text
stringlengths 0
61.5k
|
---|
ಓಂ ಶಾಂತಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಯಾರಿಗೆ ಯೋಗಬಲದಿಂದ ಪಾಪಗಳು ಕಳೆಯುತ್ತವೆಯೋ ಅವರಿಗೆ ಬಹಳ ಖುಷಿಯ ನಶೆಯೇರುತ್ತದೆ. ತಮ್ಮ ಸ್ಥಿತಿಯನ್ನು ತಾವೇ ತಿಳಿದುಕೊಳ್ಳಬಹುದಾಗಿದೆ. ಯಾವಾಗ ಸ್ಥಿತಿಯು ಚೆನ್ನಾಗಿರುವುದೋ ಆಗ ಸೇವೆ ಮಾಡುವ ಉಮ್ಮಂಗ ಬರುತ್ತದೆ. ಎಷ್ಟೆಷ್ಟು ಶುದ್ಧವಾಗುತ್ತಾ ಹೋಗುತ್ತೀರೋ ಅಷ್ಟು ಅನ್ಯರನ್ನೂ ಶುದ್ಧ ಅಥವಾ ಯೋಗಿಗಳನ್ನಾಗಿ ಮಾಡುವ ಉಮ್ಮಂಗ ಬರುತ್ತದೆ. ಏಕೆಂದರೆ ನೀವು ರಾಜಯೋಗಿಗಳು ಹಾಗೂ ರಾಜ ಋಷಿಗಳಾಗಿದ್ದೀರಿ. ಹಠಯೋಗಿ ಋಷಿಗಳು ತತ್ವವನ್ನೇ ಭಗವಂತನೆಂದು ತಿಳಿಯುತ್ತಾರೆ. ರಾಜಯೋಗಿ ಋಷಿಗಳು ಭಗವಂತನನ್ನು ತಂದೆಯೆಂದು ಒಪ್ಪುತ್ತೀರಿ. ತತ್ವವನ್ನು ನೆನಪು ಮಾಡುವುದರಿಂದ ಅವರ ಪಾಪಗಳು ಭಸ್ಮವಾಗುವುದಿಲ್ಲ. ತತ್ವದ ಜೊತೆ ಯೋಗವನ್ನು ಇಡುವುದರಿಂದ ಯಾವುದೇ ಬಲ ಸಿಗುವುದಿಲ್ಲ. ಯಾವುದೇ ಧರ್ಮದವರು ಯೋಗದ ಅರ್ಥವನ್ನು ತಿಳಿದುಕೊಂಡಿಲ್ಲ ಆದ್ದರಿಂದ ಯಾರೂ ಸಹ ಸತ್ಯಯೋಗಿಗಳಾಗಿ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳು ತಮ್ಮ ಸ್ಥಿತಿಯನ್ನು ಅರಿತುಕೊಳ್ಳಬಲ್ಲಿರಿ. ಆತ್ಮವು ತಂದೆಯನ್ನು ಎಷ್ಟು ನೆನಪು ಮಾಡುವುದೋ ಅಷ್ಟು ಖುಷಿಯಿರುವುದು. ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ, ಮಕ್ಕಳೂ ಸಹ ಒಬ್ಬರು ಇನ್ನೊಬ್ಬರ ಸ್ಥಿತಿಯನ್ನು ಮತ್ತು ತನ್ನ ಸ್ಥಿತಿಯನ್ನೂ ತಿಳಿದುಕೊಳ್ಳಬಹುದು. ನೋಡಿಕೊಳ್ಳಿ - ನನಗೆ ಶರೀರದಲ್ಲಿ ಅಭಿಮಾನವಂತೂ ಇಲ್ಲವೆ! ದೇಹಾಭಿಮಾನವಿದ್ದರೆ ತಿಳಿದುಕೊಳ್ಳಿ, ನಾವು ಬಹಳ ಕಚ್ಚಾ ಆಗಿದ್ದೇವೆ, ತಂದೆಯಿಂದ ಬಹಳ ದೂರವಿದ್ದೇವೆ. ತಂದೆಯು ಆದೇಶ ನೀಡುತ್ತಾರೆ - ಮಕ್ಕಳೇ, ನೀವೀಗ ವಜ್ರ ಸಮಾನರಾಗಬೇಕಾಗಿದೆ, ತಂದೆಯು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಾರೆ. ತಂದೆಗೆ ದೇಹಾಭಿಮಾನ ಆಗುವುದಿಲ್ಲ. ಮಕ್ಕಳಿಗೇ ದೇಹಾಭಿಮಾನ ಆಗುತ್ತದೆ. ತಂದೆಯ ನೆನಪಿನಿಂದ ನೀವು ದೇಹೀ-ಅಭಿಮಾನಿಗಳಾಗುತ್ತೀರಿ ಅಂದಾಗ ನಾವು ಎಷ್ಟು ಸಮಯ ನೆನಪು ಮಾಡುತ್ತೇವೆ ಎಂದು ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅಪಾರ ಖುಷಿಯಿರುವುದು ಮತ್ತು ತಮ್ಮನ್ನು ಯೋಗ್ಯರನ್ನಾಗಿ ಮಾಡಿಕೊಳ್ಳುತ್ತೀರಿ. ಕೆಲವು ಮಕ್ಕಳು ಕರ್ಮಾತೀತ ಸ್ಥಿತಿಯನ್ನು ತಲುಪಿ ಬಿಟ್ಟಿದ್ದಾರೆ ಎಂದೂ ತಿಳಿದುಕೊಳ್ಳಬೇಡಿ, ಇಲ್ಲ ಇನ್ನೂ ರೇಸ್ ನಡೆಯುತ್ತಿದೆ. ಯಾವಾಗ ಈ ಸ್ಪರ್ಧೆಯು ಮುಗಿಯುವುದೋ ಆಗ ಅಂತಿಮ ಫಲಿತಾಂಶ ಬರುವುದು ಮತ್ತೆ ವಿನಾಶವಾಗುವುದು ಆರಂಭವಾಗುತ್ತದೆ. ಎಲ್ಲಿಯವರೆಗೆ ಕರ್ಮಾತೀತ ಸ್ಥಿತಿಯಾಗುವುದಿಲ್ಲವೋ ಅಲ್ಲಿಯವರೆಗೆ ಈ ರಿಹರ್ಸಲ್ ಆಗುತ್ತಾ ಇರುತ್ತದೆ. ಇದರಲ್ಲಿ ನಾವು ಯಾರ ಮೇಲೂ ದೋಷ ಹಾಕುವಂತಿಲ್ಲ. ಅಂತಿಮದಲ್ಲಿಯೇ ಎಲ್ಲರದೂ ಅರ್ಥವಾಗುತ್ತದೆ. ಈಗಂತೂ ಸ್ವಲ್ಪ ಸಮಯ ಉಳಿದಿದೆ, ಈ ದಾದಾರವರೂ ಹೇಳುತ್ತಾರೆ - ಮಧುರ ಮಕ್ಕಳೇ, ಇನ್ನೂ ಸ್ವಲ್ಪ ಸಮಯವಿದೆ, ಈಗಲೇ ಯಾರೂ ಕರ್ಮಾತೀತ ಸ್ಥಿತಿಯನ್ನು ಹೊಂದಲು ಸಾಧ್ಯವಿಲ್ಲ. ಖಾಯಿಲೆ ಇತ್ಯಾದಿಗಳು ಬಂದರೂ ಸಹ ಇದಕ್ಕೆ ಕರ್ಮಭೋಗವೆಂದು ಹೇಳಲಾಗುತ್ತದೆ. ಇದನ್ನು ಭೋಗಿಸುವುದು ಮತ್ತ್ಯಾರಿಗೂ ತಿಳಿಯುವುದಿಲ್ಲ. ಅದು ಒಳಗೆ ನೋವಾಗಿರುತ್ತದೆ. ಈಗಿನ್ನೂ ಯಾರದೂ ಏಕರಸ ಸ್ಥಿತಿ ಆಗಿಲ್ಲ. ಎಷ್ಟು ಪ್ರಯತ್ನ ಪಡುವರೋ ಅಷ್ಟು ವಿಕಲ್ಪಗಳು, ಬಿರುಗಾಳಿಗಳು ಬಹಳ ಬರುತ್ತವೆ ಅಂದಮೇಲೆ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಮನುಷ್ಯರು ಸಾಹುಕಾರರಾಗಿದ್ದರೆ ದೊಡ್ಡ-ದೊಡ್ಡ ಬಂಗಲೆಗಳಿದ್ದರೆ ಖುಷಿಯಿರುತ್ತದೆ ಏಕೆಂದರೆ ಹೆಚ್ಚು ಸುಖವಿರುತ್ತದೆ. ಈಗಲೂ ಸಹ ನೀವು ತಂದೆಯಿಂದ ಅಪಾರ ಸುಖವನ್ನು ತೆಗೆದುಕೊಳ್ಳುತ್ತೀರಿ, ತಂದೆಯಿಂದ ನಾವು ರಾಜ್ಯವನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಧನದಲ್ಲಿ ಎಷ್ಟು ಖುಷಿಯಿರುತ್ತದೆಯೋ ಅಷ್ಟು ಶಾಂತಿಯಲ್ಲಿ ಇರುವುದಿಲ್ಲ. ಸನ್ಯಾಸಿಗಳು ಮನೆಯನ್ನು ಬಿಟ್ಟು ಹೋಗಿ ಕಾಡಿನಲ್ಲಿರುತ್ತಿದ್ದರು. ಎಂದೂ ತಮ್ಮ ಬಳಿ ಹಣವನ್ನು ಇಟ್ಟುಕೊಳ್ಳುತ್ತಿರಲಿಲ್ಲ, ಕೇವಲ ಆಹಾರವನ್ನು ತೆಗೆದುಕೊಳ್ಳುತ್ತಿದ್ದರು. ಈಗಂತೂ ಎಷ್ಟೊಂದು ಧನವಂತರಾಗಿ ಬಿಟ್ಟಿದ್ದಾರೆ. ಎಲ್ಲರಿಗೆ ಹಣದ ಚಿಂತೆ ಬಹಳಷ್ಟಿದೆ. ವಾಸ್ತವದಲ್ಲಿ ರಾಜರಿಗೆ ಪ್ರಜೆಗಳ ಚಿಂತೆಯಿರುತ್ತದೆ. ಆದ್ದರಿಂದ ಯುದ್ಧದ ಸಾಮಾನುಗಳನ್ನು ಇಟ್ಟುಕೊಳ್ಳುತ್ತಾರೆ. ಸತ್ಯಯುಗದಲ್ಲಂತೂ ಯುದ್ಧ ಮೊದಲಾದುವುಗಳ ಮಾತಿರುವುದಿಲ್ಲ. ಈಗ ನೀವು ಮಕ್ಕಳಿಗೆ ಖುಷಿಯಾಗುತ್ತದೆ - ನಾವು ನಮ್ಮ ರಾಜ್ಯದಲ್ಲಿ ಹೋಗುತ್ತೇವೆ, ಅಲ್ಲಿ ಯಾವುದೇ ಭಯದ ಮಾತಿರುವುದಿಲ್ಲ. ತೆರಿಗೆ ಮೊದಲಾದುವುಗಳ ಮಾತಿರುವುದಿಲ್ಲ. ಈ ಶರೀರದ ಚಿಂತೆಯು ಇಲ್ಲಿಯೇ ಇರುತ್ತದೆ, ಆದ್ದರಿಂದಲೇ ಚಿಂತೆಯಿಂದ ಮುಕ್ತರನ್ನಾಗಿ ಮಾಡಿದರು ಎಂದು ಗಾಯನವಿದೆ. ನಿಮಗೆ ತಿಳಿದಿದೆ - ಚಿಂತೆಯಿಂದ ಮುಕ್ತರಾಗಲು ನಾವೀಗ ಇಷ್ಟೊಂದು ಪುರುಷಾರ್ಥ ಮಾಡುತ್ತೇವೆ ನಂತರ 21 ಜನ್ಮಗಳಿಗಾಗಿ ಯಾವುದೇ ಚಿಂತೆಯಿರುವುದಿಲ್ಲ. ತಂದೆಯನ್ನು ನೆನಪು ಮಾಡುವುದರಿಂದ ನೀವು ಬಹಳ ಅಡೋಲರಾಗಿರುತ್ತೀರಿ. ರಾಮಾಯಣದ ಕಥೆಯೂ ನಿಮ್ಮ ಮೇಲಿದೆ, ನೀವೇ ಮಹಾವೀರರಾಗುತ್ತೀರಿ. ನಮ್ಮನ್ನು ರಾವಣನು ಅಲುಗಾಡಿಸಲು ಸಾಧ್ಯವಿಲ್ಲವೆಂದು ಆತ್ಮವೇ ಹೇಳುತ್ತದೆ, ಆ ಸ್ಥಿತಿಯು ಅಂತಿಮದಲ್ಲಿ ಬರುವುದು. ಈಗಂತೂ ಯಾರು ಬೇಕಾದರೂ ಅಲುಗಾಡುತ್ತಾರೆ, ಚಿಂತೆಯಿರುತ್ತದೆ. ಯಾವಾಗ ವಿಶ್ವದಲ್ಲಿ ಯುದ್ಧವಾಗುವುದೋ ಆಗ ಇನ್ನು ಸಮಯ ಬಂದು ಬಿಟ್ಟಿದೆ ಎಂದು ತಿಳಿದುಕೊಳ್ಳುತ್ತಾರೆ. ತಂದೆಯನ್ನು ಎಷ್ಟು ನೆನಪು ಮಾಡುವ ಪುರುಷಾರ್ಥ ಮಾಡುತ್ತೀರೋ ಅಷ್ಟು ಲಾಭವಾಗುವುದು. ಪುರುಷಾರ್ಥ ಮಾಡಲು ಇದೇ ಸಮಯವಾಗಿದೆ, ಇನ್ನು ಸ್ವಲ್ಪ ಕಳೆದರೆ ವಿನಾಶದ ಸದ್ದು-ಗದ್ದಲವಿರುವುದು. ಈಗಂತೂ ಶರೀರದಲ್ಲಿಯೂ ಮೋಹವಿರುತ್ತದೆಯಲ್ಲವೆ. ಸ್ವಯಂ ತಂದೆಯೇ ಹೇಳುತ್ತಾರೆ - ಶರೀರವನ್ನೂ ಸಂಭಾಲನೆ ಮಾಡಿ, ಇದು ಅಂತಿಮ ಶರೀರವಾಗಿದೆ, ಇದರಲ್ಲಿಯೇ ಪುರುಷಾರ್ಥ ಮಾಡಿ ಕರ್ಮಾತೀತ ಸ್ಥಿತಿಯನ್ನು ಹೊಂದಬೇಕಾಗಿದೆ. ಜೀವಿಸಿರುತ್ತೀರಿ, ತಂದೆಯನ್ನು ನೆನಪು ಮಾಡುತ್ತಾ ಇರುತ್ತೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಸದಾ ಅಮರರಾಗಿರಿ. ಎಷ್ಟು ಜೀವಿಸುತ್ತೀರೋ ಅಷ್ಟು ತಂದೆಯನ್ನು ನೆನಪು ಮಾಡಿ ಶ್ರೇಷ್ಠ ಆಸ್ತಿಯನ್ನು ಪಡೆಯುತ್ತೀರಿ. ಈಗ ನಿಮ್ಮದು ಸಂಪಾದನೆಯಾಗುತ್ತಾ ಇರುತ್ತದೆ. ಶರೀರವನ್ನು ನಿರೋಗಿ, ಸ್ವಾಸ್ಥ್ಯವಾಗಿಟ್ಟುಕೊಳ್ಳಿ. ಇದರಲ್ಲಿ ಆಲಸ್ಯ ಮಾಡಬಾರದು, ಆಹಾರ-ಪಾನೀಯಗಳ ಮೇಲೆ ಗಮನವನ್ನು ಇಟ್ಟಿದ್ದೇ ಆದರೆ ಏನೂ ಆಗುವುದಿಲ್ಲ. ಏಕರಸವಾಗಿ ನಡೆಯುವುದರಿಂದ ಶರೀರವೂ ಆರೋಗ್ಯವಂತವಾಗಿರುವುದು. ಇದು ಅಮೂಲ್ಯ ಶರೀರವಾಗಿದೆ. ಇದರಲ್ಲಿಯೇ ಪುರುಷಾರ್ಥ ಮಾಡಿ, ದೇವಿ-ದೇವತೆಗಳಾಗುತ್ತೀರಿ ಅಂದಮೇಲೆ ಬಲಿಹಾರಿಯು ಈ ಸಮಯದ್ದಾಗಿದೆ ಆದ್ದರಿಂದ ಖುಷಿಯಿರಲಿ. ಎಷ್ಟು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುತ್ತೀರೋ ಅಷ್ಟು ನಾರಾಯಣೀ ನಶೆಯೇರಿರುವುದು. ತಂದೆಯ ನೆನಪಿನಿಂದಲೇ ನೀವು ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ನೋಡಿಕೊಳ್ಳಿ, ನಾವು ಎಷ್ಟು ಖುಷಿಯಲ್ಲಿ, ಎಷ್ಟು ನಶೆಯಲ್ಲಿರುತ್ತೇವೆ? ಬಡವರಿಗಂತೂ ಇನ್ನೂ ಖುಷಿಯಿರಬೇಕು, ಸಾಹುಕಾರರಿಗಾದರೆ ಧನದ ಚಿಂತೆಯಿರುತ್ತದೆ. ನಿಮ್ಮಲ್ಲಿ ಕುಮಾರಿಯರಿಗಂತೂ ಯಾವುದೇ ಚಿಂತೆಯಿರುವುದಿಲ್ಲ. ಹಾ! ಯಾರ ಮಿತ್ರ ಸಂಬಂಧಿಗಳಾದರೂ ಬಡವರಾಗಿದ್ದರೆ ಅವರ ಸಂಭಾಲನೆ ಮಾಡಬೇಕಾಗುತ್ತದೆ. ಅವರನ್ನು ಜಾಗೃತಗೊಳಿಸುತ್ತಾ ಇರಬೇಕಾಗಿದೆ. ಒಂದುವೇಳೆ ಜಾಗೃತರಾಗದಿದ್ದರೆ ಮತ್ತೆ ಎಲ್ಲಿಯವರೆಗೆ ಸಹಯೋಗ ನೀಡುತ್ತಾ ಇರುತ್ತೀರಿ! ತಂದೆಯು ಹೇಳುತ್ತಾರಲ್ಲವೆ - ನೀವು ಸೇವಾಧಾರಿಯಾಗಿ ಮತ್ತು ನಿಮ್ಮ ಸ್ತ್ರೀಯರನ್ನೂ ಆತ್ಮಿಕ ಸೇವೆಯಲ್ಲಿ ತೊಡಗಿಸಿರಿ. ನೀವು ತಂದೆಯ ಸಹಯೋಗಿಗಳಾಗಿದ್ದೀರಿ, ಸಹಯೋಗವಂತೂ ಎಲ್ಲರಿಗೂ ಬೇಕಲ್ಲವೆ. ತಂದೆಯೊಬ್ಬರೇ ಏನು ಮಾಡುವರು! ಎಷ್ಟು ಮಂದಿಗೆ ಮಂತ್ರ ಕೊಡುವರು! ಆದ್ದರಿಂದ ನಾನು ನಿಮಗೆ ತಿಳಿಸುತ್ತೇನೆ, ನೀವು ಮತ್ತೆ ಅನ್ಯರಿಗೆ ತಿಳಿಸಬೇಕಾಗಿದೆ. ಕಸಿ ಮಾಡಬೇಕಾಗಿದೆ. ಮಕ್ಕಳಿಗೆ ಹೇಳುತ್ತಾ ಇರುತ್ತಾರೆ - ಎಷ್ಟು ಸಾಧ್ಯವೋ ಸಹಯೋಗಿಗಳಾಗಿರಿ, ಮಂತ್ರವನ್ನು ಕೊಡುತ್ತಾ ಹೋಗಿರಿ. ನಿಮ್ಮ ಶಾಸ್ತ್ರಗಳಲ್ಲಿಯೂ ಇದೆ - ಎಲ್ಲರಿಗೂ ಸಂದೇಶ ನೀಡಿದ್ದರು, ತಂದೆಯು ಬಂದಿದ್ದಾರೆ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಯನ್ನು ನೆನಪು ಮಾಡಿ, ದೇಹಧಾರಿಗಳನ್ನು ನೆನಪು ಮಾಡಬೇಡಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು ಮತ್ತು ಆಸ್ತಿಯೂ ಸಿಗುವುದು. ಗೀತೆಯನ್ನಂತೂ ಬಹಳ ಕೇಳುತ್ತಾರೆ, ಅನ್ಯರಿಗೆ ಹೇಳುತ್ತಾರೆ. ಅದರಲ್ಲಿ ಪ್ರಸಿದ್ಧವಾದ ಶಬ್ಧವಾಗಿದೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಿದರೆ ಮುಕ್ತಿಯನ್ನು ಪಡೆಯುತ್ತೀರಿ. ಸನ್ಯಾಸಿಗಳೂ ಸಹ ಇದನ್ನು ಇಚ್ಛಿಸುತ್ತಾರೆ. ಮಧ್ಯಾಜೀಭವ ಎಂದರೆ ಜೀವನ್ಮುಕ್ತಿ. ನೀವು ತಂದೆಯ ಮಕ್ಕಳಾಗುತ್ತೀರೆಂದರೆ ತಂದೆಯು ಹೇಳುತ್ತಾರೆ - ಮಕ್ಕಳೇ, ನೀವಾತ್ಮರು ಪತಿತರಾಗಿದ್ದೀರಿ, ಪತಿತರು ನಡೆಯಲು ಸಾಧ್ಯವಿಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ನೀವು ಭಾರತವಾಸಿಗಳು ಸತೋಪ್ರಧಾನರಾಗಿದ್ದಿರಿ ನಂತರ ತಮೋಪ್ರಧಾನರಾದಿರಿ. ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಪುರುಷಾರ್ಥ ಮಾಡಿರಿ ಆಗ ಶ್ರೇಷ್ಠ ಪದವಿಯು ಸಿಗುವುದು. ಭಕ್ತಿಯನ್ನಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದೀರಿ. ನಿಮಗೆ ತಿಳಿದಿದೆ – ಮೊಟ್ಟ ಮೊದಲು ಅವ್ಯಭಿಚಾರಿ ಭಕ್ತಿಯು ಆರಂಭವಾಯಿತು, ಈಗ ಎಷ್ಟೊಂದು ವ್ಯಭಿಚಾರಿ ಭಕ್ತಿಯಿದೆ. ಶರೀರಗಳಿಗೂ ಪೂಜೆ ಮಾಡುತ್ತಾರೆ, ಅದು ಭೂತ ಪೂಜೆಯಾಗಿದೆ. ದೇವತೆಗಳಾದರೂ ಪವಿತ್ರರಾಗಿದ್ದಾರೆ ಆದರೆ ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಆದ್ದರಿಂದ ಪೂಜೆಯೂ ಸಹ ತಮೋಪ್ರಧಾನವಾಗುತ್ತಾ ಹೋಗುತ್ತದೆ. ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಕ್ತಿಯ ಶಬ್ಧವನ್ನು ಏನೂ ಹೇಳಬಾರದು. ಹಾಯ್ ರಾಮ್, ಇದೂ ಸಹ ಭಕ್ತಿಯ ಶಬ್ಧವಾಗಿದೆ. ಇಲ್ಲಿ ಈ ರೀತಿ ಕೂಗುವಂತಿಲ್ಲ. ಏನನ್ನೂ ಉಚ್ಛಾರಣೆ ಮಾಡುವ ಮಾತಿಲ್ಲ, ಓಂ ಶಾಂತಿ ಎಂದೂ ಸಹ ಪದೇ-ಪದೇ ಹೇಳುವ ಅವಶ್ಯಕತೆಯಿಲ್ಲ. ಶಾಂತಿಯೆಂದರೆ ನಾನಾತ್ಮ ಶಾಂತ ಸ್ವರೂಪನಾಗಿದ್ದೇನೆ. ಆಗಿಯೇ ಇದ್ದೇನೆ. ಇದರಲ್ಲಿ ಹೇಳುವ ಮಾತಿಲ್ಲ. ಅನ್ಯ ಮನುಷ್ಯರೂ ಸಹ ಕೆಲವರು ಓಂ ಶಾಂತಿ ಎಂದು ಹೇಳುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಅವರಂತೂ ಓಂ ಎಂಬುದಕ್ಕೆ ದೊಡ್ಡ-ದೊಡ್ಡ ಮಹಿಮೆ ಮಾಡುತ್ತಾರೆ. ನೀವಂತೂ ಅರ್ಥವನ್ನು ತಿಳಿದುಕೊಂಡಿದ್ದೀರಿ. ಅರ್ಥವನ್ನು ತಿಳಿಯದೇ ಓಂ ಶಾಂತಿ ಎಂದು ಹೇಳುವುದೂ ಸಹ ವ್ಯರ್ಥವಾಗಿದೆ. ಹಾ! ಒಬ್ಬರು ಇನ್ನೊಬ್ಬರೊಂದಿಗೆ ಈ ರೀತಿ ಕೇಳಬಹುದು – ಶಿವ ತಂದೆಯ ನೆನಪಿನಲ್ಲಿದ್ದೀರಾ? ಹೇಗೆ ನಾನೂ ಸಹ ಮಕ್ಕಳೊಂದಿಗೆ ಕೇಳುತ್ತೇನೆ - ಮಕ್ಕಳೇ, ಯಾರ ಶೃಂಗಾರ ಮಾಡುತ್ತೀರಿ? ಶಿವ ತಂದೆಯ ರಥದ ಶೃಂಗಾರ ಮಾಡುತ್ತಿದ್ದೇನೆಂದು ಹೇಳುತ್ತಾರೆ. ಇದು ಶಿವ ತಂದೆಯ ರಥವಲ್ಲವೆ. ಹೇಗೆ ಹುಸೇನನ ರಥವಿರುತ್ತದೆಯಲ್ಲವೆ. ಕುದುರೆಯ ಶೃಂಗಾರ ಮಾಡುತ್ತಾರೆ, ಕುದುರೆಯ ಅರ್ಥವನ್ನು ತಿಳಿದುಕೊಂಡಿಲ್ಲ. ಧರ್ಮ ಸ್ಥಾಪನೆ ಮಾಡಲು ಯಾವ ಆತ್ಮರು ಬರುತ್ತಾರೆಯೋ ಅವರು ಬಹಳ ಪವಿತ್ರರಾಗಿರುತ್ತಾರೆ. ಹಳೆಯ ಪತಿತ ಆತ್ಮವು ಧರ್ಮ ಸ್ಥಾಪನೆ ಮಾಡಲು ಸಾಧ್ಯವಿಲ್ಲ. ನೀವು ಧರ್ಮ ಸ್ಥಾಪನೆ ಮಾಡುವುದಿಲ್ಲ. ಶಿವ ತಂದೆಯು ನಿಮ್ಮ ಮೂಲಕ ಮಾಡುತ್ತಾರೆ. ನಿಮ್ಮನ್ನು ಪವಿತ್ರರನ್ನಾಗಿ ಮಾಡುತ್ತಾರೆ. ಆ ಮನುಷ್ಯರು ಭಕ್ತಿಮಾರ್ಗದಲ್ಲಿ ಬಹಳ ಶೃಂಗಾರ ಇತ್ಯಾದಿ ಮಾಡುತ್ತಾರೆ, ಇಲ್ಲಿ ಶೃಂಗಾರವನ್ನು ಇಷ್ಟಪಡುವುದಿಲ್ಲ. ತಂದೆಯು ಎಷ್ಟು ನಿರಹಂಕಾರಿಯಾಗಿದ್ದಾರೆ, ಸ್ವಯಂ ಹೇಳುತ್ತಾರೆ - ನಾನು ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ, ಮೊದಲು ಸತ್ಯಯುಗದಲ್ಲಿ ಶ್ರೀ ನಾರಾಯಣನಿರುವರು, ಶ್ರೀ ಲಕ್ಷ್ಮಿಗಿಂತ ಮೊದಲು ಶ್ರೀ ನಾರಾಯಣನು ಬರುವರು. ಅವರಂತೂ ದೊಡ್ಡವರಿರಬೇಕಲ್ಲವೆ ಆದ್ದರಿಂದ ಕೃಷ್ಣನ ಹೆಸರಿನ ಗಾಯನವಿದೆ. ನಾರಾಯಣನಿಗಿಂತಲೂ ಹೆಚ್ಚಿನದಾಗಿ ಕೃಷ್ಣನ ಮಹಿಮೆ ಮಾಡುತ್ತಾರೆ. ಕೃಷ್ಣನಿಗೆ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ. ನಾರಾಯಣನ ಜನ್ಮದಿನವನ್ನು ಆಚರಿಸುವುದಿಲ್ಲ. ಕೃಷ್ಣನೇ ನಾರಾಯಣನೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಬಾಲ್ಯದ ಹೆಸರೇ ನಡೆದು ಬರುತ್ತದೆಯಲ್ಲವೆ. ಇಂತಹವರು ಜನ್ಮ ಪಡೆದರು ಎಂದರೆ ಅವರ ಜನ್ಮ ದಿನವನ್ನಾಚರಿಸುತ್ತಾರೆ ಆದ್ದರಿಂದ ಕೃಷ್ಣನ ಜನ್ಮ ದಿನವನ್ನು ಆಚರಿಸುತ್ತಾರೆ. ನಾರಾಯಣನ ಬಗ್ಗೆ ಯಾರಿಗೂ ಗೊತ್ತಿಲ್ಲ. ಮೊಟ್ಟ ಮೊದಲು ಶಿವ ಜಯಂತಿಯಾಗುತ್ತದೆ ನಂತರ ಕೃಷ್ಣನ ಜಯಂತಿ ಅನಂತರ ರಾಮನ ಜಯಂತಿ..... ಶಿವನ ಜೊತೆ ಗೀತಾ ಜಯಂತಿಯೂ ಆಗುತ್ತದೆ. ಶಿವ ತಂದೆಯು ಬರುವುದೇ ಬಹಳ ಜನ್ಮಗಳ ಅಂತಿಮದಲ್ಲಿ. ವೃದ್ಧ ಅನುಭವೀ ರಥದಲ್ಲಿಯೇ ಬರುತ್ತಾರೆ. ಎಷ್ಟು ಚೆನ್ನಾಗಿ ತಿಳಿಸಲಾಗಿದೆ ಆದರೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. |
ತಂದೆಯು ತಿಳಿಸುತ್ತಾರೆ - ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ, ನಾನು ಬಂದು ತಿಳಿಸಿದಾಗ ನೀವೂ ಸಹ ಅನ್ಯರಿಗೆ ತಿಳಿಸಬಲ್ಲಿರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಭವಿಷ್ಯದಲ್ಲಿ ನಾವೇ ಈ ದೇವಿ-ದೇವತೆಗಳಾಗುತ್ತೇವೆ. ಬ್ರಹ್ಮಾ ತಂದೆಯು 2-3 ಪ್ರಕಾರದ ಸಾಕ್ಷಾತ್ಕಾರ ಮಾಡಿದ್ದರು - ಈ ರೀತಿಯಾಗುತ್ತೇನೆ, ಕಿರೀಟಧಾರಿಯಾಗುತ್ತೇನೆ ಎಂದು. 2-4 ರಾಜ್ಯಭಾರದ ಜನ್ಮಗಳ ಸಾಕ್ಷಾತ್ಕಾರವನ್ನೂ ಮಾಡಿದ್ದರು, ಈಗ ನೀವು ತಿಳಿದುಕೊಳ್ಳುತ್ತೀರಿ, ಈ ಮಾತುಗಳನ್ನು ಪ್ರಪಂಚದಲ್ಲಿ ಮತ್ತ್ಯಾರೂ ತಿಳಿದುಕೊಳ್ಳುವುದಿಲ್ಲ. ಹಾ! ಇಷ್ಟನ್ನು ತಿಳಿದುಕೊಳ್ಳುತ್ತಾರೆ - ಒಳ್ಳೆಯ ಕರ್ಮ ಮಾಡಿದರೆ ಒಳ್ಳೆಯ ಜನ್ಮ ಸಿಗುವುದೆಂದು. ನೀವೀಗ ಭವಿಷ್ಯಕ್ಕಾಗಿ, ನರನಿಂದ ನಾರಾಯಣನಾಗುವ ಪುರುಷಾರ್ಥ ಮಾಡುತ್ತಿದ್ದೀರಿ. ನಾವೇ ಈ ಪದವಿಯನ್ನು ಪಡೆಯುತ್ತೇವೆಂದು ನಿಮಗೆ ತಿಳಿದಿದೆ. ಯಾರು ಕರ್ಮಾತೀತ ಸ್ಥಿತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಾ ಇರುವರೋ ಅವರಿಗೇ ಹೆಚ್ಚು ಖುಷಿಯಿರುವುದು. ಬಾಬಾ, ನಾವಂತೂ ಮಮ್ಮಾ-ಬಾಬಾರವರನ್ನು ಅನುಸರಿಸುತ್ತೇವೆಂದು ಹೇಳುತ್ತಾರೆ, ಆಗಲೇ ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಸಾಧ್ಯ. ನಾವು ಎಷ್ಟು ಸರ್ವೀಸ್ ಮಾಡುತ್ತೇವೆ ಮತ್ತು ಎಷ್ಟು ಖುಷಿಯಲ್ಲಿರುತ್ತೇವೆ ಎಂಬ ತಿಳುವಳಿಕೆಯೂ ಇರಬೇಕು. ಸ್ವಯಂ ಖುಷಿಯಲ್ಲಿದ್ದಾಗಲೇ ಅನ್ಯರನ್ನೂ ಖುಷಿಯಲ್ಲಿ ತರುತ್ತೀರಿ, ಒಳಗೆ ಯಾವುದೇ ಕೆಟ್ಟ ಗುಣಗಳಿದ್ದರೆ, ಕೊರತೆಗಳಿದ್ದರೆ ಮನಸ್ಸು ತಿನ್ನುತ್ತಾ ಇರುತ್ತದೆ. ಕೆಲಕೆಲವರು ಬಂದು ಹೇಳುತ್ತಾರೆ, ಬಾಬಾ ನಮ್ಮಲ್ಲಿ ಕ್ರೋಧವಿದೆ, ನಮ್ಮಲ್ಲಿ ಈ ಭೂತವಿದೆ. ಇದು ಚಿಂತೆಯ ಮಾತಾಯಿತಲ್ಲವೆ. ಭೂತಗಳಿರಲು ಬಿಡಬಾರದು, ಕ್ರೋಧವನ್ನೇಕೆ ಮಾಡುವುದು! ಪ್ರೀತಿಯಿಂದ ತಿಳಿಸಲಾಗುತ್ತದೆ - ತಂದೆಯು ಯಾರ ಮೇಲಾದರೂ ಕ್ರೋಧ ಮಾಡುತ್ತಾರೆಯೇ? ಶಿವ ತಂದೆಯ ಮಹಿಮೆಯಿದೆಯಲ್ಲವೆ. ಬಹಳ ಸುಳ್ಳು ಮಹಿಮೆಯನ್ನು ಮಾಡುತ್ತಾರೆ. ನಾನು ಏನು ಮಾಡುತ್ತೇನೆ! ಬಂದು ಪತಿತರಿಂದ ಪಾವನ ಮಾಡಿ ಎಂದು ಹೇಳುತ್ತಾರೆ. ಹೇಗೆ ವೈದ್ಯರಿಗೆ ನಮ್ಮ ಖಾಯಿಲೆಯನ್ನು ದೂರ ಮಾಡಿ ಎಂದು ಹೇಳುತ್ತಾರೆ, ಅವರು ಔಷಧಿ ನೀಡಿ, ಇಂಜೆಕ್ಷನ್ ಕೊಡುತ್ತಾರೆ. ಅದಂತೂ ಅವರ ಕೆಲಸವಾಗಿದೆ, ಅದೇನು ದೊಡ್ಡ ಮಾತು! ಓದುವುದೇ ಸರ್ವೀಸಿಗಾಗಿ, ಹೆಚ್ಚು ಓದಿದರೆ ಹೆಚ್ಚು ಸಂಪಾದನೆ ಮಾಡಿಕೊಳ್ಳುತ್ತಾರೆ. ತಂದೆಯಂತೂ ಯಾವುದೇ ಸಂಪಾದನೆ ಮಾಡಬೇಕಾಗಿಲ್ಲ, ಅವರು ಕೇವಲ ಸಂಪಾದನೆ ಮಾಡಿಸಬೇಕಾಗಿದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ನನಗೆ ಅವಿನಾಶಿ ಸರ್ಜನ್ ಎಂದೂ ಹೇಳುತ್ತೀರಿ. ಇದು ನನಗೆ ಹೆಚ್ಚು ಮಹಿಮೆ ಮಾಡಿದ್ದೀರಿ. ಪತಿತ-ಪಾವನನಿಗೆ ಸರ್ಜನ್ ಎಂದು ಹೇಳಲಾಗುವುದಿಲ್ಲ, ಇದು ಕೇವಲ ಮಹಿಮೆಯಾಗಿದೆ. ತಂದೆಯಂತೂ ಇಷ್ಟನ್ನೇ ಹೇಳುತ್ತಾರೆ, ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ನನ್ನೊಬ್ಬನನ್ನೇ ನೆನಪು ಮಾಡಿರಿ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಎಂದು ತಿಳಿಸುವುದೇ ನನ್ನ ಪಾತ್ರವಾಗಿದೆ. ಇದು ರಾಜಯೋಗದ ಜ್ಞಾನವಾಗಿದೆ. ಯಾರು ಗೀತೆಯನ್ನು ಓದಿದ್ದಾರೆಯೋ ಅವರಿಗೆ ತಿಳಿಸುವುದು ಸಹಜವಾಗುತ್ತದೆ. ನೀವು ಪೂಜ್ಯ ರಾಜಾಧಿರಾಜರಾಗುತ್ತೀರಿ ನಂತರ ಪೂಜಾರಿಗಳಾಗುತ್ತೀರಿ. ನೀವು ಪರಿಶ್ರಮ ಪಡಬೇಕಾಗಿದೆ. ವಿಶ್ವವನ್ನೇ ನೀವು ಪವಿತ್ರವನ್ನಾಗಿ ಮಾಡುತ್ತೀರಿ, ಇದು ಎಷ್ಟು ದೊಡ್ಡ ಪದವಿಯಾಗಿದೆ! ಕಲಿಯುಗೀ ಪರ್ವತವನ್ನು ಪರಿವರ್ತಿಸುವುದರಲ್ಲಿ ನೀವೆಲ್ಲರೂ ಕಿರು ಬೆರಳಿನ ಸಹಯೋಗ ನೀಡುತ್ತೀರಿ ಬಾಕಿ ಸ್ಥೂಲವಾಗಿ ಪರ್ವತದ ಯಾವುದೇ ಮಾತಿಲ್ಲ. ಈಗ ನಿಮಗೆ ತಿಳಿದಿದೆ, ಹೊಸ ಪ್ರಪಂಚವು ಬರಲಿದೆ ಆದ್ದರಿಂದ ರಾಜಯೋಗವನ್ನು ಅವಶ್ಯವಾಗಿ ಕಲಿಯಬೇಕಾಗಿದೆ, ತಂದೆಯೇ ಬಂದು ಕಲಿಸುತ್ತಾರೆ. ಈಗ ಸತೋಪ್ರಧಾನರಾಗಬೇಕಾಗಿದೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರಿಗೆ ತಿಳಿಸಿದ ಕೂಡಲೇ ನಾಟುವುದು. ಈ ಮಾತು ಸರಿಯಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ತಂದೆಯು ಅವಶ್ಯವಾಗಿ ಮನ್ಮನಾಭವ ಎಂದು ಹೇಳಿದ್ದರು. ಅದು ಸಂಸ್ಕೃತ ಶಬ್ಧವಾಗಿದೆ. ತಂದೆಯಂತೂ ನನ್ನನ್ನು ನೆನಪು ಮಾಡಿ ಎಂದು ಹಿಂದಿ ಭಾಷೆಯಲ್ಲಿ ಹೇಳುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಎಷ್ಟು ಶ್ರೇಷ್ಠ ಧರ್ಮ - ಶ್ರೇಷ್ಠ ಕರ್ಮದವರಾಗಿದ್ದಿರಿ. ಆದ್ದರಿಂದಲೇ 16 ಕಲಾ ಸಂಪೂರ್ಣ.... ಎಂದು ಗಾಯನವಿದೆ. ಪುನಃ ಆ ರೀತಿ ಆಗಬೇಕಾಗಿದೆ. ತಮ್ಮನ್ನು ನೋಡಿಕೊಳ್ಳಿ, ನಾವು ಎಷ್ಟು ಸತೋಪ್ರಧಾನರಾಗಿದ್ದೇವೆ, ಪಾವನರಾಗಿದ್ದೇವೆ. ಎಷ್ಟು ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವ ಸೇವೆ ಮಾಡುತ್ತೇವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ನಿರಹಂಕಾರಿಗಳಾಗಬೇಕಾಗಿದೆ. ಈ ಶರೀರದ ಸಂಭಾಲನೆ ಮಾಡುತ್ತಾ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ತಂದೆಗೆ ಸಹಯೋಗಿಗಳಾಗಬೇಕಾಗಿದೆ. |
2. ಒಳಗೆ ಯಾವುದೇ ಭೂತವಿರಲು ಅನುಮತಿ ಕೊಡಬಾರದು. ಎಂದೂ ಯಾರ ಮೇಲೂ ಕ್ರೋಧ ಮಾಡಬಾರದು. ಎಲ್ಲರೊಂದಿಗೆ ಬಹಳ ಪ್ರೀತಿಯಿಂದ ನಡೆದುಕೊಳ್ಳಬೇಕು. ಮಾತಾಪಿತರನ್ನು ಅನುಸರಿಸಿ ಸಿಂಹಾಸನಾಧೀಶರಾಗಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳೇ, ಪ್ರದರ್ಶನಿಯನ್ನು ನೋಡಿ ಬಂದಾಗ ಬುದ್ಧಿಯಲ್ಲಿ ಇದೇ ನೆನಪಿರಬೇಕು- ಶೂದ್ರನಾಗಿದ್ದಂತಹ ನಾವು ಬ್ರಾಹ್ಮಣರಾಗಿದ್ದೇವೆ ನಂತರ ದೇವತಾ ಸೂರ್ಯವಂಶಿ, ಚಂದ್ರವಂಶಿಯಾಗುತ್ತೇವೆ. ಈ ಸಂಗಮಯುಗದ ಮಾಡೆಲ್ನ ಚಿತ್ರ ಪ್ರದರ್ಶನದಲ್ಲಿಡಬೇಕು. ಕಲಿಯುಗ ಮತ್ತು ಸತ್ಯಯುಗದ ಮಧ್ಯದಲ್ಲಿ ಇದು ಸಂಗಮಯುಗವಾಗಿದೆ ಆದ್ದರಿಂದ ಸಂಗಮಯುಗದ ಮಾಡಲ್ ಮಧ್ಯದಲ್ಲಿರಲಿ. ಆ ಚಿತ್ರದಲ್ಲಿ 15-20 ಶ್ವೇತವಸ್ತ್ರಧಾರಿಗಳು ತಪಸ್ಸಿನಲ್ಲಿ ಕುಳಿತಿರಬೇಕು. ಸೂರ್ಯವಂಶಿಯರನ್ನು ತೋರಿಸಿರುವಂತೆ ಚಂದ್ರವಂಶಿಯರನ್ನೂ ತೋರಿಸಬೇಕು. ತಪಸ್ಸಿನಿಂದ ಹೀಗಿದ್ದವರು ಹೀಗಾದರೆಂದು ಮನುಷ್ಯರು ತಿಳಿದುಕೊಳ್ಳುವಂತೆ ಮಾಡಬೇಕು. ಇದು ನಿಮ್ಮ ಆರಂಭದ ಚಿತ್ರವೂ ಆಗಿದೆ. ಸಾಧಾರಣ ತಪಸ್ಸಿನ ಹಾಗೂ ಭವಿಷ್ಯದ ರಾಜ್ಯಪದವಿಯ ಚಿತ್ರ ಇರುವಂತೆ ಇದನ್ನೂ ಮಾಡಬೇಕು. ಆಗ ನೀವುಇವರೇ ಅವರಾಗುತ್ತಾರೆಂದು ತಿಳಿಸಿಕೊಡಬಹುದು. ಯಥಾವತ್ತಾಗಿ ತೋರಿಸಬೇಕಾಗುತ್ತದೆ. ನಾವು ಬ್ರಹ್ಮಾಕುಮಾರ-ಕುಮಾರಿಯರು ರಾಜಯೋಗವನ್ನು ಕಲಿತು ಹೀಗೆ ಆಗುತ್ತೇವೆ. ಆಗ ಸಂಗಮಯುಗವನ್ನೂ ಸಹ ಅಗತ್ಯವಾಗಿ ತೋರಿಸಬೇಕಾಗುವುದು. ನೀವು ಮಕ್ಕಳು ನೋಡಿಕೊಂಡು ಬರುತ್ತೀರೆಂದಾಗ ಇಡೀ ದಿನ ಆ ಜ್ಞಾನವು ಬುದ್ಧಿಯಲ್ಲಿರಬೇಕಾಗಿದೆ. ಆಗಲೇ ಜ್ಞಾನಸಾಗರನ ಮಕ್ಕಳು ನೀವು ಮಾಸ್ಟರ್ ಜ್ಞಾನಸಾಗರ ಎಂದು ಕರೆಸಿಕೊಳ್ಳುತ್ತೀರಿ. ಒಂದುವೇಳೆ ಜ್ಞಾನವು ಬುದ್ಧಿಯಲ್ಲಿ ಇಲ್ಲದಿರುವಾಗ ಜ್ಞಾನಸಾಗರನೆಂದು ಹೇಳಲಾಗುತ್ತದೆಯೇನು! ಆದುದರಿಂದ ಇಡೀ ದಿನ ಬುದ್ಧಿಯು ಇದರಲ್ಲಿಯೇ ತೊಡಗಿದ್ದಾಗ ಎಲ್ಲಾ ಬಂಧನಗಳು ದೂರವಾಗುತ್ತಾ ಹೋಗುತ್ತವೆ. ಈಗ ನಾವು ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಯಾಗುತ್ತೇವೆ. ಒಂದುವೇಳೆ ಉತ್ತಮ ಪುರುಷಾರ್ಥ ಮಾಡದೇ ಹೋದಲ್ಲಿ ಕ್ಷತ್ರಿಯ ಕುಲದಲ್ಲಿ ಹೋಗಿಬಿಡುತ್ತೀರಿ ವೈಕುಂಠವನ್ನು ನೋಡಲೂ ಆಗುವುದಿಲ್ಲ. ಮುಖ್ಯವಾಗಿರುವುದೇ ವೈಕುಂಠ. ವಂಡರ್ ಆಫ್ ದಿ ವರ್ಲ್ಡ್ (ಅಧ್ಭುತಜಗತ್ತು) ಎಂದು ಸತ್ಯಯುಗಕ್ಕೆ ಕರೆಯಲಾಗುವುದು ಆದುದರಿಂದ ಪುರುಷಾರ್ಥ ಮಾಡಬೇಕು. ನಿಮ್ಮ ಈ ಎರಡೂ ಚಿತ್ರಗಳಿರಬೇಕಾಗುತ್ತದೆ. ಅದೇ ಬಣ್ಣ-ಬಣ್ಣದ ವಸ್ತ್ರ ಹಾಗೂ ಆಭರಣಗಳಿಂದ ಶೃಂಗರಿಸಲ್ಪಟ್ಟಿರುವ ಚಿತ್ರ ಹಾಗೂ ಇದು ತಪಸ್ಸಿನ ಚಿತ್ರ ಆಗ...... ಇವರು ಸೂಕ್ಷ್ಮವತನದಲ್ಲಿ ಕುಳಿತಿದ್ದಾರೆಂದು ಅವರು ತಿಳಿದುಕೊಳ್ಳುತ್ತಾರೆ. ವಸ್ತ್ರವನ್ನಂತೂ ಬದಲಾಯಿಸಬೇಕಾಗುತ್ತದೆ, ಲಕ್ಷಣವನ್ನಂತೂ ಬದಲಾಯಿಸಲು ಸಾಧ್ಯವಿಲ್ಲ. ಅದು ಅಪವಿತ್ರ ಪ್ರವೃತ್ತಿಮಾರ್ಗದ್ದಾಗಿದೆ, ಇದು ಪವಿತ್ರ ಪ್ರವೃತ್ತಿಮಾರ್ಗದ್ದಾಗಿದೆ. ಈ ಎರಡೂ ಚಿತ್ರದಿಂದ ಸತ್ಯಯುಗದ ಸ್ಥಾಪನೆ ಮಾಡುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಇವರೇ ಮತ್ತೆ ಅವರಾಗುತ್ತಾರೆ(ದೇವತೆಗಳು). ಯಾರು ಪರಿಶ್ರಮಪಡುತ್ತಾರೆಯೋ ಅವರೇ ಪಡೆದುಕೊಳ್ಳುತ್ತಾರೆ. ಬ್ರಾಹ್ಮಣರಾಗುವವರಂತೂ ಬಹಳ ಇದ್ದಾರಲ್ಲವೆ, ಈ ಸಮಯ ನೀವು ಕಡಿಮೆಯಿದ್ದೀರಿ. ದಿನ-ಪ್ರತಿದಿನ ವೃದ್ಧಿಯಾಗುತ್ತಿರುತ್ತದೆ. ಸೃಷ್ಟಿಚಕ್ರವು ಹೇಗೆ ತಿರುಗುತ್ತದೆ ಎನ್ನುವುದು ಬುದ್ಧಿಯಲ್ಲಿದೆ- ನಾವೀಗ ತಪಸ್ಸನ್ನು ಮಾಡುತ್ತಿದ್ದೇವೆ ನಂತರ ಹೀಗೆ ಆಗುತ್ತೇವೆ. ಇದನ್ನೇ ಸ್ವದರ್ಶನ ಚಕ್ರಧಾರಿಯಾಗಿ ಕುಳಿತುಕೊಳ್ಳುವುದು ಎಂದು ಕರೆಯಲಾಗುವುದು ಏಕೆಂದರೆ ಬುದ್ಧಿಯಲ್ಲಂತೂ ಪೂರ್ಣ ಜ್ಞಾನವಿದೆ. ನಾವು ಏನಾಗಿದ್ದೆವು, ಈಗ ಏನಾಗುತ್ತೇವೆ. ವಿದ್ಯಾರ್ಥಿಗಳು ಶಿಕ್ಷಕರನ್ನು ಅಗತ್ಯವಾಗಿ ನೆನಪು ಮಾಡುತ್ತಾರೆ, ನಿಮ್ಮನ್ನೂ ಸಹ ತಂದೆ (ಶಿಕ್ಷಕ) ಯು ನೆನಪು ಮಾಡುತ್ತಾರೆ. ನೆನಪಿನ ಯಾತ್ರೆಯಿಂದ ಮಾತ್ರ ಪಾಪ ನಾಶವಾಗುತ್ತದೆ. ಆತ್ಮವು ಪವಿತ್ರವಾಗಿ ನಂತರ ಪವಿತ್ರ ಶರೀರವು ದೊರೆಯುತ್ತದೆ. ಯಾರು ಶೂದ್ರರಿಂದ ಬ್ರಾಹ್ಮಣರಾಗುತ್ತಾರೆಯೋ ಅವರೇ ನಂತರ ದೇವತೆಗಳಾಗುತ್ತಾರೆ. ಈ ಚಿತ್ರವು ಎಷ್ಟು ದೊಡ್ಡ ಚಿತ್ರವಾಗಿರುತ್ತದೆಯೋ ಅಷ್ಟು ಒಳ್ಳೆಯದು ಏಕೆಂದರೆ ಸಂಗಮಯುಗದಲ್ಲಿ ಪುರುಷೋತ್ತಮರಾಗುವ ಬ್ರಾಹ್ಮಣರು ಎಂದು ಬರೆಯಬೇಕು. ಈಗ ನಿಮಗೆ ತಂದೆಯು ಕುಳಿತು ಓದಿಸುತ್ತಿದ್ದಾರೆ. ಮೇಲೆ ಶಿವತಂದೆಯ ಚಿತ್ರವೂ ಇರಲಿ, ಅವರು ನಿಮಗೆ ಓದಿಸುತ್ತಿದ್ದಾರೆ. ನೀವೀಗ ಹೀಗೆ (ದೇವತೆ) ಆಗುತ್ತೀರಿ. ಈ ಬ್ರಹ್ಮಾರವರೂ ಸಹ ನಿಮ್ಮ ಜೊತೆಯಿದ್ದಾರೆ, ಅವರು ಶ್ವೇತವಸ್ತ್ರಧಾರಿ ವಿದ್ಯಾರ್ಥಿಯಾಗಿದ್ದಾರೆ. ಮನುಷ್ಯರಂತೂ ರಾಮರಾಜ್ಯವನ್ನು ಒಪ್ಪಿಕೊಳ್ಳುವುದಿಲ್ಲ. ರಾಮರಾಜ, ರಾಮನಂತೆ ಪ್ರಜೆ..... ಎಂಬ ಗಾಯನವೂ ಇದೆ. ಸತ್ಯಯುಗದಲ್ಲಂತೂ ಧರ್ಮದ ರಾಜ್ಯವಿರುತ್ತದೆ ಉಳಿದ ತ್ರೇತಾಯುಗದಲ್ಲಿ ಕ್ಷತ್ರಿಯರನ್ನು ನಿಂಧನೆ ಮಾಡಿದ್ದಾರೆ. ಸೂರ್ಯವಂಶಿಯರನ್ನು ನಿಂದನೆ ಮಾಡಿಲ್ಲ ಆದ್ದರಿಂದ ಇದನ್ನು ಬರೆಯಬೇಕು- ರಾಮರಾಜ, ರಾಮಪ್ರಜಾ..... ಧರ್ಮದಲ್ಲಿ ಉಪಕಾರವಿರುತ್ತದೆ. ಅದೂ ಸಹ ಸೆಮಿಸ್ವರ್ಗವಾಗಿದೆ ಏಕೆಂದರೆ 14 ಕಲೆಯಲ್ಲವೆ! ಅಲ್ಲಿ ಇಂತಹ ನಿಂದನೆಯ ಮಾತಿರುವುದಿಲ್ಲ, ಆಗುವುದಿಲ್ಲ ಆದುದರಿಂದ ಅವರಿಗೆ ನಾವು ಏನಾಗುತ್ತಿದ್ದೇವೆಂದು ಸ್ಪಷ್ಟ ಮಾಡಿ. ನಾವೇ ನಮಗಾಗಿ ರಾಮರಾಜ್ಯ ಸ್ಥಾಪನೆ ಮಾಡುತ್ತಿದ್ದೇವೆ, ವಿಶ್ವದಲ್ಲಿ ಶಾಂತಿಯ ಒಂದೇ ಅಂತಹ ಸ್ವರಾಜ್ಯವನ್ನು ಎಲ್ಲರೂ ಬೇಡುತ್ತಾರೆ, ನಾವು ಅದನ್ನು ಸ್ಥಾಪನೆ ಮಾಡುತ್ತಿದ್ದೇವೆ. |
ತಂದೆಯು ಪ್ರದರ್ಶನಿ ಮೊದಲಾದವುಗಳನ್ನು ನೋಡಿದಾಗ ಈ ಚಿಂತನೆ ನಡೆಯುತ್ತಿರುತ್ತದೆ. ನೀವು ಮಕ್ಕಳು ಮನೆಗೆ ಹೋದಾಗ ಎಲ್ಲವನ್ನೂ ಮರೆತುಬಿಡುತ್ತೀರಿ ಆದರೆ ಈ ಎಲ್ಲವನ್ನೂ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಪ್ರದರ್ಶನಿಯಿಂದ ಹೊರಗೆ ಬಂದನಂತರ ಆಟ ಮುಗಿಯುವಂತೆ ಮರೆಯಬಾರದು. ಒಳ್ಳೊಳ್ಳೆಯ ಮಕ್ಕಳು ಯಾರು ಉತ್ತಮ ಪುರುಷಾರ್ಥಿಗಳಾಗಿದ್ದಾರೆ, ಅವರ ಬುದ್ಧಿಯಲ್ಲಿ ಇದು ವಿಚಾರ ನಡೆಯುತ್ತಿರಬೇಕು. ತಂದೆಗಂತೂ ವಿಚಾರ ನಡೆಯುತ್ತಲೇ ಇರುತ್ತದೆ. ಬುದ್ಧಿಯಲ್ಲಿ ಇಡೀ ಜ್ಞಾನವಿದ್ದರೆ ತಂದೆಯ ನೆನಪೂ ಇರುತ್ತದೆ, ಉನ್ನತಿಯನ್ನು ಹೊಂದುತ್ತಿರುತ್ತೀರಿ. ಒಂದುವೇಳೆ ಸತೋಪ್ರಧಾನವಾಗದಿದ್ದರೆ ಸತ್ಯಯುಗದಲ್ಲಿ ಹೋಗುವುದಿಲ್ಲ ಆದ್ದರಿಂದ ತಮ್ಮನ್ನು ನೆನಪಿನ ಯಾತ್ರೆಯಲ್ಲಿ ಪಕ್ಕಾ ಇಟ್ಟುಕೊಳ್ಳಬೇಕು. ನೀವು ರಾಜಯೋಗಿಗಳು, ನಿಮಗೆ ಅತಿದೊಡ್ಡ ಜಟೆ (ಉದ್ದವಾದ ಕೂದಲು) ಯಿದೆ, ನೀವು ಮಾತೆಯರದೇ ಎಲ್ಲಾ ಮಹಿಮೆ ಆಗಿದೆ. ಸ್ವಾಭಾವಿಕ ಜಟೆಯಿದೆ. ರಾಜಯೋಗಿ ಹಾಗೂ ಯೋಗಿನಿಯ ಸತ್ಯ-ಸತ್ಯ ತಪಸ್ಸಿನ ರೂಪ ತೋರಿಸುತ್ತಾರೆ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ತಿಳಿಸುತ್ತಾರೆ- ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ನಿಶ್ಚಯ ಮಾಡಿಕೊಳ್ಳಿ. ಉಳಿದ ದೇಹದ ಸಂಬಂಧ ಮುಂತಾದವುಗಳನ್ನು ಮರೆತು ಒಬ್ಬ ತಂದೆಯನ್ನು ನೆನಪು ಮಾಡಿ. ಅವರು (ತಂದೆ) ನಿಮ್ಮನ್ನು ತುಂಬಾ ಸಂಪದ್ಭರಿತವಾಗಿ ಮಾಡುತ್ತಾರೆ. ಬದುಕಿದ್ದೂ ಸತ್ತುಹೋಗಿ. ತಂದೆಯು ಬಂದು ಬದುಕಿದ್ದಂತೆಯೇ ಸಾಯುವುದನ್ನು ಕಲಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಕಾಲರಕಾಲನಾಗಿದ್ದೇನೆ, ನಿಮಗೆ ಇಂತಹ ಮೃತ್ಯುವನ್ನು ಕಲಿಸಿಕೊಡುತ್ತೇನೆ, ಅದರಿಂದ ಎಂದಿಗೂ ನಿಮ್ಮ ಬಾಗಿಲಲ್ಲಿ ಮೃತ್ಯುವು ಬರಲು ಸಾಧ್ಯವಿಲ್ಲ. ಅಲ್ಲಿ ರಾವಣರಾಜ್ಯವೇ ಇರುವುದಿಲ್ಲ. ಸತ್ಯಯುಗದಲ್ಲಿ ಎಂದಿಗೂ ಮೃತ್ಯುವೂ ಕಬಳಿಸುವುದಿಲ್ಲ ಅದನ್ನು ಅಮರಪುರಿಯೆಂದು ಕರೆಯಲಾಗುವುದು. ತಂದೆಯು ನಿಮ್ಮನ್ನು ಅಮರಪುರಿಯ ಮಾಲೀಕರನ್ನಾಗಿ ಮಾಡುತ್ತಾರೆ. ಇದಾಗಿದೆ ಮೃತ್ಯುಲೋಕ ಅದಾಗಿದೆ ಅಮರಪುರಿ. ಇದು ರಾಜಯೋಗವಾಗಿದೆ, ಇಲ್ಲಿ ಮತ್ತೆ ಪ್ರಾಚೀನ ಭಾರತದ ರಾಜಯೋಗವನ್ನು ಕಲಿಸಲಾಗುತ್ತದೆ ಎಂದು ಬರೆಯಿರಿ. ಯಾರು ಪ್ರದರ್ಶನಿ ಮೊದಲಾದವುಗಳನ್ನು ನೋಡಿಕೊಳ್ಳುತ್ತಾರೆ ಅವರು ಜನರಿಗೆ ಯಥಾವತ್ತಾಗಿ ತಿಳಿಸಿಕೊಡುವಂತೆ ವಿಚಾರ ಮಾಡಬೇಕಾಗುವುದು. ಇದರಲ್ಲಿ ಪ್ರತ್ಯಕ್ಷವಾಗಿ ಬಹಳ ಚೆನ್ನಾಗಿ ತಿಳಿಸಿಕೊಡಬೇಕು. ಯಥಾ ರಾಜ-ರಾಣಿ ತಥಾ ಪ್ರಜೆಯಂತೂ ಬಂದೇಬಿಡುತ್ತಾರೆ. ತಂದೆಯು ಎಷ್ಟು ಸ್ಪಷ್ಟವಾಗಿ ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಇದರ ಬಗ್ಗೆ ಪೂರ್ಣಗಮನ ಕೊಡಬೇಕು. ವಿಶ್ವದಲ್ಲಿ ಪವಿತ್ರತೆ, ಸುಖ-ಶಾಂತಿಯ ಸ್ಥಾಪನೆಯಾಗುತ್ತಿದೆ, ಅದು ಹೇಗೆ ಆಗುತ್ತಿದೆ ಎಂದು ಬಂದು ತಿಳಿದುಕೊಳ್ಳಿ. ನೀವು ನಿಮಗಾಗಿಯೇ ಮಾಡುತ್ತೀರಿ. ಹೇಗಾಗುತ್ತಾರೆಂದೂ ಸಹ ತೋರಿಸಬೇಕು. ಪ್ರಜೆಗಳನ್ನೂ ತೋರಿಸಬೇಕು, ಶ್ರೀಮಂತ ಪ್ರಜೆಗಳನ್ನು, ಎರಡನೆ ದರ್ಜೆ, ಮೂರನೇ ದರ್ಜೆಯ ಪ್ರಜೆಗಳನ್ನೂ ತೋರಿಸಬೇಕು. ಹೀಗೆ ಚೆನ್ನಾಗಿ ತಿಳಿಸಿಕೊಡಲು ಸ್ಪಷ್ಟವಾಗಿ ಮಾಡಬೇಕು. ಇದರಲ್ಲಿ ಪರಿಶ್ರಮವಂತೂ ಪಡಬೇಕಾಗುವುದು. ಸಮಯವಂತೂ ತುಂಬಾ ಕಡಿಮೆಯಿದೆ, ಈ ಜ್ಞಾನವು ನಿಮಗಾಗಿಯೇ ಇದೆ, ನೀವು ಪ್ರದರ್ಶನಿಯಲ್ಲಿ ಈ ರೀತಿ ತಿಳಿಸಿದರೆ ಜನರು ನಾವು ಒಬ್ಬ ತಂದೆಯನ್ನು ನೆನಪು ಮಾಡಿದಾಗ ನಾವು ಹೀಗಾಗುತ್ತೇವೆಂದು ತಿಳಿದುಕೊಳ್ಳಬೇಕು. ಇಲ್ಲವಾದಲ್ಲಿ ಮತ್ತೆ ಅವರು ಭಕ್ತಿಮಾರ್ಗದಲ್ಲಿ ಬಂದುಬಿಡುತ್ತಾರೆ. |
