ಲ... ಅದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಯಾವುದೇ ಹೊಸ ಮಾತಿಲ್ಲ. ಕಲ್ಪದ ಮೊದಲೂ ಸಹ ಇದೇ ರೀತಿ ಆಗಿತ್ತು. ಕಲ್ಪದ ಜ್ಞಾನವು ಯಾರಲ್ಲಿಯೂ ಇಲ್ಲ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಸ್ವರ್ಗವಿತ್ತೆಂದು ಹೇಳುತ್ತಾರೆ ಮತ್ತೆ ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ. ಇದರ ಕಡೆ ಯಾರದೂ ಗಮನ ಹರಿಯುವುದಿಲ್ಲ. ಕೇವಲ ಕೇಳಿಸಿಕೊಂಡು ತಮ್ಮ ಉದ್ಯೋಗ-ವ್ಯವಹಾರಗಳಲ್ಲಿ ತೊಡಗಿ ಬಿಡುತ್ತಾರೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಈಗ ಬೇಗ ಬೇಗ ಪುರುಷಾರ್ಥ ಮಾಡಿ ನೆನಪಿನಲ್ಲಿರಿ ಆಗಲೇ ತುಕ್ಕು ಬಿಡುತ್ತಾ ಹೋಗುವುದು. ನೀವು ಇಲ್ಲಿಯೇ ಸತೋಪ್ರಧಾನರಾಗಬೇಕಾಗಿದೆ ಇಲ್ಲದಿದ್ದರೆ ಶಿಕ್ಷೆಗಳನ್ನನುಭವಿಸಿ ತಮ್ಮ-ತಮ್ಮ ಧರ್ಮಗಳಲ್ಲಿ ಹೋಗುತ್ತೀರಿ. ಶ್ರೀಮತವು ಭಗವಂತನಿಂದ ಸಿಗುತ್ತದೆ. ಶ್ರೀಕೃಷ್ಣನಂತೂ ರಾಜಕುಮಾರನಾಗಿದ್ದಾನೆ. ಕೃಷ್ಣನು ಯಾರಿಗೇನು ಮತ ಕೊಡುವನು! ಈ ಮಾತುಗಳನ್ನು ಪ್ರಪಂಚದವರು ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಯನ್ನು ನೆನಪು ಮಾಡಿ ಎಂದು ಪ್ರೀತಿಯಿಂದ ತಿಳಿಸಬೇಕಾಗಿದೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಅವರು ಕಲ್ಯಾಣಕಾರಿಯಾಗಿದ್ದಾರೆ, ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬರ ಸಂಗವನ್ನು ಸೇರಬೇಕಾಗಿದೆ, ನೀವು ಭಾರತದ ದೋಣಿಯನ್ನು ಪಾರು ಮಾಡುವವರಾಗಿದ್ದೀರಿ. ಸತ್ಯ ನಾರಾಯಣನ ಕಥೆಯು ಭಾರತದೊಂದಿಗೆ ಸಂಬಂಧ ಪಟ್ಟಿದೆ. ಅನ್ಯ ಧರ್ಮದವರು ಎಂದೂ ಸತ್ಯ ನಾರಾಯಣನ ಕಥೆಯನ್ನು ಹೇಳುವುದಿಲ್ಲ, ಯಾರು ನರನಿಂದ ನಾರಾಯಣನಾಗುವ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿರುವರೋ ಅವರೇ ಇದನ್ನು ಕೇಳುತ್ತಾರೆ, ಅವರೇ ಅಮರ ಕಥೆಯನ್ನು ಕೇಳುತ್ತಾರೆ. ಅಮರ ಲೋಕದಲ್ಲಿ ದೇವಿ-ದೇವತೆಗಳಿದ್ದರು ಅಂದಮೇಲೆ ಅವಶ್ಯವಾಗಿ ಅಮರಲೋಕದಲ್ಲಿ ಅಮರ ಕಥೆಯಿಂದಲೇ ಈ ಪದವಿಯನ್ನು ಪಡೆದಿರಬೇಕು. ಒಂದೊಂದು ನೆನಪು ಮಾಡಿಕೊಳ್ಳುವಂತದ್ದಾಗಿದೆ. ಒಂದು ಮಾತು ಬುದ್ಧಿಯಲ್ಲಿ ಚೆನ್ನಾಗಿ ಕುಳಿತುಕೊಂಡರೂ ಸಹ ಮತ್ತೆಲ್ಲವೂ ಬಂದು ಬಿಡುತ್ತದೆ. ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕಾಗಿದೆ. ಶಿವ ತಂದೆಯ ಜೊತೆ ಇಲ್ಲಿ ಪಾತ್ರವನ್ನಭಿನಯಿಸುತ್ತಿದ್ದೀರಿ ನಂತರ ಹಿಂತಿರುಗಿ ಹೋಗಬೇಕಾಗಿದೆ.
ಸತ್ಯವೇನು, ಅಸತ್ಯವೇನು ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಒಬ್ಬರೇ ಸತ್ಯವಾಗಿದ್ದಾರೆ, ಉಳಿದೆಲ್ಲವೂ ಅಸತ್ಯವಾಗಿದೆ. ಲಂಕೆಯಲ್ಲಿ ರಾವಣನಿದ್ದನು, ಇದು ಒಬ್ಬರ ಮಾತೇನು? ಸತ್ಯ-ತ್ರೇತಾಯುಗದಲ್ಲಂತೂ ಇಂತಹ ಮಾತುಗಳಿರುವುದಿಲ್ಲ. ಈ ಇಡೀ ಮನುಷ್ಯರ ಪ್ರಪಂಚವೇ ಲಂಕೆಯಾಗಿದೆ, ಇದು ರಾವಣ ರಾಜ್ಯವಾಗಿದೆ. ಎಲ್ಲಾ ಸೀತೆಯರು ಒಬ್ಬ ರಾಮನನ್ನು ನೆನಪು ಮಾಡುತ್ತಾರೆ ಅಥವಾ ಎಲ್ಲಾ ಭಕ್ತಿನಿಯರು, ಪ್ರಿಯತಮೆಯರು. ಒಬ್ಬ ಭಗವಂತ ಪ್ರಿಯತಮನನ್ನು ನೆನಪು ಮಾಡುತ್ತಾರೆ ಏಕೆಂದರೆ ರಾವಣ ರಾಜ್ಯವಾಗಿದೆ. ಸನ್ಯಾಸಿಗಳು ಈ ಮಾತುಗಳನ್ನು ತಿಳಿದುಕೊಳ್ಳುವುದಿಲ್ಲ. ಎಲ್ಲರೂ ದುಃಖಿಯಾಗಿದ್ದಾರೆ, ಶೋಕವಾಟಿಕೆಯಲ್ಲಿದ್ದಾರೆ, ಕಲಿಯುಗವು ಶೋಕವಾಟಿಕೆಯಾಗಿದೆ, ಸತ್ಯಯುಗವು ಅಶೋಕವಾಟಿಕೆಯಾಗಿದೆ. ಇಲ್ಲಂತೂ ಹೆಜ್ಜೆ ಹೆಜ್ಜೆಯಲ್ಲಿ ದುಃಖ, ಶೋಕವಿದೆ. ತಂದೆಯು ನಿಮ್ಮನ್ನು ಅಶೋಕ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ. ಇಲ್ಲಂತೂ ಮನುಷ್ಯರು ಎಷ್ಟೊಂದು ಶೋಕಿಸುತ್ತಾರೆ. ಯಾರಾದರೂ ಮರಣ ಹೊಂದಿದರೆ ಹೇಗೆ ಹುಚ್ಛರಾಗಿ ಬಿಡುತ್ತಾರೆ. ಸ್ವರ್ಗದಲ್ಲಂತೂ ಇವೆಲ್ಲಾ ಮಾತುಗಳಿರುವುದೇ ಇಲ್ಲ. ಸ್ತ್ರೀ ವಿಧವೆಯಾಗಲು ಅಲ್ಲೆಂದೂ ಅಕಾಲ ಮೃತ್ಯುವಾಗುವುದಿಲ್ಲ. ಅಲ್ಲಂತೂ ಸಮಯದಲ್ಲಿ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಸ್ತ್ರೀ ಅಥವಾ ಪುರುಷನ ಶರೀರವನ್ನು ಪಡೆಯುತ್ತಾರೆಂದರೆ ಅದೂ ಸಹ ಸಾಕ್ಷಾತ್ಕಾರವಾಗುವುದು. ಕೊನೆಯಲ್ಲಿ ಯಾರ್ಯಾರು ಏನೇನಾಗುತ್ತಾರೆ ಎಂಬುದೆಲ್ಲವೂ ಅರ್ಥವಾಗುತ್ತದೆ. ಮತ್ತೆ ಆ ಸಮಯದಲ್ಲಿ ನಾವು ಇಷ್ಟು ಸಮಯ ಪರಿಶ್ರಮ ಪಡಲಿಲ್ಲ ಎಂದು ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಹೇಳುವುದರಿಂದೇನು ಲಾಭ? ಸಮಯವಂತೂ ಕಳೆದು ಹೋಯಿತಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪರಿಶ್ರಮ ಪಡಿ. ಸರ್ವೀಸಿನಲ್ಲಿ ಸತ್ಯವಾದ ಬಲ ಭುಜಗಳಾಗಿ ಆಗ ರಾಜಧಾನಿಯಲ್ಲಿ ಬಂದು ಬಿಡುತ್ತೀರಿ. ಸರ್ವೀಸಿನಲ್ಲಿ ತೊಡಗಿರಿ. ಹೇಗೆ ಕೆಲವರು ಮಾದರಿಯಾಗಿದ್ದಾರಲ್ಲವೆ - ಇಡೀ ಕುಟುಂಬವೇ ಸರ್ವೀಸಿನಲ್ಲಿ ತೊಡಗಿದ್ದಾರೆ. ಈ ಕುಟುಂಬದವರು ಇಂತಹ ಒಳ್ಳೆಯ ಕರ್ಮ ಮಾಡಿದ್ದಾರೆ ಎಲ್ಲರೂ ಈಶ್ವರೀಯ ಸೇವೆಯಲ್ಲಿ ತೊಡಗಿದ್ದಾರೆಂದು ಹೇಳುತ್ತಾರಲ್ಲವೆ. ತಂದೆ, ತಾಯಿ, ಮಕ್ಕಳು..... ಹೀಗೆ ಎಲ್ಲರೂ ಸೇವೆಯಲ್ಲಿ ತೊಡಗುವುದು ಒಳ್ಳೆಯದೇ ಅಲ್ಲವೆ. ಸರ್ವೀಸಿನ ಹಿಂದೆ ಸುತ್ತುತ್ತಿರುತ್ತಾರೆ. ನೀವು ಮಕ್ಕಳಿಗೆ ಬಹಳ ಉಲ್ಲಾಸವಿರಬೇಕು - ಮನುಷ್ಯರಿಗೆ ಹೇಗೆ ಮಾರ್ಗವನ್ನು ತಿಳಿಸುವುದು, ಯಾವುದರಿಂದ ಅವರ ಆತ್ಮವು ಖುಷಿಯಾಗಲಿ? ಎಷ್ಟು ಮಂದಿಗೆ ಮಾರ್ಗವನ್ನು ತಿಳಿಸುತ್ತೀರೋ ಅಷ್ಟು ನೀವು ಪ್ರಜೆಗಳನ್ನು ಮಾಡಿಕೊಂಡಿರಿ. ಬೀಜ ಬಿತ್ತಿದರಲ್ಲವೆ. ಯಾರೂ ಜನ್ಮ ಪಡೆದ ಕೂಡಲೇ ರಾಜನಾಗುವುದಿಲ್ಲ. ಮೊದಲು ಪ್ರಜೆಗಳ ಅಧಿಕಾರಿಯಾಗುತ್ತಾರೆ ನಂತರ ಪುರುಷಾರ್ಥ ಮಾಡುತ್ತಾ-ಮಾಡುತ್ತಾ ಹೇಗಿದ್ದವರು ಏನಾಗಿ ಬಿಡುತ್ತಾರೆ! ನೀವು ಸೇವೆಯಲ್ಲಿ ತೊಡಗಿರುವುದನ್ನು ನೋಡಿ ಅನ್ಯರಿಗೂ ಸಹ ನಾವೇಕೆ ಇಂತಹ ಪುರುಷಾರ್ಥ ಮಾಡಬಾರದು ಎಂದು ಉಮ್ಮಂಗ ಬರುತ್ತದೆ. ಇಲ್ಲದಿದ್ದರೆ ಕಲ್ಪ-ಕಲ್ಪವೂ ಇದೇ ಗತಿಯಾಗುವುದು. ಅನೇಕರು ಬರುತ್ತಾರೆ, ಪಶ್ಚಾತ್ತಾಪ ಪಡುತ್ತಾರೆ. ಆ ಸಮಯದಲ್ಲಿ ಇರುವಂತಹ ದುಃಖವನ್ನು ಮನುಷ್ಯರು ಇಡೀ ಜೀವನದಲ್ಲಿ ಎಂದೂ ನೋಡಿರುವುದಿಲ್ಲ. ಶ್ರೀಮತದಂತೆ ನಡೆಯದ ಕಾರಣ ಅಂತಿಮದಲ್ಲಿ ಇಂತಹ ದುಃಖವನ್ನು ನೋಡುತ್ತಾರೆ, ಅದರ ಮಾತೇ ಕೇಳಬೇಡಿ! ಏಕೆಂದರೆ ಅನೇಕ ವಿಕರ್ಮಗಳನ್ನು ಮಾಡಿದ್ದಾರೆ. ತಂದೆಯು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಅನ್ಯರಿಗೂ ಈ ಮಾರ್ಗವನ್ನು ತಿಳಿಸಿರಿ.
ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ. ಹೇಗೆ ಕ್ರಿಶ್ಚಿಯನ್ ಧರ್ಮದ ಮನುಷ್ಯರು, ಇಸ್ಲಾಮಿ ಧರ್ಮದ ಮನುಷ್ಯರಿದ್ದಾರೆಯೋ ಹಾಗೆಯೇ ಇವರೂ ಇದ್ದಾರೆ. ಇವರು ಎಲ್ಲರಿಗಿಂತ ಪವಿತ್ರರಾಗಿದ್ದಾರೆ. ಇಂತಹ ಧರ್ಮವು ಮತ್ತ್ಯಾವುದೂ ಇಲ್ಲ. ಅರ್ಧಕಲ್ಪ ನೀವು ಪವಿತ್ರರಾಗಿರುತ್ತೀರಿ, ಸ್ವರ್ಗ ಮತ್ತು ನರಕವೆಂದು ಗಾಯನವಿದೆ. ಸ್ವರ್ಗವೆಂದು ಯಾವುದಕ್ಕೆ ಹೇಳುತ್ತಾರೆ ಎಂಬುದನ್ನೂ ತಿಳಿದುಕೊಂಡಿಲ್ಲ. ತಂದೆಯು ಭಾರತದಲ್ಲಿಯೇ ಬಂದು ಮಕ್ಕಳನ್ನು ಜಾಗೃತಗೊಳಿಸುತ್ತಾರೆ. 5000 ವರ್ಷಗಳ ಮಾತಾಗಿದೆ. ಯಾರು ಸ್ವರ್ಗವಾಸಿಗಳಾಗಿದ್ದರೋ ಅವರೇ ಈಗ ನರಕವಾಸಿಗಳಾಗಿದ್ದಾರೆ ಪುನಃ ತಂದೆಯು ಬಂದು ಪಾವನ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಒಬ್ಬ ಪ್ರಿಯತಮನನ್ನು ಬಂದು ಎಲ್ಲಾ ಪ್ರಿಯತಮೆಯರನ್ನು ತನ್ನ ಅಶೋಕವಾಟಿಕೆಗೆ ಕರೆದುಕೊಂಡು ಹೋಗುತ್ತಾರೆ ಅಂದಾಗ ಮೊಟ್ಟ ಮೊದಲು ಎಲ್ಲರಿಗೆ ಇದನ್ನೇ ಹೇಳಿರಿ - ತಂದೆಯನ್ನು ನೆನಪು ಮಾಡಿ. ಇಲ್ಲದಿದ್ದರೆ ಇಲ್ಲಿ ಕುಳಿತು-ಕುಳಿತಿದ್ದಂತೆಯೇ ಬುದ್ಧಿಯು ಎಲ್ಲೆಲ್ಲಿಯೋ ಅಲೆಯುತ್ತಿರುತ್ತದೆ. ಭಕ್ತಿಮಾರ್ಗದಲ್ಲಿಯೂ ಇದೇರೀತಿ ಆಗುತ್ತದೆ. ಈ ಬ್ರಹ್ಮಾ ತಂದೆಯು ಅನುಭವಿಯಲ್ಲವೆ. ಎಲ್ಲದಕ್ಕಿಂತ ಒಳ್ಳೆಯ ವ್ಯಾಪಾರವು ವಜ್ರ ವ್ಯಾಪಾರವಾಗಿದೆ, ಅದರಲ್ಲಿ ಸತ್ಯ ವಜ್ರ ಅಥವಾ ನಕಲಿ ಎಂಬುದನ್ನು ಬಹಳ ಕಷ್ಟದಿಂದ ತಿಳಿದುಕೊಳ್ಳುತ್ತಾರೆ. ಇಲ್ಲಿಯೂ ಸಹ ಸತ್ಯವು ಮರೆಯಾಗಿದೆ, ಸುಳ್ಳೇ ಸುಳ್ಳು ನಡೆಯುತ್ತಿರುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವೆಲ್ಲರೂ ಡ್ರಾಮಾದ ಪಾತ್ರಧಾರಿಗಳಾಗಿದ್ದೇವೆ, ಇದರಲ್ಲಿ ಯಾರೂ ಬಿಡುಗಡೆಯಾಗಲು ಸಾಧ್ಯವಿಲ್ಲ, ಯಾರೂ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ವಿವೇಕದಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಪಾತ್ರದಲ್ಲಿ ನಡೆಯುತ್ತಲೇ ಹೋಗುತ್ತಾರೆ. ಮತ್ತೆ ಕಲ್ಪದ ನಂತರ ಅದೇ ಪಾತ್ರವನ್ನು ಪುನರಾವರ್ತನೆ ಮಾಡುತ್ತಾರೆ. ಹೇಗೆ ಮನುಷ್ಯರು ಸಾಯುತ್ತಾರೆ, ವಿನಾಶವಾಗುತ್ತದೆ ಎಂಬುದನ್ನು ನೀವು ನೋಡುತ್ತೀರಿ, ಎಲ್ಲಾ ಆತ್ಮರು ನಿರ್ವಾಣಧಾಮಕ್ಕೆ ಹೊರಟು ಹೋಗುತ್ತಾರೆ. ಇದು ಬುದ್ಧಿಯಲ್ಲಿ ಜ್ಞಾನವಿದೆ. ಸರ್ವೀಸಿನಲ್ಲಿ ತೊಡಗಿದ್ದರೆ ಅನೇಕರ ಕಲ್ಯಾಣವಾಗುವುದು. ಇಡೀ ಪರಿವಾರವೇ ಈ ಜ್ಞಾನದಲ್ಲಿ ತೊಡಗಿ ಬಿಟ್ಟರೆ ಬಹಳ ಅದ್ಭುತವಾಗಿ ಬಿಡುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅಂತಿಮದ ಭಯಾನಕ ದೃಶ್ಯದಿಂದ ಹಾಗೂ ದುಃಖಗಳಿಂದ ಮುಕ್ತರಾಗಲು ಈಗಿನಿಂದಲೇ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ, ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆಯಲ್ಲಿ ಶ್ರೀಮತದಂತೆ ಮಾಡಬೇಕಾಗಿದೆ.
2. ಸರ್ವೀಸಿನಲ್ಲಿ ತಂದೆಗೆ ಬಲ ಭುಜಗಳಾಗಬೇಕಾಗಿದೆ. ಆತ್ಮವನ್ನು ಖುಷಿ ಪಡಿಸುವ ಮಾರ್ಗವನ್ನು ತಿಳಿಸಬೇಕಾಗಿದೆ. ಎಲ್ಲರ ಕಲ್ಯಾಣ ಮಾಡಬೇಕಾಗಿದೆ.
ಓಂ ಶಾಂತಿ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಅವಿನಾಶಿ ಯಾತ್ರೆ ಅಥವಾ ಆತ್ಮಿಕ ಯಾತ್ರೆಯಲ್ಲಿ ಹೋಗುತ್ತಿದ್ದೇವೆ. ಯಾವ ಯಾತ್ರೆಯಿಂದ ನಾವು ಹಿಂತಿರುಗಿ ಮತ್ತೆ ಇದೇ ಮೃತ್ಯುಲೋಕದಲ್ಲಿ ಬರುವುದಿಲ್ಲ, ಮನುಷ್ಯರಂತೂ ಈ ಮಾತುಗಳನ್ನು ಅರಿತುಕೊಂಡೇ ಇಲ್ಲ - ಇಂತಹ ಯಾತ್ರೆಯೂ ಒಂದು ಇರುತ್ತದೆ ಎಲ್ಲಿಂದ ಮತ್ತೆ ಹಿಂತಿರುಗಿ ಬರಬೇಕಾಗುವುದಿಲ್ಲ. ನೀವು ಭಾಗ್ಯಶಾಲಿ ನಕ್ಷತ್ರಗಳಿಗೆ ಈಗ ಅರ್ಥವಾಗಿದೆ. ಇದನ್ನು ಪಕ್ಕಾ ನೆನಪು ಮಾಡಿಕೊಳ್ಳಬೇಕಾಗಿದೆ. ನಾವಾತ್ಮರು ಪಾತ್ರವನ್ನಭಿನಯಿಸುತ್ತೇವೆ. ನಾನಾತ್ಮನು ಈ ವಸ್ತ್ರವನ್ನು ಧರಿಸಿ ಪಾತ್ರವನ್ನಭಿನಯಿಸಿದೆನು, ಈಗ ಮನೆಗೆ ಹೋಗುತ್ತೇವೆಂದು ಆ ನಾಟಕದಲ್ಲಿ ಹೇಳುವುದಿಲ್ಲ. ಅವರಂತೂ ತಮ್ಮನ್ನು ಶರೀರವೆಂದೇ ತಿಳಿದುಕೊಳ್ಳುತ್ತಾರೆ. ಇಲ್ಲಿ ನೀವು ಮಕ್ಕಳಿಗೆ ಜ್ಞಾನವಿದೆ - ನಾವಾತ್ಮರಾಗಿದ್ದೇವೆ, ಈ ಶರೀರರೂಪಿ ವಸ್ತ್ರವನ್ನು ಬಿಟ್ಟು ಹೋಗಿ ಇನ್ನೊಂದನ್ನು ತೆಗೆದುಕೊಳ್ಳುತ್ತೇವೆ. ಇದು 84 ಜನ್ಮಗಳ ಹಳೆಯ ವಸ್ತ್ರವಾಗಿದೆ. ಇದನ್ನು ಬಿಟ್ಟು ಹೊಸ ಪ್ರಪಂಚದಲ್ಲಿ ಹೊಸ ವಸ್ತ್ರವನ್ನು ಧರಿಸುತ್ತೇವೆ. ಈ ಲಕ್ಷ್ಮೀ-ನಾರಾಯಣರು ಹೊಸ ವಸ್ತ್ರವನ್ನು (ಶರೀರ) ಧರಿಸಿದ್ದಾರಲ್ಲವೆ. ನಿಮ್ಮ ರಾಜಧಾನಿಯವರೇ ಆಗಿದ್ದಾರೆ, ನೀವೂ ಸಹ ಹೋಗಿ ಇಂತಹ ಹೊಸ ದೈವೀ ವಸ್ತ್ರವನ್ನು ಧರಿಸುತ್ತೀರಿ, ಇಲ್ಲಂತೂ ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ತಂದೆಯೇ ಪುನಃ ಇಂತಹ ಗುಣವಂತರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನದೂ ಪಾತ್ರವಿದೆ, ನಾನು ಬಂದು ಪುನಃ ನಿಮ್ಮನ್ನು ನಿರ್ವಿಕಾರಿಗಳನ್ನಾಗಿ ಮಾಡುತ್ತೇನೆ. ಇಲ್ಲಿ ಇದು ಜೀವನ ಬಂಧನ ಧಾಮವಾಗಿದೆ, ರಾವಣ ರಾಜ್ಯವಾಗಿದೆ. ನಾವು ಪತಿತರಿಂದ ಪಾವನರು ಮತ್ತೆ ಪಾವನರಿಂದ ಪತಿತರು ಹೇಗಾಗುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ, ನಿಮಗೆ ತಿಳಿದಿದೆ - ಕಲಿಯುಗವು ಅಂಧಕಾರವಾಗಿದೆ. ಈಗ ರಾವಣ ರಾಜ್ಯದ ಅಂತ್ಯವಾಗಿದೆ, ರಾಮ ರಾಜ್ಯದ ಆದಿಯಾಗುವುದಿದೆ. ಈಗ ಸಂಗಮವಾಗಿದೆ. ಕಲ್ಪದ ಸಂಗಮಯುಗದಲ್ಲಿಯೇ ತಂದೆಯು ಬರಬೇಕಾಗುತ್ತದೆ. ಪ್ರಪಂಚದವರೂ ಸಹ ಈಗ ಇದನ್ನು ತಿಳಿದುಕೊಳ್ಳುತ್ತಿದ್ದಾರೆ - ಈಗ ವಿನಾಶದ ಸಮಯವಾಗಿದೆ ಮತ್ತು ಸ್ಥಾಪನಾರ್ಥವಾಗಿ ಭಗವಂತನು ಎಲ್ಲಿಯೋ ಗುಪ್ತ ವೇಷದಲ್ಲಿದ್ದಾರೆ ಎಂದು. ಈಗ ಗುಪ್ತ ವೇಶದಲ್ಲಿ ನೀವಾತ್ಮರೂ ಇದ್ದೀರಿ. ಆತ್ಮವೇ ಬೇರೆ, ಶರೀರವೇ ಬೇರೆಯಾಗಿದೆ. ಈ ಮನುಷ್ಯ ಶರೀರವು ಗುಪ್ತ ವೇಷವಾಗಿದೆ. ತಂದೆಯೂ ಇದರಲ್ಲಿ ಬರಬೇಕಾಗಿದೆ. ನಿಮ್ಮ ಶರೀರಕ್ಕೇ ಹೆಸರನ್ನು ಇಡಲಾಗುತ್ತದೆ, ತಂದೆಗಂತೂ ಶರೀರವಿಲ್ಲ. ನೀವೂ ಆತ್ಮರಾಗಿದ್ದೀರಿ, ಅವರೂ ಆತ್ಮರಾಗಿದ್ದಾರೆ. ಆತ್ಮಕ್ಕೆ ಆತ್ಮನ ಜೊತೆ ಮೋಹವುಂಟಾಗಿದೆ. ಅನ್ಯ ಸಂಗಗಳನ್ನು ಬಿಟ್ಟು ನಿಮ್ಮ ಸಂಗವನ್ನು ಸೇರುವೆನು, ಹೇಗೆ ನೀವು ಮೋಹಜೀತರಾಗಿದ್ದೀರೋ ಹಾಗೆಯೇ ನಾವೂ ಆಗುತ್ತೇವೆ ಎಂದು ಹಾಡುತ್ತಾರೆ. ತಂದೆಯು ಬಹಳ ಮೋಹಜೀತನಾಗಿದ್ದಾರೆ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಯಾರು ಕಾಮ ಚಿತೆಯನ್ನೇರಿ ಸುಟ್ಟು ಕಪ್ಪಾಗಿದ್ದಾರೆ. ಪರಮಪಿತ ಪರಮಾತ್ಮನು ಹಳೆಯ ಪ್ರಪಂಚದ ವಿನಾಶ ಮಾಡಿಸುವುದಕ್ಕಾಗಿಯೇ ಬರುತ್ತಾರೆ ಅಂದಮೇಲೆ ಅವರಿಗೆ ಮೋಹವೆಲ್ಲಿದೆ! ಯಾವಾಗ ಪತಿತರ ವಿನಾಶವಾಗುವುದೋ ಆಗಲೇ ಶಾಂತಿಯ ರಾಜ್ಯವು ಸ್ಥಾಪನೆಯಾಗುವುದು. ಈ ಸಮಯದಲ್ಲಿ ಸುಖವಂತೂ ಯಾರಿಗೂ ಇಲ್ಲ, ಎಲ್ಲರೂ ತಮೋಪ್ರಧಾನ, ದುಃಖಿಯಾಗಿ ಬಿಟ್ಟಿದ್ದಾರೆ, ಇದು ಪತಿತ ಪ್ರಪಂಚವಾಗಿದೆ. ಶಿವ ತಂದೆಯೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಅದಕ್ಕೆ ಶಿವಾಲಯವೆಂದು ಹೆಸರಿದೆ. ಶಿವ ತಂದೆಯು ದೇವತೆಗಳ ರಾಜಧಾನಿಯನ್ನು ಸ್ಥಾಪನೆ ಮಾಡಿದರು, ಅದು ಚೈತನ್ಯ ಶಿವಾಲಯವಾಗಿದೆ ಮತ್ತು ಈ ಶಿವಾಲಯ ಯಾವುದರಲ್ಲಿ ಶಿವನ ಚಿತ್ರವಿರುವುದೋ ಅದಂತೂ ಜಡವಾಗಿದೆ. ನೀವೀಗ ತಿಳಿದುಕೊಂಡಿದ್ದೀರಿ - ಲಕ್ಷ್ಮೀ-ನಾರಾಯಣರು ಅವಶ್ಯವಾಗಿ ಸ್ವರ್ಗದ ಮಾಲೀಕರಾಗಿದ್ದರು, ಪೂಜ್ಯರಾಗಿದ್ದರು. ಈಗ ಪುನಃ ಪೂಜ್ಯರಾಗುತ್ತಿದ್ದಾರೆ. ಈಗ ನಿಮಗೆ ಜ್ಞಾನವಿದೆ, ನೀವು ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋಗಿ ಅವರಿಗೆ ತಲೆ ಬಾಗುವುದಿಲ್ಲ. ನೀವಂತೂ ಚೈತನ್ಯದಲ್ಲಿ ಅವರ ರಾಜಧಾನಿಯಲ್ಲಿ ಹೋಗುತ್ತೀರಿ. ನಿಮಗೆ ತಿಳಿದಿದೆ - ನಾವು ದೇವತೆಗಳಾಗಿದ್ದೆವು ಈಗ ಇಲ್ಲ. ಯಾರು ಇದ್ದು ಹೋದರೋ ಅವರ ಚಿತ್ರಗಳು ರಚಿಸಲ್ಪಡುತ್ತವೆ. ಎಲ್ಲರಿಗಿಂತ ಹೆಚ್ಚಿನದಾಗಿ ಬಿರ್ಲಾದವರು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಾರೆ ಆದ್ದರಿಂದ ಅವರಿಗೂ ಹೋಗಿ ತಿಳಿಸಬೇಕು - ನೀವು ಯಾವ ಲಕ್ಷ್ಮೀ-ನಾರಾಯಣರ ಮಂದಿರವನ್ನು ಕಟ್ಟಿಸುತ್ತೀರಿ, ಇವರ 84 ಜನ್ಮಗಳ ಕಥೆಯನ್ನು ನಾವು ನಿಮಗೆ ತಿಳಿಸುತ್ತೇವೆ. ಯುಕ್ತಿಯಿಂದ ಈ ಉಡುಗೊರೆ ಕೊಡಬೇಕಾಗಿದೆ. ತಂದೆಯು ಸರ್ವೀಸಿನ ಯುಕ್ತಿಗಳನ್ನು ತಿಳಿಸುತ್ತಾರೆ. ಮಾತೆಯರು ಹೋಗಿ ತಿಳಿಸಿ - ತಾವು ಅವರ ಮಂದಿರವನ್ನಂತೂ ಕಟ್ಟಿಸುತ್ತೀರಿ ಆದರೆ ಅವರ ಜೀವನದ ಕಥೆಯನ್ನು ತಿಳಿದುಕೊಂಡಿಲ್ಲ, ನಾವು ತಿಳಿದುಕೊಂಡಿದ್ದೇವೆ ಮತ್ತು ತಿಳಿಸಿಕೊಡುತ್ತೇವೆ. ಹೀಗೆ ತಿಳಿಸಿಕೊಡುವವರು ಬಹಳ ಜಾಣ್ಮೆ ಹೊಂದಿರುವವರಾಗಿರಬೇಕು. ತಂದೆಯೂ ಸಹ ಕುಳಿತು ತಿಳಿಸುತ್ತಾರಲ್ಲವೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ಅನುಮತಿ ಸಿಗಲಿಲ್ಲವೆಂದರೆ ಮನೆಯಲ್ಲಿ ಕುಳಿತುಕೊಂಡೇ ನೆನಪು ಮಾಡಿ. ನಾವು ಶಿವ ತಂದೆಯ ಸಂತಾನರಾಗಿದ್ದೇವೆ ಎಂಬುದನ್ನಂತೂ ತಿಳಿದುಕೊಂಡಿದ್ದೀರಿ ಅಂದಮೇಲೆ ಮುರುಳಿಯಂತೂ ಎಲ್ಲಿ ಬೇಕಾದರೂ ಸಿಗುತ್ತದೆ. ಇಲ್ಲಿ ಬಂದಾಗ ನೆನಪಿನ ಯಾತ್ರೆಯು ಚೆನ್ನಾಗಿರುತ್ತದೆ, ಮನೆಯಲ್ಲಿ ಕುಳಿತುಕೊಂಡಾಗ ನೆನಪಿನ ಯಾತ್ರೆಯು ಕಡಿಮೆಯಾಗಿ ಬಿಡುತ್ತದೆ ಎಂದಲ್ಲ. ಮೋಡಗಳು ರಿಫ್ರೆಷ್ ಆಗಲು ಬರುತ್ತವೆ, ನೀವೂ ಸಹ ತಂದೆಯ ಸನ್ಮುಖದಲ್ಲಿ ಹೋಗೋಣವೆಂದು ರಿಫ್ರೆಷ್ ಆಗಲು ಬರುತ್ತೀರಿ. ಆತ್ಮಕ್ಕೆ ಜ್ಞಾನವಿದೆ, ಸನ್ಮುಖದಲ್ಲಿ ಕೇಳುವುದು ಬಹಳ ಚೆನ್ನಾಗಿರುತ್ತದೆ. ಅದೇ ಮಾತುಗಳೇ ಆಗಿವೆ ಆದರೆ ನೋಡುತ್ತೀರಿ, ಶಿವ ತಂದೆಯು ಹೇಗೆ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - “ಮಕ್ಕಳೇ, ನೀವು ನನ್ನವರಾಗಿದ್ದೀರಿ”, ನೀವು 84 ಜನ್ಮಗಳ ಪಾತ್ರವನ್ನಭಿನಯಿಸಿದ್ದೀರಿ, ನೀವು ಜನನ-ಮರಣದಲ್ಲಿ ಬರುತ್ತೀರಿ, ನಾನು ಬರುವುದಿಲ್ಲ, ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಅಜನ್ಮನೂ ಅಲ್ಲ, ಬರುತ್ತೇನೆ ಆದರೆ ವೃದ್ಧನ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ನೀವಾತ್ಮರು ಚಿಕ್ಕ ಮಗುವಿನ ಶರೀರದಲ್ಲಿ ಪ್ರವೇಶ ಮಾಡುತ್ತೀರಿ, ನಾನು ಪರಮಧಾಮದಿಂದ ಕೆಳಗೆ ಪಾತ್ರವನ್ನು ಅಭಿನಯಿಸಲು ಬರುತ್ತೇನೆ ಆದರೆ ನಾನು ವಿಕಾರಿಯ ಗರ್ಭದಲ್ಲಿ ಬರುವುದಿಲ್ಲ. ತ್ವಮೇವ ಮಾತಾಶ್ಚ ಪಿತಾ.... ಎಂದು ಹೇಳುತ್ತೀರಿ. ನನಗೆ ಯಾವುದೇ ತಂದೆ, ತಾಯಿಯಿಲ್ಲ. ನಾನು ಕೇವಲ ಶರೀರದ ಆಧಾರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೇನೆ. ದುಃಖವನ್ನು ದೂರ ಮಾಡಿ ಸುಖ ಕೊಡುವುದಕ್ಕಾಗಿ ನೀವು ನನ್ನನ್ನು ಕರೆಯುತ್ತೀರಿ. ಈಗ ನಾನು ಸನ್ಮುಖದಲ್ಲಿ ಬಂದಿದ್ದೇನೆ. ಆತ್ಮಗಳೊಂದಿಗೆ ಮಾತನಾಡುತ್ತಿದ್ದೇನೆ, ಇಲ್ಲಂತೂ ಎಲ್ಲರೂ ಬ್ರಾಹ್ಮಣರೇ ಇದ್ದೀರಿ, ನೀವು ಹೊರಗಡೆ ಹೋಗುತ್ತೀರೆಂದರೆ ಹಂಸ ಮತ್ತು ಕೊಕ್ಕರೆಗಳಾಗಿ ಬಿಡುತ್ತೀರಿ. ಇಲ್ಲಿ (ಮಧುಬನ) ನಿಮಗೆ ಬ್ರಾಹ್ಮಣರ ಸಂಗವೇ ಇದೆ, ಪರಸ್ಪರ ಜ್ಞಾನದ ಚರ್ಚೆಯನ್ನೇ ಮಾಡುತ್ತೀರಿ. ನಾವು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ಬಂದಿದ್ದಾರೆ ಹೀಗೆ ಒಬ್ಬರು ಇನ್ನೊಬ್ಬರಿಗೆ ತಂದೆಯನ್ನು ನೆನಪು ಮಾಡುವ ಈ ಯುಕ್ತಿಯನ್ನು ತಿಳಿಸುತ್ತಾ ಇರಿ. ಭೋಜನದ ಸಮಯದಲ್ಲಿಯೂ ಒಬ್ಬರು ಇನ್ನೊಬ್ಬರಿಗೆ ತಂದೆಯನ್ನು ನೆನಪು ಮಾಡಿ ಎಂದು ಸೂಚನೆ ನೀಡುತ್ತಾ ಇರಿ. ಬಹಳ ದೊಡ್ಡ ಸಂಘಟನೆಯಲ್ಲವೆ. ಅಲ್ಲಂತೂ ವಿಕಾರಿಗಳು ಜೊತೆಯಲ್ಲಿರುತ್ತಾರೆ ಆದ್ದರಿಂದ ಅವರ ಆಕರ್ಷಣೆಯಾಗುತ್ತದೆ. ಇಲ್ಲಂತೂ ಯಾರದೇ ಆಕರ್ಷಣೆಯಾಗುವುದಿಲ್ಲ. ಯೋಧರು ಯೋಧರ ಜೊತೆ ಇರುತ್ತಾರೆ. ನಿಮ್ಮದು ಇದು ಕುಟುಂಬವಾಗಿದೆ. ಬುದ್ಧಿಯಲ್ಲಿ ಇದೇ ಇರುತ್ತದೆ, ಯಾರು ಸಿಕ್ಕಿದರೂ ಸಹ ಅವರಿಗೆ ಭಗವಂತನನ್ನು ನೆನಪು ಮಾಡುತ್ತಾ ಇರಿ ಎಂದು ತಂದೆಯ ಪರಿಚಯ ಕೊಡಿ. ಇಬ್ಬರು ತಂದೆಯರಿದ್ದಾರಲ್ಲವೆ, ಲೌಕಿಕ ತಂದೆಯಿದ್ದರೂ ಸಹ ಭಗವಂತನನ್ನು ನೆನಪು ಮಾಡುತ್ತೀರಲ್ಲವೆ. ಅವರು ಲೌಕಿಕ ತಂದೆಯಾಗಿದ್ದಾರೆ. ಲೌಕಿಕ ತಂದೆಗೆ ಪರಮಪಿತನೆಂದು ಹೇಳುವುದಿಲ್ಲ. ಇವರು ಪಾರಲೌಕಿಕ ತಂದೆಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಪರಮಪಿತನಿಂದಲೇ ಆಸ್ತಿಯು ಸಿಗುವುದು. ಹೀಗೆ ಜ್ಞಾನದ ಭೂ ಭೂ ಮಾಡುತ್ತಾ ಇರಿ. ನೀವು ಬ್ರಾಹ್ಮಣರಲ್ಲವೆ, ಸನ್ಯಾಸಿಗಳೂ ಸಹ ಭೂ ಭೂ ಮಾಡುತ್ತಾರಲ್ಲವೆ. ಈ ಪ್ರಪಂಚದ ಸುಖವು ಕಾಗವಿಷ್ಟ ಸಮಾನವಾಗಿದೆ, ಎಷ್ಟೊಂದು ದುಃಖವಿದೆ. ಅವರಂತೂ ಹಠಯೋಗಿ, ನಿವೃತ್ತಿ ಮಾರ್ಗದವರಾಗಿದ್ದಾರೆ, ಅವರ ಧರ್ಮವೇ ಬೇರೆಯಾಗಿದೆ. ಸತ್ಯಯುಗದಲ್ಲಿ ನಾವು ಎಷ್ಟು ಸುಖಿ, ಪವಿತ್ರರಾಗಿರುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಾರತವು ಪ್ರವೃತ್ತಿ ಮಾರ್ಗದ್ದಾಗಿತ್ತು, ದೇವಿ-ದೇವತೆಗಳ ರಾಜ್ಯವಿತ್ತು, ಯಾರು ಪವಿತ್ರರಾಗಿದ್ದರೋ ಅವರೇ ಪತಿತರಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಿರುತ್ತಾರೆ ಮತ್ತೆ ಪರಮಾತ್ಮನು ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ನಾವು ಹೋಗಿ ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಗುತ್ತೇವೆ ಎಂದು ಹೇಳುತ್ತಾರೆ, ಪುನರ್ಜನ್ಮವನ್ನೂ ಒಪ್ಪುವುದಿಲ್ಲ. ಅನೇಕ ಮತಗಳಿವೆಯಲ್ಲವೆ, ದಿನ-ಪ್ರತಿದಿನ ವೃದ್ದಿಯಾಗುತ್ತಾ ಇರುತ್ತದೆ. ಇದನ್ನೂ ಸಹ ತಿಳಿಸಬೇಕಾಗಿದೆ - ಸನ್ಯಾಸಿಗಳ ವೃದ್ಧಿಯು ಹೇಗೆ ಆಗುತ್ತದೆ? ದಿಗಂಬರರ ವೃದ್ಧಿಯೂ ಆಗುತ್ತದೆ, ಯಾರದು ಯಾವ ಧರ್ಮವಾಗಿದೆಯೋ ಅದರಲ್ಲಿಯೇ ಇರುವುದರಿಂದ ಮತ್ತೆ ಅಂತಿಮ ಗತಿ ಸೋ ಗತಿಯಾಗಿ ಬಿಡುತ್ತದೆ. ಯಾರು ಯಾವುದನ್ನು ಹೆಚ್ಚು ಅಭ್ಯಾಸ ಮಾಡುವರು, ಹೇಗೆ ಕೆಲವರು ಶಾಸ್ತ್ರಗಳನ್ನು ಓದುತ್ತಾರೆಂದರೆ ಅಂತ್ಯಮತಿ ಸೋ ಗತಿ ಮತ್ತು ಬಾಲ್ಯದಲ್ಲಿಯೂ ಶಾಸ್ತ್ರಗಳು ಕಂಠಪಾಠವಾಗಿ ಬಿಡುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನಾನು ಇಂತಹವನಾಗಿದ್ದೇನೆ, ನಾನು ಇದಾಗಿದ್ದೇನೆ.... ಇವೆಲ್ಲಾ ದೇಹಾಭಿಮಾನದ ಮಾತುಗಳನ್ನೂ ಬಿಟ್ಟು ಬಿಡಿ, ತನ್ನನ್ನು ಅಶರೀರಿ ಆತ್ಮನೆಂದು ತಿಳಿಯಿರಿ ಮತ್ತು ತಂದೆಯನ್ನು ನೆನಪು ಮಾಡಿ. ಈ ಶರೀರವನ್ನು ನೋಡಿಯೂ ನೋಡಂತೆ ಇರಿ. ದೇಹ ಸಹಿತವಾಗಿ ದೇಹದ ಯಾವ ಸಂಬಂಧ ಇತ್ಯಾದಿಗಳಿವೆಯೋ ಎಲ್ಲವನ್ನೂ ಬಿಡಿ, ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ, ಪರಮಾತ್ಮನನ್ನು ನೆನಪು ಮಾಡಿ. ಇದರಲ್ಲಿ ಬಹಳ ಸಮಯ ಹಿಡಿಸುತ್ತದೆ. ಮಾಯೆಯು ನೆನಪು ಮಾಡಲು ಬಿಡುವುದಿಲ್ಲ, ಇಲ್ಲದಿದ್ದರೆ ವಾನಪ್ರಸ್ಥಿಗಳಿಗಾಗಿ ಬಹಳ ಸಹಜವಾಗಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ಈಗ ನೀವು ಹಿರಿಯರು, ಕಿರಿಯರು ಎಲ್ಲರದೂ ವಾನಪ್ರಸ್ಥ ಸ್ಥಿತಿಯಾಗಿದೆ. ಒಂದು ಕಡೆ ವಿನಾಶವೂ ಆಗುತ್ತಿರುವುದು, ಇನ್ನೊಂದು ಕಡೆ ಜನ್ಮವನ್ನೂ ಪಡೆಯುತ್ತಿರುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುವುದಿದ್ದರೆ ಬಂದು ಬಿಡುತ್ತಾರೆ, ಮಕ್ಕಳು ಜನ್ಮ ಪಡೆಯುತ್ತಾರೆ ಮತ್ತೆ ವಿನಾಶವಾಗಿ ಬಿಡುತ್ತದೆ. ಇದನ್ನಂತೂ ನೀವು ತಿಳಿದುಕೊಂಡಿರುತ್ತೀರಿ - ಕೆಲವರು ಗರ್ಭದಲ್ಲಿರುತ್ತಾರೆ, ಕೆಲವರು ಕೆಲವೊಂದು ಕಡೆ ಇರುತ್ತಾರೆ ಆದರೆ ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಎಲ್ಲರೂ ತಮ್ಮ ಲೆಕ್ಕಾಚಾರವನ್ನು ಮುಗಿಸಿ ಹಿಂತಿರುಗಿ ಹೋಗುತ್ತಾರೆ. ಲೆಕ್ಕಾಚಾರವು ಉಳಿದುಕೊಂಡಿದ್ದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಮತ್ತೆ ಅವರೂ ಹಗುರವಾಗಿ ಬಿಡುವರು. ಯೋಗದಲ್ಲಿಯೂ ಇದ್ದು ಪಾಪಗಳನ್ನೂ ಮಾಡುತ್ತಿರುವುದಲ್ಲ. ಕೆಲವು ಮಕ್ಕಳು ಒಂದು ಕಡೆ ಚಾರ್ಟನ್ನೂ ಬರೆಯುತ್ತಾರೆ ಮತ್ತೆ ಇನ್ನೊಂದು ಕಡೆ ಬಾಬಾ, ಮಾಯೆಯು ಮುಖ ಕಪ್ಪು ಮಾಡಿ ಬಿಟ್ಟಿತು ಎಂದು ಹೇಳುತ್ತಾರೆ. ಮಾಯೆಯು ಸೋಲಿಸಿತೆಂದರೆ ಅಂತಹವರಿಗೆ ಕಚ್ಚಾ ಎಂದೇ ಹೇಳಲಾಗುತ್ತದೆಯಲ್ಲವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಈ ರೀತಿ ತಿಳಿದುಕೊಳ್ಳಿ - ನಾವು ಇನ್ನು ಸ್ವಲ್ಪ ದಿನಗಳು ಮಾತ್ರವೇ ಇಲ್ಲಿ ಇರುತ್ತೇವೆ ನಂತರ ಹೊರಟು ಹೋಗುತ್ತೇವೆ. ಇವರೆಲ್ಲರ ವಿನಾಶವಾಗುತ್ತದೆ, ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ, ನಾವು ಎಷ್ಟು ಆತ್ಮರಿಗೆ ಮಾರ್ಗವನ್ನು ತಿಳಿಸುತ್ತೇವೆ ಮತ್ತು ಪುರುಷಾರ್ಥ ಮಾಡುತ್ತೇವೆ ಎಂದು ತಮ್ಮ ಚಾರ್ಟನ್ನು ನೋಡಿಕೊಳ್ಳುತ್ತಾ ಇರಿ. ತನು, ಮನ, ಧನದಿಂದ ಆತ್ಮಿಕ ಸೇವೆಯಲ್ಲಿ ಸಹಯೋಗಿಗಳಾಗಬೇಕಾಗಿದೆ. ಮನಸ್ಸನ್ನು ನಿಲ್ಲಿಸಲು ಸಾಧ್ಯವಿಲ್ಲವೆಂದು ಹೇಳುತ್ತಾರೆ. ಆತ್ಮವಂತೂ ಶಾಂತ ಸ್ವರೂಪನಾಗಿದೆ. ನಾನಾತ್ಮನು ಹೋಗಿ ಪರಮಧಾಮದಲ್ಲಿ ಕುಳಿತುಕೊಳ್ಳುವೆನು, ಯಾವುದೇ ಪ್ರಪಂಚದ ಸಂಕಲ್ಪವೂ ಬರುವುದಿಲ್ಲ, ಕಣ್ಣು ಮುಚ್ಚಿಕೊಂಡು ಮೂರ್ಛಿತರಾಗಬೇಕೆಂದಲ್ಲ. ಈ ರೀತಿಯೂ ಅನೇಕರು ಕಲಿಯುತ್ತಾರೆ, 10-15 ದಿನಗಳವರೆಗೆ ಮೂರ್ಛಿತರಾಗಿ ಬಿಡುತ್ತಾರೆ. ಈ ಅಭ್ಯಾಸ ಮಾಡುತ್ತಾರೆ, ನಂತರ ಕೆಲವೊಂದು ದಿನಗಳ ನಂತರ ಜಾಗೃತರಾಗುತ್ತಾರೆ. ಹೇಗೆ ಟೈಂ ಬಾಂಬುಗಳು ಇರುತ್ತವೆಯಲ್ಲವೆ. ಅದಕ್ಕೂ ಸಹ ಇವು ಇಷ್ಟು ಗಂಟೆಗಳಾದ ನಂತರ ಸ್ಫೋಟವಾಗುವುದೆಂದು ಸಮಯವಿರುತ್ತದೆ.
ನೀವು ಮಕ್ಕಳಿಗೆ ತಿಳಿದಿದೆ - ನಾವು ಯೋಗವನ್ನು ಜೋಡಿಸುತ್ತಿದ್ದೇವೆ, ಯಾವಾಗ ತಮೋಪ್ರಧಾನ ಕೊಳಕು ಹೊರಟು ಹೋಗುವುದೋ ಆಗ ನಾವು ಸತೋಪ್ರಧಾನರಾಗಿ ಬಿಡುತ್ತೇವೆ ಮತ್ತು ಈ ಶರೀರವನ್ನೇ ಬಿಟ್ಟು ಬಿಡುತ್ತೇವೆ. ನಾವೀಗ ಯೋಗದ ಯಾತ್ರೆಯಲ್ಲಿದ್ದೇವೆ, ಸಮಯ ಸಿಕ್ಕಿದೆ ನಂತರ ಈ ಶರೀರವನ್ನು ಬಿಡಲೇಬೇಕಾಗಿದೆ ಮತ್ತೆಲ್ಲವೂ ಸಮಾಪ್ತಿಯಾಗಿ ಬಿಡುವುದು. ಡ್ರಾಮಾದಲ್ಲಿ ಸಮಯವು ನಿಶ್ಚಿತವಾಗಿದೆ ಮತ್ತೆ ಅಂತ್ಯದಲ್ಲಿ ಸೊಳ್ಳೆಗಳೋಪಾದಿಯಲ್ಲಿ ಶರೀರಗಳನ್ನು ಬಿಡುತ್ತಾರೆ. ವಿನಾಶವಾಗುವುದು, ನೀವು ಕರ್ಮಾತೀತ ಸ್ಥಿತಿಯನ್ನು ಪಡೆಯುವಿರಿ, ನಂತರ ವಿನಾಶವು ಆರಂಭವಾಗಿ ಬಿಡುವುದು. ವಿನಾಶದ ಬಹಳ ಭಯಂಕರ ದೃಶ್ಯವಿದೆ, ಇದು ಡ್ರಾಮಾದಲ್ಲಿ ಬಹಳ ಭಾರಿ ನೊಂದಾವಣೆಯಿದೆ. ನೀವು ತಿಳಿದುಕೊಂಡಿದ್ದೀರಿ, ಆ ಸಮಯದಲ್ಲಿ ನಮ್ಮ ಸ್ಥಿತಿಯು ಏಕರಸವಾಗಿರುವುದು. ಖುಷಿಯಲ್ಲಿ ಸದಾ ಹರ್ಷಿತರಾಗಿರುತ್ತೀರಿ. ಈ ಪ್ರಪಂಚವಂತೂ ಸಮಾಪ್ತಿಯಾಗಲೇಬೇಕಾಗಿದೆ. ನಿಮಗೆ ತಿಳಿದಿದೆ - ಕಲ್ಪ-ಕಲ್ಪವೂ ಸಂಗಮಯುಗವಾದಾಗ ವಿನಾಶವಾಗುತ್ತದೆ. ಕೇವಲ ಬಾಂಬುಗಳನ್ನು ಪ್ರಾಕೃತಿಕ ವಿಕೋಪಗಳೂ ಸಹ ವಿನಾಶಕ್ಕೆ ಸಹಾಯ ಮಾಡುತ್ತದೆ ಅಂದಾಗ ಮಕ್ಕಳಿಗೆ ಇದು ಬುದ್ಧಿಯಲ್ಲಿರಲಿ - ನಾವೀಗ ಹೋಗಬೇಕಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಮೊದಲು ಸ್ವಯಂ ಪ್ರಯತ್ನ ಪಡಬೇಕು. ತಂದೆಯ ಮನೆ ಮತ್ತು ಮಾವನ ಮನೆಯ ಉದ್ಧಾರ ಮಾಡುವವರೇ ಕನ್ಯೆಯಾಗಿದ್ದಾರೆ. ಅಂದಮೇಲೆ ದಾನವು ಮನೆಯಿಂದಲೇ ಆರಂಭವಾಗುವುದಲ್ಲವೆ. ಸರ್ವೀಸಿನಲ್ಲಿ ತೊಡಗಿರಬೇಕು. ತಿಳಿಸಿರಿ, ಶಿವತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದು. ಇದು ನೇರಮಾತಾಗಿದೆ. ನೀವು ತಂದೆಯನ್ನು ನೆನಪು ಮಾಡಿದ್ದೇ ಆದರೆ ಸ್ವರ್ಗದ ಆಸ್ತಿಯು ನಿಮ್ಮದಾಗುವುದು, ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಈಗ ಆಸ್ತಿಯನ್ನು ಪಡೆಯಬೇಕೆಂದರೆ ನನ್ನನ್ನು ನೆನಪು ಮಾಡಿ. ಈ ಸಂದೇಶವನ್ನು ಕೊಡುವುದು ಮಕ್ಕಳ ಕರ್ತವ್ಯವಾಗಿದೆ. ಕಲ್ಪದ ಮೊದಲೂ ಕೊಟ್ಟಿದ್ದಿರಿ, ಈಗ ತಿಳಿಸಿ - ವಿನಾಶವು ಸನ್ಮುಖದಲ್ಲಿ ನಿಂತಿದೆ. ಕಲಿಯುಗದ ನಂತರ ಸತ್ಯಯುಗವು ಬರಲಿದೆ. ತಂದೆಯೇ ಬಂದು ಆಸ್ತಿಯನ್ನು ಕೊಡುತ್ತಾರೆ. ರಾವಣನು ನರಕವಾಸಿಗಳನ್ನಾಗಿ ಮಾಡುತ್ತಾರೆ. ತಂದೆಯು ಬಂದು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಭಾರತದ್ದೇ ಕಥೆಯಾಗಿದೆ. ಭಾರತವಾಸಿಗಳನ್ನು ಮೇಲೆತ್ತಬೇಕಾಗಿದೆ. ಮೊದಲು ಶಿವನ ಮಂದಿರದಲ್ಲಿ ಹೋಗಿ ತಿಳಿಸಬೇಕು - ಈ ತಂದೆಯು ಹೊಸ ಸೃಷ್ಟಿಯನ್ನು ರಚಿಸುವವರಾಗಿದ್ದಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳೂ ವಿನಾಶವಾಗುವುದೆಂದು ತಿಳಿಸುತ್ತಾರೆ. ಈ ನಿರಾಕಾರ ತಂದೆಯು ಧರೆಗೆ ಬಂದಿದ್ದಾರೆ. ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಈಗ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. 84 ಜನ್ಮಗಳು ಪೂರ್ಣವಾಯಿತು, ಈಗ ನಾವು ನಿಮಗೆ ತಿಳಿಸುತ್ತೇವೆ, ಇದನ್ನು ನಂಬಿ ಅಥವಾ ನಂಬದಿರಿ ನಿಮ್ಮಿಷ್ಟ. ಮಾತುಗಳಂತೂ ಬಹಳ ಚೆನ್ನಾಗಿವೆ, ತಂದೆಯೇ ದುಃಖಹರ್ತ, ಸುಖಕರ್ತನಾಗಿದ್ದಾರೆ. ಸ್ವಲ್ಪ ತಿಳಿಸಿದರು ಹೊರಟು ಹೋದರು, ಇದು ನಿಮ್ಮ ವ್ಯಾಪಾರವಾಗಿದೆ, ಪರಿಶ್ರಮವೇನೂ ಇಲ್ಲ. ಕೇವಲ ಬಾಯಿಂದ ತಿಳಿಸಬೇಕಾಗಿದೆ - ನನ್ನನ್ನು ನೆನಪು ಮಾಡಿ, ದೇಹೀ-ಅಭಿಮಾನಿಯಾಗಿ ಎಂದು ತಂದೆಯು ಹೇಳುತ್ತಾರೆ. ಶಿವನ ಪೂಜಾರಿಗಳ ಬಳಿ ಹೋಗಿ ಮತ್ತು ಲಕ್ಷ್ಮೀ-ನಾರಾಯಣರ ಪೂಜಾರಿಗಳ ಬಳಿಗೆ ಹೋಗಿರಿ. ಅವರಿಗೆ ದೇವತೆಗಳ ಜೀವನ ಚರಿತ್ರೆಯನ್ನು ತಿಳಿಸಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತನು-ಮನ-ಧನದಿಂದ ಆತ್ಮಿಕ ಸೇವೆಯಲ್ಲಿ ಸಹಯೋಗಿಗಳಾಗಬೇಕಾಗಿದೆ. ಎಲ್ಲರಿಗೆ ತಂದೆಯ ಪರಿಚಯ ನೀಡಿ ಆಸ್ತಿಗೆ ಅಧಿಕಾರಿಗಳನ್ನಾಗಿ ಮಾಡಬೇಕಾಗಿದೆ. ವಿನಾಶಕ್ಕೆ ಮೊದಲೇ ಕರ್ಮಾತೀತರಾಗಲು ತಂದೆಯ ನೆನಪಿನಲ್ಲಿರಬೇಕಾಗಿದೆ.
2. ತಂದೆಯ ಸಮಾನ ಮೋಹಜೀತರಾಗಬೇಕಾಗಿದೆ. ಆತ್ಮಕ್ಕೆ ಆತ್ಮದ ಜೊತೆ ಉಂಟಾಗಿರುವ ಮೋಹವನ್ನು ತೆಗೆದು ಒಬ್ಬ ತಂದೆಯೊಂದಿಗೆ ಪ್ರೀತಿಯನ್ನಿಡಬೇಕಾಗಿದೆ.
