text
stringlengths 0
61.5k
|
---|
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಶ್ರೀಮತದಂತೆ ತಮ್ಮನ್ನು ತಾವು ನೋಡಿಕೊಳ್ಳಿ - ಈ ವಿನಾಶ ಕಾಲದಲ್ಲಿ ಒಬ್ಬ ತಂದೆಯೊಂದಿಗೆ ನನಗೆ ಸತ್ಯ ಪ್ರೀತಿಯಿದೆಯೇ? ಮತ್ತೆಲ್ಲಾ ಸಂಗಗಳನ್ನು ಬಿಟ್ಟು ಒಬ್ಬರ ಸಂಗ ಮಾಡಿದ್ದೇನೆಯೇ? ಎಂದೂ ಯಾವುದೇ ವಿಕರ್ಮ ಮಾಡಿ ಅಸುರನಾಗುತ್ತಿಲ್ಲವೆ? ಹೀಗೆ ಪರಿಶೀಲನೆ ಮಾಡಿಕೊಂಡು ಸ್ವಯಂನ್ನು ಪರಿವರ್ತನೆ ಮಾಡಿಕೊಳ್ಳಬೇಕು. |
2. ಈ ಶರೀರದ ಮೇಲೆ ಯಾವುದೇ ಭರವಸೆಯಿಲ್ಲ, ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು. ತಮ್ಮ ಸ್ಥಿತಿಯನ್ನು ಏಕರಸ, ಅಚಲವನ್ನಾಗಿ ಮಾಡಿಕೊಳ್ಳಲು ಡ್ರಾಮಾದ ರಹಸ್ಯವನ್ನು ಬುದ್ಧಿಯಲ್ಲಿಟ್ಟುಕೊಂಡು ನಡೆಯಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಕೇವಲ ಒಬ್ಬರ ನೆನಪಿನಲ್ಲಿ ಕುಳಿತುಕೊಳ್ಳಬಾರದು. ಮೂರು ಸಂಬಂಧಗಳ ನೆನಪಿನಲ್ಲಿ ಕುಳಿತುಕೊಳ್ಳಬೇಕು. ಭಲೆ ಒಬ್ಬರೇ ಆಗಿದ್ದಾರೆ ನಿಮಗೆ ಗೊತ್ತಿದೆ. ಅವರು ತಂದೆಯೂ ಆಗಿದ್ದಾರೆ. ಶಿಕ್ಷಕರೂ ಆಗಿದ್ದಾರೆ. ಸದ್ಗುರುವೂ ಆಗಿದ್ದಾರೆ. ನಮ್ಮೆಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ಹೊಸಮಾತನ್ನು ನೀವೇ ತಿಳಿದುಕೊಂಡಿದ್ದೀರಿ. ಮಕ್ಕಳಿಗೆ ಗೊತ್ತಿದೆ - ಯಾರು ಭಕ್ತಿಯನ್ನು ಕಲಿಸುತ್ತಾರೆ. ಶಾಸ್ತ್ರಗಳನ್ನು ತಿಳಿಸುತ್ತಾರೆಯೋ ಅವರೆಲ್ಲರೂ ಮನುಷ್ಯರಾಗಿದ್ದಾರೆ. ಇವರಿಗೆ ಮನುಷ್ಯನೆಂದು ಹೇಳುವುದಿಲ್ಲವಲ್ಲವೇ. ಇವರಂತೂ ನಿರಾಕಾರನಾಗಿದ್ದಾರೆ. ಕುಳಿತು ನಿರಾಕಾರ ಆತ್ಮಗಳಿಗೆ ಓದಿಸುತ್ತಾರೆ. ಆತ್ಮವು ಶರೀರದ ಮೂಲಕ ಕೇಳುತ್ತದೆ. ಈ ಜ್ಞಾನವು ಬುದ್ಧಿಯಲ್ಲಿರಬೇಕು. ಈಗ ನೀವು ಬೇಹದ್ದಿನ ತಂದೆಯ ನೆನಪಿನಲ್ಲಿ ಕುಳಿತುಕೊಂಡಿದ್ದೀರಿ. ಬೇಹದ್ದಿನ ತಂದೆಯೂ ಹೇಳಿದ್ದಾರೆ - ಆತ್ಮೀಯ ಮಕ್ಕಳೇ, ನನ್ನನ್ನು ನೆನಪು ಮಾಡಿ ಆಗ ಪಾಪಗಳು ನಾಶವಾಗುತ್ತವೆ. ಇಲ್ಲಿ ಯಾವುದೇ ಶಾಸ್ತ್ರಗಳ ಮಾತಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಎಷ್ಟು ದೊಡ್ಡ ಶಿಕ್ಷಕನಾಗಿದ್ದಾರೆ. ಸರ್ವ ಶ್ರೇಷ್ಠನಾಗಿದ್ದಾರೆ. ಅಂದಮೇಲೆ ಸರ್ವ ಶ್ರೇಷ್ಠ ಪದವಿಯನ್ನೇ ಪ್ರಾಪ್ತಿ ಮಾಡಿಸುತ್ತಾರೆ. ಯಾವಾಗ ನೀವು ನಂಬರ್ವಾರ್ ಪುರುಷಾರ್ಥದನುಸಾರ ಸತೋಪ್ರಧಾನರಾಗುತ್ತೀರಿ. ಆಗ ಯುದ್ಧವು ಪ್ರಾರಂಭವಾಗುವುದು. ಪ್ರಾಕೃತಿಕ ವಿಕೋಪಗಳೂ ಆಗುವುದು ಅಂದಾಗ ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಬುದ್ಧಿಯಲ್ಲಿ ಪೂರ್ಣ ಜ್ಞಾನವೂ ಇರಬೇಕು. ಕೇವಲ ಈ ಪುರುಷೋತ್ತಮ ಸಂಗಮಯುಗದಲ್ಲಿ ಒಂದೇ ಬಾರಿ ಬಂದು ಹೊಸ ಪ್ರಪಂಚಕ್ಕಾಗಿ ತಂದೆಯು ತಿಳಿಸುತ್ತಾರೆ. ಚಿಕ್ಕ ಮಕ್ಕಳೂ ಸಹ ತಂದೆಯನ್ನು ನೆನಪು ಮಾಡುತ್ತಾರೆ. ನೀವಂತೂ ಬುದ್ಧಿವಂತರಾಗಿದ್ದೀರಿ. ನಿಮಗೆ ಗೊತ್ತಿದೆ - ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮವು ವಿನಾಶವಾಗುತ್ತದೆ. ಮತ್ತು ತಂದೆಯಿಂದ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಮತ್ತು ಈ ಲಕ್ಷ್ಮೀ-ನಾರಾಯಣರು ಹೊಸ ಪ್ರಪಂಚದಲ್ಲಿ ಯಾವ ಪದವಿಯನ್ನು ಪಡೆದಿದ್ದಾರೆಯೋ ಅದನ್ನು ಶಿವ ತಂದೆಯಿಂದಲೇ ಪಡೆದಿದ್ದಾರೆ ಎಂಬುದೂ ಸಹ ನೀವು ತಿಳಿದುಕೊಂಡಿದ್ದೀರಿ. ಈ ಲಕ್ಷ್ಮೀ-ನಾರಾಯಣರೇ 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ಬ್ರಹ್ಮಾ-ಸರಸ್ವತಿಯಾಗಿದ್ದಾರೆ. ಈಗ ಇನ್ನೂ ಪುರುಷಾರ್ಥ ಮಾಡುತ್ತಿದ್ದಾರೆ. ಈಗ ಸೃಷ್ಠಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ನಿಮಗಿದೆ. ಈಗ ನೀವು ಅಂಧ ಶ್ರದ್ಧೆಯಿಂದ ದೇವತೆಗಳ ಮುಂದೆ ತಲೆ ಬಾಗುವುದಿಲ್ಲ. ದೇವತೆಗಳ ಮುಂದೆ ಹೋಗಿ ತಮ್ಮನ್ನು ಪತಿತರೆಂದು ಸಿದ್ಧ ಮಾಡುತ್ತಾರೆ. ತಾವು ಸರ್ವಗುಣ ಸಂಪನ್ನರು, ನಾವು ಪಾಪಿ -ವಿಕಾರಿಗಳಾಗಿದ್ದೇವೆ. ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ನೀವು ಯಾರ ಮಹಿಮೆ ಮಾಡುತ್ತೀದ್ದೀರೋ ಇಂದು ಸ್ವಯಂ ಈ ರೀತಿ ಆಗುತ್ತಿದ್ದೀರಿ. ಬಾಬಾ ಈ ಶಾಸ್ತ್ರ ಇತ್ಯಾದಿಗಳನ್ನು ಓದುವುದು ಯಾವಾಗಿನಿಂದ ಎಂದು ಕೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ರಾವಣ ರಾಜ್ಯವು ಪ್ರಾರಂಭವಾದಾಗಿನಿಂದ. ಇದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಗಳಾಗಿವೆ. ನೀವಿಲ್ಲಿ ಕುಳಿತುಕೊಂಡಾಗ ಬುದ್ಧಿಯಲ್ಲಿ ಪೂರ್ಣ ಜ್ಞಾನವು ಧಾರಣೆಯಾಗಬೇಕು. ಈ ಸಂಸ್ಕಾರವನ್ನು ಆತ್ಮವು ತೆಗೆದುಕೊಂಡು ಹೋಗುತ್ತದೆ. ಭಕ್ತಿಯ ಸಂಸ್ಕಾರವು ಹೋಗುವುದಿಲ್ಲ. ಭಕ್ತಿಯ ಸಂಸ್ಕಾರದವರು ಹಳೆಯ ಪ್ರಪಂಚದಲ್ಲಿ ಮನುಷ್ಯರ ಬಳಿಯೇ ಜನ್ಮ ತೆಗೆದುಕೊಳ್ಳುತ್ತಾರೆ. ಇದೂ ಅವಶ್ಯಕವಾಗಿದೆ. ನಿಮ್ಮ ಬುದ್ಧಿಯಲ್ಲಿ ಈ ಜ್ಞಾನದ ಚಕ್ರವು ತಿರುಗಬೇಕು. ಜೊತೆ ಜೊತೆಗೆ ತಂದೆಯನ್ನೂ ನೆನಪು ಮಾಡಬೇಕಾಗಿದೆ. ಅವರು ನಮ್ಮ ತಂದೆಯೂ ಆಗಿದ್ದಾರೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ನಮ್ಮ ಶಿಕ್ಷಕನೂ ಆಗಿದ್ದಾರೆ ಎಂದಾಗ ಬುದ್ಧಿಯಲ್ಲಿ ವಿದ್ಯೆಯು ಬರುತ್ತದೆ ಮತ್ತು ಸೃಷ್ಠಿಚಕ್ರದ ಜ್ಞಾನವು ಬುದ್ಧಿಯಲ್ಲಿದೆ. ಇದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. |
ಭಕ್ತಿ ಮತ್ತು ಜ್ಞಾನ. ತಂದೆಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ಅವರಿಗೆ ಭಕ್ತಿಯು ಯಾವಾಗ ಆರಂಭವಾಯಿತು, ಯಾವಾಗ ಪೂರ್ಣವಾಗುವುದು ಎಂದು ಭಕ್ತಿಯಿದೆಲ್ಲವೂ ತಿಳಿದಿದೆ. ಮನುಷ್ಯರಿಗೆ ಇದು ಗೊತ್ತಿಲ್ಲ. ತಂದೆಯೇ ಬಂದು ತಿಳಿಸಿಕೊಡುತ್ತಾರೆ. ಸತ್ಯಯುಗದಲ್ಲಿ ನೀವು ದೇವಿ-ದೇವತೆಗಳು ವಿಶ್ವದ ಮಾಲೀಕರಾಗಿದ್ದೀರಿ. ಅಲ್ಲಿ ಭಕ್ತಿಯ ಹೆಸರಿರುವುದಿಲ್ಲ. ಒಂದು ಮಂದಿರವೂ ಇರಲಿಲ್ಲ. ಎಲ್ಲರೂ ದೇವಿ-ದೇವತೆಗಳೇ ಇದ್ದರು. ಕೊನೆಯಲ್ಲಿ ಯಾವಾಗ ಪ್ರಪಂಚವು ಅರ್ಧ ಹಳೆಯದಾಗುತ್ತದೆ. ಅಂದರೆ 2500 ವರ್ಷಗಳು ಪೂರ್ಣವಾಗುವುದೋ ಅಥವಾ ತ್ರೇತಾ ಮತ್ತು ದ್ವಾಪರದ ಸಂಗಮವಾಗುವುದೋ ಆಗ ರಾವಣನು ಬರುತ್ತಾನೆ. ಸಂಗಮವಂತೂ ಅವಶ್ಯವಾಗಿ ಬೇಕು. ತ್ರೇತಾ ಮತ್ತು ದ್ವಾಪರದ ಸಂಗಮದಲ್ಲಿ ರಾವಣನು ಬರುತ್ತಾನೆ. ಆಗ ದೇವಿ-ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತಾರೆ ಎನ್ನುವುದನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೂ ಸಹ ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯ ಸಂಗಮಯುಗದಲ್ಲಿ ಬರುತ್ತಾರೆ ಮತ್ತು ತ್ರೇತಾ ಮತ್ತು ದ್ವಾಪರದ ಸಂಗಮದಲ್ಲಿ ರಾವಣನು ಬರುತ್ತಾನೆ. ಈಗ ಆ ಸಂಗಮಕ್ಕೆ ಕಲ್ಯಾಣಕಾರಿ ಎಂದು ಹೇಳುವುದಿಲ್ಲ. ಅದಕ್ಕೆ ಅಕಲ್ಯಾಣಕಾರಿಯೆಂದೇ ಹೇಳಲಾಗುತ್ತದೆ. ತಂದೆಯ ಹೆಸರೇ ಕಲ್ಯಾಣಕಾರಿಯಾಗಿದೆ. ದ್ವಾಪರದಿಂದ ಅಕಲ್ಯಾಣಕಾರಿ ಯುಗವು ಪ್ರಾರಂಭವಾಗುತ್ತದೆ. ತಂದೆಯಂತೂ ಚೈತನ್ಯ ಬೀಜ ರೂಪನಾಗಿದ್ದಾರೆ. ಅವರಿಗೆ ಇಡೀ ವೃಕ್ಷದ ಜ್ಞಾನವಿದೆ. ಒಂದುವೇಳೆ ಸ್ಥೂಲ ಬೀಜವೂ ಚೈತನ್ಯವಾಗಿದ್ದರೆ ನನ್ನಿಂದ ಇಂತಹ ಬೀಜವನ್ನು ಬಿತ್ತುವುದರಿಂದ ಮೊದಲು ಚಿಕ್ಕ ಸಸಿಯು ಬರುತ್ತದೆ. ನಂತರ ದೊಡ್ಡದಾಗಿ ಫಲ ಕೊಡಲು ಪ್ರಾರಂಭಿಸುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬಹುದು. ಆದರೆ ಚೈತನ್ಯವೇ ಎಲ್ಲವನ್ನೂ ತಿಳಿಸುತ್ತಾರೆ. ಪ್ರಪಂಚದಲ್ಲಂತೂ ಇಂದಿನ ಮನುಷ್ಯರು ಏನೇನನ್ನೋ ಮಾಡುತ್ತಿರುತ್ತಾರೆ. ಅನ್ವೇಷಣೆಗಳನ್ನೂ ಮಾಡುತ್ತಿರುತ್ತಾರೆ. ಚಂದ್ರಗ್ರಹದಲ್ಲಿ ಹೋಗುವ ಪ್ರಯತ್ನ ಪಡುತ್ತಿರುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ಕೇಳುತ್ತಿದ್ದೀರಿ. ಚಂದ್ರಗ್ರಹದ ಕಡೆ ಎಷ್ಟು ಮೇಲೆ ಎಷ್ಟೊಂದು ಮೈಲಿಗಳವರೆಗೆ ಹೋಗುತ್ತಾರೆ. ಚಂದ್ರಗ್ರಹದಲ್ಲಿ ಏನಿದೆ, ಹೇಗಿದೆ ಎಂದು ನೋಡೋಣವೆಂದು ಪರಿಶೀಲನೆ ಮಾಡಲು ಹೋಗುತ್ತಾರೆ. ಸಮುದ್ರದಲ್ಲಿ ಎಷ್ಟೊಂದು ದೂರದವರೆಗೆ ಹೋಗುತ್ತಾರೆ. ಪರಿಶೀಲನೆ ಮಾಡುತ್ತಾರೆ. ಆದರೆ ಅಂತ್ಯವನ್ನು ಮುಟ್ಟಲು ಸಾಧ್ಯವಿಲ್ಲ. ನೀರೇ ನೀರಿದೆ! ವಿಮಾನದಲ್ಲಿ ಮೇಲೆ ಹೋಗುತ್ತಾರೆ. ಅದಕ್ಕೆ ಮತ್ತೆ ಅದು ಹಿಂತಿರುಗಿ ಬರುವಷ್ಟು ಇಂಧನವನ್ನು ಹಾಕಬೇಕಾಗುತ್ತದೆ. ಆಕಾಶವು ಬೇಹದ್ದಿನದಾಗಿದೆಯಲ್ಲವೆ, ಸಾಗರವೂ ಬೇಹದ್ದಿನದಾಗಿದೆ. ಆಕಾಶ ತತ್ವವೂ ಬೇಹದ್ದಿನದಾಗಿದೆ. ಧರಣಿಯೂ ಬೇಹದ್ದಿನದಾಗಿದೆ. ನೋಡುತ್ತಾ ಹೋಗಿ, ಸಾಗರದ ಕೆಳಗೆ ಮತ್ತೆ ಧರಣಿಯಿದೆ. ಪರ್ವತವು ಯಾವುದರ ಮೇಲೆ ನಿಂತಿದೆ. ಧರಣಿಯು ಮೇಲಲ್ಲವೆ ಮತ್ತೆ ಭೂಮಿಯನ್ನು ಅಗೆದಾಗ ಪರ್ವತವು ಹೊರ ಬರುತ್ತದೆ. ಅದರ ಕೆಳಗೆ ಮತ್ತೆ ನೀರೂ ಸಹ ಹೊರ ಬರುತ್ತದೆ. ಸಾಗರವು ಧರಣಿಯ ಮೇಲಿದೆ. ಎಲ್ಲಿಯವರೆಗೆ ನೀರಿದೆ, ಎಲ್ಲಿಯವರೆಗೆ ಭೂಮಿಯಿದೆ ಎಂದು ಅದರ ಅಂತ್ಯವನ್ನು ಯಾರೂ ಮುಟ್ಟಲು ಸಾಧ್ಯವಿಲ್ಲ. ಪರಮಪಿತ ಪರಮಾತ್ಮ ಯಾರು ಬೇಹದ್ದಿನ ತಂದೆಯಾಗಿದ್ದಾರೆ. ಅವರಿಗೆ ಬೇಹಂತ್ ಎಂದು ಹೇಳುವುದಿಲ್ಲ. ಈಶ್ವರನು ಬೇಹಂತ್, ಮಾಯೆಯೂ ಬೇಹಂತ್ ಆಗಿದೆಯೆಂದು ಭಲೆ ಮನುಷ್ಯರು ಹೇಳುತ್ತಾರೆ. ಆದರೆ ನಿಮಗೆ ತಿಳಿದಿದೆ ಈಶ್ವರನಂತೂ ಬೇಹಂತ್ ಆಗಲು ಸಾಧ್ಯವಿಲ್ಲ. ಬಾಕಿ ಈ ಆಕಾಶವು ಬೇಹಂತ್ ಆಗಿದೆ. ಈ ಪಂಚತತ್ವಗಳಿಗೆ ಆಕಾಶ, ಗಾಳಿ, ನೀರು, ಬೆಂಕಿ..... ಈ ಪಂಚತತ್ವಗಳು ತಮೋಪ್ರಧಾನವಾಗುತ್ತದೆ. ನಂತರ ತಂದೆಯು ಬಂದು ಸತೋಪ್ರಧಾನವನ್ನಾಗಿ ಮಾಡುತ್ತಾರೆ. ಆತ್ಮವು ಎಷ್ಟು ಸೂಕ್ಷ್ಮವಿದೆ, 84 ಜನ್ಮಗಳನ್ನು ಭೋಗಿಸುತ್ತದೆ. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಇದು ಅನಾದಿ ನಾಟಕವಾಗಿದೆ. ಇದರ ಅಂತ್ಯವಾಗುವುದಿಲ್ಲ. ಇದು ಪರಂಪರೆಯಿಂದ ನಡೆದು ಬರುತ್ತದೆ. ಯಾವಾಗಿನಿಂದ ಪ್ರಾರಂಭವಾಯಿತೆಂದು ಹೇಳುವುದಾದರೆ ಮತ್ತೆ ಅದಕ್ಕೆ ಅಂತ್ಯವೂ ಇರಬೇಕು. ಬಾಕಿ ಹೊಸ ಪ್ರಪಂಚವು ಯಾವಾಗಿನಿಂದ ಆರಂಭವಾಗುತ್ತದೆ. ನಂತರ ಯಾವಾಗ ಹಳೆಯದಾಗುತ್ತದೆ ಎಂಬ ಮಾತನ್ನು ಅವಶ್ಯವಾಗಿ ತಿಳಿಸಬೇಕಾಗುತ್ತದೆ. ಇದು 5000 ವರ್ಷಗಳ ಚಕ್ರವಾಗಿದೆ. ಇದು ಸುತ್ತುತ್ತಲೇ ಇರುತ್ತದೆ. ಈಗ ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಸುಳ್ಳು ಹೇಳಿ ಬಿಟ್ಟಿದ್ದಾರೆ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಆದ್ದರಿಂದ ಇದನ್ನು ಮನುಷ್ಯರು ಕೇಳುತ್ತಾ-ಕೇಳುತ್ತಾ ಅದನ್ನೇ ಸತ್ಯವೆಂದು ತಿಳಿದುಕೊಂಡಿದ್ದಾರೆ. ಭಗವಂತನು ಯಾವಾಗ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆಂದು ಅವರಿಗೆ ತಿಳಿಯುವುದೇ ಇಲ್ಲ. ತಿಳಿಯದಿರುವ ಕಾರಣದಿಂದಲೇ ಕಲಿಯುಗವು ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳಿ ಬಿಡುತ್ತಾರೆ. ಎಲ್ಲಿಯವರೆಗೆ ನೀವು ತಿಳಿಸುವುದಿಲ್ಲವೋ ಅಲ್ಲಿಯವರೆಗೆ ಲಕ್ಷಾಂತರ ವರ್ಷಗಳೆಂದು ನಂಬಿರುತ್ತಾರೆ. ಕಲ್ಪವು 5000 ವರ್ಷಗಳಾಗಿದೆಯೇ ಹೊರತು ಲಕ್ಷಾಂತರ ವರ್ಷಗಳಲ್ಲ ಎಂಬ ಮಾತನ್ನು ತಿಳಿಸಲು ನೀವೀಗ ನಿಮಿತ್ತರಾಗಿದ್ದೀರಿ. |
ಭಕ್ತಿಮಾರ್ಗದ ಎಷ್ಟೊಂದು ಸಾಮಗ್ರಿಯಿದೆ. ಮನುಷ್ಯರಿಗೆ ಹಣವಿದ್ದರೆ ಖರ್ಚು ಮಾಡುತ್ತಾರೆ. ತಂದೆಯೂ ತಿಳಿಸುತ್ತಾರೆ. ನಾನು ನಿಮಗೆ ಎಷ್ಟೊಂದು ಹಣವನ್ನು ಕೊಟ್ಟು ಹೋಗುತ್ತೇನೆ! ಬೇಹದ್ದಿನ ತಂದೆಯಂತೂ ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಇದರಿಂದ ಸುಖವೂ ಸಿಗುತ್ತದೆ. ಆಯಸ್ಸೂ ಹೆಚ್ಚುತ್ತದೆ. ತಂದೆಯು ಮಕ್ಕಳಿಗೆ ಹೇಳುತ್ತಾರೆ- ನನ್ನ ಮುದ್ದಾದ ಮಕ್ಕಳೇ, ಆಯುಷ್ಯವಾನ್ಭವ. ಅಲ್ಲಿ ನಿಮ್ಮ ಆಯಸ್ಸು 150 ವರ್ಷಗಳಿರುತ್ತದೆ, ಎಂದೂ ಕಾಲವು ಕಬಳಿಸುವುದಿಲ್ಲ. ತಂದೆಯು ವರವನ್ನು ಕೊಡುತ್ತಾರೆ. ನಿಮ್ಮನ್ನು ದೀರ್ಘಾಯುಸ್ಸುಳ್ಳವರನ್ನಾಗಿ ಮಾಡುತ್ತಾರೆ. ನೀವು ಅಮರರಾಗುತ್ತೀರಿ. ಸತ್ಯಯುಗದಲ್ಲಿ ಎಂದು ಅಕಾಲ ಮೃತ್ಯವಾಗುವುದಿಲ್ಲ. ಅಲ್ಲಿ ನೀವು ಬಹಳ ಸುಖಿಯಾಗಿರುತ್ತೀರಿ. ಆದ್ದರಿಂದ ಸುಖಧಾಮವೆಂದು ಹೇಳಲಾಗುತ್ತದೆ. ಆಯಸ್ಸು ಧೀರ್ಘವಾಗಿರುತ್ತದೆ. ಹಣವು ಹೆಚ್ಚು ಸಿಗುತ್ತದೆ. ಬಹಳ ಸುಖಿಯಾಗಿಯೂ ಇರುತ್ತೀರಿ. ಕಂಗಾಲರಿಂದ ಕಿರೀಟಧಾರಿಗಳಾಗಿ ಬಿಡುತ್ತೀರಿ. ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಲು ತಂದೆಯು ಬರುತ್ತಾರೆಂದು ನಿಮ್ಮ ಬುದ್ಧಿಯಲ್ಲಿದೆ. ಅದಂತೂ ಅವಶ್ಯವಾಗಿ ಚಿಕ್ಕ ವೃಕ್ಷವಾಗಿರುವುದು. ಅಲ್ಲಿರುವುದೇ ಒಂದು ಧರ್ಮ, ಒಂದು ರಾಜ್ಯ, ಒಂದು ಭಾಷೆ, ಅದಕ್ಕೆ ವಿಶ್ವದಲ್ಲಿ ಶಾಂತಿಯೆಂದು ಹೇಳಲಾಗುತ್ತದೆ. ಇಡೀ ವಿಶ್ವದಲ್ಲಿ ನಾವೇ ಪಾತ್ರಧಾರಿಗಳಾಗಿದ್ದೇವೆ. ಇದನ್ನು ಪ್ರಪಂಚವು ತಿಳಿದುಕೊಂಡಿಲ್ಲ. ಒಂದುವೇಳೆ ತಿಳಿದುಕೊಂಡಿದ್ದರೆ ನಾವು ಯಾವಾಗಿನಿಂದ ಪಾತ್ರವನ್ನಭಿಯಿಸುತ್ತಾ ಬಂದಿದ್ದೇವೆಂದು ತಿಳಿಸಬೇಕಿತ್ತು. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ. ತಂದೆಯಿಂದ ಏನು ಸಿಗುತ್ತದೆಯೋ ಅದು ಮತ್ತ್ಯಾರಿಂದಲೂ ಸಿಗುವುದಿಲ್ಲವೆಂದು ಗೀತೆಯಲ್ಲಿಯೂ ಇದೆಯಲ್ಲವೆ. ತಂದೆಯು ಇಡೀ ಆಕಾಶ, ಧರಣಿ, ಇಡೀ ವಿಶ್ವದ ರಾಜಧಾನಿಯನ್ನು ಕೊಟ್ಟು ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ನಂತರದಲ್ಲಿ ಯಾವ ರಾಜರು ಮೊದಲಾದವರಿರುತ್ತಾರೆಯೋ ಅವರು ಭಾರತದವರಾಗಿದ್ದರು, ಗಾಯನವೂ ಇದೆ, ಯಾವುದನ್ನು ತಂದೆಯು ಕೊಡುತ್ತಾರೆಯೋ ಅದನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯೇ ಬಂದು ಪ್ರಾಪ್ತಿ ಮಾಡಿಸುತ್ತಾರೆ. ಅಂದಾಗ ಈ ಪೂರ್ಣ ಜ್ಞಾನವು ಬುದ್ಧಿಯಲ್ಲಿರಬೇಕು. ಯಾರಿಗೆ ಬೇಕಾದರೂ ತಿಳಿಸುವಂತಿರಬೇಕು. ಇಷ್ಟೊಂದು ತಿಳಿದುಕೊಳ್ಳುವಂತದ್ದಾಗಿದೆ. ಈಗ ಯಾರು ತಿಳಿಸಲು ಸಾಧ್ಯ? ಯಾರು ಬಂಧನಮುಕ್ತರಾಗಿರುವರೋ ಅವರೇ ತಿಳಿಸುತ್ತಾರೆ. ತಂದೆಯ ಬಳಿ ಯಾರಾದರೂ ಬಂದರೆ ತಂದೆಯು ಅವರನ್ನು ಪ್ರಶ್ನಿಸುತ್ತಾರೆ - ನಿಮಗೆ ಎಷ್ಟು ಮಂದಿ ಮಕ್ಕಳಿದ್ದಾರೆ? ಆಗ ನಮಗೆ 5 ಮಂದಿ ಮಕ್ಕಳಿದ್ದಾರೆ ಮತ್ತು 6ನೇ ಮಗನು ಶಿವ ತಂದೆಯಾಗಿದ್ದಾರೆ ಅಂದಾಗ ಅವರು ಎಲ್ಲರಿಗಿಂತ ಹಿರಿಯ ಮಗನಾದರಲ್ಲವೆ. ಶಿವ ತಂದೆಯ ಮಕ್ಕಳಾಗಿ ಬಿಟ್ಟರೆ ಮತ್ತೆ ಶಿವ ತಂದೆಯು ತನ್ನ ಮಗುವನ್ನಾಗಿ ಮಾಡಿಕೊಂಡು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಮಕ್ಕಳು ವಾರಸುಧಾರರಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಶಿವ ತಂದೆಯ ಪೂರ್ಣ ವಾರಸುಧಾರರಾಗಿದ್ದಾರೆ. ಮೊದಲ ಜನ್ಮದಲ್ಲಿ ಶಿವ ತಂದೆಗೆ ಎಲ್ಲವನ್ನೂ ಕೊಟ್ಟು ಬಿಟ್ಟರು ಅಂದಾಗ ಆಸ್ತಿಯು ಅವಶ್ಯವಾಗಿ ಮಕ್ಕಳಿಗೇ ಸಿಗಬೇಕು. ತಂದೆಯು ಹೇಳಿದರು - ನನ್ನನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳಿ. ಅನ್ಯರ್ಯಾರೂ ಇಲ್ಲ. ಬಾಬಾ ಇದೆಲ್ಲವೂ ತಮ್ಮದಾಗಿದೆ, ತಮ್ಮದೆಲ್ಲವೂ ನಮ್ಮದಾಗಿದೆ. ತಾವು ಇಡೀ ವಿಶ್ವದ ರಾಜಧಾನಿಯ ಆಸ್ತಿಯನ್ನು ಕೊಡುತ್ತೀರಿ. ಏಕೆಂದರೆ ನಿಮ್ಮ ಬಳಿ ಏನೆಲ್ಲವೂ ಇತ್ತೋ ಎಲ್ಲವನ್ನೂ ಕೊಟ್ಟು ಬಿಟ್ಟಿರಿ ಎಂದು ಮಕ್ಕಳು ಹೇಳುತ್ತೀರಿ. ನಾಟಕದಲ್ಲಿ ನಿಗಧಿಯಾಗಿದೆಯಲ್ಲವೆ. ಅರ್ಜುನನಿಗೆ ವಿನಾಶವನ್ನೂ ತೋರಿಸಿದರು. ಚತುರ್ಭುಜನನ್ನೂ ತೋರಿಸಿದರು. ಅರ್ಜುನನೆಂದರೆ ಮತ್ತ್ಯಾರೂ ಅಲ್ಲ, ಇವರಿಗೆ (ಬ್ರಹ್ಮ) ಸಾಕ್ಷಾತ್ಕಾರವಾಯಿತು. ನೋಡಿದರು, ರಾಜ್ಯಭಾಗ್ಯವು ಸಿಗುತ್ತದೆ ಅಂದಮೇಲೆ ನಾನೇಕೆ ಶಿವ ತಂದೆಯನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳಬಾರದು! ಅವರು ಮತ್ತೆ ನಮ್ಮನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತಾರೆ. ಈ ವ್ಯಾಪಾರವಂತೂ ಬಹಳ ಚೆನ್ನಾಗಿದೆ ಎಂದೂ ಯಾರೊಂದಿಗೂ ಏನನ್ನು ಕೇಳಲಿಲ್ಲ. ಎಲ್ಲವನ್ನೂ ಗುಪ್ತವಾಗಿ ಕೊಟ್ಟು ಬಿಟ್ಟರು. ಇದಕ್ಕೆ ಗುಪ್ತದಾನವೆಂದು ಹೇಳಲಾಗುತ್ತದೆ. ಇವರಿಗೇನಾಯಿತೆಂದು ಯಾರಿಗೇನು ಗೊತ್ತು! ಕೆಲವರು ಈ ದಾದಾರವರಿಗೆ ವೈರಾಗ್ಯವು ಬಂದಿತು, ಬಹುಶಃ ಸನ್ಯಾಸಿಯಾಗಿ ಬಿಟ್ಟರೆಂದು ತಿಳಿದರು. ಅಂದಾಗ ಮಕ್ಕಳು ಹೇಳುತ್ತಾರೆ - ನಮಗೆ ಐದು ಮಂದಿ ಮಕ್ಕಳಿದ್ದಾರೆ ಮತ್ತು ಆರನೇಯ ಮಗುವನ್ನಾಗಿ ನಾವು ಇವರನ್ನು (ತಂದೆ) ಮಾಡಿಕೊಳ್ಳುತ್ತೇವೆ. ಈ ಬ್ರಹ್ಮಾರವರೂ ಸಹ ಎಲ್ಲವನ್ನೂ ತಂದೆಯ ಮುಂದೆ ಇಟ್ಟು ಬಿಟ್ಟರು. ಇದರಿಂದ ಅನೇಕರ ಸೇವೆಯಾಗಲಿ ಎಂದು ದಾದಾರವರನ್ನು ನೋಡಿ ಎಲ್ಲರಿಗೆ ವಿಚಾರ ಬಂದಿತು. ಎಲ್ಲರೂ ಮನೆ-ಮಠವನ್ನು ಬಿಟ್ಟು ಓಡಿ ಬಂದರು. ಅಲ್ಲಿಂದಲೇ ಹೊಡೆದಾಟವು ಪ್ರಾರಂಭವಾಯಿತು. ಅವರು ಮನೆ-ಮಠವನ್ನು ಬಿಡುವ ಧೈರ್ಯವನ್ನು ತೋರಿಸಿದರು. ಭಟ್ಟಿಯಾಗಿತ್ತೆಂದು ಶಾಸ್ತ್ರಗಳಲ್ಲಿ ಬರೆಯಲಾಗಿದೆ. ಏಕೆಂದರೆ ಅವರಿಗೆ ಏಕಾಂತವು ಅವಶ್ಯವಾಗಿ ಬೇಕು. ತಂದೆಯ ನೆನಪಿನ ವಿನಃ ಮತ್ತ್ಯಾರ ನೆನಪೂ ಇರಬಾರದು. ಮಿತ್ರ ಸಂಬಂಧಿಗಳು ಮೊದಲಾದವರ ನೆನಪೂ ಇರಬಾರದು ಏಕೆಂದರೆ ಆತ್ಮವು ಪತಿತವಾಗಿದೆ. ಅದನ್ನು ಈಗ ಅವಶ್ಯವಾಗಿ ಪಾವನ ಮಾಡಿಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿ. ಇದರಲ್ಲಿಯೇ ವಿಘ್ನಗಳು ಬರುತ್ತವೆ. ಇದು ಸ್ತ್ರೀ-ಪುರುಷರ ನಡುವೆ ಜಗಳವನ್ನಿಡುವ ಜ್ಞಾನವಾಗಿದೆ ಎಂದು ಹೇಳುತ್ತಿದ್ದರು, ಏಕೆಂದರೆ ಒಬ್ಬರು ಪವಿತ್ರರಾಗಿ ಇನ್ನೊಬ್ಬರು ಆಗದಿದ್ದರಿಂದ ಹೊಡೆದಾಟವು ನಡೆಯಿತು. ಇವರೆಲ್ಲರೂ ಪೆಟ್ಟು ತಿಂದಿದ್ದಾರೆ. ಏಕೆಂದರೆ ಆಕಸ್ಮಿಕವಾಗಿ ಹೊಸ ಮಾತಾಯಿತಲ್ಲವೆ. ಎಲ್ಲರೂ ಆಶ್ಚರ್ಯ ಚಕಿತರಾದರು. ಇದೇನಾಯಿತು, ಇವರೆಲ್ಲರೂ ಓಡಿ ಹೋಗುತ್ತಾರೆ ಎಂದುಕೊಳ್ಳುತ್ತಿದ್ದರು. ಮನುಷ್ಯರಲ್ಲಿ ತಿಳುವಳಿಕೆಯೂ ಇಲ್ಲ. ಯಾವುದೋ ಶಕ್ತಿಯಿದೆ ಎಂದಷ್ಟೇ ಹೇಳುತ್ತಿದ್ದರು. ಈ ರೀತಿಯಂತೂ ತಮ್ಮ ಮನೆ-ಮಠವನ್ನು ಬಿಟ್ಟು ಓಡಿ ಬರುವಂತಹ ಮಾತು ಎಂದೂ ಇರಲಿಲ್ಲ. ನಾಟಕದಲ್ಲಿ ಇದೆಲ್ಲಾ ಚರಿತ್ರೆಯು ಶಿವ ತಂದೆಯದಾಗಿದೆ. ಕೆಲವರು ಖಾಲಿ ಕೈಯಲ್ಲಿಯೇ ಓಡಿ ಬಂದರು. ಇದೂ ಸಹ ಆಟವಾಗಿದೆ. ಮನೆ-ಮಠ ಎಲ್ಲವನ್ನೂ ಬಿಟ್ಟು ಓಡಿ ಬಂದರು, ಏನೂ ನೆನಪಿರಲಿಲ್ಲ. ಬಾಕಿ ಕೇವಲ ಈ ಶರೀರವಿದೆ. ಇದರಿಂದ ಕೆಲಸ ಮಾಡಬೇಕಾಗಿದೆ. ಆತ್ಮವನ್ನೇ ನೆನಪಿನ ಯಾತ್ರೆಯಿಂದ ಪವಿತ್ರ ಮಾಡಿಕೊಳ್ಳಬೇಕಾಗಿದೆ. ಆಗಲೇ ಪವಿತ್ರ ಆತ್ಮಗಳು ಹಿಂತಿರುಗಿ ಹೋಗಬೇಕಾಗಿದೆ. ಸ್ವರ್ಗದಲ್ಲಿ ಅಪವಿತ್ರ ಆತ್ಮಗಳು ಹೋಗುವಂತಿಲ್ಲ. ಇದು ನಿಯಮವೇ ಇಲ್ಲ. ಮುಕ್ತಿಧಾಮದಲ್ಲಿ ಪವಿತ್ರರೇ ಬೇಕು. ಪವಿತ್ರರಾಗುವುದರಲ್ಲಿಯೇ ಎಷ್ಟೊಂದು ವಿಘ್ನಗಳು ಬರುತ್ತವೆ. ಮೊದಲು ಯಾವುದೇ ಸತ್ಸಂಗ ಇತ್ಯಾದಿಗಳಲ್ಲಿ ಹೋಗಲು ಯಾವುದೇ ಅಡೆ ತಡೆ ಇರಲಿಲ್ಲ. ಎಲ್ಲಿ ಬೇಕಾದರೂ ಹೊರಟು ಹೋಗುತ್ತಿದ್ದರು. ಇಲ್ಲಿ ಪವಿತ್ರತೆಯ ಕಾರಣವೇ ಇಲ್ಲಿಗೆ ಬರಲು ವಿಘ್ನಗಳನ್ನು ಹಾಕುತ್ತಾರೆ. ಇದಂತೂ ತಿಳಿದಿದೆ - ಪವಿತ್ರರಾಗದ ವಿನಃ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಧರ್ಮರಾಜನ ಮೂಲಕ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ, ನಂತರ ಅಲ್ಪ ಸ್ವಲ್ಪ ಪ್ರಾಪ್ತಿಯ (ರೊಟ್ಟಿ) ಸಿಗುತ್ತದೆ. ಪೆಟ್ಟು ತಿನ್ನದೆ ಇದ್ದರೆ ಪದವಿಯು ಒಳ್ಳೆಯದೇ ಸಿಗುತ್ತದೆ. ಇದು ತಿಳುವಳಿಕೆಯ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ನನ್ನ ಬಳಿ ಬರಬೇಕಾಗಿದೆ. ಈ ಹಳೆಯ ಶರೀರವನ್ನು ಬಿಟ್ಟು ಪವಿತ್ರ ಆತ್ಮಗಳಾಗಬೇಕಾಗಿದೆ. ಮತ್ತೆ ಯಾವಾಗ ಪಂಚತತ್ವಗಳೂ ಸತೋಪ್ರಧಾನವಾಗಿ ಬಿಡುವುದೋ ಆಗ ನಮಗೆ ಶರೀರವೂ ಹೊಸದು, ಸತೋಪ್ರಧಾನವಾದದ್ದೇ ಸಿಗುತ್ತದೆ. ಎಲ್ಲವೂ ಅಲ್ಲೋಲ ಕಲ್ಲೋಲವಾಗಿ ಹೊಸದಾಗಿ ಬಿಡುತ್ತವೆ. ಹೇಗೆ ತಂದೆಯು ಬಂದು ಇವರಲ್ಲಿ ಕುಳಿತುಕೊಂಡು ಬಿಡುತ್ತಾರೆ. ಹಾಗೆಯೇ ತಂದೆಯು ಯಾವುದೇ ಕಷ್ಟವಿಲ್ಲದೆ ಗರ್ಭ ಮಹಲಿನಲ್ಲಿ ಹೋಗಿ ಕುಳಿತುಕೊಳ್ಳುತ್ತದೆ. ನಂತರ ಸಮಯವು ಬಂದಾಗ ಅದು ಹೊರಗೆ ಬಂದು ಬಿಡುತ್ತದೆ. ಆಗ ಹೇಗೆ ವಿದ್ಯುತ್ತಿನಂತೆ ಪ್ರಪಂಚವೇ ಮಿಂಚುತ್ತದೆ ಏಕೆಂದರೆ ಆತ್ಮವು ಪವಿತ್ರವಾಗಿರುತ್ತದೆ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ, ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ. |
ಧಾರಣೆ ಮುಖ್ಯಸಾರ: |
1. ಈ ಪತಿತ ಛಿ-ಛಿ ಪ್ರಪಂಚದಿಂದ ಬೇಹದ್ದಿನ ವೈರಾಗ್ಯ ಇಟ್ಟುಕೊಂಡು ಆತ್ಮವನ್ನು ಪಾವನ ಮಾಡುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಬ್ಬ ತಂದೆಯ ಆಕರ್ಷಣೆಯಲ್ಲಿಯೇ ಇರಬೇಕಾಗಿದೆ. |
2. ಜ್ಞಾನದ ಧಾರಣೆಯಿಂದ ತಮ್ಮ ಬ್ಯಾಟರಿಯನ್ನು ತುಂಬಿಕೊಳ್ಳಬೇಕಾಗಿದೆ. ಜ್ಞಾನ ರತ್ನಗಳಿಂದ ತಮ್ಮನ್ನು ಧನವಾನ್ ಮಾಡಿಕೊಳ್ಳಬೇಕಾಗಿದೆ. ಈಗ ಸಂಪಾದನೆಯ ಸಮಯವಾಗಿದೆ ಇದರಿಂದ ನಷ್ಟದಿಂದ ತಪ್ಪಿಸಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ನಿಶ್ಚಯವಿದೆ- ಇವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಇವರಿಗೆ ಯಾರೂ ಸಹ ತಂದೆಯಿಲ್ಲ. ಪ್ರಪಂಚದಲ್ಲಿ ತಂದೆಯಿಲ್ಲದಿರುವ ಮನುಷ್ಯರು ಯಾರೂ ಇರುವುದಿಲ್ಲ. ಒಂದೊಂದು ಮಾತನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳಬೇಕು ಹಾಗೂ ಅವರೇ ಜ್ಞಾನವನ್ನೂ ತಿಳಿಸುತ್ತಾರೆ. ಅವರು ಎಂದಿಗೂ ಓದುವುದಿಲ್ಲ ಇಲ್ಲವೆಂದರೆ ಮನುಷ್ಯಮಾತ್ರರೂ ಅವಶ್ಯವಾಗಿ ಏನನ್ನಾದರೂ ಓದುತ್ತಾರೆ. ಕೃಷ್ಣನೂ ಸಹ ಓದಿದ್ದಾನೆ. ತಂದೆಯು ತಿಳಿಸುತ್ತಾರೆ- ನಾನು ಏನು ಓದಲಿ? ನಾನು ಓದಿಸಲು ಬಂದಿದ್ದೇನೆ ಆದರೆ ಓದುವವನಲ್ಲ. ನಾನು ಯಾರಿಂದಲೂ ಶಿಕ್ಷಣವನ್ನು ಪಡೆದಿಲ್ಲ. ಯಾವ ಗುರುಗಳನ್ನೂ ಮಾಡಿಕೊಂಡಿಲ್ಲ. ನಾಟಕದನುಸಾರ ಅವಶ್ಯವಾಗಿ ತಂದೆಗೆ ಶ್ರೇಷ್ಠಾತಿಶ್ರೇಷ್ಠ ಮಹಿಮೆಯಾಗುತ್ತದೆ- ಶ್ರೇಷ್ಠಾತಿಶ್ರೇಷ್ಠ ಭಗವಂತನೆಂದು ಕರೆಯಲಾಗುವುದು. ಅವರಿಗಿಂತಲೂ ಶ್ರೇಷ್ಠವಾಗಿರುವುದು ಬೇರೇನಿದೆ? ತಂದೆಯೂ ಇಲ್ಲ, ಶಿಕ್ಷಕನೂ ಇಲ್ಲ, ಗುರುವೂ ಇಲ್ಲ! ಈ ಬೇಹದ್ದಿನ ತಂದೆಗೆ ಯಾವುದೇ ತಂದೆ, ಶಿಕ್ಷಕ, ಗುರುವಿಲ್ಲ. ಅವರು ಸ್ವಯಂ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಇದನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ. ಇಂತಹವರು ಬೇರೆ ಯಾರೂ ಇರುವುದಿಲ್ಲ. ಹೀಗಿ ಆಶ್ಚರ್ಯಪಡುತ್ತಾ ಇಂತಹ ತಂದೆ, ಶಿಕ್ಷಕ, ಸದ್ಗುರುವನ್ನು ನೆನಪು ಮಾಡಬೇಕಾಗಿದೆ. ಮನುಷ್ಯರು ಓ ಗಾಡ್ ಫಾದರ್ ಎಂದು ಹೇಳುತ್ತಾರೆ. ಅವರು ನಾಲೆಡ್ಜ್ ಫುಲ್ ಶಿಕ್ಷಕರೂ ಆಗಿದ್ದಾರೆ, ಸುಪ್ರೀಂ ಗುರುವೂ ಆಗಿದ್ದಾರೆ, ಎಲ್ಲವೂ ಒಬ್ಬರೇ ಆಗಿದ್ದಾರೆ. ಇಂತಹ ಯಾವುದೇ ಮನುಷ್ಯರಿರಲು ಸಾಧ್ಯವಿಲ್ಲ. ಅವರು ಮನುಷ್ಯರ ತನುವಿನಲ್ಲಿಯೇ ಓದಿಸುತ್ತಾರೆ. ಓದಿಸಲು ಅಗತ್ಯವಾಗಿ ಮುಖ (ಶರೀರ) ಬೇಕಾಗಿದೆ. ಇದು ಮಕ್ಕಳಿಗೆ ಪದೇ-ಪದೇ ನೆನಪಿದ್ದಾಗ ಹಡಗು ಪಾರಾಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ. ಶ್ರೇಷ್ಠ ಶಿಕ್ಷಕನೆಂದು ತಿಳಿಯುವುದರಿಂದ ಎಲ್ಲಾ ಜ್ಞಾನವೂ ಬುದ್ಧಿಯಲ್ಲಿ ಬಂದುಬಿಡುತ್ತದೆ.ಇವರು ಸದ್ಗುರುವೂ ಆಗಿದ್ದಾರೆ. ನಮಗೆ ಯೋಗ ಕಲಿಸುತ್ತಿದ್ದಾರೆ, ಒಬ್ಬನ ಜೊತೆಯಲ್ಲಿ ಯೋಗವನ್ನಿಡಬೇಕು. ಸರ್ವ ಆತ್ಮಗಳಿಗೆ ಒಬ್ಬರೇ ತಂದೆಯಾಗಿದ್ದಾರೆ. ಅವರು ಎಲ್ಲಾ ಆತ್ಮಗಳಿಗೂ ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮವೇ ಎಲ್ಲವನ್ನೂ ಮಾಡುತ್ತದೆ, ಈ ಶರೀರವೆಂಬ ವಾಹನವನ್ನು ಆತ್ಮವೇ ನಡೆಸುತ್ತದೆ. ಇದನ್ನು ರಥ ಅಥವಾ ಏನಾದರೂ ಹೇಳಿ, ಮುಖ್ಯವಾಗಿ ನಡೆಸುವವರು ಆತ್ಮವಾಗಿದೆ. ಆತ್ಮನ ತಂದೆಯು ಒಬ್ಬರೇ ಆಗಿದ್ದಾರೆ. ನಾವೆಲ್ಲಾ ಸಹೋದರ-ಸಹೋದರರಾಗಿದ್ದೇವೆಂದು ಮುಖದಿಂದ ಹೇಳುತ್ತೀರಿ. ಒಬ್ಬ ತಂದೆಗೆ ಮಕ್ಕಳು ಸಹೋದರ-ಸಹೋದರರಾಗಿದ್ದೇವೆ ನಂತರ ತಂದೆಯು ಪ್ರಜಾಪಿತ ಬ್ರಹ್ಮನಲ್ಲಿ ಬಂದಾಗ ಸಹೋದರ-ಸಹೋದರಿಯರಾಗುತ್ತೇವೆ. ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಂತೂ ಸಹೋದರ-ಸಹೋದರಿಯರಾಗುತ್ತಾರಲ್ಲವೆ! ಸಹೋದರನೊಂದಿಗೆ ಸಹೋದರಿಯ ವಿವಾಹವಂತೂ ಎಂದಿಗೂ ಆಗುವುದಿಲ್ಲ ಆದ್ದರಿಂದ ಎಲ್ಲರೂ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿಬಿಟ್ಟರು. ಸಹೋದರ-ಸಹೋದರಿಯೆಂದು ತಿಳಿಯುವುದರಿಂದ ತಂದೆಗೆ ಅತಿಪ್ರಿಯ ಮಕ್ಕಳು ಈಶ್ವರೀಯ ಸಂಪ್ರದಾಯದವರಾಗಿಬಿಡುತ್ತಾರೆ. ನಾವು ಈಶ್ವರನ ಸಂತಾನರಾಗಿದ್ದೇವೆಂದು ಹೇಳುತ್ತೀರಿ. ಈಶ್ವರ ತಂದೆಯೇ ನಮಗೆ ಎಲ್ಲವನ್ನೂ ಕಲಿಸುತ್ತಿದ್ದಾರೆ, ಅವರು ಯಾರಿಂದಲೂ ಕಲಿಯಲ್ಪಟ್ಟಿಲ್ಲ! ಅವರು ಸದಾ ಸಂಪೂರ್ಣರಾಗಿದ್ದಾರೆ. ಅವರ ಕಲೆಗಳು ಎಂದಿಗೂ ಕಡಿಮೆಯಾಗುವುದಿಲ್ಲ ಆದರೆ ಎಲ್ಲರ ಕಲೆಗಳು ಕಡಿಮೆಯಾಗುತ್ತವೆ. ನಾವಂತೂ ಶಿವತಂದೆಯ ಮಹಿಮೆಯನ್ನಂತೂ ಬಹಳ ಮಾಡುತ್ತೇವೆ. ಶಿವತಂದೆ ಎಂದು ಹೇಳುವುದು ಬಹಳ ಸಹಜವಾಗಿದೆ ಮತ್ತು ತಂದೆಯೇ ಪತಿತ-ಪಾವನನಾಗಿದ್ದಾರೆ. ಕೇವಲ ಈಶ್ವರನೆಂದು ಹೇಳುವುದರಿಂದ ಅಷ್ಟೊಂದು ಅನುಭವವಾಗುವುದಿಲ್ಲ. ಈಗ ತಂದೆಯು ಬಂದು ಹೇಗೆ ಪತಿತರನ್ನು ಪಾವನ ಮಾಡುತ್ತಿದ್ದಾರೆಂದು ನೀವು ಮಕ್ಕಳ ಮನಸ್ಸಿನಲ್ಲಿ ಬರುತ್ತದೆ. ಇಲ್ಲಿ ಲೌಕಿಕ ತಂದೆಯೂ ಇದ್ದಾರೆ, ಅಲೌಕಿಕ ತಂದೆಯೂ ಇದ್ದಾರೆ. ಈ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ ಏಕೆಂದರೆ ಪತಿತರಾಗಿರುವ ಕಾರಣ ನೆನಪು ಮಾಡುತ್ತಾರೆ. ಪಾವನನಾದ ನಂತರ ಪಾವನ ಮಾಡಲು ಬನ್ನಿ ಎಂದು ಕರೆಯುವ ಅವಶ್ಯಕತೆಯಿಲ್ಲ. ನಾಟಕವನ್ನು ನೋಡಿ ಹೇಗೆ ಮಾಡಲ್ಪಟ್ಟಿದೆ! ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಾರೆ, ನಾವು ಪಾವನ ಪ್ರಪಂಚದ ಮಾಲೀಕರಾಗಬೇಕೆಂದು ಇಚ್ಛಿಸುತ್ತಾರೆ. |
ಶಾಸ್ತ್ರಗಳಲ್ಲಿ ದೇವತೆಗಳಿಗೂ-ಅಸುರರಿಗೂ ಯುದ್ಧ ನಡೆಯಿತೆಂದು ತೋರಿಸುತ್ತಾರೆ ಆದರೆ ಆ ರೀತಿಯೇನೂ ಇಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ನಾವು ಅಸುರರೂ ಅಲ್ಲ, ದೇವತೆಗಳೂ ಅಲ್ಲ ಮಧ್ಯದಲ್ಲಿದ್ದೇವೆ. ಎಲ್ಲವೂ ನಿಮಗೆ ಮನಸ್ಸು ತಿನ್ನುತ್ತಿರುತ್ತದೆ. ಇದು ಬಹಳ ಮಜವಾಗಿರುವ ನಾಟಕವಾಗಿದೆ. ನಾಟಕದಲ್ಲಿ ಮಜಾ ನೋಡಲು ಹೋಗುತ್ತಾರೆ ಆದರೆ ಅದು ಅಲ್ಪಕಾಲದ ನಾಟಕ, ಇದು ಬೇಹದ್ದಿನ ನಾಟಕವಾಗಿದೆ. ಇದನ್ನು ಬೇರೆ ಯಾರೂ ತಿಳಿದುಕೊಂಡಿಲ್ಲ. ದೇವತೆಗಳೂ ಸಹ ತಿಳಿದುಕೊಳ್ಳಲು ಆಗುವುದಿಲ್ಲ. ಈಗ ನೀವು ಕಲಿಯುಗವನ್ನು ಬಿಟ್ಟು ಬಂದಿದ್ದೀರಿ. ಯಾರು ಸ್ವಯಂ ತಿಳಿದುಕೊಂಡಿದ್ದಾರೆಯೋ ಅವರೇ ಅನ್ಯರಿಗೂ ತಿಳಿಸುತ್ತಾರೆ. ಒಮ್ಮೆ ನಾಟಕವನ್ನು ನೋಡಿದ ತಕ್ಷಣ ನಾಟಕವೆಲ್ಲವೂ ಬುದ್ಧಿಯಲ್ಲಿ ಬಂದುಬಿಡುತ್ತದೆ. ತಂದೆಯು ತಿಳಿಸುತ್ತಾರೆ- ಇದು ಮನುಷ್ಯಸೃಷ್ಟಿ ರೂಪಿ ವೃಕ್ಷ, ಇದರ ಬೀಜ ಮೇಲಿದ್ದಾರೆ. ವಿರಾಟರೂಪವೆಂದು ಹೇಳುತ್ತಾರಲ್ಲವೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ ಆದರೆ ಮನುಷ್ಯರಿಗೆ ಇದು ತಿಳಿದಿಲ್ಲ. ಶಿವತಂದೆಯು ಯಾರಿಂದಲಾದರೂ ಭಾಷೆಯನ್ನು ಕಲಿತಿರಬಹುದೇ? ಅವರಿಗೆ ಶಿಕ್ಷಕನೇ ಇಲ್ಲದಿರುವಾಗ ಭಾಷೆಯನ್ನು ಹೇಗೆ ಕಲಿಯುತ್ತಾರೆ? ಅವಶ್ಯವಾಗಿ ಯಾವ ರಥದಲ್ಲಿ ಬರುತ್ತಾರೆಯೋ ಅವರ ಭಾಷೆಯನ್ನೇ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಶಿವತಂದೆಗೆ ತನ್ನದೇ ಆದ ಭಾಷೆ ಯಾವುದೂ ಇಲ್ಲ, ಅವರೇನೂ ಓದಿ ಕಲಿಯುವುದಿಲ್ಲ. ಅವರಿಗೆ ಯಾರೂ ಶಿಕ್ಷಕರಿಲ್ಲ. ಕೃಷ್ಣನಂತೂ ಕಲಿಯುತ್ತಾನೆ. ಕೃಷ್ಣನಿಗೆ ತಂದೆ-ತಾಯಿ, ಶಿಕ್ಷಕ ಇದ್ದಾರೆ, ಅವನಿಗೆ ಗುರುವಿನ ಅವಶ್ಯಕತೆಯಿಲ್ಲ ಏಕೆಂದರೆ ಅವರಿಗಂತೂ ಸದ್ಗತಿ ಸಿಕ್ಕಿರುತ್ತದೆ. ಇದನ್ನು ನೀವು ತಿಳಿದಿದ್ದೀರಿ. ನೀವು ಬ್ರಾಹ್ಮಣರು ಎಲ್ಲರಿಗಿಂತ ಶ್ರೇಷ್ಠರಾಗಿದ್ದೀರಿ. ಇದನ್ನು ನೆನಪಿಟ್ಟುಕೊಳ್ಳಿ - ನಮಗೆ ತಂದೆಯು ಓದಿಸುತ್ತಿದ್ದಾರೆ, ನಾವೆಲ್ಲರೂ ಬ್ರಾಹ್ಮಣರಾಗಿದ್ದೇವೆ, ಬ್ರಾಹ್ಮಣ ದೇವತಾ...... ಎಷ್ಟೊಂದು ಸ್ಪಷ್ಟವಾಗಿದೆ. ತಂದೆಗಂತೂ ಎಲ್ಲವನ್ನೂ ತಿಳಿದಿದ್ದಾರೆಂದು ಮೊದಲೇ ಹೇಳಿಬಿಟ್ಟಿದ್ದಾರೆ, ಅವರು ಏನು ತಿಳಿದುಕೊಂಡಿದ್ದಾರೆಂದು ಯಾರಿಗೂ ಗೊತ್ತಿಲ್ಲ. ಅವರು ಜ್ಞಾನಪೂರ್ಣನಾಗಿದ್ದಾರೆ, ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಅವರಲ್ಲಿರುತ್ತದೆ. ಬೀಜದಲ್ಲಿ ಇಡೀ ವೃಕ್ಷದ ಜ್ಞಾನವಿರುತ್ತದೆ. ಅದಂತೂ ಜಡಬೀಜವಾಗಿದೆ, ನೀವಂತೂ ಚೈತನ್ಯವಾಗಿದ್ದೀರಿ. ನೀವು ನಿಮ್ಮ ವೃಕ್ಷದ ಜ್ಞಾನವನ್ನು ತಿಳಿಸುತ್ತೀರಿ. ತಂದೆಯು ತಿಳಿಸುತ್ತಾರೆ- ನಾನು ಈ ಭಿನ್ನತೆಯುಳ್ಳ ಮನುಷ್ಯಸೃಷ್ಟಿಯ ಬೀಜರೂಪನಾಗಿದ್ದೇನೆ. ಎಲ್ಲರೂ ಮನುಷ್ಯರೇ ಆಗಿದ್ದಾರೆ ಆದರೆ ವಿಭಿನ್ನವಾಗಿದ್ದಾರೆ. ಒಂದು ಆತ್ಮನ ಲಕ್ಷಣದಂತೆ ಇನ್ನೊಂದು ಆತ್ಮನದಿರುವುದಿಲ್ಲ. ಇಬ್ಬರ ಲಕ್ಷಣ ಒಂದೇ ರೀತಿಯಾಗುವುದಿಲ್ಲ, ಇದು ಬೇಹದ್ದಿನ ನಾಟಕವಾಗಿದೆ. ನಾವು ಮನುಷ್ಯರಿಗೆ ಪಾತ್ರಧಾರಿಗಳೆಂದು ಹೇಳುವುದಿಲ್ಲ, ಆತ್ಮನಿಗೇ ಹೇಳಲಾಗುವುದು. ಅವರು ಮನುಷ್ಯರಿಗೆ ಪಾತ್ರಧಾರಿಗಳೆಂದು ತಿಳಿದುಕೊಂಡಿದ್ದಾರೆ. ನಾವು ಆತ್ಮಗಳೇ ಪಾತ್ರಧಾರಿಗಳೆಂದು ನಿಮ್ಮ ಬುದ್ಧಿಯಲ್ಲಿದೆ. ಆ ಮನುಷ್ಯರು ನೃತ್ಯ ಮಾಡುತ್ತಾರೆ, ಮನುಷ್ಯರು ಮಂಗಕ್ಕೆ ನೃತ್ಯವನ್ನು ಕಲಿಸಿರುವಂತೆ ಮಾಡುತ್ತಾರೆ. ಇದು ಆತ್ಮವಾಗಿದೆ, ಶರೀರಕ್ಕೆ ನೃತ್ಯ ಮಾಡಿಸುತ್ತದೆ, ಪಾತ್ರ ಮಾಡಿಸುತ್ತದೆ. ಇವು ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಬೇಹದ್ದಿನ ತಂದೆಯು ಅಗತ್ಯವಾಗಿ ಬರುತ್ತಾರೆ, ಬರುವುದಿಲ್ಲವೆಂದು ತಿಳಿಯಬಾರದು. ಶಿವಜಯಂತಿಯೂ ಆಗುತ್ತದೆ, ಪ್ರಪಂಚವು ಪರಿವರ್ತನೆಯ ಸಮಯದಲ್ಲಿ ತಂದೆಯು ಬರುತ್ತಾರೆ. ಭಕ್ತಿಮಾರ್ಗದಲ್ಲಿ ಕೃಷ್ಣನನ್ನು ನೆನಪು ಮಾಡುತ್ತಿರುತ್ತಾರೆ ಆದರೆ ಕೃಷ್ಣನು ಹೇಗೆ ಬರುತ್ತಾನೆ? ಕಲಿಯುಗದಲ್ಲಿ ಅಥವಾ ಸಂಗಮಯುಗದಲ್ಲಿ ಕೃಷ್ಣನನ್ನು ಈ ಕಣ್ಣುಗಳಿಂದ ನೋಡಲು ಆಗುವುದಿಲ್ಲ ಹಾಗಾದರೆ ಅವರನ್ನು ಭಗವಂತನೆಂದು ಹೇಗೆ ಹೇಳುವುದು? ಕೃಷ್ಣನಂತೂ ಸತ್ಯಯುಗದ ಮೊದಲನೇ ರಾಜಕುಮಾರನಾಗಿದ್ದನು. ಅವನಿಗೆ ತಂದೆ, ಶಿಕ್ಷಕನಿದ್ದಾರೆ. ಸ್ವಯಂ ಸದ್ಗತಿಯಲ್ಲಿರುವ ಕಾರಣ ಗುರುವಿನ ಅವಶ್ಯಕತೆಯಿರುವುದಿಲ್ಲ. ಈ ಲೆಕ್ಕವು ಬಹಳ ಸ್ಪಷ್ಟವಾಗಿದೆ, ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ತಿಳಿದಿದ್ದೀರಿ. ಯಾರು-ಯಾರು ಎಷ್ಟೆಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಅಂದಾಜು ಮಾಡುತ್ತೀರಿ. ದೈವೀ ಮನೆತನದವರು ಮೊಟ್ಟಮೊದಲು ಜನ್ಮವನ್ನು ತೆಗೆದುಕೊಳ್ಳುತ್ತಾರೆ, ಮೊದಲು ಅವರ ಜನ್ಮವಾಗುತ್ತದೆ. ಒಬ್ಬರು ಬಂದರೆ ಅವರ ಹಿಂದೆ ಉಳಿದವರು ಬರುತ್ತಾರೆ. ಈ ಮಾತುಗಳನ್ನು ನೀವು ಮಾತ್ರವೇ ತಿಳಿದುಕೊಳ್ಳುತ್ತೀರಿ. ನಿಮ್ಮಲ್ಲಿಯೂ ಕೆಲವರು ತುಂಬಾ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಲೌಕಿಕ ವಿದ್ಯೆಯಲ್ಲಿಯೂ ಇದೇ ರೀತಿಯಾಗಿರುತ್ತದೆ ಆದರೆ ಇದು ಬಹಳ ಸಹಜವಾಗಿದೆ. ಕೇವಲ ಒಂದು ಗುಪ್ತವಾದ ಪರಿಶ್ರಮವಿದೆ - ನೀವು ತಂದೆಯನ್ನು ನೆನಪು ಮಾಡುತ್ತಿರುವಾಗ ಮಾಯೆಯು ವಿಘ್ನ ಹಾಕುತ್ತದೆ ಏಕೆಂದರೆ ಮಾಯಾರಾವಣ ಈರ್ಷ್ಯೆಪಡುತ್ತಾನೆ. ನೀವು ರಾಮನನ್ನು ನೆನಪು ಮಾಡುತ್ತಿರುವಾಗ ಅಸೂಯೆ ಬರುತ್ತದೆ. ಇವರು ನನ್ನ ಕಡೆಯ ಶಿಷ್ಯ ರಾಮನನ್ನು ಏಕೆ ನೆನಪು ಮಾಡುತ್ತಾರೆ! ಇದು ನಾಟಕದಲ್ಲಿ ಮೊದಲೇ ನೊಂದಾವಣೆಯಾಗಿದೆ. ಕಲ್ಪದ ಮೊದಲು ಯಾವ ಪಾತ್ರವನ್ನಭಿನಯಿಸಲಾಗಿತ್ತು ಅದೆ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ಈಗ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಕಲ್ಪದ ಹಿಂದೆ ಯಾವ ಪುರುಷಾರ್ಥವನ್ನು ಮಾಡಿದ್ದೀರಿ ಈಗಲೂ ಅದನ್ನೇ ಮಾಡುತ್ತಿದ್ದೀರಿ. ಈ ಚಕ್ರವು ಸುತ್ತುತ್ತಿರುತ್ತದೆ ಎಂದಿಗೂ ನಿಲ್ಲುವುದಿಲ್ಲ. ಹೇಗೆ ಈ ದೈನಂದಿನ ಗಡಿಯಾರ ಟಿಕ್-ಟಿಕ್ ಆಗುತ್ತಿರುತ್ತದೆ. ತಂದೆಯು ತಿಳಿಸುತ್ತಾರೆ- ಇದು 5000 ವರ್ಷಗಳ ನಾಟಕವಾಗಿದೆ. ಶಾಸ್ತ್ರಗಳಲ್ಲಿ ಎಂತೆಂತಹ ಮಾತುಗಳನ್ನು ಬರೆದುಬಿಟ್ಟಿದ್ದಾರೆ! ತಂದೆಯು ಭಕ್ತಿಯನ್ನು ಮಾಡಬೇಡಿ, ಬಿಟ್ಟುಬಿಡಿ ಎಂದು ಹೇಳುವುದೇ ಇಲ್ಲ ಏಕೆಂದರೆ ಅವರು ಇಲ್ಲಿ ನಡೆಯಲು ಆಗದಿದ್ದರೆ ಭಕ್ತಿಯನ್ನೂ ಬಿಟ್ಟರೆ ಇಲ್ಲಿನವರು ಅಲ್ಲ, ಅಲ್ಲಿನವರೂ ಆಗದಂತೆ ಆಗಬಾರದು. ಯಾವ ಕೆಲಸಕ್ಕೂ ಬಾರದಂತೆ ಆಗಿಬಿಡುತ್ತಾರೆ. ಆದ್ದರಿಂದ ನೀವು ನೋಡುತ್ತಿರಿ- ಕೆಲವರು ಮನುಷ್ಯರು ಭಕ್ತಿಯೇನೂ ಮಾಡುವುದಿಲ್ಲ. ಸುಮ್ಮನೆ ಹಾಗೆಯೇ ಜೀವನ ನಡೆಸುತ್ತಿರುತ್ತಾರೆ. ಕೆಲವರು ಭಗವಂತನೇ ಅನೇಕ ರೂಪಗಳನ್ನು ಧರಿಸಿದ್ದಾರೆಂದು ಹೇಳಿಬಿಡುತ್ತಾರೆ. ಅರೆ! ಇದು ಬೇಹದ್ದಿನ ಅನಾದಿಯಾಗಿ ಮಾಡಲ್ಪಟ್ಟಿರುವ ನಾಟಕವಾಗಿದೆ, ಇದು ಪುನರಾವರ್ತನೆಯಾಗುತ್ತಿರುತ್ತದೆ. ಆದ್ದರಿಂದ ಇದನ್ನು ಅನಾದಿ-ಅವಿನಾಶಿ, ವಿಶ್ವನಾಟಕವೆಂದು ಕರೆಯಲಾಗುವುದು. ಇದನ್ನು ನೀವು ಮಕ್ಕಳು ತಿಳಿದಿದ್ದೀರಿ. ಇದರಲ್ಲಿ ನೀವು ಕುಮಾರಿಯರಿಗಾಗಿ ಬಹಳ ಸಹಜವಾಗಿದೆ. ಮಾತೆಯರಿಗೆ ಹತ್ತಿರುವ ಏಣಿಯನ್ನು ಇಳಿಯಬೇಕಾಗುತ್ತದೆ ಆದರೆ ಕುಮಾರಿಯರಿಗೆ ಯಾವುದೇ ಬಂಧನವಿಲ್ಲ, ಚಿಂತೆಯಿಲ್ಲ ಅಂದಾಗ ತಂದೆಗೆ ಅರ್ಪಣೆಯಾಗಿಬಿಡಬೇಕು. ಲೌಕಿಕ ಸಂಬಂಧವನ್ನು ಮರೆತು ಪಾರಲೌಕಿಕ ಸಂಬಂಧವನ್ನು ಜೋಡಿಸಬೇಕು. ಕಲಿಯುಗವು ದುರ್ಗತಿಯಾಗಿದೆ, ನಾಟಕದನುಸಾರವಾಗಿ ಕೆಳಗಡೆ ಇಳಿಯಲೇಬೇಕು. |