ನೀವು ಮಹಾರಥಿ ಮಕ್ಕಳಾದ್ದರಿಂದ ನಿಮ್ಮ ಬುದ್ಧಿಯು ಸೇವೆಯ ಬಗ್ಗೆ ವಿಚಾರ ನಡೆಯುತ್ತದೆ. ಸಹೋದರರಲ್ಲೂ ಒಳ್ಳೊಳ್ಳೆಯವರಿದ್ದಾರೆ. ನಂಬರ್ವನ್ ಜಗದೀಶ್ ಆಗಿದ್ದಾರೆ. ಅವರು ಮಾಸಪತ್ರಿಕೆಯನ್ನೂ ಮಾಡುತ್ತಾರೆ. ಬೃಜ್ಮೋಹನ್ ಅವರಿಗೂ ಸಹ ಬರೆಯುವುದರಲ್ಲಿ ಬಹಳ ಆಸಕ್ತಿಯಿದೆ. ಬಹುಷಃ ಮೂರನೆಯವರು ಯಾರಾದರೂ ತಯಾರಾಗಬಹುದು. ಪ್ರತಿಯೊಂದು ಮಾತನ್ನೂ ನೀವು ದಿನ-ಪ್ರತಿದಿನ ಸ್ಪಷ್ಟ ಮಾಡುತ್ತಾ ಹೋಗುತ್ತೀರಿ. ತಂದೆಯು ಜ್ಞಾನಸಾಗರ ಆಗಿದ್ದಾರೆ, ಆ ಪರಮಾತ್ಮನಲ್ಲಿ ಜ್ಞಾನವು ತುಂಬಲ್ಪಟ್ಟಿದೆಯಲ್ಲವೆ. ಹೇಗೆ ಹಾಡನ್ನೂ ಸಹ ಕೇಳುತ್ತೀರಿ ಹಾಗೆಯೇ ಪೂರ್ಣ ರಿಕಾರ್ಡ್ ತುಂಬಲ್ಪಟ್ಟಿರುತ್ತದೆ. ಇದೂ ಸಹ ಅದೇ ರೀತಿಯಾಗಿದೆ. ತಂದೆಯ ಬಳಿ ಯಾವ ಮಾಲ್ (ಸಂಪತ್ತು) ಇದೆ, ಅದು ನಾಟಕದನುಸಾರ ಸಿಗುತ್ತಿರುತ್ತದೆ. ಇದೆಲ್ಲವೂ ನೀವು ಮಕ್ಕಳ ಬುದ್ಧಿಯಲ್ಲಿ ವಿಚಾರ ನಡೆಯುತ್ತಿರಬೇಕು. ಭಲೆ ಕೆಲಸಕಾರ್ಯಗಳನ್ನು ಮಾಡಿ, ಕೈಯಿಂದ ಭೋಜನವನ್ನೂ ತಯಾರು ಮಾಡಿ ಆದರೆ ಬುದ್ಧಿಯು ಶಿವತಂದೆಯ ಜೊತೆಯಿರಲಿ ಏಕೆಂದರೆ ಬ್ರಹ್ಮಾಭೋಜನವು ಪವಿತ್ರವಾಗಿರಬೇಕು. ಬ್ರಹ್ಮಾಭೋಜನವೇ ಬ್ರಾಹ್ಮಣರ ಭೋಜನವಾಗಿದೆ. ಎಷ್ಟೆಷ್ಟು ಯೋಗದಲ್ಲಿದ್ದು ಊಟ ತಯಾರು ಮಾಡುತ್ತೀರಿ ಅಷ್ಟು ಆ ಭೋಜನದಲ್ಲಿ ಶಕ್ತಿ ಬರುತ್ತದೆ. ದೇವತೆಗಳೂ ಸಹ ಬ್ರಹ್ಮಾಭೋಜನವನ್ನು ಬಹಳ ಮಹಿಮೆ ಮಾಡುತ್ತಿದ್ದರೆಂದು ಗಾಯನವಿದೆ. ಅಂತಹ ಊಟದಿಂದ ಹೃದಯ ಶುದ್ಧವಾಗುತ್ತದೆ ಎಂದಾಗ ಬ್ರಾಹ್ಮಣರೂ ಸಹ ಅದೇ ರೀತಿಯಿರಬೇಕು ಆದರೆ ಅದು ಈಗ ಇಲ್ಲದಂತಾಗಿದೆ. ಈಗ ಒಂದುವೇಳೆ ಈ ರೀತಿಯಾಗಿಬಿಟ್ಟರೆ ನಿಮ್ಮದು ವೃದ್ಧಿಯಾಗುತ್ತದೆ ಆದರೆ ನಾಟಕದನುಸಾರ ನಿಧಾನ-ನಿಧಾನವಾಗಿ ಬೆಳವಣಿಗೆಯಾಗಬೇಕು. ಇಂತಹ ಬ್ರಾಹ್ಮಣರೂ ತಯಾರಾಗುತ್ತಾರೆ- ನಾವು ತಂದೆಯ ನೆನಪಿನಲ್ಲಿದ್ದು ಭೋಜನ ತಯಾರು ಮಾಡುತ್ತೇವೆಂದು ಹೇಳುತ್ತಾರೆ. ಯೋಗದಲ್ಲಿದ್ದು ಭೋಜನವನ್ನು ತಯಾರು ಮಾಡುವ ಬ್ರಾಹ್ಮಣರು ಬೇಕು ಎಂದು ತಂದೆಯೂ ಸಹ ಚಾಲೆಂಜ್ ಮಾಡುತ್ತಾರಲ್ಲವೆ. ಭೋಜನವು ಪವಿತ್ರವಾಗಿರಬೇಕಾಗುತ್ತದೆ. ಭೋಜನದ ಮೇಲೆ ಬಹಳ ಆಧಾರಿತವಾಗಿದೆ. ಮಕ್ಕಳಿಗೆ ಹೊರಗಡೆ ದೊರೆಯದೇ ಇರುವಕಾರಣ ಇಲ್ಲಿ ಬರುತ್ತಾರೆ. ಮಕ್ಕಳು ಭೋಜನದಿಂದ ರಿಫ್ರೆಷ್ ಆಗುತ್ತಾರೆ. ಯೋಗದಲ್ಲಿರುವವರೇ ಜ್ಞಾನಿಗಳೂ ಆಗಿರುತ್ತಾರೆ ಆದುದರಿಂದ ಅವರನ್ನು ಸೇವೆಯಲ್ಲಿ ಕಳುಹಿಸುತ್ತಾರೆ. ಬಹಳ ಮಕ್ಕಳಾಗಿಬಿಟ್ಟಾಗ ಇಲ್ಲಿಯೂ ಅಂತಹ ಬ್ರಾಹ್ಮಣರನ್ನು ಇಡುತ್ತೇವೆ. ಇಲ್ಲವೆಂದರೆ ಮಹಾರಥಿಗಳಂಥಹ ಮಕ್ಕಳು ಯಜ್ಞ(ಭೋಜನದ) ಸೇವೆಗೆ ನಿಮಿತ್ತರಾಗಬೇಕು. ಆ ಭೋಜನವನ್ನು ಯೋಗಯುಕ್ತರಾಗಿ ತಯಾರು ಮಾಡುವವರಾಗಿರಬೇಕು. ನಾವು ಬ್ರಹ್ಮಾಭೋಜನವನ್ನು ಸ್ವೀಕರಿಸಿ ದೇವತೆಗಳಾದೆವೆಂದು ದೇವತೆಗಳೂ ತಿಳಿದುಕೊಂಡಿದ್ದಾರೆ ಆದುದರಿಂದ ನಿಮ್ಮೊಂದಿಗೆ ಬಹಳ ಇಷ್ಟಪಟ್ಟು ಮಿಲನ ಮಾಡಲು ಬರುತ್ತಾರೆ. ಅವರು ಹೇಗೆ ನಿಮ್ಮೊಂದಿಗೆ ಮಿಲನ ಮಾಡುತ್ತಾರೆ, ಅದೂ ಸಹ ನಾಟಕದಲ್ಲಿ ಯುಕ್ತಿಯನ್ನು ರಚಿಸಲ್ಪಟ್ಟಿದೆ. ಆದುದರಿಂದ ಶ್ರಮಪಟ್ಟ ನಂತರ ಸಾಕ್ಷಾತ್ಕಾರವಾಗುತ್ತದೆ, ಅದೂ ಕೇವಲ ದರ್ಶನ ಮಾತ್ರವಾಗುತ್ತದೆ. ದರ್ಶನವಾದರೆ ನಾವು ಮುಕ್ತರಾಗುತ್ತೇವೆಂದು ತಿಳಿದುಕೊಂಡಿರುತ್ತಾರೆ. ನಾವು ಈ ವಿದ್ಯೆಯಿಂದ ಹೀಗೆ ಆಗುತ್ತೇವೆಂದು ಅವರು ತಿಳಿದುಕೊಂಡಿರುತ್ತಾರೇನು! ಈ ಸೂರ್ಯವಂಶಿ, ಚಂದ್ರವಂಶಿಯು ಈ ವಿದ್ಯೆಯಿಂದ ಆಗಿದ್ದಾರೆ. ಉಳಿದಂತೆ ಇಷ್ಟೊಂದು ಚಿತ್ರಗಳನ್ನು ಮಾಡಲಾಗಿದೆ, ಈ ರೀತಿ ಯಂತೂ ಏನೂ ಇಲ್ಲ. ಇದು ಭಕ್ತಿಮಾರ್ಗದ ವಿಸ್ತಾರವಾಗಿದೆ. ಇದು ಅತಿದೊಡ್ಡ ವ್ಯವಹಾರವಾಗಿದೆ. ಈಗ ಜ್ಞಾನ ಮತ್ತು ಭಕ್ತಿಯ ರಹಸ್ಯವನ್ನು ತಿಳಿದುಕೊಳ್ಳಲು ಸಾಧ್ಯ. ಇದನ್ನು ತಂದೆಯೇ ಕುಳಿತು ತಿಳಿಸುತ್ತಾರೆ, ಅವರೇ ಜ್ಞಾನಸಾಗರನಾಗಿದ್ದಾರೆ, ಆತ್ಮಿಕ ತಂದೆಯಾಗಿದ್ದಾರೆ. ಕಲ್ಪ-ಕಲ್ಪ ಹಳೆಯ ಪ್ರಪಂಚವನ್ನು ಹೊಸಪ್ರಪಂಚವನ್ನಾಗಿ ಮಾಡುವುದು, ರಾಜಯೋಗವನ್ನು ಕಲಿಸುವುದು ತಂದೆಯ ಕೆಲಸವಾಗಿದೆ ಆದರೆ ಗೀತೆಯಲ್ಲಿ ತಂದೆಯ ಹೆಸರನ್ನು ಬದಲಾಯಿಸಿಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ- ಇದೂ ಸಹ ಕಲ್ಪ-ಕಲ್ಪದ ಆಟವಾಗಿದೆ. ನಾವಿಲ್ಲಿ ಮನೆಯಿಂದ ಪಾತ್ರವನ್ನಭಿನಯಿಸಲು ಬರುತ್ತೇವೆ. ವೃಕ್ಷದತ್ತ ಯಾರಿಗೆ ಹೇಗೆ ತಿಳಿಸಿಕೊಡಬೇಕೆಂದು ಬುದ್ಧಿಯಿಂದ ಕೆಲಸ ಮಾಡಬೇಕು. ನಾವೇನು ಸ್ವರ್ಗದಲ್ಲಿ ಬರುವುದಿಲ್ಲವೆ ಎಂದು ಕೇಳುತ್ತಾರೆ. ನಿಮ್ಮ ಧರ್ಮಸ್ಥಾಪಕರಂತೂ ಸ್ವರ್ಗದಲ್ಲಿ ಬರುವುದೇ ಇಲ್ಲ, ಅವರೆಲ್ಲರೂ ಸ್ವರ್ಗದಲ್ಲಿ ಬಂದಾಗ ನೀವೂ ಬರುತ್ತೀರಿ ಎಂದು ಹೇಳಿ. ಪ್ರತಿಯೊಂದು ಧರ್ಮಕ್ಕೂ ತಮ್ಮತಮ್ಮದೇ ಆದ ಸಮಯದಲ್ಲಿ ಪಾತ್ರವಿದೆ. ಇದು ಭಿನ್ನ-ಭಿನ್ನ ಧರ್ಮಗಳ ಪಾತ್ರವು ಮಾಡಲ್ಪಟ್ಟಿದೆ. ಇದು ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ, ಇಲ್ಲಿ ಸ್ವಲ್ಪವೂ ಹೇಳುವ ಅವಶ್ಯಕತೆಯಿಲ್ಲ ಆದರೆ ಮುಖ್ಯಧರ್ಮಗಳನ್ನು ತೋರಿಸಲಾಗಿದೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ. ಈ ಚಿತ್ರಗಳಲ್ಲಿ ಯಾವುದೂ ಸಹ ಹೊಸಚಿತ್ರಗಳಿಲ್ಲ. ಕಲ್ಪ-ಕಲ್ಪವೂ ಇದೇ ರೀತಿ ನಡೆಯುತ್ತಾ ಬರುತ್ತದೆ. ಅನೇಕ ಪ್ರಕಾರದ ವಿಘ್ನಗಳೂ ಬೀಳುತ್ತವೆ. ಹೊಡೆದಾಟ (ಜಗಳ) ಮೊದಲಾದವುಗಳ ವಿಘ್ನಗಳೂ ಬೀಳುತ್ತಿರುತ್ತವೆಯಲ್ಲವೆ. ಮಕ್ಕಳಿಗೆ ಎಷ್ಟೊಂದು ಯುಕ್ತಿಯಿಂದ ತಿಳಿಸಲಾಗುತ್ತದೆ. ಭಗವಾನುವಾಚ- ಕಾಮ ಮಹಾಶತ್ರುವಾಗಿದೆ ಎಂದು ಹೇಳಿ. ಈಗಂತೂ ಈ ಕಲಿಯುಗೀ ಪ್ರಪಂಚವು ವಿನಾಶವಾಗುವುದಿದೆ. ದೇವತಾಧರ್ಮದ ಸ್ಥಾಪನೆಯಾಗುತ್ತಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಪವಿತ್ರರಾಗಿ ಕಾಮವನ್ನು ಗೆಲ್ಲಿರಿ. ಇದರಮೇಲೆ ಜಗಳವಾಗುತ್ತಿರುತ್ತದೆ. ನೀವು ಗಣ್ಯವ್ಯಕ್ತಿಗಳಿಗೂ ತಿಳಿಸುತ್ತೀರಿ. ರಾಜ್ಯಪಾಲರ ಹೆಸರನ್ನು ಕೇಳಿ ಎಲ್ಲರೂ ಬರುವರು ಆದುದರಿಂದ ಯುಕ್ತಿ ರಚಿಸಲಾಗುತ್ತದೆ. ಅವರಲ್ಲಿ ಯಾರಾದರೂ ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು. ಹಿರಿಯರ ಹೆಸರನ್ನು ಕೇಳಿ ಬಹಳ ಮಂದಿ ಬರುತ್ತಾರೆ. ಗಣ್ಯವ್ಯಕ್ತಿಗಳು ಬರುವಂತೆಯೂ ಆಗಬಹುದು, ಇದು ಬಹಳ ಕಷ್ಟವೇನೋ ಆಗಿದೆ. ತಂದೆಯು ಎಷ್ಟೊಂದು ಬರೆಯುತ್ತಾರೆ- ಮಕ್ಕಳೇ, ಯಾರಿಂದ ಉದ್ಘಾಟನೆ ಮಾಡಿಸುತ್ತೀರೋ ಅವರಿಗೆ ಮೊದಲು ಈ ರೀತಿ ತಿಳಿಸಿ- ಅಗತ್ಯವಾಗಿ ಮನುಷ್ಯರು ದೇವತೆಗಳಾಗುತ್ತಾರೆ. ವಿಶ್ವದಲ್ಲಿ ಶಾಂತಿಯೂ ನೆಲೆಸುತ್ತದೆ. ಸ್ವರ್ಗದಲ್ಲಿಯೇ ಶಾಂತಿ ಹಾಗೂ ಸುಖವಿತ್ತು, ಈ ರೀತಿ ಭಾಷಣ ಮಾಡಿ ಸಮಾಚಾರ ಪತ್ರಿಕೆಯಲ್ಲಿ ಬಂದಾಗ ನಿಮ್ಮ ಬಳಿ ಅನೇಕಾನೇಕ ಜನರು ಬರಲು ಪ್ರಾರಂಭಿಸುತ್ತಾರೆ, ನಿಮ್ಮನ್ನು ನಿದ್ರೆ ಮಾಡಲೂ ಬಿಡುವುದಿಲ್ಲ. ನಿದ್ರೆಯನ್ನು ತ್ಯಜಿಸಬೇಕಾಗುತ್ತದೆ. ಸೇವೆಯಿಂದ, ಯೋಗದಿಂದ ಶಕ್ತಿಯೂ ಬರುತ್ತದೆ ಏಕೆಂದರೆ ನಿಮಗೆ ಅದರಿಂದ ಸಂಪಾದನೆಯಾಗುತ್ತದೆ. ಸಂಪಾದನೆ ಮಾಡುವವರಿಗೆ ಎಂದಿಗೂ ಆಲಸ್ಯತನ, ಆಕಳಿಕೆ ಬರುವುದಿಲ್ಲ, ತೂಕಡಿಕೆಯೂ (ನಿದ್ರೆಯೂ) ಬರುವುದಿಲ್ಲ. ಸಂಪಾದನೆಯಿಂದ ಹೊಟ್ಟೆತುಂಬುವುದರ ಕಾರಣ ನಿದ್ರೆಯೂ ಬರುವುದಿಲ್ಲ ಹಾಗೆಯೇ ಅವರು ಪ್ರತಿದಿನ ಹಾಜರಾಗುತ್ತಾರೆ. ನೀವೂ ಸಹ ಅತಿದೊಡ್ಡ ಸಂಪಾದನೆ ಮಾಡಿಕೊಳ್ಳುತ್ತೀರಿ. ಆಲಸ್ಯ (ಆಕಳಿಕೆ) ದಿವಾಳಿಯಾಗುವವರಿಗೆಬರುತ್ತದೆ. ಯಾರು ತುಂಬಾ ಚೆನ್ನಾಗಿ ತಿಳಿದುಕೊಂಡು ನೆನಪಿನಲಿರುತ್ತಾರೆಯೋ ಅವರಿಗೆ ಆಲಸ್ಯ ಬರುವುದಿಲ್ಲ. ಒಂದು ವೇಳೆ ಮಿತ್ರ ಸಂಬಂಧಿ ಮೊದಲಾದವರು ನೆನಪಿಗೆ ಬರುತ್ತಾರೆ ಆಕಳಿಕೆ ಬರುತ್ತಿರುತ್ತದೆ, ಇದು ಗುರುತಾಗಿದೆ ಸ್ವರ್ಗದಲ್ಲಿ ನಿಮಗೆ ಆಕಳಿಕೆ ಎಂದೂ ಬರುವುದಿಲ್ಲ. ತಂದೆಯಿಂದ ಆಸ್ತಿಯನ್ನು ಪಡೆದ ನಂತರ ಅಲ್ಲಿ ನಿದ್ರೆ ಮಾಡುವುದು, ಕುಳಿತುಕೊಳ್ಳುವುದು-ಎದ್ದೇಳುವುದು ನಿಯಮಪ್ರಮಾಣವಾಗಿ ನಡೆಯುವುದು. ಆತ್ಮವು ಯಥಾರ್ಥವಾದ ಲಿವರ್ ಗಡಿಯಾರವಾಗಿಬಿಡುತ್ತದೆ. ಈಗ ನೀವು ಸಿಲೆಂಡರ್ ಗಡಿಯಾರ ಆಗಿದ್ದೀರಿ, ಅದನ್ನು ಲಿವರ್ ಮಾಡಬೇಕು. ಕೆಲವರು ಮಾಡುತ್ತಾರೆ ಕೆಲವರು ಮಾಡಲಾಗುವುದಿಲ್ಲ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಂಧನಮುಕ್ತರಾಗಲು ಅಥವಾ ತಮ್ಮ ಉನ್ನತಿಯನ್ನು ಮಾಡಿಕೊಳ್ಳಲು ಬುದ್ಧಿಯು ಜ್ಞಾನದಿಂದ ತುಂಬಿರಬೇಕು. ಮಾ|| ಜ್ಞಾನಸಾಗರನಾಗಿ ಸ್ವದರ್ಶನ ಚಕ್ರಧಾರಿಯಾಗಿ ನೆನಪಿನಲ್ಲಿ ಕುಳಿತುಕೊಳ್ಳಬೇಕು. |
2. ನಿದ್ರೆಯನ್ನು ಗೆಲ್ಲುವವರಾಗಿ, ನೆನಪು ಹಾಗೂ ಸೇವೆಯ ಬಲವನ್ನು ಜಮಾ ಮಾಡಿಕೊಳ್ಳಬೇಕು. ಸಂಪಾದನೆಯಲ್ಲಿ ಎಂದೂ ಆಲಸ್ಯ ಮಾಡಬಾರದು, ತೂಕಡಿಸಬಾರದು. |
ಓಂ ಶಾಂತಿ. ಗೀತೆಯ ಒಂದು ಸಾಲನ್ನು ಕೇಳುತ್ತಿದ್ದಂತೆಯೇ ಮಧುರಾತಿ ಮಧುರ ಮಕ್ಕಳಿಗೆ ರೋಮಾಂಚನವಾಗಿ ಬಿಡಬೇಕು. ಭಲೆ ಸಾಮಾನ್ಯ ಗೀತೆಯಾಗಿದೆ ಆದರೆ ಇದರ ಸಾರವನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಪ್ರತಿಯೊಂದು ಗೀತೆ, ಶಾಸ್ತ್ರದ ಅರ್ಥವನ್ನು ತಿಳಿಸುತ್ತಾರೆ, ಮಧುರಾತಿ ಮಧುರ ಮಕ್ಕಳು ಇದನ್ನೂ ತಿಳಿದುಕೊಂಡಿದ್ದೀರಿ. ಕಲಿಯುಗದಲ್ಲಿ ಎಲ್ಲರ ಅದೃಷ್ಟವು ಮಲಗಿದೆ, ಸತ್ಯಯುಗದಲ್ಲಿ ಅದೃಷ್ಟವು ಬೆಳಗಿರುತ್ತದೆ. ಮಲಗಿರುವ ಅದೃಷ್ಟವನ್ನು ಜಾಗೃತಗೊಳಿಸುವವರು ಮತ್ತು ಮತವನ್ನು ಕೊಡುವವರು ಅಥವಾ ಅದೃಷ್ಟವನ್ನು ರೂಪಿಸುವವರು ಒಬ್ಬರೇ ತಂದೆಯಾಗಿದ್ದಾರೆ, ಅವರೇ ಕುಳಿತು ಮಕ್ಕಳ ಅದೃಷ್ಟವನ್ನು ಬೆಳಗಿಸುತ್ತಾರೆ. ಹೇಗೆ ಮಕ್ಕಳು ಜನ್ಮ ಪಡೆಯುತ್ತಾರೆ, ಅದೃಷ್ಟವು ಬೆಳಗುತ್ತದೆ. ಮಗುವು ಜನ್ಮ ಪಡೆಯುತ್ತಿದ್ದಂತೆಯೇ ಅವರಿಗೆ ಇದು ಅರ್ಥವಾಗುತ್ತದೆ - ನಾನು ವಾರಸುಧಾರನಾಗಿದ್ದೇನೆ ಹಾಗೆಯೇ ಇದು ಬೇಹದ್ದಿನ ಮಾತಾಗಿದೆ. ಮಕ್ಕಳಿಗೆ ತಿಳಿದಿದೆ - ಕಲ್ಪ-ಕಲ್ಪವೂ ನಮ್ಮ ಅದೃಷ್ಟವು ಬೆಳಗುತ್ತದೆ ಮತ್ತೆ ಮಲಗುತ್ತದೆ. ಪಾವನರಾದಾಗ ಅದೃಷ್ಟವು ಬೆಳಗುತ್ತದೆ, ಪಾವನ ಗೃಹಸ್ಥಾಶ್ರಮವೆಂದು ಹೇಳಲಾಗುತ್ತದೆ. ಆಶ್ರಮ ಪದವು ಪವಿತ್ರವಾಗಿರುತ್ತದೆ. ಪವಿತ್ರ ಗೃಹಸ್ಥಾಶ್ರಮ, ಅದಕ್ಕೆ ವಿರುದ್ಧ ಪದವಾಗಿದೆ - ಅಪವಿತ್ರ, ಪತಿತ ಧರ್ಮ, ಆಶ್ರಮವೆಂದು ಹೇಳುವುದಿಲ್ಲ. ಗೃಹಸ್ಥ ಧರ್ಮವಂತೂ ಎಲ್ಲರದೂ ಆಗಿದೆ, ಪ್ರಾಣಿಗಳದೂ ಆಗಿದೆ. ಎಲ್ಲವೂ ಮಕ್ಕಳು ಮರಿಗಳಿಗೆ ಜನ್ಮ ಕೊಡುತ್ತದೆ, ಪ್ರಾಣಿಗಳನ್ನೂ ಸಹ ಗೃಹಸ್ಥ ಧರ್ಮದಲ್ಲಿವೆ ಎಂದು ಹೇಳಲಾಗುತ್ತದೆ. ಈಗ ಮಕ್ಕಳಿಗೆ ತಿಳಿದಿದೆ, ನಾವು ಸ್ವರ್ಗದಲ್ಲಿ ಪವಿತ್ರ ಗೃಹಸ್ಥಾಶ್ರಮದಲ್ಲಿ ಇದ್ದೆವು, ದೇವಿ-ದೇವತೆಗಳಾಗಿದ್ದೆವು. ಅವರ ಮಹಿಮೆಯನ್ನೂ ಹಾಡುತ್ತಾರೆ - ಸರ್ವಗುಣ ಸಂಪನ್ನರು..... ನೀವೂ ಸಹ ಹಾಡುತ್ತಿದ್ದಿರಿ. ಈಗ ನಿಮಗೆ ಅರ್ಥವಾಗಿದೆ - ನಾವು ಮನುಷ್ಯರಿಂದ ಪುನಃ ದೇವಿ-ದೇವತೆಗಳಾಗುತ್ತಿದ್ದೇವೆ. ದೇವಿ-ದೇವತೆಗಳದು ಧರ್ಮವಾಗಿದೆ. ಮತ್ತೆ ಬ್ರಹ್ಮಾ, ವಿಷ್ಣು, ಶಂಕರನಿಗೂ ದೇವತೆಗಳೆಂದು ಹೇಳುತ್ತಾರೆ. ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ..... ಶಿವನಿಗೆ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಅಂತರವಾಯಿತಲ್ಲವೆ. ಶಿವ ಮತ್ತು ಶಂಕರನನ್ನು ಒಂದೇ ಎಂದು ಹೇಳಲು ಸಾಧ್ಯವಿಲ್ಲ. ಕಲ್ಲು ಬುದ್ಧಿಯವರಾಗಿದ್ದಿರಿ, ಈಗ ಪಾರಸ ಬುದ್ಧಿಯವರಾಗುತ್ತಿದ್ದೀರಿ. ದೇವತೆಗಳಿಗೆ ಕಲ್ಲು ಬುದ್ಧಿಯವರೆಂದು ಹೇಳುವುದಿಲ್ಲ. ನಂತರ ಡ್ರಾಮಾನುಸಾರ ರಾವಣ ರಾಜ್ಯವಾಗುವ ಕಾರಣ ಅವರೂ ಸಹ ಏಣಿಯನ್ನು ಇಳಿಯಬೇಕಾಗುವುದು, ಪಾರಸ ಬುದ್ಧಿಯವರಿಂದ ಕಲ್ಲು ಬುದ್ಧಿಯವರು ಆಗಬೇಕಾಗುವುದು. ಎಲ್ಲರಿಗಿಂತ ಬುದ್ಧಿವಂತರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ನಿಮ್ಮನ್ನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವು ಇಲ್ಲಿಗೆ ಪಾರಸ ಬುದ್ಧಿಯವರಾಗಲು ಬರುತ್ತೀರಿ. ಪಾರಸನಾಥನ ಮಂದಿರವೂ ಇದೆ. ಅಲ್ಲಿ ಮೇಳವಾಗುತ್ತದೆ, ಆದರೆ ಪಾರಸನಾಥ ಯಾರೆಂಬುದು ಯಾರಿಗೂ ತಿಳಿದಿಲ್ಲ. ವಾಸ್ತವದಲ್ಲಿ ಪಾರಸವನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಅವರು ಬುದ್ಧಿವಂತರಿಗೂ ಬುದ್ಧಿವಂತನಾಗಿದ್ದಾರೆ. ಇದು ನೀವು ಮಕ್ಕಳ ಬುದ್ಧಿಗಾಗಿ ಔಷಧಿಯಾಗಿದೆ. ಬುದ್ಧಿಯು ಎಷ್ಟೊಂದು ಪರಿವರ್ತನೆಯಾಗುತ್ತದೆ, ಹೇಗೆ ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ... ಎಂದು ಹಾಡಲಾಗುತ್ತದೆ. ಆದರೆ ಇದು ಕೋತಿಗಳ ಮಾತಲ್ಲ, ಮನುಷ್ಯರೇ ಕೋತಿಯಂತೆ ಆಗಿ ಬಿಡುತ್ತಾರೆ. ಮನುಷ್ಯರನ್ನು ಕಾಡು ಜನರಿಗೆ ಹೋಲಿಕೆ ಮಾಡಲಾಗುತ್ತದೆ. ಇದಕ್ಕೆ ಮುಳ್ಳುಗಳ ಕಾಡೆಂದು ಹೇಳಲಾಗುತ್ತದೆ. ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಿರುತ್ತಾರೆ. ಈಗ ನೀವು ಮಕ್ಕಳ ಬುದ್ಧಿಗೆ ಟಾನಿಕ್ ಸಿಗುತ್ತಿದೆ. ಬೇಹದ್ದಿನ ತಂದೆಯು ಟಾನಿಕ್ನ್ನು ಕೊಡುತ್ತಿದ್ದಾರೆ. ಇದು ವಿದ್ಯೆಯಾಗಿದೆ, ಇದಕ್ಕೆ ಜ್ಞಾನಾಮೃತವೆಂತಲೂ ಹೇಳುತ್ತಾರೆ. ಯಾವುದೇ ಸ್ಥೂಲವಾದ ನೀರಲ್ಲ, ಇತ್ತೀಚೆಗೆ ಎಲ್ಲಾ ವಸ್ತುಗಳಿಗೆ ಅಮೃತವೆಂದು ಹೇಳಿ ಬಿಡುತ್ತಾರೆ, ಗಂಗಾಜಲವನ್ನು ಅಮೃತವೆಂದು ಹೇಳುತ್ತಾರೆ. ದೇವತೆಗಳ ಪಾದಗಳನ್ನು ತೊಳೆದು ಕುಡಿಯುತ್ತಾರೆ. ನೀರನ್ನಿಟ್ಟು ಅದನ್ನು ಅಮೃತದ ಅಂಚಲಿಯೆಂದು ತಿಳಿಯುತ್ತಾರೆ. ಯಾವ ಅಂಚಲಿಯನ್ನು ತೆಗೆದುಕೊಳ್ಳುವರು ಅದಕ್ಕೆ ಇದು ಪತಿತರನ್ನು ಪಾವನ ಮಾಡುವಂತದ್ದೆಂದು ಹೇಳಲಾಗುವುದಿಲ್ಲ. ಗಂಗಾಜಲಕ್ಕೆ ಪತಿತ-ಪಾವನಿ ಎಂದು ಹೇಳುತ್ತಾರೆ. ಮನುಷ್ಯರು ಸತ್ತಾಗ ಗಂಗಾಜಲವು ಬಾಯಲ್ಲಿರಲಿ ಎಂದು ಹೇಳುತ್ತಾರೆ. ಅರ್ಜುನನು ಬಾಣ ಹೊಡೆದನು, ಮತ್ತೆ ಅಮೃತ ಜಲವನ್ನು ಕುಡಿಸಿದನೆಂದು ತೋರಿಸುತ್ತಾರೆ. ನೀವು ಮಕ್ಕಳು ಬಾಣಗಳನ್ನು ಹೊಡೆಯುವುದಿಲ್ಲ. ಒಂದು ಡ್ರಾಮಾ ಇದೆ, ಅಲ್ಲಿ ಬಾಣಗಳಿಂದ ಜಗಳವಾಡುತ್ತಾರೆ. ಅಲ್ಲಿನ ರಾಜನನ್ನು ಈಶ್ವರನ ಅವತಾರವೆಂದು ತಿಳಿಯುತ್ತಾರೆ, ತಂದೆಯು ಹೇಳುತ್ತಾರೆ - ಇವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಸತ್ಯ-ಸತ್ಯವಾದ ಸದ್ಗುರು ಒಬ್ಬರೇ ಆಗಿದ್ದಾರೆ, ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ. ಅವರು ಎಲ್ಲರನ್ನೂ ಜೊತೆ ಕರೆದುಕೊಂಡು ಹೋಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಬ್ರಹ್ಮ್ತತ್ವದಲ್ಲಿ ಲೀನವಾಗುವ ಮಾತೇ ಇಲ್ಲ. ಈ ನಾಟಕವು ಮಾಡಲ್ಪಟ್ಟಿದೆ. ಈ ಅನಾದಿ ಚಕ್ರವು ಸುತ್ತುತ್ತಲೇ ಇರುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಮನುಷ್ಯರು ಅರ್ಥಾತ್ ಆತ್ಮರು ತನ್ನ ತಂದೆ ರಚಯಿತನನ್ನೂ ಸಹ ಅರಿತುಕೊಂಡಿಲ್ಲ. ಅವರನ್ನೇ ಓ ಗಾಡ್ ಫಾದರ್ ಎಂದು ಹೇಳಿ ನೆನಪು ಮಾಡುತ್ತಾರೆ. ಲೌಕಿಕ ತಂದೆಗೆ ಗಾಡ್ ಫಾದರ್ ಎಂದು ಹೇಳುವುದಿಲ್ಲ. ಗಾಡ್ ಫಾದರ್ ಎಂಬುದನ್ನು ಬಹಳ ಗೌರವದಿಂದ ಹೇಳುತ್ತಾರೆ. ಅವರಿಗೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ. ಒಂದು ಕಡೆ ಅವರು ದುಃಖಹರ್ತ, ಸುಖಕರ್ತನೆಂದು ಹೇಳುತ್ತಾರೆ. ಇನ್ನೊಂದು ಕಡೆ ಯಾವುದೇ ದುಃಖವಾಗುತ್ತದೆ ಅಥವಾ ಮಗುವು ಶರೀರ ಬಿಟ್ಟರೆ ಈಶ್ವರನೇ ಸುಖ-ದುಃಖ ಕೊಡುತ್ತಾನೆ, ಈಶ್ವರನು ನಮ್ಮ ಮಗುವನ್ನು ಕಿತ್ತುಕೊಂಡನು, ಇದೇನು ಮಾಡಿ ಬಿಟ್ಟನು ಎಂದು ಹೇಳಿ ಬಿಡುತ್ತಾರೆ ಮತ್ತೆ ಈಶ್ವರನಿಗೇ ನಿಂದನೆ ಮಾಡುತ್ತಾರೆ. ಈಶ್ವರನೇ ಮಕ್ಕಳನ್ನು ಕೊಟ್ಟನೆಂದು ಹೇಳುತ್ತೀರಿ, ಮತ್ತೆ ಒಂದುವೇಳೆ ಅವರು ಹಿಂತೆಗೆದುಕೊಂಡರೆ ನೀವೇಕೆ ಅಳುತ್ತೀರಿ, ಈಶ್ವರನ ಬಳಿ ಹೋದರಲ್ಲ. ಸತ್ಯಯುಗದಲ್ಲಿ ಎಂದೂ ಯಾರೂ ಅಳುವುದಿಲ್ಲ, ತಂದೆಯು ತಿಳಿಸುತ್ತಾರೆ - ಅಳುವ ಮಾತೇ ಇಲ್ಲ. ಆತ್ಮವು ತನ್ನ ಲೆಕ್ಕಾಚಾರಗಳ ಅನುಸಾರ ಹೋಗಿ ಪಾತ್ರವನ್ನು ಅಭಿನಯಿಸಬೇಕಾಗಿದೆ. ಜ್ಞಾನವಿಲ್ಲದೇ ಇರುವ ಕಾರಣ ಮನುಷ್ಯರು ಎಷ್ಟೊಂದು ಅಳುತ್ತಾರೆ! ಹೇಗೆ ಹುಚ್ಛರಂತೆ ಆಗಿ ಬಿಡುತ್ತಾರೆ. ಇಲ್ಲಂತೂ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅಮ್ಮ ಸತ್ತರೂ ಜ್ಞಾನದ ಅಲ್ವ ತಿನ್ನಿರಿ... ನಷ್ಟಮೋಹಿಗಳಾಗಿರಿ. ನಮ್ಮವರು ಒಬ್ಬರೇ ಬೇಹದ್ದಿನ ತಂದೆಯಾಗಿದ್ದಾರೆ ಮತ್ತ್ಯಾರೂ ಇಲ್ಲ. ಮಕ್ಕಳದು ಇಂತಹ ಸ್ಥಿತಿಯಿರಬೇಕು. ಮೋಹಜೀತ ರಾಜನ ಕಥೆಯನ್ನೂ ಕೇಳಿದ್ದೀರಲ್ಲವೆ. ಸತ್ಯಯುಗದಲ್ಲಿ ಎಂದೂ ದುಃಖದ ಮಾತಿರುವುದಿಲ್ಲ, ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಕಾಲದ ಮೇಲೆ ಜಯ ಗಳಿಸುತ್ತೇವೆ, ತಂದೆಗೆ ಕಾಲರ ಕಾಲ ಮಹಾಕಾಲನೆಂತಲೂ ಹೇಳುತ್ತಾರೆ. ನೀವು ಕಾಲದ ಮೇಲೆ ಜಯ ಗಳಿಸಬೇಕಾಗಿದೆ ಅರ್ಥಾತ್ ಕಾಲವೆಂದೂ ಕಬಳಿಸುವುದಿಲ್ಲ. ಕಾಲ (ಮೃತ್ಯು) ವು ಆತ್ಮವನ್ನಾಗಲಿ, ಶರೀರವನ್ನಾಗಲಿ ಕಬಳಿಸಲು ಸಾಧ್ಯವಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಅದಕ್ಕೆ ಕಾಲವು ಕಬಳಿಸಿತು ಎಂದು ಹೇಳುತ್ತಾರೆ ಆದರೆ ಮೃತ್ಯುವೆಂದರೆ ಯಾವುದೇ ವಸ್ತುವಲ್ಲ. ಮನುಷ್ಯರು ಮಹಿಮೆಯನ್ನು ಹಾಡುತ್ತಿರುತ್ತಾರೆ. ಏನನ್ನೂ ತಿಳಿದುಕೊಳ್ಳುವುದಿಲ್ಲ. ಅಚ್ಯುತಂ, ಕೇಶವಂ..... ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈ ಪಂಚ ವಿಕಾರಗಳು ನಿಮ್ಮ ಬುದ್ಧಿಯನ್ನು ಎಷ್ಟು ಕೆಡಿಸಿಬಿಡುತ್ತವೆ. ಈ ಸಮಯದಲ್ಲಿ ಯಾರೂ ತಂದೆಯನ್ನು ತಿಳಿದುಕೊಂಡಿಲ್ಲ ಆದ್ದರಿಂದ ಇದಕ್ಕೆ ಅನಾಥರ ಪ್ರಪಂಚವೆಂದು ಹೇಳಲಾಗುತ್ತದೆ ಪರಸ್ಪರ ಎಷ್ಟೊಂದು ಹೊಡೆದಾಡುತ್ತಾ-ಜಗಳವಾಡುತ್ತಾ ಇರುತ್ತಾರೆ. ತಂದೆಯ ಮನೆಯಾಗಿದೆಯಲ್ಲವೆ. ಈ ಇಡೀ ಪ್ರಪಂಚವೇ ತಂದೆಯ ಮನೆಯಲ್ಲವೆ. ತಂದೆಯು ಇಡೀ ಪ್ರಪಂಚದ ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಲು ಬರುತ್ತಾರೆ. ಅರ್ಧಕಲ್ಪ ಪಾವನ ಪ್ರಪಂಚವಿತ್ತಲ್ಲವೆ, ರಾಮ ರಾಜ, ರಾಮ ಪ್ರಜೆ.... ಎಂದು ಹಾಡುತ್ತಾರೆ ಅಂದಮೇಲೆ ಅಲ್ಲಿ ಅಧರ್ಮದ ಮಾತಿರಲು ಹೇಗೆ ಸಾಧ್ಯ. ಅಲ್ಲಿ ಹಸು-ಹುಲಿ ಒಟ್ಟಿಗೆ ನೀರು ಕುಡಿಯುತ್ತದೆ ಎಂದು ಹೇಳುತ್ತಾರೆ ಅಂದಮೇಲೆ ಅಲ್ಲಿ ರಾವಣನು ಎಲ್ಲಿಂದ ಬರುವನು? ಏನನ್ನೂ ತಿಳಿದುಕೊಂಡಿಲ್ಲ. ವಿದೇಶದವರು ಇಂತಹ ಮಾತುಗಳನ್ನು ಕೇಳಿ ಹಾಸ್ಯ ಮಾಡುತ್ತಾರೆ. ತಂದೆಯು ಬಂದು ಜ್ಞಾನವನ್ನು ಕೊಡುತ್ತಾರೆ, ಇದು ಪತಿತ ಪ್ರಪಂಚವಲ್ಲವೆ. ಈಗ ಪ್ರೇರಣೆಯಿಂದ ಪತಿತರನ್ನು ಪಾವನ ಮಾಡುವರೇ? ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಭಾರತದಲ್ಲಿಯೇ ಬಂದಿದ್ದರು, ಈಗಲೂ ಸಹ ತಿಳಿಸುತ್ತಾರೆ - ಮಕ್ಕಳೇ, ಜ್ಞಾನ ಸಾಗರನಾದ ನಾನು ನಿಮ್ಮನ್ನು ನನ್ನ ಸಮಾನ ಮಾ|| ಜ್ಞಾನ ಸಾಗರನನ್ನಾಗಿ ಮಾಡಲು ಬಂದಿದ್ದೇನೆ. ತಂದೆಗೇ ಸತ್ಯ-ಸತ್ಯ ವ್ಯಾಸನೆಂದು ಹೇಳುತ್ತಾರೆ ಅಂದಮೇಲೆ ಇವರು ವ್ಯಾಸ ದೇವ ಮತ್ತು ಅವರ ಮಕ್ಕಳಾದ ನೀವು ಸುಖದೇವ ಆಗಿದ್ದೀರಿ. ನೀವೀಗ ಸುಖದ ದೇವತೆಗಳಾಗುತ್ತೀರಿ. ವ್ಯಾಸ ಶಿವಾಚಾರ್ಯರಿಂದ ಸುಖದ ಆಸ್ತಿಯನ್ನೂ ತೆಗೆದುಕೊಳ್ಳುತ್ತಿದ್ದೀರಿ. ನೀವು ವ್ಯಾಸನ ಮಕ್ಕಳಾಗಿದ್ದೀರಿ ಆದರೆ ಮನುಷ್ಯರು ತಬ್ಬಿಬ್ಬಾಗದಿರಲಿ ಎಂದು ಶಿವನ ಮಕ್ಕಳೆಂದು ಹೇಳಲಾಗುತ್ತದೆ. ಅವರ ಮೂಲ ಹೆಸರಾಗಿದೆ - ಶಿವ. ಆತ್ಮವನ್ನು ಅರಿತುಕೊಳ್ಳಲಾಗುತ್ತದೆ, ಪರಮಾತ್ಮನನ್ನೂ ಅರಿತುಕೊಳ್ಳಲಾಗುತ್ತದೆ, ಅವರೇ ಬಂದು ಪತಿತರಿಂದ ಪಾವನರಾಗುವ ಮಾರ್ಗವನ್ನು ತಿಳಿಸುತ್ತಾರೆ. ನಾನು ನೀವಾತ್ಮರ ತಂದೆಯಾಗಿದ್ದೇನೆ ಎಂದು ಹೇಳುತ್ತಾರೆ. ಅಂಗುಷ್ಟಾಕಾರದಲ್ಲಿ ಇದ್ದಾರೆಂದು ಹೇಳುತ್ತಾರೆ. ಇಷ್ಟು ದೊಡ್ಡದಾಗಿದ್ದರೆ ಇಲ್ಲಿ ನಿಲ್ಲುವುದಕ್ಕೂ ಆಗುತ್ತಿರಲಿಲ್ಲ. ಅವರು ಬಹಳ ಸೂಕ್ಷ್ಮವಾಗಿದ್ದಾರೆ, ಆತ್ಮವನ್ನು ನೋಡುವುದಕ್ಕಾಗಿ ವೈದ್ಯರುಗಳೂ ಸಹ ಬಹಳ ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ನೋಡಲು ಸಾಧ್ಯವಿಲ್ಲ. ಆತ್ಮವನ್ನು ಅನುಭವ ಮಾಡಲಾಗುತ್ತದೆ. ತಂದೆಯು ಕೇಳುತ್ತಾರೆ- ಈಗ ನೀವು ಆತ್ಮವನ್ನು ಅನುಭೂತಿ ಮಾಡಿದ್ದೀರಾ? ಇಷ್ಟು ಚಿಕ್ಕ ಆತ್ಮನಲ್ಲಿ ಅವಿನಾಶಿ ಪಾತ್ರವು ನಿಗಧಿಯಾಗಿದೆ. ಹೇಗೆ ಇದು ರೆಕಾರ್ಡ್ ಆಗಿದೆ. ಮೊದಲು ನೀವು ದೇಹಾಭಿಮಾನಿ ಆಗಿದ್ದಿರಿ, ಈಗ ನೀವು ದೇಹೀ-ಅಭಿಮಾನಿಗಳಾಗಿದ್ದೀರಿ. ನಾವಾತ್ಮರು ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಇರುತ್ತೇವೆ ಎಂದು ನಿಮಗೆ ತಿಳಿದಿದೆ. ಇದೆಂದೂ ನಿಂತು ಹೋಗಲು ಸಾಧ್ಯವಿಲ್ಲ. ಕೆಲವರು ಈ ನಾಟಕವು ಯಾವಾಗ ಆರಂಭವಾಯಿತೆಂದು ಕೇಳುತ್ತಾರೆ ಆದರೆ ಇದು ಅನಾದಿಯಾಗಿದೆ, ಇದೆಂದೂ ವಿನಾಶವಾಗುವುದಿಲ್ಲ. ಇದಕ್ಕೆ ಮಾಡಿ-ಮಾಡಲ್ಪಟ್ಟ ಅವಿನಾಶಿ ಸೃಷ್ಟಿ ನಾಟಕವೆಂದು ಹೇಳಲಾಗುತ್ತದೆ. ಸೃಷ್ಟಿಯನ್ನು ನೀವು ತಿಳಿದುಕೊಂಡಿದ್ದೀರಿ. ಹೇಗೆ ಅವಿದ್ಯಾವಂತ ಮಕ್ಕಳಿಗೆ ವಿದ್ಯೆಯನ್ನು ಕಲಿಸಲಾಗುತ್ತದೆಯೋ ಹಾಗೆಯೇ ತಂದೆಯು ನೀವು ಮಕ್ಕಳಿಗೆ ಓದಿಸುತ್ತಿದ್ದಾರೆ. ಆತ್ಮವೇ ಶರೀರದ ಮೂಲಕ ಓದುತ್ತದೆ, ಈ ವಿದ್ಯೆಯು ಕಲ್ಲು ಬುದ್ಧಿಗೆ ಆಹಾರವಾಗಿದೆ. ಬುದ್ಧಿಗೆ ತಿಳುವಳಿಕೆ ಸಿಗುತ್ತದೆ. ನೀವು ಮಕ್ಕಳಿಗಾಗಿಯೇ ತಂದೆಯು ಚಿತ್ರಗಳನ್ನು ಮಾಡಿಸಿದ್ದಾರೆ. ಬಹಳ ಸಹಜವಾಗಿದೆ. ತ್ರಿಮೂರ್ತಿ ಬ್ರಹ್ಮಾ-ವಿಷ್ಣು-ಶಂಕರ, ಬ್ರಹ್ಮನನ್ನು ತ್ರಿಮೂರ್ತಿಯೆಂದು ಏಕೆ ಹೇಳುತ್ತಾರೆ! ದೇವ ದೇವ ಮಹಾದೇವ.... ಒಬ್ಬರನ್ನು ಇನ್ನೊಬ್ಬರ ಮೇಲೆ ಇಡುತ್ತಾರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳಲಾಗುತ್ತದೆ ಅಂದಮೇಲೆ ಅವರು ಆ ರೀತಿಯಾಗಲು ಹೇಗೆ ಸಾಧ್ಯ. ಸೂಕ್ಷ್ಮವತನದಲ್ಲಿ ಅವರು ದೇವತೆಯಾಗಲು ಹೇಗೆ ಸಾಧ್ಯ. ಸಾಕಾರದಲ್ಲಿ ಪ್ರಜಾಪಿತನು ಇಲ್ಲಿಯೇ ಇರಬೇಕಲ್ಲವೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಈ ಶರೀರದಲ್ಲಿ ಪ್ರವೇಶ ಮಾಡಿ ಇವರ ಮೂಲಕ ನಿಮಗೆ ತಿಳಿಸುತ್ತೇನೆ. ಇವರನ್ನು ತನ್ನ ರಥವನ್ನಾಗಿ ಮಾಡಿಕೊಳ್ಳುತ್ತೇನೆ. ಇವರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬರುತ್ತೇನೆ. ಇವರೂ ಸಹ ಪಂಚ ವಿಕಾರಗಳ ಸನ್ಯಾಸ ಮಾಡುತ್ತಾರೆ. ಸನ್ಯಾಸ ಮಾಡುವವರಿಗೆ ಯೋಗಿಗಳು, ಋಷಿಗಳೆಂದು ಹೇಳಲಾಗುತ್ತದೆ. ನೀವೀಗ ರಾಜ ಋಷಿಗಳಾಗಿದ್ದೀರಿ, ಪ್ರತಿಜ್ಞೆ ಮಾಡುತ್ತೀರಿ. ಆ ಸನ್ಯಾಸಿಗಳು ಗೃಹಸ್ಥವನ್ನು ಬಿಟ್ಟು ಹೊರಟು ಹೋಗುತ್ತಾರೆ, ಇಲ್ಲಂತೂ ಸ್ತ್ರೀ-ಪುರುಷರು ಒಟ್ಟಿಗೆ ಇರುತ್ತೀರಿ. ನಾವೆಂದೂ ವಿಕಾರದಲ್ಲಿ ಹೋಗುವುದಿಲ್ಲವೆಂದು ಹೇಳುತ್ತೀರಿ. ಮೂಲ ಮಾತು ವಿಕಾರದ್ದಾಗಿದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ರಚಯಿತನಾಗಿದ್ದಾರೆ, ಅವರು ಹೊಸ ರಚನೆಯನ್ನು ರಚಿಸುತ್ತಾರೆ. ಅವರು ಬೀಜರೂಪ, ಸತ್ಚಿತ್ ಆನಂದ ಸಾಗರ, ಜ್ಞಾನ ಸಾಗರನಾಗಿದ್ದಾರೆ. ಸ್ಥಾಪನೆ, ಪಾಲನೆ, ವಿನಾಶವನ್ನು ಹೇಗೆ ಮಾಡುತ್ತಾರೆ - ಇದು ತಂದೆಗೇ ಗೊತ್ತಿದೆ. ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ಇವೆಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ, ಆದ್ದರಿಂದ ಎಲ್ಲರಿಗೆ ತಿಳಿಸುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪ್ರತಿಯೊಂದು ಆತ್ಮನ ಲೆಕ್ಕಾಚಾರವು ಬೇರೆ-ಬೇರೆಯಾಗಿದೆ ಆದ್ದರಿಂದ ಯಾರಾದರೂ ಶರೀರ ಬಿಟ್ಟರೆ ಅಳಬಾರದು, ಪೂರ್ಣ ನಷ್ಟಮೋಹಿಗಳಾಗಬೇಕಾಗಿದೆ. ಬುದ್ಧಿಯಲ್ಲಿರಲಿ - ನನ್ನವರು ಒಬ್ಬ ಬೇಹದ್ದಿನ ತಂದೆಯ ವಿನಃ ಮತ್ತ್ಯಾರೂ ಇಲ್ಲ. |
2. ಯಾವ ಪಂಚ ವಿಕಾರಗಳು ಬುದ್ಧಿಯನ್ನು ಕೆಡಿಸುತ್ತವೆಯೋ ಅವುಗಳ ತ್ಯಾಗ ಮಾಡಬೇಕಾಗಿದೆ. ಸುಖದ ದೇವತೆಯಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ, ಯಾರಿಗೂ ದುಃಖ ಕೊಡಬಾರದು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ಆತ್ಮಿಕ ತಂದೆ ಶಿವ ಬಾಬಾರವರ ಮಹಿಮೆಯನ್ನು ಕೇಳಿದಿರಿ. ಯಾವಾಗ ಪಾಪವು ಹೆಚ್ಚುವುದೋ ಅರ್ಥಾತ್ ಮನುಷ್ಯರು ಪಾಪಾತ್ಮರಾಗಿ ಬಿಡುವರೋ ಆಗಲೇ ಪತಿತ-ಪಾವನ ತಂದೆಯು ಬರುತ್ತಾರೆ. ತಂದೆಯು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ. ಆ ಬೇಹದ್ದಿನ ತಂದೆಗೆ ಮಹಿಮೆಯಿದೆ, ಅವರಿಗೆ ವೃಕ್ಷಪತಿಯೆಂತಲೂ ಹೇಳಲಾಗುತ್ತದೆ. ಈ ಸಮಯದಲ್ಲಿ ಬೇಹದ್ದಿನ ತಂದೆಯ ನೆನಪು, ಬೇಹದ್ದಿನ ಬೃಹಸ್ಪತಿ ದೆಶೆಯು ನಿಮ್ಮ ಮೇಲೆ ಕುಳಿತುಕೊಂಡಿದೆ. ವಿಶೇಷವಾಗಿ ಎರಡು ಶಬ್ಧಗಳಿರುತ್ತವೆ ಅಲ್ಲವೆ. ಇದರ ಅರ್ಥವೂ ಸಹ ಇಲ್ಲಿಯೇ ಸಿದ್ಧವಾಗುತ್ತದೆ, ಬೃಹಸ್ಪತಿ ದೆಶೆಯಿಂದ ವಿಶೇಷವಾಗಿ ಭಾರತವು ಜೀವನ್ಮುಕ್ತನಾಗುತ್ತದೆ ಅರ್ಥಾತ್ ತನ್ನ ಸ್ವರಾಜ್ಯ ಪದವಿಯನ್ನು ಪಡೆಯುತ್ತೀರಿ ಏಕೆಂದರೆ ಯಾವ ತಂದೆಗೆ ಸತ್ಯವೆಂದು ಹೇಳುತ್ತಾರೆಯೋ ಅವರೇ ಬಂದು ನಿಮ್ಮನ್ನು ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ಬಾಕಿ ಯಾರೆಲ್ಲರೂ ಇದ್ದಾರೆಯೋ ಅವರು ನಂಬರ್ವಾರ್ ತಮ್ಮ ತಮ್ಮ ಧರ್ಮದ ವಿಭಾಗದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಮತ್ತು ನಂಬರ್ವಾರ್ ಆಗಿ ಬರುತ್ತಾರೆ. ಕಲಿಯುಗದ ಅಂತ್ಯದವರೆಗೂ ಬರುತ್ತಾ ಇರುತ್ತಾರೆ. ಪ್ರತಿಯೊಂದು ಆತ್ಮನಿಗೆ ತನ್ನ-ತನ್ನ ಧರ್ಮದಲ್ಲಿ ತನ್ನ-ತನ್ನದೇ ಆದ ಪಾತ್ರವು ಸಿಕ್ಕಿದೆ. ರಾಜ್ಯದಲ್ಲಿ ರಾಜನಿಂದ ಹಿಡಿದು ಪ್ರಜೆಗಳವರೆಗೆ ಎಲ್ಲರಿಗೆ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ. ನಾಟಕವಿರುವುದೇ ರಾಜನಿಂದ ಹಿಡಿದು ಪ್ರಜೆಯ ತನಕ. ಎಲ್ಲರೂ ತಮ್ಮ-ತಮ್ಮ ಪಾತ್ರವನ್ನಭಿನಯಿಸಲಾಗುತ್ತದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಒಂದೇ ದಿನ ಕುಳಿತುಕೊಳ್ಳುತ್ತದೆಯೆಂದಲ್ಲ. ನಿಮ್ಮ ಬೃಹಸ್ಪತಿ ದೆಶೆಯು ನಡೆಯುತ್ತಿದೆ. ಈಗ ನಿಮ್ಮದು ಏರುವ ಕಲೆಯಾಗಿದೆ, ಎಷ್ಟು ನೆನಪು ಮಾಡುತ್ತೀರೋ ಅಷ್ಟು ಏರುವಕಲೆಯಾಗುವುದು. ನೆನಪನ್ನು ಮರೆಯುವುದರಿಂದ ಮಾಯೆಯು ವಿಘ್ನಗಳು ಬರುತ್ತವೆ. ನೆನಪಿನಿಂದ ಒಳ್ಳೆಯ ದೆಶೆ ಕುಳಿತುಕೊಳ್ಳುತ್ತದೆ. ಚೆನ್ನಾಗಿ ನೆನಪು ಮಾಡದಿದ್ದರೆ ಅವಶ್ಯವಾಗಿ ಬೀಳುವರು ಮತ್ತೆ ಅವರಿಂದ ಒಂದಲ್ಲ ಒಂದು ತಪ್ಪುಗಳಾಗುವವು. ತಂದೆಯು ತಿಳಿಸುತ್ತಾರೆ - ಡ್ರಾಮಾನುಸಾರ ಯಾವುದೆಲ್ಲಾ ಧರ್ಮದವರಿದ್ದಾರೆಯೋ ಒಬ್ಬರು ಇನ್ನೊಬ್ಬರ ಹಿಂದೆ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಮಕ್ಕಳಿಗೆ ತಿಳಿದಿದೆ- ಸ್ವರ್ಗದ ದೆಶೆ ಅರ್ಥಾತ್ ಜೀವನ್ಮುಕ್ತಿಯ ದೆಶೆಯು ಈಗ ನಮ್ಮಮೇಲೆ ಕುಳಿತುಕೊಂಡಿದೆ. ಈ ಡ್ರಾಮಾದ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನೂ ಸಹ ವಿವರವಾಗಿ ತಿಳಿದುಕೊಳ್ಳಬೇಕಾಗಿದೆ. ಈ ಸೃಷ್ಟಿನಾಟಕದ ಚಕ್ರವು ವಿಶೇಷವಾಗಿ ಭಾರತದ ಮೇಲೆ ಮಾಡಲ್ಪಟ್ಟಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಗಾಯನವಿದೆ - ಆಶ್ಚರ್ಯವೆನಿಸುವಂತೆ ಕೇಳಿ, ಹೇಳಿ ನಡೆಯುತ್ತಾ ಮತ್ತೆ ಬಿಟ್ಟು ಹೋಗುವರು.... ನಡೆಯುತ್ತಾ-ನಡೆಯುತ್ತಾ ಮಾಯೆಯು ಪ್ರವೇಶತೆ ಆಗುವ ಕಾರಣ ಕೆಳಗೆ ಬೀಳುತ್ತಾರೆ. ಯೋಗದ ಮೇಲೆ ಪೂರ್ಣ ಗಮನ ಕೊಡುವುದಿಲ್ಲ, ಮತ್ತೆ ತಂದೆಯು ಬಂದು ಸಂಜೀವಿನ ಮೂಲಿಕೆಯನ್ನು ಕೊಡುತ್ತಾರೆ ಅರ್ಥಾತ್ ಮೂರ್ಛಿತರಾದವರನ್ನು ಎಚ್ಚರಿಸುವಂತಹ ಮೂಲಿಕೆಯನ್ನು ಕೊಡುತ್ತಾರೆ. ಹನುಮಂತನೂ ನೀವೇ ಆಗಿದ್ದೀರಿ, ತಂದೆಯು ತಿಳಿಸಿದ್ದಾರೆ - ಈ ಸಮಯದಲ್ಲಿ ರಾವಣನನ್ನು ಓಡಿಸುವುದಕ್ಕಾಗಿ ಈ ಮೂಲಿಕೆಯನ್ನು ಕೊಡುತ್ತೇನೆ. ನಿಮಗೆ ಎಲ್ಲವೂ ಸತ್ಯವಾದ ಮಾತುಗಳನ್ನು ತಿಳಿಸುತ್ತೇನೆ. ಒಬ್ಬ ತಂದೆಯೇ ಸತ್ಯವಾಗಿದ್ದಾಗ ಅವರೇ ಬಂದು ಸತ್ಯ ನಾರಾಯಣನ ಕಥೆಯನ್ನು ತಿಳಿಸಿ ಸತ್ಯಯುಗದ ಸ್ಥಾಪನೆ ಮಾಡುತ್ತಾರೆ. ಇವರಿಗೇ ಸತ್ಯವಂತ, ಸತ್ಯವನ್ನು ಹೇಳುವವರೆಂದು ಹೇಳಲಾಗುತ್ತದೆ. ನಿಮ್ಮನ್ನು ಕೇಳುತ್ತಾರೆ - ನೀವು ಶಾಸ್ತ್ರಗಳನ್ನು ನಂಬುತ್ತೀರಾ? ಆಗ ತಿಳಿಸಿರಿ - ಹೌದು, ನಾವು ಶಾಸ್ತ್ರಗಳನ್ನು ಏಕೆ ನಂಬುವುದಿಲ್ಲ. ನಮಗೆ ತಿಳಿದಿದೆ - ಇವೆಲ್ಲವೂ ಭಕ್ತಿಮಾರ್ಗದ ಶಾಸ್ತ್ರಗಳಾಗಿವೆ, ಇವನ್ನು ನಾವು ನಂಬುತ್ತೇವೆ. ಜ್ಞಾನ ಮತ್ತು ಭಕ್ತಿ ಎರಡು ಮಾತುಗಳಿವೆ. ಈಗ ಜ್ಞಾನ ಸಿಗುತ್ತದೆಯೆಂದ ಮೇಲೆ ಭಕ್ತಿಯ ಅವಶ್ಯಕತೆಯೇನಿದೆ! ಭಕ್ತಿಯೆಂದರೆ ಇಳಿಯುವ ಕಲೆ. ಜ್ಞಾನವೆಂದರೆ ಏರುವ ಕಲೆ. ಈ ಸಮಯದಲ್ಲಿ ಭಕ್ತಿಯು ನಡೆಯುತ್ತಿದೆ, ಈಗ ನಮಗೆ ಜ್ಞಾನ ಸಿಕ್ಕಿದೆ ಇದರಿಂದ ಸದ್ಗತಿಯಾಗುತ್ತದೆ. ಭಕ್ತರ ರಕ್ಷಣೆ ಮಾಡುವವರು ಒಬ್ಬರೇ ಭಗವಂತನಾಗಿದ್ದಾರೆ. ಶತ್ರುವಿನಿಂದ ರಕ್ಷಣೆ ಮಾಡಲಾಗುತ್ತದೆಯಲ್ಲವೆ. ತಂದೆಯು ಹೇಳುತ್ತಾರೆ - ನಾನು ಬಂದು ರಾವಣನಿಂದ ನಿಮ್ಮ ರಕ್ಷಣೆ ಮಾಡುತ್ತೇನೆ. ರಾವಣನಿಂದ ಹೇಗೆ ರಕ್ಷಣೆಯಾಗುತ್ತದೆ ಎಂಬುದನ್ನು ನೋಡುತ್ತೀರಲ್ಲವೆ. ಈ ರಾವಣನ ಮೇಲೆ ಜಯ ಗಳಿಸಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಈ ರಾವಣನು ನಿಮ್ಮನ್ನು ತಮೋಪ್ರಧಾನರನ್ನಾಗಿ ಮಾಡಿದ್ದಾನೆ, ಸತ್ಯಯುಗಕ್ಕೆ ಸತೋಪ್ರಧಾನ ಸ್ವರ್ಗವೆಂದು ಹೇಳಲಾಗುತ್ತದೆ. ಮತ್ತೆ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಅಂತ್ಯದಲ್ಲಿ ಯಾವಾಗ ಸಂಪೂರ್ಣ ದೇಹಾಭಿಮಾನದಲ್ಲಿ ಬಂದು ಬಿಡುವರೋ ಆಗ ಪತಿತರಾಗುತ್ತಾರೆ. ಹೇಗೆ ಹೊಸ ಮನೆಯು ತಯಾರಾದ ಮೇಲೆ ಒಂದು ತಿಂಗಳಿನ ನಂತರ ಅಥವಾ ಆರು ತಿಂಗಳಿನ ನಂತರ ಒಂದಲ್ಲ ಒಂದು ಪರಿವರ್ತನೆ ಆಗಿ ಬಿಡುತ್ತದೆ. ಪ್ರತೀ ವರ್ಷ ಮನೆಗೆ ಸುಣ್ಣ ಬಣ್ಣವನ್ನು ಬಳಿಯುತ್ತಾರೆ. ಕಲೆಯಂತೂ ಕಡಿಮೆಯಾಗುತ್ತದೆಯಲ್ಲವೆ. ಹೊಸದರಿಂದ ಹಳೆಯದು, ಹಳೆಯದರಿಂದ ಮತ್ತೆ ಹೊಸದು, ಇದು ಆರಂಭದಿಂದ ಹಿಡಿದು ಪ್ರತಿಯೊಂದು ವಸ್ತುವಿನದೂ ಇದೇ ರೀತಿ ಆಗುತ್ತಾ ಬಂದಿದೆ. ಈ ಮನೆಯು 100 ವರ್ಷ, 150 ವರ್ಷದವರೆಗೆ ನಡೆಯುವುದೆಂದು ತಿಳಿದುಕೊಳ್ಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಹೊಸ ಪ್ರಪಂಚಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ ಮತ್ತೆ ತ್ರೇತಾಯುಗಕ್ಕೆ 25% ಕಡಿಮೆಯೆಂದು ಹೇಳಬಹುದು ಏಕೆಂದರೆ ಸ್ವಲ್ಪ ಹಳೆಯದಾಗುತ್ತದೆ, ಅವರು ಚಂದ್ರವಂಶಿಯರಾಗಿರುತ್ತಾರೆ. ಅವರಿಗೆ ಕ್ಷತ್ರಿಯರ ಚಿಹ್ನೆಗಳನ್ನು ತೋರಿಸುತ್ತಾರೆ ಏಕೆಂದರೆ ಹೊಸ ಪ್ರಪಂಚಕ್ಕೆ ಯೋಗ್ಯರಲ್ಲ ಆದ್ದರಿಂದ ಸೂರ್ಯವಂಶಿಯರಿಗಿಂತ ಕಡಿಮೆ ಪದವಿಯವರಾದರು. ಕೃಷ್ಣಪುರಿಯಲ್ಲಿ ಹೋಗಬೇಕೆಂದು ಎಲ್ಲರೂ ಬಯಸುತ್ತಾರೆ, ರಾಮ ಪುರಿಯಲ್ಲಿ ಹೋಗಬೇಕೆಂದು ಹೇಳುವುದಿಲ್ಲ. ಎಲ್ಲರೂ ಕೃಷ್ಣಪುರಿಗಾಗಿಯೇ ಹೇಳುತ್ತಾರೆ. ಬೃಂದಾವನಕ್ಕೆ ನಡೆಯಿರಿ..... ಎಂದು ಗಾಯನವಿದೆಯಲ್ಲವೆ. ಬೃಂದಾವನದ ಮಾತಿದೆ. ಅಯೋಧ್ಯೆಗೆ ಹೇಳುವುದಿಲ್ಲ. ಶ್ರೀಕೃಷ್ಣನ ಮೇಲೆ ಎಲ್ಲರಿಗೆ ಪ್ರೀತಿಯಿರುತ್ತದೆ, ಕೃಷ್ಣನನ್ನು ಬಹಳ ಪ್ರೀತಿಯಿಂದ ನೆನಪು ಮಾಡುತ್ತಾರೆ, ಕೃಷ್ಣನನ್ನು ನೋಡುತ್ತಾರೆಂದರೆ ಕೃಷ್ಣನಂತಹ ಪತಿ ಸಿಗಲಿ, ಕೃಷ್ಣನಂತಹ ಮಗುವಾಗಲಿ, ಇಂತಹ ಸಹೋದರ ಸಿಗಲಿ ಎಂದು ಹೇಳುತ್ತಾರೆ. ಬುದ್ಧಿವಂತ ಕನ್ಯೆಯರು ಕೃಷ್ಣನ ಮೂರ್ತಿಯನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ - ಇವರಂತಹ ಮಗುವಾಗಲಿ. ಕೃಷ್ಣನ ಪ್ರೀತಿಯಲ್ಲಿ ಬಹಳ ಇರುತ್ತಾರಲ್ಲವೆ. ಕೃಷ್ಣಪುರಿಯನ್ನು ಎಲ್ಲರೂ ಬಯಸುತ್ತಾರೆ. ಈಗಂತೂ ಕಂಸಪುರಿ, ರಾವಣನ ಪುರಿಯಾಗಿದೆ. ಕೃಷ್ಣಪುರಿಗೆ ಬಹಳ ಮಹತ್ವಿಕೆಯಿದೆ, ಕೃಷ್ಣನನ್ನು ಎಲ್ಲರೂ ನೆನಪು ಮಾಡುತ್ತಾರೆ. ಆದ್ದರಿಂದಲೇ ತಂದೆಯು ಹೇಳುತ್ತಾರೆ - ನೀವು ಇಷ್ಟು ಸಮಯ ನೆನಪು ಮಾಡುತ್ತಾ ಬಂದಿದ್ದೀರಿ, ಈಗ ಕೃಷ್ಣ ಪುರಿಯಲ್ಲಿ ಹೋಗುವ ಪುರುಷಾರ್ಥ ಮಾಡಿರಿ, ಇವರ ಮನೆತನದಲ್ಲಿ ಬನ್ನಿರಿ. ಸೂರ್ಯವಂಶಿಯರಿಗೆ 8 ಮನೆತನಗಳಿವೆ ಅಂದಮೇಲೆ ರಾಜಧಾನಿಯಲ್ಲಿ ರಾಜಕುಮಾರರೊಂದಿಗೆ ಉಯ್ಯಾಲೆಯಲ್ಲಿ ತೂಗುವಂತಹ ಪುರುಷಾರ್ಥ ಮಾಡಿರಿ. ಇದು ತಿಳುವಳಿಕೆಯ ಮಾತಲ್ಲವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಷ್ಟು ಸಾಧ್ಯವೊ ಮನ್ಮಾನಭವ ಆಗಿರಿ. ನೆನಪಿನಲ್ಲಿ ಇಲ್ಲದಿದ್ದರೆ ಕೆಳಗೆ ಬೀಳುತ್ತಾರೆ. ಜ್ಞಾನವೆಂದೂ ಬೀಳಿಸುವುದಿಲ್ಲ. ನೆನಪಿನಲ್ಲಿರದಿದ್ದರೆ ಕೆಳಗೆ ಬೀಳುತ್ತಾರೆ. ಇದರಮೇಲೆ ಅಲ್ಲಾ ಅವಲುದ್ದೀನ್, ಹಾತಂ ತಾಯಿಯ ನಾಟಕಗಳೂ ರಚಿಸಲ್ಪಟ್ಟಿವೆ. ನೆನಪಿನಲ್ಲಿರುವುದಕ್ಕಾಗಿ ಬಾಯಲ್ಲಿ ಉಂಗುರವನ್ನು ಹಾಕಿ ಬಿಡುತ್ತಿದ್ದರು. ಯಾರಿಗಾದರೂ ಕ್ರೋಧ ಬರುತ್ತದೆಯೆಂದರೆ ಮಾತನಾಡಿಬಿಡುತ್ತಾರೆ. ಆದ್ದರಿಂದ ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಮಾತನಾಡದಿದ್ದರೆ ಕ್ರೋಧ ಬರುವುದಿಲ್ಲ, ತಂದೆಯು ತಿಳಿಸುತ್ತಾರೆ - ಎಂದೂ ಯಾರಮೇಲೂ ಕ್ರೋಧ ಮಾಡಬೇಡಿರಿ. ಆದರೆ ಈ ಮಾತುಗಳನ್ನು ಪೂರ್ಣ ಅರಿತುಕೊಳ್ಳದೇ ಶಾಸ್ತ್ರಗಳನ್ನು ಏನೇನನ್ನೋ ಬರೆದು ಬಿಟ್ಟಿದ್ದಾರೆ. ತಂದೆಯು ಯಥಾರ್ಥವಾಗಿ ಕುಳಿತು ತಿಳಿಸುತ್ತಾರೆ. ತಂದೆಯೂ ಭೂಮಿಗೆ ಬಂದಾಗಲೇ ತಿಳಿಸುವರು. ಯಾರು ಬಂದು ಹೋಗುವರೋ ಅವರ ಮಹಿಮೆಯನ್ನು ಹಾಡಲಾಗುತ್ತದೆ. ಠಾಗೂರ್, ಝಾನ್ಸಿ ರಾಣಿ ಇದ್ದು ಹೋದರು ನಂತರ ಅವರ ನಾಟಕಗಳನ್ನು ರಚಿಸಿದ್ದಾರೆ. ಒಳ್ಳೆಯದು - ಶಿವನೂ ಸಹ ಬಂದು ಹೋಗಿದ್ದಾರೆ ಆದ್ದರಿಂದಲೇ ಶಿವ ಜಯಂತಿಯನ್ನು ಆಚರಿಸುತ್ತಾರಲ್ಲವೆ. ಆದರೆ ಶಿವನು ಯಾವಾಗ ಬಂದರು, ಬಂದು ಏನು ಮಾಡಿದರು ಎಂಬುದನ್ನು ತಿಳಿದುಕೊಂಡಿಲ್ಲ. ಅವರಂತೂ ಇಡೀ ಸೃಷ್ಟಿಯ ತಂದೆಯಾಗಿದ್ದಾರೆ ಅಂದಮೇಲೆ ಬಂದು ಎಲ್ಲರಿಗೂ ಅವಶ್ಯವಾಗಿ ಸದ್ಗತಿಯನ್ನೂ ನೀಡಿರುವರು. ಇಸ್ಲಾಮಿ, ಬೌದ್ಧಿ ಮೊದಲಾದ ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡಿ ಹೋಗಿದ್ದಾರೆಯೋ ಅವರ ಜಯಂತಿಯನ್ನು ಆಚರಿಸುತ್ತಾರೆ. ಎಲ್ಲರ ತಿಥಿ-ತಾರೀಖು ಇದೆ. ಆದರೆ ಶಿವನ ಬಗ್ಗೆ ಯಾರಿಗೂ ತಿಳಿದಿಲ್ಲ. ಕ್ರಿಸ್ತನಿಗೆ ಇಷ್ಟು ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಎಂದು ಹೇಳುತ್ತಾರೆ. ಸ್ವಸ್ತಿಕ್ ಚಿತ್ರವನ್ನು ಬಿಡಿಸುವಾಗ ಅದರಲ್ಲಿ ಪೂರ್ಣ ನಾಲ್ಕು ಭಾಗಗಳನ್ನು ಮಾಡಿದ್ದಾರೆ ಅಂದರೆ ನಾಲ್ಕು ಯುಗಗಳಿವೆ. ಆಯಸ್ಸು ಹೆಚ್ಚು ಕಡಿಮೆಯಾಗಲು ಸಾಧ್ಯವಿಲ್ಲ. ಜಗನ್ನಾಥಪುರಿಯಲ್ಲಿ ಅನ್ನದ ನೈವೇದ್ಯವನ್ನು ತಯಾರಿಸುತ್ತಾರೆ, ಅದರಿಂದ ಪೂರ್ಣ ನಾಲ್ಕು ಭಾಗಗಳಾಗಿ ಬಿಡುತ್ತವೆ. ತಂದೆಯು ತಿಳಿಸುತ್ತಾರೆ - ಭಕ್ತಿ ಮಾರ್ಗದಲ್ಲಿ ಎಲ್ಲಾ ಗೊಂದಲ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮಕ್ಕಳೇ, ದೇಹ ಸಹಿತ ಎಲ್ಲವನ್ನೂ ಮರೆತು ಹೋಗಿ. ನಾನಾತ್ಮನಾಗಿದ್ದೇನೆ, ಪರಮಪಿತ ಪರಮಾತ್ಮನ ಮಗುವಾಗಿದ್ದೇನೆ, ಈ ಅಭ್ಯಾಸವನ್ನು ಇಟ್ಟುಕೊಳ್ಳಿ. ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅಂದಮೇಲೆ ಅವಶ್ಯವಾಗಿ ನಮ್ಮನ್ನು ಸ್ವರ್ಗದಲ್ಲಿ ಕಳುಹಿಸಿರಬೇಕು. ನರಕದಲ್ಲಂತೂ ಕಳುಹಿಸುವುದಿಲ್ಲ, ತಂದೆಯು ಯಾರನ್ನೂ ನರಕದಲ್ಲಿ ಕಳುಹಿಸುವುದಿಲ್ಲ. ಮೊಟ್ಟ ಮೊದಲು ಎಲ್ಲರೂ ಸುಖವನ್ನು ಅನುಭವಿಸುತ್ತಾರೆ. ಮೊದಲು ಸುಖ ನಂತರ ದುಃಖ, ತಂದೆಯು ಎಲ್ಲರ ದುಃಖಹರ್ತ, ಸುಖಕರ್ತನಲ್ಲವೆ. ಆತ್ಮವು ಮೊದಲು ಸುಖ ನಂತರ ದುಃಖವನ್ನು ನೋಡುತ್ತದೆ. ವಿವೇಕವೂ ಹೇಳುತ್ತದೆ - ನಾವು ಮೊದಲು ಸತೋಪ್ರಧಾನರು ನಂತರ ಸತೋ, ರಜೋ, ತಮೋದಲ್ಲಿ ಬರುತ್ತೇವೆ. ಮನುಷ್ಯರೂ ಸಹ ತಿಳಿದುಕೊಳ್ಳುತ್ತಾರೆ - ವಿದೇಶದವರು ಬುದ್ಧಿವಂತರಾಗಿದ್ದಾರೆ. ಅಲ್ಲಂತೂ ಇಂತಹ ಬಾಂಬುಗಳನ್ನು ತಯಾರಿಸುತ್ತಾರೆ ಬಹು ಬೇಗನೆ ಎಲ್ಲವೂ ಸಮಾಪ್ತಿಯಾಗಿ ಬಿಡುತ್ತವೆ. ಹೇಗೆ ಇತ್ತೀಚೆಗೆ ಶವವನ್ನು ವಿದ್ಯುತ್ನಿಂದ ಕೂಡಲೇ ಸಮಾಪ್ತಿ ಮಾಡಿ ಬಿಡುತ್ತಾರೆ. ಹಾಗೆಯೇ ಬಾಂಬುಗಳಿಂದ ಬೆಂಕಿಯು ಹತ್ತಿಕೊಂಡರೆ ಮನುಷ್ಯರೂ ಸಹ ಬಹುಬೇಗ ಸಮಾಪ್ತಿಯಾಗಿ ಬಿಡುತ್ತಾರೆ. ಈ ಬಿದುರಿನ ಕಾಡಿಗೆ ಬೆಂಕಿ ಬೀಳಲಿದೆ. ಬಿರುಗಾಳಿಗಳು ಈ ರೀತಿ ಬರುತ್ತವೆ, ಹಳ್ಳಿ-ಹಳ್ಳಿಗಳು ಸಮಾಪ್ತಿಯಾಗುತ್ತವೆ. ಆ ಸಮಯದಲ್ಲಿ ಅವರನ್ನು ಪಾರು ಮಾಡಲು ಮತ್ತ್ಯಾವುದೇ ಪ್ರಬಂಧವಿರುವುದಿಲ್ಲ, ವಿನಾಶವಾಗಲೇಬೇಕಾಗಿದೆ. ಹಳೆಯ ಪ್ರಪಂಚವು ಸಮಾಪ್ತಿಯಾಗುವುದು ಗೀತೆಯಲ್ಲಿಯೂ ವರ್ಣನೆಯಿದೆ. ತಂದೆಯು ತಿಳಿಸಿದರು - ಯುರೋಪಿಯನ್ನರು ಈ ರೀತಿ ಬಾಂಬುಗಳನ್ನು ಹಾಕುತ್ತಾರೆ ಅದು ತಿಳಿಯುವುದೇ ಇಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಕಲ್ಪದ ಮೊದಲೂ ಸಹ ವಿನಾಶವಾಗಿತ್ತು, ಈಗಲೂ ಆಗುವುದು. ನೀವು ಕಲ್ಪದ ಹಿಂದಿನ ತರಹ ಓದುತ್ತಿದ್ದೀರಿ. ನಿಧಾನ-ನಿಧಾನವಾಗಿ ವೃಕ್ಷವು ವೃದ್ಧಿಯಾಗುತ್ತಾ ಇರುವುದು. ವೃದ್ಧಿಯಾಗುತ್ತಾ-ಆಗುತ್ತಾ ಸ್ಥಾಪನೆಯಾಗಿ ಬಿಡುವುದು. ಮಾಯೆಯ ಬಿರುಗಾಳಿಗಳು ಬಹಳ ಒಳ್ಳೊಳ್ಳೆಯ ಹೂಗಳನ್ನೂ ಬೀಳಿಸಿ ಬಿಡುತ್ತದೆ. ಪೂರ್ಣ ಯೋಗದಲ್ಲಿ ಇರದಿದ್ದರೆ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಂದೆಯ ಮಗುವಾಗಿ ಪವಿತ್ರತೆಯ ಪ್ರತಿಜ್ಞೆ ಮಾಡಿ, ನಂತರ ಒಂದುವೇಳೆ ವಿಕಾರದಲ್ಲಿ ಇಳಿದರೆ ಹೆಸರನ್ನೇ ಕೆಡಿಸಿ ಬಿಡುತ್ತಾರೆ. ಅಂತಹವರಿಗೆ ಬಹಳ ದೊಡ್ಡ ಪೆಟ್ಟು ಬೀಳುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಮಕ್ಕಳೇ, ಎಂದೂ ಕಾಮದ ಪೆಟ್ಟನ್ನು ತಿನ್ನಬೇಡಿರಿ. ಮಕ್ಕಳಿಗೆ ಗೊತ್ತಿದೆ, ಇಲ್ಲಿ ರಕ್ತದ ನದಿಗಳು ಹರಿಯಲಿದೆ. ಸತ್ಯಯುಗದಲ್ಲಿ ಹಾಲಿನ ನದಿಗಳು ಹರಿಯುತ್ತವೆ. ಅದು ಹೊಸ ಪ್ರಪಂಚ, ಇದು ಹಳೆಯ ಪ್ರಪಂಚವಾಗಿದೆ. ಕಲಿಯುಗದಲ್ಲಿ ನೋಡಿ ಏನಿದೆ, ಹೊಸ ಪ್ರಪಂಚದ ವೈಭವವನ್ನೂ ನೋಡಿರಿ. ಇಲ್ಲಂತೂ ಏನೇನೂ ಇಲ್ಲ. ಮಕ್ಕಳು ಸಾಕ್ಷಾತ್ಕಾರದಲ್ಲಿ ಹೋಗಿ ಸ್ವರ್ಗವನ್ನು ನೋಡಿಕೊಂಡು ಬರುತ್ತಾರೆ. ಸೂಕ್ಷ್ಮವತನದಲ್ಲಿ ಶೂಬೀ ರಸವನ್ನು ಕುಡಿದೆವು ಎಂದು ಹೇಳುತ್ತಾರೆ. ಇದೆಲ್ಲವೂ ಸಾಕ್ಷಾತ್ಕಾರವಾಗಿದೆ. ತಿಳಿಸುತ್ತಾರೆ - ನಾವು ಮೂಲವತನಕ್ಕೆ ಹೋಗುತ್ತೇವೆ. ತಂದೆಯು ಅಲ್ಲಿಂದ ವೈಕುಂಠಕ್ಕೆ ಕಳುಹಿಸುತ್ತಾರೆ, ಇವೆಲ್ಲಾ ಸಾಕ್ಷಾತ್ಕಾರಗಳು ಡ್ರಾಮಾದಲ್ಲಿ ನಿಗಧಿಯಾಗಿದೆ. ಇದರಿಂದೇನೂ ಸಿಗುವುದಿಲ್ಲ. ಅನೇಕ ಮಕ್ಕಳು ಸೂಕ್ಷ್ಮವತನಕ್ಕೆ ಹೋಗುತ್ತಿದ್ದರು, ಶೂಬೀ ರಸವನ್ನು ಕುಡಿಯುತ್ತಿದ್ದರು, ಅಂತಹವರೂ ಸಹ ಇಂದು ಇಲ್ಲ. ಒಳ್ಳೊಳ್ಳೆಯ ಮಕ್ಕಳೂ ಸಹ ಮಾಯವಾದರು, ಬಹಳ ಧ್ಯಾನದಲ್ಲಿ ಹೋಗುತ್ತಿದ್ದವರೂ ಸಹ ಇಲ್ಲಿಂದ ಹೊರಟು ಹೋಗಿ ವಿವಾಹವಾದರು. ಆಶ್ಚರ್ಯವೆನಿಸುತ್ತದೆ, ಮಾಯೆಯು ಹೇಗಿದೆ! ಅದೃಷ್ಟವು ಹೇಗೆ ಬದಲಾಗಿ ಬಿಡುತ್ತದೆ. ಅನೇಕರು ಒಳ್ಳೊಳ್ಳೆಯ ಪಾತ್ರವನ್ನಭಿನಯಿಸಿದರು. ಸಮಯದಲ್ಲಿ ಬಹಳ ಸಹಯೋಗವನ್ನೂ ಕೊಟ್ಟರು ಆದರೂ ಸಹ ಅವರು ಇಂದು ಇಲ್ಲ ಆದ್ದರಿಂದ ತಂದೆಯು ತಿಳಿಸುತ್ತಾರೆ - ಹೇ ಮಾಯೆ, ನೀನು ಬಹಳ ಶಕ್ತಿಶಾಲಿಯಾಗಿದ್ದೀಯಾ! ಮಾಯೆಯೊಂದಿಗೆ ನಿಮ್ಮ ಯುದ್ಧ ನಡೆಯುತ್ತದೆ. ಇದಕ್ಕೆ ಯೋಗಬಲದ ಯುದ್ಧವೆಂದು ಹೇಳಲಾಗುತ್ತದೆ. ಯೋಗಬಲದಿಂದ ಏನು ಪ್ರಾಪ್ತಿಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಕೇವಲ ಭಾರತದ ಪ್ರಾಚೀನ ಯೋಗವೆಂದು ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳಿಗೆ ಯೋಗದ ಬಗ್ಗೆ ತಿಳಿಸಲಾಗಿದೆ, ಪ್ರಾಚೀನ ರಾಜಯೋಗವೆಂದು ಗಾಯನವಿದೆ, ಯಾರೆಲ್ಲರೂ ತತ್ವಜ್ಞಾನಿಗಳಿದ್ದಾರೆಯೋ ಅವರಲ್ಲಿ ಈ ಆಧ್ಯಾತ್ಮಿಕ ಜ್ಞಾನವಿಲ್ಲ. ಆತ್ಮಿಕ ತಂದೆಯೇ ಜ್ಞಾನ ಸಾಗರನಾಗಿದ್ದಾರೆ. ಅವರಿಗೇ ಶಿವಾಯ ನಮಃ ಎಂದು ಹಾಡುತ್ತಾರೆ. ಅವರ ಮಹಿಮೆಯ ಗಾಯನವಿದೆ, ತಂದೆಯು ಬಂದು ನಿಮಗೆ ಎಷ್ಟೊಂದು ಜ್ಞಾನವನ್ನು ತಿಳಿಸುತ್ತಾರೆ. ಇದಕ್ಕೆ ಜ್ಞಾನದ ಮೂರನೇ ನೇತ್ರವೆಂದು ಹೇಳಲಾಗುತ್ತದೆ. ತಮ್ಮನ್ನು ತ್ರಿಕಾಲದರ್ಶಿಗಳೆಂದು ಕರೆಸಿಕೊಳ್ಳಲು ಮತ್ತ್ಯಾರಿಗೂ ಬಲವಿಲ್ಲ. ಕೇವಲ ಬ್ರಾಹ್ಮಣರೇ ತ್ರಿಕಾಲದರ್ಶಿಗಳಾಗುತ್ತಾರೆ. ಆ ಬ್ರಾಹ್ಮಣರ ಮೂಲಕವೇ ಯಜ್ಞವನ್ನು ರಚಿಸಲಾಗಿದೆ, ರುದ್ರ ಜ್ಞಾನ ಯಜ್ಞವಲ್ಲವೆ. ಶಿವನಿಗೆ ರುದ್ರನೆಂತಲೂ ಹೇಳುತ್ತಾರೆ, ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಪ್ರತಿಯೊಂದು ದೇಶದಲ್ಲಿ ಅನೇಕ ಬೇರೆ-ಬೇರೆ ಹೆಸರುಗಳಿವೆ. ಒಬ್ಬ ತಂದೆಯ ವಿನಃ ಮತ್ತ್ಯಾರಿಗೂ ಇಷ್ಟೊಂದು ಹೆಸರುಗಳಿಲ್ಲ. ಇವರಿಗೆ ಬಬುಲ್ನಾಥನೆಂದೂ ಹೇಳುತ್ತಾರೆ. ಯಾರಲ್ಲಿ ಮುಳ್ಳುಗಳಿರುತ್ತವೆಯೋ ಅವರಿಗೆ ಬಬುಲ್ ಎಂದು ಹೇಳುತ್ತಾರೆ. ತಂದೆಯು ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವವರಾಗಿದ್ದಾರೆ ಆದ್ದರಿಂದ ಅವರಿಗೆ ಬಬುಲ್ನಾಥನೆಂದು ಹೆಸರಿಟ್ಟಿದ್ದಾರೆ. ಬಾಂಬೆಯಲ್ಲಿ ಬಹಳ ದೊಡ್ಡ ಮೇಳವಾಗುತ್ತದೆ, ಅರ್ಥವನ್ನು ತಿಳಿದುಕೊಂಡಿಲ್ಲ, ತಂದೆಯು ತಿಳಿಸುತ್ತಾರೆ. ಅವರ ನಿಜವಾದ ಹೆಸರಾಗಿದೆ ಶಿವ. ವ್ಯಾಪಾರಿಗಳೂ ಸಹ ಬಿಂದು (ಸೊನ್ನೆ) ವನ್ನು ಶಿವ ಎಂದು ಹೇಳುತ್ತಾರೆ. 1, 2... ಎಂದು ಎಣಿಕೆ ಮಾಡುವಾಗ 10ರವರೆಗೆ ಬಂದಾಗ ಶಿವ ಎಂದು ಹೇಳುತ್ತಾರೆ. ತಂದೆಯೂ ತಿಳಿಸುತ್ತಾರೆ, ನಾನು ನಕ್ಷತ್ರ ಬಿಂದುವಾಗಿದ್ದೇನೆ, ಅನೇಕರು ಹೀಗೆ ಡಬಲ್ ತಿಲಕವನ್ನಿಟ್ಟುಕೊಳ್ಳುತ್ತಾರೆ. ಮಾತಾ ಮತ್ತು ಪಿತಾ. ಜ್ಞಾನ ಸೂರ್ಯ, ಜ್ಞಾನ ಚಂದ್ರಮನ ಚಿಹ್ನೆಯಾಗಿದೆ, ಅವರಿಗೆ ಅರ್ಥವು ಗೊತ್ತಿಲ್ಲ ಅಂದಾಗ ತಂದೆಯೇ ಯೋಗದ ಬಗ್ಗೆ ತಿಳಿಸುತ್ತಿದ್ದರು. ಯೋಗವು ಎಷ್ಟು ಪ್ರಸಿದ್ಧಿಯಾಗಿದೆ. ಈಗ ನೀವು ಮಕ್ಕಳು ಯೋಗ ಶಬ್ಧವನ್ನು ಬಿಟ್ಟು ಬಿಡಿ, ನೆನಪು ಮಾಡಿರಿ. ತಂದೆಯು ಹೇಳುತ್ತಾರೆ - ಯೋಗ ಶಬ್ಧದಿಂದ ತಿಳಿದುಕೊಳ್ಳುವುದಿಲ್ಲ, ನೆನಪು ಎಂದು ಹೇಳಿದರೆ ತಿಳಿದುಕೊಳ್ಳುತ್ತಾರೆ. ತಂದೆಯನ್ನು ಬಹಳ ನೆನಪು ಮಾಡಬೇಕಾಗಿದೆ. ಅವರಿಗೆ ಪ್ರಿಯತಮನೆಂತಲೂ ಹೇಳಲಾಗುತ್ತದೆ. ಪಟ್ಟದ ರಾಣಿಯರನ್ನಾಗಿ ಮಾಡುತ್ತಾರಲ್ಲವೆ. ವಿಶ್ವದ ರಾಜಧಾನಿಯ ಆಸ್ತಿಯನ್ನು ಕೊಡುತ್ತಾರೆ, ಸತ್ಯಯುಗದಲ್ಲಿ ಒಬ್ಬ ತಂದೆಯಿರುತ್ತಾರೆ. ಭಕ್ತಿಯಲ್ಲಿ ಇಬ್ಬರು ತಂದೆಯರು ಮತ್ತು ಜ್ಞಾನಮಾರ್ಗದಲ್ಲಿ ಈಗ ನಿಮಗೆ ಮೂವರು ತಂದೆಯರಿದ್ದಾರೆ. ಎಷ್ಟು ವಿಚಿತ್ರವಾಗಿದೆ! ನೀವು ಅರ್ಥ ಸಹಿತವಾಗಿ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದ್ದರಿಂದ ಪಾರಲೌಕಿಕ ತಂದೆಯನ್ನು ಅರಿತುಕೊಂಡೇ ಇರುವುದಿಲ್ಲ. ಈಗ ನೀವು ಮೂವರು ತಂದೆಯರನ್ನು ಅರಿತುಕೊಂಡಿದ್ದೀರಿ. ಎಷ್ಟು ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ನೆನಪಿನಲ್ಲಿರಲು ಬಾಯಿಂದ ಏನನ್ನು ಮಾತನಾಡಬೇಡಿರಿ. ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳಿ, ಆಗ ಕ್ರೋಧವು ಸಮಾಪ್ತಿಯಾಗುವುದು, ಯಾರಮೇಲೂ ಕ್ರೋಧ ಮಾಡಬಾರದು. |
2. ಈಗ ಈ ದುಃಖಧಾಮಕ್ಕೆ ಬೆಂಕಿ ಬೀಳಲಿದೆ. ಆದ್ದರಿಂದ ಇದನ್ನು ಮರೆತು ಹೊಸ ಪ್ರಪಂಚವನ್ನು ನೆನಪು ಮಾಡಬೇಕಾಗಿದೆ. ತಂದೆಯೊಂದಿಗೆ ಯಾವ ಪವಿತ್ರರಾಗಿರುವ ಪ್ರತಿಜ್ಞೆ ಮಾಡಿದ್ದೀರೋ ಅದರಲ್ಲಿ ಪಕ್ಕಾ ಇರಬೇಕಾಗಿದೆ. |
ಓಂ ಶಾಂತಿ. ಇನ್ನು ಕೆಲವೇ ಮೋಡಗಳು ಉಳಿದಿವೆ. ಹೇಗೆ ಮಳೆಯು ಕಡಿಮೆಯಾಗಿ ಬಿಟ್ಟಾಗ ಸಾಗರದ ಮೇಲೆ ಮೋಡಗಳಿರುವುದಿಲ್ಲ, ತಣ್ಣಗಾಗಿ ಬಿಡುತ್ತವೆ ಹಾಗೆಯೇ ಇಲ್ಲಿಯೂ ಸಹ ತಣ್ಣಗಾಗಿ ಬಿಡುತ್ತಾರೆ. ಯಾರು ರಿಫ್ರೆಶ್ ಆಗಿ ಹೋಗಿ ಮಳೆ ಸುರಿಸುವರೋ ಅವರಿಗೆ ಮೋಡಗಳೆಂದು ಹೇಳಲಾಗುವುದು. ಒಂದುವೇಳೆ ಮಳೆ ಸುರಿಸದಿದ್ದರೆ ಅವರಿಗೆ ಮೋಡಗಳೆಂದು ಹೇಳುವರೇ! ಇವು ಜ್ಞಾನದ ಮೋಡಗಳಾಗಿವೆ, ಅವು ನೀರಿನ ಮೋಡಗಳಾಗಿವೆ. ಮಿಲನದ ಸೀಜನ್ ಇದ್ದಾಗ ಜ್ಞಾನದ ಮೋಡಗಳು ಬರುತ್ತವೆ, ರಿಫ್ರೆಶ್ ಆಗಿ ಹೋಗಿ ಅನ್ಯರನ್ನೂ ರಿಫ್ರೆಶ್ ಮಾಡುತ್ತಾರೆ. ಮೋಡಗಳಲ್ಲಿಯೂ ನಂಬರ್ವಾರ್ ಇರುತ್ತಾರೆ. ಕೆಲವರಂತೂ ಬಹಳ ಜೋರಾಗಿ ಮಳೆ ಸುರಿಸುತ್ತಾರೆ. ಮೋಡಗಳ ಕೆಲಸವೇ ಆಗಿದೆ - ಮಳೆ ಸುರಿಸುವುದು, ಬಾಡಿರುವ ಮರ-ಗಿಡಗಳನ್ನು ರಿಫ್ರೆಶ್ ಮಾಡುವುದು. ಯಾರಲ್ಲಿ ಪೂರ್ಣ ಜ್ಞಾನವಿದೆಯೋ ಅವರು ಗುಪ್ತವಾಗಿ ಕುಳಿತುಕೊಳ್ಳುವುದಿಲ್ಲ, ಅವರಿಗೆ ತಂದೆಯ ಆದೇಶವೂ ಬೇಕಾಗಿಲ್ಲ ಏಕೆಂದರೆ ಮೋಡಗಳಲ್ಲವೆ. ತುಂಬಿಕೊಂಡು ಹೋಗಿ ಮಳೆ ಸುರಿಸುವುದಕ್ಕಾಗಿಯೇ ಬರುತ್ತಾರೆ. ಎಲ್ಲಿಯಾದರೂ ಬಂಜರು ಭೂಮಿ ಇರುವುದನ್ನು ನೋಡಿದರೆ ಅಲ್ಲಿ ಹೋಗಿ ಹಚ್ಚ ಹಸುರಾಗಿ ಮಾಡಬೇಕು. ಮಹಾರಥಿ ಮಕ್ಕಳು ಎಲ್ಲಾ ಸೇವಾಕೇಂದ್ರಗಳನ್ನು ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ಯಾವ ಸೇವಾಕೇಂದ್ರವು ತಣ್ಣಗಾಗಿದೆ? ಯಾವ ಸೇವಾಕೇಂದ್ರದ ಮಕ್ಕಳಿಗೆ ಹೆಚ್ಚು ಬಿರುಗಾಳಿಗಳು ಬರುತ್ತವೆ? ಎಂಬುದನ್ನು ಮಹಾರಥಿ ಸೇವಾಧಾರಿಗಳು ಬಹಳ ಚೆನ್ನಾಗಿ ತಿಳಿದುಕೊಂಡಿರುತ್ತಾರೆ. ತಂದೆಯೂ ಸಹ ಸದಾ ಹೇಳುತ್ತಾರೆ - ಸೇವಾಧಾರಿ ಮಕ್ಕಳಿಗೆ ನೆನಪು-ಪ್ರೀತಿಯನ್ನು ತಿಳಿಸಿ ಎಂದು. ಒಳ್ಳೊಳ್ಳೆಯ ಸೇವಾಧಾರಿ ಮೋಡಗಳು (ಮಕ್ಕಳು) ಸರ್ವೀಸ್ ಮಾಡಲು ಹೋಗುತ್ತಾರೆ, ಪ್ರದರ್ಶನಿಯಲ್ಲಿಯೂ ಎಲ್ಲರೂ ಏಕರಸವಾಗಿ ತಿಳಿಸುವುದಿಲ್ಲ. ಮುಖ್ಯವಾದ ಮಾತೇ ಇದಾಗಿದೆ - ಗೀತೆಯ ಭಗವಂತ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಸಾಕಾರಿ ಶ್ರೀಕೃಷ್ಣನಲ್ಲ. ತಿಳಿಸಿ ಕೊಡುವ ಶೈಲಿಯು ಬಹಳ ಚೆನ್ನಾಗಿರಬೇಕು. ಇಡೀ ದಿನ ಇದೇ ಚಿಂತನೆಯಿರಲಿ - ಎಲ್ಲರನ್ನು ಹೋಗಿ ಜಾಗೃತಗೊಳಿಸಬೇಕು, ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ, ಎಲ್ಲರಿಗೆ ಪ್ರೀತಿಯಿಂದ ತಿಳಿಸುತ್ತಾ ಇರಿ - ಇಬ್ಬರು ತಂದೆಯರಿದ್ದಾರೆ. ಒಬ್ಬರು ಲೌಕಿಕ ತಂದೆ, ಮತ್ತೊಬ್ಬರು ಪಾರಲೌಕಿಕ ತಂದೆ. ಪಾರಲೌಕಿಕ ತಂದೆಗೇ ಪತಿತ-ಪಾವನ ಎಂದು ಹೇಳುತ್ತಾರೆ. ಈಗ ನೀವು ಮಕ್ಕಳಿಗೆ ಬುದ್ಧಿಯು ಸಿಕ್ಕಿದೆ. ಪ್ರಪಂಚದ ಮನುಷ್ಯರು ಭಲೆ ಆಡಂಬರವಾಗಿ ಕಾಣುತ್ತಾರೆ ಆದರೆ ಕಲ್ಲು ಬುದ್ಧಿಯವರಾಗಿದ್ದಾರೆ. ಸ್ವಯಂ ತಂದೆಯೇ ಹೇಳುತ್ತಾರೆ- ಈ ಸಾಧು-ಸಂತರನ್ನೂ ಸಹ ನಾನೇ ಉದ್ಧಾರ ಮಾಡಬೇಕಾಗಿದೆ, ಅವರೂ ಸಹ ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ. ಸತ್ಯಯುಗದಿಂದ ಹಿಡಿದು ಈ ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ಆದರೆ ಇದು ಯಾರಿಗೂ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಈ ಜ್ಞಾನವಿಲ್ಲ. ಆದ್ದರಿಂದ ಯಾರದೂ ಸದ್ಗತಿಯಾಗಲು ಸಾಧ್ಯವಿಲ್ಲ. ಗೀತೆಗೆ ಎಷ್ಟೊಂದು ಮಾನ್ಯತೆಯಿದೆ ಆದರೆ ಅದು ಭಕ್ತಿಮಾರ್ಗವಾಗಿದೆ. ತಂದೆಯು ಪತಿತ-ಪಾವನನಾಗಿದ್ದಾರೆ. ರಾಜಯೋಗವನ್ನು ಕಲಿಸುತ್ತಾರೆ ಅಂದಮೇಲೆ ರಾಜ್ಯಭಾರಕ್ಕಾಗಿ ಅವಶ್ಯವಾಗಿ ಹೊಸ ಪ್ರಪಂಚ ಬೇಕು. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಇದೂ ಸಹ ನಿಮಗೆ ಈಗ ಅರ್ಥವಾಗಿದೆ. ಯಾರಿಗೆ ಕಲ್ಪದ ಹಿಂದೆ ತಿಳಿಸಿದ್ದರೋ ಅವರಿಗೇ ಈಗಲೂ ತಿಳಿಸುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ. ಯುದ್ಧವೆಂದರೆ ಆ ಯುದ್ಧವಲ್ಲ, ಹೇಗೆ ಯಾವಾಗಲೂ ನಡೆಯುತ್ತಾ ಬಂದಿದೆ. 8-10 ವರ್ಷಗಳವರೆಗೆ ನಡೆದು ಮತ್ತೆ ನಿಂತು ಹೋಗುತ್ತಾರೆ. ಡ್ರಾಮಾನುಸಾರ ಯಾವ ಅಣು ಬಾಂಬುಗಳನ್ನು ತಯಾರಿಸಿದ್ದಾರೆಯೋ ಅವನ್ನು ಕೇವಲ ಇಟ್ಟುಕೊಳ್ಳುವುದಕ್ಕಾಗಿ ತಯಾರಿಸಿಲ್ಲ. ಪತಿತ ಮನುಷ್ಯರ ಮೃತ್ಯುವಾಗದೇ ಸತ್ಯಯುಗವು ಬರುವುದಿಲ್ಲ. ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನೂ ತಿಳಿಸಬೇಕಾಗಿದೆ. ಶಾಂತಿ ಸ್ಥಾಪನೆ ಮಾಡುವುದು ಹಾಗೂ ಶ್ರೇಷ್ಠಾಚಾರಿ ಪ್ರಪಂಚವನ್ನಾಗಿ ಮಾಡುವುದು ಒಬ್ಬ ತಂದೆಯ ಕರ್ತವ್ಯವೇ ಆಗಿದೆ. ತಂದೆಯು ತಿಳಿಸುತ್ತಾರೆ - ಅನ್ಯ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬರ ಸಂಗವನ್ನು ಸೇರಬೇಕಾಗಿದೆ. ದೇಹ ಸಹಿತ ಏನೆಲ್ಲವೂ ಕಾಣುತ್ತಿದೆಯೋ ಇದೆಲವನ್ನು ತೆಗೆಯಬೇಕಾಗಿದೆ. ನಾವೀಗ ಮರಳಿ ಹೋಗಬೇಕಾಗಿದೆ ಆದ್ದರಿಂದ ಮನೆಯನ್ನೇ ನೆನಪು ಮಾಡಬೇಕಾಗಿದೆ. ನೀವೀಗ ತಿಳಿದುಕೊಂಡಿದ್ದೀರಿ - ಇದು ಮೃತ್ಯುಲೋಕವಾಗಿದೆ, ನಾವೀಗ ಅಮರಲೋಕದಲ್ಲಿ ಹೋಗುವುದಕ್ಕಾಗಿ ಅಮರ ಕಥೆಯನ್ನು ಕೇಳುತ್ತಿದ್ದೇವೆ. ದೇವತೆಗಳಿಗೆ ದೈವೀ ಗುಣವಂತ ಮನುಷ್ಯರೆಂದು ಹೇಳಲಾಗುತ್ತದೆ, ಇಲ್ಲಂತೂ ಒಬ್ಬರೂ ಇರಲು ಸಾಧ್ಯವಿಲ್ಲ. ಕೃಷ್ಣನಿಗೂ ಎಷ್ಟೊಂದು ನಿಂದನೆಯನ್ನು ಬರೆದು ಬಿಟ್ಟಿದ್ದಾರೆ, ಸ್ವಲ್ಪವೂ ಬುದ್ಧಿಯಲ್ಲಿ ಬರುವುದಿಲ್ಲ. |
ಈಗ ನೀವು ಮಕ್ಕಳು ಬಹಳ ಚೆನ್ನಾಗಿ ಪುರುಷಾರ್ಥ ಮಾಡಬೇಕು, ದೈವೀ ಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಯಾವುದಕ್ಕೆ ದೈವೀ ಗುಣಗಳೆಂದು ಹೇಳಲಾಗುತ್ತದೆ ಎಂಬುದನ್ನೂ ಸಹ ತಿಳಿಸಲಾಗುತ್ತದೆ. ಅವಶ್ಯವಾಗಿ ಸಂಪೂರ್ಣ ನಿರ್ವಿಕಾರಿಗಳಾಗಬೇಕಾಗಿದೆ. ಇದು ಮೊದಲ ಮುಖ್ಯ ಗುಣವಾಗಿದೆ. ನೀವು ಎಲ್ಲಿಯಾದರೂ ನೋಡಿರಿ, ಪವಿತ್ರರ ಮುಂದೆ ಅಪವಿತ್ರರು ತಲೆ ಬಾಗುತ್ತಾರೆ. ಸತ್ಯಯುಗದಲ್ಲಿ ಪವಿತ್ರರೇ ಇರುತ್ತಾರೆ ಆದ್ದರಿಂದ ಅಲ್ಲಿ ಮಂದಿರಗಳಿರುವುದಿಲ್ಲ. ನಂತರ ಯಾವಾಗ ಪೂಜಾರಿಗಳಾಗುವರೋ ಆಗ ಮಂದಿರಗಳನ್ನು ಕಟ್ಟಿಸುತ್ತಾರೆ. ಯಾರು ಪಾವನರಾಗಿದ್ದರೋ ಅವರೇ ಪತಿತರಾಗುತ್ತಾರೆ. ಇದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ತಂದೆಯು ತಿಳಿಸುತ್ತಾರೆ - ಈ ಹಳೆಯ ಪ್ರಪಂಚವನ್ನು ಹಳೆಯ ಶರೀರವನ್ನೂ ಮರೆಯಬೇಕಾಗಿದೆ. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ. ಇದು ಸಮಾಪ್ತಿ ಆಗುವುದರಲ್ಲಿ ನಿಧಾನವಾಗುವುದಿಲ್ಲ. ಈ ಹಳೆಯ ಪ್ರಪಂಚ, ಹಣ-ಅಧಿಕಾರ, ಸಂಪತ್ತೆಲ್ಲವೂ ಹೋಯಿತೆಂದರೆ ಹೋಯಿತು. ಇನ್ನು ಕೆಲವೇ ದಿನಗಳು ಉಳಿದಿವೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಡುವುದೆಂದು ಪ್ರಪಂಚದಲ್ಲಿ ಯಾರಿಗಾದರೂ ತಿಳಿದಿದೆಯೇ? ನೀವು ತಿಳಿಸುತ್ತೀರಿ, ಆದರೆ ಅವರಿಗೆ ವಿಶ್ವಾಸ ಕುಳಿತುಕೊಳ್ಳಬೇಕಲ್ಲವೆ. ಭಗವಾನುವಾಚ - ಯಾವಾಗ ತಿಳಿದುಕೊಳ್ಳುವರೋ ಆಗಲೇ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. |
ತಂದೆಯು ನೀವು ಮಕ್ಕಳಿಗೆ ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಮಕ್ಕಳಿಗೇ ತಿಳಿದಿದೆ - ಬೇಹದ್ದಿನ ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ, ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲರೂ ಸಹೋದರರಾಗಿದ್ದೀರಿ, ಸ್ವರ್ಗದಲ್ಲಿ ಎಲ್ಲಾ ಸಹೋದರರು ಸುಖಿಯಾಗಿದ್ದರು. ಕಲಿಯುಗದಲ್ಲಿ ಎಲ್ಲರೂ ದುಃಖಿಯಾಗಿದ್ದೀರಿ. ಎಲ್ಲಾ ಆತ್ಮರು ನರಕವಾಸಿಯಾಗಿದ್ದಾರೆ, ಕೇವಲ ಆತ್ಮವೇ ಇರುವುದಿಲ್ಲ. ಶರೀರವು ಬೇಕಲ್ಲವೆ. ಈಗ ನೀವು ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಿದೆ. ಇದು ಚಿಕ್ಕಮ್ಮನ ಮನೆಯಂತಲ್ಲ. ಮೊದಲು ಪರಮಪಿತ ಪರಮಾತ್ಮನೇ ನಮಗೆ ಓದಿಸುತ್ತಾರೆ, ಶಿವ ತಂದೆಯು ಈ ಶರೀರದ ಮೂಲಕ ಓದಿಸಲು ಬರುತ್ತಾರೆ ಎಂಬುದು ನಿಶ್ಚಯವಾಗುವುದು ಆಗಲೇ ಸ್ಥಿತಿಯು ಪಕ್ಕಾ ಆಗುವುದು. ನಾವೂ ಸಹ ಶರೀರದ ಮೂಲಕ ಕೇಳುತ್ತೇವೆ, ಧಾರಣೆ ಮಾಡಿಕೊಳ್ಳುತ್ತೇವೆ, ಸಂಸ್ಕಾರಗಳ ಅನುಸಾರವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ಧಾರಣೆ ಮಾಡಿಕೊಳ್ಳುತ್ತೇವೆ. ಹೇಗೆ ತಂದೆಯು ಸೈನಿಕರ ಉದಾಹರಣೆ ಕೊಡುತ್ತಾರೆ. ಅವರು ಯುದ್ಧದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಮತ್ತೆ ಸೈನಿಕರಾಗಿಯೇ ಜನ್ಮ ಪಡೆಯುತ್ತಾರೆ. ಈಗ ತಂದೆಯ ಸಂಸ್ಕಾರಗಳ ಬಗ್ಗೆಯೂ ನಿಮಗೆ ತಿಳಿದಿದೆ - ನಿರಾಕಾರ ಬೇಹದ್ದಿನ ತಂದೆಯಲ್ಲಿ ಯಾವ ಸಂಸ್ಕಾರವಿದೆ! ಅವರು ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದಾರೆ. ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರೆ. ಅವರೇ ಬಂದು ಪಾವನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಜನ್ಮ-ಜನ್ಮಾಂತರದ ವಿಕರ್ಮಗಳು ವಿನಾಶವಾಗುತ್ತವೆ. ಇಲ್ಲವೆಂದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಪದವಿಯೇನೂ ಸಿಗುವುದಿಲ್ಲ. |
ಈಗ ಮಕ್ಕಳೂ ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ಸಹಜ ಮಾರ್ಗವನ್ನು ತಿಳಿಸುತ್ತಾರೆ. ಮಕ್ಕಳೇ, ಮನ್ಮನಾಭವ ಎಂದು ಹೇಳುತ್ತಾರೆ. ಈ ಅಕ್ಷರವು ಗೀತೆಯಲ್ಲಿದೆ ಆದರೆ ಇದರ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ. ದೇಹಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ಅರಿತು ಪರಮಪಿತ ಪರಮಾತ್ಮನಾದ ನನ್ನನ್ನು ನೆನಪು ಮಾಡಿರಿ. ನೆನಪಿಗೇ ಯೋಗ ಅಗ್ನಿಯೆಂದು ಹೇಳಲಾಗುತ್ತದೆ. ಯೋಗವು ಸಾಮಾನ್ಯ ಪದವಾಗಿದೆ. ಗೀತೆಯಲ್ಲಿಯೂ ಇದೆ ಆದರೆ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಘೋರ ಅಂಧಕಾರ ಮಾಡಿ ಬಿಟ್ಟಿದ್ದಾರೆ. ಈಗ ನೀವು ತಿಳಿಸುತ್ತೀರೆಂದರೂ ಸಹ ಇದು ನಿಮ್ಮ ಕಲ್ಪನೆಯಾಗಿದೆ ಎಂದು ಹೇಳಿ ಬಿಡುತ್ತಾರೆ. ಏನೂ ಅರ್ಥವಾಗುವುದಿಲ್ಲ. ಅವರಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವುದಿಲ್ಲ. ಮೊದಲು ಇವರು ಬೇಹದ್ದಿನ ತಂದೆಯೂ ಆಗಿದ್ದಾರೆ, ಶಿಕ್ಷಕ-ಸದ್ಗುರುವೂ ಆಗಿದ್ದಾರೆ. ಅವರು ನಮಗೆ ಓದಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಬೇಕಾಗಿದೆ. ಇದು ಪಕ್ಕಾ ನಿಶ್ಚಯವಿರಬೇಕು. ಹೊಸ ವ್ಯಕ್ತಿಗಳಿಗೆ ನಿಶ್ಚಯ ಕುಳಿತುಕೊಳ್ಳುವುದು ಅಸಂಭವವಾಗಿದೆ, ಕೆಲಕೆಲವರು ಹೊಸಬರೂ ಸಹ ಬಹಳ ಸೂಕ್ಷ್ಮ ಬುದ್ಧಿಯವರಾಗಿರುತ್ತಾರೆ, ಅರ್ಥ ಮಾಡಿಕೊಳ್ಳುತ್ತಾರೆ. ಕೆಲವರಂತೂ ಇಲ್ಲಿಗೆ ಬರುವುದಕ್ಕೂ ಇಚ್ಛಿಸುವುದಿಲ್ಲ, ಏನೂ ತಿಳಿದುಕೊಳ್ಳುವುದಿಲ್ಲ. ಬುದ್ಧಿಯಲ್ಲಿಯೇ ಬರುವುದಿಲ್ಲ - ಇಷ್ಟೊಂದು ಮಂದಿ ಬಿ.ಕೆ.ಗಳಿದ್ದಾರೆ ಅಂದಮೇಲೆ ಅವಶ್ಯವಾಗಿ ಇವರಿಗೆ ತಂದೆಯಿಂದ ಆಸ್ತಿಯು ಸಿಕ್ಕಿರಬೇಕು. ಇದು ಪರಿವಾರವಾಗಿದೆ, ಬ್ರಹ್ಮಾಕುಮಾರ-ಕುಮಾರಿಯರು ಎಂದು ಬರೆಯಲಾಗಿದೆ ಅಂದಮೇಲೆ ಇದು ಪರಿವಾರವಾಯಿತಲ್ಲವೆ. ಪ್ರಜಾಪಿತ ಬ್ರಹ್ಮನ ಪರಿವಾರವು ಎಷ್ಟು ದೊಡ್ಡದಾಗಿದೆ ಆದರೆ ಈ ಮಾತು ಯಾರ ಬುದ್ಧಿಯಲ್ಲಿಯೂ ಬರಲು ಸಾಧ್ಯವಿಲ್ಲ. ತಮ್ಮ ಗುರಿ-ಧ್ಯೇಯವೇನೆಂದು ಯಾರಾದರೂ ಕೇಳಿದರೆ ತಿಳಿಸಿರಿ - ಹೊರಗಡೆ ಬೋರ್ಡಿನ ಮೇಲೆ ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಎಂದು ಬರೆಯಲಾಗಿದೆ ಅಂದಮೇಲೆ ಇದು ಪರಿವಾರವಾಯಿತು. ಇಲ್ಲಿ ತಾತನಿಂದ ಆಸ್ತಿಯು ಸಿಗುತ್ತದೆ. ಪ್ರಜಾಪಿತ ಬ್ರಹ್ಮನ ಮುಖದ ಮೂಲಕ ಶಿವ ತಂದೆಯು ರಚನೆಯನ್ನು ರಚಿಸುತ್ತಾರೆ. ಅಂದಮೇಲೆ ಅವರು ರಚಯಿತನಾದರು, ಸ್ವರ್ಗವನ್ನು ರಚಿಸುತ್ತಾರೆಂದರೆ ಅವಶ್ಯವಾಗಿ ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ ಅಂದಮೇಲೆ ಇದು ಪರಿವಾರ ಆಯಿತಲ್ಲವೆ. ತಂದೆ-ಗಂಡು ಮಕ್ಕಳು, ಹೆಣ್ಣು ಮಕ್ಕಳು ಮತ್ತು ದಾದಾರವರು. ಬ್ರಹ್ಮನೂ ಇದ್ದಾರೆ, ಶಿವನೂ ಇದ್ದಾರೆ, ಶಿವನು ರಚಯಿತ ನಿರಾಕಾರನಾಗಿದ್ದಾರೆ ಅಂದಮೇಲೆ ಮಕ್ಕಳಿಗೆ ಆಸ್ತಿಯನ್ನು ಹೇಗೆ ಕೊಡುವುದು! ಆದ್ದರಿಂದ ಬ್ರಹ್ಮಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ, ಇದನ್ನು ಒಳ್ಳೆಯ ರೀತಿಯಲ್ಲಿ ತಿಳಿಸಬೇಕಾಗಿದೆ. ತಿಳಿಸಿರಿ, ಇದು ನಿಮ್ಮ ತಂದೆಯ ಮನೆಯಾಗಿದೆ, ಇದಕ್ಕೆ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ, ನಾವು ಬ್ರಾಹ್ಮಣರಾಗಿದ್ದೇವೆ, ತಂದೆಯ ವಿನಃ ಮತ್ತ್ಯಾರೂ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಇದೆಯಲ್ಲವೆ - ಮನ್ಮನಾಭವ ಅರ್ಥಾತ್ ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು. ಆದ್ದರಿಂದ ನಾವು ಆ ಒಬ್ಬ ತಂದೆಯನ್ನೇ ನೆನಪು ಮಾಡುತ್ತೇವೆ. ಭಕ್ತಿಮಾರ್ಗದಲ್ಲಿ ಹಾಡುತ್ತಾರೆ - ಬಾಬಾ, ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ, ನಿಮ್ಮವರಾಗುತ್ತೇವೆ. ನಾವಾತ್ಮರು ಈ ದೇಹವನ್ನೂ ಬಿಟ್ಟು ನಿಮ್ಮ ಜೊತೆ ಬಂದು ಬಿಡುತ್ತೇವೆ, ನಿಮ್ಮ ಮಕ್ಕಳಾಗುತ್ತೇವೆ ಅಂದಮೇಲೆ ತಮ್ಮ ಜೊತೆಯಲ್ಲಿಯೇ ಹೋಗುತ್ತೇವೆ. ಹೇಗೆ ವಿವಾಹವಾದರೆ ಪ್ರಿಯತಮನು ತನ್ನ ಜೊತೆ ಕರೆದುಕೊಂಡು ಹೋಗುತ್ತಾರಲ್ಲವೆ. ಈ ಶಿವ ಪ್ರಿಯತಮನೂ ಹೇಳುತ್ತಾರೆ - ನಾನು ನಿಮ್ಮನ್ನು ಈ ದುಃಖದಿಂದ ಬಿಡಿಸಿ ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ, ಮತ್ತೆ ತಮ್ಮ-ತಮ್ಮ ಪುರುಷಾರ್ಥದನುಸಾರ ಹೋಗಿ ರಾಜ್ಯಭಾರ ಮಾಡುತ್ತೀರಿ. ಯಾರೆಷ್ಟು ಜ್ಞಾನ ಧನವನ್ನು ಧಾರಣೆ ಮಾಡಿಕೊಳ್ಳುವರೋ ಅಷ್ಟು ಶ್ರೇಷ್ಠ ಪದವಿಯನ್ನೂ ಪಡೆಯುತ್ತಾರೆ. ಚಿಕ್ಕ-ಚಿಕ್ಕ ಕುಮಾರಿಯರೂ ಸಹ ಸರ್ವೀಸ್ ಮಾಡುತ್ತಿದ್ದಾರೆ. ಅವರೇ ದೊಡ್ಡ-ದೊಡ್ಡ ವಿದ್ವಾಂಸರು, ಪಂಡಿತರು ಮೊದಲಾದವರಿಗೆ ತಿಳಿಸಬೇಕಾಗಿದೆ. ಉಮಂಗವಿರಬೇಕು – ಮಲ್ಲ ಯುದ್ಧದಲ್ಲಿ ದೊಡ್ಡ-ದೊಡ್ಡ ಪ್ರತಿಜ್ಞೆ ಮಾಡುತ್ತಾರೆ - ನಾವು ಇವರ ಜೊತೆ ಯುದ್ಧ ಮಾಡುತ್ತೇವೆ ಎಂದು. ಸೇವಾಧಾರಿ ಮಕ್ಕಳು ಆರಾಮದಿಂದ ಮಲಗುವಂತಿಲ್ಲ, ಆರಾಮ ಹರಾಮ (ವ್ಯರ್ಥ) ವಾಗಿದೆ. ಯಾರೆಲ್ಲಾ ತಮ್ಮನ್ನು ಮಹಾರಥಿಗಳೆಂದು ತಿಳಿದುಕೊಳ್ಳುವರೋ ಅವರು ಸುಖದಿಂದ ಮಲಗುವಂತಿಲ್ಲ. ಸರ್ವೀಸಿಗಾಗಿ ಓಡಾಡಬೇಕಾಗಿದೆ. ಇತ್ತೀಚೆಗೆ ತಂದೆಯು ಬಹಳಷ್ಟು ಪ್ರದರ್ಶನಿಗಳನ್ನು ಮಾಡಿಸುತ್ತಿರುತ್ತಾರೆ. ದೊಡ್ಡ-ದೊಡ್ಡವರಿಗೂ ನಿಮಂತ್ರಣವನ್ನು ಕಳುಹಿಸಿ, ಈಗಿಲ್ಲದಿದ್ದರೆ ಕೊನೆಯಲ್ಲಿ ಬಂದೇ ಬರುತ್ತಾರೆ. ಸಾಧು-ಸಂತ, ಮಹಾತ್ಮ ಯಾರಾದರೂ ಇರಲಿ ಎಲ್ಲರನ್ನೂ ಜಾಗೃತ ಮಾಡುತ್ತಾ ಇರಿ ಆದರೆ ಮಾತನಾಡುವವರು ಮಹಾರಥಿಯಾಗಿರಬೇಕು. ಯಾರಿಗೆ ತಂದೆಯೊಂದಿಗೆ ಯೋಗವಿಲ್ಲವೋ ಪ್ರೀತಿಯಿಲ್ಲವೋ ಅವರು ಖಾಲಿ ಮೋಡಗಳಿದ್ದಂತೆ, ಅವರೇನು ಮಾಡುವರು! ಇದನ್ನಂತೂ ತಿಳಿದುಕೊಂಡಿದ್ದೀರಿ, ವಿದ್ಯಾವಂತರ ಮುಂದೆ ಅವಿದ್ಯಾವಂತರು ತಲೆ ಬಾಗುತ್ತಾರೆ. ನಾನು ಎಲ್ಲಿಯವರೆಗೆ ಓದಿದ್ದೇನೆ, ಸರ್ವೀಸ್ ಮಾಡಿ ತೋರಿಸುತ್ತೇನೆಂದು ಪ್ರತಿಯೊಬ್ಬರೂ ತನ್ನನ್ನು ತಿಳಿದುಕೊಳ್ಳಬಹುದಾಗಿದೆ. ಒಂದುವೇಳೆ ಮೋಡಗಳು ತುಂಬಿದೆ, ಆದರೆ ಮಳೆ ಸುರಿಸದಿದ್ದರೆ ಅಂತಹ ಮೋಡಗಳಿಂದೇನು ಪ್ರಯೋಜನ? ಪ್ರತಿಯೊಬ್ಬರಿಗೆ ತಮ್ಮ ತಿಳುವಳಿಕೆ ಬೇಕು. ವ್ಯರ್ಥ ದೇಹಾಭಿಮಾನದ ನಶೆಯಲ್ಲಿದ್ದರೆ ಸದಾಕಾಲಕ್ಕಾಗಿ ಶ್ರೇಷ್ಠ ಪದವಿಯನ್ನು ಕಳೆದುಕೊಳ್ಳುತ್ತೀರಿ. ತಂದೆಗೆ ಸರ್ವೀಸಿನ ಎಷ್ಟೊಂದು ಉಮಂಗವಿದೆ! ಸರ್ಕಾರದವರಿಗೆ ತಿಳಿಸಬೇಕು - ನಮಗೆ ಒಂದು ದೊಡ್ಡ ಹಾಲ್ನ್ನು ಕೊಡಿ, ಅದರಲ್ಲಿ ನಾವು ಆತ್ಮಿಕ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತೇವೆ. ತಂದೆಯು ಬಂದಿರುವುದೇ ರಾಜಯೋಗವನ್ನು ಕಲಿಸಲು ಆದರೆ ಯುಕ್ತಿಯುಕ್ತವಾಗಿ ತಿಳಿಸಬೇಕಾಗಿದೆ. ಯಾರಿಗೆ ಭಾಷಣ ಮಾಡುವುದೇ ಗೊತ್ತಿಲ್ಲವೋ ಅವರೇನು ತಿಳಿಸುವರು! ಉನ್ನತ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ಸರ್ವೀಸ್ ಮಾಡುವರೋ ಅವರು ಪಡೆಯುವರು. ದೊಡ್ಡ-ದೊಡ್ಡವರಿಗೆ ಬರೆಯಿರಿ - ಈ ಜ್ಞಾನವಿಲ್ಲದೆ ಭಾರತದ ಹಾಗೂ ಪ್ರಪಂಚದ ಕಲ್ಯಾಣವಾಗಲು ಸಾಧ್ಯವಿಲ್ಲ. ವಿದ್ಯೆಯು ಮುಖ್ಯವಾಗಿದೆ, ಈ ಲಕ್ಷ್ಮೀ-ನಾರಾಯಣರೂ ಸಹ ವಿದ್ಯೆಯಿಂದಲೇ ಪದವಿಯನ್ನು ಪಡೆದರಲ್ಲವೆ. ಹಿಂದಿನ ಜನ್ಮದಲ್ಲಿ ರಾಜಯೋಗವನ್ನು ಕಲಿತಿದ್ದಾರೆ, ನಾವೂ ಸಹ ಈಗ ಇಲ್ಲಿ ಓದುತ್ತಿದ್ದೇವೆ. ಶಾಲೆಯಲ್ಲಿ ವಿದ್ಯಾರ್ಥಿಗಳು ನಾವು ಈ ಪರೀಕ್ಷೆಯನ್ನು ತೇರ್ಗಡೆ ಮಾಡಿ ಹೋಗಿ ಈ ಪದವಿಯನ್ನು ಪಡೆಯುತ್ತೇವೆಂದು ತಿಳಿದುಕೊಳ್ಳುತ್ತಾರೆ. ಈ ಜ್ಞಾನವು ನಿಮಗೆ ಸಿಗುತ್ತದೆ. ಅದು ಈ ಪ್ರಪಂಚಕ್ಕಾಗಿ ಅಲ್ಲ. ನೀವು ಭವಿಷ್ಯ 21 ಜನ್ಮಗಳಿಗಾಗಿ ಪ್ರಾಲಬ್ಧ ಮಾಡಿಕೊಳ್ಳುವುದಕ್ಕಾಗಿ ಓದುತ್ತೀರಿ, ಅವರು ಇದೊಂದು ಜನ್ಮದ ಸುಖಕ್ಕಾಗಿ ಓದುತ್ತಾರೆ ಅಂದಮೇಲೆ ಆ ವಿದ್ಯೆಯನ್ನೂ ಓದಬೇಕು, ಜೊತೆ ಜೊತೆಗೆ ಈ ಶಿಕ್ಷಣವನ್ನೂ ಕಲಿಯಬೇಕಾಗಿದೆ, ಇದರಲ್ಲಿ ಹೆದರುವ ಮಾತಿಲ್ಲ. ಆಧ್ಯಾತ್ಮಿಕ ಜ್ಞಾನವನ್ನು ಏಕೆ ತೆಗೆದುಕೊಳ್ಳಬಾರದು! ಚಿತ್ರಗಳನ್ನು ತೆಗೆದುಕೊಂಡು ಹೋಗಿ ತಿಳಿಸಬೇಕು - ಈ ಜ್ಞಾನವು ಎಲ್ಲರಿಗಾಗಿ ಬಹಳ ಅವಶ್ಯಕವಾಗಿದೆ ಆದರೆ ಮಕ್ಕಳು ಇನ್ನೂ ಅಷ್ಟು ತಯಾರಾಗುತ್ತಿಲ್ಲ. ನೌಕರಿಯ ಹೊರೆಯನ್ನು ಹೊತ್ತುಕೊಳ್ಳುವುದರಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಬಂಧನಮುಕ್ತರಾಗಿದ್ದರೆ ಸರ್ವೀಸಿನಲ್ಲಿ ತೊಡಗಬೇಕು. ಎಲ್ಲರೂ ಶ್ರೀಮತದಂತೆ ನಡೆಯುವುದಿಲ್ಲ, ಮಧ್ಯದಲ್ಲಿ ಮಾಯೆಯು ಸಿಕ್ಕಿ ಹಾಕಿಸುತ್ತದೆ. ಕೆಲಕೆಲವು ಮಕ್ಕಳಿಗೆ ಬಹಳ ಆಸಕ್ತಿಯಿದೆ ಆದರೆ ನಾವು ಹೋಗಿ ಅನೇಕರ ಕಲ್ಯಾಣ ಮಾಡಬೇಕೆಂಬ ನಶೆಯಿರುವುದಿಲ್ಲ. ಅಂದಾಗ ತಂದೆಯೂ ತಿಳಿದುಕೊಳ್ಳುವರು - ನೀವು ದೊಡ್ದವರಾಗಿದ್ದೀರಿ ಅಂದಮೇಲೆ ಏಕೆ ಗುಟುಕರಿಸಬೇಕು! ನೀವು ಇದನ್ನು ಹೇಳಬಹುದು - ನಾವು ಭಾರತದ ಉದ್ಧಾರ ಮಾಡಬೇಕಾಗಿದೆ, ಸತ್ಯ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕಾಗಿದೆ ಆದರೆ ತಂದೆಗೆ ಆಶ್ಚರ್ಯವೇನೆಂದರೆ ಮಕ್ಕಳಲ್ಲಿ ಇಷ್ಟು ನಶೆಯಿರುವುದಿಲ್ಲ. ಆದ್ದರಿಂದ ತಂದೆಯು ಹೇಳುತ್ತಾರೆ - ಇನ್ನೂ ರಜೋ ಬುದ್ಧಿಯಾಗಿದೆ, ಅವಕಾಶವು ಬಹಳ ಚೆನ್ನಾಗಿದೆ. ಇಂತಹವರೂ ಅನೇಕರಿದ್ದಾರೆ ಯಾರಿಗೆ ಜ್ಞಾನದ ಅಹಂಕಾರವು ಬಹಳ ಇದೆ. ಆದರೆ ಬಹಳ ಡಿಸ್ಸರ್ವೀಸ್ ಮಾಡುತ್ತಾರೆ, ಇದು ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು ಎನ್ನುವಂತೆ ತಂದೆಗೆ ಗೊತ್ತಿದೆ. ರಾಹುವಿನ ಗ್ರಹಣ ಕುಳಿತುಕೊಳ್ಳುತ್ತದೆ, ಬೃಹಸ್ಪತಿ ದೆಶೆಯು ಇಳಿದು ರಾವಣನ ದೆಶೆಯು ಕುಳಿತುಕೊಳ್ಳುತ್ತದೆ. ಈಗೀಗ ನೋಡಿದರೆ ಬಹಳ ಚೆನ್ನಾಗಿ ನಡೆಯುತ್ತಾ ಇರುತ್ತಾರೆ, ಮತ್ತೆ ಈಗೀಗ ಗ್ರಹಚಾರವು ಕುಳಿತುಕೊಳ್ಳುತ್ತದೆ, ಕೆಳಗೆ ಬೀಳುತ್ತಾರೆ. ಮಕ್ಕಳು ಬಹಳ ಬಹದ್ದೂರರಾಗಬೇಕಾಗಿದೆ. ಪ್ರತಿಜ್ಞೆ ಮಾಡಬೇಕಾಗಿದೆ - ನಾವು ಈ ಭಾರತವನ್ನು ಸ್ವರ್ಗವಾಸಿಯನ್ನಾಗಿ ಮಾಡಿಯೇ ತೀರುತ್ತೇವೆ. ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವುದು, ಶ್ರೇಷ್ಠಾಚಾರಿಗಳನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡುವುದು ನಿಮ್ಮ ಧರ್ಮವಾಗಿದೆ. ತಂದೆಯು ಬಹಳ ಚೆನ್ನಾಗಿ ನಶೆಯೇರಿಸುತ್ತಾರೆ ಆದರೆ ಮಕ್ಕಳಲ್ಲಿ ನಂಬರ್ವಾರ್ ನಶೆಯೇರುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಬಂಧನ ಮುಕ್ತರಾಗಿ ಭಾರತದ ಸತ್ಯ ಸೇವೆ ಮಾಡಬೇಕಾಗಿದೆ. ಆತ್ಮಿಕ ಸೇವೆ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕಾಗಿದೆ. ಜ್ಞಾನದ ಅಹಂಕಾರದಲ್ಲಿ ಬರಬಾರದು. ಆತ್ಮಿಕ ನಶೆಯಲ್ಲಿರಬೇಕಾಗಿದೆ. |