ಓಂ ಶಾಂತಿ. ತಂದೆಯು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ಬಹಳ ಭಕ್ತಿಯ ನೃತ್ಯ ಮಾಡಿದಿರಿ, ಜ್ಞಾನದ ನೃತ್ಯ ಮಾಡಲಿಲ್ಲ. ಭಕ್ತಿಯ ನೃತ್ಯವಿರುವಾಗ ಜ್ಞಾನದ ನೃತ್ಯವಿರುವುದಿಲ್ಲ, ಜ್ಞಾನದ ನೃತ್ಯವಿರುವಾಗ ಭಕ್ತಿಯ ನೃತ್ಯವಿರುವುದಿಲ್ಲ ಏಕೆಂದರೆ ಭಕ್ತಿಯ ನೃತ್ಯವು ಇಳಿಯುವ ಕಲೆಯಲ್ಲಿ ತರುತ್ತದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ಭಕ್ತಿಯು ದ್ವಾಪರ ಯುಗದಿಂದಲೇ ಪ್ರಾರಂಭವಾಗುತ್ತದೆ, ಭಕ್ತಿಯು ಆರಂಭವಾದಾಗ ಜ್ಞಾನದ ಪ್ರಾಲಬ್ಧವು ಪೂರ್ಣವಾಗಿ ಬಿಡುತ್ತದೆ ಮತ್ತು ಇಳಿಯುವ ಕಲೆಯಾಗುತ್ತದೆ. ಹೇಗೆ ಇಳಿಯುತ್ತೀರಿ ಎಂಬುದನ್ನು ತಂದೆಯು ತಿಳಿಸುತ್ತಾರೆ. ನಾನು ಕಲ್ಪ-ಕಲ್ಪವೂ ಬಂದು ಮಕ್ಕಳಿಗೆ ತಿಳಿಸುತ್ತೇನೆ - ನೀವು ಮಕ್ಕಳು ನನಗೆ ಬಹಳ ನಿಂದನೆ ಮಾಡಿದಿರಿ. ಯಾವಾಗ ಭಾರತದಲ್ಲಿ ಈ ಆದಿ ಸನಾತನ ದೇವಿ-ದೇವತಾ ಧರ್ಮಕ್ಕೆ ಬಹಳ ನಿಂದನೆಯಾಗುವುದೋ ಆಗ ನಾನು ಬರುತ್ತೇನೆ. ಗ್ಲಾನಿ ಎಂದು ಯಾವುದಕ್ಕೆ ಹೇಳಲಾಗುತ್ತದೆ ಎಂಬುದನ್ನೂ ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ವಿಕಾರಿ, ನರಕವಾಸಿ ಭಾರತವನ್ನು ಸ್ವರ್ಗವಾಸಿಯನ್ನಾಗಿ ಮಾಡುತ್ತೇನೆ. ನೀವು ನನ್ನ ನಿಂದನೆ ಮಾಡಿದಿರಿ, ಆಸುರೀ ಮತದಂತೆ ಮಾಡುವ ಕಾರಣ ಇಷ್ಟು ಕಂಗಾಲಾಗಿ ಬಿಟ್ಟಿದ್ದೀರಿ. ರಾಮ ರಾಜ್ಯವಿತ್ತು, ಈಗ ರಾವಣ ರಾಜ್ಯವಾಗಿದೆ. ಇದಕ್ಕೆ ಸೋಲು ಮತ್ತು ಗೆಲುವು, ದಿನ ಮತ್ತು ರಾತ್ರಿ ಎಂದು ಹೇಳಲಾಗುತ್ತದೆ. ಈಗ ವಿಚಾರ ಮಾಡಿ - ನಾನು ಯಾವಾಗ ಬರಲಿ! ಯಾರಿಗೆ ರಾಜ್ಯವನ್ನು ಕೊಟ್ಟೆನೋ ಅವರೇ ರಾಜ್ಯವನ್ನು ಕಳೆದುಕೊಂಡು ಕುಳಿತಿದ್ದಾರೆ. ಲೆಕ್ಕಾಚಾರವೆಲ್ಲವನ್ನೂ ಮೊದಲೇ ತಿಳಿಸುತ್ತೇನೆ. ನಾನು ಬಂದು ಆಸ್ತಿಯನ್ನು ಕೊಡುತ್ತೇನೆ ಮತ್ತೆ ರಾವಣನು ಬಂದು ನಿಮ್ಮನ್ನು ವಿಶೇಷವಾಗಿ ಭಾರತವನ್ನು ಹಾಗೂ ಇಡೀ ಪ್ರಪಂಚವನ್ನು ಶಾಪಗ್ರಸ್ತರನ್ನಾಗಿ ಮಾಡುತ್ತಾನೆ. ಭಾರತದ ಮಹಿಮೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಮೊಟ್ಟ ಮೊದಲಿಗೆ ಭಾರತವೇ ಇತ್ತು, ಯಾವಾಗ ಇತ್ತು, ಹೇಗೆ ಇತ್ತು, ಯಾರು ರಾಜ್ಯಭಾರ ಮಾಡುತ್ತಿದ್ದರು, ಇದು ಯಾರಿಗೂ ತಿಳಿದಿಲ್ಲ. ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ದೇವತೆಗಳಾಗಿದ್ದರೋ ಅವರ ಮುಖವು ಮನುಷ್ಯನದು, ಗುಣಗಳು ದೈವೀ ಗುಣಗಳಿತ್ತು, ಈಗ ಭಲೆ ಮುಖವು ಮನುಷ್ಯನದಾಗಿದೆ ಗುಣಗಳು ಆಸುರಿಯದಾಗಿದೆ. ಆದ್ದರಿಂದ ಯಾರಿಗೆ ತಿಳಿಸಿದರೂ ಅವರು ತಿಳಿದುಕೊಳ್ಳುವುದಿಲ್ಲ ಏಕೆಂದರೆ ಪಾರಲೌಕಿಕ ತಂದೆಯನ್ನೇ ತಿಳಿದುಕೊಂಡಿಲ್ಲ. ಕುಳಿತು ಇನ್ನೂ ಹೆಚ್ಚು ನಿಂದನೆ ಮಾಡುತ್ತಾರೆ. ತಂದೆಯ ನಿಂದನೆ ಮಾಡುತ್ತಾ-ಮಾಡುತ್ತಾ ಸಂಪೂರ್ಣ ಕವಡೆಯಂತೆ ಆಗಿ ಬಿಟ್ಟಿದ್ದಾರೆ. ಭಾರತದ ಅವನತಿಯಾಗಿ ಬಿಟ್ಟಿದೆ. ಯಾವಾಗ ಇಂತಹ ಸ್ಥಿತಿಯು ಆಗುವುದೋ ಆಗ ತಂದೆಯು ತಿಳಿಸುತ್ತಾರೆ - ನಾನು ಬರುತ್ತೇನೆ. ನೀವು ಮಕ್ಕಳಿಗೆ ಈಗ ಸನ್ಮುಖದಲ್ಲಿ ತಿಳಿಸುತ್ತಿದ್ದೇನೆ. ಕಲ್ಪದ ಮೊದಲೂ ಸಹ ಇದೇರೀತಿ ತಿಳಿಸಿದ್ದೆನು, ಇದು ದೈವೀಸಂಪ್ರದಾಯದ ಸ್ಥಾಪನೆಯಾಗುತ್ತಿದೆ, ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ತಂದೆಯು ಯಾವಾಗ ಬರುತ್ತಾರೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ಸತ್ಯ-ತ್ರೇತಾ ಯುಗದಲ್ಲಿ ನೀವು ಬಹಳ ಖುಷಿಯಲ್ಲಿ ಪ್ರಾಲಬ್ಧವನ್ನು ಭೋಗಿಸುತ್ತೀರಿ ಮತ್ತೆ ದ್ವಾಪರದಿಂದ ರಾವಣನ ಶಾಪವು ತಗುಲುತ್ತಾ ಸಂಪೂರ್ಣ ಸಮಾಪ್ತಿಯಾಗಿ ಬಿಡುತ್ತೀರಿ. ಹೇಗೆ ದೇವತೆಗಳು ಪ್ರಾಲಬ್ಧವನ್ನು ಭೋಗಿಸುತ್ತಾ-ಭೋಗಿಸುತ್ತಾ ತ್ರೇತಾದ ಅಂತ್ಯದಲ್ಲಿ ಬಂದು ಸಮಾಪ್ತಿಯಾಗಿ ಬಿಡುತ್ತಾರೆ ನಂತರ ರಾವಣನ ಆಸುರೀ ಪ್ರಾಲಬ್ಧವು ಆರಂಭವಾಗುತ್ತದೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗುತ್ತದೆ ನಂತರ ವ್ಯಭಿಚಾರಿಯಾಗುತ್ತದೆ, ಏಣಿಯ ಚಿತ್ರವು ಸರಿಯಾಗಿ ಮಾಡಲ್ಪಟ್ಟಿದೆ. ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವು ಸತೋಪ್ರಧಾನ, ಸತೋ, ರಜೋ, ತಮೋ ಆಗುತ್ತದೆ, ತುಕ್ಕು ಬೀಳುತ್ತಾ ಹೋಗುತ್ತದೆ. ನೀವು ಮಕ್ಕಳಿಗಂತೂ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ ಆದರೆ ಧಾರಣೆ ಕಡಿಮೆ. ಕೆಲವರಲ್ಲಿ ತಿಳಿಸಿಕೊಡುವ ಬುದ್ಧಿವಂತಿಕೆಯೇ ಇಲ್ಲ. ಕೆಲವರು ಒಳ್ಳೆಯ ಅನುಭವಿಗಳಾಗಿದ್ದಾರೆ ಅವರಿಗೆ ಬಹಳ ಚೆನ್ನಾಗಿ ಧಾರಣೆಯಾಗುತ್ತದೆ. ನಂಬರ್ವಾರ್ ಇರುತ್ತಾರಲ್ಲವೆ. ವಿದ್ಯಾರ್ಥಿಗಳು ಒಂದೇ ಸಮಾನ ಓದುವುದಿಲ್ಲ, ಸ್ವಲ್ಪ ಹೆಚ್ಚು ಕಡಿಮೆ ಅಂಕಗಳನ್ನು ಪಡೆಯುತ್ತಾರೆ. ಯಾರಿಗೆ ಬೇಕಾದರೂ ತಿಳಿಸುವುದು ಬಹಳ ಸಹಜವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ, ನಾನು ನಿಮ್ಮ ಬೇಹದ್ದಿನ ತಂದೆ, ಸೃಷ್ಟಿಯ ರಚಯಿತನಾಗಿದ್ದೇನೆ. ನನ್ನನ್ನು ನೆನಪು ಮಾಡಿದರೆ ನಿಮಗೆ ಬೇಹದ್ದಿನ ಆಸ್ತಿಯು ಸಿಗುವುದು. ನೆನಪಿನಿಂದಲೇ ತುಕ್ಕು ಬಿಟ್ಟು ಹೋಗುತ್ತದೆ. ಕೇವಲ ಇದನ್ನು ತಿಳಿಸಿ, ನೀವು ಭಾರತವಾಸಿಗಳು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ, ಈಗ ಕಲಿಯುಗದಲ್ಲಿ ತಮೋಪ್ರಧಾನರಾಗಿದ್ದೀರಿ. ಆತ್ಮದಲ್ಲಿ ತುಕ್ಕು ಏರುತ್ತದೆ, ಪವಿತ್ರರಾಗದೆ ಯಾರೂ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಹೊಸ ಪ್ರಪಂಚದಲ್ಲಿ ಸತೋಪ್ರಧಾನರೇ ಇರುತ್ತಾರೆ. ವಸ್ತ್ರಗಳು ಹೊಸದಾಗಿದ್ದರೆ ಸತೋಪ್ರಧಾನವೆಂದು ಹೇಳುತ್ತಾರೆ ನಂತರ ಅವು ಹಳೆಯ ತಮೋಪ್ರಧಾನವಾಗಿ ಬಿಡುತ್ತದೆ. ಈಗ ಎಲ್ಲರ ವಸ್ತ್ರಗಳು ಹರಿದು ಹೋಗುವಂತಾಗಿದೆ, ಎಲ್ಲರೂ ಜಡಜಡೀಭೂತ ಸ್ಥಿತಿಯನ್ನು ತಲುಪಿದ್ದಾರೆ. ಯಾರು ವಿಶ್ವದ ಮಾಲೀಕರಾಗಿದ್ದರೋ ಅವರೇ ಸಂಪೂರ್ಣ ಬಡವರಾಗಿದ್ದಾರೆ, ಪುನಃ ಅವರೇ ಸಾಹುಕಾರರಾಗಬೇಕಾಗಿದೆ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಮತ್ತೆಲ್ಲಾ ಧರ್ಮದವರು ಕೊನೆಯಲ್ಲಿ ಬಂದಿದ್ದಾರೆ. ತಂದೆಯು ನಿಮಗೆ ಸತ್ಯ ಮಾತನ್ನು ತಿಳಿಸುತ್ತಾರೆ. ಗೀತೆಯನ್ನು ನೋಡಿ ಎಷ್ಟು ಮಾನ್ಯತೆಯಿದೆ! ಓದುತ್ತಾ-ಓದುತ್ತಾ ಸಂಪೂರ್ಣ ಕೆಳಗಿಳಿದು ಬಿಟ್ಟಿದ್ದಾರೆ ಆದ್ದರಿಂದಲೇ ಹೇ ಪತಿತ-ಪಾವನ ಬನ್ನಿ, ನಾವು ಭ್ರಷ್ಟಾಚಾರಿಗಳಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ಸದ್ಗತಿಯನ್ನು ಭಗವಂತನೇ ಕೊಡಬಲ್ಲರು ಬಾಕಿ ಶಾಸ್ತ್ರಗಳಲ್ಲಿ ಎಲ್ಲವೂ ಭಕ್ತಿಮಾರ್ಗವಾಗಿದೆ. ನಿಮ್ಮ ಬುದ್ಧಿಯಲ್ಲಿ ಕುಳಿತಿದೆ- ನಾವು ತಂದೆಯ ಜ್ಞಾನದಿಂದ ದೇವತೆಗಳಾಗುತ್ತೇವೆ. ಈಗ ಇಡೀ ಪ್ರಪಂಚದೊಂದಿಗೆ ವೈರಾಗ್ಯವಿದೆ, ಸನ್ಯಾಸಿಗಳೂ ಸಹ ಭಕ್ತಿ ಮಾಡುತ್ತಾರೆ, ಗಂಗಾ ಸ್ನಾನ ಇತ್ಯಾದಿಗಳನ್ನು ಮಾಡುತ್ತಾರೆ. ಭಕ್ತಿಯೂ ಸಹ ಸತೋಪ್ರಧಾನ ನಂತರ ರಜೋ, ತಮೋ ಆಗುತ್ತದೆ, ಇದೂ ಹಾಗೆಯೇ ಅರ್ಧ ಕಲ್ಪ ದಿನ, ಅರ್ಧ ಕಲ್ಪ ರಾತ್ರಿ ಎಂದು ಗಾಯನವಿದೆ. ಬ್ರಹ್ಮನ ಜೊತೆ ಅವಶ್ಯವಾಗಿ ಬ್ರಾಹ್ಮಣರದೂ ರಾತ್ರಿಯಾಗುವುದು. ನೀವೀಗ ದಿನದಲ್ಲಿ ಹೋಗುತ್ತೀರಿ. ಭಕ್ತಿಯ ರಾತ್ರಿಯು ಮುಕ್ತಾಯವಾಗುತ್ತದೆ. ಭಕ್ತಿಯಲ್ಲಿ ಬಹಳ ದುಃಖವಿದೆ, ಅದಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ಅಂಧಕಾರದಲ್ಲಿ ಮನುಷ್ಯರು ಭಗವಂತನನ್ನು ಹುಡುಕಾಡುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ಸದ್ಗತಿ ನೀಡುವವರು ಯಾರೂ ಇರುವುದಿಲ್ಲ. ನಿಮ್ಮ ವಿನಃ ಯಾರೂ ಸಹ ಯಥಾರ್ಥ ರೀತಿಯಿಂದ ಭಗವಂತನನ್ನು ಅರಿತುಕೊಂಡಿಲ್ಲ. ಆತ್ಮವೂ ಬಿಂದು, ಪರಮಾತ್ಮನೂ ಬಿಂದುವಾಗಿದ್ದಾರೆ, ಈ ಮಾತನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಸ್ವಯಂ ಪರಮಾತ್ಮನೇ ಬಂದು ಬ್ರಹ್ಮಾರವರ ತನುವಿನಿಂದ ತಿಳಿಸುತ್ತಾರೆ. ಇದನ್ನು ಅವರು ಭಗೀರಥನೆಂದು ಬಸವನ ಮೇಲೆ ತೋರಿಸಿದ್ದಾರೆ. ಆದರೆ ಈಗ ಬಸವನ ಮಾತಿಲ್ಲ, ತಂದೆಯು ಎಲ್ಲಾ ಮಾತುಗಳನ್ನು ಬಹಳ ಚೆನ್ನಾಗಿ ತಿಳಿಸಿಕೊಡುತ್ತಾರೆ. ಆದರೆ ಯಾರ ಬುದ್ಧಿಯಲ್ಲಿಯೂ ಪೂರ್ಣ ರೀತಿಯಿಂದ ಕುಳಿತುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನೀವಾತ್ಮರ ತಂದೆಯಾಗಿದ್ದೇನೆ. ನೀವು ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಆದರೂ ಸಹ ಮರೆತು ಹೋಗುತ್ತಾರೆ. ವಾಹ್! ಇಂತಹ ಪ್ರಿಯತಮ ಅಥವಾ ತಂದೆಯನ್ನು ಮರೆಯುವಿರಾ? ಸ್ತ್ರೀ-ಪತಿಯನ್ನು ಅಥವಾ ಮಕ್ಕಳು-ತಂದೆಯನ್ನು ಎಂದಾದರೂ ಮರೆಯುತ್ತಾರೆಯೇ? ಇಲ್ಲಿ ನೀವು ಮರೆತು ಹೋಗುತ್ತೀರಿ? ಬಾಬಾ, ತಾವು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದೀರಿ ಎಂದು ಹೇಳುತ್ತೀರಿ ಮತ್ತೆ ಮರೆತು ಹೋಗುತ್ತೀರಿ ಆದ್ದರಿಂದ ತಂದೆಯು ತಿಳಿಸುತ್ತಾರೆ - ನೆನಪು ಮಾಡದಿದ್ದರೆ ಒಳಗಿರುವ ತುಕ್ಕು ಹೇಗೆ ಬಿಡುವುದು? ಮುಖ್ಯ ಮಾತು ನೆನಪಿನದಾಗಿದೆ. ಅನ್ಯ ಧರ್ಮದೊಂದಿಗೆ ಯಾವುದೇ ಸಂಬಂಧವಿಲ್ಲ. ಶಾಲೆಯಲ್ಲಿ ಇತಿಹಾಸ-ಭೂಗೋಳವನ್ನು ತಿಳಿಸುತ್ತೀರಿ. ಯಾರು ಸಂಪೂರ್ಣ ತಿಳಿದುಕೊಂಡಿಲ್ಲ, ತಂದೆಯು ಓದಿಸುತ್ತಾರೆ ಎಂಬುದೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಹೋಗಲಿ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದರೆ ಇದನ್ನೂ ಮರೆತು ಹೋಗುತ್ತೀರಿ. ಯಾರಿಗಾಗಿ ಅರ್ಧ ಕಲ್ಪದಿಂದ ಭಕ್ತಿ ಮಾಡುತ್ತಾ ಬಂದಿರಿ ಆ ತಂದೆಯನ್ನೇ ನೆನಪು ಮಾಡುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವೀಗ ಒಂದು ಶರೀರವನ್ನು ಬಿಟ್ಟು ರಾಜಧಾನಿಯಲ್ಲಿ ಹೋಗುತ್ತೇನೆ, ಇದು ಅಂತಿಮ ಜನ್ಮವಾಗಿದೆ. ಸೂಕ್ಷ್ಮವತನದಲ್ಲಿ ಅವರ ಅದೇರೂಪವನ್ನು ನೋಡುತ್ತೀರಿ, ವೈಕುಂಠವನ್ನೂ ನೋಡುತ್ತೀರಿ. ನಿಮಗೆ ತಿಳಿದಿದೆ - ಮಮ್ಮಾ-ಬಾಬಾರವರು ಲಕ್ಷ್ಮೀ-ನಾರಾಯಣರಾಗುತ್ತಾರೆ. ನೀವು ಸತ್ಯಯುಗದಲ್ಲಿದ್ದಾಗ ತಿಳಿದುಕೊಳ್ಳುತ್ತೀರಿ - ಈ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ. ಆದರೆ ಸತ್ಯಯುಗದ ನಂತರ ತ್ರೇತಾಯುಗ, ದ್ವಾಪರ ಯುಗವು ಬರುವುದು ನಾವು ಕೆಳಗಿಳಿಯುತ್ತಾ ಹೋಗುತ್ತೇವೆ ಎಂಬುದು ಅವರಿಗೆ ತಿಳಿದಿರುವುದಿಲ್ಲ. ಜ್ಞಾನದ ಮಾತೇ ಇಲ್ಲ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ, ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ ನಂತರ ಆತ್ಮಾಭಿಮಾನಿಯಿಂದ ದೇಹಾಭಿಮಾನಿಗಳಾಗಿ ಬಿಡುತ್ತಾರೆ. ಈ ಜ್ಞಾನವು ಕೇವಲ ಬ್ರಾಹ್ಮಣರಿಗೆ ಇದೆ, ಮತ್ತ್ಯಾರಿಗೂ ಇಲ್ಲ. ಇವರು ಜ್ಞಾನ ಜ್ಞಾನೇಶ್ವರ, ಜ್ಞಾನ ಸಾಗರ ತಂದೆಯಾಗಿದ್ದಾರೆ. ಅವರೇ ತಿಳಿಸುತ್ತಾರೆ - ಅವಶ್ಯವಾಗಿ ಬ್ರಾಹ್ಮಣ ಮಕ್ಕಳಾದ ಬ್ರಾಹ್ಮಣರಿಗೇ ತಿಳಿಸುತ್ತಾರಲ್ಲವೆ. ಬ್ರಾಹ್ಮಣ ಮಕ್ಕಳು ಬ್ರಾಹ್ಮಣ ಸಂಪ್ರದಾಯದವರಾಗಿದ್ದೀರಿ. ರಾತ್ರಿ-ಹಗಲಿನ ಅಂತರವಿದೆ. ನೀವು ಪುರುಷಾರ್ಥ ಮಾಡಿ ಸಂಪೂರ್ಣ ಗುಣವಂತರಾಗುತ್ತೀರಿ, ಸಂಪೂರ್ಣ ನಿರ್ವಿಕಾರಿ, ಗೃಹಸ್ಥ ವ್ಯವಹಾರದಲ್ಲಿದ್ದರೂ ಸಹ ನೀವು ತಂದೆಯನ್ನು ನೆನಪು ಮಾಡುತ್ತೀರಿ. ಕರ್ಮವನ್ನಂತೂ ಮಾಡಲೇಬೇಕಾಗಿದೆ. ಬುದ್ಧಿಯೋಗವು ತಂದೆಯ ಜೊತೆಯಿರಲಿ. ಭಲೆ ಯಾವುದೇ ಕರ್ಮ ಮಾಡಿ, ಚಿಕ್ಕದನ್ನೇ ಮಾಡಿ ಆದರೆ ರಾಜಧಾನಿಯ ಕೆಲಸವನ್ನಾದರೂ ಮಾಡಿ. ರಾಜ ಜನಕನ ಗಾಯನವಿದೆಯಲ್ಲವೆ. ರಾಜ್ಯಭಾರವನ್ನೂ ಮಾಡುತ್ತಾ ಇರಿ ಆದರೆ ಬುದ್ಧಿಯೋಗವು ತಂದೆಯ ಜೊತೆ ಜೋಡಿಸಿ ಆಗ ಆಸ್ತಿಯು ಸಿಗುವುದು. ತಂದೆಯು ತಿಳಿಸುತ್ತಾರೆ - ಮನ್ಮನಾಭವ, ನನ್ನೊಬ್ಬನನ್ನೇ ನೆನಪು ಮಾಡಿ. ಶಿವ ತಂದೆಯನ್ನು ಕೇವಲ ಶಿವ ಎಂದು ಹೇಳಿದಾಗ ಲಿಂಗ ರೂಪವೇ ನೆನಪಿಗೆ ಬರುವುದು, ಮತ್ತೆಲ್ಲರಿಗೆ ಶರೀರದ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ, ಶರೀರದಿಂದ ಪಾತ್ರವನ್ನಭಿನಯಿಸುತ್ತಾರೆ, ಈಗ ನಿಮ್ಮನ್ನು ಆತ್ಮಾಭಿಮಾನಿಯನ್ನಾಗಿ ಮಾಡಲಾಗುತ್ತದೆ ಯಾವುದು ಅರ್ಧ ಕಲ್ಪ ನಡೆಯುತ್ತದೆ. ಈ ಸಮಯದಲ್ಲಿ ಎಲ್ಲರೂ ದೇಹಾಭಿಮಾನದಲ್ಲಿದ್ದಾರೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ. ಯಥಾ ರಾಜ-ರಾಣಿ ತಥಾ ಪ್ರಜಾ. ಎಲ್ಲರಿಗೆ ಧೀರ್ಘಾಯಸ್ಸು ಇರುತ್ತದೆ, ಇಲ್ಲಿ ಎಲ್ಲರ ಆಯಸ್ಸು ಕಡಿಮೆಯಿದೆ ಅಂದಾಗ ತಂದೆಯು ಸನ್ಮುಖದಲ್ಲಿ ಕುಳಿತು ಮಕ್ಕಳಿಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ - ಹೇ ಆತ್ಮಗಳೇ ಎಂದು, ಏಕೆಂದರೆ ಆತ್ಮವೇ ಜ್ಞಾನವನ್ನು ತೆಗೆದುಕೊಳ್ಳುತ್ತದೆ, ಆತ್ಮದಲ್ಲಿಯೇ ಧಾರಣೆಯಾಗುತ್ತದೆ. ತಂದೆಗೆ ಶರೀರವಂತೂ ಇಲ್ಲ. ಆತ್ಮದಲ್ಲಿ ಸಂಪೂರ್ಣ ಜ್ಞಾನವಿದೆ, ಆತ್ಮವೂ ನಕ್ಷತ್ರ, ತಂದೆಯೂ ನಕ್ಷತ್ರವಾಗಿದ್ದಾರೆ ಆದರೆ ಅವರು ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಆತ್ಮಗಳೇ ತೆಗೆದುಕೊಳ್ಳುತ್ತಾರೆ. ಆದ್ದರಿಂದ ತಂದೆಯು ಕೆಲಸ ಕೊಟ್ಟಿದ್ದರು - ಪರಮಾತ್ಮನ ಮಹಿಮೆ ಮತ್ತು ಮಕ್ಕಳ ಮಹಿಮೆಯನ್ನು ಬರೆದುಕೊಂಡು ಬನ್ನಿ. ಇಬ್ಬರದೂ ಬೇರೆ-ಬೇರೆಯಾಗಿದೆ, ಶ್ರೀಕೃಷ್ಣನ ಮಹಿಮೆಯೇ ಬೇರೆಯಾಗಿದೆ, ಅವರು ಸಾಕಾರ ಇವರು ನಿರಾಕಾರನಾಗಿದ್ದಾರೆ. ಇಷ್ಟೊಂದು ಗುಣವಂತರನ್ನಾಗಿ ಯಾರು ಮಾಡಿದರು? ಅವಶ್ಯವಾಗಿ ಪರಮಾತ್ಮನೇ ಮಾಡಿದರೆಂದು ಹೇಳುತ್ತಾರೆ.
ಈ ಸಮಯದಲ್ಲಿ ನೀವು ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ನಿಮಗೆ ತಂದೆಯು ಕಲಿಸುತ್ತಿದ್ದಾರೆ ನಂತರ ಪ್ರಾಲಬ್ಧವನ್ನೂ ಭೋಗಿಸುತ್ತೀರಿ. ಸತ್ಯಯುಗದಲ್ಲಿ ಯಾರೂ ಕಲಿಸಿ ಕೊಡುವುದಿಲ್ಲ, ಭಕ್ತಿಮಾರ್ಗದ ಸಾಮಗ್ರಿಯೇ ಸಮಾಪ್ತಿಯಾಗುತ್ತದೆ. ಈ ಪ್ರಪಂಚದೊಂದಿಗೆ ವೈರಾಗ್ಯವೂ ಇರಬೇಕು ಅರ್ಥಾತ್ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ತನ್ನನ್ನು ಅಶರೀರಿ ಆತ್ಮನೆಂದು ತಿಳಿಯಬೇಕಾಗಿದೆ. ಅಶರೀರಿಯಾಗಿ ಬಂದಿದ್ದಿರಿ, ಅಶರೀರಿಯಾಗಿ ಹೋಗಬೇಕಾಗಿದೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದಿದೆ, ನಾವೆಲ್ಲರೂ ಹೊಸ ಪ್ರಪಂಚಕ್ಕೆ ಹೋಗಲಿದ್ದೇವೆ. ಕೇವಲ ಈ ನೆನಪಿನಲ್ಲಿಯೇ ಪರಿಶ್ರಮ ಪಡುತ್ತಾ ಇರಿ ಆದರೆ ಇದರಲ್ಲಿಯೇ ಮಕ್ಕಳು ಅನುತ್ತೀರ್ಣರಾಗುತ್ತಾರೆ. ನೆನಪು ಮಾಡುವುದೇ ಇಲ್ಲ, ತಿಳಿದುಕೊಳ್ಳಲು ಯಾರೆಲ್ಲಾ ಬರುವರೋ ಅವರಿಗೂ ಸಹ ಇದನ್ನೇ ತಿಳಿಸಬೇಕಾಗಿದೆ – ಶಿವ ತಂದೆಯು ಬ್ರಹ್ಮಾರವರ ಮೂಲಕ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೆನಪಿನಿಂದ ನಿಮ್ಮ ತುಕ್ಕು ಬಿಟ್ಟು ಹೋಗುವುದು, ನೀವು ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ವಿಷ್ಣು ಪುರಿಯೇ ಸ್ವರ್ಗ ಪುರಿಯಾಗಿದೆ ಅಂದಾಗ ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಿ, ಯಾವ ತಂದೆಯನ್ನು ಅರ್ಧ ಕಲ್ಪ ನೆನಪು ಮಾಡಿದಿರಿ, ಈಗ ಅವರು ಸನ್ಮುಖದಲ್ಲಿ ಬಂದಿದ್ದಾರೆ, ನನ್ನನ್ನು ನೆನಪು ಮಾಡಿ ಎಂದು ತಿಳಿಸುತ್ತಾರೆ ಆದರೆ ಯಾರೂ ತಿಳಿದುಕೊಂಡಿಲ್ಲ. ಸ್ವಯಂ ತಾವೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಯಾರಾಗಿದ್ದೇನೆ, ಹೇಗಿದ್ದೇನೆ ಹಾಗೆಯೇ ನನ್ನನ್ನು ತಿಳಿದುಕೊಳ್ಳುವವರು ಮತ್ತು ನಿಶ್ಚಯ ಮಾಡಿಕೊಳ್ಳುವವರು ಬಹಳ ವಿರಳ. ನಿಶ್ಚಯ ಮಾಡಿಕೊಂಡರೆ ಪುರುಷಾರ್ಥ ಮಾಡಿ ಆಸ್ತಿಯನ್ನು ಪಡೆದುಕೊಳ್ಳುವರು. ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ, ಯಾವುದೇ ವಿಕರ್ಮ ಮಾಡಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪುರುಷಾರ್ಥ ಮಾಡಿ ಸಂಪೂರ್ಣ ಗುಣವಂತರಾಗಬೇಕಾಗಿದೆ, ಯಾವುದೇ ಕರ್ಮವಿರಲಿ ತಂದೆಯ ನೆನಪಿನಲ್ಲಿದ್ದು ಮಾಡಬೇಕಾಗಿದೆ. ಯಾವುದೇ ವಿಕರ್ಮ ಮಾಡಬಾರದು.
2. ಈ ಹಳೆಯ ಶರೀರವು ಜಡಜಡೀಭೂತವಾಗಿದೆ, ಇದರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.
ಹೃದಯದ ಜ್ಞಾನಿ ಹಾಗೂ ಸ್ನೇಹಿಗಳಾಗಿ ಮತ್ತು ಸೋರುವಿಕೆಯನ್ನು (ಲೀಕೇಜನ್ನು) ನಿಲ್ಲಿಸಿ.
ಇಂದು ಸ್ನೇಹ ಸಾಗರ ಬಾಪ್ದಾದಾ ತನ್ನ ಸ್ನೇಹಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಈ ಆತ್ಮಿಕ ಸ್ನೇಹ ಪರಮಾತ್ಮ ಸ್ನೇಹವು ನಿಸ್ವಾರ್ಥ, ಸತ್ಯ ಸ್ನೇಹವಾಗಿದೆ. ಸತ್ಯ ಹೃದಯದ ಸ್ನೇಹವು ತಾವು ಸರ್ವ ಆತ್ಮಗಳನ್ನು ಇಡೀ ಕಲ್ಪ ಸ್ನೇಹಿಗಳನ್ನಾಗಿ ಮಾಡಿ ಬಿಡುತ್ತದೆ, ಏಕೆಂದರೆ ಪರಮಾತ್ಮ ಸ್ನೇಹ, ಆತ್ಮಿಕ ಸ್ನೇಹ, ಅವಿನಾಶಿ ಸ್ನೇಹವಾಗಿದೆ. ಈ ಆತ್ಮಿಕ ಸ್ನೇಹವು ಬ್ರಾಹ್ಮಣ ಜೀವನದ ತಳಹದಿಯಾಗಿದೆ. ಆತ್ಮಿಕ ಸ್ನೇಹದ ಅನುಭವವಿಲ್ಲವೆಂದರೆ ಬ್ರಾಹ್ಮಣ ಜೀವನದ ಸತ್ಯ ಆನಂದವಿಲ್ಲ. ಪರಮಾತ್ಮ ಸ್ನೇಹವು ಎಂತಹದ್ದೇ ಪತಿತ ಆತ್ಮನನ್ನು ಪರಿವರ್ತನೆ ಮಾಡುವ ಅಯಸ್ಕಾಂತವಾಗಿದೆ, ಪರಿವರ್ತನೆಯಾಗುವ ಸಹಜ ಸಾಧನವಾಗಿದೆ. ಸ್ನೇಹವು ಅಧಿಕಾರಿಗಳನ್ನಾಗಿ ಮಾಡುವ, ಆತ್ಮಿಕ ನಶೆಯ ಅನುಭವ ಮಾಡಿಸಲು ಆಧಾರವಾಗಿದೆ. ಸ್ನೇಹವಿದ್ದರೆ ಬ್ರಾಹ್ಮಣ ಜೀವನವು ರಮಣೀಕವಾಗಿರುತ್ತದೆ. ಸ್ನೇಹವಿಲ್ಲವೆಂದರೆ ಬ್ರಾಹ್ಮಣ ಜೀವನವು ನೀರಸವೆನಿಸುತ್ತದೆ. ಪರಮಾತ್ಮ ಸ್ನೇಹವು ಹೃದಯದ ಸ್ನೇಹವಾಗಿದೆ. ಲೌಕಿಕ ಸ್ನೇಹವು ಹೃದಯವನ್ನು ತುಂಡು-ತುಂಡನ್ನಾಗಿ ಮಾಡಿ ಬಿಡುತ್ತದೆ ಏಕೆಂದರೆ ಹಂಚಲ್ಪಡುತ್ತದೆ. ಅನೇಕರೊಂದಿಗೆ ಸ್ನೇಹವನ್ನು ನಿಭಾಯಿಸಬೇಕಾಗುತ್ತದೆ. ಅಲೌಕಿಕ ಸ್ನೇಹವು ಹೃದಯದ ಅನೇಕ ಭಾಗಗಳನ್ನು ಜೋಡಿಸುವಂತದ್ದಾಗಿದೆ. ಒಬ್ಬ ತಂದೆಯೊಂದಿಗೆ ಸ್ನೇಹ ಮಾಡಿದರೆ ಸರ್ವರ ಸಹಯೋಗಿಗಳು ಸ್ವತಹ ಆಗಿಬಿಡುತ್ತಾರೆ ಏಕೆಂದರೆ ತಂದೆಯು ಬೀಜವಾಗಿದ್ದಾರೆ. ಬೀಜಕ್ಕೆ ನೀರು ಕೊಟ್ಟರೆ ಪ್ರತಿಯೊಂದು ಎಲೆಗೆ ಸ್ವತಹ ಸಿಗುತ್ತದೆ. ಪ್ರತಿಯೊಂದು ಎಲೆಗೂ ನೀರು ಹಾಕುವ ಅವಶ್ಯಕತೆಯಿರುವುದಿಲ್ಲ ಹಾಗೆಯೇ ಆತ್ಮಿಕ ತಂದೆಗೆ ಸ್ನೇಹವನ್ನು ಇಡುವುದೆಂದರೆ ಸರ್ವರ ಸ್ನೇಹಿಗಳಾಗುವುದು ಆದ್ದರಿಂದ ಹೃದಯವು ಹಂಚಿ ಹೋಗುವುದಿಲ್ಲ. ಸ್ನೇಹವು ಪ್ರತೀ ಕಾರ್ಯವನ್ನು ಸಹಜವನ್ನಾಗಿ ಮಾಡುತ್ತದೆ ಅರ್ಥಾತ್ ಪರಿಶ್ರಮದಿಂದ ಬಿಡಿಸುತ್ತದೆ. ಎಲ್ಲಿ ಸ್ನೇಹವಿರುವುದೋ ಅಲ್ಲಿ ನೆನಪು ಸ್ವತಹ, ಸಹಜವಾಗಿ ಬರುತ್ತದೆ. ಸ್ನೇಹಿಗಳನ್ನು ಮರೆಯುವುದು ಕಷ್ಟವಾಗುತ್ತದೆ, ನೆನಪು ಮಾಡುವುದು ಕಷ್ಟವಾಗುವುದಿಲ್ಲ. ಬುದ್ಧಿಯಲ್ಲಿ ಭಲೆ ಎಷ್ಟಾದರೂ ಜ್ಞಾನವಿರಬಹುದು ಆದರೆ ಯಥಾರ್ಥ ಜ್ಞಾನ ಅರ್ಥಾತ್ ಸ್ನೇಹ ಸಂಪನ್ನ ಜ್ಞಾನವಿರಬೇಕು. ಒಂದುವೇಳೆ ಜ್ಞಾನವಿದ್ದು ಸ್ನೇಹವಿಲ್ಲವೆಂದರೆ ಅದು ಒಣಗಿದ ಜ್ಞಾನವಾಗಿದೆ. ಸ್ನೇಹವು ಹೃದಯದಿಂದ ಸರ್ವ ಸಂಬಂಧಗಳ ಅನುಭವ ಮಾಡಿಸುತ್ತದೆ. ಕೇವಲ ಯಾರು ಜ್ಞಾನಿಗಳಿದ್ದಾರೆಯೋ ಅವರು ಬುದ್ಧಿಯಿಂದ ನೆನಪು ಮಾಡುತ್ತಾರೆ ಮತ್ತು ಸ್ನೇಹಿಗಳು ಹೃದಯದಿಂದ ನೆನಪು ಮಾಡುತ್ತಾರೆ. ಬುದ್ಧಿಯಿಂದ ನೆನಪು ಮಾಡುವವರಿಗೆ ನೆನಪಿನಲ್ಲಿ, ಸೇವೆಯಲ್ಲಿ, ಧಾರಣೆಯಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಅವರು ಪರಿಶ್ರಮದ ಫಲವನ್ನು ತಿನ್ನುತ್ತಾರೆ ಮತ್ತು ಹೃದಯದಿಂದ ನೆನಪು ಮಾಡುವವರು ಪ್ರೀತಿಯ ಫಲವನ್ನು ತಿನ್ನುತ್ತಾರೆ. ಎಲ್ಲಿ ಸ್ನೇಹವಿಲ್ಲವೋ ಮತ್ತು ಬುದ್ಧಿಯ ಜ್ಞಾನವಿದೆಯೆಂದರೆ ಅವರಿಗೆ ಜ್ಞಾನದ ಮಾತುಗಳಲ್ಲಿಯೂ ಏಕೆ, ಏನು, ಹೇಗೆ... ಎಂದು ಬುದ್ಧಿಯಲ್ಲಿ ಯುದ್ಧ ನಡೆಯುತ್ತಿರುತ್ತದೆ ಮತ್ತು ತನ್ನೊಂದಿಗೆ ತಾನು ಯುದ್ಧ ಮಾಡುತ್ತಿರುತ್ತಾರೆ. ಹೆಚ್ಚು ವ್ಯರ್ಥ ಸಂಕಲ್ಪಗಳು ನಡೆಯುತ್ತವೆ, ಎಲ್ಲಿ ಏಕೆ, ಏಕೆ (ಕ್ಯು, ಕ್ಯು)... ಎಂಬುದಿರುತ್ತದೆಯೋ ಅಲ್ಲಿ ಕ್ಯು (ಏಕೆ) ಎಂಬ ಕ್ಯೂ ಇರುತ್ತದೆ ಮತ್ತು ಎಲ್ಲಿ ಸ್ನೇಹವಿರುವುದೋ ಅಲ್ಲಿ ಯುದ್ಧವಿರುವುದಿಲ್ಲ, ಲವಲೀನರಾಗಿರುತ್ತಾರೆ, ಸಮಾವೇಶವಾಗಿರುತ್ತಾರೆ. ಯಾರೊಂದಿಗೆ ಹೃದಯದ ಸ್ನೇಹವಿರುತ್ತದೆಯೋ ಅಲ್ಲಿ ಸ್ನೇಹದ ಮಾತುಗಳಲ್ಲಿ ಏಕೆ, ಏನು ಎಂಬುದು ಬರುವುದಿಲ್ಲ. ಹೇಗೆ ಪತಂಗವು ದೀಪದ ಸ್ನೇಹದಲ್ಲಿ ಏಕೆ, ಏನು ಎನ್ನುವುದಿಲ್ಲ, ಬಲಿಹಾರಿಯಾಗಿ ಬಿಡುತ್ತದೆ. ಹಾಗೆಯೇ ಪರಮಾತ್ಮ ಸ್ನೇಹೀ ಆತ್ಮಗಳು ಸ್ನೇಹದಲ್ಲಿ ಸಮಾವೇಶವಾಗಿರುತ್ತಾರೆ.
ಕೆಲವು ಮಕ್ಕಳು ತಂದೆಯೊಂದಿಗೆ ವಾರ್ತಾಲಾಪ ಮಾಡುತ್ತಾ ಈ ದೂರು ಕೊಡುತ್ತಾರೆ - "ಜ್ಞಾನವೂ ಬುದ್ಧಿಯಲ್ಲಿದೆ, ಬ್ರಾಹ್ಮಣರೂ ಆದೆವು, ಆತ್ಮವನ್ನೂ ಅರಿತೆವು, ತಂದೆಯನ್ನು ಪೂರ್ಣ ಪರಿಚಯದಿಂದ ಅರಿತುಕೊಂಡೆವು, ಸಂಬಂಧಗಳ ಬಗ್ಗೆಯೂ ತಿಳಿಯಿತು, ಚಕ್ರದ ಜ್ಞಾನವೂ ಇದೆ, ರಚಯಿತ ಮತ್ತು ರಚನೆಯ ಸಂಪೂರ್ಣ ಜ್ಞಾನವಿದೆ ಆದರೂ ಸಹ ನೆನಪು ಏಕೆ ಸಹಜವಾಗುವುದಿಲ್ಲ? ಆನಂದ, ಶಕ್ತಿಯ, ಶಾಂತಿಯ ಅನುಭವ ಸದಾ ಏಕಾಗುವುದಿಲ್ಲ? ಪರಿಶ್ರಮದಿಂದೇಕೆ ನೆನಪು ಮಾಡಬೇಕಾಗುತ್ತದೆ, ನಿರಂತರ ಏಕೆ ನೆನಪಿರುವುದಿಲ್ಲ? ಪದೇ-ಪದೇ ನೆನಪು ಏಕೆ ಮರೆತು ಹೋಗುತ್ತದೆ?" ಎಂದು ದೂರು ಕೊಡುತ್ತಾರೆ. ಇದಕ್ಕೆ ಕಾರಣವೇನೆಂದರೆ ಜ್ಞಾನವು ಬುದ್ಧಿಯವರೆಗೆ ಇದೆ. ಜ್ಞಾನದ ಜೊತೆ ಜೊತೆಗೆ ಹೃದಯದ ಸ್ನೇಹವು ಕಡಿಮೆಯಿದೆ. ಕೇವಲ ಬುದ್ಧಿಯ ಸ್ನೇಹವಿದೆ. ನಾನು ಮಗುವಾಗಿದ್ದೇನೆ, ಅವರು ತಂದೆಯಾಗಿದ್ದಾರೆ, ದಾತನಾಗಿದ್ದಾರೆ, ವಿದಾತನಾಗಿದ್ದಾರೆ... ಇದು ಕೇವಲ ಬುದ್ಧಿಯ ಜ್ಞಾನವಾಗಿದೆ. ಆದರೆ ಇದೇ ಜ್ಞಾನವು ಹೃದಯದಲ್ಲಿ ಸಮಾವೇಶವಾದಾಗ ಆ ಸ್ನೇಹದ ಚಿಹ್ನೆಯಾಗಿ ಏನನ್ನು ತೋರಿಸುತ್ತಾರೆ? ಹೃದಯ. ಅಂದಾಗ ಜ್ಞಾನ ಮತ್ತು ಸ್ನೇಹವು ಕಂಬೈಂಡ್ ಆಗಿ ಬಿಡುತ್ತದೆ. ಜ್ಞಾನವು ಬೀಜವಾಗಿದೆ, ಸ್ನೇಹವು ಜಲವಾಗಿದೆ. ಒಂದುವೇಳೆ ಬೀಜಕ್ಕೆ ನೀರು ಸಿಗಲಿಲ್ಲವೆಂದರೆ ಅದು ಫಲ ಕೊಡುವುದಿಲ್ಲ, ಹಾಗೆಯೇ ಜ್ಞಾನವಿದೆ ಆದರೆ ಹೃದಯದ ಸ್ನೇಹವಿಲ್ಲವೆಂದರೆ ಪ್ರಾಪ್ತಿಯ ಫಲ ಸಿಗುವುದಿಲ್ಲ ಆದ್ದರಿಂದ ಪರಿಶ್ರಮವೆನಿಸುತ್ತದೆ. ಸ್ನೇಹ ಅರ್ಥಾತ್ ಸರ್ವ ಪ್ರಾಪ್ತಿಯ, ಸರ್ವ ಅನುಭವದ ಸಾಗರದಲ್ಲಿ ಸಮಾವೇಶವಾಗಿರುವುದು. ಹೇಗೆ ಲೌಕಿಕ ಪ್ರಪಂಚದಲ್ಲಿಯೂ ನೋಡಿ, ಅತಿ ಚಿಕ್ಕ ಉಡುಗೊರೆಯೂ ಸಹ ಎಷ್ಟೊಂದು ಪ್ರಾಪ್ತಿಯ ಅನುಭವ ಮಾಡಿಸುತ್ತದೆ! ಮತ್ತು ಸ್ವಾರ್ಥದ ಸಂಬಂಧದಿಂದ ಲೇವಾದೇವಿ ಮಾಡಿ ಕೋಟಿಗಳಷ್ಟು ಕೊಡಬಹುದು, ಕೋಟಿಗಳಷ್ಟು ಸಿಕ್ಕಿದರೂ ಸಹ ಸಂತುಷ್ಟತೆಯಿರುವುದಿಲ್ಲ. ಯಾವುದಾದರೊಂದು ಇದು ಬೇಕು, ಅದು ಮಾಡಬೇಕೆಂದು ಕೊರತೆಗಳನ್ನು ತೆಗೆಯುತ್ತಲೇ ಇರುತ್ತಾರೆ. ಇತ್ತೀಚೆಗೆ ಎಷ್ಟೊಂದು ಖರ್ಚು ಮಾಡುತ್ತಾರೆ, ಎಷ್ಟೊಂದು ಶೋ ಮಾಡುತ್ತಾರೆ ಆದರೂ ಸಹ ಆ ಸ್ನೇಹವು ಸಮೀಪ ಬರುತ್ತದೆಯೇ ಅಥವಾ ದೂರ ಮಾಡುತ್ತದೆಯೇ? ಕೋಟಿಗಳ ಲೇವಾದೇವಿಯು ಅಷ್ಟು ಸುಖದ ಅನುಭವ ಮಾಡಿಸುವುದಿಲ್ಲ. ಆದರೆ ಹೃದಯದ ಸ್ನೇಹದ ಒಂದು ಚಿಕ್ಕ ವಸ್ತುವೂ ಸಹ ಎಷ್ಟೊಂದು ಸುಖದ ಅನುಭವ ಮಾಡಿಸುತ್ತದೆ ಏಕೆಂದರೆ ಹೃದಯದ ಸ್ನೇಹವು ಲೆಕ್ಕಾಚಾರಗಳನ್ನೂ ಸಹ ಸಮಾಪ್ತಿ ಮಾಡುತ್ತದೆ. ಸ್ನೇಹವು ಇಂತಹ ವಿಶೇಷ ಅನುಭೂತಿಯಾಗಿದೆ ಅಂದಾಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿ - ಜ್ಞಾನದ ಜೊತೆ ಜೊತೆಗೆ ಹೃದಯದ ಸ್ನೇಹವಿದೆಯೇ? ಹೃದಯದಲ್ಲಿ ಲೀಕೇಜಂತೂ ಇಲ್ಲವೇ? ಎಲ್ಲಿ ಲೀಕೇಜ್ ಇರುವುದೋ ಅಲ್ಲಿ ಏನಾಗುತ್ತದೆ? ಒಂದುವೇಳೆ ಒಬ್ಬ ತಂದೆಯ ವಿನಃ ಮತ್ತ್ಯಾರೊಂದಿಗಾದರೂ ಸಂಕಲ್ಪ ಮಾತ್ರದಲ್ಲಿ ಸ್ನೇಹವಿದ್ದರೂ ಸಹ ಭಲೆ ವ್ಯಕ್ತಿಯೊಂದಿಗೆ, ವೈಭವದೊಂದಿಗೆ ವ್ಯಕ್ತಿಯಲ್ಲಿಯೂ ಶರೀರದೊಂದಿಗೆ ಸ್ನೇಹವಿರಬಹುದು ಆದರೆ ಅವರ ವಿಶೇಷತೆಯೊಂದಿಗಿರಬಹುದು, ಹದ್ದಿನ ಪ್ರಾಪ್ತಿಯ ಆಧಾರದೊಂದಿಗಿರಬಹುದು ಆದರೆ ಆ ವಿಶೇಷತೆಯನ್ನು ಕೊಡುವವರು ಯಾರು, ಪ್ರಾಪ್ತಿ ಮಾಡಿಸುವವರು ಯಾರು?
ಯಾವುದೇ ಪ್ರಕಾರದಿಂದ ಸ್ನೇಹ ಅರ್ಥಾತ್ ಸೆಳೆತ ಸಂಕಲ್ಪ ಮಾತ್ರದಲ್ಲಿರಬಹುದು, ವಾಣಿಯಲ್ಲಿ ಇರಬಹುದು, ಕರ್ಮದಲ್ಲಿ ಇರಬಹುದು ಇದಕ್ಕೆ ಲೀಕೇಜ್ ಎಂದೇ ಹೇಳಲಾಗುವುದು. ಕೆಲವು ಮಕ್ಕಳು ಬಹಳ ಭೋಲಾತನದಲ್ಲಿ ಹೇಳುತ್ತಾರೆ - ಸೆಳೆತವಂತೂ ಇಲ್ಲ, ಆದರೆ ಇಷ್ಟವಾಗುತ್ತದೆ. ಬಯಸುವುದಿಲ್ಲ, ಆದರೆ ನೆನಪು ಬಂದು ಬಿಡುತ್ತದೆ. ಅಂದಾಗ ಸೆಳೆತದ ಚಿಹ್ನೆಯೇನೆಂದರೆ ಸಂಕಲ್ಪ, ಮಾತು ಮತ್ತು ಕರ್ಮದೊಂದಿಗೆ ಬಾಗುವಿಕೆ ಇದೆ. ಆದ್ದರಿಂದ ಲೀಕೇಜ್ ಇರುವ ಕಾರಣ ಶಕ್ತಿಯು ಹೆಚ್ಚುವುದಿಲ್ಲ ಮತ್ತು ಶಕ್ತಿಶಾಲಿಗಳಾಗದ ಕಾರಣ ತಂದೆಯನ್ನು ನೆನಪು ಮಾಡುವುದರಲ್ಲಿ ಪರಿಶ್ರಮವಾಗುತ್ತದೆ. ಪರಿಶ್ರಮವಾಗುವ ಕಾರಣ ಸಂತುಷ್ಟತೆ ಇರುವುದಿಲ್ಲ. ಮತ್ತು ಎಲ್ಲಿ ಸಂತುಷ್ಟತೆ ಇರುವುದಿಲ್ಲವೋ ಅಲ್ಲಿ ಈಗೀಗ ನೆನಪಿನ ಅನುಭೂತಿಯಿಂದ ಮಸ್ತಿಯಲ್ಲಿ ಮಸ್ತರಾಗಿರುತ್ತಾರೆ ಮತ್ತು ಈಗೀಗ ಹೃದಯ ವಿಧೀರ್ಣರು ಆಗುತ್ತಾರೆ ಏಕೆಂದರೆ ಲೀಕೇಜ್ ಇರುವ ಕಾರಣ ಶಕ್ತಿಯು ಸ್ವಲ್ಪ ಸಮಯ ತುಂಬುತ್ತದೆ, ಸದಾ ಇರುವುದಿಲ್ಲ. ಆದ್ದರಿಂದ ಸಹಜ, ನಿರಂತರ ಯೋಗಿಗಳಾಗಲು ಸಾಧ್ಯವಿಲ್ಲ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಯಾವುದೇ ವ್ಯಕ್ತಿ ಹಾಗೂ ವೈಭವದಲ್ಲಿ ಸೆಳೆತವಂತೂ ಇಲ್ಲವೆ? ಅರ್ಥಾತ್ ಲೀಕೇಜಂತೂ ಇಲ್ಲವೇ? ಈ ಲೀಕೇಜ್ ಲವಲೀನ ಸ್ಥಿತಿಯ ಅನುಭವ ಮಾಡಿಸುವುದಿಲ್ಲ, ವೈಭವದ ಪ್ರಯೋಗ ಭಲೆ ಮಾಡಿ ಆದರೆ ಯೋಗಿಯಾಗಿ ಪ್ರಯೋಗ ಮಾಡಿ. ಯಾವುದನ್ನು ತಾವು ಆರಾಮಿನ ಸಾಧನವೆಂದು ತಿಳಿಯುತ್ತೀರೋ ಅದು ಮನಸ್ಸಿನ ಸ್ಥಿತಿಯನ್ನು ಏರುಪೇರು ಮಾಡುವಂತಾಗಬಾರದು ಏಕೆಂದರೆ ಕೆಲವು ಮಕ್ಕಳು ವೈಭವಗಳಿಗೆ ವಶರಾಗುತ್ತಿದ್ದರೂ ಮನಸ್ಸಿನ ಸೆಳೆತವನ್ನು ತಿಳಿದುಕೊಳ್ಳುವುದಿಲ್ಲ. ರಾಯಲ್ ಭಾಷೆಯಲ್ಲಿ ಇದನ್ನೇ ಹೇಳುತ್ತಾರೆ - ಹಠಯೋಗಿಗಳಲ್ಲ, ಸಹಜ ಯೋಗಿಗಳಾಗಿದ್ದೇವೆ. ಭಲೆ ಸಹಜಯೋಗಿಗಳಾಗುವುದು ಒಳ್ಳೆಯದು ಅಂದಾಗ ಯೋಗಿಯಾಗಿದ್ದೀರಾ? ಯಾವುದು ತಂದೆಯ ನೆನಪನ್ನು ಏರುಪೇರಿನಲ್ಲಿ ತರುವುದೋ ಅರ್ಥಾತ್ ತನ್ನ ಕಡೆ ಆಕರ್ಷಣೆ ಮಾಡುವುದು, ಬಾಗುವಂತೆ ಮಾಡಿದರೆ ಯೋಗಿಯಾಗಿ ಪ್ರಯೋಗ ಮಾಡುವವರೆಂದು ಹೇಳುವುದಿಲ್ಲ. ಏಕೆಂದರೆ ತಂದೆಯವರಾದ ಕಾರಣ ಸಮಯ ಪ್ರತಿ ಸಮಯ ಪ್ರಕೃತಿ ದಾಸಿ ಅರ್ಥಾತ್ ವೈಭವಗಳ ಸಾಧನಗಳ ಪ್ರಾಪ್ತಿಯು ಹೆಚ್ಚುತ್ತಾ ಹೋಗುತ್ತಿದೆ. ಈ 18-19 ವರ್ಷಗಳಲ್ಲಿ ಎಷ್ಟೊಂದು ಪ್ರಾಪ್ತಿಯಾಗುತ್ತಿದೆ, ಎಲ್ಲಾ ಆರಾಮಿನ ಸಾಧನಗಳು ಹೆಚ್ಚುತ್ತಾ ಹೋಗುತ್ತಿವೆ ಆದರೆ ತಂದೆಯ ಮಕ್ಕಳಾಗಿರುವ ಫಲವಾಗಿ ಈ ಪ್ರಾಪ್ತಿಗಳಾಗುತ್ತಿವೆ. ಅಂದಾಗ ಫಲವನ್ನು ತಿನ್ನುತ್ತಾ ಬೀಜವನ್ನು ಮರೆತು ಹೋಗಬೇಡಿ. ಈ ಸಾಧನಗಳು ಸ್ವಲ್ಪ ಸಮಯದವರೆಗೆ ಹೆಚ್ಚುತ್ತಾ ಹೋಗುತ್ತವೆ ಆದರೆ ಆರಾಮಿನಲ್ಲಿ ಬರುತ್ತಾ ರಾಮನನ್ನು ಮರೆತು ಹೋಗಬೇಡಿ, ಸತ್ಯ ಸೀತೆಯಾಗಿ ಇರಿ. ಮರ್ಯಾದೆಯ ಗೆರೆಯಿಂದ ಸಂಕಲ್ಪರೂಪಿ ಬೆರಳನ್ನೂ ಸಹ ಹೊರ ತೆಗೆಯಬೇಡಿ ಏಕೆಂದರೆ ಸಾಧನೆಯಿಲ್ಲದೇ ಈ ಸಾಧನಗಳನ್ನು ಉಪಯೋಗಿಸುತ್ತೀರೆಂದರೆ ಇವು ಚಿನ್ನದ ಜಿಂಕೆಯ ಕೆಲಸ ಮಾಡುವವು. ಆದ್ದರಿಂದ ವ್ಯಕ್ತಿ ಮತ್ತು ವೈಭವದ ಸೆಳೆತ ಮತ್ತು ಬಾಗುವಿಕೆಯಿಂದ ಸದಾ ತನ್ನನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಇಲ್ಲವಾದರೆ ತಂದೆಯ ಸ್ನೇಹಿಗಳಾಗುವ ಬದಲು, ಸಹಜಯೋಗಿಗಳಾಗುವ ಬದಲು ಕೆಲವೊಮ್ಮೆ ಸಹಯೋಗಿ, ಕೆಲವೊಮ್ಮೆ ಸಹಜಯೋಗಿ ಇನ್ನೂ ಕೆಲವೊಮ್ಮೆ ವಿಯೋಗಿ, ಎರಡು ಅನುಭವಗಳನ್ನು ಮಾಡುತ್ತಾ ಇರುತ್ತೀರಿ. ಕೆಲವೊಮ್ಮೆ ನೆನಪು, ಕೆಲವೊಮ್ಮೆ ದೂರುವುದು, ಈ ರೀತಿಯ ಅನುಭೂತಿಯಲ್ಲಿರುತ್ತೀರಿ ಮತ್ತು ನಿಮ್ಮ ದೂರುಗಳೆಂದೂ ಈಡೇರುವುದಿಲ್ಲ.
