text
stringlengths 0
61.5k
|
---|
ತಂದೆಯು ಹೇಳುತ್ತಾರೆ - ನೀವು ಪಾವನರಾಗಬೇಕು, ನನ್ನನ್ನು ಫಾಲೋ ಮಾಡಬೇಕಾಗಿದೆ ಆಗಲೇ ನನ್ನ ಜೊತೆಯಲ್ಲಿ ಬರುವಿರಿ. ನೀವು ನನ್ನ ಜೊತೆಯಲ್ಲಿಯೇ ಇದ್ದಿರಿ, ಈಗ 84 ಜನ್ಮಗಳ ಚಕ್ರವನ್ನು ಸುತ್ತಿ ಪತಿತರಾಗಿದ್ದೀರಿ. ಪುನಃ ನನ್ನನ್ನು ನೆನಪು ಮಾಡಿದರೆ ಪಾವನರಾಗುತ್ತೀರಿ. ಸನ್ಯಾಸಿಗಳೂ ಸಹ ಗೃಹಸ್ಥಿಗಳಿಗೆ ಹೇಳುತ್ತಾರೆ - ಫಾಲೋ ಮಾಡಬೇಕೆಂದರೆ ಗೃಹಸ್ಥವನ್ನು ಬಿಟ್ಟು ಬಿಡಿ ಎಂದು. ಇಲ್ಲಿ ತಂದೆಯು ತಿಳಿಸುತ್ತಾರೆ - ನಾನು ಪರಮಧಾಮ ನಿವಾಸಿಯಾಗಿದ್ದೇನೆ, ನೀವೂ ಸಹ ನಡೆಯಿರಿ ಅಥವಾ ಇಲ್ಲಿಯೇ ವಿಷಯ ಸಾಗರದಲ್ಲಿ ಇರುವುದು ಇಷ್ಟವಾಗುತ್ತದೆಯೇ? ಹೇ ಪತಿತ-ಪಾವನ ಬನ್ನಿ ಎಂದು ನೀವು ಕರೆಯುತ್ತಾ ಬಂದಿದ್ದೀರಿ, ಈಗ ತಂದೆಯು ಬಂದಿದ್ದಾರೆ, ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಕಲ್ಪ-ಕಲ್ಪವೂ ಬಂದು ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆ ನಂತರ ಸತ್ಯಯುಗದಲ್ಲಿ ನೀವು ಬಹಳ ಸುಖಿಯಾಗಿರುತ್ತೀರಿ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರಲ್ಲವೆ. ಇವರಿಗೆ ಇಷ್ಟೊಂದು ಸುಖ ಕೊಡುವವರು ಯಾರು? ಸ್ವರ್ಗದ ರಚಯಿತ ತಂದೆ. ತಂದೆಯು ನೆನಪು ತರಿಸುತ್ತಾರೆ - ನೀವು ನನ್ನ ಜಯಂತಿಯನ್ನು ಆಚರಿಸುತ್ತೀರಿ, ಪರಮಪಿತ ಪರಮಾತ್ಮನ ಜಯಂತಿಯನ್ನು ಎಲ್ಲಾ ಭಾರತವಾಸಿಗಳು ಆಚರಿಸುತ್ತಾರೆ. ನನ್ನದು ಇದು ಜನ್ಮಭೂಮಿಯಾಗಿದೆ. ಕ್ರಿಶ್ಚಿಯನ್ನರು ಆಚರಿಸುವರೇ? ಅವರು ಕ್ರಿಸ್ತನನ್ನೇ ಒಪ್ಪುತ್ತಾರೆ. ಶಿವ ಜಯಂತಿಯನ್ನು ಭಾರತವಾಸಿಗಳೇ ಆಚರಿಸುತ್ತಾರೆ, ಇದು ಸರ್ವರ ಪತಿತ-ಪಾವನ ತಂದೆಯ ಜನ್ಮಭೂಮಿಯಾಗಿದೆ. ತಂದೆಯು ಎಲ್ಲರಿಗೆ ಸುಖ ಕೊಡುವವರಾಗಿದ್ದಾರೆ. ಸರ್ವರನ್ನು ಮುಕ್ತಗೊಳಿಸುವವರಾಗಿದ್ದಾರೆ ಅಂದಮೇಲೆ ಭಾರತವು ಎಷ್ಟು ಶ್ರೇಷ್ಠವಾಗಿದೆ! |
ತಂದೆಗೆ ತಿಳಿದಿದೆ - ಡ್ರಾಮಾನುಸಾರ ನನ್ನ ಮಕ್ಕಳು ಯಾವಾಗ ಬಹಳ ದುಃಖಿಯಾಗಿ ಬಿಡುವರೋ ಆಗ ಪುನಃ ಆಸ್ತಿಯನ್ನು ಕೊಡಲು ನಾನು ಬರುತ್ತೇನೆ. ತಂದೆಯು ಜ್ಞಾನ ಸಾಗರ, ಸುಖದ ಸಾಗರನಾಗಿದ್ದಾರೆ, ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಿದ್ದಾರೆ. ನನ್ನನ್ನು ಫಾಲೋ ಮಾಡಿರಿ ಎಂದು ಹೇಳುತ್ತಾರೆ. ಇದಂತೂ ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ವಿಕಾರಿಯಾಗಿದ್ದೇವೆ ಆದ್ದರಿಂದ ಶರೀರವೂ ವಿಕಾರಿಯಾಗಿದೆ. ಸತ್ಯಯುಗದಲ್ಲಿ ಆತ್ಮವು ಪವಿತ್ರವಾಗಿರುತ್ತದೆ, ಆದ್ದರಿಂದ ಶರೀರವೂ ಪವಿತ್ರವಾದುದು ಸಿಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪಾವನರಾಗಿರಿ, ನೆನಪಿನಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗುವಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು “ನಾವಾತ್ಮರು ಸಹೋದರ-ಸಹೋದರರಾಗಿದ್ದೇವೆ” - ಇದನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ, ಬಹಳ ಪ್ರೀತಿಯಿಂದ ಇರಬೇಕಾಗಿದೆ. ಹೇಗೆ ತಂದೆಯು ಪ್ರಿಯಾತಿ ಪ್ರಿಯರಾಗಿದ್ದಾರೆ ಹಾಗೆಯೇ ಪ್ರಿಯರಾಗಬೇಕಾಗಿದೆ. |
2. ತಂದೆಯ ಸಮಾನ ಪಾವನರಾಗಿ ತಂದೆಯನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ತಂದೆಯ ಜೊತೆ ಹಿಂತಿರುಗಿ ಶಾಂತಿಧಾಮ ಮನೆಗೆ ಹೋಗುವುದಕ್ಕಾಗಿ ಖಂಡಿತ ಪಾವನರಾಗಬೇಕಾಗಿದೆ. |
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಈ ಗೀತೆಗಳನ್ನು ಹಾಡುತ್ತಾರೆ ಯಾವುದೆಲ್ಲಾ ಗೀತೆಗಳಿವೆಯೋ ಅವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಅದರ ಅರ್ಥವನ್ನು ತಂದೆಯು ತಿಳಿಸುತ್ತಾರೆ. ಯಾರಿಗೆ ಭೋಲಾನಾಥನೆಂದು ಹೇಳಲಾಗುತ್ತದೆ ಎಂಬುದನ್ನು ಮಕ್ಕಳೂ ಸಹ ತಿಳಿದುಕೊಳ್ಳುತ್ತೀರಿ, ದೇವತೆಗಳಿಗೆ ಭೋಲಾನಾಥನೆಂದು ಹೇಳುವುದಿಲ್ಲ. ಸುಧಾಮನ ಹಿಡಿ ಅವಲಕ್ಕಿಗೆ ಬದಲಾಗಿ ಮಹಲು ಸಿಕ್ಕಿತೆಂದು ಗಾಯನವಿದೆ, ಅದು ಎಷ್ಟು ಸಮಯಕ್ಕಾಗಿ? 21 ಜನ್ಮಗಳಿಗಾಗಿ. ಈಗ ಮಕ್ಕಳು ತಿಳಿದುಕೊಳ್ಳುತ್ತೀರಿ - ತಂದೆಯು ಬಂದು ಭಾರತವಾಸಿಗಳಿಗೆ ವಜ್ರ-ವೈಡೂರ್ಯಗಳ ಮಹಲನ್ನು ಕೊಡುತ್ತಾರೆ ಅಂದಮೇಲೆ ಯಾವುದಕ್ಕೆ ಬದಲಾಗಿ ಕೊಡುತ್ತಾರೆ? ಬಾಬಾ, ಈ ತನು-ಮನ-ಧನವೆಲ್ಲವೂ ನಿಮ್ಮದೇ ಆಗಿದೆ. ತಾವೇ ಕೊಟ್ಟಿರುವುದಾಗಿದೆ ಎಂದು ಮಕ್ಕಳು ಹೇಳುತ್ತಾರೆ. ಮಗುವಾದಾಗಲೂ ಭಗವಂತನು ಕೊಟ್ಟರೆಂದು ಹೇಳುತ್ತಾರೆ. ಹಣವನ್ನೂ ಭಗವಂತ ಕೊಟ್ಟನೆಂದು ಹೇಳುತ್ತಾರೆ. ಹೇಳುವವರು ಯಾರು? ಆತ್ಮ. ಭಗವಂತ ಅರ್ಥಾತ್ ತಂದೆಯು ಕೊಟ್ಟರು. ತಂದೆಯು ತಿಳಿಸುತ್ತಾರೆ - ನೀವೀಗ ಎಲ್ಲವನ್ನೂ ಕೊಡಬೇಕಾಗುವುದು, ಅದಕ್ಕೆ ಪ್ರತಿಯಾಗಿ ನಾನು ನಿಮಗೆ ಬಹಳ ಸುಂದರ ಶರೀರವನ್ನು ವರ್ಗಾವಣೆ ಮಾಡುತ್ತೇನೆ, ಅಪಾರ ಧನವನ್ನು ಕೊಡುತ್ತೇನೆ ಆದರೆ ಯಾರಿಗೆ ಕೊಡುತ್ತಾರೆ? ಅವಶ್ಯವಾಗಿ ಮಕ್ಕಳಿಗೇ ಕೊಡುತ್ತಾರೆ. ಲೌಕಿಕ ತಂದೆಯಿಂದ ಅಲ್ಪಕಾಲಕ್ಕಾಗಿ ಧನ ಸಿಗುತ್ತದೆ. ಬೇಹದ್ದಿನ ತಂದೆಯು ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ಜ್ಞಾನ ಮತ್ತು ಭಕ್ತಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಭಕ್ತಿಯಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ, ಹಣವಿದ್ದರೆ ಸುಖವಿರುತ್ತದೆ, ಹಣವಿಲ್ಲದಿದ್ದರೆ ಮನುಷ್ಯರು ಎಷ್ಟೊಂದು ದುಃಖಿಯಾಗುತ್ತಾರೆ! ತಂದೆಯು ನಮಗೆ ಅಪಾರ ಧನವನ್ನು ಕೊಡುತ್ತಾರೆಂದು ಮಕ್ಕಳಿಗೇ ತಿಳಿದಿದೆ ಆದ್ದರಿಂದ ಖುಷಿಯಾಗುತ್ತದೆ. ಸುಖಧಾಮದಲ್ಲಿ ಸುಖದ ಯಾವುದೇ ಕೊರತೆಯಿರುವುದಿಲ್ಲ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ರಾಜಧಾನಿಯಿರುತ್ತದೆ, ಅದಕ್ಕೆ ಪವಿತ್ರ ಗೃಹಸ್ಥಾಶ್ರಮವೆಂದು ಹೇಳಲಾಗುತ್ತದೆ ಅಂದಾಗ ತಂದೆಯು ಎಷ್ಟು ಮುಗ್ಧನಾಗಿದ್ದಾರೆ! ಏನನ್ನು ಕೊಡುತ್ತಾರೆ ಮತ್ತು ಏನನ್ನು ತೆಗೆದುಕೊಳ್ಳುತ್ತಾರೆ! ತಂದೆಯು ಎಷ್ಟು ಒಳ್ಳೆಯ ಗ್ರಾಹಕನಾಗಿದ್ದಾರೆ. ವಾಸ್ತವದಲ್ಲಿ ತಂದೆಯು ಮಕ್ಕಳ ಗ್ರಾಹಕನೇ ಆಗುತ್ತಾರೆ, ಮಗು ಜನಿಸಿತೆಂದರೆ ಸಂಪತ್ತೆಲ್ಲವೂ ಮಗುವಿನದಾಗುತ್ತದೆ ಆದರೆ ಅವರು ಹದ್ದಿನ ಗ್ರಾಹಕರಾಗಿರುತ್ತಾರೆ, ಇವರು ಬೇಹದ್ದಿನ ಭೋಲಾನಾಥನಾಗಿದ್ದಾರೆ. ಬೇಹದ್ದಿನ ಮಕ್ಕಳ ಗ್ರಾಹಕನಾಗಿದ್ದಾರೆ, ತಂದೆಯು ಹೇಳುತ್ತಾರೆ - ನಾನು ಪರಮಧಾಮದಿಂದ ಬಂದಿದ್ದೇನೆ, ಹಳೆಯದೆಲ್ಲವನ್ನೂ ನಿಮ್ಮಿಂದ ತೆಗೆದುಕೊಂಡು ಹೊಸ ಪ್ರಪಂಚದಲ್ಲಿ ನಿಮಗೆ ಎಲ್ಲವನ್ನೂ ಕೊಡುತ್ತೇನೆ. ಆದ್ದರಿಂದ ತಂದೆಗೆ ದಾತನೆಂದು ಹೇಳಲಾಗುತ್ತದೆ, ಇವರಂತಹ ದಾತನು ಮತ್ತ್ಯಾರೂ ಇಲ್ಲ. ನಿಷ್ಕಾಮ ಸೇವೆ ಮಾಡುತ್ತಾರೆ. ತಂದೆಯು ಹೇಳುತ್ತಾರೆ - ನಾನು ನಿಷ್ಕಾಮಿಯಾಗಿದ್ದೇನೆ, ನನಗೆ ಯಾವುದೇ ಲಾಲಸೆಯಿಲ್ಲ. ವೃದ್ಧ ತಂದೆಯ ಸಂಭಾಲನೆ ಮಾಡುವುದು ಮಕ್ಕಳ ಕೆಲಸವಾಗಿದೆ ಏಕೆಂದರೆ ನಾನು ನಿಮ್ಮ ಸಂಭಾಲನೆ ಮಾಡಿದ್ದೇನೆಂದು ತಂದೆಯು ನಿಮಗೆ ಹೇಳುವುದಿಲ್ಲ. ತಂದೆಯು ವೃದ್ಧನಾದಾಗ ಮಕ್ಕಳು ಅವರನ್ನು ಸಂಭಾಲನೆ ಮಾಡುವುದು ಕಾಯಿದೆಯಿರುತ್ತದೆ ಆದರೆ ಈ ತಂದೆಯಂತೂ ಎಂದೂ ವೃದ್ಧನಾಗುವುದಿಲ್ಲ, ಸದಾ ಯುವಕನಾಗಿರುತ್ತಾನೆ. ಆತ್ಮವೆಂದೂ ವೃದ್ಧಾಪ್ಯವನ್ನು ಹೊಂದುವುದಿಲ್ಲ. ಇದನ್ನಂತೂ ತಿಳಿದುಕೊಂಡಿದ್ದೀರಿ - ಲೌಕಿಕ ತಂದೆಯು ಮಕ್ಕಳಲ್ಲಿ ಭರವಸೆಯನ್ನು ಇಡುತ್ತಾರೆ - ನಾನು ವೃದ್ಧನಾದಾಗ ಮಕ್ಕಳು ನನ್ನ ಸೇವೆ ಮಾಡುವರು ಎಂದು. ಭಲೆ ಎಲ್ಲವನ್ನೂ ಮಕ್ಕಳಿಗೆ ಕೊಡುತ್ತಾರೆ ಆದರೂ ಸಹ ಸೇವೆಯಂತೂ ಇರುತ್ತದೆ. ಈ ಶಿವ ತಂದೆಯು ಹೇಳುತ್ತಾರೆ - ನಾನು ಅಭೋಕ್ತನಾಗಿದ್ದೇನೆ, ನಾನೆಂದೂ ಏನನ್ನೂ ಸ್ವೀಕರಿಸುವುದಿಲ್ಲ, ಕೇವಲ ಮಕ್ಕಳಿಗೇ ಜ್ಞಾನವನ್ನು ಕೊಡುವುದಕ್ಕಾಗಿಯೇ ನಾನು ಬರುತ್ತೇನೆ. ಪರಮಾತ್ಮನು ಆತ್ಮರಿಗೆ ತಿಳಿಸುತ್ತಾರೆ. ಆತ್ಮವೇ ಕೇಳುತ್ತದೆ, ಪ್ರತಿಯೊಂದು ಮಾತನ್ನು ಆತ್ಮವೇ ಮಾತನಾಡುತ್ತದೆ. ಆತ್ಮವೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ ಅದರ ಆಧಾರದ ಮೇಲೆ ಶರೀರವೂ ಸಿಗುತ್ತದೆ. ಇಲ್ಲಿ ಮನುಷ್ಯರದು ಅನೇಕ ಮತಗಳಿವೆ. ಆತ್ಮವೇ ಪರಮಾತ್ಮ, ಅದಕ್ಕೆ ಯಾವುದೇ ಲೇಪಚೇಪ ಅಂಟುವುದಿಲ್ಲವೆಂದು ಕೆಲವರು ಹೇಳುತ್ತಾರೆ. ಆತ್ಮವನ್ನು ನಿರ್ಲೇಪವೆಂದು ಹೇಳಿ ಬಿಡುತ್ತಾರೆ, ಒಂದುವೇಳೆ ಆತ್ಮವು ನಿರ್ಲೇಪವಾಗಿದ್ದರೆ ಪಾಪಾತ್ಮ, ಪುಣ್ಯಾತ್ಮ ಎಂದು ಏಕೆ ಹೇಳುತ್ತಾರೆ? ಆ ರೀತಿಯಿದ್ದಿದ್ದರೆ ಪಾಪ ಶರೀರ, ಪುಣ್ಯ ಶರೀರವೆಂದು ಹೇಳಬೇಕಾಗಿತ್ತು, ನೀವೀಗ ತಿಳಿದುಕೊಂಡಿದ್ದೀರಿ - ಎಲ್ಲಾ ಆತ್ಮರ ಆತ್ಮಿಕ ತಂದೆಯು ನಾವಾತ್ಮರಿಗೆ ಈ ಶರೀರದ ಮೂಲಕ ಓದಿಸುತ್ತಿದ್ದಾರೆ. ಆತ್ಮವನ್ನು ಆಹ್ವಾನ ಮಾಡುತ್ತಾರಲ್ಲವೆ. ನಮ್ಮ ತಂದೆಯ ಆತ್ಮವು ಬಂದಿತು, ಸ್ವಾದವನ್ನು ತೆಗೆದುಕೊಂಡಿತು ಎಂದು ಹೇಳುತ್ತಾರೆ. ಆತ್ಮವೇ ರುಚಿ ನೋಡುತ್ತದೆ. ತಂದೆಗೆ ಈ ರೀತಿ ಹೇಳುವುದಿಲ್ಲ, ಅವರು ಅಭೋಕ್ತನಾಗಿದ್ದಾರೆ. ಬ್ರಾಹ್ಮಣರಿಗೆ ತಿನ್ನಿಸುತ್ತಾರೆ, ಅವರಲ್ಲಿ ಆತ್ಮವು ಬರುತ್ತದೆ. ಬಂದು ಅವಶ್ಯವಾಗಿ ಎಲ್ಲಿಯೋ ವಿರಾಜಮಾನವಾಗುತ್ತದೆ. ಬ್ರಾಹ್ಮಣರಿಗೆ ತಿನ್ನಿಸುವುದು ಭಾರತದಲ್ಲಿ ಸಾಮಾನ್ಯ ಮಾತಾಗಿದೆ. ಆತ್ಮವನ್ನು ಕರೆಸುತ್ತಾರೆ, ಅದರೊಂದಿಗೆ ಕೇಳುತ್ತಾರೆ ಅದರಲ್ಲಿ ಕೆಲವು ಮಾತುಗಳು ಸತ್ಯವೂ ಆಗಿರುತ್ತದೆ. ಪಿತೃಗಳಿಗೆ ತಿನ್ನಿಸುವುದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಇದರಲ್ಲಿ ಆಶ್ಚರ್ಯವೆನಿಸಬಾರದು. ತಂದೆಯು ಸಾರ ರೂಪದಲ್ಲಿ ಡ್ರಾಮಾದ ರಹಸ್ಯವನ್ನು ತಿಳಿಸುತ್ತಾರೆ. ಡ್ರಾಮಾವನ್ನು ಅಷ್ಟು ವಿವರವಾಗಿ ತಿಳಿಸಿಕೊಡಲು ಸಾಧ್ಯವಿಲ್ಲ, ಒಂದೊಂದರ ತಿಳುವಳಿಕೆ ನೀಡುವುದರಲ್ಲಿಯೇ ಕೆಲವು ವರ್ಷಗಳು ಹಿಡಿಸುವುದು. ನೀವು ಮಕ್ಕಳಿಗೆ ಬಹಳ ಸಹಜ ಶಿಕ್ಷಣ ಸಿಗುತ್ತಿದೆ, ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಹಾಡುತ್ತಾರೆ. ಅವರ ಹೆಸರೇ ಆಗಿದೆ - ಪತಿತ-ಪಾವನ. ಬ್ರಹ್ಮಾ-ವಿಷ್ಣು-ಶಂಕರನಿಗೆ ಪತಿತ ಪಾವನನೆಂದು ಹೇಳುವುದಿಲ್ಲ, ತಂದೆಗೇ ಪತಿತ-ಪಾವನ, ಮುಕ್ತಿದಾತನೆಂದು ಹೇಳುತ್ತಾರೆ. ದುಃಖಹರ್ತ-ಸುಖಕರ್ತನೆಂದೂ ಹೇಳಲಾಗುತ್ತದೆ. ಅವರು ನಿರಾಕಾರನಾಗಿದ್ದಾರೆ. ಶಿವನ ಮಂದಿರದಲ್ಲಿ ಹೋಗಿ ನೋಡಿ ಅಲ್ಲಿ ಲಿಂಗವನ್ನು ಇಟ್ಟಿರುತ್ತಾರೆ. ಅವಶ್ಯವಾಗಿ ಚೈತನ್ಯದಲ್ಲಿ ಇದ್ದರು ಆದ್ದರಿಂದಲೇ ಪೂಜೆ ಮಾಡುತ್ತಾರಲ್ಲವೆ. ಈ ದೇವತೆಗಳೂ ಸಹ ಯಾವುದೋ ಸಮಯದಲ್ಲಿ ಚೈತನ್ಯದಲ್ಲಿದ್ದರು ಆದ್ದರಿಂದಲೇ ಅವರಿಗೆ ಮಹಿಮೆಯಿದೆ. ನೆಹರು ಚೈತನ್ಯದಲ್ಲಿದ್ದರು ಆದ್ದರಿಂದಲೇ ಅವರ ಭಾವಚಿತ್ರವನ್ನು ತೆಗೆದು ಮಹಿಮೆ ಮಾಡುತ್ತಾರೆ. ಯಾರಾದರೂ ಒಳ್ಳೆಯ ಕಾರ್ಯ ಮಾಡಿ ಹೋಗುತ್ತಾರೆಂದರೆ ಅವರ ಜಡ ಚಿತ್ರವನ್ನಿಟ್ಟು ಮಹಿಮೆ ಮಾಡುತ್ತಾರೆ. ಪವಿತ್ರರಿಗೇ ಪೂಜೆ ಮಾಡುತ್ತಾರೆ. ಯಾವುದೇ ಮನುಷ್ಯರ ಪೂಜೆ ಮಾಡುವುದಿಲ್ಲ. ವಿಕಾರದಿಂದ ಜನ್ಮ ಪಡೆಯುವವರ ಪೂಜೆಯಾಗಲು ಸಾಧ್ಯವಿಲ್ಲ. ಯಾರು ಸದಾ ಪವಿತ್ರರಾಗಿರುತ್ತಾರೆಯೋ ಅಂತಹ ದೇವತೆಗಳ ಪೂಜೆ ನಡೆಯುತ್ತದೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದರು, ಈಗ ಪುನಃ ಸಂಗಮದಲ್ಲಿ ಸ್ವರ್ಗದ ಸ್ಥಾಪನೆ ಮಾಡಲು ಬಂದಿದ್ದಾರೆ ನಂತರ ದ್ವಾಪರದಿಂದ ರಾವಣ ರಾಜ್ಯವು ಆರಂಭವಾಗುವುದು. ರಾವಣ ರಾಜ್ಯವು ಆರಂಭವಾದಾಗ ಶಿವನ ಮಂದಿರಗಳನ್ನು ಕಟ್ಟಿಸುತ್ತಾರೆ. ಈಗಂತೂ ಚೈತನ್ಯದಲ್ಲಿ ಶಿವನು ಜ್ಞಾನವನ್ನು ತಿಳಿಸುತ್ತಿದ್ದಾರೆ, ಅವರು ಸತ್ಯ-ಚೈತನ್ಯನಾಗಿದ್ದಾರೆ. ಅವರ ಮಹಿಮೆಯನ್ನೇ ಹಾಡುತ್ತಾರೆ. ನಿರಾಕಾರನಿಗೆ ಶರೀರವಂತೂ ಬೇಕಲ್ಲವೆ. ತಂದೆಯು ಬಂದು ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಆ ಸ್ವರ್ಗದಲ್ಲಿ ರಾಜ್ಯ ಮಾಡುವುದಕ್ಕಾಗಿ ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಸ್ವರ್ಗವಾಸಿಗಳಾಗುತ್ತಿದ್ದೀರಿ, ನಿರಾಕಾರ ಪರಮಪಿತ ಪರಮಾತ್ಮನು ಜ್ಞಾನ ಸಾಗರನಾಗಿದ್ದಾರೆ ಆದರೆ ಅವರು ತಿಳಿಸುವುದು ಹೇಗೆ? ಆದ್ದರಿಂದ ಹೇಳುತ್ತಾರೆ - ನಾನು ಈ ಶರೀರದಲ್ಲಿ ಬಂದಿದ್ದೇನೆ, ನನ್ನದು ಡ್ರಾಮಾದಲ್ಲಿ ಈ ಪಾತ್ರವಿದೆ, ನಾನು ಪ್ರಕೃತಿಯ ಆಧಾರ ತೆಗೆದುಕೊಳ್ಳುತ್ತೇನೆ. ಯಾರು ಮೊಟ್ಟ ಮೊದಲಿಗರು ಆಗಿದ್ದಾರೆಯೋ ಅವರದೇ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬಂದು ಪ್ರವೇಶ ಮಾಡುತ್ತೇನೆ ಮತ್ತು ಇವರಿಗೆ ಬ್ರಹ್ಮಾ ಎಂದು ಹೆಸರನ್ನಿಡುತ್ತೇನೆ. ಮೊದಲು ಎಲ್ಲರೂ ಭಟ್ಟಿಯಲ್ಲಿದ್ದಾಗ ಅನೇಕರಿಗೆ ಹೆಸರುಗಳನ್ನು ಇಡಲಾಗಿತ್ತು ಆದರೆ ಅನೇಕರು ಬಿಟ್ಟು ಹೋದರು ಆದ್ದರಿಂದ ಹೆಸರನ್ನು ಇಡುವುದರಿಂದ ಏನು ಲಾಭ. ನೀವು ಆ ಹೆಸರುಗಳನ್ನು ನೋಡಿದರೆ ಆಶ್ಚರ್ಯಚಕಿತರಾಗುವಿರಿ. ಒಂದೇ ಸಲ ಒಟ್ಟಿಗೆ ಎಷ್ಟೊಂದು ರಮಣೀಕ ಹೆಸರುಗಳನ್ನು ಸಂದೇಶಿಯು ತಂದರು, ಆ ಪಟ್ಟಿಯನ್ನು ನಿಮ್ಮ ಬಳಿ ಅವಶ್ಯವಾಗಿ ಇಟ್ಟುಕೊಳ್ಳಬೇಕು. ಸನ್ಯಾಸಿಗಳೂ ಸಹ ಸನ್ಯಾಸ ಮಾಡಿದರೆ ಅವರಿಗೂ ಹೆಸರು ಬದಲಾಗುತ್ತದೆ. ಗೃಹಸ್ಥವನ್ನು ಬಿಟ್ಟು ಬಿಡುತ್ತಾರೆ ಆದರೆ ನೀವಂತೂ ಬಿಡುವುದಿಲ್ಲ. ನೀವು ಬಂದು ಬ್ರಹ್ಮಾರವರ ಮಕ್ಕಳಾಗುತ್ತೀರಿ. ಶಿವನ ಸಂತಾನರಂತೂ ಆಗಿಯೇ ಇದ್ದೀರಿ. ನೀವು ಬಾಪ್ದಾದಾ ಎಂದು ಹೇಳುತ್ತೀರಿ. ಸನ್ಯಾಸಿಗಳಿಗೆ ಈ ರೀತಿಯಿರುವುದಿಲ್ಲ, ಭಲೆ ಹೆಸರು ಬದಲಾಗುತ್ತದೆ ಆದರೆ ಬಾಪ್ದಾದಾ ಎಂಬ ಹೆಸರನ್ನಿಡಿವುದಿಲ್ಲ. ಅವರಿಗೆ ಕೇವಲ ಗುರುವೆಂದು ಹೇಳುತ್ತಾರೆ. ಹಠಯೋಗಿ, ಹದ್ದಿನ ಸನ್ಯಾಸಿಗಳು ಮತ್ತು ರಾಜಯೋಗಿ ಬೇಹದ್ದಿನ ಸನ್ಯಾಸಿಗಳಲ್ಲಿ ರಾತ್ರಿ-ಹಗಲಿನ ಅಂತರವಿದೆ. ಜ್ಞಾನ, ಭಕ್ತಿ, ವೈರಾಗ್ಯ ಎಂದು ಗಾಯನವಿದೆ, ಅವರಿಗೆ ವೈರಾಗ್ಯವೂ ಇರುತ್ತದೆ ಆದರೆ ಅದು ಕೇವಲ ಮನೆ-ಮಠದಿಂದ ವೈರಾಗ್ಯ, ನಿಮಗೆ ಇಡೀ ಪ್ರಪಂಚದಿಂದ ವೈರಾಗ್ಯವಿದೆ. ಸೃಷ್ಟಿಯು ಬದಲಾಗುತ್ತದೆ ಎಂಬುದು ಅವರಿಗೆ ಗೊತ್ತೇ ಇಲ್ಲ. ನಿಮ್ಮದು ಬೇಹದ್ದಿನ ವೈರಾಗ್ಯವಾಗಿದೆ, ಈ ಸೃಷ್ಟಿಯೇ ಸಮಾಪ್ತಿಯಾಗಲಿದೆ. ನಿಮಗಾಗಿ ಈಗ ಹೊಸ ಪ್ರಪಂಚವು ಸ್ಥಾಪನೆಯಾಗುತ್ತಿದೆ, ಅಲ್ಲಿಗೆ ಹೋಗಬೇಕಾಗಿದೆ ಆದರೆ ಪಾವನರಾಗದೇ ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಇದು ಮನಸ್ಸಿಗೂ ನಾಟುತ್ತದೆ, ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು ಯಾವುದನ್ನು ಈಗ ತಂದೆಯು ಸ್ಥಾಪನೆ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯನ್ನು ನೆನಪು ಮಾಡುವುದರಿಂದ ನಾವು ಪುಣ್ಯಾತ್ಮರಾಗಿ ಬಿಡುತ್ತೇವೆ. ಇದು ಬಹಳ ಸಹಜವಾಗಿದೆ ಆದರೆ ನೆನಪು ಮರೆತು ಹೋಗುತ್ತದೆ. ಭಕ್ತಿಮಾರ್ಗದ ರೀತಿ ನೀತಿಗಳೇ ಬೇರೆಯಾಗಿದೆ, ಇದರಿಂದ ಯಾರೂ ಹಿಂತಿರುಗಿ ತಮ್ಮ ಮನೆಗೆ ಹೋಗಲು ಸಾಧ್ಯವಿಲ್ಲ. ಪುನರ್ಜನ್ಮವನ್ನು ಎಲ್ಲರೂ ಅವಶ್ಯವಾಗಿ ತೆಗೆದುಕೊಳ್ಳಲೇಬೇಕಾಗಿದೆ. ಮನೆಗೆ ಹೋಗುವ ಸಮಯವು ಒಂದೇ ಆಗಿದೆ ಆದರೆ ಇಂತಹವರಿಗೆ ಮೋಕ್ಷ ಸಿಕ್ಕಿತೆಂದು ಹೇಳುವುದೆಲ್ಲವೂ ಸುಳ್ಳಾಗಿದೆ. ತಂದೆಯು ತಿಳಿಸುತ್ತಾರೆ - ಯಾವುದೇ ಆತ್ಮನು ಮಧ್ಯದಲ್ಲಿ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಹಾಗೆ ಹೋಗುವುದಾದರೆ ಇಡೀ ಆಟವೇ ಕೆಟ್ಟು ಹೋಗುವುದು. ಪ್ರತಿಯೊಬ್ಬರೂ ಸತೋ, ರಜೋ, ತಮೋದಲ್ಲಿ ಅವಶ್ಯವಾಗಿ ಬರಬೇಕಾಗಿದೆ. ಮೋಕ್ಷಕ್ಕಾಗಿ ಅನೇಕರು ಬರುತ್ತಾರೆ ಆದರೆ ಅವರಿಗೆ ತಿಳಿಸಬೇಕಾಗಿದೆ - ಮೋಕ್ಷವಂತೂ ಸಿಗುವುದಿಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದೆಂದೂ ಬದಲಾಗಲು ಸಾಧ್ಯವಿಲ್ಲ. ನೊಣವು ಇಲ್ಲಿಂದ ಹಾರಿ ಹೋಯಿತೆಂದರೆ ಪುನಃ 5000 ವರ್ಷಗಳ ನಂತರ ಇದೇರೀತಿ ಹಾರಿ ಹೋಗುವುದು. ಇದನ್ನಂತೂ ತಿಳಿದುಕೊಂಡಿದ್ದೀರಿ - ತಂದೆಯು ಎಷ್ಟೊಂದು ಭೋಲಾ ಆಗಿದ್ದಾರೆ, ಪತಿತ-ಪಾವನ ತಂದೆಯು ಪಾತ್ರವನ್ನು ಅಭಿನಯಿಸಲು ತಮ್ಮ ಪರಮಧಾಮದಿಂದ ಬರುತ್ತಾರೆ. ಈ ನಾಟಕವು ಹೇಗೆ ಮಾಡಲ್ಪಟ್ಟಿದೆ, ಇದರಲ್ಲಿ ಯಾರು-ಯಾರು ಮುಖ್ಯವಾಗಿದ್ದಾರೆ ಎಂಬುದನ್ನು ಅವರು ತಿಳಿಸುತ್ತಾರೆ. ಹೇಗೆ ಈ ಪ್ರಪಂಚದಲ್ಲಿ ಎಲ್ಲರಿಗಿಂತ ಸಾಹುಕಾರರು ಯಾರು ಎಂದು ಕೇಳುತ್ತಾರಲ್ಲವೆ ಅದರಲ್ಲಿ ನಂಬರ್ವಾರ್ ಹೆಸರುಗಳನ್ನು ತೆಗೆಯುತ್ತಾರೆ ಆದರೆ ಎಲ್ಲರಿಗಿಂತ ಸಾಹುಕಾರರು ಯಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರು ಅಮೇರಿಕಾ ಸಾಹುಕಾರ ದೇಶವೆಂದು ಹೇಳುತ್ತಾರೆ ಆದರೆ ನಿಮಗೆ ತಿಳಿದಿದೆ - ಸ್ವರ್ಗದಲ್ಲಿ ಎಲ್ಲರಿಗಿಂತ ಸಾಹುಕಾರರು ಈ ಲಕ್ಷ್ಮೀ-ನಾರಾಯಣರೇ ಆಗುತ್ತಾರೆ, ನೀವು ಎಲ್ಲರಿಗಿಂತ ದೊಡ್ಡ ಸಾಹುಕಾರರಾಗಲು ಭವಿಷ್ಯಕ್ಕಾಗಿ ಪುರುಷಾರ್ಥ ಮಾಡುತ್ತೀರಿ, ಇದು ಸ್ಪರ್ಧೆಯಾಗಿದೆ. ಈ ಲಕ್ಷ್ಮೀ-ನಾರಾಯಣರಂತಹ ಸಾಹುಕಾರರು ಯಾರಾದರೂ ಇದ್ದಾರೆಯೇ? ಅಲ್ಲಾ ಅವಲುದ್ದೀನನ ಕಥೆಯನ್ನೂ ಬರೆಯುತ್ತಾರೆ. ಉಜ್ಜಿದರೆ ಸಾಕು ಕುಬೇರನ ಖಜಾನೆಯು ಹೊರ ಬಂದಿತೆಂದು ಅನೇಕ ಪ್ರಕಾರದ ನಾಟಕಗಳನ್ನು ರಚಿಸುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿದೆ - ಈ ಶರೀರವನ್ನು ಬಿಟ್ಟು ಸ್ವರ್ಗದಲ್ಲಿ ಹೋಗುತ್ತೇವೆ. ನಮಗೆ ಕುಬೇರನ ಖಜಾನೆಯು ಸಿಗುವುದು. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ಮಾಯೆಯು ಓಡಿ ಹೋಗುವುದು. ತಂದೆಯನ್ನು ನೆನಪು ಮಾಡದೇ ಇದ್ದರೆ ಮಾಯೆಯು ತೊಂದರೆ ಕೊಡುತ್ತದೆ. ಬಾಬಾ ನಮಗೆ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿರಿ ಆಗ ಬಿರುಗಾಳಿಗಳು ಶಾಂತವಾಗುವುದು. ಬಾಕಿ ನಾಟಕ ಇತ್ಯಾದಿಗಳನ್ನು ಕುಳಿತು ರಚಿಸಿದ್ದಾರೆ, ಇರುವುದೇನೂ ಇಲ್ಲ. ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ - ಕೇವಲ ತಂದೆಯನ್ನು ನೆನಪು ಮಾಡಿದರೆ ನಿಮ್ಮಲ್ಲಿರುವ ತುಕ್ಕು ಬಿಟ್ಟು ಹೋಗುವುದು, ಮತ್ತೇನೂ ಕಷ್ಟ ಕೊಡುವುದಿಲ್ಲ. ಆತ್ಮವು ಯಾವುದು ಪವಿತ್ರ ಸತ್ಯಚಿ ನ್ನವಾಗಿತ್ತೋ ಅದು ಈಗ ಅಸತ್ಯವಾಗಿ ಬಿಟ್ಟಿದೆ. ಮತ್ತೆ ಈ ಯೋಗಾಗ್ನಿಯಿಂದಲೇ ಸತ್ಯವಾಗುವುದು. ಬೆಂಕಿಯಲ್ಲಿ ಹಾಕದ ವಿನಃ ಚಿನ್ನವು ಪವಿತ್ರವಾಗಲು ಸಾಧ್ಯವಿಲ್ಲ, ಇದಕ್ಕೂ ಯೋಗಾಗ್ನಿಯೆಂದು ಹೇಳಲಾಗುತ್ತದೆ, ನೆನಪಿನ ಮಾತಾಗಿದೆ. ಆ ಮನುಷ್ಯರಂತೂ ಅನೇಕ ಪ್ರಕಾರದ ಹಠಯೋಗಗಳನ್ನು ಕಲಿಸುತ್ತಾರೆ. ನಿಮಗಂತೂ ತಂದೆಯು ತಿಳಿಸುತ್ತಾರೆ - ಏಳುತ್ತಾ-ಕುಳಿತುಕೊಳ್ಳುತ್ತಾ ನೆನಪು ಮಾಡಿರಿ, ಆಸನ ಇತ್ಯಾದಿಗಳನ್ನು ನೀವು ಎಲ್ಲಿಯವರೆಗೆ ಮಾಡಲು ಸಾಧ್ಯ! ಇಲ್ಲಂತೂ ನಡೆಯುತ್ತಾ-ತಿರುಗಾಡುತ್ತಾ ಕೆಲಸ ಕಾರ್ಯಗಳನ್ನು ಮಾಡುತ್ತಾ ನೆನಪಿನಲ್ಲಿ ಇರಬೇಕಾಗಿದೆ. ಭಲೆ ಖಾಯಿಲೆಯಿದ್ದಾಗಲೂ ಸಹ ಮಲಗಿಕೊಂಡೇ ತಂದೆಯನ್ನು ನೆನಪು ಮಾಡಬಹುದು. ಶಿವ ತಂದೆಯನ್ನು ನೆನಪು ಮಾಡಿರಿ ಮತ್ತು ಚಕ್ರವನ್ನು ತಿರುಗಿಸಿರಿ ಸಾಕು, ಇದಕ್ಕೆ ಅವರು ಗಂಗಾ ನದಿಯ ತೀರದಲ್ಲಿರಲಿ, ಅಮೃತವು ಬಾಯಲ್ಲಿರಲಿ ಆಗ ಪ್ರಾಣವು ಶರೀರವನ್ನು ಬಿಟ್ಟು ಹೋಗಲಿ ಎಂದು ಬರೆದಿದ್ದಾರೆ. ಗಂಗಾ ತೀರದಲ್ಲಿ ಗಂಗಾ ಜಲವೇ ಸಿಗುತ್ತದೆ, ಆದ್ದರಿಂದ ಮನುಷ್ಯರು ಹರಿದ್ವಾರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ - ನೀವು ಎಲ್ಲಿಯಾದರೂ ಇರಿ, ರೋಗಿಯಾದಾಗಲೂ ಕೇವಲ ತಂದೆಯನ್ನು ನೆನಪು ಮಾಡಿರಿ. ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇರಿ ಆಗ ಪ್ರಾಣವು ತನುವಿನಿಂದ ಹೋಗಲಿ, ಇದೇ ಅಭ್ಯಾಸವನ್ನು ಮಾಡಿರಿ. ಆ ಭಕ್ತಿ ಮಾರ್ಗದ ಮಾತುಗಳಲ್ಲಿ ಮತ್ತು ಈ ಜ್ಞಾನ ಮಾರ್ಗದ ಮಾತುಗಳಲ್ಲಿ ಎಷ್ಟೊಂದು ರಾತ್ರಿ-ಹಗಲಿನ ಅಂತರವಿದೆ. ತಂದೆಯ ನೆನಪಿನಿಂದ ನೀವು ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ, ಅವರಂತೂ ಸೈನಿಕರಿಗೆ ಹೇಳುತ್ತಾರೆ - ಯಾರು ಯುದ್ಧದ ಮೈದಾನದಲ್ಲಿ ಶರೀರ ಬಿಡುವರೋ ಅವರು ಸ್ವರ್ಗದಲ್ಲಿ ಹೋಗುವರು. ವಾಸ್ತವದಲ್ಲಿ ಯುದ್ಧವು ಇದೇ ಆಗಿದೆ. ಇದನ್ನು ಅವರು ಕೌರವರು ಮತ್ತು ಪಾಂಡವರ ಸೈನ್ಯವನ್ನು ತೋರಿಸಿದ್ದಾರೆ. ಮಹಾಭಾರತ ಯುದ್ಧವಾಯಿತು ನಂತರ ಏನಾಯಿತು? ಫಲಿತಾಂಶವೇನೂ ಇಲ್ಲ, ಸಂಪೂರ್ಣ ಘೋರ ಅಂಧಕಾರವಿದೆ, ಏನನ್ನೂ ತಿಳಿದುಕೊಳ್ಳುವುದಿಲ್ಲ ಆದ್ದರಿಂದ ಅಜ್ಞಾನ ಅಂಧಕಾರವೆಂದು ಹೇಳಲಾಗುತ್ತದೆ. ಪುನಃ ಬೆಳಕು ನೀಡಲು ತಂದೆಯು ಬಂದಿದ್ದಾರೆ. ಅವರಿಗೆ ಜ್ಞಾನ ಸಾಗರ, ಜ್ಞಾನ ಪೂರ್ಣನೆಂದು ಹೇಳಲಾಗುತ್ತದೆ, ಈಗ ನಿಮಗೂ ಸಹ ಸಂಪೂರ್ಣ ಜ್ಞಾನವು ಸಿಕ್ಕಿದೆ, ಅದು ಮೂಲವತನವಾಗಿದೆ ಎಲ್ಲಿ ನೀವಾತ್ಮರು ನಿವಾಸ ಮಾಡುತ್ತೀರಿ, ಅದಕ್ಕೆ ಬ್ರಹ್ಮಾಂಡವೆಂದೂ ಹೇಳಲಾಗುತ್ತದೆ. ಇಲ್ಲಿ ರುದ್ರ ಯಜ್ಞವನ್ನು ರಚಿಸಿದಾಗ ತಂದೆಯ ಜೊತೆ ಜೊತೆಗೆ ನೀವಾತ್ಮರಿಗೂ ಸಾಲಿಗ್ರಾಮಗಳ ರೂಪದಲ್ಲಿ ಪೂಜೆ ಮಾಡುತ್ತಾರೆ ಏಕೆಂದರೆ ನೀವು ಅನೇಕರ ಕಲ್ಯಾಣ ಮಾಡುತ್ತೀರಿ, ತಂದೆಯ ಜೊತೆಯಲ್ಲಿ ನೀವು ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಆತ್ಮಿಕ ಸೇವೆ ಮಾಡುತ್ತೀರಿ. ಆದ್ದರಿಂದ ತಂದೆಯ ಜೊತೆ ನೀವು ಮಕ್ಕಳಿಗೂ ಪೂಜೆ ನಡೆಯುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮಾಯೆಯ ಬಿರುಗಾಳಿಗಳನ್ನು ಓಡಿಸಲು ತಂದೆಯನ್ನು ಬಹಳ-ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ, ಯೋಗಾಗ್ನಿಯಿಂದ ಆತ್ಮವನ್ನು ಸತ್ಯ-ಸತ್ಯವಾದ ಚಿನ್ನವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
2. ಬೇಹದ್ದಿನ ವೈರಾಗಿಗಳಾಗಿ ಈ ಹಳೆಯ ಪ್ರಪಂಚವನ್ನು ಮರೆಯಬೇಕಾಗಿದೆ. ಪ್ರಪಂಚವು ಬದಲಾಗುತ್ತಿದೆ, ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ. ಆದ್ದರಿಂದ ಇದರೊಂದಿಗೆ ಸನ್ಯಾಸವನ್ನು ತೆಗೆದುಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯ ಅರ್ಥವನ್ನಂತೂ ತಿಳಿದುಕೊಂಡಿರಿ. ಅವರು ನಾವಾತ್ಮರ ತಂದೆಯಾಗಿದ್ದಾರೆ. ಮುಖ್ಯವಾದುದು ಆತ್ಮವಾಗಿದೆ. ನಾವಾತ್ಮರು ಪರಮಪಿತ ಪರಮಾತ್ಮನ ಸನ್ಮುಖದಲ್ಲಿ ಕುಳಿತುಕೊಂಡಿದ್ದೇವೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಿಮ್ಮ ಆತ್ಮವು ಪರಮಾತ್ಮನ ಸನ್ಮುಖದಲ್ಲಿ ಕುಳಿತಿದೆ. ನಿಮಗಾದರೆ ತನ್ನ ಶರೀರವಿದೆ ಆದರೆ ತಂದೆಗೆ ಇದು ಲೋನ್ ಆಗಿ ತೆಗೆದುಕೊಂಡಿರುವ ಶರೀರವಾಗಿದೆ. ಗುರುಗಳು ಮನುಷ್ಯರನ್ನು ಯಾತ್ರೆಗೆ ಕರೆದುಕೊಂಡು ಹೋಗುತ್ತಾರೆ, ಭಕ್ತಿಮಾರ್ಗದ ಗುರುಗಳು ಅನೇಕರಿದ್ದಾರೆ. ಭಾರತದಲ್ಲಂತೂ ಸ್ತ್ರೀಯು ತನ್ನ ಪತಿಯನ್ನೂ ಸಹ ಗುರು, ಈಶ್ವರನೆಂದು ತಿಳಿದುಕೊಳ್ಳುತ್ತಾಳೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವು ಮಕ್ಕಳಲ್ಲವೆ, ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ. ಬೇಹದ್ದಿನ ಆಸ್ತಿಯನ್ನು ಪುನಃ ಪಡೆಯಲು ಬಂದಿದ್ದೇವೆ. ನಾವೀಗ ಸದ್ಗತಿಯನ್ನು ಪಡೆಯಬೇಕೆಂದು ತಿಳಿದುಕೊಳ್ಳುತ್ತೀರಿ. ಇದಂತೂ ನಿಶ್ಚಯವಿದೆಯಲ್ಲವೆ. ಇಡೀ ಪ್ರಪಂಚವು ದುರ್ಗತಿಯಲ್ಲಿದೆ, ಪತಿತವಾಗಿದೆ. ಪಾವನರಾಗುವುದಕ್ಕಾಗಿ ಕರೆಯುತ್ತಾರೆ ಅಂದಾಗ ಭಾರತದಲ್ಲಿ ಬಹುತೇಕ ಗುರುಗಳಿದ್ದಾರೆ. ಕೆಲವರಿಗೆ 100 ಜನ ಅನುಯಾಯಿಗಳು, ಕೆಲವರಿಗೆ 500 ಮಂದಿ, ಇನ್ನೂ ಕೆಲವರಿಗೆ 50 ಮಂದಿಯೂ ಇರುತ್ತಾರೆ. ಕೆಲವರಿಗೆ ಲಕ್ಷ-ಕೋಟ್ಯಾಂತರ ಅಂದಾಜಿನಲ್ಲಿಯೂ ಇರುತ್ತಾರೆ. ಉದಾ: ಕೋಜರ ಆಗಾಂಕ ಗುರುವಿದ್ದಾರೆ, ಅವರಿಗೆ ಎಷ್ಟೊಂದು ಮಂದಿ ಅನುಯಾಯಿಗಳಿದ್ದಾರೆ, ಅವರಿಗೆ ಎಷ್ಟೊಂದು ಗೌರವ ಕೊಡುತ್ತಾರೆ! ಭಲೆ ಏನಾದರೂ ಮಾಡುವವರಾಗಿರಲಿ ಆದರೆ ಅವರಿಗೆ ಮಾನ್ಯತೆ ಎಷ್ಟೊಂದಿದೆ! ಭಕ್ತಿಮಾರ್ಗದಲ್ಲಿ ಗುರುಗಳು ಅನೇಕರಿದ್ದಾರೆ, ಅವರಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರ ಸಂಪಾದನೆಯು ಪದುಮದಷ್ಟಿರುತ್ತದೆ, ಆಗಾಂಕರ ಸಂಪಾದನೆಯು ಬಹಳಷ್ಟಿದೆ, ಅವರನ್ನು ಅವರ ಶಿಷ್ಯರು ವಜ್ರಗಳಲ್ಲಿ ತುಲಾಭಾರ ಮಾಡಿ ದಾನ ಮಾಡಿದ್ದರು. ಒಂದು ಕಡೆ ವಜ್ರಗಳು ಇನ್ನೊಂದು ಕಡೆ ಅವರ ಗುರು. ವಜ್ರಗಳನ್ನು ದಾನ ಮಾಡುತ್ತಾರೆ, ಅಂದಮೇಲೆ ಎಷ್ಟು ವಜ್ರಗಳಿರಬಹುದು! ಇತ್ತೀಚೆಗೆ ಚಿನ್ನದಲ್ಲಿ ಅನೇಕರನ್ನು ತುಲಾಭಾರ ಮಾಡುತ್ತಾರೆ. ಇನ್ನೊಂದು ಪ್ಲಾಟಿನಂ ಇರುತ್ತದೆ ಅದು ಚಿನ್ನಕ್ಕಿಂತಲೂ ಹೆಚ್ಚು ಬೆಲೆ ಬಾಳುವಂತದ್ದಾಗಿರುತ್ತದೆ. ಅದನ್ನೂ ಸಹ ತುಲಾಭಾರ ಮಾಡಿದ್ದರು. ಗುರುಗಳ ಪದವಿ ನೋಡಿ ಎಷ್ಟಿದೆ... ! ಇಂತಹ ಗುರುಗಳಂತೂ ಅನೇಕರಿದ್ದಾರೆ ಆದರೆ ಈ ಸದ್ಗುರುವಿಗೆ ಏನು ಕೊಡುತ್ತೀರಿ? ಅವರನ್ನು ತುಲಾಭಾರ ಮಾಡುವಿರಾ? ವಜ್ರಗಳಲ್ಲಿ ತುಲಾಭಾರ ಮಾಡುತ್ತೀರಾ? ಅವರಿಗೆ ತೂಕವಿದೆಯೇ? ಶಿವ ತಂದೆಗೆ ತೂಕವೇ ಇಲ್ಲ, ಶಿವನು ಬಿಂದುವಾಗಿದ್ದಾರೆ. ಅವರನ್ನು ನೀವು ಹೇಗೆ ತುಲಾಭಾರ ಮಾಡಬಲ್ಲಿರಿ! ಈ ನಿಮ್ಮ ಗುರುವು ಎಷ್ಟು ವಿಚಿತ್ರವಾಗಿದ್ದಾರೆ, ಎಲ್ಲದಕ್ಕಿಂತ ಹಗುರ. ಸಂಪೂರ್ಣ ಸೂಕ್ಷ್ಮವಾಗಿದ್ದಾರೆ. ನಿಮ್ಮ ಗುರು ಒಬ್ಬರೇ ಆಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ದಾತನಾಗಿದ್ದಾರೆ, ಭಗವಂತನೆಂದೂ ಏನನ್ನೂ ತೆಗೆದುಕೊಳ್ಳುವುದಿಲ್ಲ, ಅವರು ಕೊಡುತ್ತಾರೆ. ಈಶ್ವರಾರ್ಥವಾಗಿ ಎಲ್ಲರೂ ದಾನ ಮಾಡುತ್ತಾರೆ ಆಗ ಅದಕ್ಕೆ ಪ್ರತಿಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ ಎಂದು ತಿಳಿಯುತ್ತಾರೆ. ಕಾಮನೆಯನ್ನಂತೂ ಇಟ್ಟುಕೊಳ್ಳುತ್ತಾರೆ. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ. ಇವರ ತರಹ ನಿಷ್ಕಾಮ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನಿಷ್ಕಾಮ ಸೇವೆಯೂ ನೋಡಿ ಹೇಗಿದೆ, ಮಕ್ಕಳನ್ನು ವಿಶ್ವದ, ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ವಿಶ್ವದ ಮಾಲೀಕನಾಗುವುದಿಲ್ಲ. ಅವರಿಗೆ ಸುಖದ ಸಾಗರ, ಶಾಂತಿಯ ಸಾಗರ, ಪವಿತ್ರತೆಯ ಸಾಗರನೆಂದು ಹೇಳಲಾಗುತ್ತದೆ. ಮಕ್ಕಳಿಗೆ ಪ್ರತಿಯೊಂದು ಮಾತನ್ನು ಬಹಳ ಚೆನ್ನಾಗಿ ತಿಳಿಸಲಾಗುತ್ತದೆ. ಒಬ್ಬ ತಂದೆಯಿಂದಲೇ ನಿಮಗೆ ಜೀವನ್ಮುಕ್ತಿ ಸಿಗುತ್ತದೆ. ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ನಿಶ್ಚಯ ಮಾಡಿದರೆ ಸಾಕು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ, ಇವರಿಗೆ ಜ್ಞಾನ ಸಾಗರನೆಂದು ಹೇಳುತ್ತಾರೆ. ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿ ಗಿಡ-ಮರಗಳನ್ನು ಲೇಖನಿಯನ್ನು ಮಾಡಿ ಬರೆದರೂ ಸಹ ಇವರ ಮಹಿಮೆಯು ಮುಗಿಯುವುದಿಲ್ಲ. ನೀವು ಆರಂಭದಿಂದ ಹಿಡಿದು ಬರೆಯುತ್ತಾ ಹೋಗಿ. ನಿಮ್ಮದು ಎಷ್ಟೊಂದು ಪುಸ್ತಕಗಳಾಗಿ ಬಿಡುವುದು! ಈ ಜ್ಞಾನವು ಬಹಳ ಅತ್ಯಮೂಲ್ಯವಾಗಿದೆ, ಇದನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ - ಇದು ಪರಂಪರೆಯಂತೂ ನಡೆಯುವುದಿಲ್ಲ. ಈಗ ನಿಮಗೆ ಸಾರವು ಸಿಗುತ್ತದೆ. ತಂದೆಯು ಬಂದು ಮಕ್ಕಳಿಗೆ ತಮ್ಮ ಪರಿಚಯ ನೀಡುತ್ತಾರೆ. ಅದೇ ಸಾಕಷ್ಟು ಆಗುತ್ತದೆ. ತಂದೆಯ ಪರಿಚಯ ಕೊಡುವುದರಿಂದ, ರಚಯಿತನನ್ನು ಅರಿತುಕೊಳ್ಳುವುದರಿಂದ, ರಚನೆಯ ಜ್ಞಾನವೂ ಬಂದು ಬಿಡುತ್ತದೆ. ಬುದ್ಧಿಯೂ ಹೇಳುತ್ತದೆ - ಸತ್ಯಯುಗದಲ್ಲಿ ಯಾರು ಬರುವರೋ ಅವರದು ಹೆಚ್ಚು ಪುನರ್ಜನ್ಮಗಳಿರುವುದು, ಚಕ್ರದಲ್ಲಿ ಯಾರು ಮೊದಲು ಬಂದಿರುವರೋ ಅವರೇ ಬರುತ್ತಾರೆ. ಈ ಚಕ್ರವನ್ನೂ ಸಹ ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ, ನಮ್ಮ ತೀರ್ಥ ಸ್ಥಾನವು ಭಿನ್ನವೆಂದು ಗೀತೆಯಲ್ಲಿಯೂ ಕೇಳಿದಿರಿ, ಆ ತೀರ್ಥ ಯಾತ್ರೆಗಳನ್ನಂತೂ ಜನ್ಮ-ಜನ್ಮಾಂತರದಿಂದಲೂ ಮಾಡುತ್ತಾ ಬಂದಿದ್ದೀರಿ, ಇದು ಕೇವಲ ನಿಮ್ಮ ಒಂದು ಜನ್ಮದ ಯಾತ್ರೆಯಾಗಿದೆ. ಈ ಆತ್ಮಿಕ ಯಾತ್ರೆಯಲ್ಲಿ ಸ್ವಲ್ಪವೂ ಕಷ್ಟವಿಲ್ಲ, ಜ್ಞಾನ ಕೊಡುವವರು ಒಬ್ಬರೇ ಸದ್ಗುರುವಾಗಿದ್ದಾರೆ. ಸದ್ಗತಿಯಂತೂ ಯಾರಿಗೂ ಆಗುವುದಿಲ್ಲ, ಅವರು ಸುಪ್ರೀಂ ಜ್ಞಾನ ಸಾಗರನಾಗಿದ್ದಾರೆ, ಸರ್ವರ ಸದ್ಗತಿಯಾಗಿ ಬಿಡುತ್ತದೆ ಅಂದಮೇಲೆ ಇನ್ನೇನು ಬೇಕು! ತತ್ವಗಳೂ ಸತೋಪ್ರಧಾನವಾಗಿ ಬಿಡುತ್ತವೆ. ಇಲ್ಲಿ ತಮೋಪ್ರಧಾನರಿರುವ ಕಾರಣ ವಾಯು ಇತ್ಯಾದಿಗಳೂ ಸಹ ಅದೇರೀತಿ ತಮೋಪ್ರಧಾನವಾಗುತ್ತದೆ, ಎಷ್ಟೊಂದು ಭೂಕಂಪಗಳಾಗುತ್ತವೆ. ಸತ್ಯಯುಗದಲ್ಲಿ ದುಃಖ ಕೊಡುವಂತಹ ಯಾವುದೇ ವಸ್ತು ಇರುವುದಿಲ್ಲ. ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆ. ನೀವು ಅವರ ಮಕ್ಕಳಾಗಿದ್ದೀರಿ ಆದ್ದರಿಂದ ಯಾರಿಗೂ ದುಃಖವನ್ನು ಕೊಡಬಾರದು. ಎಲ್ಲರಿಗೆ ಸುಖದ ಆಸ್ತಿಯನ್ನು ಪಡೆಯುವ ಈ ಮಾರ್ಗವನ್ನು ತಿಳಿಸಬೇಕಾಗಿದೆ. |
ಈಗ ತಂದೆಯು ತಿಳಿಸುತ್ತಾರೆ - ನೀವು ಸುಖವನ್ನೇ ಕೊಡಬೇಕಾಗಿದೆ, ತಂದೆಯು ನಿಮಗೆ ಅರ್ಧಕಲ್ಪಕ್ಕಾಗಿ ಇಂತಹ ಸುಖವನ್ನು ಕೊಡುತ್ತಾರೆ, ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಲು ನಾವು ಇಲ್ಲಿಗೆ ಬಂದಿದ್ದೇವೆ. ನೀವು ವಿದ್ಯಾರ್ಥಿಗಳಾಗಿದ್ದೀರಲ್ಲವೆ. ನಿಮ್ಮ ಹೃದಯದಲ್ಲಿದೆ – ಶಿವ ತಂದೆಯಿಂದ ಸ್ವರ್ಗದ ಸುಖವನ್ನು ತೆಗೆದುಕೊಳ್ಳುತ್ತೇವೆ, ಅದರಿಂದ ಎಲ್ಲಾ ದುಃಖಗಳೂ ದೂರವಾಗಿ ಬಿಡುತ್ತವೆ. ತಂದೆಯು ನಮಗೆ ಎಚ್ಚರವಾಗಲು ಸಂಜೀವಿನ ಮೂಲಿಕೆಯನ್ನು ಕೊಡುತ್ತಾರೆ ನಂತರ 21 ಜನ್ಮಗಳವರೆಗೂ ಎಂದೂ ಮೂರ್ಛಿತರಾಗುವುದಿಲ್ಲ. ಆ ಸಂಜೀವಿನಿ ಮೂಲಿಕೆಯಾಗಿದೆ - ಮನ್ಮನಾಭವ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಅವರಿಗೆ ನಿರಾಕಾರ-ನಿರಹಂಕಾರಿ ಎಂದು ಹೇಳಲಾಗುತ್ತದೆ. ಯಾವ ತನುವಿನಲ್ಲಿ ಬರುವರೋ ಅವರು ಸಾಧಾರಣರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಡಿಯರ್ ಚಿಲ್ಡ್ರನ್, ಐ ಆಮ್ ಯುವರ್ ಒಬಿಡಿಯಂಟ್ ಫಾದರ್ (ಪ್ರಿಯ ಮಕ್ಕಳೇ, ನಾನು ನಿಮ್ಮ ವಿಧೇಯ ತಂದೆಯಾಗಿದ್ದೇನೆ) ಹಿರಿಯ ವ್ಯಕ್ತಿಗಳು ಯಾವಾಗಲೂ ನಾನು ನಿಮ್ಮ ವಿಧೇಯ ಸೇವಕ ಎಂದು ಬರೆಯುತ್ತಾರೆ. ತಮಗೆ ಎಂದೂ ಶ್ರೀ ಎಂದು ಬರೆಯುವುದಿಲ್ಲ. ಇತ್ತೀಚೆಗಂತೂ ಶ್ರೀ ಶ್ರೀ ಎಂದು ಬರೆಯುತ್ತಾರೆ. ತಾವೇ ತಮಗೆ ಶ್ರೀ ಶ್ರೀ ಎಂದು ಬರೆದುಕೊಳ್ಳುತ್ತಾರೆ. ತಂದೆಯಂತೂ ನಿರಾಕಾರಿ ನಿರಹಂಕಾರಿಯಾಗಿದ್ದಾರೆ. ನೀವೀಗ ಅವರ ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಉಳಿದೆಲ್ಲರೂ ಭಕ್ತಿ ಮಾರ್ಗದ ಅನೇಕ ಗುರುಗಳಿದ್ದಾರೆ. ಗುರುಗಳಿಗೂ ಗುರುಗಳಿರುತ್ತಾರೆ ಆದರೆ ಇವರಿಗೆ ಯಾರೂ ಗುರುವಿಲ್ಲ. ಇವರು ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವಾಗಿದ್ದಾರೆ. |
