text
stringlengths
0
61.5k
2. ನಾವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರು ಶಿಖೆಯಾಗಿದ್ದೇವೆ - ಇದೇ ನಶೆಯಲ್ಲಿರಬೇಕಾಗಿದೆ. ಬ್ರಾಹ್ಮಣನೇ ಆಸ್ತಿಗೆ ಹಕ್ಕುದಾರರಾಗಿದ್ದಾರೆ ಏಕೆಂದರೆ ಶಿವ ತಂದೆಯ ಮೊಮ್ಮಕ್ಕಳಾಗಿದ್ದಾರೆ.
ಓಂ ಶಾಂತಿ. ಓಂ ಶಾಂತಿ ಎಂದು ಯಾರು ಹೇಳಿದರು? ಬಾಬಾ ಮತ್ತು ದಾದಾ, ಇದಂತೂ ಮಕ್ಕಳಿಗೆ ಅವಶ್ಯವಾಗಿ ನಿಶ್ಚಯವಿದೆ - ಪರಮಪಿತ ಪರಮಾತ್ಮ ಶಿವನೇ ನಮ್ಮ ಪಾರಲೌಕಿಕ ತಂದೆಯಾಗಿದ್ದಾರೆ ಮತ್ತು ಈ ಬ್ರಹ್ಮಾರವರು ಎಲ್ಲಾ ಮಕ್ಕಳ ಅಲೌಕಿಕ ತಂದೆಯಾಗಿದ್ದಾರೆ, ಇವರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುವರು. ಪ್ರಜಾಪಿತ ಬ್ರಹ್ಮಾರವರ ವಿನಃ ಮತ್ತ್ಯಾರಿಗಾದರೂ ಇಷ್ಟು ಮಂದಿ ಮಕ್ಕಳು ಇರುತ್ತಾರೆಯೇ! ಮೊದಲು ಇರಲಿಲ್ಲ ಆದರೆ ಬೇಹದ್ದಿನ ತಂದೆಯು ಇವರಲ್ಲಿ ಪ್ರವೇಶ ಮಾಡಿದ ನಂತರ ಇವರು ದಾದಾ ಆಗಿ ಬಿಟ್ಟರು. ಸ್ವಯಂ ದಾದಾರವರೇ ಹೇಳುತ್ತಾರೆ - ಮಕ್ಕಳೇ, ನಿಮಗೆ ಪಾರಲೌಕಿಕ ತಂದೆಯ ಆಸ್ತಿ ಸಿಗುತ್ತದೆ. ಮೊಮ್ಮಕ್ಕಳು ಸದಾ ತಾತನಿಗೆ ವಾರಸುಧಾರರಾಗಿರುತ್ತಾರೆ. ಅವರ ಬುದ್ಧಿಯೋಗವು ತಾತನ ಕಡೆ ಹೋಗುತ್ತದೆ ಏಕೆಂದರೆ ತಾತನ ಆಸ್ತಿಯ ಹಕ್ಕು ಸಿಗುವುದು. ಹೇಗೆ ರಾಜರ ಬಳಿ ಯಾವ ಮಕ್ಕಳು ಜನ್ಮ ಪಡೆಯುವರೋ ಅವರನ್ನು ಇವರು ದೊಡ್ಡವರ ಆಸ್ತಿ ಎಂದು ಹೇಳುತ್ತಾರೆ. ಇದರ ಅರ್ಥವಾಗಿದೆ - ದೊಡ್ಡವರ ಆಸ್ತಿಯ ಮೇಲೆ ಇವರಿಗೆ ಹಕ್ಕಿದೆ ಎಂದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಬೇಹದ್ದಿನ ತಂದೆಯ ಮೂಲಕ ಅತೀ ದೊಡ್ಡ ಆಸ್ತಿಯಾದ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ನಮಗೆ ಅಂತಹ ತಂದೆಯು ಓದಿಸುತ್ತಿದ್ದಾರೆ. ಈಗ ಸನ್ಮುಖದಲ್ಲಿ ಕುಳಿತಿದ್ದೇವೆ, ಆದರೆ ಸನ್ಮುಖದಲ್ಲಿ ಕುಳಿತಿರುವ ನಶೆಯು ಮಕ್ಕಳಲ್ಲಿ ನಂಬರ್ವಾರ್ ಪುರುಷಾರ್ಥದನುಸಾರ ಇರುತ್ತದೆ. ಕೆಲವರ ಹೃದಯದಲ್ಲಂತೂ ಬಹಳ ಪ್ರೀತಿ ಇರುತ್ತದೆ. ನಾವು ಶ್ರೇಷ್ಠಾತಿ ಶ್ರೇಷ್ಠ ಭಗವಂತನಿಗೆ ಈ ಸಾಕಾರ ಮಾತಾ-ಪಿತಾರವರ (ಮಮ್ಮಾ-ಬಾಬಾ) ಮೂಲಕ ವಾರಸುಧಾರರಾಗುತ್ತೇವೆ. ಬೇಹದ್ದಿನ ತಂದೆಯು ಬಹಳ ಮಧುರರಾಗಿದ್ದಾರೆ, ಅವರೇ ನಮ್ಮನ್ನು ರಾಜ್ಯಭಾಗ್ಯಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ. ಮಾಯೆಯು ಸಂಪೂರ್ಣ ಅಯೋಗ್ಯರನ್ನಾಗಿ ಮಾಡಿ ಬಿಟ್ಟಿದೆ. ನಿನ್ನೆ ದಿನ ಬಾಬಾರವರ ಬಳಿ ಯಾರೋ ಮಿಲನ ಮಾಡಲು ಬಂದಿದ್ದರು ಆದರೆ ಅವರಿಗೇನೂ ತಿಳಿದಿರಲಿಲ್ಲ. ಆದರೂ ಬಾಬಾರವರು ತಿಳಿಸಿದರು - ಇವರೆಲ್ಲರೂ ಬ್ರಹ್ಮಾಕುಮಾರರಾಗಿದ್ದಾರೆ ಎಂದು. ನೀವೂ ಸಹ ಬ್ರಹ್ಮಾ ಹಾಗೂ ಶಿವನ ಮಕ್ಕಳಾಗಿದ್ದೀರಿ ಎಂದು ತಂದೆಯು ಹೇಳುವುದಂತೂ ಹೇಳಿದರು ಆದರೆ ಅವರಿಗೆ ಹೃದಯಕ್ಕೆ ನಾಟಲಿಲ್ಲ. ನಿಜವಾಗಿಯು ನಾವು ಅವರ ಮಕ್ಕಳಾಗಿದ್ದೇವೆ ಎಂಬ ಬಾಣವು ನಾಟಲಿಲ್ಲ. ಹಾಗೆಯೇ ಇಲ್ಲಿಯೂ ಕೆಲವು ಮಕ್ಕಳಿದ್ದಾರೆ ಅವರಿಗೆ ಬಹಳ ಸ್ವಲ್ಪ ಮಾತ್ರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಆ ಖುಷಿ-ನಶೆ ಕಾಣಿಸುವುದಿಲ್ಲ. ನೀವು ಮಕ್ಕಳಿಗಂತೂ ಒಳಗೆ ಬಹಳ ಖುಷಿಯ ನಶೆ ಏರಿರಬೇಕು. ಆ ನಶೆಯು ಚೆಹರೆಯ ಮೇಲೆ ಕಂಡು ಬರುತ್ತದೆ. ಈಗ ನೀವು ಪ್ರಿಯತಮೆಯರ ಜ್ಞಾನ ಶೃಂಗಾರವಾಗುತ್ತಿದೆ. ನಾವೆಲ್ಲರು ಪ್ರಿಯತಮನ ಪ್ರಿಯತಮೆಯರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಒಬ್ಬ ರೈತನ ಮಗಳ ಕಥೆ ಇದೆಯಲ್ಲವೇ. ಒಬ್ಬ ರಾಜನು ರೈತನ ಮಗಳನ್ನು ಕರೆ ತಂದು ವಿವಾಹ ಮಾಡಿಕೊಂಡನು ಆದರೂ ಅವಳಿಗೆ ರಾಜ ಮಹಲಿನಲ್ಲಿ ಮಜಾ ಬರಲಿಲ್ಲ. ಆದ್ದರಿಂದ ರಾಜನು ಅವಳನ್ನು ಮತ್ತೆ ಕರೆದುಕೊಂಡು ಹೋಗಿ ಹಳ್ಳಿಯಲ್ಲಿ ಬಿಟ್ಟು ಬಂದನು. ನೀನು ರಾಜ್ಯಭಾಗ್ಯಕ್ಕೆ ಯೋಗ್ಯಳಲ್ಲ ಎಂದು ಹೇಳಿದನು. ಇಲ್ಲಿಯೂ ಸಹ ತಂದೆಯು ಶೃಂಗಾರ ಮಾಡುತ್ತಾರೆ, ಭವಿಷ್ಯದಲ್ಲಿ ಮಹಾರಾಣಿಯಾಗಿ ಎಂದು ಹೇಳುತ್ತಾರೆ. ಗೋಪಿಕೆಯರನ್ನು ಪಟ್ಟದ ರಾಣಿಯನ್ನಾಗಿ ಮಾಡಿಕೊಳ್ಳಲು ಓಡಿಸಿಕೊಂಡು ಹೋದನೆಂದು ಕೃಷ್ಣನಿಗೆ ಹೇಳುತ್ತಾರೆ ಆದರೆ ಏನನ್ನು ತಿಳಿದುಕೊಂಡಿಲ್ಲ. ಎಲ್ಲರೂ ಅಧರ್ಮಿಗಳಾಗಿದ್ದಾರೆ. ಪ್ರಪಂಚವು ಇದೇ ರೀತಿ ನಡೆಯುತ್ತಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಅನೇಕ ಮಂದಿ ಗುಡಿ-ಗೋಪುರಗಳಿಗೂ ಹೋಗುವುದಿಲ್ಲ. ಶಾಸ್ತ್ರಗಳನ್ನೂ ಒಪ್ಪುವುದಿಲ್ಲ. ಸರ್ಕಾರವೂ ಸಹ ಧರ್ಮವನ್ನು ಒಪ್ಪುವುದಿಲ್ಲ. ಭಾರತವು ಯಾವ ಧರ್ಮದ್ದಾಗಿತ್ತು, ಈಗ ಯಾವ ಧರ್ಮದ್ದಾಗಿದೆ ಎಂಬುದನ್ನು ತಿಳಿದುಕೊಂಡಿಲ್ಲ, ಈಗ ನೀವು ಮಕ್ಕಳು ದೈವೀ ಕುಲದವರಾಗಿದ್ದೀರಿ. ಹೇಗೆ ಅವರು ಕ್ರಿಶ್ಚಯನ್ ಕುಲದವರಾಗಿದ್ದಾರೆ, ಹಾಗೆಯೇ ನೀವು ಬ್ರಾಹ್ಮಣ ಕುಲದವರಾಗಿದ್ದೀರಿ. ಮೊಟ್ಟ ಮೊದಲು ನೀವು ಮಕ್ಕಳನ್ನು ಪತಿತ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತೇನೆ. ಪಾವನರಾಗುತ್ತಾ-ಆಗುತ್ತಾ 21 ಜನ್ಮಗಳಿಗಾಗಿ ದೈವೀ ಸಂಪ್ರದಾಯದವರಾಗುತ್ತೀರಿ. ದೈವೀ ಮಡಿಲಿನಲ್ಲಿ ಹೋಗುತ್ತೀರಿ. ಮೊದಲು ಆಸುರಿ ಮಡಿಲಿನಲ್ಲಿ ಇದ್ದಿರಿ. ಆಸುರಿ ಮಡಿಲಿನಿಂದ ನೀವು ಈಶ್ವರೀಯ ಮಡಿಲಿಗೆ ಬಂದಿದ್ದೀರಿ. ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿಯರಾಗಿದ್ದೀರಿ. ಇದು ಒಂದು ಅದ್ಭುತ ಆಗಿದೆ. ಎಲ್ಲರೂ ಹೇಳುತ್ತೀರಿ - ನಾವು ಬ್ರಾಹ್ಮಣ ಕುಲದವರಾಗಿದ್ದೇವೆ, ಶ್ರೀಮತದಂತೆ ನಡೆಯಬೇಕಾಗಿದೆ, ಎಲ್ಲರಿಗೆ ಸುಖ ಕೊಡಬೇಕು, ಮಾರ್ಗ ತಿಳಿಸಬೇಕು. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಹೇಳುವವರು ಪ್ರಪಂಚದಲ್ಲಿ ಯಾರೂ ಇಲ್ಲ. ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ನೀವೇ ಅವರ ಮಕ್ಕಳಾಗಿದ್ದೀರಿ. ಬುದ್ಧಿಯಿಂದ ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲು ಯಾರು ತಂದೆಯಿಂದ ಆಸ್ತಿಯನ್ನು ಪಡೆದಿದ್ದರೋ ಅವರೇ ಬಂದು ಪಡೆಯುವರು. ಸ್ವಲ್ಪ ಬುದ್ಧಿಯಲ್ಲಿದ್ದರೂ ಮತ್ತೆಂದಾದರೂ ಅವಶ್ಯವಾಗಿ ಬರುವರು. ಏನಾದರೂ ಒಂದು ಪಡೆಯುವುದಕ್ಕಾಗಿಯೇ ಬರುತ್ತಾರೆ. ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದೀರಿ. ಇಂದು ಪಾವನರಾಗಲು ಬರುತ್ತಾರೆ ಮತ್ತು ನಾಳೆ ಪತಿತರಾಗುತ್ತಾರೆ. ಅನ್ಯರ ಕೆಟ್ಟ ಸಂಗದ ಪ್ರಭಾವ ಬೀರಿದರೆ ತಂದೆಯನ್ನು ಮರೆತು ಹೋಗುತ್ತಾರೆ. ತಂದೆಯ ಮಕ್ಕಳಾಗಿ ನಂತರ ಅವರ ಕೈ ಬಿಟ್ಟರೆ ಬಹಳ ಪಾಪಾತ್ಮರಾಗುವರು. ಹೇಗೆ ಕೊಲೆ ಮಾಡಿದರೆ ಪಾಪವಾಗುತ್ತದೆ, ಆದರೆ ಆ ಪಾಪವು ಕಡಿಮೆಯೇ. ತಂದೆಯ ಮಕ್ಕಳಾಗಿ ತಂದೆಗೆ ಮತ್ತೆ ವಿಚ್ಛೆದನ ನೀಡಿ ವಿಕಾರಿಗಳಾಗುವರೋ ಅವರಿಗೆ ಬಹಳ ಪಾಪವಾಗುತ್ತದೆ. ಜ್ಞಾನದಲ್ಲಿ ಆಗುವಷ್ಟು ಅಜ್ಞಾನ ಕಾಲದಲ್ಲಿ ಅದು ಪಾಪವಾಗುವುದಿಲ್ಲ. ಅಜ್ಞಾನದಲ್ಲಿ ಮನುಷ್ಯರಿಗೆ ಕ್ರೋಧವು ಸಾಮಾನ್ಯವಾಗಿರುತ್ತದೆ. ಇಲ್ಲಿ ನೀವು ಯಾರ ಮೇಲಾದರೂ ಕ್ರೋಧ ಮಾಡಿದರೆ 100 ಪಟ್ಟು ಶಿಕ್ಷೆಯಾಗುತ್ತದೆ. ಸ್ಥಿತಿಯಿಂದ ಕೆಳಗೆ ಇಳಿಯುತ್ತೀರಿ ಏಕೆಂದರೆ ಈಶ್ವರನ ಆದೇಶವನ್ನು ಪಾಲಿಸಲಿಲ್ಲ. ಪವಿತ್ರರಾಗಿ ಎಂದು ಧರ್ಮರಾಜನ ಆದೇಶ ಸಿಗುತ್ತದೆ. ಈಶ್ವರನ ಮಕ್ಕಳಾಗಿಯು ಅವರ ಆದೇಶದ ಉಲ್ಲಂಘನೆ ಮಾಡಿದರೆ 100 ಪಟ್ಟು ಶಿಕ್ಷೆಯಾಗುತ್ತದೆ. ರಚಯಿತನು ಅವರೊಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರರೂ ತಂದೆಯ ರಚನೆಯಾಗಿದ್ದಾರೆ. ಧರ್ಮರಾಜನು ರಚನೆ. ಬಾಬಾರವರು ಧರ್ಮರಾಜನ ರೂಪವನ್ನು ಸಾಕ್ಷಾತ್ಕಾರ ಮಾಡಿಸುತ್ತಾರೆ. ಆ ಸಮಯದಲ್ಲಿ ಸಿದ್ಧ ಮಾಡಿ ತಿಳಿಸುತ್ತಾರೆ - ನೋಡಿ, ನಾವು ಕ್ರೋಧ ಮಾಡುವುದಿಲ್ಲ, ಯಾರಿಗೂ ದುಃಖ ಕೊಡುವುದಿಲ್ಲ ಎಂದು ನೀವು ಪ್ರತಿಜ್ಞೆ ಮಾಡಿದ್ದಿರಿ ಮತ್ತೆ ನೀವು ಇವರಿಗೆ ದುಃಖ ಕೊಟ್ಟು ತೊಂದರೆ ಮಾಡಿದ್ದೀರಿ. ಈಗ ಶಿಕ್ಷೆಯನ್ನು ಅನುಭವಿಸಿ ಎಂದು ಹೇಳುತ್ತಾರೆ. ತಂದೆಯು ಸಾಕ್ಷಾತ್ಕಾರ ಮಾಡಿಸದೆ ಶಿಕ್ಷೆ ಕೊಡುವುದಿಲ್ಲ. ಪ್ರೂಫ್ ಬೇಕಲ್ಲವೇ. ಶಿಕ್ಷೆ ಅನುಭವಿಸುವವರೂ ಸಹ ತಿಳಿದುಕೊಳ್ಳುತ್ತಾರೆ - ಅವಶ್ಯವಾಗಿ ನಾನು ತಂದೆಯನ್ನು ಬಿಟ್ಟು ಈ ಕೆಟ್ಟ ಕರ್ಮ ಮಾಡಿದೆನು ಎಂದು. ತಂದೆಗೆ ನಿಂದನೆ ಮಾಡಿಸುವುದರಿಂದ ಅನೇಕರಿಗೆ ಆಪತ್ತು ಬರುತ್ತದೆ. ಎಷ್ಟು ಮಂದಿ ಅಬಲೆಯರು ಬಂಧನಕ್ಕೆ ಒಳಗಾಗುತ್ತಾರೆ. ಇದೆಲ್ಲವು ನಿಂದನೆ ಮಾಡಿಸಿದವರಿಗೆ ಶಿಕ್ಷೆಯಾಗುತ್ತದೆ, ಆದ್ದರಿಂದ ತಂದೆ ಹೇಳುತ್ತಾರೆ - ಅತೀ ದೊಡ್ಡ ಪಾಪಾತ್ಮರನ್ನು ನೋಡಬೇಕೆಂದರೂ ಇಲ್ಲಿ ನೋಡಿರಿ ಎಂದು. ಹೇಗೆ ಅಗಸನ ಬಳಿ ಬಹಳ ಮೈಲಿಗೆ ಆಗಿರುವ ವಸ್ತ್ರಗಳಿದ್ದರೆ ಎತ್ತಿ ಒಗೆಯುತ್ತಿದ್ದಂತೆಯೇ ಕೆಲವು ಬಟ್ಟೆಗಳು ಹರಿದು ಹೋಗುತ್ತವೆ. ಅದೇ ರೀತಿ ಇಲ್ಲಿಯೂ ಸಹ ಸಹನೆ ಮಾಡಲಾರದೆ ಹೊರಟು ಹೋಗುತ್ತಾರೆ. ಈಶ್ವರನ ಮಡಿಲಿಗೆ ಬಂದು ಅವರ ಆಜ್ಞೆಯನ್ನು ಉಲ್ಲಂಘನೆ ಮಾಡಿದರೆ ಶಿಕ್ಷೆ ಅನುಭವಿಸಬೇಕಾಗುವುದು. ಯಾವ ಮುಖ್ಯ ಬ್ರಾಹ್ಮಣಿಯು ಇಂತಹವರನ್ನು ಕರೆ ತರುವರೋ ಅವರ ಮೇಲೆ ಬಹಳ ದೊಡ್ಡ ಜವಾಬ್ದಾರಿ ಇದೆ. ಒಂದುವೇಳೆ ಒಬ್ಬರು ತಂದೆಯ ಕೈ ಬಿಟ್ಟು ಹೋಗಿ ವಿಕಾರಿ ಆದರೆ ಅದರ ಪಾಪವು ಕರೆದುಕೊಂಡು ಬಂದಿರುವವರ ಮೇಲೆ ಆಗುವುದು. ಆದ್ದರಿಂದ ಅಂತಹವರನ್ನು ಇಂದ್ರ ಸಭೆಯಲ್ಲಿ ಕರೆ ತರಬಾರದು. ನೀಲಮಣಿ ಮುಂತಾದ ಪರಿಗಳ ಕಥೆಯಿದೆಯಲ್ಲವೇ. ಇಂದ್ರ ಸಭೆಯಲ್ಲಿ ಯಾರೋ ಬಚ್ಚಿಟ್ಟುಕೊಂಡು ಬಂದಾಗ ಅವರಿಂದ ದುರ್ಗಂಧ ಬರತೊಡಗಿತು ಆಗ ಅವರನ್ನು ಕರೆ ತಂದವರಿಗೆ ಶಿಕ್ಷೆ ಆಯಿತು. ಅವರು ಕಲ್ಲಾಗಿ ಬಿಟ್ಟರು ಎಂದು ಇಂತಹ ಕೆಲವು ಕಥೆಗಳಿವೆ. ತಂದೆಯು ಪಾರಸನಾಥರನ್ನಾಗಿ ಮಾಡುತ್ತಾರೆ. ಒಂದುವೇಳೆ ಅವರ ಉಲ್ಲಂಘನೆ ಮಾಡಿದರೆ ಕಲ್ಲಾಗಿ ಬಿಡುತ್ತಾರೆ. ರಾಜ್ಯಭಾಗ್ಯವನ್ನು ಪಡೆಯುವ ಸೌಭಾಗ್ಯವನ್ನೇ ಕಳೆದುಕೊಳ್ಳುತ್ತಾರೆ. ಉದಾಹರಣೆಗೆ ಯಾರಾದರೂ ಬಡವರು ರಾಜನ ಮಡಿಲನ್ನು (ದತ್ತು) ತೆಗೆದುಕೊಳ್ಳುತ್ತಾರೆ ನಂತರ ಅವರು ಅಯೋಗ್ಯರಾಗಿಯೇ ಉಳಿದುಕೊಂಡರೆ ಅವರನ್ನು ರಾಜನು ರಾಜ್ಯದಿಂದ ಹೊರ ಹಾಕುವನು, ಆಗ ಅವರ ಗತಿ ಏನಾಗುವುದು? ಕಂಗಾಲರಾಗಿ ಉಳಿದುಕೊಳ್ಳುತ್ತಾರೆ. ಇಲ್ಲಿಯೂ ಹಾಗೆಯೇ. ನಂತರ ಬಹಳ ದುಃಖವಾಗುವುದು, ಆದ್ದರಿಂದ ಎಂದೂ ಯಾವುದೇ ಉಲ್ಲಂಘನೆ ಮಾಡಬೇಡಿ ಎಂದು ತಂದೆಯು ಹೇಳುತ್ತಾರೆ. ತಂದೆಯು ಸಾಧಾರಣವಾಗಿದ್ದಾರೆ, ಆದ್ದರಿಂದ ಶಿವ ತಂದೆಯನ್ನು ಮರೆತು ಸಾಕಾರದ ಕಡೆ ಬುದ್ಧಿಯು ಹೋಗುತ್ತದೆ. ಈಗ ನೀವು ಮಕ್ಕಳಿಗೆ ಶ್ರೀಮತ ಸಿಗುತ್ತದೆ. ಯಾರು ಕೆಟ್ಟು ಹೋಗುವರೋ ಅವರು ಇಂದ್ರ ಸಭೆಯಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಂದು ಸೇವಾಕೇಂದ್ರವು ಇಂದ್ರ ಪ್ರಸ್ಥವಾಗಿದೆ, ಅಲ್ಲಿ ಜ್ಞಾನದ ಮಳೆಯಾಗುತ್ತದೆ. ನೀಲಮಣಿ ಮುಂತಾದ ಪರಿಗಳ ಹೆಸರಿದೆಯಲ್ಲವೇ. ನೀಲ ಎಂದು ರತ್ನಕ್ಕೆ ಹೇಳುತ್ತಾರೆ. ಈ ಕೆಲವು ಹೆಸರುಗಳನ್ನು ನೀವು ಮಕ್ಕಳಿಗೇ ಇಡಲಾಗುತ್ತದೆ. ನನ್ನ ಮಕ್ಕಳಲ್ಲಿ ಕೆಲವರು ಬಹಳ ಒಳ್ಳೆಯ ರತ್ನಗಳಿದ್ದಾರೆ. ಯಾವುದೇ ಲೋಪವಿಲ್ಲ. ವಜ್ರಗಳಲ್ಲಿ ಕೆಲವು ವಜ್ರಗಳು ಬಹಳ ಕಲೆಯುಳ್ಳದ್ದಾಗಿರುತ್ತದೆ. ಇನ್ನೂ ಕೆಲವು ಸ್ವಚ್ಛವಾಗಿರುತ್ತವೆ, ಹಾಗೆಯೇ ಇಲ್ಲಿಯು ನಂಬರ್ವಾರ್ ರತ್ನಗಳು ಇದ್ದೀರಿ. ಕೆಲವು ರತ್ನಗಳು ಬಹಳ ಅಮೂಲ್ಯವಾಗಿದ್ದಾರೆ, ಬಹಳ ಒಳ್ಳೆಯ ಸೇವೆ ಮಾಡುತ್ತಾರೆ. ಇನ್ನೂ ಕೆಲವರು ಸೇವೆಯ ಬದಲಾಗಿ ಸೇವಾಭಂಗ ಮಾಡುತ್ತಾರೆ. ಗುಲಾಬಿ ಹೂವು ಮತ್ತು ಎಕ್ಕದ ಹೂವಿನಲ್ಲಿ ಎಷ್ಟೊಂದು ಅಂತರವಿರುತ್ತದೆ. ಶಿವನಿಗೆ ಇವೆರಡನ್ನು ಅರ್ಪಿಸುತ್ತಾರೆ. ನಿಮ್ಮಲ್ಲಿ ಯಾರು-ಯಾರು ಹೂಗಳಾಗಿದ್ದೀರಿ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಹೂಗಳಾಗಿರುವವರನ್ನು ಎಲ್ಲರು ನಮ್ಮ ಬಳಿ ಬರಲಿ ಎಂದು ಇಚ್ಛಿಸುತ್ತಾರೆ. ಬಾಬಾ ನಮಗೆ ಒಳ್ಳೊಳ್ಳೆಯ ಹೂಗಳನ್ನು (ಸೇವಾಧಾರಿಗಳು) ಕಳುಹಿಸಿ ಎಂದು ಹೇಳುತ್ತಾರೆ ಆದರೆ ಒಳ್ಳೊಳ್ಳೆಯ ಹೂಗಳನ್ನೇ ಎಲ್ಲಿಂದ ತರುವುದು? ಇದು ಹೂದೋಟವಾಗಿದೆಯಲ್ಲವೇ. ನೀವು ಜ್ಞಾನ ಗಂಗೆಯರು ಆಗಿದ್ದೀರಿ, ತಂದೆಯು ಸಾಗರನಾಗಿದ್ದಾರೆ, ಇವರೇ (ಬ್ರಹ್ಮಾ) ಅತೀ ದೊಡ್ಡ ಬ್ರಹ್ಮ್ಪುತ್ರ ನದಿಯಾಗಿದ್ದಾರೆ. ಕಲ್ಕತ್ತಾದಲ್ಲಿ ಬ್ರಹ್ಮ್ಪುತ್ರ ನದಿಯು ಬಹಳ ದೊಡ್ಡದಾಗಿದೆ, ಅಲ್ಲಿ ಸಾಗರ ಮತ್ತು ನದಿಯ ಬಹಳ ದೊಡ್ಡ ಮೇಳವಾಗುತ್ತದೆ. ಜ್ಞಾನ ಸಾಗರನು ತಂದೆಯು ಆಗಿದ್ದಾರೆ. ಚೈತನ್ಯ ಜ್ಞಾನ ಸಾಗರರಾಗಿದ್ದಾರೆ. ನೀವೂ ಸಹ ಚೈತನ್ಯ ಜ್ಞಾನ ನದಿಗಳಾಗಿದ್ದೀರಿ. ಸ್ಥೂಲ ನದಿಗಳಂತೂ ನೀರಿನ ಗಂಗೆಯಾಗಿದೆ. ವಾಸ್ತವದಲ್ಲಿ ನದಿಗಳಿಗೆ ಹೆಸರನ್ನು ಇಟ್ಟಿರುವ ಕಾರಣ ಆಸುರಿ ಸಂಪ್ರದಾಯದವರು ಇದನ್ನು ಮರೆತು ಹೋಗಿದ್ದಾರೆ. ಹರಿದ್ವಾರದಲ್ಲಿ ಗಂಗಾ ನದಿ ತೀರದಲ್ಲಿ ಚತುರ್ಭುಜನ ಚಿತ್ರವನ್ನು ತೋರಿಸುತ್ತಾರೆ, ಅದನ್ನೂ ಗಂಗೆ ಎಂದು ಹೇಳುತ್ತಾರೆ. ಈ ಚತುರ್ಭುಜ ಯಾರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅವಶ್ಯವಾಗಿ ಈ ಸಮಯದಲ್ಲಿ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ನೀವು ಸತ್ಯವಾದ ಜ್ಞಾನ ನದಿಗಳಾಗಿದ್ದೀರಿ, ಅವು ನೀರಿನ ನದಿಗಳಾಗಿವೆ. ಅಲ್ಲಿ ಹೋಗಿ ಜನರು ಸ್ನಾನ ಮಾಡುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ. ಗಂಗಾ ದೇವಿ ಎಂದು ಹೇಳುತ್ತಾರೆ. ಮನುಷ್ಯರಿಗೆ ಎಂದೂ 4-8 ಭುಜಗಳು ಇರುವುದಿಲ್ಲ ಆದರೆ ಮನುಷ್ಯರಿಗೆ ಇದರ ಅರ್ಥವೇನೂ ಗೊತ್ತಿಲ್ಲ. ತಂದೆಯು ನಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡುತ್ತಾರೆ, ನಾವಂತೂ 100% ಬುದ್ಧಿಹೀನರಾಗಿದ್ದೆವು, ಬಾಬಾರವರ ಮಡಿಲನ್ನು ಪಡೆದುಕೊಂಡು ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಭಲೆ ಇಲ್ಲಿ ಯಾರಾದರೂ ರಾಜರೇ ಆಗಿರಲಿ ಆದರೆ ಇಲ್ಲಿನ ಸುಖ ಮತ್ತು ಸ್ವರ್ಗದ ಸುಖದಲ್ಲಿ ರಾತ್ರಿ-ಹಗಲಿನ ಅಂತರವಿದೆ. ನಿಮ್ಮಲಿಯೂ ಕೆಲವರು ತಂದೆಯನ್ನೂ ತಿಳಿದುಕೊಂಡಿಲ್ಲ, ತನ್ನನ್ನೂ ತಿಳಿದುಕೊಂಡಿಲ್ಲ. ಸ್ವಯಂನ್ನು ನೋಡಿಕೊಳ್ಳಿರಿ - ನಾನು ಎಷ್ಟು ಸುಗಂಧವನ್ನು ಬೀರುತ್ತೇನೆ? ಉಲ್ಟಾ-ಸುಲ್ಟಾ ಮಾತನಾಡುವುದಿಲ್ಲವೇ, ಕ್ರೋಧ ಮಾಡುವುದಿಲ್ಲವೇ? ಇವರು ಎಂತಹವರು ಎಂಬುದನ್ನು ತಂದೆಯು ಚಲನೆಯಿಂದಲೇ ತಿಳಿದುಕೊಳ್ಳುತ್ತಾರೆ. ಸೇವಾಧಾರಿ ಮಕ್ಕಳು ತಂದೆಗೆ ಬಹಳ ಪ್ರಿಯರು. ಎಲ್ಲರು ಒಂದೇ ರೀತಿ ಪ್ರಿಯರಾಗುವುದಿಲ್ಲ. ಪ್ರಿಯ ಮಕ್ಕಳ ಪ್ರತಿ ತಂದೆಯ ಆಶೀರ್ವಾದಗಳು ಸಿಗುತ್ತವೆ. ತಂದೆಯ ಆಜ್ಞೆಯನ್ನು ಉಲ್ಲಂಘನೆ ಮಾಡುವ ಮಕ್ಕಳ ಪ್ರತಿ ತಂದೆಯು ಇದೇ ಮಾತನ್ನು ಹೇಳುತ್ತಾರೆ - ಇಂತಹ ಮಕ್ಕಳು ಇರುವುದಕ್ಕಿಂತ ಸಾಯುವುದು ಲೇಸು. ತಂದೆಯ ಹೆಸರನ್ನು ಎಷ್ಟೊಂದು ಕೆಡಿಸುತ್ತಾರೆ, ಇದನ್ನೇ ದುರಾದೃಷ್ಟ ಎಂದು ಹೇಳುತ್ತಾರೆ. ಯಾರ ಅದೃಷ್ಟದಲ್ಲಿ ಏನಿದೆ ಎಂಬುದು ಕೂಡಲೇ ಅರ್ಥವಾಗುತ್ತದೆ. ತಂದೆಯು ತಿಳಿಸುತ್ತಾರೆ - ಇವರು ಸುಪುತ್ರರು, ಇವರು ಕುಪುತ್ರರು ಎಂದು. ಬಾಪ್ದಾದಾರವರನ್ನು ಅರಿತುಕೊಳ್ಳದೆ ಆಸ್ತಿ ತೆಗೆದುಕೊಳ್ಳದೆ ಇದ್ದರೆ ತಂದೆ ಏನು ಮಾಡುವರು? ಈ ಜ್ಞಾನ ಮಾರ್ಗದಲ್ಲಿ ಕಾಯಿದೆಯೇ ಬಹಳ ಕಠಿಣವಾಗಿದೆ. ತಂದೆಯು ಪವಿತ್ರರಾಗಿ ಮಕ್ಕಳು ಪವಿತ್ರರಾಗದಿದ್ದರೆ ಅಂತಹ ಮಗನು ಹಕ್ಕುಧಾರನಾಗುವುದಿಲ್ಲ. ಅವರನ್ನು ಮಗನೆಂದು ತಿಳಿಯುವುದಿಲ್ಲ. ಅಂತಹ ಸಮಯದಲ್ಲಿ ನಾವು ಶಿವ ತಂದೆಯನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ ಏಕೆಂದರೆ ತಂದೆಯು ನಮಗೆ 21 ಜನ್ಮಗಳಿಗಾಗಿ ರಿಟರ್ನ್ ಕೊಡುತ್ತಾರೆ. ಎಲ್ಲರು ತಂದೆಯ ಬಳಿ ಬಂದು ಇದ್ದು ಬಿಡಬೇಕು ಎಂದು ಇದರ ಅರ್ಥವಲ್ಲ. ಗೃಹಸ್ಥ ವ್ಯವಹಾರದಲ್ಲಿ ಇದ್ದು ಎಲ್ಲವನ್ನು ಸಂಭಾಲನೆ ಮಾಡಬೇಕು ಆದರೆ ಟ್ರಸ್ಟಿ ಆಗಿರಬೇಕು. ನಿಮ್ಮ ಮಕ್ಕಳು ಮೊದಲಾದವರನ್ನು ತಂದೆಯು ಕುಳಿತು ಸಂಭಾಲನೆ ಮಾಡುತ್ತಾರೆ ಎಂದಲ್ಲ. ಇಂತಹ ವಿಚಾರವನ್ನು ಇಟ್ಟುಕೊಳ್ಳುವವರು ಅಲೆದಾಟಕ್ಕೆ ಒಳಗಾಗುತ್ತಾರೆ. ತಂದೆಯ ಬಳಿಯಂತೂ ಸಂಪೂರ್ಣ ಪವಿತ್ರರು ಬೇಕಾಗಿದೆ. ಅಪವಿತ್ರರು ಕುಳಿತುಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಇಲ್ಲವೆಂದರೆ ಕಲ್ಲು ಬುದ್ಧಿಯವರಾಗಿ ಬಿಡುತ್ತಾರೆ. ತಂದೆಯು ಶಾಪವನ್ನೇನೂ ಕೊಡುವುದಿಲ್ಲ. ಇದೊಂದು ನಿಯಮವಾಗಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ ಎಚ್ಚರಿಕೆಯಿಂದಿರಿ, ಕರ್ಮೇಂದ್ರಿಯಗಳಿಂದ ಪಾಪ ಮಾಡಿದರೆ ಅವರು ಸತ್ತಂತೆ. ಇದು ಬಹಳ ದೊಡ್ಡ ಗುರಿಯಾಗಿದೆ. ತಂದೆಯ ಮಕ್ಕಳಾದ ನಂತರ ಕೆಲವೊಮ್ಮೆ ರೋಗವು ಹೆಚ್ಚಾಗಬಹುದು, ಹೆದರಬೇಡಿ. ಇಂತಹ ಔಷಧಿಯಿಂದ ನಿಮ್ಮ ಕಾಯಿಲೆ ಎಲ್ಲವು ಹೊರ ಬರುವುದು, ಹೆದರಬೇಡಿ ಎಂದು ವೈದ್ಯರೂ ಸಹ ಹೇಳುತ್ತಾರೆ. ಇಲ್ಲಿ ತಂದೆಯು ಹೇಳುತ್ತಾರೆ - ನೀವು ನನ್ನ ಮಕ್ಕಳಾದ ಮೇಲೆ ಮಾಯಾ ರಾವಣನು ನಿಮ್ಮನ್ನು ಬಹಳ ಹೆದರಿಸುವನು, ಬಿರುಗಾಳಿ ತರುವನು. ಹೆದರಬೇಡಿ. ಈಗ ನಿಮಗೆ ಸರಿ ಮತ್ತು ತಪ್ಪು ನಿರ್ಣಯ ಮಾಡುವ ಬುದ್ಧಿ ಸಿಕ್ಕಿದೆ. ಮತ್ತ್ಯಾರಿಗೂ ಈ ಬುದ್ಧಿ ಇಲ್ಲ. ಎಲ್ಲರದೂ ವಿನಾಶ ಕಾಲದಲ್ಲಿ ವಿಪರೀತ ಬುದ್ಧಿಯಾಗಿದೆ. ನಿಮ್ಮಲ್ಲಿಯೂ ಪ್ರೀತಿ ಬುದ್ಧಿಯವರು ನಂಬರ್ವಾರ್ ಪುರುಷಾರ್ಥದನುಸಾರ ಇದ್ದಾರೆ. ಪ್ರೀತಿ ಬುದ್ಧಿಯವರು ತಂದೆಯ ಸೇವೆಯನ್ನು ಬಹಳ ಚೆನ್ನಾಗಿ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈಶ್ವರನ ಮಗುವಾದನಂತರ ಅವರ ಆಜ್ಞೆಯ ಉಲ್ಲಂಘನೆ ಮಾಡಬಾರದು. ಈ ಕರ್ಮೇಂದ್ರಿಯಗಳಿಂದ ಯಾವುದೇ ಕೆಟ್ಟ ಕರ್ಮ ಮಾಡಬಾರದು. ಉಲ್ಟಾ-ಸುಲ್ಟಾ ಮಾತನಾಡಬಾರದು. ಸುಪುತ್ರರಾಗಿ ತಂದೆಯ ಆಶೀರ್ವಾದಗಳನ್ನು ಪಡೆಯಬೇಕಾಗಿದೆ.
2. ಟ್ರಸ್ಟಿಯಾಗಿ ತಮ್ಮ ಗೃಹಸ್ಥ ವ್ಯವಹಾರವನ್ನು ಸಂಭಾಲನೆ ಮಾಡಬೇಕಾಗಿದೆ. ಜ್ಞಾನ ಮಾರ್ಗದ ಕಾಯಿದೆಗಳ ಅನುಸಾರ ಪೂರ್ಣ ರೀತಿಯಿಂದ ನಡೆಯಬೇಕಾಗಿದೆ. ಸರಿ ಮತ್ತು ತಪ್ಪನ್ನು ತಿಳಿದುಕೊಂಡು ಮಾಯೆಯಿಂದ ಎಚ್ಚರವಾಗಿರಬೇಕಾಗಿದೆ.
ಓಂ ಶಾಂತಿ. ಬೇಹದ್ದಿನ ತಂದೆಯು ಕುಳಿತು ಬೇಹದ್ದಿನ ಮಕ್ಕಳಿಗೆ ತಿಳಿಸುತ್ತಾರೆ. ಬೇಹದ್ ಎಂದರೆ ಯಾವುದೇ ಹದ್ ಅರ್ಥಾತ್ ಪರಿಮಿತಿಯಿಲ್ಲ. ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಇಷ್ಟು ಅಸಂಖ್ಯಾತ ಮಕ್ಕಳಿಗೆ ಒಬ್ಬರೇ ತಂದೆಯಿದ್ದಾರೆ, ಅವರಿಗೆ ರಚಯಿತನೆಂದು ಹೇಳಲಾಗುತ್ತದೆ. ಲೌಕಿಕ ತಂದೆಯರಂತೂ ಅನೇಕರಿದ್ದಾರೆ, ಇವರು ಬೇಹದ್ದಿನ ಆತ್ಮಗಳ ತಂದೆಯಾಗಿದ್ದಾರೆ. ಅವರು ಹದ್ದಿನ, ದೈಹಿಕ ತಂದೆಯಾಗಿದ್ದಾರೆ. ಇವರು ಬೇಹದ್ದಿನ ಆತ್ಮಗಳಿಗೆ ಒಬ್ಬರೇ ತಂದೆಯಾಗಿದ್ದಾರೆ ಯಾರನ್ನು ಭಕ್ತಿಮಾರ್ಗದಲ್ಲಿ ಎಲ್ಲಾ ಆತ್ಮರು ನೆನಪು ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಭಕ್ತಿಮಾರ್ಗವೂ ಇದೆ ಜೊತೆ ಜೊತೆಗೆ ರಾವಣ ರಾಜ್ಯವೂ ಇದೆ. ನಮ್ಮನ್ನು ರಾವಣ ರಾಜ್ಯದಿಂದ ರಾಮ ರಾಜ್ಯಕ್ಕೆ ಕರೆದುಕೊಂಡು ಹೋಗಿ ಎಂದು ಮನುಷ್ಯರು ಕರೆಯುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ - ನೋಡಿ, ಯಾವ ದೇವಿ-ದೇವತೆಗಳು ಮಾಲೀಕರಾಗಿದ್ದರೋ ಅವರು ಈಗ ಇಲ್ಲ. ಅವರು ಯಾರಾಗಿದ್ದರು ಎಂಬುದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ. ನಾವೇ ಸತ್ಯಯುಗೀ ಸೂರ್ಯವಂಶಿ ಮನೆತನದ ಮಾಲೀಕರಾಗಿದ್ದೇವು. ರಾಜ-ರಾಣಿಯರಂತೂ ಇರುತ್ತಾರಲ್ಲವೆ. ಈಗ ನೀವು ಮಕ್ಕಳಿಗೆ ಸ್ಮೃತಿ ಬಂದಿದೆ - ನಾವು ಮಕ್ಕಳಿಗೆ ರಾಜ್ಯಭಾಗ್ಯದ ಆಸ್ತಿಯನ್ನು ಕೊಡಲು, ವಿಶ್ವದ ಮಾಲೀಕರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ, ಈಗ ಎಲ್ಲರೂ ಭಕ್ತಿಮಾರ್ಗದಲ್ಲಿದ್ದಾರೆ. ಜ್ಞಾನ ಮಾರ್ಗವನ್ನು ಕೇವಲ ಒಬ್ಬ ತಂದೆಯೇ ನಿಮಗೆ ಕಲಿಸುತ್ತಾರೆ. ಆ ಬೇಹದ್ದಿನ ತಂದೆಯನ್ನು ಭಕ್ತಿಮಾರ್ಗದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ಈಗ ನಿಮಗೆ 21 ಜನ್ಮಗಳಿಗಾಗಿ ಜ್ಞಾನದ ರಾಜಧಾನಿಯು ಸಿಗುತ್ತದೆ. ನಂತರ ಅರ್ಧ ಕಲ್ಪದವರೆಗೆ ನೀವು ಕರೆಯುವುದೇ ಇಲ್ಲ. ಅಯ್ಯೊ ರಾಮ, ಅಯ್ಯೊ ಪ್ರಭು, ಎಂದು ಹೇಳುವ ಅವಶ್ಯಕತೆಯೇ ಇರುವುದಿಲ್ಲ. ದುಃಖಿಯಾದಾಗಲೇ ಅಯ್ಯೋ ರಾಮ ಎನ್ನುತ್ತಾರೆ, ನಿಮಗೆ ಅಲ್ಲಿ ದುಃಖವೇ ಇರುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಈ ಆಟವು ಮಾಡಲ್ಪಟ್ಟಿದೆ, ಅರ್ಧ ಕಲ್ಪ ಜ್ಞಾನದ ದಿನ, ಇನ್ನರ್ಧ ಕಲ್ಪ ಭಕ್ತಿಯ ರಾತ್ರಿಯಿರುವುದು. ನೀವು ಮಕ್ಕಳ ಬುದ್ಧಿಯಲ್ಲಿ ಏಣಿಯ ಜ್ಞಾನವು ಖಂಡಿತ ಇರಬೇಕಾಗಿದೆ. ತಂದೆಯು ತಿಳಿಸುತ್ತಾರೆ, ಇದು 84 ಜನ್ಮಗಳ ಚಕ್ರವಾಗಿದೆ. ಈ ಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಆದ್ದರಿಂದ ತಂದೆಯು ಚಿತ್ರಗಳನ್ನೂ ಮಾಡಿಸುತ್ತಿದ್ದಾರೆ, ಇದರಿಂದಲೇ ಸಿದ್ಧವಾಗುತ್ತದೆ - ನಾವು ಈ ಚಕ್ರವನ್ನು ಅರಿತುಕೊಂಡರೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆದುಕೊಳ್ಳುತ್ತೇವೆ.
ನೀವೀಗ ಬಹಳಷ್ಟು ಮಂದಿ ಇದ್ದೀರಿ. ದೊಡ್ಡ ಆತ್ಮಿಕ ಶಕ್ತಿ ಸೇನೆಯಾಗಿದೆ. ನೀವೆಲ್ಲರೂ ಮಾರ್ಗದರ್ಶಕರಾಗಿದ್ದೀರಿ. ತಂದೆಯೂ ಸಹ ಮಾರ್ಗದರ್ಶಕನಾಗಿದ್ದಾರೆ. ಅವರಿಗೆ ಪಂಡ ಎಂದೂ ಹೇಳಲಾಗುತ್ತದೆ. ಈ ಮಾರ್ಗದರ್ಶಕ ಶಬ್ಧವು ಶುಭವಾಗಿದೆ. ಯಾತ್ರೆಗೆ ಕರೆದುಕೊಂಡು ಹೋಗಲು ಮಾರ್ಗದರ್ಶಕರಿರುತ್ತಾರೆ, ಯಾತ್ರಿಕರು ಹೋದಾಗ ಇವರಿಗೆ ಎಲ್ಲವನ್ನೂ ತೋರಿಸಿ ಎಂದು ಮಾರ್ಗದರ್ಶಕರಿಗೆ ಹೇಳುತ್ತಾರೆ. ತೀರ್ಥ ಯಾತ್ರೆಗಳಲ್ಲಿಯೂ ಮಾರ್ಗದರ್ಶಕರು ಸಿಗುತ್ತಾರೆ. ತಂದೆಯು ಹೇಳುತ್ತಾರೆ - ಜನ್ಮ-ಜನ್ಮಾಂತರದಿಂದ ತೀರ್ಥ ಯಾತ್ರೆಗಳನ್ನು ಮಾಡುತ್ತಾ ಬಂದಿದ್ದೀರಿ, ಅಮರ ನಾಥಕ್ಕೂ ಹೋಗುತ್ತಾರೆ, ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ, ಪರಿಕ್ರಮಣ ಮಾಡುತ್ತಾರೆ. ಅಲ್ಲಿ ಹೋಗುವ ಸಮಯದಲ್ಲಿ ಅದೇ ನೆನಪಿರುತ್ತದೆ. ಉದ್ಯೋಗ-ವ್ಯವಹಾರ ಎಲ್ಲದರಿಂದ ಬುದ್ಧಿಯೋಗವು ದೂರವಿರುತ್ತದೆ. ಇಲ್ಲಿ ನಿಮಗೆ ತಿಳಿಸಲಾಗುತ್ತದೆ, ತಮ್ಮ ಗೃಹಸ್ಥದಲ್ಲಿದ್ದರೂ ಸಹ ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ಇರಿ ಮತ್ತು ಗುಪ್ತ ಯಾತ್ರೆಯಲ್ಲಿರಿ. ಇದು ಒಳ್ಳೆಯದಾಗಿದೆ! ಎಷ್ಟು ದೊಡ್ಡ ವ್ಯಾಪಾರ ಮಾಡಬೇಕೋ ಅಷ್ಟನ್ನೂ ಮಾಡಿರಿ, ಯಾರನ್ನೂ ನಿರಾಕರಿಸುವುದಿಲ್ಲ. ಭಲೆ ತಮ್ಮ ರಾಜ್ಯವನ್ನು ಸಂಭಾಲನೆ ಮಾಡಿ. ರಾಜ ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಕ್ಕಿತು, ನಿಮಗೆ ಯಾವುದೇ ಹೊರಗಿನ ಯಾತ್ರೆ ಇತ್ಯಾದಿಗಳಲ್ಲಿ ಸುತ್ತುವ ಅವಶ್ಯಕತೆಯಿಲ್ಲ. ತಮ್ಮ ಗೃಹಸ್ಥವನ್ನೂ ಪೂರ್ಣ ರೀತಿಯಿಂದ ಸಂಭಾಲನೆ ಮಾಡಿರಿ, ಯಾರು ಬುದ್ಧಿವಂತ, ಒಳ್ಳೆಯ ಮಕ್ಕಳಿದ್ದಾರೆಯೋ ಅವರು ನಾವು ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಿರಬೇಕೆಂದು ತಿಳಿಯುತ್ತಾರೆ. ಗೃಹಸ್ಥ ವ್ಯವಹಾರದಲ್ಲಿ ಬೇಸರ ಪಡಬಾರದು. ಕುಮಾರ-ಕುಮಾರಿಯರಂತೂ ಸನ್ಯಾಸಿಗಳಿದ್ದಂತೆ, ಅವರಲ್ಲಿ ವಿಕಾರವಿರುವುದಿಲ್ಲ. ಪಂಚ ವಿಕಾರಗಳಿಂದ ದೂರವಿರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮ್ಮ ಶೃಂಗಾರವೇ ಭಿನ್ನವಾಗಿದೆ, ಅವರದೇ ಭಿನ್ನವಾಗಿದೆ. ಅವರದು ತಮೋಪ್ರಧಾನ ಶೃಂಗಾರವಾಗಿದೆ, ನಿಮ್ಮದು ಸತೋಪ್ರಧಾನ ಶೃಂಗಾರವಾಗಿದೆ. ಇದರಿಂದ ನೀವು ಸತೋಪ್ರಧಾನ, ಸೂರ್ಯವಂಶಿ ರಾಜಧಾನಿಯಲ್ಲಿ ಹೋಗಬೇಕಾಗಿದೆ. ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ತಮೋಪ್ರಧಾನ ದೈಹಿಕ ಶೃಂಗಾರವನ್ನು ಸ್ವಲ್ಪವೂ ಮಾಡಬೇಡಿ. ಪ್ರಪಂಚವು ಬಹಳ ಕೆಟ್ಟು ಹೋಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಫ್ಯಾಷನೇಬಲ್ ಆಗಬೇಡಿ. ಫ್ಯಾಷನ್ ಆಕರ್ಷಣೆ ಮಾಡುತ್ತದೆ. ಈ ಸಮಯದಲ್ಲಿ ಸೌಂದರ್ಯವು ಒಳ್ಳೆಯದಲ್ಲ, ಕಪ್ಪಾಗಿದ್ದರೆ ಇನ್ನೂ ಒಳ್ಳೆಯದು. ಯಾವುದೇ ಪೆಟ್ಟು ಬೀಳುವುದಿಲ್ಲ. ಸುಂದರರಾಗಿರುವ ಹಿಂದೆ ಸುತ್ತುತ್ತಿರುತ್ತಾರೆ, ಕೃಷ್ಣನನ್ನೂ ಸಹ ಕಪ್ಪಾಗಿ ತೋರಿಸುತ್ತಾರೆ. ನೀವು ಶಿವ ತಂದೆಯಿಂದ ಸುಂದರರಾಗಬೇಕಾಗಿದೆ, ಅವರಂತೂ ಫೌಡರ್ ಇತ್ಯಾದಿಗಳಿಂದ ಸುಂದರವಾಗಿ ಕಾಣುತ್ತಾರೆ, ಎಷ್ಟೊಂದು ಫ್ಯಾಷನ್ ಇದೆ, ಮಾತೇ ಕೇಳಬೇಡಿ. ಸಾಹುಕಾರರಿಗಂತೂ ಸತ್ಯ ನಾಶವಾಗುತ್ತದೆ, ಬಡವರು ಚೆನ್ನಾಗಿರುತ್ತಾರೆ. ಹಳ್ಳಿಗಳಿಗೆ ಹೋಗಿ ಬಡವರ ಕಲ್ಯಾಣ ಮಾಡಬೇಕಾಗಿದೆ. ಆದರೆ ಸಂದೇಶವನ್ನು ಕೊಡುವವರು ದೊಡ್ಡ ವ್ಯಕ್ತಿಯಾಗಿರಬೇಕು. ನೀವೆಲ್ಲರೂ ಬಡವರಲ್ಲವೆ. ಯಾರಾದರೂ ಸಾಹುಕಾರರಿದ್ದೀರಾ? ನೀವು ನೋಡಿ, ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ, ಬಾಂಬೆಯಲ್ಲಿ ಫ್ಯಾಷನ್ ನೋಡಿ ಎಷ್ಟೊಂದಿದೆ!! ತಂದೆಯ ಬಳಿ ಮಿಲನ ಮಾಡಲು ಬರುತ್ತಾರೆ, ಆಗ ಹೇಳುತ್ತೇನೆ - ನೀವು ಈ ಶಾರೀರಕ ಶೃಂಗಾರ ಮಾಡಿಕೊಂಡಿದ್ದೀರಿ, ಬನ್ನಿರಿ ನಿಮಗೆ ಜ್ಞಾನದ ಶೃಂಗಾರ ಮಾಡಿಸುತ್ತೇವೆ ಯಾವುದರಿಂದ ನೀವು ಸ್ವರ್ಗದಲ್ಲಿ 21 ಜನ್ಮಗಳಿಗಾಗಿ ದೇವತೆಯಾಗಿ ಬಿಡುತ್ತೀರಿ. ಸದಾ ಸುಖಿಯಾಗಿರುತ್ತೀರಿ. ಎಂದೂ ಅಳುವುದೂ ಇಲ್ಲ, ದುಃಖವೂ ಆಗುವುದಿಲ್ಲ. ನೀವೀಗ ಈ ದೈಹಿಕ ಶೃಂಗಾರವನ್ನು ಬಿಟ್ಟು ಬಿಡಿ. ನಿಮಗೆ ನಾವು ಜ್ಞಾನ ರತ್ನಗಳಿಂದ ಬಹಳ ಫಸ್ಟ್ಕ್ಲಾಸ್ ಶೃಂಗಾರ ಮಾಡಿಸುತ್ತೇವೆ, ಅದರ ಮಾತೇ ಕೇಳಬೇಡಿ. ಒಂದುವೇಳೆ ನನ್ನ ಮತದಂತೆ ನಡೆಯುವುದಾದರೆ ನಿಮ್ಮನ್ನು ಪಟ್ಟದ ರಾಣಿಯರನ್ನಾಗಿ ಮಾಡುತ್ತೇನೆ, ಇದು ಒಳ್ಳೆಯದಲ್ಲವೆ. ನೀವೆಲ್ಲಾ ಭಾರತವಾಸಿಗಳನ್ನು ಈ ತಮೋಪ್ರಧಾನ, ಆಸುರೀ ಪ್ರಪಂಚ, ನರಕದಿಂದ ಓದಿಸಿ ಸ್ವರ್ಗದ ಮಹಾರಾಣಿಯರನ್ನಾಗಿ ಮಾಡುತ್ತೇನೆ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇಂದು ನಾವು ಶ್ವೇತ ವಸ್ತ್ರಗಳಲ್ಲಿದ್ದೇವೆ, ಇನ್ನೊಂದು ಜನ್ಮದಲ್ಲಿ ಸ್ವರ್ಗದಲ್ಲಿ ಚಿನ್ನದ ಚಮಚದಿಂದ ಹಾಲು ಕುಡಿಯುತ್ತೀರಿ, ಇದಂತೂ ಬಹಳ ಛೀ ಛೀ ಪ್ರಪಂಚವಾಗಿದೆ. ಸ್ವರ್ಗವಂತೂ ಸ್ವರ್ಗವೇ ಆಗಿದೆ, ಅದರ ಮಾತೇ ಕೇಳಬೇಡಿ. ಇಲ್ಲಿ ನೀವು ಭಿಕಾರಿಗಳಾಗಿದ್ದೀರಿ, ಭಾರತವು ಭಿಕಾರಿಯಾಗಿದೆ. ಭಿಕಾರಿಯಿಂದ ರಾಜಕುಮಾರನೆಂಬ ಗಾಯನವಿದೆ. ಮತ್ತೆ ಈ ಭಾರತದಲ್ಲಿಯೇ ಜನ್ಮ ಪಡೆಯುತ್ತೀರಿ. ತಂದೆಯು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದ್ದರು, ರಾತ್ರಿ-ಹಗಲಿನ ಅಂತರವಿದೆ. ಮಹಾನ್ ಬಡವರು ಯಾರಿಗೆ ತಿನ್ನುವುದಕ್ಕೂ ಏನೂ ಇರುವುದಿಲ್ಲವೋ ಅವರಿಗೇ ದಾನ ಮಾಡಲಾಗುತ್ತದೆ. ಭಾರತ ದೇಶವೇ ಮಹಾನ್ ಬಡ ದೇಶವಾಗಿದೆ, ಈ ಸಮಯದಲ್ಲಿ ಎಲ್ಲರೂ ತಮೋ ಪ್ರಧಾನರಾಗಿದ್ದಾರೆಂದು ಪಾಪ! ಅವರಿಗೆ ತಿಳಿಯುವುದೇ ಇಲ್ಲ. ದಿನ-ಪ್ರತಿದಿನ ಏಣಿಯನ್ನು ಕೆಳಗಿಳಿಯುತ್ತಲೇ ಹೋಗುತ್ತೀರಿ. ಈಗ ಯಾರೂ ಏಣಿಯನ್ನು ಏರಲು ಸಾಧ್ಯ. 16 ಕಲೆಗಳಿಂದ 14 ಕಲೆ ನಂತರ 12 ಕಲೆ.... ಕೆಳಗಡೆ ಇಳಿಯುತ್ತಲೇ ಬರುತ್ತಾರೆ. ಈ ಲಕ್ಷ್ಮೀ-ನಾರಾಯಣರೂ ಸಹ 16 ಕಲಾ ಸಂಪೂರ್ಣರಾಗಿದ್ದರು, ನಂತರ 14 ಕಲೆಗಳಲ್ಲಿ ಇಳಿಯುತ್ತಾರಲ್ಲವೆ. ಇದನ್ನೂ ಸಹ ಚೆನ್ನಾಗಿ ನೆನಪಿಟ್ಟುಕೊಳ್ಳಬೇಕಾಗಿದೆ. ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಸಂಪೂರ್ಣ ಪತಿತರಾಗಿದ್ದೀರಿ. ಈಗ ಸ್ವರ್ಗದ ಮಾಲೀಕರನ್ನಾಗಿ ಯಾರು ಮಾಡುವರು? ಈ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಇದನ್ನೂ ಸಹ ಎಲ್ಲರೂ ಹೇಳುತ್ತಾರೆ ಆದರೆ ಈಗ ಯಾವ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಶಾಸ್ತ್ರಗಳಲ್ಲಿ ಸತ್ಯಯುಗದ ಆಯಸ್ಸನ್ನು ಲಕ್ಷಾಂತರ-ಕೋಟ್ಯಾಂತರ ವರ್ಷಗಳೆಂದು ಬರೆದು ಬಿಟ್ಟರು. ಕೇಳಿರಿ, ಸತ್ಯಯುಗವು ಯಾವಾಗ ಬರುವುದು? ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳುತ್ತಾರೆ. ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ಕಲ್ಪದ ಆಯಸ್ಸು 5000 ವರ್ಷಗಳಾಗಿದೆ. ಅವರು ಕೇವಲ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಘೋರ ಅಂಧಕಾರವಿದೆಯಲ್ಲವೆ ಅಂದಮೇಲೆ ಮನುಷ್ಯರು ಬಂದಿರುವರೆಂದು ಹೇಗೆ ನಂಬುವರು? ಕಲಿಯುಗದ ಅಂತ್ಯವಾದಾಗ ಭಗವಂತನು ಬರುವರೆಂದು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳು ಎಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ವಿನಾಶವು ಸನ್ಮುಖದಲ್ಲಿ ನಿಂತಿದೆ. ಮಕ್ಕಳಿಗೆ ತಿಳಿಸಲಾಗುತ್ತದೆ - ವಿನಾಶಕ್ಕೆ ಮೊದಲೇ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ ಆದರೆ ಮನುಷ್ಯರು ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ, ಅಂತಹವರು ಪಾಪ, ಅಯ್ಯೊ ಅಯ್ಯೊ ಎನ್ನುತ್ತಾ ಸಾಯುತ್ತಾರೆ. ನಿಮ್ಮದು ಜಯ ಜಯಕಾರವಾಗುತ್ತದೆ. ವಿನಾಶದಲ್ಲಿ ಇರುವುದೇ ಅಯ್ಯೊ ಅಯ್ಯೊ ಎಂಬ ಶಬ್ಧ. ವಿಪರೀತ ಬುದ್ಧಿಯವರೇ ಅಯ್ಯೊ ಅಯ್ಯೊ ಎನ್ನುತ್ತಾರೆ. ಈಗ ನೀವು ಸತ್ಯ ತಂದೆಯ ಸತ್ಯ ಸಂತಾನರಾಗಿದ್ದೀರಿ. ನರಕದ ವಿನಾಶವಾಗದ ಹೊರತು ಸ್ವರ್ಗವು ಹೇಗಾಗುವುದು? ನೀವು ಹೇಳುತ್ತೀರಿ, ಇದಂತೂ ಮಹಾಭಾರತ ಯುದ್ಧವಾಗಿದೆ, ಇದರಿಂದಲೇ ಸ್ವರ್ಗದ ದ್ವಾರವು ತೆರೆಯುವುದು. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿದೆ - ನಮಗೆ ಈಗ ದೈವೀ ಸ್ವರಾಜ್ಯದ ಬೆಣ್ಣೆಯು ಸಿಗುತ್ತದೆ. ಅವರಂತೂ ಪರಸ್ಪರ ಹೊಡೆದಾಡುತ್ತಾ ಇರುತ್ತಾರೆ, ಅವರು ಮನುಷ್ಯರು ನೀವೂ ಮನುಷ್ಯರೇ ಆದರೆ ಅವರು ಆಸುರೀ ಸಂಪ್ರದಾಯ, ನೀವು ದೈವೀ ಸಂಪ್ರದಾಯದವರಾಗಿದ್ದೀರಿ. ತಂದೆಯು ಮಕ್ಕಳಿಗೆ ಸಮ್ಮುಖದಲ್ಲಿ ತಿಳಿಸುತ್ತಾರೆ - ನೀವು ಮಕ್ಕಳಲ್ಲಿ ಖುಷಿಯಿರುತ್ತದೆ, ನೀವು ಅನೇಕ ಬಾರಿ ಇಂತಹ ರಾಜಧಾನಿಯನ್ನು ಪಡೆದುಕೊಂಡಿದ್ದಿರಿ ಹೇಗೆ ಈಗಲೂ ಸಹ ಪಡೆದುಕೊಳ್ಳುತ್ತಿದ್ದೀರಿ. ಅವರು ಪರಸ್ಪರ ಎರಡು ಬೆಕ್ಕುಗಳಂತೆ ಕಾದಾಡುತ್ತಾರೆ ಇಡೀ ವಿಶ್ವದ ರಾಜ್ಯಭಾಗ್ಯದ ಬೆಣ್ಣೆಯು ನಿಮಗೆ ಸಿಗುತ್ತದೆ. ಇಲ್ಲಿ ನೀವು ವಿಶ್ವದ ಮಾಲೀಕರಾಗುವುದಕ್ಕಾಗಿಯೇ ಬರುತ್ತೀರಿ. ನೀವು ತಿಳಿದುಕೊಳ್ಳುತ್ತೀರಿ - ನಾವು ತಂದೆಯ ಜೊತೆ ಬುದ್ಧಿಯೋಗವನ್ನಿಟ್ಟು ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತೇವೆ. ಅವರು ಪರಸ್ಪರ ಹೊಡೆದಾಡುತ್ತಾರೆ. ನಾವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೇವೆ, ಇದಂತೂ ಸಾಮಾನ್ಯ ಮಾತಾಗಿದೆ. ಆ ಬಾಹುಬಲ ಇರುವವರು ರಾಜ್ಯಭಾಗ್ಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನೀವು ಯೋಗಬಲದಿಂದ ವಿಶ್ವದ ಮಾಲೀಕರಾದಿರಿ, ನಿಮ್ಮದು ಅಹಿಂಸಾ ಪರಮೋ ದೇವತಾ ಧರ್ಮವಾಗಿದೆ. ಅಲ್ಲಿ ಎರಡೂ ಹಿಂಸೆಗಳಿರುವುದಿಲ್ಲ – ಕಾಮ ಕಟಾರಿಯ ಹಿಂಸೆಯು ಎಲ್ಲದಕ್ಕಿಂತ ಕೆಟ್ಟದಾಗಿದೆ. ಇದು ನಿಮಗೆ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ರಾವಣ ರಾಜ್ಯವು ಯಾವಾಗ ಆಗುತ್ತದೆ ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಈಗ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ ಅಂದಮೇಲೆ ಎಂದಾದರೂ ಪಾವನರಾಗಿದ್ದಿರಲ್ಲವೆ. ದುಃಖದಿಂದ ಮುಕ್ತಗೊಳಿಸಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ, ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ಭಾರತವಾಸಿ ಮಕ್ಕಳೇ ಕರೆಯುತ್ತಾರೆ. ಕೃಷ್ಣನಿಗೆ ಹರಿ ಎಂದೂ ಹೇಳುತ್ತಾರೆ. ಬಾಬಾ, ನಮ್ಮನ್ನು ಹರಿಯ ದ್ವಾರಕ್ಕೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ, ಹರಿಯ ದ್ವಾರವು ಕೃಷ್ಣ ಪುರಿಯಾಗಿದೆ, ಇದು ಕಂಸ ಪುರಿಯಾಗಿದೆ. ಇದು ನಮಗೆ ಇಷ್ಟವಿಲ್ಲ, ಮಾಯಾ ಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ, ರಾವಣ ರಾಜ್ಯವು ದ್ವಾಪರದಿಂದ ಆರಂಭವಾಗುತ್ತದೆ. ಯಾವ ದೇವತೆಗಳು ಪಾವನರಿದ್ದರೋ ಅವರು ಪತಿತರಾಗತೊಡಗುತ್ತಾರೆ. ಅದರ ಸಾಕ್ಷಿಗಳು ಜಗನ್ನಾಥ ಪುರಿಯಲ್ಲಿದೆ. ಪ್ರಪಂಚದಲ್ಲಿ ಎಷ್ಟು ಕೊಳಕುತನವಿದೆ! ನಾವಂತೂ ಈಗ ಅವೆಲ್ಲಾ ಮಾತುಗಳಿಂದ ಹೊರ ಬಂದು ಪರಿಸ್ಥಾನಕ್ಕೆ ಹೋಗುತ್ತೇವೆ. ಇದರಲ್ಲಿ ಬಹಳ ಧೈರ್ಯ, ಮಹಾವೀರತನ ಬೇಕು. ತಂದೆಯ ಮಕ್ಕಳಾದ ನಂತರವೂ ಪತಿತರಾಗಬಾರದು. ಸ್ತ್ರೀ-ಪುರುಷರು ಒಟ್ಟಿಗೆ ಇದ್ದು ಪರಸ್ಪರ ಬೆಂಕಿಹತ್ತಿಕೊಳ್ಳದೇ ಇರಲು ಸಾಧ್ಯವೇ ಇಲ್ಲವೆಂದು ತಿಳಿದುಕೊಳ್ಳುತ್ತಾರೆ. ಆದ್ದರಿಂದಲೇ ಇಲ್ಲಿ ಇವರು ಸ್ತ್ರೀ-ಪುರುಷರನ್ನು ಸಹೋದರ-ಸಹೋದರಿಯನ್ನಾಗಿ ಮಾಡಿಸುತ್ತಾರೆಂದು ಬಹಳಷ್ಟು ಹೊಡೆದಾಡುತ್ತಾರೆ. ಈ ರೀತಿಯಂತೂ ಎಲ್ಲಿಯೂ ಬರೆದಿಲ್ಲ, ಇಲ್ಲಿ ಯಾವ ಜಾದುವಿದೆಯೋ ಗೊತ್ತಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಅರೆ! ನೀವು ಬ್ರಹ್ಮಾಕುಮಾರಿಯರ ಬಳಿ ಹೋಗುತ್ತೀರಿ ಮತ್ತು ಅವರು ನಿಮ್ಮನ್ನು ಬಂಧಿಸುತ್ತಾರೆ. ಹೀಗೆ ಅಲ್ಲಿ ಸುಳ್ಳು ಹೇಳುತ್ತಿರುತ್ತಾರೆ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾರ ಪಾತ್ರವಿರುವುದೋ ಅವರು ಬಂದೇ ಬರುತ್ತಾರೆ. ಇದರಲ್ಲಿ ಹೆದರುವ ಮಾತಿಲ್ಲ. ಶಿವ ತಂದೆಯಂತೂ ಜ್ಞಾನ ಸಾಗರ, ಪತಿತ-ಪಾವನ, ಸರ್ವರ ಸದ್ಗತಿದಾತನಾಗಿದ್ದಾರೆ. ಬ್ರಹ್ಮಾರವರ ಮೂಲಕ ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಈ ಶಬ್ಧವು ಇಷ್ಟು ದೊಡ್ಡ ಅಕ್ಷರಗಳಲ್ಲಿ ಬರೆಯಬೇಕು, ಅದನ್ನು ಯಾರು ಬೇಕಾದರೂ ಓದುವಂತಿರಲಿ. ಪವಿತ್ರತೆಗಾಗಿ ಎಷ್ಟೊಂದು ವಿಘ್ನಗಳನ್ನು ಹಾಕುತ್ತಾರೆ.