ವ್ಯಕ್ತಿ ಮತ್ತು ವೈಭವಕ್ಕೆ ಬಾಗುವುದರ ಗುರುತೇನೆಂದರೆ ಒಂದನೆಯದಾಗಿ ತಿಳಿಸಿದೆವು - ಕೆಲವೊಮ್ಮೆ ಸಹಯೋಗಿ, ಕೆಲವೊಮ್ಮೆ ಯೋಗಿ, ಇನ್ನೂ ಕೆಲವೊಮ್ಮೆ ದೂರುವವರಾಗುವರು. ಎರಡನೆಯ ಮಾತೇನೆಂದರೆ - ಇಂತಹ ಆತ್ಮನಿಗೆ ಸಾಧನಗಳಿರಬಹುದು, ಸಹಯೋಗ-ಸ್ನೇಹವಿರಬಹುದು, ಎಲ್ಲವೂ ಪ್ರಾಪ್ತಿಯಾಗಬಹುದು ಆದರೆ ಲೀಕೇಜ್ ಇರುವ ಆತ್ಮನು ಪ್ರಾಪ್ತಿಗಳಿದ್ದರೂ ಸಹ ಎಂದೂ ಸಂತುಷ್ಟನಾಗಿರುವುದಿಲ್ಲ. ಅವರ ಬಾಯಿಂದ ಸದಾ ಯಾವುದಾದರೊಂದು ಪ್ರಕಾರದ ಅಸಂತುಷ್ಟತೆಯ ಮಾತುಗಳು ಬಯಸದಿದ್ದರೂ ಹೊರ ಬರುತ್ತಿರುತ್ತವೆ. ಇವರಿಗೆ ಬಹಳ ಸಿಗುತ್ತದೆ, ಇವರ ತರಹ ಯಾರಿಗೂ ಸಿಗುವುದಿಲ್ಲವೆಂದು ಬೇರೆಯವರು ಮಾಡುತ್ತಾರೆ ಆದರೆ ಆ ಆತ್ಮಗಳು ಮಾತ್ರ ಸದಾ ತನ್ನ ಅಪ್ರಾಪ್ತಿಯ ದುಃಖದ ವರ್ಣನೆಯನ್ನೇ ಮಾಡುತ್ತಿರುತ್ತಾರೆ. ಇವರಂತಹ ಸುಖಿಯು ಯಾರೂ ಇಲ್ಲವೆಂದು ಬೇರೆಯವರು ಹೇಳುತ್ತಾರೆ ಮತ್ತು ನನ್ನಂತಹ ದುಃಖಿಯು ಯಾರೂ ಇಲ್ಲವೆಂದು ಅವರೂ ಹೇಳುತ್ತಿರುತ್ತಾರೆ ಏಕೆಂದರೆ ಅಂತಹವರು ಬಲೂನಿನ ಹಾಗೆ. ಹೇಗೆ ಬಲೂನ್ ಗಾಳಿಯಿದ್ದಾಗ ದೊಡ್ಡದಾಗುತ್ತದೆ ಮತ್ತು ಮೇಲೆ ಹಾರುತ್ತದೆ. ಯಾವಾಗ ಗಾಳಿಯು ಮುಗಿಯುವುದೋ ಆಗ ಎಲ್ಲಿಯೋ ಬೀಳುತ್ತದೆ! ಹಾರುವುದನ್ನು ನೋಡುವುದಕ್ಕೆ ಎಷ್ಟು ಸುಂದರವೆನಿಸುತ್ತದೆ ಆದರೆ ಅದು ಅಲ್ಪಕಾಲದ್ದಾಗಿರುತ್ತದೆ. ಹಾಗೆಯೇ ಲೀಕೇಜ್ ಇರುವ ಆತ್ಮಗಳು ಎಂದೂ ತನ್ನ ಭಾಗ್ಯದಿಂದ ಸಂತುಷ್ಟರಾಗಿರುವುದಿಲ್ಲ. ಸದಾ ಇವರು ಹೀಗೆ ಮಾಡುತ್ತಾರೆ, ಇದು ಹೀಗಾಗುತ್ತದೆ ಆದ್ದರಿಂದ ನನ್ನ ಭಾಗ್ಯವಿಲ್ಲ ಎಂದು ಯಾರಾದರೊಬ್ಬರನ್ನು ತನ್ನ ಭಾಗ್ಯದ, ಅಪ್ರಾಪ್ತಿಯ ನಿಮಿತ್ತರನ್ನಾಗಿ ಮಾಡಿಕೊಳ್ಳುತ್ತಾ ಇರುತ್ತಾರೆ. ಭಾಗ್ಯವಿದಾತನು ಭಾಗ್ಯ ಮಾಡಿಸುವವರಾಗಿದ್ದಾರೆ. ಎಲ್ಲಿ ಭಾಗ್ಯವಿದಾತನು ಭಾಗ್ಯವನ್ನು ರೂಪಿಸುತ್ತಿದ್ದಾರೆಯೋ ಆ ಪರಮಾತ್ಮನ ಶಕ್ತಿಯ ಮುಂದೆ ಆತ್ಮನ ಶಕ್ತಿಯು ಭಾಗ್ಯವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಇವೆಲ್ಲವೂ ನೆಪಗಳಾಗಿವೆ. ಹಾರುವ ಕಲೆಯ ಆಟವು ಬರಲಿಲ್ಲವೆಂದರೆ ಬಹಳಷ್ಟು ನೆಪಗಳನ್ನು ಹೇಳುತ್ತಿರುತ್ತಾರೆ. ಇದರಲ್ಲಿ ಎಲ್ಲರೂ ಬುದ್ಧಿವಂತರಿದ್ದಾರೆ ಆದ್ದರಿಂದ ಇದನ್ನು ಪರಿಶೀಲನೆ ಮಾಡಿಕೊಳ್ಳಿ - ಭಲೆ ಸ್ನೇಹದಿಂದ ಬಾಗುವಿಕೆಯಿರಬಹುದು ಅಥವಾ ಲೆಕ್ಕಾಚಾರವು ಸಮಾಪ್ತಿಯಾಗುವ ಕಾರಣ ಬಾಗುವಿಕೆಯಿರಬಹುದು, ಎರಡನ್ನೂ ಪರಿಶೀಲನೆ ಮಾಡಿಕೊಳ್ಳಿ.
ಯಾರೊಂದಿಗೇ ಈರ್ಷ್ಯೆ ಅಥವಾ ತಿರಸ್ಕಾರವಿರುವುದೋ ಅಲ್ಲಿಯೂ ಬಾಗುವಿಕೆಯಿರುತ್ತದೆ. ಅಂದರೆ ಪದೇ-ಪದೇ ಅವರೇ ನೆನಪಿಗೆ ಬರುತ್ತಿರುತ್ತಾರೆ. ತಂದೆಯನ್ನು ನೆನಪು ಮಾಡಲು ಯೋಗದಲ್ಲಿ ಕುಳಿತುಕೊಂಡರೆ ಈರ್ಷ್ಯೆ ಅಥವಾ ತಿರಸ್ಕಾರವು ಯಾರೊಂದಿಗಿದೆಯೋ ಅವರೇ ನೆನಪಿಗೆ ಬರುತ್ತಾರೆ. ನಾನು ಸ್ವದರ್ಶನ ಚಕ್ರಧಾರಿ ಆಗಿದ್ದೇನೆಂದು ಯೋಚಿಸುತ್ತಾರೆ ಆದರೆ ಪರದರ್ಶನ ಚಕ್ರವು ನಡೆಯುತ್ತಿರುತ್ತದೆ ಅಂದಾಗ ಎರಡೂ ಕಡೆಯ ಬಾಗುವಿಕೆಯು ಕೆಳಗೆ ತರುತ್ತದೆ. ಆದ್ದರಿಂದ ಎರಡನ್ನೂ ಪರಿಶೀಲನೆ ಮಾಡಿಕೊಳ್ಳಿ ನಂತರ ತಂದೆಯ ಮುಂದೆ ನಾನಂತೂ ಬಹಳ ಚೆನ್ನಾಗಿದ್ದೇನೆ, ಕೇವಲ ಇದೊಂದೇ ಮಾತು ಹೀಗಿದೆ. ಇದನ್ನು ತಾವು ಕಳೆಯಿರಿ ಎಂದು ಅರ್ಜಿ ಹಾಕುತ್ತಾರೆ. ಆಗ ತಂದೆಯು ಮುಗುಳ್ನಗುತ್ತಾ ಹೇಳುತ್ತಾರೆ - ಲೆಕ್ಕಾಚಾರವನ್ನು ತಾವು ಮಾಡಿಕೊಂಡರು, ಆದರೆ ತಂದೆಯು ಸಮಾಪ್ತಿ ಮಾಡುವುದೇ! ಬಾಬಾ, ಲೆಕ್ಕಾಚಾರವನ್ನು ಚುಕ್ತ ಮಾಡಿಸಿ ಎಂದು ಹೇಳುವುದು ಸರಿಯಾಗಿದೆ. ಆದರೆ ತಾವೇ ಚುಕ್ತ ಮಾಡಿ ಎಂದು ಹೇಳುವುದು ಸರಿಯಲ್ಲ. ಲೆಕ್ಕಾಚಾರ ಬೆಳೆಸಿಕೊಳ್ಳುವ ಸಮಯದಲ್ಲಿ ತಂದೆಯನ್ನೇ ಮರೆತು ಹೋದರು ಮತ್ತು ಚುಕ್ತ ಮಾಡುವ ಸಮಯದಲ್ಲಿ ಬಾಬಾ, ಬಾಬಾ ಎಂದು ಹೇಳುತ್ತಾರೆ! ಮಾಡಿಸುವಂತಹ ತಂದೆಯು ಮಾಡಿಸುವುದಕ್ಕಾಗಿ ಬಂಧಿತರಾಗಿದ್ದಾರೆ ಆದರೆ ತಾವೇ ಮಾಡಿಕೊಳ್ಳಬೇಕಲ್ಲವೆ. ಅಂದಾಗ ಮಕ್ಕಳ ಯಾವ-ಯಾವ ಸಮಾಚಾರಗಳನ್ನು ಬಾಪ್ದಾದಾರವರು ನೋಡುತ್ತಾರೆಂಬುದನ್ನು ಕೇಳಿದಿರಾ? ಅಂದಾಗ ಸಾರವೇನಾಯಿತು? ಕೇವಲ ಒಣಗಿದ ಜ್ಞಾನಿಗಳಾಗಬೇಡಿ, ಬುದ್ಧಿಯ ಜ್ಞಾನಿಗಳಾಗಬೇಡಿ. ಹೃದಯದ ಜ್ಞಾನಿ ಹಾಗೂ ಸ್ನೇಹಿಗಳಾಗಿ ಹಾಗೂ ಲೀಕೇಜನ್ನು ಪರಿಶೀಲನೆ ಮಾಡಿಕೊಳ್ಳಿ. ತಿಳಿಯಿತೆ?
18 ಜನವರಿ (ಸ್ಮೃತಿ ದಿವಸ) ಯು ಬರುತ್ತಿದೆಯಲ್ಲವೆ, ಆದ್ದರಿಂದ ಮೊದಲೇ ಸ್ಮೃತಿ ತರಿಸುತ್ತಿದ್ದೇವೆ - ಜನವರಿ 18ರ ದಿನವನ್ನು ಸದಾಕಾಲದ ಸಮರ್ಥ ದಿವಸವನ್ನಾಗಿ ಆಚರಣೆ ಮಾಡಿ. ತಿಳಿಯಿತೇ? ಕೇವಲ ತಂದೆಯ ಕಥೆಯನ್ನು ಹೇಳಿ ಆಚರಿಸುವುದಲ್ಲ ಆದರೆ ಅವರ ಸಮಾನ ಜೀವನವನ್ನು ರೂಪಿಸಿಕೊಳ್ಳುವ ಲಕ್ಷ್ಯದಿಂದ ಆಚರಿಸಿ. ಒಳ್ಳೆಯದು.
ಸದಾ ವ್ಯಕ್ತಿ ಹಾಗೂ ವೈಭವಗಳ ವಶದಿಂದ ಭಿನ್ನ, ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ ಸದಾ ಯಥಾರ್ಥ ಜ್ಞಾನ ಹಾಗೂ ಹೃದಯದ ಸ್ನೇಹ - ಎರಡರಲ್ಲಿಯೂ ಕಂಬೈಂಡ್ ಸ್ಥಿತಿಯ ಅನುಭವ ಮಾಡುವಂತಹ ಸದಾ ಯೋಗಿಗಳಾಗಿ, ಸಾಧನೆಯ ಸ್ಥಿತಿಯಿಂದ ಸಾಧನಗಳನ್ನು ಕಾರ್ಯದಲ್ಲಿ ತೊಡಗಿಸುವಂತಹ ಸದಾ ಸ್ನೇಹಿ, ಹೃದಯದಲ್ಲಿ ಸಮಾವೇಶವಾಗಿರುವ ಮಕ್ಕಳಿಗೆ ಹೃದಯರಾಮ ತಂದೆಯ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:
ಡಬಲ್ ಹೀರೊಗಳೆಂದು ತಿಳಿಯುವಿರಾ? ವಜ್ರ ಸಮಾನ ಜೀವನವಾಗಿದೆ ಅಂದಮೇಲೆ ಹೀರೊ ಸಮಾನರಾಗಿದ್ದೀರಿ ಹಾಗೂ ಸೃಷ್ಟಿ ನಾಟಕದಲ್ಲಿ ಆದಿಯಿಂದ ಅಂತ್ಯದವರೆಗೂ ಹೀರೊ ಪಾತ್ರವನ್ನು ಅಭಿನಯಿಸುವವರು ಆಗಿದ್ದೀರಿ ಅಂದರೆ ಡಬಲ್ ಹೀರೋ ಆಗಿದ್ದೀರಲ್ಲವೆ. ಅಲ್ಪಕಾಲದ ಯಾವುದೇ ನಾಟಕದಲ್ಲಿ ಪಾತ್ರವನ್ನು ಮಾಡುವಂತಹ ಹೀರೊ ಪಾತ್ರವುಳ್ಳವನ ಬಗ್ಗೆ ಮಹಿಮೆಯಾಗುತ್ತದೆ ಆದರೆ ಡಬಲ್ ಹೀರೊಗಳಂತು ಯಾರೂ ಆಗುವುದಿಲ್ಲ. ನೋಡಿದರೆ ತಾವು ಡಬಲ್ ಹೀರೊ ಆಗಿದ್ದೀರಿ. ತಂದೆಯವರ ಜೊತೆ ಪಾತ್ರವನ್ನು ಮಾಡುವುದೆಷ್ಟು ಭಾಗ್ಯವಾಗಿದೆ! ಅಂದಮೇಲೆ ಸದಾ ಈ ಶ್ರೇಷ್ಠ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಮುಂದುವರೆಯುತ್ತಾ ಇದ್ದೀರಲ್ಲವೆ. ನಿಲ್ಲುವವರಂತು ಆಗಿಲ್ಲ ಅಲ್ಲವೇ? ಯಾರು ಸುಸ್ತಾಗುವುದಿಲ್ಲವೋ ಅವರು ನಿಲ್ಲುವುದೂ ಇಲ್ಲ, ಮುಂದೆ ಸಾಗುತ್ತಾ ಇರುತ್ತಾರೆ ಅಂದಾಗ ತಾವು ನಿಲ್ಲುವವರೇ ಅಥವಾ ಸುಸ್ತಾಗುವವರೇ? ಒಂಟಿಯಾದರೂ ಸುಸ್ತಾಗುತ್ತದೆ, ಬೇಸರವಾದರೂ ಸುಸ್ತಾಗುತ್ತದೆ ಆದರೆ ಎಲ್ಲಿ ಜೊತೆಯಿದೆಯೋ ಅಲ್ಲಿ ಸದಾಕಾಲವೂ ಒಲವು-ಉತ್ಸಾಹವಿರುತ್ತದೆ. ಯಾವುದೇ ಯಾತ್ರೆಯಲ್ಲಿ ಹೋದಾಗಲೂ ಏನು ಮಾಡುತ್ತಾರೆ? ಸಂಘಟನೆಯನ್ನು ತಯಾರು ಮಾಡುತ್ತಾರಲ್ಲವೆ. ಏಕೆ ಮಾಡುತ್ತಾರೆ? ಸಂಘಟನೆಯಿಂದ, ಜೊತೆಯಿಂದ ಒಲವು-ಉತ್ಸಾಹದಿಂದ ಮುಂದೆ ಸಾಗುತ್ತಿರುತ್ತಾರೆ. ಆದ್ದರಿಂದ ತಾವೆಲ್ಲರೂ ಸಹ ಆತ್ಮಿಕ ಯಾತ್ರೆಯಲ್ಲಿ ಸದಾ ಮುಂದುವರೆಯುತ್ತಾ ಇರಬೇಕು ಏಕೆಂದರೆ ತಂದೆಯ ಜೊತೆ(ಸಂಗ), ಬ್ರಾಹ್ಮಣ ಪರಿವಾರದ ಶ್ರೇಷ್ಠವಾದ ಸಂಗವು ಜೊತೆಯಿದೆ! ಒಂದುವೇಳೆ ಒಳ್ಳೆಯ ಸಂಗಾತಿಯಿದ್ದರೆ ಎಂದಿಗೂ ಸಹ ಬೇಸರವಾಗುವುದಿಲ್ಲ, ಸುಸ್ತಾಗುವುದಿಲ್ಲ. ಅಂದಮೇಲೆ ಸದಾ ಮುಂದುವರೆಯುವವರು ಸದಾಕಾಲವೂ ಹರ್ಷಿತವಾಗಿ ಇರುತ್ತಾರೆ, ಸದಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಆದ್ದರಿಂದ ವೃದ್ಧಿ ಹೊಂದುತ್ತಾ ಇರುತ್ತೀರಲ್ಲವೆ! ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲೇಬೇಕು ಏಕೆಂದರೆ ಅಗಲಿರುವ ಯಾವುದೇ ಮಗು ಯಾವುದೇ ಮೂಲೆಯಲ್ಲಿ ಇರಬಹುದು, ಅಲ್ಲಿ ಆ ಆತ್ಮರು ಸಮೀಪಕ್ಕೆ ಬರಲೇಬೇಕಾಗಿದೆ. ಆದ್ದರಿಂದ ಸೇವೆಯಲ್ಲಿಯೂ ವೃದ್ಧಿಯಾಗುತ್ತಾ ಇರುತ್ತದೆ. ಯಾರೆಷ್ಟಾದರೂ ಶಾಂತವಾಗಿ ಕುಳಿತುಕೊಳ್ಳಬೇಕೆಂದು ಬಯಸಬಹುದು ಆದರೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸೇವೆಯು ಕುಳಿತುಕೊಳ್ಳುವುದಕ್ಕೆ ಬಿಡುವುದಿಲ್ಲ, ಮುಂದುವರೆಸುತ್ತದೆ ಏಕೆಂದರೆ ಯಾವ ಆತ್ಮರು ತಂದೆಯ ಮಕ್ಕಳಾಗಿದ್ದರು, ಅವರು ಪುನಃ ತಂದೆಯ ಮಕ್ಕಳಾಗಲೇಬೇಕು. ಒಳ್ಳೆಯದು!
ಮುಖ್ಯ ಸಹೋದರರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:
ಶಕ್ತಿಯರಿಗೆ ಒಳ್ಳೆಯ ಅವಕಾಶವು ಸಿಗುತ್ತದೆ, ದಾದಿಯರಾಗುವುದು ಒಳ್ಳೆಯದು ಎಂದು ಪಾಂಡವರು ಯೋಚಿಸುತ್ತಾರೆ. ಆದರೆ ಪಾಂಡವರೇನಾದರೂ ಪ್ಲಾನಿಂಗ್ ಬುದ್ಧಿಯವರು ಆಗಿಲ್ಲದಿದ್ದರೆ, ಶಕ್ತಿಯರೇನು ಮಾಡುವರು. ಅಂತಿಮ ಜನ್ಮದಲ್ಲಿಯೂ ಪಾಂಡವರಾಗುವುದು ಕಡಿಮೆ ಮಾತಲ್ಲ! ಏಕೆಂದರೆ ಪಾಂಡವರ ವಿಶೇಷತೆಯಂತು ಬ್ರಹ್ಮಾ ತಂದೆಯ ಜೊತೆಯಲ್ಲಿಯೇ ಇದೆ. ಅಂದಮೇಲೆ ಪಾಂಡವರೇನು ಕಡಿಮೆಯಲ್ಲ, ಪಾಂಡವರಿಲ್ಲದೆ ಶಕ್ತಿಯರಿಲ್ಲ, ಶಕ್ತಿಯರಿಲ್ಲದೆ ಪಾಂಡವರಿಲ್ಲ. ಚತುರ್ಭುಜನ ಎರಡು ಭುಜಗಳು ಅವರದು (ನಾರಾಯಣ) ಮತ್ತು ಎರಡು ಭುಜಗಳು (ಲಕ್ಷ್ಮಿ) ಅವರದಾಗಿದೆ. ಆದ್ದರಿಂದ ಪಾಂಡವರದು ತನ್ನ ವಿಶೇಷತೆಯಿದೆ, ನಿಮಿತ್ತವಷ್ಟೇ ಸೇವೆಗಾಗಿ ಇವರಿಗೆ ಸಿಕ್ಕಿದೆ(ದಾದಿಯರಿಗೆ) ಆದ್ದರಿಂದ ಇವರು ಮಾಡುತ್ತಾರೆ. ಬಾಕಿ ಸದಾ ಪಾಂಡವರಿಗಾಗಿ ಶಕ್ತಿಯರ ಮತ್ತು ಶಕ್ತಿಯರಿಗಾಗಿ ಪಾಂಡವರ ಸ್ನೇಹವಿದೆ, ಗೌರವವಿದೆ ಹಾಗೂ ಸದಾಕಾಲವೂ ಇರುತ್ತದೆ. ಶಕ್ತಿಯರು ಪಾಂಡವರನ್ನು ಮುಂದಿಡುತ್ತಾರೆ - ಇದರಲ್ಲಿಯೇ ಸಫಲತೆಯಿದೆ ಮತ್ತು ಪಾಂಡವರು ಶಕ್ತಿಯರನ್ನು ಮುಂದಿಡುತ್ತಾರೆ - ಇದರಲ್ಲಿಯೇ ಸಫಲತೆಯಿದೆ. `ಮೊದಲು ತಾವು' ಎಂಬ ಪಾಠವು ಇಬ್ಬರಲ್ಲಿಯೂ ಪರಿಪಕ್ವವಾಗಿದೆ. `ಮೊದಲು ತಾವು', `ಮೊದಲು ತಾವು' ಎನ್ನುತ್ತಾ ಸ್ವಯಂ ಸಹ `ಮೊದಲು ತಾವು' ಆಗಿ ಬಿಡುತ್ತೀರಿ. ಮಧ್ಯದಲ್ಲಿ ತಂದೆಯಿದ್ದರೆ ಜಗಳಗಳೇ ಇರುವುದಿಲ. ಪಾಂಡವರಿಗೆ ಬುದ್ಧಿಯ ಒಳ್ಳೆಯ ವರದಾನವು ಸಿಕ್ಕಿರುತ್ತದೆ, ಅವರು ಯಾವ ಕಾರ್ಯಕ್ಕಾಗಿ ನಿಮಿತ್ತರಾಗಿದ್ದಾರೆಯೋ, ಅದೇ ವಿಶೇಷತೆಯೂ ಸಿಕ್ಕಿರುತ್ತದೆ ಹಾಗೂ ಪ್ರತಿಯೊಬ್ಬರ ವಿಶೇಷತೆಯಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದಿದ್ದಾರೆ ಆದ್ದರಿಂದ ತಾವು ನಿಮಿತ್ತ ಆತ್ಮರಾಗಿದ್ದೀರಿ. ಒಳ್ಳೆಯದು.
ಓಂ ಶಾಂತಿ. ತಂದೆಯು ಕುಳಿತು ತಿಳಿಸುತ್ತಾರೆ - ಈಗ ಮಕ್ಕಳಿಗೆ ಚೆನ್ನಾಗಿ ಗೊತ್ತಾಗಿದೆ, ಬೇಹದ್ದಿನ ತಂದೆಯನ್ನು ಕೆಟ್ಟು ಹೋಗಿರುವವರನ್ನು ಸರಿ ಪಡಿಸುವವರು ಎಂದು. ಕೃಷ್ಣನು ಕೆಟ್ಟು ಹೋಗಿರುವವರನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲ. ಗೀತೆಯ ಭಗವಂತ ಕೃಷ್ಣನಲ್ಲ, ಶಿವನಾಗಿದ್ದಾನೆ. ಶಿವ ತಂದೆಯು ರಚಯಿತನಾಗಿದ್ದಾರೆ, ಕೃಷ್ಣನು ರಚನೆಯಾಗಿದ್ದಾನೆ. ಸ್ವರ್ಗದ ಆಸ್ತಿಯನ್ನು ಕೊಡುವವರು ಸ್ವರ್ಗದ ರಚಯಿತನೇ ಆಗಿರಬೇಕು. ಇದೇ ಭಾರತದ ಬಹಳ ದೊಡ್ಡ ತಪ್ಪಾಗಿದೆ. ಶ್ರೀಕೃಷ್ಣನನ್ನು ತಂದೆ ಎಂದು ಹೇಳಲು ಸಾಧ್ಯವಿಲ್ಲ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ, ಭಾರತಕ್ಕೇ ಸಿಕ್ಕಿತ್ತು. ಭಾರತದಲ್ಲಿಯೇ ಶ್ರೀಕೃಷ್ಣನ ರಾಜ್ಯಭಾರ ಮತ್ತು ರಾಧೆಯ ರಾಜ್ಯಭಾರದ ಗಾಯನವಿದೆ. ಮಹಿಮೆಯು ಶ್ರೇಷ್ಠಾತಿ ಶ್ರೇಷ್ಠ ತಂದೆಯೊಬ್ಬರದೇ ಆಗಿದೆ. ಶ್ರೀಕೃಷ್ಣನು ಶ್ರೇಷ್ಠಾತಿ ಶ್ರೇಷ್ಠ ರಚನೆಯಾಗಿದ್ದಾನೆ, ವಿಶ್ವದ ಮಾಲೀಕನಾಗಿದ್ದಾನೆ. ಅವರಿಗೆ ಸೂರ್ಯವಂಶಿ, ದೈವೀ ಸಾಮ್ರಾಜ್ಯದವರು ಎನ್ನುತ್ತಾರೆ. ಗೀತೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಸತ್ಯಯುಗದಲ್ಲಂತೂ ಜ್ಞಾನವನ್ನು ಯಾರಿಗೂ ಹೇಳುವುದಿಲ್ಲ, ಸಂಗಮದಲ್ಲಿಯೇ ತಂದೆಯು ತಿಳಿಸುತ್ತಾರೆ. ಚಿತ್ರಗಳಲ್ಲಿಯೂ ಸಹ ಇದನ್ನೇ ಮೊದಲು ಸಿದ್ಧ ಮಾಡಬೇಕಾಗಿದೆ. ಇಬ್ಬರ ಚಿತ್ರಗಳನ್ನೂ ಇಡುತ್ತಾರೆ - ಗೀತೆಯ ಭಗವಂತ ಇವರು ರಚಯಿತನಾಗಿದ್ದಾರೆ, ಪುನರ್ಜನ್ಮರಹಿತನಾಗಿದ್ದಾರೆ ಶ್ರೀಕೃಷ್ಣನಲ್ಲ. ಅವನು ರಚನೆಯಾಗಿದೆ. ಶಿವ ತಂದೆಯು ವಜ್ರ ಸಮಾನ ಮಾಡುತ್ತಿದ್ದಾರೆ ಎಂದು ನೀವು ತಿಳಿದುಕೊಂಡಿದ್ದೀರಿ. ವಜ್ರ ಸಮಾನ, ಕಲ್ಲಿನ ಸಮಾನವೆಂದೂ ಗಾಯನ ಮಾಡುತ್ತಾರೆ. ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಂದೆಯು ಆಜ್ಞೆ ಮಾಡುತ್ತಾರೆಂದು ಮಕ್ಕಳ ಬುದ್ಧಿಯಲ್ಲಿರಬೇಕು. ಅವರು ಬೇಹದ್ದಿನ ತಂದೆಯಾಗಿದ್ದಾರೆ. ಕೃಷ್ಣನಂತೂ ಹದ್ದಿನ ಮಾಲೀಕನಾಗಿದ್ದಾನೆ. ಭಲೆ ವಿಶ್ವದ ರಾಜನಾಗುತ್ತಾನೆ, ಶಿವ ತಂದೆಯಂತೂ ರಾಜನಾಗುವುದಿಲ್ಲ. ವಾಸ್ತವದಲ್ಲಿ ಗೀತೆಗೆ ಬಹಳ ಮಹಿಮೆಯಿದೆ, ಜೊತೆ ಜೊತೆಗೆ ಭಾರತದ್ದೂ ಮಹಿಮೆಯಿದೆ. ಭಾರತವು ಎಲ್ಲಾ ಧರ್ಮದವರ ದೊಡ್ಡ ತೀರ್ಥ ಸ್ಥಾನವಾಗಿದೆ. ಕೇವಲ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಎಲ್ಲದರ ಮಹತ್ವವು ಇಲ್ಲದಂತಾಗಿದೆ. ಇದರ ಕಾರಣವೇ ಭಾರತವು ಕವಡೆಯ ಸಮಾನವಾಗಿದೆ. ಇದಂತೂ ಡ್ರಾಮಾ ಅನುಸಾರ ಇದೆ ಆದರೆ ಎಚ್ಚರಿಕೆ ಕೊಡಲೇಬೇಕಾಗುವುದು. ಬಹಳ ಚೆನ್ನಾಗಿ ತಂದೆಯು ತಿಳಿಸುತ್ತಾರೆ, ದಿನ-ಪ್ರತಿದಿನ ರಹಸ್ಯವಾದ ಮಾತುಗಳನ್ನೂ ತಿಳಿಸುತ್ತಾರೆ ಅಂದಮೇಲೆ ಹಳೆಯ ಚಿತ್ರಗಳನ್ನು ಬದಲಾಯಿಸಿ ಬೇರೆ ಚಿತ್ರಗಳನ್ನು ಮಾಡಬೇಕಾಗುವುದು. ಇದಂತೂ ಅಂತ್ಯದವರೆಗೆ ನಡೆಯುತ್ತಲೇ ಇರುತ್ತದೆ. ಶಿವ ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆಂದು ಮಕ್ಕಳ ಬುದ್ಧಿಯಲ್ಲಿ ಚೆನ್ನಾಗಿ ಇರಬೇಕು. ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದು ಎಂದು ತಂದೆಯು ತಿಳಿಸುತ್ತಾರೆ. ಕೃಷ್ಣನನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದಿಲ್ಲ, ಅವನಂತೂ ಸರ್ವಶಕ್ತಿವಂತನೂ ಅಲ್ಲ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರೇ ಆಸ್ತಿಯನ್ನು ಕೊಡುತ್ತಾರೆ. ಮನುಷ್ಯರು ಕೃಷ್ಣನನ್ನೇ ನೆನಪು ಮಾಡುತ್ತಿರುತ್ತಾರೆ. ತಿಳಿದುಕೊಳ್ಳಿ - ಕೃಷ್ಣನು ಹೇಳಿದನು, ದೇಹದ ಸಂಬಂಧವನ್ನು ಬಿಟ್ಟು ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾನೆ, ಅಂದಾಗ ತಂದೆಯನ್ನೇ ನೆನಪು ಮಾಡಬೇಕಲ್ಲವೆ! ಕೃಷ್ಣನಂತೂ ಎಲ್ಲಾ ಆತ್ಮರ ತಂದೆಯಲ್ಲ, ಇವೆಲ್ಲವನ್ನೂ ವಿಚಾರ ಮಾಡಿ ಬುದ್ಧಿಯಲ್ಲಿ ಧಾರಣೆ ಮಾಡಬೇಕಾಗಿದೆ. ಕೆಲಕೆಲವರು ಮೋಹದಲ್ಲಿ ಸಿಕ್ಕಿಕೊಂಡಿರುವ ಕಾರಣ ಧಾರಣೆ ಮಾಡಲು ಸಾಧ್ಯವಿಲ್ಲ. ಬೇರೆಲ್ಲಾ ಸಂಗವನ್ನು ಬಿಟ್ಟು ನಿಮ್ಮ ಸಂಗವನ್ನು ಮಾಡುತ್ತೇವೆಂದು ಹಾಡುತ್ತಾ ಬಂದಿರುವಿರಿ. ನನ್ನವರಂತೂ ಒಬ್ಬರ ವಿನಃ ಬೇರೆಯಾರೂ ಇಲ್ಲ. ಆದರೆ ಮೋಹವು ಮತ್ತೆ ಇಂತಹ ವಸ್ತುವಾಗಿದೆ ಒಂದೇ ಬಾರಿ ಮಂಗನ ರೀತಿ ಮಾಡಿ ಬಿಡುತ್ತದೆ. ಮಂಗನಲ್ಲಿ ಮೋಹ ಮತ್ತು ಲೋಭವು ಹೆಚ್ಚಾಗಿರುತ್ತದೆ. ಸಾಹುಕಾರರಿಗೂ ಸಹ ತಿಳಿಸಬೇಕಾಗುತ್ತದೆ - ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಇದೆಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ಉಪಯೋಗಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಆದರೆ ಮಂಗನ ತರಹ ಅಂಟಿಕೊಂಡೇ ಇರುತ್ತಾರೆ, ಬಿಡುವುದೇ ಇಲ್ಲ. ಯಾರದೇ ದೇಹ, ದೇಹದ ಸಂಬಂಧವಿದೆಯೋ ಅದನ್ನು ತೆಗೆದುಬಿಡಿ ಎಂದು ತಂದೆಯು ತಿಳಿಸುತ್ತಾರೆ. ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ನೀವು ಹೇಳುತ್ತೀರಿ - ಈ ಹಣ, ಮಕ್ಕಳು-ಮರಿಗಳು ಎಲ್ಲವನ್ನೂ ಈಶ್ವರನು ಕೊಟ್ಟಿರುವುದಾಗಿದೆ. ಅವರು ಈಗ ಸ್ವಯಂ ಬಂದು ಎಲ್ಲವನ್ನೂ ತಿಳಿಸುತ್ತಾರೆ - ನಿಮ್ಮ ಹಣ-ಸಂಪತ್ತೆಲ್ಲವೂ ಈಗ ಸಮಾಪ್ತಿಯಾಗುವುದಿದೆ. ಕೆಲವರದು ಮಣ್ಣಿನ ಪಾಲಾಗುತ್ತದೆ..... ಭೂಕಂಪ ಇತ್ಯಾದಿಗಳೂ ಆಗಿ ಇವೆಲ್ಲವೂ ಸಮಾಪ್ತಿಯಾಗುತ್ತದೆ. ವಿಮಾನ ಅಪಘಾತವಾಗುತ್ತದೆ ಅಥವಾ ಬೆಂಕಿ ಹತ್ತಿಕೊಳ್ಳುತ್ತದೆ ಎಂದರೆ ಮೊಟ್ಟ ಮೊದಲು ಪೋಲೀಸರು ಬರುವುದರೊಳಗೆ ಕಳ್ಳರು ಒಳಗೆ ನುಗ್ಗುತ್ತಾರೆ. ಅಂದಮೇಲೆ ಮಕ್ಕಳೇ, ದೇಹಧಾರಿಯೊಂದಿಗಿನ ಮೋಹವನ್ನು ತೆಗೆದುಬಿಡಿ, ಮೋಹಜೀತರಾಗಬೇಕಾಗಿದೆ. ದೇಹದ ಅಭಿಮಾನವು ಮೊಟ್ಟ ಮೊದಲ ಶತ್ರುವಾಗಿದ್ದಾನೆ. ದೇವತೆಗಳು ದೇಹೀ-ಅಭಿಮಾನಿಗಳಾಗಿದ್ದರು. ದೇಹಾಭಿಮಾನವು ಬರುವುದರ ಕಾರಣ ವಿಕಾರದಲ್ಲಿ ಸಿಕ್ಕಿಕೊಳ್ಳುತ್ತಾರೆ. ನೀವು ಅರ್ಧಕಲ್ಪದಿಂದ ದೇಹಾಭಿಮಾನದಲ್ಲಿ ಇದ್ದಿರಿ. ಈಗ ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ. ಅವಶ್ಯವಾಗಿ ಇಲ್ಲಿರುವ ಮನುಷ್ಯರಿಗೆ ಈ ಮಾತುಗಳು ತಿಳಿದಿಲ್ಲ, ಪರಮಾತ್ಮನೂ ಸಹ ಗೊತ್ತಿಲ್ಲ. ಆತ್ಮವೆಂದರೇನು, ಪರಮಾತ್ಮವೆಂದರೇನು, ಆತ್ಮವು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಎಷ್ಟು ಪಾತ್ರವನ್ನಭಿನಯಿಸುತ್ತದೆ, ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಆದ್ದರಿಂದ ಅನಾಥರು, ನಿರ್ಧನಿಕರಾಗಿದ್ದಾರೆಂದು ಹೇಳಲಾಗುತ್ತದೆ. ಆತ್ಮವು ಜ್ಯೋತಿಯಲ್ಲಿ ಲೀನವಾಗುತ್ತದೆ ಎಂದು ಅವರು ಹೇಳುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು ಅಡಕವಾಗಿದೆ. ಆತ್ಮವು ಒಂದು ನಕ್ಷತ್ರವಾಗಿದೆ ಎಂದೂ ಹೇಳುತ್ತಾರೆ ಆದರೆ ಏನೂ ತಿಳಿದಿಲ್ಲ. ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ, ತಂದೆಯನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಆತ್ಮಕ್ಕೆ ಹೇಳುತ್ತಾರೆ. ಪರಮಾತ್ಮನಿಗೆ ಏನೂ ಸಹ ಹೇಳುವುದಿಲ್ಲ. ಅವರಿಗೆ ಪರಮ ಆತ್ಮ ಎಂದು ಹೇಳುತ್ತಾರೆ, ಅವರು ಪರಮಧಾಮದಲ್ಲಿರುತ್ತಾರೆ. ಅವರೂ ಸಹ ಬಿಂದುವಾಗಿದ್ದಾರೆ, ಕೇವಲ ಪುನರ್ಜನ್ಮರಹಿತನಾಗಿದ್ದಾರೆ ಆದರೆ ಆತ್ಮಗಳು ಪುನರ್ಜನ್ಮದಲ್ಲಿ ಬರುತ್ತವೆ. ಪರಮಾತ್ಮನಿಗೆ ಜ್ಞಾನ ಸಾಗರ, ಆನಂದ ಸಾಗರ, ಪವಿತ್ರತಾ ಸಾಗರನೆಂದು ಹೇಳಲಾಗುತ್ತದೆ. ದೇವತೆಗಳಿಗೆ ಆಸ್ತಿಯನ್ನು ಯಾರು ಕೊಟ್ಟರು? ತಂದೆ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ..... ಈ ದೇವತೆಗಳ ರೀತಿ ಯಾರೂ ಇಲ್ಲ. ಅವರಿಗೆ ಈ ಆಸ್ತಿಯು ಹೇಗೆ ಸಿಕ್ಕಿತು ಎಂದು ಯಾರಿಗೂ ಗೊತ್ತಿಲ್ಲ. ತಂದೆಯೇ ಬಂದು ತಿಳಿಸುತ್ತಾರೆ, ಅವರನ್ನು ಜ್ಞಾನ ಸಾಗರನೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ. ಈ ಸಮಯದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ ನಂತರ ಅದು ಪ್ರಾಯಃಲೋಪವಾಗಿಬಿಡುತ್ತದೆ. ಮತ್ತೆ ಭಕ್ತಿಯಿರುತ್ತದೆ ಅದನ್ನು ಜ್ಞಾನವೆಂದು ಹೇಳಲು ಸಾಧ್ಯವಿಲ್ಲ. ಜ್ಞಾನದಿಂದ ಸದ್ಗತಿಯಾಗುತ್ತದೆ, ದುರ್ಗತಿಯಾದಾಗಲೇ ಎಲ್ಲರ ಸದ್ಗತಿದಾತ, ಜ್ಞಾನ ಸಾಗರನು ಬರುತ್ತಾರೆ. ತಂದೆಯು ಬಂದು ಜ್ಞಾನ ಸ್ನಾನ ಮಾಡಿಸುತ್ತಾರೆ, ಅವರಂತೂ ನೀರಿನ ಸ್ನಾನ ಮಾಡುತ್ತಾರೆ, ಅದರಿಂದ ಯಾವ ಸದ್ಗತಿಯೂ ಆಗುವುದಿಲ್ಲ. ಇಷ್ಟಾದರೂ ಧಾರಣೆ ಮಾಡಬೇಕಲ್ಲವೆ. ಮುಖ್ಯವಾದ ಒಳ್ಳೊಳ್ಳೆಯ ಚಿತ್ರಗಳಿವೆ, ಅವುಗಳು ದೊಡ್ಡದಾಗಿರಬೇಕು ಅದರಿಂದ ಚೆನ್ನಾಗಿ ಅರ್ಥವಾಗುವುದು. ಅದರಲ್ಲಿ ಅಕ್ಷರಗಳನ್ನು ದೊಡ್ಡದಾಗಿ ಬರೆಯಬೇಕು. ಇದು ಚಿತ್ರ ಮಾಡುವವರ ಬುದ್ಧಿಯಲ್ಲಿ ಚೆನ್ನಾಗಿ ಇಟ್ಟುಕೊಳ್ಳಬೇಕಾಗಿದೆ. ಅನ್ಯರನ್ನೂ ಕರೆಯಬೇಕು. ನಿಮಂತ್ರಣ ಕೊಡಬೇಕಾಗಿದೆ - ಬಂದು ಪರಮಪಿತ ಪರಮಾತ್ಮನ ಪರಿಚಯವನ್ನು ಪಡೆದು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಿರಿ. ಸಹೋದರರೇ, ಸಹೋದರಿಯರೇ ಪಾರಲೌಕಿಕ ತಂದೆಯಿಂದ ಬೇಹದ್ದಿನ ಸುಖದ ಸ್ವರಾಜ್ಯವು ಹೇಗೆ ಸಿಗುತ್ತದೆಯೆಂದು ಬಂದು ತಿಳಿದುಕೊಳ್ಳಿ. ಬೇಹದ್ದಿನ ತಂದೆಯಿಂದ ಆಸ್ತಿ ಪಡೆಯುವುದನ್ನು ಕಲಿತುಕೊಳ್ಳಿ, ಇದರಲ್ಲಿ ಹೆದರುವ ಮಾತೇನೂ ಇಲ್ಲ. ಪತಿತ-ಪಾವನ ಬನ್ನಿ ಎಂದು ಕರೆಯುತ್ತಲೇ ಇರುತ್ತಾರೆ, ಕಾಮ ಮಹಾಶತ್ರುವಾಗಿದೆ ಎಂದು ತಂದೆಯೂ ಸಹ ತಿಳಿಸುತ್ತಾರೆ. ಪಾವನ ಪ್ರಪಂಚಕ್ಕೆ ಹೋಗಬೇಕೆಂದಮೇಲೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ವಿಕಾರದಿಂದ ಜನ್ಮ ಪಡೆಯುವವರನ್ನು ಪತಿತರೆಂದು ಕರೆಯಲಾಗುವುದು. ಸತ್ಯ-ತ್ರೇತಾಯುಗದಲ್ಲಿ ವಿಷ (ವಿಕಾರ) ಇರುವುದಿಲ್ಲ, ಅದನ್ನು ಸಂಪೂರ್ಣ ನಿರ್ವಿಕಾರಿ ಪ್ರಪಂಚವೆಂದು ಕರೆಯುತ್ತಾರೆ, ವಿಕಾರವೇ ಇರುವುದಿಲ್ಲ ಅಂದಾಗ ಮಕ್ಕಳ ಜನ್ಮ ಹೇಗಾಗುತ್ತದೆ ಎಂದು ಕೇಳುತ್ತಾರೆ, ನೀವಂತೂ ನಿರ್ವಿಕಾರಿಗಳಾಗಿರಿ. ಜನ್ಮ-ಜನ್ಮಾಂತರ ವಿಕರ್ಮಗಳು ವಿನಾಶವಾಗಲಿ, ಇದಂತೂ ಪಾಪಾತ್ಮರ ಪ್ರಪಂಚವಾಗಿದೆ. ಅದು ಪುಣ್ಯಾತ್ಮರ ಪ್ರಪಂಚವಾಗಿದೆ. ಇದನ್ನು ಬಹಳ ಚೆನ್ನಾಗಿ ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಭಕ್ತಿಯ ಫಲವನ್ನು ಭಗವಂತನು ಬಂದು ಕೊಡುತ್ತಾನೆ, ತಂದೆಯೇ ಎಲ್ಲರ ಸದ್ಗತಿ ಮಾಡಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ಪವಿತ್ರರಾಗಿ, ನನ್ನನ್ನು ನೆನಪು ಮಾಡಿ - ಇದೇ ಮಹಾಮಂತ್ರವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯಿಂದ ಅವಶ್ಯವಾಗಿ ಆಸ್ತಿಯು ಸಿಗುತ್ತದೆ. ನೀವು ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುವಿರಿ ಎಂದು ತಂದೆಯು ತಿಳಿಸುತ್ತಾರೆ. ಏಣಿ ಚಿತ್ರದ ಬಗ್ಗೆ ತಿಳಿಸಬೇಕಾಗಿದೆ. ದಿನ-ಪ್ರತಿದಿನ ವಸ್ತು ಸುಧಾರಣೆಯಾಗುತ್ತಾ ಹೋಗುವುದು, ಇದರಬಗ್ಗೆ ಸ್ಪಷ್ಟವಾಗಿ ಬರೆಯಬೇಕಾಗಿದೆ. ಬ್ರಹ್ಮನ ಮೂಲಕ ಆದಿ ಸನಾತನ ಧರ್ಮದ ಸ್ಥಾಪನೆಯಾಯಿತು. ಆದಿ ಸನಾತನ ದೇವಿ-ದೇವತಾ ಧರ್ಮವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ, ಯಾರು ಪವಿತ್ರರಾಗಿರುತ್ತಾರೆಯೋ ಅವರೇ ಪವಿತ್ರ ಪ್ರಪಂಚಕ್ಕೆ ಬರುತ್ತಾರೆ. ಎಷ್ಟು ಶಕ್ತಿಯನ್ನು ನಿಮ್ಮಲ್ಲಿ ತುಂಬಿಕೊಳ್ಳುತ್ತೀರೋ ಅಷ್ಟು ಮೊದಲು ಬರುತ್ತೀರಿ. ಎಲ್ಲರೂ ಒಟ್ಟಿಗೆ ಬರಲು ಸಾಧ್ಯವಿಲ್ಲ. ಸತ್ಯಯುಗ-ತ್ರೇತಾಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿತ್ತು ನಂತರ ವೃದ್ಧಿ ಹೊಂದುತ್ತದೆ. ಪ್ರಜೆಗಳಂತೂ ಬಹಳ ಆಗುತ್ತಾರೆ. ತಿಳಿಸುವವರು ಬಹಳ ಬುದ್ಧಿವಂತರಿರಬೇಕಾಗಿದೆ. ಬೇಹದ್ದಿನ ತಂದೆಯ ಬಳಿ ಬಂದು ಆಸ್ತಿಯನ್ನು ಪಡೆದುಕೊಳ್ಳಿ, ಯಾರನ್ನು ನೀವು ಹೇ ಬಾಬಾ ಎಂದು ಕರೆಯುತ್ತೀರಿ ಅವರ ಹೆಸರು ವಾಸ್ತವದಲ್ಲಿ ಶಿವ ಎಂದಾಗಿದೆ ಎಂದು ತಿಳಿಸಿ. ಈಶ್ವರ ಅಥವಾ ಪ್ರಭು, ಭಗವಂತನೆಂದು ಹೇಳುವುದರಿಂದ ತಂದೆಯೆಂದು ತಿಳಿದುಕೊಳ್ಳುವುದೂ ಇಲ್ಲ, ಆಸ್ತಿಯು ಸಿಗುತ್ತದೆಯೆಂದು ತಿಳಿಯುವುದಿಲ್ಲ. ಶಿವ ತಂದೆ ಎನ್ನುವುದರಿಂದ ಆಸ್ತಿಯು ನೆನಪಿಗೆ ಬರುತ್ತದೆ. ಶಿವ ಪರಮಾತ್ಮಾಯನಮಃ ಎಂದು ಹೇಳುತ್ತಾರೆ, ಪರಮಾತ್ಮನ ಹೆಸರನ್ನಾದರೂ ಹೇಳಿ. ನಾಮ-ರೂಪದಿಂದ ಭಿನ್ನವಾಗಿರುವ ವಸ್ತುವು ಯಾವುದೂ ಇರುವುದಿಲ್ಲ. ಅವರ ಹೆಸರು ಶಿವ ಎಂದಾಗಿದೆ. ಕೇವಲ ಶಿವಾಯ ನಮಃ ಎಂದು ಹೇಳಿದರೆ ತಪ್ಪಾಗಿದೆ, ಶಿವ ಪರಮಾತ್ಮಾಯನಮಃ ಎಂದು ಹೇಳಬೇಕು. ಪ್ರತಿಯೊಂದು ಅಕ್ಷರವನ್ನು ಬಹಳ ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ. ಶಿವಾಯ ನಮಃ ಎಂದು ಹೇಳುವುದರಿಂದ ತಂದೆ ಎಂಬ ಶಬ್ಧದಲ್ಲಿರುವ ಮಜಾ ಬರುವುದಿಲ್ಲ. ಮನುಷ್ಯರಂತೂ ಎಲ್ಲಾ ಹೆಸರುಗಳನ್ನು ತಮ್ಮಮೇಲೆ ಇಟ್ಟುಕೊಂಡಿದ್ದಾರೆ. ಮನುಷ್ಯರನ್ನು ಭಗವಂತನೆಂದು ಹೇಳಲು ಸಾಧ್ಯವಿಲ್ಲವೆಂದು ನಿಮಗೆ ಗೊತ್ತಿದೆ. ಬ್ರಹ್ಮಾ-ವಿಷ್ಣು-ಶಂಕರರನ್ನೂ ಸಹ ದೇವತೆಗಳೆಂದು ಹೇಳಲಾಗುತ್ತದೆ. ತಂದೆಯು ರಚಯಿತನಾಗಿದ್ದಾರೆ ಅಂದಮೇಲೆ ಅವರೊಬ್ಬರೇ ನಿರಾಕಾರನಾಗಿದ್ದಾರೆ. ಲೌಕಿಕ ತಂದೆಯು ಮಕ್ಕಳನ್ನು ಹೇಗೆ ರಚನೆ ಮಾಡಿ ಆಸ್ತಿಯನ್ನು ಕೊಡುತ್ತಾರೆಯೋ ಹಾಗೆಯೇ ಬೇಹದ್ದಿನ ತಂದೆಯೂ ಆಸ್ತಿಯನ್ನು ಕೊಡುತ್ತಾರೆ. ಭಾರತವನ್ನು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ. ಇಡೀ ಪ್ರಪಂಚದ ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಇದು ಯಾರಾದರೂ ತಿಳಿದುಕೊಂಡಿದ್ದಾರೆಯೇ! ನಮ್ಮ ಧರ್ಮ ಸ್ಥಾಪಕರು ಈ ಸಮಯದಲ್ಲಿ ಪತಿತರಾಗಿದ್ದಾರೆ, ಸ್ಮಶಾನವಾಸಿಗಳಾಗಿದ್ದಾರೆ. ಈಗ ಎಲ್ಲರ ವಿನಾಶದ ಸಮಯವಾಗಿದೆ, ತಂದೆಯೇ ಬಂದು ಎಲ್ಲರನ್ನೂ ಜಾಗೃತ ಮಾಡುತ್ತಾರೆ. ವಿನಾಶದ ಸಮಯದಲ್ಲಿ ಖುದಾ ಭಗವಂತ ಬರುತ್ತಾರೆ. ಅವರೇ ಜ್ಞಾನ ಸಾಗರನಾಗಿದ್ದಾರೆ. ಸಾಗರನ ಮಕ್ಕಳು ಭಸ್ಮೀಭೂತರಾಗಿದ್ದರು ಅಂದರೆ ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿದ್ದರು, ಕಬ್ಬಿಣದಂತಾಗಿದ್ದರು ಅಂದಾಗ ನೆನಪಿನ ಯಾತ್ರೆಯಿಂದ ಪುನಃ ಹೇಗೆ ಸುಂದರರಾದರು! ಎಂದು ಬರೆಯುತ್ತಾರೆ. ಯೋಗ ಅಕ್ಷರವನ್ನು ಎಂದು ಹೇಳುವುದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ನನ್ನನ್ನು ನೆನಪು ಮಾಡುತ್ತೀರೆಂದರೆ ಅಂತ್ಯ ಮತಿ ಸೋ ಗತಿಯಾಗುವುದು ಎಂದು ತಂದೆಯು ತಿಳಿಸುತ್ತಾರೆ. ಇಷ್ಟು ಸಹಜವಾಗಿ ತಿಳಿಸಿದರೂ ಸಹ ಬುದ್ಧಿಯಲ್ಲಿ ಏಕೆ ಕುಳಿತುಕೊಳ್ಳುವುದಿಲ್ಲ? ಬಹಳ ದೇಹಾಭಿಮಾನವಿರುವ ಕಾರಣ ಧಾರಣೆಯಾಗುವುದಿಲ್ಲ. ಬಾಬಾ ಬಹಳ ಒಳ್ಳೆಯ ಯುಕ್ತಿಗಳನ್ನು ತಿಳಿಸುತ್ತಾರೆ. ಬೇಹದ್ದಿನ ತಂದೆ ಯಾರನ್ನು ನೀವು ನೆನಪು ಮಾಡುತ್ತೀರೋ, ಅವರು ಬಂದು ಏನು ಮಾಡಿದರು? ಭಾರತವನ್ನು ಸ್ವರ್ಗವನ್ನಾಗಿ ಮಾಡಿದರು. ಹದ್ದಿನ ಆಸ್ತಿಯನ್ನು ಜನ್ಮ-ಜನ್ಮಾಂತರದಿಂದ ಪಡೆಯುತ್ತಲೇ ಬಂದಿದ್ದೀರಿ, ಈಗ ಬೇಹದ್ದಿನ ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಿರಿ. ಸತ್ಯ-ತ್ರೇತಾ ಯುಗದಲ್ಲಿ ದೇವತೆಗಳು ರಾಜ್ಯ ಮಾಡುತ್ತಿದ್ದರು. ಸೂರ್ಯವಂಶಿ, ಚಂದ್ರವಂಶಿ, ವೈಶ್ಯ ವಂಶಿ ನಂತರ ಶೂದ್ರವಂಶಿ.... ಈ ಅಕ್ಷರಗಳನ್ನು ಬರೆಯುವುದರಿಂದ ಅವರೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ, ವರ್ಣಗಳಲ್ಲಿ ಬರುತ್ತಾರೆಂದು ಸಿದ್ಧವಾಗುತ್ತದೆ. ತಂದೆಯು ಎಲ್ಲರಿಗೂ ತಿಳಿಸುತ್ತಾರೆ, ಸನ್ಮುಖದಲ್ಲಿ ಕುಳಿತಿದ್ದೀರೆಂದಮೇಲೆ ಬಹಳ ಖುಷಿಯಾಗುತ್ತದೆ. ಕೆಲಕೆಲವರಿಗೆ ಅದೃಷ್ಟದಲ್ಲಿಲ್ಲ ಅಂದಮೇಲೆ ಸರ್ವೀಸನ್ನೂ ಮಾಡುವುದಿಲ್ಲ. ಸರ್ವೀಸ್ ಮಾಡುತ್ತೀರೆಂದರೆ ಹೆಸರು ಬರುತ್ತದೆ. ಮಕ್ಕಳು ಎಷ್ಟು ಬುದ್ಧಿವಂತರು, ಎಲ್ಲಾ ಕೆಲಸವನ್ನೂ ಮಾಡುತ್ತಾರೆಂದು ಹೇಳುತ್ತಾರೆ. ನಮಗೆ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತಿದೆ, ಇವೆಲ್ಲಾ ವಸ್ತುಗಳನ್ನೂ ಸಹ ಕೊಡುತ್ತಾರೆ. ಈ ಚಿತ್ರವು ಕುರುಡರ ಮುಂದೆ ಕನ್ನಡಿಯಂತಿದೆ. ಇದರಲ್ಲಿ ಜಾದೂ ಇತ್ಯಾದಿಯ ಮಾತೇ ಇಲ್ಲ. ಪವಿತ್ರತೆಯೇ ಮುಖ್ಯ ಮಾತಾಗಿದೆ. ಇದು ಅಂತಿಮ ಜನ್ಮವಾಗಿದೆ ಸ್ವರ್ಗದಲ್ಲಿ ಹೋಗಬೇಕೆಂದರೆ ಅವಶ್ಯವಾಗಿ ಪವಿತ್ರರಾಗಬೇಕೆಂದು ತಿಳಿಯಬೇಕು. ವಿನಾಶವು ಎದುರಿನಲ್ಲಿ ನಿಂತಿದೆ ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ಪಾವನರಾಗಲು ಸನ್ಯಾಸಿಗಳು ಮನೆ-ಮಠವನ್ನು ಬಿಟ್ಟು ಬಿಡುತ್ತಾರೆ. ವಿನಾಶವು ಎದುರಿನಲ್ಲಿದೆ, ನನ್ನನ್ನು ನೆನಪು ಮಾಡಿದರೆ ದೋಣಿಯು ಪಾರಾಗುವುದು ಎಂದು ತಂದೆಯು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿನಾಶದ ಮೊದಲೇ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಿ, ಇದು ವಿನಾಶದ ಸಮಯವಾಗಿದೆ. ಆದ್ದರಿಂದ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.
2. ದೇಹಧಾರಿಗಳಿಂದ ಮೋಹವನ್ನು ತೆಗೆದು ಮೋಹಜೀತರಾಗಬೇಕಾಗಿದೆ. ದೇಹಾಭಿಮಾನವು ಮೊದಲ ನಂಬರಿನ ಶತ್ರುವಾಗಿದೆ, ಇದರ ಮೇಲೆ ವಿಜಯವನ್ನು ಪಡೆಯಬೇಕಾಗಿದೆ. ಎಲ್ಲಾ ಸಂಗವನ್ನು ಬಿಟ್ಟು ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ.