2. ನಿಶ್ಚಯ ಬುದ್ಧಿಯವರಾಗಿ ಮೊದಲು ತಮ್ಮ ಸ್ಥಿತಿಯನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. ದೇಹ ಸಹಿತವಾಗಿ ಏನೆಲ್ಲವೂ ಕಾಣುತ್ತದೆಯೋ ಅದೆಲ್ಲದರಿಂದ ಬುದ್ಧಿಯೋಗವನ್ನು ತೆಗೆಯಬೇಕು ಮತ್ತು ಒಬ್ಬ ತಂದೆಯ ಜೊತೆ ಜೋಡಿಸಬೇಕಾಗಿದೆ. |
ಓಂ ಶಾಂತಿ. ಸರ್ವ ಶ್ರೇಷ್ಠ ಬೇಹದ್ದಿನ ತಂದೆಯ ಸನ್ಮುಖದಲ್ಲಿ ನೀವೆಲ್ಲಾ ಮಕ್ಕಳು ಕುಳಿತುಕೊಂಡಿದ್ದೀರಿ. ನೀವೆಷ್ಟು ಭಾಗ್ಯಶಾಲಿ ಆಗಿರುವಿರಿ, ಯಾರಿಗೆ ಅಂತಹ ತಂದೆಯು ಸಿಕ್ಕಿದ್ದಾರೆ. ನೀವು ಜ್ಞಾನ ಸಾಗರ ತಂದೆಯ ಬಳಿ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಲು, ಸಂಪಾದನೆ ಮಾಡಿಕೊಳ್ಳುವುದಕ್ಕಾಗಿ ಬಂದಿದ್ದೀರಿ. ತಂದೆಯು ನೀವು ಮಧುರಾತಿ ಮಧುರ ಮಕ್ಕಳನ್ನು ಎಷ್ಟೊಂದು ಶ್ರೇಷ್ಠ ಮಟ್ಟಕ್ಕೆ ಕರೆದುಕೊಂಡು ಹೋಗುವರು. ತಂದೆಯಂತು ಕೇವಲ ನೀವು ಮಕ್ಕಳನ್ನಷ್ಟೇ ನೋಡುವರು, ಅವರಂತು ಯಾರನ್ನೂ ನೆನಪು ಮಾಡುವುದಿಲ್ಲ. ಇವರ ಆತ್ಮವಂತು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ಹೇಳುವರು - ನಾವಿಬ್ಬರೂ ನೀವು ಮಕ್ಕಳನ್ನೇ ನೋಡುವೆವು. ನಾನಾತ್ಮನನ್ನಂತು ಸಾಕ್ಷಿಯಾಗಿ ನೋಡಬಾರದು ಆದರೆ ತಂದೆಯ ಸಂಗದಲ್ಲಿ ನಾನೂ ಸಹ ಇದೇ ರೀತಿ ನೋಡುತ್ತೇನೆ. ತಂದೆಯ ಜೊತೆಯಲ್ಲಂತು ಇರುತ್ತೇನಲ್ಲವೆ. ಅವರ ಮಗುವಾಗಿದ್ದೇನೆ ಅಂದಾಗ ಜೊತೆಯಲ್ಲಿದ್ದು ನೋಡುತ್ತೇನೆ. ನಾನು ವಿಶ್ವದ ಮಾಲೀಕನಾಗಿ ಪರಿಕ್ರಮಿಸುತ್ತೇನೆ. ಹೇಗೆಂದರೆ ಇದನ್ನು ನಾನೇ ಮಾಡುತ್ತೇನೆ, ನಾನು ದೃಷ್ಟಿ ಕೊಡುತ್ತೇನೆ. ಇದರಲ್ಲಿ ದೇಹ ಸಹಿತ ಎಲ್ಲವನ್ನೂ ಮರೆಯಬೇಕಾಗುವುದು, ಉಳಿದಂತೆ ತಂದೆ ಮತ್ತು ಮಗುವು ಹೇಗೆ ಒಂದಾಗಿ ಬಿಡುತ್ತಾರೆ. ಅದಕ್ಕಾಗಿ ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಬಹಳ ಚೆನ್ನಾಗಿ ಪುರುಷಾರ್ಥ ಮಾಡಿರಿ. ಹೇಗೆ ತಂದೆಯು ಅಪಕಾರಿಗಳ ಮೇಲೂ ಉಪಕಾರ ಮಾಡುತ್ತಾರೆಯೋ ಹಾಗೆಯೇ ನೀವು ಫಾಲೋ ಫಾದರ್ (ತಂದೆಯನ್ನು ಅನುಕರಣೆ ಮಾಡುವುದು) ಮಾಡಿರಿ, ಸುಖದಾಯಿ ಆಗಿರಿ. ಪರಸ್ಪರದಲ್ಲಿ ಎಂದಿಗೂ ಸಹ ಜಗಳ-ಹೊಡೆದಾಟ ಮಾಡಬಾರದು. ತಮ್ಮನ್ನು ಆತ್ಮನೆಂದು ತಿಳಿದುಕೊಂಡು ಈ ದೇಹವನ್ನು ಮರೆಯುತ್ತಾ ಹೋಗಿ. ಒಬ್ಬ ತಂದೆಯ ಹೊರತು ಮತ್ತ್ಯಾರೂ ನೆನಪಿಗೇ ಬರಬಾರದು.ಇದೂ ಸಹ ಹೇಗೆಂದರೆ ಬದುಕಿದ್ದಂತೆಯೇ ಸಾಯುವ ಸ್ಥಿತಿಯಾಗಿದೆ. ಈ ಪ್ರಪಂಚದಿಂದ ಸತ್ತು ಹೋದಂತೆ, ಇದಕ್ಕಾಗಿ ಹೇಳುವರು - ತಾವು ಸತ್ತರೆ ಇಡೀ ಜಗತ್ತೇ ಸತ್ತಂತೆ.ಇಲ್ಲಿ ನೀವು ಬದುಕಿದ್ದಂತೆಯೇ ಸಾಯಬೇಕಾಗಿದೆ, ಶರೀರದ ಪರಿವೆಯಿಂದ ಹಾರುತ್ತಿರಿ. ಏಕಾಂತದಲ್ಲಿ ಕುಳಿತುಕೊಂಡು ಅಭ್ಯಾಸವನ್ನು ಮಾಡುತ್ತಿರಿ. ಬೆಳಗ್ಗೆ ಏಕಾಂತದಲ್ಲಿ ಕುಳಿತುಕೊಂಡು ತಮ್ಮೊಂದಿಗೆ ಮಾತನಾಡಿಕೊಳ್ಳಿರಿ. ಬಹಳ ಒಲವಿನಿಂದ ತಂದೆಯನ್ನು ನೆನಪು ಮಾಡಿರಿ. ಬಾಬಾ ಈಗೀಗ ನಾವು ತಮ್ಮ ಮಡಿಲಿಗೆ ಬಂದು ಬಿಟ್ಟೆವು ಅಷ್ಟೆ, ಒಬ್ಬರ ನೆನಪಿನಲ್ಲಿಯೇ ಶರೀರದ ಅಂತ್ಯವಾಗಲಿ ಅಷ್ಟೇ...... ಇದಕ್ಕೇ ಏಕಾಂತ ಎಂದು ಹೇಳಲಾಗುತ್ತದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ಶರೀರವೆಂಬ ಪೊರೆ(ಚರ್ಮ)ಯು ಬಿಟ್ಟು ಹೋಗುವುದು. |
ನೀವು ತಿಳಿದುಕೊಂಡಿದ್ದೀರಿ - ಇದು ಹಳೆಯ ಪ್ರಪಂಚ, ಹಳೆಯ ದೇಹವು ನಶಿಸಿ ಹೋಗುವುದು. ಬಾಕಿ ಪುರುಷಾರ್ಥಕ್ಕಾಗಿ ಸ್ವಲ್ಪವೇ ಸಂಗಮದ ಸಮಯವಿದೆ. ಮಕ್ಕಳು ಕೇಳುವರು - ಬಾಬಾ ಈ ವಿದ್ಯಾಭ್ಯಾಸವು ಎಲ್ಲಿಯವರೆಗೆ ನಡೆಯುವುದು? ಬಾಬಾರವರು ಹೇಳುವರು - ಎಲ್ಲಿಯವರೆಗೆ ದೈವೀ ರಾಜಧಾನಿ ಸ್ಥಾಪನೆಯಾಗುವುದು, ಅಲ್ಲಿಯವರೆಗೆ ತಿಳಿಸುತ್ತಾ ಇರುತೇವೆ ನಂತರ ಹೊಸ ಪ್ರಪಂಚದಲ್ಲಿ ವರ್ಗಾವಣೆ ಆಗುವಿರಿ. ಇದು ಹಳೆಯ ಶರೀರವಾಗಿದೆ, ಅಲ್ಪಸ್ವಲ್ಪ ಕರ್ಮಭೋಗವೂ ನಡೆಯುತ್ತಿರುತ್ತದೆ, ಇದರಲ್ಲಿ ಬಾಬಾರವರು ಸಹಯೋಗ ಕೊಡಲಿ ಎಂಬ ಭರವಸೆಯನ್ನು ಇಟ್ಟುಕೊಳ್ಳಬಾರದು. ದಿವಾಳಿಯಾದರು, ರೋಗಿಯಾದರು ಎಂದರೆ ತಂದೆಯು ಹೇಳುವರು - ಇದು ನಿಮ್ಮ ಲೆಕ್ಕಾಚಾರವಾಗಿದೆ. ಇದಿದ್ದರೂ ಸಹ ಯೋಗದಿಂದ ಆಯಸ್ಸು ಹೆಚ್ಚಾಗುವುದು. ತಮಗಾಗಿ ಪರಿಶ್ರಮ ಪಡಬೇಕು, ಕೃಪೆಯನ್ನು ಬೇಡಬಾರದು. ತಂದೆಯನ್ನು ಎಷ್ಟು ನೆನಪು ಮಾಡುವಿರಿ, ಇದರಲ್ಲಿಯೇ ಕಲ್ಯಾಣವಿದೆ. ಎಷ್ಟು ಸಾಧ್ಯವೋ ಯೋಗಬಲದಿಂದ ಕೆಲಸ ತೆಗೆದುಕೊಳ್ಳಿರಿ. ಭಕ್ತಿಮಾರ್ಗದಲ್ಲಿ ಮಹಿಮೆ ಮಾಡುವರು - ನನ್ನನ್ನು ರೆಪ್ಪೆಗಳಲ್ಲಿ ಗುಪ್ತವಾಗಿಡಿ..... ಪ್ರಿಯವಾದ ವಸ್ತುವನ್ನು ಕಣ್ಮಣಿ, ಪ್ರಾಣ ಪ್ರಿಯ ಎಂದು ಹೇಳುವರು. ಈ ತಂದೆಯಂತು ಬಹಳ ಪ್ರಿಯವಾಗಿದ್ದಾರೆ ಆದರೆ ಗುಪ್ತವಾಗಿದ್ದಾರೆ. ಅವರಿಗಾಗಿ ಇಂತಹ ಪ್ರೀತಿಯಿರಬೇಕು, ಅದನ್ನು ಕೇಳಲೇಬೇಡಿ. ಮಕ್ಕಳಿಗಂತು ತಂದೆಯು ತನ್ನ ರೆಪ್ಪೆಗಳಲ್ಲಿ ಗುಪ್ತವಾಗಿಯೇ ಇಡುತ್ತಾರೆ. ರೆಪ್ಪೆಗಳೆಂದರೆ ಈ ಕಣ್ಣುಗಳದಲ್ಲ, ಇದಂತು ಬುದ್ಧಿಯ ಮಾತಾಗಿದೆ. ಅತಿ ಪ್ರಿಯವಾದ ನಿರಾಕಾರ ತಂದೆಯು ನಮಗೆ ಓದಿಸುತ್ತಿದ್ದಾರೆ. ಅವರು ಜ್ಞಾನದ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ. ಅಂತಹ ಅತಿ ಪ್ರಿಯ ತಂದೆಯ ಜೊತೆಗೆ ಎಷ್ಟೊಂದು ಪ್ರೀತಿಯಿರಬೇಕು!! ಅವರು ಮಕ್ಕಳಿಗಾಗಿ ಎಷ್ಟೊಂದು ನಿಷ್ಕಾಮ ಸೇವೆಯನ್ನು ಮಾಡುತ್ತಾರೆ.ನೀವು ಮಕ್ಕಳನ್ನು ವಜ್ರ ಸಮಾನ ಮಾಡುತ್ತಾರೆ. ಎಷ್ಟೊಂದು ಮಧುರ ತಂದೆಯಾಗಿದ್ದಾರೆ, ಎಷ್ಟೊಂದು ನಿರಹಂಕಾರಿಯಾಗಿ ನೀವು ಮಕ್ಕಳ ಸೇವೆಯನ್ನು ಮಾಡುತ್ತಾರೆ! ಅಂದಮೇಲೆ ನೀವು ಮಕ್ಕಳೂ ಸಹ ಅಷ್ಟೇ ಪ್ರೀತಿಯಿಂದ ಸೇವೆಯನ್ನು ಮಾಡಬೇಕಾಗಿದೆ, ಶ್ರೀಮತದಂತೆ ನಡೆಯಬೇಕಾಗಿದೆ. ಎಲ್ಲಿಯಾದರೂ ತಮ್ಮ ಮತವು (ಮನಮತ) ಕಾಣಿಸಿತೆಂದರೆ ಅದೃಷ್ಟಕ್ಕೆ ಗೆರೆಯುಂಟಾಗುವುದು (ಅದೃಷ್ಟವು ಕ್ಯಾನ್ಸಲ್ ಆಗುವುದು). |
ಪರಸ್ಪರದಲ್ಲಿ ನೀವು ಮಕ್ಕಳು ಬಹಳ-ಬಹಳ ಆತ್ಮಿಕ ಪ್ರೀತಿಯಿಂದ ಇರಬೇಕು ಆದರೆ ದೇಹ ಅಭಿಮಾನದಲ್ಲಿ ಬರುವ ಕಾರಣದಿಂದ ಒಬ್ಬರಿನ್ನೊಬ್ಬರಲ್ಲಿ ಆ ಪ್ರೀತಿಯಿರುವುದಿಲ್ಲ. ಒಬ್ಬರಿನ್ನೊಬ್ಬರ ಕೊರತೆಗಳನ್ನೇ ತೆಗೆಯುತ್ತಾ ಇರುತ್ತಾರೆ, ಇಂತಹವರು ಹೀಗಿ, ಅವರು ಹೀಗೆ ಮಾಡುವರು.... ಯಾವಾಗ ನೀವು ದೇಹೀ-ಅಭಿಮಾನಿ ಆಗಿದ್ದಿರಿ, ಆಗ ಯಾರಲ್ಲಿಯೂ ಕೊರತೆಗಳನ್ನೇ ತೆಗೆಯುತ್ತಿರಲಿಲ್ಲ. ಪರಸ್ಪರದಲ್ಲಿ ಬಹಳ ಪ್ರೀತಿಯಿತ್ತು, ಈಗ ಪುನಃ ಅದೇ ಸ್ಥಿತಿಯನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಮುಂಚೆ ನೀವು ಎಷ್ಟೊಂದು ಮಧುರರಾಗಿ ಇದ್ದಿರಿ, ಮತ್ತೆ ಇದೇ ರೀತಿ ಮಧುರ ಸದಾ ಸುಖ ಕೊಡುವವರಾಗಿರಿ. ದೇಹ ಅಭಿಮಾನದಲ್ಲಿ ಬರುವುದರಿಂದ ದುಃಖ ಕೊಡುವವರಾದಿರಿ ಆದ್ದರಿಂದ ನಿಮ್ಮಲ್ಲಿ ಆತ್ಮಿಕ ಖುಷಿಯು ಮಾಯವಾಗಿ ಬಿಟ್ಟಿತು. ಜೀವನವೂ ಸಹ ಚಿಕ್ಕದಾಗಿ ಹೋಯಿತು. ಈಗ ಮತ್ತೆ ತಂದೆಯು ಬಂದಿದ್ದಾರೆ - ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡಿ ಸದಾ ಸುಖದಾಯಿ ಮಾಡುವುದಕ್ಕಾಗಿ. ನೀವೆಷ್ಟು ತಂದೆಯನ್ನು ನೆನಪು ಮಾಡುತ್ತಾ ಇರುವಿರಿ, ಅಷ್ಟು ಕೊರತೆಗಳೆಲ್ಲವೂ ಹೊರಟು ಹೋಗುವುದು. ಮತಭೇದವು ಬಿಟ್ಟು ಹೋಗುವುದು. ನಾವು ಆತ್ಮ ಸಹೋದರ-ಸಹೋದರ ಆಗಿದ್ದೇವೆ ಎಂಬುದು ಪರಿಪಕ್ವವಾಗಿ ನೆನಪಿರಲಿ. ಆತ್ಮ ಸಹೋದರ-ಸಹೋದರನನ್ನು ನೋಡುವುದರಿಂದ ಸದಾ ಗುಣಗಳೇ ಕಾಣಿಸುತ್ತದೆ. ಎಲ್ಲರನ್ನು ಗುಣವಂತರನ್ನಾಗಿ ಮಾಡುವ ಪ್ರಯತ್ನ ಮಾಡುತ್ತಿರಿ. ಅವಗುಣಗಳನ್ನು ಬಿಟ್ಟು ಗುಣಗಳನ್ನೇ ಧಾರಣೆ ಮಾಡಿಕೊಳ್ಳಿರಿ. ಎಂದಿಗೂ ಯಾರದೇ ಗ್ಲಾನಿಯನ್ನು ಮಆಡಬಾರದು. ಕೆಲಕೆಲವರಲಿ ಇಂತಹ ಕೊರತೆಗಳಿವೆ, ಅದನ್ನು ಅವರನ್ನವರೂ ಸಹ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರು ಸ್ವಯಂನ್ನು ಬಹಳ ಒಳ್ಳೆಯವರೆಂದು ತಿಳಿಯುವರು ಆದರೆ ಕೊರತೆಗಳಿರುವ ಕಾರಣದಿಂದ ಕೆಲವೊಂದು ಕಡೆ ಉಲ್ಟಾ ಮಾತುಗಳು ಹೊರ ಬರುತ್ತವೆ. ಸತೋಪ್ರಧಾನ ಸ್ಥಿತಿಯಲ್ಲಿ ಇಂತಹ ಮಾತುಗಳಾಗುವುದಿಲ್ಲ. ತಮ್ಮನ್ನು ತಾವು ನೋಡಿಕೊಳ್ಳಿರಿ - ನಾನೆಷ್ಟು ಮಧುರನಾಗಿರುವೆನು? ನಮ್ಮ ತಂದೆಯ ಜೊತೆ ಎಷ್ಟು ಪ್ರೀತಿಯಿದೆ? ತಂದೆಯೊಂದಿಗೆ ಈ ರೀತಿ ಪ್ರೀತಿಯಿರಲಿ, ಒಂದೇ ಸಾರಿ ಬುದ್ಧಿಯ ಜೋಡಣೆಯಾಗಲಿ. ಬಾಬಾ, ತಾವು ನಮ್ಮನ್ನೆಷ್ಟು ಶ್ರೇಷ್ಠ ಬುದ್ಧಿವಂತರನ್ನಾಗಿ ಮಾಡುವಿರಿ, ಸ್ವರ್ಗದ ಮಾಲೀಕರನ್ನಾಗಿ ಮಾಡುವಿರಿ. ಈ ರೀತಿ ಒಳಗಿಂದೊಳಗೆ ತಂದೆಯ ಮಹಿಮೆಯನ್ನು ಮಾಡುತ್ತಾ ರೋಮಾಂಚನವಾಗಬೇಕು.ಆತ್ಮಿಕ ಖುಷಿಯಲ್ಲಿ ಇರಬೇಕಾಗಿದೆ. ಮಹಿಮೆಯನ್ನೂ ಮಾಡುತ್ತಾರೆ - ಖುಷಿಯಂತಹ ಔಷಧಿಯಿಲ್ಲ ಎಂದು. ತಂದೆಯು ಸಿಕ್ಕಿರುವ ಖುಷಿಯೆಷ್ಟಿರಬೇಕು! ಸಂಗಮದಲ್ಲಿಯೇ ನೀವು ಮಕ್ಕಳಿಗೆ 21 ಜನ್ಮಗಳಿಗಾಗಿಸ್ ಅದಾ ಖುಷಿಯಲ್ಲಿರುವ ಔಷಧಿಯು ಸಿಕ್ಕಿ ಬಿಡುವುದು. ನಂತರ ಯಾರಿಗೂ ಯಾವುದೇ ಚಿಂತೆಯೇ ಇರುವುದಿಲ್ಲ. ಈಗಂತು ಎಷ್ಟೊಂದು ಚಿಂತೆಗಳಿವೆ ಆದ್ದರಿಂದ ಅದರ ಪ್ರಭಾವವು ಶರೀರದ ಮೇಲೆ ಬರುವುದು. ನಿಮಗಂತು ಯಾವುದೇ ಮಾತಿನ ಚಿಂತೆಯಿಲ್ಲ, ಈ ಖುಷಿಯ ಔಷಧಿಯನ್ನು ನೀವು ಒಬ್ಬರಿನ್ನೊಬ್ಬರಿಗೆ ತಿನ್ನಿಸುತ್ತಾ ಇರಬೇಕು. ಒಬ್ಬರಿನ್ನೊಬ್ಬರಿಗೆ ಈ ಶ್ರೇಷ್ಠವಾದ ಸತ್ಕಾರ ಮಾಡಬೇಕಾಗಿದೆ. ಇಂತಹ ಸತ್ಕಾರ ಮನುಷ್ಯರು ಮನುಷ್ಯರಿಗೆ ಮಾಡಲು ಸಾಧ್ಯವಿಲ್ಲ. ನೀವು ತಂದೆಯ ಶ್ರೀಮತದಂತೆ ಈ ಸತ್ಕಾರವನ್ನು ಮಾಡುತ್ತೀರಿ. ಯಾರಿಗೇ ಆಗಲಿ ತಂದೆಯ ಪರಿಚಯವನ್ನು ಕೊಡುವುದೇ ಖುಷಿಯ ಸಮಾಚಾರವೂ ಸಹ ಆಗಿದೆ. ಇದು ಜ್ಞಾನ ಮತ್ತು ಯೋಗದ ಅತ್ಯುತ್ತಮ ಅದ್ಭುತವಾದ ಔಷಧಿಯಾಗಿದೆ. ಈ ಔಷಧಿಯನ್ನು ಒಬ್ಬರೇ ಆತ್ಮಿಕ ಸರ್ಜನ್ನ ಮೂಲಕ ಸಿಗುವುದು. ಮನ್ಮನಾಭವ-ಮಧ್ಯಾಜೀಭವ - ಕೇವಲ ಇವೆರಡು ವರ್ಶನ್ಸ್ ಔಷಧಿಯಾಗಿದೆ. ಅತಿ ಪ್ರಿಯವಾದ ತಂದೆಯಿಂದ ನೀವು ಸದಾ ನಿರೋಗಿ, ಸದಾ ಸಂಪತ್ತಿವಂತರು ಆಗಿ ಬಿಡುತ್ತೀರಿ. ಹಾಗಾದರೆ ನೀವು ಮಕ್ಕಳು ಈ ಮಾತುಗಳನ್ನು ಸ್ಮರಣೆ ಮಾಡುತ್ತಾ ಹರ್ಷಿತವಾಗಿರಬೇಕು. ಈಶ್ವರೀಯ ವಿದ್ಯಾರ್ಥಿ ಜೀವನವು ಅತ್ಯುತ್ತಮ ಜೀವನವಾಗಿದೆ - ಈ ಮಹಿಮೆಯೂ ಸಹ ಈ ಸಮಯದ್ದಾಗಿದೆ.ಎಷ್ಟು ಸಾಧ್ಯವೋ ಒಬ್ಬರಿನ್ನೊಬ್ಬರಿಗೆ ಈ ಆತ್ಮಿಕ ಔಷಧಿಯನ್ನು ತಲುಪಿಸಿರಿ, ಒಬ್ಬರಿನ್ನೊಬ್ಬರ ಉನ್ನತಿ ಮಾಡಿರಿ, ಸಮಯವನ್ನು ವ್ಯರ್ಥವಾಗಿ ಕಳೆಯಬೇಡಿ. ಬಹಳ ತಾಳ್ಮೆಯಿಂದ, ಗಂಭೀರತೆಯಿಂದ, ಬುದ್ಧಿವಂತಿಕೆಯಿಂದ ತಂದೆಯನ್ನು ನೆನಪು ಮಾಡಿರಿ, ತಮ್ಮ ಜೀವನವನ್ನು ವಜ್ರಸಮಾನ ಮಾಡಿಕೊಳ್ಳಿರಿ. |
ಮಧುರ ಮಕ್ಕಳೇ, ತಂದೆಯವರಿಂದ ಯಾವ ಶ್ರೀಮತವು ಸಿಗುವುದೋ ಅದರಲ್ಲಿ ತಪ್ಪು ಮಾಡಬಾರದು. ಎಲ್ಲರಿಗೂ ತಂದೆಯ ಸಂದೇಶವನ್ನು ತಲುಪಿಸಬೇಕಾಗಿದೆ. ತಂದೆಯ ಸಂದೇಶವಂತು ಎಲ್ಲರಿಗೂ ಸಿಗಲೇಬೇಕಲ್ಲವೆ. ಬಹಳ ಸಹಜವಾದ ಸಂದೇಶವಾಗಿದೆ - ಕೇವಲ ಇಷ್ಟು ಹೇಳಿರಿ, ತಮ್ಮನ್ನು ಆತ್ಮನೆಂದು ತಿಳಿದುಕೊಂಡು ತಂದೆಯನ್ನು ನೆನಪು ಮಾಡಿರಿ ಹಾಗೂ ಕರ್ಮೇಂದ್ರಿಯಗಳಿಂದ ಮನಸಾ-ವಾಚಾ-ಕರ್ಮದಿಂದ ಯಾವುದೇ ಕೆಟ್ಟ ಕರ್ಮವನ್ನು ಮಾಡಬೇಡಿ. ಒಂದು ದಿನ ನಿಮ್ಮ ಈ ಶಾಂತಿಯ ಬಲದ ಧ್ವನಿ ಮೊಳಗುವುದು. ದಿನ ಕಳೆದಂತೆ ನಿಮ್ಮ ಉನ್ನತಿಯಾಗುತ್ತಾ ಹೋಗುವುದು. ನಿಮ್ಮ ಹೆಸರು ಪ್ರಸಿದ್ಧವಾಗುವುದು. ಎಲ್ಲರೂ ತಿಳಿಯುವರು - ಇದು ಒಳ್ಳೆಯ ಸಂಸ್ಥೆಯಾಗಿದೆ, ಒಳ್ಳೆಯ ಕಾರ್ಯವನ್ನು ಮಾಡುತ್ತಿದ್ದಾರೆ, ಬಹಳ ಸಹಜ ರೀತಿಯಾಗಿ ಮಾರ್ಗವನ್ನು ತಿಳಿಸುತ್ತಾರೆ. ಬ್ರಾಹ್ಮಣರ ಈ ವೃಕ್ಷವು ಬಹಳ ವೃದ್ಧಿಯಾಗುತ್ತಾ ಹೋಗುವುದು, ಪ್ರಜೆಗಳಾಗುತ್ತಾ ಇರುವರು. ಸೇವಾಕೇಂದ್ರವು ಬಹಳ ವೃದ್ಧಿಯನ್ನು ಹೊಂದುವುದು. ನಿಮ್ಮ ಪ್ರದರ್ಶನಿಯೂ ಸಹ ಹಳ್ಳಿ-ಹಳ್ಳಿಯಲ್ಲಿರುತ್ತದೆ. ನೀವು ಮಕ್ಕಳು ಬಹಳ ಶ್ರೇಷ್ಠವಾದ ಸೇವೆಯನ್ನು ಮಾಡಬೇಕಾಗಿದೆ. ನಿಮ್ಮ ಹೊಸ-ಹೊಸ ಸೇವಾಕೇಂದ್ರಗಳು ತೆರೆಯುತ್ತಾ ಹೋಗುವುದು, ಅದರಲ್ಲಿ ಅನೇಕ ಮನುಷ್ಯರು ಬಂದು ತನ್ನ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳುತ್ತಾ ಇರುತ್ತಾರೆ.ನೀವು ಬಹಳ ಪ್ರೀತಿಯಿಂದ ಒಬ್ಬೊಬ್ಬರ ಸಂಭಾಲ್ನೆ ಮಾಡಬೇಕಾಗುವುದು. ಪಾಪ! ಎಲ್ಲಿ ಯಾರೂ ಸಹ ಜಾರಿ ಹೋಗಬಾರದು. ಎಷ್ಟು ಹೆಚ್ಚು ಸೇವಾಕೇಂದ್ರಗಳು ಆಗುತ್ತಿರುತ್ತವೆಯೋ ಅಷ್ಟು ಹೆಚ್ಚು ಮಂದಿ ಬಂದು ಜೀವದಾನವನ್ನು ಪಡೆಯುವರು. ಯಾವಾಗ ತಾವು ಮಕ್ಕಳ ಪ್ರಭಾವ ಬೀರುವುದೋ ಆಗ ಅನೇಕರು ಕರೆಯುವರು - ಇಲ್ಲಿಗೆ ಬಂದು ನಮಗೆ ಮನುಷ್ಯನಿಂದ ದೇವತೆಯನ್ನಾಗಿ ಮಾಡುವ ರಾಜಯೋಗವನ್ನು ಕಲಿಸಿರಿ ಎಂದು. ಅದೇ ಭಗವಂತನು ಬಂದು ಅಬುವಿನಲ್ಲಿ ಆಗಮಿಸಿದ್ದಾರೆ ಎನ್ನುವುದು ಮುಂದೆ ನಡೆದಂತೆ ಬಹಳಷ್ಟು ಹರಡುವುದು. |
ನೀವು ಮಕ್ಕಳು ನೋಡುತ್ತಿದ್ದೀರಿ - ಈ ಸಮಯ ಹಳೆಯ ಪ್ರಪಂಚದಲ್ಲಿ ಅನೇಕ ಕೋಲಾಹಲಗಳಿವೆ. ಈಗ ಇವೆಲ್ಲಾ ಕೋಲಾಹಲಗಳು ಸಮಾಪ್ತಿಯಾಗುವುದು, ಇದಕ್ಕಾಗಿ ನೀವು ಯಾವುದೇ ಚಿಂತೆಯನ್ನು ಮಾಡಬಾರದು. ನೀವು ಎಲ್ಲರಿಗೂ ತಿಳಿಸಿ - ಇದರ ಚಿಂತೆ ಮಾಡಬೇಡಿ, ಈಗ ಈ ಹಳೆಯ ಪ್ರಪಂಚವು ಹೋಯಿತೆಂದರೆ ಹೋಯಿತು, ಇದರಲ್ಲಿ ಮೋಹವನ್ನಿಡಬೇಡಿ, ಒಂದುವೇಳೆ ಮೋಹವಿದ್ದರೆ ಹೃದಯವು ಶುದ್ಧವಾಗುವುದಿಲ್ಲ. ಮತ್ತೆ ಅಪಾರ ಖುಷಿಯೂ ಇರುವುದಿಲ್ಲ. ಮಕ್ಕಳಿಗೆ ಅಪಾರ ಜ್ಞಾನ ಧನದ ಖಜಾನೆಯು ಸಿಗುತ್ತಿರುತ್ತದೆ ಅಂದಮೇಲೆ ಅಪಾರ ಖುಷಿಯೂ ಇರಬೇಕು. ಹೃದಯವು ಎಷ್ಟು ಶುದ್ಧವಾಗುವುದೋ ಅಷ್ಟು ಅನ್ಯರನ್ನೂ ಶುದ್ಧಗೊಳಿಸುವರು. ಯೋಗದ ಸ್ಥಿತಿಯಿಂದಲೇ ಹೃದಯವು ಶುದ್ಧವಾಗುತ್ತದೆ. ನೀವು ಮಕ್ಕಳಲ್ಲಿ ಯೋಗಿಯಾಗುವ, ಅನ್ಯರನ್ನೂ ಯೋಗಿ ಮಾಡುವ ಆಸಕ್ತಿಯಿರಬೇಕು. ದೇಹದಲ್ಲೇನಾದರೂ ಮೋಹವಿದೆ, ದೇಹಾಭಿಮಾನವು ಇರುತ್ತದೆಯೆಂದರೆ ತಿಳಿದುಕೊಳ್ಳಿರಿ - ನಮ್ಮ ಸ್ಥಿತಿಯು ಬಹಳ ಕಚ್ಚಾ (ಅಪೂರ್ಣ) ಇದೆ. ದೇಹಿ ಅಭಿಮಾನಿ ಮಕ್ಕಳೇ ಸತ್ಯ ವಜ್ರವಾಗುವರು ಆದ್ದರಿಂದ ಎಷ್ಟು ಸಾಧ್ಯವೋ ದೇಹಿ ಅಭಿಮಾನಿಯಾಗುವ ಅಭ್ಯಾಸ ಮಾಡಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಸಮಾನ ನಿರಹಂಕಾರಿ ಆಗಿದ್ದು ಬಹಳ ಪ್ರೀತಿಯಿಂದ ಸರ್ವರ ಸೇವೆಯನ್ನು ಮಾಡಬೇಕಾಗಿದೆ. ಶ್ರೀಮತದನುಸಾರ ನಡೆಯಬೇಕಾಗಿದೆ. ತಮ್ಮ ಮತದಂತೆ ನಡೆದು ಅದೃಷ್ಠಕ್ಕೆ ಗೆರೆಯನ್ನುಂಟು ಮಾಡಿಕೊಳ್ಳಬಾರದು. |
2. ಸಂಗಮದಲ್ಲಿ ತಂದೆಯ ಮೂಲಕ ಏನೆಲ್ಲಾ ಖುಷಿಯ ಔಷಧಿಯು ಸಿಕ್ಕಿದೆಯೋ, ಆ ಔಷಧಿಯನ್ನೇ ಸೇವಿಸುತ್ತಾ ಹಾಗೂ ಅನ್ಯರಿಗೂ ಸೇವನೆ ಮಾಡಿಸುತ್ತಾ ಇರಬೇಕು. ತಮ್ಮ ಸಮಯವನ್ನು ವ್ಯರ್ಥಗೊಳಿಸಬಾರದು. ಬಹಳ ತಾಳ್ಮೆ, ಗಂಭೀರತೆಯಿಂದ, ಬುದ್ಧಿವಂತಿಕೆಯಿಂದ ತಂದೆಯನ್ನು ನೆನಪು ಮಾಡುತ್ತಾ, ತಮ್ಮ ಜೀವನವನ್ನು ವಜ್ರ ಸಮಾನ ಮಾಡಿಕೊಳ್ಳಬೇಕಾಗಿದೆ. |
ವರದಾತನಿಂದ ಪ್ರಾಪ್ತಿಯಾಗಿರುವ ವರದಾನಗಳನ್ನು ವೃದ್ಧಿಯಲ್ಲಿ ತರುವ ವಿಧಿ |
ಇಂದು ಬಾಪ್ದಾದಾ ತನ್ನ ಆತ್ಮೀಯ ಚಾತ್ರಕ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗು ತಂದೆಯೊಂದಿಗೆ ಕೇಳುವ, ಮಿಲನ ಮಾಡುವ ಮತ್ತು ಜೊತೆ ಜೊತೆಗೆ ತಂದೆಯ ಸಮಾನರಾಗಲು ಚಾತ್ರಕರಾಗಿದ್ದಾರೆ. ಕೇಳುವುದರಿಂದ ಜನ್ಮ-ಜನ್ಮಾಂತರದ ಬಾಯಾರಿಕೆಯು ನೀಗುತ್ತದೆ. ಜ್ಞಾನಾಮೃತವು ಬಾಯಾರಿದ ಆತ್ಮಗಳನ್ನು ತೃಪ್ತ ಆತ್ಮನನ್ನಾಗಿ ಮಾಡಿ ಬಿಡುತ್ತದೆ. ಕೇಳುತ್ತಾ-ಕೇಳುತ್ತಾ ಆತ್ಮಗಳೂ ಸಹ ತಂದೆಯ ಸಮಾನ ಜ್ಞಾನ ಸ್ವರೂಪರಾಗಿ ಬಿಡುತ್ತೀರಿ ಅಥವಾ ಈ ರೀತಿಯೂ ಹೇಳಬಹುದು - ಜ್ಞಾನ ಮುರುಳಿಯನ್ನು ಕೇಳುತ್ತಾ-ಕೇಳುತ್ತಾ ಸ್ವಯಂ ‘ಮುರುಳೀಧರ ಮಕ್ಕಳು’ ಆಗಿ ಬಿಡುತ್ತೀರಿ. ಆತ್ಮಿಕ ಮಿಲನವನ್ನು ಆಚರಿಸುತ್ತಾ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿ ಬಿಡುತ್ತೀರಿ. ಮಿಲನ ಮಾಡುತ್ತಾ ಲವಲೀನ, ಮಗ್ನ ಸ್ಥಿತಿಯವರಾಗಿ ಬಿಡುತ್ತೀರಿ. ಮಿಲನ ಮಾಡುತ್ತಾ ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ - ಈ ಅನುಭೂತಿಯಲ್ಲಿ ಸಮಾವೇಶವಾಗಿರುತ್ತೀರಿ. ಮಿಲನವನ್ನು ಆಚರಿಸುತ್ತಾ ನಿರ್ವಿಘ್ನ, ಸದಾ ತಂದೆಯ ಸಂಗದ ರಂಗಿನಲ್ಲಿ ಕೆಂಪಗಾಗಿ ಬಿಡುತ್ತೀರಿ. ಯಾವಾಗ ಈ ರೀತಿ ಸಮಾವೇಶ ಆಗಿರುತ್ತೀರಿ ಅಥವಾ ಸ್ನೇಹದಲ್ಲಿ ಲವಲೀನ ಆಗಿಬಿಡುತ್ತೀರೆಂದರೆ ಯಾವ ಆಸೆಯಿರುತ್ತದೆ? ‘ತಂದೆಯ ಸಮಾನ’ರಾಗುವ ಆಸೆ. ತಂದೆಯ ಪ್ರತೀ ಹೆಜ್ಜೆಯ ಮೇಲೆ ಹೆಜ್ಜೆಯನ್ನು ಇಡುವವರು ಅರ್ಥಾತ್ ತಂದೆಯ ಸಮಾನರಾಗುವವರು. ಹೇಗೆ ತಂದೆಯದು ಸದಾ ಸರ್ವಶಕ್ತಿವಂತ ಸ್ವರೂಪವಾಗಿದೆ ಹಾಗೆಯೇ ಮಕ್ಕಳೂ ಸಹ ಸದಾ ಮಾ|| ಸರ್ವಶಕ್ತಿವಂತ ಸ್ವರೂಪ ಆಗಿ ಬಿಡುತ್ತೀರಿ. ತಂದೆಯದು ಯಾವ ಸದಾ ಶಕ್ತಿಶಾಲಿ, ಸದಾ ಲೈಟ್ನ ಸ್ವರೂಪವಿದೆಯೋ ಅದೇ ರೀತಿ ಸಮಾನರಾಗಿ ಬಿಡುತ್ತೀರಿ. |
ಸಮಾನರಾಗುವ ವಿಶೇಷ ಮಾತುಗಳನ್ನು ತಿಳಿದುಕೊಂಡಿದ್ದೀರಲ್ಲವೆ. ಯಾವ-ಯಾವ ಮಾತುಗಳಲ್ಲಿ ತಂದೆಯ ಸಮಾನರಾಗಬೇಕು? ಆಗಿಯೂ ಇದ್ದೀರಿ ಮತ್ತು ಆಗುತ್ತಲೂ ಇದ್ದೀರಿ. ಹೇಗೆ ತಂದೆಯ ಹೆಸರೋ ಮಕ್ಕಳಿಗೂ ಅದೇ ಹೆಸರಿದೆ. ವಿಶ್ವ ಕಲ್ಯಾಣಕಾರಿಗಳು - ಇದೇ ತಮ್ಮೆಲ್ಲರ ಹೆಸರಾಗಿದೆಯಲ್ಲವೆ. ಯಾವುದು ತಂದೆಯ ರೂಪವೋ ಅದೇ ಮಕ್ಕಳ ರೂಪ, ತಂದೆಯ ಗುಣವೇ ಮಕ್ಕಳ ಗುಣ. ತಂದೆಯ ಪ್ರತಿ ಗುಣವನ್ನು ಧಾರಣೆ ಮಾಡುವವರೇ ತಂದೆಯ ಸಮಾನರಾಗುತ್ತಾರೆ. ಯಾವುದು ತಂದೆಯ ಕಾರ್ಯವೋ ಅದು ಮಕ್ಕಳ ಕಾರ್ಯ. ಎಲ್ಲಾ ಮಾತುಗಳಲ್ಲಿ ತಂದೆಯ ಸಮಾನರಾಗಬೇಕು. ಲಕ್ಷ್ಯವಂತೂ ಎಲ್ಲರದೂ ಇದೇ ಆಗಿದೆಯಲ್ಲವೆ. ಸನ್ಮುಖದಲ್ಲಿ ಇರುವವರಲ್ಲ ಆದರೆ ಸಮಾನರಾಗುವವರಿದ್ದೀರಿ. ಅಂತಹವರಿಗೆ ಫಾಲೋ ಫಾದರ್ ಮಾಡುವವರೆಂದು ಹೇಳಲಾಗುತ್ತದೆ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ - ಎಲ್ಲಾ ಮಾತುಗಳಲ್ಲಿ ಎಲ್ಲಿಯವರೆಗೆ ತಂದೆಯ ಸಮಾನರಾಗಿದ್ದೀರಿ? ತಂದೆಯ ಸಮಾನರಾಗುವ ವರದಾನವನ್ನು ಆದಿಯಿಂದಲೂ ಮಕ್ಕಳಿಗೆ ಕೊಟ್ಟಿದ್ದಾರೆ. ಆದಿಯ ವರದಾನವಾಗಿದೆ - "ಸರ್ವ ಶಕ್ತಿಗಳಿಂದ ಸಂಪನ್ನ ಭವ". ಲೌಕಿಕ ಜೀವನದಲ್ಲಿ ತಂದೆ ಅಥವಾ ಗುರುಗಳು ವರದಾನ ಕೊಡುತ್ತಾರೆ. ‘ಧನವಾನ್ ಭವ’, ‘ಪುತ್ರವಾನ್ ಭವ’, ‘ಧೀರ್ಘಾಯಷ್ಯವಾನ್ಭವ’ ಅಥವಾ ‘ಸುಖೀ ಭವ’ದ ವರದಾನವನ್ನು ಕೊಡುತ್ತಾರೆ. ಅಂದಾಗ ಬಾಪ್ದಾದಾರವರು ಯಾವ ವರದಾನ ಕೊಟ್ಟರು? ‘ಸದಾ ಜ್ಞಾನ ಧನ, ಶಕ್ತಿಗಳ ಧನದಿಂದ ಸಂಪನ್ನಭವ’. ಇದೇ ಬ್ರಾಹ್ಮಣ ಜೀವನದ ಖಜಾನೆಯಾಗಿದೆ. |
ಯಾವಾಗ ಬ್ರಾಹ್ಮಣ ಜನ್ಮವಾಯಿತೋ ಆಗಿನಿಂದಲೇ ಸಂಗಮಯುಗದ ಸ್ಥಾಪನೆಯ ಕಾರ್ಯದಲ್ಲಿ ಅಂತ್ಯದವರೆಗೆ ಜೀವಿಸುವುದು ಅರ್ಥಾತ್ ‘ಧೀರ್ಘಾಯಷ್ಯವಾನ್ ಭವ’ ಮಧ್ಯದಲ್ಲಿ ಒಂದುವೇಳೆ ಬ್ರಾಹ್ಮಣ ಜೀವನದಿಂದ ಹೊರಬಂದು ಹಳೆಯ ಸಂಸ್ಕಾರವು ಅಥವಾ ಹಳೆಯ ಸಂಸಾರದಲ್ಲಿ ಹೊರಟು ಹೋಗುತ್ತಾರೆಂದರೆ ಅವರಿಗೆ ಜನ್ಮವನ್ನಂತೂ ಪಡೆದುಕೊಂಡರು ಆದರೆ ಕಡಿಮೆ ಆಯಸ್ಸು ಇರುವವರೆಂದು ಹೇಳಲಾಗುತ್ತದೆ ಏಕೆಂದರೆ ಬ್ರಾಹ್ಮಣ ಜೀವನದಿಂದ ಸತ್ತು ಹೋದರು. ಕೆಲಕೆಲವರು ಹೀಗೂ ಇರುತ್ತಾರೆ ಕೋಮದಲ್ಲಿ ಹೊರಟು ಹೋಗುತ್ತಾರೆ. ಇಂತಹವರು ಇದ್ದರೂ ಸಹ ಇಲ್ಲದಿದ್ದಂತೆ ಮತ್ತು ಕೆಲಕೆಲವೊಮ್ಮೆ ಜಾಗೃತರೂ ಆಗುತ್ತಾರೆ ಆದರೆ ಅವರು ಬದುಕಿರುವುದೂ ಸಹ ಸತ್ತ ಸಮಾನವೇ ಆಗಿರುತ್ತದೆ ಅಂದಾಗ ‘ಧೀರ್ಘಾಯಷ್ಯವಾನ್ ಭವ’ ಅರ್ಥಾತ್ ಸದಾ ಆದಿಯಿಂದ ಅಂತ್ಯದವರೆಗೆ ಬ್ರಾಹ್ಮಣ ಜೀವನ ಅಥವಾ ಶ್ರೇಷ್ಠ ದಿವ್ಯ ಜೀವನದ ಸರ್ವ ಪ್ರಾಪ್ತಿಗಳಲ್ಲಿ ಜೀವಿಸುವುದು. ಧೀರ್ಘಾಯಸ್ಸಿನ ಜೊತೆ ಜೊತೆಗೆ ‘ನಿರೋಗಿಭವ’ದ ವರದಾನವು ಅವಶ್ಯಕತೆಯಿದೆ. ಒಂದುವೇಳೆ ಆಯಸ್ಸು ಧೀರ್ಘವಾಗಿದೆ ಆದರೆ ಮಾಯೆಯ ವ್ಯಾಧಿ ಪದೇ ಪದೇ ಬಲಹೀನರನ್ನಾಗಿ ಮಾಡಿ ಬಿಡುತ್ತದೆಯೆಂದರೆ ಅವರು ಜೀವಿಸುವುದೂ ಸಹ ಜೀವಿಸುವ ರೀತಿ ಅಲ್ಲ. ಅಂದಾಗ ‘ಧೀರ್ಘಾಯಷ್ಯವಾನ್ ಭವ’ದ ಜೊತೆಗೆ ಸದಾ ಆರೋಗ್ಯವಂತರಾಗಿರುವುದು ಅರ್ಥಾತ್ ನಿರ್ವಿಘ್ನರಾಗಿ ಇರಬೇಕಾಗಿದೆ. ಪದೇ-ಪದೇ ಗೊಂದಲದಲ್ಲಿ ಅಥವಾ ಹೃದಯ ವಿಧೀರ್ಣತೆಯ ಸ್ಥಿತಿಯ ಹಾಸಿಗೆಗೆ ಬಲಿಯಾಗಬಾರದು. ಯಾರಾದರೂ ರೋಗಿಯಾದರೆ ಹಾಸಿಗೆ ಹಿಡಿಯುತ್ತಾರಲ್ಲವೆ. ಚಿಕ್ಕ-ಚಿಕ್ಕ ಗೊಂದಲಗಳನ್ನು ನಡೆಯುತ್ತ-ತಿರುಗಾಡುತ್ತಾ ಸಮಾಪ್ತಿ ಮಾಡಿ ಬಿಡುತ್ತೀರಿ ಆದರೆ ಯಾವಾಗ ಯಾವುದೇ ದೊಡ್ಡ ಸಮಸ್ಯೆ ಬಂದು ಬಿಡುತ್ತದೆಯೆಂದರೆ ಗೊಂದಲದಲ್ಲಿ ಬರುತ್ತೀರಿ, ಹೃದಯ ವಿಧೀರ್ಣರಾಗಿ ಬಿಡುತ್ತೀರಿ ಎಂದರೆ ಮನಸ್ಸಿನ ಗತಿಯೇನಾಗುತ್ತದೆ? ಹೇಗೆ ಶರೀರವು ಹಾಸಿಗೆ ಹಿಡಿಯುತ್ತದೆಯೆಂದರೆ ಎದ್ದೇಳಲು, ನಡೆದಾಡಲು ಹಾಗೂ ಆಹಾರ-ಪಾನೀಯಗಳನ್ನು ಸೇವಿಸಲು ಮನಸ್ಸಾಗುವುದಿಲ್ಲ. ಹಾಗೆಯೇ ಇಲ್ಲಿಯೂ ಸಹ ಯೋಗದಲ್ಲಿ ಕುಳಿತುಕೊಂಡರೂ ಸಹ ಅದು ಮನಸ್ಸಿಗೆ ಹಿಡಿಸುವುದಿಲ್ಲ. ಜ್ಞಾನವನ್ನು ಕೇಳುತ್ತೀರಿ ಆದರೆ ಅದನ್ನು ರುಚಿಯಿಂದ ಕೇಳುವುದಿಲ್ಲ. ಸೇವೆಯನ್ನೂ ಉಲ್ಲಾಸದಿಂದ ಮಾಡುವುದಿಲ್ಲ, ತೋರ್ಪಡಿಕೆಯಿಂದ ಅಥವಾ ಭಯದಿಂದ, ಲೋಕ ಮರ್ಯಾದೆಯಿಂದ ಮಾಡುತ್ತೀರಿ, ಇದಕ್ಕೆ ಸದಾ ಆರೋಗ್ಯವಂತ ಜೀವನವೆಂದು ಹೇಳುವುದಿಲ್ಲ ಅಂದಾಗ ‘ಧೀರ್ಘಾಯಷ್ಯವಾನ್ ಭವ’ ಅರ್ಥಾತ್ ‘ನಿರೋಗಿಭವ’ - ಇದಕ್ಕೆ ಹೇಳಲಾಗುತ್ತದೆ. |
`ಪುತ್ರವಾನ್ ಭವ' ಹಾಗೂ `ಸಂತಾನ ಭವ' ತಮಗೆ ಸಂತಾನವಿದೆಯೇ? ಇಬ್ಬರು - ನಾಲ್ಕು ಮಂದಿ ಮಕ್ಕಳಿಗಷ್ಟೇ ಜನ್ಮ ಕೊಟ್ಟಿಲ್ಲವೆ, `ಸಂತಾನ ಭವ'ದ ವರದಾನವಿದೆಯಲ್ಲವೆ. 2-4 ಮಂದಿ ಮಕ್ಕಳ ವರದಾನವು ಸಿಗುವುದಿಲ್ಲ ಆದರೆ ಯಾವಾಗ ತಂದೆಯ ಸಮಾನ ಮಾ|| ರಚಯಿತನ ಸ್ಥಿತಿಯಲ್ಲಿ ಸ್ಥಿತರಾಗುವಿರೋ ಆಗ ಇದೆಲ್ಲವೂ ತಮ್ಮ ರಚನೆಯಾಗುತ್ತದೆ. ಬೇಹದ್ದಿನ ಮಾ|| ರಚಯಿತರಾಗುವುದು, ಈ ಬೇಹದ್ದಿನ `ಪುತ್ರವಾನ್ಭವ', `ಸಂತಾನ ಭವ' ಆಗಿ ಬಿಡುತ್ತದೆ. ನಾವು ಎರಡು-ನಾಲ್ಕು ಜನ ಜಿಜ್ಞಾಸುಗಳನ್ನು ತಯಾರು ಮಾಡಿದೆವು, ಇವರು ನನ್ನವರಾಗಿದ್ದಾರೆ, ಈ ಹದ್ದಿನದಲ್ಲ. ಮಾ|| ರಚಯಿತನ ಸ್ಥಿತಿಯು ಬೇಹದ್ದಿನ ಸ್ಥಿತಿಯಾಗಿದೆ. ಯಾವುದೇ ಆತ್ಮನನ್ನು ಹಾಗೂ ಪ್ರಕೃತಿಯ ತತ್ವಗಳನ್ನೂ ಸಹ ತನ್ನ ರಚನೆಯೆಂದು ತಿಳಿದು ವಿಶ್ವ ಕಲ್ಯಾಣಕಾರಿ ಸ್ಥಿತಿಯಿಂದ ಪ್ರತಿಯೊಬ್ಬರ ಪ್ರತಿ ಕಲ್ಯಾಣದ ಶುಭ ಭಾವನೆ, ಶುಭ ಕಾಮನೆಯಿರುತ್ತದೆ. ರಚಯಿತನಿಗೆ ರಚನೆಯ ಪ್ರತಿ ಇದೇ ಭಾವನೆಗಳಿರುತ್ತವೆ. ಯಾವಾಗ ತಾವು ಬೇಹದ್ದಿನ ಮಾ|| ರಚಯಿತರಾಗಿ ಬಿಡುತ್ತೀರೋ ಆಗ ಯಾವುದೇ ಹದ್ದಿನ ಆಕರ್ಷಣೆ ಆಕರ್ಷಿತ ಮಾಡಲು ಸಾಧ್ಯವಿಲ್ಲ. ಸದಾ ತನ್ನನ್ನು ಎಲ್ಲಿ ನಿಂತಿರುವಂತೆ ನೋಡುತ್ತೀರಿ? ಹೇಗೆ ವೃಕ್ಷದ ರಚಯಿತ `ಬೀಜ'ವು ಯಾವಾಗ ವೃಕ್ಷದ ಅಂತಿಮ ಸ್ಥಿತಿ ಬರುತ್ತದೆಯೋ ಆಗ ಆ ಬೀಜವು ಮೇಲೆ ಬಂದು ಬಿಡುತ್ತದೆಯಲ್ಲವೆ. ಹಾಗೆಯೇ ಬೇಹದ್ದಿನ ಮಾ|| ರಚಯಿತರು ಸದಾ ತಮ್ಮನ್ನು ಈ ಕಲ್ಪ ವೃಕ್ಷದ ಮೇಲೆ ನಿಂತಿರುವ ಅನುಭವ ಮಾಡುತ್ತಾರೆ, ತಂದೆಯ ಜೊತೆ ಜೊತೆಗೆ ವೃಕ್ಷದ ಮೇಲೆ ಮಾ|| ಬೀಜರೂಪರಾಗಿ ಶಕ್ತಿಗಳ, ಗುಣಗಳ ಶುಭ ಭಾವನೆ-ಶುಭ ಕಾಮನೆಯ, ಸ್ನೇಹದ, ಸಹಯೋಗದ ಕಿರಣಗಳನ್ನು ಹರಡುತ್ತಾರೆ. ಹೇಗೆ ಸೂರ್ಯನು ಮೇಲಿರುವ ಕಾರಣ ಇಡೀ ವಿಶ್ವದಲ್ಲಿ ಕಿರಣಗಳು ಹರಡುತ್ತವೆಯಲ್ಲವೆ. ಹಾಗೆಯೇ ಮಾ|| ರಚಯಿತ ಅಥವಾ ಮಾ|| ಬೀಜರೂಪನಾಗಿ ಇಡೀ ವೃಕ್ಷಕ್ಕೆ ಕಿರಣಗಳು ಹಾಗೂ ನೀರನ್ನು ಕೊಡಬಲ್ಲಿರಿ ಅಂದಾಗ ಎಷ್ಟು ಸಂತಾನವಾಯಿತು? ಇಡೀ ವಿಶ್ವವು ತಮ್ಮ ರಚನೆಯಾಯಿತಲ್ಲವೆ ಅಂದಾಗ `ಮಾ|| ರಚಯಿತ ಭವ'. ಇದಕ್ಕೆ `ಪುತ್ರವಾನ್ಭವ' ಎಂದು ಹೇಳುತ್ತಾರೆ ಅಂದಾಗ ಎಷ್ಟೊಂದು ವರದಾನಗಳಿವೆ! ಇದಕ್ಕೆ ತಂದೆಯ ಸಮಾನರಾಗುವುದು ಎಂದು ಹೇಳಲಾಗುತ್ತದೆ. ಜನ್ಮ ಪಡೆದ ಕೂಡಲೇ ಇವೆಲ್ಲಾ ವರದಾನಗಳನ್ನು ಪ್ರತಿಯೊಬ್ಬ ಬ್ರಾಹ್ಮಣ ಆತ್ಮನಿಗೆ ತಂದೆಯು ಕೊಟ್ಟು ಬಿಟ್ಟಿದ್ದಾರೆ. ವರದಾನಗಳು ಸಿಕ್ಕಿವೆಯಲ್ಲವೆ ಅಥವಾ ಇನ್ನೂ ಸಿಗಬೇಕಾಗಿದೆಯೇ? |
ಯಾವಾಗ ಯಾವುದೇ ವರದಾನವು ಯಾರಿಗಾದರೂ ಸಿಗುತ್ತದೆಯೆಂದರೆ ವರದಾನದ ಜೊತೆಗೆ ವರದಾನವನ್ನು ಕಾರ್ಯದಲ್ಲಿ ತೊಡಗಿಸುವ ವಿಧಿಯನ್ನೂ ತಿಳಿಸಲಾಗುತ್ತದೆ. ಒಂದುವೇಳೆ ಆ ವಿಧಿಯನ್ನು ತನ್ನದನ್ನಾಗಿ ಮಾಡಿಕೊಳ್ಳದಿದ್ದರೆ ವರದಾನದ ಲಾಭವನ್ನು ಪಡೆಯಲು ಸಾಧ್ಯವಿಲ್ಲ ಅಂದಾಗ ವರದಾನವಂತೂ ಎಲ್ಲರಿಗೂ ಸಿಕ್ಕಿದೆ ಆದರೆ ಪ್ರತಿಯೊಂದು ವರದಾನವನ್ನು ವಿಧಿಯಿಂದ ಉಪಯೋಗಿಸಿ ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಬಲ್ಲಿರಿ. ವೃದ್ಧಿಯನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳಬಹುದು, ಅದರ ವಿಧಿಯು ಎಲ್ಲದಕ್ಕಿಂತ ಸಹಜ ಮತ್ತು ಎಲ್ಲದಕ್ಕಿಂತ ಶ್ರೇಷ್ಠ ಇದೇ ಆಗಿದೆ - ಎಂತಹ ಸಮಯವೋ ಅದರ ಪ್ರಮಾಣವು ವರದಾನವು ಸ್ಮೃತಿಯಲ್ಲಿ ಬರಲಿ ಮತ್ತು ಸ್ಮೃತಿಯಲ್ಲಿ ಬಂದಾಗ ಸಮರ್ಥರಾಗಿ ಬಿಡುತ್ತೀರಿ ಮತ್ತು ಸಿದ್ಧಿ ಸ್ವರೂಪರಾಗಿ ಬಿಡುತ್ತೀರಿ. ಎಷ್ಟು ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುತ್ತೀರೋ ಅಷ್ಟು ವರದಾನವು ವೃದ್ಧಿಯನ್ನು ಪ್ರಾಪ್ತಿ ಹೊಂದುತ್ತಾ ಇರುವುದು ಅರ್ಥಾತ್ ಸದಾ ವರದಾನದ ಫಲವನ್ನು ಅನುಭವ ಮಾಡುತ್ತಾ ಇರುತ್ತೀರಿ. ಇಷ್ಟು ಶ್ರೇಷ್ಠ ಶಕ್ತಿಶಾಲಿ ವರದಾನಗಳು ಸಿಕ್ಕಿವೆ, ಅದನ್ನು ಕೇವಲ ತನ್ನ ಪ್ರತಿ ಕಾರ್ಯದಲ್ಲಿ ತೊಡಗಿಸಿ ಫಲವನ್ನು ಪ್ರಾಪ್ತಿ ಮಾಡಿಕೊಳ್ಳಬಹುದು ಆದರೆ ಅನ್ಯ ಆತ್ಮರಿಗೂ ಸಹ ವರದಾತ ತಂದೆಯಿಂದ ವರದಾನವನ್ನು ಪ್ರಾಪ್ತಿ ಮಾಡಿಸಲು ಯೋಗ್ಯರನ್ನಾಗಿ ಮಾಡಬಲ್ಲಿರಿ. ಈ ಸಂಗಮಯುಗದ ವರದಾನವು 21 ಜನ್ಮಗಳವರೆಗೆ ಭಿನ್ನ ರೂಪದಿಂದ ಜೊತೆಯಲ್ಲಿರುತ್ತದೆ. ಈ ಸಂಗಮದ ರೂಪವು ಬೇರೆಯಾಗಿದೆ ಮತ್ತು 21 ಜನ್ಮಗಳು ಇದೇ ವರದಾನವು ಜೀವನದ ಲೆಕ್ಕದಿಂದ ನಡೆಯುತ್ತದೆ. ಆದರೆ ವರದಾತ ಮತ್ತು ವರದಾನವು ಪ್ರಾಪ್ತಿಯಾಗುವ ಸಮಯವು ಇದೇ ಆಗಿದೆ ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ಸರ್ವ ವರದಾನಗಳನ್ನು ಕಾರ್ಯದಲ್ಲಿ ತೊಡಗಿಸುತ್ತಾ ಸಹಜವಾಗಿ ಮುಂದುವರೆಯುತ್ತಿದ್ದೀರಾ? |
ಈ ವರದಾನದ ವಿಶೇಷತೆ ಏನೆಂದರೆ - ವರದಾನಿಗಳು ಎಂದೂ ಪರಿಶ್ರಮ ಪಡಬೇಕಾಗುವುದಿಲ್ಲ. ಯಾವಾಗ ಭಕ್ತಾತ್ಮರೂ ಸಹ ಪರಿಶ್ರಮ ಪಟ್ಟು ಸುಸ್ತಾದಾಗ ತಂದೆಯಿಂದ ವರದಾನವನ್ನೇ ಬೇಡುತ್ತಾರೆ. ತಮ್ಮ ಬಳಿಯೂ ಸಹ ಮನುಷ್ಯರು ಬಂದಾಗ ಯೋಗವನ್ನು ಮಾಡುವ ಪರಿಶ್ರಮ ಪಡಲು ಇಚ್ಛಿಸುವುದಿಲ್ಲವೆಂದರೆ ಯಾವ ಭಾಷೆಯನ್ನು ಮಾತನಾಡುತ್ತಾರೆ? ಕೇವಲ ನಮಗೆ ವರದಾನ ಕೊಟ್ಟು ಬಿಡಿ, ತಲೆಯ ಮೇಲೆ ಕೈಯನ್ನು ಇಟ್ಟು ಬಿಡಿ ಎಂದು ಹೇಳುತ್ತಾರೆ. ತಾವು ಬ್ರಾಹ್ಮಣ ಮಕ್ಕಳ ಮೇಲೆ ವರದಾತ ತಂದೆಯ ಹಸ್ತವು ಸದಾ ಇದೆ. ಶ್ರೇಷ್ಠ ಮತವೇ ಅವರ ಹಸ್ತವಾಗಿದೆ. ಸ್ಥೂಲವಾಗಿ 24 ಗಂಟೆಗಳ ಕಾಲ ಹಸ್ತವನ್ನಂತೂ ಇಡುವುದಿಲ್ಲ ಅಲ್ಲವೆ. ಈ ತಂದೆಯ ಶ್ರೇಷ್ಠ ಮತದ ವರದಾನರೂಪಿ ಹಸ್ತವು ಸದಾ ಮಕ್ಕಳ ಮೇಲೆ ಇದೆ. ಅಮೃತವೇಳೆಯಿಂದ ಹಿಡಿದು ರಾತ್ರಿ ಮಲಗುವವರೆಗೆ ಪ್ರತೀ ಶ್ವಾಸಕ್ಕಾಗಿ, ಪ್ರತೀ ಸಂಕಲ್ಪ, ಪ್ರತೀ ಕರ್ಮಕ್ಕಾಗಿ ಶ್ರೇಷ್ಠ ಮತದ ಹಸ್ತವು ಇದ್ದೇ ಇದೆ. ಇದೇ ವರದಾನವನ್ನು ವಿಧಿಪೂರ್ವಕವಾಗಿ ನಡೆಸುತ್ತಾ ಹೋಗಿ ಆಗ ಎಂದೂ ಪರಿಶ್ರಮ ಪಡಬೇಕಾಗುವುದಿಲ್ಲ. |