ಭಾರತವಾಸಿಗಳು ಇದೆಲ್ಲವೂ ಈಶ್ವರನದೆಂದು ಹೇಳುತ್ತಾರೆ ಅವರೇ ಮಾಲೀಕನಾಗಿದ್ದಾರೆ ಎಂದು ಹೇಳುತ್ತಾರೆ. ನೀವು ಯಾರು! ನಾವು ಆತ್ಮ ಆಗಿದ್ದೇವೆ, ಬಾಕಿ ಇದೆಲ್ಲವೂ ಈಶ್ವರನದಾಗಿದೆ. ಈ ದೇಹ ಮೊದಲಾದವುಗಳೆಲ್ಲವನ್ನೂ ಪರಮಾತ್ಮನೇ ಕೊಟ್ಟಿದ್ದಾರೆ. ಮುಖದಿಂದ ಹೇಳುವುದೇನೋ ಸರಿ, ಇದೆಲ್ಲವೂ ಈಶ್ವರನದೆಂದು ಹೇಳಿಬಿಡುತ್ತಾರೆ. ಒಳ್ಳೆಯದು. ಅವರು ಕೊಟ್ಟಂತಹ ವಸ್ತುವಿನಲ್ಲಿ ನನ್ನತನವನ್ನೇನಾದರೂ ಇರಬೇಕೇನು! ಆದರೆ ಹೇಳುವಂತೆ ನಡೆಯುವುದಿಲ್ಲ. ರಾವಣನ ಮತದಂತೆ ನಡೆಯುತ್ತಾರೆ. ತಂದೆಯು ತಿಳಿಸುತ್ತಾರೆ- ನೀವು ನಿಮಿತ್ತರಾಗಿರಿ ಆದರೆ ರಾವಣನ ಸಂಪ್ರದಾಯದವರಾಗಿರುವ ಕಾರಣ ನಿಮಗೆ ಮೋಸ ಮಾಡಿಕೊಳ್ಳುತ್ತೀರಿ. ಮುಖದಿಂದ ಒಂದನ್ನು ಹೇಳುವುದು ಮಾಡುವುದು ಇನ್ನೊಂದು. ತಂದೆಯು ಕೊಟ್ಟಂತಹ ವಸ್ತುವನ್ನು ಮರಳಿ ಪಡೆದರೆ ದುಃಖವೇಕೆ ಆಗಬೇಕು! ಮಮತೆಯನ್ನು ದೂರ ಮಾಡಲು ಈ ಎಲ್ಲಾ ಮಾತುಗಳನ್ನು ಮಕ್ಕಳಿಗೆ ತಿಳಿಸುತ್ತಾರೆ. ಈಗ ತಂದೆಯು ಬಂದಿದ್ದಾರೆ- ತಂದೆಯೇ ನಮ್ಮನ್ನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗಿ ಎಂದು ನೀವೇ ಕರೆದಿರಿ. ನಾವು ರಾವಣರಾಜ್ಯದಲ್ಲಿ ಬಹಳ ದುಃಖಿಗಳಾಗಿದ್ದೇವೆ ಬಂದು ಪಾವನ ಮಾಡಿ ಏಕೆಂದರೆ ಪಾವನರಾಗದ ಹೊರಟು ಹೋಗಲು ಸಾಧ್ಯವಿಲ್ಲವೆಂದು ತಿಳಿದುಕೊಂಡಿದ್ದಾರೆ. ನಮ್ಮನ್ನು ಕರೆದುಕೊಂಡು ಹೋಗಿ! ಎಲ್ಲಿಗೆ? ಮನೆಗೆ ಕರೆದುಕೊಂಡು ಹೋಗಿ. ಎಲ್ಲರೂ ನಾವು ಮನೆಗೆ ಹೋಗೋಣವೆಂದು ಹೇಳುತ್ತಾರೆ, ಕೃಷ್ಣನ ಭಕ್ತರು ಕೃಷ್ಣಪುರಿ, ವೈಕುಂಠಕ್ಕೆ ಹೋಗೋಣವೆಂದು ಹೇಳುತ್ತಾರೆ, ಅವರಿಗೆ ಸತ್ಯಯುಗದ ನೆನಪಿರುತ್ತದೆ, ಅದು ಪ್ರೀತಿಯ ವಸ್ತುವಾಗಿದೆ. ಮನುಷ್ಯರು ಸತ್ತಾಗ ಸ್ವರ್ಗಕ್ಕೆ ಹೋಗುವುದಿಲ್ಲ. ಸತ್ಯಯುಗದಲ್ಲಿ ಸ್ವರ್ಗವಿರುತ್ತದೆ, ನರಕವು ಕಲಿಯುಗದಲ್ಲಿದೆ. ಅಗತ್ಯವಾಗಿ ಕಲಿಯುಗದಲ್ಲಿಯೇ ಅವರ ಪುನರ್ಜನ್ಮವಾಗುತ್ತದೆ. ಇದು ಸತ್ಯಯುಗವೇನು? ಅದಂತೂ ಅದ್ಭುತ ಜಗತ್ತಾಗಿತ್ತು. ಹೇಳಿಯೂ ಹೇಳುತ್ತಾರೆ, ತಿಳಿದುಕೊಂಡಿದ್ದಾರೆ ಆದರೂ ಮತ್ತೆ ಸತ್ತಾಗ ಅವರ ಸಂಬಂಧಿಕರು ಏನೂ ಅರ್ಥಮಾಡಿಕೊಳ್ಳುವುದಿಲ್ಲ. ತಂದೆಯ ಬಳಿ 84 ಜನ್ಮದ ಚಕ್ರದ ಜ್ಞಾನವಿದೆ ಅದನ್ನು ತಂದೆಯೇ ಕೊಡುತ್ತಾರೆ. ನೀವಂತೂ ನಿಮ್ಮನ್ನು ದೇಹವೆಂದು ತಿಳಿದುಕೊಂಡಿದ್ದೀರಿ, ಅದು ತಪ್ಪಾಗಿತ್ತು. ಈಗ ತಂದೆಯು ತಿಳಿಸುತ್ತಾರೆ- ದೇಹೀ ಅಭಿಮಾನಿಭವ. ದೇಹೀ ಅಭಿಮಾನಿಭವ ಎಂದು ಕೃಷ್ಣನು ಹೇಳಲಾಗುವುದಿಲ್ಲ ಏಕೆಂದರೆ ಅವನಿಗಂತೂ ದೇಹವಿದೆ. ಶಿವತಂದೆಗಂತೂ ತನ್ನ ದೇಹವಿಲ್ಲ. ಇದು ಅವರ ರಥವಾಗಿದೆ. ಇದರಲ್ಲಿ ಅವರು ವಿರಾಜಮಾನನಾಗಿದ್ದಾರೆ. ಇದು ಶಿವನ ರಥವೂ ಆಗಿದೆ, ಬ್ರಹ್ಮನ ರಥವೂ ಆಗಿದೆ. ಈ ಶರೀರದ ಆತ್ಮವೂ ಇದೆ, ತಂದೆಯು ಲೋನ್ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ- ನಾನು ಇವರ ಆಧಾರವನ್ನು ತೆಗೆದುಕೊಳ್ಳುತ್ತೇನೆ. ನನ್ನದಂತೂ ಇಲ್ಲ ಹಾಗಾದರೆ ಹೇಗೆ ಓದಿಸುವುದು! ತಂದೆಯು ಪ್ರತಿನಿತ್ಯ ಕುಳಿತು ಮಕ್ಕಳನ್ನು ಆಕರ್ಷಣೆ ಮಾಡುತ್ತಾರೆ, ನಿಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಬೇಕು, ಈ ಶರೀರವನ್ನು ಮರೆತುಬಿಡಿ. ನಾನು ನಿಮ್ಮನ್ನು ನೋಡುತ್ತೇನೆ, ನೀವು ನನ್ನನ್ನು ನೋಡಿ. ನೀವು ತಂದೆಯನ್ನು ಎಷ್ಟೆಷ್ಟು ನೋಡುತ್ತೀರಿ ಅಷ್ಟೂ ಪಾವನರಾಗುತ್ತೀರಿ. ಪಾವನರಾಗಲು ಇನ್ನ್ಯಾವುದೆ ಉಪಾಯವಿಲ್ಲ. ಒಂದುವೇಳೆ ಇದ್ದರೆ ಅದರಿಂದ ಆತ್ಮ ಪಾವನವಾಗುವುದಿದ್ದರೆ ಹೇಳಿ ಆತ್ಮವು ಗಂಗೆಯ ನೀರಿನಿಂದ ಪಾವನವಾಗುವುದಿಲ್ಲ, ಮೊದಲು ಯಾರಿಗಾದರೂ ತಂದೆಯ ಪರಿಚಯ ಕೊಡಬೇಕು. ಇಂತಹ ತಂದೆಯಂತೂ ಯಾರೂ ಇರುವುದಿಲ್ಲ. ನಾಡಿಯನ್ನು ನೋಡಿ ತಿಳಿಸಿಕೊಡಿ ಅವರು ಆಶ್ಚರ್ಯಪಡಬೇಕು. ಹೌದು! ಇವರೇ ಪರಮಾತ್ಮನೆಂದು ತಿಳಿದುಕೊಳ್ಳಬೇಕು. ಈಗ ನೀವು ಮಕ್ಕಳಿಗೆ ತಂದೆಯು ತನ್ನ ಪರಿಚಯವನ್ನು ಕೊಟ್ಟಿದ್ದಾರೆ. ನಾನು ಯಾರೆಂದು ಮಕ್ಕಳಿಗೆ ತಿಳಿದಿದೆ. ಚರಿತ್ರೆಯು ಪುನರಾವರ್ತನೆಯಾಗುತ್ತದೆ. ಯಾರು ಈ ಕುಲದವರಾಗಿರುತ್ತಾರೆಯೋ ಅವರೇ ಬರುತ್ತಾರೆ, ಉಳಿದವರು ತಮ್ಮ-ತಮ್ಮ ಧರ್ಮದಲ್ಲಿ ಹೊರಟುಹೋಗುತ್ತಾರೆ. ಯಾರು ಅನ್ಯಧರ್ಮಗಳಿಗೆ ಪರಿವರ್ತನೆಯಾಗುತ್ತಾರೆ ಅವರು ಈಗ ಬಂದು ಅವರವರ ವಿಭಾಗಕ್ಕೆ ಹೋಗುತ್ತಾರೆ ಆದ್ದರಿಂದ ನಿರಾಕಾರಿ ವೃಕ್ಷವನ್ನು ತೋರಿಸಲಾಗಿದೆ. ಈ ಮಾತುಗಳನ್ನು ನೀವು ಮಕ್ಕಳು ಮಾತ್ರ ತಿಳಿದುಕೊಳ್ಳುತ್ತೀರಿ ಬಾಕಿ ಕಷ್ಟಪಟ್ಟು ತಿಳಿದುಕೊಳ್ಳುತ್ತಾರೆ 7-8 ಜನಕ್ಕೆ ತಿಳಿಸಿದರೆ ಒಬ್ಬರು ಅಥವಾ ಇಬ್ಬರು ಈ ಜ್ಞಾನವು ಬಹಳ ಚೆನ್ನಾಗಿದೆ ಎಂದು ತಿಳಿದುಕೊಂಡು ಉಳಿಯುತ್ತಾರೆ. ಇಲ್ಲಿನವರಾಗಿದ್ದಾಗ ಬಿರುಗಾಳಿ ಕಡಿಮೆ ಬರುತ್ತದೆ, ಅವರಿಗೆ ಮುರುಳಿಯನ್ನು ಕೇಳೋಣ, ಮತ್ತೆ ಹೋಗೋಣವೆಂದು ಮನಸ್ಸಾಗುತ್ತಿರುತ್ತದೆ. ಕೆಲವರು ಸಂಗದ ರಂಗಿನಲ್ಲಿ ಬಂದು ಇಲ್ಲಿಗೆ ಬರುವುದೇ ಇಲ್ಲ. ಎಲ್ಲಾದರೂ ಬೇರೆ ಪಾರ್ಟಿ ಹೋಗುವುದನ್ನು ನೋಡಿ ಮತ್ತೆ ಸಿಕ್ಕಿಹಾಕಿಕೊಳ್ಳುತ್ತಾರೆ. ಬಹಳ ಶ್ರಮ ಪಡಬೇಕಾಗುತ್ತದೆ. ಎಷ್ಟೊಂದು ಶ್ರಮಪಡಬೇಕಾಗುತ್ತದೆ! ಪದೇ-ಪದೇ ಮರೆತುಹೋಗುತ್ತೇವೆಂದು ಹೇಳುತ್ತಾರೆ. ನಾನು ಆತ್ಮನಾಗಿದ್ದೇನೆ, ಶರೀರವಲ್ಲ. ಇದು ಪದೇ-ಪದೇ ಮರೆತುಹೋಗುತ್ತದೆ. ತಂದೆಯೂ ತಿಳಿದಿದ್ದಾರೆ- ಮಕ್ಕಳು ಕಾಮಚಿತೆಯ ಮೇಲೆ ಕುಳಿತು ಕಪ್ಪಾಗಿಬಿಟ್ಟಿದ್ದಾರೆ, ಸ್ಮಶಾನವಾಸಿಗಳಾಗಿದ್ದಾರೆ ಆದ್ದರಿಂದ ಅವರು ಪತಿತರಾಗಿದ್ದಾರೆ. ಅವರಿಗೆ ಮತ್ತೆ ತಂದೆಯು ತಿಳಿಸುತ್ತಾರೆ- ನನ್ನ ಮಕ್ಕಳೆಲ್ಲರೂ ಸುಟ್ಟು ಭಸ್ಮವಾಗಿದ್ದಾರೆ, ಇದು ಬೇಹದ್ದಿನ ಮಾತಾಗಿದೆ. ಎಷ್ಟೊಂದು ಕೋಟ್ಯಾಂತರ ಆತ್ಮಗಳು ತಮ್ಮ ಮನೆಯಲ್ಲಿರುವವರಾಗಿದ್ದಾರೆ ಅರ್ಥಾತ್ ಬಹ್ಮ್ ಲೋಕದಲ್ಲಿರುವವರಾಗಿದ್ದಾರೆ. ತಂದೆಯಂತೂ ಬೇಹದ್ದಿನಲ್ಲಿ ನಿಂತಿದ್ದಾರಲ್ಲವೆ, ನೀವೂ ಬೇಹದ್ದಿನಲ್ಲಿ ನಿಂತುಬಿಡುತ್ತೀರಿ. ಬಾಬಾ ಸ್ಥಾಪನೆ ಮಾಡಿ ಹೊರಟುಹೋಗುತ್ತಾರೆಂದು ತಿಳಿದಿದ್ದೀರಿ, ಮತ್ತೆ ನೀವು ರಾಜ್ಯ ಮಾಡುತ್ತೀರಿ. ಉಳಿದ ಆತ್ಮರು ಶಾಂತಿಧಾಮಕ್ಕೆ ಹೊರಟುಹೋಗುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವುದೇ ಪಾತ್ರಧಾರಿಯೊಂದಿಗೆ ರಾವಣನು ಅಸೂಯೆ ಪಡಲಿ, ವಿಘ್ನಹಾಕಲಿ, ಬಿರುಗಾಳಿಯಲ್ಲಿ ತರಲಿ ಆದರೂ ಅದನ್ನು ನೋಡದೇ ತಮ್ಮ ಪುರುಷಾರ್ಥದಲ್ಲಿ ತತ್ಪರರಾಗಿರಬೇಕು ಏಕೆಂದರೆ ಈ ನಾಟಕದಲ್ಲಿ ಪ್ರತಿಯೊಬ್ಬ ಪಾತ್ರಧಾರಿಯ ಪಾತ್ರವು ತಮ್ಮ-ತಮ್ಮದೇ ಆಗಿದೆ. ಇದು ಅನಾದಿ ನಾಟಕ ಮಾಡಲ್ಪಟ್ಟಿದೆ. |
2. ರಾವಣನ ಮತದಂತೆ ಈಶ್ವರನ ಆಸ್ತಿಯಲ್ಲಿ ಕೈ ಹಾಕಬಾರದು. ಎಲ್ಲದರಿಂದ ಮಮತೆಯನ್ನು ಅಳಿಸಿ ಸಂಪೂರ್ಣ ನಿಮಿತ್ತರಾಗಿರಬೇಕು. |
ಉದಾಸೀನತೆ ಬರಲು ಕಾರಣ- ಚಿಕ್ಕ ಪುಟ್ಟ ಉಲ್ಲಂಘನೆಗಳು |
ಇಂದು ಬೇಹದ್ದಿನ ಅತಿ ಶ್ರೇಷ್ಠ ತಂದೆ, ಸರ್ವ ಶ್ರೇಷ್ಠರನ್ನಾಗಿ ಮಾಡುವಂತ ತಂದೆಯು ತನ್ನ ನಾಲೂ ಕಡೆಯಲ್ಲಿರುವ ಎಲ್ಲಾ ಮಕ್ಕಳಲ್ಲಿ, ವಿಶೇಷವಾಗಿ ಆಜ್ಞಾಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಎಲ್ಲರೂ ತಮ್ಮನ್ನು ಆಜ್ಞಾಕಾರಿ ಮಕ್ಕಳೆಂದು ತಿಳಿಯುತ್ತಾರೆ ಆದರೆ ನಂಬರ್ವಾರ್ ಆಗಿದ್ದಾರೆ. ಕೆಲವರು ಸದಾ ಆಜ್ಞಾಕಾರಿ ಮತ್ತು ಕೆಲವರು ಆಜ್ಞಾಕಾರಿ ಆಗಿದ್ದಾರೆ ಆದರೆ ಸದಾ ಇಲ್ಲ. ಆಜ್ಞಾಕಾರಿಗಳ ಪಟ್ಟಿಯಲ್ಲಿ ಎಲ್ಲಾ ಮಕ್ಕಳು ಬಂದು ಬಿಡುತ್ತಾರೆ ಆದರೆ ಅವಶ್ಯವಾಗಿ ಅಂತರವಿದೆ. ಆಜ್ಞೆಯನ್ನು ಕೊಡುವಂತಹ ತಂದೆಯು ಎಲ್ಲಾ ಮಕ್ಕಳಿಗೂ ಒಂದೇ ಸಮಯದಲ್ಲಿ, ಒಂದೇ ಆಜ್ಞೆಯನ್ನೂ ಕೊಡುತ್ತಾರೆ, ಯಾರಿಗೂ ಬೇರೆ-ಬೇರೆ ಅಥವಾ ಭಿನ್ನ-ಭಿನ್ನ ಆಜ್ಞೆಗಳನ್ನೂ ಕೊಡುವುದಿಲ್ಲ. ಆದರೂ ನಂಬರ್ವಾರ್ ಏಕೆ ಆಗುತ್ತಾರೆ? ಏಕೆಂದರೆ ಯಾರು ಸದಾ ಪ್ರತೀ ಸಂಕಲ್ಪ ಅಥವಾ ಪ್ರತೀ ಕರ್ಮವನ್ನು ಮಾಡುತ್ತಿದ್ದರೂ ತಂದೆಯ ಆಜ್ಞೆಯ ಸಹಜ ಸ್ಮೃತಿ ಸ್ವರೂಪರು ಆಗುತ್ತಾರೆ, ಅಂತಹವರು ಸದಾ ಸ್ವತಹವಾಗಿಯೇ ಪ್ರತೀ ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಆಜ್ಞೆಯ ಅನುಸಾರ ನಡೆಯುತ್ತಾರೆ ಮತ್ತು ಯಾರು ಸ್ಮೃತಿ ಸ್ವರೂಪರಾಗಿ ಇರುವುದಿಲ್ಲವೋ ಅವರಿಗೆ ಅನೇಕರು ಪದೇ-ಪದೇ ಸ್ಮೃತಿಯನ್ನು ತರಿಸಬೇಕಾಗುತ್ತದೆ. ಕೆಲವೊಮ್ಮೆ ಸ್ಮೃತಿಯ ಕಾರಣ ಆಜ್ಞಾಕಾರಿಗಳಾಗಿ ನಡೆಯುತ್ತಾ, ಮತ್ತೆ ಕೆಲವೊಮ್ಮೆ ನಡೆದ ನಂತರ ಆಜ್ಞೆಯನ್ನು ನೆನಪು ಮಾಡುತ್ತಾರೆ ಏಕೆಂದರೆ ಆಜ್ಞೆಗಳ ಸ್ಮೃತಿ ಸ್ವರೂಪರಾಗಿರುವುದಿಲ್ಲ, ಯಾರಿಗೆ ಶ್ರೇಷ್ಠ ಕರ್ಮದ ಪ್ರತ್ಯಕ್ಷ ಫಲವು ಸಿಗುತ್ತದೆಯೋ, ಅದು ಅನುಭೂತಿ ಆಗದೇ ಇರುವ ಕಾರಣದಿಂದ ಕರ್ಮ ಮಾಡಿದ ನಂತರ ನೆನಪಿಗೆ ಬರುತ್ತದೆ - ಈ ಫಲಿತಾಂಶವೇಕೆ ಬಂದಿತು? ಕರ್ಮದ ನಂತರ ಪರಿಶೀಲನೆ ಮಾಡಿದಾಗ ತಿಳಿಯುತ್ತಾರೆ - ತಂದೆಯ ಆಜ್ಞೆಯನುಸಾರ ನಡೆಯದೇ ಇರುವ ಕಾರಣದಿಂದ, ಪ್ರತ್ಯಕ್ಷಫಲ ಅನುಭವವೇನು ಆಗಬೇಕಾಗಿತ್ತು ಅದಾಗಲಿಲ್ಲ. ಇದಕ್ಕೆ ಹೇಳುತ್ತಾರೆ - ಆಜ್ಞೆಯ ಸ್ಮೃತಿ ಸ್ವರೂಪರು ಆಗಿಲ್ಲ, ಆದರೆ ಕರ್ಮದ ಫಲವನ್ನು ನೋಡಿ ಸ್ಮೃತಿಗೆ ಬಂದಿತು. ಅಂದಾಗ ಮೊದಲ ನಂಬರಿನಲ್ಲಿ ಇದ್ದಾರೆ - ಸಹಜ, ಸ್ವತಹ ಸ್ಮೃತಿ ಸ್ವರೂಪ ಆಜ್ಞಾಕಾರಿಗಳು, ಎರಡನೆಯ ನಂಬರಿನಲ್ಲಿ - ಕೆಲವೊಮ್ಮೆ ಸ್ಮೃತಿಯಿಂದ ಕರ್ಮವನ್ನು ಮಾಡುವವರು ಮತ್ತೆ ಕೆಲವೊಮ್ಮೆ ಕರ್ಮದ ನಂತರ ಸ್ಮೃತಿಯಲ್ಲಿ ಬರುವವರು. ಮೂರನೇ ನಂಬರಿನವರ ಮಾತಂತು ಬಿಟ್ಟು ಬಿಡಿ. ಎರಡು ಮಾಲೆಗಳಿವೆ, ಮೊದಲು ಚಿಕ್ಕದಾದ ಮಾಲೆ ಇನ್ನೊಂದು ದೊಡ್ಡ ಮಾಲೆಯಿದೆ. ಮೂರನೆಯ ಮಾಲೆಯಂತು ಇಲ್ಲ ಆದ್ದರಿಂದ ಇಬ್ಬರ ಮಾತುಗಳನ್ನು ತಿಳಿಸುತ್ತಿದ್ದೇವೆ. |
‘ನಂಬರ್ವನ್ ಆಜ್ಞಾಕಾರಿ’ಗಳು ಇಡೀ ದಿನದ ದಿನಚರಿಯಲ್ಲಿ ಸದಾ ಅಮೃತವೇಳೆಯಿಂದ ರಾತ್ರಿಯವರೆಗೆ ಪ್ರತಿಯೊಂದು ಕರ್ಮದಲ್ಲಿ ಆಜ್ಞೆಯ ಅನುಸಾರ ನಡೆಯುವ ಕಾರಣದಿಂದ, ಪ್ರತಿಯೊಂದು ಕರ್ಮದಲ್ಲಿ ಪರಿಶ್ರಮದ ಅನುಭವ ಆಗುವುದಿಲ್ಲ ಆದರೆ ಆಜ್ಞಾಕಾರಿಯಾಗುವ ವಿಶೇಷ ಫಲವಾಗಿ ತಂದೆಯ ಅಶೀರ್ವಾದಗಳ ಅನುಭೂತಿ ಮಾಡುತ್ತಾರೆ. ಏಕೆಂದರೆ ಆಜ್ಞಾಕಾರಿ ಮಕ್ಕಳ ಪ್ರತೀ ಹೆಜ್ಜೆಯಲ್ಲಿ ಬಾಪ್ದಾದಾರವರ ಹೃದಯದ ಆಶೀರ್ವಾದಗಳು ಜೊತೆಯಿದೆ. ಆದ್ದರಿಂದ ಪ್ರತೀ ಕರ್ಮವು ಫಲ ಕೊಡುವಂತದ್ದೇ ಆಗಿದೆ. ಏಕೆಂದರೆ ಕರ್ಮವು ಬೀಜವಾಗಿದೆ ಮತ್ತು ಬೀಜದಿಂದ ಪ್ರಾಪ್ತಿಯೇನಾಗುತ್ತದೆಯೋ ಅದರ ಫಲವಾಗಿದೆ. ಅಂದಮೇಲೆ ನಂಬರ್ವನ್ ಆತ್ಮರ ಪ್ರತಿಯೊಂದು ಕರ್ಮವೆಂಬ ಬೀಜವು ಶಕ್ತಿಶಾಲಿಯಾಗಿರುವ ಕಾರಣದಿಂದ, ಅದರ ಫಲ ಅರ್ಥಾತ್ ಸಂತುಷ್ಟತೆ, ಸಫಲತೆಯು ಪ್ರಾಪ್ತಿಯಾಗುತ್ತದೆ. ಸ್ವಯಂ ಸ್ವಯಂನಿಂದಲೂ ಸಂತುಷ್ಟತೆ ಆಗುತ್ತದೆ ಹಾಗೂ ಕರ್ಮದ ಫಲಿತಾಂಶದಿಂದಲೂ ಸಂತುಷ್ಟತೆಯು ಪ್ರಾಪ್ತಿಯಾಗುತ್ತದೆ. ಹಾಗೂ ಅನ್ಯ ಆತ್ಮರ ಸಂಬಂಧ -ಸಂಪರ್ಕದಿಂದಲೂ ಸಂತುಷ್ಟತೆಯ ಪ್ರಾಪ್ತಿಯಾಗುತ್ತದೆ. ನಂಬರ್ವನ್ ಆಜ್ಞಾಕಾರಿ ಆತ್ಮರಲ್ಲಿ ಸ್ವತಹ ಹಾಗೂ ಸದಾ ಮೂರೂ ಪ್ರಕಾರದ ಸಂತುಷ್ಟತೆಯ ಅನುಭವವಾಗುತ್ತದೆ. ನಾನು ಬಹಳ ಚೆನ್ನಾಗಿ ವಿಧಿಪೂರ್ವಕವಾದ ಕರ್ಮವನ್ನು ಮಾಡಿದೆನು ಎಂದು ಕೆಲವೊಮ್ಮೆ ಕೆಲವು ಮಕ್ಕಳು ತನ್ನ ಕರ್ಮದಿಂದ ಸ್ವಯಂ ಸಂತುಷ್ಟರಾಗುತ್ತಾರೆ. ಆದರೆ ಎಲ್ಲಿ ಸ್ವಯಂಗೆ ಸಫಲತೆಯೆಂಬ ಫಲವು ಎಷ್ಟಾಗಿದೆ ಎಂದು ತಿಳಿಯುತ್ತಾರೆಯೋ ಅಷ್ಟು ಕಾಣಿಸುವುದಿಲ್ಲ, ಮತ್ತೆ ಎಲ್ಲಿ ಸ್ವಯಂ ಹಾಗೂ ಫಲದಲ್ಲಿಯೂ ಸಂತುಷ್ಟವಾಗಿರುತ್ತಾರೆ. ಆದರೆ ಸಂಬಂಧ-ಸಂಪರ್ಕದಲ್ಲಿ ಸಂತುಷ್ಟತೆ ಇರುವುದಿಲ್ಲ. ಅಂದಮೇಲೆ ಇಂತಹವರಿಗೆ ನಂಬರ್ವನ್ ಆಜ್ಞಾಕಾರಿ ಎಂದು ಹೇಳುವುದಿಲ್ಲ. ನಂಬರ್ವನ್ ಆಜ್ಞಾಕಾರಿಗಳು ಮೂರೂ ಮಾತುಗಳಲ್ಲಿ ಸಂತುಷ್ಟತೆಯ ಅನುಭವ ಮಾಡುತ್ತಾರೆ. |
ವರ್ತಮಾನ ಸಮಯದ ಅನುಸಾರ ಶ್ರೇಷ್ಠ ಆಜ್ಞಾಕಾರಿಯಾದ ಕೆಲವು ಮಕ್ಕಳ ಮೂಲಕ ಕೆಲವೊಮ್ಮೆ ಕೆಲಕೆಲವು ಆತ್ಮರು ತನ್ನನ್ನು ಅಸಂತುಷ್ಟನೆಂಬ ಅನುಭವವನ್ನೂ ಮಾಡುತ್ತಾರೆ. ಯಾರಿಂದ ಎಲ್ಲರೂ ಸಂತುಷ್ಟವಾಗಿದ್ದಾರೆ ಎನ್ನುವಂತೆ ಯಾರೂ ಇಲ್ಲ ಎಂದು ತಾವು ಯೋಚಿಸುತ್ತೀರಿ! ಕೆಲಕೆಲವರು ಅಸಂತುಷ್ಟರೂ ಆಗಿ ಬಿಡುತ್ತಾರೆ, ಆದರೆ ಅದಕ್ಕೆ ಹಲವು ಕಾರಣಗಳಿರುತ್ತವೆ. ತನ್ನ ಕಾರಣವನ್ನು ತಿಳಿಯದೇ ಇರುವ ಕಾರಣದಿಂದ ತಪ್ಪಾಗಿ ತಿಳಿದುಕೊಂಡು ಬಿಡುತ್ತಾರೆ. ಇನ್ನೊಂದು ಮಾತು - ತನ್ನ ಬುದ್ಧಿಯ ಅನುಸಾರ ಹಿರಿಯರಿಂದ ಹೆಚ್ಚಾಗಿ ಬಯಕೆ, ಇಚ್ಛೆಯನ್ನು ಇಡುತ್ತಾರೆ ಮತ್ತು ಆ ಇಚ್ಛೆಯು ಯಾವಾಗ ಪೂರ್ಣವಾಗುವುದಿಲ್ಲವೋ ಆಗ ಅಸಂತುಷ್ಟರಾಗಿ ಬಿಡುತ್ತಾರೆ. ಮೂರನೇ ಮಾತು - ಕೆಲವು ಆತ್ಮರು ಯಾರು ಸಂತುಷ್ಟವಾಗಬೇಕು, ಅವರು ತನ್ನ ಹಿಂದಿನ ಸ್ವಭಾವ-ಸಂಸ್ಕಾರ ಮತ್ತು ಲೆಕ್ಕಾಚಾರದ ಕಾರಣ ಸಂತುಷ್ಟವಾಗುವುದಿಲ್ಲ. ಇದರಿಂದ ನಂಬರ್ವನ್ ಆಜ್ಞಾಕಾರಿ ಆತ್ಮನ ಅಥವಾ ಶ್ರೇಷ್ಠ ಆತ್ಮರ ಮೂಲಕ ಸಂತುಷ್ಟತೆಯು ಸಿಗದಿರುವ ಕಾರಣದಿಂದ ಅಸಂತುಷ್ಟರು ಆಗುವುದಲ್ಲ. ಆದರೆ ತನ್ನ ಕಾರಣಗಳಿಂದಲೇ ಅಸಂತುಷ್ಟರು ಆಗಿ ಬಿಡುತ್ತಾರೆ. ಆದ್ದರಿಂದ ಕೆಲಕೆಲವೊಂದು ಕಡೆ ಇದೇ ಕಾಣಿಸುತ್ತದೆ- ಪ್ರತಿಯೊಬ್ಬರಲ್ಲಿಯೂ ಯಾವುದಾದರೂ ಅಸಂತುಷ್ಟತೆಯಿದೆ. ಆದರೆ ಅವರಲ್ಲಿಯೂ ಮೆಜಾರಿಟಿಯಲ್ಲಿ ಸುಮಾರು 95% ಸಂತುಷ್ಟವಾಗಿರಬಹುದು, 5% ಅಸಂತುಷ್ಟತೆಯು ಕಾಣಿಸುತ್ತದೆ. ಅಂದಾಗ ನಂಬರ್ವನ್ ಆಜ್ಞಾಕಾರಿ ಮಕ್ಕಳಲ್ಲಿ ಮೆಜಾರಿಟಿ ಮೂರೂ ರೂಪಗಳಿಂದ ಸಂತುಷ್ಟತೆಯ ಅನುಭವ ಮಾಡುವರು ಮತ್ತು ಸದಾ ಪ್ರತಿಯೊಂದು ಕರ್ಮವನ್ನು ಆಜ್ಞೆಯ ಅನುಸಾರ ಶ್ರೇಷ್ಠ ಕರ್ಮವಿರುವ ಕಾರಣದಿಂದ, ಕರ್ಮವನ್ನು ಮಾಡಿದ ನಂತರ ಸಂತುಷ್ಟರಾಗುವ ಕಾರಣ ಕರ್ಮವು ಅವರನ್ನು ಸರಿಯಾಗಿ ಮಾಡಿದೆನೇ ಅಥವಾ ಇಲ್ಲವೆ ಎಂದು ಮತ್ತೆ-ಮತ್ತೆ ಬುದ್ಧಿಯನ್ನು-ಮನಸ್ಸನ್ನು ವಿಚಲಿತ ಮಾಡುವುದಿಲ್ಲ. ಸೆಕೆಂಡ್ ನಂಬರಿನವರಲ್ಲಿ ಕೆಲವೊಮ್ಮೆ ಕರ್ಮವನ್ನು ಮಾಡಿದ ನಂತರ ಮನಸ್ಸಿನಲ್ಲಿ ಸಂಕಲ್ಪವು ನಡೆಯುತ್ತದೆ - ಗೊತ್ತಿಲ್ಲ ಸರಿಯಾಗಿ ಮಾಡಿದೆನೆ ಅಥವಾ ಇಲ್ಲವೋ. ತಮ್ಮ ಭಾಷೆಯಲ್ಲಿ ಹೀಗೆ ಹೇಳುತ್ತೀರಿ - ಸರಿಯಾಗಿ ಮಾಡಿಲ್ಲವೆಂದು ಮನಸ್ಸು ತಿನ್ನುತ್ತಿದೆ. ನಂಬರ್ವನ್ ಆಜ್ಞಾಕಾರಿ ಆತ್ಮನ ಮನಸ್ಸೆಂದಿಗೂ ತಿನ್ನುವುದಿಲ್ಲ, ಆಜ್ಞೆಯ ಅನುಸಾರ ನಡೆಯುವ ಕಾರಣದಿಂದ ಸದಾ ಹಗುರವಾಗಿ ಇರುತ್ತಾರೆ ಏಕೆಂದರೆ ಕರ್ಮದ ಬಂಧನಗಳ ಹೊರೆಯಿರುವುದಿಲ್ಲ. ಒಂದು - ಕರ್ಮದ ಸಂಬಂಧದಲ್ಲಿ ಬರುವುದು, ಇನ್ನೊಂದು - ಕರ್ಮದ ಬಂಧನಗಳಿಗೆ ವಶರಾಗಿ ಕರ್ಮ ಮಾಡುವುದು. ಇದನ್ನು ಇದಕ್ಕು ಮೊದಲೂ ಸಹ ತಿಳಿಸಿದ್ದೆವು ಅಂದಾಗ ನಂಬರ್ವನ ಆತ್ಮನು ಕರ್ಮದ ಸಂಬಂಧದಲ್ಲಿ ಬರುವವನಾಗಿದ್ದಾನೆ, ಆದ್ದರಿಂದ ಸದಾ ಹಗುರವಾಗಿ ಇರುತ್ತಾರೆ. ಅವರ ಪ್ರತೀ ಕರ್ಮದಲ್ಲಿಯೂ ಬಾಪ್ದಾದಾರವರ ಮೂಲಕ ವಿಶೇಷ ಆಶೀರ್ವಾದದ ಪ್ರಾಪ್ತಿಯಿರುವ ಕಾರಣದಿಂದ, ಅದರ ಫಲ ಸ್ವರೂಪವಾಗಿ ಪ್ರತಿಯೊಂದು ಕರ್ಮವನ್ನು ಮಾಡುತ್ತಿದ್ದರೂ ಸದಾ ಆಂತರಿಕವಾಗಿ ಆತ್ಮ ವಿಶ್ವಾಸದ ಅನುಭವ ಮಾಡುವರು. ಸದಾ ಅತೀಂದ್ರಿಯ ಸುಖದ ಅನುಭವ ಮಾಡುವರು, ಸದಾ ತನ್ನನ್ನು ಸಂಪನ್ನವಾಗಿದ್ದೇನೆಂಬ ಅನುಭವ ಮಾಡುತ್ತಾರೆ. |
ಕೆಲವೊಮ್ಮೆ ಕೆಲವು ಮಕ್ಕಳು ತಂದೆಯ ಮುಂದೆ ತನ್ನ ಹೃದಯದ ಕ್ಷೇಮ ಸಮಾಚಾರವನ್ನು ತಿಳಿಸುತ್ತಾರೆ ಏನು ಹೇಳುತ್ತಾರೆ - ಇಂದು ಸ್ವಯಂನ್ನು ಖಾಲಿ-ಖಾಲಿಯಾಗಿರುವ ಅನುಭವವಾಗುತ್ತಿದೆ, ಯಾವುದೇ ಮಾತು(ಸಂದರ್ಭ) ನಡೆದಿಲ್ಲ ಆದರೆ ಸಂಪನ್ನತೆ ಅಥವಾ ಸುಖದ ಅನುಭೂತಿ ಆಗುತ್ತಿಲ್ಲ. ಕೆಲವೊಮ್ಮೆ ಆ ಸಮಯದಲ್ಲಿ ಯಾವುದೇ ಉಲ್ಟಾ ಕಾರ್ಯ ಅಥವಾ ಯಾವುದೇ ಚಿಕ್ಕ ಪುಟ್ಟ ತಪ್ಪುಗಳಾಗುವುದಿಲ್ಲ ಆದರೆ ನಡೆಯುತ್ತಾ-ನಡೆಯುತ್ತಾ ಬುದ್ಧಿಹೀನತೆ ಅಥವಾ ಹುಡುಗಾಟಿಕೆಯಲ್ಲಿ ಸಮಯ-ಸಮಯದಲ್ಲಿ ಆಜ್ಞೆಯನುಸಾರ ಕಾರ್ಯವನ್ನು ಮಾಡುವುದಿಲ್ಲ. ಮೊದಲ ಉಲ್ಲಂಘನೆ ಮಾಡಿರುವ ಸಮಯದ ಹೊರೆಯು, ಯಾವುದೇ ಸಮಯದಲ್ಲಾದರೂ ತನ್ನ ಕಡೆಗೆ ಸೆಳೆಯಬಹುದು. ಹೇಗೆ ಹಿಂದಿನ ಜನ್ಮಗಳ ಕಠಿಣವಾದ ಸಂಸ್ಕಾರ-ಸ್ವಭಾವವನ್ನು ಬಯಸದಿದ್ದರೂ ಕೆಲ-ಕೆಲವೊಮ್ಮೆ ತನ್ನ ಕಡೆಗೆ ಸೆಳೆದು ಬಿಡುತ್ತದೆ, ಅದಂತು ಹಿಂದಿನ ಲೆಕ್ಕಾಚಾರವಾಗಿದೆ. ಅದೇ ರೀತಿ ಸಮಯ-ಸಮಯದಲ್ಲಿ ಮಾಡಿರುವ ಉಲ್ಲಂಘನೆಗಳ ಹೊರೆಯು ಕೆಲ-ಕೆಲವೊಮ್ಮೆ ತನ್ನ ಕಡೆಗೆ ಸೆಳೆದು ಬಿಡುತ್ತದೆ, ಇದಂತು ವರ್ತಮಾನ ಜೀವನದ ಲೆಕ್ಕವಾಗಿದೆ. ಏಕೆಂದರೆ ಯಾವುದೇ ಲೆಕ್ಕಾಚಾರ ಆಗಿರಬಹುದು- ಅದು ಭಲೆ ಈ ಜನ್ಮದ್ದಾಗಿರಲಿ ಅಥವಾ ಹಿಂದಿನ ಜನ್ಮದ್ದಾಗಿರಲಿ, ಅದೆಲ್ಲವೂ ಲಗನ್ನಿನ ಅಗ್ನಿ ಸ್ವರೂಪ ಸ್ಥಿತಿಯಿಲ್ಲದೆ ಭಸ್ಮಗೊಳಿಸಲು ಸಾಧ್ಯವಾಗುವುದಿಲ್ಲ. ಸದಾ ಅಗ್ನಿ ಸ್ವರೂಪ ಸ್ಥಿತಿ ಎಂದರೆ ಶಕ್ತಿಶಾಲಿ ನೆನಪಿನ ಸ್ಥಿತಿ, ಬೀಜರೂಪ, ಲೈಟ್ಹೌಸ್ (ಪ್ರಕಾಶ ಗೃಹ), ಮೈಟ್ಹೌಸ್ (ಶಕ್ತಿ ಗೃಹ) ಸ್ಥಿತಿಯಿಲ್ಲದೇ ಇರುವ ಕಾರಣದಿಂದ, ಈ ಲೆಕ್ಕಾಚಾರಗಳನ್ನು ಭಸ್ಮಗೊಳಿಸಲು ಸಾಧ್ಯವಿಲ್ಲ. ಆದ್ದರಿಂದ ಉಳಿದಿರುವ ಲೆಕ್ಕಾಚಾರಗಳು ತನ್ನ ಕಡೆಗೆ ಸೆಳೆಯುತ್ತದೆ. ಆ ಸಮಯದಲ್ಲಿ ಯಾವುದೇ ತಪ್ಪುಗಳನ್ನು ಮಾಡುವುದಿಲ್ಲ ಆದರೆ ಗೊತ್ತಿಲ್ಲ ಏನಾಗುತ್ತಿದೆ! ಕೆಲವೊಮ್ಮೆ ನೆನಪಿನಲ್ಲಿ, ಸೇವೆಯಲ್ಲಿಯೂ ಮನಸ್ಸು ತೊಡಗಿಸಲು ಆಗುವುದಿಲ್ಲ ಅಥವಾ ಕೆಲವೊಮ್ಮೆ ಆಲಸ್ಯದ ಪ್ರಕಂಪನಗಳಿರುತ್ತವೆ. ಒಂದು - ಜ್ಞಾನದ ಮೂಲಕ ಶಾಂತಿಯ ಅನುಭವ, ಇನ್ನೊಂದಿದೆ - ಖುಷಿ-ಆನಂದವಿಲ್ಲದೆಯೇ ಸನ್ನಾಟ ಶಾಂತಿ(ಸಮಾಧಿ ಸ್ಥಿತಿ). ಅದು ಪ್ರಾಪ್ತಿಯಿಲ್ಲದಿರುವ ಶಾಂತಿಯಾಗಿರುತ್ತದೆ. ಮನಸ್ಸು ಇಚ್ಛಿಸುತ್ತದೆ - ಕೇವಲ ಒಂಟಿಯಾಗಿ ಎಲ್ಲಿಯಾದರೂ ಹೋಗಿ ಕುಳಿತು ಬಿಡೋಣ. ಇವೆಲ್ಲಾ ಲಕ್ಷಣಗಳು ಯಾವುದಾದರೊಂದು ಶ್ರೀಮತದ ಉಲ್ಲಂಘನೆಯ ಚಿಹ್ನೆಗಳಾಗಿವೆ. ಕರ್ಮದ ಹೊರೆಯು ಸೆಳೆಯುತ್ತದೆ. |
ಉಲ್ಲಂಘನೆಯಲ್ಲಿಯೂ ಒಂದು - ಪಾಪ ಕರ್ಮ ಮಾಡುವುದು ಅಥವಾ ಯಾವುದಾದರೂ ದೊಡ್ಡ ತಪ್ಪನ್ನು ಮಾಡುವುದು ಮತ್ತು ಇನ್ನೊಂದು – ಚಿಕ್ಕ ಪುಟ್ಟ ಉಲ್ಲಂಘನೆಗಳೂ ಆಗುತ್ತಿರುತ್ತವೆ. ಉದಾ: ತಂದೆಯವರ ಆಜ್ಞೆಯಿದೆ - ಅಮೃತವೇಳೆಯಲ್ಲಿ ವಿಧಿಗಳನುಸಾರ ಶಕ್ತಿಶಾಲಿ ನೆನಪಿನಲ್ಲಿರಿ. ಅದರಂತೆ ಒಂದುವೇಳೆ ಅಮೃತವೇಳೆಯಲ್ಲಿ ಆಜ್ಞೆಯ ಅನುಸಾರ ನಡೆಯುತ್ತಿಲ್ಲವೆಂದರೆ, ಅವರಿಗೇನು ಹೇಳುವುದು? ಆಜ್ಞಾಕಾರಿಯೇ ಅಥವಾ ಉಲ್ಲಂಘನೆ ಮಾಡುವವರೇ? ಪ್ರತಿಯೊಂದು ಕರ್ಮವನ್ನು ಕರ್ಮಯೋಗಿಯಾಗಿ, ನಿಮಿತ್ತ ಭಾವದಿಂದ ಮಾಡಿರಿ, ನಿರ್ಮಾಣರಾಗಿದ್ದು ಮಾಡಿರಿ ಎಂಬುದು ಆಜ್ಞೆಗಳಿವೆ. ಹಾಗೆ ನೋಡಿದರೆ ಆಜ್ಞೆಗಳ ಬಹಳ ದೊಡ್ಡ ಪಟ್ಟಿಯೇ ಇದೆ ಆದರೆ ಉದಾಹರಣೆಯಲ್ಲಿ ತಿಳಿಸುತ್ತಿದ್ದೇವೆ. ದೃಷ್ಟಿ, ವೃತ್ತಿ, ಪ್ರತಿಯೊಂದಕ್ಕೂ ಆಜ್ಞೆಗಳಿವೆ, ಇವೆಲ್ಲಾ ಆಜ್ಞೆಗಳಲ್ಲಿ ಯಾವುದಾದರೊಂದು ಆಜ್ಞೆಯನ್ನು ವಿಧಿಪೂರ್ವಕವಾಗಿ ಪಾಲಿಸುವುದಿಲ್ಲವೆಂದರೆ ಹೇಳಲಾಗುತ್ತದೆ – ಚಿಕ್ಕ ಪುಟ್ಟ ಉಲ್ಲಂಘನೆ ಮಾಡುವುದು. ಒಂದುವೇಳೆ ಈ ಖಾತೆಯು ಜಮಾ ಆಗುತ್ತಿದ್ದರೆ, ಅವಶ್ಯವಾಗಿ ತನ್ನ ಕಡೆಗೆ ಸೆಳೆಯುತ್ತದೆ ಅಲ್ಲವೆ. ಆದ್ದರಿಂದ ಹೇಳುತ್ತೀರಿ - ಎಷ್ಟು ಆಗಬೇಕಾಗಿತ್ತು ಅಷ್ಟು ಆಗುತ್ತಿಲ್ಲ. ಎಲ್ಲರೂ ಸರಿಯಾಗಿ ನಡೆಯುತ್ತಿದ್ದೀರಾ ಎಂದು ಯಾವಾಗ ಕೇಳುತ್ತೇವೆ, ಅದಕ್ಕೆ ಎಲ್ಲರೂ ಹೌದು ಎಂದು ಹೇಳುತ್ತೀರಿ. ಮತ್ತೆ ಯಾವಾಗ ಕೇಳುತ್ತೇವೆ - ಎಷ್ಟಾಗಬೇಕು ಅಷ್ಟಿದೆಯೇ ಎಂದು ಕೇಳಿದಾಗ ಯೋಚಿಸುತ್ತಾರೆ. ಇಷ್ಟೆಲ್ಲಾ ಸೂಚನೆಗಳು ಸಿಗುತ್ತವೆ, ಜ್ಞಾನಪೂರ್ಣರು ಆಗಿದ್ದರೂ ಸಹ ಎಷ್ಟಾಗಬೇಕು ಅಷ್ಟಾಗುತ್ತಿಲ್ಲವೆಂದರೆ, ಅದರ ಕಾರಣವೇನು? ಹಿಂದಿನ ಅಥವಾ ವರ್ತಮಾನದ ಹೊರೆಯು ತಮ್ಮನ್ನು ಡಬಲ್ಲೈಟ್ ಆಗಲು ಬಿಡುತ್ತಿಲ್ಲ. ಕೆಲವೊಮ್ಮೆ ಡಬಲ್ಲೈಟ್ ಆಗುವುದು, ಕೆಲವೊಮ್ಮೆ ಹೊರೆಯು ಕೆಳಗೆ ಕರೆ ತರುತ್ತದೆ. ಸದಾ ಅತೀಂದಿರ್ಯ ಸುಖ ಅಥವಾ ಖುಷಿ ಸಂಪನ್ನ ಶಾಂತಿ ಸ್ಥಿತಿಯ ಅನುಭವ ಮಾಡುತ್ತಿಲ್ಲ. ಬಾಪ್ದಾದಾರವರಿಂದ ವಿಶೇಷವಾಗಿ ಆಜ್ಞಾಕಾರಿಯಾಗುವ ಅಶೀರ್ವಾದ ಲಿಫ್ಟ್ನ ಪ್ರಾಪ್ತಿಯಾಗುವುದಿಲ್ಲ ಆದರಿಂದ ಕೆಲವೊಮ್ಮೆ ಸಹಜವಾಗುತ್ತದೆ ಮತ್ತೆ ಕೆಲವೊಮ್ಮೆ ಪರಿಶ್ರಮ ಎನಿಸುತ್ತದೆ. ನಂಬರ್ವನ್ ಆಜ್ಞಾಕಾರಿಯ ವಿಶೇಷತೆಯನ್ನು ಸ್ಪಷ್ಟವಾಗಿ ಕೇಳಿದಿರಾ! ಉಳಿದಂತೆ ನಂಬರ್ ಟು(ಎರಡನೆ ನಂಬರಿನವರು) ಯಾರಾದರು? ಯಾರಲ್ಲಿ ಈ ವಿಶೇಷತೆಗಳ ಕೊರತೆಯಿದೆ, ಅವರು ನಂಬರ್ ಟು ಮತ್ತು ಎರಡನೇ ನಂಬರಿನ ಮಾಲೆಯವರಾದರು. ಅಂದಾಗ ಮೊದಲ ಮಾಲೆಯಲ್ಲಿ ಬರಬೇಕಲ್ಲವೇ? ಇದರಲ್ಲಿ ಕಷ್ಟವೇನೂ ಇಲ್ಲ, ಪ್ರತೀ ಹೆಜ್ಜೆಯ ಆಜ್ಞೆಗಳೂ ಸ್ಪಷ್ಟವಿದೆ, ಅದರಂತೆ ನಡೆಯುವುದು ಸಹಜವೇ ಅಥವಾ ಕಷ್ಟವಾಗಿದೆಯೇ? ಆಜ್ಞೆಗಳೇ ತಂದೆಯ ಹೆಜ್ಜೆಗಳಾಗಿವೆ ಅಂದಮೇಲೆ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವುದು ಸಹಜವಲ್ಲವೆ. ಅದೇರೀತಿ ಎಲ್ಲರೂ ಸತ್ಯಸೀತೆ ಆಗಿದ್ದೀರಿ, ಪ್ರೇಮಿಕೆ ಆಗಿದ್ದೀರಿ ಅಂದಮೇಲೆ ಪ್ರೇಮಿಕೆಯರು ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುತ್ತಾರಲ್ಲವೆ? ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುವುದು ವಿಧಿಯಾಗಿದೆ ಅಲ್ಲವೆ. ಅಂದಮೇಲೆ ಕಷ್ಟವೇನಿದೆ! ಮಗುವಿನ ಸಂಬಂಧದಲ್ಲಿಯೂ ನೋಡಿರಿ - ಮಗು ಎಂದರೆ ಯಾರು ತಂದೆಯ ಪದ ಚಿಹ್ನೆಯ ಮೇಲೆ ನಡೆಯುವವರು. ಹೇಗೆ ತಂದೆಯವರು ಹೇಳಿದರು ಅದೇ ರೀತಿ ಮಾಡುವುದು ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವುದು ಆಗಿದೆ. ತಂದೆಯವರು ಹೇಳುವುದು ಮತ್ತು ಮಕ್ಕಳು ಮಾಡುವುದಕ್ಕೆ ಹೇಳಲಾಗುತ್ತದೆ - ನಂಬರ್ವನ್ ಆಜ್ಞಾಕಾರಿ. ಹಾಗಾದರೆ ಇದನ್ನು ಪರಿಶೀಲನೆ ಮಾಡಿರಿ ಮತ್ತು ಪರಿವರ್ತನೆ ಮಾಡಿಕೊಳ್ಳಿರಿ. ಒಳ್ಳೆಯದು. |
ನಾಲ್ಕೂ ಕಡೆಯಲ್ಲಿರುವ ಸರ್ವ ಆಜ್ಞಾಕಾರಿ ಶ್ರೇಷ್ಠಾತ್ಮರಿಗೆ, ಸದಾ ತಂದೆಯ ಮೂಲಕ ಪ್ರಾಪ್ತಿಯಾಗಿರುವ ಆಶೀರ್ವಾದಗಳ ಅನುಭೂತಿ ಮಾಡುವಂತಹ ವಿಶೇಷ ಆತ್ಮರಿಗೆ, ಸದಾ ಪ್ರತಿಯೊಂದು ಕರ್ಮದಲ್ಲಿ ಸಂತುಷ್ಟತೆ, ಸಫಲತೆಯನ್ನು ಅನುಭವ ಮಾಡುವಂತಹ ಮಹಾನ್ ಆತ್ಮರಿಗೆ, ಸದಾ ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡುವ ಆಜ್ಞಾಕಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ. |
ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ಮಧುರ ಮಹಾವಾಕ್ಯಗಳು: |
1. ಸದಾ ತಮ್ಮನ್ನು ಆತ್ಮಿಕ ಯಾತ್ರಿಯೆಂದು ತಿಳಿಯುತ್ತೀರಾ? ಯಾತ್ರೆ ಮಾಡುವಾಗ ಯಾವ ನೆನಪಿರುತ್ತದೆ? ಎಲ್ಲಿಗೆ ಹೋಗಬೇಕಾಗಿದೆಯೋ ಅದೇ ನೆನಪಿರುತ್ತದೆ ಅಲ್ಲವೆ. ಅದರ ಹೊರತು ಮತ್ತ್ಯಾವುದೇ ಮಾತು ನೆನಪಿಗೆ ಬರುತ್ತದೆಯೆಂದರೆ, ಅದನ್ನೂ ಮರೆಸುತ್ತಾರೆ. ಒಂದುವೇಳೆ ಯಾರಾದರೂ ದೇವಿಯ ಯಾತ್ರೆಯಲ್ಲಿ ಹೋಗುತ್ತಾರೆಂದರೆ `ಜೈ ಮಾತಾ ಜೈ ಮಾತಾ' ಎನ್ನುತ್ತಾ ಹೋಗುವರು. ಒಂದುವೇಳೆ ಮತ್ತ್ಯಾರದಾದರೂ ನೆನಪು ಬರುತ್ತದೆಯೆಂದರೆ ಒಳ್ಳೆಯದಲ್ಲವೆಂದು ತಿಳಿಯುವರು. ಮತ್ತು ಒಬ್ಬರು ಇನ್ನೊಬ್ಬರಿಗೂ ಸಹ ಜೈ ಮಾತಾ ಎಂದು ನೆನಪು ಮಾಡಿರಿ, ಮನೆಯನ್ನು ಅಥವಾ ಮಕ್ಕಳನ್ನು ನೆನಪು ಮಾಡದಿರಿ, ತಾಯಿ(ದೇವಿ)ಯನ್ನು ನೆನಪು ಮಾಡಿರಿ ಎನ್ನುವುದನ್ನು ನೆನಪಿಗೆ ತರಿಸುತ್ತಾರೆ. ಅಂದಮೇಲೆ ಈ ಆತ್ಮಿಕ ಯಾತ್ರಿಗಳಲ್ಲಿ ಸದಾ ಯಾವ ನೆನಪಿರುತ್ತದೆ? ತನ್ನ ಮನೆ ಅಂದರೆ ಪರಮಧಾಮವು ನೆನಪಿರುತ್ತದೆ ಅಲ್ಲವೆ? ಅಲ್ಲಿಯೇ ಹೋಗಬೇಕಾಗಿದೆ ಅಂದಮೇಲೆ ಮನೆ ಮತ್ತು ನಮ್ಮ ರಾಜ್ಯವಾದ ಸ್ವರ್ಗ ಎರಡರ ನೆನಪಿರುತ್ತದೆಯೇ ಅಥವಾ ಬೇರೆ ಯಾವುದೇ ಮಾತುಗಳು ನೆನಪಿರುತ್ತದೆಯೇ? ಹಳೆಯ ಮಾತುಗಳಂತು ನೆನಪಿಗೆ ಬರುವುದಿಲ್ಲ ಅಲ್ಲವೇ? ಇಲ್ಲಿರುವಾಗ ನೆನಪಿಗೆ ಬಂದು ಬಿಡುತ್ತದೆ - ಈ ರೀತಿಯಲ್ಲಿಯೂ ಆಗಬಾರದು. ಇಲ್ಲಿರುತ್ತಿದ್ದರೂ ಭಿನ್ನವಾಗಿರಬೇಕು ಏಕೆಂದರೆ ಎಷ್ಟು ಭಿನ್ನವಾಗಿ ಇರುತ್ತೀರಿ ಅಷ್ಟೇ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬಹುದು. ಹಾಗಾದರೆ ಪರಿಶೀಲನೆ ಮಾಡಿಕೊಳ್ಳಿ- ಹಳೆಯ ಪ್ರಪಂಚದಲ್ಲಿ ಇರುತ್ತಿದ್ದರೂ, ಹಳೆಯ ಪ್ರಪಂಚದಲ್ಲಿ ಸಿಲುಕಿಕೊಳ್ಳುವುದಿಲ್ಲವೇ? ಕಮಲ-ಪುಷ್ಪವು ಕೆಸರಿನಲ್ಲಿ ಇರುತ್ತದೆ ಆದರೆ ಅದರಲ್ಲಿದ್ದರೂ ಅದರಿಂದ ಭಿನ್ನವಾಗಿ ಇರುತ್ತದೆ ಅಂದಾಗ ಸೇವೆಯಲ್ಲಿಯೂ ಇರಬೇಕಾಗುತ್ತದೆ, ಮೋಹದ ಕಾರಣದಿಂದಲ್ಲ. ಅಂದಮೇಲೆ ಮಾತೆಯರಿಗೆ ಮೋಹವಂತು ಇಲ್ಲವೇ? ಒಂದುವೇಳೆ ಅಲ್ಪ ಸ್ವಲ್ಪ ಮೊಮ್ಮಕ್ಕಳು-ಮರಿ ಮಕ್ಕಳಿಗೆ ಏನಾದರೂ ಆಯಿತೆಂದರೆ, ಆಗ ಮೋಹವಿರುತ್ತದೆಯೇ? ಒಂದುವೇಳೆ ಅವರೇನಾದರೂ ಸ್ವಲ್ಪ ಅಳುತ್ತಾರೆಂದರೆ, ತಮ್ಮ ಮನಸ್ಸೂ ಅಳುತ್ತದೆಯೇ? ಏಕೆಂದರೆ ಎಲ್ಲಿ ಮೋಹವಿರುತ್ತದೆಯೋ ಅಲ್ಲಿ ಅನ್ಯರ ದುಃಖವು ತಮ್ಮದೆನಿಸುತ್ತದೆ. ಅವರಿಗೇನಾದರೂ ಜ್ವರವಿದ್ದರೆ ತಮ್ಮ ಮನಸ್ಸಿಗೂ ಜ್ವರವುಂಟಾಗಿ ಬಿಡುತ್ತದೆ - ಈ ರೀತಿಯೂ ಆಗಬಾರದು. ಮೋಹವು ಸೆಳೆಯುತ್ತದೆ ಅಲ್ಲವೆ! ಪರೀಕ್ಷೆಗಳಂತು ಬರುತ್ತವೆ ಅಲ್ಲವೆ! ಕೆಲವೊಮ್ಮೆ ಮೊಮ್ಮಗನು ರೋಗಿಯಾಗುವನು, ಕೆಲವೊಮ್ಮೆ ಮರಿಮಗು ರೋಗಿ ಆಗುವನು, ಕೆಲವೊಮ್ಮೆ ಹಣದ ಸಮಸ್ಯೆಯು ಉಂಟಾಗುತ್ತದೆ, ಕೆಲವೊಮೆ ತಮ್ಮ ರೋಗದ ಸಮಸ್ಯೆಯೇ ಬರುತ್ತದೆ, ಇವೆಲ್ಲವೂ ಅವಶ್ಯವಾಗಿ ಆಗುತ್ತದೆ. ಆದರೆ ಇವೆಲ್ಲವುಗಳಿಂದ ಸದಾ ಭಿನ್ನವಾಗಿರಬೇಕು, ಮೋಹದಲ್ಲಿ ಬಂದು ಬಿಡುಬಾರದು - ಇಷ್ಟು ನಿರ್ಮೋಹಿ ಆಗಿದ್ದೀರಾ? ಮಾತೆಯರಲ್ಲಿ ಸಂಬಂಧದೊಂದಿಗೆ ಮೋಹವುಂಟಾಗುತ್ತದೆ ಮತ್ತು ಪಾಂಡವರಲ್ಲಿ ಹಣದೊಂದಿಗೆ ಮೋಹವುಂಟಾಗುತ್ತದೆ. ಹಣ ಸಂಪಾದಿಸುವಾಗ ನೆನಪೂ ಸಹ ಮರೆತು ಹೋಗುತ್ತದೆ. ಶರೀರ ನಿರ್ವಹಣೆಯ ನಿಮಿತ್ತ ಕಾರ್ಯವನ್ನು ಮಾಡುವುದು ಬೇರೆ ಮಾತು ಆದರೆ ಯಾವುದರಲ್ಲಿ ತೊಡಗಿರುತ್ತೀರಿ ಅದರಿಂದ ವಿದ್ಯಾಭ್ಯಾಸವೂ ನೆನಪಿಲ್ಲ, ನೆನಪಿನ ಅಭ್ಯಾಸವೂ ಇಲ್ಲ.... ಅದಕ್ಕೆ ಮೋಹ ಎಂದು ಹೇಳಲಾಗುತ್ತದೆ. ಅಂದಮೇಲೆ ಮೋಹವಂತು ಇಲ್ಲವಲ್ಲವೆ. ಎಷ್ಟು ನಷ್ಟಮೋಹಿ ಆಗಿರುತ್ತೀರಿ ಅಷ್ಟೇ ಸ್ಮೃತಿ ಸ್ವರೂಪರು ಆಗುವಿರಿ. |
ಕುಮಾರರೊಂದಿಗೆ: ಚಮತ್ಕಾರ ಮಾಡುವಂತಹ ಕುಮಾರರಲ್ಲವೆ? ಯಾವ ಚಮತ್ಕಾರವನ್ನು ತೋರಿಸುವಿರಿ? ತಂದೆಯ ಪ್ರತ್ಯಕ್ಷಗೊಳಿಸುವ ಉತ್ಸಾಹವಂತು ಇದ್ದೇ ಇರುತ್ತದೆ ಆದರೆ ಅದರ ವಿಧಿಯೇನಾಗಿದೆ? ವರ್ತಮಾನದಲ್ಲಿ ಯುವ ವರ್ಗದವರ ಮೇಲೆ ಎಲ್ಲರ ಕಣ್ಣಿದೆ. ಆತ್ಮಿಕ ಯುವ ವರ್ಗದವರು ತಮ್ಮ ಮನಸಾ ಶಕ್ತಿಯಿಂದ, ಮಾತಿನಿಂದ, ಚಲನೆಯಿಂದ ಶಾಂತಿಯ ಶಕ್ತಿಯನ್ನು ಈ ರೀತಿಯಲ್ಲಿ ಅನುಭವ ಮಾಡಿಸಿರಿ - ಇವರು ಶಾಂತಿಯ ಶಕ್ತಿಯಿಂದ ಕ್ರಾಂತಿ ಮಾಡುವವರು ಎಂದು ಅವರು ತಿಳಿಯಲಿ. ಹೇಗೆ ಶಾರೀರಿಕ ಯುವ ವರ್ಗದವರ ಚಲನೆ ಮತ್ತು ಚಹರೆಯಿಂದ ಉತ್ಸಾಹವು ಕಾಣಿಸುತ್ತದೆ ಅಲ್ಲವೆ. ಅವರನ್ನು ನೋಡುತ್ತಿದ್ದಂತೆಯೇ ಗೊತ್ತಾಗುತ್ತದೆ - ಇವರು ಯುವ ವರ್ಗದವರು. ಹಾಗೆಯೇ ತಮ್ಮ ಚಹರೆ ಮತ್ತು ಚಲನೆಯಿಂದ ಶಾಂತಿಯ ಅನುಭೂತಿಯಾಗಲಿ - ಇದಕ್ಕೆ ಚಮತ್ಕಾರ ಮಾಡುವುದೆಂದು ಹೇಳಲಾಗುತ್ತದೆ. ಪ್ರತಿಯೊಬ್ಬರ ವೃತ್ತಿಯಿಂದ ಪ್ರಕಂಪನಗಳು ಬರಲಿ. ಹೇಗೆ ಅವರುಗಳ ಚಲನೆ-ಚಹರೆಯಿಂದ ಈ ಪ್ರಕಂಪನಗಳು ಬರುತ್ತವೆ - ಇವರು ಹಿಂಸಕ ವೃತ್ತಿಯವರು ಎಂದು. ಹಾಗೆಯೇ ತಮ್ಮ ಪ್ರಕಂಪನಗಳಿಂದ ಶಾಂತಿಯ ಕಿರಣಗಳ ಅನುಭವವಾಗುವ ಚಮತ್ಕಾರವನ್ನು ತೋರಿಸಿರಿ. ಯಾರು ಕ್ರಾಂತಿಯ ಕಾರ್ಯವನ್ನು ಮಾಡುತ್ತಾರೆಯೋ ಅವರಲ್ಲಿ ಎಲ್ಲರ ಗಮನ ಹರಿಯುತ್ತದೆ ಅಲ್ಲವೆ. ಅದೇರೀತಿ ತಾವುಗಳ ಮೇಲೆ ಎಲ್ಲರ ಗಮನ ಹರಿಯಲಿ - ಇಂತಹ ವಿಶಾಲ ಸೇವೆಯನ್ನು ಮಾಡಿರಿ ಏಕೆಂದರೆ ಜ್ಞಾನವನ್ನು ಕೇಳಿದಾಗ ಚೆನ್ನಾಗಿದೆ ಎನಿಸುತ್ತದೆ ಆದರೆ ಪರಿವರ್ತನೆಯಂತು ಅನುಭವವನ್ನು ನೋಡಿ ಅನುಭವಿ ಆಗುತ್ತಾರೆ. ಇಂತಹ ಯಾವುದಾದರೂ ಭಿನ್ನವಾದ/ವಿಶೇಷವಾದ ಮಾಡಿ ತೋರಿಸಿರಿ. ವಾಣಿಯಿಂದಂತು ಮಾತೆಯರೂ ಸಹ ಸೇವೆಯನ್ನು ಮಾಡುವರು, ನಿಮಿತ್ತ ಶಿಕ್ಷಕಿಯರೂ ಸೇವೆಯನ್ನು ಮಾಡುತ್ತಾರೆ ಆದರೆ ತಾವು ನವೀನತೆಯನ್ನು ಮಾಡಿತೋರಿಸಿರಿ, ಯಾವುದರಿಂದ ಸರ್ಕಾರದ ಗಮನಕ್ಕೂ ಬರಬೇಕೆ. ಹೇಗೆ ಸೂರ್ಯನ ಉದಯವು ಆಗುತ್ತದೆಯೆಂದರೆ ಸ್ವತಹವಾಗಿಯೇ ಗಮನ ಹರಿಯುತ್ತದೆ ಅಲ್ಲವೆ- ಕಿರಣಗಳು ಬರುತ್ತಿದೆ! ಅದೇರೀತಿ ತಮ್ಮ ಕಡೆ ಗಮನ ಹರಿಯಲಿ. ತಿಳಿಯಿತೆ? |
ಓಂ ಶಾಂತಿ. ಭೋಲಾನಾಥನ ಮಕ್ಕಳು ಕೇಳುತ್ತಿದ್ದೀರಲ್ಲವೆ. ಯಾರಿಂದ ಕೇಳುತ್ತಿದ್ದೀರಿ? ಭೋಲಾನಾಥನಿಂದ ಕೇಳುತ್ತಿದ್ದೀರಿ. ಭೋಲಾನಾಥನೆಂದು ಶಿವನಿಗೆ ಹೇಳಲಾಗುತ್ತದೆ, ಅವರ ಹೆಸರೇ ಶಿವ ಎಂದಾಗಿದೆ. ಭೋಲಾನಾಥನ ಮಕ್ಕಳು ಅರ್ಥಾತ್ ಶಿವನ ಮಕ್ಕಳಾಗಿದ್ದೀರಿ. ಆತ್ಮಗಳು ಈ ಕಿವಿಗಳಿಂದ ಕೇಳುತ್ತಿದ್ದೀರಿ. ಈಗ ನೀವಾತ್ಮಗಳು ಆತ್ಮಾಭಿಮಾನಿಗಳಾಗಿದ್ದೀರಿ. ಮಕ್ಕಳು ಟೇಪ್ರೆಕಾರ್ಡರ್ನಲ್ಲಿಯೂ ಕೇಳುತ್ತಾರೆಂದರೆ ಶಿವ ತಂದೆಯು ನಮಗೆ ಪರಿಚಯ ಕೊಡುತ್ತಾರೆ - ನಾನು ಎಲ್ಲಾ ಆತ್ಮಗಳ ತಂದೆಯಾಗಿದ್ದೇನೆಂದು ತಿಳಿದಿದ್ದಾರೆ. ನೀವು ಯಾರನ್ನು ಪರಮಪಿತ ಪರಮಾತ್ಮ ಅಥವಾ ಪರಮಾತ್ಮನೆಂದು ಹೇಳುತ್ತೀರೋ ಅವರನ್ನು ಸದಾ ತಂದೆ ಎಂದು ಕರೆಯುತ್ತಾರೆ. ಯಾರು ಅವರನ್ನು ತಂದೆಯೆಂದು ಕರೆಯುತ್ತಾರೆ? ಆತ್ಮವೇ ಕರೆಯುತ್ತದೆ. ಆತ್ಮಕ್ಕೆ ಈಗ ಜ್ಞಾನ ಸಿಕ್ಕಿದೆ, ಯಾವ ಮನುಷ್ಯ ಮಾತ್ರರಿಗೂ ಈ ಜ್ಞಾನವಿಲ್ಲ. ನಾವಾತ್ಮರಿಗೆ ಇಬ್ಬರು ತಂದೆಯರಿದ್ದಾರೆ. ಒಬ್ಬರು ಸಾಕಾರಿ ತಂದೆ, ಇನ್ನೊಬ್ಬರು ನಿರಾಕಾರಿ ತಂದೆಯಾಗಿದ್ದಾರೆ. ಅವರು ಪರಮಪಿತ ಪರಮಾತ್ಮನಾಗಿದ್ದಾರೆ, ಈ ತಿಳುವಳಿಕೆಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯ ಹೊರತು ಬೇರೆ ಯಾರೂ ಕೇಳಲು ಸಾಧ್ಯವಿಲ್ಲ. ಹಾ! ನೀವು ಪರಮಪಿತ ಪರಮಾತ್ಮ, ಗಾಡ್ಫಾದರ್ ಎಂದು ಯಾರಿಗೆ ಹೇಳುತ್ತೀರಿ? ಏನು ಲೌಕಿಕ ತಂದೆಗೋ ಅಥವಾ ಪಾರಲೌಕಿಕ ತಂದೆಗೋ? ಲೌಕಿಕ ತಂದೆಗೆ ಗಾಡ್ಫಾದರ್ ಎಂದು ಕರೆಯುತ್ತಾರೆಯೇ? ಹಿಂದಿ ಭಾಷೆಯಲ್ಲಿ ಪರಮಪಿತನೆಂದು ಅಕ್ಷರವಿದೆ. ಅವರಂತೂ ಒಬ್ಬ ನಿರಾಕಾರನಾಗಿದ್ದಾರೆ, ಈಶ್ವರ, ಪ್ರಭು ಅಥವಾ ಭಗವಂತನೆಂದು ಹೇಳುವುದರಿಂದ ತಂದೆ ಎಂಬ ಮಾತು ಸಿದ್ಧವಾಗುವುದಿಲ್ಲ. ಗಾಡ್ಫಾದರ್ ಎಂಬ ಅಕ್ಷರವು ಚೆನ್ನಾಗಿದೆ, ಆತ್ಮವು ನಮ್ಮ ಗಾಡ್ಫಾದರ್ ಎಂದು ಹೇಳಿತು. ಲೌಕಿಕ ತಂದೆಯು ಕೇವಲ ಶರೀರದ ತಂದೆಯಾಗಿದ್ದಾರೆ, ನಿಮ್ಮೊಂದಿಗೆ ಕೇಳಲಾಗುತ್ತದೆ - ನಿಮಗೆ ಎಷ್ಟು ಜನ ತಂದೆಯರಿದ್ದಾರೆ? ಒಬ್ಬರು ಲೌಕಿಕ ಮತ್ತೊಬ್ಬರು ಪಾರಲೌಕಿಕ. ಇವರಿಬ್ಬರಲ್ಲಿ ಯಾರು ದೊಡ್ಡವರಾಗಿದ್ದಾರೆ? ಅವಶ್ಯವಾಗಿ ಪಾರಲೌಕಿಕ ತಂದೆಯಾಗಿದ್ದಾರೆ. ಎಲ್ಲಾ ಪತಿತರನ್ನು ಪಾವನ ಮಾಡುವಂತಹ ಪಾರಲೌಕಿಕ ತಂದೆಯ ಮಹಿಮೆಯಾಗಿದೆ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮಗೆ ಪಾರಲೌಕಿಕ ತಂದೆಯೊಂದಿಗೆ ಪ್ರೀತಿಯಿದೆ ಎಂದು ತಂದೆಯು ತಿಳಿಸಿದ್ದಾರೆ. ಬೇರೆಲ್ಲರದೂ ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಈಗ ಮಹಾಭಾರತ ಯುದ್ಧವು ನಡೆಯಲಿದೆ, ವಿಮಾನಗಳು, ಟ್ಯಾಂಕ್ ಇತ್ಯಾದಿಗಳನ್ನು ಪರಸ್ಪರ ಸರಬರಾಜು ಮಾಡುತ್ತಿದ್ದಾರೆ. ಹಣವನ್ನು ತೆಗೆದುಕೊಂಡು ಯಾರಿಗೆ ಬೇಕೋ ಅವರಿಗೆ ಕೊಡುತ್ತಿದ್ದಾರೆ, ಸಾಲವನ್ನೂ ಸಹ ತೆಗೆದುಕೊಳ್ಳುತ್ತಿದ್ದಾರೆ ಅಂದಮೇಲೆ ವಿಮಾನ, ಅಣು ಬಾಂಬು ಇತ್ಯಾದಿಗಳನ್ನೂ ಸಹ ಕೊಂಡುಕೊಳ್ಳುತ್ತಾರೆ. ಇವೆಲ್ಲಾ ಸಾಮಗ್ರಿಗಳು ಬಹಳ ಬೆಲೆ ಹೆಚ್ಚಿರುತ್ತದೆ. ವಿದೇಶಿಯರು ಇದನ್ನು ಮಾಡುತ್ತಾರೆ ನಂತರ ಮಾರಾಟ ಮಾಡುತ್ತಾರೆ. ಭಾರತವಾಸಿಗಳು ವಿಮಾನಗಳನ್ನು ಮಾರಾಟ ಮಾಡುತ್ತಾರೆಯೇ! ಎಲ್ಲಾ ಸಾಮಗ್ರಿಗಳು ಹೊರಗಿನಿಂದಲೇ ಬರುತ್ತವೆ. ಈಗ ಈ ಸಾಮಗ್ರಿಗಳನ್ನು ಖರೀದಿಸಿದರೆಂದ ಮೇಲೆ ಕೆಲಸಕ್ಕೆ ಬರುತ್ತವೆಯಲ್ಲವೆ, ಅವನ್ನು ಬಿಸಾಡಲು ಸಾಧ್ಯವೇ? ಅವರೆಲ್ಲರದೂ ವಿನಾಶಕಾಲೇ ವಿಪರೀತ ಬುದ್ಧಿ, ಯಾದವ ಸಂಪ್ರದಾಯವಾಗಿದೆ, ಇವರೆಲ್ಲರೂ ಯುರೋಪಿನಲ್ಲಿ ಇರುತ್ತಾರೆ, ಇವರಲ್ಲಿ ಎಲ್ಲರೂ ಬಂದು ಬಿಡುತ್ತಾರೆ. ಭಾರತವಂತೂ ಅವಿನಾಶಿ ಖಂಡವಾಗಿದೆ ಏಕೆಂದರೆ ಅವಿನಾಶಿ ತಂದೆಯ ಜನ್ಮ ಸ್ಥಾನವಾಗಿದೆ. ತಂದೆಯು ಬರುತ್ತಾರೆಂದರೆ ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕು ಮತ್ತು ಜನ್ಮವನ್ನೂ ಸಹ ತೆಗೆದುಕೊಳ್ಳುತ್ತಾರೆಂದರೆ ಆ ಖಂಡವೂ ಸಮಾಪ್ತಿಯಾಗುವುದಿಲ್ಲ. ತಂದೆಯು ಬಂದಿದ್ದರು ಆದ್ದರಿಂದಲೇ ಶಿವ ಜಯಂತಿಯನ್ನು ಮಾಡುತ್ತಾರೆ ಆದರೆ ಶಿವ ತಂದೆಯು ಯಾವಾಗ ಬರುತ್ತಾರೆಂದು ತಿಳಿದಿಲ್ಲ. ಯಾವಾಗ ವಿನಾಶದ ತಯಾರಿ ಆಗುತ್ತದೆಯೋ ಆಗ ತಂದೆಯು ಬರುತ್ತಾರೆ. |