ಓಂ ಶಾಂತಿ. ಇದನ್ನು ಯಾರು ಹೇಳಿದರು? ಮಕ್ಕಳು. ಅತೀಂದ್ರಿಯ ಸುಖಮಯ ಜೀವನದಲ್ಲಿ ಬಂದು ಹೇಳುತ್ತಾರೆ - ಬೇಹದ್ದಿನ ತಂದೆಯು ಬಂದಿದ್ದಾರೆ. ಏತಕ್ಕಾಗಿ? ಈ ಪತಿತ ಪ್ರಪಂಚವನ್ನು ಪರಿವರ್ತನೆ ಮಾಡಿ ಪಾವನ ಪ್ರಪಂಚವನ್ನಾಗಿ ಮಾಡಲು ಬಂದಿದ್ದಾರೆ. ಪಾವನ ಪ್ರಪಂಚವು ಎಷ್ಟು ದೊಡ್ಡದಾಗಿರುವುದು! ಪತಿತ ಪ್ರಪಂಚವು ಎಷ್ಟೊಂದು ದೊಡ್ಡದಾಗಿದೆ, ಇದು ನೀವು ಮಕ್ಕಳ ಬುದ್ಧಿಯಲ್ಲಿ ಬರಬೇಕಾಗಿದೆ. ಇಲ್ಲಿ ಎಷ್ಟು ಕೋಟ್ಯಾಂತರ ಜನಸಂಖ್ಯೆಯಿದೆ, ಇದಕ್ಕೆ ಪತಿತ, ಭ್ರಷ್ಟಾಚಾರಿ ಪ್ರಪಂಚವೆಂದು ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ಇದು ಮನಸ್ಸಿನಲ್ಲಿ ಬರಬೇಕು - ನಮ್ಮ ಹೊಸ ಪ್ರಪಂಚವು ಎಷ್ಟು ಚಿಕ್ಕದಾಗಿರುತ್ತದೆ! ನಾವು ಹೇಗೆ ರಾಜ್ಯ ಮಾಡುತ್ತೇವೆ! ನಮ್ಮ ಭಾರತದಂತಹ ದೇಶವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಭಾರತವೇ ಸ್ವರ್ಗವಾಗಿತ್ತು, ಅದರಂತಹ ದೇಶವು ಮತ್ತ್ಯಾವುದೂ ಇಲ್ಲವೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ನಿಮಗೆ ಅರ್ಥವಾಗುತ್ತಿದೆ, ಈ ಭಾರತವು ಈಗ ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಭಾರತವೇ ಸ್ವರ್ಗವಾಗಿತ್ತು ಆದರೆ ಈಗ ಇಲ್ಲ. ನಮ್ಮ ಭಾರತವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ, ಎಲ್ಲದಕ್ಕಿಂತ ಪ್ರಾಚೀನವಾಗಿದೆ ಎಂಬುದು ಯಾರಿಗೂ ನೆನಪಿಗೆ ಬರುವುದಿಲ್ಲ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಬರುತ್ತದೆ ಅದೂ ನಂಬರ್ವಾರ್ ಪುರುಷಾರ್ಥದನುಸಾರ. ಇಷ್ಟೊಂದು ಖುಷಿ, ಇಷ್ಟು ಗೌರವವಿರುತ್ತದೆಯೇ? ಬೇಹದ್ದಿನ ತಂದೆಯು ಬಂದಿದ್ದಾರೆ, ಕಲ್ಪ-ಕಲ್ಪವೂ ಬರುತ್ತಾರೆ. ಮಾಯಾ ರಾವಣನು ನಮ್ಮ ಯಾವ ರಾಜ್ಯಭಾಗ್ಯವನ್ನು ಕಸಿದುಕೊಂಡಿದ್ದಾನೆಯೋ ಅದನ್ನು ಪುನಃ ತಂದೆಯು ಬಂದು ನಾವಾತ್ಮರಿಗೆ ಕೊಡುತ್ತಾರೆ. ಯಾವುದೇ ಯುದ್ಧದಿಂದ ಕಸಿದುಕೊಂಡಿಲ್ಲ. ರಾವಣ ರಾಜ್ಯದಲ್ಲಿ ನಮ್ಮ ಮತವು ಭ್ರಷ್ಟಾಚಾರಿ ಆಗಿ ಬಿಡುತ್ತದೆ. ನಾವು ಶ್ರೇಷ್ಠಾಚಾರಿಗಳಿಂದ ಭ್ರಷ್ಟಾಚಾರಿಗಳಾಗಿ ಬಿಡುತ್ತೇವೆ. ಪ್ರಪಂಚವು ನೋಡಿ ಎಷ್ಟೊಂದು ವೃದ್ಧಿಯಾಗಿ ಬಿಟ್ಟಿದೆ. ನಮ್ಮ ಭಾರತ ದೇಶವು ಎಷ್ಟು ಚಿಕ್ಕದಾಗಿತ್ತು, ಸ್ವರ್ಗದಲ್ಲಿ ಎಷ್ಟೊಂದು ಸುಖಿಯಾಗಿರುತ್ತಾರೆ, ವಜ್ರ-ವೈಡೂರ್ಯಗಳ ಮಹಲುಗಳಿರುತ್ತವೆ, ಅಲ್ಲಿ ರಾವಣನೇ ಇರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಖುಷಿಯಿರಬೇಕು, ಅತೀಂದ್ರಿಯ ಸುಖವಿರಬೇಕು. ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿರಿ. ದೇಹಭಾನವನ್ನು ಕಳೆಯಲು ಬ್ರಹ್ಮಾ ತಂದೆಯು ಹೇಳುತ್ತಿದ್ದರು - 108 ತೇಪೆಗಳುಳ್ಳ ವಸ್ತ್ರವನ್ನು ಧರಿಸಿರಿ. ಭಲೆ ಹಿರಿಯ ವ್ಯಕ್ತಿಗಳೊಂದಿಗೆ, ವಜ್ರ ವ್ಯಾಪಾರಿಗಳೊಂದಿಗೆ ಸಂಬಂಧವಿತ್ತು, ಅಂದಮೇಲೆ ಆ ನಶೆಯನ್ನು ಹೇಗೆ ಕಳೆಯುವುದು! ಆದ್ದರಿಂದ ದೇಹೀ-ಅಭಿಮಾನಿಯಾಗಬೇಕಾಗಿದೆ. ನಾವಾತ್ಮರಾಗಿದ್ದೇವೆ. ಇದು ಹಳೆಯ ಶರೀರವಾಗಿದೆ, ಇದನ್ನು ಬಿಟ್ಟು ಹೊಸ ಶರೀರವನ್ನು ತೆಗೆದುಕೊಳ್ಳಬೇಕಾಗಿದೆ. ಸರ್ಪವು ಒಂದು ಪೊರೆಯನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಹಾಗೆಯೇ ನಾವೂ ಸಹ ಈ ಹಳೆಯ ಶರೀರವನ್ನು ಬಿಟ್ಟು ಇನ್ನೊಂದು ಹೊಸ ಶರೀರವನ್ನು ಧಾರಣೆ ಮಾಡುತ್ತೇವೆ ಎಂದು ನೀವು ಮಕ್ಕಳ ಬುದ್ಧಿಯಲ್ಲಿ ಜ್ಞಾನವಿದೆ. ಅಂದಮೇಲೆ ಇಡೀ ದಿನ ನೀವು ಮಕ್ಕಳ ಬುದ್ಧಿಯಲ್ಲಿ ಜ್ಞಾನದ ಚಿಂತನೆ ನಡೆಯುತ್ತಿರಲಿ. ಇದು ಛೀ ಛೀ ಪ್ರಪಂಚವಾಗಿದೆ, ಇದನ್ನು ನೋಡುತ್ತಿದ್ದರೂ ಸಹ ಬುದ್ಧಿಯಿಂದ ಮರೆಯಬೇಕಾಗಿದೆ. ನಾವೀಗ ಯಾತ್ರೆಯಲ್ಲಿದ್ದೇವೆ, ನಮ್ಮ ಬುದ್ಧಿಯೋಗವು ಮನೆಯ ಕಡೆಯಿದೆ - ಈ ಅಭ್ಯಾಸ ಮಾಡಬೇಕಲ್ಲವೆ. ಈ ಶರೀರವೂ ಸಹ ಹಳೆಯದಾಗಿದೆ, ಪ್ರಪಂಚವೂ ಹಳೆಯದಾಗಿದೆ. ಕೆಲವರಿಗೆ ಸಾಕ್ಷಾತ್ಕಾರವೂ ಆಗಿದೆ, ಈಗ ಈ ದೇಹ ಮತ್ತು ದೇಹದ ಎಲ್ಲಾ ಸಂಬಂಧಗಳನ್ನು ಬಿಟ್ಟು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ನಾವೀಗ ಹೋಗಬೇಕೆಂದು ಆಂತರ್ಯದಲ್ಲಿ ಬಹಳ ಖುಷಿಯಾಗುತ್ತದೆ ಅಂದಾಗ ಬುದ್ಧಿಯೋಗವನ್ನು ಅಲ್ಲಿ ಜೋಡಿಸಬೇಕಾಗಿದೆ. ಪರಸ್ಪರ ಇದನ್ನೇ ತಿಳಿಸಿರಿ - ಮನ್ಮನಾಭವ. ಇದು ಬಹಳ ಶಕ್ತಿಶಾಲಿ ಮಂತ್ರವಾಗಿದೆ, ಭಲೆ ಗೀತೆಯನ್ನು ಅನೇಕರು ಓದುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಹೇಗೆ ಅನ್ಯ ಶಾಸ್ತ್ರಗಳನ್ನು ಓದುತ್ತಾರೆಯೋ ಆ ರೀತಿ ಇದನ್ನೂ ಓದುತ್ತಾರೆ. ಇದು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ನಾವು ಭವಿಷ್ಯಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೇವೆ. ಬಹಳಷ್ಟು ಕಳೆದುಹೋಯಿತು, ಇನ್ನು ಸ್ವಲ್ಪವೇ ಸಮಯವಿದೆ. ಹೀಗೆ ತಮ್ಮನ್ನು ಖುಷಿಯಲ್ಲಿ ತಂದುಕೊಳ್ಳಬೇಕಾಗಿದೆ. ಇದೆಲ್ಲವೂ ಸಮಾಪ್ತಿಯಾಗಲಿದೆ. ಬೆಕ್ಕಿಗೆ ಚಲ್ಲಾಟ, ಇಲಿಗೆ ಪ್ರಾಣ ಸಂಕಟ ಅರ್ಥಾತ್ ನಾವು ನಮ್ಮ ಪ್ರಿಯತಮನನ್ನು ಅರಿತುಕೊಂಡಿದ್ದೇವೆ. ಎಲ್ಲಾ ಆತ್ಮರ ತಂದೆಯು ಕುಳಿತು ಶಿಕ್ಷಣ ಕೊಡುತ್ತಾರೆ. ಭಲೆ ಸಾಧಾರಣವಾಗಿದ್ದಾರೆ ಆದರೆ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ. ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬರುತ್ತಾರೆ. ಕಲ್ಪ-ಕಲ್ಪವೂ ಬರುತ್ತಾರೆ. ಇದಂತೂ ಛೀ ಛೀ ಪ್ರಪಂಚವಾಗಿದೆ, ಹೀಗೆ ತನ್ನೊಂದಿಗೆ ಮಾತನಾಡಿಕೊಳ್ಳಬೇಕಾಗಿದೆ. ಇದಕ್ಕೆ ವಿಚಾರ ಸಾಗರ ಮಂಥನವೆಂದು ಹೇಳಲಾಗುತ್ತದೆ. ಈ ಶಾಸ್ತ್ರಗಳನ್ನಂತೂ ಜನ್ಮ-ಜನ್ಮಾಂತರಗಳಿಂದಲೂ ಓದಿದೆವು, ಈಗ ಅರ್ಥವಾಗಿದೆ ಭಾರತವಾಸಿಗಳು ಎಷ್ಟು ಜಪ-ತಪಗಳನ್ನು ಮಾಡಿದ್ದಾರೆಯೋ ಅಷ್ಟು ಮತ್ತ್ಯಾರೂ ಮಾಡಲಿಲ್ಲ. ಯಾರು ಮೊಟ್ಟ ಮೊದಲು ಬಂದಿರುವರೋ ಅವರೇ ಭಕ್ತಿ ಮಾಡಿದ್ದಾರೆ ಮತ್ತು ಅವರೇ ಜ್ಞಾನ, ಯೋಗದಲ್ಲಿ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ ಏಕೆಂದರೆ ಪುನಃ ಅವರೇ ಮೊಟ್ಟಮೊದಲಿಗೆ ಬರಬೇಕಾಗಿದೆ ಆದ್ದರಿಂದ ನೀವು ನೋಡುತ್ತೀರಿ - ಕೆಲಕೆಲವರು ಬಹಳ ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆ.
ನೀವು ಮಕ್ಕಳು ಯಾರು ಈ ಆತ್ಮಿಕ ಸೇವೆಯಲ್ಲಿ ತೊಡಗಿದ್ದೀರೋ ಅವರಿಗಾಗಿ ಬಹಳ ಒಳ್ಳೆಯದಾಗಿದೆ. ನಿಜವಾಗಿಯೂ ನೀವು ಭಟ್ಟಿಯಲ್ಲಿ ಕುಳಿತಿದ್ದೀರಿ. ಆ ಸಂಬಂಧವು ಅಟೂಟವಾಗಿದೆ ಮತ್ತು ಯಾರು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಇದನ್ನು ಕೇಳುತ್ತಾ, ಅನ್ಯರಿಗೂ ಹೇಳುತ್ತಾ ಹೋಗುವರೋ ಅವರು ಹಳಬರಿಗಿಂತಲೂ ಮುಂದೆ ಹೋಗುತ್ತಿದ್ದಾರೆ. ಹೊಸದಾಗಿ ಬರುವವರು ಬಹಳ ತೀಕ್ಷ್ಣವಾಗಿ ಮುಂದೆ ಹೋಗುತ್ತಾರೆ. ನೀವು ಪಟ್ಟಿಯನ್ನು ತೆಗೆದರೆ ಅರ್ಥವಾಗುವುದು. ಮೊಟ್ಟ ಮೊದಲು ತಂದೆಯು ನಿಮ್ಮ ಮಾಲೆಯನ್ನು ಮಾಡುತ್ತಿದ್ದರು, ನಂತರ ನೋಡಿದಾಗ ಎಷ್ಟು ಒಳ್ಳೊಳ್ಳೆಯ ಮಕ್ಕಳು 3-4 ನೇ ನಂಬರಿನವರೂ ಸಹ ಜ್ಞಾನವನ್ನು ಬಿಟ್ಟು ಹೋದರು. ಪ್ರಜೆಗಳಲ್ಲಿ ಹೊರಟು ಹೋದರು. ಈಗ ನಿಮ್ಮದು ಇದು ವಿದ್ಯಾರ್ಥಿ ಜೀವನವಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಜೊತೆ ಜೊತೆಗೆ ಈ ಕೋರ್ಸನ್ನೂ ಓದುತ್ತೀರಿ. ಅನೇಕ ಮಕ್ಕಳು ಡಬಲ್ ಕೋರ್ಸನ್ನು ತೆಗೆದುಕೊಳ್ಳುತ್ತಾರೆ. ಲಿಫ್ಟ್ ಸಿಗುತ್ತದೆ. ನಿಮ್ಮ ಕೋರ್ಸಾಗಿದೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಇದನ್ನು ಓದುವುದು. ಇದರಲ್ಲಿಯೂ ಕನ್ಯೆಯರು ಬಹಳ ತೀಕ್ಷ್ಣವಾಗಿ ಹೋಗಬೇಕು, ಕನ್ಯೆಯರ ಕಾರಣ ತಂದೆಗೆ ಕನ್ಹಯ್ಯ ಅಥವಾ ಗೋಪಾಲ ಎಂಬ ಹೆಸರಿನ ಗಾಯನವಿದೆ. ವಾಸ್ತವದಲ್ಲಿ ಗೋಪರೂ ಇದ್ದಾರೆ ಏಕೆಂದರೆ ಪ್ರವೃತ್ತಿ ಮಾರ್ಗವಲ್ಲವೆ. ನೀವು ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಈ ಲಕ್ಷ್ಮೀ-ನಾರಾಯಣರು ಪ್ರವೃತ್ತಿ ಮಾರ್ಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು. ನಾವೀಗ ಹೇಗಿದ್ದವರು ಹೇಗಾಗುತ್ತೇವೆ ಎಂದು ನಿಮ್ಮ ಬುದ್ಧಿಯಲ್ಲಿ ಜ್ಞಾನವು ಹನಿಯುತ್ತಿರಬೇಕು. ದೇವತೆಗಳು ಎಷ್ಟು ಶ್ರೇಷ್ಠರಾಗಿದ್ದಾರೆ, ಅವರ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ - ತಾವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು... ನಾವು ಪಾಪಿಗಳು, ಕಪಟಿಗಳಾಗಿದ್ದೇವೆ. ನಾವು ನಿರ್ಗುಣ ಹಾರನಲ್ಲಿ ಯಾವುದೇ ಗುಣವಿಲ್ಲ.... ಇದರಲ್ಲಿ ಭಗವಂತನಿಗೆ ದಯೆ ಬರುವುದಿಲ್ಲ, ಕೃಪೆ ಮಾಡುವುದಿಲ್ಲ. ವಾಸ್ತವದಲ್ಲಿ ದಯೆ ಅಥವಾ ಕೃಪೆಯನ್ನು ತನ್ನಮೇಲೆ ತಾನೇ ತೋರಿಸಿಕೊಳ್ಳಬೇಕಾಗಿದೆ ಏಕೆಂದರೆ ನೀವೇ ದೇವತೆಗಳಾಗಿದ್ದಿರಿ, ಈಗ ತಮ್ಮನ್ನು ನೋಡಿಕೊಳ್ಳಿ – ಹೇಗಾಗಿ ಬಿಟ್ಟಿದ್ದೀರಿ. ಈಗ ಮತ್ತೆ ಪುರುಷಾರ್ಥ ಮಾಡಿ ದೇವತೆಗಳಾಗಿರಿ. ಶ್ಯಾಮನಿಂದ ಸುಂದರರಾಗಲು ಪುರುಷಾರ್ಥ ಮಾಡಬೇಕಾಗಿದೆ. ಇದಂತೂ ಭಕ್ತಿಮಾರ್ಗದಲ್ಲಿ ಹೇಳುತ್ತಾರೆ - ನಾವು ಸತ್ತು ಹೋಗುತ್ತಿದ್ದೆವು, ಇಂತಹವರ ಕೃಪೆಯಿಂದ, ಇಂತಹವರ ಆಶೀರ್ವಾದದಿಂದ ಪಾರಾದೆವು ಎಂದು. ಮಹಾತ್ಮ ಮೊದಲಾದವರ ಕೈ ಹಿಡಿದುಕೊಂಡು ತಮ್ಮ ಆಶೀರ್ವಾದ ಬೇಕೆಂದು ಹೇಳುತ್ತಾರೆ. ಇಲ್ಲಂತೂ ಇದು ವಿದ್ಯೆಯಾಗಿದೆ, ಕೃಪೆ ಇತ್ಯಾದಿಗಳ ಮಾತಿಲ್ಲ. ಮನ್ಮನಾಭವದ ಅರ್ಥವಿದೆಯಲ್ಲವೆ. ಮಂತ್ರಗಳನ್ನು ಬಹಳಷ್ಟು ತಿಳಿಸುತ್ತಾರೆ, ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ. ಪ್ರತಿಯೊಬ್ಬರ ಶಿಕ್ಷಣವು ವಿಭಿನ್ನವಾಗಿರುತ್ತದೆ. ಹಠಯೋಗದ ಮಾದರಿಗಳನ್ನು ನೋಡಬೇಕೆಂದರೆ ಜೈಪುರದ ಮ್ಯೂಜಿಯಂನಲ್ಲಿ ಹೋಗಿ ನೋಡಿರಿ. ಇಲ್ಲಂತೂ ಎಷ್ಟು ಆರಾಮದಿಂದ ಕುಳಿತಿದ್ದೀರಿ. ನಮಗೆ ಪುನಃ ತಂದೆಯು ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆಂದು ನಿಮ್ಮ ಬುದ್ಧಿಯಲ್ಲಿದೆ. ಅಲ್ಲಿಯೇ ಅದ್ವೈತ ದೇವಿ-ದೇವತಾ ಧರ್ಮವಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಎರಡು ಕೈಗಳು ಸೇರಿದಾಗಲೇ ಚಪ್ಪಾಳೆ ತಟ್ಟಲು ಸಾಧ್ಯ ಅರ್ಥಾತ್ ಒಂದು ಧರ್ಮವಿರುವ ಕಾರಣ ಅಲ್ಲಿ ಯಾವುದೇ ಜಗಳ-ಕಲಹಗಳಿರುವುದಿಲ್ಲ. ಈಗ ಕಲಿಯುಗವಾಗಿದೆ, ಕಲಿಯುಗವು ಪೂರ್ಣವಾದರೆ ಭಕ್ತಿಯೂ ಪೂರ್ಣವಾಗುವುದು. ಈಗಂತೂ ಮನುಷ್ಯರ ಸಂಖ್ಯೆಯು ಎಷ್ಟೊಂದು ವೃದ್ಧಿಯಾಗುತ್ತಿರುತ್ತದೆ. ಭಾರತದ ಧರಣಿಯು ಹೆಚ್ಚುವುದಿಲ್ಲ, ಧರಣಿಯು ಅಷ್ಟೇ ಇರುತ್ತದೆ ಬಾಕಿ ಮನುಷ್ಯರ ಸಂಖ್ಯೆಯು ಹೆಚ್ಚು ಕಡಿಮೆ ಆಗುತ್ತಿರುತ್ತದೆ. ಸತ್ಯಯುಗದಲ್ಲಿ ಇದೇ ಪ್ರಪಂಚವೇ ಇರುವುದು ಆದರೆ ಅಲ್ಲಿ ಜನಸಂಖ್ಯೆಯು ಬಹಳ ಕಡಿಮೆಯಿರುತ್ತದೆ. ಪ್ರಪಂಚವೇನೂ ಚಿಕ್ಕದಾಗಿ ಬಿಡುವುದಿಲ್ಲ ಅಂದಾಗ ನಾವು ನಮ್ಮ ಯೋಗಬಲದಿಂದ ತಂದೆಯ ಶ್ರೀಮತದಂತೆ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೆ ನೆನಪು ಮಾಡಿ ಆಗ ನಿಮ್ಮ ಪಾಪಗಳು ಭಸ್ಮವಾಗುವುದು. ಆತ್ಮದಲ್ಲಿಯೇ ತುಕ್ಕು ಹಿಡಿದಿದೆಯಲ್ಲವೆ. ಕೇವಲ ಸತೋ, ರಜೋ, ತಮೋ ಎಂದು ಹೇಳುತ್ತಾರೆ ಆದರೆ ಆತ್ಮದಲ್ಲಿಯೇ ಈ ತುಕ್ಕು ಬೀಳುತ್ತದೆ ಎಂದು ತೋರಿಸುವುದಿಲ್ಲ. ಮೊದಲು ಸತೋಪ್ರಧಾನರಾಗಿದ್ದಾಗ ಸತ್ಯ ಚಿನ್ನದ ಸಮಾನರಾಗಿದ್ದಿರಿ ನಂತರ ಆತ್ಮದಲ್ಲಿ ಬೆಳ್ಳಿಯು ಬೆರಕೆಯಾಗುತ್ತದೆ ಅರ್ಥಾತ್ ಅದಕ್ಕೆ ತ್ರೇತಾಯುಗವೆಂದು ಹೇಳಲಾಗುತ್ತದೆ. ಚಂದ್ರವಂಶಿಯರಿರುತ್ತಾರೆ. ಆಂಗ್ಲ ಭಾಷೆಯ ಶಬ್ಧಗಳು ಎಷ್ಟು ಚೆನ್ನಾಗಿದೆ - ಗೋಲ್ಡನ್, ಸಿಲ್ವರ್, ಕಾಪರ್ ಮತ್ತು ಐರನ್. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮದಲ್ಲಿ ತುಕ್ಕು ಹಿಡಿದಿದೆ, ಅದು ಬಿಡುವುದಾದರೂ ಹೇಗೆ? ಸತೋದಿಂದ ತಮೋ ಆಗಿ ಬಿಟ್ಟಿದ್ದೀರಿ. ಈಗ ತಮೋದಿಂದ ಸತೋ ಹೇಗಾಗುವುದು? ಇದಕ್ಕಾಗಿ ಗಂಗೆಯಲ್ಲಿ ಸ್ನಾನ ಮಾಡಿದರೆ ಸತೋಪ್ರಧಾನವಾಗಿ ಬಿಡುತ್ತೇವೆ ಎಂದು ತಿಳಿದು ಬಿಡುತ್ತಾರೆ, ಆದರೆ ಇದು ಸಾಧ್ಯವಿಲ್ಲ. ಗಂಗಾ ಸ್ನಾನವನ್ನಂತೂ ಪ್ರತಿನಿತ್ಯವೂ ಮಾಡುತ್ತಿರುತ್ತಾರೆ. ಕೆಲವರಂತೂ ನೇಮಿನಾಥರಾಗಿ ಬಿಡುತ್ತಾರೆ. ಕೊಳದಲ್ಲಿಯೂ ಹೋಗಿ ಸ್ನಾನ ಮಾಡುತ್ತಾರೆ. ನಿಮಗೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಂದೆಯನ್ನು ನೆನಪು ಮಾಡುವ ನಿಯಮವನ್ನಿಟ್ಟುಕೊಳ್ಳಿ. ನೆನಪಿನ ಸ್ನಾನ ಅಥವಾ ಯಾತ್ರೆ ಮಾಡಿ. ತಂದೆಯು ಜ್ಞಾನ ಸ್ನಾನ, ಯೋಗದ ಯಾತ್ರೆಯನ್ನು ಕಲಿಸುತ್ತಾರೆ. ಜ್ಞಾನವನ್ನು ಕೊಡುತ್ತಾರೆ, ಇದರಲ್ಲಿ ಯೋಗದ ಜ್ಞಾನ, ಸೃಷ್ಟಿಚಕ್ರದ ಜ್ಞಾನವೂ ಇದೆ. ಬಾಕಿ ಶಾಸ್ತ್ರಗಳ ಜ್ಞಾನವನ್ನು ಅನೇಕರು ತಿಳಿಸುತ್ತಾರೆ. ಯೋಗವನ್ನು ಯಾರೂ ಅರಿತುಕೊಂಡಿಲ್ಲ. ಇದನ್ನು ಹಠಯೋಗವೆಂದು ತಿಳಿದುಕೊಂಡಿದ್ದಾರೆ. ಯೋಗಾಶ್ರಮಗಳು ಬಹಳಷ್ಟಿವೆ, ಮನ್ಮನಾಭವದ ಮಂತ್ರವು ತಂದೆಯ ವಿನಃ ಮತ್ತ್ಯಾವ ಮನುಷ್ಯರ ಬಳಿಯೂ ಇಲ್ಲ. ಈಗ 84 ಜನ್ಮಗಳ ಚಕ್ರವು ಪೂರ್ಣವಾಗಿದೆ ಮತ್ತೆ ಹೊಸ ಪ್ರಪಂಚವಾಗುವುದು, ವೃಕ್ಷದ ವೃದ್ಧಿಯು ಹೇಗಾಗುತ್ತದೆ ಎಂಬುದು ಈಗ ನಿಮ್ಮ ಬುದ್ಧಿಯಲ್ಲಿದೆ. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಎಲ್ಲರೂ ಒಟ್ಟಿಗೆ ಹೋಗುವುದಿಲ್ಲ. ಬ್ರಾಹ್ಮಣರ ವೃಕ್ಷವು ಬಹಳ ದೊಡ್ಡದಾಗುವುದು ನಂತರ ಕೆಲಕೆಲವರಾಗಿಯೇ ಹೋಗುವರು. ಪ್ರಜೆಗಳೂ ತಯಾರಾಗುತ್ತಿರುವರು. ಯಾರಾದರೂ ಜ್ಞಾನವನ್ನು ಸ್ವಲ್ಪ ಕೇಳಿದರೂ ಸಹ ಪ್ರಜೆಗಳಲ್ಲಿ ಬಂದು ಬಿಡುತ್ತಾರೆ. ಸೇವಾಕೇಂದ್ರಗಳು ಬಹಳ ವೃದ್ಧಿ ಹೊಂದುತ್ತವೆ. ಎಲ್ಲಿ ನೋಡಿದರಲ್ಲಿ ಪ್ರದರ್ಶನಿಗಳನ್ನು ಇಡುತ್ತಾ ಹೋಗುವರು. ಹೇಗೆ ಮಂದಿರಗಳನ್ನು ಕಟ್ಟಿಸುತ್ತಾ ಹೋಗುವರೋ ಹಾಗೆಯೇ ನಿಮ್ಮ ಪ್ರದರ್ಶನಿಗಳೂ ಸಹ ಹಳ್ಳಿ-ಹಳ್ಳಿಗಳಲ್ಲಿ ಸ್ಥಾಪನೆಯಾಗುತ್ತದೆ. ಮನೆ-ಮನೆಯಲ್ಲಿ ಪ್ರದರ್ಶನಿಯನ್ನು ಇಡುವರು, ವೃದ್ಧಿಯಾಗುತ್ತಾ ಹೋಗುತ್ತದೆ. ಆದ್ದರಿಂದ ಕೊನೆಗೆ ಈ ಚಿತ್ರಗಳನ್ನು ಮುದ್ರಿಸಬೇಕಾಗುವುದು. ಎಲ್ಲರಬಳಿ ತಂದೆಯ ಸಂದೇಶ ತಲುಪುವುದು. ನೀವು ಮಕ್ಕಳು ಬಹಳಷ್ಟು ಸರ್ವೀಸ್ ಮಾಡಬೇಕಾಗಿದೆ, ಈಗಂತೂ ಈ ಪ್ರೋಜೆಕ್ಟರ್, ಪ್ರದರ್ಶನಿಯ ಫ್ಯಾಷನ್ ಬಂದಿದೆ ಆದ್ದರಿಂದ ಹಳ್ಳಿ-ಹಳ್ಳಿಗಳಲ್ಲಿ ಇದನ್ನು ತೋರಿಸಿರಿ, ಇದರಿಂದ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ಶಿವ ಜಯಂತಿಯ ಗಾಯನವಿದೆ ಆದರೆ ಶಿವನು ಹೇಗೆ ಬರುವರು? ಎಂಬುದು ಯಾರಿಗೂ ತಿಳಿದಿಲ್ಲ. ಶಿವ ಪುರಾಣದಲ್ಲಿ ಈ ಮಾತುಗಳಿಲ್ಲ. ಈ ಮಾತುಗಳನ್ನು ಕೇವಲ ನೀವು ಮಕ್ಕಳೇ ಕೇಳುತ್ತೀರಿ, ಕೇಳುವ ಸಮಯದಲ್ಲಿ ಬಹಳ ಇಷ್ಟವಾಗುತ್ತದೆ ಮತ್ತೆ ಮರೆತು ಹೋಗುತ್ತೀರಿ. ನಿಮ್ಮಲ್ಲಿ ಜ್ಞಾನ ಬಿಂದುಗಳು ಚೆನ್ನಾಗಿ ಧಾರಣೆಯಾಗಿದ್ದಾಗ ಬಹಳ ಚೆನ್ನಾಗಿ ಸರ್ವೀಸನ್ನೂ ಮಾಡುವಿರಿ ಆದರೆ ಎಲ್ಲಾ ಜ್ಞಾನದ ಅಂಶಗಳು ಯಾರಿಗೂ ಧಾರಣೆಯಾಗುವುದಿಲ್ಲ. ಭಾಷಣ ಮಾಡಿ ಬಂದ ನಂತರ ಈ ಅಂಶವನ್ನು ತಿಳಿಸಿದ್ದರೆ ಬಹಳ ಚೆನ್ನಾಗಿರುತ್ತಿತ್ತು ಎಂದು ವಿಚಾರ ಬರುತ್ತದೆ. ಭಾಷಣ ಮಾಡಿದನಂತರ ನಾವು ಇವೆಲ್ಲಾ ಅಂಶಗಳನ್ನು ಸರಿಯಾಗಿ ತಿಳಿಸಿದೆವೆ? ಎಂದು ವಿಚಾರ ಮಾಡುತ್ತಾರೆ. ಈಗಿನ್ನೂ ಬಹಳಷ್ಟು ಜ್ಞಾನದ ವಿಚಾರಗಳನ್ನು ಮರೆತು ಹೋಗುತ್ತಾರೆ. ಇವೆಲ್ಲವೂ ಜೊತೆ ಬರುವುದಿಲ್ಲ. ಇದು ಕೇವಲ ಈಗಿನ ಸಮಯಕ್ಕಾಗಿ ಮಾತ್ರ, ನಂತರ ಇದೆಲ್ಲವೂ ಸಮಾಪ್ತಿ ಆಗಿ ಬಿಡುವುದು. ಈಗ ಈ ಕಣ್ಣುಗಳಿಂದ ಏನೆಲ್ಲವೂ ನೋಡುತ್ತೀರೋ ಇದು ಸತ್ಯಯುಗದಲ್ಲಿರುವುದಿಲ್ಲ. ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತದೆ, ನೀವೀಗ ತ್ರಿನೇತ್ರಿಗಳಾಗುತ್ತೀರಿ. ತಂದೆಯು ಬಂದು ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ, ಅದನ್ನು ಆತ್ಮವು ಧಾರಣೆ ಮಾಡಿಕೊಳ್ಳುತ್ತದೆ. ಆತ್ಮಕ್ಕೆ ಮೂರನೇ ನೇತ್ರವು ಸಿಗುತ್ತದೆ. ನಾನಾತ್ಮನಾಗಿದ್ದೇನೆ, ನಾನು ಈ ಶರೀರದ ಮೂಲಕ ಇಂತಹ ಕರ್ಮವನ್ನು ಮಾಡುತ್ತೇನೆ, ತಂದೆಯು ನಮಗೆ ಓದಿಸುತ್ತಾರೆ ಎಂಬ ಜ್ಞಾನವು ಈಗ ಯಾರಲ್ಲಿಯೂ ಇಲ್ಲ, ಇದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳುವುದು ಬಹಳ ಪರಿಶ್ರಮವಾಗಿದೆ. ಮಕ್ಕಳು ಪರಿಶ್ರಮ ಪಡಬೇಕು ಮತ್ತು ಖುಷಿಯಲ್ಲಿ ಇರಬೇಕಾಗಿದೆ. ಈಗ ನಮ್ಮ ರಾಜ್ಯವು ಬಂದಿತೆಂದರೆ ಬಂದಿತು. ನಮ್ಮ ರಾಜ್ಯದಲ್ಲಿ ಏನೇನಿರುವುದು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳಿಗಂತೂ ನಾವೀಗ ಈ ವಿದ್ಯೆಯಿಂದ ರಾಜ್ಯಭಾಗ್ಯವನ್ನು ಪಡೆಯುತ್ತೇವೆಂದು ಬಹಳ ಖುಷಿಯಿರಬೇಕಾಗಿದೆ. ಓದುವವರಿಗೆ ಪದವಿಯ ನೆನಪಿರುತ್ತದೆ. ನಾವು ಭವಿಷ್ಯಕ್ಕಾಗಿ ಓದುತ್ತೇವೆ, ಚೆನ್ನಾಗಿ ಓದಿದ್ದೇ ಆದರೆ ರಾಜ್ಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆವು. ಅಂತಹವರು ಪ್ರಸಿದ್ಧರಾಗುತ್ತಾರೆ. ಈಗ ಅದರ ಪಟ್ಟಿಯನ್ನು ತೆಗೆದು ಮಾಲೆಯನ್ನು ತಯಾರಿಸಿದರೆ ಆಗ ಎಲ್ಲರೂ ಹೇಳುವರು - ಇಂತಹವರು ನಮ್ಮ ಬಳಿ ರಿಫ್ರೆಷ್ ಮಾಡಲು ಕಳುಹಿಸಿ ಎಂದು. ಭಾಷಣ ಮಾಡುವವರನ್ನು ಕರೆಸುತ್ತಾರೆ ಅಂದಮೇಲೆ ಅವರಿಗೆ ಗೌರವ ಕೊಡಬೇಕು, ನಾವೂ ಸಹ ಇವರಂತೆ ಬುದ್ಧಿವಂತರಾಗಬೇಕೆಂದು ಸಂಕಲ್ಪವಿರಲಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅತೀಂದ್ರಿಯ ಸುಖದ ಅನುಭವ ಮಾಡಲು ದೇಹಭಾನವನ್ನು ಕಳೆಯುವ ಪುರುಷಾರ್ಥ ಮಾಡಬೇಕಾಗಿದೆ. ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಬುದ್ಧಿಯೋಗವು ಮನೆಯೊಂದಿಗೆ ತೊಡಗಿರಲಿ.
2. ಗೃಹಸ್ಥ ವ್ಯವಹಾರದಲ್ಲಿರುತ್ತಾ ವಿದ್ಯೆಯನ್ನೂ ಓದಬೇಕಾಗಿದೆ, ಡಬಲ್ ಕೋರ್ಸ್ ತೆಗೆದುಕೊಳ್ಳಬೇಕು. ಜ್ಞಾನದ ಸ್ನಾನ ಮತ್ತು ನೆನಪಿನ ಯಾತ್ರೆಯನ್ನು ಮಾಡಬೇಕು ಮತ್ತು ಅನ್ಯರಿಗೂ ಮಾಡಿಸಬೇಕಾಗಿದೆ.
ಓಂ ಶಾಂತಿ. ಎಲ್ಲಾ ಸೇವಾಕೇಂದ್ರದ ಮಕ್ಕಳು ಗೀತೆಯನ್ನು ಕೇಳಿದಿರಿ, ನೀವು ಇಂದು ಕೇಳುತ್ತಿದ್ದೀರಿ, ದೂರದಲ್ಲಿರುವ ಮಕ್ಕಳು 2-4 ದಿನಗಳ ನಂತರ ಕೇಳುತ್ತಾರೆ. ಒಂದುವೇಳೆ ಹಳೆಯ ಪ್ರಪಂಚ, ಹಳೆಯ ಶರೀರದೊಂದಿಗೆ ಮನಸ್ಸನ್ನಿಟ್ಟಿದ್ದೇ ಆದರೆ ಅದೃಷ್ಟವು ಕೆಟ್ಟುಹೋಗುವುದು ಏಕೆಂದರೆ ಈ ಶರೀರವು ಹಳೆಯ ಪ್ರಪಂಚದ್ದಾಗಿದೆ ಆದ್ದರಿಂದ ಒಂದುವೇಳೆ ದೇಹಾಭಿಮಾನಿಗಳಾದರೆ ಇಷ್ಟೊಂದು ಯಾವ ಅದೃಷ್ಟವು ರೂಪಿಸಲ್ಪಡುತ್ತಿದೆಯೋ ಅದೂ ಸಹ ಕೆಟ್ಟು ಹೋಗುವುದು. ನೀವೀಗ ದುರಾದೃಷ್ಟರಿಂದ ಅದೃಷ್ಟವಂತರಾಗುತ್ತಿದ್ದೀರಿ ಆದ್ದರಿಂದ ಎಷ್ಟು ಸಾಧ್ಯವೋ ಒಬ್ಬ ತಂದೆಯನ್ನು ನೆನಪು ಮಾಡಿ, ಯಾರು ಬೇಹದ್ದಿನ ಆಸ್ತಿಯನ್ನು ಕೊಡುತ್ತಿದ್ದಾರೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಈ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯವಿದೆ, ಇದರಲ್ಲಿ ನೀವು ಪುರುಷಾರ್ಥ ಮಾಡಿ. ಅವಶ್ಯವಾಗಿ ಸರ್ವಗುಣ ಸಂಪನ್ನ ಆಗಬೇಕಾಗಿದೆ. ಅನೇಕರು ಪವಿತ್ರರಾಗಿಯೂ ಇದ್ದಾರೆ, ಕೆಲವರು ಪದೇ-ಪದೇ ಕೆಳಗೆ ಬೀಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಅವಶ್ಯವಾಗಿ ಸರ್ವಗುಣ ಸಂಪನ್ನರಾಗಬೇಕಾಗಿದೆ. ತಂದೆಯ ಜೊತೆ ಸೇವೆಯಲ್ಲಿಯೂ ಜೊತೆಗಾರರಾಗಬೇಕು. ಬಹಳ ದೊಡ್ಡ ಸೇವೆಯಾಗಿದೆ. ಇಡೀ ಪತಿತ ಪ್ರಪಂಚವನ್ನು ಪಾವನ ಮಾಡಲು ಎಲ್ಲರೂ ತಂದೆಗೆ ಸಹಯೋಗ ನೀಡುತ್ತಾರೆಂದಲ್ಲ. ಯಾರು ಕಲ್ಪದ ಹಿಂದೆ ಸಹಯೋಗ ನೀಡಿದ್ದಾರೆಯೋ ಬ್ರಾಹ್ಮಣ ಕುಲಭೂಷಣ ಬಿ.ಕೆ. ಆಗಿದ್ದಾರೆಯೋ ಅವರು ಬುದ್ಧಿವಂತರಾಗುತ್ತಾರೆ. ಪ್ರಜಾಪಿತ ಬ್ರಹ್ಮನ ಹೆಸರಂತೂ ಗಾಯನವಿದೆ, ಬ್ರಹ್ಮಾನ ಮಕ್ಕಳಿಗೆ ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರೆಂದೇ ಹೇಳಲಾಗುತ್ತದೆ. ಅವಶ್ಯವಾಗಿ ಇದ್ದು ಹೋಗಿದ್ದಾರೆ, ಆದಿ ದೇವ-ಆದಿ ದೇವಿಯನ್ನೂ ನೆನಪು ಮಾಡುತ್ತಾರೆ ಏಕೆಂದರೆ ಯಾವುದು ಮೊದಲು ಆಗಿ ಹೋಗಿದೆಯೋ ಅದು ಪುನಃ ಆಗುವುದು. ಇದನ್ನು ನೀವು ತಿಳಿದುಕೊಂಡಿದ್ದೀರಿ, ಸತ್ಯಯುಗವು ಬಂದು ಹೋಗಿದೆ. ಆದಿ ಸನಾತನ ದೇವಿ-ದೇವತೆಗಳ ರಾಜ್ಯವಿತ್ತು, ಅದು ಈಗ ಇಲ್ಲ. ದೇವಿ-ದೇವತೆಗಳು ಯಾರು ಪವಿತ್ರ ಪ್ರವೃತ್ತಿ ಮಾರ್ಗದವರು ರಾಜ್ಯ ಮಾಡುತ್ತಿದ್ದರೋ ಅವರು ಈಗ 84ನೇ ಜನ್ಮದ ಅಂತಿಮದಲ್ಲಿದ್ದಾರೆ. ಈಗ ಪವಿತ್ರರಿಲ್ಲ ಮತ್ತು ಆ ರಾಜ್ಯವೂ ಇಲ್ಲ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ, ಪುನಃ ಪಾವನರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ-ಮಕ್ಕಳೇ, ಪತಿತರೊಂದಿಗೆ ಬುದ್ಧಿಯೋಗವನ್ನು ಇಡಬೇಡಿ, ಒಬ್ಬ ತಂದೆಯನ್ನು ನೆನಪು ಮಾಡಿ.
ನೀವು ತಿಳಿದುಕೊಂಡಿದ್ದೀರಿ - ನಾವು ತಂದೆಯ ಸಲಹೆಯಂತೆ ನಡೆದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆಸ್ತಿಯನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ಯುಕ್ತಿಯನ್ನೂ ತಿಳಿಸುತ್ತಾರೆ. ಮನುಷ್ಯರಂತೂ ಅನೇಕ ಪ್ರಕಾರದ ಯುಕ್ತಿಗಳನ್ನು ರಚಿಸುತ್ತಾರೆ. ಕೆಲವರು ವಿಜ್ಞಾನದ ಅಭಿಮಾನಿಗಳಾಗಿದ್ದಾರೆ, ಕೆಲವರು ವೈದ್ಯಕೀಯ ಅಭಿಮಾನಿಗಳಾಗಿದ್ದಾರೆ. ಮನುಷ್ಯರ ಹೃದಯವು ಹಾಳಾದರೆ ಇನ್ನೊಂದು ಪ್ಲಾಸ್ಟಿಕ್ ಹೃದಯವನ್ನು ಹಾಕಬಲ್ಲೆವು ಎಂದು ಬರೆಯುತ್ತಾರೆ. ನಿಜವಾದುದನ್ನು ತೆಗೆದು ತಾತ್ಕಾಲಿಕ ಹೃದಯವನ್ನು ನಡೆಸುತ್ತಿರುತ್ತಾರೆ. ಇದೂ ಸಹ ಎಷ್ಟು ಒಳ್ಳೆಯ ಕಲೆಯಾಗಿದೆ ಆದರೆ ಇದು ಅಲ್ಪಕಾಲದ ಸುಖಕ್ಕಾಗಿ. ನಾಳೆ ಅವರು ಮರಣ ಹೊಂದಿದರೆ ಶರೀರವೇ ಸಮಾಪ್ತಿ ಆಗಿ ಬಿಡುವುದು, ಪ್ರಾಪ್ತಿಯೇನೂ ಆಗುವುದಿಲ್ಲ. ಅಲ್ಪಕಾಲಕ್ಕಾಗಿ ಸಿಕ್ಕಿತಷ್ಟೇ. ವಿಜ್ಞಾನದ ಮೂಲಕ ಬಹಳಷ್ಟು ಕಮಾಲ್ ಮಾಡಿ ತೋರಿಸುತ್ತಾರೆ ಅದೂ ಕೇವಲ ಅಲ್ಪಕಾಲಕ್ಕಾಗಿ. ಈ ಮಾತಂತೂ ಎಲ್ಲದಕ್ಕಿಂತ ಸಂಪೂರ್ಣ ಭಿನ್ನವಾಗಿದೆ. ಪಾವನ ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಪತಿತವಾಗಿ ಬಿಟ್ಟಿದೆ. ಆ ಪತಿತ ಆತ್ಮವನ್ನು ಪುನಃ ಪಾವನವನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಒಬ್ಬ ತಂದೆಯದೇ ಗಾಯನವಿದೆ, ಸರ್ವರ ಪತಿತ-ಪಾವನ, ಸರ್ವರ ಸದ್ಗತಿದಾತ, ಸರ್ವರ ಮೇಲೆ ದಯಾ ದೃಷ್ಟಿಯನ್ನು ಇಡುವವರು, ಸರ್ವೋದಯ ಲೀಡರ್ ಆಗಿದ್ದಾರೆ. ಮನುಷ್ಯರು ತಮ್ಮನ್ನು ಸರ್ವೋದಯ ಲೀಡರ್ ಎಂದು ಕರೆಸಿಕೊಳ್ಳುತ್ತಾರೆ ಆದರೆ ಸರ್ವ ಎಂದರೆ ಅದರಲ್ಲಿ ಎಲ್ಲರೂ ಬಂದುಬಿಡುತ್ತಾರೆ. ಅಂದಮೇಲೆ ಸರ್ವರ ಮೇಲೆ ದಯೆ ತೋರಿಸುವವರು ತಂದೆಯೊಬ್ಬರೇ ಎಂದು ಗಾಯನವಿದೆ. ಅವರಿಗೇ ದಯಾ ಸಾಗರ, ಆನಂದ ಸಾಗರನೆಂದು ಹೇಳುತ್ತಾರೆ. ಉಳಿದ ಮನುಷ್ಯರು ಸರ್ವರ ಮೇಲೆ ದಯೆ ತೋರಿಸಲು ಸಾಧ್ಯವೇ? ತಮ್ಮಮೇಲೆ ದಯೆ ಮಾಡಿಕೊಳ್ಳಲು ಸಾಧ್ಯವಿಲ್ಲವೆಂದರೆ ಅನ್ಯರ ಮೇಲೆ ಏನು ಮಾಡುವರು? ಇವರು ಅಲ್ಪಕಾಲದ ದಯೆ ತೋರಿಸುತ್ತಾರೆ. ಎಷ್ಟು ದೊಡ್ಡ ಹೆಸರುಗಳನ್ನು ಇಟ್ಟುಕೊಂಡಿದ್ದಾರೆ.
ಈಗ ತಂದೆಯು ತಿಳಿಸುತ್ತಾರೆ - ನಿಮಗೆ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುವ ಎಷ್ಟು ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಯುಕ್ತಿಯು ಅತಿ ಸಹಜವಾಗಿದೆ, ಕೇವಲ ನನ್ನನ್ನು ನೆನಪು ಮಾಡಿರಿ ಏಕೆಂದರೆ ನೀವು ನನ್ನನ್ನೇ ಮರೆತು ಹೋದಿರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿರುತ್ತೀರಿ ಆದ್ದರಿಂದ ನನ್ನನ್ನು ನೆನಪು ಮಾಡುವುದಿಲ್ಲ. ನಿಮ್ಮ 84 ಜನ್ಮಗಳ ಚರಿತ್ರೆ-ಭೂಗೋಳವನ್ನು ನಿಮಗೆ ತಿಳಿಸುತ್ತೇನೆ, ನೀವು ಹೀಗೆ ರಾಜ್ಯ ಮಾಡುತ್ತಿದ್ದಿರಿ, ಸದಾ ಸುಖಿಯಾಗಿದ್ದಿರಿ, ನಂತರ ದಿನ-ಪ್ರತಿದಿನ ಕೆಳಗಿಳಿಯುತ್ತಾ-ಇಳಿಯುತ್ತಾ ತಮೋಪ್ರಧಾನ, ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ಈಗ ತಂದೆಯು ಪುನಃ ನೀವುಮಕ್ಕಳಿಗೆ ಕಲ್ಪದ ಮೊದಲಿನಂತೆ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವೇ ಕಲ್ಪ-ಕಲ್ಪವೂ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಶ್ರೀಮತದಂತೆ ನಡೆಯುತ್ತೀರಿ. ಶ್ರೀಮತವು ಬಾಪ್ದಾದಾರವರ ಮತವಾಗಿದೆ. ಅವರನ್ನು ಬಿಟ್ಟರೆ ಶ್ರೀಮತವೆಲ್ಲಿಂದ ಸಿಗುವುದು! ತಂದೆಯು ತಿಳಿಸುತ್ತಾರೆ - ನೀವು ವಿಚಾರ ಮಾಡಿ, ಈ ಕಲೆಯು ಯಾರಲ್ಲಿಯಾದರೂ ಇದೆಯೇ? ಇಲ್ಲ. ವಿಶ್ವದ ಮಾಲೀಕರನ್ನಾಗಿ ಮಾಡುವ ಯುಕ್ತಿಯನ್ನು ತಂದೆಯೇ ತಿಳಿಸಿಕೊಡುತ್ತಾರೆ. ಇದರ ವಿನಃ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ತಂದೆಯೇ ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಜ್ಞಾನ ತಿಳಿಸುತ್ತಾರೆ. ಕೇವಲ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳುವುದರಿಂದ ನೀವು ಪವಿತ್ರರಾಗಿ ಬಿಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ, ಈ ಯೋಗಾಗ್ನಿಯಿಂದಲೇ ನಿಮ್ಮ ಪಾಪದ ಕೊಡವು ಸಮಾಪ್ತಿ ಆಗುವುದು.
ನೀವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಬಹಳ ಪತಿತರಾಗಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ಇತ್ತೀಚೆಗಂತೂ ಮನುಷ್ಯರು ನಾನೇ ಶಿವನೆಂದು ಹೇಳಿಕೊಳ್ಳುತ್ತಾರೆ ಅಥವಾ ನೀವು ಪರಮಾತ್ಮನ ರೂಪವಾಗಿದ್ದೀರಿ, ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ. ಈಗ ತಂದೆಯು ಬಂದಿದ್ದಾರೆ, ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯೇ ನೆನಪು ತರಿಸಬೇಕಾಗಿದೆ. ಸರ್ವರ ಸದ್ಗತಿದಾತನು ಒಬ್ಬ ಪರಮಪಿತ ಪರಮಾತ್ಮನೇ ಆಗಿದ್ದಾರೆ. ಶಿವನ ಮಂದಿರಗಳನ್ನು ಪ್ರತ್ಯೇಕವಾಗಿ ಕಟ್ಟಿಸುತ್ತಾರೆ, ಶಂಕರನ ರೂಪವೇ ಬೇರೆಯಾಗಿದೆ. ಪ್ರದರ್ಶನಿಯಲ್ಲಿಯೂ ಇದನ್ನು ತೋರಿಸಬೇಕಾಗಿದೆ, ಶಿವ ನಿರಾಕಾರ, ಶಂಕರ ಆಕಾರಿಯಾಗಿದ್ದಾನೆ. ಕೃಷ್ಣನಂತೂ ಸಾಕಾರದಲ್ಲಿದ್ದಾನೆ, ಜೊತೆಯಲ್ಲಿ ರಾಧೆಯನ್ನು ತೋರಿಸುವುದು ಸರಿಯಾಗಿದೆ. ಆಗ ಇದು ಸಿದ್ಧವಾಗುವುದು - ಇವರೇ ನಂತರ ಲಕ್ಷ್ಮೀ-ನಾರಾಯಣ ಆಗುತ್ತಾರೆಂದು. ಕೃಷ್ಣನು ದ್ವಾಪರದಲ್ಲಿ ಗೀತೆಯನ್ನು ತಿಳಿಸಲು ಬರುವುದೇ ಇಲ್ಲ. ಪತಿತರಾಗುವುದು ಕಲಿಯುಗದ ಅಂತ್ಯದಲ್ಲಿ, ಸತ್ಯಯುಗದಲ್ಲಿ ಪಾವನರಿರುತ್ತಾರೆ ಅಂದಮೇಲೆ ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಇದನ್ನು ತಂದೆಯೇ ತಿಳಿದುಕೊಂಡಿದ್ದಾರೆ, ಅವರೇ ತ್ರಿಕಾಲದರ್ಶಿಯಾಗಿದ್ದಾರೆ. ಕೃಷ್ಣನಿಗೆ ತ್ರಿಕಾಲದರ್ಶಿಯೆಂದು ಹೇಳಲಾಗುವುದಿಲ್ಲ, ಅವರು ಮೂರು ಕಾಲಗಳ ಜ್ಞಾನವನ್ನು ತಿಳಿಸಲು ಸಾಧ್ಯವಿಲ್ಲ ಏಕೆಂದರೆ ಕೃಷ್ಣನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವೇ ಇಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆಂದು ಹೇಳುತ್ತಾರೆ. ದೈವೀ ರಾಜಕುಮಾರ-ಕುಮಾರಿಯರು ಕಾಲೇಜಿಗೆ ಓದಲು ಹೋಗುತ್ತಾರೆ. ಮೊದಲು ಇಲ್ಲಿಯೂ ಸಹ ರಾಜಕುಮಾರ-ಕುಮಾರಿಯರ ಕಾಲೇಜುಗಳಿತ್ತು, ಈಗ ಒಂದೇ ಬೆರಕೆಯಾಗಿ ಬಿಟ್ಟಿದೆ. ಕೃಷ್ಣನು ರಾಜಕುಮಾರನಾಗಿದ್ದನು, ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರೆ, ಎಲ್ಲರೂ ಒಟ್ಟಿಗೆ ಓದುತ್ತಾರೆ. ಅದಂತೂ ನಿರ್ವಿಕಾರಿ ಪ್ರಪಂಚವಾಗಿದೆ, ಒಬ್ಬ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಸರ್ವರ ಸದ್ಗತಿದಾತನಾಗಲು ಸಾಧ್ಯವಿಲ್ಲ. ತಂದೆಯೇ ಬಂದು ಸರ್ವರಿಗೆ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ. ದೇವತೆಗಳ ರಾಜ್ಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಧರ್ಮಗಳು ಅರ್ಧದಿಂದ ಬರುತ್ತವೆ ಅಂದಮೇಲೆ ಸತ್ಯಯುಗದಲ್ಲಿ ಈ ಧರ್ಮಗಳಿರಲು ಹೇಗೆ ಸಾಧ್ಯ! ಇವರು ನಿವೃತ್ತಿ ಮಾರ್ಗದವರು ಹಠಯೋಗಿಗಳಾಗಿದ್ದಾರೆ. ರಾಜಯೋಗವನ್ನು ತಿಳಿದುಕೊಂಡಿಲ್ಲ. ಪ್ರವೃತ್ತಿ ಮಾರ್ಗದವರಿಗಾಗಿ ಈ ರಾಜಯೋಗವಿದೆ, ಭಾರತವು ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಕಲಿಯುಗದಲ್ಲಿ ಪತಿತ ಪ್ರವೃತ್ತಿ ಮಾರ್ಗದವರಾಗಿ ಬಿಟ್ಟಿದ್ದೀರಿ. ಭಗವಾನುವಾಚ, ನನ್ನೊಬ್ಬನನ್ನೇ ನೆನಪು ಮಾಡಿರಿ. ಹಳೆಯ ಪ್ರಪಂಚ ಅಥವಾ ದೇಹದ ಸಂಬಂಧಗಳೊಂದಿಗೆ ಮನಸ್ಸನ್ನಿಟ್ಟರೆ ಅದೃಷ್ಟವು ಕೆಟ್ಟು ಹೋಗುವುದು. ಅನೇಕರ ಅದೃಷ್ಟವು ಕೆಟ್ಟು ಹೋಗುತ್ತದೆ. ಯಾರಾದರೂ ಅಕರ್ತವ್ಯ ಮಾಡಿದ್ದರೆ ಅಂತಿಮದಲ್ಲಿ ಅದೆಲ್ಲವೂ ಮುಂದೆ ಬರುತ್ತದೆ, ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಕ್ಕಳು ಬಹಳ ಮುಚ್ಚಿಡುತ್ತಾರೆ. ಈ ಜನ್ಮದಲ್ಲಿ ಮಾಡಿರುವ ಪಾಪಕರ್ಮಗಳನ್ನು ತಂದೆಗೆ ತಿಳಿಸುವುದರಿಂದ ಅರ್ಧ ಶಿಕ್ಷೆಯು ಕಳೆದು ಹೋಗುವುದು. ಆದರೆ ಸಂಕೋಚಕ್ಕೊಳಗಾಗಿ ತಿಳಿಸುವುದೇ ಇಲ್ಲ. ಬಹಳ ಕೊಳಕು ಕೆಲಸಗಳನ್ನು ಮಾಡುತ್ತಾರೆ. ಬುದ್ಧಿಯಲ್ಲಿ ನೆನಪಂತೂ ಇರುತ್ತದೆ ಆದರೆ ಅದನ್ನು ತಿಳಿಸುವುದರಿಂದ ಶಿಕ್ಷೆಯಿಂದ ಮುಕ್ತರಾಗುವಿರಿ. ಇವರು ಅವಿನಾಶಿ ಸರ್ಜನ್ ಆಗಿದ್ದಾರೆ. ಇರುವ ಕಾಯಿಲೆಯನ್ನು ಸಂಕೋಚಕ್ಕೊಳಗಾಗಿ ಸರ್ಜನ್ಗೆ ತಿಳಿಸಲಿಲ್ಲವೆಂದರೆ ಅದು ಕಳೆಯುವುದಾದರೂ ಹೇಗೆ? ಯಾವುದೇ ವಿಕರ್ಮ ಮಾಡಿದ್ದರೂ ಸಹ ತಿಳಿಸುವುದರಿಂದ ಅರ್ಧ ಪಾಪವು ತುಂಡಾಗುವುದು. ತಿಳಿಸದೇ ಇದ್ದರೆ ಅದು ವೃದ್ಧಿಯಾಗುತ್ತಾ ಹೋಗುವುದು. ಹೆಚ್ಚು ಸಿಕ್ಕಿ ಹಾಕಿಕೊಳ್ಳುತ್ತಾ ಹೋಗುವಿರಿ ಮತ್ತೆ ಅದೃಷ್ಟವು ಸಮಾಪ್ತಿಯಾಗಿ ದುರಾದೃಷ್ಟವಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ದೇಹದೊಂದಿಗೂ ಸಂಬಂಧವನ್ನು ಇಡಬೇಡಿ.ಯಾವಾಗಲೂ ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮಿಂದ ಯಾವುದೇ ಕೆಟ್ಟ ಕೆಲಸವಾಗುವುದಿಲ್ಲ. ಇವರು ಧರ್ಮರಾಜನೂ ಆಗಿದ್ದಾರೆ, ಅವರೊಂದಿಗೂ ಮುಚ್ಚಿಡುತ್ತಾ ಇದ್ದರೆ ಮತ್ತೆ ನಿಮ್ಮಷ್ಟು ಶಿಕ್ಷೆ ಮತ್ತ್ಯಾರಿಗೂ ಸಿಗುವುದಿಲ್ಲ. ಸಮಯವು ಎಷ್ಟು ಸಮೀಪಿಸುತ್ತಾ ಹೋಗುವುದೋ ಎಲ್ಲರಿಗೂ ಸಾಕ್ಷಾತ್ಕಾರವಾಗುತ್ತಾಹೋಗುವುದು. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರೂ ಪತಿತರಾಗಿದ್ದಾರೆ. ಪಾಪಗಳ ಶಿಕ್ಷೆಯು ಖಂಡಿತ ಸಿಗುತ್ತದೆ. ಹೇಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುವುದೋ ಹಾಗೆಯೇ ಒಂದು ಸೆಕೆಂಡಿನಲ್ಲಿ ಶಿಕ್ಷೆಗಳ ಈ ರೀತಿ ಅನುಭವವಾಗುತ್ತದೆ ಹೇಗೆ ಬಹಳ ಸಮಯದಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೇನೆ ಎಂಬಂತೆ. ಇದು ಬಹಳ ಸೂಕ್ಷ್ಮ ಮೆಷಿನರಿಯಾಗಿದೆ, ಎಲ್ಲರ ಅಂತಿಮ ಸಮಯವಾಗಿದೆ. ಶಿಕ್ಷೆಗಳನ್ನು ಖಂಡಿತವಾಗಿಯೂ ಅನುಭವಿಸಬೇಕಾಗಿದೆ ನಂತರ ಎಲ್ಲಾ ಆತ್ಮರು ಪವಿತ್ರರಾಗಿ ಹೊರಟು ಹೋಗುವರು. ತಂದೆಯು ಬಂದು ಪತಿತ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಈ ಶಕ್ತಿಯಿಲ್ಲ. 63 ಜನ್ಮಗಳಿಂದ ಪಾಪಗಳನ್ನು ಮಾಡುತ್ತಾ-ಮಾಡುತ್ತಾ ಈಗ ಪಾಪದ ಕೊಡವು ತುಂಬಿದೆ. ಮಾಯೆಯ ಗ್ರಹಣವು ಎಲ್ಲರಿಗೂ ಹಿಡಿದಿದೆ. ದೊಡ್ಡ ಗ್ರಹಣವು ನಿಮಗೆ ಹಿಡಿದಿದೆ, ನೀವೇ ಸರ್ವಗುಣ ಸಂಪನ್ನರಾಗಿದ್ದಿರಿ, ನಿಮ್ಮ ಮೇಲೆ ಗ್ರಹಣ ಹಿಡಿದಿದೆ. ಜ್ಞಾನವೂ ಸಹ ಈಗ ನೀವು ಮಕ್ಕಳಿಗೆ ಸಿಕ್ಕಿದೆ. ತಂದೆಯು ತಿಳಿಸುತ್ತಾರೆ - ನೀವು ಭಾರತದ ಮಾಲೀಕರಾಗಿದ್ದಿರಿ ನಂತರ 84 ಜನ್ಮಗಳನ್ನು ನೀವು ತೆಗೆದುಕೊಂಡಿರಿ. ನೀವು ಅವಶ್ಯವಾಗಿ ದೇವಿ-ದೇವತಾ ಧರ್ಮದವರಾಗಿದ್ದಿರಿ, ಮತ್ತೆ ಪತಿತರಾದ ಕಾರಣ ಹಿಂದೂಗಳೆಂದು ಕರೆಸಿಕೊಂಡಿದ್ದಿರಿ ಎಂದು ತಂದೆಯು ನೇರವಾಗಿ ತಿಳಿಸುತ್ತಾರೆ. ಹಿಂದೂ ಧರ್ಮವನ್ನು ಯಾರೂ ಸ್ಥಾಪನೆ ಮಾಡಿಯೇ ಇಲ್ಲ. ಮಠಪಂಥಕ್ಕೆ ರಾಜಧಾನಿ ಎಂದು ಹೇಳುವುದಿಲ್ಲ. ರಾಜ್ಯವು ರಾಜರಿಗಿರುತ್ತದೆ. ಮೊದಲನೇ ಲಕ್ಷ್ಮೀ-ನಾರಾಯಣ, ಎರಡನೇ ಲಕ್ಷ್ಮೀ-ನಾರಾಯಣ......ಹೀಗೆ ರಾಜ್ಯವು ನಡೆಯುತ್ತದೆ. ಇದೂ ಸಹ ಅವಶ್ಯವಾಗಿದೆ, ಪಾವನರಿಂದ ಪತಿತರಾಗಲೇಬೇಕಾಗಿದೆ. ಪತಿತರಾಗುವ ಕಾರಣ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ಪೂಜ್ಯ ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ತಮ್ಮ ಧರ್ಮದ ಚಿತ್ರಗಳನ್ನೇ ಪೂಜಿಸುತ್ತಾರೆ. ನಾವೇ ಪೂಜ್ಯ ದೇವಿ-ದೇವತೆಗಳಾಗಿದ್ದೆವು, ಈಗ ಪೂಜಾರಿಗಳಾಗಿದ್ದೇವೆ ಎಂಬುದನ್ನೇ ಮರೆತು ಹೋಗಿದ್ದೇವೆ. ತಂದೆಯು ಆಸ್ತಿಯನ್ನು ಕೊಟ್ಟಿದ್ದರು, ನಂತರ ಪತಿತರಾದೆವು ಆದ್ದರಿಂದ ನಮ್ಮದೇ ಚಿತ್ರಗಳಿವೆ. ಕುಳಿತು ಪೂಜೆ ಮಾಡಿದೆವು ಎಂದು ನೀವೀಗ ತಿಳಿದುಕೊಳ್ಳುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಾರತದ ವಿನಃ ಮತ್ತ್ಯಾರಿಗೂ ಹೇಳುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬಂದು ಪುನಃ ದೇವಿ-ದೇವತೆಗಳನ್ನಾಗಿ ಮಾಡಲು ಜ್ಞಾನ ಕೊಡುತ್ತಾರೆ. ಉಳಿದೆಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹಿಂತಿರುಗಿ ಹೊರಟು ಹೋಗುತ್ತಾರೆ. ಆತ್ಮರೆಲ್ಲರೂ ಓ ಗಾಡ್ ಫಾದರ್ ಎಂದು ತಂದೆಯನ್ನು ಕರೆಯುತ್ತಾ ಇರುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ, ಒಬ್ಬರು ಶಿವ ತಂದೆ, ಇನ್ನೊಬ್ಬರು ಲೌಕಿಕ ತಂದೆ ಮತ್ತು ಇವರು ಅಲೌಕಿಕ ತಂದೆ ಪ್ರಜಾಪಿತ ಬ್ರಹ್ಮಾನಾಗಿದ್ದಾರೆ. ಮತ್ತೆಲ್ಲರಿಗೆ ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ಸತ್ಯಯುಗದಲ್ಲಿ ಕೇವಲ ಒಬ್ಬರೇ ಲೌಕಿಕ ತಂದೆಯಿರುತ್ತಾರೆ. ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇಲ್ಲ. ಅಲ್ಲಂತೂ ಸುಖವೇ ಸುಖವಿರುತ್ತದೆ ಅಂದಮೇಲೆ ಮತ್ತೆ ಪಾರಲೌಕಿಕ ತಂದೆಯನ್ನು ಏಕೆ ನೆನಪು ಮಾಡುವರು! ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುತ್ತಾರೆ, ಇಲ್ಲಿ ನಿಮಗೆ ಮೂವರು ತಂದೆಯರಿರುತ್ತಾರೆ, ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಅಲ್ಲಿ ಆತ್ಮಾಭಿಮಾನಿಯಾಗಿರುತ್ತಾರೆ, ನಂತರ ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಇಲ್ಲಿ ನೀವು ಆತ್ಮಾಭಿಮಾನಿಗಳೂ ಆಗಿದ್ದೀರಿ, ಪರಮಾತ್ಮಾಭಿಮಾನಿಗಳೂ ಆಗಿದ್ದೀರಿ. ನಾವೆಲ್ಲರೂ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮಗೆ ಶುದ್ಧ ಅಭಿಮಾನವಿದೆ. ತಂದೆಯು ಶಿಕ್ಷಕ, ಸದ್ಗುರುವೂ ಆಗಿದ್ದಾರೆ, ಅವರ ಮಹಿಮೆಯನ್ನೂ ಸಹ ತಿಳಿಸಬೇಕಾಗಿದೆ. ಅವರೇ ಬಂದು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ನಿಮಗೆ ಆಸ್ತಿಯಿತ್ತು, ನಂತರ 84 ಜನ್ಮಗಳನ್ನು ತೆಗೆದುಕೊಂಡು ಅದನ್ನು ಕಳೆದುಕೊಂಡಿದ್ದೀರಿ. ಇದನ್ನು ತಿಳಿಸುವುದು ಎಷ್ಟು ಸಹಜವಾಗಿದೆ, ತಂದೆಗೆ ಪತಿತ-ಪಾವನ, ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಈ ಪ್ರಪಂಚವೇ ಪತಿತರದಾಗಿದೆ. ಯಾರೂ ಸದ್ಗತಿ ಕೊಡಲು ಸಾಧ್ಯವಿಲ್ಲ. ಬಾಕಿ ಯಾರಾದರೂ ಬಹಳ ಶಾಸ್ತ್ರಗಳನ್ನು ಓದಿದ್ದರೆ ಅವರದು ಅಂತ್ಯಮತಿ ಸೋ ಗತಿಯಾಗುತ್ತದೆ. ನಂತರದ ಜನ್ಮದಲ್ಲಿ ಬಾಲ್ಯದಲ್ಲಿಯೇ ಎಲ್ಲವನ್ನೂ ಕಂಠಪಾಠ ಮಾಡಿ ಬಿಡುತ್ತಾರೆ. ತಂದೆಯು ನೀವು ಮಕ್ಕಳಿಗೆ ಎಷ್ಟು ಒಳ್ಳೆಯ ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ - ಮಕ್ಕಳೇ, ನಿವು ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುವುದು. ಈಗ ನಾಟಕವು ಪೂರ್ಣವಾಗುತ್ತದೆ. ಎಲ್ಲರೂ ಇಲ್ಲಿ ರಾಜರಾಗಬೇಕಾಗಿದೆ. ಕ್ರೈಸ್ಟ್ ಮೊದಲಾದವರೆಲ್ಲರ ಆತ್ಮಗಳು ಹಾಜರಿದ್ದಾರೆ, ಅವರೂ ಸಹ ತಂದೆಯ ಬಳಿ ಸಲಾಮು ಹೊಡೆಯಲು ಬರುವರು. ಅವರಂತೂ ಚಕ್ರವರ್ತಿ ರಾಜರಾಗುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡುತ್ತಾರೆ. ಮನ್ಮನಾಭವದ ಮಂತ್ರವನ್ನು ತೆಗೆದುಕೊಂಡು ಹೋಗುತ್ತಾರೆ. ನಿಮ್ಮದು ಮನ್ಮನಾಭವ ಮತ್ತು ಮಧ್ಯಾಜೀಭವದ ಡಬಲ್ ಮಂತ್ರವಾಗಿದೆ. ತಂದೆಯು ಎಷ್ಟು ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಹಳೆಯ ಪ್ರಪಂಚದಲ್ಲಿರುತ್ತಾ ಪುರುಷಾರ್ಥ ಮಾಡಿ ಸರ್ವಗುಣ ಸಂಪನ್ನರು ಅವಶ್ಯವಾಗಿ ಆಗಬೇಕಾಗಿದೆ. ಈ ಹಳೆಯ ಶರೀರ ಹಾಗೂ ಹಳೆಯ ಪ್ರಪಂಚದೊಂದಿಗೆ ಮನಸ್ಸನ್ನು ಇಡಬಾರದು. ಅದೃಷ್ಟವಂತರಾಗಬೇಕಾಗಿದೆ.