ಹೇಗೆ ದೇವತೆಗಳಿಗಾಗಿ ಇಚ್ಛಾ ಮಾತ್ರಂ ಅವಿದ್ಯಾ ಎಂದು ಗಾಯನವಿದೆ. ಇದು ಫರಿಶ್ತಾ ಜೀವನದ ವಿಶೇಷತೆಯಾಗಿದೆ. ದೇವತಾ ಜೀವನದಲ್ಲಂತೂ ಇಚ್ಛೆಯ ಮಾತೇ ಇರುವುದಿಲ್ಲ. ಬ್ರಾಹ್ಮಣ ಜೀವನದಿಂದ ಫರಿಶ್ತಾ ಜೀವನ ಆಗಿ ಬಿಡುತ್ತದೆ ಅರ್ಥಾತ್ ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಹೊಂದುತ್ತೀರಿ. ಯಾವುದೇ ಶುದ್ಧ ಕರ್ಮ ಅಥವಾ ವ್ಯರ್ಥ ಕರ್ಮ ಹಾಗೂ ವಿಕರ್ಮವಿಲ್ಲದೆ ಹಿಂದಿನ ಕರ್ಮವು ಯಾವುದೇ ಕರ್ಮದ ಬಂಧನದಲ್ಲಿ ಬಂಧಿಸಿಡುವುದಕ್ಕೆ ಕರ್ಮಾತೀತ ಸ್ಥಿತಿಯೆಂದು ಹೇಳುವುದಿಲ್ಲ. ಒಂದು ಕರ್ಮದ ಸಂಬಂಧವಾಗಿದೆ, ಇನ್ನೊಂದು ಬಂಧನವಾಗಿದೆ. ಅಂದಾಗ ಹೇಗೆ ಹದ್ದಿನ ಇಚ್ಛೆಯಿಂದ ಅವಿದ್ಯಾ ಎಂದು ಈಗ ಗಾಯನವಿದೆ. ಹಾಗೆಯೇ ಫರಿಶ್ತಾ ಜೀವನ ಹಾಗೂ ಬ್ರಾಹ್ಮಣ ಜೀವನ ಅರ್ಥಾತ್ `ಪರಿಶ್ರಮ' ಶಬ್ಧದ ಅವಿದ್ಯೆ, ಹೊರೆಯಿಂದ ಅವಿದ್ಯೆ, ಅದು ಹೇಗಿರುತ್ತದೆ ಎಂಬುದು ಗೊತ್ತೇ ಇರುವುದಿಲ್ಲ. ಈ ರೀತಿಯಿರಬೇಕು ಅಂದಾಗ ವರದಾನಿ ಆತ್ಮ ಅರ್ಥಾತ್ ಪರಿಶ್ರಮ ಜೀವನದಿಂದ ಅವಿದ್ಯೆಯ ಅನುಭವ ಮಾಡುವವರು. ಇಂತಹವರಿಗೆ ವರದಾನಿ ಆತ್ಮನೆಂದು ಹೇಳಲಾಗುತ್ತದೆ ಆದ್ದರಿಂದ ತಂದೆಯ ಸಮಾನರಾಗುವುದು ಎಂದರೆ ಸದಾ ವರದಾತನಿಂದ ಪ್ರಾಪ್ತಿಯಾಗಿರುವ ವರದಾನಗಳಿಂದ ಬೆಳೆಯುವುದು, ಸದಾ ನಿಶ್ಚಿಂತ, ನಿಶ್ಚಿತ ವಿಜಯದ ಅನುಭವ ಮಾಡುವುದು. |
ಕೆಲವು ಮಕ್ಕಳು ಪುರುಷಾರ್ಥವನ್ನಂತೂ ಬಹಳ ಚೆನ್ನಾಗಿ ಮಾಡುತ್ತಾರೆ ಆದರೆ ಪುರುಷಾರ್ಥದ ಹೊರೆಯ ಅನುಭವವಾಗುವುದು - ಇದು ಯಥಾರ್ಥ ಪುರುಷಾರ್ಥವಲ್ಲ. ಗಮನವನ್ನು ಇಡುವುದು ಬ್ರಾಹ್ಮಣ ಜೀವನದ ವಿಧಿಯಾಗಿದೆ ಆದರೆ ಆ ಗಮನವು ಆತಂಕದಲ್ಲಿ ಬದಲಾಗಿ ಬಿಡುತ್ತದೆ. ಸ್ವಾಭಾವಿಕವಾದ ಗಮನವಿರುವುದಿಲ್ಲ. ಇದಕ್ಕೂ ಸಹ ಯಥಾರ್ಥ ಗಮನವೆಂದು ಹೇಳಲಾಗುವುದಿಲ್ಲ. ಹೇಗೆ ಜೀವನದಲ್ಲಿ ಈ ವಸ್ತು ಒಳ್ಳೆಯದು, ಇದನ್ನು ಮಾತನಾಡಬೇಕು, ಇದನ್ನು ಮಾತನಾಡಬಾರದು ಎಂದು ಸ್ಥೂಲ ಜ್ಞಾನ ಇರುತ್ತದೆಯೆಂದರೆ ಆ ಜ್ಞಾನದ ಆಧಾರದ ಮೇಲೆ ಯಾರು ಜ್ಞಾನಪೂರ್ಣರಾಗುವರೋ ಅವರ ಚಿಹ್ನೆಯಾಗಿದೆ - ಅವರಿಗೆ ಇದನ್ನು ತಿನ್ನಬೇಕು, ಇದನ್ನು ತಿನ್ನಬಾರದು, ಇದನ್ನು ಮಾಡಬೇಕು, ಇದನ್ನು ಮಾಡಬಾರದೆಂದು ಸ್ವಾಭಾವಿಕ ಗಮನವಿರುತ್ತದೆ. ಅವರಿಗೆ ಪ್ರತೀ ಹೆಜ್ಜೆಯಲ್ಲಿ ಇದನ್ನು ಮಾಡುವುದೇ ಅಥವಾ ಬೇಡವೇ, ತಿನ್ನುವುದೇ ಅಥವಾ ಬೇಡವೆ - ಈ ರೀತಿ ನಡೆಯುವುದೇ ಅಥವಾ ಬೇಡವೆ ಎಂಬ ಆತಂಕವಿರುವುದಿಲ್ಲ. ಸ್ವಾಭಾವಿಕ ಜ್ಞಾನದ ಶಕ್ತಿಯಿಂದ ಗಮನವಿರುತ್ತದೆ. ಅದೇ ರೀತಿ ಯಥಾರ್ಥ ಪುರುಷಾರ್ಥಿಯ ಪ್ರತೀ ಹೆಜ್ಜೆ, ಪ್ರತೀ ಕರ್ಮದಲ್ಲಿ ಸ್ವಾಭಾವಿಕ ಗಮನವಿರುತ್ತದೆ ಏಕೆಂದರೆ ಜ್ಞಾನದ ಲೈಟ್ಮೈಟ್ ಸ್ವತಹ ಯಥಾರ್ಥ ರೂಪದಿಂದ, ಯಥಾರ್ಥ ರೀತಿಯಿಂದ ನಡೆಸುತ್ತದೆ ಅಂದಾಗ ಪುರುಷಾರ್ಥವನ್ನು ಭಲೆ ಮಾಡಿ, ಭಲೆ ಗಮನವನ್ನಿಡಿ ಆದರೆ ಅದನ್ನು `ಆತಂಕ'ದ ರೂಪದಲ್ಲಿ ಅಲ್ಲ. ಯಾವಾಗ ಆತಂಕದಲ್ಲಿ ಬಂದು ಬಿಡುತ್ತೀರೋ ಆಗ ಬಹಳ ಕೆಲಸ ಮಾಡಲು ಇಚ್ಛಿಸುತ್ತೀರಿ. ಹಾಗೂ ನಂಬರ್ವನ್ ಆಗಲು ಬಯಸುತ್ತೀರಿ ಆದರೆ `ಆತಂಕ'ವು ಎಷ್ಟು ಬಯಸುತ್ತೀರೋ ಅಷ್ಟು ಮಾಡಲು ಬಿಡುವುದಿಲ್ಲ. ಏನಾಗ ಬಯಸುತ್ತೀರೋ ಅದು ಆಗಲು ಬಿಡುವುದಿಲ್ಲ ಮತ್ತು ಆತಂಕವು ಇನ್ನೂ ಆತಂಕವನ್ನು ಹುಟ್ಟಿಸುತ್ತದೆ ಏಕೆಂದರೆ ಏನನ್ನು ಬಯಸುತ್ತೀರೋ ಅದೇ ಆಗಲಿಲ್ಲವೆಂದರೆ ಆತಂಕವು ಇನ್ನೂ ಹೆಚ್ಚಾಗುತ್ತದೆ. |
ಅಂದಾಗ ಪುರುಷಾರ್ಥವನ್ನು ಎಲ್ಲರೂ ಮಾಡುತ್ತೀರಿ ಆದರೆ ಕೆಲವರು ಪುರುಷಾರ್ಥವನ್ನು ಹೆಚ್ಚು ಭಾರಿ ಮಾಡಿಕೊಳ್ಳುತ್ತಾರೆ. ಕೆಲವರು ಏನಾಗಬೇಕಾಗಿದೆಯೋ ಅದು ಆಗಿ ಬಿಡುವುದು, ನೋಡೋಣ, ಯಾರು ನೋಡುತ್ತಾರೆ. ಯಾರು ಕೇಳುತ್ತಾರೆ.... ಎಂದು ಬಹಳ ಆಲಸಿಗಳಾಗಿ ಬಿಡುತ್ತಾರೆ ಅಂದಾಗ ಭಾರಿಯಾಗುವುದೂ ಒಳ್ಳೆಯದಲ್ಲ, ಆಲಸಿಗಳಾಗುವುದೂ ಒಳ್ಳೆಯದಲ್ಲ ಆಗ ಬ್ಯಾಲೆನ್ಸ್ನಿಂದ ತಂದೆಯ ಬ್ಲೆಸ್ಸಿಂಗ್, ವರದಾನಗಳ ಅನುಭವ ಮಾಡಿ. ಸದಾ ತಂದೆಯ ಹಸ್ತವು ನನ್ನ ಮೇಲಿದೆ - ಈ ಅನುಭವವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿ. ಹೇಗೆ ಭಕ್ತಾತ್ಮರು ಸ್ಥೂಲ ಚಿತ್ರಗಳನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ, ತಲೆಯ ಮೇಲೆ ವರದಾನದ ಹಸ್ತವಿರುವ ಚಿತ್ರವನ್ನು ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ, ತಾವೂ ಸಹ ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ಈ ಅನುಭವದ ಚಿತ್ರವನ್ನು ಸದಾ ಸ್ಮೃತಿಯಲ್ಲಿಟ್ಟುಕೊಳ್ಳಿ. ತಿಳಿಯಿತೆ - ಬಹಳ ಪುರುಷಾರ್ಥ ಮಾಡಿದಿರಿ, ಈಗ ವರದಾನಗಳಿಂದ ಬೆಳೆಯುತ್ತಾ, ಹಾರುತ್ತಾ ನಡೆಯಿರಿ. ತಂದೆಯ ಜ್ಞಾನ ದಾತ, ವಿದಾತನ ಅನುಭವ ಮಾಡಿದಿರಿ. ಈಗ ವರದಾತನ ಅನುಭವ ಮಾಡಿ. ಒಳ್ಳೆಯದು. |
ಸದಾ ಪ್ರತೀ ಹೆಜ್ಜೆಯಲ್ಲಿ ತಂದೆಯನ್ನು ಫಾಲೋ ಮಾಡುವವರು, ಸದಾ ತಮ್ಮನ್ನು ವರದಾತ ತಂದೆಯ ವರದಾನೀ ಶ್ರೇಷ್ಠ ಆತ್ಮನೆಂದು ಅನುಭವ ಮಾಡುವವರು, ಸದಾ ಪ್ರತೀ ಹೆಜ್ಜೆಯನ್ನು ಸಹಜವಾಗಿ ಪಾರು ಮಾಡುವವರು, ಸದಾ ಸರ್ವ ವರದಾನಗಳನ್ನು ಸಮಯದಲ್ಲಿ, ಕಾರ್ಯದಲ್ಲಿ ತೊಡಗಿಸುವವರು ಇಂತಹ ತಂದೆಯ ಸಮಾನರಾಗುವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ವರದಾತನ ರೂಪದಲ್ಲಿ ನೆನಪು, ಪ್ರೀತಿ ಹಾಗೂ ನಮಸ್ತೆ. |
ಮುಖ್ಯ ಮಹಾರಥಿ ಸಹೋದರರೊಂದಿಗೆ ವಾರ್ತಾಲಾಪ – |
ಜನ್ಮವಾದಾಗಿನಿಂದ ಎಷ್ಟೊಂದು ವರದಾನಗಳು ಸಿಕ್ಕಿವೆ! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ವರದಾನಗಳು ಸಿಕ್ಕಿರುತ್ತವೆ ಮತ್ತು ಜನ್ಮವೇ ವರದಾನಗಳಿಂದ ಆಗಿದೆ. ಇಲ್ಲದಿದ್ದರೆ ಇಂದು ಇಷ್ಟೊಂದು ಮುಂದುವರೆಯಲು ಸಾಧ್ಯವಿಲ್ಲ. ವರದಾನದಿಂದ ಜನ್ಮವಾಗಿದೆ ಆದ್ದರಿಂದ ವೃದ್ಧಿಯಾಗುತ್ತಾ ಇದ್ದೀರಿ. ಪಾಂಡವರ ಮಹಿಮೆಯೇನೂ ಕಡಿಮೆಯಿಲ್ಲ, ಪ್ರತಿಯೊಬ್ಬರ ವಿಶೇಷತೆಯನ್ನು ವರ್ಣನೆ ಮಾಡುತ್ತೇವೆಂದರೆ ಎಷ್ಟೊಂದಿದೆ! ಈ ಭಾಗವತವೇನಿದೆ, ಅದರಷ್ಟು ಆಗಿ ಬಿಡುತ್ತದೆ. ತಂದೆಯ ದೃಷ್ಟಿಯಲ್ಲಿ ಪ್ರತಿಯೊಬ್ಬರ ವಿಶೇಷತೆಗಳಿವೆ ಮತ್ತು ಅದನ್ನು ನೋಡುತ್ತಿದ್ದರೂ ನೋಡುವುದಿಲ್ಲ, ಮತ್ತು ತಿಳಿದಿದ್ದರೂ ತಿಳಿಯದಂತೆ ಇರುತ್ತಾರೆ. ಅಂದರೆ ವಿಶೇಷತೆಗಳು ತಮ್ಮನ್ನು ಸದಾ ಮುಂದುವರೆಸುತ್ತಾ ಇದೆ ಮತ್ತು ಮುಂದುವರೆಸುತ್ತಾ ಇರುತ್ತದೆ. ಯಾರು ಜನ್ಮದಿಂದಲೇ ವರದಾನಿ ಆತ್ಮರಿದ್ದಾರೆ ಅವರೆಂದಿಗೂ ಸಹ ಹಿಂದೆ ಸರಿಯುವುದಿಲ್ಲ. ಸದಾ ಹಾರುವಂತಹ ವರದಾನಿ ಆತ್ಮರಾಗಿದ್ದೀರಿ. ವರದಾತ ತಂದೆಯ ವರದಾನಗಳು ಮುಂದುವರೆಸುತ್ತಾ ಇದೆ. ಪಾಂಡವರು ಗುಪ್ತವಾಗಿ ಇರುತ್ತಾರೆ ಆದರೆ ಬಾಪ್ದಾದಾರವರ ಹೃದಯದಲ್ಲಿ ಸದಾ ಪ್ರತ್ಯಕ್ಷವಾಗಿದ್ದಾರೆ. ಒಳ್ಳೊಳ್ಳೆಯ ಯೋಜನೆಗಳನ್ನಂತು ಪಾಂಡವರೇ ಮಾಡುತ್ತಾರೆ. ಶಕ್ತಿಯರು ಬೇಟೆಯಾಡುತ್ತಾರೆ ಆದರೆ ಚಮತ್ಕಾರವಂತು ಯೋಜನೆಗಳನ್ನು ಮಾಡುವವರದ್ದಾಗಿದೆ. ಒಂದುವೇಳೆ ಬೇಟೆಯನ್ನು ತರುವವರು ತರದೇ ಇದ್ದರೆ ಬೇಟೆಯನ್ನೇನು ಮಾಡುತ್ತಾರೆ? ಆದ್ದರಿಂದ ಪಾಂಡವರಿಗೆ ವಿಶೇಷವಾಗಿ ತಮ್ಮ ವರದಾನವಿದೆ. `ನೆನಪು' ಮತ್ತು `ಸೇವೆ'ಯ ಬಲವೂ ವಿಶೇಷವಾಗಿ ಸಿಗುತ್ತದೆ - ಏಕೆ? ಅದರ ಕಾರಣವೂ ಇದೆ ಏಕೆಂದರೆ ಅವಶ್ಯಕತೆಯ ಸಮಯದಲ್ಲಿ ಯಾರೆಷ್ಟು ಕಾರ್ಯದಲ್ಲಿ ಬಂದಿದ್ದಾರೆಯೋ, ಅವರಿಗೆ ವಿಶೇಷ ವರದಾನವು ಸಿಕ್ಕಿದೆ. ಹೇಗೆ ಆದಿಯಲ್ಲಿ ಸ್ಥಾಪನೆಯಾಯಿತು, ಆಗ ತಾವು ಪಾಂಡವರು ಗುಪ್ತವಾಗಿದ್ದಿರಿ ಪ್ರತ್ಯಕ್ಷವಾಗಿ ಇರಲಿಲ್ಲ. ಶಕ್ತಿಯರು ಉದಾಹರಣೆಯಾದರು ಮತ್ತು ಅವರುಗಳ ಉದಾಹರಣೆಯನ್ನು ನೋಡಿ ಇನ್ನೂ ಮುಂದುವರೆದರು. ಅಂದಾಗ ಇವರು ಅವಶ್ಯಕತೆಯ ಸಮಯದಲ್ಲಿ ಉದಾಹರಣೆಯಾದರು ಆದ್ದರಿಂದ ಯಾರೆಷ್ಟು ಅವಶ್ಯಕತೆಯ ಸಮಯದಲ್ಲಿ ಸಹಯೋಗಿ ಆಗುವರು, ಅದು ಭಲೆ ಜೀವನದಿಂದ ಆಗಿರಬಹುದು ಅಥವಾ ಸೇವೆಯಿಂದ.... ಅವರಿಗೆ ಡ್ರಾಮಾನುಸಾರ ವಿಶೇಷ ಬಲವು ಸಿಗುತದೆ. ತನ್ನ ಪುರುಷಾರ್ಥವಂತು ಇದ್ದೇ ಇರುತ್ತದೆ ಆದರೆ ಇನ್ನೂ ಹೆಚ್ಚು ಬಲ ಸಿಗುತ್ತದೆ. ಒಳ್ಳೆಯದು. |
ಯಾವ ಸೇವೆ ಮಾಡುವುದರಿಂದ ಸರ್ವ ಆತ್ಮರುಗಳು ಖುಷಿಯಾಗುತ್ತಾರೆಯೋ ಅದರಿಂದಲೂ ಬಹಳ ಬಲ ಸಿಗುತ್ತದೆ. ಯಾರು ಅನುಭವಿ ಆತ್ಮರಿದ್ದಾರೆಯೋ ಅವರುಗಳ ಸೇವೆಯ ಅವಶ್ಯಕತೆಯಿದೆ. ಏಕೆಂದರೆ ಯಾರು ಸಾಕಾರದಲ್ಲಿ ಪಾಲನೆ ಪಡೆದಿದ್ದಾರೆಯೋ ಅವರುಗಳನ್ನು ನೋಡಿ, ಸದಾ ತಂದೆಯದೇ ನೆನಪು ಬರುತ್ತದೆ. ತಾವುಗಳು (ದಾದಿಯರು) ಯಾವಾಗ ಎಲ್ಲಿಯೇ ಹೋಗುತ್ತೀರೆಂದರೆ ವಿಶೇಷವಾಗಿ ಏನು ಕೇಳುವರು? ಚರಿತ್ರೆಯನ್ನು ತಿಳಿಸಿರಿ, ತಂದೆಯ ಯಾವುದಾದರೂ ಮಾತನ್ನು ತಿಳಿಸಿರಿ. ಅಂದಮೇಲೆ ವಿಶೇಷತೆ ಆಯಿತಲ್ಲವೆ. ಆದ್ದರಿಂದ ಸೇವೆಯ ವಿಶೇಷತೆಯ ವರದಾನವು ಸಿಕ್ಕಿರುತ್ತದೆ. ಭಲೆ ವೇದಿಕೆಯಲ್ಲಿ ನಿಂತು ಭಾಷಣವನ್ನೇನು ಮಾಡದೇ ಇರಬಹುದು ಆದರೆ ಇದು ಅವೆಲ್ಲವುಗಳಿಗಿಂತಲೂ ದೊಡ್ಡ ಭಾಷಣವಾಗಿದೆ. ಚರಿತ್ರೆಯನ್ನು ಕೇಳಿ ಚಾರಿತ್ರ್ಯವಂತರಾಗುವ ಪ್ರೇರಣೆಯನ್ನು ಕೊಡುವುದು - ಇದು ಅತಿ ಶ್ರೇಷ್ಠವಾದ ಸೇವೆಯಾಗಿದೆ. ಅಂದಮೇಲೆ ಸೇವೆಯಲ್ಲಿ ಅವಶ್ಯವಾಗಿ ಹೋಗಬೇಕು ಮತ್ತು ಅವಶ್ಯವಾಗಿ ಸೇವೆಯ ನಿಮಿತ್ತರು ಆಗಬೇಕಾಗಿದೆ. ಒಳ್ಳೆಯದು! |
ಓಂ ಶಾಂತಿ. ಬಾಪ್ದಾದಾರವರನ್ನು ಸನ್ಮುಖದಲ್ಲಿ ನೋಡುತ್ತಾರೆಂದರೆ ಮಕ್ಕಳಿಗೆ ಅಪಾರ ಖುಷಿಯ ನಶೆಯೇರುತ್ತದೆ ಮತ್ತು 5000 ವರ್ಷಗಳ ಹಿಂದೆ ಶಿವ ತಂದೆಯು ಬ್ರಹ್ಮಾರವರಲ್ಲಿ ಹೇಗೆ ಬಂದಿದ್ದರೋ ಹಾಗೆಯೇ ಬಂದಿದ್ದಾರೆಂದು ಮಕ್ಕಳು ತಿಳಿದಿದ್ದೀರಿ. ಏನು ಮಾಡಲು ಬಂದಿದ್ದಾರೆ? ಇದು ಮಕ್ಕಳಿಗೆ ನಶೆಯೇರಿರುತ್ತದೆ. ಸ್ವರ್ಗದ ಮಾಲೀಕರನ್ನಾಗಿ ಮಾಡಲು, ನಮ್ಮನ್ನು ಯೋಗ್ಯರನ್ನಾಗಿ ಮಾಡಲು ತಂದೆಯು ಬಂದಿದ್ದಾರೆಂಬುದು ಎಲ್ಲಾ ಮಕ್ಕಳಿಗೆ ತಿಳಿದಿದೆ. ನಮ್ಮನ್ನು ತಮೋಪ್ರಧಾನರಿಂದ ಸತೋಪ್ರಧಾನರಾಗುವ ಯುಕ್ತಿಗಳನ್ನು ಪದೇ-ಪದೇ ತಿಳಿಸುತ್ತಾರೆ. ಯುಕ್ತಿಯಂತೂ ಬಹಳ ಸಹಜವಾಗಿದೆ. ಅವಶ್ಯವಾಗಿ ಸಹಜವಾದ ನೆನಪನ್ನು ಮಕ್ಕಳಿಗೆ ಕಲಿಸುತ್ತಾರೆ. ಅಜ್ಞಾನ ಕಾಲದಲ್ಲಿಯೂ ತಂದೆಗೆ ಮಗನ ಜನನವಾಗುತ್ತದೆ ಎಂದರೆ ಆಸ್ತಿಗೆ ಹಕ್ಕುದಾರನು ಜನಿಸಿದನೆಂದು ತಿಳಿಯುತ್ತಾರೆ. ಈ ಸಮಯದಲ್ಲಿ ತಂದೆಯು ಬಂದು ಮಕ್ಕಳನ್ನು ದತ್ತು ತೆಗೆದುಕೊಳ್ಳುತ್ತಾರೆಂದು ತಿಳಿದಿದ್ದೀರಿ. ನೀವಂತೂ ಶಿವ ತಂದೆಯ ಮಕ್ಕಳೇ ಆಗಿದ್ದೀರಿ, ಆದರೆ ತಂದೆಯು ಬಂದು ತನ್ನವರನ್ನಾಗಿ ಹೇಗೆ ಮಾಡಿಕೊಂಡರು, ನಮಗೆ ತಿಳಿಸಲು ಹಾಗೂ ನಾವು ಅವರಿಂದ ಕೇಳಲು ಸಾಧ್ಯವಿದೆ. ಶಿವ ತಂದೆಯು ನಿಮ್ಮ ತಂದೆಯಾಗಿದ್ದೇನೆ ಎಂದು ಬ್ರಹ್ಮಾರವರ ತನುವಿನ ಮೂಲಕ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ಕೇವಲ ನೀವಾತ್ಮರು ಪತಿತರಾಗಿದ್ದೀರಿ ಆದ್ದರಿಂದ ನೀವು ಮುಕ್ತಿ ಹಾಗೂ ಜೀವನ್ಮುಕ್ತಿಧಾಮಕ್ಕೂ ಹೋಗಲು ಸಾಧ್ಯವಿಲ್ಲ, ನೀವೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ಎಲ್ಲರೂ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಅನೇಕಾನೇಕ ಮಕ್ಕಳಿದ್ದಾರೆ, ವೃದ್ಧಿಯಂತೂ ಆಗುತ್ತಲೇ ಇರುತ್ತದೆ, ದತ್ತು ತೆಗೆದುಕೊಳ್ಳುತ್ತಲೇ ಇರುತ್ತಾರೆ. ಹೇ ಆತ್ಮಗಳೇ, ಈಗ ನೀವು ನನ್ನ ಸಂತಾನರಾಗಿದ್ದೀರಿ. ತಮ್ಮನ್ನು ತಾವು ಆತ್ಮನೆಂದು ತಿಳಿದುಕೊಳ್ಳಬೇಕು, ನಮಗೆ ತಂದೆಯು ಸಿಕ್ಕಿದ್ದಾರೆ ಯಾರನ್ನು ನಾವು ಅರ್ಧ ಕಲ್ಪದಿಂದ ನೆನಪು ಮಾಡುತ್ತಾ ಬಂದೆವೋ ಆ ತಂದೆಯೇ ಸಿಕ್ಕಿದ್ದಾರೆ. ಇದನ್ನು ಎಂದೂ ಮರೆಯಬಾರದು. ಅರ್ಧ ಕಲ್ಪದಿಂದ ಈ ಆತ್ಮವು ಶರೀರದ ಮೂಲಕ ನೆನಪು ಮಾಡುತ್ತಲೇ ಬಂದಿದೆ. ಹೇ ಪತಿತ-ಪಾವನ, ಹೇಗೆ ದುಃಖಹರ್ತ-ಸುಖಕರ್ತ ಎಂದು ಕೂಗುತ್ತಾರೆ ಏಕೆಂದರೆ ಇದು ರಾವಣ ರಾಜ್ಯವಲ್ಲವೆ. ಭಲೆ ನಾವು ಬಹಳ ಸುಖಿಗಳಾಗಿದ್ದೇವೆ, ನಮ್ಮ ಬಳಿ ಬೇಕಾದಷ್ಟು ಹಣವಿದೆ, ಅನೇಕ ಮಿಲ್ಗಳಿವೆ, ಕಾರ್ಖಾನೆಗಳಿವೆ ಆದರೆ ಇವೆಲ್ಲವೂ ಅಲ್ಪಕಾಲದ್ದಾಗಿದೆ. ಅಂತ್ಯದಲ್ಲಿ ಬಹಳ ಅಯ್ಯೊ, ಅಯ್ಯೊ ಎನ್ನಬೇಕಾಗುತ್ತದೆ, ದುಃಖದ ಬೆಟ್ಟವೇ ಬೀಳಲಿದೆ. ಇಷ್ಟೊಂದು ಆಸ್ತಿಯೆಲ್ಲಾ ಒಂದು ಸೆಕೆಂಡಿನಲ್ಲಿ ಸಮಾಪ್ತಿಯಾಗುವುದು. ತಂದೆಯಿಂದ ನಿಮಗೆ ಒಂದು ಸೆಕೆಂಡಿನಲ್ಲಿ ಆಸ್ತಿಯು ದೊರಕುತ್ತದೆ. ಹೇಳುತ್ತಾರೆ ನಿಮಗೆ ಒಂದು ಸೆಕೆಂಡಿನಲ್ಲಿ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು, ಯುದ್ಧಗಳು ನಡೆಯಲಿದೆ, ಪ್ರಾಕೃತಿಕ ವಿಕೋಪಗಳುಂಟಾಗುವುದು. ಸ್ವಚ್ಛವಾಗಬೇಕಲ್ಲವೆ! ನೀವಾತ್ಮರು ಈಗ ಪವಿತ್ರರಾಗುತ್ತಿದ್ದೀರಿ. ಬಾಪ್ದಾದಾ ಇಬ್ಬರೂ ತಿಳಿಯುತ್ತಾರೆ - ಮಕ್ಕಳು ಎಷ್ಟೊಂದು ಪರಿಶ್ರಮ ಪಡುತ್ತಾರೆ. ತಂದೆಯಿಂದ ಆಸ್ತಿಯನ್ನು ಪಡೆಯಲು ಸ್ವಲ್ಪವೇ ಕಷ್ಟ ಕೊಡುತ್ತಾರೆ? ತಮ್ಮನ್ನು ತಾವು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಅವರು ಆತ್ಮೀಯ ತಂದೆ ನಿರಾಕಾರನಾಗಿದ್ದಾರೆ. ನಾವೆಲ್ಲರೂ ಕರೆಯುತ್ತೇವಲ್ಲವೆ! ನೀವಾತ್ಮರು ಪತಿತರಿಂದ ಪಾವನರು ಹೇಗಾಗಬಹುದು ಎಂದು ತಂದೆಯು ತಿಳಿಸುತ್ತಾರೆ. ಪತಿತ-ಪಾವನನಂತೂ ಒಬ್ಬ ತಂದೆಯೇ ಆಗಿದ್ದಾರೆ. ನದಿಯ ನೀರು ಪತಿತ-ಪಾವನಿಯಾಗಿದ್ದರೆ ತಕ್ಷಣ ಹೋಗಿ ಮುಳುಗಿ ಬಂದು ಬಿಡಬೇಕಿತ್ತು. ಗಂಗಾ ಸ್ನಾನ ಬಹಳ ಮಂದಿ ಮಾಡುತ್ತಾರೆ ಆದರೂ ಇನ್ನೂ ಪತಿತರಾಗಿದ್ದಾರೆ ಏಕೆ? ಹಗಲು-ರಾತ್ರಿ ಇದೇ ವಿಚಾರ ಬರುತ್ತಿರುತ್ತದೆ - ಪತಿತ-ಪಾವನ ಸೀತಾರಾಂ ಅರ್ಥಾತ್ ಎಲ್ಲರೂ ಭಕ್ತಿನಿಯರಾಗಿದ್ದಾರೆ ಅಥವಾ ಸೀತೆಯರಾಗಿದ್ದಾರೆ. ಎಲ್ಲರ ರಕ್ಷಕ ಒಬ್ಬನೇ ರಾಮ ಪರಮಪಿತ ಪರಮಾತ್ಮನಾಗಿದ್ದಾರೆ. ಪತಿತ-ಪಾವನ ಪತಿಯರ ಪತಿ ಅವರೇ ಆಗಿದ್ದಾರೆ. ತಂದೆಯು ಬರುತ್ತಾರೆಂದರೆ ಪಾವನರನ್ನಾಗಿಯೇ ಮಾಡುತ್ತಾರೆ. ಆದ್ದರಿಂದಲೇ ನನ್ನ ಶ್ರೀಮತದಂತೆ ನಡೆಯಬೇಕು ಮತ್ತ್ಯಾವುದೇ ಮತದಂತೆ ನಡೆಯಬಾರದು. ಮನುಷ್ಯರು ಭಕ್ತಿಯಿಂದ ಭಗವಂತನು ಸಿಗುತ್ತಾನೆಂದು ಹೇಳುತ್ತಾರೆ. ಆದರೆ ಭಕ್ತರನ್ನು ರಕ್ಷಿಸು ಎಂದು ಏಕೆ ಹೇಳಬೇಕು? ಭಕ್ತರನ್ನು ರಕ್ಷಣೆ ಮಾಡಲು ಅವರಿಗೆ ಯಾವ ಕಷ್ಟ ಬಂದಿದೆ? ಯಾವುದಾದರೂ ಕಷ್ಟದ ಸಮಯದಲ್ಲಿಯೇ ರಕ್ಷಣೆ ಮಾಡುತ್ತಾರೆ. ನೀವು ಎಷ್ಟೊಂದು ದುರ್ಗತಿಯನ್ನು ಪಡೆದಿದ್ದೀರಿ! ಇದು ರೌರವ ನರಕವಾಗಿದೆ, ಎಲ್ಲರೂ ದುಃಖಿ, ರೋಗಿಗಳಾಗಿದ್ದಾರೆ. ಮನೆ-ಮನೆಯಲ್ಲಿ ನೋಡಿ, ಏನೆಲ್ಲಾ ನಡೆಯುತ್ತಿದೆ! ದುಃಖವೇ ದುಃಖ. ಆದ್ದರಿಂದ ಬಾಬಾ, ನಮ್ಮ ದುಃಖವನ್ನು ದೂರ ಮಾಡು, ಸುಖವನ್ನು ಕೊಡು ಎಂದು ಕರೆಯುತ್ತಾರೆ. ಭಾರತದಲ್ಲಿಯೇ ಸದಾ ಸುಖವಿತ್ತು ಈಗ ದುಃಖವಿದೆ. ಭಾರತದ್ದೇ ಮಾತಾಗಿದೆ, ಬೇರೆ ಖಂಡಗಳು ವಿಭಿನ್ನವಾಗಿದೆ. ಅನ್ಯ ಧರ್ಮದವರಂತೂ ನಂತರ ಬರುತ್ತಾರೆ. ಕೆಲವರದು 60 ಜನ್ಮಗಳು, ಕೆಲವರಂತೂ ಇದಕ್ಕಿಂತಲೂ ಕಡಿಮೆ ಜನ್ಮಗಳನ್ನು ಪಡೆಯುತ್ತಾರೆ. 84 ಜನ್ಮಗಳನ್ನು ದೇವತಾ ಧರ್ಮದವರೇ ತೆಗೆದುಕೊಳ್ಳುತ್ತಾರೆ ಅಂದಮೇಲೆ ಲೆಕ್ಕದ ಪ್ರಕಾರದ ಅರ್ಧ ಕಲ್ಪದ ನಂತರ ಬರುತ್ತಾರೆಂದರೆ ಅವರು 84ಕ್ಕಿಂತಲೂ ಅರ್ಧ ಜನ್ಮವನ್ನು ಪಡೆಯಬೇಕಲ್ಲವೆ! ಎಲ್ಲರೂ 84 ಜನ್ಮದ ಚಕ್ರವನ್ನು ಸುತ್ತುತ್ತಾರೆ ಎಂದಲ್ಲ. ಮನುಷ್ಯರಿಗೆ ಏನು ಬರುತ್ತದೆಯೋ ಅದನ್ನು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು ತಂದೆಯ ಮೂಲಕ ಅವಿನಾಶಿ ಜ್ಞಾನರತ್ನಗಳ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತಿದ್ದೀರಿ. ರತ್ನಗಳಂತೂ ಬಹಳ ಬೆಲೆ ಬಾಳುವಂತಾಗಿರುತ್ತದೆ. ತಂದೆಯಂತೂ ಬಹಳ ಸಹಜವಾಗಿ ತಿಳಿಸಿಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಪತಿತ-ಪಾವನ ಬನ್ನಿ ಬಂದು ಪಾವನ ಮಾಡಿ ಎಂದು ಕರೆಯುತ್ತೀರಿ ಆದ್ದರಿಂದಲೇ ತಂದೆಯು ಬಂದಿದ್ದಾರೆ. ನಾವು ಪಾವನರಾಗುತ್ತೇವೆ ಅಂದಮೇಲೆ ಸ್ವರ್ಗದ ಮಾಲೀಕರಾಗುತ್ತೇವೆಂದು ನೀವೀಗ ತಿಳಿದಿದ್ದೀರಿ. ಶಿವ ತಂದೆಯು ನಮ್ಮನ್ನು ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ, ಪಥ್ಥರ್ನಾಥ (ಕಲ್ಲಿನ ಸಮಾನ) ರಿಂದ ಪಾರಸನಾಥರನ್ನಾಗಿ ಮಾಡಲು ಬಂದಿದ್ದಾರೆ. ಭಕ್ತಿಮಾರ್ಗದಲ್ಲಂತೂ ಎಲ್ಲವನ್ನೂ ಕಲ್ಲಿನಿಂದಲೇ ಮಾಡಲ್ಪಟ್ಟಿವೆ. ಕಲ್ಲುಗಳ ಬಳಿ ಹೋಗಿ ತಲೆ ಚಚ್ಚಿಕೊಳ್ಳುತ್ತಾರೆ. ಎಷ್ಟೇ ಪರಿಶ್ರಮ ಪಟ್ಟರೂ ಸಹ ಲಾಭ ಸಿಗುವುದಿಲ್ಲ. ಮೊದಲು ನೀವೆಲ್ಲರೂ ಬಲಿಹಾರಿಯಾಗುತ್ತಿದ್ದಿರಿ ಆದರೆ ಏನಾದರೂ ಲಾಭವಾಯಿತೆ? ದೇವಿಯ ಸಾಕ್ಷಾತ್ಕಾರವಾಗಿರಬಹುದು ಅಷ್ಟೇ. ಸಂಗಮಯುಗದಲ್ಲಿ ಒಂದೇ ಬಾರಿ ಪತಿತ-ಪಾವನ ತಂದೆಯು ಬರುತ್ತಾರೆ. ಸತ್ಯಯುಗದಲ್ಲಿ ಭಕ್ತಿಮಾರ್ಗದ ಮಾತುಗಳೇ ಇರುವುದಿಲ್ಲ. ತಂದೆಯು ಎಂದೂ ಕತ್ತನ್ನು ಕತ್ತರಿಸಿಕೊಳ್ಳಿ, ಇದನ್ನು ಮಾಡಿ ಎಂದು ಹೇಳುವುದಿಲ್ಲ. ಭಕ್ತಿಮಾರ್ಗದಲ್ಲಿ ಅನೇಕ ಪ್ರಕಾರವಾಗಿ ಏನೆನೆಲ್ಲಾ ಮಾಡುತ್ತಾ ಬಂದಿದ್ದಾರೆ! ಮುಂದೆ ಮನುಷ್ಯರನ್ನೂ ಸಹ ಬಲಿ ಕೊಡುತ್ತಿದ್ದರು, ನೀವು ಸುಧಾರಣೆಯಾಗಿದ್ದಾಗ ದೇವತೆಗಳಾಗಿದ್ದಿರಿ ಆದರೆ ಈಗ ಕಲ್ಲು ಬುದ್ಧಿಯವರಾಗಿದ್ದೀರಿ. ನಿಮಗೆ ಸ್ವರ್ಗದ ರಾಜ್ಯಭಾಗ್ಯ ದೊರಕಿತ್ತು, ಎಷ್ಟೊಂದು ಚಿನ್ನ ,ವಜ್ರಗಳ ಮಹಲುಗಳಿತ್ತು, ಅಪಾರ ಧನವಿತ್ತು, ಅದೆಲ್ಲವನ್ನೂ ಏನು ಮಾಡಿದಿರಿ? ಈಗಂತೂ ನೀವು ಬಹಳ ದುಃಖಿಗಳಾಗಿದ್ದೀರಿ. ವಾಸ್ತವದಲ್ಲಿ ನೀವು ದೇವಿ-ದೇವತಾ ಧರ್ಮದವರಾಗಿದ್ದೀರಿ. ಈಗ ನೀವು ರಜೋ, ತಮೋದಲ್ಲಿ ಬಂದಿದ್ದೀರಿ. ನೀವು ದೇವತಾ ಧರ್ಮದವರಾಗಿದ್ದಿರಿ, ಮತ್ತೆ ನೀವೇಕೆ ನಿಮ್ಮನ್ನು ಹಿಂದೂಗಳೆಂದು ಕರೆದುಕೊಳ್ಳುತ್ತೀರಿ? ಬೇರೆ ಎಲ್ಲಾ ಧರ್ಮದವರು ತಮ್ಮ ಧರ್ಮವನ್ನು ಒಪ್ಪಿಕೊಳ್ಳುತ್ತಾರೆ, ಧರ್ಮವಂತೂ ಒಂದೇ ಆಗಿರುತ್ತದೆಯಲ್ಲವೆ. ಮುಸಲ್ಮಾನರದು ಮುಸ್ಲಿಂ ಧರ್ಮ, ಕ್ರಿಶ್ಚಿಯನ್ನರದು ಕ್ರಿಶ್ಚಿಯನ್ ಧರ್ಮವು ನಡೆದು ಬರುತ್ತದೆ, ನಿಮ್ಮದು ಏನಾಯಿತು, ನೀವಂತೂ ಸಂಪೂರ್ಣ ಸುಖಿ, ಪವಿತ್ರರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ, ಈಗ ಎಷ್ಟೊಂದು ವಿಕಾರಿಗಳಾಗಿದ್ದೀರಿ. ಅವಶ್ಯವಾಗಿ ನಾವು ಸಂಪೂರ್ಣ ನಿರ್ವಿಕಾರಿಗಳಾಗಿದ್ದೆವು ನಂತರ ಹೇಗೆ ಸಂಪೂರ್ಣ ವಿಕಾರಿಗಳಾದೆವು? ಇದು ಯಾರಿಗೂ ತಿಳಿದಿಲ್ಲ. 84 ಜನ್ಮಗಳನ್ನು ಪಡೆಯುತ್ತಾ ಸತೋದಿಂದ ತಮೋ ಆಗಿದ್ದೀರಿ. ಅವಶ್ಯವಾಗಿ ಈಗ ತಮೋಪ್ರಧಾನ, ಪತಿತರಾಗಿದ್ದೀರಿ. ಸತ್ಯಯುಗದಿಂದ ಕಲಿಯುಗಕ್ಕೆ ಬರಲೇಬೇಕಾಗಿದೆ. ಎಲ್ಲಾ ಧರ್ಮದವರು ಸತೋ, ರಜೋ, ತಮೋದಲ್ಲಿ ಬಂದೇ ಬರುತ್ತಾರೆ, ವೃದ್ಧಿ ಪಡೆಯಲೇಬೇಕಾಗಿದೆ. ನೀವೂ ಸಹ ವೃಕ್ಷದಲ್ಲಿದ್ದೀರಲ್ಲವೆ. ವೃಕ್ಷದಲ್ಲಿ ನೋಡಿದಾಗ ಅಂತ್ಯದಲ್ಲಿ ಬ್ರಹ್ಮನು ನಿಂತಿದ್ದಾರೆ, ವೃಕ್ಷದ ಮೇಲೆ ಶಿಖೆಯಲ್ಲಿ ಬ್ರಹ್ಮನೇ 84 ಜನ್ಮಗಳನ್ನು ಪಡೆದು ಅಂತ್ಯದಲ್ಲಿ ನಿಂತಿದ್ದಾರೆ. ನೀವೀಗ ಕೆಳಗಡೆ ಬ್ರಾಹ್ಮಣರು ಕುಳಿತಿದ್ದೀರಿ ನಂತರ ಅಂತ್ಯದಲ್ಲಿ ಪತಿತ, ಶೂದ್ರರಾಗಿದ್ದೀರಿ. ಮತ್ತೆ ಕೆಳಗೆ ರಾಜಯೋಗವನ್ನು ಕಲಿಯುತ್ತಿದ್ದೀರಿ. ನೀವೇ ಶೂದ್ರರಾಗಿದ್ದಿರಿ, ಈಗ ಬ್ರಾಹ್ಮಣರಾಗುತ್ತೀರಿ. ಇದು ಬಹಳ ದೊಡ್ಡ ತಿಳುವಳಿಕೆಯ ಮಾತಾಗಿದೆ. ಈಗ ಈ ವೃಕ್ಷದಲ್ಲೆ ಬಹಳ ಹೆಚ್ಚಿನ ತಿಳುವಳಿಕೆಯಿದೆ, ಈಗ ನೀವು ರಾಜಯೋಗದ ತಪಸ್ಸನ್ನು ಮಾಡುತ್ತಿದ್ದೀರಿ, ನಿಮ್ಮದೇ ನೆನಪಾರ್ಥವು ಇಲ್ಲಿ ಇದೆ. ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ, ಅದು ಜಡ ಮಂದಿರವಾಗಿದೆ. ಸತ್ಯಯುಗದಲ್ಲಿ ಇದು ಇರಲಿಲ್ಲ, ಈ ಸಮಯದಲ್ಲಿ ನೀವು ನಿಮ್ಮ ನೆನಪಾರ್ಥವನ್ನು ನೋಡುತ್ತೀರಿ. ನೀವು ಪ್ರಾಕ್ಟಿಕಲ್ನಲ್ಲಿ ಸತ್ಯ-ಸತ್ಯವಾದ ದಿಲ್ವಾಡಾ ಮಂದಿರದಲ್ಲಿ, ಚೈತನ್ಯದಲ್ಲಿ ಕುಳಿತಿದ್ದೀರಿ. ಸ್ವರ್ಗದ ಸ್ಥಾಪನೆಯಾಗುತ್ತಿದೆ ನಂತರ ಸ್ವರ್ಗದಲ್ಲಿ ಬರುತ್ತೀರೆಂದರೆ ಈ ಮಂದಿರಗಳು ಏನೂ ಇರುವುದಿಲ್ಲ. ಈ ಮಮ್ಮಾ, ಬಾಬಾ ಮತ್ತು ನಾವು ಮಕ್ಕಳು ಕುಳಿತಿದ್ದೇವೆ. ಕಲ್ಪದ ಹಿಂದಿನಂತೆಯೇ ಇದು ನಿಮ್ಮದೇ ಮಂದಿರವಾಗಿದೆ, ಹೆಸರನ್ನು ಮಧುಬನ ಎಂದು ಇಡಲಾಗಿದೆ. ಇದು ಚೈತನ್ಯ ದಿಲ್ವಾಡಾ ಮಂದಿರವಾಗಿದೆ. ನಂತರ ಭಕ್ತಿಮಾರ್ಗವು ಪ್ರಾರಂಭವಾದಾಗ ಮತ್ತೆ ಈ ಮಂದಿರಗಳನ್ನು ಕಟ್ಟುತ್ತಾರೆ. ತಂದೆಯು ನಿಮ್ಮನ್ನು ಎಷ್ಟೊಂದು ಧನವಂತರನ್ನಾಗಿ ಮಾಡಿದ್ದರು, ಆದ್ದರಿಂದ ನೀವು ಅವರ ಮಂದಿರಗಳನ್ನು ಮಾಡುತ್ತೀರಿ. ಶಿವನ ಮಂದಿರವೊಂದನ್ನೇ ಮಾಡುವುದಿಲ್ಲ. ಯಥಾ ಶಕ್ತಿಯ ಅನುಸಾರವಾಗಿ ಮಂದಿರಗಳನ್ನು ಕಟ್ಟುತ್ತಾರೆಂದು ಎಲ್ಲರೂ ತಿಳಿದಿದ್ದಾರೆ. |
ನಾವೇ ಪೂಜ್ಯರಾಗಿದ್ದೆವು ನಂತರ ದ್ವಾಪರದಿಂದ ಪೂಜಾರಿಗಳಾಗುತ್ತೇವೆಂದು ನೀವೇ ತಿಳಿದಿದ್ದೀರಿ. ಶಿವ ತಂದೆಯು ಎಷ್ಟೊಂದು ಸಾಹುಕಾರರನ್ನಾಗಿ ಮಾಡುತ್ತಾರೆ, ಭಕ್ತಿಯಲ್ಲಿ ನಂತರ ನೀವೇ ಅವರ ಮಂದಿರಗಳನ್ನು ಕಟ್ಟುತ್ತೀರಿ, ಈ ಮಾತುಗಳನ್ನು ನೀವೀಗ ತಿಳಿದಿದ್ದೀರಿ ಅಂದಮೇಲೆ ಈಗ ಪುರುಷಾರ್ಥ ಮಾಡಿ ನಂತರ ರಾಜರಿಗೂ ರಾಜರಾಗಬೇಕಲ್ಲವೆ. ಸತ್ಯಯುಗದಲ್ಲಿ ಇರುವವರನ್ನು ಮಹಾರಾಜರೆಂದು, ತ್ರೇತಾದಲ್ಲಿರುವವರನ್ನು ರಾಜರೆಂದು ಕರೆಯಲಾಗುವುದು. ನಂತರ ಪ್ರಪಂಚವು ಪತಿತವಾಗುತ್ತದೆ ಅಂದಮೇಲೆ ಮಹಾರಾಜರು ಪತಿತರಾಗುತ್ತಾರೆ, ರಾಜರೂ ಪತಿತರಾಗುತ್ತಾರೆ. ಅವರು ನಿರ್ವಿಕಾರಿ ಮಹಾರಾಜರುಗಳ ಮಂದಿರಗಳನ್ನು ಕಟ್ಟಿಸಿ ಪೂಜೆ ಮಾಡುತ್ತಾರೆ. ಮೊಟ್ಟ ಮೊದಲು ಶಿವನ ಮಂದಿರವನ್ನು ಕಟ್ಟುತ್ತಾರೆ ನಂತರ ದೇವತೆಗಳ ಮಂದಿರಗಳನ್ನು ಕಟ್ಟುತ್ತಾರೆ. ತಾವೇ ಮಂದಿರವನ್ನು ಕಟ್ಟಿ ಪೂಜೆ ಮಾಡುತ್ತಾರೆ, 84 ಜನ್ಮಗಳನ್ನು ಭೋಗಿಸುತ್ತಾರಲ್ಲವೆ. ಅರ್ಧಕಲ್ಪ ನೀವು ಪೂಜ್ಯರು ನಂತರ ಅರ್ಧಕಲ್ಪ ಪೂಜಾರಿಗಳಾಗುತ್ತೀರಿ. ಭಗವಂತನೇ ಪೂಜ್ಯ ಮತ್ತು ಪೂಜಾರಿಯಾಗುತ್ತಾನೆಂದು, ಅವನೇ ಎಲ್ಲವನ್ನೂ ಕೊಡುತ್ತಾನೆ ಎಲ್ಲವನ್ನೂ ಕಸಿದುಕೊಳ್ಳುತ್ತಾನೆಂದು ಮನುಷ್ಯರು ತಿಳಿಯುತ್ತಾರೆ. ಅಂದಮೇಲೆ ಭಗವಂತನೇ ಕೊಟ್ಟನು, ತೆಗೆದುಕೊಂಡನೆಂದ ಮೇಲೆ ಚಿಂತೆಯೇಕೆ? ನೀವೆಲ್ಲರೂ ನಿಮಿತ್ತರಲ್ಲವೆ. ಇನ್ನು ಅಳುವ ಮಾತೇನು? ತಂದೆಯು ಕುಳಿತು ಆತ್ಮಗಳಿಗೆ ತಿಳಿಸುತ್ತಾರೆ - ಈಗ ನೀವು ನಂಬರ್ವಾರ್ ಆಗಿ ಆತ್ಮಾಭಿಮಾನಿಗಳಾಗುತ್ತೀರಿ. ಕೆಲವರಂತೂ ಅವಶ್ಯವಾಗಿ ನೆನಪು ಮಾಡುವುದೇ ಇಲ್ಲ, ದೇಹೀ-ಅಭಿಮಾನಿಗಳು ಆಗುವುದೇ ಇಲ್ಲ. ಅರೆ! ನೀವಂತೂ ಆತ್ಮರಾಗಿದ್ದೀರಿ, ನಿಮಗೆ ಪರಮಾತ್ಮನು ಓದಿಸುತ್ತಿದ್ದಾರೆ, ಇದನ್ನು ಎಷ್ಟು ಬಾರಿ ತಿಳಿಸಲಾಗಿದೆ! ಆತ್ಮದಲ್ಲಿಯೇ ಸಂಸ್ಕಾರವಿರುತ್ತದೆ. ಆತ್ಮವೇ ಬ್ಯಾರಿಸ್ಟರ್, ಮೆಜಿಸ್ಟ್ರೇಟ್ ಇತ್ಯಾದಿ ಆಗುತ್ತದೆ, ನಾಳೆ ಏನಾಗುತ್ತಾರೆ? ಒಂದುವೇಳೆ ಆತ್ಮವು ಚೆನ್ನಾಗಿ ನೆನಪು ಮಾಡಿದರೆ ನಂತರ ಅಮರಲೋಕದಲ್ಲಿ ಹೋಗಿ ಜನ್ಮ ಪಡೆಯಬಹುದು, ಮೃತ್ಯುಲೋಕದಲ್ಲಿ ಮತ್ತೆ ಜನ್ಮ ಪಡೆಯುವ ಅವಶ್ಯಕತೆಯಿಲ್ಲ. ಒಂದುವೇಳೆ ಲೆಕ್ಕಾಚಾರವು ಉಳಿದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಶಿಕ್ಷೆಯಿಂದ ಸಮಾಪ್ತಿ ಮಾಡಿದರೆ ನಂತರ ಶ್ರೇಷ್ಠ ಪದವಿಯು ಸಿಗುವುದಿಲ್ಲ. ಕರ್ಮದ ಗುಹ್ಯಗತಿಯನ್ನು ತಂದೆಯು ಮಕ್ಕಳಿಗೆ ತಿಳಿಸಿಕೊಡುತ್ತಾರೆ. ಸತ್ಯಯುಗವು ಸತೋಪ್ರಧಾನವಾಗಿದೆ ಎಂದು ಮಕ್ಕಳು ತಿಳಿದಿದ್ದೀರಿ, ಅಲ್ಲಿನ ಪ್ರತಿಯೊಂದು ವಸ್ತುವು ಸತೋಪ್ರಧಾನವಾಗಿರುವುದು. ಕೃಷ್ಣನು ಹಸುಗಳನ್ನು ಸಂಭಾಲನೆ ಮಾಡುತ್ತಿದ್ದನೆಂದು ಹೇಳುತ್ತಾರೆ. ರಾಜರು ಹಸುಗಳನ್ನು ಸಂಭಾಲನೆ ಮಾಡುತ್ತಾರೆಯೇ! ಅಂತಹ ಮಾತುಗಳಿರಲು ಸಾಧ್ಯವೇ ಇಲ್ಲ. ಸತ್ಯಯುಗದಲ್ಲಿ ಹಸುಗಳು ಬಹಳ ಫಸ್ಟ್ಕ್ಲಾಸ್ ಆಗಿರುತ್ತವೆ, ಅವುಗಳನ್ನು ಕಾಮಧೇನು ಎಂದೂ ಸಹ ಹೇಳುತ್ತಾರೆ. ಜಗದಂಬಾ ಸರಸ್ವತಿಯೂ ಸಹ ಕಾಮಧೇನುವಾಗಿದ್ದಾರೆ. 21 ಜನ್ಮಗಳಿಗೆ ಮನೋಕಾಮನೆಗಳನ್ನು ಪೂರ್ಣ ಮಾಡುವವರಾಗಿದ್ದಾರೆ ಅಂದಮೇಲೆ ನೀವೂ ಸಹ ಕಾಮಧೇನು ಅಲ್ಲವೆ. ಅದೇ ಹೆಸರನ್ನು ಹಸುಗಳಿಗೆ ಇಟ್ಟಿದ್ದಾರೆ, ಆ ಹಸುಗಳು ಬಹಳ ಹಾಲನ್ನು ಕೊಡುತ್ತವೆ. ರಾಜರುಗಳ ಮನೆಯಲ್ಲಿಯೂ ಸಹ ಬಹಳ ಫಸ್ಟ್ಕ್ಲಾಸ್ ಆಗಿರುವ ಹಸುಗಳಿರುತ್ತವೆ, ರಾಜರ ಬಳಿ ಒಳ್ಳೊಳ್ಳೆಯ ಹಸುಗಳಿದ್ದವು ಅಂದಮೇಲೆ ಸ್ವರ್ಗವು ಎಷ್ಟೊಂದು ಸುಂದರವಾಗಿರಬಹುದು! ಅಲ್ಲಿ ಯಾವುದೇ ದುರ್ವಾಸನೆ ಇತ್ಯಾದಿಗಳು ಖಂಡಿತ ಬರುವುದಿಲ್ಲ. |
ನಾನು ನಿಮ್ಮನ್ನು ಹೂಗಳನ್ನಾಗಿ ಮಾಡಿ ಜೊತೆಯಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆಂದು ತಿಳಿಸುತ್ತಾರೆ. ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ, ಪತಿತ ಪ್ರಪಂಚ, ಪತಿತ ಶರೀರದಲ್ಲಿಯೇ ಬನ್ನಿ ಎಂದು ಕರೆಯುತ್ತೀರಿ. ಇದು ಪತಿತಶರೀರ, ಅದು ಪಾವನ ಫರಿಶ್ತಾ ಆಗಿದೆ. ಹೋಲಿಕೆಯನ್ನು ತೋರಿಸುತ್ತಾರಲ್ಲವೆ. ನೀವೂ ಸಹ ಪತಿತರಿಂದ ಈ ಪಾವನ ಫರಿಶ್ತೆಗಳಂತೆ ಆಗುತ್ತೀರಿ. ಸತ್ಯಯುಗೀ ದೇವತೆಗಳಿಗೆ ಡೀಟಿ (ದೈವೀ) ಎಂದು ಹೇಳುತ್ತಾರೆ. ಸೂಕ್ಷ್ಮವತನವಾಸಿಗಳಿಗೆ ಫರಿಶ್ತೆಗಳೆಂದು ಹೇಳುತ್ತಾರೆ. ನೀವೀಗ ಪವಿತ್ರ ಫರಿಶ್ತೆಗಳಾಗುತ್ತಿದ್ದೀರಿ. ತಂದೆಯು ಎಷ್ಟೊಂದು ಸಹಜವಾದ ಶಿಕ್ಷಣ ಕೊಡುತ್ತಾರೆ! ಇಲ್ಲಿ ನೀವು ಬರುತ್ತೀರೆಂದ ಮೇಲೆ ಹೊರಗಡೆಯ ಯಾವುದೇ ಮಿತ್ರ ಸಂಬಂಧಿ, ಮನೆ-ಮಠ, ವ್ಯಾಪಾರ ಇತ್ಯಾದಿಗಳ ನೆನಪು ಬರಬಾರದು. ನೀವು ತಂದೆಯ ಸನ್ಮುಖದಲ್ಲಿ ಬಂದಿದ್ದೀರಲ್ಲವೆ. ಇಲ್ಲಿ ಬಂದಿದ್ದೀರೆಂದ ಮೇಲೆ ಯೋಗದಿಂದ ಸಂಪಾದನೆ ಮಾಡುವುದರಲ್ಲಿ ತೊಡಗಿ ಬಿಡಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಶಿಕ್ಷೆಗಳಿಂದ ಮುಕ್ತರಾಗಬೇಕೆಂದರೆ ಹಳೆಯ ಎಲ್ಲಾ ಲೆಕ್ಕಾಚಾರವನ್ನು ಯೋಗಬಲದಿಂದ ಸಮಾಪ್ತಿ ಮಾಡಬೇಕು. ನಿಮಿತ್ತರಾಗಿ ಎಲ್ಲವನ್ನೂ ಸಂಭಾಲನೆ ಮಾಡಬೇಕು. ಯಾವುದೇ ಮಾತಿನ ಚಿಂತೆಯನ್ನಿಟ್ಟುಕೊಳ್ಳಬಾರದು, ಆತ್ಮಾಭಿಮಾನಿ ಆಗಬೇಕಾಗಿದೆ. |
2. ಇದು ಸಂಪಾದನೆ ಮಾಡುವ ಸಮಯವಾಗಿದೆ, ಇದರಲ್ಲಿ ಮನೆ-ಮಠ, ವ್ಯಾಪಾರ ಇತ್ಯಾದಿಗಳನ್ನು ನೆನಪು ಮಾಡಬಾರದು. ಫರಿಶ್ತೆಗಳಾಗಲು ಒಬ್ಬ ತಂದೆಯ ನೆನಪಿನಲ್ಲಿರುವ ಸಂಪೂರ್ಣ ಪುರುಷಾರ್ಥವನ್ನು ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಅರ್ಥಾತ್ ಆತ್ಮಗಳ ಪ್ರತಿ ಪರಮಪಿತ ಪರಮಾತ್ಮನು ಇದನ್ನು ತಿಳಿಸುತ್ತಿದ್ದಾರೆ. ಬೇಹದ್ದಿನ ತಂದೆಯು ನಮಗೆ ವರದಾನ ನೀಡುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಮನುಷ್ಯರಂತೂ ಪುತ್ರವಾನ್ಭವ, ಆಯುಷ್ಯವಾನ್ಭವ, ಧನವಾನ್ಭವ ಎಂದು ಆಶೀರ್ವಾದ ಮಾಡುತ್ತಾರೆ, ಇಲ್ಲಿ ನಿಮಗೆ ತಂದೆಯು ಆಯುಷ್ಯವಾನ್ಭವ ಎಂದು ವರದಾನ ಕೊಡುತ್ತಾರೆ. ನಿಮ್ಮದು ಧೀರ್ಘಾಯಸ್ಸು ಆಗಿ ಬಿಡುವುದು. ಅಲ್ಲಿ ಪುತ್ರರೂ ಇರುವರು ಮತ್ತು ಅವರು ಸುಖ ಕೊಡುವಂತಹವರಾಗಿರುವರು. ಇಲ್ಲಿ ಯಾರೆಲ್ಲಾ ಮಕ್ಕಳಿದ್ದಾರೆಯೋ ಎಲ್ಲರೂ ದುಃಖ ಕೊಡುವವರಾಗಿದ್ದಾರೆ, ಸತ್ಯಯುಗದಲ್ಲಿರುವವರು ಸುಖ ಕೊಡುವ ಮಕ್ಕಳಾಗಿರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ಬೇಹದ್ದಿನ ಸುಖದ ಆಸ್ತಿಯನ್ನು ಕೊಡುತ್ತಿದ್ದಾರೆ, ಅವಶ್ಯವಾಗಿ ನಾವು ಆಯುಷ್ಯವಂತರು, ಧನವಂತರೂ ಆಗುತ್ತೇವೆ. ಈಗ ಮನಸ್ಸಿನಲ್ಲಿ ಯಾವುದೇ ಕಾಮನೆಯನ್ನು ಇಟ್ಟುಕೊಳ್ಳಬಾರದು. ನಿಮ್ಮ ಎಲ್ಲಾ ಕಾಮನೆಗಳು ಸತ್ಯಯುಗದಲ್ಲಿ ಪೂರ್ಣವಾಗುವವು. ಈ ನರಕದಲ್ಲಿ ಯಾವುದೇ ಕಾಮನೆಯನ್ನು ಇಟ್ಟುಕೊಳ್ಳಬಾರದು. ಹಣದ ಕಾಮನೆಯನ್ನೂ ಇಟ್ಟುಕೊಳ್ಳಬೇಡಿ, ಬಹಳ ಹಣವಿರಲಿ, ದೊಡ್ಡ ನೌಕರಿ ಸಿಗಲಿ ಎಂಬ ಹೆಚ್ಚಿನ ಇಚ್ಛೆಯನ್ನೂ ಇಟ್ಟುಕೊಳ್ಳಬೇಡಿ. ಹೊಟ್ಟೆಗೆ ಒಂದು ಪಾವು ಹಿಟ್ಟು ಸಾಕು ಆದ್ದರಿಂದ ಹೆಚ್ಚಿನ ಲೋಭದಲ್ಲಿರಬಾರದು. ಹೆಚ್ಚು ಹಣವಿದ್ದರೂ ಸಹ ಅದು ಸಮಾಪ್ತಿಯಾಗುವುದು. ಮಕ್ಕಳಿಗೆ ತಿಳಿದಿದೆ - ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ತಂದೆಯು ಹೇಳುತ್ತಾರೆ - ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದು ಅಂದಮೇಲೆ ಯಾವ ದಾನವನ್ನು ಕೊಡಬೇಕು? ಈ ಪಂಚವಿಕಾರಗಳ ದಾನ. ಈ ದಾನವನ್ನು ಕೊಡುವುದರಿಂದ ಗ್ರಹಚಾರವು ಬಿಟ್ಟುಹೋಗುವುದು ಮತ್ತು ನೀವು 16 ಕಲಾ ಸಂಪೂರ್ಣರಾಗಿಬಿಡುತ್ತೀರಿ. ನಿಮಗೆ ತಿಳಿದಿದೆ - ನಾವು ಇಲ್ಲಿಯೇ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಬೇಕಾಗಿದೆ. 5 ವಿಕಾರಗಳ ದಾನ ಕೊಡಬೇಕಾಗುತ್ತದೆ. ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವ ಆಸೆಯನ್ನು ಬಿಟ್ಟರೆ ಮತ್ತ್ಯಾವುದೇ ಆಸೆಯನ್ನು ಇಟ್ಟುಕೊಳ್ಳಬೇಡಿ, ಇನ್ನು ಸ್ವಲ್ಪವೇ ಸಮಯವಿದೆ, ಬಹಳ ಕಳೆಯಿತು, ಸ್ವಲ್ಪವೇ ಉಳಿಯಿತೆಂದು ಗಾಯನವಿದೆ, ಇನ್ನು ಸ್ವಲ್ಪವೇ ಸಮಯದಲ್ಲಿ ವಿನಾಶವಾಗುವುದು ಆದ್ದರಿಂದ ಈ ಹಳೆಯ ಪ್ರಪಂಚದ ಯಾವುದೇ ಆಸೆಯನ್ನು ಇಟ್ಟುಕೊಳ್ಳಬೇಡಿ, ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ. ನೆನಪಿನಿಂದಲೇ ನೀವು ಮಕ್ಕಳು ಸತೋಪ್ರಧಾನರಾಗಬೇಕಾಗಿದೆ. ಈ ಪ್ರಪಂಚದಲ್ಲಿ ಮನುಷ್ಯರು ಯಾವ ಆಸೆಯನ್ನು ಇಟ್ಟುಕೊಳ್ಳುವರೋ ಅದ್ಯಾವುದನ್ನೂ ನೀವು ಇಟ್ಟುಕೊಳ್ಳಬೇಡಿ. ಒಬ್ಬ ಶಿವ ತಂದೆಯಿಂದ ನಾವು ನಮ್ಮ ಸ್ವರ್ಗದ ಆಸ್ತಿಯನ್ನು ಪಡೆಯಬೇಕೆಂದು ಕೇವಲ ಒಂದೇ ಆಸೆಯನ್ನಿಟ್ಟುಕೊಳ್ಳಿ. ಎಂದೂ ಯಾರಿಗೂ ದುಃಖ ಕೊಡಬಾರದು. ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುವುದೂ ಕೂಡ ಎಲ್ಲದಕ್ಕಿಂತ ದೊಡ್ಡ ದುಃಖವಾಗಿದೆ. ಆದ್ದರಿಂದ ಸನ್ಯಾಸಿಗಳು ಸ್ತ್ರೀಯರಿಂದ ದೂರವಾಗಿ ಬಿಡುತ್ತಾರೆ. ಇವರು ಬಿಟ್ಟು ಬಿಟ್ಟಿದ್ದಾರೆಂದು ಹೇಳುತ್ತಾರೆ, ಈ ಸಮಯದಲ್ಲಿ ರಾವಣರಾಜ್ಯದಲ್ಲಿ ಎಲ್ಲರೂ ಪತಿತರು, ಪಾಪಾತ್ಮರಾಗಿದ್ದಾರೆ. |