ನೀವು ತಿಳಿದುಕೊಂಡಿದ್ದೀರಿ - ಆತ್ಮವೇ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತಿದೆ. ತಂದೆಯೂ ಸಹ ಆತ್ಮನಲ್ಲವೆ, ಅವರಲ್ಲಿಯೂ ಗುಣಗಳಿವೆ. ನಿಮ್ಮ ಗುಣಗಳು ಬೇರೆ-ಬೇರೆಯಾಗಿ ಬಿಡುತ್ತವೆ. ಈ ಸಮಯದಲ್ಲಿ ಯಾವ ಗುಣಗಳು ನಿಮ್ಮಲ್ಲಿವೆಯೋ ಅದೇ ತಂದೆಯದಾಗಿದೆ. ಮತ್ತೆ ಸತ್ಯಯುಗದಲ್ಲಿ ನಿಮ್ಮದು ದೈವೀ ಗುಣಗಳಾಗುತ್ತವೆ. ತಂದೆಯು ಜ್ಞಾನ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ. ಕೃಷ್ಣನ ಮಹಿಮೆಯು ಬೇರೆಯಾಗಿದೆ. ಶಿವ ತಂದೆಗೆ 16 ಕಲಾ ಸಂಪೂರ್ಣನೆಂದು ಹೇಳಲು ಸಾಧ್ಯವಿಲ್ಲ. ಅವರಂತೂ ಸ್ಥಿರವಾಗಿದ್ದಾರೆ. ತಂದೆಯು ಹೇಳುತ್ತಾರೆ - ಈ ಬಿರುದನ್ನು ನನಗೆ ಕೊಡಲು ಸಾಧ್ಯವಿಲ್ಲ. ನಾನು ಪುನಃ ಸರ್ವಗುಣ ಸಂಪನ್ನನಾಗಲು ನಾನು ವಿಕಾರಿಯಾಗುತ್ತೇನೆಯೇ! ಕೃಷ್ಣನ ಹಾಗೆ ನನ್ನ ಮಹಿಮೆ ಮಾಡುವುದಿಲ್ಲ. ಈ ಜ್ಞಾನವನ್ನು ಯಾರು ಕಲ್ಪದ ಮೊದಲು ಕೇಳಿದ್ದಾರೆಯೋ ಅವರೇ ಬರುತ್ತಾರೆ, ಬಂದು ತಂದೆಯಿಂದ ಕೇಳುತ್ತಾರೆ ಮತ್ತು ತಂದೆಯನ್ನು ನೆನಪು ಮಾಡುತ್ತಾರೆ. ಅಂತಿಮದಲ್ಲಿ ಅಯ್ಯೊ, ಅಯ್ಯೊ ಎಂದು ಅಳುತ್ತಾರೆ, ನಂತರ ಜಯ ಜಯಕಾರವಾಗಿ ಬಿಡುತ್ತದೆ. ನೀವೀಗ ಯಾತ್ರೆಯ ರಹಸ್ಯವನ್ನೂ ತಿಳಿದುಕೊಂಡಿದ್ದೀರಿ - ಈ ಯಾತ್ರೆಯಿಂದ ಮತ್ತೆ ನೀವು ಮೃತ್ಯುಲೋಕಕ್ಕೆ ಹಿಂತಿರುಗುವುದಿಲ್ಲ. ಆ ತೀರ್ಥ ಯಾತ್ರೆಗಳಿಂದ ಪುನಃ ಮನೆಗೆ ಹಿಂತಿರುಗಿ ಬರುತ್ತಾರೆ. ಎಷ್ಟೊಂದು ಮನುಷ್ಯರು ಸ್ನಾನ ಮಾಡಲು ಹೋಗುತ್ತಾರೆ, ಭಕ್ತಿಯ ವಿಸ್ತಾರ ನೋಡಿ ಎಷ್ಟೊಂದಿದೆ! ಹೇಗೆ ವೃಕ್ಷವು ಎಷ್ಟು ದೊಡ್ಡದಾಗಿರುತ್ತದೆ, ಬೀಜವಂತೂ ಬಹಳ ಚಿಕ್ಕದಾಗಿರುತ್ತದೆ ಹಾಗೆಯೇ ಭಕ್ತಿಯ ವಿಸ್ತಾರವು ಎಷ್ಟೊಂದಿದೆ! ಜ್ಞಾನ ಸಾಗರದಲ್ಲಿ ಒಂದು ಸಲ ಮುಳುಗಿದರೂ ಸಹ ನಿಮ್ಮದು ಸದ್ಗತಿ ಆಗಿ ಬಿಡುತ್ತದೆ, ಭಕ್ತಿಯಲ್ಲಿ ಇಳಿಯುತ್ತಾ-ಇಳಿಯುತ್ತಾ ಅರ್ಧಕಲ್ಪ ಹಿಡಿಸುತ್ತದೆ, ಇಲ್ಲಿ ನಿಮಗೆ ಏಣಿಯನ್ನು ಹತ್ತುವುದರಲ್ಲಿ ಒಂದು ಸೆಕೆಂಡ್ ಸಾಕು. ಎಷ್ಟು ಒಳ್ಳೆಯ ಲಿಫ್ಟ್ ಆಗಿದೆ. ಕೆಳಗಿನಿಂದ ಒಮ್ಮೆಲೆ ಮೇಲೆ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಇದಕ್ಕೆ ಏರುವ ಕಲೆಯಿಂದ ಸರ್ವರ ಉದ್ಧಾರವೆಂದು ಹೇಳಲಾಗುತ್ತದೆ. ಸರ್ವರ ಸದ್ಗತಿದಾತನು ತಂದೆಯೊಬ್ಬರೇ ಆಗಿದ್ದಾರೆ. ಈಗ ಜ್ಞಾನ-ಭಕ್ತಿಯ ಅಂತರವನ್ನು ನೋಡಿದಿರಿ. ಜ್ಞಾನ, ಭಕ್ತಿ, ವೈರಾಗ್ಯವಲ್ಲವೆ! ಸನ್ಯಾಸಿಗಳದು ಮಿತವಾದ ವೈರಾಗ್ಯವಾಗಿದೆ, ತಂದೆಯು ತಿಳಿಸಿದ್ದಾರೆ - ಎರಡು ಪ್ರಕಾರದ ವೈರಾಗ್ಯವಿದೆ, ಒಂದು ಹದ್ದಿನ ವೈರಾಗ್ಯ ಯಾವುದರಿಂದ ಯಾರದೇ ಸದ್ಗತಿ ಆಗುವುದಿಲ್ಲ. ಇನ್ನೊಂದು ಬೇಹದ್ದಿನ ವೈರಾಗ್ಯವಾಗಿದೆ, ಇದರಿಂದ ನಿಮ್ಮ ಸದ್ಗತಿ ಆಗಿ ಬಿಡುತ್ತದೆ. ಸದ್ಗತಿಗಾಗಿ ಈಗ ನೀವು ಮಕ್ಕಳಿಗೆ ಶ್ರೇಷ್ಠಾತಿ ಶ್ರೇಷ್ಠರಾಗುವ ಮತ ಸಿಗುತ್ತದೆ. ಈಗ ಶ್ರೀಮತದ ಅನುಸಾರ ಶ್ರೇಷ್ಠ ಪ್ರಪಂಚದ ಸ್ಥಾಪನೆಯಾಗುತ್ತಿದೆ. ರಾವಣನ ಮತದ ಅನುಸಾರ ಈ ಭ್ರಷ್ಟ ಪ್ರಪಂಚವಾಗಿದೆ. ನಾವು ಶ್ರೇಷ್ಠರಾಗುತ್ತಿದ್ದೇವೆ, ಈ ಮಾತುಗಳು ನಿಮಗೇ ತಿಳಿದಿದೆ. ಪ್ರಪಂಚದವರಿಗೆ ಏನೂ ತಿಳಿದಿಲ್ಲ. ಈ ಬ್ರಹ್ಮಾಕುಮಾರಿಯರು ವಿನಾಶ ಮಾಡಿಸುವವರಾಗಿದ್ದಾರೆಂದು ಹೇಳುತ್ತಾರೆ ಆದರೆ ಸತ್ಯವಾಗಿ ವಿನಾಶವಂತೂ ಆಗಲೇಬೇಕಾಗಿದೆ, ಇದರಿಂದಲೇ ಕಲ್ಯಾಣವಾಗುವುದು. ಕಲ್ಯಾಣಕಾರಿ ತಂದೆಯು ಬರುತ್ತಾರೆ ಆಗಲೇ ಮಹಾಭಾರತ ಯುದ್ಧವಾಗುತ್ತದೆ. ಈ ಬ್ರಹ್ಮಾಕುಮಾರಿಯರು ವಿನಾಶ ಮಾಡುತ್ತಾರೆ ಎಂದು ನಾವು ಹೇಳುತ್ತಿದ್ದೆವಲ್ಲವೆ ಎನ್ನುತ್ತಾರೆ. ಅವಶ್ಯವಾಗಿ ವಿನಾಶವಂತೂ ಆಗಲೇಬೇಕಾಗಿದೆ, ನಾವು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತೇವೆ, ಹಳೆಯದರ ನಂತರ ಹೊಸದು ಬರಲೇಬೇಕಾಗಿದೆ. ಕಲ್ಪ-ಕಲ್ಪವೂ ವಿನಾಶವಾಗುತ್ತದೆ, ಇದರಿಂದಲೇ ಭಾರತದಲ್ಲಿ ಸ್ವರ್ಗದ ಬಾಗಿಲು ತೆರೆಯುತ್ತದೆ ಆದರೆ ಇದನ್ನು ಮನುಷ್ಯರು ತಿಳಿದುಕೊಳ್ಳುವುದಾದರೂ ಹೇಗೆ? ಮುಂದೆ ಹೋದಂತೆ ಅನೇಕರು ತಿಳಿದುಕೊಳ್ಳುವರು. ತಂದೆಯು ಬರುತ್ತಾರೆ, ಇಡೀ ಹಳೆಯ ಪ್ರಪಂಚವು ಸ್ವಾಹಾ ಆಗಿ ಬಿಡುತ್ತದೆ, ನಿಮ್ಮ ಈ ಯಜ್ಞವಂತೂ ಅದ್ಭುತವಾಗಿದೆ, ಇದರಲ್ಲಿ ಎಲ್ಲವೂ ಆಹುತಿ ಆಗಬೇಕಾಗಿದೆ. ಇದೂ ಸಹ ನಿಮಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ಪಾಂಡವರ ವಿಜಯವಾಗುವುದು ಮತ್ತೆಲ್ಲರೂ ಸಮಾಪ್ತಿಯಾಗುವರು. ನೀವು ಪಾಂಡವರೇ ಉಳಿಯುತ್ತೀರಿ ನಂತರ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ಈ ಜ್ಞಾನವು ಬಹಳ ಅದ್ಭುತವಾಗಿದೆ. ಎಲ್ಲರ ದುಃಖಹರ್ತ-ಸುಖಕರ್ತ ಸದ್ಗತಿ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಎಷ್ಟು ಮಧುರ, ಎಷ್ಟೊಂದು ಪ್ರಿಯ ತಂದೆಯಾಗಿದ್ದಾರೆ. ಮಧುರ ತಂದೆಯೇ, ತಾವು ಬಂದರೆ ನಾವು ನಿಮಗೆ ಬಲಿಹಾರಿ ಆಗುತ್ತೇವೆ. ನನ್ನವರು ನಿಮ್ಮ ಹೊರತು ಮತ್ತ್ಯಾರೂ ಇಲ್ಲವೆಂದು ಹೇಳುತ್ತಾ ಬಂದಿದ್ದೀರಿ ಆದರೆ ಇದರ ಅರ್ಥವು ಮನೆ-ಮಠವನ್ನು ಬಿಟ್ಟು ಇಲ್ಲಿ ಬಂದು ಕುಳಿತುಕೊಳ್ಳುತ್ತೇವೆ ಎಂದಲ್ಲ. ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ಏಳು ದಿನಗಳ ಕೋರ್ಸ್ ತೆಗೆದುಕೊಂಡು ಮತ್ತೆ ಎಲ್ಲಿಯಾದರೂ ಹೋಗಿರಿ - ಮನ್ಮನಾಭವ. ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಆಸ್ತಿಯನ್ನು ಪಡೆಯಬೇಕಾಗಿದೆ. ಕೇವಲ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ, ಇದರಿಂದಲೇ ದೋಣಿಯು ಪಾರಾಗುವುದು. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಪವಿತ್ರರಾಗಿರಬೇಕಾಗಿದೆ, ಛೀ ಛೀ ಪದಾರ್ಥಗಳನ್ನು ತಿನ್ನಬಾರದು. ಮುರುಳಿಯಂತೂ ಅವಶ್ಯವಾಗಿ ಸಿಗುತ್ತದೆ. ಕೆಲವೊಂದು ಸಮಯದಲ್ಲಿ ಮುರುಳಿಯೂ ಸಿಗುವುದಿಲ್ಲ, ಆಪತ್ತುಗಳು ಬರುತ್ತವೆ, ಏರುಪೇರುಗಳಾಗುತ್ತವೆ ಆಗ ಮುರುಳಿಯೂ ಸಿಗುವುದಿಲ್ಲ. ನೀವು ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಇದೇನೂ ಉಳಿಯುವುದಿಲ್ಲ, ಎಲ್ಲವೂ ಭಸ್ಮವಾಗಿ ಬಿಡುವುದು. ಪ್ರಳಯವಂತೂ ಆಗುವುದಿಲ್ಲ, ಪ್ರಪಂಚವಂತೂ ಒಂದೇ ಆಗಿದೆ, ಹೊಸದರಿಂದ ಹಳೆಯದಾಗುತ್ತದೆ. ಹೊಸ ಪ್ರಪಂಚ, ಹಳೆಯ ಪ್ರಪಂಚವೆಂದು ಹೇಳಲಾಗುತ್ತದೆ. ಈಗಂತೂ ಹೇಳುತ್ತೀರಿ, ಇದು ಹಳೆಯ ಪ್ರಪಂಚವಾಗಿದೆ, ಇನ್ನು ಸ್ವಲ್ಪವೇ ಸಮಯವಿದೆ, ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಅವರು ಹೇಳುತ್ತಾರೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳು ನಡೆಯುವುದೆಂದು ಹೇಳುತ್ತಾರೆ. ವಾಸ್ತವದಲ್ಲಿ ಇದು 5000 ವರ್ಷಗಳ ಚಕ್ರವಾಗಿದೆ, ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಮನುಷ್ಯರು ಬಹಳ ಕಲ್ಲು ಬುದ್ಧಿಯವರಾಗಿದ್ದಾರೆ, ಪಾತ್ರಧಾರಿಗಳಾಗಿಯೂ ಡ್ರಾಮಾದ ರಚಯಿತ, ನಿರ್ದೇಶಕರನ್ನು ಅರಿತುಕೊಂಡಿಲ್ಲ ಅಂದಮೇಲೆ ಅವರಿಗೆ ಏನು ಹೇಳುವುದು! ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನಂತೂ ತಿಳಿದುಕೊಳ್ಳಬೇಕಲ್ಲವೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಬುದ್ಧಿಯಲ್ಲಿ ಧಾರಣೆ ಮಾಡಿಕೊಂಡು ಅನ್ಯರಿಗೆ ಧಾರಣೆ ಮಾಡಿಸುತ್ತಾರೆ. ಅಂತಹವರು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನನ್ನಲ್ಲಿ ಯಾವ ಜ್ಞಾನವಿದೆಯೋ ಅದನ್ನು ಈಗ ನಿಮಗೆ ತಿಳಿಸುತ್ತಿದ್ದೇನೆ. ಡ್ರಾಮಾನುಸಾರ ನಾನು ಪುನರಾವರ್ತನೆ ಮಾಡುತ್ತೇನೆ, ನನ್ನದೂ ಡ್ರಾಮಾದಲ್ಲಿ ಪಾತ್ರವಿದೆ, ಭಕ್ತಿಮಾರ್ಗದಲ್ಲಿಯೂ ಪಾತ್ರವನ್ನು ಅಭಿನಯಿಸಿದೆನು, ಈಗ ಬಂದು ನಿಮಗೆ ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಪರಿಚಯವನ್ನು ಕೊಡುತ್ತೇನೆ, ನಾನೂ ಸಹ ಡ್ರಾಮಾದ ಬಂಧನದಲ್ಲಿದ್ದೇನೆ, ನನ್ನ ಪರಿಚಯವನ್ನು ಕೊಡಲು ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿಸಲು ಒಂದೇಬಾರಿ ಬರುತ್ತೇನೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ವಿಧೇಯರಾಗಬೇಕಾಗಿದೆ, ಎಂದೂ ಯಾವುದೇ ಮಾತಿನಲ್ಲಿ ತಮ್ಮ ಅಹಂಕಾರವನ್ನು ತೋರಿಸಬಾರದು. ನಿರಾಕಾರಿ ಮತ್ತು ನಿರಹಂಕಾರಿಗಳಾಗಿ ಇರಬೇಕಾಗಿದೆ. |
2. ತಂದೆ, ಶಿಕ್ಷಕ ಮತ್ತು ಸದ್ಗುರುವಿನ ಅಂತರವನ್ನು ತಿಳಿದುಕೊಂಡು ನಿಶ್ಚಯ ಬುದ್ಧಿಯವರಾಗಿ ಶ್ರೀಮತದಂತೆ ನಡೆಯಬೇಕಾಗಿದೆ, ಆತ್ಮಿಕ ಯಾತ್ರೆಯಲ್ಲಿ ಇರಬೇಕಾಗಿದೆ. |
ಬ್ರಹ್ಮಾ ಮಾತಾಪಿತರಿಗೆ ತನ್ನ ಬ್ರಾಹ್ಮಣ ಮಕ್ಕಳ ಪ್ರತಿ ಎರಡು ಶುಭ ಆಸೆಗಳು |
ಇಂದು ವಿಶ್ವದ ಸರ್ವ ಆತ್ಮರ ಸರ್ವ ಆಸೆಗಳನ್ನು ಪೂರ್ಣ ಮಾಡುವಂತಹ ಬಾಪ್ದಾದಾ ತನ್ನ ಶುಭ ಆಸೆಗಳ ಆತ್ಮಿಕ ದೀಪಗಳನ್ನು ನೋಡುತ್ತಿದ್ದರು. ಹೇಗೆ ತಂದೆಯು ಸರ್ವರ ಶುಭ ಆಸೆಗಳನ್ನು ಪೂರ್ಣ ಮಾಡುವವರಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ತಂದೆಯ ಶುಭ ಆಸೆಗಳನ್ನು ಪೂರ್ಣ ಮಾಡುವವರಾಗಿದ್ದೀರಿ. ತಂದೆಯು ಮಕ್ಕಳ ಆಸೆಗಳನ್ನು ಪೂರ್ಣ ಮಾಡುತ್ತಾರೆ, ಮಕ್ಕಳು ತಂದೆಯದನ್ನು ಪೂರ್ಣ ಮಾಡುತ್ತೀರಿ. ಮಕ್ಕಳ ಪ್ರತಿ ತಂದೆಗೆ ಯಾವ ಶುಭ ಆಸೆಗಳಿದೆ ಎಂಬುದನ್ನು ತಿಳಿದುಕೊಂಡಿದ್ದೀರಲ್ಲವೆ? ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ತಂದೆಯ ಆಶಾ ದೀಪವಾಗಿದ್ದೀರಿ. ದೀಪ ಅರ್ಥಾತ್ ಸದಾ ಜಾಗೃತ ಜ್ಯೋತಿ. ಸದಾ ಬೆಳಗುತ್ತಿರುವ ದೀಪವು ಪ್ರಿಯವೆನಿಸುತ್ತದೆ. ಒಂದುವೇಳೆ ಪದೇ-ಪದೇ ಟಿಮ್ಟಿಮಾ ಎನ್ನುವ ದೀಪವಾಗಿದ್ದರೆ ಹೇಗೆನಿಸುವುದು? ತಂದೆಯ ಸರಳ ಆಸೆಗಳನ್ನು ಪೂರ್ಣ ಮಾಡುವವರು ಅರ್ಥಾತ್ ಸದಾ ಬೆಳಗುತ್ತಿರುವ ದೀಪಗಳನ್ನು ಬಾಪ್ದಾದಾ ನೋಡಿ ಹರ್ಷಿತರಾಗುತ್ತಾರೆ. ಇಂದು ಬಾಪ್ದಾದಾ ಪರಸ್ಪರ ವಾರ್ತಾಲಾಪ ಮಾಡುತ್ತಿದ್ದರು. ಬಾಪ್ದಾದಾರವರ ಮುಂದೆ ಸದಾ ಯಾರಿರುತ್ತಾರೆ? ಮಕ್ಕಳಿರುತ್ತಾರಲ್ಲವೆ ಅಂದಾಗ ಮಕ್ಕಳ ಪ್ರತಿಯೇ ವಾರ್ತಾಲಾಪ ಮಾಡುತ್ತಾರಲ್ಲವೆ. ಮಕ್ಕಳ ಪ್ರತಿ ಇಲ್ಲಿಯವರೆಗೆ ಯಾವುದಾದರೂ ಶುಭ ಆಸೆಗಳಿದೆಯೇ ಎಂದು ಶಿವ ತಂದೆಯು ಬ್ರಹ್ಮಾ ತಂದೆಯೊಂದಿಗೆ ಕೇಳುತ್ತಿದ್ದರು. ಆಗ ಬ್ರಹ್ಮಾ ತಂದೆಯು ತಿಳಿಸಿದರು - ಮಕ್ಕಳು ನಂಬರ್ವಾರ್ ತನ್ನ ಶಕ್ತಿಯ ಪ್ರಮಾಣ, ಸ್ನೇಹದ ಪ್ರಮಾಣ, ಗಮನದ ಪ್ರಮಾಣ ಸದಾ ತಂದೆಯ ಶುಭ ಆಸೆಗಳನ್ನು ಪೂರ್ಣ ಮಾಡುವುದರಲ್ಲಿ ಅವಶ್ಯವಾಗಿ ತೊಡಗಿದ್ದಾರೆ, ಪ್ರತಿಯೊಬ್ಬರ ಹೃದಯದಲ್ಲಿ ಉಲ್ಲಾಸ-ಉತ್ಸಾಹವೂ ಅವಶ್ಯವಾಗಿ ಇದೆ - ತಂದೆಯು ನಮ್ಮ ಸರ್ವ ಆಸೆಗಳನ್ನು ಪೂರ್ಣ ಮಾಡಿದ್ದಾರೆಂದ ಮೇಲೆ ನಾವೂ ಸಹ ತಂದೆಯ ಸರ್ವ ಆಸೆಗಳನ್ನು ಪೂರ್ಣ ಮಾಡಿಯೇ ತೋರಿಸಬೇಕೆಂದು. ಆದರೆ ಮಾಡಿ ತೋರಿಸುವುದರಲ್ಲಿ ನಂಬರ್ವಾರ್ ಆಗಿ ಬಿಡುತ್ತಾರೆ. ಆಲೋಚಿಸುವುದು ಮತ್ತು ಮಾಡಿ ತೋರಿಸುವುದರಲ್ಲಿ ಅಂತರವಾಗಿ ಬಿಡುತ್ತದೆ. ಕೆಲಕೆಲವು ಮಕ್ಕಳು ಈ ರೀತಿಯೂ ಇದ್ದಾರೆ ಆಲೋಚಿಸುವುದು ಮತ್ತು ಮಾಡಿ ತೋರಿಸುವುದರಲ್ಲಿ ಸಮಾನತೆಯಿದೆ ಆದರೆ ಎಲ್ಲರೂ ಇದೇ ರೀತಿ ಇಲ್ಲ. ಯಾವ ಸಮಯದಲ್ಲಿ ತಂದೆಯ ಸ್ನೇಹ ಮತ್ತು ತಂದೆಯ ಮೂಲಕ ಆಗಿರುವ ಪ್ರಾಪ್ತಿಗಳನ್ನು ಅಂದರೆ ತಂದೆಯು ಏನು ಮಾಡಿದರು ಮತ್ತು ಏನನ್ನು ಕೊಟ್ಟರು ಎಂಬುದನ್ನು ಸ್ಮೃತಿಯಲ್ಲಿ ತಂದುಕೊಂಡಾಗ ಸ್ನೇಹ ಸ್ವರೂಪರಾಗುವ ಕಾರಣ ತಂದೆಯು ಏನು ಹೇಳಿದ್ದಾರೆಯೋ ಅದನ್ನು ನಾನೇ ಮಾಡಿ ತೋರಿಸುವೆನು ಎಂದು ಬಹಳ ಉಲ್ಲಾಸ-ಉತ್ಸಾಹದಲ್ಲಿ ಹಾರುತ್ತಾರೆ. ಆದರೆ ಯಾವಾಗ ಸೇವೆಯ ಅಥವಾ ಸಂಘಟನೆಯ ಸಂಪರ್ಕದಲ್ಲಿ ಬರುವರೋ ಅರ್ಥಾತ್ ಅದನ್ನು ಪ್ರಯೋಗದಲ್ಲಿ ತರಲು ಕರ್ಮದಲ್ಲಿ ಬರಬೇಕಾಗುವುದೋ ಆಗ ಕೆಲವೊಂದೆಡೆ ಸಂಕಲ್ಪ ಮತ್ತು ಕರ್ಮ ಸಮಾನವಾಗಿ ಬಿಡುತ್ತದೆ ಅರ್ಥಾತ್ ಅದೇ ಉಲ್ಲಾಸ-ಉತ್ಸಾಹವಿರುತ್ತದೆ. ಇನ್ನೂ ಕೆಲವೊಮ್ಮೆ ಕರ್ಮದಲ್ಲಿ ಬರುವ ಸಮಯದಲ್ಲಿ ಸಂಘಟನೆಯ ಸಂಸ್ಕಾರ ಹಾಗೂ ಮಾಯೆ ಅಥವಾ ಪ್ರಕೃತಿಯ ಮೂಲಕ ಬಂದಂತಹ ಪರಿಸ್ಥಿತಿಗಳೆಂಬ ಪರೀಕ್ಷೆಗಳು ಕೆಲವೊಂದೆಡೆ ಕಷ್ಟದ ಅನುಭವ ಮಾಡಿಸುತ್ತದೆ ಆದ್ದರಿಂದ ಸ್ನೇಹದಿಂದ ಯಾವ ಉಲ್ಲಾಸ-ಉತ್ಸಾಹವಿತ್ತೋ ಅದು ಪರಿಸ್ಥಿತಿಗಳ ಕಾರಣ, ಸಂಸ್ಕಾರದ ಕಾರಣ ಮಾಡುವುದರಲ್ಲಿ ಅಂತರವನ್ನು ತಂದು ಬಿಡುತ್ತದೆ ಆಗ ಆಲೋಚಿಸುತ್ತಾರೆ - ಒಂದುವೇಳೆ ಈ ರೀತಿಯಾಗದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಹೀಗೆ "ಹಾಗಿದ್ದರೆ, ಹೀಗಿದ್ದರೆ" ಎಂಬ ಚಕ್ರದಲ್ಲಿ ಬಂದು ಬಿಡುತ್ತಾರೆ. ಈ ರೀತಿಯಾಗಬೇಕಿತ್ತು ಆದರೆ ಈ ರೀತಿಯಾಯಿತು ಆದ್ದರಿಂದ ಇದಾಯಿತು, ಈ ಹಾಗೆ, ಹೀಗೆ ಎಂಬ ಚಕ್ರದಲ್ಲಿ ಬಂದು ಬಿಡುತ್ತಾರೆ ಆದ್ದರಿಂದ ಉಲ್ಲಾಸ-ಉತ್ಸಾಹದ ಸಂಕಲ್ಪ ಮತ್ತು ಪ್ರತ್ಯಕ್ಷ ಕರ್ಮದಲ್ಲಿ ಅಂತರವಾಗಿ ಬಿಡುತ್ತದೆ. |
ಅಂದಾಗ ಬ್ರಹ್ಮಾ ತಂದೆಯು ಮಕ್ಕಳ ಪ್ರತಿ ಎರಡು ವಿಶೇಷ ಆಸೆಗಳನ್ನು ತಿಳಿಸುತ್ತಿದ್ದರು ಏಕೆಂದರೆ ಬ್ರಹ್ಮಾ ತಂದೆಯು ಮಕ್ಕಳನ್ನು ಜೊತೆ ಕರೆದುಕೊಂಡು ಹೋಗಲೂ ಬೇಕಾಗಿದೆ, ಜೊತೆ ಇರಲೂ ಬೇಕಾಗಿದೆ. ಶಿವ ತಂದೆಯಂತೂ ಜೊತೆ ಕರೆದುಕೊಂಡು ಹೋಗುವವರಾಗಿದ್ದಾರೆ ಆದರೆ ರಾಜ್ಯದಲ್ಲಿ ಅಥವಾ ಇಡೀ ಕಲ್ಪದಲ್ಲಿಯೇ ಜೊತೆಯಿರುವುದಿಲ್ಲ. ಬ್ರಹ್ಮಾ ತಂದೆಯು ಸದಾ ಜೊತೆಯಿರುವವರಾಗಿದ್ದಾರೆ ಮತ್ತು ಶಿವ ತಂದೆಯು ಸಾಕ್ಷಿಯಾಗಿ ನೋಡುವವರಾಗಿದ್ದಾರೆ. ಅಂತರವಿದೆಯಲ್ಲವೆ. ಬ್ರಹ್ಮಾ ತಂದೆಗೆ ಮಕ್ಕಳ ಪ್ರತಿ ಸದಾ ಸಮಾನರನ್ನಾಗಿ ಮಾಡುವ ಶುಭ ಆಸೆಗಳು ಇಮರ್ಜ್ ಆಗಿರುತ್ತವೆ. ಹಾಗೆ ನೋಡಿದರೆ ಬಾಪ್-ದಾದಾ ಇಬ್ಬರೂ ಜವಾಬ್ದಾರರಾಗಿದ್ದಾರೆ. ಆದರೂ ಸಹ ಸಾಕಾರದಲ್ಲಿ ಬ್ರಹ್ಮನು ರಚಯಿತನಾಗಿರುವುದರಿಂದ ಸಾಕಾರ ರಚಯಿತನಿಗೆ ಸಾಕಾರ ರಚನೆಯ ಪ್ರತಿ ಸ್ವತಹ ಸ್ನೇಹವಿರುತ್ತದೆ. ಮೊದಲೂ ಸಹ ತಿಳಿಸಿದ್ದೆವು - ತಂದೆ-ತಾಯಿ ಇಬ್ಬರಿಗೂ ಸಹ ಮಕ್ಕಳಾಗಿದ್ದರೂ ಸಹ ವಿಶೇಷವಾಗಿ ಮಕ್ಕಳ ಪ್ರತಿ ತಾಯಿಗೆ ಸ್ನೇಹವಿರುತ್ತದೆ ಏಕೆಂದರೆ ತಾಯಿಯು ಪಾಲನೆಗೆ ನಿಮಿತ್ತವಾಗುತ್ತಾಳೆ. ತಂದೆಯ ಸಮಾನರನ್ನಾಗಿ ಮಾಡಲು ತಾಯಿಯು ನಿಮಿತ್ತವಾಗುತ್ತಾಳೆ ಆದ್ದರಿಂದ ತಾಯಿಯ ಮಮತೆಯ ಗಾಯನವಿದೆ. ಇದು ಮೋಹದ ವಿಕಾರದ ಮಮತೆಯಲ್ಲ, ಶುದ್ಧ ಮಮತೆಯಾಗಿದೆ. ಎಲ್ಲಿ ಮೋಹವಿರುವುದೋ ಅಲ್ಲಿ ವ್ಯಾಕುಲರಾಗುತ್ತಾರೆ ಮತ್ತು ಎಲ್ಲಿ ಆತ್ಮಿಕ ಮಮತೆಯಿರುವುದೋ ಅಥವಾ ಸ್ನೇಹವೆಂದಾದರೂ ಹೇಳಿ, ಆತ್ಮಿಕ ಸ್ನೇಹವಿದ್ದಲ್ಲಿ ತಾಯಿಗೆ ಮಕ್ಕಳ ಪ್ರತಿ ಹೆಮ್ಮೆಯಿರುತ್ತದೆ, ವ್ಯಾಕುಲವಾಗುವುದಿಲ್ಲ ಅಂದಾಗ ಬ್ರಹ್ಮಾ ತಾಯಿ ಎಂದಾದರೂ ಹೇಳಿ, ತಂದೆಯೆಂದಾದರೂ ಹೇಳಿ. ಎರಡೂ ರೂಪದಿಂದ ವಿಶೇಷವಾಗಿ ಯಾವ ಆಸೆಯನ್ನು ಇಟ್ಟುಕೊಳ್ಳುತ್ತಾರೆ? ಒಂದು ತಂದೆಯ ಪ್ರತಿ ಆಸೆಯಿದೆ ಮತ್ತು ಇನ್ನೊಂದು ಬ್ರಾಹ್ಮಣ ಪರಿವಾರದ ಪ್ರತಿ ಶುಭ ಆಸೆಯಿದೆ. ತಂದೆಯ ಪ್ರತಿ ಶುಭ ಆಸೆಯೇನೆಂದರೆ ಹೇಗೆ ಬಾಪ್ದಾದಾ ಸಾಕ್ಷಿಯೂ ಆಗಿದ್ದಾರೆ ಮತ್ತು ಸಾಥಿಯೂ ಆಗಿದ್ದಾರೆ. ಅದೇರೀತಿ ಬಾಪ್ದಾದಾರವರ ಸಮಾನ ಸಾಕ್ಷಿ ಮತ್ತು ಸಾತಿ (ಜೊತೆಗಾರ), ಸಮಯ ಪ್ರಮಾಣ ಎಲ್ಲಾ ಮಕ್ಕಳು ಸದಾ ಇವೆರಡೂ ಪಾತ್ರವನ್ನು ಅಭಿನಯಿಸುವಂತಹ ಮಹಾನ್ ಆತ್ಮರಾಗಲಿ ಅಂದಾಗ ತಂದೆಯ ಪ್ರತಿ ಶುಭ ಆಸೆಯೇನೆಂದರೆ ಬಾಪ್ದಾದಾರವರ ಸಮಾನ ಸಾಕ್ಷಿ ಮತ್ತು ಸಾತಿಯಾಗುವುದು. |
ಒಂದು ಮಾತಿನಲ್ಲಿ ಬಾಪ್-ದಾದಾ ಇಬ್ಬರೂ ಸಹ ಮಕ್ಕಳಿಂದ ಪೂರ್ಣ ಸಂತುಷ್ಟರಾಗಿದ್ದಾರೆ - ಅದು ಯಾವುದು? ಪ್ರತಿಯೊಬ್ಬ ಮಗುವಿಗೆ ಬಾಪ್ದಾದಾರೊಂದಿಗೆ ಸ್ನೇಹವು ಚೆನ್ನಾಗಿದೆ. ಬಾಪ್-ದಾದಾರವರೊಂದಿಗೆ ಸ್ನೇಹವು ಎಂದೂ ತುಂಡಾಗುವುದಿಲ್ಲ ಮತ್ತು ಸ್ನೇಹವಿರುವ ಕಾರಣವೇ ಶಕ್ತಿಶಾಲಿಯಾಗಿ ಅಥವಾ ಯಥಾ ಶಕ್ತಿಯಾಗಿ ನಡೆಯುತ್ತಿದ್ದಾರೆ. ಬ್ರಾಹ್ಮಣ ಆತ್ಮರೂಪಿ ಮುತ್ತುಗಳಾಗಿ ಸ್ನೇಹದ ದಾರದಲ್ಲಿ ಪೋಣಿಸಲ್ಪಟ್ಟಿದ್ದಾರೆ. ಸ್ನೇಹದ ದಾರವು ಗಟ್ಟಿಯಾಗಿದೆ ಆದ್ದರಿಂದ ಅದು ತುಂಡಾಗಲು ಸಾಧ್ಯವಿಲ್ಲ. ಸ್ನೇಹದ ಮಾಲೆಯಂತೂ ಉದ್ದವಾಗಿದೆ. ವಿಜಯ ಮಾಲೆಯು ಚಿಕ್ಕದಾಗಿದೆ. ಬಾಪ್-ದಾದಾರವರ ಸ್ನೇಹದ ಮೇಲೆ ಸಮರ್ಪಿತರೂ ಆಗಿದ್ದಾರೆ, ತಂದೆಯ ಸ್ನೇಹದಿಂದ ಯಾರೆಷ್ಟಾದರೂ ಬೇರ್ಪಡಿಸಲು ಪ್ರಯತ್ನ ಪಡಲಿ ಆದರೆ ಸ್ನೇಹದಲ್ಲಿ ಈ ರೀತಿ ಬಲಿಹಾರಿಯಾಗಿದ್ದಾರೆ ಅದರಿಂದ ಬೇರ್ಪಡಲು ಸಾಧ್ಯವೇ ಇಲ್ಲ. ಎಲ್ಲರಿಗೆ ಹೃದಯದ ಸ್ನೇಹದಿಂದ "ನನ್ನ ಬಾಬಾ" ಶಬ್ಧವು ಹೊರ ಬರುತ್ತದೆ ಅಂದಾಗ ಸ್ನೇಹದ ಮಾಲೆಯಲ್ಲಂತೂ ಸಂತುಷ್ಟರಾಗಿದ್ದಾರೆ ಆದರೆ ತಂದೆಯ ಸಮಾನ ಶಕ್ತಿಶಾಲಿ, ಹಾಗೆ-ಹೀಗೆ ಎಂಬ ಚಕ್ರದಿಂದ ಭಿನ್ನವಾಗುವುದರಲ್ಲಿ ಸದಾ ಶಕ್ತಿಶಾಲಿಯಾಗುವುದರ ಬದಲು ಯಥಾಶಕ್ತಿಯಾಗಿದ್ದಾರೆ. ಬಾಪ್ದಾದಾ ಇದರಲ್ಲಿ ತಂದೆಯ ಸಮಾನ ಸದಾ ಶಕ್ತಿಶಾಲಿಯನ್ನಾಗಿ ಮಾಡುವ ಶುಭ ಆಸೆಯನ್ನು ಎಲ್ಲಾ ಮಕ್ಕಳಲ್ಲಿ ಇಟ್ಟುಕೊಳ್ಳುತ್ತಾರೆ. ಎಲ್ಲಿ ಸಾಕ್ಷಿಯಾಗಬೇಕೋ ಅಲ್ಲಿ ಕೆಲವೊಮ್ಮೆ ಸಾಥಿಯಾಗಿ ಬಿಡುತ್ತಾರೆ ಮತ್ತು ಎಲ್ಲಿ ಸಾಥಿಯಾಗಬೇಕೋ ಅಲ್ಲಿ ಸಾಕ್ಷಿಯಾಗಿ ಬಿಡುತ್ತಾರೆ. ಸಮಯ ಪ್ರಮಾಣ ಎರಡೂ ರೀತಿಗಳನ್ನು ನಿಭಾಯಿಸುವುದಕ್ಕೆ ತಂದೆಯ ಸಮಾನರಾಗುವುದು ಎಂದು ಹೇಳುತ್ತಾರೆ. ಸ್ನೇಹದ ಮಾಲೆಯಂತೂ ತಯಾರಾಗಿದೆ ಆದರೆ ವಿಜಯ ಮಾಲೆಯು ಇಷ್ಟು ಉದ್ದವಾಗಿ ತಯಾರಾಗಬೇಕು - ಬಾಪ್ದಾದಾ ಇದೇ ಶುಭ ಆಸೆಯನ್ನು ಇಟ್ಟುಕೊಳ್ಳುತ್ತಾರೆ. ಕೇವಲ 108 ಅಷ್ಟೇ ಅಲ್ಲ, ಬಾಪ್ದಾದಾ ಅನುಮತಿ ಕೊಡುತ್ತೇವೆ - ಎಷ್ಟು ಮಂದಿ ವಿಜಯಿಗಳಾಗಬೇಕೋ ಅಷ್ಟು ದೊಡ್ಡ ವಿಜಯ ಮಾಲೆಯು ಆಗುವ ಸಾಧ್ಯತೆಯಿದೆ. 108 ಎಂದು ಹದ್ದಿನಲ್ಲಿಯೂ ಬರಬೇಡಿ, ಇರುವುದೇ 108 ಅಂದಮೇಲೆ ನಾವಂತೂ ಅದರಲ್ಲಿ ಬರಲು ಸಾಧ್ಯವಿಲ್ಲ ಎನ್ನುವ ಮಾತೇನೂ ಇಲ್ಲ. ಯಾರೆಲ್ಲಾ ಆಗಬೇಕೋ ಆಗಿರಿ. |
ವಿಜಯಿಗಳಾಗುವ ಒಂದು ಬ್ಯಾಲೆನ್ಸ್ ನ ಅವಶ್ಯಕತೆಯಿದೆ - ನೆನಪು ಮತ್ತು ಸೇವೆಯ ಬ್ಯಾಲೆನ್ಸ್ನ್ನು ಸದಾ ಕೇಳುತ್ತಿರುತ್ತೀರಿ ಆದರೆ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಬಯಸಿದರೂ ಏಕೆ ಇರುವುದಿಲ್ಲ? ತಿಳಿದುಕೊಂಡಿದ್ದರೂ ಸಹ ಅದು ಕರ್ಮದಲ್ಲಿ ಏಕೆ ಬರುವುದಿಲ್ಲ? ಅದಕ್ಕಾಗಿ ಇನ್ನೊಂದು ಬ್ಯಾಲೆನ್ಸ್ನ ಅವಶ್ಯಕತೆಯಿದೆ. ಅದೇ ಬ್ಯಾಲೆನ್ಸ್ ಬ್ರಹ್ಮಾ ತಂದೆಯ ಎರಡನೇ ಆಸೆಯಾಗಿದೆ. ಸಮಾನರಾಗುವ ಒಂದು ಆಸೆಯಂತೂ ತಂದೆಯ ಪ್ರತಿ ಆಯಿತು, ಎರಡನೇ ಆಸೆಯು ಪರಿವಾರದ ಪ್ರತಿ ಆಗಿದೆ. ಅದು ಯಾವುದೆಂದರೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನ ಪ್ರತಿ ಸದಾ ಶುಭ ಭಾವನೆ, ಶುಭ ಕಾಮನೆಯು ಕರ್ಮದಲ್ಲಿರಲಿ. ಕೇವಲ ಇಚ್ಛೆಯವರೆಗೆ, ಸಂಕಲ್ಪದವರೆಗೆ ಅಲ್ಲ. ಕೆಲವರು ಹೇಳುತ್ತಾರೆ – ಶುಭ ಭಾವನೆಯನ್ನು ಇಡುವುದೇ ನಮ್ಮ ಇಚ್ಛೆಯಿದೆ ಆದರೆ ಕರ್ಮದಲ್ಲಿ ಬದಲಾಗಿ ಬಿಡುತ್ತದೆ. ಇದರ ವಿಸ್ತಾರವನ್ನು ಮೊದಲೂ ತಿಳಿಸಿದ್ದೇವೆ. ಪರಿವಾರದ ಪ್ರತಿ ಸದಾ ಶುಭ ಭಾವನೆ, ಶುಭ ಕಾಮನೆ ಏಕೆ ಇರುವುದಿಲ್ಲ, ಇದಕ್ಕೆ ಕಾರಣವೇನು? ಹೇಗೆ ತಂದೆಯೊಂದಿಗೆ ಹೃದಯದ ಸ್ನೇಹ, ಜಿಗರೀ ಸ್ನೇಹವಿದೆ ಮತ್ತು ಹೃದಯದ ಜಿಗರೀ ಸ್ನೇಹದ ಚಿಹ್ನೆಯಾಗಿದೆ - ಅವರೊಂದಿಗೆ ಸಂಬಂಧವು ತುಂಡಾಗದಿರುವುದು. ತಂದೆಯ ಪ್ರತಿ ಯಾರೆಷ್ಟಾದರೂ ನಿಮಗೆ ತಪ್ಪು ತಿಳುವಳಿಕೆ ನೀಡಲಿ, ಯಾರೆಷ್ಟೇ ಬಂದು ತಮಗೆ ಎಂತಹದ್ದೇ ಮಾತುಗಳನ್ನು ತಿಳಿಸಲಿ ಅಥವಾ ಸಾಕಾರದಲ್ಲಿ ಸ್ವಯಂ ತಂದೆಯೂ ಸಹ ಕೆಲವು ಮಕ್ಕಳನ್ನು ಮುಂದುವರೆಸುವುದಕ್ಕಾಗಿ ಸ್ವಯಂ ಬಂದು ಯಾವುದೇ ಸೂಚನೆ ಅಥವಾ ಶಿಕ್ಷಣ ಕೊಡಲಿ ಆದರೆ ಎಲ್ಲಿ ಸ್ನೇಹವಿರುವುದೋ ಅಲ್ಲಿ ಶಿಕ್ಷಣ ಅಥವಾ ಯಾವುದೇ ಪರಿವರ್ತನೆಯ ಸಲಹೆ, ತಪ್ಪು ಅರ್ಥವನ್ನು ಉತ್ಪನ್ನ ಮಾಡುವುದಿಲ್ಲ. ಸದಾ ಇದೇ ಭಾವನೆಯಿರುತ್ತದೆ - ತಂದೆಯು ಏನನ್ನು ಹೇಳುವರೋ ಅದರಲ್ಲಿ ಕಲ್ಯಾಣವಿದೆ. ಎಂದೂ ಸ್ನೇಹದ ಕೊರತೆಯಾಗುವುದಿಲ್ಲ. ಇನ್ನೂ ತಮ್ಮನ್ನು ತಂದೆಯ ಹೃದಯಕ್ಕೆ ಸಮೀಪವೆಂದು ತಿಳಿಯುತ್ತಾ ಇದ್ದಿರಿ - ಇದು ನನ್ನತನದ ಸ್ನೇಹವಾಗಿದೆ. ಇದಕ್ಕೆ ಹೃದಯದ ಜಿಗರೀ ಸ್ನೇಹವೆಂದು ಹೇಳುತ್ತಾರೆ. ಇದು ಭಾವನೆಯನ್ನು ಪರಿವರ್ತನೆ ಮಾಡಿ ಬಿಡುತ್ತದೆ. ತಂದೆಯ ಪ್ರತಿ ಇರುವ ಸ್ನೇಹದ ಗುರುತೇನೆಂದರೆ - ಸದಾ ತಂದೆಯು ಹೇಳಿದರು ಮತ್ತು "ಹಾಂಜಿ" ಎಂದು ಮಾಡಿದಿರಿ. ಅದೇ ರೀತಿ ಬ್ರಾಹ್ಮಣ ಪರಿವಾರದ ಪ್ರತಿ ಸದಾ ಇದೇ ಹೃದಯದ ಸ್ನೇಹವಿರಲಿ ಭಾವನಾ ಪರಿವರ್ತನೆಯ ವಿಧಿಯಿರಲಿ ಆಗ ತಂದೆ ಮತ್ತು ಪರಿವಾರದಲ್ಲಿ ಸ್ನೇಹದ ಬ್ಯಾಲೆನ್ಸ್ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ ಸ್ವತಹ ಕರ್ಮದಲ್ಲಿ ಕಾಣುವುದು ಅಂದಾಗ ತಂದೆಯ ಸ್ನೇಹದ ಪರಡೆ (ತಕ್ಕಡಿಯ ತಟ್ಟೆ) ಯು ಭಾರಿಯಾಗಿದೆ ಆದರೆ ಸರ್ವ ಬ್ರಾಹ್ಮಣ ಪರಿವಾರದಲ್ಲಿ ಸ್ನೇಹದ ಪರಡೆಯು ಬದಲಾಗುತ್ತಿರುತ್ತದೆ. ಕೆಲವೊಮ್ಮೆ ಭಾರಿ, ಕೆಲವೊಮ್ಮೆ ಹಗುರ, ಕೆಲವರ ಪ್ರತಿ ಭಾರಿ, ಇನ್ನೂ ಕೆಲವರ ಪ್ರತಿ ಹಗುರ - ಹೀಗೆ ಪರಿವಾರ ಸ್ನೇಹದ ತಟ್ಟೆಯು ಮೇಲೆ ಕೆಳಗೆ ಆಗುತ್ತಿರುತ್ತದೆ. ಈ ತಂದೆ ಮತ್ತು ಮಕ್ಕಳ ಸ್ನೇಹದ ಬ್ಯಾಲೆನ್ಸ್ ಇರಲಿ. ಇದೇ ಬ್ರಹ್ಮಾ ತಂದೆಯ ಶುಭ ಆಸೆಯಾಗಿದೆ. ತಿಳಿಯಿತೆ - ಇದರಲ್ಲಿ ತಂದೆಯ ಸಮಾನರಾಗಿ. |
ಸ್ನೇಹವು ಇಂತಹ ಶ್ರೇಷ್ಠತೆಯಾಗಿದೆ. ಯಾವುದರಲ್ಲಿ ತಾವು ಮಾಡಿದಿರಿ ಅಥವಾ ಬೇರೆಯವರು ಮಾಡಿದರು, ಇದರಲ್ಲಿ ಇಬ್ಬರಲ್ಲಿಯೂ ಸಮಾನ ಖುಷಿಯ ಅನುಭವವಾಗಲಿ. ಹೇಗೆ ಬಾಪ್ದಾದಾ ಸ್ಥಾಪನೆಯ ಕಾರ್ಯಾರ್ತವಾಗಿ ನಿಮಿತ್ತರಾದರು ಆದರೆ ಯಾವಾಗ ಮಕ್ಕಳನ್ನು ಸೇವೆಯಲ್ಲಿ ಜೊತೆಗಾರರನ್ನಾಗಿ ಮಾಡಿಕೊಂಡರು. ಒಂದುವೇಳೆ ಪ್ರಾಕ್ಟಿಕಲ್ನಲ್ಲಿ ಮಕ್ಕಳು ತಂದೆಗಿಂತಲೂ ಹೆಚ್ಚು ಸೇವೆ ಮಾಡುತ್ತಾರೆ, ಮಾಡುತ್ತಾ ಇರುತ್ತಿದ್ದರೆಂದರೆ ಬಾಪ್ದಾದಾ ಸದಾ ಮಕ್ಕಳನ್ನು ಸೇವೆಯಲ್ಲಿ ಮುಂದುವರೆಸುತ್ತಾ ಸ್ನೇಹದ ಕಾರಣ ಖುಷಿಯಾಗಿರುತ್ತಿದ್ದರು. ಎಂದೂ ಸಹ ಹೃದಯದ ಸ್ನೇಹದಲ್ಲಿ ಈ ಸಂಕಲ್ಪವು ಉತ್ಪನ್ನವಾಗಲಿಲ್ಲ - ಸೇವೆಯಲ್ಲಿ ಮಕ್ಕಳೇ ಏಕೆ ಮುಂದುವರೆಯಬೇಕು, ನಿಮಿತ್ತನಂತೂ ನಾನಾಗಿದ್ದೇನೆ, ನಾನೇ ಇವರನ್ನು ನಿಮಿತ್ತ ಮಾಡಿದೆನು ಎಂದು ಸ್ವಪ್ನ ಮಾತ್ರದಲ್ಲಿಯೂ ಈ ಭಾವನೆಯು ಉತ್ಪನ್ನವಾಗಲಿಲ್ಲ. ಇದಕ್ಕೆ ಸತ್ಯ ಸ್ನೇಹ, ನಿಸ್ವಾರ್ಥ ಸ್ನೇಹ, ಆತ್ಮಿಕ ಸ್ನೇಹವೆಂದು ಹೇಳಲಾಗುತ್ತದೆ. ಸದಾ ಮಕ್ಕಳನ್ನು ಮುಂದೆ ನಿಮಿತ್ತ ಮಾಡುವುದರಲ್ಲಿ ಹರ್ಷಿತರಾಗಿದ್ದರು. ಮಕ್ಕಳು ಮಾಡಲಿ ಅಥವಾ ತಂದೆಯು ಮಾಡಲಿ ಇದರಲ್ಲಿ ನಾನು ಎಂಬುದು ಇರಲಿಲ್ಲ. ನನ್ನ ಕೆಲಸವಾಗಿದೆ, ನನ್ನ ಕರ್ತವ್ಯವಾಗಿದೆ, ನನ್ನ ಅಧಿಕಾರವಾಗಿದೆ, ನನ್ನ ಬುದ್ಧಿಯಾಗಿದೆ, ನನ್ನ ಯೋಜನೆಯಾಗಿದೆ ಎಂಬುದಿಲ್ಲ. ಸ್ನೇಹವು ಈ ನನ್ನತನವನ್ನು ಕಳೆಯುತ್ತದೆ. ತಾವು ಮಾಡಿದರೆ ನಾನು ಮಾಡಿದಂತೆ, ನಾನು ಮಾಡಿದರೆ ತಾವು ಮಾಡಿದಂತೆ - ಈ ಶುಭ ಭಾವನೆ ಹಾಗೂ ಶುಭ ಕಾಮನೆಯಿರಲಿ. ಇದಕ್ಕೆ ಹೃದಯದ ಸ್ನೇಹವೆಂದು ಹೇಳಲಾಗುತ್ತದೆ. ಸ್ನೇಹದಲ್ಲಿ ಎಂದೂ ತನ್ನದು ಅಥವಾ ಪರರದು ಎನಿಸುವುದಿಲ್ಲ. ಸ್ನೇಹದಲ್ಲಿ ಕೆಲವೊಮ್ಮೆ ಸ್ನೇಹದ ಮಾತು, ಹೇಗೆ ಸಾಧಾರಣವಾಗಿಯೇ ಇರಲಿ, ತಮಾಷೆಯ ಮಾತಾಗಿರಲಿ ಆದರೆ ಬೇಸರವಾಗುವುದಿಲ್ಲ. ಇವರು ಹೀಗೇಕೆ ಹೇಳಿದರು? ಎಂದು ಎನಿಸುವುದಿಲ್ಲ. ಸ್ನೇಹಿಯು ಸ್ನೇಹಿ ಆತ್ಮನ ಪ್ರತಿ ಹೀಗಾಗುವುದು, ಹಾಗಾಗುವುದು ಎಂದು ಅನುಮಾನ ಉತ್ಪನ್ನ ಮಾಡುವುದಿಲ್ಲ. ಸದಾ ಸ್ನೇಹಿಯ ಪ್ರತಿ ನಂಬಿಕೆ ಇರುವ ಕಾರಣ ಅವರ ಹಗುರ ಮಾತೂ ಸಹ ಇವರು ಅವಶ್ಯವಾಗಿ ಯಾವುದೋ ಅರ್ಥದಿಂದ ಹೇಳಿದ್ದಾರೆ ಎನಿಸುತ್ತದೆ, ನಿರರ್ಥಕ, ವ್ಯರ್ಥವೆನಿಸುವುದಿಲ್ಲ. ಎಲ್ಲಿ ಸ್ನೇಹವಿರುವುದೋ ಅಲ್ಲಿ ನಂಬಿಕೆಯು ಅವಶ್ಯವಾಗಿ ಇರುವುದು. ಸ್ನೇಹವಿಲ್ಲದಿದ್ದರೆ ನಂಬಿಕೆಯೂ ಇಲ್ಲ ಅಂದಾಗ ಬ್ರಾಹ್ಮಣ ಪರಿವಾರದ ಪ್ರತಿ ಸ್ನೇಹ ಹಾಗೂ ನಂಬಿಕೆ ಇರುವುದಕ್ಕೆ ಬ್ರಹ್ಮಾ ತಂದೆಯ ಎರಡನೆಯ ಆಸೆಯನ್ನು ಪೂರ್ಣ ಮಾಡುವುದೆಂದು ಹೇಳುತ್ತಾರೆ. ಹೇಗೆ ತಂದೆಯ ಪ್ರತಿ ಸ್ನೇಹಕ್ಕಾಗಿ ಬಾಪ್ದಾದಾ ಸರ್ಟಿಫಿಕೇಟ್ ಕೊಟ್ಟರು ಹಾಗೆಯೇ ಬ್ರಾಹ್ಮಣ ಪರಿವಾರದ ಪ್ರತಿ ಯಾವ ಸ್ನೇಹದ ಪರಿಭಾಷೆಯನ್ನು ತಿಳಿಸಿದೆವೋ ಆ ವಿಧಿಯಿಂದ ಪ್ರತ್ಯಕ್ಷ ಕರ್ಮದಲ್ಲಿ ಬರುವುದು - ಈ ಸರ್ಟಿಫಿಕೇಟನ್ನು ತೆಗೆದುಕೊಳ್ಳಬೇಕಾಗಿದೆ. ಈ ಬ್ಯಾಲೆನ್ಸ್ ಬೇಕು. ಎಷ್ಟು ತಂದೆಯೊಂದಿಗೋ ಅಷ್ಟು ಮಕ್ಕಳೊಂದಿಗೂ ಸಹ ಬ್ಯಾಲೆನ್ಸ್ ಇರಬೇಕು - ಈ ಬ್ಯಾಲೆನ್ಸ್ ಇಲ್ಲದಿರುವ ಕಾರಣ ಯಾವಾಗ ಸೇವೆಯಲ್ಲಿ ಮುಂದುವರೆಯುತ್ತೀರೋ ಆಗ ಸೇವೆಯಲ್ಲಿ ಮಾಯೆ ಬರುತ್ತದೆ ಎಂದು ತಾವೇ ಹೇಳುತ್ತೀರಿ. ಕೆಲವೊಮ್ಮೆ ವಾಯುಮಂಡಲವನ್ನು ನೋಡಿ, ಇದನ್ನೂ ಹೇಳುತ್ತೀರಿ - ಇಂತಹ ಸೇವೆಗಿಂತಲೂ ನೆನಪಿನಲ್ಲಿರುವುದೇ ಒಳ್ಳೆಯದು. ಎಲ್ಲಾ ಸೇವೆಗಳಿಂದ ಬಿಡಿಸಿ ಭಟ್ಟಿಯಲ್ಲಿ ಕೂರಿಸಿ. ತಮ್ಮೆಲ್ಲರ ಬಳಿ ಸಮಯ ಪ್ರಮಾಣ ಈ ಸಂಕಲ್ಪಗಳಿರುತ್ತವೆ. |
ವಾಸ್ತವದಲ್ಲಿ ಸೇವೆಯು ಮಾಯಾಜೀತರನ್ನಾಗಿ ಮಾಡುವಂತದ್ದಾಗಿದೆ, ಮಾಯೆಯನ್ನು ತರುವಂತದ್ದಲ್ಲ ಆದರೆ ಸೇವೆಯಲ್ಲಿ ಮಾಯೆಯು ಏಕೆ ಬರುತ್ತದೆ? ಇದಕ್ಕೆ ಮೂಲ ಕಾರಣ ಹೃದಯದ ಸ್ನೇಹವಲ್ಲ, ಪರಿವಾರದ ಪ್ರಮಾಣ ಸ್ನೇಹವಾಗಿದೆ ಆದರೆ ಹೃದಯದ ಸ್ನೇಹವು ತ್ಯಾಗದ ಭಾವನೆಯನ್ನು ಉತ್ಪನ್ನ ಮಾಡುತ್ತದೆ. ಅದು ಇಲ್ಲದಿರುವ ಕಾರಣ ಕೆಲಕೆಲವೊಮ್ಮೆ ಸೇವೆಯು ಮಾಯಾ ರೂಪವಾಗಿ ಬಿಡುತ್ತದೆ ಮತ್ತು ಇಂತಹ ಸೇವೆಯನ್ನು ಜಮಾ ಖಾತೆಯಲ್ಲಿ ಜಮಾ ಮಾಡಲು ಸಾಧ್ಯವಿಲ್ಲ. ಭಲೆ ಯಾರಾದರೂ 50-60 ಸೇವಾಕೇಂದ್ರಗಳನ್ನು ತೆರೆಯಲು ನಿಮಿತ್ತರಾಗಬಹುದು ಆದರೆ ಸೇವೆಯ ಖಾತೆಯಲ್ಲಿ ಹಾಗೂ ಬಾಪ್ದಾದಾರವರ ಹೃದಯದಲ್ಲಿ ಜಮಾ ಎಷ್ಟಾಗುತ್ತದೆ ಎಂದರೆ ಅವರು ಮಾಯೆಯಿಂದ ಮುಕ್ತರಾಗಿ, ಯೋಗಯುಕ್ತರಾಗಿ ಎಷ್ಟು ಮಾಡಿದರೋ ಅಷ್ಟೇ ಜಮಾ ಆಗುತ್ತದೆ. ಯಾರ ಬಳಿ ಎರಡು ಸೇವಾಕೇಂದ್ರಗಳಿದೆ, ನೋಡಲು ಮಾತ್ರ ಎರಡು ಸೇವಾಕೇಂದ್ರಗಳಿಗೆ ಸಂಚಾಲಕರಾಗಿರುತ್ತಾರೆ. ಇನ್ನೂ ಕೆಲವರು 50 ಸೇವಾಕೇಂದ್ರಗಳಿಗೆ ಸಂಚಾಲಕರಾಗಿ ಕಾಣುತ್ತಾರೆ ಆದರೆ ಒಂದುವೇಳೆ ಎರಡು ಸೇವಾಕೇಂದ್ರಗಳೂ ಸಹ ನಿರ್ವಿಘ್ನವಾಗಿದ್ದರೆ, ಮಾಯೆಯಿಂದ, ಏರುಪೇರುಗಳಿಂದ, ಸ್ವಭಾವ-ಸಂಸ್ಕಾರದ ಘರ್ಷಣೆಯಿಂದ ಮುಕ್ತವಾಗಿದ್ದರೆ ಎರಡು ಸೇವಾಕೇಂದ್ರಗಳನ್ನು ಸಂಭಾಲನೆ ಮಾಡುವವರಿಗೂ ಸಹ 50 ಸೇವಾಕೇಂದ್ರಗಳು ಇರುವವರಿಗಿಂತಲೂ ಹೆಚ್ಚು ಸೇವೆಯ ಖಾತೆಯು ಜಮಾ ಆಗುತ್ತದೆ. ನಮಗೆ 30 ಸೇವಾಕೇಂದ್ರಗಳಿವೆ, ನಮ್ಮದು 40 ಸೇವಾಕೇಂದ್ರಗಳಿವೆ ಖುಷಿಯಾಗಿ ಬಿಡಬೇಡಿ ಆದರೆ ಮಾಯೆಯಿಂದ ಮುಕ್ತ ಎಷ್ಟು ಸೇವಾಕೇಂದ್ರಗಳಾಗಿವೆ? ಸೇವಾಕೇಂದ್ರವನ್ನು ವೃದ್ಧಿ ಮಾಡುತ್ತಾ ಹೋಗಿ ಮಾಯೆಯನ್ನೂ ಹೆಚ್ಚಿಸಿಕೊಳ್ಳುತ್ತಾ ಹೋಗಿ - ಇಂತಹ ಸೇವೆಯು ತಂದೆಯ ರಿಜಿಸ್ಟರ್ನಲ್ಲಿ ಜಮಾ ಆಗುವುದಿಲ್ಲ. ನಾವಂತೂ ಬಹಳ ಸೇವೆ ಮಾಡುತ್ತಿದ್ದೇವೆ. ದಿನ-ರಾತ್ರಿ ನಿದ್ರೆಯನ್ನೂ ಮಾಡುವುದಿಲ್ಲ. ಅಡಿಗೆಯನ್ನೂ ಸಹ ಒಂದು ಬಾರಿ ಮಾಡಿ ರಾತ್ರಿಗೂ ಅದನ್ನೇ ತಿನ್ನುತ್ತೇವೆ, ಇಷ್ಟು ಬ್ಯುಸಿಯಾಗಿರುತ್ತೇವೆ ಎಂದು ತಾವು ಯೋಚಿಸುತ್ತೀರಿ ಆದರೆ ಸೇವೆಯ ಜೊತೆ ಜೊತೆಗೆ ಮಾಯೆಯಲ್ಲಿ ಬ್ಯುಸಿಯಾಗಿ ಬಿಡುವುದಿಲ್ಲ ತಾನೆ! ಇದು ಏಕಾಯಿತು, ಇದು ಹೇಗಾಯಿತು, ಇವರು ಇವರೇಕೆ ಮಾಡಿದರು, ನಾನೇಕೆ ಮಾಡಲಿಲ್ಲ, ನಿನ್ನ ಹಕ್ಕು, ನನ್ನ ಹಕ್ಕು ಆದರೆ ತಂದೆಯ ಹಕ್ಕು ಎಲ್ಲಿ ಹೋಯಿತು? ತಿಳಿಯಿತೆ? ಸೇವೆ ಅರ್ಥಾತ್ ಯಾವುದರಲ್ಲಿ ಸ್ವಯಂನ ಹಾಗೂ ಸರ್ವರ ಸಹಯೋಗದ ಸಂತುಷ್ಟತೆಯ ಫಲವು ಪ್ರತ್ಯಕ್ಷವಾಗಿ ಕಂಡುಬರಲಿ. ಒಂದುವೇಳೆ ಸರ್ವರ ಶುಭ ಭಾವನೆ, ಶುಭ ಕಾಮನೆಯ ಸಹಯೋಗ ಹಾಗೂ ಸಂತುಷ್ಟತೆಯ ಪ್ರತ್ಯಕ್ಷ ಫಲದ ರೂಪದಲ್ಲಿ ಪ್ರಾಪ್ತಿಯಾಗುತ್ತಿಲ್ಲವೆಂದರೆ ಪರಿಶೀಲನೆ ಮಾಡಿಕೊಳ್ಳಿ - ಕಾರಣವೇನು? ಫಲವೇಕೆ ಸಿಗಲಿಲ್ಲ? ಮತ್ತು ವಿಧಿಯನ್ನು ಪರಿಶೀಲನೆ ಮಾಡಿ ಪರಿವರ್ತನೆ ಮಾಡಿಕೊಳ್ಳಿ. |
ಇಂತಹ ಸತ್ಯ ಸೇವೆಯನ್ನು ವೃದ್ಧಿ ಮಾಡುವುದು ಸೇವೆಯನ್ನು ವೃದ್ಧಿ ಪಡಿಸುವುದಾಗಿದೆ. ಕೇವಲ ನಾನಂತೂ ಬಹಳ ಚೆನ್ನಾಗಿ ಸೇವೆ ಮಾಡುತ್ತಿದ್ದೇನೆಂದು ತಮ್ಮ ಮನಸ್ಸನ್ನು ಖುಷಿ ಪಡಿಸಿಕೊಳ್ಳಬೇಡಿ ಆದರೆ ತಂದೆಯ ಹೃದಯವನ್ನು ಖುಷಿಪಡಿಸಿ ಮತ್ತು ಬ್ರಾಹ್ಮಣ ಪರಿವಾರದ ಹೃದಯದ ಆಶೀರ್ವಾದಗಳನ್ನು ಪಡೆಯಿರಿ, ಇದಕ್ಕೆ ಸತ್ಯ ಸೇವೆಯೆಂದು ಹೇಳಲಾಗುತ್ತದೆ. ತೋರ್ಪಡಿಕೆಯ ಸೇವೆಯಂತೂ ಬಹಳ ದೊಡ್ಡದಾಗಿರುತ್ತದೆ ಆದರೆ ಎಲ್ಲಿ ಹೃದಯ ಪೂರ್ವಕವಾದ ಸೇವೆ ಇರುವುದೋ ಅಲ್ಲಿ ಹೃದಯದ ಸ್ನೇಹದ ಸೇವೆಯು ಅವಶ್ಯವಾಗಿ ಆಗುವುದು. ಇದಕ್ಕೆ ಪರಿವಾರದ ಪ್ರತಿ ಬ್ರಹ್ಮಾ ತಂದೆಯ ಆಸೆಯನ್ನು ಪೂರ್ಣ ಮಾಡುವುದೆಂದು ಹೇಳುತ್ತಾರೆ. ಇದು ಇಂದಿನ ವಾರ್ತಾಲಾಪವಾಗಿತ್ತು, ಇನ್ನು ಉಳಿದುದನ್ನು ಮುಂದೆ ತಿಳಿಸುತ್ತೇವೆ. ಇಂದು ಭಾರತವಾಸಿ ಮಕ್ಕಳ ಈ ಸೀಜನ್ನಿನ ಕೊನೆಯ ಅವಕಾಶವಾಗಿದೆ ಆದ್ದರಿಂದ ಬಾಪ್ದಾದಾ ಏನನ್ನು ಬಯಸುತ್ತೇವೆ ಎಂಬುದನ್ನು ತಿಳಿಸಿದೆವು. ಪಾಸ್ನ ಒಂದು ಸರ್ಟಿಫಿಕೇಟನ್ನು ತೆಗೆದುಕೊಂಡಿರಿ. ಈಗ ಇನ್ನೊಂದು ಸರ್ಟಿಫಿಕೇಟನ್ನು ತೆಗೆದುಕೊಳ್ಳಬೇಕಾಗಿದೆ. ಒಳ್ಳೆಯದು. ಈಗ ತಂದೆಯ ಆಶಾ ದೀಪವನ್ನು ಸದಾ ಬೆಳಗಿಸುತ್ತಾ ಇರಿ. ಒಳ್ಳೆಯದು. |
