text
stringlengths 0
61.5k
|
---|
ತಂದೆಯು ಹೇಳುತ್ತಾರೆ - ನಾನು ಗ್ಯಾರಂಟಿ ಕೊಡುತ್ತೇನೆ, ಕಲ್ಪ-ಕಲ್ಪವೂ ನಾನೇ ಬಂದು ನೀವು ಮಕ್ಕಳನ್ನು ಪಾವನರನ್ನಾಗಿ ಮಾಡುತ್ತೇನೆ. ಅಲ್ಲಿ ಯಾರೊಬ್ಬರೂ ಪತಿತರಿರುವುದಿಲ್ಲ. ಜ್ಞಾನವು ಎಷ್ಟು ಸಹಜವಾಗಿದೆ! ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಎಂಬ ಜ್ಞಾನವೂ ಸಹ ಬುದ್ಧಿಯಲ್ಲಿದೆ. ನಾವೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ ಎಂಬ ನಿಶ್ಚಯ ಮಾಡಿಕೊಳ್ಳಬೇಕಾಗಿದೆ. ನಿಶ್ಚಯದಲ್ಲಿಯೇ ವಿಜಯವಿದೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆಯೋ ಅಥವಾ ಇನ್ನೂ ಕಡಿಮೆಯೋ ಗೊತ್ತಿಲ್ಲ ಎಂದು ಆಲೋಚಿಸಬೇಡಿ. ನೀವು ಬ್ರಾಹ್ಮಣರಾಗಿದ್ದೀರಿ ಅಂದಮೇಲೆ ನಿಮಗೇ ನಿಶ್ಚಯವಿರಬೇಕು. ಅವಶ್ಯವಾಗಿ ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಇದು ಬಹಳ ಸಹಜ ತಿಳುವಳಿಕೆಯಾಗಿದೆ. ಮಕ್ಕಳಿಗೆ ತಿಳಿಸಿದ್ದಾರೆ - ಇವೆಲ್ಲಾ ಚಿತ್ರಗಳನ್ನು ತಂದೆಯು ದಿವ್ಯ ದೃಷ್ಟಿಯಿಂದ ಮಾಡಿಸಿದ್ದಾರೆ. ಅದರಲ್ಲಿ ತಿದ್ದು ಪಡಿಯೂ ಮಾಡಿಸಿದ್ದಾರೆ. ಯಜ್ಞದ ಆದಿಯಲ್ಲಿ ಬ್ರಹ್ಮಾ ತಂದೆಯು ಕಾಶಿಯಲ್ಲಿ ಏಕಾಂತದಲ್ಲಿ ಕುಳಿತಿದ್ದಾಗ ಗೋಡೆಗಳ ಮೇಲೆ ಇಂತಹ ಚಕ್ರ ಇತ್ಯಾದಿಗಳನ್ನು ಚಿತ್ರಿಸುತ್ತಿದ್ದರು, ಇದೇನು ಎಂಬುದು ಅರ್ಥವಾಗುತ್ತಿರಲಿಲ್ಲ, ಖುಷಿಯಾಗುತ್ತಿತ್ತು. ಸಾಕ್ಷಾತ್ಕಾರವಾದಾಗ ಹೇಗೆ ಹಾರುತ್ತಿದ್ದರು. ಇದೇನಾಗುತ್ತಿದೆ ಎಂಬುದೇನೂ ತಿಳಿಯುತ್ತಿರಲಿಲ್ಲ. ನೀವು ತಿಳಿದುಕೊಂಡಿದ್ದೀರಿ - ಯಾವ ಚಿತ್ರಗಳು ಮೊದಲು ತಯಾರಾಗಿದ್ದವೋ ಅದನ್ನು ಮತ್ತೆ ಬದಲಾಯಿಸಿ ಹೊಸ-ಹೊಸದಾಗಿ ಮಾಡಿಸುತ್ತಾ ಹೋಗಿದ್ದಾರೆ. ಈಗ ಹೊಸ-ಹೊಸ ಚಿತ್ರಗಳು ಕಲ್ಪದ ಹಿಂದಿನ ತರಹ ಆಗುತ್ತಾ ಹೋಗುತ್ತದೆ. ಏಣಿಯ ಚಿತ್ರ ನೋಡಿ, ಎಷ್ಟು ಚೆನ್ನಾಗಿದೆ! ಇದರ ಮೇಲೆ ತಿಳಿಸುವುದು ಬಹಳ ಸಹಜವಾಗುತ್ತದೆ. ಕೊನೆಯಲ್ಲಿ ಬರುವವರಿಗೆ ಇನ್ನೂ ಬಹಳ ಸಹಜವಾಗಿ ಸಿಗುತ್ತದೆ. ಈಗ ಬರುವ ಹೊಸಬರು ಏಳು ದಿನಗಳಲ್ಲಿ ಇಡೀ ಜ್ಞಾನವನ್ನು ಅರ್ಥ ಮಾಡಿಕೊಳ್ಳುತ್ತಾರೆ. ಹಳಬರಿಗಿಂತಲೂ ಮುಂದೆ ಹೋಗುತ್ತಿದ್ದಾರೆ. ಮೊದಲೇ ಬಂದಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಎಂದು ಕೆಲವರು ಹೇಳುತ್ತಾರೆ. ಅರೆ! ಈ ಚಿಂತೆಯನ್ನೂ ಮಾಡಬೇಡಿರಿ. ಒಂದುವೇಳೆ ಮೊದಲೇ ಬಂದು ಮತ್ತೆ ಜ್ಞಾನವನ್ನು ಬಿಟ್ಟು ಹೋಗಿದ್ದರೆ? ತಡವಾಗಿ ಬರುವವರಿಗೆ ಸಹಜವಾಗಿ ಸಿಂಹಾಸನ ಸಿಗುತ್ತದೆ. ಯಾರು ಮೊದಲು ಬಂದರೋ ಅವರು ನೋಡಿ, ಇಂದು ಇಲ್ಲವೇ ಇಲ್ಲ ಸಮಾಪ್ತಿಯಾದರು. ಕೊನೆಯಲ್ಲಿ ಯಾರು ತೇರ್ಗಡೆಯಾದರು ಎಂದು ಫಲಿತಾಂಶವು ತಿಳಿಯುತ್ತದೆ. ಹೊಸ ಹೊಸಬರು ಬರುತ್ತಾರೆ, ಕೂಡಲೇ ಸೇವೆಯಲ್ಲಿ ತೊಡಗುತ್ತಾರೆ. ಹಳಬರು ಈ ರೀತಿ ತೊಡಗುವುದಿಲ್ಲ. ಹೊಸ ಹೊಸ ಮಕ್ಕಳು ಸೇವೆಯಿಂದ ಹೃದಯವನ್ನೇರಿರುತ್ತಾರೆ. ಎಷ್ಟೊಂದು ಮಂದಿ ಹಳಬರು ಹೊರಟು ಹೋದರು ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಾರಿಗೆ ಸರ್ವೋತ್ತಮ ಬ್ರಾಹ್ಮಣ ಕುಲಭೂಷಣರೆಂದು ಹೇಳಲಾಗುತ್ತದೆಯೋ ಅವರಲ್ಲಿಯೂ ಕೆಲವರು ಆಶ್ಚರ್ಯವೆನಿಸುವಂತೆ ಕೇಳಿ, ಹೇಳಿ, ಮತ್ತೆ ಬಿಟ್ಟು ಹೋಗುತ್ತಾರೆ. ಯಾವುದು ಗಾಯನವಿದೆಯೋ ಅದು ಈಗ ಪ್ರತ್ಯಕ್ಷದಲ್ಲಿ ನಡೆಯುತ್ತಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ನೋಡಿಕೊಳ್ಳಿ, ನಾನು ಬಹಳ-ಬಹಳ ಮಧುರನಾಗಿದ್ದೇನೆಯೇ? ನನ್ನಲ್ಲಿ ಯಾವ-ಯಾವ ಕೊರತೆಗಳಿವೆ? ಎಲ್ಲಾ ದೈವೀ ಗುಣಗಳು ಧಾರಣೆಯಾಗಿದೆಯೇ! ತಮ್ಮ ಚಲನೆಯನ್ನು ದೇವತೆಗಳಂತೆ ಮಾಡಿಕೊಳ್ಳಬೇಕಾಗಿದೆ. ಆಸುರೀ ಆಹಾರ-ಪಾನೀಯಗಳ ತ್ಯಾಗ ಮಾಡಬೇಕಾಗಿದೆ. |
2. ಯಾವುದೇ ವ್ಯರ್ಥ ಮಾತುಗಳನ್ನು ಕೇಳಲೂಬಾರದು, ಹೇಳಲೂಬಾರದು, ಸಹನಾಶೀಲರಾಗಬೇಕಾಗಿದೆ. |
ಓಂ ಶಾಂತಿ. ಡಬಲ್ ಓಂ ಶಾಂತಿ. ಇದು ಮಕ್ಕಳ ಬುದ್ಧಿಯಲ್ಲಿದೆ. ತಂದೆಯೂ ಸಹ ಕುಳಿತು ಮಕ್ಕಳಿಗೇ ತಿಳಿಸುತ್ತಾರೆ. ಮೊಟ್ಟಮೊದಲು ತಂದೆಯ ಬಗ್ಗೆ ನಿಶ್ಚಯವಿರಬೇಕು ಏಕೆಂದರೆ ಅವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ. ಹಾಗೆ ನೋಡಿದರೆ ಲೌಕಿಕ ರೀತಿಯಿಂದ ಬೇರೆ-ಬೇರೆಯಾಗಿರುತ್ತಾರೆ. ಶಿಕ್ಷಕನನ್ನು ಯೌವನದಲ್ಲಿ ಮಾಡಿಕೊಳ್ಳಲಾಗುವುದು. ಗುರುವನ್ನು 60 ವಯಸ್ಸಿನ ನಂತರ ಮಾಡಿಕೊಳ್ಳುತ್ತಾರೆ. ಇಲ್ಲಿ ತಂದೆಯು ಬಂದು ಮೂರೂ ಸಂಬಂಧದಲ್ಲಿ ಜೊತೆಜೊತೆ ಸೇವೆ ಮಾಡುತ್ತಾರೆ. ಚಿಕ್ಕವರೂ,ದೊಡ್ಡವರೆಲ್ಲರೂ ಓದಬಹುದೆಂದು ಹೇಳುತ್ತಾರೆ. ಮಕ್ಕಳ ಬುದ್ಧಿಯು ಬಹಳ ಉಲ್ಲಾಸವಾಗುತ್ತದೆ. ಚಿಕ್ಕವರು, ದೊಡ್ಡವರು ಎಲ್ಲರೂ ಅಗತ್ಯವಾಗಿ ಜೀವಾತ್ಮ ಆಗಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮವು ದೇಹದಲ್ಲಿ ಪ್ರವೇಶ ಮಾಡುತ್ತದೆ, ಆತ್ಮ ಹಾಗೂ ಜೀವದಲ್ಲಿ ಅಂತರವಿದೆಯಲ್ಲವೆ. ಇಲ್ಲಿ ಮಕ್ಕಳಿಗೆ ಆತ್ಮ ಹಾಗೂ ಪರಮಾತ್ಮನ ಜ್ಞಾನವನ್ನು ನೀಡಲಾಗುವುದು. ಆತ್ಮವು ಅವಿನಾಶಿಯಾಗಿದೆ ಆದರೆ ಇಲ್ಲಿ ಶರೀರವು ಭ್ರಷ್ಟಾಚಾರದಿಂದ ಜನ್ಮವಾಗುತ್ತದೆ, ಅಲ್ಲಿ ಭ್ರಷ್ಟಾಚಾರದ ಹೆಸರೂ ಸಹ ಇರುವುದಿಲ್ಲ. ಆ ಪ್ರಪಂಚವನ್ನು ಸಂಪೂರ್ಣ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುವುದು. ಶ್ರೇಷ್ಠಾಚಾರಿ ಮತ್ತು ಭ್ರಷ್ಟಾಚಾರಿಯ ಅಕ್ಷರವಿದೆಯಲ್ಲವೆ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸಿಕೊಡುತ್ತಾರೆ. ಮಕ್ಕಳಿಗೆ ಇದು ಪಕ್ಕಾ ನಿಶ್ಚಯವಿರಬೇಕಾಗಿದೆ- ನಾವೆಲ್ಲಾ ಆತ್ಮಗಳ ತಂದೆ ನಮಗೆ ಓದಿಸುತ್ತಿದ್ದಾರೆ, ತಂದೆಯು ಪುರುಷೋತ್ತಮ ಸಂಗಮಯುಗದಲ್ಲಿ ಬರುತ್ತಾರೆ. ಇದರಿಂದ ಕನಿಷ್ಟರಿಂದ ಪುರುಷೋತ್ತಮರನ್ನಾಗಿ ಮಾಡುತ್ತಾರೆಂದು ಸಿದ್ಧವಾಗುತ್ತದೆ. ಈ ಪ್ರಪಂಚ ಕನಿಷ್ಟ, ತಮೋಪ್ರಧಾನವಾಗಿದೆ, ಇದನ್ನು ಘೋರ ನರಕವೆಂದು ಕರೆಯಲಾಗುವುದು. ಈಗ ನಾವು ಮನೆಗೆ ಹಿಂತಿರುಗಬೇಕಾಗಿದೆ ಆದುದರಿಂದ ತಮ್ಮನ್ನು ಆತ್ಮನೆಂದು ತಿಳಿಯಿರಿ. ತಂದೆಯು ಬಂದಿರುವುದೇ ಮನೆಗೆ ಕರೆದುಕೊಂಡು ಹೋಗಲು. ನಾವು ಆತ್ಮರು ಸಹೋದರ-ಸಹೋದರರಾಗಿದ್ದೇವೆಂದು ಪಕ್ಕಾ ನಿಶ್ಚಯ ಮಾಡಿಕೊಳ್ಳಿ. ಈ ದೇಹವಂತೂ ಇರುವುದೇ ಇಲ್ಲ. ಹೀಗೆ ವಿಕಾರಿ ದೃಷ್ಟಿಯು ಸಮಾಪ್ತಿಯಾಗಿಬಿಡುತ್ತದೆ. ಇದೇ ಅತಿದೊಡ್ಡ ಗುರಿಯಾಗಿದೆ. ಇದರಲ್ಲಿ ಕಡಿಮೆ ಮಕ್ಕಳು ಈ ಗುರಿಯನ್ನು ತಲುಪುತ್ತಾರೆ. ಅಂತ್ಯದಲ್ಲಿ ಯಾವ ವಸ್ತುವೂ ನೆನಪಿಗೆ ಬರಬಾರದು. ಇದನ್ನೇ ಕರ್ಮಾತೀತ ಸ್ಥಿತಿಯೆಂದು ಕರೆಯಲಾಗುವುದು. ಈ ದೇಹವೂ ಸಹ ವಿನಾಶಿಯಾಗಿದೆ, ಇದರೊಂದಿಗೂ ಮಮತ್ವವು ಹೊರಟುಹೋಗಬೇಕು. ಹಳೆಯ ದೇಹ, ದೇಹದ ಸಂಬಂಧದಲ್ಲಿ ಮಮತೆಯನ್ನಿಟ್ಟುಕೊಳ್ಳಬಾರದು, ಈಗ ಹೊಸಸಂಬಂಧದಲ್ಲಿ ಹೋಗಬೇಕಾಗಿದೆ. ಈ ಹಳೆಯ ಆಸುರೀ ಸ್ತ್ರೀ-ಪುರುಷರ ಸಂಬಂಧ ಎಷ್ಟೊಂದು ಅಪವಿತ್ರವಾಗಿದೆ. ಅದಕ್ಕಾಗಿ ತಂದೆಯು ತಿಳಿಸುತ್ತಾರೆ- ತಮ್ಮನ್ನು ತಾವು ಆತ್ಮನೆಂದು ತಿಳಿದುಕೊಳ್ಳಿ, ಈಗ ಆತ್ಮಗಳು ಮನೆಗೆ ಹಿಂತಿರುಗಬೇಕಾಗಿದೆ. ಆತ್ಮ, ಆತ್ಮನೆಂದು ತಿಳಿಯುವುದರಿಂದ ಶರೀರದ ಭಾನವಿರುವುದಿಲ್ಲ. ಸ್ತ್ರೀ-ಪುರುಷ ಎಂಬ ಸೆಳೆತ ಹೊರಟುಹೋಗುತ್ತದೆ. ಅಂತ್ಯಕಾಲದಲ್ಲಿ ಯಾರು ಸ್ತ್ರೀಯನ್ನು ಸ್ಮರಣೆ ಮಾಡುತ್ತಾರೆಯೋ ಆ ಚಿಂತೆಯಲ್ಲಿಯೇ ದೇಹ ಬಿಡುತ್ತಾರೆ....... ಎಂದು ಬರೆಯಲ್ಪಟ್ಟಿದೆ. ಆದುದರಿಂದ ಅಂತ್ಯಕಾಲದಲ್ಲಿ ಗಂಗಾಜಲವನ್ನು ಬಾಯಿಗೆ ಹಾಕುತ್ತಾ ಕೃಷ್ಣನನ್ನು ನೆನಪು ಮಾಡಲು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿ ಕೃಷ್ಣನ ನೆನಪಿರುತ್ತದೆ, ಕೃಷ್ಣಭಗವಾನುವಾಚ ಎಂದು ಹೇಳುತ್ತಾರೆ. ಇಲ್ಲಿ ತಂದೆಯು ತಿಳಿಸುತ್ತಾರೆ- ದೇಹವನ್ನು ನೆನಪು ಮಾಡಬಾರದು, ನಿಮ್ಮನ್ನು ಆತ್ಮನೆಂದು ತಿಳಿದು ಎಲ್ಲಾ ಕಡೆಯಿಂದ ನಿಮ್ಮ ಬುದ್ಧಿಯಿಂದ ದೂರವಾಗುತ್ತಾ ಹೋಗಿ. ಸರ್ವಸಂಬಂಧಗಳ ಪ್ರೀತಿ ಹೇಗೆ ಒಬ್ಬ ತಂದೆಯಲ್ಲಯೇ ಸ್ಯಾಕ್ರೀನ್ ಆಗಿಬಿಡುತ್ತದೆ. ಎಲ್ಲರಿಗೂ ಅತಿಮಧುರ ಹಾಗೂ ಎಲ್ಲರ ಪ್ರಿಯತಮ ಅವರೇ ಆಗಿದ್ದಾರೆ. ಒಬ್ಬರೇ ಪ್ರಿಯತಮನಾಗಿದ್ದಾರೆ ಆದರೆ ಭಕ್ತಿಮಾರ್ಗದಲ್ಲಿ ಎಷ್ಟೊಂದು ಹೆಸರುಗಳನ್ನಿಟ್ಟಿದ್ದಾರೆ. ಭಕ್ತಿಯ ವಿಸ್ತಾರವು ಬಹಳ ಇದೆ. ಯಜ್ಞ, ಜಪ-ತಪ, ದಾನ, ತೀರ್ಥ, ವ್ರತ ಮಾಡುವುದು, ಶಾಸ್ತ್ರಗಳನ್ನು ಓದುವುದೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಜ್ಞಾನದ ಸಾಮಗ್ರಯೇನೂ ಇಲ್ಲ, ಸ್ವಲ್ಪವೂ ಇಲ್ಲ. ಇದನ್ನೂ ಸಹ ನೀವು ತಿಳಿಸಿಕೊಡಲು ನೋಟ್ ಮಾಡಿಕೊಳ್ಳುತ್ತೀರಿ. ಆದರೆ ನಿಮ್ಮ ಈ ಕಾಗದ ಯಾವುದೂ ಸಹ ಉಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೀವು ಶಾಂತಿಧಾಮದಿಂದ ಬಂದಿದ್ದೀರಿ ಆಗ ನಿಮಗೆ ಶಾಂತಿಯೇ ಇತ್ತು, ಶಾಂತಿಸಾಗರನಿಂದ ಶಾಂತಿಯ, ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಈಗ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಲ್ಲವೆ! ಜ್ಞಾನವನ್ನೂ ತೆಗೆದುಕೊಳ್ಳುತ್ತಿದ್ದೀರಿ, ನಿಮ್ಮ ಪದವಿಯು ನಿಮ್ಮ ಮುಂದೆ ನಿಂತಿದೆ ಈ ಜ್ಞಾನವನ್ನು ತಂದೆಯ ವಿನಃ ಅನ್ಯರು ಯಾರೂ ಕೊಡಲು ಸಾಧ್ಯವಿಲ್ಲ, ಇದು ಆತ್ಮಿಕ ಜ್ಞಾನವಾಗಿದೆ, ಆತ್ಮದ ಜ್ಞಾನವನ್ನು ಕೊಡಲು ಆತ್ಮಿಕ ತಂದೆಯು ಒಮ್ಮೆಯೇ ಬರುತ್ತಾರೆ ಅವರಿಗೆ ಪತಿತ ಪಾವನನೆಂದು ಹೇಳುತ್ತಾರೆ. |
ಮುಂಜಾನೆ ಮಕ್ಕಳಿಗೆ ಕುಳಿತು ಡ್ರಿಲ್ ಮಾಡಿಸುತ್ತಾರೆ. ವಾಸ್ತವದಲ್ಲಿ ಇದನ್ನು ಡ್ರಿಲ್ ಎಂದು ಹೇಳಲಾಗುವುದಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿ. ಎಷ್ಟೊಂದು ಸಹಜವಾಗಿದೆ, ನೀವು ಆತ್ಮವಲ್ಲವೆ ಅಂದಾಗ ಎಲ್ಲಿಂದ ಬಂದಿರಿ? ಪರಮಧಾಮದಿಂದ. ಈ ರೀತಿಯಾಗಿ ಬೇರೆ ಯಾರೂ ಕೇಳುವುದಿಲ್ಲ. ಪಾರಲೌಕಿಕ ತಂದೆಯೇ ಮಕ್ಕಳನ್ನು ಕೇಳುತ್ತಾರೆ. ಮಕ್ಕಳೇ ಈ ಶರೀರದಲ್ಲಿ ಪಾತ್ರವನ್ನಭಿನಯಿಸಲು ಪರಮಧಾಮದಿಂದ ಬಂದಿದ್ದೀರಲ್ಲವೆ. ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಈಗ ನಾಟಕ ಪೂರ್ಣವಾಯಿತು. ಆತ್ಮ ಪತಿತವಾದ ಕಾರಣ ಶರೀರವು ಪತಿತವಾಯಿತು. ಚಿನ್ನದಲ್ಲಿಯೇ ಕಲಬೆರಕೆಯಾಗುತ್ತದೆ ಮತ್ತೆ ಅದನ್ನು ಕರಗಿಸಲಾಗುವುದು. ಸನ್ಯಾಸಿಗಳು ಇದರ ಅರ್ಥವನ್ನು ಎಂದಿಗೂ ತಿಳಿಸುವುದಿಲ್ಲ. ಅವರು ಈಶ್ವರನನ್ನು ತಿಳಿದುಕೊಂಡಿಲ್ಲ, ಈಶ್ವರನೊಂದಿಗೆ ಸಂಬಂಧ ಜೋಡಿಸುವುದನ್ನು ಅವರು ಒಪ್ಪುವುದಿಲ್ಲ. ತಂದೆಯು ಕಲಿಸುವುದನ್ನು ಬೇರೆ ಯಾರೂ ಕಲಿಸಲು ಸಾಧ್ಯವಿಲ್ಲ. ಇಲ್ಲಿ ಪ್ರತ್ಯಕ್ಷವಾಗಿ ಶ್ರಮಪಡಬೇಕಾಗುವುದು. ತಂದೆಯು ಇಲ್ಲಿ ಎಷ್ಟೊಂದು ಸಹಜವಾಗಿ ತಿಳಿಸಿಕೊಡುತ್ತಾರೆ. ಹೇ ಪತಿತ-ಪಾವನ, ಸರ್ವಶಕ್ತಿವಂತ.... ಎಂದು ಹಾಡುತ್ತಾರೆ. ಅವರಿಗೇ ಶ್ರೀ ಶ್ರೀ ಎಂದು ಕರೆಯಲಾಗುವುದು ಹಾಗೂ ದೇವತೆಗಳಿಗೂ ಶ್ರೀ ಎಂದು ಕರೆಯಲಾಗುತ್ತದೆ, ಅದು ಅವರಿಗೆ ಶೋಭಿಸುತ್ತದೆ. ಅವರ ಆತ್ಮ ಹಾಗೂ ಶರೀರವೆರಡೂ ಪವಿತ್ರವಾಗಿರುತ್ತದೆ. ಆತ್ಮನನ್ನು ಯಾರೂ ನಿರ್ಲೇಪವೆಂದು ಹೇಳಲು ಸಾಧ್ಯವಿಲ್ಲ, ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ ಆದರೆ ಮನುಷ್ಯರು ತಿಳಿಯದಿರುವ ಕಾರಣ ಆತ್ಮವನ್ನು ಅಸತ್ಯ ಮಾಡಿಬಿಟ್ಟಿದ್ದಾರೆ. ಒಬ್ಬ ತಂದೆಯೇ ಬಂದು ಸತ್ಯವನ್ನಾಗಿ ಮಾಡುತ್ತಾರೆ. ರಾವಣನು ಅಸತ್ಯವನ್ನಾಗಿ ಮಾಡುತ್ತಾನೆ, ನಿಮ್ಮ ಬಳಿ ಚಿತ್ರವೂ ಇದೆ. ಉಳಿದಂತೆ 10 ತಲೆಯುಳ್ಳಂತಹ ರಾವಣ ಯಾರೂ ಇರುವುದಿಲ್ಲ. ಸತ್ಯಯುಗದಲ್ಲಿ ರಾವಣನಿರುವುದಿಲ್ಲ ಎನ್ನುವುದು ಸ್ಪಷ್ಟವಿದೆ ಆದರೆ ಕೇಳುವವರಲ್ಲಿ ಇಲ್ಲಿಯ ದೇವತಾ ಕಸಿ ಎಂದು ಹೇಳಲಾಗುತ್ತದೆ. ಕೆಲವರು ಸ್ವಲ್ಪ ಕೇಳುತ್ತಾರೆ, ಇನ್ನೂ ಕೆಲವರು ಬಹಳ ಕೇಳುತ್ತಾರೆ. ಭಕ್ತಿಮಾರ್ಗವು ಎಷ್ಟೊಂದು ವಿಸ್ತಾರವಾಗಿದೆ. ನೋಡಿ! ಅನೇಕ ಪ್ರಕಾರದ ಭಕ್ತರಿದ್ದಾರೆ. ಅಲ್ಲದೆ ಮೊದಲಿನಿಂದಲೂ ಕೇಳಿರುತ್ತಾರೆ- ಕೃಷ್ಣನು ಗೋಪಿಕೆಯರನ್ನು ಓಡಿಸಿಕೊಂಡು ಹೋದ ಎಂದು ಹೇಳುತ್ತಾರೆ. ಹಾಗಾದರೆ ಕೃಷ್ಣನನ್ನು ಏಕೆ ಪ್ರೀತಿ ಮಾಡುತ್ತಾರೆ? ಏಕೆ ಪೂಜಿಸುತ್ತಾರೆ? ಆದುದರಿಂದ ತಂದೆಯು ಕುಳಿತು ತಿಳಿಸುತ್ತಾರೆ- ಕೃಷ್ಣನು ಮೊದಲನೇ ರಾಜಕುಮಾರನಾಗಿರುತ್ತಾನೆ, ಅವನು ಎಷ್ಟೊಂದು ಬುದ್ಧಿವಂತನಾಗಿರುತ್ತಾನೆ. ಇಡೀ ವಿಶ್ವದ ಮಾಲೀಕನಾಗಿರುವ ಕೃಷ್ಣ ಕಡಿಮೆ ಬುದ್ಧಿಯುಳ್ಳವನಾಗಿರುತ್ತಾನೆಯೇ? ಅಲ್ಲಿ ಅವನಿಗೆ ಮಂತ್ರಿ ಮುಂತಾದವರಿರುವುದಿಲ್ಲ, ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಇಲ್ಲಿ ಸಲಹೆಯನ್ನು ತೆಗೆದುಕೊಂಡೇ ಸಂಪೂರ್ಣನಾಗಿದ್ದೇನೆ ಆದ್ದರಿಂದ ಸಲಹೆಯನ್ನು ಏಕೆ ತೆಗೆದುಕೊಳ್ಳುತ್ತಾನೆ! ನೀವು ಅರ್ಧಕಲ್ಪಕ್ಕೆ ಯಾವುದೇ ಸಲಹೆಯನ್ನು ತೆಗೆದುಕೊಳ್ಳುವುದಿಲ್ಲ. ಸ್ವರ್ಗ ಹಾಗೂ ನರಕದ ಹೆಸರನ್ನು ಕೇಳಿದ್ದೀರಿ, ಇದಂತೂ ಸ್ವರ್ಗವಾಗಲು ಸಾಧ್ಯವಿಲ್ಲ. ಕಲ್ಲುಬುದ್ಧಿಯವರು ನಮ್ಮ ಬಳಿ ಹಣವಿದೆ, ಮಹಲುಗಳಿವೆ, ನಾವು ಸ್ವರ್ಗದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ ಆದರೆ ಸ್ವರ್ಗವು ಹೊಸಪ್ರಪಂಚದಲ್ಲಿ ಇರುತ್ತದೆಯೆಂದು ನೀವು ತಿಳಿದುಕೊಂಡಿದ್ದೀರಿ. ಸ್ವರ್ಗದಲ್ಲಿ ಎಲ್ಲರೂ ಸದ್ಗತಿಯಲ್ಲಿರುತ್ತಾರೆ, ಸ್ವರ್ಗ-ನರಕ ಜೊತೆಜೊತೆಯಲ್ಲಿ ಹೇಗೆ ಇರುತ್ತದೆ! ಸ್ವರ್ಗವೆಂದು ಯಾವುದಕ್ಕೆ ಹೇಳಲಾಗುತ್ತದೆ, ಅದಕ್ಕೆ ಎಷ್ಟು ಆಯಸ್ಸಿರುತ್ತದೆ? ಇವೆಲ್ಲವನ್ನೂ ತಂದೆಯು ನಿಮಗೆ ತಿಳಿಸಿಕೊಟ್ಟಿದ್ದಾರೆ. ಪ್ರಪಂಚವಂತೂ ಒಂದೇ ಆಗಿದೆ, ಹೊಸದನ್ನು ಸತ್ಯಯುಗ, ಹಳೆಯದನ್ನು ಕಲಿಯುಗವೆಂದು ಕರೆಯಲಾಗುತ್ತದೆ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗುತ್ತಿದೆ, ಭಕ್ತಿಯ ನಂತರ ಜ್ಞಾನ, ಎಲಾ ಜೀವಾತ್ಮರು ಪಾತ್ರವನ್ನಭಿನಯಿಸುತ್ತಾ-ಅಭಿನಯಿಸುತ್ತಾ ಪತಿತರಾಗಿದ್ದಾರೆ ಇದನ್ನೂ ಸಹ ತಂದೆಯು ತಿಳಿಸಿಕೊಟ್ಟಿದ್ದಾರೆ. ನೀವು ಸುಖವನ್ನು ಹೆಚ್ಚು ಪಡೆಯುತ್ತೀರಿ. 3/4 ಸುಖವಿರುತ್ತದೆ ಉಳಿದಂತೆ 1/4 ದುಃಖವಿರುತ್ತದೆ. ಇದರಲ್ಲಿಯೂ ಯಾವಾಗ ತಮೋಪ್ರಧಾನರಾಗಿಬಿಡುತ್ತೀರಿ ಆಗ ದುಃಖವು ಹೆಚ್ಚಾಗುತ್ತದೆ. ಅರ್ಧ-ಅರ್ಧ ಇದ್ದರೂ ಸಹ ಮಜಾ ಬರುವುದಿಲ್ಲ. ಯಾವಾಗ ಸ್ವರ್ಗದಲ್ಲಿ ದುಃಖದ ಹೆಸರು ಚಿಹ್ನೆಯೇ ಇರುವುದಿಲ್ಲ ಆಗ ಮಜಾ ಇರುತ್ತದೆ. ಅದಕ್ಕೆ ಎಲ್ಲರೂ ಸ್ವರ್ಗವನ್ನು ನೆನಪು ಮಾಡುತ್ತಾರೆ. ಹೊಸಪ್ರಪಂಚ ಹಾಗೂ ಹಳೆಯ ಪ್ರಪಂಚ ಈ ಬೇಹದ್ದಿನ ಆಟವಾಗಿದೆ ಅದನ್ನು ಯಾರೂ ತಿಳಿದುಕೊಳ್ಳಲಾಗುವುದಿಲ್ಲ. ತಂದೆಯು ಭಾರತವಾಸಿಗಳಿಗೇ ತಿಳಿಸುತ್ತಾರೆ ಬಾಕಿ ಉಳಿದವರೆಲ್ಲರೂ ಅರ್ಧಕಲ್ಪ ನಂತರ ಬರುತ್ತಾರೆ. ಅರ್ಧಕಲ್ಪದಲ್ಲಿ ನೀವು ಸೂರ್ಯವಂಶಿ-ಚಂದ್ರವಂಶಿಯಾಗುತ್ತೀರಿ. ಅಲ್ಲಿ ಪವಿತ್ರವಾಗಿರುವ ಕಾರಣ ನಿಮಗೆ ದೀರ್ಘಾಯಸ್ಸಿರುತ್ತದೆ ಹಾಗೂ ಅದು ಹೊಸಪ್ರಪಂಚವಾಗಿರುತ್ತದೆ. ಹಾಗೆ ಅಲ್ಲಿ ಪ್ರತಿಯೊಂದು ವಸ್ತುವೂ ಹೊಸದಾಗಿರುತ್ತದೆ. ಧವಸ,ಧಾನ್ಯ,ನೀರು,ಧರಣಿ ಮೊದಲಾದ ಎಲ್ಲವೂ ಹೊಸದಾಗಿರುತ್ತದೆ.ಈ ರೀತಿ ಆಗುತ್ತದೆ ಎಂದು ಮುಂದೆಹೋದಂತೆ ನೀವು ಮಕ್ಕಳಿಗೆ ಎಲ್ಲಾ ಸಾಕ್ಷಾತ್ಕಾರಗಳನ್ನು ಮಾಡಿಸುತ್ತಿರುತ್ತೇನೆ. ಯಜ್ಞದ ಆದಿಯಲ್ಲಿ ಆದಂತೆ ಅಂತ್ಯದಲ್ಲಿಯೂ ಆಗಬೇಕು. ಸಮೀಪ ಬರುತ್ತಾ ಖುಷಿಯಾಗುತ್ತಿರುತ್ತದೆ. ಮನುಷ್ಯರು ಹೊರದೇಶದಿಂದ ತಮ್ಮ ದೇಶದಲ್ಲಿ ಬಂದಾಗ ಖುಷಿಯಾಗುತ್ತದೆಯಲ್ಲವೆ. ಯಾರಾದರೂ ಹೊರದೇಶದಲ್ಲಿ ಶರೀರಬಿಟ್ಟರೆ ವಿಮಾನದಲ್ಲಿ ಸ್ವದೇಶಕ್ಕೆ ತೆಗೆದುಕೊಂಡು ಬರುತ್ತಾರೆ. ಎಲ್ಲದಕ್ಕಿಂತಲೂ ಅತ್ಯಂತ ಪವಿತ್ರ ಭೂಮಿ ಭಾರತವಾಗಿದೆ. ಭಾರತದ ಮಹಿಮೆಯನ್ನು ನೀವು ಮಕ್ಕಳ ವಿನಃ ಬೇರೆ ಯಾರೂ ತಿಳಿದುಕೊಂಡಿಲ್ಲ. ವಂಡರ್ ಆಫ್ ದಿ ವರ್ಲ್ಡ್ ಆಗಿದೆ. ಸ್ವರ್ಗವೆಂದು ಹೆಸರಿದೆ. ಇಲ್ಲಿ ತೋರಿಸುವ ಅದ್ಭುತಗಳು ನರಕದ್ದಾಗಿವೆ, ನರಕದ ಅದ್ಭುತಗಳಿಗೂ ಸ್ವರ್ಗದ ಅದ್ಭುತಗಳಿಗೂ ಹಗಲು-ರಾತ್ರಿಯ ಅಂತರವಿದೆ. ನರಕದ ಅದ್ಭುತಗಳನ್ನು ನೋಡಲು ಬಹಳ ಜನ ಹೋಗುತ್ತಾರೆ. ಎಷ್ಟೊಂದು ಮಂದಿರಗಳು ಇಲ್ಲಿವೆ ಆದರೆ ಅಲ್ಲಿರುವುದಿಲ್ಲ. ಸ್ವಾಭಾವಿಕ ಸೌಂದರ್ಯವಿರುತ್ತದೆ, ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಇಲ್ಲಿಯ ಹಾಗೆ ಸುಗಂಧಭರಿತ ವಸ್ತುಗಳ ಅವಶ್ಯಕತೆಯಿರುವುದಿಲ್ಲ. ಪ್ರತಿಯೊಬ್ಬರಿಗೂ ತಮ್ಮತಮ್ಮದೆ ಆದ ತೋಟವಿರುತ್ತದೆ, ಸುಂದರವಾದ ಹೂಗಳಿರುತ್ತವೆ, ಅಲ್ಲಿಯ ಹವಾಮಾನವೂ ಫಸ್ಟ್ ಕ್ಲಾಸ್ ಆಗಿರುತ್ತದೆ. ಬೇಸಿಗೆ ಮೊದಲಾದವುಗಳೆಲ್ಲವೂ ಕಷ್ಟಕೊಡುವುದಿಲ್ಲ, ಸದಾ ವಸಂತಋತುವಿರುತ್ತದೆ. ಅಗರಬತ್ತಿಯ ಅವಶ್ಯಕತೆಯಿರುವುದಿಲ್ಲ. ಸ್ವರ್ಗದ ಹೆಸರನ್ನು ಕೇಳಿದ ತಕ್ಷಣವೇ ಬಾಯಲ್ಲಿ ನೀರೂರುತ್ತದೆ. ನೀವೂ ಸಹ ಹೇಳುತ್ತೀರಿ- ಇಂತಹ ಸ್ವರ್ಗದಲ್ಲಿ ತಲುಪಬೇಕು ಏಕೆಂದರೆ ನೀವು ಸ್ವರ್ಗವನ್ನು ತಿಳಿದುಕೊಂಡಿದ್ದೀರಿ ಆದರೆ ಮತ್ತೆ ಮನಸ್ಸು ಹೇಳುತ್ತದೆ- ಈಗ ನಾವು ಬೇಹದ್ದಿನ ತಂದೆಯ ಜೊತೆಯಲ್ಲಿದ್ದೇವೆ, ತಂದೆಯು ಓದಿಸುತ್ತಿದ್ದಾರೆ, ಇಂತಹ ಸುವರ್ಣಾವಕಾಶವು ಪುನಃ ಸಿಗುತ್ತದೆಯೇನು? ಇಲ್ಲಿಯಾದರೂ ಮನುಷ್ಯರು ಮನುಷ್ಯರಿಗೆ ಓದಿಸುತ್ತಾರೆ, ಅಲ್ಲಿ ದೇವತೆಗಳು ದೇವತೆಗಳಿಗೆ ಓದಿಸುತ್ತಾರೆ ಆದರೆ ಇಲ್ಲಿ ತಂದೆಯು ಮಕ್ಕಳಿಗೆ ಓದಿಸುತ್ತಾರೆ ಅಂದಾಗ ಹಗಲು-ರಾತ್ರಿಯ ಅಂತರವಿದೆ, ಎಷ್ಟೊಂದು ಖುಷಿಯಾಗಬೇಕು. |