ಯುರೋಪಿಯನ್ನರು, ಯಾದವ ಸಂಪ್ರದಾಯದವರು, ಬೌದ್ಧಿಯರು, ಕ್ರಿಶ್ಚಿಯನ್ನರು ಸತ್ಯಯುಗದಲ್ಲಿ ಇರುವುದಿಲ್ಲ. ಅವರದೆಲ್ಲವೂ ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ ಏಕೆಂದರೆ ಪರಮಾತ್ಮ ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ. ನಿಮ್ಮದು ವಿನಾಶಕಾಲೇ ಪ್ರೀತಿ ಬುದ್ಧಿ, ತಂದೆಯನ್ನು ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂದು ನೀವು ತಿಳಿದಿದ್ದೀರಿ. 84 ಜನ್ಮಗಳಿಂದ ಪಾಪಾತ್ಮರು, ತಮೋಪ್ರಧಾನರಾಗಿ ಬಿಟ್ಟಿದ್ದೇವೆ, ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈಗ ನಾಟಕವು ಸಂಪೂರ್ಣವಾಗುತ್ತಿದೆ, ಈಗ ಎಲ್ಲರೂ ಹಿಂತಿರುಗಿ ಹೋಗಬೇಕು. ನೀವು ರಾಜಯೋಗದ ವಿದ್ಯೆಯನ್ನು ಈಗ ಕಲಿಯುತ್ತಿದ್ದೀರಿ. ಈಗ ಎಲ್ಲರದೂ ವಿನಾಶದ ಸಮಯ ಅರ್ಥಾತ್ ಮೃತ್ಯುವಿನ ಸಮಯವಾಗಿದೆ ಅಂದಮೇಲೆ ಆ ಯಾದವರೊಂದಿಗೆ ಈಶ್ವರನಿಗೆ ಪ್ರೀತಿಯಿಲ್ಲ ಆದ್ದರಿಂದ ವಿನಾಶಕಾಲೇ ವಿಪರೀತ ಬುದ್ಧಿಯೆಂದು ಹೇಳಲಾಗುತ್ತದೆ. ಯಾವುದೇ ದೇಹಧಾರಿ ಮನುಷ್ಯನೊಂದಿಗೆ ಪ್ರೀತಿಯನ್ನು ಇಡಬಾರದು, ಅವರಂತೂ ರಚನೆಯಾಗಿದ್ದಾರೆ, ಅವರಿಂದ ಆಸ್ತಿ ಸಿಗಲು ಸಾಧ್ಯವಿಲ್ಲ. ಸಹೋದರನಿಂದ ಸಹೋದರನಿಗೆ ಆಸ್ತಿಯು ಸಿಗಲು ಸಾಧ್ಯವೇ? ಇದನ್ನಂತೂ ಬಹಳ ಚೆನ್ನಾಗಿ ತಿಳಿಸಲಾಗಿದೆ. ಅವರದು ವಿನಾಶಕಾಲೆ ವಿಪರೀತ ಬುದ್ಧಿ, ನಿಮ್ಮದು ಪ್ರೀತಿ ಬುದ್ಧಿ ಎಂದು ನೀವು ತಿಳಿದಿದ್ದೀರಿ. ಇದರಲ್ಲಿಯೂ ಸಹ ತೀವ್ರ ಪ್ರೀತಿಯಿರುವವರು ತಂದೆಯೊಂದಿಗೆ ಸಂಪೂರ್ಣ ಪ್ರೀತಿಯನ್ನಿಟ್ಟಿರುತ್ತಾರೆ. ನಾವು ತಂದೆಯಿಂದ 21 ಜನ್ಮಗಳ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇವೆ, ಆ ತಂದೆಯು ಸತ್ಯವನ್ನೇ ಹೇಳುತ್ತಾರೆ ಮತ್ತ್ಯಾರೊಂದಿಗೂ ಪ್ರೀತಿಯನ್ನಿಡಬಾರದು. ಯಾವಾಗ ಹೊಸ ಮನೆಯ ತಯಾರಾಗುತ್ತದೆಯೋ ನಂತರ ಹೊಸ ಮನೆಯೊಂದಿಗೆ ಪ್ರೀತಿಯಿರುತ್ತದೆ. ಈ ಹಳೆಯ ಮನೆಯು ಒಡೆದು ಹೋಗುತ್ತದೆ ಎಂದು ತಿಳಿದು ಬರುತ್ತದೆ ಅಂದಮೇಲೆ ನಾವೂ ಹಳೆಯ ಪ್ರಪಂಚದಿಂದ ಮನಸ್ಸನ್ನು ತೆಗೆಯುತ್ತಾ ಹೋಗುತ್ತೇವೆ. ದಿನ-ಪ್ರತಿದಿನ ವಾಯುಮಂಡಲ ಕೆಡುತ್ತಲೇ ಹೋಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಎಷ್ಟೊಂದು ಗಲಾಟೆಗಳಾಗುತ್ತದೆ ಅಂದಮೇಲೆ ಇವೆಲ್ಲವೂ ಸಮಾಪ್ತಿಯಾಗಲೇ ಬೇಕಲ್ಲವೆ. ನಾವು ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ ಅಂದಮೇಲೆ ಹೊಸ ಪ್ರಪಂಚವನ್ನು ನೆನಪು ಮಾಡಬೇಕು. ಬೇಹದ್ದಿನ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು, ಮತ್ತ್ಯಾರನ್ನೇ ನೆನಪು ಮಾಡುವುದರಿಂದ ಏನೂ ಸಿಗುವುದಿಲ್ಲ. ಮನುಷ್ಯರು ಭಕ್ತಿಮಾರ್ಗದಲ್ಲಂತೂ ಎಷ್ಟೊಂದು ನೆನಪು ಮಾಡುತ್ತಾರೆ. ತಂದೆ-ತಾಯಿ, ಮಿತ್ರ ಸಂಬಂಧಿಗಳನ್ನು ನೆನಪು ಮಾಡುತ್ತಿದ್ದರೂ ಸಹ ದೇವಿ-ದೇವತೆಗಳನ್ನು ಎಷ್ಟೊಂದು ನೆನಪು ಮಾಡುತ್ತಾರೆ! ಹೋಗಿ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಅದಕ್ಕೆ ಪತಿತ-ಪಾವನಿ ಎಂದು ಹೇಳುತ್ತಾರೆ. ಬಾಣ ಹೊಡೆದರು ಗಂಗೆ ಹೊರ ಬಂದಿತೆಂದು ತೋರಿಸುತ್ತಾರೆ. ಗಂಗಾ ಜಲವನ್ನು ಬಾಯಲ್ಲಿ ಹಾಕುತ್ತಾರೆ, ಸ್ವಲ್ಪ ಜಲವು ಸಿಗುವುದರಿಂದ ಮುಕ್ತಿಯನ್ನು ಪಡೆಯುತ್ತಾರೆಂದು ತಿಳಿಯುತ್ತಾರೆ. ಇಲ್ಲಂತೂ ಜ್ಞಾನದ ಮಾತಾಗಿದೆ. ಸ್ವಲ್ಪ ಜ್ಞಾನವನ್ನು ಕೇಳುವುದರಿಂದಲೂ ಫಲ ಸಿಗುವುದು, ಈ ಜ್ಞಾನವು ಕೇಳುವ ಮಾತಾಗಿದೆ, ಅಮೃತವನ್ನು ಕುಡಿಯುವ ಮಾತಲ್ಲ ಕೇಳುವ ಮಾತಾಗಿದೆ. ಭೋಗದ ಅಮೃತವನ್ನು ಕುಡಿಸುತ್ತಾರೆಂದು ಅಲ್ಲ, ಅದಂತೂ ಸಿಹಿ ನೀರಾಗಿದೆ. ಬಾಕಿ ಇದಂತೂ ಜ್ಞಾನದ ಮಾತಾಗಿದೆ. ಜ್ಞಾನವೆಂದರೆ ತಂದೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದಾಗಿದೆ. ಈ ಸೃಷ್ಟಿಯು ಹೇಗೆ ಸುತ್ತುತ್ತದೆ, 84 ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ? ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮೊಟ್ಟ ಮೊದಲು ಭಾರತವಾಸಿಗಳೇ ಬರುತ್ತಾರೆ, ಅವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಯಾರು ದೇವತೆಗಳಾಗಿದ್ದರೋ ಅವರೇ 84 ಜನ್ಮಗಳನ್ನು ಭೋಗಿಸಿ ಪತಿತರಾಗಿದ್ದಾರೆ, ತಂದೆಯು ಬಂದು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ. ಮನುಷ್ಯರು ದೇಹಾಭಿಮಾನದಲ್ಲಿ ಬಂದು ಪಂಚ ವಿಕಾರಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಈಗ ರಾವಣ ರಾಜ್ಯವಿದೆ, ಸತ್ಯಯುಗದಲ್ಲಿ ದೈವೀ ರಾಜ್ಯವಿತ್ತು. ಶಿವ ತಂದೆಯು ಸ್ವರ್ಗ ಪುರಿಯನ್ನು ರಚನೆ ಮಾಡುತ್ತಾರೆ, ಸೂರ್ಯವಂಶಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅದು ಈಗ ಸ್ಥಾಪನೆಯಾಗುತ್ತಿದೆ ಎಂದು ನೀವು ಈಗ ತಿಳಿದಿದ್ದೀರಿ. ನಿಮ್ಮದು ವಿನಾಶಕಾಲೇ ಪ್ರೀತಿ ಬುದ್ಧಿ ಆದ್ದರಿಂದ ನೀವು ವಿಜಯಿಗಳಾಗಿದ್ದೀರಿ, ಇಡೀ ವಿಶ್ವದ ಮೇಲೆ ವಿಜಯ ಗಳಿಸುತ್ತೀರಿ, ಇದನ್ನು ನೀವು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕಾಗಿದೆ. ನಾವು ಭಾರತವಾಸಿಗಳು ಯಾರು ಈಗ ಕಲಿಯುಗದಲ್ಲಿದ್ದೇವೆ ನಂತರ ಬದಲಾಗಿ ಸ್ವರ್ಗದಲ್ಲಿ ಹೋಗುತ್ತೇವೆ. ಹಳೆಯ ಪ್ರಪಂಚವನ್ನು ಬಿಟ್ಟು ಬಿಡಬೇಕು, ಈ ವಿಕಾರಿ ಸಂಬಂಧವನ್ನು ಬಂಧನವೆಂದು ಹೇಳಲಾಗುತ್ತದೆ. ನೀವೀಗ ವಿಕಾರಿ ಬಂಧನದಿಂದ ಹೊರ ಬಂದು ನಿರ್ವಿಕಾರಿ ಸಂಬಂಧದಲ್ಲಿ ಹೋಗುತ್ತೀರಿ ನಂತರ ಇನ್ನೊಂದು ಜನ್ಮದಲ್ಲಿ ವಿಕಾರಿ ಬಂಧನದಲ್ಲಿ ಬರುವುದಿಲ್ಲ, ಅಲ್ಲಿ ನಿರ್ವಿಕಾರಿ ಸಂಬಂಧ, ಈ ಸಮಯದಲ್ಲಿ ಆಸುರೀ ಬಂಧನವಾಗಿದೆ. ನಮಗೆ ಶಿವ ತಂದೆಯೊಂದಿಗೆ ಪ್ರೀತಿಯಿದೆ ಎಂದು ಆತ್ಮವು ಹೇಳುತ್ತದೆ. ನೀವು ಬ್ರಾಹ್ಮಣರದು ಪ್ರೀತಿಯಿದೆ ಏಕೆಂದರೆ ಯಥಾರ್ಥವಾಗಿ ತಿಳಿದಿದ್ದೀರಿ. ತಂದೆಯನ್ನು, ಸೃಷ್ಟಿಚಕ್ರವನ್ನು ತಿಳಿದು ನಂತರ ಅನ್ಯರಿಗೂ ನೀವು ತಿಳಿಸುತ್ತೀರಿ. ಯಾರೆಷ್ಟು ಅನ್ಯರಿಗೆ ತಿಳಿಸುತ್ತೀರೋ ಅಷ್ಟು ಕಲ್ಯಾಣವಾಗುವುದು. ಯಾರೆಷ್ಟು ತಿಳಿಸುತ್ತಾರೆಯೋ ಅವರೇ ಹೆಚ್ಚು ಬುದ್ಧಿವಂತರು ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಕಡಿಮೆ ಸೇವೆ ಮಾಡುತ್ತಾರೆಂದರೆ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಇಡೀ ಪ್ರಪಂಚವಂತೂ ಪತಿತವಾಗಿದೆ, ಪ್ರತಿಯೊಬ್ಬರಿಗೂ ಪತಿತರಿಂದ ಪಾವನರಾಗುವ ದಾರಿಯನ್ನು ತೋರಿಸಬೇಕಾಗಿದೆ, ಮತ್ತ್ಯಾವುದೇ ಉಪಾಯವಿಲ್ಲ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುವುದು. ಯಾರು ದೈವೀ ಸಂಪ್ರದಾಯದವರು ಆಗಿರುತ್ತಾರೆಯೋ ಅವರ ಮುಂದೆ ಈ ಅಕ್ಷರಗಳು ಪ್ರತಿಧ್ವನಿಸುತ್ತಿರುತ್ತದೆ. ಇದು ಸರಿಯಾದ ಮಾತಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅವಶ್ಯವಾಗಿ ನಾವು ದೇವಿ-ದೇವತೆಗಳಾಗುತ್ತೇವೆ, ನಮ್ಮ ಆಹಾರ ಬಹಳ ಶುದ್ಧವಾಗಿರಬೇಕಾಗಿದೆ, ದೈವೀ ಗುಣವನ್ನೂ ಇಲ್ಲಿಯೇ ಧಾರಣೆ ಮಾಡಬೇಕು, ಸರ್ವಗುಣ ಸಂಪನ್ನರಾಗಬೇಕು, ಅದು ನೀವು ಇಲ್ಲಿಯೇ ಆಗುತ್ತಿದ್ದೀರಿ. ಈ ಲಕ್ಷ್ಮೀ-ನಾರಾಯಣರು ದೇವತೆಗಳಾಗಿದ್ದಾರೆ, ಇವರಿಗೆ ಭೋಗವನ್ನಿಡುತ್ತಾರೆಂದರೆ ಸಿಗರೇಟು, ಇತ್ಯಾದಿಗಳನ್ನೇನು ಇಡುತ್ತಾರೆಯೇ! ಸಿಗರೇಟು ಸೇದುವವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ, ಇದು ಯಾವುದೇ ದೈವೀ ವಸ್ತುವಲ್ಲ. ಸಿಗರೇಟು ಕುಡಿಯುವುದು ಅಥವಾ ಬೆಳ್ಳುಳ್ಳಿ-ಈರುಳ್ಳಿಯನ್ನು ತಿನ್ನುತ್ತಾರೆ ಆದ್ದರಿಂದ ಕೆಳಗಡೆ ಬೀಳುತ್ತಾರೆ. ಇವುಗಳನ್ನು ಬಿಡುವುದರಿಂದ ಆರೋಗ್ಯ ಕೆಡುತ್ತದೆಯೆಂದು ಹೇಳುತ್ತಾರೆ, ಶಿವ ತಂದೆಯನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಈ ಅಭ್ಯಾಸವನ್ನು ಬಿಟ್ಟರೆ ನಿಮ್ಮ ಸದ್ಗತಿಯಾಗುತ್ತದೆ. ಸಿಗರೇಟಿನ ಅಭ್ಯಾಸವಂತೂ ಬಹಳ ಜನರಲ್ಲಿ ಇರುತ್ತದೆ. ದೇವತೆಗಳಿಗೆ ಯಾವಾಗಲೂ ಇಂತದ್ದನ್ನು ಭೋಗವನ್ನು ಇಡುವುದಿಲ್ಲವೆಂದು ತಿಳಿಸಲಾಗುತ್ತದೆ. ಇವರಂತೆಯೇ ಇಲ್ಲಿ ನೀವು ಆಗಬೇಕಾಗಿದೆ. ನೀವು ಈ ರೀತಿ ಕೆಟ್ಟ ಪದಾರ್ಥಗಳನ್ನು ಸೇವಿಸಿದರೆ ದುರ್ವಾಸನೆ ಬರುತ್ತದೆ. ಸಿಗರೇಟು ಅಥವಾ ಮಧ್ಯಪಾನ ಸೇವಿಸುವವರಿಂದ ದೂರದಿಂದಲೇ ವಾಸನೆ ಬರುತ್ತದೆ ಅಂದಮೇಲೆ ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಬೇಕು, ವೈಷ್ಣವರಾಗಬೇಕಾಗಿದೆ. ನೀವು ವಿಷ್ಣುವಿನ ಸಂತಾನರು, ವಿಷ್ಣು ವಂಶಿಗಳು ಅರ್ಥಾತ್ ದೈವೀ ಸಂತಾನರಾಗುತ್ತೀರಿ. ಇಲ್ಲಂತೂ ನೀವು ಈಶ್ವರೀಯ ಸಂತಾನರಾಗಿದ್ದೀರಿ, ಇದು ನಿಮ್ಮ ಸರ್ವೋತ್ತಮ ಜನ್ಮವಾಗಿದೆ. ದೇವತೆಗಳಿಗಿಂತಲೂ ನೀವು ಉತ್ತಮರಾಗಿದ್ದೀರಿ, ಅನ್ಯರನ್ನೂ ಸಹ ನೀವು ಉತ್ತಮರನ್ನಾಗಿ ಮಾಡುವವರಾಗಿದ್ದೀರಿ. ಇದು ಬೇಹದ್ದಿನ ತಂದೆಯ ಮೆಷಿನರಿಯಾಗಿದೆ. ಕ್ರಿಶ್ಚಿಯನ್ನರ ಮಿಷನ್ಯಿರುತ್ತದೆಯಲ್ಲವೆ, ತಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಅನೇಕರನ್ನು ಪರಿವರ್ತನೆ ಮಾಡಿಕೊಳ್ಳುತ್ತಾರೆ, ಇದು ಈಶ್ವರೀಯ ಮಿಷನ್ ಆಗಿದೆ. ನೀವು ಶೂದ್ರರಿಂದ ಬ್ರಾಹ್ಮಣ ಧರ್ಮಕ್ಕೆ ಪರಿವರ್ತನೆಯಾಗಿ ನಂತರ ದೇವತಾ ಧರ್ಮಕ್ಕೆ ಹೋಗುತ್ತೀರಿ. ನಾವು ಮೊದಲು ಶೂದ್ರವಂಶಿಯರಾಗಿದ್ದೆವು ಈಗ ಬ್ರಾಹ್ಮಣರಾಗಿದ್ದೇವೆ ಎಂದು ನೀವೀಗ ತಿಳಿದಿದ್ದೀರಿ. ಬದುಕಿದ್ದರೂ ಸತ್ತಂತೆಯೇ ಇದ್ದು ನಂತರ ಹೋಗಿ ದೇವತೆಗಳಾಗುತ್ತೀರಿ. ಗರ್ಭದಿಂದ ಜನ್ಮ ಸಿಗುತ್ತದೆ. |
ಇಲ್ಲಿ ನಿಮ್ಮನ್ನು ತಂದೆಯು ಧರ್ಮಾತ್ಮರನ್ನಾಗಿ ಮಾಡಲು ಧರ್ಮದ ಮಕ್ಕಳನ್ನಾಗಿ ಮಾಡಿದರು. ತಂದೆಯು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ, ತಂದೆ ಮಕ್ಕಳಿಗೆ ಬ್ರಾಹ್ಮಣರಿಂದ ದೇವತೆಗಳಾಗುವುದು ಕಲಿಸುತ್ತಾರೆ. ಈ ಮನುಷ್ಯರು ಎಷ್ಟೊಂದು ಶ್ರೇಷ್ಠರಾಗಿದ್ದಾರೆ, ಇವರಲ್ಲಿ ಎಲ್ಲಾ ದೈವೀ ಗುಣಗಳಿವೆ. ನೀವಾತ್ಮರು ಯಾವಾಗ ಪವಿತ್ರರಾಗುತ್ತೀರಿ ಆಗ ಶರೀರವೂ ಸಹ ಪವಿತ್ರವಾದುದೇ ಬೇಕಲ್ಲವೆ. ಹಳೆಯ ಶರೀರವು ಸಮಾಪ್ತಿಯಾಗುತ್ತದೆ ನಂತರ ನಿಮಗೆ ಹೊಸ ಶರೀರ ಸತೋಪ್ರಧಾನವಾದುದೇ ಬೇಕಲ್ಲವೆ. ಸತ್ಯಯುಗದಲ್ಲಿ ಐದೂ ತತ್ವಗಳೂ ಸತೋಪ್ರಧಾನವಾಗಿರುತ್ತವೆ, ನೀವು ಶೂದ್ರ ವರ್ಣದಲ್ಲಿದ್ದಿರಿ, ಈಗ ಪುನಃ ಬ್ರಾಹ್ಮಣ ವರ್ಣದವರಾಗಿ ನಂತರ ದೈವೀ ವರ್ಣದಲ್ಲಿ ಬರುತ್ತೀರಿ, 84 ಜನ್ಮಗಳನ್ನು ಪಡೆಯುತ್ತೀರಿ. ಬ್ರಾಹ್ಮಣ ವರ್ಣವನ್ನು ಪ್ರಾಯಃಲೋಪ ಮಾಡಿ ಬಿಟ್ಟಿದ್ದಾರೆ. ಈಗ ತಂದೆಯು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿ ನಂತರ ದೇವತೆಗಳನ್ನಾಗಿ ಮಾಡುತ್ತಾರೆ. ಈಗ ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಬಾಜೋಲಿ ಆಟವಿರುತ್ತದೆಯಲ್ಲವೆ. ಈಗ ಬ್ರಾಹ್ಮಣ, ದೇವತಾ, ಕ್ಷತ್ರಿಯ..... ನಂತರ ಬ್ರಾಹ್ಮಣರಾಗುತ್ತೀರಿ. ಇದಕ್ಕೆ ಚಕ್ರವೆಂದು ಹೇಳಲಾಗುತ್ತದೆ. ಈಗ ನೀವು ಬ್ರಾಹ್ಮಣ ವರ್ಣದಲ್ಲಿದ್ದೀರಿ, ಈ ಜ್ಞಾನವು ಈಗಲೇ ಸಿಗುತ್ತದೆ ನಂತರ ಇದರ ಪ್ರಾಲಬ್ಧವು ಸಿಗುತ್ತದೆ. ಅಲ್ಲಿ ಸದಾ ಸುಖಿಯಾಗಿರುತ್ತೀರಿ. 21 ಜನ್ಮಗಳು ನಂಬರ್ವಾರ್ ಪುರುಷಾರ್ಥದ ಅನುಸಾರವಾಗಿದೆ. ಕೆಲವರು ರಾಜ ವಂಶಕ್ಕೆ ಹೋಗುತ್ತಾರೆ, ಕೆಲವರು ಪ್ರಜೆಗಳಲ್ಲಿ ಹೋಗುತ್ತಾರೆ. ರಾಜ ಮನೆತನದಲ್ಲಿ ಬಹಳ ಸುಖವಿರುತ್ತದೆ ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ನಿಮಗೆ 84 ಜನ್ಮಗಳ ಜ್ಞಾನ ಸಿಕ್ಕಿದೆ, ಸ್ಮೃತಿ ಬಂದಿದೆ. ತಂದೆಯು ಬಂದು ಮಧುರಾತಿ ಮಧುರ ಮಕ್ಕಳೇ, ನಿಮ್ಮ 84 ಜನ್ಮಗಳು ಈಗ ಸಂಪೂರ್ಣವಾಗಿದೆ. ಕೆಲವರದು 84 ಜನ್ಮ, 80, 50 ಅಥವಾ 60 ಜನ್ಮಗಳನ್ನೂ ತೆಗೆದುಕೊಂಡಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ನೀವು ಭಾರತವಾಸಿಗಳೇ ಸುಖವನ್ನು ಭೋಗಿಸುತ್ತೀರಿ. ನಿಮ್ಮ ಹೆಸರು ಪ್ರಸಿದ್ಧವಾಗಿದೆ. ದೇವತೆಗಳಿಗಿಂತಲೂ ನೀವು ಶ್ರೇಷ್ಠರಾಗಿದ್ದೀರಿ, ನಾವೇ ಪೂಜ್ಯರಾಗುತ್ತೇವೆಂದು ನೀವು ತಿಳಿದಿದ್ದೀರಿ. ಸತ್ಯಯುಗದಲ್ಲಿ ಯಾರನ್ನೂ ನಾವು ಪೂಜಿಸುವುದಿಲ್ಲ, ನಮ್ಮನ್ನೂ ಯಾರೂ ಪೂಜಿಸುವುದಿಲ್ಲ. ಅಲ್ಲಿ ನಾವು ಪೂಜ್ಯರಾಗಿಯೇ ಇರುತ್ತೇವೆ, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ನಾವು ಪೂಜ್ಯರಿಂದ ಪೂಜಾರಿಗಳಾಗಿ ತಲೆ ಬಾಗುತ್ತೇವೆ, ದ್ವಾಪರದಿಂದ ಪೂಜಾರಿಗಳಾಗುವುದು ಪ್ರಾರಂಭವಾಗುತ್ತದೆ. ಅಂತ್ಯದಲ್ಲಿ ಎಲ್ಲರೂ ವ್ಯಭಿಚಾರಿಗಳಾಗುತ್ತಾರೆ. ಈ ಶರೀರವು 5 ತತ್ವಗಳಿಂದ ಮಾಡಲ್ಪಟ್ಟಿದೆ. ಶರೀರ ಪೂಜೆ ಮಾಡುವುದನ್ನು ಭೂತ ಪೂಜೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರಲ್ಲಿಯೂ 5 ಭೂತಗಳಿವೆ, ದೇಹಾಭಿಮಾನದ ಭೂತ ನಂತರ ಕಾಮ-ಕ್ರೋಧದ ಭೂತವಾಗಿದೆ. ಭೂತ ಸಂಪ್ರದಾಯ ಅಥವಾ ಆಸುರೀ ಸಂಪ್ರದಾಯವೆಂದು ಹೇಳುವುದು ಒಂದೇ ಆಗಿದೆ. ತಂದೆಯು ಬಂದು ಪುನಃ ದೈವೀ ಸಂಪ್ರದಾಯವನ್ನಾಗಿ ಮಾಡುತ್ತಾರೆ. ತಂದೆಯು ಬಂದು ಭೂತಗಳಿಂದ ಬಿಡಿಸಿ ತಮ್ಮ ಜೊತೆ ಯೋಗ ಸೇರಿಸಿ ದೇವತೆಗಳನ್ನಾಗಿ ಮಾಡುತ್ತಾರೆ. ಗುರುನಾನಕರೂ ಸಹ ಪರಮಪಿತ ಪರಮಾತ್ಮನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಮಹಿಮೆಯನ್ನೂ ಮಾಡಿದ್ದಾರೆ. ಅವರೇ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಒಳ್ಳೆಯದು.ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬ್ರಾಹ್ಮಣರಿಂದ ದೇವತೆಗಳಾಗಬೇಕಾಗಿದೆ, ಆದ್ದರಿಂದ ಕೆಟ್ಟ-ಕೆಟ್ಟ ಅಭ್ಯಾಸಗಳನ್ನು ಬಿಡಬೇಕಾಗಿದೆ. ಶೂದ್ರರನ್ನು ಬ್ರಾಹ್ಮಣ ಧರ್ಮದಲ್ಲಿ ಪರಿವರ್ತನೆ ಮಾಡಿ ದೇವತೆಗಳನ್ನಾಗಿ ಮಾಡುವಂತಹ ಈಶ್ವರೀಯ ಮಿಷನ್ ಕಾರ್ಯದಲ್ಲಿ ಸಹಯೋಗಿಗಳಾಗಬೇಕಾಗಿದೆ. ಮಧ್ಯಪಾನ, ಸಿಗರೇಟು ಅಥವಾ ಯಾವುದೇ ಕೆಟ್ಟ ಹವ್ಯಾಸಗಳಿದ್ದರೆ ಅದನ್ನು ತೆಗೆಯಬೇಕಾಗಿದೆ. |
2. ಈ ವಿನಾಶ ಕಾಲದ ಸಮಯದಲ್ಲಿ ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನು ಇಡಬೇಕಾಗಿದೆ. ಹಳೆಯ ಮನೆ ಮುರಿದು ಹೋಗಲಿದೆ. ಆದ್ದರಿಂದ ಇದರಿಂದೊಗಿನ ಮನಸ್ಸನ್ನು ತೆಗೆದು ಹೊಸದರೊಂದಿಗೆ ಇಡಬೇಕು. |
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ ಗೀತೆಯನ್ನು ಕೇಳಿದಿರಿ. ಯಾರು ತಂದೆಗೆ ಅರ್ಪಣೆಯಾಗುವರೊ ಅವರಿಗೆ ಮಕ್ಕಳೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಇದು ಅಂತಿಮ ಮರುಜೀವಾ ಜನ್ಮವಾಗಿದೆ. ಜೀವಿಸಿದ್ದಂತೆಯೇ ತಂದೆಗೆ ಅರ್ಪಣೆಯಾಗಬೇಕಾಗಿದೆ. ಇದಂತೂ ಮಕ್ಕಳಿಗೆ ತಿಳಿದಿದೆ - ಶ್ರೀಮತದ ಗಾಯನವಿದೆ, ಶ್ರೀಮತ್ಭಗವಾನುವಾಚ. ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ವಾಸ್ತವದಲ್ಲಿ ಶಿವ ತಂದೆಯಾಗಿದ್ದಾರೆ, ಅವರ ನಂತರ ಬ್ರಹ್ಮಾ, ನಂತರ ಕೃಷ್ಣ. ಶ್ರೀಮತವು ಕೃಷ್ಣನದೆಂದು ಹೇಳುವುದಿಲ್ಲ. ನಮ್ಮ ತಂದೆಯು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಪತಿತ-ಪಾವನರೆಂದು ಕೃಷ್ಣನಿಗಾಗಲಿ, ರಾಧೆಗಾಗಲಿ ಹೇಳುವುದಿಲ್ಲ ಅವರು ದೈವೀ ಗುಣವಂತ ಮನುಷ್ಯರಾಗಿದ್ದಾರೆ. ಮನುಷ್ಯರಿಗೆ ಪತಿತ-ಪಾವನ ಎಂದು ಹೇಳಲಾಗುವುದಿಲ್ಲ. ಸತ್ಯಯುಗದಲ್ಲಿ ಪತಿತ-ಪಾವನ ಬನ್ನಿ ಎಂದು ಹೇಳುವುದಿಲ್ಲ, ಪತಿತರನ್ನು ಪಾವನ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರ ಶ್ರೀಮತದಂತೆ ನೀವು ನಡೆಯುತ್ತಿದ್ದೀರಿ. ಪ್ರಜಾಪಿತ ಬ್ರಹ್ಮನ ಮತವು ಪ್ರಸಿದ್ಧವಾಗಿದೆ, ಶ್ರೀಮತವೂ ಪ್ರಸಿದ್ಧವಾಗಿದೆ ಆದರೆ ಅದರಲ್ಲಿ ಮಾಡಿರುವ ತಪ್ಪೇನೆಂದರೆ ತಂದೆಯ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ವಾಸ್ತವದಲ್ಲಿ ಸರ್ವ ಧರ್ಮದವರಿಗೂ ಒಬ್ಬರೇ ತಂದೆಯಾಗಿದ್ದಾರೆ, ಕೃಷ್ಣನನ್ನು ಎಲ್ಲರೂ ಒಪ್ಪುವುದಿಲ್ಲ, ಕ್ರಿಶ್ಚಿಯನ್ನರು ಕ್ರೈಸ್ಟ್ ತಂದೆಯೆಂದು ಒಪ್ಪುತ್ತಾರೆಯೇ ಹೊರತು ಕೃಷ್ಣನನ್ನು ಒಪ್ಪುವುದಿಲ್ಲ ಏಕೆಂದರೆ ಕ್ರಿಶ್ಚಿಯನ್ನರು ಕ್ರೈಸ್ಟ್ನ ಮುಖವಂಶಾವಳಿಯಾಗಿದ್ದಾರೆ. ಶಿವ ತಂದೆಯು ಬಂದು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ತಲೆಯ ಮೇಲೆ ಕೈಯಿಟ್ಟು ತಂದೆಯ ಮಕ್ಕಳಾಗಿದ್ದೇವೆ ಎಂದು ಹೇಳುತ್ತಾರೆ ಅಂದಮೇಲೆ ಅವರ ಆದೇಶದಂತೆ ನಡೆಯಬೇಕಾಗಿದೆ. ನೀವು ತಂದೆಗೆ ತಮ್ಮ ಮತವನ್ನು ಕೊಡುವ ಅವಶ್ಯಕತೆಯಿಲ್ಲ. ಅವರೇ ಮತವನ್ನು ಕೊಡುವವರಾಗಿದ್ದಾರೆ, ಎಲ್ಲರೂ ಮಕ್ಕಳಾಗಿದ್ದೀರಿ. ಶಿವ ತಂದೆಯು ಪ್ರಸಿದ್ಧನಾಗಿದ್ದಾರೆ, ಅವರು ಯಾವ ಮತವನ್ನು ಕೊಡುವರೋ, ಏನೆಲ್ಲವನ್ನೂ ಮಾಡುವರೊ ಅದು ಸತ್ಯವಾಗಿದೆ. ಈ ರೀತಿ ಮಾಡಿ ಎಂದು ಬ್ರಹ್ಮಾರವರಿಗೂ ಸಹ ಮತ ಕೊಡುತ್ತಾರೆ. ನಿಮ್ಮ ಸಂಬಂಧವೇ ಶಿವ ತಂದೆಯೊಂದಿಗೆ ಇದೆ ಅಂದಮೇಲೆ ಯಾರದೇ ಅವಗುಣವನ್ನು ನೋಡಬಾರದು. ಶ್ರೀಮತದಂತೆ ನಡೆಯಬೇಕಾಗಿದೆ. ಶಿವ ತಂದೆಯು ನಿರಾಕಾರನಾಗಿದ್ದಾರೆ. ಈ ಮನೆಯಂತೂ ಅವರದಲ್ಲ, ನೀವಿಲ್ಲಿ ಹಳೆಯ ಮನೆಯಲ್ಲಿರುತ್ತೀರಿ ನಂತರ ಸ್ವರ್ಗದಲ್ಲಿ ಹೋಗಿ ತಮ್ಮ ಮಹಲುಗಳಲ್ಲಿರುತ್ತೀರಿ. ಶಿವ ತಂದೆಯು ಹೇಳುತ್ತಾರೆ, ನಾನಂತೂ ಸ್ವರ್ಗದಲ್ಲಿ ಬರುವುದಿಲ್ಲ, ನಾನು ಈ ಸಮಯದಲ್ಲಿ ಸ್ವಲ್ಪ ಸಮಯಕ್ಕಾಗಿಯೇ ಬರುತ್ತೇನೆ. |
ನೀವು ಸತ್ಯ-ಸತ್ಯ ಆತ್ಮೀಯ ರಕ್ಷಣಾ ಸೈನಿಕರಾಗಿದ್ದೀರಿ. ಪರಮ ಆತ್ಮನು ಡ್ರಾಮಾ ಅನುಸಾರ ಕಲ್ಪದ ಹಿಂದಿನ ತರಹ ಆದೇಶ ನೀಡುತ್ತಿದ್ದಾರೆ. ಕಲ್ಪ-ಕಲ್ಪವೂ ಯಾವ ಆದೇಶವನ್ನು ನೀಡಿದ್ದರೋ ಅದನ್ನೇ ನೀಡುತ್ತಾರೆ. ಹಗಲು-ರಾತ್ರಿ ಗುಹ್ಯ-ಗುಹ್ಯ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಈ ಮಾತುಗಳು ಹೊಸಬರಿಗೆ ಅರ್ಥವಾಗುವುದಿಲ್ಲ. ಭಲೆ ಕೆಲವರು 35-40 ವರ್ಷಗಳಿಂದ ಜ್ಞಾನ ಮಾರ್ಗದಲ್ಲಿ ನಡೆಯುತ್ತಿದ್ದಾರೆ ಆದರೆ ಅವರಲ್ಲಿ ಅನೇಕರು ಈ ಗಂಭೀರ ಮಾತುಗಳನ್ನು ತಿಳಿದುಕೊಳ್ಳುವುದೇ ಇಲ್ಲ. ತಂದೆಯಂತೂ ನಿತ್ಯವೂ ಹೊಸ-ಹೊಸ ಮಾತುಗಳನ್ನು ತಿಳಿಸುತ್ತಾರೆ. ಕರಾಚಿಯಿಂದ ಹಿಡಿದು ಮುರುಳಿಯನ್ನು ನುಡಿಸುತ್ತಲೇ ಬಂದಿದ್ದಾರೆ. ತಂದೆಯು ಮೊದಲು ಮುರುಳಿ ನುಡಿಸುತ್ತಿರಲಿಲ್ಲ. ರಾತ್ರಿ ಎರಡು ಗಂಟೆಗೆ ಎದ್ದು 10-15 ಪುಟಗಳನ್ನು ಬರೆಯುತ್ತಿದ್ದರು. ತಂದೆಯು ಬರೆಸುತ್ತಿದ್ದರು ನಂತರ ಅದರ ಪ್ರತಿಗಳನ್ನು ಮಾಡಿಸಿ ಕಳುಹಿಸಲಾಗುತ್ತಿತ್ತು. ಭಕ್ತಿಮಾರ್ಗದಲ್ಲಂತೂ ಶಾಸ್ತ್ರ ಮುಂತಾದುವುಗಳ ಕಾಗದಗಳನ್ನು ಸಂಭಾಲನೆ ಮಾಡುತ್ತಾರೆ. ದಿನ-ಪ್ರತಿದಿನ ದೊಡ್ಡ-ದೊಡ್ಡ ಗ್ರಂಥಗಳನ್ನು ಮಾಡುತ್ತಾ ಬರುತ್ತಾರೆ. ಎಷ್ಟೊಂದು ಚರಿತ್ರೆಗಳನ್ನು ತಯಾರಿಸುತ್ತಾ ಇರುತ್ತಾರೆ. ಅದನ್ನು ಓದಿ ಮತ್ತೆ ಇಟ್ಟು ಬಿಡುತ್ತಾರೆ. ನೀವಂತೂ ಮುರುಳಿಗಳನ್ನು ಓದಿ ಎಸೆದು ಬಿಡುತ್ತೀರಿ, ಈ ಮಹಾವಾಕ್ಯಗಳನ್ನು ಸದಾಕಾಲಕ್ಕಾಗಿ ಇಟ್ಟುಕೊಳ್ಳಬೇಕು ಆದರೆ ನಿಮಗೆ ತಿಳಿದಿದೆ - ಇದೆಲ್ಲವೂ ವಿನಾಶವಾಗಿ ಬಿಡುವುದು. ನೀವು ಯಾವುದೆಲ್ಲಾ ಚಿತ್ರ ಮೊದಲಾದುವುಗಳನ್ನು ಮಾಡಿಸುತ್ತೀರೋ ಇವು ಸ್ವಲ್ಪ ಸಮಯಕ್ಕಾಗಿ ಮಾತ್ರ. ಮತ್ತೆ ಇವೆಲ್ಲವೂ ಮಣ್ಣು ಪಾಲಾಗುತ್ತವೆ ನಂತರ ಅಲ್ಲಿ ಶಾಸ್ತ್ರಗಳಾಗಲಿ, ಈ ಚಿತ್ರಗಳಾಗಲಿ ಏನೂ ಉಳಿಯುವುದಿಲ್ಲ. ಈಗ ಏನೆಲ್ಲವೂ ನಡೆಯುತ್ತಿದೆಯೋ ಅದು ಕಲ್ಪದ ನಂತರವೂ ಆಗುವುದು. ಶಾಸ್ತ್ರ ಮೊದಲಾದುವುಗಳು ಮತ್ತೆ ಪ್ರಾರಂಭವಾಗುತ್ತವೆ. ಗ್ರಂಥವೂ ಸಹ ಮೊದಲು ಕೈಯಿಂದ ಬರೆಯಲ್ಪಟ್ಟ ಚಿಕ್ಕ ಪುಸ್ತಕವಾಗಿತ್ತು, ಈಗ ದೊಡ್ಡದಾಗಿ ಮಾಡಿದ್ದಾರೆ. ದಿನ-ಪ್ರತಿದಿನ ದೊಡ್ಡದಾಗಿ ಮಾಡಿಸುತ್ತಾ ಹೋಗುತ್ತಾರೆ, ಇಲ್ಲವಾದರೆ ಶಿವ ತಂದೆಯ ಜೀವನ ಕಥೆಯು ಎಷ್ಟೊಂದು ಬರೆಯಬೇಕು! ನಾವು ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ತಿಳಿದುಕೊಂಡಿದ್ದೇವೆಂದು ನೀವು ಮಕ್ಕಳು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ನಾನು ಭಕ್ತಿಮಾರ್ಗದಲ್ಲಿ ಏನು ಮಾಡುತ್ತೇನೆ? ಭಕ್ತಿ ಮಾರ್ಗದಲ್ಲಿಯೂ ಇನ್ಶೂರೆನ್ಸ್ ಮಾಡುತ್ತೇನೆ. ಮನುಷ್ಯರು ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡುತ್ತಾರಲ್ಲವೆ. ಇವರು ಈಶ್ವರಾರ್ಥವಾಗಿ ದಾನ-ಪುಣ್ಯ ಮಾಡಿದ್ದಾರೆ ಆದ್ದರಿಂದ ಈಶ್ವರನು ದೊಡ್ಡ ಮನೆಯಲ್ಲಿ ಜನ್ಮ ಕೊಟ್ಟಿದ್ದಾರೆಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಅನೇಕ ಧರ್ಮಾತ್ಮರಿರುತ್ತಾರೆ. ಈಶ್ವರಾರ್ಥವಾಗಿ ಶ್ರೀಕೃಷ್ಣನ ಅರ್ಥವಾಗಿ ದಾನ-ಪುಣ್ಯ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಮಕ್ಕಳಿಗೆ ಇನ್ನೊಂದು ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಫಲ ಕೊಡುತ್ತಾ ಬಂದಿದ್ದೇನೆ. ಒಳ್ಳೆಯದು ಅಥವಾ ಕೆಟ್ಟ ಫಲವು ಸಿಗುತ್ತದೆಯಲ್ಲವೆ. ಎಷ್ಟೊಂದು ಇನ್ಶೂರೆನ್ಸ್ ಆಯಿತು! ಯಾರು ಎಂತಹ ಕರ್ಮ ಮಾಡುವರೋ ಅದರನುಸಾರ ಫಲವು ಸಿಗುತ್ತದೆ. ಮಾಯೆಯು ಉಲ್ಟಾ ಕರ್ಮಗಳನ್ನು ಮಾಡಿಸುತ್ತದೆ ಅದರಿಂದಲೇ ನೀವು ದುಃಖ ಪಡೆಯುತ್ತೀರಿ. ನಾನೀಗ ನಿಮಗೆ ಇಂತಹ ಕರ್ಮವನ್ನು ಕಲಿಸುತ್ತೇನೆ ಅದರಿಂದ ಎಂದೂ ದುಃಖವಾಗುವುದಿಲ್ಲ ಮತ್ತು ಅಲ್ಲಿ ಮಾಯೆಯೂ ಇರುವುದಿಲ್ಲ ಆದರೆ ಅಲ್ಲಿ ಪದವಿಗಳಿರುತ್ತವೆ. ಯಾರೆಷ್ಟು ಇನ್ಶೂರ್ ಮಾಡುವರೋ ಅದರಂತೆ ಪದವಿಯಿರುತ್ತದೆ, ಶಿವ ತಂದೆಯು ಟ್ರಸ್ಟಿಯಲ್ಲವೆ. ನಂಬರ್ವನ್ ಟ್ರಸ್ಟಿಯಾಗಿದ್ದಾರೆ. ಕೆಲವರು ಟ್ರಸ್ಟಿಗಳಂತೂ ಅನ್ಯರ ಆಹಾರವನ್ನೇ ಕೆಡಿಸಿ ಬಿಡುತ್ತಾರೆ. ತಂದೆಯು ನೋಡಿ ಎಂತಹ ಟ್ರಸ್ಟಿಯಾಗಿದ್ದಾರೆ! ಇದೆಲ್ಲವೂ ಮಕ್ಕಳಿಗಾಗಿ ಎಂದು ಹೇಳುತ್ತಾರೆ. ನಿಮ್ಮ ಸಂಬಂಧವೆಲ್ಲವೂ ಶಿವ ತಂದೆಯೊಂದಿಗೆ ಇದೆ. ತಂದೆಯು ಹೇಳುತ್ತಾರೆ - ನಾನು ಸತ್ಯವಾದ ಟ್ರಸ್ಟಿಯಾಗಿದ್ದೇನೆ, ನಾನು ಸುಖವನ್ನು ತೆಗೆದುಕೊಳ್ಳುವುದಿಲ್ಲ, ಇಡೀ ರಾಜಧಾನಿಯನ್ನು ಮಕ್ಕಳಿಗೆ ಕೊಡುತ್ತೇನೆ. ಲೌಕಿಕ ತಂದೆಯೂ ಸಹ ಎಲ್ಲವನ್ನೂ ಮಕ್ಕಳಿಗೆ ಆಸ್ತಿಯಲ್ಲಿ ಕೊಟ್ಟು ಬಿಡುತ್ತಾರೆ. ನಾನಂತೂ ಸ್ವರ್ಗದಲ್ಲಿ ಏನನ್ನೂ ತೆಗೆದುಕೊಳ್ಳುವುದಿಲ್ಲ, ನಿಮಗೇ ಎಲ್ಲವನ್ನೂ ಕೊಡುತ್ತೇನೆ ಆದ್ದರಿಂದ ನಿಮ್ಮ ಸಂಬಂಧವೆಲ್ಲವೂ ನನ್ನೊಂದಿಗಿದೆ. ಈ ಬ್ರಹ್ಮಾ ತಂದೆಯೂ ಹೇಳುತ್ತಾರೆ - ನಾನೂ ಸಹ ಪೂರ್ಣ ಇನ್ಶೂರೆನ್ಸ್ ಮಾಡಿ ಬಿಟ್ಟಿದ್ದೇನೆ, ತನು-ಮನ-ಧನ ಎಲ್ಲವೂ ತಂದೆಯ ಸೇವೆಯಲ್ಲಿದೆ. ಸಿಂಧಿಯಲ್ಲಿ ಒಂದು ಗಾದೆಯಿದೆ, ಯಾರದು ನೀಡುವ ಕೈಯಿದೆಯೋ ಅವರೇ ಮೊದಲು ತಲುಪುವರು. ತಂದೆಗೆ ಎಲ್ಲವನ್ನೂ ಇನ್ಶೂರ್ ಮಾಡಬೇಕಾಗಿದೆ, 2 ಹಿಡಿ ಅವಲಕ್ಕಿಯನ್ನು ಕೊಟ್ಟಿದ್ದರಿಂದ ಮಹಲು ಸಿಕ್ಕಿ ಬಿಟ್ಟಿತು. ಈಗ ನೋಡಿ, ಎಷ್ಟು ದೊಡ್ಡ ಮನೆಯಾಗಿದೆ! ಕೆಲವರು ಒಂದು ರೂಪಾಯಿಯನ್ನು ಕಳುಹಿಸಿದರು, ಇದರಿಂದ ನಮ್ಮ ಒಂದು ಇಟ್ಟಿಗೆಯನ್ನಾದರೂ ಹಾಕಿಸಿ ಎಂದು. ಅದಕ್ಕೆ ತಂದೆಯು ಬರೆಯುತ್ತಿದ್ದರು - ನಿಮಗೆ ಎಲ್ಲರಿಗಿಂತ ಒಳ್ಳೆಯ ಮಹಲು ಸಿಗುತ್ತದೆ ಏಕೆಂದರೆ ನೀವು ಬಡವರಾಗಿದ್ದೀರಿ, ನಾನು ಬಡವರ ಬಂಧುವಾಗಿದ್ದೇನೆ. ಬಡವರ ಒಂದು ರೂಪಾಯಿಯು ಸಾಹುಕಾರರ 10 ಸಾವಿರಕ್ಕೆ ಸರಿಸಮಾನ. ಇಬ್ಬರಿಗೂ ಒಂದೇ ಪದವಿ ಸಿಗುತ್ತದೆ. ಸಾಹುಕಾರರು ಬರುವುದು ಬಹಳ ವಿರಳ, ಎಲ್ಲರಿಗಿಂತಲೂ ಕನ್ಯೆಯರು ಬಹಳ ಸ್ವತಂತ್ರರಾಗಿದ್ದಾರೆ. ನೋಡಿ, ಮಮ್ಮಾ ನಂಬರ್ವನ್ನಲ್ಲಿ ಹೋದರು, ಅವರ ಬಳಿ ಏನೂ ಇರಲಿಲ್ಲ, ಬಡವರ ಮನೆಯ ಕನ್ಯೆಯಾಗಿದ್ದರು ಆದರೂ ಸಹ ನಂಬರ್ವನ್ ಹೊರಟುಹೋದರು. ಇವರು (ಬ್ರಹ್ಮಾ) ಎಲ್ಲವನ್ನೂ ಕೊಟ್ಟರು ಆದರೂ ಸಹ ಮೊದಲು ಲಕ್ಷ್ಮೀ, ನಂತರ ನಾರಾಯಣ. ಎಷ್ಟು ವಿಚಿತ್ರ ಆಟವಾಗಿದೆ! ಅಂದಾಗ ಎಂದೂ ಯಾವುದೇ ಮಾತಿನಲ್ಲಿ ಸಂಶಯವಿರಬಾರದು. ಬಾಪ್ದಾದಾ ಎಷ್ಟು ದೊಡ್ಡವರಾಗಿದ್ದಾರೆ ಅಂದಮೇಲೆ ಇವರಲ್ಲಿ ಸ್ವಲ್ಪವೂ ಸಂಶಯ ಬರಬಾರದು, ಬಹಳ ಮಧುರರಾಗಬೇಕು, ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮಾಯೆಯು ನಷ್ಟವನ್ನುಂಟುಮಾಡಿಸುತ್ತದೆ. ಮಕ್ಕಳಿಗೆ ಎಷ್ಟೊಂದು ಸೂಚನೆ ನೀಡಬೇಕಾಗುತ್ತದೆ. ತಂದೆಯು ಹೇಳುತ್ತಾರೆ - ಪೂರ್ಣ ಸಮಾಚಾರವನ್ನು ಬರೆಯಿರಿ, ತಂದೆಯು ಪ್ರತಿಯೊಂದು ಪ್ರಕಾರದ ಸಂಭಾಲನೆ ಮಾಡುತ್ತಾರೆ. ತಂದೆಗೆ ಬಹಳ ವಿಚಾರಗಳಿರುತ್ತವೆ ಮಕ್ಕಳ ಉನ್ನತಿಯಾಗಲಿ ಎಂದು. ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕು. ನಾವು ಪ್ರಿಯಾತಿ ಪ್ರಿಯ ತಂದೆಯ ವಿದ್ಯಾರ್ಥಿಗಳಾಗಿದ್ದೇವೆ, ಭಗವಾನುವಾಚವು ಬರೆಯಲ್ಪಟ್ಟಿದೆ ಆದರೆ ಅದರಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಕೃಷ್ಣನೂ ಸಹ ಎಲ್ಲಾ ಮನುಷ್ಯರಿಗಿಂತಲೂ ಶ್ರೇಷ್ಠನಾದನಲ್ಲವೆ. ಮೊದಲ ರಾಜಕುಮಾರನಾಗಿದ್ದೇನೆ, ಕೃಷ್ಣನ ಹೆಸರನ್ನು ಹೇಳುತ್ತಾರೆ, ನಾರಾಯಣನ ಹೆಸರು ಏಕೆ ಇಲ್ಲ? ಕೃಷ್ಣನು ಬಾಲಕನಾಗಿದ್ದಾನೆ, ಬಾಲಕರು ಸತೋಪ್ರಧಾನರಾಗಿರುತ್ತಾರೆ ನಂತರ ಬಾಲ್ಯದಿಂದ ಯವ್ವನ ನಂತರ ವೃದ್ಧಾವಸ್ಥೆಯು ಬರುತ್ತದೆ. ಮಕ್ಕಳಿಗೇ ಮಹಿಮೆ ಮಾಡುತ್ತಾರೆ ಏಕೆಂದರೆ ಪವಿತ್ರರಲ್ಲವೆ. ಬಾಲಕರು ಬ್ರಹ್ಮ ಜ್ಞಾನಿಗಳ ಸಮಾನರೆಂದು ಹೇಳುತ್ತಾರೆ. ಮಕ್ಕಳಿಂದ ಯಾವುದೇ ಪಾಪವಾಗುವುದಿಲ್ಲ. ಕೃಷ್ಣನೂ ಸಹ ಚಿಕ್ಕ ಮಗುವಾಗಿರುವ ಕಾರಣ ಅವನ ಜಯಂತಿಯನ್ನು ಆಚರಿಸುತ್ತಾರೆ ಆದರೆ ಕೃಷ್ಣನನ್ನು ಅವರು ದ್ವಾಪರದಲ್ಲಿ ತೋರಿಸಿದ್ದಾರೆ. ಯಥಾರ್ಥ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಇವೆಲ್ಲಾ ಮಾತುಗಳನ್ನು ತಿಳಿದುಕೊಂಡಿರುವವರೇ ಈ ಪ್ರಪಂಚದಲ್ಲಿ ನೀವು ಬ್ರಾಹ್ಮಣರ ವಿನಃ ಮತ್ತ್ಯಾರೂ ಇರುವುದಿಲ್ಲ. ಬ್ರಾಹ್ಮಣರು ಉತ್ತಮರಾಗಿದ್ದಾರೆ. ನೀವು ಬ್ರಾಹ್ಮಣರು ಈಶ್ವರೀಯ ಸಂತಾನರಾಗಿದ್ದೀರಿ. ಸತ್ಯಯುಗದಲ್ಲಿ ಈಶ್ವರನ ಸಂತಾನರೆಂದು ಹೇಳುವುದಿಲ್ಲ, ಈಶ್ವರನಿಂದ ಅವಶ್ಯವಾಗಿ ಸ್ವರ್ಗದ ಪ್ರಾಪ್ತಿಯಾಗುವುದು. ನಿಮ್ಮದು ಇದು ಅತಿ ದುರ್ಲಬವಾದ ಅಮೂಲ್ಯ ಜೀವನವಾಗಿದೆ. ಎಲ್ಲರಿಗೂ ಇದು ಸಿಗಲು ಸಾಧ್ಯವಿಲ್ಲ, ಈ ನಾಟಕವೇ ಹೀಗೆ ಮಾಡಲ್ಪಟ್ಟಿದೆ. ಕಲ್ಪದ ಮೊದಲು ಯಾರು ಓದಿದ್ದರೋ ಅವರು ಓದುತ್ತಿದ್ದಾರೆ. ಭಗವಂತನೇ ಅವಶ್ಯವಾಗಿ ಭಗವಾನ್-ಭಗವತಿಯನ್ನು ಸೃಷ್ಟಿಸಿದರು ಆದರೆ ವಾಸ್ತವದಲ್ಲಿ ಭಗವಾನ್-ಭಗವತಿಯೆಂದು ಹೇಳುವುದಿಲ್ಲ ಏಕೆಂದರೆ ಭಗವಂತ ಒಬ್ಬರೇ ಆಗಿದ್ದಾರೆ. ನಿರಾಕಾರನ ಮಹಿಮೆಯಿದೆ. ಸಾಕಾರಿ ಮನುಷ್ಯರಿಗೆ ಮಹಿಮೆಯಾಗುವುದಿಲ್ಲ, ಈ ಲಕ್ಷ್ಮೀ-ನಾರಾಯಣರನ್ನೂ ಸಹ ನಿರಾಕಾರಿ ತಂದೆಯೇ ಈ ರೀತಿ ಮಾಡಿದರು. ಈಗ ಪುನಃ ರಾಜಯೋಗವನ್ನು ಕಲಿಯುತ್ತಿದ್ದಾರೆ, ರಾಜಧಾನಿಯು ಸ್ಥಾಪನೆಯಾಯಿತು ಮತ್ತು ಆ ಸಮಯದಲ್ಲಿ ವಿನಾಶವು ಆಗಿತ್ತು. ತಂದೆಯು ಅವಶ್ಯವಾಗಿ ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರೆ, ಈಗಂತೂ ಸಂಗಮದ ಮಾತಾಗಿದೆ. ಶಿವ ತಂದೆಯು ಬರುತ್ತಾರೆ ಆಗ ಆಟವು ಮುಕ್ತಾಯವಾಗುತ್ತದೆ. ನಂತರ ಕೃಷ್ಣನ ಜನ್ಮವಾಗುತ್ತದೆ, ಇದರಲ್ಲಿ ಮನುಷ್ಯರು ತಬ್ಬಿಬ್ಬಾಗಿದ್ದಾರೆ ಆದ್ದರಿಂದಲೇ ತಂದೆಯು ಬಂದು ತಿಳಿಸುತ್ತಾರೆ. ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ನೀವೀಗ ಮಾ|| ಜ್ಞಾನಪೂರ್ಣರ ಹಾಗೆ ಆಗಿ ಬಿಟ್ಟಿದ್ದೀರಿ, ಆತ್ಮಕ್ಕೇ ಮಹಿಮೆಯಿದೆ. ಜ್ಞಾನ ಸಾಗರ, ಆನಂದ ಸಾಗರ, ದಯಾ ಸಾಗರ ಇದು ತಂದೆಯ ಮಹಿಮೆಯಾಗಿದೆ. ತಂದೆಯು ಹೇಳುತ್ತಾರೆ - ಈ ಭಾರತವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ ಆದರೆ ಕೃಷ್ಣನ ಹೆಸರನ್ನು ಹಾಕಿರುವ ಕಾರಣ ಎಲ್ಲಾ ಮಹಿಮೆಯನ್ನು ಮರೆ ಮಾಡಿ ಬಿಟ್ಟಿದ್ದಾರೆ. ಇಲ್ಲದಿದ್ದರೆ ಎಲ್ಲರೂ ಶಿವನ ಮಂದಿರದಲ್ಲಿ ಹೋಗಿ ಹೂಗಳನ್ನಿಡುತ್ತಾರೆ, ಎಲ್ಲರ ಸದ್ಗತಿದಾತನು ಅವರೊಬ್ಬರೇ ಆಗಿದ್ದಾರೆ. ಅರ್ಧಕಲ್ಪ ನೀವು ಪ್ರಾಲಬ್ಧವನ್ನು ಭೋಗಿಸಿ ನಂತರ ಕೆಳಗೆ ಬರುತ್ತೀರಿ. ಎಲ್ಲರೂ ತಮೋಪ್ರಧಾನರಾಗಲೇಬೇಕಾಗಿದೆ, ಈಗ ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳಿಗಾಗಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದೇನೆ, ನಾನು ಅಲ್ಲಿ ಬರುವುದಿಲ್ಲ, ಎಲ್ಲವೂ ನೀವು ಮಕ್ಕಳಿಗಾಗಿಯೇ. ಇದು ಸತ್ಯ ಮಾತಾಗಿದೆ. ಮನುಷ್ಯರಂತೂ ಎಲ್ಲವನ್ನೂ ತಮಗಾಗಿ ಮಾಡಿಕೊಳ್ಳುತ್ತಾರೆ ಮತ್ತೆ ನಾವು ನಿಷ್ಕಾಮ ಸೇವೆ ಮಾಡುತ್ತೇವೆಂದು ಹೇಳುತ್ತಾರೆ ಆದರೆ ಯಾರೂ ನಿಷ್ಕಾಮ ಸೇವೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಂದು ಕರ್ಮಕ್ಕೂ ಅವಶ್ಯವಾಗಿ ಫಲ ಸಿಗುತ್ತದೆ. ನಾನು ನೀವು ಮಕ್ಕಳಿಗೆ ಅವಿನಾಶಿ ಜ್ಞಾನರತ್ನಗಳನ್ನು ಕೊಡುತ್ತೇನೆ, ನಿಮಗಾಗಿಯೇ ವೈಕುಂಠವನ್ನು ತಂದಿದ್ದೇನೆ. ಮಕ್ಕಳಿಗೆ ಸ್ವರ್ಗದ ಉಡುಗೊರೆಯನ್ನು ಕೊಡುತ್ತೇನೆ ಅಂದಮೇಲೆ ಅದನ್ನು ತೆಗೆದುಕೊಳ್ಳಲು ಅಷ್ಟು ಯೋಗ್ಯರಾಗಬೇಕಾಗಿದೆ. ಸ್ವರ್ಗದ ಮಾಲೀಕರಾಗಬೇಕಾಗಿದೆ. ಅಂಗೈಯಲ್ಲಿ ಸ್ವರ್ಗ ಸಿಗುತ್ತದೆ, ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿ ಸಿಗುತ್ತದೆ. ದಿವ್ಯ ದೃಷ್ಟಿ ದಾತನು ಶಿವ ತಂದೆಯಾಗಿದ್ದಾರೆ, ಸೆಕೆಂಡಿನಲ್ಲಿ ವೈಕುಂಠಕ್ಕೆ ಕರೆದುಕೊಂಡು ಹೋಗುತ್ತಾರೆ. ಇದಕ್ಕಾಗಿ ತಂದೆಯ ಕೈಯಲ್ಲಿ ಯಾವುದೇ ಸ್ಥೂಲವಾದ ಬೀಗದಕೈ ಇಲ್ಲ. ತಂದೆಯು ಹೇಳುತ್ತಾರೆ - ನಾನು ನೀವು ಮಕ್ಕಳಿಗೆ ರಾಜ್ಯಭಾಗ್ಯವನ್ನು ಕೊಡುತ್ತೇನೆ, ನಾನು ರಾಜ್ಯಭಾರ ಮಾಡುವುದಿಲ್ಲ. ನಂತರ ನೀವು ಯಾವಾಗ ಭಕ್ತಿಮಾರ್ಗದಲ್ಲಿ ಬರುತ್ತೀರೋ ಆಗ ನಿಮ್ಮನ್ನು ದಿವ್ಯದೃಷ್ಟಿಯಿಂದ ಖುಷಿಪಡಿಸಬೇಕಾಗುತ್ತದೆ. ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಇಂತಹ ತಂದೆಯು ಕಲ್ಪ-ಕಲ್ಪವೂ ಕಲ್ಪದ ಸಂಗಮ ಯುಗದಲ್ಲಿ ಒಂದೇ ಬಾರಿ ಬರುತ್ತಾರೆ. ಮಾಡಿ -ಮಾಡಿಲ್ಪಟ್ಟಿರುವುದೇ ನಡೆಯುತ್ತದೆ, ಹೊಸದೇನೂ ಆಗುವುದಿಲ್ಲ.... ಏನೆಲ್ಲವೂ ಆಗುತ್ತಿದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ ಆದ್ದರಿಂದ ಸಾಕ್ಷಿಯಾಗಿ ನೋಡಿರಿ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಮಕ್ಕಳೇ, ನಾನು ನಿಮ್ಮ ಇನ್ಶೂರೆನ್ಸ್ ಮ್ಯಾಗ್ನೆಟ್ ಆಗಿದ್ದೇನೆ, ನಿಮ್ಮ ಒಂದು ಪೈಸೆಯನ್ನೂ ಕಳೆಯುವುದಿಲ್ಲ, ನಿಮ್ಮನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತೇನೆ. ಇದೆಲ್ಲವನ್ನೂ ಶಿವ ತಂದೆಯು ಬ್ರಹ್ಮಾರವರ ಮೂಲಕ ಮಾಡಿಸುತ್ತಾರೆ, ಅವರು ಮಾಡಿ-ಮಾಡಿಸುವವರಾಗಿದ್ದಾರೆ. ನಿರಕಾರ, ನಿರಹಂಕಾರಿಯಾಗಿದ್ದಾರೆ. ಪರಮಪಿತ ಪರಮಾತ್ಮನು ಹೇಗೆ ಸಾಧಾರಣ ರೀತಿಯಲ್ಲಿ ಕುಳಿತು ಓದಿಸುತ್ತಾರೆ, ನೀವು ನನ್ನ ಚರಣಗಳಿಗೆ ನಮಿಸಿ ಎಂದೂ ಹೇಳುವುದಿಲ್ಲ, ತಂದೆಯು ಮಕ್ಕಳ ವಿಧೇಯ ಸೇವಕನಾಗಿದ್ದಾರೆ. ಹೇಳುತ್ತಾರೆ - ಯಾರನ್ನು ಮಾಲೀಕರನ್ನಾಗಿ ಮಾಡಿದೆನೋ ಅವರು ಸುಖವನ್ನು ಭೋಗಿಸಿ ಈಗ ದುಃಖಿಯಾಗಿದ್ದೀರಿ. ನಿಮಗೆ ಬಹಳ ಸುಖವು ಸಿಗುತ್ತದೆ, ಮತ್ತ್ಯಾವ ಧರ್ಮದವರಿಗೂ ಇಷ್ಟು ಸುಖ ಸಿಗುವುದಿಲ್ಲ. ಭಾರತವಾಸಿಗಳಿಗೇ ಏಕೆ ಇಷ್ಟು ಸುಖ, ಅನ್ಯರು ಏನು ಮಾಡಿದ್ದಾರೆ? ಎಂದು ಹೇಳುವಂತಿಲ್ಲ. ಇಷ್ಟೊಂದು ಜನಸಂಖ್ಯೆಯಿದೆ, ಎಲ್ಲರೂ ಬರುವುದಿಲ್ಲ. ಈ ಡ್ರಾಮಾ ಮಾಡಲ್ಪಟ್ಟಿದೆ. ಭಾರತದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಭಗವಂತನು ಬಂದು ಸಹಜ ರಾಜಯೋಗವನ್ನು ಕಲಿಸಿದ್ದರು. ತಂದೆಯು ತಿಳಿಸುತ್ತಾರೆ, ಮಕ್ಕಳೇ, ನಾನು ಪುನಃ ಬಂದಿದ್ದೇನೆ. ನೀವೂ ತಿಳಿದುಕೊಂಡಿದ್ದೀರಿ, 84 ಜನ್ಮಗಳ ಪಾತ್ರವನ್ನಭಿನಯಿಸಿ ಈಗ ಪುನಃ ನಾವು ನಮ್ಮ ಮನೆಗೆ ಹೋಗುತ್ತೇವೆ. ಇದು ಬಹಳ ಹಳೆಯ ಪೊರೆಯಾಗಿ ಬಿಟ್ಟಿದೆ (ಸರ್ಪದಂತೆ) ಸನ್ಯಾಸಿಗಳು ಹೇಳುತ್ತಾರೆ - ಆತ್ಮವು ಪರಮಾತ್ಮನಲ್ಲಿ ಲೀನವಾಗಿ ಬಿಡುತ್ತದೆ ಎಂದು. ಇದೇ ಸ್ಥಿತಿಯಲ್ಲಿ ಇರುತ್ತಾ-ಇರುತ್ತಾ ಶರೀರವನ್ನು ಬಿಟ್ಟು ಬಿಡುತ್ತಾರೆ ಆದರೆ ಬ್ರಹ್ಮ್ದಲ್ಲಿ ಯಾರೂ ಲೀನವಾಗುವುದಿಲ್ಲ. ಅವರಲ್ಲಿಯೂ ಕೆಲವರು ಬಹಳ ತೀಕ್ಷ್ಣವಾಗಿರುತ್ತಾರೆ, ಶಾಂತಿಯಲ್ಲಿ ಕುಳಿತು ಶರೀರಬಿಟ್ಟು ಹೊರಟು ಹೋಗುತ್ತಾರೆ ಆಗ ಅವರ ವಾಯುಮಂಡಲದಲ್ಲಿ 2-3 ದಿನಗಳವರೆಗೆ ಶೂನ್ಯ ಶಾಂತಿಯಾಗಿ ಬಿಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ಈ ಹಳೆಯ ಶರೀರವನ್ನು ಬಿಟ್ಟು ನಾವು ತಂದೆಯ ಬಳಿ ಹೋಗುತ್ತೇವೆ, ಬ್ರಹ್ಮ್ತತ್ವವೇ ತಂದೆಯಲ್ಲ, ಇದು ಆ ಮನುಷ್ಯರ ಭ್ರಮೆಯಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಡ್ರಾಮಾದ ಪ್ರತಿಯೊಂದು ದೃಶ್ಯವನ್ನು ಸಾಕ್ಷಿಯಾಗಿದ್ದು ನೋಡಬೇಕಾಗಿದೆ ಏಕೆಂದರೆ ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ. ಎಂದೂ ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. |