ತಂದೆಯು ಹೇಳುತ್ತಾರೆ - ಮಕ್ಕಳೇ, ಯಾವುದೇ ದೇಹಧಾರಿಯಲ್ಲಿ ಮೋಹದ ಸೆಳೆತವಿರಬಾರದು. ಒಂದುವೇಳೆ ಎಲ್ಲಿಯಾದರೂ ಮೋಹದ ಸೆಳೆತವಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತೀರಿ. ಇಲ್ಲಂತೂ ತಾಯಿ ಸತ್ತಾಗಲೂ ಸಹ ಹಲ್ವ ತಿನ್ನಬೇಕು.... ತಂದೆಯು ಸಮ್ಮುಖದಲ್ಲಿ ಕೂರಿಸಿಕೊಂಡು ಕೇಳುತ್ತಾರೆ - ನಾಳೆ ನಿಮ್ಮವರು ಯಾರಾದರೂ ಸಾವನ್ನಪ್ಪಿದರೆ ಅಳುವುದಿಲ್ಲವೆ? ಕಣ್ಣೀರು ಬಂದರೆ ಅನುತ್ತೀರ್ಣರಾದರು. ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಂಡರು ಅದರಲ್ಲಿ ಅಳುವ ಮಾತೇನಿದೆ! ಅನ್ಯರು ಯಾರಾದರೂ ಕೇಳಿಸಿಕೊಂಡರೆ ಹೇಳುವರು, ಬಾಯಿಂದ ಒಳ್ಳೆಯದಾದರೂ ಹೇಳಿರಿ. ಅರೆ! ಒಳ್ಳೆಯದನ್ನೇ ಹೇಳುತ್ತೇವೆ - ಸತ್ಯಯುಗದಲ್ಲಿ ಅಳುವುದೇ ಇಲ್ಲ. ಈ ನಿಮ್ಮ ಜೀವನವು ಅದಕ್ಕಿಂತಲೂ ಶ್ರೇಷ್ಠವಾಗಿದೆ. ನೀವು ಎಲ್ಲರನ್ನೂ ಅಳುವುದರಿಂದ ಪಾರು ಮಾಡುವವರು ಅಂದಮೇಲೆ ನೀವು ಹೇಗೆ ಅಳುವಿರಿ? ನಮಗೆ ಪತಿಯರ ಪತಿ ಸಿಕ್ಕಿದರು, ಅವರು ನಮ್ಮನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ ಅಂದಮೇಲೆ ನರಕದಲ್ಲಿ ಬೀಳಿಸುವವರಿಗಾಗಿ ನಾವೇಕೆ ಅಳಬೇಕು? ತಂದೆಯು ಎಷ್ಟು ಮಧುರಾತಿ ಮಧುರ ಮಾತುಗಳನ್ನು ತಿಳಿಸುತ್ತಾರೆ ಆಸ್ತಿಯನ್ನು ತೆಗೆದುಕೊಳ್ಳುವುದಕ್ಕಾಗಿ. ಈ ಸಮಯದಲ್ಲಿ ಭಾರತಕ್ಕೆ ಎಷ್ಟೊಂದು ಅಕಲ್ಯಾಣವಾಗಿದೆ, ತಂದೆಯು ಬಂದು ಕಲ್ಯಾಣ ಮಾಡುತ್ತಾರೆ. ಭಾರತಕ್ಕೆ ಮಗಧ ದೇಶವೆಂದು ಹೇಳುತ್ತಾರೆ. ಸಿಂಧ್ನಲ್ಲಿ ಇರುವವರಷ್ಟು ಫ್ಯಾಷನೇಬಲ್ ಯಾರೂ ಇರುವುದಿಲ್ಲ. ವಿದೇಶದಿಂದ ಫ್ಯಾಷನ್ ಕಲಿತುಕೊಂಡು ಬರುತ್ತಾರೆ. ಕೂದಲಿಗಾಗಿ ಈಗಿನ ಕನ್ಯೆಯರು ಎಷ್ಟೊಂದು ಖರ್ಚು ಮಾಡುತ್ತಾರೆ! ಅವರಿಗೆ ನರಕದ ದೇವತೆಗಳೆಂದು ಕರೆಯಲಾಗುತ್ತದೆ. ತಂದೆಯು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಆ ಮನುಷ್ಯರಂತೂ ನಮಗಾಗಿ ಇಲ್ಲಿಯೇ ಸ್ವರ್ಗವಿದೆ, ಈ ಸುಖವನ್ನು ಅನುಭವಿಸೋಣ ಎಂದು ಹೇಳುತ್ತಾರೆ. ನಾಳೆ ಏನಾಗುವುದೋ ಯಾರಿಗೆ ಗೊತ್ತು! ಇಂತಹ ವಿಚಾರದವರು ಅನೇಕರು ಬರುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸತ್ಯ-ಸತ್ಯವಾದ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಶರೀರ ನಿರ್ವಹಣೆಗಾಗಿ ಉದ್ಯೋಗ-ವ್ಯವಹಾರ ಮಾಡುತ್ತಾ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಕಾರ್ಯ ವ್ಯವಹಾರದಲ್ಲಿ ಬೇಸರ ಪಡಬಾರದು.
2. ಜ್ಞಾನ ಶೃಂಗಾರ ಮಾಡಿಕೊಂಡು ಸ್ವಯಂನ್ನು ಸ್ವರ್ಗದ ದೇವತೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ಈ ತಮೋಪ್ರಧಾನ ಪ್ರಪಂಚದಲ್ಲಿ ಈ ದೈಹಿಕ ಶೃಂಗಾರ ಮಾಡಬಾರದು. ಕಲಿಯುಗೀ ಫ್ಯಾಷನ್ ಬಿಟ್ಟು ಬಿಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಪತಂಗಗಳೇ ಗೀತೆಯನ್ನು ಕೇಳಿದಿರಿ. ನೀವು ಮಕ್ಕಳನ್ನು ಪತಂಗವೆಂದಾದರೂ ಹೇಳಿ, ಹೂವೆಂದಾದರೂ ಹೇಳಿ ಎರಡೂ ಒಂದೇ ಮಾತಾಗಿದೆ. ತಮ್ಮನ್ನು ತಾವು ಕೇಳಿಕೊಳ್ಳಿ - ನಾವು ಸತ್ಯವಾಗಿ ಬಲಿಹಾರಿಯಾಗುವಂತಹ ಪತಂಗಗಳಾಗಿದ್ದೇವೆಯೇ ಅಥವಾ ಸುತ್ತು ಹಾಕಿ ಹೋಗುವವರೇ? ಪರಂಜ್ಯೋತಿಯನ್ನು ಮರೆಯುವುದಿಲ್ಲ ತಾನೆ? ಮತ್ತೊಂದು ಎಲ್ಲರೂ ತಮ್ಮನ್ನು ತಾವು ಕೇಳಿಕೊಳ್ಳಿ - ನಾವು ಎಲ್ಲಿಯವರೆಗೆ ಹೂಗಳಾಗಿ ಜ್ಞಾನದ ಪರಿಮಳವನ್ನು ಹರಡುತ್ತಿದ್ದೇವೆ. ನಮ್ಮಂತೆಯೇ ಎಷ್ಟು ಹೂಗಳನ್ನು ಮಾಡಿದ್ದೇವೆ? ತಂದೆಯಂತೂ ಜ್ಞಾನಸಾಗರನಾಗಿದ್ದಾರೆ, ಅವರ ಸುವಾಸನೆಯಂತೂ ಎಷ್ಟೊಂದಿದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ಯಾರು ಒಳ್ಳೆಯ ಹೂಗಳು ಅಥವಾ ಪತಂಗಗಳಿರುತ್ತಾರೆಯೋ ಅವಶ್ಯವಾಗಿ ಅವರಿಂದ ಸುವಾಸನೆಯು ಬರುತ್ತದೆ. ಅವರು ಸದಾ ಖುಷಿಯಾಗಿರುತ್ತಾರೆ. ಬೇರೆಯವರನ್ನು ತಮ್ಮ ಸಮಾನ ಹೂಗಳನ್ನಾಗಿ ಅಥವಾ ಪತಂಗಗಳನ್ನಾಗಿ ಮಾಡುತ್ತಾರೆ. ಹೂಗಳನ್ನಾಗಿ ಮಾಡದಿದ್ದರೂ ಮೊಗ್ಗುಗಳನ್ನಾಗಿ ಮಾಡುತ್ತಾರೆ. ಯಾರು ಬದುಕಿದ್ದರೂ ಸತ್ತಂತಿರುತ್ತಾರೆಯೋ ಅವರೇ ಸಂಪೂರ್ಣ ಪತಂಗಗಳಾಗಿದ್ದಾರೆ. ಬಲಿಹಾರಿಯಾಗುತ್ತಾರೆ ಅಥವಾ ಈಶ್ವರನ ಮಕ್ಕಳಾಗುತ್ತಾರೆ. ಯಾವುದೇ ಸಾಹುಕಾರನು ಬಡವನ ಮಗುವನ್ನು ದತ್ತು ಮಾಡಿಕೊಳ್ಳುತ್ತಾರೆಂದರೆ ಆ ಮಗುವಿಗೆ ಸಾಹುಕಾರನ ಮನೆಗೆ ಬಂದ ನಂತರ ಅವರನ್ನೇ ತಂದೆ-ತಾಯಿಯಾಗಿ ನೆನಪು ಮಾಡುತ್ತಾರೆಯೇ ಹೊರತು ಬಡ ತಂದೆ-ತಾಯಿ ನೆನಪಿಗೆ ಬರುವುದಿಲ್ಲ. ನಮ್ಮ ತಂದೆ-ತಾಯಿ ಬಡವರಾಗಿದ್ದರೆಂದು ತಿಳಿದಿರುತ್ತದೆ ಆದರೆ ಸಾಹುಕಾರ ತಂದೆ-ತಾಯಿಯನ್ನು ನೆನಪು ಮಾಡುತ್ತಾರೆ ಏಕೆಂದರೆ ಅವರಿಂದ ಧನ ಸಿಗುತ್ತದೆ. ಸಾಧು-ಸನ್ಯಾಸಿಗಳೆಲ್ಲರೂ ಮುಕ್ತಿಧಾಮಕ್ಕೆ ಹೋಗುವ ಸಾಧನೆಯನ್ನೇ ಮಾಡುತ್ತಾರೆ. ಎಲ್ಲರೂ ಮುಕ್ತಿಗೆ ಹೋಗಲು ಪುರುಷಾರ್ಥ ಮಾಡುತ್ತಾರೆ ಆದರೆ ಮುಕ್ತಿಯ ಅರ್ಥವಂತೂ ತಿಳಿದಿಲ್ಲ. ಕೆಲವರು ಜ್ಯೋತಿಯು ಜ್ಯೋತಿಯಲ್ಲಿ ಲೀನವಾಯಿತೆಂದು ತಿಳಿಯುತ್ತಾರೆ. ಕೆಲವರು ನಿರ್ವಾಣಧಾಮಕ್ಕೆ ಹೋಯಿತೆಂದು ತಿಳಿಯುತ್ತಾರೆ. ನಿರ್ವಾಣಧಾಮಕ್ಕೆ ಹೋಗುವುದನ್ನು ಜ್ಯೋತಿಯಲ್ಲಿ ಲೀನವಾದರೆಂದು ಹೇಳಲು ಸಾಧ್ಯವಿಲ್ಲ. ನಾವು ದೂರದೇಶದ ನಿವಾಸಿಗಳಾಗಿದ್ದೇವೆಂದು ನೀವು ತಿಳಿದಿಲ್ಲ. ಈ ಕೊಳಕು ಪ್ರಪಂಚದಲ್ಲಿದ್ದು ಏನು ಮಾಡುವುದು? ಯಾರಾದರೂ ಸಿಕ್ಕಿದರೆಂದರೆ ಅವರಿಗೆ ಇದು ಮಾಡಿ-ಮಾಡಲ್ಪಟ್ಟಿರುವ ಡ್ರಾಮಾ ಆಗಿದೆ ಎಂದು ನೀವು ತಿಳಿಸಬೇಕು. ಸತ್ಯಯುಗದ ನಂತರ ತ್ರೇತಾಯುಗದ ಸಂಗಮವಾಗುತ್ತದೆ ಇದನ್ನೂ ಸಹ ತಿಳಿದಿದ್ದೀರಿ. ಈ ಯುಗವು ತಿರುಗುತ್ತಿರುತ್ತದೆ ಮತ್ತು ಕಲ್ಪವೂ ಸುತ್ತುತ್ತಿರುತ್ತದೆ. ಮನುಷ್ಯರು ತಿಳಿದಿರುವಂತೆ ತಂದೆಯು ಯುಗ-ಯುಗದಲ್ಲಿ ಬರುವುದಿಲ್ಲ. ಯಾವಾಗ ಎಲ್ಲರೂ ತಮೋಪ್ರಧಾನರಾಗಿ ಬಿಡುತ್ತಾರೆ, ಕಲಿಯುಗದ ಅಂತ್ಯವಾಗಿ ಬಿಡುತ್ತದೆ ಆಗ ಕಲ್ಪದ ಸಂಗಮದಲ್ಲಿ ನಾನು ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಯುಗವು ಪೂರ್ಣವಾದಂತೆಯೇ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಈಗಂತೂ ಪೂರ್ಣ ಗ್ರಹಣ ಹಿಡಿದು ಬಿಟ್ಟಿದೆ ಆಗ ನಾನು ಬರುತ್ತೇನೆ, ನಾನು ಯುಗ-ಯುಗದಲ್ಲಿ ಬರುವುದಿಲ್ಲ. ತಂದೆಯು ಕುಳಿತು ಇದನ್ನು ಪತಂಗಗಳಿಗೆ ತಿಳಿಸುತ್ತಾರೆ. ಪತಂಗಗಳಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರಂತೂ ಬಲಿಹಾರಿಯಾಗುತ್ತಾರೆ, ಕೆಲವರು ಸುತ್ತು ಹಾಕಿ ಹೊರಟು ಹೋಗುತ್ತಾರೆ. ಶ್ರೀಮತದಂತೆ ನೀವೇ ನಡೆಯಲು ಸಾಧ್ಯ. ಒಂದುವೇಳೆ ಎಲ್ಲಿಯಾದರೂ ಶ್ರೀಮತದಂತೆ ನಡೆಯದಿದ್ದರೆ ಮಾಯೆಯು ಸತಾಯಿಸುತ್ತಿರುತ್ತದೆ. ಶ್ರೀಮತದ್ದು ಬಹಳ ಗಾಯನವಿದೆ. ಶ್ರೀ ಮದ್ಭಗವದ್ಗೀತಾ ಎಂದೂ ಸಹ ಹೇಳುತ್ತಾರೆ, ನಂತರ ಕುಳಿತು ಶಾಸ್ತ್ರಗಳನ್ನು ಬರೆಯುತ್ತಾರೆ, ಆ ಸಮಯದಲ್ಲಿ ಬುದ್ಧಿಯು ರಜೋ ಸ್ಥಿತಿಯಲ್ಲಿರುವುದರ ಕಾರಣ ಕೃಷ್ಣನು ದ್ವಾಪರದಲ್ಲಿ ಬಂದನೆಂದು ಬರೆಯುತ್ತಾರೆ. ಯಾವಾಗ ದೇವಿ-ದೇವತಾ ಧರ್ಮವು ಪ್ರಾಯಃಲೋಪವಾಗುತ್ತದೆಯೋ ಆಗ ನಾನು ಬರುತ್ತೇನೆ, ಬಾಕಿ ಎಲ್ಲಾ ಧರ್ಮಗಳಿರುತ್ತವೆ. ದೇವತಾ ಧರ್ಮದ ಮನುಷ್ಯರು ಪ್ರಾಯಃಲೋಪವಾಗಿ ಬಿಡುತ್ತಾರೆ ಎಂದಲ್ಲ ಆದರೆ ತಾವೇ ದೇವಿ-ದೇವತಾ ಧರ್ಮದವರಾಗಿದ್ದೆವೆಂದು ಮರೆತು ಹೋಗಿದ್ದಾರೆ. ತಮ್ಮನ್ನು ಹಿಂದೂ ಧರ್ಮದವರೆಂದು ಹೇಳಿಕೊಳ್ಳುತ್ತಾರೆ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಯಾವಾಗ ಮರೆತು ಹೋಗುತ್ತಾರೆಯೋ ಆಗ ನಾನು ಬಂದು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಈ ಒಬ್ಬ ತಂದೆಯೇ ಬಂದು ದುಃಖಧಾಮದಿಂದ ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ನೀವೀಗ ಹೇಳುತ್ತೀರಿ - ನಾವು ನರಕದ ಮಾಲೀಕರಾಗಿದ್ದೇವೆ, ಪ್ರಪಂಚವಂತೂ ತಮೋಪ್ರಧಾನವಾಗಲೇಬೇಕು. ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ ಪವಿತ್ರರಾಗಿರುವವರ ಮುಂದೆ ಹೋಗಿ ನಮಸ್ಕಾರ ಮಾಡುತ್ತಾರೆ. ಈಗ ಶ್ರೀಮತದಂತೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ. ಜನ್ಮ-ಜನ್ಮಾಂತರ ಹೊರೆಯು ತಲೆಯ ಮೇಲಿದೆ ಇಲ್ಲದಿದ್ದರೆ ಅಯ್ಯೊ ಅಯ್ಯೊ ಎನ್ನಬೇಕಾಗುತ್ತದೆ. ಅವರಂತೂ ಆತ್ಮವು ನಿರ್ಲೇಪವೆಂದು ತಿಳಿದಿದ್ದಾರೆ ಆದರೆ ಆತ್ಮವು ಸುಖ-ದುಃಖ ಎರಡನ್ನೂ ಭೋಗಿಸುತ್ತದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ಗುರಿಯು ಬಹಳ ದೊಡ್ಡದಾಗಿದೆ ಎಂದು ತಂದೆಯು ಬಹಳ ತಿಳಿಸುತ್ತಾರೆ. ಈ ಸಮಯದಲ್ಲಿ ನೀವು ದುಃಖಿಗಳಾಗಿದ್ದೀರಿ ಆದ್ದರಿಂದ ಪುರುಷಾರ್ಥ ಮಾಡುತ್ತಿದ್ದೀರಿ. ಸತ್ಯಯುಗದಲ್ಲಿ ನಾವು ಬಹಳ ಸುಖಿಗಳಾಗಿರುತ್ತೇವೆ, ಅಲ್ಲಂತೂ ಮತ್ತೆ ದುಃಖಧಾಮಕ್ಕೆ ಹೋಗಬೇಕಾಗಿದೆ ಎಂದು ತಿಳಿದಿರುವುದಿಲ್ಲ. ನಾವು ಸುಖದಲ್ಲಿ ಹೇಗೆ ಬಂದೆವು? ಎಷ್ಟು ಜನ್ಮಗಳನ್ನು ಪಡೆದುಕೊಂಡೆವೆಂದು ತಿಳಿದಿರುವುದಿಲ್ಲ. ಈಗ ಯಾರು ಶ್ರೇಷ್ಠರಾಗಿದ್ದಾರೆ? ನೀವು ಈಶ್ವರನ ಮಕ್ಕಳಾಗಿರುವ ಕಾರಣ ಹೇಗೆ ಈಶ್ವರನು ಜ್ಞಾನ ಸಾಗರನಾಗಿದ್ದಾರೆಯೋ ಅವರಂತೆಯೇ ನೀವೂ ಜ್ಞಾನ ಸಾಗರನಾಗಿದ್ದೀರಿ. ಈಗ ನೀವು ಈಶ್ವರನ ಮಕ್ಕಳು ನಂಬರ್ವಾರ್ ಆಗಿದ್ದೀರಿ. ಕೆಲವರಂತೂ ಬಹಳ ಮಸ್ತಿಯಲ್ಲಿರುತ್ತಾರೆ, ನಾವು ತಂದೆಯ ಮತದಂತೆ ನಡೆಯುತ್ತಿದ್ದೇವೆಂದು ತಿಳಿದಿರುತ್ತಾರೆ. ಮತದಂತೆ ಎಷ್ಟು ನಡೆಯುತ್ತೀರೋ ಅಷ್ಟೇ ಶ್ರೇಷ್ಠರಾಗುತ್ತೀರಿ. ತಂದೆಯು ಎದುರಿನಲ್ಲಿ ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ನಿರಂತರ ನೆನಪು ಮಾಡಿ. ತಂದೆಯಂತೂ ಸದಾ ಸುಖದಾತನಾಗಿದ್ದಾರೆ, ತಂದೆಯೇ ದುಃಖವನ್ನೂ ಕೊಡುತ್ತಾರೆ ಎಂದಲ್ಲ. ತಂದೆಯೂ ಎಂದೂ ದುಃಖವನ್ನು ಕೊಡುವುದಿಲ್ಲ, ಮಕ್ಕಳು ತಪ್ಪು ನಡುವಳಿಕೆಗಳಿಂದ ದುಃಖ ಪಡೆಯುತ್ತಾರೆ. ತಂದೆಯು ದುಃಖವನ್ನು ಕೊಡಲು ಸಾಧ್ಯವಿಲ್ಲ. ಹೇ ಭಗವಂತ ಮಗುವನ್ನು ಕೊಡು, ಕುಲದ ವೃದ್ಧಿಯಾಗುತ್ತದೆ ಎಂದು ಭಗವಂತನನ್ನು ಕೇಳುತ್ತಾರೆ, ಮಗುವನ್ನು ಬಹಳ ಪ್ರೀತಿ ಮಾಡುತ್ತಾರೆ ಬಾಕಿ ದುಃಖವಂತೂ ತಮ್ಮ ಕರ್ಮದನುಸಾರವಾಗಿಯೇ ಪಡೆಯುತ್ತಾರೆ. ಈಗ ನೀವು ಮಕ್ಕಳನ್ನು ಬಹಳ ಸುಖಿಯನ್ನಾಗಿ ಮಾಡುತ್ತಾರೆ. ಶ್ರೀಮತದಂತೆ ನಡೆಯಿರಿ, ಆಸುರೀ ಮತದಂತೆ ನಡೆಯುವುದರಿಂದ ದುಃಖವನ್ನು ಪಡೆಯುತ್ತೀರಿ. ಮಕ್ಕಳೇ, ತಂದೆ ಅಥವಾ ಶಿಕ್ಷಕ ಅಥವಾ ದೊಡ್ಡವರ ಆಜ್ಞೆಯನುಸಾರ ನಡೆಯದೇ ಇರುವುದರಿಂದ ದುಃಖಿಗಳಾಗುತ್ತಾರೆ, ಸ್ವತಃ ದುಃಖದಾಯಿಗಳಾಗುತ್ತಾರೆ. ಮಾಯೆಗೆ ವಶರಾಗಿ ಬಿಡುತ್ತಾರೆ. ಈಶ್ವರನ ಮತವು ನಿಮಗೆ ಈಗ ಸಿಗುತ್ತದೆ. ಈಶ್ವರನ ಮತದ ಫಲಿತಾಂಶವಾಗಿ 21 ಜನ್ಮಗಳು ನಡೆಯುತ್ತದೆ, ನಂತರ ಅರ್ಧ ಕಲ್ಪ ಮಾಯೆಯ ಮತದಂತೆ ನಡೆಯುತ್ತದೆ. ಈಶ್ವರನು ಒಂದೇ ಬಾರಿ ಬಂದು ಮತವನ್ನು ಕೊಡುತ್ತಾರೆ. ಮಾಯೆಯಂತೂ ಅರ್ಧ ಕಲ್ಪದಿಂದ ಮತವನ್ನು ಕೊಡುತ್ತಲೇ ಇರುತ್ತದೆ. ತಂದೆಯಂತೂ ಒಂದೇ ಬಾರಿ ಮತವನ್ನು ಕೊಡುತ್ತಾರೆ, ಮಾಯೆಯ ಮತದಂತೆ ನಡೆಯುವುದರಿಂದ 100% ದುರ್ಭಾಗ್ಯಶಾಲಿ ಆಗಿ ಬಿಡುತ್ತೀರಿ. ಯಾರು ಒಳ್ಳೊಳ್ಳೆಯ ಮಕ್ಕಳಿದ್ದಾರೆಯೋ ಅವರು ಸದಾ ಖುಷಿಯ ಮಸ್ತಿಯಲ್ಲಿರುತ್ತಾರೆ, ನಂಬರ್ವಾರಂತೂ ಇದ್ದಾರಲ್ಲವೆ. ಪತಂಗಗಳು ಕೆಲವರಂತೂ ತಂದೆಯ ಮಕ್ಕಳಾಗಿ ಶ್ರೀಮತದಂತೆ ನಡೆಯುತ್ತಾರೆ, ಬಡವರೇ ತಮ್ಮ ಲೆಕ್ಕವನ್ನು ಬರೆಯುತ್ತಾರೆ. ಸಾಹುಕಾರರಿಗೆ ಇಲ್ಲಿ ತಮ್ಮ ಹಣವನ್ನು ಎಲ್ಲಿ ತೆಗೆದುಕೊಂಡು ಬಿಡುತ್ತಾರೆಂದು ಅವರಿಗೆ ಭಯವಿರುತ್ತದೆ, ಸಾಹುಕಾರರಿಗೆ ಇದು ಬಹಳ ಕಷ್ಟ. ನಾನಂತೂ ಬಡವರ ಬಂಧುವಾಗಿದ್ದೇನೆ ಎಂದು ತಂದೆಯು ಹೇಳುತ್ತಾರೆ. ದಾನವನ್ನೂ ಸಹ ಯಾವಾಗಲೂ ಬಡವರಿಗೇ ಕೊಡಲಾಗುತ್ತದೆ. ಒಂದು ಹಿಡಿ ಅಕ್ಕಿಯನ್ನು ಕೊಟ್ಟು ಅರಮನೆಯನ್ನು ಪಡೆದನೆಂದು ಸುಧಾಮನ ಮಾತಿದೆಯಲ್ಲವೆ. ನೀವೆಲ್ಲಾ ಬಡವರು ತಿಳಿದುಕೊಳ್ಳಿ, ಯಾರ ಬಳಿಯಾದರೂ 25-50 ರೂಗಳಿವೆ, ಅದರಿಂದ 20-25 ಪೈಸೆ ಕೊಡುತ್ತಾರೆ, ಸಾಹುಕಾರನು 50 ಸಾವಿರ ರೂಗಳನ್ನು ಕೊಡುತ್ತಾನೆಂದರೆ ಅದಕ್ಕೆ ಸಮಾನವಾಗಿ ಬಿಡುತ್ತದೆ ಆದ್ದರಿಂದ ಬಡವರ ಬಂಧುವೆಂದು ಗಾಯನ ಮಾಡಲಾಗುತ್ತದೆ. ನಮಗೆ ಸಮಯವಿಲ್ಲ ಎಂದು ಸಾಹುಕಾರರು ಹೇಳುತ್ತಾರೆ ಏಕೆಂದರೆ ಪೂರ್ಣ ನಿಶ್ಚಯವಿರುವುದಿಲ್ಲ, ನೀವಂತೂ ಬಡವರಾಗಿದ್ದೀರಿ, ಬಡವರಿಗೆ ಧನ ಸಿಗುವುದರಿಂದ ಬಹಳ ಖುಷಿಯಾಗುತ್ತದೆ. ಇಲ್ಲಿಯ ಬಡವರು ಅಲ್ಲಿ ಸಾಹುಕಾರರಾಗಿ ಬಿಡುತ್ತಾರೆ ಮತ್ತು ಇಲ್ಲಿಯ ಸಾಹುಕಾರರು ಅಲ್ಲಿ ಬಡವರಾಗಿ ಬಿಡುತ್ತಾರೆಂದು ತಂದೆಯು ತಿಳಿಸುತ್ತಾರೆ.
ನಾವು ಯಜ್ಞದ ಬಗ್ಗೆ ಗಮನ ಕೊಡುವುದೋ ಅಥವಾ ಕುಟುಂಬದ ಬಗ್ಗೆ ಗಮನ ಕೊಡುವುದೋ ಎಂದು ಕೆಲವರು ಕೇಳುತ್ತಾರೆ. ನೀವು ನಿಮ್ಮ ಕುಟುಂಬದ ಬಗ್ಗೆ ಚೆನ್ನಾಗಿ ಸಂಭಾಲನೆ ಮಾಡಿ ಎಂದು ಹೇಳುತ್ತಾರೆ. ಒಳ್ಳೆಯದು - ಈ ಸಮಯದಲ್ಲಿ ನೀವು ಬಡವರಾಗಿದ್ದೀರಿ. ಸಾಹುಕಾರರಾಗಿದ್ದರೆ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಸನ್ಯಾಸಿಗಳು ಈ ರೀತಿ ಹೇಳುವುದಿಲ್ಲ. ಅವರಂತೂ ಹಣವನ್ನು ತೆಗೆದುಕೊಂಡು ತಮ್ಮ ಆಸ್ತಿಯನ್ನು ಮಾಡಿಕೊಳ್ಳುತ್ತಾರೆ. ಶಿವ ತಂದೆಯು ಮಾಡಲು ಸಾಧ್ಯವೇ! ಇಲ್ಲಿ ಮನೆ ಇತ್ಯಾದಿಗಳನ್ನು ನೀವೆಲ್ಲಾ ಮಕ್ಕಳಿಗಾಗಿ ಮಾಡಿದ್ದಾರೆ. ಇದು ಯಾರದೇ ಆಸ್ತಿಯಲ್ಲ, ಇದಂತೂ ಅಲ್ಪಕಾಲಕ್ಕಾಗಿ ಇದೆ ಏಕೆಂದರೆ ಅಂತ್ಯ ಕಾಲದಲ್ಲಿ ಮಕ್ಕಳು ಬಂದು ಇಲ್ಲಿರಬೇಕಾಗುತ್ತದೆ, ನಮ್ಮ ನೆನಪಾರ್ಥವೂ ಸಹ ಇಲ್ಲಿಯೇ ಇದೆ ಅಂದಮೇಲೆ ಕಡೆಯಲ್ಲಿ ಎಲ್ಲರೂ ಬಂದು ಇಲ್ಲಿ ವಿಶ್ರಾಂತಿಯನ್ನು ಪಡೆಯುತ್ತಾರೆ. ತಂದೆಯ ಬಳಿ ಯಾರು ಯೋಗಯುಕ್ತರಾಗಿರುತ್ತಾರೆಯೋ ಅವರೇ ಓಡಿ ಹೋಗುತ್ತಾರೆ. ಅವರಿಗೇ ತಂದೆಯ ಸಹಾಯವೂ ಸಿಗುತ್ತದೆ. ತಂದೆಯ ಸಹಾಯವು ಬಹಳ ಸಿಗುತ್ತದೆ. ನೀವೆಲ್ಲರೂ ಇಲ್ಲಿ ಕುಳಿತು ವಿನಾಶ ನೋಡಬೇಕಾಗಿದೆ. ಮಕ್ಕಳಾದ ನಿಮಗೆ ಮನೋರಂಜನೆಯನ್ನು ಮೊದಲು ಹೇಗೆ ಕೊಟ್ಟರೋ ಹಾಗೆಯೇ ಅಂತ್ಯದಲ್ಲಿಯೂ ಸಹ ನಿಮ್ಮನ್ನು ಮನರಂಜಿಸಲು ಪ್ರಾರಂಭಿಸುತ್ತಾರೆ, ಬಹಳ ಪ್ರೀತಿ ಮಾಡುತ್ತಾರೆ. ಹೇಗೆ ವೈಕುಂಠದಲ್ಲಿ ಕುಳಿತಿರುವಂತೆ ಅದು ಸಮೀಪ ಬರುತ್ತಾ ಹೋಗುತ್ತದೆ. ನಾವೀಗ ಯಾತ್ರೆಯಲ್ಲಿದ್ದೇವೆಂದು ನೀವು ತಿಳಿದಿದ್ದೀರಿ. ಸ್ವಲ್ಪ ಸಮಯದ ನಂತರ ವಿನಾಶವಾಗುತ್ತದೆ, ನೀವು ಬಹಳ ಖುಷಿಯಾಗಿ ಬಿಡುತ್ತೀರಿ. ನಾವು ಹೋಗಿ ಈ ರಾಜಕುಮಾರರಾಗುತ್ತೇವೆ ಅಷ್ಟೇ. ವಿಧ ವಿಧವಾದ ಹೂಗಳಿವೆ. ಪ್ರತಿಯೊಬ್ಬರೂ ನಾನೆಷ್ಟು ಜ್ಞಾನದ ಸುವಾಸನೆಯನ್ನು ಕೊಡುತ್ತೇವೆ, ಯಾರಿಗೆ ಜ್ಞಾನ-ಯೋಗದ ಶಿಕ್ಷಣವನ್ನು ಕೊಡುತ್ತೇನೆ ಎಂದು ತಿಳಿದುಕೊಳ್ಳುತ್ತೇವೆ. ಯಾರು ಜ್ಞಾನವನ್ನು ತಿಳಿಸುತ್ತಾರೆಯೋ ಅವರು ಪ್ರಫುಲ್ಲಿತರಾಗಿರುತ್ತಾರೆ. ಇವರು ಯಾವ ಸ್ಥಿತಿಯಲ್ಲಿರುತ್ತಾರೆಂದು ತಂದೆಯು ತಿಳಿದಿರುತ್ತಾರೆ. ಇವರ ಯಾವ ಸ್ಥಿತಿಯವರೆಗೆ ಗ್ಯಾಲಪ್ ಮಾಡುತ್ತಾರೆಂದು ತಿಳಿದಿರುತ್ತಾರೆ. ಯಾರು ಪತಂಗಗಳಾಗಿರುತ್ತಾರೆಯೋ ಅವರೇ ಗ್ಯಾಲಪ್ ಮಾಡುತ್ತಾರೆ. ಮಾಯೆಯ ಬಿರುಗಾಳಿಗಳಂತೂ ಬಹಳ ಬರುತ್ತವೆ ಅದರೆ ಅವುಗಳಿಂದ ಸುರಕ್ಷಿತರಾಗಿರಿ ಎಂದು ತಂದೆಯು ತಿಳಿಸುತ್ತಾರೆ. ಈ ರಾಜಯೋಗವನ್ನು ಕಲಿಸಲು ಪರಮಪಿತ ಪರಮಾತ್ಮ ಬರುತ್ತಾರೆ, ಪರಮಾತ್ಮನು ಬಂದು ಆತ್ಮಗಳಿಗೆ ತಿಳಿಸುತ್ತಾರೆ. ಆತ್ಮದ ಜ್ಞಾನ - ನಾನಾತ್ಮ, ನನ್ನ ಈ ಸಹೋದರ ಆತ್ಮನಿಗೆ ತಿಳಿಸುತ್ತೇನೆ. ಹೇಗೆ ಪರಮಾತ್ಮ ತಂದೆಯು ಆತ್ಮ ಮಕ್ಕಳಿಗೆ ತಿಳಿಸುತ್ತಾರೆಯೋ ಹಾಗೆಯೇ, ನಾವೂ ಸಹ ಆತ್ಮರಾಗಿದ್ದೇವೆ. ತಂದೆಯು ನಮ್ಮೆಲ್ಲರಿಗೂ ತಿಳಿಸುತ್ತಾರೆ, ನಂತರ ನಾವು ಈ ಆತ್ಮಗಳಿಗೆ ತಿಳಿಸುತ್ತೇವೆ. ಆದರೆ ಈ ಆತ್ಮತನದ ನಿಶ್ಚಯವಿಲ್ಲದ ಕಾರಣ ತಮ್ಮನ್ನು ತಾವು ಮನುಷ್ಯನೆಂದು ತಿಳಿದುಕೊಂಡಿದ್ದಾರೆ. ನಾನು ಪರಮ ಆತ್ಮನು ನೀವು ಆತ್ಮಗಳೊಂದಿಗೆ ಮಾತನಾಡುತ್ತೇನೆ, ನೀವಾತ್ಮಗಳೂ ಕೇಳುತ್ತೀರಿ. ನೀವು ದೇಹೀ-ಅಭಿಮಾನಿಗಳಾಗಿ ಯಾರಿಗೇ ತಿಳಿಸುತ್ತೀರೆಂದರೆ ತಕ್ಷಣ ಬಾಣ ನಾಟುವುದು. ಒಂದುವೇಳೆ ದೇಹೀ-ಅಭಿಮಾನಿಯಾಗಿರದಿದ್ದರೆ ಧಾರಣೆಯಾಗಲು ಸಾಧ್ಯವಿಲ್ಲ, ಇದು ಬಹಳ ದೊಡ್ಡ ಗುರಿಯಾಗಿದೆ. ನಾನಾತ್ಮನು ಈ ಅಂಗಾಂಗಳಿಂದ ಕೇಳುತ್ತಿದ್ದೇನೆಂದು ಬುದ್ಧಿಯಲ್ಲಿರಬೇಕಾಗಿದೆ. ನಾವಾತ್ಮಗಳೊಂದಿಗೆ ತಂದೆಯು ಮಾತನಾಡುತ್ತಿದ್ದಾರೆ. ತಂದೆಯ ಆದೇಶವಾಗಿದೆ – ಅಶರೀರಿ ಭವ. ದೇಹಾಭಿಮಾನವನ್ನು ಬಿಟ್ಟು ನನ್ನನ್ನು ನೆನಪು ಮಾಡಿ ಎಂಬುದು ಬುದ್ಧಿಯಲ್ಲಿರಬೇಕಾಗಿದೆ. ನಾನು ಆತ್ಮಗಳೊಂದಿಗೆ ಮಾತನಾಡುತ್ತೇನೆ ಹೊರತು ಶರೀರದೊಂದಿಗಲ್ಲ. ಭಲೆ ಸ್ತ್ರೀ ಇರಬಹುದು ಆದರೆ ಅವರ ಆತ್ಮದೊಂದಿಗೆ ಮಾತನಾಡುತ್ತೇನೆ. ನೀವು ಬಾಬಾರವರ ಮಗುವಾಗಿದ್ದೇವೆಂದು ಮಕ್ಕಳು ತಿಳಿದಿದ್ದೀರಿ. ಆದರೆ ಇದರಲ್ಲಿ ಬಹಳ ಸೂಕ್ಷ್ಮ ಬುದ್ಧಿಯು ನಡೆಯುತ್ತಿರುತ್ತದೆ. ನಾನಾತ್ಮ ಇವರ ಆತ್ಮಕ್ಕೆ ತಿಳಿಸುತ್ತಿದ್ದೇನೆ. ಇವರು ನನ್ನ ಸಹೋದರನಾಗಿದ್ದಾರೆ, ಇವರಿಗೆ ನಾನು ಮಾರ್ಗವನ್ನು ತೋರಿಸಬೇಕಾಗಿದೆ. ಆತ್ಮವೇ ತಿಳಿದುಕೊಳ್ಳುತ್ತಿದೆ ಎಂದು ತಿಳಿದುಕೊಂಡಾಗ ಬಾಣವು ನಾಟುವುದು, ದೇಹವನ್ನು ನೋಡಿ ಹೇಳುತ್ತೀರೆಂದರೆ ಆತ್ಮವು ಕೇಳುವುದಿಲ್ಲ. ಮೊದಲು ಈ ಎಚ್ಚರಿಕೆಯನ್ನು ತಮಗೆ ತಾವು ಕೊಟ್ಟುಕೊಳ್ಳಿ - ಆತ್ಮದೊಂದಿಗೆ ಮಾತನಾಡುತ್ತಿದ್ದೇನೆ. ಆತ್ಮವಂತೂ ಪುರುಷನೂ ಅಲ್ಲ, ಸ್ತ್ರೀಯೂ ಅಲ್ಲ, ಆತ್ಮವಂತೂ ವಿಭಿನ್ನವಾಗಿದೆ. ಪುರುಷ-ಸ್ತ್ರೀ ಎಂದು ಶರೀರದಿಂದ ಹೆಸರುಗಳು ಬರುತ್ತವೆ, ಬ್ರಹ್ಮಾ-ಸರಸ್ವತಿಯನ್ನು ಪುರುಷ-ಸ್ತ್ರೀ ಎಂದು ಹೇಳುತ್ತಾರಲ್ಲವೆ. ಶಿವ ತಂದೆಯನ್ನು ಪುರುಷನೆಂದೂ ಹೇಳುವುದಿಲ್ಲ, ಸ್ತ್ರೀಯೆಂದೂ ಹೇಳುವುದಿಲ್ಲ ಅಂದಮೇಲೆ ತಂದೆಯು ಆತ್ಮಗಳಿಗೆ ತಿಳಿಸುತ್ತಾರೆ, ಇದು ಬಹಳ ದೊಡ್ಡ ಗುರಿಯಾಗಿದೆ. ಪಾಯಿಂಟ್ ಬಹಳ ಕಠಿಣವಾಗಿದೆ. ಆತ್ಮಕ್ಕೆ ಇಂಜೆಕ್ಷನ್ ಬಿದ್ದಾಗ ದೇಹಾಭಿಮಾನವು ಹೊರಟು ಹೋಗುತ್ತದೆ, ಇಲ್ಲದಿದ್ದರೆ ಸುವಾಸನೆಯೂ ಬರುವುದಿಲ್ಲ, ಶಕ್ತಿಯೂ ಇರುವುದಿಲ್ಲ. ಮಾತಂತೂ ಬಹಳ ಚಿಕ್ಕದಾಗಿದೆ, ನಾವಾತ್ಮರೊಂದಿಗೆ ಮಾತನಾಡುತ್ತಿದ್ದೇವೆ. ನೀವೀಗ ಹಿಂತಿರುಗಿ ಹೋಗಬೇಕಾಗಿದೆ ಆದ್ದರಿಂದ ದೇಹೀ-ಅಭಿಮಾನಿಯಾಗಿ ಎಂದು ತಂದೆಯು ಹೇಳುತ್ತಾರೆ. ಮನ್ಮನಾಭವ ನಂತರ ಸ್ವಾಭಾವಿಕವಾಗಿ ಮಧ್ಯಾಜೀ ಭವವೂ ಬಂದು ಬಿಡುತ್ತದೆ, ಈಗ ಬಹಳ ದೊಡ್ಡ ಸೂಕ್ಷ್ಮ ಬುದ್ಧಿ ಸಿಗುತ್ತದೆ. ಮುಂಜಾನೆಯೇ ಎದ್ದು ಕುಳಿತು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಇಡೀ ದಿನದಲ್ಲಿ ಸರ್ವೀಸ್ ಮಾಡಬೇಕು ಏಕೆಂದರೆ ನೀವು ಕರ್ಮಯೋಗಿಗಳಾಗಿದ್ದೀರಿ. ನಿದ್ರೆಯನ್ನೂ ಗೆಲ್ಲುವವರಾಗಿದ್ದೀರೆಂದು ಬರೆಯುತ್ತಾರೆ. ರಾತ್ರಿಯಲ್ಲಿ ಎಚ್ಚರವಾಗಿದ್ದು ಸಂಪಾದನೆ ಮಾಡಿಕೊಳ್ಳಿ, ದಿನದಲ್ಲಂತೂ ಮಾಯೆಯ ಬಹಳ ಪ್ರಭಾವವಿರುತ್ತದೆ. ಅಮೃತವೇಳೆಯ ವಾಯುಮಂಡಲವು ಬಹಳ ಚೆನ್ನಾಗಿರುತ್ತದೆ, ಇಂತಹ ಸಮಯದಲ್ಲಿ ಎದ್ದು ಕುಳಿತು ವಿಚಾರ ಸಾಗರ ಮಂಥನ ಮಾಡುತ್ತೇವೆಂದು ತಂದೆಗೆ ಯಾರೂ ಬರೆಯುವುದಿಲ್ಲ, ಇದರಲ್ಲಿ ಪರಿಶ್ರಮವಿದೆ. ನೀವು ವಿಶ್ವದ ಮಾಲೀಕರಾಗುತ್ತೀರಿ, ಇಲ್ಲಂತೂ ಹದ್ದಿನ ಮಾಲೀಕರಾಗಿದ್ದೀರಿ. ನೀರಿನ ಪರಿಮಿತಿಯ ಬಗ್ಗೆಯೂ ಎಷ್ಟೊಂದು ಜಗಳ ನಡೆಯುತ್ತದೆ, ಶತೃತ್ವ ಬಂದು ಬಿಟ್ಟಿದೆ, ಒಬ್ಬರನ್ನೊಬ್ಬರು ಸಹೋದರರೆಂದು ತಿಳಿದಿಲ್ಲ, ಕೇವಲ ನಾವೆಲ್ಲರೂ ಒಂದು ಎಂದು ಹೇಳುತ್ತಾರೆ. ಒಂದಾಗಲು ಸಾಧ್ಯವೇ ಇಲ್ಲ, ಅನೇಕ ಆತ್ಮಗಳಿದ್ದಾರೆ ಎಲ್ಲರದೂ ಅವರವರ ಪಾತ್ರಗಳಿವೆ, ನೀವು ಇಲ್ಲಿ ಕುಳಿತಿದ್ದೀರಿ. ಕಲ್ಪದ ಹಿಂದೆಯೂ ಸಹ ಹೀಗೆ ಕುಳಿತಿದ್ದಿರಿ, ಎಲೆಯು ಅಲುಗಾಡಿತೆಂದರೂ ಸಹ ಅದು ಡ್ರಾಮಾನುಸಾರ. ಒಂದೊಂದು ಎಲೆಯನ್ನೂ ಪರಮಾತ್ಮನು ಅಲುಗಾಡಿಸುತ್ತಾನೆ ಎಂದಲ್ಲ. ಇಂತಹ ಮಾತುಗಳನ್ನು ತಿಳಿದುಕೊಂಡು ನಂತರ ತಿಳಿಸಬೇಕಾಗಿದೆ. ಪ್ರತಿಯೊಬ್ಬರೂ ನಾವು ಪತಂಗಗಳಾಗಿದ್ದೇವೆಯೇ ಅಥವಾ ಇಲ್ಲವೆ ಎಂದು ತಿಳಿದುಕೊಳ್ಳಬಹುದು. ನಾವು ತಂದೆಯ ಮತದಂತೆಯೇ ನಡೆಯುತ್ತಿರುತ್ತೇವೆ, ವ್ಯರ್ಥ ಮಾತುಗಳನ್ನು ಮಾತನಾಡುವುದಿಲ್ಲ. ನಮ್ಮ ಹಣವಂತೂ ಪಾಪದ ಕಡೆ ಹೋಗುತ್ತಿಲ್ಲ ಅಷ್ಟೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂ ತಮ್ಮನ್ನು ಆತ್ಮನೆಂದು ತಿಳಿದು ಆತ್ಮದೊಂದಿಗೆ ಮಾತನಾಡಬೇಕಾಗಿದೆ. ದೇಹೀ-ಅಭಿಮಾನಿಯಾಗಿ ಹೇಳುವ-ಕೇಳುವುದರಿಂದ ಚೆನ್ನಾಗಿ ಧಾರಣೆಯಾಗುತ್ತದೆ.
2. ನಿದ್ರೆಯನ್ನು ಗೆಲ್ಲುವಂತಹವರಾಗಿ ರಾತ್ರಿಯಲ್ಲಿ ಎಚ್ಚರವಾಗಿದ್ದು ಸಂಪಾದನೆ ಮಾಡಿಕೊಳ್ಳಬೇಕಾಗಿದೆ. ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಯಾವುದೇ ವ್ಯರ್ಥಮಾತುಗಳಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು.
ಸಂಗಮಯುಗದಲ್ಲಿ ನಂಬರ್ವನ್ ಪೂಜ್ಯರಾಗುವ ಅಲೌಕಿಕ ವಿಧಿ
ಇಂದು ಅನಾದಿ ತಂದೆ ಮತ್ತು ಆದಿ ತಂದೆಯು ಅನಾದಿ ಸಾಲಿಗ್ರಾಮ ಮಕ್ಕಳನ್ನು ಮತ್ತು ಆದಿ ಬ್ರಾಹ್ಮಣ ಮಕ್ಕಳನ್ನು ಡಬಲ್ ರೂಪದಿಂದ ನೋಡುತ್ತಿದ್ದಾರೆ. ಸಾಲಿಗ್ರಾಮ ರೂಪದಲ್ಲಿಯೂ ಪರಮ ಪೂಜ್ಯರಾಗಿದ್ದೀರಿ ಮತ್ತು ಬ್ರಾಹ್ಮಣ ಸೋ ದೇವತಾ ಸ್ವರೂಪದಲ್ಲಿಯೂ ಗಾಯನ ಹಾಗೂ ಪೂಜೆಗೆ ಯೋಗ್ಯರಾಗಿದ್ದೀರಿ. ಆದಿ ಮತ್ತು ಅನಾದಿ ಇಬ್ಬರೂ ತಂದೆಯರು ನೀವು ಪೂಜ್ಯಾತ್ಮಗಳನ್ನು ಎರಡೂ ರೂಪದಿಂದ ನೋಡಿ ಹರ್ಷಿತರಾಗುತ್ತಿದ್ದೇವೆ. ಅನಾದಿ ತಂದೆಯು ಆದಿ ಪಿತನ ಸಹಿತ ಅರ್ಥಾತ್ ಬ್ರಹ್ಮಾ ತಂದೆ ಮತ್ತು ಬ್ರಾಹ್ಮಣ ಮಕ್ಕಳನ್ನು ತನಗಿಂತಲೂ ಹೆಚ್ಚಾಗಿ ಡಬಲ್ ರೂಪದಲ್ಲಿ ಪೂಜ್ಯರನ್ನಾಗಿ ಮಾಡಿದ್ದಾರೆ. ಅನಾದಿ ತಂದೆಯ ಪೂಜೆಯು ಕೇವಲ ಒಂದು ನಿರಾಕಾರನ ರೂಪದಲ್ಲಿ ಆಗುತ್ತದೆ ಆದರೆ ಬ್ರಹ್ಮಾ ಮತ್ತು ಬ್ರಾಹ್ಮಣ ಮಕ್ಕಳ ಪೂಜೆಯು ನಿರಾಕಾರಿ-ಸಾಕಾರಿ ಎರಡೂ ರೂಪಗಳಲ್ಲಿ ನಡೆಯುತ್ತದೆ ಅಂದಾಗ ತಂದೆಯು ಮಕ್ಕಳನ್ನು ತನಗಿಂತಲೂ ಹೆಚ್ಚು ಡಬಲ್ ರೂಪದಿಂದ ಮಹಾನರೆಂದು ತಿಳಿಯುತ್ತಾರೆ.