84 ಜನ್ಮಗಳನ್ನು ನೀವು ತೆಗೆದುಕೊಂಡಿದ್ದೀರಿ. ನಾವು ಅನೇಕಬಾರಿ ರಾಜ್ಯವನ್ನು ತೆಗೆದುಕೊಂಡು ಮತ್ತೆ ರಾವಣರಾಜ್ಯದಲ್ಲಿ ಬಂದಿದ್ದೇವೆಂದು ನೀವೇ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಈಗ ತಂದೆಯು ತಿಳಿಸುತ್ತಾರೆ- ನೀವು ಒಂದು ಜನ್ಮದಲ್ಲಿ ಪವಿತ್ರರಾದಾಗ 21 ಜನ್ಮಗ ನೀವು ಪಾವನರಾಗಿಬಿಡುತ್ತೀರಿ ಹಾಗಾದರೆ ಏಕೆ ಆಗುವುದಿಲ್ಲ! ಆದರೆ ಮಾಯೆಯು ಈ ರೀತಿಯಿದೆ, ಸಹೋದರ-ಸಹೋದರಿಯ ಸಂಬಂಧದ ಬೇಳೆಯೂ ಸಹ ಬೇಯುವುದಿಲ್ಲ. ಹಾಗೆಯೇ ಹಸಿಯಾಗಿಯೇ ಉಳಿದುಬಿಡುತ್ತದೆ. ಯಾವಾಗ ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರರೆಂದು ತಿಳಿದುಕೊಂಡಾಗ ಬೇಳೆ ಬೇಯುತ್ತದೆ. ದೇಹದ ಪರಿವೆಯಿರಬಾರದು- ಇದೇ ಪರಿಶ್ರಮವಾಗಿದೆ, ತುಂಬಾ ಸಹಜವೂ ಆಗಿದೆ. ಯಾರಿಗಾದರೂ ತುಂಬಾ ಕಷ್ಟವೆಂದರೆ ಅವರ ಮನಸ್ಸು ತುಂಬಾ ದೂರವಾಗಿಬಿಡುತ್ತದೆ ಆದ್ದರಿಂದ ಇದನ್ನು ಸಹಜ ಯೋಗ ಎಂದು ಹೆಸರಿಡಲಾಗಿದೆ. ಜ್ಞಾನವು ಸಹಜವಾಗಿದೆ, 84 ಜನ್ಮಗಳ ಚಕ್ರವನ್ನು ತಿಳಿದುಕೊಳ್ಳುವುದು, ಮೊಟ್ಟಮೊದಲು ತಂದೆಯ ಪರಿಚಯವನ್ನು ಕೊಡುವುದು. ತಂದೆಯ ನೆನಪಿನಿಂದ ಮಾತ್ರ ಆತ್ಮದಲ್ಲಿರುವ ತುಕ್ಕು ಬಿಟ್ಟುಹೋಗುತ್ತದೆ ಹಾಗೂ ಪವಿತ್ರ ಪ್ರಪಂಚದ ಆಸ್ತಿಯನ್ನು ಪಡೆಯುತ್ತೀರಿ ಆದ್ದರಿಂದ ಮೊದಲು ತಂದೆಯನ್ನು ನೆನಪು ಮಾಡಿ. ಭಾರತದ ಪ್ರಾಚೀನ ಯೋಗವೆಂದು ಹೇಳುತ್ತೀರಿ ಅದರಿಂದ ಭಾರತಕ್ಕೆ ವಿಶ್ವದ ರಾಜ್ಯಭಾಗ್ಯ ಸಿಗುತ್ತದೆ. ಪ್ರಾಚೀನವೆಂದರೆ ಎಷ್ಟು ವರ್ಷಗಳಾಯಿತು? ಆಗ ಲಕ್ಷಾಂತರ ವರ್ಷವೆಂದು ಹೇಳುತ್ತಾರೆ. 5000 ವರ್ಷಗಳೆಂದು ನಿಮಗೆ ಗೊತ್ತಿದೆ, ಅದೇ ರಾಜಯೋಗವನ್ನು ತಂದೆಯು ಕಲಿಸುತ್ತಾರೆ, ಇದರಲ್ಲಿ ಗೊಂದಲವಾಗುವ ಅಗತ್ಯವಿಲ್ಲ. ನೀವಾತ್ಮರ ನಿವಾಸಸ್ಥಾನ ಎಲ್ಲಿದೆಯೆಂದು ಕೇಳಲಾಗುತ್ತದೆ? ನಮ್ಮ ನಿವಾಸಸ್ಥಾನ ಭೃಕುಟಿಯೆಂದು ಹೇಳುತ್ತೀರಿ. ಆದ್ದರಿಂದ ಆತ್ಮವನ್ನೇ ನೋಡಬೇಕಾಗುವುದು. ಈ ಜ್ಞಾನವು ಈಗ ನಿಮಗೆ ಸಿಗುತ್ತದೆ ನಂತರ ಅಲ್ಲಿ ಈ ಜ್ಞಾನದ ಅವಶ್ಯಕತೆಯಿರುವುದಿಲ್ಲ. ಮುಕ್ತಿ-ಜೀವನ್ಮುಕ್ತಿಯನ್ನು ಪಡೆದನಂತರ ಸಮಾಪ್ತಿಯಾಗುತ್ತದೆ. ಮುಕ್ತಿಯವರು ತಮ್ಮ ಸಮಯದಲ್ಲಿ ಜೀವನ್ ಮುಕ್ತಿಯಲ್ಲಿ ಬಂದು ಸುಖವನ್ನು ಪಡೆಯುತ್ತಾರೆ. ಎಲ್ಲರೂ ಮುಕ್ತಿಯಿಂದ ಜೀವನ್ಮುಕ್ತಿಯಲ್ಲಿ ಬರುತ್ತಾರೆ. ಇಲ್ಲಿಂದ ಶಾಂತಿಧಾಮಕ್ಕೆ ಹೋಗುತ್ತಾರೆ ಇನ್ನು ಯಾವುದೇ ಪ್ರಪಂಚವಿಲ್ಲ. ನಾಟಕದನುಸಾರವಾಗಿ ಎಲ್ಲರೂ ಹಿಂತಿರುಗಿ ಹೋಗಬೇಕಾಗಿದೆ, ವಿನಾಶದ ತಯಾರಿಯೂ ನಡೆಯುತ್ತಿದೆ, ಇಷ್ಟೊಂದು ಖರ್ಚುಮಾಡಿ ಅಣುಬಾಂಬನ್ನು ತಯಾರು ಮಾಡುತ್ತಿರುವಾಗ ಅವನ್ನು ಹಾಗೆಯೇ ಇಟ್ಟುಕೊಳ್ಳುತ್ತಾರೇನು! ಅವುಗಳಿರುವುದೇ ವಿನಾಶಕ್ಕಾಗಿ. ಸತ್ಯ-ತ್ರೇತಾಯುಗದಲ್ಲಿ ಈ ವಸ್ತುಗಳಿರುವುದಿಲ್ಲ, ಈಗ 84 ಜನ್ಮಗಳು ಪೂರ್ಣವಾಯಿತು, ಈಗ ಈ ಶರೀರವನ್ನು ಬಿಟ್ಟು ಮನೆಗೆ ಹೋಗಬೇಕು. ದೀಪಾವಳಿಯಲ್ಲಿ ಎಲ್ಲರೂ ಒಳ್ಳೊಳ್ಳೆಯ ವಸ್ತ್ರಗಳನ್ನು ಧರಿಸುತ್ತಾರಲ್ಲವೆ. ನೀವು ಆತ್ಮರೂ ಸಹ ಹೊಸದಾಗಿ ಆಗುತ್ತೀರಿ- ಇದು ಬೇಹದ್ದಿನ ಮಾತಾಗಿದೆ. ಆತ್ಮ ಪವಿತ್ರವಾಗುವುದರಿಂದ ಶರೀರವೂ ಫಸ್ಟ್ಕ್ಲಾಸ್ ಆಗಿರುವುದೇ ಸಿಗುತ್ತದೆ. ಈ ಸಮಯ ನಕಲಿ ಶೋ ಮಾಡುತ್ತಾರೆ. ಪೌಡರ್ ಮೊದಲಾದವುಗಳನ್ನು ಹಾಕಿಕೊಂಡು ಬಹಳ ಸುಂದರರಾಗಿಬಿಡುತ್ತಾರೆ. ಅಲ್ಲಿ ಸ್ವಾಭಾವಿಕ ಸೌಂದರ್ಯವಿರುತ್ತದೆ. ಆತ್ಮವು ಸದಾಕಾಲಕ್ಕೆ ಸುಂದರವಾಗಿಬಿಡುತ್ತದೆ. ಇದನ್ನು ನೀವು ತಿಳಿದುಕೊಂಡಿದ್ದೀರಿ- ಶಾಲೆಯಲ್ಲಿ ಎಲ್ಲರೂ ಒಂದೇರೀತಿಯಾಗಿ ಇರುವುದಿಲ್ಲ. ನಾವು ಇಂತಹ ಲಕ್ಷ್ಮೀ-ನಾರಾಯಣರಾಗಬೇಕೆಂದು ಪುರುಷಾರ್ಥ ಮಾಡುತ್ತೀರಿ. |
ಇದು ನಿಮ್ಮ ಈಶ್ವರೀಯ ಕುಲವಾಗಿದೆ. ನಂತರ ಇದು ಸೂರ್ಯವಂಶಿ-ಚಂದ್ರವಂಶಿ ಮನೆತನವಾಗುತ್ತದೆ. ನಿಮ್ಮ ಬ್ರಾಹ್ಮಣರ ರಾಜ್ಯವಿಲ್ಲ, ಈಗ ನೀವು ಸಂಗಮದಲ್ಲಿದ್ದೀರಿ. ಈ ಕಲಿಯುಗದಲ್ಲಿ ರಾಜ್ಯವಿಲ್ಲ. ಒಂದುವೇಳೆ ಯಾವುದಾದರೂ ರಾಜ್ಯಭಾರವು ಉಳಿಯಬಹುದು ಆದರೆ ಎಂದಿಗೂ ಇಲ್ಲದಂತಾಗುವುದಿಲ್ಲ. ಈಗ ನೀವು ಈ ರೀತಿಯಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಅವರು ತಂದೆಯಾಗಿದ್ದು ನಾವು ಆತ್ಮರು ಸಹೋದರ-ಸಹೋದರತೆಯಿಂದ ನೋಡುತ್ತೀರಿ. ಪರಸ್ಪರ ಸಹೋದರ-ಸಹೋದರರನ್ನು ನೋಡಿ ಎಂದು ತಿಳಿಸುತ್ತಾರೆ. ಜ್ಞಾನದ ಮೂರನೆಯ ನೇತ್ರ ದೊರೆತಿದೆಯಲ್ಲವೆ. ನೀವಾತ್ಮ ಎಲ್ಲಿ ನಿವಾಸ ಮಾಡುತ್ತೀರಿ? ಆತ್ಮ ಸಹೋದರ ಕೇಳುತ್ತದೆ- ಆತ್ಮವು ಎಲ್ಲಿರುತ್ತದೆ? ಇಲ್ಲಿ ಭೃಕುಟಿಯಲ್ಲಿ ಎಂದು ಹೇಳಲಾಗುತ್ತದೆ. ಇದಂತೂ ಸಾಮಾನ್ಯ ಶಬ್ಧವಾಗಿದೆ. ಒಬ್ಬ ತಂದೆಯ ವಿನಃ ಯಾವ ನೆನಪೂ ಬರಬಾರದು. ಅಂತ್ಯದಲ್ಲಿ ಶರೀರವೂ ಸಹ ತಂದೆಯ ನೆನಪಿನಲ್ಲಿ ಬಿಡಬೇಕು ಈ ಅಭ್ಯಾಸವನ್ನು ಪಕ್ಕಾ ಮಾಡಿಕೊಳ್ಳಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸತ್ಯಯುಗದಲ್ಲಿ ಫಸ್ಟ್ ಕ್ಲಾಸ್ ಸುಂದರ ಶರೀರವನ್ನು ಪ್ರಾಪ್ತಿ ಮಾಡಿಕೊಳ್ಳಲು ಈಗ ಆತ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ, ತುಕ್ಕನ್ನು ತೆಗೆದುಹಾಕಬೇಕು. ನಕಲಿ ಶೋ ಮಾಡಬಾರದು. |
2. ಸದಾ ಪವಿತ್ರವಾಗಿರಲು ಅಭ್ಯಾಸ ಮಾಡಬೇಕಾಗಿದೆ ಏಕೆಂದರೆ ಒಬ್ಬ ತಂದೆಯ ವಿನಃ ಮತ್ತೇನೂ ನೆನಪಿಗೆ ಬರಬಾರದು. ಈ ದೇಹವನ್ನೂ ಮರೆತುಬಿಡಬೇಕಾಗಿದೆ. ಸಹೋದರ-ಸಹೋದರ ದೃಷ್ಟಿಯನ್ನು ಸ್ವಾಭಾವಿಕವಾಗಿ ಪಕ್ಕಾ ಆಗಿಬಿಡಬೇಕು. |
ಹೋಲಿಯನ್ನು ಹೇಗೆ ಆಚರಿಸುವುದು ಹಾಗೂ ಸದಾಕಾಲದ ಪರಿವರ್ತನೆ ಹೇಗಾಗುವುದು? |
ಇಂದು ಸರ್ವರ ಭಾಗ್ಯವಿಧಾತ ತಂದೆಯು ತನ್ನ ಹೋಲಿ ಹಂಸಗಳೊಂದಿಗೆ ಜ್ಞಾನ ರತ್ನಗಳ ಹೋಲಿಯನ್ನು ಆಚರಿಸಲು ಬಂದಿದ್ದಾರೆ. ಆಚರಿಸುವುದು ಎಂದರೆ ಮಿಲನ ಮಾಡುವುದು. ಬಾಪ್ದಾದಾ ಪ್ರತಿಯೊಬ್ಬ ಅತಿಸ್ನೇಹೀ, ಸಹಜಯೋಗಿ, ಸದಾ ತಂದೆಯ ಕಾರ್ಯದಲ್ಲಿ ಸಹಯೋಗಿ, ಸದಾ ಪಾವನ ವೃತ್ತಿಯಿಂದ, ಪಾವನ ದೃಷ್ಟಿಯಿಂದ ಸೃಷ್ಟಿಯನ್ನು ಪರಿವರ್ತನೆ ಮಾಡುವಂತಹ ಸರ್ವ ಹೋಲಿ ಮಕ್ಕಳನ್ನು ನೋಡಿ ಸದಾ ಹರ್ಷಿತರಾಗುತ್ತೇವೆ. ಪಾವನರಂತೂ ಈಗಿನ ಮಹಾತ್ಮರು ಎನಿಸಿಕೊಂಡಿರುವವರೂ ಆಗುತ್ತಾರೆ ಆದರೆ ತಾವು ಶ್ರೇಷ್ಠಾತ್ಮರು ಬಹಳ ಶ್ರೇಷ್ಠ ಹೋಲಿಯಾಗುತ್ತೀರಿ ಅರ್ಥಾತ್ ಸಂಕಲ್ಪ ಮಾತ್ರ, ಸ್ವಪ್ನ ಮಾತ್ರದಲ್ಲಿಯೂ ಅಪವಿತ್ರತೆಯು ವೃತ್ತಿ, ದೃಷ್ಟಿಯಲ್ಲಿ ಪಾವನ ಸ್ಥಿತಿಯಿಂದ ಕೆಳಗೆ ತರಲು ಸಾಧ್ಯವಿಲ್ಲ. ಪ್ರತೀ ಸಂಕಲ್ಪ ಅರ್ಥಾತ್ ಸ್ಮೃತಿಯು ಪಾವನವಾಗಿರುವ ಕಾರಣ ವೃತ್ತಿ, ದೃಷ್ಟಿಯು ಸ್ವತಹವಾಗಿಯೇ ಪಾವನವಾಗಿ ಬಿಡುತ್ತದೆ. ಕೇವಲ ತಾವಷ್ಟೇ ಪಾವನರಾಗುವುದಿಲ್ಲ ಆದರೆ ಪ್ರಕೃತಿಯನ್ನೂ ಸಹ ಪಾವನವನ್ನಾಗಿ ಮಾಡಿ ಬಿಡುತ್ತೀರಿ ಆದರೆ ಪಾವನ ಪ್ರಕೃತಿಯ ಕಾರಣ ಭವಿಷ್ಯ ಅನೇಕ ಜನ್ಮಗಳು ಶರೀರವೂ ಸಹ ಪಾವನವಾದದ್ದೇ ಸಿಗುತ್ತದೆ. ಇಂತಹ ಹೋಲಿ ಹಂಸಗಳು ಅಥವಾ ಸದಾ ಪಾವನ ಸಂಕಲ್ಪಧಾರಿ ಶ್ರೇಷ್ಠಾತ್ಮರಾಗಿ ಬಿಡುತ್ತೀರಿ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಪ್ರತೀ ಮಾತಿನಲ್ಲಿ ಶ್ರೇಷ್ಠ ಜೀವನದವರನ್ನಾಗಿ ಮಾಡುತ್ತಾರೆ. ಪವಿತ್ರತೆಯೂ ಸಹ ಶ್ರೇಷ್ಠಾತಿ ಶ್ರೇಷ್ಠ ಪವಿತ್ರತೆಯಾಗಿದೆ, ಸಾಧಾರಣವಲ್ಲ. ಸಾಧಾರಣ ಪವಿತ್ರ ಆತ್ಮಗಳು ತಾವು ಮಹಾನ್ ಪವಿತ್ರ ಆತ್ಮರ ಮುಂದೆ ಮನಸ್ಸಿನಿಂದ ಒಪ್ಪಿಕೊಂಡು ನಮಸ್ಕಾರ ಮಾಡುತ್ತಾರೆ - ತಮ್ಮ ಪವಿತ್ರತೆಯು ಅತೀ ಶ್ರೇಷ್ಠವಾಗಿದೆ ಎಂದು. ಈಗಿನ ಗೃಹಸ್ಥಿಗಳು ತಮ್ಮನ್ನು ಅಪವಿತ್ರರೆಂದು ತಿಳಿಯುವ ಕಾರಣ ಯಾವ ಪವಿತ್ರ ಆತ್ಮಗಳನ್ನು ಮಹಾನರೆಂದು ತಿಳಿದು ತಲೆ ಬಾಗಿಸುತ್ತಾರೆಯೋ ಆ ಮಹಾನ್ ಆತ್ಮರೆಂದು ಕರೆಸಿಕೊಳ್ಳುವ ತಾವು ಶ್ರೇಷ್ಠ ಆತ್ಮರ ಮುಂದೆ ಇದನ್ನು ಖಂಡಿತ ಒಪ್ಪಿಕೊಳ್ಳುತ್ತಾರೆ - ತಮ್ಮ ಪವಿತ್ರತೆ ಮತ್ತು ನಮ್ಮ ಪವಿತ್ರತೆಯಲ್ಲಿ ಮಹಾನ್ ಅಂತರವಿದೆ. |
ಈ ಹೋಲಿಯ ಉತ್ಸವವು ತಾವು ಪಾವನ ಆತ್ಮರ ಪಾವನರಾಗುವ ವಿಧಿಯ ಸ್ಮರಣಾರ್ಥವಾಗಿದೆ ಏಕೆಂದರೆ ತಾವೆಲ್ಲಾ ನಂಬರ್ವಾರ್ ಪಾವನ ಆತ್ಮರು ತಂದೆಯ ನೆನಪಿನ ಲಗನ್ನಿನ ಅಗ್ನಿಯ ಮೂಲಕ ಸದಾಕಾಲಕ್ಕಾಗಿ ಅಪವಿತ್ರತೆಯನ್ನು ಭಸ್ಮ ಮಾಡಿ ಬಿಡುತ್ತೀರಿ. ಆದ್ದರಿಂದ ಮೊದಲು ಸುಡುವ ಹೋಲಿಯನ್ನು ಆಚರಿಸುತ್ತಾರೆ ನಂತರ ಬಣ್ಣದ ಹೋಲಿ ಹಾಗೂ ಮಂಗಳ ಮಿಲನವನ್ನು ಆಚರಿಸುತ್ತಾರೆ. ಸುಡುವುದು ಎಂದರೆ ಹೆಸರೂ, ಗುರುತನ್ನೂ ಸಮಾಪ್ತಿ ಮಾಡುವುದು. ಹೇಗೆ ಯಾರನ್ನಾದರೂ ಹೆಸರು, ಗುರುತಿನ ಸಹಿತವಾಗಿ ಸಮಾಪ್ತಿ ಮಾಡಬೇಕಾದರೆ ಏನು ಮಾಡುತ್ತೀರಿ? ಸುಟ್ಟು ಬಿಡುತ್ತೀರಿ. ಆದ್ದರಿಂದ ರಾವಣನನ್ನೂ ಸಹ ಸಾಯಿಸಿದ ನಂತರ ಸುಟ್ಟು ಬಿಡುತ್ತಾರೆ. ಇದು ತಾವಾತ್ಮರ ನೆನಪಾರ್ಥವಾಗಿದೆ. ಅಪವಿತ್ರತೆಯನ್ನು ಸುಟ್ಟಿರಿ ಅರ್ಥಾತ್ ಪಾವನ “ಹೋಲಿ”ಯಾಗಿ ಬಿಟ್ಟಿರಿ. ಬಾಪ್ದಾದಾ ಸದಾ ತಿಳಿಸುತ್ತಾರೆ - ಬ್ರಾಹ್ಮಣರು ಹೋಲಿಯನ್ನು ಆಚರಿಸುವುದು ಎಂದರೆ ಹೋಲಿ (ಪವಿತ್ರ) ಯನ್ನಾಗಿ ಮಾಡುವುದು. ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ - ಅಪವಿತ್ರತೆಯನ್ನು ಕೇವಲ ಸಾಯಿಸಿದ್ದೀರಾ ಅಥವಾ ಸುಟ್ಟಿದ್ದೀರಾ? ಸತ್ತಿರುವವರು ಒಂದುವೇಳೆ ಬದುಕಿ ಬಿಡಬಹುದು. ಎಲ್ಲಿಯಾದರೂ ಶ್ವಾಸವು ಮುಚ್ಚಿಟ್ಟುಕೊಂಡಿರುತ್ತದೆ ಆದರೆ ಸುಡುವುದು ಎಂದರೆ ಹೆಸರು, ಗುರುತನ್ನೂ ಸಮಾಪ್ತಿ ಮಾಡುವುದು ಅಂದಾಗ ಎಲ್ಲಿಯವರೆಗೆ ತಲುಪಿದ್ದೇವೆ ಎಂಬುದನ್ನು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಸ್ವಪ್ನದಲ್ಲಿಯೂ ಸಹ ಅಪವಿತ್ರತೆಯ ಬಚ್ಚಿಟ್ಟುಕೊಂಡಿರುವ ಶ್ವಾಸವು ಪುನಃ ಜೀವಂತವಾಗಬಾರದು. ಅಂತಹವರಿಗೆ ಶ್ರೇಷ್ಠ ಪಾವನ ಆತ್ಮರೆಂದು ಹೇಳಲಾಗುತ್ತದೆ. ಸಂಕಲ್ಪದಿಂದ ಸ್ವಪ್ನಗಳೂ ಸಹ ಪರಿವರ್ತನೆ ಆಗಿ ಬಿಡುತ್ತದೆ. |
ಇಂದು ವತನದಲ್ಲಿ ಬಾಪ್ದಾದಾ ಮಕ್ಕಳ ಸಮಯ-ಪ್ರತಿ-ಸಮಯ ಸಂಕಲ್ಪದ ಮೂಲಕ ಅಥವಾ ಬರವಣಿಗೆಯ ಮೂಲಕ ತಂದೆಯ ಮೂಲಕ ಮಾಡಿರುವ ಪ್ರತಿಜ್ಞೆಗಳನ್ನು ನೋಡುತ್ತಿದ್ದೆವು. ಭಲೆ ಸ್ಥಿತಿಯಲ್ಲಿ ಮಹಾರಥಿಯಿರಬಹುದು, ಸೇವೆಯಲ್ಲಿ ಮಹಾರಥಿಯಿರಬಹುದು. ಇಬ್ಬರ ಸಮಯ-ಪ್ರತಿ-ಸಮಯದ ಪ್ರತಿಜ್ಞೆಗಳು ಬಹಳ ಒಳ್ಳೆಯದಾಗಿ ಮಾಡಿದ್ದೀರಿ. ಮಹಾರಥಿಗಳಲ್ಲಿಯೂ ಎರಡು ಪ್ರಕಾರದವರಿದ್ದಾರೆ. ಒಬ್ಬರು ತನ್ನನ್ನು ವರದಾನ ಹಾಗೂ ಆಸ್ತಿಯ ಪ್ರಾಪ್ತಿಯ ಪುರುಷಾರ್ಥದ ಆಧಾರದಿಂದ ಮಹಾರಥಿಗಳು ಮತ್ತು ಎರಡನೆಯವರು ಯಾವುದಾದರೊಂದು ಸೇವೆಯ ವಿಶೇಷ ಆಧಾರದಿಂದ ಮಹಾರಥಿಗಳು. ಇಬ್ಬರೂ ಮಹಾರಥಿಗಳೆಂದೇ ಕರೆಸಿಕೊಳ್ಳುತ್ತಾರೆ ಆದರೆ ಮೊದಲನೆಯವರನ್ನು ತಿಳಿಸಿದೆವಲ್ಲವೆ - ಸ್ಥಿತಿಯ ಆಧಾರದ ಮೇಲೆ ಇರುವವರು, ಸದಾ ಮನಸ್ಸಿನಿಂದ ಅತೀಂದ್ರಿಯ ಸುಖದ ಸಂತುಷ್ಟತೆಯ ಸರ್ವರ ಹೃದಯದ ಸ್ನೇಹದ ಪ್ರಾಪ್ತಿ ಸ್ವರೂಪದ ಉಯ್ಯಾಲೆಯಲ್ಲಿ ತೂಗುತ್ತಿರುತ್ತಾರೆ ಮತ್ತು ಎರಡನೇ ನಂಬರಿನವರು ಸೇವೆಯ ವಿಶೇಷತೆಯ ಆಧಾರದಿಂದ ಆಗಿರುವವರು, ತನುವಿನಿಂದ ಅರ್ಥಾತ್ ಹೊರಗಿನಿಂದ ಸೇವೆಯ ವಿಶೇಷತೆಯ ಫಲ ಸ್ವರೂಪವಾಗಿ ಸಂತುಷ್ಟವಾಗಿ ಕಂಡು ಬರುತ್ತಾರೆ. ಸೇವೆಯ ವಿಶೇಷತೆಯ ಕಾರಣ ಸೇವೆಯ ಆಧಾರದ ಮೇಲೆ ಮನಸ್ಸಿನ ಸಂತುಷ್ಟತೆಯಿರುತ್ತದೆ. ಸೇವೆಯ ವಿಶೇಷತೆಯ ಕಾರಣ ಸರ್ವರ ಸ್ನೇಹವೂ ಇರುತ್ತದೆ ಆದರೆ ಮನಸ್ಸಿನಿಂದ ಹಾಗೂ ಹೃದಯದಿಂದ ಸದಾ ಇರುವುದಿಲ್ಲ. ಕೆಲವೊಮ್ಮೆ ಹೃದಯದಿಂದ, ಕೆಲವೊಮ್ಮೆ ಹೊರಗಿನಿಂದ ಆದರೆ ಸೇವೆಯ ವಿಶೇಷತೆಯು ಮಹಾರಥಿಗಳನ್ನಾಗಿ ಮಾಡಿ ಬಿಡುತ್ತದೆ. ಎಣಿಕೆಯಲ್ಲಿ ಮಹಾರಥಿಯ ಸಾಲಿನಲ್ಲಿ ಬರುತ್ತಾರೆ. |
ಇಂದು ಬಾಪ್ದಾದಾ ಮಹಾರಥಿ ಮತ್ತು ಪುರುಷಾರ್ಥಿ ಇಬ್ಬರ ಪ್ರತಿಜ್ಞೆಗಳನ್ನು ನೋಡುತ್ತಿದ್ದೆವು. ಈಗೀಗ ಸಮೀಪದಲ್ಲಿ ಬಹಳ ಪ್ರತಿಜ್ಞೆ ಮಾಡುತ್ತಾರೆ, ಅಂದಾಗ ಏನು ನೋಡಿರಬಹುದು? ಪ್ರತಿಜ್ಞೆಯಿಂದ ಲಾಭವಂತೂ ಆಗುತ್ತದೆ ಏಕೆಂದರೆ ಧೃಡತೆಯ ಪೂರ್ಣ ಗಮನವಿರುತ್ತದೆ. ಪದೇ-ಪದೇ ಪ್ರತಿಜ್ಞೆಯ ಸ್ಮೃತಿಯು ಸಾಮರ್ಥ್ಯವನ್ನು ತರಿಸುತ್ತದೆ. ಇದರ ಕಾರಣ ಅಲ್ಪಸ್ವಲ್ಪ ಪರಿವರ್ತನೆಯೂ ಆಗುತ್ತಾರೆ ಆದರೆ ಬೀಜವು ಮುಚ್ಚಿಡಲ್ಪಟ್ಟಿರುತ್ತದೆ. ಆದ್ದರಿಂದ ಯಾವಾಗ ಅಂತಹ ಸಮಯ ಅಥವಾ ಸಮಸ್ಯೆಯು ಬರುತ್ತದೆಯೋ ಆಗ ‘ಸಮಸ್ಯೆ’ ಅಥವಾ ‘ಕಾರಣ’ದ ನೀರು ಸಿಕ್ಕಿದರೆ ಸಾಕು, ಆ ಮರೆಯಾಗಿರುವ ಬೀಜವು ಪುನಃ ಎಲೆಗಳನ್ನು ಬಿಡಲು ಆರಂಭಿಸಿ ಬಿಡುತ್ತದೆ. ಸದಾಕಾಲಕ್ಕಾಗಿ ಸಮಾಪ್ತಿ ಆಗುವುದಿಲ್ಲ. ಸುಡುವಂತಹ ಹೋಲಿಯನ್ನು ಯಾರು ಆಚರಣೆ ಮಾಡಿದ್ದಾರೆ ಎಂಬುದನ್ನು ಬಾಪ್ದಾದಾ ನೋಡುತ್ತಿದ್ದೇವೆ. ಬೀಜವನ್ನು ಸುಟ್ಟ ಮೇಲೆ ಸುಟ್ಟ ಬೀಜವೆಂದು ಫಲ ಕೊಡುವುದಿಲ್ಲ. ಪ್ರತಿಜ್ಞೆಗಳನ್ನಂತೂ ಎಲ್ಲರೂ ಮಾಡಿದಿರಿ - ಕಳೆದುದನ್ನು ಕಳೆದು ಹಾಕಿ. ಎಲ್ಲಿಯವರೆಗೆ ಏನಾಯಿತೋ, ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ಎಲ್ಲವನ್ನೂ ಸಮಾಪ್ತಿ ಮಾಡಿ ಪರಿವರ್ತನೆ ಮಾಡಿಕೊಳ್ಳುತ್ತೇವೆ ಎಂದು ಎಲ್ಲರೂ ಈಗೀಗ ಪ್ರತಿಜ್ಞೆ ಮಾಡಿದಿರಲ್ಲವೆ. ವಾರ್ತಾಲಾಪದಲ್ಲಿಯೂ ಎಲ್ಲರೂ ಪ್ರತಿಜ್ಞೆ ಮಾಡುತ್ತಾರಲ್ಲವೆ. ಪ್ರತಿಯೊಬ್ಬರ ರೆಕಾರ್ಡ್ ಬಾಪ್ದಾದಾರವರ ಬಳಿ ಇದೆ. ಬಹಳ ಒಳ್ಳೆಯ ರೂಪದಿಂದ ಪ್ರತಿಜ್ಞೆ ಮಾಡುತ್ತಾರೆ. ಕೆಲವರು ಗೀತೆ, ಕವಿತೆಗಳ ಮೂಲಕ, ಇನ್ನೂ ಕೆಲವರು ಚಿತ್ರಗಳ ಮೂಲಕ. |
ಬಾಪ್ದಾದಾ ನೋಡುತ್ತಿದ್ದೇವೆ. ಎಷ್ಟನ್ನು ಬಯಸುತ್ತಾರೆಯೋ ಅಷ್ಟು ಪರಿವರ್ತನೆ ಏಕೆ ಆಗುವುದಿಲ್ಲ? ಕಾರಣವೇನು? ಸದಾಕಾಲಕ್ಕಾಗಿ ಏಕೆ ಸಮಾಪ್ತಿಯಾಗುವುದಿಲ್ಲ? ಏನು ನೋಡಿರಬಹುದು? ತನ್ನ ಪ್ರತಿ ಹಾಗೂ ಅನ್ಯರ ಪ್ರತಿ ಸಂಕಲ್ಪ ಮಾಡುತ್ತೀರಿ - ಈ ನಿರ್ಬಲತೆಯನ್ನು ಮತ್ತೆ ಬರಲು ಬಿಡುವುದಿಲ್ಲ ಹಾಗೂ ಅನ್ಯರ ಪ್ರತಿಯೂ ಆಲೋಚಿಸುತ್ತೀರಿ. ಯಾವುದೇ ಆತ್ಮನ ಪ್ರತಿ ಸಂಸ್ಕಾರದ ಕಾರಣ ಅಥವಾ ಲೆಕ್ಕಾಚಾರವು ಸಮಾಪ್ತಿಯಾಗುವ ಕಾರಣ ಏನೆಲ್ಲಾ ಸಂಕಲ್ಪದಲ್ಲಿ, ಮಾತಿನಲ್ಲಿ ಹಾಗೂ ಕರ್ಮದಲ್ಲಿ ಸಂಸ್ಕಾರದ ಘರ್ಷಣೆಯಾಗುತ್ತದೆ ಅದರ ಪರಿವರ್ತನೆ ಮಾಡಿಕೊಳ್ಳುತ್ತೇವೆ ಎಂದು. ಆದರೆ ಸಮಯದಲ್ಲಿ ಅದು ಪುನಃ ಏಕೆ ಪುನರಾವರ್ತನೆಯಾಗುತ್ತದೆ? ಅದಕ್ಕೆ ಕಾರಣವೇನು? ಇನ್ನು ಮುಂದೆ ಈ ಆತ್ಮನ ಈ ಸಂಸ್ಕಾರವನ್ನು ಅರಿತುಕೊಂಡು ಸ್ವಯಂನ್ನು ಸುರಕ್ಷಿತವಾಗಿಟ್ಟುಕೊಂಡು ಆ ಆತ್ಮನಿಗೂ ಶುಭ ಭಾವನೆ, ಶುಭ ಕಾಮನೆಯನ್ನು ಕೊಡುತ್ತೇವೆಂದು ಆಲೋಚಿಸುತ್ತೀರಿ. ಆದರೆ ಹೇಗೆ ಅನ್ಯರ ನಿರ್ಬಲತೆಯನ್ನು ನೋಡುವ, ಕೇಳುವ ಹಾಗೂ ಗ್ರಹಿಸುವ ಹವ್ಯಾಸವು ಸ್ವಾಭಾವಿಕವಾಗಿದೆ ಮತ್ತು ಬಹಳ ಕಾಲದಿಂದ ಇದೆ. ಈ ಹವ್ಯಾಸವನ್ನು ಇಟ್ಟುಕೊಳ್ಳುವುದಿಲ್ಲ, ಇದಂತೂ ಬಹಳ ಒಳ್ಳೆಯದು ಆದರೆ ಅದರ ಸ್ಥಾನದಲ್ಲಿ ಏನು ನೋಡುತ್ತೀರಿ? ಆ ಆತ್ಮನಿಂದ ಏನನ್ನು ಗ್ರಹಿಸುತ್ತೀರಿ ಎಂಬುದನ್ನು ಗಮನದಲ್ಲಿ ಪದೇ-ಪದೇ ಇಟ್ಟುಕೊಳ್ಳುವುದಿಲ್ಲ. ಇದನ್ನು ಮಾಡಬಾರದು ಎಂಬುದು ನೆನಪಿರುತ್ತದೆ ಆದರೆ ಅಂತಹ ಆತ್ಮಗಳ ಪ್ರತಿ ಏನು ಮಾಡಬೇಕು? ಆಲೋಚಿಸಬೇಕು, ನೋಡಬೇಕು ಎಂಬ ಮಾತುಗಳು ಸ್ವಾಭಾವಿಕವಾಗಿ ಗಮನದಲ್ಲಿ ಇರುವುದಿಲ್ಲ. ಹೇಗೆ ಯಾವುದೇ ಸ್ಥಾನವು ಖಾಲಿಯಾಗಿರುತ್ತದೆ, ಅದನ್ನು ಒಳ್ಳೆಯ ರೂಪದಲ್ಲಿ ಉಪಯೋಗಿಸಲಿಲ್ಲವೆಂದರೆ ಖಾಲಿ ಸ್ಥಾನದಲ್ಲಿ ಕೊಳಕು ಹಾಗೂ ಸೊಳ್ಳೆಗಳು ಹುಟ್ಟಿಕೊಳ್ಳುತ್ತವೆ. ಏಕೆಂದರೆ ವಾಯುಮಂಡಲದಲ್ಲಿ ಮಣ್ಣು, ಧೂಳು, ಸೊಳ್ಳೆಗಳು ಇದ್ದೇ ಇರುತ್ತವೆ. ಅವು ಮತ್ತೆ ಸ್ವಲ್ಪ-ಸ್ವಲ್ಪವಾಗಿಯೇ ವೃದ್ಧಿಯಾಗಿ ಬಿಡುತ್ತದೆ ಆದರೆ ಆ ಸ್ಥಾನವನ್ನು ತುಂಬಬೇಕು. ಯಾವಾಗಲೂ ಆತ್ಮಗಳ ಸಂಪರ್ಕದಲ್ಲಿ ಬರುತ್ತೀರೆಂದರೆ ಮೊದಲು ಸ್ವಾಭಾವಿಕ ಪರಿವರ್ತನೆ ಮಾಡಿಕೊಂಡಿರುವ ಶ್ರೇಷ್ಠ ಸಂಕಲ್ಪದ ಸ್ವರೂಪವು ಸ್ಮೃತಿಯಲ್ಲಿ ಬರಬೇಕು ಏಕೆಂದರೆ ಜ್ಞಾನ ಪೂರ್ಣರಂತೂ ಆಗಿಯೇ ಬಿಡುತ್ತೀರಿ. ಎಲ್ಲರ ಗುಣ, ಕರ್ತವ್ಯ, ಸಂಸ್ಕಾರ, ಸೇವೆ, ಸ್ವಭಾವ ಪರಿವರ್ತನೆ, ಶುಭ ಸಂಸ್ಕಾರ ಹಾಗೂ ಸ್ಥಾನವು ಸದಾ ಸಂಪನ್ನವಾಗಿದ್ದರೆ ಅಶುದ್ಧತೆಯನ್ನು ಸ್ವತಹವಾಗಿಯೇ ಸಮಾಪ್ತಿ ಮಾಡಿ ಬಿಡುವುದು. |