2. ತಂದೆಯು ಇನ್ಶೂರೆನ್ಸ್ ಮ್ಯಾಗ್ನೆಟ್ ಆಗಿದ್ದಾರೆ ಆದ್ದರಿಂದ ತನು-ಮನ-ಧನವನ್ನು ತಂದೆಯ ಸೇವೆಯಲ್ಲಿ ಸಫಲ ಮಾಡಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾಗಿದೆ. ತಂದೆಯೊಂದಿಗೆ ಪೂರ್ಣ ಸಂಬಂಧವನ್ನಿಡಬೇಕಾಗಿದೆ, ಪೂರ್ಣ ಸಮಾಚಾರವನ್ನು ತಿಳಿಸಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ. ಈ ಗೀತೆಯಿಂದ ಸರ್ವವ್ಯಾಪಿಯ ಜ್ಞಾನವು ಹೊರಟು ಹೋಗುತ್ತದೆ. ಈಗ ಭಾರತವು ಬಹಳ ದುಃಖಿಯಾಗಿದೆ ಆದ್ದರಿಂದ ನೆನಪು ಮಾಡುತ್ತಾರೆ. ಡ್ರಾಮಾನುಸಾರ ಇವೆಲ್ಲಾ ಗೀತೆಗಳು ರಚಿಸಲ್ಪಟ್ಟಿವೆ, ಆದರೆ ಇವುಗಳ ಅರ್ಥವು ಪ್ರಪಂಚದವರಿಗೆ ಗೊತ್ತಿಲ್ಲ. ತಂದೆಯು ಪತಿತರನ್ನು ಪಾವನ ಮಾಡಲು ಅಥವಾ ದುಃಖಿಗಳನ್ನು ದುಃಖದಿಂದ ಬಿಡಿಸಿ ಸುಖ ಕೊಡಲು ಬರುತ್ತಾರೆ. ಅದೇ ತಂದೆಯು ಈಗ ಬಂದಿದ್ದಾರೆಂದು ಮಕ್ಕಳಿಗೆ ಅರ್ಥವಾಗಿದೆ, ಪರಿಚಯ ಸಿಕ್ಕಿ ಬಿಟ್ಟಿದೆ. ಸ್ವಯಂ ತಂದೆಯು ಕುಳಿತು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡಿ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ. ಸೃಷ್ಟಿಯು ಒಂದೇ ಆಗಿದೆ ಕೇವಲ ಹೊಸದು ಮತ್ತು ಹಳೆಯದಾಗುತ್ತದೆ. ಹೇಗೆ ಶರೀರವು ಬಾಲ್ಯದಲ್ಲಿ ಹೊಸದಾಗಿರುತ್ತದೆ ನಂತರ ಹಳೆಯದಾಗುತ್ತದೆ. ಹೊಸ ಶರೀರ, ಹಳೆಯ ಶರೀರ ಎರಡು ಶರೀರಗಳೆಂದು ಹೇಳುವುದಿಲ್ಲ. ಒಂದೇ ಶರೀರವೇ ಆದರೆ ಅದು ಹೊಸದರಿಂದ ಹಳೆಯದಾಗುತ್ತದೆ ಹಾಗೆಯೇ ಪ್ರಪಂಚವೂ ಒಂದೇ ಆಗಿದೆ, ಹೊಸದರಿಂದ ಈಗ ಹಳೆಯದಾಗುತ್ತದೆ. ಯಾವಾಗ ಹೊಸದಾಗಿತ್ತು? ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ, ತಂದೆಯು ಬಂದು ತಿಳಿಸುತ್ತಾರೆ - ಮಕ್ಕಳೇ, ಹೊಸ ಪ್ರಪಂಚವಿದ್ದಾಗ ಭಾರತವು ಹೊಸದಾಗಿತ್ತು, ಸತ್ಯಯುಗವೆಂದು ಕರೆಸಿಕೊಳ್ಳುತ್ತಿತ್ತು, ಅದೇ ಭಾರತವು ಈಗ ಹಳೆಯದಾಗಿದೆ. ಇದಕ್ಕೆ ಹಳೆಯ ಪ್ರಪಂಚ ಎಂದು ಹೇಳಲಾಗುತ್ತದೆ. ಹೊಸ ಪ್ರಪಂಚದಿಂದ ಹಳೆಯದಾಗಿದೆ, ಅದು ಪುನಃ ಖಂಡಿತವಾಗಿಯೂ ಹೊಸದಾಗಬೇಕಾಗಿದೆ. ಮಕ್ಕಳು ಹೊಸ ಪ್ರಪಂಚದ ಸಾಕ್ಷಾತ್ಕಾರ ಮಾಡಿದ್ದಾರೆ, ಅಂದಾಗ ಆ ಹೊಸ ಪ್ರಪಂಚದ ಮಾಲೀಕರು ಯಾರಾಗಿದ್ದರು? ಈ ಲಕ್ಷ್ಮೀ-ನಾರಾಯಣರಾಗಿದ್ದರು. ಆದಿ ಸನಾತನ ದೇವಿ-ದೇವತೆಗಳು ಆ ಪ್ರಪಂಚದ ಮಾಲೀಕರಾಗಿದ್ದರು. ಈ ತಂದೆಯು ಮಕ್ಕಳಿಗೆ ತಿಳಿಸುತ್ತಿದ್ದಾರೆ, ತಂದೆಯು ಹೇಳುತ್ತಾರೆ - ಈಗ ನಿರಂತರ ಇದನ್ನೇ ನೆನಪು ಮಾಡಿ, ತಂದೆಯು ಪರಮಧಾಮದಿಂದ ನಮಗೆ ಓದಿಸಲು ಬರುತ್ತಾರೆ, ರಾಜಯೋಗವನ್ನು ಕಲಿಸಲು ಬಂದಿದ್ದಾರೆ. ಮಹಿಮೆಯೆಲ್ಲವೂ ಅವರೊಬ್ಬರದೇ ಆಗಿದೆ, ಇವರಿಗೇನೂ ಮಹಿಮೆಯಿಲ್ಲ. ಈ ಸಮಯದಲ್ಲಿ ಎಲ್ಲರೂ ತುಚ್ಛ ಬುದ್ಧಿಯವರಾಗಿದ್ದಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ನಾನು ಬರುತ್ತೇನೆ ಆದ್ದರಿಂದಲೇ ಗೀತೆಯು ಮಾಡಲ್ಪಟ್ಟಿದೆ. ಈ ಹಾಡಿನಿಂದ ಸರ್ವವ್ಯಾಪಿಯ ಜ್ಞಾನವು ಹೊರಟು ಹೋಗುತ್ತದೆ. ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ. ತಂದೆಯು ಪದೇ-ಪದೇ ಹೇಳುತ್ತಾರೆ - ದೇಹಾಭಿಮಾನವನ್ನು ಬಿಟ್ಟು ನೀವು ಆತ್ಮಾಭಿಮಾನಿಯಾಗಿರಿ ಮತ್ತು ಕರ್ಮೇಂದ್ರಿಯಗಳ ಮೂಲಕ ಶಿಕ್ಷಣವನ್ನು ಧಾರಣೆ ಮಾಡಿಕೊಳ್ಳಿ. ಭಲೆ ಈ ತಂದೆಯನ್ನು ನಡೆಯುತ್ತಾ-ತಿರುಗಾಡುತ್ತಾ ನೋಡುತ್ತೀರಿ ಆದರೆ ನೆನಪು ಶಿವ ತಂದೆಯನ್ನು ಮಾಡಿ. ಶಿವ ತಂದೆಯೇ ಎಲ್ಲವನ್ನೂ ಮಾಡುತ್ತಾರೆ ಎಂದು ತಿಳಿದುಕೊಳ್ಳಿ, ಈ ಬ್ರಹ್ಮನಲ್ಲ. ಭಲೆ ಈ ಕಣ್ಣುಗಳಿಗೆ ಇವರ ರೂಪವು ಕಾಣಿಸುತ್ತದೆ ಆದರೆ ನಿಮ್ಮ ಬುದ್ಧಿಯು ಶಿವ ತಂದೆಯ ಕಡೆ ಹೋಗಬೇಕು. ಶಿವ ತಂದೆಯಿಲ್ಲದೇ ಹೋಗಿದ್ದರೆ ಇವರ ಆತ್ಮ, ಇವರ ಶರೀರ ಏನೂ ಕೆಲಸಕ್ಕೆ ಬರುತ್ತಿರಲಿಲ್ಲ ಆದ್ದರಿಂದ ಯಾವಾಗಲೂ ತಿಳಿದುಕೊಳ್ಳಿ, ಇವರಲ್ಲಿ ಶಿವ ತಂದೆಯಿದ್ದಾರೆ, ಇವರ ಮೂಲಕ ಓದಿಸುತ್ತಾರೆ. ನಿಮಗೆ ಶಿಕ್ಷಕರು ಈ ಬ್ರಹ್ಮಾ ತಂದೆಯಲ್ಲ, ಶಿವ ತಂದೆಯು ಪರಮ ಶಿಕ್ಷಕನಾಗಿದ್ದಾರೆ, ಅವರನ್ನೇ ನೆನಪು ಮಾಡಬೇಕಾಗಿದೆ. ಎಂದೂ ಸಹ ಶರೀರವನ್ನು ನೆನಪು ಮಾಡಬಾರದು, ಬುದ್ಧಿಯೋಗವನ್ನು ತಂದೆಯ ಜೊತೆ ಇಡಬೇಕಾಗಿದೆ. ಪುನಃ ಬಂದು ಜ್ಞಾನ-ಯೋಗವನ್ನು ಕಲಿಸಿ ಎಂದು ಮಕ್ಕಳು ತಂದೆಯನ್ನು ನೆನಪು ಮಾಡುತ್ತಾರೆ. ಪರಮಪಿತ ಪರಮಾತ್ಮನ ವಿನಃ ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಮಕ್ಕಳ ಬುದ್ಧಿಯಲ್ಲಿದೆ - ಅವರೇ ಕುಳಿತು ಗೀತಾ ಜ್ಞಾನವನ್ನು ತಿಳಿಸುತ್ತಾರೆ ನಂತರ ಈ ಜ್ಞಾನವು ಪ್ರಾಯಃಲೋಪವಾಗಿಬಿ ಡುತ್ತದೆ. ರಾಜಧಾನಿಯು ಸ್ಥಾಪನೆಯಾಗಿ ಬಿಟ್ಟರೆ ಸದ್ಗತಿಯಾಗಿ ಬಿಟ್ಟರೆ ಅನಂತರ ಅಲ್ಲಿ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ದುರ್ಗತಿಯಿಂದ ಸದ್ಗತಿಯಾಗಲು ಜ್ಞಾನವನ್ನು ಕೊಡಲಾಗುತ್ತದೆ. ಬಾಕಿ ಅವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಮನುಷ್ಯರು ಜಪ ತಪ ದಾನ, ಪುಣ್ಯ ಇತ್ಯಾದಿ ಏನೆಲ್ಲವನ್ನೂ ಮಾಡುವರೋ ಎಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಇದರಿಂದ ಯಾರೂ ನನ್ನೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ. ಆತ್ಮದ ರೆಕ್ಕೆಗಳು ತುಂಡಾಗಿವೆ, ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ. ಕಲ್ಲಿನಿಂದ ಪಾರಸವನ್ನಾಗಿ ಮಾಡಲು ಪುನಃ ನಾನು ಬರಬೇಕಾಗುತ್ತದೆ. ಎಷ್ಟೊಂದು ಜನಸಂಖ್ಯೆಯಿದೆ! ಈ ಸಂಸಾರವು ಸಾಸಿವೆಯಂತೆ ತುಂಬಿದೆ. ಈಗ ಇದೆಲ್ಲವೂ ಸಮಾಪ್ತಿಯಾಗುವುದು, ಸತ್ಯಯುಗದಲ್ಲಿ ಇಷ್ಟೊಂದು ಜನಸಂಖ್ಯೆಯಿರುವುದಿಲ್ಲ. ಹೊಸ ಪ್ರಪಂಚದಲ್ಲಿ ಬಹಳ ವೈಭವ ಮತ್ತು ಜನಸಂಖ್ಯೆ ಕಡಿಮೆಯಿರುತ್ತದೆ. ಇಲ್ಲಾದರೆ ಇಷ್ಟೊಂದು ಮನುಷ್ಯರಿದ್ದಾರೆ, ತಿನ್ನುವುದಕ್ಕೂ ಸಿಗುವುದಿಲ್ಲ. ಹಳೆಯ ಮರಳುಗಾಡು ಆಗಿ ಬಿಟ್ಟಿದೆ, ಇದೇ ಮತ್ತೆ ಹೊಸದಾಗುವುದು, ಅಲ್ಲಿ ಪ್ರತಿಯೊಂದು ಹೊಸದಾಗಿರುತ್ತದೆ. ಸ್ವರ್ಗ, ಬಹಿಶ್ತ್, ದೇವತೆಗಳ ಹೊಸ ಪ್ರಪಂಚ ಈ ಹೆಸರೇ ಎಷ್ಟು ಮಧುರವಾಗಿದೆ. ಹಳೆಯದನ್ನು ಬಿಟ್ಟು ಹೊಸದರಲ್ಲಿ ಹೋಗುವ ಮನಸ್ಸಾಗುತ್ತದೆಯಲ್ಲವೆ. ಈಗ ಹೊಸ ಪ್ರಪಂಚ ಸ್ವರ್ಗದಲ್ಲಿ ಹೋಗುವ ಮಾತಿದೆ. ಈ ಹಳೆಯ ಶರೀರಕ್ಕೆ ಯಾವುದೇ ಬೆಲೆಯಿಲ್ಲ, ಶಿವ ತಂದೆಗಂತೂ ಯಾವುದೇ ಶರೀರವಿಲ್ಲ. |
ಈ ತಂದೆಗೆ ಹಾರವನ್ನು ಹಾಕುವುದೇ ಎಂದು ಮಕ್ಕಳು ಕೇಳುತ್ತಾರೆ ಆದರೆ ಇವರಿಗೆ ಹಾರವನ್ನು ಹಾಕಿದರೆ ನಿಮ್ಮ ಬುದ್ಧಿಯೋಗವು ಇವರ ಕಡೆ ಹೊರಟು ಹೋಗುವುದು. ಆದ್ದರಿಂದ ಶಿವ ತಂದೆಯು ಹೇಳುತ್ತಾರೆ - ಹಾರದ ಅವಶ್ಯಕತೆಯಿಲ್ಲ, ನೀವೇ ಪೂಜ್ಯರಾಗುತ್ತೀರಿ, ಪೂಜಾರಿಗಳೂ ನೀವೇ ಆಗುತ್ತೀರಿ ಆಗ ತಮ್ಮದೇ ಚಿತ್ರಗಳನ್ನು ಮಾಡತೊಡಗುತ್ತೀರಿ. ನಾನಂತೂ ಪೂಜ್ಯನೂ ಆಗುವುದಿಲ್ಲ, ಹೂ ಇತ್ಯಾದಿಗಳ ಅವಶ್ಯಕತೆಯೂ ಇಲ್ಲ, ನಾನೇಕೆ ಇದನ್ನು ಧರಿಸಲಿ ಆದ್ದರಿಂದ ಎಂದೂ ಹೂ ಮಾಲೆ ಇತ್ಯಾದಿಗಳನ್ನು ನಾನು ಸ್ವೀಕರಿಸುವುದಿಲ್ಲ. ನೀವು ಪೂಜ್ಯರಾಗುತ್ತೀರಿ ಅಂದಮೇಲೆ ಎಷ್ಟು ಬೇಕೋ ಅಷ್ಟು ಹೂಗಳನ್ನು ಧರಿಸುವಿರಿ, ನಾನಂತೂ ನೀವು ಮಕ್ಕಳ ವಿಧೇಯ ತಂದೆಯೂ ಆಗಿದ್ದೇನೆ, ಶಿಕ್ಷಕನೂ ಆಗಿದ್ದೇನೆ, ಸೇವಕನೂ ಆಗಿದ್ದೇನೆ. ದೊಡ್ಡ-ದೊಡ ವ್ಯಕ್ತಿಗಳು ಸಹಿ ಮಾಡುವಾಗ ತಮ್ಮ ವಿಧೇಯ.... ಎಂದು ಬರೆಯುತ್ತಾರೆ. ಎಂದೂ ತಮ್ಮನ್ನು ಲಾರ್ಡ್ ಎಂದು ಬರೆಯುವುದಿಲ್ಲ. ಇಲ್ಲಂತೂ ಮನುಷ್ಯರು ತಮಗೆ ಶ್ರೀ ನಾರಾಯಣ, ಶ್ರೀ..... ತಮಗೆ ಶ್ರೀ ಅಕ್ಷರವನ್ನು ಹಾಕಿಕೊಳ್ಳುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈಗ ಈ ಶರೀರವನ್ನು ನೆನಪು ಮಾಡಬೇಡಿ, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿ. ಈ ಹಳೆಯ ಪ್ರಪಂಚದಲ್ಲಿ ಆತ್ಮ ಮತ್ತು ಶರೀರ ಎರಡೂ ಪತಿತವಾಗಿವೆ. 9 ಕ್ಯಾರೇಟ್ನ ಚಿನ್ನವಾಗಿದ್ದರೆ 9 ಕ್ಯಾರೇಟ್ನ ಆಭರಣಗಳೇ ತಯಾರಾಗುತ್ತವೆ. ಚಿನ್ನದಲ್ಲಿಯೇ ಲೋಹವು ಬೆರಕೆಯಾಗುತ್ತದೆ ಅಂದಾಗ ಆತ್ಮವನ್ನೆಂದೂ ನಿರ್ಲೇಪವೆಂದು ತಿಳಿದುಕೊಳ್ಳಬಾರದು. ಈ ಜ್ಞಾನವು ನಿಮಗೆ ಈಗಲೇ ಇದೆ. ನೀವು ಅರ್ಧಕಲ್ಪ 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಪಡೆಯುತ್ತೀರಿ ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಬೇಕು! ಆದರೆ ಮಕ್ಕಳು ಪದೇ-ಪದೇ ಮರೆತು ಹೋಗುತ್ತಾರೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ನಮಗೆ ಶಿಕ್ಷಣ ಕೊಡುತ್ತಿದ್ದಾರೆ. ಬ್ರಹ್ಮನ ಆತ್ಮವೂ ಸಹ ಅವರನ್ನೇ ನೆನಪು ಮಾಡುತ್ತದೆ. ಬ್ರಹ್ಮಾ-ವಿಷ್ಣು-ಶಂಕರನು ಸೂಕ್ಷ್ಮವತನವಾಸಿಗಳಾಗಿದ್ದಾರೆ. ತಂದೆಯು ಮೊದಲು ಸೂಕ್ಷ್ಮ ಸೃಷ್ಟಿಯನ್ನು ರಚಿಸುತ್ತಾರೆ. ನಿರ್ವಾಣ ಧಾಮವು ಸರ್ವ ಶ್ರೇಷ್ಠ ಧಾಮವಾಗಿದೆ. ಎಲ್ಲದಕ್ಕಿಂತ ಮೇಲಿದೆ. ಒಬ್ಬ ಭಗವಂತನನ್ನು ಎಲ್ಲಾ ಭಕ್ತರು ನೆನಪು ಮಾಡುತ್ತಾರೆ ಆದರೆ ತಮೋಪ್ರಧಾನರಾಗಿರುವ ಕಾರಣ ತಂದೆಯನ್ನು ಮರೆತು ಕಲ್ಲು, ಮುಳ್ಳು ಎಲ್ಲದರ ಪೂಜೆ ಮಾಡುತ್ತಿರುತ್ತಾರೆ. ನಮಗೆ ತಿಳಿದಿದೆ - ಏನೆಲ್ಲವೂ ನಡೆಯುತ್ತದೆಯೋ ಇದು ಡ್ರಾಮಾದಲ್ಲಿ ನಿಗಧಿಯಾಗುತ್ತಾ ಹೋಗುತ್ತದೆ. ಡ್ರಾಮಾದಲ್ಲಿ ಒಂದು ಬಾರಿ ಯಾವುದು ನಿಗಧಿಯಾಗಿ ಬಿಡುತ್ತದೆಯೋ ಉದಾಹರಣೆಗೆ: ಮಧ್ಯದಲ್ಲಿ ಯಾವುದಾದರೂ ಪಕ್ಷಿಯು ಹಾರಿ ಹೋಗುತ್ತದೆಯೆಂದರೆ ಅದೇ ಮತ್ತೆ-ಮತ್ತೆ ಪುನರಾವರ್ತನೆಯಾಗುತ್ತಿರುವುದು, ಪತಂಗವು ಹಾರುತ್ತಿರುವಾಗ ಅದು ಶೂಟಿಂಗ್ ಆಗಿ ಬಿಟ್ಟರೆ ಮತ್ತೆ-ಮತ್ತೆ ಅದೇ ಪುನರಾವರ್ತನೆಯಾಗುತ್ತಾ ಇರುವುದು. ಈ ಡ್ರಾಮಾದ ಕ್ಷಣ-ಕ್ಷಣವು ಪುನರಾವರ್ತನೆಯಾಗುತ್ತಾ ಇರುತ್ತದೆ, ಶೂಟಿಂಗ್ ನಡೆಯುತ್ತಾ ಇರುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ನೀವು ಪಾತ್ರಧಾರಿಗಳಾಗಿದ್ದೀರಿ, ಇಡೀ ನಾಟಕವನ್ನು ಸಾಕ್ಷಿಯಾಗಿ ನೋಡುತ್ತೀರಿ. ಒಂದೊಂದು ಕ್ಷಣವೂ ಡ್ರಾಮಾನುಸಾರ ಕಳೆಯುತ್ತದೆ. ಎಲೆಯೂ ಅಲುಗಾಡಿದರೂ ಸಹ ಡ್ರಾಮಾದಲ್ಲಿ ಒಂದು ಕ್ಷಣವು ಕಳೆಯಿತು, ಒಂದೊಂದು ಎಲೆಯು ಭಗವಂತನ ಆಜ್ಞೆಯಿಂದ ಅಲುಗಾಡುತ್ತದೆ ಎಂದಲ್ಲ. ಇದೆಲ್ಲವೂ ಡ್ರಾಮಾದಲ್ಲಿ ಮೊದಲೇ ನಿಗಧಿಯಾಗಿದೆ, ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗುತ್ತದೆ. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ ಮತ್ತು ಸೃಷ್ಟಿ ನಾಟಕದ ಜ್ಞಾನವನ್ನು ಕೊಡುತ್ತಾರೆ. ಎಷ್ಟು ಒಳ್ಳೊಳ್ಳೆಯ ಚಿತ್ರಗಳೂ ಮಾಡಲ್ಪಟ್ಟಿವೆ, ಸಂಗಮಯುಗದಲ್ಲಿ ಗಡಿಯಾರದ ಗಂಟೆಯ ಮುಳ್ಳನ್ನೂ ತೋರಿಸಲಾಗಿದೆ. ಕಲಿಯುಗದ ಅಂತ್ಯ ಸತ್ಯಯುಗದ ಆದಿಯ ಸಂಗಮವಾಗಿದೆ. ಈಗ ಹಳೆಯ ಪ್ರಪಂಚದಲ್ಲಿ ಅನೇಕ ಧರ್ಮಗಳಿವೆ ನಂತರ ಹೊಸ ಪ್ರಪಂಚದಲ್ಲಿ ಇವು ಇರುವುದಿಲ್ಲ. ನೀವು ಮಕ್ಕಳು ಸದಾ ನಮಗೆ ತಂದೆಯು ಓದಿಸುತ್ತಾರೆ, ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆಂದು ತಿಳಿಯಿರಿ. ಭಗವಾನುವಾಚ - ನಾನು ನಿಮ್ಮನ್ನು ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ರಾಜರೂ ಸಹ ಲಕ್ಷ್ಮೀ-ನಾರಾಯಣರನ್ನು ಪೂಜಿಸುತ್ತಾರೆ ಅಂದಮೇಲೆ ಅವರನ್ನು ಪೂಜ್ಯರನ್ನಾಗಿ ಮಾಡುವವನು ನಾನಾಗಿದ್ದೇನೆ. ಯಾರು ಪೂಜ್ಯರಾಗಿದ್ದರೋ ಅವರೇ ಈಗ ಪೂಜಾರಿಗಳಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೇ ಪೂಜ್ಯರಾಗಿದ್ದೆವು ನಂತರ ನಾವೇ ಪೂಜಾರಿಗಳಾದೆವು, ತಂದೆಯಂತೂ ಆಗುವುದಿಲ್ಲ. ತಂದೆಯು ಹೇಳುತ್ತಾರೆ - ನಾನು ಪೂಜಾರಿಯೂ ಆಗುವುದಿಲ್ಲ, ಪೂಜ್ಯನೂ ಆಗುವುದಿಲ್ಲ. ಆದ್ದರಿಂದ ನಾನು ಹಾರವನ್ನು ಧರಿಸುವುದೂ ಇಲ್ಲ, ಧರಿಸಬೇಕಾಗುವುದೂ ಇಲ್ಲ ಅಂದಮೇಲೆ ನಾನೇಕೆ ಹೂಗಳನ್ನು ಸ್ವೀಕಾರ ಮಾಡಲಿ? ವಾಸ್ತವದಲ್ಲಿ ನೀವೂ ಸಹ ಸ್ವೀಕಾರ ಮಾಡುವಂತಿಲ್ಲ, ನಿಯಮಾನುಸಾರ ಆ ದೇವತೆಗಳಿಗೇ ಹಕ್ಕಿದೆ ಏಕೆಂದರೆ ಅವರ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿದೆ. ಹೂಗಳನ್ನು ಸ್ವೀಕರಿಸಲು ಅವರೇ ಅಧಿಕಾರಿಗಳಾಗಿದ್ದಾರೆ. ಅಲ್ಲಿ ಸ್ವರ್ಗದಲ್ಲಂತೂ ಸುಗಂಧ ಭರಿತ ಹೂಗಳಿರುತ್ತವೆ, ಹೂಗಳಿರುವುದೇ ಸುಗಂಧ ಬೀರುವುದಕ್ಕಾಗಿ, ಧರಿಸುವುದಕ್ಕಾಗಿಯೂ ಇರುತ್ತದೆ. ತಂದೆಯು ಹೇಳುತ್ತಾರೆ - ಈಗ ನೀವು ಮಕ್ಕಳು ವಿಷ್ಣುವಿನ ಕೊರಳಿನ ಹಾರವಾಗುತ್ತೀರಿ. ನಂಬರ್ವಾರ್ ನೀವು ಸಿಂಹಾಸನದ ಮೇಲೆ ಕುಳಿತುಕೊಳ್ಳಬೇಕಾಗಿದೆ. ಕಲ್ಪದ ಮೊದಲು ಯಾರು ಪುರುಷಾರ್ಥ ಮಾಡಿದ್ದಾರೆಯೋ ಅವರು ಈಗಲೂ ಮಾಡುತ್ತಾರೆ ಮತ್ತು ಮಾಡತೊಡಗುತ್ತಾರೆ. ನಂಬರ್ವಾರಂತೂ ಇದ್ದೇ ಇರುತ್ತಾರೆ. ಇವರು ಬಹಳ ಒಳ್ಳೆಯ ಸೇವಾಧಾರಿಯೆಂದು ವಿವೇಕವೂ ಹೇಳುತ್ತದೆ. ಹೇಗೆ ಅಂಗಡಿಯಲ್ಲಿರುತ್ತಾರೆ, ಸೇಟ್ ಆಗುತ್ತಾರೆ, ಭಾಗೀಧಾರರಾಗುತ್ತಾರೆ. ಅವರ ಕೆಳಗಿನವರಿಗೂ ಲಿಫ್ಟ್ ಸಿಗುತ್ತದೆ. ಇಲ್ಲಿಯೂ ಹಾಗೆಯೇ ನೀವು ಮಕ್ಕಳು ಮಾತಾಪಿತರ ಮೇಲೆ ಜಯ ಗಳಿಸಬೇಕಾಗಿದೆ. ಮಾತಾಪಿತರಿಗಿಂತಲೂ ಹೇಗೆ ಮುಂದೆ ಹೋಗಬಹುದೆಂದು ನೀವು ಆಶ್ಚರ್ಯಚಕಿತರಾಗುತ್ತೀರಿ. ತಂದೆಯಂತೂ ಮಕ್ಕಳನ್ನು ಸಿಂಹಾಸನಾಧಿಕಾರಿಗಳನ್ನಾಗಿ ಮಾಡಲು ಪರಿಶ್ರಮಪಟ್ಟು ಯೋಗ್ಯರನ್ನಾಗಿ ಮಾಡುತ್ತಾರೆ. ಆದ್ದರಿಂದ ಹೇಳುತ್ತಾರೆ - ಈಗ ನನ್ನ ಹೃದಯರೂಪಿ ಸಿಂಹಾಸನವನ್ನು ಜಯಿಸಿದರೆ ಭವಿಷ್ಯದ ಸಿಂಹಾಸನಕ್ಕೆ ಅಧಿಕಾರಿಗಳಾಗುತ್ತೀರಿ. ಇಷ್ಟು ಪುರುಷಾರ್ಥ ಮಾಡಿ ಅದರಿಂದ ನರನಿಂದ ನಾರಾಯಣರಾಗಿರಿ, ಮುಖ್ಯವಾಗಿ ಒಂದೇ ಗುರಿ-ಧ್ಯೇಯವಿದೆ -ರಾಜಧಾನಿಯು ಸ್ಥಾಪನೆಯಾಗುತ್ತಿದೆ ಅಂದಮೇಲೆ ಅದರಲ್ಲಿ ಪದವಿಗಳು ಬಹಳಷ್ಟಿದೆ. ನೀವು ಮಾಯೆಯನ್ನು ಗೆಲ್ಲುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ಮಕ್ಕಳು ಮೊದಲಾದವರನ್ನು ಭಲೆ ಪ್ರೀತಿಯಿಂದ ನಡೆಸಿ ಆದರೆ ಟ್ರಸ್ಟಿಯಾಗಿ ಇರಿ. ಭಕ್ತಿಮಾರ್ಗದಲ್ಲಿಯೂ ಸಹ ಹೇಳುತ್ತಿದ್ದರಲ್ಲವೆ - ಪ್ರಭು ಇದೆಲ್ಲವೂ ತಾವು ಕೊಟ್ಟಿರುವುದೇ ಆಗಿದೆ. ತಾವು ಕೊಟ್ಟಿರುವ ವಸ್ತುವನ್ನು ತಾವು ತೆಗೆದುಕೊಂಡಿರಿ. ಒಳ್ಳೆಯದು- ಅಂದಮೇಲೆ ಅಳುವ ಮಾತೇ ಇಲ್ಲ ಆದರೆ ಇದಂತೂ ಅಳುವ ಪ್ರಪಂಚವಾಗಿದೆ. ಮನುಷ್ಯರು ಬಹಳ ಕಥೆಗಳನ್ನು ತಿಳಿಸುತ್ತಾರೆ. ಮೋಹಜೀತ ರಾಜನ ಕಥೆಯನ್ನೂ ಹೇಳುತ್ತಾರೆ. ಇದರಿಂದ ದುಃಖದ ಅನುಭವವಾಗುವುದಿಲ್ಲ. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡರು, ಅಲ್ಲಿ ಎಂದೂ ಯಾವುದೇ ಕಾಯಿಲೆ ಬರುವುದಿಲ್ಲ. 21 ಜನ್ಮಗಳಿಗಾಗಿ ನಿರೋಗಿಕಾಯವಿರುತ್ತದೆ. ಮಕ್ಕಳಿಗೆ ಎಲ್ಲವೂ ಸಾಕ್ಷಾತ್ಕಾರವಾಗುತ್ತದೆ - ಅಲ್ಲಿನ ರೀತಿ ಪದ್ಧತಿಗಳು ಹೇಗೆ ನಡೆಯುತ್ತವೆ. ಎಂತಹ ಉಡುಪುಗಳನ್ನು ಧರಿಸುತ್ತಾರೆ, ಸ್ವಯಂವರ ಇತ್ಯಾದಿ ಹೇಗಾಗುತ್ತವೆ ಎಲ್ಲವನ್ನೂ ಮಕ್ಕಳು ಸಾಕ್ಷಾತ್ಕಾರ ಮಾಡಿದ್ದೀರಿ. ಆ ಪಾತ್ರವೆಲ್ಲವೂ ಕಳೆದು ಹೋಯಿತು, ಆ ಸಮಯದಲ್ಲಿ ಇಷ್ಟೊಂದು ಜ್ಞಾನವಿರಲಿಲ್ಲ, ದಿನ-ಪ್ರತಿದಿನ ನೀವು ಮಕ್ಕಳಲ್ಲಿ ಆ ಶಕ್ತಿಯು ಬರತೊಡಗುತ್ತಿದೆ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಆಶ್ಚರ್ಯವಲ್ಲವೆ. ಪರಮಪಿತ ಪರಮಾತ್ಮನದೂ ಸಹ ಎಷ್ಟು ದೊಡ್ಡ ಪಾತ್ರವಾಗಿದೆ! ಅವರೇ ಕುಳಿತು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿಯೂ ನಾನು ಮೇಲೆ ಕುಳಿತು ಎಷ್ಟೊಂದು ಕೆಲಸ ಮಾಡುತ್ತೇನೆ. ಕಲ್ಪದಲ್ಲಿ ಒಂದೇಬಾರಿ ಕೆಳಗೆ ಬರುತ್ತೇನೆ. ಅನೇಕರು ನಿರಾಕಾರನ ಪೂಜೆಯನ್ನೂ ಮಾಡುತ್ತಾರೆ ಆದರೆ ನಿರಾಕಾರ ಪರಮಾತ್ಮನು ಹೇಗೆ ಬಂದು ಓದಿಸುತ್ತಾರೆ ಎಂಬ ಮಾತನ್ನು ಮರೆ ಮಾಡಿ ಬಿಟ್ಟಿದ್ದಾರೆ. ಗೀತೆಯಲ್ಲಿಯೂ ಕೃಷ್ಣನ ಹೆಸರನ್ನು ಹಾಕಿದ್ದಾರೆ, ಆದ್ದರಿಂದ ನಿರಾಕಾರನೊಂದಿಗಿನ ಪ್ರೀತಿಯೇ ಹೊರಟು ಹೋಗಿದೆ. ಇದನ್ನು ಪರಮಾತ್ಮನೇ ಬಂದು ಸಹಜಯೋಗವನ್ನು ಕಲಿಸಿದರು ಮತ್ತು ಪ್ರಪಂಚವನ್ನು ಪರಿವರ್ತಿಸಿದರು. ಯುಗಗಳು ಸುತ್ತುತ್ತಾ ಇರುತ್ತವೆ, ಪ್ರಪಂಚವು ಬದಲಾಗುತ್ತಾ ಇರುತ್ತದೆ. ಈ ಸೃಷ್ಟಿಚಕ್ರವನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ, ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸತ್ಯಯುಗದ ದೇವಿ-ದೇವತೆಗಳನ್ನು ತಿಳಿದುಕೊಂಡಿಲ್ಲ. ಕೇವಲ ದೇವತೆಗಳ ಸಾಕ್ಷಿಗಳು ಉಳಿದುಕೊಂಡಿವೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಸದಾ ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ಶಿವ ತಂದೆಯು ನಮಗೆ ಓದಿಸುತ್ತಾರೆ, ಈ ಬ್ರಹ್ಮಾರವರ ಮೂಲಕ ನಮಗೆ ಶಿಕ್ಷಣ ಕೊಡುತ್ತಾರೆಂದು ತಿಳಿಯಿರಿ. ಶಿವ ತಂದೆಯ ನೆನಪಿನಲ್ಲಿ ಬಹಳ ಮಜಾ ಬರುವುದು. ಇಂತಹ ಗಾಡ್ಫಾದರ್ ಯಾರು? ಅವರು ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಕೆಲವರು ಲೌಕಿಕ ತಂದೆಯರು ಮಕ್ಕಳಿಗೆ ಓದಿಸಲೂಬಹುದು, ಆಗ ಅವರು ನಮ್ಮ ತಂದೆಯು ಶಿಕ್ಷಕನೂ ಆಗಿದ್ದಾರೆಂದು ಹೇಳುತ್ತಾರೆ ಆದರೆ ಅವರೇ ಗುರುವೂ ಆಗಿರಲು ಸಾಧ್ಯವಿಲ್ಲ. ಭಲೆ ಶಿಕ್ಷಕರಾಗಿರಬಹುದು. ತಂದೆಗೆ ಎಂದೂ ಸಹ ಗುರುವೆಂದು ಹೇಳುವುದಿಲ್ಲ. ಇವರ (ಬ್ರಹ್ಮಾ) ತಂದೆಯು ಶಿಕ್ಷಕನೂ ಆಗಿದ್ದರು, ಓದಿಸುತ್ತಿದ್ದರು. ಅವರಂತೂ ಹದ್ದಿನ ತಂದೆ, ಶಿಕ್ಷಕನಾಗಿದ್ದಾರೆ, ಇವರು ಬೇಹದ್ದಿನ ಶಿಕ್ಷಕನಾಗಿದ್ದಾರೆ. ನೀವು ತಮ್ಮನ್ನು ಈಶ್ವರೀಯ ವಿದ್ಯಾರ್ಥಿಯೆಂದು ತಿಳಿದುಕೊಂಡರೂ ಸಹ ಅಹೋ ಸೌಭಾಗ್ಯ! ಪರಮಾತ್ಮನು ಓದಿಸುತ್ತಾರೆ, ಎಷ್ಟು ಸ್ಪಷ್ಟವಾಗಿದೆ. ಎಷ್ಟು ಮಧುರ ತಂದೆಯಾಗಿದ್ದಾರೆ, ಸದಾ ಮಧುರ ವಸ್ತುವನ್ನು ನೆನಪು ಮಾಡಲಾಗುತ್ತದೆ. ಹೇಗೆ ಪ್ರಿಯತಮ-ಪ್ರಿಯತಮೆಯರ ಪ್ರೀತಿಯಿರುತ್ತದೆ. ಅವರಲ್ಲಿ ವಿಕಾರಕ್ಕಾಗಿ ಪ್ರೀತಿಯಿರುವುದಿಲ್ಲ, ಕೇವಲ ಒಬ್ಬರು ಇನ್ನೊಬ್ಬರನ್ನು ನೋಡುತ್ತಾ ಇರುತ್ತಾರೆ, ನಿಮ್ಮದು ಪರಮಾತ್ಮ ತಂದೆಯ ಜೊತೆ ಆತ್ಮರ ಯೋಗವಾಗಿದೆ. ತಂದೆಯು ಎಷ್ಟು ಜ್ಞಾನ ಸಾಗರ, ಪ್ರೇಮ ಸಾಗರನಾಗಿದ್ದಾರೆ. ಈ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬಂದು ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆಂದು ಆತ್ಮವೂ ಹೇಳುತ್ತದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವವರೆಂದು ಗಾಯನವಿದೆ, ಸೆಕೆಂಡಿನಲ್ಲಿ ವೈಕುಂಠಕ್ಕೆ ಹೊರಟು ಹೋಗುತ್ತೀರಿ. ಸೆಕೆಂಡಿನಲ್ಲಿ ಮನುಷ್ಯರಿಂದ ದೇವತೆಗಳಾಗಿ ಬಿಡುತ್ತೀರಿ, ಇದು ಗುರಿ-ಧ್ಯೇಯವಾಗಿದೆ ಅದಕ್ಕಾಗಿ ವಿದ್ಯಾಭ್ಯಾಸ ಮಾಡಬೇಕು. ಗುರುನಾನಕರೂ ಹೇಳಿದ್ದಾರಲ್ಲವೆ - ಹೊಲಸಾದ ಬಟ್ಟೆಯನ್ನು ಒಗೆದರು.... ಲಕ್ಷ್ಯವು ಸಾಬೂನು ಆಗಿದೆಯಲ್ಲವೆ. ತಂದೆಯು ಹೇಳುತ್ತಾರೆ - ನಾನು ಎಷ್ಟು ಒಳ್ಳೆಯ ಅಗಸನಾಗಿದ್ದೇನೆ. ನಿಮ್ಮ ವಸ್ತ್ರಗಳು ಅರ್ಥಾತ್ ಆತ್ಮ ಮತ್ತು ಶರೀರವನ್ನು ಎಷ್ಟು ಶುದ್ಧವನ್ನಾಗಿ ಮಾಡುತ್ತೇನೆ! ಆದ್ದರಿಂದ ಈ ದಾದಾರವರನ್ನು ಎಂದೂ ನೆನಪು ಮಾಡಬಾರದು. ಇದೆಲ್ಲವೂ ಶಿವ ತಂದೆಯ ಕಾರ್ಯವಾಗಿದೆ, ಅವರನ್ನೇ ನೆನಪು ಮಾಡಿರಿ. ತಂದೆಯು ಇವರಿಗಿಂತಲೂ ಮಧುರರಾಗಿದ್ದಾರೆ. ಆತ್ಮಕ್ಕೆ ಹೇಳುತ್ತಾರೆ - ನಿಮಗೆ ಈ ಕಣ್ಣುಗಳಿಂದ ಬ್ರಹ್ಮಾರವರ ರಥವು ಕಂಡು ಬರುತ್ತದೆ, ಆದರೆ ನೀವು ಶಿವ ತಂದೆಯನ್ನು ನೆನಪು ಮಾಡಿರಿ. ಶಿವ ತಂದೆಯು ಇವರ ಮೂಲಕ ನಿಮ್ಮನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಿದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಹೃದಯರೂಪಿ ಸಿಂಹಾಸನದ ಮೇಲೆ ಜಯ ಗಳಿಸುವ ಪುರುಷಾರ್ಥ ಮಾಡಬೇಕಾಗಿದೆ. ಪರಿವಾರದಲ್ಲಿ ಟ್ರಸ್ಟಿಯಾಗಿದ್ದು ಪ್ರೀತಿಯಿಂದ ಎಲ್ಲರನ್ನೂ ನಡೆಸಬೇಕಾಗಿದೆ. ಮೋಹಜೀತರಾಗಬೇಕಾಗಿದೆ. |
2. ಯೋಗ ಬಲದಿಂದ ಆತ್ಮವನ್ನು ಸ್ವಚ್ಛ ಮಾಡಿಕೊಳ್ಳಬೇಕಾಗಿದೆ. ಈ ಕಣ್ಣುಗಳಿಂದ ಎಲ್ಲವನ್ನೂ ನೋಡುತ್ತಿದ್ದರೂ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಇಲ್ಲಿ ಹೂ ಮಾಲೆ ಸ್ವೀಕಾರ ಮಾಡದೇ ಸುಗಂಧ ಭರಿತ ಹೂವಾಗಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಅವಶ್ಯವಾಗಿ ಗೀತೆಯಲ್ಲಿ ಯಾವುದೋ ರಹಸ್ಯವಿದೆ. ಈ ರೆಕಾರ್ಡನ್ನು ಖರೀದಿಸಿ ತಂದೆಯು ಇದರ ಅರ್ಥವನ್ನು ತಿಳಿಸುತ್ತಾರೆ. ಜೀವಿಸಿದ್ದಂತೆಯೇ ಸತ್ತು ತಂದೆಯ ಮಕ್ಕಳಾಗುವುದು ಎಂದು ಇದಕ್ಕೇ ಹೇಳಲಾಗುತ್ತದೆ. ತಂದೆಯ ಮಕ್ಕಳಾದ ಮೇಲೆ ಶಿಕ್ಷಕರನ್ನು ಮಾಡಿಕೊಳ್ಳುವುದು, ಶಿಕ್ಷಕರ ನಂತರ ಅನೇಕರು ಗುರುಗಳನ್ನು ಮಾಡಿಕೊಳ್ಳುತ್ತಾರೆ. ಕ್ರಿಶ್ಚಿಯನ್ನರೂ ಸಹ ಮಗು ಜನ್ಮ ಪಡೆದಾಗ ಕ್ರಿಶ್ಚಿಯನೈಸ್ ಮಾಡುತ್ತಾರೆ. ಗುರುವಿನ ಮಡಿಲಿಗೆ ಕೊಡುತ್ತಾರೆ, ಪಾದ್ರಿಯಾಗಿರಲಿ ಅಥವಾ ಯಾರೇ ಆಗಿರಲಿ ಆದರೆ ಪಾದ್ರಿಯಂತೂ ಕ್ರೈಸ್ಟ್ ಆಗಲಿಲ್ಲ, ಅವರ ಹೆಸರಿನ ಮೇಲೆ ನಾವು ಕ್ರಿಶ್ಚಿಯನ್ನರಾಗುತ್ತೇವೆಂದು ಹೇಳುತ್ತಾರೆ. |
ಈಗ ನೀವು ಮಕ್ಕಳು ಮೊದಲು ತಂದೆಯ ಮಕ್ಕಳಾಗುತ್ತೀರಿ, ಅಶರೀರಿಯಾಗುತ್ತೀರಿ. ತಮ್ಮ ತನು-ಮನ-ಧನ ಏನೆಲ್ಲವೂ ಇದೆಯೋ ಅದನ್ನು ತಂದೆಗೆ ಅರ್ಪಣೆ ಮಾಡುತ್ತೀರಿ. ಜೀವಿಸಿದ್ದಂತೆಯೇ ಸಾಯುತ್ತೇವೆ ಅರ್ಥಾತ್ ನಾವಾತ್ಮರು ಅವರ ಮಕ್ಕಳಾಗುತ್ತೇವೆ. ಇದು ಬುದ್ಧಿಯಲ್ಲಿರಬೇಕಾಗಿದೆ. ನನ್ನದು ಏನೆಲ್ಲಾ ವಸ್ತುಗಳಿವೆಯೋ ನನ್ನ ಶರೀರ, ನನ್ನ ಹಣ, ಅಧಿಕಾರ, ಸಂಬಂಧ ಇತ್ಯಾದಿಗಳೆಲ್ಲವನ್ನೂ ಮರೆಯುತ್ತೇವೆ. ಹೇಗೆ ಸತ್ತನಂತರ ಎಲ್ಲವೂ ಮರೆತು ಹೋಗುತ್ತದೆಯಲ್ಲವೆ. ಹಾಗೆಯೇ ಇದು ಬಹಳ ದೊಡ್ಡ ಗುರಿಯಾಗಿದೆ. ನಾವು ಅಶರೀರಿ ಆತ್ಮರಾಗಿದ್ದೇವೆ, ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ನೀವು ಶರೀರವನ್ನು ಬಿಟ್ಟು ಸತ್ತು ಹೋಗುತ್ತೀರೆಂದಲ್ಲ, ಆತ್ಮವು ಇನ್ನೂ ಸಂಪೂರ್ಣವಾಗಿದೆಯೇ! ಭಲೆ ತಂದೆಯ ಮಕ್ಕಳಾಗಿದ್ದೀರಿ ಆದರೆ ತಂದೆಯೇ ಹೇಳುತ್ತಾರೆ - ನೀವಾತ್ಮರು ಇನ್ನೂ ಅಪವಿತ್ರರಾಗಿದ್ದೀರಿ. ಆತ್ಮದ ರೆಕ್ಕೆಗಳು ತುಂಡಾಗಿದೆ. ಈಗ ಆತ್ಮವು ಹಾರಲಾಗುತ್ತಿಲ್ಲ. ತಮೋಪ್ರಧಾನವಾಗಿರುವ ಕಾರಣ ಯಾರೊಬ್ಬರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಮಾಯೆಯು ಒಮ್ಮೆಲೆ ರೆಕ್ಕೆಗಳನ್ನು ಕತ್ತರಿಸಿ ಹಾಕಿದೆ. ತಂದೆಯು ತಿಳಿಸುತ್ತಾರೆ - ಆತ್ಮವು ಎಲ್ಲದಕ್ಕಿಂತ ತೀಕ್ಷ್ಣವಾಗಿ ಹಾರುತ್ತದೆ. ಅದಕ್ಕಿಂತಲೂ ತೀಕ್ಷ್ಣವಾದ ವಸ್ತು ಮತ್ತ್ಯಾವುದೂ ಇಲ್ಲ. ಆತ್ಮಕ್ಕೆ ಸರಿಸಮನಾಗಿ ಮತ್ತ್ಯಾವುದೇ ವಸ್ತು ತಲುಪುವುದಿಲ್ಲ. ಕೊನೆಯಲ್ಲಿ ಎಲ್ಲಾ ಆತ್ಮರು ಸೊಳ್ಳೆಗಳೋಪಾದಿಯಲ್ಲಿ ಹಾರುತ್ತಾರೆ. ಎಲ್ಲಿಗೆ ಹೋಗುತ್ತಾರೆ? ಬಹಳ ದೂರ ಸೂರ್ಯ-ಚಂದ್ರರಿಗಿಂತಲೂ ಮೇಲೆ. ಅಲ್ಲಿಂದ ಮತ್ತೆ ಹಿಂತಿರುಗುವುದಿಲ್ಲ. ಈ ರಾಕೆಟ್ ಇತ್ಯಾದಿಗಳು ಹೋಗಿ ಹಿಂತಿರುಗಿ ಬರುತ್ತವೆ. ಸೂರ್ಯನವರೆಗೂ ತಲುಪಲು ಸಾಧ್ಯವಿಲ್ಲ. ನೀವಂತೂ ಅದಕ್ಕಿಂತಲೂ ಬಹಳ ದೂರ ತಲುಪಬೇಕಾಗಿದೆ. ಸೂಕ್ಷ್ಮವತನಕ್ಕಿಂತಲೂ ಮೇಲೆ ಮೂಲವತನಕ್ಕೆ ಹೋಗಬೇಕಾಗಿದೆ, ಆತ್ಮಕ್ಕೆ ರೆಕ್ಕೆಗಳು ಸಿಗುತ್ತವೆ. ಲೆಕ್ಕಾಚಾರಗಳೆಲ್ಲವನ್ನೂ ಮುಗಿಸಿ ಆತ್ಮವು ಪವಿತ್ರವಾಗಿ ಬಿಡುತ್ತದೆ. ಅಂತಿಮ ಸಮಯದ ಮಹಿಮೆಯನ್ನು ಬಹಳ ಬರೆದಿದ್ದಾರೆ. ಎಲ್ಲಾ ಆತ್ಮಗಳು ಲೆಕ್ಕಾಚಾರವನ್ನು ಮುಗಿಸಿ ಹೋಗಬೇಕಾಗಿದೆ. ಈಗಂತೂ ಎಲ್ಲಾ ಆತ್ಮರು ಮೈಲಿಗೆ, ಪಾಪಾತ್ಮರಾಗಿದ್ದಾರೆ. ಭಲೆ ದೊಡ್ಡ-ದೊಡ್ಡ ಗುರು, ಸಾಧು-ಸನ್ಯಾಸಿಗಳಿದ್ದಾರೆ. ನಾವು ಗುರುಗಳಾಗಿದ್ದೇವೆ, ಅಹಂ ಬ್ರಹ್ಮಾಸ್ಮಿ.... ಅಹಂ ಬ್ರಂಹೋಮಃ ನಾವು ಬ್ರಹ್ಮ್ದಲ್ಲಿ ತಲುಪಿದ್ದೇವೆ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇಲ್ಲಿಯೇ ಕುಳಿತಿದ್ದಾರೆ ಅಂದಮೇಲೆ ಬ್ರಹ್ಮ್ತತ್ವದಲ್ಲಿ ಎಲ್ಲಿ ತಲುಪಿದ್ದಾರೆ? ನೀವೀಗ ತಿಳಿದುಕೊಂಡಿದ್ದೀರಿ - ನಾವಾತ್ಮರು ಬ್ರಹ್ಮತತ್ವದ ನಿವಾಸಿಗಳಾಗಿದ್ದೇವೆ ಆದರೆ ಅಲ್ಲಿಗೆ ಈಗ ಯಾರೂ ಹೋಗಲು ಸಾಧ್ಯವಿಲ್ಲ. ಎಲ್ಲಾ ಆತ್ಮರು ಇಲ್ಲಿಯೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಇದು ಬೇಹದ್ದಿನ ಡ್ರಾಮಾ ಆಗಿದೆ, ಎಲ್ಲಾ ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸಲು ಅಲ್ಲಿಂದ ಬರಲೇಬೇಕಾಗಿದೆ. ಎಲ್ಲಾ ಆತ್ಮರು ಸ್ಟೇಜಿನ ಮೇಲೆ ಬಂದಿದ್ದಾರೆ, ಯಾವಾಗ ವಿನಾಶದ ಸಮಯವಾಗುವುದು ಆಗ ಎಲ್ಲರೂ ಬಂದು ಬಿಡುತ್ತಾರೆ. ಅಲ್ಲಿದ್ದು ಏನು ಮಾಡುತ್ತಾರೆ! ಪಾತ್ರಧಾರಿಯು ಪಾತ್ರವನ್ನು ಅಭಿನಯಿಸದೇ ಮನೆಯಲ್ಲಿ ಕುಳಿತುಕೊಳ್ಳುವರೇ? ನಾಟಕದಲ್ಲಿ ಅವಶ್ಯವಾಗಿ ಬರಬೇಕಾಗುತ್ತದೆ ಅಲ್ಲಿಂದ ಯಾವಾಗ ಎಲ್ಲರೂ ಬಂದು ಬಿಡುವರೋ ಆಗ ಪುನಃ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ತಂದೆಯು ಹೇಳುತ್ತಾರೆ - ನಾನು ಭಲೆ ಇಲ್ಲಿದ್ದೇನೆ ಆದರೂ ಸಹ ಎಲ್ಲಾ ಆತ್ಮರೂ ಇಲ್ಲಿ ಬರುತ್ತಿರುತ್ತಾರೆ, ನಂಬರ್ವಾರ್ ವೃದ್ಧಿ ಹೊಂದುತ್ತಾ ಇರುತ್ತಾರೆ. ನೀವು ನಂಬರ್ವಾರ್ ಆಗಿಯೇ ಹೋಗುತ್ತೀರಿ. ನಿಮ್ಮದೆಲ್ಲವೂ ಸ್ಥಿತಿಯ ಮೇಲೆ ಆಧಾರಿತವಾಗಿದೆ ಆದ್ದರಿಂದ ನೀವು ಮರುಜೀವಿಗಳಾಗಬೇಕಾಗಿದೆ. ನಾವಾತ್ಮರಾಗಿದ್ದೇವೆ ಎಂಬುದನ್ನು ನಿಶ್ಚಯ ಮಾಡಿಕೊಳ್ಳುವುದು ಪರಿಶ್ರಮವಿದೆ. ಮಕ್ಕಳು ಪದೇ-ಪದೇ ದೇಹಾಭಿಮಾನದಲ್ಲಿ ಬಂದು ಮರೆತು ಹೋಗುತ್ತಾರೆ. ಯಾವಾಗ ಸಂಪೂರ್ಣ ಸಮರ್ಪಿತರಾಗುವರು, ಬಾಬಾ ಇದೆಲ್ಲವೂ ತಮ್ಮದಾಗಿದೆ, ನಾನೂ ನಿಮ್ಮವನಾಗಿದ್ದೇನೆ. ಈ ದೇಹವೂ ಸಹ ನನ್ನದಲ್ಲ, ಇದನ್ನು ಬಿಟ್ಟು ಬಿಡುತ್ತೇನೆ, ಬಾಬಾ, ನನು ನಿಮ್ಮವನಾಗಿದ್ದೇನೆ ಎಂದು ಬಲಿಹಾರಿಯಾಗುವಿರೋ ಆಗಲೇ ದೇಹೀ-ಅಭಿಮಾನಿಗಳಾಗಿರಲು ಸಾಧ್ಯ. ತಂದೆಯು ಹೇಳುತ್ತಾರೆ - ನನ್ನವರಾಗಿ ಮತ್ತೆಲ್ಲರಿಂದ ಮಮತ್ವವನ್ನು ಕಳೆಯಿರಿ, ಅಂದರೆ ಇಲ್ಲಿ ಬಂದು ಕುಳಿತು ಬಿಡುವುದಲ್ಲ, ನೀವು ತಮ್ಮ ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕು, ಮನೆಯನ್ನೂ ಸಂಭಾಲನೆ ಮಾಡಬೇಕಾಗಿದೆ. ಮಕ್ಕಳು ಮಾತಾಪಿತರ ಸಾಲವನ್ನೂ ತೀರಿಸಬೇಕಾಗಿದೆ. ಅವರ ಸೇವೆ ಮಾಡಿ ಅವರಿಗೆ ರಿಟರ್ನ್ ಕೊಡಬೇಕಾಗಿದೆ. ಮಕ್ಕಳಮೇಲೆ ತಂದೆ-ತಾಯಿಯ ಪಾಲನೆಯ ಸಾಲವೇರುತ್ತದೆ. ಈಗ ತಂದೆಯು ನಿಮ್ಮ ಪಾಲನೆ ಮಾಡುತ್ತಿದ್ದಾರೆ, ಆದಿಯಲ್ಲಿ ಯಾರೆಲ್ಲರೂ ಬಂದಿದ್ದರೋ ಎಲ್ಲರೂ ಕೂಡಲೇ ಸಮರ್ಪಣೆ ಮಾಡಿ ಬಿಟ್ಟರು. ತಮ್ಮ ಬಳಿ ಏನನ್ನೂ ಇಟ್ಟುಕೊಳ್ಳಲಿಲ್ಲ, ಸಮರ್ಪಣೆ ಮಾಡಿದರು, ಆ ಧನದಿಂದ ನೀವು ಮಕ್ಕಳು ಭಾರತವನ್ನು ಪಾವನವನ್ನಾಗಿ ಮಾಡುತ್ತಿದ್ದೀರಿ. ಭಾರತವೇ ಸಂಪೂರ್ಣ ಪವಿತ್ರವಾಗಿತ್ತು, ಭಾರತವಾಸಿಗಳಷ್ಟು ಮತ್ತ್ಯಾರೂ ಪವಿತ್ರ, ಸುಖಿಗಳಾಗಿರಲು ಸಾಧ್ಯವಿಲ್ಲ. ಭಾರತವು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಇಲ್ಲಿ ಪತಿತ-ಪಾವನ ತಂದೆಯು ಬಂದು ಇಡೀ ಸೃಷ್ಟಿಯನ್ನು ಪತಿತರನ್ನೂ ಪವಿತ್ರರನ್ನಾಗಿ ಮಾಡುತ್ತಾರೆ. ಈಗ ಈ ತತ್ವ ಇತ್ಯಾದಿಗಳೆಲ್ಲವೂ ಶತ್ರುಗಳಾಗಿವೆ, ಭೂಕಂಪವಾಗುತ್ತದೆ, ಚಂಡ ಮಾರುತಗಳು ಬರುತ್ತವೆ ಏಕೆಂದರೆ ತಮೋಪ್ರಧಾನವಾಗಿವೆ. ಪ್ರಾಕೃತಿಕ ವಿಕೋಪಗಳು ಬಂದರೆ ಬಹಳ ದುಃಖ ಕೊಡುತ್ತವೆ. ಈ ಸಮಯದಲ್ಲಿ ಎಲ್ಲವೂ ದುಃಖದ ವಸ್ತುಗಳಾಗಿವೆ. ಸತ್ಯಯುಗದಲ್ಲಿ ಎಲ್ಲವೂ ಸುಖದ ವಸ್ತುಗಳಾಗಿವೆ, ಅಲ್ಲಿ ಈ ಬಿರುಗಾಳಿ ಅಥವಾ ಬಿಸಿಗಾಳಿ ಇತ್ಯಾದಿ ಏನೂ ಇರುವುದಿಲ್ಲ. ನಿಮ್ಮಲ್ಲಿಯೂ ಕೆಲವರೇ ಈ ಮಾತುಗಳನ್ನು ತಿಳಿದುಕೊಳ್ಳುತ್ತಾರೆ. ಇಂದು ಇರುತ್ತಾರೆ, ನಾಳೆ ಹೊರಟು ಹೋಗುತ್ತಾರೆ ಅಂದಮೇಲೆ ಅವರು ಏನೂ ಅರಿತುಕೊಳ್ಳಲಿಲ್ಲ. ಭಲೆ ಇಲ್ಲಿಗೆ ಬರುತ್ತಾರೆ. ಆದರೆ ಎಲ್ಲರೂ ಸ್ಥಿರವಾಗಿ ನಿಲ್ಲುತ್ತಾರೆಯೇ? ಇಲ್ಲಿಂದ ಹೋದರೆಂದರೆ 10 ದಿನಗಳ ನಂತರ ಬಾಬಾ, ಇಂತಹವರನ್ನು ಮಾಯೆಯು ತಿಂದು ಬಿಟ್ಟಿತೆಂದು ಸಮಾಚಾರ ಬರುತ್ತದೆ. ಚಿಕ್ಕ ಹೂಗಳು ದೊಡ್ಡದಾದಾಗಲೇ ಅದರಿಂದ ಫಲ ಬಿಡುವುದು, ಅವರಲ್ಲಿ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುವ ಶಕ್ತಿಯಿರುತ್ತದೆ. ಅದಕ್ಕೆ ಫಲ ಬರುತ್ತದೆ. |
ತಂದೆಯ ಮಕ್ಕಳಾದ ಮೇಲೆ ಪ್ರಜೆಗಳನ್ನೂ ಮಾಡಿಕೊಳ್ಳಬೇಕು, ವಾರಸುಧಾರರನ್ನೂ ಮಾಡಿಕೊಳ್ಳಬೇಕಾಗಿದೆ. ಮಾರ್ಗದರ್ಶಕರಾಗಿ ತಂದೆಯ ಬಳಿ ಬಂದಿರಿ, ನಾವಂತೂ ತಲುಪಿ ಬಿಟ್ಟೆವು ಎಂದಲ್ಲ. ಗುರಿಯು ಬಹಳ ದೊಡ್ಡದಾಗಿದೆ. ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆಯೆಂದು ಹೇಳುತ್ತಾರೆ, ನೀವು ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಬಿರುಗಾಳಿಗಳಂತೂ ಬಂದೇ ಬರುತ್ತವೆ. ಕೆಲವರು ಹೇಳುತ್ತಾರೆ - ಬಾಬಾ, ನಾವು ನಿಮ್ಮವರಾಗಿದ್ದೆವು, ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡಿದ್ದೆವು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ 84 ಜನ್ಮಗಳನ್ನು ಕಳೆದೆವು, ಈಗ ಪುನಃ ಬಂದು ನಿಮ್ಮವರಾಗಿದ್ದೇವೆ. ನಾವಂತೂ ತಮ್ಮಿಂದ ಆಸ್ತಿಯನ್ನು ತೆಗೆದುಕೊಂಡೇ ತೀರುತ್ತೇವೆ. ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕಾಗಿದೆ ಮತ್ತು ಅನ್ಯರನ್ನೂ ತಮ್ಮ ಸಮಾನ ಮಾಡಿಕೊಂಡು ಫಲ ಕೊಡಬೇಕಾಗಿದೆ. ಇಲ್ಲದಿದ್ದರೆ ಮಾಲಿಯು ಹೇಗಾಗುತ್ತದೆ! ತಂದೆಯ ವಾರಸುಧಾರರನ್ನು ಹೇಗೆ ತಯಾರು ಮಾಡುತ್ತೀರಿ? ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಪ್ರಜೆಗಳೂ ಬೇಕು, ವಾರಸುಧಾರರೂ ಬೇಕು, ತಂದೆಯ ಬಳಿಯಂತು ಅನೇಕರು ಬರುತ್ತಾರೆ ಮತ್ತು ವಿಚ್ಛೇದನ ಕೊಟ್ಟು ಬಿಡುತ್ತಾರೆ. ಬುದ್ಧಿಯೋಗವು ತುಂಡಾಯಿತೆಂದರೆ ಆಟವೇ ಸಮಾಪ್ತಿ. |