2. ಆತ್ಮಾಭಿಮಾನಿ ಹಾಗೂ ಪರಮಾತ್ಮಾಭಿಮಾನಿ ಆಗಬೇಕಾಗಿದೆ. ಈ ಅಂತಿಮ ಸಮಯದಲ್ಲಿ ತಂದೆಯೊಂದಿಗೆ ಅಥವಾಏನನ್ನೂ ಮುಚ್ಚಿಡಬಾರದು. ಅವಿನಾಶಿ ಸರ್ಜನ್ನಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ.
ಓಂ ಶಾಂತಿ. ಪ್ರತಿಯೊಬ್ಬ ಮನುಷ್ಯನೂ ಸುಖ ಮತ್ತು ಶಾಂತಿಯ ಅದೃಷ್ಟವನ್ನು ರೂಪಿಸಿಕೊಳ್ಳಲು ಪುರುಷಾರ್ಥ ಮಾಡುತ್ತಾನೆ. ಸಾಧು, ಸಂತ, ಸನ್ಯಾಸಿಗಳೂ ಸಹ ನಮಗೆ ಶಾಂತಿ ಬೇಕು, ದುಃಖ ದೂರ ಮಾಡಿ ಸುಖ ಕೊಡಿ ಎಂದು ಹೇಳುತ್ತಾರೆ. ಭಗವಂತನೇ ಮನುಷ್ಯ ಮಾತ್ರನ ದುಃಖಹರ್ತ-ಸುಖಕರ್ತನಾಗಿದ್ದಾರೆಂದು ತಿಳಿಯುತ್ತಾರೆ. ಈಗ ಭಗವಂತನನ್ನು ಮನುಷ್ಯರು ತಿಳಿದುಕೊಂಡಿಲ್ಲ. ನೀವಂತೂ ಶಿವಬಾಬಾ ಎಂದು ಹೇಳುತ್ತೀರಿ, ಬ್ರಹ್ಮಾ-ವಿಷ್ಣು-ಶಂಕರನಿಗೆ ಬಾಬಾ ಎಂದು ಹೇಳುವುದಿಲ್ಲ. ಅವರಂತೂ ದೇವತೆಗಳಾಗಿದ್ದಾರೆ. ಭಗವಂತನಿಗೇ ತಂದೆಯೆಂದು ಹೇಳುತ್ತಾರೆ, ಅವರು ನಿರಾಕಾರನಾಗಿದ್ದಾರೆ, ಅವರ ಪೂಜೆ ಮಾಡುತ್ತಾರೆ. ಅವರು ಎಲ್ಲರ ತಂದೆಯಾಗಿದ್ದಾರೆಂದು ತಿಳಿದಿದೆ ಆದರೆ ನಾವೇಕೆ ತಂದೆಯೆಂದು ಹೇಳುತ್ತೇವೆ? ಒಬ್ಬ ಲೌಕಿಕ ತಂದೆಯಂತೂ ಇದ್ದಾರೆ ಇವರು ಎಂತಹ ತಂದೆಯಾಗಿದ್ದಾರೆ ಎಂಬ ವಿಚಾರವೇ ಬರುವುದಿಲ್ಲ. ಅವರು ನಿರಾಕಾರ ತಂದೆಯಾಗಿದ್ದಾರೆ ಎಂದು ಆತ್ಮವು ಹೇಳುತ್ತದೆ. ಅವರೂ ನಿರಾಕಾರನಾಗಿದ್ದಾರೆ, ನಾವಾತ್ಮರೂ ನಿರಾಕಾರಿಯಾಗಿದ್ದೇವೆ. ಸಾಕಾರಿ ತಂದೆಯಿದ್ದರೂ ಸಹ ಆತ್ಮವು ಆ ತಂದೆಯನ್ನು ಮರೆಯುವುದಿಲ್ಲ. ಅವರು ಪರಮ ಆತ್ಮನಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ. ಪರಮಪಿತನೆಂದು ಹೇಳುತ್ತಾರೆ. ಆಂಗ್ಲ ಭಾಷೆಯಲ್ಲಿ ಗಾಡ್ಫಾದರ್, ಸುಪ್ರೀಂಸೌಲ್, ಎಲ್ಲರಿಗಿಂತ ಶ್ರೇಷ್ಠನೆಂದು ಹೇಳುತ್ತಾರೆ. ಲೌಕಿಕ ತಂದೆಯು ಶರೀರದ ರಚಯಿತನಾಗಿದ್ದಾರೆ ಮತ್ತು ಇವರು ಪಾರಲೌಕಿಕ ತಂದೆಯಾಗಿದ್ದಾರೆ. ತಂದೆಯೇ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ತಂದೆಯಿಂದ ಆಸ್ತಿಯು ಸಿಗುತ್ತದೆ. ನೀವು ತಂದೆಯ ಬಳಿ ಆಸ್ತಿಯನ್ನು ತೆಗೆದುಕೊಳ್ಳಲು ಬರುತ್ತೀರಿ. ದುಃಖಹರ್ತ, ಸುಖಕರ್ತ ತಂದೆಯೇ ಬಂದು ಸುಖದ ಮಾರ್ಗವನ್ನು ತಿಳಿಸುತ್ತಾರೆ. ಅಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ಇಲ್ಲಂತೂ ಬಹಳ ದುಃಖವಿದೆಯಲ್ಲವೆ. ಎಲ್ಲರೂ ಹೋಗುತ್ತಾರೆ. ಈಗಂತೂ ಪ್ರಪಂಚದಲ್ಲಿ ಬಹಳ ದುಃಖವು ಮುಂದೆ ಬರಲಿದೆ. ಯಾರಾದರೂ ಮರಣ ಹೊಂದಿದರೆ ಎಷ್ಟೊಂದು ದುಃಖಿಯಾಗುತ್ತಾರೆ. ‘ಅಯ್ಯೋ ಭಗವಂತ’ ಎಂದು ಅಳುತ್ತಾರೆ. ಅವರೇ ಕಲ್ಯಾಣಕಾರಿ ತಂದೆಯಾಗಿದ್ದಾರೆ. ಹಾಡುತ್ತಾರೆಂದರೆ ಅವಶ್ಯವಾಗಿ ದುಃಖವನ್ನು ಹರಣ ಮಾಡಿ, ಸುಖವನ್ನು ಕೊಟ್ಟಿದ್ದಾರಲ್ಲವೆ. ಆ ತಂದೆಯೇ ಬಂದು ತಿಳಿಸುತ್ತಾರೆ - ಮಕ್ಕಳೇ, ನೀವು ಕಲ್ಪ-ಕಲ್ಪವೂ ಯಾವಾಗ ಬಹಳ ದುಃಖಿ, ಪತಿತರಾಗಿ ಬಿಡುತ್ತೀರೋ ಆಗ ತಂದೆಯೇ ಬನ್ನಿ ಎಂದು ಕರೆಯುತ್ತೀರಿ. ನಾನು ಕಲ್ಪ-ಕಲ್ಪವೂ ಸಂಗಮದಲ್ಲಿಯೇ ಬರುತ್ತೇನೆ, ಪಾವನ ಪ್ರಪಂಚದ ಆದಿ ಮತ್ತೆ ಪತಿತ ಪ್ರಪಂಚದ ಅಂತ್ಯಕ್ಕೆ ಸಂಗಮವೆಂದು ಹೇಳಲಾಗುತ್ತದೆ. ಇದೊಂದೇ ಸಂಗಮಯುಗದ ಗಾಯನವಿದೆ. ತಂದೆಯು ಎಲ್ಲರ ಜ್ಯೋತಿಯನ್ನು ಜಾಗೃತ ಮಾಡಲು ದುಃಖವನ್ನು ದೂರ ಮಾಡಿ, ಸುಖವನ್ನು ಕೊಡಲು ಬರುತ್ತಾರೆ. ನಾವು ಪಾರಲೌಕಿಕ ತಂದೆಯ ಬಳಿ ಬಂದಿದ್ದೇವೆ, ಆ ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆಂದು ನಿಮಗೆ ತಿಳಿದಿದೆ. ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ, ಇವರಿಗೆ ಬ್ರಹ್ಮನೆಂದು ಹೆಸರನ್ನಿಡುತ್ತೇನೆ. ನೀವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ನಿಮಗೆ ಈ ನಿಶ್ಚಯವಿದೆ - ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳಲು ನಾವು ಬ್ರಹ್ಮನ ಸಂತಾನರಾಗಿದ್ದೇವೆ. ನೀವು ಮಕ್ಕಳಿಗೇ ಸುಖವಿತ್ತು ಯಾವಾಗ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಈಗ ಕಲಿಯುಗ, ದುಃಖಧಾಮವಾಗಿದೆ, ಅದರ ನಂತರ ಮತ್ತೆ ಸತ್ಯಯುಗವು ಬರುವುದು. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆಯಲ್ಲವೆ. ಸತ್ಯಯುಗದಲ್ಲಿ ಮತ್ತೆ ಈ ಲಕ್ಷ್ಮೀ-ನಾರಾಯಣರದೇ ರಾಜ್ಯಬೇಕು. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ತಂದೆಯು ತಿಳಿಸುತ್ತಾರೆ - ನೀವು ನರಕವಾಸಿಗಳಾಗಿದ್ದೀರಿ, ಈಗ ಮತ್ತೆ ಸ್ವರ್ಗವಾಸಿಗಳಾಗಬೇಕಾಗಿದೆ. ನೀವು ದೇವಿ-ದೇವತೆಗಳ ವೃಕ್ಷವು ಬಹಳ ಚಿಕ್ಕದಾಗಿತ್ತು, ಈಗ ನಿಮಗೆ ಸ್ಮೃತಿ ಬಂದಿದೆ, ನಾವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ, ನಾವು ಇಡೀ ವಿಶ್ವದ ಮಾಲೀಕರಾಗಿದ್ದೇವೆ, ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದೇವೆ. ಈಗ ನಿಮ್ಮ 84 ಜನ್ಮಗಳ ಅಂತಿಮದಲ್ಲಿಯೂ ಅಂತ್ಯವಾಗಿದೆ. ಪ್ರಪಂಚವು ಹೊಸದರಿಂದ ಹಳೆಯದು ಖಂಡಿತ ಆಗುವುದು. ಹೊಸ ಪ್ರಪಂಚವು ಪಾವನವಾಗಿತ್ತು, ಈಗ ಹಳೆಯ ಪತಿತ ಪ್ರಪಂಚವಾಗಿದೆ. ಎಷ್ಟೊಂದು ದುಃಖಿ, ಕಂಗಾಲರಾಗಿದ್ದಾರೆ. ಭಾರತವು ಬಹಳ ಸಾಹುಕಾರನಾಗಿತ್ತು, ಪವಿತ್ರ ಗೃಹಸ್ಥಾಶ್ರಮವಾಗಿತ್ತು, ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದರು – ಈ ಎಲ್ಲಾ ಮಾತುಗಳು ಶಾಸ್ತ್ರಗಳಲ್ಲಿಲ್ಲ. ಶಾಸ್ತ್ರಗಳು ಭಕ್ತಿಮಾರ್ಗಕ್ಕಾಗಿಯೇ ಇವೆ. ಅದರಲ್ಲಿ ಭಕ್ತಿಯ ರೀತಿ-ಪದ್ಧತಿಗಳೇ ಇವೆ. ತಂದೆಯೊಂದಿಗೆ ಮಿಲನ ಮಾಡುವ ಮಾರ್ಗವು ಶಾಸ್ತ್ರಗಳಿಂದ ಸಿಗಲು ಸಾಧ್ಯವಿಲ್ಲ. ಭಗವಂತನು ಇಲ್ಲಿಯೇ ಬರಬೇಕಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅಲ್ಲಿ ಹೋಗುವ ಮಾತಂತೂ ಇಲ್ಲ, ಯಜ್ಞ-ತಪ ಇತ್ಯಾದಿಗಳನ್ನು ಮಾಡುವುದೇನೂ ಮಾರ್ಗವಲ್ಲ. ಭಗವಂತನನ್ನು ಬನ್ನಿ, ಬಂದು ಮಾರ್ಗವನ್ನು ತಿಳಿಸಿ, ನಾವಾತ್ಮಗಳು ತಮೋಪ್ರಧಾನರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ಆತ್ಮವು ತಮೋಪ್ರಧಾನವಾಗಿರುವ ಕಾರಣ ಹಾರಲು ಆಗುತ್ತಿಲ್ಲ ಅರ್ಥಾತ್ ತಂದೆಯ ಬಳಿ ಹೋಗಲು ಸಾಧ್ಯವಾಗುತ್ತಿಲ್ಲ. ಹಾಗೆ ನೋಡಿದರೆ ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗುತ್ತದೆ. ಅಮೇರಿಕಾದವರೆಗೂ ಹೋಗುತ್ತದೆ. ಯಾರದು ಯಾರ ಜೊತೆ ಸಂಬಂಧವಿರುವುದೋ ಅಲ್ಲಿಗೆ ಆತ್ಮವು ಒಂದು ಸೆಕೆಂಡಿನಲ್ಲಿ ಹಾರುತ್ತದೆ. ಆದರೆ ಅದು ಹಾರಿ ತನ್ನ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಏಕೆಂದರೆ ಪತಿತರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ - ಇಡೀ ಪ್ರಪಂಚವು ಪತಿತವಾದಾಗಲೇ ನಾನು ಬರುತ್ತೇನೆ. ಪತಿತ ಪ್ರಪಂಚದಲ್ಲಿ ಒಬ್ಬರೂ ಪಾವನರಿಲ್ಲ. ಗಂಗೆಯು ಪತಿತ-ಪಾವನಿ ಎಂದು ತಿಳಿಯುತ್ತಾರೆ, ಆದ್ದರಿಂದ ಸ್ನಾನ ಮಾಡಲು ಹೋಗುತ್ತಾರೆ ಆದರೆ ನೀರಿನಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ಹಳೆಯ ಪ್ರಪಂಚವು ಪತಿತ, ಹೊಸ ಪ್ರಪಂಚವು ಪಾವನವಾಗಿದೆ. ನೀವೀಗ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ. ನೀವು ಪುಣ್ಯಾತ್ಮರಾಗಬೇಕಾಗಿದೆ. ನಿಮ್ಮ ಆತ್ಮವು ಸತೋಪ್ರಧಾನವಾಗಿತ್ತು, ಅದೇ ಈಗ ತಮೋಪ್ರಧಾನವಾಗಿದೆ. ಮತ್ತೆ ಅದು ಯಾವುದೇ ಗಂಗಾ ಸ್ನಾನದಿಂದ ಸತೋಪ್ರಧಾನವಾಗುವುದಿಲ್ಲ, ಪತಿತರನ್ನು ಪಾವನ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ಬಾಕಿ ನೀರಿನ ನದಿಗಳಂತೂ ಎಲ್ಲಾ ಸ್ಥಳಗಳಲ್ಲಿಯೂ ಇವೆ, ಮೋಡಗಳಿಂದ ಮಳೆ ಸುರಿಯುತ್ತದೆ, ಎಲ್ಲರಿಗೆ ಸಿಗುತ್ತದೆ. ಒಂದುವೇಳೆ ನೀರಿನ ನದಿಗಳು ಪಾವನ ಮಾಡುವುದಾದರೆ ಎಲ್ಲರನ್ನೂ ಪಾವನ ಮಾಡಿ ಬಿಡಬೇಕಾಗಿತ್ತು, ಪಾವನರಾಗುವ ಯುಕ್ತಿಯನ್ನು ತಂದೆಯೇ ಬಂದು ಇವರ ಮೂಲಕ ತಿಳಿಸುತ್ತಾರೆ. ಇವರಿಗೂ ತಮ್ಮ ಆತ್ಮವಿದೆ. ಶಿವ ತಂದೆಯು ತಿಳಿಸುತ್ತಾರೆ - ನನಗೆ ನನ್ನದೇ ಆದ ಶರೀರವಿಲ್ಲ, ನಿಮಗೆ ಕಲ್ಪ ಕಲ್ಪವೂ ತಿಳಿಸಲು ಇವರಲ್ಲಿಯೇ ಬರುತ್ತೇನೆ. ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಹೇಳಿ ಬಿಡುತ್ತಾರೆ.
ತಂದೆಯು ತಿಳಿಸುತ್ತಾರೆ - ಇದು 84 ಜನ್ಮಗಳ ಚಕ್ರವಾಗಿದೆ, 5000 ವರ್ಷಗಳಲ್ಲಿ 84 ಲಕ್ಷ ಜನ್ಮಗಳನ್ನು ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಸ್ವರ್ಗದಲ್ಲಿ ನೀವು 16 ಕಲಾಸಂಪೂರ್ಣರಾಗಿದ್ದಿರಿ, ನಂತರ 2 ಕಲೆಗಳು ಕಡಿಮೆಯಾಯಿತು, ಮತ್ತೆ ನಿಧಾನ-ನಿಧಾನವಾಗಿ ಕಲೆಗಳು ಕಡಿಮೆಯಾಗುತ್ತದೆ, ಹೊಸ ಪ್ರಪಂಚದಿಂದ ಹಳೆಯದಾಗುತ್ತದೆ. ದ್ವಾಪರ-ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ನನಗೇ ಜ್ಞಾನ ಸಾಗರನೆಂದು ಹೇಳುತ್ತಾರೆ, ನಾನು ಯಾವುದಾದರೂ ಶಾಸ್ತ್ರಗಳನ್ನು ಓದುತ್ತೇನೆಯೇ? ನಾನು ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೇನೆ. ಭಕ್ತಿಮಾರ್ಗದವರಿಗೆ ಈ ಜ್ಞಾನವಿರಲು ಸಾಧ್ಯವಿಲ್ಲ, ಅದೆಲ್ಲವೂ ಭಕ್ತಿಯ ಜ್ಞಾನವಾಗಿದೆ, ನಾವು ಪಾಪಿಗಳು, ನೀಚರಾಗಿದ್ದೇವೆ. ನಮ್ಮಲ್ಲಿ ಯಾವುದೇ ಗುಣವಿಲ್ಲ, ತಾವೇ ದಯೆ ತೋರಿಸಿ ಎಂದು ಹಾಡುತ್ತಾರೆ. ಇವರ ಮೇಲೆ ದಯೆ ತೋರಿಸಿದ್ದಾರೆ, ಆದ್ದರಿಂದ ಮನುಷ್ಯರಿಂದ ದೇವತೆಗಳಾಗಿದ್ದಾರೆ. ಇದಕ್ಕೆ ಶ್ರೇಷ್ಠಾತಿ ಶ್ರೇಷ್ಠ ಅದೃಷ್ಟವೆಂದು ಹೇಳಲಾಗುತ್ತದೆ. ಶಾಲೆಯಲ್ಲಿ ಅದೃಷ್ಟವನ್ನು ರೂಪಿಸಿಕೊಳ್ಳಲು ಹೋಗುತ್ತಾರೆ, ಕೆಲವರು ವಕೀಲ, ಕೆಲವರು ಇಂಜಿನಿಯರ್ ಆಗುತ್ತಾರೆ, ಅದು ವಿಕಾರಿ ಅದೃಷ್ಟವಾಗಿದೆ, ನಿಮ್ಮದು ಈಶ್ವರನ ಮೂಲಕ ಅದೃಷ್ಟವು ಬೆಳಗುತ್ತದೆ. ಆದ್ದರಿಂದ ದುಃಖಹರ್ತ-ಸುಖಕರ್ತನೆಂದು ಕರೆಯುತ್ತಾರೆ. ದೇವತೆಗಳನ್ನಾಗಿ ಮಾಡಲು ತಂದೆಯ ವಿನಃ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ಕುಳಿತು ಆತ್ಮರೊಂದಿಗೆ ಮಾತನಾಡುತ್ತಾರೆ. ಇದು ನನ್ನ ಶರೀರವೆಂದು ಆತ್ಮವೇ ಹೇಳುತ್ತದೆ, ನನ್ನ ಆತ್ಮವೆಂದು ಶರೀರವು ಹೇಳುವುದಿಲ್ಲ. ಶರೀರದ ಒಳಗೆ ಆತ್ಮವಿದೆ, ಇದು ನನ್ನ ಶರೀರವೆಂದು ಆತ್ಮವೇ ಹೇಳುತ್ತದೆ. ನಾನಾತ್ಮನನ್ನು ನೋಯಿಸಬೇಡಿ ಎಂದು ಮನುಷ್ಯರು ಹೇಳುತ್ತಾರೆ. ಆತ್ಮವು ಶರೀರದಲ್ಲಿ ಇಲ್ಲದಿದ್ದರೆ ಹೇಳುವುದೂ ಇಲ್ಲ. ಆತ್ಮವು ಹೇಳುತ್ತದೆ - ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ, ನಾವು ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡು ನರಕವಾಸಿಗಳಾಗಿದ್ದೇವೆ. ಈಗ ಪುನಃ ನೀವು ಸ್ವರ್ಗವಾಸಿಗಳಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯೇ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ, ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇಂತಹವರು ಸ್ವರ್ಗವಾಸಿಯಾದರು ಎಂದು ಯಾವ ಮಾತನ್ನು ಹೇಳುತ್ತಾರೆಯೋ ಇದು ಸುಳ್ಳಾಗಿದೆ ಏಕೆಂದರೆ ಇದು ನರಕವಾಗಿದೆ. ಯಾರಾದರೂ ಸತ್ತರೆ ಸ್ವರ್ಗದಲ್ಲಿ ಹೋದರೆಂದು ಹೇಳುತ್ತಾರೆ ಅಂದಮೇಲೆ ಬಂದು ಭೋಜನವನ್ನು ಸ್ವೀಕರಿಸಿ ಎಂದು ಅವರನ್ನು ನರಕದಲ್ಲಿ ಏಕೆ ಕರೆಯುತ್ತಾರೆ? ಸ್ವರ್ಗದಲ್ಲಿ ಅವರಿಗೆ ಬಹಳ ವೈಭವ ಸಿಗುತ್ತದೆ ಅಂದಮೇಲೆ ನೀವು ನರಕದಲ್ಲಿ ಏಕೆ ಕರೆಯುತ್ತೀರಿ? ಮನುಷ್ಯರಲ್ಲಿ ಇಷ್ಟಾದರೂ ತಿಳುವಳಿಕೆಯಿಲ್ಲ. ತಂದೆಯು ತಿಳಿಸುತ್ತಾರೆ - ಈಗ ಈ ಕಲಿಯುಗವು ಸಮಾಪ್ತಿಯಾಗಲಿದೆ, ಇದಕ್ಕೆ ಬೆಂಕಿ ಬೀಳುವುದು. ಎಲ್ಲರೂ ಸಮಾಪ್ತಿ ಆಗಿ ಬಿಡುತ್ತಾರೆ. ನೀವು ಮಕ್ಕಳು ಯಾರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರೋ ಅವರು ಸತ್ಯಯುಗದಲ್ಲಿ ಬಂದು ರಾಜ್ಯಭಾರ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರಿಗೆ ಆಸ್ತಿಯನ್ನು ಯಾರು ಕೊಟ್ಟರು? ತಂದೆ. ನೀವೀಗ ತಂದೆಯ ಮೂಲಕ ಯೋಗ್ಯರಾಗುತ್ತಿದ್ದೀರಿ. ನಾವು ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತಿದ್ದೇವೆಂದು ನೀವು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಸ್ವರ್ಗವಾಸಿಯಾಗುವುದಿಲ್ಲ, ನಾನಂತೂ ಪರಮಧಾಮದಲ್ಲಿರುತ್ತೇನೆ. ನರಕವಾಸಿ, ಸ್ವರ್ಗವಾಸಿಗಳು ನೀವೇ ಆಗುತ್ತೀರಿ. ಆತ್ಮರ ನಿವಾಸ ಸ್ಥಾನವೇ ಶಾಂತಿಧಾಮವಾಗಿದೆ, ನಂತರ ನೀವು ಸುಖಧಾಮದಲ್ಲಿ ಬರುತ್ತೀರಿ, ಇದು ದುಃಖಧಾಮವಾಗಿದೆ. ಈಗ ಇದರ ವಿನಾಶವಾಗುವುದು. ಭಗವಂತನು ಬ್ರಹ್ಮಾ ತನುವಿನಲ್ಲಿ ಬಂದು ರಾಜಯೋಗವನ್ನು ಕಲಿಸುತ್ತಾರೆಂದು ಯಾರಿಗೂ ತಿಳಿದಿಲ್ಲ. ಕೃಷ್ಣನು ಬಂದನೆಂದು ಅವರು ತಿಳಿಯುತ್ತಾರೆ, ಕೃಷ್ಣನ ತನುವಿನಲ್ಲಿ ಬಂದರೆಂದೂ ಹೇಳುವುದಿಲ್ಲ. ಕೃಷ್ಣನಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಕೃಷ್ಣನಂತೂ ವಿಶ್ವದ ಮಾಲೀಕನಾಗಿದ್ದಾನೆ, ಎಲ್ಲರ ಮುಕ್ತಿದಾತನು ಒಬ್ಬರೇ ಆಗಿದ್ದಾರೆ. ಅವರು ಪರಮ ಆತ್ಮನಾಗಿದ್ದಾರೆ. ನಾವು ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂದು ತಿಳಿದುಕೊಳ್ಳುವಂತಹ ಸತ್ಸಂಗವು ಮತ್ತ್ಯಾವುದೂ ಇರುವುದಿಲ್ಲ. ಪತಿತರಿಂದ ಪಾವನರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನು ನಿಮ್ಮ ಸತ್ಯವಾದ ಗುರುವಾಗಿದ್ದೇನೆ, ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ, ಬಾಕಿ ಗಂಗಾನೀರು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ, ಇದು ಪಾಪಾತ್ಮರ ಪ್ರಪಂಚವಾಗಿದೆ. ಏನೇ ಮಾಡಿದರೂ ಸಹ ಏಣಿಯನ್ನು ಇಳಿಯಲೇಬೇಕಾಗಿದೆ. ಸತೋಪ್ರಧಾನರಿಂದ ತಮೋಪ್ರಧಾನ ಆಗಲೇಬೇಕಾಗಿದೆ. ನೀವು ಭಕ್ತಿ ಮಾಡುವುದಿಲ್ಲ, ಅಯ್ಯೋ ರಾಮ ಎಂದು ಹೇಳುವುದಿಲ್ಲ. ಅವರು ನಿಮ್ಮ ತಂದೆಯಾಗಿದ್ದಾರೆ, ನಿಮಗೆ ಓದಿಸುತ್ತಿದ್ದಾರೆ. ಹೇ ಭಗವಂತ ಬನ್ನಿ, ಹೇ ರಾಮ ಎಂದೂ ಹೇಳಬಾರದು ಆದರೆ ಅನೇಕರಲ್ಲಿ ಈ ಅಭ್ಯಾಸವಾಗಿ ಬಿಟ್ಟಿದೆ. ಆದ್ದರಿಂದ ಅಂತಹ ಶಬ್ಧಗಳು ಬಂದು ಬಿಡುತ್ತವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ನನ್ನ ಬಳಿಗೆ ಬಂದು ಬಿಡುತ್ತೀರಿ. ಒಬ್ಬರನ್ನೇ ನೆನಪು ಮಾಡಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಈಗ ಆಸ್ತಿಯನ್ನು ತೆಗೆದುಕೊಂಡರೆ ತೆಗೆದುಕೊಂಡಂತೆ, ಮತ್ತೆಂದೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ, ಯಾರು ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆಯೋ ಅವರು ಮೂಲತಃ ದೇವಿ-ದೇವತಾ ಧರ್ಮದವರು ಆಗಿದ್ದಾರೆ, ಕ್ರಿಶ್ಚಿಯನ್ ಧರ್ಮದವರೆಂದೂ ಹೆಸರನ್ನು ಬದಲಾಯಿಸಿಕೊಳ್ಳುವುದಿಲ್ಲ. ಭಲೆ ತಮೋಪ್ರಧಾನದವರಾದರೂ ಸಹ ಕ್ರಿಶ್ಚಿಯನ್ ಧರ್ಮದಲ್ಲಿಯೇ ಇರುತ್ತಾರೆ. ನೀವು ದೇವಿ-ದೇವತೆಗಳಾಗುತ್ತೀರಿ ಆದರೆ ಪತಿತರಾಗಿರುವ ಕಾರಣ ತಮಗೆ ಹಿಂದೂಗಳೆಂದು ಹೇಳಿಕೊಳ್ಳುತ್ತೀರಿ. ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ನಾವು ಮೂಲತಃ ದೇವಿ-ದೇವತೆಗಳಾಗಿದ್ದೆವೆಂದು ಮರೆತು ಹೋಗಿದ್ದಾರೆ. ತಮ್ಮನ್ನು ಯಾರೂ ದೇವತಾ ಧರ್ಮದವರೆಂದು ಕರೆಸಿಕೊಳ್ಳುವುದಿಲ್ಲ ಏಕೆಂದರೆ ವಿಕಾರಿಯಾಗಿದ್ದಾರೆ, ಇದು ದೇಹಾಭಿಮಾನವಾಗಿದೆ. ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ಇಲ್ಲಿ ಯಾವುದೇ ಸಾಧು-ಸಂತ ಮೊದಲಾದವರಿಲ್ಲ. ನಾನು ವ್ಯಾಪಾರಿಯಾಗಿದ್ದೇನೆ, ನಾನು ಇಂತಹವನಾಗಿದ್ದೇನೆ - ಇದೆಲ್ಲವೂ ದೇಹಾಭಿಮಾನವಾಗಿದೆ. ನೀವೀಗ ದೇಹೀ-ಅಭಿಮಾನಿಗಳು ಆಗಬೇಕಾಗಿದೆ. ದೇಹೀ-ಅಭಿಮಾನಿಗಳಾಗುವುದರಲ್ಲಿಯೇ ಪರಿಶ್ರಮವಿದೆ, ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಯನ್ನು ನೆನಪು ಮಾಡಬೇಕಾಗಿದೆ. ಕೈಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ನೆನಪು ಮಾಡಲಿ. ನೀವು ಒಬ್ಬ ಪ್ರಿಯತಮನ ಪ್ರಿಯತಮೆಯರಾಗಿದ್ದೀರಿ. ಎಲ್ಲರ ಸದ್ಗತಿದಾತನು ಒಬ್ಬ ಪ್ರಿಯತಮನಾಗಿದ್ದಾರೆ, ಯಾವಾಗ ಎಲ್ಲರಿಗೆ ಸದ್ಗತಿ ಸಿಗುವುದೋ, ಸ್ವರ್ಗದ ಸ್ಥಾಪನೆಯಾಗುವುದೋ ಆಗ ಅವರು ಬರುತ್ತಾರೆ. ದುಃಖದ ಹೆಸರು, ಗುರುತೂ ಸಹ ಮಾಯವಾಗಿ ಬಿಡುತ್ತದೆ. ಈಗ ನೀವು ಮಕ್ಕಳು ಬೇಹದ್ದಿನ ತಂದೆಯಿಂದ ಸ್ವರ್ಗದ, 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯನ್ನು ಪಡೆಯಲು ಇಲ್ಲಿಗೆ ಬಂದಿದ್ದೀರಿ, ಮತ್ತ್ಯಾವ ಮನುಷ್ಯ ಮಾತ್ರರು ಯಾರನ್ನೂ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಭಾರತದಲ್ಲಿಯೇ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗುವುದು ಎಂಬುದನ್ನು ಮರೆತು ಹೋಗಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿದ್ಯೆಯ ಆಧಾರದ ಮೇಲೆ ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳಬೇಕು, ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಪಾವನರಾಗಿ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಮತ್ತೆ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ.
2. ಕೈಗಳಿಂದ ಕೆಲಸ ಮಾಡುತ್ತಾ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ಯಾವುದೇ ಉಲ್ಟಾ ಮಾತನ್ನು ಕೇಳಲೂಬಾರದು, ಹೇಳಲೂಬಾರದು.
ಓಂ ಶಾಂತಿ. ಮಕ್ಕಳು ತಮ್ಮ ತಂದೆಯ ಮಹಿಮೆಯನ್ನು ಕೇಳಿದಿರಿ. ಗಾಯನ ಮಾಡಲಾಗುತ್ತದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತ ಎಂದು. ಅವರು ಎಲ್ಲಾ ಮಕ್ಕಳ ತಂದೆಯಾಗಿದ್ದಾರೆ. ಯಾರೆಲ್ಲರೂ ಇದ್ದಾರೆಯೋ ಎಲ್ಲರೂ ಪರಸ್ಪರ ಸಹೋದರರಾಗಿದ್ದಾರೆ ಮತ್ತು ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ, ಅವರು ಶಿವ ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ಭಕ್ತಿಮಾರ್ಗದಲ್ಲಿ ನಿಮಗೆ ಇಬ್ಬರು ತಂದೆಯರಿರುತ್ತಾರೆ, ಲೌಕಿಕ ತಂದೆ ಮತ್ತು ಪಾರಲೌಕಿಕ ತಂದೆ. ರಚಯಿತನಿಂದ ರಚನೆಗೆ ಆಸ್ತಿಯು ಸಿಗುತ್ತದೆ, ಅದು ಹದ್ದಿನ ಆಸ್ತಿ, ಇದು ಬೇಹದ್ದಿನ ಆಸ್ತಿಯಾಗಿದೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಅವರು ನಿರಾಕಾರನಾಗಿದ್ದಾರೆ. ಅವರ ಹೆಸರಾಗಿದೆ - ಶಿವ. ಪರಮಪಿತ ಪರಮಾತ್ಮ ಶಿವನೆಂದು ಹೇಳುತ್ತಾರೆ. ಶಿವ ಪರಮಾತ್ಮಾಯ ನಮಃ, ಅವರು ಸರ್ವ ಶ್ರೇಷ್ಠನಾಗಿದ್ದಾರೆ. ನಿಮ್ಮ ಬುದ್ಧಿಯು ನಿರಾಕಾರ ತಂದೆಯ ಕಡೆ ಹೊರಟು ಹೋಗುತ್ತದೆ. ಅವರು ಪರಮಧಾಮದಲ್ಲಿರುತ್ತಾರೆ, ಎಲ್ಲಿಂದ ನೀವಾತ್ಮರು ಬರುತ್ತೀರಿ. ತಂದೆಯೂ ಸಹ ಅಲ್ಲಿಯೇ ಇರುತ್ತಾರೆ, ಅವರು ಸರ್ವರ ಸದ್ಗತಿ ಮಾಡುವವರಾಗಿದ್ದಾರೆ, ಅದರಲ್ಲಿಯೂ ಭಾರತವು ಪರಮಪಿತ ಪರಮಾತ್ಮನ ಜನ್ಮ ಸ್ಥಳವಾಗಿದೆ. ಶಿವ ಜಯಂತಿಯನ್ನೂ ಇಲ್ಲಿಯೇ ಆಚರಿಸುತ್ತಾರೆ. ಆ ಆತ್ಮಿಕ ತಂದೆಗೇ ಜ್ಞಾನ ಸಾಗರ, ಪತಿತ-ಪಾವನ, ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳಲಾಗುತ್ತದೆ, ಅವರೇ ದುಃಖಹರ್ತ-ಸುಖಕರ್ತನಾಗಿದ್ದಾರೆ - ಇದನ್ನು ಭಾರತವಾಸಿಗಳು ತಿಳಿದುಕೊಂಡಿದ್ದಾರೆ. ಇದು ದುಃಖಧಾಮವಾಗಿದೆ, ಭಾರತವೇ ಸುಖಧಾಮವಾಗಿತ್ತು. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಹೇ ಭಾರತವಾಸಿಗಳೇ, ನೀವು ವಿಶ್ವದ ಮಾಲೀಕರಾಗಿದ್ದಿರಿ, ನಿಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿತ್ತು, ದೇವಿ-ದೇವತೆಗಳು ಧರ್ಮಶ್ರೇಷ್ಠರು, ಕರ್ಮಶ್ರೇಷ್ಠರಾಗಿದ್ದರು, ಈಗ ಧರ್ಮಭ್ರಷ್ಠರು-ಕರ್ಮಭ್ರಷ್ಟರಾಗಿ ಬಿಟ್ಟಿದ್ದಾರೆ. ತಮ್ಮನ್ನು ಪಾವನ ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ಕಲಿಯುಗದ ಅಂತ್ಯದವರೆಗೂ ಭಕ್ತಿಮಾರ್ಗವು ನಡೆಯುತ್ತದೆ. ಇದರಲ್ಲಿ ಜ್ಞಾನವಿರುವುದಿಲ್ಲ, ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಸರ್ವರ ಸದ್ಗತಿದಾತ ತಂದೆಯು ಬರುವವರೆಗೂ ಸದ್ಗತಿಯಾಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ, ಈ ಸಮಯದಲ್ಲಿ ಪತಿತ ಪ್ರಪಂಚವಾಗಿದೆ, ಯಾರೊಬ್ಬರೂ ಪಾವನರಿಲ್ಲ. ಭಲೆ ಸನ್ಯಾಸಿಗಳು ಪವಿತ್ರರಾಗುತ್ತಾರೆ ಆದರೆ ಅವರು ಪುನರ್ಜನ್ಮವನ್ನಂತೂ ಇಲ್ಲಿಯೇ ತೆಗೆದುಕೊಳ್ಳಬೇಕಾಗಿದೆ. ವಿಷದಿಂದ ಜನ್ಮಪಡೆಯಬೇಕಾಗುತ್ತದೆ. ಹಿಂತಿರುಗಿ ಹೋಗುವಂತಿಲ್ಲ. ಯಾವಾಗ ಚಕ್ರವು ಪೂರ್ಣವಾಗುವುದೋ ಆಗ ತಂದೆಯು ಬಂದು ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುವುದು. ಪರಮ ಆತ್ಮನೇ ಆತ್ಮಿಕ ಜ್ಞಾನವನ್ನು ಕೊಡುತ್ತಾರೆ, ಅವರೇ ಜ್ಞಾನದ ಸಾಗರ, ಪತಿತ-ಪಾವನನಾಗಿದ್ದಾರೆ, ಬಾಕಿ ಶಾಸ್ತ್ರಗಳ ಜ್ಞಾನವಂತೂ ಭಕ್ತಿಮಾರ್ಗವಾಗಿದೆ. ತಂದೆಯು ತಿಳಿಸುತ್ತಾರೆ - ಯಜ್ಞ, ಜಪ, ತೀರ್ಥಯಾತ್ರೆಗಳನ್ನು ಮಾಡುತ್ತಾ ಇನ್ನೂ ಕೆಳಗಿಳಿಯುತ್ತಲೇ ಬಂದಿದ್ದೀರಿ. ನೀವು ಮೊದಲು ಸತೋಪ್ರಧಾನರಾಗಿದ್ದಿರಿ, ಭಾರತದಲ್ಲಿ ಪವಿತ್ರತೆಯಿದ್ದಾಗ ಶಾಂತಿ, ಸುಖವು ಇತ್ತು, ಆರೋಗ್ಯ-ಭಾಗ್ಯ ಎರಡೂ ಇತ್ತು. ಇಂದಿಗೆ 5000 ವರ್ಷಗಳ ಮೊದಲಿನ ಮಾತಾಗಿದೆ, ಈ ಭಾರತವೇ ಸ್ವರ್ಗವಾಗಿತ್ತು, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ಕೇವಲ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಯಾವುದನ್ನು ಪರಮಪಿತ ಪರಮಾತ್ಮನು ಸ್ಥಾಪನೆ ಮಾಡಿದರು. ಸ್ವರ್ಗದ ಸ್ಥಾಪನೆಯನ್ನು ಅವರೇ ಮಾಡುತ್ತಾರೆ, ಮನುಷ್ಯರು ಮಾಡಲು ಸಾಧ್ಯವಿಲ್ಲ. ಕೃಷ್ಣನು ರಚಯಿತನೆಂದು ಹೇಳುವುದಿಲ್ಲ. ರಚಯಿತನು ಒಬ್ಬರೇ ನಿರಾಕಾರ ಶಿವನಾಗಿದ್ದಾರೆ, ಉಳಿದೆಲ್ಲವೂ ಅವರ ರಚನೆಯಾಗಿದೆ. ರಚಯಿತನಿಂದಲೇ ರಚನೆಯ ಆಸ್ತಿಯು ಸಿಗುತ್ತದೆ.
ತಂದೆಯು ತಿಳಿಸುತ್ತಾರೆ- ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ, ನಿಮಗೆ ಬೇಹದ್ದಿನ 21 ಜನ್ಮಗಳಿಗಾಗಿ ಬೇಹದ್ದಿನ ಆಸ್ತಿಯನ್ನು ಕೊಡುತ್ತೇನೆ. ಸೂರ್ಯವಂಶಿ, ಚಂದ್ರವಂಶಿ ಪವಿತ್ರ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಬ್ರಾಹ್ಮಣ ಧರ್ಮವು ಶಿಖೆಗೆ ಸಮಾನವಾಗಿದೆ. ಎಲ್ಲರಿಗಿಂತ ಶ್ರೇಷ್ಠರು ಆತ್ಮಿಕ ತಂದೆಯಾಗಿದ್ದಾರೆ, ಆತ್ಮಗಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ತಂದೆಯು ಜ್ಞಾನಸಾಗರ, ಸುಖದ ಸಾಗರನಾಗಿದ್ದಾರೆ ಆದ್ದರಿಂದ ನಿಮ್ಮನ್ನೂ ಮಾಡುತ್ತಾರೆ. ಭಾರತವೇ ಸುಖಧಾಮವಾಗಿತ್ತು, ಈಗಂತೂ ದುಃಖಧಾಮವಾಗಿದೆ. ತಂದೆಯು ಹೇಗೆ ಬರುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ಸತ್ಯಯುಗದ ಆದಿಯಿಂದ ಕಲಿಯುಗದ ಅಂತ್ಯದವರೆಗೆ ಇಡೀ ಚರಿತ್ರೆ-ಭೂಗೋಳವು ಭಾರತದ್ದಾಗಿದೆ. ಈ ಲಕ್ಷ್ಮೀ-ನಾರಾಯಣರು ಎಷ್ಟು ಆರೋಗ್ಯವಂತರು, ಐಶ್ವರ್ಯವಂತರು ಆಗಿದ್ದರು! ಎಂದೂ ರೋಗಿಯಾಗುತ್ತಿರಲಿಲ್ಲ, ಈಗ ಕಾಲದ ಮೇಲೆ ವಿಜಯ ಪಡೆಯುವ ಶಿಕ್ಷಣವನ್ನು ಪಡೆಯುತ್ತಿದ್ದೀರಿ. ತಂದೆಗೆ ಕಾಲರ ಕಾಲ ಮಹಾಕಾಲನೆಂದು ಹೇಳಲಾಗುತ್ತದೆ, ಅವರು ನಿಮಗೆ ಕಾಲದ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಶಿವಾಯ ನಮಃ ಎಂದು ಹೆಸರನ್ನು ಕೇಳಿಸಿಕೊಂಡಿರಿ, ಪರಮಾತ್ಮನು ಸರ್ವವ್ಯಾಪಿಯಾಗಿದ್ದಾರೆ, ಬೆಕ್ಕು-ನಾಯಿಯಲ್ಲಿದ್ದಾರೆಂದು ನೀವು ಎಂದಿಗೂ ಹೇಳುವುದಿಲ್ಲ. ಇದಕ್ಕೆ ಧರ್ಮದ ನಿಂದನೆ ಎಂದು ಹೇಳಲಾಗುತ್ತದೆ. ತಂದೆಯ ನಿಂದನೆ ಮಾಡುತ್ತಾರೆ. ಈಗ ಇದು ಕಲ್ಪದ ಸಂಗಮದ ಸಮಯವಾಗಿದೆ. ಈ ಸಮಯದಲ್ಲಿಯೇ ವಿನಾಶಕಾಲೇ ವಿಪರೀತ ಬುದ್ಧಿಯವರು ಎಂದು ಹೇಳಲಾಗುತ್ತದೆ. ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ. ಗೀತೆಯಲ್ಲಿಯೂ ಬರೆದಿದ್ದಾರೆ - ಯಾದವರು, ಕೌರವರು, ಪಾಂಡವರು ಏನು ಮಾಡಿ ಹೋದರು.... ಸರ್ವ ಶಾಸ್ತ್ರಮಯಿ ಶಿರೋಮಣಿ ಶ್ರೀಮತ್ಭಗವದ್ಗೀತೆಯಾಗಿದೆ, ಅದರಿಂದಲೇ ಮತ್ತೆಲ್ಲಾ ಶಾಸ್ತ್ರಗಳು ರಚಿಸಲ್ಪಟ್ಟಿವೆ. ನೀವು ತಿಳಿದುಕೊಂಡಿದ್ದೀರಿ - ಗೀತೆಯು ದೇವತಾ ಧರ್ಮದ ಶಾಸ್ತ್ರವಾಗಿದೆ. ತಂದೆಯು ತಿಳಿಸುತ್ತಾರೆ - ನಾವು ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೇವೆ, ನಂತರ ದೇವಿ-ದೇವತೆಗಳನ್ನಾಗಿ ಮಾಡುತ್ತೇನೆ. ಮತ್ತೆ ನೀವು ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಯಾರು ಮೊಟ್ಟ ಮೊದಲು ಸತ್ಯಯುಗದಲ್ಲಿ ಬರುವರೋ ಅವರೇ ಹೆಚ್ಚು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ನೀವು ಭಾರತವಾಸಿಗಳೇ ಗರಿಷ್ಠ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಕನಿಷ್ಠ ಒಂದು ಜನ್ಮ. ಇದನ್ನೂ ಸಹ ತಂದೆಯೇ ತಿಳಿಸುತ್ತಾರೆ. ತಂದೆಯ ವಿನಃ ಮತ್ತ್ಯಾರಿಗೂ ಜ್ಞಾನಸಾಗರನೆಂದು ಹೇಳಲಾಗುವುದಿಲ್ಲ. ಪತಿತ-ಪಾವನ, ಜ್ಞಾನಸಾಗರನೆಂದು ಹೇಳಿದಾಗ ಬುದ್ಧಿಯು ಮೇಲೆ ಹೋಗುತ್ತದೆ. ತಂದೆಯೇ ಎಲ್ಲರನ್ನೂ ಮುಕ್ತ ಮಾಡಿ ವಾಪಸ್ ಕರೆದುಕೊಂಡು ಹೋಗುತ್ತಾರೆ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಮತ್ತೆ ಸರ್ವರ ದುರ್ಗತಿ ಹೇಗಾಗುತ್ತದೆ? ಯಾರು ಮಾಡುತ್ತಾರೆ? ಸತ್ಯಯುಗಕ್ಕೆ ಸದ್ಗತಿಯೆಂದು, ಕಲಿಯುಗಕ್ಕೆ ದುರ್ಗತಿಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ಸದ್ಗತಿ ನೀಡುತ್ತೇನೆ. ನೀವು ಮಕ್ಕಳು ಇಡೀ ವಿಶ್ವದ ಚರಿತ್ರೆ, ಭೂಗೋಳವನ್ನು ಅರಿತುಕೊಂಡಿದ್ದೀರಿ. ಶಾಲೆಯಲ್ಲಂತೂ ಅರ್ಧಚರಿತ್ರೆ-ಭೂಗೋಳವನ್ನು ಕಲಿಸುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಯಾರು ರಾಜ್ಯ ಮಾಡುತ್ತಿದ್ದರು ಎಂದು ಯಾರಿಗೂ ತಿಳಿದಿಲ್ಲ. ಈ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು ಎಂದು ಚಿತ್ರವಂತೂ ಇದೆ. ಎಷ್ಟು ಸಮಯ ಆ ರಾಜಧಾನಿಯು ನಡೆಯಿತು ಎಂಬುದನ್ನು ನೀವು ತಿಳಿಸಬಲ್ಲಿರಿ. ಕ್ರಿಶ್ಚಿಯನ್ ರಾಜಧಾನಿಯು 2000 ವರ್ಷಗಳು ನಡೆಯಿತು, ಬೌದ್ಧರ ರಾಜ್ಯವು ಇಷ್ಟು ಸಮಯ ನಡೆಯಿತು, ಇಸ್ಲಾಮಿಗಳು.... ಅವರಿಗೂ ಮೊದಲು ಚಂದ್ರವಂಶಿಯರಿದ್ದರು, ಅವರ ರಾಜ್ಯವು 1250 ವರ್ಷ ನಡೆಯಿತು. ಸತ್ಯ-ತ್ರೇತಾಯುಗದಲ್ಲಿ ಸೂರ್ಯವಂಶಿ, ಚಂದ್ರವಂಶಿಯರೇ ಇದ್ದರು, ಮತ್ತ್ಯಾವುದೇ ಧರ್ಮವಿರಲಿಲ್ಲ. ನೀವು ಸೂರ್ಯವಂಶಿ, ಚಂದ್ರವಂಶಿಯರಾಗುತ್ತೀರಿ. ಈಗ ಪುನಃ ಬ್ರಾಹ್ಮಣ ವಂಶಿಯರಾಗಿದ್ದೀರಿ, ಇದೆಲ್ಲಾ ನಾಟಕವು ಭಾರತದ ಮೇಲೆ ಮಾಡಲ್ಪಟ್ಟಿದೆ, ಭಾರತವೇ ಸ್ವರ್ಗ ಮತ್ತು ನರಕವಾಗುತ್ತದೆ. ಅನ್ಯ ಧರ್ಮದವರಿಗಾಗಿ ಹೇಳುವುದಿಲ್ಲ, ಅವರಂತೂ ಸ್ವರ್ಗದಲ್ಲಿ ಇರುವುದೇ ಇಲ್ಲ. ಯಾರಾದರೂ ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ನರಕವಾಸಿಗಳಂತೂ ನರಕದಲ್ಲಿಯೇ ಜನ್ಮ ತೆಗೆದುಕೊಳ್ಳಬೇಕಾಗುತ್ತದೆ. ಸ್ವರ್ಗವಾಸಿಗಳು ಸ್ವರ್ಗದಲ್ಲಿಯೇ ಪುನರ್ಜನ್ಮ ತೆಗೆದುಕೊಳ್ಳುತ್ತಾರೆ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ- ಈ ಲಕ್ಷ್ಮೀ-ನಾರಾಯಣರು ಸ್ವರ್ಗವಾಸಿಗಳಾಗಿದ್ದರು, ಅವರು ಈ ರಾಜಧಾನಿಯನ್ನು ಹೇಗೆ ಪಡೆದರು, ಲಕ್ಷಾಂತರ ವರ್ಷಗಳ ಮಾತು ನೆನಪಿರಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಈ ಶಾಸ್ತ್ರ ಇತ್ಯಾದಿಗಳಿರುವುದಿಲ್ಲ. ಇದೆಲ್ಲವೂ ಭಕ್ತಿಯ ಸಾಮಗ್ರಿಯಾಗಿದೆ, ಏಣಿಯನ್ನು ಕೆಳಗಿಳಿಯಲೇಬೇಕಾಗಿದೆ. ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ, ಈ ಏಣಿಯನ್ನು ಇಳಿಯುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ. ಸತ್ಯಯುಗದಲ್ಲಿ 16 ಕಲಾ ಸಂಪೂರ್ಣರು, ನಂತರ ತ್ರೇತಾದಲ್ಲಿ ಎರಡು ಕಲೆಗಳು ಕಡಿಮೆಯಾಯಿತು, ಆತ್ಮದಲ್ಲಿ ಬೆಳ್ಳಿಯು ಬೆರಕೆಯಾಯಿತು. ದ್ವಾಪರ ಯುಗದಲ್ಲಿ ಬಂದಾಗ ತಾಮ್ರದ ಬೆರಕೆಯಾಯಿತು, ಈ ಸಮಯದಲ್ಲಿ ಸಂಪೂರ್ಣ ತಮೋಪ್ರಧಾನರಾಗಿದ್ದೀರಿ. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ನೀವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಆತ್ಮಿಕ ಶಿವ ತಂದೆಯೇ ಬಂದು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ನೀವೀಗ ಆತ್ಮಾಭಿಮಾನಿಗಳಾಗಬೇಕಾಗಿದೆ. ರಾವಣನ ಪ್ರವೇಶತೆ ಆಗುವುದರಿಂದ ಎಲ್ಲರೂ ದೇಹಾಭಿಮಾನಿಗಳಾಗಿ ಬಿಡುತ್ತಾರೆ. ಈಗ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ನಾವೇ 84 ಜನ್ಮಗಳನ್ನು ತೆಗೆದುಕೊಂಡು ಭಿನ್ನ-ಭಿನ್ನ ಪಾತ್ರವನ್ನು ಅಭಿನಯಿಸುತ್ತಾ ಬಂದಿದ್ದೇವೆ. ಈಗ 84 ಜನ್ಮಗಳ ಚಕ್ರವು ಪೂರ್ಣವಾಯಿತು. ಈ ಶರೀರವೂ ಸಹ ಈಗ ಜಡಜಡೀಭೂತವಾಗಿ ಬಿಟ್ಟಿದೆ. ದ್ವಾಪರದಿಂದ ರಾವಣ ರಾಜ್ಯವಾಗುತ್ತದೆ. ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ. ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಯಾಗಿದ್ದಿರಿ, ದ್ವಾಪರ-ಕಲಿಯುಗದಲ್ಲಿ ದೇಹಾಭಿಮಾನಿಗಳಾಗಿ ಬಿಡುತ್ತೀರಿ. ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಅರಿತುಕೊಂಡಿಲ್ಲ.