ಇಂದು ಬಾಪ್ದಾದಾ ಮಕ್ಕಳ ವಿಶೇಷತೆಗಳನ್ನು ನೋಡುತ್ತಿದ್ದೆವು, ಪ್ರತಿಯೊಬ್ಬ ಮಗುವಿನ ವಿಶೇಷತೆಯು ತನ್ನತನ್ನದೇ ಆಗಿದೆ. ಕೆಲವರು ತಂದೆಯ ಹಾಗೂ ಸರ್ವ ಬ್ರಾಹ್ಮಣ ಆತ್ಮಗಳ ವಿಶೇಷತೆಗಳನ್ನು ಅರಿತು ಸ್ವಯಂನಲ್ಲಿ ಸರ್ವ ವಿಶೇಷತೆಗಳನ್ನು ಧಾರಣೆ ಮಾಡಿಕೊಂಡು ಶ್ರೇಷ್ಠ ಅರ್ಥಾತ್ ವಿಶೇಷ ಆತ್ಮಗಳಾಗಿ ಬಿಟ್ಟಿದ್ದಾರೆ. ಇನ್ನೂ ಕೆಲವರು ಕೇವಲ ವಿಶೇಷತೆಗಳನ್ನು ಅರಿತು ಮತ್ತು ನೋಡಿ ಖುಷಿಯಾಗುತ್ತಾರೆ ಆದರೆ ತಮ್ಮಲ್ಲಿ ಸರ್ವ ವಿಶೇಷತೆಗಳನ್ನು ಧಾರಣೆ ಮಾಡಿಕೊಳ್ಳುವ ಸಾಹಸವಿಲ್ಲ. ಮತ್ತೆ ಕೆಲವರು ಪ್ರತೀ ಆತ್ಮನಲ್ಲಿ ಅಥವಾ ಬ್ರಾಹ್ಮಣ ಪರಿವಾರದಲ್ಲಿ ವಿಶೇಷತೆಗಳಿದ್ದರೂ ಸಹ ಅವನ್ನು ವಿಶೇಷತೆಯ ಮಹತ್ವಿಕೆಯಿಂದ ನೋಡುವುದಿಲ್ಲ. ಒಬ್ಬರು ಇನ್ನೊಬ್ಬರನ್ನು ಸಾಧಾರಣ ರೂಪದಿಂದ ನೋಡುತ್ತಾರೆ. ವಿಶೇಷತೆಯನ್ನು ನೋಡುವ ಹಾಗೂ ಅರಿತುಕೊಳ್ಳುವ ಅಭ್ಯಾಸವಿಲ್ಲ ಮತ್ತು ಗುಣ ಗ್ರಾಹಕ ಬುದ್ಧಿ ಅರ್ಥಾತ್ ಗುಣ ಗ್ರಹಣ ಮಾಡುವ ಬುದ್ಧಿಯಿಲ್ಲದಿರುವ ಕಾರಣ ವಿಶೇಷತೆ ಅರ್ಥಾತ್ ಗುಣವನ್ನು ಅರಿತುಕೊಳ್ಳುವುದಿಲ್ಲ. ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಲ್ಲಿ ಯಾವುದಾದರೊಂದು ವಿಶೇಷತೆಯು ಅವಶ್ಯವಾಗಿ ಅಡಕವಾಗಿದೆ. ಭಲೆ ಅವರು 16000 ದ ಕೊನೆಯ ಮಣಿಯೇ ಆಗಿರಬಹುದು ಆದರೆ ಅವರಲ್ಲಿಯೂ ಒಂದಲ್ಲ ಒಂದು ವಿಶೇಷತೆಯಿದೆ ಆದ್ದರಿಂದಲೇ ತಂದೆಯ ದೃಷ್ಟಿಯು ಆ ಆತ್ಮನ ಮೇಲೆ ಬೀಳುತ್ತದೆ. ಭಗವಂತನ ದೃಷ್ಟಿಯು ಬಿದ್ದಿತ್ತು ಅಥವಾ ಭಗವಂತನೇ ತನ್ನವರನ್ನಾಗಿ ಮಾಡಿಕೊಂಡರೆಂದರೆ ಅವಶ್ಯವಾಗಿ ವಿಶೇಷತೆಯು ಸಮಾವೇಶವಾಗಿದೆಯಲ್ಲವೆ. ಆದ್ದರಿಂದಲೇ ಆ ಆತ್ಮನು ಬ್ರಾಹ್ಮಣರ ಪಟ್ಟಿಯಲ್ಲಿ ಬಂದು ಬಿಟ್ಟಿದ್ದಾರೆ ಆದರೆ ಸದಾ ಪ್ರತಿಯೊಬ್ಬರ ವಿಶೇಷತೆಯನ್ನು ನೋಡುವ ಮತ್ತು ಅರಿತುಕೊಳ್ಳುವುದರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ಬಾಪ್ದಾದಾರವರಿಗೆ ಗೊತ್ತಿದೆ - ಎಂತಹದ್ದೇ ಆತ್ಮನು ಭಲೆ ಜ್ಞಾನದ ಧಾರಣೆ ಹಾಗೂ ಸೇವೆ ಮತ್ತು ನೆನಪಿನಲ್ಲಿ ನಿರ್ಬಲರಾಗಿರಬಹುದು ಆದರೆ ತಂದೆಯನ್ನು ಅರಿತುಕೊಳ್ಳುವ, ತಂದೆಯ ಮಕ್ಕಳಾಗುವ ವಿಶಾಲ ಬುದ್ಧಿ, ತಂದೆಯನ್ನು ನೋಡುವ ದಿವ್ಯ ದೃಷ್ಟಿ - ಈ ವಿಶೇಷತೆಯಂತೂ ಇದೆಯಲ್ಲವೆ. ಯಾವ ತಂದೆಯನ್ನು ಈಗಿನ ಪ್ರಸಿದ್ಧ ವಿದ್ವಾಂಸರೂ ಸಹ ಅರಿತುಕೊಳ್ಳಲು ಆಗಲಿಲ್ಲ, ಗುರುತಿಸಲು ಆಗಲಿಲ್ಲ ಆದರೆ ಈ ಆತ್ಮಗಳು ಅರಿತುಕೊಂಡರಲ್ಲವೆ! ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರು - ಈ ಪಟ್ಟಿಯಲ್ಲಿ ಬಂದು ಬಿಟ್ಟರಲ್ಲವೆ ಆದ್ದರಿಂದ ಕೋಟಿ ಆತ್ಮಗಳಿಗಿಂತ ವಿಶೇಷ ಆತ್ಮನಂತೂ ಆಗಿ ಬಿಟ್ಟರಲ್ಲವೆ. ಏಕೆ ವಿಶೇಷ ಆತ್ಮನಾದರು? ಏಕೆಂದರೆ ಸರ್ವ ಶ್ರೇಷ್ಠ ತಂದೆಯ ಮಕ್ಕಳಾಗಿ ಬಿಟ್ಟರು.
ಎಲ್ಲಾ ಆತ್ಮಗಳನ್ನು ಬ್ರಾಹ್ಮಣ ಆತ್ಮಗಳು ವಿಶೇಷವಾಗಿದ್ದೀರಿ. ಕೇವಲ ಕೆಲವರು ತಮ್ಮ ವಿಶೇಷತೆಯನ್ನು ಕಾರ್ಯದಲ್ಲಿ ತೊಡಗಿಸುತ್ತಾರೆ ಆದ್ದರಿಂದ ಆ ವಿಶೇಷತೆಯು ವೃದ್ಧಿಯಾಗುತ್ತಿರುತ್ತದೆ ಮತ್ತು ಅನ್ಯರಿಗೂ ಅದು ಕಾಣಿಸುತ್ತದೆ. ಇನ್ನೂ ಕೆಲವರಲ್ಲಿ ವಿಶೇಷತಾ ರೂಪಿ ಬೀಜವಂತೂ ಇದೆ ಆದರೆ ಬೀಜವನ್ನು ಕಾರ್ಯದಲ್ಲಿ ತರುವುದು ಎಂದರೆ ಬೀಜವನ್ನು ಧರಣಿಯಲ್ಲಿ ಬಿತ್ತುವುದಾಗಿದೆ. ಎಲ್ಲಿಯವರೆಗೆ ಬೀಜವನ್ನು ಧರಣಿಯಲ್ಲಿ ಬಿತ್ತುವುದಿಲ್ಲವೋ ಅಲ್ಲಿಯವರೆಗೆ ಅದು ಸಸಿಯಾಗುವುದಿಲ್ಲ ಮತ್ತು ವೃಕ್ಷವಾಗುವುದಿಲ್ಲ. ಇನ್ನೂ ಕೆಲವರು ವಿಶೇಷತೆಯ ಬೀಜವನ್ನು ವಿಸ್ತಾರದಲ್ಲಿಯೂ ತರುತ್ತಾರೆ ಅರ್ಥಾತ್ ವೃಕ್ಷದ ರೂಪದಲ್ಲಿ ವೃದ್ಧಿಯನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತಾರೆ, ಫಲವನ್ನೂ ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಆದರೆ ಯಾವಾಗ ಫಲ ಬರುತ್ತದೆಯೋ ಆಗ ಫಲದ ಹಿಂದೆ ಪಕ್ಷಿಗಳೂ ಸಹ ತಿನ್ನುವುದಕ್ಕಾಗಿ ಬರುತ್ತವೆ ಅಂದಾಗ ಯಾವಾಗ ಫಲ ಬಿಡುವವರೆಗೆ ತಲುಪುತ್ತದೆಯೋ ಆಗ ಮಾಯೆಯು ಈ ರೂಪದಲ್ಲಿ ಬರುತ್ತದೆ - ನಾನು ವಿಶೇಷ ಆತ್ಮನಾಗಿದ್ದೇನೆ, ಇದು ನನ್ನ ವಿಶೇಷತೆಯಾಗಿದೆ ಎಂದು. ತಂದೆಯ ಮೂಲಕ ಪ್ರಾಪ್ತಿಯಾಗಿರುವ ವಿಶೇಷತೆಯಾಗಿದೆ. ವಿಶೇಷತೆಯನ್ನು ತುಂಬುವವರು ತಂದೆಯಾಗಿದ್ದಾರೆಂದು ತಿಳಿದುಕೊಳ್ಳುವುದಿಲ್ಲ. ಯಾವಾಗ ಬ್ರಾಹ್ಮಣರಾದಿರೋ ಆಗ ವಿಶೇಷತೆ ಬಂದಿತು ಅಂದಮೇಲೆ ವಿಶೇಷತೆಯು ಬ್ರಾಹ್ಮಣ ಜೀವನದ ಕೊಡುಗೆಯಾಗಿದೆ, ತಂದೆಯ ಕೊಡುಗೆಯಾಗಿದೆ ಆದ್ದರಿಂದ ಫಲದ ನಂತರ ಅರ್ಥಾತ್ ಸೇವೆಯಲ್ಲಿ ಸಫಲತೆ ಪಡೆದ ನಂತರ ಈ ಗಮನವನ್ನಿಡುವುದೂ ಸಹ ಅತ್ಯವಶ್ಯಕವಾಗಿದೆ ಇಲ್ಲವೆಂದರೆ ಮಾಯಾರೂಪಿ ಪಕ್ಷಿಗಳು ಫಲವನ್ನು ಬೀಳಿಸಿ ಬಿಡುತ್ತವೆ ಅಥವಾ ಕಚ್ಚಿ ಬಿಡುತ್ತವೆ. ಹೇಗೆ ಖಂಡನೆಯಾಗಿರುವ ಮೂರ್ತಿಗೆ ಪೂಜೆಯು ನಡೆಯುವುದಿಲ್ಲ. ಇದು ಮೂರ್ತಿಯಾಗಿದೆ ಎಂದು ಹೇಳುತ್ತಾರೆಯೇ ಹೊರತು ಅದಕ್ಕೆ ಪೂಜೆ ಮಾಡುವುದಿಲ್ಲ. ಹಾಗೆಯೇ ಬ್ರಾಹ್ಮಣ ಆತ್ಮಗಳು ಸೇವೆಯ ಫಲ ಅರ್ಥಾತ್ ಸೇವೆಯಲ್ಲಿ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾರೆ ಆದರೆ ‘ನಾನು’ ಎಂಬ ಪಕ್ಷಿಯು ಫಲವನ್ನು ಖಂಡನೆ ಮಾಡಿ ಬಿಟ್ಟಿತು ಆದ್ದರಿಂದ ಕೇವಲ ಇವರು ಚೆನ್ನಾಗಿ ಸೇವೆ ಮಾಡುತ್ತಾರೆ, ಮಹಾರಥಿಯಾಗಿದ್ದಾರೆ, ಸೇವಾಧಾರಿಯಾಗಿದ್ದಾರೆ ಎಂದು ಅನ್ಯರು ಒಪ್ಪುತ್ತಾರೆ ಆದರೆ ಅವರು ಸಂಗಮಯುಗದಲ್ಲಿಯೂ ಸರ್ವ ಬ್ರಾಹ್ಮಣ ಪರಿವಾರದವರ ಹೃದಯದಲ್ಲಿ ಸ್ನೇಹಕ್ಕೆ ಪಾತ್ರರು ಅಥವಾ ಪೂಜ್ಯರಾಗಲು ಸಾಧ್ಯವಿಲ್ಲ.
ಸಂಗಮಯುಗದಲ್ಲಿ ಹೃದಯದ ಸ್ನೇಹ, ಹೃದಯದ ಗೌರವವೇ ಪೂಜ್ಯರಾಗುವುದಾಗಿದೆ. ಫಲವನ್ನು ನಾನು ಎಂಬುದರಲ್ಲಿ ತರುವವರು ಪೂಜ್ಯರಾಗಲು ಸಾಧ್ಯವಿಲ್ಲ. ಒಂದಾಗಿದೆ - ಹೃದಯದಿಂದ ಅನ್ಯರನ್ನು ಶ್ರೇಷ್ಠರೆಂದು ಒಪ್ಪುವುದು. ಅಂದಾಗ ಶ್ರೇಷ್ಠರಿಗೆ ಪೂಜ್ಯರೆಂದು ಹೇಳಲಾಗುತ್ತದೆ. ಹೇಗೆ ಇಂದಿನ ಪ್ರಪಂಚದಲ್ಲಿಯೂ ಸಹ ತಂದೆಯು ದೊಡ್ಡವರಾಗಿರುವ ಕಾರಣ ಮಕ್ಕಳು "ಪೂಜ್ಯ ಪಿತಾಜೀ" ಎಂದು ಕರೆಯುತ್ತಾರೆ ಅಥವಾ ಬರೆಯುತ್ತಾರೆ. ಹಾಗೆಯೇ ಹೃದಯದಿಂದ ಶ್ರೇಷ್ಠರೆಂದು (ದೊಡ್ಡವರು) ಒಪ್ಪುವುದು ಅರ್ಥಾತ್ ಹೃದಯದಿಂದ ಗೌರವ ಕೊಡುವುದು. ಎರಡನೆಯದಾಗಿದೆ - ಹೊರಗಿನ ಮರ್ಯಾದೆಯ ಪ್ರಮಾಣ ಗೌರವ ಕೊಡಲೇಬೇಕಾಗುತ್ತದೆ ಅಂದಾಗ "ಹೃದಯದಿಂದ ಕೊಡುವುದು" ಮತ್ತು "ಏನು ಮಾಡುವುದು ಕೊಡಲೇಬೇಕಾಗುತ್ತದೆ" ಎಂಬುದರಲ್ಲಿ ಎಷ್ಟೊಂದು ಅಂತರವಿದೆ! ಪೂಜ್ಯರಾಗುವುದು ಅರ್ಥಾತ್ ಸರ್ವರೂ ಹೃದಯದಿಂದ ಅವರನ್ನು ಒಪ್ಪುವುದಾಗಿದೆ. ಮೆಜಾರಿಟಿ ಇರಬೇಕು, ಮೊದಲೂ ಸಹ ತಿಳಿಸಿದ್ದೆವು - 5% ನಷ್ಟು ಜನರಂತೂ ಉಳಿದುಕೊಳ್ಳುತ್ತಾರೆ ಆದರೆ ಇನ್ನು 95% ಜನರು ಹೃದಯದಿಂದ ಒಪ್ಪುವುದೇ ಸಂಗಮಯುಗದಲ್ಲಿ ಪೂಜ್ಯರಾಗುವುದಾಗಿದೆ. ಪೂಜ್ಯರಾಗುವ ಸಂಸ್ಕಾರವನ್ನೂ ಸಹ ಈಗಿನಿಂದಲೇ ತುಂಬಿಸಿಕೊಳ್ಳಬೇಕಾಗಿದೆ ಆದರೆ ಭಕ್ತಿಮಾರ್ಗದ ಪೂಜ್ಯರಾಗುವುದರಲ್ಲಿ ಮತ್ತು ಈಗಿನ ಪೂಜ್ಯರಾಗುವುದರಲ್ಲಿ ಅಂತರವಿದೆ. ಈಗ ತಮ್ಮ ಶರೀರಗಳಿಗೆ ಪೂಜೆ ನಡೆಯಲು ಸಾಧ್ಯವಿಲ್ಲ ಏಕೆಂದರೆ ಇದು ಅಂತಿಮ ಹಳೆಯ ಶರೀರವಾಗಿದೆ, ತಮೋಗುಣಿ ತತ್ವಗಳಿಂದಾದ ಶರೀರವಾಗಿದೆ ಅಂದಾಗ ಈಗ ಹೂಮಾಲೆಯು ಕೊರಳಿಗೆ ಬೀಳುವುದಿಲ್ಲ. ಭಕ್ತಿಮಾರ್ಗದಲ್ಲಂತೂ ದೇವತೆಗಳಿಗೆ ಹೂಗಳನ್ನು ಹಾಕುತ್ತಾರಲ್ಲವೆ. ಪೂಜ್ಯರ ಸಂಕೇತವಾಗಿದೆ - ಧೂಪ ಹಚ್ಚುವುದು, ಹಾರವನ್ನು ಹಾಕುವುದು, ಆರತಿ ಬೆಳಗುವುದು, ಕೀರ್ತನೆ ಮಾಡುವುದು, ತಿಲಕವನ್ನಿಡುವುದು. ಸಂಗಮಯುಗದಲ್ಲಿ ಈ ಸ್ಥೂಲ ವಿಧಿಗಳಿಲ್ಲ, ಆದರೆ ಸಂಗಮಯುಗದಲ್ಲಿ ಸದಾ ಹೃದಯದಿಂದ ಆ ಪೂಜ್ಯ ಆತ್ಮಗಳಪ್ರತಿ ಸತ್ಯ ಸ್ನೇಹದ ಆರತಿಯನ್ನು ಬೆಳಗುತ್ತಿರುತ್ತಾರೆ. ಆತ್ಮಗಳ ಮೂಲಕ ಸದಾ ಯಾವುದಾದರೊಂದು ಪ್ರಾಪ್ತಿಯ ಕೀರ್ತನೆ ಮಾಡುತ್ತಿರುತ್ತಾರೆ. ಸದಾ ಆ ಆತ್ಮಗಳ ಪ್ರತಿ ಶುಭ ಭಾವನೆಯ ಧೂಪ ಅಥವಾ ದೀಪವನ್ನು ಬೆಳಗಿಸುತ್ತಿರುತ್ತಾರೆ. ಸದಾ ಇಂತಹ ಆತ್ಮಗಳನ್ನು ನೋಡಿ ಸ್ವಯಂ ಕೂಡ ಹೇಗೆ ಆ ಆತ್ಮಗಳು ತಂದೆಯ ಮೇಲೆ ಬಲಿಹಾರಿಯಾಗಿದ್ದಾರೆಯೋ ಹಾಗೆಯೇ ಅನ್ಯ ಆತ್ಮಗಳಲ್ಲಿಯೂ ತಂದೆಗೆ ಬಲಿಹಾರಿಯಾಗುವ ಉಲ್ಲಾಸ ಬರುತ್ತದೆ ಆದ್ದರಿಂದ ತಂದೆಗೆ ಬಲಿಹಾರಿಯಾಗುವ ಹಾರವು ಸದಾ ಆ ಆತ್ಮಗಳಿಗೆ ಸ್ವತಹವಾಗಿ ಪ್ರಾಪ್ತಿಯಾಗುತ್ತದೆ. ಇಂತಹ ಆತ್ಮಗಳು ಸದಾ ಸ್ಮೃತಿಸ್ವರೂಪದ ತಿಲಕಧಾರಿಗಳಾಗಿರುತ್ತಾರೆ. ಈ ಅಲೌಕಿಕ ವಿಧಿಯಿಂದ ಈ ಸಮಯದ ಪೂಜ್ಯಾತ್ಮರಾಗುತ್ತೀರಿ.
ಭಕ್ತಿಮಾರ್ಗದ ಪೂಜ್ಯರಾಗುವುದಕ್ಕಿಂತ ಶ್ರೇಷ್ಠ ಪೂಜೆಯು ಈಗಿನದಾಗಿದೆ. ಹೇಗೆ ಭಕ್ತಿಮಾರ್ಗದ ಪೂಜ್ಯ ಆತ್ಮಗಳ ಎರಡು ಕ್ಷಣಗಳ ಸಂಪರ್ಕದಿಂದ ಅರ್ಥಾತ್ ಕೇವಲ ಮೂರ್ತಿಯ ಮುಂದೆ ಹೋಗುತ್ತಿದ್ದಂತೆಯೇ ಎರಡು ಕ್ಷಣಗಳಿಗಾಗಿ ಶಾಂತಿ, ಶಕ್ತಿ, ಖುಷಿಯ ಅನುಭವವಾಗುತ್ತದೆ ಹಾಗೆಯೇ ಸಂಗಮಯುಗೀ ಪೂಜ್ಯಾತ್ಮರ ಮೂಲಕ ಈಗಲೂ ಎರಡು ಘಳಿಗೆ, ಒಂದು ಘಳಿಗೆಯೂ ಸಹ ದೃಷ್ಟಿ ಸಿಕ್ಕಿದರೂ ಸಾಕು, ಖುಷಿ-ಶಾಂತಿ ಹಾಗೂ ಉಲ್ಲಾಸ-ಉತ್ಸಾಹದ ಶಕ್ತಿಯ ಅನುಭವವಾಗುತ್ತದೆ. ಇಂತಹ ಪೂಜ್ಯಾತ್ಮರು ಅರ್ಥಾತ್ ನಂಬರ್ವನ್ ವಿಶೇಷ ಆತ್ಮರಾಗಿದ್ದಾರೆ. ಸೆಕೆಂಡ್ ಅಥವಾ ಥರ್ಡ್ನವರ ಬಗ್ಗೆ ತಿಳಿಸಿದ್ದೇವೆ. ಅದರ ವಿಸ್ತಾರವನ್ನೇನು ಹೇಳುವುದು? ಎಲ್ಲರೂ ವಿಶೇಷ ಆತ್ಮಗಳ ಪಟ್ಟಿಯಲ್ಲಿದ್ದಾರೆ ಆದರೆ ಮೊದಲನೇ, ಎರಡನೇ ಮೂರನೆಯವರು - ಹೀಗೆ ನಂಬರ್ವಾರ್ ಇದ್ದಾರೆ. ಎಲ್ಲರ ಲಕ್ಷ್ಯವೂ ನಂಬರ್ವನ್ ಆಗಿರುತ್ತದೆ ಅಂದಾಗ ಇಂತಹ ಪೂಜ್ಯರಾಗಿ. ಹೇಗೆ ಬ್ರಹ್ಮಾ ತಂದೆಯ ಗುಣಗಳ ಗೀತೆಯನ್ನು ಹಾಡುತ್ತೀರಲ್ಲವೆ. ಇದೆಲ್ಲಾ ವಿಶೇಷತೆಗಳು ಪೂಜ್ಯರಾಗುವ ಹಾಗೂ ನಂಬರ್ವನ್ ವಿಶೇಷ ಆತ್ಮನಾಗುವ ಮಾತುಗಳನ್ನು ಬ್ರಹ್ಮಾ ತಂದೆಯದು ನೋಡಿದಿರಿ, ಕೇಳಿದಿರಲ್ಲವೆ! ಅಂದಾಗ ಹೇಗೆ ಬ್ರಹ್ಮಾ ಸಾಕಾರ ಆತ್ಮ ನಂಬರ್ವನ್ ಸಂಗಮಯುಗೀ ಪೂಜ್ಯರಿಂದ ಭವಿಷ್ಯದಲ್ಲಿ ನಂಬರ್ವನ್ ಪೂಜ್ಯನಾಗುತ್ತಾರೆ. ಲಕ್ಷ್ಮೀ-ನಾರಾಯಣರು ನಂಬರ್ವನ್ ಪೂಜ್ಯರಾಗಿದ್ದಾರಲ್ಲವೆ. ಅದೇರೀತಿ ತಾವೆಲ್ಲರೂ ಸಹ ಈ ರೀತಿ ಆಗಬಹುದಲ್ಲವೆ.
ಹೇಗೆ ತಂದೆಯ ಜೊತೆ ಜೊತೆಗೆ ಬ್ರಹ್ಮಾ ತಂದೆಯ ಚಮತ್ಕಾರವನ್ನೂ ಗಾಯನ ಮಾಡುತ್ತಾರೆ ಹಾಗೆಯೇ ತಾವೆಲ್ಲರೂ ಸಹ ಸದಾ ಇಂತಹ ಸಂಕಲ್ಪ, ಮಾತು ಮತ್ತು ಕರ್ಮ ಮಾಡಿ ಯಾವುದು ಸದಾ ಚಮತ್ಕಾರದಿಂದ ಕೂಡಿರಲಿ. ಯಾವಾಗ ಕಮಾಲ್ ಆಗುವುದೊ ಆಗ ದಮಾಲ್ ಆಗುವುದಿಲ್ಲ. ಕಮಾಲ್ ಮಾಡುವುದಿಲ್ಲವೆಂದರೆ ದಮಾಲ್ ಮಾಡುತ್ತೀರಿ - ಭಲೆ ಸಂಕಲ್ಪಗಳ ದಮಾಲ್ ಆದರೂ ಮಾಡಿ, ವಾಣಿಯಿಂದಲಾದರೂ ಮಾಡಿ. ಸಂಕಲ್ಪಗಳಲ್ಲಿಯೂ ವ್ಯರ್ಥ ಬಿರುಗಾಳಿಯು ನಡೆಯುತ್ತದೆಯೆಂದರೆ ಇದು ದಮಾಲ್ ಅಲ್ಲವೆ. ಆದ್ದರಿಂದ ಈಗ ಧಮಾಲ್ ಮಾಡುವುದಲ್ಲ, ಕಮಾಲ್ ಮಾಡಬೇಕಾಗಿದೆ ಏಕೆಂದರೆ ಆದಿಪಿತ ಬ್ರಹ್ಮಾನ ಬ್ರಾಹ್ಮಣ ಮಕ್ಕಳು ಸದಾ ಪೂಜ್ಯರೆಂದು ಗಾಯನ ಮಾಡಲಾಗುತ್ತದೆ. ಈಗ ಅಂತಿಮ ಜನ್ಮದಲ್ಲಿಯೂ ನೋಡಿ, ಎಲ್ಲರಿಗಿಂತ ಶ್ರೇಷ್ಠ ವರ್ಣವೆಂದು ಯಾವುದಕ್ಕೆ ಗಾಯನವಿದೆ? ಬ್ರಾಹ್ಮಣ ವರ್ಣವೆಂದು ಹೇಳುತ್ತಾರಲ್ಲವೆ. ಶ್ರೇಷ್ಠ ಹೆಸರು ಮತ್ತು ಶ್ರೇಷ್ಠ ಕಾರ್ಯಕ್ಕಾಗಿ ಬ್ರಾಹ್ಮಣರನ್ನೇ ಕರೆಸುತ್ತಾರೆ. ಯಾರದೇ ಕಲ್ಯಾಣ ಮಾಡುವುದಕ್ಕಾಗಿಯೂ ಬ್ರಾಹ್ಮಣರನ್ನೇ ಕರೆಸುತ್ತಾರೆ ಅಂದಾಗ ಅಂತಿಮ ಜನ್ಮದವರೆಗೂ ಸಹ ಬ್ರಾಹ್ಮಣ ಆತ್ಮಗಳ ಶ್ರೇಷ್ಠ ಹೆಸರು, ಶ್ರೇಷ್ಠ ವರ್ಣವು ಪ್ರಸಿದ್ಧವಾಗುತ್ತದೆ. ಪರಂಪರೆಯಿಂದ ನಡೆದುಬರುತ್ತಿದೆ. ಕೇವಲ ಆ ಹೆಸರಿನಿಂದಲೂ ಕೆಲಸ ನಡೆಸುತ್ತಿದ್ದಾರೆ. ಕಾರ್ಯವು ತಮ್ಮದಾಗಿದೆ ಆದರೆ ಕೇವಲ ಆ ಹೆಸರನ್ನು ಇಟ್ಟುಕೊಂಡಿರುವವರ ಕೆಲಸವು ನಡೆಯುತ್ತಿದೆ. ಇದರಿಂದ ನೋಡಿ – ಸತ್ಯ ಬ್ರಾಹ್ಮಣ ಆತ್ಮಗಳಿಗೆ ಎಷ್ಟೊಂದು ಮಹಿಮೆಯಿದೆ ಮತ್ತು ಎಷ್ಟೊಂದು ಮಹಾನರಾಗಿದ್ದೀರಿ! "ಬ್ರಾಹ್ಮಣ" ಎಂಬ ಹೆಸರೂ ಸಹ ಅವಿನಾಶಿಯಾಗಿ ಬಿಟ್ಟಿದೆ, ಅವಿನಾಶಿ ಪ್ರಾಪ್ತಿಯುಳ್ಳ ಜೀವನವಾಗಿ ಬಿಟ್ಟಿದೆ. ಬ್ರಾಹ್ಮಣ ಜೀವನದ ವಿಶೇಷತೆಯೇನೆಂದರೆ ಪರಿಶ್ರಮ ಕಡಿಮೆ, ಹೆಚ್ಚು ಪ್ರಾಪ್ತಿ ಏಕೆಂದರೆ ಪ್ರೀತಿಯ ಮುಂದೆ ಪರಿಶ್ರಮವೆನಿಸುವುದಿಲ್ಲ. ಈ ಅಂತಿಮ ಜನ್ಮದಲ್ಲಿಯೂ ನಾಮಧಾರಿ ಬ್ರಾಹ್ಮಣರು ಪರಿಶ್ರಮ ಪಡುವುದಿಲ್ಲ, ಆರಾಮವಾಗಿ ತಿನ್ನುತ್ತಿರುತ್ತಾರೆ. ಒಂದುವೇಳೆ "ಹೆಸರಿಗೆ" ಕೆಲಸ ಮಾಡಿದರೂ ಸಹ ಅವರು ಹಸಿವಿನಿಂದಿರಲು ಸಾಧ್ಯವಿಲ್ಲ ಅಂದಾಗ ಈ ಸಮಯದ ಬ್ರಾಹ್ಮಣ ಜೀವನದ ವಿಶೇಷತೆಗಳ ನಿದರ್ಶನಗಳನ್ನು ಇಲ್ಲಿಯವರೆಗೂ ಇಷ್ಟು ವಿಶೇಷ ಆತ್ಮಗಳಾಗಿದ್ದೀರಿ! ತಿಳಿಯಿತೆ.
ವರ್ತಮಾನ ಸಮಯದ ಪೂಜ್ಯರೇ ಭವಿಷ್ಯದ ಪೂಜ್ಯರು - ಇವರಿಗೇ ವಿಶೇಷ ನಂಬರ್ವನ್ ಆತ್ಮಗಳೆಂದು ಹೇಳುತ್ತಾರೆ ಅಂದಾಗ ಪರಿಶೀಲನೆ ಮಾಡಿಕೊಳ್ಳಿ. ಬ್ರಹ್ಮಾ ತಂದೆಯ ಚರಿತ್ರೆಯನ್ನು ತಿಳಿಸುತ್ತಿದ್ದೇವೆ ಅಲ್ಲವೆ. ಈಗ ಇನ್ನೂ ಉಳಿದುಕೊಂಡಿದೆ. ಈ ಬ್ರಹ್ಮಾ ತಂದೆಯ ವಿಶೇಷತೆಯನ್ನು ಸದಾ ಸನ್ಮುಖದಲ್ಲಿಟ್ಟುಕೊಳ್ಳಿ, ಅನ್ಯ ಯಾವುದೇ ಮಾತುಗಳಲ್ಲಿ ಹೋಗಬೇಡಿ. ವಿಶೇಷತೆಗಳನ್ನು ನೋಡಿ ಮತ್ತು ವರ್ಣನೆ ಮಾಡಿ. ಪ್ರತಿಯೊಬ್ಬರಿಗೆ ವಿಶೇಷತೆಯ ಮಹತ್ವಿಕೆಯನ್ನು ತಿಳಿಸಿ. ವಿಶೇಷ ಆತ್ಮಗಳನ್ನಾಗಿ ಮಾಡಿ. ಅನ್ಯರನ್ನು ವಿಶೇಷ ಆತ್ಮಗಳನ್ನಾಗಿ ಮಾಡುವುದೆಂದರೆ ಸ್ವಯಂ ವಿಶೇಷ ಆತ್ಮನಾಗುವುದು. ತಿಳಿಯಿತೆ? ಒಳ್ಳೆಯದು.
ನಾಲ್ಕಾರು ಕಡೆಯ ಸರ್ವ ನಂಬರ್ವನ್ ವಿಶೇಷ ಆತ್ಮಗಳಿಗೆ, ಸರ್ವ ಬ್ರಾಹ್ಮಣ ಜೀವನದ ವಿಶೇಷ ಆತ್ಮಗಳಿಗೆ, ಸದಾ ಬ್ರಹ್ಮಾ ತಂದೆಯನ್ನು ಸನ್ಮುಖದಲ್ಲಿಟ್ಟುಕೊಂಡು ಸಮಾನರಾಗುವ ಆತ್ಮಗಳಿಗೆ, ಅನಾದಿ ತಂದೆ - ಆದಿ ತಂದೆಯ ಎರಡೂ ರೂಪಗಳಿಂದ ಸರ್ವ ಸಾಲಿಗ್ರಾಮ ಹಾಗೂ ಸಾಕಾರೀ ಬ್ರಾಹ್ಮಣ ಆತ್ಮಗಳಿಗೆ ಸ್ನೇಹ ಸಂಪನ್ನ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ವಾರ್ತಾಲಾಪ:
1. ಸದಾ ತಂದೆಯ ಕೈ ಹಾಗೂ ಜೊತೆಯಿದೆ - ಇಂತಹ ಭಾಗ್ಯಶಾಲಿಯೆಂದು ತಿಳಿಯುವಿರಾ? ಎಲ್ಲಿ ತಂದೆಯ ಕೈ (ಶ್ರೀಮತ) ಹಾಗೂ ಜೊತೆಯಿದೆಯೋ ಅಲ್ಲಿ ಸದಾಕಾಲವೂ ಮೋಜಿನ ಜೀವನವಿರುತ್ತದೆ. ಗೊಂದಲಕ್ಕೆ ಒಳಗಾಗುವವರಲ್ಲ, ಮೋಜಿನಲ್ಲಿರುವರು. ಯಾವುದೇ ಪರಿಸ್ಥಿತಿಗಳು ತನ್ನಕಡೆಗೆ ಆಕರ್ಷಿಸುವುದಿಲ್ಲ, ಸದಾ ತಂದೆಯ ಕಡೆಗೆ ಆಕರ್ಷಿತರಾಗುವರು. ಅತ್ಯುನ್ನತ ಹಾಗೂ ಅತ್ಯಂತ ಶ್ರೇಷ್ಠವಾದ ತಂದೆಯಿದ್ದಾರೆ ಅಂದಮೇಲೆ ತಂದೆಯ ಹೊರತು ಮತ್ತ್ಯಾವುದೇ ವಸ್ತು ಅಥವಾ ವ್ಯಕ್ತಿಯು ಆಕರ್ಷಿಸುವುದಕ್ಕೆ ಸಾಧ್ಯವೇ ಇಲ್ಲ. ಯಾರು ತಂದೆಯ ಕೈ ಹಾಗೂ ಜೊತೆಯಲ್ಲಿ ಬೆಳೆಯುತ್ತಾ ಇರುತ್ತಾರೆಯೋ ಅವರ ಮನಸ್ಸು ಮತ್ತೆಲ್ಲಿಗೂ ಹೋಗಲು ಸಾಧ್ಯವಿಲ್ಲ. ಎಲ್ಲರೂ ಈ ರೀತಿ ಇದ್ದೀರಾ ಅಥವಾ ಮಾಯೆಯ ಪಾಲನೆಯಲ್ಲಿ ಹೊರಟು ಹೋಗುತ್ತೀರಾ? ಆ ಮಾರ್ಗವು ಸ್ಥಗಿತವಾಗಿದೆ ಅಲ್ಲವೆ. ಅಂದಮೇಲೆ ಸದಾ ತಂದೆಯ ಜೊತೆ ಮೋಜಿನಲ್ಲಿರಿ. ತಂದೆಯು ಸಿಕ್ಕಿದರು ಎಲ್ಲವೂ ಸಿಕ್ಕಿ ಬಿಟ್ಟಿತು, ಅದರಲ್ಲಿ ಯಾವುದೇ ಅಪ್ರಾಪ್ತಿಯಿಲ್ಲ. ಯಾರೆಷ್ಟಾದರೂ ಕೈ, ಜೊತೆಯನ್ನು ಬಿಡಿಸಲಿ ಆದರೆ ನಾವು ಬಿಡುವವರಲ್ಲ. ಮತ್ತೆ ಬಿಟ್ಟು ಹೋಗುವುದಾದರೂ ಎಲ್ಲಿಗೆ? ಮತ್ತ್ಯಾವುದೂ ಇದಕ್ಕಿಂತ ಶ್ರೇಷ್ಠವಾದ ಭಾಗ್ಯವಿರಲು ಸಾಧ್ಯವಿಲ್ಲ! ಕುಮಾರಿಯರಂತು ಸದಾ ಭಾಗ್ಯಶಾಲಿಗಳೇ ಆಗಿದ್ದಾರೆ, ಅವರಿಗೆ ಡಬಲ್ ಭಾಗ್ಯವಿದೆ. ಒಂದು - ಕುಮಾರಿ ಜೀವನದ ಭಾಗ್ಯ, ಇನ್ನೊಂದು - ತಂದೆಯ ಮಗುವಾಗುವ ಭಾಗ್ಯ. ಕುಮಾರಿ ಜೀವನದಲ್ಲಿ ಪೂಜಿಸುತ್ತಾರೆ, ಯಾವಾಗ ಆ ಜೀವನವು ಸಮಾಪ್ತಿಯಾಗುವುದೋ ಆಗ ಎಲ್ಲರ ಮುಂದೆ ಬಾಗಬೇಕಾಗುತ್ತದೆ. ಗೃಹಸ್ಥಿ ಜೀವನವಂತು ಕುರಿ ಸಮಾನ ಜೀವನವಾಗಿದೆ, ಕುಮಾರಿ ಜೀವನವು ಪೂಜ್ಯನೀಯ ಜೀವನವಾಗಿದೆ. ಒಂದುವೇಳೆ ಯಾರೇ ಒಂದು ಬಾರಿ ಬೀಳುತ್ತಾರೆಂದರೂ ಮೂಳೆಯು ಮುರಿಯುತ್ತದೆಯಲ್ಲವೆ. ಆನಂತರ ಅದಕ್ಕೆಷ್ಟಾದರೂ ಪ್ಲಾಸ್ಟರ್ ಮಾಡಿರಿ, ಸರಿ ಪಡಿಸಲೂಬಹುದು ಆದರೆ ಮೂಳೆಯು ಬಲಹೀನ ಆಗಿ ಬಿಡುತ್ತದೆ. ಆದ್ದರಿಂದ ಬುದ್ಧಿವಂತರಾಗಿರಿ. ಪರೀಕ್ಷೆ ಮಾಡಿದ ನಂತರ ಬುದ್ಧಿವಂತರಾಗುವುದಲ್ಲ. ಒಳ್ಳೆಯದು!
2. ಸದಾ ತಮ್ಮನ್ನು ಕಲ್ಪ-ಕಲ್ಪದ ವಿಜಯಿ ಆತ್ಮರೆಂದು ಅನುಭವ ಮಾಡುತ್ತೀರಾ? ಅನೇಕ ಬಾರಿ ವಿಜಯಿಯಾಗುವ ಪಾತ್ರವನ್ನು ಅಭಿನಯಿಸಲಾಗಿದೆ ಮತ್ತು ಈಗಲೂ ಅಭಿನಯಿಸುತ್ತಾ ಇದ್ದೀರಿ. ವಿಜಯಿ ಆತ್ಮರು ಸದಾ ಅನ್ಯರನ್ನೂ ವಿಜಯಿಯನ್ನಾಗಿ ಮಾಡುತ್ತಾರೆ. ಯಾರು ಅನೇಕ ಬಾರಿ ಮಾಡಿರುತ್ತಾರೆಯೋ ಅವರು ಸದಾಕಾಲ ಸಹಜವಾಗಿ ಇರುತ್ತಾರೆ, ಪರಿಶ್ರಮ ಪಡುವುದಿಲ್ಲ. ಯಾವುದೇ ಪರಿಸ್ಥಿತಿಯನ್ನು ಅನೇಕ ಬಾರಿಯ ವಿಜಯಿ ಆತ್ಮನೆಂಬ ಸ್ಮೃತಿಯಿಂದ ಪಾರು ಮಾಡುವುದು ಆಟವೆನಿಸುತ್ತದೆ. ಖುಷಿಯ ಅನುಭವವಾಗುತ್ತದೆಯೇ? ವಿಜಯಿ ಆತ್ಮರಿಗೆ ವಿಜಯದ ಅಧಿಕಾರದ ಅನುಭವವಾಗುವುದು. ಅಧಿಕಾರವು ಪರಿಶ್ರಮದಿಂದ ಸಿಗುವುದಿಲ್ಲ, ಸ್ವತಹವಾಗಿಯೇ ಸಿಗುತ್ತದೆ ಅಂದಾಗ ಸದಾ ವಿಜಯದ ಖುಷಿಯಿಂದ, ಅಧಿಕಾರದಿಂದ ಮುಂದುವರೆಯುತ್ತಾ, ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಲೌಕಿಕ ಪರಿವಾರದಲ್ಲಿದ್ದರೂ ಅಲೌಕಿಕದಲ್ಲಿ ಪರಿವರ್ತನೆ ಮಾಡಿರಿ ಏಕೆಂದರೆ ಅಲೌಕಿಕ ಸಂಬಂಧವು ಸುಖ ಕೊಡುವಂತದ್ದಾಗಿದೆ. ಲೌಕಿಕ ಸಂಬಂಧದಿಂದ ಅಲ್ಪಕಾಲದ ಸುಖ ಸಿಗುತ್ತದೆ, ಸದಾಕಾಲವೂ ಇರುವುದಿಲ್ಲ ಅಂದಾಗ ಸದಾ ಸುಖಿಯಾಗಿ ಬಿಡಿ. ದುಃಖಿಗಳ ಪ್ರಪಂಚದಿಂದ ಸುಖದ ಪ್ರಪಂಚದಲ್ಲಿ ಬಂದು ಬಿಟ್ಟೆವು - ಈ ಅನುಭವ ಮಾಡುತ್ತೀರಾ? ಮುಂಚೆ ರಾವಣನ ಮಕ್ಕಳಾಗಿದ್ದೆವು ಆದ್ದರಿಂದ ದುಃಖ ಕೊಡುವವರಾಗಿದ್ದೆವು, ಈಗ ಸುಖದಾತನ ಮಕ್ಕಳು ಸುಖ ಸ್ವರೂಪರು ಆಗಿ ಬಿಟ್ಟೆವು. ಮೊದಲ ನಂಬರ್ ಈ ಅಲೌಕಿಕ ಬ್ರಾಹ್ಮಣ ಪರಿವಾರವಾಗಿದೆ, ದೇವತೆಗಳೂ ಸಹ ಸೆಕೆಂಡ್ ನಂಬರಿನವರಾದರು. ಅಂದಮೇಲೆ ಈ ಅಲೌಕಿಕ ಜೀವನವು ಪ್ರಿಯವೆನಿಸುತ್ತದೆ ಅಲ್ಲವೆ.
3. ಸದಾ ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಎಂದು ಅನುಭವ ಮಾಡುವಿರಾ? ಇಡೀ ಕಲ್ಪದಲ್ಲಿ ಇಂತಹ ಶ್ರೇಷ್ಠ ಭಾಗ್ಯವು ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಏಕೆಂದರೆ ಭವಿಷ್ಯ ಸ್ವರ್ಗದಲ್ಲಿಯೂ ಈ ಸಮಯದ ಪುರುಷಾರ್ಥದ ಪ್ರಾಲಬ್ಧದ ರೂಪದಲ್ಲಿ ರಾಜ್ಯಭಾಗ್ಯದ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಭವಿಷ್ಯವೂ ಸಹ ವರ್ತಮಾನದ ಭಾಗ್ಯದ ಲೆಕ್ಕದಿಂದಲೇ ಸಿಗುತ್ತದೆ. ಮಹತ್ವವೆಲ್ಲವೂ ಈ ಸಮಯದ ಭಾಗ್ಯದ್ದಾಗಿದೆ. ಈ ಸಮಯದಲ್ಲಿಯೇ ಬೀಜವನ್ನು ಬಿತ್ತುತ್ತೀರಿ ಮತ್ತು ಅದರ ಫಲವು ಅನೇಕ ಜನ್ಮಗಳವರೆಗೆ ಪ್ರಾಪ್ತಿಯಾಗುವುದು. ಅಂದಮೇಲೆ ಮಹತ್ವವಂತು ಬೀಜದ್ದಾಯಿತಲ್ಲವೆ. ಈ ಸಮಯದಲ್ಲಿ ಭಾಗ್ಯವನ್ನು ರೂಪಿಸಿಕೊಳ್ಳುವುದು ಅಥವಾ ಭಾಗ್ಯದ ಪ್ರಾಪ್ತಿ ಆಗುವುದು - ಇದು ಬೀಜವನ್ನು ಬಿತ್ತುವುದಾಯಿತು. ಹಾಗಾದರೆ ಈ ಗಮನವನ್ನಿಡುತ್ತಾ ಸದಾ ಪುರುಷಾರ್ಥದಲ್ಲಿ ತೀವ್ರ ಗತಿಯಿಂದ ಮುಂದುವರೆಯುತ್ತಾ ಸಾಗಿರಿ ಹಾಗೂ ಸದಾ ಈ ಸಮಯದ ಪದಮಾಪದಮ ಭಾಗ್ಯದ ಸ್ಮೃತಿಯು ಇಮರ್ಜ್ ರೂಪದಲ್ಲಿರಲಿ, ಕರ್ಮವನ್ನು ಮಾಡುತ್ತಿರುವಾಗಲೂ ನೆನಪಿರಲಿ, ಕರ್ಮದಲ್ಲಿರುವಾಗ ತಮ್ಮ ಈ ಶ್ರೇಷ್ಠ ಭಾಗ್ಯವನ್ನು ಮರೆಯಬಾರದು, ಸ್ಮೃತಿ ಸ್ವರೂಪರು ಆಗಿರಬೇಕು. ಇಂತಹವರಿಗೆ ಹೇಳಲಾಗುತ್ತದೆ – ಪದಮಾ ಪದಮ ಭಾಗ್ಯಶಾಲಿಗಳು. ಸದಾ ಇದೇ ಸ್ಮೃತಿಯ ವರದಾನವನ್ನು ಜೊತೆಯಲ್ಲಿ ಇಟ್ಟುಕೊಳ್ಳಿರಿ, ಇದರಿಂದ ಸಹಜವಾಗಿಯೇ ಮುಂದುವರೆಯುತ್ತಾ ಇರುತ್ತೀರಿ, ಪರಿಶ್ರಮದಿಂದ ಮುಕ್ತರಾಗುವಿರಿ. ಒಳ್ಳೆಯದು!
ಪ್ರಶ್ನೆ: ಲೌಕಿಕ ಸಂಬಂಧದಲ್ಲಿ ಬುದ್ಧಿಯು ಯಥಾರ್ಥವಾಗಿ ನಿರ್ಣಯ ಕೊಡುತ್ತಿರಲಿ - ಅದಕ್ಕೆ ವಿಧಿಯೇನಾಗಿದೆ?
ಉತ್ತರ: ಎಂದೂ ಸಹ ಲೌಕಿಕ ಮಾತುಗಳನ್ನು ಆಲೋಚಿಸಿ ನಿರ್ಣಯ ಮಾಡುವುದಲ್ಲ, ಅಲೌಕಿಕ ಶಕ್ತಿಶಾಲಿ ಸ್ಥಿತಿಯಲ್ಲಿದ್ದು ನಿರ್ಣಯ ಮಾಡಿ. ಯಾವುದೇ ಹಿಂದಿನ ಮಾತುಗಳನ್ನು ಸ್ಮೃತಿಯಲ್ಲಿ ಇಟ್ಟುಕೊಂಡಾಗ ಬುದ್ಧಿಯು ಅತ್ತಕಡೆ ಹೊರಟು ಹೋಗುತ್ತದೆ ಮತ್ತೆ ಹಿಂದಿನ ಸಂಸ್ಕಾರವೂ ಪ್ರಕಟವಾಗುತ್ತದೆ ಆದ್ದರಿಂದ ಕಷ್ಟವಾಗುತ್ತದೆ. ಅಂದಾಗ ಲೌಕಿಕ ವೃತ್ತಿಯನ್ನು ಸಂಪೂರ್ಣವಾಗಿ ಮರೆತು ಆತ್ಮನೆಂದು ತಿಳಿದು ನಂತರ ನಿರ್ಣಯ ಮಾಡಿ ಆಗ ಯಥಾರ್ಥ ನಿರ್ಣಯ ಸಿಗುವುದು. ಇದಕ್ಕೆ ವಿಕರ್ಮಾಜೀತನ ಸಿಂಹಾಸನವೆಂದು ಹೇಳುತ್ತಾರೆ. ಅಲೌಕಿಕ ಆತ್ಮಿಕ ಸ್ಥಿತಿಯೇ ವಿಕರ್ಮಾಜೀತನ ಸಿಂಹಾಸನವಾಗಿದೆ. ಈ ಸಿಂಹಾಸನದಲ್ಲಿ ಕುಳಿತು ನಿರ್ಣಯ ಮಾಡಿ ಆಗ ಅದು ಯಥಾರ್ಥವಾಗಿರುವುದು. ಒಳ್ಳೆಯದು.
ಓಂ ಶಾಂತಿ. ಡಬಲ್ ಓಂ ಶಾಂತಿ ಎಂದು ಹೇಳಬಹುದು. ಮಕ್ಕಳಿಗೂ ತಿಳಿದಿದೆ ಹಾಗೂ ಬಾಪ್ದಾದಾರವರೂ ತಿಳಿದುಕೊಂಡಿದ್ದಾರೆ- ನಾನಾತ್ಮ ಶಾಂತಸ್ವರೂಪನಾಗಿದ್ದೇನೆ ಎನ್ನುವುದು ಓಂಶಾಂತಿಯ ಅರ್ಥವಾಗಿದೆ. ಅವಶ್ಯವಾಗಿ ಶಾಂತಿಯ ಸಾಗರ, ಸುಖಸಾಗರ, ಪವಿತ್ರತೆಯ ಸಾಗರ ತಂದೆಯ ಸಂತಾನನಾಗಿದ್ದೇನೆ. ತಂದೆಯು ಪವಿತ್ರತೆಯ ಸಾಗರನಾಗಿದ್ದಾರೆ. ಪವಿತ್ರವಾಗುವುದರಲ್ಲಿ ಮನುಷ್ಯರಿಗೆ ಕಷ್ಟವೆನಿಸುತ್ತದೆ ಹಾಗೂ ಪವಿತ್ರವಾಗುವುದರಲ್ಲಿ ಬಹಳ ಸ್ಥಾನಮಾನವಿದೆ. ಪ್ರತಿಯೊಂದು ಮಗುವು ತಿಳಿದುಕೊಂಡಿದ್ದಾರೆ- ಇದರಿಂದ ನಮ್ಮ ಸ್ಥಾನ ವೃದ್ಧಿಯಾಗುತ್ತಿದೆ. ಈಗ ನಾವು ಸಂಪೂರ್ಣರಾಗಿಲ್ಲ. ಕೆಲವರಲ್ಲಿ ಒಂದು ಪ್ರಕಾರದ, ಇನ್ನೂ ಕೆಲವರಲ್ಲಿ ಇನ್ನೊಂದು ಪ್ರಕಾರದ ನ್ಯೂನತೆ ಪವಿತ್ರತೆ ಹಾಗೂ ಯೋಗದಲ್ಲಿ ಅವಶ್ಯವಾಗಿ ಇದೆ. ದೇಹಾಭಿಮಾನದಲ್ಲಿ ಬರುವುದರಿಂದಲೇ ನ್ಯೂನತೆ ಇರುತ್ತದೆ, ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆ ನ್ಯೂನತೆಗಳಿರುತ್ತವೆ. ಭಿನ್ನ-ಭಿನ್ನವಾಗಿರುವ ವಜ್ರಗಳಿರುತ್ತವೆ. ಅದನ್ನು ಮತ್ತೆ ಮ್ಯಾಗ್ನಿಫೈ ಗ್ಲಾಸ್ (ಭೂತಕನ್ನಡಿ) ನಿಂದ ನೋಡಲಾಗುತ್ತದೆ. ಹೇಗೆ ತಂದೆಯು ಆತ್ಮರಿಗೆ ತಿಳಿಸುತ್ತಾರೆಯೋ ಹಾಗೆಯೇ ಆತ್ಮರೂ (ಮಕ್ಕಳಿಗೆ) ಸಹ ತಿಳಿದುಕೊಳ್ಳಬೇಕಾಗುತ್ತದೆ. ಇದು ರತ್ನವಾಗಿದೆಯಲ್ಲವೆ! ರತ್ನಗಳೇ ನಮಸ್ತೆಗೆ ಯೋಗ್ಯವಾಗಿರುತ್ತದೆ. ಮುತ್ತು, ಮಾಣಿಕ್ಯ, ಪುಖರಾಜ ಮುಂತಾದವುಗಳೆಲ್ಲವೂ ನಮಸ್ತೆಗೆ ಯೋಗ್ಯವಾಗಿದೆ ಆದ್ದರಿಂದ ವಿಭಿನ್ನವಾಗಿರುವ ರತ್ನಗಳನ್ನು ಹಾಕಿರುತ್ತಾರೆ. ನಂಬರ್ವಾರ್ ಪುರುಷಾರ್ಥದನುಸಾರ ಇದೆಯಲವೆ! ಬೇಹದ್ದಿನ ತಂದೆಯು ಅವಿನಾಶಿ ಜ್ಞಾನರತ್ನಗಳ ವ್ಯಾಪಾರಿಯಾಗಿದ್ದಾರೆಂದು ಮಕ್ಕಳು ತಿಳಿದಿದ್ದಾರೆ. ವ್ಯಾಪಾರಿಯೆಂದು ಅವರಿಗೇ ಅವಶ್ಯವಾಗಿ ಹೇಳುತ್ತಾರೆ. ಜ್ಞಾನರತ್ನಗಳನ್ನು ಕೊಡುತ್ತಾರಲ್ಲವೆ! ನಂತರ ಅವರ ರಥವೂ ವಜ್ರದ ವ್ಯಾಪಾರಿಯಾಗಿದ್ದಾರೆ, ಅವರೂ ರತ್ನಗಳ ಬೆಲೆಯನ್ನೂ ತಿಳಿದುಕೊಂಡಿದ್ದಾರೆ. ವಜ್ರಗಳನ್ನು ಬಹಳ ಚೆನ್ನಾಗಿ ಮ್ಯಾಗ್ನಿಫೈ ಗ್ಲಾಸಿನಲ್ಲಿ ನೋಡಲಾಗುತ್ತದೆ. ಇದರಲ್ಲಿ ಎಷ್ಟು ನ್ಯೂನತೆಯಿದೆ, ಇದು ಎಂತಹ ರತ್ನವಾಗಿದೆ, ಎಲ್ಲಿಯವರೆಗೆ ಸೇವಾಧಾರಿಯಾಗಿದ್ದಾರೆ? ಎಂದು ರತ್ನಗಳನ್ನು ನೋಡಲು ಮನಸ್ಸಾಗುತ್ತದೆ. ಒಳ್ಳೆಯ ರತ್ನಗಳಾದರೆ ಅವನ್ನು ಪ್ರೀತಿಯಿಂದ ನೋಡುತ್ತಾರೆ- ಇವು ಬಹಳ ಚೆನ್ನಾಗಿದೆ, ಇವನ್ನು ಚಿನ್ನದ ಡಬ್ಬಿಯಲ್ಲಿಡುವುದಿಲ್ಲ. ಇಲ್ಲಿಯೂ ಸಹ ಅದೇ ವಿಧವಾಗಿ ಬೇಹದ್ದಿನ ರತ್ನಗಳೂ ಆಗುತ್ತಾರೆ. ಪ್ರತಿಯೊಬ್ಬರೂ ನಾನು ಎಂತಹ ವಜ್ರವಾಗಿದ್ದೇನೆಂದು ತಮ್ಮ ಮನಸ್ಸಿನಿಂದ ತಿಳಿದುಕೊಳ್ಳುತ್ತಾರೆ. ನಮ್ಮಲ್ಲಿ ಯಾವುದೇ ಬಲಹೀನತೆಯಿಲ್ಲವೆ? ಹೇಗೆ ವಜ್ರಗಳನ್ನು ಬಹಳ ಚೆನ್ನಾಗಿ ನೋಡಲಾಗುತ್ತದೆ. ಹಾಗೆಯೇ ಇಲ್ಲಿ ಪ್ರತಿಯೊಬ್ಬರನ್ನೂ ನೋಡಲಾಗುತ್ತದೆ, ಚೈತನ್ಯರತ್ನಗಳಾಗಿದ್ದೀರೋ ಇಲ್ಲವೇ? ನಾವು ಇಲ್ಲಿಯವರೆಗೆ ಸಬ್ಜ್ ಪರಿ, ನೀಲಂಪರಿ ಆಗಿದ್ದೇವೆಂದು ಪ್ರತಿಯೊಬ್ಬರೂ ತಮ್ಮನ್ನು ತಾವು ನೋಡಿಕೊಳ್ಳಬೇಕು. ಹೇಗೆ ಹೂಗಳಲ್ಲಿ ಕೆಲವು ಸದಾ ಗುಲಾಬಿ, ಕೆಲವು ಗುಲಾಬಿ, ಕೆಲವು ಹೇಗೋ ಇರುತ್ತವೆ..... ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಪ್ರತಿಯೊಬ್ಬರನ್ನೂ ಬಹಳ ಚೆನ್ನಾಗಿ ತಿಳಿದುಕೊಳ್ಳಬಹುದು. ಇಡೀ ದಿನದಲ್ಲಿ ನಾವು ಏನು ಮಾಡಿದ್ದೇವೆಂದು ನೋಡಿಕೊಳ್ಳಿ. ತಂದೆಯನ್ನು ಎಷ್ಟು ನೆನಪು ಮಾಡಿದೆವು? ಗೃಹಸ್ಥ ವ್ಯವಹಾರದಲ್ಲಿದ್ದು ತಂದೆಯನ್ನು ನೆನಪು ಮಾಡಬೇಕೆಂದು ತಂದೆಯು ತಿಳಿಸುತ್ತಾರೆ. ತಂದೆಯು ನಾರದನಿಗೆ ನಿಮ್ಮ ಮುಖವನ್ನು ನೋಡಿಕೋ ಎಂದು ಹೇಳಿದರು. ಇದು ಒಂದು ಉದಾಹರಣೆಯಾಗಿದೆ. ನೀವು ಮಕ್ಕಳು ಒಬ್ಬೊಬ್ಬರು ತಮ್ಮನ್ನು ಬಹಳ ಚೆನ್ನಾಗಿ ನೋಡಿಕೊಳ್ಳಬೇಕು, ಪರಿಶೀಲನೆ ಮಾಡಿಕೊಳ್ಳಬೇಕು- ಯಾವ ತಂದೆಯಿಂದ ನಾವು ವಜ್ರಸಮಾನ ಆಗುತ್ತಿದ್ದೇವೆಯೋ ಆ ತಂದೆಯ ಜೊತೆ ಎಷ್ಟು ಪ್ರೀತಿಯಿದೆ? ಬೇರೆಕಡೆ ತಮ್ಮ ವೃತ್ತಿಯು ಹೋಗುವುದಿಲ್ಲವೇ? ನನ್ನ ದೈವೀಸ್ವಭಾವ ಎಷ್ಟಿದೆ? ಮನುಷ್ಯರಿಗೆ ಸ್ವಭಾವವು ಬಹಳ ಸತಾಯಿಸುತ್ತದೆ. ಪ್ರತಿಯೊಬ್ಬರಿಗೂ ಮೂರನೆಯ ನೇತ್ರವು ಸಿಕ್ಕಿದೆ ಅದರಿಂದ ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು. ನಾನು ತಂದೆಯ ನೆನಪಿನಲ್ಲಿ ಎಷ್ಟು ಸಮಯ ಇರುತ್ತೇನೆ? ನನ್ನ ನೆನಪು ಅವರಿಗೆ ಎಷ್ಟು ತಲುಪುತ್ತದೆ? ಅವರ ನೆನಪಿನಲ್ಲಿದ್ದು ಒಮ್ಮೆಯೇ ರೋಮಾಂಚನವಾಗಬೇಕು ಆದರೆ ಸ್ವಯಂ ತಂದೆಯೇ ತಿಳಿಸುತ್ತಾರೆ- ಮಾಯೆಯ ವಿಘ್ನವು ಖುಷಿಯಲ್ಲಿ ಬರಲು ಬಿಡುವುದಿಲ್ಲ. ನಾವೀಗ ಪುರುಷಾರ್ಥಿಗಳಾಗಿದ್ದೇವೆಂದು ಮಕ್ಕಳಿಗೆ ಗೊತ್ತಿದೆ. ಫಲಿತಾಂಶವಂತೂ ಕೊನೆಯಲ್ಲಿ ತಿಳಿಯುತ್ತದೆ. ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು. ಕೊರತೆಗಳನ್ನು ನೀವು ಈಗಲೇ ತೆಗೆಯಬಹುದು. ಸಂಪೂರ್ಣ ಪವಿತ್ರ ವಜ್ರವಾಗಬೇಕು. ಒಂದುವೇಳೆ ಸ್ವಲ್ಪ ನ್ಯೂನತೆಯಿದ್ದರೆ ನಮ್ಮ ಬೆಲೆ ಕಡಿಮೆಯಾಗುತ್ತಿದೆ ಎಂದು ತಿಳಿದುಕೊಳ್ಳುತ್ತಾರೆ. ಆತ್ಮವು ರತ್ನವಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸದಾ ಪವಿತ್ರ ಬೆಲೆಯುಳ್ಳ ವಜ್ರವಾಗಬೇಕಾಗಿದೆ. ಹೀಗೆ ಪುರುಷಾರ್ಥ ಮಾಡಿಸಲು ಭಿನ್ನ-ಭಿನ್ನ ರೀತಿಯಾಗಿ ತಂದೆಯು ತಿಳಿಸುತ್ತಾರೆ.