ಕೆಲವು ಮಕ್ಕಳು ಬಂದು ತಂದೆಯೊಂದಿಗೆ ಕೇಳುತ್ತಾರೆ - ಬಾಬಾ, ಯಾವುದೇ ಬಿರುಗಾಳಿ ತಗುಲದಂತೆ ಸ್ಥಿತಿಯನ್ನು ಹೇಗೆ ಸರಿಯಾಗಿಟ್ಟುಕೊಳ್ಳುವುದು? ಇದರ ಮಾರ್ಗವನ್ನಂತೂ ತಿಳಿಸುತ್ತಲೇ ಇರುತ್ತೇವೆ - ತಂದೆಯನ್ನು ನೆನಪು ಮಾಡಿ. ಬಿರುಗಾಳಿಗಳಂತೂ ಬರುತ್ತವೆ, ಮಲ್ಲಯುದ್ಧದಲ್ಲಿ ಕೇವಲ ಒಬ್ಬರೇ ಹೊಡೆಯುತ್ತಿರುವುದನ್ನು ಎಲ್ಲಿಯಾದರೂ ನೋಡಿದ್ದೀರಾ? ಎರಡೂ ಕಡೆಯವರಲ್ಲಿಯೂ ಶಕ್ತಿಯಿರುತ್ತದೆ, ಒಬ್ಬರು 5 ಏಟು ಹೊಡೆದರೆ ಇನ್ನೊಬ್ಬರು 10 ಏಟುಗಳನ್ನು ಹೊಡೆಯುತ್ತಾರೆ. ಇದೂ ಸಹ ಮಲ್ಲ ಯುದ್ಧವಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಇದ್ದಾಗ ಮಾಯೆಯು ದೂರವಾಗುವುದು ಆದರೆ ಒಂದೇಸಲ ಅದು ಓಡಿ ಹೋಗುವುದಿಲ್ಲ. ಮಾಯೆಯೊಂದಿಗೆ ಕುಸ್ತಿ ಆಡಬೇಕಾಗಿದೆ, ಮಾಯೆಯು ಪೆಟ್ಟು ಕೊಡುವುದಿಲ್ಲ ಎಂದು ತಿಳಿಯಬೇಡಿ, ಭಲೆ ಯಾರೇ ಆದರೂ ಸಹ ಇದು ದೊಡ್ಡ ಮಲ್ಲ ಯುದ್ಧವಾಗಿದೆ. ಕೆಲವರು ಬಹಳ ಹೆದರುತ್ತಾರೆ, ಮಾಯೆಯು ಒಮ್ಮೆಲೆ ಉಸಿರು ಕಟ್ಟಿಸುತ್ತದೆ, ಯುದ್ಧ ಸ್ಥಳವಲ್ಲವೆ. ಬುದ್ಧಿಯೋಗವನ್ನು ಇಡುವುದರಲ್ಲಿ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ, ಪರಿಶ್ರಮವೆಲ್ಲವೂ ಯೋಗದಲ್ಲಿದೆ. ತಂದೆಯು ಜ್ಞಾನಿ ಆತ್ಮ ಮಕ್ಕಳು ನನಗೆ ಪ್ರಿಯರೆಂದು ಭಲೆ ಹೇಳುತ್ತಾರೆ ಆದರೆ ಇದರ ಅರ್ಥ ಕೇವಲ ಜ್ಞಾನವನ್ನು ಕೊಡುವವರು ಪ್ರಿಯರೆಂದಲ್ಲ. ಮೊದಲು ಯೋಗವಿರಬೇಕು, ತಂದೆಯನ್ನು ನೆನಪು ಮಾಡಬೇಕಾಗಿದೆ. ಮಾಯೆಯ ವಿಘ್ನಗಳಿಗೆ ಹೆದರಬಾರದು. ವಿಶ್ವದ ಮಾಲೀಕರಾಗುತ್ತೀರಲ್ಲವೆ! ಎಲ್ಲರೂ ಆಗುವರೇ? 16,108ರ ಮಾಲೆಯಂತೂ ಬಹಳ ದೊಡ್ಡದಾಗಿದೆ, ಅಂತ್ಯದಲ್ಲಿ ಮುಕ್ತಾಯವಾಗುತ್ತದೆ, ತ್ರೇತಾದ ಅಂತ್ಯದವರೆಗೂ ಎಷ್ಟೊಂದು ರಾಜಕುಮಾರ-ಕುಮಾರಿಯರಾಗುತ್ತಾರೆ, ಕೆಲವು ಸಾಕ್ಷಿಗಳೂ ಇವೆಯಲ್ಲವೆ. 8ರ ಮಾಲೆಯ ಗುರುತೂ ಇದೆ, 108ರ ಮಾಲೆಯೂ ಇದೆ. ಇದು ಸರಿಯಾಗಿದೆ. ತ್ರೇತಾದ ಅಂತ್ಯದಲ್ಲಿ ಇಷ್ಟು 16,108 ರಾಜಕುಮಾರ-ಕುಮಾರಿಯರಿರುತ್ತಾರೆ, ಆರಂಭದಲ್ಲಿ ಇಷ್ಟೊಂದು ಮಂದಿ ಇರುವುದಿಲ್ಲ. ಮೊದಲು ಕೆಲವರೇ ಇರುತ್ತಾರೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ಅವರು ಇಲ್ಲಿಯೇ ತಯಾರಾಗುತ್ತಾರೆ, ಬಹಳ ಒಳ್ಳೆಯ ಅವಕಾಶವಿದೆ ಆದರೆ ಬಹಳ ಪರಿಶ್ರಮವೂ ಇದೆ. ಗೀತೆಯಲ್ಲಿಯೂ ಹೇಳುತ್ತಾರೆ, ನಾನು ನಿಮ್ಮನ್ನೆಂದೂ ಬಿಡುವುದಿಲ್ಲ. ಶರೀರವನ್ನಾದರೂ ಬಿಡುತ್ತೇನೆ...... ಬಾಬಾ, ಈ ತನು-ಮನ-ಧನವೆಲ್ಲವೂ ನಿಮ್ಮದಾಗಿದೆ, ನಾವು ಅಶರೀರಿಯಾಗಿ ತಮ್ಮನ್ನು ನೆನಪು ಮಾಡುತ್ತೇವೆ. ತಮ್ಮೊಂದಿಗೇ ಬುದ್ಧಿಯೋಗವನ್ನಿಡುತ್ತೇವೆ. ಮತ್ತೆ ತಂದೆಯು ಹೇಳುತ್ತಾರೆ - ಇದೆಲ್ಲವೂ ನೀವು ಮಕ್ಕಳಿಗಾಗಿಯೇ ಎಂದು ಮತ್ತು ಮಕ್ಕಳು ಹೇಳುತ್ತಾರೆ - ಬಾಬಾ, ನಮ್ಮದೆಲ್ಲವೂ ನಿಮ್ಮದಾಗಿದೆ. ಇದೆಲ್ಲವನ್ನೂ ಭಗವಂತನು ಕೊಟ್ಟಿದ್ದಾರೆಂದು ಹೇಳುತ್ತಾರಲ್ಲವೆ. ಈಗ ತಂದೆಯು ತಿಳಿಸುತ್ತಾರೆ, ಇದೆಲ್ಲವೂ ಸಮಾಪ್ತಿಯಾಗುವುದಿದೆ. ನಿಮ್ಮ ಬಳಿ ಏನಿದೆ? ಈ ಶರೀರವೂ ಸಮಾಪ್ತಿಯಾಗಿ ಬಿಡುವುದು. ನಾನು ನಿಮ್ಮನ್ನು ಪರಿವರ್ತನೆ ಮಾಡಿ ಬಿಡುತ್ತೇನೆ. ಕೇವಲ ಅದಲು ಬದಲು ಮಾಡುತ್ತೇನೆ ಆದ್ದರಿಂದ ಮಕ್ಕಳೇ ಅಶರೀರಿಯಾಗಿ ನನ್ನನ್ನು ನೆನಪು ಮಾಡಿರಿ. ಬುದ್ಧಿಯಿಂದ ಎಲ್ಲವನ್ನೂ ಸಮರ್ಪಣೆ ಮಾಡಿ ರಾಜ ಹರಿಶ್ಚಂದ್ರನ ಕಥೆಯೂ ಇದೆಯಲ್ಲವೆ. ಅಡವಾಗಿ ಇಟ್ಟುಕೋ ಎಂದು ಹೇಳಿದರು. |
ತಂದೆಯು ತಿಳಿಸುತ್ತಾರೆ - ಇವೆಲ್ಲಾ ಶಾಸ್ತ್ರ ಮೊದಲಾದುವುಗಳ ಸಾರವನ್ನು ನಿಮಗೆ ತಿಳಿಸುತ್ತೇನೆ. ನಾನೇ ನಿಮ್ಮನ್ನು ಬ್ರಹ್ಮಾರವರ ಮುಖದ ಮೂಲಕ ರಾಜ-ರಾಣಿಯರನ್ನಾಗಿ ಮಾಡಿದ್ದೆನು, ಈಗ ಪುನಃ ಮಾಡುತ್ತೇನೆ. ಮನುಷ್ಯರು ಮನುಷ್ಯರಿಗೆ ಗೀತೆಯನ್ನು ತಿಳಿಸಿ ರಾಜಯೋಗವನ್ನು ಕಲಿಸಿ ಎಂದೂ ರಾಜ-ರಾಣಿಯರನ್ನಾಗಿ ಮಾಡಲು ಸಾಧ್ಯವಿಲ್ಲ. ಅಂದಮೇಲೆ ಗೀತೆಯನ್ನು ಕೇಳುವುದರಿಂದೇನು ಲಾಭ? ತಂದೆಯು ಹೇಳುತ್ತಾರೆ - ನಾನೇ ಕಲ್ಪ-ಕಲ್ಪವೂ ಬಂದು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ನನ್ನವರಾದಾಗಲೇ ವಾರಸುಧಾರರಾಗುತ್ತೀರಲ್ಲವೆ. ಆದ್ದರಿಂದ ಎಷ್ಟು ಯೋಗದಲ್ಲಿರುತ್ತೀರೋ ಅಷ್ಟು ಶುದ್ಧವಾಗುತ್ತಾ ಹೋಗುತ್ತೀರಿ. ಬಾಬಾ, ಇದೆಲ್ಲವೂ ತಮ್ಮದಾಗಿದೆ, ನಾವು ಕೇವಲ ನಿಮಿತ್ತರಾಗಿದ್ದೇವೆ. ನಿಮ್ಮ ಆಜ್ಞೆಯಿಲ್ಲದೆ ನಾವು ಏನನ್ನೂ ಮಾಡುವುದಿಲ್ಲ. ಶರೀರ ನಿರ್ವಹಣೆ ಹೇಗೆ ಮಾಡುವುದೆಂಬುದನ್ನೂ ಸಹ ಮತ ತೆಗೆದುಕೊಳ್ಳುತ್ತಾರೆ. ಬಹಳ ಮಟ್ಟಿಗೆ ಬಡವರೇ ಪೂರ್ಣ ಲೆಕ್ಕವನ್ನು ತಿಳಿಸುತ್ತಾರೆ, ಸಾಹುಕಾರರು ತಿಳಿಸುವುದಿಲ್ಲ. ಅವರು ಸಮರ್ಪಣೆಯಾಗಲು ಸಾಧ್ಯವಿಲ್ಲ. ಕೆಲವರೇ ವಿರಳ ಅಂತಹವರು ಬರುತ್ತಾರೆ. ಹೇಗೆ ಒಬ್ಬ ಜನಕನ ಹೆಸರಿದೆ, ಮಕ್ಕಳು ಮರಿ ಜಂಟಿ ಆಸ್ತಿಯಿದೆ ಅಂದಮೇಲೆ ಅದು ಹೇಗೆ ಬೇರ್ಪಡಿಸುವುದು? ಸಮರ್ಪಣೆಯಾಗಲು ಸಾಹುಕಾರರು ತಮ್ಮ ಆಸ್ತಿಯನ್ನು ಬೇರ್ಪಡಿಸುವುದಾದರೂ ಹೇಗೆ? ತಂದೆಯು ಬಡವರ ಬಂಧುವಾಗಿದ್ದಾರೆ, ಎಲ್ಲರಿಗಿಂತ ಬಡವರು ಮಾತೆಯರಾಗಿದ್ದಾರೆ, ಅವರಿಗಿಂತಲೂ ಹೆಚ್ಚು ಬಡವರು ಕನ್ಯೆಯರಾಗಿದ್ದಾರೆ. ಕನ್ಯೆಗೆ ಎಂದೂ ಆಸ್ತಿಯ ನಶೆಯಿರುವುದಿಲ್ಲ. ಗಂಡು ಮಕ್ಕಳಿಗಾದರೆ ತಂದೆಯ ಆಸ್ತಿಯ ನಶೆಯಿರುತ್ತದೆ. ಅಂದಾಗ ಅದೆಲ್ಲವನ್ನೂ ಬಿಟ್ಟು ಮತ್ತೆ ವೈಕುಂಠದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾವಾಗಲೂ ಬಡವರಿಗೇ ದಾನ ಮಾಡಲಾಗುತ್ತದೆ. ಭಾರತವು ಎಲ್ಲದಕ್ಕಿಂತ ಬಡದೇಶವಾಗಿದೆ, ಅಮೇರಿಕಾ ಬಹಳ ಸಾಹುಕಾರನಾಗಿದೆ ಅದಕ್ಕೇ ಆಸ್ತಿಯನ್ನು ಕೊಡುತ್ತಾರೆಯೇ? ಭಾರತವು ಎಲ್ಲದಕ್ಕಿಂತ ಸಾಹುಕಾರನಾಗಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ, ಕೇವಲ ಭಾರತವಾಸಿಗಳೇ ಇದ್ದರು, ಒಂದು ಭಾಷೆ ಇತ್ತು. ದೇವರೊಬ್ಬನೇ ಆಗಿದ್ದಾನೆ, ನಾನು ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆಯನ್ನು ಸ್ಥಾಪನೆ ಮಾಡುತ್ತೇನೆ. ಒಂದು ಈಶ್ವರೀಯ ಸರ್ಕಾರವನ್ನು ಸ್ಥಾಪನೆ ಮಾಡುತ್ತೇನೆ. ಆ ಒಂದರಿಂದ ಎರಡು, ಮೂರು ಹೀಗೆ ಅನೇಕ ಆಗಿ ಬಿಡುತ್ತವೆ. ಈಗ ಎಷ್ಟೊಂದು ಧರ್ಮಗಳಿವೆ ಅಂದಮೇಲೆ ಪುನಃ ಅವಶ್ಯವಾಗಿ ಒಂದು ಧರ್ಮ ಬರಬೇಕಾಗಿದೆ. 5000 ವರ್ಷಗಳ ಮಾತಾಗಿದೆ. ಒಂದು ಧರ್ಮವಿತ್ತು, ವಿದ್ವಾಂಸರು ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ಸತ್ಯಯುಗವೆಂದರೇನು? ಎಂಬುದನ್ನು ತಿಳಿದುಕೊಂಡಿಲ್ಲ. ಸ್ವರ್ಗವಾಸಿಯಾದರೆಂದರೆ ಭಹುಷಃ ಮೇಲೆ ಹೊರಟು ಹೋದರೆಂದು ತಿಳಿಯುತ್ತಾರೆ. ದಿಲ್ವಾಡಾ ಮಂದಿರದಲ್ಲಿಯೂ ಸ್ವರ್ಗವನ್ನು ಮೇಲ್ಭಾಗದಲ್ಲಿ ತೋರಿಸಿದ್ದಾರೆ ಆದ್ದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ವಾಸ್ತವದಲ್ಲಿ ಸ್ವರ್ಗವೇನೂ ಮೇಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯ ಬಳಿ ಹೋಗಿ ಮತ್ತೆ ಇಲ್ಲಿಯೇ ಬಂದು ರಾಜ್ಯಮಾಡುತ್ತೇವೆ. ಯಾರಿಗೆ ಬೇಕಾದರೂ ತಿಳಿಸಿಕೊಡುವುದಕ್ಕಾಗಿ ಈ ಜ್ಞಾನವು ಬುದ್ಧಿಯಲ್ಲಿರಬೇಕು. ಕಚ್ಚಾ ಆಗಿರುವವರನ್ನು ಮಾಯಾ ಹದ್ದು ತಿಂದು ಬಿಡುತ್ತದೆ ಆದ್ದರಿಂದ ಅವರ ಭಾವಚಿತ್ರಗಳನ್ನೂ ತರಿಸಲಾಗುತ್ತದೆ ಮತ್ತು ರಿಜಿಸ್ಟರ್ ಇಡಲಾಗುತ್ತದೆ. |
ಇಂತಹವರು ಒಂದೇ ಜ್ಞಾನದ ಬಾಣವನ್ನು ಹೊಡೆದರು - ನಾನು ತಂದೆಯ ಮಗುವಾಗಿ ಬಿಟ್ಟೆನು ಎಂದು ತಂದೆಯ ಬಳಿ ಸಮಾಚಾರಗಳು ಬರುತ್ತವೆ. ಕುಮಾರಿಯರ ಮೂಲಕ ಬಾಣ ಹೊಡೆಸಿದರೆಂದು ಶಾಸ್ತ್ರಗಳಲ್ಲಿಯೂ ಬರೆಯಲ್ಪಟ್ಟಿದೆ. ಅರೆ! ತಂದೆಯನ್ನು ಏಕೆ ಮರೆತಿದ್ದೀರಿ? ಇದಕ್ಕೆ ಜ್ಞಾನ ಬಾಣವೆಂದು ಹೇಳಲಾಗುತ್ತದೆ, ಕೇವಲ ತಂದೆಯ ನೆನಪು ತರಿಸಬೇಕಾಗಿದೆ. ಬಾಕಿ ಯಾವುದೇ ಹಿಂಸಾ ಬಾಣದ ಮಾತಿಲ್ಲ. ತಂದೆಯು ಹೇಳುತ್ತಾರೆ - ನಾನು ಬ್ರಹ್ಮ ಮುಖದಿಂದ ಎಲ್ಲಾ ಶಾಸ್ತ್ರಗಳ ರಹಸ್ಯವನ್ನು ನಿಮಗೆ ತಿಳಿಸುತ್ತೇನೆ. ಬ್ರಹ್ಮಾರವರೂ ಸಹ ಅವಶ್ಯವಾಗಿ ಇಲ್ಲಿಯೇ ಇರಬೇಕಲ್ಲವೆ. ಮನುಷ್ಯರು ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮನನ್ನು ತೋರಿಸಿದ್ದಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ, ಮನುಷ್ಯರಿಗೆ ಏನು ಬಂದಿತೋ ಅದನ್ನು ಬರೆದು ಬಿಟ್ಟರು. ರಿದ್ಧಿ ಸಿದ್ಧಿಯವರು ಅನೇಕರಿದ್ದಾರೆ, ಯಾವಾಗ ಸತ್ಯವು ಬರುವುದೋ ಆಗ ಅಸತ್ಯದವರು ಅದನ್ನು ಎದುರಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಯು ನಿರಾಕಾರನಾಗಿದ್ದಾರೆ. ಈ ಬ್ರಹ್ಮಾರವರು ಸಾಕಾರಿಯಾಗಿದ್ದಾರೆ. ಬಾಕಿ ನಾಭಿ ಇತ್ಯಾದಿಗಳ ಯಾವುದೇ ಮಾತಿಲ್ಲ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈಗ ಜ್ಞಾನಿ ಆತ್ಮರಾಗಬೇಕಾಗಿದೆ, ಕೇವಲ ಜ್ಞಾನವನ್ನು ಕೇಳುವವರು-ಹೇಳುವವರಲ್ಲ. ನೆನಪಿನ ಪರಿಶ್ರಮ ಪಡಬೇಕಾಗಿದೆ, ಅಶರೀರಿಯಾಗಿ ಅಶರೀರಿ ತಂದೆಯನ್ನು ನೆನಪು ಮಾಡಬೇಕಾಗಿದೆ. |
2. ತಂದೆಯ ಮಕ್ಕಳಾಗಿ ಅನ್ಯ ಎಲ್ಲಾ ಮಾತುಗಳಿಂದ ಮಮತ್ವವನ್ನು ಕಳೆಯಬೇಕಾಗಿದೆ. ಈ ದೇಹವೂ ನನ್ನದಲ್ಲ, ಪೂರ್ಣ ದೇಹೀ-ಅಭಿಮಾನಿಯಾಗಿ ಸಂಪೂರ್ಣ ಸಮರ್ಪಣೆಯಾಗಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಈ ರೀತಿ ಭಕ್ತರು ಭಗವಂತನನ್ನು ಕರೆಯುತ್ತಾರೆ ಆದರೆ ಭಗವಂತನನ್ನು ಪೂರ್ಣ ರೀತಿಯಲ್ಲಿ ಅರಿತುಕೊಳ್ಳದ ಕಾರಣ ಮನುಷ್ಯರು ಎಷ್ಟೊಂದು ದುಃಖಿಯಾಗಿದ್ದಾರೆ. ಭಕ್ತಿ ಮಾರ್ಗದಲ್ಲಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿರುತ್ತಾರೆ. ಕೇವಲ ಈ ಜೀವನದ ಮಾತಿಲ್ಲ. ಯಾವಾಗಿನಿಂದ ಭಕ್ತಿಯು ಆರಂಭವಾಗಿದೆಯೋ ಆಗಿನಿಂದಲೂ ಅಲೆದಾಡುತ್ತಲೇ ಇದ್ದಾರೆ. ಭಾರತದಲ್ಲಿಯೇ ದೇವಿ-ದೇವತೆಗಳ ರಾಜ್ಯವಿತ್ತು ಯಾವುದಕ್ಕೆ ಸ್ವರ್ಗ, ಸತ್ಯ ಖಂಡವೆಂದು ಹೇಳಲಾಗುತ್ತಿತ್ತು. ಈಗ ಭಾರತವು ಅಸತ್ಯ ಖಂಡವಾಗಿದೆ. ಭಾರತದ ಮಹಿಮೆಯು ಬಹಳ ಭಾರಿಯಾಗಿದೆ ಏಕೆಂದರೆ ಭಾರತವು ಪರಮಪಿತ ಪರಮಾತ್ಮನ ಜನ್ಮ ಸ್ಥಳವಾಗಿದೆ. ಅವರ ಮೂಲ ಹೆಸರಾಗಿದೆ, ಶಿವ. ಶಿವ ಜಯಂತಿಯನ್ನು ಆಚರಿಸುತ್ತಾರೆ, ರುದ್ರ ಅಥವಾ ಸೋಮನಾಥ ಜಯಂತಿಯೆಂದು ಹೇಳಲಾಗುವುದಿಲ್ಲ. ಶಿವ ಜಯಂತಿ ಅಥವಾ ಶಿವರಾತ್ರಿ ಎಂದು ಹೇಳಲಾಗುತ್ತದೆ. ಸ್ವರ್ಗದ ಸ್ಥಾಪನೆ ಮಾಡುವವರು ಒಬ್ಬರೇ ಸ್ವರ್ಗದ ರಚಯಿತನಾಗಿದ್ದಾರೆ. ಎಲ್ಲಾ ಭಕ್ತರ ಭಗವಂತನಂತೂ ಅವಶ್ಯವಾಗಿ ಒಬ್ಬರೇ ಆಗಿರಬೇಕು. ಎಲ್ಲರೂ ನಯನಹೀನರಾಗಿದ್ದಾರೆ. ಅರ್ಥಾತ್ ಜ್ಞಾನದ ಚಕ್ಷು ಅಥವಾ ಡಿವೈನ್ ಇನ್ಸೈಟ್ ಇಲ್ಲ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಶ್ರೀ ಮದ್ಭಗವದ್ಗೀತೆಯು ಮುಖ್ಯವಾಗಿದೆ, ಶ್ರೀ ಅರ್ಥಾತ್ ಶ್ರೇಷ್ಠ ಮತ. ಈಗ ನಿಮ್ಮನ್ನು ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ದಿವ್ಯ ಚಕ್ಷು ಅರ್ಥಾತ್ ಜ್ಞಾನದ ಮೂರನೇ ನೇತ್ರವನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಜ್ಞಾನದ ಮೂರನೇ ನೇತ್ರವು ನೀವು ಬ್ರಾಹ್ಮಣರಿಗೆ ಸಿಗುತ್ತದೆ, ಯಾವುದರಿಂದ ನೀವು ತಂದೆಯನ್ನು ಹಾಗೂ ತಂದೆಯ ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುತ್ತೀರಿ. ಈ ಸಮಯದಲ್ಲಿ ಎಲ್ಲರಲ್ಲಿಯೂ ದೇಹದ ಅಹಂಕಾರ ಅಥವಾ ಪಂಚ ವಿಕಾರಗಳಿವೆ. ಆದ್ದರಿಂದ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳ ಬಳಿ ಪ್ರಕಾಶವಿದೆ, ನೀವಾತ್ಮರು ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ಅರಿತುಕೊಂಡಿದ್ದೀರಿ, ಮೊದಲು ನೀವೆಲ್ಲರೂ ಅಜ್ಞಾನದಲ್ಲಿದ್ದಿರಿ, ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು, ಅಜ್ಞಾನ ಅಂಧಕಾರವು ವಿನಾಶವಾಯಿತು. ಯಾರು ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಗಳಾಗಿ ಬಿಟ್ಟಿದ್ದಾರೆ. ಪೂಜ್ಯರು ಪ್ರಕಾಶತೆಯಲ್ಲಿರುತ್ತಾರೆ, ಪೂಜಾರಿಗಳು ಅಂಧಕಾರದಲ್ಲಿ ಇದ್ದಾರೆ. ಪರಮಾತ್ಮನಿಗೆ ನೀವೇ ಪೂಜ್ಯ, ನೀವೇ ಪೂಜಾರಿ ಎಂದು ಹೇಳುವಂತಿಲ್ಲ, ಅವರು ಪರಮ ಪೂಜ್ಯನಾಗಿದ್ದಾರೆ. ಎಲ್ಲರನ್ನೂ ಪೂಜ್ಯರನ್ನಾಗಿ ಮಾಡುವವರಾಗಿದ್ದಾರೆ. ಅವರಿಗೆ ಪರಮ ಪೂಜ್ಯರೆಂದು ಹೇಳಲಾಗುತ್ತದೆ. ಪರಮಪಿತ ಪರಮಾತ್ಮ ಎಂದರೆ ಪರಮಾತ್ಮ. ಕೃಷ್ಣನಿಗೆ ಈ ರೀತಿ ಹೇಳುವರೇ! ಕೃಷ್ಣನನ್ನು ಎಲ್ಲರೂ ಪರಮಪಿತನೆಂದು ಹೇಳುವುದಿಲ್ಲ. ನಿರಾಕಾರ ತಂದೆಗೇ ಎಲ್ಲರೂ ಪರಮಪಿತನೆಂದು ಹೇಳುತ್ತಾರೆ. ಅವರೂ ಆತ್ಮನೇ ಆಗಿದ್ದಾರೆ ಆದರೆ ಪರಮ ಅರ್ಥ ಶ್ರೇಷ್ಠರಾಗಿದ್ದಾರೆ ಆದ್ದರಿಂದ ಅವರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಪರಮ ಆತ್ಮ, ಸದಾ ಪರಮಧಾಮದಲ್ಲಿ ಇರುವವರಾಗಿದ್ದಾರೆ. ಆಂಗ್ಲ ಭಾಷೆಯಲ್ಲಿ ಅವರಿಗೆ ಸುಪ್ರೀಂ ಸೌಲ್ ಎಂದು ಹೇಳಲಾಗುತ್ತದೆ. ತಂದೆಯು ಹೇಳುತ್ತಾರೆ - ಆತ್ಮಗಳು ಪರಮಾತ್ಮನಿಂದ ಬಹಳ ಕಾಲ ಅಗಲಿ ಹೋಗಿದ್ದರು ಎಂದು ಹಾಡುತ್ತೀರಿ. ಪರಮಾತ್ಮನು ಪರಮಾತ್ಮನಿಂದ ಬಹುಕಾಲ ಅಗಲಿದ್ದರು ಎಂದು ಹೇಳುವುದಿಲ್ಲ. ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮನೆಂದು ಹೇಳುವುದು ಮೊಟ್ಟ ಮೊದಲನೇ ಅಜ್ಞಾನವಾಗಿದೆ. ಆತ್ಮವಂತೂ ಜನನ-ಮರಣದಲ್ಲಿ ಬರುತ್ತದೆ, ಪರಮಾತ್ಮನು ಪುನರ್ಜನ್ಮದಲ್ಲಿ ಬರುತ್ತಾರೆಯೇ? ತಂದೆಯು ತಿಳಿಸುತ್ತಾರೆ - ನೀವು ಭಾರತವಾಸಿಗಳು ಸ್ವರ್ಗವಾಸಿ, ಪೂಜ್ಯರಾಗಿದ್ದಿರಿ. ಎಲ್ಲಾ ದೇವಿ-ದೇವತೆಗಳು ಮಾನವ ಸೃಷ್ಟಿಗೆ ಪೂಜ್ಯರಾಗಿದ್ದರು, ಇದೆಲ್ಲವೂ ಈಶ್ವರೀಯ ಪರಿವಾರವಾಗಿದೆ, ಈಶ್ವರನು ರಚಯಿತನಾಗಿದ್ದಾರೆ. ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹಾಡುತ್ತಾರೆ ಅಂದಮೇಲೆ ಇದು ಪರಿವಾರವಾಯಿತಲ್ಲವೆ. ಅಂದಾಗ ತಿಳಿಸಿ, ನೀವು ಮಾತಾಪಿತಾ ಎಂದು ಯಾರಿಗೆ ಹೇಳುತ್ತೀರಿ? ಇದನ್ನು ಯಾರು ಹೇಳುತ್ತಾರೆ? ನೀವು ಮಾತಾಪಿತಾ, ನಿಮ್ಮ ಕೃಪೆಯಿಂದ ನಮಗೆ ಸ್ವರ್ಗದಲ್ಲಿ ಅಪಾರ ಸುಖ ಸಿಕ್ಕಿತ್ತು ಎಂದು ಆತ್ಮವೇ ಹೇಳುತ್ತದೆ. ನೀವು ಮಾತಾಪಿತರು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತೀರಿ, ಆದ್ದರಿಂದ ನಾವು ನಿಮ್ಮ ಮಕ್ಕಳಾಗುತ್ತೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಸಂಗಮದಲ್ಲಿಯೇ ಬಂದು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ಮನುಷ್ಯರ ಬುದ್ಧಿಯು ಸಂಪೂರ್ಣ ಭ್ರಷ್ಟವಾಗಿ ಬಿಟ್ಟಿದೆ, ಸ್ವರ್ಗವನ್ನೇ ನರಕವೆಂದು ತಿಳಿದುಕೊಳ್ಳುತ್ತಾರೆ, ಅಲ್ಲಿಯೂ ಸಹ ಕಂಸ, ಜರಾಸಂಧ, ಹಿರಣ್ಯ ಕಷ್ಯಪ ಮೊದಲಾದವರಿದ್ದರೆಂದು ಹೇಳುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ - ಮಕ್ಕಳೇ ನೀವು ಮರೆತು ಹೋಗಿದ್ದೀರಾ? ಭಾರತದಲ್ಲಿಯೇ ನೀವು ನನ್ನ ಶಿವ ಜಯಂತಿಯನ್ನು ಆಚರಿಸುತ್ತೀರಿ, ಶಿವರಾತ್ರಿಯೆಂದೂ ಗಾಯನವಿದೆ ಅಂದಾಗ ಯಾವ ರಾತ್ರಿ? ಇದು ಬ್ರಹ್ಮನ ಬೇಹದ್ದಿನ ರಾತ್ರಿಯಾಗಿದೆ. ತಂದೆಯು ಸಂಗಮದಲ್ಲಿ ಬಂದು ರಾತ್ರಿಯಿಂದ ದಿನ ಅರ್ಥಾತ್ ನರಕದಿಂದ ಸ್ವರ್ಗವನ್ನಾಗಿ ಮಾಡುತ್ತಾರೆ. ಶಿವರಾತ್ರಿಯ ಅರ್ಥವು ಯಾರಿಗೂ ತಿಳಿದಿಲ್ಲ, ಭಗವಂತನು ನಿರಾಕಾರನಾಗಿದ್ದಾರೆ. ಮನುಷ್ಯರಿಗಾದರೆ ಪ್ರತೀ ಜನ್ಮದಲ್ಲಿ ಶರೀರದ ಹೆಸರು ಬದಲಾಗುತ್ತದೆ. ಪರಮಾತ್ಮನು ಹೇಳುತ್ತಾರೆ- ನನಗೆ ಯಾವುದೇ ಶರೀರದ ಹೆಸರಿಲ್ಲ, ನನ್ನ ಹೆಸರು ಶಿವನೆಂದೇ ಆಗಿದೆ, ನಾನು ಕೇವಲ ವೃದ್ಧ, ವಾನಪ್ರಸ್ಥ ತನುವಿನ ಆಧಾರ ತೆಗೆದುಕೊಳ್ಳುತ್ತೇನೆ, ಇವರು ಪೂಜ್ಯರಾಗಿದ್ದರು, ಈಗ ಪೂಜಾರಿಯಾಗಿದ್ದಾರೆ. ಶಿವ ತಂದೆಯು ಬಂದು ಸ್ವರ್ಗವನ್ನು ರಚಿಸುತ್ತಾರೆ, ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಅವಶ್ಯವಾಗಿ ನಾವು ಸ್ವರ್ಗದ ಮಾಲೀಕರಾಗಬೇಕಲ್ಲವೆ. ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನದು ತಮ್ಮತಮ್ಮದೇ ಪಾತ್ರವಿದೆ. ಪ್ರತಿಯೊಂದು ಆತ್ಮನಲ್ಲಿ ತನ್ನ ಸುಖ-ದುಃಖದ ಪಾತ್ರವು ನಿಗಧಿಯಾಗಿದೆ. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಗೆ ನೀವು ವಾರಸುಧಾರರಾಗಿದ್ದೀರಿ, ಶಿವ ತಂದೆಯು ಸ್ವರ್ಗವಾಸಿಗಳನ್ನಾಗಿ ಮಾಡಿದ್ದರು. ಆದ್ದರಿಂದಲೇ ಅವರನ್ನು ಎಲ್ಲರೂ ನೆನಪು ಮಾಡುತ್ತಾರೆ - ಓ ಭಗವಂತನೇ ದಯೆ ತೋರಿಸಿ ಎಂದು. ಸಾಧುಗಳೂ ಸಹ ಸಾಧನೆ ಮಾಡುತ್ತಾರೆ ಏಕೆಂದರೆ ಇಲ್ಲಿ ದುಃಖವಿರುವುದರಿಂದ ನಿರ್ವಾಣಧಾಮಕ್ಕೆ ಹೋಗಲು ಬಯಸುತ್ತಾರೆ. ಆತ್ಮವು ಪರಮಾತ್ಮನಲ್ಲಿ ಲೀನವಾಗುತ್ತದೆ ಅಥವಾ ನಾವಾತ್ಮರೇ ಪರಮಾತ್ಮನೆಂದು ತಿಳಿದುಕೊಳ್ಳುವುದು ತಪ್ಪಾಗಿದೆ. ಈಗ ನೀವು ಹೇಳುತ್ತೀರಿ, ನಾವಾತ್ಮರು ಪರಮಧಾಮ ನಿವಾಸಿಗಳಾಗಿದ್ದೇವೆ, ನಂತರ ದೇವತಾ ಕುಲದಲ್ಲಿ ಬರುತ್ತೇವೆ, 84 ಜನ್ಮಗಳಲ್ಲಿ ಬರುತ್ತೇವೆ, ನಾವಾತ್ಮರೇ ವರ್ಣಗಳಲ್ಲಿ ಬರುತ್ತೇವೆ. ಶಿವ ತಂದೆಯು ಜನನ-ಮರಣದಲ್ಲಿ ಬರುವುದಿಲ್ಲ. ಕೇವಲ ನಾರಾಯಣನ ರಾಜಧಾನಿಯಿತ್ತು, ಹೇಗೆ ಕ್ರಿಶ್ಚಿಯನ್ನರ ವಂಶಾವಳಿಯಲ್ಲಿ ಎಡ್ವರ್ಡ್ ದಿ ಫಸ್ಟ್, ಸೆಕೆಂಡ್... ಹೀಗೆ ನಡೆಯುತ್ತದೆ. ಹಾಗೆಯೇ ಅಲ್ಲಿಯೂ ಸಹ ಲಕ್ಷ್ಮೀ-ನಾರಾಯಣ ದಿ ಫಸ್ಟ್, ಸೆಕೆಂಡ್, ಥರ್ಡ್... ಹೀಗೆ 8 ಪೀಳಿಗೆಗಳು ನಡೆಯುತ್ತವೆ. ಈಗ ನೀವು ಬ್ರಾಹ್ಮಣರ ಮೂರನೇ ನೇತ್ರವು ತೆರೆದಿದೆ. ತಂದೆಯು ಕುಳಿತು ಆತ್ಮಗಳೊಂದಿಗೆ ಮಾತನಾಡುತ್ತಾರೆ - ನೀವು 84 ಜನ್ಮಗಳ ಚಕ್ರವನ್ನು ಸುತ್ತಿ ಇಷ್ಟಿಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ. ವರ್ಣಗಳ ಒಂದು ಚಿತ್ರವನ್ನೂ ಮಾಡುತ್ತಾರೆ ಅದರಲ್ಲಿ ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ, ಬ್ರಾಹ್ಮಣರನ್ನು ತೋರಿಸುತ್ತಾರೆ. ಈಗ ನೀವು ತಿಳಿದುಕೋಂಡಿದ್ದೀರಿ - ನಾವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೇವೆ, ಈ ಸಮಯದಲ್ಲಿ ನಾವು ಪ್ರತ್ಯಕ್ಷ ರೂಪದಲ್ಲಿ ಈಶ್ವರೀಯ ಸಂತಾನರಾಗಿದ್ದೇವೆ, ಈ ಸಹಜ ರಾಜಯೋಗ ಮತ್ತು ಜ್ಞಾನದಿಂದ ನಮಗೆ ಅಪಾರ ಸುಖ ಸಿಗುತ್ತದೆ. ಕೆಲವರು ಸೂರ್ಯವಂಶಿ ರಾಜಧಾನಿಯ ಆಸ್ತಿ, ಇನ್ನೂ ಕೆಲವರು ಚಂದ್ರವಂಶಿ ರಾಜಧಾನಿಯ ಆಸ್ತಿಯನ್ನು ಪಡೆಯುತ್ತಾರೆ. ಇಡೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಪ್ರತಿಯೊಬ್ಬರೂ ತಮ್ಮ ಪುರುಷಾರ್ಥದಿಂದ ಆ ಪದವಿಯನ್ನು ಪಡೆಯುತ್ತಾರೆ. ಈಗ ಓದುತ್ತಾ-ಓದುತ್ತಾ ನಾವು ಶರೀರ ಬಿಟ್ಟರೆ ಏನು ಪದವಿ ಸಿಗುವುದೆಂದು ಯಾರಾದರೂ ಒಂದುವೇಳೆ ಕೇಳಿದರೆ ತಂದೆಯು ತಿಳಿಸಬಲ್ಲರು. ಯೋಗದಿಂದಲೇ ಆಯಸ್ಸು ವೃದ್ಧಿಯಾಗುತ್ತದೆ, ವಿಕರ್ಮಗಳು ವಿನಾಶವಾಗುತ್ತದೆ, ಪತಿತರಿಂದ ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ಎಂದು ಹೇಳುತ್ತಿದ್ದಂತೆಯೇ ಭಗವಂತನ ನೆನಪು ಬರುತ್ತದೆ ಆದರೆ ಭಗವಂತ ಯಾರೆಂದು ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ - ನಾನು ಭಾರತದಲ್ಲಿಯೇ ಬರುತ್ತೇನೆ, ಇದು ನನ್ನ ಜನ್ಮ ಸ್ಥಾನವಾಗಿದೆ. ಸೋಮನಾಥ ಮಂದಿರವು ಎಷ್ಟು ಸುಂದರವಾಗಿದೆ! ಇದನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಭಕ್ತಿ ಮಾರ್ಗದಲ್ಲಿ ನೆನಪಾರ್ಥವಾಗಲು ಆರಂಭವಾಗುತ್ತದೆ. ಪೂಜಾರಿಗಳಾದಾಗ ಮೊಟ್ಟ ಮೊದಲಿಗೆ ಸೋಮನಾಥ ಮಂದಿರವನ್ನು ಕಟ್ಟಿಸುತ್ತಾರೆ. ಭಾರತವು ಸತ್ಯ-ತ್ರೇತಾಯುಗದಲ್ಲಿ ಬಹಳ ಸಾಹುಕಾರನಾಗಿತ್ತು, ಮಂದಿರಗಳಲ್ಲಿಯೂ ಅಪಾರ ಧನವಿತ್ತು, ಭಾರತವು ವಜ್ರ ಸಮಾನವಾಗಿತ್ತು, ಈಗಂತೂ ಭಾರತವು ಕಂಗಾಲ ಕವಡೆಯ ಸಮಾನವಾಗಿದೆ. ಮತ್ತೆ ತಂದೆಯು ಬಂದು ಭಾರತವನ್ನು ವಜ್ರ ಸಮಾನವನ್ನಾಗಿ ಮಾಡುತ್ತಾರೆ. ರಚಯಿತ ಯಾರೆಂದು ಯಾರೊಂದಿಗಾದರೂ ಕೇಳಿರಿ ಅವರು ಪರಮಾತ್ಮನೆಂದು ಹೇಳುತ್ತಾರೆ. ಅವರು ಎಲ್ಲಿದ್ದಾರೆ ಎಂದರೆ ಸರ್ವವ್ಯಾಪಿ ಆಗಿದ್ದಾರೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಇಡೀ ವೃಕ್ಷವೇ ಜಡ ಜಡೀಭೂತ ಸ್ಥಿತಿಯನ್ನು ತಲುಪಿದೆ. |
ತಮ್ಮನ್ನು ನೋಡಿಕೊಳ್ಳಿ - ನಾನು ಮಮ್ಮಾ-ಬಾಬಾರವರ ಸಿಂಹಾಸನಕ್ಕೆ ಅಧಿಕಾರಿಯಾಗಲು ಯೋಗ್ಯನಾಗಿದ್ದೇನೆಯೇ? ಇದರಲ್ಲಿ ಪವಿತ್ರತೆಯು ಮುಖ್ಯವಾಗಿದೆ, ಈಗಂತೂ ಆರೋಗ್ಯವೂ ಇಲ್ಲ, ಐಶ್ವರ್ಯವೂ ಇಲ್ಲ, ಸಂತೋಷವೂ ಇಲ್ಲ. ಇದು ಮೃಗ ತೃಷ್ಣ ಸಮಾನ ರಾಜ್ಯವಾಗಿದೆ. ಇದರ ಮೇಲೆ ದುರ್ಯೋಧನನ ಕಥೆಯನ್ನು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ವಿಕಾರಿಗೆ ದುರ್ಯೋಧನನೆಂದು ಹೇಳಲಾಗುತ್ತದೆ. ನಮ್ಮನ್ನು ರಕ್ಷಣೆ ಮಾಡಿ ಎಂದು ದ್ರೌಪದಿಯರು ಹೇಳುತ್ತಾರೆ, ಎಲ್ಲರೂ ದ್ರೌಪದಿಯರಲ್ಲವೆ. ಈ ಕನ್ಯೆಯರು ಸ್ವರ್ಗದ ದ್ವಾರವಾಗಿದ್ದಾರೆ, ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಯಾರ ಬುದ್ಧಿಯೋಗವು ಪೂರ್ಣ ಜೋಡಿಸಲ್ಪಟ್ಟಿರುವುದೊ ಅವರಿಗೆ ಧಾರಣೆಯೂ ಆಗುವುದು. ಜ್ಞಾನವನ್ನು ಬ್ರಹ್ಮಚರ್ಯದಲ್ಲಿಯೇ ಓದಲಾಗುತ್ತದೆ. ತಂದೆಯು ಹೇಳುತ್ತಾರೆ - ಗೃಹಸ್ಥ ವ್ಯವಹಾರದಲ್ಲಿತ್ತಾ ಕಮಲಪುಷ್ಪ ಸಮಾನರಾಗಬೇಕಾಗಿದೆ, ಎರಡೂ ಕಡೆ ನಿಭಾಯಿಸಬೇಕಾಗಿದೆ. ಸಾಯುವುದಂತೂ ಖಂಡಿತ, ಸಾಯುವ ಸಮಯದಲ್ಲಿ ಮನುಷ್ಯರಿಗೆ ಮಂತ್ರವನ್ನು ಕೊಡುತ್ತಾರೆ. ತಂದೆಯು ಹೇಳುತ್ತಾರೆ - ನೀವೆಲ್ಲರೂ ಶರೀರ ಬಿಡುವವರಾಗಿದ್ದೀರಿ, ನಾನು ಕಾಲರ ಕಾಲ ಮಹಾಕಾಲನು ಮರಳಿ ಕರೆದುಕೊಂಡು ಹೋಗುವವನಾಗಿದ್ದೇನೆ ಅಂದಮೇಲೆ ಖುಷಿಯಾಗಬೇಕಲ್ಲವೆ. ಯಾರು ಚೆನ್ನಾಗಿ ಓದುವರೋ ಅವರು ಸ್ವರ್ಗದ ಮಾಲೀಕರಾಗುತ್ತಾರೆ, ಓದಲಿಲ್ಲವೆಂದರೆ ಪ್ರಜಾ ಪದವಿಯನ್ನು ಪಡೆಯುತ್ತಾರೆ. ನೀವಿಲ್ಲಿ ರಾಜ್ಯ ಪದವಿಯನ್ನು ಪಡೆಯಲು ಬಂದಿದ್ದೀರಿ, ಇದು ವಿದ್ಯೆಯಾಗಿದೆ, ಇದರಲ್ಲಿ ಅಂಧಶ್ರದ್ಧೆಯ ಮಾತಿಲ್ಲ. ರಾಜ್ಯಭಾಗ್ಯಕ್ಕಾಗಿ ಈ ವಿದ್ಯೆಯಿದೆ. ಹೇಗೆ ವಿದ್ಯೆಯ ಗುರಿ-ಧ್ಯೇಯವಿರುತ್ತದೆ - ವಕೀಲರಾಗುತ್ತಾರೆಂದರೆ ಅವಶ್ಯವಾಗಿ ಓದಿಸುವ ಶಿಕ್ಷಕರೊಂದಿಗೆ ಯೋಗವನ್ನು ಇಡಬೇಕಾಗುತ್ತದೆ, ಇಲ್ಲಿ ನಿಮಗೆ ಭಗವಂತನೇ ಓದಿಸುತ್ತಾರೆ ಅಂದಮೇಲೆ ಅವರೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ಪರಮಧಾಮ ಬಹಳ ದೂರದಿಂದ ಬರುತ್ತೇನೆ, ಪರಮಧಾಮವು ಎಷ್ಟು ಉನ್ನತವಾಗಿದೆ. ಸೂಕ್ಷ್ಮ ವತನಕ್ಕಿಂತಲೂ ಮೇಲೆ ಅಲ್ಲಿಂದ ಬರುವುದರಿಂದ ನನಗೆ ಒಂದು ಸೆಕೆಂಡ್ ಸಾಕು. ನನಗಿಂತಲೂ ತೀಕ್ಷ್ಣ ಮತ್ತ್ಯಾರೂ ಇರಲು ಸಾಧ್ಯವಿಲ್ಲ, ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಕೊಡುತ್ತೇನೆ. ಜನಕನ ಉದಾಹರಣೆಯಿದೆಯಲ್ಲವೆ. ಈಗಂತೂ ನರಕ, ಹಳೆಯ ಪ್ರಪಂಚವಾಗಿದೆ, ಸ್ವರ್ಗಕ್ಕೆ ಹೊಸ ಪ್ರಪಂಚವೆಂದು ಹೇಳಲಾಗುತ್ತದೆ. ತಂದೆಯು ನರಕದ ವಿನಾಶ ಮಾಡಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಉಳಿದೆಲ್ಲಾ ಆತ್ಮರು ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಅದಕ್ಕೆ ಅವಿನಾಶಿ ಪಾತ್ರವು ಸಿಕ್ಕಿದೆ ಅಂದಮೇಲೆ ಆತ್ಮವು ಚಿಕ್ಕದು-ದೊಡ್ಡದಾಗಲು ಹೇಗೆ ಸಾಧ್ಯ! ಅಥವಾ ಅದು ಸುಡಲು ಹೇಗೆ ಸಾಧ್ಯ? ನಕ್ಷತ್ರ ಮಾದರಿಯಾಗಿದೆ. ಗಾತ್ರದಲ್ಲಿ ಚಿಕ್ಕದು-ದೊಡ್ಡದಾಗಲು ಸಾಧ್ಯವಿಲ್ಲ, ನೀವೀಗ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಿ, ಪರಮಾತ್ಮ ಜ್ಞಾನ ಸಾಗರ ಆನಂದ ಸಾಗರನಾಗಿದ್ದಾರೆ, ಅವರು ನಿಮಗೆ ಓದಿಸುತ್ತಿದ್ದಾರೆ. ಈ ವಿದ್ಯೆಯಿಂದ ನಾವೇ ದೇವಿ-ದೇವತೆಗಳಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ನೀವು ಭಾರತದ ಸೇವೆ ಮಾಡುತ್ತಿದ್ದೀರಿ. ಮೊಟ್ಟಮೊದಲಿಗೆ ಈ ತಂದೆಗೆ ಮಕ್ಕಳಾಗಬೇಕಾಗಿದೆ, ಅನ್ಯ ಸ್ಥಳಗಳಲ್ಲಂತೂ ಗುರುವಿನ ಬಳಿ ಹೋಗುತ್ತಾರೆ, ಅವರಿಗೆ ಶಿಷ್ಯರಾಗುತ್ತಾರೆ ಅಥವಾ ಅವರನ್ನು ತಮ್ಮ ಗುರುವನ್ನಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಇವರು ತಂದೆಯಾಗಿದ್ದಾರೆ, ಅಂದಮೇಲೆ ಮೊದಲು ತಂದೆಗೆ ಮಗುವಾಗಬೇಕಾಗಿದೆ. ತಂದೆಯು ಮಕ್ಕಳಿಗೆ ತಮ್ಮ ಆಸ್ತಿಯನ್ನು ಕೊಡುತ್ತಾರೆ, ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ನಿಮ್ಮ ಬಳಿ ಇರುವುದೆಲ್ಲವನ್ನೂ ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಹಳೆಯದೆಲ್ಲವೂ ನನ್ನದು, ನನ್ನದೆಲ್ಲವೂ ನಿಮ್ಮದು. ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಅದನ್ನು ನನಗೆ ಕೊಟ್ಟು ಬಿಡಿ. ನಾನು ನಿಮ್ಮ ಆತ್ಮ ಮತ್ತು ಶರೀರವೆರಡನ್ನೂ ಪವಿತ್ರವನ್ನಾಗಿ ಮಾಡುತ್ತೇನೆ, ಮತ್ತು ರಾಜ್ಯ ಪದವಿಯನ್ನೂ ಕೊಡುತ್ತೇನೆ. ನಿಮ್ಮ ಬಳಿ ಏನೆಲ್ಲವೂ ಇದೆಯೋ ಅದನ್ನು ಬಲಿದಾನವಾಗಿ ಕೊಟ್ಟು ಬಿಡಿ ಆಗ ಜೀವನ್ಮುಕ್ತಿ ಸಿಗುವುದು - ಬಾಬಾ, ಇದೆಲ್ಲವೂ ತಮ್ಮದಾಗಿದೆ ಎಂದು. ನನ್ನನ್ನು ನಿಮ್ಮ ವಾರಸುಧಾರನನ್ನಾಗಿ ಮಾಡಿಕೊಳ್ಳಿ, ನಾನು ನಿಮಗೆ 21 ಜನ್ಮಗಳವರೆಗೆ ವಾರಸುಧಾರನಾಗುತ್ತೇನೆ, ಕೇವಲ ನನ್ನ ಮತದಂತೆ ನಡೆಯಿರಿ, ಭಲೆ ಉದ್ಯೋಗ-ವ್ಯವಹಾರಗಳನ್ನೂ ಮಾಡಿ, ವಿದೇಶಕ್ಕೂ ಹೋಗಿ ಏನಾದರೂ ಮಾಡಿ. ಕೇವಲ ನನ್ನ ಮತದಂತೆ ನಡೆಯಿರಿ. ಮಾಯೆಯು ಪದೇ-ಪದೇ ಹಿಂದೆ ಬೀಳುತ್ತದೆ, ಇದರಲ್ಲಿ ಎಚ್ಚರಿಕೆಯಿಂದಿರಿ, ಇದರಲ್ಲಿ ಯಾವುದೇ ವಿಕರ್ಮ ಮಾಡಬೇಡಿ. ಶ್ರೀಮತದಂತೆ ನಡೆದಾಗಲೇ ಶ್ರೇಷ್ಠರಾಗುವಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಆತ್ಮ ಮತ್ತು ಶರೀರ ಎರಡನ್ನೂ ಪಾವನ ಮಾಡಿಕೊಳ್ಳಲು ದೇಹ ಸಹಿತವಾಗಿ ಏನೆಲ್ಲವೂ ಇದೆಯೋ ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿ ಅವರ ಶ್ರೀಮತದಂತೆ ನಡೆಯಬೇಕಾಗಿದೆ. |
2. ಮಾತಾಪಿತರ ಸಿಂಹಾಸನಕ್ಕೆ ಅಧಿಕಾರಿಗಳಾಗಲು ಸ್ವಯಂನ್ನು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ. ಯೋಗ್ಯರಾಗುವುದಕ್ಕಾಗಿ ಮುಖ್ಯವಾಗಿ ಪವಿತ್ರತೆಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಕ್ಕಳ ಪ್ರತಿ ತಂದೆಯು ತಿಳಿಸುತ್ತಿದ್ದಾರೆ ಮತ್ತು ಮಕ್ಕಳು ತಿಳಿದುಕೊಳ್ಳುತ್ತಿದ್ದೀರಿ - ಅವಶ್ಯವಾಗಿ ಈ ಪ್ರಪಂಚವು ಈಗ ಸ್ಮಶಾನವಾಗುವುದಿದೆ. ಮೊದಲು ಇದು ಪರಿಸ್ತಾನವಾಗಿತ್ತು, ಈಗ ಹಳೆಯದಾಗಿ ಬಿಟ್ಟಿದೆ, ಆದ್ದರಿಂದ ಇದಕ್ಕೆ ಸ್ಮಶಾನವೆಂದು ಹೇಳಲಾಗುತ್ತದೆ. ಎಲ್ಲವೂ ಸ್ಮಶಾನದಲ್ಲಿ ಹೋಗಲಿದೆ. ಹಳೆಯ ವಸ್ತುವು ಸ್ಮಶಾನಕ್ಕೆ ಯೋಗ್ಯವಾಗಿರುತ್ತದೆ ಅರ್ಥಾತ್ ಮಣ್ಣಿನಲ್ಲಿ ಸೇರಿ ಹೋಗುತ್ತದೆ, ಇದನ್ನೂ ಸಹ ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪ್ರಪಂಚದವರು ತಿಳಿದುಕೊಂಡಿಲ್ಲ. ಕೆಲವರು ವಿದೇಶಿಯರಿಗೆ ಇದು ಅರ್ಥವಾಗುತ್ತಿದೆ - ಇದೆಲ್ಲವೂ ಸ್ಮಶಾನವಾಗಲಿರುವ ಸಮಯವು ಕಂಡು ಬರುತ್ತಿದೆ ಎಂದು. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ಪರಿಸ್ತಾನವನ್ನು ಸ್ಥಾಪನೆ ಮಾಡುವ ನಮ್ಮ ತಂದೆಯು ಪುನಃ ಬಂದಿದ್ದಾರೆ. ಮಕ್ಕಳು ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಒಂದುವೇಳೆ ಈ ಸ್ಮಶಾನದೊಂದಿಗೆ ಮನಸ್ಸನ್ನು ಇಟ್ಟಿದ್ದೇ ಆದರೆ ನಷ್ಟವುಂಟಾಗುವುದು. ನೀವೀಗ ಬೇಹದ್ದಿನ ತಂದೆಯಿಂದ ಕಲ್ಪದ ಹಿಂದಿನ ತರಹ ಬೇಹದ್ದಿನ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಇದು ನೀವು ಮಕ್ಕಳ ಬುದ್ಧಿಯಲ್ಲಿ ಪ್ರತೀ ಹೆಜ್ಜೆಯಲ್ಲಿ ಸ್ಮೃತಿಯಿರಬೇಕು. ಇದೇ ಮನ್ಮನಾಭವ ಆಗಿದೆ. ತಂದೆಯ ನೆನಪಿನಲ್ಲಿ ಇರುವುದರಿಂದಲೇ ಸ್ವರ್ಗವಾಸಿಗಳಾಗುತ್ತೀರಿ. ಭಾರತವೇ ಪರಿಸ್ತಾನವಾಗಿತ್ತು, ಮತ್ತ್ಯಾವ ಖಂಡವೂ ಆಗುವುದಿಲ್ಲ. ಇದು ಮಾಯಾ ರಾವಣನ ಶೋ ಆಗಿದೆ. ಇದು ಇನ್ನು ಸ್ವಲ್ಪ ಸಮಯವೇ ನಡೆಯಲಿದೆ. ಇದೆಲ್ಲವೂ ಸುಳ್ಳು ಶೋ ಆಗಿದೆ. ಸುಳ್ಳು ಕಾಯ, ಸುಳ್ಳು ಮಾಯೆಯಲ್ಲವೆ. ಇದು ಅಂತಿಮದ ಆಡಂಬರವಾಗಿದೆ. ಇದನ್ನು ನೋಡಿ ಮನುಷ್ಯರು ಸ್ವರ್ಗವಂತೂ ಈಗ ಇದೆ, ಮೊದಲು ನರಕವಾಗಿತ್ತು ಎಂದು ತಿಳಿದುಕೊಳ್ಳುತ್ತಾರೆ. ದೊಡ್ಡ-ದೊಡ್ಡ ಕಟ್ಟಡಗಳನ್ನು ಕಟ್ಟಿಸುತ್ತಿರುತ್ತಾರೆ, ಇದು 100 ವರ್ಷಗಳ ಶೋ ಆಗಿದೆ. ವಿದ್ಯುತ್, ಟೆಲಿಫೋನ್, ವಿಮಾನ ಇವೆಲ್ಲವೂ 100 ವರ್ಷಗಳಿಂದ ಈಚೆಗೆ ಹೊರ ಬಂದಿದೆ, ಎಷ್ಟೊಂದು ಶೋ ಇದೆ ಆದ್ದರಿಂದ ಸ್ವರ್ಗವಂತೂ ಈಗಲೇ ಇದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಹಳೆಯ ದೆಹಲಿಯು ಹೇಗಿತ್ತು? ಈಗ ನವ ದೆಹಲಿಯು ಎಷ್ಟು ಚೆನ್ನಾಗಿ ತಯಾರಾಗಿದೆ! ನವ ದೆಹಲಿಯೆಂದೇ ಹೆಸರನ್ನಿಟ್ಟಿದ್ದಾರೆ. ಹೊಸ ಪ್ರಪಂಚ ರಾಮ ರಾಜ್ಯವು ಸ್ಥಾಪನೆಯಾಗಲಿ, ಪರಿಸ್ತಾನವಾಗಲಿ ಎಂದು ಬಾಪೂಜಿಯೂ ಸಹ ಹೇಳುತ್ತಿದ್ದರು. ಇದಂತೂ ತಾತ್ಕಾಲಿಕ ಶೋ ಆಗಿದೆ. ಎಷ್ಟು ದೊಡ್ಡ-ದೊಡ್ಡ ಮನೆಗಳು, ಕಾರಂಜಿ ಮೊದಲಾದುವುಗಳನ್ನು ಕಟ್ಟಿಸುತ್ತಾರೆ. ಇದಕ್ಕೆ ಆರ್ಟಿಫಿಷಿಯಲ್ ಸ್ವರ್ಗವೆಂದು ಹೇಳಲಾಗುತ್ತದೆ, ಇದು ಅಲ್ಪಕಾಲಕ್ಕಾಗಿ. ನೀವು ತಿಳಿದುಕೊಂಡಿದ್ದೀರಿ - ಇದರ ಹೆಸರು ಸ್ವರ್ಗವೇನಲ್ಲ, ಇದು ನರಕವಾಗಿದೆ. ನರಕದ್ದು ಒಂದು ಶೋ ಆಗಿದೆ, ಇದು ಅಲ್ಪಕಾಲದ ಶೋ. ಈಗ ಹೋಯಿತೆಂದರೆ ಹೋಯಿತು. |
ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮೊದಲನೆಯದಾಗಿ ಶಾಂತಿಧಾಮವನ್ನು ನೆನಪು ಮಾಡಿ. ಎಲ್ಲಾ ಮನುಷ್ಯ ಮಾತ್ರರೂ ಶಾಂತಿಯನ್ನೇ ಹುಡುಕುತ್ತಾ ಇರುತ್ತಾರೆ, ಎಲ್ಲಿಂದ ಶಾಂತಿ ಸಿಗುವುದು? ಪ್ರಪಂಚದಲ್ಲಿ ಹೇಗೆ ಶಾಂತಿಯು ಸ್ಥಾಪನೆಯಾಗುವುದು ಎಂಬ ಪ್ರಶ್ನೆಯಂತೂ ಇಡೀ ಪ್ರಪಂಚಕ್ಕೆ ಇದೆ. ವಾಸ್ತವದಲ್ಲಿ ನಾವೆಲ್ಲರೂ ಶಾಂತಿಧಾಮದ ನಿವಾಸಿಗಳು. ನಾವಾತ್ಮರು ಶಾಂತಿಧಾಮದಲ್ಲಿ ಇರುತ್ತೇವೆ ನಂತರ ಪಾತ್ರವನ್ನು ಅಭಿನಯಿಸಲು ಇಲ್ಲಿಗೆ ಬರುತ್ತೇವೆ ಎಂದು ಮನುಷ್ಯರಿಗೆ ತಿಳಿದೇ ಇಲ್ಲ. ಅದೂ ನೀವು ಮಕ್ಕಳಿಗೇ ತಿಳಿದಿದೆ. ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಹೋಗಲು ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಪ್ರತಿಯೊಬ್ಬರ ಬುದ್ಧಿಯಲ್ಲಿದೆ - ನಾವಾತ್ಮರು ಈಗ ನಮ್ಮ ಮನೆ ಶಾಂತಿಧಾಮಕ್ಕೆ ಹೋಗುತ್ತೇವೆ. ಇಲ್ಲಂತೂ ಶಾಂತಿಯ ಮಾತಿರಲು ಸಾಧ್ಯವಿಲ್ಲ. ಇದು ದುಃಖಧಾಮವಾಗಿದೆ. ಸತ್ಯಯುಗವು ಪಾವನ ಪ್ರಪಂಚ, ಕಲಿಯುಗವು ಪತಿತ ಪ್ರಪಂಚವಾಗಿದೆ. ಈ ಮಾತುಗಳ ತಿಳುವಳಿಕೆಯು ಈಗ ನೀವು ಮಕ್ಕಳಿಗೆ ಬಂದಿದೆ. ಪ್ರಪಂಚದವರು ಏನನ್ನೂ ತಿಳಿದುಕೊಂಡಿಲ್ಲ. ಬೇಹದ್ದಿನ ತಂದೆಯು ನಮಗೆ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ ಮತ್ತೆ ಧರ್ಮ ಸ್ಥಾಪಕರು ಬಂದು ಹೇಗೆ ಧರ್ಮ ಸ್ಥಾಪನೆ ಮಾಡುತ್ತಾರೆ ಎಂಬುದು ನಿಮ್ಮ ಬುದ್ಧಿಯಲ್ಲಿ ಬಂದಿದೆ. ಈಗ ಸೃಷ್ಟಿಯಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ಭಾರತದಲ್ಲಿಯೂ ಬಹಳಷ್ಟಿದೆ. ಭಾರತವು ಸ್ವರ್ಗವಾಗಿದ್ದಾಗ ಬಹಳ ಸಾಹುಕಾರರಿದ್ದರು, ಮತ್ತ್ಯಾವುದೇ ಧರ್ಮವಿರಲಿಲ್ಲ. ನೀವು ಮಕ್ಕಳನ್ನು ಪ್ರತಿನಿತ್ಯವೂ ರಿಫ್ರೆಷ್ ಮಾಡಲಾಗುತ್ತದೆ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಭಕ್ತಿಮಾರ್ಗದಲ್ಲಿಯೂ ಇದು ನಡೆದು ಬರುತ್ತದೆ. ಯಾವಾಗಲೂ ಬೆರಳು ಮೇಲೆ ಮಾಡಿ ತೋರಿಸುತ್ತಾರೆ - ಪರಮಾತ್ಮನನ್ನು ನೆನಪು ಮಾಡಿ, ಪರಮಾತ್ಮ ಅಥವಾ ಅಲ್ಲಾ ಪರಮಧಾಮದಲ್ಲಿದ್ದಾರೆ. ಆದರೆ ಕೇವಲ ಹಾಗೆಯೇ ನೆನಪು ಮಾಡುವುದರಿಂದ ಏನೂ ಆಗುವುದಿಲ್ಲ. ನೆನಪಿನಿಂದ ಲಾಭವೇನು, ಅವರ ಜೊತೆ ನಮ್ಮ ಸಂಬಂಧವೇನು ಎಂಬುದೂ ಅವರಿಗೆ ತಿಳಿದಿಲ್ಲ. ದುಃಖದ ಸಮಯದಲ್ಲಿ ಹೇ ರಾಮ.... ಎಂದು ಕರೆಯುತ್ತಾರೆ. ಆತ್ಮವು ನೆನಪು ಮಾಡುತ್ತದೆ ಆದರೆ ಯಾವುದಕ್ಕೆ ಸುಖ-ಶಾಂತಿಯೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ಬರುತ್ತದೆ - ನಾವೆಲ್ಲರೂ ಒಬ್ಬ ತಂದೆಯ ಸಂತಾನರಾಗಿದ್ದೇವೆ ಅಂದಮೇಲೆ ಏಕೆ ದುಃಖವಾಗಬೇಕು? ಬೇಹದ್ದಿನ ತಂದೆಯಿಂದ ಸದಾ ಸುಖದ ಆಸ್ತಿಯು ಸಿಗಬೇಕು. ಇದೂ ಸಹ ಚಿತ್ರದಲ್ಲಿ ಸ್ಪಷ್ಟವಾಗಿದೆ. ಭಗವಂತನು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ, ಅವರು ಭಾರತದಲ್ಲಿಯೇ ಬರುತ್ತಾರೆ ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಅವಶ್ಯವಾಗಿ ಸಂಗಮದಲ್ಲಿಯೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುವುದು. ಸತ್ಯಯುಗದಲ್ಲಿ ಹೇಗಾಗುವುದು ಆದರೆ ಈ ಮಾತುಗಳನ್ನು ಅನ್ಯ ಧರ್ಮದವರು ತಿಳಿದುಕೊಳ್ಳುವುದಿಲ್ಲ. ತಂದೆಯೇ ಜ್ಞಾನಪೂರ್ಣನಾಗಿದ್ದಾರೆ ಅವರು ಆದಿ ಸನಾತನ ದೇವಿ-ದೇವತಾ ಧರ್ಮವು ಹೇಗೆ ಸ್ಥಾಪನೆಯಾಯಿತು ಎಂಬುದನ್ನು ತಿಳಿಸುತ್ತಾರೆ. ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳು ಎಂದು ಹೇಳಿರುವುದರಿಂದ ಬಹಳ ದೂರ ತೆಗೆದುಕೊಂಡು ಹೋಗುತ್ತಾರೆ. ನೀವು ಮಕ್ಕಳು ಚಿತ್ರದಲ್ಲಿ ತಿಳಿಸಬೇಕಾಗಿದೆ - ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರು ಹೇಗೆ ಯಾವಾಗ ಈ ರಾಜ್ಯವನ್ನು ಪಡೆದರು ಎಂಬುದನ್ನು ತಿಳಿದುಕೊಂಡಿಲ್ಲ. ಕೇವಲ ಇವರು ಸತ್ಯಯುಗದ ಮಾಲೀಕರಾಗಿದ್ದರು ಎಂದು ಹೇಳುತ್ತಾರೆ. ಅವರ ಮುಂದೆ ಹೋಗಿ ಬೇಡುತ್ತಾರೆ ಆಗ ಅಲ್ಪಕಾಲಕ್ಕಾಗಿ ಏನಾದರೂ ಸಿಗುತ್ತದೆ. ಯಾರಾದರೂ ದಾನ-ಪುಣ್ಯ ಮಾಡಿದರೆ ಅಲ್ಪಕಾಲಕ್ಕಾಗಿ ಅದರ ಫಲವು ಸಿಗುತ್ತದೆ. ಸಾಹುಕಾರ ಮುಖ್ಯಸ್ಥರಿಗೆ ಎಷ್ಟು ಖುಷಿಯಿರುತ್ತದೆಯೋ ಅಷ್ಟು ಬಡ ಪಂಚಾಯಿತಿಯ ಮುಖ್ಯಸ್ಥರಿಗೂ ಇರುತ್ತದೆ. ಬಡವರೂ ಸಹ ತಮ್ಮನ್ನು ಸುಖಿಯೆಂದು ತಿಳಿದುಕೊಳ್ಳುತ್ತಾರೆ. ಬಾಂಬೆಯಲ್ಲಿ ನೋಡಿ, ಬಡವರು ಎಂತೆಂತಹ ಸ್ಥಳಗಳಲ್ಲಿ ಇರುತ್ತಾರೆ! ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ - ಭಲೆ ಕೋಟ್ಯಾಧೀಶ್ವರರಿರಬಹುದು ಆದರೆ ಎಷ್ಟೊಂದು ದುಃಖಿಯಾಗಿದ್ದಾರೆ! ನೀವು ಹೇಳುತ್ತೀರಿ - ನಮ್ಮಂತಹ ಅದೃಷ್ಟವಂತರು ಮತ್ತ್ಯಾರೂ ಇಲ್ಲ, ನಾವು ಡೈರೆಕ್ಟ್ ತಂದೆಯ ಮಕ್ಕಳಾಗಿದ್ದೇವೆ ಯಾರಿಂದ ಸದ್ಗತಿಯ ಆಸ್ತಿಯು ಸಿಗುತ್ತದೆ. ದೊಡ್ಡ-ದೊಡ್ಡ ವ್ಯಕ್ತಿಗಳು ಎಂದೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ಬಡವರಿದ್ದಾರೆಯೋ ಅವರೇ ಸಾಹುಕಾರರಾಗಿ ಬಿಡುತ್ತಾರೆ. ವಾಸ್ತವದಲ್ಲಿ ನೀವೇ ಓದಿ ವಿದ್ಯಾವಂತರಾಗುತ್ತೀರಿ, ಅವರು ಅವಿದ್ಯಾವಂತರಾಗುತ್ತಾರೆ. ಭಲೆ ಅಲ್ಪ ಸ್ವಲ್ಪ ಓದಿದರೂ ಸಹ ಅವರಿಗೆ ತಂದೆಯ ನೆನಪಿನಲ್ಲಿರಲು ಸಾಧ್ಯವಿಲ್ಲ. ಅಂತಿಮದಲ್ಲಿ ನಿಮಗೆ ತಂದೆಯ ವಿನಃ ಮತ್ತೇನೂ ನೆನಪಿರಬಾರದು ಏಕೆಂದರೆ ನಿಮಗೆ ತಿಳಿದಿದೆ - ಇದೆಲ್ಲವೂ ಸ್ಮಶಾನವಾಗಲಿದೆ. ಬುದ್ಧಿಯಲ್ಲಿರಲಿ - ನಾವು ಯಾವ ಉದ್ಯೋಗ ವ್ಯವಹಾರಗಳನ್ನು ಮಾಡುತ್ತೇವೆಯೋ ಇವು ಸ್ವಲ್ಪ ಸಮಯಕ್ಕಾಗಿ ಮಾತ್ರ. ಧನವಂತರು ಧರ್ಮ ಶಾಲೆಗಳನ್ನು ಕಟ್ಟಿಸುತ್ತಾರೆ, ಅವರೇನೂ ಸಂಪಾದನೆಗಾಗಿ ಕಟ್ಟಿಸುವುದಿಲ್ಲ. ತೀರ್ಥ ಸ್ಥಾನಗಳಲ್ಲಿ ಧರ್ಮ ಶಾಲೆಗಳಿಲ್ಲವೆಂದರೆ ಅಲ್ಲಿ ಹೋಗುವವರು ಎಲ್ಲಿ ಇರುವುದು, ಆದ್ದರಿಂದ ಸಾಹುಕಾರರು ಧರ್ಮ ಶಾಲೆಗಳನ್ನು ಕಟ್ಟಿಸುತ್ತಾರೆ. ವ್ಯಾಪಾರ ಮಾಡುವುದಕ್ಕಾಗಿ ಅಲ್ಲ. ತೀರ್ಥ ಸ್ಥಳಗಳಲ್ಲಿ ಧರ್ಮಶಾಲೆಗಳನ್ನು ಕಟ್ಟಿಸಲಾಗುತ್ತದೆ. ನಿಮ್ಮ ಸೇವಾಕೇಂದ್ರವು ದೊಡ್ಡದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ಎಲ್ಲೆಲ್ಲಿ ನಿಮ್ಮ ಸೇವಾಕೇಂದ್ರಗಳಿವೆಯೋ ಅವು ದೊಡ್ಡ-ದೊಡ್ಡ ತೀರ್ಥ ಸ್ಥಾನಗಳಿವೆ, ಎಲ್ಲಿಂದ ಮನುಷ್ಯರಿಗೆ ಸುಖ-ಶಾಂತಿ ಸಿಗುತ್ತದೆ. ನಿಮ್ಮ ಈ ಗೀತಾ ಪಾಠ ಶಾಲೆಯು ದೊಡ್ಡದಾಗಿದೆ, ಇದು ಆದಾಯದ ಮೂಲವಾಗಿದೆ, ಇದರಿಂದ ಬಹಳ ಸಂಪಾದನೆಯಾಗುತ್ತದೆ. ನೀವು ಮಕ್ಕಳಿಗಾಗಿ ಇದು ಧರ್ಮ ಶಾಲೆಯಾಗಿದೆ, ದೊಡ್ಡದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಗಿದೆ. ನೀವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಇದರಂತಹ ದೊಡ್ಡ ತೀರ್ಥ ಸ್ಥಾನವು ಮತ್ತ್ಯಾವುದೂ ಇರುವುದಿಲ್ಲ. ಆ ತೀರ್ಥ ಸ್ಥಳಗಳಿಗೆ ಹೋಗುವುದರಿಂದ ನಿಮಗೆ ಏನೂ ಸಿಗುವುದಿಲ್ಲ, ಇದನ್ನೂ ನೀವೀಗ ತಿಳಿದುಕೊಂಡಿದ್ದೀರಿ. ಭಕ್ತರು ಬಹಳ ಪ್ರೇಮದಿಂದ ಮಂದಿರಗಳಲ್ಲಿ ಚರಣಾಮೃತವನ್ನು ತೆಗೆದುಕೊಳ್ಳುತ್ತಾರೆ, ಇದರಿಂದ ನಾವು ಪವಿತ್ರವಾಗಿ ಬಿಡುವುದು ಎಂದು ತಿಳಿದುಕೊಳ್ಳುತ್ತಾರೆ. ಆದರೆ ಅದಂತೂ ನೀರಾಗಿದೆ, ಇಲ್ಲಿ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದು. ಈಗ ಬೇಹದ್ದಿನ ತಂದೆಯಿಂದ ನಿಮಗೆ ಅವಿನಾಶಿ ಜ್ಞಾನರತ್ನಗಳ ಖಜಾನೆಯು ಸಿಗುತ್ತದೆ. ಬಹುತೇಕವಾಗಿ ಶಂಕರನ ಬಳಿ ಹೋಗುತ್ತಾರೆ, ಅಮರನಾಥನು ಪಾರ್ವತಿಗೆ ಕಥೆ ಹೇಳಿದರೆಂದು ಹೇಳುತ್ತಾರೆ. ಆದ್ದರಿಂದ ಜೋಳಿಗೆಯನ್ನು ತುಂಬಿಸು.... ಎಂದು ಹೇಳುತ್ತಾರೆ. ನೀವು ಅವಿನಾಶಿ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ ಬಾಕಿ ಅಮರನಾಥನು ಕೇವಲ ಒಬ್ಬರಿಗೆ ಕುಳಿತು ಕಥೆ ಹೇಳುವರೇ? ಅವಶ್ಯವಾಗಿ ಅನೇಕರಿರಬೇಕು, ಅವರು ಮೃತ್ಯುಲೋಕದಲ್ಲಿಯೇ ಇರುವರು. ಸೂಕ್ಷ್ಮವತನದಲ್ಲಂತು ಕಥೆಯನ್ನು ಹೇಳುವ ಅವಶ್ಯಕತೆಯೇ ಇಲ್ಲ. ಅನೇಕ ತೀರ್ಥ ಸ್ಥಾನಗಳನ್ನು ಮಾಡಿದ್ದಾರೆ, ಸಾಧು-ಸಂತ ಮಹಾತ್ಮರು ಅನೇಕರು ಹೋಗುತ್ತಾರೆ. ಅಮರನಾಥದಲ್ಲಿ ಲಕ್ಷಾಂತರ ಮಂದಿ ಹೋಗುತ್ತಾರೆ. ಎಲ್ಲದಕ್ಕಿಂತ ಹೆಚ್ಚಿನದಾಗಿ ಕುಂಭಮೇಳದಲ್ಲಿ ಗಂಗಾ ಸ್ನಾನ ಮಾಡಲು ಹೋಗುತ್ತಾರೆ, ಇದರಿಂದ ನಾವು ಪಾವನರಾಗುತ್ತೇವೆಂದು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ ಸತ್ಯವಾದ ಕುಂಭಮೇಳವು ಇದಾಗಿದೆ. ಆ ಮೇಳಗಳಲ್ಲಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿರಿ. ಆದರೆ ತಂದೆಯು ತಿಳಿಸುತ್ತಾರೆ - ಇದರಿಂದ ಯಾರೂ ತಮ್ಮ ಮನೆಗೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಏಕೆಂದರೆ ಆತ್ಮವು ಪವಿತ್ರವಾದಾಗಲೇ ಹೋಗಲು ಸಾಧ್ಯ ಆದರೆ ಅಪವಿತ್ರರಾಗಿರುವ ಕಾರಣ ಎಲ್ಲರ ರೆಕ್ಕೆಗಳು ತುಂಡಾಗಿವೆ. ಆತ್ಮಕ್ಕೆ ಈಗ ರೆಕ್ಕೆಗಳು ಸಿಕ್ಕಿವೆ. ಯೋಗದಲ್ಲಿ ಇರುವುದರಿಂದ ಆತ್ಮವು ಎಲ್ಲದಕ್ಕಿಂತ ತೀಕ್ಷ್ಣವಾಗಿ ಹಾರುತ್ತದೆ. ಯಾರ ಲೆಕ್ಕಾಚಾರವು ಲಂಡನ್ನಿನಲ್ಲಿ, ಅಮೇರಿಕಾದಲ್ಲಿದ್ದರೆ ಕೂಡಲೇ ಅಲ್ಲಿಗೆ ಹಾರುತ್ತಾರೆ. ಸೆಕೆಂಡಿನಲ್ಲಿ ಅಲ್ಲಿಗೆ ಹೋಗಿ ತಲುಪುತ್ತಾರೆ ಆದರೆ ಮುಕ್ತಿಧಾಮಕ್ಕೆ ಕರ್ಮಾತೀತರಾದಾಗಲೇ ಹೋಗಲು ಸಾಧ್ಯ. ಅಲ್ಲಿಯವರೆಗೆ ಇಲ್ಲಿಯೇ ಜನನ-ಮರಣದಲ್ಲಿ ಬರುತ್ತಾರೆ. ಹೇಗೆ ನಾಟಕವು ಟಿಕ್ ಟಿಕ್ ಎಂದು ನಡೆಯುತ್ತದೆ. ಆತ್ಮವೂ ಹಾಗೆಯೇ ಒಂದು ಸೆಕೆಂಡ್ ಕಳೆಯಿತೆಂದರೆ ಆತ್ಮವು ಹೊರಟು ಹೋಯಿತು, ಇದರಷ್ಟು ತೀಕ್ಷ್ಣ ಮತ್ತ್ಯಾವುದೇ ವಸ್ತುವಿರುವುದಿಲ್ಲ. ಅನೇಕಾನೇಕ ಆತ್ಮಗಳು ಮೂಲವತನದಲ್ಲಿ ಹೋಗುವರು. ಆತ್ಮಕ್ಕೆ ಎಲ್ಲಿಂದ ಎಲ್ಲಿಗೆ ಬೇಕಾದರೂ ತಲುಪುವುದರಲ್ಲಿ ಸಮಯ ಹಿಡಿಸುವುದಿಲ್ಲ, ಮನುಷ್ಯರು ಈ ಮಾತುಗಳನ್ನು ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿ ಬರುತ್ತದೆ – ಹೊಸ ಪ್ರಪಂಚದಲ್ಲಿ ಅವಶ್ಯವಾಗಿ ಕೆಲವರೇ ಆತ್ಮರಿರುತ್ತಾರೆ ಮತ್ತು ಅಲ್ಲಿ ಬಹಳ ಸುಖಿಯಾಗಿರುತ್ತಾರೆ. ಅದೇ ಆತ್ಮಗಳು ಈಗ 84 ಜನ್ಮಗಳನ್ನು ತೆಗೆದುಕೊಂಡು ಬಹಳ ದುಃಖಿಯಾಗಿದ್ದಾರೆ. ನಿಮಗೆ ಇಡೀ ಚಕ್ರದ ಬಗ್ಗೆ ಅರ್ಥವಾಗಿದೆ, ನಿಮ್ಮ ಬುದ್ಧಿಯು ಕೆಲಸ ಮಾಡುತ್ತದೆ. ಮತ್ತ್ಯಾವ ಮನುಷ್ಯರ ಬುದ್ಧಿಯು ಓಡುವುದಿಲ್ಲ. ಪ್ರಜಾಪಿತ ಬ್ರಹ್ಮನ ಗಾಯನವೂ ಇದೆ. ಕಲ್ಪದ ಮೊದಲೂ ಸಹ ಇದೇ ರೀತಿ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಿರಿ, ನೀವು ತಿಳಿದುಕೊಂಡಿದ್ದೀರಿ - ಪ್ರಜಾಪಿತ ಬ್ರಹ್ಮನಿಗೆ ನಾವು ಮಕ್ಕಳಾಗಿದ್ದೇವೆ, ನಮ್ಮ ಮೂಲಕ ತಂದೆಯು ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ ಯಾವಾಗ ನಂಬರ್ವಾರ್ ಪುರುಷಾರ್ಥದನುಸಾರ ಯೋಗ್ಯರಾಗಿ ಬಿಡುತ್ತೀರೋ ಆಗ ಈ ಹಳೆಯ ಪ್ರಪಂಚದ ವಿನಾಶವಾಗುವುದು. ತ್ರಿಮೂರ್ತಿಯದೂ ಇಲ್ಲಿಯೇ ಗಾಯನವಿದೆ, ತ್ರಿಮೂರ್ತಿ ಚಿತ್ರವನ್ನು ಇಟ್ಟುಕೊಳ್ಳುತ್ತಾರೆ ಅದರಲ್ಲಿ ಶಿವನನ್ನು ತೋರಿಸುವುದಿಲ್ಲ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಹೇಳಲಾಗುತ್ತದೆ, ಅದನ್ನು ಯಾರು ಮಾಡಿಸುತ್ತಾರೆ? ಶಿವ ತಂದೆ. ವಿಷ್ಣುವಿನ ಮೂಲಕ ಪಾಲನೆಯಾಗುತ್ತದೆ. ನೀವು ಬ್ರಾಹ್ಮಣರು ಈಗ ದೇವತೆಗಳಾಗುವುದಕ್ಕಾಗಿ ಯೋಗ್ಯರಾಗುತ್ತಿದ್ದೀರಿ. ನೀವೀಗ ಆ ಪಾತ್ರವನ್ನಭಿನಯಿಸುತ್ತಿದ್ದೀರಿ. ಕಲ್ಪದ ನಂತರ ಪುನಃ ಅಭಿನಯಿಸುತ್ತೀರಿ. ನೀವು ಪವಿತ್ರರಾಗುತ್ತೀರಿ. ನೀವು ಹೇಳುತ್ತೀರಿ - ತಂದೆಯ ಆದೇಶವಾಗಿದೆ, ಕಾಮ ರೂಪಿ ಶತ್ರುವನ್ನು ಜಯಿಸಿರಿ, ನನ್ನೊಬ್ಬನನ್ನೇ ನೆನಪು ಮಾಡಿ. ಬಹಳ ಸಹಜವಾಗಿದೆ. ಭಕ್ತಿಮಾರ್ಗದಲ್ಲಿ ನೀವು ಮಕ್ಕಳು ದುಃಖ ನೋಡಿದ್ದೀರಿ. ಭಲೆ ಸ್ವಲ್ಪ ಸುಖವಿದ್ದರೂ ಸಹ ಅಲ್ಪಕಾಲಕ್ಕಾಗಿ. ಭಕ್ತಿಯಲ್ಲಿ ಸಾಕ್ಷಾತ್ಕಾರವಾಗುತ್ತದೆ, ಅಲ್ಪಕಾಲಕ್ಕಾಗಿ ನಿಮ್ಮ ಆಸೆಗಳು ಈಡೇರುತ್ತದೆ. ಈ ಸಾಕ್ಷಾತ್ಕಾರವನ್ನೂ ಸಹ ನಾನೇ ಮಾಡಿಸುತ್ತೇನೆ, ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವ ಕ್ಷಣ-ಪ್ರತಿಕ್ಷಣವು ಕಳೆಯಿತೋ ಅದು ಡ್ರಾಮಾದಲ್ಲಿ ಮೊದಲೇ ನಿಗಧಿಯಾಗಿದೆ. ಈಗ ನಿಗಧಿಯಾಯಿತು ಎಂದು ಹೇಳುವುದಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಎಷ್ಟು ಮಂದಿ ಪಾತ್ರಧಾರಿಗಳಿದ್ದಾರೆಯೋ ಎಲ್ಲರ ಪಾತ್ರವು ಅವಿನಾಶಿಯಾಗಿದೆ. ಯಾರೂ ಮೋಕ್ಷವನ್ನು ಪಡೆಯುವುದಿಲ್ಲ. ನಾವು ಲೀನವಾಗಿ ಬಿಡುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಅವಿನಾಶಿ ಆತ್ಮನಾಗಿದ್ದೀರಿ, ಆತ್ಮವು ಬಿಂದುವಾಗಿದೆ. ಇಷ್ಟು ಚಿಕ್ಕ ಬಿಂದುವಿನಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಈ ಚಕ್ರವು ನಡೆಯುತ್ತಲೇ ಇರುತ್ತದೆ. ಯಾರು ಮೊಟ್ಟ ಮೊದಲು ಪಾತ್ರವನ್ನಭಿನಯಿಸಲು ಬರುತ್ತಾರೆಯೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಎಲ್ಲರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ವಿನಃ ಮತ್ತ್ಯಾರ ಬುದ್ಧಿಯಲ್ಲಿಯೂ ಈ ಜ್ಞಾನವಿಲ್ಲ. ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನಾವು ಆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ತಂದೆಯು ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ದುಃಖದ ಹೆಸರು-ಗುರುತೂ ಇರುವುದಿಲ್ಲ. ತಂದೆಯು ಹೇಳುತ್ತಾರೆ - ಆಯುಷ್ಯವಾನ್ಭವ, ಧನವಾನ್ಭವ..... ನಿವೃತ್ತಿ ಮಾರ್ಗದವರು ಹೀಗೆ ಆಶೀರ್ವಾದ ಮಾಡಲು ಸಾಧ್ಯವಿಲ್ಲ. ನೀವು ಮಕ್ಕಳಿಗೆ ತಂದೆಯಿಂದ ಆಸ್ತಿಯು ಸಿಗುತ್ತಿದೆ, ಸತ್ಯ-ತ್ರೇತಾಯುಗವು ಸುಖಧಾಮವಾಗಿದೆ ಮತ್ತೆ ಹೇಗೆ ದುಃಖವಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ದೇವತೆಗಳು ಹೇಗೆ ವಾಮ ಮಾರ್ಗದಲ್ಲಿ ಹೋಗುತ್ತಾರೆಂದು ಸಾಕ್ಷಿಗಳಿವೆ. ಜಗನ್ನಾಥ ಪುರಿಯಲ್ಲಿ ದೇವತೆಗಳ ಚಿತ್ರಗಳು ಕಿರೀಟ ಇತ್ಯಾದಿ ಧರಿಸಿರುವುದನ್ನು ತೋರಿಸುತ್ತಾರೆ. ನಂತರ ಕೊಳಕು ಚಿತ್ರಗಳನ್ನೂ ತೋರಿಸಿದ್ದಾರೆ, ಆದ್ದರಿಂದ ಅವರ ಮೂರ್ತಿಯನ್ನು ಕಪ್ಪಾಗಿ ತೋರಿಸಿದ್ದಾರೆ. ಇದರಿಂದಲೇ ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತಾರೆಂದು ಸಿದ್ಧವಾಗುತ್ತದೆ ಆದ್ದರಿಂದ ಅಂತಿಮದಲ್ಲಿ ಸಂಪೂರ್ಣ ಕಪ್ಪಾಗಿ ಬಿಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ಭಾರತವು ಎಷ್ಟು ಸುಂದರವಾಗಿತ್ತು, ನಂತರ ಡ್ರಾಮಾ ಪ್ಲಾನ ಅನುಸಾರ ತಮೋಪ್ರಧಾನ ಆಗಲೇಬೇಕಾಗಿದೆ. ಈಗ ಸಂಗಮದಲ್ಲಿ ನಿಮಗೆ ಈ ಜ್ಞಾನವಿದೆ, ತಂದೆಯು ಜ್ಞಾನಪೂರ್ಣನಾಗಿದ್ದಾರೆ. ನಿಮಗೆ ಒಬ್ಬರೇ ತಂದೆಯು ತಂದೆ, ಶಿಕ್ಷಕ, ಗುರು ಮೂವರೂ ಆಗಿದ್ದಾರೆ. ಇದು ಸದಾ ಬುದ್ಧಿಯಲ್ಲಿರಲಿ – ಶಿವ ತಂದೆಯು ನಮಗೆ ಓದಿಸುತ್ತಾರೆ. ಇದು ಬೇಹದ್ದಿನ ವಿದ್ಯೆಯಾಗಿದೆ, ಇದರಿಂದ ನೀವು ಜ್ಞಾನ ಪೂರ್ಣರಾಗಿ ಬಿಟ್ಟಿದ್ದೀರಿ. ನೀವು ಎಲ್ಲವನ್ನೂ ಅರಿತುಕೊಂಡಿದ್ದೀರಿ. ಅವರು ಸರ್ವವ್ಯಾಪಿಯೆಂದು ಹೇಳುತ್ತಾರೆ, ನೀವು ಪತಿತ-ಪಾವನನೆಂದು ಹೇಳುತ್ತೀರಿ, ಎಷ್ಟು ರಾತ್ರಿ-ಹಗಲಿನ ವ್ಯತ್ಯಾಸವಿದೆ. ನೀವೀಗ ನಂಬರ್ವಾರ್ ಮಾ|| ಜ್ಞಾನಪೂರ್ಣರಾಗಿದ್ದೀರಿ. ತಂದೆಯ ಬಳಿ ಏನಿದೆಯೋ ಅದನ್ನು ಕಲಿಸುತ್ತಾರೆ, ನೀವೂ ಸಹ ಎಲ್ಲರಿಗೆ ತಿಳಿಸುತ್ತೀರಿ - ತಂದೆಯನ್ನು ನೆನಪು ಮಾಡಿದರೆ 21 ಜನ್ಮಗಳಿಗಾಗಿ ಆಸ್ತಿಯು ಸಿಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸ್ವಯಂ ರಿಫ್ರೆಷ್ ಆಗಿದ್ದು ಅನ್ಯರನ್ನೂ ರಿಫ್ರೆಷ್ ಮಾಡಲು ತಂದೆ ಮತ್ತು ಆಸ್ತಿಯ ನೆನಪಿನಲ್ಲಿರಬೇಕು ಮತ್ತು ಎಲ್ಲರಿಗೂ ನೆನಪು ತರಿಸಬೇಕಾಗಿದೆ. |
2. ಈ ಹಳೆಯ ಪ್ರಪಂಚದೊಂದಿಗೆ, ಈ ಸ್ಮಶಾನದೊಂದಿಗೆ ಮನಸ್ಸನ್ನು ಇಡಬಾರದು. ಶಾಂತಿಧಾಮ-ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಸ್ವಯಂನ್ನು ದೇವತೆಯಾಗಲು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಮನನ ಮಾಡುವ ವಿಧಿ ಹಾಗೂ ಮನನ ಶಕ್ತಿಯನ್ನು ಹೆಚ್ಚಿಸಿಕೊಳ್ಳುವ ಯುಕ್ತಿಗಳು |
ಇಂದು ರತ್ನಾಗಾರ ತಂದೆಯು ತನ್ನ ಅಮೂಲ್ಯ ರತ್ನಗಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ - ಪ್ರತಿಯೊಬ್ಬ ಶ್ರೇಷ್ಟ ಆತ್ಮನು ಎಷ್ಟು ಜ್ಞಾನ ರತ್ನಗಳನ್ನು ಜಮಾ ಮಾಡಿಕೊಂಡಿದ್ದೀರಿ ಅರ್ಥಾತ್ ಜೀವನದಲ್ಲಿ ಧಾರಣೆ ಮಡಿಕೊಂಡಿದ್ದೀರಿ? ಒಂದೊಂದು ಜ್ಞಾನ ರತ್ನವು ಪದುಮಗಳಿಗಿಂತಲೂ ಹೆಚ್ಚು ಅಮೂಲ್ಯವಾಗಿದೆ ಅಂದಾಗ ಆಲೋಚಿಸಿ, ಆದಿಯಿಂದ ಇಲ್ಲಿಯವರೆಗೆ ಎಷ್ಟು ಜ್ಞಾನ ರತ್ನಗಳು ಸಿಕ್ಕಿವೆ! ರತ್ನಾಗಾರ ತಂದೆಯು ಪ್ರತಿಯೊಬ್ಬ ಮಗುವಿನ ಬುದ್ಧಿರೂಪಿ ಜೋಳಿಗೆಯಲ್ಲಿ ಅನೇಕಾನೇಕ ರತ್ನಗಳನ್ನು ತುಂಬಿದ್ದೇವೆ. ಎಲ್ಲಾ ಮಕ್ಕಳಿಗೂ ಒಂದೇ ಬಾರಿ, ಒಂದೇ ತರಹವಾಗಿ ಜ್ಞಾನ ರತ್ನಗಳನ್ನು ಕೊಟ್ಟಿದ್ದೇವೆ ಆದರೆ ಈ ಜ್ಞಾನ ರತ್ನಗಳನ್ನು ಸ್ವಯಂನ ಪ್ರತಿ ಹಾಗೂ ಅನ್ಯ ಆತ್ಮಗಳ ಪ್ರತಿ ಎಷ್ಟು ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ಈ ಜ್ಞಾನ ರತ್ನಗಳು ಹೆಚ್ಚುತ್ತಾ ಹೋಗುತ್ತವೆ. ಬಾಪ್ದಾದಾ ನೋಡುತ್ತಿದ್ದೇವೆ, ತಂದೆಯಂತೂ ಎಲ್ಲರಿಗೂ ಸಮಾನವಾಗಿ ಕೊಟ್ಟರು. ಆದರೆ ಕೆಲವು ಮಕ್ಕಳು ರತ್ನಗಳನ್ನು ಹೆಚ್ಚಿಸಿಕೊಂಡಿದ್ದಾರೆ. ಇನ್ನೂ ಕೆಲವರು ರತ್ನಗಳನ್ನು ಹೆಚ್ಚಿಸಿಕೊಂಡಿಲ್ಲ. ಕೆಲವರು ಸಂಪನ್ನರಾಗಿದ್ದಾರೆ, ಕೆಲವರು ಮುಗಿಯದಂತೆ ಸಂಪನ್ನರಾಗಿದ್ದಾರೆ. ಇನ್ನೂ ಕೆಲವರು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸಿದ್ದಾರೆ. ಮತ್ತೆ ಕೆಲವರು ಸದಾ ಕಾರ್ಯದಲ್ಲಿ ತೊಡಗಿಸಿ ಒಂದಕ್ಕೆ ಪದಮಾಗುಣದಷ್ಟು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಕೆಲವರು ಎಷ್ಟು ಕಾರ್ಯದಲ್ಲಿ ತೊಡಗಿಸಬೇಕೋ ಅಷ್ಟು ತೊಡಗಿಸುತ್ತಿಲ್ಲ. ಆದ್ದರಿಂದ ರತ್ನಗಳ ಬೆಲೆಯನ್ನು ಎಷ್ಟು ತಿಳಿದುಕೊಳ್ಳಬೇಕೋ ಅಷ್ಟು ತಿಳಿದುಕೊಳ್ಳುತ್ತಿಲ್ಲ. ಎಷ್ಟು ಸಿಕ್ಕಿದೆಯೋ ಅಷ್ಟನ್ನು ಬುದ್ಧಿಯಲ್ಲಿ ಧಾರಣೆಯಂತೂ ಮಾಡಿಕೊಂಡರು ಆದರೆ ಕಾರ್ಯದಲ್ಲಿ ತರುವುದರಿಂದ ಯಾವ ಸುಖ, ಶಾಂತಿ, ಶಕ್ತಿ, ಖುಷಿ ಮತ್ತು ನಿರ್ವಿಘ್ನ ಸ್ಥಿತಿಯ ಪ್ರಾಪ್ತಿಯ ಅನುಭೂತಿಯಾಗಬೇಕೋ ಅದು ಆಗುತ್ತಿಲ್ಲ. ಇದಕ್ಕೆ ಕಾರಣ ಮನನ ಶಕ್ತಿಯ ಕೊರತೆಯಾಗಿದೆ ಏಕೆಂದರೆ ಮನನ ಮಾಡುವುದು ಅರ್ಥಾತ್ ಜೀವನದಲ್ಲಿ ಸಮಾವೇಶ ಮಾಡಿಕೊಳ್ಳುವುದು, ಧಾರಣೆ ಮಾಡಿಕೊಳ್ಳುವುದಾಗಿದೆ. ಮನನ ಮಾಡದೇ ಇರುವುದೆಂದರೆ ಕೇವಲ ಬುದ್ಧಿಯವರೆಗೆ ಮಾತ್ರ ಧಾರಣೆ ಮಾಡಿಕೊಳ್ಳುವುದಾಗಿದೆ. ಮೊದಲನೆಯವರು ಜೀವನದ ಪ್ರತೀ ಕಾರ್ಯದಲ್ಲಿ, ಪ್ರತೀ ಕರ್ಮದಲ್ಲಿ ತನ್ನ ಪ್ರತಿ ಅಥವಾ ಅನ್ಯರ ಪ್ರತಿ ತೊಡಗಿಸುತ್ತಾರೆ ಮತ್ತು ಎರಡನೆಯವರು ಕೇವಲ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳುತ್ತಾರೆ ಅರ್ಥಾತ್ ಧಾರಣೆ ಮಾಡಿಕೊಳ್ಳುತ್ತಾರೆ. |
ಹೇಗೆ ಯಾವುದೇ ಸ್ಥೂಲ ಖಜಾನೆಯನ್ನು ಕೇವಲ ಜೇಬಿನಲ್ಲಿ ಅಥವಾ ಲಾಕರ್ನಲ್ಲಿ ಇಟ್ಟುಕೊಂಡು ಸದಾ ಕಾರ್ಯದಲ್ಲಿ ತೊಡಗಿಸಲಿಲ್ಲವೆಂದರೆ ಅದರ ಖುಷಿಯ ಪ್ರಾಪ್ತಿಯಾಗುವುದಿಲ್ಲ. ಕೇವಲ ನನ್ನ ಬಳಿ ಇದೆಯೆಂಬ ಹೃದಯದ ಭರವಸೆಯಿರುತ್ತದೆ. ಅದು ವೃದ್ಧಿಯಾಗುವುದೂ ಇಲ್ಲ, ಅನುಭೂತಿಯೂ ಆಗುವುದಿಲ್ಲ. ಅದೇರೀತಿ ಜ್ಞಾನ ರತ್ನಗಳನ್ನು ಕೇವಲ ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡಿರಿ, ನೆನಪಿಟ್ಟುಕೊಂಡಿರಿ, ಹೌದು ಈ ವಿಚಾರವು ಬಹಳ ಚೆನ್ನಾಗಿದೆಯೆಂದು ವರ್ಣನೆ ಮಾಡಿದಿರೆಂದರೆ ಅದು ಸ್ವಲ್ಪ ಸಮಯಕ್ಕಾಗಿ ಆ ಒಳ್ಳೆಯ ವಿಚಾರದ ನಶೆಯಿರುತ್ತದೆ. ಆದರೆ ಜೀವನದಲ್ಲಿ ಪ್ರತೀ ಕರ್ಮದಲ್ಲಿ ಆ ಜ್ಞಾನ ರತ್ನಗಳನ್ನು ತರಬೇಕಾಗಿದೆ ಏಕೆಂದರೆ ಜ್ಞಾನವು ರತ್ನವೂ ಆಗಿದೆ, ಜ್ಞಾನವು ಪ್ರಕಾಶತೆಯೂ ಆಗಿದೆ, ಶಕ್ತಿಯೂ ಆಗಿದೆ. ಆದ್ದರಿಂದ ಒಂದುವೇಳೆ ಇದೇ ವಿಧಿಯಿಂದ ಕರ್ಮದಲ್ಲಿ ತರಲಿಲ್ಲವೆಂದರೆ ಅದು ವೃದ್ಧಿಯಾಗುವುದಿಲ್ಲ ಹಾಗೂ ಅನುಭೂತಿಯೂ ಆಗುವುದಿಲ್ಲ. ಜ್ಞಾನವು ವಿದ್ಯೆಯೂ ಆಗಿದೆ, ಜ್ಞಾನವು ಯುದ್ಧದ ಶ್ರೇಷ್ಠ ಶಸ್ತ್ರವೂ ಆಗಿದೆ. ಇದು ಜ್ಞಾನದ ಬೆಲೆಯಾಗಿದೆ, ಬೆಲೆಯನ್ನು ಅರಿತುಕೊಳ್ಳುವುದೆಂದರೆ ಕಾರ್ಯದಲ್ಲಿ ತೊಡಗಿಸುವುದು ಮತ್ತು ಎಷ್ಟೆಷ್ಟು ಕಾರ್ಯದಲ್ಲಿ ತೊಡಗಿಸುವಿರೋ ಅಷ್ಟು ಶಕ್ತಿಯ ಅನುಭವ ಮಾಡುತ್ತಾ ಹೋಗುವಿರಿ. ಹೇಗೆ ಶಸ್ತ್ರವನ್ನು ಸಮಯ ಪ್ರಮಾಣ ಉಪಯೋಗಿಸಲಿಲ್ಲವೆಂದರೆ ಆ ಶಸ್ತ್ರವು ವ್ಯರ್ಥವಾಗಿ ಬಿಡುತ್ತದೆ ಅರ್ಥಾತ್ ಅದಕ್ಕೆ ಎಷ್ಟು ಬೆಲೆಯಿರಬೇಕೋ ಅಷ್ಟು ಇರುವುದಿಲ್ಲ. ಜ್ಞಾನವೂ ಸಹ ಶಸ್ತ್ರವಾಗಿದೆ. ಒಂದುವೇಳೆ ಮಾಯಾಜೀತರಾಗುವ ಸಮಯದಲ್ಲಿ ಶಸ್ತ್ರವನ್ನು ಕಾರ್ಯದಲ್ಲಿ ತೊಡಗಿಸಲಿಲ್ಲವೆಂದರೆ ಅದಕ್ಕೆ ಯಾವ ಬೆಲೆಯಿದೆಯೋ ಅದನ್ನು ಕಡಿಮೆ ಮಾಡಿಬಿಟ್ಟಿರಿ ಏಕೆಂದರೆ ಲಾಭವನ್ನು ತೆಗೆದುಕೊಳ್ಳಲಿಲ್ಲ. ಲಾಭ ತೆಗೆದುಕೊಳ್ಳುವುದೆಂದರೆ ಅದರ ಪ್ರತಿ ಬೆಲೆಯಿಡುವುದು. ಜ್ಞಾನರತ್ನಗಳು ಎಲ್ಲರ ಬಳಿಯಿದೆ ಏಕೆಂದರೆ ಅಧಿಕಾರಿಯಾಗಿದ್ದೀರಿ ಆದರೆ ಅದರಿಂದ ಸಂಪನ್ನರಾಗಿರುವುದರಲ್ಲಿ ನಂಬರ್ವಾರ್ ಆಗಿದ್ದೀರಿ. ಮೂಲ ಕಾರಣವನ್ನು ತಿಳಿಸಿದೆವಲ್ಲವೆ – ಮನನ ಶಕ್ತಿಯ ಕೊರತೆಯಿದೆ. |
ಮನನ ಶಕ್ತಿಯು ತಂದೆಯ ಖಜಾನೆಯನ್ನು ತನ್ನ ಖಜಾನೆಯೆಂದು ಅನುಭವ ಮಾಡಿಸುವ ಆಧಾರವಾಗಿದೆ. ಹೇಗೆ ಸ್ಥೂಲ ಭೋಜನವು ಜೀರ್ಣವಾದಾಗ ಅದು ರಕ್ತವಾಗುತ್ತದೆ ಏಕೆಂದರೆ ಭೋಜನವೇ ಬೇರೆಯಾಗಿದೆ. ಅದನ್ನು ಯಾವಾಗ ಜೀರ್ಣ ಮಾಡಿಕೊಳ್ಳುತ್ತೀರೋ ಆಗ ಅದು ರಕ್ತದ ರೂಪದಲ್ಲಿ ತನ್ನದಾಗಿ ಬಿಡುತ್ತದೆ. ಹಾಗೆಯೇ ಮನನ ಶಕ್ತಿಯಿಂದ ತಂದೆಯ ಖಜಾನೆಯೇ ನನ್ನ ಖಜಾನೆ, ಇದು ನನ್ನ ಅಧಿಕಾರ, ತನ್ನ ಖಜಾನೆಯೆಂಬ ಅನುಭವವಾಗುತ್ತದೆ. ಬಾಪ್ದಾದಾ ಮೊದಲಿನಿಂದಲೂ ತಿಳಿಸುತ್ತಾ ಬಂದಿದ್ದೇವೆ - ತನ್ನಲ್ಲಿ ತಾನು ಚಿಂತನೆ ಮಾಡಿದಾಗ ನಶೆ ಬರುವುದು ಅರ್ಥಾತ್ ತಂದೆಯ ಖಜಾನೆಯನ್ನು ಮನನ ಶಕ್ತಿಯಿಂದ ಕಾರ್ಯದಲ್ಲಿ ತೊಡಗಿಸಿ, ಪ್ರಾಪ್ತಿಗಳ ಅನುಭೂತಿ ಮಾಡಿ ಆಗ ನಶೆಯೇರುವುದು. ಕೇಳುವ ಸಮಯದಲ್ಲಿ ನಶೆಯಿರುವುದು ಆದರೆ ಸದಾ ಏಕೆ ಇರುವುದಿಲ್ಲ? ಇದಕ್ಕೆ ಕಾರಣವೇನೆಂದರೆ ಸದಾ ಮನನ ಶಕ್ತಿಯಿಂದ ತನ್ನದನ್ನಾಗಿ ಮಾಡಿಕೊಂಡಿಲ್ಲ. ಮನನಶಕ್ತಿ ಅರ್ಥಾತ್ ಸಾಗರದ ಆಳದಲ್ಲಿ ಹೋಗಿ ಅಂತರ್ಮುಖಿಯಾಗಿ ಪ್ರತಿಯೊಂದು ಜ್ಞಾನ ರತ್ನಗಳ ಗುಹ್ಯತೆಯಲ್ಲಿ ಹೋಗುವುದು. ಕೇವಲ ರಿಪೀಟ್ ಮಾಡುವುದಲ್ಲ ಆದರೆ ಪ್ರತಿಯೊಂದು ಮಾತಿನ ರಹಸ್ಯವೇನು ಮತ್ತು ತಂದೆಯ ಪ್ರತೀ ಮಾತನ್ನು ಯಾವ ಸಮಯ ಯಾವ ವಿಧಿಯಿಂದ ಕಾರ್ಯದಲ್ಲಿ ತೊಡಗಿಸಬೇಕು ಹಾಗೂ ಪ್ರತೀ ಮಾತನ್ನು ಅನ್ಯ ಆತ್ಮಗಳ ಪ್ರತಿ ಸೇವೆಯಲ್ಲಿ ಯಾವ ವಿಧಿಯಿಂದ ಕಾರ್ಯದಲ್ಲಿ ತೊಡಗಿಸಬೇಕು - ಈ ನಾಲ್ಕೂ ಮಾತುಗಳಲ್ಲಿ ಪ್ರತಿಯೊಂದು ಅಂಶವನ್ನು ಕೇಳಿ ಮನನ ಮಾಡಿ. ಜೊತೆ ಜೊತೆಗೆ ಮನನ ಮಾಡುತ್ತಾ ಪ್ರತ್ಯಕ್ಷದಲ್ಲಿ ಆ ರಹಸ್ಯದ ರಸದಲ್ಲಿ ಹೊರಟು ಹೋಗಿ ನಶೆಯ ಅನುಭೂತಿಯಲ್ಲಿ ಬನ್ನಿ. ಮಾಯೆಯ ಭಿನ್ನ-ಭಿನ್ನ ವಿಘ್ನಗಳ ಸಮಯ ಹಾಗೂ ಪ್ರಕೃತಿಯ ಭಿನ್ನ-ಭಿನ್ನ ಪರಿಸ್ಥಿತಿಗಳ ಸಮಯದಲ್ಲಿ ಕಾರ್ಯದಲ್ಲಿ ತೊಡಗಿಸಿ ನೋಡಿ - ಈ ಪರಿಸ್ಥಿತಿಯ ಪ್ರಮಾಣ ಅಥವಾ ವಿಘ್ನದ ಪ್ರಮಾಣ ಈ ಜ್ಞಾನರತ್ನವು ಮಾಯಾಜೀತರನ್ನಾಗಿ ಮಾಡಬಲ್ಲದು ಅಥವಾ ಮಾಡುವಂತದ್ದಾಗಿದೆ ಎಂದು ಯಾವ ಮನನ ಮಾಡಿದೆನೋ ಅದು ಪ್ರತ್ಯಕ್ಷದಲ್ಲಿ ಕಾರ್ಯ ಮಾಡಿತೇ ಅರ್ಥಾತ್ ಮಾಯಾಜೀತನಾದೆನೇ? ಅಥವಾ ಮಾಯಾಜೀತ ಆಗುತ್ತೇನೆಂದು ಯೋಚಿಸಿದ್ದೆನು ಆದರೆ ಪರಿಶ್ರಮ ಪಡಬೇಕಾಯಿತು ಅಥವಾ ಸಮಯ ವ್ಯರ್ಥವಾಯಿತೇ? ಇದರಿಂದ ಸಿದ್ಧವಾಗುತ್ತದೆ - ವಿಧಿಯು ಯಥಾರ್ಥವಾಗಿರಲಿಲ್ಲ ಆದ್ದರಿಂದ ಸಿದ್ಧಿಯು ಸಿಗಲಿಲ್ಲ. ಉಪಯೋಗಿಸುವ ವಿಧಿಯೂ ಬೇಕು, ಅಭ್ಯಾಸವೂ ಬೇಕು. ಹೇಗೆ ವಿಜ್ಞಾನಿಗಳೂ ಸಹ ಬಹಳ ಶಕ್ತಿಶಾಲಿ ಬಾಂಬುಗಳನ್ನು ತೆಗೆದುಕೊಂಡು ಹೋಗುತ್ತಾರೆ, ಇದರಿಂದ ನಾವೀಗ ಜಯ ಪಡೆಯುತ್ತೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಉಪಯೋಗಿಸುವವರಿಗೆ ಅದನ್ನು ಉಪಯೋಗಿಸುವ ವಿಧಿಯು ಬರಲಿಲ್ಲವೆಂದರೆ ಶಕ್ತಿಶಾಲಿ ಬಾಂಬುಗಳಾಗಿದ್ದರೂ ಸಹ ಅದು ಎಲ್ಲೆಲ್ಲೊ ಇಂತಹ ಸ್ಥಾನದಲ್ಲಿ ಹೋಗಿ ಬೀಳುತ್ತದೆ ಅದು ವ್ಯರ್ಥವಾಗಿ ಹೊರಟು ಹೋಗುತ್ತದೆ. ಕಾರಣವೇನಾಯಿತು? ಉಪಯೋಗಿಸುವ ವಿಧಿಯು ಸರಿಯಿಲ್ಲ. ಹೀಗೆ ಒಂದೊಂದು ಜ್ಞಾನ ರತ್ನವು ಅತೀ ಅಮೂಲ್ಯವಾಗಿದೆ. ಜ್ಞಾನ ರತ್ನ ಅಥವಾ ಜ್ಞಾನದ ಶಕ್ತಿಯ ಮುಂದೆ ಪರಿಸ್ಥಿತಿ ಹಾಗೂ ವಿಘ್ನವು ನಿಲ್ಲಲು ಸಾಧ್ಯವಿಲ್ಲ ಆದರೆ ಒಂದುವೇಳೆ ವಿಜಯವಾಗಲಿಲ್ಲವೆಂದರೆ ತಿಳಿದುಕೊಳ್ಳಿ, ಅದನ್ನು ಉಪಯೋಗಿಸುವ ವಿಧಿಯು ಬರುತ್ತಿಲ್ಲ. ಎರಡನೆಯ ಮಾತೇನೆಂದರೆ ಮನನ ಶಕ್ತಿಯ ಅಭ್ಯಾಸವನ್ನು ಸದಾ ಮಾಡದೇ ಇರುವ ಕಾರಣ ಸಮಯದಲ್ಲಿ ಅಭ್ಯಾಸವಿಲ್ಲದೆ ಆಕಸ್ಮಿಕವಾಗಿ ಕಾರ್ಯದಲ್ಲಿ ತೊಡಗಿಸುವ ಪ್ರಯತ್ನ ಮಾಡುತ್ತೀರಿ, ಆದ್ದರಿಂದ ಮೋಸ ಹೋಗುತ್ತೀರಿ. ಜ್ಞಾನವಂತೂ ಬುದ್ಧಿಯಲ್ಲಿ ಇದ್ದೇ ಇದೆ, ಸಮಯ ಬಂದಾಗ ಕಾರ್ಯದಲ್ಲಿ ತೊಡಗಿಸಿದರೆ ಆಯಿತೆಂದು ಆಲಸ್ಯವು ಬಂದು ಬಿಡುತ್ತದೆ ಆದರೆ ಸದಾಕಾಲದ ಅಭ್ಯಾಸ, ಬಹಳ ಕಾಲದ ಅಭ್ಯಾಸ ಬೇಕಾಗಿದೆ ಇಲ್ಲವಾದರೆ ಆ ಸಮಯದಲ್ಲಿ ಯೋಚಿಸುವವರಿಗೆ ಯಾವ ಬಿರುದು ಕೊಡುತ್ತಾರೆ? ಕುಂಭಕರ್ಣ. ಕುಂಭಕರ್ಣನು ಯಾವ ಆಲಸ್ಯ ಮಾಡಿದನು? ಬರಲಿ ಬಿಡು, ಬಂದಾಗ ಜಯ ಗಳಿಸುತ್ತೇನೆ ಎಂದೇ ಯೋಚಿಸಿದನಲ್ಲವೆ. ಸಮಯ ಬಂದಾಗ ಆಗಿ ಬಿಡುವುದೆಂದು ಯೋಚಿಸುವ ಈ ಆಲಸ್ಯವೇ ಮೋಸಗೊಳಿಸುತ್ತದೆ. ಆದ್ದರಿಂದ ಪ್ರತಿನಿತ್ಯವೂ ಮನನ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತಾ ಹೋಗಿ. |
ರಿವೈಜ್ ಕೋರ್ಸ್ನಲ್ಲಿ ಅಥವಾ ಯಾವ ಅವ್ಯಕ್ತ ಮುರುಳಿಯನ್ನು ನಿತ್ಯವೂ ಕೇಳುತ್ತೀರೋ ಅದರಲ್ಲಿ ಮನನಶಕ್ತಿಯನ್ನು ಹೆಚ್ಚಿಸಿಕೊಳ್ಳಲು ನಿತ್ಯವೂ ಯಾವುದಾದರೊಂದು ವಿಶೇಷ ಮಾತನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಿ ಮತ್ತು ಯಾವ ನಾಲ್ಕು ಮಾತುಗಳನ್ನು ತಿಳಿಸಿದೆವೋ ಆ ವಿಧಿಯಿಂದ ಅಭ್ಯಾಸ ಮಾಡಿ. ನಡೆಯುತ್ತಾ-ತಿರುಗಾಡುತ್ತಾ ಪ್ರತೀ ಕರ್ಮ ಮಾಡುತ್ತಾ, ಸ್ಥೂಲ ಕರ್ಮವನ್ನೇ ಮಾಡಿ ಅಥವಾ ಯಾವುದೇ ಸೇವೆ ಮಾಡಿ ಆದರೆ ಇಡೀ ದಿನ ಮನನ ನಡೆಯುತ್ತಿರಲಿ. ವ್ಯಾಪಾರವನ್ನೇ ಮಾಡುತ್ತೀರೋ ಅಥವಾ ಅಂಗಡಿಯ ಕೆಲಸ ಮಾಡುತ್ತೀರೋ ಅಥವಾ ಸೇವಾಕೇಂದ್ರದಲ್ಲಿ ಸೇವೆ ಮಾಡುತ್ತೀರೋ ಆದರೆ ಯಾವ ಸಮಯದಲ್ಲಿ ಬುದ್ಧಿಯು ಸ್ವಲ್ಪ ಬಿಡುವಾದರೆ ಸಾಕು ತನ್ನ ಮನನಶಕ್ತಿಯ ಅಭ್ಯಾಸವನ್ನು ಮತ್ತೆ-ಮತ್ತೆ ಮಾಡಿ. ಕೆಲವು ಇಂತಹ ಕೆಲಸಗಳಿರುತ್ತವೆ, ಕರ್ಮ ಮಾಡುತ್ತಿದ್ದೀರಿ ಆದರೆ ಜೊತೆ ಜೊತೆಗೆ ಬೇರೆಯದನ್ನೂ ಆಲೋಚಿಸಬಹುದು. ಅಲ್ಪ ಸ್ವಲ್ಪ ಸಮಯವಿರುತ್ತದೆ, ಅದರಲ್ಲಿ ಇಂತಹ ಕಾರ್ಯವಿರುತ್ತದೆ, ಅದರಲ್ಲಿ ಬುದ್ಧಿಯ ಪೂರ್ಣ ಗಮನ ಕೊಡಬೇಕಾಗುತ್ತದೆ. ಇಲ್ಲವಾದರೆ ಬುದ್ಧಿಯು ಎರಡೂ ಕಡೆ ನಡೆಯುತ್ತಿರುತ್ತದೆ. ಇಂತಹ ಸಮಯದಲ್ಲಿ ತಮ್ಮ ದಿನಚರಿಯಲ್ಲಿ ನೋಟ್ ಮಾಡಿಕೊಳ್ಳಿ ಆಗ ಮಧ್ಯ-ಮಧ್ಯದಲ್ಲಿ ಬಹಳ ಸಮಯ ಸಿಗುತ್ತದೆ. ಮನನ ಶಕ್ತಿಗಾಗಿ ವಿಶೇಷ ಸಮಯ ಸಿಗಲಿ ಆಗ ಅಭ್ಯಾಸ ಮಾಡುತ್ತೇವೆ ಎಂಬುದಲ್ಲ. ನಡೆಯುತ್ತಾ-ತಿರುಗಾಡುತ್ತಲೂ ಮಾಡಬಹುದಾಗಿದೆ. ಒಂದುವೇಳೆ ಏಕಾಂತದ ಸಮಯ ಸಿಕ್ಕಿದರೆ ಬಹಳ ಒಳ್ಳೆಯದು. ಇನ್ನೂ ಆಳದಲ್ಲಿ ಹೋಗಿ ಪ್ರತಿಯೊಂದು ಮಾತಿನ ಸ್ಪಷ್ಟೀಕರಣದಲ್ಲಿ ಹೋಗಿ, ವಿಸ್ತಾರದಲ್ಲಿ ತನ್ನಿ ಆಗ ಆನಂದವಾಗುವುದು ಆದರೆ ಮೊದಲು ಆ ಮಾತಿನ ನಶೆಯ ಸ್ಥಿತಿಯಲ್ಲಿ ಸ್ಥಿತರಾಗಿ ಮಾಡಿರಿ ಆಗ ಬೇಸರವಾಗುವುದಿಲ್ಲ. ಇಲ್ಲದಿದ್ದರೆ ಕೇವಲ ರಿಪೀಟ್ ಮಾಡಿಕೊಳ್ಳುತ್ತಾರೆ ಮತ್ತೆ ಇದಂತೂ ಆಗಿ ಹೋಯಿತು, ಈಗ ಏನು ಮಾಡುವುದೆಂದು ಹೇಳುತ್ತಾರೆ. |
ಹೇಗೆ ಕೆಲವರು ಸ್ವದರ್ಶನ ಚಕ್ರವನ್ನು ತಿರುಗಿಸುವ ಮಾತಿನಲ್ಲಿ ಚಕ್ರವನ್ನೇನು ತಿರುಗಿಸುವುದು, ಐದು ನಿಮಿಷಗಳಲ್ಲಿ ಚಕ್ರವು ಮುಕ್ತಾಯವಾಗಿ ಬಿಡುತ್ತದೆ ಎಂದು ನಗಿಸುತ್ತಾರಲ್ಲವೆ. ಸ್ಥಿತಿಯ ಅನುಭವ ಮಾಡುವುದು ಬರುವುದಿಲ್ಲ ಆದರೆ ಕೇವಲ ರಿಪೀಟ್ ಮಾಡಿಕೊಳ್ಳುತ್ತಾರೆ - ಸತ್ಯ, ತ್ರೇತಾ, ದ್ವಾಪರ, ಕಲಿಯುಗ ಇಷ್ಟು ಜನ್ಮಗಳು, ಇಷ್ಟು ಆಯಸ್ಸು, ಇಷ್ಟು ಸಮಯ... ಅಷ್ಟೆ ಆಗಿ ಹೋಯಿತು. ಆದರೆ ಸ್ವದರ್ಶನ ಚಕ್ರಧಾರಿಗಳಾಗುವುದು ಎಂದರೆ ಜ್ಞಾನಪೂರ್ಣ, ಶಕ್ತಿಶಾಲಿ ಸ್ಥಿತಿಯ ಅನುಭವ ಮಾಡುವುದು. ಪ್ರತಿಯೊಂದು ಮಾತಿನ ನಶೆಯಲ್ಲಿ ಸ್ಥಿತರಾಗಿರುವುದು, ರಹಸ್ಯದಲ್ಲಿ ರಹಸ್ಯಯುಕ್ತರಾಗುವುದು, ಇಂತಹ ಅಭ್ಯಾಸವನ್ನೂ ಪ್ರತೀ ಮಾತಿನಲ್ಲಿ ಮಾಡಿರಿ. ಇದಂತೂ ಒಂದು ಸ್ವದರ್ಶನ ಚಕ್ರದ ಮಾತನ್ನು ತಿಳಿಸಿದೆವು, ಇದೇರೀತಿ ಪ್ರತೀ ಜ್ಞಾನದ ಮಾತನ್ನು ಮನನ ಮಾಡಿ ಮತ್ತು ಮಧ್ಯ-ಮಧ್ಯದಲ್ಲಿ ಅಭ್ಯಾಸ ಮಾಡಿ. ಕೇವಲ ಅರ್ಧ ಗಂಟೆ ಮನನ ಮಾಡಿದೆವು, ಸಮಯ ಸಿಕ್ಕಿತು ಮತ್ತು ಬುದ್ಧಿಯು ಮನನದ ಅಭ್ಯಾಸದಲ್ಲಿ ಹೊರಟು ಹೋಯಿತೆಂದಲ್ಲ. ಮನನ ಶಕ್ತಿಯಿಂದ ಬುದ್ಧಿಯು ಬ್ಯುಸಿಯಾಗಿರುವುದು ಆಗ ಸ್ವತಹವಾಗಿ ಸಹಜವಾಗಿ ಮಾಯಾಜೀತರಾಗಿ ಬಿಡುತ್ತೀರಿ. ಬ್ಯುಸಿಯಾಗಿರುವುದನ್ನು ನೋಡಿ ಮಾಯೆಯು ತಾನೇ ದೂರ ಸರಿಯುತ್ತದೆ. ಮಾಯೆಯು ಬಂದಿತು ಮತ್ತೆ ಯುದ್ಧ ಮಾಡಿ ಓಡಿಸಿ ಒಮ್ಮೆ ಸೋಲು ಇನ್ನೊಮ್ಮೆ ಗೆಲುವು - ಇದೆಲ್ಲವೂ ಇರುವೆ ಮಾರ್ಗದ ಪುರುಷಾರ್ಥವಾಗಿದೆ. ಈಗಂತೂ ತೀವ್ರ ಪುರುಷಾರ್ಥ ಮಾಡುವ ಸಮಯ, ಹಾರುವ ಸಮಯವಾಗಿದೆ ಆದ್ದರಿಂದ ಮನನ ಶಕ್ತಿಯಿಂದ ಬುದ್ಧಿಯನ್ನು ಬ್ಯುಸಿಯಾಗಿಟ್ಟುಕೊಳ್ಳಿ. ಇದೇ ಮನನ ಶಕ್ತಿಯಿಂದ ನೆನಪಿನ ಶಕ್ತಿಯಲ್ಲಿ ಮಗ್ನರಾಗಿರುವ ಅನುಭವವು ಸಹಜವಾಗುವುದು. ಮನನ ಶಕ್ತಿಯು ಮಾಯಾಜೀತರು ಮತ್ತು ವ್ಯರ್ಥ ಸಂಕಲ್ಪಗಳಿಂದಲೂ ಮುಕ್ತರನ್ನಾಗಿ ಮಾಡುತ್ತದೆ. ಎಲ್ಲಿ ವ್ಯರ್ಥವಿಲ್ಲ, ವಿಘ್ನವಿಲ್ಲವೆಂದರೆ ಸಮರ್ಥ ಸ್ಥಿತಿ ಹಾಗೂ ಲಗನ್ನಿನಲ್ಲಿ ಮಗ್ನರಾಗಿರುವ ಸ್ಥಿತಿಯು ಸ್ವತಹವಾಗಿ ಆಗಿ ಬಿಡುತ್ತದೆ. |
ಬೀಜ ರೂಪ ಸ್ಥಿತಿ ಅಥವಾ ಶಕ್ತಿಶಾಲಿ ನೆನಪಿನ ಸ್ಥಿತಿಯು ಕಡಿಮೆಯಿರುತ್ತದೆ ಇಲ್ಲವೆ ಬಹಳ ಗಮನ ಕೊಟ್ಟ ನಂತರ ಅನುಭವವಾಗುತ್ತದೆ ಎಂದು ಕೆಲವರು ಯೋಚಿಸುತ್ತಾರೆ. ಇದಕ್ಕೆ ಕಾರಣವೇನೆಂದರೆ ಇದರ ಹಿಂದಿನ ಬಾರಿಯೂ ತಿಳಿಸಿದೆವು - ಎಲ್ಲಿಯೋ ಸೋರಿಕೆಯಿದೆ, ಬುದ್ಧಿಯ ಶಕ್ತಿಯು ವ್ಯರ್ಥದ ಕಡೆ ಹಂಚಲ್ಪಡುತ್ತಿದೆ. ಕೆಲವೊಮ್ಮೆ ವ್ಯರ್ಥ ಸಂಕಲ್ಪಗಳು ನಡೆಯುತ್ತವೆ, ಇನ್ನೂ ಕೆಲವೊಮ್ಮೆ ಸಾಧಾರಣ ಸಂಕಲ್ಪಗಳು ನಡೆಯುತ್ತವೆ, ಯಾವ ಕೆಲಸ ಮಾಡುತ್ತಿದ್ದೀರೋ ಅದರ ಸಂಕಲ್ಪದಲ್ಲಿಯೇ ಬುದ್ಧಿಯು ಬ್ಯುಸಿಯಾಗಿರುವುದಕ್ಕೆ ಸಾಧಾರಣ ಸಂಕಲ್ಪವೆಂದು ಹೇಳುತ್ತಾರೆ. ನೆನಪಿನ ಶಕ್ತಿ, ಅಥವಾ ಮನನಶಕ್ತಿ ಏನಿರಬೇಕೋ ಅದು ಇರುವುದಿಲ್ಲ ಮತ್ತು ತನ್ನನ್ನು ತಾನು ಇಂದು ಯಾವುದೇ ಪಾಪ ಕರ್ಮವಾಗಲಿಲ್ಲ, ವ್ಯರ್ಥವು ನಡೆಯಲಿಲ್ಲ, ಯಾರಿಗೂ ದುಃಖ ಕೊಡಲಿಲ್ಲವೆಂದು ಖುಷಿ ಪಡಿಸಿಕೊಳ್ಳುತ್ತಾರೆ ಅದರೆ ಸಮರ್ಥ ಸಂಕಲ್ಪ, ಸಮರ್ಥ ಸ್ಥಿತಿ, ಶಕ್ತಿಶಾಲಿ ನೆನಪು ಇದ್ದಿತೆ? ಒಂದುವೇಳೆ ಅದು ಇಲ್ಲವೆಂದರೆ ಇದಕ್ಕೆ ಸಾಧಾರಣ ಸಂಕಲ್ಪವೆಂದು ಹೇಳಲಾಗುತ್ತದೆ. ಕರ್ಮವನ್ನಂತೂ ಮಾಡಿದಿರಿ ಆದರೆ ಕರ್ಮ ಮತ್ತು ಯೋಗವು ಜೊತೆ ಜೊತೆಗೆ ಇರಲಿಲ್ಲವಲ್ಲವೆ? ಕರ್ಮ ಕರ್ತರಂತೂ ಆದಿರಿ ಆದರೆ ಕರ್ಮಯೋಗಿಗಳಾಗಲಿಲ್ಲ. ಆದ್ದರಿಂದ ಕರ್ಮ ಮಾಡುತ್ತಲೂ ಅಥವಾ ಮನನ ಶಕ್ತಿ ಇಲ್ಲವೆ ಮಗ್ನಸ್ಥಿತಿಯ ಶಕ್ತಿ - ಇವೆರಡರಲ್ಲಿ ಒಂದು ಅನುಭೂತಿಯು ಸದಾ ಇರಬೇಕು. ಇವೆರಡೂ ಸ್ಥಿತಿಗಳು ಶಕ್ತಿಶಾಲಿ ಸೇವೆ ಮಾಡಿಸುವ ಆಧಾರವಾಗಿದೆ. ಮನನ ಮಾಡುವವರು ಅಭ್ಯಾಸವಿರುವ ಕಾರಣ ಯಾವ ಸಮಯದಲ್ಲಿ ಯಾವ ಸ್ಥಿತಿಯನ್ನು ಮಾಡಿಕೊಳ್ಳಬೇಕೋ ಅದನ್ನು ಮಾಡಿಕೊಳ್ಳಬಲ್ಲರು. ಬುದ್ಧಿಯೋಗವು ಸ್ಪಷ್ಟವಾಗಿರುವ ಕಾರಣ ಸೋರಿಕೆಯು ನಿಂತು ಹೋಗುತ್ತದೆ ಮತ್ತು ಯಾವ ಸಮಯದಲ್ಲಿ ಭಲೆ ಬೀಜರೂಪ ಸ್ಥಿತಿಯಿರಬಹುದು ಅಥವಾ ಫರಿಶ್ತಾ ರೂಪವಿರಬಹುದು, ಯಾವ ಅನುಭೂತಿ ಮಾಡಬೇಕೋ ಅದನ್ನು ಸಹಜವಾಗಿ ಮಾಡುತ್ತಾರೆ ಏಕೆಂದರೆ ಜ್ಞಾನದ ಸ್ಮೃತಿಯಿದ್ದಾಗ ಜ್ಞಾನದ ಸ್ಮರಣೆಯಿಂದ ಜ್ಞಾನದಾತನು ಸ್ವತಹ ನೆನಪಿರುತ್ತಾರೆ ಅಂದಮೇಲೆ ಹೇಗೆ ಮನನ ಮಾಡಬೇಕೆಂದು ತಿಳಿಯಿತೆ? ಮನನ ಶಕ್ತಿಯ ಬಗ್ಗೆ ಮತ್ತೆಂದಾದರೂ ತಿಳಿಸುತ್ತೇವೆಂದು ಹೇಳಿದ್ದೇವಲ್ಲವೆ. ಆದ್ದರಿಂದ ಇಂದು ಮನನ ಮಾಡುವ ವಿಧಿಯನ್ನು ತಿಳಿಸಿದೆವು. ಮಾಯೆಯ ವಿಘ್ನಗಳಿಂದ ಸದಾ ವಿಜಯಿಗಳಾಗುವುದು ಹಾಗೂ ಸದಾ ಸೇವೆಯಲ್ಲಿ ಸಫಲತೆಯ ಅನುಭವ ಮಾಡುವ ಆಧಾರವು ಮನನಶಕ್ತಿಯಾಗಿದೆ. ತಿಳಿಯಿತೆ? ಒಳ್ಳೆಯದು. |
ಸರ್ವ ಜ್ಞಾನ ಸಾಗರನ ಜ್ಞಾನಿ ಆತ್ಮ ಮಕ್ಕಳಿಗೆ, ಸದಾ ಮನನ ಶಕ್ತಿಯ ಮೂಲಕ ಸಹಜವಾಗಿ ಮಾಯಾಜೀತರಾಗುವಂತಹ ಶ್ರೇಷ್ಠ ಆತ್ಮರಿಗೆ, ಸದಾ ಮನನ ಶಕ್ತಿಯ ಅಭ್ಯಾಸವನ್ನು ಹೆಚ್ಚಿಸಿಕೊಳ್ಳುವಂತಹ, ಮನನದಿಂದ ಮಗ್ನ ಸ್ಥಿತಿಯ ಅನುಭವ ಮಾಡುವಂತಹ, ಸದಾ ಜ್ಞಾನ ರತ್ನಗಳ ಮೌಲ್ಯವನ್ನು ಅರಿತುಕೊಳ್ಳುವಂತಹ, ಸದಾ ಪ್ರತೀ ಕರ್ಮದಲ್ಲಿ ಜ್ಞಾನದ ಶಕ್ತಿಯನ್ನು ಕಾರ್ಯದಲ್ಲಿ ತರುವಂತಹ ಸದಾ ಶ್ರೇಷ್ಠ ಸ್ಥಿತಿಯಲ್ಲಿರುವ ವಿಶೇಷ ಹಾಗೂ ಅಮೂಲ್ಯ ರತ್ನಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಪಾರ್ಟಿಯೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ: |
ಸ್ವಯಂನ್ನು ತೀವ್ರ ಪುರುಷಾರ್ಥಿ ಆತ್ಮರೆಂದು ಅನುಭವ ಮಾಡುವಿರಾ? ಏಕೆಂದರೆ ಸಮಯವು ಬಹಳ ತೀವ್ರ ಗತಿಯಿಂದ ಸಾಗುತ್ತಿದೆ. ಹೇಗೆ ಸಮಯವು ಮುಂದೆ ಸಾಗುತ್ತಿದೆಯೋ, ಅದೇ ರೀತಿ ಸಮಯದಲ್ಲಿ ಗುರಿಗೆ ತಲುಪುವವರು ಯಾವ ಗತಿಯಿಂದ ನಡೆಯಬೇಕಾಗುತ್ತದೆ? ಸಮಯವು ಕಡಿಮೆಯಿದೆ ಮತ್ತು ಹೆಚ್ಚು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ. ಅಂದಮೇಲೆ ಸ್ವಲ್ಪ ಸಮಯದಲ್ಲಿ ಹೆಚ್ಚು ಪ್ರಾಪ್ತಿ ಮಾಡಿಕೊಳ್ಳಬೇಕೆಂದರೆ, ತೀವ್ರಗೊಳಿಸಬೇಕಾಗುತ್ತದೆ. ಒಂದುವೇಳೆ ಸಮಯವು ತೀವ್ರ ಗತಿಯಲ್ಲಿದೆ ಮತ್ತು ತಮ್ಮ ಗತಿಯು ತೀವ್ರವಾಗಿಲ್ಲದಿದ್ದರೆ ಸಮಯ ಅರ್ಥಾತ್ ತಮ್ಮ ರಚನೆಯು ತಾವು ರಚೈತನಿಗಿಂತಲೂ ತೀವ್ರವಾಯಿತು. ರಚೈತನಿಗಿಂತ ರಚನೆಯು ತೀವ್ರವಾಗಿ ಸಾಗುತ್ತದೆಯೆಂದರೆ, ಅದು ಒಳ್ಳೆಯದೆ ಎನ್ನುವಿರಾ? ರಚನೆಗಿಂತಲೂ ರಚೈತನು ಮುಂದೆ ಇರಬೇಕು. ಸದಾ ತೀವ್ರ ಪುರುಷಾರ್ಥಿ ಆತ್ಮರಾಗಿದ್ದು ಮುಂದುವರೆಯುವ ಸಮಯವಾಗಿದೆ. ಇದರಲ್ಲಿ ಏನಾದರೂ ಮುಂದುವರೆಯುತ್ತಾ ಸೈಡ್ ಸೀನ್ನ್ನೂ ನೋಡಬಹುದು, ಇದರಿಂದ ನಿಲ್ಲುವವರು ಸರಿಯಾದ ಸಮಯದಲ್ಲಿ ತಲುಪಲು ಸಾಧ್ಯವಾಗುವುದಿಲ್ಲ. ಮಾಯೆಯ ಯಾವುದೇ ಆಕರ್ಷಣೆಯೂ ಸಹ ಸೈಡ್ ಸೀನ್ ಆಗಿದೆ. ಸೈಡ್ ಸೀನ್ನಲ್ಲಿ ನಿಲ್ಲುವವರು ಗುರಿಯಲ್ಲಿ ಹೇಗೆ ತಲುಪುತ್ತಾರೆ? ಆದ್ದರಿಂದ ಸದಾ ತೀವ್ರ ಪುರುಷಾರ್ಥಿಗಳಾಗಿರುತ್ತಾ ಮುಂದುವರೆಯುತ್ತಾ ಸಾಗಬೇಕಾಗಿದೆ. ಈ ರೀತಿಯಾಗಿಯೂ ತಿಳಿಯಬಾರದು - ಸಮಯದಲ್ಲಿ ತಲುಪಿ ಬಿಡುತ್ತೇನೆ, ಈಗಂತು ಇನ್ನೂ ಸಮಯವಿದೆ. ಈ ರೀತಿ ಯೋಚಿಸುತ್ತಾ ನಿಧಾನವಾಗಿ ನಡೆಯುತ್ತಿದ್ದರೆ, ಸಮಯದಲ್ಲಿ ಮೋಸವಾಗಿ ಬಿಡುತ್ತದೆ. ಬಹಳ ಕಾಲದ ತೀವ್ರ ಪುರುಷಾರ್ಥದ ಸಂಸ್ಕಾರವು ಅಂತಿಮ ಸಮಯದಲ್ಲಿಯೂ ತೀವ್ರ ಪುರುಷಾರ್ಥದ ಅನುಭವ ಮಾಡಿಸುತ್ತದೆ. ಅಂದಾಗ ಸದಾ ತೀವ್ರ ಪುರುಷಾರ್ಥಿಗಳಾಗಿರಿ. ಕೆಲವೊಮ್ಮೆ ತೀವ್ರಗತಿ, ಕೆಲವೊಮ್ಮೆ ಬಲಹೀನರಾಗಿ ಇರಬಾರದು. ಯಾವುದಾದರೂ ಚಿಕ್ಕ ಮಾತಿನಿಂದಲೂ ಬಲಹೀನ ಆಗುವಂತೆಯೂ ಆಗಬಾರದು. ಇಂತಹವರಿಗೆ ತೀವ್ರ ಪುರುಷಾರ್ಥಿಗಳೆಂದು ಹೇಳುವುದಿಲ್ಲ. ತೀವ್ರ ಪುರುಷಾರ್ಥಿಗಳೆಂದಿಗೂ ನಿಲ್ಲುವುದಿಲ್ಲ, ಹಾರುತ್ತಿರುತ್ತಾರೆ. ಆದ್ದರಿಂದ ಹಾರುವ ಪಕ್ಷಿಯಾಗಿರುತ್ತಾ ಹಾರುವ ಕಲೆಯ ಅನುಭವ ಮಾಡುತ್ತಾ ಸಾಗಬೇಕಾಗಿದೆ. ಒಬ್ಬರು ಇನ್ನೊಬ್ಬರಿಗೂ ಸಹ ಸಹಯೋಗವನ್ನು ಕೊಡುತ್ತಾ ತೀವ್ರ ಪುರುಷಾರ್ಥಿಗಳನ್ನಾಗಿ ಮಾಡುತ್ತಾ ಸಾಗಿರಿ. ಅನ್ಯರ ಸೇವೆಯನ್ನೆಷ್ಟು ಮಾಡುವಿರಿ ಅಷ್ಟು ಸ್ವಯಂನ ಒಲವು -ಉತ್ಸಾಹವು ಹೆಚ್ಚಾಗುತ್ತಾ ಇರುತ್ತದೆ. |
ವಿದಾಯಿಯ ಸಮಯದಲ್ಲಿ (ದಾದಿ ಜಾನಕಿಜೀ ವಿದೇಶಕ್ಕೆ ಹೋಗುವುದಕ್ಕಾಗಿ ಬಾಪ್ದಾದಾರವರಿಂದ ಅನುಮತಿ ಪಡೆಯುತ್ತಿದ್ದಾರೆ) |