ತಂದೆಯು ತಿಳಿಸುತ್ತಾರೆ - ಆತ್ಮವು ಒಂದು ನಕ್ಷತ್ರವಾಗಿದೆ, ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರ... ಅದನ್ನು ದಿವ್ಯ ದೃಷ್ಟಿಯ ವಿನಹ ನೋಡಲು ಸಾಧ್ಯವಿಲ್ಲ, ಅದು ಬಹಳ ಸೂಕ್ಷ್ಮವಾಗಿದೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ನಾವಾತ್ಮರೇ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ಪರಮಪಿತ ಪರಮಾತ್ಮನೂ ಸಹ ಬಿಂದುವಾಗಿದ್ದಾರೆ. ಅವರಿಗೇ ಜ್ಞಾನಸಾಗರ, ಪತಿತ-ಪಾವನ, ಜ್ಞಾನಪೂರ್ಣನೆಂದು ಹೇಳುತ್ತಾರೆ. ಪರಮಪಿತ ಪರಮಾತ್ಮನಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ಬೀಜರೂಪನಾಗಿರುವ ಕಾರಣ ಅವರಿಗೆ ಸತ್ಚಿತ್ ಆನಂದ ಸ್ವರೂಪನೆಂದು ಹೇಳಲಾಗುತ್ತದೆ. ತಂದೆಯಲ್ಲಿ ಯಾವ ಜ್ಞಾನವಿದೆಯೋ ಅದನ್ನು ಅವಶ್ಯವಾಗಿ ತಿಳಿಸಬೇಕಾಗಿದೆ. ಇದು ಆತ್ಮಿಕ ಜ್ಞಾನವಾಗಿದೆ. ಎಲ್ಲಾ ಆತ್ಮರ ತಂದೆಯು ಬಂದು ಆತ್ಮಗಳಿಗೆ ಓದಿಸುತ್ತಾರೆ. ನೀವು ಆತ್ಮಾಭಿಮಾನಿಗಳಾಗಬೇಕಾಗಿದೆ. ಶಿವ ತಂದೆಯು ನಮಗೆ ಓದಿಸುತ್ತಾರೆ, ಅವರೇ ಜ್ಞಾನಪೂರ್ಣನಾಗಿದ್ದಾರೆ. ತಂದೆಯೇ ಬಂದು ಸ್ವರ್ಗದ ರಚನೆಯನ್ನು ರಚಿಸುತ್ತಾರೆ. ನಿಮ್ಮನ್ನು ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ. ಈ ಸೃಷ್ಟಿಚಕ್ರದ ರಹಸ್ಯವನ್ನು ಯಾವುದೆ ಮನುಷ್ಯರು ತಿಳಿದುಕೊಂಡಿಲ್ಲ, ತಂದೆಯನ್ನೇ ಅರಿತುಕೊಳ್ಳದ ಕಾರಣ ಭಾರತಕ್ಕೆ ಈ ಗತಿಯುಂಟಾಗಿದೆ. ಭಾರತದಲ್ಲಿ ಪವಿತ್ರತೆಯಿದ್ದಾಗ ಸುಖ-ಶಾಂತಿಯಿತ್ತು, ಈಗಂತೂ ನರಕವಾಗಿದೆ ಅಂದಮೇಲೆ ಯಾರಾದರೂ ಸ್ವರ್ಗದಲ್ಲಿ ಹೇಗೆ ಹೋಗಲು ಸಾಧ್ಯ. ಸಂಪೂರ್ಣ ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ.
ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗಾಗಿ ಯಾವುದಾದರೂ ಉಡುಗೊರೆಯನ್ನು ತೆಗೆದುಕೊಂಡು ಬರುತ್ತೇನೆ. ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಯಾರು ಕಲ್ಪದ ಮೊದಲು ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಈಗ ತಿಳಿದುಕೊಳ್ಳುತ್ತಾರೆ, ಮನುಷ್ಯರಿಂದ ದೇವತೆಗಳಾಗುತ್ತಾರೆ. ವಾಸ್ತವದಲ್ಲಿ ಪ್ರಜಾಪಿತ ಬ್ರಹ್ಮನಿಗೆ ಎಲ್ಲರೂ ಮಕ್ಕಳಾಗಿದ್ದಾರೆ. ಈಗ ಬ್ರಹ್ಮಾರವರ ಮೂಲಕ ಶಿವ ತಂದೆಯು ರಚನೆಯನ್ನು ರಚಿಸುತ್ತಿದ್ದಾರೆ. ಬ್ರಹ್ಮಾಕುಮಾರ-ಕುಮಾರಿಯರಾಗುತ್ತಾ ಹೋಗುತ್ತಾರೆ. ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಎಲ್ಲಾ ವಿಕರ್ಮಗಳು ವಿನಾಶವಾಗುತ್ತವೆ. ಈ ಆತ್ಮಿಕ ಜ್ಞಾನವನ್ನು ತಂದೆಯ ಹೊರತು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಆತ್ಮಿಕ ತಂದೆಯೇ ಆತ್ಮಗಳಿಗೆ ಜ್ಞಾನವನ್ನು ಕೊಡುತ್ತಾರೆ. ನೀವು ಆತ್ಮಿಕ ಯಾತ್ರೆ ಮಾಡುತ್ತೀರಿ, ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗುತ್ತೀರಿ. ಆತ್ಮವು ಅವಿನಾಶಿಯಾಗಿದೆ, ಆತ್ಮದಲ್ಲಿಯೇ ಪಾತ್ರವು ತುಂಬಿದೆ. ಆತ್ಮವು ಹೇಗೆ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತದೆ ಎಂದು ಈಗ ಅರ್ಥವಾಗಿದೆ. ನಾವು ಸೂರ್ಯವಂಶಿಯರಾಗಿದ್ದೇವೆ ನಂತರ ಚಂದ್ರವಂಶಿಯರಾದೆವು, ಪುನಃ ನಾವೀಗ ಸೂರ್ಯವಂಶಿಯರಾಗಬೇಕಾಗಿದೆ. ಈಗ ತಂದೆಯು ಸತೋಪ್ರಧಾನರಾಗುವ ಶಿಕ್ಷಣ ಕೊಡುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ. ಭಗವಾನುವಾಚ - ಗೀತೆಯ ಭಗವಂತನು ಶಿವ ತಂದೆಯಾಗಿದ್ದಾರೆ, ಶ್ರೀಕೃಷ್ಣನಲ್ಲ. ಕೃಷ್ಣನ ಆತ್ಮವೂ ಸಹ ಈಗ ಕಲಿಯುತ್ತಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಆತ್ಮಿಕ ಯಾತ್ರೆಯನ್ನು ಮಾಡಬೇಕು ಹಾಗೂ ಮಾಡಿಸಬೆಕಾಗಿದೆ. ಸ್ವಯಂನ್ನು ಸತೋಪ್ರಧಾನ ಮಾಡಿಕೊಳ್ಳಲು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆತ್ಮಾಭಿಮಾನಿಯಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.
2. ಕಾಲದ ಮೇಲೆ ವಿಜಯವನ್ನು ಪಡೆಯಲು ತಂದೆಯ ಶಿಕ್ಷಣವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ತನ್ನನ್ನು ಆತ್ಮನೆಂದು ತಿಳಿದು ಆತ್ಮರಿಗೆ ಜ್ಞಾನವನ್ನು ಕೊಡಬೇಕಾಗಿದೆ.
ಸಂಕಲ್ಪ ಶಕ್ತಿಯ ಮಹತ್ವವನ್ನು ಅರಿತು ಅದನ್ನು ಹೆಚ್ಚಿಸಿ ಮತ್ತು ಪ್ರಯೋಗದಲ್ಲಿ ತನ್ನಿ
ಇಂದು ಅತ್ಯುನ್ನತ ತಂದೆ ತಮ್ಮ ನಾಲ್ಕಾರು ಕಡೆಯ ಶ್ರೇಷ್ಠ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ ಏಕೆಂದರೆ ಇಡೀ ವಿಶ್ವದ ಆತ್ಮಗಳಲ್ಲಿ ತಾವು ಮಕ್ಕಳು ಶ್ರೇಷ್ಠ ಅಂದರೆ ಹೈಯೆಸ್ಟ್ ಆಗಿದ್ದೀರಿ. ಜಗತ್ತಿನವರು ಹೈಯೆಸ್ಟ್ ಇನ್ ದ ವಲ್ರ್ಡ್ ಎಂದು ಹೇಳುತ್ತಾರೆ ಅದು ಕೂಡ ಒಂದು ಜನ್ಮಕ್ಕಾಗಿ ಆದರೆ ತಾವು ಮಕ್ಕಳು ಹೈಯೆಸ್ಟ್ ಶ್ರೇಷ್ಠ ಇಡೀ ಕಲ್ಪದಲ್ಲಿ ಆಗಿದ್ದೀರಿ. ಇಡೀ ಕಲ್ಪದಲ್ಲಿ ತಾವು ಶ್ರೇಷ್ಠವಾಗಿದ್ದಿರಿ ಗೊತ್ತಿದೆಯಲ್ಲವೇ? ತಮ್ಮ ಅನಾದಿ ಕಾಲವನ್ನು ನೋಡಿ ಅನಾದಿಕಾಲದಲ್ಲೂ ಕೂಡ ತಾವು ಎಲ್ಲ ಆತ್ಮರು ತಂದೆಯ ಜೊತೆ ಸಮೀಪದಲ್ಲಿ ಇರುವಂತಹವರಾಗಿದ್ದೀರಿ. ನೋಡುತ್ತಿದ್ದೀರಿ ಅನಾದಿ ರೂಪದಲ್ಲಿಯೂ ತಂದೆಯ ಜೊತೆ ಜೊತೆಗೆ ಸಮೀಪದಲ್ಲಿ ಇರುವಂತಹ ಶ್ರೇಷ್ಠ ಆತ್ಮಗಳಾಗಿದ್ದೀರಿ. ಎಲ್ಲರೂ ಇರುತ್ತಾರೆ ಆದರೆ ತಮ್ಮ ಸ್ಥಾನ ಬಹಳ ಸಮೀಪದಲ್ಲಿದೆ. ಆದ್ದರಿಂದ ಅನಾದಿ ರೂಪದಲ್ಲೂ ಕೂಡ ಅತ್ಯುನ್ನತ ಸ್ಥಾನದಲ್ಲಿ ಇದ್ದೀರಿ. ನಂತರ ಆದಿಕಾಲಕ್ಕೆ ಬನ್ನಿ ಅಲ್ಲಿ ಎಲ್ಲಾ ಮಕ್ಕಳು ದೇವತಾ ಸ್ಥಾನದಲ್ಲಿ ದೇವತಾ ರೂಪದಲ್ಲಿ ಇದ್ದೀರಿ. ತಮ್ಮ ದೇವತಾ ಸ್ವರೂಪ ನೆನಪಿದೆಯೇ? ಆದಿಕಾಲದಲ್ಲಿ ಸರ್ವ ಪ್ರಾಪ್ತಿ ಸ್ವರೂಪರಾಗಿದ್ದೀರಿ. ತನು-ಮನ-ಧನ ಮತ್ತು ಜನ ನಾಲ್ಕು ಸ್ವರೂಪಗಳಲ್ಲಿ ಶ್ರೇಷ್ಠರಾಗಿದ್ದೀರಿ. ಸದಾ ಸಂಪನ್ನರಾಗಿದ್ದೀರಿ, ಸರ್ವಪ್ರಾಪ್ತಿಯ ಸ್ವರೂಪರಾಗಿದ್ದೀರಿ. ಇಂತಹ ದೇವತಾ ಪದವಿ ಬೇರೆ ಯಾವ ಆತ್ಮಗಳಿಗೂ ಲಭ್ಯವಾಗುವುದಿಲ್ಲ. ಧರ್ಮಾತ್ಮರೇ ಆಗಿರಲಿ, ಮಹಾತ್ಮರೇ ಆಗಿರಲಿ ಆದರೆ ಇಂತಹ ಸರ್ವಪ್ರಾಪ್ತಿಗಳಿಂದ ಶ್ರೇಷ್ಠ, ಅಪ್ರಾಪ್ತಿಯ ಕುರುಹು ಇಲ್ಲ, ಈ ರೀತಿ ಯಾರೂ ಕೂಡ ಅನುಭವ ಮಾಡಲು ಸಾಧ್ಯವಿಲ್ಲ. ಮಧ್ಯಕಾಲದಲ್ಲಿ ಬನ್ನಿ, ಮಧ್ಯಕಾಲದಲ್ಲಿ ಕೂಡ ತಾವು ಆತ್ಮರು ಪೂಜ್ಯರಾಗಿರುತ್ತೀರಿ. ತಮ್ಮ ಜಡ ಚಿತ್ರಗಳು ಪೂಜಿಸಲ್ಪಡುತ್ತವೆ. ಇನ್ಯಾವ ಆತ್ಮಗಳದ್ದು ಇಂತಹ ವಿಧಿಪೂರ್ವಕ ಪೂಜೆ ಆಗುವುದಿಲ್ಲ. ಹೇಗೆ ಪೂಜ್ಯ ಆತ್ಮಗಳ ಪೂಜೆ ವಿಧಿಪೂರ್ವಕವಾಗಿ ಆಗುತ್ತದೆಯೋ ಆ ರೀತಿ ವಿಧಿ ಪೂರ್ವಕ ಪೂಜೆ ಇನ್ಯಾರದ್ದಾದ್ರು ಆಗುತ್ತದೆಯೇ! ತಾವು ಕರ್ಮಯೋಗಿಗಳಾಗಿದ್ದರಿಂದ ಪ್ರತಿಯೊಂದು ಕರ್ಮದ ಪೂಜೆ ಆಗುತ್ತದೆ. ದೇವಸ್ಥಾನಗಳಲ್ಲಿ ಧರ್ಮಾತ್ಮರನ್ನು ಅಥವಾ ಮಹಾನಾತ್ಮರನ್ನು ಒಟ್ಟಿಗೆ ಇರಿಸಿದರು ಕೂಡ ವಿಧಿಪೂರ್ವಕವಾದ ಪೂಜೆ ಆಗುವುದಿಲ್ಲ. ಆದ್ದರಿಂದ ಮಧ್ಯಕಾಲದಲ್ಲಿಯೂ ಕೂಡ ಹೈಯೆಸ್ಟ್ ಅಂದರೆ ಶ್ರೇಷ್ಠರಾಗಿದ್ದೀರಿ. ನಂತರ ವರ್ತಮಾನ ಸಮಯದ ಅಂತ್ಯಕಾಲಕ್ಕೆ ಬನ್ನಿ, ಅಂತ್ಯಕಾಲದಲ್ಲಿಯೂ ಈಗ ಸಂಗಮದಲ್ಲಿ ಸಂಗಮ ಯುಗದಲ್ಲಿ ಶ್ರೇಷ್ಠ ಆತ್ಮಗಳಾಗಿದ್ದೀರಿ. ಏನು ಶ್ರೇಷ್ಠತೆ ಇದೆ? ಸ್ವಯಂ ಬಾಪ್ದಾದಾ, ಪರಮಾತ್ಮ ಆತ್ಮ ಮತ್ತು ಆದಿ ಆತ್ಮ ಅಂದರೆ ಬಾಪ್ದಾದಾ ಇಬ್ಬರ ಮೂಲಕ ಪಾಲನೆಯನ್ನು ಪಡೆಯುತ್ತೀರಿ, ಶಿಕ್ಷಣವನ್ನು ಪಡೆಯುತ್ತೀರಿ, ಜೊತೆಯಲ್ಲಿ ಸದ್ಗುರುವಿನ ಮೂಲಕ ಶ್ರೀಮತವನ್ನು ಪಡೆಯುವ ಅಧಿಕಾರಿಗಳಾಗಿದ್ದೀರಿ. ಆದ್ದರಿಂದ ಅನಾದಿಕಾಲದಲ್ಲಿ, ಆದಿಕಾಲದಲ್ಲಿ, ಮಧ್ಯಕಾಲದಲ್ಲಿ ಮತ್ತು ಈಗ ಅಂತ್ಯಕಾಲದಲ್ಲಿಯೂ ಕೂಡ ಹೈಯೆಸ್ಟ್ ಆಗಿದ್ದೀರಿ, ಶ್ರೇಷ್ಠರಾಗಿದ್ದೀರಿ. ಇಷ್ಟೊಂದು ನಶೆ ಇರುತ್ತದೆಯೇ?
ಈ ಸ್ಮೃತಿಯನ್ನು ಇಮರ್ಜ್ ಮಾಡಿಕೊಳ್ಳಿ ಎಂದು ಬಾಪ್ದಾದಾ ಹೇಳುತ್ತಾರೆ. ಮನಸ್ಸಿನಲ್ಲಿ, ಬುದ್ಧಿಯಲ್ಲಿ ಈ ಪ್ರಾಪ್ತಿಯನ್ನು ಪುನರಾವರ್ತಿಸಿ. ಎಷ್ಟು ಸ್ಮೃತಿಯನ್ನು ಇಮರ್ಜ್ ಇಟ್ಟುಕೊಳ್ಳುತ್ತಿರೋ ಅಷ್ಟು ಸ್ಮೃತಿಯಿಂದ ಆತ್ಮಿಕ ನಶೆ ಇರುತ್ತದೆ. ಸಂತೋಷವಿರುತ್ತದೆ ಶಕ್ತಿಶಾಲಿ ಆಗುತ್ತೀರಿ. ಇಂತಹ ಹೈಯೆಸ್ಟ್ ಆತ್ಮ ಆಗಿದ್ದೀರಿ. ನಾವೇ ಹೈಯೆಸ್ಟ್, ಶ್ರೇಷ್ಠ ಆಗಿದ್ದೆವು, ಆಗಿದ್ದೇವೆ ಮತ್ತು ಸದಾ ಆಗುತ್ತಾ ಇರುತ್ತೇವೆ ಎಂಬ ನಿಶ್ಚಯ ಖಚಿತವಾಗಿದೆಯೇ? ಈ ನಶೆ ಇದೆಯೇ? ಧಡವಾದ ನಿಷ್ಚಯವಿರುವವರು ಕೈಯೆತ್ತಿ. ಟೀಚರ್ಸ್ ಕೂಡ ಕೈಯುತ್ತಿದ್ದಾರೆ.
ಮಾತೆಯರು ಸದಾ ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ ಅಲ್ಲವೇ? ಮಾತೆಯರಿಗೆ ಬಹಳ ನಶೆ ಇರುತ್ತದೆ, ಯಾವ ನಶೆ ಇರುತ್ತದೆ? ಬಾಬಾ ನಮಗಾಗಿ ಬಂದಿದ್ದಾರೆ. ಈ ನಶೆ ಇದೆಯಲ್ಲವೇ! ದ್ವಾಪರದಿಂದ ಎಲ್ಲರೂ ಪತನಕೆ ಇಳಿದಿದ್ದಾರೆ, ಆದ್ದರಿಂದ ತಂದೆಗೆ ಮಾತೆಯರ ಮೇಲೆ ಬಹಳ ಪ್ರೀತಿ ಇದೆ ಮತ್ತು ವಿಶೇಷವಾಗಿ ಮಾತೆಯರಿಗಾಗಿ ತಂದೆ ಬಂದಿದ್ದಾರೆ. ಮಾತೆಯರು ಖುಷಿಯಾಗುತ್ತಿದ್ದಾರೆ ಆದರೆ ಸದಾ ಖುಷಿಯಾಗಿರಿ. ಹಾಗಲ್ಲ ಈಗ ಕೈಯೆತ್ತಿದ್ದೆ ಎತ್ತಿದ್ದೇವೆ ಮತ್ತು ಟ್ರೈನ್ನಲ್ಲಿ ಹೋಗುವಾಗ ಸ್ವಲ್ಪ ಸ್ವಲ್ಪವೇ ನಶೆ ತಿಳಿಯುತ್ತಾ ಹೋಗಬಾರದು. ಸದಾ ಏಕರಸ, ಅವಿನಾಶಿ ನಶೆಯಾಗಿರಬೇಕು. ಕೆಲವೊಮ್ಮೆ ನಶೆಯಲ್ಲ, ಸದಾಕಾಲದ ನಶೆ ಸದಾಕಾಲದ ಖುಷಿಯನ್ನು ಕೊಡುತ್ತದೆ. ತಾವು ಮಾತೆಯರ ಮುಖ ಆತ್ವಿಕ ಗುಲಾಬಿಯಂತೆ ದೂರದಿಂದ ಕಾಣಿಸಬೇಕು ಏಕೆಂದರೆ ಈ ವಿಶ್ವವಿದ್ಯಾಲಯದ ಮಾತು ಎಲ್ಲರಿಗೂ ಇಷ್ಟವಾಗುತ್ತದೆ, ವಿಶೇಷತೆಯೇನೆಂದರೆ ಮಾತೆಯರು ಆತ್ಮಿಕ ಗುಲಾಬಿಯಂತೆ ಸದಾ ಅರಳುವ ಹೂವುಗಳಾಗಿದ್ದಾರೆ ಮತ್ತು ಮಾತೆಯರೇ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಮಾತೆಯರು ಇಂತಹ ಮಹಾನ್ ಕಾರ್ಯಗಳನ್ನು ಮಾಡುತ್ತಿದ್ದಾರೆ. ಮಹಾಮಂಡಲೇಶ್ವರರೇ ಆಗಿರಲಿ ಆದರೆ ಅವರು ಕೂಡ ಮಾತೆಯರೇ ನಿಮಿತ್ತರಾಗಿದ್ದಾರೆ ಎಂದು ಅರ್ಥ ಮಾಡಿಕೊಂಡಿದ್ದಾರೆ ಹಾಗೂ ಮಾತೆಯರು ಇಂತಹ ಶ್ರೇಷ್ಠ ಕಾರ್ಯವನ್ನು ಸಹಜವಾಗಿ ನಡೆಸುತ್ತಿದ್ದಾರೆ. ಮಾತೆಯರ ಬಗ್ಗೆ ಒಂದು ಮಾತಿದೆ - ಅದು ನಿಜವಲ್ಲ ಆದರೆ ಮಾತಿದೆ ಇಬ್ಬರು ಮಾತೆಯರು ಒಟ್ಟಿಗೆ ಯಾವುದೇ ಕೆಲಸವನ್ನು ಮಾಡುವುದು ಕಷ್ಟ. ಆದರೆ ಇಲ್ಲಿ ಯಾರು ನಿಮಿತ್ತರಾಗಿದ್ದಾರೆ? ಮಾತೆಯರೇ ಅಲ್ಲವೇ! ಭೇಟಿಯಾಗಲು ಬಂದಾಗ ಏನನ್ನು ಕೇಳುತ್ತಾರೆ? ಮಾತೆಯರು ನಡೆಸುತ್ತಿದ್ದಾರೆ, ಪರಸ್ಪರ ಜಗಳವಾಡುವುದಿಲ್ಲವೇ? ಗಲಾಟೆ ಮಾಡುವುದಿಲ್ಲವೇ? ಆದರೆ ಅವರಿಗೆ ಅವರಿಗೇನು ಗೊತ್ತು ಇವರು ಸಾಧಾರಣ ಮಾತೆಯರಲ್ಲ ಇವರು ಪರಮಾತ್ಮನ ಮೂಲಕ ಮಾಡಿದಂತಹ ಆತ್ಮಗಳು ಮಾತೆಯರಾಗಿದ್ದಾರೆ. ಪರಮಾತ್ಮನ ವರದಾನ ಇವರನ್ನು ನಡೆಸುತ್ತಿದೆ. ಪಾಂಡವರು, ಮಾತೆಯರಿಗೆ ಗೌರವವಿದೆ ನಮಗೇನು ಇಲ್ಲ ಎಂದು ತಿಳಿದುಕೊಂಡಿಲ್ಲ ತಾನೇ. ತಮ್ಮದೂ ಕೂಡ ಗಾಯನವಿದೆ 5 ಪಾಂಡವರು ಎಂಬ ಗಾಯನವಿದೆ. ಶಕ್ತಿಯರ ಜೊತೆಗೆ ಏಳು ಶೀತಲೆಯರನ್ನು ತೋರಿಸುತ್ತಾರೆ ಹಾಗೆಯೇ ಒಬ್ಬ ಪಾಂಡವನನ್ನು ತೋರಿಸುತ್ತಾರೆ. ಮತ್ತು ಪಾಂಡವರಿಲ್ಲದೆ ಮಾತೆಯರು ನಡೆಸಲಾಗುವುದಿಲ್ಲ, ಮಾತೆಯರ ವಿನಹ ಪಾಂಡವರು ನಡೆಸಲಾಗುವುದಿಲ್ಲ. ಎರಡು ಭುಜಗಳು ಬೇಕು ಆದರೆ ಮಾತೆಯರನ್ನು ಬಹಳ ಪತನಕ್ಕೆ ಇಳಿಸಿದ್ದಾರಲ್ಲವೇ, ಆದ್ದರಿಂದ ತಂದೆ ಮಾತೆಯರನ್ನು ಯಾರನ್ನು ಜಗತ್ತು ಅಸಂಭವ ಎಂದು ತಿಳಿದುಕೊಂಡಿತ್ತು, ಅವರಿಂದ ಸಂಭವ ಮಾಡಿ ತೋರಿಸುತ್ತಿದ್ದಾರೆ. ಮಾತೆಯರನ್ನು ನೋಡಿ ತಾವು ಖುಷಿಯಾಗಿದ್ದೀರಲ್ಲವೇ? ಅಥವಾ ಇಲ್ಲವೇ? ಖುಷಿಯಾಗಿದ್ದಿರಿ ತಾನೇ! ಒಂದುವೇಳೆ ಮಾತೆಯರನ್ನು ತಂದೆ ನಿಮಿತ್ತ ಮಾಡಿರದಿದ್ದರೆ ಹೊಸ ಜ್ಞಾನ, ಹೊಸ ಸಿಸ್ಟಮ್ ಆಗಿರುವ ಕಾರಣ ಪಾಂಡವರನ್ನು ನೋಡಿ ಬಹಳ ಘರ್ಷಣೆ ಆಗುತ್ತಿತ್ತು. ಹೊಸ ಜ್ಞಾನವಿರುವುದರಿಂದ ಮಾತೆಯರು ಗುರಾಣಿಯಾಗಿದ್ದಾರೆ. ಹೊಸ ಮಾತುಗಳಿವೆ. ಆದರೆ ಸಹೋದರಿಯರಿಗೆ ಸಹೋದರರು ಸದಾ ಜೊತೆಯಾಗಿದ್ದಾರೆ. ಪಾಂಡವರು ತಮ್ಮ ಕಾರ್ಯಗಳಲ್ಲಿ ಮುಂದಿದ್ದಾರೆ ಹಾಗೂ ಸಹೋದರಿಯರು ತಮ್ಮ ಕಾರ್ಯಗಳಲ್ಲಿ ಮುಂದಿದ್ದಾರೆ. ಇಬ್ಬರ ಪರಾಮರ್ಶೆಯಿಂದ ಪ್ರತಿ ಕಾರ್ಯವು ನಿರ್ವಿಘ್ನವಾಗಿ ನಡೆಯುತ್ತಾ ಇದೆ.
ಬಾಪ್ದಾದಾ ಪ್ರತಿದಿನ ಮಕ್ಕಳ ಭಿನ್ನ-ಭಿನ್ನ ಕಾರ್ಯಗಳನ್ನು ನೋಡುತ್ತಾ ಇರುತ್ತಾರೆ. ಹೊಸ ಹೊಸ ಪ್ಲಾನ್ಗಳು ಆಗುತ್ತಲೇ ಇರುತ್ತವೆ. ಸಮಯ ಎಲ್ಲರಿಗೂ ನೆನಪಿದೆ. ನೆನಪಿದೆಯೇ? 99 ಚಕ್ರವೂ ಪೂರ್ತಿ ಆಯಿತು ಅಲ್ಲವೇ! ಏನು ಯೋಚಿಸುತ್ತಿದ್ದೀರಿ? ವರ್ಷ 99 ಬಂದಿತು, 99 ಬಂದಿತು. ಆದರೆ ತಮ್ಮೆಲ್ಲರಿಗೂ ಸೇವೆ ಮಾಡುವ ವರ್ಷ, ನಿರ್ವಿಘ್ನವಾಗಿರುವ ವರ್ಷ ಸಿಕ್ಕಿತು. ನೋಡಿ 99 ರಲ್ಲಿಯೇ ಮೌನ ಭಟ್ಟಿಗಳನ್ನು ಮಾಡುತ್ತಿದ್ದೀರಲ್ಲವೇ! ಜಗತ್ತು ಭಯಭೀತವಾಗಿದೆ ಮತ್ತು ತಾವು, ಅವರೆಷ್ಟು ಭಯಗೊಂಡಿದ್ದಾರೋ ಅಷ್ಟೇ ತಾವೆಲ್ಲರೂ ನೆನಪಿನ ಆಳದಲ್ಲಿ ಹೋಗುತ್ತಿದ್ದೀರಿ. ಮನಸ್ಸಿನ ಮೌನವೇ ಆಗಿದೆ, ಜ್ಞಾನ ಸಾಗರನ ಆಳದಲ್ಲಿ ಹೋಗಿ ಹೊಸ ಹೊಸ ಅನುಭವಗಳ ರತ್ನಗಳನ್ನು ಪಡೆಯುವುದು. ಬಾಪ್ದಾದಾ ಈ ಹಿಂದೆಯೇ ಸೂಚನೆಯನ್ನು ಕೊಟ್ಟಿದ್ದಾರೆ - ವರ್ತಮಾನ ಹಾಗೂ ಭವಿಷ್ಯವನ್ನು ಮಾಡಿಕೊಳ್ಳುವುದು, ಎಲ್ಲದಕ್ಕಿಂತ ದೊಡ್ಡ ಸಂಪತ್ತಾಗಿದೆ, ಅದಾಗಿದೆ ಶ್ರೇಷ್ಠ ಸಂಕಲ್ಪದ ಖಜಾನೆ. ಸಂಕಲ್ಪದ ಶಕ್ತಿ ಬಹಳ ದೊಡ್ಡ ಶಕ್ತಿಯಾಗಿದೆ ಅದು ತಾವು ಮಕ್ಕಳ ಬಳಿ ಇದೆ - ಶ್ರೇಷ್ಠ ಸಂಕಲ್ಪದ ಶಕ್ತಿ. ಸಂಕಲ್ಪಗಳು ಎಲ್ಲರ ಬಳಿಯೂ ಇವೆ ಆದರೆ ಶ್ರೇಷ್ಠ ಶಕ್ತಿ, ಶುಭ ಭಾವನೆ ಶುಭಕಾಮನೆಯ ಸಂಕಲ್ಪ ಶಕ್ತಿ, ಮನಸ್ಸು ಬುದ್ಧಿಯನ್ನು ಏಕಾಗ್ರ ಮಾಡುವ ಶಕ್ತಿ- ಇದು ತಮ್ಮ ಬಳಿ ಮಾತ್ರವೇ ಇದೆ. ಮತ್ತು ಎಷ್ಟು ಮುಂದುವರೆಯುತ್ತಿರೋ ಈ ಸಂಕಲ್ಪ ಶಕ್ತಿಯನ್ನು ಜಮಾ ಮಾಡುತ್ತಾ ಹೋಗುತ್ತೀರಿ, ವ್ಯರ್ಥ ಮಾಡುವುದಿಲ್ಲ, ವ್ಯರ್ಥವಾಗಿ ಕಳೆಯುವ ಮುಖ್ಯ ಕಾರಣವೆಂದರೆ-- ವ್ಯರ್ಥಸಂಕಲ್ಪ. ಮೆಜಾರಿಟಿ ಮಕ್ಕಳಲ್ಲಿ ಇಡೀ ದಿನ ವ್ಯರ್ಥಸಂಕಲ್ಪ ಇನ್ನೂ ಕೂಡ ಇದೆ ಎಂದು ಬಾಪ್ದಾದಾರವರು ನೋಡಿದ್ದಾರೆ. ಹೇಗೆ ಭೌತಿಕ ಧನವನ್ನು ಎಕಾನಮಿಯಿಂದ ಉಪಯೋಗಿಸುವವರು ಸದಾ ಸಂಪನ್ನರಾಗಿರುತ್ತಾರೆ ಮತ್ತು ವ್ಯರ್ಥವಾಗಿ ಕಳೆಯುವವರು ಮೋಸ ಹೋಗುತ್ತಾರೆ. ಹಾಗೆಯೇ ಶ್ರೇಷ್ಠ ಶುದ್ಧ ಸಂಕಲ್ಪಗಳಲ್ಲಿ ಎಷ್ಟು ಶಕ್ತಿ ಇದೆ ಎಂದರೆ ತಮ್ಮ ಕ್ಯಾಚಿಂಗ್ ಪವರ್, ವೈಬ್ರೇಶನ್ನ್ನು ಕ್ಯಾಚ್ ಮಾಡುವ ಶಕ್ತಿ, ಬಹಳ ಹೆಚ್ಚಾಗುತ್ತದೆ. ಈ ವಾಯರ್ಲೆಸ್, ಟೆಲಿಫೋನ್... ಹೇಗೆ ಈ ಸೈನ್ಸ್ ನ ಸಾಧನಗಳು ಕೆಲಸ ಮಾಡುತ್ತವೆಯೋ ಹಾಗೆಯೇ ಶುದ್ಧ ಸಂಕಲ್ಪಗಳ ಖಜಾನೆ, ಹೀಗೆಯೇ ಕೆಲಸ ಮಾಡುತ್ತದೆ ಲಂಡನ್ನಲ್ಲಿ ಕುಳಿತಿರುವ ಯಾವುದೇ ಆತ್ಮದ ವೈಬ್ರೇಶನ್, ಈ ವಾಯರ್ಲೆಸ್ ಅಥವಾ ಟೆಲಿಫೋನ್ನಷ್ಟೇ ಸ್ಪಷ್ಟವಾಗಿ ನಿಮಗೆ ಕ್ಯಾಚ್ ಆಗುತ್ತವೆ. ಎಷ್ಟೊಂದು ಸಾಧನಗಳು ಬಂದಿವೆ. ಇವುಗಳಿಗಿಂತ ಸ್ಪಷ್ಟವಾಗಿ ತಮ್ಮ ಕ್ಯಾಚಿಂಗ್ ಪವರ್, ಏಕಾಗ್ರತೆಯ ಶಕ್ತಿಯಿಂದ ಹೆಚ್ಚಾಗುತ್ತದೆ. ಈ ಆಧಾರಗಳು ಅಂತ್ಯಗೊಳ್ಳುತ್ತವೆ. ಈ ಎಲ್ಲಾ ಸಾಧನಗಳು ಯಾವ ಆಧಾರದ ಮೇಲಿವೆ? ಬೆಳಕಿನ ಆಧಾರದ ಮೇಲೆ. ಯಾವೆಲ್ಲ ಸುಖದ ಸಾಧನಗಳಿವೆ ಮೆಜಾರಿಟಿ ಬೆಳಕಿನ ಆಧಾರದ ಮೇಲಿವೆ. ಹಾಗಾದರೆ ತಮ್ಮ ಆಧ್ಯಾತ್ಮಿಕ ಬೆಳಕು, ಆತ್ಮದ ಬೆಳಕು ಈ ಕಾರ್ಯವನ್ನು ಮಾಡಲು ಸಾಧ್ಯವಿಲ್ಲವೇ! ನಿಮಗೆ ಬೇಕಾದ ಯಾವುದೇ ಕಂಪನಗಳನ್ನು ನೀವು ಸಮೀಪದಲ್ಲಿ ಅಥವಾ ದೂರದಲ್ಲಿ ಕ್ಯಾಚ್ ಮಾಡಲು ಸಾಧ್ಯವಾಗುತ್ತದೆ. ಈಗ ಏನಾಗಿದೆ, ಏಕಾಗ್ರತೆಯ ಶಕ್ತಿ ಮನಸ್ಸು -ಬುದ್ಧಿ ಎರಡು ಏಕಾಗ್ರವಾದರೆ ಮಾತ್ರ ಕ್ಯಾಚಿಂಗ್ ಪವರ್ ಇರುತ್ತದೆ. ಬಹಳ ಅನುಭವ ಮಾಡುವಿರಿ. ಸಂಕಲ್ಪ ಮಾಡಿದಿರಿ- ನಿಸ್ವಾರ್ಥ, ಸ್ವಚ್ಛ, ಸ್ಪಷ್ಟ ಇವು ಬಹಳ ಬೇಗ ಅನುಭವ ಮಾಡಿಸುತ್ತವೆ. ಮೌನದ ಶಕ್ತಿಯ ಮುಂದೆ ಈ ವಿಜ್ಞಾನದ ಶಕ್ತಿಯು ತಲೆಬಾಗುತ್ತದೆ. ಇಂದಿಗೂ ಕೂಡ ವಿಜ್ಞಾನದಲ್ಲಿ ಕೆಲವು ಇತ್ಯರ್ಥವಾಗದ ವಿಷಯಗಳಿವೆ ಅದನ್ನು ತುಂಬಬೇಕಾಗಿದೆ ಆದ್ದರಿಂದ ಬಾಪ್ದಾದಾ ಮತ್ತೊಮ್ಮೆ ಅಂಡರ್ ಲೈನ್ ಮಾಡಿಸುತ್ತಿದ್ದಾರೆ ಅಂತಿಮ ಸ್ಟೇಜ್, ಅಂತಿಮ ಸೇವೆ- ಈ ಸಂಕಲ್ಪ ಶಕ್ತಿ ಬಹಳ ಫಾಸ್ಟ್ ಆಗಿ ಸೇವೆಯನ್ನು ಮಾಡಿಸುತ್ತದೆ ಆದ್ದರಿಂದ ಸಂಕಲ್ಪ ಶಕ್ತಿಯ ಮೇಲೆ ಇನ್ನೊ ಹೆಚ್ಚು ಅಟೆಂಷನ್ ಕೊಡಿ. ಅದನ್ನು ಉಳಿಸಿರಿ, ಜಮಾ ಮಾಡಿರಿ. ಬಹಳ ಉಪಯುಕ್ತವಾಗಿದೆ. ಈ ಸಂಕಲ್ಪದ ಶಕ್ತಿಯನ್ನು ಪ್ರಯೋಗಿಸುವವರಾಗಿ. ವಿಜ್ಞಾನಕ್ಕೆ ಏಕೆ ಮಹತ್ವವಿದೆ? ಪ್ರಯೋಗದಲ್ಲಿ ತಂದಾಗ ವಿಜ್ಞಾನವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಎಲ್ಲರೂ ಅರ್ಥ ಮಾಡಿಕೊಳ್ಳುತ್ತಾರೆ. ಆದ್ದರಿಂದ ಶಾಂತಿಯ ಶಕ್ತಿಯನ್ನು ಪ್ರಯೋಗದಲ್ಲಿ ತರಲು ಏಕಾಗ್ರತೆಯ ಶಕ್ತಿಯ ಅಗತ್ಯವಿದೆ ಮತ್ತು ಏಕಾಗ್ರತೆಯ ಮೂಲ ಆಧಾರವೆಂದರೆ - ಮನಸ್ಸಿನ ನಿಯಂತ್ರಣ ಶಕ್ತಿ, ಇದು ಮನೋಬಲವನ್ನು ಹೆಚ್ಚಿಸುತ್ತದೆ. ಮನೋಬಲಕ್ಕೆ ಬಹಳ ಮಹಿಮೆ ಇದೆ. ರಿದ್ಧಿ ಸಿದ್ಧಿಯವರು ಕೂಡ ಮನೋಬಲದ ಮುಖಾಂತರ ಅಲ್ಪಾವಧಿಯ ಪವಾಡಗಳನ್ನು ತೋರಿಸುತ್ತಾರೆ. ತಾವು ವಿಧಿಪೂರ್ವಕ, ರಿದ್ಧಿ ಸಿದ್ಧಿಯಲ್ಲ, ವಿಧಿಪೂರ್ವಕವಾಗಿ ಕಲ್ಯಾಣದ ಚಮತ್ಕಾರಗಳನ್ನು ತೋರಿಸಿದರೆ ವರದಾನವಾಗುತ್ತದೆ, ಆತ್ಮಗಳಿಗೆ ಈ ಸಂಕಲ್ಪದ ಶಕ್ತಿಯ ಪ್ರಯೋಗ ವರದಾನವಾಗಿ ಪರಿಣಮಿಸುತ್ತದೆ. ಹಾಗಾಗಿ ಮನಸ್ಸನ್ನು ನಿಯಂತ್ರಿಸುವ ನಿಯಂತ್ರಣ ಶಕ್ತಿ ತಮ್ಮಲ್ಲಿದೆ ಎಂದು ಪರಿಶೀಲಿಸಿಕೊಳ್ಳಿ? ವಿಜ್ಞಾನದ ಶಕ್ತಿಯಿಂದ ಹೇಗೆ ಸೆಕೆಂಡಿನಲ್ಲಿ ಸ್ವಿಚ್ ಆನ್ ಆಫ್ ಮಾಡಬಹುದು, ಹಾಗೆಯೇ ಸೆಕೆಂಡಿನಲ್ಲಿ, ಮನಸ್ಸನ್ನು ಎಲ್ಲಿ ಬೇಕು, ಹೇಗೆ ಬೇಕು, ಎಷ್ಟು ಸಮಯ ಬೇಕು, ಅಷ್ಟು ನಿಯಂತ್ರಿಸಲು ಸಾಧ್ಯವೇ? ಬಹಳ ಒಳ್ಳೊಳ್ಳೆಯ ತಮ್ಮ ಪ್ರತಿ ಹಾಗೂ ಸೇವೆಯ ಪ್ರತಿ ಬಹಳ ಒಳ್ಳೆಯ ಸಿದ್ಧಿ ರೂಪದ ಸಂಕಲ್ಪಗಳು ಕಾಣುತ್ತವೆ. ಆದರೆ ಬಾಪ್ದಾದಾ ನೋಡುತ್ತಾರೆ ಸಂಕಲ್ಪದ ಶಕ್ತಿಯ ಜಮಾದ ಖಾತೆ ಇನ್ನೂ ಕೂಡ ಸಾಧಾರಣವಾಗಿದೆ, ಎಷ್ಟು ಇರಬೇಕಾಗಿತ್ತೋ ಅಷ್ಟು ಇಲ್ಲ. ಸಂಕಲ್ಪದ ಆಧಾರದ ಮೇಲೆ ಮಾತು ಹಾಗೂ ಕರ್ಮ ಆಟೋಮೆಟಿಕ್ ಆಗಿ ಆಗುತ್ತವೆ. ಬೇರೆ ಬೇರೆಯಾಗಿ ಪರಿಶ್ರಮ ಪಡುವ ಅವಶ್ಯಕತೆಯೇ ಇಲ್ಲ, ಇಂದು ಮಾತನ್ನು ನಿಯಂತ್ರಿಸುವುದು, ಇಂದು ದೃಷ್ಟಿಯನ್ನು ಅಟೆಂಷನ್ನಲ್ಲಿ ತರುವುದು, ಪರಿಶ್ರಮ ಪಡುವುದು, ಇಂದು ವೃತ್ತಿಯನ್ನು ಅಟೆಂಷನ್ನಿಂದ ಚೇಂಜ್ ಮಾಡುವುದು. ಸಂಕಲ್ಪ ಶಕ್ತಿ ಶಕ್ತಿಶಾಲಿಯಾಗಿದ್ದರೆ ಇವೆಲ್ಲವುಗಳು ಸ್ವತಹವಾಗಿ ನಿಯಂತ್ರಣದಲ್ಲಿ ಬರುತ್ತವೆ. ಪರಿಶ್ರಮದಿಂದ ಮುಕ್ತರಾಗುತ್ತೇವೆ. ಆದ್ದರಿಂದ ಸಂಕಲ್ಪ ಶಕ್ತಿಯ ಮಹತ್ವವನ್ನು ಅರಿತುಕೊಳ್ಳಿ.
ಅಭ್ಯಾಸವಾಗಬೇಕು ಎಂದು ಈ ವಿಶೇಷ ಭಟ್ಟಿಗಳನ್ನು ಮಾಡಿಸಲಾಗುತ್ತದೆ. ಇಲ್ಲಿ ಅಭ್ಯಾಸ ಭವಿಷ್ಯದಲ್ಲಿಯೂ ಕೂಡ ಗಮನಕೊಟ್ಟು ಮಾಡುತ್ತಾ ಇದ್ದರೆ ಆಗ ಅವಿನಾಶಿಯಾಗುತ್ತದೆ. ಅರ್ಥವಾಯಿತೆ. ಏನು ಮಹತ್ವವಿದೆ? ತಮ್ಮ ಹತ್ತಿರ ಮಹತ್ತರವಾದ ಅತ್ಯುನ್ನತ ಸಂಪತ್ತನ್ನು ತಂದೆಯೂ ಕೊಟ್ಟಿದ್ದಾರೆ. ಈ ಶ್ರೇಷ್ಠ ಸಂಕಲ್ಪ, ಶುಭ ಭಾವನೆ ಶುಭಕಾಮನೆಯ ಸಂಕಲ್ಪದ ಸಂಪತ್ತು ಇದೆಯೇ? ಎಲ್ಲರಿಗೂ ತಂದೆಯು ಕೊಟ್ಟಿದ್ದಾರೆ ಆದರೆ ನಂಬರ್ವಾರ್ ಆಗಿ ಜಮಾ ಮಾಡಿಕೊಳ್ಳುತ್ತಾರೆ ಮತ್ತು ಪ್ರಯೋಗದಲ್ಲಿ ತರುವ ಶಕ್ತಿಯು ಕೂಡ ನಂಬರ್ವಾರ್ ಆಗಿದೆ. ಈಗಲಾದರೂ ಶುಭ ಭಾವನೆ ಮತ್ತು ಶುಭಕಾಮನೆಯ ಪ್ರಯೋಗ ಮಾಡಿದ್ದೀರಾ? ವಿಧಿಪೂರ್ವಕವಾಗಿ ಮಾಡಿದಾಗ ಸಿದ್ದಿಯ ಅನುಭವ ಆಗುತ್ತದೆಯೇ? ಈಗ ಸ್ವಲ್ಪ-ಸ್ವಲ್ಪ ಆಗುತ್ತದೆ. ಕೊನೆಯಲ್ಲಿ ತಮ್ಮ ಸಂಕಲ್ಪದ ಶಕ್ತಿ ಎಷ್ಟು ಮಹತ್ವದ್ದಾಗುತ್ತದೆ ಎಂದರೆ -- ಸೇವೆಯಲ್ಲಿ ಮುಖದಿಂದ ಸಂದೇಶ ಕೊಡುವುದರಲ್ಲಿ ಸಮಯವೂ ಆಗುತ್ತದೆ, ಸಂಪತ್ತನ್ನು ಹಾಕುತ್ತಿರಿ, ಏರುಪೇರಿನಲ್ಲಿಯೂ ಬರುತ್ತಿರಿ, ದಣಿಯುತ್ತೀರಿ ಕೂಡ... ಆದರೆ ಶ್ರೇಷ್ಠ ಸಂಕಲ್ಪದ ಸೇವೆಯಿಂದ ಇವೆಲ್ಲವೂ ಉಳಿತಾಯವಾಗುತ್ತದೆ. ಹೆಚ್ಚಿಸಿಕೊಳ್ಳಿ. ಈ ಸಂಕಲ್ಪ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದರಿಂದ ಬಹುಬೇಗ ಪ್ರತ್ಯಕ್ಷತೆಯಾಗುತ್ತದೆ. ಈಗ 62-63 ವರ್ಷಗಳಾಗಿವೆ, ಇಷ್ಟು ವರ್ಷಗಳಲ್ಲಿ ಎಷ್ಟು ಆತ್ಮಗಳನ್ನು ತಯಾರು ಮಾಡಿದ್ದೀರಿ? ಒಂಬತ್ತು ಲಕ್ಷ ಕೂಡ ಪೂರ್ತಿಯಾಗಿಲ್ಲ. ಮತ್ತು ಇಡೀ ವಿಶ್ವಕ್ಕೆ ಸಂದೇಶ ತಲುಪಿಸಬೇಕಾಗಿದೆ ಅಂದಾಗ ಎಷ್ಟು ಕೋಟಿ ಆತ್ಮಗಳಿವೆ? ಎಲ್ಲಿಯವರೆಗೆ ಭಗವಂತ ಇವರ ಟೀಚರ್ ಆಗಿದ್ದಾರೆ, ಭಗವಂತ ಇವರನ್ನು ನಡೆಸುತ್ತಿದ್ದಾರೆ, ಮಾಡಿಸುವಂತಹ ಪರಮಾತ್ಮ ಮಾಡಿಸುತ್ತಿದ್ದಾನೆ... ಇದು ಸ್ಪಷ್ಟವಾಗಿಲ್ಲ. ಒಳ್ಳೆಯ ಕಾರ್ಯವಾಗಿದೆ ಮತ್ತು ಶ್ರೇಷ್ಠ ಕಾರ್ಯವನ್ನು ಮಾಡುತ್ತಿದ್ದೇವೆ ಈ ಮಾತಂತೂ ಇದೆ ಆದರೆ ಮಾಡಿಸುವಂತಹವನು ಇನ್ನೂ ಗುಪ್ತವಾಗಿದ್ದಾನೆ. ಆದ್ದರಿಂದ ಈ ಸಂಕಲ್ಪ ಶಕ್ತಿಯಿಂದ ಪ್ರತಿಯೊಬ್ಬರ ಬುದ್ಧಿಯನ್ನು ಪರಿವರ್ತನೆ ಮಾಡಲು ಸಾಧ್ಯ. ಹೇ ಪ್ರಭು ಎಂದಾದರೂ ಪ್ರತ್ಯಕ್ಷ ಮಾಡಿರಿ ಅಥವಾ ತಂದೆಯ ರೂಪದಲ್ಲಾದರೂ ಪ್ರತ್ಯಕ್ಷ ಮಾಡಿರಿ. ಆದ್ದರಿಂದ ಬಾಪ್ದಾದಾ ಈಗಲೂ ಕೂಡ ಮತ್ತೊಮ್ಮೆ ಸಂಕಲ್ಪ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಮತ್ತು ಪ್ರಯೋಗದಲ್ಲಿ ತರುವುದರ ಬಗ್ಗೆ ಗಮನ ಸೆಳೆಯುತ್ತಾರೆ. ಅರ್ಥವಾಯಿತೆ. ಒಳ್ಳೆಯದು.
ಒಂದು ಸೆಕೆಂಡ್ನಲ್ಲಿ ಮನಸ್ಸು ಏಕಾಗ್ರವಾಗಬೇಕು ಎಂಬುದು ಬಾಪ್ದಾದಾ ಅಭ್ಯಾಸವನ್ನು ತಿಳಿಸಿದರು, ಏಕೆಂದರೆ ಸಮಸ್ಯೆ ಇದ್ದಕ್ಕಿದ್ದಂತೆ ಬರುತ್ತದೆ ಮತ್ತು ಅದೇ ಸಮಯದಲ್ಲಿ ಆತ್ಮ ಬಲವಿದ್ದರೆ, ಸಮಸ್ಯೆಯೇ ಸಮಾಪ್ತಿಯಾಗುತ್ತದೆ ಹಾಗೂ ಆ ಸಮಸ್ಯೆ ಒಳ್ಳೆಯ ಪಾಠವನ್ನು ಕಲಿಸುತ್ತದೆ. ಆದ್ದರಿಂದ ಎಲ್ಲರೂ ತಮ್ಮ ಮನಸ್ಸು ಬುದ್ಧಿಯನ್ನು ಈ ಕ್ಷಣವೇ ಏಕಾಗ್ರಗೊಳಿಸಿ. ಸಾಧ್ಯವಾಗುತ್ತದೆಯೇ ಎಂದು ನೋಡಿ. (ಡ್ರಿಲ್) ಹೀಗೆ ದಿನವಿಡಿ ಅಭ್ಯಾಸ ಮಾಡುತ್ತಾ ಇರಿ. ಒಳ್ಳೆಯದು.
ನಾಲ್ಕಾರು ಕಡೆಯ ಶ್ರೇಷ್ಠ ಆತ್ಮಗಳಿಗೆ, ಆದಿ ಮಧ್ಯ ಮತ್ತು ಅಂತ್ಯದಲ್ಲಿ ಶ್ರೇಷ್ಠ ಪಾತ್ರವನ್ನು ನಿರ್ವಹಿಸುವ ಆತ್ಮಗಳಿಗೆ, ಸದಾ ತಮ್ಮ ಶ್ರೇಷ್ಠ ಸಂಕಲ್ಪದ ವಿಧಿಯನ್ನು ಅನುಭವ ಮಾಡುವಂತಹವರಿಗೆ, ಸದಾ ಸಹಜಯೋಗಿಯ ಜೊತೆಗೆ ಪ್ರಯೋಗಶೀಲರು ಆಗಿರುವಂತಹವರಿಗೆ, ಸದಾ ಸಂಕಲ್ಪ ಶಕ್ತಿಯ ಮುಖಾಂತರ ಸರ್ವ ಶಕ್ತಿಗಳನ್ನು ಹೆಚ್ಚಿಸಿಕೊಳ್ಳುವಂತಹವರಿಗೆ, ಮನಸ್ಸು ಮತ್ತು ಬುದ್ಧಿಯ ಮೇಲೆ ನಿಯಂತ್ರಣವನ್ನು ನೀಡುವಂತಹವರಿಗೆ, ಸದಾ ಪ್ರಯೋಗಶೀಲ ಮಕ್ಕಳಿಗೆ ಬಾಪ್ದಾದಾ ಅವರ ನೆನಪು ಪ್ರೀತಿ ಮತ್ತು ನಮಸ್ತೆ.
ಬಾಪ್ದಾದಾ ಅವರು ದೇಶ ಹಾಗೂ ವಿದೇಶದ ಮಕ್ಕಳನ್ನು ಕೂಡ ನೋಡುತ್ತಿದ್ದಾರೆ. ಸಂಕಲ್ಪದ ಮುಖಾಂತರ ನೆನಪು ಪ್ರೀತಿಯ ಅಥವಾ ಆತ್ಮಿಕ ವರ್ತಲಾಪವನ್ನು ಮಾಡುವವರ ಮಾತುಗಳು ಬಾಪ್ದಾದಾರವರನ್ನು ತಲುಪುತ್ತ್ತವೆ. ವಿಜ್ಞಾನದ ಶಕ್ತಿಯ ಮೂಲಕ ಈಗಲೂ ಕೇಳುತ್ತಿರುವ ಪ್ರತಿಯೊಂದು ದೇಶದ ಎಲ್ಲಾ ಮಕ್ಕಳಿಗೆ ನೆನಪು, ಪ್ರೀತಿ. ಜನಕ ಮಗುವಿಗೆ ಕೂಡ ವಿಶೇಷವಾಗಿ ಬಾಪ್ದಾದಾ ನೆನಪು ಪ್ರೀತಿಯನ್ನು ಕೊಡುತ್ತಿದ್ದಾರೆ, ಏಕೆಂದರೆ ಅವರು ಮನಸ್ಸಿನಿಂದ ಇಲ್ಲಿದ್ದಾರೆ ದೇಹದಿಂದ ಅಲ್ಲಿದ್ದಾರೆ, ಆದ್ದರಿಂದ ಎಲ್ಲರಿಗೂ ಹಾಗೂ ಪ್ರತಿಯೊಬ್ಬರಿಗೂ ವಿಶೇಷ ನೆನಪು, ಪ್ರೀತಿ ಒಳ್ಳೆಯದು. ಕಾರ್ಯಕ್ರಮ ಬಹಳ ಚೆನ್ನಾಗಿ ನಡೆಯುತ್ತಾ ಇದೆ.
ದಾದಿಯರೊಂದಿಗೆ: ಸದಾ ತಮ್ಮನ್ನು ಬಾಪ್ದಾದಾ ಅವರ ನಯನದ ನಕ್ಷತ್ರ ಎಂದು ತಿಳಿದುಕೊಂಡಿದ್ದೀರಾ? ನಯನದಲ್ಲಿ ಸದಾ ತುಂಬಿಕೊಂಡಿರುವವರು ಸದಾ ದೃಷ್ಟಿಯಲ್ಲಿ ಇರುತ್ತಾರೆ. ಇದು ಕೂಡ ತಂದೆ ಮತ್ತು ಮಕ್ಕಳ ಸಂಗಮ ಯುಗದ ಶುಭ ಹಬ್ಬವಾಗಿದೆ. ಭೇಟಿಯಾಗುವುದು, ಕೇಳುವುದು, ತಿನ್ನುವುದು, ಕುಡಿಯುವುದು ಇದು ಸಂಗಮದ ಹಬ್ಬವಾಗಿದೆ. ಹೀಗೆ ಆಚರಿಸುತ್ತಾ ನಮ್ಮ ಮನೆಗೆ ಹೋಗುತ್ತೇವೆ. ನಂತರ ರಾಜ್ಯದಲ್ಲಿ ಬರುತ್ತೇವೆ. ಬ್ರಹ್ಮಾ ತಂದೆಯ ಜೊತೆಗೆ ರಾಜ್ಯವನ್ನು ಮಾಡುತ್ತೇವೆ. ಚೆನ್ನಾಗಿದೆ. ಜಗತ್ತಿನವರು ಯೋಚನೆ ಮಾಡುತ್ತಾ ಇರುತ್ತಾರೆ ಮತ್ತು ತಾವು ಸದಾ ಆಚರಿಸುತ್ತಾ ಇರುತ್ತೀರಿ. ಏನಾಗುತ್ತದೆ, ಹೇಗಾಗುತ್ತದೆ ಎಂಬ ಯಾವ ಯೋಚನೆಯು ಇಲ್ಲ. ಯಾವುದೇ ಪ್ರಕಾರದ ಯೋಚನೆಯು ಇಲ್ಲ. ಒಳ್ಳೆಯದು.