ಹೇಗೆ ತಿಳಿಸಿದ್ದೆವು - ಕೆಲವು ಮಕ್ಕಳು ನೆನಪಿನಲ್ಲಿ ಕುಳಿತುಕೊಂಡಾಗ ಅಥವಾ ಬ್ರಾಹ್ಮಣ ಜೀವನದಲ್ಲಿ ನಡೆಯುತ್ತಾ-ತಿರುಗಾಡುತ್ತಾ ನೆನಪಿನ ಅಭ್ಯಾಸ ಮಾಡುವಾಗ ನೆನಪಿನಲ್ಲಿ ಶಾಂತಿಯ ಅನುಭವ ಮಾಡುತ್ತಾರೆ ಆದರೆ ಖುಷಿಯ ಅನುಭವ ಮಾಡುವುದಿಲ್ಲ. ಕೇವಲ ಶಾಂತಿಯ ಅನುಭೂತಿಯು ಕೆಲವೊಮ್ಮೆ ತಲೆಯನ್ನು ಭಾರಿ ಮಾಡಿ ಬಿಡುತ್ತದೆ. ಇನ್ನೂ ಕೆಲವೊಮ್ಮೆ ನಿದ್ರೆಯ ಕಡೆ ತೆಗೆದುಕೊಂಡು ಹೋಗುತ್ತದೆ. ಶಾಂತಿಯ ಸ್ಥಿತಿಯ ಜೊತೆಗೆ ಖುಷಿಯಿರುವುದಿಲ್ಲ ಅಂದಮೇಲೆ ಎಲ್ಲಿ ಖುಷಿಯಿಲ್ಲವೋ ಅಲ್ಲಿ ಉಲ್ಲಾಸ-ಉತ್ಸಾಹವಿಲ್ಲ ಮತ್ತು ಯೋಗ ಮಾಡಿದರೂ ಸಹ ತನ್ನೊಂದಿಗೆ ಸಂತುಷ್ಟವಾಗಿರುವುದಿಲ್ಲ, ಸುಸ್ತಾಗಿರುತ್ತಾರೆ. ಸದಾ ಆಲೋಚಿಸುವ ಮೂಡಿನಲ್ಲಿರುತ್ತಾರೆ. ಆಲೋಚಿಸುತ್ತಲೇ ಇರುತ್ತಾರೆ. ಖುಷಿಯೇಕೆ ಇರುವುದಿಲ್ಲ ಎಂಬುದಕ್ಕೂ ಕಾರಣವಿದೆ. ಏಕೆಂದರೆ ಇದನ್ನು ಆಲೋಚಿಸುತ್ತೀರಿ - ನಾನಾತ್ಮನಾಗಿದ್ದೇನೆ, ಬಿಂದುವಾಗಿದ್ದೇನೆ, ಜ್ಯೋತಿ ಸ್ವರೂಪನಾಗಿದ್ದೇನೆ. ತಂದೆಯೂ ಹಾಗೆಯೇ ಇದ್ದಾರೆ ಆದರೆ ನಾನು ಎಂತಹ ಆತ್ಮನಾಗಿದ್ದೇನೆ! ನಾನಾತ್ಮನ ವಿಶೇಷತೆಯೇನಾಗಿದೆ? ಹೇಗೆ ನಾನು ಪದಮಾಪದಮ ಭಾಗ್ಯಶಾಲಿ ಆತ್ಮನಾಗಿದ್ದೇನೆ, ನಾನು ಆದಿ ರಚನೆಯ ಆತ್ಮನಾಗಿದ್ದೇನೆ. ನಾನು ತಂದೆಯ ಹೃದಯ ಸಿಂಹಾಸನಾಧಿಕಾರಿಯಾಗುವ ಆತ್ಮನಾಗಿದ್ದೇನೆ. ಈ ವಿಶೇಷತೆಗಳು ಯಾವುದು ಖುಷಿಯನ್ನು ತರುತ್ತವೆಯೋ ಅದನ್ನು ಆಲೋಚಿಸುವುದಿಲ್ಲ. ಕೇವಲ ಬಿಂದುವಾಗಿದ್ದೇನೆ, ಜ್ಯೋತಿಯಾಗಿದ್ದೇನೆ, ಶಾಂತ ಸ್ವರೂಪನಾಗಿದ್ದೇನೆ ಎಂದರೆ ಶೂನ್ಯದಲ್ಲಿ ಹೊರಟು ಹೋಗುತ್ತೀರಿ. ಆದ್ದರಿಂದ ತಲೆಯು ಭಾರವಾಗಿ ಬಿಡುತ್ತದೆ ಅದೇರೀತಿ ಯಾವಾಗ ಸ್ವಯಂನ ಪ್ರತಿ ಹಾಗೂ ಅನ್ಯ ಆತ್ಮರ ಪ್ರತಿ ಪರಿವರ್ತನೆಯ ಧೃಡ ಸಂಕಲ್ಪ ಮಾಡುತ್ತೀರೋ ಆಗ ಸ್ವಯಂನ ಪ್ರತಿ ಹಾಗೂ ಅನ್ಯ ಆತ್ಮರ ಪ್ರತಿ ಶುಭ ಹಾಗೂ ಶ್ರೇಷ್ಠ ಸಂಕಲ್ಪ ಹಾಗೂ ವಿಶೇಷತೆಯ ಸ್ವರೂಪವನ್ನು ಸದಾ ಇಮರ್ಜ್ ರೂಪದಲ್ಲಿ ಇಟ್ಟುಕೊಳ್ಳಿ ಆಗ ಪರಿವರ್ತನೆ ಆಗುವುದು. |
ಹೇಗೆ ಇವರು ಇರುವುದೇ ಹೀಗೆ, ಇದು ಆಗುವುದೇ ಹೀಗೆ, ಇವರು ಹೀಗೆಯೇ ಮಾಡುತ್ತಾರೆ ಎಂಬ ಸಂಕಲ್ಪ ಬರುತ್ತದೆ, ಇದಕ್ಕೆ ಬದಲು ಈ ರೀತಿ ಆಲೋಚಿಸಿ - ಇವರು ವಿಶೇಷತೆಯ ಪ್ರಮಾಣ ಈ ರೀತಿ ವಿಶೇಷವಾಗಿದ್ದಾರೆ. ಹೇಗೆ ನಿರ್ಬಲತೆಗೆ ‘ಹೀಗೆ’ ಮತ್ತು ‘ಹಾಗೆ’ ಎಂದು ಬರುತ್ತದೆಯೋ ಹಾಗೆಯೇ ಶ್ರೇಷ್ಠತೆ ಹಾಗೂ ವಿಶೇಷತೆಗೆ ‘ಹೀಗೆ’, ‘ಹಾಗೆ’ ಎಂಬುದನ್ನು ಸನ್ಮುಖದಲ್ಲಿ ತಂದುಕೊಳ್ಳಿ, ಸ್ಮೃತಿಯನ್ನು ಸ್ವರೂಪವನ್ನು ದೃಷ್ಟಿ, ವೃತ್ತಿಯನ್ನು ಪರಿವರ್ತನೆಯಲ್ಲಿ ತಂದುಕೊಳ್ಳಿ. ಈ ರೂಪದಿಂದ ಸ್ವಯಂನ್ನು ನೋಡಿಕೊಳ್ಳಿ ಮತ್ತು ಅನ್ಯರನ್ನೂ ನೋಡಿ. ಇದಕ್ಕೇ ಸ್ಥಾನವನ್ನು ತುಂಬಿದರು, ಖಾಲಿ ಬಿಡಲಿಲ್ಲವೆಂದು ಹೇಳಲಾಗುತ್ತದೆ. ಈ ವಿಧಿಯಿಂದ ಸುಡುವ ಹೋಲಿಯನ್ನು ಆಚರಿಸಿ. ತನ್ನ ಪ್ರತಿ ಹಾಗೂ ಅನ್ಯರ ಪ್ರತಿ ಈ ರೀತಿ ಎಂದೂ ಆಲೋಚಿಸಬೇಡಿ - ನೋಡಿ, ಇವರು ಬದಲಾಗುವುದೇ ಇಲ್ಲವೆಂದು ನಾವು ಹೇಳಿದ್ದೆವು ಆದರೆ ಆ ಸಮಯದಲ್ಲಿ ತಾವು ತಮ್ಮೊಂದಿಗೆ ಕೇಳಿಕೊಳ್ಳಿ – ‘ನಾನು ಬದಲಾಗಿದ್ದೇನೆಯೇ?’ ಸ್ವ ಪರಿವರ್ತನೆಯೇ ಅನ್ಯರ ಪರಿವರ್ತನೆಯನ್ನು ಸನ್ಮುಖದಲ್ಲಿ ತರುವುದು. ಪ್ರತಿಯೊಬ್ಬರೂ ಇದನ್ನು ಆಲೋಚಿಸಿ- ‘ಮೊದಲು ನಾನು ಪರಿವರ್ತನೆಯಾಗಲು ಉದಾಹರಣೆ ಆಗುತ್ತೇನೆ’ ಇದಕ್ಕೆ ಹೋಲಿಯನ್ನು ಸುಡುವುದು ಎಂದು ಹೇಳುತ್ತಾರೆ. ಸುಡದ ವಿನಃ ಆಚರಿಸಲಾಗುವುದಿಲ್ಲ. ಮೊದಲು ಸುಡಲಾಗುತ್ತದೆ ಏಕೆಂದರೆ ಯಾವಾಗ ಸುಟ್ಟು ಬಿಟ್ಟರು ಎಂದರೆ ಸ್ವಚ್ಛವಾದರು. ಶ್ರೇಷ್ಠ, ಪವಿತ್ರರಾಗಿ ಬಿಟ್ಟರು ಅಂದಾಗ ಇಂತಹ ಆತ್ಮನು ತಂದೆಯಿಂದ ಹಾಗೂ ಸರ್ವ ಆತ್ಮರಿಂದ ಮಂಗಳ ಮಿಲನ ಅರ್ಥಾತ್ ಕಲ್ಯಾಣಕಾರಿ ಶ್ರೇಷ್ಠ ಶುಭ ಮಿಲನವನ್ನು ಆಚರಿಸುತ್ತಲೇ ಇರುತ್ತಾರೆ. ತಿಳಿಯಿತೆ. |
ಇಂತಹ ಹೋಲಿಯನ್ನು ಆಚರಿಸಬೇಕಲ್ಲವೆ. ಎಲ್ಲಿ ಉಲ್ಲಾಸ-ಉತ್ಸಾಹವಿರುವುದೋ ಅಲ್ಲಿ ಪ್ರತೀ ಘಳಿಗೆ ಉತ್ಸವವಿರುತ್ತದೆ ಅಂದಾಗ ಖುಷಿಯಿಂದ ಆಚರಿಸಿ. ಆಡಿರಿ, ಕುಣಿಯಿರಿ, ತಿನ್ನಿರಿ, ಮಜಾ ಮಾಡಿ ಆದರೆ ಸದಾ ಹೋಲಿ (ಪವಿತ್ರ) ಆಗಿ ಮಿಲನವನ್ನು ಆಚರಿಸುತ್ತಾ ಇರಿ. ಒಳ್ಳೆಯದು. |
ಸದಾ ಪ್ರತೀ ಸೆಕೆಂಡ್ ತಂದೆಯ ಮೂಲಕ ವರದಾನದ ಶುಭಾಷಯಗಳನ್ನು ತೆಗೆದುಕೊಳ್ಳುವವರು, ಸದಾ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನ ಮೂಲಕ ಶುಭ ಭಾವನೆಯ ಶುಭಾಷಯಗಳನ್ನು ಪಡೆಯುವವರು ಅತಿ ಶ್ರೇಷ್ಠ ಪಾವನ ಆತ್ಮರಿಗೆ, ಸದಾ ಸಂಗದ ರಂಗಿನಲ್ಲಿ ರಂಗಿತರಾಗಿರುವ ಆತ್ಮಗಳಿಗೆ ಸದಾ ತಂದೆಯೊಂದಿಗೆ ಮಿಲನವನ್ನು ಆಚರಿಸುವ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ವರದಾನ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು: |
1. ಸದಾ ತಮ್ಮನ್ನು ತಂದೆಯ ನೆನಪಿನ ಛತ್ರಛಾಯೆಯಲ್ಲಿ ಇರುವಂತಹ ಶ್ರೇಷ್ಠಾತ್ಮರೆಂದು ಅನುಭವ ಮಾಡುವಿರಾ? ಛತ್ರಛಾಯೆಯೇ ಸುರಕ್ಷತೆಯ ಸಾಧನವಾಗಿದೆ. ಈ ಛತ್ರಛಾಯೆಯಿಂದ ಸಂಕಲ್ಪ ಕಾಲನ್ನು ಹೊರಗಿಟ್ಟರೂ ಏನಾಗುವುದು? ರಾವಣನು ಹೊತ್ತುಕೊಂಡು ಹೋಗುವನು ಮತ್ತು ಶೋಕವಾಟಿಕೆಯಲ್ಲಿ ಕೂರಿಸಿ ಬಿಡುವನು. ಅಲ್ಲಿಗಂತು ಹೋಗಬಾರದು, ಸದಾ ತಂದೆಯ ಛತ್ರಛಾಯೆಯಲ್ಲಿ ಇರುವವರು ಮತ್ತು ತಂದೆಯ ಸ್ನೇಹಿ ಆತ್ಮನಾಗಿದ್ದೇನೆ ಎಂಬ ಅನುಭವದಲ್ಲಿಯೇ ಇರಿ. ಇದೇ ಅನುಭವದಿಂದ ಸದಾ ಶಕ್ತಿಶಾಲಿಯಾಗಿ ಮುಂದುವರೆಯುತ್ತಾ ಇರುತ್ತೀರಿ. |
2. ಸದಾ ತಮ್ಮನ್ನು ಬಾಪ್ದಾದಾರವರ ದೃಷ್ಟಿಯಲ್ಲಿ ಸಮಾವೇಶವಾಗಿರುವ ಆತ್ಮನೆಂದು ಅನುಭವ ಮಾಡುವಿರಾ? ನಯನಗಳಲ್ಲಿ ಸಮಾವೇಶವಾಗಿರುವ ಆತ್ಮನ ಸ್ವರೂಪವೇನಾಗಿರುತ್ತದೆ? ನಯನಗಳಲ್ಲಿ ಏನಿರುತ್ತದೆ? ಬಿಂದು. ನೋಡುವಂತಹ ಶಕ್ತಿಯೇ ಬಿಂದುವಿನಲ್ಲಿದೆ ಅಲ್ಲವೆ. ಅಂದಮೇಲೆ ನಯನಗಳಲಿ ಸಮಾವೇಶವಾಗಿರುವ ಅಂದರೆ ಸದಾ ಬಿಂದು ಸ್ವರೂಪದಲ್ಲಿ ಸ್ಥಿತರಾಗಿರುವವರು - ಇಂತಹ ಅನುಭವ ಆಗುತ್ತದೆಯಲ್ಲವೆ! ಇಂತಹವರಿಗೇ “ಕಣ್ಮಣಿ”ಗಳೆಂದು ಹೇಳುವರು. ಅಂದಮೇಲೆ ಸದಾ ತಮ್ಮನ್ನು ಈ ಸ್ಮೃತಿಯಿಂದ ಮುಂದುವರೆಸುತ್ತಿರಿ. ಸದಾ ಇದೇ ನಶೆಯಲ್ಲಿರಿ - ನಾನು ‘ಕಣ್ಮಣಿ’ ಆತ್ಮನಾಗಿದ್ದೇನೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಹೇಗೆ ಆತ್ಮವು ಗುಪ್ತವಾಗಿದೆ ಮತ್ತು ಶರೀರವು ಪ್ರತ್ಯಕ್ಷವಾಗಿದೆ. ಆತ್ಮವನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ, ಅಗೋಚರವಾಗಿದೆ. ಅದು ಖಂಡಿತವಾಗಿಯೂ ಇದೆ ಆದರೆ ಈ ಶರೀರದಿಂದ ಮುಚ್ಚಲ್ಪಟ್ಟಿದೆ. ಆದ್ದರಿಂದ ಆತ್ಮವು ಗುಪ್ತವಾಗಿದೆ ಎಂದು ಹೇಳಲಾಗುತ್ತದೆ. ನಾನು ನಿರಾಕಾರನಾಗಿದ್ದೇನೆ, ಇಲ್ಲಿ ಸಾಕಾರದಲ್ಲಿ ಬಂದು ಗುಪ್ತವಾಗಿದ್ದೇನೆ ಎಂದು ಆತ್ಮವೇ ಹೇಳುತ್ತದೆ. ಆತ್ಮಗಳ ನಿವಾಸ ಸ್ಥಾನವು ನಿರಾಕಾರಿ ಪ್ರಪಂಚವಾಗಿದೆ. ಅಲ್ಲಂತೂ ಗುಪ್ತವಾಗಿರುವ ಮಾತಿಲ್ಲ, ಪರಮಪಿತ ಪರಮಾತ್ಮನೂ ಸಹ ಅಲ್ಲಿರುತ್ತಾರೆ, ಅವರಿಗೆ ಸುಪ್ರೀಂ ಎಂದು ಹೇಳುತ್ತಾರೆ. ಶ್ರೇಷ್ಠಾತಿ ಶ್ರೇಷ್ಠ ಆತ್ಮ. ಅತಿ ದೂರಕ್ಕಿಂತಲೂ ದೂರ ಇರುವವರು ಪರಮಪಿತ ಪರಮಾತ್ಮನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಹೇಗೆ ನೀವು ಗುಪ್ತವಾಗಿದ್ದೀರೋ ಹಾಗೆಯೇ ನಾನೂ ಗುಪ್ತವಾಗಿ ಬರಬೇಕಾಗುತ್ತದೆ. ನಾನು ಗರ್ಭ ಜೈಲಿನಲ್ಲಿ ಬರುವುದಿಲ್ಲ, ನನ್ನ ಹೆಸರು ಶಿವ ಎಂದೇ ನಡೆದು ಬರುತ್ತದೆ. ನಾನು ಇವರಲ್ಲಿ (ಬ್ರಹ್ಮಾ) ಬರುತ್ತೇನೆಂದರೂ ಸಹ ನನ್ನ ಹೆಸರು ಬದಲಾಗುವುದಿಲ್ಲ. ಈ ಆತ್ಮನಿಗೆ ಯಾವ ಶರೀರವಿದೆಯೋ ಅದರ ಹೆಸರು ಬದಲಾಗುತ್ತದೆ, ನನಗೆ ಶಿವನೆಂದೇ ಹೇಳುತ್ತಾರೆ. ಎಲ್ಲಾ ಆತ್ಮರ ತಂದೆಯಾಗಿದ್ದೇನೆ ಅಂದಾಗ ನೀವಾತ್ಮರು ಈ ಶರೀರದಲ್ಲಿ ಗುಪ್ತವಾಗಿದ್ದೀರಿ. ಈ ಶರೀರದ ಮೂಲಕ ಕರ್ಮ ಮಾಡುತ್ತೀರಿ, ನಾನೂ ಸಹ ಗುಪ್ತವಾಗಿದ್ದೇನೆ. ನೀವು ಮಕ್ಕಳಿಗೆ ಈ ಜ್ಞಾನವು ಈಗ ಸಿಗುತ್ತಿದೆ - ನಾನಾತ್ಮನು ಈ ಶರೀರದಿಂದ ಮುಚ್ಚಲ್ಪಟ್ಟಿದ್ದೇನೆ. ಆತ್ಮವು ನಿರಾಕಾರಿಯಾಗಿದೆ, ಶರೀರವು ಸಾಕಾರಿಯಾಗಿದೆ. ನಾನು ಅಶರೀರಿಯಾಗಿದ್ದೇನೆ, ನಿರಾಕಾರಿ ತಂದೆಯು ಈ ಶರೀರದ ಮೂಲಕ ತಿಳಿಸುತ್ತಾರೆ - ನೀವೂ ಸಹ ನಿರಾಕಾರಿಯಾಗಿದ್ದೀರಿ, ಶರೀರದ ಮೂಲಕ ಕೇಳುತ್ತೀರಿ. ನಿಮಗೆ ತಿಳಿದಿದೆ - ತಂದೆಯು ಬಂದಿದ್ದಾರೆ, ತಂದೆಯು ಭಾರತವನ್ನು ಪುನಃ ಬಡ ದೇಶದಿಂದ ಸಾಹುಕಾರವನ್ನಾಗಿ ಮಾಡಲು ಬರುತ್ತಾರೆ. ನಮ್ಮದು ಬಡ ಭಾರತವಾಗಿದೆ ಎಂದು ನೀವು ಹೇಳುತ್ತೀರಿ, ಎಲ್ಲರಿಗೂ ತಿಳಿದಿದೆ ಆದರೆ ನಮ್ಮ ಭಾರತ ದೇಶವು ಯಾವಾಗ ಸಾಹುಕಾರನಾಗಿತ್ತು, ಹೇಗಾಗಿತ್ತು ಎಂಬುದು ಅವರಿಗೆ ತಿಳಿದಿಲ್ಲ. ನೀವು ಮಕ್ಕಳಿಗೆ ಬಹಳ ನಶೆಯಿದೆ - ನಮ್ಮ ಭಾರತವು ಬಹಳ ಸಾಹುಕಾರನಾಗಿತ್ತು, ದುಃಖದ ಮಾತಿರಲಿಲ್ಲ. ಸತ್ಯಯುಗದಲ್ಲಿ ಅನ್ಯ ಯಾವುದೇ ಧರ್ಮವಿರಲಿಲ್ಲ, ಒಂದೇ ದೇವಿ-ದೇವತಾ ಧರ್ಮವಿತ್ತು, ಇದು ಯಾರಿಗೂ ತಿಳಿದಿಲ್ಲ. ವಿಶ್ವದ ಈ ಚರಿತ್ರೆ-ಭೂಗೋಳವನ್ನು ಯಾರೂ ತಿಳಿದುಕೊಂಡಿಲ್ಲ. ನೀವೀಗ ಚೆನ್ನಾಗಿ ತಿಳಿದುಕೊಂಡಿದ್ದೀರಿ - ನಮ್ಮ ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಬಹಳ ಬಡ ಭಾರತವಾಗಿದೆ. ಪುನಃ ಸಾಹುಕಾರ ರಾಷ್ಟ್ರವನ್ನಾಗಿ ಮಾಡಲು ತಂದೆಯು ಬಂದಿದ್ದಾರೆ. ಭಾರತವು ಸತ್ಯಯುಗದಲ್ಲಿ ಬಹಳ ಸಾಹುಕಾರನಾಗಿತ್ತು, ಯಾವಾಗ ದೇವಿ-ದೇವತೆಗಳ ರಾಜ್ಯವಿತ್ತು ನಂತರ ಆ ರಾಜ್ಯವು ಎಲ್ಲಿಗೆ ಹೊರಟು ಹೋಯಿತು, ಇದು ಯಾರಿಗೂ ತಿಳಿದಿಲ್ಲ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು ಋಷಿ ಮುನಿಗಳೂ ಸಹ ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಸತ್ಯಯುಗದಲ್ಲಿ ಈ ದೇವಿ-ದೇವತೆಗಳಿಗೂ ರಚಯಿತ ಮತ್ತು ರಚನೆಯ ಜ್ಞಾನವಿರಲಿಲ್ಲ, ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿರಲಿಲ್ಲ. ಒಂದುವೇಳೆ ಅವರಿಗೆ ನಾವು ಏಣಿಯನ್ನಿಳಿಯುತ್ತಾ ರಸಾತಳದಲ್ಲಿ ಹೋಗುತ್ತೇವೆಂಬ ಜ್ಞಾನವಿದ್ದಿದ್ದರೆ ರಾಜ್ಯಭಾಗ್ಯದ ಸುಖವೇ ಇರುತ್ತಿರಲಿಲ್ಲ, ಚಿಂತೆಯಾಗಿ ಬಿಡುತ್ತಿತ್ತು. |
ಈಗ ನಿಮಗೆ ಇದೇ ಚಿಂತೆಯಿದೆ - ನಾವು ಹೇಗೆ ತಮೋಪ್ರಧಾನರಿಂದ ಸತೋಪ್ರಧಾನರಾಗುವುದು? ನಾವಾತ್ಮರು ಯಾವ ನಿರಾಕಾರಿ ಪ್ರಪಂಚದಲ್ಲಿದ್ದೆವು ಅಲ್ಲಿಂದ ಹೇಗೆ ಸುಖಧಾಮದಲ್ಲಿ ಬಂದೆವು ಎಂಬ ಜ್ಞಾನವೂ ಇದೆ. ನಾವೀಗ ಏರುವಕಲೆಯಲ್ಲಿದ್ದೇವೆ, ಇದು 84 ಜನ್ಮಗಳ ಏಣಿಯಾಗಿದೆ. ಇದರ ಮಧ್ಯದಲ್ಲಿ ಏನಾಗುತ್ತದೆ ಎಂಬುದನ್ನೂ ಸಹ ನೀವು ಅರಿತುಕೊಂಡಿದ್ದೀರಿ. ಎಲ್ಲರೂ ಸತ್ಯಯುಗದಲ್ಲಿ ಬರುವುದಿಲ್ಲ, ಡ್ರಾಮಾನುಸಾರ ನೀವು ಪ್ರತಿಯೊಬ್ಬ ಪಾತ್ರಧಾರಿಯೂ ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತೀರಿ. |
ಈಗ ನೀವು ಮಕ್ಕಳು ಯಾರಿಗೆ ಬಡವರ ಬಂಧುವೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳುತ್ತೀರಿ, ಪ್ರಪಂಚದವರಿಗೆ ತಿಳಿದಿಲ್ಲ. ಕೊನೆಗೂ ಆ ದಿನ ಇಂದು ಬಂದಿತು ಎಂಬುದನ್ನು ಗೀತೆಯಲ್ಲಿಯೂ ಕೇಳಿದಿರಿ. ಇದೆಲ್ಲವೂ ಭಕ್ತಿಯಾಗಿದೆ. ಭಗವಂತನು ಯಾವಾಗ ಬಂದು ನಾವು ಭಕ್ತರನ್ನು ಈ ಭಕ್ತಿಮಾರ್ಗದಿಂದ ಬಿಡಿಸಿ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ ಎಂಬುದನ್ನೂ ಸಹ ತಿಳಿದಿದ್ದೀರಿ. ರಾಮ ರಾಜ್ಯ, ರಾವಣ ರಾಜ್ಯ ಯಾವುದರ ಹೆಸರಾಗಿದೆ ಎಂಬುದನ್ನೂ ಸಹ ಯಾವ ಮನುಷ್ಯರೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಪುನಃ ಈ ಶರೀರದಲ್ಲಿ ಬಂದಿದ್ದಾರೆ, ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಶಿವನು ಅವಶ್ಯವಾಗಿ ಬರುತ್ತಾರೆ. ನಾನು ಕೃಷ್ಣನ ತನುವಿನಲ್ಲಿ ಬರುತ್ತೇನೆಂದು ಹೇಳುವುದಿಲ್ಲ, ತಂದೆಯು ತಿಳಿಸುತ್ತಾರೆ - ಕೃಷ್ಣನ ಆತ್ಮವು 84 ಜನ್ಮಗಳನ್ನು ತೆಗೆದುಕೊಂಡಿದೆ. ಯಾರು ಮೊಟ್ಟ ಮೊದಲಿಗರಾಗಿದ್ದರೋ ಅವರೇ ಈಗ ಅಂತಿಮದಲ್ಲಿದ್ದಾರೆ. ತತ್ತ್ವಂ. ನಾನಂತೂ ಸಾಧಾರಣ ತನುವಿನಲ್ಲಿ ಬರುತ್ತೇನೆ, ಬಂದು ನಿಮಗೆ ಹೇಗೆ ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರೆಂದು ತಿಳಿಸುತ್ತೇನೆ. ಈ ಸಮಯದಲ್ಲಿ ಯಾರೊಬ್ಬರೂ ತಮ್ಮನ್ನು ದೇವತಾ ಧರ್ಮದವರೆಂದು ತಿಳಿದುಕೊಳ್ಳುವುದಿಲ್ಲ ಏಕೆಂದರೆ ಸತ್ಯಯುಗವನ್ನು ಬಹಳ ದೂರ ತೆಗೆದುಕೊಂಡು ಹೋಗಿದ್ದಾರೆ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ. ವಾಸ್ತವದಲ್ಲಿ ಡ್ರಾಮಾದ ಚರಿತ್ರೆಯು ಬಹಳ ಚಿಕ್ಕದಾಗಿದೆ, ಇದರಲ್ಲಿ ಕೆಲವು ಧರ್ಮಗಳ ಚರಿತ್ರೆಯು 500 ವರ್ಷಗಳು, ಇನ್ನೂ ಕೆಲವರದು 2500 ವರ್ಷಗಳ ಇತಿಹಾಸವಿದೆ, ನಿಮ್ಮದು 5000 ವರ್ಷಗಳ ಇತಿಹಾಸವಾಗಿದೆ. ದೇವತಾ ಧರ್ಮದವರೇ ಸ್ವರ್ಗದಲ್ಲಿ ಬರುತ್ತೀರಿ, ಅನ್ಯ ಧರ್ಮದವರು ಬರುವುದೇ ನಂತರದಲ್ಲಿ. ದೇವತಾ ಧರ್ಮದವರೇ ಅನ್ಯ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಡ್ರಾಮಾನುಸಾರ ಮುಂದಿನ ಕಲ್ಪದಲ್ಲಿಯೂ ಇದೇ ರೀತಿ ಹೋಗಿ ಸೇರುತ್ತಾರೆ ಮತ್ತೆ ತಮ್ಮ-ತಮ್ಮ ಧರ್ಮಕ್ಕೆ ಮರಳಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವಂತೂ ವಿಶ್ವದ ಮಾಲೀಕರಾಗಿದ್ದಿರಿ, ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ನಾವೇಕೆ ಸ್ವರ್ಗದಲ್ಲಿರಬಾರದು! ತಂದೆಯಿಂದ ನಾವು ಆಸ್ತಿಯನ್ನು ಅವಶ್ಯವಾಗಿ ತೆಗೆದುಕೊಳ್ಳುತ್ತೇವೆ ಅಂದಮೇಲೆ ಇದರಿಂದಲೇ ಸಿದ್ಧವಾಗುತ್ತದೆ - ಇವರು ನಮ್ಮ ಧರ್ಮದವರಾಗಿದ್ದಾರೆ, ಯಾರು ಈ ಧರ್ಮದವರಲ್ಲವೋ ಅವರು ಬರುವುದಿಲ್ಲ. ಪರಧರ್ಮದಲ್ಲಿ ಏಕೆ ಹೋಗಬೇಕೆಂದು ಹೇಳುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸತ್ಯಯುಗ ಹೊಸ ಪ್ರಪಂಚದಲ್ಲಿ ದೇವತೆಗಳಿಗೆ ಬಹಳ ಸುಖವಿತ್ತು, ಚಿನ್ನದ ಮಹಲುಗಳಿತ್ತು. ಸೋಮನಾಥ ಮಂದಿರದಲ್ಲಿ ಎಷ್ಟೊಂದು ಚಿನ್ನವಿತ್ತು! ಈ ರೀತಿ ಮತ್ತ್ಯಾವುದೇ ಮಂದಿರವಿರುವುದಿಲ್ಲ, ಅದರಲ್ಲಿ ಬಹಳ ವಜ್ರ ವೈಡೂರ್ಯಗಳಿತ್ತು. ಬೌದ್ಧ ಮೊದಲಾದವರದು ವಜ್ರ ರತ್ನಗಳ ಮಹಲುಗಳಿರುವುದಿಲ್ಲ. ನೀವು ಮಕ್ಕಳನ್ನು ಯಾವ ತಂದೆಯು ಇಷ್ಟು ಶ್ರೇಷ್ಠರನ್ನಾಗಿ ಮಾಡಿದ್ದಾರೆಯೋ ಅವರಿಗೆ ನೀವು ಎಷ್ಟೊಂದು ಗೌರವವನ್ನಿಟ್ಟಿದ್ದೀರಿ. ಯಾರು ಒಳ್ಳೆಯ ಕರ್ಮ ಮಾಡಿ ಹೋಗುವರೋ ಅವರಿಗೆ ಗೌರವ ಕೊಡಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಎಲ್ಲರಿಗಿಂತ ಒಳ್ಳೆಯ ಕರ್ಮವನ್ನು ಪತಿತ-ಪಾವನ ತಂದೆಯೇ ಮಾಡಿ ಹೋಗುತ್ತಾರೆ. ನಿಮ್ಮ ಆತ್ಮ ಹೇಳುತ್ತದೆ - ಎಲ್ಲರಿಗಿಂತ ಅತ್ಯುತ್ತಮ ಸೇವೆಯನ್ನು ಬೇಹದ್ದಿನ ತಂದೆಯೇ ಬಂದು ಮಾಡುತ್ತಾರೆ. ನಮ್ಮನ್ನು ಬಡವರಿಂದ ರಾಜ, ಭಿಕಾರಿಗಳಿಂದ ರಾಜಕುಮಾರರನ್ನಾಗಿ ಮಾಡಿ ಬಿಡುತ್ತಾರೆ. ಯಾರು ಭಾರತವನ್ನು ಸ್ವರ್ಗವನ್ನಾಗಿ ಮಾಡುವರೋ ಅವರಿಗೂ ಸಹ ಯಾರೂ ಗೌರವವನ್ನಿಡುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ - ಸೋಮನಾಥ ಮಂದಿರವು ಬಹಳ ಶ್ರೇಷ್ಠವೆಂದು ಗಾಯನವಿದೆ, ಅದನ್ನೇ ಲೂಟಿ ಮಾಡಿಕೊಂಡು ಹೋದರು. ಲಕ್ಷ್ಮೀ-ನಾರಾಯಣರ ಮಂದಿರವನ್ನು ಎಂದೂ ಯಾರೂ ಲೂಟಿ ಮಾಡಲಿಲ್ಲ. ಸೋಮನಾಥ ಮಂದಿರವನ್ನೇ ಲೂಟಿ ಮಾಡಿದ್ದಾರೆ. ಭಕ್ತಿಮಾರ್ಗದಲ್ಲಿ ಇವರು ಬಹಳ ಧನವಂತರಾಗಿರುತ್ತಾರೆ, ರಾಜರಲ್ಲಿಯೂ ನಂಬರ್ವಾರ್ ಇರುತ್ತಾರಲ್ಲವೆ. ಯಾರು ಉತ್ತಮ ಪದವಿಯವರು ಇರುವರೋ ಅವರಿಗೆ ಚಿಕ್ಕ ಪದವಿಯನ್ನು ಹೊಂದಿರುವವರು ಗೌರವ ಕೊಡುತ್ತಾರೆ. ದರ್ಬಾರಿನಲ್ಲಿಯೂ ನಂಬರ್ವಾರ್ ಆಗಿ ಕುಳಿತುಕೊಳ್ಳುತ್ತಾರೆ. ಬ್ರಹ್ಮಾ ತಂದೆಯು ಅನುಭವಿಯಲ್ಲವೆ. ಇಲ್ಲಿಯದು ಪತಿತ ರಾಜರ ದರ್ಬಾರಾಗಿದೆ. ಅಂದಮೇಲೆ ಪಾವನ ರಾಜರ ದರ್ಬಾರು ಹೇಗಿರಬಹುದು! ಯಾವಾಗ ಅವರ ಬಳಿ ಇಷ್ಟೊಂದು ಹಣವಿರುತ್ತದೆ ಅಂದಮೇಲೆ ಅವರ ಮನೆಯೂ ಸಹ ಅಷ್ಟೇ ಚೆನ್ನಾಗಿರುತ್ತದೆ, ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ನಮಗೆ ಓದಿಸುತ್ತಿದ್ದಾರೆ, ಸ್ವರ್ಗದ ಸ್ಥಾಪನೆ ಮಾಡಿಸುತ್ತಿದ್ದಾರೆ. ನಾವು ಸ್ವರ್ಗದ ಮಹಾರಾಜ-ಮಹಾರಾಣಿಯಾಗುತ್ತೇವೆ ನಂತರ ನಾವು ಕೆಳಗಿಳಿಯುತ್ತೇವೆ. ಕೆಳಗಿಳಿಯುತ್ತಾ ನಾವು ಮೊಟ್ಟ ಮೊದಲು ಶಿವ ತಂದೆಯ ಪೂಜಾರಿಗಳಾಗುತ್ತೇವೆ. ಯಾರು ಸ್ವರ್ಗದ ಮಾಲೀಕರನ್ನಾಗಿ ಮಾಡಿದರೋ ಅವರಿಗೆ ನಾವು ಪೂಜೆ ಮಾಡುತ್ತೇವೆ. ಅವರು ನಮ್ಮನ್ನು ಬಹಳ ಸಾಹುಕಾರರನ್ನಾಗಿ ಮಾಡುತ್ತಾರೆ, ಈಗ ಭಾರತವು ಎಷ್ಟು ಬಡ ದೇಶವಾಗಿದೆ! ಮೊದಲು ಇಷ್ಟೊಂದು ಬಡ ರಾಷ್ಟ್ರವಾಗಿರಲಿಲ್ಲ, ಬಹಳ ಖುಷಿಯಲ್ಲಿದ್ದರು. ಯಾವ ಜಮೀನನ್ನು 500 ರೂಪಾಯಿಗಳಿಗೆ ತೆಗೆದುಕೊಂಡಿದ್ದರೋ ಅದು ಇಂದು 5000 ಕೊಟ್ಟರೂ ಸಿಗುವುದಿಲ್ಲ. ಸತ್ಯಯುಗದಲ್ಲಿ ಧರಣಿಗೆ ಮೌಲ್ಯವೇ ಇರುವುದಿಲ್ಲ, ಯಾರು ಎಷ್ಟು ಬೇಕೋ ಅಷ್ಟು ತೆಗೆದುಕೊಳ್ಳಬಹುದು. ಬಹಳಷ್ಟು ಜಮೀನಿರುತ್ತದೆ, ಸಿಹಿ ನೀರಿನ ನದಿಗಳ ತೀರದಲ್ಲಿ ನಿಮ್ಮ ಮಹಲುಗಳಿರುತ್ತವೆಯಲ್ಲವೆ. ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ, ಪ್ರಕೃತಿಯು ದಾಸಿಯಾಗಿರುತ್ತದೆ. ಬಹಳ ಒಳ್ಳೊಳ್ಳೆಯ ಫಲ ಪುಷ್ಫಗಳು ಸಿಗುತ್ತಿರುತ್ತವೆ. ನೀವೀಗ ಎಷ್ಟೊಂದು ಪರಿಶ್ರಮ ಪಡುತ್ತೀರಿ ಆದರೂ ಸಹ ಬರಗಾಲವು ಬಂದಿತೆಂದರೆ ಆಹಾರವು ಸಿಗುವುದಿಲ್ಲ ಅಂದಾಗ ಹಾಡು ಕೇಳುತ್ತಿದ್ದಂತೆಯೇ ನಿಮಗೆ ರೋಮಾಂಚನವಾಗಿ ಬಿಡಬೇಕು. ತಂದೆಗೆ ಬಡವರ ಬಂಧು ಎಂದು ಹೇಳುತ್ತೀರಿ, ಈಗ ಅರ್ಥವನ್ನು ತಿಳಿದುಕೊಂಡಿರಲ್ಲವೆ. ಯಾರನ್ನು ಸಾಹುಕಾರರನ್ನಾಗಿ ಮಾಡುತ್ತಾರೆ? ಅವಶ್ಯವಾಗಿ ಯಾರು ಇಲ್ಲಿಗೆ ಬರುವರೋ ಅವರನ್ನೇ ಸಾಹುಕಾರರನ್ನಾಗಿ ಮಾಡುತ್ತಾರಲ್ಲವೆ. ನೀವು ಮಕ್ಕಳಿಗೆ ತಿಳಿದಿದೆ - ಪಾವನರಿಂದ ಪತಿತರಾಗುವುದರಲ್ಲಿ 5000 ವರ್ಷಗಳು ಹಿಡಿಸಿದೆ, ಈಗ ಪುನಃ ತಂದೆಯು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಶ್ರೇಷ್ಠಾತಿ ಶ್ರೇಷ್ಠರನ್ನಾಗಿ ಮಾಡುತ್ತಾರೆ, ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯು ಪ್ರಾಪ್ತಿಯಾಗುತ್ತದೆ. ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ವಿಶ್ವದ ಮಾಲೀಕರಾಗಿದ್ದೀರಿ, ಮಗು ಜನ್ಮ ಪಡೆಯಿತೆಂದರೆ ವಾರಸುಧಾರನಾಯಿತು, ಎಷ್ಟೊಂದು ಖುಷಿಯಾಗುತ್ತದೆ! ಆದರೆ ಹೆಣ್ಣು ಮಗುವನ್ನು ನೋಡುತ್ತಿದ್ದಂತೆ ಚಹರೆಯೇ ಬಾಡಿ ಹೋಗುತ್ತದೆ. ಇಲ್ಲಂತೂ ಎಲ್ಲಾ ಆತ್ಮರೂ ಗಂಡು ಮಕ್ಕಳಾಗಿದ್ದೀರಿ, ನಾವು ಸ್ವರ್ಗದ ಮಾಲೀಕರಾಗಿ ಬಿಟ್ಟೆವು. ಈಗ ಅರ್ಥವಾಗಿದೆ - ನಾವು 5000 ವರ್ಷಗಳ ಮೊದಲೂ ಸ್ವರ್ಗದ ಮಾಲೀಕರಾಗಿದ್ದೆವು, ತಂದೆಯು ಆ ರೀತಿ ಮಾಡಿದ್ದರು. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂಬುದನ್ನು ತಿಳಿದುಕೊಂಡಿಲ್ಲ. ಯಾವಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದೇನೂ ಗೊತ್ತಿಲ್ಲ. ವಾಸ್ತವದಲ್ಲಿ ಭಾರತದ ಸಂಪನ್ನತೆಯು ಎಲ್ಲದಕ್ಕಿಂತ ಹೆಚ್ಚಿನದಾಗಿರಬೇಕು. ಭಾರತದ ಭೂಮಿಯೂ ಎಲ್ಲದಕ್ಕಿಂತ ದೊಡ್ಡದಾಗಿರಬೇಕು. ಲಕ್ಷಾಂತರ ವರ್ಷಗಳಿದ್ದಿದ್ದೇ ಆದರೆ ಮತ್ತೆ ಬಹಳ ಜಮೀನು ಬೇಕಾಗುವುದು, ಇಡೀ ಪ್ರಪಂಚದ ಜಮೀನಾದರೂ ಸಾಕಾಗುವುದಿಲ್ಲ. ಲಕ್ಷಾಂತರ ವರ್ಷಗಳಲ್ಲಿ ಎಷ್ಟೊಂದು ಜನಸಂಖ್ಯೆಯಾಗಿ ಬಿಡುವುದು, ಅಸಂಖ್ಯಾತ ಮನುಷ್ಯರಾಗುವರು ಆದ್ದರಿಂದ ಲಕ್ಷಾಂತರ ವರ್ಷಗಳಂತೂ ಇಲ್ಲ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ಮನುಷ್ಯರು ಈ ಮಾತುಗಳನ್ನು ಕೇಳಿದಾಗ ಇದನ್ನು ಎಂದೂ ಕೇಳಿಲ್ಲ, ಯಾವುದೇ ಶಾಸ್ತ್ರಗಳಲ್ಲಿ ಓದಲಿಲ್ಲ ಎಂದು ಹೇಳುತ್ತಾರೆ. ಇವು ಬಹಳ ಅದ್ಭುತ ಮಾತುಗಳಾಗಿವೆ. |