ನಾಲ್ಕಾರು ಕಡೆಯ ಸರ್ವಬ್ರಾಹ್ಮಣ ಕುಲದೀಪಕರು, ಸದಾ ಬಾಪ್ದಾದಾರವರ ಶುಭ ಆಸೆಗಳನ್ನು ಪೂರ್ಣ ಮಾಡುವವರು ಸದಾ ತಂದೆ ಮತ್ತು ಪರಿವಾರದ ಹೃದಯದ ಸ್ನೇಹದ ಸಮತೋಲನೆಯನ್ನು ನ್ನಿಟ್ಟುಕೊಳ್ಳುವವರು, ಸದಾ ಹೃದಯ ಪೂರ್ವಕ ಸೇವೆಯಿಂದ ಸೇವೆಯ ಖಾತೆಯನ್ನು ಹೆಚ್ಚು ಜಮಾ ಮಾಡಿಕೊಳ್ಳುವವರು - ಇಂತಹ ತಂದೆಯ ಶುಭ ಆಶಾದೀಪಗಳಿಗೆ ಸತ್ಯ ಹೃದಯದಿಂದ ಸೇವೆ ಮಾಡುವಂತಹ ಸೇವಾಧಾರಿಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಓಂ ಶಾಂತಿ. ಮಕ್ಕಳ ಮನಸ್ಸಿನಲ್ಲಿಯೂ ಬಂದಿತು ಓಂ ಶಾಂತಿ. ಹೇಗೆ ಯಾರಿಗಾದರೂ ನಮಸ್ತೆ ಎಂದು ಹೇಳಿದಾಗ ಅವರೂ ಸಹ ನಮಸ್ತೆ ಎಂದು ಹೇಳುತ್ತಾರೆ. ಇಲ್ಲಿ ಓಂ ಶಾಂತಿ ಎಂದು ತಂದೆಯು ಹೇಳಿದರು ಆಗ ಎಲ್ಲಾ ಮಕ್ಕಳು ಜೊತೆಗೆ ಇವರ ಸಹಿತ (ಬ್ರಹ್ಮನ ಆತ್ಮ) ಎಲ್ಲರ ಹೃದಯದಿಂದ ಬರುವುದು ಓಂ ಶಾಂತಿ ಅರ್ಥಾತ್ ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ. ತಂದೆಗೆ ಪ್ರತ್ಯುತ್ತರ ನೀಡಬೇಕಲ್ಲವೆ. ಓಂ ಶಾಂತಿ ಎಂದು ಹೇಳುವುದು ರಿಟರ್ನ್ ಕೊಡುವುದಾಗಿದೆ. ಮತ್ತ್ಯಾರೂ ಅರ್ಥ ಸಹಿತವಾಗಿ ಈ ರೀತಿ ಹೇಳಲು ಸಾಧ್ಯವಿಲ್ಲ. ತಂದೆ ಜ್ಞಾನ ಸೂರ್ಯನೂ ಸಹ ಓಂ ಶಾಂತಿ ಎಂದು ಹೇಳುತ್ತಾರೆ, ಜ್ಞಾನ ಚಂದ್ರನೂ ಓಂ ಶಾಂತಿ ಎಂದು ಹೇಳುತ್ತಾರೆ, ಜ್ಞಾನ ನಕ್ಷತ್ರಗಳೂ ಸಹ ಓಂ ಶಾಂತಿ ಎಂದು ಹೇಳುತ್ತೀರಿ. ನಕ್ಷತ್ರಗಳಲ್ಲಿ ಎಲ್ಲರೂ ಬಂದು ಬಿಟ್ಟರು. ಈಗ ನೀವು ಮಕ್ಕಳಿಗೆ ತಮ್ಮ ಸ್ವ ಧರ್ಮದ ಬಗ್ಗೆ ಅರಿವಾಗಿದೆ - ನಾವಾತ್ಮರು ಶಾಂತ ಸ್ವರೂಪರು ಮತ್ತು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಇಲ್ಲಿ ನಿಮಗೆ ನಿಶ್ಚಯವಾಗಿದೆ - ನೀವು ಬಹಳ ಚೆನ್ನಾಗಿ ಆತ್ಮವನ್ನು ಅರಿತುಕೊಂಡಿದ್ದೀರಿ. ಮಹಾನ್ ಆತ್ಮ, ಪಾಪಾತ್ಮ ಎಂದು ಹೇಳಲಾಗುತ್ತದೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ ಆದರೆ ಯಾರಿಗೂ ಆತ್ಮದ ಯಥಾರ್ಥ ಪರಿಚಯವಿಲ್ಲ. ನಾವಾತ್ಮರು ಬಹಳ ಸೂಕ್ಷ್ಮವಾಗಿದ್ದೇವೆ, 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತೇವೆ. ಇದು ನಿಮಗೂ ತಿಳಿದಿರಲಿಲ್ಲ, ಮತ್ತ್ಯಾರಿಗೂ ತಿಳಿದಿಲ್ಲ. ಈಗ ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ, ತಂದೆಯನ್ನು ತಮ್ಮವರನ್ನಾಗಿ ಮಾಡಿಕೊಳ್ಳುತ್ತೀರಿ. ಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿಯೇ ತಮ್ಮವರನ್ನಾಗಿ ಮಾಡಿಕೊಳ್ಳುತ್ತೀರಿ. |
ನೀವು ಮಕ್ಕಳಿಗೆ ತಿಳಿದಿದೆ - ನಾವಾತ್ಮರ ಬೇಹದ್ದಿನ ತಂದೆಯು ಈ ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಬ್ರಹ್ಮನ ತನುವಿನಲ್ಲಿ ಬಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆ. ಕಲ್ಪದ ಮೊದಲೂ ಸಹ ಆದಿ ಸನಾತನ ದೇವಿ-ದೇವತಾ ಧರ್ಮ ಅರ್ಥಾತ್ ಸೂರ್ಯವಂಶಿ ರಾಜಧಾನಿಯು ಸ್ಥಾಪನೆಯಾಗಿದೆ. ಈ ಸ್ಥಾಪನಾ ಕಾರ್ಯವನ್ನು ಕಲ್ಪ-ಕಲ್ಪವೂ ತಂದೆಯೇ ಮಾಡುತ್ತಾರೆ, ಅವರಿಗೆ ಭಗವಂತನೆಂದು ಹೇಳಲಾಗುತ್ತದೆ. ಭಗವಂತ ತಂದೆಯಿಂದ ಎಲ್ಲರೂ ಬೇಡುತ್ತಾರೆ - ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು. ಯಾವಾಗ ಸುಖವು ಪ್ರಾಪ್ತಿಯಾಗುತ್ತದೆಯೋ ಆಗ ಬೇಡುವ ಅವಶ್ಯಕತೆ ಇರುವುದಿಲ್ಲ. ಇಲ್ಲಿಯೇ ಬೇಡುತ್ತಾರೆ ಏಕೆಂದರೆ ಇಲ್ಲಿ ದುಃಖವಿದೆ. ಅಲ್ಲಿ ಏನನ್ನೂ ಬೇಡುವ ಅವಶ್ಯಕತೆ ಇರುವುದಿಲ್ಲ ಏಕೆಂದರೆ ತಂದೆಯು ಎಲ್ಲವನ್ನೂ ಕೊಟ್ಟು ಹೋಗುತ್ತಾರೆ. ಆದ್ದರಿಂದ ಸತ್ಯಯುಗದಲ್ಲಿ ಯಾರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳನ್ನು ನಾನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತೇನೆ, ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ಈ ತಂದೆಯಿಂದ ನಾವು ಪುನಃ ಸುಖಧಾಮದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖ ಪಡೆಯುತ್ತೇವೆ. ಭಕ್ತಿಮಾರ್ಗವು ಹೇಗೆ ನಡೆಯುತ್ತದೆ, ಮನುಷ್ಯ ಸೃಷ್ಟಿರೂಪಿ ವೃಕ್ಷದ ಉತ್ಪತ್ತಿ, ಪಾಲನೆ ಮತ್ತು ವಿನಾಶವು ಹೇಗಾಗುತ್ತದೆ ಮತ್ತು ಡ್ರಾಮಾದ ಆದಿ-ಮಧ್ಯ-ಅಂತ್ಯವೇನೆಂಬುದನ್ನು ನಿಮಗೆ ತಿಳಿಸಲಾಗುತ್ತದೆ. ಇದು ಸಾಕಾರಿ ಪ್ರಪಂಚ, ಅದು ನಿರಾಕಾರಿ ಪ್ರಪಂಚವಾಗಿದೆ. ಮಕ್ಕಳಿಗೆ ತಿಳಿದಿದೆ - ನಾವು ಅರ್ಧ ಕಲ್ಪ ಭಕ್ತಿ ಮಾಡಿದೆವು, ಈಗ ಕಲಿಯುಗದ ಅಂತ್ಯವಾಗಿದೆ, ಸಂಗಮದಲ್ಲಿಯೇ ಆಸ್ತಿಯು ಸಿಗುತ್ತದೆ. ಇದನ್ನು ಮಕ್ಕಳು ಚೆನ್ನಾಗಿ ತಿಳಿದುಕೊಳ್ಳಬೇಕು, ನಾವೀಗ ಸಂಗಮದಲ್ಲಿದ್ದೇವೆ ಎಂಬುದನ್ನು ನೀವು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಮತ್ತ್ಯಾರಿಗೂ ನೀವು ಪರಿಚಯ ಕೊಡುವವರೆಗೆ ಅರ್ಥವಾಗುವುದಿಲ್ಲ. ಅವಶ್ಯವಾಗಿ ಸಂಗಮಯುಗವು ಬರುತ್ತದೆ, ಆಗಲೇ ಹಳೆಯ ಪ್ರಪಂಚವು ಬದಲಾಗಿ ಹೊಸದಾಗುತ್ತದೆ. ಇದು ಹಳೆಯ ಪ್ರಪಂಚವಾಗಿದೆ, ಇದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಮೊಟ್ಟ ಮೊದಲು ಇಡೀ ಪ್ರಪಂಚದಲ್ಲಿ ಒಂದೇ ಧರ್ಮವಿರುತ್ತದೆ. ಹೊಸ ಪ್ರಪಂಚದಲ್ಲಿ ಕೇವಲ ಭಾರತ ಖಂಡವೇ ಇರುತ್ತದೆ, ಕಡಿಮೆ ಜನಸಂಖ್ಯೆ ಇರುತ್ತದೆ. ಹೊಸ ಪ್ರಪಂಚಕ್ಕೇ ಸ್ವರ್ಗವೆಂದು ಹೇಳಲಾಗುತ್ತದೆ, ಇದರಿಂದಲೇ ಹೊಸ ಪ್ರಪಂಚದಲ್ಲಿ ಹೊಸ ಭಾರತವಿತ್ತು, ಈಗ ಹಳೆಯ ಪ್ರಪಂಚದಲ್ಲಿ ಹಳೆಯ ಭಾರತವಾಗುವುದು ಎಂಬುದು ಸಿದ್ಧವಾಗುತ್ತದೆ. ಹೊಸ ಪ್ರಪಂಚ, ಹೊಸ ಭಾರತವಾಗಲಿ, ಹೊಸ ದೆಹಲಿಯಾಗಲಿ ಎಂದು ಗಾಂಧೀಜಿಯೂ ಸಹ ಹೇಳುತ್ತಿದ್ದರು. ಈಗ ಹೊಸ ಭಾರತವಾಗಲೀ, ಹೊಸ ದೆಹಲಿಯಾಗಲೀ ಇಲ್ಲ. ನವಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ಅದೇ ಭಾರತದಲ್ಲಿ ರಾವಣ ರಾಜ್ಯವಿದೆ. ಇದನ್ನೂ ಬರೆಯಬೇಕು - ಹೊಸ ಪ್ರಪಂಚ, ಹೊಸ ದೆಹಲಿಯು ಇಂತಹ ಸಮಯದಿಂದ ಈ ಸಮಯದವರೆಗೆ ಇವರ ರಾಜ್ಯವಿತ್ತು ಎಂದು. ಯಾರು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರಿದ್ದಾರೆಯೋ ಅವರೇ ಇದನ್ನು ತಿಳಿಸಬಲ್ಲರು. ಬ್ರಹ್ಮಾರವರ ಮೂಲಕ ಹೊಸ ಪ್ರಪಂಚ ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ. ಆ ಸ್ವರ್ಗದ ಆಸ್ತಿಯನ್ನು ಪಡೆಯುವುದಕ್ಕಾಗಿ ನೀವು ಬರುತ್ತೀರಿ. ತಂದೆಯು ನಿಮಗೆ ಯುಕ್ತಿಯನ್ನು ತಿಳಿಸುತ್ತಾರೆ ಅಥವಾ ಪುರುಷಾರ್ಥ ಮಾಡಿಸುತ್ತಾರೆ. ಸನ್ಮುಖದಲ್ಲಿಯೂ ಮಿಲನ ಮಾಡಲು ಬರುತ್ತೀರಿ ಅಥವಾ ಅಲ್ಲಿಯೂ ಕುಳಿತು ಓದುತ್ತೀರಿ. ಸನ್ಮುಖದಲ್ಲಿ ಮಿಲನ ಮಾಡಬೇಕೆಂದು ಮನಸ್ಸಾಗುತ್ತದೆ. ಆ ಮನುಷ್ಯರು ಮನುಷ್ಯರೊಂದಿಗೆ ಮಿಲನ ಮಾಡುತ್ತಾರೆ, ನಾವು ಶಿವ ತಂದೆಯೊಂದಿಗೆ ಮಿಲನ ಮಾಡಲು ಹೋಗುತ್ತೇವೆಂದು ನೀವು ಹೇಳುತ್ತೀರಿ ಆಗ ಅವರಂತೂ ನಿರಾಕಾರನಲ್ಲವೆ ಎಂದು ಹೇಳುತ್ತಾರೆ. ನಾವಾತ್ಮರೂ ನಿರಾಕಾರಿಯಾಗಿದ್ದೇವೆ, ನಾವೂ ಸಹ ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತೇವಲ್ಲವೆ. ಯಾರಿಗೆ ಹೆಸರಿದೆಯೋ ಅವರು ಅವಶ್ಯವಾಗಿ ಪಾತ್ರಧಾರಿಯೂ ಆಗಿರುತ್ತಾರೆ ಅಂದಮೇಲೆ ಭಗವಂತನಿಗೂ ಹೆಸರಿದೆಯಲ್ಲವೆ. ನಿರಾಕಾರ ಶಿವನಿಗೇ ಭಗವಂತನೆಂದು ಹೇಳಲಾಗುತ್ತದೆ, ಮತ್ತ್ಯಾರಿಗೂ ಭಗವಂತನೆಂದು ಹೇಳುವುದಿಲ್ಲ. ಭಗವಂತನೆಂದು ನಿರಾಕಾರನಿಗೇ ಗಾಯನವಿದೆ. ಅವರ ಪೂಜೆಯು ನಡೆಯುತ್ತದೆ, ಆತ್ಮರಿಗೂ ಪೂಜೆಯಾಗುತ್ತದೆ. ರುದ್ರ ಯಜ್ಞವನ್ನು ರಚಿಸುತ್ತಾರಲ್ಲವೆ. ಅದರಲ್ಲಿ ಮಣ್ಣಿನ ಸಾಲಿಗ್ರಾಮಗಳನ್ನು ಮಾಡುತ್ತಾರೆ, ಕಲ್ಲಿನಿಂದ ಅಥವಾ ಮಣ್ಣಿನಿಂದ ಮಾಡಿಸುತ್ತಾರೆ. ಮಣ್ಣಿನಿಂದ ಮಾಡಿರುವುದನ್ನು ಕೆಡಿಸಲು ಮತ್ತೆ ತಯಾರಿಸಲು ಸಹಜವಾಗುತ್ತದೆ. ಪ್ರಪಂಚವಂತೂ ಈ ಮಾತುಗಳನ್ನು ಅರಿತುಕೊಂಡಿಲ್ಲ. ರುದ್ರ ಯಜ್ಞದಲ್ಲಿ ಎಷ್ಟೊಂದು ಆತ್ಮರ ಪೂಜೆಯಾಗುತ್ತದೆ, ಎಷ್ಟು ಆತ್ಮರ ಪೂಜೆ ಮಾಡಬಹುದು! ಮಕ್ಕಳಂತೂ ಅನೇಕರಿದ್ದಾರೆ, ಭಕ್ತರೆಲ್ಲರೂ ಭಗವಂತನ ಮಕ್ಕಳಾಗಿದ್ದಾರೆ. ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ, ನೀವು ಕೆಲವರೇ ಅವರ ಸಹಯೋಗಿಗಳು, ಈಶ್ವರೀಯ ಸೇವಾಧಾರಿಗಳಾಗುತ್ತೀರಿ. ಅವರ ನೆನಪಾರ್ಥವಾಗಿಯೇ ಭಕ್ತರು ಸಾಲಿಗ್ರಾಮಗಳನ್ನು ಮಾಡಿ ಪೂಜಿಸುತ್ತಾರೆ. ಯಜ್ಞವನ್ನು ರಚಿಸಿದಾಗ ಅದರಲ್ಲಿ ಚಿಕ್ಕ ಯಜ್ಞವೂ ಇರುತ್ತದೆ, ದೊಡ್ಡದೂ ಇರುತ್ತದೆ. ದೊಡ್ಡ ಸಾಹುಕಾರರು ದೊಡ್ಡ ಯಜ್ಞವನ್ನು ರಚಿಸುತ್ತಾರೆ, ಲಕ್ಷ ಗಟ್ಟಲೆ ಸಾಲಿಗ್ರಾಮಗಳನ್ನು ಮಾಡುತ್ತಾರೆ. ಚಿಕ್ಕ ಯಜ್ಞವಾಗಿದ್ದರೆ 5-10 ಸಾವಿರ ಮಾಡಿಸುತ್ತಾರೆ, ಎಷ್ಟೇಷ್ಟು ಸಾಹುಕಾರರೋ ಅದರಂತೆಯೇ ಯಜ್ಞ ಮತ್ತು ಅಷ್ಟು ಸಾಲಿಗ್ರಾಮಗಳನ್ನು ಮಾಡಿಸುತ್ತಾರೆ. ಒಬ್ಬ ಶಿವ, ಉಳಿದೆಲ್ಲಾ ಸಾಲಿಗ್ರಾಮಗಳನ್ನು ಮಾಡಿಸುತ್ತಾರೆ ಮತ್ತೆ ಅಷ್ಟೊಂದು ಬ್ರಾಹ್ಮಣರೂ ಬೇಕು. ಅನೇಕರು ಯಜ್ಞವನ್ನು ನೋಡಿರುತ್ತೀರಿ, ನಿಮಗೆ ತಿಳಿದಿದೆ - ತಂದೆಯು ನಾವು ಮಕ್ಕಳ ಸೇವೆ ಮಾಡುತ್ತಾರೆ. ನಾವು ಮತ್ತೆ ಅನ್ಯರ ಸೇವೆ ಮಾಡುತ್ತೇವೆ ಆದ್ದರಿಂದ ಪೂಜೆಯಾಗುತ್ತದೆ. ನೀವೀಗ ಪೂಜ್ಯರಾಗುತ್ತೀರಿ, ಆತ್ಮವು ಹೇಳುತ್ತದೆ - ಬಾಬಾ, ತಾವಂತೂ ಸದಾ ಪೂಜ್ಯನಾಗಿದ್ದೀರಿ, ನಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಿದ್ದೀರಿ. ನೀವು ಪೂಜ್ಯಾತ್ಮರು ಶರೀರವನ್ನು ತೆಗೆದುಕೊಂಡಾಗ ಪೂಜ್ಯ ದೇವಿ-ದೇವತೆಗಳೆಂದು ಹೇಳುತ್ತಾರೆ. ಆತ್ಮವೇ ಪೂಜ್ಯ ಅಥವಾ ಪೂಜಾರಿಯಾಗುತ್ತದೆ. ತಂದೆಯು ಒಂದೇ ಬಾರಿ ಬರುತ್ತಾರೆ, ಮತ್ತೆಂದೂ ಸಹ ತಂದೆಯು ಆತ್ಮರಿಗೆ ಓದಿಸಲು ಸಾಧ್ಯವಿಲ್ಲ. ಆತ್ಮವೇ ಕೇಳಿಸಿಕೊಳ್ಳುತ್ತದೆ, ಹೇಗೆ ಆತ್ಮವು ಶರೀರದ ಮೂಲಕ ಕೇಳಿಸಿಕೊಳ್ಳುತ್ತದೆಯೋ ಹಾಗೆಯೇ ಪರಮಪಿತ ಪರಮಾತ್ಮನೂ ಸಹ ಶರೀರದ ಆಧಾರವನ್ನು ತೆಗೆದುಕೊಂಡು ಇವರ ಮೂಲಕ ಕೇಳುತ್ತಾರೆ. ಇವರ ಮೂಲಕ ನಿಮಗೆ ರಾಜಯೋಗವನ್ನು ಕಲಿಸುತ್ತಾರೆ, ಅವರಿಗೆ ತಮ್ಮದೇ ಆದ ಶರೀರವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರಿಗೂ ಸಹ ತಮ್ಮ ಸೂಕ್ಷ್ಮ ಶರೀರವಿದೆ, ಇಲ್ಲಂತೂ ಎಲ್ಲರಿಗೂ ತಮ್ಮ-ತಮ್ಮದೇ ಆದ ಶರೀರವಿದೆ. ಇದು ಸಾಕಾರಿ ಪ್ರಪಂಚವಾಗಿದೆ. ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರು ಜ್ಞಾನ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನೂ ಆಗಿದ್ದಾರೆ. ಅವರು ಬಂದು ಎಲ್ಲರನ್ನೂ ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಇದರಲ್ಲಿ ಯಾವುದೇ ಪ್ರೇರಣೆಯ ಮಾತಿಲ್ಲ. ಒಂದುವೇಳೆ ನಾನು ಪ್ರೇರಣೆಯಿಂದ ಪಾವನರನ್ನಾಗಿ ಮಾಡುವಂತಿದ್ದರೆ ಇಲ್ಲಿ ಬಂದು ರಥವನ್ನು ತೆಗೆದುಕೊಳ್ಳುವ ಅವಶ್ಯಕತೆಯಾದರೂ ಏನಿದೆ! ಶಿವನ ಮಂದಿರದಲ್ಲಿ ಮುಂದೆ ನಂದಿಯನ್ನು ಇಡುತ್ತಾರೆ. ಮನುಷ್ಯರ ಬುದ್ಧಿಯು ಕಲ್ಲುಬುದ್ಧಿ ಆಗಿರುವ ಕಾರಣ ಏನನ್ನೂ ತಿಳಿದುಕೊಳ್ಳುವುದಿಲ್ಲ. ಬಸವನನ್ನು ಶಿವನ ಮುಂದೆ ಏಕೆ ಇಟ್ಟಿದ್ದಾರೆ? ಗೋಶಾಲೆ ಎಂಬ ಹೆಸರನ್ನು ಕೇಳಿರುವುದರಿಂದ ಅಲ್ಲಿ ನಂದಿಯನ್ನು ತೋರಿಸಿಬಿಟ್ಟಿದ್ದಾರೆ ಆದರೆ ನಂದಿಯ ಮೇಲೆ ಯಾರು ಸವಾರಿ ಮಾಡಿದದರು! ಕೃಷ್ಣನ ಆತ್ಮವಂತೂ ಸತ್ಯಯುಗದಲ್ಲಿರುತ್ತದೆ. ಪ್ರಾಣಿಗಳ ಮೇಲೆ ಕುಳಿತುಕೊಳ್ಳಲು ಕೃಷ್ಣನಿಗೇನಾಗಿದೆ! ಮನುಷ್ಯರು ಏನನ್ನೂ ತಿಳಿದುಕೊಳ್ಳುವುದಿಲ್ಲ, ದ್ರೌಪದಿಯೂ ಸಹ ಕೇವಲ ಒಬ್ಬರೇ ಇರಲಿಲ್ಲ, ಅನೇಕ ದ್ರೌಪದಿಯರಿದ್ದಾರೆ, ತಂದೆಯನ್ನು ಕರೆಯುತ್ತಾರೆ. ಇದನ್ನು ಅವರು ಒಂದು ನಾಟಕವನ್ನಾಗಿ ಮಾಡಿದ್ದಾರೆ- ಅದರಲ್ಲಿ ಶ್ರೀಕೃಷ್ಣನು ಸೀರೆಗಳನ್ನು ಕೊಡುತ್ತಾ ಹೋಗುತ್ತಾನೆ, ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನೀವು 21 ಜನ್ಮಗಳವರೆಗೆ ಪತಿತರಾಗುವುದಿಲ್ಲ. ಎಲ್ಲಿಯ ಮಾತನ್ನು ಎಲ್ಲಿಗೆ ತೆಗೆದುಕೊಂಡು ಹೋಗಿದ್ದಾರೆ! ಭಕ್ತಿಮಾರ್ಗದ ಕಥೆಗಳು ಬಹಳಷ್ಟಿದೆ. ಈ ಕಥೆಗಳೆಲ್ಲವೂ ಅನಾದಿಯಾಗಿದೆ ಎಂದು ಹೇಳುತ್ತಾರೆ. ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಕೇಳುತ್ತಾ ಬಂದಿದ್ದೇವೆಂದು ಹೇಳುತ್ತಾರೆ. ಅನಾದಿಯೂ ಯಾವಾಗಿನಿಂದ ಆರಂಭವಾಯಿತು ಎಂಬುದೇನೂ ತಿಳಿದಿಲ್ಲ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದೂ ತಿಳಿದಿಲ್ಲ, ಅದರ ವರ್ಣನೆಯೂ ಇಲ್ಲ, ನೀವು ಎಷ್ಟೊಂದು ಸೇವೆ ಮಾಡುತ್ತೀರಿ! ಆ ಸೂರ್ಯ, ಚಂದ್ರ, ನಕ್ಷತ್ರಗಳಂತೂ ಇದ್ದೇ ಇದೆ. ಸತ್ಯಯುಗದಲ್ಲಿಯೂ ಇರುತ್ತವೆ, ಈಗಲೂ ಇವೆ. ಅವು ಅದಲು-ಬದಲಾಗುವುದಿಲ್ಲ. ನೀವೀಗ ಭಾರತವನ್ನೇ ಪುನಃ ಅಂಧಕಾರದಿಂದ ತೆಗೆದು ಪ್ರಕಾಶತೆಯಲ್ಲಿ ತರುವುದಕ್ಕೆ ನಿಮಿತ್ತರಾಗಿದ್ದೀರಿ. ಭಕ್ತಿಮಾರ್ಗಕ್ಕೆ ಅಂಧಕಾರವೆಂದು ಹೇಳಲಾಗುತ್ತದೆ, ನಿಮ್ಮ ಮಹಿಮೆಯಿದೆ. ನೀವು ಧರಣಿಯ ನಕ್ಷತ್ರಗಳಾಗಿದ್ದೀರಿ, ನಕ್ಷತ್ರಗಳಿದ್ದಾರೆ ಅಂದಮೇಲೆ ಸೂರ್ಯ-ಚಂದ್ರರೂ ಇರಬೇಕು. |
ಇದು ನಿಮ್ಮ ಆತ್ಮಿಕ ತೀರ್ಥ ಸ್ಥಾನವಾಗಿದೆ. ನೀವು ಇಂತಹ ಯಾತ್ರೆ ಮಾಡುತ್ತೀರಿ, ಅಲ್ಲಿಂದ ಮತ್ತೆ ಇದೇ ಮೃತ್ಯುಲೋಕದಲ್ಲಿ ಬರುವುದಿಲ್ಲ. ಈಗ ಇದು ಮೃತ್ಯುಲೋಕವಾಗಿದೆ ಮತ್ತೆ ಇಲ್ಲಿಯೇ ಅಮರಲೋಕವಾಗುವುದು. ದ್ವಾಪರದಿಂದ ಮೃತ್ಯುಲೋಕವು ಆರಂಭವಾಗುತ್ತದೆ, ನೀವೀಗ ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನೀವು ತಿಳಿದುಕೊಂಡಿದ್ದೀರಿ, ನಾವಾತ್ಮರ ಯಾತ್ರೆಯು ಭಿನ್ನವಾಗಿದೆ. ನೀವಿಲ್ಲಿ ಕುಳಿತಲ್ಲಿಯೇ ಯಾತ್ರೆ ಮಾಡುವ ಪುರುಷಾರ್ಥ ಮಾಡುತ್ತೀರಿ. ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಅವರು ಯಾತ್ರೆಗೆ ಹೋಗುತ್ತಾರೆ, ಅದರಲ್ಲಿ ವಿಕರ್ಮ ವಿನಾಶ ಆಗುತ್ತದೆಯೇ! ಮನುಷ್ಯರಲ್ಲಿ ಮಧ್ಯಪಾನದ ಎಷ್ಟೊಂದು ಹವ್ಯಾಸವಿದೆಯೆಂದರೆ ಮುಚ್ಚಿಟ್ಟುಕೊಂಡು ತೆಗೆದುಕೊಂಡು ಹೋಗುತ್ತಾರೆ. ಇತ್ತೀಚೆಗಂತೂ ಯಾತ್ರಾ ಸ್ಥಳಗಳಲ್ಲಿಯೂ ಬಹಳ ಕೊಳಕು ಮನುಷ್ಯರಿರುತ್ತಾರೆ. ಎಲ್ಲರೂ ಪತಿತರಲ್ಲವೆ. ಹೇಗೆ ಬ್ರಾಹ್ಮಣರು ಪತಿತರೋ ಅದೇ ರೀತಿ ಯಾತ್ರಿಕರೂ ಪತಿತರಾಗಿದ್ದಾರೆ. ಮಾರ್ಗದರ್ಶಕರು ಯಾತ್ರೆ ಮಾಡಿಸುತ್ತಾರೆ ಆದರೆ ಪಾವನರಾಗಿದ್ದಾರೆಯೇ! ನೀವಂತೂ ಪವಿತ್ರರಾಗಿರುತ್ತೀರಿ, ನೀವು ಸತ್ಯ ಬ್ರಾಹ್ಮಣರಾಗಿದ್ದೀರಿ. ನಿಮ್ಮ ಆತ್ಮವು ಪವಿತ್ರವಾಗಿರುತ್ತದೆ, ನೆನಪಿನ ಯಾತ್ರೆಯಿಂದಲೇ ನೀವು ಪವಿತ್ರರಾಗುತ್ತೀರಿ. ಈಗ ಸತೋಪ್ರಧಾನರಾಗಬೇಕಾಗಿದೆ. ತಂದೆಯು ಪದೇ-ಪದೇ “ಮಧುರ ಮಕ್ಕಳೇ” ಎಂದು ಬರೆಯುತ್ತಾರೆ, ಇದನ್ನು ಶಿವ ತಂದೆಯು ಆತ್ಮರಿಗೆ ಬರೆಯುವರು. ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ, ಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೀರಿ. ಇದೊಂದೇ ಮುಖ್ಯವಾದ ಆಜ್ಞೆಯಾಗಿದೆ. ಎಷ್ಟು ಸಹಜವೂ ಆಗಿದೆ, ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ನೆನಪು ಮಾಡದಿದ್ದರೆ ವಿಕರ್ಮ ವಿನಾಶವಾಗುವುದಿಲ್ಲ ಮತ್ತೆ ಶಿಕ್ಷೆಯನ್ನು ಅನುಭವಿಸುತ್ತೀರಿ. ತಂದೆಯು ಹೇಳುತ್ತಾರೆ, ನೀವು ಎಲ್ಲಿ ಹೋದರೂ ಸಹ ಸಂಪಾದನೆ ಮಾಡಬಲ್ಲಿರಿ. ತಿನ್ನಿರಿ, ಕುಡಿಯಿರಿ, ಏನಾದರೂ ಮಾಡಿ ಕೇವಲ ತಂದೆಯನ್ನು ನೆನಪು ಮಾಡಿರಿ. ನಿಮ್ಮದು ಸಂಪಾದನೆಯಾಗಿದೆ, ಮಕ್ಕಳಿಗಾಗಿ ಇನ್ನೂ ಸಹಜವಾಗಿದೆ. ಇದರಲ್ಲಿ ಯಾವುದೇ ಗಮನ ಇತ್ಯಾದಿಗಳ ಮಾತಿಲ್ಲ. ಶ್ರೀನಾಥ ಮಂದಿರದಲ್ಲಿ ಶ್ರೀನಾಥನ ನೆನಪಿನಲ್ಲಿ ಕುಳಿತುಕೊಳ್ಳುತ್ತಾರೆ, ಭೋಗವನ್ನು ಇಡುತ್ತಾರೆ, ಅದು ಕಲ್ಲಿನ ಮೂರ್ತಿಯೇ ಅಲ್ಲವೆ. ಭೋಗವನ್ನು ಯಾರಿಗೆ ಇಡಬೇಕು? ಅಧಿಕಾರಿಯಂತೂ ಶಿವ ತಂದೆಯೊಬ್ಬರೇ ಆಗಿದ್ದಾರೆ, ಅವರೇ ಸರ್ವರ ಸದ್ಗತಿದಾತ, ಪತಿತ-ಪಾವನನಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನಂತೂ ಸ್ವೀಕಾರ ಮಾಡುವುದಿಲ್ಲ. ನೀವು ನನ್ನ ಮೇಲೆ ನೀರು ಹಾಲನ್ನು ಎರೆಯುತ್ತೀರಿ, ಈ ಭೋಗವನ್ನು ಇಡುತ್ತೀರಿ - ಏಕೆ? ನಾನಂತೂ ನಿರಾಕಾರ, ಅಭೋಕ್ತನಾಗಿದ್ದೇನೆ, ನನಗೇನು ಪೂಜೆ ಮಾಡುತ್ತೀರಿ! ನನ್ನ ಮುಂದೆ ಭೋಗವನ್ನು ಇಡುತ್ತಾರೆ ಆದರೆ ಭಕ್ತರು ಭೋಗವನ್ನಿಟ್ಟರು ಮತ್ತೆ ಅವರೇ ಹಂಚಿತಿಂದರು. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಗೆ ಭೋಗವನ್ನಂತೂ ಅವಶ್ಯವಾಗಿ ಇಡಬೇಕು. ಮತ್ತೆ ನೀವೇ ಹಂಚಿ ತಿನ್ನುತ್ತೀರಿ ಆದರೆ ಇದು ಗೌರವ ಕೊಡುವುದಾಗಿದೆ. ನಾವು ಶಿವ ತಂದೆಗೆ ಭೋಗವನ್ನು ಇಡುತ್ತೇವೆ ಏಕೆಂದರೆ ಇದು ಶಿವ ತಂದೆಯ ಭಂಡಾರವಾಗಿದೆಯಲ್ಲವೆ. ಯಾರ ಭಂಡಾರವಾಗಿದೆಯೋ ಅವರಿಗೆ ಭೋಗವನ್ನು ಅವಶ್ಯವಾಗಿ ಇಡಬೇಕಾಗಿದೆ. ಭಲೆ ನೀವು ಭೋಗವನ್ನಿಡುತ್ತೀರಿ, ನೀವು ಮಕ್ಕಳೇ ತಿನ್ನುತ್ತೀರಿ. ಈ ಬ್ರಹ್ಮಾರವರು ತಿನ್ನಬಹುದು, ನಾನು ತಿನ್ನುವುದಿಲ್ಲ ಬಾಕಿ ಪರಿಮಳವಂತೂ ಬರುತ್ತದೆಯಲ್ಲವೆ. ಬಹಳ ಚೆನ್ನಾಗಿ ಭೋಗವನ್ನು ತಯಾರಿಸಿದ್ದಾರೆ, ಹೇಳುವುದಕ್ಕಾಗಿ ಕರ್ಮೇಂದ್ರಿಯಗಳಂತೂ ಇವೆಯಲ್ಲವೆ. ಈ ಬ್ರಹ್ಮಾರವರು ತಿನ್ನಬಹುದು, ಈ ಶರೀರವು ಇವರದಾಗಿದೆ, ನಾನು ಕೇವಲ ಇವರಲ್ಲಿ ಪ್ರವೇಶ ಮಾಡುತ್ತೇನೆ. ನೀವು ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಲು ಕೇವಲ ಇವರ ಬಾಯಿಯನ್ನು ಉಪಯೋಗಿಸುತ್ತೇನೆ, ಗೋಮುಖವೆಂದು ಹೇಳುತ್ತಾರಲ್ಲವೆ. ಇವರು ಗೋವು ಆಗಿದ್ದಾರೆ. ನಿಮಗೆ ತಿಳಿದಿದೆ, ಇವರ ಮೂಲಕವೇ ನಿಮ್ಮನ್ನು ದತ್ತು ಮಾಡಿಕೊಳ್ಳಲಾಗುತ್ತದೆ, ಇವರು ಮಾತಾಪಿತಾ ಇಬ್ಬರೂ ಆಗಿದ್ದಾರೆ ಆದರೆ ಮಾತೆಯರನ್ನು ಸಂಭಾಲನೆ ಮಾಡುವುದು ಯಾರು! ಆದ್ದರಿಂದ ಡ್ರಾಮಾನುಸಾರ ಸರಸ್ವತಿಯನ್ನು ನಿಮಿತ್ತ ಮಾಡಲಾಯಿತು. ತಾಯಿ ಗುರುವಿನ ಮಹಿಮೆಯೂ ಬೇಕಲ್ಲವೆ. ಗುರುವಂತೂ ಮೊದಲ ನಂಬರಿನಲ್ಲಿ ಇವರು ಪ್ರಸಿದ್ಧವಾಗಿದ್ದಾರೆ. ಗುರು ಬ್ರಹ್ಮಾ ಸರಿಯಾಗಿದೆ, ಎಂತಹ ತಂದೆಯೋ ಅಂತಹ ಮಕ್ಕಳು. ನೀವು ಬ್ರಾಹ್ಮಣರೂ ಸಹ ಸತ್ಯ ಗುರುಗಳಾಗುತ್ತೀರಿ, ಎಲ್ಲರಿಗೆ ಸ್ವರ್ಗದ ಸತ್ಯಮಾರ್ಗವನ್ನು ತಿಳಿಸುತ್ತೀರಿ. ಆತ್ಮವೇ ಬಾಯಿಂದ ಮಾರ್ಗವನ್ನು ತಿಳಿಸುತ್ತದೆ - ಮನ್ಮಾನಭವ, ಮಧ್ಯಾಜೀಭವ. ತಂದೆ-ತಾಯಿ, ಮಕ್ಕಳು ಎಲ್ಲರೂ ಅದೇ ಮಾರ್ಗವನ್ನು ತಿಳಿಸುತ್ತೀರಿ. ನೀವಿಲ್ಲಿ ಸನ್ಮುಖದಲ್ಲಿ ಕುಳಿತಿದ್ದೀರಿ. ಆದ್ದರಿಂದ ನೆನಪಿರುತ್ತದೆ ಮತ್ತೆ ಮನೆಗೆ ಹೋಗುತ್ತೀರೆಂದರೆ ಅನೇಕ ಮಕ್ಕಳು ಮರೆತು ಹೋಗುತ್ತೀರಿ. ತಂದೆಯ ಬಳಿ ಬಂದಿದ್ದೇವೆಂದು ಇಲ್ಲಿ ಆನಂದವಾಗುತ್ತದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಸ್ವದರ್ಶನ ಚಕ್ರಧಾರಿಗಳಾಗಿ ಈ ಯುಕ್ತಿಯನ್ನು ತಿಳಿಸಿ - ಮುಕ್ತಿಧಾಮ, ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಹಾಗೂ ತಂದೆಗೆ ಯಥಾರ್ಥ ಗೌರವ ಕೊಡಬೇಕಾಗಿದೆ. ಭಲೆ ತಂದೆಯು ಅಭೋಕ್ತನಾಗಿದ್ದಾರೆ ಆದರೆ ಯಾರ ಭಂಡಾರದಿಂದ ಪಾಲನೆಯಾಗುತ್ತಿದೆಯೋ ಅವರಿಗೆ ಅವಶ್ಯವಾಗಿ ಮೊದಲು ಸ್ವೀಕಾರ ಮಾಡಿಸಬೇಕಾಗಿದೆ. |
2. ಪೂಜ್ಯನೀಯರಾಗಲು ಈಶ್ವರನ ಸೇವಾಧಾರಿಗಳಾಗಬೇಕಾಗಿದೆ. ತಂದೆಯ ಜೊತೆ ಸೇವೆಯಲ್ಲಿ ಸಹಯೋಗಿಗಳಾಗಬೇಕು. ಯಾವಾಗ ಆತ್ಮ ಮತ್ತು ಶರೀರ ಎರಡೂ ಪಾವನವಾಗುವುದೋ ಆಗ ಪೂಜೆಯಾಗುವುದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಹಾಡಿನ ಎರಡು ಶಬ್ದಗಳನ್ನು ಕೇಳಿದ್ದೀರಿ. ಮಕ್ಕಳಿಗೆ ಹೆಚ್ಚರಿಕೆ ಸಿಗುತ್ತದೆ. ಈ ಸಮಯದಲ್ಲಿ ಕೇವಲ ನೀವು ಬ್ರಾಹ್ಮಣರ ವಿನಃ ಎಲ್ಲರ ಅದೃಷ್ಟ ಹಾಳಾಗಿದೆ. ಅದೃಷ್ಟವನ್ನು ರೂಪಿಸುವವರು ಎಂದು ತಂದೆಗೆ ಹೇಳಲಾಗುತ್ತದೆ. ತಮಗೆ ಗೊತ್ತಿದೆ ಶಿವಬಾಬಾ ಎಷ್ಟು ಮಧುರವಾಗಿದ್ದಾರೆ ಎಂದು. ಬಾಬಾ ಎಂಬ ಅಕ್ಷರ ಮಧುರವಾಗಿದೆ. ತಂದೆಯಿಂದ ಎಲ್ಲಾ ಆತ್ಮರಿಗೆ ಆಸ್ತಿ ಸಿಗುತ್ತದೆ. ಲೌಕಿಕ ತಂದೆಯಿಂದ ಮಕ್ಕಳಿಗೆ ಆಸ್ತಿ ಸಿಗುತ್ತದೆ. ಹೆಣ್ಣು ಮಗುವಿಗೆ ಸಿಗುವುದಿಲ್ಲ. ಇಲ್ಲಿ ಗಂಡು ಮಗು ಅಥವಾ ಹೆಣ್ಣು ಮಗು ಎಲ್ಲರೂ ಆಸ್ತಿಗೆ ಹಕ್ಕುದಾರರಾಗಿದ್ದಾರೆ. ತಂದೆ ಆತ್ಮರಿಗೆ ಅರ್ಥಾತ್ ತಮ್ಮ ಮಕ್ಕಳಿಗೆ ಓದಿಸುತ್ತಾರೆ. ನಾವೆಲ್ಲಾ ಸಹೋದರರಾಗಿದ್ದೇವೆ ಎಂದು ಆತ್ಮ ತಿಳಿಯುತ್ತದೆ. ಇದಕ್ಕೆ ಬ್ರದರ್ಹುಡ್ (ವಿಶ್ವ ಭ್ರಾತೃತ್ವ) ಎಂದು ಹೇಳಲಾಗುತ್ತದೆಯಲ್ಲವೇ. ಒಬ್ಬ ಭಗವಂತನ ಮಕ್ಕಳಾಗಿದ್ದೇವೆ ಆದರೆ ಇಷ್ಟು ಯುದ್ಧ-ಜಗಳ ಏಕೆ ಮಾಡುತ್ತಾರೆ? ಎಲ್ಲರೂ ಪರಸ್ಪರ ಜಗಳ ಮಾಡುತ್ತಲೇ ಇರುತ್ತಾರೆ. ಅನೇಕ ಧರ್ಮ, ಅನೇಕ ಮತಗಳಿದೆ ಮತ್ತು ಮುಖ್ಯ ಮಾತಂತೂ ರಾವಣ ರಾಜ್ಯದಲ್ಲಿ ಯುದ್ಧವೇ ನಡೆಯುತ್ತದೆ ಏಕೆಂದರೆ ವಿಕಾರಗಳ ಪ್ರವೇಶತೆ ಆಗುತ್ತದೆ. ಕಾಮ ವಿಕಾರದ ಮೇಲೆ ಎಷ್ಟೊಂದು ಯುದ್ಧ, ಜಗಳ ನಡೆಯುತ್ತದೆ. ಈ ರೀತಿ ಬಹಳ ರಾಜರು ಯುದ್ಧ ಮಾಡಿದರು. ಕಾಮ ವಿಕಾರಕ್ಕಾಗಿ ಅನೇಕರು ಜಗಳ ಮಾಡುತ್ತಾರೆ. ಎಷ್ಟು ಖುಷಿ ಆಗುತ್ತಾರೆ. ಯಾರ ಜೊತೆಯಾದರೂ ಮನಸ್ಸಾದರೆ ಹೊಡೆಯುವುದೂ ಮಾಡುತ್ತಾರೆ. ಕಾಮ ಮಹಾಶತ್ರುವಾಗಿದೆ. ಕ್ರೋಧ ಮಾಡಿಕೊಳ್ಳುವವರಿಗೆ ಕ್ರೋಧಿ ಎಂದು ಹೇಳಲಾಗುತ್ತದೆ. ಲೋಭ ಇರುವವರಿಗೆ ಲೋಭಿ ಎಂದು ಹೇಳಲಾಗುತ್ತದೆ. ಆದರೆ ಕಾಮಿ ಆಗಿರುವವರಿಗೆ ಅನೇಕ ಹೆಸರುಗಳಿಟ್ಟಿದ್ದಾರೆ. ಆದ್ದರಿಂದ ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯುವುದು. ಶಾಸ್ತ್ರದಲ್ಲಿ ಅಮೃತ ಎಂದು ಹೆಸರು ಕೊಟ್ಟಿದ್ದಾರೆ. ಸಾಗರ ಮಂಥನ ಮಾಡಿದಾಗ ಅಮೃತ ಬಂದಿದೆ ಎಂದು ತೋರಿಸುತ್ತಾರೆ. ಲಕ್ಷಿಗೆ ಕಲಶವನ್ನು ಕೊಟ್ಟಿದ್ದಾರೆ. ಎಷ್ಟು ಕಥೆಗಳಿವೆ. ಇದರಲ್ಲೂ ಸರ್ವವ್ಯಾಪಿಯ ಮಾತು ದೊಡ್ಡದಾಗಿದೆ, ಗೀತೆಯ ಭಗವಂತ ಯಾರಾಗಿದ್ದಾರೆ? ಮತ್ತು ಪತಿತ-ಪಾವನ ಯಾರಾಗಿದ್ದಾರೆ? ಪ್ರದರ್ಶಿನಿಯಲ್ಲಿ ಮುಖ್ಯವಾಗಿ ಈ ಚಿತ್ರಗಳ ಮೇಲೆ ತಿಳಿಸಲಾಗುತ್ತದೆ. ಪತಿತ-ಪಾವನ, ಜ್ಞಾನ ಸಾಗರ ಮತ್ತು ಅವರಿಂದ ಹೊರಟಿರುವ ಗಂಗಯರೋ ಅಥವಾ ನೀರಿನ ನದಿಗಳೋ ಅಥವಾ ಸಾಗರವೋ? ಎಷ್ಟು ಒಳ್ಳೊಳ್ಳೆಯ ಮಾತುಗಳನ್ನು ತಿಳಿಸಲಾಗುತ್ತದೆ. ತಂದೆ ಕುಳಿತು ತಿಳಿಸುತ್ತಿದ್ದಾರೆ – ಮಧುರಾತಿ ಮಧುರ ಮಕ್ಕಳೇ ನಿಮ್ಮನ್ನು ಯಾರು ಪಾವನ ಮಾಡಿದ್ದಾರೆ? ಹಾಳಾಗಿರುವವರನ್ನು ಸುಧಾರಣೆ ಮಾಡುವವರು ಯಾರು? ಪತಿತ ಪಾವನ ಯಾವಾಗ ಬರುತ್ತಾರೆ? ಈ ಆಟ ಹೇಗೆ ಮಾಡಲ್ಪಟ್ಟಿದೆ? ಯಾರಿಗೂ ಗೊತ್ತಿಲ್ಲ. ತಂದೆಗೆ ಜ್ಞಾನ ಸಾಗರ, ಆನಂದ ಸಾಗರ, ಶಾಂತಿಯ ಸಾಗರ ಎಂದು ಹೇಳಲಾಗುತ್ತದೆ. ಹಾಳಾಗಿರುವವರನ್ನು ಸುಧಾರಣೆ ಮಾಡುವವರು ಒಬ್ಬರೆಯಾಗಿದ್ದಾರೆ ಎಂದು ಗಾಯನವೂ ಸಹ ಇದೆ. ರಾವಣನೇ ನಮ್ಮನ್ನು ಹಾಳು ಮಾಡುತ್ತಾನೆ ಎಂದಂತೂ ಅರ್ಥ ಆಗುತ್ತದೆ. ಇದು ಸೋಲು-ಗೆಲುವಿನ ಆಟವಾಗಿದೆ. ರಾವಣನನ್ನೂ ಸಹ ನೀವು ತಿಳಿದುಕೊಂಡಿದ್ದೀರಿ ಯಾರನ್ನು ವರ್ಷ-ವರ್ಷ ಸುಡುತ್ತಾರೆ. ರಾವಣ ಭಾರತದ ಶತ್ರುವಾಗಿದ್ದಾನೆ. ಭಾರತದಲ್ಲಿಯೇ ಪ್ರತಿ ವರ್ಷ ಸುಡುತ್ತಾರೆ. ಯಾವಾಗಿನಿಂದ ಸುಡುತ್ತಾ ಬಂದಿದ್ದೀರಾ? ಎಂದು ಅವರನ್ನು ಕೇಳಿ. ಅಂದಾಗ ಇದು ಅನಾದಿಯಿಂದ, ಸೃಷ್ಟಿ ಆರಂಭ ಆದಾಗಿನಿಂದ ನಡೆಯುತ್ತಾ ಬಂದಿದೆ ಎಂದು ಹೇಳುತ್ತಾರೆ. ಶಾಸ್ತ್ರದಲ್ಲಿ ಓದಿರುವುದೆಲ್ಲಾ ಸತ್ಯ ಎಂದು ಹೇಳುತ್ತಾ ಬಂದಿದ್ದಾರೆ. ಈಶ್ವರನಿಗೆ ಸರ್ವವ್ಯಾಪಿ ಎಂದು ಹೇಳುವುದು ಮುಖ್ಯ ತಪ್ಪಾಗಿದೆ. ತಂದೆ ಇದು ಯಾರ ತಪ್ಪಾಗಿದೆ ಎಂದು ಹೇಳುವುದಿಲ್ಲ. ಇದು ಡ್ರಾಮಾದಲ್ಲಿ ನಿಗದಿಯಾಗಿದೆ. ಸೋಲು-ಗೆಲುವಿನ ಆಟವಾಗಿದೆ. ಮಾಯೆಯ ಜೊತೆ ಸೋತಾದಾಗ ಸೋಲು, ಗೆದ್ದಾಗ ಗೆಲುವು. ಮಾಯೆಯ ಜೊತೆ ಹೇಗೆ ಸೋಲುವುದು, ಅದನ್ನೂ ಸಹ ತಿಳಿಸಲಾಗುತ್ತದೆ. ಪೂರ್ತಿ ಅರ್ಧಕಲ್ಪ ರಾವಣ ರಾಜ್ಯ ನಡೆಯುತ್ತದೆ. ಒಂದು ಸೆಕೆಂಡಿನ ಅಂತರವೂ ಸಹ ಇರಲು ಸಾಧ್ಯವಿಲ್ಲ. ರಾಮ ರಾಜ್ಯದ ಸ್ಥಾಪನೆ, ರಾವಣ ರಾಜ್ಯದ ವಿನಾಶವು ತನ್ನ ಸಮಯದಲ್ಲಿ ಸರಿಯಾಗಿ ಆಗುತ್ತದೆ. ಸತ್ಯಯುಗದಲ್ಲಿ ಲಂಕೆ ಇರುವುದಿಲ್ಲ. ಅದಂತೂ ಬುದ್ಧ ಧರ್ಮದ ಖಂಡವಾಗಿದೆ. ಲಂಡನ್ ಈ ಕಡೆ ಇದೆ, ಅಮೆರಿಕಾ ಈ ಕಡೆ ಇದೆ ಎಂದು ಓದಿರುವವರ ಬುದ್ದಿಯಲ್ಲಿ ಇರುತ್ತದೆ. ವಿದ್ಯೆಯಿಂದ ಬುದ್ಧಿಯ ಬೀಗ ತೆರೆಯಲಾಗುತ್ತದೆ, ಬೆಳಕು ಬರುತ್ತದೆ. ಇದಕ್ಕೆ ಜ್ಞಾನದ ಮೂರನೇ ನೇತ್ರ ಎಂದು ಹೇಳಲಾಗುತ್ತದೆ. ವೃದ್ಧರು ಬಹಳ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವರು ಒಂದು ಮುಖ್ಯ ಮಾತನ್ನು ಧಾರಣೆ ಮಾಡಿಕೊಳ್ಳಬೇಕು, ಯಾವುದು ಅಂತ್ಯದಲ್ಲಿ ಕೆಲಸಕ್ಕೆ ಬರುವುದು. ಮನುಷ್ಯರು ಶಾಸ್ತ್ರಗಳನ್ನಂತೂ ಬಹಳ ಓದುತ್ತಾರೆ. ಆದರೂ ಕೊನೆಗೆ ರಾಮ-ರಾಮ ಎಂಬುದು ಹೇಳಿ ಎಂದು ಒಂದು ಅಕ್ಷರವನ್ನು ಹೇಳಿ ಬಿಡುತ್ತಾರೆ. ಶಾಸ್ತ್ರವನ್ನು ಕೇಳಿಸಿ, ವೇದವನ್ನು ಕೇಳಿಸಿ ಎಂದು ಹೇಳುವುದಿಲ್ಲ. ಕೊನೆಗೆ ರಾಮನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಯಾರು ಹೆಚ್ಚು ಸಮಯ ಯಾವ ಚಿಂತನೆಯಲ್ಲಿ ಇರುತ್ತಾರೆ ಅಂತ್ಯದಲ್ಲೂ ಅದೇ ನೆನಪು ಬಂದು ಬಿಡುತ್ತದೆ. ಈಗ ಎಲ್ಲರ ವಿನಾಶವಂತೂ ಆಗಬೇಕಾಗಿದೆ. ಎಲ್ಲರು ಯಾರನ್ನು ನೆನಪು ಮಾಡುತ್ತಾರೆ? ಎಂದು ನಿಮಗೆ ಗೊತ್ತಿದೆ. ಕೆಲವರು ಕೃಷ್ಣನನ್ನು, ಕೆಲವರು ಗುರುವನ್ನು ನೆನಪು ಮಾಡುತ್ತಾರೆ. ಕೆಲವರು ತಮ್ಮ ದೇಹ ಸಂಬಂಧಿಗಳನ್ನು ನೆನಪು ಮಾಡುತ್ತಾರೆ. ದೇಹವನ್ನು ನೆನಪು ಮಾಡಿದರೆ ಎಲ್ಲವು ಸಮಾಪ್ತಿ ಆಗಿ ಬಿಡುತ್ತದೆ. ತಮ್ಮನ್ನು ತಾವು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಿ ಎಂಬ ಒಂದೇ ಮಾತನ್ನು ಇಲ್ಲಿ ನಿಮಗೆ ತಿಳಿಸಲಾಗುತ್ತದೆ. ನಾವು ಎಷ್ಟು ನೆನಪು ಮಾಡುತ್ತೇವೆ ಎಂದು ಚಾರ್ಟ್ ಇಟ್ಟುಕೊಳ್ಳಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತಾ ಹೋಗುತ್ತೀರಿ. ಗಂಗೆಯಲ್ಲಿ ಸ್ನಾನ ಮಾಡುವುದರಿಂದ ಪಾವನರಾಗುತ್ತೀರೆಂದಲ್ಲ. ಆತ್ಮನ ಮಾತಾಗಿದೆಯಲ್ಲವೇ. ಆತ್ಮವೇ ಪಾವನ ಆಗುತ್ತದೆ, ಆತ್ಮನೇ ಪತಿತ ಆಗುತ್ತದೆಯಲ್ಲವೇ. ಆತ್ಮ ನಕ್ಷತ್ರ ಬಿಂದು ಆಗಿದೆ ಎಂದು ತಂದೆ ತಿಳಿಸಿದ್ದಾರೆ. ಭೃಕುಟಿಯ ಮಧ್ಯದಲ್ಲಿ ಆತ್ಮ ಇರುವುದು. ಆತ್ಮ ನಕ್ಷತ್ರ ಅತೀ ಸೂಕ್ಷ್ಮವಾಗಿದೆ. ತಾವು ಮಕ್ಕಳೇ ಈ ಮಾತುಗಳನ್ನು ತಿಳಿದುಕೊಳ್ಳಲು ಸಾಧ್ಯ. ನಾನು ಕಲ್ಪದ ಸಂಗಮದಲ್ಲಿ ಬರುತ್ತೇನೆ ಎಂದು ನಾನು ತಿಳಿಸಿದ್ದೇನೆ. ಘೋರ ಅಂಧಕಾರ ಮತ್ತು ಘೋರ ಬೆಳಕಿನ ಸಂಗಮದಲ್ಲಿ ಬರುತ್ತೇನೆ. ಬಾಕಿ ಯುಗ-ಯುಗದಲ್ಲಿ ಬರುವ ಅವಶ್ಯಕತೆ ಇಲ್ಲ. ಏಣಿಯನ್ನು ಇಳಿಯುತ್ತಲೇ ಬರುತ್ತೀರಿ. ಪೂರ್ಣ 84 ಜನ್ಮಗಳ ಏಣಿ ಇಳಿದಾಗ ತಂದೆಯು ಬರುತ್ತಾರೆ. ಈ ಜ್ಞಾನ ಇಡೀ ಪ್ರಪಂಚಕ್ಕಾಗಿ ಇದೆ. ಇವರ ಎಲ್ಲಾ ಚಿತ್ರಗಳು ಕಲ್ಪನೆಯಾಗಿದೆ ಎಂದು ಸನ್ಯಾಸಿಗಳು ಹೇಳಿ ಬಿಡುತ್ತಾರೆ. ಆದರೆ ಕಲ್ಪನೆ ಮಾಡುವ ಮಾತೇ ಇದರಲ್ಲಿ ಇಲ್ಲ. ಇದು ಎಲ್ಲರಿಗೆ ತಿಳಿಸಲಾಗುತ್ತದೆ, ಇಲ್ಲವೆಂದರೆ ಹೇಗೆ ಗೊತ್ತಾಗುತ್ತದೆ. ಆದ್ದರಿಂದ ಈ ಚಿತ್ರಗಳನ್ನು ಮಾಡಲಾಗಿದೆ. ಈ ಪ್ರದರ್ಶಿನಿ ದೇಶ-ವಿದೇಶದಲ್ಲಿ ಆಗುತ್ತಿರುತ್ತದೆ. ಬಹಳ ಭಾರತವಾಸಿ ಮಕ್ಕಳಿದ್ದಾರೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರೂ ಮಕ್ಕಳಾಗಿದ್ದಾರಲ್ಲವೇ. ಇದು ಅನೇಕ ಧರ್ಮಗಳ ವೃಕ್ಷವಾಗಿದೆ. ಇವರೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಸತ್ತು ಹೋಗಿದ್ದಾರೆ ಎಂದು ತಂದೆ ಕುಳಿತು ತಿಳಿಸುತ್ತಾರೆ. ಸತ್ಯಯುಗದಲ್ಲಿ ಯಾರು ಮೊಟ್ಟ ಮೊದಲು ಬರುತ್ತಾರೆ, ಅವರೇ ಪುನಃ ಮೊಟ್ಟ ಮೊದಲು ದ್ವಾಪರದಿಂದ ಹಿಡಿದು ಕಾಮ ಅಗ್ನಿಯಲ್ಲಿ ಸುಟ್ಟು ಹೋಗುತ್ತಾರೆ. ಆದ್ದರಿಂದ ಕಪ್ಪಾಗಿ ಬಿಟ್ಟಿದ್ದಾರೆ. ಈಗ ಎಲ್ಲರ ಸದ್ಗತಿ ಆಗುವುದಿದೆ. ತಾವು ನಿಮಿತ್ತರಾಗಿದ್ದೀರಿ. ನಿಮ್ಮ ಹಿಂದೆ ಎಲ್ಲರ ಸದ್ಗತಿ ಆಗುವುದಿದೆ. ತಂದೆ ಎಷ್ಟು ಸಹಜ ರೀತಿ ತಿಳಿಸುತ್ತಾರೆ. ಕೇವಲ ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಆತ್ಮವೇ ದುರ್ಗತಿಯನ್ನು ಪಡೆದುಕೊಂಡಿದೆ. ಆತ್ಮ ಪತಿತ ಆಗುವುದರಿಂದ ಶರೀರವೂ ಸಹ ಅದೇ ರೀತಿ ಸಿಗುತ್ತದೆ. ಆತ್ಮನನ್ನು ಪಾವನ ಮಾಡಿಕೊಳ್ಳುವ ಬಹಳ ಸಹಜ ಯುಕ್ತಿಯನ್ನು ತಂದೆ ತಿಳಿಸುತ್ತಾರೆ. |