ಓಂ ಶಾಂತಿ. ಮಧುರಾತಿ ಮಧುರ ಜೀವಾತ್ಮರಿಗೆ ಪರಮಪಿತ ಪರಮಾತ್ಮ ಕುಳಿತು ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ, ಬಂದು ಬಹಳ ಮಕ್ಕಳಿಗೆ ಓದಿಸುತ್ತೇನೆ. ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣ ಮಕ್ಕಳಿಗೇ ತಿಳಿಸುತ್ತೇನೆ, ಅವಶ್ಯವಾಗಿ ಮುಖದ ಮೂಲಕವೇ ತಿಳಿಸುತ್ತಾರೆ. ಮತ್ತ್ಯಾರಿಗೆ ತಿಳಿಸುತ್ತಾರೆ! ಹೇಳುತ್ತಾರೆ - ಮಕ್ಕಳೇ, ನೀವು ನನ್ನನ್ನು ಭಕ್ತಿಮಾರ್ಗದಲ್ಲಿ ಹೇ ಪತಿತ-ಪಾವನ ಎಂದು ಕರೆಯುತ್ತಾ ಬಂದಿದ್ದೀರಿ. ಭಾರತ ಹಾಗೂ ಇಡೀ ಪ್ರಪಂಚದಲ್ಲಿ ಎಲ್ಲರೂ ಕರೆಯುತ್ತಾರೆ, ಭಾರತವೇ ಪಾವನವಾಗಿತ್ತು, ಉಳಿದೆಲ್ಲರೂ ಶಾಂತಿಧಾಮದಲ್ಲಿದ್ದರು. ಮಕ್ಕಳಿಗೆ ಇದು ಸ್ಮೃತಿಯಿರಲಿ - ಸತ್ಯ-ತ್ರೇತಾಯುಗವೆಂದು ಯಾವುದಕ್ಕೆ ಹೇಳಲಾಗುತ್ತದೆ, ದ್ವಾಪರ-ಕಲಿಯುಗವೆಂದು ಯಾವುದಕ್ಕೆ ಹೇಳಲಾಗುತ್ತದೆ, ಅದರಲ್ಲಿ ಯಾರು-ಯಾರು ರಾಜ್ಯ ಮಾಡುತ್ತಿದ್ದರು ಎಂದು ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನ ಇದೆ. ಹೇಗೆ ತಂದೆಗೆ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೋ ಹಾಗೆಯೇ ನಿಮ್ಮ ಬುದ್ಧಿಯಲ್ಲಿಯೂ ಇದೆ. ತಂದೆಯು ಯಾವ ಜ್ಞಾನವನ್ನು ಕೊಡುತ್ತಾರೆಯೋ ಅದು ಮಕ್ಕಳಲ್ಲಿಯೂ ಅವಶ್ಯವಾಗಿ ಇರಬೇಕು. ತಂದೆಯು ಬಂದು ಮಕ್ಕಳನ್ನು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಎಷ್ಟು ತಂದೆಯ ಮಹಿಮೆಯಿದೆಯೋ ಅಷ್ಟು ಮಕ್ಕಳಿಗೂ ಇದೆ. ತಂದೆಯು ಮಕ್ಕಳನ್ನು ಹೆಚ್ಚು ಮಹಿಮಾವಂತರನ್ನಾಗಿ ಮಾಡಿದ್ದಾರೆ. ಸದಾ ತಿಳಿದುಕೊಳ್ಳಿ – ಶಿವ ತಂದೆಯು ಇವರ (ಬ್ರಹ್ಮಾ) ಮೂಲಕ ಕಲಿಸುತ್ತಾರೆ, ಆತ್ಮವೇ ಒಬ್ಬರು ಇನ್ನೊಬ್ಬರೊಂದಿಗೆ ಮಾತನಾಡುತ್ತದೆ ಆದರೆ ಮನುಷ್ಯರು ದೇಹಾಭಿಮಾನಿಗಳಾಗಿರುವ ಕಾರಣ ಇಂತಹವರು ಓದಿಸುತ್ತಾರೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಎಲ್ಲವನ್ನು ಮಾಡುವುದು ಆತ್ಮವೇ ಆಗಿದೆ. ಆತ್ಮವೇ ಪಾತ್ರವನ್ನಭಿನಯಿಸುತ್ತದೆ, ಈಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಪದೇ-ಪದೇ ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಎಲ್ಲಿಯವರೆಗೆ ತಮ್ಮನ್ನು ಆತ್ಮನೆಂದು ತಿಳಿಯುವುದಿಲ್ಲವೋ ಅಲ್ಲಿಯವರೆಗೆ ತಂದೆಯನ್ನೂ ನೆನಪು ಮಾಡಲು ಸಾಧ್ಯವಿಲ್ಲ, ಮರೆತು ಹೋಗುತ್ತಾರೆ. ನೀವು ಯಾರ ಮಕ್ಕಳಾಗಿದ್ದೀರಿ ಎಂದು ನಿಮ್ಮನ್ನು ಕೇಳಿದಾಗ, ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ ಎಂದು ಹೇಳುತ್ತೀರಿ. ವಿಜಿಟರ್ ಬುಕ್ನಲ್ಲಿಯೂ ಬರೆಯಲಾಗಿದೆ - ನಿಮ್ಮ ತಂದೆ ಯಾರು? ಆಗ ಕೂಡಲೇ ದೇಹದ ತಂದೆಯ ಹೆಸರನ್ನು ತಿಳಿಸುತ್ತಾರೆ. ಒಳ್ಳೆಯದು - ಈಗ ಆತ್ಮದ ತಂದೆಯ ಹೆಸರನ್ನು ತಿಳಿಸಿ. ಆಗ ಕೆಲವರು ಕೃಷ್ಣನ, ಕೆಲವರು ಹನುಮಂತನ ಹೆಸರನ್ನು ಬರೆಯುತ್ತಾರೆ. ಕೆಲವರು ನಮಗೆ ಗೊತ್ತಿಲ್ಲವೆಂದು ಬರೆಯುತ್ತಾರೆ. ಅರೆ! ನೀವು ಲೌಕಿಕ ತಂದೆಯನ್ನು ಅರಿತುಕೊಂಡಿದ್ದೀರಿ ಮತ್ತು ಪಾರಲೌಕಿಕ ತಂದೆ, ಯಾರನ್ನು ನೀವು ಯಾವಾಗಲೂ ದುಃಖದಲ್ಲಿ ನೆನಪು ಮಾಡುತ್ತೀರಿ, ಅವರನ್ನೇ ಅರಿತುಕೊಂಡಿಲ್ಲವೆ! ಹೇ ಭಗವಂತ ದಯೆ ತೋರಿಸಿ. ಹೇ ಭಗವಂತ ಒಂದು ಮಗುವನ್ನು ಕೊಡಿ ಎಂದು ಬೇಡುತ್ತಾರಲ್ಲವೆ. ಈಗ ತಂದೆಯು ಬಹಳ ಸಹಜ ಮಾತನ್ನು ತಿಳಿಸುತ್ತಾರೆ. ನೀವು ದೇಹಾಭಿಮಾನದಲ್ಲಿರುತ್ತೀರಿ ಆದ್ದರಿಂದ ತಂದೆಯ ಆಸ್ತಿಯ ನಶೆಯೇರುವುದಿಲ್ಲ. ನಿಮಗಂತೂ ಬಹಳ ನಶೆಯೇರಬೇಕು. ಭಕ್ತಿ ಮಾಡುವುದು ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ, ಯಜ್ಞ, ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುವುದೆಲ್ಲವೂ ಭಕ್ತಿಯಾಗಿದೆ. ಎಲ್ಲರೂ ಒಬ್ಬ ಭಗವಂತನನ್ನು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಪತಿಯರಿಗೂ ಪತಿ, ತಂದೆಯರಿಗೂ ತಂದೆಯಾಗಿದ್ದೇನೆ. ಎಲ್ಲಾ ತಂದೆಯರು ಭಗವಂತನನ್ನು ಅವಶ್ಯವಾಗಿ ನೆನಪು ಮಾಡುತ್ತಾರೆ, ಆತ್ಮರೇ ನೆನಪು ಮಾಡುತ್ತಾರೆ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಭಲೆ ಹೇಳುತ್ತಾರೆ ಆದರೆ ಅರ್ಥವನ್ನು ತಿಳಿಯದೆ ಹಾಗೆಯೇ ಹೇಳಿ ಬಿಡುತ್ತಾರೆ. ರಹಸ್ಯವೇನೂ ಗೊತ್ತಿಲ್ಲ, ನೀವು ಆತ್ಮನನ್ನೇ ತಿಳಿದುಕೊಂಡಿಲ್ಲವೆಂದರೆ ಆತ್ಮದ ತಂದೆಯನ್ನು ಹೇಗೆ ತಿಳಿದುಕೊಳ್ಳುವಿರಿ? ಸಾಕ್ಷಾತ್ಕಾರವಂತೂ ಭಕ್ತಿಮಾರ್ಗದ್ದಾಗುತ್ತದೆ, ಭಕ್ತಿಮಾರ್ಗದಲ್ಲಿ ಪೂಜೆಗಾಗಿ ದೊಡ್ಡ-ದೊಡ್ಡ ಲಿಂಗಗಳನ್ನು ಇಟ್ಟುಕೊಳ್ಳುತ್ತಾರೆ ಏಕೆಂದರೆ ಒಂದುವೇಳೆ ಬಿಂದುವಿನ ರೂಪವನ್ನು ತೋರಿಸಿದರೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಬಹಳ ಸೂಕ್ಷ್ಮ ಮಾತಾಗಿದೆ. ಪರಮಾತ್ಮನಿಗೆ ಅಖಂಡ ಜ್ಯೋತಿ ಸ್ವರೂಪನೆಂದು ಹೇಳುತ್ತಾರೆ, ಅವರಿಗೆ ಬಹಳ ದೊಡ್ಡ ರೂಪವಿದೆಯೆಂದು ಮನುಷ್ಯರು ಹೇಳುತ್ತಾರೆ. ಬ್ರಹ್ಮ ಸಮಾಜದವರು ಜ್ಯೋತಿಯನ್ನು ಪರಮಾತ್ಮನೆಂದು ಹೇಳುತ್ತಾರೆ. ಪರಮಪಿತ ಪರಮಾತ್ಮನು ಬಿಂದುವಾಗಿದ್ದಾರೆಂದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ ಆದ್ದರಿಂದ ಗೊಂದಲದಲ್ಲಿದ್ದಾರೆ. ಮಕ್ಕಳೂ ಸಹ ಹೇಳುತ್ತಾರೆ - ಬಾಬಾ, ಯಾರನ್ನು ನೆನಪು ಮಾಡುವುದು. ಭಕ್ತಿಯಲ್ಲಿ ಪರಮಾತ್ಮನು ದೊಡ್ಡ ಲಿಂಗ ರೂಪದಲ್ಲಿದ್ದಾರೆಂದು ನಾವು ಕೇಳಿದ್ದೆವು, ಈಗ ಬಿಂದುವನ್ನು ಹೇಗೆ ನೆನಪು ಮಾಡುವುದು? ತಂದೆಯು ತಿಳಿಸುತ್ತಾರೆ - ಅರೆ! ನೀವಾತ್ಮರು ಬಿಂದುವಾಗಿದ್ದೀರಿ, ನಾನೂ ಬಿಂದುವಾಗಿದ್ದೇನೆ. ಆತ್ಮವನ್ನು ಕರೆಸುತ್ತಾರೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ಬಂದು ಕುಳಿತುಕೊಳ್ಳುತ್ತಾರೆ. ಭಕ್ತಿಮಾರ್ಗದಲ್ಲಿ ಯಾವ ಸಾಕ್ಷಾತ್ಕಾರ ಇತ್ಯಾದಿಗಳಾಗುತ್ತದೆಯೋ ಅದೆಲ್ಲವೂ ಭಕ್ತಿಯಾಗಿದೆ. ಭಕ್ತಿಯನ್ನೂ ಸಹ ಒಬ್ಬರಿಗೆ ಮಾಡುವುದಿಲ್ಲ, ಅನೇಕರನ್ನು ಭಗವಂತರನ್ನಾಗಿ ಮಾಡಿ ಬಿಟ್ಟಿದ್ದಾರೆ. ಭಕ್ತರು ಯಾರು ಭಕ್ತಿ ಮಾಡುತ್ತಾ ಇರುತ್ತಾರೆಯೋ ಅವರಿಗೆ ಭಗವಂತನೆಂದು ಹೇಗೆ ಹೇಳುವುದು? ಒಂದುವೇಳೆ ಪರಮಾತ್ಮ ಸರ್ವವ್ಯಾಪಿ ಎಂದು ಹೇಳುವುದಾದರೆ ಮತ್ತೆ ಯಾರ ಭಕ್ತಿ ಮಾಡುತ್ತಾರೆ? ಅದರಲ್ಲಿಯೂ ಭಿನ್ನ-ಭಿನ್ನ ಪ್ರಕಾರದ ಭಕ್ತಿ ಮಾಡುತ್ತಾರೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾವು ಇನ್ನೂ ಅನೇಕ ವರ್ಷಗಳು ಜೀವಿಸುತ್ತೇವೆಂದು ತಿಳಿಯಬೇಡಿ, ಈಗ ಸಮಯವು ಬಹಳ ಸಮೀಪಿಸುತ್ತಾ ಹೋಗುತ್ತಿದೆ. ನಿಶ್ಚಯವನ್ನಿಡಬೇಕಾಗಿದೆ, ತಂದೆಗೆ ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡಿಸಬೇಕಾಗಿದೆ. ನಾನು ಇವರ ಮೂಲಕ ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆಂದು ಸ್ವಯಂ ತಂದೆಯೇ ಹೇಳುತ್ತಾರೆ. ಬ್ರಹ್ಮಾರವರ ಮೂಲಕ ಸ್ಥಾಪನೆಯೆಂದು ಹೇಳುತ್ತಾರೆ ಆದರೆ ಇದನ್ನು ತಿಳಿದುಕೊಂಡಿಲ್ಲ – ಹೊಸ ಪ್ರಪಂಚಕ್ಕೆ ವಿಷ್ಣು ಪುರಿಯೆಂದು ಹೇಳಲಾಗುತ್ತದೆ ಅರ್ಥಾತ್ ವಿಷ್ಣುವಿನ ಎರಡು ರೂಪಗಳಾದ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಿದ್ದರು. ವಿಷ್ಣು ಯಾರೆಂಬುದು ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ - ಈ ಬ್ರಹ್ಮಾ ಸರಸ್ವತಿಯೇ ಈ ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗಿ ಪಾಲನೆ ಮಾಡುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣು ಪುರಿ ಅರ್ಥಾತ್ ಮತ್ತೆ ಸ್ವರ್ಗದ ಪಾಲನೆ ಮಾಡುತ್ತಾರೆ. ನಿಮ್ಮ ಬುದ್ಧಿಯಲ್ಲಿ ಬರಬೇಕಾಗಿದೆ - ತಂದೆಯು ಜ್ಞಾನ ಸಾಗರನಾಗಿದ್ದಾರೆ, ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಅವರು ಈ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದಾರೆ, ಅವರೇ ಪತಿತ-ಪಾವನನಾಗಿದ್ದಾರೆ. ಆ ತಂದೆಯ ಕರ್ತವ್ಯವೇ ನಿಮ್ಮ ಕರ್ತವ್ಯವಾಗಿದೆ. ನೀವೂ ಸಹ ಪತಿತರಿಂದ ಪಾವನರನ್ನಾಗಿ ಮಾಡುತ್ತೀರಿ. ಪ್ರಪಂಚದಲ್ಲಿ ಒಬ್ಬ ತಂದೆಗೆ 3-4 ಜನ ಮಕ್ಕಳಿದ್ದರೆ ಅವರಲ್ಲಿ ಕೆಲವರು ಬಹಳ ಉತ್ತಮ ಉದ್ಯೋಗದಲ್ಲಿರುತ್ತಾರೆ, ಇನ್ನೂ ಕೆಲವರು ಬಹಳ ಕನಿಷ್ಟ ಮಟ್ಟದಲ್ಲಿರುತ್ತಾರೆ. ಇಲ್ಲಿ ನಿಮಗೆ ತಂದೆಯು ಒಂದೇ ಉದ್ಯೋಗವನ್ನು ಕಲಿಸುತ್ತಾರೆ - ನೀವು ಪತಿತರನ್ನು ಪಾವನರನ್ನಾಗಿ ಮಾಡಿರಿ. ಎಲ್ಲರಿಗೆ ಈ ಲಕ್ಷ್ಯವನ್ನು ಕೊಡಿ, ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ಗೀತೆಯಲ್ಲಿ ಕೃಷ್ಣ ಭಗವಾನುವಾಚವೆಂದು ಉಲ್ಟಾ ಬರೆದಿದ್ದಾರೆ, ನೀವು ತಿಳಿಸಬೇಕಾಗಿದೆ - ಭಗವಂತನು ನಿರಾಕಾರ ಪುನರ್ಜನ್ಮ ರಹಿತನಾಗಿದ್ದಾರೆ. ಕೇವಲ ಇದೇ ತಪ್ಪಾಗಿದೆ. ಈಗ ನೀವು ಮಕ್ಕಳು ಕೃಷ್ಣ ಪುರಿಗೆ ಮಾಲೀಕರಾಗುತ್ತಿದ್ದೀರಿ. ಕೆಲವರು ರಾಜಧಾನಿಯಲ್ಲಿ ಬರುತ್ತಾರೆ, ಕೆಲವರು ಪ್ರಜೆಗಳಲ್ಲಿ ಬರುತ್ತಾರೆ. ಕೃಷ್ಣ ಪುರಿಯೆಂದು ಹೇಳಲಾಗುತ್ತದೆ ಏಕೆಂದರೆ ಕೃಷ್ಣನು ಎಲ್ಲರಿಗೆ ಪ್ರಿಯನಾಗಿದ್ದಾನೆ. ಮಕ್ಕಳು ಪ್ರಿಯರೆನಿಸುತ್ತಾರಲ್ಲವೆ. ಮಕ್ಕಳಿಗೂ ಸಹ ತಂದೆ-ತಾಯಿಯೊಂದಿಗೆ ಪ್ರೀತಿಯುಂಟಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಶರೀರವೆಂದು ತಿಳಿಯಬೇಡಿ, ಪದೇ-ಪದೇ ತನ್ನನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ, ಆತ್ಮಾಭಿಮಾನಿಯಾಗಿ. ತಂದೆಯು ನಿರಾಕಾರನಾಗಿದ್ದಾರೆ, ತಿಳಿಸುವುದಕ್ಕಾಗಿ ಇಲ್ಲಿಯೇ ಶರೀರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಶರೀರವಿಲ್ಲದೆ ತಿಳಿಸಲು ಸಾಧ್ಯವಿಲ್ಲ. ನಿಮಗಂತೂ ತಮ್ಮದೇ ಆದ ಶರೀರವಿದೆ, ಆದರೆ ತಂದೆಯು ಈ (ಬ್ರಹ್ಮಾ) ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತಾರೆ, ಬಾಕಿ ಇದರಲ್ಲಿ ಪ್ರೇರಣೆಯ ಮಾತಿಲ್ಲ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಈ ಶರೀರ ಧಾರಣೆ ಮಾಡಿ ಮಕ್ಕಳಿಗೆ ಓದಿಸುತ್ತೇನೆ ಏಕೆಂದರೆ ನೀವಾತ್ಮರು ಈಗ ತಮೋಪ್ರಧಾನರಾಗಿ ಬಿಟ್ಟಿದ್ದೀರಿ ಮತ್ತೆ ಸತೋಪ್ರಧಾನರನ್ನಾಗಿ ಮಾಡಬೇಕಾಗಿದೆ. ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ತಂದೆಯು ಹೇಗೆ ಬಂದು ಪಾವನರನ್ನಾಗಿ ಮಾಡುತ್ತಾರೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಇದೂ ಸಹ ನಿಮಗೆ ತಿಳಿದಿದೆ- ಸತ್ಯಯುಗದಲ್ಲಿ ಕೇವಲ ನಮ್ಮದೇ ಚಿಕ್ಕ ವೃಕ್ಷವಿರುವುದು, ನೀವು ಸ್ವರ್ಗದಲ್ಲಿ ಹೋಗುತ್ತೀರಿ. ಬಾಕಿ ಯಾವ ಇಷ್ಟೊಂದು ಖಂಡಗಳಿವೆಯೋ ಅವುಗಳ ಹೆಸರು, ಗುರುತೂ ಇರುವುದಿಲ್ಲ. ಭಾರತ ಖಂಡವೇ ಸ್ವರ್ಗವಾಗುವುದು. ಪರಮಪಿತ ಪರಮಾತ್ಮನು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ, ಈಗ ನರಕವಾಗಿದೆ. ಭಾರತ ಖಂಡವೇ ಪ್ರಾಚೀನವಾಗಿದೆ, ಎಲ್ಲಿ ದೇವತೆಗಳ ರಾಜ್ಯವಿತ್ತೋ ಈಗ ಇಲ್ಲ. ಇಲ್ಲಿ ಅವರ ಮಂದಿರಗಳಿವೆ, ಚಿತ್ರಗಳಿವೆ ಅಂದಾಗ ಭಾರತದ್ದೇ ಮಾತಾಯಿತು. ಇದು ಯಾವುದೆ ಭಾರತವಾಸಿಗಳ ಬುದ್ಧಿಯಲ್ಲಿ ಬರುವುದಿಲ್ಲ - ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರು ಮಾಲೀಕರಾಗಿದ್ದರು, ಮತ್ತ್ಯಾವುದೇ ಖಂಡವಿರಲಿಲ್ಲ. ಈಗಂತೂ ಅನೇಕ ಧರ್ಮಗಳು ಬಂದು ಬಿಟ್ಟಿದೆ. ಭಾರತವಾಸಿಗಳು ಧರ್ಮ ಭ್ರಷ್ಟರು, ಕರ್ಮ ಭ್ರಷ್ಟರಾಗಿ ಬಿಟ್ಟಿದ್ದಾರೆ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಅವಶ್ಯವಾಗಿ ಇವರು ಕಪ್ಪಾಗಿದ್ದರಲ್ಲವೆ. ಕೃಷ್ಣನಿಗೆ ಸರ್ಪವು ಕಚ್ಚಿತು ಆದ್ದರಿಂದ ಕಪ್ಪಾಗಿ ಬಿಟ್ಟನೆಂದು ಹೇಳುತ್ತಾರೆ. ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದನು ಅಂದಮೇಲೆ ಹೇಗೆ ಕಪ್ಪಾಗಿ ಬಿಟ್ಟನು! ನೀವೀಗ ಈ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಕೃಷ್ಣನ ತಂದೆ-ತಾಯಿಯೂ ಸಹ ಈಗ ಓದುತ್ತಿದ್ದಾರೆ. ತಂದೆ, ತಾಯಿಗಿಂತಲೂ ಶ್ರೀಕೃಷ್ಣನು ಉತ್ತಮನೆಂದು ಗಾಯನವಿದೆ. ತಂದೆ-ತಾಯಿಯ ಹೆಸರಿಲ್ಲ, ಇಲ್ಲದಿದ್ದರೆ ಯಾವ ತಂದೆ-ತಾಯಿಯಿಂದ ಇಂತಹ ಮಗು ಜನ್ಮ ಪಡೆದನೋ, ಆ ತಂದೆ-ತಾಯಿಯೂ ಸಹ ಎಷ್ಟು ಪ್ರಿಯರಾಗಬೇಕು ಆದರೆ ಇಲ್ಲ. ಮಹಿಮೆಯಲ್ಲವೂ ರಾಧೆ-ಕೃಷ್ಣನಿಗೇ ಇದೆ, ಅವರ ತಂದೆ-ತಾಯಿಗೆ ಏನೂ ಇಲ್ಲ. ನಿಮ್ಮ ಬುದ್ಧಿಯಲ್ಲಿ ಜ್ಞಾನವಿದೆ, ಜ್ಞಾನವು ದಿನ ಭಕ್ತಿಯು ರಾತ್ರಿಯಾಗಿದೆ. ಅಂಧಕಾರ ರಾತ್ರಿಯಲ್ಲಿ ಮನುಷ್ಯರು ಅಲೆದಾಡುತ್ತಿರುತ್ತಾರೆ.
ಈಗ ನೀವು ಮಕ್ಕಳಿಗೆ ತಿಳಿಸಲಾಗುತ್ತದೆ – ಮನೆಯಲ್ಲಿಯೇ ಇರಿ, ಈ ಸೇವೆಯನ್ನು ಮಾಡುತ್ತಾ ಇರಿ. ಯಾರು ಬಂದರೂ ಇದನ್ನು ತಿಳಿಸಿ - ನೀವು ಒಬ್ಬ ಪ್ರಿಯತಮನಿಗೆ ಅರ್ಧಕಲ್ಪದ ಪ್ರಿಯತಮೆಯರಾಗಿದ್ದೀರಿ. ಭಕ್ತಿಮಾರ್ಗದಲ್ಲಿ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ ಅಂದಮೇಲೆ ಪ್ರಿಯತಮೆಯರಾದರಲ್ಲವೆ. ಆದರೆ ಪ್ರಿಯತಮೆಯನ್ನು ಪೂರ್ಣ ತಿಳಿದುಕೊಂಡಿಲ್ಲ. ಬಹಳ ಪ್ರೀತಿಯಿಂದ ನೆನಪು ಮಾಡುತ್ತಾರೆ - ಹೇ ಪ್ರಿಯತಮನೇ, ನೀವು ಬಂದರೆ ನಾವು ಕೇವಲ ತಮ್ಮನ್ನೇ ನೆನಪು ಮಾಡುತ್ತೇವೆ, ಮತ್ತೆಲ್ಲರಿಂದ ಬುದ್ಧಿಯೋಗವನ್ನು ತೆಗೆದು ತಮ್ಮೊಂದಿಗೆ ಜೋಡಿಸುತ್ತೇವೆ,ಹೀಗೆ ಹಾಡುತಿದ್ದಿರಲ್ಲವೆ. ಆದರೆ ತಂದೆಯಿಂದ ನಮಗೆ ಯಾವ ಆಸ್ತಿಯು ಸಿಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನೀವು ಆತ್ಮಾಭಿಮಾನಿಗಳಾಗಿ ತಂದೆಯನ್ನು ನೆನಪು ಮಾಡುವುದು ನೀವು ಮಕ್ಕಳ ಮೊದಲ ಕರ್ತವ್ಯವಾಗಿದೆ. ಮಗನು ಯಾವಾಗಲೂ ತಂದೆಯನ್ನು ಮತ್ತು ಮಗಳು ತಾಯಿಯನ್ನು ನೆನಪು ಮಾಡುತ್ತಾಳೆ, ಜೊತೆಗಾರರಲ್ಲವೆ. ನಮ್ಮ ತಂದೆಯ ಆಸ್ತಿಗೆ ನಾನು ವಾರಸುಧಾರನಾಗುತ್ತೇನೆಂದು ಮಗನು ತಿಳಿಯುತ್ತಾನೆ, ಆದರೆ ಮಗಳು ಆ ರೀತಿ ಹೇಳುವುದಿಲ್ಲ. ನಾನಂತೂ ತಂದೆಯ ಮನೆಯಿಂದ ಮಾವನ ಮನೆಗೆ ಹೋಗಬೇಕಾಗಿದೆ ಎಂದು ಮಗಳು ತಿಳಿಯುತ್ತಾಳೆ. ಈಗ ನಿಮ್ಮದು ನಿರಾಕಾರ ಮತ್ತು ಸಾಕಾರ ತಂದೆಯ ಮನೆಯಾಗಿದೆ. ಹೇ ಪರಮಪಿತ ಪರಮಾತ್ಮ, ದಯೆ ತೋರಿಸಿ, ದುಃಖ ಹರಿಸಿ ಸುಖ ಕೊಡಿ. ನಮ್ಮನ್ನು ಮುಕ್ತರನ್ನಾಗಿ ಮಾಡಿ, ನಮಗೆ ಮಾರ್ಗದರ್ಶಕರಾಗಿ ಎಂದು ಕರೆಯುತ್ತಾರೆ. ಆದರೆ ಅದರ ಅರ್ಥವನ್ನು ದೊಡ್ಡ-ದೊಡ್ಡ ವಿದ್ವಾಂಸ, ಆಚಾರ್ಯರೂ ಸಹ ತಿಳಿದುಕೊಂಡಿಲ್ಲ. ತಂದೆಯು ಸರ್ವರ ಮುಕ್ತಿದಾತನಾಗಿದ್ದಾರೆ. ಅವರೇ ಎಲ್ಲರ ಕಲ್ಯಾಣಕಾರಿಯಾಗಿದ್ದಾರೆ. ಬಾಕಿ ಮನುಷ್ಯರು ತಮ್ಮದೇ ಕಲ್ಯಾಣ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ ಅನ್ಯರಿಗೇನು ಮಾಡುತ್ತಾರೆ! ಇಲ್ಲಿ ತಂದೆಯು ತಿಳಿಸುತ್ತಾರೆ - ನಾನು ಗುಪ್ತವಾಗಿ ಬರುತ್ತೇನೆ, ಖುದಾ ದೋಸ್ತನ ಕಥೆಯನ್ನು ಕೇಳಿದ್ದೀರಲ್ಲವೆ. ಈಗ ಇದು ಕಲಿಯುಗ ಮತ್ತು ಸತ್ಯಯುಗದ ನಡುವಿನ ಸೇತುವೆಯಾಗಿದೆ. ಆ ತೀರವನ್ನು ಸೇರಬೇಕಾಗಿದೆ. ಈಗ ಖುದಾ ತಂದೆಯೂ ಆಗಿದ್ದಾರೆ, ಜೊತೆಗಾರನೂ ಆಗಿದ್ದಾರೆ. ಮಾತಾಪಿತ, ಶಿಕ್ಷಕನ ಪಾತ್ರವನ್ನು ಅಭಿನಯಿಸುತ್ತಾನೆ. ಇಲ್ಲಿ ನಿಮಗೆ ಸಾಕ್ಷಾತ್ಕಾರವಾದರೆ ಜಾದು ಜಾದುವೆಂದು ಹೇಳಿ ಬಿಡುತ್ತಾರೆ. ಸಾಕ್ಷಾತ್ಕಾರವಂತೂ ನೌಧಾಭಕ್ತಿ ಮಾಡುವವರಿಗೂ ಸಹ ಆಗುತ್ತದೆ. ಬಹಳ ತೀವ್ರ ಭಕ್ತರಿರುತ್ತಾರೆ, ದರ್ಶನ ನೀಡಿ ಇಲ್ಲದಿದ್ದರೆ ನಾವು ತಲೆಯನ್ನು ಕತ್ತರಿಸಿಕೊಳ್ಳುತ್ತೇವೆ ಎಂದು ಹೇಳಿದಾಗ ಸಾಕ್ಷಾತ್ಕಾರವಾಗುತ್ತದೆ, ಅದಕ್ಕೆ ನೌಧಾಭಕ್ತಿಯೆಂದು ಹೇಳಲಾಗುತ್ತದೆ. ಇಲ್ಲಿ ನೌಧಾಭಕ್ತಿಯ ಮಾತಿಲ್ಲ. ಮನೆಯಲ್ಲಿ ಕುಳಿತು-ಕುಳಿತಿದ್ದಂತೆಯೇ ಅನೇಕರಿಗೆ ಸಾಕ್ಷಾತ್ಕಾರವಾಗುತ್ತಿರುತ್ತದೆ. ದಿವ್ಯ ದೃಷ್ಟಿಯ ಬೀಗದ ಕೈ ನನ್ನ ಬಳಿಯಿದೆ. ಅರ್ಜುನನಿಗೂ ಸಹ ನಾನು ದಿವ್ಯ ದೃಷ್ಟಿಯನ್ನು ಕೊಟ್ಟೆನಲ್ಲವೆ - ಈ ವಿನಾಶ ನೋಡಿ, ತನ್ನ ರಾಜ್ಯವನ್ನು ನೋಡಿ ಎಂದು. ಈಗ ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಈ ರೀತಿಯಾಗುತ್ತೀರಿ. ವಿಷ್ಣು ಯಾರೆಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಮಂದಿರವನ್ನು ಕಟ್ಟಿಸುವವರು ತಾವೇ ತಿಳಿದುಕೊಂಡಿರುವುದಿಲ್ಲ. ವಿಷ್ಣುವಿನ ಮೂಲಕ ಪಾಲನೆಯಾಗುತ್ತದೆ, ನಾಲ್ಕು ಭುಜಗಳ ಅರ್ಥವೇ ಆಗಿದೆ - 2 ಭುಜಗಳು ಪುರುಷನದು, 2 ಭುಜಗಳು ಸ್ತ್ರೀಯದು. ವಿಷ್ಣುವಿನ ಎರಡು ರೂಪಗಳು ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾವುದರ ಜ್ಞಾನವೂ ಇಲ್ಲ. ಶಿವ ತಂದೆಯದಾಗಲಿ, ವಿಷ್ಣುವಿನದಾಗಲಿ ಏನೂ ಗೊತ್ತಿಲ್ಲ. ಮೊಟ್ಟ ಮೊದಲು ತಂದೆಯ ಅಕರ್ಷಣೆಯಿತ್ತು, ಅನೇಕರು ಬರುತ್ತಿದ್ದರು. ಯಜ್ಞದ ಆದಿಯಲ್ಲಿ ಅಂಗಳವೆಲ್ಲವೂ ತುಂಬಿ ಹೋಗುತ್ತಿತ್ತು. ಜಡ್ಜ್, ಮ್ಯಾಜಿಸ್ಟ್ರೇಟ್ ಎಲ್ಲರೂ ಬರುತ್ತಿದ್ದರು ನಂತರ ವಿಕಾರದ ಜಗಳವು ಪ್ರಾರಂಭವಾಯಿತು. ಮಕ್ಕಳಾಗದಿದ್ದರೆ ಸೃಷ್ಟಿಯು ಹೇಗೆ ನಡೆಯುವುದು? ಇದಂತೂ ಸೃಷ್ಟಿಯನ್ನು ವೃದ್ಧಿ ಮಾಡುವ ಖಾಯಿದೆಯಾಗಿದೆ ಎಂದು ಹೇಳತೊಡಗಿದರು. ಭಗವಾನುವಾಚ - ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಬೇಕೆಂಬ ಗೀತೆಯ ಮಾತನ್ನೇ ಮರೆತು ಹೋದರು. ಸ್ತ್ರೀ-ಪುರುಷ ಇಬ್ಬರೂ ಒಟ್ಟಿಗೆ ಬಂದರೆ ಅವರಿಗೆ ಜ್ಞಾನ ಕೊಡಿ, ಒಬ್ಬರೇ ಕೊಡಬೇಡಿ ಎಂದು ಹೇಳತೊಡಗಿದರು. ಇಬ್ಬರು ಬರಬೇಕಲ್ಲವೆ. ಇಬ್ಬರು ಒಟ್ಟಿಗೆ ಬಂದರೂ ಸಹ ಒಬ್ಬರು ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ, ಕೆಲವರು ತಿಳಿದುಕೊಳ್ಳುವುದಿಲ್ಲ. ಅದೃಷ್ಟದಲ್ಲಿಲ್ಲವೆಂದರೆ ಏನು ಮಾಡಲು ಸಾಧ್ಯ! ಒಬ್ಬರು ಹಂಸ, ಇನ್ನೊಬ್ಬರು ಕೊಕ್ಕರೆಯಾಗಿ ಬಿಡುತ್ತಾರೆ. ಇಲ್ಲಿ ನೀವು ಬ್ರಾಹ್ಮಣರು ದೇವತೆಗಳಿಗಿಂತಲೂ ಉತ್ತಮರಾಗಿದ್ದೀರಿ. ನಿಮಗೇ ತಿಳಿದಿದೆ - ನಾವು ಈಶ್ವರೀಯ ಸಂತಾನರಾಗಿದ್ದೇವೆ, ಶಿವ ತಂದೆಯ ಮಕ್ಕಳಾಗಿದ್ದೇವೆ. ಸ್ವರ್ಗದಲ್ಲಿ ನಿಮಗೆ ಈ ಜ್ಞಾನವೇ ಇರುವುದಿಲ್ಲ. ನಿರಾಕಾರಿ ಪ್ರಪಂಚ, ಮುಕ್ತಿಧಾಮದಲ್ಲಿದ್ದಾಗಲೂ ಈ ಜ್ಞಾನವಿರುವುದಿಲ್ಲ. ಈ ಜ್ಞಾನವು ಶರೀರದ ಜೊತೆಯಲ್ಲಿಯೇ ಸಮಾಪ್ತಿಯಾಗಿ ಬಿಡುತ್ತದೆ. ಈಗ ನಿಮಗೆ ಜ್ಞಾನವಿದೆ - ಒಬ್ಬ ತಂದೆಯು ಓದಿಸುತ್ತಿದ್ದಾರೆ. ಈಗ ಈ ಆಟವು ಮುಕ್ತಾಯವಾಗುತ್ತದೆ. ಎಲ್ಲಾ ಪಾತ್ರಧಾರಿಗಳು ಹಾಜರಿದ್ದಾರೆ. ತಂದೆಯೂ ಬಂದಿದ್ದಾರೆ. ಅಳಿದುಳಿದ ಆತ್ಮಗಳೂ ಸಹ ಬರುತ್ತಿದ್ದಾರೆ, ಯಾವಾಗ ಎಲ್ಲರೂ ಬಂದು ಬಿಡುವರೋ ಆಗ ವಿನಾಶವಾಗುವುದು ಮತ್ತೆ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವರು, ಎಲ್ಲರೂ ಹೋಗಬೇಕಾಗಿದೆ. ಈ ಪತಿತ ಪ್ರಪಂಚದ ವಿನಾಶವಾಗಲಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪತಿತರಿಂದ ಪಾವನರನ್ನಾಗಿ ಮಾಡುವ ಕರ್ತವ್ಯ ಯಾವುದು ತಂದೆಯದಾಗಿದೆಯೋ ಅದೇ ಕರ್ತವ್ಯ ಮಾಡಬೇಕಾಗಿದೆ. ಎಲ್ಲರಿಗೆ ಲಕ್ಷ್ಯವನ್ನು ಕೊಡಬೇಕು - ತಂದೆಯನ್ನು ನೆನಪು ಮಾಡಿ ಮತ್ತು ಪಾವನರಾಗಿರಿ.
2. ಈ ಬ್ರಾಹ್ಮಣ ಜೀವನವು ದೇವತೆಗಳಿಗಿಂತಲೂ ಉತ್ತಮ ಜೀವನವಾಗಿದೆ, ಈ ನಶೆಯಲ್ಲಿ ಇರಬೇಕಾಗಿದೆ. ಮತ್ತೆಲ್ಲದರಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ.
ಹೊಸ ವರ್ಷ - ತಂದೆಯ ಸಮಾನರಾಗುವ ವರ್ಷ
ಇಂದು ತ್ರಿಮೂರ್ತಿ ತಂದೆಯು ಮೂರು ಸಂಗಮಗಳನ್ನು ನೋಡುತ್ತಿದ್ದಾರೆ. ಒಂದನೆಯದು, ತಂದೆ ಮತ್ತು ಮಕ್ಕಳ ಸಂಗಮವಾಗಿದೆ, ಎರಡನೆಯದು - ಈ ಯುಗವು ಸಂಗಮಯುಗವಾಗಿದೆ, ಮೂರನೆಯದು - ಇಂದು ವರ್ಷದ ಸಂಗಮವಾಗಿದೆ. ಮೂರೂ ಸಂಗಮಗಳಿಗೂ ತಮ್ಮ-ತಮ್ಮ ವಿಶೇಷತೆಯಿದೆ. ಪ್ರತಿಯೊಂದು ಸಂಗಮಯುಗವು ಪರಿವರ್ತನೆಯಾಗಲು ಪ್ರೇರಣೆ ಕೊಡುವಂತದ್ದಾಗಿದೆ. ಸಂಗಮಯುಗವು ವಿಶ್ವ ಪರಿವರ್ತನೆಯ ಪ್ರೇರಣೆಯನ್ನು ಕೊಡುತ್ತದೆ. ತಂದೆ ಮತ್ತು ಮಕ್ಕಳ ಸಂಗಮವು ಸರ್ವ ಶ್ರೇಷ್ಠ ಭಾಗ್ಯ, ಹಾಗೂ ಶ್ರೇಷ್ಠ ಪ್ರಾಪ್ತಿಗಳ ಅನುಭೂತಿ ಮಾಡಿಸುವಂತದ್ದಾಗಿದೆ. ವರ್ಷದ ಸಂಗಮವು ನವೀನತೆಗೆ ಪ್ರೇರಣೆಯನ್ನು ಕೊಡುವಂತದ್ದಾಗಿದೆ. ಮೂರೂ ಸಂಗಮಗಳು ತನ್ನ-ತನ್ನ ಅರ್ಥದಿಂದ ಮಹತ್ವಿಕೆಯನ್ನು ಇಟ್ಟುಕೊಂಡಿದೆ. ಇಂದು ಎಲ್ಲಾ ದೇಶ-ವಿದೇಶದ ಮಕ್ಕಳು ವಿಶೇಷವಾಗಿ ಈ ಹಳೆಯ ಪ್ರಪಂಚದ ಹೊಸ ವರ್ಷವನ್ನು ಆಚರಿಸಲು ಬಂದಿದ್ದೀರಿ. ಬಾಪ್ದಾದಾ ಎಲ್ಲಾ ಸಾಕಾರ ರೂಪಧಾರಿ ಹಾಗೂ ಆಕಾರ ರೂಪಧಾರಿ ಬುದ್ಧಿಯ ವಿಮಾನದಿಂದ ತಲುಪುವಂತಹ ಮಕ್ಕಳನ್ನು ನೋಡುತ್ತಿದ್ದೇವೆ ಮತ್ತು ಹೊಸ ವರ್ಷವನ್ನು ಆಚರಿಸಲು ವಜ್ರ ಸಮಾನ ಶುಭಾಷಯಗಳನ್ನು ಕೊಡುತ್ತಿದ್ದೇವೆ ಏಕೆಂದರೆ ಎಲ್ಲಾ ಮಕ್ಕಳು ವಜ್ರ ಸಮಾನ ಜೀವನವನ್ನು ಮಾಡಿಕೊಳ್ಳುತ್ತಿದ್ದೀರಿ. ಡಬಲ್ ಹೀರೋಗಳಾಗಿದ್ದೀರಾ? ಒಂದಂತೂ ತಂದೆಯ ಅಮೂಲ್ಯ ರತ್ನಗಳಾಗಿದ್ದೀರಿ, ಹೀರೋ ವಜ್ರಗಳಾಗಿದ್ದೀರಿ. ಎರಡನೆಯದಾಗಿ ಹೀರೋ ಪಾತ್ರವನ್ನು ಅಭಿನಯಿಸುವಂತಹ ಹೀರೊಗಳಾಗಿದ್ದೀರಿ ಆದ್ದರಿಂದ ಬಾಪ್ದಾದಾರವರು ಪ್ರತೀ ಸೆಕೆಂಡ್, ಪ್ರತೀ ಸಂಕಲ್ಪ, ಪ್ರತೀ ಜನ್ಮದ ಅವಿನಾಶಿ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ತಾವು ಶ್ರೇಷ್ಠ ಆತ್ಮಗಳು ಕೇವಲ ಇಂದಿನ ದಿನವು ಶುಭಾಷಯಗಳನ್ನು ತಿಳಿಸುವಂತದ್ದಲ್ಲ. ಪ್ರತೀ ಸಮಯ ಶ್ರೇಷ್ಠ ಭಾಗ್ಯ, ಶ್ರೇಷ್ಠ ಪ್ರಾಪ್ತಿಯ ಕಾರಣ ತಂದೆಗೆ ಪ್ರತೀ ಸಮಯ ಶುಭಾಷಯಗಳನ್ನು ಹೇಳುತ್ತೀರಿ, ಮತ್ತು ತಂದೆಯು ಮಕ್ಕಳಿಗೆ ಶುಭಾಷಯಗಳನ್ನು ಕೊಡುತ್ತಾ ಸದಾ ಹಾರುವ ಕಲೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ಈ ಹೊಸ ವರ್ಷದಲ್ಲಿ ಇದೇ ವಿಶೇಷ ನವೀನತೆಯನ್ನು ಜೀವನದಲ್ಲಿ ಅನುಭವ ಮಾಡುತ್ತಾ ಇರಿ - ಪ್ರತೀ ಸೆಕೆಂಡ್ ಹಾಗೂ ಪ್ರತೀ ಸಂಕಲ್ಪದಲ್ಲಿ ತಂದೆಗಂತೂ ಸದಾ ಶುಭಾಷಯಗಳನ್ನು ಹೇಳುತ್ತೀರಿ ಆದರೆ ಪರಸ್ಪರದಲ್ಲಿಯೂ ಪ್ರತಿಯೊಬ್ಬ ಬ್ರಾಹ್ಮಣ ಆತ್ಮ ಹಾಗೂ ಯಾರೇ ಅಪರಿಚಿತ ಅಜ್ಞಾನಿ ಆತ್ಮಗಳೂ ಸಹ ಸಂಬಂಧ-ಸಂಪರ್ಕದಲ್ಲಿ ಬಂದರೆ ತಂದೆಯ ಸಮಾನ ಪ್ರತೀ ಸಮಯ, ಪ್ರತಿಯೊಂದು ಆತ್ಮದ ಪ್ರತಿ ಹೃದಯದ ಖುಷಿಯ ಶುಭಾಷಯಗಳು ನಿಮ್ಮಿಂದ ಹೊರ ಬರಲಿ. ಯಾರು ಎಂತಹವರೇ ಆಗಿರಲಿ ಆದರೆ ತಮ್ಮ ಖುಷಿಯು ಶುಭಾಷಯಗಳು ಅವರಿಗೂ ಸಹ ಖುಷಿಯ ಪ್ರಾಪ್ತಿಯ ಅನುಭವ ಮಾಡಿಸಲಿ. ಶುಭಾಷಯಗಳನ್ನು ಕೊಡುವುದು, ಖುಷಿಯ ಲೇವಾದೇವಿ ಮಾಡುವುದಾಗಿದೆ. ಎಂದಾದರೂ ಯಾರಿಗೇ ಶುಭಾಷಯಗಳನ್ನು ಕೊಡುತ್ತೀರೆಂದರೆ ಅದು ಖುಷಿಯ ಶುಭಾಷಯವಾಗಿದೆ. ದುಃಖದ ಸಮಯದಲ್ಲಿ ಶುಭಾಷಯಗಳನ್ನು ಹೇಳುವುದಿಲ್ಲ ಅಂದಾಗ ಪ್ರತಿಯೊಂದು ಆತ್ಮನನ್ನು ನೋಡಿ ಖುಷಿಯಾಗುವುದು ಹಾಗೂ ಖುಷಿಯನ್ನು ಕೊಡುವುದೇ ಹೃದಯಪೂರ್ವಕ ಶುಭಾಷಯವಾಗಿದೆ. ಅನ್ಯ ಆತ್ಮನೂ ಭಲೆ ತಮ್ಮೊಂದಿಗೆ ಹೇಗಾದರೂ ವ್ಯವಹರಿಸಲಿ ಆದರೆ ತಾವು ಪ್ರತೀ ಸಮಯ ಬಾಪ್ದಾದಾರವರ ಶುಭಾಷಯಗಳನ್ನು ತೆಗೆದುಕೊಳ್ಳುವಂತಹ ಶ್ರೇಷ್ಠ ಆತ್ಮಗಳು ಸದಾ ಪ್ರತಿಯೊಬ್ಬರಿಗೆ ಖುಷಿಯನ್ನು ಕೊಡಿ, ಅವರು ಮುಳ್ಳುಗಳನ್ನೇ ಕೊಡಬಹುದು ಆದರೆ ತಾವು ಅದಕ್ಕೆ ಬದಲಾಗಿ ಆತ್ಮಿಕ ಗುಲಾಬಿಯನ್ನು ಕೊಡಿ. ಅವರು ದುಃಖವನ್ನೇ ಕೊಡಲಿ, ತಾವು ಸುಖದಾತನ ಮಕ್ಕಳು ಸುಖವನ್ನು ಕೊಡಿ. ಹೇಗಿದ್ದವರು ಹಾಗೆಯೇ ಇರಬೇಡಿ. ಅಜ್ಞಾನಿಗಳೊಂದಿಗೆ ಅಜ್ಞಾನಿಗಳಾಗಬೇಡಿ, ಸಂಸ್ಕಾರಗಳ ಹಾಗೂ ಸ್ವಭಾವಗಳ ವಶೀಭೂತ ಆತ್ಮನೊಂದಿಗೆ ತಾವೂ ‘ವಶೀಭೂತ’ರಾಗಬೇಡಿ.
ತಾವು ಶ್ರೇಷ್ಠಾತ್ಮಗಳ ಪ್ರತೀ ಸಂಕಲ್ಪದಲ್ಲಿ ಸರ್ವರ ಕಲ್ಯಾಣದ ಶ್ರೇಷ್ಠ ಪರಿವರ್ತನೆಯು `ವಶೀಭೂತ'ರಿಂದ ಸ್ವತಂತ್ರರನ್ನಾಗಿ ಮಾಡುವ ಹೃದಯದ ಆಶೀರ್ವಾದಗಳು ಹಾಗೂ ಖುಷಿಯ ಶುಭಾಷಯಗಳು ಸದಾ ಸ್ವಾಭಾವಿಕ ರೂಪದಲ್ಲಿ ಕಂಡು ಬರಲಿ. ಏಕೆಂದರೆ ತಾವೆಲ್ಲರೂ ದಾತ ಅರ್ಥಾತ್ ದೇವತೆಗಳಾಗಿದ್ದೀರಿ, ನೀಡುವವರಾಗಿದ್ದೀರಿ ಅಂದಾಗ ಈ ಹೊಸ ವರ್ಷದಲ್ಲಿ ವಿಶೇಷವಾಗಿ ಖುಷಿಯ ಶುಭಾಷಯಗಳನ್ನು ನೀಡುತ್ತಾ ಇರಿ. ಕೇವಲ ಇಂದಿನ ದಿನ ಹಾಗೂ ನಾಳೆಯ ದಿನ ನಡೆಯುತ್ತಾ-ತಿರುಗಾಡುತ್ತಾ ಶುಭಾಷಯಗಳು, ಶುಭಾಷಯಗಳು ಎಂದು ಹೇಳಿ ಹೊಸ ವರ್ಷವನ್ನು ಆರಂಭಿಸುವುದಲ್ಲ. ಶುಭಾಷಯಗಳೆಂದು ಭಲೆ ಹೇಳಿರಿ, ಹೃದಯದಿಂದ ಹೇಳಿರಿ ಆದರೆ ಇಡೀ ವರ್ಷ ಹೇಳುವುದು, ಕೇವಲ ಎರಡು ದಿನಗಳಲ್ಲ. ಯಾರಿಗಾದರೂ ಒಂದುವೇಳೆ ಹೃದಯದಿಂದ ಶುಭಾಷಯಗಳನ್ನು ಹೇಳುತ್ತೀರೆಂದರೆ ಆ ಆತ್ಮವು ಶುಭಾಷಯಗಳನ್ನು ಪಡೆದು ಬಹಳ ಖುಷಿಯಾಗಿ ಬಿಡುತ್ತದೆ. ಆದ್ದರಿಂದ ಸದಾ ದಿಲ್ಖುಷ್ ಮಿಠಾಯಿಯನ್ನು ಹಂಚುತ್ತಾ ಇರಿ. ಕೇವಲ ಒಂದು ದಿನ ಮಿಠಾಯಿಯನ್ನು ತಿನ್ನುವುದು ಹಾಗೂ ತಿನ್ನಿಸುವುದಲ್ಲ. ನಾಳೆಯ ದಿನವೂ ಮುಖದ ಮಿಠಾಯಿಯನ್ನು ಎಷ್ಟು ಬೇಕೋ ಅಷ್ಟು ತಿನ್ನಿರಿ ಮತ್ತು ಎಲ್ಲರಿಗೂ ಮಿಠಾಯಿಯನ್ನು ತಿನ್ನಿಸಿ. ಆದರೆ ಇದೇ ರೀತಿ ಸದಾ ಪ್ರತಿಯೊಬ್ಬರೂ ಹೃದಯದಿಂದ ಖುಷಿ ಪಡುತ್ತಿರಿ. ಎಷ್ಟು ಖುಷಿಯಾಗುವುದು? ಈಗಿನ ಪ್ರಪಂಚದಲ್ಲಾದರೆ ಸ್ಥೂಲ ಮಿಠಾಯಿಯನ್ನು ತಿನ್ನುವುದಕ್ಕೂ ಭಯವಿದೆ ಆದರೆ ಈ ದಿಲ್ಖುಷ್ ಮಿಠಾಯಿಯನ್ನು ಎಷ್ಟು ಬೇಕೋ ಅಷ್ಟು ತಿನ್ನಬಹುದು, ತಿನ್ನಿಸಬಹುದು. ಇದರಿಂದ ಖಾಯಿಲೆಯು ಬರುವುದಿಲ್ಲ ಏಕೆಂದರೆ ಬಾಪ್ದಾದಾ ಮಕ್ಕಳನ್ನು ಸಮಾನರನ್ನಾಗಿ ಮಾಡುತ್ತಾರೆ. ಅಂದಾಗ ಈ ವರ್ಷದಲ್ಲಿ ತಂದೆಯ ಸಮಾನರಾಗುವ ಇದೇ ವಿಶೇಷತೆಯನ್ನು ವಿಶ್ವದ ಮುಂದೆ, ಬ್ರಾಹ್ಮಣ ಪರಿವಾರದ ಮುಂದೆ ತೋರಿಸಿ. ಹೇಗೆ ಪ್ರತಿಯೊಂದು ಆತ್ಮನು `ಬಾಬಾ' ಎಂದು ಹೇಳುತ್ತಾ ಮಧುರತೆ ಹಾಗೂ ಖುಷಿಯ ಅನುಭವ ಮಾಡುತ್ತಾರೆ. `ವಾಹ್ ಬಾಬಾ' ಎಂದು ಹೇಳುವುದರಿಂದ ಬಾಯಿ ಮಧುರವಾಗುತ್ತದೆ ಏಕೆಂದರೆ ಪ್ರಾಪ್ತಿಯಾಗುತ್ತದೆ. ಹೇಗೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಯಾವುದೇ ಬ್ರಾಹ್ಮಣರ ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಖುಷಿಯಾಗಲಿ ಏಕೆಂದರೆ ತಂದೆಯ ಸಮಾನ ತಾವೆಲ್ಲರೂ ಒಬ್ಬರು ಇನ್ನೊಬ್ಬರಿಗೆ ತಂದೆಯ ಮೂಲಕ ಪ್ರಾಪ್ತಿಯಾಗಿರುವ ವಿಶೇಷತೆಯ ಮೂಲಕ ಪರಸ್ಪರ ವ್ಯವಹಾರ ಮಾಡುತ್ತೀರಿ, ಪರಸ್ಪರ ಒಬ್ಬರು ಇನ್ನೊಬ್ಬರ ಸಹಯೋಗಿಗಳಾಗಿ, ಸಂಗಾತಿಯಾಗಿ ಉನ್ನತಿಯನ್ನು ಪ್ರಾಪ್ತಿ ಮಾಡಿಸುತ್ತೀರಿ. ಜೀವನದ ಸಂಗಾತಿ ಆಗಬಾರದು ಆದರೆ ಕಾರ್ಯದ ಜೊತೆಗಾರರು ಭಲೆ ಆಗಿ, ಪ್ರತಿಯೊಂದು ಆತ್ಮನು ತನ್ನ ಪ್ರಾಪ್ತಿಯಾಗಿರುವ ವಿಶೇಷತೆಗಳಿಂದ ಪರಸ್ಪರ ಖುಷಿಯ ಲೇವಾದೇವಿಯನ್ನೂ ಮಾಡುತ್ತೀರಿ ಮತ್ತು ಸದಾ ಮುಂದುವರೆಸುತ್ತಾ ಇರಿ. ಹೇಗೆ ತಂದೆಯನ್ನು ನೆನಪು ಮಾಡುತ್ತಿದ್ದಂತೆಯೇ ಖುಷಿಯಲ್ಲಿ ನರ್ತಿಸುತ್ತಿರಿ ಹಾಗೆಯೇ ಪ್ರತಿಯೊಬ್ಬ ಬ್ರಾಹ್ಮಣನು ನೆನಪು ಮಾಡುತ್ತಾ ಆತ್ಮಿಕ ಖುಷಿಯ ಅನುಭವ ಮಾಡಲಿ, ಹದ್ದಿನ ಖುಷಿಯಲ್ಲ. ಸದಾ ತಂದೆಯ ಸರ್ವ ಪ್ರಾಪ್ತಿಗಳ ಸಾಕಾರ ನಿಮಿತ್ತ ರೂಪವೆಂದು ಅನುಭವ ಮಾಡಿರಿ. ಇದಕ್ಕೆ ಪ್ರತೀ ಸಂಕಲ್ಪ ಹಾಗೂ ಪ್ರತೀ ಸಮಯ ಒಬ್ಬರು ಇನ್ನೊಬ್ಬರಿಗೆ ಶುಭಾಷಯಗಳನ್ನು ಕೊಡುವುದಾಗಿದೆ ಎಂದು ಹೇಳಲಾಗುತ್ತದೆ. ತಂದೆಯ ಸಮಾನ ಆಗಲೇಬೇಕೆಂದು ಎಲ್ಲರ ಲಕ್ಷ್ಯವು ಒಂದೇ ಆಗಿದೆ ಏಕೆಂದರೆ ಸಮಾನರಾಗದೆ ತಂದೆಯ ಜೊತೆ ಮಧುರ ಮನೆಗೂ ಹೋಗುವುದಿಲ್ಲ ಮತ್ತು ಬ್ರಹ್ಮಾ ತಂದೆಯ ಜೊತೆ ರಾಜ್ಯದಲ್ಲಿಯೂ ಬರುವುದಿಲ್ಲ. ಯಾರು ಬಾಪ್ದಾದಾರವರ ಜೊತೆ ತನ್ನ ಮನೆಗೆ ಹೋಗುವರೋ ಅವರೇ ಬ್ರಹ್ಮಾ ತಂದೆಯ ಜೊತೆ ರಾಜ್ಯದಲ್ಲಿ ಬರುತ್ತಾರೆ. ಮೇಲಿನಿಂದ ಕೆಳಗೆ ಬರುತ್ತಾರಲ್ಲವೆ. ಕೇವಲ ಜೊತೆ ಹೋಗುವುದಲ್ಲ, ಸತ್ಯಯುಗದಲ್ಲಿಯೂ ಜೊತೆಯಲ್ಲಿಯೇ ಬರುವರು. ಬ್ರಹ್ಮಾ ತಂದೆಯ ಜೊತೆಯಲ್ಲಿಯೇ ಪೂಜ್ಯರೂ ಆಗುವರು ಮತ್ತು ಪೂಜಾರಿಗಳೂ ಸಹ ಬ್ರಹ್ಮಾ ತಂದೆಯ ಜೊತೆಯಲ್ಲಿಯೇ ಆಗುತ್ತಾರೆ ಅಂದಾಗ ಅನೇಕ ಜನ್ಮಗಳ ಜೊತೆಯಾಗಿ ಇರಿ ಆದರೂ ಅದಕ್ಕೆ ಆಧಾರವು ಈ ಸಮಯದಲ್ಲಿ ಸಮಾನರಾಗಿ ಜೊತೆ ನಡೆಯುವುದಾಗಿದೆ.
ಈ ವರ್ಷದ ವಿಶೇಷತೆಯನ್ನೂ ನೋಡಿ, ಸಂಖ್ಯೆಯೂ ಸಹ 8,8 (88ನೇ ಇಸವಿ) ಎಂದಾಗಿದೆ. 8ಕ್ಕೆ ಎಷ್ಟೊಂದು ಮಹತ್ವಿಕೆಯಿದೆ. ಒಂದುವೇಳೆ ತಮ್ಮ ಪೂಜ್ಯ ರೂಪವನ್ನು ನೋಡಿದಾಗ ಅಷ್ಟ ಭುಜಧಾರಿಗಳು, ಅಷ್ಟ ಶಕ್ತಿಗಳು ಅವರದೇ ನೆನಪಾರ್ಥವಾಗಿದೆ – ಅಷ್ಟ ರತ್ನಗಳು, ಅಷ್ಟ ರಾಜಧಾನಿಗಳು. ಎಂಟಕ್ಕೆ ಭಿನ್ನ-ಭಿನ್ನರೂಪದಿಂದ ಗಾಯನವಿದೆ. ಆದ್ದರಿಂದ ಈ ವರ್ಷವನ್ನು ತಂದೆಯ ಸಮಾನರಾಗುವ ಧೃಡ ಸಂಕಲ್ಪದ ವರ್ಷವನ್ನಾಗಿ ಆಚರಿಸಿ, ಏನೇ ಕರ್ಮ ಮಾಡಿದರೂ ತಂದೆಯ ಸಮಾನ ಮಾಡಿ. ಸಂಕಲ್ಪ ಮಾಡಿ, ಮಾತನಾಡಿ, ಸಂಬಂಧ-ಸಂಪರ್ಕದಲ್ಲಿ ಬನ್ನಿ. ಎಲ್ಲವೂ ತಂದೆಯ ಸಮಾನವಿರಲಿ, ಬ್ರಹ್ಮಾ ತಂದೆಯ ಸಮಾನರಾಗುವುದು ಸಹಜವಲ್ಲವೆ ಏಕೆಂದರೆ ಸಾಕಾರಿಯಾಗಿದ್ದಾರೆ. 84 ಜನ್ಮಗಳನ್ನು ಪಡೆಯುವ ಆತ್ಮನಾಗಿದ್ದಾರೆ. ಪೂಜ್ಯ ಅಥವಾ ಪೂಜಾರಿ ಎಲ್ಲರ ಅನುಭವೀ ಆತ್ಮನಾಗಿದ್ದಾರೆ. ಹಳೆಯ ಪ್ರಪಂಚ, ಹಳೆಯ ಸಂಸ್ಕಾರ, ಹಳೆಯ ಲೆಕ್ಕಾಚಾರ, ಸಂಘಟನೆಯಲ್ಲಿ ನಡೆಯುವ ಮತ್ತು ನಡೆಸುವ ಎಲ್ಲಾ ಮಾತುಗಳ ಅನುಭವಿಯಾಗಿದ್ದಾರೆ. ಅಂದಮೇಲೆ ಅನುಭವಿಯನ್ನು ಅನುಸರಿಸುವುದು ಕಷ್ಟವಾಗುವುದಿಲ್ಲ ಮತ್ತು ತಂದೆಯಂತೂ ತಿಳಿಸುತ್ತಾರೆ – ಬ್ರಹ್ಮಾ ತಂದೆಯ ಪ್ರತೀ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡಿ, ಹೊಸ ಮಾರ್ಗವನ್ನು ಹಿಡಿಯುವಂತಿಲ್ಲ. ಕೇವಲ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡಬೇಕಾಗಿದೆ. ಬ್ರಹ್ಮಾ ತಂದೆಯನ್ನು ಕಾಪಿ ಮಾಡಿ. ಇಷ್ಟಾದರೂ ಬುದ್ಧಿಯಿದೆಯಲ್ಲವೆ. ಕೇವಲ ಮಿಲನ ಮಾಡಿಸುತ್ತಾ ಹೋಗಿ ಏಕೆಂದರೆ ಬಾಪ್ದಾದಾ ಇಬ್ಬರೂ ಸಹ ತಮ್ಮ ಜೊತೆ ನಡೆಯುವುದಕ್ಕಾಗಿ ನಿಂತಿದ್ದಾರೆ. ನಿರಾಕಾರ ತಂದೆಯು ಪರಮಧಾಮ ನಿವಾಸಿಯಾಗಿದಾರೆ. ಸಂಗಮದಲ್ಲಿ ಸಾಕಾರ ತಂದೆಯ ಮೂಲಕ ಪಾತ್ರವನ್ನು ಅಭಿನಯಿಸಬೇಕಾಗುತ್ತದೆಯಲ್ಲವೆ. ಆದ್ದರಿಂದ ತಮ್ಮ ಈ ಕಲ್ಪದ ಪಾತ್ರವು ಸಮಾಪ್ತಿಯಾಗುವ ಜೊತೆಗೆ ಬಾಪ್ದಾದಾ ಇಬ್ಬರದು ಈ ಕಲ್ಪದ ಪಾತ್ರವು ಸಮಾಪ್ತಿಯಾಗುವುದು. ಪುನಃ ಕಲ್ಪವು ಪುನರಾವರ್ತನೆ ಆಗುವುದು ಆದ್ದರಿಂದ ನಿರಾಕಾರ ತಂದೆಯೂ ಸಹ ತಾವು ಮಕ್ಕಳ ಪಾತ್ರದ ಜೊತೆ ಬಂಧಿತರಾಗಿದ್ದಾರೆ. ಇದು ಶುದ್ಧಬಂಧನವಾಗಿದೆ ಆದರೆ ಪಾತ್ರದ ಬಂಧನವಂತೂ ಇದೆಯಲ್ಲವೆ. ಸ್ನೇಹದ ಬಂಧನ, ಸೇವೆಯ ಬಂಧನ... ಆದರೆ ಮಧುರ ಬಂಧನವಾಗಿದೆ, ಕರ್ಮ ಭೋಗದ ಬಂಧನವಲ್ಲ.