ಈಗ ನೀವು ಮಕ್ಕಳ ಬುದ್ಧಿಯಲ್ಲಿ ಇಡೀ ಚಕ್ರದ ಜ್ಞಾನವಿದೆ, ಇವರು ಬಹಳ ಜನ್ಮಗಳ ಅಂತಿಮದಲ್ಲಿ ಈಗ ಪತಿತ ಆತ್ಮನಾಗಿದ್ದಾರೆ, ಯಾರು ಸತೋಪ್ರಧಾನರಾಗಿದ್ದರೋ ಅವರೇ ಈಗ ತಮೋಪ್ರಧಾನವಾಗಿದ್ದಾರೆ ಪುನಃ ಸತೋಪ್ರಧಾನರಾಗಬೇಕಾಗಿದೆ. ನೀವಾತ್ಮರಿಗೆ ಈಗ ಶಿಕ್ಷಣ ಸಿಗುತ್ತಿದೆ - ಶರೀರದ ಮುಖಾಂತರ ಆತ್ಮವು ಕೇಳುವಾಗ ಶರೀರವು ತೂಗುತ್ತದೆ ಏಕೆಂದರೆ ಆತ್ಮವು ಇದರ ಮೂಲಕ ಕೇಳಿಸಿಕೊಳ್ಳುತ್ತದೆಯಲ್ಲವೆ. ಅವಶ್ಯವಾಗಿ ನಾವಾತ್ಮರು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಅಂದಮೇಲೆ ಅವಶ್ಯವಾಗಿ 84 ಮಂದಿ ತಂದೆ-ತಾಯಿಯರು ಸಿಕ್ಕಿರುವರು, ಇದೂ ಸಹ ಲೆಕ್ಕವಿದೆಯಲ್ಲವೆ. ಬುದ್ಧಿಯಲ್ಲಿ ಬರುತ್ತದೆ - 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಮತ್ತೆ ಇನ್ನೂ ಕಡಿಮೆ ಜನ್ಮಗಳೂ ಇರಬಹುದು, ಕನಿಷ್ಠ ಮತ್ತು ಗರಿಷ್ಠದ ಲೆಕ್ಕವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಶಾಸ್ತ್ರಗಳಲ್ಲಿ ಏನೇನು ಬರೆದು ಬಿಟ್ಟಿದ್ದಾರೆ! ನಿಮಗಾದರೂ 84 ಜನ್ಮಗಳೆಂದು ಹೇಳುತ್ತಾರೆ ಆದರೆ ನನಗೆ ನೋಡಿ, ಅಸಂಖ್ಯಾತ ಜನ್ಮಗಳೆಂದು ಹೇಳಿ ಬಿಟ್ಟಿದ್ದಾರೆ, ಕಣ ಕಣದಲ್ಲಿ ಎಲ್ಲಿ ನೋಡಿದರಲ್ಲಿ ನೀನೇ ನೀನು..... ಕೃಷ್ಣನೇ ಕೃಷ್ಣನಿದ್ದಾನೆ. ಮಥುರಾ ಬೃಂದಾವನದಲ್ಲಿ ಕೃಷ್ಣನು ಸರ್ವವ್ಯಾಪಿಯಾಗಿದ್ದಾನೆಂದು ಹೇಳುತ್ತಾರೆ. ರಾಧೆಯ ಪಂಥದವರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ ಎಂದು ಹೇಳುತ್ತಾರೆ. ನಾವು ರಾಧಾ ಸ್ವಾಮಿಗಳೆಂದು ಹೇಳುತ್ತಾರೆ. ಕೃಷ್ಣ ಸ್ವಾಮಿಗಳೇ ಬೇರೆ. ಅವರು ರಾಧೆಯನ್ನು ಒಪ್ಪುತ್ತಾರೆ. ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ, ನೀವೂ ರಾಧೆ, ನಾನೂ ರಾಧೆ ಎಂದು ಹೇಳುತ್ತಾರೆ. |
ಈಗ ತಂದೆಯು ತಿಳಿಸುತ್ತಾರೆ - ಅವಶ್ಯವಾಗಿ ನಾನು ಬಡವರ ಬಂಧುವಾಗಿದ್ದೇನೆ ಅಲ್ಲವೆ. ಭಾರತವೇ ಎಲ್ಲದಕ್ಕಿಂತ ಸಾಹುಕಾರನಾಗಿತ್ತು, ಈಗ ಎಲ್ಲದಕ್ಕಿಂತ ಬಡ ದೇಶವಾಗಿದೆ. ಆದ್ದರಿಂದ ನಾನು ಭಾರತದಲ್ಲಿಯೇ ಬರಬೇಕಾಗುತ್ತದೆ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಇದು ಬೇಹದ್ದಿನ ಡ್ರಾಮಾ ಆಗಿದೆ. ಡ್ರಾಮಾದಲ್ಲಿ ಏನು ಶೂಟಿಂಗ್ ನಡೆದಿದೆಯೋ ಅದೇ ಪುನರಾವರ್ತನೆಯಾಗುವುದು. ಡ್ರಾಮಾದ ಬಗ್ಗೆಯೂ ತಿಳಿದಿರಬೇಕು, ಡ್ರಾಮಾ ಎಂದರೆ ಡ್ರಾಮಾ. ಅದು ಹದ್ದಿನ ಡ್ರಾಮಾ ಆಗಿರುತ್ತದೆ, ಇದು ಬೇಹದ್ದಿನ ಡ್ರಾಮಾ ಆಗಿದೆ. ಇದರ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ಬಡವರ ಬಂಧು ಎಂದು ನಿರಾಕಾರ ಭಗವಂತನನ್ನೇ ಒಪ್ಪುತ್ತಾರೆ, ಕೃಷ್ಣನನ್ನು ಒಪ್ಪುವುದಿಲ್ಲ. ಕೃಷ್ಣನಂತೂ ಧನವಂತ, ಸತ್ಯಯುಗದ ರಾಜಕುಮಾರನಾಗುತ್ತಾನೆ. ಭಗವಂತನಿಗೆ ತನ್ನ ಶರೀರವೇ ಇಲ್ಲ. ಅವರು ಬಂದು ನೀವು ಮಕ್ಕಳನ್ನು ಧನವಂತರನ್ನಾಗಿ ಮಾಡುತ್ತಾರೆ. ನಿಮಗೆ ರಾಜಯೋಗದ ಶಿಕ್ಷಣವನ್ನು ಕೊಡುತ್ತಾರೆ. ಮನುಷ್ಯರೂ ಸಹ ವಿದ್ಯೆಯಿಂದ ಬ್ಯಾರಿಸ್ಟರ್ ಇತ್ಯಾದಿಯಾಗುತ್ತಾರೆ ಮತ್ತು ಸಂಪಾದನೆ ಮಾಡುತ್ತಾರೆ. ತಂದೆಯು ಸಹ ನಿಮಗೆ ಈಗ ಓದಿಸುತ್ತಾರೆ. ನೀವು ಭವಿಷ್ಯದಲ್ಲಿ ನರನಿಂದ ನಾರಾಯಣನಾಗುತ್ತೀರಿ. ನಿಮ್ಮ ಜನ್ಮವಂತೂ ಆಗುತ್ತದೆಯಲ್ಲವೆ. ಸ್ವರ್ಗದಲ್ಲಿ ಯಾರೂ ಸಮುದ್ರದಿಂದ ತೇಲಿ ಬರುವುದಿಲ್ಲ, ಕೃಷ್ಣನೂ ಸಹ ಜನ್ಮ ಪಡೆದನಲ್ಲವೆ. ಆ ಸಮಯದಲ್ಲಿ ಕಂಸ ಪುರಿ ಇತ್ಯಾದಿಗಳಿರಲಿಲ್ಲ. ಕೃಷ್ಣನ ಹೆಸರು ಎಷ್ಟೊಂದು ಗಾಯನವಿದೆ, ಅವರ ತಂದೆಯ ಹೆಸರೇ ಇಲ್ಲ. ಅವರ ತಂದೆಯು ಎಲ್ಲಿದ್ದಾರೆ? ಅವಶ್ಯವಾಗಿ ರಾಜನ ಮಗುವಾಗಿರಬೇಕಲ್ಲವೆ. ಅಲ್ಲಿ ದೊಡ್ಡ ರಾಜರ ಮನೆಯಲ್ಲಿ ಜನ್ಮವಾಗುತ್ತದೆ ಆದರೆ ಅವರು ಪತಿತ ರಾಜರಾಗಿರುವ ಕಾರಣ ಅವರ ಹೆಸರು ಪ್ರಸಿದ್ಧವಾಗುವುದಿಲ್ಲ. ಕೃಷ್ಣನು ಇರುವಾಗ ಕೆಲವರು ಪತಿತರೂ ಇರುತ್ತಾರೆ, ಯಾವಾಗ ಅವರು ಸಂಪೂರ್ಣ ಸಮಾಪ್ತಿಯಾಗುವರೋ ಆಗ ಕೃಷ್ಣನು ಸಿಂಹಾಸನವನ್ನೇ ಏರುತ್ತಾನೆ, ತನ್ನ ರಾಜ್ಯವನ್ನು ತೆಗೆದುಕೊಳ್ಳುತ್ತಾನೆ ಆಗಲೇ ಅವರ ಸಂವತ್ಸರವು ಆರಂಭವಾಗುತ್ತದೆ. ಲಕ್ಷ್ಮೀ-ನಾರಾಯಣರಿಂದ ಸಂವತ್ಸರವು ಆರಂಭವಾಗುತ್ತದೆ, ನೀವು ಪೂರ್ಣ ಲೆಕ್ಕವನ್ನು ಬರೆಯುತ್ತೀರಿ. ಇವರ ರಾಜ್ಯವು ಇಷ್ಟು ಸಮಯ ಮತ್ತು ಇಂತಹವರ ರಾಜ್ಯವು ಇಷ್ಟು ಸಮಯ ಎಂದು ನೀವು ಲೆಕ್ಕವನ್ನು ತೆಗೆಯುತ್ತೀರಿ. ಇದರಿಂದ ಮನುಷ್ಯರು ತಿಳಿದುಕೊಳ್ಳುವರು - ಕಲ್ಪದ ಆಯಸ್ಸು ದೊಡ್ಡದಾಗಿರಲು ಸಾಧ್ಯವೇ ಇಲ್ಲ, ಈ 5000 ವರ್ಷಗಳ ಪೂರ್ಣ ಲೆಕ್ಕವಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ರಚಯಿತ ಮತ್ತು ರಚನೆಯ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ಕೇವಲ ಒಂದೇ ಚಿಂತೆಯಿರಲಿ - ನಾವು ಖಂಡಿತವಾಗಿಯೂ ಸತೋಪ್ರಧಾನರಾಗಬೇಕಾಗಿದೆ. |
2. ಈ ಬೇಹದ್ದಿನ ಡ್ರಾಮಾವನ್ನು ಬುದ್ಧಿಯಲ್ಲಿಟ್ಟುಕೊಂಡು ಅಪಾರ ಖುಷಿಯಲ್ಲಿರಬೇಕು, ತಂದೆಯ ಸಮಾನ ಗೌರವವನ್ನು ಪಡೆಯಲು ಪತಿತರನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ. |
ಓಂ ಶಾಂತಿ. ಮಕ್ಕಳು ತಮ್ಮ ಸಹೋದರ-ಸಹೋದರಿಯರಿಗೆ ಡ್ರಿಲ್ ಅನ್ನು ಕಲಿಸಲು ಕುಳಿತಿದ್ದೀರಿ, ಇದು ಎಂತಹ ಡ್ರಿಲ್ ಆಗಿದೆ? ಇದರಲ್ಲಿ ಮಕ್ಕಳು ಏನನ್ನೂ ಹೇಳುವಂತಿಲ್ಲ, ಆ ದೈಹಿಕ ಡ್ರಿಲ್ ಕಲಿಸುವವರು ಮಾತನಾಡಬೇಕಾಗುತ್ತದೆ. ಇವರಂತೂ ಪರಮ ಶಿಕ್ಷಕನಾಗಿದ್ದಾರೆ, ಗೀತೆಯ ಭಗವಂತನೂ ಆಗಿದ್ದಾರೆ. ಮಕ್ಕಳಿಗೆ ಯೋಗದ ಡ್ರಿಲ್ ಅನ್ನೂ ಕಲಿಸುತ್ತಾರೆ. ಇದು ಗುಪ್ತವಾದ ಡ್ರಿಲ್ ಆಗಿದೆ, ಈ ಡ್ರಿಲ್ ಅನ್ನು ಏಕೆ ಕಲಿಸಲಾಗುತ್ತದೆ ಎಂದರೆ ವಿದ್ಯಾರ್ಥಿಗಳು ದಷ್ಟ-ಪುಷ್ಟವಾಗಲಿ ಎಂದು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಮನ್ಮನಾಭವದ ಡ್ರಿಲ್ನಿಂದ 21 ಜನ್ಮಗಳಿಗಾಗಿ ದಷ್ಟ-ಪುಷ್ಟವಾಗಿರುತ್ತೀರಿ. ಎಂದೂ ರೋಗಿಯಾಗುವುದಿಲ್ಲ ಅಂದಮೇಲೆ ಇದು ಎಷ್ಟು ಒಳ್ಳೆಯ ಆತ್ಮಿಕ ಡ್ರಿಲ್ ಆಗಿದೆ! ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮಾನಭವ ಆಗಿರಿ. ಇದರಲ್ಲಿ ಏನನ್ನೂ ಹೇಳುವ ಅವಶ್ಯಕತೆಯೇ ಇಲ್ಲ, ಕೇವಲ ತಮ್ಮನ್ನು ಆತ್ಮನೆಂದು ತಿಳಿಯಿರಿ. ದೇಹೀ-ಅಭಿಮಾನಿ ಭವ ಎಂದು ತಿಳಿಸಲಾಗುತ್ತದೆ. ಭವದ ಅರ್ಥವೇ ಆಗಿದೆ - ನೀವು ತಂದೆಯನ್ನು ನೆನಪು ಮಾಡಿದರೆ ಸದಾ ಆರೋಗ್ಯವಂತರಾಗುತ್ತೀರಿ. ಕಲ್ಪದ ಮೊದಲೂ ಸಹ ನಾವು ಆತ್ಮಿಕ ವ್ಯಾಯಾಮದಿಂದ ಸದಾ ಆರೋಗ್ಯವಂತರಾಗಿದ್ದೆವು. ಇದನ್ನು ಆತ್ಮಿಕ ತಂದೆ ಪರಮಪಿತ ಪರಮಾತ್ಮ ಶಿವನೇ ಕಲಿಸುತ್ತಾರೆ. ಅವರಿಗೇ ಭಗವಂತನೆಂದು ಹೇಳಲಾಗುತ್ತದೆ, ಅವರ ಪೂಜೆಯೂ ನಡೆಯುತ್ತದೆ. ಶಿವಾಯ ನಮಃ ಎಂದು ಹೇಳುತ್ತಾರಲ್ಲವೆ. ಬ್ರಹ್ಮ ದೇವತಾಯ ನಮಃ, ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಈ ಆತ್ಮಿಕ ವ್ಯಾಯಾಮವನ್ನು ಯಾವುದೇ ಮನುಷ್ಯರು ಕಲಿಸುವುದಿಲ್ಲ. ನಿಮಗೆ ಇದನ್ನು ಬ್ರಹ್ಮನೂ ಕಲಿಸುವುದಿಲ್ಲ. ಭಲೆ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ ಆದರೆ... ಪತ್ರದ ಮೇಲೂ ಸಹ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ. ಅವರಂತೂ ಗುಪ್ತವಾಗಿದ್ದಾರೆ ಆದರೆ ಬ್ರಹ್ಮನು ಪ್ರಜಾಪಿತನಾಗಿದ್ದಾರೆ ಎಂದು ಮನುಷ್ಯರಿಗೆ ಹೇಗೆ ಅರ್ಥವಾಗುವುದು? ಇಡೀ ಪ್ರಪಂಚವೇ ಅವರ ಮಕ್ಕಳಾಗಿದ್ದಾರೆ ಏಕೆಂದರೆ ಪ್ರಜಾಪಿತನಲ್ಲವೆ. ಈ ಆತ್ಮಿಕ ವ್ಯಾಯಾಮವನ್ನು ಕಲಿಸಿಕೊಡುವವರು ನಿರಾಕಾರ ತಂದೆಯಾಗಿದ್ದಾರೆ ಆದರೆ ಗುಪ್ತವಾಗಿದ್ದಾರೆ. ಗುಪ್ತವಾಗಿರುವ ಕಾರಣ ಮನುಷ್ಯರಿಗೆ ಇದನ್ನು ತಿಳಿದುಕೊಳ್ಳುವುದರಲ್ಲಿಯೂ ಕಷ್ಟವಾಗುತ್ತದೆ. ಬ್ರಹ್ಮನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಇಲ್ಲಿ ಬ್ರಹ್ಮಾಕುಮಾರ-ಕುಮಾರಿಯರು ಅಂದರೆ ಬ್ರಹ್ಮನ ಸಂತಾನರೆಂದೇ ಹೆಸರನ್ನು ತೋರಿಸುತ್ತಾರೆ. ಯಾವಾಗ ಯಾರೇ ಬಂದರೂ ಸಹ ಅವರಿಗೆ ತಿಳಿಸಿಕೊಡಬೇಕು - ಹೊಸ ಪ್ರಪಂಚವನ್ನು ರಚಿಸುವವರು ಈ ಬ್ರಹ್ಮಾರವರಲ್ಲ, ನಿರಾಕಾರ ತಂದೆಯಾಗಿದ್ದಾರೆ. ಅವರು ಬ್ರಹ್ಮಾರವರ ಮೂಲಕ ರಚನೆಯನ್ನು ರಚಿಸುತ್ತಾರೆ, ಪಾರಲೌಕಿಕ ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ರಚಿಸುತ್ತಾರೆ ಅಂದಮೇಲೆ ಇವರೂ ಸಹ ಪರಮಾತ್ಮನ ರಚನೆಯಾದರು. ನೀವು ಪತ್ರದ ಮೇಲೆ ಬರೆಯುತ್ತೀರಿ - ಶಿವಬಾಬಾ ಛಿ/o ಬ್ರಹ್ಮಾ. ಅಂದಾಗ ನೆನಪು ಮಾಡಲು ಇದೂ ಸಹ ಯುಕ್ತಿಯಾಗಿದೆ. ಶಿವಬಾಬಾ ಬ್ರಹ್ಮನ ಮೂಲಕ ಕಲಿಸುತ್ತಾರೆ. ಕೇವಲ ಮನ್ಮಾನಭವ ಎಂದು ಹೇಳುತ್ತಾರೆ ಮತ್ತ್ಯಾವುದೇ ಕಷ್ಟ ಕೊಡುವುದಿಲ್ಲ, ಇಷ್ಟನ್ನೇ ಹೇಳುತ್ತಾರೆ, ನೀವು ತಮ್ಮ ಉನ್ನತಿಯನ್ನು ಮಾಡಿಕೊಳ್ಳಲು ಬಯಸುವುದಾದರೆ ಮತ್ತು ಸತ್ಯ ಖಂಡದ ಮಾಲೀಕರಾಗಬೇಕೆಂದರೆ ಸತ್ಯ ಖಂಡವನ್ನು ಸ್ಥಾಪನೆ ಮಾಡುವವರಂತೂ ಒಬ್ಬರೇ ತಂದೆಯಾಗಿದ್ದಾರೆ, ಅವರನ್ನೇ ನೆನಪು ಮಾಡಿರಿ. ಬೇಹದ್ದಿನ ತಂದೆಯೇ ಬಂದು ಮಕ್ಕಳಿಗೆ ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ಪಾಪಗಳಿಂದ ಮುಕ್ತರಾಗುತ್ತೀರಿ, ಪರಮಪಿತ ಪರಮಾತ್ಮನ ಹೊರತು ಕೃಷ್ಣನಿಗೂ ಸಹ ಪತಿತ-ಪಾವನನೆಂದು ಹೇಳಲಾಗುವುದಿಲ್ಲ, ಮತ್ತ್ಯಾವುದೇ ಹೆಸರುಗಳನ್ನು ತೆಗೆದುಕೊಳ್ಳುವುದಿಲ್ಲ. ಎಲ್ಲರೂ ಗಾಡ್ಫಾದರ್ ಎಂದೇ ಹೇಳುತ್ತಾರೆ, ಎಲ್ಲರೂ ಅವರನ್ನು ತಂದೆಯೆಂದು ಹೇಳುತ್ತಾರೆ ಅಂದಮೇಲೆ ಅವರಿಗೆ ಸರ್ವವ್ಯಾಪಿಯೆಂದು ಹೇಳಲು ಹೇಗೆ ಸಾಧ್ಯ! ಅವರು ಎಲ್ಲರನ್ನೂ ಮುಕ್ತರನ್ನಾಗಿ ಮಾಡಲು ಬರುತ್ತಾರೆಂದು ಹೇಳುತ್ತಾರೆ. ಇದನ್ನು ಮನುಷ್ಯರು ತಿಳಿದುಕೊಂಡಿಲ್ಲ ಆದ್ದರಿಂದ ಕಲ್ಪದ ಆಯಸ್ಸನ್ನು ಉಲ್ಟಾ ಬರೆದು ಬಿಟ್ಟಿದ್ದಾರೆ. ಈಗ ಮಕ್ಕಳು ಈ ಡ್ರಿಲ್ ಮಾಡಬೇಕಾಗಿದೆ. ಜ್ಞಾನವಂತೂ ದೊರಕಿದೆ, ಯಾವಾಗ ಕುಳಿತುಕೊಳ್ಳುತ್ತೀರೋ ಆಗ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಟೀಚರ್ ಸನ್ಮುಖದಲ್ಲಿ ಗದ್ದುಗೆಯ ಮೇಲೆ ಕುಳಿತುಕೊಂಡರೆ ಶೋಭಿಸುತ್ತದೆ, ನಿಯಮವೇನೆಂದರೆ ಡ್ರಿಲ್ ಮಾಡಿಸಲು ಟೀಚರ್ ಅವಶ್ಯವಾಗಿ ಬೇಕು. ಕೆಲವರು ಹಿರಿಯ ಟೀಚರ್ ಇರುತ್ತಾರೆ, ಇನ್ನೂ ಕೆಲವರು ಕಿರಿಯ ಟೀಚರ್ ಇರುತ್ತಾರೆ. ಈಗ ನಿಮ್ಮಿಂದ ಪರೀಕ್ಷೆ ತೆಗೆದುಕೊಳ್ಳುವ ಯಾವುದೇ ಅವಶ್ಯಕತೆಯಿಲ್ಲ ಏಕೆಂದರೆ ನೀವು ಎಷ್ಟು ಸಮಯ ನಾವು ಪ್ರಿಯಾತಿ ಪ್ರಿಯ ತಂದೆಯನ್ನು ನೆನಪು ಮಾಡುತ್ತೇವೆಂದು ತಿಳಿದುಕೊಂಡಿದ್ದೀರಿ. ಬ್ರಹ್ಮನು ಪ್ರಿಯಾತಿ ಪ್ರಿಯನಲ್ಲ, ಯಾರು ಸದಾ ಪಾವನನಾಗಿದ್ದಾರೆಯೋ ಅವರೇ ಪ್ರಿಯಾತಿ ಪ್ರಿಯನಾಗಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲರಿಗಿಂತ ಪ್ರಿಯರು ಯಾರು ಎಂದು. ಮನುಷ್ಯರು ಪರಮಾತ್ಮನನ್ನೇ ಹೇ ದುಃಖಕರ್ತ-ಸುಖಕರ್ತನೆಂದು ನೆನಪು ಮಾಡುತ್ತಾರೆ, ಅವರಿಗೇ ಮುಕ್ತಿದಾತನೆಂತಲೂ ಹೇಳುತ್ತಾರೆ ಅರ್ಥಾತ್ ಅವರು ದುಃಖಗಳಿಂದ ಮುಕ್ತರನ್ನಾಗಿ ಮಾಡುವವರಾಗಿದ್ದಾರೆ ಆದ್ದರಿಂದ ಮಕ್ಕಳು ತಮ್ಮ ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾನುಸಾರ ಈ ಪ್ರಪಂಚವು ಪಾವನವಾಗಲೇಬೇಕಾಗಿದೆ ಮತ್ತು ಪಾವನ ಪ್ರಪಂಚವಾಗಲು ಇದಕ್ಕೆ ಬೆಂಕಿ ಬೀಳಲಿದೆ. ಹೇಗೆ ಬೆಂಕಿ ಬೀಳುವುದು ಎಂಬುದನ್ನೂ ಸಹ ತಿಳಿದುಕೊಂಡಿದ್ದೀರಿ. ವಿನಾಶವಾಗದೇ ಪ್ರಪಂಚವು ಪಾವನವಾಗಲು ಸಾಧ್ಯವಿಲ್ಲ. ಇದು ರುದ್ರ ಜ್ಞಾನ ಯಜ್ಞವಾಗಿದೆ. ರುದ್ರ ಮತ್ತು ಶಿವ - ಇವೆರಡರಲ್ಲಿ ಯಾವುದೇ ವ್ಯತ್ಯಾಸವಿಲ್ಲ ಆದರೆ ಶಿವ ಎಂಬ ಹೆಸರು ಮುಖ್ಯವಾಗಿದೆ. ಬಾಕಿ ತಮ್ಮ-ತಮ್ಮ ಭಾಷೆಗಳಲ್ಲಿ ಅನೇಕ ಹೆಸರುಗಳನ್ನು ಇಟ್ಟಿದ್ದಾರೆ. ಮೂಲ ಹೆಸರಾಗಿದೆ - ಶಿವ. ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಭಾರತದಲ್ಲಿ ಶಿವ ಜಯಂತಿಯು ಪ್ರಸಿದ್ಧವಾಗಿದೆ, ಬೇಹದ್ದಿನ ತಂದೆಯ ಶಿವ ಜಯಂತಿಯಾಗುತ್ತದೆ ಅಂದಮೇಲೆ ಅವರು ಅವಶ್ಯವಾಗಿ ಬರುವರು. ಶಿವ ತಂದೆಯ ಹೆಸರು ಪ್ರಸಿದ್ಧವಾಗಿದೆ, ಅವರು ಬ್ರಹ್ಮಾರವರ ಮೂಲಕ ಸ್ವರ್ಗದ ಸ್ಥಾಪನೆ ಮಾಡಿಸುವವರಾಗಿದ್ದಾರೆ ಅಂದಮೇಲೆ ಆ ಶ್ರೇಷ್ಠಾತಿ ಶ್ರೇಷ್ಠ ತಂದೆಯನ್ನು ನೆನಪು ಮಾಡಬೇಕಾಗಿದೆ. ಬ್ರಹ್ಮನು ಶ್ರೇಷ್ಠಾತಿ ಶ್ರೇಷ್ಠನಲ್ಲ, ವಾಸ್ತವದಲ್ಲಿ ಬ್ರಹ್ಮನೂ ಸಹ ತಂದೆಯಿಂದಲೇ ಶ್ರೇಷ್ಠನಾಗುತ್ತಾರೆ ಮತ್ತೆ ಕೆಳಗೂ ಇಳಿಯುತ್ತಾರೆ. ನೀವು ಬಿ.ಕೆ.ಗಳೂ ಸಹ ಕನಿಷ್ಟರಾಗಿದ್ದಿರಿ, ಈಗ ಪುನಃ ಶ್ರೇಷ್ಠರಾಗುತ್ತಿದ್ದೀರಿ. ಒಮ್ಮೆಲೇ ಶ್ರೇಷ್ಠ ತಂದೆಯ ಮನೆಗೆ ಹೋಗುವಿರಿ. ಈ ಸಮಯದಲ್ಲಿ ನೀವು ತ್ರಿಕಾಲದರ್ಶಿಗಳಾಗುತ್ತಿದ್ದೀರಿ, ನಾವೇ ಸ್ವದರ್ಶನ ಚಕ್ರಧಾರಿಗಳಾಗಿದ್ದೇವೆ. ನಾವು ಬ್ರಹ್ಮಾಂಡ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಳ್ಳುವವರಾಗಿದ್ದೇವೆಂದು ನಿಮಗೆ ತಿಳಿದಿದೆ. ಬ್ರಹ್ಮಾಂಡ ಅರ್ಥಾತ್ ಅತಿ ಮೇಲಿನ ಸ್ಥಾನ, ಎಲ್ಲಿ ಎಲ್ಲಾ ಆತ್ಮರು ನಿವಾಸ ಮಾಡುತ್ತಾರೆ. ಮೂಲವತನದಲ್ಲಿ ಆತ್ಮರು ನಿವಾಸ ಮಾಡುತ್ತಾರೆ ಎಂದು ತಿಳಿಸುವವರು ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ವಿಶ್ವ ಮತ್ತು ಬ್ರಹ್ಮಾಂಡವು ಬೇರೆ-ಬೇರೆಯಾಗಿದೆ, ಆತ್ಮರು ನಿರ್ವಾಣ ಧಾಮದಲ್ಲಿರುತ್ತಾರೆ, ಅದಕ್ಕೆ ಶಾಂತಿಧಾಮವೆಂದು ಹೇಳಲಾಗುತ್ತದೆ. ಅದು ಎಲ್ಲರಿಗೂ ಇಷ್ಟವಾಗುತ್ತದೆ. ಅದರ ನಿಜವಾದ ಹೆಸರು - ನಿರ್ವಾಣಧಾಮ ಹಾಗೂ ಶಾಂತಿಧಾಮವಾಗಿದೆ. ಆತ್ಮದ ಸ್ವರೂಪವೂ ಶಾಂತಿಯಾಗಿದೆ, ಒಂದು ಶಾಂತಿಧಾಮ ಅದರ ನಂತರ ಮೂವ್ಹಿ ಧಾಮ (ಸೂಕ್ಷ್ಮ ಲೋಕ) ಮತ್ತು ಇದು ಟಾಕಿ ಧಾಮ (ಶಬ್ಧ ಪ್ರಪಂಚ). ಮೂವ್ಹಿಧಾಮದಲ್ಲಿ ಹೆಚ್ಚು ಇರುವುದಿಲ್ಲ, ಶಾಂತಿಧಾಮದಲ್ಲಂತೂ ಅನೇಕರು ಇರಬೇಕಾಗುತ್ತದೆ ಮತ್ತ್ಯಾವುದೇ ಸ್ಥಾನವಿಲ್ಲ. ಆತ್ಮವು ಯಾವಾಗ ತಂದೆಯನ್ನು ಮತ್ತು ಮನೆಯನ್ನು ನೆನಪು ಮಾಡುತ್ತದೆಯೋ ಆಗ ಮೇಲೆ ನೆನಪು ಮಾಡುತ್ತದೆ. ಮಧ್ಯದಲ್ಲಿರುವ ಧಾಮವನ್ನು (ಸೂಕ್ಷ್ಮ ಲೋಕ) ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಮನುಷ್ಯರಿಗಂತೂ ಇಷ್ಟಾದರೂ ಜ್ಞಾನವಿಲ್ಲ. ಬ್ರಹ್ಮಾ-ವಿಷ್ಣು-ಶಂಕರರು ಸೂಕ್ಷ್ಮವತನದಲ್ಲಿರುತ್ತಾರೆ ಎಂದು ಕೇವಲ ಹೇಳಿ ಬಿಡುತ್ತಾರೆ ಬಾಕಿ ಅವರ ಕರ್ತವ್ಯದ ಬಗ್ಗೆ ಗೊತ್ತಿಲ್ಲ. ಅವರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮನಾಗುತ್ತಾರೆ. ಇದು ಅತಿ ಚಿಕ್ಕ ಯುಗವಾಗಿದೆ, ಸ್ವಲ್ಪವೇ ಸಮಯದ್ದಾಗಿದೆ. ಹೇಗೆ ಪುರುಷೋತ್ತಮ ಮಾಸವೆಂದು ಹೇಳಲಾಗುತ್ತದೆಯೋ ಹಾಗೆಯೇ ನಿಮ್ಮದು ಇದು ವಜ್ರ ಸಮಾನ ಉತ್ತಮರಾಗುವ ಶ್ರೇಷ್ಠ ಜನ್ಮವಾಗಿದೆ. ಶೂದ್ರರಿಂದ ಬ್ರಾಹ್ಮಣರಾಗುವುದು ಎಲ್ಲದಕ್ಕಿಂತ ಉತ್ತಮವಾಗಿದೆ. ಬ್ರಾಹ್ಮಣರಾಗುತ್ತೀರೆಂದರೆ ತಾತನ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗುತ್ತೀರಿ. |