(ಇಂದು ಯೋಗದ ಸಮಯದ ಮಧ್ಯದಲ್ಲಿ ಬಾಪ್ದಾದಾರವರು ಗದ್ದುಗೆಯಿಂದ ಇಳಿದು ಸಭೆಯಲ್ಲಿ ಮಧ್ಯದಲ್ಲಿ ಸುತ್ತುಹಾಕಿ ಒಂದೊಂದು ಮಗುವಿನೊಂದಿಗೆ ನಯನಗಳಿಂದ ಮಿಲನ ಮಾಡುತ್ತಿದ್ದರು) ಇಂದು ತಂದೆಯು ಸಭೆಯ ಮಧ್ಯದಲ್ಲಿ ಏಕೆ ಏಳಬೇಕಾಯಿತು? ಯಾರ್ಯಾರು ಸೇವಾಧಾರಿ ಮಕ್ಕಳಿದ್ದಾರೆಂದು ನೋಡಲು. ಏಕೆಂದರೆ ಒಬ್ಬೊಬ್ಬರು ಒಂದೊಂದುಕಡೆ ಕುಳಿತಿರುತ್ತಾರೆ ಆದ್ದರಿಂದ ಎದ್ದು ಇವರಲ್ಲಿ ಯಾವ ಗುಣವಿದೆ? ಇವರಿಗೆ ಎಷ್ಟು ಪ್ರೀತಿಯಿದೆ? ಎಂದು ನೋಡಿದರು. ಎಲ್ಲಾ ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದಾರೆ ಆದ್ದರಿಂದ ಎಲ್ಲರೂ ಪ್ರಿಯರಾಗಿರುತ್ತಾರೆ ಆದರೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ಪ್ರಿಯರಾಗಿರುತ್ತಾರೆ. ತಂದೆಯೂ ಸಹ ತಿಳಿದುಕೊಂಡಿದ್ದಾರೆ- ಯಾರಲ್ಲಿ ಯಾವ-ಯಾವ ನ್ಯೂನತೆಯಿದೆ? ಏಕೆಂದರೆ ತಂದೆಯು ಯಾರ ಶರೀರದಲ್ಲಿ ಪ್ರವೇಶ ಮಾಡಿದ್ದಾರೆಯೋ ಅವರೂ ಸಹ ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳುತ್ತಾರೆ. ಬಾಪ್ದಾದಾ ಇಬ್ಬರೂ ಜೊತೆಯಿದ್ದಾರೆ. ಎಷ್ಟೆಷ್ಟು ಅನ್ಯರಿಗೆ ಸುಖ ಕೊಡುತ್ತಾರೆ, ಯಾರಿಗೂ ದುಃಖ ಕೊಡುವುದಿಲ್ಲವೋ ಅಂತಹ ಮಕ್ಕಳನ್ನು ಮುಚ್ಚಿಡಲು ಸಾಧ್ಯವಿಲ್ಲ. ಗುಲಾಬಿ, ಮಲ್ಲಿಗೆ ಹೂವನ್ನು ಎಂದಿಗೂ ಮುಚ್ಚಿಡಲು ಆಗುವುದಿಲ್ಲ. ತಂದೆಯು ಎಲ್ಲವನ್ನೂ ಮಕ್ಕಳಿಗೆ ತಿಳಿಸಿ ನಂತರ ಹೇಳುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿದಾಗ ನಿಮ್ಮಲ್ಲಿರುವ ಕಲಬೆರಕೆಯು ಬಿಟ್ಟುಹೋಗುತ್ತದೆ. ಇಡೀ ದಿನ ನೆನಪಿನಲ್ಲಿದ್ದು ಏನೇನು ಮಾಡಿದೆ ಎಂದು ನೋಡಿಕೊಳ್ಳಬೇಕು. ನನ್ನಲ್ಲಿ ಯಾವ ಅವಗುಣವಿದೆ, ಅದರಿಂದ ತಂದೆಯ ಹೃದಯವನ್ನು ಗೆಲ್ಲಲು ಸಾಧ್ಯವಾಗುತ್ತಿಲ್ಲ. ತಂದೆಯ ಹೃದಯವನ್ನು ಗೆಲ್ಲುವುದು ಸಿಂಹಾಸನವನ್ನು ಪಡೆಯುವುದಾಗಿದೆ. ಆದ್ದರಿಂದ ತಂದೆಯು ಬಂದು ಮಕ್ಕಳನ್ನು ನೋಡುತ್ತಾರೆ- ನನ್ನ ಸಿಂಹಾಸನಕ್ಕೆ ಯಾರು-ಯಾರು ಯೋಗ್ಯರಾಗುತ್ತಿದ್ದಾರೆ. ಯಾವಾಗ ಸಮಯ ಸಮೀಪಕ್ಕೆ ಬರುತ್ತದೆಯೋ ಆಗ ಮಕ್ಕಳಿಗೆ ನಾವು ಎಷ್ಟು ಉತ್ತೀರ್ಣರಾಗಿದ್ದೇವೆಂದು ತಕ್ಷಣ ತಿಳಿದುಬಿಡುತ್ತದೆ. ಅನುತ್ತೀರ್ಣರಾಗುವವರಿಗೂ ಮೊದಲೇ ತಿಳಿಯುತ್ತದೆ- ನಮ್ಮ ಅಂಕಗಳು ಕಡಿಮೆಯಿದೆ. ನೀವು ತಿಳಿದುಕೊಂಡಿದ್ದೀರಿ- ನಮಗೆ ಒಳ್ಳೆಯ ಅಂಕಗಳು ಸಿಗುತ್ತದೆ, ನಾವು ಯಾರಿಗೆ ವಿದ್ಯಾರ್ಥಿಗಳಾಗಿದ್ದೇವೆ? ಭಗವಂತನಿಗೆ. ಅವರು ಈ ದಾದಾರವರ ಮೂಲಕ ಓದಿಸುತ್ತಾರೆಂದು ತಿಳಿದಿದ್ದೀರಿ. ಅಂದಾಗ ಎಷ್ಟೊಂದು ಖುಷಿಯಿರಬೇಕು. ಬಾಬಾ ನಮ್ಮನ್ನು ಎಷ್ಟೋಂದು ಪ್ರೀತಿ ಮಾಡುತ್ತಾರೆ, ಎಷ್ಟು ಸಿಹಿಯಾಗಿದ್ದಾರೆ, ಕಷ್ಟವಂತೂ ಏನೂ ಕೊಡುವುದಿಲ್ಲ. ಈ ಚಕ್ರವನ್ನು ನೆನಪು ಮಾಡಿ ಎಂದಷ್ಟೇ ಹೇಳುತ್ತಾರೆ. ವಿಧ್ಯೆ ಏನೂ ಹೆಚ್ಚಿಲ್ಲಾ,ಗುರಿ ಉದ್ಧೇಶ ಸಮ್ಮುಖದಲ್ಲಿದೆ. ನಾವು ಹಾಗೆ ಆಗಬೇಕಾಗಿದೆ ದೈವೀಗುಣಗಳೇ ಗುರಿ ಉದ್ಧೇಶವಾಗಿದೆ. ನೀವು ದೈವೀಗುಣ ಧಾರಣೆ ಮಾಡಿಕೊಂಡು ಇವರಹಾಗೆ ಪವಿತ್ರರಾದಾಗ ಮಾಲೆಯಲ್ಲಿ ಪೋಣಿಸಲ್ಪಡುವಿರಿ. ಬೇಹದ್ದಿನ ತಂದೆ ನಮಗೆ ಓದಿಸುತ್ತಿದ್ದಾರೆ ಅಂದಾಗ ಖುಷಿಯಾಗುತ್ತದೆಯಲ್ಲವೆ. ತಂಎ ಅವಶ್ಯವಾಗಿ ತನ್ನ ಸಮಾನ ಪವಿತ್ರ ಜ್ಞಾನ ಸಂಪೂರ್ಣರನ್ನಾಗಿ ಮಾಡುತ್ತಾರೆ. ಇದರಲ್ಲಿ ಪವಿತ್ರತೆ ಸುಖ,ಶಾಂತಿ ಎಲ್ಲವೂ ಬಂದುಬಿಡುತ್ತದೆ. ಈಗ ಯಾರೂ ಪರಿಪೂರ್ಣರಾಗಿಲ್ಲ ಅಂತ್ಯದಲ್ಲಿ ಆಗಬೇಕಿದೆ. ಅದಕ್ಕಾಗಿ ಪುರುಷಾರ್ಥ ಮಡಬೇಕು. ತಂದೆಯನ್ನಂತೂ ಎಲ್ಲರೂ ಪ್ರೀತಿ ಮಾಡುತ್ತಾರೆ. ತಂದೆ ಎಂದು ಹೇಳಿದಾಗ ಹೃದಯ ಅರಳಿಬಿಡುತ್ತದೆ. ತಂದೆಯಿಂದ ಎಷ್ಟು ದೊಡ್ಡ ಆಸ್ತಿಯು ಸಿಗುತ್ತಿದೆ ಆದ್ದರಿಂದ ತಂದೆಯ ವಿನಃ ಬೇರೆಲ್ಲಿಗೂ ನಮ್ಮ ಮನಸ್ಸು ಹೋಗುವುದಿಲ್ಲ. ತಂದೆಯ ನೆನಪು ಬಹಳ ಸತಾಯಿಸಬೇಕು. ಬಾಬಾ, ಬಾಬಾ, ಬಾಬಾ.... ಎಂದು ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ರಾಜನ ಮಗನಾದರೆ ಅವನಿಗೆ ರಾಜ್ಯದ ನಶೆಯಿರುತ್ತದೆ. ಈಗಂತೂ ರಾಜರಿಗೆ ಗೌರವವೇ ಇಲ್ಲ. ಯಾವಾಗ ಬ್ರಿಟೀಷ್ ಸರ್ಕಾರವಿತ್ತು ಆಗ ಬಹಳ ಗೌರವವಿತ್ತು, ವೈಸರಾಯ ಬಿಟ್ಟು ಎಲ್ಲರೂ ಅವರಿಗೆ ನಮಸ್ಕಾರ ಮಾಡುತ್ತಿದ್ದರು. ಈಗ ಅವರ ಸ್ಥಿತಿ ಏನಾಗಿಬಿಟ್ಟಿದೆ! ಇದನ್ನು ನೀವೂ ತಿಳಿದುಕೊಂಡಿದ್ದೀರಿ. ಅವರ್ಯಾರೂ ಬಂದು ರಾಜಪದವಿಯನ್ನು ತೆಗೆದುಕೊಳ್ಳುವುದಿಲ್ಲ.
ತಂದೆಯು ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ, ಬಡವರು ತಂದೆಯನ್ನು ತಕ್ಷಣ ತಿಳಿದುಕೊಂಡುಬಿಡುತ್ತಾರೆ. ಇದೆಲ್ಲವೂ ತಂದೆಯದೇ ಎಂದು ತಿಳಿದುಕೊಳ್ಳುತ್ತಾರೆ. ಅವರ ಶ್ರೀಮತದಂತೆಯೇ ಎಲ್ಲವನ್ನೂ ಮಾಡುತ್ತೇವೆ. ಶ್ರೀಮಂತರಿಗಂತೂ ತಮ್ಮ ಹಣದ ನಶೆಯಿರುತ್ತದೆ, ಅವರು ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡುವುದಿಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ- ನಾನು ಬಡವರ ಬಂಧುವಾಗಿದ್ದೇನೆ ಬಾಕಿ ಹಾ! ಶ್ರೀಮಂತರನ್ನು ಮೇಲೆತ್ತಬೇಕಾಗುವುದು ಏಕೆಂದರೆ ಅಂತಹವರು ಬರುವಕಾರಣ ಬಡವರು ತಕ್ಷಣ ಬರುತ್ತಾರೆ. ಗಣ್ಯವ್ಯಕ್ತಿಗಳು ಬರುವ ಕಾರಣ ಬಡವರು ಬಂದು ಬಿಡುತ್ತಾರೆ ಆದರೆ ಬಡವರು ಬಹಳ ಭಯಪಡುತ್ತಾರೆ. ಒಂದುದಿನ ಅವರೆಲ್ಲರೂ ನಿಮ್ಮ ಬಳಿ ಬರುತ್ತಾರೆ, ಅಂಥಹ ದಿನವೂ ಬರುತ್ತದೆ. ನಂತರ ನೀವು ಅವರಿಗೆ ತಿಳಿಸಿದರೆ ಬಹಳ ಖುಷಿಯಾಗುತ್ತದೆ. ಒಮ್ಮೆಲೆ ತಂದೆಗೆ ಅರ್ಪಣೆಯಾಗಿಬಿಡುತ್ತಾರೆ, ಅವರಿಗಾಗಿ ನೀವು ವಿಶೇಷ ಸಮಯ ಕೊಡುತ್ತೀರಿ. ಮಕ್ಕಳ ಮನಸ್ಸಿನಲ್ಲಿ ನಾವು ಎಲ್ಲರನ್ನೂ ಉದ್ಧಾರ ಮಾಡಬೇಕು ಎಂದಿದೆ. ಅವರೂ (ಬಡವರು) ಸಹ ಓದಿ ದೊಡ್ಡ-ದೊಡ್ಡ ಅಧಿಕಾರಿಗಳಾಗಿಬಿಡುತ್ತಾರಲ್ಲವೆ. ಇದು ಈಶ್ವರೀಯ ಮಿಷನ್ (ಸಂಸ್ಥೆ) ಆಗಿದೆ. ನೀವು ಎಲ್ಲರ ಉದ್ಧಾರ ಮಾಡಬೇಕು. ಭಿಲ್ಲಣಿಯ ಮನೆಯಲ್ಲಿ ಬೇರ್ ಹಣ್ಣನ್ನು ತಿಂದರು....... ಎಂಬ ಗಾಯನವಿದೆ ವಿವೇಕವೂ ಹೇಳುತ್ತದೆ- ದಾನವನ್ನೂ ಸಹ ಬಡವರಿಗೆ ಕೊಡಲಾಗುತ್ತದೆ ಆದರೆ ಶ್ರೀಮಂತರಿಗೆ ದಾನ ಮಾಡುವುದಿಲ್ಲ. ಮುಂದೆ ಹೋದಂತೆ ಎಲ್ಲವನ್ನೂ ಮಾಡಬೇಕು ಆದರೆ ಇದರಲ್ಲಿ ಯೋಗಬಲ ಬೇಕಾಗಿದೆ. ಯೋಗಬಲದಿಂದ ಆಕರ್ಷಣೆಯಾಗುತ್ತದೆ. ಯೋಗಬಲ ಕಡಿಮೆಯಿರಲು ದೇಹಾಭಿಮಾನವೇ ಕಾರಣವಾಗಿದೆ. ಪ್ರತಿಯೊಬ್ಬರೂ ತಮ್ಮ ಮನಸ್ಸನ್ನು ಕೇಳಿಕೊಳ್ಳಿ- ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ? ನಾವು ಎಲ್ಲಿಯೂ ಸಿಕ್ಕಿಹಾಕಿಕೊಳ್ಳುವುದಿಲ್ಲವೆ? ಯಾರನ್ನೇ ನೋಡಿದರೂ ಚಂಚಲವಾಗದಂತೆ ನಮ್ಮ ಸ್ಥಿತಿಯಿರಬೇಕಾಗಿದೆ. ತಂದೆಯ ಆಜ್ಞೆಯಾಗಿದೆ- ದೇಹಾಭಿಮಾನಿ ಆಗಬಾರದು. ಆತ್ಮನಿಗೆ ನಾವು ಸಹೋದರ-ಸಹೋದರಾಗಿದ್ದೇವೆಂದು ತಿಳಿದಿದೆ. ದೇಹದ ಎಲ್ಲಾ ಧರ್ಮಗಳನ್ನು ಬಿಡಬೇಕಾಗಿದೆ. ಅಂತ್ಯದಲ್ಲಿ ಯಾರದೇ ನೆನಪು ಬಂದಿತೆಂದರೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ನಿಮ್ಮ ಸ್ಥಿತಿಯನ್ನು ಬಹಳ ಶಕ್ತಿಶಾಲಿಯನ್ನಾಗಿ ಮಾಡಿಕೊಳ್ಳಬೇಕು ಹಾಗೂ ಸೇವೆಯನ್ನೂ ಮಾಡಬೇಕು. ಇಂಥಹ ಸ್ಥಿತಿಯನ್ನು ಮಾಡಿಕೊಂಡಾಗ ಪದವಿಯು ಸಿಗುತ್ತದೆಯೆಂದು ಮನಸ್ಸಿನಲ್ಲಿ ತಿಳಿದುಕೊಳ್ಳಬೇಕು. ತಂದೆಯಂತೂ ಬಹಳ ಚೆನ್ನಾಗಿ ತಿಳಿಸುತ್ತಾರೆ. ಸೇವೆಯೂ ಸಹ ಬಹಳ ಇದೆ. ನಿಮ್ಮಲ್ಲಿಯೂ ಶಕ್ತಿಯಿದ್ದಾಗ ಅವರಿಗೆ ಆಕರ್ಷಣೆಯಾಗುತ್ತದೆ. ಅನೇಕ ಜನ್ಮಗಳ ತುಕ್ಕು ಹಿಡಿದಿದೆ ಎಂಬ ಚಿಂತೆಯು ಬ್ರಾಹ್ಮಣರಿಗಿರಬೇಕು. ಎಲ್ಲಾ ಆತ್ಮರನ್ನೂ ಪಾವನ ಮಾಡಬೇಕು. ಮನುಷ್ಯರಂತೂ ತಿಳಿದುಕೊಂಡಿಲ್ಲ, ನೀವು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದಿದ್ದೀರಿ. ತಂದೆಯು ಎಲ್ಲಾ ಮಾತುಗಳನ್ನೂ ತಿಳಿಸುತ್ತಾರೆ. ನಾವು ನಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಹೇಗೆ ತಂದೆಯು ಬೇಹದ್ದಿನಲ್ಲಿದ್ದಾರೆ ಹಾಗೆಯೇ ಮಕ್ಕಳೂ ಸಹ ಬೇಹದ್ದಿನ ಚಿಂತೆ ಮಾಡಬೇಕು. ತಂದೆಗೆ ಆತ್ಮಗಳೊಂದಿಗೆ ಎಷ್ಟೊಂದು ಪ್ರೀತಿಯಿದೆ! ಇಷ್ಟೂ ದಿನ ಇಷ್ಟೊಂದು ಪ್ರೀತಿಯು ಏಕೆ ಇರಲಿಲ್ಲ? ಏಕೆಂದರೆ ನ್ಯೂನತೆಉಳ್ಳವರಾಗಿದ್ದರು. ಪತಿತ ಆತ್ಮರನ್ನು ಏನು ಪ್ರೀತಿ ಮಾಡುತ್ತೀರಿ? ಈಗಂತೂ ತಂದೆಯು ಎಲ್ಲರನ್ನೂ ಪತಿತರಿಂದ ಪಾವನರನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ಅವಶ್ಯವಾಗಿ ಲವ್ಲೀನ ಆಗಬೇಕು. ತಂದೆಯು ಅತಿಪ್ರಿಯರಾಗಿದ್ದಾರೆ, ಮಕ್ಕಳನ್ನು ತುಂಬಾ ಆಕರ್ಷಣೆ ಮಾಡುತ್ತಾರೆ. ದಿನೇ-ದಿನೇ ಎಷ್ಟೊಂದು ಪವಿತ್ರರಾಗುತ್ತಾ ಹೋಗುತ್ತೀರಿ, ನಿಮಗೆ ಬಹಳ ಪ್ರೀತಿ ಸಿಗುತ್ತದೆ. ತಂದೆಯಲ್ಲಿ ಬಹಳ ಪ್ರೀತಿಯಿದೆ, ತಂದೆಯ ಪ್ರೀತಿ ಇಷ್ಟೊಂದು ಆಕರ್ಷಣೆ ಮಾಡುತ್ತದೆ ಅದು ಇಲ್ಲಿರಲು ಬಿಡುವುದಿಲ್ಲ. ನಿಮ್ಮ ಸ್ಥಿತಿಯು ನಂಬರ್ವಾರ್ ಪುರುಷಾರ್ಥದನುಸಾರ ಹೀಗೆ ಆಗಿಬಿಡುತ್ತದೆ, ಇಲ್ಲಿ ತಂದೆಯನ್ನು ನೀವು ನೋಡುತ್ತಿರುವಂತೆ ಸಾಕು!...... ನಾನು ಈಗಲೇ ಹೋಗಿ ತಂದೆಯನ್ನು ಮಿಲನ ಮಾಡಬೇಕು. ಇಂತಹ ತಂದೆಯಿಂದ ಎಂದಿಗೂ ದೂರವಾಗಬಾರದು. ಹಾಗೆಯೇ ತಂದೆಗೆ ಮಕ್ಕಳ ಆಕರ್ಷಣೆಯಾಗುತ್ತದೆ,ಈ ಮಗುವಿನದಂತೂ ಚಮತ್ಕಾರವಿದೆ, ಇವರು ಬಹಳ ಸೇವೆ ಮಾಡುತ್ತಾರೆ. ಹಾ! ಸ್ವಲ್ಪ ಬಲಹೀನತೆಯೂ ಇದೆ ಆದರೆ ಸ್ಥಿತಿಗನುಗುಣವಾಗಿ ಸಮಯದಲ್ಲಿ ಸೇವೆಯನ್ನು ಚೆನ್ನಾಗಿ ಮಾಡುತ್ತಾರೆ. ಯಾರಿಗಾದರೂ ದುಃಖಕೊಡುವಂತಹ ವ್ಯಕ್ತಿಯ ಹಾಗೆ ಕಾಣುತ್ತಿಲ್ಲ, ಖಾಯಿಲೆ ಮೊದಲಾದವುಗಳು ನಮ್ಮ ಕರ್ಮಭೋಗವಾಗಿದೆ. ಸ್ವಯಂ ಸಹ ತಿಳಿದುಕೊಳ್ಳುತ್ತೇವೆ- ಇಲ್ಲಿ ಇರುವತನಕ ಒಂದಲ್ಲಒಂದು ಆಗುತ್ತಿರುತ್ತದೆ. ಇವರು ತಂದೆಯ ರಥವಾಗಿದ್ದರೂ ಸಹ ಅಂತ್ಯದವರೆಗೂ ಕರ್ಮಭೋಗವನ್ನು ಭೋಗಿಸಬೇಕು. ಇವರ ಮೇಲೆ ಆಶೀರ್ವಾದ ಮಾಡಬಹುದಲ್ಲ ಎಂದು ನಿರ್ಣಯ ತೆಗೆದುಕೊಳ್ಳಬಾರದು. ಇವರೂ ಸಹ ಪುರುಷಾರ್ಥವನ್ನು ಮಾಡಬೇಕು. ಹಾ!..... ರಥವನ್ನು ಕೊಟ್ಟಿರುವಕಾರಣ ಅವರನ್ನು ಸ್ವಲ್ಪ ಮುಂದಿಡುತ್ತೇನೆ. ಬಹಳ ಬಂಧನದಲ್ಲಿರುವವರು ಹೇಗೆ ಬರುತ್ತಾರೆ! ಹೇಗೆ ಯುಕ್ತಿಯಿಂದ ಬಿಡುಗಡೆಹೊಂದಿ ಬರುತ್ತಾರೆ, ಅವರಿಗೆ ಎಷ್ಟು ಪ್ರೀತಿಯಿರುತ್ತದೆಯೆಂದರೆ ಅಷ್ಟು ಪ್ರೀತಿ ಬೇರೆ ಯಾರಿಗೂ ಇರುವುದಿಲ್ಲ. ಕೆಲವರಿಗಂತೂ ಸ್ವಲ್ಪವೂ ಪ್ರೀತಿಯಿಲ್ಲ. ಆ ಬಂಧನದಲ್ಲಿರುವವರ ಪ್ರೀತಿಯನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ. ಬಂಧನದಲ್ಲಿರುವವರ ಯೋಗ ಎಂದೂ ಕಡಿಮೆಯೆಂದು ತಿಳಿಯಬಾರದು. ನೆನಪಿನಲ್ಲಿ ಬಹಳ ಅಳುತ್ತಾರೆ. ಬಾಬಾ ಓ ಬಾಬಾ ನಾವು ನಿಮ್ಮೊಂದಿಗೆ ಯಾವಾಗ ಮಿಲನ ಮಾಡುತ್ತೇವೆ? ಬಾಬಾ ವಿಶ್ವದ ಮಾಲೀಕರನ್ನಾಗಿ ಮಾಡುವ ಬಾಬಾ ನಾವು ನಿಮ್ಮನ್ನು ಹೇಗೆ ಮಿಲನ ಮಾಡುವುದು? ಈ ರೀತಿ ಬಂಧನದಲ್ಲಿರುವವರು ಆನಂದಬಾಷ್ಫಗಳನ್ನು ಸುರಿಸುತ್ತಾರೆ. ಅದು ಅವರ ದುಃಖದ ಕಣ್ಣೀರಲ್ಲ, ಅದು ಪ್ರೀತಿಯ ಕಣ್ಣೀರು ಮುತ್ತುಗಳಾಗಿಬಿಡುತ್ತವೆ. ಅಂತಹ ಬಂಧನದಲ್ಲಿರುವವರ ಯೋಗ ಕಡಿಮೆಯಿರುತ್ತದೆಯೇನು? ನೆನಪಿನಲ್ಲಿ ಬಹಳ ಚಡಪಡಿಸುತ್ತಾರೆ- ಓ ಬಾಬಾ ನಾವು ನಿಮ್ಮ ಜೊತೆ ಯಾವಾಗ ಮಿಲನ ಮಾಡುತ್ತೇವೆ? ಎಲ್ಲರ ದುಃಖವನ್ನು ದೂರ ಮಾಡುವ ತಂದೆಯೇ! ತಂದೆಯು ತಿಳಿಸುತ್ತಾರೆ- ನೀವು ಎಷ್ಟು ಸಮಯ ನೆನಪಿನಲ್ಲಿರುತ್ತೀರಿ ಆಗ ಸೇವೆಯನ್ನೂ ಮಾಡುತ್ತೀರಿ. ಭಲೇ ಯಾವುದೇ ಬಂಧನದಲ್ಲಿರಬಹುದು, ಸ್ವಯಂ ಸೇವೆ ಮಾಡದೇ ಇರಬಹುದು ಆದರೆ ನೆನಪಿನಲ್ಲಿಯೇ ಅವರಿಗೆ ಶಕ್ತಿ ಸಿಗುತ್ತದೆ, ನೆನಪಿನಲ್ಲಿಯೇ ಎಲ್ಲವೂ ತುಂಬಿದೆ. ಚಡಪಡಿಸುತ್ತಾರೆ, ಓ ಬಾಬಾ ನಿಮ್ಮೊಂದಿಗೆ ಮಿಲನ ಮಾಡುವ ಅವಕಾಶ ಯಾವಾಗ ಸಿಗುತ್ತದೆ? ಎಷ್ಟೊಂದು ನೆನಪಿನಲ್ಲಿರುತ್ತಾರೆ. ಮುಂದೆಹೋದಂತೆ ದಿನ-ಪ್ರತಿದಿನ ನಿಮಗೆ ಬಹಳ ಆಕರ್ಷಣೆಯಾಗುತ್ತಿರುತ್ತದೆ. ಸ್ನಾನ ಮಾಡುತ್ತಾ, ಕೆಲಸ ಮಾಡುತ್ತಾ ನೆನಪಿನಲ್ಲಿರುತ್ತೀರಿ. ಓ ಬಾಬಾ, ಬಂಧನ ಸಮಾಪ್ತಿಯಾಗುವ ದಿನ ಯಾವಾಗ ಬರುತ್ತದೆ? ಅಸಹಾಯಕರು ಕೇಳುತ್ತಿರುತ್ತಾರೆ- ಬಾಬಾ, ಇವರು ನನಗೆ ಬಹಳ ಕಷ್ಟವನ್ನು ಕೊಡುತ್ತಿರುತ್ತಾರೆ, ಏನು ಮಾಡಲಿ? ಮಕ್ಕಳನ್ನು ಬೈಯಬಹುದೇ? ಪಾಪವಾಗುವುದಿಲ್ಲವೇ? ತಂದೆಯು ತಿಳಿಸುತ್ತಾರೆ- ಇಂದಿನ ಮಕ್ಕಳು ಈ ರೀತಿಯಿದ್ದಾರೆ ಅದನ್ನು ಕೇಳಲೇಬೇಡಿ. ಕೆಲವರಿಗೆ ಪತಿಯಿಂದ ದುಃಖವಾಗುತ್ತದೆ ಆಗ ಮನಸ್ಸಿನಲ್ಲಿ ಯೋಚಿಸುತ್ತಾರೆ- ಯಾವಾಗ ಇದರಿಂದ ಬಿಡುಗಡೆಯಾಗಿ ಮುಕ್ತರಾಗಿ ತಂದೆಯೊಂದಿಗೆ ಮಿಲನ ಮಾಡುತ್ತೇವೆ? ಸಾಕು, ಬಾಬಾ-ಬಾಬಾ ಎಂದು ಹೇಳುತ್ತಿರುತ್ತಾರೆ ಅಂದಾಗ ಅವರೊಂದಿಗೆ ಆಕರ್ಷಣೆಯಾಗುತ್ತದೆಯಲ್ಲವೆ. ಅಬಲೆಯರು ಬಹಳ ಸಹನೆ ಮಾಡಿಕೊಳ್ಳುತ್ತಿರುತ್ತಾರೆ. ತಂದೆಯು ಮಕ್ಕಳಿಗೆ ಧೈರ್ಯ ಕೊಡುತ್ತಾರೆ- ಮಕ್ಕಳೇ, ನೀವು ತಂದೆಯನ್ನು ನೆನಪು ಮಾಡುತ್ತೀರಿ, ಆಗ ನಿಮ್ಮ ಬಂಧನಗಳು ಸಮಾಪ್ತಿಯಾಗುತ್ತವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಬೇಕು- ನಮ್ಮಲ್ಲಿ ಯಾವುದೇ ಅವಗುಣವಿಲ್ಲವೆ? ನಮ್ಮ ನೆನಪು ತಂದೆಯವರಿಗೆ ಎಷ್ಟು ತಲುಪುತ್ತದೆ? ನಮ್ಮ ಸ್ವಭಾವ ದೈವೀಸ್ವಭಾವವಾಗಿದೆಯೇ? ವೃತ್ತಿ ಬೇರೆ ಕಡೆ ಅಲೆದಾಡುವುದಿಲ್ಲವೇ?
2. ತಂದೆಗೆ ಆಕರ್ಷಣೆಯಾಗುವಷ್ಟು ನಾವು ಪ್ರಿಯರಾಗಬೇಕು. ಎಲ್ಲರಿಗೂ ಸುಖ ಕೊಡಬೇಕು. ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು.
ಓಂ ಶಾಂತಿ. ಮಕ್ಕಳು ಗೀತೆಯ ಒಂದು ಸಾಲನ್ನು ಕೇಳಿದಿರಿ. ಒಂದು ಕಡೆ ಇಡೀ ಪ್ರಪಂಚವಿದೆ ಅಂದರೆ ಭಕ್ತಿಮಾರ್ಗದವರು ಇದ್ದಾರೆ ಮತ್ತೊಂದು ಕಡೆ ನೀವು ಜ್ಞಾನ ಮಾರ್ಗದವರು ಇದ್ದೀರಿ. ಅವರು ಭಕ್ತಿಯ ಏಣಿಯನ್ನು ಹತ್ತುತ್ತಿರುತ್ತಾರೆ ಮತ್ತು ನೀವು ಮಕ್ಕಳು ಜ್ಞಾನದ ಏಣಿಯನ್ನು ಹತ್ತುತ್ತೀರಿ. ಮಕ್ಕಳಿಗೆ ತಿಳಿದಿದೆ ಅರ್ಧಕಲ್ಪದಿಂದ ಭಕ್ತಿಯ ಏಣಿಯನ್ನು ಹತ್ತಲಾಗುತ್ತದೆ. ಭಕ್ತಿಯು ಸಹ ಮೊದಲು ಅವ್ಯಭಿಚಾರಿ ಆಗಿರುತ್ತದೆ. ನಂತರ ಕೊನೆಯಲ್ಲಿ ವ್ಯಭಿಚಾರಿ ಆಗುತ್ತದೆ. ಮನುಷ್ಯರು ಸಂಪೂರ್ಣ ಅಂಧಶ್ರದ್ಧೆಯಲ್ಲಿ ಬಂದು ಬಿಡುತ್ತಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ. ನಾವು ಅಂಧಕಾರದಲ್ಲಿ ಇದ್ದೇವೆ. ಸದ್ಗುರು ಇಲ್ಲದಿದ್ದರೆ ಘೋರ ಅಂಧಕಾರ ಎಂದು ಹಾಡುತ್ತಾರೆ. ಗುರುಗಳಂತೂ ಇಲ್ಲಿ ಅನೇಕರಿದ್ದಾರೆ. ಹಾಗಾದರೆ ಸತ್ಯವಾದ ಗುರು ಯಾರು? ಸಾಧು-ಸಂತ ಮಹಾತ್ಮ, ಭಕ್ತ ಮೊದಲಾದವರೆಲ್ಲರೂ ಸಾಧನೆ ಮಾಡುತ್ತಾರೆ ಅಥವಾ ನೆನಪು ಮಾಡುತ್ತಾರೆ. ಶಾಸ್ತ್ರ-ವೇದ-ಉಪನಿಷತ್ತು ಇತ್ಯಾದಿಗಳನ್ನು ಓದುತ್ತಾರೆ ಆದರೂ ಮತ್ತೆ ಹೇಳುತ್ತಾರೆ - ಭಗವಂತನು ಬಂದಾಗಲೇ ನಮ್ಮ ಸದ್ಗತಿ ಮಾಡುವರು ಎಂದು. ಸದ್ಗತಿ ದಾತನಿಗೆ ಪತಿತ ಪಾವನ ಎಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳು ಘೋರ ಅಂಧಕಾರದಲ್ಲಿ ಇಲ್ಲ. ನೀವು ಜ್ಞಾನದ ಬೆಳಕಿನೆಡೆಗೆ ಬಂದಿದ್ದೀರಿ. ಪತಿತ ಪಾವನ ತಂದೆಯನ್ನು ಅರಿತುಕೊಂಡಿದ್ದೀರಿ ಹಾಗೂ ಅವರನ್ನು ನೆನಪು ಮಾಡುತ್ತೀರಿ. ಯಾವ ಮಗು ಎಷ್ಟು ನೆನಪು ಮಾಡುವರೋ ಮತ್ತು ಜ್ಞಾನದ ಧಾರಣೆ ಮಾಡಿಕೊಳ್ಳುವರೋ ಅಷ್ಟು ಅವರ ಅಜ್ಞಾನ ಅಂಧಕಾರವು ವಿನಾಶ ಆಗುತ್ತದೆ. ಬೆಳಕಿನೆಡೆಗೆ ಕರೆದುಕೊಂಡು ಹೋಗುವರು ಒಬ್ಬ ತಂದೆ ಆಗಿದ್ದಾರೆ. ಜ್ಞಾನ ಅಂಜನವನ್ನು ಸದ್ಗುರು ಕೊಟ್ಟರು... ಎಂದು ಹೇಳುತ್ತಾರೆ. ಇದು ಯಾವುದೇ ಕಾಡಿಗೆ ಅಲ್ಲ ಜ್ಞಾನದ ಮಾತಾಗಿದೆ. ಜ್ಞಾನದ ಜೊತೆ ಯೋಗವು ಇದೆ. ಮನುಷ್ಯರು ಭಕ್ತಿಯನ್ನು ಕಲಿಸುತ್ತಾರೆಂದರೆ ಅವರೊಂದಿಗೂ ಯೋಗವಿರುತ್ತದೆ. ಈಗ ನೀವು ಮಕ್ಕಳ ಬುದ್ಧಿಯೋಗವು ನಿರಾಕಾರ ಪರಮಪಿತ ಪರಮಾತ್ಮನ ಜೊತೆ ಜೋಡಿಸಲ್ಪಟ್ಟಿದೆ. ನೀವು ಮಕ್ಕಳಲ್ಲೂ ನಂಬರ್ವಾರ್ ಇದ್ದಾರೆ. ಇಡೀ ವಿಶ್ವದಲ್ಲಿ ನಿಮ್ಮ ವಿನಃ ಮತ್ತ್ಯಾವ ಮನುಷ್ಯ ಮಾತ್ರರ ಬುದ್ಧಿಯೋಗವು ಪರಮಪಿತ ಪರಮಾತ್ಮ ಸರ್ವಶಕ್ತಿವಂತನ ಜೊತೆ ಇಲ್ಲ. ನೀವು ತಂದೆ ಹಾಗೂ ಮುಕ್ತಿ-ಜೀವನ್ಮುಕ್ತಿಧಾಮದೊಂದಿಗೆ ಯೋಗವನ್ನು ಇಡಬೇಕಾಗುತ್ತದೆ. ಒಳ್ಳೆಯ ದೈವೀ ಮ್ಯಾನರ್ಸ್ ಬೇಕಾಗಿದೆ. ಈ ಸಮಯದಲ್ಲಿ ಎಲ್ಲರದೂ ಆಸುರಿ ನಡವಳಿಕೆಯಾಗಿದೆ. ಪರಮಪಿತ ಪರಮಾತ್ಮನ ಗುಣಗಾನ ಮಾಡಲಾಗುತ್ತದೆ ಏಕೆಂದರೆ ಅವರು ಮನುಷ್ಯ ಸೃಷ್ಟಿಯ ಬೀಜ ರೂಪ, ಸತ್ಯ, ಚೈತನ್ಯನಾಗಿದ್ದಾರೆ, ಆನಂದ ಸಾಗರ, ಜ್ಞಾನ ಸಾಗರನಾಗಿದ್ದಾರೆ. ಸದಾ ಕಾಲಕ್ಕಾಗಿ ಪವಿತ್ರತೆಯ ಸಾಗರನಾಗಿದ್ದಾರೆ. ಅವರದು ಇದು ಅವಿನಾಶಿ ಪದವಿಯಾಗಿದೆ ಮತ್ತ್ಯಾವುದೇ ಮನುಷ್ಯರ ಪದವಿಯು ಅವಿನಾಶಿ ಆಗಿರುವುದಿಲ್ಲ. ಭಲೆ ನೀವೀಗ ಜ್ಞಾನ ಸಾಗರ, ಪವಿತ್ರತೆಯ ಸಾಗರರಾಗುತ್ತೀರಿ ಆದರೆ ಅಲ್ಪಕಾಲಕ್ಕಾಗಿ. ತಂದೆಯು ಹೇಳುತ್ತಾರೆ - ನಾನು ಬೇಹದ್ದಿನ ಸಾಗರನಾಗಿದ್ದೇನೆ, ನಿಮ್ಮನ್ನು ಬೇಹದ್ದಿನವರನ್ನಾಗಿ ಮಾಡಲು ಸಾಧ್ಯವಿಲ್ಲ. ಹಾಗಿದ್ದರೆ ಸೃಷ್ಟಿಯ ನಾಟಕವು ಹೇಗೆ ನಡೆಯುತ್ತದೆ. 84 ಜನ್ಮಗಳನ್ನು ಹೇಗೆ ಪಡೆಯುತ್ತೀರಿ? ಆದ್ದರಿಂದ ನೀವು ಸದಾ ಪಾವನರಾಗಲು ಸಾಧ್ಯವಿಲ್ಲ. ಕೇವಲ 21 ಜನ್ಮಗಳಿಗಾಗಿ ಪಾವನರಾಗುತ್ತೀರಿ. ಇದಕ್ಕೆ 21 ಪೀಳಿಗೆ ಎಂದು ಬರೆಯಲಾಗಿದೆ. ನೀವು ಸದಾ ಕಾಲಕ್ಕಾಗಿ ಪಾವನರಾಗುವುದು ಈ ಡ್ರಾಮಾದಲ್ಲಿ ನಿಯಮವಿಲ್ಲ. ನಾನು ಸದಾ ಪಾವನನಾಗಿದ್ದೇನೆ. ಪರಮಧಾಮದಲ್ಲಿ ಇರುತ್ತೇನೆ. ನನ್ನ ಬಳಿ ಜ್ಞಾನ-ಪವಿತ್ರತೆ, ಮುಂತಾದ ಖಜಾನೆಗಳಿವೆ. ನೀವು ಇದನ್ನು ಮರೆತು ಹೋಗುತ್ತೀರಿ, ಆದ್ದರಿಂದ ಈ ಸಮಯದಲ್ಲಿ ತಂದೆಯು ಬಂದು ಮಕ್ಕಳನ್ನು ಘೋರ ಅಂಧಕಾರದಿಂದ ತೆಗೆದು ಜ್ಞಾನ ಮತ್ತು ಯೋಗದಿಂದ ಪವಿತ್ರರನ್ನಾಗಿ ಮಾಡುತ್ತಾರೆ. ನಾನು ಪರಮಧಾಮದಿಂದ ಬಂದಿದ್ದೇನೆ. ಈಗ ನನ್ನನ್ನು ನೆನಪು ಮಾಡಿರಿ ಎಂದು ತಂದೆಯ ವಿನಃ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಈ ನನ್ನ ಮಹಾವಾಕ್ಯಗಳನ್ನು ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ. ನಾನು ಬರುವುದೇ ನೀವು ಮಕ್ಕಳನ್ನು 21 ಜನ್ಮಗಳಿಗೆ ರಾಜರಿಗೂ ರಾಜರನ್ನಾಗಿ ಮಾಡಲು ಅಂದಮೇಲೆ ಆಗಬೇಕಯಲ್ಲವೇ. ಯಾರು ಕಲ್ಪದ ಮೊದಲು ಆಗಿದ್ದರೋ ಅವರೇ ಆಗುವರು. ಎಷ್ಟು ಮಂದಿ ಪವಿತ್ರರಾಗುತ್ತಾರೆ, ಎಷ್ಟು ಮಂದಿ ಅಜಾಮಿಳರಂತಹ ಪಾಪಿಗಳಾಗುತ್ತಾರೆ, ಎಷ್ಟು ಅಶುದ್ಧ ಮೈಲಿಗೆ ಆಗಿ ಬಿಡುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೈಲಿಗೆ ವಸ್ತ್ರಗಳನ್ನು ತಂದೆಯೇ ಬಂದು ಸ್ವಚ್ಛ ಮಾಡಬೇಕಾಗುತ್ತದೆ. ಆತ್ಮವೇ ಮೈಲಿಗೆ ಆಗುತ್ತದೆ. ತಂದೆಯು ಆತ್ಮರಿಗೇ ತಿಳಿಸುತ್ತಾರೆ - ಮಾಯಾರಾವಣನು ನಿಮ್ಮನ್ನು ಎಷ್ಟೊಂದು ಮೈಲಿಗೆಯನ್ನಾಗಿ ಮಾಡಿ ಬಿಟ್ಟಿದ್ದಾನೆ. ಕೇವಲ ಇದು ಒಂದು ಜನ್ಮದ ಮಾತಲ್ಲ. ಜನ್ಮ-ಜನ್ಮಾಂತರದ ಮಾತಾಗಿದೆ, ಇಂತಹ ಆತ್ಮರನ್ನು ಸ್ವಚ್ಛ ಮಡಲು ಲಕ್ಷ್ಯದ ಸೋಪನ್ನು (ಗುರಿ) ಕೊಡುತ್ತೇನೆ. ಮಕ್ಕಳೇ ನನ್ನನ್ನು ನೆನಪು ಮಾಡಿದಾಗ ನಂದಿ ಹೋಗುತ್ತಿರುವ ನೀವು ಆತ್ಮರು ಈ ಯೋಗದಿಂದ ಮತ್ತೆ ಜಾಗೃತರಾಗುವಿರಿ ಆದರೆ ಎಷ್ಟೆಷ್ಟು ನನ್ನನ್ನು ನೆನಪು ಮಾಡುತ್ತೀರೋ ಅಷ್ಟೇ ಆಗುತ್ತೀರಿ. ತಂದೆಯು ಸ್ಮೃತಿ ತರಿಸುತ್ತಿದ್ದಾರೆ, ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು ಮತ್ತು ಮಾಯೆಯು ಮೈಲಿಗೆಯನ್ನಾಗಿ ಮಾಡಿದೆ. ಈಗ ಪುನಃ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಈ ಬ್ರಹ್ಮಾರವರ ತನುವಿನಿಂದ ಶಿಕ್ಷಣವನ್ನು ನೀಡುತ್ತಿದ್ದೇನೆ. ಹೇ ಮಕ್ಕಳೇ! ಲೌಕಿಕ ತಂದೆಯನ್ನು ಬುದ್ಧಿಯಿಂದ ಮರೆಯಿರಿ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಆತ್ಮವು ಸ್ವಚ್ಛ ಆಗುತ್ತಾ ಹೋಗುವುದು. ನಿಮಗೆ ಭವಿಷ್ಯದಲ್ಲಿ ಹೊಸ ಶರೀರವು ಸಿಗುವುದು. ತತ್ವಗಳೂ ಸಹ ಸತೋಪ್ರಧಾನವಾಗುತ್ತವೆ ಎಂದು ತಂದೆಯು ಆತ್ಮರೊಂದಿಗೆ ಮಾತನಾಡುತ್ತಾರೆ. ಹೇಳುತ್ತಾರೆ - ಈಗ ಈ ಹಳೆಯ ಪ್ರಪಂಚವನ್ನು ಮರೆಯುತ್ತಾ ಹೋಗಿ. ನನ್ನನ್ನು ನೆನಪು ಮಾಡುತ್ತಾ ಹೋದರೆ ನನ್ನ ಬಳಿ ಬಂದು ನಂತರ ಸ್ವರ್ಗದಲ್ಲಿ ಹೋಗುವಿರಿ. ಇದು ಹಳೆಯ ಪ್ರಪಂಚವಾಗಿದೆ. ಇದರಲ್ಲಿ ಯಾವುದೇ ವಸ್ತುವನ್ನು ತಯಾರು ಮಾಡಿದರೆ ಅದಕ್ಕೆ ಹೊಸ ಹೆಸರನ್ನು ಇಟ್ಟು ಬಿಡುತ್ತಾರೆ, ಉದಾಹರಣೆಗೆ ಹೊಸ ದೆಹಲಿ, ಹಳೆಯ ದೆಹಲಿ ಎಂದು ಹೇಳುತ್ತಾರೆ ಆದರೆ ಪ್ರಪಂಚವಂತೂ ಹಳೆಯದಲ್ಲವೇ. ಈಗ ನೀವು ಮಕ್ಕಳ ಬುದ್ಧಿಯೋಗವು ಈ ಹಳೆಯ ಪ್ರಪಂಚದಿಂದ ದೂರ ಸರಿಯಬೇಕು. ನೀವಾತ್ಮರ ಮನೆಯ ನಿರ್ವಾಣ ಧಾಮವಾಗಿದೆ. ಈಗ ಅಲ್ಲಿಗೆ ಹೋಗಬೇಕಾಗಿದೆ, ಆದುದರಿಂದ ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಂಡು ನನ್ನನ್ನು ನೆನಪು ಮಾಡಿರಿ ಆಗ ಅಂತ್ಯಮತಿ ಸೋ ಗತಿ ಆಗುವುದು. ಮನುಷ್ಯರು ಅನೇಕರನ್ನು ನೆನಪು ಮಾಡುತ್ತಾರೆ, ಕೆಲವರು ಗುರುಗಳನ್ನು, ಕೆಲವರು ಕೃಷ್ಣನನ್ನು ನೆನಪು ಮಾಡುತ್ತಾರೆ, ಆದರೆ ಕೃಷ್ಣನು ಎಲ್ಲಿಂದ ಬಂದನು - ಇದು ಯಾರಿಗೂ ಗೊತ್ತಿಲ್ಲ. ಎಲ್ಲರೂ ಪುನರ್ಜನ್ಮದಲ್ಲಿ ಬರಲೇಬೇಕಾಗಿದೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಈ ಪುನರ್ಜನ್ಮದ ಪದ್ಧತಿಯು ಸೃಷ್ಟಿಯ ಆದಿಯಿಂದಲೂ ನಡೆದು ಬಂದಿದೆ. ಸೃಷ್ಟಿಯ ಆದಿಯಲ್ಲಿ ದೇವೀ-ದೇವತೆಗಳು ಇದ್ದರು. ಅವಶ್ಯವಾಗಿ ಪುನರ್ಜನ್ಮವು ಅಲ್ಲಿಂದಲೇ ಆರಂಭವಾಗಿದೆ. ಮೊಟ್ಟ ಮೊದಲ ಪವಿತ್ರ ಮನುಷ್ಯ ಶ್ರೀ ಕೃಷ್ಣನಾಗಿದ್ದಾನೆ, ಆದ್ದರಿಂದ ಲಕ್ಷ್ಮೀ-ನಾರಾಯಣರಿಗಿಂತಲೂ ಶ್ರೀ ಕೃಷ್ಣನ ಮಹಿಮೆ ಹೆಚ್ಚು ಇದೆ ಏಕೆಂದರೆ ಮಕ್ಕಳು ಪವಿತ್ರ-ಸತೋಪ್ರಧಾನ ಆಗಿರುವುದರಿಂದ ಮಕ್ಕಳ ಮಹಿಮೆಯ ಗಾಯನವಿದೆ, ಆದ್ದರಿಂದ ಕೃಷ್ಣನ ಮಹಿಮೆಯು ಹೆಚ್ಚಾಗಿದೆ, ಆದರೆ ಕೃಷ್ಣಪುರಿ ಎಲ್ಲಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸತ್ಯಯುಗಕ್ಕೆ ವೈಕುಂಠವೆಂದು ಹೇಳುತ್ತಾರೆ ಆದರೆ ಕೃಷ್ಣನನ್ನು ದ್ವಾಪರದಲ್ಲಿ ಇದ್ದನೆಂದು ಏಕೆ ಹೇಳಿದ್ದಾರೆಯೋ ಗೊತ್ತಿಲ್ಲ. ಕೃಷ್ಣನು ಮತ್ತ್ಯಾವುದೇ ಸಮಯದಲ್ಲಿ ಅದೇ ನಾಮ-ರೂಪದಿಂದ ಬರಲು ಸಾಧ್ಯವಿಲ್ಲ. ಅದೇ ಹೆಸರು ಮತ್ತೊಂದು ಜನ್ಮದಲ್ಲಿ ಇರಲು ಸಾಧ್ಯವಿಲ್ಲ. ಶ್ರೀಕೃಷ್ಣನು ಸತ್ಯಯುಗದಲ್ಲಿ ಇದ್ದನು. ನಿಮಗೆ ತಿಳಿದಿದೆ, ಈ ಜಗದಂಬೆ, ಜಗತ್ಪಿತನು ಹೋಗಿ ಲಕ್ಷ್ಮೀ-ನಾರಾಯಣರಾಗುತ್ತಾರೆ. ಸತ್ಯಯುಗಕ್ಕೆ ಕೃಷ್ಣ ಪುರಿ ಎಂದು ಹೇಳಲಾಗುತ್ತದೆ. ಈಗಂತೂ ಕಂಸ ಪುರಿಯಾಗಿದೆ. ಇವೆಲ್ಲವೂ ಆಸುರಿ ಹೆಸರುಗಳಾಗಿವೆ. ಅಲ್ಲಿ ದೈವೀ ಸಂಪ್ರದಾಯದವರು ಇದ್ದರು. ಇಲ್ಲಿ ಆಸುರಿ ಸಂಪ್ರದಾಯದವರು ಇದ್ದಾರೆ. ತಂದೆಯು ಮಕ್ಕಳಿಗೆ ಇದೆಲ್ಲವನ್ನು ಸಂಗಮದಲ್ಲಿಯೇ ತಿಳಿಸುತ್ತಾರೆ. ಅವರು ರಚಯಿತನಾಗಿದ್ದಾರೆ. ಅವರಿಗೆ ಮನುಷ್ಯ ಸೃಷ್ಟಿಯ ಬೀಜರೂಪನೆಂದು ಹೇಳಲಾಗುತ್ತದೆ. ಅಂದಮೇಲೆ ಅವಶ್ಯವಾಗಿ ಹೊಸ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ. ಬಾಬಾ ತಾವು ಪತಿತ ಪಾವನನಾಗಿದ್ದೀರಿ, ಈ ಪತಿತ ಸೃಷ್ಟಿಯನ್ನು ತಾವು ಬಂದು ಪಾವನ ಮಾಡಿ, ಪಾವನ ಸೃಷ್ಟಿಯನ್ನು ರಚಿಸಿ ಪತಿತ ಸೃಷ್ಟಿಯ ವಿನಾಶ ಮಾಡಿಸಿ ಎಂದು ನೀವು ಹಾಡುತ್ತೀರಿ. ಪತಿತ ಪಾವನ ತಂದೆಯು ಬ್ರಹ್ಮಾರವರ ಮೂಲಕ ಪಾವನ ಸೃಷ್ಟಿಯನ್ನು ರಚಿಸಿ ಪತಿತ ಸೃಷ್ಟಿಯನ್ನು ವಿನಾಶ ಮಾಡಿಸುತ್ತಾರೆ. ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಂದೆಯ ಜೊತೆ ಯೋಗವನ್ನಿಡುತ್ತೀರಿ, ಬಾಬಾರವರು ಹೇಗೆ ಮೈಲಿಗೆ ವಸ್ತ್ರವನ್ನು ಒಗೆಯುತ್ತಾರೆ ಈಗ ನೀವು ನೋಡುತ್ತಿದ್ದೀರಿ. ಕೆಲವು ವಸ್ತ್ರಗಳಂತೂ ಒಗೆಯುವಾಗ ಹರಿದೇ ಹೋಗುತ್ತದೆ. ಅಂದರೆ ಕೆಲವರು ಬಹಳ ಮೈಲಿಗೆ ಅಜಾಮಳರಂತ ಪಾಪಾತ್ಮರಿದ್ದಾರೆ, ಅವರಿಗೆ ಧಾರಣೆ ಆಗುವುದೇ ಇಲ್ಲ. ಹಾಗೆಯೇ ಎಷ್ಟು ಒಳ್ಳೆಯ ಮಾತುಗಳನ್ನು ತಿಳಿಸುತ್ತಾರೆ, ಮಧುರ ಮುದ್ದಾದ ಮಕ್ಕಳೇ ನಾನು ಅತೀ ಪ್ರಿಯ ತಂದೆಯನ್ನು ನೆನಪು ಮಾಡಿರಿ, ಪ್ರಿಯವಾದ ಸುಖಧಾಮವನ್ನು ನೆನಪು ಮಾಡಿರಿ. ಇದೂ ಸಹ ನಿಮಗೆ ಮಾತ್ರ ತಿಳಿದಿದೆ, ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಈಗ ಇದು ಅತೀ ದುಃಖಧಾಮವಾಗಿದೆ, ಮನುಷ್ಯರು ತ್ರಾಹಿ-ತ್ರಾಹಿ ಎನ್ನುತ್ತಿದ್ದಾರೆ. ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಿರುತ್ತಾರೆ. ಭಗವಂತನೇ ರಕ್ಷಣೆ ಮಾಡಿ ಎಂದು ಹೇಳುತ್ತಾರೆ. ಈ ಶಬ್ದವು ಅವಶ್ಯವಾಗಿ ಮುಖದಿಂದ ಹೊರಡುತ್ತದೆ ಏಕೆಂದರೆ ತಂದೆಯು ಮುಕ್ತಿದಾತನಾಗಿದ್ದಾರೆ.
ನೀವು ತಿಳಿದುಕೊಂಡಿದ್ದೀರಿ - ತಂದೆಯು ಇಡೀ ವಿಶ್ವದ ಮಕ್ಕಳನ್ನು ಅದರಲ್ಲಿಯೂ ವಿಶೇಷವಾಗಿ ನಿಮ್ಮನ್ನು ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ಈ ನಶೆಯು ನೀವು ಮಕ್ಕಳಲ್ಲಿ ನಂಬರ್ವಾರ್ ಇದೆ. ಈ ವಿದ್ಯೆಯು ಕಡಿಮೆ ಇಲ್ಲ. ತಂದೆಯು ನೋಡಿ ಯಾರಿಗೆ ಓದಿಸುತ್ತಿದ್ದಾರೆ! ಅಜಾಮಿಳರಂತ ಪಾಪಾತ್ಮರಿಗೆ ಓದಿಸಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ತಮೋಪ್ರಧಾನರಂತೂ ಎಲ್ಲರೂ ಆಗಿದ್ದಾರೆ. ಅವರನ್ನು ಸತೋಪ್ರಧಾನ ಪ್ರಪಂಚದಲ್ಲಿ ಕರೆದುಕೊಂಡು ಹೋಗಬೇಕಾಗುತ್ತದೆ. ಆದ್ದರಿಂದಲೇ ಮಕ್ಕಳಿಗೆ ಪದೇ-ಪದೇ ತಿಳಿಸುತ್ತಾರೆ - ಇಲ್ಲಿ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಿರಿ. ಇಲ್ಲಿ ನಿಮಗೆ ಗುರಿ-ಧ್ಯೇಯವು ಬುದ್ಧಿಯಲ್ಲಿ ಇದೆ. ಈ ಪವಿತ್ರತೆಯ ಮ್ಯಾನರ್ಸನ್ನು ಮತ್ತೆ ಯಾರೂ ಕಲಿಸುವುದಿಲ್ಲ. ಸನ್ಯಾಸಿಗಳಾದರೂ ಮನೆ-ಮಠವನ್ನು ಬಿಡಿಸುತ್ತಾರೆ, ಆದರೆ ಇಲ್ಲಿ ತಂದೆಯು ತಿಳಿಸುತ್ತಾರೆ - ನೀವು ಮನೆಯನ್ನು ಬಿಡುವಂತಿಲ್ಲ, ಈ ಹಳೆಯ ಪ್ರಪಂಚವನ್ನು ಬಿಡಬೇಕಾಗಿದೆ ಅರ್ಥಾತ್ ಮರೆಯಬೇಕಾಗಿದೆ. ಅದು ಹದ್ದಿನ ಸನ್ಯಾಸ, ಇದು ಬೇಹದ್ದಿನ ಸನ್ಯಾಸವಾಗಿದೆ. ಆ ಸನ್ಯಾಸಿಗಳಿಗೂ ಎಷ್ಟೊಂದು ಮಾನ್ಯತೆ ಸಿಗುತ್ತದೆ? ಸಾಧು-ಸಮಾಜದವರು, ಸರ್ಕಾರಕ್ಕೂ ಮತ ಕೊಡುತ್ತಾರೆ. ಮುಂದೆ ಹೋದಂತೆ ಈ ಸನ್ಯಾಸಿ ಮೊದಲಾದವರೂ ನೀವು ಮಾತೆಯರ ಚರಣಗಳಿಗೆ ಬೀಳುವರು. ಮಾತೆಯರು ಇಲ್ಲದೆ ಅವರ ಉದ್ಧಾರ ಆಗಲು ಸಾಧ್ಯವಿಲ್ಲ ಏಕೆಂದರೆ ನೀವು ಜ್ಞಾನ ಕೊಡುತ್ತೀರಿ. ಉಳಿದಂತೆ ಚರಣಗಳಿಗೆ ಬೀಳುವ ಮಾತಿಲ್ಲ. ಹಾ! ಯಾರಾದರೂ ನಮಸ್ತೆ ಅಥವಾ ರಾಂ-ರಾಂ ಎಂದು ಹೇಳಿದರೆ ಅವರಿಗೆ ಪ್ರತ್ಯುತ್ತರ ನೀಡಬೇಕಾಗುತ್ತದೆ. ತಂದೆಯು ಸಹ ಮಕ್ಕಳೇ ನಮಸ್ತೆ ಎಂದು ಹೇಳುತ್ತಾರಲ್ಲವೇ. ನಾನು ನೀವು ಮಕ್ಕಳನ್ನು ನನಗಿಂತಲೂ ಶ್ರೇಷ್ಠರನ್ನಾಗಿ ಮಾಡುತ್ತೇನೆ. ನಿಮ್ಮನ್ನು ಬ್ರಹ್ಮಾಂಡ ಹಾಗೂ ಸೃಷ್ಟಿ ಎರಡಕ್ಕೂ ಮಾಲೀಕರನ್ನಾಗಿ ಮಾಡುತ್ತೇನೆ ಮತ್ತು ನಾನು ವಾನಪ್ರಸ್ಥದಲ್ಲಿ ಹೊರಟು ಹೋಗುತ್ತೇನೆ ಆದರೆ ನೀವೀಗ ಶ್ರೀಮತದಂತೆ ನಡೆಯಬೇಕಾಗಿದೆ. ಈ ಹಳೆಯ ಪ್ರಪಂಚದಿಂದ ಮುಖವನ್ನು ತಿರುಗಿಸಬೇಕಾಗಿದೆ. ರಾಮ, ರಾವಣ ಮತ್ತು ಸೀತೆಯ ಗೊಂಬೆಗಳು ಇರುತ್ತವೆಯಲ್ಲವೇ. ಸೀತೆಯು ರಾವಣನಿಗೆ ಬೆನ್ನು ತಿರುಗಿಸಿ ರಾಮನ ಕಡೆ ಮುಖ ಮಾಡುತ್ತಾಳೆ. ಇದನ್ನು ಗೊಂಬೆಗಳ ರೂಪದಲ್ಲಿ ತೋರಿಸಿದ್ದಾರೆ, ಹಾಗೆಯೇ ನರಕವನ್ನು ಕಾಲಿನಿಂದ ಒದೆಯುವ ಹಾಗೂ ಸ್ವರ್ಗವನ್ನು ಅಂಗೈಯಲ್ಲಿ ಹಿಡಿದಿರುವ ಕೃಷ್ಣನ ಚಿತ್ರವು ಇದೆ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ ಆದರೆ ಇಂತಹವರೊಂದಿಗೆ ವ್ಯಾಪಾರ ಮಾಡುವ ವ್ಯಾಪಾರಿಗಳೇ ವಿರಳ. ತಂದೆಗೆ ತಮ್ಮ ಹಳೆಯ ತನು-ಮನ-ಧನವನ್ನು ಕೊಟ್ಟು ಹೊಸದನ್ನು ಪಡೆಯಿರಿ. ಇದು ಬಹಳ ದೊಡ್ಡ ಇನ್ಶ್ಯೂರೆನ್ಸ್ ಆಗಿದೆ. ನೀವೀಗ ಆತ್ಮನನ್ನು ಪವಿತ್ರ ಮಾಡಿಕೊಂಡರೆ ಶರೀರವು ಪವಿತ್ರವಾದುದು ಸಿಗುವುದು. ಇದರಿಂದ ನಂತರ ನೀವು ಸ್ವರ್ಗದ ರಾಜ್ಯಭಾರ ಮಾಡುತ್ತೀರಿ, ಆದ್ದರಿಂದ ತಂದೆಗೆ ವ್ಯಾಪಾರಿ, ಜಾದೂಗಾರನೆಂದು ತಿಳಿಯುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡುವುದು, ಇದು ಈಶ್ವರೀಯ ಜಾದು ಎಂದು ಹೇಳಬಹುದಲ್ಲವೇ. ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿರಿ ಎಂದು ಹೇಳುತ್ತೀರಿ ಅಂದಮೇಲೆ ಈ ರೀತಿ ಮಾಡುವುದು ಬಹಳ ಒಳ್ಳೆಯ ಜಾದು ಆಗಿದೆ. ಇದರಲ್ಲಿ ಬಹಳ ಪ್ರಾಪ್ತಿ ಇದೆ. ಆದ್ದರಿಂದ ರಾಜರಿಗೂ ರಾಜರಾಗಿ, ಫಾಲೋ ಮಾಡಿರಿ, ನಾನು ಕುಳಿತಿದ್ದೇನೆ ಎಂದು ತಂದೆಯು ಹೇಳುತ್ತಾರೆ. ಇವರು (ಬ್ರಹ್ಮಾ) ಅದರ್ಕುಮಾರನಾಗಿದ್ದಾರೆ, ಮಮ್ಮಾರವರು ಕುಮಾರಿ, ಕನ್ಯೆಯಾಗಿದ್ದಾರೆ, ಆದ್ದರಿಂದ ಅವರನ್ನು ಫಾಲೋ ಮಾಡಬೇಕಾಗಿದೆ. ಆಸ್ತಿಯು ತಂದೆಯಿಂದಲೇ ಸಿಗುವುದು. ಆದ್ದರಿಂದ ನಾವು ಸಹೋದರ-ಸಹೋದರಿಯರು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆಂದು ನೀವು ಹೇಳುತ್ತೀರಿ. ಲೌಕಿಕ ರೀತಿಯಿಂದ ನೋಡಿದಾಗ ಸಹೋದರಿಗೆ ಆಸ್ತಿ ಸಿಗುವುದಿಲ್ಲ, ಸಹೋದರನಿಗೆ ಸಿಗುತ್ತದೆ. ಇಲ್ಲಂತೂ ನಿಮ್ಮೆಲ್ಲರಿಗೂ ಸಿಗುವುದು ಏಕೆಂದರೆ ನೀವೆಲ್ಲರೂ ಆತ್ಮರಾಗಿದ್ದೀರಲ್ಲವೇ. ನೀವೀಗ ನನ್ನ ಬಳಿ ಬರಬೇಕಾಗಿದೆ ಎಂದು ತಂದೆಯು ಹೇಳುತ್ತಾರೆ. ತಂದೆಯ ಬಳಿ ಹೋದ ಮೇಲೆ ಸಹೋದರ-ಸಹೋದರಿಯ ಸಂಬಂಧವು ಬಿಟ್ಟು ಹೋಗುವುದು. ಅಲ್ಲಿ ಕೇವಲ ತಂದೆಯ-ಮಕ್ಕಳ ಸಂಬಂಧ ಇರುವುದು. ಆದ್ದರಿಂದ ನಾವೆಲ್ಲರೂ ಸಹೋದರರು ಎಂದು ಹೇಳುತ್ತೀರಿ. ಒಂದುವೇಳೆ ಈಶ್ವರನಿಗೆ ಸರ್ವವ್ಯಾಪಿ ಎಂದು ಹೇಳಿದರೆ ವಿಶ್ವ ಪಿತೃತ್ವವಾಗುತ್ತದೆ ಅಂದರೆ ಎಲ್ಲರೂ ಪರಮಾತ್ಮನೆಂದರ್ಥ. ನೋಡಿ! ಈ ಸರ್ವವ್ಯಾಪಿಯ ಜ್ಞಾನವು ಎಷ್ಟೊಂದು ನಷ್ಟವನ್ನು ಉಂಟು ಮಾಡಿದೆ.