ತ್ರಿಮೂರ್ತಿ ಚಿತ್ರದಲ್ಲಿ ಬ್ರಹ್ಮನ ಚಿತ್ರವನ್ನು ನೋಡಿ ಮನುಷ್ಯರು ಗೊಂದಲವಾಗುತ್ತಾರೆ. ಇವರಿಗೆ ಬ್ರಹ್ಮಾ ಎಂದು ಏಕೆ ಹೇಳುತ್ತೀರಿ? ಬ್ರಹ್ಮಾ ಅಂತೂ ಸೂಕ್ಷ್ಮವತನವಾಸಿ ದೇವತೆಯಾಗಿದ್ದಾರೆ, ಇಲ್ಲಿ ಎಲ್ಲಿಂದ ಬಂದಿದ್ದಾರೆ? ಈ ದಾದಾರವರಂತೂ ಪ್ರಸಿದ್ಧ ಆಗಿದ್ದರು. ಸಮಾಚಾರ ಪತ್ರದಲ್ಲಿ ಎಲ್ಲಾ ಕಡೆ ಹಾಕಿದರು, ಒಬ್ಬ ವಜ್ರದ ವ್ಯಾಪಾರಿ ನಾನು ಶ್ರಿಕೃಷ್ಣನಾಗಿದ್ದೇನೆ, ನಮಗೆ 16,108 ರಾಣಿಗಳು ಬೇಕು ಎಂದು ಹೇಳಿದರು. ಈ ರೀತಿ ಓಡಿಸಲು ದೊಡ್ಡದಾಗಿ ಸಮಾಚಾರ ಹರಡಿದೆ. ಈಗ ಒಬ್ಬೊಬ್ಬರಿಂದ ಯಾರು ತಲೆ ಕೆಡಿಸಿಕೊಳ್ಳುತ್ತಾರೆ. ಎಷ್ಟೊಂದು ಮನುಷ್ಯರಿದ್ದಾರೆ. ಆಬುನಲ್ಲೂ ಸಹ ಯಾರಾದರೂ ಬರುತ್ತಾರೆಂದರೆ ಅವರಿಗೆ ತಕ್ಷಣ ಅರೇ ಬ್ರಹ್ಮಾಕುಮಾರಿಯರ ಹತ್ತಿರ ಹೋಗುತ್ತೀರಾ! ಅವರಂತೂ ಜಾದೂ ಮಾಡಿ ಬಿಡುತ್ತಾರೆ. ಸ್ತ್ರೀ-ಪುರುಷರನ್ನು ಸಹೋದರ-ಸಹೋದರಿಯರನ್ನಾಗಿ ಮಾಡಿ ಬಿಡುತ್ತಾರೆ. ದೊಡ್ಡ-ದೊಡ್ಡ ಮಾತುಗಳನ್ನು ಹೇಳಿ ತಲೆ ಕೆಡಿಸುತ್ತಾರೆ. ತಾವು ನನಗೆ ಜ್ಞಾನ ಸಾಗರ, ವರ್ಲ್ಡ್ ಆಲ್ಮೈಟಿ ಅಥಾರಿಟಿ ಎಂದು ಹೇಳುತ್ತೀರಿ ಎಂದು ತಂದೆ ತಿಳಿಸುತ್ತಾರೆ. ವರ್ಲ್ಡ್ ಆಲ್ಮೈಟಿ ಅಥಾರಿಟಿ ಎಂದರೆ ಸರ್ವಶಕ್ತಿವಂತ. ಎಲ್ಲಾ ವೇದ, ಶಾಸ್ತ್ರಗಲು ತಿಳಿದಿರುವವರು. ದೊಡ್ಡ ವಿದ್ವಾನರಿಗೂ ಸಹ ಅಥಾರಿಟಿ ಎಂದು ಹೇಳಲಾಗುತ್ತದೆ ಏಕೆಂದರೆ ಅವರೆಲ್ಲರೂ ವೇದ-ಶಾಸ್ತ್ರ ಮುಂತಾದಗಳನ್ನು ಓದುತ್ತಾರೆ. ನಂತರ ಕಾಶಿಗೆ ಹೋಗಿ ಟೈಟಲ್ ತೆಗೆದುಕೊಂಡು ಬರುತ್ತಾರೆ. ಮಹಾ-ಮಹೋಪಾಧ್ಯಾಯ ಶ್ರೀ, ಶ್ರೀ 108 ಸರಸ್ವತಿ ಎಂಬ ಎಲ್ಲಾ ಬಿರುದುಗಳು ಅಲ್ಲಿಯೇ ಸಿಗುತ್ತದೆ. ಯಾರು ಬಹಳ ಬುದ್ಧಿವಂತರಾಗಿರುತ್ತಾರೆ ಅವರಿಗೆ ಬಹಳ ದೊಡ್ಡ ಬಿರುದು ಸಿಗುತ್ತದೆ. ಶಾಸ್ತ್ರಗಳಲ್ಲಿ ಜನಕನ ಬಗ್ಗೆ ಬರೆದಿದ್ದಾರೆ. ಅವರು ಯಾರಾದರೂ ಸತ್ಯ ಬ್ರಹ್ಮ ಜ್ಞಾನಿ ನನಗೆ ತಿಳಿಸಲಿ ಎಂದು ಹೇಳಿದರು. ಈಗ ಬ್ರಹ್ಮ ಜ್ಞಾನಿಗಳಂತೂ ಇಲ್ಲವೇ ಇಲ್ಲ. ಇದೆಲ್ಲಾ ಇಲ್ಲಿನ ಮಾತುಗಳೇ. ದೊಡ್ಡ ಕಥೆ ಮಾಡಿ ಬಿಟ್ಟಿದ್ದಾರೆ. ಶಂಕರ-ಪಾರ್ವತಿಯರದೂ ಸಹ ಬರೆದಿರುವ ಕಥೆಯಾಗಿದೆ. ಎಷ್ಟು ಕಥೆಗಳನ್ನು ಕುಳಿತು ಮಾಡಿದ್ದಾರೆ. ಶಂಕರ ಪಾರ್ವತಿಗೆ ಕಥೆ ತಿಳಿಸಿದ್ದಾರೆ, ವಾಸ್ತವದಲ್ಲಿ ಶಿವ ಎಂದು ಇತ್ತು ನಂತರ ಅವರು ಶಂಕರ-ಪಾರ್ವತಿಯರ ಹೆಸರು ಕೊಟ್ಟು ಬಿಟ್ಟಿದ್ದಾರೆ. ಭಾಗವತ ಮುಂತಾದವುದರಲ್ಲಿ ಈ ಸಮಯದ ಮಾತುಗಳಿವೆ. ಅವರಿಗೆ ಯೋಚನೆ ಬಂದಿತು - ರಾಜನಿಗೆ ಹೋಗಿ ಈ ಜ್ಞಾನವನ್ನು ತಿಳಿಸೋಣ ಎಂದು ನಂತರ ಕಥೆಯಲ್ಲಿ ತಿಳಿಸುತ್ತಾರೆ. ತಂದೆಯು ತಿಳಿಸುತ್ತಾರೆ - ರಾಜರಿಗೆ ಹೋಗಿ ಜ್ಞಾನವನ್ನು ತಿಳಿಸಿ. ತಾವೇ ಸೂರ್ಯವಂಶಿ ಆಗಿದ್ದಿರಿ ನಂತರ ಚಂದ್ರವಂಶಿ, ವೈಶ್ಯವಂಶಿ, ಶೂದ್ರವಂಶಿ ಆಗಿದ್ದೀರಿ. ನಮ್ಮ ರಾಜಧಾನಿಯೇ ಕಳೆದು ಹೋಗಿದೆ. ನಂತರ ಸೂರ್ಯವಂಶಿಯ ರಾಜಧಾನಿಯನ್ನು ತೆಗೆದುಕೊಳ್ಳಬೇಕೆಂದರೆ ಪುರುಷಾರ್ಥ ಮಾಡಿ. ರಾಜಯೋಗ ಕಲಿಸುವ ತಂದೆ ಬಂದಿದ್ದಾರೆ. ಪುನಃ ಬಂದು ಬೇಹದ್ದಿನ ಸ್ವರಾಜ್ಯವನ್ನು ಪಡೆದುಕೊಳ್ಳಿ. ರಾಜರ ಬಳಿಯೂ ಬಹಳ ಪತ್ರಗಳು ಹೋಗುತ್ತದೆ. ಆದರೆ ಅವರಿಗೆ ಸಿಗುತ್ತದೇನು? ಅವರ ಪ್ರವೈಟ್ ಸೆಕ್ರೆಟರಿ ಪತ್ರಗಳನ್ನು ಕೊಡುತ್ತಾರೆ. ಇಷ್ಟೊಂದು ಪತ್ರಗಳನ್ನು ಎಸೆದು ಬಿಡುತ್ತಾರೆ. ಕೆಲವೊಂದರಲ್ಲಿ ಅವಶ್ಯವಾಗಿರುವ ಮಾತುಗಳಿದ್ದರೆ ಅವರಿಗೆ ತೋರಿಸುತ್ತಾರೆ. ಅಷ್ಟವಕ್ರ ಜನಕನಿಗೆ ಸೆಕೆಂಡಿನಲ್ಲಿ ಜೀವನ್ಮುಕ್ತಿಯ ಸಾಕ್ಷಾತ್ಕಾರ ಮಾಡಿಸಿದರು ಎಂದು ಹೇಳುತ್ತಾರೆ. ಈಗ ತಂದೆ ನಿಮಗೆ ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಯಾರು ತಿಳಿದುಕೊಳ್ಳುವರು ಇಲ್ಲವೋ ಅವರು ಇಲ್ಲಿ-ಅಲ್ಲಿ ನೋಡುತ್ತಿರುತ್ತಾರೆ. ಬಾಬಾ ತಕ್ಷಣ ತಿಳಿದುಕೊಳ್ಳುತ್ತಾರೆ - ಅವರ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳಿತ್ತಿಲ್ಲ ಎಂದು. ಬಾಬಾ ಎಲ್ಲಾ ಕಡೆ ನೋಡುತ್ತಾರೆ - ಎಲ್ಲರೂ ಚೆನ್ನಾಗಿ ಕೇಳುತ್ತಾರೆಯೇ, ಇವರ ಬುದ್ಧಿ ಎಲ್ಲೋ ಅಲೆದಾಡುತ್ತಿರುತ್ತದೆ, ಆಕಲಿಸುತ್ತಿರುತ್ತಾರೆ. ಜ್ಞಾನ ಬುದ್ಧಿಯಲ್ಲಿ ಕುಳಿತುಕೊಂಡಿಲ್ಲವೆಂದರೆ ತೂಕಡಿಸುತ್ತಿರುತ್ತಾರೆ, ನಷ್ಟ ಆಗಿ ಬಿಡುತ್ತದೆ. ಕರಾಚಿಯಲ್ಲಿ ಮಕ್ಕಳ ಭಟ್ಟಿ ಇತ್ತು. ಕೆಲವರು ತೂಕಡಿಸಿದರೆ, ಅವರನ್ನು ತಕ್ಷಣ ಹೊರಗೆ ಹಾಕುತ್ತಿದ್ದರು. ತಾವೇ ಕುಳಿತುಕೊಳ್ಳುತ್ತಿದ್ದರು. ಹೊರಗಿನವರು ಯಾರೂ ಬರುತ್ತಿರಲಿಲ್ಲ. ಶುರುವಿನಲ್ಲಿ ಇವರದು ಬಹಳ ದೊಡ್ಡ ಪಾರ್ಟ್ ನಡೆದಿತ್ತು. ದೊಡ್ಡ ಚರಿತ್ರೆ ಇದೆ. ಶುರುವಿನಲ್ಲಂತೂ ಮಕ್ಕಳು ಬಹಳ ಧ್ಯಾನದಲ್ಲಿ ಹೋಗುತ್ತಿದ್ದರು. ಇದುವರೆಗೂ ಜಾದೂ ಎಂದು ಹೇಳುತ್ತಾರೆ. ಪರಮಪಿತ ಪರಮಾತ್ಮನಿಗೆ ಜಾದುಗಾರ್ ಎಂದು ಹೇಳುತ್ತಾರೆ. ಶಿವ ಬಾಬಾ ನೋಡುತ್ತಾರೆ - ಇವರಿಗೆ ಬಹಳ ಪ್ರೀತಿ ಇದೆ, ನೋಡುತ್ತಿದ್ದಾಗಲೇ ತಕ್ಷಣ ಧ್ಯಾನದಲ್ಲಿ ಹೋಗುತ್ತಿದ್ದರು. ಭಾರತವಾಸಿಗಳಿಗೆ ವೈಕುಂಠವೆಂದರೆ ಬಹಳ ಪ್ರೀತಿ ಇದೆ. ಯಾರಾದರೂ ಸತ್ತು ಹೋದರೆ ವೈಕುಂಠವಾಸಿ ಆದರು, ಸ್ವರ್ಗವಾಸಿ ಆದರು ಎಂದು ಹೇಳುತ್ತಾರೆ. ಈಗ ಇದಂತೂ ನರಕವಾಗಿದೆ, ಎಲ್ಲರೂ ನರಕವಾಸಿ ಆದರು. ಆಗ ಇಂತಹವರು ಸ್ವರ್ಗವಾಸಿ ಆದರು ಎಂದು ಹೇಳುತ್ತಾರೆ. ಆದರೆ ಸ್ವರ್ಗದಲ್ಲಂತೂ ಯಾರೂ ಹೋಗುವುದೇ ಇಲ್ಲ. ನಾವು ಸ್ವರ್ಗವಾಸಿ ಆಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ನರಕವಾಸಿ ಆದೆವು ಎಂದು ಈಗ ಕೇವಲ ನೀವಷ್ಟೇ ತಿಳಿದುಕೊಂಡಿದ್ದೀರಿ. ಪುನಃ ಈಗ ಬಾಬಾ ಸ್ವರ್ಗವಾಸಿಯನ್ನಾಗಿ ಮಾಡುತ್ತಿದ್ದಾರೆ. ಸ್ವರ್ಗದಲ್ಲಿ ರಾಜಧಾನಿ ಇರುತ್ತದೆ. ರಾಜಧಾನಿಯಲ್ಲಿ ಬಹಳ ಪದವಿಗಳಿವೆ. ಪುರುಷಾರ್ಥ ಮಾಡಿ ನರನಿಂದ ನಾರಯಣರಾಗಬೇಕು. ಮಮ್ಮಾ-ಬಾಬಾ ಭವಿಷ್ಯದಲ್ಲಿ ಲಕ್ಷ್ಮೀ-ನಾರಾಯಣರಾಗುತ್ತಾರೆ ಎಂದು ತಮಗೆ ಗೊತ್ತಿದೆ. ಈಗ ಪುರುಷಾರ್ಥ ಮಾಡುತ್ತಿದ್ದಾರೆ, ಆದ್ದರಿಂದ ಫಾಲೋ ಫಾದರ್-ಮದರ್ ಎಂದು ಹೇಳಲಗುತ್ತದೆ. ಇವರು ಹೇಗೆ ಪುರುಷಾರ್ಥ ಮಾಡಿದರು ಅದೇ ರೀತಿ ತಾವೂ ಸಹ ಮಾಡಿ. ಇವರೂ ನೆನಪಿನಲ್ಲಿ ಇರುತ್ತಾರೆ, ಸ್ವದರ್ಶನ ಚಕ್ರಧಾರಿಯಾಗುತ್ತಾರೆ. ತಾವು ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ. ತ್ರಿಕಾಲದರ್ಶಿಯಾಗಿ. ನಿಮಗೆ ಪೂರ್ತಿ ಚಕ್ರದ ಜ್ಞಾನವಿದೆ, ಇದರಲ್ಲಿ ತತ್ಪರರಾಗಿರಿ, ಬೇರೆಯವರಿಗೆ ತಿಳಿಸುತ್ತಿರಿ. ಈ ಸೇವೆಯಲ್ಲಿ ತತ್ಪರರಾಗಿದ್ದರೆ ಬೇರೆ ಯಾವುದೇ ವ್ಯಾಪರ-ವ್ಯವಹಾರ ನೆನಪಿರುವುದಿಲ್ಲ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸತ್ಯಯುಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಮಾತಾ-ಪಿತಾರವರನ್ನು ಪೂರ್ತಿ ಫಾಲೋ ಮಾಡಬೇಕು. ಅವರ ಸಮಾನ ಪುರುಷಾರ್ಥ ಮಾಡಬೇಕು. ಸೇವೆಯಲ್ಲಿ ತತ್ಪರರಾಗಿರಬೇಕು. ಏಕಾಗ್ರವಾಗಿ ವಿದ್ಯೆಯನ್ನು ಓದಬೇಕು. |
2. ನೆನಪಿನ ಸತ್ಯ-ಸತ್ಯ ಚಾರ್ಟ್ ಇಟ್ಟುಕೊಳ್ಳಬೇಕು. ತಮ್ಮನ್ನು ತಾವು ಆತ್ಮ ಎಂದು ತಿಳಿದು ತಂದೆಯನ್ನು ನೆನಪು ಮಾಡಬೇಕು. ದೇಹ ಮತ್ತು ದೇಹಧಾರಿಗಳನ್ನು ನೆನಪು ಮಾಡಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಜಗದಂಬೆಯ ಮಹಿಮೆಯನ್ನು ಕೇಳಿದಿರಿ. ಭಾರತದಲ್ಲಿಯೇ ಜಗದಂಬೆಯ ಗಾಯನವಿದೆ, ಜಗದಂಬೆಯಿದ್ದಾರೆ ಅಂದಮೇಲೆ ಜಗತ್ಪಿತನೂ ಅವಶ್ಯವಾಗಿ ಇರುವರು. ಸರಸ್ವತಿಗೆ ಜಗದಂಬೆ ಎಂದು ಹೇಳುತ್ತಾರೆ, ವಾಸ್ತವದಲ್ಲಿ ಅವರ ಹೆಸರು ಒಂದೇ ಇರಬೇಕಾಗಿದೆ. ನಿಮ್ಮದು ಒಂದೇ ಹೆಸರಿದೆಯಲ್ಲವೆ. 2-3 ಹೆಸರುಗಳಂತೂ ಇಲ್ಲ. ಜಗದಂಬೆಯನ್ನು ಸಾಕಾರದಲ್ಲಿ ತೋರಿಸುತ್ತಾರೆ, ಶರೀರಧಾರಿಯಾಗಿದ್ದಾರೆ ಹಾಗೆಯೇ ಜಗತ್ಪಿತನೂ ಇದ್ದಾರೆ, ಅವರಿಗೆ ಪ್ರಜಾಪಿತನೆಂದೂ ಹೇಳಲಾಗುತ್ತದೆ. ಹೇಗೆ ಇಡೀ ಜಗತ್ತಿಗೆ ತಾಯಿಯಾಗಿದ್ದಾರೆಯೋ ಅದೇ ರೀತಿ ಇಡೀ ಜಗತ್ತಿನ ತಂದೆಯೂ ಇದ್ದಾರೆ. ಅವಶ್ಯವಾಗಿ ಇಬ್ಬರೂ ಇಲ್ಲಿಯೇ ಇರುವರು. ಇಬ್ಬರ ಹೆಸರನ್ನೂ ತಿಳಿಸಿದೆನು - ಪ್ರಜಾಪಿತ ಮತ್ತು ಪ್ರಜಾ ಮಾತಾ ಹಾಗೂ ನಿರಾಕಾರ ಶಿವ ತಂದೆಗೂ ಸಹ ಜಗತ್ಪಿತನೆಂದು ಹೇಳಲಾಗುತ್ತದೆ. ಅವರು ಎಲ್ಲರ ಪಿತನಾಗಿದ್ದಾರೆ. ಅವರ ಹೆಸರೇ ಆಗಿದೆ - ಪರಮಪಿತ ಪರಮಾತ್ಮ ಶಿವ. ಕೇವಲ ಈಶ್ವರ ಅಥವಾ ಪರಮಾತ್ಮ ಎಂದು ಹೇಳಬಾರದು. ಅವರಿಗೆ ನಾಮ-ರೂಪವೂ ಇದೆಯಲ್ಲವೆ. ಗಾಡ್ಫಾದರ್ ಎಂದು ಹೇಳಲಾಗುತ್ತದೆ, ಒಬ್ಬರು ಆತ್ಮಗಳ ತಂದೆಯಾಗಿದ್ದಾರೆ, ಇನ್ನೊಬ್ಬರು ಸಾಕಾರಿ ಮನುಷ್ಯಾತ್ಮರ ತಂದೆ ಮತ್ತು ತಾಯಿಯಾಗಿದ್ದಾರೆ. ಶಿವನು ಆತ್ಮರ ಪಿತನಾಗಿದ್ದಾರೆ, ಅವರು ನಮ್ಮ ತಂದೆಯಾಗಿದ್ದಾರೆಂದು ಆತ್ಮವು ಹೇಳುತ್ತದೆ ಮತ್ತೆ ಆತ್ಮಕ್ಕೆ ಈ ಸಾಕಾರ ಶರೀರವು ಸಿಕ್ಕಿದಾಗ ಬ್ರಹ್ಮಾ ತಂದೆ ಎಂದು ಹೇಳುತ್ತಾರೆ ಅಂದಮೇಲೆ ಇಬ್ಬರು ತಂದೆಯರಾದರು. ಒಬ್ಬರು ಶಿವ ತಂದೆ, ಇನ್ನೊಬ್ಬರು ಪ್ರಜಾಪಿತ ಬ್ರಹ್ಮಾ. ಬ್ರಹ್ಮನು ಶಿವ ತಂದೆಯ ಮಗನಾಗಿದ್ದಾರೆ. ಒಬ್ಬರು ನಿರಾಕಾರಿ ಪಿತ, ಇನ್ನೊಬ್ಬರು ಸಾಕಾರಿ ಪಿತ. ನಿರಾಕಾರ ಪಿತನಿಗೆ ಪತಿತ-ಪಾವನನೆಂದು ಹೇಳಲಾಗುತ್ತದೆ. ಬ್ರಹ್ಮಾ ಹಾಗೂ ಸರಸ್ವತಿಗೆ ಪತಿತ-ಪಾವನರೆಂದು ಹೇಳಲಾಗುವುದಿಲ್ಲ. ಪತಿತ-ಪಾವನನು ಒಬ್ಬರೇ ಆಗಿದ್ದಾರೆ, ಇವರಂತೂ ಇಬ್ಬರಾದರು. ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ ಅಂದಾಗ ಇಬ್ಬರು ತಂದೆಯರಾದರು. ಶಿವ ತಂದೆಯು ರಚಯಿತನಾಗಿದ್ದಾರೆ, ಹೊಸ ಪ್ರಪಂಚವನ್ನು ರಚಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಮೊದಲು ಬ್ರಹ್ಮನನ್ನು ರಚಿಸಬೇಕಾಗಿದೆ, ವಿಷ್ಣು ಮತ್ತು ಶಂಕರನಿಗೆ ಎಂದೂ ಪ್ರಜಾಪಿತನೆಂದು ಹೇಳುವುದಿಲ್ಲ, ಬ್ರಹ್ಮನಿಗೇ ಪ್ರಜಾಪಿತನೆಂದು ಹೇಳುತ್ತಾರೆ ಅಂದಮೇಲೆ ಶಿವ ತಂದೆಯು ಪ್ರಜಾಪಿತ ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ನಾವು ಶಿವ ತಂದೆಯ ಮಕ್ಕಳೆಂದು ಹೇಳುತ್ತೀರಿ, ಶಿವ ತಂದೆಯು ಇವರಲ್ಲಿ ಪ್ರವೇಶ ಮಾಡಿ ದತ್ತು ಮಾಡಿಕೊಂಡಿದ್ದಾರೆ, ಅವರೇ ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ಆತ್ಮವೇ ಪತಿತವಾಗಿದೆ, ಈ ಕಾರಣದಿಂದ ಶರೀರವು ಪತಿತವಾದದ್ದೇ ಸಿಗುತ್ತದೆ. ಹೇಗೆ ಚಿನ್ನದಲ್ಲಿ ಬೆಳ್ಳಿ, ತಾಮ್ರ, ಕಬ್ಬಿಣವನ್ನು ಬೆರೆಸುತ್ತಾರೆಯೋ ಅದೇ ರೀತಿ ಆತ್ಮದಲ್ಲಿಯೂ ತುಕ್ಕು ಬೀಳುತ್ತದೆ, ಮೂಲತಃ ಆತ್ಮವು ಪವಿತ್ರ, ಮುಕ್ತಿಧಾಮದ ನಿವಾಸಿಯಾಗಿದೆ. ಅಲ್ಲಿ ಶಿವ ತಂದೆಯು ಇರುತ್ತಾರೆ. ಶಿವ ತಂದೆ, ಪ್ರಜಾಪಿತ ಬ್ರಹ್ಮಾರಲ್ಲಿ ಒಬ್ಬರಿಗೆ ತಂದೆಯೆಂತಲೂ, ಇನ್ನೊಬ್ಬರಿಗೆ ದಾದಾ ಎಂತಲೂ ಹೇಳುತ್ತೀರಿ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ. ಎಲ್ಲಾ ಮನುಷ್ಯ ಮಾತ್ರರು ಶಿವನ ಸಂತಾನರಾಗಿದ್ದಾರೆ, ಶಿವವಂಶಿಯರಾಗಿದ್ದಾರೆ ಮತ್ತೆ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ಶಿವ ತಂದೆ ಮತ್ತು ಬ್ರಹ್ಮಾದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ, ಶಿವ ತಂದೆಯು ಇವರಲ್ಲಿ ವಿರಾಜಮಾನವಾಗಿದ್ದಾರೆ, ನಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ಬ್ರಾಹ್ಮಣರನ್ನಾಗಿ ಮಾಡಿ ರಾಜಯೋಗವನ್ನು ಕಲಿಸುತ್ತಾರೆ. ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ದೇವತೆಗಳಿಗೆ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ, ಅವರಿಗೆ ತಂದೆಯೆಂತಲೂ ಹೇಳಲು ಸಾಧ್ಯವಿಲ್ಲ. ನೀವೀಗ ವಿಷ್ಣುಪುರಿಯ ಮಾಲೀಕರಾಗುತ್ತಿದ್ದೀರಿ, ವಿಷ್ಣುವಿನ ಎರಡು ರೂಪಗಳು ಲಕ್ಷ್ಮೀ-ನಾರಾಯಣರಾಗಿದ್ದಾರೆ, ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಯಾರು ಭಕ್ತಿ ಮಾಡುವರೋ ಅವರಿಗೆ ಅವಶ್ಯವಾಗಿ ಇಬ್ಬರು ತಂದೆಯರಿದ್ದಾರೆ. ಸತ್ಯಯುಗದಲ್ಲಿ ಒಬ್ಬ ತಂದೆಯಿರುತ್ತಾರೆ, ಅಲ್ಲಿ ಹೇ ಪರಮಪಿತ ಪರಮಾತ್ಮ, ದುಃಖಹರ್ತ-ಸುಖಕರ್ತ ಬನ್ನಿ ಎಂದು ಹೇಳುವುದಿಲ್ಲ. ಅಲ್ಲಂತೂ ದೇವಿ-ದೇವತೆಗಳ ರಾಜ್ಯವಿತ್ತು, ಅವರೆಂದೂ ಓ ಗಾಡ್ಫಾದರ್, ಲಿಬರೇಟರ್ ಎಂದು ಹೇಳುವುದಿಲ್ಲ. ಪತಿತ-ಪಾವನನ್ನು ಕರೆಯಲು ಅಲ್ಲಿ ಯಾರೂ ದುಃಖಿ-ಪತಿತರಿರುವುದೇ ಇಲ್ಲ. ನೀವು ತಿಳಿದುಕೊಂಡಿದ್ದೀರಿ - ಭಾರತದಲ್ಲಿ ಇಂದಿಗೆ 5000 ವರ್ಷಗಳ ಮೊದಲು ದೇವಿ-ದೇವತೆಗಳ ರಾಜ್ಯವಿತ್ತು, ಮತ್ತೆ 1250 ವರ್ಷಗಳ ನಂತರ ರಾಮ-ಸೀತೆಯರ ರಾಜ್ಯವಾಗುತ್ತದೆ. ತಂದೆಯು ಸಿದ್ಧ ಮಾಡಿ ತಿಳಿಸುತ್ತಾರೆ - ಸತ್ಯ-ತ್ರೇತಾಯುಗದಲ್ಲಿ ನೀವು 21 ಜನ್ಮಗಳನ್ನು ತೆಗೆದುಕೊಂಡಿರಿ. ಬ್ರಾಹ್ಮಣ-ದೇವತಾ, ಕ್ಷತ್ರಿಯ..... ಎಲ್ಲವೂ ಭಾರತದಲ್ಲಿಯೇ ಆಗುತ್ತಾರೆ, ತಂದೆಯು ಬಂದು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡುತ್ತಾರೆ, ಪುನರ್ಸ್ಥಾಪನೆ ಮಾಡುತ್ತಾರೆ. ಕಾಯ ಕಲ್ಪತರುವನ್ನಾಗಿ ಮಾಡುತ್ತಾರೆ, ಅಮರವನ್ನಾಗಿ ಮಾಡುತ್ತಾರೆ. ನೀವು ಮಕ್ಕಳನ್ನು ತಂದೆಯು ಬಂದು ಅಮರ ಲೋಕದ ಮಾಲೀಕರನ್ನಾಗಿ ಮಾಡುತ್ತಾರೆ. ಭಾರತವು ಅಮರ ಲೋಕವಾಗಿದ್ದಾಗ ದೇವತೆಗಳ ರಾಜ್ಯವಿತ್ತು, ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ಬಂದು ಮೃತ್ಯುಲೋಕದ ಮಾಲೀಕರಾಗಿದ್ದೀರಿ. ನಮ್ಮ ಭಾರತವೆಂದು ಹೇಳುತ್ತಾರೆ ಅಂದಮೇಲೆ ಪ್ರಜೆಗಳೂ ಮಾಲೀಕರಾದರಲ್ಲವೆ. ನೀವೂ ಸಹ ನಮ್ಮ ಭಾರತವೆಂದು ಹೇಳುತ್ತೀರಿ, ನಾವು ಭಾರತದ ಮಾಲೀಕರಾಗಿದ್ದೆವು ಆದರೆ ನರಕವಾಸಿಗಳು. ನಾವು ಸ್ವರ್ಗವಾಸಿಗಳಾಗಿದ್ದೇವೆ ಎಂದು ದೇವತೆಗಳು ಹೇಳುತ್ತಾರೆ, ನೀವೂ ಸಹ ಸ್ವರ್ಗವಾಸಿಗಳಾಗಿದ್ದಿರಿ ಮತ್ತೆ 84 ಜನ್ಮಗಳನ್ನು ತೆಗೆದುಕೊಂಡು ನರಕವಾಸಿಗಳಾಗಿದ್ದೀರಿ, ಇಲ್ಲಿ ಭಾರತದಲ್ಲಿಯೇ ಶಿವ ತಂದೆಯು ಅವತರಣೆ ಮಾಡುತ್ತಾರೆ, ಶಿವ ರಾತ್ರಿ ಮತ್ತು ಶಿವ ಜಯಂತಿ ಎಂದು ಗಾಯನವಿದೆ, ಕೃಷ್ಣ ಜಯಂತಿಯನ್ನೂ ಆಚರಿಸುತ್ತಾರೆ. ಇಂತಹ ಸಮಯದಲ್ಲಿ ಕೃಷ್ಣನ ಜನ್ಮವಾಯಿತೆಂದು ದಿನಾಂಕ, ವೇಳೆಯನ್ನು ತಿಳಿಸುತ್ತಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ತಾಯಿಯ ಗರ್ಭದಿಂದಲೇ ಜನ್ಮ ಪಡೆದಿರಬೇಕು, ಸತ್ಯಯುಗ, ಹೊಸ ಪ್ರಪಂಚದಲ್ಲಿ ಕೃಷ್ಣ ಜಯಂತಿಯಾಗುತ್ತದೆ ನಂತರ ಕೃಷ್ಣನು ಪುನರ್ಜನ್ಮದಲ್ಲಿ ಬರತೊಡಗಿದನು. ತಂದೆಯು ಕೇವಲ ಒಬ್ಬರ ಮಾತನ್ನು ತಿಳಿಸುವುದಿಲ್ಲ, ಕೃಷ್ಣ ಪುರಿಯೇ ವಿಷ್ಣು ಪುರಿ ರಾಜರು ಕೆಳಗಿಳಿಯುತ್ತಾರೆ. ಅವರ ರಾಜಧಾನಿಯೂ ಸಹ ಕನಿಷ್ಠ ಮಟ್ಟಕ್ಕೆ ಬರುತ್ತದೆ. ಅದರಲ್ಲಿ ರಾಜ-ರಾಣಿ, ಪ್ರಜೆಗಳೆಲ್ಲರೂ ಬರುತ್ತಾರೆ. ಯಾವಾಗ ಚಂದ್ರವಂಶಿಯರ ರಾಜ್ಯವಿರುವುದೋ ಆಗ ಸೂರ್ಯವಂಶಿಯರ ರಾಜ್ಯವು ಕಳೆದು ಹೋಗುತ್ತದೆ. ಅವರ ರಾಜ್ಯವೇ ಚಂದ್ರವಂಶಿಯರಿಗೆ ಸಿಗುತ್ತದೆ ನಂತರ ವೈಶ್ಯ ವಂಶಿಯರಿಗೆ ಸಿಗುತ್ತದೆ. |
ಈಗ ನೀವು ತಿಳಿದುಕೊಳ್ಳುತ್ತೀರಿ - ನಾವು ಬ್ರಾಹ್ಮಣ ಕುಲದವರು ಜುಟ್ಟಿಗೆ ಸಮಾನರಾಗಿದ್ದೇವೆ. ಜುಟ್ಟಿಗೂ ಮೇಲೆ ತಂದೆಯಿದ್ದಾರೆ, ನಾವು ಮೊದಲು ಬ್ರಾಹ್ಮಣರಾಗಿದ್ದೆವು ನಂತರ ಶೂದ್ರರು ಅಥವಾ ಪಾದಗಳಿಗೆ ಸಮಾನರಾದೆವು, ಈಗ ಪಾದಗಳಿಂದ ಒಮ್ಮೆಲೆ ಶಿಖೆಗೆ ಸಮಾನರಾಗುತ್ತೇವೆ. ಮೊದಲು ಶಿವ ತಂದೆ ಅವರ ನಂತರ ಶಿಖೆಯಿರುತ್ತದೆ. ತಂದೆಯು ನಿಮ್ಮನ್ನು ಬ್ರಾಹ್ಮಣರನ್ನಾಗಿ ಮಾಡಿದ್ದಾರೆ, ಈಗ ನೀವು ಶಿವ ತಂದೆಯನ್ನು ಬಾಬಾ, ಬಾಬಾ ಎಂದು ಹೇಳುತ್ತೀರಿ. ಈ ಲೆಕ್ಕದಿಂದ ನೀವು ಮೊಮ್ಮಕ್ಕಳಾಗಿದ್ದೀರಿ. ನಿಮಗೆ ತಿಳಿದಿದೆ - ನಾವೆಲ್ಲರೂ ಬ್ರಹ್ಮನ ಸಂತಾನರು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೇವೆ. ನಾವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಸಹೋದರ-ಸಹೋದರಿಯರ ನಡುವೆ ಎಂದೂ ಕುದೃಷ್ಟಿ ಬರಲು ಸಾಧ್ಯವಿಲ್ಲ. ಎಷ್ಟೊಂದು ಮಂದಿ ಮಕ್ಕಳೆಲ್ಲರೂ ಬಾಬಾ ಎಂದು ಹೇಳುತ್ತಾರೆ ಅಂದಮೇಲೆ ಇದೆಲ್ಲವೂ ಸುಳ್ಳಾಗಲು ಸಾಧ್ಯವೇ! ಎಲ್ಲರ ತಂದೆಯಂತೂ ನಿರಾಕಾರ ಶಿವನಾಗಿದ್ದಾರೆ ಮತ್ತು ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮನಾಗಿದ್ದಾರೆ, ಒಬ್ಬ ತಂದೆಯ ಮಕ್ಕಳು ಸಹೋದರ-ಸಹೋದರಿಯರಾದರು ಅಂದಮೇಲೆ ನೀವು ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ಸ್ತ್ರೀ-ಪುರುಷರು ಹೇಗೆ ಪವಿತ್ರರಾಗಿರುವುದು ಆದ್ದರಿಂದ ಡ್ರಾಮಾದಲ್ಲಿ ಈ ಯುಕ್ತಿಯು ನಿಗಧಿಯಾಗಿದೆ, ಇಲ್ಲಿ ಕೇವಲ ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ. ಯಾರೂ ಶೂದ್ರ ಕುಮಾರ-ಕುಮಾರಿಯರಲ್ಲ. ಅವರು ಪತಿತ, ಶೂದ್ರ, ತುಚ್ಛ ಬುದ್ಧಿಯವರಾಗಿದ್ದಾರೆ ಏಕೆಂದರೆ ತಂದೆಯನ್ನು ಅರಿತುಕೊಂಡಿಲ್ಲ. ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ ಅಂದಮೇಲೆ ಅವರ ವಿಳಾಸ ಗೊತ್ತಿದೆಯೇ? ನಾಮ-ರೂಪ, ದೇಶ-ಕಾಲವನ್ನು ತಿಳಿಸಿ, ಅವರ ಜೀವನ ಕಥೆಯನ್ನು ತಿಳಿಸಿ? ಒಂದುವೇಳೆ ತಿಳಿದಿಲ್ಲವೆಂದರೆ ನಾಸ್ತಿಕರಾದರು. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲ. ಇದು ಪತಿತ ಪ್ರಪಂಚವಾಗಿದೆ, ಸತ್ಯಯುಗ ಪಾವನ ಪ್ರಪಂಚ, ಕಲಿಯುಗಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸಂಪೂರ್ಣ ತಮೋಪ್ರಧಾನರಾಗಿದ್ದಾರೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ. ಇದಕ್ಕೂ ಸಹ ಹಂತಗಳಿರುತ್ತವೆ. ದ್ವಾಪರದಿಂದ ನರಕವಾಗಲು ಆರಂಭವಾಗುತ್ತದೆ, ನಂತರ ವೃದ್ಧಿಯಾಗುತ್ತದೆ. ಭಕ್ತಿಯೂ ಸಹ ಮೊದಲು ಸತೋಪ್ರಧಾನ, ಅವ್ಯಭಿಚಾರಿಯಾಗಿತ್ತು ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆ. ನೀವು ನೋಡಿರಬಹುದು - ಎಲ್ಲಿ ಮೂರುದಾರಿಗಳು ಸೇರುವವೋ ಅದಕ್ಕೆ ಟಿವಾಟೆ ಎಂದು ಹೇಳುತ್ತಾರೆ. ಅದರ ಮೇಲೆ ತೈಲ ಇತ್ಯಾದಿಗಳನ್ನು ಹಾಕುತ್ತಾರೆ, ಕೈ ಮುಗಿಯುತ್ತಾರೆ ಅಂದಾಗ ಆಲೋಚಿಸಿ – ಶಿವ ತಂದೆಯ ಪೂಜೆಯೆಲ್ಲಿ, ಆ ಟಿವಾಟೆಯ ಪೂಜೆಯೆಲ್ಲಿ! ಇದಕ್ಕೇ ತಮೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ನೀರಿಗೂ ಪೂಜೆ ಮಾಡುತ್ತಾರೆ. ಪತಿತ-ಪಾವನಿ ಗಂಗೆಯೆಂದು ಹಾಡುತ್ತಾರೆ ಆದರೆ ಪತಿತ-ಪಾವನ ಯಾರು? ನೀರಿನ ಗಂಗೆಯು ಪತಿತ-ಪಾವನಿಯಾಗಲು ಸಾಧ್ಯವೇ! ಅದಂತೂ ಸ್ಥೂಲ ನೀರಲ್ಲವೆ. ಪತಿತ-ಪಾವನನು ತಂದೆಯಾಗಿದ್ದಾರೆ, ಶಿವ ಜಯಂತಿಯೂ ಭಾರತದಲ್ಲಿಯೇ ಆಗುತ್ತದೆ ಅಂದಮೇಲೆ ಅವಶ್ಯವಾಗಿ ಪತಿತರನ್ನು ಪಾವನ ದೇವತೆಗಳನ್ನಾಗಿ ಮಾಡಲು ಭಾರತದಲ್ಲಿಯೇ ಬಂದಿರಬೇಕಲ್ಲವೆ. ಬ್ರಹ್ಮನ ತನುವಿನಲ್ಲಿ ಬಂದು ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತಾರೆ, ನೀವಿಲ್ಲಿ ಪತಿತರಿಂದ ಪಾವನ ಆಗುವುದಕ್ಕಾಗಿಯೇ ಬರುತ್ತೀರಿ. ಹೇಗೆ ನಿಮಗೆ ಎರಡು ಭುಜಗಳಿವೆಯೋ ಹಾಗೆಯೇ ಎರಡು ಭುಜಗಳಿರುತ್ತವೆ, ನಾಲ್ಕೆಂಟು ಭುಜಗಳುಳ್ಳ ಮನುಷ್ಯರು ಯಾರೂ ಇರುವುದಿಲ್ಲ. ಇದು ಕೇವಲ ಅಲಂಕಾರಗಳನ್ನು ತೋರಿಸಿದ್ದಾರೆ. ಪ್ರವೃತ್ತಿಯನ್ನು ತೋರಿಸುವುದಕ್ಕಾಗಿ ಚತುರ್ಭುಜವನ್ನು ತೋರಿಸಿದ್ದಾರೆ. ಲಕ್ಷ್ಮೀ-ನಾರಾಯಣ ಪುರಿಗೆ ವಿಷ್ಣು ಪುರಿಯೆಂದು ಹೇಳಲಾಗುತ್ತದೆ. ವಿಷ್ಣುವಿನಿಂದ ವೈಷ್ಣವ ಶಬ್ಧವು ಬಂದಿದೆ, ದೇವತೆಗಳು ವೈಷ್ಣವರಾಗಿದ್ದರು. ವಲ್ಲಭಾಚಾರಿ ವೈಷ್ಣವರು ಸಸ್ಯಹಾರಿಗಳಾಗಿರುತ್ತಾರೆ. ಅವರೇನೂ ನಿರ್ವಿಕಾರಿಗಳು ಆಗಿರುವುದಿಲ್ಲ, ಅವರದು ದೊಡ್ಡ ಮಹಲುಗಳಿರುತ್ತವೆ. ವೈಷ್ಣವ ಎಂಬುದರ ಅರ್ಥವನ್ನೇ ತಿಳಿದುಕೊಂಡಿಲ್ಲ, ವಾಸ್ತವದಲ್ಲಿ ವಿಷ್ಣು ಪುರಿಯಲ್ಲಿ ಇರುವವರಿಗೆ ವೈಷ್ಣವರೆಂದು ಹೇಳಲಾಗುತ್ತದೆ, ಪವಿತ್ರರಿಗೆ ವೈಷ್ಣವರೆಂದು ಹೇಳಲಾಗುತ್ತದೆ. ರಾಧೆ-ಕೃಷ್ಣರ ಮಂದಿರವೇ ಬೇರೆ, ಲಕ್ಷ್ಮೀ-ನಾರಾಯಣರ ಮಂದಿರವನ್ನೇ ಬೇರೆಯನ್ನಾಗಿ ಮಾಡಿ ಬಿಟ್ಟಿದ್ದಾರೆ. ಅವರಲ್ಲಿ ಏನು ವ್ಯತ್ಯಾಸವಿದೆಯೆಂಬುದನ್ನು ಭಾರತವಾಸಿಗಳು ತಿಳಿದುಕೊಂಡೇ ಇಲ್ಲ. ರಾಧೆ-ಕೃಷ್ಣರೇ ಲಕ್ಷ್ಮೀ-ನಾರಾಯಣರಾಗುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ರಾಧೆ-ಕೃಷ್ಣ ಇದು ಬಾಲ್ಯದ ರೂಪವಾಗಿದೆ. ಲಕ್ಷ್ಮೀ-ನಾರಾಯಣ ಇದು ದೊಡ್ಡವರ ರೂಪವಾಗಿದೆ. ಲಕ್ಷ್ಮೀ-ನಾರಾಯಣರ ಬಾಲ್ಯದ ಚಿತ್ರ ಯಾವುದೂ ಇಲ್ಲ, ಲಕ್ಷ್ಮೀ-ನಾರಾಯಣರನ್ನು ಸತ್ಯಯುಗದಲ್ಲಿಯೂ, ರಾಧೆ-ಕೃಷ್ಣರನ್ನು ದ್ವಾಪರದಲ್ಲಿಯೂ ತೆಗೆದುಕೊಂಡು ಹೋಗಿದ್ದಾರೆ. ನೀವೀಗ ರಚಯಿತ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ತಂದೆಯು ವೃಕ್ಷದ ರಹಸ್ಯವನ್ನು ತಿಳಿಸುತ್ತಾರೆ, ಡ್ರಾಮಾದ ರಹಸ್ಯವನ್ನೂ ತಿಳಿಸುತ್ತಾರೆ. ವೃಕ್ಷವನ್ನು ನೋಡಿದಾಗ ಶಂಕರಾಚಾರ್ಯರು ಕಲಿಯುಗದಲ್ಲಿ ಬರುತ್ತಾರೆ ತಿಳಿದುಕೊಳ್ಳುತ್ತಾರೆ. ಸನ್ಯಾಸಿಗಳ ವಂಶವು ಸತ್ಯಯುಗದಲ್ಲಂತೂ ಇರಲು ಸಾಧ್ಯವಿಲ್ಲ. ಎಲ್ಲರೂ ಭಗವಂತನ ಮಕ್ಕಳೆಂದ ಮೇಲೆ ಸ್ವರ್ಗವಾಸಿಗಳಾಗಬೇಕು ಆದರೆ ಎಲ್ಲರೂ ಸ್ವರ್ಗವಾಸಿಗಳಾಗುವುದಿಲ್ಲ, ಕೇವಲ ದೇವತೆಗಳೇ ಆಗುತ್ತಾರೆ. ಈಗ ನೀವು ಬ್ರಾಹ್ಮಣ ವಂಶಿಯರಾಗಿದ್ದೀರಿ ನಂತರ ದೇವತೆಗಳಾಗುತ್ತೀರಿ ಅಂದಮೇಲೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. |
ನೀವು ತಿಳಿದುಕೊಂಡಿದ್ದೀರಿ - ಹಿರಿಯರು, ಕಿರಿಯರು ಎಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದಾರೆ. ಬಾಬಾ, ನಾವು ನಿಮ್ಮ ಮಕ್ಕಳಾಗಿದ್ದೇವೆ, ಬ್ರಾಹ್ಮಣರಾಗಿದ್ದೇವೆಂದು ಇಬ್ಬರೂ ಹೇಳುತ್ತಾರೆ. ಇವರು ಬಾಪ್ದಾದಾ ಆಗಿದ್ದಾರೆ – ಆದಿ ದೇವ ಬ್ರಹ್ಮಾ ಮತ್ತು ಶಿವ ತಂದೆ. ನಾವು ಬ್ರಹ್ಮಾ ತಂದೆ ಮತ್ತು ಶಿವ ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ಪತಿತರಿಂದ ಪಾವನರಾಗುತ್ತೀರಿ. ನಾವು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶಿವ ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಪತಿತ-ಪಾವನನೂ ಆಗಿದ್ದಾರೆ, ಗುರುವೂ ಆಗಿದ್ದಾರೆ. ಇದು ಸಂಗಮಯುಗವಾಗಿದೆ, ಪತಿತರಿಂದ ಪಾವನರಾಗುವ ಮೇಳವಾಗಿದೆ. ಪತಿತ-ಪಾವನನ ಮೂಲಕವೇ ಪಾವನರಾಗುತ್ತೀರಿ. ಸಂಗಮದಲ್ಲಿ ನದಿಗಳು ಮತ್ತು ಸಾಗರನ ಮೇಳವಾಗಿದೆ. ನದಿಗಳ ಮೇಳವಂತೂ ಅಲ್ಲ. ಈಗ ಜ್ಞಾನ ಸಾಗರ ಮತ್ತು ನೀವಾತ್ಮರ ಮೇಳವಾಗುತ್ತದೆ. ನೀವು ಜ್ಞಾನ ಸಾಗರನ ಬಳಿ ಬಂದಿದ್ದೀರಿ. ಜ್ಞಾನ ಗಂಗೆಯರಾದ ನೀವು ಜ್ಞಾನ ಸಾಗರನಿಂದ ಹೊರಟಿದ್ದೀರಿ. ನೀವು ಜ್ಞಾನ ಸ್ನಾನ ಮಾಡಿಸಿ ಪಾವನರನ್ನಾಗಿ ಮಾಡುತ್ತೀರಿ, ಯೋಗವನ್ನು ಕಲಿಸುತ್ತೀರಿ. ಸಾಗರನ ಪರಿಚಯ ನೀಡಿ ನೀವು ಈ ಮೇಳದಲ್ಲಿ ಕರೆದುಕೊಂಡು ಬಂದಿದ್ದೀರಿ. ಈ ಸಮಯದಲ್ಲಿ ನೀವು ಬ್ರಾಹ್ಮಣರಾದಾಗ ನಿಮಗೆ ಮೂರು ಜನ ತಂದೆಯರಿರುತ್ತಾರೆ. ಲೌಕಿಕ ತಂದೆಯೂ ಇದ್ದಾರೆ ಮತ್ತು ಪ್ರಜಾಪಿತನೂ ಇದ್ದಾರೆ, ಶಿವ ತಂದೆಯೂ ಇದ್ದಾರೆ. ಭಕ್ತಿಮಾರ್ಗದಲ್ಲಿ ಇಬ್ಬರು ತಂದೆಯರಿರುತ್ತಾರೆ, ಸತ್ಯಯುಗದಲ್ಲಿ ಒಬ್ಬರೇ ತಂದೆಯಿರುವರು. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನಿಮ್ಮ ಆತ್ಮವು ಹೇಳುತ್ತದೆ - ನನ್ನವರು ಒಬ್ಬ ಶಿವ ತಂದೆಯ ಹೊರತು ಮತ್ತ್ಯಾರೂ ಇಲ್ಲ. ಮಿತ್ರ ಸಂಬಂಧಿ ಮೊದಲಾದವರಿದ್ದರೂ ಸಹ ನನ್ನವರು ಒಬ್ಬರೇ ಶಿವ ತಂದೆಯೆಂದು ಹೇಳುತ್ತೀರಿ, ಅವರ ನೆನಪಿನಿಂದಲೇ ಪತಿತರಿಂದ ಪಾವನರಾಗಬೇಕಾಗಿದೆ. ಆತ್ಮಕ್ಕೆ ತಿಳಿದಿದೆ - ಅವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ನಾವಾತ್ಮರನ್ನು ತಂದೆಯು ಕರೆದುಕೊಂಡು ಹೋಗಲು ಬಂದಿದ್ದಾರೆ, ಬ್ರಹ್ಮನ ತನುವಿನಲ್ಲಿ ಪ್ರವೇಶ ಮಾಡಿ ಪಾವನರನ್ನಾಗಿ ಮಾಡುತ್ತಾರೆ. ನಿಮ್ಮನ್ನು ಕರೆದುಕೊಂಡು ಹೋಗುವುದಕ್ಕಾಗಿಯೇ ತಂದೆಯು ಬಂದಿದ್ದಾರೆ. ಹೇಳುತ್ತಾರೆ - ನಿಮ್ಮೆಲ್ಲರಿಗೆ ಮೃತ್ಯುವನ್ನು ಕೊಡಲು ಬಂದಿದ್ದೇನೆ. ನರಕವಾಸಿಗಳಿಂದ ಸ್ವರ್ಗವಾಸಿಗಳಾಗಬೇಕೆಂದರೆ ಅವಶ್ಯವಾಗಿ ಸಾಯಬೇಕಾಗುತ್ತದೆಯಲ್ಲವೆ. ನಿಮ್ಮ ಈ ದೇಹವನ್ನು ಸಮಾಪ್ತಿ ಮಾಡಿಸಿ ಆತ್ಮರನ್ನು ಕರೆದುಕೊಂಡು ಹೋಗುತ್ತೇನೆ. ತಂದೆಯು ಹೇಳುತ್ತಾರೆ - ನಿಮಗೆ ಜೀವದಾನ ಕೊಡುತ್ತೇನೆ, ಇದು ಮಹಾಭಾರತ ಯುದ್ಧವಲ್ಲವೆ. ಎಲ್ಲರ ವಿನಾಶವಾಗುವುದು, ಇಲ್ಲದಿದ್ದರೆ ಹೇಗೆ ಕರೆದುಕೊಂಡು ಹೋಗಲಿ! ಆತ್ಮರನ್ನು ಪವಿತ್ರರನ್ನಾಗಿ ಮಾಡಿ ಮನೆಗೆ ಕರೆದುಕೊಂಡು ಹೋಗುತ್ತೇನೆ, ಅದಂತೂ ಶಾಂತಿಧಾಮವಾಗಿದೆ. ಸತ್ಯಯುಗವು ಬರುತ್ತದೆಯೆಂದರೆ ಅವಶ್ಯವಾಗಿ ಕಲಿಯುಗದ ವಿನಾಶವಾಗುವುದು. ಇದಕ್ಕಾಗಿಯೇ ಮಹಾಭಾರತ ಯುದ್ಧವು ಪ್ರಸಿದ್ಧವಾಗಿದೆ. ಈ ಸಂಗಮಯುಗದಲ್ಲಿಯೇ ಆಗುತ್ತದೆ ಯಾವಾಗ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಸಾಗರದಲ್ಲಿ ಜ್ಞಾನ ಸ್ನಾನ ಮಾಡಿ ಸ್ವಯಂನ್ನು ಪಾವನ ಮಾಡಿಕೊಳ್ಳಬೇಕಾಗಿದೆ, ಮಿತ್ರ ಸಂಬಂಧಿಗಳ ಜೊತೆಯಲ್ಲಿದ್ದರೂ ಸಹ ಬುದ್ಧಿಯಲ್ಲಿರಲಿ - ನನ್ನವರು ಒಬ್ಬ ಶಿವ ತಂದೆಯ ಹೊರತು ಮತ್ತ್ಯಾರೂ ಇಲ್ಲ. |
2. ವಿಷ್ಣು ಪುರಿಯಲ್ಲಿ ಹೋಗಲು ಪಕ್ಕಾ ವೈಷ್ಣವರು ಅರ್ಥಾತ್ ಪವಿತ್ರರಾಗಬೇಕಾಗಿದೆ. ನರಕದಿಂದ ಜೀವಿಸಿದ್ದಂತೆಯೇ ಸತ್ತು ಬುದ್ಧಿಯೋಗವನ್ನು ಸ್ವರ್ಗದ ಕಡೆ ಜೋಡಿಸಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ತಂದೆಯು ತಿಳಿಸುತ್ತಿರುವರು- ಆತ್ಮಾಭಿಮಾನಿ ಅಥವಾ ದೇಹೀ-ಅಭಿಮಾನಿಯಾಗಿ ಕುಳಿತುಕೊಳ್ಳಬೇಕು. ಯಾರನ್ನು ನೆನಪು ಮಾಡಬೇಕು? ತಂದೆಯನ್ನು ನೆನಪು ಮಾಡಬೇಕು. ತಂದೆಯ ವಿನಃ ಬೇರೆ ಯಾರನ್ನೂ ನೆನಪು ಮಾಡಬಾರದು. ಯಾವ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ ಆ ತಂದೆಯನ್ನು ನೆನಪು ಮಾಡಬೇಕು. ಬೇಹದ್ದಿನ ತಂದೆಯು ಬಂದು ತಿಳಿಸುತ್ತಾರೆ- ದೇಹೀ-ಅಭಿಮಾನಿಭವ, ಆತ್ಮಾಭಿಮಾನಿಭವ. ದೇಹಾಭಿಮಾನವನ್ನು ಬಿಡುತ್ತಾ ಹೋಗಿ. ಅರ್ಧಕಲ್ಪ ನೀವು ದೇಹಾಭಿಮಾನಿಯಾಗಿದ್ದು ಈಗ ಅರ್ಧಕಲ್ಪ ದೇಹೀ-ಅಭಿಮಾನಿಯಾಗಿರಬೇಕು. ಸತ್ಯಯುಗ ಮತ್ತು ತ್ರೇತಾದಲ್ಲಿ ಆತ್ಮಾಭಿಮಾನಿಯಾಗಿದ್ದೆವು, ಅಲ್ಲಿ ನಾನಾತ್ಮ ಎಂದು ತಿಳಿದಿರುತ್ತದೆ, ಈಗ ಈ ಶರೀರವು ವೃದ್ಧಾಪ್ಯ ಹೊಂದಿದೆ ಈಗ ಇದನ್ನು ಬಿಡಬೇಕು, ಇದನ್ನು ಬದಲಾಯಿಸಬೇಕು (ಸರ್ಪ ತನ್ನ ಪೋರೆಯನ್ನು ಕಳಚುವಂತೆ). ನೀವೂ ಸಹ ಹಳೆಯ ಶರೀರವನ್ನು ಬಿಟ್ಟು ಮತ್ತೊಂದು ಶರೀರದಲ್ಲಿ ಪ್ರವೇಶ ಮಾಡುತ್ತೀರಿ ಆದುದರಿಂದ ನೀವೀಗ ಆತ್ಮಾಭಿಮಾನಿಯಾಗಬೇಕು. ಆ ರೀತಿ ಯಾರು ಮಾಡುತ್ತಾರೆ? ತಂದೆ. ಅವರು ಸದಾ ಆತ್ಮಾಭಿಮಾನಿಯಾಗಿರುತ್ತಾರೆ, ಅವರೆಂದಿಗೂ ದೇಹಾಭಿಮಾನಿಯಾಗುವುದಿಲ್ಲ. ಭಲೆ ಒಮ್ಮೆ ಮಾತ್ರ ಬಂದರೂ ಸಹ ದೇಹಾಭಿಮಾನಿಯಾಗುವುದಿಲ್ಲ ಏಕೆಂದರೆ ಈ ಶರೀರವಂತೂ ಬೇರೆಯವರದಾಗಿದ್ದು ಲೋನ್ ಆಗಿ ಪಡೆಯಲಾಗುತ್ತದೆ. ಈ ಶರೀರದ ಜೊತೆಗೆ ಅವರಿಗೆ ಸೆಳೆತವಿರುವುದಿಲ್ಲ. ಲೋನ್ ತೆಗೆದುಕೊಳ್ಳುವುದರ ಜೊತೆ ಸೆಳೆತವಿರುವುದಿಲ್ಲ. ಈ ಶರೀರವನ್ನಂತೂ ಬಿಡಬೇಕಾಗುತ್ತದೆಯೆಂದು ತಿಳಿದುಕೊಂಡಿರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನೇ ಬಂದು ನೀವು ಮಕ್ಕಳನ್ನು ಪಾವನ ಮಾಡುತ್ತೇನೆ. ನೀವು ಸತೋಪ್ರಧಾನರಾಗಿದ್ದವರೇ ಮತ್ತೆ ತಮೋಪ್ರಧಾನರಾಗಿದ್ದಿರಿ. ಈಗ ಪುನಃ ಪಾವನರಾಗಲು ನಿಮಗೆ ನನ್ನ ಜೊತೆ ಸಂಬಂಧ ಜೋಡಿಸುವುದನ್ನು ಕಲಿಸುತ್ತೇನೆ. ಯೋಗ ಎಂಬ ಅಕ್ಷರ ಹೇಳದೆ ನೆನಪು ಎಂದು ಹೇಳುವುದು ಸರಿಯಾಗಿದೆ. ನೆನಪನ್ನು ಕಲಿಸಿಕೊಡುತ್ತೇನೆ, ಮಕ್ಕಳು ತಂದೆಯನ್ನು ನೆನಪು ಮಾಡುತ್ತೀರಿ. ಈಗ ನೀವೂ ಸಹ ತಂದೆಯನ್ನು ನೆನಪು ಮಾಡಬೇಕು. ಆತ್ಮವೇ ನೆನಪು ಮಾಡುತ್ತದೆ. ಯಾವಾಗ ರಾವಣರಾಜ್ಯವು ಆರಂಭವಾಗುತ್ತದೆ ಆಗ ನೀವು ದೇಹಾಭಿಮಾನಿಯಾಗಿಬಿಡುತ್ತೀರಿ ನಂತರ ತಂದೆಯು ಬಂದು ಆತ್ಮಾಭಿಮಾನಿಗಳನ್ನಾಗಿ ಮಾಡುತ್ತಾರೆ. ದೇಹಾಭಿಮಾನಿಯಾಗುವುದರಿಂದ ನಾಮ-ರೂಪದಲ್ಲಿ ಸಿಲುಕಿಕೊಳ್ಳುತ್ತೀರಿ. ವಿಕಾರಿಯಾಗಿಬಿಡುತ್ತೀರಿ. ಇಲ್ಲವೆಂದರೆ ನೀವೆಲ್ಲರೂ ನಿರ್ವಿಕಾರಿಗಳಾಗಿದ್ದಿರಿ. ಮತ್ತೆ ಪುನರ್ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ವಿಕಾರಿಯಾಗಿಬಿಡುತ್ತೀರಿ. ಜ್ಞಾನ ಹಾಗೂ ಭಕ್ತಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ತಂದೆಯೇ ತಿಳಿಸುತ್ತಾಯೇರೆ. ಭಕ್ತಿಯು ದ್ವಾಪರದಿಂದ ಪ್ರಾರಂಭವಾಗುತ್ತದೆ, ಅದು ಪಂಚವಿಕಾರ ರೂಪಿ ರಾವಣನಿಂದ ಸ್ಥಾಪನೆಯಾಗುತ್ತದೆ. ಭಾರತವನ್ನೇ ರಾಮರಾಜ್ಯ ಹಾಗೂ ರಾವಣರಾಜ್ಯವೆಂದು ಕರೆಯಲಾಗುತ್ತದೆ ಆದರೆ ಎಷ್ಟು ಸಮಯ ರಾಮರಾಜ್ಯ ನಡೆಯುತ್ತದೆ, ಎಷ್ಟು ಸಮಯ ರಾವಣರಾಜ್ಯ ನಡೆಯುತ್ತದೆ ಎಂದು ಮನುಷ್ಯರು ತಿಳಿದುಕೊಂಡಿಲ್ಲ. ಈ ಸಮಯ ಎಲ್ಲರೂ ತಮೋಪ್ರಧಾನ, ಕಲ್ಲುಬುದ್ಧಿಯವರಾಗಿದ್ದಾರೆ, ಜನ್ಮವೇ ಭ್ರಷ್ಟಾಚಾರದಿಂದ ಆಗುತ್ತದೆ ಆದ್ದರಿಂದ ಇದನ್ನು ವಿಕಾರಿ ಪ್ರಪಂಚವೆಂದು ಕರೆಯಲಾಗುವುದು. ಹಳೆಯ ಪ್ರಪಂಚ ಹಾಗೂ ಹೊಸಪ್ರಪಂಚಕ್ಕೆ ಹಗಲು-ರಾತ್ರಿಯ ಅಂತರವಿದೆ. ಹೊಸಪ್ರಪಂಚದಲ್ಲಿ ಕೇವಲ ಭಾರತವೊಂದೇ ಇತ್ತು, ಭಾರತದಂತಹ ಪವಿತ್ರಖಂಡ ಬೇರೆ ಯಾವ ಖಂಡವಾಗಲೂ ಸಾಧ್ಯವಿಲ್ಲ. ಹಾಗೆಯೇ ಭಾರತದಷ್ಟು ಅಪವಿತ್ರಖಂಡವೂ ಬೇರೆ ಯಾವ ಖಂಡವಾಗುವುದಿಲ್ಲ. ಅದೇ ಮತ್ತೆ ಅಪವಿತ್ರವಾಗುತ್ತದೆ ಮತ್ತೆ ಪವಿತ್ರವಾಗುತ್ತದೆ. ದೇವಿ-ದೇವತೆಗಳು ಪವಿತ್ರವಾಗಿದ್ದರೆಂದು ನೀವು ತಿಳಿದುಕೊಂಡಿದ್ದೀರಿ. ನಂತರ ಪುನರ್ಜನ್ಮವನ್ನು ಪಡೆಯುತ್ತಾ-ಪಡೆಯುತ್ತಾ ಅಪವಿತ್ರರಾಗಿಬಿಟ್ಟಿದ್ದಾರೆ. ಎಲ್ಲದಕ್ಕಿಂತ ಹೆಚ್ಚು ಜನ್ಮಗಳನ್ನು ಇವರೇ ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ- ನಾನು ಅನೇಕ ಜನ್ಮಗಳ ಅಂತ್ಯದ ಜನ್ಮದಲ್ಲಿ, ಅದರಲ್ಲಿಯೂ ಅಂತ್ಯದ ಸಮಯದಲ್ಲಿ ಬರುತ್ತೇನೆ, ಇವರೇ ಮೊದಲು 84 ಜನ್ಮಗಳನ್ನು ಪೂರ್ಣ ಮಾಡಿ ವಾನಪ್ರಸ್ಥದಲ್ಲಿ ಬರುತ್ತಾರೋ ಆಗ ಪ್ರವೇಶ ಮಾಡುತ್ತೇನೆ. ತ್ರಿಮೂರ್ತಿ ಬ್ರಹ್ಮಾ-ವಿಷ್ಣು-ಶಂಕರರೂ ಸಹ ಇದ್ದಾರೆ, ಆದರೆ ಯಾರಿಗೂ ಗೊತ್ತಿಲ್ಲ ಏಕೆಂದರೆ ತಮೋಪ್ರಧಾನರಾಗಿದ್ದಾರಲ್ಲವೇ. ಯಾರದೇ ಜೀವನ ಚರಿತ್ರೆ ಯಾವುದೇ ಮನುಷ್ಯಮಾತ್ರರಿಗೆ ಗೊತ್ತಿಲ್ಲ. ಪೂಜೆ ಮಾಡುತ್ತಾರೆ ಆದರೆ ಅಂಧಶ್ರದ್ದೆಯಾಗಿದೆ. ಭಕ್ತಿಗೆ ಬ್ರಾಹ್ಮಣರ ರಾತ್ರಿ ಮತ್ತು ಸತ್ಯಯುಗಕ್ಕೆ ಬ್ರಾಹ್ಮಣರ ಹಗಲು ಎಂದು ಹೇಳಲಾಗುತ್ತದೆ. ಈಗ ಬ್ರಹ್ಮಾ ಪ್ರಜಾಪಿತ ಆದರೆ ಅವಶ್ಯವಾಗಿ ಮಕ್ಕಳೂ ಸಹ ಇರುತ್ತಾರಲ್ಲವೇ. ಇಲ್ಲೂ ಸಹ ತಿಳಿಸಲಾಗಿದೆ ಬ್ರಾಹ್ಮಣರ ಕುಲ ಇರುತ್ತದೆ, ವಂಶ ಇರುವುದಿಲ್ಲ. ಬ್ರಾಹ್ಮಣರು ಶಿಖೆ ಆಗಿದ್ದಾರೆ. ಶಿಖೆ ಕಂಡುಬರುತ್ತದೆ. ಶ್ರೇಷ್ಠಾತಿಶ್ರೇಷ್ಠ ಓದಿಸುವವರು ಪರಮಪಿತ ಶಿವ ಆಗಿದ್ದಾರೆ. ಅವರ ಹೆಸರು ಒಂದೇ ಆಗಿದೆ ಆದರೆ ಭಕ್ತಿಮಾರ್ಗದಲ್ಲಿ ಲೆಕ್ಕವಿಲ್ಲದಷ್ಟು ಹೆಸರುಗಳನ್ನು ಇಟ್ಟಿದ್ದಾರೆ. ಭಕ್ತಿಮಾರ್ಗದಲ್ಲಿ ಶೋ (ಆಡಂಬರ) ಬಹಳ ಇರುತ್ತದೆ. ಎಷ್ಟು ಚಿತ್ರಗಳು, ಎಷ್ಟು ಮಂದಿರಗಳು ಇವೆ, ಯಜ್ಞ, ತಪ, ದಾನ, ಪುಣ್ಯ ಮುಂತಾದವುಗಳೆಲ್ಲಾ ಮಾಡುತ್ತಾರೆ. ಭಕ್ತಿಯಿಂದ ಭಗವಂತ ಸಿಗುತ್ತಾರೆ ಎಂದು ಹೇಳುತ್ತಾರೆ. ಯಾರಿಗೆ ಸಿಗುತ್ತಾರೆ? ಯಾರು ಮೊಟ್ಟಮೊದಲು ಬರುತ್ತಾರೆ, ಅವರೇ ಮೊಟ್ಟಮೊದಲು ಭಕ್ತಿ ಶುರು ಮಾಡುತ್ತಾರೆ. ಯಾರು ಬ್ರಾಹ್ಮಣರಿಂದ ದೇವತೆಗಳಾಗುತ್ತಾರೆ ಅವರೇ ಯಥಾ ರಾಜಾ-ರಾಣಿ ತಥಾ ಪ್ರಜೆಗಳು... ಸರ್ವಗುಣಸಂಪನ್ನ, 16 ಕಲಾ ಸಂಪೂರ್ಣ, ಸಂಪೂರ್ಣನಿರ್ವಿಕಾರಿ ಅಹಿಂಸಾ ಪರಮಧರ್ಮ ದೇವೀ-ದೇವತೆಗಳ ಧರ್ಮ ಇರುತ್ತದೆ. ಭಾರತದಲ್ಲಿ ಒಂದೇ ಆದಿಸನಾತನ ದೇವೀದೇವತಾ ಧರ್ಮ ಇತ್ತು ಆಗ ಅಪಾರ ಧನ ಇತ್ತು. ಮೊಟ್ಟಮೊದಲು ತಾವು ದೇವೀದೇವತಾ ಧರ್ಮದವರೇ 84 ಜನ್ಮಗಳನ್ನು ಪಡೆದುಕೊಳ್ಳುತ್ತೀರಿ. ತಂದೆ ನೆನಪಿಸುತ್ತಾರೆಮೊಟ್ಟಮೊದಲು ನೀವು ದೇವೀ ದೇವತಾಧರ್ಮದವರೇ 84 ಜನ್ಮಗಳನ್ನು ಪಡೆದುಕೊಳ್ಳುತ್ತೀರಿ. ಎಲ್ಲರೂ ಪಡೆದುಕೊಳ್ಳುವುದಿಲ್ಲ. ಇರುವುದು 84 ಜನ್ಮಗಳು ಮಾತ್ರ. ಅವರು 84 ಲಕ್ಷ ಜನ್ಮಗಳು ಎಂದು ಹೇಳುತ್ತಾರೆ. ಕಲ್ಪದ ಆಯಸ್ಸೂ ಸಹ ಲಕ್ಷಾಂತರ ವರ್ಷ ಎಂದು ಹೇಳಿಬಿಟ್ಟಿದ್ದಾರೆ. ತಂದೆಯು ಹೇಳುತ್ತಾರೆ ಇದು 5000 ವರ್ಷಗಳ ಡ್ರಾಮಾ. ಅಂದಾಗ ಇದು ಜ್ಞಾನವಾಗಿದೆ. ಜ್ಞಾನಸಾಗರ ಒಬ್ಬರೇ ಶಿವಬಾಬಾ ಎಂದು ಗಾಯನವಿದೆ. ಅವರು ಹದ್ದಿನ ತಂದೆಯಾಗಿದ್ದಾರೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ. ಹದ್ದಿನ ತಂದೆಯವರಿದ್ದರೂ ಸಹ ದುಃಖ ಆದಾಗ ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತಾರೆ. ಪುನರ್ಜನ್ಮವನ್ನು ಪಡೆದುಕೊಳ್ಳುತ್ತಾ-ಪಡೆದುಕೊಳ್ಳುತ್ತಾ ಪ್ರಪಂಚ ಹಳೆಯದು ತಮೋಪ್ರಧಾನ ಆಗಿಬಿಡುತ್ತದೆ ಆಗ ತಂದೆ ಬರುತ್ತಾರೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ. ಯಾರಿಂದ ಸಿಗುತ್ತದೆ? ಬೇಹದ್ದಿನ ತಂದೆಯಿಂದ ಸಿಗುತ್ತದೆ. ಅಂದಾಗ ಖಂಡಿತ ಜೀವನಬಂಧನದಲ್ಲಿ ಇದ್ದಾರೆ, ಪತಿತರು ನಂತರ ಪಾವನರಾಗಬೇಕು. ಇದು ಸೆಕೆಂಡಿನ ಮಾತಾಗಿದೆ. ಜ್ಞಾನ ಒಂದು ಸೆಕೆಂಡಿನದ್ದಾಗಿದೆ, ಏಕೆಂದರೆ ವಿದ್ಯೆಯಂತೂ ನೀವು ಬಹಳ ಓದುತ್ತೀರಿ, ಮತ್ತೆಲ್ಲಾ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ. ಓದುವುದಂತೂ ಆತ್ಮನೇ ಆಗಿದೆ. ಆದರೆ ದೇಹಾಭಿಮಾನದ ಕಾರಣ ತಮ್ಮನ್ನು ಆತ್ಮ ಎಂದು ಮರೆತು ನಾವು ಇಂತಹ ಮಿನಿಸ್ಟರ್..... ಎಂದು ಹೇಳಿಬಿಡುತ್ತಾರೆ. ವಾಸ್ತವದಲ್ಲಿ ಆತ್ಮರಾಗಿದ್ದೇವೆ. ಆತ್ಮ ಮಿಸ್ಟರ್-ಮಿಸ್ಸಸ್ (ಪುರುಷ ಮತ್ತು ಸ್ತ್ರೀ) ತನುವಿನ ಮೂಲಕ ಪಾತ್ರವನ್ನು ಮಾಡುತ್ತದೆ, ಇದನ್ನು ಮರೆತುಬಿಡುತ್ತದೆ. ಇಲ್ಲವೆಂದರೆ ಆತ್ಮನೇ ಶರೀರದ ಮೂಲಕ ಪಾತ್ರ ಮಾಡುತ್ತದೆ. ಕೆಲವರು ಏನಾಗುತ್ತಾರೆ? ಇನ್ನೂ ಕೆಲವರು ಏನಾಗುತ್ತಾರೆ? ಈಗ ಈ ಹಳೆಯ ಪ್ರಪಂಚ ಬದಲಾವಣೆ ಆಗಿ ಹೊಸದಾಗುತ್ತದೆ ಎಂದು ತಂದೆ ತಿಳಿಸುತ್ತಾರೆ. ಪ್ರಪಂಚದ ಚರಿತ್ರೆ-ಭೂಗೋಳ ಪುನರಾವರ್ತನೆ ಆಗುತ್ತದೆ. ಹೊಸ ಪ್ರಪಂಚ ಸತೋಪ್ರಧಾನವಾಗಿರುತ್ತದೆ. ಮನೆಯೂ ಸಹ ಮೊದಲು ಹೊಸದಾಗಿರುತ್ತದೆ ಆಗ ಸತೋಪ್ರಧಾನ ಎಂದು ಹೇಳುತ್ತಾರೆ ನಂತರ ಹಳೆಯದು ಜಡಜಡೀಭೂತ ತಮೋಪ್ರಧಾನ ಆಗಿಬಿಡುತ್ತದೆ. ಈ ಬೇಹದ್ದಿನ ನಾಟಕ ಅಥವಾ ಸೃಷ್ಟಿಚಕ್ರದ ಜ್ಞಾನವನ್ನು ತಿಳಿದುಕೊಳ್ಳಬೇಕು ಏಕೆಂದರೆ ಇದು ವಿದ್ಯೆಯಾಗಿದೆ, ಭಕ್ತಿ ಅಲ್ಲ, ಭಕ್ತಿಗೆ ವಿದ್ಯೆ ಎಂದು ಹೇಳುವುದಿಲ್ಲ ಏಕೆಂದರೆ ಭಕ್ತಿಯಲ್ಲಿ ಗುರಿ-ಉದ್ದೇಶ ಏನೂ ಇರುವುದಿಲ್ಲ. ಜನ್ಮ-ಜನ್ಮಾಂತರ ವೇದ, ಶಾಸ್ತ್ರವನ್ನು ಓದುತ್ತಿರಿ. ಇಲ್ಲಂತೂ ಪ್ರಪಂಚ ಬದಲಾವಣೆ ಆಗಬೇಕು, ಸತ್ಯ-ತ್ರೇತಾಯುಗದಲ್ಲಿ ಭಕ್ತಿ ಇರುವುದಿಲ್ಲ. ಭಕ್ತಿ ದ್ವಾಪರಯುಗದಿಂದ ಶುರು ಆಗುತ್ತದೆ ಇದನ್ನು ತಂದೆ ಕುಳಿತು ಆತ್ಮೀಕ ಮಕ್ಕಳಿಗೆ ತಿಳಿಸುತ್ತಾರೆ, ಇದನ್ನು ಆತ್ಮಿಕ ಜ್ಞಾನ ಅಥವಾ ಆಧ್ಯಾತ್ಮಿಕ ಜ್ಞಾನ ಎಂದು ಹೇಳಲಾಗುವುದು. ಈ ಆತ್ಮಿಕ ಜ್ಞಾನವನ್ನು ಯಾರು ಕಲಿಸುತ್ತಾರೆ ಸುಪ್ರೀಂ ಆತ್ಮ ಅಂದರೆ ಪರಮಪಿತನೇ ಕಲಿಸುತ್ತಾರೆ. ಅವರು ಎಲ್ಲರಿಗಾಗಿ ತಂದೆ ಆಗಿದ್ದಾರಲ್ಲವೇ! ಲೌಕಿಕ ತಂದೆಗೆ ಎಂದೂ ಪರಮಪಿತ ಎಂದು ಹೇಳಲಾಗುವುದಿಲ್ಲ. ಪಾರಲೌಕಿಕ ತಂದೆಗೆ ಪರಮಪಿತ ಎಂದು ಕರೆಯಲಾಗುವುದು, ಅವರು ಪರಮಧಾಮದಲ್ಲಿ ಇರುವವರಾಗಿದ್ದಾರೆ. ಹೇ ಗಾಡ್, ಹೇ ಈಶ್ವರಾ ಎಂದು ತಂದೆಯನ್ನು ನೆನಪು ಮಾಡುತ್ತಾರೆ. ವಾಸ್ತವದಲ್ಲಿ ಅವರ ಹೆಸರು ಒಂದೇ ಆಗಿದೆ. ಅದೇ ಭಕ್ತಿಮಾರ್ಗದಲ್ಲಿ ಅನೇಕ ಹೆಸರಗಳನ್ನು ಕಟ್ಟಿದ್ದಾರೆ, ಭಕ್ತಿಯ ವಿಸ್ತಾರ ಬಹಳ ಇದೆ. ಅದೆಲ್ಲವು ಮನುಷ್ಯರ ಮತವಾಗಿದೆ. ಈಗ ಮನುಷ್ಯರಿಗೆ ಈಶ್ವರೀಯ ಮತ ಬೇಕಾಗಿದೆ. ಶ್ರೀಮತವೇ ಈಶ್ವರೀಯ ಮತವಾಗಿದೆ. ಶ್ರೀ ಶ್ರೀ 108ರ ಮಾಲೆಯಾಗುತ್ತದೆಯಲ್ಲವೇ. ಇದು ಪ್ರವೃತ್ತಿ ಮಾರ್ಗದ ಮಾಲೆಯಾಗಿದೆ. ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ, ಜನ್ಮಗಳಲ್ಲಿ ಇಳಿಯುತ್ತಾ ದಿವಾಳಿಯಾಗಿಬಿಡುತ್ತಾರೆ. ಬುದ್ಧಿಯೂ ಸಹ ಶಕ್ತಿಹೀನವಾಗಿಬಿಡುತ್ತದೆ. ಆಗ ಮನುಷ್ಯರು ದಿವಾಳಿಗಳಾಗಿಬಿಡುತ್ತಾರೆ. ಯಾರು 100% ಶ್ರೀಮಂತರಾಗಿದ್ದರೋ ಅವರೇ ಈ ಸಮಯದಲ್ಲಿ ಬಡವರಾಗಿದ್ದಾರೆ. ಬುದ್ಧಿಗೆ ಬೀಗ ಹಾಕಲ್ಪಟ್ಟಿದೆ ಅಂದಾಗ ಅದಕ್ಕೆ ಬೀಗ ಹಾಕಿದವರು ಯಾರು? ಗಾಡ್ರೆಜ್ ಬೀಗ ಹಾಕಲ್ಪಟ್ಟಿದೆ, ಭಾರತವು ಹೇಗೆ ನಂಬರ್ವನ್ ಆಗಿತ್ತು ಹಾಗೆ ಬೇರೆ ಖಂಡಗಳು ಇರಲಿಲ್ಲ. ಭಾರತಕ್ಕೆ ಬಹಳ ಮಹಿಮೆ ಇದೆ, ಭಾರತವು ಸರ್ವ ಧರ್ಮದವರಿಗೂ ಅತೀ ದೊಡ್ಡ ತೀರ್ಥ ಸ್ಥಾನವಾಗಿದೆ, ಆದರೆ ನಾಟಕದನುಸಾರ ಗೀತೆಯನ್ನು ಖಂಡನೆ ಮಾಡಲಾಗಿದೆ. ಇದು ಭಾರತ ಹಾಗೂ ಇಡೀ ಪ್ರಪಂಚದ ತಪ್ಪಾಗಿದೆ. ಭಾರತದಲ್ಲಿಯೇ ಗೀತೆಯ ಖಂಡನೆ ಮಾಡಲಾಗಿದೆ. ಅದೇ ಗೀತಾ ಜ್ಞಾನದಿಂದ ತಂದೆಯು ಹೊಸ ಪ್ರಪಂಚವನ್ನು ಮಾಡುತ್ತಾರೆ ಹಾಗೂ ಸರ್ವರ ಸದ್ಗತಿಯನ್ನು ಮಾಡುತ್ತಾರೆ. |