ತಂದೆಯು ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ ಸದಾ ಮನ್ಮನಾಭವ. ತಂದೆಯ ಸಂದೇಶವನ್ನು ಎಲ್ಲರಿಗೆ ಕೊಡುತ್ತಾ ಇರಿ. ತಂದೆಗೆ ಮೆಸೆಂಜರ್ ಎಂದು ಹೇಳಲಾಗುತ್ತದೆ, ಮತ್ತ್ಯಾರೂ ಸಹ ಮೆಸೆಂಜರ್ ಅಥವಾ ಪೈಗಂಬರ್ ಅಲ್ಲ, ಆ ಧರ್ಮ ಗುರುಗಳಂತೂ ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಪೈಗಂಬರ್ ಕೇವಲ ಒಬ್ಬರೇ ಆಗಿದ್ದಾರೆ, ಅವರೇ ಬಂದು ನಿಮಗೆ ಪವಿತ್ರರಾಗುವ ಸಂದೇಶ ಕೊಡುತ್ತಾರೆ. ಧರ್ಮ ಪಿತರು ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ ಆದರೆ ಅವರು ಮರಳಿ ಕರೆದುಕೊಂಡು ಹೋಗುವ ಮಾರ್ಗದರ್ಶಕರಲ್ಲ. ಆ ಒಬ್ಬರೇ ಸದ್ಗುರು ಸದ್ಗತಿ ನೀಡುವವರಾಗಿದ್ದಾರೆ. ಸತ್ಯವನ್ನು ಹೇಳುವವರು, ಸತ್ಯ ಮಾರ್ಗವನ್ನು ತಿಳಿಸುವವರು ಒಬ್ಬರೇ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ ಅಂದಾಗ ಮಕ್ಕಳು ಬಹಳ ಗುಪ್ತ ಪರಿಶ್ರಮ ಪಡಬೇಕಾಗಿದೆ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಈ ದೇಹವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ಬಿಟ್ಟರೆ ಇಡೀ ಪ್ರಪಂಚವೇ ಬಿಟ್ಟು ಹೋಗುತ್ತದೆ, ಆತ್ಮವು ಒಂಟಿಯಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿರಿ, ಆಗ ಯಾವುದೇ ಮಿತ್ರ ಸಂಬಂಧಿಗಳು ನೆನಪಿಗೆ ಬರುವುದಿಲ್ಲ. ನಾವಾತ್ಮರಾಗಿದ್ದೇವೆ, ನಾವು ತಂದೆಯ ಬಳಿಗೆ ಹೋಗುತ್ತೇವೆ. ನೀವು ನನ್ನ ಬಳಿ ಹೇಗೆ ಬರಬಹುದು ಎಂದು ತಂದೆಯು ಸಲಹೆ ನೀಡುತ್ತಾರೆ. ಈ ಬ್ರಹ್ಮಾರವರೂ ಸಹ ಹೆಸರುವಾಸಿಯಾಗಿದ್ದಾರೆ. ಇವರ ಮೂಲಕ ತಂದೆಯು ಎಲ್ಲಾ ಆತ್ಮರ ಮಾರ್ಗದರ್ಶಕನಾಗಿ ಸೊಳ್ಳೆಗಳೋಪಾದಿಯಲ್ಲಿ ಮರಳಿ ಕರೆದುಕೊಂಡು ಹೋಗುತ್ತಾರೆ. ಈ ಯಥಾರ್ಥ ಜ್ಞಾನವು ಕೇವಲ ನೀವು ಮಕ್ಕಳ ಬುದ್ಧಿಯಲ್ಲಿದೆ. ನಿಮಗೆ ಪಾಂಡವ ಸೇನೆಯೆಂದೂ ಹೇಳುತ್ತಾರೆ. ಪಾಂಡವ ಪತಿಯು ಸ್ವಯಂ ಸಾಕ್ಷಾತ್ ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ನೀವು ಮಕ್ಕಳಿಗೆ ಆತ್ಮಿಕ ವ್ಯಾಯಾಮವನ್ನು ಕಲಿಸುತ್ತಿದ್ದಾರೆ ಕಲ್ಪದ ಹಿಂದಿನ ತರಹ. ವಿನಾಶವಾದಾಗ ಎಲ್ಲಾ ಆತ್ಮರು ಶರೀರವನ್ನು ಬಿಟ್ಟು ಹೊರಟು ಹೋಗುವರು. ಸತ್ಯಯುಗದಲ್ಲಿ ಯಾವಾಗ ಕೆಲವರೇ ಆತ್ಮರಿರುವರೋ ಆಗ ಒಂದು ರಾಜ್ಯವಿರುತ್ತದೆ, ಈಗ ಅನೇಕವಿದೆ ನಂತರ ಅವಶ್ಯವಾಗಿ ಒಂದೇ ರಾಜ್ಯವಾಗುವುದು. ಈ ಜ್ಞಾನವನ್ನು ಇಡೀ ದಿನ ಬುದ್ಧಿಯಲ್ಲಿ ಸ್ಮರಣೆ ಮಾಡಬೇಕಾಗಿದೆ. ಮಕ್ಕಳೇ, ಪ್ರದರ್ಶನಿಯಲ್ಲಿಯೂ ತಿಳಿಸಬೇಕಾಗಿದೆ, ಹೊಸ ದೆಹಲಿಯಿದ್ದಾಗ ಹೊಸ ಭಾರತವಾಗಿತ್ತು, ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಆದಿ ಸನಾತನ ಯಾವುದೇ ಹಿಂದೂ ಧರ್ಮವಾಗಿರಲಿಲ್ಲ. ನಾವು ಬ್ರಾಹ್ಮಣರಿಂದ ದೇವತೆಗಳಾಗುತ್ತೇವೆ, ಇದನ್ನು ಅನ್ಯ ಧರ್ಮದವರು ಒಪ್ಪುವುದಿಲ್ಲ. ಯಾರು ಮೊದಲು ಬರುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಇವು ಬಹಳ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ಈಗ ನಾಟಕವು ಮುಕ್ತಾಯವಾಗುತ್ತದೆ, ಎಲ್ಲಾ ಪಾತ್ರಧಾರಿಗಳು ಬಂದು ಬಿಟ್ಟಿದ್ದಾರೆ. 84 ಜನ್ಮಗಳನ್ನು ಪೂರ್ಣಮಾಡಿದಿರಿ, ಈಗ ಮತ್ತೆ ಮನೆಗೆ ಹೋಗಬೇಕಾಗಿದೆ ಏಕೆಂದರೆ ಬಹಳ ಸುಸ್ತಾಗಿ ಬಿಟ್ಟಿದ್ದೀರಲ್ಲವೆ. ಭಕ್ತಿಮಾರ್ಗವೇ ಸುಸ್ತಾಗುವ ಮಾರ್ಗವಾಗಿದೆ, ತಂದೆಯು ತಿಳಿಸುತ್ತಾರೆ - ಈಗ ನನ್ನನ್ನು ನೆನಪು ಮಾಡಿರಿ, ಅನ್ಯರಿಗೂ ಸಂದೇಶ ನೀಡಿರಿ – ದೇಹ ಸಹಿತ ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಅಶರೀರಿಯಾಗಿರಿ ಆಗ ಪಾವನರಾಗಿ ಬಿಡುವಿರಿ, ಏಕೆಂದರೆ ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ. |
ಇಲ್ಲಿಯೂ ಮಕ್ಕಳು ಸನ್ಮುಖದಲ್ಲಿ ತಂದೆಯ ಬಳಿ ರಿಫ್ರೆಶ್ ಆಗಲು ಬರುತ್ತೀರಿ, ತಂದೆಯು ಸನ್ಮುಖದಲ್ಲಿ ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ದೇಹಾಭಿಮಾನವನ್ನು ಬಿಟ್ಟು ನನ್ನೊಬ್ಬನನ್ನೇ ನೆನಪು ಮಾಡಿರಿ. ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ, ನೀವು ಒಬ್ಬ ತಂದೆಯನ್ನು ನೆನಪು ಮಾಡಿ ಪವಿತ್ರರಾಗಿರಿ ಆಗ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಒಂದುವೇಳೆ ಪರಿಶ್ರಮ ಪಡದಿದ್ದರೆ ಫಲವು ಸಿಗುವುದಿಲ್ಲ ಮತ್ತೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತಮ್ಮ ಸಂಪಾದನೆಯನ್ನೂ ಜಮಾ ಮಾಡಿಕೊಳ್ಳುತ್ತಾ ಇರಿ ಮತ್ತು ಅನ್ಯರಿಗೂ ನಿಮಂತ್ರಣ ಕೊಡಿ, ತಂದೆಯ ಮಾರ್ಗವನ್ನೂ ತಿಳಿಸಿರಿ. ನೀವು ಮಕ್ಕಳೂ ಸಹ ಕಲ್ಯಾಣಕಾರಿಗಳಾಗಬೇಕಾಗಿದೆ, ತಮ್ಮ ಮಿತ್ರ ಸಂಬಂಧಿಗಳ ಕಲ್ಯಾಣ ಮಾಡಬೇಕಾಗಿದೆ. ಇಲ್ಲಿ ನಿಮ್ಮನ್ನು ದೇಹೀ-ಅಭಿಮಾನಿಗಳನ್ನಾಗಿ ಮಾಡಲಾಗುತ್ತದೆ. ತಂದೆಯು ಮಹಾಮಂತ್ರವನ್ನು ಕೊಡುತ್ತಾರೆ. ಪ್ರಾಚೀನ ಯೋಗವನ್ನು ತಂದೆಯೇ ಬಂದು ಕಲಿಸಿದ್ದಾರೆ, ಅದಕ್ಕಾಗಿಯೇ ಗಾಯನವಿದೆ - ಯೋಗಾಗ್ನಿಯಿಂದ ಪಾಪಗಳು ಭಸ್ಮವಾಗುತ್ತವೆ, ಕಲ್ಪದ ಮೊದಲೂ ಸಹ ಇದೇ ಸೂಚನೆ ಸಿಕ್ಕಿತ್ತು. ತಂದೆಯು ಸನ್ನೆ ಮಾಡುತ್ತಾರೆ - ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ, ಭಲೆ ತಮ್ಮ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ನಾನು ನಿಮಗೆ ಶರಣಾದೆನು... ಎಂದು ಗಾಯನವಿದೆ. ಇದೂ ಸಹ ಆಗುತ್ತದೆ - ಯಾರಾದರೂ ದುಃಖಿಯಾದಾಗ ಅಂತಹವರು ಹೋಗಿ ಉತ್ತಮ ಶಕ್ತಿಯಿರುವವರ ಆಶ್ರಯವನ್ನು ತೆಗೆದುಕೊಳ್ಳುತ್ತಾರೆ. ಇಲ್ಲಂತೂ ಪ್ರತ್ಯಕ್ಷದಲ್ಲಿದೆ, ಯಾವಾಗ ಬಹಳ ದುಃಖವನ್ನು ನೋಡುವರೋ, ಸಹನೆ ಮಾಡಲು ಸಾಧ್ಯವಿಲ್ಲವೋ ಅಸಹಾಯಕರಾದಾಗ ಓಡಿ ಬಂದು ತಂದೆಯ ಆಶ್ರಯ ತೆಗೆದುಕೊಳ್ಳುತ್ತಾರೆ. ತಂದೆಯ ವಿನಃ ಮತ್ತ್ಯಾರೂ ಸದ್ಗತಿ ನೀಡಲು ಸಾಧ್ಯವಿಲ್ಲ. ಹಳೆಯ ಪ್ರಪಂಚದ ವಿನಾಶವಾಗಲಿದೆ ಎಂದು ಮಕ್ಕಳಿಗೆ ತಿಳಿದಿದೆ, ತಯಾರಿಯು ನಡೆಯುತ್ತಿದೆ. ಇತ್ತ ಕಡೆ ನಿಮ್ಮ ಸ್ಥಾಪನೆಯ ತಯಾರಿಗಳು, ಅತ್ತ ಕಡೆ ವಿನಾಶದ ತಯಾರಿ ಆಗುತ್ತಿದೆ. ಸ್ಥಾಪನೆಯಾಗಿ ಬಿಟ್ಟರೆ ವಿನಾಶವೂ ಸಹ ಅವಶ್ಯವಾಗಿ ಆಗುವುದು. ನಿಮಗೆ ತಿಳಿದಿದೆ, ತಂದೆಯು ಸ್ಥಾಪನೆ ಮಾಡಿಸಲು ಬಂದಿದ್ದಾರೆ, ಇವರ ಮೂಲಕ ಆಸ್ತಿಯೂ ಅವಶ್ಯವಾಗಿ ಸಿಗುವುದು. ಬಾಕಿ ಪ್ರೇರಣೆಯಿಂದ ಕೆಲಸ ನಡೆಯುವುದಿಲ್ಲ. ನಾವು ತಮ್ಮ ಪ್ರೇರಣೆಯಿಂದ ಓದುತ್ತೇವೆಂದು ಶಿಕ್ಷಕರಿಗೆ ಹೇಳುವರೇ? ಒಂದುವೇಳೆ ಎಲ್ಲವೂ ಪ್ರೇರಣೆಯಿಂದ ಆಗುವಂತಿದ್ದರೆ ಶಿವ ಜಯಂತಿಯನ್ನು ಏಕೆ ಆಚರಿಸಲಾಗುತ್ತದೆ. ಪ್ರೇರಣೆಯಿಂದ ಮಾಡುವವರ ಶಿವ ಜಯಂತಿಯನ್ನು ಆಚರಿಸುವ ಅವಶ್ಯಕತೆಯಿಲ್ಲ. ಜಯಂತಿಯಂತೂ ಎಲ್ಲಾ ಆತ್ಮರಿಗೆ ಆಗುತ್ತದೆ, ಆತ್ಮರೆಲ್ಲರೂ ಜೀವದಲ್ಲಿ ಬರುತ್ತಾರೆ, ಆತ್ಮ ಮತ್ತು ಶರೀರವು ಸೇರಿದಾಗ ಪಾತ್ರವನ್ನು ಅಭಿನಯಿಸುತ್ತಾರೆ. ಆತ್ಮದ ಸ್ವ ಧರ್ಮವೇ ಶಾಂತಿಯಾಗಿದೆ, ಅದರಲ್ಲಿಯೇ ಜ್ಞಾನ ಧಾರಣೆಯಾಗುತ್ತದೆ. ಆತ್ಮವೇ ಒಳ್ಳೆಯ - ಕೆಟ್ಟ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ತಂದೆಯಂತೂ ಸ್ವರ್ಗದ ರಚಯಿತನಾಗಿದ್ದಾರೆ. ಅಲ್ಲಿ ಪವಿತ್ರತೆಯಯೇ ಇರುತ್ತದೆ, ಅಪವಿತ್ರತೆಯ ಹೆಸರು, ಗುರುತು ಇರುವುದಿಲ್ಲ. ಇದು ವಿಷಯ ಸಾಗರವಾಗಿದೆ, ಎಷ್ಟು ಸ್ಪಷ್ಟವಾಗಿ ತಿಳಿಸಿದರೂ ಸಹ ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಆದರೆ ನೀವು ಯಾರ ಮೇಲೂ ದೋಷ ಹೊರಿಸುವುದಿಲ್ಲ ಏಕೆಂದರೆ ಎಲ್ಲರೂ ಡ್ರಾಮಾದ ಬಂಧನದಲ್ಲಿ ಬಂಧಿತರಾಗಿದ್ದಾರೆ. |
ನೀವು ತಿಳಿದುಕೊಳ್ಳುತ್ತೀರಿ - ಮೇಲಿನಿಂದ ಏಣಿಯನ್ನಿಳಿಯುತ್ತಾ ಕೆಳಗಿಳಿದು ಬಂದಿದ್ದೇವೆ, ಡ್ರಾಮಾನುಸಾರ ನಾವು ಇಳಿಯಲೇಬೇಕಾಗಿದೆ. ಈಗ ಮತ್ತೆ ತಂದೆಯು ತಿಳಿಸುತ್ತಾರೆ, ಮಕ್ಕಳೇ ಏರುವುದಕ್ಕಾಗಿ ಪುರುಷಾರ್ಥ ಮಾಡಬೇಕಾಗಿದೆ ಆದರೆ ಯಾರ ಅದೃಷ್ಟದಲ್ಲಿಲ್ಲವೋ ಅವರು ಹೀಗೆ ಹೇಳಿ ಬಿಡುತ್ತಾರೆ. ಯಾರು ಹೀಗೆ ಹೇಳುವರೋ ಅದರಿಂದಲೇ ತಿಳಿದುಕೊಳ್ಳಲಾಗುವುದು - ಇವರ ಅದೃಷ್ಟದಲ್ಲಿ ಇಲ್ಲವೆಂದು. 2-4 ವರ್ಷಗಳ ಕಾಲ ನಡೆಯುತ್ತಾ-ನಡೆಯುತ್ತಾ ಮತ್ತೆ ಕೆಳಗೆ ಬೀಳುತ್ತಾರೆ. ನಾವು ಬಹಳ ದೊಡ್ಡ ತಪ್ಪು ಮಾಡಿದ್ದೇವೆ, ಬಹಳ ದೊಡ್ಡ ಪೆಟ್ಟು ತಿಂದೆವು ಎಂಬುದನ್ನು ಅನುಭವ ಮಾಡುತ್ತಾರೆ. ಇದೂ ಸಹ ಅರ್ಧ ಕಲ್ಪದ ರೋಗವಾಗಿದೆ, ಕಡಿಮೆಯಲ್ಲ. ಅರ್ಧ ಕಲ್ಪದ ರೋಗಿಗಳಾಗಿದ್ದೀರಿ, ಭೋಗಿಗಳಾಗುವುದರಿಂದಲೇ ರೋಗಿಗಳಾಗುತ್ತೀರಿ, ಆದ್ದರಿಂದ ತಂದೆಯು ಬಂದು ಪುರುಷಾರ್ಥ ಮಾಡಿಸುತ್ತಾರೆ. ಕೃಷ್ಣನಿಗೆ ಯೋಗೇಶ್ವರನೆಂದು ಹೇಳುತ್ತಾರೆ, ಈ ಸಮಯದಲ್ಲಿ ನೀವು ಸತ್ಯ-ಸತ್ಯವಾದ ಯೋಗಿಗಳಾಗಿದ್ದೀರಿ. ಯೋಗೇಶ್ವರನು ನಿಮಗೆ ಯೋಗವನ್ನು ಕಲಿಸುತ್ತಾರೆ. ನೀವು ಜ್ಞಾನ ಜ್ಞಾನೇಶ್ವರರೂ ಆಗಿದ್ದೀರಿ, ನಂತರ ರಾಜ ರಾಜೇಶ್ವರರಾಗುತ್ತೀರಿ. ಜ್ಞಾನದಿಂದ ನೀವು ಧನವಂತರಾಗುತ್ತೀರಿ, ಯೋಗದಿಂದ ಸದಾ ಆರೋಗ್ಯವಂತರಾಗುತ್ತೀರಿ. ಅರ್ಧಕಲ್ಪಕ್ಕಾಗಿ ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ ಅಂದಮೇಲೆ ಇದಕ್ಕಾಗಿ ಎಷ್ಟೊಂದು ಪುರುಷಾರ್ಥ ಮಾಡಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪಾವನರಾಗಲು ಅಶರೀರಿಯಾಗುವ ಅಭ್ಯಾಸ ಮಾಡಬೇಕಾಗಿದೆ. ಎಲ್ಲರಿಗೆ ಸಂದೇಶ ಕೊಡಬೇಕಾಗಿದೆ - ಒಬ್ಬ ತಂದೆಯನ್ನು ನೆನಪು ಮಾಡಿರಿ, ದೇಹ ಸಹಿತ ಎಲ್ಲವನ್ನೂ ಮರೆಯಿರಿ. |
2. ಯೋಗೇಶ್ವರ ತಂದೆಯಿಂದ ಯೋಗವನ್ನು ಕಲಿತು ಸತ್ಯ-ಸತ್ಯ ಯೋಗಿಗಳಾಗಬೇಕಾಗಿದೆ. ಜ್ಞಾನದಿಂದ ಧನವಂತರು ಮತ್ತು ಯೋಗದಿಂದ ನಿರೋಗಿ, ಸದಾ ಆರೋಗ್ಯವಂತರಾಗಬೇಕು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲಿನ ಅರ್ಥವನ್ನು ತಿಳಿದುಕೊಂಡಿರಿ. ನೀವೀಗ ಜೀವಿಸಿದ್ದಂತೆಯೇ ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ಇಡೀ ಕಲ್ಪ ಲೌಕಿಕ ತಂದೆಯ ಮಕ್ಕಳಾಗಿದ್ದೀರಿ. ನಿಮಗೆ ತಿಳಿದಿದೆ - ಬೇಹದ್ದಿನ ತಂದೆಯಿಂದ ನಾವು ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಒಂದುವೇಳೆ ತಂದೆಯನ್ನು ಬಿಟ್ಟು ಬಿಟ್ಟರೆ ಬೇಹದ್ದಿನ ಆಸ್ತಿಯು ಸಿಗಲು ಸಾಧ್ಯವಿಲ್ಲ. ಭಲೆ ನೀವು ತಿಳಿಸುತ್ತೀರಿ, ಆದರೆ ಸ್ವಲ್ಪದರಲ್ಲಿಯೇ ಯಾರೂ ಖುಷಿ ಪಡುವುದಿಲ್ಲ. ಮನುಷ್ಯರು ಧನವನ್ನು ಬಹಳ ಬಯಸುತ್ತಾರೆ. ಧನವಿಲ್ಲದೆ ಯಾರೂ ಸುಖಿಯಾಗಿರಲು ಸಾಧ್ಯವಿಲ್ಲ. ಧನವೂ ಬೇಕು, ಶಾಂತಿಯೂ ಬೇಕು, ನಿರೋಗಿ ಕಾಯವೂ ಬೇಕು. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಇಂದು ಏನಿದೆ? ನಾಳೆ ಏನಾಗುವುದು? ವಿನಾಶವಂತೂ ಸನ್ಮುಖದಲ್ಲಿ ನಿಂತಿದೆ. ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿಲ್ಲ. ಒಂದುವೇಳೆ ವಿನಾಶ ಸನ್ಮುಖದಲ್ಲಿ ನಿಂತಿದೆ ಎಂಬುದು ಅರ್ಥವಾದರೂ ಸಹ ಏನು ಮಾಡಬೇಕೆಂಬುದು ಗೊತ್ತಿಲ್ಲ. ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ನಿಮಗೆ ಈ ರೀತಿ ಅನಿಸುತ್ತದೆ - ಯಾವಾಗ ಬೇಕಾದರೂ ಯುದ್ಧವಾಗಬಹುದು. ಸ್ವಲ್ಪ ಕಿಡಿ ಬಂದರೆ ಸಾಕು ಅಲ್ಲೋಲ-ಕಲ್ಲೋಲವಾಗುವುದು, ಇದರಲ್ಲಿ ನಿಧಾನವಾಗುವುದಿಲ್ಲ. ಮೊದಲೂ ಸಹ ಚಿಕ್ಕ ಮಾತಿಗೆ ಎಷ್ಟು ದೊಡ್ಡ ಯುದ್ಧವಾಗಿತ್ತು! ಮಕ್ಕಳಿಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸಮಾಪ್ತಿಯಾಯಿತೆಂದರೆ ಆಯಿತು. ಆದ್ದರಿಂದ ಈಗ ಬೇಗನೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ತಂದೆಯನ್ನು ಸದಾ ನೆನಪು ಮಾಡುತ್ತಿದ್ದರೆ ಬಹಳ ಹರ್ಷಿತರಾಗಿರುತ್ತೀರಿ. ದೇಹಾಭಿಮಾನದಲ್ಲಿ ಬರುವುದರಿಂದಲೇ ಆ ಖುಷಿಯು ಮಾಯವಾಗುತ್ತದೆ. ದೇಹೀ-ಅಭಿಮಾನಿಗಳಾಗುತ್ತೀರೆಂದರೆ ತಂದೆಯನ್ನು ನೆನಪು ಮಾಡುವಿರಿ. ದೇಹಾಭಿಮಾನದಲ್ಲಿ ಬಂದರೆ ತಂದೆಯನ್ನು ಮರೆತು ದುಃಖಿಯಾಗುತ್ತೀರಿ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಬೇಹದ್ದಿನ ಸುಖವನ್ನೂ ಪಡೆಯುತ್ತೀರಿ. ನೀವಿಲ್ಲಿ ಬಂದಿರುವುದೇ ಇಂತಹ ಲಕ್ಷ್ಮೀ-ನಾರಾಯಣರಾಗುವುದಕ್ಕಾಗಿ. ರಾಜ-ರಾಣಿ ಮತ್ತು ಪ್ರಜೆಗಳ ನೌಕರ-ಚಾಕರರಾಗುವುದರಲ್ಲಿ ಬಹಳ ಅಂತರವಿದೆಯಲ್ಲವೆ. ಈಗಿನ ಪುರುಷಾರ್ಥವೇ ಕಲ್ಪ-ಕಲ್ಪಕ್ಕಾಗಿ ನಿಗಧಿಯಾಗುತ್ತದೆ. ನಾವು ಎಷ್ಟು ಪುರುಷಾರ್ಥ ಮಾಡಿದ್ದೇವೆ ಎಂಬುದು ಅಂತಿಮದಲ್ಲಿ ಸಾಕ್ಷಾತ್ಕಾರವಾಗುತ್ತದೆ. ಈಗಲೂ ಸಹ ತಂದೆಯು ಹೇಳುತ್ತಾರೆ, ತಮ್ಮ ಸ್ಥಿತಿಯನ್ನು ನೋಡಿಕೊಳ್ಳುತ್ತಾ ಇರಿ. ಯಾವ ಮಧುರಾತಿ ಮಧುರ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆಯೋ ಅವರನ್ನು ನಾವು ಎಷ್ಟು ನೆನಪು ಮಾಡುತ್ತೇವೆ? ನಿಮ್ಮದೆಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಖುಷಿಯೂ ಇರುವುದು. ನಾವೀಗ ಸನ್ಮುಖ ಬಂದು ತಲುಪಿದ್ದೇವೆ ಎಂಬುದನ್ನು ತಿಳಿದುಕೊಳ್ಳುತ್ತೀರಿ. ಕೆಲವರು ಗುರಿಯು ಇನ್ನೆಷ್ಟು ದೂರವಿದೆಯೋ ಎಂದು ಹೇಳಿ ಸುಸ್ತಾಗಿ ಬಿಡುತ್ತಾರೆ. ತಲುಪಿದಾಗಲೇ ಪರಿಶ್ರಮವೂ ಸಫಲವಾಗುವುದು. ಯಾರಿಗೆ ಭಗವಂತನೆಂದು ಹೇಳಲಾಗಿದೆ ಎಂಬುದು ಪ್ರಪಂಚದವರಿಗೆ ಗೊತ್ತಿಲ್ಲ. ಹೇ ಭಗವಂತ ಎಂದು ಹೇಳುತ್ತಾರೆ ಮತ್ತೆ ಕಲ್ಲು-ಮುಳ್ಳಿನಲ್ಲಿದ್ದಾರೆಂದು ಹೇಳುತ್ತಾರೆ. ನೀವೀಗ ತಿಳಿದುಕೊಳ್ಳುತ್ತೀರಿ, ನಾವು ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ಈಗ ತಂದೆಯ ಮತದನುಸಾರವೇ ನಡೆಯಬೇಕಾಗಿದೆ. ಭಲೆ ವಿದೇಶದಲ್ಲಿಯೇ ಇರಿ, ಅಲ್ಲಿದ್ದರೂ ಸಹ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ನಿಮಗೆ ಶ್ರೀಮತವಂತೂ ಸಿಕ್ಕಿದೆ, ತಂದೆಯ ನೆನಪಿನ ವಿನಃ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾಗಲು ಸಾಧ್ಯವಿಲ್ಲ. ಬಾಬಾ, ನಾವು ತಮ್ಮಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಹೇಗೆ ನಮ್ಮ ತಂದೆಯು (ಬ್ರಹ್ಮಾ) ಆಸ್ತಿಯನ್ನು ತೆಗೆದುಕೊಳ್ಳುವರೋ ಹಾಗೆಯೇ ನಾವೂ ಸಹ ಪುರುಷಾರ್ಥ ಮಾಡಿ ಅವರ ಸಿಂಹಾಸನದ ಮೇಲೆ ಅವಶ್ಯವಾಗಿ ಕುಳಿತುಕೊಳ್ಳುತ್ತೇವೆ. ಮಮ್ಮಾ-ಬಾಬಾ ರಾಜ ರಾಜೇಶ್ವರ-ರಾಜ ರಾಜೇಶ್ವರಿಯಾಗುತ್ತಾರೆ ಅಂದಮೇಲೆ ನಾವೂ ಆಗುತ್ತೇವೆ ಎಂದು ಹೇಳುತ್ತೀರಿ. ಪರೀಕ್ಷೆಯಂತೂ ಎಲ್ಲರಿಗೂ ಒಂದೇ ಆಗಿದೆ. ನಿಮಗೆ ಬಹಳ ಸ್ವಲ್ಪವೇ ಕಲಿಸಲಾಗುತ್ತದೆ, ಕೇವಲ ತಂದೆಯನ್ನು ನೆನಪು ಮಾಡಿರಿ, ಇದಕ್ಕೇ ಸಹಜ ರಾಜಯೋಗ ಬಲವೆಂದು ಹೇಳಲಾಗುತ್ತದೆ. ನೀವು ತಿಳಿದುಕೊಳ್ಳುತ್ತೀರಿ, ಯೋಗದಿಂದ ಬಹಳ ಬಲ ಸಿಗುತ್ತದೆ, ನಾವು ಯಾವುದೇ ವಿಕರ್ಮ ಮಾಡಿದರೆ ಬಹಳ ಶಿಕ್ಷೆಯನ್ನು ಅನುಭವಿಸುತ್ತೇವೆ, ಪದವಿ ಭ್ರಷ್ಟರಾಗುತ್ತೀರಿ. ನೆನಪಿನಲ್ಲಿಯೇ ಮಾಯೆಯು ವಿಘ್ನಗಳನ್ನು ಹಾಕುತ್ತದೆ. |
ನೀವು ತಿಳಿದುಕೊಂಡಿದ್ದೀರಿ - ನಾವೀಗ ಪಾವನ ಪ್ರಪಂಚಕ್ಕೆ ಹೋಗುತ್ತಿದ್ದೇವೆ. ಯಾರು ಬ್ರಾಹ್ಮಣರಾಗುವರೋ ಅವರೇ ನಿಮಿತ್ತರಾಗುವರು. ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗದ ವಿನಃ ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ತಂದೆಯು ಮಕ್ಕಳನ್ನು ಆಸ್ತಿ ಕೊಡುವುದಕ್ಕಾಗಿಯೇ ರಚಿಸುತ್ತಾರೆ. ನಾವಂತೂ ಶಿವ ತಂದೆಯ ಮಕ್ಕಳಾಗಿ ಬಿಟ್ಟಿದ್ದೇವೆ. ಅವರು ಹೊಸ ಸೃಷ್ಟಿಯನ್ನು ರಚಿಸುವುದೇ ಮಕ್ಕಳಿಗೆ ಆಸ್ತಿಯನ್ನು ಕೊಡುವುದಕ್ಕಾಗಿ. ಶರೀರಧಾರಿಗಳಿಗೇ ಆಸ್ತಿಯನ್ನು ಕೊಡುತ್ತಾರೆ. ಆತ್ಮಗಳಂತೂ ಮೇಲಿರುತ್ತಾರೆ. ಅಲ್ಲಿ ಆಸ್ತಿ ಅಥವಾ ಪ್ರಾಲಬ್ಧದ ಮಾತಿರುವುದಿಲ್ಲ. ನೀವೀಗ ಪುರುಷಾರ್ಥ ಮಾಡಿ ಪ್ರಾಲಬ್ಧವನ್ನು ಪಡೆಯುತ್ತಿದ್ದೀರಿ, ಇದು ಪ್ರಪಂಚದವರಿಗೆ ಗೊತ್ತಿಲ್ಲ. ಈಗ ಸಮಯವು ಸಮೀಪಿಸುತ್ತಾ ಹೋಗುತ್ತಿದೆ. ಒಂದುವೇಳೆ ಇಂತಹವರು ನಮ್ಮನ್ನು ಈ ರೀತಿ ಮಾಡಿದರೆ ನಾವು ಒಮ್ಮೆಲೆ ಅವರನ್ನು ಹಾರಿಸಿ ಬಿಡುತ್ತೇವೆ ಎಂದು ಸೂಚನೆ ಕೊಡುತ್ತಿರುತ್ತಾರೆ, ಹಾರಿಸುವ ತಯಾರಿಗಳಾಗುತ್ತಿವೆ. ಬಾಂಬುಗಳನ್ನು ಯಾರು ಸುಮ್ಮನೆ ಇಟ್ಟುಕೊಳ್ಳುವುದಿಲ್ಲ, ಬಹಳ ತಯಾರಿಗಳು ನಡೆಯುತ್ತಿದೆ. ಬ್ರಿಟೀಷ್ ಸರ್ಕಾರದ ಸಮಯದಲ್ಲಿ ಪಾಕೀಸ್ತಾನ, ಹಿಂದೂಸ್ತಾನ ಇತ್ತೆ? ಯಾದವರ ಯುದ್ಧವಾಯಿತೆಂದು ಬರೆಯಲ್ಪಟ್ಟಿದೆ, ಪಾಂಡವರು ಮತ್ತು ಕೌರವರ ಯುದ್ಧವಾಗಲಿಲ್ಲ, ಯಾದವರು ಹೊಡೆದಾಡುತ್ತಿದ್ದಾರೆ. ಬಾಂಬುಗಳೂ ತಯಾರಾಗಿವೆ. ಈಗ ತಂದೆಯು ನಮಗೆ ಆದೇಶ ನೀಡುತ್ತಾರೆ. ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಇಲ್ಲದಿದ್ದರೆ ಅಂತಿಮದಲ್ಲಿ ಬಹಳ ಅಳಬೇಕಾಗುವುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಕೋಪದಲ್ಲಿ ಹೋಗಿ ಮುಳುಗಿ ಸಾಯುತ್ತಾರೆ, ಇಲ್ಲಿ ಕೋಪದ ಮಾತಿಲ್ಲ. ಅಂತಿಮದಲ್ಲಿ ನಿಮಗೆ ಬಹಳ ಸಾಕ್ಷಾತ್ಕಾರಗಳಾಗುತ್ತವೆ. ನಾವು ಏನೇನಾಗುತ್ತೇವೆ ಎಂಬುದೂ ಸಹ ಅರ್ಥವಾಗಿ ಬಿಡುತ್ತದೆ. ಪುರುಷಾರ್ಥ ಮಾಡಿಸುವುದೇ ತಂದೆಯ ಕರ್ತವ್ಯವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕರ್ಮ ಮಾಡುತ್ತಾ ನೆನಪು ಮಾಡುವುದನ್ನು ಮರೆತು ಹೋಗುತ್ತೀರಿ ಅಥವಾ ಬಿಡುವು ಸಿಗುವುದಿಲ್ಲವೆಂದರೆ ಸಮಯ ತೆಗೆದು ಕುಳಿತು ತಂದೆಯನ್ನು ನೆನಪು ಮಾಡಿರಿ. ಪರಸ್ಪರ ನೀವು ಮಿಲನ ಮಾಡುತ್ತೀರೆಂದರೂ ಈ ಪ್ರಯತ್ನ ಪಡಿ, ನಾವು ತಂದೆಯನ್ನು ನೆನಪು ಮಾಡಬೇಕು, ಎಲ್ಲರೂ ಸೇರಿ ಕುಳಿತುಕೊಂಡಾಗ ಚೆನ್ನಾಗಿ ನೆನಪು ಮಾಡಬಹುದು. ಸಂಘಟನೆಯ ಸಹಯೋಗ ಸಿಗುವುದು. ಮೂಲ ಮಾತಾಗಿದೆ, ತಂದೆಯನ್ನು ನೆನಪು ಮಾಡುವುದು. ಇಲ್ಲಿ ಬರುವುದಾದರೆ ಬನ್ನಿ ಅಥವಾ ಬರದಿದ್ದರೂ ಸಹ ತಂದೆಯನ್ನು ನೆನಪು ಮಾಡುತ್ತಾ ಇರಿ. ಹೇಗೆ ಯಾರಾದರೂ ವಿದೇಶಕ್ಕೆ ಹೋಗುತ್ತಾರೆಂದರೆ ಅವರು ಅಷ್ಟು ದೂರದಿಂದ ಬರುವುದಕ್ಕೆ ಆಗುವುದಿಲ್ಲ. ಅಲ್ಲಿಯೂ ಸಹ ಕೇವಲ ಒಂದು ಮಾತನ್ನು ನೆನಪಿಟ್ಟುಕೊಳ್ಳಿ. ತಂದೆಯ ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ಒಂದು ಮಾತನ್ನು ನೆನಪಿಟ್ಟುಕೊಳ್ಳಿ, ತಂದೆಯನ್ನು ನೆನಪು ಮಾಡಿರಿ. ತಂದೆಯು ತಿಳಿಸುತ್ತಾರೆ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ವಿಶ್ವದ ಮಾಲೀಕರಾಗುತ್ತೀರಿ. ಮೂಲ ಮಾತು ನೆನಪಿನದಾಗಿದೆ, ಎಲ್ಲಿಯೂ ಹೋಗುವ ಅವಶ್ಯಕತೆಯಿಲ್ಲ. ಮನೆಯಲ್ಲಿರಿ ಕೇವಲ ತಂದೆಯನ್ನು ನೆನಪು ಮಾಡುತ್ತಾ ಇರಿ. ಪವಿತ್ರರಾಗದಿದ್ದರೆ ನೆನಪು ಮಾಡಲು ಆಗುವುದಿಲ್ಲ. ಎಲ್ಲರೂ ಬಂದು ತರಗತಿಯಲ್ಲಿ ಓದುತ್ತೇವೆಂದಲ್ಲ, ಮಂತ್ರವನ್ನು ತೆಗೆದುಕೊಂಡ ಮೇಲೆ ಭಲೆ ಎಲ್ಲಿಯೇ ಹೋಗಿ ಓದಿರಿ. ಸತೋಪ್ರಧಾನರಾಗುವ ಮಾರ್ಗವನ್ನು ತಂದೆಯು ತಿಳಿಸಿದ್ದಾರೆ. ವಾಸ್ತವದಲ್ಲಿ ಸೇವಾಕೇಂದ್ರಕ್ಕೆ ಬರುವುದರಿಂದ ಹೊಸ-ಹೊಸ ವಿಚಾರಗಳನ್ನು ಕೇಳುತ್ತಾ ಇರುತ್ತೀರಿ. ಒಂದುವೇಳೆ ಯಾವುದೇ ಕಾರಣದಿಂದ ಬರಲು ಆಗದೇ ಇದ್ದರೆ ಉದಾ: ಮಳೆ ಬರುತ್ತದೆ ಅಥವಾ ಕರ್ಫ್ಯೂ ಆಗುತ್ತದೆ, ಯಾರೂ ಹೊರಗೆ ಬರಲು ಸಾಧ್ಯವಾಗದಿದ್ದಾಗ ಏನು ಮಾಡುವಿರಿ? ಆದ್ದರಿಂದ ತಂದೆಯು ತಿಳಿಸುತ್ತಾರೆ - ಪರವಾಗಿಲ್ಲ, ಎಲ್ಲಿದ್ದರೂ ಸಹ ನೀವು ನೆನಪಿನಲ್ಲಿರಿ. ನಡೆಯುತ್ತಾ-ತಿರುಗಾಡುತ್ತಾ ನೆನಪಿನಲ್ಲಿರಿ, ಅನ್ಯರಿಗೆ ಇದನ್ನೇ ಹೇಳಿರಿ - ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ದೇವತೆಗಳಾಗಿ ಬಿಡುತ್ತೀರಿ. ಎರಡೇ ಅಕ್ಷರಗಳಿವೆ. |