ಈಗ ನೀವು ಮಕ್ಕಳ ಬಳಿ ತಂದೆಯ ನೆನಪಿದೆ. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಹೆಚ್ಚು ಶ್ರಮವಿದೆ. ನಿಮಗೆ ಯಾರಾದರೂ ಯೋಗ ಮಾಡಿಸಬೇಕು ಎಂಬ ಆಧಾರವು ಇರಬಾರದು ಏಕೆಂದರೆ ನಿಮಗೆ ಲಕ್ಷ್ಯವಂತೂ ಸಿಕ್ಕಿದೆ, ಇಲ್ಲಿ ಕೇವಲ ಮುರಳಿಯನ್ನು ಓದಿ ತಿಳಿಸುತ್ತೀರಿ, ಯೋಗವು ಸದಾ ಇರುತ್ತದೆ ಅಂದರೆ ಮುರಳಿಯನ್ನು ಕೇಳಿದ ಮೇಲೆ ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿ ಇರಬಹುದಾಗಿದೆ. ನಾವು ಯಾತ್ರೆಯಲ್ಲಿ ಹೋಗುತ್ತಿದ್ದೇವೆ, ಆದ್ದರಿಂದ ಎಷ್ಟು ಸಾಧ್ಯವೋ ಅಷ್ಟು ನೆನಪಿನಲ್ಲಿ ಇರಬೇಕು. 8 ಗಂಟೆಗಳು ನಿಮ್ಮ ಸೇವೆಯನ್ನೇ ಮಾಡಿಕೊಳ್ಳಿರಿ. ಅನುಮತಿ ಇದೆ. ಉಳಿದ ಸಮಯವನ್ನು ನೆನಪಿನ ಯಾತ್ರೆಯಲ್ಲಿ ಕೊಡಬೇಕಾಗಿದೆ. ಮೂಲ ಮಾತು ಪವಿತ್ರತೆಯದಾಗಿದೆ. ನೀವು ತಿಳಿದುಕೊಂಡಿದ್ದೀರಿ - ಇದು ಮುಳ್ಳುಗಳ ಕಾಡಾಗಿದೆ. ಒಬ್ಬರು ಇನ್ನೊಬ್ಬರಿಗೆ ಮುಳ್ಳು ಚುಚ್ಚುತ್ತಿರುತ್ತಾರೆ. ತಂದೆಯು ಹೇಳುತ್ತಾರೆ ಮಕ್ಕಳೇ ಶ್ರೀಮತದಂತೆ ನಡೆಯಿರಿ. ಮುರಳಿ ನುಡಿಸುವಾಗ ಶಿವ ತಂದೆಯು ಮಾತನಾಡುತ್ತಾರೆ, ಬ್ರಹ್ಮಾ ತಂದೆಯು ಮಾತನಾಡುತ್ತಾರೆ ಆದರೆ ಶಿವ ತಂದೆ ನಮಗೆ ಓದಿಸುತ್ತಾರೆ ಎಂಬುದು ನಿಮಗೆ ತಿಳಿದಿದೆ. ನೀವು ವಿದ್ಯಾರ್ಥಿಗಳಾಗಿದ್ದೀರಿ. ಶಿವ ತಂದೆಯು ನಮಗೆ ತಂದೆಯು ಆಗಿದ್ದಾರೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ನಾನು ನಿಮ್ಮನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ ಎಂದು ಗ್ಯಾರೆಂಟಿ ನೀಡುತ್ತಾರೆ. ಈ ಗ್ಯಾರೆಂಟಿಯನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಸುಖವನ್ನು ಕೊಡುವಂತಹ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಆ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ಒಂದುವೇಳೆ ತಂದೆಯನ್ನು ಅರಿತುಕೊಂಡರೆ ತಂದೆಯ ಆಸ್ತಿಯನ್ನು ಅರಿತುಕೊಳ್ಳುವರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಗುರಿ, ಧ್ಯೇಯವನ್ನು ಸದಾ ಮುಂದಿಟ್ಟುಕೊಂಡು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಸತೋಪ್ರಧಾನ ಪ್ರಪಂಚದಲ್ಲಿ ಹೋಗಲು ಪವಿತ್ರತೆಯ ನಡವಳಿಕೆಯನ್ನು ಧಾರಣೆ ಮಾಡಿಕೊಳ್ಳಬೇಕು, ಬುದ್ಧಿಯಿಂದ ಬೇಹದ್ದಿನ ಸನ್ಯಾಸ ಮಾಡಬೇಕಾಗಿದೆ.
2. ಅತೀ ಪ್ರಿಯವಾದ ತಂದೆಯನ್ನು ಹಾಗೂ ತಮ್ಮ ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಈ ದುಃಖಧಾಮದಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.
ಓಂ ಶಾಂತಿ. ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರೆಂದರೆ ನಾವೆಲ್ಲರೂ ಜೀವಾತ್ಮರೆಂದು ತಿಳಿದಿದ್ದೀರಿ. ಇಲ್ಲಿ ಎಲ್ಲರೂ ಜೀವಾತ್ಮರೇ ಇರುತ್ತಾರಲ್ಲವೆ. ಯಾವಾಗ ಆತ್ಮಕ್ಕೆ ಶರೀರವಿಲ್ಲವೆಂದರೆ ಅದಕ್ಕೆ ಅಶರೀರಿ ಎಂದು ಕರೆಯಲಾಗುತ್ತದೆ. ನೀವು ಶರೀರದ ಜೊತೆಯಲ್ಲಿ ಕುಳಿತಿದ್ದೀರಿ. ಆತ್ಮ ಅಥವಾ ಪರಮಾತ್ಮನು ಶರೀರದಲ್ಲಿ ಬರದ ಹೊರತು ಮಾತನಾಡಲು ಸಾಧ್ಯವಿಲ್ಲ. ನೀವು ಜೀವಾತ್ಮರು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರೆಂದು ತಿಳಿದಿದ್ದೀರಿ. 5000 ವರ್ಷದ ಮೊದಲಿನಂತೆಯೇ ಬಂದಿದ್ದೀರಿ. ಮಕ್ಕಳು ಅವಶ್ಯವಾಗಿ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರಲ್ಲವೆ. ನಾವು ಪರಮಪಿತ ಪರಮಾತ್ಮ ಬೇಹದ್ದಿನ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ ಎಂದು ತಿಳಿದಿದ್ದೀರಿ. ಏಕೆ ಕುಳಿತಿದ್ದೀರಿ? ತಂದೆಯಿಂದ ಆಸ್ತಿಯನ್ನು ಪಡೆಯಲು. ಹೇಗೆ ಶಾಲೆಗಳಲ್ಲಿ ನಾವು ಟೀಚರ್ನ ಮೂಲಕ ಇಂಜಿನಿಯರ್, ಬ್ಯಾರಿಸ್ಟರ್ ಆಗುತ್ತೇವೆ ಎಂದು ಹೇಳುತ್ತಾರೆ. ಈ ಗುರಿ-ಉದ್ದೇಶವಿರುತ್ತದೆ. ಪರಮಪಿತ ಪರಮಾತ್ಮನು ಬ್ರಹ್ಮನ ಶರೀರದಲ್ಲಿ ಕುಳಿತು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆಂದು ನೀವು ತಿಳಿದಿದ್ದೀರಿ. ಭಗವಾನುವಾಚ - ಇದು ನೀವು ಮಕ್ಕಳಿಗೆ ಭಗವಂತ ನಿರಾಕಾರನು ತಿಳಿಸುತ್ತಾರೆ. ಜೀವಾತ್ಮರಂತೂ ಪುನರ್ಜನ್ಮವನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತಾರೆ. ಮನುಷ್ಯರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆಯೇ ಎಂದು ಯಾವುದೇ ಸನ್ಯಾಸಿಗಳನ್ನು ಕೇಳಿದಾಗ ತೆಗೆದುಕೊಳ್ಳುವುದಿಲ್ಲವೆಂದು ಹೇಳುವುದಿಲ್ಲ. ಇಲ್ಲವೆಂದರೆ 84 ಲಕ್ಷ ಜನ್ಮಗಳೆಂದು ಹೇಗೆ ಹೇಳುತ್ತಾರೆ. ಕೇಳಿ ನೀವು ಪುನರ್ಜನ್ಮವನ್ನು ನಂಬುತ್ತೀರಾ? ಇದಂತೂ ಅವಶ್ಯವಾಗಿದೆ, ಆತ್ಮವು ಸಂಸ್ಕಾರದನುಸಾರ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಹೀಗೆ ಬೇರೆ-ಬೇರೆ ಮನುಷ್ಯ ಜನ್ಮಗಳನ್ನು ತೆಗೆದುಕೊಳ್ಳುತ್ತದೆ. 84 ಲಕ್ಷ ಜನ್ಮಗಳ ಮಾತಂತೂ ಇಲ್ಲ. ಮೊದಲ ಜನ್ಮದಲ್ಲಿ ಅವಶ್ಯವಾಗಿ ಸತೋಪ್ರಧಾನವಾಗಿರುತ್ತದೆ, ಅಂತ್ಯದ ಜನ್ಮವು ಛೀ ಛೀ ಆಗಿರುತ್ತದೆ. 16 ಕಲೆಯಿಂದ 14 ಕಲೆ, 12 ಕಲೆ ಆಗುತ್ತದೆ, ಪುನರ್ಜನ್ಮವನ್ನಂತೂ ಅವಶ್ಯವಾಗಿ ತೆಗೆದುಕೊಳ್ಳುತ್ತಾರೆ. ಪರಮಪಿತ ಪರಮಾತ್ಮನು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆಯೇ? ಅಥವಾ ಪುನರ್ಜನ್ಮ ರಹಿತನಾಗಿದ್ದಾರೆ ಎಂದು ಕೇಳಬೇಕು. ನೋಡಿ, ಇದು ಬಹಳ ಸೂಕ್ಷ್ಮವಾದ ಮಾತಾಗಿದೆ. ಒಂದುವೇಳೆ ಜನನ-ಮರಣ ರಹಿತನೆಂದು ಹೇಳಿದರೆ ಶಿವ ಜಯಂತಿಯನ್ನು ಸಿದ್ಧ ಮಾಡಲು ಸಾಧ್ಯವಿಲ್ಲ. ಶಿವ ಜಯಂತಿಯಂತೂ ಇದೆ ಎಂದು ತಿಳಿದು ಬರುತ್ತದೆ ಆದರೆ ಜನನದ ಜೊತೆಯಲ್ಲಿ ಮತ್ತೆ ಮರಣ ಎಂದು ಯಾವುದಕ್ಕೆ ಹೇಳುತ್ತಾರೆಯೋ ಅದು ಇಲ್ಲ. ಒಂದುವೇಳೆ ಮರಣ ಹೊಂದಿದರೆ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕು. ತಂದೆಯು ಎಂದೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ. ಅವರು ಶರೀರದಲ್ಲಿ ಒಂದು ಬಾರಿ ಬರುತ್ತಾರೆ ಅಷ್ಟೇ, ಮತ್ತೆ ಪುನರ್ಜನ್ಮದಲ್ಲಿ ಬರುವುದಿಲ್ಲ. ಪರಮಪಿತ ಪರಮಾತ್ಮನು ಪುನರ್ಜನ್ಮ ರಹಿತನಾಗಿದ್ದಾರೆ. ಅವರು ಎಂದೂ ಸತೋಪ್ರಧಾನರಿಂದ ತಮೋಪ್ರಧಾನರಾಗುವುದಿಲ್ಲ. ಆತ್ಮರೆಲ್ಲರೂ ಜನನ-ಮರಣದಲ್ಲಿ ಬರುತ್ತಾ-ಬರುತ್ತಾ ಪತಿತರಾಗುತ್ತಾರೆ. ತಂದೆಯು ಪಾವನರನ್ನಾಗಿ ಮಾಡಲು ಮತ್ತೆ ಬರಬೇಕಾಗುತ್ತದೆ, ಆತ್ಮವೇ ಪತಿತವಾಗುತ್ತದೆ, ಆತ್ಮವೇ ಮನೆಯಿಂದ ಪಾವನವಾಗಿ ಬರುತ್ತದೆ, ಮತ್ತೆ ಮಾಯೆಯು ಪತಿತರನ್ನಾಗಿ ಮಾಡಿ ಬಿಡುತ್ತದೆ ಎಂದು ಇದರಿಂದ ಸಿದ್ಧವಾಗುತ್ತದೆ. ತಂದೆಯು ಎಂದೂ ಪತಿತರನ್ನಾಗಿ ಮಾಡುವುದಿಲ್ಲ, ಎಂದೂ ಕೆಟ್ಟ ಮತವನ್ನು ಕೊಡಲು ಸಾಧ್ಯವಿಲ್ಲ. ಈ ಸಮಯದಲ್ಲಿ ಮನುಷ್ಯರು ಪತಿತ ಮತವನ್ನೇ ಕೊಡುತ್ತಾರೆ. ಈಗ ಪತಿತರಾಗಬೇಡಿ ಅರ್ಥಾತ್ ವಿಕಾರದಲ್ಲಿ ಹೋಗಬೇಡಿ ಎಂದು ಪಾವನ ತಂದೆಯು ಹೇಳುತ್ತಾರೆ. ರಾವಣನ ಮತದಿಂದ ದುಃಖಧಾಮವಾಗಿ ಬಿಟ್ಟಿತು, ಮೊದಲು ಸುಖಧಾಮವಿತ್ತು. ತಂದೆಯೇ ಸುಖ-ದುಃಖವನ್ನು ಕೊಡುತ್ತಾರೆಂದಲ್ಲ, ತಂದೆಯು ಮಕ್ಕಳಿಗೆ ಎಂದೂ ದುಃಖದ ಮತ ಕೊಡಲು ಸಾಧ್ಯವಿಲ್ಲ. ಮಾಯೆಯೇ ದುಃಖವನ್ನು ಕೊಡುತ್ತದೆ. ಆ ಮಾಯೆಯ ಮೇಲೆ ವಿಜಯ ಗಳಿಸುವುದರಿಂದ ಜಗಜ್ಜೀತರಾಗುತ್ತೀರಿ. ಮನುಷ್ಯರಿಗೆ ಮಾಯೆಯ ಅರ್ಥವು ತಿಳಿದಿಲ್ಲ, ಅವರು ಧನವನ್ನು ಮಾಯೆಯೆಂದು ಹೇಳುತ್ತಾರೆ. ಇವರಿಗೆ ಮಾಯೆಯ ನಶೆಯೇರಿದೆ ಎಂದು ಹೇಳುತ್ತಾರಲ್ಲವೆ ಆದರೆ ಮಾಯೆಯ ನಶೆ ಇರುವುದಿಲ್ಲ. ಅಲ್ಲಿ ರಾವಣನ ಭೂತವನ್ನು ಮಾಡಿ ಸುಡುವುದಿಲ್ಲ. ಭೂತವನ್ನಂತೂ ಶತ್ರುಗಳಿಗೆ ಮಾಡುತ್ತಾರಲ್ಲವೆ. ರಾವಣ ರಾಜ್ಯವು ಅರ್ಧಕಲ್ಪದಿಂದ ಆರಂಭವಾಗುತ್ತದೆ. ದೇಹದ ಅಹಂಕಾರವು ಬರುವುದರಿಂದ ಬೇರೆ ವಿಕಾರಗಳೂ ಬರುತ್ತವೆ. ಶಾಸ್ತ್ರಗಳಲ್ಲಿ ದೇವತೆಗಳು ವಾಮಮಾರ್ಗದಲ್ಲಿ ಅರ್ಥಾತ್ ವಿಕಾರದಲ್ಲಿ ಹೋದರೆಂದು ಬರೆದಿದ್ದಾರೆ. ಮಾಯೆಯ ವಶವಾಗುವ ಕಾರಣ ಪರವಶರಾಗುತ್ತಾರೆ, ಪರಮತದಂತೆ ನಡೆಯುತ್ತಾ ಇರುತ್ತಾರೆ. ಈಗ ನೀವು ಶ್ರೀಮತದಂತೆ ನಡೆಯುತ್ತೀರಿ. ಪರಮತ ಎಂದರೆ ಮಾಯೆಯ ಮತವಾಗಿದೆ. ಶ್ರೀ ಅರ್ಥಾತ್ ಶ್ರೇಷ್ಠ ತಂದೆಯ ಮತವಾಗಿದೆ. ಅದು ರಾವಣನ ಮತ, ಪರಮತವಾಗಿದೆ. ಆಸುರೀ ಸಂಪ್ರದಾಯದವರೆಲ್ಲರೂ ರಾವಣನ ಸಂಕೋಲೆಯಲ್ಲಿ ದುಃಖಿಗಳಾಗಿದ್ದಾರೆಂದು ತಂದೆಯು ತಿಳಿಸುತ್ತಾರೆ.
ಮನುಷ್ಯರು ಸತ್ಯಯುಗದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ತಿಳಿದುಕೊಂಡಿದ್ದಾರೆ. 5000 ವರ್ಷಗಳು ಹೇಗೆಂದು ನೀವು ಲೆಕ್ಕವನ್ನು ಹೇಳುತ್ತೀರಿ. ಕ್ರೈಸ್ತನು ಬಂದು 2000 ವರ್ಷಗಳಾಯಿತು, ಬುದ್ಧನು ಬಂದು 2250 ವರ್ಷವಾಯಿತು, ನಂತರ ಇಸ್ಲಾಮಿಯರು ಬಂದು 2500 ವರ್ಷಗಳಾಯಿತು. ಒಟ್ಟಾಗಿ ಅರ್ಧಕಲ್ಪವಾಯಿತು. ಅವರಿಗೆ ಮೊದಲು ದೇವತೆಗಳ ರಾಜ್ಯವಿತ್ತು, ಅಂದಮೇಲೆ ದೇವತೆಗಳನ್ನು ಲಕ್ಷಾಂತರ ವರ್ಷಗಳ ಹಿಂದೆ ಇದ್ದರು ಎಂದು ಹೇಗೆ ಹೇಳುವಿರಿ! ಆ ಸಮಯದಲ್ಲಿಯೇ ಇಷ್ಟೊಂದು ಮನುಷ್ಯರಿದ್ದರೆಂದರೆ ಮನುಷ್ಯರು ಬಹಳ ಆಗಿ ಬಿಟ್ಟರು. ಇಷ್ಟೊಂದಂತೂ ಇಲ್ಲ. 5000 ವರ್ಷದಲ್ಲಿಯೇ ಕೋಟ್ಯಾಂತರ ಮನುಷ್ಯರಾಗಿದ್ದಾರೆ, ಕ್ರೈಸ್ತನಿಗಿಂತ ಮೊದಲು ಆದಿ ಸನಾತನ ದೇವತಾ ಧರ್ಮವಿತ್ತು, 5000 ವರ್ಷಗಳು ಪೂರ್ಣವಾಗಿ ಬಿಟ್ಟಿದೆ. ನಾಟಕವು ಪೂರ್ಣವಾಗುತ್ತದೆಯಲ್ಲವೆ. ಈ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ನಾನು ಹೇಗಿದ್ದೇನೆ, ಯಾರಾಗಿದ್ದೇನೆ, ಈ ಚಕ್ರ ಸುತ್ತುತ್ತದೆ ಎಂಬುದನ್ನು ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದು ಗೀತೆಯ ಅಧ್ಯಾಯವಾಗಿದೆ. ತಂದೆಯು ಬಂದು ರಾಜಯೋಗವನ್ನು ಕಲಿಸಿದ್ದರು, ವೃದ್ಧರಿಗೂ ಇದು ಬಹಳ ಸಹಜವಾದ ಮಾತಾಗಿದೆ ಎಂದು ತಿಳಿಸುತ್ತಾರೆ. ಕೇವಲ ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಮಗುವಿನ ಜನ್ಮವಾಯಿತೆಂದರೆ ವಾರಸುಧಾರನ ಜನ್ಮವಾಯಿತು ಎಂದರ್ಥ. ಈಗ ನಾವೆಲ್ಲರೂ ತಂದೆಯ ವಾರಸುಧಾರರಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ - 5000 ವರ್ಷಗಳ ನಂತರ ಮತ್ತೆ ಮಿಲನ ಮಾಡಲು ಬಂದಿದ್ದೇವೆ. ಇದು ಬಹಳ ಗುಪ್ತವಾದ ಮಾತಾಗಿದೆ. ಮೊದಲು ಯಾವಾಗಲಾದರೂ ಮಿಲನ ಮಾಡಿದ್ದಿರಾ? ಎಂದು ಕೇಳಿದಾಗ ಹೌದು ಬಾಬಾ ಎಂದು ಹೇಳುತ್ತಾರೆ. ನಾವು 5000 ವರ್ಷದ ಹಿಂದೆ ಮಿಲನ ಮಾಡಿದ್ದೆವು ಎಂದು ಆತ್ಮವು ಈ ಮುಖದಿಂದ ಹೇಳುತ್ತದೆ. ನಾವು ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಲು ಕುಳಿತಿದ್ದೇವೆಂದು ಮಕ್ಕಳು ಪಕ್ಕಾ ತಿಳಿದಿದ್ದೀರಿ. ನಾವು ಬ್ರಹ್ಮನ ಮೂಲಕ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ನಾನು ನಿಮ್ಮ ತಂದೆಯಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ನೀವು ಹೇಳುತ್ತೀರಿ - ಹೌದು ಬಾಬಾ, ನಾವೆಲ್ಲಾ ಆತ್ಮಗಳಿಗೆ ನೀವು ಪರಮಪಿತ ಪರಮಾತ್ಮನು ತಂದೆಯಾಗಿದ್ದೀರಿ. ನಿಮ್ಮೆಲ್ಲರನ್ನೂ ನಾನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಆಸ್ತಿಯನ್ನೂ ಕೊಟ್ಟಿದ್ದೆನು ಆದರೆ ಮಾಯೆಯು ಕಸಿದುಕೊಂಡು ಬಿಟ್ಟಿತು, ಪುನಃ ನಾನೀಗ ಕೊಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಮಾಯೆಯು ಆಸ್ತಿಯನ್ನು ಕಸಿದುಕೊಳ್ಳುತ್ತದೆ, ತಂದೆಯು ಕೊಡುತ್ತಾರೆ. ಈ ಆಟ ಅನೇಕ ಬಾರಿ ಆಗಿ ಹೋಗಿದೆ, ಆಗುತ್ತಲೇ ಇರುತ್ತದೆ, ಇದರ ಅಂತ್ಯವಿಲ್ಲ. ಕೆಲವರು ತಂದೆಯ ಸ್ವಂತ ಮಕ್ಕಳಾಗುತ್ತಾರೆ, ಕೆಲವರು ಮಲತಾಯಿ ಮಕ್ಕಳಾಗುತ್ತಾರೆ. ಕಚ್ಚಾ, ಪಕ್ಕಾ ಅಂತೂ ಇರುತ್ತಾರಲ್ಲವೆ! ಪಕ್ಕಾ ಇರುವ ಮಕ್ಕಳ ಮೇಲೂ ಕೆಲವೊಮ್ಮೆ ಮಾಯೆಯು ವಿಜಯ ಗಳಿಸುತ್ತದೆ. ಬಾಬಾ, ನಾವು ಎಲ್ಲಿಯವರೆಗೆ ಜೀವಿಸಿರುತ್ತೇವೆಯೋ ಅಲ್ಲಿಯವರೆಗೆ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆಂದು ಹೇಳುತ್ತಾರೆ. ವಿಕರ್ಮಗಳ ಹೊರೆಯು ತಲೆಯ ಮೇಲೆ ಬಹಳ ಇದೆ. ಯಾರೆಷ್ಟು ನೆನಪಿನಲ್ಲಿರುತ್ತಾರೆಯೋ ಆ ಯೋಗಾಗ್ನಿಯಿಂದ ನೀವು ಪಾಪಾತ್ಮರಿಂದ ಪುಣ್ಯಾತ್ಮರಾಗಿ ಬಿಡುತ್ತೀರಿ. ಬೆಂಕಿ ವಸ್ತುವನ್ನು ಪವಿತ್ರವನ್ನಾಗಿ ಮಾಡಿ ಬಿಡುತ್ತದೆ, ನಿಮ್ಮದು ಯೋಗ ಅಗ್ನಿಯಾಗಿದೆ. ಇದು ಬೇಹದ್ದಿನ ಯಜ್ಞವಾಗಿದೆ. ಬೇಹದ್ದಿನ ಸೇಟು ಬೇಹದ್ದಿನ ಯಜ್ಞವನ್ನು ರಚನೆ ಮಾಡಿದ್ದಾರೆ, ಯಾವುದೇ ಯಜ್ಞವು ಇಷ್ಟು ವಷಗಳವರೆಗೆ ನಡೆಯುವುದಿಲ್ಲ. 7-8 ದಿನ ಅಥವಾ ಒಂದು ತಿಂಗಳ ಯಜ್ಞವನ್ನು ರಚಿಸುತ್ತಾರೆ, ನಿಮ್ಮ ಯಜ್ಞವಂತೂ ಎಷ್ಟು ವರ್ಷಗಳಿಂದ ನಡೆಯುತ್ತಾ ಬಂದಿದೆ. ತಂದೆಯಂತೂ ತಿಳಿಸುತ್ತಲೇ ಇರುತ್ತಾರೆ. ಮರೆಯಬೇಡಿ, ಕೇವಲ ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರಗಳ ವಿಕರ್ಮದ ಹೊರೆ ತುಂಡಾಗುತ್ತಾ ಹೋಗುತ್ತದೆ ಎಂದು ತಿಳಿಸುತ್ತಾರೆ. ಭಗವಾನುವಾಚ - ನೀವು ತಂದೆಯಾದ ನನ್ನನ್ನು ನೆನಪು ಮಾಡಿ. ಅವಶ್ಯವಾಗಿ ಬಂದಿದ್ದಾರೆ ಆದ್ದರಿಂದಲೇ ಹೇಳುತ್ತಾರಲ್ಲವೆ! ನೀವೀಗ ಹಿಂತಿರುಗಿ ಹೋಗಬೇಕಾಗಿದೆ, ನಿಮ್ಮ ಆತ್ಮವು ಈಗ ಬಹಳ ಪತಿತವಾಗಿದೆ. ಯೋಗದಿಂದ ನಾವು ಪಾವನರಾಗುತ್ತೇವೆಂದು ನೀವು ತಿಳಿದಿದ್ದೀರಿ. ನೀವು ಬಂದಾಗ ಬೇರೆಲ್ಲಾ ಸಂಗವನ್ನು ಬಿಟ್ಟು ನಿಮ್ಮ ಸಂಗವನ್ನೇ ಮಾಡುತ್ತೇವೆ, ನಿಮ್ಮ ಮೇಲೆಯೇ ಬಲಿಹಾರಿಯಾಗುತ್ತೇವೆಂದು ಪ್ರತಿಜ್ಞೆ ಮಾಡಿದ್ದಿರಿ. ಸ್ತ್ರೀ ಪುರುಷನ ಮೇಲೆ, ಪುರುಷನು ಸ್ತ್ರೀಯ ಮೇಲೆ ಬಲಿಹಾರಿಯಾಗುತ್ತಾರೆ, ಇಲ್ಲಂತೂ ತಂದೆಯ ಮೇಲೆ ಬಲಿಹಾರಿಯಾಗಬೇಕಾಗಿದೆ. ವಿವಾಹದಲ್ಲಿ ಒಬ್ಬರ ಮೇಲೆ ಒಬ್ಬರು ಬಲಿಹಾರಿಯಾಗುತ್ತಾರೆ. ಇಲ್ಲಂತೂ ಮನುಷ್ಯರ ಮೇಲೆ ಬಲಿಹಾರಿಯಾಗಬಾರದು ಎಂದು ತಂದೆಯು ತಿಳಿಸುತ್ತಾರೆ, ನಿಮ್ಮ ಮೇಲೆಯೇ ಬಲಿಹಾರಿಯಾಗುತ್ತೇನೆಂದು ನಿಮ್ಮ ಪ್ರತಿಜ್ಞೆಯಾಗಿದೆ. ನೀವು ನನ್ನ ಮೇಲೆ ಬಲಿಹಾರಿಯಾದರೆ ನಾನು 21 ಜನ್ಮಗಳಲ್ಲಿ ಸುಖಿಯನ್ನಾಗಿ ಮಾಡುತ್ತೇನೆ, ಇದು ಎಷ್ಟು ದೊಡ್ಡ ಆಸ್ತಿಯಾಗಿದೆ. ಶ್ರೀಮತದಿಂದ ನೀವು ಶ್ರೇಷ್ಠರಾಗುತ್ತೀರಿ, ಇದನ್ನು ಮರೆಯಬೇಡಿ. ಲಕ್ಷ್ಮೀ-ನಾರಾಯಣರ ಚಿತ್ರವನ್ನೂ ಸಹ ಮನೆಯಲ್ಲಿಡಬೇಕು. ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ತಂದೆಯು ಪರಮಧಾಮದಿಂದ ಬಂದಿದ್ದಾರೆ. ಆದರೆ ಮಾಯಾ ಹದ್ದು ಸಹ ಕಡಿಮೆಯೇನಿಲ್ಲ. ಎಲ್ಲರ ಮಾತಲ್ಲ ಆದರೆ ನಂಬರ್ವಾರ್ ಆಗಿದೆ. ನಾವು ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ ಎಂಬುದನ್ನು ಕೆಲವರಂತೂ ಒಂದೇ ಸಾರಿ ಮರೆತು ಹೋಗುತ್ತಾರೆ. ಇಲ್ಲಿ ಕುಳಿತಿರುವಾಗ ನಶೆಯೇರುವುದು, ಇಲ್ಲಿಂದ ಹೋದರೆಂದರೆ ಮರೆತು ಹೋಗುತ್ತಾರೆ. ನಂತರ ಬೆಳಗ್ಗೆ ರಿಫ್ರೆಷ್ ಆಗುತ್ತಾರೆ ಪುನಃ ಇಡೀ ದಿನ ಮರೆತು ಹೋಗುತ್ತಾರೆ. 4-5 ವರ್ಷಗಳು ಚೆನ್ನಾಗಿ ಸೇವೆ ಮಾಡುವವರೂ ಸಹ ಈಗ ಇಲ್ಲ. ಏನೋ ಉಲ್ಲಂಘನೆ ಮಾಡಿರುವ ಕಾರಣ ಅವರ ಕೆನ್ನೆಗೆ ಮಾಯೆಯು ಪೆಟ್ಟು ಕೊಟ್ಟಿರಬೇಕು. ಏರಿದರೆ ವೈಕುಂಠ ರಸ ಏರಬಹುದು, ಬಿದ್ದರೆಂದರೆ ಚಕನಾಚೂರ್ ಆಗುತ್ತಾರೆ. ಹೇಗೆ ಚಕನಾಚೂರ್ ಆಗುತ್ತಾರೆಂದು ನೀವು ತಿಳಿಯುತ್ತೀರಿ. ವೈಕುಂಠದಲ್ಲಂತೂ ಬರುತ್ತಾರೆ ಆದರೆ ಪದವಿಯು ನಂಬರ್ವಾರ್ ಇದೆಯಲ್ಲವೆ. ಭಲೆ ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದರೆ ಪದವಿಗಳಿದೆಯಲ್ಲವೆ. ಶಾಲೆಯಲ್ಲಿ ಪದವಿಯನ್ನು ಪಡೆಯಬೇಕೆಂದು ಪುರುಷಾರ್ಥ ಮಾಡುತ್ತಾರೆ, ಪ್ರಜೆಗಳಾದರೆ ಸಾಕು, ಅದೃಷ್ಟದಲ್ಲಿದ್ದರೆ ಆಗುತ್ತದೆ ಎಂದಲ್ಲ. ಇದಕ್ಕೆ ತಮೋಪ್ರಧಾನ ಪುರುಷಾರ್ಥವೆಂದು ಹೇಳಲಾಗುತ್ತದೆ. ಯಾರು ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯುವ ಪ್ರತಿಜ್ಞೆ ಮಾಡುತ್ತಾರೆಯೋ ಅವರು ಸತೋಪ್ರಧಾನರೆಂದು ಹೇಳುತ್ತಾರೆ, ಇದಂತೂ ಕುದುರೆಯ ಓಟವಾಗಿದೆ. ಎಲ್ಲರೂ ನಂಬರ್ವನ್ ಆಗಲು ಸಾಧ್ಯವಿಲ್ಲ. ಇದು ಮನುಷ್ಯರ ಓಟವಾಗಿದೆ. ನೀವು ಶಿವ ತಂದೆಯ ಕೊರಳಿನ ಮಾಲೆಯಲ್ಲಿ ಪೋಣಿಸಲ್ಪಡಬೇಕೆಂದು ಬಯಸುತ್ತೀರಿ ಅಂದಮೇಲೆ ಅವರನ್ನು ನೆನಪು ಮಾಡಬೇಕಲ್ಲವೆ. ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಮಾಯೆಯು ವಿಘ್ನ ಹಾಕಿತೆಂದರೆ ಒಮ್ಮೆಲೆ ಓಟದಿಂದ ತೆಗೆದು ಬಿಡುತ್ತದೆ. ನಿಮ್ಮದು ಮನುಷ್ಯರ ಓಟವಾಗಿದೆ, ನಾವು ಬಹಳ ದುಃಖಿಗಳಾಗಿದ್ದೇವೆ, ಶರೀರವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಸುಸ್ತಾಗಿದ್ದೇವೆ, ಈಗ ತಂದೆಯ ಬಳಿ ಹೋಗಬೇಕಾಗಿದೆ ಎಂದು ಆತ್ಮವು ಹೇಳುತ್ತದೆ. ತಂದೆಯು ಎಷ್ಟೊಂದು ಯುಕ್ತಿಗಳನ್ನು ತಿಳಿಸಿದ್ದಾರೆ. ಬಾಬಾ, ನಾವು ನಿಮ್ಮ ನೆನಪಿನಲ್ಲಿರುತ್ತೇವೆ, ನೆನಪಿನಲ್ಲಿರಲು ಎಷ್ಟು ಸಮಯ ಸಾಧ್ಯವಾಗುತ್ತದೆಯೋ ಅಷ್ಟು ಒಳ್ಳೆಯದು. ಸರ್ಕಾರೀ ಕೆಲಸಕ್ಕೆ 8 ಗಂಟೆಗಳ ಕಾಲ ಕೊಡುತ್ತೀರಿ, ಹಾಗೆಯೇ ನೆನಪಿನಲ್ಲಿಯೂ 8 ಗಂಟೆಗಳ ಕಾಲ ಕೊಡಬೇಕಾಗಿದೆ. ಸೃಷ್ಟಿಯನ್ನು ಸ್ವರ್ಗ ಮಾಡುವುದು ಎಷ್ಟು ದೊಡ್ಡ ಸೇವೆಯಾಗಿದೆ. ಕೇವಲ ತಂದೆ ಮತ್ತು ಸುಖಧಾಮವನ್ನು ನೆನಪು ಮಾಡಿ. 8 ಗಂಟೆಗಳ ಸೇವೆ ಮಾಡುತ್ತೀರೆಂದರೆ ಪೂರ್ಣ ಆಸ್ತಿಯನ್ನು ಪಡೆದು ಬಿಡುವಿರಿ. ಈ ರೀತಿ ನೆನಪು ಮಾಡುತ್ತಾ-ಮಾಡುತ್ತಾ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. 8 ಗಂಟೆಗಳ ಕಾಲ ಈ ಸೇವೆಗಾಗಿ ಕೊಡಿ, ಉಳಿದ 16 ಗಂಟೆಗಳ ಕಾಲ ನೀವು ಬಿಡುವಾಗಿರುತ್ತೀರಿ. ನೆನಪನ್ನಂತೂ ಎಲ್ಲಿ ಬೇಕಾದರೂ ಕುಳಿತು ಮಾಡಬಹುದು. ಮುಂಜಾನೆಯ ಸಮಯವು ಎಲ್ಲದಕ್ಕಿಂತ ಒಳ್ಳೆಯ ಸಮಯ ಸಿಗುತ್ತದೆ. ಸಿಂಧಿಭಾಷೆಯಲ್ಲಿ ಒಂದು ಗಾದೆಮಾತಿದೆ - ಬೇಗನೆ ಮಲಗಬೇಕು, ಬೇಗನೇ ಏಳಬೇಕು. ಅದೇ ಮನುಷ್ಯರ ದೊಡ್ಡ ಗುಣವಾಗಿದೆ. ಈ ಗಾಯನವು ಈಗಿನದೇ ಆಗಿದೆ. ರಾತ್ರಿ ಬೇಗನೆ ಮಲಗಿ ಮುಂಜಾನೆಯೇ ಏಳಬೇಕೆಂದು ತಂದೆಯು ಹೇಳುತ್ತಾರೆ. ಅಜ್ಞಾನಿಗಳು 8 ಗಂಟೆ ನಿದ್ರೆ ಮಾಡುತ್ತಾರೆ, ನಿಮ್ಮ ನಿದ್ರೆಯು ಅದರ ಅರ್ಧ ಭಾಗದಷ್ಟು ಇರಬೇಕು. 4-5 ಗಂಟೆಗಳ ನಿದ್ರೆ ಸಾಕು. ನೀವಂತೂ ಕರ್ಮಯೋಗಿಗಳಲ್ಲವೆ. ರಾತ್ರಿ 10 ಗಂಟೆಗೆ ಮಲಗಿ ಬೆಳಗ್ಗೆ 2 ಗಂಟೆಗೆ ಏಳಬೇಕು. ಶಿವ ತಂದೆಯನ್ನು ನೆನಪು ಮಾಡುವುದರಿಂದ ನಿಮಗೆ ಬಹಳ ಸಂಪಾದನೆಯಾಗುತ್ತದೆ. ನಿಮಗೆ ಆರೋಗ್ಯ-ಸಂಪತ್ತು ಎರಡೂ ಸಿಗುತ್ತದೆ. ಒಳ್ಳೆಯದು - 2 ಗಂಟೆಗೆ ಇಲ್ಲವೆಂದರೆ 3 ಗಂಟೆಗೆ ಏಳಿ, 4 ಗಂಟೆಗೆ ಎದ್ದೇಳಿ. ಇದು ಫಸ್ಟ್ಕ್ಲಾಸ್ ಸಮಯವಾಗಿದೆ, ಶಾಂತಿಯಿರುತ್ತದೆ, ಎಲ್ಲರೂ ಅಶರೀರಿಗಳಾಗಿರುತ್ತಾರೆ. ಆ ಸಮಯದಲ್ಲಿ ಸನ್ನಾಟ ಶಾಂತಿಯಿರುತ್ತದೆ. ಅಮೃತವೇಳೆಯಲ್ಲಿ ಬಹಳ ಚೆನ್ನಾಗಿ ಪ್ರಭಾವ ಬೀರುತ್ತದೆ. ತಂದೆಯು ರಾತ್ರಿಯಲ್ಲಿ ಬಹಳ ಎಚ್ಚರವಾಗಿರುತ್ತಾರೆ. ಸೂಕ್ಷ್ಮ ಸೇವೆಯಲ್ಲಿ ಸುಸ್ತಾಗುವುದಿಲ್ಲ, ಸಂಪಾದನೆಯಿಂದ ಬಹಳ ಖುಷಿಯಾಗುತ್ತದೆ. ನೀವು ಮಕ್ಕಳು ಬೆಳಗ್ಗೆ ಎದ್ದು ನಿಮ್ಮ ಅವಿನಾಶಿ ಸಂಪಾದನೆಯನ್ನು ಮಾಡಿಕೊಳ್ಳುತ್ತಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. 21 ಜನ್ಮಗಳವರೆಗೆ ಸದಾ ಸುಖಿಯಾಗಿರಲು ಒಬ್ಬ ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ಶ್ರೀಮತದಿಂದ ಶ್ರೇಷ್ಠರಾಗಬೇಕಾಗಿದೆ. ಮನಮತ ಅಥವಾ ಪರಮತವನ್ನು ತ್ಯಾಗ ಮಾಡಬೇಕಾಗಿದೆ. ಯಾವುದೇ ಉಲ್ಲಂಘನೆ ಮಾಡಬಾರದು.
2. ಮುಂಜಾನೆ ಎದ್ದು ನೆನಪಿನಲ್ಲಿ ಕುಳಿತು ಸಂಪಾದನೆ ಮಾಡಿಕೊಳ್ಳಬೇಕು. ಸೃಷ್ಟಿಯನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ಕೊನೆಪಕ್ಷ 8 ಗಂಟೆಗಳ ಕಾಲ ಅವಶ್ಯವಾಗಿ ಕೊಡಬೇಕು.
(ಮಾತೇಶ್ವರಿಯವರ ಪುಣ್ಯ ಸ್ಮೃತಿ ದಿನದಂತು ಕ್ಲಾಸಿನಲ್ಲಿ ತಿಳಿಸುವುದಕ್ಕಾಗಿ ಜಗದಂಬಾ ಸರಸ್ವತಿಯವರ ಮಧುರ ಮಹಾವಾಕ್ಯಗಳು)
ಗೀತೆ: ಬಿಟ್ಟು ಬಿಡು ಜಗತ್ತಿನ ಸಂಬಂಧವನ್ನು.......
Audio Player
ಒಂದುವೇಳೆ ನಾವು ಜಗತ್ತಿನಿಂದ ಸಂಬಂಧವನ್ನೇ ಬಿಟ್ಟಿದ್ದೇವೆಂದರೆ, ನಂತರ ಜಗತ್ತು ಏತಕ್ಕಾಗಿ ಇದೆ? ಒಂದುವೇಳೆ ಸಂಬಂಧವನ್ನು ಮರಿಯುವ ಮಾತಿದೆಯೆಂದರೆ, ಈ ಸಂಬಂಧವನ್ನು ಮಾಡಿದ್ದಾದರೂ ಏಕೆ? ಪತಿ-ಪತ್ನಿ, ತಂದೆ-ಮಗ, ರಾಜಾ-ಪ್ರಜೆ ಇತ್ಯಾದಿ, ಇತ್ಯಾದಿ, ಅನೇಕಾನೇಕ ಸಂಬಂಧಗಳೇನಿವೆ, ಇವೆಲ್ಲವೂ ಭಗವಂತನೇ ರಚಿಸಿದ್ದಾರೆ ಎಂದು ಹೇಳುತ್ತಾರಲ್ಲವೆ! ಅಂದಾಗ ಯಾವಾಗ ಭಗವಂತನೇ ರಚಿಸಿದ್ದಾರೆ ಅಂದಮೇಲೆ ಇದನ್ನು ಬಿಟ್ಟು ಬಿಡಿ ಎಂದು ಏಕೆ ಹೇಳುವುದು! ಅಥವಾ ಈ ಹಾಡೇ ತಪ್ಪಾಗಿದೆಯೆ!
ಭಗವಂತನು ಎಂತಹ ಪ್ರಪಂಚವನ್ನು ರಚಿಸಿದರು? ಜಗತ್ತು ಅಥವಾ ಪ್ರಪಂಚವೆಂದಾದರೂ ಹೇಳಿರಿ, ಅದನ್ನು ಭಗವಂತನೇ ರಚಿಸಿದರೆಂದರೆ, ಯಾವುದನ್ನು ಬಿಡಬೇಕಾಗುತ್ತದೆಯೋ ಅಂತಹ ಪ್ರಪಂಚವನ್ನು ರಚಿಸಿದರೇನು! ಭಗವಂತನು ಈಗಿರುವ ಸಂಬಂಧವನ್ನು ರಚಿಸಲಿಲ್ಲ. ಭಲೆ ಈಗ ಈ ಜಗತ್ತನ್ನೂ ನೋಡಿ - ನಿಮ್ಮ ಸಂಬಂಧಗಳು ಹೇಗಾಗಿ ಬಿಟ್ಟಿದೆ! ಕರ್ಮಗಳನುಸಾರ ತಮೋಪ್ರಧಾನತೆಯಲ್ಲಿ ಬರುತ್ತಾ-ಬರುತ್ತಾ ಏನಾಗಿ ಬಿಟ್ಟಿದೆ! ಒಬ್ಬರಿನ್ನೊಬ್ಬರನ್ನು ಕರ್ಮಗಳ ಬಂಧನವೇ ಚುಚ್ಚುತ್ತಾ (ದುಃಖ ಕೊಡುತ್ತದೆ) ಇರುತ್ತದೆ. ಎಲ್ಲಾ ಸಂಬಂಧಗಳ ಲೆಕ್ಕಾಚಾರದಲ್ಲಿ ತಮೋಪ್ರಧಾನತೆಯಲ್ಲಿ ಬರುತ್ತಾ, ಒಬ್ಬರಿನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಾ-ತೆಗೆದುಕೊಳ್ಳುತ್ತಾ ಇರುತ್ತಾರೆ. ಇದಕ್ಕೆ ಭಗವಂತನು ಸ್ವಯಂ ಹೇಳುತ್ತಾರೆ - ನಾನಂತು ನಿಮ್ಮ ಈ ದುಃಖದ ಸಂಬಂಧಗಳನ್ನು ಮಾಡಲಿಲ್ಲ, ನಾನು ನಿಮ್ಮ ಸಂಬಂಧಗಳೇನು ಬೆಸೆದಿದ್ದೆನು ಅದು ಬಂಧನವಾಗಿರಲಿಲ್ಲ. ನಾನು ನಿಮ್ಮ ಶ್ರೇಷ್ಠ ಸಂಬಂಧವನ್ನು ಬೆಸೆದಿದ್ದೆನು, ನೀವು ಅದೇ ಸಂಬಂಧದಲ್ಲಿ ಸದಾ ಸುಖಿಯಾಗಿದ್ದಿರಿ. ನಿಮ್ಮ ಎಲ್ಲಾ ಸಂಬಂಧಗಳು ಬಹಳ ಸ್ವಚ್ಛವಾಗಿದ್ದವು (ಪವಿತ್ರ) ಆದ್ದರಿಂದ ನೆನಪು ಮಾಡುತ್ತೀರಲ್ಲವೆ – ರಾಮ ರಾಜ, ರಾಮ ಪ್ರಜಾ, ರಾಮ ಸಾಹುಕಾರ ಆಗಿದ್ದಾರೆ, ಇಡೀ ನಗರವು ಬದುಕಲು ದಾತನ ಧರ್ಮದ ಉಪಕಾರವಿದೆ.... ಅದಕ್ಕೆ ಗೃಹಸ್ಥ ಧರ್ಮ ಎಂದು ಹೇಳುತ್ತಿದ್ದಿರಿ. ಧರ್ಮ-ಪತಿ, ಧರ್ಮ-ಪತ್ನಿ, ಧರ್ಮದ ಹೆಸರಿನಿಂದಲೇ ಇದೆಯಲ್ಲವೆ ಆದರೆ ಈಗಂತು ಆ ಧರ್ಮದ ಸಂಬಂಧವಿಲ್ಲದಂತೆ ಆಗಿದೆ, ಪ್ರತ್ಯಕ್ಷದಲ್ಲಿ ಆ ಜೀವನವೇ ಇಲ್ಲದಂತದಾಗಿದೆ, ಆದ್ದರಿಂದ ತಂದೆಯವರು ಹೇಳುತ್ತಾರೆ - ನೀವೇನು ತಮ್ಮ ಜಗತ್ತನ್ನು ಮಾಡಿದ್ದೀರಿ, ಇದರಲ್ಲಿ ಸಂಬಂಧಗಳೇ ಹಾಳಾಗಿ ಬಿಟ್ಟಿದೆ. ನಾವು ಯಾವ ಜಗತ್ತನ್ನು ತಯಾರು ಮಾಡಿದ್ದೆವು, ಅದರಲ್ಲಿ ನಿಮ್ಮ ಸಂಬಂಧಗಳು ಬಹಳ ಚೆನ್ನಾಗಿದ್ದವು, ಬಹಳ ಪ್ರಿಯವಾಗಿದ್ದವು, ಒಬ್ಬರಿಗೊಬ್ಬರು ಎಷ್ಟೊಂದು ಸುಖವನ್ನು ಕೊಡುವವರಿದ್ದರು. ಅಂದರೆ ಅಲ್ಲಿ ಅವಶ್ಯವಾಗಿ ಸಂಬಂಧಗಳಿದ್ದವು, ಆದರೆ ಭಗವಂತನು ಸಂಬಂಧಗಳನ್ನೇ ರಚಿಸಲಿಲ್ಲ ಎಂದಲ್ಲ. ಸಂಬಂಧಗಳಿದ್ದವು ಆದರೆ ಆ ಸಂಬಂಧಗಳು ಕರ್ಮ ಬಂಧನ ಮುಕ್ತವಾಗಿದ್ದವು ಆದ್ದರಿಂದ ಅವರಿಗೆ ಜೀವನ್ಮುಕ್ತರು ಎಂದು ಹೇಳಲಾಗುತ್ತದೆ. ಜೀವನದಲ್ಲಿ ಈ ಕರ್ಮದ ಬಂಧನಗಳಿಂದ ಮುಕ್ತವಾಗಿದ್ದರು ಆದ್ದರಿಂದ ಜೀವನ್ಮುಕ್ತರೆಂದು ಹೇಳುತ್ತಾರೆ. ಈಗ ನಿಮ್ಮ ಸಂಬಂಧವು ಜೀವನ ಬಂಧನ ಆಗಿ ಬಿಟ್ಟಿದೆ. ಆದ್ದರಿಂದ ಹೇಳುತ್ತಾರೆ - ಈಗ ಅದರಿಂದ ಮುಕ್ತಿ ಪಡೆಯುವುದು ಹೇಗೆ! ತಂದೆಯು ತಿಳಿಸುತ್ತಾರೆ - ಅದರಿಂದ ಸಂಬಂಧವನ್ನು ಮುರಿದು ನನ್ನೊಬ್ಬನೊಂದಿಗೆ ಜೋಡಿಸಿರಿ. ನೀವು ನಿಮ ಇದೊಂದು ಜೀವನವನ್ನು ನನಗೆ ಅರ್ಪಣೆ ಮಾಡಿಬಿಡಿ. ನನಗೆ ಅರ್ಪಣೆಯಾಗುವುದು ಎಂದರೆ ಸ್ತ್ರೀಯು ಪತಿಯ ಅರ್ಪಣೆ, ಪತಿಯು ಸ್ತ್ರೀಯ ಅರ್ಪಣೆ ಮಾಡುವುದು. ಹೇಗೆ ಮಾಡಲಿ, ಏನು ಮಾಡಲಿ ಎಂಬ ಪ್ರಶ್ನೆಯನ್ನೂ ಸಹ ಕೇಳಲು ಸಾಧ್ಯವಿಲ್ಲ, ನೀವು ತಮ್ಮ ಜೀವನವನ್ನು ಒಬ್ಬರಿನ್ನೊಬ್ಬರಿಗಾಗಿಯೇ ಕೊಡುತ್ತಾ ಬಂದಿದ್ದೀರಿ, ನೀವು ನಿಮ್ಮ ಜೀವನವನ್ನು ಮಕ್ಕಳಿಗಾಗಿ ಕೊಟ್ಟು ಕುಳಿತಿಲ್ಲವೇ? ತಮ್ಮ ತನು, ಮನ, ಧನ ಏನೆಲ್ಲವೂ ಇದೆಯೋ, ಅದನ್ನು ನೀವು ಅವರಿಗಾಗಿಯೇ ಮಾಡುತ್ತಾ ಕುಳಿತಿದ್ದೀರಲ್ಲವೆ. ನಿಮ್ಮದು-ಇದು ನಿಮ್ಮದು ಎನ್ನುತ್ತೀರಲ್ಲವೆ! ಇಡೀ ಜೀವನವನ್ನೇ ಅವರಿಗಾಗಿ ಉಪಯೋಗಿಸುತ್ತೀರಿ, ಅಂದಮೇಲೆ ನಾನೇನು ಇದೆಲ್ಲವನ್ನೂ ನನಗೆ ಅರ್ಪಣೆ ಮಾಡಿ ಬಿಡಿ ಎಂದು ಅಂತಹ ಯಾವುದೇ ಹೊಸ ಮಾತನ್ನು ಹೇಳುವುದಿಲ್ಲ. ಹೇಗೆ ಈಗ ಒಬ್ಬರಿನ್ನೊಬ್ಬರಿಗಾಗಿ ಮಾಡುತ್ತಾ ಬಂದಿದ್ದೀರಿ ಹಾಗೆಯೇ ಈಗ ನೀವು ನನ್ನವರಾಗಿರಿ ಎಂದು ಹೇಳುತ್ತೇನೆ. ನನ್ನವರಾದ ನಂತರ ನಿಮಿತ್ತರಾಗಿದ್ದು ನಿಭಾಯಿಸಿರಿ. ನೀವು ಭಕ್ತಿಮಾರ್ಗದಲ್ಲಿ ಇದನ್ನೇ ಹೇಳುತ್ತಾ ಬಂದಿದ್ದೀರಿ - ಭಗವಂತ, ಇದೆಲ್ಲವೂ ನಿನ್ನದು, ನಾನೂ ನಿನ್ನವಳು.... ಆದರೆ ನಿನ್ನದೆಂದು ಮಾಡಲಿಲ್ಲ, ಕೇವಲ ನಿನ್ನದೆಂದು ಹೇಳಿದಿರಷ್ಟೆ. ನಿನ್ನದೂ ನನ್ನದೆ, ನನ್ನದೂ ನಿನ್ನದೆ.... ಈ ರೀತಿಯಾಗಿಯೇ ಎಲ್ಲರೂ ಮಾಡುತ್ತಿದ್ದಿರಿ ಆದರೆ ಈಗ ಆ ಮೋಸವಂತು ನಡೆಯುವುದಿಲ್ಲ ಅಲ್ಲವೇ! ನಿನ್ನದೆಲ್ಲವೂ ನನ್ನದು, ಹಾಗೆಯೇ ನನ್ನದೆಲ್ಲವೂ ನನ್ನದು ಈ ರೀತಿಯಾಗಬಾರದು. ಈಗ ನಿನ್ನದು-ನನ್ನದು ಎಂಬುದೆಲ್ಲವನ್ನೂ ಸಮಾಪ್ತಿ ಮಾಡಬೇಕಾಗುತ್ತದೆ. ಈಗ ನಾನು ನಿನ್ನವನೆಂದಾಗ ಅದರಲ್ಲಿ ಸರ್ವಸ್ವವೂ ಬಂದು ಬಿಡುತ್ತದೆ. ನಾನು ನಿನ್ನವನು ಅಷ್ಟೇ, ಉಳಿದಂತೆ ಅವರದೂ ನನ್ನದೇ, ನನ್ನದೂ ನನ್ನದೆ.... ಇಂತಹ ಮೋಸದಿಂದ ಲಾಭವೇನಿದೆ! ಏಕೆಂದರೆ ತಾವೇ ತಮ್ಮನ್ನು ಮೋಸ ಮಾಡಿಕೊಳ್ಳುತ್ತೀರಿ, ಆ ಪರಮಾತ್ಮನನ್ನೆಂದಿಗೂ ಮೋಸ ಮಾಡಲು ಸಾಧ್ಯವಿಲ್ಲ. ಮೊದಮೊದಲು ಹೇಗೇಗೆ ಮೋಸ ಮಾಡುತ್ತಿದ್ದಿರಿ ಆದರೆ ಮಾಡುತ್ತಾ-ಮಾಡುತ್ತಾ ಸ್ವಯಂ ತಾವೇ ದುಃಖಿ-ಅಶಾಂತರಾದಿರಿ ಏಕೆಂದರೆ ಮೋಸವನ್ನಂತು ತಾವೇ ಅನುಭವಿಸುತ್ತಿದ್ದಿರಿ, ಆದ್ದರಿಂದ ತಂದೆಯವರು ಈಗ ಹೇಳುತ್ತಾರೆ - ಅದೆಲ್ಲವನ್ನೂ ಬಿಟ್ಟು ಬಿಡಿ, ದೇಹ ಸಹಿತವಾಗಿ ಎಲ್ಲಾ ಸಂಬಂಧಗಳಿಂದ ಬುದ್ಧಿಯನ್ನು ತೆಗೆದು, ಈಗ ನನ್ನೊಂದಿಗೆ ಜೋಡಿಸಿರಿ. ನಂತರ ನನ್ನದೆನ್ನುವುದೇ ಇರುವುದಿಲ್ಲ.
ಈಗಿನವರೆಗೂ ನನ್ನದು-ನನ್ನದು ಎನ್ನುತ್ತಾ ದುಃಖಿಯಾಗುತ್ತಾ ಇರುತ್ತೀರಿ, ಆದರೂ ಕೂಡ ಬುದ್ಧಿಯು ಅದರ ಕಡೆಯೇ ಹೋಗುತ್ತದೆ, ಆದ್ದರಿಂದ ಏನು ಮಾಡಲಿ-ಹೇಗೆ ಮಾಡಲಿ... ಎಂದು ಹೇಳುತ್ತೀರಿ. ನೀವು ಒಂದುವೇಳೆ ಯಾವುದರಲ್ಲಾದರೂ ಸಿಲುಕುತ್ತೀರೆಂದರೆ ಅದೃಷ್ಟವೇನಾಗುವುದು! ಮೋಹದ ಕಾರಣದಿಂದಲೇ ನೀವು ದುಃಖಿಯಾಗಿದ್ದೀರಿ. ಆದ್ದರಿಂದ ತಂದೆಯು ಹೇಳುತ್ತಾರೆ - ನೀವೀಗ ಈ ಜಗತ್ತಿನ ಸಂಬಂಧವನ್ನು ಮುರಿದು ನನ್ನವರಾಗಿರಿ. ಈಗ ನೀವೇನು ತಮ್ಮ ದೇಹದ ಬಂಧನ, ಜೀವನ ಬಂಧನವನ್ನಾಗಿ ಮಾಡಿಕೊಂಡಿದ್ದೀರಿ, ಅದರಿಂದ ಹೊರಬಂದು ನನ್ನವರಾಗಿ ಬಿಡಿ. ಆನಂತರ ನಾನೇನು ನಿಮ್ಮ ಜೊತೆ ಜನ್ಮ-ಜನ್ಮದಲ್ಲಿಯೂ ನಡೆಯುತ್ತಿರುತ್ತೇನೆಯೇ! ಇಲ್ಲ. ಈಗ ನನಗೆ ನಿಮ್ಮೊಂದಿಗೆ ಕೆಲಸವಿದೆ ಅಷ್ಟೇ. ನಂತರದಲ್ಲಂತು ಸದಾಕಾಲಕ್ಕಾಗಿ ನೀವಾತ್ಮರು ಪರಸ್ಪರದಲ್ಲಿ ಸುಖದಲ್ಲಿ ನಡೆಯುತ್ತಾ ಇರುತ್ತೀರಿ. ಅದಕ್ಕಾಗಿ ನಿಮ್ಮ ದುಃಖದ ಬಂಧನಗಳನ್ನು ಮುರಿಯುತ್ತಾ, ಸುಖದ ಸಂಬಂಧವನ್ನಾಗಿ ಮಾಡಿ ಬಿಡುತ್ತೇನೆ, ಆನಂತರ ಪರಸ್ಪರ ನೀವೇ ಸುಖವನ್ನು ಅನುಭವಿಸುವಿರಿ. ಈಗ ನೋಡಿ, ನೀವೆಷ್ಟು ಹಾಳಾಗಿದ್ದೀರಿ ಆದ್ದರಿಂದಲೇ ದುಃಖಿಯಾಗಿದ್ದೀರಿ. ಮತ್ತೆ ನಾನು ಹಾಳಾಗಿರುವ ನಿಮ್ಮನ್ನು ಸುಧಾರಣೆ ಮಾಡುತ್ತೇನೆ, ನಂತರ ನೀವೇ ಸುಖಿಯಾಗಿರುತ್ತೀರಿ. ನಾನೇನಾದರೂ ಜನ್ಮ-ಜನ್ಮದಲ್ಲಿಯೂ ನಿಮ್ಮಜೊತೆ ನಡೆಯುತ್ತೇನೆಯೇ! ನಾನಂತು ಕೇವಲ ಹಾಳಾಗಿರುವ (ಪತಿತ) ನಿಮ್ಮನ್ನು ಸರಿಹೋಗಲು (ಪಾವನ) ಹೇಳುತ್ತೇನೆ, ಅದಕ್ಕಾಗಿ ಈಗ ನನ್ನವರಾಗಿರಿ. ಅದನ್ನೂ ಏಕೆ ಹೇಳುತ್ತೇನೆ? ಏಕೆಂದರೆ ನನ್ನ ಆದೇಶದಂತೆ ನಡೆಯುವುದರಿಂದ ನಿಮಗೆ ಎಲ್ಲವೂ ಸಹಜವಾಗುತ್ತದೆ - ಈ ಸಹಜ ಯುಕ್ತಿಯನ್ನು ನಾನು ನಿಮಗೆ ಕೊಡುತ್ತೇನೆ. ನೀವು ಪ್ರತ್ಯಕ್ಷವಾಗಿ ನನ್ನವರಾಗಿದ್ದು ನಡೆಯುತ್ತೀರೆಂದರೆ, ಈ ಯುಕ್ತಿಯು ಕೆಲಸಕ್ಕೆ ಬರುತ್ತದೆ. ಹೇಗೆ ಯಾರೇ ಯಾರನ್ನಾದರೂ ಮಡಿಲಿನ ಮಗುವಾಗುತ್ತದೆ, ನಂತರ ಅವರ ಹೆಸರೇ ಪ್ರತ್ಯಕ್ಷವಾಗಿ ನಡೆಯುತ್ತದೆಯಲ್ಲವೆ. ಅದೇರೀತಿ ನೀವೂ ಸಹ ಪ್ರತ್ಯಕ್ಷವಾಗಿ ನನ್ನವರಾಗಿದ್ದು ನಡೆಯುವುದರಿಂದ ನಿಮ್ಮದೇ ಭಾಗ್ಯವಾಗುತ್ತದೆ. ತಂದೆಯಂತು ಬಹಳ ಸೀದಾ, ಸಹಜ, ಅತ್ಯಂತ ಸಹಜವಾದ ಮಾತುಗಳನ್ನು ತಿಳಿಸುತ್ತಾರೆ. ಅದನ್ನೂ ಸಹ ನೋಡಿ, ಕೋಟಿಯಲ್ಲಿ ಕೆಲವರೇ ಧಾರಣೆ ಮಾಡುವವರು ಹೊರಬರುತ್ತಾರೆ.