ಭಾರತವು ಎಲ್ಲದಕ್ಕಿಂತ ಶ್ರೇಷ್ಠ ಹಾಗೂ ಶ್ರೀಮಂತ ಖಂಡವಾಗಿತ್ತು. ಪುನಃ ಆಗುತ್ತಿದೆ. ಇದು ಉಲ್ಟಾ ವೃಕ್ಷವಾಗಿದೆ, ಈ ವೃಕ್ಷದ ಬೀಜ ಮೇಲಿದೆ, ಅವರಿಗೆ ವೃಕ್ಷಪತಿ ಎಂದು ಕರೆಯಲಾಗುವುದು. ಬೃಹಸ್ಪತಿ ದಶೆಯು ಇರುತ್ತದೆಯಲ್ಲವೇ! ತಂದೆಯು ತಿಳಿಸುತ್ತಾರೆ - ನಾನು ವೃಕ್ಷಪತಿ ಬಂದಾಗ ಭಾರತಕ್ಕೆ ಬೃಹಸ್ಪತಿ ದಶೆ ಕುಳಿತುಕೊಳ್ಳುತ್ತದೆ. —ಅದು ಶ್ರೇಷ್ಠವಾಗಿಬಿಡುತ್ತದೆ ನಂತರ ರಾವಣ ಬಂದಾಗ ರಾಹುವಿನ ದಶೆ ಕುಳಿತುಕೊಳ್ಳುತ್ತದೆ. ಭಾರತದ ಸ್ಥಿತಿಯು ಏನಾಗಿಬಿಟ್ಟಿದೆ! ಅಲ್ಲಾದರೂ ನೀವು ಪವಿತ್ರರಾಗಿರುವ ಕಾರಣ ನಿಮ್ಮ ಆಯುಸ್ಸು ದೀರ್ಘವಾಗಿರುತ್ತದೆ. ಅರ್ಧಕಲ್ಪದವರೆಗೆ ನೀವು 21 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ಉಳಿದ ಅರ್ಧಕಲ್ಪದಲ್ಲಿ ಭೋಗಿ ಆಗಿರುವ ಕಾರಣ ಕಡಿಮೆ ಆಯಸ್ಸುವುಳ್ಳವರಾಗಿ 63 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ಸತೋಪ್ರಧಾನರಾಗಲು ನನ್ನನ್ನೊಬ್ಬನನ್ನೆ ನೆನಪು ಮಾಡಿ. ಎಲ್ಲಾ ಧರ್ಮದವರು ಈ ಸಮಯದಲ್ಲಿ ತಮೋಪ್ರಧಾನರಾಗಿದ್ದಾರೆ, ನೀವು ಈ ಜ್ಞಾನವನ್ನು ಎಲ್ಲರಿಗೂ ತಿಳಿಸಬಹುದು. ಆತ್ಮಿಕ ತಂದೆ ಒಬ್ಬರೇ ಆಗಿದ್ದಾರೆ, ಎಲ್ಲರೂ ಸಹೋದರರಾಗಿದ್ದಾರೆ ಏಕೆಂದರೆ ನಾವೆಲ್ಲಾ ಆತ್ಮಗಳು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಹಿಂದು-ಮುಸಲ್ಮಾನ ಸಹೋದರ-ಸಹೋದರರೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಆತ್ಮ ಹೇಳುವುದು ಸರಿ ಇದೆ, ಎಲ್ಲರೂ ಆತ್ಮ ರೂಪಿ ಸಹೋದರರ ತಂದೆ ಒಬ್ಬರೇ ಆಗಿದ್ದಾರೆ. ಹಿರಿಯ ತಂದೆಯೇ ಆಸ್ತಿಯನ್ನು ಕೊಡಬೇಕಾಗಿರುವುದು. ಅವರು ಭಾರತದಲ್ಲಿಯೇ ಬರುತ್ತಾರೆ. ಭಾರತದಲ್ಲಿಯೇ ಶಿವಜಯಂತಿಯನ್ನು ಆಚರಿಸುತ್ತಾರೆ. ಆದರೆ ಅವರು ಯಾವಾಗ ಬಂದಿದ್ದರು ಎಂದು ಯಾರಿಗೂ ತಿಳಿದಿಲ್ಲ. ನಿಮ್ಮದು ಪಂಚವಿಕಾರಗಳ ಜೊತೆ ಯುದ್ಧವಾಗಿದೆ. ಕಾಮ ನಿಮ್ಮ ನಂಬರ್ವನ್ ಶತ್ರು ಆಗಿದೆ. ರಾವಣನನ್ನು ಸುಡುತ್ತಾರೆ ಎಂದರೆ ಅವನು ಯಾರು? ಏಕೆ ಸುಡುತ್ತಾರೆ? ಏನನ್ನೂ ತಿಳಿದುಕೊಂಡಿಲ್ಲ. ದ್ವಾಪರದಿಂದ ಕೆಳಗೆ ಇಳಿಯುತ್ತಾ ನೀವು ಈ ಸಮಯದಲ್ಲಿ ಪತಿತರಾಗಿದ್ದೀರಿ. ಒಂದು ಕಡೆ ಶಿವತಂದೆಯನ್ನು ನೆನಪು ಮಾಡುತ್ತಾ ಪೂಜೆ ಮಾಡುತ್ತಾರೆ ಮತ್ತೊಂದು ಕಡೆ ಸರ್ವವ್ಯಾಪಿ ಎಂದು ಹೇಳುತ್ತಾರೆ. ಯಾರು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿದರು ಅವರನ್ನೇ ನೀವು ಮಾಯೆಯ ಬಂಧನದಲ್ಲಿ ಬಂದು ನಿಂದನೆ ಮಾಡುತ್ತೀರಿ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ ನೀವು ನನ್ನನ್ನು ಲೆಕ್ಕವಿಲ್ಲದಷ್ಟು ಜನ್ಮಗಳಲ್ಲಿ ಕರೆದೊಯ್ಯುತ್ತೀರಿ. ನನ್ನನ್ನು ಕಣ-ಕಣದಲ್ಲಿಯೂ ಇದ್ದೀರಿ ಎಂದು ಹೇಳಿಬಿಟ್ಟಿದ್ದೀರಿ, ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಬೇಹದ್ದಿನ ತಂದೆಯನ್ನು ನಿಂದಿಸುತ್ತಾ ಎಷ್ಟೊಂದು ಪಾಪಾತ್ಮಗಳಾಗಿಬಿಟ್ಟಿದ್ದಾರೆ. ರಾವಣರಾಜ್ಯವಾಗಿದೆ ಯಲ್ಲವೆ. |
ಈ ಸಮಯದಲ್ಲಿ ಎಲ್ಲರೂ ಭಕ್ತರಾಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಸರ್ವರ ಸದ್ಗತಿ ಮಾಡುವವರು ಯಾರಾಗಿದ್ದಾರೆ? ಸತ್ಯಖಂಡವನ್ನು ಸ್ಥಾಪನೆ ಮಾಡುವವರು ಎಲ್ಲರ ತಂದೆ ಆಗಿದ್ದಾರೆ. ರಾವಣನಿಗೆ ತಂದೆ ಎಂದು ಹೇಳುವುದಿಲ್ಲ. ಎಲ್ಲರಲ್ಲಿಯೂ ಪಂಚವಿಕಾರಗಳಿವೆ. ವಿಕಾರದಿಂದ ಜನ್ಮ ಆಗುವುದರಿಂದ ಭ್ರಷ್ಟಾಚಾರಿ ಎಂದು ಹೇಳಲಾಗುವುದು. ದೇವತೆಗಳಿಗೆ ಸಂಪೂರ್ಣ ನಿರ್ವಿಕಾರಿಗಳು ಎಂದು ಹೇಳಲಾಗುವುದು. ಈಗ ಸಂಪೂರ್ಣ ವಿಕಾರಿ ಆಗಿದ್ದಾರೆ. ಯಾವ ದೇವತೆಗಳು ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಗಳಾಗಿದ್ದಾರೆ. ಅವರು ಆತ್ಮನನ್ನೇ ಪರಮಾತ್ಮ ಎಂದು ಹೇಳಿಬಿಡುತ್ತಾರೆ. ಪರಮಾತ್ಮ ತಂದೆಯು ಇದು ತಪ್ಪಾಗಿದೆ ಎಂದು ಹೇಳುತ್ತಾರೆ. ಮೊಟ್ಟಮೊದಲು ತಮ್ಮನ್ನು ಆತ್ಮ ಎಂದು ನಿಶ್ಚಯ ಮಾಡಿಕೊಳ್ಳಿ, ನಾನು ಆತ್ಮ ಈ ಸಮಯ ಬ್ರಾಹ್ಮಣ ಕುಲದವನಾಗಿದ್ದೇನೆ ನಂತರ ದೇವತಾ ಕುಲದಲ್ಲಿ ಹೋಗುತ್ತೇನೆ. ಈ ಬ್ರಾಹ್ಮಣಕುಲ ಸರ್ವೊತ್ತಮ ಕುಲವಾಗಿದೆ, ಬ್ರಾಹ್ಮಣರ ರಾಜ್ಯವಿಲ್ಲ. ಬ್ರಾಹ್ಮಣರೇ ಶ್ರೇಷ್ಠವಾಗಿದ್ದಾರೆ. ನೀವು ಬ್ರಾಹ್ಮಣರಲ್ಲವೇ. ಎಲ್ಲದಕ್ಕಿಂತಲೂ ಮೇಲೆ ಶಿವತಂದೆ ಇದ್ದಾರೆ. ಭಾರತದಲ್ಲಿಯೇ ವಿರಾಟರೂಪವನ್ನು ಮಾಡಿದ್ದಾರೆ ಆದರೆ ಅಲ್ಲಿ ಬ್ರಾಹ್ಮಣರ ಶಿಖೆಯು ಇಲ್ಲ, ಬ್ರಾಹ್ಮಣರ ತಂದೆಯು ಇಲ್ಲ. ಅರ್ಥವನ್ನಂತೂ ಸ್ವಲ್ಪವು ತಿಳಿದುಕೊಂಡಿಲ್ಲ. ತ್ರಿಮೂರ್ತಿಯ ಅರ್ಥವನ್ನು ತಿಳಿದಿಲ್ಲ. ಇಲ್ಲವೆಂದರೆ ಭಾರತದ ರಾಷ್ಟ್ರ ಚಿನ್ಹೆ ಈ ತ್ರಿಮೂರ್ತಿ ಶಿವ ಆಗಬೇಕಾಗಿತ್ತು. ಈಗ ಇದು ಮುಳ್ಳುಗಳ ಕಾಡಾಗಿದೆ, ಆದ್ದರಿಂದ ಕಾಡು ಪ್ರಾಣಿಗಳನ್ನು ರಾಷ್ಟ್ರ ಚಿನ್ಹೆಗಳನ್ನಾಗಿ ಮಾಡಿದ್ದಾರೆ ಅದರಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಸತ್ಯಯುಗದಲ್ಲಿ ಹುಲಿ, ಕುರಿ ಜೊತೆಯಲ್ಲಿ ಒಂದೇ ದಡದಲ್ಲಿ ನೀರು ಕುಡಿಯುವುದನ್ನು ತೋರಿಸಿದ್ದಾರೆ. ಸತ್ಯಮೇವಜಯತೆ ಅಂದರೆ ವಿಜಯಿ. ಎಲ್ಲರೂ ಕ್ಷೀರ ಖಂಡವಾಗಿರುತ್ತಾರೆ, ಯಾವುದೇ ಜಗಳ (ಉಪ್ಪುನೀರು) ಆಗುವುದಿಲ್ಲ. ರಾವಣರಾಜ್ಯದಲ್ಲಿ ಉಪ್ಪುನೀರು, ರಾಮರಾಜ್ಯದಲ್ಲಿ ಕ್ಷೀರಖಂಡವಾಗುತ್ತಾರೆ. ಇದನ್ನು ಮುಳ್ಳುಗಳ ಕಾಡು ಎಂದು ಕರೆಯಲಾಗುವುದು. ಮೊಟ್ಟಮೊದಲು ಎಲ್ಲರಿಗೂ ಕಾಮವಿಕಾರದ ಮುಳ್ಳನ್ನು ಚುಚ್ಚುತ್ತಾರೆ. ತಂದೆಯು ಕಾಮ ಮಹಾಶತ್ರು ಎಂದು ತಿಳಿಸುತ್ತಾರೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತಹದ್ದಾಗಿದೆ. ಹೆಸರೇ ರಾವಣರಾಜ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಈ ಪಂಚವಿಕಾರಗಳನ್ನು ಗೆದ್ದು ಜಗತ್ಜೀತರಾಗಿ. ಈ ಅಂತಿಮ ಜನ್ಮದಲ್ಲಿ ನಿರ್ವಿಕಾರಿಗಳಾಗಿ. ನೀವು ತಮೋಪ್ರಧಾನ, ಪತಿತರಾಗಿದ್ದೀರಿ. ಪುನಃ ಸತೋಪ್ರಧಾನ ಪಾವನರಾಗಿ, ಗಂಗೆಯು ಪತಿತಪಾವನಿ ಅಲ್ಲ. ಶರೀರದ ಕೊಳೆಯನ್ನು ಮನೆಯಲ್ಲಿ ಇರುವ ನೀರಿನಿಂದ ತೆಗೆಯಬಹುದು ಆದರೆ ಆತ್ಮವಂತೂ ಸ್ವಚ್ಛ ಆಗುವುದಿಲ್ಲ. ಭಕ್ತಿಮಾರ್ಗದಲ್ಲಿ ಅನೇಕಾನೇಕ ಗುರುಗಳಿದ್ದಾರೆ, ಸದ್ಗತಿ ಮಾಡುವಂತಹ ಸದ್ಗುರುವು ಒಬ್ಬರೇ ಆಗಿದ್ದಾರೆ. ಸುಪ್ರೀಂ ತಂದೆಯು ಆಗಿದ್ದಾರೆ, ಸುಪ್ರೀಂ ಶಿಕ್ಷಕನು ಆಗಿದ್ದಾರೆ ಸುಪ್ರೀಂ ಸದ್ಗುರುವೂ ಆಗಿದ್ದಾರೆ, ಅವರೇ ನಿಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ |
ಧಾರಣೆಗಾಗಿ ಮುಖ್ಯಸಾರ: |
1. ಸತೋಪ್ರಧಾನರಾಗಲು ತಂದೆಯ ವಿನಃ ಅನ್ಯ ಯಾರನ್ನು ನೆನಪು ಮಾಡಬಾರದು. ದೇಹೀ-ಅಭಿಮಾನಿ ಆಗುವ ಅಭ್ಯಾಸ ಮಾಡಬೇಕು. |
2. ಎಲ್ಲರ ಜೊತೆ ಕ್ಷೀರ ಖಂಡವಾಗಿರಬೇಕು, ಈ ಅಂತಿಮ ಜನ್ಮದಲ್ಲಿ ವಿಕಾರಗಳ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಂಡು ಜಗತ್ಜೀತರಾಗಬೇಕು. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ಇದು ತಿಳಿದಿದೆ - ಮಧುರ ತಂದೆಯು ನಮ್ಮನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ಇಲ್ಲಿ ಬಂದಿದ್ದಾರೆ. ಇದು ಮಕ್ಕಳ ಬುದ್ಧಿಯಲ್ಲಿದೆ. ಪ್ರತಿಯೊಬ್ಬರಿಗೆ ಇದನ್ನು ತಿಳಿಸಬೇಕಾಗಿದೆ - ನಾವಾತ್ಮರು ಈ ನೆನಪಿನ ಯಾತ್ರೆಯಿಂದಲೇ ಪವಿತ್ರರಾಗುತ್ತೇವೆ. ಎಷ್ಟು ಸಹಜ ಉಪಾಯವಾಗಿದೆ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಮಕ್ಕಳಿಗೆ ತಿಳಿದಿದೆ - ತಂದೆಯು ಒಂದು ಸೆಕೆಂಡಿನಲ್ಲಿ ಮುಕ್ತಿ-ಜೀವನ್ಮುಕ್ತಿಯ ಆಸ್ತಿಯನ್ನು ಕೊಡುತ್ತಾರೆ. ಈಗ ಎಲ್ಲರೂ ಜೀವನ ಬಂಧನದಲ್ಲಿದ್ದಾರೆ, ರಾವಣ ರಾಜ್ಯದ ಬಂಧನದಲ್ಲಿದ್ದಾರೆ. ಈ ಮಾತು ತಂದೆಗೇ ಗೊತ್ತು ಮತ್ತು ಮಕ್ಕಳಿಗೆ ಗೊತ್ತು ಇನ್ನ್ಯಾರಿಗೂ ಗೊತ್ತಿಲ್ಲ. ನೀವು ಮಕ್ಕಳಿಗೆ ಈ ನಿಶ್ಚಯವಿದೆ - ಬೇಹದ್ದಿನ ತಂದೆಯನ್ನು ನಾವು ನೆನಪು ಮಾಡುತ್ತೇವೆ ಅಂದಮೇಲೆ ಆತ್ಮಕ್ಕೆ ಆಂತರ್ಯದಲ್ಲಿ ಬಹಳ ಖುಷಿಯಾಗಿರಬೇಕು. ಯಾವ ತಂದೆಯನ್ನು ಅರ್ಧ ಕಲ್ಪದಿಂದ ನೆನಪು ಮಾಡುತ್ತಿದ್ದಿರೋ ಆ ತಂದೆಯು ಸಿಕ್ಕಿದರು, ದುಃಖದಲ್ಲಿ ತಂದೆಯನ್ನು ಸ್ಮರಣೆ ಮಾಡುತ್ತಿರುತ್ತಾರೆ, ನೀವೂ ಸಹ ಸ್ಮರಣೆ ಮಾಡುತ್ತಿದ್ದಿರಿ. ಈಗ ನೀವು ದುಃಖಿಗಳಾಗಿ ಸ್ಮರಣೆ ಮಾಡುವುದಿಲ್ಲ. ಯಾರನ್ನು ಇಡೀ ಪ್ರಪಂಚವು ಸ್ಮರಿಸುತ್ತದೆಯೋ ಆ ತಂದೆಯು ಬಂದಿದ್ದಾರೆ, ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಪದೇ-ಪದೇ ತಿಳಿಸಿದ್ದಾರೆ - ಇಲ್ಲಿ ನೀವು ಕುಳಿತುಕೊಳ್ಳುತ್ತೀರೆಂದರೆ ಈ ರೀತಿ ತಿಳಿದುಕೊಳ್ಳಿ - ನಾವಾತ್ಮರಾಗಿದ್ದೇವೆ, ತಂದೆಯು ಪರಮಧಾಮದಿಂದ ಬಂದಿದ್ದಾರೆ, ಕಲ್ಪ-ಕಲ್ಪವೂ ತಮ್ಮ ವಾಯಿದೆಯ ಅನುಸಾರ ಬರುತ್ತಾರೆ. ತಂದೆಯದು ಇದು ಪ್ರತಿಜ್ಞೆಯಾಗಿದೆ - ಯಾವಾಗ ನೀವು ಕರೆಯುತ್ತೀರೋ ಮತ್ತು ಅರ್ಧಕಲ್ಪ ಪೂರ್ಣವಾಗುವುದೋ ಆಗ ನಾನು ಬರಬೇಕಾಗುತ್ತದೆ, ಕಲಿಯುಗದ ನಂತರ ಸತ್ಯಯುಗವಾಗಬೇಕಾಗಿದೆ ಅಂದಮೇಲೆ ನಾನು ಬರಬೇಕಾಗುತ್ತದೆ. ಇದು ಸಂಗಮಯುಗವಾಗಿದೆ. ತಂದೆಯು ಬಂದಿದ್ದಾರೆಂಬುದು ಕೇವಲ ನೀವು ಮಕ್ಕಳಿಗೇ ತಿಳಿದಿದೆ - ನೀವು ಮಕ್ಕಳೂ ಸಹ ಸರ್ವೀಸ್ ಮಾಡುತ್ತೀರಿ, ದಿನ-ಪ್ರತಿದಿನ ಪರಿಚಯ ಕೊಡುತ್ತಾ ಹೋಗುತ್ತೀರಿ. ಎಲ್ಲರಿಗೆ ತಂದೆಯ ಪರಿಚಯ ಸಿಗುತ್ತಾ ಹೋಗುತ್ತದೆ. ಇಲ್ಲಿ ನೀವು ಕುಳಿತಿದ್ದೀರಿ, ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯಾದ ಶಿವ ತಂದೆಯು ನಮಗೆ ಪುನಃ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನೀವು ಬಾಬಾ, ಬಾಬಾ ಎಂದು ಹೇಳುತ್ತೀರಲ್ಲವೆ. ನಾವು ಶಿವ ತಂದೆಯ ಬಳಿ ಬಂದಿದ್ದೇವೆ, ಶಿವ ತಂದೆಯೂ ಹೇಳುತ್ತಾರೆ - ನಾನು ಕಲ್ಪದ ಹಿಂದಿನ ತರಹ ಸಾಧಾರಣ ತನುವಿನಲ್ಲಿ ಬಂದಿದ್ದೇನೆ, ಇದನ್ನು ಮರೆಯಬಾರದು. ಯಾವ ತಂದೆಯಿಂದ ಪತಿತರಿಂದ ಪಾವನರಾಗುತ್ತೀರೋ ಅಂತಹ ತಂದೆಯ ನೆನಪನ್ನೇ ಮಾಯೆಯು ಮರೆಸಿ ಬಿಡುತ್ತದೆ. ನಿಮಗೆ ತಿಳಿದಿದೆ - ಸರ್ವರ ಸದ್ಗತಿದಾತನು ಒಬ್ಬರೇ ಸದ್ಗುರುವಾಗಿದ್ದಾರೆ, ಸಿಖ್ಖರೂ ಸಹ ಸತ್ ಶ್ರೀ ಅಕಾಲ್ ಎಂದು ಹಾಡುತ್ತಾರೆ. ಪತಿತ-ಪಾವನನಿಗೇ ಸದ್ಗುರುವೆಂದು ಹೇಳಲಾಗುತ್ತದೆ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ, ಆತ್ಮವೇ ಕರೆಯುತ್ತದೆ. ನಾವು ಸನ್ಮುಖದಲ್ಲಿ ತಂದೆಯೊಂದಿಗೆ ಮಿಲನ ಮಾಡಲು ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ದೊಡ್ಡ-ದೊಡ್ಡ ವ್ಯಕ್ತಿಗಳು ಒಬ್ಬರು ಇನ್ನೊಬ್ಬರನ್ನು ಮಿಲನ ಮಾಡಲು ಹೋಗುತ್ತಾರೆಂದರೆ ಅವರಿಗೆ ಎಷ್ಟು ಮಹಿಮೆಯಾಗುತ್ತದೆ! ಬಹಳ ವಿಜೃಂಭಣೆಯಿಂದ ಖುಷಿಯ ವಾದ್ಯಗಳನ್ನು ಮೊಳಗಿಸುತ್ತಾರೆ ಆದರೆ ಇಲ್ಲಿ ಗುಪ್ತ ವೇಷದಲ್ಲಿ ಯಾರು ಬಂದಿದ್ದಾರೆಂಬುದನ್ನು ಕೇವಲ ನೀವೇ ತಿಳಿದಿದ್ದೀರಿ. ಅವರಿಗೆ ದೂರ ದೇಶದ ಯಾತ್ರಿಕನೆಂದು ಕರೆಯಲಾಗುತ್ತದೆ. |
ನಾವಾತ್ಮರು ಪರಮಧಾಮದ ನಿವಾಸಿಗಳಾಗಿದ್ದೇವೆ, ಇಲ್ಲಿ ಯಾತ್ರಿಕರಾಗಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾವ ಒಂದೊಂದು ಶಬ್ಧವನ್ನು ತಂದೆಯು ತಿಳಿಸುತ್ತಾರೆಯೋ ಅದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ನೀವೀಗ ತಂದೆಯಿಂದ ಕೇಳಿಸಿಕೊಳ್ಳುತ್ತಿದ್ದೀರಿ ಅಂದಮೇಲೆ ಅದನ್ನು ಬಹಳ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಈ ಕರ್ಮ ಕ್ಷೇತ್ರದಲ್ಲಿ ಯಾತ್ರಿಕರಾಗಿದ್ದೀರಿ, ನಿಮಗೆ ತಿಳಿದಿದೆ - ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಈ ಸಾಕಾರ ಪ್ರಪಂಚದಲ್ಲಿ ಶಬ್ಧದಲ್ಲಿ ಬರುತ್ತೇವೆ, ನಾವು ಶಾಂತಿಧಾಮದ ಯಾತ್ರಿಕರಾಗಿದ್ದೇವೆ, ಇಲ್ಲಿ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತೇವೆ. ಕೊನೆಗೂ ಇದು ಅಂತಿಮ ಸಮಯವಾಗಿದೆ ಆದ್ದರಿಂದ ಹಳೆಯ ಸೃಷ್ಟಿಯನ್ನು ಹೊಸದನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆ, ಈ ಚಿತ್ರವು ಸ್ಪಷ್ಟವಾಗಿದೆ. ಕೃಷ್ಣನ ಮೂಲಕ, ವಿಷ್ಣುವಿನ ಮೂಲಕ ಸ್ಥಾಪನೆ ಮಾಡುವುದಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ಸ್ವರ್ಗವನ್ನು ರಚಿಸುವುದಕ್ಕಾಗಿಯೇ ಬರುತ್ತಾರೆ. ತಂದೆಯು ಸಾಧಾರಣ ತನುವಿನಲ್ಲಿ ಬಂದಿದ್ದಾರೆ, ಇದು ಪತಿತ ಪ್ರಪಂಚವಾಗಿದೆ, ಯಾರೊಬ್ಬರೂ ಪಾವನರಿಲ್ಲ. ಮೊದಲ ನಂಬರಿನ ಲಕ್ಷ್ಮೀ-ನಾರಾಯಣರೂ ಸಹ ಪತಿತರಾಗುತ್ತಾರೆ. ಯಾರು ಪಾವನರಾಗಿದ್ದರೋ ಅವರು ಇಡೀ ವಂಶಾವಳಿ ಸಹಿತವಾಗಿ ಎಲ್ಲರೂ ಸಹ ಪತಿತರಾಗಿದ್ದಾರೆ. ನಾವು ಯಾರು ದೇವಿ-ದೇವತಾ ಧರ್ಮದವರಾಗಿದ್ದೆವೋ ಅವರು ಈಗ ಶೂದ್ರ ಧರ್ಮದವರಾಗಿ ಬಿಟ್ಟಿದ್ದೇವೆ. ಭಲೆ ಅಮೇರಿಕಾ ಮುಂತಾದ ದೇಶಗಳಲ್ಲಿ ದೊಡ್ಡ-ದೊಡ್ಡ ಸಾಹುಕಾರರಿದ್ದಾರೆ ಆದರೆ ಸತ್ಯಯುಗದ ಮುಂದೆ ಅಮೇರಿಕಾ ಏನೇನೂ ಇಲ್ಲ. ಇವೆಲ್ಲವೂ ಕೊನೆಯಲ್ಲಿಯೇ ಆಗಿವೆ, ಇದು ಅಲ್ಪಕಾಲದ ಆಡಂಭರವಾಗಿದೆ. ವಿನಾಶವಂತೂ ಆಗಲೇಬೇಕಾಗಿದೆ, ನೀವು ಮಕ್ಕಳಿಗೆ ಬಹಳ ನಶೆಯಿರಬೇಕು - ಯಾವ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ನಾವು ಮಕ್ಕಳು ನೆನಪು ಮಾಡದೇ ಇರುವುದು ಎಷ್ಟು ಆಶ್ಚರ್ಯಜನಕ ಮಾತಾಗಿದೆ! ಮಾಯೆಯು ನೆನಪು ಮಾಡಲು ಬಿಡುವುದಿಲ್ಲ, ಬಾಬಾ ಮಾಯೆಯು ನಮ್ಮನ್ನು ನೆನಪು ಮಾಡಲು ಬಿಡುವುದಿಲ್ಲವೆಂದು ನೀವು ಹೇಳುತ್ತೀರಿ. ಅರೆ! ಯಾವ ತಂದೆಯು 21 ಜನ್ಮಗಳಿಗಾಗಿ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೇ ನೀವು ನೆನಪು ಮಾಡಲು ಸಾಧ್ಯವಿಲ್ಲವೇ? ಪ್ರಜೆಗಳೂ ಸಹ ಸ್ವರ್ಗದ ಮಾಲೀಕರಾಗುತ್ತಾರಲ್ಲವೆ, ಎಲ್ಲರೂ ಸುಖಿಯಾಗಿರುತ್ತಾರೆ. ಈಗಂತೂ ಎಲ್ಲರೂ ದುಃಖಿಗಳಾಗಿದ್ದಾರೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಮೊದಲಾದವರಿಗಂತೂ ಹಗಲು-ರಾತ್ರಿ ಚಿಂತೆಯಿರುತ್ತದೆ, ಯುದ್ಧ ಇತ್ಯಾದಿಗಳಲ್ಲಿ ಎಷ್ಟೊಂದು ಮಂದಿ ಸಾಯುತ್ತಿರುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಮಹಾಭಾರತ ಯುದ್ಧವು ಪ್ರಸಿದ್ಧವಾಗಿದೆ ಆದರೆ ಅದರಲ್ಲಿ ಏನಾಗಿತ್ತು ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ನಿಮಗೆ ಬುದ್ಧಿಯಲ್ಲಿ ಕೂರಿಸಿದ್ದಾರೆ. ಮಹಾಭಾರತ ಯುದ್ಧದಲ್ಲಿ ಎಷ್ಟೊಂದು ಮಂದಿ ಮರಣ ಹೊಂದಿದರು! ಎಷ್ಟು ದೊಡ್ಡ ಮನುಷ್ಯ ಸೃಷ್ಟಿಯಾಗಿದೆ! ಆತ್ಮಗಳದೂ ವೃಕ್ಷವಿದೆ. ವೃಕ್ಷವು ಮೊದಲು ಹೊಸದಾಗಿರುತ್ತದೆ ಮತ್ತು ಬಹಳ ಚಿಕ್ಕದಾಗಿರುತ್ತದೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ನಿಮಗೆ ತಿಳಿದಿದೆ - ಮೊದಲು ದೇವತಾ ಧರ್ಮವಿದ್ದಾಗ ಎಷ್ಟು ಚಿಕ್ಕ ವೃಕ್ಷವಾಗಿತ್ತು, ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಈಗ ಎಷ್ಟೊಂದು ವಿಭಿನ್ನ ಧರ್ಮಗಳಿವೆ! ಈ ಮಹಾಭಾರತ ಯುದ್ಧದ ಮೂಲಕ ಇವೆಲ್ಲದರ ವಿನಾಶವಾಗುವುದು ಆದರೆ ಈ ಜ್ಞಾನವು ಯಾರಲ್ಲಿಯೂ ಇಲ್ಲ. ಇದು ಅದೇ ಮಹಾಭಾರತ ಯುದ್ಧವಾಗಿದೆ ಎಂದು ಭಲೆ ಹೇಳುತ್ತಾರೆ ಆದರೆ ಇದರಿಂದ ಏನಾಗುವುದು ಎಂಬುದನ್ನು ತಿಳಿದುಕೊಂಡಿಲ್ಲ. ನೀವೀಗ ಬೆಳಕಿನಲ್ಲಿದ್ದೀರಿ, ನಿಮಗೆ ತಿಳಿದಿದೆ - ಈಗ ವಿನಾಶವಾಗುವುದು ಆದ್ದರಿಂದ ಮಹಾಭಾರತ ಯುದ್ಧಕ್ಕೆ ಮೊದಲೇ ನಮ್ಮ ಆಸ್ತಿಯನ್ನು ತೆಗೆದುಕೊಳ್ಳಬೇಕು. ಮಾತು ಬಹಳ ಸಹಜವಾಗಿದೆ, ಪವಿತ್ರರಾಗಿ ಮತ್ತು ತಂದೆಯನ್ನು ನೆನಪು ಮಾಡಿ. ಅನೇಕ ಕನ್ಯೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ಒಬ್ಬರು ಇನ್ನೊಬ್ಬರನ್ನು ರಕ್ಷಣೆ ಮಾಡಲು ನೀವು ಮಾತೆಯರ ಸಂಘಟನೆ ಇರಬೇಕು ಆದರೆ ಅವಶ್ಯವಾಗಿ ಆತ್ಮಾಭಿಮಾನಿ ಆಗಬೇಕಾಗಿದೆ. ನಾವು ಖಂಡಿತ ಪಾವನರಾಗಬೇಕೆಂಬ ಪಕ್ಕಾ ನಶೆಯಿರಬೇಕು, ಈ ನಶೆಯಲ್ಲಿ ಇರುವವರೇ ತಿಳಿಸಬಲ್ಲರು. ನಾವು ತಂದೆಯನ್ನು ನೆನಪು ಮಾಡಬೇಕು, ಪವಿತ್ರರಾಗಬೇಕಾಗಿದೆ. ನಾವು ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ ಎಂಬ ನಶೆಯಂತೂ ಇರಬೇಕು. ನಾವು ರಚಯಿತ ತಂದೆ ಮತ್ತು ರಚನೆಯ ಚಕ್ರವನ್ನು ಅರಿತುಕೊಂಡಿದ್ದೇವೆ, ನಾವೀಗ ತಂದೆಯಿಂದ ಹೊಸ ಪ್ರಪಂಚ ಸತ್ಯಯುಗದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ತಿಳಿಸುತ್ತಾ ಇರಿ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ನಷ್ಟವಾಗುತ್ತವೆ, ಪಾವನರಂತೂ ಅವಶ್ಯವಾಗಿ ಆಗಬೇಕಾಗಿದೆ. ಪಾವನರು ಎಂದರೆ ಪವಿತ್ರರು. ಕಾಮ ಮಹಾಶತ್ರುವಾಗಿದೆ, ನಾವು 84 ಜನ್ಮಗಳ ಚಕ್ರವನ್ನು ಪೂರ್ಣಗೊಳಿಸಿದೆವು, ಈಗ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನೀವಿಲ್ಲಿ ರಿಫ್ರೆಶ್ ಆಗುವುದಕ್ಕಾಗಿ ಬರುತ್ತೀರಿ. ತಂದೆಯಾದ ನನ್ನನ್ನು ನೆನಪು ಮಾಡಿರಿ, ನನ್ನಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಯಾರಲ್ಲಿಯೂ ಮೋಹದ ಸೆಳೆತವಿರಬಾರದು, ನಷ್ಟಮೋಹಿಗಳಾಗಬೇಕಾಗಿದೆ. ಈ ಶರೀರದಲ್ಲಿಯೂ ವ್ಯಾಮೋಹವಿರಬಾರದು, ಇದಂತೂ ಹಳೆಯ ಚರ್ಮವಾಗಿದೆ, ಆದರೆ ಈ ಶರೀರದ ಮೂಲಕವೇ ವಿದ್ಯೆಯನ್ನು ಓದಬೇಕಾಗಿದೆ ಆದ್ದರಿಂದ ಇದನ್ನೂ ಸಂಭಾಲನೆ ಮಾಡಬೇಕಾಗಿದೆ. ಖಾಯಿಲೆಯಾದಾಗ ಇದಕ್ಕೆ ತೇಪೆಯನ್ನು ಹಾಕಬೇಕಾಗುತ್ತದೆ ಏಕೆಂದರೆ ನಿಮಗೆ ತಿಳಿದಿದೆ - ಇದು ಬಹಳ ಹಳೆಯ ಶರೀರವಾಗಿದೆ, ಇದಕ್ಕೆ ಏನಾದರೊಂದು ಆಗುತ್ತಲೇ ಇರುತ್ತದೆ. ಆತ್ಮಕ್ಕೇ ದುಃಖವಾಗುತ್ತದೆ, ನಿಮಗೆ ತಿಳಿದಿದೆ - ಈಗಂತೂ ಈ ಶರೀರವನ್ನು ಬಿಡಬೇಕಾಗಿದೆ, ಯೋಗಬಲದಿಂದ ಇದನ್ನು ತಣಿಸಬೇಕಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಇರಬೇಕಾಗಿದೆ, ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸಾಕು. ಮತ್ತ್ಯಾವುದೆ ಲೌಕಿಕ ಸಂಬಂಧಗಳೂ ಸಹ ನೆನಪಿಗೆ ಬರಬಾರದು, ನಾನು ದೇಹವಲ್ಲ, ಆತ್ಮನಾಗಿದ್ದೇನೆ. ತಂದೆಯು ತಿಳಿಸುತ್ತಾರೆ - ನಾನು ನೀವಾತ್ಮರಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ, ಆತ್ಮವು ಪವಿತ್ರವಾದರೆ ನಂತರ ಅದಕ್ಕೆ ಒಳ್ಳೆಯ ಶರೀರವೇ ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಈಗ ನಾವಾತ್ಮರು ಪಾವನರಾಗಬೇಕಾಗಿದೆ. ನಾವು ಪಾವನರಿದ್ದಾಗ ಈ ಲಕ್ಷ್ಮೀ-ನಾರಾಯಣರಂತೆ ಇದ್ದೆವು, ಲಕ್ಷ್ಮೀ-ನಾರಾಯಣರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ, ಇಡೀ ಸೂರ್ಯವಂಶಿ ರಾಜಧಾನಿಯೇ 84 ಜನ್ಮ ತೆಗೆದುಕೊಂಡಿದ್ದಾರೆ. ಚಂದ್ರವಂಶಿಯರಿಗೆ 84 ಜನ್ಮಗಳೆಂದು ಹೇಳುವುದಿಲ್ಲ, ಯಾರು ಸೂರ್ಯವಂಶಿಯರಲ್ಲಿ ಮೊಟ್ಟ ಮೊದಲು ದಾಸ-ದಾಸಿಯರಾಗುವರೋ ಅವರು ತ್ರೇತಾದಲ್ಲಿ ಬಂದನಂತರ ಸ್ವಲ್ಪ ಪದವಿಯನ್ನು ಪಡೆಯುತ್ತಾರೆ, ಅವರದು 84 ಜನ್ಮಗಳೆಂದು ಹೇಳಬಹುದು. ರಾಜ-ರಾಣಿ, ಪ್ರಜೆ ಯಾರೆಲ್ಲಾ ದಾಸ-ದಾಸಿ ಮೊದಲಾದವರು ಸೂರ್ಯವಂಶದಲ್ಲಿ ಬರುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳಬೇಕು. ನಾವು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದನ್ನು ವಿಚಾರ ಸಾಗರ ಮಂಥನ ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತಾ ಇರಿ. ನಡೆಯುತ್ತಾ-ತಿರುಗಾಡುತ್ತಾ ಈ ರೀತಿ ತಿಳಿದುಕೊಳ್ಳಿ - ನಾವು ತಂದೆಯ ಮಕ್ಕಳಾಗಿದ್ದೇವೆ. ಯಾರಾದರೂ ಸಿಗಲಿ ಅವರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈ ಚಿತ್ರಗಳಲ್ಲಿ ಸಂಪೂರ್ಣ ಜ್ಞಾನವಿದೆ, ಎಲ್ಲವನ್ನೂ ತಿಳಿಸಬೇಕಾಗಿದೆ. ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಲ್ಲವೆ. ನಾವು ಬಿ.ಕೆ.ಗಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ತಂದೆಯು ಬಂದಿದ್ದಾರೆ, ಎಲ್ಲಾ ಆತ್ಮಗಳ ತಂದೆಯು ಒಬ್ಬರೇ ಆಗಿದ್ದಾರೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ತಮ್ಮ-ತಮ್ಮ ಕಾರ್ಡನ್ನೂ ಸಹ ತೋರಿಸಿ. ಎಲ್ಲಿಯಾದರೂ ಕಛೇರಿ ಇತ್ಯಾದಿಗಳಲ್ಲಿ ಕಾರ್ಡನ್ನು ತೋರಿಸಿದರೂ ಸಹ ಈ ಬಿ.ಕೆ.ಗಳು ಯಾರೆಂಬುದು ಅವರಿಗೆ ಅರ್ಥವಾಗುವುದಿಲ್ಲ, ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ಸರ್ಕಾರಕ್ಕೂ ಸಹ ಇದನ್ನು ತಿಳಿಸಬೇಕಾಗಿದೆ - ನಮ್ಮದು ಇದು ಪರಿವಾರವಾಗಿದೆ, ದಾದಾ ಮತ್ತು ತಂದೆಯಿದ್ದಾರೆ. ದಾದಾರವರ ಮೂಲಕ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ, ಇದನ್ನು ನೆನಪಿಟ್ಟುಕೊಂಡು ಖುಷಿಯಲ್ಲಿರಬೇಕು. ಆಸ್ತಿಯೆಲ್ಲವೂ ತಾತನದಾಗಿದೆ. ತಾತನ ಆಸ್ತಿಯ ಮೇಲೆ ಮೊಮ್ಮಕ್ಕಳಿಗೆ ಅಧಿಕಾರವಿರುತ್ತದೆ. ಪೂರ್ಣ ಭಾಗವನ್ನು ಹಂಚಿಕೊಳ್ಳುತ್ತಾರೆ. |
ನೀವೂ ಸಹ ತಿಳಿದುಕೊಂಡಿದ್ದೀರಿ – ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ನಾವು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇದನ್ನು ನೆನಪಿಟ್ಟುಕೊಳ್ಳಬೇಕು. ಓದಬೇಕು ಮತ್ತು ಓದಿಸಲೂಬೇಕಾಗಿದೆ. ಮಕ್ಕಳ ಪಾಲನೆ ಮಾಡುವುದು ತಂದೆಯ ಕರ್ತವ್ಯವಾಗಿದೆ. ಎಲ್ಲಿಯವರೆಗೆ ಕುಮಾರ-ಕುಮಾರಿಯರು ಪ್ರೌಢಾವಸ್ಥೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ತಂದೆಯು ಅವರ ಸಂಭಾಲನೆ ಮಾಡಬೇಕಾಗಿದೆ. ಓದುವುದು ಮಕ್ಕಳ ಕೆಲಸವಾಗಿದೆ. ತಮ್ಮ ಕಾಲಿನ ಮೇಲೆ ನಿಂತುಕೊಳ್ಳುವುದಕ್ಕಾಗಿ ಓದುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು 21 ಜನ್ಮಗಳಿಗಾಗಿ ನಮಗೆ ಓದಿಸುತ್ತಿದ್ದಾರೆ ನಂತರ ನಾವು ನಮ್ಮ ಕಾಲಿನ ಮೇಲೆ ನಿಂತುಕೊಳ್ಳುತ್ತೇವೆ. ಎಷ್ಟು ಓದುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ನೀವು ಸ್ವಯಂ ಹೇಳುತ್ತೀರಿ - ನಾವಿಲ್ಲಿ ಶ್ರೀ ಲಕ್ಷ್ಮೀ ಹಾಗೂ ಶ್ರೀ ನಾರಾಯಣರಾಗಲು ಬರುತ್ತೇವೆ, ಇದು ಸತ್ಯ ನಾರಾಯಣನ ಕಥೆಯಲ್ಲವೆ. ಈ ಲಕ್ಷ್ಮೀ-ನಾರಾಯಣರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ಯಾರಿಗೂ ತಿಳಿದಿಲ್ಲ. ರಾಧೆಯ ಭಕ್ತರಾಗಿದ್ದರೆ ರಾಧೆಯು ಎಲ್ಲೆಲ್ಲಿಯೂ ಇದ್ದಾರೆ ಎಂದು ಹೇಳುತ್ತಾರೆ, ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ, ಕೃಷ್ಣನೇ ಕೃಷ್ಣನಿದ್ದಾನೆ, ಶಿವನೇ ಶಿವನಿದ್ದಾರೆ ಎಂದು ಹೇಳಿ ಗಡಿಬಿಡಿ ಮಾಡಿಬಿಟ್ಟಿದ್ದಾರೆ. ಈಶ್ವರ, ರಾಧೆ, ಕೃಷ್ಣ ಎಲ್ಲರೂ ಸರ್ವವ್ಯಾಪಿಯಾಗಿದ್ದಾರೆ, ಎಲ್ಲವೂ ಈಶ್ವರನ ರೂಪವಾಗಿದೆ. ಭಗವಂತನೇ ಈ ರೂಪಗಳನ್ನು ಧಾರಣೆ ಮಾಡಿದ್ದಾರೆ ಎಂದು ಹೇಳುತ್ತಾರೆ. ಎಲ್ಲಿ ನೋಡಿದರಲ್ಲಿ ನೀನೇ ನೀನು.... ಹೀಗೆ ಹೇಳುತ್ತಾ ಎಷ್ಟು ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ಇದು ವಿಕಾರಿ ಪತಿತ ಪ್ರಪಂಚವಾಗಿದೆ. ಸತ್ಯಯುಗವು ನಿರ್ವಿಕಾರಿ ಪಾವನ ಪ್ರಪಂಚವಾಗಿರುತ್ತದೆ. ನಿರ್ವಿಕಾರಿ ಪ್ರಪಂಚದ ಅರ್ಥವೇ ಆಗಿದೆ- ಸ್ವರ್ಗ. ಅಲ್ಲಿಯೂ ಮಕ್ಕಳಿದ್ದರಲ್ಲವೆ. ಅವರು ಹೇಗೆ ಜನಿಸುತ್ತಾರೆ ಎಂದು ಕೇಳುತ್ತಾರೆ. ಕೇವಲ ಇದೇ ಪ್ರಶ್ನೆಯನ್ನು ಕೇಳುತ್ತಾರೆ. ಮಕ್ಕಳಾಗದಿದ್ದರೆ ಸೃಷ್ಟಿಯು ಹೇಗೆ ವೃದ್ಧಿಯಾಗುವುದು ಎಂದು ಕೇಳುತ್ತಾರೆ. ಪ್ರತಿವರ್ಷದ ಜನಗಣತಿಯನ್ನು ತೆಗೆಯುತ್ತಾರೆ - ಜನಸಂಖ್ಯೆಯು ಎಷ್ಟು ಹೆಚ್ಚಾಯಿತು ಎಂದು ಆದರೆ ಇಷ್ಟು ಮಂದಿ ಸತ್ತರೆಂದು ತಿಳಿಸುವುದಿಲ್ಲ ಅಂದಾಗ ನೀವು ಮಕ್ಕಳು ಮೊದಲು ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. ಮೊದಲು ನಾನಾತ್ಮನಾಗಿದ್ದೇನೆ ಎಂಬ ನಿಶ್ಚಯ ಮಾಡಿಕೊಳ್ಳಿ ಜೊತೆಗೆ ತಂದೆಯನ್ನು ನೆನಪು ಮಾಡಬೇಕಾಗಿದೆ. ಅಂತ್ಯಕಾಲದಲ್ಲಿ ಯಾರು ನಾರಾಯಣನನ್ನು ಸ್ಮರಿಸಿದರೋ ಅವರಿಗೆ ಅಂತಹ ಜನ್ಮವೇ ಸಿಕ್ಕಿತು.... ನಾರಾಯಣನನ್ನು ಸ್ಮರಿಸಬೇಕೆಂದು ಈ ಶಬ್ಧವನ್ನು ತಪ್ಪಾಗಿ ಬರೆದಿದ್ದಾರೆ. ಅಂತ್ಯಕಾಲದಲ್ಲಿ ಯಾರು ಶಿವನನ್ನು ಸ್ಮರಿಸಿದರೋ.... ಅದೇ ಚಿಂತೆಯಲ್ಲಿ ಯಾರು ಸತ್ತರೋ ಅವರು ಸ್ವರ್ಗದ ನಾರಾಯಣನಾದರು. ಅಂತ್ಯಕಾಲದಲ್ಲಿ ನಾರಾಯಣನ ಸ್ಮರಣೆಯೆಂದು ಏಕೆ ಹೇಳುತ್ತಾರೆ? ಕೃಷ್ಣನೇ ಜ್ಞಾನವನ್ನು ಕೊಟ್ಟಿದ್ದರೆಂದು ತಿಳಿಯುತ್ತಾರೆ, ಕೃಷ್ಣನನ್ನೇ ನೆನಪು ಮಾಡುತ್ತಾರೆ, ನಾರಾಯಣನ ಬಗ್ಗೆ ಯಾರಿಗೂ ತಿಳಿದಿಲ್ಲ. ಕೃಷ್ಣ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ರಾಧೆಯ ಜಯಂತಿಯೆಲ್ಲಿ? ಕೃಷ್ಣನ ಜನ್ಮವನ್ನು ಆಚರಿಸುತ್ತಾರೆ, ನಾರಾಯಣನದೆಲ್ಲಿ? ವಿಶ್ವದ ಮಹಾರಾಜ-ಮಹಾರಾಣಿ ಲಕ್ಷ್ಮೀ-ನಾರಾಯಣರ ಬಗ್ಗೆ ಯಾರಿಗೂ ತಿಳಿದಿಲ್ಲ. ಪ್ರಜಾಪಿತ ಬ್ರಹ್ಮನ ಮುಖವಂಶಾವಳಿ ಇರಬೇಕಲ್ಲವೆ. ಅವರು ಎಲ್ಲಿ ಹೋದರು? ಬ್ರಾಹ್ಮಣ ದೇವಿ-ದೇವತಾಯ ನಮಃ ಎಂದು ಹೇಳುತ್ತಾರೆ, ಬ್ರಹ್ಮನ ಮುಖವಂಶಾವಳಿ ಇತ್ತಲ್ಲವೆ? ಮಕ್ಕಳು ತಿಳಿದುಕೊಂಡಿದ್ದೀರಿ - ಬ್ರಹ್ಮನ ಮೂಲಕ ಶಿವ ತಂದೆಯು ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣ ಧರ್ಮವನ್ನು ಬ್ರಹ್ಮನು ರಚಿಸಲಿಲ್ಲ, ಶಿವ ತಂದೆಯು ರಚಿಸಿದ್ದಾರೆ. ಇವರಂತೂ ಈಗ ಬ್ರಹ್ಮನಾಗಿದ್ದಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಹಳೆಯ ಶರೀರದಲ್ಲಿರುತ್ತಾ ವಿದ್ಯೆಯನ್ನು ಓದಿ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳಬೇಕಾಗಿದೆ, ಆದ್ದರಿಂದ ಇದರ ಸಂಭಾಲನೆ ಮಾಡಬೇಕಾಗಿದೆ ಆದರೆ ಇದರಲ್ಲಿ ವ್ಯಾಮೋಹವಿರಬಾರದು. |