ತಂದೆಯು ಹೇಳುತ್ತಾರೆ - ಮಕ್ಕಳೇ, ಬಾಲ್ಯವನ್ನು ಮರೆಯಬೇಡಿ. ಒಂದುವೇಳೆ ತಂದೆಯನ್ನು ಮರೆತರೆ ಇಂದು ನಗುತ್ತೀರಿ ನಾಳೆ ಅಳಬೇಕಾಗುವುದು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸ್ವರ್ಗದಲ್ಲಂತೂ ಹೋಗುತ್ತೇವೆ ಅಲ್ಲವೆ. ಅಂದಮೇಲೆ ಅದೃಷ್ಟದಲ್ಲಿ ಏನಿದ್ದರೆ ಅದೇ ಆಗುವುದೆಂದು ಅನೇಕರು ಹೇಳುತ್ತಾರೆ. ಅದಕ್ಕೆ ಯಾರೂ ಪುರುಷಾರ್ಥ ಮಾಡುವುದು ಎಂದು ಹೇಳುವುದಿಲ್ಲ. ಮನುಷ್ಯರು ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿಯೇ ಪುರುಷಾರ್ಥ ಮಾಡುತ್ತಾರೆ, ಈಗ ತಂದೆಯ ಬಳಿ ಶ್ರೇಷ್ಠ ಪದವಿ ಸಿಗುತ್ತದೆ ಅಂದಮೇಲೆ ಏಕೆ ಹುಡುಗಾಟಿಕೆ ಮಾಡುವಿರಿ? ಶಾಲೆಯಲ್ಲಿ ಯಾರು ಓದುವುದಿಲ್ಲವೋ ಅವರು ವಿದ್ಯಾವಂತರ ಮುಂದೆ ತಲೆ ಬಾಗಬೇಕಾಗುವುದು. ತಂದೆಯನ್ನು ಪೂರ್ಣ ನೆನಪು ಮಾಡದಿದ್ದರೆ ಹೋಗಿ ಪ್ರಜೆಗಳಿಗೂ ನೌಕರ-ಚಾಕರರಾಗುತ್ತೀರಿ. ಇದರಲ್ಲಿಯೇ ಖುಷಿಯಾಗಿ ಬಿಡಬಾರದು. ಆದ್ದರಿಂದ ತಂದೆಯು ತಿಳಿಸುತ್ತಾರೆ, ಮಧುರಾತಿ ಮಧುರ ಮಕ್ಕಳು ಸನ್ಮುಖದಲ್ಲಿ ರಿಫ್ರೆಶ್ ಆಗಿ ಹೋಗುತ್ತೀರಿ. ಕೆಲವರು ಬಂಧನದಲ್ಲಿದ್ದಾರೆ, ಅವರು ಮನೆಯಲ್ಲಿ ಕುಳಿತೇ ನೆನಪು ಮಾಡುತ್ತಾ ಇರಿ ಪರವಾಗಿಲ್ಲ. ನಿಮಗೆ ಎಷ್ಟೊಂದು ಸಹಜವಾಗಿ ತಿಳಿಸುತ್ತೇನೆ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಆಕಸ್ಮಿಕವಾಗಿಯೇ ಯುದ್ಧವು ಪ್ರಾರಂಭವಾಗಿ ಬಿಡುವುದು. ಸ್ವಲ್ಪ ಗಡಿ ಬಿಡಿ ಮಾಡಿದರೂ ಸಹ ನಾವು ಈ ರೀತಿ ಮಾಡಿ ಬಿಡುತ್ತೇವೆ ಎಂದು ಒಬ್ಬರು ಇನ್ನೊಬ್ಬರಿಗೆ ಹೇಳುತ್ತಾರೆ, ಮೊದಲೇ ಹೇಳಿ ಬಿಡುತ್ತಾರೆ. ಬಾಂಬುಗಳ ಗರ್ವವು ಬಹಳಷ್ಟಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬಹುಷಃ ಯೋಗ ಬಲದಲ್ಲಿ ಇನ್ನೂ ಅಷ್ಟು ತೀಕ್ಷ್ಣವಾಗಿಲ್ಲ. ಆದ್ದರಿಂದ ಪುರುಷಾರ್ಥಕ್ಕೆ ಮೊದಲೇ ಯುದ್ಧವಾಗುವಂತಾಗಬಾರದು ಆದರೆ ಡ್ರಾಮಾನುಸಾರ ಈ ರೀತಿ ಆಗುವುದೇ ಇಲ್ಲ ಏಕೆಂದರೆ ಮಕ್ಕಳು ಪೂರ್ಣ ಆಸ್ತಿಯನ್ನು ತೆಗೆದುಕೊಂಡಿಲ್ಲ. ಆದ್ದರಿಂದ ನಿಶ್ಚಯವಾಗುತ್ತದೆ, ಒಂದುವೇಳೆ ಯುದ್ಧವಾಗಲೂಬಹುದು ಆದರೂ ಸಹ ಸ್ವಲ್ಪ ನಡೆದು ಮತ್ತೆ ನಿಂತು ಹೋಗುತ್ತದೆ ಏಕೆಂದರೆ ಈಗಿನ್ನೂ ರಾಜಧಾನಿಯು ಸ್ಥಾಪನೆಯಾಗಿಲ್ಲ, ಸಮಯ ಬೇಕಾಗಿದೆ. ಪುರುಷಾರ್ಥ ಮಾಡಿಸುತ್ತಾ ಇರುತ್ತಾರೆ. ಯಾವ ಸಮಯದಲ್ಲಿ ಏನು ಬೇಕಾದರೂ ಆಗುವ ಸಾಧ್ಯತೆಯಿದೆ. ವಿಮಾನವು ಬೀಳಬಹುದು, ರೈಲು ಗಾಡಿಯು ಬೀಳಬಹುದು. ಮೃತ್ಯುವು ಎಷ್ಟು ಸಹಜವಾಗಿ ನಿಂತಿದೆ! ಭೂಮಿಯೂ ಸಹ ಅಲುಗಾಡುತ್ತಿರುತ್ತದೆ. ಎಲ್ಲದಕ್ಕಿಂತ ಹೆಚ್ಚು ಕೆಲಸವನ್ನು ಭೂಕಂಪವು ಮಾಡಬೇಕಾಗಿದೆ ಆದರೆ ವಿನಾಶವಾಗುವ ಮೊದಲೇ ನೀವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಆದ್ದರಿಂದ ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಿರಿ. ಬಾಬಾ, ತಮ್ಮ ವಿನಃ ಮತ್ತ್ಯಾರೂ ನನ್ನವರಿಲ್ಲ, ಹೀಗೆ ಕೇವಲ ತಂದೆಯನ್ನೇ ನೆನಪು ಮಾಡುತ್ತಾ ಇರಿ. ಎಷ್ಟು ಸಹಜ ರೀತಿಯಿಂದ ಚಿಕ್ಕ ಚಿಕ್ಕ ಮಕ್ಕಳಿಗೆ ತಿಳಿಸುವಂತೆ ತಿಳಿಸುತ್ತಾರೆ - ಮಕ್ಕಳೇ, ಮತ್ತ್ಯಾವುದೇ ಕಷ್ಟ ಕೊಡುವುದಿಲ್ಲ, ಕೇವಲ ನೆನಪು ಮಾಡಿರಿ ಮತ್ತು ಕಾಮ ಚಿತೆಯ ಮೇಲೆ ಕುಳಿತು ನೀವು ಸುಟ್ಟು ಹೋಗಿದ್ದೀರಿ. ಈಗ ಜ್ಞಾನ ಚಿತೆಯ ಮೇಲೆ ಕುಳಿತು ಪವಿತ್ರರಾಗಿರಿ. ತಮ್ಮ ಉದ್ದೇಶವೇನೆಂದು ನಿಮ್ಮೊಂದಿಗೆ ಯಾರಾದರೂ ಕೇಳುತ್ತಾರೆ ಆಗ ತಿಳಿಸಿರಿ, ಯಾರು ಎಲ್ಲರ ತಂದೆಯಾಗಿದ್ದಾರೆಯೋ ಅವರು ತಿಳಿಸುತ್ತಿದ್ದಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಸರ್ವರ ಸದ್ಗತಿದಾತನು ಒಬ್ಬರೇ ತಂದೆಯಾಗಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿದರೆ ತುಕ್ಕು ಕಳೆಯುವುದು. ಇಷ್ಟು ಸಂದೇಶವನ್ನಂತೂ ಕೊಡುತ್ತೀರಲ್ಲವೆ. ಸ್ವಯಂ ನೆನಪು ಮಾಡಿದಾಗಲೇ ಅನ್ಯರಿಂದಲೂ ನೆನಪು ಮಾಡಿಸಲು ಸಾಧ್ಯ. ಅನ್ಯರಿಗೂ ರುಚಿಯಿಂದ ಹೇಳುತ್ತೀರಿ, ಇಲ್ಲದಿದ್ದರೆ ಅದು ಅಂತರಾಳದಿಂದ ಹೊರಡುವುದಿಲ್ಲ. ತಂದೆಯು ತಿಳಿಸುತ್ತಾರೆ - ಎಲ್ಲಿಯಾದರೂ ಇರಿ, ಎಷ್ಟು ಸಾಧ್ಯವೋ ಕೇವಲ ನನ್ನನ್ನು ನೆನಪು ಮಾಡಿರಿ. ಭಲೆ ಆಹಾರ-ಪಾನೀಯಗಳ ವಿಷಯದಲ್ಲಿ ಸ್ವಲ್ಪ ಕಷ್ಟವಾಗಬಹುದು ಆದರೆ ಮನೆಯಲ್ಲಿಯೇ ಇರಿ, ಮನೆಯಲ್ಲಿದ್ದು ತಂದೆಯನ್ನು ನೆನಪು ಮಾಡಿರಿ. ಯಾರು ಸಿಕ್ಕಿದರೂ ಅವರಿಗೆ ಇದೇ ಶಿಕ್ಷಣವನ್ನು ಕೊಡಿ - ಮೃತ್ಯು ಸನ್ಮುಖದಲ್ಲಿ ನಿಂತಿದೆ. |
ತಂದೆಯು ಹೇಳುತ್ತಾರೆ - ನೀವೆಲ್ಲರೂ ತಮೋಪ್ರಧಾನ, ಪತಿತರಾಗಿ ಬಿಟ್ಟಿದ್ದೀರಿ. ಈಗ ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಆತ್ಮವೇ ಪತಿತನಾಗಿದೆ, ಸತ್ಯಯುಗದಲ್ಲಿ ಪಾವನ ಆತ್ಮರಿರುತ್ತಾರೆ. ತಂದೆಯ ನೆನಪಿನಿಂದಲೇ ಆತ್ಮವು ಪಾವನವಾಗುವುದು, ಮತ್ತ್ಯಾವುದೇ ಉಪಾಯವಿಲ್ಲ. ಈ ಸಂದೇಶವನ್ನು ಎಲ್ಲರಿಗೂ ಕೊಡುತ್ತಾ ಹೋಗಿ ಆಗ ಅನೇಕರ ಕಲ್ಯಾಣ ಮಾಡುವಿರಿ ಮತ್ತ್ಯಾವುದೇ ಕಷ್ಟವನ್ನು ಕೊಡುವುದಿಲ್ಲ. ಈಗ ಪುರುಷೋತ್ತಮ ಮಾಸವಾಗಿದೆ. ಹೋಗಿ ಎಲ್ಲರಿಗೆ ತಿಳಿಸಿರಿ - ಎಲ್ಲರಿಗಿಂತ ಪುರುಷೋತ್ತಮರು ಯಾರು? ಎಂದು. ಸತ್ಯಯುಗದ ಆದಿಯಲ್ಲಿ ಈ ಲಕ್ಷ್ಮೀ-ನಾರಾಯಣರು ಪುರುಷೋತ್ತಮರಾಗಿದ್ದರು, ಇವರನ್ನು ಇಷ್ಟು ಪುರುಷೋತ್ತಮರನ್ನಾಗಿ ಮಾಡುವವರು ಅರ್ಥಾತ್ ಸ್ವರ್ಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಎಲ್ಲಾ ಆತ್ಮರನ್ನೂ ಪಾವನ ಮಾಡುವವರು ಪತಿತ-ಪಾವನ ತಂದೆಯೇ ಆಗಿದ್ದಾರೆ. ಎಲ್ಲರಿಗಿಂತ ಉತ್ತಮರಿಗಿಂತ ಉತ್ತಮ ಪುರುಷರನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಯಾರು ಪೂಜ್ಯರಾಗಿದ್ದರೋ ಅವರೇ ನಂತರ ಪೂಜಾರಿಗಳಾಗಿದ್ದಾರೆ. ರಾವಣ ರಾಜ್ಯದಲ್ಲಿ ನಾವು ಪೂಜಾರಿಗಳಾಗಿರುತ್ತೇವೆ, ರಾಮ ರಾಜ್ಯದಲ್ಲಿ ಪೂಜ್ಯರಾಗುತ್ತೇವೆ. ಈಗ ರಾವಣ ರಾಜ್ಯದ ಅಂತ್ಯವಾಗಿದೆ, ನಾವು ಪೂಜಾರಿಗಳಿಂದ ಮತ್ತೆ ಪೂಜ್ಯರಾಗುತ್ತೇವೆ. ತಂದೆಯನ್ನು ನೆನಪು ಮಾಡುವ ಮಾರ್ಗವನ್ನು ಅನ್ಯರಿಗೂ ತಿಳಿಸಬೇಕಾಗಿದೆ. ವೃದ್ಧರೂ ಸಹ ಈ ಸೇವೆ ಮಾಡಬೇಕು. ಮಿತ್ರ ಸಂಬಂಧಿಗಳಿಗೂ ಸಹ ತಂದೆಯ ಪರಿಚಯ ಕೊಡಿ. ಈ ರೀತಿ ತಿಳಿಸಿರಿ, ಶಿವ ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ನಿರಾಕಾರ ಶಿವ ತಂದೆಯು ಸರ್ವರ ಸದ್ಗತಿದಾತನಾಗಿದ್ದಾರೆ, ಅವರು ಎಲ್ಲಾ ಆತ್ಮರಿಗೆ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಆಗ ಸತೋಪ್ರಧಾನರಾಗುವಿರಿ. ಇದನ್ನು ತಿಳಿಸುವುದು ಸಹಜವಲ್ಲವೆ. ವೃದ್ಧರೂ ಸಹ ಈ ಸರ್ವೀಸ್ ಮಾಡಬಹುದು, ಮೂಲ ಮಾತೇ ಇದಾಗಿದೆ. ಎಲ್ಲಿಯೇ ಮದುವೆ-ಮುಂಜಿಗಳಿಗೆ ಹೋಗುತ್ತೀರೆಂದರೆ ಕಿವಿಯಲ್ಲಿ ಈ ಮಾತನ್ನು ತಿಳಿಸಿರಿ. ಗೀತೆಯ ಭಗವಂತನು ಹೇಳುತ್ತಾರೆ - ನನ್ನನ್ನು ನೆನಪು ಮಾಡಿರಿ ಎಂದು. ಈ ಮಾತನ್ನು ಎಲ್ಲರೂ ಇಷ್ಟ ಪಡುತ್ತಾರೆ. ಹೆಚ್ಚಿನದಾಗಿ ಹೇಳುವ ಅವಶ್ಯಕತೆಯಿಲ್ಲ. ಕೇವಲ ತಂದೆಯ ಸಂದೇಶವನ್ನು ಕೊಡಬೇಕಾಗಿದೆ - ನನ್ನನ್ನು ನೆನಪು ಮಾಡಿರಿ ಎಂದು ತಂದೆಯು ಹೇಳುತ್ತಾರೆ. |
ಒಳ್ಳೆಯದು. ಭಗವಂತನು ಪ್ರೇರಣೆ ಕೊಡುತ್ತಾರೆಂದೇ ತಿಳಿದುಕೊಳ್ಳಿ, ಸ್ವಪ್ನದಲ್ಲಿ ಸಾಕ್ಷಾತ್ಕಾರವಾಗುತ್ತದೆ ಅಥವಾ ಸದ್ದು ಕೇಳಿ ಬರುತ್ತದೆ - ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುವಿರಿ. ನೀವು ಕೇವಲ ಇದೇ ಚಿಂತನೆ ಮಾಡುತ್ತಾ ಇರಿ, ಇದರಿಂದ ದೋಣಿಯು ಪಾರಾಗುವುದು. ನಾವು ಪ್ರತ್ಯಕ್ಷದಲ್ಲಿ ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಮತ್ತು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅಂದಮೇಲೆ ಖುಷಿಯಿರಬೇಕಲ್ಲವೆ. ತಂದೆಯನ್ನು ಮರೆಯುವುದರಿಂದಲೇ ಕಷ್ಟವಾಗುತ್ತದೆ. ನನ್ನನ್ನು ನೆನಪು ಮಾಡಿರಿ ಎಂದು ತಂದೆಯು ಎಷ್ಟು ಸಹಜವಾಗಿ ತಿಳಿಸುತ್ತಾರೆ, ಇದರಿಂದ ಇವರಿಗೆ ಒಳ್ಳೆಯ ಮಾರ್ಗವು ಸಿಕ್ಕಿದೆಯೆಂದು ಎಲ್ಲರೂ ತಿಳಿದುಕೊಳ್ಳುವರು. ಈ ಮಾರ್ಗವನ್ನು ಎಂದೂ ಯಾರೂ ತಿಳಿಸಲು ಸಾಧ್ಯವಿಲ್ಲ. ಮುಂದೆ ಇಂತಹ ಸಮಯವು ಬರುವುದು ನೀವು ಮನೆಯಿಂದ ಹೊರ ಬರುವುದಕ್ಕೇ ಸಾಧ್ಯವಾಗುವುದಿಲ್ಲ. ತಂದೆಯನ್ನು ನೆನಪು ಮಾಡುತ್ತಾ -ಮಾಡುತ್ತಾ ಶರೀರ ಬಿಡುತ್ತೀರಿ. ಅಂತ್ಯ ಕಾಲದಲ್ಲಿ ಯಾರು ಶಿವ ತಂದೆಯ ಸ್ಮರಣೆ ಮಾಡಿದರೋ.... ಅಂತಹವರು ಲಕ್ಷ್ಮೀ-ನಾರಾಯಣರ ರಾಜ್ಯದಲ್ಲಿ ಬರುತ್ತಾರೆ, ಮತ್ತೆ ಮತ್ತೆ ರಾಜ್ಯ ಪದವಿಯನ್ನು ಪಡೆಯುತ್ತಾರೆ. ಆದ್ದರಿಂದ ಕೇವಲ ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿರಿ. ನೆನಪು ಮಾಡದೇ ಹೇಗೆ ಪ್ರೀತಿ ಮಾಡುವಿರಿ? ಸುಖವು ಸಿಗುತ್ತದೆ ಆದ್ದರಿಂದಲೇ ನೆನಪು ಮಾಡಲಾಗುತ್ತದೆಯಲ್ಲವೆ. ದುಃಖ ಕೊಡುವವರನ್ನು ನೆನಪು ಮಾಡಲಾಗುವುದಿಲ್ಲ. ತಂದೆಯು ಹೇಳುತ್ತಾರೆ - ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ ಆದ್ದರಿಂದ ನನ್ನನ್ನು ನೆನಪು ಮಾಡಿರಿ, ತಂದೆಯ ಮತದಂತೆ ನಡೆಯಬೇಕಲ್ಲವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ವಿದ್ಯೆಯಲ್ಲಿ ಎಂದೂ ಹುಡುಗಾಟಿಕೆ ಮಾಡಬಾರದು. ಯುದ್ಧಕ್ಕೆ ಮೊದಲೇ ತಂದೆಯಿಂದ ಪೂರ್ಣ ಆಸ್ತಿಯನ್ನು ಪಡೆಯಬೇಕಾಗಿದೆ. |
2. ಶ್ರೀಮತದಂತೆ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಎಂದು ಯಾರು ಹೇಳಿದರು? ಅವಶ್ಯವಾಗಿ ಆತ್ಮಿಕ ತಂದೆಯೇ ಹೇಳುತ್ತಾರೆ. ಮಧುರಾತಿ ಮಧುರ ಮಕ್ಕಳು ಈಗ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ಬಹಳ ಪ್ರೀತಿಯಿಂದ ತಂದೆಯು ತಿಳಿಸುತ್ತಿದ್ದಾರೆ. ಈಗ ನಿಮಗೆ ತಿಳಿದಿದೆ - ಆತ್ಮಿಕ ತಂದೆಯ ವಿನಃ ಇಡೀ ಪ್ರಪಂಚದಲ್ಲಿ ಮತ್ತ್ಯಾರೂ ಸಹ ಸರ್ವರಿಗೆ ಸುಖ-ಶಾಂತಿಯನ್ನು ಕೊಡುವವರು ಹಾಗೂ ಸರ್ವರನ್ನು ದುಃಖದಿಂದ ಬಿಡಿಸುವವರು ಯಾರೂ ಇಲ್ಲ. ಆದ್ದರಿಂದ ದುಃಖದಲ್ಲಿ ತಂದೆಯನ್ನು ನೆನಪು ಮಾಡುತ್ತಾ ಇರುತ್ತಾರೆ. ನೀವು ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ತಂದೆಯು ನಮ್ಮನ್ನು ಸುಖಧಾಮಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಸದಾ ಸುಖಧಾಮದ ಮಾಲೀಕರನ್ನಾಗಿ ಮಾಡುವಂತಹ ತಂದೆಯ ಸನ್ಮುಖದಲ್ಲಿ ಬಂದಿದ್ದೀರಿ. ಈಗ ನಿಮಗೆ ತಿಳಿಯುತ್ತಿದೆ, ಸನ್ಮುಖದಲ್ಲಿ ಕೇಳುವ ಮತ್ತು ದೂರವಿದ್ದು ಕೇಳುವುದರಲ್ಲಿ ಬಹಳ ಅಂತರವಿದೆ. ಮಧುಬನದಲ್ಲಿ ಸನ್ಮುಖದಲ್ಲಿ ಬರುತ್ತೀರಿ, ಮಧುಬನವು ಪ್ರಸಿದ್ಧವಾಗಿದೆ. ಮಧುಬನ ಬೃಂದಾವನದಲ್ಲಿ ಅವರು ಕೃಷ್ಣನ ಚಿತ್ರವನ್ನು ತೋರಿಸಿದ್ದಾರೆ ಆದರೆ ಕೃಷ್ಣನಂತೂ ಇಲ್ಲ. ಇಲ್ಲಿ ನಿರಾಕಾರ ತಂದೆಯು ನೀವು ಮಕ್ಕಳೊಂದಿಗೆ ಮಿಲನ ಮಾಡುತ್ತಾರೆ. ನೀವು ಸ್ವಯಂನ್ನು ಪದೇ-ಪದೇ ಆತ್ಮ ನಿಶ್ಚಯ ಮಾಡಿಕೊಳ್ಳಬೇಕಾಗಿದೆ - ನಾನಾತ್ಮನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇನೆ. ಇಡೀ ಕಲ್ಪದಲ್ಲಿ ಇದೊಂದೇ ಸಮಯದಲ್ಲಿ ತಂದೆಯು ಬರುತ್ತಾರೆ, ಇದು ಕಲ್ಪದ ಬಹಳ ಕಲ್ಯಾಣಕಾರಿ ಸಂಗಮಯುಗವಾಗಿದೆ. ಇದಕ್ಕೆ ಪುರುಷೋತ್ತಮ ಎಂದು ಹೆಸರನ್ನಿಡಲಾಗಿದೆ. ಇದೇ ಸಂಗಮಯುಗವಾಗಿದೆ, ಇದರಲ್ಲಿ ಎಲ್ಲಾ ಮನುಷ್ಯ ಮಾತ್ರರೂ ಉತ್ತಮರಾಗುತ್ತಾರೆ. ಈಗಂತೂ ಎಲ್ಲಾ ಮನುಷ್ಯ ಮಾತ್ರರೂ ತಮೋಪ್ರಧಾನರಾಗಿದ್ದಾರೆ, ಮತ್ತೆ ಸತೋಪ್ರಧಾನರಾಗುತ್ತಾರೆ. ಸತೋಪ್ರಧಾನರಾಗಿದ್ದಾಗ ಮನುಷ್ಯರು ಉತ್ತಮರಾಗಿರುತ್ತಾರೆ, ತಮೋಪ್ರಧಾನರಾಗುವುದರಿಂದ ಮನುಷ್ಯರೂ ಕನಿಷ್ಠರಾಗುತ್ತಾರೆ ಅಂದಾಗ ತಂದೆಯು ಕುಳಿತು ಸನ್ಮುಖದಲ್ಲಿ ಆತ್ಮರಿಗೆ ತಿಳಿಸುತ್ತಾರೆ. ಎಲ್ಲಾ ಪಾತ್ರವನ್ನು ಆತ್ಮವೇ ಅಭಿನಯಿಸುತ್ತದೆ, ಶರೀರವಲ್ಲ. ಆತ್ಮ ಮತ್ತು ಶರೀರ ಯಾವಾಗ ಇವೆರಡರ ಮೇಳವಾಗುವುದೋ ಆಗ ಪಾತ್ರವನ್ನು ಅಭಿನಯಿಸಲ್ಪಡುತ್ತದೆ. ನಿಮ್ಮ ಬುದ್ಧಿಯಲ್ಲಿ ಬಂದುಬಿಟ್ಟಿದೆ - ನಾವಾತ್ಮರು ಮೂಲತಃ ನಿರಾಕಾರಿ ಪ್ರಪಂಚ ಅಥವಾ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಇದು ಯಾರಿಗೂ ತಿಳಿದಿಲ್ಲ. ತಾನು ತಿಳಿದುಕೊಳ್ಳುವುದೂ ಇಲ್ಲ, ಅನ್ಯರಿಗೂ ತಿಳಿಸುವುದಿಲ್ಲ. ಈಗ ನಿಮ್ಮ ಬುದ್ಧಿ ಬೀಗವು ತೆರೆದಿದೆ, ನೀವು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಆತ್ಮರು ಪರಮಧಾಮದಲ್ಲಿರುತ್ತಾರೆ. ಅದು ನಿರಾಕಾರಿ ಪ್ರಪಂಚವಾಗಿದೆ, ಇದು ಸಾಕಾರಿ ಪ್ರಪಂಚವಾಗಿದೆ. ಇಲ್ಲಿ ನಾವೆಲ್ಲಾ ಆತ್ಮರು ಪಾತ್ರಧಾರಿಗಳಾಗಿದ್ದೇವೆ. ಮೊಟ್ಟ ಮೊದಲು ನಾವು ಪಾತ್ರವನ್ನು ಅಭಿನಯಿಸಲು ಬರುತ್ತೇವೆ ನಂತರ ನಂಬರ್ವಾರ್ ಆಗಿ ಬರತೊಡಗುತ್ತಾರೆ. ಎಲ್ಲಾ ಪಾತ್ರಧಾರಿಗಳು ಒಟ್ಟಿಗೆ ಬಂದು ಬಿಡುವುದಿಲ್ಲ, ಭಿನ್ನ-ಭಿನ್ನ ಪ್ರಕಾರದ ಪಾತ್ರಧಾರಿಗಳು ಬರುತ್ತಾ ಇರುತ್ತಾರೆ. ಯಾವಾಗ ನಾಟಕವು ಮುಕ್ತಾಯವಾಗುವುದೋ ಆಗ ಎಲ್ಲರೂ ಒಟ್ಟಿಗೆ ಸೇರುತ್ತಾರೆ. ಈಗ ನಿಮಗೆ ಪರಿಚಯ ಸಿಕ್ಕಿದೆ - ಆತ್ಮವು ಮೂಲತಃ ಶಾಂತಿಧಾಮ ನಿವಾಸಿಯಾಗಿದೆ, ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬರುತ್ತದೆ. ತಂದೆಯು ಇಡೀ ಸಮಯ ಪಾತ್ರವನ್ನು ಅಭಿನಯಿಸಲು ಬರುವುದಿಲ್ಲ. ನಾವೇ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ತಮೋಪ್ರಧಾನರಾಗಿ ಬಿಡುತ್ತೇವೆ, ಈಗ ನೀವು ಮಕ್ಕಳಿಗೆ ಸನ್ಮುಖದಲ್ಲಿ ಕೇಳುವುದರಿಂದ ಬಹಳ ಆನಂದವಾಗುತ್ತದೆ. ಇಲ್ಲಿ ಆಗುವಷ್ಟು ಆನಂದವು ಮುರುಳಿಯನ್ನು ಕೇಳುವುದರಿಂದ ಆಗುವುದಿಲ್ಲ, ಇಲ್ಲಿ ಸನ್ಮುಖದಲ್ಲಿದ್ದೀರಲ್ಲವೆ ಅಂದಾಗ ಮೊಟ್ಟ ಮೊದಲಿಗೆ ಸತ್ಯಯುಗೀ ಆದಿ ಸನಾತನ ದೇವಿ-ದೇವತಾ ಧರ್ಮದವರೇ ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಭಾರತವು ದೇವಿ-ದೇವತೆಗಳ ಸ್ಥಾನವಾಗಿತ್ತು, ಈಗ ಇಲ್ಲ. ಚಿತ್ರಗಳನ್ನು ನೋಡುತ್ತೀರಿ, ಅಂದಾಗ ಅವಶ್ಯವಾಗಿ ಇದ್ದರು. ಮೊಟ್ಟ ಮೊದಲು ನಾವು ದೇವಿ-ದೇವತೆಗಳಾಗಿದ್ದೆವು, ತಮ್ಮ ಪಾತ್ರವನ್ನು ನೆನಪು ಮಾಡಿಕೊಳ್ಳುತ್ತೀರೋ ಅಥವಾ ಮರೆತು ಹೋಗುತ್ತೀರೋ? ತಂದೆಯು ಹೇಳುತ್ತಾರೆ, ನೀವು ಈ ಪಾತ್ರವನ್ನು ಅಭಿನಯಿಸಿದ್ದೀರಿ. ಇದು ಡ್ರಾಮಾ ಆಗಿದೆ, ಹೊಸ ಪ್ರಪಂಚವೇ ಮತ್ತೆ ಹಳೆಯದಾಗುತ್ತದೆ. ಮೊಟ್ಟ ಮೊದಲು ಮೇಲಿನಿಂದ ಯಾವ ಆತ್ಮರು ಬರುವರೋ ಅವರು ಸತ್ಯಯುಗದಲ್ಲಿ ಬರುತ್ತಾರೆ. ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿದೆ, ಸತ್ಯಯುಗದ ಆದಿಯಲ್ಲಿ ನೀವೇ ಪಾತ್ರವನ್ನು ಅಭಿನಯಿಸಲು ಬಂದಿದ್ದಿರಿ. ನೀವು ವಿಶ್ವದ ಮಾಲೀಕರು ಮಹಾರಾಜ-ಮಹಾರಾಣಿಯಾಗಿದ್ದಿರಿ. ನಿಮ್ಮದು ರಾಜಧಾನಿಯಿತ್ತು, ಈಗಂತೂ ರಾಜಧಾನಿಯಿಲ್ಲ. ನಾವು ರಾಜ್ಯಭಾರವನ್ನು ಹೇಗೆ ನಡೆಸಬೇಕು ಎಂಬುದನ್ನು ನೀವೀಗ ಕಲಿಯುತ್ತಿದ್ದೀರಿ. ಅಲ್ಲಿ ಮಂತ್ರಿಗಳಿರುವುದಿಲ್ಲ, ಸಲಹೆಯನ್ನು ತೆಗೆದುಕೊಳ್ಳುವ ಅವಶ್ಯಕತೆಯೇ ಇರುವುದಿಲ್ಲ. ಅವರು ಈ ಸಮಯದಲ್ಲಿ ತಂದೆಯ ಶ್ರೀಮತದಿಂದ ಶ್ರೇಷ್ಠಾತಿ ಶ್ರೇಷ್ಠರಾಗಿ ಬಿಡುತ್ತಾರೆ. ಆದ್ದರಿಂದ ಅವರಿಗೆ ಮತ್ತ್ಯಾರಿಂದಲೂ ಸಲಹೆಯನ್ನು ಪಡೆಯುವ ಅವಶ್ಯಕತೆಯಿರುವುದಿಲ್ಲ. ಒಂದುವೇಳೆ ಯಾರಿಂದಲಾದರೂ ಸಲಹೆಯನ್ನು ತೆಗೆದುಕೊಂಡರೆ ಅವರ ಬುದ್ಧಿಯು ಬಲಹೀನವಾಗಿದೆ ಎಂದು ತಿಳಿಯಲಾಗುತ್ತದೆ. ಈಗ ಯಾವ ಶ್ರೀಮತವು ಸಿಗುತ್ತಿದೆಯೋ ಅದು ಸತ್ಯಯುಗದಲ್ಲಿಯೂ ಸ್ಥಿರವಾಗಿರುತ್ತದೆ. ಈಗ ನಿಮ್ಮ ಆತ್ಮವು ತಾಜಾ ಆಗುತ್ತಿದೆ. ಈಗ ನೀವು ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ. ಶಾಂತಿಧಾಮದಿಂದ ಬಂದು ನೀವಿಲ್ಲಿ ಶಬ್ಧದಲ್ಲಿ ಬಂದಿದ್ದೀರಿ. ಶಬ್ಧದಲ್ಲಿ ಬರದೆ ಕರ್ಮವು ನಡೆಯುವುದಿಲ್ಲ, ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಹೇಗೆ ತಂದೆಯಲ್ಲಿ ಸಂಪೂರ್ಣ ಜ್ಞಾನವಿದೆಯೋ ಹಾಗೆಯೇ ನಿಮ್ಮಲ್ಲಿ ಈಗ ಜ್ಞಾನವಿದೆ. ನಾನು ಒಂದು ಶರೀರವನ್ನು ಬಿಟ್ಟು ಸಂಸ್ಕಾರದನುಸಾರ ಮತ್ತೆ ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವು ಹೇಳುತ್ತದೆ, ಪುನರ್ಜನ್ಮವು ಅವಶ್ಯವಾಗಿ ಆಗುತ್ತದೆ. ಆತ್ಮಕ್ಕೆ ಏನೆಲ್ಲಾ ಪಾತ್ರವು ಸಿಕ್ಕಿದೆಯೋ ಅದನ್ನು ಅಭಿನಯಿಸುತ್ತಾ ಇರುತ್ತದೆ ಮತ್ತು ಸಂಸ್ಕಾರಗಳ ಅನುಸಾರ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳುತ್ತಾ ಇರುತ್ತದೆ. ದಿನ-ಪ್ರತಿದಿನ ಆತ್ಮದ ಪವಿತ್ರತೆಯ ದರ್ಜೆಯು ಕಡಿಮೆಯಾಗುತ್ತಾ ಹೋಗುತ್ತದೆ. ಪತಿತ ಶಬ್ಧವನ್ನು ದ್ವಾಪರದ ನಂತರ ಉಪಯೋಗಿಸುತ್ತಾರೆ ಆದರೂ ಸಹ ಸ್ವಲ್ಪ ಅಂತರವಿರುತ್ತದೆ. ನೀವು ಹೊಸ ಮನೆಯನ್ನು ಕಟ್ಟಿಸಿ ಒಂದು ತಿಂಗಳಿನ ನಂತರ ಅವಶ್ಯವಾಗಿ ಅದರಲ್ಲಿ ಅಂತರವಿರುತ್ತದೆ. |