ತಂದೆಯವರು ತಿಳಿಸುತ್ತಾರೆ - ಈ ಪುಟ್ಟ ಸಂಗಮಯುಗದಲ್ಲಿ ನಿಮ್ಮ ದೇಶವಾದ ಈ ಸಾಕಾರ ಪ್ರಪಂಚದಲ್ಲಿ, ನಿಮಗಾಗಿಯೇ ಬಂದಿರುವೆನು. ಅಂದಮೇಲೆ ಕೊನೆಪಕ್ಷ ಎಷ್ಟು ಸಮಯವಿದೆಯೋ ಅಷ್ಟು ಸಮಯವಂತು ನಮ್ಮ ಚಿಂತನೆ ಮಾಡಿರಿ. ಬಾಬಾರವರ ಮಕ್ಕಳಾಗಿದ್ದೀರೆಂದರೆ ಕೊನೆಪಕ್ಷ ಇಷ್ಟು ಸಮಯವಂತು ಶುದ್ಧವಾಗಿರಲಿ. ನಂತರದಲ್ಲಂತು ನಿಮ್ಮ ಪ್ರಾಲಬ್ಧವೇ ಅಂತಹದ್ದಾಗುತ್ತದೆ, ಯಾವುದರಲ್ಲಿ ನೀವು ಪರಿಶ್ರಮ ಪಡಬೇಕಾಗಿರುವುದಿಲ್ಲ. ಈಗ ಸ್ವಲ್ಪವೇ ಪರಿಶ್ರಮದ ಮಾತಿದೆ, ಈಗ ನೀವು ಏನಾದರೂ ಮಾಡಿ, ಎಲ್ಲವನ್ನೂ ಸಹನೆ ಮಾಡಿಯಾದರೂ ಪವಿತ್ರರಾಗುವ ಪ್ರತಿಜ್ಞೆಯನ್ನು ಮಾಡಿರಿ. ಅದರಲ್ಲಿ ತಮ್ಮ ಧೃಡತೆಯನ್ನಿಡಿ, ತಮ್ಮ ಧಾರಣೆಗಳಲ್ಲಿಯೇ ಇರುವಂತಹ ಸಂಪೂರ್ಣ ಪ್ರಯತ್ನದಲ್ಲಿರಿ. ತಂದೆಯು ನಿಮಗೆ ಸ್ಪಷ್ಟ ರೀತಿಯಿಂದ ತಿಳಿಸುತ್ತಾರೆ, ಇದನ್ನು ಕೇವಲ ಸ್ವಲ್ಪ ಸಮಯಕ್ಕಾಗಿ ಪರಿಶ್ರಮ ಪಡಬೇಕು. ನಾನು ನಿಮಗೆ ಮತ್ತ್ಯಾವುದೇ ಪರಿಶ್ರಮ ಕೊಡುವುದಿಲ್ಲ, ನಿಮಗೆಷ್ಟು ಸಿಗುತ್ತದೆಯೋ ಅದರ ಹೋಲಿಕೆಯಲ್ಲಿ ಇದೇನೂ ಪರಿಶ್ರಮವೇ ಅಲ್ಲ.
ಈಗ ತುಪ್ಪದ ಮಡಿಕೆಯಾಗಬಾರದು..... ಇದನ್ನು ಮಾಡುವೆನು,... ಅದು ಮಾಡುವೆನು.... ಪ್ರಪಂಚವೇನು ಹೇಳುತ್ತದೋ.... ಅವರೇನು ಹೇಳುವರೋ.... ಅರೆ! ಪ್ರಪಂಚವೇನು ಹೇಳುತ್ತದೆ... ಇದನ್ನು ಬಿಟ್ಟು ಬಿಡಿ. ಈಗ ಈ ಪ್ರಪಂಚವೇ ಹೋಗುವುದಿದೆ ಆದರೆ ಪಾಪ! ಅವರಿಗೇನಾದರೂ ಗೊತ್ತಿದೆಯೇ! ಆದ್ದರಿಂದ ತಂದೆಯು ಹೇಳುತ್ತಾರೆ - ಇದರ ಬಗ್ಗೆ ಚಿಂತಿಸಬಾರದು. ಈಗಂತು ಮೃತ್ಯುವೇ ಸನ್ಮುಖದಲ್ಲಿ ನಿಂತುಕೊಂಡಿದೆ, ನೀವಂತು ಇಷ್ಟು ಉದ್ದಗಲವಾಗಿ ಮಾಡಿಕೊಂಡು ಕುಳಿತಿದ್ದೀರಿ - ಎಲ್ಲವನ್ನೂ ವ್ಯರ್ಥ ಮಾಡುತ್ತಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ವ್ಯರ್ಥವೆಲ್ಲವನ್ನೂ ಉಳಿತಾಯ ಮಾಡಿರಿ, ಈ ಶರೀರ ನಿರ್ವಹಣೆಗಾಗಿ ಭಲೆ ಎಷ್ಟು ಬೇಕು ಅಷ್ಟು ಮಾಡಿರಿ, ನಿಮ್ಮ ರಚನೆಯೊಂದಿಗೆ ಎಷ್ಟು ಲೆಕ್ಕಾಚಾರವಿದೆಯೋ ಅಷ್ಟು ಮಾಡಿರಿ, ನಾನು ಹೇಗೆ ಸಂಭಾಲನೆ ಮಾಡುವುದು! ಎಂದರೆ ಇದನ್ನು ನೀವೇ ಸಂಭಾಲಿಸಬೇಕು. ಯಾವುದು ಅವಶ್ಯಕವೋ ಅದರಲ್ಲಿ ನಿಮ್ಮನ್ನು ಮುಕ್ತಗೊಳಿಸುತ್ತೇನೆ ಆದರೆ ಈಗೇನು ರಚಿಸುತ್ತಿದ್ದೀರಿ, ಅದಕ್ಕಾಗಿ ಬೇಡವೆನ್ನುತ್ತೇನೆ ಏಕೆಂದರೆ ಈಗ ಅವರಂತು ಬೀಳಲೇಬೇಕು, ಅದರಲ್ಲಿ ತಮ್ಮ ಸಮಯವನ್ನೇಕೆ ವ್ಯರ್ಥವಾಗಿ ಕಳೆಯುತ್ತಿದ್ದೀರಿ. ಈ ವ್ಯರ್ಥ ಜಂಜಾಟಗಳಿಂದಲೇ ನೀವು ದುಃಖಿಯಾಗಿದ್ದೀರಿ, ಅದರಿಂದ ಹೇಗೆ ಮುಕ್ತರಾಗುವುದು ಎನ್ನುವುದನ್ನೇ ನಾನು ತಿಳಿಸುತ್ತೇನೆ. ಇಷ್ಟು ಮಾಡಿದರೂ ಅನೇಕ ನೆಪ/ಕಾರಣ ಕೊಡುತ್ತೀರೆಂದರೆ, ಇದು ಎಲ್ಲಿನ ರೀತಿಯಾಗಿದೆ? ಇಷ್ಟಾದರೂ ತಂದೆಯು ಹೇಳುತ್ತಾರೆ - ಈಗೇನಾದರೂ ನನಗೆ ಡೈರೆಕ್ಟ್ ಸಹಯೋಗ ಕೊಡುವುದಿಲ್ಲ, ಕೈ ಕೊಡುವುದಿಲ್ಲವೆಂದರೆ ನೋಡಿ, ನಾನಂತು ಆ ರೀತಿ ಮೂಗನ್ನಿಡಿದು ಕರೆದುಕೊಂಡು ಹೋಗುವೆನು. ಮೂಗನ್ನಿಡಿದರೆ ಆ ನಂತರ ಉಸಿರಿಡಿದುಕೊಳ್ಳುತ್ತದೆ, ನಂತರ ದುಃಖವಾಗುವುದು, ಶಿಕ್ಷೆಯನ್ನು ಅನುಭವಿಸಬೇಕಲ್ಲವೆ! ಆದ್ದರಿಂದ ಹೇಳುತ್ತಿದ್ದೇವೆ - ಈಗ ಕೈಯಲ್ಲಿ ಕೈ ಹಿಡಿದು ನೇರವಾಗಿ ನಡೆಯುವ ಸಮಯ ಬಂದು ಬಿಟ್ಟಿದೆ. ಈಗೇನಾದರೂ ನೇರವಾಗಿ ನಡೆಯದಿದ್ದರೆ, ನಮ್ಮ ಕೈಯಂತು ನಿಮ್ಮ ಮೂಗನ್ನಿಡಿಯುತ್ತದೆ ಆದ್ದರಿಂದ ನೋಡಿ ಏನು ಮಾಡುವಿರಿ! ಆ ಸಮಯದಲ್ಲಂತು ಏನು ಮಾಡಲೂ ಸಾಧ್ಯವಿಲ್ಲ, ಏನೂ ಆಗಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ಈಗ ನೀವು ನನ್ನವರಾಗಿದ್ದು, ನನ್ನ ಬಳಿ ಬಂದು, ನನ್ನ ಮಾತುಗಳನ್ನು ಕೇಳುತ್ತಾ ಇದ್ದರೂ ಸಹ ಏನೂ ಮಾಡದಿದ್ದರೆ ಬಹಳ ಕಠಿಣ ಶಿಕ್ಷೆಗಳಾಗುವುದು, ಆದ್ದರಿಂದ ಯಾರಿಗೆ ಪಾಪ! ಗೊತ್ತಿಲ್ಲವೋ ಅವರ ಮಾತಂತು ಬೇರೆ ಆದರೆ ಯಾರು ಕುಳಿತು-ಕೇಳಿಸಿಕೊಳ್ಳುತ್ತಾ, ನಂತರ ಇದೇ ಮಾತುಗಳಲ್ಲಿ ತಪ್ಪಾಗುತ್ತದೆಯೆಂದರೆ ಅವರಿಗೆ ಕ್ಷಮೆಯಿಲ್ಲ. ಹೇಗೆ 10 ಪಟ್ಟು ಲಾಭವಿದೆಯೋ ಹಾಗೆಯೇ 10 ಪಟ್ಟು ನಷ್ಟವಾಗುವುದು. ಆದ್ದರಿಂದ ಈಗ ತಮ್ಮ ನಷ್ಟವನ್ನು, ಹಾನಿಯನ್ನು..... ಬಹಳ ಚೆನ್ನಾಗಿ ತಿಳಿದುಕೊಳ್ಳಿರಿ ಎಂದು ಹೇಳುತ್ತೇವೆ. ಬಹಳ ಚೆನ್ನಾಗಿ ಸ್ವಲ್ಪವಾದರೂ ತಮ್ಮ ಬುದ್ಧಿಯನ್ನು ತೆರೆಯಿರಿ. ಈಗ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡುತ್ತೀರೆಂದರೆ ಶಕ್ತಿ ಸಿಗುವುದು. ಆದ್ದರಿಂದ ಇವೆಲ್ಲಾ ಮಾತುಗಳನ್ನು ತಿಳಿಯಿರಿ, ಮರೆಯಬಾರದು.
ಈಗ ಯಾವ ಸಮಯ ನಡೆಯುತ್ತಿದೆಯೋ ಅದನ್ನು ಗುರುತಿಸಿರಿ, ಸ್ವಲ್ಪವಾದರೂ ಕಣ್ಣು ತೆರೆಯಿರಿ, ಬುದ್ಧಿ ತೆರೆಯಿರಿ ಮತ್ತು ಸಮಯದ ಪೂರ್ಣ ಲಾಭವನ್ನು ಪಡೆದುಕೊಳ್ಳಿ ಮತ್ತು ತಮ್ಮ ಅದೃಷ್ಟವೆಲ್ಲವನ್ನೂ ಜಾಗೃತಗೊಳಿಸಿರಿ. ಎಂತಹ ಸಂಗವೋ ಅಂತಹ ರಂಗೇರುತ್ತದೆ ಎಂದೂ ಸಹ ಹೇಳುತ್ತಾರೆ ಆದ್ದರಿಂದ ಯಾರಲ್ಲೀಗ ಈ ಧಾರಣೆಯು ಆಗಿಲ್ಲವೋ ಅವರಿಗೆ ಮಾಯೆಯ ಸಂಗವಂತು ಹಿಡಿದಿರುತ್ತದೆ, ಆದ್ದರಿಂದ ಹೇಳುತ್ತೇವೆ - ಕೆಟ್ಟದನ್ನು ಕೇಳಬಾರದು, ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಚಿಂತನೆ ಮಾಡಬಾರದು..... ಕೆಲವು ಅಂತಹ ಕೆಟ್ಟ ಗುಣಗಳಿವೆ, ಅದು ಇಲ್ಲಿರುವವಲ್ಲಿಯೂ ಕೆಲವರನ್ನು ಬಿಡುವುದಿಲ್ಲ, ಆನಂತರ ಒಬ್ಬರಿನ್ನೊಬ್ಬರ ಸಂಗದೋಷದಲ್ಲಿ ಬಂದು ಬಿಡುತ್ತಾರೆ. ಅದಕ್ಕಾಗಿಯೇ ಹೇಳುತ್ತೇವೆ - ಅಂತಹ ಸಂಗದೋಷದಿಂದ ಪಾರಾಗಿರಿ (ಸುರಕ್ಷಿತವಾಗಿರಿ). ಈ ರೀತಿಯೂ ತಿಳಿಯಬಾರದು - ಸಂಗದೋಷವಂತು ಹೊರಗಿದೆ, ಇಲ್ಲಿಲ್ಲ. ಇಲ್ಲಿಯೂ ಸಹ ಸುತ್ತಾಡುತ್ತಿರುತ್ತದೆ ಏಕೆಂದರೆ ಅವನ ರಾಜ್ಯವಿದೆಯಲ್ಲವೆ. ಆದ್ದರಿಂದ ತಂದೆಯು ಹೇಳುತ್ತಾರೆ – ಬಹಳ ಚೆನ್ನಾಗಿ ಕವಚವನ್ನು ಧರಿಸಿಕೊಂಡಿರಿ, ಕವಚವಿದ್ದರೆ ಅದರ ಗುಂಡು ನಾಟುವುದಿಲ್ಲ. ಯೋಗವೇ ಕವಚವಾಗಿದೆ, ಜ್ಞಾನವು ಖಡ್ಗವಾಗಿದೆ- ತಮ್ಮಬಳಿ ಇವೆಲ್ಲಾ ಅಸ್ತ್ರಶಸ್ತ್ರಗಳನ್ನು ಬಹಳಷ್ಟು ಕಾಪಾಡಿಕೊಂಡು ಇಟ್ಟುಕೊಳ್ಳಿರಿ.
ಯಾರು ಮಾಡುತ್ತಾರೆಯೋ ಅವರು ಪಡೆಯುವರು ಎಂದೂ ಸಹ ಹೇಳಲಾಗುತ್ತದೆ, ಇದಂತು ಭವಿಷ್ಯ ಪ್ರಾಲಬ್ಧವನ್ನು ಮಾಡಿಕೊಳ್ಳುವ ಮಾತಾಗಿದೆ. ಇಲ್ಲಂತು ಪ್ರಾಲಬ್ಧವನ್ನು ಅನುಭವಿಸುವುದಿಲ್ಲ, ಇಲ್ಲಿ ಯಾವುದೇ ಗುರುಗಳಾಗಿಯೂ ಕುಳಿತಿಲ್ಲ. ಇದರಲ್ಲಿ ಯಾವುದೇ ಗೊಂದಲ ಮಾಡಿಕೊಳ್ಳಬಾರದು ಆದ್ದರಿಂದ ಇವೆಲ್ಲವನ್ನೂ ತಿಳಿಸಲಾಗುತ್ತದೆ. ಅದಕ್ಕಾಗಿ ಇವೆಲ್ಲಾ ಮಾತುಗಳನ್ನು ಗಮನದಲ್ಲಿ ಇಟ್ಟುಕೊಳ್ಳುತ್ತಾ, ತಮ್ಮನ್ನು ಸುರಕ್ಷತೆಯಿಂದ ಇಡಬೇಕಾಗಿದೆ. ಇಲ್ಲಿ ಯಾವುದೇ ಖರ್ಚು ಇತ್ಯಾದಿಯ ಮಾತುಗಳಾಗಬಾರದು. ಈಗ ಇವೆಲ್ಲಾ ಖರ್ಚುಗಳನ್ನು ಅನ್ಯರ ಕಲ್ಯಾಣಾರ್ಥವಾಗಿ ಉಪಯೋಗಿಸಬೇಕು. ಇದೇ ಕಾರ್ಯಕ್ಕಾಗಿ ಒಂದೊಂದು ಪೈಸೆಯನ್ನು ಉಪಯೋಗಿಸಬೇಕು. ಒಳ್ಳೆಯದು!
ಇನ್ನೊಂದು ಮುರುಳಿ: “ಏರುವ ಕಲೆಯಲ್ಲಿ ಹೋಗಬೇಕೆಂದರೆ ತಮ್ಮ ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅವರ ಕೈಯಲ್ಲಿ ಸಮರ್ಪಣೆ ಮಾಡಿಬಿಡಿ”
ಬಹಳ ಮನುಷ್ಯರು ಇಂತಹ ಪ್ರಶ್ನೆಯನ್ನು ಕೇಳುತ್ತಾರೆ, ಇಷ್ಟೆಲ್ಲಾ ಜ್ಞಾನವನ್ನು ಕೇಳುತ್ತಿದ್ದರೂ ನಮ್ಮ ಸ್ಥಿತಿಯು ವೃದ್ಧಿಯಾಗುತ್ತಿಲ್ಲ-ಏಕೆ? ವೃದ್ಧಿಯಾಗುವುದರಲ್ಲಿ ಅಡಚಣೆಗಳೇಕೆ? ಯಾರು ಈ ಮಾರ್ಗದಲ್ಲಿ ನಡೆಯುವಂತಹ ಹೆಜ್ಜೆಯನ್ನಿಟ್ಟರು, ಅವರ ಪ್ರತಿ ಈ ತಿಳುವಳಿಕೆಯನ್ನು ಕೊಡಲಾಗುತ್ತದೆ. ಆದರೆ ಎಲ್ಲಿಯವರೆಗೆ ತನ್ನ ಜೀವನವನ್ನು ಮನ-ವಾಣಿ-ಕರ್ಮ ಸಮೇತವಾಗಿ ಅರ್ಪಣೆಯಾಗಿ, ಇವರ ಮಗುವಾಗಲಿಲ್ಲವೋ ಅಲ್ಲಿಯವರೆಗೆ ಅವರಿಗೆ ಅತೀಂದ್ರಿಯ ಸುಖದ ಅನುಭೂತಿಯಾಗಲು ಸಾಧ್ಯವಿಲ್ಲ. ಇದೊಂದು ಈಶ್ವರೀಯ ನಿಯಮವಾಗಿದೆ, ತಾವು ಯಾವಾಗ ಅವರ ಆಶ್ರಯವನ್ನು ಪಡೆದಿದ್ದೀರೆಂದಾಗ, ಹೃದಯದಿಂದ ಅವರಮುಂದೆ ಜೀವನವನ್ನು ಅರ್ಪಣೆ ಮಾಡಿ ಬಿಡಬೇಕು ಅರ್ಥಾತ್ ಸಂಪೂರ್ಣವಾಗಿ ವಾರಸುಧಾರನಾಗಿ ಆಸ್ತಿಯನ್ನು ಪಡೆಯಬೇಕಾಗಿದೆ. ಈ ನಶೆಯಲ್ಲಿ ಇರುವುದರಿಂದ ಆ ಸ್ಥಿತಿಯಲ್ಲಿ ಉಲ್ಲಾಸವು ತುಂಬಿ ಬಿಡುತ್ತದೆ, ಅದಾದ ನಂತರ ಜ್ಞಾನದ ಧಾರಣೆ ಆಗುವುದರಿಂದ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳುವ ಶಕ್ತಿಯು ಬರುತ್ತದೆ. ಬಾಕಿ ಈ ರೀತಿ ತಿಳಿಯಬಾರದು- ಮಾನಸಿಕವಾಗಿ ನಾವು ಅರ್ಪಣೆಯಾಗಿದ್ದೇವೆ. ಅಲ್ಲ. ಇದಂತು ತಮ್ಮನ್ನು ಮೋಸ ಮಾಡಿದಂತೆ. ಯಾವಾಗ ಬಾಬಾರವರು ಪ್ರತ್ಯಕ್ಷದಲ್ಲಿ ಬಂದಿದ್ದಾರೆ ಅಂದಮೇಲೆ ಪ್ರತ್ಯಕ್ಷದಲ್ಲಿಯೇ ಮಕ್ಕಳಾಗಿರಿ, ನಂತರ ಬಾಬಾರವರು ಆ ಮಕ್ಕಳ ಜನ್ಮಪತ್ರಿಕೆಯನ್ನು ತಿಳಿದುಕೊಂಡು, ಹೇಗಾದರೂ ಮಾಡಿ ಡೈರೆಕ್ಷನ್ನಂತೆ ನಡೆಸುತ್ತಾರೆ. ಅದರಲ್ಲಿ ಮೊದಲು ಸ್ವಲ್ಪ ಕಷ್ಟವಾಗುತ್ತದೆ ಆದರೆ ಅಂತ್ಯದಲ್ಲಿ ತಿಳಿಯುವಿರಿ - ಇದರಲ್ಲಿಯೇ ನಮ್ಮ ಏರುವ ಕಲೆ ಇದೆ. ತಮ್ಮ ಜೀವನದ ಎಲ್ಲಾ ಜವಾಬ್ದಾರಿಗಳನ್ನು ಅವರ ಕೈಯಲ್ಲಿ ಸಮರ್ಪಣೆ ಮಾಡಿ ಬಿಡಬೇಕು. ಬಾಕಿ ಯಾರೂ ಸಹ ಗುರುವಿನ ಹಿಂದೆ ಗುರುವಾಗಿ, ಅವರ ಗದ್ದುಗೆಯ ಮೇಲೆ ಕುಳಿತುಕೊಳ್ಳಬಾರದು. ಈಗ ಇವೆಲ್ಲಾ ಮಾತುಗಳನ್ನು ಬುದ್ಧಿಯಲ್ಲಿ ಇಟ್ಟುಕೊಂಡಾಗಲೇ ಸ್ಥಿತಿಯು ಶ್ರೇಷ್ಠವಾಗಲು ಸಾಧ್ಯವಿದೆ. ಒಂದುವೇಳೆ ಶ್ರೇಷ್ಠ ಮಟ್ಟ ಹೋಗುತ್ತಿಲ್ಲವೆಂದರೆ, ಅವಶ್ಯವಾಗಿ ತಮ್ಮದೇ ಹೃದಯ ಅಥವಾ ಧಾರಣೆಗಳಲ್ಲಿ ಸ್ವಲ್ಪ ಕೊರತೆಯಿದೆ. ತಿಳಿಯಿತೆ. ಒಳ್ಳೆಯದು - ಮಧುರಾತಿ ಮಧುರ ಮಕ್ಕಳಿಗೆ ನೆನಪು-ಪ್ರೀತಿ, ಸುಪ್ರಭಾತ.
ಓಂ ಶಾಂತಿ. ಶಾಂತಿಧಾಮವು ವಿಶ್ರಾಮ ಪುರಿಯಾಗಿದೆ. ಈ ಪ್ರಪಂಚದಿಂದ ಎಲ್ಲರೂ ಸುಸ್ತಾಗಿದ್ದಾರೆ, ನಾವು ನಮ್ಮ ಸುಖಧಾಮಕ್ಕೆ ಹೋಗಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ. ಈ ಪ್ರಪಂಚವು ಯಾರಿಗೂ ಚೆನ್ನಾಗಿದೆ ಅನಿಸುವುದಿಲ್ಲ. ಸ್ವರ್ಗವನ್ನು ನೋಡುತ್ತೀರೆಂದರೆ ನರಕದ ಕಡೆ ಮನಸ್ಸು ಹೇಗೆ ಹೋಗುತ್ತದೆ! ಬಾಬಾ, ಬೇಗ ಈ ದುಃಖದ ಪ್ರಪಂಚದಿಂದ ಕರೆದುಕೊಂಡು ಹೋಗು ಎಂದು ಹೇಳುತ್ತಾರೆ. ಇದಂತೂ ಛೀ ಛೀ ಪ್ರಪಂಚವಾಗಿದೆ, ಇದರ ಹೆಸರೇ ಭೂತಗಳ ಪ್ರಪಂಚ, ನರಕ ಎಂದು ತಂದೆಯು ತಿಳಿಸುತ್ತಾರೆ. ಇದೇನೂ ಒಳ್ಳೆಯ ಅಕ್ಷರವಾಗಿದೆಯೇ? ಆ ದೇವತೆಗಳ ಪ್ರಪಂಚವೆಲ್ಲಿ, ಈ ಭೂತಗಳ ಪ್ರಪಂಚವೆಲ್ಲಿ! ಈ ಭೂತಗಳ ಪ್ರಪಂಚದಲ್ಲಿ ಎಲ್ಲರೂ ಸುಸ್ತಾಗಿ ಬಿಟ್ಟಿದ್ದಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ತಮೋಪ್ರಧಾನದ ತುಕ್ಕು ಹಿಡಿದು ಬಿಟ್ಟಿದೆ. ಆ ತುಕ್ಕನ್ನು ಆತ್ಮನಿಂದ ಹೊರ ತೆಗೆಯಬೇಕು, ಅದಕ್ಕಾಗಿಯೇ ಪುರುಷಾರ್ಥ ಮಾಡುತ್ತಿದ್ದೀರಿ. ಯಾರು ಒಳ್ಳೆಯ ಪುರುಷಾರ್ಥಿಗಳಿದ್ದೀರೋ ಅವರ ಸ್ಥಿತಿಯು ಬಹಳ ಚೆನ್ನಾಗಿರುವುದು. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಇನ್ನು ಕೆಲವೇ ದಿನಗಳಿವೆ. ಎಲ್ಲಿಯರೆಗೆ ತಂದೆಯು ಹಿಂತಿರುಗಿ ಕರೆದುಕೊಂಡು ಹೋಗುವುದಿಲ್ಲವೋ ಅಲ್ಲಿಯವರೆಗೂ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಬಹಳ ದುಃಖವಿದೆಯಲ್ಲವೆ. ಮನೆಯಲ್ಲಿಯೂ ಸಹ ಯಾವುದಾದರೊಂದು ದುಃಖವಿರುತ್ತದೆ, ನೀವು ಮಕ್ಕಳ ಹೃದಯದಲ್ಲಿ ಇದೆ - ಬಾಬಾ ನಮ್ಮನ್ನು ದುಃಖದಿಂದ ಬಿಡಿಸಲು ಬಂದಿದ್ದಾರೆ. ಯಾರು ಬಹಳ ಒಳ್ಳೆಯ ನಿಶ್ಚಯ ಬುದ್ಧಿಯವರಿರುತ್ತಾರೆಯೋ ಅವರು ತಂದೆಯ ನೆನಪನ್ನು ಮರೆಯಲು ಸಾಧ್ಯವೇ ಇಲ್ಲ. ಅವರನ್ನು ಸರ್ವರ ದುಃಖಹರ್ತನೆಂದು ಕರೆಯುತ್ತಾರೆ. ಮಕ್ಕಳೇ ತಂದೆಯನ್ನು ಗುರುತಿಸುತ್ತಾರೆ, ಒಂದುವೇಳೆ ಎಲ್ಲರೂ ಗುರುತಿಸಿದರೆಂದರೆ ಇಷ್ಟೊಂದು ಮನುಷ್ಯರು ಎಲ್ಲಿ ಕುಳಿತುಕೊಳ್ಳುವರು, ಇದು ಆಗಲು ಸಾಧ್ಯವಿಲ್ಲ ಆದ್ದರಿಂದ ಡ್ರಾಮಾದಲ್ಲಿ ಯುಕ್ತಿ ರಚನೆಯಾಗಿದೆ. ಯಾರು ಶ್ರೀಮತದಂತೆ ನಡೆಯುತ್ತಾರೆಯೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ, ಅದಂತೂ ಸರಿಯಲ್ಲವೆ. ಶಿಕ್ಷೆಯನ್ನನುಭವಿಸಿ ಶಾಂತಿಧಾಮಕ್ಕೆ ಅಥವಾ ಪಾವನ ಪ್ರಪಂಚಕ್ಕೆ ಹೊರಟು ಹೋಗುವರು ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಪುರುಷಾರ್ಥ ಮಾಡಬೇಕಾಗಿದೆ. ಇನ್ನೊಂದಾಗಿದೆ - ಪಾವನರಾಗದೆ ಪಾವನ ಪ್ರಪಂಚಕ್ಕೆ ಯಾರೂ ಹೋಗಲು ಸಾಧ್ಯವಿಲ್ಲ. ಇಂತಹವರು ಜ್ಯೋತಿ ಜ್ಯೋತಿಯಲ್ಲಿ ಸಮಾವೇಶವಾದರು, ಹಿಂತಿರುಗಿ ಹೋದರು ಎಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ಯಾರು ಮೊಟ್ಟ ಮೊದಲು ಸೃಷ್ಟಿಯಲ್ಲಿ ಬಂದಿದ್ದಾರೆ, ಲಕ್ಷ್ಮೀ-ನಾರಾಯಣರೇ ಹಿಂತಿರುಗಿ ಹೋಗಿಲ್ಲವೆಂದರೆ ಬೇರೆ ಯಾರು ಹೋಗಲು ಸಾಧ್ಯ! ಅವರದೇ ಈಗ 84 ಜನ್ಮಗಳು ಪೂರ್ಣವಾಗಿದೆ. ಈಗ ಹಿಂತಿರುಗಿ ಹೋಗಲು ತಪಸ್ಸು ಮಾಡುತ್ತಿದ್ದಾರೆ. ಎಲ್ಲರೂ ಒಬ್ಬ ತಂದೆಯನ್ನೇ ಓ ಗಾಡ್ ಫಾದರ್, ಓ ಮುಕ್ತಿದಾತ ಎಂದು ಕರೆಯುತ್ತಾರೆ, ಅವರೇ ಗಾಡ್ಫಾದರ್ ಆಗಿದ್ದಾರೆ, ದುಃಖಹರ್ತ-ಸುಖಕರ್ತನೂ ಆಗಿದ್ದಾರೆ. ಕೃಷ್ಣ ಅಥವಾ ಮತ್ತ್ಯಾರನ್ನಾದರೂ ಕರೆಯುತ್ತಾರೆಯೇ! ಕ್ರಿಶ್ಚಿಯನ್ನರು ಇರಲಿ, ಮುಸಲ್ಮಾನರಿರಲಿ ಎಲ್ಲರೂ ಓ ಗಾಡ್ಫಾದರ್ ಎಂದೇ ಕರೆಯುತ್ತಾರೆ. ಆತ್ಮವು ತನ್ನ ತಂದೆಯನ್ನು ಕರೆಯುತ್ತದೆ. ತಂದೆ ಎಂದು ಕರೆಯುತ್ತಾರೆ ಅಂದಮೇಲೆ ನಾವೆಲ್ಲರೂ ಆತ್ಮಗಳೆಂದು ಆಗ ತಿಳಿದುಕೊಳ್ಳುತ್ತಾರೆ. ಆತ್ಮವೂ ಸಹ ಒಂದು ವಸ್ತುವಲ್ಲವೆ! ಆತ್ಮವು ಯಾವುದೇ ದೊಡ್ಡ ಗಾತ್ರದಲ್ಲಿಲ್ಲ. ಅದು ಒಂದು ನಕ್ಷತ್ರ, ಅತಿ ಸೂಕ್ಷ್ಮವಾಗಿದೆ. ಹೇಗೆ ತಂದೆಯಿದ್ದಾರೆಯೋ ಹಾಗೆಯೇ ಆತ್ಮನ ಸ್ವರೂಪವೂ ಇದೆ. ಈಗ ನೀವು ತಂದೆಯ ಮಹಿಮೆಯನ್ನು ಮಾಡುತ್ತೀರಿ, ಅವರು ಸತ್ಚಿತ್ ಜ್ಞಾನ ಸಾಗರ, ಆನಂದ ಸಾಗರನಾಗಿದ್ದಾರೆ. ನೀವಾತ್ಮರೂ ಸಹ ಅವರ ಸಮಾನರಾಗುತ್ತೀರಿ. ನಿಮ್ಮ ಬುದ್ಧಿಯಲ್ಲಿ ಈಗ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನ ತಿಳಿದಿದೆ ಮತ್ತ್ಯಾವುದೇ ಮನುಷ್ಯ ಮಾತ್ರರಿಗೂ ತಿಳಿದಿಲ್ಲ. ಇಡೀ ಭಾರತ, ವಿದೇಶವನ್ನು ಹುಡುಕಿನೋಡಿ, ಯಾರಿಗೂ ಗೊತ್ತಿಲ್ಲ.ಆತ್ಮವು 84 ಜನ್ಮಗಳನ್ನು ಅಭಿನಯಿಸುತ್ತದೆ, 84 ಲಕ್ಷವಂತೂ ಅಸಾಧ್ಯವಾಗಿದೆ. 84 ಲಕ್ಷ ಜನ್ಮಗಳನ್ನು ಯಾರೂ ವರ್ಣನೆ ಮಾಡಲು ಸಾಧ್ಯವಿಲ್ಲ. ನೀವೇ ನಿಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ, ನಾನೇ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಅವರೆಲ್ಲರೂ ಕೇಳುತ್ತಿದ್ದರೂ ಸಹ ಕಲ್ಲು ಬುದ್ಧಿಯವರು ಅರ್ಥವೇ ಮಾಡಿಕೊಳ್ಳುವುದಿಲ್ಲ, 84 ಲಕ್ಷ ಜನ್ಮಗಳೆಂದು ಹೇಗೆ ಹೇಳಲು ಸಾಧ್ಯ!
ನಾವು ಬ್ರಾಹ್ಮಣರೆಂದು ಈಗ ನೀವು ತಿಳಿದಿದ್ದೀರಿ. ನಾವು 84 ಜನ್ಮಗಳನ್ನು ಪಡೆದಿದ್ದೇವೆ, ಬ್ರಹ್ಮನೂ ಹಾಗೂ ವಿಷ್ಣುವೂ ಸಹ 84 ಜನ್ಮಗಳನ್ನು ಪಡೆದಿದ್ದಾರೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮ, ಲಕ್ಷ್ಮೀ-ನಾರಾಯಣರೇ 84 ಜನ್ಮಗಳನ್ನು ಪಡೆದು ಬ್ರಹ್ಮಾ-ಸರಸ್ವತಿಯರಾಗುತ್ತಾರೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. 5000 ವರ್ಷಗಳ ನಂತರ ಬಂದು ಮತ್ತೆ ತಿಳಿಸುತ್ತೇನೆ. 5000 ವರ್ಷಗಳ ಚಕ್ರವಾಗಿದೆ. ಈಗ ನಿಮಗೆ ವರ್ಣಗಳ ರಹಸ್ಯವು ತಿಳಿದಿದೆ. ಹಮ್ ಸೋನ ಅರ್ಥವೂ ಸಹ ತಿಳಿದಿದೆ, ನಾವಾತ್ಮರು ದೇವತೆಗಳಾಗುತ್ತೇವೆ ನಂತರ ಕ್ಷತ್ರಿಯ, ನಾವೇ ವೈಶ್ಯ-ಶೂದ್ರರಾಗುತ್ತೇವೆ. ಇಷ್ಟಿಷ್ಟು ಜನ್ಮಗಳನ್ನು ಪಡೆಯುತ್ತೇವೆ, ನಂತರ ನಾವೇ ಬ್ರಾಹ್ಮಣರಾಗುತ್ತೇವೆ. ಬ್ರಾಹ್ಮಣರದು ಇದು ಒಂದುಜನ್ಮವಾಗಿದೆ. ಇದು ನಿಮ್ಮ ವಜ್ರ ಸಮಾನ ಜನ್ಮವಾಗಿದೆ.
ತಂದೆಯು ತಿಳಿಸುತ್ತಾರೆ - ಇದು ನಿಮ್ಮ ಉತ್ತಮ ಶರೀರವಾಗಿದೆ, ಇದರಿಂದ ನೀವು ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ ಆದ್ದರಿಂದ ಈಗ ಮತ್ತ್ಯಾವ ಕಡೆಯೂ ಅಲೆಯಬಾರದು, ಜ್ಞಾನಾಮೃತವನ್ನು ಕುಡಿಯಿರಿ. ಅವಶ್ಯವಾಗಿ 84 ಜನ್ಮಗಳನ್ನೂ ತೆಗೆದುಕೊಳ್ಳುತ್ತೇವೆಂದು ತಿಳಿದು ಬರುತ್ತದೆ, ಮೊದಲು ನೀವು ಸತ್ಯಯುಗದಲ್ಲಿ ಸತೋಪ್ರಧಾನರಾಗಿದ್ದಿರಿ, ನಂತರ ಸತೋ ಅದಿರಿ, ನಂತರ ಬೆಳ್ಳಿ ಮಿಶ್ರಣವಾಯಿತು. ಲೆಕ್ಕವನ್ನು ತಿಳಿಸುತ್ತಾರೆ. ಈಗ ಸರ್ಕಾರವೂ ಸಹ ಹೇಳುತ್ತದೆ - ಚಿನ್ನದಲ್ಲಿ ಇಷ್ಟು ಮಿಶ್ರಣವನ್ನು ಬೆರೆಸಿ ಎಂದು. 14 ಕ್ಯಾರೇಟ್ ಚಿನ್ನವನ್ನು ಹಾಕಿಕೊಳ್ಳಿ. ಚಿನ್ನದಲ್ಲಿ ಲೋಹ ಬೆರೆಸಿ, ಇದನ್ನು ಭಾರತದವರು ಅಪಶಕುನವೆಂದು ತಿಳಿಯುತ್ತಾರೆ. ವಿವಾಹ ಮಾಡುತ್ತಾರೆಂದರೆ ಸಂಪೂರ್ಣ ಅಪ್ಪಟ ಚಿನ್ನವನ್ನು ಧರಿಸುತ್ತಾರೆ. ಚಿನ್ನದ ಮೇಲೂ ಸಹ ಭಾರತವಾಸಿಗಳಿಗೆ ಬಹಳ ಪ್ರೀತಿಯಿದೆ. ಭಾರತದ ಮಾತನ್ನು ಕೇಳಲೇಬೇಡಿ. ಸತ್ಯಯುಗದಲ್ಲಿ ಚಿನ್ನದ ಮಹಲುಗಳಿದ್ದವು, ಚಿನ್ನದ ಇಟ್ಟಿಗೆಗಳಿಂದ ಮಾಡಲ್ಪಟ್ಟಿದ್ದವು. ಇಲ್ಲಿ ಇಟ್ಟಿಗೆ ಹೇರಳವಾಗಿರುತ್ತವೆ, ಅಲ್ಲಿ ಚಿನ್ನ-ಬೆಳ್ಳಿಯು ಹೇರಳವಾಗಿರುತ್ತದೆ. ಮಾಯಾಮಚ್ಛಂದರ್ನ ಆಟವನ್ನು ತೋರಿಸುತ್ತಾರೆ. ಅವನು ಚಿನ್ನದ ಇಟ್ಟಿಗೆಯನ್ನು ನೋಡಿ ತೆಗೆದುಕೊಂಡು ಹೋಗೋಣ ಎಂದು ಯೋಚಿಸುತ್ತಾನೆ. ಕೆಳಗೆ ಇಳಿದು ನೋಡಿದರೆ ಏನೂ ಇಲ್ಲ. ಏನೋ ಅಲ್ಪಸ್ವಲ್ಪ ಇರಬೇಕಲ್ಲವೆ. ಮಕ್ಕಳು ತಿಳಿಯುತ್ತಾರೆ - ಈಗ ನಾವು ಪುನಃ ಸ್ವರ್ಗದಲ್ಲಿ ಹೋಗುತ್ತೇವೆ, ಒಂದುವೇಳೆ ಪತಿ ಅಥವಾ ಯಾರಾದರೂ ತೊಂದರೆ ಕೊಡುತ್ತಾರೆಂದರೆ ಪಾಪ! ಒಳಗೆ ಅಳುತ್ತಾಳೆ. ನಾವು ಯಾವಾಗ ಸುಖಧಾಮದಲ್ಲಿ ಹೋಗುತ್ತೇವೆ, ಈಗ ಬೇಗ ಸಾಕು ಮಾಡಿ ಎನ್ನುತ್ತಾರೆ. ಆದರೆ ಬೇಗ ಹೇಗೆ ಮಾಡಲಿ, ಮೊದಲು ಯೋಗಬಲದಿಂದ ನಿಮ್ಮಲ್ಲಿರುವ ಕೊಳಕನ್ನು ತೆಗೆದುಹಾಕಬೇಕು. ನೆನಪಿನ ಯಾತ್ರೆಯಲ್ಲಿ ಇರಬೇಕೆಂದು ತಂದೆಯು ಧೈರ್ಯ ಕೊಡುತ್ತಾರೆ. ಪತಿತ-ಪಾವನನನ್ನೇ ಕರೆಯುತ್ತಾರೆ. ಸರ್ವರ ಸದ್ಗತಿದಾತ ಒಬ್ಬನೇ ಆಗಿದ್ದಾರೆ ಎಂದು ಗಾಯನವಿದೆ, ಇದೆಲ್ಲವೂ ಇಲ್ಲಿಯ ಮಾತೇ ಆಗಿದೆ. ಅಕಾಸುರ-ಬಕಾಸುರ ಎಲ್ಲಾ ಇಲ್ಲಿಯ ಸಂಗಮ ಸಮಯದ್ದೇ ಆಗಿದೆ. ಇದು ಆಸುರೀ ಪ್ರಪಂಚವಾಗಿದೆ. ನಾನು ಕಲ್ಪ-ಕಲ್ಪ ಸಂಗಮದಲ್ಲಿ ಬರುತ್ತೇನೆಂದು ತಂದೆಯು ತಿಳಿಸುತ್ತಾರೆ. ಯಾವಾಗ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯಾಗುತ್ತದೆಯೋ ಆಗ ನಾನು ಬರುತ್ತೇನೆ.
ನೀವು ತಿಳಿದುಕೊಂಡಿದ್ದೀರಿ - ಸತ್ಯಯುಗದಲ್ಲಿ ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುತ್ತದೆ. ಇಲ್ಲಿ ಇಷ್ಟೊಂದು ಪಕ್ಷಿ, ಪ್ರಾಣಿ ಇತ್ಯಾದಿಗಳೆಲ್ಲವೂ ಇದೆ, ಅಲ್ಲಿ ಇಷ್ಟೊಂದಿರುವುದಿಲ್ಲ. ದೊಡ್ಡ ವ್ಯಕ್ತಿಗಳ ಬಳಿ ಬಹಳ ಸ್ವಚ್ಛತೆಯಿರುತ್ತದೆ. ಅವರು ಇರುವಂತಹ ಸ್ಥಳ, ಪೀಠೋಪಕರಣಗಳು ಬಹಳ ಚೆನ್ನಾಗಿರುತ್ತದೆ. ನೀವೂ ಸಹ ಅಷ್ಟು ಶ್ರೇಷ್ಠ ದೇವತೆಗಳಾಗುತ್ತೀರಿ. ಅಲ್ಲಿ ಯಾವುದೇ ಛೀ ಛೀ ವಸ್ತುಗಳಿರಲು ಸಾಧ್ಯವಿಲ್ಲ. ಇಲ್ಲಂತೂ ಸೊಳ್ಳೆ ಇತ್ಯಾದಿಗಳಿಂದ ಅನೇಕ ರೋಗಗಳು ಹರಡುತ್ತವೆ ಮತ್ತು ಬಹಳ ಕೊಳಕಿರುತ್ತದೆ. ಹಳ್ಳಿಗಳಲ್ಲಿ ಇಷ್ಟೊಂದು ಕೊಳಕಿರುವುದಿಲ್ಲ. ದೊಡ್ಡ-ದೊಡ್ಡ ಪಟ್ಟಣಗಳಲ್ಲಿ ಬಹಳ ಕೊಳಕು ಇರುತ್ತದೆ ಏಕೆಂದರೆ ಬಹಳ ಜನಸಂಖ್ಯೆಯಿದೆ, ವಾಸಮಾಡಲು ಸ್ಥಳವೇ ಇಲ್ಲ. ಮನುಷ್ಯರು ಗಾಯನ ಮಾಡುತ್ತಾರೆ – ಕಣ ಕಣದಲ್ಲಿಯೂ ಬ್ರಹ್ಮಾ, ವಿಷ್ಣು ಇರುತ್ತಾರೆ. ಬ್ರಹ್ಮನೇ ವಿಷ್ಣುವಾಗುತ್ತಾರೆ. ಬ್ರಹ್ಮನ ಜೊತೆಯಲ್ಲಿ ನಕ್ಷತ್ರಗಳೂ ಸಹ ಇವೆ. ಸತ್ಯಯುಗದಲ್ಲಿ ಮೊದಲು ದೇವತೆಗಳಾಗುತ್ತಾರೆಂದರೆ ಇಷ್ಟೊಂದು ಜನ ಇರುತ್ತಾರೆಯೇ! ವೃಕ್ಷವು ಯಾವಾಗಲೂ ಚಿಕ್ಕದಾಗಿರುತ್ತದೆ ನಂತರ ವೃದ್ಧಿಯಾಗುತ್ತದೆ, ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಸಿಹಿ ನೀರಿನ ನದಿಗಳ ತೀರದಲ್ಲಿ ವಾಸ ಮಾಡುತ್ತಾರೆ. ಇಲ್ಲಿ ನದಿಗಳಿಂದ ಎಷ್ಟೊಂದು ಕಾಲುವೆಗಳು ತೆಗೆಯುತ್ತಾರೆ, ಅಲ್ಲಿ ಕಾಲುವೆಗಳಿರಲು ಸಾಧ್ಯವೇ! ಒಂದು ಮುಷ್ಟಿಯಷ್ಟು ಜನರಿರುತ್ತಾರೆ. ಅವರಿಗಂತೂ ಗಂಗಾ-ಜಮುನಾ ನದಿಗಳು ಇದ್ದೇ ಇರುತ್ತವೆ. ಅವರು ನದಿಗಳ ಅಕ್ಕಪಕ್ಕದಲ್ಲಿಯೇ ಇರುತ್ತಾರೆ. 5 ತತ್ವಗಳೂ ಸಹ ದೇವತೆಗಳ ಸೇವಕನಾಗಿರುತ್ತದೆ, ಅಕಾಲ ಮಳೆ ಬರುವುದಿಲ್ಲ. ಯಾವುದೇ ನದಿಗಳ ಪ್ರವಾಹ ಬರುವುದಿಲ್ಲ. ಹೆಸರೇ ಸ್ವರ್ಗವಾಗಿದೆ ಅಂದಮೇಲೆ ಕೇಳಬೇಕೆ! ಈಗ ಸ್ವರ್ಗದ ಆಯಸ್ಸು ಎಷ್ಟೊಂದು ಆಗಿದೆ ಎಂದು ಹೇಳುತ್ತಾರೆ. ಒಳ್ಳೆಯದು- ಅಲ್ಲಿ ಯಾರು ರಾಜ್ಯ ಮಾಡುತ್ತಿದ್ದರೆಂದು ಹೇಳಿ ನೋಡೋಣ. ಎಷ್ಟೊಂದು ಕಥೆಗಳನ್ನು ಹೇಳುತ್ತಲೇ ಇರುತ್ತಾರೆ. ಕಲ್ಪದ ಹಿಂದಿನಂತೆಯೇ ನಾವು ಪಾತ್ರವನ್ನಭಿನಯಿಸುತ್ತಿದ್ದೇವೆ. ರುದ್ರ ಜ್ಞಾನ ಯಜ್ಞದಲ್ಲಿ ಅನೇಕ ಪ್ರಕಾರದ ಅಸುರರ ವಿಘ್ನಗಳು ಬೀಳುತ್ತವೆ, ಮನುಷ್ಯರು ತಿಳಿಯುತ್ತಾರೆ - ಅಸುರರು ಮೇಲಿನಿಂದ ಕೊಳಕು, ಗೊಬ್ಬರಗಳನ್ನು ಹಾಕುತ್ತಿದ್ದರು ಎಂದು. ಆದರೆ ಇಲ್ಲ, ಇಲ್ಲಿ ಎಂತಹ ವಿಘ್ನಗಳು ಬೀಳುತ್ತವೆ ಎಂದು ನೀವು ನೋಡುತ್ತೀರಿ. ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆಯೆಂದರೆ ಪಾಪದ ಕೊಡ ತುಂಬುತ್ತದೆ. ಸ್ವಲ್ಪ ಸಹನೆ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ನೀವು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಲೇ ಇರಿ ಎಂದು ತಂದೆಯು ತಿಳಿಸುತ್ತಾರೆ. ಪೆಟ್ಟು ತಿನ್ನುವ ಸಮಯದಲ್ಲಿಯೂ ಸಹ ಶಿವಬಾಬಾ ಎಂದೇ ನೆನಪು ಮಾಡಿ. ನಿಮಗಂತೂ ಬುದ್ಧಿಯಲ್ಲಿ ಜ್ಞಾನವಿದೆ, ಯಾರಿಗಾದರೂ ನೇಣು ಗಂಬಕ್ಕೆ ಏರಿಸುತ್ತಾರೆಂದರೆ ಪಾದ್ರಿಗಳು ಗಾಡ್ಫಾದರನ್ನು ನೆನಪು ಮಾಡು ಎಂದು ಹೇಳುತ್ತಿದ್ದರು. ಕ್ರೈಸ್ತನನ್ನು ನೆನಪು ಮಾಡಿ ಎಂದಲ್ಲ. ಭಗವಂತನ ಕಡೆಯೇ ಬೆರಳು ಮಾಡಿ ತೋರಿಸುತ್ತಾರೆ, ಇಷ್ಟೊಂದು ಲವಲೀ ಆಗಿದ್ದಾರೆ ಆದ್ದರಿಂದ ಎಲ್ಲರೂ ಕರೆಯುತ್ತಾರೆ. ಆತ್ಮವೇ ಕರೆಯುತ್ತದೆ, ಈಗ ಆತ್ಮಾಭಿಮಾನಿಯಾಗುವುದರಲ್ಲಿಯೇ ಪರಿಶ್ರಮವಿದೆ. 63 ಜನ್ಮಗಳಲ್ಲಿ ನೀವು ದೇಹಾಭಿಮಾನದಲ್ಲಿರುತ್ತೀರಿ, ಈ ಒಂದು ಅಂತಿಮ ಜನ್ಮದಲ್ಲಿ ಅರ್ಧಕಲ್ಪದ ಅಭ್ಯಾಸವನ್ನು ಅಳಿಸಬೇಕಾಗಿದೆ. ದೇಹೀ-ಅಭಿಮಾನಿಯಾಗುವುದರಿಂದ ಸ್ವರ್ಗದ ಮಾಲೀಕರಾಗುತ್ತೇವೆಂದು ನೀವು ತಿಳಿದಿದ್ದೀರಿ. ಎಷ್ಟು ದೊಡ್ಡದಾದ ಪ್ರಾಪ್ತಿಯಿದೆ ಅಂದಮೇಲೆ ರಾತ್ರಿ-ಹಗಲು ಇದೇ ಪ್ರಯತ್ನ ಪಡುತ್ತಿರಬೇಕು. ಮನುಷ್ಯರು ವ್ಯಾಪಾರ ಇತ್ಯಾದಿಗಳಿಗಾಗಿ ಪರಿಶ್ರಮ ಪಡುತ್ತಾರೆ. ವ್ಯಾಪಾರ ಮಾಡುವಾಗ ಮನುಷ್ಯರಿಗೆ ಎಂದೂ ಆಕಳಿಕೆ, ತೂಕಡಿಕೆ ಬರುವುದಿಲ್ಲ ಏಕೆಂದರೆ ಅದು ವ್ಯಾಪಾರವಾಗಿದೆ, ಹಣದ ಖುಷಿಯಿರುತ್ತದೆ. ಸುಸ್ತಾಗುವ ಮಾತೇ ಇರುವುದಿಲ್ಲ. ಬಾಬಾರವರೂ ಸಹ ಅನುಭವಿಯಲ್ಲವೆ. ರಾತ್ರಿಯಲ್ಲಿ ಸ್ಟೀಮರ್ಸ್ ಬರುತ್ತಿದ್ದವು ಅಂದಮೇಲೆ ಬಂದು ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ಎಲ್ಲಿಯವರೆಗೆ ಗ್ರಾಹಕರು ಲಗೇಜು ಖಾಲಿಯಾಗುವುದಿಲ್ಲವೋ ಅಲ್ಲಿಯವರೆಗೆ ಅವರನ್ನು ಬಿಡುತ್ತಿರಲಿಲ್ಲ. ತಂದೆಯೂ ಸಹ ಅನುಭವೀ ರಥವನ್ನೇ ತೆಗೆದುಕೊಂಡಿದ್ದಾರೆ. ಇವರು ಎಲ್ಲಾ ಅನುಭವ ಮಾಡಿದ್ದಾರೆ. ಇವರು ಹಳ್ಳಿ ಬಾಲಕನಾಗಿದ್ದರು, ಹತ್ತು ಆಣೆಗೆ ಒಂದು ಮಣ ಅಕ್ಕಿಯನ್ನು ಮಾರುತ್ತಿದ್ದರು, ಈಗ ನೋಡಿ, ವಿಶ್ವದ ಮಾಲೀಕರಾಗುತ್ತಿದ್ದಾರೆ. ಏಕ್ದಂ ಹಳ್ಳಿಯವನಾಗಿದ್ದನು ನಂತರ ಏಕ್ದಂ ಚಿನ್ನದ ವ್ಯಾಪಾರಿಯಾಗಿ ಬಿಟ್ಟರು. ಇದು ವಜ್ರದ ವ್ಯಾಪಾರದ ಮಾತಾಗಿದೆ, ನಂತರ ಇಲ್ಲಿ ಸತ್ಯವಾದ ವ್ಯಾಪಾರಿಯಾದರು. ಇದು ರಾಯಲ್ ವ್ಯಾಪಾರವಾಗಿದೆ. ಬಾಬಾ ಬಹಳ ಅನುಭವಿಯಾಗಿದ್ದಾರೆ, ಬಾಬಾ ವೈಸರಾಯ್ ಮುಂತಾದವರ ಮನೆಗಳಿಗೆ ತಮ್ಮ ಮನೆಗೆ ಹೋದಂತೆಯೇ ಹೋಗುತ್ತಿದ್ದರು. ಇದಕ್ಕೇ ಅವಿನಾಶಿ ಜ್ಞಾನರತ್ನವೆಂದು ಹೇಳುತ್ತಾರೆ. ಬುದ್ಧಿಯಲ್ಲಿ ಎಷ್ಟು ಧಾರಣೆ ಮಾಡುತ್ತೀರೊ ಅಷ್ಟು ನೀವು ಪದಮಾಪತಿಗಳಾಗುತ್ತೀರಿ. ಶಿವ ತಂದೆಗೆ ಸೌಧಾಗಾರ, ರತ್ನಾಗಾರ ಎಂದು ಹೇಳುತ್ತಾರೆ. ಅವರ ಮಹಿಮೆಯನ್ನೂ ಸಹ ಮಾಡುತ್ತಾರೆ ನಂತರ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಮಹಿಮೆಯ ಜೊತೆಯಲ್ಲಿ ಎಷ್ಟೊಂದು ನಿಂದನೆ! ಇದು ಭಕ್ತಿಮಾರ್ಗದ ಸ್ಥಿತಿಯಾಗಿದೆ. ಯಾವಾಗ ಭಕ್ತಿ ಪೂರ್ಣವಾಗುತ್ತದೆಯೋ ಆಗ ನಾನು ಬರುತ್ತೇನೆ. ಯಾರು ಬಹಳ ಭಕ್ತಿ ಮಾಡುತ್ತಾರೆಯೋ ಅದೂ ಸಹ ಸಿದ್ಧವಾಗುತ್ತದೆ. ಎಲ್ಲರಿಗಿಂತ ನೀವೇ ಹೆಚ್ಚು ಭಕ್ತಿ ಮಾಡುತ್ತೀರಿ, ಅವರೇ ಬಂದು ಇಲ್ಲಿ ಬ್ರಾಹ್ಮಣರಾಗುತ್ತಾರೆ ನಂತರ ತಂದೆಯಿಂದ ಪೂಜ್ಯರಾಗುವ ಆಸ್ತಿಯನ್ನು ಪಡೆಯುತ್ತಾರೆ. ರಾವಣ ಪೂಜಾರಿಯನ್ನಾಗಿ ಮಾಡಿದನು, ತಂದೆಯು ಪೂಜ್ಯರನ್ನಾಗಿ ಮಾಡುತ್ತಾನೆ. ಇದು ಭಗವಾನುವಾಚ ಆಗಿದೆ. ಭಗವಂತನು ಒಬ್ಬರೇ ಆಗಿದ್ದಾರೆ, 2-3 ಭಗವಂತರಿರಲು ಸಾಧ್ಯವಿಲ್ಲ. ಗೀತೆಯ ಭಗವಂತನ ಬಗ್ಗೆ ಹಾಡಿದ್ದಾರೆ, ಶಿವ ಭಗವಾನುವಾಚ, ಇದರ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ, ಎಷ್ಟೊಂದು ವ್ಯತ್ಯಾಸವಿದೆ! ಡ್ರಾಮಾನುಸಾರ ಗೀತೆಯಲ್ಲಿ ಈ ಹೆಸರು ಬದಲಾಗಲೇಬೇಕು, ನಂತರ ಪತಿತ-ಪಾವನ ಬಾ ಎಂದು ಕರೆಯುತ್ತಾರೆ. ತಂದೆಯು ಪಾವನರನ್ನಾಗಿ ಮಾಡುತ್ತಾರೆ, ರಾವಣನು ಪತಿತರನ್ನಾಗಿ ಮಾಡುತ್ತಾನೆ. ಅಂದಮೇಲೆ ತಿಳಿದುಕೊಳ್ಳಲು ಎಷ್ಟೊಂದು ಬುದ್ಧಿ ಬೇಕು. ಶ್ರೀಮತ ಶ್ರೇಷ್ಠಾತಿ ಶ್ರೇಷ್ಠ ಮತವು ಒಬ್ಬ ತಂದೆಯದಾಗಿದೆ. ಈ ಲಕ್ಷ್ಮೀ-ನಾರಾಯಣರು ತಂದೆಯ ಮತದಿಂದಲೇ ಆಗಿದ್ದರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಒಂದು ಜನ್ಮದಲ್ಲಿ 63 ಜನ್ಮಗಳ ಹಳೆಯ ದೇಹಾಭಿಮಾನದ ಅಭ್ಯಾಸವನ್ನು ಅಳಿಸುವ ಪರಿಶ್ರಮ ಪಡಬೇಕು. ದೇಹೀ-ಅಭಿಮಾನಿಯಾಗಿ ಸ್ವರ್ಗದ ಮಾಲೀಕರಾಗಬೇಕಾಗಿದೆ.
2. ಈ ವಜ್ರ ಸಮಾನ ಉತ್ತಮ ಜನ್ಮದಲ್ಲಿ ತಮ್ಮ ಬುದ್ಧಿಯನ್ನು ಅಲೆದಾಡಲು ಬಿಡಬಾರದು, ಸತೋಪ್ರಧಾನರಾಗಬೇಕು. ಅತ್ಯಾಚಾರವನ್ನು ಸಹನೆ ಮಾಡಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು.