2. ಇಂತಹ ಅಭ್ಯಾಸ ಮಾಡಿರಿ - ಅಂತ್ಯಕಾಲದಲ್ಲಿ ಒಬ್ಬ ಶಿವ ತಂದೆಯ ನೆನಪೇ ಇರಲಿ, ಅನ್ಯ ಯಾವುದೇ ಚಿಂತನೆಯಲ್ಲಿ ಹೋಗಬಾರದು, ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾವಾಗ ಮಹಿಮೆಯನ್ನು ಹಾಡುತ್ತೀರೋ ಆಗ ಬುದ್ಧಿಯು ಮೇಲೆ ಹೋಗುತ್ತದೆ. ಆತ್ಮವೇ ತಂದೆಗೆ ಹೇಳುತ್ತದೆ, ನೀನೇ ಅಂಬಿಗ, ಪತಿತ-ಪಾವನ ಅಥವಾ ಸತ್ಯ-ಸತ್ಯವಾದ ಸಂದೇಶ ವಾಹಕರಾಗಿದ್ದೀರಿ. ತಂದೆಯೇ ಬಂದು ಆತ್ಮಗಳಿಗೆ ಸಂದೇಶವನ್ನು ಕೊಡುತ್ತಾರೆ ಮತ್ತು ಸಂದೇಶವಾಹಕ ಅಥವಾ ಪೈಗಂಬರ್ ಎಂದು ಯಾರಿಗೆ ಹೇಳುತ್ತೇವೆ ಅವರು ಚಿಕ್ಕವರು ಅಥವಾ ದೊಡ್ಡವರು ಇರುತ್ತಾರೆ. ವಾಸ್ತವದಲ್ಲಿ ಅವರು ಯಾರೂ ಸಂದೇಶವನ್ನು ಕೊಡುವುದಿಲ್ಲ. ಇದಂತೂ ಅಸತ್ಯ ಮಹಿಮೆಯಾಗಿದೆ. ಒಬ್ಬನ ಹೊರತು ಈ ಮನುಷ್ಯ ಸೃಷ್ಟಿಯಲ್ಲಿ ಯಾರದೂ ಮಹಿಮೆಯಿಲ್ಲವೆಂದು ಮಕ್ಕಳು ತಿಳಿದಿದ್ದೀರಿ. ಎಲ್ಲರಿಗಿಂತ ಹೆಚ್ಚಿನ ಮಹಿಮೆ ಈ ಲಕ್ಷ್ಮೀ-ನಾರಾಯಣರದ್ದಾಗಿದೆ ಏಕೆಂದರೆ ಇವರು ಹೊಸ ಪ್ರಪಂಚದ ಮಾಲೀಕರಾಗಿದ್ದರು, ಅದನ್ನೂ ಸಹ ಭಾರತವಾಸಿಗಳೇ ತಿಳಿದಿದ್ದಾರೆ. ಪ್ರಪಂಚದವರು ಈ ಭಾರತವನ್ನು ಕೇವಲ ಪ್ರಾಚೀನ ದೇಶವೆಂದು ತಿಳಿದಿದ್ದಾರೆ. ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಕೃಷ್ಣನನ್ನೂ ಸಹ ಗಾಡ್ ಎಂದು ಹೇಳಿ ಬಿಡುತ್ತಾರೆ. ಭಾರತವಾಸಿಗಳು ಇವರನ್ನು ಭಗವಾನ್-ಭಗವತಿ ಎಂದು ಹೇಳುತ್ತಾರೆ ಆದರೆ ಈ ಭಗವಾನ್-ಭಗವತಿಯರು ಸತ್ಯಯುಗದಲ್ಲಿ ರಾಜ್ಯ ಮಾಡುತ್ತಿದ್ದರೆಂದು ಯಾರಿಗೂ ಗೊತ್ತಿಲ್ಲ. ಭಗವಂತನೇ ಈ ದೇವಿ-ದೇವತೆಗಳ ರಾಜ್ಯವನ್ನು ಸ್ಥಾಪನೆ ಮಾಡಿದರು. ವಿವೇಕವೂ ಹೇಳುತ್ತದೆ - ನಾವು ಭಗವಂತನ ಮಕ್ಕಳೆಂದ ಮೇಲೆ ನಾವೂ ಸಹ ಭಗವಾನ್-ಭಗವತಿಯಾಗಬೇಕಲ್ಲವೆ. ನಾವೆಲ್ಲರೂ ಒಬ್ಬನ ಮಕ್ಕಳಲ್ಲವೆ! ಆದರೆ ಭಗವಾನ್-ಭಗವತಿಯೆಂದು ಹೇಳಲು ಸಾಧ್ಯವಿಲ್ಲ. ಇದೆಲ್ಲಾ ಮಾತುಗಳನ್ನು ತಂದೆಯು ಕುಳಿತು ತಿಳಿಸುತ್ತಾರೆ. ಮೊದಲು ನಾವು ಹೊಸ ಪ್ರಪಂಚದಲ್ಲಿದ್ದೆವೆಂದು ಭಾರತವಾಸಿಗಳು ಹೇಳುತ್ತಾರೆ. ಹೊಸ ಪ್ರಪಂಚವನ್ನು ಎಲ್ಲರೂ ಬಯಸುತ್ತಾರೆ. ಬಾಪೂಜಿಯೂ ಸಹ ಹೊಸ ಪ್ರಪಂಚ, ಹೊಸ ರಾಮ ರಾಜ್ಯವನ್ನು ಬಯಸುತ್ತಿದ್ದರು ಆದರೆ ರಾಮ ರಾಜ್ಯದ ಅರ್ಥವನ್ನು ಖಂಡಿತ ತಿಳಿದಿರಲಿಲ್ಲ. ಈಗಿನ ಕಾಲದ ಮನುಷ್ಯರಿಗೆ ತಮ್ಮದೇ ಆದ ಅಹಂಕಾರವು ಎಷ್ಟೊಂದಿದೆ! ಕಲಿಯುಗದಲ್ಲಿ ಎಲ್ಲರೂ ಕಲ್ಲು ಬುದ್ಧಿಯವರು, ಸತ್ಯಯುಗದಲ್ಲಿ ಎಲ್ಲರೂ ಪಾರಸ ಬುದ್ಧಿಯವರಾಗಿರುತ್ತಾರೆ ಆದರೆ ಇದು ಯಾರಿಗೂ ತಿಳಿದಿಲ್ಲ. ಭಾರತವೇ ಸತ್ಯಯುಗದಲ್ಲಿ ಪಾರಸ ಬುದ್ಧಿಯಾಗಿತ್ತು, ಈಗ ಕಲಿಯುಗದಲ್ಲಿ ಕಲ್ಲು ಬುದ್ಧಿಯಾಗಿದೆ. ಮನುಷ್ಯರಂತೂ ಇದನ್ನು ಸ್ವರ್ಗವೆಂದು ತಿಳಿದಿದ್ದಾರೆ. ಸ್ವರ್ಗದಲ್ಲಿ ವಿಮಾನಗಳಿತ್ತು, ದೊಡ್ಡ-ದೊಡ್ಡ ಅರಮನೆಗಳಿತ್ತು, ಅವಲ್ಲವೂ ಈಗ ಇದೆ. ವಿಜ್ಞಾನವು ಎಷ್ಟೊಂದು ವೃದ್ಧಿ ಹೊಂದಿದೆ, ಎಷ್ಟೊಂದು ಸುಖವಿದೆ, ಎಷ್ಟೊಂದು ಫ್ಯಾಷನ್ ಇದೆ. ಬುದ್ಧಿಯು ಇಡೀ ದಿನ ಫ್ಯಾಷನ್ನಿನ ಹಿಂದೆಯೇ ಇರುತ್ತದೆ. ಆರ್ಟಿಫಿಷಿಯಲ್ ಸೌಂದರ್ಯಕ್ಕಾಗಿ ಕೇಶ ಶೃಂಗಾರವನ್ನು ಮಾಡಿಕೊಳ್ಳುತ್ತಾರೆ, ಎಷ್ಟೊಂದು ಖರ್ಚು ಮಾಡುತ್ತಾರೆ! ಇವೆಲ್ಲಾ ಫ್ಯಾಷನ್ ಈ ಚಿತ್ರಗಳಿಂದಲೇ ಬಂದಿದೆ, ಪಾರ್ವತಿಯಂತೆ ನಾವು ಕೇಶ ಶೃಂಗಾರ ಮಾಡಿಕೊಂಡಿದ್ದೇವೆಂದು ತಿಳಿಯುತ್ತಾರೆ. ಇದೆಲ್ಲವನ್ನೂ ಆಕರ್ಷಣೆ ಮಾಡುವುದಕ್ಕಾಗಿಯೇ ಮಾಡಿಕೊಳ್ಳುತ್ತಾರೆ. ಹಿಂದಿನ ಕಾಲದಲ್ಲಿ ಪಾರಸಿ ಸ್ತ್ರೀಯರು ಮುಖಕ್ಕೆ ಕಪ್ಪು ಮುಸುಕನ್ನು ಹಾಕಿಕೊಳ್ಳುತ್ತಿದ್ದರು ಏಕೆಂದರೆ ಯಾರಾದರೂ ನೋಡಿ ಆಕರ್ಷಣೆಯಾಗಬಾರದು. ಇದಕ್ಕೆ ವೈಶ್ಯಾಲಯ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ನೀನೇ ತಾಯಿ-ತಂದೆ ಎಂದು ಹಾಡು ಹೇಳುತ್ತಾರೆ ಆದರೆ ತಂದೆ-ತಾಯಿಯೆಂದು ಯಾರಿಗೆ ಹೇಳುತ್ತಾರೆ? ತಂದೆ-ತಾಯಿ ಯಾರಾಗಿದ್ದಾರೆ? ಎಂಬುದನ್ನೂ ತಿಳಿದಿಲ್ಲ. ತಂದೆ-ತಾಯಿಯು ಅವಶ್ಯವಾಗಿ ಆಸ್ತಿಯನ್ನು ಕೊಟ್ಟಿರಬೇಕಲ್ಲವೆ. ತಂದೆಯಂತೂ ನೀವು ಮಕ್ಕಳಿಗೆ ಸುಖದ ಆಸ್ತಿಯನ್ನು ಕೊಟ್ಟಿದ್ದರು, ಮಕ್ಕಳು ಹೇಳುತ್ತಾರೆ - ಬಾಬಾ, ನಾವಂತೂ ನಿಮ್ಮನ್ನು ಬಿಟ್ಟರೆ ಬೇರೆ ಯಾರಿಂದಲೂ ಕೇಳುವುದಿಲ್ಲ. ಶಿವ ತಂದೆಯ ಮಹಿಮೆಯ ಗಾಯನವಿದೆ ಎಂದು ನೀವು ತಿಳಿದಿದ್ದೀರಿ. ನಾವೇ ಪಾವನರಾಗಿದ್ದೆವು ಈಗ ಪತಿತರಾಗಿದ್ದೇವೆಂದು ಸ್ವಯಂ ಬ್ರಹ್ಮರವರ ಆತ್ಮವು ಹೇಳುತ್ತದೆ. ನಾವು ಬ್ರಹ್ಮಕುಮಾರ-ಕುಮಾರಿಯರು ಸೋ ದೇವಿ-ದೇವತೆಗಳಾಗಿದ್ದವರು ನಂತರ 84 ಜನ್ಮಗಳ ನಂತರ ಅಂತ್ಯದಲ್ಲಿ ಪತಿತರಾಗಿದ್ದೇವೆಂದು ಬ್ರಹ್ಮನ ಮಕ್ಕಳೂ ಸಹ ಹೇಳುತ್ತಾರೆ. ಯಾರು ನಂಬರ್ವನ್ ಪಾವನರಾಗಿದ್ದರೋ ಅವರೇ ಪತಿತರಾಗಿದ್ದಾರೆ. ತಂದೆಯು ಹೇಗೋ ಹಾಗೆಯೇ ಮಕ್ಕಳು ಆಗಿದ್ದಾರೆ. ಶಿವ ತಂದೆಯು ಹೇಳುತ್ತಾರೆ - ನಾನೂ ಸಹ ಇವರ ಅನೇಕ ಜನ್ಮಗಳ ಅಂತ್ಯದಲ್ಲಿ ಬರುತ್ತೇನೆ. ಯಾರು ಮೊದಲ ನಂಬರಿನ ಪೂಜ್ಯ ಲಕ್ಷ್ಮೀ-ನಾರಾಯಣರ ವಂಶದಲ್ಲಿದ್ದರು, ಇದು ಸಂಗಮಯುಗವಾಗಿದೆ. ನೀವು ಕಲಿಯುಗದಲ್ಲಿದ್ದಿರಿ, ಈಗ ಸಂಗಮಯುಗದವರಾಗಿದ್ದೀರಿ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ. ಡ್ರಾಮಾನುಸಾರ ಮಕ್ಕಳು ವೃದ್ಧಿಯನ್ನು ಪಡೆಯುತ್ತಾರೆ. ಈಗ ಮಕ್ಕಳಿಗೆ ಜ್ಞಾನ ದೊರಕುತ್ತದೆ, ನಾವು ದೇವತೆಗಳಾಗಿದ್ದೆವು ನಂತರ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತೇವೆ. ಇಡೀ ಚಕ್ರವನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳನ್ನು ಪಡೆದೆವೆಂಬುದು ಬಹಳ ಸಹಜವಾಗಿದೆ, ಕೆಲವರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದೇ ಇಲ್ಲ. ವಿದ್ಯಾರ್ಥಿಗಳೂ ಸಹ ನಂಬರ್ವಾರಂತೂ ಇರುತ್ತಾರೆ. ಬಲಗಡೆಯಿಂದ ಪ್ರಾರಂಭ ಮಾಡಿ ಫಸ್ಟ್ಕ್ಲಾಸ್, ಸೆಕೆಂಡ್ ಕ್ಲಾಸ್, ಥರ್ಡ್ ಕ್ಲಾಸ... ಸ್ವಯಂ ಮಕ್ಕಳು ನಾವು ಥರ್ಡ್ ಕ್ಲಾಸ್ ಬುದ್ಧಿಯವರೆಂದು ಹೇಳಿಕೊಳ್ಳುತ್ತಾರೆ. ನಾವು ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಮನಸ್ಸಂತೂ ಅನ್ಯರಿಗೆ ಹೇಳಲು ಬಯಸುತ್ತದೆ ಆದರೆ ಹೇಳಲು ಸಾಧ್ಯವಿಲ್ಲ. ಬಾಬಾ ಏನು ಮಾಡುವುದು? ಇದು ತಮ್ಮ ಕರ್ಮಗಳ ಲೆಕ್ಕಾಚಾರವಾಗಿದೆ. ನಾನಂತೂ ನಿಮಗೆ ಕರ್ಮ-ಅಕರ್ಮ-ವಿಕರ್ಮದ ಜ್ಞಾನವನ್ನು ತಿಳಿಸುತ್ತೇನೆ. ಕರ್ಮ ಮಾಡುವುದನ್ನು ನೀವು ಮಕ್ಕಳು ತಿಳಿದಿದ್ದೀರಿ, ಥರ್ಡ್ ಕ್ಲಾಸ್ ಬುದ್ಧಿಯವರು ಈ ಮಾತನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ, ಇದು ರಾವಣ ರಾಜ್ಯವಾಗಿದೆ ಆದರೆ ಇದು ಯಾರಿಗೂ ತಿಳಿದಿಲ್ಲ. ರಾವಣ ರಾಜ್ಯದಲ್ಲಿ ಮನುಷ್ಯರು ವಿಕರ್ಮಗಳನ್ನೇ ಮಾಡುತ್ತಾರೆಂದರೆ ಕೆಳಗಡೆ ಬೀಳುತ್ತಾರೆ. ದುಃಖದ ಪ್ರಪಂಚದಲ್ಲಿಯೇ ಗುರುಗಳನ್ನು ಮಾಡಿಕೊಳ್ಳುತ್ತಾರೆ, ಗುರುಗಳನ್ನು ಮಾಡಿಕೊಂಡರೆ ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತಾರೆ, ಸದ್ಗತಿಯನ್ನು ಕೊಡುತ್ತಾರೆ ಎಂದು ತಿಳಿಯುತ್ತಾರೆ. ಅದು ನಿರ್ವಾಣಧಾಮವಾಗಿದೆ, ವಾಣಿಯಿಂದ ದೂರವಿರುವ ಸ್ಥಾನವಾಗಿದೆ. ಮನುಷ್ಯರು ತಮ್ಮನ್ನು ವಾನಪ್ರಸ್ಥಿಗಳೆಂದು ಹೇಳುತ್ತಾರೆ. ಇದಂತೂ ಹೇಳುವುದಕ್ಕಾಗಿಯೇ ಇದೆ, ವಾನಪ್ರಸ್ಥಿಗಳ ಸಭೆಯೂ ಇರುತ್ತದೆ. ಎಲ್ಲಾ ಆಸ್ತಿಯನ್ನು ಮಕ್ಕಳಿಗೆ ಕೊಟ್ಟು ಗುರುಗಳ ಬಳಿ ಹೋಗಿ ಕುಳಿತು ಬಿಡುತ್ತಾರೆ. ಆಹಾರ-ಪಾನೀಯಗಂತೂ ಮಕ್ಕಳೇ ಅವಶ್ಯವಾಗಿ ಕೊಡುತ್ತಾರಲ್ಲವೆ ಆದರೆ ವಾನಪ್ರಸ್ಥದ ಅರ್ಥವನ್ನು ಯಾರೂ ತಿಳಿದಿಲ್ಲ. ನಾವು ನಿರ್ವಾಣಧಾಮಕ್ಕೆ ಹೋಗಬೇಕೆಂದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಆ ಮನೆಯನ್ನು ಯಾರೂ ತಿಳಿದುಕೊಂಡಿಲ್ಲ. ಜ್ಯೋತಿ ಜ್ಯೋತಿಯಲ್ಲಿ ಸಮಾವೇಶವಾಗುತ್ತದೆ ಎಂದು ತಿಳಿಯುತ್ತಾರೆ. ನಿರ್ವಾಣ ಧಾಮವು ವಾಸ ಮಾಡುವ ಸ್ಥಾನವಾಗಿದೆ. ಹಿಂದೆ 60 ವರ್ಷಗಳ ನಂತರ ಒಂದು ಕಾಯಿದೆಯ ರೀತಿ ವಾನಪ್ರಸ್ಥವನ್ನು ಸ್ವೀಕರಿಸುತ್ತಿದ್ದರು, ಈಗಲೂ ಇದೇರೀತಿ ಮಾಡುತ್ತಾರೆ. ಯಾರೂ ವಾಣಿಯಿಂದ ದೂರ ಹೋಗಲು ಸಾಧ್ಯವಿಲ್ಲವೆಂದು ಈಗ ನೀವು ತಿಳಿಸಬಹುದು. ಪತಿತ-ಪಾವನ ಬಾ, ಬಂದು ನಮ್ಮನ್ನು ಪಾವನ ಮಾಡಿ ಮನೆಗೆ ಕರೆದುಕೊಂಡು ಹೋಗಿ ಎಂದು ನೀವು ಕರೆಯುತ್ತೀರಿ. ಮುಕ್ತಿಧಾಮವು ಆತ್ಮಗಳ ಮನೆಯಾಗಿದೆ. ಸತ್ಯಯುಗದಲ್ಲಿ ಯಾರು ಇರುತ್ತಾರೆ, ಹೇಗೆ ವೃದ್ಧಿಯಾಗುತ್ತದೆ, ಎಂಬುದೂ ಸಹ ನಿಮಗೆ ತಿಳಿಸಲಾಗಿದೆ. ಜನಸಂಖ್ಯೆಯೂ ಸಹ ತಿಳಿದಿಲ್ಲ, ರಾಮ ರಾಜ್ಯದಲ್ಲಿ ಎಷ್ಟು ಜನಸಂಖ್ಯೆಯಿರುತ್ತದೆ, ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆ, ಸ್ವಲ್ಪವೂ ತಿಳಿದಿಲ್ಲ. ಯಾವುದೇ ವಿದ್ವಾನ್, ಆಚಾರ್ಯ, ಪಂಡಿತರು ಯಾರೂ ಈ ಡ್ರಾಮಾದ ಚಕ್ರವನ್ನು ತಿಳಿಸಲು ಸಾಧ್ಯವಿಲ್ಲ. 84 ಲಕ್ಷ ಜನ್ಮಗಳ ಚಕ್ರವು ಹೇಗಾಗಲು ಸಾಧ್ಯ! ಎಷ್ಟೊಂದು ಮಾತುಗಳು ತಪ್ಪಾಗಿವೆ. ಅವಶ್ಯವಾಗಿ ಸೂತ್ರವು ಗಂಟಾಗಿ ಬಿಟ್ಟಿದೆ. ತಂದೆಯು ತಿಳಿಸುವ ಕರ್ಮ-ಅಕರ್ಮ-ವಿಕರ್ಮದ ಪೂರ್ಣ ರಹಸ್ಯವನ್ನು ನೀವೇ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ನಿಮ್ಮ ಕರ್ಮವು ಅಕರ್ಮವಾಗುತ್ತದೆ, ಅಲ್ಲಿ ಯಾವುದೇ ಕೆಟ್ಟ ಕರ್ಮಗಳಾಗುವುದಿಲ್ಲ. ಆದ್ದರಿಂದ ಅಕರ್ಮವಾಗುತ್ತದೆ, ಇಲ್ಲಿ ಮನುಷ್ಯರು ಯಾವುದೇ ಕರ್ಮವನ್ನು ಮಾಡುತ್ತಾರೆಂದರೆ ವಿಕರ್ಮವೇ ಆಗುವುದು. ಇಲ್ಲಿ ಇಡೀ ಪ್ರಪಂಚವು ವಾನಪ್ರಸ್ಥ ಸ್ಥಿತಿಯಲ್ಲಿದೆ, ಈಗ ನಾವು ಎಲ್ಲರೂ ಹಿರಿಯರು-ಕಿರಿಯರು ಎಲ್ಲರಿಗೂ ವಾನಪ್ರಸ್ಥ ಸ್ಥಿತಿಯಾಗಿದೆ. ಎಲ್ಲರೂ ವಾಣಿಯಿಂದ ದೂರ ಹೋಗುವಂತಹವರೇ ಆಗಿದ್ದಾರೆ. ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡು ಎಂದು ಕರೆಯುತ್ತಾರೆ ಆದರೆ ಎಲ್ಲಿಯವರೆಗೆ ಪಾವನ ಪ್ರಪಂಚವು ಆಗುವುದಿಲ್ಲವೋ ಅಲ್ಲಿಯವರೆಗೆ ಈ ಪತಿತ ಪ್ರಪಂಚದಲ್ಲಿ ಪಾವನರು ಇರಲು ಸಾಧ್ಯವಿಲ್ಲ. ಇಲ್ಲಿ ಪತಿತ ಪ್ರಪಂಚವು ಯಾವುದು ಇದೆಯೋ ಅದು ಸಮಾಪ್ತಿಯಾಗಲಿದೆ, ನಾವು ಪುನಃ ಹೊಸ ಪ್ರಪಂಚಕ್ಕೆ ಹೋಗುತ್ತೇವೆ ಎಂದು ತಿಳಿದಿದ್ದೀರಿ. ಹೇಗೆ ಹೋಗುತ್ತೇವೆ ಎಂಬುದು ಪೂರ್ಣ ಜ್ಞಾನವಿದೆ. ಈ ಹೊಸ ಜ್ಞಾನವು ಅಮರಲೋಕ, ಹೊಸ ಪ್ರಪಂಚ ಅಥವಾ ಪಾವನ ಪ್ರಪಂಚಕ್ಕಾಗಿ ಇದೆ. ನೀವು ಈಗ ಸಂಗಮದಲ್ಲಿ ಕುಳಿತಿದ್ದೀರಿ. ಇದನ್ನೂ ತಿಳಿದಿದ್ದೀರಿ - ಬೇರೆಯವರು ಯಾರೇ ಮನುಷ್ಯರಿದ್ದಾರೆ, ಅವರು ಬ್ರಾಹ್ಮಣರಲ್ಲ ಆದರೆ ಅವರೆಲ್ಲರೂ ಕಲಿಯುಗದಲ್ಲಿದ್ದಾರೆ, ನಾವೆಲ್ಲರೂ ಸಂಗಮಯುಗದಲ್ಲಿದ್ದೇವೆ. ಸತ್ಯಯುಗದ ಕಡೆಗೆ ಹೋಗುತ್ತಿದ್ದೇವೆ ಅವಶ್ಯವಾಗಿ ಇದು ಸಂಗಮಯುಗವಾಗಿದೆ. ಅದಂತೂ ಸ್ವರ್ಗವೇ ಆಗಿದೆ. ಅದನ್ನು ಸಂಗಮವೆಂದು ಹೇಳಲು ಸಾಧ್ಯವಿಲ್ಲ. ಸಂಗಮಯುಗವು ಇದಾಗಿದೆ, ಈ ಸಂಗಮಯುಗವು ಎಲ್ಲದಕ್ಕಿಂತ ಚಿಕ್ಕದಾಗಿದೆ, ಇದನ್ನು ಅಧಿಕ ಯುಗವೆಂದು ಹೇಳುತ್ತಾರೆ ಯಾವುದರಲ್ಲಿ ಮನುಷ್ಯರು ಪಾಪಾತ್ಮರಿಂದ ಧರ್ಮಾತ್ಮರಾಗುತ್ತಾರೆ, ಆದ್ದರಿಂದ ಇದನ್ನು ಧರ್ಮಾವು ಯುಗವೆಂದು ಕರೆಯುತ್ತಾರೆ. ಕಲಿಯುಗದಲ್ಲಿ ಎಲ್ಲಾ ಮನುಷ್ಯರು ಅಧರ್ಮಿಗಳಾಗಿದ್ದಾರೆ, ಅಲ್ಲಂತೂ ಎಲ್ಲರೂ ಧರ್ಮಾತ್ಮರೇ ಇರುತ್ತಾರೆ, ಭಕ್ತಿಮಾರ್ಗದ ಪ್ರಭಾವವು ಎಷ್ಟೊಂದು ಇದೆ. ಕಲ್ಲಿನ ಮೂರ್ತಿಗಳನ್ನು ಮಾಡಿ ನೋಡಿ ಖುಷಿಪಡುತ್ತಾರೆ, ಇದು ಕಲ್ಲಿನ ಪೂಜೆಯಾಗಿದೆ. ಶಿವನ ಮಂದಿರಕ್ಕೆ ಬಹಳ ದೂರ-ದೂರದಿಂದ ಹೋಗಿ ಪೂಜೆ ಮಾಡುತ್ತಾರೆ. ಶಿವನ ಚಿತ್ರವನ್ನೂ ಸಹ ಮನೆಯಲ್ಲಿಯೇ ಇಡಬಹುದು ಅಂದಾಗ ಎಷ್ಟೊಂದು ದೂರ ಏಕೆ ಅಲೆಯಬೇಕು? ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ನಿಮ್ಮ ಕಣ್ಣು ಈಗ ತೆರೆದಿದೆ. ಬುದ್ಧಿಯ ದ್ವಾರ ತೆರೆದಿದೆ. ತಂದೆಯು ಜ್ಞಾನವನ್ನು ತಿಳಿಸಿದ್ದಾರೆ, ಪರಮಪಿತ ಪರಮಾತ್ಮನು ಈ ಸೃಷ್ಟಿಯ ಬೀಜ ರೂಪ, ಜ್ಞಾನ ಸಾಗರ, ನಾಲೆಡ್ಜ್ಫುಲ್ ಆಗಿದ್ದಾರೆ. ಆತ್ಮವೂ ಸಹ ಅದೇ ಜ್ಞಾನವನ್ನು ಧಾರಣೆ ಮಾಡುತ್ತದೆ. ಆತ್ಮವೂ ಸಹ ಪ್ರೆಸಿಡೆಂಟ್ ಇತ್ಯಾದಿಯಾಗುತ್ತದೆ, ಮನುಷ್ಯನು ದೇಹಾಭಿಮಾನಿಯಾಗುವ ಕಾರಣ ದೇಹದ ಮಹಿಮೆಯನ್ನೇ ಮಾಡುತ್ತಾ ಇರುತ್ತಾನೆ. ಆತ್ಮವೇ ಎಲ್ಲವನ್ನೂ ಮಾಡುತ್ತದೆ ಎಂಬುದು ನೀವೀಗ ತಿಳಿದಿದ್ದೀರಿ. ನೀವು ಆತ್ಮರು 84 ಜನ್ಮಗಳ ಚಕ್ರವನ್ನು ಸುತ್ತಾಡಿ ಅವಶ್ಯವಾಗಿ ದುರ್ಗತಿಯನ್ನು ಪಡೆದಿದ್ದೀರಿ. ಈಗ ನಾವಾತ್ಮರು ತಂದೆಯನ್ನು ತಿಳಿದುಕೊಂಡಿದ್ದೇವೆ, ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಆತ್ಮವು ಶರೀರ ಧಾರಣೆ ಮಾಡಲೇಬೇಕಾಗಿದೆ. ಶರೀರದ ಹೊರತು ಆತ್ಮಗಳು ಕೇಳುವುದು, ಮಾತನಾಡುವುದು ಹೇಗೆ ಸಾಧ್ಯ? ನಾನು ನಿರಾಕಾರನಾಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ನಾನು ಶರೀರದ ಆಧಾರವನ್ನು ತೆಗೆದುಕೊಳ್ಳುತ್ತೇನೆ, ಶಿವ ತಂದೆಯು ಈ ಬ್ರಹ್ಮಾರವರ ಶರೀರದ ಮೂಲಕ ನಮಗೆ ತಿಳಿಸುತ್ತಾರೆಂದು ನೀವು ತಿಳಿದಿದ್ದೀರಿ. ಈ ಮಾತುಗಳನ್ನು ಬ್ರಹ್ಮಾಕುಮಾರ-ಕುಮಾರಿಯರಾದ ನೀವೇ ತಿಳಿದಿದ್ದೀರಿ. ನಿಮಗೆ ಈಗ ಜ್ಞಾನವು ಸಿಗುತ್ತಿದೆ, ಬ್ರಹ್ಮನ ಮೂಲಕ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ, ಆ ತಂದೆಯೇ ರಾಜಯೋಗವನ್ನು ಕಲಿಸುತ್ತಿದ್ದಾರೆ ಇದರಲ್ಲಿ ತಬ್ಬಿಬ್ಬಾಗುವ ಮಾತೇನೂ ಇಲ್ಲ. ಶಿವ ತಂದೆಯು ನಮಗೆ ತಿಳಿಸುತ್ತಿದ್ದಾರೆ ಮತ್ತೆ ಅನ್ಯರಿಗೆ ನಾವು ತಿಳಿಸುತ್ತಿದ್ದೇವೆ. ನಮಗೆ ತಿಳಿಸುವವರು ಒಬ್ಬರೇ ಶಿವ ತಂದೆಯಾಗಿದ್ದಾರೆ. ನಾವೀಗ ಪತಿತರಿಂದ ಪಾವನರಾಗುತ್ತಿದ್ದೇವೆಂದು ನೀವೀಗ ಹೇಳುತ್ತೀರಿ, ಇದು ಪತಿತ ಪ್ರಪಂಚವಾಗಿದೆ, ರಾವಣ ರಾಜ್ಯವಲ್ಲವೆ ಎಂದು ತಂದೆಯು ತಿಳಿಸುತ್ತಾರೆ. ರಾವಣನು ಪಾಪಾತ್ಮರನ್ನಾಗಿ ಮಾಡುತ್ತಾನೆ, ಇದು ಬೇರೆ ಯಾರಿಗೂ ತಿಳಿದಿಲ್ಲ. ಭಲೆ ರಾವಣನ ಗೊಂಬೆಯನ್ನು ಮಾಡಿ ಸುಡುತ್ತಾರೆ ಆದರೆ ಸ್ವಲ್ಪವೂ ತಿಳಿದಿಲ್ಲ. ಸೀತೆಯನ್ನು ರಾವಣನು ಅಪಹರಿಸಿದನು, ಇದು ಮಾಡಿದನು, ಅದು ಮಾಡಿದನು... ಎಂದು ಎಷ್ಟೊಂದು ಕಥೆಗಳನ್ನು ಬರೆದಿದ್ದಾರೆ. ಕುಳಿತು ಕೇಳಿ ಅಳುತ್ತಾರೆ, ಎಲ್ಲವೂ ದಂತ ಕಥೆಗಳಾಗಿವೆ. ತಂದೆಯು ನಮ್ಮನ್ನು ವಿಕರ್ಮಾಜೀತರನ್ನಾಗಿ ಮಾಡಲು ತಿಳಿಸುತ್ತಾರೆ. ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಬುದ್ಧಿಯನ್ನು ಎಲ್ಲಿಯೂ ಇಡಬಾರದು, ಶಿವ ತಂದೆಯು ನಮಗೆ ತನ್ನ ಪರಿಚಯವನ್ನು ಕೊಟ್ಟಿದ್ದಾರೆ, ಪತಿತ-ಪಾವನ ತಂದೆಯು ಬಂದು ತನ್ನ ಪರಿಚಯ ಕೊಡುತ್ತಾರೆ. ಈಗ ನೀವು ಎಷ್ಟು ಒಳ್ಳೆಯ ಮಧುರ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ತಿಳಿದಿದ್ದೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿದು ಶ್ರೇಷ್ಠ ಕರ್ಮವನ್ನು ಮಾಡಬೇಕು, ಜ್ಞಾನ ದಾನ ಮಾಡಿ ಧರ್ಮಾತ್ಮರಾಗಬೇಕು. |
2. ಇದು ವಾನಪ್ರಸ್ಥ ಸ್ಥಿತಿಯಾಗಿದೆ. ಈ ಅಂತಿಮ ಗಳಿಗೆಯಲ್ಲಿ ಪಾವನರಾಗಿ, ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ. ಪಾವನರಾಗುವ ಸಂದೇಶವನ್ನು ಎಲ್ಲರಿಗೂ ಕೊಡಬೇಕು. |
ಸಾಹಸದ ಎರಡನೇ ಹೆಜ್ಜೆ - "ಸಹನಶೀಲತೆ" (ಬ್ರಹ್ಮಾ ತಂದೆಯ ಜೀವನ ಚರಿತ್ರೆ) |
ಇಂದು ಆಲ್ಮೈಟಿ ಅಥಾರಿಟಿ ತಂದೆಯು ತನ್ನ ಮೊದಲ ಶ್ರೇಷ್ಠ ರಚನೆಯನ್ನು ನೋಡುತ್ತಿದ್ದಾರೆ. ಮೊದಲ ರಚನೆಯು ಬ್ರಾಹ್ಮಣರ ರಚನೆಯಾಗಿದೆ. ಆ ಮೊದಲ ರಚನೆಯಲ್ಲಿಯೂ ಮೊದಲ ನಂಬರಿನವರೆಂದು ಬ್ರಹ್ಮರವರಿಗೆ ಹೇಳುತ್ತಾರೆ. ಮೊದಲ ರಚನೆಯ ಮೊದಲ ನಂಬರಿನವರಾಗಿರುವ ಕಾರಣ ಬ್ರಹ್ಮರವರಿಗೆ ಆದಿ ದೇವನೆಂದು ಹೇಳಲಾಗುತ್ತದೆ. ಇದೇ ಹೆಸರಿನಿಂದ ಈ ಅಬು ಪರ್ವತದಲ್ಲಿ ನೆನಪಾರ್ಥವೂ ಸಹ "ಆದಿ ದೇವ" ಎಂಬ ಹೆಸರಿನಿಂದಲೇ ಇದೆ. ಆದಿ ದೇವ ಅರ್ಥಾತ್ ಆದಿ ರಚಯಿತನೆಂದು ಹೇಳಲಾಗುತ್ತದೆ ಮತ್ತು ಜೊತೆ ಜೊತೆಗೆ ಆದಿ ದೇವ ಅರ್ಥಾತ್ ಹೊಸ ಸೃಷ್ಟಿಯ ಆದಿಯ ಮೊದಲ ನಂಬರಿನ ದೇವನಾಗಿದ್ದಾರೆ. ಮೊದಲ ದೇವಾತ್ಮ ಶ್ರೀಕೃಷ್ಣನ ರೂಪದಲ್ಲಿ ಬ್ರಹ್ಮರವರೇ ಆಗುತ್ತಾರೆ ಆದ್ದರಿಂದ ಹೊಸ ಸೃಷ್ಟಿಯ ಆದಿಯ ಆದಿ ದೇವನೆಂದು ಕರೆಯಲಾಗುತ್ತದೆ. ಸಂಗಮ ಯುಗದಲ್ಲಿಯೂ ಆದಿ ರಚನೆಯ ಮೊದಲ ನಂಬರ್ ಅರ್ಥಾತ್ ಆದಿ ದೇವನೆಂದಾದರೂ ಹೇಳಿ ಅಥವಾ ಬ್ರಾಹ್ಮಣ ಆತ್ಮರ ರಚಯಿತ ಬ್ರಹ್ಮರವರೆಂದಾದರೂ ಹೇಳಿ ಅಂದಾಗ ಸಂಗಮದಲ್ಲಿ ಮತ್ತು ಸೃಷ್ಟಿಯ ಆದಿಯಲ್ಲಿ ಎರಡೂ ಸಮಯಕ್ಕೆ ಆದಿಯಾಗಿದ್ದಾರೆ ಆದ್ದರಿಂದ ಆದಿ ದೇವನೆಂದು ಕರೆಯಲಾಗುವುದು. |
ಬ್ರಹ್ಮರವರೇ ಆದಿ ಕರ್ಮಾತೀತ ಫರಿಶ್ತೆಯಾಗುತ್ತಾರೆ. ಬ್ರಹ್ಮಾ ಸೋ ಫರಿಶ್ತಾ ಮತ್ತು ಫರಿಶ್ತಾ ಸೋ ದೇವತಾ ಎಲ್ಲದರಲ್ಲಿ ನಂಬರ್ವನ್, ಈ ರೀತಿ ನಂಬರ್ವನ್ ಏಕಾದರು? ಯಾವ ವಿಧಿಯಿಂದ ನಂಬರ್ವನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು? ತಾವೆಲ್ಲಾ ಬ್ರಾಹ್ಮಣ ಆತ್ಮರು ಬ್ರಹ್ಮರವರನ್ನೇ ಫಾಲೋ ಮಾಡಬೇಕಾಗಿದೆ. ಏನನ್ನು ಫಾಲೋ ಮಾಡಬೇಕು? ಇದರ ಮೊದಲ ಹೆಜ್ಜೆ - "ಸಮರ್ಪಣತೆ" ಯಾಗಿದೆ. ಇದನ್ನಂತೂ ಮೊದಲೇ ತಿಳಿಸಿದ್ದೇವೆ. ಮೊದಲ ಹೆಜ್ಜೆಯಲ್ಲಿಯೂ ಎಲ್ಲಾ ರೂಪದಿಂದ ಸಮರ್ಪಣೆಯಾಗಿ ತೋರಿಸಿದರು. ಎರಡನೇ ಹೆಜ್ಜೆಯಾಗಿದೆ - "ಸಹನಶೀಲತೆ". ಯಾವಾಗ ಸಮರ್ಪಣೆ ಆದರೆಂದರೆ ತಂದೆಯಿಂದ ಸರ್ವಶ್ರೇಷ್ಠ ಆಸ್ತಿಯಂತೂ ಸಿಕ್ಕಿತು. ಆದರೆ ಪ್ರಪಂಚದವರಿಂದ ಏನು ಸಿಕ್ಕಿತು? ಎಲ್ಲರಿಗಿಂತ ಹೆಚ್ಚು ಗ್ಲಾನಿಯ ಮಳೆಯು ಯಾರ ಮೇಲೆ ಸುರಿಯಿತು? ಭಲೆ ತಾವಾತ್ಮರಿಗೂ ನಿಂದನೆಯಾಯಿತು ಅಥವಾ ಅತ್ಯಾಚಾರಗಳಾಯಿತು. ಆದರೆ ಹೆಚ್ಚಿನ ಕ್ರೋಧ ಅಥವಾ ಕೋಪವು ಬ್ರಹ್ಮರವರಿಗೇ ಸಿಗುತ್ತಿತ್ತು, ಲೌಕಿಕ ಜೀವನದಲ್ಲಿ ಯಾರು ಎಂದೂ ಒಂದು ಅಪ ಶಬ್ಧವನ್ನು ಕೇಳಿರಲಿಲ್ಲ ಆದರೆ ಬ್ರಹ್ಮನಾದ ಮೇಲೆ ಅಪ ಶಬ್ಧಗಳನ್ನು ಕೇಳುವುದರಲ್ಲಿಯೂ ಇವರು ನಂಬರ್ವನ್ ಇದ್ದರು. ಎಲ್ಲರಿಗಿಂತ ಹೆಚ್ಚು ಸರ್ವರ ಸ್ನೇಹಿ ಜೀವನವನ್ನು ವ್ಯತೀತ ಮಾಡಿದರು ಆದರೆ ಲೌಕಿಕ ಜೀವನದಲ್ಲಿ ಎಷ್ಟು ಸರ್ವರಿಗೆ ಸ್ನೇಹಿಯಾಗಿದ್ದರೋ ಅಷ್ಟೇ ಅಲೌಕಿಕ ಜೀವನದಲ್ಲಿ ಸರ್ವರಿಗೆ ಶತ್ರುವಿನ ರೂಪದಲ್ಲಾದರು. ಮಕ್ಕಳ ಮೇಲೆ ಅತ್ಯಾಚಾರವಾಯಿತೆಂದರೆ ಸ್ವತಹ ಅದು ಪರೋಕ್ಷವಾಗಿ ತಂದೆಯ ಮೇಲೆ ಅತ್ಯಾಚಾರವಾಯಿತು ಆದರೆ ಸಹನಶೀಲತೆಯ ಗುಣದಿಂದ, ಸಹನಶೀಲತೆಯ ಧಾರಣೆಯಿಂದ ಮುಗುಳ್ನಗುತ್ತಾ ಇದ್ದರು, ಎಂದೂ ಬಾಡಿ ಹೋಗಲಿಲ್ಲ. |
ಯಾರಾದರೂ ಪ್ರಶಂಸೆ ಮಾಡಿದಾಗ ಮುಗುಳ್ನಗುವುದು - ಇದಕ್ಕೆ ಸಹನಶೀಲತೆ ಎಂದು ಹೇಳುವುದಿಲ್ಲ. ಆದರೆ ಶತ್ರುವಾಗಿ ಕ್ರೋಧಿತರಾಗಿ ಅಪ ಶಬ್ಧಗಳ ಮಳೆ ಸುರಿಸುವ ಸಮಯದಲ್ಲಿಯೂ ಸದಾ ಮುಗುಳ್ನಗುತ್ತಿರುವುದು ಸಂಕಲ್ಪ ಮಾತ್ರದಲ್ಲಿಯೂ ಬೇಸರವಾಗುವ ಚಿಹ್ನೆಗಳು ಚಹರೆಯಲ್ಲಿ ಕಂಡು ಬರಬಾರದು. ಅಂತಹವರಿಗೆ ಸಹನಶೀಲರೆಂದು ಹೇಳಲಾಗುತ್ತದೆ. ಶತ್ರುವನ್ನೂ ಸಹ ದಯಾ ಭಾವನೆಯಿಂದ ನೋಡುವುದು, ಮಾತನಾಡುವುದು, ಸಂಪರ್ಕದಲ್ಲಿ ಬರುವುದಕ್ಕೆ ಸಹನಶೀಲತೆಯೆಂದು ಹೇಳುತ್ತಾರೆ. ಸ್ಥಾಪನಾ ಕಾರ್ಯದಲ್ಲಿ, ಸೇವಾಕಾರ್ಯದಲ್ಲಿ ಕೆಲವೊಮ್ಮೆ ಚಿಕ್ಕ-ದೊಡ್ಡ ಬಿರುಗಾಳಿಗಳು ಬಂದವು. ಹೇಗೆ ನೆನಪಾರ್ಥ ಶಾಸ್ತ್ರಗಳಲ್ಲಿ ಮಹಾವೀರ ಹನುಮಂತನಿಗಾಗಿ ತೋರಿಸುತ್ತಾರೆ. ಅಷ್ಟು ದೊಡ್ಡ ಪರ್ವತವನ್ನೂ ಸಹ ಅಂಗೈಯಲ್ಲಿ ಒಂದು ಚೆಂಡಿನ ಸಮಾನ ತೆಗೆದುಕೊಂಡು ಬಂದನು ಎಂದು. ಹಾಗೆಯೇ ಎಷ್ಟೇ ದೊಡ್ಡ ಪರ್ವತದಂತಹ ಸಮಸ್ಯೆಯಿರಲಿ, ಬಿರುಗಾಳಿಯಿರಲಿ, ವಿಘ್ನವಿರಲಿ ಆದರೆ ಪರ್ವತ ಅರ್ಥಾತ್ ದೊಡ್ಡ ಮಾತನ್ನೂ ಚಿಕ್ಕ ಆಟದ ಗೊಂಬೆಯನ್ನಾಗಿ ಮಾಡಿ ಆಟದ ರೀತಿಯಲ್ಲಿ ಸದಾ ಪಾರು ಮಾಡಿದರು ಅಥವಾ ದೊಡ್ಡ ಬಾರಿ ಮಾತನ್ನೂ ಸಹ ಸದಾ ಹಗುರ ಮಾಡಿ ಸ್ವಯಂ ಕೂಡ ಹಗುರವಾಗಿದ್ದರು ಮತ್ತು ಅನ್ಯರನ್ನೂ ಹಗುರರನ್ನಾಗಿ ಮಾಡಿದರು - ಇದಕ್ಕೇ ಸಹನಶೀಲತೆ ಎಂದು ಹೇಳಲಾಗುತ್ತದೆ. ಚಿಕ್ಕ ಕಲ್ಲನ್ನು ಪರ್ವತ ಮಾಡುವುದಲ್ಲ ಆದರೆ ಪರ್ವತವನ್ನೂ ಚೆಂಡಿನ ಸಮಾನ ಮಾಡಿಕೊಂಡರು. ವಿಸ್ತಾರವನ್ನು ಸಾರದಲ್ಲಿ ತಂದರು - ಇದು ಸಹನಶೀಲತೆಯಾಗಿದೆ. ವಿಘ್ನಗಳನ್ನು, ಸಮಸ್ಯೆಗಳನ್ನು ತನ್ನ ಮನಸ್ಸಿನಲ್ಲಿ ಹಾಗೂ ಅನ್ಯರ ಮುಂದೆ ವಿಸ್ತಾರ ಮಾಡುವುದು ಎಂದರೆ ಅದನ್ನು ಪರ್ವತವನ್ನಾಗಿ ಮಾಡುವುದಾಗಿದೆ ಆದರೆ ಇವರು ವಿಸ್ತಾರದಲ್ಲಿ ಹೋಗದೇ "ನತಿಂಗ್ ನ್ಯೂ" ಎಂಬ ಫುಲ್ಸ್ಟಾಪ್ನಿಂದ ಬಿಂದುವನ್ನಿಟ್ಟು ಬಿಂದುವಾಗಿ ಮುಂದುವರೆದರು. ಇದಕ್ಕೆ ವಿಸ್ತಾರವನ್ನು ಸಾರದಲ್ಲಿ ತರುವುದೆಂದು ಹೇಳುತ್ತಾರೆ. ಸಹನಶೀಲ ಶ್ರೇಷ್ಠ ಆತ್ಮನು ಸದಾ ಜ್ಞಾನ-ಯೋಗದ ಸಾರದಲ್ಲಿ ಸ್ಥಿತರಾಗಿ ಇಂತಹ ವಿಸ್ತಾರವನ್ನು, ಸಮಸ್ಯೆಯನ್ನು, ವಿಘ್ನಗಳನ್ನೂ ಸಹ ಸಾರದಲ್ಲಿ ತರುತ್ತಾರೆ. ಹೇಗೆ ಇದನ್ನು ಬ್ರಹ್ಮಾ ತಂದೆಯು ಮಾಡಿದರು. ಹೇಗೆ ಉದ್ದವಾದ ರಸ್ತೆಯನ್ನು ಪಾರು ಮಾಡುವುದರಲ್ಲಿ ಸಮಯ, ಶಕ್ತಿಗಳು ಸಮಾಪ್ತಿಯಾಗುತ್ತವೆ ಅರ್ಥಾತ್ ಹೆಚ್ಚು ಉಪಯೋಗಿಸಬೇಕಾಗುತ್ತದೆ. ಹಾಗೆಯೇ ವಿಸ್ತಾರವು ಬಹಳ ಉದ್ದನೆಯ ರಸ್ತೆಯನ್ನು ಪಾರು ಮಾಡುವುದಾಗಿದೆ ಮತ್ತು ಸಾರವು ಕಾಲು ದಾರಿಯನ್ನು ಪಾರು ಮಾಡುವುದಾಗಿದೆ. ಎರಡನ್ನೂ ಪಾರು ಮಾಡುತ್ತಾರೆ ಆದರೆ ಕಾಲು ದಾರಿಯನ್ನು ಹಿಡಿಯುವವರು ಸಮಯ ಮತ್ತು ಶಕ್ತಿಗಳ ಉಳಿತಾಯವಾಗುವ ಕಾರಣ ನಿರಾಶರಾಗುವುದಿಲ್ಲ, ವ್ಯಾಕುಲರಾಗುವುದಿಲ್ಲ, ಸದಾ ಮೋಜಿನಲ್ಲಿ ಮುಗುಳ್ನಗುತ್ತಾ ಪಾರು ಮಾಡುತ್ತಾರೆ. ಇದಕ್ಕೆ ಸಹನಶೀಲತೆ ಎಂದು ಹೇಳಲಾಗುತ್ತದೆ. |
ಸಹನಶೀಲತೆಯ ಶಕ್ತಿಯುಳ್ಳವರು ಈ ರೀತಿಯೂ ಆಗುತ್ತದೆಯೇ ಎಂದು ಎಂದಿಗೂ ಗಾಬರಿಯಾಗುವುದಿಲ್ಲ. ಸದಾ ಸಂಪನ್ನರಾಗಿರುವ ಕಾರಣ ಜ್ಞಾನದ ನೆನಪಿನ ಆಳದಲ್ಲಿ ಹೋಗುತ್ತಾರೆ. ಗಾಬರಿಯಾಗುವವರು ಎಂದೂ ಗಹರಾಯಿ (ಆಳ) ಯಲ್ಲಿ ಹೋಗಲು ಸಾಧ್ಯವಿಲ್ಲ. ಸಾರ ರೂಪದಲ್ಲಿ ತರುವವರು ಸದಾ ಬರ್ಪೂರ್ ಆಗಿರುತ್ತಾರೆ. ಆದ್ದರಿಂದ ಬರ್ಪೂರ್ ಸಂಪನ್ನ ವಸ್ತು ಗಂಭೀರವಾಗಿರುತ್ತದೆ, ವಿಸ್ತಾರದಲ್ಲಿರುವುದು ಖಾಲಿ-ಖಾಲಿಯಾಗಿರುತ್ತದೆ ಆದ್ದರಿಂದ ಖಾಲಿ ವಸ್ತುವು ಸದಾ ತುಳುಕುತ್ತಿರುತ್ತದೆ. ಆದ್ದರಿಂದ ವಿಸ್ತಾರದಲ್ಲಿ ಬರುವವರು ಇದೇಕೆ ಅದೇಕೆ, ಹೀಗಲ್ಲ ಹಾಗೆ, ಹೀಗಾಗಬಾರದು.... ಇಂತಹ ಸಂಕಲ್ಪಗಳಲ್ಲಿಯೂ ಬರುತ್ತಾರೆ ಮತ್ತು ವಾಣಿಯಲ್ಲಿಯೂ ಎಲ್ಲರ ಮುಂದೆ ಬರುತ್ತಾರೆ ಮತ್ತು ಯಾರು ಹದ್ದಿನಿಂದ ಹೆಚ್ಚು ತುಳುಕುವರೋ ಅವರು ಏನಾಗುವರು? ಸುಸ್ತಾಗಿ ಬಿಡುವರು. ತಾವೇ ತುಳುಕುವರು, ತಾವೇ ಜಿಗಿಯುವರು ಮತ್ತು ತಾವೇ ಸುಸ್ತಾಗುವರು. ಸಹನಶೀಲರು ಇವೆಲ್ಲಾ ಮಾತುಗಳಿಂದ ಪಾರಾಗುತ್ತಾರೆ ಆದ್ದರಿಂದ ಸದಾ ಮೋಜಿನಲ್ಲಿರುತ್ತಾರೆ. ತುಳುಕುವುದಿಲ್ಲ ಅರ್ಥಾತ್ ಜಿಗಿಯುವುದಿಲ್ಲ, ಹಾರುತ್ತಾರೆ. |
ಎರಡನೇ ಹೆಜ್ಜೆ - "ಸಹನ ಶೀಲತೆ" ಇದನ್ನು ಬ್ರಹ್ಮಾ ತಂದೆಯು ನಡೆದು ತೋರಿಸಿದರು. ಸದಾ ಅಚಲ-ಅಟಲ ಸಹಜ ಸ್ವರೂಪದಲ್ಲಿ ಮೋಜಿನಲ್ಲಿದ್ದರು, ಪರಿಶ್ರಮದಿಂದಲ್ಲ. ಇದನ್ನು 14 ವರ್ಷ ತಪಸ್ಸು ಮಾಡಿದ ಮಕ್ಕಳು ಅನುಭವ ಮಾಡಿದಿರಿ. 14 ವರ್ಷಗಳೆನಿಸಿತೇ ಅಥವಾ ಕೆಲವು ಘಳಿಗೆಗಳು ಎನಿಸಿತೆ? ಮೋಜಿನಲ್ಲಿದ್ದಿರೋ ಅಥವಾ ಪರಿಶ್ರಮವೆನಿಸಿತೋ? ಹೇಗೆ ಸ್ಥೂಲ ಪರಿಶ್ರಮದ ಪರೀಕ್ಷೆಯನ್ನೂ ಸಹ ತಂದೆಯು ತೆಗೆದುಕೊಂಡರು. ಬಹಳ ಸುಖವಾಗಿ ಬೆಳೆಯುವವರೆಲ್ಲಿ ಮತ್ತು ಬೆರಣಿಯನ್ನು ತಟ್ಟುವುದೆಲ್ಲಿ! ಮೆಕಾನಿಕ್ ಕೆಲಸವನ್ನೂ ಕಲಿಸಿದರು. ಚಪ್ಪಲಿಯನ್ನೂ ಹೊಲಿಸಿದರು, ಮಾಲಿಯನ್ನಾಗಿಯೂ ಮಾಡಿದರು ಆದರೆ ಪರಿಶ್ರಮವೆನಿಸಿತೆ ಅಥವಾ ಮೋಜಿನ ಅನುಭವವಾಯಿತೆ? ಎಲ್ಲವನ್ನೂ ಪಾರು ಮಾಡಿದರು ಆದರೆ ಸದಾ ಮೋಜಿನ ಜೀವನದ ಅನುಭವವಿತ್ತು. ಯಾರು ತಬ್ಬಿಬ್ಬಾದರೋ ಅವರು ಹೊರಟು ಹೋದರು ಮತ್ತು ಯಾರು ಮೋಜಿನಲ್ಲಿದ್ದರೋ ಅವರು ಅನೇಕರಿಗೆ ಮೋಜಿನ ಜೀವನದ ಅನುಭವ ಮಾಡಿಸುತ್ತಿದ್ದಾರೆ. ಈಗಲೂ ಒಂದುವೇಳೆ ಅದೇ 14 ವರ್ಷದ ಕಾರ್ಯಕ್ರಮವನ್ನು ಪುನರಾವರ್ತಿಸಿದರೆ ಇಷ್ಟವಿದೆಯಲ್ಲವೆ. ಈಗಂತೂ ಸೇವಾಕೇಂದ್ರದಲ್ಲಿ ಒಂದುವೇಳೆ ಚಿಕ್ಕ ಸ್ಥೂಲ ಕೆಲಸವನ್ನು ಮಾಡಬೇಕಾದರೂ ಸಹ ನಾವು ಈ ಕೆಲಸಕ್ಕಾಗಿ ಇದ್ದೇವೆಯೇ? ಇದಕ್ಕಾಗಿಯೇ ಸನ್ಯಾಸ ಮಾಡಿದೆವೇ? ಎಂದು ಯೋಚಿಸುತ್ತಾರೆ. ಮೋಜಿನಿಂದ ಜೀವನವನ್ನು ಜೀವಿಸುವುದಕ್ಕೇ ಬ್ರಾಹ್ಮಣ ಜೀವನವೆಂದು ಹೇಳಲಾಗುತ್ತದೆ. ಭಲೆ ಸ್ಥೂಲ ಸಾಧಾರಣ ಕೆಲಸವೇ ಆಗಿರಲಿ ಆದರೆ ಸಾವಿರಾರು ಜನರ ಸಭೆಯ ಮಧ್ಯದಲ್ಲಿ ಸ್ಟೇಜಿನ ಮೇಲೆ ಭಾಷಣ ಮಾಡುವುದಿರಲಿ, ಎರಡನ್ನೂ ಮೋಜಿನಿಂದ ಮಾಡಬೇಕು. ಇದಕ್ಕೇ ಮೋಜಿನ ಜೀವನವನ್ನು ಜೀವಿಸುವುದೆಂದು ಹೇಳಲಾಗುತ್ತದೆ. ತಬ್ಬಿಬ್ಬಾಗಬೇಡಿ - ನಾವಂತೂ ಸಮರ್ಪಣೆಯಾಗುವುದು ಎಂದರೆ ಇದೆಲ್ಲವನ್ನೂ ಮಾಡಬೇಕಾಗುವುದೆಂದು ತಿಳಿದುಕೊಂಡಿರಲಿಲ್ಲ. ನಾನು ಶಿಕ್ಷಕಿಯಾಗಿ ಬಂದಿದ್ದೇನೆ, ಸ್ಥೂಲ ಕೆಲಸ ಮಾಡುವುದಕ್ಕಾಗಿ ಸನ್ಯಾಸ ಮಾಡಲಿಲ್ಲ. ಬ್ರಹ್ಮಾಕುಮಾರಿ ಜೀವನವು ಹೀಗಿರುತ್ತದೆಯೇ? ಇದಕ್ಕೆ ತಬ್ಬಿಬ್ಬಾಗುವ ಜೀವನವೆಂದು ಹೇಳಲಾಗುತ್ತದೆ. |
ಬ್ರಹ್ಮಾಕುಮಾರಿಯಾಗುವುದು ಅರ್ಥಾತ್ ಹೃದಯದ ಮೋಜಿನಲ್ಲಿರುವುದು, ಸ್ಥೂಲ ಮೋಜಿನಲ್ಲಿರುವುದಲ್ಲ. ಹೃದಯದ ಮೋಜಿನಿಂದ ಯಾವುದೇ ಪರಿಸ್ಥಿತಿಯಲ್ಲಿ, ಯಾವುದೇ ಕಾರ್ಯದಲ್ಲಿ ತಬ್ಬಿಬ್ಬಾಗುವುದನ್ನೂ ಸಹ ಮೋಜಿನಲ್ಲಿ ಪರಿವರ್ತಿಸಿಕೊಳ್ಳುತ್ತೀರಿ ಮತ್ತು ಹೃದಯದಿಂದ ತಬ್ಬಿಬ್ಬಾಗುವವರು ಶ್ರೇಷ್ಠ ಸಾಧನಗಳಿದ್ದರೂ, ಸ್ಪಷ್ಟ ಮಾತಿದ್ದರೂ ಸಹ ಸದಾ ಸ್ವಯಂ ತಬ್ಬಿಬ್ಬಾಗಿರುವ ಕಾರಣ ಸ್ಪಷ್ಟ ಮಾತನ್ನೂ ಸಹ ತಬ್ಬಿಬ್ಬು ಮಾಡಿಬಿಡುವರು. ಒಳ್ಳೆಯ ಸಾಧನಗಳಿದ್ದರೂ ಸಹ ಸಾಧನಗಳಿಂದ ಆನಂದವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇದು ಹೇಗಾಗುವುದು, ಹೀಗಲ್ಲ ಹಾಗೆ ಆಗುವುದು. ಇದರಲ್ಲಿ ತಾನೂ ತಬ್ಬಿಬ್ಬಾಗುವರು, ಬೇರೆಯವರನ್ನೂ ತಬ್ಬಿಬ್ಬು ಮಾಡುತ್ತಾರೆ. ಹೇಗೆ ಹೇಳುತ್ತಾರಲ್ಲವೆ - "ಸೂತ್ರವು ಗಂಟಾದರೆ ಅದನ್ನು ಬಿಡಿಸುವುದು ಬಹಳ ಕಷ್ಟ" ಒಳ್ಳೆಯ ಮಾತಿನಲ್ಲಿಯೂ ತಬ್ಬಿಬ್ಬಾಗುವರು ಮತ್ತು ಗಾಬರಿಯಾಗುವ ಮಾತಿನಲ್ಲಿಯೂ ತಬ್ಬಿಬ್ಬಾಗುವರು ಏಕೆಂದರೆ ಅವರ ವೃತ್ತಿಯೂ ತಬ್ಬಿಬ್ಬಾಗಿದೆ, ಮನಸ್ಸು ಗೊಂದಲವಾಗಿದೆ ಆದ್ದರಿಂದ ವೃತ್ತಿಯ ಪ್ರಭಾವವು ಸ್ವತಹ ದೃಷ್ಟಿಯ ಮೇಲೆ ಮತ್ತು ದೃಷ್ಟಿಯ ಕಾರಣ ಸೃಷ್ಟಿಯೂ ಸಹ ಗೊಂದಲದಂತೆ ಕಾಣುವುದು. ಬ್ರಹ್ಮಾಕುಮಾರಿ ಜೀವನ ಅರ್ಥಾತ್ ಬ್ರಹ್ಮಾ ತಂದೆಯ ಸಮಾನ ಮೋಜಿನ ಜೀವನ ಆದರೆ ಇದಕ್ಕೆ ಆಧಾರವಾಗಿದೆ - ಸಹನಶೀಲತೆ ಅಂದಾಗ ಸಹನಶೀಲತೆಗೆ ಇಷ್ಟೊಂದು ವಿಶೇಷತೆಯಿದೆ. ಇದೇ ವಿಶೇಷತೆಯ ಕಾರಣ ಬ್ರಹ್ಮಾ ತಂದೆಯು ಸದಾ ಅಚಲ-ಅಟಲವಾಗಿದ್ದರು. |
ಎರಡು ಪ್ರಕಾರದ ಸಹನಶೀಲತೆಯ ಪರೀಕ್ಷೆಗಳನ್ನು ತಿಳಿಸಿದೆವು - ಮೊದಲ ಪರೀಕ್ಷೆಯಾಗಿದೆ - ಮನುಷ್ಯರ ಮೂಲಕ ಅಪಶಬ್ಧ ಅಥವಾ ಅತ್ಯಾಚಾರ. ಎರಡನೆಯದು - ಯಜ್ಞದ ಸ್ಥಾಪನೆಯಲ್ಲಿ ಬಂದಂತಹ ಭಿನ್ನ-ಭಿನ್ನ ವಿಘ್ನಗಳು. ಮೂರನೆಯದು - ಕೆಲವು ಬ್ರಾಹ್ಮಣ ಮಕ್ಕಳ ಮೂಲಕವೂ ಸಹ ವಿರೋಧಿಯಾಗುವ ಅಥವಾ ಚಿಕ್ಕ-ಪುಟ್ಟ ಮಾತುಗಳಲ್ಲಿ ಅಸಂತುಷ್ಟತೆಯಿಂದ ಎದುರಾದರು ಆದರೆ ಇದರಲ್ಲಿಯೂ ಸದಾ ಅಸಂತುಷ್ಟರನ್ನು ಸಂತುಷ್ಟ ಪಡಿಸುವ ಭಾವನೆಯಿಂದ ಅವರನ್ನು ಪರವಶರೆಂದು ತಿಳಿದು ಸದಾ ಕಲ್ಯಾಣದ ಭಾವನೆಯಿಂದ ಸಹನಶೀಲತೆಯ ಶಾಂತಿ ಶಕ್ತಿಯಿಂದ ಪ್ರತಿಯೊಬ್ಬರನ್ನೂ ಮುಂದುವರೆಸಿದರು. ವಿರೋಧ ಮಾಡುವವರಿಗೂ ಸಹ ಮಧುರತೆ ಮತ್ತು ಶುಭ ಭಾವನೆ ಮತ್ತು ಶುಭ ಕಾಮನೆಯಿಂದ ಸಹನಶೀಲತೆಯ ಪಾಠವನ್ನು ಓದಿಸಿದರು. ಯಾರು ಇಂದು ಎದುರಾಗುವರೋ ಅವರು ನಾಳೆ ಕ್ಷಮೆ ಯಾಚಿಸುತ್ತಾರೆ. ಅವರ ಮುಖದಿಂದಲೂ ಸಹ ಇದೇ ಮಾತು ಹೊರ ಬರುತ್ತದೆ - "ಬಾಬಾ ಅಂತೂ ಬಾಬಾ ಆಗಿದ್ದಾರೆ" ಇದಕ್ಕೇ ಸಹನಶೀಲತೆಯ ಮೂಲಕ ಫೇಲ್ನ್ನೂ ಪಾಸ್ ಮಾಡಿ ವಿಘ್ನವನ್ನು ಪಾರು ಮಾಡುವುದೆಂದು ಹೇಳಲಾಗುತ್ತದೆ ಅಂದಾಗ ಎರಡನೇ ಹೆಜ್ಜೆಯನ್ನು ಕೇಳಿದಿರಿ - ಏತಕ್ಕಾಗಿ? ಹೆಜ್ಜೆಯ ಮೇಲೆ ಹೆಜ್ಜೆಯನ್ನಿಡಿ. ಇದಕ್ಕೆ ಫಾಲೋ ಫಾದರ್ ಅರ್ಥಾತ್ ತಂದೆಯ ಸಮಾನರಾಗುವುದೆಂದು ಹೇಳಲಾಗುತ್ತದೆ. ಆಗಬೇಕೋ ಅಥವಾ ಕೇವಲ ದೂರದಿಂದ ನೋಡಬೇಕೋ? ಬಹದ್ದೂರರಾಗಿದ್ದೀರಲ್ಲವೆ. ಪಂಜಾಬ್, ಮಹಾರಾಷ್ಟ್ರ ಇಬ್ಬರೂ ಬಹದ್ದೂರರಾಗಿದ್ದೀರಿ. ಎಲ್ಲರೂ ಬಹದ್ದೂರರಾಗಿದ್ದಾರೆ. ದೇಶ-ವಿದೇಶದವರೆಲ್ಲರೂ ತಮ್ಮನ್ನು ಮಹಾವೀರರೆಂದು ಹೇಳುತ್ತಾರೆ. ಯಾರಿಗಾದರೂ ನೀವು ಕಾಲಾಳುವೆಂದರೆ ಒಪ್ಪುವರೇ? ಇದರಿಂದಲೇ ಸಿದ್ಧವಾಗುತ್ತದೆ - ಎಲ್ಲರೂ ತಮ್ಮನ್ನು ಮಹಾವೀರರೆಂದು ತಿಳಿಯುತ್ತೀರಿ. ಮಹಾವೀರ ಅರ್ಥಾತ್ ತಂದೆಯ ಸಮಾನ ಆಗುವುದು - ತಿಳಿಯಿತೇ? ಒಳ್ಳೆಯದು. |
ದೇಶ-ವಿದೇಶದ ಸರ್ವ ತಂದೆಯ ಸಮಾನ, ಸದಾ ಬುದ್ಧಿಯಿಂದ ಸಮರ್ಪಿತ ಆತ್ಮರಿಗೆ, ಸದಾ ಪ್ರತೀ ಪರಿಸ್ಥಿತಿಯಲ್ಲಿ, ಪ್ರತೀ ವ್ಯಕ್ತಿಯೊಂದಿಗೆ ಸಹನಶೀಲರಾಗಿ ಪ್ರತೀ ದೊಡ್ಡ ಮಾತನ್ನೂ ಚಿಕ್ಕ ಮಾತನ್ನಾಗಿ ಸಹಜವಾಗಿ ಪಾರು ಮಾಡುವವರು, ಸದಾ ವಿಸ್ತಾರವನ್ನು ಸಾರದಲ್ಲಿ ತರುವವರು, ಸದಾ ಬ್ರಾಹ್ಮಣ ಜೀವನವನ್ನು ಮೋಜಿನ ಜೀವನವನ್ನು ಜೀವಿಸುವವರು, ಇಂತಹ ತಂದೆಯ ಸಮಾನರಾಗುವ ಮಹಾವೀರ ಶ್ರೇಷ್ಠಾತ್ಮಗಳಿಗೆ ಬಾಪ್ದಾದಾರವರ "ಸಮಾನ ಭವ"ದ ಸ್ನೇಹ ಸಂಪನ್ನ ನೆನಪು-ಪ್ರೀತಿ ಹಾಗೂ ನಮಸ್ತೆ. |
ಪಾರ್ಟಿಯೊಂದಿಗೆ ವಾರ್ತಾಲಾಪ: |
ಕುಮಾರರೊಂದಿಗೆ: ಕುಮಾರರ ವಿಶೇಷತೆ ಏನಾಗಿದೆ? ಕುಮಾರ ಜೀವನವು ಶ್ರೇಷ್ಠವಾದ ಜೀವನವಾಗಿದೆ ಏಕೆಂದರೆ ಪವಿತ್ರ ಜೀವನವಿದೆ ಮತ್ತು ಎಲ್ಲಿ ಪವಿತ್ರತೆಯಿದೆಯೋ ಅಲ್ಲಿ ಮಹಾನತೆಯಿದೆ. ಕುಮಾರ ಅರ್ಥಾತ್ ಶಕ್ತಿಶಾಲಿ, ಯಾವ ಸಂಕಲ್ಪವನ್ನು ಮಾಡುವರೋ ಅದನ್ನು ಮಾಡಬಲ್ಲರು. ಕುಮಾರ ಅರ್ಥಾತ್ ಸದಾ ಬಂಧನ ಮುಕ್ತರಾಗುವ ಹಾಗೂ ಅನ್ಯರನ್ನೂ ಮಾಡುವವರು. ಇಂತಹ ವಿಶೇಷತೆಯು ಇದೆಯಲ್ಲವೇ? ಯಾವ ಸಂಕಲ್ಪವನ್ನು ಮಾಡುವಿರಿ, ಅದನ್ನೇ ಕರ್ಮದಲ್ಲಿಯೂ ತರಬಹುದು. ಸ್ವಯಂ ತಾವೂ ಪವಿತ್ರವಾಗಿದ್ದು ಅನ್ಯರಿಗೂ ಪವಿತ್ರವಾಗಿರುವ ಮಹತ್ವವನ್ನು ತಿಳಿಸಬಹುದು. ನಮ್ಮಂತಹ ಪಾವನರು ಮತ್ತ್ಯಾರೂ ಆಗಲು ಸಾಧ್ಯವಿಲ್ಲ ಎಂದು ಬ್ರಹ್ಮಾಕುಮಾರರು ಚಾಲೆಂಜ್ ಮಾಡುವಿರಾ? ಏಕೆಂದರೆ ಪಾವರನ್ನಾಗಿ ಮಾಡುವವರು ಸರ್ವಶಕ್ತಿವಂತ ಆಗಿದ್ದಾರೆ. ಪ್ರಪಂಚದವರು ಎಷ್ಟೇ ಪ್ರಯತ್ನ ಪಡಬಹುದು ಆದರೆ ತಮ್ಮಂತೆ ಪಾವನರಾಗಲು ಸಾಧ್ಯವಿಲ್ಲ. ತಾವು ಸಹಜವಾಗಿಯೇ ಪಾವನರಾಗಿ ಬಿಟ್ಟಿರಿ, ಸಹಜವೆನಿಸುತ್ತದೆ ಅಲ್ಲವೇ? ಅಥವಾ ಪ್ರಪಂಚದವರು ಇದನ್ನು ಅಸ್ವಾಭಾವಿಕ ಎಂದು ಹೇಳುವಂತೆ ಅನಿಸುತ್ತದೆಯೇ? ಕುಮಾರ ಎಂಬುದರ ಪರಿಭಾಷೆಯಾಗಿದೆ – ‘ಚಾಲೆಂಜ್ ಮಾಡುವವರು, ಪರಿವರ್ತನೆ ಮಾಡಿ ತೋರಿಸುವವರು, ಅಸಂಭವವನ್ನು ಸಂಭವ ಮಾಡುವವರು’. ಪ್ರಪಂಚದವರು ತನ್ನ ಜೊತೆಗಾರರನ್ನು ಸಂಗ ದೋಷದಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ತಾವು ತಂದೆಯ ಸಂಗದಲ್ಲಿ ಕರೆದುಕೊಂಡು ಬರುತ್ತೀರಿ. ಅವರು ತಮ್ಮ ಸಂಗದಲ್ಲಿ ತರುವುದಿಲ್ಲ, ತಂದೆಯ ಸಂಗದ ರಂಗನ್ನು ಹಾಕುವಿರಿ, ತಂದೆಯ ಸಮಾನರನ್ನಾಗಿ ಮಾಡುತ್ತೀರಿ. ಈ ರೀತಿ ಇದ್ದೀರಲ್ಲವೇ? ಒಳ್ಳೆಯದು! |