ದೇಶ-ವಿದೇಶದಲ್ಲಿ ಸೇವೆಯ ಒಲವು-ಉತ್ಸಾಹವಂತು ಬಹಳ ಚೆನ್ನಾಗಿದೆ. ಎಲ್ಲಿ ಒಲವು-ಉತ್ಸಾಹವಿರುತ್ತದೆಯೋ ಅಲ್ಲಿ ಸಫಲತೆಯೂ ಇರುತ್ತದೆ. ಸದಾ ಈ ಗಮನವನ್ನಿಡಿ - ಮೊದಲು ಸ್ವಯಂನ ಒಲವು-ಉತ್ಸಾಹವಿರಲಿ, ಸಂಘಟನೆಯ ಶಕ್ತಿಯಿರಲಿ. ಸ್ನೇಹದ ಶಕ್ತಿ, ಸಹಯೋಗದ ಶಕ್ತಿಯಿದ್ದರೆ, ಅದರನುಸಾರವಾಗಿ ಸಫಲತೆಯೂ ಆಗುತ್ತದೆ, ಇದು ಧರಣಿಯಾಗಿದೆ. ಹೇಗೆ ಧರಣಿಯು ಪರಿಪಕ್ವವಾಗಿ ಇರುತ್ತದೆಯೆಂದರೆ, ಅದೇರೀತಿ ಫಲವೂ ಬರುತ್ತದೆ, ಅದೇನಾದರೂ ತತ್ಕಾಲಕ್ಕಾಗಿ ಪರಿಪಕ್ವಗೊಳಿಸಿದರೆ ಫಲವೂ ಸಹ ಸ್ವಲ್ಪ ಸಮಯಕ್ಕಾಗಿ ಸಿಗುತ್ತದೆ, ಆದರೆ ಸದಾಕಾಲಕ್ಕಾಗಿ ಸಿಗುವುದಿಲ್ಲ. ಅಂದಾಗ ಸಫಲತೆಯ ಫಲಕ್ಕೆ ಮೊದಲು ಸದಾ ಧರಣಿಯನ್ನು ಪರಿಶೀಲನೆ ಮಾಡಿರಿ. ಯಾರು ಮಾಡುತ್ತಾರೆಯೋ ಅವರಲ್ಲಿ ಜಮಾ ಆಗಿ ಬಿಡುತ್ತದೆ. ಈಗಲೂ ಖುಷಿ ಸಿಗುತ್ತದೆ ಮತ್ತು ಭವಿಷ್ಯವಂತು ಇದ್ದೇ ಇರುತ್ತದೆ. ಒಳ್ಳೆಯದು! |
ಓಂ ಶಾಂತಿ. ಮಕ್ಕಳು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ಇದು ಶ್ರೀಮತ ಅರ್ಥಾತ್ ಶ್ರೇಷ್ಠಾತಿ ಶ್ರೇಷ್ಠ ಮತ ಸಿಗುತ್ತಿದೆ, ನೆನಪಿನ ಯಾತ್ರೆಯು ಬಹಳ ಮಧುರವಾಗಿದೆ. ಮಕ್ಕಳು ನಂಬರ್ವಾರ್ ಪುರುಷಾರ್ಥದ ಅನುಸಾರ ತಿಳಿದುಕೊಂಡಿದ್ದೀರಿ - ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ತಂದೆಯು ಪ್ರಿಯರೆನಿಸುವರು. ತಂದೆಯು ಸ್ಯಾಕ್ರೀನ್ ಅಲ್ಲವೆ. ಒಬ್ಬ ತಂದೆಯೇ ಪ್ರೀತಿ ಮಾಡುತ್ತಾರೆ ಉಳಿದೆಲ್ಲರೂ ಪೆಟ್ಟನ್ನೇ ಕೊಡುತ್ತಾರೆ. ಪ್ರಪಂಚದವರೆಲ್ಲರೂ ಒಬ್ಬರು ಇನ್ನೊಬ್ಬರನ್ನು ತಿರಸ್ಕರಿಸುತ್ತಾರೆ, ತಂದೆಯು ಪ್ರೀತಿ ಮಾಡುತ್ತಾರೆ. ಅವರನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ಯಾರಾಗಿದ್ದೇನೆ, ಹೇಗಿದ್ದೇನೆ, ಎಷ್ಟು ದೊಡ್ಡವನಾಗಿದ್ದೇನೆ, ತಿಳಿಸಿ - ನಮ್ಮ ತಂದೆಯು ಎಷ್ಟು ದೊಡ್ಡವರಾಗಿದ್ದಾರೆ? ಆಗ ಬಿಂದುವಾಗಿದ್ದಾರೆಂದು ಹೇಳುತ್ತಾರೆ ಮತ್ತ್ಯಾರೂ ಅರಿತುಕೊಂಡಿಲ್ಲ. ಮಕ್ಕಳೂ ಸಹ ಪದೇ-ಪದೇ ಮರೆತು ಹೋಗುತ್ತೀರಿ. ಭಕ್ತಿಮಾರ್ಗದಲ್ಲಂತೂ ದೊಡ್ಡ-ದೊಡ್ಡ ಚಿತ್ರಗಳ ಪೂಜೆಯನ್ನು ಮಾಡುತ್ತಿದ್ದೆವು. ಈಗ ಬಿಂದುವನ್ನು ಹೇಗೆ ನೆನಪು ಮಾಡುವುದು ಎಂದು ಹೇಳುತ್ತಾರೆ. ಬಿಂದುವು ಬಿಂದುವನ್ನೇ ನೆನಪು ಮಾಡುವುದಲ್ಲವೆ. ಆತ್ಮಕ್ಕೆ ತಿಳಿದಿದೆ - ನಾನು ಬಿಂದುವಾಗಿದ್ದೇನೆ. ನಮ್ಮ ತಂದೆಯೂ ಬಿಂದುವಾಗಿದ್ದಾರೆ. ಆತ್ಮವೇ ರಾಷ್ಟ್ರಪತಿ, ಆತ್ಮವೇ ನೌಕರನಾಗುತ್ತದೆ. ಆತ್ಮವೇ ಪಾತ್ರವನ್ನು ಅಭಿನಯಿಸುತ್ತದೆ. ತಂದೆಯು ಎಲ್ಲರಿಗಿಂತ ಮಧುರರಾಗಿದ್ದಾರೆ. ಹೇ ಪತಿತ-ಪಾವನ, ದುಃಖಹರ್ತ-ಸುಖಕರ್ತ ಬನ್ನಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ಈ ನಿಶ್ಚಯವಿದೆ - ನಾವು ಯಾರನ್ನು ಬಿಂದುವೆಂದು ಹೇಳುತ್ತೇವೆಯೋ ಅವರು ಬಹಳ ಸೂಕ್ಷ್ಮವಾಗಿದ್ದಾರೆ, ಮಹಿಮೆಯು ಎಷ್ಟು ಭಾರಿಯಾಗಿದೆ! ಭಲೆ ಜ್ಞಾನ ಸಾಗರ, ಶಾಂತಿಯ ಸಾಗರನೆಂದು ಮಹಿಮೆಯನ್ನು ಹಾಡುತ್ತಾರೆ ಆದರೆ ಅವರು ಹೇಗೆ ಬಂದು ಸುಖವನ್ನು ಕೊಡುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಮಧುರಾತಿ ಮಧುರ ಮಕ್ಕಳು ಪ್ರತಿಯೊಬ್ಬರೂ ಇದನ್ನು ತಿಳಿದುಕೊಳ್ಳಬಹುದು - ಯಾರು ಯಾರು ಶ್ರೀಮತದಂತೆ ನಡೆಯುತ್ತಾರೆ! ಸರ್ವೀಸ್ ಮಾಡುವ ಶ್ರೀಮತವು ಸಿಗುತ್ತದೆ. ಅನೇಕ ಮನುಷ್ಯರು ರೋಗಿಗಳಾಗಿದ್ದಾರೆ, ಇನ್ನೂ ಅನೇಕರು ಆರೋಗ್ಯವಂತರೂ ಆಗಿದ್ದಾರೆ. ಭಾರತವಾಸಿಗಳಿಗೆ ತಿಳಿದಿದೆ - ಸತ್ಯಯುಗದಲ್ಲಿ ಬಹಳ ಧೀರ್ಘಾಯಸ್ಸು ಅಂದರೆ 125-150 ವರ್ಷಗಳಿರುತ್ತಿತ್ತು. ಪ್ರತಿಯೊಬ್ಬರೂ ತಮ್ಮ ಆಯಸ್ಸು ಮುಗಿಯುವವರೆಗೂ ಇರುತ್ತಾರೆ, ಈಗಂತೂ ಸಂಪೂರ್ಣ ಛೀ ಛೀ ಪ್ರಪಂಚವಾಗಿದೆ, ಇನ್ನು ಸ್ವಲ್ಪವೇ ಸಮಯವಿದೆ. ಮನುಷ್ಯರು ಇಲ್ಲಿಯವರೆಗೆ ದೊಡ್ಡ-ದೊಡ್ಡ ಧರ್ಮಶಾಲೆಗಳನ್ನು ಕಟ್ಟಿಸುತ್ತಿರುತ್ತಾರೆ. ಇವು ಇನ್ನೆಷ್ಟು ಸಮಯ ಇರುವುದೆಂದು ತಿಳಿದುಕೊಂಡಿಲ್ಲ, ಮಂದಿರಗಳನ್ನು ಕಟ್ಟಿಸುತ್ತಾರೆ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ಅದರ ಆಯಸ್ಸು ಇನ್ನೆಷ್ಟು ಸಮಯ ಇರಬಹುದು? ನೀವು ತಿಳಿದುಕೊಂಡಿದ್ದೀರಿ - ಇವು ಬಿದ್ದಿತೆಂದರೆ ಬಿದ್ದಿತು. ನಿಮಗೆ ಮನೆ ಕಟ್ಟಿಸುವುದಕ್ಕಾಗಿ ತಂದೆಯು ಎಂದೂ ನಿರಾಕರಿಸುವುದಿಲ್ಲ. ನೀವು ತಮ್ಮದೇ ಮನೆಯಲ್ಲಿ ಒಂದು ಕೋಣೆಯಲ್ಲಿ ಆಸ್ಪತ್ರೆ ಹಾಗೂ ಯುನಿವರ್ಸಿಟಿ (ಸೇವಾಕೇಂದ್ರ) ಯನ್ನು ತೆರೆಯಿರಿ. ಯಾವುದೇ ಖರ್ಚಿಲ್ಲದೆ ಈ ಜ್ಞಾನದಿಂದ ಆರೋಗ್ಯ, ಐಶ್ವರ್ಯ, ಸಂತೋಷವನ್ನು 21 ಜನ್ಮಗಳಿಗೆ ತೆಗೆದುಕೊಳ್ಳಬೇಕಾಗಿದೆ. ಇದನ್ನೂ ಸಹ ತಿಳಿಸಿದ್ದೇವೆ - ನಿಮಗೆ ಬಹಳ ಸುಖ ಸಿಗುತ್ತದೆ. ಯಾವಾಗ ತಮೋಪ್ರಧಾನರಾಗುವಿರೋ ಆಗಿನಿಂದ ದುಃಖವು ಹೆಚ್ಚಾಗುತ್ತದೆ, ಎಷ್ಟೆಷ್ಟು ತಮೋಪ್ರಧಾನರಾಗುವಿರೋ ಅಷ್ಟು ಪ್ರಪಂಚದಲ್ಲಿ ದುಃಖ, ಅಶಾಂತಿಯು ಹೆಚ್ಚಾಗುತ್ತಾ ಹೋಗುವುದು. ಮನುಷ್ಯರು ಬಹಳ ದುಃಖಿಯಾಗುತ್ತಾರೆ ನಂತರ ಜಯ ಜಯಕಾರವಾಗುತ್ತದೆ. ನೀವು ಮಕ್ಕಳು ಯಾವ ವಿನಾಶವನ್ನು ದಿವ್ಯ ದೃಷ್ಟಿಯಿಂದ ನೋಡುತ್ತೀರೋ ಅದನ್ನು ಪ್ರತ್ಯಕ್ಷದಲ್ಲಿ ನೋಡುವಿರಿ. ಅನೇಕರು ಸ್ಥಾಪನೆಯ ಸಾಕ್ಷಾತ್ಕಾರವನ್ನೂ ನೋಡಿದ್ದಾರೆ. ಚಿಕ್ಕ ಕನ್ಯೆಯರು ಬಹಳ ಸಾಕ್ಷಾತ್ಕಾರ ನೋಡುತ್ತಿದ್ದರು. ಜ್ಞಾನವೇನೂ ಇರಲಿಲ್ಲ. ಹಳೆಯ ಪ್ರಪಂಚದ ವಿನಾಶವು ಖಂಡಿತ ಆಗುವುದಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯೇ ಬಂದು ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಆದರೆ ಮಕ್ಕಳು ಶ್ರೇಷ್ಠ ಪದವಿಯನ್ನೇ ಪಡೆಯುವ ಪುರುಷಾರ್ಥ ಮಾಡಬೇಕಾಗಿದೆ. ನೀವು ಮಕ್ಕಳಿಗೆ ತಂದೆಯು ಕುಳಿತು ಇವೆಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇನ್ನು ಸ್ವಲ್ಪವೇ ಸಮಯವಿದೆ ಎಂದು ಮನುಷ್ಯರಿಗೆ ಗೊತ್ತಿದೆಯೇ! ತಂದೆಯು ತಿಳಿಸುತ್ತಾರೆ - ನಾನು ದಾತನಾಗಿದ್ದೇನೆ, ನಿಮಗೆ ನೀಡಲು ಬಂದಿದ್ದೇನೆ. ಮನುಷ್ಯರು ಹೇಳುತ್ತಾರೆ - ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿರಿ. |
ಮೊದಲು ನೀವು ಎಷ್ಟು ಬುದ್ಧಿವಂತರಾಗಿದ್ದಿರಿ, ಸತೋಪ್ರಧಾನರಾಗಿದ್ದಿರಿ, ಈಗಂತೂ ತಮೋಪ್ರಧಾನರಾಗಿ ಬಿಟ್ಟಿದ್ದೀರಿ ಎಂದು ತಂದೆಯು ತಿಳಿಸುತ್ತಾರೆ. ನಿಮ್ಮ ಬುದ್ಧಿಯಲ್ಲಿಯೂ ಈಗ ಬಂದಿದೆ, ನಾವೇ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದೆವು ಎಂಬುದು ಮೊದಲು ತಿಳಿದಿರಲಿಲ್ಲ. ನೀವೇ ಆಗಿದ್ದಿರಿ, ಪುನಃ ಅವಶ್ಯವಾಗಿ ಆಗುತ್ತೀರಿ. ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ತಂದೆಯು ತಿಳಿಸುತ್ತಾರೆ - 5000 ವರ್ಷಗಳ ಮೊದಲು ನಾನು ಬಂದಿದ್ದೆನು, ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದೆನು ನಂತರ ನೀವು 84 ಜನ್ಮಗಳ ಏಣಿಯನ್ನು ಇಳಿಯುತ್ತೀರಿ. ಈ ವಿಸ್ತಾರವು ಯಾವುದೇ ಶಾಸ್ತ್ರದಲ್ಲಿಲ್ಲ. ಶಿವ ತಂದೆಯು ಯಾವುದೇ ಶಾಸ್ತ್ರಗಳನ್ನು ಓದಿದ್ದಾರೆಯೇ? ಅವರಿಗಂತೂ ಜ್ಞಾನದ ಅಥಾರಿಟಿಯೆಂದು ಹೇಳಲಾಗುತ್ತದೆ. ಆ ಮನುಷ್ಯರೂ ಸಹ ಶಾಸ್ತ್ರಗಳನ್ನು ಓದಿ ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಪತಿತ-ಪಾವನ ಬನ್ನಿ ಎಂದು ಅವರೇ ಹಾಡುತ್ತಾರೆ. ಗಂಗಾ ಸ್ನಾನ ಮಾಡಲು ಹೋಗುತ್ತಾರೆ. ವಾಸ್ತವದಲ್ಲಿ ಈ ಭಕ್ತಿಯಿರುವುದು ಗೃಹಸ್ಥಿಗಳಿಗಾಗಿ. ತಂದೆಯು ತಿಳಿಸುತ್ತಾರೆ, ಸದ್ಗತಿದಾತನು ಯಾರೆಂಬುದು ಅವರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ಹೇ ಪತಿತ-ಪಾವನ ಬನ್ನಿ ಎಂದು ನೀವು ನನ್ನನ್ನು ಕರೆಯುತ್ತೀರಿ. ನಾನು ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ. ನಾನು ನಿಮಗೆ ಓದಿಸುವುದಕ್ಕಾಗಿ ಬರುತ್ತೇನೆ. ನೀವು ನಮ್ಮ ಮೇಲೆ ಕೃಪೆ ತೋರಿ ಎಂದು ಹೇಳುವುದಲ್ಲ. ನಾನಂತೂ ಶಿಕ್ಷಕನಾಗಿದ್ದೇನೆ ಅಂದಮೇಲೆ ಕೃಪೆಯನ್ನೇಕೆ ಬೇಡುತ್ತೀರಿ! ಆಶೀರ್ವಾದವನ್ನಂತೂ ಅನೇಕ ಜನ್ಮಗಳಿಂದ ತೆಗೆದುಕೊಳ್ಳುತ್ತಾ ಬಂದಿದ್ದೀರಿ. ಈಗ ಬಂದು ತಂದೆ-ತಾಯಿಯ ಸಂಪತ್ತಿಗೆ ಮಾಲೀಕರಾಗಿ. ಆಶೀರ್ವಾದವನ್ನೇನು ಮಾಡುವುದು! ಮಗುವಿನ ಜನ್ಮವಾಯಿತೆಂದರೆ ತಂದೆಯ ಪೂರ್ಣ ಸಂಪತ್ತಿಗೆ ಮಾಲೀಕನಾಯಿತು. ಲೌಕಿಕ ತಂದೆಗೆ ಕೃಪೆ ತೋರಿ ಎಂದು ಹೇಳುತ್ತಾರೆ, ಇಲ್ಲಿ ಕೃಪೆಯ ಮಾತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಇದೂ ಸಹ ಯಾರಿಗೂ ತಿಳಿದಿಲ್ಲ - ತಂದೆಯು ಬಿಂದುವಾಗಿದ್ದಾರೆ, ಈಗ ನಿಮಗೆ ತಂದೆಯು ತಿಳಿಸಿದ್ದಾರೆ, ಪರಮಪಿತ ಪರಮಾತ್ಮ, ಗಾಡ್ಫಾದರ್, ಸುಪ್ರೀಂಸೌಲ್ ಎಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಪರಮ ಆತ್ಮನಾದರಲ್ಲವೆ. ಅವರು ಪರಮ ಅರ್ಥಾತ್ ಶ್ರೇಷ್ಠನಾಗಿದ್ದಾರೆ ಉಳಿದೆಲ್ಲರೂ ಆತ್ಮರಾಗಿದ್ದೀರಿ. ಪರಮಾತ್ಮ ತಂದೆಯೇ ಬಂದು ತಮ್ಮ ಸಮಾನರನ್ನಾಗಿ ಮಾಡುತ್ತಾರೆ, ಮತ್ತೇನೂ ಇಲ್ಲ. ಬೇಹದ್ದಿನ ತಂದೆಯು ಸ್ವರ್ಗದ ರಚಯಿತನೇ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಂದು ಮತ್ತ್ಯಾರ ಬುದ್ಧಿಯಲ್ಲಾದರೂ ಇರುತ್ತದೆಯೇ? ನೀವೀಗ ತಿಳಿದುಕೊಂಡಿದ್ದೀರಿ, ಕೃಷ್ಣನ ಕೈಯಲ್ಲಿ ಸ್ವರ್ಗದ ಗೋಲವಿದೆ, ಗರ್ಭದಿಂದ ಮಗುವು ಹೊರ ಬರುತ್ತದೆ, ಆಗಿನಿಂದ ಆಯಸ್ಸು ಆರಂಭವಾಗುತ್ತದೆ. ಶ್ರೀಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಗರ್ಭದಿಂದ ಹೊರಬಂದರೆ ಆ ದಿನದಿಂದ 84 ಜನ್ಮಗಳೆಂದು ಎಣಿಕೆಯಾಗುತ್ತದೆ. ಲಕ್ಷ್ಮೀ-ನಾರಾಯಣರಿಗಂತೂ ದೊಡ್ಡವರಾಗುವುದರಲ್ಲಿ 30-35 ವರ್ಷಗಳು ಹಿಡಿಸಿತಲ್ಲವೆ. ಅಂದಾಗ ಆ 30-35 ವರ್ಷಗಳನ್ನು 5000 ವರ್ಷಗಳಲ್ಲಿ ಕಡಿಮೆ ಮಾಡಬೇಕಾಗಿದೆ. ಶಿವ ತಂದೆಯದಂತೂ ಎಣಿಕೆ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಯಾವಾಗ ಬಂದರು ಎಂದು ಸಮಯವನ್ನು ಹೇಳಲು ಸಾಧ್ಯವಿಲ್ಲ. ಆರಂಭದಿಂದ ಸಾಕ್ಷಾತ್ಕಾರವಾಗುತ್ತಿತ್ತು, ಮುಸಲ್ಮಾನರೂ ಸಹ ಸೂಕ್ಷ್ಮವತನದಲ್ಲಿ ಹೋಗಿ ಉದ್ಯಾನವನ ಇತ್ಯಾದಿಗಳನ್ನು ನೋಡುತ್ತಿದ್ದರು. ಈ ನೌಧಾಭಕ್ತಿಯನ್ನಂತೂ ಯಾರೂ ಮಾಡಲಿಲ್ಲ. ಮನೆಯಲ್ಲಿ ಕುಳಿತಿದ್ದಂತೆಯೇ ತಾವೇ ಧ್ಯಾನದಲ್ಲಿ ಹೋಗುತ್ತಿದ್ದರು, ಆ ಮನುಷ್ಯರಂತೂ ಎಷ್ಟೊಂದು ನೌಧಾ ಭಕ್ತಿ ಮಾಡುತ್ತಾರೆ. ಆದ್ದರಿಂದ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ - ತಂದೆಯು ದೂರ ದೇಶದಿಂದ ಬಂದಿದ್ದಾರೆ, ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಇವರಲ್ಲಿ ತಂದೆಯು ಪ್ರವೇಶ ಮಾಡಿ ನಮಗೆ ಓದಿಸುತ್ತಾರೆ ಆದರೆ ಹೊರಗಡೆ ಹೋಗುತ್ತಿದ್ದಂತೆಯೇ ನಶೆಯು ಕಡಿಮೆಯಾಗಿ ಬಿಡುತ್ತದೆ. ನೆನಪಿದ್ದಾಗ ಖುಷಿಯ ನಶೆಯೇ ಏರಿರುವುದು ಮತ್ತು ಕರ್ಮಾತೀತ ಸ್ಥಿತಿಯಾಗುವುದು ಆದರೆ ಅದರಲ್ಲಿ ಸಮಯ ಬೇಕು. ಈಗ ನೋಡಿ, ಶ್ರೀಕೃಷ್ಣನ ಆತ್ಮಕ್ಕೆ ಅಂತಿಮ ಜನ್ಮದಲ್ಲಿ ಸಂಪೂರ್ಣ ಜ್ಞಾನವಿದೆ, ಮತ್ತೆ ಗರ್ಭದಿಂದ ಹೊರ ಬಂದ ಮೇಲೆ ಒಂದು ಪೈಸೆಯಷ್ಟೂ ಜ್ಞಾನವಿರುವುದಿಲ್ಲ. ತಂದೆಯು ಬಂದು ತಿಳಿಸುತ್ತಾರೆ - ಕೃಷ್ಣನು ಮುರುಳಿಯನ್ನು ನುಡಿಸಲಿಲ್ಲ, ಕೃಷ್ಣನಂತೂ ಜ್ಞಾನವನ್ನೇ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರೇ ತಿಳಿದುಕೊಂಡಿಲ್ಲವೆಂದಮೇಲೆ ಮತ್ತೆ ಋಷಿ-ಮುನಿ, ಸಾಧು-ಸನ್ಯಾಸಿಗಳು ಹೇಗೆ ತಿಳಿದುಕೊಳ್ಳುವರು! ವಿಶ್ವದ ಮಾಲೀಕರಾದ ಲಕ್ಷ್ಮೀ-ನಾರಾಯಣರೇ ಅರಿತುಕೊಂಡಿಲ್ಲ ಅಂದಮೇಲೆ ಈ ಸನ್ಯಾಸಿಗಳು ಏನು ಅರಿತುಕೊಳ್ಳುವರು! ಸಾಗರದಲ್ಲಿ ಆಲದ ಎಲೆಯ ಮೇಲೆ ತೇಲಿ ಬಂದನು, ಇದನ್ನು ಮಾಡಿದನು.... ಇವೆಲ್ಲವೂ ಕಥೆಗಳಾಗಿವೆ, ಮನುಷ್ಯರು ಕುಳಿತು ಬರೆದಿದ್ದಾರೆ. ಗಂಗಾ ನದಿಯಲ್ಲಿ ಹೆಜ್ಜೆಯಿಟ್ಟ ಕೂಡಲೇ ಗಂಗೆಯು ಕೆಳಗಡೆ ಹೊರಟು ಹೋಯಿತು ಎಂದು ಹೇಳುತ್ತಾರೆ ಅಂದಮೇಲೆ ವಿಚಾರ ಮಾಡಿ - ಮನುಷ್ಯರು ಯಾವ ಮಾತುಗಳನ್ನು ತಾನೇ ಬರೆಯಲು ಸಾಧ್ಯವಿಲ್ಲ! ಈಗ ತಂದೆಯು ತಿಳಿಸುತ್ತಾರೆ - ಯಾವುದೇ ಉಲ್ಟಾ ಸುಲ್ಟಾ ಮಾತುಗಳ ಮೇಲೆ ವಿಶ್ವಾಸವನ್ನಿಡಬೇಡಿ. ಮನುಷ್ಯರು ಎಷ್ಟೊಂದು ಶಾಸ್ತ್ರಗಳನ್ನು ಓದುತ್ತಾರೆ, ಈಗ ತಂದೆಯು ತಿಳಿಸುತ್ತಾರೆ - ಓದಿರುವುದೆಲ್ಲವನ್ನೂ ಮರೆತು ಹೋಗಿ, ಈ ದೇಹವನ್ನೂ ಮರೆತುಬಿಡಿ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತದೆ. ಭಿನ್ನ-ಭಿನ್ನ ನಾಮ-ರೂಪ, ದೇಶ, ವಸ್ತ್ರಗಳನ್ನು ಧರಿಸುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಇದು ಛೀ ಛೀ ವಸ್ತ್ರವಾಗಿದೆ. ಆತ್ಮ ಮತ್ತು ಶರೀರವು ಎರಡೂ ಪತಿತವಾಗಿದೆ. ಆತ್ಮಕ್ಕೆ ಶ್ಯಾಮ ಮತ್ತು ಸುಂದರ ಎಂದು ಹೇಳಲಾಗುತ್ತದೆ. ಆತ್ಮವು ಪವಿತ್ರವಾಗಿತ್ತು, ಆಗ ಸುಂದರವಾಗಿತ್ತು, ನಂತರ ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಕಪ್ಪಾಗಿದೆ. ಈಗ ಪುನಃ ತಂದೆಯು ಜ್ಞಾನ ಚಿತೆಯ ಮೇಲೆ ಕೂರಿಸುತ್ತಾರೆ. ಪತಿತ-ಪಾವನ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ ಆಗಲೇ ಈ ತುಕ್ಕು ಹೊರಟು ಹೋಗುವುದು. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ಕಲಿಯುಗದ ಅಂತ್ಯದಲ್ಲಿ ನೀವು ಬಡವರಾಗಿದ್ದೀರಿ. ಅಲ್ಲಿ ಸತ್ಯಯುಗದಲ್ಲಿ ನೀವು ಚಿನ್ನದ ಮಹಲುಗಳನ್ನು ಕಟ್ಟಿಸುತ್ತೀರಿ. ಅದ್ಭುತವೇನೆಂದರೆ ಇಲ್ಲಿ ವಜ್ರಗಳ ಬೆಲೆ ನೋಡಿ ಎಷ್ಟೊಂದಿದೆ! ಅಲ್ಲಂತೂ ವಜ್ರಗಳು ಕಲ್ಲುಗಳಂತಿರುತ್ತವೆ, ನೀವೀಗ ತಂದೆಯಿಂದ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೀರಿ. ಸಾಗರದಿಂದ ರತ್ನಗಳ ತಟ್ಟೆಗಳನ್ನು ತುಂಬಿಸಿ ತೆಗೆದುಕೊಂಡು ಬರುತ್ತಾರೆ ಎಂದು ಬರೆಯಲ್ಪಟ್ಟಿದೆ. ಸಾಗರದಿಂದ ಎಷ್ಟು ಬೇಕೋ ಅಷ್ಟನ್ನು ತೆಗೆದುಕೊಳ್ಳಿ, ಗಣಿಗಳೇ ಸಂಪನ್ನವಾಗಿ ಬಿಡುತ್ತವೆ. ನೀವು ಸಾಕ್ಷಾತ್ಕಾರ ಮಾಡಿದ್ದೀರಿ, ಮಾಯಾ ಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಅವನು ಚಿನ್ನದ ಇಟ್ಟಿಗೆಯು ಬಿದ್ದಿರುವುದನ್ನು ನೋಡಿ ತೆಗೆದುಕೊಂಡು ಹೋಗೋಣವೆಂದು ತಿಳಿದುಕೊಂಡನು, ಕೆಳಗೆ ಬಂದಾಗ ಏನೂ ಇರಲಿಲ್ಲ. ಸತ್ಯಯುಗದಲ್ಲಿ ಚಿನ್ನದ ಇಟ್ಟಿಗೆಗಳಿಂದ ಮಹಲುಗಳನ್ನು ಕಟ್ಟಿಸುತ್ತೀರಿ. ಈ ರೀತಿಯ ವಿಚಾರವು ಬಂದಾಗ ಖುಷಿಯ ನಶೆಯಿರುವುದು. ತಂದೆಯ ಪರಿಚಯ ಕೊಡಬೇಕಾಗಿದೆ, ಶಿವ ತಂದೆಯು 5000 ವರ್ಷಗಳ ಮೊದಲೂ ಸಹ ಬಂದಿದ್ದರು, ಇದು ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - 5000 ವರ್ಷಗಳ ಮೊದಲು ಬಂದು ನಿಮಗೆ ರಾಜಯೋಗವನ್ನು ಕಲಿಸಿದ್ದೆನು, ಕಲ್ಪ-ಕಲ್ಪವೂ ನಿಮಗೇ ಕಲಿಸುತ್ತೇನೆ. ಯಾರು-ಯಾರು ಬಂದು ಬ್ರಾಹ್ಮಣರಾಗುವರೋ ಅವರು ಮತ್ತೆ ದೇವತೆಗಳಾಗುವರು. ವಿರಾಟ ರೂಪವನ್ನೂ ತೋರಿಸುತ್ತಾರೆ, ಅದರಲ್ಲಿ ಬ್ರಾಹ್ಮಣರ ಶಿಖೆಯನ್ನು ಮರೆ ಮಾಡಿ ಬಿಟ್ಟಿದ್ದಾರೆ. ಬ್ರಾಹ್ಮಣ ಕುಲವು ಬಹಳ ಉತ್ತಮವೆಂದು ಗಾಯನವಿದೆ, ಅವರು ದೈಹಿಕ ಬ್ರಾಹ್ಮಣರಾಗಿದ್ದಾರೆ, ನೀವು ಆತ್ಮಿಕ ಬ್ರಾಹ್ಮಣರಾಗಿದ್ದೀರಿ. ಸತ್ಯ-ಸತ್ಯವಾದ ಕಥೆಯನ್ನು ತಿಳಿಸುತ್ತೀರಿ. ಇದೇ ಸತ್ಯ ನಾರಾಯಣನ ಕಥೆ, ಅಮರ ಕಥೆಯಾಗಿದೆ. ನಿಮಗೆ ಅಮರ ಕಥೆಯನ್ನು ತಿಳಿಸಿ ಅಮರರನ್ನಾಗಿ ಮಾಡುತ್ತಿದ್ದಾರೆ. ಈ ಮೃತ್ಯುಲೋಕವು ಸಮಾಪ್ತಿಯಾಗಲಿದೆ. ನಾನು ನಿಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದೇನೆಂದು ಶಿವ ತಂದೆಯು ತಿಳಿಸುತ್ತಾರೆ. ಎಷ್ಟೊಂದು ಆತ್ಮರಿರಬಹುದು, ಆತ್ಮಕ್ಕೆ ತಿಳಿದಿದೆ - ಯಾವುದೇ ಶಬ್ಧ ಆಗುವುದಿಲ್ಲ, ಜೇನುನೊಣಗಳ ಹಿಂಡು ಹೋಗುವಾಗ ಎಷ್ಟು ಶಬ್ಧವಾಗುತ್ತದೆ! ರಾಣಿ ನೊಣದ ಹಿಂದೆ ಉಳಿದೆಲ್ಲವೂ ಓಡುತ್ತವೆ. ಪರಸ್ಪರ ಎಷ್ಟೊಂದು ಏಕತೆಯಿರುತ್ತದೆ! ಭ್ರಮರಿಯ ಉದಾಹರಣೆಯೂ ಸಹ ಇಲ್ಲಿಯದೇ ಆಗಿದೆ. ನೀವು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೀರಿ, ಪತಿತರಿಗೆ ನೀವು ಜ್ಞಾನದ ಭೂ ಭೂ ಮಾಡುತ್ತೀರಿ ಆಗ ಅವರು ಪಾವನ ವಿಶ್ವದ ಮಾಲೀಕರಾಗಿ ಬಿಡುತ್ತಾರೆ. ನಿಮ್ಮದು ಪ್ರವೃತ್ತಿ ಮಾರ್ಗವಾಗಿದೆ, ಅದರಲ್ಲಿಯೂ ಮೆಜಾರಿಟಿ ಮಾತೆಯರದಾಗಿದೆ ಆದ್ದರಿಂದ ವಂದೇ ಮಾತರಂ ಎಂದು ಹೇಳಲಾಗುತ್ತದೆ. ಯಾರು ತಂದೆಯ ಮೂಲಕ 21 ಜನ್ಮಗಳ ಆಸ್ತಿಯನ್ನು ಕೊಡಿಸುವರೋ ಅವರೆ ಬ್ರಹ್ಮಾಕುಮಾರಿಯಾಗಿದ್ದಾರೆ. ತಂದೆಯು ಸದಾ ಸುಖದ ಆಸ್ತಿಯನ್ನು ಕೊಡುತ್ತಾರೆ. ಯಾರು ಸರ್ವೀಸ್ ಮಾಡುವರೋ, ಓದುವರೋ-ಬರೆಯುವರೋ ಅವರು ನವಾಬರಾಗುತ್ತಾರೆ. ರಾಜರಾಗುವುದು ಒಳ್ಳೆಯದೋ ಅಥವಾ ನೌಕರರಾಗುವುದು ಒಳ್ಳೆಯದೋ? ಅಂತಿಮ ಸಮಯದಲ್ಲಿ ನಿಮಗೆ ಎಲ್ಲವೂ ಅರ್ಥವಾಗುವುದು - ನಾವು ಏನಾಗುತ್ತೇವೆ? ಎಂದು. ಆಗ ನಾವು ಶ್ರೀಮತದಂತೆ ಏಕೆ ನಡೆಯಲಿಲ್ಲ ಎಂದು ಬಹಳ ಪಶ್ಚಾತ್ತಾಪ ಪಡುವರು. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಫಾಲೋ ಮಾಡಿ. ಯಾರಾದರೂ ಸೇವಾಕೇಂದ್ರಕ್ಕಾಗಿ ಒಂದು ಕೋಣೆಯನ್ನು ಕೊಟ್ಟು ತಾನು ಮಾತ್ರ ಮಾಂಸ-ಮಧ್ಯಗಳನ್ನು ಸೇವಿಸುತ್ತಾ ಇರುವುದಲ್ಲ. ಒಬ್ಬರು ಪುಣ್ಯಾತ್ಮ, ಇನ್ನೊಬ್ಬರು ಪಾಪಾತ್ಮ ಅಂದಮೇಲೆ ಆ ಆಶ್ರಮವು ಇರುವುದಿಲ್ಲ. ಮನೆಯಲ್ಲಿ ಸ್ವರ್ಗವನ್ನು ಮಾಡುತ್ತೀರೆಂದರೆ ತಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಬೇಕಲ್ಲವೆ. ಕೇವಲ ಆಶೀರ್ವಾದದ ಮೇಲೆ ನಿಲ್ಲಬಾರದು. ತಂದೆಯನ್ನು ನೆನಪು ಮಾಡಬೇಕಾಗಿದೆ. ಪವಿತ್ರರನ್ನಾಗಿ ಮಾಡಿಯೇ ಜೊತೆ ಕರೆದುಕೊಂಡು ಹೋಗುತ್ತೇನೆ. ನಿಮಗಂತೂ ಬಹಳ ಖುಷಿಯಿರಬೇಕು, ಎಷ್ಟು ದೊಡ್ಡ ಲಾಟರಿ ಸಿಗುತ್ತದೆ! ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ಮಾಡುವ ಪ್ರೀತಿಯನ್ನು ಪ್ರಪಂಚದಲ್ಲಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಅವರಿಗೆ ಪ್ರೀತಿಯ ಸಾಗರನೆಂದೇ ಹೇಳಲಾಗುತ್ತದೆ. ನೀವೂ ಸಹ ಅವರಂತೆಯೇ ಆಗಿ, ಒಂದುವೇಳೆ ಯಾರಿಗಾದರೂ ದುಃಖ ಕೊಟ್ಟರೆ, ಬೇಸರ ಪಡಿಸಿದರೆ ಬೇಸರವಾಗಿಯೇ ಸಾಯುವಿರಿ. ತಂದೆಯು ಈ ರೀತಿ ಶಾಪ ಕೊಡುತ್ತಿಲ್ಲ, ತಿಳಿಸುತ್ತಿದ್ದೇವೆ. ಸುಖ ಕೊಡುತ್ತೀರೆಂದರೆ ಸುಖಿಯಾಗಿರುತ್ತೀರಿ, ಎಲ್ಲರನ್ನೂ ಪ್ರೀತಿ ಮಾಡಿ. ತಂದೆಯೂ ಸಹ ಪ್ರೀತಿಯ ಸಾಗರನಾಗಿದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಯಾವುದೇ ಉಲ್ಟಾ ಸುಲ್ಟಾ ಮಾತಿನ ಮೇಲೆ ವಿಶ್ವಾಸವನ್ನಿಡಬಾರದು. ಏನೆಲ್ಲವನ್ನೂ ಉಲ್ಟಾ ಓದಿದ್ದೀರೋ ಅದನ್ನು ಮರೆತು ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ. |
2. ಕೇವಲ ಆಶೀರ್ವಾದದ ಮೇಲೆ ನಡೆಯಬಾರದು. ಸ್ವಯಂನ್ನು ಪವಿತ್ರನನ್ನಾಗಿ ಮಾಡಿಕೊಳ್ಳಬೇಕಾಗಿದೆ. ತಂದೆಯನ್ನು ಪ್ರತೀ ಹೆಜ್ಜೆಯಲ್ಲಿ ಫಾಲೋ ಮಾಡಬೇಕಾಗಿದೆ. ಯಾರಿಗೂ ದುಃಖ ಕೊಡಬಾರದು, ಬೇಸರ ಪಡಿಸಬಾರದು. |
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಿಳಿಸಲಾಗಿದೆ. ಆತ್ಮವು ತನ್ನ ಪರಿಚಯ ಕೊಡುತ್ತದೆ, ನನ್ನ ಸ್ವರೂಪವು ಶಾಂತಿಯಾಗಿದೆ ಮತ್ತು ನಾನಿರುವ ಸ್ಥಾನವು ಶಾಂತಿಧಾಮವಾಗಿದೆ ಯಾವುದಕ್ಕೆ ಪರಮಧಾಮ, ನಿರ್ವಾಣ ಧಾಮವೆಂದೂ ಹೇಳಲಾಗುತ್ತದೆ. ತಂದೆಯೂ ಸಹ ಹೇಳುತ್ತಾರೆ - ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ತಂದೆಯನ್ನು ನೆನಪು ಮಾಡಿ. ಅವರು ಪತಿತ-ಪಾವನನಾಗಿದ್ದಾರೆ, ಇದನ್ನು ಯಾರೂ ತಿಳಿದುಕೊಂಡಿಲ್ಲ - ನಾವಾತ್ಮರಾಗಿದ್ದೇವೆ, ಇಲ್ಲಿಗೆ ಪಾತ್ರವನ್ನಭಿನಯಿಸಲು ಬಂದಿದ್ದೇವೆ. ಈಗ ನಾಟಕವು ಮುಕ್ತಾಯವಾಗುತ್ತದೆ, ಹಿಂತಿರುಗಿ ಹೋಗಬೇಕಾಗಿದೆ, ಆದ್ದರಿಂದ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ. ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಇದಕ್ಕೇ ಸಂಸ್ಕೃತದಲ್ಲಿ ಮನ್ಮನಾಭವ ಎಂದು ಹೇಳುತ್ತಾರೆ. ತಂದೆಯು ಸಂಸ್ಕೃತ ಭಾಷೆಯಲ್ಲಿ ತಿಳಿಸಲಿಲ್ಲ, ತಂದೆಯಂತೂ ಹಿಂದಿ ಭಾಷೆಯಲ್ಲಿಯೇ ತಿಳಿಸುತ್ತಾರೆ. ಹೇಗೆ ಸರ್ಕಾರವು ಒಂದೇ ಹಿಂದಿ ಭಾಷೆಯಿರಬೇಕೆಂದು ಹೇಳುತ್ತದೆ. ತಂದೆಯೂ ಸಹ ವಾಸ್ತವದಲ್ಲಿ ಹಿಂದಿ ಭಾಷೆಯಲ್ಲಿಯೇ ತಿಳಿಸಿದ್ದಾರೆ ಆದರೆ ಈ ಸಮಯದಲ್ಲಿ ಅನೇಕ ಧರ್ಮ, ಮಠ ಪಂಥಗಳಿರುವ ಕಾರಣ ಅನೇಕ ಪ್ರಕಾರದ ಭಾಷೆಗಳನ್ನು ಮಾಡಿ ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಇಲ್ಲಿರುವಷ್ಟು ಭಾಷೆಗಳು ಇರುವುದಿಲ್ಲ. ಗುಜರಾತಿನಲ್ಲಿರುವ ಭಾಷೆಯೇ ಬೇರೆ, ಯಾರು ಯಾವ ಪ್ರಾಂತ್ಯದಲ್ಲಿರುವರೋ ಅವರು ಅಲ್ಲಿನ ಭಾಷೆಯನ್ನು ಅರಿತಿರುತ್ತಾರೆ. ಅನೇಕ ಮನುಷ್ಯರು ಅನೇಕ ಭಾಷೆಗಳಿವೆ, ಸತ್ಯಯುಗದಲ್ಲಿ ಒಂದೇ ಧರ್ಮ, ಒಂದೇ ಭಾಷೆಯಿತ್ತು. ಈಗ ನೀವು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವು ಬುದ್ಧಿಯಲ್ಲಿದೆ. ಇದು ಯಾವುದೇ ಶಾಸ್ತ್ರದಲ್ಲಿಲ್ಲ. ಈ ಜ್ಞಾನವಿರುವಂತಹ ಶಾಸ್ತ್ರವು ಯಾವುದೂ ಇಲ್ಲ. ಕಲ್ಪದ ಆಯಸ್ಸನ್ನೂ ಬರೆದಿಲ್ಲ ಅಥವಾ ಇದು ಯಾರಿಗೂ ತಿಳಿದಿಲ್ಲ. ಸೃಷ್ಟಿಯು ಒಂದೇ ಆಗಿದೆ, ಸೃಷ್ಟಿಚಕ್ರವು ಸುತ್ತುತ್ತಾ ಇರುತ್ತದೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದಾಗುತ್ತದೆ, ಇದಕ್ಕೇ ಸ್ವದರ್ಶನ ಚಕ್ರವೆಂದು ಹೇಳಲಾಗುತ್ತದೆ. ಯಾರಿಗೆ ಈ ಚಕ್ರದ ಜ್ಞಾನವಿದೆಯೋ ಅವರಿಗೆ ಸ್ವದರ್ಶನ ಚಕ್ರಧಾರಿಗಳೆಂದು ಕರೆಯಲಾಗುತ್ತದೆ. ಆತ್ಮಕ್ಕೆ ಜ್ಞಾನವಿರುತ್ತದೆ, ಇದನ್ನು ಮನುಷ್ಯರು ಕೃಷ್ಣನಿಗೆ, ವಿಷ್ಣುವಿಗೆ ಸ್ವದರ್ಶನ ಚಕ್ರವನ್ನು ತೋರಿಸುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಅವರಿಗಂತೂ ಜ್ಞಾನವೇ ಇರಲಿಲ್ಲ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಂದೆಯೇ ಕೊಡುತ್ತಾರೆ, ಇದು ಸ್ವದರ್ಶನ ಚಕ್ರವಾಗಿದೆ ಬಾಕಿ ತಲೆಯನ್ನು ಕತ್ತರಿಸಲು ಇಲ್ಲಿ ಯಾವುದೇ ಹಿಂಸೆಯ ಮಾತಿಲ್ಲ. ಇದೆಲ್ಲವನ್ನೂ ಸುಳ್ಳು ಬರೆದು ಬಿಟ್ಟಿದ್ದಾರೆ. ಈ ಜ್ಞಾನವನ್ನು ತಂದೆಯ ವಿನಃ ಯಾವುದೇ ಮನುಷ್ಯ ಮಾತ್ರರು ಕೊಡಲು ಸಾಧ್ಯವಿಲ್ಲ. ಮನುಷ್ಯರನ್ನೆಂದೂ ಭಗವಂತನೆಂದು ಹೇಳಲು ಸಾಧ್ಯವಿಲ್ಲ, ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ದೇವತೆಗಳೆಂದು ಹೇಳಲಾಗುತ್ತದೆ. ತಂದೆಯ ಮಹಿಮೆಯು ದೇವತೆಗಳಿಗೂ ಇರುವುದಿಲ್ಲ. ತಂದೆಯಂತೂ ರಾಜಯೋಗವನ್ನು ಕಲಿಸುತ್ತಿದ್ದಾರೆ. ತಂದೆಯ ಮಹಿಮೆಯೇ ಮಕ್ಕಳ ಮಹಿಮೆಯೆಂದು ಹೇಳುವುದಿಲ್ಲ. ಮಕ್ಕಳಾದರೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತೀರಿ, ತಂದೆಯು ಪುನರ್ಜನ್ಮದಲ್ಲಿ ಬರುವುದಿಲ್ಲ. ಮಕ್ಕಳು ತಂದೆಯನ್ನು ನೆನಪು ಮಾಡುತ್ತೀರಿ. ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ, ಅವರು ಸದಾ ಪಾವನನಾಗಿದ್ದಾರೆ. ಮಕ್ಕಳು ಪಾವನರಾಗಿ ಮತ್ತೆ ಪತಿತರಾಗುತ್ತೀರಿ, ತಂದೆಯಂತೂ ಸದಾ ಪಾವನನಾಗಿದ್ದಾರೆ. ಮಕ್ಕಳಿಗೆ ತಂದೆಯ ಆಸ್ತಿಯೂ ಅವಶ್ಯವಾಗಿ ಬೇಕು. ಒಂದು ಮುಕ್ತಿ ಬೇಕು, ಇನ್ನೊಂದು ಜೀವನ್ಮುಕ್ತಿ ಬೇಕು. ಶಾಂತಿಧಾಮಕ್ಕೆ ಮುಕ್ತಿ, ಸುಖಧಾಮಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಮುಕ್ತಿಯು ಎಲ್ಲರಿಗೂ ಸಿಗುತ್ತದೆ ಆದರೆ ಜೀವನ್ಮುಕ್ತಿಯು ಯಾರು ಓದುವರೋ ಅವರಿಗೇ ಸಿಗುತ್ತದೆ. ಭಾರತದಲ್ಲಿ ಅವಶ್ಯವಾಗಿ ಜೀವನ್ಮುಕ್ತಿಯಿತ್ತು ಉಳಿದೆಲ್ಲರೂ ಮುಕ್ತಿಧಾಮದಲ್ಲಿದ್ದರು. ಸತ್ಯಯುಗದಲ್ಲಿ ಕೇವಲ ಒಂದೇ ಭಾರತ ಖಂಡವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ತಂದೆಯು ತಿಳಿಸಿದ್ದಾರೆ - ಎಲ್ಲದಕ್ಕಿಂತ ಹೆಚ್ಚಿನದಾಗಿ ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಾರೆ. ಮಂದಿರವನ್ನು ಕಟ್ಟಿಸುವ ಬಿರ್ಲಾದವರಿಗೂ ಸಹ ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವು ಎಲ್ಲಿಂದ ಸಿಕ್ಕಿತು? ಎಷ್ಟು ಸಮಯ ರಾಜ್ಯ ಮಾಡಿದರು? ಮತ್ತೆ ಎಲ್ಲಿ ಹೋದರು? ಏನೂ ತಿಳಿದಿಲ್ಲ ಅಂದಮೇಲೆ ಇದು ಗೊಂಬೆ ಪೂಜೆಯ ಹಾಗೆ ಆಯಿತಲ್ಲವೆ! ಇದಕ್ಕೆ ಭಕ್ತಿ ಎಂದು ಹೇಳಲಾಗುತ್ತದೆ. ತಾವೇ ಪೂಜ್ಯ ಮತ್ತು ತಾವೇ ಪೂಜಾರಿ. ಪೂಜ್ಯ ಮತ್ತು ಪೂಜಾರಿಯಲ್ಲಿ ಬಹಳ ಅಂತರವಿದೆ. ಅದಕ್ಕೂ ಅರ್ಥವಿರಬೇಕಲ್ಲವೆ. ವಿಕಾರಿಗೆ ಪತಿತರೆಂದು ಹೇಳಲಾಗುತ್ತದೆ. ಕ್ರೋಧಿಗೆ ಪತಿತರೆಂದು ಹೇಳುವುದಿಲ್ಲ, ವಿಕಾರದಲ್ಲಿ ಹೋಗುವವರಿಗೇ ಪತಿತರೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ನಿಮಗೆ ಜ್ಞಾನಾಮೃತ ಸಿಗುತ್ತದೆ. ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ತಂದೆಯು ತಿಳಿಸಿದ್ದಾರೆ - ಈ ಭಾರತವೇ ಸತೋಪ್ರಧಾನ, ಶ್ರೇಷ್ಠಾತಿ ಶ್ರೇಷ್ಠವಾಗಿತ್ತು, ಈಗ ತಮೋಪ್ರಧಾನವಾಗಿದೆ, ಇದು ನಿಮ್ಮ ಬುದ್ಧಿಯಲ್ಲಿದೆ. ಇಲ್ಲಿ ಯಾವುದೇ ರಾಜಧಾನಿಯಿಲ್ಲ, ಇದು ಪ್ರಜೆಗಳ ರಾಜ್ಯವಾಗಿದೆ. ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಇಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ವಿನಾಶದ ತಯಾರಿಗಳೂ ಆಗುತ್ತಿದೆ. ದೆಹಲಿಯು ಪರಿಸ್ಥಾನವು ಆಗಲೇಬೇಕಾಗಿದೆ ಆದರೆ ಇದನ್ನು ಯಾರೂ ತಿಳಿದುಕೊಂಡಿಲ್ಲ. ಇದು ಹೊಸ ದೆಹಲಿಯೆಂದು ಅವರು ತಿಳಿದುಕೊಳ್ಳುತ್ತಾರೆ. ಈ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡುವವರು ಯಾರು! ಇದು ಯಾರಿಗೂ ತಿಳಿದಿಲ್ಲ, ಯಾವುದೇ ಶಾಸ್ತ್ರದಲ್ಲಿಯೂ ಇಲ್ಲ. ತಿಳಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಈಗ ನೀವು ಮಕ್ಕಳು ಹೊಸ ಪ್ರಪಂಚಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಕವಡೆಯಿಂದ ವಜ್ರ ಸಮಾನರಾಗುತ್ತಿದ್ದೀರಿ, ಭಾರತವು ಎಷ್ಟು ಸಾಹುಕಾರನಾಗಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗಂತೂ ಅನೇಕ ಧರ್ಮಗಳಿವೆ. ಈಗ ದಯಾಹೃದಯಿ ತಂದೆಯನ್ನು ನೆನಪು ಮಾಡುತ್ತಾರೆ. ಭಾರತವು ಸುಖಧಾಮವಾಗಿತ್ತು ಎಂಬುದನ್ನು ಮರೆತು ಬಿಟ್ಟಿದ್ದಾರೆ. ಈಗ ಭಾರತದ ಗತಿಯೇನಾಗಿದೆ! ವಾಸ್ತವದಲ್ಲಿ ಭಾರತವು ಸ್ವರ್ಗವಾಗಿತ್ತು, ತಂದೆಯ ಜನ್ಮ ಸ್ಥಾನವಲ್ಲವೆ ಆದ್ದರಿಂದ ಡ್ರಾಮಾನುಸಾರ ಅವರಿಗೆ ದಯೆ ಬರುತ್ತದೆ. ಭಾರತವು ಪ್ರಾಚೀನ ದೇಶವಾಗಿದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಮತ್ತ್ಯಾವುದೇ ಧರ್ಮವಿರಲಿಲ್ಲವೆಂದು ಹೇಳುತ್ತಾರೆ. ಈಗ ಈ ಭಾರತವು ಸಂಪೂರ್ಣ ಕನಿಷ್ಟ ಮಟ್ಟಕ್ಕೆ ಬಂದು ಬಿಟ್ಟಿದೆ. ನಮ್ಮ ಭಾರತ ದೇಶವು ಎಲ್ಲದಕ್ಕಿಂತ ಶ್ರೇಷ್ಠವಾಗಿತ್ತು ಎಂದು ಹಾಡುತ್ತಾರೆ. ಅದರ ಹೆಸರೇ ಸ್ವರ್ಗ ಎಂದಿತ್ತು. ಭಾರತದ ಮಹಿಮೆಯು ಯಾರಿಗೂ ತಿಳಿದಿಲ್ಲ. ತಂದೆಯೇ ಬಂದು ಭಾರತದ ಕಥೆಯನ್ನು ತಿಳಿಸುತ್ತಾರೆ. ಭಾರತದ ಕಥೆಯೆಂದರೆ ಪ್ರಪಂಚದ ಕಥೆಯಾಗಿದೆ. ಇದಕ್ಕೆ ಸತ್ಯ ನಾರಾಯಣನ ಕಥೆಯೆಂದು ಹೇಳಲಾಗುತ್ತದೆ. ತಂದೆಯೇ ಕುಳಿತು ತಿಳಿಸುತ್ತಾರೆ - ಪೂರ್ಣ 5000 ವರ್ಷಗಳ ಮೊದಲು ಭಾರತದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರ ಚಿತ್ರಗಳೂ ಇವೆ ಆದರೆ ಈ ರಾಜ್ಯವು ಹೇಗೆ ಸಿಕ್ಕಿತು? ಸತ್ಯಯುಗಕ್ಕೆ ಮೊದಲು ಏನಿತ್ತು? ಸಂಗಮಯುಗಕ್ಕೆ ಮೊದಲು ಏನಿತ್ತು? ಕಲಿಯುಗ. ಇದು ಸಂಗಮಯುಗವಾಗಿದೆ. ಇದರಲ್ಲಿ ತಂದೆಯೇ ಬರಬೇಕಾಗುತ್ತದೆ ಏಕೆಂದರೆ ಯಾವಾಗ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಬೇಕೋ ಆಗಲೇ ನಾನು ಪತಿತ ಪ್ರಪಂಚವನ್ನು ಪಾವನ ಮಾಡಲು ಬರಬೇಕಾಗುತ್ತದೆ, ಆದರೆ ನನ್ನನ್ನು ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಯುಗ-ಯುಗದಲ್ಲಿ ಬರುತ್ತಾರೆಂದು ಹೇಳಿ ಮನುಷ್ಯರು ತಬ್ಬಿಬ್ಬಾಗಿದ್ದಾರೆ. ಸಂಗಮಯುಗವನ್ನು ಕೇವಲ ನೀವೇ ತಿಳಿದುಕೊಂಡಿದ್ದೀರಿ, ನೀವು ಯಾರು - ಬೋರ್ಡಿನ ಮೇಲೆ ಬರೆಯಲ್ಪಟ್ಟಿದೆ, ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು. ಬ್ರಹ್ಮನ ತಂದೆ ಯಾರು? ಸರ್ವಶ್ರೇಷ್ಠ ಶಿವ, ನಂತರ ಬ್ರಹ್ಮಾ, ನಂತರ ಬ್ರಹ್ಮನ ಮೂಲಕ ರಚನೆಯಾಗುತ್ತದೆ. ಪ್ರಜಾಪಿತನೆಂದು ಬ್ರಹ್ಮನಿಗೇ ಹೇಳಲಾಗುತ್ತದೆ, ಶಿವನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಶಿವನು ಎಲ್ಲಾ ಆತ್ಮರ ನಿರಾಕಾರ ತಂದೆಯಾಗಿದ್ದಾರೆ ಮತ್ತೆ ಇಲ್ಲಿಗೆ ಬಂದು ಪ್ರಜಾಪಿತ ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ, ಅವರ ಮೂಲಕ ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ, ಬ್ರಹ್ಮಾರವರ ಮೂಲಕವೇ ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡಿ ಮತ್ತೆ ದೇವತೆಗಳನ್ನಾಗಿ ಮಾಡುತ್ತೇನೆ. ನೀವೇ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೀರಿ. ಈಗ ಮತ್ತೆ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಬೇಕಾಗಿದೆ. ನೀವು ಬಂದು ಬ್ರಹ್ಮನ ಮಕ್ಕಳಾಗಿದ್ದೀರಿ, ಬ್ರಹ್ಮನು ಯಾರ ಮಗ? ಬ್ರಹ್ಮನ ತಂದೆಗೆ ಯಾವುದಾದರೂ ಹೆಸರಿದೆಯೇ? ಅವರು ಶಿವ, ನಿರಾಕಾರ ತಂದೆಯಾಗಿದ್ದಾರೆ. ಅವರು ಬಂದು ಇವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಳ್ಳುತ್ತಾರೆ, ಮುಖ ವಂಶಾವಳಿಯನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಪ್ರವೇಶ ಮಾಡುತ್ತೇನೆ, ಇವರು ನನ್ನವರಾಗಿ ಬಿಡುತ್ತಾರೆ, ಸನ್ಯಾಸ ಧಾರಣೆ ಮಾಡುತ್ತಾರೆ. ಯಾವುದರ ಸನ್ಯಾಸ? 5 ವಿಕಾರಗಳ ಸನ್ಯಾಸ. ಮನೆ-ಮಠವನ್ನು ಬಿಡುವ ಅವಶ್ಯಕತೆಯಿಲ್ಲ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಬೇಕಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ, ಇದೇ ಯೋಗವಾಗಿದೆ, ಇದರಿಂದ ತುಕ್ಕು ಬಿಟ್ಟು ಹೋಗುತ್ತದೆ ಮತ್ತು ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಭಕ್ತಿಯಲ್ಲಿ ಭಲೆ ಎಷ್ಟಾದರೂ ಗಂಗಾ ಸ್ನಾನ ಮಾಡಲಿ, ಜಪ-ತಪ ಇತ್ಯಾದಿಗಳನ್ನು ಮಾಡಲಿ ಆದರೆ ಅವಶ್ಯವಾಗಿ ಕೆಳಗಿಳಿಯಲೇಬೇಕಾಗಿದೆ. ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ಮತ್ತೆ ಸತೋಪ್ರಧಾನರಾಗುವುದು ಹೇಗೆ? ಆ ಮಾರ್ಗವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆಯು ಬಹಳ ಸಹಜ ರೀತಿಯಲ್ಲಿ ತಿಳಿಸುತ್ತಾರೆ, ಆತ್ಮಗಳೊಂದಿಗೆ ಮಾತನಾಡುತ್ತಾರೆ. ಯಾವುದೇ ಗುಜರಾತಿನವರೊಂದಿಗೆ ಅಥವಾ ಸಿಂಧಿಗಳೊಂದಿಗೆ ಮಾತನಾಡುವುದಿಲ್ಲ. ಇದು ಆತ್ಮಿಕ ಜ್ಞಾನವಾಗಿದೆ. ಶಾಸ್ತ್ರಗಳಲ್ಲಿ ದೈಹಿಕ ಜ್ಞಾನವಿದೆ. ಆತ್ಮಕ್ಕೇ ಜ್ಞಾನವು ಬೇಕು. ಆತ್ಮವೇ ಪತಿತನಾಗಿದೆ ಆದ್ದರಿಂದ ಅದಕ್ಕೆ ಆತ್ಮಿಕ ಇಂಜೆಕ್ಷನ್ ಬೇಕು. ತಂದೆಗೆ ಆತ್ಮಿಕ ಅವಿನಾಶಿ ಸರ್ಜನ್ ಎಂದು ಹೇಳಲಾಗುತ್ತದೆ. ಅವರು ಬಂದು ತಮ್ಮ ಪರಿಚಯ ನೀಡುತ್ತಾರೆ - ನಾನು ನಿಮ್ಮ ಆತ್ಮಿಕ ಸರ್ಜನ್ ಆಗಿದ್ದೇನೆ. ನಿಮ್ಮ ಆತ್ಮವು ಪತಿತನಾಗಿರುವ ಕಾರಣ ಶರೀರವೂ ರೋಗಿಯಾಗಿ ಬಿಟ್ಟಿದೆ. ಈ ಸಮಯದಲ್ಲಿ ಭಾರತವಾಸಿ ಹಾಗೂ ಇಡೀ ಪ್ರಪಂಚವೇ ನರಕವಾಸಿಯಾಗಿದೆ ಮತ್ತೆ ಹೇಗೆ ಸ್ವರ್ಗವಾಸಿಯಾಗುವುದು ಎಂಬುದನ್ನು ತಂದೆಯು ತಿಳಿಸುತ್ತಾರೆ. ನಾನೇ ಬಂದು ಎಲ್ಲಾ ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುತ್ತೇನೆ. ಅವಶ್ಯವಾಗಿ ನಾವು ನರಕವಾಸಿಗಳಾಗಿದ್ದೆವು ಎಂಬುದನ್ನು ನೀವೂ ಸಹ ತಿಳಿದುಕೊಳ್ಳುತ್ತೀರಿ. ಕಲಿಯುಗಕ್ಕೆ ನರಕವೆಂದು ಹೇಳಲಾಗುತ್ತದೆ. ಈಗ ಈ ನರಕಕ್ಕೂ ಅಂತ್ಯವಾಗಿದೆ, ಭಾರತವಾಸಿಗಳು ಈ ಸಮಯದಲ್ಲಿ ರೌರವ ನರಕದಲ್ಲಿದ್ದಾರೆ, ಇದಕ್ಕೆ ಸ್ವರ್ಗವೆಂದು ಹೇಳುವುದಿಲ್ಲ. ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ಈಗ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಮಾತನ್ನು ಒಪ್ಪಬೇಕಲ್ಲವೆ. ತಮ್ಮ ಧರ್ಮ ಶಾಸ್ತ್ರವನ್ನೂ ಸಹ ತಿಳಿದುಕೊಂಡಿಲ್ಲ, ತಂದೆಯನ್ನೇ ತಿಳಿದುಕೊಂಡಿಲ್ಲ. |
ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿದ್ದೆನು, ಶ್ರೀಕೃಷ್ಣನಲ್ಲ. ಕೃಷ್ಣನಂತೂ ನಂಬರ್ವನ್ ಪಾವನನಾಗಿದ್ದನು, ಅವನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ. ಕೃಷ್ಣನ ಆತ್ಮವು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪತಿತನಾಗಿದೆ. ಕಾಮ ಚಿತೆಯನ್ನೇರಿ ಕಪ್ಪಾಗಿದ್ದಾರೆ. ಜಗದಂಬೆಯನ್ನು ಕಪ್ಪಾಗಿ ಏಕೆ ತೋರಿಸುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಹೇಗೆ ಕೃಷ್ಣನನ್ನು ಕಪ್ಪಾಗಿ ತೋರಿಸಿದ್ದಾರೆಯೋ ಹಾಗೆಯೇ ಜಗದಂಬೆಯನ್ನು ಕಪ್ಪಾಗಿ ತೋರಿಸುತ್ತಾರೆ. ಈಗ ನೀವು ಕಪ್ಪಾಗಿದ್ದೀರಿ ಮತ್ತೆ ಸುಂದರರಾಗುತ್ತೀರಿ. ನೀವು ಇದನ್ನು ತಿಳಿಸಬಹುದು - ಭಾರತವು ಬಹಳ ಸುಂದರವಾಗಿತ್ತು, ಸುಂದರತೆಯನ್ನು ನೋಡಬೇಕೆಂದರೆ ಅಜ್ಮೀರ್ನಲ್ಲಿ ನೋಡಿ. ಸ್ವರ್ಗದಲ್ಲಿ ಚಿನ್ನ, ವಜ್ರ, ವೈಡೂರ್ಯಗಳ ಮಹಲುಗಳಿತ್ತು, ಈಗಂತೂ ಕಲ್ಲಿನಿಂದ ಮಾಡಲ್ಪಟ್ಟಿದೆ. ಎಲ್ಲರೂ ತಮೋಪ್ರಧಾನರಾಗಿದ್ದಾರೆ ಅಂದಾಗ ಮಕ್ಕಳಿಗೆ ತಿಳಿದಿದೆ – ಶಿವ ತಂದೆ, ಬ್ರಹ್ಮಾದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ ಆದ್ದರಿಂದ ಬಾಪ್ದಾದಾ ಎಂದು ಹೇಳುತ್ತೇವೆ. ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ. ಒಂದುವೇಳೆ ದಾದಾರವರಿಂದ ಸಿಗುತ್ತದೆ ಎಂದು ಹೇಳುವುದಾದರೆ ಬಾಕಿ ಶಿವ ತಂದೆಯ ಬಳಿ ಏನಿದೆ? ಆಸ್ತಿಯು ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ಸಿಗುತ್ತದೆ. ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆ. ಈಗಂತೂ ರಾವಣ ರಾಜ್ಯವಾಗಿದೆ. ನಿಮ್ಮನ್ನು ಬಿಟ್ಟು ಮತ್ತೆಲ್ಲರೂ ನರಕವಾಸಿಗಳಾಗಿದ್ದಾರೆ, ನೀವೀಗ ಸಂಗಮದಲ್ಲಿದ್ದೀರಿ. ಈಗ ಪತಿತರಿಂದ ಪಾವನರಾಗುತ್ತಿದ್ದೀರಿ ನಂತರ ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಈ ವಿದ್ಯೆಯನ್ನು ಮನುಷ್ಯರು ಓದಿಸುವುದಿಲ್ಲ. ನಿಮಗೆ ಮುರುಳಿಯನ್ನು ಯಾರು ನುಡಿಸುತ್ತಾರೆ? ಶಿವ ತಂದೆ. ತಂದೆಯು ಪರಮಧಾಮದಿಂದ ಹಳೆಯ ಪ್ರಪಂಚ, ಹಳೆಯ ಶರೀರದಲ್ಲಿ ಬರುತ್ತಾರೆ. ಯಾರಿಗಾದರೂ ಈ ನಿಶ್ಚಯವಾಗಿ ಬಿಟ್ಟರೆ ಮತ್ತೆ ತಂದೆಯೊಂದಿಗೆ ಮಿಲನ ಮಾಡದೆ ಇರಲು ಸಾಧ್ಯವೇ ಇಲ್ಲ. ಮೊದಲು ಬೇಹದ್ದಿನ ತಂದೆಯೊಂದಿಗೆ ಮಿಲನ ಮಾಡಬೇಕೆಂದು ಹೇಳುತ್ತಾರೆ, ಅವರು ನಿಲ್ಲುವುದಿಲ್ಲ. ಯಾವ ಬೇಹದ್ದಿನ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರ ಬಳಿ ನಮ್ಮನ್ನು ಬೇಗನೆ ಕರೆದುಕೊಂಡು ಹೋಗಿ, ಶಿವ ತಂದೆಯ ರಥವು ಯಾವುದೆಂಬುದನ್ನು ನಾವು ನೋಡಲೇಬೇಕೆಂದು ಹೇಳುತ್ತಾರೆ. ಅವರಂತೂ ಕುದುರೆಗೆ ಶೃಂಗಾರ ಮಾಡುತ್ತಾರೆ, ಆ ರಥವು ಮಹಮ್ಮದ್ನದಾಗಿತ್ತು, ಯಾರು ಧರ್ಮ ಸ್ಥಾಪನೆ ಮಾಡಿದರು. ಭಾರತವಾಸಿಗಳು ನಂದಿಗೆ ತಿಲಕವನ್ನಿಟ್ಟು ಮಂದಿರದಲ್ಲಿ ಇಡುತ್ತಾರೆ. ಇದರ ಮೇಲೆ ಶಿವನ ಸವಾರಿಯಾಯಿತು ಎಂದು ತಿಳಿಯುತ್ತಾರೆ ಆದರೆ ಬಸವನ ಮೇಲೆ ಶಿವನ ಸವಾರಿಯಾಗಲಿ, ಶಂಕರನ ಸವಾರಿಯಾಗಲಿ ಆಗಲಿಲ್ಲ. ಮನುಷ್ಯರು ಏನನ್ನೂ ತಿಳಿದುಕೊಳ್ಳುವುದಿಲ್ಲ. ಶಿವನು ನಿರಾಕಾರನಾಗಿದ್ದಾರೆ ಅಂದಮೇಲೆ ಅವರು ಹೇಗೆ ಸವಾರಿಯಾಗುತ್ತಾರೆ! ಎತ್ತಿನ ಮೇಲೆ ಕುಳಿತುಕೊಳ್ಳಲು ಕಾಲುಗಳು ಬೇಕಲ್ಲವೆ. ಇದು ಅಂಧಶ್ರದ್ಧೆಯಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯಿಂದ ಯಾವ ಜ್ಞಾನಾಮೃತವು ಸಿಗುತ್ತಿದೆಯೋ ಆ ಅಮೃತವನ್ನು ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ. ಪೂಜಾರಿಗಳಿಂದ ಪೂಜ್ಯರಾಗಲು ವಿಕಾರಗಳ ತ್ಯಾಗ ಮಾಡಬೇಕಾಗಿದೆ. |
2. ಯಾವ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆಯೋ ಅವರ ಪ್ರತಿಯೊಂದು ಮಾತನ್ನು ಪಾಲಿಸಬೇಕಾಗಿದೆ. ಪೂರ್ಣ ನಿಶ್ಚಯ ಬುದ್ಧಿಯವರಾಗಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯ ಅರ್ಥವೇನಾಗಿದೆ? ಸ್ವಧರ್ಮದಲ್ಲಿ ಕುಳಿತುಕೊಳ್ಳಿ ಅಥವಾ ತಮ್ಮನ್ನು ಆತ್ಮನೆಂದು ತಿಳಿದು ಶಾಂತಿಯಲ್ಲಿ ಕುಳಿತುಕೊಳ್ಳಿ. ಇದನ್ನು ಸ್ವಧರ್ಮದಲ್ಲಿ ಕುಳಿತುಕೊಳ್ಳುವುದು ಎಂದು ಕರೆಯಲಾಗುವುದು. ಭಗವಾನುವಾಚ- ಸ್ವಧರ್ಮದಲ್ಲಿ ಕುಳಿತುಕೊಳ್ಳಿ. ನಿಮ್ಮ ತಂದೆಯು ಕುಳಿತು ನಿಮಗೆ ಓದಿಸುತ್ತಿದ್ದಾರೆ. ಬೇಹದ್ದಿನ ತಂದೆಯು ಬೇಹದ್ದಿನ ವಿದ್ಯೆಯನ್ನು ಓದಿಸುತ್ತಿದ್ದಾರೆ ಏಕೆಂದರೆ ತಂದೆಯು ಬೇಹದ್ದಿನ ಸುಖವನ್ನು ಕೊಡುವವರಾಗಿದ್ದಾರೆ. ವಿದ್ಯೆಯಿಂದ ಸುಖ ಸಿಗುತ್ತದೆಯಲ್ಲವೆ! ಸದಾ ತಂದೆಯು ಹೇಳುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ. ಬೇಹದ್ದಿನ ತಂದೆಯು ನಿಮ್ಮನ್ನು ವಜ್ರಸಮಾನರನ್ನಾಗಿ ಮಾಡಲು ಬಂದಿದ್ದಾರೆ. ವಜ್ರದಂತೆ ದೇವಿ-ದೇವತೆಗಳೇ ಇರುತ್ತಾರೆ ಅಂದಾಗ ಆ ರೀತಿ ಯಾವಾಗ ಆಗುತ್ತಾರೆ? ಇಷ್ಟೊಂದು ಶ್ರೇಷ್ಠ ಪುರುಷೋತ್ತಮರು ಹೇಗಾದರು? ಇದನ್ನು ತಂದೆಯ ವಿನಃ ಬೇರೆ ಯಾರೂ ತಿಳಿಸಿಕೊಡಲು ಆಗುವುದಿಲ್ಲ. ಪ್ರಜಾಪಿತ ಬ್ರಹ್ಮನ ಮಕ್ಕಳು ನೀವು ಬ್ರಾಹ್ಮಣರಾಗಿದ್ದೀರಿ ಮತ್ತೆ ನೀವೀಗ ದೇವತೆಗಳಾಗಬೇಕು ಬ್ರಾಹ್ಮಣರಿಗೆ ಶಿಖೆಯಿರುತ್ತದೆ. ನೀವೀಗ ಶೂದ್ರರಿಂದ ಬ್ರಾಹ್ಮಣರಾಗಿದ್ದೀರಿ. ನೀವು ಪ್ರಜಾಪಿತ ಬ್ರಹ್ಮನ ಮುಖವಂಶಾವಳಿಯಾಗಿದ್ದೀರಿ, ಕುಖವಂಶಾವಳಿಯಲ್ಲ. ಕಲಿಯುಗದವರೆಲ್ಲಾ ಕುಖವಂಶಾವಳಿಗಳಾಗಿದ್ದಾರೆ, ಸಾಧು-ಸಂತ, ಋಷಿ-ಮುನಿಗಳೆಲ್ಲರೂ ದ್ವಾಪರಯುಗದಿಂದ ಕುಖವಂಶಾವಳಿಗಳಾಗಿದ್ದಾರೆ. ಈಗ ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಮಾತ್ರ ಮುಖವಂಶಾವಳಿಗಳಾಗಿದ್ದೀರಿ. ಇದು ದೇವತೆಗಳಿಗಿಂತಲೂ ಉತ್ತಮ ಸರ್ವೋತ್ತಮ ಕುಲವಾಗಿದೆ ಏಕೆಂದರೆ ನಿಮಗೆ ಓದಿಸುವವರು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ತಂದೆಯೇ ಬಂದಿದ್ದಾರೆ. ತಂದೆಯು ಮಕ್ಕಳಿಗೆ ಕುಳಿತು ತಿಳಿಸುತ್ತಾರೆ- ಯಾರು ಭಕ್ತಿಮಾರ್ಗದಲ್ಲಿರುತ್ತಾರೆಯೋ ಅವರು ಬರುವುದಿಲ್ಲ, ಜ್ಞಾನಮಾರ್ಗದವರು ಬರುತ್ತಾರೆ. ನೀವಿಲ್ಲಿ ಬೇಹದ್ದಿನ ತಂದೆಯಿಂದ ಭಕ್ತಿಯ ಫಲವನ್ನು ತೆಗೆದುಕೊಳ್ಳಲು ಬರುತ್ತೀರಿ. ಈಗ ಭಕ್ತಿಯ ಫಲವನ್ನು ಯಾರು ಪಡೆಯುತ್ತಾರೆ? ಯಾರು ಎಲ್ಲರಿಗಿಂತ ಹೆಚ್ಚು ಭಕ್ತಿ ಮಾಡಿರುತ್ತಾರೆಯೋ ಅವರೇ ಕಲ್ಲಿನಿಂದ ಪಾರಸಬುದ್ಧಿಯವರಾಗುತ್ತಾರೆ, ಅವರೇ ಬಂದು ಜ್ಞಾನವನ್ನು ಪಡೆಯುತ್ತಾರೆ ಏಕೆಂದರೆ ಭಕ್ತಿಯ ಫಲವನ್ನು ಭಗವಂತನೇ ಬಂದು ಕೊಡಬೇಕು. ಇದನ್ನು ಬಹಳ ಚೆನ್ನಾಗಿ ತಿಳಿದುಕೊಳ್ಳುವ ಮಾತಾಗಿದೆ. ಈಗ ನೀವು ಕಲಿಯುಗಿಗಳಿಂದ ಸತ್ಯಯುಗಿ, ವಿಕಾರಿಗಳಿಂದ ನಿರ್ವಿಕಾರಿಗಳಾಗುತ್ತೀರಿ ಅಥವಾ ಪುರುಷೋತ್ತಮರಾಗುತ್ತೀರಿ. ನೀವು ಇಂತಹ ಲಕ್ಷ್ಮೀ-ನಾರಾಯಣರಾಗಲು ಬಂದಿದ್ದೀರಿ. ಇವರು ಭಗವಾನ್-ಭಗವತಿಯಾಗಿರುವುದರಿಂದ ಇವರಿಗೆ ಭಗವಂತನೇ ಓದಿಸುತ್ತಾರೆ. ಭಗವಾನುವಾಚ, ಆದರೆ ಭಗವಂತನೆಂದು ಯಾರಿಗೆ ಕರೆಯಲಾಗುವುದು? ಭಗವಂತನಂತೂ ಒಬ್ಬರೇ ಆಗಿರುತ್ತಾರೆ. ನೂರಾರು-ಸಾವಿರಾರು ಭಗವಂತರಿರುವುದಿಲ್ಲ. ಕಲ್ಲು-ಮುಳ್ಳಿನಲ್ಲಿರುವುದಿಲ್ಲ, ತಂದೆಯನ್ನರಿಯದ ಕಾರಣ ಭಾರತವು ಕಂಗಾಲಾಗಿಬಿಟ್ಟಿದೆ. ಈಗ ಮಕ್ಕಳು ತಿಳಿದುಕೊಂಡಿದ್ದೀರಿ- ಭಾರತದಲ್ಲಿ ಇವರ (ಲಕ್ಷ್ಮೀ-ನಾರಾಯಣ) ರಾಜಧಾನಿಯಿತ್ತು. ಇವರ ಮಕ್ಕಳೆಲ್ಲರೂ ರಾಜಧಾನಿಯ ಮಾಲೀಕರಾಗಿದ್ದರು. ನೀವು ಇಲ್ಲಿಗೆ ಆ ರಾಜಧಾನಿಯ ಮಾಲೀಕರಾಗಲು ಬಂದಿದ್ದೀರಿ. ಈಗ ಇಲ್ಲವಲ್ಲವೆ. ಭಾರತದಲ್ಲಿ ಇವರ ರಾಜ್ಯವಿತ್ತು. ಈಗ ಇಲ್ಲವಲ್ಲವೆ. ಮಕ್ಕಳಿಗೆ ತಿಳಿಸಲಾಗಿದೆ- ಯಾವಾಗ ದೇವಿ-ದೇವತೆಗಳ ರಾಜಧಾನಿಯಿತ್ತು, ಸೂರ್ಯವಂಶಿ-ಚಂದ್ರವಂಶಿಯರಿದ್ದರು ಆಗ ಅನ್ಯಧರ್ಮಗಳಿರಲಿಲ್ಲ. ಈ ಸಮಯದಲ್ಲಿ ಅನೇಕ ಧರ್ಮಗಳಿವೆ ಆದರೆ ಈ ಧರ್ಮವಿಲ್ಲದಂತಾಗಿದೆ. ಇದು ತಳಪಾಯವಾಗಿದ್ದು ಇದಕ್ಕೆ ಬೇರು (ಮೂಲ) ಎಂದೂ ಕರೆಯಲಾಗುವುದು. ಈ ಸಮಯದಲ್ಲಿ ಮನುಷ್ಯಸೃಷ್ಟಿಯ ಬೇರುಗಳೆಲ್ಲವೂ ಸುಟ್ಟುಹೋಗಿದೆ. ಉಳಿದ ಎಲ್ಲಾ ಧರ್ಮಗಳು ನಿಂತಿವೆ. ಈಗ ಇವುಗಳ ಆಯಸ್ಸು ಪೂರ್ಣ ಆಗುತ್ತಿದೆ. ಈ ಮನುಷ್ಯಸೃಷ್ಟಿ ರೂಪಿ ಭಿನ್ನತೆಯುಳ್ಳ ವೃಕ್ಷವಾಗಿದೆ. ನಾಮ-ರೂಪ, ದೇಶ-ಕಾಲ ಭಿನ್ನವಾಗಿದೆಯಲ್ಲವೆ! ಎಷ್ಟು ದೊಡ್ಡವೃಕ್ಷವಾಗಿದೆ. ತಂದೆಯು ತಿಳಿಸುತ್ತಾರೆ- ಕಲ್ಪ-ಕಲ್ಪವೂ ಈ ವೃಕ್ಷ ತಮೋಪ್ರಧಾನವಾಗಿಬಿಡುತ್ತದೆ, ನಿಸ್ಸಾರವಾಗಿಬಿಡುತ್ತದೆ ಆಗ ನಾನು ಬರುತ್ತೇನೆ. ನೀವು ನನ್ನನ್ನು ಕರೆಯುತ್ತೀರಿ, ತಂದೆಯೇ ಬನ್ನಿ, ನಾವು ಪತಿತರನ್ನು ಪಾವನ ಮಾಡಲು ಬನ್ನಿ ಎಂದು ಕರೆಯುತ್ತೀರಿ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಆಗ ನಿರಾಕಾರ ತಂದೆಯ ನೆನಪು ಬರುತ್ತದೆ ಆದರೆ ಸಾಕಾರ ತಂದೆಯ ನೆನಪು ಬರುವುದಿಲ್ಲ. ಪತಿತ-ಪಾವನ, ಸದ್ಗತಿದಾತ ಒಬ್ಬರೇ ಆಗಿದ್ದಾರೆ. ಯಾವಾಗ ಸತ್ಯಯುಗವಾಗಿತ್ತು, ನಿಮಗೆ ಸದ್ಗತಿಯಿತ್ತು. ಈಗ ನೀವು ಪುರುಷೋತ್ತಮ ಸಂಗಮಯುಗದಲ್ಲಿ ಕುಳಿತಿದ್ದೀರಿ ಉಳಿದವರೆಲ್ಲರೂ ಕಲಿಯುಗದಲ್ಲಿದ್ದಾರೆ. ನೀವು ಪುರುಷೋತ್ತಮ ಸಂಗಮಯುಗದಲ್ಲಿದ್ದಿರಿ, ಒಬ್ಬ ಭಗವಂತನಿಗೆ ಉತ್ತಮಕ್ಕಿಂತಲೂ ಉತ್ತಮ ಪುರುಷ ಅಥವಾ ಸರ್ವೋತ್ತಮ ಎಂದು ಗಾಯನ ಮಾಡಲಾಗುತ್ತದೆ. ನಿಮ್ಮ ಹೆಸರೂ ಶ್ರೇಷ್ಠ, ನಿಮ್ಮ ಧಾಮವೂ ಶ್ರೇಷ್ಠ. ಶ್ರೇಷ್ಠಾತಿಶ್ರೇಷ್ಠ ತಂದೆಯು ಪರಮಧಾಮದಲ್ಲಿರುತ್ತಾರೆ. ಇವನ್ನು ತಿಳಿದುಕೊಳ್ಳಲು ಬಹಳ ಸಹಜವಾಗಿದೆ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ ಮತ್ತೆ ಸಂಗಮಯುಗವಾಗಿದೆ. ಇದು ಯಾರಿಗೂ ತಿಳಿದಿಲ್ಲ. ನಾಟಕದಲ್ಲಿ ಈ ಭಕ್ತಿಮಾರ್ಗವೂ ಮಾಡಲ್ಪಟ್ಟಿದೆ. ತಂದೆಯು ಮತ್ತೆ ಭಕ್ತಿಮಾರ್ಗವನ್ನು ಏಕೆ ಮಾಡಿದ್ದಾರೆಂದು ಹೇಳುವಂತಿಲ್ಲ. ಇದು ಅನಾದಿಯಾಗಿದೆ, ನಾನು ಕುಳಿತು ನಿಮಗೆ ನಾಟಕದ ರಹಸ್ಯವನ್ನು ತಿಳಿಸುತ್ತೇನೆ. ನಾನು ಮಾಡಿದೆ ಅಂದರೆ ಯಾವಾಗ ಮಾಡಿದರೆಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ- ಇದು ಅನಾದಿಯಾಗಿದೆ. ಯಾವಾಗ ಆರಂಭವಾಯಿತೆಂಬ ಪ್ರಶ್ನೆಯು ಬರುವುದಿಲ್ಲ. ಒಂದುವೇಳೆ ಇಂತಹ ಸಮಯದಲ್ಲಿ ಪ್ರಾರಂಭವಾಯಿತೆಂದು ಹೇಳಿದರೆ ಯಾವಾಗ ಸಮಾಪ್ತಿಯಾಗುತ್ತದೆ ಎಂದು ಕೇಳುತ್ತಾರೆ ಆದರೆ ಈ ಚಕ್ರವು ಸುತ್ತುತ್ತಲೇ ಇರುತ್ತದೆ. ನೀವು ಬ್ರಹ್ಮಾ, ವಿಷ್ಣು, ಶಂಕರರ ಚಿತ್ರವನ್ನು ಮಾಡುತ್ತೀರಿ. ಇವರು ದೇವತೆಗಳಾಗಿದ್ದಾರೆ. ತ್ರಿಮೂರ್ತಿಗಳನ್ನು ತೋರಿಸುತ್ತಾರೆ ಅದರಲ್ಲಿ ಸರ್ವೋತ್ತಮ ಶಿವನನ್ನು ತೋರಿಸುವುದಿಲ್ಲ, ಅವರನ್ನು ಬೇರೆ ಮಾಡಿಬಿಡುತ್ತಾರೆ. ಬ್ರಹ್ಮನಿಂದ ಸ್ಥಾಪನೆ ಅದು ಈಗ ನಡೆಯುತ್ತಿದೆ, ನೀವು ನಿಮ್ಮ ರಾಜ್ಯಸ್ಥಾಪನೆ ಮಾಡುತ್ತಿದ್ದೀರಿ. ರಾಜಧಾನಿಯಲ್ಲಿ ಎಲ್ಲಾ ರೀತಿಯ ಪದವಿಗಳಿರುತ್ತವೆ. ಅಧ್ಯಕ್ಷ, ರಾಷ್ಟ್ರಾಧ್ಯಕ್ಷ, ಪ್ರಧಾನಮಂತ್ರಿ, ಮುಖ್ಯಮಂತ್ರಿ.... ಎಲ್ಲರೂ ಇರುತ್ತಾರೆ. ಇವರೆಲ್ಲರೂ ಸಲಹೆ ಕೊಡಲು ಇರುತ್ತಾರೆ. ಸತ್ಯಯುಗದಲ್ಲಿ ಸಲಹೆ ಕೊಡಲು ಯಾರೂ ಬೇಕಾಗುವುದಿಲ್ಲ. ಈಗ ನಿಮಗೆ ಸಲಹೆ ಅಥವಾ ಶ್ರೀಮತ ಸಿಗುತ್ತಿದೆ, ಇದೇ ಅವಿನಾಶಿಯಾಗಿಬಿಡುತ್ತದೆ. ಈಗ ಎಷ್ಟೊಂದು ಜನ ಸಲಹೆಗಾರರಿದ್ದಾರೆ! ಬಹಳಷ್ಟು ಮಂದಿಯಿದ್ದಾರೆ. ಹಣವನ್ನೂ ಖರ್ಚು ಮಾಡಿ ಸಲಹೆ ಕೊಡಲು ಮಂತ್ರಿಯಾಗುತ್ತಾರೆ. ಸರ್ಕಾರವೇ ಹೇಳುತ್ತದೆ- ಇವರು ಲಂಚ ತಿನ್ನುವವರಾಗಿದ್ದಾರೆ, ಇದು ಕಲಿಯುಗವಾಗಿದೆ ಆದರೆ ಅಲ್ಲಿ ಈ ರೀತಿ ನಡೆಯುವುದಿಲ್ಲ, ಅಲ್ಲಿ ಮಂತ್ರಿಯ ಅವಶ್ಯಕತೆಯೂ ಇರುವುದಿಲ್ಲ, ಸತ್ಯಯುಗದಲ್ಲಿ ಗುರು, ಮಂತ್ರಿಯಿರುವುದಿಲ್ಲ, ಈಗ ನಿಮಗೆ ಅವಿನಾಶಿಯಾಗಿ 21 ಜನ್ಮಗಳಿಗಾಗಿ ಶ್ರೀಮತವು ಸಿಗುತ್ತಿದೆ. ವೃದ್ಧರಾದ ನಂತರ ಚಿಕ್ಕ ಮಗುವಾಗುತ್ತೀರಿ. ಹೇಗೆ ಸರ್ಪವು ಒಂದು ಪೆÇರೆಯನ್ನು ಬಿಟ್ಟು ಇನ್ನೊಂದನ್ನು ಪಡೆಯುತ್ತದೆ! ಪ್ರಾಣಿಗಳ ಉದಾಹರಣೆಯನ್ನು ಕೊಡಲಾಗುತ್ತದೆ. ಮನುಷ್ಯರಲ್ಲಿ ಸ್ವಲ್ಪವೂ ಬುದ್ಧಿಯಿಲ್ಲ ಏಕೆಂದರೆ ಕಲ್ಲುಬುದ್ಧಿಯವರಾಗಿದ್ದಾರೆ. |
ತಂದೆಯು ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ ನೀವು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೀರಿ. ನೀವು ಕೊಳಕು ವಸ್ತ್ರವನ್ನು ಸ್ವಚ್ಛ ಮಾಡುವವರೆಂದು ಗ್ರಂಥದಲ್ಲಿಯೂ ಕೇಳುತ್ತಾ-ಓದುತ್ತಾ ಬಂದಿದ್ದೀರಿ. ಭಗವಂತನನ್ನು ಕರೆಯುತ್ತಾರೆ- ಬಂದು ಆತ್ಮರೂಪಿ ಅಶುದ್ಧ ವಸ್ತ್ರವನ್ನು ಸ್ವಚ್ಛ ಮಾಡು ಎಂದು ಕರೆಯುತ್ತಾರೆ. ನಾವೆಲ್ಲಾ ಆತ್ಮರ ತಂದೆ ಬಂದು ನಮ್ಮ ವಸ್ತ್ರವನ್ನು ಸ್ವಚ್ಛಮಾಡು, ಶರೀರವನ್ನು ತೊಳೆಯುವುದಲ್ಲ-ಆತ್ಮವನ್ನು ಸ್ವಚ್ಛಮಾಡಬೇಕು ಏಕೆಂದರೆ ಆತ್ಮವೇ ಪತಿತವಾಗಿದೆ. ಪತಿತ ಆತ್ಮರನ್ನು ಬಂದು ಪಾವನ ಮಾಡು ಆಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನಾನು ಇಲ್ಲಿ ಬರಬೇಕಾಗುತ್ತದೆ, ನಾನೇ ಜ್ಞಾನಸಾಗರನಾಗಿದ್ದೇನೆ, ಪವಿತ್ರತೆಯ ಸಾಗರನಾಗಿದ್ದೇನೆ. ನೀವು ಬೇಹದಿನ ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯನ್ನು ಪಡೆಯುತ್ತೀರಿ. ಹದ್ದಿನ ಆಸ್ತಿಯಲ್ಲಿ ಬಹಳ ದುಃಖವಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತಾರೆ. ಅಪಾರ ದುಃಖವಿದೆ. ತಂದೆಯು ತಿಳಿಸಿದ್ದಾರೆ- ಈ ಪಂಚವಿಕಾರಗಳೆಂಬ ರಾವಣನು ನಿಮ್ಮ ಅತಿದೊಡ್ಡ ಶತ್ರುವಾಗಿದ್ದಾನೆ, ಇದೇ ನಿಮ್ಮ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಹೇ ಮಕ್ಕಳೇ, ಈ ಒಂದು ಜನ್ಮದಲ್ಲಿ ಬ್ರಾಹ್ಮಣರಾಗಿ ಕಾಮವಿಕಾರದ ಮೇಲೆ ವಿಜಯಿಗಳಾದರೆ ಜಗತ್ಜೀತರಾಗುತ್ತೀರಿ. ನೀವು ದೇವತೆಗಳಾಗಲು ಪವಿತ್ರತೆಯನ್ನು ಧಾರಣೆ ಮಾಡುತ್ತೀರಿ. ನೀವು ಆದಿಸನಾತನ ದೇವಿ-ದೇವತಾಧರ್ಮದ ಸ್ಥಾಪನೆ ಮಾಡಲು ಬಂದಿದ್ದೀರಿ. ಇದು ಪುರುಷೋತ್ತಮ ಸಂಗಮಯುಗವಾಗಿದೆ, ಇದರಲ್ಲಿ ಪುರುಷಾರ್ಥ ಮಾಡಿ ಪುರುಷೋತ್ತಮರಾಗಬೇಕು. ಕಲ್ಪದ ಹಿಂದೆ ಯಾರು ಸೂರ್ಯವಂಶಿ-ಚಂದ್ರವಂಶಿ ಪಾವನರಾಗಿದ್ದರು ಅವರೇ ಅವಶ್ಯವಾಗಿ ನಂತರ ಆಗುತ್ತಾರೆ ಆದರೆ ಅದರಲ್ಲಿ ಸಮಯವಂತೂ ಹಿಡಿಸುತ್ತದೆ. ತಂದೆಯು ಬಹಳ ಸಹಜವಾಗಿ ಉಪಾಯವನ್ನು ತಿಳಿಸುತ್ತಾರೆ. ಈಗ ನೀವು ತಂದೆಗೆ ಮಕ್ಕಳಂತೂ ಆಗಿದ್ದೀರಿ. ಇಲ್ಲಿಗೆ ನೀವು ಯಾರ ಬಳಿ ಬಂದಿದ್ದೀರಿ? ಅವರು ನಿರಾಕಾರ ಆಗಿದ್ದಾರೆ, ಅವರು ಈ (ಬ್ರಹ್ಮಾ) ಶರೀರವನ್ನು ಲೋನ್ ತೆಗೆದುಕೊಂಡಿದ್ದಾರೆ. ಸ್ವಯಂ ತಂದೆಯೇ ತಿಳಿಸುತ್ತಾರೆ- ಇದಾಗಿದೆ ಅನೇಕ ಜನ್ಮಗಳ ಅಂತ್ಯದಲ್ಲಿಯೂ ಅಂತ್ಯ ಜನ್ಮವಾಗಿದೆ. ಇದು ಎಲ್ಲದಕ್ಕಿಂತಲೂ ಹಳೆಯ ಶರೀರವಾಗಿದೆ. ನಾನು ಹಳೆಯ ರಾವಣನ ಅಸುರೀ ಪ್ರಪಂಚದಲ್ಲಿ ಬರುತ್ತೇನೆ ಹಾಗೂ ಯಾರು ತಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲವೋ ಅವರ ಶರೀರದಲ್ಲಿ ಬರುತ್ತೇನೆ. ಇದು ಅನೇಕ ಜನ್ಮಗಳ ಅಂತಿಮ ಜನ್ಮವಾಗಿದೆ. ಯಾವಾಗ ಅವರ ವಾನಪ್ರಸ್ಥ ಸ್ಥಿತಿಯಾಗುತ್ತದೆ ಆಗ ನಾನು ಪ್ರವೇಶ ಮಾಡುತ್ತೇನೆ. ಸಾಮಾನ್ಯವಾಗಿ ವಾನಪ್ರಸ್ಥ ಜೀವನದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಾರೆ. 60 ಆಯಿತೆಂದರೆ ಊರುಗೋಲು ಬರುತ್ತದೆ..... ಎಂದು ಹೇಳುತ್ತಾರಲ್ಲವೆ! ಮನೆಯಲ್ಲಿದ್ದಾಗ ಮಕ್ಕಳಿಂದ ತೊಂದರೆಯಾಗುತ್ತದೆ ಆದ್ದರಿಂದ ಮನೆಬಿಟ್ಟು ಹೋಗುತ್ತಾರೆ. ಮಕ್ಕಳೂ ಸಹ ತಂದೆಗೆ ಹೊಡೆಯುವುದರಲ್ಲಿ ತಡ ಮಾಡುವುದಿಲ್ಲ. ಇವರು ಯಾವಾಗ ಸಾಯುತ್ತಾರೆ, ನಮಗೆ ಹಣ ಸಿಗುತ್ತದೆ ಎಂದು ಹೇಳುತ್ತಾರೆ. ಬಹಳ ವಾನಪ್ರಸ್ಥಿಗಳ ಸತ್ಸಂಗ ನಡೆಯುತ್ತದೆ. ಸರ್ವರ ಸದ್ಗತಿದಾತ ಒಬ್ಬರೇ ಆಗಿದ್ದಾರೆ, ಅವರು ಸಂಗಮಯುಗದಲ್ಲಿ ಬರುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ. ನೀವು ಸತ್ಯಯುಗದಲ್ಲಿ ಸದ್ಗತಿಯಲ್ಲಿದ್ದಾಗ ಉಳಿದವರು ಶಾಂತಿಧಾಮದಲ್ಲಿರುತ್ತಾರೆ. ಇವರಿಗೆ ಸರ್ವರ ಸದ್ಗತಿದಾತ ಎಂದು ಕರೆಯುತ್ತಾರೆ, ತಂದೆಯ ವಿನಃ ಯಾರೂ ಬೇರೆ ಸದ್ಗತಿದಾತರಾಗಲು ಸಾಧ್ಯವಿಲ್ಲ. ಯಾರಿಗೂ ಶ್ರೀ ಹಾಗೂ ಶ್ರೀ ಶ್ರೀ ಎಂದು ಹೇಳಬಾರದು. ಶ್ರೀ ಅರ್ಥಾತ್ ದೇವತೆಗಳು ಶ್ರೇಷ್ಠವಾಗಿರುತ್ತಾರೆ. ಶ್ರೀಲಕ್ಷ್ಮೀ-ಶ್ರೀನಾರಾಯಣ ಅವರಿಗೆ ಕರೆಯಲಾಗುತ್ತದೆ. ಅವರನ್ನು ಈ ರೀತಿ ಮಾಡುವವರು ಯಾರು? ಶ್ರೀ ಶ್ರೀ ಶಿವತಂದೆಗೆ ಹೇಳಬೇಕಾಗುವುದು. ತಂದೆಯು ನಮ್ಮ ತಪ್ಪುಗಳನ್ನು ಸಿದ್ಧ ಮಾಡಿ ಹೇಳುತ್ತಾರೆ- ನೀವು ಇಷ್ಟೊಂದು ಗುರುಗಳ ಸೇವೆ ಮಾಡಿದಿರಿ ಮತ್ತೆ ಮಾಡುತ್ತೀರಿ ಮತ್ತೆ ಅದೇ ಗುರುಗಳನ್ನೇ ಮಾಡಿಕೊಳ್ಳುತ್ತೀರಿ. ಚಕ್ರವು ಹಾಗೆಯೇ ಪುನರಾವರ್ತನೆಯಾಗುತ್ತದೆ. ನೀವು ಸ್ವರ್ಗದಲ್ಲಿದ್ದಾಗ ಅದು ಸುಖಧಾಮವಾಗಿರುತ್ತದೆ. ಪವಿತ್ರತೆ-ಸುಖ-ಶಾಂತಿಯೆಲ್ಲವೂ ಇರುತ್ತದೆ, ಅಲ್ಲಿ ಕಲಹ-ಜಗಳ ಇರುವುದೇ ಇಲ್ಲ. ಬಾಕಿ ಉಳಿದವರೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ಭಲೆ ಸತ್ಯಯುಗವನ್ನು ಲಕ್ಷಾಂತರ ವರ್ಷಗಳೆಂದು ಹೇಳಿರಬಹುದು ಆದರೆ ತಂದೆಯು ತಿಳಿಸುತ್ತಾರೆ- ಅದು ಲಕ್ಷಾಂತರ ವರ್ಷಗಳ ಮಾತಿಲ್ಲ, ಇದು 5000 ವರ್ಷಗಳ ಮಾತಾಗಿದೆ. ತಂದೆಯು ಮನುಷ್ಯರಿಗೆ 84 ಜನ್ಮಗಳು ಮಾತ್ರವೆಂದು ತಿಳಿಸುತ್ತಾರೆ. ಇದೂ ಸಹ ನಾಟಕವು ಮಾಡಲ್ಪಟ್ಟಿದೆ. ಪಾತ್ರಧಾರಿಗಳಾಗಿದ್ದು ನಾಟಕದ ರಚಯಿತ, ನಿರ್ದೇಶಕ, ಮುಖ್ಯಪಾತ್ರಧಾರಿಗಳು ಯಾರೆಂದು ತಿಳಿಯದೇ ಇದ್ದಾಗ ಅಂತಹವರಿಗೆ ಏನು ಹೇಳಲಾಗುವುದು! ತಂದೆಯು ತಿಳಿಸುತ್ತಾರೆ- ಈ ಬೇಹದ್ದಿನ ನಾಟಕವನ್ನು ಮನುಷ್ಯರು ಯಾರೂ ತಿಳಿದುಕೊಂಡಿಲ್ಲ ತಂದೆಯೇ ಬಂದು ತಿಳಿಸುತ್ತಾರೆ. ಇದು ನಾಟಕವಾಗಿದೆ, ನಾವು ಶರೀರವನ್ನು ಪಡೆದು ಪಾತ್ರವನ್ನಭಿನಯಿಸುತ್ತೇವೆ ಎಂದು ಹೇಳುತ್ತಾರೆ ಆದರೆ ನಾಟಕದಲ್ಲಿ ಮುಖ್ಯಪಾತ್ರಧಾರಿಗಳು ಯಾರು? ಯಾರೂ ತಿಳಿಸಿಕೊಡಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಈ ಬೇಹದ್ದಿನ ನಾಟಕವು ಹೇನಿನ ರೀತಿ ನಡೆಯುತ್ತದೆ, ಟಿಕ್-ಟಿಕ್ ಎಂದು ನಡೆಯುತ್ತಿರುತ್ತದೆ. ಮುಖ್ಯ ಶ್ರೇಷ್ಠಾತಿಶ್ರೇಷ್ಠ ತಂದೆಯಾಗಿದ್ದಾರೆ, ಅವರೇ ಬಂದು ತಿಳಿಸುತ್ತಾರೆ ಹಾಗೂ ಸರ್ವರ ಸದ್ಗತಿ ಮಾಡುತ್ತಾರೆ. ಸತ್ಯಯುಗದಲ್ಲಿ ಬೇರೆ ಯಾರೂ ಇರುವುದಿಲ್ಲ, ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಆ ಕಡಿಮೆಯಿರುವವರೇ ಎಲ್ಲದಕ್ಕಿಂತ ಹೆಚ್ಚು ಭಕ್ತಿ ಮಾಡಿರುತ್ತಾರೆ. ನಿಮ್ಮ ಬಳಿ ಪ್ರದರ್ಶನ ಅಥವಾ ಮ್ಯೂಜಿಯಂಗೆ ಬಹಳ ಭಕ್ತಿ ಮಾಡಿರುವವರೇ ಬರುತ್ತಾರೆ. ಒಬ್ಬ ಶಿವನ ಭಕ್ತಿ ಮಾಡುವುದನ್ನು ಅವ್ಯಭಿಚಾರಿ ಭಕ್ತಿಯೆಂದು ಕರೆಯಲಾಗುವುದು. ನಂತರ ಅನೇಕರ ಭಕ್ತಿಮಾಡುತ್ತಾ ವ್ಯಭಿಚಾರಿಗಳಾಗುತ್ತಾರೆ. ಈಗಂತೂ ಸಂಪೂರ್ಣ ತಮೋಪ್ರಧಾನ ಭಕ್ತಿಯಾಗಿದೆ, ಮೊದಲು ಸತೋಪ್ರಧಾನ ಭಕ್ತಿಯಿತ್ತು ನಂತರ ಏಣಿ ಇಳಿಯುತ್ತಾ ತಮೋಪ್ರಧಾನರಾಗಿಬಿಟ್ಟಿದ್ದಾರೆ. ಇಂತಹ ಸ್ಥಿತಿ ಬಂದಾಗ ತಂದೆಯು ಎಲ್ಲರನ್ನೂ ಸತೋಪ್ರಧಾನ ಮಾಡಲು ಬರುತ್ತಾರೆ. ಈ ಬೇಹದ್ದಿನ ನಾಟಕವನ್ನು ನೀವೀಗ ತಿಳಿದುಕೊಂಡಿದ್ದೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಲು ಅವಶ್ಯವಾಗಿ ಪಾವನರಾಗಬೇಕು. ಈಗ ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳಿ ಅರ್ಥಾತ್ ಕಾಮಜೀತರಾಗಿ ಆಗ ಜಗತ್ಜೀತರಾಗುತ್ತೀರಿ. |
2. ಬೇಹದ್ದಿನ ತಂದೆಯಿಂದ ವಿದ್ಯೆಯನ್ನು ಓದಿ ಸ್ವಯಂನ್ನು ಕವಡೆಯಿಂದ ವಜ್ರದಂತೆ ಮಾಡಿಕೊಳ್ಳಬೇಕು. ಬೇಹದ್ದಿನ ಸುಖವನ್ನು ಪಡೆಯಬೇಕಾಗಿದೆ. ಮನುಷ್ಯರಿಂದ ದೇವತೆಯನ್ನಾಗಿ ಮಾಡುವ ತಂದೆಯು ಈಗ ನಮ್ಮ ಸನ್ಮುಖದಲ್ಲಿದ್ದಾರೆ, ಇದು ನಮ್ಮ ಸರ್ವೋತ್ತಮ ಬ್ರಾಹ್ಮಣಕುಲವಾಗಿದೆ ಎಂಬ ನಶೆಯಿರಬೇಕು. |
ಓಂ ಶಾಂತಿ. ಇದು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣ ಕುಲ ಭೂಷಣರು ಪ್ರತಿಜ್ಞೆ ಮಾಡುತ್ತಾರೆ, ಏಕೆಂದರೆ ಅವರ ಪ್ರೀತಿ ಒಬ್ಬ ತಂದೆಯ ಜೊತೆ ಇದೆ. ಇದು ವಿನಾಶದ ಸಮಯ ಎಂದು ನೀವು ತಿಳಿದಿದ್ದೀರಿ. ವಿನಾಶವಂತೂ ಆಗಲೇಬೇಕೆಂದು ತಂದೆ ತಿಳಿಸುತ್ತಾರೆ. ವಿನಾಶ ಕಾಲದಲ್ಲಿ ತಂದೆಯ ಜೊತೆ ಪ್ರೀತಿ ಇರುವವರೆ ವಿಜಯವನ್ನು ಪಡೆಯುತ್ತಾರೆ ಅರ್ಥಾತ್ ಸತ್ಯಯುಗದ ಮಾಲೀಕರಾಗುತ್ತಾರೆ. ವಿಶ್ವದ ಮಾಲೀಕರು ರಾಜರು ಆಗುತ್ತಾರೆ ಪ್ರಜೆಗಳು ಆಗುತ್ತಾರೆ ಎಂದು ಶಿವ ತಂದೆಯು ತಿಳಿಸಿದ್ದಾರೆ ಆದರೆ ಪದವಿಯಲ್ಲಿ ಬಹಳ ಅಂತರವಿರುತ್ತದೆ. ಎಷ್ಟು ತಂದೆಯ ಜೊತೆ ಪ್ರೀತಿಯನ್ನಿಡುತ್ತಿರೋ ನೆನಪಿನಲ್ಲಿ ಇರುತ್ತಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಂದೆಯ ನೆನಪಿನಿಂದಲೇ ನಿಮ್ಮ ವಿಕರ್ಮಗಳ ಹೊರೆ ಭಸ್ಮವಾಗುವುದು ಎಂದು ತಂದೆ ತಿಳಿಸುತ್ತಾರೆ. ವಿನಾಶ ಕಾಲೇ ವಿಪರೀತ ಬುದ್ದಿ... ಎಂದು ನೀವು ಬರೆಯುವುದಕ್ಕೆ ಹೆದರಬೇಕಾಗಿಲ್ಲ. ವಿಪರೀತ ಬುದ್ದಿಯವರ ವಿನಾಶವಾಗುತ್ತದೆ ಮತ್ತು ಪ್ರೀತಿ ಬುದ್ದಿ ಇರುವವರ ವಿಜಯವಾಗುತ್ತದೆ ಎಂದು ತಂದೆಯ ಸ್ವತಹವಾಗಿ ತಿಳಿಸುತ್ತಾರೆ. ತಂದೆಯು ಅವಶ್ಯವಾಗಿ ತಿಳಿಸುತ್ತಾರೆ - ಈ ಜಗತ್ತಿನಲ್ಲಿ ಯಾರಲ್ಲಿಯೂ ಪ್ರೀತಿಯಿಲ್ಲ. ನಿಮ್ಮದೇ ಪ್ರೀತಿಯಿರುವುದು. ಪರಮಾತ್ಮ ಮತ್ತು ಶ್ರೀಕೃಷ್ಣನ ಮಹಿಮೆಯು ಭಿನ್ನವಾಗಿದೆ ಎಂದು ಬರೆದರೆ ಗೀತೆಯ ಭಗವಂತ ಯಾರು ಎಂದು ಅವಶ್ಯವಾಗಿ ಸಿದ್ದವಾಗುತ್ತದೆ. ಜ್ಞಾನ ಸಾಗರ, ಪತಿತ-ಪಾವನ, ಪರಮಪಿತ ಪರಮಾತ್ಮನಾಗಿದ್ದಾರೆಯೋ ಅಥವಾ ನೀರಿನ ನದಿಯೋ? ಜ್ಞಾನದ ಗಂಗೆಯೇ ಅಥವಾ ನೀರಿನ ಗಂಗೆಯೇ ಎಂದು ಬಾಬಾ ಬಹಳ ಸಹಜವಾಗಿ ತಿಳಿಸುತ್ತಾರೆ. ಎರಡನೆಯ ಮಾತು ನೀವು ಯಾವಾಗ ಪ್ರದರ್ಶನಿಗಳನ್ನು ಇಡುತ್ತಿರೆಂದರೆ ಮೊಟ್ಟ ಮೊದಲು ಗೀತಾ ಪಾಠಶಾಲೆಯವರನ್ನು ನಿಮಂತ್ರಣ ಕೊಟ್ಟು ಕರೆಯಬೇಕು. ಅವರಂತೂ ಬೇಕಾದಷ್ಟು ಜನ ಇದ್ದಾರೆ. ಅವರಿಗೆ ನಿಮಂತ್ರಣ ಕೊಡಬೇಕು. ಯಾರು ಶ್ರೀಮದ್ಬಗವದ್ಗೀತೆಯ ಅಭ್ಯಾಸ ಮಾಡುತ್ತಾರೆಯೋ ಅವರಿಗೆ ಮೊದಲು ನಿಮಂತ್ರಣ ಕೊಡಬೇಕು ಏಕೆಂದರೆ ಅವರು ಮರೆತು ಬಿಟ್ಟಿದ್ದಾರೆ, ಎಲ್ಲರಿಗೂ ಮರೆಸಿದ್ದಾರೆ. ಅವರನ್ನು ಕರೆದು ಹೇಳಬೇಕು - ಇಲ್ಲಿ ಬಂದು ತಿಳಿದುಕೊಳ್ಳಿ, ನಂತರ ನಿಮಗೆ ಹೇಗೆ ಬೇಕೊ ಹಾಗೆ ಮಾಡಿ. ಗೀತೆಯ ಬಗ್ಗೆ ತಿಳಿಸುತ್ತಾ, ಗೀತೆಯ ಬಗ್ಗೆಯೇ ಇವರು ಪ್ರಚಾರ ಮಾಡುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಗೀತೆಯಿಂದಲೇ ಸ್ವರ್ಗದ ಸ್ಠಾಪನೆಯಾಯಿತು. ಗೀತೆಯ ಮಹಿಮೆ ಬಹಳ ಇದೆ ಆದರೆ ಭಕ್ತಿಮಾರ್ಗದ ಗೀತೆಯಲ್ಲ. ನಾನು ಸತ್ಯವಾಗಿದ್ದೇನೆ, ಸತ್ಯವನ್ನೇ ಹೇಳುತ್ತೇನೆ ಎಂದು ಬಾಬಾ ತಿಳಿಸುತ್ತಾರೆ. ಮನುಷ್ಯರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಯಾರು ಸತ್ಯವನ್ನು ಹೇಳುವುದಿಲ್ಲ, ನಾನೇ ಸತ್ಯವನ್ನು ಹೇಳುವುದು. ಪರಮಾತ್ಮನನ್ನು ಸರ್ವವ್ಯಾಪಿ ಎನ್ನುವುದು ಅಸತ್ಯವಾಗಿದೆ, ಇವೆಲ್ಲವೂ ವಿನಾಶ ಹೊಂದುತ್ತವೆ ಮತ್ತು ಕಲ್ಪ-ಕಲ್ಪ ಹೀಗೆಯೇ ಆಗುತ್ತದೆ. ನೀವೂ ಸಹ ಮೊಟ್ಟ ಮೊದಲು ಮುಖ್ಯವಾಗಿ ಇದನ್ನೇ ತಿಳಿಸಬೇಕಾಗಿದೆ - ಯುರೋಪಿಯನ್ನರು ವಿನಾಶ ಕಾಲೆ ವಿಪರೀತ ಬುದ್ದಿಯವರು ಎಂದು ತಂದೆ ತಿಳಿಸುತ್ತಾರೆ. ವಿನಾಶಕ್ಕಾಗಿ ತಯಾರಿಗಳು ಚೆನ್ನಾಗಿ ನಡೆಯುತ್ತಿವೆ ಆದರೆ ಕಲ್ಲು ಬುದ್ದಿಯವರು ಇದನ್ನು ತಿಳಿಯಲು ಸಾಧ್ಯವಿಲ್ಲ. ನೀವೂ ಸಹ ಕಲ್ಲು ಬುದ್ದಿಯವರಾಗಿದ್ದಿರಿ, ಈಗ ವಜ್ರ ಸಮಾನರಾಗುತ್ತಿದ್ದೀರಿ. ಪಾರಸ ಬುದ್ದಿಯವರು ಪುನಃ ಕಲ್ಲು ಬುದ್ದಿಯವರು ಹೇಗೆ ಆದೆವು - ಇದು ಅದ್ಭುತವಾಗಿದೆ. ತಂದೆಯನ್ನು ಜ್ಞಾನ ಸಾಗರ, ದಯಾ ಸಾಗರ ಎಂದು ಕರೆಯುತ್ತಾರೆ. ಕೇವಲ ತಮ್ಮ ಕಲ್ಯಾಣವನ್ನೇ ಮಾಡಿಕೊಳ್ಳಲು ಬಾರದವರು ಬೇರೆಯವರ ಕಲ್ಯಾಣವನ್ನು ಹೇಗೆ ಮಾಡಲು ಸಾಧ್ಯ! ಯಾರು ಜ್ಞಾನವನ್ನು ಧಾರಣೆ ಮಾಡುವುದಿಲ್ಲವೋ ಪದವಿಯೂ ಅಂತಹದ್ದೇ ಪಡೆಯುತ್ತಾರೆ, ಯಾರು ಸೇವಾಧಾರಿಗಳಿರುತ್ತಾರೆಯೊ ಅವರು ಉನ್ನತ ಪದವಿ ಪಡೆಯುತ್ತಾರೆ. ಅವರನ್ನೆ ಬಾಬಾರವರು ಪ್ರೀತಿ ಮಾಡುತ್ತಾರೆ. ನಂಬರ್ವಾರ್ ಪುರುಷಾರ್ಥ ಅನುಸಾರವಾಗಿಯೇ ಆಗುತ್ತದೆ. ತಂದೆಯ ಜೊತೆ ನಮಗೆ ಪ್ರೀತಿ ಇಲ್ಲದಿದ್ದರೆ ಪದವಿಯು ಸಿಗುವುದಿಲ್ಲ ಎಂದು ಕೆಲವರು ಇದನ್ನು ತಿಳಿದುಕೊಂಡಿಲ್ಲ. ಅವರು ಸ್ವಂತ ಮಕ್ಕಳಾಗಿರಲಿ ಅಥವಾ ಮಲ ತಾಯಿ ಮಕ್ಕಳಾಗಿರಲಿ ವಿನಾಶಕಾಲೇ ಪ್ರೀತಿ ಬುದ್ದಿ ಇಲ್ಲದಿದ್ದರೆ ತಂದೆಯನ್ನು ಅನುಸರಿಸದಿದ್ದರೆ ಹೋಗಿ ಸಣ್ಣ ಪದವಿಯನ್ನು ಪಡೆಯುತ್ತಾರೆ. ದೈವೀ ಗುಣವು ಬೇಕಾಗಿದೆ. ಎಂದೂ ಸುಳ್ಳು ಹೇಳಬಾರದಾಗಿದೆ. ನಾನು ಸತ್ಯವನ್ನೇ ಹೇಳುತ್ತೇನೆ, ಯಾರು ನನ್ನಜೊತೆ ಪ್ರೀತಿ ಮಾಡುವುದಿಲ್ಲವೋ ಅವರಿಗೆ ಪದವಿಯೂ ಸಿಗುವುದಿಲ್ಲ. ಪ್ರಯತ್ನ ಪಟ್ಟು 21 ಜನ್ಮಗಳ ಆಸ್ತಿಯನ್ನು ಪಡೆಯಬೇಕು. ಅಂದಮೇಲೆ ಪ್ರದರ್ಶನಿ ಮೇಳಗಳಲ್ಲಿ ಮೊಟ್ಟ ಮೊದಲು ಗೀತಾ ಪಾಠಶಾಲೆಯವರಿಗೆ ನಿಮಂತ್ರಣ ಕೊಡಬೇಕು. ಏಕೆಂದರೆ ಅವರು ಭಕ್ತರಲ್ಲವೆ! ಗೀತಾಪಾಠಿಗಳು ಅವಶ್ಯವಾಗಿ ಕೃಷ್ಣನನ್ನು ನೆನಪು ಮಾಡುತ್ತಾರೆ. ಆದರೆ ಏನನ್ನು ತಿಳಿದು ಕೊಂಡಿಲ್ಲ. ಕೃಷ್ಣ ಕೊಳಲನ್ನು ಊದಿದನು ಹಾಗಾದರೆ ರಾಧೆ ಎಲ್ಲಿ ಹೋದಳು. ಸರಸ್ವತಿಗೆ ವೀಣೆಯನ್ನು ಕೊಟ್ಟರು ಕೊಳಲನ್ನು ಕೃಷ್ಣನಿಗೆ ಕೊಟ್ಟರು. ಮನುಷ್ಯರು ಹೇಳುತ್ತಾರೆ ನಮ್ಮನ್ನು ಅಲ್ಲಾ ಹುಟ್ಟಿಸಿದನು ಎಂದು ಆದರೆ ಅಲ್ಲಾ ಯಾರು ಎಂದೆ ಗೊತ್ತಿಲ್ಲ. ಇದು ಭಾರತದ ಮಾತಾಗಿದೆ. ಭಾರತದಲ್ಲೇ ದೇವತೆಗಳ ರಾಜ್ಯವಿತ್ತು, ಅವರ ಚಿತ್ರಗಳಿಗೆ ಮಂದಿರದಲ್ಲಿ ಪೂಜೆಯಾಗುತ್ತದೆ. ಇನ್ನಿಇತರೆ ರಾಜರುಗಳ ಮೂರ್ತಿಗಳನ್ನು ಹೊರಗಡೆ ಇಡುತ್ತಾರೆ, ಅವುಗಳ ಮೇಲೆ ಪಕ್ಷಿಗಳು ಕೊಳಕು ಮಾಡುತ್ತವೆ. ಲಕ್ಷ್ಮೀ- ನಾರಾಯಣ, ರಾಧೆ-ಕ್ರಿಷ್ಣ ಮೂರ್ತಿಗಳನ್ನು ಎಂತಹ ಒಳ್ಳೆಯ ಸ್ಥಳದಲ್ಲಿ ಕೂರಿಸುತ್ತಾರೆ. ಅವರಿಗೆ ಮಹಾರಾಜ ಮಹಾರಾಣಿ ಎನ್ನುತ್ತಾರೆ. ಕಿಂಗ್ ಎನ್ನುವ ಅಕ್ಷರ ಆಂಗ್ಲ ಭಾಷೆಯದಾಗಿದೆ. ಎಷ್ಟೊಂದು ಧನವನ್ನು ವ್ಯಯ ಮಾಡಿ ಮಂದಿರಗಳನ್ನು ಕಟ್ಟುತ್ತಾರೆ ಏಕೆಂದರೆ ಆ ಮಹಾರಾಜರುಗಳು ಪವಿತ್ರವಾಗಿದ್ದರು. ಯಥಾ ರಾಜ-ರಾಣಿ ತಥಾ ಪ್ರಜಾ ಎನ್ನುವಂತೆ ಎಲ್ಲರು ಪೂಜ್ಯರಾಗಿದ್ದರು. ನೀವೇ ಪೂಜ್ಯ ಮತ್ತು ಪೂಜಾರಿಗಳು ಆಗುತ್ತೀರಿ. ಮೊದಲ ಮಾತಾಗಿದೆ ತಂದೆಯನ್ನು ನೆನಪು ಮಾಡುವುದು ತಂದೆಯ ನೆನಪು ಮಾಡುವ ಅಭ್ಯಾಸದಿಂದಲೇ ಧಾರಣೆಯಾಗುವುದು. ಒಬ್ಬರ ಜೊತೆ ಪ್ರೀತಿ ಇಲ್ಲ ಎಂದರೆ ಬೇರೆ ಬೇರೆಯವರ ಜೊತೆ ಪ್ರೀತಿ ಅಂಟಿಕೊಂಡು ಬಿಡುತ್ತದೆ. ಕೆಲವರು ಇಂತಹ ಮಕ್ಕಳಿದ್ದಾರೆ ಒಬ್ಬರನ್ನು ಒಬ್ಬರು ಎಷ್ಟು ಪ್ರೀತಿಸುತ್ತಾರೆ ಶಿವಬಾಬಾರವರನ್ನು ಕೂಡ ಅಷ್ಟು ಪ್ರೀತಿಸುವುದಿಲ್ಲ. ನಿಮ್ಮ ಬುದ್ದಿಯೊಗ ನನ್ನ ಜೊತೆ ಇರಬೇಕೊ ಅಥವಾ ಒಬ್ಬರಿಗೊಬ್ಬರು ಪ್ರಿಯತಮೆ ಪ್ರಿಯತಮರಾಗಬೇಕೋ ಎಂದು ಶಿವಬಾಬಾ ಕೇಳುತ್ತಾರೆ. ನಂತರ ನನ್ನನ್ನು ಸಂಪೂರ್ಣವಾಗಿ ಮರೆತೇ ಹೊಗುತ್ತಾರೆ. ನಿಮಗಂತೂ ಬುದ್ದಿಯೋಗ ನನ್ನ ಜೊತೆ ಸೇರಿಸಬೇಕಾಗಿದೆ ಇದರಲ್ಲೇ ಪರಿಶ್ರಮವಿರುವುದು. ಬುದ್ದಿ ಮುರಿಯುವುದೇ ಇಲ್ಲ. ಶಿವಬಾಬನ ಬದಲಾಗಿ ಒಬ್ಬರನ್ನು ಒಬ್ಬರು ನೆನಪು ಮಾಡುತ್ತಲೇ ಇರುತ್ತಾರೆ ಬಾಬಾ ಹೆಸರನ್ನು ಹೇಳಿದರೆ ವಿರೋಧಿಗಳಾಗಿ ಬಿಡುತ್ತಾರೆ, ನಂತರ ನಿಂದನೆ ಮಾಡುವುದಕ್ಕೂ ತಡಮಾಡುವುದಿಲ್ಲ. ಈ ಬಾಬಾನನ್ನು ನಿಂದಿಸಿದರೆ ಆ ಕ್ಷಣವೇ ಶಿವ ಬಾಬಾರವರಿಗೆ ಕೇಳಿಸುತ್ತದೆ. ಬ್ರಹ್ಮನಿಂದ ಓದಲಿಲ್ಲ ಎಂದ ಮೇಲೆ ಶಿವ ಬಾಬಾರವರಿಂದಲೂ ಓದಲು ಸಾಧ್ಯವಿಲ್ಲ. ಬ್ರಹ್ಮನ ಹೊರತು ಶಿವ ಬಾಬಾ ಕೂಡಾ ಏನು ಹೇಳಲು ಸಾಧ್ಯವಿಲ್ಲ, ಆದ್ದರಿಂದಲೇ ಸಾಕಾರ ಬಾಬಾನನ್ನು ಕೇಳಿ ಎಂದು ಬಾಬಾ ಹೇಳುತ್ತಾರೆ. ಕೆಲವು ಒಳ್ಳೊಳ್ಳೆಯ ಮಕ್ಕಳು ಸಾಕಾರ ತಂದೆಯ ಮಾತನ್ನು ಕೇಳುವುದೇ ಇಲ್ಲ. ಇವರಂತು ಪುರುಷಾರ್ಥಿ ಎಂದು ಹೇಳುತ್ತಾರೆ. ಪುರುಷಾರ್ಥಿಗಳಂತೂ ಎಲ್ಲರೂ ಆಗಿದ್ದಾರೆ ಆದರೆ ನೀವಂತು ತಂದೆ ತಾಯಿಯನ್ನು ಅನುಸರಿಸಬೇಕಲ್ಲವೆ? ಕೆಲವರು ತಿಳಿಸಿ ಹೇಳಿದರೆ ತಿಳಿದು ಕೊಳ್ಳುತ್ತಾರೆ, ಕೆಲವರ ಅದೃಷ್ಟದಲ್ಲಿ ಇಲ್ಲವೆಂದರೆ ತಿಳಿದು ಕೊಳ್ಳುವುದೇಇಲ್ಲ. ಸೇವಾಧಾರಿಗಳು ಆಗುವುದೇ ಇಲ್ಲ. ಆದರೆ ಬುದ್ದಿ ಒಬ್ಬ ತಂದೆಯ ಜೊತೆ ಇಡಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಬಹಳ ಆತ್ಮಗಳು ತಮ್ಮಲ್ಲಿ ಶಿವಬಾಬಾ ಬರತ್ತಾರೆ ಎನ್ನುತ್ತಾರೆ ಇದರಿಂದ ಜಾಗರೂಕರಾಗಬೇಕಾಗಿದೆ. ಮಾಯೆಯ ಪ್ರವೇಶ ಆಗುತ್ತದೆ. ಹಿಂದೆ ಯಾರಲ್ಲಿ ಶ್ರೀ ನಾರಾಯಣ ಇತ್ಯಾದಿಗಳು ಬರುತ್ತಿದ್ದರೋ ಅವರುಗಳೂ ಈಗ ಇಲ್ಲ. ಕೇವಲ ಪ್ರವೇಶದಿಂದ ಏನೂ ಆಗುವುದಿಲ್ಲ. ನನ್ನನ್ನು ನೆನಪು ಮಾಡಿ ಎಂದು ತಂದೆ ತಿಳಿಸುತ್ತಾರೆ. ಉಳಿದಂತೆ ನನ್ನಲ್ಲಿ ಇವರು ಬರುತ್ತಾರೆ ಅವರು ಬರುತ್ತಾರೆ ಎನ್ನುವುದೆಲ್ಲಾ ಬರೀ ಮಾಯೆಯಾಗಿದೆ. ನನ್ನ ನೆನಪೇ ಇಲ್ಲವೆಂದರೆ ಪ್ರಾಪ್ತಿ ಹೇಗೆ ಆಗುತ್ತದೆ, ಎಲ್ಲಿಯವರೆಗೂ ತಂದೆಯ ಜೊತೆ ಡೈರೆಕ್ಟ್ ಯೋಗ ಇರುವುದಿಲ್ಲವೋ ಅಲ್ಲಿಯವರೆಗೆ ಪದವಿಯೂ ಸಿಗುವುದಿಲ್ಲ, ಧಾರಣೆಯೂ ಆಗುವುದಿಲ್ಲ. |
ನೀವು ನನ್ನೊಬ್ಬನ್ನನ್ನೇ ನೆನಪು ಮಾಡಬೇಕು ಎಂದು ತಂದೆ ತಿಳಿಸುತ್ತಾರೆ. ಬ್ರಹ್ಮನ ಮೂಲಕವೇ ನಾನು ತಿಳಿಸುವುದು ಬ್ರಹ್ಮನ ಮೂಲಕವೇ ಸ್ಥಾಪನೆಯಾಗಿರುವುದು. ತ್ರಿಮೂರ್ತಿಗಳು ಅವಶ್ಯವಾಗಿ ಬೇಕು. ಕೆಲವರು ಬ್ರಹ್ಮಾ ಚಿತ್ರವನ್ನು ನೋಡಿ ಕೋಪಗೊಳ್ಳುತ್ತಾರೆ. ಇನ್ನು ಕೆಲವರು ಕೃಷ್ಣ 84 ಜನ್ಮ ತೆಗೆದುಕೊಳ್ಳುತ್ತಾನೆ ಎಂದರೆ ಕೋಪಗೊಳ್ಳುತ್ತಾರೆ. ಚಿತ್ರವನ್ನು ಹರಿದು ಬಿಡುತ್ತಾರೆ. ಅರೆ! ಇವಂತು ತಂದೆ ಮಾಡಿಸಿರುವ ಚಿತ್ರಗಳು. ಮರೆಯಬೇಡಿ ತಂದೆಯನ್ನು ಮಾತ್ರ ನೆನಪು ಮಾಡಿ ಎಂದು ತಂದೆ ತಿಳಿಸುತ್ತಾರೆ. ಬಂಧನದಲ್ಲಿರುವವರು ಕೂಡ ಅಳುವ ಅವಶ್ಯಕತೆ ಇಲ್ಲ. ಮನೆಯಲ್ಲಿ ಕುಳಿತು ತಂದೆಯನ್ನು ನೆನಪು ಮಾಡುತ್ತಾ ಇರಿ. ಬಂಧನದಲ್ಲಿ ಇರುವವರಿಗೆ ಇನ್ನೂ ಹೆಚ್ಚಿನ ಪದವಿ ಸಿಗಬಹುದು. ನೀವು ಮಕ್ಕಳಿಗೆ ಜ್ಞಾನ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಸ್ಪಿರಿಚುಯಲ್ ಜ್ಞಾನ ಒಬ್ಬ ತಂದೆಯ ಬಳಿ ಮಾತ್ರ ಇದೆ ಬೇರೆ ಯಾರ ಬಳಿಯೂ ಇಲ್ಲ. ಜ್ಞಾನ ಸಾಗರ ಒಬ್ಬ ಪರಮಪಿತ ಪರಮಾತ್ಮ ಮಾತ್ರ ಆಗಿದ್ದಾರೆ, ಅವರಿಗೆ ಮುಕ್ತಿದಾತ ಎಂದು ಕರೆಯುತ್ತಾರೆ, ಇದರಲ್ಲಿ ಹೆದರುವ ಮಾತೇನಿದೆ. ತಂದೆ ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳು ಬೇರೆಯವರಿಗೆ ತಿಳಿಸಬೇಕು. ನನ್ನನ್ನು ನೆನಪು ಮಾಡುವುದರಿಂದ ಸದ್ಗತಿಯನ್ನು ಪಡೆಯುತ್ತೀರಿ ಎಂದು ತಂದೆ ತಿಳಿಸುತ್ತಾರೆ. ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ ಕಲಿಯುಗದಲ್ಲಿ ಅದು ಇಲ್ಲ. ಸತ್ಯ ಯುಗದಲ್ಲಿ ಒಂದೇ ರಾಜ್ಯವಿರುತ್ತದೆ. ಈ ಮಾತುಗಳು ಸಹ ನಿಮ್ಮಲ್ಲಿ ನಂಬರ್ವಾರ್ ಬುದ್ದಿಯಲ್ಲಿ ಧಾರಣೆಯಾಗುತ್ತದೆ, ಯಾರ ಬುದ್ದಿಯಲ್ಲಿ ಧಾರಣೆಯಾಗುವುದಿಲ್ಲವೋ ಅವರನ್ನು ವಿನಾಶಕಾಲೇ ವಿಪರೀತ ಬುದ್ದಿ ಎನ್ನುತ್ತಾರೆ, ಪದವಿಯೂ ಪಡೆಯುವುದಿಲ್ಲ. ಎಲ್ಲರ ವಿನಾಶವಂತೂ ಆಗಲೇಬೇಕಾಗಿದೆ. ಈ ಮಾತೇನು ಕಡಿಮೆಯಲ್ಲ. ವಿನಾಶ ಕಾಲೆ ಪ್ರೀತಿ ಬುದ್ದಿಯವರಾಗಿ ಎಂದು ತಂದೆಯು ತಿಳಿಸುತ್ತಾರೆ. ಇದು ನಿಮ್ಮ ಅಂತಿಮ ಜನ್ಮವಾಗಿದೆ. ಈಗ ನೀವು ಪ್ರೀತಿಯನ್ನಿಡದೆ ಇದ್ದರೆ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸತ್ಯವಾದ ಹೃದಯದವರ ಮೇಲೆ ತಂದೆ ರಾಜಿಯಾಗುತ್ತಾರೆ. ದಧೀಚಿ ಋಷಿಯ ಹಾಗೆ ಮೂಳೆಗಳನ್ನು ಸೇವೆಯಲ್ಲಿ ಸವೆಸಬೇಕು. ಯಾವಾಗ ಗ್ರಹಚಾರ ಕುಳಿತುಕೊಳ್ಳುತ್ತದೆ ಎಂದರೆ ಅನೇಕ ತರಹದ ಮಾಯೆಯ ಬಿರುಗಾಳಿ ಬರುತ್ತಲೇ ಇರುತ್ತದೆ. ಇದಕ್ಕಿಂತ ಲೌಕಿಕವೇ ಸರಿ, ಅಲ್ಲಿಗೆ ಹೊರಟು ಹೋಗೋಣ, ಇಲ್ಲಂತು ಯಾವ ಮಜವೂ ಇಲ್ಲ ಎಂದು ಹೇಳುತ್ತಾರೆ. ಅಲ್ಲಂತೂ ನಾಟಕವಿದೆ, ಸಿನೆಮಾಗಳಿವೆ, ಯಾರು ಈ ಮಾತುಗಳಲ್ಲಿ ಇರುತ್ತಾರೆಯೋ ಅವರು ಇಲ್ಲಿ ಇರುವುದು ಬಹಳ ಕಷ್ಟ. ಹಾ! ಪುರುಷಾರ್ಥ ಮಾಡಿ ಉನ್ನತ ಪದವಿಯನ್ನು ಪಡೆಯಬಹುದು. ಬೆಳಗ್ಗೆ ಎದ್ದು ಕುಳಿತುಕೊಳ್ಳದಿದ್ದರೆ ಮಜಾ ಬರುವುದಿಲ್ಲ, ಮಲಗಿಕೊಂಡರೆ ಕೆಲವೊಮ್ಮೆ ನಿದ್ದೆ ಬರುತ್ತದೆ. ಎದ್ದು ಕುಳಿತುಕೊಳ್ಳುವುದರಿಂದ ಒಳ್ಳೆಯ ವಿಚಾರಗಳು ಬರುತ್ತವೆ. ಬಹಳ ಮಜಾ ಬರುತ್ತದೆ ಎಂದು ಬಾಬಾ ತಿಳಿಸುತ್ತಾರೆ. |
Subsets and Splits
No community queries yet
The top public SQL queries from the community will appear here once available.