ಓಂ ಶಾಂತಿ. ಮಕ್ಕಳು ಏನು ಹೇಳುವುದೋ ತಂದೆಯೂ ಸಹ ಅದನ್ನೇ ಹೇಳುವರು. ಬಾಬಾ ನಿಮ್ಮನ್ನು ಪಡೆದ ನಾವು ಸ್ವರ್ಗದ ಮಾಲೀಕರಾಗುತ್ತೇವೆಂದು ಮಕ್ಕಳು ಹೇಳುತ್ತಾರೆ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ಸ್ವರ್ಗದ ಮಾಲೀಕರಾಗುವಿರಿ. ಮನುಷ್ಯರೆಲ್ಲರೂ ಕೇಳುತ್ತಾರೆ, ಬ್ರಹ್ಮಾಕುಮಾರ-ಕುಮಾರಿಯರ ಈ ಸತ್ಸಂಗದಲ್ಲಿ ಏನು ಸಿಗುತ್ತದೆ? ಆಗ ನಾವು ಬಾಪ್ದಾದಾರವರಿಂದ ವಿಶ್ವದ ಮಾಲೀಕರಾಗುತ್ತೇವೆಂದು ಬ್ರಹ್ಮಾಕುಮಾರ-ಕುಮಾರಿಯರು ಹೇಳುತ್ತಾರೆ. ವಿಶ್ವದ ಮಾಲೀಕರನ್ನಾಗಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ವಿಶ್ವದ ಮಾಲೀಕರು ಈ ಲಕ್ಷ್ಮೀ-ನಾರಾಯಣರೇ ಆಗಿದ್ದರು, ಶಿವ ತಂದೆಯಂತೂ ವಿಶ್ವದ ಮಾಲೀಕರಾಗುವುದಿಲ್ಲ, ನೀವು ಮಕ್ಕಳೇ ವಿಶ್ವದ ಮಾಲೀಕರಾಗುತ್ತೀರಿ ಆದರೆ ನಿಮ್ಮ ತಂದೆಯು ವಿಶ್ವದ ಮಾಲೀಕರಾಗುವುದಿಲ್ಲ. ಇಂತಹ ನಿಷ್ಕಾಮ ಸೇವೆ ಮಾಡುವವರು ಮತ್ತ್ಯಾರೂ ಇಲ್ಲ. ಪ್ರತಿಯೊಬ್ಬರಿಗೂ ಸೇವೆಯ ಫಲ ಅವಶ್ಯವಾಗಿ ಸಿಗುವುದು. ಭಕ್ತಿಮಾರ್ಗದಲ್ಲಿ ಅಥವಾ ಯಾರೇ ಯಾವುದೇ ಪ್ರಕಾರವಾಗಿ ಏನು ಮಾಡಿದರು.... ಸಮಾಜ ಸೇವಾಕರ್ತರಿಗೂ ಸಹ ಸೇವೆಯ ಫಲವು ಅವಶ್ಯವಾಗಿ ಸಿಗುತ್ತದೆ. ಸರ್ಕಾರದಿಂದ ಸಂಬಳ ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ನಾನಂತೂ ನಿಷ್ಕಾಮ ಸೇವೆ ಮಾಡುತ್ತೇನೆ, ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ ಆದರೆ ನಾನಾಗುವುದಿಲ್ಲ. ಮಕ್ಕಳಿಗೆ ಸುಖವನ್ನು ಕೊಟ್ಟು ಸುಖಧಾಮದ ಮಾಲೀಕರನ್ನಾಗಿ ಮಾಡಿ 21 ಜನ್ಮಗಳಿಗೆ ಸುಖವನ್ನು ಕೊಟ್ಟು ನಾನು ನಿರ್ವಾಣಧಾಮದಲ್ಲಿ ಅಥವಾ ವಾನಪ್ರಸ್ಥ ಸ್ಥಿತಿಯಲ್ಲಿ ಕುಳಿತುಕೊಳ್ಳುತ್ತೇನೆ. ವಾನಪ್ರಸ್ಥವೆಂದು ಮೂಲವತನಕ್ಕೇ ಹೇಳುತ್ತಾರೆ. ಮನುಷ್ಯರು ವಾನಪ್ರಸ್ಥವನ್ನು ತೆಗೆದುಕೊಳ್ಳುತ್ತಾರೆ. ಮಕ್ಕಳಿಗೆ ಎಲ್ಲವನ್ನೂ ಕೊಟ್ಟು ಸತ್ಸಂಗಗಳನ್ನು ಮಾಡುತ್ತಾರೆ. ಮುಕ್ತಿಯನ್ನು ತೋರಿಸುತ್ತಾರೆಂದು ಗುರುಗಳನ್ನೂ ಮಾಡಿಕೊಳ್ಳುತ್ತಾರೆ. ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ಯಾವುದೇ ಮನುಷ್ಯರೂ ಕೊಡಲು ಸಾಧ್ಯವಿಲ್ಲವೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಅವರು ಯಾರಿಗೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ, ತಮಗೇ ತಾವು ಕೊಡಲು ಸಾಧ್ಯವಿಲ್ಲ. ತಮಗೆ ಕೊಟ್ಟುಕೊಂಡರೆ ಅನ್ಯರಿಗೂ ಕೊಡಬಹುದು. ತಂದೆಯು ಪರಮಧಾಮದಿಂದ ಬರುತ್ತಾರೆ, ಅವರು ಅಲ್ಲಿಯೇ ವಾಸಿಸುತ್ತಾರೆ, ನೀವೂ ಸಹ ಅಲ್ಲಿಯೇ ವಾಸಮಾಡುತ್ತೀರಿ. ನೀವು ಪಾತ್ರವನ್ನಭಿನಯಿಸಲು ಈ ಕರ್ಮಕ್ಷೇತ್ರದಲ್ಲಿ ಬರಬೇಕಾಗುತ್ತದೆ. ತಂದೆಯೂ ಸಹ ಒಂದುಬಾರಿ ಇಲ್ಲಿಗೆ ಬರಬೇಕಾಗುತ್ತದೆ. ನೀವು ಮಕ್ಕಳಿಗಾಗಿ ಸ್ವರ್ಗವು ಸ್ಥಾಪನೆಯಾಗುತ್ತದೆ ಅಂದಮೇಲೆ ಅವಶ್ಯವಾಗಿ ನರಕದ ವಿನಾಶವೂ ಆಗಲೇಬೇಕಿದೆ.
ಶಿವ ತಂದೆಯು ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಿದ್ದಾರೆ, ಪುನಃ ಮನುಷ್ಯರಿಂದ ದೇವತೆಗಳಾಗುತ್ತಿದ್ದೇವೆಂದು ನೀವು ತಿಳಿದಿದ್ದೀರಿ. 5000 ವರ್ಷಗಳ ನಂತರ ಪುನಃ ಬಂದು ಬ್ರಹ್ಮನ ಮೂಲಕ ಶಿವ ತಂದೆಯ ಮಕ್ಕಳಾಗುತ್ತೇವೆ, ಆಸ್ತಿಯನ್ನು ಪಡೆಯುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಪತಿತ-ಪಾವನನೆಂದು ಅವರಿಗೇ ಹೇಳಲಾಗುತ್ತದೆ. ನಾಲೆಡ್ಜ್ಫುಲ್, ಜ್ಞಾನ ಸಾಗರನೂ ಆಗಿದ್ದಾರೆ. ಯೋಗ ಅರ್ಥಾತ್ ನೆನಪನ್ನು ಕಲಿಸುತ್ತಾರೆ ಆದರೆ ನಿರಾಕಾರನು ಹೇಗೆ ತಿಳಿಸುವುದು! ಅದಕ್ಕಾಗಿ ಬ್ರಹ್ಮನ ಮೂಲಕ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೇನೆ ಅರ್ಥಾತ್ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ. ಈಗ ಆ ಧರ್ಮವಿಲ್ಲ, ಪುನಃ ಮಾಡಬೇಕಾಗಿದೆ. ಈಗ ಮತ್ತೆ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಬಾಕಿ ಭಾರತ ಪ್ರಾಚೀನ ಖಂಡವಾಗಿದೆ ಆದ್ದರಿಂದ ವಾಸ್ತವದಲ್ಲಿ ಭಾರತದ ಪರಂಪರೆಯು ಎಲ್ಲದಕ್ಕಿಂತ ಹೆಚ್ಚಾಗಿರಬೇಕು. ಇಂತಹ ಮಾತುಗಳು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಆದಿ ಸನಾತನ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಬಹಳ ದೊಡ್ಡದಾಗಿರಬೇಕು. 5000 ವರ್ಷದಿಂದ ಅವರ ವೃದ್ಧಿಯಾಗುತ್ತಲೇ ಇದೆ ಬಾಕಿ ಬೇರೆಯವರು 2500 ವರ್ಷಗಳ ನಂತರ ಬರುತ್ತಾರೆ. ಇಸ್ಲಾಮಿಗಳ ಪರಂಪರೆಯು ಕಡಿಮೆಯಿರಬೇಕು ಏಕೆಂದರೆ ಸ್ವಲ್ಪಸಮಯದ ನಂತರ ಬೌದ್ಧ ಧರ್ಮದವರು ಬರುತ್ತಾರೆ, ಅವರಲ್ಲಿ ಸ್ವಲ್ಪ ಅಂತರವಿರಬೇಕು. ಇಸ್ಲಾಮಿ, ಬೌದ್ಧಿ, ಇವರುಗಳು ಮೊದಲು ಸತೋಪ್ರಧಾನರಾಗಿದ್ದು ನಂತರ ನಿಧಾನ-ನಿಧಾನವಾಗಿ ತಮೋಪ್ರಧಾರಾಗುತ್ತಾರೆ. ಇವೆಲ್ಲದರ ಲೆಕ್ಕವಿದೆ. ಯಾರು ಅನನ್ಯ ಬುದ್ಧಿವಂತ ಮಕ್ಕಳಿರುತ್ತಾರೆ ಅವರ ಬುದ್ಧಿಯಲ್ಲಿಯೇ ವಿಚಾರ ಬರುತ್ತದೆ. ಇತ್ತೀಚೆಗೆ ಚೈನಾದವರು ಬಹಳ ಇದ್ದಾರೆ ಎಂದು ಬರೆಯುತ್ತಾರೆ ಆದರೆ ಅವರಿಗೆ ಸೃಷ್ಟಿಚಕ್ರದ ಜ್ಞಾನವೇ ಗೊತ್ತಿಲ್ಲ. ಇವೆಲ್ಲದರ ರಹಸ್ಯವು ನೀವು ಮಕ್ಕಳ ಬುದ್ಧಿಯಲ್ಲಿದೆ. ಯಾರು ವಿದ್ಯಾವಂತರಿರುತ್ತಾರೆಯೋ ಅವರಿಗೆ ಪರಿಪೂರ್ಣವಾಗಿ ತಿಳಿಸಬೇಕಾಗುತ್ತದೆ. ದೇವಿ-ದೇವತಾ ಧರ್ಮದವರಿಗೆ 5000 ವರ್ಷಗಳಾಯಿತು ಅಂದಮೇಲೆ ಈ ಸಮಯದಲ್ಲಿ ಅವರ ಸಂಖ್ಯೆಯೇ ಹೆಚ್ಚಾಗಿರಬೇಕಲ್ಲವೆ. ಆದರೆ ದೇವಿ-ದೇವತಾ ಧರ್ಮದವರು ಅನ್ಯ ಧರ್ಮಗಳಲ್ಲಿ ಪರಿವರ್ತನೆಯಾಗಿ ಬಿಟ್ಟಿದ್ದಾರೆ. ಮೊಟ್ಟ ಮೊದಲು ಬಹಳ ಮುಸಲ್ಮಾನರಾಗಿ ಹೋಗುತ್ತಾರೆ, ನಂತರ ಬೌದ್ಧಿಯರೂ ಬಹಳಷ್ಟು ಜನ ಆಗುತ್ತಾರೆ. ಇಲ್ಲಿಯೂ ಸಹ ಬೌದ್ಧರು ಬಹಳಷ್ಟು ಜನ ಇದ್ದಾರೆ. ಕ್ರೈಸ್ತರಂತೂ ಲೆಕ್ಕವಿಲ್ಲದಷ್ಟು ಇದ್ದಾರೆ, ದೇವತಾ ಧರ್ಮದ ಹೆಸರೇ ಇಲ್ಲ. ಒಂದುವೇಳೆ ನಾವು ಬ್ರಾಹ್ಮಣ ಧರ್ಮದವರು ಎಂದರೆ ಹಿಂದೂಗಳ ಸಾಲಿನಲ್ಲಿ ಹಾಕಿ ಬಿಡುತ್ತಾರೆ. ಈಗ ನೀವು ತಿಳಿದಿದ್ದೀರಿ - ಶ್ರೀಮತದ ಆಧಾರದ ಮೇಲೆ ಬ್ರಾಹ್ಮಣರ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆ ಆಗುತ್ತಿದೆ ಎಂದು ನೀವು ತಿಳಿದಿದ್ದೀರಿ. ಇದನ್ನೂ ಸಹ ತಿಳಿದುಕೊಳ್ಳಬೇಕಾಗಿದೆ. ಧರ್ಮದ ಬಗ್ಗೆ ಗಾಯನ ಮಾಡುತ್ತಾರಲ್ಲವೆ. ಇಲ್ಲಿಯ ಮನುಷ್ಯರಂತೂ ತಮ್ಮನ್ನು ಹಿಂದೂಗಳ ಸಾಲಿನಲ್ಲಿ ತೆಗೆದುಕೊಳ್ಳುತ್ತಾರೆ, ಹಿಂದೂ ಆರ್ಯ ಧರ್ಮವಾಗಿದೆ, ಎಲ್ಲದಕ್ಕಿಂತ ಪುರಾತನವಾಗಿದೆ ಎಂದು ಹೇಳುತ್ತಾರೆ. ಭಾರತವಾಸಿಗಳು ಮೊಟ್ಟ ಮೊದಲು ಆರ್ಯರಾಗಿದ್ದರು, ಬಹಳ ಧನವಂತರಾಗಿದ್ದರು, ಈಗ ಅನಾರ್ಯರಾಗಿದ್ದಾರೆ. ಸ್ವಲ್ಪವೂ ಬುದ್ಧಿಯಿಲ್ಲ. ಯಾರಿಗೆ ಏನು ಬರುತ್ತದೆಯೋ ಆ ಧರ್ಮದ ಹೆಸರನ್ನು ಇಟ್ಟು ಬಿಡುತ್ತಾರೆ. ವೃಕ್ಷದ ಹಿಂದೆ ಚಿಕ್ಕ-ಚಿಕ್ಕ ಎಲೆಗಳು, ರೆಂಬೆ-ಕೊಂಬೆಗಳು ಬರುತ್ತಲೇ ಇರುತ್ತವೆ. ಹೊಸಬರಿಗೆ ಸ್ವಲ್ಪ ಮಾನ್ಯತೆಯಿರುತ್ತದೆ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಅಂತಹ ಆಸ್ತಿಯನ್ನು ಕೊಡುವಂತಹ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ಎಷ್ಟು ಹೆಚ್ಚು ನೆನಪು ಮಾಡುತ್ತೀರೋ ಒಂದನೆಯದಾಗಿ ಆಸ್ತಿಯು ಸಿಗುತ್ತದೆ ಮತ್ತು ಪಾವನರಾಗುತ್ತೀರಿ. ಲೌಕಿಕ ತಂದೆಯಿಂದ ಧನದ ಆಸ್ತಿಯಂತೂ ಸಿಗುತ್ತದೆ. ಜೊತೆ ಜೊತೆಗೆ ಪತಿತರಾಗುವ ಆಸ್ತಿಯೂ ಸಹ ಸಿಗುತ್ತದೆ. ಅವರಂತೂ ಲೌಕಿಕ ತಂದೆ, ಇವರು ಪಾರಲೌಕಿಕ ತಂದೆ ಮತ್ತು ಇವರು (ಬ್ರಹ್ಮಾ) ಮಧ್ಯದಲ್ಲಿ ಅಲೌಕಿಕ ತಂದೆ. ಇವರನ್ನು ಇಬ್ಬರ ಮಧ್ಯದಲ್ಲಿ ಜೋಡಿಸಲಾಗುತ್ತದೆ. ಶಿವ ತಂದೆಗೆ ಯಾವುದೇ ಕಷ್ಟ ಆಗುವುದಿಲ್ಲ. ಇವರು ಎಷ್ಟು ನಿಂದನೆ ಅನುಭವಿಸಬೇಕಾಗುತ್ತದೆ. ವಾಸ್ತವದಲ್ಲಿ ಕೃಷ್ಣನಿಗೂ ನಿಂದನೆ ಸಿಗುವುದಿಲ್ಲ, ಮಧ್ಯದಲ್ಲಿ ಇವರೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮಾರ್ಗದಲ್ಲಿ ನಡೆಯುತ್ತಾ ಬ್ರಾಹ್ಮಣನು ಸಿಕ್ಕಿಕೊಂಡನು ಎಂದು ಹೇಳುತ್ತಾರಲ್ಲವೆ. ಇವರು ನಿಂದನೆಯನ್ನು ಅನುಭವಿಸುವುದಕ್ಕಾಗಿ ಸಿಕ್ಕಿಕೊಂಡಿದ್ದಾರೆ. ಅಲೌಕಿಕ ತಂದೆಯೇ ಸಹನೆ ಮಾಡಬೇಕಾಗುತ್ತದೆ. ಶಿವ ತಂದೆಯು ಇವರಲ್ಲಿ ಪ್ರವೇಶ ಮಾಡಿ ಪತಿತರನ್ನು ಪಾವನ ಮಾಡುತ್ತಾರೆಂದು ಇದು ಯಾರಿಗೂ ಗೊತ್ತಿಲ್ಲ. ಪವಿತ್ರರಾಗುವುದರಲ್ಲಿಯೇ ಪೆಟ್ಟು ತಿನ್ನುತ್ತಾರೆ. ನಾನು ಬರುತ್ತೇನೆ, ಎಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತೆನೆಂದು ತಂದೆಯು ತಿಳಿಸುತ್ತಾರೆ. ಎದುರಿನಲ್ಲಿ ಮೃತ್ಯು ನಿಂತಿದೆ ಎಂದು ನೀವು ತಿಳಿದಿದ್ದೀರಿ. ವಿನಾಶವಂತೂ ಆಗಲೇಬೇಕಾಗಿದೆ. ವಿನಾಶದ ಹೊರತು ಸುಖ-ಶಾಂತಿ ಹೇಗಾಗುತ್ತದೆ. ಯಾವಾಗ ಯಾವುದೇ ಯುದ್ಧ ನಡೆಯುತ್ತದೆಯೆಂದರೆ ಯುದ್ಧಗಳು ನಿಂತು ಹೋಗಲಿ ಎಂದು ಮನುಷ್ಯರು ಯಜ್ಞವನ್ನು ಮಾಡುತ್ತಾರೆ. ನೀವು ಬ್ರಾಹ್ಮಣ ಕುಲಭೂಷಣರೇ ತಿಳಿದಿದ್ದೀರಿ, ಅವಶ್ಯವಾಗಿ ಆಗಲೇಬೇಕು ಇಲ್ಲದಿದ್ದರೆ ಸ್ವರ್ಗದ ದ್ವಾರ ಹೇಗೆ ತೆರೆಯಲ್ಪಡುವುದು! ಎಲ್ಲರೂ ಸ್ವರ್ಗದಲ್ಲಂತೂ ಬರಲು ಸಾಧ್ಯವಿಲ್ಲ. ಯಾರು ಪುರುಷಾರ್ಥ ಮಾಡುತ್ತಾರೆಯೋ ಅವರೇ ಸ್ವರ್ಗಕ್ಕೆ ಹೋಗುತ್ತಾರೆ ಉಳಿದವರು ಮುಕ್ತಿಧಾಮಕ್ಕೆ ಹೋಗುತ್ತಾರೆ. ಇದು ಯಾರಿಗೂ ತಿಳಿಯದೇ ಇರುವ ಕಾರಣ ಎಷ್ಟೊಂದು ಭಯ ಪಡುತ್ತಾರೆ. ಶಾಂತಿಗಾಗಿ ಎಷ್ಟೊಂದು ಅಲೆದಾಡುತ್ತಾರೆ. ಸಮ್ಮೇಳನಗಳನ್ನೂ ಮಾಡುತ್ತಾರೆ, ಕೇವಲ ನೀವು ಬ್ರಾಹ್ಮಣರು ಸುಖಧಾಮ-ಶಾಂತಿಧಾಮವು ಹೇಗೆ ಸ್ಥಾಪನೆಯಾಗುತ್ತಿದೆ ಎಂದು ತಿಳಿದಿದ್ದೀರಿ. ವಿನಾಶದ ವಿನಃ ಸ್ಥಾಪನೆಯಾಗಲು ಸಾಧ್ಯವಿಲ್ಲ. ನೀವೀಗ ತ್ರಿಕಾಲದರ್ಶಿಗಳಾಗಿದ್ದೀರಿ. ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ಅವರಂತೂ ಶಾಂತಿಯನ್ನು ಹೇಗೆ ಪಡೆಯುವುದು ಅರ್ಥಾತ್ ಯಾರೂ ಜಗಳವಾಡುವುದು ಬೇಡ. ಎಲ್ಲರೂ ಒಮ್ಮತವಾಗಿರಬೇಕು ಎಂದು ಹೇಳುತ್ತಿರುತ್ತಾರೆ ಆದರೆ ಒಬ್ಬರೇ ತಂದೆಯ ಒಂದು ಮತವನ್ನು ತೆಗೆದುಕೊಂಡು ಎಲ್ಲರೂ ತಂದೆಯ ಮಕ್ಕಳು ಸಹೋದರ-ಸಹೋದರರಾದಿರಿ ಅಂದಮೇಲೆ ಒಮ್ಮತವಾಗಿ ಬಿಡುವುದು. ಒಬ್ಬ ತಂದೆಯ ಮಕ್ಕಳು ಅಂದಮೇಲೆ ಪರಸ್ಪರ ಜಗಳವಾಡಬಾರದು. ಇದಂತೂ ಸತ್ಯಯುಗದಲ್ಲಿಯೇ ಇತ್ತಲ್ಲವೆ! ಅಲ್ಲಿ ಯಾರೂ ಪರಸ್ಪರದಲ್ಲಿ ಜಗಳವಾಡುವುದಿಲ್ಲ. ಅದಂತೂ ಸತ್ಯಯುಗದ ಮಾತಾಯಿತು, ಇದು ಕಲಿಯುಗವಾಗಿದೆ. ಅವಶ್ಯವಾಗಿ ಸತ್ಯಯುಗದಲ್ಲಿ ದೇವತೆಗಳಿದ್ದರು, ಉಳಿದ ಬೇರೆಲ್ಲಾ ಆತ್ಮರು ಎಲ್ಲಿರುತ್ತಾರೆಂದು ಗೊತ್ತಾಗುವುದಿಲ್ಲ. ಒಂದು ರಾಜ್ಯ ಕೇವಲ ಸತ್ಯಯುಗದಲ್ಲಿ ಮಾತ್ರ ಇತ್ತೆಂದು ಈಗ ನೀವು ತಿಳಿದಿದ್ದೀರಿ, ಅಲ್ಲಿ ಸುಖ-ಶಾಂತಿ ಎಲ್ಲವೂ ಇತ್ತು. ನಂಬರ್ವಾರ್ ಪುರುಷಾರ್ಥದನುಸಾರ ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ, ಅವಶ್ಯವಾಗಿ ನಾವು ಸತ್ಯಯುಗದಲ್ಲಿ ರಾಜ್ಯ ಮಾಡುತ್ತಿದ್ದೆವು, ಬಹಳ ಸುಖವಾಗಿದ್ದೆವು ಎಂದು ತಿಳಿದಿದ್ದೀರಿ. ಅದ್ವೈತ ಜ್ಞಾನವಿತ್ತು ಎಂಬ ತಿಳುವಳಿಕೆ ಯಾರಿಗೂ ಇರಲಿಲ್ಲ. ಈ ಸಮಯದಲ್ಲಿ ನೀವು ನಾಲೆಡ್ಜ್ಫುಲ್ ಆಗುತ್ತೀರಿ. ತಂದೆಯು ನಿಮ್ಮನ್ನು ತಮ್ಮ ಸಮಾನ ಮಾಡಿಕೊಳ್ಳುತ್ತಾರೆ, ತಂದೆಯ ಮಹಿಮೆಯೇನಿದೆಯೋ ಅದರಂತೆ ನಿಮ್ಮನ್ನೂ ಮಾಡುತ್ತಾರೆ. ಕೇವಲ ದಿವ್ಯ ದೃಷ್ಟಿಯ ಬೀಗದ ಕೈ ತಂದೆಯ ಬಳಿ ಇರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ನಾನು ಕೆಲಸ ಮಾಡಬೇಕಾಗುತ್ತದೆ. ಯಾರು ಯಾವ ಪೂಜೆಯನ್ನು ಮಾಡುತ್ತಾರೆಯೋ ಅವರ ಮನೋಕಾಮನೆಗಳನ್ನು ಪೂರ್ಣ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಇಲ್ಲಿಯೂ ದಿವ್ಯ ದೃಷ್ಟಿಯ ಪಾತ್ರವು ನಡೆಯುತ್ತದೆ. ಅರ್ಜುನನು ವಿನಾಶದ ಸಾಕ್ಷಾತ್ಕಾರ ಮಾಡಿದನು ಎಂದು ಹೇಳುತ್ತಾರಲ್ಲವೆ. ವಿನಾಶವು ಅವಶ್ಯವಾಗಿ ಆಗಲೇಬೇಕಾಗಿದೆ, ವಿಷ್ಣು ಪುರಿಯ ಸ್ಥಾಪನೆಯೂ ಅವಶ್ಯವಾಗಿ ಆಗಬೇಕು. ಕಲ್ಪದ ಹಿಂದೆ ತಂದೆಯು ಹೇಗೆ ತಿಳಿಸಿದ್ದರೋ ಅದೇರೀತಿ ಈಗಲೂ ಸಹ ತಿಳಿಸುತ್ತಿದ್ದಾರೆ. ಬಾಬಾ ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ, ಯಾವಾಗ ದೇವತೆಗಳಾಗುತ್ತೇವೆ ಆಗ ಆಸುರೀ ಸೃಷ್ಟಿಯ ವಿನಾಶವಾಗಲೇಬೇಕು. ನಾಲ್ಕೂ ಕಡೆ ಹಾಹಾಕಾರ ಮೊಳಗಲೇಬೇಕು. ಪ್ರಾಕೃತಿಕ ವಿಕೋಪಗಳೂ ಸಹ ಆಗಲೇಬೇಕೆಂದು ಬುದ್ಧಿಯಲ್ಲಿದೆ, ಬಾಂಬುಗಳ ಮಳೆಯಾಗುತ್ತದೆ. ಇವೆಲ್ಲದರ ವಿನಾಶವಾದರೆ ಸತ್ಯಯುಗದ ಸ್ಥಾಪನೆಯಾಗುವುದು. 5 ತತ್ವಗಳ ಗೊಬ್ಬರ ಸಹ ಸೇರಿ ಬಿಡುತ್ತವೆ. ಈ ಧರಣಿಗೆ ಗೊಬ್ಬರ ಎಷ್ಟೊಂದು ಸಿಗುತ್ತದೆ! ಈ ರುದ್ರ ಜ್ಞಾನ ಯಜ್ಞದಲ್ಲಿ ಎಲ್ಲವೂ ಸ್ವಾಹಾ ಆಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ರುದ್ರ ಯಜ್ಞವನ್ನು ಹೇಗೆ ರಚಿಸುತ್ತಾರೆ ನೋಡಿ. ಶಿವಬಾಬಾನ ಲಿಂಗ ಮತ್ತು ಅನೇಕ ಚಿಕ್ಕ-ಚಿಕ್ಕ ಸಾಲಿಗ್ರಾಮ ಮಾಡಿ, ಅದಕ್ಕೆ ಪೂಜೆ ಮಾಡಿ ನಂತರ ಅಳಿಸಿ ಹಾಕುತ್ತಾರೆ, ಪುನಃ ತಯಾರು ಮಾಡುತ್ತಾರೆ. ಪೂಜೆ ಮಾಡಿ ನಂತರ ಒಡೆದು ಹಾಕುತ್ತಾರೆ. ಶಿವ ತಂದೆಯ ಜೊತೆ ಯಾರು-ಯಾರು ಸೇವೆ ಮಾಡಿದ್ದಾರೆ ಅವರ ಸ್ಥಿತಿಯನ್ನೂ ಹೀಗೆ ಮಾಡುತ್ತಾರೆ. ರಾವಣನ ಗೊಂಬೆಯನ್ನು ಮಾಡಿ ಪ್ರತೀ ವರ್ಷ ಸುಡುತ್ತಾರೆ. ಶತ್ರುವೆಂದ ಮೇಲೆ ಒಂದೆರಡು ಬಾರಿ ಸುಡುತ್ತಾರೆ, ವರ್ಷ-ವರ್ಷವೂ ಸುಡುವ ರೀತಿಯಲ್ಲ. ಒಂದೇ ಬಾರಿ ಕೋಪವನ್ನು ತಯಾರಿಸುತ್ತಾರೆ, ರಾವಣನ್ನಂತೂ ವರ್ಷ-ವರ್ಷ ಸುಡುತ್ತಾರೆ, ಇದರ ಅರ್ಥವನ್ನೂ ಸ್ವಲ್ಪವೂ ತಿಳಿದಿಲ್ಲ. ನಂತರ ಸೀತೆಯನ್ನು ರಾವಣನು ಕದ್ದುಕೊಂಡು ಹೋದನು ಎಂದು ಹೇಳುತ್ತಾರೆ, ಸ್ವಲ್ಪವೂ ಅರ್ಥವನ್ನೇ ತಿಳಿದಿಲ್ಲ. ವಿದೇಶಿಯರಿಗಂತೂ ಸ್ವಲ್ಪವೂ ಅರ್ಥವಾಗುವುದಿಲ್ಲ. ದಿನ-ಪ್ರತಿದಿನ ರಾವಣನ ಗೊಂಬೆಯನ್ನು ದೊಡ್ಡದಾಗಿ ಮಾಡುತ್ತಾರೆ ಏಕೆಂದರೆ ರಾವಣನು ಬಹಳ ದುಃಖ ಕೊಡುವವನಾಗಿದ್ದಾನೆ. ಈಗ ನೀವು ಇದರ ಮೇಲೆ ಜಯ ಗಳಿಸುತ್ತೀರಿ. ಸತ್ಯಯುಗದಲ್ಲಿ ಇದು ಇರುವುದೇ ಇಲ್ಲ. ಇಲ್ಲಿ ಏನು ಕರ್ಮ ಭೋಗ ಭೋಗಿಸುವರೋ, ರೋಗ ಇತ್ಯಾದಿಗಳಿಗೆ ರಾವಣನೇ ಕಾರಣನಾಗಿದ್ದಾನೆ. ರಾವಣನ ಪ್ರವೇಶತೆಯ ಕಾರಣ ಮನುಷ್ಯರು ಏನೇ ಕರ್ಮವನ್ನು ಮಾಡಿದರೆ ವಿಕರ್ಮವೇ ಆಗುತ್ತದೆ. ಸುಖ-ದುಃಖದ ಆಟ ಮಾಡಲ್ಪಟ್ಟಿದೆ. ಈ ಇತಿಹಾಸ-ಭೂಗೋಳವು ಯಾರಿಗೂ ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರಿಗೆ ಹೇಗೆ ರಾಜ್ಯ ಸಿಗುತ್ತದೆ ಎಂದು ಯಾರಿಗೂ ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರು ಹೇಗೆ ರಾಜ್ಯ ಮಾಡಿದರೆಂದು ಚಿಕ್ಕ-ಚಿಕ್ಕ ಮಕ್ಕಳು ತಿಳಿದುಕೊಂಡಿದ್ದೀರಿ, ಸಂಗಮದಲ್ಲಿ ರಾಜಯೋಗವನ್ನು ಕಲಿತು ಇವರು ಪದವಿಯನ್ನು ಪಡೆದಿದ್ದಾರೆ. ಚಿಕ್ಕ-ಚಿಕ್ಕ ಮಕ್ಕಳು ಹೋಗಿ ಇವರು ಹೇಗೆ ರಾಜ್ಯಭಾಗ್ಯವನ್ನು ಪಡೆದರು, ಈಗಂತೂ ಕಲಿಯುಗವಾಗಿದೆ, ಇದನ್ನಂತೂ ಸತ್ಯಯುಗವೆನ್ನಲು ಸಾಧ್ಯವಿಲ್ಲವೆಂದು ಬಿರ್ಲಾದವರಿಗೆ ತಿಳಿಸಬೇಕು. ರಾಜ್ಯಭಾಗ್ಯವಂತೂ ಈಗ ಇಲ್ಲವೇ ಇಲ್ಲ. ರಾಜರ ಕಿರೀಟಗಳನ್ನು ಉಡಾಯಿಸಿ ಬಿಟ್ಟಿದ್ದಾರೆ. ಧರ್ಮ ಶಾಸ್ತ್ರಗಳು ಕೇವಲ ನಾಲ್ಕು ಮಾತ್ರವೇ ಇದೆ. ಗೀತಾ ಧರ್ಮ ಶಾಸ್ತ್ರವಾಗಿದೆ ಯಾವುದರಿಂದ ಈ ಮೂರು ಧರ್ಮಗಳು ಸ್ಥಾಪನೆಯಾಗುತ್ತದೆ, ಸತ್ಯಯುಗದಲ್ಲಿ ಅಲ್ಲ. ಲಕ್ಷ್ಮೀ-ನಾರಾಯಣ ಅಥವಾ ರಾಮನು ಧರ್ಮವನ್ನು ಸ್ಥಾಪನೆ ಮಾಡಿದರು ಎಂದಲ್ಲ. ಈಗ ಈ ಧರ್ಮ ಸ್ಥಾಪನೆಯಾಗುತ್ತಿದೆ ನಂತರ ಇಸ್ಲಾಮಿ, ಬೌದ್ಧಿ ಮತ್ತು ಕ್ರಿಶ್ಚಿಯನ್ ಧರ್ಮ ಸ್ಥಾಪನೆಯಾಗುತ್ತದೆ. ಕ್ರಿಶ್ಚಿಯನ್ನರ ಧರ್ಮ ಗ್ರಂಥ ಬೈಬಲ್ ಆಗಿದೆ ನಂತರ ಮುಂದೆ ವೃದ್ಧಿಯಾಗುತ್ತಾ ಹೋಗುತ್ತದೆ. ಆದಿ ಸನಾತನವು ದೇವತಾ ಧರ್ಮವೇ ಆಗಿದೆ ಈಗ ಪುನಃ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ನೀವು ಡ್ರಾಮಾದ ರಹಸ್ಯವನ್ನು ತಿಳಿದುಕೊಂಡಿದ್ದೀರಿ, ಖುಷಿಯಾಗಿಯೂ ಇರುತ್ತೀರಿ. ನೀವೀಗ ತಿಳಿದಿದ್ದೀರಿ - 100% ನಿಶ್ಚಿತವಾಗಿದೆ, ನಮ್ಮ ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡಿಕೊಳ್ಳುತ್ತೇವೆ, ಇದರಲ್ಲಿ ಯುದ್ಧ, ಯಾವುದರ ಮಾತಿಲ್ಲ. ರಾಜಧಾನಿಯ ಸ್ಥಾಪನೆಯಾಗುತ್ತಿದೆ, ಇದು ನಿಶ್ಚಿತವಾಗಿದೆ. ಆಯಸ್ಸೂ ನಿಗಧಿಯಾಗಿದೆ, ಮೃತ್ಯುವೂ ನಿಗಧಿಯಾಗಿದೆ. ನಾವೀಗ ಮತ್ತೆ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ, ತಂದೆಯಿಂದ ಕಲ್ಪ-ಕಲ್ಪವೂ ಆಸ್ತಿಯನ್ನು ಪಡೆಯುತ್ತೇವೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೇವೆಂದು ನೀವೀಗ ತಿಳಿದಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಯಾವ-ಯಾವ ಮಹಿಮೆಯಿದೆಯೋ ಅದನ್ನು ಸ್ವಯಂನಲ್ಲಿ ತರಬೇಕು. ತಂದೆಯ ಸಮಾನ ಮಹಿಮಾಯೋಗ್ಯರಾಗಬೇಕಾಗಿದೆ. ಪಾರಲೌಕಿಕ ತಂದೆಯಿಂದ ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಪವಿತ್ರರಾಗುವುದರಿಂದಲೇ ಸ್ವರ್ಗದ ಆಸ್ತಿಯು ಸಿಗುತ್ತದೆ.
2. ಶ್ರೀಮತದಂತೆ ತಮ್ಮದೇ ತನು-ಮನ-ಧನದಿಂದ ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಬೇಕಾಗಿದೆ.
ಓಂ ಶಾಂತಿ. ಈ ನಶೆಯಿರಬೇಕು - ನಾನಾತ್ಮ ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತೇನೆ ಆಗಲೇ ಪಾವನವಾಗಲು ಸಾಧ್ಯ. ಇದೇ ಪರಿಶ್ರಮವಿದೆ ಅದು ಮಕ್ಕಳಬಳಿ ತಲುಪುವುದೇ ಇಲ್ಲ. ಮಾಯೆಯು ಬಹಳ ತೊಂದರೆ ಕೊಡುತ್ತದೆ. ಒಬ್ಬ ತಂದೆಯನ್ನು ಮರೆಸಿ ಬೇರೆಯವರ ನೆನಪೇ ಬರುತ್ತದೆ, ತಂದೆ ಅಥವಾ ಪ್ರಿಯತಮನ ನೆನಪೇ ಮಾಡುವುದಿಲ್ಲ. ಇಂತಹ ಪ್ರಿಯತಮನನ್ನು ಕೊನೆಪಕ್ಷ 8 ಗಂಟೆಯಾದರೂ ನೆನಪು ಮಾಡುವ ಸರ್ವೀಸ್ ಮಾಡಬೇಕು ಅರ್ಥಾತ್ ಪ್ರಿಯತಮನಿಗೆ ನೆನಪು ಮಾಡಿ ಸಹಾಯ ಮಾಡಬೇಕು ಅಥವಾ ಮಕ್ಕಳು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದೇ ಬಹಳ ದೊಡ್ಡ ಪರಿಶ್ರಮವಾಗಿದೆ. ಗೀತೆಯಲ್ಲಿಯೂ ಸಹ ಮನ್ಮನಾಭವ ಇದೆ. ತಂದೆಯನ್ನು ನೆನಪು ಮಾಡುತ್ತಲೇ ಇರಿ, ಕುಳಿತುಕೊಳ್ಳುತ್ತಾ-ನಿಂತುಕೊಳ್ಳುತ್ತಾ, ಓಡಾಡುತ್ತಾ-ತಿರುಗಾಡುತ್ತಾ ಒಬ್ಬ ತಂದೆಯನ್ನೇ ನೆನಪು ಮಾಡಬೇಕು, ಬೇರೆ ಯಾವುದೂ ಇಲ್ಲ. ಅಂತ್ಯದಲ್ಲಿ ಈ ನೆನಪೇ ಕೆಲಸಕ್ಕೆ ಬರುವುದು. ತಮ್ಮನ್ನು ಆತ್ಮ ಅಶರೀರಿ ಎಂದು ತಿಳಿದುಕೊಳ್ಳಿ, ಈಗ ನಾವೆಲ್ಲರೂ ಮನೆಗೆ ಹಿಂತಿರುಗಬೇಕಾಗಿದೆ, ಇದರ ಬಹಳ ಪರಿಶ್ರಮ ಪಡಬೇಕಾಗಿದೆ. ಬೆಳಗ್ಗೆ ಸ್ನಾನ ಇತ್ಯಾದಿಗಳನ್ನು ಮಾಡಿ ನಂತರ ಮೇಲ್ಛಾವಣಿಯಲ್ಲಿ ಅಥವಾ ಕ್ಲಾಸ್ಹಾಲ್ನಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಿ. ಎಷ್ಟು ಏಕಾಂತದಲ್ಲಿರುತ್ತೀರೋ ಅಷ್ಟು ಚೆನ್ನಾಗಿರುವುದು. ಸದಾ ಇದೇ ವಿಚಾರ ಮಾಡಿ - ನಾವು ತಂದೆಯನ್ನು ನೆನಪು ಮಾಡಬೇಕು, ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಈ ಪರಿಶ್ರಮವನ್ನು ಪ್ರತೀ 5000 ವರ್ಷದ ನಂತರ ಮಾಡಬೇಕಾಗಿದೆ. ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ ಎಲ್ಲಿಯೂ ಸಹ ನೀವು ಪರಿಶ್ರಮ ಪಡಬೇಕಾಗಿಲ್ಲ. ಈ ಸಂಗಮದಲ್ಲಿಯೇ ನನ್ನನ್ನು ನೆನಪು ಮಾಡಿ ಎಂದು ನಿಮಗೆ ತಂದೆಯು ತಿಳಿಸುತ್ತಾರೆ. ಈ ವೇಳೆಯಲ್ಲಿ ನನ್ನನ್ನು ನೆನಪು ಮಾಡಿ. ತಂದೆಯು ಸಂಗಮದಲ್ಲಿಯೇ ಬರುತ್ತಾರೆ, ಮತ್ತ್ಯಾವುದೇ ಸಮಯದಲ್ಲಿ ಬರುವುದಿಲ್ಲ. ನೀವೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಮಕ್ಕಳು ತಂದೆಯನ್ನು ಮರೆತು ಬಿಡುತ್ತಾರೆ. ಆದ್ದರಿಂದಲೇ ಬಹಳ ಮೋಸ ಹೋಗುತ್ತಾರೆ, ರಾವಣನು ಬಹಳ ಮೋಸಗಾರನಾಗಿದ್ದಾನೆ. ಇವನು ಅರ್ಧಕಲ್ಪದ ಶತ್ರುವಾಗಿದ್ದಾನೆ. ಆದ್ದರಿಂದ ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಿ ಚಾರ್ಟ್ ಇಡಿ - ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆನು? ತುಕ್ಕು ಎಷ್ಟು ಬಿಟ್ಟು ಹೋಗಿದೆ? ನೆನಪಿನ ಮೇಲೆಯೇ ಎಲ್ಲವೂ ಆಧಾರಿತವಾಗಿದೆ. ಮಕ್ಕಳು ಪೂರ್ಣ ಆಸ್ತಿಯನ್ನು ಪಡೆಯಲು ಪ್ರಯತ್ನ ಪಟ್ಟು ನರನಿಂದ ನಾರಾಯಣರಾಗಬೇಕಾಗಿದೆ, ಇದೇ ಸತ್ಯವಾದ ಸತ್ಯ ನಾರಾಯಣನ ಕಥೆಯಾಗಿದೆ. ಭಕ್ತರು ಹುಣ್ಣಿಮೆಯ ದಿನ ಸತ್ಯ ನಾರಾಯಣನ ಕಥೆಯನ್ನು ಹೇಳುತ್ತಾರೆ, ಈಗ ನೀವು 16 ಕಲಾಸಂಪೂರ್ಣರಾಗಬೇಕೆಂದು ನಿಮಗೆ ತಿಳಿದಿದೆ. ಇದು ಸತ್ಯ ತಂದೆಯನ್ನು ನೆನಪು ಮಾಡುವುದರಿಂದ ಆಗುತ್ತದೆ. ಶ್ರೀಮತವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಗೃಹಸ್ಥದಲ್ಲಿರಿ, ಎಲ್ಲಾ ವ್ಯವಹಾರಗಳನ್ನೂ ಮಾಡಿ, ಕೇವಲ ತಂದೆಯನ್ನು ನೆನಪು ಮಾಡಬೇಕಷ್ಟೇ. ನೆನಪೇ ಮಾಡುವುದಿಲ್ಲವೆಂದರೆ ಎಲ್ಲಾದರೂ ಒಂದು ಕಡೆ ರಾವಣನಿಂದ ಮೋಸ ಹೋಗುತ್ತೀರಿ. ಮೂಲ ಮಾತು ನೆನಪು ಮಾಡುವುದಾಗಿದೆ. ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ತನ್ನನ್ನು ಆತ್ಮನೆಂದು ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿ ಪದೇ-ಪದೇ ತಿಳಿಸುತ್ತಾರೆ. ಇಲ್ಲದಿದ್ದರೆ ಅಂತ್ಯದಲ್ಲಿ ಬಹಳ ಪಶ್ಚಾತ್ತಾಪ ಪಡುವಿರಿ, ಬಹಳ ಮೋಸ ಹೋಗುತ್ತೀರಿ. ಕೆಲವರಿಗೆ ಇಷ್ಟು ಜೋರಾಗಿ ಪೆಟ್ಟು ಬೀಳುವುದು, ಮಾಯೆಯು ಒಂದೇ ಬಾರಿಗೆ ಕಪ್ಪು ಮುಖ ಮಾಡಿ ಬಿಡುತ್ತದೆ. ತಂದೆಯು ಸುಂದರರನ್ನಾಗಿ ಮಾಡಲು ಬಂದಿದ್ದಾರೆ. ಈ ಸಮಯದಲ್ಲಿ ಒಬ್ಬರಿಗೊಬ್ಬರು ಕಪ್ಪು ಮುಖವನ್ನಾಗಿಯೇ ಮಾಡುತ್ತಾರೆ. ಸುಂದರರನ್ನಾಗಿ ಒಬ್ಬ ತಂದೆಯೇ ಮಾಡುತ್ತಾರೆ. ಇವರ ನೆನಪಿನಿಂದಲೇ ಸುಂದರ ಅರ್ಥಾತ್ ಸ್ವರ್ಗದ ಮಾಲೀಕರಾಗುತ್ತೀರಿ. ಇದು ಪತಿತ ಪ್ರಪಂಚವಾಗಿದೆ. ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತಾರೆ. ಬಾಕಿ ನಿಮ್ಮ ಯಾವುದೇ ವ್ಯಾಪಾರ-ವ್ಯವಹಾರ ಇತ್ಯಾದಿಗಳ ಜೊತೆ ತಂದೆಯ ಸಂಬಂಧವಿಲ್ಲ. ಶರೀರ ನಿರ್ವಹಣೆಗಾಗಿ ನೀವು ಏನು ಮಾಡಬೇಕಾಗಿದೆಯೋ ಅದನ್ನು ಮಾಡಿ ಆದರೆ ಕೇವಲ ಮನ್ಮನಾಭವ ಆಗಿರಿ ಎಂದು ತಂದೆಯು ತಿಳಿಸುತ್ತಾರೆ. ನೀವು ಪಾವನ ಪ್ರಪಂಚದ ಮಾಲೀಕರಾಗುವುದು ಹೇಗೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ಕೇವಲ ನನ್ನನ್ನು ನೆನಪು ಮಾಡಿ, ಮತ್ತ್ಯಾವುದೇ ಉಪಾಯವು ಪಾವನರಾಗುವುದಕ್ಕಾಗಿ ಇಲ್ಲ. ತಂದೆಯ ನೆನಪಿನ ವಿನಃ ದಾನ-ಪುಣ್ಯ, ಎಷ್ಟೇ ಪುರುಷಾರ್ಥ ಮಾಡಿದರೂ, ಬೆಂಕಿಯ ಮೇಲೆ ನಡೆದರೂ ಯಾವುದೇ ಕೆಲಸಕ್ಕೆ ಬರುವುದಿಲ್ಲ. ಇದು ಬಹಳ ಸಹಜವಾಗಿದೆ ಆದ್ದರಿಂದ ಇದು ಸಹಜಯೋಗವಾಗಿದೆ. ನಿಮ್ಮನ್ನು ನೀವು ಕೇಳಿಕೊಳ್ಳಿ – ಮಧುರ ತಂದೆಯನ್ನು ಇಡೀ ದಿನದಲ್ಲಿ ಎಷ್ಟು ನೆನಪು ಮಾಡಿದ್ದೇನೆ? ಆಗ ನಿದ್ರೆಯಲ್ಲಿ ಯಾವುದೇ ಪಾಪವಾಗುವುದಿಲ್ಲ, ಅಶರೀರಿಯಾಗಿ ಬಿಡುತ್ತೀರಿ, ಬಾಕಿ ದಿನದಲ್ಲಿ ಬಹಳ ಪಾಪಕರ್ಮವಾಗುತ್ತದೆ, ಹಳೆಯ ಪಾಪಕರ್ಮಗಳು ಬಹಳಷ್ಟಿವೆ ಆದ್ದರಿಂದ ನೆನಪಿನ ಪರಿಶ್ರಮ ಪಡಬೇಕು. ಇಲ್ಲಿ ಬರುತ್ತೀರೆಂದರೆ ಪರಿಶ್ರಮ ಪಡಲೇಬೇಕಾಗಿದೆ. ಹೊರಗಡೆಯ ವ್ಯರ್ಥ ಸಂಕಲ್ಪಗಳನ್ನು ತೆಗೆದು ಬಿಡಿ. ಇಲ್ಲದಿದ್ದರೆ ವಾಯುಮಂಡಲವು ಬಹಳ ಕೆಟ್ಟದಾಗಿ ಬಿಡುತ್ತದೆ. ಮನೆ, ಹೊಲ-ಗದ್ದೆಗಳ ವಿಚಾರವಂತೂ ನಡೆಯುತ್ತಲೇ ಇರುತ್ತದೆ. ಕೆಲವೊಮ್ಮೆ ಮಕ್ಕಳ ನೆನಪು ಬರುವುದು, ಕೆಲವೊಮ್ಮೆ ಗುರುಗಳ ನೆನಪು ಬರುವುದು. ಸಂಕಲ್ಪಗಳು ನಡೆಯುತ್ತಿದ್ದರೆ ವಾಯುಮಂಡಲವು ಹಾಳು ಮಾಡಿ ಬಿಡುವುದು. ಪುರುಷಾರ್ಥ ಮಾಡದೇ ಇರುವವರು ಬಹಳ ವಿಘ್ನಗಳನ್ನು ಹಾಕುತ್ತಾರೆ, ಇವುಗಳು ಬಹಳ ಸೂಕ್ಷ್ಮವಾದ ಮಾತುಗಳಾಗಿವೆ. ಇದನ್ನು ನೀವೀಗ ತಿಳಿದಿದ್ದೀರಿ ನಂತರ ಎಂದೂ ತಿಳಿಯುವುದಿಲ್ಲ. ತಂದೆಯು ಈಗ ಆಸ್ತಿಯನ್ನು ಕೊಡುತ್ತಾರೆ ನಂತರ ಅರ್ಧಕಲ್ಪಕ್ಕೆ ನಿಶ್ಚಿಂತರಾಗುವಿರಿ. ಲೌಕಿಕ ತಂದೆಯ ವಿಚಾರಗಳು ಮತ್ತು ಬೇಹದ್ದಿನ ತಂದೆಯ ವಿಚಾರಗಳಲ್ಲಿ ಅಂತರವಿದೆ. ತಂದೆಯು ಹೇಳುತ್ತಾರೆ - ಭಕ್ತಿಮಾರ್ಗದಲ್ಲಿ ನನಗೆ ಬಹಳ ವಿಚಾರಗಳಿರುತ್ತವೆ. ಭಕ್ತರು ಘಳಿಗೆ-ಘಳಿಗೆ ಎಷ್ಟೊಂದು ನೆನಪು ಮಾಡುತ್ತಾರೆ, ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ನಾನು ನಿಮಗೆ ಇಷ್ಟೊಂದು ಸುಖ ಕೊಡುತ್ತೇನೆ, ಅಲ್ಲಿ ನೀವು ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ, ಏಕೆಂದರೆ ನಮ್ಮ ಮಕ್ಕಳು ಶಾಂತಿಧಾಮ-ಸುಖಧಾಮದಲ್ಲಿ ಕುಳಿತಿರುತ್ತಾರೆ. ಬೇರೆ ಯಾವುದೇ ಮನುಷ್ಯರು ಇದನ್ನು ತಿಳಿಯಲು ಸಾಧ್ಯವಿಲ್ಲ. ಇಂತಹ ತಂದೆಯಲ್ಲಿ ನಿಶ್ಚಯ ಬುದ್ಧಿಯವರಾಗುವುದರಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ಕೇವಲ ನನ್ನನ್ನು ನೆನಪು ಮಾಡುವುದರಿಂದ ನಿಮ್ಮಲ್ಲಿ ಸೇರಿರುವ ಬೆಳ್ಳಿ, ತಾಮ್ರ, ಲೋಹ... ಇವುಗಳು ಬಿಟ್ಟು ಹೋಗುವುದು. ಚಿನ್ನದ ಯುಗದಿಂದ ಬೆಳ್ಳಿಯ ಯುಗದಲ್ಲಿ ಬಂದ ನಂತರ ಎರಡು ಕಲೆ ಕಡಿಮೆಯಾಗುತ್ತದೆ. ಈ ಮಾತುಗಳನ್ನು ನೀವೇ ಕೇಳುತ್ತೀರಿ, ತಿಳಿದುಕೊಳ್ಳುತ್ತೀರಿ. ಯಾರು ಸತ್ಯ ಬ್ರಾಹ್ಮಣರಾಗಿದ್ದಾರೆಯೋ ಅವರ ಬುದ್ಧಿಯಲ್ಲಿಯೇ ಚೆನ್ನಾಗಿ ಕುಳಿತುಕೊಳ್ಳುತ್ತದೆ, ಇಲ್ಲದಿದ್ದರೆ ಇಲ್ಲ. ನೆನಪು ನಿಲ್ಲುವುದೇ ಇಲ್ಲ. ಎಲ್ಲದರ ಆಧಾರ ತಂದೆಯನ್ನು ನೆನಪು ಮಾಡುವುದರಲ್ಲಿಯೇ ಇದೆ. ಮತ್ತೆ-ಮತ್ತೆ ನನ್ನನ್ನು ನೆನಪು ಮಾಡಿ ಎಂದು ಮಕ್ಕಳಿಗೆ ತಿಳಿಸುತ್ತಾರೆ. ಬ್ರಹ್ಮಾ ತಂದೆಯೂ ಹೇಳುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿ. ನಿಮ್ಮ ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಆತ್ಮಗಳಿಗೆ ಮಕ್ಕಳೆಂದು ಹೇಳಲಾಗುತ್ತದೆ, ಆ ನಿರಾಕಾರ ಪರಮಾತ್ಮನು ಆತ್ಮಗಳಿಗೇ ಹೇಳುತ್ತಾರೆ. ಮೂಲ ಮಾತೇ ಇದಾಗಿದೆ. ಮೊಟ್ಟ ಮೊದಲು ಯಾರೇ ಬಂದರೂ ಅವರಿಗೆ ತಂದೆಯನ್ನು ನೆನಪು ಮಾಡಿ ಎಂದು ಹೇಳಿರಿ, ಮತ್ತ್ಯಾವುದನ್ನೂ ಒತ್ತುಕೊಟ್ಟು ಹೇಳಬೇಡಿ. ಕೇವಲ ತಮ್ಮನ್ನು ತಾವು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದನ್ನೇ ಒಳಗಡೆ ಮೆಲುಕು ಹಾಕಬೇಕು. ನಾವು ಆತ್ಮ ಎಂದು ತುಳಸೀದಾಸರು ಹಾಡುತ್ತಾರೆ - ಗಂಧವನ್ನು ತೇಯ್ದು.... ತಿಲಕವೆಂದರೆ ಯಾವುದೇ ಸ್ಥೂಲ ವಸ್ತುವಲ್ಲ. ವಾಸ್ತವದಲ್ಲಿ ತಿಲಕವು ಈ ಸಮಯದ ನೆನಪಾರ್ಥವಾಗಿದೆ. ನೀವು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯದ ತಿಲಕವನ್ನು ಕೊಡುತ್ತಾರೆ, ನಿಮಗೆ ರಾಜ್ಯಭಾಗ್ಯದ ತಿಲಕವೂ ಸಿಗುತ್ತದೆ, ಎರಡು ಕಿರೀಟಗಳೂ ಸಿಗುತ್ತವೆ. ರಾಜ್ಯಭಾಗ್ಯದ ತಿಲಕ ಸಿಗುತ್ತದೆ ಅರ್ಥಾತ್ ಸ್ವರ್ಗದ ಮಹಾರಾಜ-ಮಹಾರಾಣಿಯಾಗುತ್ತೀರಿ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ! ತಂದೆಯನ್ನು ನೆನಪು ಮಾಡಿ. ನಾನಾತ್ಮ, ಶರೀರವಲ್ಲ. ನಾವು ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ.
ನಾವು ಆತ್ಮರು ಬಿಂದುವಿನ ತರಹ ಇದ್ದೇವೆ, ತಂದೆಯೂ ಬಿಂದುವಾಗಿದ್ದಾರೆಂದು ನೀವು ತಿಳಿದಿದ್ದೀರಿ. ತಂದೆಯು ಜ್ಞಾನದ ಸಾಗರ, ಸುಖದ ಸಾಗರರಾಗಿದ್ದಾರೆ, ಅವರು ನಮಗೆ ವರದಾನವನ್ನು ಕೊಡುತ್ತಾರೆ. ಇವರ ಪಕ್ಕದಲ್ಲಿ ಬಂದು ಕುಳಿತುಕೊಳ್ಳುತ್ತಾರೆ. ಗುರುಗಳು ತಮ್ಮ ಶಿಷ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಓದಿಸುತ್ತಾರೆ. ಇವರೂ (ಶಿವ ತಂದೆ) ಸಹ ಪಕ್ಕದಲ್ಲಿಯೇ ಕುಳಿತಿದ್ದಾರೆ, ನಿಮ್ಮನ್ನು ನೀವು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಸತ್ಯಯುಗದಲ್ಲಿ ನೀವು ನಿಮ್ಮನ್ನು ಆತ್ಮನೆಂದು ತಿಳಿದುಕೊಳ್ಳುತ್ತೀರಿ ಆದರೆ ತಂದೆಯನ್ನು ತಿಳಿದುಕೊಂಡಿರುವುದಿಲ್ಲ. ನಾವಾತ್ಮರು ಶರೀರವನ್ನು ಬಿಡುತ್ತೇವೆ, ಇನ್ನೊಂದು ಶರೀರವನ್ನು ತೆಗೆದುಕೊಳ್ಳಬೇಕು. ಡ್ರಾಮಾನುಸಾರ ನಿಮ್ಮ ಪಾತ್ರ ಹೀಗೇ ಇದೆ ಆದ್ದರಿಂದ ಅಲ್ಲಿ ನಿಮ್ಮದು ದೀರ್ಘಾಯಸ್ಸು ಇರುತ್ತದೆ, ನೀವು ಪವಿತ್ರರಾಗಿಯೂ ಇರುತ್ತೀರಿ. ಸತ್ಯಯುಗದಲ್ಲಿ ಆಯಸ್ಸು ಹೆಚ್ಚಾಗಿರುತ್ತದೆ, ಕಲಿಯುಗದಲ್ಲಿ ಇರುವುದಿಲ್ಲ. ಅಲ್ಲಿ ಯೋಗಿಗಳು, ಇಲ್ಲಿ ಭೋಗಿಗಳಿದ್ದಾರೆ. ಪವಿತ್ರವಾಗಿರುವವರೇ ಯೋಗಿಗಳಾಗಿದ್ದಾರೆ. ರಾವಣ ರಾಜ್ಯವೇ ಅಲ್ಲಿರುವುದಿಲ್ಲ. ಆಯಸ್ಸು ಬಹಳ ಜಾಸ್ತಿಯಿರುತ್ತದೆ. ಇದಕ್ಕೆ ಕರ್ಮ ಭೋಗವೆಂದು ಹೇಳಲಾಗುತ್ತದೆ. ಅಲ್ಲಿ ಅಕಾಲ ಮೃತ್ಯು ಎಂದೂ ಆಗುವುದಿಲ್ಲ, ಅಂದಮೇಲೆ ತಂದೆಯನ್ನು ಗುರುತಿಸಿ ಶ್ರೀಮತದಂತೆ ನಡೆಯಬೇಕಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡಿ, ತಮ್ಮನ್ನು ತಾವು ಆತ್ಮನೆಂದು ತಿಳಿಯಬೇಕು. ನಾವು ಹಿಂತಿರುಗಿ ಹೋಗಬೇಕಾಗಿದೆ, ಈ ಶರೀರವನ್ನು ಬಿಡಬೇಕಾಗಿದೆ ಬಾಕಿ ಸಮಯವನ್ನು ಸೇವೆಯಲ್ಲಿ ತೊಡಗಿಸಬೇಕಾಗಿದೆ.
ನೀವು ಮಕ್ಕಳು ಬಹಳ ಬಡವರಿದ್ದೀರಿ ಆದ್ದರಿಂದ ತಂದೆಗೆ ಬಹಳ ದಯೆಯುಂಟಾಗುತ್ತದೆ. ನೀವು ವೃದ್ಧರು, ಕುಬ್ಜೆಯರು ಮುಂತಾದವರಿಗೆ ಯಾವುದೇ ಕಷ್ಟವನ್ನು ಕೊಡುವುದಿಲ್ಲ. ವೃದ್ಧರಿಗೆ ಕುಬ್ಜರೆಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡಿ ಎಂದು ವೃದ್ಧರಿಗೆ ತಿಳಿಸುತ್ತಾರೆ. ನಿಮ್ಮನ್ನು ಯಾರಾದರೂ ಕೇಳಿದಾಗ ಪಾಠಶಾಲೆಗೆ ಹೋಗುತ್ತೇವೆಂದು ಹೇಳಿ. ಇಲ್ಲಂತೂ ಕೃಷ್ಣನ ಆತ್ಮವು 84 ಜನ್ಮಗಳನ್ನು ಪಡೆದು ಈಗ ತಂದೆಯಿಂದ ಜ್ಞಾನವನ್ನು ತೆಗೆದುಕೊಳ್ಳುತ್ತಿದೆ.