2. ಕುಮಾರ ಅರ್ಥಾತ್ ಸದಾ ಅಚಲ-ಅಡೋಲ ಆಗಿರುವವರು, ಎಂತಹ ಪರಿಸ್ಥಿತಿಯೇ ಬರಲಿ ಆದರೆ ಏರುಪೇರು ಆಗುವವರಲ್ಲ. ಏಕೆಂದರೆ ತಮ್ಮ ಸಂಗಾತಿಯು ಸ್ವಯಂ ತಂದೆಯಾಗಿದ್ದಾರೆ. ಎಲ್ಲಿ ತಂದೆಯಿದ್ದಾರೆಯೋ ಅಲ್ಲಿ ಸದಾ ಅಚಲ-ಅಡೋಲವಾಗಿರುವಿರಿ. ಎಲ್ಲಿ ಸರ್ವಶಕ್ತಿವಂತನು ಇರುವರು ಅಲ್ಲಿ ಸರ್ವ ಶಕ್ತಿಗಳೂ ಇರುತ್ತವೆ. ಸರ್ವ ಶಕ್ತಿಗಳ ಮುಂದೆ ಮಾಯೆಯೇನೂ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಕುಮಾರ ಜೀವನ ಅರ್ಥಾತ್ ಸದಾ ಏಕರಸ ಸ್ಥಿತಿಯಲ್ಲಿ ಇರುವವರು, ಏರುಪೇರಿನಲ್ಲಿ ಬರುವುದಿಲ್ಲ. ಯಾರು ಏರುಪೇರುಗಳಲ್ಲಿ ಬರುತ್ತಾರೆಯೋ ಅವರು ಅವಿನಾಶಿ ರಾಜ್ಯಭಾಗ್ಯವನ್ನು ಪಡೆಯುವುದಕ್ಕೆ ಸಾಧ್ಯವಾಗುವುದಿಲ್ಲ. ಅಲ್ಪ ಸ್ವಲ್ಪ ಸುಖ ಸಿಗಬಹುದು ಆದರೆ ಸದಾಕಾಲದ್ದಲ್ಲ ಆದ್ದರಿಂದ ಕುಮಾರ ಜೀವನ ಅರ್ಥಾತ್ ಸದಾ ಅಚಲ, ಏಕರಸ ಸ್ಥಿತಿಯಲ್ಲಿ ಸ್ಥಿತವಾಗಿರುವವರು. ಅಂದಮೇಲೆ ಏಕರಸ ಸ್ಥಿತಿಯಲ್ಲಿ ಇರುತ್ತೀರಾ ಅಥವಾ ಅನ್ಯ ಪ್ರಾಪ್ತಿಗಳಲ್ಲಿ ಬುದ್ಧಿಯು ಹೋಗುತ್ತದೆಯೇ? ಸರ್ವಪ್ರಾ ಪ್ತಿಗಳು ಒಬ್ಬ ತಂದೆಯ ಮೂಲಕ ಅನುಭವ ಮಾಡುವವರಿಗೆ ಏಕರಸ ಅರ್ಥಾತ್ ಅಚಲ-ಅಡೋಲವಾಗಿ ಇರುವವರೆಂದು ಹೇಳಲಾಗುತ್ತದೆ. ಈ ರೀತಿ ಆಗುವಂತಹ ಮಕ್ಕಳು ತಂದೆಯವರಿಗೆ ಪ್ರಿಯವಾಗುವರು. ಅಂದಮೇಲೆ ಸದಾ ಇದನ್ನೇ ನೆನಪಿಟ್ಟುಕೊಳ್ಳಿರಿ - ನಾವು ಅಚಲ-ಅಡೋಲ ಆತ್ಮರು ಏಕರಸ ಸ್ಥಿತಿಯಲ್ಲಿ ಇರುವವರು ಆಗಿದ್ದೇವೆ. |
ಮಾತೆಯರೊಂದಿಗೆ: |
1. ಬಾಪ್ದಾದಾರವರು ಮಾತೆಯರಿಗಾಗಿ ಯಾವ ಸಹಜ ಮಾರ್ಗವನ್ನು ತಿಳಿಸಿದ್ದಾರೆ, ಅದರಿಂದ ಸಹಜವಾಗಿಯೇ ತಂದೆಯ ನೆನಪು ಮಾಡಲು ಸಾಧ್ಯವಾಗುವುದು, ಪರಿಶ್ರಮ ಪಡಬೇಕಾಗಿರುವುದಿಲ್ಲ? ನೆನಪನ್ನೂ ಸಹಜ ಮಾಡುವ ಸಾಧನವೇನಾಗಿದೆ? ಹೃದಯದಿಂದ “ನನ್ನ ಬಾಬಾ” ಎಂದು ಹೇಳಿರಿ. ಎಲ್ಲಿ “ನನ್ನ ಬಾಬಾ” ಎನ್ನುತ್ತೀರಿ ಅಲ್ಲಿ ಸಹಜವಾಗಿಯೇ ನೆನಪು ಬರುತ್ತದೆ. ಇಡೀ ದಿನದಲ್ಲಿಯೂ ನನ್ನದೇನು ಆಗಿರುತ್ತದೆಯೋ ಅದೇ ನೆನಪಿಗೆ ಬರುತ್ತದೆ ಅಲ್ಲವೆ. ಭಲೆ ವ್ಯಕ್ತಿಯಾಗಿರಲಿ, ವಸ್ತುವಾಗಿರಲಿ.... ಎಲ್ಲಿ ನನ್ನದೆನ್ನುವುದು ಇರುತ್ತದೆಯೋ ಅದೇ ನೆನಪು ಬರುತ್ತದೆ. ಒಂದುವೇಳೆ ಇದೇರೀತಿ ತಂದೆಯನ್ನು ನನ್ನವರೆಂದು ಹೇಳುತ್ತೀರಿ, ನನ್ನದೆಂದು ತಿಳಿಯುತ್ತೀರೆಂದರೆ ತಂದೆಯ ನೆನಪೂ ಸಹ ಬರುವುದು. ಅಂದಾಗ ತಂದೆಯನ್ನು ನೆನಪು ಮಾಡುವ ಸಹಜ ವಿಧಿಯಾಗಿದೆ - ಹೃದಯದಿಂದ ಹೇಳಿರಿ “ನನ್ನ ಬಾಬಾ”, ಇದನ್ನು ಕೇವಲ ಮುಖದಿಂದ ನನ್ನದು-ನನ್ನದು ಎನ್ನುವುದಲ್ಲ, ಅಧಿಕಾರದಿಂದ ಹೇಳಬೇಕು. ಇದೇ ಸಹಜ ಪುರುಷಾರ್ಥವನ್ನು ಮಾಡುತ್ತಾ ಮುಂದುವರೆಯುತ್ತಾ ಸಾಗಿರಿ. ಸದಾಕಾಲವೂ ಈ ವಿಧಿಯಿಂದ ಸಹಜಯೋಗಿ ಆಗಿರಿ. ನನ್ನದೆಂದು ಹೇಳಿರಿ ಮತ್ತು ತಂದೆಯ ಖಜಾನೆಗಳ ಮಾಲೀಕರಾಗಿರಿ. |
2. ಮಾತೆಯರು ಸದಾ ತಮ್ಮನ್ನು ಪದಮಾಪದಮ ಭಾಗ್ಯಶಾಲಿ ಎಂದು ತಿಳಿಯುತ್ತೀರಾ? ಮನೆಯಲ್ಲಿ ಕುಳಿತಿದ್ದಂತೆಯೇ ತಂದೆಯು ಸಿಕ್ಕಿದ್ದಾರೆಂದಾಗ, ಇದೆಷ್ಟು ಶ್ರೇಷ್ಠ ಭಾಗ್ಯವಾಗಿದೆ! ಪ್ರಪಂಚದವರಂತು ತಂದೆಯನ್ನು ಹುಡುಕುವುದಕ್ಕಾಗಿಯೇ ಹೋಗುತ್ತಾರೆ ಮತ್ತು ತಮಗಂತು ಮನೆಯಲ್ಲಿ ಕುಳಿತಿದ್ದಂತೆಯೇ ಸಿಕ್ಕಿದರು. ಅಂದಾಗ ಎಂದಾದರೂ ಇಷ್ಟು ಶ್ರೇಷ್ಠವಾದ ಭಾಗ್ಯವು ಪ್ರಾಪ್ತಿಯಾಗುವುದೆಂದು ಯೋಚಿಸಿದ್ದಿರಾ? ಮನೆಯಲ್ಲಿ ಕುಳಿತಿದ್ದಂತೆಯೇ ಭಗವಂತನು ಸಿಕ್ಕಿದರು ಎಂಬ ಗಾಯನವೇನಿದೆ.... ಇದು ಯಾರಿಗಾಗಿ ಇದೆ? ತಮಗಾಗಿಯೇ ಇದೆಯಲ್ಲವೆ. ಅಂದಮೇಲೆ ಇದೇ ಶ್ರೇಷ್ಠ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಮುಂದುವರೆಯುತ್ತಾ ಸಾಗಿರಿ. “ವಾಹ್ ನನ್ನ ಶ್ರೇಷ್ಠ ಭಾಗ್ಯವೇ!”- ಖುಷಿಯ ಈ ಹಾಡನ್ನು ಹಾಡುತ್ತಿರಿ. ಖುಷಿಯ ಉಯ್ಯಾಲೆಯಲ್ಲಿ ತೂಗುತ್ತಿರಿ, ಖುಷಿಯಲ್ಲಿ ನರ್ತಿಸಿ ಮತ್ತು ಹಾಡುತ್ತಿರಿ. |
3. ಶಕ್ತಿಯರಿಗೆ ಸದಾ ಯಾವ ಖುಷಿಯಿರುತ್ತದೆ? ಸದಾ ತಂದೆಯ ಜೊತೆಗೆ ಕಂಬೈಂಡ್ ಆಗಿದ್ದೇನೆ. ಶಿವ ಶಕ್ತಿಯ ಅರ್ಥವೇ ಆಗಿದೆ - ಕಂಬೈಂಡ್. ತಂದೆ ಮತ್ತು ತಾವು - ಇಬ್ಬರನ್ನು ಸೇರಿಸಿ “ಶಿವ-ಶಕ್ತಿ” ಎಂದು ಹೇಳಲಾಗುತ್ತದೆ. ಅಂದಮೇಲೆ ಯಾರು ಕಂಬೈಂಡ್ ಆಗಿದ್ದಾರೆಯೋ ಅವರನ್ನು ಯಾರೂ ಸಹ ಬೇರ್ಪಡಿಸಲು ಸಾಧ್ಯವಿಲ್ಲ. ಇಂತಹ ಖುಷಿಯಿರುತ್ತದೆಯೇ? ನಿರ್ಬಲ ಆತ್ಮನನ್ನು ತಂದೆಯವರು ಶಕ್ತಿಯರನ್ನಾಗಿ ಮಾಡಿ ಬಿಟ್ಟರು ಅಂದಮೇಲೆ ಸದಾ ಇದನ್ನೇ ನೆನಪಿಟ್ಟುಕೊಳ್ಳಿರಿ - ನಾವು ಕಂಬೈಂಡ್ ಆಗಿರುವಂತಹ ಅಧಿಕಾರಿ ಆಗಿ ಬಿಟ್ಟೆವು. ಮುಂಚೆ ಹುಡುಕಾಡುತ್ತಿದ್ದೆವು ಮತ್ತು ಈಗ ಅವರ ಸಂಗದಲ್ಲಿಯೇ ಇರುವವರು ಆಗಿದ್ದೇವೆ - ಈ ನಶೆಯು ಸದಾ ಇರಲಿ. ಮಾಯೆಯು ಬೇರ್ಪಡಿಸಲು ಎಷ್ಟೇ ಪ್ರಯತ್ನ ಪಡಲಿ ಆದರೆ ಶಿವ-ಶಕ್ತಿಯರ ಮುಂದೆ ಮಾಯೆಯು ಏನೂ ಮಾಡಲು ಸಾಧ್ಯವಿಲ್ಲ. ಒಂಟಿಯಾಗಿ ಇರುತ್ತೀರೆಂದರೆ ಮಾಯೆಯು ಬರುತ್ತದೆ, ಕಂಬೈಂಡ್ ಆಗಿರುತ್ತೀರೆಂದರೆ ಮಾಯೆಯು ಬರಲು ಸಾಧ್ಯವಿಲ್ಲ. ಹಾಗಾದರೆ ಈ ವರದಾನವನ್ನೇ ಸದಾ ನೆನಪಿಟ್ಟುಕೊಳ್ಳಿರಿ- “ನಾವು ಕಂಬೈಂಡ್ ಆಗಿರುವಂತಹ ಶಿವ-ಶಕ್ತಿಯರು ವಿಜಯಿ ಆಗಿದ್ದೇವೆ”. ಒಳ್ಳೆಯದು. |
ಓಂ ಶಾಂತಿ. ಆತ್ಮೀಯ ತಂದೆಯು ಮಧುರ ಆತ್ಮಗಳೇ ಅಥವಾ ಮಕ್ಕಳೇ ಗೀತೆಯನ್ನು ಕೇಳಿದಿರಾ ಎಂದು ಕೇಳುತ್ತಾರೆ, ಇದಕ್ಕೆ ಜ್ಞಾನದ ಗೀತೆಯೆಂದು ಹೇಳಲಾಗುತ್ತದೆ. ಈ ಗೀತೆಯಂತೂ ಬಹಳ ಚೆನ್ನಾಗಿದೆ. ನೀವಾತ್ಮರು ಈಗ ಜಾಗೃತರಾಗಿದ್ದೀರಿ. ಡ್ರಾಮಾದ ಪ್ರತಿಯೊಂದು ರಹಸ್ಯವನ್ನು ತಿಳಿದಿದ್ದೀರಿ. ಭಕ್ತಿಮಾರ್ಗದ ಕೌತುಕತೆಯನ್ನೂ ನೀವು ನೋಡಿದ್ದೀರಿ. ಏನೆಲ್ಲಾ ಕಳೆದು ಹೋಗಿದೆಯೋ ಅದು ನಿಮ್ಮ ಬುದ್ಧಿಯಲ್ಲಿದೆ. ನೀವು ನಿಮ್ಮ 84 ಜನ್ಮಗಳ ಇತಿಹಾಸವನ್ನು ತಿಳಿದಿದ್ದೀರಿ, ತಂದೆಯು ನಿಮ್ಮ 84 ಜನ್ಮಗಳ ಕಥೆಯನ್ನು ತಿಳಿಸಿದ್ದಾರೆ. ಇದು ಹೊಸ ಪ್ರಪಂಚಕ್ಕಾಗಿ ಹೊಸ ಮಾತಾಗಿದೆ. ತಂದೆಯ ಮೂಲಕ ಹೊಸ ಮಾತನ್ನು ಕೇಳುತ್ತೀರಿ. ತಂದೆಯು ಮಕ್ಕಳಿಗೆ ಧೈರ್ಯ ಕೊಡುತ್ತಾರೆ - ಮಕ್ಕಳೇ, ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ ಅಂದಮೇಲೆ ಹಳೆಯ ಮಾತುಗಳನ್ನು ಮರೆಯುತ್ತಾ ಹೋಗಿ. ಈ ವೇದಶಾಸ್ತ್ರ, ಭಕ್ತಿಮಾರ್ಗದ ಯಾವುದೆಲ್ಲಾ ಸಾಮಗ್ರಿಗಳಿವೆಯೋ ಇವೆಲ್ಲವೂ ಸಮಾಪ್ತಿಯಾಗಲಿದೆ. ಅಲ್ಲಿ ಭಕ್ತಿಮಾರ್ಗದ ಯಾವುದೇ ಗುರುತುಗಳೂ ಇರುವುದಿಲ್ಲ, ಭಕ್ತಿಯ ಫಲ ಸಿಕ್ಕಿರುವುದು. ತಂದೆಯು ಬಂದು ಭಕ್ತರಿಗೆ ಫಲ ಕೊಡುತ್ತಾರೆ, ಯಾರೆಷ್ಟು ಭಕ್ತಿ ಮಾಡಿರುವರೋ ಅವರಿಗೆ ಹೆಚ್ಚು ಫಲ ಸಿಗುತ್ತದೆ, ತಂದೆಯು ಬಂದು ಹೇಗೆ ಫಲವನ್ನು ಕೊಡುತ್ತಾರೆಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಜ್ಞಾನದ ಪುರುಷಾರ್ಥವನ್ನೂ ಸಹ ಅವರೇ ಹೆಚ್ಚು ಮಾಡುತ್ತಾರೆ. ನಾವಾತ್ಮರೇ ಭಕ್ತಿಯನ್ನು ಹೆಚ್ಚು ಮಾಡಿದ್ದೆವು ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅವಶ್ಯವಾಗಿ ಅವರೇ ಜ್ಞಾನದಲ್ಲಿಯೂ ತೀಕ್ಷ್ಣವಾಗಿ ಹೋಗುತ್ತಾರೆ ಅಂದಮೇಲೆ ಈ ಲಕ್ಷ್ಮೀ-ನಾರಾಯಣರಂತೆ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಈಗ ಜ್ಞಾನ ಮತ್ತು ಯೋಗಕ್ಕಾಗಿ ನಿಮ್ಮ ಪುರುಷಾರ್ಥವಾಗಿದೆ. ದೇಹೀ-ಅಭಿಮಾನಿಯಾಗಿ ನಂತರ ದೇಹಧಾರಿಯಾಗಬೇಕಾಗಿದೆ. ಕರ್ಮ ಮಾಡುತ್ತಾ ತಂದೆಯನ್ನು ನೆನಪು ಮಾಡುತ್ತಿರಬೇಕು ಏಕೆಂದರೆ ದೇಹವಿಲ್ಲದೆ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಇದಂತೂ ಸರಿಯಾಗಿದೆ, ತಂದೆಯನ್ನು ನೆನಪು ಮಾಡಬೇಕು ಆದರೆ ತನ್ನನ್ನು ತಾನು ಆತ್ಮನೆಂದು ತಿಳಿಯಬೇಕು, ದೇಹವನ್ನು ಮರೆಯುವುದರಿಂದ ಕರ್ಮವನ್ನು ಮಾಡಲು ಆಗುವುದಿಲ್ಲ, ಕರ್ಮವನ್ನಂತೂ ಮಾಡಲೇಬೇಕು. ತಂದೆಯ ನೆನಪಿನಲ್ಲಿಯೇ ಬಹಳ ಮಜಾ ಬರುತ್ತದೆ. ಕುಳಿತುಕೊಳ್ಳುತ್ತಾ-ಎದ್ದೇಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ ಆದರೆ ಹೊಟ್ಟೆಗೆ ಭೋಜನವಂತೂ ಬೇಕಲ್ಲವೆ. ದೇಹೀ-ಅಭಿಮಾನಿಯಾಗಿರಬೇಕು, ಈ ಸಮಯದಲ್ಲಿ ದೇಹೀ-ಅಭಿಮಾನಿಗಳು ನೀವು ಮಕ್ಕಳನ್ನು ಬಿಟ್ಟರೆ ಮತ್ತ್ಯಾರೂ ಇಲ್ಲ. ಭಲೆ ತನ್ನನ್ನು ಆತ್ಮನೆಂದು ತಿಳಿದುಕೊಂಡಿದ್ದಾರೆ ಆದರೆ ತಂದೆಯ ಪರಿಚಯವಿಲ್ಲ. ಭಲೆ ಆತ್ಮ ಅವಿನಾಶಿ, ಈ ಶರೀರವು ವಿನಾಶಿಯಾಗಿದೆ ಎಂದು ತಿಳಿದಿದ್ದಾರೆ ಆದರೆ ಈ ತಿಳುವಳಿಕೆಯಿಂದ ವಿಕರ್ಮ ವಿನಾಶವಾಗುವುದಿಲ್ಲ. ಪುಣ್ಯಾತ್ಮ, ಪತಿತ ಆತ್ಮನೆಂದೂ ಹೇಳುತ್ತಾರೆ, ನಾನಾತ್ಮ ಇದು ನನ್ನ ಶರೀರವಾಗಿದೆ ಎಂದು ಹೇಳುತ್ತಾರೆ, ಇದಂತೂ ಸಾಮಾನ್ಯ ಮಾತಾಗಿದೆ. ಮೂಲ ಮಾತಾಗಿದೆ - ನನ್ನನ್ನು ನೆನಪು ಮಾಡಿ. ಶರೀರ ನಿರ್ವಹಣೆಗಾಗಿ ದೇಹಾಭಿಮಾನದಲ್ಲಿ ಬರಲೇಬೇಕಾಗಿದೆ, ದೇಹಕ್ಕೆ ತಿನ್ನಿಸಬೇಕಾಗುವುದು, ದೇಹವಿಲ್ಲದಿದ್ದರೆ ಏನು ಮಾಡಲೂ ಸಾಧ್ಯವಿಲ್ಲ. ಪ್ರತಿಯೊಂದು ಜನ್ಮದಲ್ಲಿಯೂ ಶರೀರ ನಿರ್ವಹಣೆಗಾಗಿ ಮಾಡುತ್ತಲೇ ಬಂದಿದ್ದೀರಿ, ಕರ್ಮ ಮಾಡುತ್ತಾ ನೀವು ಪ್ರಿಯತಮನನ್ನು ನೆನಪು ಮಾಡಬೇಕು. ಆ ಪ್ರಿಯತಮನು ಸಂಪೂರ್ಣವಾಗಿ ಯಾರಿಗೂ ತಿಳಿದಿಲ್ಲ. ಪ್ರಿಯತಮ ಅಥವಾ ತಂದೆಯಿಂದ ಆಸ್ತಿಯು ನಿಮಗೆ ಸಿಗುತ್ತದೆ, ಅವರ ನೆನಪಿನಿಂದ ವಿಕರ್ಮ ವಿನಾಶವಾಗುವುದು ಎಂದು ಯಾರಿಗೂ ತಿಳಿದಿಲ್ಲ. ನೀವು ಮಕ್ಕಳು ಹೊಸ ಮಾತುಗಳನ್ನು ಕೇಳುತ್ತಿದ್ದೀರಿ. ಮನೆಗೆ ಹೋಗಲು ಮಾರ್ಗ ಸಿಕ್ಕಿದೆ, ನಾವು ಮನೆಗೆ ಹೋಗಿ ನಂತರ ರಾಜಧಾನಿಯಲ್ಲಿ ಬರುತ್ತೇವೆ, ತಂದೆಯು ಹೊಸ ಮನೆಯನ್ನು ಕಟ್ಟುತ್ತಾರೆ ಅಂದಮೇಲೆ ಆ ಮನೆಯಲ್ಲಿ ಹೋಗಿ ಕುಳಿತುಕೊಳ್ಳೋಣವೆಂದು ಮನಸ್ಸು ಆಗುತ್ತದೆಯಲ್ಲವೆ. ಈಗ ನಮಗೆ ಯಾರಿಗೂ ಗೊತ್ತಿಲ್ಲದ ಮಾರ್ಗವು ಸಿಕ್ಕಿದೆ. ಎಷ್ಟೇ ಯಜ್ಞ, ತಪ ಮುಂತಾದುವುಗಳನ್ನು ಮಾಡಿದರೂ ಸಹ, ತಲೆ ಕೆಡಿಸಿಕೊಂಡರೂ ಸದ್ಗತಿಯಂತೂ ಪಡೆಯಲು ಸಾಧ್ಯವಿಲ್ಲ. ಈ ಪ್ರಪಂಚದಿಂದ ಆ ಪ್ರಪಂಚಕ್ಕೆ ಹೋಗಲು ಸಾಧ್ಯವಿಲ್ಲ, ಇದನ್ನೂ ನೀವು ತಿಳಿಸಬೇಕಾಗಿದೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ ಆದ್ದರಿಂದ ಮನುಷ್ಯರ ಬುದ್ಧಿಯು ಕೆಲಸ ಮಾಡುವುದಿಲ್ಲ. ಇದು ನೆನ್ನೆಯ ಮಾತಾಗಿದೆ ಎಂಬುದು ಚೆನ್ನಾಗಿ ತಿಳಿದಿದ್ದೀರಿ. ಭಾರತ ಸ್ವರ್ಗವಾಗಿತ್ತು, ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಭಾರತದಂತಹ ಸುಖವನ್ನು ಯಾರೂ ಪಡೆಯಲು ಸಾಧ್ಯವಿಲ್ಲ, ಸ್ವರ್ಗದಲ್ಲಂತೂ ಮತ್ತ್ಯಾವುದೇ ಧರ್ಮದವರು ಬರಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮಷ್ಟು ಸುಖವನ್ನು ಮತ್ತ್ಯಾರೂ ಪಡೆಯಲು ಸಾಧ್ಯವಿಲ್ಲ. ಎಷ್ಟೇ ಹಣವನ್ನು ಖರ್ಚು ಮಾಡಿದರೂ ಸ್ವರ್ಗದ ಸುಖ ಇಲ್ಲಿ ಸಿಗಲು ಸಾಧ್ಯವಿಲ್ಲ ಏಕೆಂದರೆ ಕೆಲವರಿಗೆ ಹಣವಿದ್ದರೆ ಆರೋಗ್ಯವಿರುವುದಿಲ್ಲ, ಆರೋಗ್ಯವಿದ್ದರೆ ಹಣವಿರುವುದಿಲ್ಲ.... ಇದಂತೂ ದುಃಖದ ಪ್ರಪಂಚವಾಗಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ ಆತ್ಮಗಳೇ ಎದ್ದೇಳಿ, ಜ್ಞಾನದ ಮೂರನೇ ನೇತ್ರವು ನಿಮಗೆ ಸಿಕ್ಕಿದೆ, ಎಷ್ಟೊಂದು ಜಾಗೃತವಾಗಿದೆ. ನೀವು ಇಡೀ ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿದಿದ್ದೀರಿ, ತಂದೆಯು ಎಲ್ಲವನ್ನೂ ಬಲ್ಲಂತಹವರು ಎಂದು ಹೇಳಲಾಗುತ್ತದೆ ಅಂದರೆ ಎಲ್ಲರ ಮನಸ್ಸನ್ನು ತಿಳಿದವರೆಂದು ಅಲ್ಲ. ಇವರು ಯಾರು? ಎಷ್ಟು ತಿಳಿಸುತ್ತಾರೆ, ಎಲ್ಲಿಯವರೆಗೆ ಪವಿತ್ರರಾಗಿದ್ದಾರೆ, ಇವರು ತಂದೆಯನ್ನು ಎಷ್ಟು ನೆನಪು ಮಾಡುತ್ತಾರೆ - ಇವೆಲ್ಲಾ ವಿಚಾರಗಳನ್ನು ನಾನೇಕೆ ತಿಳಿಸಲಿ, ನಾನಂತೂ ನಿಮ್ಮೆಲ್ಲರಿಗೂ ಮಾರ್ಗವನ್ನು ತೋರಿಸುತ್ತೇನೆ ಮತ್ತು ಪರಮಪಿತ ಪರಮಾತ್ಮನನ್ನು ನೆನಪು ಮಾಡಿ ಎಂದು ಹೇಳುತ್ತೇನೆ. ಈ ಸೃಷ್ಟಿ ಚಕ್ರವನ್ನೂ ಸಹ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ, ಅವಶ್ಯವಾಗಿ ದೇಹೀ-ಅಭಿಮಾನಿಗಳಾಗಬೇಕು. ದೇಹಾಭಿಮಾನದ ಕಾರಣ ನಿಮ್ಮ ದುರ್ಗತಿಯಾಗಿದೆ, ಈಗ ನೀವು ತಂದೆಯನ್ನು ನೆನಪು ಮಾಡಬೇಕಾಗಿದೆ. ಗೃಹಸ್ಥದಲ್ಲಿ ಇರುತ್ತಾ ಕಮಲಪುಷ್ಫ ಸಮಾನರಾಗಬೇಕಾಗಿದೆ, ಸ್ವದರ್ಶನ ಚಕ್ರಧಾರಿಗಳೂ ನೀವೇ ಆಗಿದ್ದೀರಿ. ದೇವತೆಗಳ ಕೈಯಲ್ಲಿ ಶಂಖು ಇತ್ಯಾದಿಗಳೇನೂ ಇರುವುದಿಲ್ಲ, ಜ್ಞಾನದ ಶಂಖ ಇತ್ಯಾದಿಗಳೆಲ್ಲವೂ ನೀವು ಬ್ರಾಹ್ಮಣರದ್ದಾಗಿದೆ. ಸಿಖ್ಖರು ಶಂಖ ಊದಿದಾಗ ದೊಡ್ಡ ಧ್ವನಿ ಬರುತ್ತದೆ, ನೀವೂ ಸಹ ಜ್ಞಾನವನ್ನು ದೊಡ್ಡ ಸಭೆಯಲ್ಲಿಯೂ ಹೇಳುತ್ತೀರೆಂದರೆ ಲೌಡ್ ಸ್ಪೀಕರ್ನ್ನು ಹಾಕುತ್ತಾರಲ್ಲವೆ. ಇಲ್ಲಿ ಲೌಡ್ ಸ್ಪೀಕರ್ನ್ನು ಹಾಕುವ ಅವಶ್ಯಕತೆಯಿಲ್ಲ, ಟೀಚರ್ ಓದಿಸುತ್ತಾರೆಂದರೆ ಲೌಡ್ ಸ್ಪೀಕರ್ನ್ನು ಹಾಕುತ್ತಾರೆಯೇ! ಇಲ್ಲಂತೂ ಕೇವಲ ಶಿವ ತಂದೆಯನ್ನು ನೆನಪು ಮಾಡಬೇಕು ಅದರಿಂದಲೇ ವಿಕರ್ಮ ವಿನಾಶವಾಗುವುದು, ನಾನು ಸರ್ವಶಕ್ತಿವಂತನಾಗಿದ್ದೇನಲ್ಲವೆ. ನೀವು ಲೌಡ್ ಸ್ಪೀಕರ್ನ್ನು ಹಾಕಿದರೆ ಅದರ ಧ್ವನಿಯು ದೂರ ದೂರದವರೆಗೆ ಕೇಳಿ ಬರುತ್ತದೆ. ಅದೂ ಸಹ ಮುಂದೆ ಕೆಲಸಕ್ಕೆ ಬರುವುದು. ಎದುರಿನಲ್ಲಿ ಸಾವು ನಿಂತಿದೆ ಎಂದು ನೀವು ಎಲ್ಲರಿಗೂ ತಿಳಿಸಬೇಕು. ಈಗ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ. ಮಹಾಭಾರತದ ಯುದ್ಧವು ಸನ್ಮುಖದಲ್ಲಿ ನಿಂತಿದೆ, ಗೀತೆಯಲ್ಲಿಯೂ ಸಹ ಮಹಾಭಾರತ ಯುದ್ಧವಾಯಿತು, ವಿನಾಶವಾಯಿತು ಎಂದು ಬರೆದಿದ್ದಾರೆ, ಒಳ್ಳೆಯದು - ನಂತರ ಏನಾಯಿತು? ಪಾಂಡವರೂ ಸಹ ಕರಗಿ ಹೋದರು. ಮೊದಲು ವಿನಾಶವಾಯಿತೆಂದರೆ ಭಾರತಖಂಡವು ಖಾಲಿಯಾಗಿ ಬಿಡುವುದು, ಭಾರತವು ಅವಿನಾಶಿ ಖಂಡವಾಗಿರುವುದರಿಂದ ವಿನಾಶವೂ ಆಗುವುದಿಲ್ಲ, ಖಾಲಿಯೂ ಆಗುವುದಿಲ್ಲ, ಪ್ರಳಯವಾಗುವುದೂ ಇಲ್ಲ ಎಂದು ನೀವು ತಿಳಿದಿದ್ದೀರಿ. ತಂದೆಯು ಅವಿನಾಶಿಯಾಗಿದ್ದಾರೆ ಅಂದಮೇಲೆ ಅವರ ಜನ್ಮ ಸ್ಥಳವೂ ಅವಿನಾಶಿಯಾಗಿದೆ. ತಂದೆಯು ಸರ್ವರ ಸದ್ಗತಿದಾತ, ಸುಖ-ಶಾಂತಿದಾತನಾಗಿದ್ದಾರೆ ಎಂದು ಮಕ್ಕಳು ಖುಷಿ ಪಡಬೇಕಾಗಿದೆ, ಯಾರೇ ಬಂದರೂ ಸಹ ಶಾಂತಿ ಬೇಕೆಂದು ಬಯಸುತ್ತಾರೆ. ಆತ್ಮವು ಶಾಂತಿ ಬೇಕೆಂದು ಇಷ್ಟೊಂದು ಏಕೆ ನೆನಪು ಮಾಡುತ್ತದೆ? ಶಾಂತಿಧಾಮವು ಆತ್ಮಗಳ ಮನೆಯಾಗಿದೆಯಲ್ಲವೆ. ಯಾರಿಗೆ ಮನೆಯ ನೆನಪಿರುವುದಿಲ್ಲ! ವಿದೇಶದಲ್ಲಿ ಯಾರಾದರೂ ಶರೀರ ಬಿಡುತ್ತಾರೆಂದರೆ ಆ ಶರೀರವನ್ನು ತನ್ನ ಜನ್ಮ ಭೂಮಿಗೆ ತೆಗೆದುಕೊಂಡು ಬರುತ್ತಾರೆ. ಒಂದುವೇಳೆ ಸರ್ವರ ಸದ್ಗತಿದಾತ, ದುಃಖದಿಂದ ಮುಕ್ತಿ ಕೊಡುವವನ ಜನ್ಮ ಸ್ಥಳವು ಈ ಭಾರತವಾಗಿದೆಯೆಂದು ಗೊತ್ತಾದರೆ ಅದರ ಮಾನ್ಯತೆ ಹೆಚ್ಚಾಗುತ್ತದೆ. ಒಬ್ಬ ಶಿವ ತಂದೆಯ ಮೇಲೆಯೇ ಎಕ್ಕದ ಹೂವನ್ನು ಹಾಕುತ್ತಾರೆ ಆದರೆ ಈಗ ಎಲ್ಲರ ಮೇಲೂ ಹೂವನ್ನು ಹಾಕುತ್ತಾರೆ. ಎಲ್ಲರಿಗೂ ಸುಖ-ಶಾಂತಿ ಕೊಡುವಂತಹವರ ಹೆಸರು ಮತ್ತು ಗುರುತನ್ನು ಪ್ರಾಯಃಲೋಪ ಮಾಡಿ ಬಿಟ್ಟಿದ್ದಾರೆ. ಯಾರು ತಂದೆಯನ್ನು ತಿಳಿದುಕೊಂಡಿದ್ದಾರೆಯೋ ಅವರೇ ಆಸ್ತಿಯನ್ನು ಪಡೆಯುವ ಪುರುಷಾರ್ಥವನ್ನೂ ಮಾಡುತ್ತಾರೆ. ನನ್ನ ಹೆಸರೇ ದುಃಖಹರ್ತ-ಸುಖಕರ್ತ ಆಗಿದೆ, ದುಃಖದಿಂದ ಮುಕ್ತ ಮಾಡಿ ಏನು ಮಾಡುತ್ತಾರೆ? ನಾವು ಶಾಂತಿಧಾಮದಲ್ಲಿ ಶಾಂತವಾಗಿರುತ್ತೇವೆ, ಸುಖಧಾಮದಲ್ಲಿ ಸುಖವಾಗಿರುತ್ತೇವೆಂದು ತಿಳಿದಿದ್ದೀರಿ. ಶಾಂತಿಧಾಮದ ಸ್ಥಳವೇ ಬೇರೆಯಾಗಿದೆ, ಸುಖಧಾಮದ ಸ್ಥಳವೇ ಬೇರೆಯಾಗಿದೆ, ಇದಂತೂ ದುಃಖಧಾಮವಾಗಿದೆ. ಈ ಸಮಯದಲ್ಲಿ ಎಲ್ಲರಿಗೂ ದುಃಖವೇ ದುಃಖವಿದೆ. ನಾವು ಇಂತಹ ಸುಖದಲ್ಲಿ ಹೋಗುತ್ತೇವೆ ಅಲ್ಲಿ 21 ಜನ್ಮಗಳವರೆಗೂ ಯಾವುದೇ ಪ್ರಕಾರದ ದುಃಖವಿರುವುದಿಲ್ಲ. ಸುಖಧಾಮ ಎನ್ನುವ ಹೆಸರೇ ಎಷ್ಟು ಮಧುರವಾಗಿದೆ! ನಾನು ನಿಮಗೆ ಯಾವುದೇ ರೀತಿಯ ಕಷ್ಟ ಕೊಡುವುದಿಲ್ಲ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ತನ್ನನ್ನು ತಾನು ಆತ್ಮನೆಂದು ತಿಳಿದುಕೊಳ್ಳಿ, ಈಗ ಈ ಜ್ಞಾನವನ್ನು ನಿಮಗೆ ತಂದೆಯು ತಿಳಿಸುತ್ತಿದ್ದಾರೆ, ಸತ್ಯಯುಗದಲ್ಲಿ ನಾನಾತ್ಮ ಈ ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆಂಬ ಜ್ಞಾನವಿರುತ್ತದೆ, ಇದನ್ನೇ ಆತ್ಮಾಭಿಮಾನಿ ಎಂದು ಹೇಳಲಾಗುತ್ತದೆ. ಇದು ಆತ್ಮಿಕ ಜ್ಞಾನವಾಗಿದೆ, ಇದನ್ನು ಯಾರೂ ಕೊಡಲು ಸಾಧ್ಯವಿಲ್ಲ. 5000 ವರ್ಷಗಳಿಗೆ ಒಂದು ಬಾರಿ ಆತ್ಮೀಯ ತಂದೆಯು ಬಂದು ಅತ್ಮಗಳಿಗೆ ಜ್ಞಾನ ಕೊಡುತ್ತಾರೆ. ಮನುಷ್ಯರು ಅವಶ್ಯವಾಗಿ ಘೋರ ಅಂಧಕಾರದಲ್ಲಿದ್ದಾರೆ, ನಿಮಗೆ ಈಗ ಬೆಳಕು ಸಿಕ್ಕಿದೆ. ನೀವು ಅಜ್ಞಾನದ ನಿದ್ರೆಯಿಂದ ಜಾಗೃತರಾಗಿದ್ದೀರಿ, ಎಲ್ಲಾ ಪ್ರಿಯತಮಯರ ಪ್ರಿಯತಮನು ಒಬ್ಬ ತಂದೆಯಾಗಿದ್ದಾರೆ. ನಾನು ತಂದೆಯೂ ಆಗಿದ್ದೇನೆ, ಪ್ರಿಯತಮನೂ ಆಗಿದ್ದೇನೆ, ಗುರುಗಳಿಗೆ ಗುರುವೂ ಆಗಿದ್ದೇನೆ, ಸುಪ್ರೀಂ ಟೀಚರ್ ಸಹ ಆಗಿದ್ದೇನೆಂದು ತಂದೆಯು ತಿಳಿಸುತ್ತಾರೆ. ಸರ್ವಗುರುಗಳ ಸದ್ಗತಿದಾತ ಒಬ್ಬ ಸದ್ಗುರುವಾಗಿದ್ದಾರೆ, ಮಕ್ಕಳೇ, ನಾನು ಎಲ್ಲರ ಸದ್ಗತಿ ಮಾಡುತ್ತೇನೆ ನಂತರ ಸದ್ಗತಿಯಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. |
ತಂದೆಯು ತಿಳಿಸುತ್ತಾರೆ - ಪ್ರತಿಯೊಬ್ಬ ಆತ್ಮನೂ ಸಹ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಆತ್ಮವೇ ಸತೋಪ್ರಧಾನ, ಸತೋ, ರಜೋ, ತಮೋ ಆಗುತ್ತದೆ. ಕೆಲಕೆಲವರಿಗೆ ಬಹಳ ಚಿಕ್ಕ ಪಾತ್ರವಿರುತ್ತದೆ, ಬಂದರು ನಂತರ ಹೊರಟು ಹೋದರು. ಸೊಳ್ಳೆಗಳ ರೀತಿ ಜನ್ಮ ಪಡೆದರು ಮತ್ತೆ ಮರಣ ಹೊಂದಿದರು, ಅಂತಹವರು ತಂದೆಯಿಂದ ಆಸ್ತಿಯನ್ನು ಪಡೆಯುವುದಿಲ್ಲ. ತಂದೆಯಿಂದ ಪವಿತ್ರತೆ, ಸುಖ-ಶಾಂತಿಯ ಆಸ್ತಿಯು ಸಿಗುತ್ತದೆ ಎಂದು ನೀವಾತ್ಮಗಳಿಗೆ ತಂದೆಯು ತಿಳಿಸುತ್ತಾರೆ. ತಂದೆಯಂತೂ ನಿರಾಕಾರನಾಗಿದ್ದಾರೆ, ಅವರೂ ಸಹ ಈ ಮುಖ (ಬ್ರಹ್ಮಾ) ದಿಂದಲೇ ಬಂದು ತಿಳಿಸುತ್ತಾರೆ. ಶಿವ ತಂದೆಯ ಮಂದಿರವನ್ನು ಬಹಳ ಎತ್ತರದಲ್ಲಿ ಕಟ್ಟುತ್ತಾರೆ, ಎಷ್ಟೊಂದು ದೂರದವರೆಗೆ ತೀರ್ಥ ಯಾತ್ರೆ, ಬಹಳ ಮೇಳಗಳಿಗೆ ಹೋಗುತ್ತಾರೆ, ಮೇಲೆ ಯಾವುದೇ ಜ್ಞಾನಾಮೃತವನ್ನು ಇಟ್ಟಿರುತ್ತಾರೆಯೇ! ಎಷ್ಟೊಂದು ಖರ್ಚು ಮಾಡುತ್ತಾರೆ, ಸರ್ಕಾರವೂ ಸಹ ಅದಕ್ಕಾಗಿ ಎಷ್ಟೊಂದು ಅನುಕೂಲಗಳನ್ನು ಮಾಡಬೇಕಾಗುತ್ತದೆ, ಎಷ್ಟೊಂದು ಪರಿಶ್ರಮವಾಗುತ್ತದೆ. ಇಲ್ಲಿ ತೀರ್ಥ ಸ್ಥಾನಗಳಿಗೆ ಚಿಕ್ಕ ಮಕ್ಕಳನ್ನು ಹೇಗೆ ಕರೆದುಕೊಂಡು ಹೋಗುತ್ತಾರೆ? ಯಾರಾದರೂ ಸಂಭಾಲನೆ ಮಾಡಲು ಕೊಟ್ಟು ಹೋಗುತ್ತಾರೆ, ಜೊತೆಯಲ್ಲಿಯೇ ಕರೆದುಕೊಂಡು ಹೋಗುವುದಿಲ್ಲ. 2-3 ತಿಂಗಳುಗಳು ಯಾತ್ರೆಯನ್ನು ಮಾಡುತ್ತಾರೆ, ಇಲ್ಲಿ ನೀವು ಬರುತ್ತೀರೆಂದರೆ ನೀವು ಕುಳಿತು ಕೇವಲ ಕೇಳಬೇಕು ಮತ್ತು ಓದಬೇಕು. ಇಲ್ಲಿ ಚಿಕ್ಕ ಮಕ್ಕಳು ಕೇಳುವುದಿಲ್ಲ, ನೀವು ಇಲ್ಲಿಗೆ ಜ್ಞಾನ-ಯೋಗವನ್ನು ಕಲಿಯುವುದಕ್ಕಾಗಿಯೇ ಬರುತ್ತೀರಿ. ಜ್ಞಾನವನ್ನು ತಿಳಿಸುವಾಗ ಯಾವುದೇ ಶಬ್ಧ ಇತ್ಯಾದಿಗಳು ಆಗಬಾರದು ಇಲ್ಲದಿದ್ದರೆ ಗಮನವಿರುವುದಿಲ್ಲ, ಶಾಂತಿಯಲ್ಲಿ ಕುಳಿತು ಗಮನ ಕೊಟ್ಟು ಕೇಳಬೇಕು, ಯೋಗವಂತೂ ಬಹಳ ಸಹಜವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಏನೇ ಕೆಲಸ ಮಾಡುತ್ತಿದ್ದರೂ ಸಹ ಬುದ್ಧಿಮಾತ್ರ ಅಲ್ಲಿಯೇ ಇರಬೇಕು. ತಂದೆಯ ನೆನಪಿನಿಂದ ಆಗುವ ಸಂಪಾದನೆಯು ಬಹಳ ಜಬರ್ದಸ್ತ್ ಆಗಿರುವುದು. ನಾವು ಸದಾಕಾಲಕ್ಕಾಗಿ ಆರೋಗ್ಯವಂತರಾಗುತ್ತೇವೆಂದು ತಿಳಿದಿದ್ದೀರಿ. ಈ ರೀತಿ ತಮ್ಮೊಂದಿಗೆ ಮಾತನಾಡಿಕೊಳ್ಳಬೇಕಾಗಿದೆ. ತಂದೆಯ ನೆನಪಿನಲ್ಲಿದ್ದು ತಮ್ಮ ಕೈಯಿಂದಲೇ ಭೋಜನವನ್ನು ತಯಾರಿಸಬೇಕಾಗಿದೆ, ಕೈಯಿಂದ ಕೆಲಸ ಮಾಡಬೇಕು ಆದರೆ ತಂದೆಯನ್ನು ನೆನಪು ಮಾಡುತ್ತಿರಬೇಕಾಗಿದೆ. ನೆನಪಿನಲ್ಲಿ ಇರುವುದರಿಂದ ನಿಮ್ಮ ಕಲ್ಯಾಣವೂ ಆಗುವುದು ಮತ್ತು ಭೋಜನವೂ ಬಹಳ ಚೆನ್ನಾಗಿರುವುದು. ನಿಮಗೆ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆ, ನೀವಿಲ್ಲಿಗೆ ಲಕ್ಷ್ಮೀ-ನಾರಾಯಣರು ಆಗುವುದಕ್ಕಾಗಿಯೇ ಬರುತ್ತೀರಿ. ನಾವೆಲ್ಲರೂ ಸೂರ್ಯವಂಶಿಯರು ಆಗುತ್ತೇವೆಂದು ಹೇಳುತ್ತಾರೆ. |
ಮಮ್ಮಾ-ಬಾಬಾ ಈ ಸಮಯದಲ್ಲಿ ಬ್ರಹ್ಮಾ-ಸರಸ್ವತಿಯಾಗುತ್ತಾರೆ, ಭವಿಷ್ಯದಲ್ಲಿ ಲಕ್ಷ್ಮೀ-ನಾರಾಯಣರಾಗುತ್ತಾರೆಂದು ನೀವು ತಿಳಿದಿದ್ದೀರಿ. ಭವಿಷ್ಯದಲ್ಲಿ ಏನಾಗುತ್ತೇವೆ ಎಂಬುದು ಬೇರೆ ಯಾರಿಗೂ ಗೊತ್ತಿಲ್ಲ. ನೆಹರು ಶರೀರ ಬಿಟ್ಟರು ಅಂದಮೇಲೆ ನಂತರ ಏನಾದರು ಎಂಬುದು ಯಾರಿಗೆ ಗೊತ್ತಿದೆ! ಒಳ್ಳೆಯದು. ಸ್ವಲ್ಪ ದಾನ ಮಾಡಿದ್ದಾರೆಂದರೆ ಇಲ್ಲಿ ಒಳ್ಳೆಯ ಕುಲದಲ್ಲಿ ಹುಟ್ಟಿರಬಹುದು. ಈಗ ನಿಮಗೆ ಸಂಪೂರ್ಣವಾಗಿದೆ ತಿಳಿದಿದೆ. ಇವರ ಹೆಸರು ಆದಿ ದೇವ ಬ್ರಹ್ಮಾ, ಆದಿ ದೇವಿ ಸರಸ್ವತಿಯಾಗಿದೆ, ಇವರೇ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ, ಇವರ ಜೊತೆ ಮಕ್ಕಳೂ ಇದ್ದಾರೆ. ಇವರೂ ಸಹ ಹೇಳುತ್ತಾರೆ - ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಇದು ಪಕ್ಕಾ ಆಗಿದೆ. ಸೂಕ್ಷ್ಮವತನದಲ್ಲಿಯೂ ಸಹ ನೀವು ನೋಡುತ್ತೀರಿ - ದೇವಿಯರ ಮಂದಿರದಲ್ಲಿಯೂ ಬಹಳ ಮೇಳಗಳಾಗುತ್ತವೆ. ಈಗ ಜಗದಂಬಾರವರಂತೂ ಒಬ್ಬರೇ ಆಗಿದ್ದಾರೆಂದರೆ ಅವರ ಮುಖ ಲಕ್ಷಣಗಳು ಒಬ್ಬರದೇ ಇರಬೇಕಲ್ಲವೆ. ಮಮ್ಮಾರವರನ್ನೂ ಸಹ ನೀವು ನೋಡುತ್ತೀರಿ, ನೀವು ಮಕ್ಕಳ ಮುಖ ಲಕ್ಷಣಗಳೂ ಇವೆ ನಂತರ ಹೆಸರನ್ನು ಅಧರ್ ಕುಮಾರಿಯೆಂದು ಇಟ್ಟಿದ್ದಾರೆ. ನಾವೇ ಮತ್ತೆ ಈ ರೀತಿಯಾಗುತ್ತೇವೆಂದು ತಿಳಿದಿದ್ದೀರಿ. ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೇವೆ, ಯುಗಲ್ ಸಹ ನಾವು ಬ್ರಹ್ಮಾಕುಮಾರ-ಕುಮಾರಿಯರು ಒಬ್ಬ ತಂದೆಯ ಮಕ್ಕಳಾಗಿದ್ದೇವೆಂದು ಹೇಳುತ್ತೀರಿ, ಇದೆಲ್ಲವೂ ನಿಮ್ಮ ನೆನಪಾರ್ಥವಾಗಿದೆ. ಅವಶ್ಯವಾಗಿ ನೀವು ಅರ್ಥ ಸಹಿತವಾಗಿ ಜ್ಞಾನವನ್ನು ತಿಳಿಸುತ್ತೀರಿ, ಇದು ದಿಲ್ವಾಡಾ ಮಂದಿರವಾಗಿದೆ ಆದರೆ ಇದೆಲ್ಲವನ್ನೂ ನೀವೇ ತಿಳಿಸಲು ಸಾಧ್ಯ. ನಾವು ರಾಜಯೋಗದಿಂದ ಶ್ರೀಮತದ ಆಧಾರದ ಮೇಲೆ ಸ್ವರ್ಗವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ಎಂದು ನೀವು ತಿಳೀದಿದ್ದೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಮತ್ತು ಯೋಗದ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ಕೇಳುವ ಸಮಯದಲ್ಲಿ ಬಹಳ ಶಾಂತ, ಏಕಾಗ್ರ ಚಿತ್ತರಾಗಿ ಕುಳಿತುಕೊಳ್ಳಬೇಕಾಗಿದೆ. ಕರ್ಮಯೋಗಿಯೂ ಆಗಬೇಕಾಗಿದೆ. |
2. ತಂದೆಯು ಮನೆಯ ಮಾರ್ಗವನ್ನು ತೋರಿಸಿದ್ದಾರೆ, ಇದನ್ನು ಎಲ್ಲರಿಗೂ ತಿಳಿಸಬೇಕಾಗಿದೆ, ಸ್ವದರ್ಶನ ಚಕ್ರಧಾರಿಯಾಗಿ ಜೊತೆ ಜೊತೆಗೆ ಜ್ಞಾನದ ಶಂಖವನ್ನು ಊದಬೇಕಾಗಿದೆ. |
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಪ್ರಪಂಚದವರು ಕೇವಲ ಹಾಡನ್ನು ಹಾಡುತ್ತಾರೆ. ಭಕ್ತಿಮಾರ್ಗದಲ್ಲಿ ನಾವೂ ಸಹ ಹಾಡುತ್ತಿದ್ದೆವೆಂದು ನೀವು ಮಕ್ಕಳು ತಿಳಿದಿದ್ದೀರಿ, ಈಗ ಅದೇ ಭೋಲಾನಾಥ ಸನ್ಮುಖದಲ್ಲಿದ್ದಾರೆ. ಭೋಲಾನಾಥನೆಂಬುದೂ ಭಕ್ತಿಮಾರ್ಗದ ಶಬ್ಧವಾಗಿದೆ, ಜ್ಞಾನಮಾರ್ಗದಲ್ಲಿ ಶಿವ ಬಾಬಾ ಎಂದಾಗಿದೆ. ಅನಾದಿ ಮಾಡಿ-ಮಾಡಲ್ಪಟ್ಟ ಡ್ರಾಮಾದ ಪ್ಲಾನನುಸಾರ ಸಂಗಮಯುಗದಲ್ಲಿ ತಂದೆಯು ಬಂದು ನಮ್ಮಿಂದ ಈ ಪುರುಷಾರ್ಥಿ ಮಾಡಿಸುತ್ತಾರೆಂದು ನೀವು ತಿಳಿದಿದ್ದೀರಿ. ಕಲ್ಪ-ಕಲ್ಪವೂ ಪುರುಷಾರ್ಥವನ್ನು ಮಾಡಿಸುತ್ತಲೇ ಬಂದಿದ್ದಾರೆ. ನೀವು ಮಕ್ಕಳು ಎಷ್ಟು ಸಮಯ ಭಕ್ತಿ ಮಾಡಿದಿರಿ ಎಂಬುದನ್ನೂ ಸಹ ಸಿದ್ಧ ಮಾಡಿ ತಿಳಿಸುತ್ತಾರೆ. ಯಾರು ಮೊಟ್ಟ ಮೊದಲು ಭಕ್ತಿಯನ್ನು ಪ್ರಾರಂಭ ಮಾಡಿದರೋ ಅವರೇ ಬಂದು ಜ್ಞಾನವನ್ನು ಪಡೆಯುತ್ತಾರೆ ನಂತರ ಸೂರ್ಯವಂಶಿಗಳಾಗುತ್ತಾರೆ. ಸತ್ಯಯುಗದಲ್ಲಿ ಕೇವಲ ಲಕ್ಷ್ಮೀ-ನಾರಾಯಣರಷ್ಟೇ ಬರುವುದಿಲ್ಲ, ಅವರ ವಂಶಾವಳಿ ಇದೆಯಲ್ಲವೆ. ಅದನ್ನು ದೈವೀ ವರ್ಣವೆಂದು ಕರೆಯಲಾಗುತ್ತದೆ. ಭಾರತವು ದೈವೀ ವರ್ಣವಾಗಿತ್ತು, ಈಗ ಆಸುರೀ ವರ್ಣವಿದೆ, ಇದು ಸಂಗಮವಾಗಿದೆ. ಈಗ ಆಸುರೀ ವರ್ಣದಿಂದ ದೈವೀ ವರ್ಣದಲ್ಲಿ ಹೋಗಬೇಕಾಗಿದೆ. ಅವಶ್ಯವಾಗಿ ಇದು ಅದೇ ಮಹಾಭಾರತದ ಯುದ್ಧವಾಗಿದೆ, ಕೇವಲ ಶಿವನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಒಂದು ಗೀತೆಯ ಖಂಡನೆ ಆಗಿರುವುದರಿಂದ ಎಲ್ಲಾ ಶಾಸ್ತ್ರಗಳ ಖಂಡನೆ ಆಗಿ ಬಿಡುತ್ತದೆ. ಮೂಲ ಮಾತೇ ಗೀತೆಯದ್ದಾಗಿದೆ, ಗೀತಾ ಪಾಠಶಾಲೆಗಳು ಅಥವಾ ಗೀತಾ ಭವನಗಳು ಎಷ್ಟೊಂದಿದೆ, ಗೀತೆಯ ಜ್ಞಾನವನ್ನು ಕೇಳುವಂತಹ ಪಾಠಶಾಲೆಯಾಗಿದೆ, ಸ್ವಯಂ ತಿಳಿಸುವಂತದ್ದಲ್ಲ. ಯಾವುದು ಆಗಿ ಹೋಗಿದೆಯೋ ಅದರ ಗಾಯನ ಅವಶ್ಯವಾಗಿ ನಡೆಯುತ್ತದೆ. ಮಕ್ಕಳಿಗೆ ಪ್ರತೀ ದಿನ ತಂದೆಯು ಬಹಳ ಪ್ರೀತಿಯಿಂದ ತಿಳಿಸುತ್ತಾರೆ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಎಂದು ಮಕ್ಕಳು ತಿಳಿದಿದ್ದೀರಿ. ಎಲ್ಲರಿಗೂ ಪ್ರೀತಿಯಿಂದ ಕಲಿಸಿಕೊಡುತ್ತಾರೆ. ತಂದೆಯೂ ಎಂದೂ ಸಹ ಕೋಪ ಮಾಡಿಕೊಳ್ಳುವುದಿಲ್ಲ, ಸದಾ ಪ್ರೀತಿಯಿಂದ ತಿಳಿಸುತ್ತಾರೆ - ಮಕ್ಕಳೇ, ನೀವು ಸತೋಪ್ರಧಾನರಾಗಿದ್ದಿರಿ ಈಗ ಮತ್ತೆ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದೀರಿ. ನೀವು ವಾಸ್ತವದಲ್ಲಿ ಭಾರತವಾಸಿಗಳು ದೇವತಾ ಧರ್ಮದವರಾಗಿದ್ದಿರಿ, ಇದನ್ನೂ ಸಹ ತಂದೆಯು ತಿಳಿಸುತ್ತಾರೆ. ಮೊಟ್ಟ ಮೊದಲು ಆಸ್ತಿಯನ್ನು ಯಾರು ಪಡೆಯಲು ಬರುತ್ತಾರೆ? ಯಾರು ಕಲ್ಪದ ಹಿಂದೆ ಪಡೆದಿದ್ದರೋ ಅವರೇ ಬಾಬಾ, ನಿನ್ನನ್ನು ಬಿಟ್ಟರೆ ನನಗೆ ಯಾರೂ ಸಹಾಯಕರಿಲ್ಲವೆಂದು ಹೇಳುತ್ತಾರೆ. ಸಂಗಮಯುಗವು ಯಾವಾಗ ಬರುತ್ತದೆಯೋ ಆಗಲೇ ಕ್ಷಮಿಸುತ್ತಾರೆ. ಈಗ ರಾವಣ ರಾಜ್ಯವಾಗಿದೆ ಮತ್ತು ರಾಮ ರಾಜ್ಯವು ಇಲ್ಲಿಯೇ ಆಗುತ್ತದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ರಾವಣ ರಾಜ್ಯವಿರುವ ಕಾರಣ ಎಲ್ಲರೂ ರಾಮ ರಾಜ್ಯವನ್ನು ಬಯಸುತ್ತಾರೆ. ನೀವು ಶಿವ ಬಾಬಾ ಎಂದು ಹೇಳಿದಾಗ ಬುದ್ಧಿಯು ನಿರಾಕಾರನ ಕಡೆಗೆ ಹೋಗುತ್ತದೆ. ನಿರಾಕಾರನ ನೆನಪೇ ಬರುತ್ತದೆ. ಆತ್ಮವೇ ತಂದೆಯನ್ನು ಕರೆಯುತ್ತದೆ. ಪರಮಾತ್ಮನು ಕುಳಿತುಕೊಂಡು ಎಲ್ಲವನ್ನು ಕೇಳುತ್ತಾನೆಂದಲ್ಲ. ಈ ಡ್ರಾಮಾ ಪ್ಲಾನನುಸಾರ ಪತಿತರನ್ನು ಪಾವನ ಮಾಡಲು ನಾನು ಈ ಶರೀರದಲ್ಲಿ ಬರುತ್ತೇನೆಂದು ತಿಳಿಸುತ್ತಾರೆ. ನಿಮ್ಮ ಕೂಗನ್ನು ಕೇಳಿ ನಾನು ಬರಲಿಲ್ಲ. ಭಕ್ತಿಯು ಯಾವಾಗ ಪೂರ್ಣವಾಗುತ್ತದೆಯೋ ಆಗ ನಾನು ಬರಲೇಬೇಕಾಗುತ್ತದೆ. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಅಂತಹ ಸಮಯ ಬರುತ್ತದೆ ಮಕ್ಕಳು ಕರೆಯಲು ಪ್ರಾರಂಭಿಸುತ್ತಾರೆ. ಯಾವಾಗ ಬರುತ್ತಾರೆ ಎಂಬುದು ಎಲ್ಲಿಯೂ ಸಹ ಬರೆದಿಲ್ಲ. ಅವರಂತೂ ಕಲ್ಪದ ಆಯಸ್ಸನ್ನು ತಪ್ಪಾಗಿ ಬರೆದು ಬಿಟ್ಟಿದ್ದಾರೆ, ಈ ಚಿತ್ರಗಳು ಮನೆ-ಮನೆಯಲ್ಲಿ ಇರಬೇಕಾಗಿದೆ. ದಿನವು ನೋಡುತ್ತಿರಬೇಕು ಮತ್ತು ನೆನಪು ಮಾಡಬೇಕು - ಇವರು ನಮ್ಮ ಬಾಬಾ, ಇವರು ನಮ್ಮ ದಾದಾ, ಇದು ನಮ್ಮ ಆಸ್ತಿಯಾಗಿದೆ ಎಂದು. ನನ್ನನ್ನು ನೆನಪು ಮಾಡಿದರೆ ನೀವು ಮಕ್ಕಳು ಸತೋಪ್ರಧಾನರೂ ಆಗುತ್ತೀರಿ, ತುಕ್ಕೂ ಸಹ ಬಿಟ್ಟು ಹೋಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಈ ಯುಕ್ತಿಯನ್ನು ತಂದೆಯೇ ತಿಳಿಸುತ್ತಾರೆ. ಈ ತಂದೆಯು (ಬ್ರಹ್ಮ) ಸಹ ನಾನು ಪುರುಷಾರ್ಥ ಮಾಡುತ್ತೇನೆಂದು ಹೇಳುತ್ತಾರೆ. ಮಕ್ಕಳು ಒಬ್ಬರಿಗೊಬ್ಬರು ಎಚ್ಚರಿಕೆಯನ್ನು ಕೊಟ್ಟುಕೊಂಡು ಉನ್ನತಿಯನ್ನು ಪಡೆಯಬೇಕಾಗಿದೆ, ಈ ಚಿತ್ರಗಳಲ್ಲಿಯೂ ಸಹ ತಿಳುವಳಿಕೆ ಬಹಳ ಚೆನ್ನಾಗಿದೆ. ಶಿವ ತಂದೆಯು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ, ಎದುರಿನಲ್ಲಿ ಮಹಾಭಾರಿ ಮಹಾಭಾರತ ಯುದ್ಧವು ನಿಂತಿದೆ. ಇಎಷ್ಟೊಂದು ಅನೇಕ ಧರ್ಮಗಳ ವಿನಾಶವಾಗಬೇಕು ಅದಕ್ಕಾಗಿ ಯುದ್ಧವು ಅವಶ್ಯಕವಾಗಿದೆ. ಈ ಮಾತುಗಳನ್ನು ಮಕ್ಕಳು ಮರೆಯಬಾರದು. ಅವಶ್ಯವಾಗಿ ಈಗ ಕಲಿಯುಗ ಘೋರ ಅಂಧಕಾರದಲ್ಲಿದೆ, ಎಷ್ಟೊಂದು ಮನುಷ್ಯರಿದ್ದಾರೆ ಅವಶ್ಯವಾಗಿ ವಿನಾಶವಾಗಲೇಬೇಕು. ಸತ್ಯಯುಗದಲ್ಲಿ ಒಂದೇ ಧರ್ಮವಿದೆ, ಅವಶ್ಯವಾಗಿ 84 ಜನ್ಮಗಳ ಚಕ್ರವನ್ನು ಅವರೇ ತೆಗೆದುಕೊಳ್ಳುತ್ತಾರೆ. ಇದಂತೂ ಸಹಜವಾಗಿದೆ, ಬಾಕಿ ಇಷ್ಟೊಂದು ಎಲ್ಲಾ ಧರ್ಮಗಳೂ ಸಹ ಅವಶ್ಯವಾಗಿ ವಿನಾಶವಾಗುವುದು ಮತ್ತೆ ಒಂದು ಧರ್ಮದ ಸ್ಥಾಪನೆಯಾಗುವುದು. ಸರ್ವರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ, ನಾವೀಗ ಈ ವಿದ್ಯೆಯನ್ನು ಭವಿಷ್ಯ 21 ಜನ್ಮಗಳಿಗಾಗಿ ಓದುತ್ತಿದ್ದೇವೆಂದು ನೀವು ಮಕ್ಕಳು ತಿಳಿದಿದ್ದೀರಿ. ಭಗವಾನುವಾಚ - ನಾನು ನಿಮಗೆ ಓದಿಸಿ 21 ಜನ್ಮಗಳಿಗೆ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಸೂರ್ಯವಂಶಿ, ಚಂದ್ರವಂಶಿ ಮನೆತನಗಳು ಅವಶ್ಯವಾಗಿ ಸ್ಥಾಪನೆಯಾಗುತ್ತದೆ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟೇ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದ ಮೇಲೆ ಈ ತಂದೆ-ತಾಯಿಯನ್ನು ಅನುಕರಣೆ ಮಾಡಿ ಎಂದು ಶಿವ ತಂದೆಯು ತಿಳಿಸುತ್ತಾರೆ, ಇವರನ್ನು ಸೂಕ್ಷ್ಮವತನದಲ್ಲಿಯೂ ನೋಡುತ್ತೀರಿ, ವೈಕುಂಠದಲ್ಲಿಯೂ ನೋಡುತ್ತೀರಿ. ತಮ್ಮನ್ನೂ ನೋಡಿಕೊಳ್ಳುತ್ತೀರಿ - ನಾವೂ ಸಹ ಮಹಾರಾಜ-ಮಹಾರಾಣಿಯಾಗುತ್ತೇವೆ, ವೈಕುಂಠದ ಸಾಕ್ಷಾತ್ಕಾರವೂ ಆಗುತ್ತದೆ. ಅವಶ್ಯವಾಗಿ ಭಾರತವು ವೈಕುಂಠವಾಗಿತ್ತು, ಶ್ರೀಕೃಷ್ಣ ಪುರಿಯಾಗಿತ್ತು ಎಂದು ಒಪ್ಪುತ್ತಾರೆ. ಇಂದು ಕಂಸ ಪುರಿಯಾಗಿದೆ, ನಾಳೆ ಕೃಷ್ಣ ಪುರಿಯಾಗುತ್ತದೆ. ರಾತ್ರಿಯ ಬದಲಾಗಿ ಹಗಲಾಗಬೇಕಾಗಿದೆ. ಇದು ಅರ್ಧಕಲ್ಪದ ಬೇಹದ್ದಿನ ದಿನ ಮತ್ತು ಅರ್ಧಕಲ್ಪದ ಬೇಹದ್ದಿನ ರಾತ್ರಿಯಾಗಿದೆ. ಅಂಧಕಾರದಲ್ಲಿ ಎಲ್ಲರೂ ಪೆಟ್ಟನ್ನು ತಿನ್ನುತ್ತಲೇ ಇರುತ್ತಾರೆ. ಬ್ರಹ್ಮನ ರಾತ್ರಿ ಸೋ ಬ್ರಾಹ್ಮಣರ ರಾತ್ರಿಯಾಗಿದೆ ಮತ್ತೆ ನೀವು ಬ್ರಾಹ್ಮಣರಿಂದ ದೇವತೆಗಳಾಗುತ್ತೀರಿ. ಸತ್ಯಯುಗದಲ್ಲಿ ಬ್ರಾಹ್ಮಣರಿರುವುದಿಲ್ಲ, ದೇವತೆಗಳಿರುತ್ತಾರೆ. |