ಈಗ ಸಮಯವು ಬಹಳ ಕಡಿಮೆಯಿದೆ, ಒಂದುವೇಳೆ ನೀವು ತಂದೆಯ ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠರಾಗುವುದಿಲ್ಲ. ಮಕ್ಕಳೇ ಶ್ರೇಷ್ಠಾತಿ ಶ್ರೇಷ್ಠರಾಗಬೇಕಾಗಿದೆ ಆದ್ದರಿಂದ ಪಂಚ ವಿಕಾರಗಳ ದಾನ ಕೊಡಬೇಕಾಗಿದೆ ಆಗಲೇ ಈ ಗ್ರಹಣವು ಬಿಟ್ಟು ಹೋಗುವುದು. ಎಲ್ಲರ ಮೇಲೆ ಗ್ರಹಚಾರವಿದೆ, ಸಂಪೂರ್ಣ ಕಪ್ಪಾಗಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ಒಂದುವೇಳೆ ನನ್ನಿಂದ ಆಸ್ತಿಯನ್ನು ಪಡೆಯಬೇಕೆಂದರೆ ಪಾವನರಾಗಿ. ದ್ವಾಪರದಿಂದ ಹಿಡಿದು ಪತಿತರಾಗುತ್ತಾ ಆಗುತ್ತಾ ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ ಆದ್ದರಿಂದಲೇ ಪತಿತ ಪಾವನ ಬಾ, ಬಂದು ನಮ್ಮನ್ನು ಪಾವನ ಮಾಡು ಎಂದು ಹಾಡುತ್ತೀರಿ ಅಂದಮೇಲೆ ತಂದೆಯು ಆದೇಶ ನೀಡುತ್ತಾರೆ - ಮಕ್ಕಳೇ, ಈಗ ಪತಿತರಾಗಬೇಡಿ, ಕಾಮ ಮಹಾ ಶತ್ರುವಿನ ಮೇಲೆ ವಿಜಯ ಪಡೆಯಿರಿ, ಇದರಿಂದಲೇ ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆದಿರಿ. ತಂದೆಯು ತಿಳಿಸುತ್ತಾರೆ - ಸ್ವರ್ಗದಲ್ಲಿ ಪವಿತ್ರವಾಗಿದ್ದಿರಿ. ಈಗ ರಾವಣನ ಮತದಂತೆ ನೀವು ಪತಿತರಾಗಿದ್ದೀರಿ ಆದ್ದರಿಂದಲೇ ದೇವತೆಗಳ ಮುಂದೆ ಹೋಗಿ ನೀವು ಸರ್ವಗುಣ ಸಂಪನ್ನ, ಸಂಪೂರ್ಣ ನಿರ್ವಿಕಾರಿ ನಾವೆಲ್ಲರೂ ವಿಕಾರಿಗಳಾಗಿದ್ದೇವೆ ಎಂದು ಮಹಿಮೆಯನ್ನು ಮಾಡುತ್ತೀರಿ. ನಿರ್ವಿಕಾರಿಗಳಾಗುವುದರಿಂದ ಸುಖವೇ ಸುಖ ಸಿಗುತ್ತದೆ. ಈಗ ನೀವು ಮಕ್ಕಳನ್ನು ನಿರ್ವಿಕಾರಿಗಳನ್ನಾಗಿ ಮಾಡಲು ನಾನು ಬಂದಿದ್ದೇನೆ. ಈಗ ನೀವು ಎಲ್ಲಾ ಇಚ್ಛೆಗಳನ್ನು ಬಿಡಬೇಕಾಗಿದೆ. ಭಲೆ ನಿಮ್ಮ ವ್ಯವಹಾರಗಳನ್ನೂ ಮಾಡಿಕೊಳ್ಳಿ, ಒಬ್ಬರಿಗೊಬ್ಬರು ಜ್ಞಾನಾಮೃತವನ್ನು ಕುಡಿಸಬೇಕು. ಅಮೃತವನ್ನು ಬಿಟ್ಟು ವಿಷವನ್ನು ಏಕೆ ಕುಡಿಯುವಿರಿ! ಎಂದು ಗಾಯನವೂ ಇದೆ. ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು. ನಾವು ನೆನಪಿನ ಯಾತ್ರೆಯಿಂದಲೇ ಸಂಪೂರ್ಣ ಸತೋಪ್ರಧಾನರಾಗುತ್ತೇವೆ, 63 ಜನ್ಮಗಳು ಪಾಪ ಮಾಡಿದ್ದೇವೆ, ಇದು ನೆನಪಿನಿಂದಲೇ ಸಮಾಪ್ತಿಯಾಗಬೇಕಾಗಿದೆ. ಈಗ ನಿರ್ವಿಕಾರಿಗಳಾಗಬೇಕಾಗಿದೆ. ಭಲೆ ಎಷ್ಟೊಂದು ಮಾಯೆಯ ಬಿರುಗಾಳಿಗಳು ಬರುತ್ತವೆ ಆದರೆ ಪತಿತರಾಗಬಾರದು. ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ನೀವೇ ಸತೋಪ್ರಧಾನ ಪೂಜ್ಯ ದೇವತೆಗಳಾಗಿದ್ದಿರಿ, ನಂತರ ನೀವೇ ಪೂಜ್ಯರಿಂದ ಪೂಜಾರಿಗಳಾಗುತ್ತೀರಿ. ನಾವು ನಿರೋಗಿಗಳಾಗಿದ್ದೆವು ನಂತರ ರೋಗಿಗಳಾದೆವು ಈಗ ಮತ್ತೆ ನಿರೋಗಿಗಳಾಗುತ್ತಿದ್ದೇವೆ. ನಾವು ನಿರೋಗಿಗಳಾಗಿದ್ದಾಗ ಧೀರ್ಘಾಯಸ್ಸು ಇತ್ತು, ಈಗಂತೂ ನೋಡಿ ಮನುಷ್ಯರು ಕುಳಿತು-ಕುಳಿತಲ್ಲಿಯೇ ಶರೀರ ಬಿಡುತ್ತಾರೆ ಆದ್ದರಿಂದ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು, ಇವೆಲ್ಲವೂ ಕೊಳಕು ಆಸೆಗಳಾಗಿವೆ. ಮುಳ್ಳುಗಳಿಂದ ಹೂವಾಗುವುದು ಒಂದೇ ಫಸ್ಟ್ಕ್ಲಾಸ್ ಆಸೆಯಾಗಿದೆ - ನನ್ನನ್ನು ನೆನಪು ಮಾಡಿದರೆ ಪುಣ್ಯಾತ್ಮರು ಆಗಿ ಬಿಡುತ್ತೀರಿ ಎಂದು ತಂದೆಯು ಹೇಳುತ್ತಾರೆ. ಈ ಸಮಯದಲ್ಲಿ ಎಲ್ಲರ ಮೇಲೆ ರಾಹುವಿನ ಗ್ರಹಣ ಹಿಡಿದಿದೆ. ಇಡೀ ಭಾರತದ ಮೇಲೆ ರಾಹುವಿನ ಗ್ರಹಣವಿದೆ ನಂತರ ಬೃಹಸ್ಪತಿಯ ದೆಶೆ ಬೇಕಾಗುವುದು. ಈಗ ನಮ್ಮ ಮೇಲೆ ಬೃಹಸ್ಪತಿಯ ದೆಶೆ ಕುಳಿತಿದೆ ಎಂದು ನೀವು ತಿಳಿದಿದ್ದೀರಿ. ಭಾರತವು ಸ್ವರ್ಗವಾಗಿತ್ತಲ್ಲವೆ. ಸತ್ಯಯುಗದಲ್ಲಿ ನಿಮ್ಮಮೇಲೆ ಬೃಹಸ್ಪತಿಯ ದೆಶೆಯಿರುತ್ತದೆ. ಈ ಸಮಯದಲ್ಲಿ ರಾಹುವಿನ ದೆಶೆಯಿದೆ, ಈಗ ಪುನಃ ಬೇಹದ್ದಿನ ಬೃಹಸ್ಪತಿ ದೆಶೆ ಸಿಗುತ್ತದೆ. ಬೃಹಸ್ಪತಿ ದೆಶೆಯಲ್ಲಿ 21 ಜನ್ಮಗಳಿರುತ್ತವೆ, ತ್ರೇತಾಯುಗದಲ್ಲಿ ಶುಕ್ರದೆಶೆಯಿರುತ್ತದೆ. ಯಾರೆಷ್ಟು ನೆನಪು ಮಾಡುತ್ತಾರೆಯೋ ಅಷ್ಟು ಬೃಹಸ್ಪತಿಯ ದೆಶೆಯಿರುತ್ತದೆ. ಈಗ ಎಲ್ಲರೂ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತಲೇ ಇರಿ ಆಗ ವಿಕರ್ಮ ವಿನಾಶವಾಗುತ್ತದೆ ಮತ್ತು ನೀವು ಹಾರಲು ಯೋಗ್ಯರಾಗುತ್ತೀರಿ. ಮಾಯೆಯು ನಿಮ್ಮ ರೆಕ್ಕೆಗಳನ್ನು ಕತ್ತರಿಸಿಬಿಟ್ಟಿದೆ. ಈಗ ನಿಮಗೆ ಈಶ್ವರೀಯ ಮತ ಸಿಕ್ಕಿದೆ ಯಾವುದರಿಂದ ಸದಾ ಸುಖಿಗಳಾಗುತ್ತೀರಿ. ಈಶ್ವರೀಯ ಜ್ಞಾನದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ, ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಈಶ್ವರೀಯ ಮತವು ಸಿಗುತ್ತದೆ, ಒಬ್ಬ ತಂದೆಯನ್ನು ನೆನಪು ಮಾಡಿದರೆ ಅಂತ್ಯಮತಿ ಸೋ ಗತಿಯಾಗುವುದು. ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ, ಪವಿತ್ರರಾಗುತ್ತೀರಿ. ಪವಿತ್ರ ಆತ್ಮರೇ ಸ್ವರ್ಗಕ್ಕೆ ಯೋಗ್ಯರಾಗುತ್ತಾರೆ. ಅಲ್ಲಿ ನಿಮ್ಮ ಶರೀರ ನಿರೋಗಿಯಾಗಿರುತ್ತದೆ, ಧೀರ್ಘಾಯಸ್ಸೂ ಇರುತ್ತದೆ, ಧನವೂ ಸಮೃದ್ಧಿಯಾಗಿರುತ್ತದೆ. ಅಲ್ಲಿ ಎಂದೂ ಪುತ್ರರನ್ನು ದತ್ತು ಮಾಡಿಕೊಳ್ಳುವುದಿಲ್ಲ. ಆಯುಷ್ಯವಾನ್ಭವ, ಸಂಪತ್ತಿವಾನ್ಭವ ಎಂದು ಹೇಳುತ್ತಾರೆ, ಒಂದು ಗಂಡು ಮಗುವಿರುತ್ತದೆ. ಈ ಸಮಯದಲ್ಲಿ ತಂದೆಯು ಎಲ್ಲರನ್ನೂ ಧರ್ಮದ ಮಕ್ಕಳನ್ನಾಗಿ ಮಾಡುತ್ತಾರೆ. ಅಂದಮೇಲೆ ಸತ್ಯಯುಗದಲ್ಲಿ ಯಾವುದೇ ಧರ್ಮದ ಮಕ್ಕಳಿರುವುದಿಲ್ಲ. ಒಂದು ಹೆಣ್ಣು ಮಗು, ಒಂದು ಗಂಡು ಮಗು ಯೋಗಬಲದಿಂದ ಜನ್ಮ ಪಡೆಯುತ್ತಾರೆ. ಅಲ್ಲಿ ಮಕ್ಕಳು ಹೇಗೆ ಜನ್ಮ ಪಡೆಯುತ್ತಾರೆಂದು ಕೇಳುತ್ತಾರೆ, ಅಲ್ಲಿ ಯೋಗಬಲದಿಂದ ಜನ್ಮವಾಗುತ್ತದೆ. ಇದು ಡ್ರಾಮಾದಲ್ಲಿ ನಿಗಧಿಯಾಗಿದೆ. ಸತ್ಯಯುಗದಲ್ಲಿ ಎಲ್ಲರೂ ಯೋಗಿಗಳಿರುತ್ತಾರೆ, ಕೃಷ್ಣನನ್ನು ಯೋಗೇಶ್ವರನೆಂದು ಕರೆಯಲಾಗುತ್ತದೆ. ಕೃಷ್ಣನು ಯೋಗದಲ್ಲಿ ಕುಳಿತಿರುತ್ತಾನೆಂದಲ್ಲ, ಕೃಷ್ಣನು ಸಂಪೂರ್ಣ ಪವಿತ್ರ ಯೋಗಿಯಾಗಿದ್ದಾನೆ. ಈಶ್ವರನು ಎಲ್ಲರನ್ನೂ ಯೋಗೇಶ್ವರನನ್ನಾಗಿ ಮಾಡಿದ್ದರು ಆದ್ದರಿಂದಲೇ ಭವಿಷ್ಯದಲ್ಲಿ ಯೋಗಿಗಳಾಗಿರುತ್ತಾರೆ. ತಂದೆಯು ಯೋಗಿಗಳನ್ನಾಗಿ ಮಾಡಿದ್ದರು, ಯೋಗಿಗಳಿಗೆ ಧೀರ್ಘಾಯಸ್ಸು ಇರುತ್ತದೆ. ಭೋಗಿಗಳ ಆಯಸ್ಸು ಬಹಳ ಕಡಿಮೆಯಿರುತ್ತದೆ. ಈಶ್ವರನು ಮಕ್ಕಳನ್ನು ಪವಿತ್ರರನ್ನಾಗಿ ಮಾಡಿ ಯೋಗವನ್ನು ಕಲಿಸಿಕೊಟ್ಟು ದೇವತೆಗಳನ್ನಾಗಿ ಮಾಡಿದರು, ಇವರಿಗೆ ಯೋಗಿಗಳೆಂದು ಹೇಳಲಾಗುತ್ತದೆ. ಯೋಗಿ ಅಥವಾ ಋಷಿಗಳು ಪವಿತ್ರರಾಗಿರುತ್ತಾರೆ. ನೀವು ರಾಜಋಷಿಗಳಾಗಿದ್ದೀರಿ ಎಂದು ತಿಳಿಸಲಾಗಿದೆ. ರಾಜ್ಯಭಾಗ್ಯವನ್ನು ಪಡೆಯಲು ರಾಜಯೋಗವನ್ನು ಕಲಿಯುತ್ತಿದ್ದೀರಿ, ಈ ಸಮಯದಲ್ಲಿ ಮಕ್ಕಳಾಗಲಿ ಎಂಬ ಯಾವುದೇ ಉಲ್ಟಾ ಆಸೆಯನ್ನು ಇಟ್ಟುಕೊಳ್ಳಬಾರದು ಮತ್ತೆ ವಿಕಾರದಲ್ಲಿ ಹೋಗಬೇಕಾಗುತ್ತದೆ, ಕಾಮ ಕಟಾರಿಯನ್ನು ನಡೆಸಬೇಕಾಗುತ್ತದೆ, ದೇಹಾಭಿಮಾನಿಗಳು ಕಾಮ ಕಟಾರಿಯನ್ನು ನಡೆಸುತ್ತಾರೆ. ದೇಹಿ-ಅಭಿಮಾನಿಗಳು ಕಾಮ ಕಟಾರಿ ನಡೆಸುವುದಿಲ್ಲ, ಪವಿತ್ರರಾಗಬೇಕಾಗಿದೆ. ಈಗ ಕಾಮ ಕಟಾರಿಯನ್ನು ನಡೆಸಬಾರದು ಎಂದು ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ಪವಿತ್ರರಾಗುತ್ತೀರೆಂದರೆ ನಿಮ್ಮೆಲ್ಲರ ದುಃಖವು ದೂರವಾಗಿ ಬಿಡುವುದು, ಸ್ವರ್ಗದ ಮಾಲೀಕರಾಗುತ್ತೀರಿ. ತಂದೆಯು ಎಷ್ಟೊಂದು ಸುಖ ಕೊಡುತ್ತಾರೆ ಅಂದಮೇಲೆ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ. |
ತಂದೆಯಂತೂ ಬಡವರ ಬಂಧುವಾಗಿದ್ದಾರೆ. ಸುಧಾಮನು ಎರಡು ಹಿಡಿ ಅವಲಕ್ಕಿಯನ್ನು ಕೊಟ್ಟು ಮಹಲನ್ನೇ ಪಡೆದನೆಂದು ಗಾಯನವಿದೆ. ತಂದೆಯು 21 ಜನ್ಮಗಳಿಗೆ ಆಸ್ತಿಯನ್ನು ಕೊಡುತ್ತಾರೆ, ಈಗ ಹಿಂತಿರುಗಿ ಹೋಗಬೇಕಾಗಿದೆ ಎಂದು ನೀವು ತಿಳಿದಿದ್ದೀರಿ. ಶಿವ ತಂದೆಯು ಮಾಡುತ್ತಿರುವ ಸ್ಥಾಪನಾ ಕಾರ್ಯದಲ್ಲಿ ಎಷ್ಟು ಸಾಧ್ಯವೋ ಅಷ್ಟು ಮಾಡಬೇಕಾಗಿದೆ. ಮನೆಯಲ್ಲಿ ಯುನಿವರ್ಸಿಟಿ ಅಥವಾ ಆಸ್ಪತ್ರೆಯನ್ನು ತೆರೆಯಬೇಕು. ಸಹೋದರರೇ ಮತ್ತು ಸಹೋದರಿಯರೇ 21 ಜನ್ಮಗಳಿಗೆ ಸದಾ ಆರೋಗ್ಯ ಹಾಗೂ ಸಂಪತ್ತನ್ನು ಪಡೆಯಬೇಕೆಂದರೆ ಇಲ್ಲಿ ಬಂದು ತಿಳಿದುಕೊಳ್ಳಿ ಎಂದು ಬೋರ್ಡಿನ ಮೇಲೆ ಬರೆಯಬೇಕಾಗಿದೆ. ನಾವು ಒಂದು ಸೆಕೆಂಡಿನಲ್ಲಿ ಸದಾ ಆರೋಗ್ಯ, ಸಂಪತ್ತಿವಂತರು ಹೇಗೆ ಆಗುವುದು ಎಂಬ ಮಾರ್ಗವನ್ನು ತೋರಿಸುತ್ತೇವೆ. ನೀವು ಸರ್ಜನ್ ಆಗಿದ್ದೀರಲ್ಲವೆ. ಸರ್ಜನ್ಗಳಂತೂ ಅವಶ್ಯವಾಗಿ ಬೋರ್ಡ್ ಹಾಕುತ್ತಾರೆ ಇಲ್ಲದಿದ್ದರೆ ಮನುಷ್ಯರಿಗೆ ಹೇಗೆ ತಿಳಿಯುತ್ತದೆ! ನೀವೂ ಸಹ ಮನೆ ಮುಂದೆ ಬೋರ್ಡನ್ನು ಹಾಕಬೇಕಾಗಿದೆ. ಯಾರೇ ಬರುತ್ತಾರೆಂದರೆ ಇಬ್ಬರು ತಂದೆಯರ ರಹಸ್ಯವನ್ನು ತಿಳಿಸಬೇಕಾಗಿದೆ. ಹದ್ದಿನ ತಂದೆಯಿಂದ ಹದ್ದಿನ ಆಸ್ತಿಯನ್ನು ಪಡೆಯುತ್ತಲೇ ಬಂದಿದ್ದೀರಿ. ನನ್ನನ್ನು ನೆನಪು ಮಾಡುತ್ತೀರೆಂದರೆ ಬೇಹದ್ದಿನ ಆಸ್ತಿಯು ಸಿಗುತ್ತದೆ ಎಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಪ್ರಾಜೆಕ್ಟರ್, ಪ್ರದರ್ಶನಿಗಳಲ್ಲಿ ಮೊದಲು ಇದನ್ನು ತಿಳಿಸಬೇಕಾಗಿದೆ. ಈ ಪುರುಷಾರ್ಥದಿಂದ ಈ ರೀತಿಯಾಗುತ್ತೀರಿ. ಈಗ ಸಂಗಮಯುಗವಿದೆ, ಕಲಿಯುಗದಿಂದ ಸತ್ಯಯುಗವಾಗಬೇಕಾಗಿದೆ. ನೀವು ಭಾರತವಾಸಿಗಳು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನರಾಗಿದ್ದೀರಿ. ನನ್ನನ್ನು ನೆನಪು ಮಾಡುತ್ತೀರೆಂದರೆ ಸ್ವರ್ಗದ ಮಾಲೀಕರಾಗುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಮಾತುಗಳಂತು ಎರಡು ಇವೆ - ಅಲ್ಫ್ನನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯವು ನಿಮ್ಮದಾಗುತ್ತದೆ. ಈ ನೆನಪಿನಿಂದಲೇ ಖುಷಿಯಾಗಿರುತ್ತೀರಿ, ಈ ಕೊಳಕು ಪ್ರಪಂಚದಲ್ಲಿ ಯಾವುದೇ ಆಸೆಯನ್ನು ಇಟ್ಟುಕೊಳ್ಳಬಾರದು. ಇಲ್ಲಿ ನೀವು ಬದುಕಿದ್ದಂತೆಯೇ ಸಾಯುವ ರೀತಿಯಿರಲು ಪುರುಷಾರ್ಥ ಮಾಡುತ್ತೀರಿ, ಅವರಂತೂ ಸತ್ತ ಮೇಲೆ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ನಾವು ಸ್ವರ್ಗವಾಸಿಗಳಾಗಲು ತಂದೆಯನ್ನು ನೆನಪು ಮಾಡುತ್ತೇವೆಂದು ನೀವು ಎಲ್ಲರಿಗೂ ಹೇಳುತ್ತೀರಿ. ಅವರಿಂದ ಬೇಹದ್ದಿನ ಸುಖ ಸಿಗುತ್ತದೆ. ತಂದೆಯನ್ನು ನೆನಪು ಮಾಡುವುದರಿಂದ ಎಂದೂ ಸಹ ನೀವು ಅಳುವುದಿಲ್ಲ, ದುಃಖಿಸುವುದೂ ಇಲ್ಲ. ಮಾಯೆಯ ಬಿರುಗಾಳಿಗಳು ಬರುತ್ತವೆ, ಅದರ ವಿಚಾರ ಮಾಡಬಾರದು. ಮಾಯೆಯ ಬಿರುಗಾಳಿಗಳಂತೂ ಬಂದೇ ಬರುತ್ತವೆ, ಇದು ಯುದ್ಧವಾಗಿದೆ. ಸಂಕಲ್ಪ, ವಿಕಲ್ಪಗಳು ಬರುತ್ತವೆ ಅಂದಮೇಲೆ ಸಮಯವು ವ್ಯರ್ಥವಾಗಿ ಹೋಗುತ್ತದೆ. ಬಿರುಗಾಳಿ ಬಂದರೆ ಸದಾ ಇರಲು ಸಾಧ್ಯವೇ! ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಿ ಆಸ್ತಿಯನ್ನು ಪಡೆಯಬೇಕಾಗಿದೆ. ಇದೇ ಧ್ವನಿಯು ಆಂತರ್ಯದಲ್ಲಿ ಮೊಳಗುತ್ತಿರಬೇಕಾಗಿದೆ. ತಂದೆಯಂತೂ ಯಾವುದೇ ಕಷ್ಟವನ್ನು ಕೊಡುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕು, ಬೇರೆಲ್ಲವನ್ನೂ ಮರೆತು ಬಿಡಿ. ಇವರೆಲ್ಲರೂ ಸತ್ತು ಹೋಗಿದ್ದಾರೆ. ಒಬ್ಬರಿಗೊಬ್ಬರು ಇದೇ ಮಾತನಾಡಬೇಕು. ಬಾಬಾ, ಈಗ ನಿಮ್ಮನ್ನೇ ನೆನಪು ಮಾಡುತ್ತೇನೆ, ನಿಮ್ಮಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇನೆ. ನಾವು ಮೂರು ಗಂಟೆಯಿಂದ ನಾಲ್ಕು ಗಂಟೆಯವರೆಗೆ ಅವಶ್ಯವಾಗಿ ಎದ್ದು ನೆನಪು ಮಾಡುತ್ತೇವೆಂದು ಸಮಯವನ್ನು ಇಟ್ಟುಕೊಳ್ಳಬೇಕು. ಚಕ್ರವನ್ನೂ ನೆನಪು ಮಾಡಬೇಕು. ತಂದೆಯು ನಮಗೆ ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸಿದ್ದಾರೆ. ನಾವು ಈ ಮನುಷ್ಯ ಸೃಷ್ಟಿಯ ವೃಕ್ಷವನ್ನು ತಿಳಿದುಕೊಂಡಿದ್ದೇವೆ. ನಾವು 21 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಈಗ ನಾವು ಹೋಗಿ ಸ್ವರ್ಗದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತೇವೆ. ನಾವೆಲ್ಲಾ ಆತ್ಮಗಳಾಗಿದ್ದೇವೆ, ಆತ್ಮಕ್ಕೇ ರಾಜ್ಯಭಾಗ್ಯವು ಸಿಗುವುದು. ತಂದೆಯನ್ನು ನೆನಪು ಮಾಡುವುದರಿಂದ ಆಸ್ತಿಗೆ ಅಧಿಕಾರಗಳಾಗುತ್ತೇವೆ. ಇದು ರಾಜಯೋಗವಾಗಿದೆ. ತಂದೆಯನ್ನು ನೆನಪು ಮಾಡುತ್ತೇವೆ. ಬೇಹದ್ದಿನ ತಂದೆಯ ಮೂಲಕ ಅನೇಕ ಬಾರಿ ವಿಶ್ವದ ಮಾಲೀಕರಾಗಿದ್ದೆವು, ಈಗ ನರಕವಾಸಿಗಳಾಗಿದ್ದೇವೆ, ಒಬ್ಬ ತಂದೆಯ ನೆನಪಿನಿಂದ ಈಗ ಪುನಃ ಸ್ವರ್ಗವಾಸಿಗಳಾಗುತ್ತೇವೆ, ಪಾಪ ಭಸ್ಮವಾಗುವುದು ಆದ್ದರಿಂದ ಈ ಯೋಗಕ್ಕೆ ಅಗ್ನಿಯೆಂದು ಹೇಳಲಾಗುತ್ತದೆ. ನೀವು ಬ್ರಾಹ್ಮಣರು ರಾಜಋಷಿಗಳಾಗಿದ್ದೀರಿ, ಋಷಿಗಳು ಸದಾ ಪವಿತ್ರರಾಗಿರುತ್ತಾರೆ. ತಂದೆಯನ್ನು ನೆನಪು ಮಾಡುತ್ತೀರಿ ಮತ್ತು ರಾಜ್ಯಭಾಗ್ಯದ ಆಸ್ತಿಯನ್ನು ಪಡೆಯುತ್ತೀರಿ. ಈಗ ವಿಕಾರಗಳ ಮೇಲೆ ಇಚ್ಛೆಯನ್ನಿಡಲು ಸಾಧ್ಯವೇ! ಇದು ಕೊಳಕು ಇಚ್ಛೆಯಾಗಿದೆ. ಈಗ ಪಾರಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆಯಬೇಕಾಗಿದೆ. ಆರೋಗ್ಯ ಚೆನ್ನಾಗಿಲ್ಲವೆಂದರೂ ಸಹ ತಂದೆಯನ್ನು ನೆನಪು ಮಾಡಬಹುದು ಏಕೆಂದರೆ ಮಕ್ಕಳೆಂದರೆ ತಂದೆಗೆ ಬಹಳ ಪ್ರೀತಿಯಿದೆ. ತಂದೆಯು ಅನೇಕ ಮಂದಿ ಮಕ್ಕಳಿಗೆ ಪತ್ರವನ್ನು ಬರೆಯಬೇಕಾಗುತ್ತದೆ, ಶಿವ ತಂದೆಯು ಬರೆಸುತ್ತಾರೆ. ನೀವೂ ಸಹ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ. ನಾವೆಲ್ಲರೂ ಶಿವ ತಂದೆಯ ಮಕ್ಕಳು ಸಹೋದರರಾಗಿದ್ದೇವೆ, ಆತ್ಮೀಯ ತಂದೆಯು ಬಂದು ನಮ್ಮನ್ನು ಪಾವನ ಮಾಡುತ್ತಾರೆ ಆದ್ದರಿಂದ ಪತಿತ ಪಾವನ ಎಂದು ಕರೆಯಲಾಗುತ್ತದೆ, ಎಲ್ಲಾ ಆತ್ಮರನ್ನು ಪಾವನ ಮಾಡುತ್ತಾರೆ, ಯಾರನ್ನೂ ಬಿಡುವುದಿಲ್ಲ. ಪ್ರಕೃತಿಯೂ ಪಾವನವಾಗುತ್ತದೆ. ಸತ್ಯಯುಗದಲ್ಲಿ ಪ್ರಕೃತಿಯು ಪಾವನವಾಗಿರುತ್ತದೆ ಎಂದು ನೀವು ತಿಳಿದಿದ್ದೀರಿ, ಈಗ ಶರೀರವು ಪತಿತವಾಗಿದೆ ಆದ್ದರಿಂದ ಗಂಗೆಯಲ್ಲಿ ಹೋಗಿ ಸ್ನಾನ ಮಾಡುತ್ತಾರೆ ಆದರೆ ಆತ್ಮವು ಪಾವನವಾಗುವುದಿಲ್ಲ. ಅದಂತೂ ಯೋಗಾಗ್ನಿಯಿಂದಲೇ ಪವಿತ್ರವಾಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಕಲಿಯುಗ ಪ್ರಪಂಚದಲ್ಲಿ ಯಾವುದೇ ಉಲ್ಟಾ ಆಸೆಯನ್ನು ಇಟ್ಟುಕೊಳ್ಳಬಾರದು, ಸಂಪೂರ್ಣ ಸತೋಪ್ರಧಾನರಾಗಲು ಈಶ್ವರೀಯ ಮತದಂತೆ ನಡೆಯಬೇಕಾಗಿದೆ. |
2. ಪಾವನರಾಗಿ ಹಿಂತಿರುಗಿ ಹೋಗಬೇಕೆಂಬ ಆಸೆಯನ್ನೇ ಇಟ್ಟುಕೊಳ್ಳಬೇಕಾಗಿದೆ. ಅಂತ್ಯಮತಿ ಸೋ ಗತಿ. ಮಾಯೆಯ ಬಿರುಗಾಳಿಗಳೊಂದಿಗೆ ಸಮಯವನ್ನು ವ್ಯರ್ಥ ಮಾಡಬಾರದು. |
ಓಂ ಶಾಂತಿ. ಮಕ್ಕಳದು ಇದು ಈಶ್ವರೀಯ ವಿದ್ಯಾರ್ಥಿ ಜೀವನವಾಗಿದೆ. ಮಕ್ಕಳಿಗೆ ತಿಳಿದಿದೆ - ನಾವು ಅವರ ಬಳಿ ಬಂದಿದ್ದೇವೆ, ಅವರೇ ಕಲ್ಪ-ಕಲ್ಪವೂ ಭಾರತವಾಸಿ ಮಕ್ಕಳಿಗೆ ಬಂದು ರಾಜ್ಯಭಾಗ್ಯವನ್ನು ಕೊಡುತ್ತಾರೆ. ಭಾರತದಲ್ಲಿಯೇ ಬರುತ್ತಾರಲ್ಲವೆ. ಇದು ಭಾರತ ಭೂಮಿಯಾಗಿದೆ, ತಮ್ಮ ಭೂಮಿಯ ಮೇಲೆ ಬಹಳ ಪ್ರೀತಿ, ಗೌರವವಿರುತ್ತದೆ, ಹೇಗೆ ಯಾರಾದರೂ ವಿದೇಶದ ದೊಡ್ಡ ವ್ಯಕ್ತಿಯು ಇಲ್ಲಿ ಶರೀರ ಬಿಟ್ಟರೆ ಅವರನ್ನು ವಿದೇಶಕ್ಕೆ ತೆಗೆದುಕೊಂಡು ಹೋಗುತ್ತಾರೆ ಅಥವಾ ಇಲ್ಲಿಯ ವ್ಯಕ್ತಿ ಯಾರಾದರೂ ವಿದೇಶದಲ್ಲಿ ಮರಣ ಹೊಂದಿದರೆ ಅವರನ್ನು ಇಲ್ಲಿಗೆ ತೆಗೆದುಕೊಂಡು ಬರುತ್ತಾರೆ. ತಮ್ಮ ಭೂಮಿಗೆ ಮಾನ್ಯತೆ ಕೊಡುತ್ತಾರೆ. ಭಾರತಕ್ಕೆ ಭಗವಂತನ ಜನ್ಮ ಭೂಮಿಯೆಂದು ಹೇಳಲಾಗುತ್ತದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಯಾರಿಗೆ ಭಗವಂತ ಅಥವಾ ಅಲ್ಲಾಹ್ ಪರಮಾತ್ಮ ಎಂದು ಹೇಳುತ್ತಾರೆಯೋ ಅವರ ಸನ್ಮುಖದಲ್ಲಿ ನೀವೀಗ ಕುಳಿತಿದ್ದೀರಿ. ಹೆಸರು ಅವಶ್ಯವಾಗಿ ಬೇಕಲ್ಲವೆ. ಅಲ್ಲಾಹ್ ಎಂದು ಹೇಳುತ್ತಾರೆ ಎಂದರೆ ಲಿಂಗಕ್ಕೆ ಪೂಜೆ ಮಾಡುತ್ತಾರೆ. ಈಶ್ವರ ಅಥವಾ ಖುದಾ ಎಂದು ಹೇಳುತ್ತಾರೆ ಅಂದಮೇಲೆ ಗುರುತೂ ಇರಬೇಕಲ್ಲವೆ. ಎಲ್ಲಾ ಕಡೆಯೂ ಲಿಂಗಕ್ಕೆ ಪೂಜೆ ಮಾಡುತ್ತಾರೆ, ಚಿತ್ರಗಳಲ್ಲಿಯೂ ಇತ್ತೀಚೆಗೆ ದೇವತೆಗಳ ಮುಂದೆ ಪರಮಪಿತ ಪರಮಾತ್ಮನ ಚಿತ್ರ ಲಿಂಗವನ್ನು ತೋರಿಸುತ್ತಾರೆ. ಅವರು ಎಲ್ಲರಿಗಿಂತ ಶ್ರೇಷ್ಠರಾಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಆದ್ದರಿಂದ ನಿರಾಕಾರನೆಂದು ಹೇಳಲಾಗುತ್ತದೆ ಸಾಕಾರನಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಶಿಕ್ಷಣವನ್ನು ತೆಗೆದುಕೊಳ್ಳಲು ಅವರಮುಂದೆ ಕಲ್ಪ-ಕಲ್ಪವೂ ಹಾಜರಾಗುತ್ತೇವೆ. ಭಗವಾನುವಾಚ ಇದೆ ಅಂದಮೇಲೆ ಅವಶ್ಯವಾಗಿ ರಾಜಯೋಗವನ್ನು ಕಲಿಸುತ್ತಾರೆ. ವಿದ್ಯಾರ್ಥಿಗಳಿಗೆ ರಾಜಯೋಗವನ್ನು ಕಲಿಸಿದ್ದರು ಮತ್ತು ಅವರು ರಾಜ-ರಾಣಿಯಾಗಿದ್ದರು, ಇಲ್ಲಿ ಯುದ್ಧದ ಮಾತಿಲ್ಲ. ಈ ಲಕ್ಷ್ಮೀ-ನಾರಾಯಣರು ಯುದ್ಧ ಮಾಡಿ ರಾಜ್ಯಭಾಗ್ಯವನ್ನು ಪಡೆಯಲಿಲ್ಲ. ಇವರು ಸತ್ಯಯುಗದಲ್ಲಿ ಹೇಗೆ ರಾಜ್ಯವನ್ನು ಪಡೆದರು ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯಿಂದ ರಾಜ್ಯವನ್ನು ತೆಗೆದುಕೊಂಡಿದ್ದೇವೆ, ನಾವು ಅವರ ಸನ್ಮುಖದಲ್ಲಿ ಕುಳಿತಿದ್ದೇವೆ. ಅವರೇ ತಂದೆಯಾಗಿದ್ದಾರೆ, ಕೃಷ್ಣನಲ್ಲ. ಕೃಷ್ಣನು ಚಿಕ್ಕ ಮಗುವಾಗಿದ್ದಾನೆ, ರಚನೆಯಾಗಿದ್ದಾನೆ. ಈಗ ಕೃಷ್ಣನೂ ಸಹ ತನ್ನ ಪದವಿಯನ್ನು ಪಡೆಯುತ್ತಿದ್ದಾನೆ ಯಾವುದರಿಂದ ಭವಿಷ್ಯದಲ್ಲಿ ಕೃಷ್ಣನೆಂದು ಕರೆಸಿಕೊಳ್ಳುತ್ತಾನೆ. ಇದೆಲ್ಲವೂ ವಿದ್ಯೆಯ ಮಾತಾಗಿದೆ. |
ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಹೇಗೆ ಮನುಷ್ಯರು ಮನುಷ್ಯರನ್ನು ಬ್ಯಾರಿಸ್ಟರ್, ಇಂಜಿನಿಯರ್ನ್ನಾಗಿ ಮಾಡುತ್ತಾರೆ, ಅವರೂ ಮನುಷ್ಯರೇ ಅಲ್ಲವೆ. ನೀವು ತಿಳಿದುಕೊಳ್ಳುತ್ತೀರಿ - ನಾವು ಮನುಷ್ಯರೇ ಆಗಿದ್ದೇವೆ ಆದರೆ ಪತಿತರಾಗಿದ್ದೇವೆ. ಈಗ ತಂದೆಯು ಪಾವನರನ್ನಾಗಿಯೂ ಮಾಡುತ್ತಾರೆ ಮತ್ತು ನಮಗೆ ಆಸ್ತಿಯನ್ನೂ ಕೊಡುತ್ತಾರೆ. ಪಾವನ ಪ್ರಪಂಚವಂತೂ ಹೊಸ ಪ್ರಪಂಚವೇ ಆಗಿರುವುದು. ಹೊಸ ಪ್ರಪಂಚದಲ್ಲಿ ರಾಜಧಾನಿಯಿರುತ್ತದೆ. ನೀವೀಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಪ್ರೀತಿಯಿಂದ ತಿಳಿಸುತ್ತಾರೆ ಹಾಗೆಯೇ ಇವರು ಪಾರಲೌಕಿಕ ವಿಚಿತ್ರ ತಂದೆಯಾಗಿದ್ದಾರೆ. ಇವರಿಗಾಗಿಯೇ ತ್ವಮೇವ ಮಾತಾಶ್ಚ ಪಿತಾ..... ಎಂದು ನೀವು ಹಾಡುತ್ತಾ ಬಂದಿದ್ದೀರಿ. ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ, ಇವರು ತಮ್ಮ ಪಾತ್ರವನ್ನಭಿನಯಿಸುತ್ತಾರೆ, ಅದನ್ನು ಭಕ್ತಿಮಾರ್ಗದಲ್ಲಿ ನಾವು ಗಾಯನ ಮಾಡುತ್ತೇವೆ. ನಾವು ಶಿವ ತಂದೆಯ ಬಳಿ ಬಂದಿದ್ದೇವೆ ಎಂದು ನೀವು ಹೇಳುತ್ತೀರಿ. ಶಿವಬಾಬಾ ಛಿ/o ಬ್ರಹ್ಮಾ ಎಂದು ಪತ್ರವನ್ನೂ ಬರೆಯುತ್ತೀರಿ. ಯಾರಿಗಾದರೂ ನೀವು ಈ ಪತ್ರವನ್ನು ತೋರಿಸಿದರೆ ಆಶ್ಚರ್ಯಚಕಿತರಾಗುವರು. ಶಿವಬಾಬಾ ಛಿ/o ಬ್ರಹ್ಮಾ ಎಂಬುದನ್ನು ಎಂದೂ ಕೇಳಿರುವುದಿಲ್ಲ. ಶಿವ ತಂದೆಯು ಬ್ರಹ್ಮಾರವರಲ್ಲಿ ಬಂದು ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಿದ್ದಾರೆ, ಸನ್ಮುಖದಲ್ಲಿ ನಿಂತಿದ್ದಾರೆ. ಶಿವ ತಂದೆಯು ಮೇಲಿರುತ್ತಾರೆ, ಅವರು ಬ್ರಹ್ಮನ ಮೂಲಕ ಸ್ಥಾಪನೆ ಮಾಡಿದ್ದರು, ಈಗ ಪುನಃ ಮಾಡುತ್ತಾರೆ. ಇದು ಪ್ರವೃತ್ತಿ ಮಾರ್ಗವಾಗಿದೆ. ರಾಜ ವಿದ್ಯೆಯಲ್ಲಿಯೂ ಬ್ಯಾರಿಸ್ಟರ್ ಓದಿಸುತ್ತಾರೆಂದರೆ ಸ್ತ್ರೀ-ಪುರುಷರಿಬ್ಬರೂ ಓದುತ್ತಾರೆ. ಸ್ತ್ರೀಯರು ಜಡ್ಜ್, ಬ್ಯಾರಿಸ್ಟರ್, ಡಾಕ್ಟರ್ ಇತ್ಯಾದಿ ಆಗುತ್ತಾರೆ, ಇದೂ ಸಹ ಪ್ರವೃತ್ತಿ ಮಾರ್ಗವಾಗಿದೆ, ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ. ಅದು ಬೇರೆಯಾಗಿದೆ. ಇದನ್ನೂ ತಂದೆಯು ತಿಳಿಸಿದ್ದಾರೆ - ಒಂದುವೇಳೆ ಶಂಕರಾಚಾರ್ಯರು ಬರಲಿಲ್ಲವೆಂದರೆ ಪವಿತ್ರತೆಯ ಅಂಶವೂ ಇರುತ್ತಿರಲಿಲ್ಲ, ಭಾರತವು ಸಂಪೂರ್ಣ ಕಾಮಾಗ್ನಿಯಲ್ಲಿ ಸುಟ್ಟು ಹೋಗುತ್ತಿತ್ತು, ಭಾರತವನ್ನು ತಣಿಸುವುದಕ್ಕಾಗಿ ಇದು ನಿಗಧಿಯಾಗಿದೆ. ಭಾರತವು ಬಹಳ ಪವಿತ್ರವಾಗಿತ್ತು ನಂತರ ಅಪವಿತ್ರವಾಗಿದೆ. ಈಗ ಭಾರತವು ಎಷ್ಟೊಂದು ಕಂಗಾಲ ವಾಗಿದೆ. ಚಿನ್ನದ ಲಂಕೆಯು ಸಮುದ್ರದ ಕೆಳಗಡೆ ಹೊರಟು ಹೋಯಿತೆಂದು ಹೇಳುತ್ತಾರೆ, ಲಂಕೆಯಂತೂ ಚಿನ್ನದ್ದಾಗಿರಲು ಸಾಧ್ಯವಿಲ್ಲ, ಕೇವಲ ಇವೆಲ್ಲಾ ಕಥೆಗಳನ್ನು ಬರೆದಿದ್ದಾರೆ. ಇದರಿಂದ ಲಾಭವೇನೂ ಇಲ್ಲ. |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಸಹಜ ನೆನಪಿನ ಬಲದಿಂದ ಎಷ್ಟು ಶ್ರೇಷ್ಠರನ್ನಾಗಿ ಮಾಡುತ್ತಾರೆ! ತಂದೆಯು ಪ್ರತಿಜ್ಞೆ ಮಾಡುತ್ತಾರೆ. ಒಂದುವೇಳೆ ನಿರಂತರ ನೆನಪು ಮಾಡುವ ಪುರುಷಾರ್ಥ ಮಾಡಿದ್ದೇ ಆದರೆ ವಿಕರ್ಮಗಳು ವಿನಾಶವಾಗುತ್ತವೆ. ಭಕ್ತಿಮಾರ್ಗದಲ್ಲಿಯೂ ನೆನಪು ಮಾಡುವ ಪುರುಷಾರ್ಥ ಮಾಡಿದ್ದೀರಲ್ಲವೆ. ಏಕೆ ನೆನಪು ಮಾಡುತ್ತಾರೆ? ನಮಗೆ ಸಾಕ್ಷಾತ್ಕಾರವಾಗಲಿ ಎಂದು. ಕೃಷ್ಣಪುರಿಯಲ್ಲಿ ನಮಗೆ ರಾಜ್ಯಭಾಗ್ಯ ಸಿಗಲಿ ಅಥವಾ ನಾವು ನರನಿಂದ ನಾರಾಯಣನಾಗಬೇಕೆಂದು ನೆನಪು ಮಾಡುವುದಿಲ್ಲ. ನಿಮಗೂ ಸಹ ನಾವು ಮನುಷ್ಯರಿಂದ ದೇವತೆಯಾಗಬೇಕೆಂಬ ಆಸೆಯೂ ಇರಲಿಲ್ಲ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಹಾಡುತ್ತಾರೆ, ನೀವು ನೋಡುವಿರಿ - ಅವಶ್ಯವಾಗಿ ಕಲಿಯುಗದ ನಂತರ ಸತ್ಯಯುಗ ಬರುವುದು, ಕಲಿಯುಗದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಒಂದೇ ಧರ್ಮವಿರುವುದು. ಈಗ ನಿಮಗೆ ಆತ್ಮ-ಪರಮಾತ್ಮನ ಜ್ಞಾನವು ಸಿಕ್ಕಿದೆ. ಆತ್ಮದ ಜ್ಞಾನವಿರುವ ಮನುಷ್ಯರು ಪ್ರಪಂಚದಲ್ಲಿ ಯಾರೊಬ್ಬರೂ ಇಲ್ಲ. ಆತ್ಮದಲ್ಲಿ 84 ಜನ್ಮಗಳ ಪಾತ್ರವು ಹೇಗೆ ನಿಗಧಿಯಾಗಿದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈ ಅಕ್ಷರವನ್ನು ಎಂದೂ ಯಾರಿಂದಲೂ ಕೇಳಿರುವುದಿಲ್ಲ. ತಂದೆಯು ಜ್ಞಾನ ಸಾಗರ, ದಯಾ ಸಾಗರ, ನಿರಾಕಾರನಾಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಈಗ ಪಾಪಾತ್ಮರಿಂದ ಪುಣ್ಯಾತ್ಮರಾಗುತ್ತಿದ್ದೇವೆ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ, ಇಲ್ಲಿ ಪಾಪಾತ್ಮರಿದ್ದಾರೆ. ಬಹಳ ದಾನ-ಪುಣ್ಯ ಮಾಡುವವರಿಗೆ ಪುಣ್ಯಾತ್ಮರೆಂದು ಕರೆಯಲಾಗುವುದಿಲ್ಲ, ಪುಣ್ಯಾತ್ಮರಿರುವುದೇ ಸತ್ಯಯುಗದಲ್ಲಿ. ಇಲ್ಲಿ ಯಾವ ಮನುಷ್ಯರು ದಾನ-ಪುಣ್ಯ ಮಾಡುತ್ತಾರೆಯೋ ಅವರನ್ನು ಪುಣ್ಯಾತ್ಮರೆಂದು ಕರೆಯುತ್ತಾರೆ. ಅಲ್ಲಿ ನಿಮಗೆ ದಾನ-ಪುಣ್ಯ ಇತ್ಯಾದಿಗಳನ್ನು ಮಾಡುವ ಅವಶ್ಯಕತೆ ಇರುವುದಿಲ್ಲ, ಅಲ್ಲಿ ಯಾರೂ ಬಡವರಿರುವುದಿಲ್ಲ. ನೀವು ಅಲ್ಲಿ ಸದಾಕಾಲಕ್ಕಾಗಿ ಪುಣ್ಯಾತ್ಮರಾಗಿಯೇ ಇರುತ್ತೀರಿ. ನೀವು ತನು-ಮನ-ಧನ ಎಲ್ಲವನ್ನೂ ಬೇಹದ್ದಿನ ತಂದೆಯ ಅರ್ಥವಾಗಿ ಕೊಡುತ್ತೀರಿ. ಇದಕ್ಕೆ ಬಲಿಹಾರಿ ಆಗುವುದು ಎಂದು ಹೇಳಲಾಗುತ್ತದೆ. ತಂದೆಯು ಕೇಳುತ್ತಾರೆ, ಮೊದಲು ನಾನು ಬಲಿಹಾರಿ ಆಗುತ್ತೇನೆಯೋ ಅಥವಾ ನೀವೋ? ತಂದೆಯು ತಿಳಿಸುತ್ತಾರೆ - ಮೊದಲು ನೀವು ಬಲಿಹಾರಿ ಆಗುತ್ತೀರಿ ಆದ್ದರಿಂದಲೇ 21 ಜನ್ಮಗಳಿಗಾಗಿ ಬಲಿಹಾರಿಯು ಸಿಗುವುದು. ಈ ಮಾತುಗಳನ್ನು ನೀವೀಗ ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಸನ್ಮುಖದಲ್ಲಿ ಕೇಳುತ್ತೀರಿ. ಮನೆಯಲ್ಲಿದ್ದರೂ ಸಹ ಅಲ್ಲಿಗೆ ಮುರುಳಿ ಬರುತ್ತದೆ, ದೂರದಿಂದ ಕೇಳುತ್ತೀರಿ. ಈಗಂತೂ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ನಿಮ್ಮ ತಂದೆಯೂ ಆಗಿದ್ದೇನೆ, ಇಲ್ಲಿ ಯಾವುದೇ ಅಂಧಶ್ರದ್ಧೆಯ ಮಾತಿಲ್ಲ, ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯ ಮಕ್ಕಳಾದರೆ ಅವರು ಶಿಕ್ಷಣ ಕೊಡುತ್ತಾರೆ. ಈಗ ನಿಮ್ಮ ಬುದ್ಧಿಯಲ್ಲಿ ಎಲ್ಲದರ ಜ್ಞಾನವಿದೆ, 84 ಜನ್ಮಗಳ ಚಕ್ರವನ್ನೂ ನಿಮಗೆ ತಿಳಿಸಲಾಗಿದೆ. ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲವೋ ಅವರು ತಿಳಿದುಕೊಳ್ಳುವುದೂ ಇಲ್ಲ. ನಾವು 84 ಜನ್ಮಗಳ ಚಕ್ರವನ್ನು ಸುತ್ತಿ ಈಗ ಹಿಂತಿರುಗಿ ಹೋಗುತ್ತೇವೆಂದು ನೀವು ತಿಳಿದುಕೊಳ್ಳುತ್ತೀರಿ. ತಂದೆಯು ಹೇಳುತ್ತಾರೆ - ನೀವಾತ್ಮರು ಅಶರೀರಿಯಾಗಿ ಬಂದಿದ್ದಿರಿ ಮತ್ತೆ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ನೀವು ಪವಿತ್ರ ಆತ್ಮರಾಗಿ ಹೋಗುತ್ತೀರಿ. ಪವಿತ್ರರಾಗಲು ನೀವು ಪುರುಷಾರ್ಥ ಮಾಡುತ್ತಿದ್ದಿರಿ. ಯೋಗಬಲ ಅರ್ಥಾತ್ ನೆನಪಿನ ಬಲದಿಂದ ನೀವು ಪವಿತ್ರರಾಗಿ ಬಿಡುತ್ತೀರಿ. ಯೋಗ ಎಂಬುದು ಶಾಸ್ತ್ರಗಳ ಅಕ್ಷರವಾಗಿದೆ, ಸರಿಯಾದ ಶಬ್ಧವು ‘ನೆನಪು’ ಎಂದಾಗಿದೆ. ಸ್ತ್ರೀಗೆ ಪತಿಯ ನೆನಪು ಅಥವಾ ಪುರುಷನಿಗೆ ಪತ್ನಿಯ ನೆನಪಿರುತ್ತದೆಯಲ್ಲವೆ. ಯೋಗದ ಅರ್ಥವೇ ಆಗಿದೆ - ನೆನಪು. ತಂದೆಯೂ ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆದು ತಂದೆಯಾದ ನನ್ನೊಬ್ಬನ ಜೊತೆ ಬುದ್ಧಿಯೋಗವನ್ನಿಡಿ. ನೆನಪು ಮಾಡಿರಿ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. ಅವಶ್ಯವಾಗಿ ಭಾರತಕ್ಕೆ ಕಲ್ಪ-ಕಲ್ಪವೂ ಆಸ್ತಿಯು ಸಿಗುತ್ತದೆ. ಶಿವ ಜಯಂತಿಯು ಪ್ರಸಿದ್ಧವಾಗಿದೆ, ಹೇಗೆ ಬುದ್ಧ, ಕ್ರೈಸ್ಟ್ ಮೊದಲಾದವರ ಜಯಂತಿಯಿದೆಯೋ ಹಾಗೆಯೇ ನಿರಾಕಾರ ಶಿವನ ಜಯಂತಿಯೂ ಇದೆ. ಇದು ಸರ್ವಶ್ರೇಷ್ಠವಾಗಿದೆ. ಕೃಷ್ಣ ಜಯಂತಿಯೂ ಪ್ರಸಿದ್ಧವಾಗಿದೆ ಆದರೆ ಕೃಷ್ಣನು ಬಂದು ಏನು ಮಾಡುತ್ತಾನೆಂದು ಯಾರಿಗೂ ತಿಳಿದಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದನು, ಅವಶ್ಯವಾಗಿ ಕೃಷ್ಣನಿಗೆ ಮತ್ತ್ಯಾರೋ ಇಂತಹ ಕರ್ಮವನ್ನು ಕಲಿಸಿರಬೇಕು, ಇದರಿಂದಲೇ ಸತ್ಯಯುಗದ ರಾಜಕುಮಾರನಾಗಿದ್ದಾನೆ. ಚಿಕ್ಕ ಮಗುವಂತೂ ಪವಿತ್ರವಾಗಿರುತ್ತದೆ, ಅಲ್ಲಿ ವಿಕಾರದ ಮಾತಿರುವುದಿಲ್ಲ. ಮಗು ನಿರ್ಮಲವಾಗಿರುತ್ತದೆ, ಭಗವಂತನು ಒಬ್ಬರೇ ನಿರಾಕಾರನಾಗಿದ್ದಾರೆ. ಗಾಡ್ ಈಜ್ ಒನ್, ಉಳಿದೆಲ್ಲವೂ ಅವರ ರಚನೆಯಾಗಿದೆ. ರಚನೆಯಿಂದ ಎಂದೂ ರಚನೆಗೆ ಆಸ್ತಿಯು ಸಿಗುವುದಿಲ್ಲ, ತಂದೆಯಿಂದಲೇ ಸಿಗುವುದು. ಸಹೋದರರಿಂದ ಸಹೋದರರಿಗೆ ಆಸ್ತಿಯು ಸಿಗುವುದಿಲ್ಲ. ನೀವೆಲ್ಲರೂ ಸಹೋದರ-ಸಹೋದರರಾಗಿದ್ದೀರಿ, ಸಹೋದರತ್ವವೆಂದು ಹೇಳುತ್ತಾರಲ್ಲವೆ. ತಂದೆಯು ಒಬ್ಬರೇ ಆಗಿದ್ದಾರೆ. ಆಸ್ತಿಯು ತಂದೆಯಿಂದ ಸಿಗುವುದು. ಎಲ್ಲಾ ಸಹೋದರರ ಸದ್ಗತಿದಾತನು ಒಬ್ಬ ತಂದೆಯಾಗಿದ್ದಾರೆ. ಎಲ್ಲಾ ಆತ್ಮರಿಗೆ ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆಯು ಹೇಳುತ್ತಾರೆ - ನಾನು ಬಂದು ಆತ್ಮರಿಗೆ ಓದಿಸುತ್ತೇನೆ, ಆತ್ಮರಿಗೇ ಸದ್ಗತಿ ಕೊಡುತ್ತೇನೆ. ತಂದೆಯೇ ಕುಳಿತು ರಾಜಯೋಗವನ್ನು ಕಲಿಸುತ್ತಾರೆ, ಈ ವಿದ್ಯೆಯ ಪದವಿಯನ್ನು ನೀವು ಇಲ್ಲಿ ಪಡೆಯುವುದಿಲ್ಲ. ಮನುಷ್ಯರು ಈ ಜನ್ಮದಲ್ಲಿಯೇ ವಕೀಲ ಮೊದಲಾದವರಾಗುತ್ತಾರೆ ಮತ್ತೆ ಇನ್ನೊಂದು ಜನ್ಮ ಪಡೆದ ಮೇಲೆ ಮತ್ತೆ ಓದುತ್ತಾರೆ. |
ನೀವು ತಿಳಿದುಕೊಂಡಿದ್ದೀರಿ - ಈ ವಿದ್ಯೆಯಿಂದ ನಾವು 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಪಡೆಯುತ್ತೇವೆ, ಸತ್ಯಯುಗದಲ್ಲಿ ವೈದ್ಯರು ಮೊದಲಾದವರು ಇರುವುದಿಲ್ಲ. ಅಲ್ಲಿ ರೋಗವೇ ಇರುವುದಿಲ್ಲ. ನೀವು ಗರ್ಭ ಮಹಲಿನಲ್ಲಿರುತ್ತೀರಿ, ಇಲ್ಲಿ ಗರ್ಭ ಜೈಲಿನಲ್ಲಿರುತ್ತೀರಿ. ಬಹಳ ಶಿಕ್ಷೆಗಳು ಸಿಗುತ್ತವೆ ಆದ್ದರಿಂದಲೇ ಈ ಜೈಲಿನಿಂದ ಹೊರ ತೆಗೆಯಿರಿ, ನಾವು ಇನ್ನೆಂದೂ ತಪ್ಪು ಮಾಡುವುದಿಲ್ಲ ಎಂದು ಕರೆಯುತ್ತೀರಿ. ಧರ್ಮ ರಾಜನೊಂದಿಗೆ ಪ್ರತಿಜ್ಞೆ ಮಾಡುತ್ತೀರಿ. ಇಲ್ಲಿ ನೀವು ಶಿವ ತಂದೆಯೊಂದಿಗೆ ಪ್ರತಿಜ್ಞೆ ಮಾಡಬೇಕಾಗಿದೆ, ಬಾಬಾ ಇನ್ನೆಂದೂ ನಾವು ವಿಕರ್ಮ ಮಾಡುವುದಿಲ್ಲ. ನಾವು ಪಂಚ ವಿಕಾರಗಳನ್ನು ನಿಮಗೆ ಕೊಟ್ಟು ಬಿಡುತ್ತೇವೆ. ಇದೂ ಸಹ ತಂದೆಗೆ ತಿಳಿದಿದೆ - ವಿಕಾರಗಳು ಕೂಡಲೇ ಬಿಟ್ಟು ಹೋಗುವುದಿಲ್ಲ. ಆದ್ದರಿಂದ ಒಳಗೆ ಭಯವಿರಲಿ, ನಾವು ವಿಕಾರಗಳ ದಾನ ಕೊಟ್ಟು ಮತ್ತೆ ಹಿಂತೆಗೆದುಕೊಂಡರೆ ಬಹಳ ಪಾಪವಾಗುವುದು. ಹೇಗೆ ರಾಜಾ ಹರಿಶ್ಚಂದ್ರನ ಉದಾಹರಣೆಯಿದೆ. ತಂದೆಗೆ ಗೊತ್ತಿದೆ, ಐದು ವಿಕಾರಗಳು ಕೂಡಲೇ ಬಿಟ್ಟು ಹೋಗುವುದಿಲ್ಲ. ಇದರಲ್ಲಿ ಸಮಯ ಹಿಡಿಸುತ್ತದೆ. ನಿಮ್ಮದು ಕರ್ಮಾತೀತ ಸ್ಥಿತಿಯಾದಾಗ ಯುದ್ಧವಾಗುತ್ತದೆ. ಈ ಪಂಚ ವಿಕಾರಗಳು ದೊಡ್ಡ ಶತ್ರುಗಳಾಗಿವೆ, ಅದರಲ್ಲಿಯೂ ಮುಖ್ಯವಾದುದು ಒಂದು ದೇಹಾಭಿಮಾನವಾಗಿದೆ, ಅದರ ದಾನ ಮಾಡುವುದು ಎಷ್ಟು ಪರಿಶ್ರಮವಾಗಿದೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಎಂದು. ಆದರೆ ಇದು ಆಗುವುದಿಲ್ಲ. ದೇಹಾಭಿಮಾನಿಗಳಾಗುವುದರಿಂದ ಕಾಮದ ಪೆಟ್ಟು ಬೀಳುತ್ತದೆ. ದೇಹಾಭಿಮಾನವು ಎಲ್ಲದಕ್ಕಿಂತ ತೀಕ್ಷ್ಣವಾಗಿದೆ. ದೇಹೀ-ಅಭಿಮಾನಿಯಾಗುವುದು ಪರಿಶ್ರಮವಿದೆ. ಮುಖ್ಯವಾಗಿ ದೇಹಾಭಿಮಾನವು ಬರುವುದರಿಂದಲೇ ಪಾಪಗಳಾಗಿದೆ. ಇದಕ್ಕಾಗಿ ಐದು ವಿಕಾರಗಳನ್ನು ದಾನವಾಗಿ ಕೊಡಬೇಕಾಗುತ್ತದೆ. ಇದರಲ್ಲಿಯೇ ಸಮಯ ಹಿಡಿಸುತ್ತದೆ. ಪ್ರಿಯತಮನಿಲ್ಲದೆ ಪ್ರಿಯತಮೆಯರು ಹೋಗಲು ಸಾಧ್ಯವಿಲ್ಲ. ಮೊದಲು ಪ್ರಿಯತಮನು ಹೋಗಬೇಕು ನಂತರ ಪ್ರಿಯತಮೆಯರು. ಪ್ರಿಯತಮನು ಬಂದು ಎಲ್ಲಾ ಆತ್ಮರನ್ನು ಕರೆದುಕೊಂಡು ಹೋಗಬೇಕಾಗಿದೆ, ಕರ್ಮಾತೀತ ಸ್ಥಿತಿಯಾಗುವವರೆಗೂ ಪುರುಷಾರ್ಥ ಮಾಡಬೇಕಾಗಿದೆ. ದೇಹಾಭಿಮಾನ ಬರುವುದರಿಂದಲೇ ತಪ್ಪುಗಳಾಗುತ್ತವೆ. ಬಾಬಾ, ದೇಹಾಭಿಮಾನ ಬರುವುದರಿಂದಲೇ ವಿಕಾರದಲ್ಲಿ ಬಿದ್ದೆವು ಎಂದು ಹೇಳುತ್ತಾರೆ. ಬಹಳ ಬಿರುಗಾಳಿಗಳು ಬರುತ್ತವೆ, ವಿಕಾರದ ಸಂಕಲ್ಪಗಳು ಬರುತ್ತವೆ ಆದರೆ ಕರ್ಮೇಂದ್ರಿಯಗಳಿಂದ ಎಂದೂ ಯಾವುದೇ ಪಾಪ ಮಾಡಬಾರದು ಮಾಯೆಯನ್ನು ಗೆಲ್ಲುವುದಕ್ಕಾಗಿ ಎಷ್ಟೊಂದು ಪರಿಶ್ರಮ ಪಡಬೇಕಾಗುತ್ತದೆ. ತಂದೆಯು ಹೇಳುತ್ತಾರೆ - ಒಂದುವೇಳೆ ವಿವಾಹವಾಗಿದ್ದರೆ ಪವಿತ್ರವಾಗಿದ್ದು ತೋರಿಸಿರಿ ಆಗ ಸನ್ಯಾಸಿಗಳೂ ನೋಡುತ್ತಾರೆ. ನಿಮಗೆ ಎಷ್ಟು ದೊಡ್ಡ ಸಂಪಾದನೆಯಿದೆ! ಪವಿತ್ರರಾಗಿದ್ದು ತೋರಿಸಿದರೆ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ನಿಮ್ಮ ಮೇಲೆ ಎಲ್ಲರೂ ಬಲಿಹಾರಿಯಾಗುವರು. ತಂದೆಯೂ ಮಹಿಮೆ ಮಾಡುತ್ತಾರೆ. ಭಲೆ ಪವಿತ್ರರಾಗಿರಿ ಆದರೆ ಜೊತೆಗೆ ಯೋಗವೂ ಇರಬೇಕು, ಯೋಗದಲ್ಲಿಯೇ ಪದೇ-ಪದೇ ವಿಘ್ನಗಳು ಬರುತ್ತವೆ. ದೇಹಭಿಮಾನವು ಬಂದು ಬಿಡುತ್ತದೆ. ಪವಿತ್ರರಾಗಿರುವುದೇನೋ ಸರಿ, ಪವಿತ್ರತೆಯಿಂದಲೇ ಪವಿತ್ರ ಪ್ರಪಂಚದಲ್ಲಿ ಆಸ್ತಿಯನ್ನು ಪಡೆಯುತ್ತೀರಿ ಆದರೆ ಮತ್ತೆ ಮಾಯೆಯು ಬಹಳ ಜೋರಾಗಿ ಯುದ್ಧ ಮಾಡುತ್ತದೆ. ಇದೆಲ್ಲವೂ ಆಗುತ್ತದೆ, ಶೌರ್ಯವನ್ನು ತೋರಿಸುತ್ತಾರೆ ಆದರೆ ಜೊತೆ ಜೊತೆಗೆ ನಿರಂತರ ನೆನಪೂ ಇರಲಿ ಆಗಲೇ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಂದೆಯು ತಿಳಿಸುತ್ತಾರೆ. ಯಾರು ಶಕ್ತಿಶಾಲಿಯಾಗುವರೋ ಅವರನ್ನು ಮಾಯೆಯು ಬಹಳ ಸತಾಯಿಸುತ್ತದೆ, ನೆನಪಿನಲ್ಲಿರುವುದು ಬಹಳ ಕಷ್ಟವಾಗುತ್ತದೆ. ಯಾರು ಇರುವರೋ ಅವರೊಂದಿಗೆ ಅನುಭವ ಕೇಳಬೇಕು - ಏನು ತಿಳಿದುಕೊಳ್ಳುತ್ತೀರಿ? ಹೇಗಿರುತ್ತೀರಿ ಎಂದು. ನೆನಪಿನಲ್ಲಿರುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಈ ಮಾತು ಸಂಪೂರ್ಣ ಭಿನ್ನ ಮತ್ತು ಹೊಸದಾಗಿದೆ. ಇಲ್ಲಿ ಕುಳಿತಿದ್ದರೂ ಸಹ ನಶೆಯೇರಿದೆ, ಇದನ್ನೂ ತಿಳಿದುಕೊಂಡಿದ್ದೀರಿ - ಭಗವಂತನು ಒಬ್ಬರೇ ನಿರಾಕಾರನಾಗಿದ್ದಾರೆ, ಕೃಷ್ಣನಲ್ಲ. ವಾಸ್ತವದಲ್ಲಿ ಕೃಷ್ಣನ ಬಗ್ಗೆ ಶಾಸ್ತ್ರಗಳಲ್ಲಿ ಅನೇಕ ಮಾತುಗಳನ್ನು ಬರೆದಿದ್ದಾರೆ - ಹಗ್ಗದಿಂದ ಕಟ್ಟಿ ಹಾಕಿದರು, ಬೆಣ್ಣೆ ಕದ್ದನು..... ಆದರೆ ಆ ಮಾತುಗಳೇನೂ ಇಲ್ಲ. ವಾಸ್ತವದಲ್ಲಿ ಇದೂ ಸಹ ಕೃಷ್ಣನ ನಿಂದನೆ ಮಾಡಿದಂತಾಯಿತು, ಕೃಷ್ಣನಲ್ಲಿ ಯಾವುದೇ ಅವಗುಣವಿರಲಿಲ್ಲ, ಚಂಚಲತೆ ಮಾಡುವುದೂ ಸಹ ಒಂದು ಅವಗುಣ ಆಯಿತಲ್ಲವೆ. ಕೃಷ್ಣನು ಮರ್ಯದಾ ಪುರುಷೋತ್ತಮನಾಗಿದ್ದಾನೆ. ಸರ್ವಗುಣ ಸಂಪನ್ನ.... ಮಹಿಮೆ ಮಾಡುತ್ತಾರೆ. ಗುರು ಬ್ರಹ್ಮಾ, ಗುರು ವಿಷ್ಣು ಎಂದು ಗಾಯನವೂ ಆಗುತ್ತದೆ ಆಗ ಹೇಳಿರಿ, ನಮಗೆ ಗುರುವಂತೂ ಇಲ್ಲ, ನಾವು ಇವರನ್ನು (ಬ್ರಹ್ಮಾ) ಗುರುವೆಂದಾಗಲಿ, ಈಶ್ವರನೆಂದಾಗಲಿ ಒಪ್ಪುವುದಿಲ್ಲ. ಪತಿತ-ಪಾವನನು ಒಬ್ಬ ನಿರಾಕಾರನೇ ಆಗಿದ್ದಾರಲ್ಲವೆ. ಯಾವುದೇ ಸಾಕಾರಿ ಗುರುಗಳು ಪತಿತ-ಪಾವನನಾಗಲು ಸಾಧ್ಯವಿಲ್ಲ. ಈ ಸಮಯದಲ್ಲಿ ನೀವು ಪರಮಪಿತ ಪರಮಾತ್ಮನ ಇಡೀ ಜೀವನ ಚರಿತ್ರೆಯನ್ನು ತಿಳಿದುಕೊಂಡಿದ್ದೀರಿ. 5000 ವರ್ಷಗಳಲ್ಲಿ ಶಿವ ತಂದೆಯ ಪಾತ್ರವೇನು ಎಂಬುದನ್ನು ನೀವು ತಂದೆಯ ಮೂಲಕ ಅರಿತಿದ್ದೀರಿ. ತಂದೆಯು ಜ್ಞಾನ ಪೂರ್ಣನಲ್ಲವೆ. ಸುಖ, ಶಾಂತಿ, ಆನಂದದ ಸಾಗರ..... ಇದು ತಂದೆಯ ಮಹಿಮೆಯಾಗಿದೆ. ತಂದೆಯ ಬಳಿ ಖಜಾನೆಯಿದೆ ಅಂದಮೇಲೆ ಅವಶ್ಯವಾಗಿ ಮಕ್ಕಳಿಗೂ ಕೊಡುವರಲ್ಲವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಈ ಕರ್ಮೇಂದ್ರಿಯಗಳಿಂದ ಯಾವುದೇ ತಪ್ಪು ಮಾಡಬಾರದು. ಪವಿತ್ರರಾಗಿರುವವರ ಜೊತೆ ಜೊತೆಗೆ ನೆನಪಿನಲ್ಲಿಯೂ ಶಕ್ತಿಶಾಲಿಗಳಾಗಬೇಕಾಗಿದೆ. |