ಮಕ್ಕಳು ಪ್ರದರ್ಶನಿ ಇತ್ಯಾದಿಗಳಲ್ಲಿ ಖರ್ಚು ಮಾಡುತ್ತಾರೆ, ಇಂತಹವರು ಬಹಳ ಪ್ರಭಾವಿತರಾದರು ಎಂದೂ ಸಹ ಬರೆಯುತ್ತಾರೆ ಆದರೆ ಅವಶ್ಯವಾಗಿ ಈ ಸಮಯದಲ್ಲಿ ಬ್ರಹ್ಮನ ಶರೀರದಲ್ಲಿ ತಂದೆಯು ಬಂದಿದ್ದಾರೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ ಎಂದು ಯಾರೂ ಬರೆಯುವುದಿಲ್ಲ. ಒಬ್ಬರಿಗೂ ನಿಶ್ಚಯವಾಗಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಜ್ಞಾನ ಚೆನ್ನಾಗಿದೆ ಎಂದು ಪ್ರಭಾವಿತರಾಗುತ್ತಾರೆ, ಏಣಿಯನ್ನು ಸರಿಯಾದ ರೀತಿಯಲ್ಲಿ ತೋರಿಸಿದ್ದಾರೆ ಆದರೆ ಸ್ವತಃ ಯೋಗದಲ್ಲಿದ್ದು ತಮೋಪ್ರಧಾನದಿಂದ ಸತೋಪ್ರಧಾನರಾಗುವುದನ್ನು ಮಾಡುವುದಿಲ್ಲ. ಕೇವಲ ಪರಮಾತ್ಮನಿಂದ ಆಸ್ತಿಯನ್ನು ಪಡೆಯಲು ತಿಳುವಳಿಕೆ ಚೆನ್ನಾಗಿದೆ ಎನ್ನುತ್ತಾರೆ ಆದರೆ ಸ್ವಯಂ ತಾವೇ ತಿಳಿದುಕೊಳ್ಳಿ ಎಂದು ಹೇಳಿದರೆ ಅದನ್ನು ಮಾಡುವುದಿಲ್ಲ. ಪುರುಷಾರ್ಥವನ್ನು ಏನೂ ಮಾಡುವುದಿಲ್ಲ, ಪ್ರಜೆಗಳು ಬಹಳಷ್ಟು ಮಂದಿ ಆಗುತ್ತಾರೆ. ಬಾಕಿ ರಾಜರಾಗುವುದರಲ್ಲಿಯೇ ಪರಿಶ್ರಮವಿದೆ. ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಕೇಳಿಕೊಳ್ಳಬೇಕು - ನಾವು ತಂದೆಯ ನೆನಪಿನಲ್ಲಿ ಎಷ್ಟು ಹರ್ಷಿತರಾಗಿರುತ್ತೇವೆ, ನಾವೇ ನಂತರ ದೇವತೆಗಳಾಗುತ್ತೇವೆ. ಈ ರೀತಿ ತಮ್ಮೊಂದಿಗೆ ತಾವು ಏಕಾಂತದಲ್ಲಿ ಕುಳಿತು ಮಾತನಾಡಿಕೊಳ್ಳಬೇಕು. ತಂದೆಯನ್ನು ನೆನಪು ಮಾಡುತ್ತಾ ಇರಿ ಆಗ ಅರ್ಧಕಲ್ಪ ದುಃಖವೇ ಇರುವುದಿಲ್ಲವೆಂದು ತಂದೆಯು ಗ್ಯಾರಂಟಿ ಕೊಡುತ್ತಾರೆ. ಈಗ ತಂದೆಯು ಬಂದು ನಮ್ಮನ್ನು ರಾವಣನ ಮಾಯೆಯಿಂದ ಗೆಲ್ಲಿಸುತ್ತಿದ್ದಾರೆ, ಯಾರೆಷ್ಟು ಪುರುಷಾರ್ಥ ಮಾಡುತ್ತಾರೆಯೋ ಅವರು ತಮಗಾಗಿಯೇ ಮಾಡುತ್ತಾರೆ ನಂತರ ನೀವು ಹೊಸ ಪ್ರಪಂಚದಲ್ಲಿ ಬರುತ್ತೀರಿ. ಹಳೆಯ ಪ್ರಪಂಚದ ಲೆಕ್ಕಾಚಾರವನ್ನೂ ಸಮಾಪ್ತಿ ಮಾಡಬೇಕಾಗಿದೆ ಏಕೆಂದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಪಾವನರಾಗಲು ಯುಕ್ತಿಯನ್ನೂ ಸಹ ತಿಳಿಸುತ್ತಾರೆ. ಇದು ವಿನಾಶದ ಸಮಯವಾಗಿದೆ, ಎಲ್ಲರ ವಿನಾಶವಾಗಲೇಬೇಕಾಗಿದೆ. ಹೊಸ ಪ್ರಪಂಚದ ಸ್ಥಾಪನೆಯಾಗಬೇಕಾಗಿದೆ. ನಾವು ಈ ಮೃತ್ಯುಲೋಕದಲ್ಲಿ ಶರೀರವನ್ನು ಬಿಟ್ಟು ನಂತರ ಹೊಸಪ್ರ ಪಂಚ ಅಮರಲೋಕದಲ್ಲಿ ಬರುತ್ತೇವೆ. ನಾವು ಓದುವುದೇ ಹೊಸ ಪ್ರಪಂಚಕ್ಕಾಗಿ ಮತ್ತು ಭವಿಷ್ಯಕ್ಕಾಗಿ ಓದುತ್ತಾರೆ ಇಂತಹ ಪಾಠಶಾಲೆಯು ಎಲ್ಲಿಯೂ ಇಲ್ಲ. ಹಾ! ಕೆಲವರು ಬಹಳ ದಾನ-ಪುಣ್ಯವನ್ನು ಮಾಡುತ್ತಾರೆಂದ ಮೇಲೆ ರಾಜರ ಬಳಿ ಜನ್ಮವನ್ನು ಪಡೆಯುತ್ತಾರೆ. ಬಾಯಲ್ಲಿ ಚಿನ್ನದ ಚಮಚ ಎಂದು ಹೇಳಲಾಗುತ್ತದೆ, ಅದು ಸತ್ಯಯುಗದಲ್ಲಿ ನಿಮಗೆ ಸಿಗುವುದು. ಕಲಿಯುಗದಲ್ಲಿಯೂ ಸಹ ಅನೇಕ ರಾಜರ ಬಳಿ ಜನ್ಮ ಪಡೆಯುತ್ತಾರೆ, ಅವರಿಗೂ ಸಿಗುತ್ತದೆ ಆದರೆ ಅನೇಕ ಪ್ರಕಾರದ ದುಃಖವಿರುತ್ತದೆ. ಭವಿಷ್ಯದಲ್ಲಿ 21 ಜನ್ಮಗಳವರೆಗೆ ದುಃಖವಿರುವುದಿಲ್ಲ. ಎಂದೂ ಆರೋಗ್ಯ ತಪ್ಪುವುದಿಲ್ಲ. ಸ್ವರ್ಗದಲ್ಲಿ ಬಾಯಲ್ಲಿ ಚಿನ್ನದ ಚಮಚ ಇರುತ್ತದೆ. ಇಲ್ಲಿ ಅಲ್ಪಕಾಲದ ಸುಖಕ್ಕಾಗಿ ರಾಜ್ಯಭಾಗ್ಯ ಸಿಗುತ್ತದೆ, ನಿಮ್ಮದು 21 ಜನ್ಮಗಳ ರಾಜ್ಯಭಾಗ್ಯ ಸಿಗುತ್ತದೆ. ಬುದ್ಧಿಯಲ್ಲಿ ಈ ರೀತಿ ಕೆಲಸ ತೆಗೆದುಕೊಂಡು ನಂತರ ತಿಳಿಸಬೇಕಾಗಿದೆ. ಭಕ್ತಿಯಲ್ಲಿ ರಾಜನಾಗುವುದಿಲ್ಲ ಎಂದಲ್ಲ, ಕೆಲವರು ಕಾಲೇಜು-ಆಸ್ಪತ್ರೆಯನ್ನು ಕಟ್ಟಿಸುತ್ತಾರೆಂದರೆ ಪ್ರತಿಫಲ ಸಿಗುತ್ತದೆ, ಆಸ್ಪತ್ರೆಗಳನ್ನು ಕಟ್ಟಿಸುತ್ತಾರೆಂದರೆ ಮುಂದಿನ ಜನ್ಮದಲ್ಲಿ ಬಹಳ ಚೆನ್ನಾಗಿ ಆರೋಗ್ಯವಂತರಾಗಿರುತ್ತಾರೆ. ಇವರಿಗೆ ಇಡೀ ಆಯಸ್ಸಿನಲ್ಲಿ ಜ್ವರವೇ ಬಂದಿರಲಿಲ್ಲ ಎಂದು ಹೇಳುತ್ತಾರಲ್ಲವೆ. ಬಹಳ ದೊಡ್ಡ ಆಯಸ್ಸು ಇರುತ್ತದೆ, ಬಹಳ ದಾನ ಇತ್ಯಾದಿಗಳನ್ನು ಮಾಡಿದ್ದಾರೆ, ಆಸ್ಪತ್ರೆ ಇತ್ಯಾದಿಗಳನ್ನು ಮಾಡಿದ್ದಾರೆ ಆದ್ದರಿಂದ ಆಯಸ್ಸು ಹೆಚ್ಚಾಗಿದೆ. ಇಲ್ಲಂತೂ ಯೋಗದಿಂದ ನೀವು ಸದಾ ಆರೋಗ್ಯವಂತರು - ಐಶ್ವರ್ಯವಂತರು ಆಗುತ್ತೀರಿ. ಯೋಗದಿಂದ ನೀವು 21 ಜನ್ಮಗಳಿಗೆ ಅಪಾರ ಸುಖವನ್ನು ಪಡೆಯುತ್ತೀರಿ. ಇದಂತೂ ದೊಡ್ಡ ಆಸ್ಪತ್ರೆ ಮತ್ತು ದೊಡ್ಡ ವಿಶ್ವ ವಿದ್ಯಾಲವಾಗಿದೆ. ತಂದೆಯು ಪ್ರತಿಯೊಂದು ಮಾತನ್ನು ಬಹಳ ಒಳ್ಳೆಯ ರೀತಿಯಲ್ಲಿ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ಯಾರಿಗೆ ಎಲ್ಲಿ ಮಜಾ ಬರುತ್ತದೆಯೋ, ಎಲ್ಲಿ ಮನಸ್ಸಾಗುತ್ತದೆಯೋ ಅಲ್ಲಿ ಹೋಗಿ ವಿದ್ಯೆಯನ್ನು ಓದಬಹುದು. ನಮ್ಮ ಸೇವಾಕೇಂದ್ರಕ್ಕೇ ಬರಬೇಕು, ಅವರ ಬಳಿ ಏಕೆ ಹೋಗುತ್ತೀರಿ ಎಂದಲ್ಲ, ಯಾರಿಗೆ ಎಲ್ಲಿ ಇಷ್ಟವಾಗುತ್ತದೆಯೋ ಅಲ್ಲಿಗೆ ಹೋಗಬಹುದು. ಮಾತಂತೂ ಒಂದೇ ಆಗಿದೆ, ಮುರುಳಿಯನ್ನು ಓದಿ ಹೇಳುತ್ತಾರೆ. ಅವರಿಗೆ ಮುರುಳಿಯು ಇಲ್ಲಿಂದಲೇ ಹೋಗುತ್ತದೆ, ಆದರೆ ಕೆಲವರು ವಿಸ್ತಾರವಾಗಿ ಚೆನ್ನಾಗಿ ತಿಳಿಸುತ್ತಾರೆ, ಇನ್ನೂ ಕೆಲವರು ಕೇವಲ ಓದಿ ಹೇಳುತ್ತಾರೆ. ಭಾಷಣ ಮಾಡುವವರಿಗೆ ಚೆನ್ನಾಗಿ ಹುರಿದುಂಬಿಸಿ ಹೇಳುತ್ತಾರೆ. ಎಲ್ಲಾದರೂ ಭಾಷಣವಾಯಿತೆಂದರೆ ಮೊಟ್ಟ ಮೊದಲು ತಮ್ಮನ್ನು ತಾವು ಆತ್ಮವೆಂದು ತಿಳಿದುಕೊಳ್ಳಿ, ತಂದೆಯಾದ ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ ಮತ್ತು ಪಾವನರಾಗಿ ಪಾವನಪ್ರ ಪಂಚದ ಮಾಲೀಕರಾಗುತ್ತೀರೆಂದು ಶಿವ ತಂದೆಯು ತಿಳಿಸುತ್ತಾರೆಂದು ಹೇಳಿರಿ. ಎಷ್ಟು ಸಹಜವಾಗಿ ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೊರಗಿನ ವ್ಯರ್ಥ ವಿಚಾರಗಳನ್ನು ಬಿಟ್ಟು ಏಕಾಂತದಲ್ಲಿ ಕುಳಿತು ತಂದೆಯನ್ನು ನೆನಪು ಮಾಡುವ ಪರಿಶ್ರಮ ಪಡಬೇಕಾಗಿದೆ.
2. ಬೆಳಗ್ಗೆ-ಬೆಳಗ್ಗೆ ವಿಚಾರ ಸಾಗರ ಮಂಥನ ಮಾಡಬೇಕು ಮತ್ತು ಚಾರ್ಟನ್ನು ನೋಡಿಕೊಳ್ಳಬೇಕು. ಹೇಗೆ ಭಕ್ತಿಮಾರ್ಗದಲ್ಲಿ ದಾನ-ಪುಣ್ಯದ ಮಹತ್ವಿಕೆ ಇದೆಯೋ ಹಾಗೆಯೇ ಜ್ಞಾನ ಮಾರ್ಗದಲ್ಲಿ ನೆನಪಿನ ಮಹತ್ವಿಕೆಯಿದೆ. ನೆನಪಿನಿಂದ ಆತ್ಮವನ್ನು ಎವರ್ಹೆಲ್ದಿ-ವೆಲ್ಧಿಯನ್ನಾಗಿ ಮಾಡಿಕೊಳ್ಳಬೇಕು, ಅಶರೀರಿಯಾಗುವ ಅಭ್ಯಾಸ ಮಾಡಬೇಕು.
ಸಾಹಸದ ಮೊದಲ ಹೆಜ್ಜೆ – ಸಮರ್ಪಣತೆ (ಬ್ರಹ್ಮಾ ತಂದೆಯ ಜೀವನ ಚರಿತ್ರೆ)
ಇಂದು ಸ್ನೇಹ ಸಾಗರ ಬಾಪ್ದಾದಾ ತನ್ನ ಸ್ನೇಹೀ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಸ್ನೇಹೀ ಆತ್ಮನಿಗೆ ಒಂದೇ ಲಗನ್ನಿದೆ, ಶ್ರೇಷ್ಠ ಸಂಕಲ್ಪವಿದೆ - ನಾವೆಲ್ಲರೂ ತಂದೆಯ ಸಮಾನರಾಗಬೇಕು, ಸ್ನೇಹದಲ್ಲಿ ಸಮಾವೇಶವಾಗಬೇಕು. ಸ್ನೇಹದಲ್ಲಿ ಸಮಾವೇಶವಾಗುವುದು ಎಂದರೆ ತಂದೆಯ ಸಮಾನರಾಗುವುದು. ಎಲ್ಲರ ಹೃದಯದಲ್ಲಿ ಇದೇ ಸಂಕಲ್ಪವಿದೆ - ನಾವು ಬಾಪ್ದಾದಾರವರ ಮೂಲಕ ಪ್ರಾಪ್ತವಾಗಿರುವ ಸ್ನೇಹ, ಶಕ್ತಿಶಾಲಿ ಪಾಲನೆ ಮತ್ತು ಅಕೂಟ ಅವಿನಾಶಿ ಖಜಾನೆಗಳಿಗೆ ಅವಶ್ಯವಾಗಿ ರಿಟರ್ನ್ (ಮರು ಪಾವತಿ) ಕೊಡಬೇಕಾಗಿದೆ. ಅಂದಮೇಲೆ ರಿಟರ್ನ್ ಏನು ಕೊಡುತ್ತೀರಿ? ಹೃದಯದ ಸ್ನೇಹವನ್ನು ಬಿಟ್ಟರೆ ನಿಮ್ಮ ಬಳಿ ಮತ್ತೇನಿದೆ? ಏನೆಲ್ಲವೂ ಇದೆಯೋ ಅದು ತಂದೆಯು ಕೊಟ್ಟಿರುವುದೇ ಆಗಿದೆ ಅಂದಮೇಲೆ ಅದನ್ನೇನು ಕೊಡುವಿರಿ? ತಂದೆಯ ಸಮಾನರಾಗುವುದೇ ಅವರಿಗೆ ರಿಟರ್ನ್ ಆಗಿದೆ ಮತ್ತು ಇದನ್ನು ಎಲ್ಲರೂ ಮಾಡಬಲ್ಲಿರಿ.
ಬಾಪ್ದಾದಾ ನೋಡುತ್ತಿದ್ದರು - ಇತ್ತೀಚೆಗೆ ಎಲ್ಲರ ಹೃದಯದಲ್ಲಿ ವಿಶೇಷವಾಗಿ ಬ್ರಹ್ಮಾ ತಂದೆಯ ಸ್ಮೃತಿ ಹೆಚ್ಚಿನದಾಗಿ ಇಮರ್ಜ್ ಆಗಿದೆ. ಶರೀರದ ಸ್ಮೃತಿಯಲ್ಲ ಆದರೆ ಚರಿತ್ರೆಗಳ, ವಿಶೇಷತೆಗಳ ಸ್ಮೃತಿಯಾಗಿದೆ ಏಕೆಂದರೆ ಅಲೌಕಿಕ ಬ್ರಾಹ್ಮಣ ಜೀವನವು ಜ್ಞಾನ ಸ್ವರೂಪ ಜೀವನವಾಗಿದೆ. ಜ್ಞಾನ ಸ್ವರೂಪರಾಗಿರುವ ಕಾರಣ ದೇಹದ ಸ್ಮೃತಿಯೂ ಸಹ ದುಃಖದ ಅಲೆಯನ್ನು ತರುವುದಿಲ್ಲ. ಅಜ್ಞಾನಿ ಜೀವನದಲ್ಲಿ ಯಾರನ್ನೇ ನೆನಪು ಮಾಡಿದರೂ ಸಹ ದೇಹವು ಸನ್ಮುಖದಲ್ಲಿ ಬರುತ್ತದೆ, ದೇಹದ ಸಂಬಂಧಗಳ ಕಾರಣ ದುಃಖದ ಅನುಭೂತಿಯಾಗುತ್ತದೆ ಆದರೆ ತಾವು ಬ್ರಾಹ್ಮಣ ಮಕ್ಕಳಿಗೆ ತಂದೆಯ ಸ್ಮೃತಿ ಬರುತ್ತಿದ್ದಂತೆಯೇ ನಾವೂ ಸಹ "ತಂದೆಯ ಸಮಾನ" ರಾಗಲೇಬೇಕಾಗಿದೆ ಎಂಬ ಸಾಮರ್ಥ್ಯವು ಬಂದು ಬಿಡುತ್ತದೆ. ಅಲೌಕಿಕ ತಂದೆಯ ಸ್ಮೃತಿಯು ಸಾಮರ್ಥ್ಯ ಅರ್ಥಾತ್ ಶಕ್ತಿಯನ್ನು ತರಿಸುತ್ತದೆ. ಭಲೆ ಕೆಲವು ಮಕ್ಕಳು ಹೃದಯದ ಸ್ನೇಹವನ್ನು ನಯನಗಳ ಮುತ್ತುಗಳ ಮೂಲಕವೂ ಸಹ ಪ್ರಕಟ ಮಾಡುತ್ತಾರೆ ಆದರೆ ಅದು ದುಃಖದ ಕಣ್ಣೀರಲ್ಲ, ವಿಯೋಗದ ಕಣ್ಣೀರಲ್ಲ, ಇವು ಸ್ನೇಹದ ಮುತ್ತುಗಳಾಗಿವೆ. ಹೃದಯದ ಮಿಲನದ ಸ್ನೇಹವಾಗಿದೆ. ವಿಯೋಗಿಗಳಲ್ಲ, ತಾವು ರಾಜಯೋಗಿಗಳಾಗಿದ್ದೀರಿ ಏಕೆಂದರೆ ಹೃದಯದ ಸ್ನೇಹವು ನಾವೂ ಸಹ ಬೇಗ ಬೇಗನೆ ಮೊದಲು ತಂದೆಗೆ ರಿಟರ್ನ್ ಕೊಡಬೇಕೆಂದು ಶಕ್ತಿಯನ್ನು ತರಿಸುತ್ತದೆ. ರಿಟರ್ನ್ ಕೊಡುವುದು ಎಂದರೆ ಸಮಾನರಾಗುವುದು. ಈ ವಿಧಿಯಿಂದಲೇ ತಮ್ಮ ಸ್ನೇಹಿ ಬಾಪ್ದಾದಾರವರ ಜೊತೆ ಮಧುರ ಮನೆಗೆ ರಿಟರ್ನ್ ಆಗುತ್ತೀರಿ ಅರ್ಥಾತ್ ಜೊತೆಯಲ್ಲಿ ಹಿಂತಿರುಗಿ ಹೋಗುತ್ತೀರಿ. ರಿಟರ್ನ್ ಕೊಡಲೂಬೇಕಾಗಿದೆ ಮತ್ತು ತಂದೆಯ ಜೊತೆ ಹೋಗಲೂಬೇಕಾಗಿದೆ. ಆದ್ದರಿಂದ ತಮ್ಮ ಸ್ನೇಹ ಮತ್ತು ನೆನಪು ಪ್ರಪಂಚದಿಂದ ಭಿನ್ನ ಹಾಗೂ ತಂದೆಗೆ ಪ್ರಿಯರಾಗುವಂತದ್ದಾಗಿದೆ.
ಅಂದಾಗ ಬಾಪ್ದಾದಾ ಮಕ್ಕಳ ಸಮರ್ಥರಾಗುವ ಸಂಕಲ್ಪ, ಸಮಾನರಾಗುವ ಉಲ್ಲಾಸವನ್ನು ನೋಡುತ್ತಿದ್ದೇವೆ. ಬ್ರಹ್ಮಾ ತಂದೆಯ ವಿಶೇಷತೆಗಳನ್ನು ನೋಡುತ್ತಿದ್ದೆವು. ಒಂದುವೇಳೆ ಬ್ರಹ್ಮಾ ತಂದೆಯ ವಿಶೇಷತೆಗಳನ್ನು ವರ್ಣನೆ ಮಾಡಿದರೆ ಎಷ್ಟಾಗಬಹುದು? ಪ್ರತೀ ಹೆಜ್ಜೆಯಲ್ಲಿ ವಿಶೇಷತೆಯಿತ್ತು, ಸಂಕಲ್ಪದಲ್ಲಿಯೂ ವಿಶೇಷ ವ್ಯಕ್ತಿಗಳನ್ನಾಗಿ ಮಾಡುವ ಉಲ್ಲಾಸ-ಉತ್ಸಾಹವು ಪ್ರತೀ ಸಮಯ ಇರುತ್ತಿತ್ತು. ತಮ್ಮ ವೃತ್ತಿಯ ಮೂಲಕ ಪ್ರತೀ ಆತ್ಮನನ್ನು ಉಲ್ಲಾಸ-ಉತ್ಸಾಹದಲ್ಲಿ ತರುವ ವಿಶೇಷತೆಯನ್ನು ಬ್ರಹ್ಮಾ ತಂದೆಯಲ್ಲಿ ಸದಾ ಪ್ರತ್ಯಕ್ಷ ರೂಪದಲ್ಲಿ ನೋಡಿದಿರಿ. ವಾಣಿಯ ಮೂಲಕ ಸಾಹಸವನ್ನು ತರಿಸುವಂತಹ, ಭರವಸೆಯಿಲ್ಲದವರನ್ನು ಭರವಸೆಯಲ್ಲಿ ತರುವಂತಹ, ನಿರ್ಬಲ ಆತ್ಮನನ್ನು ಹಾರುವ ಕಲೆಯ ವಿಧಿಯಿಂದ ಹಾರಿಸುವಂತಹ, ಸೇವೆಗೆ ಯೋಗ್ಯರನ್ನಾಗಿ ಮಾಡುವಂತಹ ಪ್ರತೀ ಮಾತು ಅಮೂಲ್ಯ, ಮಧುರ, ಯುಕ್ತಿ ಯುಕ್ತವಾಗಿತ್ತು. ಅದೇರೀತಿ ಕರ್ಮದಲ್ಲಿ ಮಕ್ಕಳ ಜೊತೆ ಪ್ರತೀ ಕರ್ಮದಲ್ಲಿ ಜೊತೆಗಾರನಾಗಿ ಕರ್ಮಯೋಗಿಗಳನ್ನಾಗಿ ಮಾಡಿದರು. ಕೇವಲ ಸಾಕ್ಷಿಯಾಗಿ ನೋಡುವವರಲ್ಲ ಆದರೆ ಸ್ಥೂಲ ಕರ್ಮದ ಮಹತ್ವಿಕೆಯನ್ನು ಅನುಭವ ಮಾಡಿಸುವುದಕ್ಕಾಗಿ ಕರ್ಮದಲ್ಲಿಯೂ ಜೊತೆಗಾರನಾದರು. ನಾನು ಯಾವ ಕರ್ಮ ಮಾಡುತ್ತೇನೆಯೋ ನನ್ನನ್ನು ನೋಡಿ ಮಕ್ಕಳೂ ಸ್ವತಹ ಮಾಡುತ್ತಾರೆ - ಈ ಪಾಠವನ್ನು ಸದಾ ಕರ್ಮ ಮಾಡಿ ತೋರಿಸಿದರು. ಸಂಬಂಧ-ಸಂಪರ್ಕದಲ್ಲಿ ಚಿಕ್ಕ ಮಕ್ಕಳಿಗೂ ಸಹ ಸಂಬಂಧದಿಂದ ಮಕ್ಕಳ ಸಮಾನರಾಗಿ ಖುಷಿ ಪಡಿಸಿದರು. ವಾನಪ್ರಸ್ಥಿಗಳಿಗೂ (ವೃದ್ಧರು) ಸಹ ವಾನಪ್ರಸ್ಥ ರೂಪದಿಂದ ಅನುಭವಿಯಾಗಿ ಸಂಬಂಧ-ಸಂಪರ್ಕದಿಂದ ಸದಾ ಉಲ್ಲಾಸ-ಉತ್ಸಾಹದಲ್ಲಿ ತಂದರು. ಬಾಲಕರೊಂದಿಗೆ ಬಾಲ್ಯ ರೂಪ, ಯುವಕರೊಂದಿಗೆ ಯುವ ರೂಪ ಮತ್ತು ವೃದ್ಧರೊಂದಿಗೆ ವೃದ್ಧ ರೂಪನಾಗಿ ಸದಾ ಮುಂದುವರೆಸಿದರು. ಸದಾ ಸಂಬಂಧ-ಸಂಪರ್ಕದಿಂದ ಪ್ರತಿಯೊಬ್ಬರಿಗೆ ನನ್ನತನದ ಅನುಭವ ಮಾಡಿಸಿದರು. ಚಿಕ್ಕ ಮಕ್ಕಳೂ ಸಹ ಹೇಳುವರು - "ಬಾಬಾ ನನ್ನನ್ನು ಎಷ್ಟು ಪ್ರೀತಿ ಮಾಡುತ್ತಾರೆಯೋ ಅಷ್ಟು ಮತ್ತ್ಯಾರನ್ನೂ ಮಾಡುವುದಿಲ್ಲ" ಅಂದಾಗ ಪ್ರತಿಯೊಬ್ಬರಿಗೂ ಇಷ್ಟೊಂದು ಪ್ರೀತಿ ಕೊಟ್ಟರು, ಅದರಿಂದ ಪ್ರತಿಯೊಬ್ಬರೂ ಸಹ ಬಾಬಾ ನನ್ನವರಾಗಿದ್ದಾರೆಂದು ತಿಳಿಯುತ್ತಿದ್ದರು. ಇದು ಸಂಬಂಧ-ಸಂಪರ್ಕದ ವಿಶೇಷತೆಯಾಗಿದೆ. ನೋಡುವುದರಲ್ಲಿ ಪ್ರತಿಯೊಂದು ಆತ್ಮನ ವಿಶೇಷತೆ ಮತ್ತು ಗುಣವನ್ನೇ ನೋಡುವುದು ಮತ್ತೆ ಆಲೋಚನೆಯಲ್ಲಿ ನೋಡಿ, ಸದಾ ಇವರು ಕೊನೆಯ ನಂಬರಿನ ಮಣಿಯಾಗಿದ್ದಾರೆ ಎಂಬುದು ಗೊತ್ತಿದ್ದರೂ ಸಹ ಅಂತಹ ಆತ್ಮನ ಪ್ರತಿಯೂ ಸದಾ ಇವರೂ ಸಹ ಮುಂದುವರೆಯಲಿ ಎಂದು ಪ್ರತಿಯೊಂದು ಆತ್ಮನ ಪ್ರತಿ ಶುಭ ಚಿಂತಕರಾಗಿದ್ದರು. ಈ ವಿಶೇಷತೆಗಳನ್ನು ಎಲ್ಲಾ ಮಕ್ಕಳು ಅನುಭವ ಮಾಡಿದಿರಿ. ಇವೆಲ್ಲಾ ಮಾತುಗಳಲ್ಲಿ ಸಮಾನರಾಗುವುದು ಅರ್ಥಾತ್ ಫಾಲೋ ಫಾದರ್ ಮಾಡುವುದಾಗಿದೆ. ಫಾಲೋ ಮಾಡುವುದು ಕಷ್ಟವಾಗುತ್ತದೆಯೇ? ಇದಕ್ಕೇ ಸ್ನೇಹ, ಇದಕ್ಕೇ ರಿಟರ್ನ್ ಕೊಡುವುದೆಂದು ಹೇಳಲಾಗುತ್ತದೆ. ಅಂದಾಗ ಬಾಪ್ದಾದಾ ನೋಡುತ್ತಿದ್ದೆವು, ಪ್ರತಿಯೊಬ್ಬ ಮಗುವೂ ಇಲ್ಲಿಯವರೆಗೆ ಎಷ್ಟು ರಿಟರ್ನ್ ಕೊಟ್ಟಿದ್ದಾರೆ? ಎಲ್ಲರ ಲಕ್ಷ್ಯವಂತೂ ಒಂದೇ ಆಗಿದೆ ಆದರೆ ಪ್ರತ್ಯಕ್ಷ ಜೀವನದಲ್ಲಿಯೇ ನಂಬರ್ವಾರ್ ಇದ್ದಾರೆ. ಎಲ್ಲರೂ ನಂಬರ್ವನ್ ಆಗಲು ಬಯಸುತ್ತೀರಿ, ಎರಡನೇ ಮೂರನೆಯವರಾಗಲು ಯಾರೂ ಇಷ್ಟ ಪಡುವುದಿಲ್ಲ. ಈ ಲಕ್ಷ್ಯವು ಶಕ್ತಿಶಾಲಿ ಮತ್ತು ಚೆನ್ನಾಗಿದೆ ಆದರೆ ಲಕ್ಷ್ಯ ಮತ್ತು ಲಕ್ಷಣಗಳು ಸಮಾನವಾಗಿರುವುದೇ ಸಮಾನರಾಗುವುದಾಗಿದೆ. ಇದಕ್ಕಾಗಿ ಹೇಗೆ ಬ್ರಹ್ಮಾ ತಂದೆಯು ಇಂತಹ ಮೊದಲ ಯಾವ ಸಾಹಸದ ಹೆಜ್ಜೆಯನ್ನಿಟ್ಟರು ಅದರಿಂದಲೇ ಪದಮಾಪದಮ ಭಾಗ್ಯಶಾಲಿಯ ಅನುಭವ ಮಾಡಿದರು? ಮೊದಲ ಸಾಹಸದ ಹೆಜ್ಜೆಯಾಗಿದೆ - ಎಲ್ಲಾ ಮಾತುಗಳಲ್ಲಿ ಸಮರ್ಪಣತೆ. ಎಲ್ಲವನ್ನು ಸಮರ್ಪಣೆ ಮಾಡಿದರು, ಏನಾಗುವುದೋ, ಹೇಗಾಗುವುದೋ ಎಂದು ಏನನ್ನೂ ಆಲೋಚಿಸಲಿಲ್ಲ. ಒಂದು ಸೆಕೆಂಡಿನಲ್ಲಿ ತಂದೆಯ ಶ್ರೇಷ್ಠ ಮತದ ಪ್ರಮಾಣ ತಂದೆಯು ಸೂಚನೆ ಕೊಟ್ಟರು, ತಂದೆಯ ಸೂಚನೆಯಂತೆ ಬ್ರಹ್ಮಾ ತಂದೆಯ ಕರ್ಮ ಹಾಗೂ ಹೆಜ್ಜೆಯಿತ್ತು. ಇದಕ್ಕೆ ಸಾಹಸದ ಮೊದಲ ಹೆಜ್ಜೆಯೆಂದು ಹೇಳುತ್ತಾರೆ. ತನುವನ್ನೂ ಸಮರ್ಪಣೆ ಮಾಡಿದರು, ಮನಸ್ಸನ್ನೂ ಸಹ ಸದಾ ಮನ್ಮನಾಭವದ ವಿಧಿಯಿಂದ ಸಿದ್ಧಿ ಸ್ವರೂಪವನ್ನಾಗಿ ಮಾಡಿಕೊಂಡರು ಆದ್ದರಿಂದ ಮನಸ್ಸು ಅರ್ಥಾತ್ ಪ್ರತೀ ಸಂಕಲ್ಪ ಸಿದ್ಧಿ ಅರ್ಥಾತ್ ಸಫಲತಾ ಸ್ವರೂಪರಾದರು. ಧನವನ್ನೂ ಸಹ ಭವಿಷ್ಯದ ಯಾವುದೇ ಚಿಂತೆಯಿಲ್ಲದೆ ನಿಶ್ಚಿಂತರಾಗಿ ಧನ ಸಮರ್ಪಣೆ ಮಾಡಿದರು ಏಕೆಂದರೆ ಅವರಿಗೆ ಇದು ಕೊಡುವುದಲ್ಲ, ಪದುಮದಷ್ಟು ತೆಗೆದುಕೊಳ್ಳುವುದಾಗಿದೆ ಎಂಬ ನಿಶ್ಚಯವಿತ್ತು, ಇದೇರೀತಿ ಸಂಬಂಧವನ್ನೂ ಸಮರ್ಪಣೆ ಮಾಡಿದರು ಅರ್ಥಾತ್ ಲೌಕಿಕವನ್ನು ಅಲೌಕಿಕ ಸಂಬಂಧದಲ್ಲಿ ಪರಿವರ್ತನೆ ಮಾಡಿದರು. ಬಿಟ್ಟು ಬಿಡಲಿಲ್ಲ, ಕಲ್ಯಾಣ ಮಾಡಿದರು ಪರಿವರ್ತನೆ ಮಾಡಿದರು. ನನ್ನತನದ ಬುದ್ಧಿ, ಅಭಿಮಾನದ ಬುದ್ಧಿಯನ್ನು ಸಮರ್ಪಣೆ ಮಾಡಿದರು. ಆದ್ದರಿಂದ ಸದಾ ತನು-ಮನ, ಬುದ್ಧಿಯಿಂದ ನಿರ್ಮಲ, ಶೀತಲ, ಸುಖದಾಯಿಯಾಗಿ ಬಿಟ್ಟರು. ಲೌಕಿಕ ಪರಿವಾರದಿಂದ ಹಾಗೂ ಪ್ರಪಂಚದ ಅಪರಿಚಿತ ಆತ್ಮಗಳಿಂದ ಏನೆಲ್ಲಾ ಪರಿಸ್ಥಿತಿಗಳು ಬಂದಿತು ಆದರೆ ಸಂಕಲ್ಪ-ಸ್ವಪ್ನದಲ್ಲಿಯೂ ಸಹ ಎಂದೂ ಸಂಶಯದ ಸೂಕ್ಷ್ಮ ರೂಪವು "ಸಂಕಲ್ಪ ಮಾತ್ರ"ದ ಏರುಪೇರಿನಲ್ಲಿಯೂ ಬರಲಿಲ್ಲ.
ಬ್ರಹ್ಮಾ ತಂದೆಯಲ್ಲಿ ವಿಶೇಷವಾಗಿ ಈ ಮಾತಿನ ಚಮತ್ಕಾರವಿತ್ತು – ತಮ್ಮೆಲ್ಲರ ಮುಂದೆ ಸಾಕಾರ ರೂಪದಲ್ಲಿ ಬ್ರಹ್ಮಾ ತಂದೆಯು ಉದಾಹರಣಾ ಮೂರ್ತಿಯಾಗಿದ್ದರು. ಆದರೆ ಬ್ರಹ್ಮಾ ತಂದೆಯ ಮುಂದೆ ಯಾರು ಸಾಕಾರ ಉದಾಹರಣೆಯಾಗಿ ಇರಲಿಲ್ಲ. ಕೇವಲ ಅಟಲ ನಿಶ್ಚಯ, ತಂದೆಯ ಶ್ರೀಮತದ ಆಧಾರವಿತ್ತು. ತಮ್ಮೆಲ್ಲರಿಗಂತೂ ಬಹಳ ಸಹಜವಾಗಿದೆ ಮತ್ತು ಯಾರೆಷ್ಟು ತಡವಾಗಿ ಬಂದಿದ್ದೀರೋ ಅಷ್ಟು ಸಹಜವಾಗಿದೆ ಏಕೆಂದರೆ ಅನೇಕ ಆತ್ಮಗಳ ಪರಿವರ್ತನೆಯ ಶ್ರೇಷ್ಠ ಜೀವನವು ತಮ್ಮ ಮುಂದೆ ಉದಾಹರಣೆಯಾಗಿದೆ. ಇದನ್ನು ಮಾಡಬೇಕು, ಈ ರೀತಿಯಾಗಬೇಕೆನ್ನುವುದು ಸ್ಪಷ್ಟವಾಗಿದೆ ಆದ್ದರಿಂದ ತಮ್ಮೆಲ್ಲರಿಗೆ "ಏಕೆ-ಏನು" ಎಂಬ ಪ್ರಶ್ನೆ ಬರುವ ಅವಕಾಶವೇ ಇಲ್ಲ. ಎಲ್ಲವನ್ನೂ ನೋಡುತ್ತಿದ್ದೀರಿ ಆದರೆ ಬ್ರಹ್ಮಾರವರ ಮುಂದೆ ಪ್ರಶ್ನೆ ಬರುವ ಅವಕಾಶವಿತ್ತು, ಏನು ಮಾಡಬೇಕು, ಮುಂದೇನಾಗುವುದೋ, ತಪ್ಪು ಮಾಡುತ್ತಿದ್ದೇನೆಯೇ ಅಥವಾ ಸರಿ ಮಾಡುತ್ತಿದ್ದೇನೆಯೇ ಎಂಬ ಸಂಕಲ್ಪ ಬರುವ ಸಂಭವವಿತ್ತು. ಆದರೆ ಸಂಭವವನ್ನು ಅಸಂಭವ ಮಾಡಿದರು. ಒಂದು ಬಲ ಒಂದು ಭರವಸೆ - ಇದೇ ಆಧಾರದಿಂದ ನಿಶ್ಚಯಬುದ್ಧಿ ನಂಬರ್ವನ್ ವಿಜಯಿಯಾಗಿ ಬಿಟ್ಟರು. ಇದೇ ಸಮರ್ಪಣತೆಯ ಕಾರಣ ಬುದ್ಧಿಯು ಸದಾ ಹಗುರವಾಗಿತ್ತು. ಬುದ್ಧಿಯಲ್ಲಿ ಹೊರೆಯಿರಲಿಲ್ಲ. ಮನಸ್ಸು ನಿಶ್ಚಿಂತವಾಗಿತ್ತು, ಚಹರೆಯಲ್ಲಿ ಸದಾ ನಿಶ್ಚಿಂತ ಚಕ್ರವರ್ತಿಯ ಚಿಹ್ನೆಗಳು ಸ್ಪಷ್ಟವಾಗಿ ಕಾಣುತ್ತಿತ್ತು. 350 ಮಂದಿ ಮಕ್ಕಳಿದ್ದರು ಆದರೆ ತಿನ್ನುವುದಕ್ಕೆ ಹಿಟ್ಟು ಸಹ ಇರಲಿಲ್ಲ ಮತ್ತು ಸಮಯದಲ್ಲಿ ಮಕ್ಕಳಿಗೆ ಊಟ ಮಾಡಿಸಬೇಕು! ಅಂದಾಗ ಆಲೋಚಿಸಿ, ಇಂತಹ ಸ್ಥಿತಿಯಲ್ಲಿ ಯಾರಾದರೂ ನಿಶ್ಚಿಂತರಾಗಿರಲು ಸಾಧ್ಯವೇ! ಒಂದು ಗಂಟೆಗೆ ಘಂಟೆ ಬಾರಿಸಬೇಕು ಮತ್ತು 11 ಗಂಟೆಯವರೆಗೆ ಅಡಿಗೆ ಮಾಡಲು ಏನೂ ಇರಲಿಲ್ಲ ಅಂದಮೇಲೆ ಯಾರು ನಿಶ್ಚಿಂತವಾಗಿ ಇರಬಲ್ಲರು? ಇಂತಹ ಸ್ಥಿತಿಯಲ್ಲಿಯೂ ಹರ್ಷಿತ, ಅಚಲವಾಗಿದ್ದರು. ಇದು ತಂದೆಯ ಜವಾಬ್ದಾರಿಯಾಗಿದೆ, ನನ್ನದಲ್ಲ, ನಾನೂ ತಂದೆಯವನು ಅಂದಮೇಲೆ ಈ ಮಕ್ಕಳೆಲ್ಲರೂ ತಂದೆಯವರಾಗಿದ್ದಾರೆ, ನಾನು ನಿಮಿತ್ತನಾಗಿದ್ದೇನೆ - ಇಂತಹ ನಿಶ್ಚಯ ಮತ್ತು ನಿಶ್ಚಿಂತರಾಗಿರಲು ಯಾರಿಗೆ ಸಾಧ್ಯ? ಮನಸ್ಸು-ಬುದ್ಧಿಯಿಂದ ಸಮರ್ಪಿತ ಆತ್ಮನೇ ಈ ರೀತಿ ಇರಲು ಸಾಧ್ಯ ಅಲ್ಲವೆ. ಒಂದುವೇಳೆ ತಮ್ಮ ಬುದ್ಧಿಯನ್ನು ಈ ರೀತಿ ನಡೆಸಬಹುದಿತ್ತಲ್ಲವೆ - ಏನಾಗುವುದೋ ಗೊತ್ತಿಲ್ಲ! ಎಲ್ಲರೂ ಹಸಿವಿನಿಂದ ಇರಲು ಸಾಧ್ಯವಿಲ್ಲ. ಇದಂತೂ ಸಾಧ್ಯವಿಲ್ಲ, ಅದಂತೂ ಸಾಧ್ಯವಿಲ್ಲ - ಹೀಗೆ ವ್ಯರ್ಥ ಸಂಕಲ್ಪ ಹಾಗೂ ಸಂಶಯದ ಅವಕಾಶವು ಇದ್ದರೂ ಸಹ ಸಮರ್ಥ ಸಂಕಲ್ಪವೇ ತಂದೆಗೆ ನಡೆಯಿತು - ಸದಾ ತಂದೆಯು ರಕ್ಷಕನಾಗಿದ್ದಾರೆ, ಕಲ್ಯಾಣಕಾರಿಯಾಗಿದ್ದಾರೆ. ಹೀಗೆ ಸಮರ್ಪಣೆಯ ವಿಶೇಷತೆಯು ತಂದೆಯಲ್ಲಿತ್ತು ಅಂದಾಗ ಹೇಗೆ ಬ್ರಹ್ಮಾ ತಂದೆಯು ಸಮರ್ಪಣೆಯಾಗುವ ಮೊದಲ "ಸಾಹಸ"ದ ಹೆಜ್ಜೆಯನ್ನಿಟ್ಟರೋ ಅದೇರೀತಿ ಫಾಲೋ ಫಾದರ್ ಮಾಡಿ. ನಿಶ್ಚಯದ ವಿಜಯವು ಅವಶ್ಯವಾಗಿ ಆಗುತ್ತದೆ ಆದ್ದರಿಂದ ಸಮಯದಲ್ಲಿ ಆಹಾರ ಧಾನ್ಯಗಳೂ ಬಂದಿತು, ಸಮಯಕ್ಕೆ ಸರಿಯಾಗಿ ಘಂಟೆಯೂ ಬಾರಿಸಿತು ಮತ್ತು ಪಾಸ್ ಆಗಿ ಬಿಟ್ಟರು. ಇದಕ್ಕೇ ಹೇಳುತ್ತಾರೆ - ಪ್ರಶ್ನಾರ್ಥಕ ಅಥವಾ ಡೊಂಕಾದ ಮಾರ್ಗವನ್ನು ಹಿಡಿಯದೇ ಸದಾ ಕಲ್ಯಾಣದ ಬಿಂದುವನ್ನಿಡಿ. ಫುಲ್ ಸ್ಟಾಪ್ - ಈ ವಿಧಿಯಿಂದಲೇ ಸಹಜವೂ ಆಗುವುದು ಮತ್ತು ಸಿದ್ಧಿಯೂ ಪ್ರಾಪ್ತಿಯಾಗುವುದು. ಅಂದಾಗ ಇದು ಬ್ರಹ್ಮಾರವರ ಚಮತ್ಕಾರವಾಗಿತ್ತು. ಇಂದು ಮೊದಲ ಒಂದು ಹೆಜ್ಜೆಯ ಬಗ್ಗೆ ತಿಳಿಸಿದ್ದೇವೆ, ಚಿಂತೆಯ ಹೊರೆಯಿಂದಲೂ ನಿಶ್ಚಿಂತರಾಗಿ ಬಿಡಿ. ಇದಕ್ಕೆ ಸ್ನೇಹಕ್ಕೆ ರಿಟರ್ನ್ ಕೊಡುವುದೆಂದು ಹೇಳಲಾಗುತ್ತದೆ. ಒಳ್ಳೆಯದು.
ಸದಾ ಪ್ರತೀ ಹೆಜ್ಜೆಯನ್ನು ತಂದೆಯನ್ನು ಫಾಲೋ ಮಾಡುವಂತಹ, ಪ್ರತೀ ಹೆಜ್ಜೆಯಲ್ಲಿ ಸ್ನೇಹಕ್ಕೆ ರಿಟರ್ನ್ ಕೊಡುವಂತಹ, ಸದಾ ನಿಶ್ಚಿಂತ ಬುದ್ಧಿಯವರಾಗಿ ನಿಶ್ಚಿಂತ ಚಕ್ರವರ್ತಿಗಳಾಗುವಂತಹ, ಮನಸ್ಸು-ವಾಣಿ-ಕರ್ಮ-ಸಂಬಂಧದಲ್ಲಿ ತಂದೆಯ ಸಮಾನರಾಗುವಂತಹ ಸದಾ ಶುಭ ಚಿಂತಕ ಸದಾ ಪ್ರತಿಯೊಬ್ಬರ ವಿಶೇಷತೆಯನ್ನು ನೋಡುವಂತಹ, ಪ್ರತೀ ಆತ್ಮನನ್ನು ಸದಾ ಮುಂದುವರೆಸುವಂತಹ ತಂದೆಯ ಸಮಾನ ಮಕ್ಕಳಿಗೆ ಸ್ನೇಹೀ ತಂದೆಯ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ.
ಪಾರ್ಟಿಯೊಂದಿಗೆ ವಾರ್ತಾಲಾಪ:
1. ತಮ್ಮನ್ನು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಆತ್ಮರೆಂದು ತಿಳಿದುಕೊಳ್ಳುವಿರಾ? ಬ್ರಾಹ್ಮಣರು ಅತ್ಯಂತ ಶ್ರೇಷ್ಠರೆಂದು ಗಾಯನವಾಗುತ್ತದೆ, ಶ್ರೇಷ್ಠತೆಯ ಸಂಕೇತವಾಗಿ ಬ್ರಾಹ್ಮಣರನ್ನು ಸದಾ ಶಿಖೆಯಲ್ಲಿ ತೋರಿಸುತ್ತಾರೆ. ಪ್ರಪಂಚದವರು ಹೆಸರಿಗಿರುವ ಬ್ರಾಹ್ಮಣರ ಸಂಕೇತವನ್ನು ತೋರಿಸಿದ್ದಾರೆ, ಅಂದಮೇಲೆ ಶಿಖೆಯನ್ನಿಡುವವರಲ್ಲ ಆದರೆ ಶಿಖೆಯ ಸ್ಥಿತಿಯಲ್ಲಿ ಇರುವವರು. ಅವರು ಸ್ಥೂಲ ಸಂಕೇತವನ್ನು ತೋರಿಸಿದ್ದಾರೆ, ವಾಸ್ತವದಲ್ಲಿ ಶ್ರೇಷ್ಠ ಸ್ಥಿತಿಯಲ್ಲಿ ಇರುವುದಾಗಿದೆ. ಬ್ರಾಹ್ಮಣರನ್ನೇ ಪುರುಷೋತ್ತಮರೆಂದು ಹೇಳಲಾಗುತ್ತದೆ, ಪುರುಷೋತ್ತಮ ಎಂದರೆ ಪುರುಷರಿಗಿಂತಲೂ ಉತ್ತಮ, ಸಾಧಾರಣ ಮನುಷ್ಯಾತ್ಮರಿಗಿಂತಲೂ ಉತ್ತಮವಾದವರು, ಇಂತಹ ಪುರುಷೋತ್ತಮರಲ್ಲವೆ! ಪುರುಷ ಎಂದು ಆತ್ಮನಿಗೂ ಹೇಳಲಾಗುತ್ತದೆ, ಶ್ರೇಷ್ಠಾತ್ಮ ಆಗುವವರು ಅಂದರೆ ಪುರುಷರಿಗಿಂತಲೂ ಉತ್ತಮ ಪುರುಷನಾಗುವವರು. ದೇವತೆಗಳಿಗೂ ಪುರುಷೋತ್ತಮ ಎಂದು ಹೇಳಲಾಗುತ್ತದೆ ಏಕೆಂದರೆ ದೇವ-ಆತ್ಮರಾಗಿದ್ದಾರೆ. ತಾವು ದೇವ-ಆತ್ಮರಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಾಗಿದ್ದೀರಿ - ಈ ನಶೆಯು ಸದಾ ಇರಲಿ. ಅನ್ಯ ನಶೆಗಾಗಿ ಕಡಿಮೆ ಮಾಡಿ ಎಂದು ಹೇಳಲಾಗುತ್ತದೆ, ಆತ್ಮಿಕ ನಶೆಗಾಗಿ ತಂದೆಯವರು ಹೆಚ್ಚಿಸಿಕೊಳ್ಳಿರಿ ಎಂದು ಹೇಳುತ್ತಾರೆ. ಏಕೆಂದರೆ ಈ ನಶೆಯು ಹಾನಿ ಮಾಡುವಂತದ್ದಲ್ಲ ಹಾಗೂ ಶ್ರೇಷ್ಠ ಮಟ್ಟಕ್ಕೆ ಕರೆದುಕೊಂಡು ಹೋಗುತ್ತದೆ, ಉಳಿದ ಎಲ್ಲಾ ನಶೆಗಳು ಹಾನಿಯನ್ನುಂಟು ಮಾಡುತ್ತದೆ ಹಾಗೂ ಕನಿಷ್ಟರನ್ನಾಗಿ ಮಾಡುತ್ತದೆ. ಒಂದುವೇಳೆ ಆತ್ಮಿಕ ನಶೆಯು ಕಡಿಮೆಯಾಗಿ ಬಿಡುತ್ತದೆ ಎಂದರೆ ಹಳೆಯ ಪ್ರಪಂಚದ ಸ್ಮೃತಿಯು ಬಂದು ಬಿಡುತ್ತದೆ. ನಶೆಯೇರಿದರೆ ಹೊಸ ಪ್ರಪಂಚದ ಸ್ಮೃತಿಯಿರುತ್ತದೆ. ಈ ಬ್ರಾಹ್ಮಣ ಸಂಸಾರವೇ ಹೊಸ ಸಂಸಾರ ಆಗಿದೆ. ಸತ್ಯಯುಗಕ್ಕಿಂತಲೂ ಈ ಸಂಸಾರ(ಪ್ರಪಂಚ)ವು ಅತಿ ಶ್ರೇಷ್ಠ ಆಗಿದೆ! ಅಂದಮೇಲೆ ಸದಾ ಈ ಸ್ಮೃತಿಯಿಂದ ಮುಂದುವರೆಯುತ್ತಾ ಸಾಗಿರಿ.
2. ತಮ್ಮನ್ನು ಸದಾ ವಿಶ್ವ-ರಚೈತ ತಂದೆಯ ಶ್ರೇಷ್ಠ ರಚನೆ ಎಂದು ಅನುಭವ ಮಾಡುತ್ತೀರಾ? ಬ್ರಾಹ್ಮಣ ಜೀವನವೆಂದರೆ ವಿಶ್ವ-ರಚೈತನ ಶ್ರೇಷ್ಠ ರಚನೆ. ನಾವು ತಂದೆಯ ಡೈರೆಕ್ಟ್ ರಚನೆಯಾಗಿದ್ದೇವೆ ಎಂಬ ನಶೆಯು ಇದೆಯೇ? ಪ್ರಪಂಚದವರಂತು ಕೇವಲ ಅರಿವಿಲ್ಲದವರಾಗಿ ಹೇಳುತ್ತಾರೆ - ಭಗವಂತನು ನಮ್ಮ ಜನ್ಮ ಕೊಟ್ಟಿದ್ದಾರೆ. ಮುಂಚೆ ತಾವೆಲ್ಲರೂ ಸಹ ಇದೇರೀತಿ ಹೇಳುತ್ತಿದ್ದಿರಿ ಆದರೆ ಈಗ ತಿಳಿದಿದ್ದೀರಿ - ನಾವು ಶಿವವಂಶಿ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಆಗಿದ್ದೇವೆ. ಅಂದಮೇಲೆ ಈಗ ಜ್ಞಾನದ ಆಧಾರದಿಂದ ಮತ್ತು ತಿಳುವಳಿಕೆಯಿಂದ ಹೇಳುತ್ತೀರಿ- ಭಗವಂತನೇ ನಮಗೆ ಜನ್ಮ ಕೊಟ್ಟಿದ್ದಾರೆ, ನಾವು ಮುಖ ವಂಶಾವಳಿ ರಚನೆಯಾಗಿದ್ದೇವೆ. ತಂದೆಯು ಡೈರೆಕ್ಟ್ ಆಗಿ ಬ್ರಹ್ಮಾ ತಂದೆಯ ಮೂಲಕ ರಚನೆ ಮಾಡಿದ್ದಾರೆ. ಅಂದಮೇಲೆ ಬಾಪ್ದಾದಾ ಅಥವಾ ಮಾತಾಪಿತನ ರಚನೆಯಾಗಿದ್ದೀರಿ. ಡೈರೆಕ್ಟ್ ಭಗವಂತನ ರಚನೆ ಎಂದು ಈಗ ಅನುಭವದಿಂದ ಹೇಳಬಲ್ಲಿರಿ. ಅಂದಮೇಲೆ ಭಗವಂತನ ರಚನೆಯು ಎಷ್ಟೊಂದು ಶ್ರೇಷ್ಠವಾಗಿರಬೇಕು! ರಚೈತನಂತೆ ರಚನೆಯೂ ಆಗುತ್ತದೆಯಲ್ಲವೆ! ಈ ನಶೆ ಮತ್ತು ಖುಷಿಯು ಸದಾ ಇರುತ್ತದೆಯೇ? ತಮ್ಮನ್ನು ಸಾಧಾರಣರೆಂದು ತಿಳಿಯುವುದಿಲ್ಲವೇ? ಯಾವಾಗ ಈ ರಹಸ್ಯವು ಅರ್ಥವಾಗುತ್ತದೆಯೋ, ಆಗ ಸದಾಕಾಲವೂ ಚಹರೆಯಲ್ಲಿ ಅಥವಾ ಚಲನೆಯಲ್ಲಿ ಸ್ವತಹವಾಗಿಯೇ ಆತ್ಮಿಕ ನಶೆ ಮತ್ತು ಖುಷಿಯಿರುತ್ತದೆ. ತಮ್ಮ ಚಹರೆಯನ್ನು ಯಾರೇ ನೋಡಿದರೂ ಈ ಅನುಭವವಾಗಲಿ - ಇವರು ಸತ್ಯವಾಗಿಯೂ ಶ್ರೇಷ್ಠ ರಚೈತನ ರಚನೆಯಾಗಿದ್ದಾರೆ. ಹೇಗೆ ರಾಜನ ರಾಜಕುಮಾರಿಯು ತನ್ನ ಚಲನೆಯಿಂದ ತಿಳಿದುಬರುತ್ತದೆ - ಇವರು ರಾಯಲ್ ಮನೆತನದವರು ಆಗಿದ್ದಾರೆ. ಇವರು ಸಾಹುಕಾರ ಮನೆಯವರು ಅಥವಾ ಇವರು ಸಾಧಾರಣ ಮನೆಯವರು ಆಗಿದ್ದಾರೆ. ಅದೇರೀತಿಯಲ್ಲಿ ತಮ್ಮ ಚಲನೆಯಿಂದ, ಚಹರೆಯಿಂದ ಅನುಭವವಾಗಲಿ - ಇವರು ಶ್ರೇಷ್ಠ ರಚನೆಯಾಗಿದ್ದಾರೆ, ಶ್ರೇಷ್ಠ ತಂದೆಯ ಮಕ್ಕಳಾಗಿದ್ದಾರೆ!
ಕುಮಾರಿಯರೊಂದಿಗೆ: ಕನ್ಯೆಯರು 100 ಬ್ರಾಹ್ಮಣರಿಗಿಂತಲೂ ಉತ್ತಮಳೆಂದು ಗಾಯನವಿದೆ, ಈ ಮಹಿಮೆಯು ಏಕೆ ಇದೆ? ಏಕೆಂದರೆ ಸ್ವಯಂ ಎಷ್ಟು ಶ್ರೇಷ್ಠವಾಗುವರು, ಅಷ್ಟೇ ಅನ್ಯರನ್ನೂ ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಿದೆ. ಅಂದಾಗ ಶ್ರೇಷ್ಠಾತ್ಮರೆಂಬ ಖುಷಿಯು ಇರುತ್ತದೆಯೇ? ಕುಮಾರಿಯರು ಸೇವಾಧಾರಿಯಾಗಿ ಸೇವೆಯಲ್ಲಿ ಮುಂದುವರೆಯುತ್ತಾ ಸಾಗಿರಿ ಏಕೆಂದರೆ ಈ ಸಂಗಮಯುಗವೇ ಸ್ವಲ್ಪ ಸಮಯದ ಯುಗವಾಗಿದೆ, ಇದರಲ್ಲಿ ಯಾರೆಷ್ಟು ಮಾಡಿಕೊಳ್ಳಬೇಕೆಂದು ಬಯಸುವಿರಿ, ಅಷ್ಟೂ ಮಾಡಿಕೊಳ್ಳಬಹುದು. ಅಂದಮೆಲೆ ಶ್ರೇಷ್ಠ ಲಕ್ಷ್ಯ ಮತ್ತು ಶ್ರೇಷ್ಠ ಲಕ್ಷಣವಿರುವವರು ಆಗಿದ್ದೀರಲ್ಲವೇ? ಎಲ್ಲಿ ಲಕ್ಷ್ಯ ಮತ್ತು ಲಕ್ಷಣವು ಶ್ರೇಷ್ಠವಾಗಿರುವುದೋ ಅಲ್ಲಿ ಪ್ರಾಪ್ತಿಯೂ ಸಹ ಸದಾ ಶ್ರೇಷ್ಟವಾಗಿರುವುದೇ ಅನುಭವವಾಗುವುದು. ಸದಾ ಈ ಈಶ್ವರೀಯ ಜೀವನದ ಫಲವಾದ “ಖುಷಿ” ಹಾಗೂ “ಶಕ್ತಿ” ಎರಡನ್ನೂ ಅನುಭವ ಮಾಡುತ್ತೀರಾ? ಪ್ರಪಂಚದಲ್ಲಿ ಇರುವವರು ಖುಷಿಗಾಗಿ ಖರ್ಚು ಮಾಡಿದರೂ ಪ್ರಾಪ್ತಿಯಾಗುವುದಿಲ್ಲ. ಒಂದುವೇಳೆ ಪ್ರಾಪ್ತಿಯಾದರೂ ಅಲ್ಪಕಾಲದ್ದಷ್ಟೇ ಆಗುವುದು ಮತ್ತು ಖುಷಿಯ ಜೊತೆ ಜೊತೆಗೆ ದುಃಖವೂ ಆಗುವುದು ಆದರೆ ತಾವುಗಳ ಜೀವನವು ಸದಾ ಖುಷಿಯದಾಯಿತು. ಪ್ರಪಂಚದವರು ಖುಷಿಗಾಗಿ ಹುಡುಕಾಡುತ್ತಾರೆ ಮತ್ತು ತಮಗಂತು ಖುಷಿಯು ಪ್ರತ್ಯಕ್ಷ ಫಲದ ರೂಪದಲ್ಲಿ ಸಿಗುತ್ತಿದೆ. ತಮ್ಮ ಜೀವನದ ವಿಶೇಷತೆ ಖುಷಿಯೇ ಆಗಿದೆ! ಒಂದುವೇಳೆ ಖುಷಿಯಿಲ್ಲದಿದ್ದರೆ ಜೀವನವಿಲ್ಲ ಅಂದಮೇಲೆ ಸದಾ ತಮ್ಮ ಉನ್ನತಿ ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಇರುತ್ತೀರಲ್ಲವೇ? ಬಾಪ್ದಾದಾರವರು ಈ ಮಾತಿನಲ್ಲಿ ಖುಷಿಯಾಗುತ್ತಾರೆ- ಕುಮಾರಿಯರು ಸಮಯದಲ್ಲಿ ಪಾರಾಗಿ ಬಿಟ್ಟರು, ಇಲ್ಲದಿದ್ದರೆ ಉಲ್ಟಾ ಏಣಿಯನ್ನು ಹತ್ತಿದ ನಂತರ ಇಳಿಯಬೇಕಾಗಿತ್ತು. ಏರಿಳಿತದಲ್ಲಿ ಪರಿಶ್ರಮವಿದೆ ಅಲ್ಲವೆ. ನೋಡಿ - ಯಾರೇ ಪ್ರವೃತ್ತಿಯಲ್ಲಿದ್ದಾರೆ, ಆದರೂ ಹೇಳುವುದರಲ್ಲಿ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎನ್ನುವು ಬರುತ್ತದೆ, ಬ್ರಹ್ಮಾ ಅಧರ್ಕುಮಾರ್ ಎಂದು ಹೇಳುವುದಿಲ್ಲ. ಇಷ್ಟಾದರೂ ಕುಮಾರ-ಕುಮಾರಿ ಆಗಿದ್ದಾರಲ್ಲವೆ. ಅವರು ಏಣಿಯನ್ನಿಳಿದರು ಆದರೆ ತಾವು ಇಳಿಯಬೇಕಾಗಲಿಲ್ಲ, ಬಹಳ ಭಾಗ್ಯಶಾಲಿ ಆಗಿದ್ದೀರಿ, ಸಮಯದಲ್ಲಿ ತಂದೆಯವರು ಸಿಕ್ಕಿ ಬಿಟ್ಟರು. ಕುಮಾರಿಯನ್ನೇ ಪೂಜಿಸುತ್ತಾರೆ, ಕುಮಾರಿಯು ಯಾವಾಗ ಗೃಹಸ್ಥಿಯಾಗುವಳು ಆಗ ಕುರಿಯಂತೆ ಎಲ್ಲರ ಮುಂದೆ ತಲೆ ಬಾಗಿಸುತ್ತಾ ಇರುತ್ತಾಳೆ. ಅದರಿಂದ ತಾವುಗಳು ಪಾರಾಗಿ ಬಿಟ್ಟಿರಲ್ಲವೆ. ತಮ್ಮನ್ನು ಸದಾ ಇಂತಹ ಭಾಗ್ಯಶಾಲಿ ಎಂದು ತಿಳಿಯುತ್ತಾ ಮುಂದೆ ಸಾಗುತ್ತಿರಿ. ಒಳ್ಳೆಯದು!