ಭಾರತವು ಪವಿತ್ರ ರಾಜಾಸ್ಥಾನವಾಗಿತ್ತು ಮತ್ತೆ ಅಪವಿತ್ರ ರಾಜಸ್ಥಾನವಾಗಿದೆ ಎಂದು ನೀವು ಮಕ್ಕಳು ತಿಳಿದಿದ್ದೀರಿ. ಭಾರತವು ಸದಾ ರಾಜಾಸ್ಥಾನವಾಗಿಯೇ ಇರುತ್ತದೆ. ರಾಜಧಾನಿಯು ಪ್ರಾರಂಭದಿಂದ ನಡೆಯುತ್ತಲೇ ಬರುತ್ತದೆ, ಅನ್ಯ ಧರ್ಮದವರದು ಪ್ರಾರಂಭದಿಂದಲೂ ರಾಜಧಾನಿಯಿರುವುದಿಲ್ಲ. ಭಗವಂತನೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ಅವರೇ ರಾಜಯೋಗವನ್ನು ಕಲಿಸಿಕೊಡುತ್ತಾರೆ. ಅವರು ನಿರಾಕಾರ, ಜ್ಞಾನ ಸಾಗರ, ಸುಖ ಸಾಗರ.... ಆಗಿದ್ದಾರೆ. ಅವರಿಂದ ನಾವು ಆಸ್ತಿಯನ್ನು ಪಡೆಯುತ್ತಿದ್ದೇವೆಂದು ತಿಳಿದಿದ್ದೀರಿ. ಅವಶ್ಯವಾಗಿ ನಮ್ಮ ಪುರುಷಾರ್ಥದಲ್ಲಿಯೇ ನಿಧಾನತೆಯಿದೆ. ಎಷ್ಟು ಪುರುಷಾರ್ಥ ಮಾಡುತ್ತೀರೋ ಅಷ್ಟು ಮಾರ್ಗ ತೋರಿಸುತ್ತೀರಿ. ನನ್ನನ್ನು ನೆನಪು ಮಾಡುತ್ತೀರೆಂದರೆ ನೀವು ಪತಿತರಿಂದ ಪಾವನರಾಗಿ, ಪಾವನ ಪ್ರಪಂಚದ ಮಾಲೀಕರಾಗುತ್ತೀರಿ, ಇದು ಎಷ್ಟು ಸಹಜವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಒಂದುವೇಳೆ ಲೌಕಿಕ ತಂದೆ-ತಾಯಿಯು ಜ್ಞಾನದಲ್ಲಿ ಇದ್ದಾರೆಂದರೆ ಮಕ್ಕಳನ್ನೂ ಸಹ ತಮ್ಮ ಸಮಾನ ಮಾಡಿಕೊಳ್ಳಬೇಕು. ತಾಯಿ-ತಂದೆ ಸತ್ಯವಾದ ಸಂಪಾದನೆ ಮಾಡುತ್ತಾರೆಂದ ಮೇಲೆ ಸತ್ಯವಾದ ಸಂಪಾದನೆಯನ್ನು ಮಾಡಿಸಬೇಕಲ್ಲವೆ. ಕೆಲವು ಮಕ್ಕಳು ಬಹಳ ಒಳ್ಳೆಯವರಿರುತ್ತಾರೆ, ನಾವು ಈ ಆತ್ಮಿಕ ವಿದ್ಯೆಯನ್ನು ಓದಿ ಮನೆ-ಮನೆಗೆ ಸಂದೇಶ ಕೊಡುತ್ತೇವೆಂದು ಹೇಳುತ್ತಾರೆ. ತಂದೆಯೂ ಸಹ ತಿಳಿಸುತ್ತಾರೆ - ನಾನು ಪೈಗಂಬರ್ ಮತ್ತು ಮೆಸೆಂಜರ್ ಆಗಿದ್ದೇನೆ, ನಿಮಗೂ ಸಹ ಸಂದೇಶ ಕೊಡುತ್ತೇನೆ - ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಎಂದು. ಅನ್ಯ ಧರ್ಮ ಸ್ಥಾಪಕರು ಕೇವಲ ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಹಿಂತಿರುಗಿ ಹೋಗಬೇಕೆನ್ನುವ ಸಂದೇಶವನ್ನು ಎಲ್ಲರಿಗೂ ನಾನು ಕೊಡುತ್ತೇನೆ. ಈ ಪ್ರಪಂಚವು ನೀವಿರಲು ಯೋಗ್ಯವಿಲ್ಲ. ನನ್ನನ್ನು ನೆನಪು ಮಾಡಿದರೆ ಪಾವನರಾಗಿ ಬಿಡುತ್ತೀರಿ. ನೀವು ಪಾವನರಾಗಿದ್ದಿರಿ ನಂತರ ರಾವಣನು ಪತಿತರನ್ನಾಗಿ ಮಾಡಿದನು ಪುನಃ ನಾನು ಪಾವನರನ್ನಾಗಿ ಮಾಡಲು ಬಂದಿದ್ದೇನೆ. ಸ್ವಲ್ಪ ಸಮಯದ ನಂತರ ಬಾಂಬುಗಳು ಬೀಳುತ್ತವೆಯೆಂದರೆ ಅದೇ ಮಹಾಭಾರತ ಯುದ್ಧವಾಗಿದೆ ಎಂದು ತಿಳಿಯುತ್ತಾರೆ. ಅವಶ್ಯವಾಗಿ ಭಗವಂತನು ಇದ್ದಾನೆಂದು ತಿಳಿಯುತ್ತಾರೆ ಆದರೆ ಗೀತೆಯ ಭಗವಂತನು ಕೃಷ್ಣನೆಂದು ತಿಳಿದಿದ್ದಾರೆ. ಎಷ್ಟೊಂದು ತಬ್ಬಿಬ್ಬಾಗಿದ್ದಾರೆ! ತಬ್ಬಿಬ್ಬಾಗದಿದ್ದರೆ ಭಗವಂತನು ಬರುವ ಅವಶ್ಯಕತೆಯೇ ಇಲ್ಲ. ಭಕ್ತಿಮಾರ್ಗವು ಮರೆತು ಮರೆಸುವಂತಹ ಆಟವೆಂದು ಹೇಳುತ್ತಾರೆ. ನನ್ನನ್ನು ನೆನಪು ಮಾಡಿದರೆ ಎಲ್ಲಾ ತಪ್ಪುಗಳು ಭಸ್ಮವಾಗಿ ಬಿಡುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಮೊದಲು ನೀವು ನಿಮ್ಮನ್ನು ದೇಹವೆಂದು ತಿಳಿದಿದ್ದಿರಿ, ಈಗ ತಮ್ಮನ್ನು ದೇಹೀ ಎಂದು ತಿಳಿಯುತ್ತೀರಿ. ಈ ಎಚ್ಚರಿಕೆಯನ್ನು ತಂದೆಯೇ ಕೊಡುತ್ತಾರೆ - ಮಕ್ಕಳೇ ದೇಹೀ-ಅಭಿಮಾನಿಗಳಾಗಿ. ಇಲ್ಲಿ ನೀವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಲ್ಲವೆ. ಅಲ್ಲಿ ಸೇವಾಕೇಂದ್ರದಲ್ಲಿ ಮಕ್ಕಳು ಕುಳಿತು ಶಿವ ತಂದೆಯು ಹೀಗೆ ತಿಳಿಸುತ್ತಾರೆಂದು ಹೇಳುತ್ತಾರೆ, ಇಲ್ಲಂತೂ ನಾನು ಕುಳಿತು ಡೈರೆಕ್ಟ್ ಆತ್ಮಗಳೊಂದಿಗೆ ಮಾತನಾಡುತ್ತೇನೆ. ತಂದೆಯು ಇವರ ಮೂಲಕ ನಮಗೆ ತಿಳಿಸುತ್ತಿದ್ದಾರೆಂದು ನೀವು ಮಕ್ಕಳು ತಿಳಿದಿದ್ದೀರಿ. ಇದಂತೂ ಬಹಳ ದೊಡ್ಡ ಮೇಳವಾಗಿದೆ. ತಂದೆಯು ತಿಳಿಸುತ್ತಾರೆ - ನಿರಂತರವಾಗಿ ನನ್ನನ್ನು ನೆನಪು ಮಾಡಿ. ತಂದೆಯಿಂದ ನಾವು ಸ್ವರ್ಗದ ಆಸ್ತಿಯನ್ನು ಪಡೆಯಬೇಕಾಗಿದೆ. ತಂದೆ ಮತ್ತು ಸ್ವರ್ಗವನ್ನು ನೆನಪು ಮಾಡಬೇಕು, ಯಾವುದೇ ತಪ್ಪನ್ನು ಮಾಡಬಾರದು. ಒಂದುವೇಳೆ ವಿಕರ್ಮ ಮಾಡಿದರೆ ನೂರು ಪಟ್ಟು ಆಗಿ ಬಿಡುತ್ತದೆ. ವಿಕರ್ಮ ಮಾಡಿಸುವುದು ಮಾಯೆಯಾಗಿದೆ, ಅದರ ಮೇಲೆ ವಿಜಯ ಗಳಿಸಬೇಕು ಆದ್ದರಿಂದ ಹನುಮಂತ, ಮಹಾವೀರನ ಕಥೆಯಿದೆ, ನೀವು ಹನುಮಂತ ಮಹಾವೀರರಾಗಿದ್ದೀರಿ. ನಾವು ತಂದೆಯ ಮಗುವಾಗಿದ್ದೇವೆ, ಮಾಯೆಯಿಂದ ಸೋಲಲು ಸಾಧ್ಯವಿಲ್ಲ. ನಾವು ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಸತೋಪ್ರಧಾನ, ವಿಕರ್ಮಾಜೀತರಾಗಿ ಬಿಡುತ್ತೇವೆ. ಇಲ್ಲದಿದ್ದರೆ ಪದವಿ ಭ್ರಷ್ಟವಾಗುವುದು, ಪುರುಷಾರ್ಥಿ ಮಕ್ಕಳು ಯಾರಿರುತ್ತಾರೆಯೋ ಅವರ ತಮ್ಮ ಜೀವನದ ಮೇಲೆ ಅನುಕಂಪ ತೋರಿಸಿಕೊಳ್ಳುತ್ತಾರೆ. ಏನೇ ಆಗಲಿ, ನೆನಪಿನ ಯಾತ್ರೆಯಲ್ಲಿಯೇ ಇರುತ್ತೇವೆ, ಅಚಲ-ಅಡೋಲ, ಸ್ಥಿರವಾಗಿರುತ್ತೇವೆಂದು ಹೇಳುತ್ತಾರೆ. ವಿನಾಶವಂತೂ ಆಗಲೇಬೇಕಾಗಿದೆ. ಎಲ್ಲರ ಚಿಕ್ಕಪ್ಪ, ಕಾಕಾ, ಮಾವ, ಗುರು-ಗೋಸಾಯಿ ಎಲ್ಲರೂ ಸಮಾಪ್ತಿಯಾಗಲೇಬೇಕು. ನಾನು ನಿಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವವನಾಗಿದ್ದೇನೆಂದು ಸದ್ಗುರು ಹೇಳುತ್ತಾರೆ. ಮನುಷ್ಯರಂತೂ ಅವಶ್ಯವಾಗಿ ಅಂಧಕಾರದಲ್ಲಿದ್ದಾರೆ, ಶಿವ ತಂದೆಯು ನಮ್ಮನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆಂದು ನೀವು ತಿಳಿದಿದ್ದೀರಿ. ಕಾಲ ಕಬಳಿಸಿತೆಂದು ಹೇಳುತ್ತೀರಲ್ಲವೆ ಆದರೆ ನಾನು ನಿಮ್ಮನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ, ಆತ್ಮವು ಶರೀರವನ್ನು ಬಿಟ್ಟು ಹೋಗುತ್ತದೆ. ಮೃತ್ಯುವು ತೆಗೆದುಕೊಂಡು ಹೋಗುವುದಿಲ್ಲ, ಆತ್ಮವೇ ಶರೀರವನ್ನು ಬಿಟ್ಟು ಬರಬೇಕಾಗುತ್ತದೆ. ನಿಮ್ಮನ್ನು ಹಿಂತಿರುಗಿ ಕರೆದುಕೊಂಡು ಹೋಗಲು ಸ್ವಯಂ ನಾನೇ ಬಂದಿದ್ದೇನೆ. ತಂದೆಯ ಯಾರನ್ನಾದರೂ ಸಾಯಿಸಲು ಬರುತ್ತಾರೆಯೇ? ಇಲ್ಲ. ನೀವೀಗ ಹಳೆಯ ಶರೀರವನ್ನು ಬಿಡಬೇಕಾಗಿದೆ. ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಬೇಕಾಗಿದೆ. ಈ ಪಂಚತತ್ವಗಳೂ ತಮೋಪ್ರಧಾನವಾಗಿದೆ ಆದ್ದರಿಂದಲೇ ಶರೀರವೂ ಸಹ ಹಾಗೆಯೇ ಇದೆ. ಅಲ್ಲಿ ಸತೋಪ್ರಧಾನ ತತ್ವಗಳಿರುವುದರಿಂದ ನಿಮ್ಮ ಶರೀರವೂ ಸಹ ಸುಂದರವಾಗಿರುತ್ತದೆ. ನಾನು ಮತ್ತೆ ಸತ್ಯಯುಗದ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ನೀವೇ 84 ಜನ್ಮಗಳನ್ನು ಭೋಗಿಸುತ್ತೀರಿ, ನೀವು ನಿಮ್ಮ ಧರ್ಮವನ್ನು ಮರೆತು ಬಿಟ್ಟಿದ್ದೀರಿ, ಮತ್ತ್ಯಾರೂ ಸಹ ತಮ್ಮ ಧರ್ಮವನ್ನು ಮರೆತಿಲ್ಲ. ವಾಸ್ತವದಲ್ಲಿ ನಾವು ದೇವಿ-ದೇವತಾ ಧರ್ಮದವರು ಅಷ್ಟು ಶ್ರೇಷ್ಠರು ನಂತರ ಹೇಗೆ ಕನಿಷ್ಟರಾದೆವು ಎಂದು ನೀವು ತಿಳಿದಿದ್ದೀರಿ. ತಂದೆಯು ಕಲ್ಪ-ಕಲ್ಪವೂ ನಿಮಗೇ ತಿಳಿಸುತ್ತಾರೆ, ನೀವು ಮತ್ತೆ ಅನ್ಯರಿಗೆ ತಿಳಿಸುತ್ತಿರುತ್ತೀರಿ. ಈಗ 84 ಜನ್ಮಗಳ ಚಕ್ರವು ಸಂಪೂರ್ಣವಾಗಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ. ಸ್ವರ್ಗದ ಮಾಲೀಕರಾಗಲು ತಮ್ಮನ್ನು ತಾವು ಯೋಗ್ಯರನ್ನಾಗಿ ಮಾಡಿಕೊಳ್ಳಬೇಕಾಗಿದೆ, ಅದೂ ಸಹ ನೆನಪಿನಿಂದಲೇ ಆಗಲು ಸಾಧ್ಯ. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿ- ಬಾಬಾ, ನೀವು ಹೇಗೆ ಬರುತ್ತೀರಿ ಇದು ಬಹಳ ಆಶ್ಚರ್ಯಕರವಾಗಿದೆ, ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ ಆದರೆ ಈಗ ನಾವು ತಿಳಿದಿದ್ದೇವೆ - ಅವರೇ ಎದುರಿಗೆ ಮಾತನಾಡುತ್ತಿದ್ದಾರೆ. ಅವೆಲ್ಲವೂ ಹೇಳಿ-ಕೇಳಿರುವಂತಹ ಭಕ್ತಿಯ ಮಾತುಗಳಾಗಿವೆ. ಈಗಂತೂ ನಾವೆಲ್ಲಾ ಆತ್ಮಗಳಿಗೆ ತಂದೆಯು ಸಿಕ್ಕಿದ್ದಾರೆ, ಆತ್ಮನಿಗೆ ತಂದೆಯು ಸಿಕ್ಕಿದ್ದಾರೆಂದರೆ ಬಂದು ಅವರನ್ನು ಪ್ರೀತಿಯಿಂದ ಮಿಲನ ಮಾಡುತ್ತಾರೆ. ಮಕ್ಕಳು ತಂದೆಯನ್ನು ಬಹಳ ಪ್ರೀತಿಯಿಂದ ಮಿಲನ ಮಾಡುತ್ತಾರೆ, ಇಲ್ಲಂತೂ ಆ ನಿರಾಕಾರ ತಂದೆಯು ಗುಪ್ತವಾಗಿದ್ದಾರೆ ಆದ್ದರಿಂದಲೇ ನೀವು ಯಾವಾಗ ಈ ಸಾಕಾರ ತಂದೆಯನ್ನು ಮಿಲನ ಮಾಡುತ್ತೀರೆಂದರೂ ಶಿವ ತಂದೆಯನ್ನು ನೆನಪು ಮಾಡುತ್ತಾ ಮಿಲನ ಮಾಡಿ. ಮನುಷ್ಯರಂತೂ ಸ್ವಲ್ಪವೂ ತಿಳಿದಿಲ್ಲ. ನಿಮ್ಮಲ್ಲಿಯೂ ಸಹ ಯಾರನ್ನು ತಿಳಿದಿದ್ದಾರೆಯೋ ಅವರು ನನ್ನವರಾಗಿ ಮತ್ತೆ ಮರೆತು ಬಿಡುತ್ತಾರೆ, ದೇಹಾಭಿಮಾನದಲ್ಲಿ ಬಂದು ಬಿಡುತ್ತಾರೆ. ಬಾಬಾ, ನಾನು ನಿಮ್ಮವನಾಗಿದ್ದೇನೆಂದು ಪ್ರತಿಜ್ಞೆಯನ್ನೂ ಮಾಡುತ್ತಾರೆ. ಪುರುಷರಾಗಲಿ ಅಥವಾ ಸ್ತ್ರೀಯಾಗಲಿ ಎರಡೂ ಆತ್ಮಗಳೂ ಹೇಳುತ್ತಾರೆ ಆದರೆ ಪುರುಷನ ಶರೀರದಲ್ಲಿದ್ದರೆ ನಾನು ನಿನ್ನವನಾಗಿದ್ದೇನೆಂದು ಹೇಳುತ್ತಾರೆ, ಸ್ತ್ರೀಯಾಗಿದ್ದರೆ ನಾನು ನಿನ್ನವಳಾಗಿದ್ದೇನೆಂದು ಹೇಳುತ್ತಾರೆ, ಬಾಬಾ, ನಾನು ನಿಮ್ಮಿಂದ ಸಂಪೂರ್ಣ ಆಸ್ತಿಯನ್ನೂ ಪಡೆಯುತ್ತೇನೆ, ನೆನಪೂ ಮಾಡುತ್ತೇನೆ. ನೆನಪಿನ ವಿನಃ ತುಕ್ಕು ಬಿಟ್ಟು ಹೋಗಲು ಸಾಧ್ಯವಿಲ್ಲ. ತಮೋಪ್ರಧಾನರಿಂದ ಸತೋಪ್ರಧಾನರಾಗಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ನಿಮಗೆ ಅಖಂಡ, ಅಟಲ, ಸುಖ-ಶಾಂತಿ, ಸಂಪತ್ತಿನ 21 ಜನ್ಮಗಳ ರಾಜ್ಯ ಸಿಗುತ್ತದೆ. ಸ್ವರ್ಗದ ರಚಯಿತ ತಂದೆಯು ಅವಶ್ಯವಾಗಿ ತಮ್ಮ ಆಸ್ತಿಯನ್ನು ಕೊಡುತ್ತಾರೆ. ಗಾಯನವೂ ಇದೆ, ಪರಬ್ರಹ್ಮದಲ್ಲಿರುವ ಪರಮಪಿತ ಪರಮಾತ್ಮನನ್ನು ಪಡೆಯುವ ಇಚ್ಛೆಯಿತ್ತು, ಅವರಂತೂ ಒಂದೇ ಬಾರಿ ಬರುತ್ತಾರೆ. ಇದು ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಕೆಲವರಂತೂ ತಿಳಿದುಕೊಳ್ಳುವುದೇ ಇಲ್ಲ, ಸ್ವಲ್ಪ ದೊಡ್ಡದಾದ ಯುದ್ಧ ನಡೆಯುತ್ತದೆ ಎಂದರೆ ಮುಂದೆ ಹೋದಂತೆ ಕಣ್ಣು ತೆರೆಯುತ್ತದೆ. ವಾಸ್ತವದಲ್ಲಿ ಈ ಯಜ್ಞವೂ ರಚನೆಯಾಗಿದೆ ಮತ್ತು ಯುದ್ಧವೂ ಇದೆ. ಈ ಯಜ್ಞದ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ರುದ್ರ ಜ್ಞಾನ ಯಜ್ಞವು ವಿನಾಶಕ್ಕಾಗಿಯೇ ರಚನೆಯಾಗಿದೆ, ವಿನಾಶವಾಗದೇ ಇರಲಿ ಮತು ಶಾಂತಿಯಿರಲಿ ಎಂದು ಅವರು ಯಜ್ಞಗಳನ್ನು ರಚಿಸುತ್ತಾರೆ. ಈ ಯಜ್ಞವು ಪುನಃ ರಚನೆಯಾಗುತ್ತದೆ, ವಿನಾಶದ ನಂತರ ಏನಾಗುವುದು ಎಂದು ಅವರಿಗೆ ಗೊತ್ತಿಲ್ಲ. ಈಗ ನೀವು ಮಕ್ಕಳು ಇಡೀ ಪ್ರಪಂಚದ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದೀರಿ, ಎಲ್ಲರ ಬೇಹದ್ದಿನ ಜನ್ಮಗಳ ಕಥೆಯನ್ನೂ ತಿಳಿದಿದ್ದೀರಿ. ನಾವು ಪರಮಪಿತ ಪರಮಾತ್ಮನ ಜೀವನದ ಕಥೆಯನ್ನು ತಿಳಿಸುತ್ತೇವೆ ಎಂದಲ್ಲ, ಎಲ್ಲರೂ ಪರಮಾತ್ಮನನ್ನೇ ಕರೆಯುತ್ತಾರಲ್ಲವೆ. ಕ್ಷಣ-ಕ್ಷಣವೂ ಅವರನ್ನೇ ನೆನಪು ಮಾಡುತ್ತಾರೆ. ಭಗವಂತನು ಮಗುವನ್ನು ಕೊಟ್ಟನು, ಇದನ್ನು ಮಾಡಿದನು... ಎಂದು ಹೇಳುತ್ತಾರೆ. ಯಾರ ವಸ್ತುವಾಗಿತ್ತೋ ಅದನ್ನು ಹಿಂತಿರುಗಿ ತೆಗೆದುಕೊಂಡನೆಂದು ಕೆಲವರು ಹೇಳುತ್ತಾರೆ. ಅಂತಹ ತಿಳುವಳಿಕೆಯುಳ್ಳ ಪುರುಷರೂ ಇರುತ್ತಾರೆ, ಅನೇಕ ಪ್ರಕಾರದ ಮನುಷ್ಯರಿದ್ದಾರೆ. ಈಗ ನಿಮಗೆ ತಂದೆಯು ಸಿಕ್ಕಿದ್ದಾರೆಂದರೆ ತಂದೆಯನ್ನೇ ನೆನಪು ಮಾಡಬೇಕು, ಇದರಿಂದಲೇ ಸಂಪಾದನೆಯಾಗುವುದು. ನೀವು ವಿಷ್ಣು ಪುರಿಯ ಮಾಲೀಕರಾಗಿ ಬಿಡುವಿರಿ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೂ ಎಲ್ಲವನ್ನೂ ನೀವು ತಿಳಿದಿದ್ದೀರಿ. ತಂದೆಯ ಬುದ್ಧಿಯಲ್ಲಿ ಏನು ವಿಚಾರವಿದೆಯೋ ಅದೇ ರೀತಿ ನಿಮ್ಮ ಬುದ್ಧಿಯಲ್ಲಿಯೂ ಇದೆ ಆದ್ದರಿಂದಲೇ ಅವರನ್ನು ಜ್ಞಾನ ಸಾಗರ, ಜ್ಞಾನಪೂರ್ಣನೆಂದು ಹೇಳಲಾಗುತ್ತದೆ. ಈಗ ನೀವು ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೀವು ಮಕ್ಕಳು ಅಚಲ, ಸ್ಥಿರವಾಗಿರಬೇಕಾಗಿದೆ, ಮಾಯೆಯು ಘಳಿಗೆ-ಘಳಿಗೆಗೆ ಬಂದು ಅಲುಗಾಡಿಸುತ್ತಲೇ ಇರುತ್ತದೆಯೆಂದಲ್ಲ. ಎಂದೂ ಸಹ ಮುಟ್ಟಿದರೆ ಮುನಿ ಆಗಬಾರದು. ತಂದೆಯನ್ನು ನೆನಪು ಮಾಡದೇ ಇರುವುದರಿಂದ ಬಾಡಿ ಹೋಗುತ್ತಾರೆ. ನೆನಪು ಮಾಡುವ ಪುರುಷಾರ್ಥವನ್ನು ನೀವು ಮಾಡುತ್ತಿದ್ದೀರಿ. ಸಮಯವು ಸಮೀಪ ಬಂದಿತೆಂದರೆ ಆಗ ನಿಮಗೆ ನಿಮ್ಮ ಪುರುಷಾರ್ಥವು ಸಂಪೂರ್ಣವಾಯಿತು, ಅಂತಿಮ ಸಮಯವು ಬಂದು ಬಿಟ್ಟಿತೆಂದು ತಿಳಿಯುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಆತ್ಮಿಕ ವಿದ್ಯೆಯನ್ನು ಓದಿ ಸತ್ಯ ಸಂಪಾದನೆಯನ್ನು ಮಾಡಿಕೊಳ್ಳಬೇಕು ಮತ್ತು ಅನ್ಯರಿಗೆ ಮಾಡಿಸಬೇಕಾಗಿದೆ. ಈಗ ಯಾವುದೇ ವಿಕರ್ಮ ಮಾಡಬಾರದು. |
2. ಮುಂಜಾನೆ ಎದ್ದು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ, ಚಿಕ್ಕ-ಪುಟ್ಟ ಮಾತುಗಳಲ್ಲಿ ಮುಟ್ಟಿದರೆ ಮುನಿಯಾಗಬಾರದು. ಸ್ಥಿತಿಯನ್ನು ಅಚಲ-ಅಡೋಲವಾಗಿ ಇಟ್ಟುಕೊಳ್ಳಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯನ್ನು ಯಾರು ಹೇಳಿದರು? ಯಾವ ಮಕ್ಕಳಿಗೆ ಹೇಳಿದರು ಎಂದು ಮಕ್ಕಳು ತಿಳಿದಿದ್ದೀರಿ. ಯಾರ ಆತ್ಮವು ಓಂ ಶಾಂತಿ ಎಂದು ಹೇಳಿತು? ಪರಮಪಿತ ಪರಮಾತ್ಮ ಎಂದು ಮಕ್ಕಳು ತಿಳಿದಿದ್ದಾರೆ. ಯಾವ ಮನುಷ್ಯಾತ್ಮರೂ ಈ ಮಾತುಗಳನ್ನು ಹೇಳಲಿಲ್ಲ, ಪರಮಪಿತ ಪರಮಾತ್ಮ ಶಿವನ ಆತ್ಮನೇ ಹೇಳಿದರೆಂದು ತಿಳಿದಿದ್ದೀರಿ. ಅವರು ಎಲ್ಲರ ತಂದೆ ಶ್ರೇ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ, ಈಗ ಗೀತೆಯಲ್ಲಿ ಕೇಳಿದಿರಲ್ಲವೆ. ಭಾರತದ ಮೇಲೆ ಮಾಯೆಯ ನೆರಳು ಬಿದ್ದಿದೆ. ಎಲ್ಲರೂ ಪತಿತರಾಗಿ ಬಿಟ್ಟಿದ್ದಾರೆ, ಆದ್ದರಿಂದಲೇ ಪತಿತ-ಪಾವನ ಪುನಃ ಬಾ ಎಂದು ಕರೆಯುತ್ತಾರೆ. ಆತ್ಮವೇ ತನ್ನ ತಂದೆಯನ್ನು ಕರೆಯುತ್ತದೆ, ಯಾರನ್ನು ಭಗವಂತನೆಂದು ಹೇಳುತ್ತಾರೆ. ಅವರನ್ನೇ ಪತಿತ-ಪಾವನ ಎಂದೂ ಹೇಳಲಾಗುತ್ತದೆ, ಒಬ್ಬರದೇ ಮಹಿಮೆಯೂ ಆಗುವುದು. ಅವರೇ ಎಲ್ಲಾ ಆತ್ಮಗಳ ಬೇಹದ್ದಿನ ತಂದೆಯಾಗಿದ್ದಾರೆ. ಇಲ್ಲಿ ಎಲ್ಲರೂ ಪತಿತರಾಗಿದ್ದಾರೆ ಆದ್ದರಿಂದ ಹೇ ಪರಮಪಿತ ಪರಮಾತ್ಮ ಎಂದು ಕರೆಯುತ್ತಾರೆ. ಅವರು ಜ್ಞಾನ ಸಾಗರ, ಪತಿತ-ಪಾವನನೂ ಆಗಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ ಏಕೆಂದರೆ ಜ್ಞಾನ ಸಾಗರನೂ ಆಗಿದ್ದಾರೆ, ಸರ್ವಶಕ್ತಿವಂತನೂ ಆಗಿದ್ದಾರೆ. ಎಲ್ಲಾ ವೇದಶಾಸ್ತ್ರ, ಗ್ರಂಥಗಳನ್ನು ತಿಳಿದಿದ್ದಾರೆ, ಅವರನ್ನು ನಾಲೆಡ್ಜ್ ಫುಲ್ ಎಂದೂ ಕರೆಯುತ್ತಾರೆ ಅಂದಮೇಲೆ ಈ ಸಮಯದಲ್ಲಿ ಎಲ್ಲರೂ ಪಾರಲೌಕಿಕ ತಂದೆಯನ್ನು ಕರೆಯುತ್ತಾರೆ ಏಕೆಂದರೆ ಎಲ್ಲರೂ ದುಃಖಿಗಳಾಗಿದ್ದಾರೆ, ಗಾಡ್ಫಾದರ್ ಎನ್ನುತ್ತಾರೆ ಆದರೆ ಹೆಸರಂತೂ ಬೇಕಲ್ಲವೆ. ಅವರ ಹೆಸರಂತೂ ಶಿವ ಬಾಬಾ ಎಂದು ಗಾಯನ ಮಾಡಲ್ಪಟ್ಟಿದೆ. ಅವರೇ ಶ್ರೇಷ್ಠಾತಿ ಶ್ರೇಷ್ಠ ಜ್ಞಾನ ಸಾಗರ, ಸುಖದ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಈ ಮನುಷ್ಯಾತ್ಮನು ತಮ್ಮ ತಂದೆಯ ಮಹಿಮೆಯನ್ನೇ ಮಾಡುತ್ತಾರೆ, ಶ್ರೇಷ್ಠಾತಿ ಶ್ರೇಷ್ಠನಾದ ಪರಮಪಿತ ಪರಮಾತ್ಮ ಅವರು ಪರಮ ಆಗಿದ್ದಾರೆ, ಪತಿತ ಮನುಷ್ಯರು ಅವರನ್ನೇ ನೆನಪು ಮಾಡುತ್ತಾರೆ. ಸತ್ಯಯುಗವು ಯಾವಾಗ ಪಾವನವಾಗಿತ್ತೋ ಆಗ ದೇವಿ-ದೇವತೆಗಳ ರಾಜ್ಯವಿತ್ತು ಆಗ ಯಾರೂ ಪತಿತರಿರಲಿಲ್ಲ. ಇದಂತೂ ತಮೋಪ್ರಧಾನ ಪ್ರಪಂಚ ಅರ್ಥಾತ್ ಈ ಪ್ರಪಂಚದಲ್ಲಿ ಎಲ್ಲರೂ ಪಾಪಾತ್ಮರೇ ಆಗಿದ್ದಾರೆ, ಇದೇ ಭಾರತವು ಪಾವನವಾಗಿತ್ತು, ಇದೇ ಭಾರತ ಈಗ ಪತಿತವಾಗಿದೆ. ಈ ಕಲಿಯುಗದಲ್ಲಿ ಎಲ್ಲರೂ ಪತಿತರೇ ಆಗಿದ್ದಾರೆ. ಜ್ಞಾನ ಸಾಗರ, ಪತಿತ-ಪಾವನ, ಪರಮಪಿತ ಪರಮಾತ್ಮ ಪರಮಧಾಮದಿಂದ ಬಂದು ನಮಗೆ ಬ್ರಹ್ಮನ ಮೂಲಕ ಓದಿಸುತ್ತಾರೆ. ಅವಶ್ಯವಾಗಿ ಅವರಿಗೆ ಒಂದು ಶರೀರ ಬೇಕಲ್ಲವೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ಜ್ಞಾನ ಸಾಗರನಾದ ಇವರಿಗೆ ಎಲ್ಲಾ ಅಧಿಕಾರವೂ ಇದೆ ಮತ್ತು ಇವರು ಎಲ್ಲವನ್ನೂ ತಿಳಿದಿದ್ದಾರೆ. ಭಾರತದಲ್ಲಿ ವಿಷ್ಣುವಿನ ನಾಭಿಯಿಂದ ಬ್ರಹ್ಮನನ್ನು ಮತ್ತು ಬ್ರಹ್ಮನ ಕೈಯಲ್ಲಿ ಶಾಸ್ತ್ರಗಳನ್ನು ಕೊಟ್ಟಿದ್ದಾರೆ. ಈ ಚಿತ್ರವನ್ನು ತೋರಿಸುತ್ತಾರೆ. ವಿಷ್ಣು ಯಾವ ಶಾಸ್ತ್ರದ ಸಾರವನ್ನೂ ತಿಳಿಸುವುದಿಲ್ಲ. ಪರಮಪಿತ ಪರಮಾತ್ಮನು ಜ್ಞಾನ ಸಾಗರನೇ ಬ್ರಹ್ಮಾರವರ ಮೂಲಕ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರನ್ನೂ ಸಹ ಇವರೇ ರಚಿಸುತ್ತಾರೆ. ಬ್ರಹ್ಮಾ ಅಥವಾ ವಿಷ್ಣುವನ್ನು ಜ್ಞಾನ ಸಾಗರನೆಂದು ಕರೆಯಲು ಸಾಧ್ಯವಿಲ್ಲ. ಶಂಕರನ ಮಾತನ್ನು ಬಿಟ್ಟು ಬಿಡಿ. ಈಗ ಜ್ಞಾನ ಸಾಗರ ಯಾರಾಗಿದ್ದಾರೆ? ನಿರಾಕಾರ ಶ್ರೇಷ್ಠಾತಿ ಶ್ರೇಷ್ಠ ಪರಮಾತ್ಮನೇ ಪತಿತ-ಪಾವನನಾಗಿದ್ದಾರೆ. ಈ ಮಹಿಮೆಯು ಆ ಪರಮಪಿತ ಪರಮಾತ್ಮನದೇ ಆಗಿದೆ. ಇಲ್ಲಿಯೂ ಸಹ ಆತ್ಮನದೇ ಮಹಿಮೆಯಾಗುತ್ತದೆ, ಆತ್ಮನೇ ಶರೀರದ ಮೂಲಕ ನಾನು ಪ್ರೆಸಿಡೆಂಟ್ ಆಗಿದ್ದೇನೆ, ನಾನು ಬ್ಯಾರಿಸ್ಟರ್ ಆಗಿದ್ದೇನೆ, ನಾನು ಇಂತಹ ಮಿನಿಸ್ಟರ್ ಆಗಿದ್ದೇನೆ.... ಎಂದು ಆತ್ಮವೇ ಶರೀರದ ಮೂಲಕ ಹೇಳುತ್ತದೆ, ಪದವಿಯನ್ನು ಪಡೆಯುತ್ತದೆ. ಒಂದು ಶರೀರವನ್ನು ಬಿಟ್ಟು ಇನ್ನೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವು ಶರೀರದ ಮೂಲಕ ಹೇಳುತ್ತದೆ. ಮಕ್ಕಳೇ, ಆತ್ಮಾಭಿಮಾನಿಗಳಾಗಿ ಎಂದು ಈ ಸಮಯದಲ್ಲಿ ಬಂದು ತಂದೆಯು ತಿಳಿಸುತ್ತಾರೆ. ಈ ಪಾಠವನ್ನೇ ಹೇಳಿಕೊಡುವುದಕ್ಕಾಗಿಯೇ ನಾನು ನಿಮ್ಮ ತಂದೆಯು ಬಂದಿದ್ದೇನೆ. ಮನುಷ್ಯರಿಂದ ದೇವತೆ, ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುವಂತಹ ಪಾಠಶಾಲೆಯು ಇದಾಗಿದೆ. ಹೇ ಪರಮಪಿತ ಪರಮಾತ್ಮ, ನಿರಾಕಾರಿ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ರೂಪ ಬದಲಾಯಿಸಿಕೊಂಡು ಸಾಕಾರಿ ಪ್ರಪಂಚಕ್ಕೆ ಬನ್ನಿ ಎಂದು ಕರೆಯುತ್ತಾರೆ. ನೀವು ನಿರಾಕಾರಿ ಆತ್ಮಗಳು ಶರೀರದಲ್ಲಿ ಬರುತ್ತೀರೆಂದ ಮೇಲೆ ಗರ್ಭದಲ್ಲಿ ಬರುತ್ತೀರಿ ಮತ್ತು ಪುನರ್ಜನ್ಮವನ್ನೂ ಪಡೆಯುತ್ತೀರಿ. ನೀವು 84 ಜನ್ಮಗಳನ್ನು ಗರ್ಭದಿಂದಲೇ ಪಡೆದಿದ್ದೀರೆಂದು ತಿಳಿಸುತ್ತಾರೆ. ಒಂದು ಶರೀರ ಬಿಟ್ಟು ನಂತರ ಗರ್ಭದಲ್ಲಿ ಹೋಗುತ್ತೀರಿ, ಹೀಗೆ 84 ಜನ್ಮಗಳನ್ನು ಪಡೆಯುತ್ತೀರಿ. ನಾನಂತೂ ಗರ್ಭದಲ್ಲಿ ಬರುವುದಿಲ್ಲ, ವಾಸ್ತವದಲ್ಲಿ ಭಾರತವಾಸಿಗಳು ದೇವಿ-ದೇವತಾ ಧರ್ಮದವರಾಗಿದ್ದರು ನಂತರ ಏಣಿಯನ್ನು ಇಳಿಯುತ್ತಾ ಕ್ಷತ್ರಿಯ ವರ್ಣ, ನಂತರ ವೈಶ್ಯ ವರ್ಣ, ಶೂದ್ರ ವರ್ಣದಲ್ಲಿ ಕಲೆಗಳು ಕಡಿಮೆಯಾಗುತ್ತಾ ಹೋಯಿತು. ಭಾರತವು 16 ಕಲಾ ಸಂಪೂರ್ಣವಾಗಿತ್ತು ನಂತರ 14 ಕಲೆಗಳಾಯಿತು. ಭಾರತವಾಸಿಗಳು ತಮ್ಮ ಜನ್ಮಗಳನ್ನು ತಿಳಿದುಕೊಂಡಿಲ್ಲ, 84 ಜನ್ಮಗಳನ್ನು ಭಾರತವಾಸಿಗಳೇ ಪಡೆಯುತ್ತಾರೆ, ಮತ್ತ್ಯಾರೂ 84 ಜನ್ಮಗಳನ್ನು ಪಡೆಯುವುದಿಲ್ಲ. ನೀವು ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ, ಇದು ಜ್ಞಾನದ ಮಾತುಗಳಾಗಿವೆ. ನೀವು ಸ್ವದರ್ಶನ ಚಕ್ರಧಾರಿಗಳಾಗುವುದರಿಂದ ಸ್ವರ್ಗದ ಚಕ್ರವರ್ತಿ ಮಹಾರಾಜರಾಗುತ್ತೀರಿ. ನೀವು ಇಲ್ಲಿ ಪತಿತರಿಂದ ಪಾವನರಾಗಲು ಬಂದಿದ್ದೇವೆಂದು ತಿಳಿದುಕೊಂಡಿದ್ದೀರಿ. ಇದು ಪತಿತ ಪ್ರಪಂಚವಾಗಿದೆ, ಪತಿತ-ಪಾವನ ಎಲ್ಲರ ಸದ್ಗತಿದಾತ ಒಬ್ಬ ತಂದೆಯಾಗಿದ್ದಾರೆ. ಎಲ್ಲರೂ ಅವರನ್ನೇ ಕರೆಯುತ್ತಾರೆ. ತಂದೆಯೊಬ್ಬರನ್ನೇ ನೆನಪು ಮಾಡುತ್ತಾರೆ ಆದರೆ ಕೃಷ್ಣನನ್ನಲ್ಲ. ಕೃಷ್ಣನು ಗೀತೆಯನ್ನು ನುಡಿಸಿಲ್ಲ. ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ, ಭಾರತದ ಗೀತೆಯು ಯಾವ ಧರ್ಮ ಶಾಸ್ತ್ರದ್ದಾಗಿದೆ? ಆದಿ ಸನಾತನ ದೇವಿ-ದೇವತಾ ಧರ್ಮದ್ದಾಗಿದೆ. ಗೀತೆಯನ್ನು ಯಾರು ನುಡಿಸಿದರು? ರಾಜಯೋಗವನ್ನು ಯಾರು ಕಲಿಸಿಕೊಟ್ಟರು? ಪರಮಪಿತ ಪರಮಾತ್ಮ, ಪತಿತ-ಪಾವನ ತಂದೆಯು ಕಲಿಸಿದರು. ನೀವಾತ್ಮರು ನಿರಾಕಾರರಾಗಿದ್ದಿರಿ, ನೀವೇ ಸಾಕಾರ ಶರೀರವನ್ನು ಧಾರಣೆ ಮಾಡಿದ್ದೀರಿ, ಸಾಕಾರಿ ಮನುಷ್ಯನನ್ನೆಂದೂ ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಭಲೆ ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರಿರುತ್ತಾರೆ, ಅವರನ್ನೂ ಸಹ ಭಗವಂತನೆಂದು ಕರೆಯಲು ಸಾಧ್ಯವಿಲ್ಲ. ಇದಂತೂ ಅವರಿಗೆ ಬಿರುದುಗಳನ್ನು ಕೊಡಲಾಗುತ್ತದೆ. ಕಾಯಿದೆಯ ಅನುಸಾರ ಭಗವಂತ ಮತ್ತು ರಚಯಿತನು ಒಬ್ಬನೇ ಆಗಿದ್ದಾರೆ, ಉಳಿದೆಲ್ಲರೂ ದೇವತೆಗಳಾಗಿದ್ದಾರೆ. 5000 ವರ್ಷಗಳ ಮಾತಾಗಿದೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರನ್ನು ಮಹಾರಾಜ-ಮಹಾರಾಣಿ ಎಂದು ಕರೆಯುತ್ತಿದ್ದರು, ಭಗವಂತನು ಮಹಾರಾಜನಾಗುವುದಿಲ್ಲ. ಅವರು ಭಾರತವಾಸಿಗಳನ್ನು ಇಂತಹ ದೇವಿ-ದೇವತೆಗಳನ್ನಾಗಿ ಮಾಡುವ ತಂದೆಯಾಗಿದ್ದಾರೆ. ಈಗಂತೂ ದೇವಿ-ದೇವತಾ ಧರ್ಮವೇ ಇಲ್ಲ. ಇವರಿಗೆ ರಾವಣ ಸಂಪ್ರದಾಯದವರು ಎಂದು ಹೇಳಲಾಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ರಾವಣನನ್ನು ಪ್ರತೀ ವರ್ಷ ಸುಡುತ್ತಲೇ ಬರುತ್ತಾರೆ ಏಕೆಂದರೆ ಹಳೆಯ ಶತ್ರುವಾಗಿದ್ದಾನೆ ಆದರೆ ಭಾರತವಾಸಿಗಳು ಇದನ್ನು ತಿಳಿದುಕೊಂಡೇ ಇಲ್ಲ. ಶಾಸ್ತ್ರಗಳಲ್ಲಿಯೂ ಸಹ ರಾವಣನು ಯಾರು ಎಂದು ವರ್ಣನೆಯಿಲ್ಲ, ರಾವಣನಿಗೆ 10 ತಲೆಗಳನ್ನು ತೋರಿಸುತ್ತಾರೆ. ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಈ ಮನುಷ್ಯರಂತೂ ಅವಶ್ಯವಾಗಿ ಕಲ್ಲು ಬುದ್ಧಿಯವರಾಗಿದ್ದಾರೆ, ಈ ಲಕ್ಷ್ಮೀ-ನಾರಾಯಣರನ್ನು ಪಾರಸ ಬುದ್ಧಿಯವರೆಂದು ಕರೆಯುತ್ತಾರೆ. ಪಾರಸನಾಥ-ಪಾರಸನಾಥಿನಿಯರ ರಾಜ್ಯವಿತ್ತು, ರಾಜ-ರಾಣಿಯರು ಹೇಗಿದ್ದರೋ ಅದೇ ರೀತಿ ಪ್ರಜೆಗಳೂ ಇದ್ದರು. ಭಾರತದಂತಹ ಸುಖಧಾಮ ಮತ್ತ್ಯಾವುದೇ ಖಂಡವಿರುವುದಿಲ್ಲ. ಭಾರತವು ಸ್ವರ್ಗವಾಗಿದ್ದಾಗ ಯಾವುದೇ ರೀತಿಯ ಖಾಯಿಲೆಗಳು, ದುಃಖ ಅಥವಾ ರೋಗವಿರಲಿಲ್ಲ, ಸಂಪೂರ್ಣ ಸುಖಿಯಾಗಿದ್ದರು. ಈಶ್ವರನ ಮಹಿಮೆ ಅಪರಮಪಾರವಾಗಿದೆ ಎಂದು ಹೇಳುತ್ತಾರೆ. ಭಾರತದ ಮಹಿಮೆಯೂ ಸಹ ಅಪರಮಪಾರವಾಗಿದೆ. ಪವಿತ್ರತೆಯ ಮೇಲೆ ಎಲ್ಲವೂ ಆಧಾರಿತವಾಗಿದೆ, ಎಲ್ಲರೂ ಪತಿತರಾಗಿದ್ದಾರೆ, ಶಾಂತಿಯಿಲ್ಲ, ಸುಖವಿಲ್ಲ ಎಂದು ಕರೆಯುತ್ತಾರೆ. ನಾವೇ ಭಾರತವಾಸಿಗಳು ಸೂರ್ಯವಂಶಿ, ದೇವಿ-ದೇವತೆಗಳಾಗಿದ್ದೆವು ನಂತರ ನಿಧಾನ-ನಿಧಾನವಾಗಿ ಪತಿತರಾಗಿದ್ದೇವೆಂದು ನೀವೀಗ ತಿಳಿದಿದ್ದೀರಿ, ಇದನ್ನು ಮೃತ್ಯು ಲೋಕವೆಂದು ಕರೆಯಲಾಗುತ್ತದೆ. ಇದಕ್ಕೆ ಬೆಂಕಿಬೀಳಲಿದೆ. ಇದು ಶಿವ ಜ್ಞಾನ ಯಜ್ಞವಾಗಿದೆ, ರುದ್ರ ಜ್ಞಾನ ಯಜ್ಞವೆಂದೂ ಸಹ ಕರೆಯಲಾಗುತ್ತದೆ. ಮನುಷ್ಯರಂತೂ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಶಿವನ ಮೂರ್ತಿಯನ್ನು ನೋಡಿದ ಕೂಡಲೇ ಅನೇಕ ಭಿನ್ನ-ಭಿನ್ನವಾದ ಹೆಸರುಗಳನ್ನು ಇಡುತ್ತಾರೆ, ಒಬ್ಬನನ್ನೇ ಅನೇಕ ಹೆಸರುಗಳಲ್ಲಿ ಮಂದಿರಗಳನ್ನು ಕಟ್ಟಿಸುತ್ತಾರೆ. ಜ್ಞಾನ, ಭಕ್ತಿ, ವೈರಾಗ್ಯ ಎಂದು ತಂದೆಯು ತಿಳಿಸುತ್ತಾರೆ. ಈಗ ಭಕ್ತಿ ಪೂರ್ಣವಾಗಿದೆ, ನಿಮಗೆ ಭಕ್ತಿಯಿಂದ ವೈರಾಗ್ಯ ಬರುತ್ತದೆ ಅರ್ಥಾತ್ ಈ ಹಳೆಯ ಪ್ರಪಂಚದಿಂದ ವೈರಾಗ್ಯ ಬರುತ್ತದೆ. ಈ ಹಳೆಯ ಪ್ರಪಂಚವು ಈಗ ವಿನಾಶವಾಗಲಿದೆ. |
ಬಾಬಾ, ನಾವು ಪತಿತರಿಂದ ಪಾವನರು ಹೇಗಾಗುವುದು ಎಂದು ಮಕ್ಕಳು ಕೇಳುತ್ತಾರೆ. ಹೊಸಬರು ಬರುತ್ತಾರೆಂದರೆ ಅವರನ್ನು ಒಳಗೆ ಬರಲು ಅನುಮತಿ ಕೊಡುವುದಿಲ್ಲ, ಕಾಲೇಜಿನಲ್ಲಿ ಯಾರಾದರೂ ಹೊಸಬರು ಹೋಗಿ ಕುಳಿತುಕೊಂಡರೆ ಅವರಿಗೆ ಏನೂ ಅರ್ಥವಾಗುವುದಿಲ್ಲವೋ ಹಾಗೆಯೇ ಇಲ್ಲಿಯೂ ಮನುಷ್ಯರಿಂದ ದೇವತೆಗಳಾಗುವುದು ಹೇಗೆಂಬುದು ಅರ್ಥವಾಗುವುದಿಲ್ಲ. ಮನುಷ್ಯರು ಯಾರು ಪತಿತರಾಗಿದ್ದಾರೆಯೋ ಅವರೇ ಪಾವನರಾಗುತ್ತಾರೆ. ಈ ಸಮಯದಲ್ಲಿ ಭಾರತವು ಭಿಕ್ಷುಕನಾಗಿದೆ, ಸತ್ಯಯುಗದಲ್ಲಿ ಭಾರತವೇ ರಾಜಕುಮಾರನಾಗಿತ್ತು. ಶ್ರೀಕೃಷ್ಣನು ಸತ್ಯಯುಗದ ಮೊದಲನೇ ನಂಬರಿನ ರಾಜಕುಮಾರನಾಗಿದ್ದನು, ಅವನಲ್ಲಿ ಎಲ್ಲಾ ಗುಣಗಳಿದ್ದವು, ಲಕ್ಷ್ಮೀ-ನಾರಾಯಣರ ರಾಜ್ಯವೆಂದು ಹೇಳುತ್ತಾರೆ. ಕೃಷ್ಣನು ರಾಜಕುಮಾರನಾಗಿದ್ದನು, ರಾಧೆ ರಾಜಕುಮಾರಿಯಾಗಿದ್ದಳು. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ.....ಇದು ರಾಜಕುಮಾರನಾದ ಕೃಷ್ಣನ ಮಹಿಮೆಯಾಗಿದೆ. ಅವನು ಯಾವುದೇ ಗೀತೆಯನ್ನು ನುಡಿಸಿಲ್ಲ. ಅವನಂತೂ ಸತ್ಯಯುಗದ ರಾಜಕುಮಾರನಾಗಿದ್ದನು, ಅವನು ಪತಿತ ಮನುಷ್ಯರನ್ನು ಪಾವನ ಮಾಡಲು ಗೀತೆಯನ್ನು ನುಡಿಸಿರುವುದು ಸಾಧ್ಯವೇ ಇಲ್ಲ. ಇದೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ. ಶಾಸ್ತ್ರಗಳ ಮಹಿಮೆಯು ಎಷ್ಟೊಂದಿದೆ! ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಾಗಲಿ, ಚಿತ್ರಗಳಾಗಲಿ, ಭಕ್ತಿಮಾರ್ಗದ್ದು ಏನೂ ಇರುವುದಿಲ್ಲ. ಅಲ್ಲಂತೂ ಜ್ಞಾನದ ಪ್ರಾಲಬ್ಧವು 21 ಜನ್ಮಗಳಿಗೆ ಸಿಗುತ್ತದೆ. ಪುನಃ ಸತ್ಯಯುಗದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೇವೆ. ಭಾರತವಾಸಿಗಳು ಸತ್ಯಯುಗದಲ್ಲಿ 5000 ವರ್ಷಗಳಹಿಂದೆ ವಿಶ್ವದ ಮಾಲೀಕರಾಗಿದ್ದರು ಮತ್ತು ಯಾವುದೇ ರೀತಿಯ ವಿಭಜನೆಗಳಿರಲಿಲ್ಲ, ಇದು 5000 ವರ್ಷಗಳ ಮಾತಾಗಿದೆ. ಈಗ ಕಲಿಯುಗದ ಅಂತ್ಯವಲ್ಲವೆ. ವಿನಾಶವಂತೂ ಎದುರಿನಲ್ಲಿದೆ. ಭಗವಂತನೇ ಈ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ಪತಿತ ಕಲಿಯುಗವನ್ನು ಪಾವನ ಸತ್ಯಯುಗವನ್ನಾಗಿ ಮಾಡಬೇಕೆಂದರೆ ಅವಶ್ಯವಾಗಿ ಪತಿತ ಪ್ರಪಂಚ ವಿನಾಶವಾಗಲೇಬೇಕು. ಬ್ರಹ್ಮನ ಮುಖಾಂತರ ಆದಿ ಸನಾತನ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು ಎಂದು ಗಾಯನವಿದೆ, ಅದು ಈಗ ಶಿವ ತಂದೆಯು ಬ್ರಹ್ಮನ ಮೂಲಕ ಮಾಡುತ್ತಿದ್ದಾರೆ. ನೀವೀಗ ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಿದ್ದಾರೆ. ಅವರಂತೂ ಪ್ರಜಾಪಿತ ಆಗಿದ್ದಾರೆ. ಎಲ್ಲರೂ ಬ್ರಹ್ಮನ ಮಕ್ಕಳಾಗಿದ್ದಾರೆ, ಅವಶ್ಯವಾಗಿ ಬ್ರಹ್ಮನ ಮೂಲಕ ಸ್ವರ್ಗದ ಸ್ಥಾಪನೆ ಆಗಿತ್ತು, ಇಂದಿಗೆ 5000 ವರ್ಷಗಳ ಹಿಂದಿನಂತೆ ಸಂಗಮದಲ್ಲಿ ಬಂದು ನಿಮಗೆ ರಾಜಯೋಗವನ್ನು ಕಲಿಸಿಕೊಟ್ಟಿದ್ದರು. ಕೃಷ್ಣನಲ್ಲ, ನಾನು ಬಂದಿದ್ದೆನು. ಕೃಷ್ಣನು ಪತಿತ ಪ್ರಪಂಚದಲ್ಲಿ ಬರಲು ಸಾಧ್ಯವಿಲ್ಲ, ತಂದೆಯೇ ಬರುತ್ತಾರೆ, ಅವರೇ ಎಲ್ಲರ ಸದ್ಗತಿದಾತನಾಗಿದ್ದಾರೆ. ಮನುಷ್ಯನು ಮನುಷ್ಯನಿಗೆ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ. ನೆನಪನನ್ನಂತೂ ಒಬ್ಬನನ್ನೇ ಮಾಡುತ್ತಾರೆ, ಪರಮಪಿತ ಪರಮಾತ್ಮನು ಎಲ್ಲಿರುತ್ತಾರೆ? ಪರಮಧಾಮದಲ್ಲಿ ಇರುತ್ತಾರೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅದು ಬ್ರಹ್ಮ ಮಹಾತತ್ವವಾಗಿದೆ. ಅಲ್ಲಿ ಆತ್ಮಗಳು ಮಹಾತ್ಮರಂತೆ ಪವಿತ್ರರಾಗಿರುತ್ತಾರೆ. ಇಲ್ಲಿಯೂ ಸಹ ಮಹಾನ್ ಆತ್ಮ, ಪತಿತ ಆತ್ಮನೆಂದು ಹೇಳುತ್ತಾರಲ್ಲವೆ. ವಾಸ್ತವದಲ್ಲಿ ಮಹಾನ್ ಆತ್ಮರಂತೂ ಒಬ್ಬರೂ ಇಲ್ಲ. ಆತ್ಮವೇ ಜ್ಞಾನ-ಯೋಗದಿಂದ ಪಾವನ ಸತೋಪ್ರಧಾನವಾಗಬೇಕಾಗಿದೆ, ನೀರಿನಿಂದಲ್ಲ. ಆತ್ಮವೇ ಪತಿತವಾಗಿದೆ, ಆತ್ಮದಲ್ಲಿಯೇ ತುಕ್ಕು ಬಿದ್ದಿದೆ. ಆತ್ಮವೇ ಚಿನ್ನ, ಬೆಳ್ಳಿ, ತಾಮ್ರ, ಕಬ್ಬಿಣ ಸಮಾನವಾಗುತ್ತದೆ. ಈಗ ಆತ್ಮರು ಪತಿತರಾಗಿದ್ದಾರೆ ಆದರೆ ಅವರನ್ನು ಪಾವನ ಮಾಡುವವರು ಯಾರು? ಪರಮಪಿತ ಪರಮಾತ್ಮನ ಹೊರತು ಮತ್ತ್ಯಾರೂ ಪಾವನ ಮಾಡಲು ಸಾಧ್ಯವಿಲ್ಲ. ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮೆಲ್ಲರ ಪಾಪವು ಭಸ್ಮವಾಗುವುದು ಎಂದು ತಂದೆಯು ತಿಳಿಸುತ್ತಾರೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತೀರಿ, ಇದರಲ್ಲಿಯೇ ಪರಿಶ್ರಮವಿದೆ. ಜ್ಞಾನವಂತೂ ಬುದ್ಧಿಯಲ್ಲಿದೆ, ಈ ಚಕ್ರವು ಹೇಗೆ ಸುತ್ತುತ್ತದೆ, 84 ಜನ್ಮಗಳನ್ನು ಹೇಗೆ ಪಡೆಯುತ್ತೇವೆ? ಸತ್ಯಯುಗದಲ್ಲಿ ಎಷ್ಟು ಸಮಯ ರಾಜ್ಯ ನಡೆಯುತ್ತದೆ? ನಂತರ ರಾವಣ ಹೇಗೆ ಬರುತ್ತಾನೆ? ರಾವಣನು ಯಾರಾಗಿದ್ದಾನೆ? ರಾವಣನನ್ನು ಯಾವಾಗಿನಿಂದ ಸುಡುತ್ತಾ ಬಂದಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಪ್ರತೀ ವರ್ಷ ಸುಡುತ್ತಲೇ ಇರುತ್ತಾರೆ. ಸತ್ಯಯುಗದಲ್ಲಂತೂ ಸುಡುವುದಿಲ್ಲ, ಈಗಂತೂ ರಾವಣ ರಾಜ್ಯವಾಗಿದೆ, ರಾಮ ರಾಜ್ಯವಂತೂ ಯಾರೂ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ಇದಂತೂ ತಂದೆಯದೇ ಕೆಲಸವಾಗಿದೆ. ಪತಿತ ಮನುಷ್ಯರಂತೂ ಇದನ್ನು ಮಾಡಲು ಸಾಧ್ಯವೇ ಇಲ್ಲ, ಅವರೆಲ್ಲರೂ ವಿನಾಶವಾಗಿ ಬಿಡುತ್ತಾರೆ. ಪತಿತ ಪ್ರಪಂಚವೇ ವಿನಾಶವಾಗಬೇಕಾಗಿದೆ. ಸತ್ಯಯುಗದಲ್ಲಿ ಒಬ್ಬರೂ ಸಹ ಪತಿತ-ಪಾವನ ಬನ್ನಿ ಎಂದು ಕರೆಯುವುದಿಲ್ಲ, ಅದಂತೂ ಪಾವನ ಪ್ರಪಂಚವಲ್ಲವೆ. ಈ ಲಕ್ಷ್ಮೀ-ನಾರಾಯಣರನ್ನು ಸ್ವರ್ಗದ ಮಾಲೀಕರನ್ನಾಗಿ ಯಾರು ಮಾಡಿದರೆಂದು ನೀವೀಗ ತಿಳಿದಿದ್ದೀರಿ. ನಂತರ ಇವರೇ 84 ಜನ್ಮಗಳನ್ನು ಪಡೆದಿದ್ದಾರೆ, ಆದಿ ಸನಾತನ ದೇವಿ-ದೇವತಾ ಧರ್ಮದವರೇ 84 ಜನ್ಮವನ್ನು ಪಡೆದಿದ್ದಾರೆ, ಅವರೇ ಈ ಸಮಯದಲ್ಲಿ ಶೂದ್ರ ವಂಶಿಗಳಾಗಿದ್ದಾರೆ. ಈಗ ಮತ್ತೆ ಬ್ರಾಹ್ಮಣ ವಂಶಿಗಳಾಗುತ್ತಾರೆ, ಈಗ ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಇದು ಶ್ರೇಷ್ಠಾತಿ ಶ್ರೇಷ್ಠ ಶಿಖೆಯಾಗಿದೆ. ಬ್ರಹ್ಮನ ಮುಖವಂಶಾವಳಿ ಬ್ರಾಹ್ಮಣ ಕುಲಭೂಷಣರಾಗಿದ್ದೀರಿ, ನೀವು ಶಿವ ತಂದೆಯ ಮಕ್ಕಳೂ ಆಗಿದ್ದೀರಿ, ಮೊಮ್ಮಕ್ಕಳೂ ಆಗಿದ್ದೀರಿ. ಶಿವವಂಶಿಯರು ನಂತರ ಬ್ರಹ್ಮಾಕುಮಾರ-ಕುಮಾರಿಯರೂ ಆಗಿದ್ದೀರಿ. ಆಸ್ತಿಯಂತೂ ತಾತನಿಂದ ಬರುತ್ತದೆ. ನನ್ನನ್ನು ನಿರಂತರವಾಗಿ ನೆನಪು ಮಾಡಿ, ಪಾವನರಾದಿರೆಂದರೆ ಆಗ ನನ್ನ ಬಳಿ ಮುಕ್ತಿಧಾಮಕ್ಕೆ ಬಂದು ಬಿಡುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಈ ಮಾತುಗಳನ್ನು ಯಾರು ಕಲ್ಪದ ಹಿಂದೆ ತಿಳಿದಿದ್ದರೋ ಅವರೇ ತಿಳಿದುಕೊಳ್ಳುತ್ತಾರೆ. ಸಾವಿರಾರು ಮಂದಿಯಿದ್ದಾರೆ. ಕೆಲವರು ಕೇಳುತ್ತಾರೆ - ಎಷ್ಟು ಬಿ.ಕೆ. ಗಳಿದ್ದಾರೆ? ಅಂದಾಜಿನಲ್ಲಿ ಸಾವಿರಾರು ಮಂದಿಯಿದ್ದಾರೆಂದು ಹೇಳಿ. ಈ ದೈವೀ ವೃಕ್ಷದ ವೃದ್ಧಿ ಆಗುತ್ತಲೇ ಹೋಗುತ್ತದೆ. ಮತ್ತೆ ಈ ಸಸಿಯನ್ನು ನಾಟಿ ಮಾಡಲಾಗುತ್ತಿದೆ ಏಕೆಂದರೆ ಆದಿ ಸನಾತನ ದೇವಿ-ದೇವತಾಧರ್ಮವು ಈಗಿಲ್ಲ. ಎಲ್ಲರೂ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾರೆ, ಅನ್ಯ ಧರ್ಮಗಳಲ್ಲಿ ಮತಾಂತರಗೊಂಡಿದ್ದಾರೆ. ಮತ್ತೆಲ್ಲರೂ ಅಲ್ಲಿಂದ ಬಂದು ಆಸ್ತಿಯನ್ನು ಪಡೆಯುತ್ತಾರೆ. ನೀವೂ ಸಹ ಬೇಹದ್ದಿನ ತಂದೆಯಿಂದ ಸುಖದ ಆಸ್ತಿಯನ್ನು ಪಡೆಯಲು ಬಂದಿದ್ದೀರಿ ಅರ್ಥಾತ್ ಮನುಷ್ಯರಿಂದ ದೇವತೆಗಳಾಗಲು ಬಂದಿದ್ದೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪತಿತರಿಂದ ಪಾವನರಾಗುವುದಕ್ಕೆ ಜ್ಞಾನ-ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ. ಆತ್ಮದಲ್ಲಿ ಯಾವ ತುಕ್ಕು ಹಿಡಿದಿದೆಯೋ ಅದನ್ನು ನೆನಪಿನ ಪರಿಶ್ರಮದಿಂದ ತೆಗೆಯಬೇಕಾಗಿದೆ. |
Subsets and Splits
No community queries yet
The top public SQL queries from the community will appear here once available.