ಅಂದಾಗ ಹೊಸ ವರ್ಷವು ಸದಾ ಶುಭಾಷಯಗಳ ವರ್ಷವಾಗಿದೆ. ಹೊಸ ವರ್ಷವು ಸದಾ ತಂದೆಯ ಸಮಾನರಾಗುವ ವರ್ಷವಾಗಿದೆ ಮತ್ತು ಬ್ರಹ್ಮಾ ತಂದೆಯನ್ನು ಫಾಲೋ ಮಾಡುವ ವರ್ಷವಾಗಿದೆ. ಹೊಸ ವರ್ಷವು ತಂದೆಯ ಜೊತೆ ಮಧುರ ಮನೆ ಮತ್ತು ಮಧುರ ರಾಜಧಾನಿಯಲ್ಲಿ ಜೊತೆಯಿರುವ ವರದಾನವನ್ನು ಪ್ರಾಪ್ತಿ ಮಾಡಿಕೊಳ್ಳುವ ವರ್ಷವಾಗಿದೆ ಏಕೆಂದರೆ ಈಗಿನಿಂದ ಸದಾ ಜೊತೆಯಿರುತ್ತೀರಿ. ಈಗ ಜೊತೆಯಿರುವುದೇ ಸದಾ ಜೊತೆಯಲ್ಲಿರುವ ವರದಾನವಾಗಿದೆ. ಇಲ್ಲವಾದರೆ ದಿಬ್ಬಣಿಗ (ಮೆರವಣಿಗೆಯಲ್ಲಿ ಹಿಂದೆ ಬರುವವರು) ರಾಗುತ್ತೀರಿ ಮತ್ತು ಸಮೀಪದ ಸಂಬಂಧಿಯಾಗುವ ಬದಲು ದೂರದ ಸಂಬಂಧಿಯಾಗುತ್ತೀರಿ. ಸತ್ಯಯುಗದಲ್ಲಿ ಕೆಲಕೆಲವೊಮ್ಮೆ ಮಿಲನ ಮಾಡುತ್ತೀರಿ. ಅಂದಾಗ ಕೆಲಕೆಲವೊಮ್ಮೆ ಮಿಲನ ಮಾಡುವವರಲ್ಲ ತಾನೆ? ಮೊದಲ ಜನ್ಮದಲ್ಲಿ ಮೊದಲ ರಾಜ್ಯದ ಸುಖ ಮತ್ತು ಮೊದಲ ನಂಬರಿನ ರಾಜ್ಯಾಧಿಕಾರಿ ವಿಶ್ವ ಮಹಾರಾಜ - ವಿಶ್ವ ಮಹಾರಾಣಿಯ ರಾಯಲ್ ಸಂಬಂಧ, ಅವರ ಹೊಳಪು ಮತ್ತು ಕಾಂತಿಯು ಭಿನ್ನವಾಗಿರುವುದು! ಒಂದುವೇಳೆ ಎರಡನೇ ನಂಬರಿನ ವಿಶ್ವ ಮಹಾರಾಜ-ಮಹಾರಾಣಿಯ ರಾಯಲ್ ಪರಿವಾರದಲ್ಲಿ ಬಂದರೂ ಸಹ ಅದರಲ್ಲಿ ಅಂತರವಿರುತ್ತದೆ. ಒಂದು ಜನ್ಮದ ಅಂತರವಾಗಿ ಬಿಡುತ್ತದೆ, ಆದ್ದರಿಂದ ಇದಕ್ಕೂ ಜೊತೆಯೆಂದು ಹೇಳುವುದಿಲ್ಲ. ಯಾವುದೇ ಹೊಸ ವಸ್ತುವನ್ನು ಒಂದು ಬಾರಿ ಉಪಯೋಗಿಸಿದರೂ ಸಹ ಬಳಸಿರುವ ವಸ್ತುವೆಂದೇ ಹೇಳುತ್ತಾರೆ, ಹೊಸದೆಂದು ಹೇಳುವುದಿಲ್ಲ. ಜೊತೆಯಲ್ಲಿ ಹೋಗಬೇಕಾಗಿದೆ, ಜೊತೆಯಲ್ಲಿ ಬರಬೇಕಾಗಿದೆ. ಜೊತೆಯಲ್ಲಿ ಮೊದಲ ಜನ್ಮದ ರಾಜ್ಯಭಾರವನ್ನು ರಾಯಲ್ ಫ್ಯಾಮಿಲಿಯವರಾಗಿ ಮಾಡಬೇಕಾಗಿದೆ. ಇದಕ್ಕೇ ಸಮಾನರಾಗುವುದೆಂದು ಹೇಳುತ್ತಾರೆ ಅಂದಾಗ ಏನು ಮಾಡಬೇಕು, ಸಮಾನರಾಗಬೇಕೋ ಅಥವಾ ದಿಬ್ಬಣಿಗರಾಗಬೇಕೋ?
ಬಾಪ್ದಾದಾ ಅಜ್ಞಾನಿ ಮತ್ತು ಜ್ಞಾನಿಗಳಲ್ಲಿ ಒಂದು ಅಂತರವನ್ನು ನೋಡುತ್ತಿದ್ದರು. ಒಂದು ದೃಶ್ಯದ ರೂಪದಲ್ಲಿ ನೋಡುತ್ತಿದ್ದರು, ತಂದೆಯ ಮಕ್ಕಳು ಹೇಗಿದ್ದಾರೆ ಮತ್ತು ಅಜ್ಞಾನಿಗಳು ಹೇಗಿದ್ದಾರೆ? ಇಂದಿನ ಪ್ರಪಂಚದಲ್ಲಿ ವಿಕಾರಿ ಆತ್ಮಗಳು ಏನಾಗಿ ಬಿಟ್ಟಿದ್ದಾರೆ? ಹೇಗೆ ಇತ್ತೀಚೆಗೆ ಯಾವುದಾದರೂ ದೊಡ್ಡ ಕಾರ್ಖಾನೆ ಅಥವಾ ಎಲ್ಲಿಯಾದರೂ ಬೆಂಕಿಯು ಹತ್ತಿಕೊಂಡರೆ ಅದರ ಹೊಗೆಯು ಹೊರ ಹೋಗಲು ಹೊಗೆ ನಳಿಕೆಯನ್ನು ಕಟ್ಟಿಸುತ್ತಾರಲ್ಲವೆ. ಅದರಿಂದ ಸದಾ ಹೊಗೆಯು ಹೊರ ಹೋಗುತ್ತಲೇ ಇರುತ್ತದೆ ಮತ್ತು ಸದಾ ಕಪ್ಪಾಗಿ ಕಾಣಿಸುತ್ತದೆ. ಹಾಗೆಯೇ ಇಂದಿನ ಮಾನವರು ವಿಕಾರಿಗಳಾಗಿರುವ ಕಾರಣ ಯಾವುದಾದರೊಂದು ವಿಕಾರಕ್ಕೆ ವಶರಾಗುವ ಕಾರಣ ಸಂಕಲ್ಪದಲ್ಲಿ, ಮಾತಿನಲ್ಲಿ ಈರ್ಷ್ಯೆ, ತಿರಸ್ಕಾರ, ಅಥವಾ ಯಾವುದಾದರೊಂದು ವಿಕಾರದ ಹೊಗೆಯನ್ನು ಉಗುಳುತ್ತಿರುತ್ತಾರೆ. ಕಣ್ಣುಗಳಿಂದಲೂ ವಿಕಾರಗಳ ಹೊಗೆ ಹೊರ ಬರುತ್ತಿರುತ್ತದೆ ಮತ್ತು ಜ್ಞಾನಿ ಮಕ್ಕಳ ಪ್ರತೀ ಮಾತು ಮತ್ತು ಸಂಕಲ್ಪದಿಂದ ಫರಿಶ್ತಾತನದಿಂದ ಆಶೀರ್ವಾದಗಳು ಹೊರ ಬರುತ್ತದೆ. ಅವರದು ವಿಕಾರಗಳ ಬೆಂಕಿಯ ಹೊಗೆ ಹಾಗೂ ಜ್ಞಾನಿ ಆತ್ಮಗಳ ಫರಿಶ್ತಾ ರೂಪದಿಂದ ಸದಾ ಆಶೀರ್ವಾದಗಳು ಹೊರ ಬರುತ್ತವೆ. ಎಂದೂ ಸಂಕಲ್ಪದಲ್ಲಿಯೂ ಸಹ ಯಾವುದೇ ವಿಕಾರಕ್ಕೆ ವಶರಾಗಿ ವಿಕಾರದ ಅಗ್ನಿಯ ಹೊಗೆಯನ್ನು ಉಗುಳಬಾರದು. ಸದಾ ಆಶೀರ್ವಾದಗಳೇ ಬರಲಿ. ಅಂದಾಗ ಪರಿಶೀಲನೆ ಮಾಡಿಕೊಳಿ - ಎಂದೂ ಆಶೀರ್ವಾದಗಳಿಗೆ ಬದಲು ಹೊಗೆಯಂತೂ ಬರುವುದಿಲ್ಲವೆ? ಫರಿಶ್ತೆಗಳೆಂದರೆ ಆಶೀರ್ವಾದಗಳ ಸ್ವರೂಪರು. ಯಾವಾಗ ಯಾವುದೇ ಇಂತಹ ಸಂಕಲ್ಪ ಅಥವಾ ಮಾತು ಹೊರ ಬಂದರೆ ಈ ದೃಶ್ಯವನ್ನು ಸನ್ಮುಖದಲ್ಲಿ ತಂದುಕೊಳ್ಳಿ. ನಾನು ಏನಾಗಿ ಬಿಟ್ಟೆನು, ಫರಿಶ್ತೆಯಿಂದ ಬದಲಾಗಿಲ್ಲವೆ? ವ್ಯರ್ಥ ಸಂಕಲ್ಪಗಳದೂ ಸಹ ಹೊಗೆಯಾಗಿದೆ. ವಿಕಾರಗಳದು ಉರಿಯುತ್ತಿರುವ ಬೆಂಕಿಯ ಹೊಗೆಯಾಗಿದೆ ಮತ್ತು ವ್ಯರ್ಥ ಸಂಕಲ್ಪಗಳದು ಬೆಂಕಿಯು ಅರ್ಧ ಆರಿರುವ ಹೊಗೆಯಾಗಿದೆ. ಬೆಂಕಿಯು ಪೂರ್ಣ ನಂದಿ ಹೋಗದಿದ್ದರೂ ಸಹ ಹೊಗೆಯು ಬರುತ್ತದೆಯಲ್ಲವೆ ಅಂದಾಗ ಅದೇರೀತಿ ಫರಿಶ್ತಾ ರೂಪವಿರಲಿ. ಅವರಿಂದ ಸದಾ ಆಶೀರ್ವಾದಗಳೇ ಹೊರಡುತ್ತಿರಲಿ. ಇದಕ್ಕೆ ಮಾll ದಯಾಳು, ಕೃಪಾಳು, ಕರುಣಾಳುವೆಂದು ಹೇಳಲಾಗುತ್ತದೆ. ಈಗ ಈ ಪಾತ್ರವನ್ನು ಅಭಿನಯಿಸಿ, ತನ್ನ ಮೇಲೂ ಕೃಪೆ ಮಾಡಿಕೊಳ್ಳಿ ಮತ್ತು ಅನ್ಯರ ಮೇಲೂ ಕೃಪೆ ತೋರಿ. ಏನನ್ನು ನೋಡಿದಿರೋ, ಕೇಳಿದಿರೋ ಅದನ್ನು ವರ್ಣನೆ ಮಾಡಬೇಡಿ, ಆಲೋಚಿಸಬೇಡಿ. ವ್ಯರ್ಥವನ್ನು ಆಲೋಚಿಸದಿರುವುದು, ನೋಡದಿರುವುದೇ ತನ್ನ ಮೇಲೆ ಕೃಪೆ ಮಾಡಿಕೊಳ್ಳುವುದಾಗಿದೆ ಮತ್ತು ಯಾರು ಮಾಡಿದರು ಅಥವಾ ಹೇಳಿದರು ಅವರ ಪ್ರತಿಯೂ ಸಹ ಸದಾ ದಯೆ ತೋರಿಸಿ, ಕೃಪೆ ಮಾಡಿ ಅರ್ಥಾತ್ ಏನು ವ್ಯರ್ಥವನ್ನು ಕೇಳಿದಿರಿ, ನೋಡಿದಿರಿ, ಆ ಆತ್ಮನ ಪ್ರತಿಯೂ ಶುಭ ಭಾವನೆ, ಶುಭ ಕಾಮನೆಯ ಕೃಪೆಯನ್ನು ತೋರಿ. ಮತ್ತ್ಯಾವುದೇ ಕೃಪೆಯನ್ನು ಹಾಗೂ ಯಾವುದೇ ಕೈಯಿಂದ ವರದಾನವನ್ನು ಕೊಡುವುದಲ್ಲ. ಆದರೆ ಅವರ ಪ್ರತಿ ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು, ಇದೇ ಆ ಆತ್ಮನ ಪ್ರತಿ ಕೃಪೆ ತೋರುವುದಾಗಿದೆ. ಒಂದುವೇಳೆ ಯಾವುದೇ ವ್ಯರ್ಥ ಮಾತು ನೋಡಿರುವುದನ್ನು ಅಥವಾ ಕೇಳಿರುವುದನ್ನು ವರ್ಣನೆ ಮಾಡುತ್ತೀರಿ ಅರ್ಥಾತ್ ವ್ಯರ್ಥ ಬೀಜದ ವೃಕ್ಷವನ್ನು ಬೆಳೆಸುತ್ತೀರಿ, ವಾಯುಮಂಡಲದಲ್ಲಿ ಹರಡುತ್ತೀರೆಂದರೆ ಇದು ವೃಕ್ಷವಾಗಿ ಬಿಡುತ್ತದೆ, ಏಕೆಂದರೆ ಒಬ್ಬರು ಯಾರದೇ ಕೆಟ್ಟದ್ದನ್ನು ಕೇಳುತ್ತಾರೆ ಹಾಗೂ ನೋಡುತ್ತಾರೆಂದರೆ ಕೇವಲ ಅವರೊಬ್ಬರ ಮನಸ್ಸಿನಲ್ಲಿಯೇ ಇಟ್ಟುಕೊಳ್ಳುವುದಿಲ್ಲ, ಖಂಡಿತವಾಗಿ ಅನ್ಯರಿಗೂ ತಿಳಿಸುವರು, ವರ್ಣನೆ ಮಾಡುವರು. ಹೀಗೆ ಒಬ್ಬರಿಂದ ಇನ್ನೊಬ್ಬರಿಗೆ ಹೋದರೆ ಏನಾಗುವುದು? ಒಬ್ಬರಿಂದ ಅನೇಕರಿಗೆ ಹರಡುವುದು ಮತ್ತು ಯಾವಾಗ ಒಬ್ಬರಿಂದ ಇನ್ನೊಬ್ಬರು, ಇನ್ನೊಬ್ಬರಿಂದ ಮತ್ತೊಬ್ಬರು - ಹೀಗೆ ಮಾಲೆ ಆಗಿ ಬಿಡುತ್ತದೆಯೋ ಆಗ ಯಾರು ಮಾಡುವವರಾಗಿರುತ್ತಾರೆಯೋ ಅವರು ಇನ್ನೂ ಸ್ಪಷ್ಟ ಮಾಡಲು ಜಿದ್ದಿನಲ್ಲಿ ಬಂದು ಬಿಡುತ್ತಾರೆ. ಆಗ ವಾಯುಮಂಡಲದಲ್ಲಿ ಏನು ಹರಡಿತು? ವ್ಯರ್ಥ. ಈ ಹೊಗೆ ಹರಡಿತಲ್ಲವೆ. ಇದು ಆಶೀರ್ವಾದವೋ ಅಥವಾ ಕೃಪೆಯೋ? ಆದ್ದರಿಂದ ವ್ಯರ್ಥವನ್ನು ನೋಡುತ್ತಾ, ಕೇಳುತ್ತಿದ್ದರೂ ಸ್ನೇಹದಿಂದ-ಶುಭ ಭಾವನೆಯಿಂದ ಸಮಾವೇಶ ಮಾಡಿಕೊಳ್ಳಿ, ವಿಸ್ತಾರ ಮಾಡಬೇಡಿ. ಇದಕ್ಕೆ ಅನ್ಯರ ಮೇಲೆ ಕೃಪೆ ತೋರುವುದು ಅರ್ಥಾತ್ ಆಶೀರ್ವಾದ ಮಾಡುವುದೆಂದು ಹೇಳುತ್ತಾರೆ. ಆದ್ದರಿಂದ ಸಮಾನರಾಗಿ ಜೊತೆಯಲ್ಲಿ ಹೋಗುವ ಮತ್ತು ಜೊತೆಯಲ್ಲಿರುವ ತಯಾರಿ ಮಾಡಿಕೊಳ್ಳಿ. ಈಗಂತು ಇಲ್ಲಿಯೇ ಇರುವುದು ಸರಿ, ಜೊತೆಯಲ್ಲಿ ಹೋಗಲು ಈಗಲೇ ತಯಾರಿ ಮಾಡಿಕೊಳ್ಳುವುದು ಬೇಡ. ಇನ್ನೂ ಸ್ವಲ್ಪ ತಡೆಯೋಣವೆಂದು ತಿಳಿಯುವುದಿಲ್ಲತಾನೆ. ನಿಲ್ಲಲು ಬಯಸುವಿರಾ? ನಿಂತರೂ ಸಹ ತಂದೆಯ ಸಮಾನರಾಗಿ ನಿಲ್ಲಿರಿ. ಹಾಗೆಯೇ ನಿಲ್ಲಬೇಡಿ, ತಂದೆಯ ಸಮಾನರಾಗಿ ನಿಲ್ಲಿರಿ. ನಂತರ ಭಲೆ ನಿಲ್ಲಿರಿ, ಅದಕ್ಕೆ ಅನುಮತಿಯಿದೆ. ತಾವಂತೂ ಎವರೆಡಿಯಲ್ಲವೆ. ಸೇವೆಯು ತಡೆಯುತ್ತದೆ, ಅಥವಾ ನಾಟಕವು ತಡೆಯುತ್ತದೆಯೆಂದರೆ ಅದು ಬೇರೆ ಮಾತು. ಆದರೆ ತಮ್ಮ ಕಾರಣದಿಂದ ನಿಲ್ಲುವವರಾಗಬೇಡಿ. ಕರ್ಮ ಬಂಧನಕ್ಕೆ ವಶರಾಗಿ ನಿಲ್ಲುವವರಲ್ಲ. ಕರ್ಮಗಳ ಲೆಕ್ಕಾಚಾರದ ಪುಸ್ತಕವು ಸ್ವಚ್ಛ ಮತ್ತು ಸ್ಪಷ್ಟವಾಗಿರಲಿ. ತಿಳಿಯಿತೆ?
ನಾಲ್ಕಾರು ಕಡೆಯ ಸರ್ವ ಮಕ್ಕಳಿಗೆ ಹೊಸ ವರ್ಷದ ಮಹಾನತೆಯಿಂದ ಮಹಾನರಾಗುವ ಶುಭಾಷಯಗಳು ಸದಾ ಜೊತೆಯಿರಲಿ, ಸದಾ ಸರ್ವ ಸಾಹಸವಂತರು, ಫಾಲೋ ಫಾದರ್ ಮಾಡುವವರು, ಸದಾ ಒಬ್ಬರು ಇನ್ನೊಬ್ಬರಿಗೆ ದಿಲ್ಖುಷ್ ಮಿಠಾಯಿಯನ್ನು ತಿನ್ನಿಸುವವರು, ಸದಾ ಫರಿಶ್ತೆಯಾಗಿ ಆಶೀರ್ವಾದಗಳನ್ನು ಕೊಡುವವರು, ಇಂತಹ ತಂದೆಯ ಸಮಾನ ದಯಾಳು, ಕೃಪಾಳು ಮಕ್ಕಳಿಗೆ ಸಮಾನರಾಗುವ ಶುಭಾಷಯಗಳು ಜೊತೆ ಜೊತೆಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ತಮ್ಮನ್ನು ಸದಾ ಸಂಗಮಯುಗಿ ಶ್ರೇಷ್ಠ ಆತ್ಮರೆಂದು ಅನುಭವ ಮಾಡುತ್ತೀರಾ? ಶ್ರೇಷ್ಠ ಆತ್ಮರ ಪ್ರತಿಯೊಂದು ಸಂಕಲ್ಪ ಅಥವಾ ಮಾತು ಅಥವಾ ಪ್ರತೀ ಕರ್ಮವು ಸ್ವತಹವಾಗಿಯೇ ಶ್ರೇಷ್ಠವಾಗಿರುತ್ತದೆ. ಹಾಗಾದರೆ ಪ್ರತಿಯೊಂದು ಕರ್ಮವು ಶ್ರೇಷ್ಠವಾಗಿದೆ ಅಲ್ಲವೇ? ಯಾರು ಹೇಗಿರುತ್ತಾರೆಯೋ ಅವರಿಂದ ಅಂತಹ ಕಾರ್ಯವೇ ಆಗುತ್ತದೆ. ಅಂದಮೇಲೆ ಶ್ರೇಷ್ಠಾತ್ಮರ ಕರ್ಮವೂ ಶ್ರೇಷ್ಠವಾಗಿರುತ್ತದೆ. ಸ್ಮೃತಿಯಂತೆ ಸ್ವತಹವಾಗಿ ಸ್ಥಿತಿಯಾಗುತ್ತದೆ ಅಂದಮೇಲೆ ಶ್ರೇಷ್ಠ ಸ್ಥಿತಿಯು ಸ್ವಾಭಾವಿಕ ಸ್ಥಿತಿಯಾಗಿದೆ ಏಕೆಂದರೆ ತಾವು ಅವಶ್ಯವಾಗಿ ವಿಶೇಷ ಆತ್ಮರಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೀರೆಂದರೆ ತಂದೆಯಂತೆ ಮಕ್ಕಳಾಗಿದ್ದೀರಲ್ಲವೆ. ಮಕ್ಕಳಿಗಾಗಿ ಸದಾ ಹೇಳಲಾಗುತ್ತದೆ - ತಂದೆಯನ್ನು ಮಕ್ಕಳು ಪ್ರತ್ಯಕ್ಷ ಮಾಡುವರು. ಅಂದಾಗ ಇಂತಹ ಮಕ್ಕಳಾಗಿದ್ದೀರಾ? ತಮ್ಮೆಲ್ಲರ ಹೃದಯದಲ್ಲಿ ಯಾರು ಸಮಾವೇಶವಾಗಿದ್ದಾರೆ? ಯಾರು ಹೃದಯದಲ್ಲಿ ಇರುತ್ತಾರೆಯೋ ಅವರೇ ಬುದ್ಧಿಯಲ್ಲಿ ಇರುತ್ತಾರೆ, ಮಾತಿನಲ್ಲಿಯೂ ಅವರೇ ಇರುತ್ತಾರೆ, ಸಂಕಲ್ಪದಲ್ಲಿಯೂ ಇರುತ್ತಾರೆ. ತಾವು ಕಾರ್ಡನ್ನೂ ಹಾರ್ಟ್(ಹೃದಯದ ಚಿತ್ರಣ)ನದ್ದೇ ತರುತ್ತೀರಲ್ಲವೆ. ಉಡುಗೊರೆಯನ್ನೂ ಹಾರ್ಟ್ ಚಿತ್ರಣವಿರುವುದನ್ನೇ ಕಳುಹಿಸುತ್ತೀರಿ ಅಂದಮೇಲೆ ಇದು ತಮ್ಮ ಸ್ಥಿತಿಯ ಚಿತ್ರಣವನ್ನು ಕಳುಹಿಸಲಾಯಿತು. ಯಾರು ಸದಾ ತಂದೆಯ ಹೃದಯದಲ್ಲಿದ್ದಾರೆಯೋ ಅವರು ಸದಾ ಏನು ಮಾತನಾಡುತ್ತಾರೆ, ಏನು ಮಾಡುತ್ತಾರೆ ಅದು ಸ್ವತಹವಾಗಿಯೇ ತಂದೆಯ ಸಮಾನವಾಗಿ ಇರುತ್ತದೆ. ತಂದೆಯ ಸಮಾನರಾಗುವುದು ಕಷ್ಟವಿಲ್ಲ ಅಲ್ಲವೇ? ಕೇವಲ ಬಿಂದುವನ್ನು ನೆನಪಿಟ್ಟುಕೊಳ್ಳುತ್ತೀರೆಂದರೆ ಕಷ್ಟವು ಇಲ್ಲದಂತಾಗುತ್ತದೆ. ಬಿಂದುವನ್ನು ಮರೆಯುತ್ತೀರಿ ಕಷ್ಟವಾಗುತ್ತದೆ. ಬಿಂದುವನ್ನಿಡುವುದು ಎಷ್ಟೊಂದು ಸಹಜವಿದೆ, ಸಂಪೂರ್ಣ ಜ್ಞಾನವು ಈ ಒಂದು ಬಿಂದು ಶಬ್ಧದಲ್ಲಿಯೇ ಸಮಾವೇಶವಾಗಿದೆ. ತಾವೂ ಸಹ ಬಿಂದು, ತಂದೆಯೂ ಬಿಂದು ಮತ್ತು ಯಾವುದು ಆಗಿ ಹೋಯಿತು ಅದಕ್ಕೂ ಬಿಂದುವನ್ನಿಡಿ ಅಷ್ಟೇ. ಚಿಕ್ಕ ಮಕ್ಕಳು ಬರೆಯಲು ಆರಂಭಿಸಿದರೆ, ಪೆನ್ಸಿಲ್ನ್ನು ಕಾಗದದ ಮೇಲೆ ಇಡುತ್ತಿದ್ದಂತೆಯೇ ಯಾವ ಚಿತ್ರಣವಾಗುತ್ತದೆ? ಬಿಂದುವಾಗುತ್ತದೆ ಅಲ್ಲವೆ? ಇದೂ ಸಹ ಚಿಕ್ಕ ಮಕ್ಕಳ ಆಟವಾಗಿದೆ. ಸಂಪೂರ್ಣ ಜ್ಞಾನದ ವಿದ್ಯಾಭ್ಯಾಸವೇ ಆಟ-ಆಟದಲ್ಲಿಯೇ ಆಗಿ ಬಿಡುತ್ತದೆ, ಇದು ಕಷ್ಟದ ಕಾರ್ಯವಲ್ಲ. ಆದ್ದರಿಂದ ಕಾರ್ಯವೂ ಸಹಜವಿದೆ ಮತ್ತು ತಾವಾಗುವುದೂ ಸಹ ಸಹಜಯೋಗಿ. ಬೋರ್ಡ್ನಲ್ಲಿಯೂ “ಸಹಜ ರಾಜಯೋಗ” ಎಂದು ಬರೆಯುತ್ತೀರಿ ಅಂದಮೇಲೆ ಸಹಜವಾಗಿ ಅನುಭವ ಮಾಡಿಸುವುದಕ್ಕೇ ಜ್ಞಾನವೆಂದು ಹೇಳಲಾಗುತ್ತದೆ. ಯಾರು ಜ್ಞಾನ ಪೂರ್ಣರಾಗಿರುತ್ತಾರೆಯೋ ಅವರು ಸ್ವತಹವಾಗಿಯೇ ಶಕ್ತಿ ಸಂಪನ್ನರಾಗಿರುತ್ತಾರೆ. ಏಕೆಂದರೆ ಜ್ಞಾನವನ್ನು ಲೈಟ್ ಮತ್ತು ಮೈಟ್ ಎಂದು ಹೇಳಲಾಗುತ್ತದೆ. ಜ್ಞಾನಪೂರ್ಣ ಆತ್ಮರು ಸಹಜವಾಗಿಯೇ ಶಕ್ತಿ ಸಂಪನ್ನರು ಆಗಿರುವ ಕಾರಣದಿಂದ, ಪ್ರತೀ ಮಾತಿನಲ್ಲಿಯೂ ಸಹಜವಾಗಿ ಮುಂದುವರೆಯುತ್ತಾರೆ. ಹಾಗಾದರೆ ಇಡೀ ಗ್ರೂಪ್ ಸಹಜಯೋಗಿಗಳ ಗ್ರೂಪ್ ಆಗಿದೆಯಲ್ಲವೆ. ಇಂತಹ ಸಹಜ ಯೋಗಿಗಳೇ ಆಗಿರಬೇಕು. ಒಳ್ಳೆಯದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಶರೀರದ ಮೂಲಕ ಹೇಳುತ್ತೀರಿ. ನಾವು ಸಾಧು-ಸಂತರಿಗಾಗಿಯೇ ಸಾಯುತ್ತೇವೆ ಎಂದು ಯಾರೂ ಹೇಳುವುದಿಲ್ಲ. ಮಕ್ಕಳಿಗೆ ತಿಳಿದಿದೆ - ನಾವು ತಂದೆಯ ಜೊತೆ ಹೋಗಬೇಕಾಗಿದೆ, ಈ ಶರೀರವನ್ನು ಬಿಟ್ಟು ಬಿಡಬೇಕಾಗಿದೆ. ಆದ್ದರಿಂದ ಹೇಳುತ್ತಾರೆ - ಈ ಶರೀರವನ್ನು ಬಿಟ್ಟು ನಾವು ತಂದೆಯ ಜೊತೆ ಹೊರಟು ಹೋಗುತ್ತೇವೆ. ತಂದೆಯು ಕರೆದುಕೊಂಡು ಹೋಗುವುದಕ್ಕಾಗಿಯೇ ಬಂದಿದ್ದಾರೆ, ಇದು ಬಹಳ ತಿಳುವಳಿಕೆಯ ಮಾತಾಗಿದೆ. ನಾವು ಪತಿತರನ್ನು ಬಂದು ಪಾವನ ಮಾಡಿ ಎಂದು ಮಕ್ಕಳು ಕರೆಯುತ್ತಾರೆ ಅಂದಮೇಲೆ ಏನು ಮಾಡಲಿ? ಇಲ್ಲಿಯೇ ಬಿಟ್ಟು ಹೋಗುವುದಿಲ್ಲ, ಇಡೀ ಪ್ರಪಂಚವೇ ಪತಿತವಾಗಿದೆ, ಈ ಪತಿತ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿಯೇ ತಂದೆಯು ಬಂದಿದ್ದಾರೆ, ನಾವಾತ್ಮರನ್ನು ಜೊತೆ ಕರೆದುಕೊಂಡು ಹೋಗುತ್ತಾರೆ. ಇಡೀ ಪ್ರಪಂಚವು ವಿಕಾರಿಯಾಗಿದೆ ಎಂಬುದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ನೀವು ಯಾರಿಗಾದರೂ ವಿಕಾರಿ, ಪತಿತರೆಂದು ಹೇಳಿದರೆ ಕ್ರೋಧಿತರಾಗಿ ಬಿಡುವರು. ಮನುಷ್ಯರಿಗೆ ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ, ಒಬ್ಬ ತಂದೆಯ ಮಹಿಮೆ ಮಾಡಬೇಕಾಗಿದೆ. ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ, ಬಹಳ ತಿಳುವಳಿಕೆಯಿಂದ ಮಾತನಾಡಬೇಕಾಗಿದೆ. ಯಾರಾದರೂ ಬಹಳ ಪ್ರಶ್ನೋತ್ತರ ಮಾಡಿದರೆ ಹೇಳಿರಿ - ನಾವಿನ್ನೂ ಕಚ್ಚಾ ಆಗಿದ್ದೇವೆ, ನಮ್ಮ ಹಿರಿಯ ಸಹೋದರಿಯು ಬಂದು ನಿಮಗೆ ಉತ್ತರ ನೀಡುವರು.
ನೀವು ಹೇಳುತ್ತೀರಿ, ಶಿವ ತಂದೆಯು ತಿಳಿಸುತ್ತಾರೆ - ಭಗವಾನುವಾಚ, ಮನುಷ್ಯರೆಲ್ಲರೂ ಪತಿತರಾಗಿದ್ದಾರೆ, ಪತಿತರು ಭಗವಂತನಾಗಲು ಸಾಧ್ಯವಿಲ್ಲ. ಪತಿತ-ಪಾವನನನ್ನು ಕರೆಯುತ್ತಾರೆ ಏಕೆಂದರೆ ಪತಿತರಾಗಿದ್ದಾರೆ. ದೇಹಧಾರಿಗಳಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ನಿರಾಕಾರ ಶಿವನಿಗೇ ಭಗವಂತನೆಂದು ಹೇಳಲಾಗುತ್ತದೆ. ಶಿವನ ಮಂದಿರಗಳೂ ಬಹಳಷ್ಟಿವೆ. ಮೊಟ್ಟ ಮೊದಲು ಒಂದು ಮಾತನ್ನು ತಿಳಿದುಕೊಂಡರೆ ಸಾಕು ನಿಲ್ಲುವರು. ಮೊಟ್ಟ ಮೊದಲು ತಿಳಿಸಿ, ಶಿವ ಭಗವಾನುವಾಚ - ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಶಿವ ತಂದೆಯು ಹೇಳುತ್ತಾರೆ. ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರನಿಗಾದರೂ ತಮ್ಮದೇ ಆದ ಸೂಕ್ಷ್ಮ ಶರೀರವಿದೆ, ಕಾಣುತ್ತದೆ. ಇವರಂತೂ ಕಣ್ಣಿಗೂ ಕಾಣಿಸುವುದಿಲ್ಲ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ನೀವೂ ಸಹ ಹೇಳುತ್ತೀರಿ. ನೀವು ತಮ್ಮ ಆತ್ಮದ ಸಾಕ್ಷಾತ್ಕಾರ ಮಾಡಿದ್ದೀರಿ. ಭಕ್ತಿಮಾರ್ಗದಲ್ಲಿ ಸಾಕ್ಷಾತ್ಕಾರಕ್ಕಾಗಿ ನೌಧಾಭಕ್ತಿ ಮಾಡುತ್ತಾರೆ ಆದರೆ ಭಕ್ತಿ ಮಾಡುವವರು ಎಂದೂ ಸಾಕ್ಷಾತ್ಕಾರ ಮಾಡಲಿಲ್ಲ, ಅದೇನು ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ಕೇವಲ ಅದು ನಿರಾಕಾರಿಯಾಗಿದೆ ಎಂದು ಹೇಳುತ್ತಾರೆ. ವಾರ್ತಾಲಾಪವನ್ನಂತೂ ಆತ್ಮವೇ ಮಾಡುತ್ತದೆ, ಸಂಸ್ಕಾರವೂ ಆತ್ಮದಲ್ಲಿಯೇ ಇರುತ್ತದೆ. ಆತ್ಮವು ಹೊರಟು ಹೋದರೆ ಆತ್ಮನಾಗಲಿ, ಶರೀರವಾಗಲಿ ಮಾತನಾಡಲು ಸಾಧ್ಯವಿಲ್ಲ. ಆತ್ಮವು ಶರೀರವಿಲ್ಲದೆ ಏನನ್ನೂ ಮಾಡಲು ಸಾಧ್ಯವಿಲ್ಲ. ಮೊದಲು ಆತ್ಮನನ್ನು ಅರಿತುಕೊಳ್ಳಬೇಕಾಗಿದೆ ಮತ್ತು ತಂದೆಯ ಮೂಲಕವೇ ತಂದೆಯನ್ನು ಅರಿತುಕೊಳ್ಳುವಿರಿ. ಯಾವಾಗ ತನ್ನನ್ನೇ ತಿಳಿದುಕೊಂಡಿಲ್ಲ, ನೋಡಲು ಆಗುವುದಿಲ್ಲ ಅಂದಮೇಲೆ ಆತ್ಮನಿಗೆ ಪರಮಪಿತ ಪರಮಾತ್ಮನ ಸಾಕ್ಷಾತ್ಕಾರವು ಹೇಗಾಗಲು ಸಾಧ್ಯ? ಭಲೆ ಹೊಳೆಯುತ್ತಿರುವ ವಿಚಿತ್ರ ನಕ್ಷತ್ರವೆಂದು ಹೇಳುತ್ತಾರೆ. ಆದರೆ ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. ಮನುಷ್ಯರು ಸಂಪೂರ್ಣ ದೇಹಾಭಿಮಾನಿಯಾಗಿರುತ್ತಾರೆ, ಈಗ ತಂದೆಯು ತಿಳಿಸುತ್ತಾರೆ - ದೇಹೀ-ಅಭಿಮಾನಿಯಾಗಿರಿ, ತಮ್ಮನ್ನು ಆತ್ಮನೆಂದು ತಿಳಿದು ನನ್ನ ಮುಖಾಂತರ ಕೇಳಿರಿ. ಹೇಳುವುದು ಆತ್ಮನಾಗಿದೆ, ಆತ್ಮಕ್ಕೆ ತಿಳಿಸುವವರು ಪರಮಾತ್ಮನೇ ಬೇಕು. ಮನುಷ್ಯರಿಗೆ ತಿಳಿಸುವವರು ಮನುಷ್ಯರೇ ಆಗುವರು, ಈ ಆತ್ಮದ ಜ್ಞಾನವು ಯಾರಿಗೂ ಇಲ್ಲ. ಆದ್ದರಿಂದಲೇ ಮೊದಲು ಆತ್ಮನನ್ನು ಅರಿತುಕೊಳ್ಳಿ, ಆತ್ಮಾನುಭೂತಿ ಮಾಡಿ ಎಂದು ಹೇಳಲಾಗುತ್ತದೆ. ನಾವು ಹೇಗೆ ಆತ್ಮಾನುಭೂತಿ ಮಾಡುವುದು ಎಂದು ಆತ್ಮವೇ ಕೇಳುತ್ತದೆ. ನಾವಾತ್ಮರಲ್ಲಿ ಹೇಗೆ ಪಾತ್ರವು ತುಂಬಲ್ಪಟ್ಟಿದೆ ಎಂಬುದು ಯಾರಿಗೂ ತಿಳಿದಿಲ್ಲ. ಯಾವುದೇ ಸಾಧು ಸನ್ಯಾಸಿಗಳು ತಿಳಿಸಲು ಸಾಧ್ಯವಿಲ್ಲ. ತಂದೆಯೇ ಬಂದು ಮಕ್ಕಳಿಗೆ ಆತ್ಮಾನುಭೂತಿ ಮಾಡಿಸಲಾಗುತ್ತದೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನಾನು ನಿರಾಕಾರ ಪರಮಪಿತ ಪರಮಾತ್ಮನಿಂದ ಕೇಳಿರಿ, ಆತ್ಮ ಮತ್ತು ಪರಮಾತ್ಮನು ಯಾವಾಗ ಮಿಲನ ಮಾಡುವರೋ ಆಗಲೇ ಈ ಮಾತುಗಳಿರುವವು. ಪರಮಪಿತ ಪರಮಾತ್ಮನು ಯಾವಾಗ ಬರುತ್ತಾರೆ, ಹೇಗೆ ಬಂದು ತಿಳಿಸುತ್ತಾರೆ ಎಂಬುದು ಪ್ರಪಂಚದವರಿಗೆ ತಿಳಿದೇ ಇಲ್ಲ. ತಿಳಿದುಕೊಳ್ಳದ ಕಾರಣ ಮತ ಭೇದದಲ್ಲಿ ಬಂದು ಬಿಡುತ್ತಾರೆ. ಅವರದೆಲ್ಲವೂ ಶಾಸ್ತ್ರಗಳ ಮೇಲೆ ಆಧಾರಿತವಾಗಿದೆ. ತಂದೆಯು ತಿಳಿಸುತ್ತಾರೆ - ಅದರಿಂದ ನನ್ನ ಅನುಭೂತಿಯಾಗಲಿ ಅಥವಾ ಆತ್ಮಾನುಭೂತಿಯಾಗಲಿ ಮಾಡಲು ಸಾಧ್ಯವಿಲ್ಲ. ಅವರಂತೂ ಆತ್ಮ ಸೋ ಪರಮಾತ್ಮ ಎಂದು ಹೇಳಿ ಬಿಡುತ್ತಾರೆ. ಹೀಗೆ ಹೇಳುವುದರಿಂದ ಏನಾಗುತ್ತದೆ? ನಮ್ಮನ್ನು ಪತಿತರಿಂದ ಪಾವನರನ್ನಾಗಿ ಯಾರು ಮಾಡುತ್ತಾರೆ? ತ್ರಿಕಾಲದರ್ಶಿಯನ್ನಾಗಿ ಯಾರು ಮಾಡುತ್ತಾರೆ? ಯಾರೂ ಸಹ ಆತ್ಮ-ಪರಮಾತ್ಮನ ಜ್ಞಾನವನ್ನಂತೂ ಕೊಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಹೇಳುತ್ತೀರಿ - ಯಾವ ಆತ್ಮರು ತಮ್ಮ ತಂದೆಯನ್ನೇ ಅರಿತುಕೊಂಡಿಲ್ಲವೋ ಅವರು ನಾಸ್ತಿಕರಾಗಿದ್ದಾರೆ. ಯಾರು ಭಕ್ತಿ ಮಾಡುವುದಿಲ್ಲವೋ ಅವರು ನಾಸ್ತಿಕರಾಗಿದ್ದಾರೆಂದು ಅವರು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು ಭಕ್ತಿಯನ್ನಂತೂ ಮಾಡುವುದಿಲ್ಲ, ನಿಮ್ಮ ಬಳಿ ಬಹಳ ಒಳ್ಳೆಯ ಚಿತ್ರಗಳಿವೆ. ಚಿತ್ರಗಳಲ್ಲಿಯೇ ತಿಳಿಸಲಾಗುತ್ತದೆ - ಯಾರಾದರೂ ವಿಶ್ವದ ನಕ್ಷೆಯನ್ನೇ ನೋಡಿಲ್ಲವೆಂದರೆ ಅವರಿಗೆ ಲಂಡನ್ ಎಲ್ಲಿದೆ? ಅಮೇರಿಕಾ ಎಲ್ಲಿದೆ? ಎಂಬುದು ಹೇಗೆ ತಿಳಿಯುತ್ತದೆ. ಎಲ್ಲಿಯವರೆಗೆ ಶಿಕ್ಷಕರು ಕುಳಿತು ನಕ್ಷೆಯಲ್ಲಿ ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಅವರಿಗೇನು ಗೊತ್ತು? ಆದ್ದರಿಂದ ನೀವು ಈ ಚಿತ್ರಗಳನ್ನು ಮಾಡಿಸಿದ್ದೀರಿ ಆದರೆ ಯಾರೂ ಇದನ್ನು ವಿವರವಾಗಿ ತಿಳಿದುಕೊಳ್ಳುವುದಿಲ್ಲ. ಸೂರ್ಯವಂಶಿಯರು ಈ ರಾಜಧಾನಿಯನ್ನು ಎಲ್ಲಿಂದ ಪಡೆದುಕೊಂಡರು? ಮತ್ತೆ ಚಂದ್ರವಂಶಿಯರು ಹೇಗೆ ಪಡೆದುಕೊಂಡರು? ಸೂರ್ಯವಂಶಿಯರೊಂದಿಗೆ ಯುದ್ಧ ಮಾಡಿದರೆ? ನೀವು ತಿಳಿದುಕೊಂಡಿದ್ದೀರಿ - ಎಲ್ಲರಿಗೂ ಆಸ್ತಿಯು ಒಬ್ಬ ತಂದೆಯಿಂದಲೇ ಸಿಗುತ್ತದೆ. ಸೂರ್ಯವಂಶಿ, ಚಂದ್ರವಂಶಿಯರಂತೂ ವಿಶ್ವದ ಮಾಲೀಕರಾಗಿದ್ದಾರೆ ಮತ್ತ್ಯಾವುದೇ ಧರ್ಮವೂ ಇರುವುದಿಲ್ಲ ಅಂದಮೇಲೆ ಯುದ್ಧದ ಮಾತೆಲ್ಲಿ! ನಾವು ವಿಶ್ವದ ಮಾಲೀಕರಾಗುತ್ತೇವೆಂದು ನೀವೀಗ ತಿಳಿದುಕೊಳ್ಳುತ್ತೀರಿ. ಸೂರ್ಯವಂಶಿಯರಿಂದ ಚಂದ್ರವಂಶಿಯರು ಗೆದ್ದರು ಅಥವಾ ಯುದ್ಧ ನಡೆಯಿತು ಎಂದಲ್ಲ. ಬೇರೆ-ಬೇರೆ ಮನೆತನವಿರುತ್ತದೆ.
ಈಗ ನಿಮ್ಮ ಬುದ್ಧಿಯಲ್ಲಿ ಈ ಚಿತ್ರಗಳ ಸಂಪೂರ್ಣ ಜ್ಞಾನವಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳು ಓದುತ್ತಾರೆಂದರೆ ಬುದ್ಧಿಯಲ್ಲಿ ಇಡೀ ಜ್ಞಾನವು ಬಂದು ಬಿಡುತ್ತದೆ. ಚಿಕ್ಕ ಮಕ್ಕಳಿಗೆ ಪುಸ್ತಕದಲ್ಲಿ ತೋರಿಸಿ ಇದು ಆನೆ ಆಗಿದೆ, ಇದು ಇಂತದ್ದಾಗಿದೆ ಎಂದು ಹೇಳಲಾಗುತ್ತದೆ. ನೀವೀಗ ಈ ನಾಟಕವನ್ನು ಅರಿತುಕೊಂಡಿದ್ದೀರಿ. ಇಡೀ ಚಕ್ರವು ನಿಮ್ಮ ಬುದ್ದಿಯಲ್ಲಿದೆ. ಇವೆಲ್ಲಾ ಹೊಸ ಮಾತುಗಳನ್ನು ಬ್ರಾಹ್ಮಣ ಕುಲದವರೇ ತಿಳಿದುಕೊಳ್ಳುತ್ತಾರೆ. ಬೇರೆಯವರಂತೂ ವಾದ-ವಿವಾದ ಮಾಡುತ್ತಾರೆ. ಎಲ್ಲರಿಗೂ ಒಟ್ಟಿಗೆ ತಿಳಿಸಬಾರದು, ಪ್ರತ್ಯೇಕವಾಗಿ ತಿಳಿಸಬೇಕಾಗುತ್ತದೆ. ಕಾಯಿದೆಯೂ ಇದೆ, ಮೊದಲು ತಂದೆಯನ್ನು, ಆತ್ಮನನ್ನು ತಿಳಿದುಕೊಳ್ಳಲಿ ನಂತರ ತರಗತಿಯಲ್ಲಿ ಕುಳಿತುಕೊಂಡಾಗ ಅರ್ಥವಾಗುವುದು, ಇಲ್ಲದಿದ್ದರೆ ಅವರಿಗೆ ಅರ್ಥವೇ ಆಗುವುದಿಲ್ಲ. ಸಂಶಯವನ್ನೇ ತರುತ್ತಿರುತ್ತಾರೆ. ನೀವು ತಿಳಿಸಬೇಕಾಗಿದೆ - ಭಗವಂತನು ಒಬ್ಬರೇ ಆಗಿದ್ದಾರೆ, ಅವರು ಸರ್ವಶ್ರೇಷ್ಠನಾಗಿದ್ದಾರೆ. ದೇವತೆಗಳಿಗೂ ಸಹ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಈಗ ನಿಮಗೆ ಆತ್ಮದ ಜ್ಞಾನವು ಸಿಕ್ಕಿದೆ, ಕರ್ಮದ ಫಲವನ್ನು ಆತ್ಮವೇ ಅನುಭವಿಸುತ್ತದೆ. ಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ. ಆತ್ಮವೇ ಈ ಕರ್ಮೇಂದ್ರಿಯಗಳ ಮೂಲಕ ಕೇಳಿಸಿಕೊಳ್ಳುತ್ತದೆ. ಭಗವಂತ ತಂದೆಯು ಒಬ್ಬರೇ ಆಗಿದ್ದಾರೆ, ಆಸ್ತಿಯು ಅವರಿಂದಲೇ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ, ತಂದೆಯೊಂದಿಗೆ ಬುದ್ಧಿಯೋಗವನ್ನಿಡಿ. ಜನ್ಮ-ಜನ್ಮಾಂತರದಿಂದ ಭಕ್ತಿ ಮಾಡುತ್ತಾ ಬಂದಿದ್ದೀರಿ. ಹನುಮಂತನ ಪೂಜಾರಿಗಳಿದ್ದರೆ ಹನುಮಂತನನ್ನೇ ನೆನಪು ಮಾಡುತ್ತಾರೆ, ಕೃಷ್ಣನ ಪೂಜಾರಿಗಳಾಗಿದ್ದರೆ ಕೃಷ್ಣನನ್ನೇ ನೆನಪು ಮಾಡುತ್ತಾರೆ. ಈಗ ನಿಮಗೆ ತಿಳಿಸಲಾಗುತ್ತದೆ - ನೀವಾತ್ಮರಾಗಿದ್ದೀರಿ, ನಿಮ್ಮವರು ಪರಮಪಿತ ಪರಮಾತ್ಮನಾಗಿದ್ದಾರೆ, ಅವರನ್ನು ನೆನಪು ಮಾಡುವುದರಿಂದಲೇ ಆಸ್ತಿಯು ಸಿಗುವುದು. ಅವರು ಸ್ವರ್ಗದ ರಚಯಿತ ಅಂದಮೇಲೆ ಅವಶ್ಯವಾಗಿ ನಾವು ಸ್ವರ್ಗದಲ್ಲಿರಬೇಕು. ಭಾರತವು ಸ್ವರ್ಗವಾಗಿತ್ತು, ಈಗಂತೂ ರಾಜ್ಯಭಾಗ್ಯವಿರಲು ಸ್ವರ್ಗವೇ ಇಲ್ಲ. ನರಕದಲ್ಲಂತೂ ರಾವಣನ ರಾಜ್ಯವಿದೆ. ನಮ್ಮ ರಾಜಧಾನಿಯು ಹೇಗೆ ನಡೆಯಿತು, ನಂತರ ಹೇಗೆ ಕೆಳಗಿಳಿದೆವು ಎಂಬುದೇನನ್ನೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ನಾವು ಕೆಳಗಿಳಿಯಲೇಬೇಕಾಗಿದೆ. ಈಗ ಪುನಃ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಪಾವನರಾಗುವಿರಿ, ಸ್ವರ್ಗದ ಆಸ್ತಿಯು ಸಿಗುತ್ತದೆ. ನಾವು ತಂದೆಯ ಮಕ್ಕಳಾಗುತ್ತೇವೆಂದರೆ ತಂದೆಯ ಆಸ್ತಿಯು ಸಿಗುತ್ತದೆ ಆದರೆ ಎಲ್ಲಿಯವರೆಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದಿಲ್ಲವೋ, ಯೋಗದಿಂದ ಪಾವನರಾಗುವುದಿಲ್ಲವೋ ಅಲ್ಲಿಯವರೆಗೆ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ, ವಿಕರ್ಮಾಜೀತರಾಗುತ್ತೀರಿ. ಇದು ಗ್ಯಾರಂಟಿಯಾಗಿದೆ, ತಿಳುವಳಿಕೆ ನೀಡಬೇಕಾಗುತ್ತದೆ. ಕೆಲವರು ತಿಳಿದುಕೊಂಡಿದ್ದಾರೆ, ಕೆಲವರು ಆತುರ ಬುದ್ಧಿಯವರಾಗಿದ್ದರೆ ಕೂಗಾಡತೊಡಗುತ್ತಾರೆ. ಒಂದಲ್ಲ ಒಂದು ವಿಘ್ನಗಳನ್ನು ಹಾಕುವವರು ತಯಾರಾಗುತ್ತಾರೆ. ಯಾರಾದರೂ ಬಹಳ ಏರುಪೇರು ಮಾಡಿದರೆ ಅವರಿಗೆ ಹೇಳಿರಿ, ಏಕಾಂತದಲ್ಲಿ ಬಂದು ತಿಳಿದುಕೊಳ್ಳಿ. ಇಲ್ಲಿಯ ನಿಯಮವಾಗಿದೆ - 7 ದಿನಗಳ ಕಾಲ ಭಟ್ಟಿಯಲ್ಲಿದ್ದು ತಿಳಿದುಕೊಳ್ಳಬೇಕಾಗಿದೆ, ಏಕೆಂದರೆ ಇದು ಹೊಸ ಜ್ಞಾನವಾಗಿರುವ ಕಾರಣ ಮನುಷ್ಯರು ತಬ್ಬಿಬ್ಬಾಗುತ್ತಾರೆ. ಯಾವುದೇ ಹೊಸ ಸೇವಾಕೇಂದ್ರವನ್ನು ಮೊದಲು ತೆರೆಯುತ್ತಾರೆಂದರೆ ಎಲ್ಲರಿಗೆ ತಿಳಿಸಲು ಅದರಲ್ಲಿ ಬಹಳ ಬುದ್ಧಿವಂತರಿರಬೇಕು. ಭಗವಂತನಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ಎಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದಾರೆ, ಪರಮಾತ್ಮನು ಎಲ್ಲರ ತಂದೆಯಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವರು ಅವಶ್ಯವಾಗಿ ಪಾವನನಾಗಿದ್ದಾರೆ, ಅವರೆಂದಿಗೂ ಪತಿತನಾಗುವುದಿಲ್ಲ. ತಂದೆಯೇ ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಸತ್ಯಯುಗದಲ್ಲಿ ಎಲ್ಲರೂ ಪಾವನರಿರುತ್ತಾರೆ. ಕಲಿಯುಗದಲ್ಲಿ ಪತಿತರಿದ್ದಾರೆ. ಪತಿತರು ಬಹಳ ಮಂದಿ ಇರುತ್ತಾರೆ, ಪಾವನರು ಕೆಲವರೇ ಇರುತ್ತಾರೆ. ಸತ್ಯಯುಗಕ್ಕೆ ಎಲ್ಲರೂ ಹೋಗುವುದಿಲ್ಲ, ಯಾರು ಪತಿತರಿಂದ ಪಾವನರಾಗುವರೋ ಅವರೇ ಪಾವನ ಪ್ರಪಂಚದಲ್ಲಿ ಹೋಗುತ್ತಾರೆ. ಉಳಿದೆಲ್ಲರೂ ನಿರ್ವಾಣಧಾಮಕ್ಕೆ ಹೋಗುತ್ತಾರೆ. ಇದೂ ಸಹ ತಿಳಿದಿದೆ - ಇಡೀ ಪ್ರಪಂಚವು ಬಂದು ಮತವನ್ನು ತೆಗೆದುಕೊಳ್ಳುವುದಿಲ್ಲ. ನೀವು ಇಡೀ ಪ್ರಪಂಚಕ್ಕೆ ಮತ ಕೊಡಿ ಎಂಬುದು ಕಷ್ಟದ ಮಾತಾಗಿದೆ. ಈಗ ಎಲ್ಲರ ಅಂತಿಮ ಸಮಯವಾಗಿದೆ, ಎಲ್ಲರ ವಿನಾಶವಾಗಲಿದೆ. ತಿಳಿಸುವುದಕ್ಕೂ ಬಹಳ ಯುಕ್ತಿ ಬೇಕು. ಅದರಿಂದ ಎಲ್ಲರೂ ಶಾಂತಿಯಿಂದ ಕುಳಿತು ಕೇಳಲಿ. ತೊಂದರೆ ಮಾಡದಿರಲಿ, ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ಶಿವ ತಂದೆಯೇ ಪತಿತ-ಪಾವನನಾಗಿದ್ದಾರೆ, ಅವರೇ ತಿಳಿಸುತ್ತಾರೆ. ಗೀತೆಯಲ್ಲಿಯೂ ಅಕ್ಷರವು ಪ್ರಸಿದ್ಧವಾಗಿದೆ. ಪತಿತ-ಪಾವನ ತಂದೆಯೇ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಗೀತೆಯೊಂದಿಗೆ ಈ ಶಬ್ಧಗಳು ಸಂಬಂಧ ಪಟ್ಟಿವೆ. ಶಿವ ತಂದೆಯು ಹೇಳಿದ್ದಾರೆ - ನನ್ನನ್ನು ನೆನಪು ಮಾಡಿರಿ, ನಾನು ಸರ್ವಶಕ್ತಿವಂತ, ಪತಿತ-ಪಾವನನಾಗಿದ್ದೇನೆ. ಗೀತಾ ಜ್ಞಾನ ದಾತ, ಜ್ಞಾನ ಸಾಗರನಾಗಿದ್ದೇನೆ. ಗೀತೆಯ ಶಬ್ಧವಂತೂ ಇದೆಯಲ್ಲವೆ. ಕೇವಲ ಅವರು ಕೃಷ್ಣ ಭಗವಾನುವಾಚ ಎಂದು ಹೇಳುತ್ತಾರೆ. ನೀವು ಶಿವ ಭಗವಾನುವಾಚ ಎಂದು ಹೇಳುತ್ತೀರಿ. ಭಗವಂತನು ನಿರಾಕಾರನಾಗಿದ್ದಾರೆ, ಅವರೆಂದಿಗೂ ಪುನರ್ಜನ್ಮದಲ್ಲಿ ಬರುವುದಿಲ್ಲ. ಅಲೌಕಿಕ ದಿವ್ಯ ಜನ್ಮವನ್ನು ಪಡೆಯುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ. ಅವರಿಗೇ ಭಗೀರಥನೆಂದು ಹೇಳುತ್ತಾರೆ. ಬ್ರಹ್ಮಾರವರ ಮೂಲಕವೇ ರಚನೆಯನ್ನು ರಚಿಸುತ್ತಾರೆ ಆದ್ದರಿಂದ ಮನುಷ್ಯನ ಹೆಸರನ್ನು ಬ್ರಹ್ಮನೆಂದು ಇಡಲಾಗುತ್ತದೆ. ವ್ಯಕ್ತ ಬ್ರಹ್ಮನೇ ಮತ್ತೆ ಪಾವನನಾಗಿ ಅವ್ಯಕ್ತ ಫರಿಶ್ತೆಯಾಗುತ್ತಾರೆ. ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ತಂದೆಯು ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ. ಇವು ವಿಸ್ತಾರವಾದ ತಿಳುವಳಿಕೆಯಾಗಿದೆ. ಮೊದಲಿಗೆ ತಿಳಿಸಬೇಕು - ಭಗವಂತನು ಹೇಳುತ್ತಾರೆ, ಕಲ್ಪದ ಮೊದಲಿನ ತರಹ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ, ಪತಿತರಿಂದ ಪಾವನರಾಗುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಹಾಡುತ್ತಾರೆ, ಗಂಗೆಯಂತೂ ಇದ್ದೇ ಇದೆ. ನೀವು ಕರೆಯುತ್ತೀರಿ ಅಂದಮೇಲೆ ಅವಶ್ಯವಾಗಿ ಎಲ್ಲಿಂದಲೋ ಬರುತ್ತಾರೆ. ಪತಿತ-ಪಾವನನು ಪತಿತರಿಂದ ಪಾವನರನ್ನಾಗಿ ಮಾಡುವ ಪಾತ್ರವನ್ನಭಿನಯಿಸಲು ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಪಾವನರಾಗಿದ್ದಿರಿ ನಂತರ ನಿಮ್ಮಲ್ಲಿ ತುಕ್ಕು ಹಿಡಿದಿದೆ. ಅದು ಯೋಗಬಲದಿಂದಲೇ ಬಿಟ್ಟು ಹೋಗುವುದು. ನೀವು ಪವಿತ್ರರಾದರೆ ಮತ್ತೆ ಪಾವನ ಪ್ರಪಂಚದಲ್ಲಿಯೇ ಬರುತ್ತೀರಿ. ಪತಿತ ಪ್ರಪಂಚದ ವಿನಾಶವಾಗಿ ಬಿಡುತ್ತದೆ. ಏನನ್ನು ತಿಳಿಸುವೆವೋ ಅದನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಾವಂತೂ ಕೇವಲ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಿಮೆ ಮಾಡುತ್ತೀರಿ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಎಷ್ಟೊಂದು ಪತಿತರಾಗಿದ್ದೀರಿ, ಮೊದಲು ಪಾವನರಾಗಿದ್ದಿರಿ, ಈಗ ಪತಿತರಾಗಿದ್ದೀರಿ. ಮತ್ತೆ ನೆನಪಿನ ಯಾತ್ರೆಯಲ್ಲಿರುವುದರಿಂದ ನೀವು ಪಾವನರಾಗಿ ಬಿಡುತ್ತೀರಿ. ಭಕ್ತಿಮಾರ್ಗದಿಂದ ನೀವು ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಇದು ಸಂಪೂರ್ಣ ಸಹಜ ಮಾತಾಗಿದೆ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ಮುಂಜಾನೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕು. ನಂತರ ಯಾರೇ ಬರಲಿ ಅವರಿಗೆ ತಿಳಿಸಬೇಕಾಗಿದೆ. ಮುರುಳಿಯ ಮುಖ್ಯ ಅಂಶಗಳನ್ನು ಬರೆದುಕೊಂಡು ಅದನ್ನು ರಿಪೀಟ್ ಮಾಡಬೇಕು ಆಗ ಹೃದಯದಲ್ಲಿ ಪಕ್ಕಾ ಆಗಿ ಬಿಡುವುದು.