ನೀವೀಗ ತಿಳಿದುಕೊಳ್ಳುತ್ತೀರಿ - ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಾರೆ, ನಾನು ನೀವು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ ಎಂದು ತಂದೆಯು ತಿಳಿಸುತ್ತಾರೆ. ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ಪದವಿಯನ್ನು ಪಡೆಯುತ್ತಾರೆ, ತಂದೆಯ ಬಳಿ ಯಾವುದೇ ತಾರತಮ್ಯವಿಲ್ಲ. ತಂದೆಗೆ ತಿಳಿದಿದೆ, ನಾನು ಆತ್ಮರಿಗೇ ಓದಿಸುತ್ತೇನೆ. ಪ್ರತಿಯೊಂದು ಆತ್ಮವು ತನಗಾಗಿ ಪುರುಷಾರ್ಥ ಮಾಡುತ್ತದೆ, ಸ್ತ್ರೀ-ಪುರುಷರ ದೃಷ್ಟಿಯು ಇಲ್ಲಿರುವುದಿಲ್ಲ. ನೀವೆಲ್ಲಾ ಮಕ್ಕಳು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೀರಿ. ಎಲ್ಲಾ ಆತ್ಮರು ಸಹೋದರರಾಗಿದ್ದೀರಿ, ನಿಮಗೆ ತಂದೆಯು ಓದಿಸುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ತಂದೆಯೇ ಆತ್ಮಿಕ ಮಕ್ಕಳೊಂದಿಗೆ ಮಾತನಾಡುತ್ತಾರೆ, ಹೇ ಮುದ್ದಾದ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ, ನೀವು ಬಹಳ ಸಮಯದಿಂದ ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಈಗ ತಮ್ಮ ಆಸ್ತಿಯನ್ನು ಪಡೆಯಲು ಪುನಃ ಬಂದು ಮಿಲನ ಮಾಡಿದ್ದೀರಿ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಆರಂಭದಿಂದ ಹಿಡಿದು ಪಾತ್ರವು ನಿಗಧಿಯಾಗಿದೆ, ನೀವು ಪಾತ್ರಧಾರಿಗಳು ಪಾತ್ರವನ್ನಭಿನಯಿಸುತ್ತಾ ಇರುತ್ತೀರಿ, ಆತ್ಮವು ಅವಿನಾಶಿಯಾಗಿದೆ, ಇದರಲ್ಲಿ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ. ಶರೀರವಂತೂ ಬದಲಾಗುತ್ತಿರುತ್ತದೆ ಬಾಕಿ ಆತ್ಮವು ಕೇವಲ ಪವಿತ್ರನಿಂದ ಅಪವಿತ್ರವಾಗುತ್ತದೆ. ಸತ್ಯಯುಗದಲ್ಲಿ ಪಾವನರಿರುತ್ತಾರೆ, ಈ ಪ್ರಪಂಚಕ್ಕೆ ಪತಿತ ಪ್ರಪಂಚವೆಂದು ಹೇಳಲಾಗುತ್ತದೆ. ಈಗ ಸುಖಧಾಮವು ಸ್ಥಾಪನೆಯಾಗುತ್ತದೆ, ಉಳಿದೆಲ್ಲಾ ಆತ್ಮವು ಮುಕ್ತಿಧಾಮದಲ್ಲಿರುತ್ತಾರೆ. ಈಗ ಈ ಬೇಹದ್ದಿನ ನಾಟಕವು ಮುಕ್ತಾಯವಾಗಿದೆ, ಎಲ್ಲಾ ಆತ್ಮರು ಸೊಳ್ಳೆಗಳೋಪಾದಿಯಲ್ಲಿ ಹೋಗುವರು. ಈ ಸಮಯದಲ್ಲಿ ಯಾವುದೇ ಆತ್ಮವು ಮೇಲಿನಿಂದ ಬಂದರೂ ಸಹ ಪತಿತ ಪ್ರಪಂಚದಲ್ಲಿ ಅದಕ್ಕೆ ಏನು ಬೆಲೆಯಿರುತ್ತದೆ! ವಾಸ್ತವದಲ್ಲಿ ಯಾರು ಮೊಟ್ಟ ಮೊದಲು ಪ್ರಪಂಚದಲ್ಲಿ ಬರುವರೋ ಅವರಿಗೆ ಬೆಲೆಯಿರುತ್ತದೆ, ಹೊಸ ಪ್ರಪಂಚವಿತ್ತು ಅದು ನಂತರ ಹಳೆಯದಾಗಿದೆ, ಹೊಸ ಪ್ರಪಂಚದಲ್ಲಿ ದೇವತೆಗಳಿದ್ದರು, ಅಲ್ಲಿ ದುಃಖದ ಹೆಸರೂ ಇರಲಿಲ್ಲ ಇಲ್ಲಂತೂ ಅಪಾರ ದುಃಖವಿದೆ. ತಂದೆಯು ಬಂದು ದುಃಖದ ಹಳೆಯ ಪ್ರಪಂಚದಿಂದ ಮುಕ್ತರನ್ನಾಗಿ ಮಾಡುತ್ತಾರೆ. ಈ ಹಳೆಯ ಪ್ರಪಂಚವು ಅವಶ್ಯವಾಗಿ ಬದಲಾಗಲಿದೆ. ಹೇಗೆ ಹಗಲಿನ ನಂತರ ರಾತ್ರಿ, ರಾತ್ರಿಯ ನಂತರ ಹಗಲಾಗುತ್ತದೆ. ನೀವು ತಿಳಿದುಕೊಳ್ಳುತ್ತೀರಿ, ಅವಶ್ಯವಾಗಿ ನಾವು ಸತ್ಯಯುಗದ ಮಾಲೀಕರಾಗುತ್ತೇವೆ ಅಂದಮೇಲೆ ನಾವೇಕೆ ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಬಾರದು! ಸ್ವಲ್ಪವಾದರೂ ಪರಿಶ್ರಮ ಪಡಬೇಕಾಗುವುದು, ರಾಜ್ಯ ಪದವಿಯನ್ನು ಪಡೆಯುವುದು ಸಹಜವೇನಲ್ಲ. ತಂದೆಯನ್ನು ನೆನಪು ಮಾಡಬೇಕಾಗಿದೆ, ಮಾಯೆಯ ಅದ್ಭುತವೇನೆಂದರೆ ಪದೇ-ಪದೇ ನಿಮಗೆ ಮರೆಸಿ ಬಿಡುತ್ತದೆ, ಇದಕ್ಕಾಗಿ ಉಪಾಯ ರಚಿಸಬೇಕು. ನನ್ನವರಾದರೆ ನೆನಪು ಸ್ಥಿರವಾಗಿ ನಿಲ್ಲುತ್ತದೆಯೆಂದಲ್ಲ ಅಂದಮೇಲೆ ಪುರುಷಾರ್ಥವನ್ನೇನು ಮಾಡುತ್ತೀರಿ! ಇಲ್ಲಿ ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಪುರುಷಾರ್ಥ ಮಾಡಬೇಕಾಗಿದೆ, ಜ್ಞಾನಾಮೃತವನ್ನು ಕುಡಿಯುತ್ತಾ ಇರಬೇಕಾಗಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ನಮ್ಮದು ಇದು ಅಂತಿಮ ಜನ್ಮವಾಗಿದೆ, ಈ ಶರೀರದ ಅಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕು, ಪುರುಷಾರ್ಥವನ್ನೂ ಅವಶ್ಯವಾಗಿ ಮಾಡಬೇಕು. ಕೇವಲ ತನ್ನನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿರಿ. ತ್ವಮೇವ ಮಾತಾಶ್ಚ ಪಿತಾ.... ಇದೆಲ್ಲವೂ ಭಕ್ತಿಮಾರ್ಗದ ಮಹಿಮೆಯಾಗಿದೆ. ನೀವು ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾನೊಬ್ಬನೇ ಸ್ಯಾಕ್ರೀನ್ ಆಗಿದ್ದೇನೆ. ನೀವೂ ಸಹ ಅನ್ಯ ಮಾತುಗಳನ್ನು ಬಿಟ್ಟು ಬಹಳ ಮಧುರ ಸ್ಯಾಕ್ರೀನ್ ಆಗಿ ಬಿಡಿ. ಈಗ ನಿಮ್ಮ ಆತ್ಮವು ತಮೋಪ್ರಧಾನವಾಗಿದೆ ಅದನ್ನು ಸತೋಪ್ರಧಾನ ಮಾಡಿಕೊಳ್ಳಲು ನೆನಪಿನ ಯಾತ್ರೆಯಲ್ಲಿರಿ. ಎಲ್ಲರಿಗೆ ಇದೇ ಮಾತನ್ನು ತಿಳಿಸಿರಿ - ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳಿ. ಸುಖವು ಸತ್ಯಯುಗದಲ್ಲಿಯೇ ಇರುತ್ತದೆ, ಸುಖಧಾಮವನ್ನು ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ತಂದೆಯನ್ನು ನೆನಪು ಮಾಡುವುದು ಅತಿ ಸಹಜವಾಗಿದೆ ಆದರೆ ಮಾಯೆಯ ವಿರೋಧವು ಬಹಳಷ್ಟಿದೆ ಆದ್ದರಿಂದ ಪ್ರಯತ್ನ ಪಟ್ಟು ನನ್ನನ್ನು ನೆನಪು ಮಾಡಿರಿ, ಆಗ ತುಕ್ಕು ಬಿಟ್ಟು ಹೋಗುವುದು. ಸೆಕೆಂಡಿನಲ್ಲಿ ಜೀವನ್ಮುಕ್ತಿ ಎಂದು ಗಾಯನವಿದೆ. |
ಈ ಡ್ರಾಮಾದಲ್ಲಿ ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗಿದೆ. ಈ ಡ್ರಾಮಾದಲ್ಲಿ ಎಲ್ಲರಿಗಿಂತ ಹೆಚ್ಚು ಪಾತ್ರವು ನಮ್ಮದಾಗಿದೆ. ಎಲ್ಲರಿಗಿಂತ ಹೆಚ್ಚು ಸುಖವೂ ನಮಗೇ ಸಿಗುವುದು. ತಂದೆಯು ಹೇಳುತ್ತಾರೆ, ನಿಮ್ಮ ದೇವಿ-ದೇವತಾ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ ಉಳಿದೆಲ್ಲಾ ಆತ್ಮರು ತಮ್ಮ ಲೆಕ್ಕಾಚಾರಗಳನ್ನು ಮುಗಿಸಿ ಶಾಂತಿಧಾಮಕ್ಕೆ ಹೊರಟು ಹೋಗುವರು. ಹೆಚ್ಚು ವಿಸ್ತಾರದಲ್ಲಿ ನಾವೇಕೆ ಹೋಗಬೇಕು. ತಂದೆಯು ಬರುವುದೇ ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗುವುದಕ್ಕಾಗಿ. ಸೊಳ್ಳೆಗಳೋಪಾದಿಯಲ್ಲಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ, ಶರೀರಗಳು ಸಮಾಪ್ತಿಯಾಗಿ ಬಿಡುತ್ತವೆ. ಬಾಕಿ ಆತ್ಮವು ಏನು ಅವಿನಾಶಿಯಾಗಿದೆಯೋ ಅದು ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೊರಟು ಹೋಗುವುದು. ಆತ್ಮವನ್ನು ಬೆಂಕಿಯಲ್ಲಿ ಹಾಕುವುದರಿಂದ ಪವಿತ್ರವಾಗುವುದು ಎಂದಲ್ಲ, ಆತ್ಮವು ನೆನಪು ಎಂಬ ಯೋಗದಿಂದಲೇ ಪವಿತ್ರವಾಗಬೇಕಾಗಿದೆ. ಇದು ಯೋಗದ ಅಗ್ನಿಯಾಗಿದೆ. ಇದನ್ನು ಅವರು ಸೀತೆಯು ಅಗ್ನಿಯಿಂದ ಪಾರಾದಳು ಎಂದು ನಾಟಕದಲ್ಲಿ ಬರೆದಿದ್ದಾರೆ. ಅಗ್ನಿಯಿಂದ ಒಬ್ಬರೇ ಪಾರಾಗುವರೇ? ತಂದೆಯು ತಿಳಿಸುತ್ತಾರೆ - ನೀವೆಲ್ಲಾ ಸೀತೆಯರು ಈ ಸಮಯದಲ್ಲಿ ಪತಿತರಾಗಿದ್ದೀರಿ, ರಾವಣ ರಾಜ್ಯದಲ್ಲಿದ್ದೀರಿ. ಈಗ ಒಬ್ಬ ತಂದೆಯ ನೆನಪಿನಿಂದ ನೀವು ಪಾವನರಾಗಬೇಕಾಗಿದೆ. ರಾಮನು ಒಬ್ಬರೇ ಆಗಿದ್ದಾರೆ. ಅಗ್ನಿ ಶಬ್ಧವನ್ನು ಕೇಳಿ ಅಗ್ನಿಯಿಂದ ಪಾರಾದಳೆಂದು ಹೇಳುತ್ತಾರೆ, ಯೋಗಾಗ್ನಿಯೆಲ್ಲಿ! ಆ ಅಗ್ನಿಯೆಲ್ಲಿ! ಆತ್ಮವು ಪರಮಾತನೊಂದಿಗೆ ಯೋಗವನ್ನು ಇಡುವುದರಿಂದಲೇ ಪತಿತದಿಂದ ಪಾವನವಾಗುವುದು. ರಾತ್ರಿ-ಹಗಲಿನ ಅಂತರವಿದೆ. ಆತ್ಮರೆಲ್ಲರೂ ಸೀತೆಯರಾಗಿದ್ದೀರಿ. ರಾವಣನ ಜೈಲಿನಲ್ಲಿ ಶೋಕವಾಟಿಕೆಯಲ್ಲಿ ಇದ್ದೀರಿ, ಇಲ್ಲಿನ ಸುಖವು ಕಾಗವಿಷ್ಟ ಸಮಾನವಾಗಿದೆ, ಸ್ವರ್ಗದ ಸುಖವು ಅಪಾರವಾಗಿದೆ ಆದ್ದರಿಂದ ಮಕ್ಕಳು ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ, ಯಾವುದೇ ಪ್ರಕಾರದ ಸಂಶಯ ಬರಬಾರದು. ದೇಹಾಭಿಮಾನವು ಬಂದರೆ ಮತ್ತೆ ಅನೇಕ ಪ್ರಕಾರದ ಪ್ರಶ್ನೆಗಳು ಉತ್ಪನ್ನವಾಗುತ್ತವೆ. ಆಗ ತಂದೆಯು ಯಾವ ಕರ್ತವ್ಯವನ್ನು ಕೊಡುತ್ತಾರೆಯೋ ಅದನ್ನು ಮಾಡುವುದಿಲ್ಲ. ಮೂಲ ಮಾತಾಗಿದೆ - ನಾವು ಪತಿತರಿಂದ ಪಾವನರಾಗಬೇಕಾಗಿದೆ, ಅನ್ಯ ಯಾವುದೇ ಸಂಕಲ್ಪವನ್ನು ನಡೆಸುವ ಅವಶ್ಯಕತೆಯಿಲ್ಲ. ಇದು ಪತಿತ ಪ್ರಪಂಚ, ಅದು ಪಾವನ ಪ್ರಪಂಚವಾಗಿದೆ, ಪಾವನರಾಗುವುದು ಮುಖ್ಯ ಮಾತಾಗಿದೆ. ಯಾರು ಪಾವನರನ್ನಾಗಿ ಮಾಡುತ್ತಾರೆ, ಇದೇನೂ ತಿಳಿದಿಲ್ಲ. ನೀವು ಪತಿತರಾಗಿದ್ದೀರಿ ಎಂದು ಹೇಳಿದರೆ ಕ್ರೋಧಿತರಾಗಿ ಬಿಡುತ್ತಾರೆ. ಯಾರೂ ಸಹ ತಮ್ಮನ್ನು ವಿಕಾರಿ ಎಂದು ತಿಳಿದುಕೊಳ್ಳುವುದಿಲ್ಲ, ಎಲ್ಲರೂ ಗೃಹಸ್ಥಿಯಾಗಿದ್ದರು. ರಾಮ-ಸೀತೆ, ಲಕ್ಷ್ಮೀ-ನಾರಾಯಣರಿಗೂ ಸಹ ಮಕ್ಕಳಿದ್ದರಲ್ಲವೆ. ಅಲ್ಲಿಯೂ ಸಹ ಮಕ್ಕಳು ಜನಿಸುತ್ತಾರೆಂದು ಹೇಳುತ್ತಾರೆ, ಆದರೆ ಅದಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಶಿವಾಲಯವಾಗಿದೆ ಎಂಬುದನ್ನೇ ಮರೆತು ಬಿಟ್ಟಿದ್ದಾರೆ. |
ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಇವರು ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ, ಎಲ್ಲರಿಗೆ ಸದ್ಗತಿ ನೀಡುತ್ತಾರೆ. ಅವರಂತೂ ಒಬ್ಬ ಗುರು ಶರೀರ ಬಿಟ್ಟರೆ ಮತ್ತೆ ಮಕ್ಕಳಿಗೆ ಅವರ ಸಿಂಹಾಸನವನ್ನು ಕೊಡುತ್ತಾರೆ. ಈಗ ಅವರು ಹೇಗೆ ಸದ್ಗತಿಯಲ್ಲಿ ಕರೆದುಕೊಂಡು ಹೋಗುವರು! ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ರಾವಣ ರಾಜ್ಯದಲ್ಲಿ ದುರ್ಗತಿಯಿದೆ, ರಾಮ ರಾಜ್ಯದಲ್ಲಿ ಸದ್ಗತಿ ಇರುತ್ತದೆ. ತಂದೆಯು ಎಲ್ಲರನ್ನೂ ಪಾವನ ಮಾಡಿ ಕರೆದುಕೊಂಡು ಹೋಗುತ್ತಾರೆ ನಂತರ ಕೂಡಲೇ ಯಾರೂ ಪತಿತರಾಗುವುದಿಲ್ಲ, ನಂಬರ್ವಾರ್ ಆಗಿ ಕೆಳಗಿಳಿಯುತ್ತಾರೆ. ಸತೋಪ್ರಧಾನರಿಂದ ಸತೋ, ರಜೋ, ತಮೋ.... ನಿಮ್ಮ ಬುದ್ಧಿಯಲ್ಲಿ 84 ಜನ್ಮಗಳ ಚಕ್ರದ ಜ್ಞಾನವಿದೆ. ನೀವೀಗ ಲೈಟ್ಹೌಸ್ ಆಗಿದ್ದೀರಿ. ಜ್ಞಾನದಿಂದ ಹೇಗೆ ಈ ಚಕ್ರವು ಸುತ್ತುತ್ತದೆ ಎಂಬುದನ್ನು ಅರಿತುಕೊಂಡಿದ್ದೀರಿ. ಈಗ ನೀವು ಮಕ್ಕಳು ಮತ್ತೆಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ. ನೀವೆಲ್ಲರೂ ಸೇನೆಯಾಗಿದ್ದೀರಿ, ನೀವು ಮಾರ್ಗವನ್ನು ತಿಳಿಸುವಂತಹ ಪೈಲೆಟ್ ಆಗಿದ್ದೀರಿ. ಎಲ್ಲರಿಗೆ ತಿಳಿಸಿರಿ - ಈಗ ಶಾಂತಿಧಾಮ, ಸುಖಧಾಮವನ್ನು ನೆನಪು ಮಾಡಿರಿ. ಕಲಿಯುಗ ದುಃಖಧಾಮವನ್ನು ಮರೆತು ಹೋಗಿ. ನಾವು ನಿಮಗೆ ಬಹಳ ಒಳ್ಳೆಯ ಮಾರ್ಗವನ್ನು ತಿಳಿಸುತ್ತೇವೆ. ಪತಿತ-ಪಾವನನು ಒಬ್ಬರೇ ನಿರಾಕಾರ ತಂದೆಯಾಗಿದ್ದಾರೆ, ಅವರನ್ನು ನೆನಪು ಮಾಡಿದರೆ ನೀವು ಪಾವನರಾಗಿ ಬಿಡುತ್ತೀರಿ. ನಿಮ್ಮ ಆತ್ಮದಲ್ಲಿ ಹಿಡಿದಿರುವ ತುಕ್ಕು ಕಳೆಯುತ್ತಾ ಹೋಗುತ್ತದೆ. ಭಗವಾನುವಾಚ - ಮನ್ಮನಾಭವ. ಶಿವ ಭಗವಾನುವಾಚ – ವಿನಾಶ ಕಾಲೇ ವಿಪರೀತ ಬುದ್ಧಿ ವಿನಃಶ್ಯಂತಿ ಮತ್ತು ವಿನಾಶಕಾಲೇ ಪರಮಪಿತ ಪರಮಾತ್ಮನ ಜೊತೆ ಪ್ರೀತಿ ಬುದ್ಧಿ ವಿಜಯಂತಿ. ನಿಮ್ಮದು ಎಷ್ಟು ಪ್ರೀತಿಬುದ್ಧಿಯಿರುವುದೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ದೇಹಾಭಿಮಾನದಲ್ಲಿ ಬಂದರೆ ಇಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ, ಯಾವುದೇ ಪ್ರಕಾರದ ಸಂಶಯವನ್ನು ತರಬಾರದು. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡುವ ಪುರುಷಾರ್ಥ ಮಾಡಿ ಪಾವನರಾಗಬೇಕಾಗಿದೆ. ಅನ್ಯ ಪ್ರಶ್ನೆಗಳಲ್ಲಿ ಹೋಗಬಾರದು. |
2. ಒಬ್ಬ ತಂದೆಯೊಂದಿಗೇ ಸತ್ಯ ಪ್ರೀತಿಯನ್ನಿಟ್ಟು ತಂದೆಯ ಸಮಾನ ಮಧುರ ಸ್ಯಾಕ್ರೀನ್ ಆಗಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಾ? ಯಾರು ಕೇಳಿದರು? ಆತ್ಮರು. ಆತ್ಮಕ್ಕೆ ಪರಮಾತ್ಮನೆಂದು ಹೇಳಲು ಸಾಧ್ಯವಿಲ್ಲ. ಮನುಷ್ಯನಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ನೀವೀಗ ಬ್ರಾಹ್ಮಣರಾಗಿದ್ದೀರಿ. ಈಗ ನಿಮಗೆ ದೇವತೆಯೆಂದು ಹೇಳಲಾಗುವುದಿಲ್ಲ. ಬ್ರಹ್ಮನಿಗೂ ಸಹ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ಭಲೆ ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ ಆದರೆ ಬ್ರಹ್ಮಾ ಮತ್ತು ವಿಷ್ಣುವಿನಲ್ಲಿ ಬಹಳ ಅಂತರವಿದೆ. ವಿಷ್ಣುವಿಗೆ ದೇವತೆ ಎಂದು ಹೇಳುತ್ತಾರೆ, ಬ್ರಹ್ಮನಿಗೆ ದೇವತೆಯೆಂದು ಹೇಳಲು ಸಾಧ್ಯವಿಲ್ಲ ಏಕೆಂದರೆ ಬ್ರಹ್ಮನು ಬ್ರಾಹ್ಮಣರ ತಂದೆಯಾಗಿದ್ದಾರೆ. ಬ್ರಾಹ್ಮಣರಿಗೆ ದೇವತೆಯೆಂದು ಹೇಳಲಾಗುವುದಿಲ್ಲ. ಈ ಮಾತುಗಳನ್ನು ಯಾವುದೇ ಮನುಷ್ಯರು ಮನುಷ್ಯರಿಗೆ ತಿಳಿಸಲು ಸಾಧ್ಯವಿಲ್ಲ, ಭಗವಂತನೇ ತಿಳಿಸುತ್ತಾರೆ. ಮನುಷ್ಯರು ಅಂಧ ಶ್ರದ್ಧೆಯಿಂದ ಏನು ಬಂದರೆ ಅದನ್ನು ಹೇಳಿ ಬಿಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಆತ್ಮಿಕ ತಂದೆಯು ನಾವು ಮಕ್ಕಳಿಗೆ ಓದಿಸುತ್ತಿದ್ದಾರೆ, ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಬೇಕಾಗಿದೆ. ನಾನಾತ್ಮನು ಈ ಶರೀರವನ್ನು ತೆಗೆದುಕೊಳ್ಳುತ್ತೇನೆ. ನಾನಾತ್ಮನು 84 ಜನ್ಮಗಳನ್ನು ಪಡೆದಿದ್ದೇನೆ, ಎಂತೆಂತಹ ಕರ್ಮ ಮಾಡುವರೋ ಅದರಂತೆ ಶರೀರ ಸಿಗುತ್ತದೆ. ಆತ್ಮವು ಶರೀರದಿಂದ ಬೇರೆಯಾಗಿ ಬಿಟ್ಟರೆ ಮತ್ತೆ ಶರೀರದೊಂದಿಗೆ ಪ್ರೀತಿಯಿರುವುದಿಲ್ಲ, ಆತ್ಮದೊಂದಿಗೇ ಪ್ರೀತಿಯಿರುತ್ತದೆ. ಆತ್ಮವು ಶರೀರದಲ್ಲಿದ್ದಾಗಲೇ ಆತ್ಮದಲ್ಲಿಯೂ ಪ್ರೀತಿಯಿರುತ್ತದೆ, ಪಿತೃಗಳನ್ನು ಕರೆಸುತ್ತಾರೆ. ಅವರ ಶರೀರವಂತೂ ಸಮಾಪ್ತಿಯಾಯಿತು ಆದರೆ ಅವರ ಆತ್ಮವನ್ನು ನೆನಪು ಮಾಡುತ್ತಾರೆ ಆದ್ದರಿಂದ ಬ್ರಾಹ್ಮಣರಲ್ಲಿ ಅವರ ಆತ್ಮವನ್ನು ಆಹ್ವಾನ ಮಾಡುತ್ತಾರೆ. ಇಂತಹವರ ಆತ್ಮವೇ ಬನ್ನಿ, ಈ ಭೋಜನವನ್ನು ಸ್ವೀಕಾರ ಮಾಡಿ ಎಂದು ಹೇಳುತ್ತಾರೆ ಅಂದರೆ ಆತ್ಮದಲ್ಲಿ ಮೋಹವಿರುತ್ತದೆ. ಆದರೆ ಮೊದಲು ಶರೀರದಲ್ಲಿ ಮೋಹವಿತ್ತು, ಆ ಶರೀರವು ನೆನಪಿಗೆ ಬರುತ್ತಿತ್ತು. ನಾವು ಆತ್ಮವನ್ನು ಕರೆಸುತ್ತೇವೆಂದು ತಿಳಿದುಕೊಳ್ಳುವುದಿಲ್ಲ ಆದರೆ ಎಲ್ಲವನ್ನೂ ಮಾಡುವುದೂ ಆತ್ಮವೇ. ಆತ್ಮದಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಅದರನಂತರ ಅನ್ಯ ವಿಕಾರಗಳು ಬರುತ್ತವೆ, ಎಲ್ಲವನ್ನೂ ಸೇರಿಸಿ ವಿಕಾರಿ ಎಂದು ಹೇಳಲಾಗುತ್ತದೆ. ಯಾರಲ್ಲಿ ಈ ವಿಕಾರ ಇರುವುದಿಲ್ಲವೋ ಅವರಿಗೆ ನಿರ್ವಿಕಾರಿ ಎಂದು ಹೇಳುತ್ತಾರೆ. ಇದನ್ನಂತೂ ತಿಳಿದುಕೊಂಡಿದ್ದೀರಿ - ಭಾರತದಲ್ಲಿ ದೇವಿ-ದೇವತೆಗಳಿದ್ದಾಗ ಅವರಲ್ಲಿ ದೈವೀ ಗುಣಗಳಿತ್ತು, ಈ ಲಕ್ಷ್ಮೀ-ನಾರಾಯಣರದೂ ದೇವಿ-ದೇವತಾ ಧರ್ಮವಾಗಿದೆ. ಹೇಗೆ ಕ್ರಿಶ್ಚಿಯನ್ ಧರ್ಮದಲ್ಲಿ ಸ್ತ್ರೀ ಅಥವಾ ಪುರುಷರೆಲ್ಲರೂ ಕ್ರಿಶ್ಚಿಯನ್ನರಾಗಿದ್ದಾರೆ, ಅದೇರೀತಿ ಇಲ್ಲಿಯೂ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ರಾಜ-ರಾಣಿ, ಪ್ರಜೆ ಎಲ್ಲರೂ ದೇವಿ-ದೇವತಾ ಧರ್ಮದವರಾಗಿದ್ದಾರೆ, ಇದು ಬಹಳ ಸುಖ ಕೊಡುವಂತಹ ಧರ್ಮವಾಗಿದೆ. ಮಕ್ಕಳು ಗೀತೆಯನ್ನೂ ಕೇಳಿದಿರಿ, ಬಾಬಾ, ನನ್ನನ್ನು ಸುಖ-ಶಾಂತಿಯಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಎಂದು ಆತ್ಮವೇ ಹೇಳಿತು. ಆ ಸ್ಥಳವಂತೂ ಸುಖಧಾಮ ಮತ್ತು ಶಾಂತಿಧಾಮವಾಗಿದೆ, ಇಲ್ಲಿ ಬಹಳ ಅಶಾಂತಿಯಿದೆ. ಸತ್ಯಯುಗದಲ್ಲಿ ಅಶಾಂತಿಯಿರುವುದಿಲ್ಲ. ಆತ್ಮಕ್ಕೆ ತಿಳಿದಿದೆ – ತಂದೆಯ ವಿನಃ ಬೇರೆಯಾರೂ ಸುಖದ ಪ್ರಪಂಚಕ್ಕೆ ಕರೆದುಕೊಂಡು ಹೋಗಲು ಆಗುವುದಿಲ್ಲ. ತಂದೆಯು ಹೇಳುತ್ತಾರೆ - ಮುಕ್ತಿ-ಜೀವನ್ಮುಕ್ತಿ ಇವೆರಡು ಉಡುಗೊರೆಗಳನ್ನು ಕಲ್ಪ-ಕಲ್ಪವೂ ತರುತ್ತೇನೆ ಆದರೆ ನೀವು ಮರೆತು ಹೋಗುತ್ತೀರಿ. ಡ್ರಾಮಾದಲ್ಲಿ ಎಲ್ಲವನ್ನೂ ಮರೆಯಲೇಬೇಕಾಗಿದೆ, ಎಲ್ಲವನ್ನೂ ಮರೆತಾಗಲೇ ನಾನು ಬರುವೆನು. ನೀವೀಗ ಬ್ರಾಹ್ಮಣರಾಗಿದ್ದೀರಿ, ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂದು ನಿಮಗೆ ನಿಶ್ಚಯವಿದೆ, ಯಾರು ಪೂರ್ಣ ಜ್ಞಾನವನ್ನು ಪಡೆದುಕೊಳ್ಳುವುದಿಲ್ಲವೋ ಅವರು ಮೊದಲ ಹೊಸ ಪ್ರಪಂಚದಲ್ಲಿಯೂ ಬರುವುದಿಲ್ಲ. ತ್ರೇತಾ ಅಥವಾ ತ್ರೇತಾಯುಗದ ಅಂತ್ಯದಲ್ಲಿ ಬರುವರು. ಎಲ್ಲವೂ ಪುರುಷಾರ್ಥದ ಮೇಲೆ ಅವಲಂಭಿತವಾಗಿದೆ, ಸತ್ಯಯುಗದಲ್ಲಿ ಸುಖವಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಒಳ್ಳೆಯದು - ಇದಕ್ಕೆ ಹಿಂದಿನ ಜನ್ಮದಲ್ಲಿ ಇವರು ಯಾರಾಗಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ಮೊದಲ ಜನ್ಮದಲ್ಲಿ ಇವರು ಬ್ರಾಹ್ಮಣರಾಗಿದ್ದರು, ಅದಕ್ಕೂ ಮೊದಲು ಶೂದ್ರರಾಗಿದ್ದರು. ನೀವು ವರ್ಣಗಳ ಮೇಲೆ ಬಹಳ ಚೆನ್ನಾಗಿ ತಿಳಿಸಬಹುದು. |