2. ಸದಾ ಪುಣ್ಯಾತ್ಮರಾಗಲು ತನು-ಮನ-ಧನದಿಂದ ತಂದೆಗೆ ಬಲಿಹಾರಿಯಾಗಬೇಕಾಗಿದೆ. ಒಂದು ಬಾರಿ ಬಲಿಹಾರಿಯಾದರೆ 21 ಜನ್ಮಗಳಿಗಾಗಿ ಪುಣ್ಯಾತ್ಮರಾಗಿ ಬಿಡುತ್ತೀರಿ. |
ಓಂ ಶಾಂತಿ. ಭಕ್ತಿಮಾರ್ಗದಲ್ಲಿ ಈ ರೀತಿ ತಂದೆಯ ಮಹಿಮೆ ಮಾಡುವರು. ಇದು ಪತಂಗಗಳ ಜ್ಯೋತಿಯ ಮಹಿಮೆ ಆಗಿದೆ, ಯಾವಾಗ ತಂದೆಯು ಬರುತ್ತಾರೆಯೋ ಆಗ ನಾವೇಕೆ ಬದುಕಿದ್ದಂತೆಯೇ ಅವರ ಮಕ್ಕಳಾಗಬಾರದು. ಯಾರನ್ನು ದತ್ತು ಮಾಡಿಕೊಳ್ಳುವರು ಅವರಿಗೇ ಬದುಕಿದ್ದಂತೆಯೇ ಸಾಯುವುದು ಎಂದು ಹೇಳಲಾಗುತ್ತದೆ. ಮುಂಚೆ ನೀವು ಆಸುರಿ ಪರಿವಾರದವರಾಗಿದ್ದಿರಿ, ಈಗ ನೀವು ಈಶ್ವರೀಯ ಪರಿವಾರದವರು ಆಗಿದ್ದೀರಿ. ನೀವು ಬದುಕಿದ್ದಂತೆಯೇ ಈಶ್ವರನು ಬಂದು ನಿಮ್ಮನ್ನು ದತ್ತು ಮಾಡಿಕೊಂಡಿದ್ದಾರೆ, ಅದನ್ನೇ ಶರಣಾಗತಿ ಆಗುವುದು ಹೇಳಲಾಗುತ್ತದೆ. ಮಹಿಮೆ ಮಾಡುವರಲ್ಲವೆ - ನಾನು ನಿನ್ನ ಆಶ್ರಯದಲ್ಲಿ ಬಂದಿದ್ದೇನೆ...... ಅವರು ಯಾವಾಗ ಬರುವರೋ ಆಗಲೇ ಪ್ರಭುವಿನ ಆಶ್ರಯದಲ್ಲಿ ಬರಬಹುದು, ಅವರು ತನ್ನ ಶಕ್ತಿಯನ್ನೂ ತೋರಿಸುವರು, ಶೋಭೆಯನ್ನು ತೋರಿಸುವರು. ಅವರಂತು ಸರ್ವಶಕ್ತಿವಂತನಲ್ಲವೆ, ಖಂಡಿತವಾಗಿಯೂ ಅವರಲ್ಲಿ ಆಕರ್ಷಣೆಯೂ ಇದೆಯಲ್ಲವೆ. ಎಲ್ಲವನ್ನೂ ಬಿಡಿಸಿ ಬಿಡುತ್ತಾರೆ, ಅವಶ್ಯವಾಗಿ ಯಾರು ತಂದೆಯ ಮಕ್ಕಳಾಗುವರೋ ಅವರು ಆಸುರಿ ಸಂಪ್ರದಾಯದ ಸಂಬಂಧದಿಂದ ಬೇಸತ್ತು ಹೋಗಿದ್ದಾರೆ. ಹೇಳುತ್ತಾರೆ - ಬಾಬಾ, ಈ ಸಂಬಂಧವು ಯಾವಾಗ ಬಿಡುಗಡೆಯಾಗುವುದೋ.... ಇಲ್ಲಿ ಈ ಹಳೆಯ ಸಂಬಂಧವನ್ನು ಮರೆಯಬೇಕಾಗುತ್ತದೆ. ಆತ್ಮವು ಯಾವಾಗ ದೇಹದಿಂದ ಬೇರ್ಪಡುತ್ತದೆಯೋ ಆಗ ಬಂಧನಗಳೆಲ್ಲವೂ ಸಮಾಪ್ತಿಯಾಗುತ್ತವೆ. ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ - ಮೃತ್ಯುವು ಎಲ್ಲರಿಗಾಗಿಯೂ ಇದೆ ಮತ್ತು ಈ ಬಂಧನಗಳೇನಿವೆಯೋ ಅವೆಲ್ಲವೂ ವಿಕಾರಿ ಬಂಧನವಾಗಿದೆ. ಈಗ ಮಕ್ಕಳು ನಿರ್ವಿಕಾರಿ ಸಂಬಂಧವನ್ನು ಬಯಸುತ್ತಾರೆ, ನಿರ್ವಿಕಾರಿ ಸಂಬಂಧದಲ್ಲಿದ್ದಿರಿ ನಂತರದಲ್ಲಿ ವಿಕಾರಿ ಸಂಬಂಧದಲ್ಲಿ ಸಿಕ್ಕಿಕೊಂಡು ಬಿಟ್ಟಿರಿ, ನಂತರ ನಮ್ಮ ನಿರ್ವಿಕಾರಿ ಸಂಬಂಧವಾಗುವುದು. ಈ ಮಾತುಗಳಂತು ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಮಕ್ಕಳಿಗೆ ಗೊತ್ತಿದೆ - ನಾವು ಆಸುರಿ ಬಂಧನಗಳಿಂದ ಮುಕ್ತರಾಗುವ ಪುರುಷಾರ್ಥವನ್ನು ಮಾಡುತ್ತಿದ್ದೇವೆ. ಇದಕ್ಕಾಗಿ ಒಬ್ಬ ತಂದೆಯೊಂದಿಗೆ ಸಂಬಂಧವನ್ನು ಇಡಬೇಕಾಗುತ್ತದೆ, ಏಕೆಂದರೆ ಆ ಕಡೆ ಇದ್ದಾನೆ ಒಬ್ಬ ರಾವಣ, ಈ ಕಡೆ ಒಬ್ಬ ರಾಮನಿದ್ದಾರೆ. ಈ ಮಾತುಗಳು ಪ್ರಪಂಚದವರಿಗೆ ಗೊತ್ತಿಲ್ಲ, ಹೇಳುವುದಂತು ರಾಮ ರಾಜ್ಯ ಬೇಕು ಎನ್ನುತ್ತಾರೆ ಆದರೆ ಇಡೀ ಪ್ರಪಂಚವು ರಾವಣ ರಾಜ್ಯದಲ್ಲಿದೆ. ರಾಮ ರಾಜ್ಯದಲ್ಲಂತು ಪವಿತ್ರತೆ, ಸುಖ, ಶಾಂತಿಯಿತ್ತು, ಅದು ಈಗಿಲ್ಲ ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಆದರೆ ಸ್ವಯಂ ಏನು ಹೇಳುವರು ಅದರ ಅನುಭವವನ್ನೂ ಮಾಡುವುದಿಲ್ಲ. ಗಾಯನವಂತು ಆಗುತ್ತದೆ - ಈ ಆತ್ಮರೆಲ್ಲರೂ ಸೀತೆಯರಾಗಿದ್ದಾರೆ, ಒಬ್ಬಳು ಸೀತೆಯ ಮಾತಲ್ಲ, ಒಬ್ಬ ಅರ್ಜುನನ ಮಾತಲ್ಲ, ಒಬ್ಬ ದ್ರೌಪದಿಯ ಮಾತಲ್ಲ, ಇದಂತು ಅನೇಕರ ಮಾತಾಗಿದೆ. ಉದಾಹರಣೆಯನ್ನಂತು ಒಬ್ಬರದೇ ಕೊಡುತ್ತಾರೆ, ನಿಮಗೂ ಸಹ ಹೇಳಲಾಗುತ್ತದೆ - ನೀವೆಲ್ಲರೂ ಅರ್ಜುನನ ಸಮಾನರಿದ್ದೀರಿ. ನೀವು ಹೇಳುವಿರಿ - ಅರ್ಜುನನಂತು ಈ ಭಗೀರಥನಾದರು, ಬಾಬಾರವರು ಹೇಳುತ್ತಾರೆ - ನಾನು ಸಾಧಾರಣ ವೃದ್ಧ ತನುವಾದ ಈ ರಥವನ್ನು ತೆಗೆದುಕೊಳ್ಳುವೆನು. ಆದರೆ ಅವರು ಚಿತ್ರಗಳಲ್ಲಿ ಕುದುರೆ ಗಾಡಿಯನ್ನು ತೋರಿಸಿದ್ದಾರೆ! ಇದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ. ಮಕ್ಕಳು ಈ ಶಾಸ್ತ್ರ ಇತ್ಯಾದಿ ಏನೆಲ್ಲವೂ ಇವೆಯೂ ಭಕ್ತಿಮಾರ್ಗದ್ದಾಗಿದೆ ಎಂದು ತಿಳಿಯುವರು, ಈ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಎಲ್ಲಿಯವರೆಗೆ 7 ದಿನದಲ್ಲಿ ತಿಳುವಳಿಕೆಯ ಕೋರ್ಸ್ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಭಕ್ತಿಮಾರ್ಗವೇ ವಿಭಿನ್ನವಾಗಿದೆ, ಜ್ಞಾನ ಭಕ್ತಿ ಮತ್ತು ವೈರಾಗ್ಯವೆಂದು ಹೇಳುತ್ತಾರೆ. ವಾಸ್ತವದಲ್ಲಿ ಸನ್ಯಾಸಿಗಳ ವೈರಾಗ್ಯವೇನೂ ಸತ್ಯವಲ್ಲ, ಅವರಂತು ಕಾಡಿನಲ್ಲಿ ಹೋಗಿ ಆನಂತರ ನಗರಗಳಿಗೆ ಬಂದು ನಿವಾಸ ಮಾಡಿ, ದೊಡ್ದ-ದೊಡ್ಡ ಕಟ್ಟಡ ಮುಂತಾದವುಗಳನ್ನು ನಿರ್ಮಾಣ ಮಾಡುತ್ತಾರೆ. ನಾವು ಸಂಸಾರವನ್ನು ಬಿಟ್ಟಿದ್ದೇವೆಂದು ಹೇಳುತ್ತಾರಷ್ಟೇ. ನಿಮ್ಮದಾಗಿದೆ- ಇಡೀ ಹಳೆಯ ಪ್ರಪಂಚದೊಂದಿಗಿನ ವೈರಾಗ್ಯವಾಗಿದೆ. ಇದು ಯಥಾರ್ಥವಾದ ಮಾತಾಗಿದೆ, ಅದು ಅಲ್ಪಕಾಲದ ಮಾತಾಗಿದೆ ಆದ್ದರಿಂದ ಅದನ್ನು ಹಠಯೋಗ, ಅಲ್ಪಕಾಲದ ವೈರಾಗ್ಯವೆಂದು ಹೇಳಲಾಗುವುದು. |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವೀಗ ಸಮಾಪ್ತಿ ಆಗುವುದಿದೆ ಆದ್ದರಿಂದ ಇದರೊಂದಿಗೆ ಅವಶ್ಯವಾಗಿ ವೈರಾಗ್ಯವು ಬರಬೇಕಾಗಿದೆ. ಬುದ್ಧಿಯೂ ಸಹ ಹೇಳುತ್ತದೆ - ಹೊಸ ಮನೆಯನ್ನು ನಿರ್ಮಾಣವಾಗುತ್ತದೆ ಎಂದರೆ ಹಳೆಯದನ್ನು ಬೀಳಿಸಲಾಗುತ್ತದೆ. ಈಗ ತಯಾರಿಯಾಗುತ್ತಿದೆ, ಕಲಿಯುಗದ ನಂತರ ಪುನಃ ಸತ್ಯಯುಗವು ಅವಶ್ಯವಾಗಿ ಬರುವುದು, ಈಗ ಇದು ಪುರುಷೋತ್ತಮ ಸಂಗಮಯುಗವಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಪುರುಷೋತ್ತಮ ಮಾಸವೂ ಆಗುತ್ತದೆ, ನಿಮ್ಮದು ಇದು ಪುರುಷೋತ್ತಮ ಯುಗವಾಗಿದೆ. ಪುರುಷೋತ್ತಮ ಮಾಸದಲ್ಲಿ ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾರೆ. ನೀವಂತು ಈ ಪುರುಷೋತ್ತಮ ಯುಗದಲ್ಲಿ ಸರ್ವಸ್ವವನ್ನೂ ಸ್ವಾಹಾ ಮಾಡಿ ಬಿಡುತ್ತೀರಿ. ಈ ಇಡೀ ಪ್ರಪಂಚವೇ ಸ್ವಾಹಾ ಆಗುವುದಿದೆ ಎಂಬುದು ಗೊತ್ತಿದೆ ಅಂದಮೆಲೆ ಇಡೀ ಪ್ರಪಂಚದ ಸರ್ವಸ್ವವು ಸ್ವಾಹಾ ಆಗುವುದಕ್ಕೆ ಮೊದಲೇ, ನಾನು ನಮ್ಮನ್ನೇಕೆ ಸ್ವಾಹಾ ಮಾಡಬಾರದು!! ಇದರ ಪುಣ್ಯವೆಷ್ಟು ಲಭಿಸುವುದು!! ಅದಂತು ಅಲ್ಪಕಾಲದ ಪುರುಷೋತ್ತಮ ಮಾಸ, ಇದಂತು ಬೇಹದ್ದಿನ ಮಾತಾಗಿದೆ. ಪುರುಷೋತ್ತಮ ಮಾಸದಲ್ಲಿ ಬಹಳಷ್ಟು ಕಥೆಗಳನ್ನು ಕೇಳುತ್ತಾರೆ, ವ್ರತ, ಉಪವಾಸವನ್ನು ಇಡುತ್ತಾರೆ. ನಿಮ್ಮದು ಇದು ಬಹಳ ಶ್ರೇಷ್ಠವಾದ ವ್ರವಾಗಿದೆ. ನಿಮಗಂತು ಮರಿಮಕ್ಕಳು, ಮನೆ-ವ್ಯಾಪಾರ ಇತ್ಯಾದಿಗಳೆಲ್ಲವೂ ಇವೆ, ಆದರೆ ಹೃದಯದಿಂದ ಮಮತ್ವವು ನಶಿಸಿ ಹೋಗಿದೆ. ತಾವು ಸತ್ತರೆ ಇಡೀ ಪ್ರಪಂಚವೇ ಸತ್ತಂತೆ, ಇದೆಲ್ಲವೂ ಸಮಾಪ್ತಿ ಆಗಿ ಬಿಡುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವು ಪುರುಷೋತ್ತಮರು ಆಗುವುದಕ್ಕಾಗಿ ತಂದೆಯ ಮಕ್ಕಳಾಗಿದ್ದೇವೆ. ಸರ್ವ ಪುರುಷರಲ್ಲಿ ಅರ್ಥಾತ್ ಮನುಷ್ಯರಲ್ಲಿ ಉತ್ತಮ ಪುರುಷರಾಗಿ ತಮ್ಮ ಮುಂದೆ ಈ ಲಕ್ಷ್ಮೀ-ನಾರಾಯಣ ನಿಂತಿದ್ದಾರೆ. ಇವರಿಗಿಂತ ಉತ್ತಮರಂತು ಯಾವುದೇ ಮನುಷ್ಯರಾಗಲು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕನಾಗಿದ್ದರು. ನೀವೂ ಈ ರೀತಿಯೇ ಪುರುಷೋತ್ತಮರಾಗಲು ಬಂದಿರುವಿರಿ. ಮನುಷ್ಯರೆಲ್ಲರೂ ಸದ್ಗತಿಯನ್ನು ಪಡೆಯುತ್ತಾರೆ, ಮನುಷ್ಯರ ಆತ್ಮವು ಪುರುಷೋತ್ತಮರು ಆಗುತ್ತಾರೆಂದರೆ, ಮತ್ತೆ ಅವರಿರುವ ಸ್ಥಾನವೂ ಅಷ್ಟು ಉತ್ತಮವೇ ಆಗಿರಬೇಕು. ಹೇಗೆ ಪ್ರೆಸಿಡೆಂಟ್ ಎಲ್ಲರಿಗಿಂತಲೂ ಶ್ರೇಷ್ಠ ಪದವಿಯಲ್ಲಿದ್ದಾರೆ, ಆದ್ದರಿಂದ ಅವರಿರುವುದಕ್ಕಾಗಿ ರಾಷ್ಟ್ರಪತಿ ಭವನವು ಸಿಕ್ಕಿದೆ. ಅಲ್ಲಿ ಎಷ್ಟೊಂದು ದೊಡ್ಡ ಮಹಲು, ಉದ್ಯಾನವನ ಇತ್ಯಾದಿ.... ಇದೆ. ಇದೆಲ್ಲವೂ ಇಲ್ಲಿನ ಮಾತಾಯಿತು. ರಾಮ ರಾಜ್ಯವನ್ನಂತು ನೀವು ತಿಳಿದುಕೊಂಡಿದ್ದೀರಿ, ನೀವು ಸತ್ಯಯುಗಿ ಪುರುಷೋತ್ತಮರು ಆಗುತ್ತೀರಿ ನಂತರ ಈ ಕಲಿಯುಗೀ ಪುರುಷೋತ್ತಮರು ಇರುವುದಿಲ್ಲ. ನೀವು ಸತ್ಯಯುಗಿ ಪುರುಷೋತ್ತಮರಾಗಲು ಪುರುಷಾರ್ಥ ಮಾಡುತ್ತಿದ್ದೀರಿ, ನಿಮಗೆ ಗೊತ್ತಿದೆ - ಅಲ್ಲಿ ನಮ್ಮ ಮಹಲುಗಳು ಹೇಗಾಗುತ್ತವೆ. ನಾಳೆ ರಾಮ ರಾಜ್ಯವಾಗುವುದು, ನೀವು ರಾಮ ರಾಜ್ಯದಲ್ಲಿ ಪುರುಷೋತ್ತಮರಾಗಿ ಇರುತ್ತೀರಿ. ನಾವು ರಾವಣ ರಾಜ್ಯವು ಪರಿವರ್ತನೆ ಮಾಡಿ ರಾಮ ರಾಜ್ಯವನ್ನು ಸ್ಥಾಪಿಸುವೆವು ಎಂದು ನೀವು ಚಾಲೆಂಜ್ ಮಾಡುವಿರಿ. ಈಗ ಚಾಲೆಂಜ್ ಮಾಡಿದ್ದೀರೆಂದಾಗ ಭವಿಷ್ಯ 21 ಜನ್ಮಕ್ಕಾಗಿ ಒಬ್ಬರಿನ್ನೊಬ್ಬರನ್ನೂ ಪುರುಷೋತ್ತಮರನ್ನಾಗಿ ಮಾಡಬೇಕಾಗಿದೆ. ದೇವತೆಗಳ ಮಹಿಮೆಯನ್ನಂತು ಮಾಡುತ್ತಾರೆ - ಸರ್ವಗುಣ ಸಂಪನ್ನ..... ಅಹಿಂಸಾ ಪರಮೊ ದೇವಿ-ದೇವತಾ ಧರ್ಮ. ಇದನ್ನು ನೀವು ತಿಳಿದುಕೊಂಡಿದ್ದೀರಿ ಮತ್ತ್ಯಾವುದೇ ಮನುಷ್ಯರೂ ತಿಳಿದುಕೊಂಡಿಲ್ಲ. ನೀವು ಮುಂದಿನ ಜನ್ಮದಲ್ಲಿ ಪುರುಷೋತ್ತಮರಾಗುವಿರಿ, ನಂತರ ಯಾರಿಗೂ ಈ ರಾವಣ ರಾಜ್ಯವು ಇರುವುದಿಲ್ಲ. ನಿಮಗೀಗ ಸಂಪೂರ್ಣ ತಿಳುವಳಿಕೆಯಿದೆ, ಈಗ ರಾವಣ ರಾಜ್ಯವೇ ಸಮಾಪ್ತಿಯಾಗುವುದಿದೆ. ವರ್ತಮಾನದಲ್ಲಂತು ಸಮಯದ ಮೇಲೆ ಭರವಸೆಯೇ ಇಲ್ಲ, ಅಕಾಲ ಮೃತ್ಯುವಾಗಿ ಬಿಡುತ್ತದೆ ಅಥವಾ ಯಾರೊಂದಿಗೇ ಶತ್ರುತ್ವವಿದ್ದರೆ ಕೊಲೆ ಮಾಡಿ ಬಿಡುತ್ತಾರೆ. ನಿಮ್ಮನ್ನಂತು ಯಾರೂ ಸಹ ಈ ರೀತಿ ಮಾಡಲು ಸಾಧ್ಯವಿಲ್ಲ, ನೀವು ಅವಿನಾಶಿ ಪುರುಷೋತ್ತಮರಾಗಿದ್ದೀರಿ. ಈ ಪ್ರಪಂಚದಲ್ಲಿ ಇರುವವರಂತು ವಿನಾಶಿ, ಹಾಗೆಯೇ ರಾವಣ ರಾಜ್ಯದಲ್ಲಿ ಇದೆ. ಇವರಿಗೆ ನಿಮ್ಮ ದೈವೀ ರಾಜ್ಯದ ಬಗ್ಗೆ ಗೊತ್ತೇ ಇಲ್ಲ. ನಾವು ಶ್ರೀಮತದ ಆಧಾರದ ಮೇಲೆ ನಮ್ಮ ದೈವೀ ಸ್ವರಾಜ್ಯದ ಸ್ಥಾಪನೆ ಮಾಡುತ್ತಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಯಾರ ಪೂಜೆಯಾಗುತ್ತದೆಯೋ ಅವರು ಅವಶ್ಯವಾಗಿ ಅಂಥಹ ಒಳ್ಳೆಯ ಕರ್ತವ್ಯವನ್ನು ಮಾಡಿಹೋಗಿದ್ದಾರೆ ಎನ್ನುವುದನ್ನಂತು ನೀವು ತಿಳಿದಿದ್ದೀರಿ. ಉದಾ: ಜಗದಂಬಾರವರ ಎಷ್ಟೊಂದು ಪೂಜೆಯಾಗುತ್ತದೆ, ಇವರೀಗ ಜ್ಞಾನ-ಜ್ಞಾನೇಶ್ವರಿ ಆಗಿದ್ದಾರೆ. ನೀವು ಜಗದಂಬನ ಮಕ್ಕಳು ಜ್ಞಾನ-ಜ್ಞಾನೇಶ್ವರಿ ಮತ್ತು ರಾಜ-ರಾಜೇಶ್ವರಿ ಆಗಿದ್ದೀರಿ. ಇಬ್ಬರಲ್ಲಿ ಉತ್ತಮರು ಯಾರು? ಜ್ಞಾನ-ಜ್ಞಾನೇಶ್ವರಿಯ ಬಳಿ ಹೋಗಿ ಅನೇಕ ಪ್ರಕಾರದ ಮನೋಕಾಮನೆಗಳನ್ನು ತಿಳಿಸುತ್ತಾರೆ. ಅನೇಕ ವಸ್ತುಗಳನ್ನು ಬೇಡುತ್ತಾರೆ. ಜಗದಂಬನ ಮಂದಿರ ಮತ್ತು ಲಕ್ಷ್ಮೀ-ನಾರಾಯಣನ ಮಂದಿರದಲ್ಲಿ ಬಹಳ ಅಂತರವಿದೆ. ಜಗದಂಬನ ಮಂದಿರವು ಬಹಳ ಚಿಕ್ಕದಾಗಿದೆ, ಚಿಕ್ಕ ಜಾಗದಲ್ಲಿಯೇ ಬಹಳ ಮನುಷ್ಯರ ಗುಂಪು ಸೇರುವುದು ಬಯಸುತ್ತಾರೆ, ಶ್ರೀನಾಥನ ಮಂದಿರದಲ್ಲಿಯೂ ಬಹಳಷ್ಟು ಜನ ಸಮೂಹವಾಗುತ್ತದೆ, ಸಮೂಹದಲ್ಲಿರುವ ಜನರನ್ನು ಮುಂದೆ ಕಳುಹಿಸಲು ಬಟ್ಟೆಯ ಕೋಲನ್ನು ತೋರಿಸುತ್ತಾ ಇರುತ್ತಾರೆ. ಕಲ್ಕತ್ತಾದಲ್ಲಿ ಕಾಳಿಯ ಮಂದಿರವು ಬಹಳ ಚಿಕ್ಕದಾಗಿದೆ, ಒಳಗೆ ಬಹಳ ಎಣ್ಣೆ ಮತ್ತು ನೀರಿರುತ್ತದೆ. ಮಂದಿರದೊಳಗೆ ಬಹಳ ಜಾಗ್ರತೆಯಿಂದ ನಡೆದುಕೊಂಡು ಹೋಗಬೇಕಾಗುತ್ತದೆ. ಅಲ್ಲಿ ಬಹಳ ಸಮೂಹವಿರುತ್ತದೆ. ಲಕ್ಷ್ಮೀ-ನಾರಾಯಣನ ಮಂದಿರವಂತು ಬಹಳ ದೊಡ್ಡದಾಗಿರುತ್ತದೆ, ಜಗದಂಬನ ಮಂದಿರವೇಕೆ ಚಿಕ್ಕದಾಗಿರುತ್ತದೆ? ಬಡವಳಲ್ಲವೆ. ಆದ್ದರಿಂದ ಮಂದಿರವೂ ಅದೇರೀತಿ ಇದೆ. ಅವರು ಸಾಹುಕಾರರಾಗಿದ್ದಾರೆ, ಆದರೆ ಮಂದಿರದಲ್ಲೆಂದಿಗೂ ಜಾತ್ರೆಯಾಗುವುದಿಲ್ಲ. ಜಗದಂಬನ ಮಂದಿರದಲ್ಲಿ ಬಹಳ ಜಾತ್ರೆಗಳಾಗುತ್ತವೆ, ಹೊರ ಪ್ರದೇಶಗಳಿಂದ ಬಹಳಷ್ಟು ಜನರು ಬರುತ್ತಾರೆ. ಮಹಾಲಕ್ಷ್ಮಿಯ ಮಂದಿರವೂ ಇದೆ, ಇದನ್ನು ನೀವೂ ತಿಳಿದಿದ್ದೀರಿ. ಇದರಲ್ಲಿ ಲಕ್ಷ್ಮಿಯೂ ಇದ್ದಾರೆ ಮತ್ತು ನಾರಾಯಣನೂ ಇರುವನು (ಕಂಬೈಂಡ್ ರೂಪ). ಲಕ್ಷ್ಮಿಯಿಂದ ಕೇವಲ ಹಣವನ್ನೇ ಬೇಡುವರು ಏಕೆಂದರೆ ಮಹಾಲಕ್ಷ್ಮಿಯು ಸಿರಿವಂತಳಾಗಿದ್ದಾರಲ್ಲವೆ. ಇಲ್ಲಿರುವುದಂತು ಅವಿನಾಶಿ ಜ್ಞಾನರತ್ನಗಳು. ಹಣಕ್ಕಾಗಿ ಲಕ್ಷ್ಮಿಯ ಬಳಿ ಹೋಗುವರು, ಬಾಕಿ ಅನೇಕ ಆಶೆಗಳನ್ನಿಟ್ಟುಕೊಂಡು ಜಗದಂಬನ ಬಳಿಗೆ ಹೋಗುವರು. ನೀವು ಜಗದಂಬನ ಮಕ್ಕಳಾಗಿದ್ದೀರಿ, 21 ಜನ್ಮಗಳಿಗಾಗಿ ನೀವು ಎಲ್ಲರ ಮನೋಕಾಮನೆಗಳನ್ನು ಪೂರ್ಣಗೊಳಿಸುವಿರಿ. ಒಂದು ಮಹಾಮಂತ್ರದಿಂದಲೇ ಎಲ್ಲರ ಮನೋಕಾಮನೆಗಳು 21 ಜನ್ಮಗಳಿಗಾಗಿ ಪೂರ್ಣಗೊಳ್ಳುತ್ತದೆ. ಅನ್ಯರು ಯಾವುದೆಲ್ಲಾ ಮಂತ್ರಗಳು ಮುಂತಾದವನ್ನು ಕೊಡುತ್ತಾರೆಯೋ ಅದರಲ್ಲಿ ಅರ್ಥವೇನೂ ಇಲ್ಲ. ತಂದೆಯು ತಿಳಿಸುವರು - ಈ ಮಂತ್ರವನ್ನು ನಿಮಗೆ ಕೊಡುತ್ತೇನೆ - ಏಕೆ? ಏಕೆಂದರೆ ನೀವು ಪತಿತರಾಗಿದ್ದೀರಲ್ಲವೆ. ನನ್ನೊಬ್ಬನನ್ನೇ ನೆನಪು ಮಾಡುತ್ತೀರಿ, ಆಗಲೇ ಪಾವನರಾಗುವಿದಿ. ಆತ್ಮರಿಗೆ ಇದನ್ನು ತಂದೆಯವರಲ್ಲದೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಇದರಿಂದ ಸಿದ್ಧವಾಗುತ್ತದೆ - ಈ ಸಹಜ ರಾಜಯೋಗವನ್ನು ಒಬ್ಬ ತಂದೆಯೇ ಕಲಿಸುವರು. ಅವರೇ ಮಂತ್ರವನ್ನೂ ಕೊಡುವರು. ಈ ಮಂತ್ರವನ್ನು 5000 ವರ್ಷಗಳ ಮೊದಲೂ ಕೊಟ್ಟಿದ್ದರೆಂಬ ಸ್ಮೃತಿಯು ಬಂದಿದೆ. ಈಗ ನೀವು ಸನ್ಮುಖದಲ್ಲಿ ಕುಳಿತುಕೊಂಡಿದ್ದೀರಿ. ಕ್ರೈಸ್ಟ್ ಇದ್ದು ಹೋದರು, ನಂತರ ಅವರ ಬೈಬಲ್ ಗ್ರಂಥವನ್ನು ಓದುತ್ತಿರುತ್ತಾರೆ. ಅವರೇನು ಮಾಡಿ ಹೋದರು? ಧರ್ಮದ ಸ್ಥಾಪನೆ ಮಾಡಿಹೋದರು. ಶಿವ ತಂದೆಯು ಏನು ಮಾಡಿಹೋದರು, ಕೃಷ್ಣನು ಏನು ಮಾಡಿ ಹೋದನು! ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಕೃಷ್ಣನಂತು ಸತ್ಯಯುಗದ ರಾಜಕುಮಾರನಾಗಿದ್ದನು, ಅವನೇ ನಂತರ ನಾರಾಯಣನಾಗುವನು, ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದಾನೆ. ಶಿವ ತಂದೆಯೂ ಸಹ ಏನೋ ಮಾಡಿ ಹೋಗಿದ್ದಾರೆ. ಆದ್ದರಿಂದಲೇ ಅವರ ಇಷ್ಟೆಲ್ಲಾ ಪೂಜೆ ಇತ್ಯಾದಿ... ನಡೆಯುತ್ತದೆ. ಈಗ ನೀವು ತಿಳಿದಿದ್ದೀರಿ - ರಾಜಯೋಗವನ್ನು ಕಲಿಸಿಕೊಟ್ಟು ಹೋದರು, ಭಾರತವನ್ನು ಸ್ವರ್ಗವನ್ನಾಗಿ ಮಾಡಿಹೋಗಿದ್ದಾರೆ, ಆ ಸ್ವರ್ಗದ ಮೊದಲ ನಂಬರಿನ ಮಾಲೀಕನು ಸ್ವಯಂ ತಂದೆಯಾಗುವುದಿಲ್ಲ, ಶ್ರೀಕೃಷ್ಣನಾದನು. ಅವಶ್ಯವಾಗಿ ಕೃಷ್ಣ ಆತ್ಮನಿಗೆ ಓದಿಸಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡು ಬಿಟ್ಟಿರಿ. ಕೃಷ್ಣನ ವಂಶಾವಳಿಯಾಗಿ ನೀವು ಕುಳಿತಿದ್ದೀರಿ, ರಾಜಾ-ರಾಣಿಯನ್ನು ಮಾತಾಪಿತ ಅನ್ನದಾತಾ ಎಂದು ಕರೆಯುತ್ತಾರೆ. ರಾಜಾಸ್ಥಾನದಲ್ಲಿಯೂ ರಾಜನಿಗೆ ಅನ್ನದಾತಾ ಎನ್ನುವರು. ರಾಜರಿಗೆಷ್ಟು ಮಾನ್ಯತೆಯಿರುತ್ತದೆ! ಮುಂಚೆ ಎಲ್ಲಾ ದೂರುಗಳು ರಾಜರ ಬಳಿ ಬರುತ್ತಿದ್ದವು, ಸಭೆಯು ಸೇರುತ್ತಿತ್ತು. ಯಾರೇ ತಪ್ಪು ಮಾಡುತ್ತಿದ್ದರು, ಅವರು ಬಹಳ ಪಶ್ಚಾತ್ತಾಪ ಪಡುತ್ತಿದ್ದರು. ವರ್ತಮಾನದಲ್ಲಂತು ಬಹಳಷ್ಟು ಜೈಲಿನ ಪಕ್ಷಿಗಳಿದ್ದಾರೆ, ಪದೇ-ಪದೇ ಜೈಲಿಗೆ ಹೋಗುತ್ತಾರೆ. ಈಗ ನೀವು ಮಕ್ಕಳು ಗರ್ಭ ಜೈಲಿನಲ್ಲಿ ಹೋಗಬಾರದು, ನೀವಂತು ಗರ್ಭ ಮಹಲಿನಲ್ಲಿ ಬರಬೇಕಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುವಿರೆಂದರೆ ವಿಕರ್ಮಗಳ ವಿನಾಶವಾಗುವುದು. ನಂತರ ಮತ್ತೆಂದಿಗೂ ಗರ್ಭ ಜೈಲಿನಲ್ಲಿ ಹೋಗುವುದಿಲ್ಲ, ಅಲ್ಲಿ (ಸತ್ಯ-ತ್ರೇತಾ) ಪಾಪಗಳಾಗುವುದಿಲ್ಲ. ಎಲ್ಲರೂ ಗರ್ಭಮಹಲಿನಲ್ಲಿ ಇರುತ್ತಾರೆ, ಕೇವಲ ಕಡಿಮೆ ಪುರುಷಾರ್ಥದ ಕಾರಣ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಶ್ರೇಷ್ಠ ಪದವಿಯುಳ್ಳವರಿಗೆ ಸುಖವೂ ಅತ್ಯಧಿಕವಾಗಿರುತ್ತದೆ. ಇಲ್ಲಂತು ಕೇವಲ 5 ವರ್ಷಗಳಿಗಾಗಿ ಗವರ್ನರ್, ಪ್ರೆಸಿಡೆಂಟ್ ನಿಮಿತ್ತರನ್ನಾಗಿ ಮಾಡುತ್ತಾರೆ. ನೀವು ಇದನ್ನು ತಿಳಿಸಬಹುದು - ಭಾರತವೇ ದೈವೀ ರಾಜಾಸ್ಥಾನವಾಗಿತ್ತು, ಈಗಂತು ರಾಜಾಸ್ಥಾನವೂ ಇಲ್ಲ ಮತ್ತು ರಾಜಾ-ರಾಣಿಯೂ ಇಲ್ಲ. ಮುಂಚೆ ಯಾರಾದರೂ ಸರ್ಕಾರಕ್ಕೆ ಹಣವನ್ನು ಕೊಡುತ್ತಿದ್ದರೆಂದರೆ, ಮಹಾರಾಜಾ-ಮಹಾರಾಣಿ ಎಂಬ ಬಿರುದು ಸಿಕ್ಕಿ ಬಿಡುತ್ತಿತ್ತು. ಇಲ್ಲಂತು ನಿಮ್ಮ ವಿದ್ಯಾಭ್ಯಾಸವಿದೆ. ಈ ಪ್ರಪಂಚದಲ್ಲಿ ವಿದ್ಯಾಭ್ಯಾಸದಿಂದ ಎಂದಿಗೂ ರಾಜಾ-ರಾಣಿ ಆಗುವುದಿಲ್ಲ. ನಿಮ್ಮದು ಇಲ್ಲಿ ಗುರಿ-ಉದ್ದೇಶವಿದೆ, ಈ ವಿದ್ಯಾಭ್ಯಾಸದಿಂದ ನೀವು ವಿಶ್ವದ ಮಹಾರಾಜಾ-ಮಹಾರಾಣಿ ಆಗುತ್ತೀರಿ. ಕೇವಲ ರಾಜಾ-ರಾಣಿಯಲ್ಲ. ರಾಜಾ-ರಾಣಿಯ ಬಿರುದಂತು ತ್ರೇತಾದಿಂದ ಆರಂಭವಾಗುವುದು. |
ನೀವೀಗ ಜ್ಞಾನ-ಜ್ಞಾನೇಶ್ವರಿ ಆಗುತ್ತೀರಿ, ನಂತರ ರಾಜ-ರಾಜೇಶ್ವರಿಯಾಗುವಿರಿ. ಆ ರೀತಿ ಮಾಡುವವರು ಯಾರು? ಈಶ್ವರ. ಹೇಗೆ? ರಾಜಯೋಗ ಮತ್ತು ಜ್ಞಾನದಿಂದ. ರಾಜ್ಯಭಾಗ್ಯಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯು ನಿಮ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ, ಇದಂತು ಬಹಳ ಸಹಜವಿದೆಯಲ್ಲವೆ. ಸ್ವರ್ಗದ ಸ್ಥಾಪನೆ ಮಾಡುವವರಂತು ಗಾಡ್ ಫಾದರ್ ಆಗಿದ್ದಾರೆ. ಸ್ವರ್ಗದಲ್ಲಿಯೇ ಸ್ವರ್ಗದ ಸ್ಥಾಪನೆಯನ್ನು ಮಾಡುವುದಿಲ್ಲ. ಅವರಿಗೆ ಆ ಪದವಿಯೂ ಸಹ ಅವಶ್ಯವಾಗಿ ಸಂಗಮದಲ್ಲಿಯೇ ಸಿಕ್ಕಿರುತ್ತದೆ. ಆದ್ದರಿಂದ ಇದನ್ನು ಸೌಭಾಗ್ಯಶಾಲಿ ಕಲ್ಯಾಣಕಾರಿ ಸಂಗಮಯುಗವೆಂದು ಹೇಳಲಾಗುವುದು. ಯಾವ ತಂದೆಯು ಎಷ್ಟೊಂದು ಮಕ್ಕಳ ಕಲ್ಯಾಣ ಮಾಡುತ್ತಾರೆ, ಅವರೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಹೇಳುವುದೂ ಸಹ ಪರಮಪಿತ ಪರಮಾತ್ಮ ಹೊಸ ಪ್ರಪಂಚವನ್ನು ರಚಿಸುವರು ಎಂದು ಹೇಳುತ್ತಾರೆ, ಆದರೆ ಅದರಲ್ಲಿ ಯಾರು ರಾಜ್ಯಾಡಳಿತ ಮಾಡುವರು ಎಂಬುದು ಯಾರಿಗೂ ತಿಳಿದಿಲ್ಲ. ನೀವು ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಅವರುಗಳಂತು ರಾಮ ರಾಜ್ಯದ ಸಮಯವನ್ನು ಲಕ್ಷಾಂತರ ವರ್ಷಗಳೆಂದು ಹೇಳಿಕೆ ಕೊಟ್ಟಿದ್ದಾರೆ, ಕಲಿಯುಗಕ್ಕೆ 40 ಸಾವಿರ ವರ್ಷಗಳೆಂದು ಹೇಳಿ ಬಿಟ್ಟಿದ್ದಾರೆ. ತಂದೆಯು ಹೇಳುತ್ತಾರೆ - ನಾನು ಬರುವುದೇ ಸಂಗಮದಲ್ಲಿ, ಬಂದು ಬ್ರಹ್ಮಾರವರ ಮೂಲಕ ವಿಷ್ಣುಪುರಿಯ ಸ್ಥಾಪನೆ ಮಾಡುವೆನು. ಸತ್ಯ ನಾರಾಯಣನ ಕಥೆಯೂ ಸಹ ಇದೇ ಆಗಿದೆ. ಸತ್ಯಯುಗದಲ್ಲಿ ನೀವು ಲಕ್ಷ್ಮೀ-ನಾರಾಯಣನು ಸರ್ವಗುಣ ಸಂಪನ್ನ.... ಆಗುತ್ತೀರಿ. ನಂತರದಲ್ಲಿ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಯಾವಾಗ ಸ್ಥಾಪನೆಯಾಗುವುದೋ ಆಗಲೇ ಹೊಸ ವೃಕ್ಷವಾಗುವುದು. ಹೊಸ ಮನೆಯ ನಿರ್ಮಾಣವಾಗುತ್ತದೆ ಎಂದರೆ ಹೊಸದೆಂದು ಹೇಳಲಾಗುವುದು. ನೀವೂ ಸಹ ಸತ್ಯಯುಗದಲ್ಲಿ ಬರುತ್ತೀರೆಂದರೆ ಹೊಸ ರಾಜಧಾನಿಯಾಗುವುದು, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ಸ್ಥಾಪನೆಯು ಇಲ್ಲಿಯೇ ಆಗುತ್ತದೆ, ಈ ಅದ್ಭುತವಾದ ಮತುಗಳು ಯಾರದೇ ಬುದ್ಧಿಯಲ್ಲಿಯೂ ಇಲ್ಲ. ಆದ್ದರಿಂದ ತಂದೆಯು ತಿಳಿಸಿದ್ದಾರೆ - ಎಲ್ಲಾ ಆತ್ಮರಿಗಾಗಿ ಈ ಯುಗವು ಪುರುಷೋತ್ತಮರಾಗುವ ಯುಗವಾಗಿದೆ. ಜೀವನ್ಮುಕ್ತಿಗೆ ಪುರುಷೋತ್ತಮ ಎಂದು ಹೇಳಲಾಗುತ್ತದೆ. ಜೀವನ ಬಂಧನವನ್ನು ಪುರುಷೋತ್ತಮ ಎಂದು ಹೇಳುವುದಿಲ್ಲ, ಈ ಸಮಯದಲ್ಲಂತು ಎಲ್ಲರೂ ಜೀವನ ಬಂಧನದಲ್ಲಿದ್ದಾರೆ. ತಂದೆಯು ಬಂದು ಎಲ್ಲರನ್ನೂ ಜೀವನ್ಮುಕ್ತರನ್ನಾಗಿ ಮಾಡುತ್ತಾರೆ, ನೀವು ಅರ್ಧಕಲ್ಪಕ್ಕಾಗಿ ಜೀವನ್ಮುಕ್ತರಾಗುವಿರಿ ನಂತರ ಜೀವನ ಬಂಧನದಲ್ಲಿ - ಇದನ್ನಂತು ನೀವು ತಿಳಿದಿದ್ದೀರಿ. ನಿಮ್ಮ ಈ ವ್ರತ-ಉಪವಾಸಗಳೆಲ್ಲವೂ ಏನಾಗಿದೆ? ಬಾಬಾರವರು ಬಂದು ವ್ರತ ಮಾಡಿಸಿದ್ದಾರೆ, ಆದರೆ ಅದು ಆಹಾರ-ಪಾನೀಯಗಳ ಮಾತಲ್ಲ. ಎಲ್ಲಾ ಕಾರ್ಯಗಳನ್ನೂ ಮಾಡಿರಿ ಕೇವಲ ತಂದೆಯನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಪುರುಷೋತ್ತಮ ಮಾಸದಲ್ಲಿ ಬಹಳಷ್ಟು ಮಂದಿ ಪವಿತ್ರವಾಗಿಯೂ ಇರುತ್ತಾರೆ. ವಾಸ್ತವದಲ್ಲಿ ಈ ಪುರುಷೋತ್ತಮ ಯುಗದ ಮಾನ್ಯತೆಯಿದೆ ಅಂದಾಗ ನಿಮಗೆಷ್ಟು ಖುಷಿ ಹಾಗೂ ನಶೆಯುಂಟಾಗಬೇಕು!! ಈಗ ನಿಮ್ಮ ಯಾವುದೇ ಪಾಪಕರ್ಮಗಳು ಆಗಬಾರದು ಏಕೆಂದರೆ ನೀವು ಪುರುಷೋತ್ತಮರು ಆಗುತ್ತಿದ್ದೀರಿ. ಒಳ್ಳೆಯದು! |
ಮಧುರಾತಿ ಮಧುರ ಅಗಲಿ ಸಿಕ್ಕಿರುವಂತಹ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಪುರುಷೋತ್ತಮ ಯುಗದಲ್ಲಿ ಜೀವನ್ಮುಕ್ತರು ಆಗುವುದಕ್ಕಾಗಿ ಪುಣ್ಯ ಕರ್ಮಗಳನ್ನು ಮಾಡಬೇಕಾಗಿದೆ. ಅವಶ್ಯವಾಗಿ ಪವಿತ್ರರಾಗಿ ಇರಬೇಕಾಗಿದೆ. ಮನೆ-ವ್ಯವಹಾರ ಮುಂತಾದವೆಲ್ಲವೂ ಇದ್ದರೂ ಮನಃಪೂರ್ವಕವಾಗಿ ಮಮತ್ವ ಸಮಾಪ್ತಿ ಮಾಡಬೇಕಾಗಿದೆ. |
2. ಶ್ರೀಮತದಂತೆ ತಮ್ಮ ತನು-ಮನ-ಧನದಿಂದ ದೈವೀ ರಾಜ್ಯವನ್ನು ಸ್ಥಾಪಿಸಬೇಕಾಗಿದೆ. ಪುರುಷೋತ್ತಮರನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. |
ಓಂ ಶಾಂತಿ. ಗೀತೆಯ ಒಂದು ಅಕ್ಷರವೇ ಬಹಳಷ್ಟಾಗಿದೆ. ಮಕ್ಕಳಿಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಮತ್ತು ಕಲ್ಪ-ಕಲ್ಪವೂ ಸಿಗುತ್ತದೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ಬೇಹದ್ದಿನ ಆಸ್ತಿಯು ಸಿಗುತ್ತದೆ, ಅವಶ್ಯವಾಗಿ ಅದು ಭಾರತಕ್ಕೇ ಸಿಕ್ಕಿತ್ತು, ಈಗ ಇಲ್ಲ ಪುನಃ ಸಿಗುತ್ತಿದೆ. ನೋಡುತ್ತೀರಿ, ಈಗಂತೂ ಸ್ವರ್ಗದ ಆಸ್ತಿಯಿಲ್ಲ, ರಾವಣನ ಮೂಲಕ ನರಕದ ಶಾಪವು ಸಿಗುತ್ತಿದೆ. ಶಾಪದಿಂದ ಮನುಷ್ಯರು ದುಃಖಿಯಾಗುತ್ತಾರೆ. ವರ ಅರ್ಥಾತ್ ಆಸ್ತಿಯಿಂದ ಸುಖಿಯಾಗುತ್ತಾರೆ, ಈಗ ಬ್ರಾಹ್ಮಣ ಮಕ್ಕಳಿಗೆ ಅರ್ಥವಾಗಿದೆ - ಒಬ್ಬರು ಬೇಹದ್ದಿನ ನಿರಾಕಾರ ತಂದೆ, ಇನ್ನೊಬ್ಬರು ಪ್ರಜಾಪಿತ ಬೇಹದ್ದಿನ ಸಾಕಾರ ತಂದೆ ಆಗಿದ್ದಾರೆ. ಬೇಹದ್ದಿನ ಸಾಕಾರ ತಂದೆಯು ಪ್ರಜಾಪಿತ ಬ್ರಹ್ಮನಲ್ಲದೆ ಮತ್ತ್ಯಾರೂ ಅಲ್ಲ. ಗಾಂಧೀಜಿಗೂ ಬಾಪೂಜಿ ಎಂದು ಹೇಳುತ್ತಿದ್ದರು ಆದರೆ ನಿಯಮಾನುಸಾರ ಇಡೀ ಮನುಷ್ಯ ಸೃಷ್ಟಿಗೆ ಅವರು ಬಾಪೂಜಿಯಾಗಲು ಸಾಧ್ಯವಿಲ್ಲ. ಇಡೀ ನಿರಾಕಾರಿ ವಿಶ್ವದ ಬಾಪೂಜಿಯು ಶಿವನಾಗಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಶಿವ ತಂದೆಯು ಬಂದು ಆಸ್ತಿಯನ್ನು ಕೊಡುವುದಕ್ಕಾಗಿ ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ಮಧುಬನಕ್ಕೆ ಏತಕ್ಕಾಗಿ ಬರುತ್ತೀರಿ? ಶಿವ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ. ಆದರೆ ಅವರು ನಿರಾಕಾರನಾಗಿದ್ದಾರೆ. ಕೇವಲ ಶಿವ ತಂದೆಯೆಂದು ಹೇಳಿದರೆ ಅರ್ಥವಾಗುವುದಿಲ್ಲ ಆದ್ದರಿಂದ ಬಾಪ್ದಾದಾ ಎಂದು ಹೇಳಲಾಗುತ್ತದೆ. ಶಿವ ತಂದೆ ಮತ್ತು ಬ್ರಹ್ಮಾದಾದಾ ಆಗಿದ್ದಾರೆ. ದಾದಾರವರ ಹೆಸರೇ ಬೇರೆ, ತಂದೆಯ ಹೆಸರೇ ಬೇರೆಯಾಗಿದೆ. ಆ ನಿರಾಕಾರನು ಎಲ್ಲರ ತಂದೆಯಾಗಿದ್ದಾರೆ, ಎಲ್ಲರ ತಾತನೂ ಆಗಿದ್ದಾರೆ. ಎಲ್ಲಾ ಮಕ್ಕಳಿಗೆ ಬಾಪ್ದಾದಾರವರಿಂದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ, ಬೇಹದ್ದಿನ ತಂದೆಯಿಂದ ಎಲ್ಲರಿಗೆ ಆಸ್ತಿಯು ಸಿಗುತ್ತದೆ. ಆ ತಂದೆಯು ಎಲ್ಲರ ದುಃಖಹರ್ತ-ಸುಖಕರ್ತನಾಗಿದ್ದಾರೆ. ಸತ್ಯಯುಗದಲ್ಲಿ ಯಾವುದೇ ಮನುಷ್ಯರು ದುಃಖಿಯಾಗಿರಲು ಸಾಧ್ಯವಿಲ್ಲ, ಹೆಸರೇ ಆಗಿದೆ ಸ್ವರ್ಗ, ಅವರು ಸ್ವರ್ಗವನ್ನು ಸ್ಥಾಪಿಸುವ ಪರಮಪಿತನಾಗಿದ್ದಾರೆ. ಭಾರತವು ಎಲ್ಲದಕ್ಕಿಂತ ಹಳೆಯದಾಗಿದೆ, ಇದೇ ಹೊಸದಾಗಿತ್ತು ಆದ್ದರಿಂದ ಈಗ ಎಲ್ಲದಕ್ಕಿಂತ ಹಳೆಯದಾಗಿದೆ. ಭಾರತಕ್ಕೇ ಸತ್ಯಯುಗ, ಕಲಿಯುಗ ಎಂದು ಹೇಳಲಾಗುತ್ತದೆ. ಅವಶ್ಯವಾಗಿ ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡುತ್ತಿದ್ದರು. ಇದು ಬುದ್ಧಿಯಲ್ಲಿದೆ. ನೀವೀಗ ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ಹೋಗುತ್ತೀರೆಂದರೆ ಕೂಡಲೇ ಬುದ್ಧಿಯಲ್ಲಿ ಬರುತ್ತದೆ - ಅವರಿಗೆ ಈ ಆಸ್ತಿಯು ಹೇಗೆ ಸಿಕ್ಕಿತು! ಇವರು ಹೇಗೆ ಪೂಜ್ಯರಾದರು! ಯಾವಾಗ ರಾಜ್ಯ ಮಾಡಿದರು? ಯಾರ ಮುಖಾಂತರ ರಾಜ್ಯ ಪಡೆದರು? ಇದೆಲ್ಲವೂ ಬುದ್ಧಿಯಲ್ಲಿ ಬರುತ್ತದೆ. ಮೊದಲು ಲಕ್ಷ್ಮೀ-ನಾರಾಯಣರ ಮಂದಿರಕ್ಕೆ ಹೋಗುತ್ತಿದ್ದಿರಿ, ಮಾಲೆಯನ್ನು ಜಪಿಸುತ್ತಿದ್ದಿರಿ, ಅವರ ಕರ್ತವ್ಯದ ಬಗ್ಗೆ ಏನೂ ತಿಳಿದಿರಲಿಲ್ಲ. ಈಗ ಕೇವಲ ನಿಮ್ಮ ಬುದ್ಧಿಯಲ್ಲಿದೆ, ನಿಮ್ಮಲ್ಲಿಯೂ ನಂಬರ್ವಾರ್. ನೀವೀಗ ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಹೋಗಿ ನಿಂತುಕೊಂಡ ಕೂಡಲೇ ಹರ್ಷಿತರಾಗುತ್ತೀರಿ, ಏಕೆಂದರೆ ನಿಮ್ಮ ಬುದ್ಧಿಯಲ್ಲಿದೆ - ಇವರು ಈ ಪ್ರಾಲಬ್ಧವನ್ನು ಹೇಗೆ ಪಡೆದಿದ್ದರು, ಸಂಗಮಯುಗದಲ್ಲಿಯೇ ಪಡೆದರು ಏಕೆಂದರೆ ಸಂಗಮ ಯುಗದಲ್ಲಿಯೇ ಹಳೆಯ ಪ್ರಪಂಚ ಪರಿವರ್ತನೆ ಆಗಬೇಕಾಗಿದೆ. ಸಂಗಮದಲ್ಲಿಯೇ ತಂದೆಯು ಬಂದು ರಾಜಯೋಗವನ್ನು ಕಲಿಸಿದ್ದರು, ಇದನ್ನೂ ತಿಳಿದುಕೊಂಡಿದ್ದೀರಿ - ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಇವರು ಬ್ರಹ್ಮನಾಗಿದ್ದರು. ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ಈ ಲಕ್ಷ್ಮೀ-ನಾರಾಯಣರೇ ಹಿಂದಿನ ಜನ್ಮದಲ್ಲಿ ಬ್ರಹ್ಮಾ-ಸರಸ್ವತಿಯಾಗಿದ್ದರು, ಬ್ರಹ್ಮನ ಜೊತೆಗೆ ಬ್ರಾಹ್ಮಣ-ಬ್ರಾಹ್ಮಣಿಯರೂ ಇರುತ್ತಾರೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಅವಶ್ಯವಾಗಿ ಪ್ರಜಾಪಿತನೂ ಇರುವರು. ನೀವು ತಿಳಿದುಕೊಂಡಿದ್ದೀರಿ - ನಾವು ಪುರುಷಾರ್ಥ ಮಾಡುತ್ತಿದ್ದೇವೆ, ಯಾರು ಕಲ್ಪದ ಹಿಂದೆ ಪುರುಷಾರ್ಥ ಮಾಡಿದ್ದಾರೆಯೋ ಅವರನ್ನು ನಾವು ಸಾಕ್ಷಿಯಾಗಿ ನೋಡುತ್ತೇವೆ. ಒಂದು ರಾಜ್ಯ ಮನೆತನವಿರುತ್ತದೆ, ಇನ್ನೊಂದು ಪ್ರಜಾ ಮನೆತನವಿರುತ್ತದೆ. ಪ್ರಜೆಗಳಲ್ಲಿಯೂ ಕೆಲವರು ಬಹಳ ಸಾಹುಕಾರರಿರುತ್ತಾರೆ, ಕೆಲವರು ಕಡಿಮೆ. ರಾಜರಲ್ಲಿಯೂ ಕೆಲವರು ಬಹಳ ಸಾಹುಕಾರರು, ಕೆಲವರು ಕಡಿಮೆ ಸಾಹುಕಾರರಿರುತ್ತಾರೆ. ಇವರು ಈ ರಾಜ್ಯವನ್ನು ಹೇಗೆ ಪಡೆದರೆಂದು ನೀವು ಲಕ್ಷ್ಮೀ-ನಾರಾಯಣರ ಮಂದಿರದಲ್ಲಿ ಯಾರಿಗಾದರೂ ತಿಳಿಸಬಲ್ಲಿರಿ. ಈಗ ಪುನಃ ಅವರೇ ತಮ್ಮ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ, ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಎಷ್ಟು ಸಹಜವಾಗಿದೆ. ಅಂಬಾ ಯಾರೆಂಬುದನ್ನು ತಿಳಿದುಕೊಂಡಿಲ್ಲ, ನೀವು ಹೇಳುತ್ತೀರಿ, ಇವರಂತೂ ಜಗದಂಬೆಯಾಗಿದ್ದಾರೆ, ಕಲ್ಪದ ಮೊದಲೂ ಜಗದಂಬಾ ಜಗತ್ಪಿತರು ಇದ್ದರು. ಅವರ ಮಕ್ಕಳು ನಾವೂ ಇದ್ದೆವು, ಸಂಗಮದಲ್ಲಿ ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ. ಜಗದಂಬೆಯ ಮಕ್ಕಳು ಅನೇಕರಿದ್ದಾರೆ ಆದರೆ ಇಷ್ಟೊಂದು ಮಂದಿಯನ್ನು ಇಲ್ಲಿಯೇ ಇರಿಸಿಕೊಳ್ಳಲು ಸಾಧ್ಯವಿಲ್ಲ. |
ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮಕ್ಕಳಿಗೆ ಜ್ಞಾನವನ್ನೇ ಕೊಡುತ್ತಾರೆ. ಅವರಿಗೆ ಮನುಷ್ಯನೆಂದಾಗಲಿ, ದೇವತೆಯೆಂದಾಗಲಿ ಹೇಳುವುದಿಲ್ಲ. ಅವರಿಗೆ ಪರಮಾತ್ಮನೆಂದೇ ಹೇಳಲಾಗುತ್ತದೆ. ನೀವು ಯಾರದೇ ಮಂದಿರದಲ್ಲಿ ಹೋಗುತ್ತೀರೆಂದರೆ ಅವರ ಚರಿತ್ರೆಯನ್ನು ತಿಳಿಸಬಲ್ಲಿರಿ. ರಾಮನ ಚರಿತ್ರೆಯನ್ನು ನೀವು ತಿಳಿಸಬಲ್ಲಿರಿ, ಚಂದ್ರವಂಶಿ ಮನೆತನವು ಈಗ ಸ್ಥಾಪನೆಯಾಗುತ್ತಿದೆ. ಬ್ರಹ್ಮನ ಮೂಲಕ ಬ್ರಾಹ್ಮಣ ಧರ್ಮದ ಸ್ಥಾಪನೆಯೂ ಆಗುತ್ತದೆ. ಬ್ರಹ್ಮನ ಹೆಸರು ಎಷ್ಟು ಪ್ರಸಿದ್ಧವಾಗಿದೆ! ತಂದೆಯು ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿರುವುದರಿಂದ ತಿಳಿದುಕೊಂಡಿದ್ದೀರಿ, ನಾವು ಒಬ್ಬ ತಂದೆಯ ಮಕ್ಕಳು ಪರಸ್ಪರ ಸಹೋದರ-ಸಹೋದರಿಯರಾಗಿದ್ದೇವೆ ಅಂದಮೇಲೆ ವಿಕಾರಿ ದೃಷ್ಟಿಯನ್ನು ಇಡಲು ಸಾಧ್ಯವಿಲ್ಲ. ಸಹೋದರ-ಸಹೋದರಿಯು ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ತಂದೆಯು ಈ ಯುಕ್ತಿಯನ್ನು ರಚಿಸಿದ್ದಾರೆ - ಡ್ರಾಮಾ ಅನುಸಾರ ನೀವು ಬ್ರಹ್ಮಾಕುಮಾರರು ನಾನೂ ಬ್ರಹ್ಮಾಕುಮಾರಿಯಾಗಿದ್ದೇನೆ. ವಾಸ್ತವದಲ್ಲಿ ಇಡೀ ಪ್ರಪಂಚವೇ ಬ್ರಹ್ಮಾಕುಮಾರ-ಕುಮಾರಿಯರದಾಗಿದೆ ಆದರೆ ನಾವೂ ಸಹ ಬಿ.ಕೆ., ಆಗಿದ್ದೇವೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ನಾವು ಶಿವ ತಂದೆಯ ಮತದಿಂದ ಬೇಹದ್ದಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಮಾಯೆಯೂ ಕಡಿಮೆಯಿಲ್ಲ, ನಾಲ್ಕೂ ಕಡೆಯಿಂದ ವಿಘ್ನ ಹಾಕುತ್ತಿರುತ್ತದೆ. ನಾವು ಸಹೋದರ-ಸಹೋದರಿಯರಾಗಿದ್ದೇವೆ. ಒಬ್ಬ ತಂದೆಯಿಂದ ಆಸ್ತಿಯನ್ನೂ ತೆಗೆದುಕೊಳ್ಳುತ್ತೇವೆ ಎಂಬುದನ್ನೇ ಮರೆತು ಹೋಗುತ್ತಾರೆ. ಇದನ್ನು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಒಂದೇ ಧರ್ಮವಿರುತ್ತದೆ. ಮತ್ತೆಲ್ಲಾ ಧರ್ಮಗಳು ಸಮಾಪ್ತಿಯಾಗಲಿದೆ. ಇದು ಮಕ್ಕಳಿಗೆ ಗೊತ್ತಿದೆ, ಇದೇನೂ ಹೊಸ ಮಾತಲ್ಲ. ಪ್ರತೀ 5000 ವರ್ಷಗಳ ನಂತರ ಈ ಚಕ್ರವು ಸುತ್ತುತ್ತದೆ, ತಿಥಿ-ತಾರೀಖನ್ನು ಬರೆದಿದ್ದಾರೆ. ಅಂದಾಗ ಇದೂ ಬುದ್ಧಿಯಲ್ಲಿರಬೇಕು - ನಾವು ಶಿವ ತಂದೆಯಿಂದ ಈ ಯುಕ್ತಿಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಲಕ್ಷ್ಯವಂತೂ ಸಿಕ್ಕಿದೆಯಲ್ಲವೆ, ತಂದೆಯನ್ನು ನೆನಪು ಮಾಡಿ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೆನಪು ಅರ್ಥಾತ್ ಯೋಗಬಲದಿಂದಲೇ ತುಕ್ಕು ಕಳೆಯುವುದು, ಇದರಲ್ಲಿ ಯಾವುದೇ ಆಲಸ್ಯವಿರಬಾರದು ಆದ್ದರಿಂದ ಮುರುಳಿಗಳು ಸಿಗುತ್ತವೆ. ನಿಶ್ಚಯ ಬುದ್ಧಿಯವರಾಗಿದ್ದಾರೆ. ಎಲ್ಲಿ ಬೇಕಾದರೂ ಹೋಗಬಹುದು, ಒಂದುವೇಳೆ ಮುರುಳಿ ಸಿಗಲಿಲ್ಲವೆಂದರೂ ಸಹ ನಾವು ತಂದೆಯವರಾಗಿ ಬಿಟ್ಟಿದ್ದೇವೆ ಎಂಬುದಂತೂ ಬುದ್ಧಿಯಲ್ಲಿರುತ್ತದೆಯಲ್ಲವೆ. ತಂದೆಯು ತಿಳಿಸುತ್ತಾರೆ - ನೀವಾತ್ಮರು ತಮೋಪ್ರಧಾನ ಬುದ್ಧಿಯವರಾಗಿದ್ದೀರಿ, ನೀವೀಗ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ, ಈ ಮಹಾಮಂತ್ರವನ್ನು ಒಬ್ಬ ತಂದೆಯೇ ತಿಳಿಸುತ್ತಾರೆ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯೇ ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಈ ಅಕ್ಷರವಿದೆ ಆದರೆ ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ, ಅವಶ್ಯವಾಗಿ ಕಲ್ಪದ ಮೊದಲೂ ಸಹ ತಂದೆಯು ಈ ಶಬ್ಧವನ್ನು ತಿಳಿಸಿದ್ದರು - ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತಮ್ಮನ್ನು ಆತ್ಮನೆಂದು ತಿಳಿಯಿರಿ, ಇವೆಲ್ಲವೂ ದೇಹದ ಧರ್ಮಗಳಾಗಿದೆಯಲ್ಲವೆ. ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ, ಎಲ್ಲಾ ಆತ್ಮರು ಆ ಒಬ್ಬ ತಂದೆಯನ್ನು ಕರೆಯುತ್ತಾರೆ. ಪೋಪನೂ ಸಹ ಭಗವಂತನನ್ನೇ ನೆನಪು ಮಾಡುತ್ತಾರೆ. ಓ ಗಾಡ್ ಫಾದರ್ ದಯೆ ತೋರಿಸಿ, ಈ ಮನುಷ್ಯರ ಕ್ರೋಧಿ ಬುದ್ಧಿಗಳನ್ನು ಪರಿವರ್ತನೆ ಮಾಡಿ, ಅದರಿಂದ ಇವರು ಪರಸ್ಪರ ಹೊಡೆದಾಡದಿರಲಿ ಎಂದು ಹೇಳುತ್ತಾರೆ. ತಂದೆಯನ್ನೇ ನೆನಪು ಮಾಡುತ್ತಾರಲ್ಲವೆ, ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಬಂದು ಪತಿತರನ್ನು ಪಾವನ ಮಾಡಿರಿ ಎಂದು ಶಿವ ತಂದೆಯನ್ನೇ ಕರೆಯುತ್ತಾರೆ. ಪಾವನರಾಗಿ ಬಿಟ್ಟರೆ ಮತ್ತೆ ಈ ಛೀ ಛೀ ರಾವಣನ ಪ್ರಪಂಚದಲ್ಲಿರಲು ಸಾಧ್ಯವಿಲ್ಲ. ಅವಶ್ಯವಾಗಿ ಹೊಸ ಪ್ರಪಂಚವು ಬೇಕಾಗುತ್ತದೆ. ಕಲಿಯುಗದಿಂದ ಪರಿವರ್ತನೆಯಾಗಿ ಸತ್ಯಯುಗವೇ ಆಗುತ್ತದೆಯಲ್ಲವೆ ಆದರೆ ಇಷ್ಟನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಕಲಿಯುಗವಂತೂ ಕಲಿಯುಗವಾಗಿಯೇ ನಡೆಯುತ್ತಾ ಇರುತ್ತದೆ ಎಂದು ಒಬ್ಬ ವೈದ್ಯರು ಹೇಳುತ್ತಿದ್ದರು. ಅರೆ! ಸದಾ ಕಲಿಯುಗವೇ ಹೇಗೆ ನಡೆಯುತ್ತದೆ! ಈ ಕಲಿಯುಗವು ಚೆನ್ನಾಗಿದೆಯೇ? ಆದರೆ ಅವರಿಗೆ ಅರ್ಥವಾಗುವುದಿಲ್ಲ. ಕೇವಲ ಭಾವನೆಯಿರುವ ಕಾರಣ ಅನ್ಯರನ್ನೂ ಕರೆದುಕೊಂಡು ಬರುತ್ತಾರೆ, ಅವರಿಗೆ ಬಾಣವು ನಾಟುವುದಿಲ್ಲ, ಯಾರಾದರೂ ಅವರ ಜೊತೆ ಬರುವವರಿಗೆ ಬಾಣವು ನಾಟಿದರೂ ಸಹ ಅಲ್ಪಸ್ವಲ್ಪ ದಲ್ಲಾಳಿ ಫಲ ಸಿಗುವುದು, ಸ್ವರ್ಗದಲ್ಲಿ ಬಂದು ಬಿಡುವರು. ತಂದೆಯಿಂದ ಸ್ವಲ್ಪ ಕೇಳಿದರೂ ಸಹ ಸ್ವರ್ಗದಲ್ಲಿ ಅವಶ್ಯವಾಗಿ ಹೋಗುತ್ತಾರೆ. ಈಗಂತೂ ಸ್ವರ್ಗದ ರಚಯಿತ ತಂದೆಯ ಸನ್ಮುಖದಲ್ಲಿ ಬಂದು ಕುಳಿತಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ಎಲ್ಲರ ತಂದೆಯಾಗಿದ್ದೇನೆ, ಶಿವ ತಂದೆಯು ಹೇಗೆ ಬರುವರು ಎಂಬುದನ್ನು ಯಾರೂ ಒಪ್ಪುವುದಿಲ್ಲ. ಅರೆ! ಕೆಲವು ಆತ್ಮಗಳೇ ಬರುತ್ತಾರೆ ಎಂದಮೇಲೆ ನಾನೇಕೆ ಬರುವುದಿಲ್ಲ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಹೋಗುತ್ತದೆ ಅಂದಮೇಲೆ ನಾನು ಬರಲು ಸಾಧ್ಯವಿಲ್ಲವೆ? ಇಲ್ಲದಿದ್ದರೆ ನಾನು ಹೇಗೆ ಬರಲಿ! ಹೇ ಪತಿತ-ಪಾವನ ತಂದೆಯೇ ಬಂದು ಪತಿತರಿಂದ ಪಾವನ ಮಾಡಿ ಎಂದು ಕರೆಯುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ನಾನು ಭಾರತದಲ್ಲಿಯೇ ಬರುತ್ತೇನೆ, ಕಲ್ಪ-ಕಲ್ಪದ ಸಂಗಮದಲ್ಲಿ ಒಂದೇ ಬಾರಿ ಬರುತ್ತೇನೆ, ಯಾವಾಗ ನೀವು ಪೂರ್ಣ 84 ಜನ್ಮಗಳನ್ನು ಮುಗಿಸುತ್ತೀರೋ ಆಗ ನಾನು ಬರುತ್ತೇನೆ. ನೀವು ಮಕ್ಕಳಿಗೆ ನಿಶ್ಚಯವಿದೆ - ತಂದೆಯು ಪುನಃ ಆಸ್ತಿಯನ್ನು ಕೊಡಲು ಬಂದಿದ್ದಾರೆ. ತಂದೆಯು ಹೇಳುತ್ತಾರೆ - ನನ್ನ ಕರ್ತವ್ಯವೇ ಆಗಿದೆ, ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವುದು ಆದ್ದರಿಂದಲೇ ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶ ಎಂದು ಗಾಯನವಿದೆ. ನಂತರ ನೀವು ಪಾಲನೆ ಮಾಡುತ್ತೀರಿ. ಜ್ಞಾನದ ಪ್ರಕಾಶತೆ ಸಿಕ್ಕಿದೆಯಲ್ಲವೆ. ಕಾಳಿಯ ಮಂದಿರವನ್ನು ನೋಡುತ್ತೀರೆಂದರೆ ಇದು ಸುಳ್ಳು ಚಿತ್ರವೆಂದು ತಿಳಿದುಕೊಳ್ಳುತ್ತೀರಿ. ಕಾಳಿಯು ಅವಶ್ಯವಾಗಿ ಜಗದಂಬೆಯಾಗಿದ್ದಾರೆ ಆದರೆ ಇಂತಹ ಭಯಾನಕ ರೂಪವಂತೂ ಇಲ್ಲ. ಬಂಗಾಳದಲ್ಲಿ ಕಾಳಿಯ ಮುಂದೆ ಬಲಿ ಕೊಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಲಕ್ಷಾಂತರ ಮಂದಿ ಜಗದಂಬೆಯ ಮಂದಿರಕ್ಕೆ ಹೋಗುತ್ತಾರೆ. ಸದಾ ಮೇಳವಿದ್ದಂತೆ ಇರುತ್ತದೆ. ಚಿಕ್ಕದಾದ ಮೂರ್ತಿಯನ್ನು ಇಟ್ಟಿದ್ದಾರಲ್ಲವೆ. ಜಗದಂಬೆಯೆಂದು ಹೆಸರನ್ನಿಟ್ಟಿದ್ದಾರೆ ಅಂದಾಗ ಜಗದಂಬೆಯಂತೂ ಒಬ್ಬರೇ ಇರಬೇಕಲ್ಲವೆ. ಸಿಂಧ್ನಲ್ಲಿ ಕಾಳಿಯ ಮಂದಿರವನ್ನು ಹೇಗೆ ಕಟ್ಟಿಸಿದ್ದರು, ಒಂದು ಬಾರಿ ಕೋಟೆಯಲ್ಲಿ ಅಣುಬಾಂಬ್ನ ಸ್ಫೋಟವಾಯಿತು, ಆಗ ಒಬ್ಬ ಕಾವಲುಗಾರನು ಹೇಳಿದನು - ಕಾಳಿ ಮಾತೆಯು ಕೋಪಿಸಿಕೊಂಡಿದ್ದಾರೆ ಎಂದು ಆಗ ಅವರು ಬಂದು ಅಲ್ಲಿ ಕಾಳಿಯ ಮಂದಿರವನ್ನು ಕಟ್ಟಿಸಿ ಬಿಟ್ಟರು. ವಾಸ್ತವದಲ್ಲಿ ಕಾಳಿಯು ಯಾರಾಗಿದ್ದಾರೆ! ಏನನ್ನೂ ತಿಳಿದುಕೊಂಡಿಲ್ಲ. ಈಗ ನಿಮಗೆ ಜ್ಞಾನ ಸಿಕ್ಕಿದೆ, ನೀವು ತಿಳಿದುಕೊಂಡಿರದ ಮಾತೇ ಇಲ್ಲ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ತಿಳಿದುಕೊಂಡಿದ್ದೀರಿ ಅಂದಮೇಲೆ ಅದಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕಲ್ಲವೆ. |
ಮೊಟ್ಟ ಮೊದಲನೆಯದಾಗಿ ಯಾವಾಗ ಕುಮಾರ-ಕುಮಾರಿಯು ವಿವಾಹ ಮಾಡಿಕೊಳ್ಳುವರೋ ಆಗಲೇ ದುಃಖವು ಆರಂಭವಾಗುತ್ತದೆ, ನಿಮಗೆ ವಿವಾಹ ಮಾಡಿಕೊಳ್ಳುವ ಸಂಕಲ್ಪವೂ ಸಹ ಎಂದಿಗೂ ಬರಬಾರದು. ಈಗ ತಂದೆಯು ತಿಳಿಸುತ್ತಾರೆ - ಈ ರಾವಣ ರಾಜ್ಯವು ಸಮಾಪ್ತಿಯಾಗಲಿದೆ, ಇದು ವಿಕಾರಿ ಗೃಹಸ್ಥ ವ್ಯವಹಾರವಾಗಿದೆ. ದೇವಿ-ದೇವತೆಗಳಿಗಾಗಿ ಗಾಯನ ಮಾಡುತ್ತಿರುತ್ತಾರೆ, ಈ ದೇವತೆಗಳನ್ನೂ ನಿರ್ವಿಕಾರಿಗಳನ್ನಾಗಿ ಮಾಡುವವರು ಯಾರೆಂಬುದು ಯಾರಿಗೂ ತಿಳಿದಿರುವುದಿಲ್ಲ. ಸತ್ಯಯುಗವು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿದೆ. ಅಲ್ಲಿಯೂ ವಿಕಾರಗಳಿತ್ತು ಎಂದು ಶಾಸ್ತ್ರಗಳಲ್ಲಿ ತೋರಿಸಿಬಿಟ್ಟಿದ್ದಾರೆ ಆದರೆ ಅದು ಸಂಪೂರ್ಣ ನಿರ್ವಿಕಾರಿ ಪ್ರಪಂಚವಾಗಿರುತ್ತದೆ. ವಿಕಾರಿ ಪ್ರಪಂಚ ಮತ್ತು ನಿರ್ವಿಕಾರಿ ಪ್ರಪಂಚದಲ್ಲಿ ಎಷ್ಟೊಂದು ಅಂತರವಿದೆ! ಈ ಮಾತುಗಳು ಮತ್ತ್ಯಾರ ಬುದ್ಧಿಯಲ್ಲಿಯೂ ಇಲ್ಲ. ನೀವು ತಿಳಿದುಕೊಂಡಿದ್ದೀರಿ - ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಕೆಲವರೇ ಮನುಷ್ಯರಿದ್ದರು, ಒಂದೇ ಧರ್ಮವಿತ್ತು ನಂತರ ಇದು ವೃದ್ಧಿಯಾಗಿದೆ. ಪೂರ್ಣ ಚಕ್ರವನ್ನು ಸುತ್ತಬೇಕಾಗಿದೆ ಆದ್ದರಿಂದಲೇ ಇಡೀ ಪೃಥ್ವಿಯನ್ನು ಸುತ್ತಿದರೆಂದು ಹೇಳುತ್ತಾರೆ. ಸಮುದ್ರವನ್ನಂತೂ ಸುತ್ತಲು ಸಾಧ್ಯವಿಲ್ಲ, ಸತ್ಯಯುಗದಲ್ಲಿ ಕೆಲವರೇ ಇರುವ ಕಾರಣ ಎಷ್ಟೊಂದು ಕಡಿಮೆ ಭೂಮಿಯನ್ನು ತೆಗೆದುಕೊಳ್ಳುತ್ತಾರೆ. ಈಗ ಮನುಷ್ಯ ಸೃಷ್ಟಿಯ ಎಲ್ಲೆಯು ಪೂರ್ಣವಾಗಲಿದೆ. ಮೇಲೆ ಉಳಿದುಕೊಂಡಿರುವ ಆತ್ಮಗಳೆಲ್ಲರೂ ಬರುತ್ತಿದ್ದಾರೆ, ಜನಸಂಖ್ಯೆಯು ವೃದ್ಧಿಯಾಗುತ್ತಲೇ ಇದೆ. ಯಾವಾಗ ಮೇಲಿನಿಂದ ಎಲ್ಲಾ ಆತ್ಮರು ಬರುವುದು ಮುಕ್ತಾಯವಾಗುವುದೋ, ನೀವು ಕರ್ಮಾತೀತ ಸ್ಥಿತಿಯನ್ನು ಹೊಂದುವಿರೋ ಆಗ ಮತ್ತೆ ಆತ್ಮಗಳು ಶರೀರ ಬಿಟ್ಟು ಹೋಗಬೇಕಾಗಿದೆ. ಅವರು ಬರುತ್ತಾರೆ ಮತ್ತು ನೀವು ಹೋಗುತ್ತೀರಿ. ಕೆಲಕೆಲವರೇ ಬರುತ್ತಾ ಇದ್ದಾರೆ, ಇದು ತಿಳಿದುಕೊಳ್ಳುವ ಮಾತುಗಳಲ್ಲವೆ. ನಾವು ಮೊಟ್ಟ ಮೊದಲಿಗೆ ಹೋಗಿ ಅಲ್ಲಿರುತ್ತೇವೆ. ನಾವಿರಬೇಕಾದರೆ ಅವರು ಯಾರೂ ಇರುವುದಿಲ್ಲ. ಇವು ವಿಸ್ತಾರದ ಮಾತುಗಳಾಗಿವೆ. ಮಕ್ಕಳಿಗೆ ಪುನಃ ತಂದೆಯು ತಿಳಿಸುತ್ತಾರೆ - ತಮ್ಮ ಪ್ರಿಯ ತಂದೆಯನ್ನು ನೆನಪು ಮಾಡಿರಿ, ತಂದೆಯನ್ನು ನೆನಪು ಮಾಡುವುದರಲ್ಲಿಯೇ ನಿಮಗೆ ಲಾಭವಿದೆ. ಈ ಚರಿತ್ರೆ-ಭೂಗೋಳವನ್ನಂತೂ ಮನುಷ್ಯರು ಬಹಳ ಓದುತ್ತಾರೆ. ಬಹಳ ದೂರ-ದೂರದವರೆಗೆ ಹೋಗುತ್ತಾರೆ, ಚಂದ್ರಗೃಹಕ್ಕೂ ಹೋಗುತ್ತಾರೆ. ಇದು ವಿಜ್ಞಾನದ ಅಭಿಮಾನವಾಗಿದೆ. ಬಹಳ ಅತಿಯಲ್ಲಿ ಹೋಗುತ್ತಾರೆ ಅದರೆ ಚಂದ್ರಗೃಹದಲ್ಲಿ ಏನಾದರೂ ಇದೆಯೇ? ನೀವಂತೂ ಸೂರ್ಯ-ಚಂದ್ರನಿಗಿಂತಲೂ ದೂರ ಹೋಗುತ್ತೀರಿ, ಈ ಜ್ಞಾನವು ಈಗ ನಿಮ್ಮ ಬುದ್ಧಿಯಲ್ಲಿದೆ. ತಿಳಿದುಕೊಳ್ಳುತ್ತೀರಿ- ಡ್ರಾಮಾನುಸಾರ ತಂದೆಯು ಇವೆಲ್ಲವನ್ನೂ ತಿಳಿಸುತ್ತಾರೆ. ತಂದೆಯೇ ಹೇಳುತ್ತಾರೆ - ನಾನು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತೇನೆ. ಇದು ನನ್ನ ಪಾತ್ರವಾಗಿದೆ. ಭಕ್ತಿಮಾರ್ಗದಲ್ಲಿಯೂ ಈ ನನ್ನ ಪಾತ್ರವಿರುತ್ತದೆ. ಇದು ಡ್ರಾಮಾ ಅಲ್ಲವೆ. ಹೇಗೆ ನೀವು ಪಾತ್ರಧಾರಿಗಳಾಗಿದ್ದೀರೋ ಹಾಗೆಯೇ ನಾನೂ ಪಾತ್ರಧಾರಿಯಾಗಿದ್ದೇನೆ. ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುವುದೇ ನನ್ನ ಕರ್ತವ್ಯವಾಗಿದೆ. ಯಾರಾದರೂ ಸ್ವಲ್ಪ ಮಾಡಿದರೂ ಸಹ ಅವರಿಗೆ ಮಹಿಮೆ ಆಗುತ್ತದೆಯಲ್ಲವೆ. ಈ ಲಕ್ಷ್ಮೀ-ನಾರಾಯಣರಿಗೆ ಎಷ್ಟೊಂದು ಮಹಿಮೆಯಿದೆ, ಆದರೆ ಇವರನ್ನು ಅಷ್ಟು ಯೋಗ್ಯರನ್ನಾಗಿ ಯಾರು ಮಾಡಿದರು! ಇವರು ಸುಖಧಾಮದ ಮಾಲೀಕರಾಗಿದ್ದರು, ಈಗಂತೂ ಅನೇಕ ಪ್ರಕಾರದ ದುಃಖಗಳಿವೆ. ಇಂದು ಯಾರಾದರೂ ಶರೀರ ಬಿಡುತ್ತಾರೆ, ಜಗಳವಾಗುತ್ತದೆ. ಭಲೆ ಯಾರ ಬಳಿಯಾದರೂ ಲಕ್ಷ, ಕೋಟಿಗಳಷ್ಟು ಇರಬಹುದು ಆದರೆ ಒಂದುವೇಳೆ ಯಾವುದೇ ಖಾಯಿಲೆ ಬಂದು ಬಿಟ್ಟರೆ ಏನು ಮಾಡುವುದು! ಬಿರ್ಲಾದವರ ಬಳಿ ಎಷ್ಟೊಂದು ಹಣವಿದೆ! ಒಂದು ಜನ್ಮದಲ್ಲಿ ಬಹಳ ಹಣವಿರುತ್ತದೆ ಆದರೆ ಯಾವುದೇ ದುಃಖವಿಲ್ಲದಂತಹ ಮನುಷ್ಯರು ಯಾರೂ ಇಲ್ಲ. ಎಲ್ಲರಿಗೆ ಯಾವುದಾದರೊಂದು ಪ್ರಕಾರದ ದುಃಖವು ಇದ್ದೇ ಇರುತ್ತದೆ. ಈಗಂತೂ ಈ ಹಣ ಇತ್ಯಾದಿಯೆಲ್ಲವೂ ಮಣ್ಣು ಪಾಲಾಗಲಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಕೊಂಡು ಮನೆಗೆ ಹಿಂತಿರುಗಿ ಹೋಗಬೇಕಾಗಿದೆ, ಆದರೆ ಯಾವಾಗ ಆತ್ಮರ ಬರುವಿಕೆಯು ಮುಕ್ತಾಯವಾಗುವುದೋ ಆಗಲೇ ಹಿಂತಿರುಗಿ ಹೋಗುತ್ತೀರಿ. ಈ ವಿಸ್ತಾರವನ್ನು ಬುದ್ಧಿಯಲ್ಲಿಟ್ಟುಕೊಂಡು ಒಬ್ಬ ಬಬುಲ್ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. |
2. ಜ್ಞಾನದ ಬೆಳಕು ಸಿಕ್ಕಿದೆ, ಆದ್ದರಿಂದ ನಿಶ್ಚಯ ಬುದ್ಧಿಯವರಾಗಿ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಎಲ್ಲಿದ್ದರೂ ಸಹ ನೆನಪಿನ ಬಲದಿಂದ ಆತ್ಮವನ್ನು ತಮೋಪ್ರಧಾನದಿಂದ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. |
"ಹೊಸ ವರ್ಷದಲ್ಲಿ ತಮ್ಮ ಚಲನೆ ಹಾಗೂ ಚಹರೆಯಿಂದ ಫರಿಶ್ತಾ ಸ್ವರೂಪದ ಪ್ರತ್ಯಕ್ಷ ತೆ ಮಾಡಿ" |
ಇಂದು ಬಾಪ್ದಾದಾರವರು ತಮ್ಮ ಪರಮಾತ್ಮ ಪಾಲನೆಯ ಅಧಿಕಾರಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದರು. ಎಷ್ಟು ಭಾಗ್ಯವಂತರಾಗಿದ್ದೀರಿ, ಯಾರು ಸ್ವಯಂ ಭಗವಂತನ ಪಾಲನೆಯಲ್ಲಿ ಬೆಳೆಯುತ್ತಿದ್ದಾರೆ. ಪ್ರಪಂಚದವರು ಹೇಳುತ್ತಾರೆ- ನಮ್ಮನ್ನು ಪರಮಾತ್ಮ ಪಾಲನೆ ಮಾಡುತ್ತಿದ್ದಾರೆ, ಆದರೆ ತಾವು ಕೆಲವೇ ವಿಶೇಷ ಆತ್ಮರು ಪ್ರಾಕ್ಟಿಕಲ್ನಲ್ಲಿ ಬೆಳೆಯುತ್ತಿದ್ದೀರಿ. ಪರಮಾತ್ಮ ಪಾಲನೆ ಇದೆ, ಪರಮಾತ್ಮ ಶ್ರೀಮತವಿದೆ, ಅದೇ ಶ್ರೀಮತದ ಮೇಲೆ ನಡೆಯುತ್ತಿದ್ದೀರಿ, ಬೆಳೆಯುತ್ತಿದ್ದೀರಿ. ಈ ರೀತಿ ತಮ್ಮನ್ನು ತಾವು ವಿಶೇಷ ಆತ್ಮರು ಎಂದು ಅನುಭವ ಮಾಡುತ್ತೀರಾ? ತಮ್ಮ ಮಹಾನತೆಯನ್ನು ತಿಳಿದುಕೊಂಡಿದ್ದೀರಾ? ವರ್ತಮಾನ ಸಮಯವಂತು ಬ್ರಾಹ್ಮಣ ಆತ್ಮರು ಮಹಾನ್ ಆಗಿದ್ದೀರಿ, ಹಾಗೂ ಭವಿಷ್ಯದಲ್ಲಿ ಸರ್ವ ಶ್ರೇಷ್ಠ ಮಹಾನ್ ಆಗಿದ್ದೀರಿ. ದ್ವಾಪರದಲ್ಲಿಯೂ ಸಹ ತಮ್ಮ ಜಡ ಚಿತ್ರಗಳು ಇಷ್ಟು ಮಹಾನ್ ಆಗಿರುತ್ತದೆ- ಯಾರೆ ನಿಮ್ಮ ಚಿತ್ರದ ಮುಂದೆ ಹೋದರೆ ನಮನ ಮಾಡುತ್ತಾರೆ. ನಿಮ್ಮ ಮಹಾನತೆ ಇಷ್ಟು ಇದೆ- ಇಂದಿನ ದಿನದವರೆಗೂ ಯಾವುದೇ ಆತ್ಮರನ್ನು ದೇವತೆಯಂತೆ ತಯಾರಿಸಿದರೆ ಲಕ್ಷ್ಮೀ, ನಾರಾಯಣರನ್ನಾಗಿ ಮಾಡಿದರೆ, ಶ್ರೀ ರಾಮನನ್ನಾಗಿ ಮಾಡಿದರೆ, ಎಲ್ಲಿಯವರೆಗೆ ಆ ಆತ್ಮ ದೇವತೆಯ ಪಾತ್ರವನ್ನು ಅಭಿನಯಿಸುತ್ತದೆ, ಅವರು ಸಾಧಾರಣ ಮನುಷ್ಯರು ಎಂದು ಗೊತ್ತಿದ್ದರೂ ಸಹ, ಯಾವಾಗ ದೇವತಾ ರೂಪವನ್ನು ಧಾರಣೆ ಮಾಡಿದ್ದಾಗ ಆ ಸಾಧಾರಣ ಆತ್ಮವನ್ನು ಸಹ ನಮನ ಮಾಡುತ್ತಾರೆ. ನಿಮ್ಮ ರೂಪದ ಮಹಾನತೆಯಂತೂ ಇದೆ ಆದರೆ ನಾಮಧಾರಿ ಆತ್ಮರನ್ನು ಸಹ ಮಹಾನ್ ಎಂದು ತಿಳಿಯುತ್ತಾರೆ, ಈ ರೀತಿ ಮಹಾನತೆಯ ಅನುಭವ ಮಾಡುತ್ತೀರಾ? ಒಪ್ಪಿಕೊಂಡಿದ್ದೀರಾ ತಿಳಿದಿದ್ದೀರಾ ಅಥವಾ ಇಮರ್ಜ ರೂಪದಲ್ಲಿ ತಮ್ಮನ್ನು ತಾವು ಅನುಭವ ಮಾಡುತ್ತೀರಾ? ಏಕೆಂದರೆ ಮೂಲ ಆಧಾರವಾಗಿದೆ ಅನುಭವ ಮಾಡುವುದು. |
ಬಾಪ್ದಾದಾರವರು ಎಲ್ಲಾ ಮಕ್ಕಳನ್ನು ಅನುಭವಿ ಮೂರ್ತರನ್ನಾಗಿ ಮಾಡುತ್ತಾರೆ. ಕೇವಲ ಕೇಳುವವರು ಹಾಗೂ ತಿಳಿದುಕೊಳ್ಳುವವರಲ್ಲ. ಅನುಭವ ಪ್ರತಿಯೊಬ್ಬರ ಚಹರೆಯಿಂದ, ಚಲನೆಯಿಂದ ತಿಳಿದುಬಿಡುತ್ತದೆ. ಚಲನೆಯಿಂದ ಅವರ ಸ್ಥಿತಿ ತಿಳಿದುಬಿಡುತ್ತದೆ. ಹಾಗಾದರೆ ಯೋಚಿಸಿ ನಮ್ಮ ಚಲನೆ ಹೇಗಿರಬೇಕು? ಬ್ರಾಹ್ಮಣರ ಚಲನೆ ಇದೆಯೇ? ಬ್ರಾಹ್ಮಣ ಅರ್ಥಾತ್ ಸದಾ ಸಂಪನ್ನ ಆತ್ಮ. ಶಕ್ತಿಗಳಿಂದಲೂ ಸಂಪನ್ನ, ಗುಣಗಳಿಂದಲೂ ಸಂಪನ್ನ... ಈ ರೀತಿ ಚಲನೆ ಇದೆಯೇ? ನಿಮ್ಮ ಸಹರೆಯಿಂದ ಕಾಣಿಸುತ್ತದೆ- ಇವರು ಸಾಧಾರಣವಾಗಿದ್ದರು ಸಹ ಅಲೋಕಿಕರಾಗಿದ್ದಾರೆ? ನಿಮ್ಮೆಲ್ಲರ ದೃಷ್ಟಿ ವೃತ್ತಿ ವೈಬ್ರೇಶನ್ ಅಲೋಕಿಕ ಅನುಭವ ಮಾಡಿಸುತ್ತದೆಯೇ? ಕೊನೆಯ ಜನ್ಮದವರೆಗೂ ನಿಮ್ಮ ದಿವ್ಯತೆ, ಮಹಾನತೆ ಜಡ ಚಿತ್ರಗಳಿಂದಲೂ ಸಹ ಅನುಭವ ಮಾಡುತ್ತಾರೆ, ಎಂದ ಮೇಲೆ ವರ್ತಮಾನ ಸಮಯ ಚೈತನ್ಯ ಶ್ರೇಷ್ಠ ಆತ್ಮಗಳ ಮೂಲಕ ಅನುಭವವಾಗುತ್ತದೆಯೇ? ಜಡ ಚಿತ್ರಗಳಂತು ನಿಮ್ಮದೇ ಅಲ್ಲವೇ! |
ಅಮೃತವೇಳೆಯಿಂದ ಹಿಡಿದು ಪ್ರತಿಯೊಂದು ಚಲನೆಯನ್ನು ಪರಿಶೀಲಿಸಿಕೊಳ್ಳಿ- ನಮ್ಮ ದೃಷ್ಟಿ ಅಲೋಕಿಕವಾಗಿದೆಯೇ? ಚಹರೆಯ ಪೋಸ್ ಸದಾ ಹರ್ಷಿತವಾಗಿದೆಯೇ? ಏಕ ರಸ, ಅಲೌಕಿಕವಾಗಿದೆಯೇ ಅಥವಾ ಸಮಯ ಪ್ರತಿ ಸಮಯ ಬದಲಾಗುತ್ತಾ ಇರುತ್ತದೆ? ಕೇವಲ ಯೋಗದಲ್ಲಿ ಕುಳಿತ ಸಮಯ ಅಥವಾ ಯಾವುದಾದರೂ ವಿಶೇಷ ಸೇವೆಯ ಸಮಯ ಅಲೌಕಿಕ ಸ್ಮೃತಿ ಹಾಗೂ ವೃತ್ತಿ ಇರುತ್ತದೆಯೇ ಅಥವಾ ಸಾಧಾರಣ ಕಾರ್ಯ ಮಾಡುತ್ತಾ ಸಹ ಚಹರೆ ಹಾಗೂ ಚಲನೆ ವಿಶೇಷವಾಗಿರುತ್ತದೆಯೇ? ಯಾರೇ ನಿಮ್ಮನ್ನು ನೋಡಿದರೆ- ಕೆಲಸ ಕಾರ್ಯದಲ್ಲಿ ವ್ಯಸ್ತರಾಗಿದ್ದರು, ಯಾವುದೇ ಏರುಪೇರಿನ ಮಾತಿನಲ್ಲಿ ಇದ್ದರೂ ಸಹ ತಮ್ಮನ್ನು ಅಲೌಕಿಕ ಎಂದುಕೊಳ್ಳುತ್ತಾರೆಯೇ? ಚೆಕ್ ಮಾಡಿ- ಮಾತು, ಚಲನೆ, ಚಹರೆ ಸಾಧಾರಣ ಕಾರ್ಯದಲ್ಲಿಯೂ ಸಹ ಭಿನ್ನ ಹಾಗೂ ಪ್ರಿಯ ಅನುಭವವಾಗುತ್ತದೆಯೇ? ಯಾವುದೇ ಸಮಯ ಇದ್ದಕ್ಕಿದ್ದಂತೆ ಯಾವುದೇ ಆತ್ಮ ನಿಮ್ಮ ಸಮ್ಮುಖದಲ್ಲಿ ಬಂದುಬಿಟ್ಟರೆ ನಿಮ್ಮ ಪ್ರಕಂಪನಗಳಿಂದ, ಚಲನೆ-ಮಾತಿನಿಂದ ಇವರು ಅಲೌಕಿಕ ಫರಿಶ್ತೆಗಳಾಗಿದ್ದಾರೆ ಎಂದು ತಿಳಿಯುತ್ತಾರೆಯೇ? ಏಕೆಂದರೆ ಇಂದಿನ ದಿನ ಸಂಗಮದ ದಿನವಾಗಿದೆ, ಹಳೆಯದ್ದು ಹೋಗುತ್ತಿದೆ, ಹೊಸದು ಬರುತ್ತಿದೆ. ಎಂದ ಮೇಲೆ ಯಾವ ನವೀನತೆ ವಿಶ್ವದ ಎದುರು ಕಾಣಿಸಬೇಕು? ಅಂತರಾಳದಲ್ಲಿ ನೆನಪಿರುತ್ತದೆ ಅಥವಾ ತಿಳಿದುಕೊಳ್ಳುವುದು, ಅದು ಬೇರೆ ಮಾತಾಗಿದೆ ಆದರೆ ಸ್ಥಾಪನೆಯ ಸಮಯವನ್ನು ಯೋಚಿಸಿ- ಎಷ್ಟು ಸ್ಥಾಪನೆಯ ಸಮಯ ಕಳೆದು ಹೋಯಿತು! ಕಳೆದು ಹೋದ ಸಮಯ ಪ್ರಮಾಣ ಬಾಕಿ ಎಷ್ಟು ಸ್ವಲ್ಪ ಸಮಯ ಉಳಿದುಕೊಂಡಿದೆ? ಯಾವ ಅನುಭವ ಆಗಬೇಕಾಗಿದೆ? ಬಾಪ್ದಾದಾರವರು ತಿಳಿದಿದ್ದಾರೆ ಬಹಳ ಒಳ್ಳೆಯ ಪುರುಷಾರ್ಥಿ, ಪುರುಷಾರ್ಥವನ್ನು ಮಾಡುತ್ತಿದ್ದಾರೆ, ಹಾರುತ್ತಲೂ ಇದ್ದಾರೆ. ಆದರೆ ಬಾಪ್ದಾದಾರವರು ಈ 21 ನೇ ಶತಮಾನದಲ್ಲಿ ನವೀನತೆಯನ್ನು ನೋಡಲು ಬಯಸುತ್ತಾರೆ. ಎಲ್ಲರೂ ಚೆನ್ನಾಗಿದ್ದೀರಿ, ವಿಶೇಷವಾಗಿದ್ದೀರಿ, ಮಹಾನ್ ಆಗಿದ್ದೀರಿ ಆದರೆ ತಂದೆಯ ಪ್ರತ್ಯಕ್ಷತೆಯ ಆಧಾರವಾಗಿದೆ- ಸಾಧಾರಣ ಕಾರ್ಯದಲ್ಲಿ ಇದ್ದರೂ ಸಹ ಫರಿಶ್ತೆಗಳ ಚಲನೆ ಹಾಗೂ ಸ್ಥಿತಿ ಇರಲಿ. ಮಾತು ಈ ರೀತಿ ಇತ್ತು, ಕೆಲಸ ಈ ರೀತಿ ಇತ್ತು, ಪರಿಸ್ಥಿತಿ ಹೀಗಿತ್ತು, ಸಮಸ್ಯೆ ಹೀಗಿತ್ತು, ಹಾಗಾಗಿ ಸಾಧಾರಣತೆ ಬಂದು ಬಿಟ್ಟಿದ್ದು -ಬಾಪ್ದಾದಾರವರು ಇದನ್ನು ನೋಡಲು ಬಯಸುವುದಿಲ್ಲ. ಫರಿಶ್ತೆಗಳ ಸ್ವರೂಪ ಎಂದರೆ ಸ್ಮೃತಿ ಸ್ವರೂಪದಲ್ಲಿದ್ದೀರಿ, ಸಾಕಾರ ರೂಪದಲ್ಲಿ ಇದ್ದೀರಿ, ಕೇವಲ ತಿಳಿದುಕೊಳ್ಳುವವರಲ್ಲ, ಸ್ಮೃತಿಯವರೆಗೂ ಅಲ್ಲ, ಸ್ವರೂಪದಲ್ಲಿ ಇರಲಿ. ಇಂತಹ ಪರಿವರ್ತನೆ ಯಾವುದೇ ಸಮಯದಲ್ಲಿ, ಯಾವುದೇ ಸ್ಥಿತಿಯಲ್ಲಿಯೂ ಸಹ ಅಲೌಕಿಕ ಸ್ವರೂಪದ ಅನುಭವವಾಗಲಿ. ಈ ರೀತಿ ಇದ್ದೀರೆ ಅಥವಾ ಸ್ವಲ್ಪ ಬದಲಾಗುತ್ತದೆಯೇ? ಎಂತಹ ಮಾತು ಅಂತಹ ತಮ್ಮ ಸ್ವರೂಪವನ್ನಾಗಿ ಮಾಡಿಕೊಳ್ಳಬೇಡಿ. ಮಾತುಗಳು ನಿಮ್ಮನ್ನು ಏಕೆ ಬದಲಾಯಿಸಬೇಕು, ನೀವು ಮಾತನ್ನು ಬದಲಾಯಿಸಿ. ಮಾತು ನಿಮ್ಮನ್ನು ಬದಲಾಯಿಸಬೇಕೇ ಅಥವಾ ನೀವು ಮಾತನ್ನು ಬದಲಾಯಿಸುತ್ತೀರಾ? ಯಾವುದನ್ನು ಪರಿವರ್ತನೆ ಎಂದು ಹೇಳುವುದು? ಪ್ರಾಕ್ಟಿಕಲ್ ಜೀವನದ ಸ್ಯಾಂಪಲ್ (ಮಾದರಿ) ಯಾವುದಕ್ಕೆ ಹೇಳಲಾಗುತ್ತದೆ? ಎಂತಹ ಸಮಯ, ಎಂತಹ ಪರಿಸ್ಥಿತಿ ಅಂತಹ ಸ್ವರೂಪವರಾಗುವುದು- ಇದಂತೂ ಸಾಧಾರಣ ಮನುಷ್ಯರು ಸಹ ಮಾಡುತ್ತಾರೆ. ಆದರೆ ಫರಿಶ್ತೆ ಅರ್ಥಾತ್ ಹಳೆಯ ಸಾಧಾರಣ ಸ್ಥಿತಿ -ಚಲನೆಯಿಂದಲೂ ಸಹ ಭಿನ್ನರಾಗಿರುತ್ತಾರೆ. |
ಈಗ ನಿಮ್ಮ ಟಾಪಿಕ್ ಇದೆಯಲ್ಲವೇ- " ಸಮಯದ ಕರೆ". ಎಂದ ಮೇಲೆ ಈಗ ಸಮಯದ ಕರೆ ತಾವು ವಿಶೇಷ ಮಹಾನ್ ಆತ್ಮಗಳ ಪ್ರತಿ ಇದೇ ಆಗಿದೆ- ಈಗ ಫರಿಶ್ತೆ ಅರ್ಥಾತ್ ಅಲೌಕಿಕ ಜೀವನ ಸ್ವರೂಪದಲ್ಲಿ ಕಾಣಿಸಲಿ. ಇದು ಆಗಲು ಸಾಧ್ಯವೇ? ಶಿಕ್ಷಕಿಯರು ಹೇಳಿ, ಆಗಲು ಸಾಧ್ಯವೇ? ಯಾವಾಗ ಆಗುವುದು? ಆಗಲು ಸಾಧ್ಯ, ಇದಂತೂ ಬಹಳ ಒಳ್ಳೆಯ ಮಾತಾಗಿದೆ, ಯಾವಾಗ ಆಗುವುದು? ಒಂದು ವರ್ಷ ಬೇಕೆ, 2000 ಪೂರ್ತಿಯಾಗಿ ಬಿಡಬೇಕೆ? ಯಾರು ತಿಳಿಯುತ್ತೀರಿ- ಸ್ವಲ್ಪ ಸಮಯವಂತು ಬೇಕು, ಹೋಗಲಿ ಒಂದು ವರ್ಷವಲ್ಲ, ಆರು ತಿಂಗಳು, ಆರು ತಿಂಗಳು ಅಲ್ಲ ಮೂರು ತಿಂಗಳು ಬೇಕೆ? ಇದರಲ್ಲಿ ಕೈ ಎತ್ತುತ್ತಿಲ್ಲ. ನಿಮ್ಮ ಸ್ಲೋಗನ್ ಏನಾಗಿದೆ? ನೆನಪಿದೆಯೇ?" ಈಗಿಲ್ಲದಿದ್ದರೆ ಮತ್ತೆ ಇನ್ನೆಂದಿಗೂ ಇಲ್ಲ" ಈ ಸ್ಲೋಗನ್ ಯಾರದ್ದಾಗಿದೆ? ಬ್ರಾಹ್ಮಣರದ್ದಾಗಿದೆಯೇ ಅಥವಾ ದೇವತೆಗಳದ್ದಾಗಿದೆಯೇ? ಬ್ರಾಹ್ಮಣರದ್ದಾಗುದೆ ಅಲ್ಲವೇ! ಈ ಹೊಸ ಶತಮಾನದಲ್ಲಿ ಬಾಪ್ದಾದಾರವರು ಇದನ್ನೇ ನೋಡಲು ಬಯಸುತ್ತಾರೆ- ಏನೇ ಆಗಲಿ ಆದರೆ ಅಲೌಕಿಕತೆ ಹೋಗದಿರಲಿ. ಇದಕ್ಕಾಗಿ ಕೇವಲ ನಾಲ್ಕು ಶಬ್ದಗಳ ಗಮನ ಇಡಬೇಕಾಗುತ್ತದೆ, ಅದು ಯಾವುದು? ಆ ಮಾತುಗಳು ಹೊಸದೇನಲ್ಲ, ಹಳೆಯದ್ದೆ, ಕೇವಲ ರಿವಿಷನ್ (ಪುನಾರಾವರ್ತನೆ) ಮಾಡಿಸುತ್ತಿದ್ದಾರೆ. |
ಒಂದು ಮಾತು ಶುಭ ಚಿಂತಕ, ಎರಡನೆಯದು ಶುಭ ಚಿಂತನೆ, ಮೂರನೆಯದು ಶುಭ ಭಾವನೆ, ಇವರು ಬದಲಾದರೆ ನಾನು ಬದಲಾಗುತ್ತೇನೆ ಎಂಬ ಭಾವನೆ ಅಲ್ಲ. ಅವರ ಪ್ರತಿಯೂ ಸಹ ಶುಭ ಭಾವನೆ, ತಮ್ಮ ಪ್ರತಿಯೂ ಸಹ ಶುಭ ಭಾವನೆ ಹಾಗೂ ನಾಲ್ಕನೆಯದು ಶುಭ ಶ್ರೇಷ್ಠ ಸ್ಮೃತಿ ಹಾಗೂ ಸ್ವರೂಪ. ಕೇವಲ ಒಂದು ಶುಭ ಶಬ್ದವನ್ನು ನೆನಪಿಟ್ಟುಕೊಳ್ಳಿ, ಇದರಲ್ಲಿ ನಾಲ್ಕು ಮಾತುಗಳು ಬಂದುಬಿಡುತ್ತದೆ. ಕೇವಲ ನಾವು ಎಲ್ಲದರಲ್ಲಿಯೂ ಶುಭ ಶಬ್ದವನ್ನು ಸ್ಮೃತಿಯಲ್ಲಿಟ್ಟುಕೊಳ್ಳಬೇಕು. ಇದನ್ನಂತು ಬಹಳ ಬಾರಿ ಕೇಳಿದ್ದೇವೆ. ಬಹಳ ಬಾರಿ ಹೇಳಿದ್ದೇವೆ. ಈಗ ಸ್ವರೂಪದಲ್ಲಿ ತರುವ ಗಮನವನ್ನು ಇಡಬೇಕು. ಬಾಪ್ದಾದಾರವರು ತಿಳಿದಿದ್ದಾರೆ ನೀವೇ ತಯಾರಾಗಬೇಕು. ಮತ್ತು ಮುಂದೆ ಯಾರು ಬರುವವರಿದ್ದಾರೆ ಅವರಂತೂ ಸಾಕಾರ ರೂಪದಲ್ಲಿ ನಿಮ್ಮನ್ನೇ ನೋಡುತ್ತಾರೆ. |
ಇಂದು ವರ್ಷದ ಅಂತಿಮ ದಿನ ಆಗಿದೆ ಅಲ್ಲವೇ! ಬಾಪ್ದಾದಾರವರು ಮೆಜಾರಿಟಿ ಮಕ್ಕಳ ವರ್ಷದ ಲೆಕ್ಕ-ಪಟ್ಟಿಯನ್ನು ನೋಡಿದರು. ಏನು ನೋಡಿರಬಹುದು? ಮುಖ್ಯ ಒಂದು ಕಾರಣವನ್ನು ನೋಡಿದರು. ಬಾಪ್ದಾದಾರವರು ನೋಡಿದರೂ- ಅಳಿಸುವ ಹಾಗೂ ಸಮಾವೇಶ ಮಾಡಿಕೊಳ್ಳುವ ಶಕ್ತಿ ಕಡಿಮೆ ಇದೆ. ಅಳಿಸುತ್ತಾರೆ, ಉಲ್ಟಾ ನೋಡುವುದು, ಕೇಳುವುದು, ಯೋಚಿಸುವುದು, ಕಳೆದು ಹೋದುದ್ದನ್ನು ಅಳಿಸುತ್ತಾರೆ ಆದರೆ ನೀವು ಹೇಳುತ್ತೀರಲ್ಲವೇ ಒಂದಾಗಿದೆ ಕಾನ್ಶಿಯಸ್(ಜಾಗೃತ) ಇನ್ನೊಂದು ಸಬ್ ಕಾನ್ಶಿಯಸ್( ಅವಚೇತನ). ಅಳಿಸುತ್ತಿರಿ ಆದರೆ ಮನಸ್ಸಿನ ಪ್ಲೇಟ್ ಎಂದು ಹೇಳಿ, ಸ್ಲೇಟ್ ಎಂದು ಹೇಳಿ, ಕಾಗದ ಎಂದು ಹೇಳಿ, ಏನೇ ಹೇಳಿ, ಪೂರ್ತಿಯಾಗಿ ಅಳಿಸುವುದಿಲ್ಲ. ಏಕೆ ಅಳಿಸಲು ಆಗುತ್ತಿಲ್ಲ? ಅದರ ಕಾರಣವಾಗಿದೆ- ಸಮಾವೇಶ ಮಾಡಿಕೊಳ್ಳುವ ಶಕ್ತಿ ಪವರ್ಫುಲ್ ಇಲ್ಲ. ಸಮಯ ಅನುಸಾರ ಸಮಾವೇಶ ಮಾಡಿಕೊಳ್ಳುತ್ತೀರಿ ಆದರೆ ಮತ್ತೆ ಸಮಯ ಬಂದಾಗ ಹೊರಬರುತ್ತದೆ, ಆದ್ದರಿಂದ ಯಾವ ನಾಲ್ಕು ಮಾತುಗಳನ್ನು ಬಾಪ್ದಾದಾರವರು ಹೇಳಿದರು, ಅದು ಸದಾ ನಡೆಯುವುದಿಲ್ಲ. ಒಂದು ವೇಳೆ ತಿಳಿದುಕೊಳ್ಳಿ ಮನಸ್ಸಿನ ಪ್ಲೇಟ್ ಅಥವಾ ಕಾಗದ ಪೂರ್ತಿಯಾಗಿ ಸ್ವಚ್ಛವಾಗಿಲ್ಲ, ಪೂರ್ತಿಯಾಗಿ ಅಳಿಸಿಲ್ಲ ಎಂದರೆ ಅದರ ಮೇಲೆ ಒಂದುವೇಳೆ ಬೇರೆ ಏನಾದರೂ ಬರೆಯಲು ಹೋದರೆ ಸ್ಪಷ್ಟವಾಗಿ ಇರುತ್ತದೆಯೇ? ಅರ್ಥಾತ್ ಸರ್ವಗುಣ, ಸರ್ವಶಕ್ತಿಗಳ ಧಾರಣೆ ಮಾಡಲು ಬಯಸಿದರು ಸಹ ಸದಾ ಹಾಗೂ ಸಂಪೂರ್ಣ ಪಸೆರ್ಂಟೇಜ್ನಲ್ಲಿ ಆಗುವುದೇ? ಸಂಪೂರ್ಣ ಸ್ವಚ್ಛವಾಗಿರಬೇಕು, ಶುದ್ಧವಾಗಿರಬೇಕು ಆಗಲೇ ಈ ಶಕ್ತಿಗಳನ್ನು ಸಹಜವಾಗಿ ಕಾರ್ಯದಲ್ಲಿ ತೊಡಗಿಸಬಹುದು. ಇದೇ ಕಾರಣವಾಗಿದೆ, ಬಹುತೇಕರ ಸ್ಲೇಟ್ ಸ್ವಚ್ಛ ಹಾಗೂ ಶುದ್ಧವಾಗಿಲ್ಲ. ಸ್ವಲ್ಪ - ಸ್ವಲ್ಪವೂ ಸಹ ಕಳೆದುಹೋದ ಮಾತುಗಳು ಅಥವಾ ಕಳೆದ ಚಲನೆ, ವ್ಯರ್ಥ ಮಾತುಗಳು ಹಾಗೂ ವ್ಯರ್ಥ ಚಲನೆ ಸೂಕ್ಷ್ಮ ರೂಪದಲ್ಲಿ ಸಮಾವೇಶವಾಗಿರುತ್ತದೆ ಎಂದರೆ ನಂತರದ ಸಮಯದಲ್ಲಿ ಸಾಕಾರ ರೂಪದಲ್ಲಿ ಬಂದುಬಿಡುತ್ತದೆ. ಎಂದ ಮೇಲೆ ಸಮಯ ಅನುಸಾರ ಮೊದಲೇ ಪರಿಶೀಲಿಸಿಕೊಳ್ಳಿ, ತಮ್ಮನ್ನು ತಾವು ಪರಿಶೀಲಿಸಿಕೊಳ್ಳಿ ಬೇರೆಯವರನ್ನು ಪರಿಶೀಲಸಲು ಹೋಗಬೇಡಿ, ಏಕೆಂದರೆ ಅನ್ಯರನ್ನು ಪರಿಶೀಲಿಸುವುದು ಸಹಜ ಎನಿಸುತ್ತದೆ. ತನ್ನನ್ನು ಪರಿಶೀಲಿಸಿಕೊಳ್ಳುವುದು ಕಷ್ಟ ಎನಿಸುತ್ತದೆ. ಚೆಕ್ ಮಾಡಿಕೊಳ್ಳಿ ತಮ್ಮ ಮನಸ್ಸಿನ ಪ್ಲೇಟ್ ವ್ಯರ್ಥದಿಂದ ಹಾಗೂ ಕಳೆದುಹೋದ ಮಾತುಗಳಿಂದ ಸಂಪೂರ್ಣ ಸ್ವಚ್ಛವಾಗಿದೆಯೇ? ಎಲ್ಲಕ್ಕಿಂತ ಸೂಕ್ಷ್ಮ ರೂಪದಲ್ಲಿ- ಪ್ರಕಂಪನಗಳ ರೂಪದಲ್ಲಿ ಉಳಿದುಕೊಂಡು ಬಿಡುತ್ತದೆ. ಫರಿಶ್ತೆ ಅರ್ಥಾತ್ ಸಂಪೂರ್ಣ ಶುದ್ಧ ಹಾಗೂ ಸ್ವಚ್ಛ. ಸಮಾವೇಶ ಮಾಡಿಕೊಳ್ಳುವ ಶಕ್ತಿಯಿಂದ ನಕಾರಾತ್ಮಕತೆಯನ್ನು ಸಹ ಸಕಾರಾತ್ಮಕ ರೂಪದಲ್ಲಿ ಪರಿವರ್ತನೆ ಮಾಡಿ ಸಮಾವೇಶ ಮಾಡಿಕೊಳ್ಳಿ. ನಕಾರಾತ್ಮಕತೆಯೇ ಇಲ್ಲ ಸಮಾವೇಶ ಮಾಡಿಕೊಳ್ಳಿ, ಸಕಾರಾತ್ಮಕತೆಯಲ್ಲಿ ಪರಿವರ್ತನೆ ಮಾಡಿ ಸಮಾವೇಶ ಮಾಡಿಕೊಳ್ಳಿ ಆಗ ಹೊಸ ಶತಮಾನದಲ್ಲಿ ನವೀನತೆ ಬರುವುದು. |
ಎರಡನೆಯ ಮಾತು ಏನು ನೋಡಿದರೂ ಎಂದು ಹೇಳಬಹುದೇ? ಹೇಳಬಹುದೇ ಅಥವಾ ಡೋಸ್ ಜಾಸ್ತಿ ಆಯಿತೇ? ಹೇಗೆ ಬಾಪ್ದಾದಾರವರು ಮೊದಲು ಸಹ ಹೇಳಿದ್ದರು ಏನಾದರೂ ಮಾಡಿ ನಾನು ನಿಮ್ಮೆಲ್ಲರನ್ನು ನನ್ನ ಜೊತೆ ಪರಮಧಾಮಕ್ಕೆ ಕರೆದುಕೊಂಡು ಹೋಗಲೇಬೇಕು, ಹೊಡೆದು ಆದರೂ ಕರೆದುಕೊಂಡು ಹೋಗಬೇಕು ಅಥವಾ ಪ್ರೀತಿಯಿಂದಲಾದರೂ ಕರೆದುಕೊಂಡು ಹೋಗಲೇಬೇಕು. ಅಜ್ಞಾನಿಗಳಿಗೆ ಹೊಡೆದು ಹಾಗೂ ನೀವು ಮಕ್ಕಳನ್ನು ಪ್ರೀತಿಯಿಂದ. ಇದೇ ರೀತಿ ಬಾಪ್ದಾದಾರವರು ಈಗಲೂ ಹೇಳುತ್ತಾರೆ- ಹೇಗಾದರೂ ಮಾಡಿ ಪ್ರಪಂಚದ ಮುಂದೆ ಮಹಾನ್ ಆತ್ಮಗಳನ್ನು ಫರಿಶ್ತಾ ರೂಪದಲ್ಲಿ ಪ್ರತ್ಯಕ್ಷ ಮಾಡಲೇಬೇಕು. ತಯಾರಾಗಿದ್ದೀರಲ್ಲವೇ? ಬಾಪ್ದಾದಾರವರು ಹೇಳಿದರಲ್ಲವೇ- ಹೇಗಾದರೂ ಮಾಡಿ ತಯಾರಿಸಲೇಬೇಕು. ಇಲ್ಲವಾದರೆ ಹೊಸ ಪ್ರಪಂಚ ಹೇಗೆ ಬರುವುದು. ಒಳ್ಳೆಯದು, ಎರಡನೇ ಮಾತು ಏನು ನೋಡಿದರು? |
ವರ್ಷದ ಅಂತ್ಯವಾಗಿದೆ ಅಲ್ಲವೇ! ನೋಡಿ, ಬಾಪ್ದಾದಾರವರು ಬಹುತೇಕ ಶಬ್ದವನ್ನು ಹೇಳುತ್ತಿದ್ದಾರೆ, ಎಲ್ಲರೂ ಎಂದು ಹೇಳುತ್ತಿಲ್ಲ, ಬಹುತೇಕರು ಎಂದು ಹೇಳುತ್ತಿದ್ದಾರೆ. ಹಾಗಾದರೆ ಎರಡನೆಯ ಮಾತು ಏನು ನೋಡಿದರು? ಏಕೆಂದರೆ ಕಾರಣವನ್ನು ನಿವಾರಣೆ ಮಾಡಿದಾಗಲೇ ನವ ನಿರ್ಮಾಣವಾಗುವುದು. ಎಂದ ಮೇಲೆ ಎರಡನೆಯ ಕಾರಣ- ಹುಡುಗಾಟಕೆ ಭಿನ್ನ-ಭಿನ್ನ ರೂಪದಲ್ಲಿ ನೋಡಿದರು. ಕೆಲವರಲ್ಲಿ ಬಹಳ ರಾಯಲ್ ರೂಪದ ಹುಡುಗಾಟಕೆಯನ್ನು ನೋಡಿದರು. ಒಂದು ಶಬ್ದ ಹುಡುಗಾಟಕೆಯ ಕಾರಣ- "ಎಲ್ಲವೂ ನಡೆಯುತ್ತದೆ". ಏಕೆಂದರೆ ಸಾಕಾರದಲ್ಲಂತೂ ಪ್ರತಿಯೊಬ್ಬರ ಪ್ರತಿ ಕರ್ಮವನ್ನು ಯಾರು ಸಹ ನೋಡಲು ಸಾಧ್ಯವಿಲ್ಲ, ಸಾಕಾರ ಬ್ರಹ್ಮಾ ಸಹ ಕಾರದಲ್ಲಿ ನೋಡಲು ಸಾಧ್ಯವಾಗಿಲ್ಲ ಆದರೆ ಈಗ ಅವ್ಯಕ್ತ ರೂಪದಲ್ಲಿ ಬಯಸಿದರೆ ಪ್ರತಿಯೊಬ್ಬರ ಪ್ರತಿ ಕರ್ಮವನ್ನು ನೋಡಬಹುದು. ಗಾಯನ ಇದೆಯಲ್ಲವೇ ಪರಮಾತ್ಮನಿಗೆ ಸಾವಿರಾರು ಕಣ್ಣುಗಳು, ಲಕ್ಷಾಂತರ ಕಣ್ಣುಗಳು, ಲಕ್ಷಾಂತರ ಕಿವಿಗಳು ಇದೆ. ಈಗ ನಿರಾಕಾರ ಹಾಗೂ ಅವ್ಯಕ್ತ ಬ್ರಹ್ಮಾ ಇಬ್ಬರು ಜೊತೆ ಜೊತೆ ನೋಡಬಹುದು. ಯಾರೇ ಎಷ್ಟೇ ಮುಚ್ಚಿಟ್ಟರು, ರಾಯಲ್ಟಿಯಿಂದಲೂ ಮುಚ್ಚಿಡುತ್ತಾರೆ, ಸಾಧಾರಣವಲ್ಲ. ಹುಡುಗಾಟಕೆ ಒಂದು ದೊಡ್ಡ ರೂಪದಲ್ಲಿರುತ್ತದೆ, ಇನ್ನೊಂದು ಸೂಕ್ಷ್ಮ ರೂಪದಲ್ಲಿರುತ್ತದೆ, ಶಬ್ದ ಎರಡರಲ್ಲಿಯೂ ಒಂದೇ ಆಗಿದೆ -" ಎಲ್ಲವೂ ನಡೆಯುತ್ತದೆ, ಏನಾಗುತ್ತದೆ ಎಂದು ನೋಡಿಬಿಟ್ಟಿದ್ದೇವೆ! ಏನು ಆಗುವುದಿಲ್ಲ. ಈಗಂತೂ ನಡೆಸಿ, ನಂತರ ನೋಡಲಾಗುವುದು". ಇದು ಹುಡುಗಾಟಿಕೆಯ ಸಂಕಲ್ಪಗಳಾಗಿವೆ. ಬಾಪ್ದಾದಾರವರು ಬೇಕಾದರೆ ಎಲ್ಲರಿಗೂ ಹೇಳಬಹುದು ಆದರೆ ನೀವು ಹೇಳುತ್ತೀರಲ್ಲವೇ ಸ್ವಲ್ಪ ಮರ್ಯಾದೆಯನ್ನು ಉಳಿಸಿ ಎಂದು. ಎಂದ ಮೇಲೆ ಬಾಪ್ದಾದಾರವರು ಸಹ ಮರ್ಯಾದೆಯನ್ನು ಉಳಿಸುತ್ತಾರೆ ಆದರೆ ಈ ಹುಡುಗಾಟಕೆ ಪುರುಷಾರ್ಥವನ್ನು ತೀವ್ರವನ್ನಾಗಿ ಮಾಡಲು ಸಾಧ್ಯವಿಲ್ಲ. ಪಾಸ್ ವಿತ್ ಹಾನರ್ ಮಾಡಲು ಸಾಧ್ಯವಿಲ್ಲ. ಹೇಗೆ ಸ್ವಯಂ ಯೋಚಿಸುತ್ತೀರಲ್ಲವೇ "ಎಲ್ಲವೂ ನಡೆಯುತ್ತದೆ". ರಿಸಲ್ಟ್ ನಲ್ಲಿ(ಫಲಿತಾಂಶದಲ್ಲಿಯೂ) ನಡೆದು ಬಿಡುತ್ತದೆ ಆದರೆ ಹಾರಲು ಸಾಧ್ಯವಿಲ್ಲ. ಕೇಳಿದಿರಲ್ಲವೇ ಯಾವ ಎರಡು ಮಾತುಗಳನ್ನು ನೋಡಿದರು! ಪರಿವರ್ತನೆಯಲ್ಲಿ ಯಾವುದಾದರೂ ಒಂದು ರೂಪದಲ್ಲಿ, ಪ್ರತಿಯೊಬ್ಬರಲ್ಲಿಯೂ ಬೇರೆ ಬೇರೆ ರೂಪದ ಹುಡುಗಾಟಕೆ ಇದೆ. ಆ ಸಮಯ ಬಾಪ್ದಾದಾರವರು ಮುಗುಳ್ನಗುತ್ತಾರೆ, ಮಕ್ಕಳು ಹೇಳುತ್ತಾರೆ- ನೋಡೋಣ ಏನಾಗುವುದು! ಬಾಪ್ದಾದಾರವರು ಸಹ ಹೇಳುತ್ತಾರೆ -ಏನಾಗುವುದು ನೀವೇ ನೋಡಿಕೊಳ್ಳಿ! ಇಂದು ಇದನ್ನು ಏಕೆ ಹೇಳುತ್ತಿದ್ದೇವೆ? ಏಕೆಂದರೆ ಬಯಸಿ ಅಥವಾ ಬಯಸದಿರಿ, ಬಲವಂತವಾಗಿಯಾದರೂ ನಿಮ್ಮನ್ನು ತಯಾರಿಸಲೇಬೇಕು, ಹಾಗೂ ನೀವು ತಯಾರಾಗಲೇಬೇಕು. ಇಂದು ಸ್ವಲ್ಪ ಕಠಿಣವಾಗಿ ಹೇಳಿದ್ದೇವೆ ಏಕೆಂದರೆ ನೀವು ಯೋಜನೆಗಳನ್ನು ತಯಾರಿಸುತ್ತಿರುವಿರಿ, ಇದನ್ನು ಮಾಡುತ್ತೇವೆ, ಅದನ್ನು ಮಾಡುತ್ತೇವೆ... ಆದರೆ ಕಾರಣದ ನಿವಾರಣೆ ಆಗುವುದಿಲ್ಲ ಎಂದರೆ ಟೆಂಪರರಿ (ಅಲ್ಪಕಾಲದ್ದು) ಆಗಿಬಿಡುತ್ತದೆ, ನಂತರ ಯಾವುದೇ ಮಾತು ಬಂದು ಬಿಟ್ಟರೆ ಹೇಳುತ್ತೀರಿ- ಮಾತೇ ಈ ರೀತಿ ಇತ್ತು ಅಲ್ಲವೇ! ಕಾರಣವೇ ಈ ರೀತಿ ಇತ್ತು! ನನ್ನ ಲೆಕ್ಕಾಚಾರವೇ ಈ ರೀತಿ ಇದೆ, ಆದ್ದರಿಂದ ತಯಾರಾಗಲೇಬೇಕು. ಒಪ್ಪಿಗೆ ಇದೇ ಅಲ್ಲವೇ! ಶಿಕ್ಷಕಿಯರೇ ಒಪ್ಪಿಗೆ ಇದೆಯೇ? ವಿದೇಶಿಯರೇ ಒಪ್ಪಿಗೆ ಇದೆಯೇ? ಬಾಪ್ದಾದಾರವರು ಹೇಳುತ್ತಾರೆ- ಆಗಲೇಬೇಕು. ನಂತರ ಹೊಸ ಶತಮಾನದಲ್ಲಿ ಆಗಿಬಿಟ್ಟೆವು ಎಂದು ಹೇಳುವಿರಿ. ಸರಿಯಲ್ಲವೇ- ಕಡಿಮೆ ಎಂದರೆ ಕಡಿಮೆ ಸಮಯ ತೆಗೆದುಕೊಳ್ಳಬೇಕು. ಆದರೂ ಸಹ ಬಾಪ್ದಾದಾರವರು ಒಂದು ವರ್ಷವನ್ನು ಕೊಡುತ್ತಿದ್ದಾರೆ, ಈಗಂತೂ ಸಹಜವಲ್ಲವೇ. ಆರಾಮಾಗಿ ಮಾಡಿ. ಆರಾಮದ ಅರ್ಥವಾಗಿದೆ ಆ ರಾಮ (ರಾಮ ಬನ್ನಿ) ಅರ್ಥಾತ್ ತಂದೆಯನ್ನು ನೆನಪು ಮಾಡಿ ನಂತರ ಮಾಡುವುದು. ಆ ಹಾಸಿಗೆಯ ಮೇಲೆ ಮಾಡುವ ಆರಾಮ ಮಾಡಬೇಡಿ. ಬಾಪ್ದಾದಾರವರಿಗೆ ನಿಮ್ಮೊಂದಿಗೆ ಬಹಳ ಪ್ರೀತಿ ಇದೆಯೇ, ಅಥವಾ ನಿಮ್ಮ ಪ್ರೀತಿ ತಂದೆಗಿಂತಲೂ ಜಾಸ್ತಿ ಇದೆಯೇ? ಯಾರ ಪ್ರೀತಿ ಜಾಸ್ತಿ? ತಂದೆಯದೆ ಅಥವಾ ನಿಮ್ಮದೇ? |
ಬಾಪ್ದಾದಾರವರಿಗೆ ನಿಮ್ಮೆಲ್ಲರ ಮೇಲೆ ನಿಶ್ಚಯವಿದೆ- ನೀವೆಲ್ಲ ಮಕ್ಕಳು ಪ್ರೀತಿಯ ರಿಟರ್ನ್ ಅವ್ಯಕ್ತ ಬ್ರಹ್ಮಾ ತಂದೆಯ ಸಮಾನ ಅವಶ್ಯವಾಗಿ ಆಗುವಿರಿ. ಆಗುವಿರಿ ಅಲ್ಲವೇ! ಬಾಪ್ದಾದಾರವರು ಬಿಡುವುದಿಲ್ಲ! ಪ್ರೀತಿ ಇದೆ ಅಲ್ಲವೇ! ಯಾರೊಂದಿಗೆ ಪ್ರೀತಿ ಇದೆ ಅವರ ಜೊತೆಯನ್ನು ಎಂದು ಬಿಡಲಾಗುವುದಿಲ್ಲ. ಎಂದ ಮೇಲೆ ಬ್ರಹ್ಮಾ ತಂದೆಗೆ ನಿಮ್ಮ ಮೇಲೆ ಬಹಳ ಪ್ರೀತಿ ಇದೆ. ನಿಮಗಾಗಿ ಕಾಯುತ್ತಾ ಇರುತ್ತಾರೆ, ಯಾವಾಗ ನನ್ನ ಮಕ್ಕಳು ಬರುವರು! ಸಮಾನರಂತು ಆಗುವಿರಲ್ಲವೇ! |
Subsets and Splits
No community queries yet
The top public SQL queries from the community will appear here once available.