ನೀವೀಗ ತಿಳಿದುಕೊಳ್ಳುತ್ತೀರಿ, ನಾವು 21 ಜನ್ಮಗಳಿಗಾಗಿ ಸುಖವನ್ನು ಪಡೆಯುತ್ತೇವೆ. ತಂದೆಯು ನಮಗೆ ಆ ಮಾರ್ಗವನ್ನು ತಿಳಿಸುತ್ತಿದ್ದಾರೆ. ನಾವೀಗ ಪತಿತರಾಗಿದ್ದೇವೆ ಆದ್ದರಿಂದ ಅಶಾಂತ, ದುಃಖಿಯಾಗಿದ್ದೇವೆ. ಎಲ್ಲಿ ಸಂತುಷ್ಟತೆಯಿರುವುದೋ ಅದಕ್ಕೆ ಸುಖ-ಶಾಂತಿ ಎಂದು ಹೇಳುವರು ಅಂದಾಗ ಈಗ ನೀವು ಮಕ್ಕಳ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ತಿಳಿದುಕೊಂಡಿದ್ದೀರಿ, ಸತ್ಯಯುಗದಲ್ಲಿ ಭಾರತವು ಎಷ್ಟು ಸುಖಿಯಾಗಿತ್ತು, ದುಃಖ ಅಥವಾ ಅಸಂತುಷ್ಟತೆಯ ಹೆಸರೇ ಇರಲಿಲ್ಲ, ನೀವೀಗ ಸ್ವರ್ಗದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ನೀವೀಗ ಈಶ್ವರೀಯ ಸಂಪ್ರದಾಯದವರಾಗಿದ್ದೀರಿ, ಅವರು ಆಸುರೀ ಸಂಪ್ರದಾಯದವರಾಗಿದ್ದಾರೆ. ಪಾಪಾತ್ಮರೆಂದು ಹೇಳುತ್ತಾರಲ್ಲವೆ. ಆತ್ಮರು ಅನೇಕರಿದ್ದಾರೆ, ಪರಮಾತ್ಮನು ಒಬ್ಬನೇ ಆಗಿದ್ದಾರೆ. ಎಲ್ಲರೂ ಸಹೋದರರಾಗಿದ್ದೀರಿ, ಎಲ್ಲರೂ ಪರಮಾತ್ಮರಾಗಲು ಸಾಧ್ಯವಿಲ್ಲ. ಇಷ್ಟು ಚಿಕ್ಕ ಮಾತೂ ಸಹ ಮನುಷ್ಯರ ಬುದ್ಧಿಯಲ್ಲಿಲ್ಲ. ತಂದೆಯು ತಿಳಿಸಿದ್ದಾರೆ - ಇಡೀ ಪ್ರಪಂಚವೇ ದೊಡ್ಡ ಬೇಹದ್ದಿನ ದ್ವೀಪವಾಗಿದೆ, ಅವು ಚಿಕ್ಕ-ಚಿಕ್ಕ ದ್ವೀಪಗಳಿರುತ್ತವೆ. ಈ ಬೇಹದ್ದಿನ ದ್ವೀಪದಲ್ಲಿ ರಾವಣ ರಾಜ್ಯವಿದೆ, ಈ ಮಾತುಗಳನ್ನು ಮನುಷ್ಯರು ತಿಳಿದುಕೊಳ್ಳುವುದಿಲ್ಲ. ಅವರು ಕೇವಲ ಕಥೆಗಳನ್ನು ತಿಳಿಸುತ್ತಾ ಇರುತ್ತಾರೆ, ಕಥೆಗೆ ಜ್ಞಾನವೆಂದು ಹೇಳಲಾಗುವುದಿಲ್ಲ, ಅದರಿಂದ ಮನುಷ್ಯರು ಸದ್ಗತಿ ಪಡೆಯಲು ಸಾಧ್ಯವಿಲ್ಲ, ಜ್ಞಾನದಿಂದಲೇ ಸದ್ಗತಿ ಸಿಗುತ್ತದೆ. ಜ್ಞಾನ ಕೊಡುವವರು ಒಬ್ಬ ತಂದೆಯಾಗಿದ್ದಾರೆ ಮತ್ತ್ಯಾರೂ ಇಲ್ಲ. ಭಗವಂತನೇ ಬಂದು ಭಕ್ತರ ರಕ್ಷಣೆ ಮಾಡುತ್ತಾರೆ. ಮನುಷ್ಯರು ಮನುಷ್ಯರನ್ನು ರಕ್ಷಣೆ ಮಾಡಲು ಸಾಧ್ಯವಿಲ್ಲ. ಶಿವ ತಂದೆಯು ಎಲ್ಲಾ ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ವಕೀಲನೂ ಆಗಿದ್ದಾರೆ ಏಕೆಂದರೆ ಯಮದೂತರ ಶಿಕ್ಷೆಗಳಿಂದ ಬಿಡಿಸುವವರಾಗಿದ್ದಾರೆ. ಸತ್ಯಯುಗದಲ್ಲಿ ಯಾರೂ ಜೈಲಿಗೆ ಹೋಗುವುದಿಲ್ಲ, ತಂದೆಯು ಎಲ್ಲರನ್ನೂ ಜೈಲಿನಿಂದ ಬಿಡಿಸುತ್ತಾರೆ. ಮಕ್ಕಳ ಎಲ್ಲಾ ಸರ್ವಶ್ರೇಷ್ಠ ಮನೋಕಾಮನೆಗಳು ಈಡೇರುತ್ತವೆ. ರಾವಣನ ಮೂಲಕ ಅಶುದ್ಧ ಕಾಮನೆಗಳು ಈಡೇರುತ್ತವೆ. ತಂದೆಯ ಮೂಲಕ ಶುದ್ಧ ಕಾಮನೆಗಳು ಪೂರ್ಣವಾಗುತ್ತವೆ. ಶುದ್ಧ ಕಾಮನೆಗಳು ಪೂರ್ಣವಾಗುವುದರಿಂದ ನೀವು ಸದಾ ಸುಖಿಯಾಗಿ ಬಿಡುತ್ತೀರಿ. ಪತಿತ ವಿಕಾರಿಯಾಗುವುದು ಅಶುದ್ಧ ಕಾಮನೆಯಾಗಿದೆ. ಪಾವನರಾಗಿರುವವರಿಗೆ ಬ್ರಹ್ಮಚಾರಿಗಳೆಂದು ಹೇಳಲಾಗುತ್ತದೆ. ನೀವೂ ಸಹ ಪವಿತ್ರರಾಗಿರಬೇಕಾಗಿದೆ, ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ. ತಂದೆಯೊಬ್ಬರೇ ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ಸಾಧು-ಸನ್ಯಾಸಿಗಳೂ ಸಹ ವಿಕಾರದಿಂದ ಜನ್ಮ ಪಡೆಯುತ್ತಾರೆ, ದೇವತೆಗಳಿಗೆ ಈ ರೀತಿ ಹೇಳುವುದಿಲ್ಲ ಏಕೆಂದರೆ ಅಲ್ಲಿ ವಿಕಾರವಿರುವುದೇ ಇಲ್ಲ. ಅದು ಪಾವನ ಪ್ರಪಂಚವಾಗಿದೆ, ಲಕ್ಷ್ಮೀ-ನಾರಾಯಣರು ಸಂಪೂರ್ಣ ನಿರ್ವಿಕಾರಿಯಾಗಿದ್ದರು, ಭಾರತವು ಪವಿತ್ರವಾಗಿತ್ತು, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ಸತ್ಯಯುಗದಲ್ಲಿ ಪವಿತ್ರತೆಯಿದ್ದಾಗ ಸುಖ-ಶಾಂತಿಯಿತ್ತು, ಎಲ್ಲರೂ ಸುಖಿಯಾಗಿದ್ದರು. ಯಾವಾಗಿನಿಂದ ರಾವಣ ರಾಜ್ಯವಾಯಿತೋ ಆಗಿನಿಂದಲೇ ಇಳಿಯುತ್ತಾ ಬಂದಿದ್ದಾರೆ. ಈಗಂತೂ ಏನೂ ಪ್ರಯೋಜನಕ್ಕಿಲ್ಲ, ಒಮ್ಮೆಲೇ ಕವಡೆಯಂತಾಗಿ ಬಿಟ್ಟಿದ್ದೀರಿ, ಈಗ ಪುನಃ ತಂದೆಯ ಮೂಲಕ ವಜ್ರ ಸಮಾನರಾಗುತ್ತೀರಿ. ಭಾರತವು ಸತ್ಯಯುಗವಾಗಿದ್ದಾಗ ವಜ್ರ ಸಮಾನವಾಗಿತ್ತು, ಈಗಂತೂ ಕವಡೆಯ ತರಹವೂ ಇಲ್ಲ. ಯಾರಿಗೂ ತಮ್ಮ ಧರ್ಮದ ಬಗ್ಗೆ ಗೊತ್ತಿಲ್ಲ. ಪಾಪಗಳನ್ನು ಮಾಡುತ್ತಿರುತ್ತಾರೆ, ಸತ್ಯಯುಗದಲ್ಲಿ ಪಾಪದ ಹೆಸರೂ ಇರುವುದಿಲ್ಲ. ನೀವು ದೇವಿ-ದೇವತಾ ಧರ್ಮದವರು ಹೆಸರುವಾಸಿಯಾಗಿದ್ದೀರಿ, ದೇವತೆಗಳ ಅನೇಕ ಚಿತ್ರಗಳಿವೆ. ಅನ್ಯ ಧರ್ಮಗಳಲ್ಲಿ ನೋಡಿದರೆ ಒಂದೇ ಚಿತ್ರವಿರುತ್ತದೆ, ಕ್ರಿಶ್ಚಿಯನ್ನರ ಬಳಿ ಒಬ್ಬರೇ ಕ್ರೈಸ್ಟ್ನ ಚಿತ್ರವಿರುವುದು. ಬೌದ್ಧರ ಬಳಿ ಬುದ್ಧನ ಚಿತ್ರವಿರುವುದು. ಕ್ರಿಶ್ಚಿಯನ್ನರು ಕ್ರಿಸ್ತನನ್ನೇ ನೆನಪು ಮಾಡುತ್ತಾರೆ ಅವರನ್ನು ನನ್ಸ್ ಎಂದು ಹೇಳುತ್ತಾರೆ. ನನ್ಸ್ ಎಂದರೆ ಒಬ್ಬ ಕ್ರಿಸ್ತನನ್ನು ಬಿಟ್ಟರೆ ಮತ್ತ್ಯಾರೂ ಇಲ್ಲ, ಆದ್ದರಿಂದ ನನ್ ಬಟ್ ಕ್ರೈಸ್ಟ್ ಎಂದು ಹೇಳುತ್ತಾರೆ. ಬ್ರಹ್ಮಚಾರಿಗಳಾಗಿರುತ್ತಾರೆ, ನೀವೂ ಸಹ ನನ್ಸ್ ಆಗಿದ್ದೀರಿ, ನೀವು ತಮ್ಮ ಗೃಹಸ್ಥ ವ್ಯವಹಾರದಲ್ಲಿರುತ್ತಾ ನನ್ಸ್ ಆಗುತ್ತೀರಿ. ಒಬ್ಬ ತಂದೆಯನ್ನೇ ನೆನಪು ಮಾಡುತ್ತೀರಿ, ನನ್ ಬಟ್ ಒನ್, ಒಬ್ಬ ಶಿವ ತಂದೆಯ ವಿನಃ ಅನ್ಯ ಯಾರೂ ಇಲ್ಲ. ಅವರ ಬುದ್ಧಿಯಲ್ಲಾದರೂ ಇಬ್ಬರು ಬಂದು ಬಿಡುತ್ತಾರೆ, ಕ್ರಿಸ್ತನನ್ನು ಭಗವಂತನ ಮಗುವೆಂದು ತಿಳಿಯುತ್ತಾರೆ ಆದರೆ ಅವರಿಗೆ ಭಗವಂತನ ಜ್ಞಾನವಿಲ್ಲ, ನೀವು ಮಕ್ಕಳಿಗೇ ಜ್ಞಾನವಿದೆ. ಇಡೀ ಪ್ರಪಂಚದಲ್ಲಿ ಪರಮಾತ್ಮನ ಜ್ಞಾನವಿರುವಂತಹ ಮನುಷ್ಯರು ನಿಮ್ಮ ವಿನಃ ಯಾರೂ ಇಲ್ಲ. ಪರಮಾತ್ಮನು ಎಲ್ಲಿರುತ್ತಾರೆ? ಯಾವಾಗ ಬರುತ್ತಾರೆ? ಅವರ ಪಾತ್ರವೇನು ಎಂಬುದು ಯಾರಿಗೂ ತಿಳಿದಿಲ್ಲ. ಭಗವಂತನಿಗೆ ಎಲ್ಲವನ್ನೂ ಬಲ್ಲವರೆಂದು ಹೇಳುತ್ತಾರೆ, ಇದರಿಂದ ಅವರು ನಮ್ಮ ಹೃದಯದ ಮಾತನ್ನು ತಿಳಿದುಕೊಳ್ಳುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ತಂದೆಯು ಹೇಳುತ್ತಾರೆ - ನಾನು ಪ್ರತಿಯೊಬ್ಬರ ಹೃದಯದಲ್ಲಿ ಕುಳಿತು ಅವರ ಒಳಹೊಕ್ಕು ನೋಡಲು ನನಗೇಕೆ ಬೇಕು? ನಾನು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತೇನೆ. ಒಂದುವೇಳೆ ಯಾರಾದರೂ ಪವಿತ್ರವಾಗಿರುವುದಿಲ್ಲ, ಅಸತ್ಯವನ್ನು ಹೇಳುತ್ತಾರೆಂದರೆ ತಮಗೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ. ದೇವತೆಗಳ ಸಭೆಯಲ್ಲಿ ಅಸುರರು ಹೋಗಿ ಕುಳಿತುಕೊಳ್ಳುತ್ತಿದ್ದರು, ಅಲ್ಲಿ ಅಮೃತವನ್ನು ಹಂಚಲಾಗುತ್ತಿತ್ತು, ಯಾರೋ ವಿಕಾರದಲ್ಲಿ ಹೋಗಿ ಮತ್ತೆ ಬಚ್ಚಿಟ್ಟುಕೊಂಡು ಬಂದು ಕುಳಿತುಕೊಂಡರು ಆದ್ದರಿಂದ ಅವರು ಅಸುರರಾಗಿ ಬಿಟ್ಟರು ಎಂದು ಗಾಯನವಿದೆ ಅಂದರೆ ತಾವೇ ತಮ್ಮ ಪದವಿಯನ್ನು ಭ್ರಷ್ಟ ಮಾಡಿಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ಪುರುಷಾರ್ಥ ಮಾಡಬೇಕಾಗಿದೆ, ಇಲ್ಲವಾದರೆ ತಮ್ಮದೇ ಸತ್ಯ ನಾಶ ಮಾಡಿಕೊಳ್ಳುವರು. ಅನೇಕರು ಹೀಗೆ ಬಚ್ಚಿಟ್ಟುಕೊಂಡು ಕುಳಿತುಕೊಳ್ಳುತ್ತಾರೆ, ನಾವು ವಿಕಾರದಲ್ಲಿ ಹೋಗುವುದಿಲ್ಲವೆಂದು ಹೇಳುತ್ತಾರೆ ಆದರೆ ವಿಕಾರದಲ್ಲಿ ಹೋಗುತ್ತಿರುತ್ತಾರೆ. ಹೀಗೆ ತಮಗೆ ತಾವೇ ಮೋಸ ಮಾಡಿಕೊಳ್ಳುತ್ತಾರೆ. ತಮ್ಮದೇ ಸತ್ಯ ನಾಶ ಮಾಡಿಕೊಳ್ಳುತ್ತಾರೆ, ಪರಮಪಿತ ಪರಮಾತ್ಮನ ಬಲಭುಜ ಧರ್ಮರಾಜನಾಗಿದ್ದಾರೆ. ಧರ್ಮರಾಜನ ಮುಂದೆ ಸುಳ್ಳು ಹೇಳಿದರೆ ತಾವೇ ಶಿಕ್ಷೆಗೆ ಭಾಗಿಗಳಾಗುತ್ತಾರೆ. ಬಹಳಷ್ಟು ಸೇವಾಕೇಂದ್ರಗಳಲ್ಲಿಯೂ ಇಂತಹವರಿರುತ್ತಾರೆ. ತಂದೆಯು ಯಾವಾಗ ಮೊದಲ ಬಾರಿ ದೆಹಲಿಗೆ ಹೋಗಿದ್ದಾಗ ಒಬ್ಬ ವ್ಯಕ್ತಿಯು ನಿತ್ಯವೂ ಬರುತ್ತಿದ್ದರು ಮತ್ತು ವಿಕಾರದಲ್ಲಿ ಹೋಗುತ್ತಿದ್ದರು. ಪವಿತ್ರರಾಗಿ ಇರಲು ಸಾಧ್ಯವಿಲ್ಲವೆಂದರೆ ತಾವೇಕೆ ಬರುತ್ತೀರಿ ಎಂದು ಕೇಳಲಾಯಿತು, ಆಗ ಅವರು ಈ ರೀತಿ ಹೇಳಿದರು - ನಾನು ಬರದಿದ್ದರೆ ಮುಂದೆ ಹೇಗೆ ನಿರ್ವಿಕಾರಿಯಾಗುವೆನು? ಪವಿತ್ರತೆಯು ಇಷ್ಟವಾಗುತ್ತದೆ ಆದರೆ ಪವಿತ್ರವಾಗಿರಲು ಸಾಧ್ಯವಾಗುತ್ತಿಲ್ಲ, ಕೊನೆಗೊಂದು ದಿನ ಸುಧಾರಣೆಯಾಗುವೆನು, ಒಂದುವೇಳೆ ಬರುವುದನ್ನು ಬಿಟ್ಟರೆ ನನ್ನ ದೋಣಿಯು ಸಿಕ್ಕಿಹಾಕಿಕೊಳ್ಳುವುದು. ಮತ್ತ್ಯಾವುದೇ ಮಾರ್ಗವೂ ಇಲ್ಲ ಆದ್ದರಿಂದ ನಾನು ಇಲ್ಲಿಗೆ ಬರಬೇಕಾಗುತ್ತದೆ ಎಂದರು. |
ತಂದೆಯು ತಿಳಿಸುತ್ತಾರೆ - ನೀವು ವಾಯುಮಂಡಲವನ್ನು ಹಾಳು ಮಾಡುತ್ತೀರಿ, ಎಲ್ಲಿಯವರೆಗೆ ಈ ರೀತಿ ಬರುತ್ತಾ ಇರುತ್ತೀರಿ! ಯಾರು ಪಾವನರಾಗುವರೋ ಅವರಿಗೆ ಪತಿತರೊಂದಿಗೆ ತಿರಸ್ಕಾರ ಬರುತ್ತದೆ. ಬಾಬಾ, ಇವರ ಕೈಯಿಂದ ತಯಾರಿಸಿದ ಆಹಾರವೂ ಇಷ್ಟವಾಗುವುದಿಲ್ಲವೆಂದು ಹೇಳುತ್ತಾರೆ. ತಂದೆಯು ಯುಕ್ತಿಯನ್ನೂ ತಿಳಿಸಿದ್ದಾರೆ - ಆಹಾರ-ಪಾನೀಯಗಳ ವಿಷಯಗಳಲ್ಲಿ ಕಿರಿಕಿರಿಯಾದರೆ ನೌಕರಿಯನ್ನೇ ಬಿಟ್ಟು ಬಿಡುತ್ತೇವೆಂದು ಹೇಳುವುದಲ್ಲ, ಯುಕ್ತಿಯಿಂದ ನಡೆಯಬೇಕಾಗುತ್ತದೆ. ಯಾರಿಗಾದರೂ ತಿಳಿಸಿದರೆ ಅವರು ಮುನಿಸಿಕೊಳ್ಳುತ್ತಾರೆ. ಹೇಗೆ ಪವಿತ್ರರಾಗಿರುವುದು! ಇದನ್ನು ಎಂದೂ ಕೇಳಿರುವುದೂ ಇಲ್ಲ, ಸನ್ಯಾಸಿಗಳೂ ಇರಲು ಸಾಧ್ಯವಿಲ್ಲ. ಯಾವಾಗ ಮನೆ-ಮಠಗಳನ್ನು ಬಿಟ್ಟು ಹೋಗುವರೋ ಆಗ ಪವಿತ್ರರಾಗಿರಲು ಸಾಧ್ಯ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇಲ್ಲಿ ಪತಿತ-ಪಾವನ, ಪರಮಪಿತ ಪರಮಾತ್ಮನೇ ಓದಿಸುತ್ತಾರೆಂದು ತಿಳಿದಿಲ್ಲ, ನಂಬುವುದಿಲ್ಲ ಆದ್ದರಿಂದ ವಿರೋಧ ಮಾಡುತ್ತಾರೆ. ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬರುತ್ತಾರೆ ಎಂಬುದು ಯಾವುದೇ ಶಾಸ್ತ್ರದಲ್ಲಾದರೂ ತೋರಿಸಿ ಎನ್ನುತ್ತಾರೆ. ಇದಂತೂ ಗೀತೆಯಲ್ಲಿ ಬರೆಯಲ್ಪಟ್ಟಿದೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ. ಅವರು (ಬ್ರಹ್ಮಾ) ತನ್ನ ಜನ್ಮಗಳನ್ನೇ ಅರಿತುಕೊಂಡಿಲ್ಲ. ಇದಂತೂ ಬರೆಯಲ್ಪಟ್ಟಿದೆ ಅಂದಮೇಲೆ ಪರಮಾತ್ಮನು ಮನುಷ್ಯನ ತನುವಿನಲ್ಲಿ ಹೇಗೆ ಬರುತ್ತಾರೆಂದು ನೀವು ಹೇಗೆ ಹೇಳುವಿರಿ! ಪತಿತತನುವಿನಲ್ಲಿಯೇ ಬಂದು ಮಾರ್ಗವನ್ನು ತಿಳಿಸುತ್ತಾರಲ್ಲವೆ. ಮೊದಲೂ ಸಹ ಬಂದಿದ್ದರು ಮತ್ತು ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ತಿಳಿಸಿದ್ದರು, ಅವರೇ ಪರಮಧಾಮದಲ್ಲಿರುತ್ತಾರೆ ಮತ್ತು ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಹೇಳುತ್ತಾರೆ. ಕೃಷ್ಣನ ಶರೀರವಂತೂ ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಹೇಳಲು ಮೂಲ ವತನದಲ್ಲಿ ಇರುವುದಿಲ್ಲ, ಒಬ್ಬ ಪರಮಪಿತ ಪರಮಾತ್ಮನೇ ಸಾಧಾರಣ ತನುವಿನಲ್ಲಿ ಪ್ರವೇಶ ಮಾಡಿ ನೀವು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಈ ಯೋಗಾಗ್ನಿಯಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ ಆದ್ದರಿಂದಲೇ ನನಗೆ ಪತಿತ-ಪಾವನನೆಂದು ಹೇಳುತ್ತಾರೆ. ಅವಶ್ಯವಾಗಿ ಆತ್ಮರ ಪತಿತ-ಪಾವನನೇ ಆಗಿರಬೇಕಲ್ಲವೆ. ಆತ್ಮವೇ ಪತಿತನಾಗುತ್ತದೆ. |
ತಂದೆಯು ತಿಳಿಸುತ್ತಾರೆ - ನೀವು ಪವಿತ್ರ ಆತ್ಮರು 16 ಕಲಾ ಸಂಪೂರ್ಣರಾಗಿದ್ದಿರಿ, ಈಗ ಕಲಾಹೀನ, ಪತಿತರಾಗಿ ಬಿಟ್ಟಿದ್ದೀರಿ. ನಾನು ಕಲ್ಪ-ಕಲ್ಪವೂ ಬಂದು ನಿಮಗೆ ತಿಳಿಸುತ್ತೇನೆ. ನೀವು ಕಾಮ ಚಿತೆಯ ಮೇಲೆ ಕುಳಿತು ಪತಿತರಾಗಿ ಬಿಡುತ್ತೀರಿ ನಂತರ ಜ್ಞಾ ನಚಿತೆಯ ಮೇಲೆ ಕೂರಿಸಿ ನಿಮ್ಮನ್ನು ಪಾವನರನ್ನಾಗಿ ಮಾಡುತ್ತೇನೆ. ಭಾರತದಲ್ಲಿ ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಅಪವಿತ್ರ ಪ್ರವೃತ್ತಿ ಮಾರ್ಗವಾಗಿದೆ, ಯಾರಿಗೂ ಸುಖವಿಲ್ಲ. ತಂದೆಯು ತಿಳಿಸುತ್ತಾರೆ - ಇಬ್ಬರೂ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿರಿ. ಆತ್ಮರಿಗೆ ತಮ್ಮ-ತಮ್ಮ ಕರ್ಮಗಳನುಸಾರ ಶರೀರಗಳು ಸಿಗುತ್ತವೆ. ಇನ್ನೊಂದು ಜನ್ಮದಲ್ಲಿಯೂ ಅದೇ ಪತಿ-ಪತ್ನಿಯು ಪರಸ್ಪರ ಸೇರುತ್ತಾರೆಂದಲ್ಲ. ಇಷ್ಟೊಂದು ರೇಸ್ ಮಾಡಲು ಸಾಧ್ಯವಿಲ್ಲ, ಇದು ವಿದ್ಯೆಯ ಮಾತಲ್ಲವೆ. ಅಜ್ಞಾನ ಕಾಲದಲ್ಲಿ ಇದು ಆಗಬಹುದು, ಪರಸ್ಪರ ಬಹಳ ಪ್ರೇಮವಿದ್ದರೆ ಅವರ ಮನೋಕಾಮನೆಗಳು ಪೂರ್ಣವಾಗಬಹುದು. ಅದಂತೂ ಪತಿತ ವಿಕಾರಿ ಮಾರ್ಗವಾಗಿದೆ. ಪತಿಯ ಹಿಂದೆ ಪತ್ನಿಯು ಚಿತೆಯ ಮೇಲೆ ಕುಳಿತುಕೊಳ್ಳುತ್ತಾಳೆ. ನಂತರದ ಜನ್ಮದಲ್ಲಿಯೂ ಹೋಗಿ ಅವರನ್ನು ಸೇರುತ್ತಾರೆ ಆದರೆ ನಂತರದ ಜನ್ಮದಲ್ಲಿ ಅವರಿಗೆ ಇದೆಲ್ಲವೂ ಅರ್ಥವಾಗುವುದಿಲ್ಲ. ನೀವೂ ಸಹ ತಂದೆಯ ಜೊತೆ ಜ್ಞಾನ ಚಿತೆಯನ್ನೇರುತ್ತೀರಿ. ಈ ಛೀ ಛೀ ಶರೀರವನ್ನು ಬಿಟ್ಟು ಹೊರಟು ಹೋಗುತ್ತೀರಿ. ನಿಮಗೆ ಇದು ಈಗ ಅರ್ಥವಾಗಿದೆ, ನಾವು ಹಿಂದಿನ ಜನ್ಮದಲ್ಲಿ ಇದೇರೀತಿ ಜೊತೆಗಾರರಾಗಿದ್ದೆವು ಎಂಬುದು ಅವರಿಗಂತೂ ತಿಳಿದಿರುವುದಿಲ್ಲ. ನಿಮಗೂ ಸಹ ನಂತರದಲ್ಲಿ ಈ ಮಾತುಗಳು ನೆನಪಿರುವುದಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಗುರಿ-ಧ್ಯೇಯವಿದೆ, ಮಮ್ಮಾ-ಬಾಬಾರವರೇ ಲಕ್ಷ್ಮೀ-ನಾರಾಯಣರಾಗುತ್ತಾರೆ. ವಿಷ್ಣು ದೇವತೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನಿಗೆ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ಬ್ರಹ್ಮನೇ ನಂತರ ದೇವತೆಯಾಗುತ್ತಾರೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮ ಹೇಗಾಗುತ್ತಾರೆಂದು ನೀವೀಗ ತಿಳಿದುಕೊಂಡಿದ್ದೀರಿ. ನಿಮಗೆ ಇದೂ ಸಹ ತಿಳಿದಿದೆ - ಸುಖವು ಕೇವಲ ಸ್ವರ್ಗದಲ್ಲಿಯೇ ಇರುತ್ತದೆ, ಯಾರಾದರೂ ಶರೀರ ಬಿಟ್ಟರೆ ಸ್ವರ್ಗಕ್ಕೆ ಹೋದರು ಅರ್ಥಾತ್ ಸುಖದಲ್ಲಿ ಹೋದರೆಂದು ಹೇಳುತ್ತಾರೆ. ದುಃಖದಲ್ಲಿ ಪತಿತರಿರುತ್ತಾರೆ. ತಂದೆಯು ಪುನಃ ಇದನ್ನೇ ಹೇಳುತ್ತಾರೆ - ಮಕ್ಕಳೇ, ತನ್ನನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುತ್ತವೆ. ಉಳಿದೆಲ್ಲವೂ ವಿವರವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ತಂದೆಯು ಜ್ಞಾನ ಪೂರ್ಣನಾಗಿರುವುದರಿಂದ ನಿಮ್ಮನ್ನೂ ತನ್ನಂತೆಯೇ ಜ್ಞಾನ ಪೂರ್ಣರನ್ನಾಗಿ ಮಾಡುತ್ತಾರೆ. ತಂದೆಯ ನೆನಪಿನಿಂದ ನೀವು ಸತೋಪ್ರಧಾನರಾಗುತ್ತೀರಿ. ಇದು ಆತ್ಮರ ರೇಸ್ ಆಗಿದೆ. ಯಾರು ಹೆಚ್ಚು ನೆನಪು ಮಾಡುವರೋ ಅವರು ಬೇಗನೆ ಆಗುತ್ತಾರೆ. ಇದು ಯೋಗ ಮತ್ತು ವಿದ್ಯೆಯ ರೇಸ್ ಆಗಿದೆ. ಶಾಲೆಯಲ್ಲಿಯೂ ಸ್ಪರ್ಧೆಯಿರುತ್ತದೆಯಲ್ಲವೆ. ಅನೇಕ ಮಂದಿ ವಿದ್ಯಾರ್ಥಿಗಳಿರುತ್ತಾರೆ, ಅವರಲ್ಲಿ ಯಾರು ನಂಬರ್ವನ್ ಬರುವರೋ ಅವರಿಗೆ ವಿದ್ಯಾರ್ಥಿವೇತನವು ಸಿಗುತ್ತದೆ. ಲಕ್ಷಾಂತರ, ಕೋಟ್ಯಾಂತರ ವಿದ್ಯಾರ್ಥಿಗಳಿಗೂ ಒಂದೇ ವಿದ್ಯೆಯಿರುತ್ತದೆ ಅಂದಮೇಲೆ ಇಷ್ಟೊಂದು ಶಾಲೆಗಳು ಇರುತ್ತವೆಯಲ್ಲವೆ. ಈಗ ನೀವು ಈ ವಿದ್ಯೆಯನ್ನು ಓದಬೇಕಾಗಿದೆ. ಎಲ್ಲರಿಗೆ ಮಾರ್ಗವನ್ನು ತಿಳಿಸಿರಿ, ಅಂಧರಿಗೆ ಊರುಗೋಲಾಗಿರಿ. ಮನೆ-ಮನೆಯಲ್ಲಿ ಸಂದೇಶವನ್ನು ತಲುಪಿಸಬೇಕಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈಗ ಅಶುದ್ಧ ಕಾಮನೆಗಳ ತ್ಯಾಗ ಮಾಡಿ ಶುದ್ಧ ಕಾಮನೆಗಳನ್ನು ಇಟ್ಟುಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ಶುದ್ಧ ಕಾಮನೆಯಾಗಿದೆ, ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕು ಎಂಬುದು. ಯಾವುದೇ ತಪ್ಪನ್ನು ಮುಚ್ಚಿಟ್ಟು ತಮಗೆ ತಾವು ಮೋಸ ಮಾಡಿಕೊಳ್ಳಬಾರದು. ಧರ್ಮರಾಜ ತಂದೆಯೊಂದಿಗೆ ಸದಾ ಸತ್ಯವಾಗಿರಬೇಕಾಗಿದೆ. |
2. ಜ್ಞಾನ ಚಿತೆಯ ಮೇಲೆ ಕುಳಿತು ಈ ವಿದ್ಯೆಯಲ್ಲಿ ರೇಸ್ ಮಾಡಿ ಭವಿಷ್ಯ ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಯೋಗಾಗ್ನಿಯಿಂದ ವಿಕರ್ಮಗಳ ಖಾತೆಯನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿ. ಈ ಎರಡನ್ನೂ ಯಾರು ಹೇಳುತ್ತಾರೆ? ಒಬ್ಬರು ತಂದೆ, ಇನ್ನೊಬ್ಬರು ದಾದಾ. ಒಬ್ಬ ರಾಜನಿದ್ದನು, ಒಬ್ಬ ರಾಣಿಯಿದ್ದಳು ಎಂದು ಕಥೆಯನ್ನು ಹೇಳುತ್ತಾರಲ್ಲವೆ. ಈಗ ಇವು ಹೊಸ ಮಾತುಗಳಾಗಿವೆ. ಒಬ್ಬರು ತಂದೆ, ಇನ್ನೊಬ್ಬರು ದಾದಾ, ನೀವು ಹೇಳುತ್ತೀರಿ - 5000 ವರ್ಷಗಳು ಮೊದಲೂ ಸಹ ಒಬ್ಬರು ಶಿವ ತಂದೆಯಿದ್ದರು, ಇನ್ನೊಬ್ಬರು ಬ್ರಹ್ಮಾದಾದಾ ಇದ್ದರು. ಶಿವನಿಗಂತೂ ಎಲ್ಲರೂ ಮಕ್ಕಳಾಗಿದ್ದಾರೆ. ಎಲ್ಲಾ ಆತ್ಮರು ಒಬ್ಬ ತಂದೆಯ ಸಂತಾನರಾಗಿದ್ದಾರೆ. ಇದಂತೂ ಇದ್ದೇ ಇದೆ. ಬ್ರಹ್ಮನ ಮಕ್ಕಳು ಬ್ರಾಹ್ಮಣರೂ ಇದ್ದರು, ಪ್ರಜಾಪಿತ ಬ್ರಹ್ಮನ ಸಂತಾನರು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದರು, ಅವರಿಗೆ ಯಾರು ಓದಿಸುತ್ತಿದ್ದರು? ಶಿವ ತಂದೆ. ಪ್ರಜಾಪಿತ ಬ್ರಹ್ಮನಿಗೆ ಈ ಬ್ರಹ್ಮಾಕುಮಾರ-ಕುಮಾರಿಯರು ಅನೇಕ ಮಕ್ಕಳಿದ್ದಾರಲ್ಲವೆ. ಬ್ರಹ್ಮಾಕುಮಾರ-ಕುಮಾರಿಯರು ಒಪ್ಪುತ್ತಾರೆ - ನಾವು ಶಿವ ತಂದೆಯ ಮಕ್ಕಳೂ ಆಗಿದ್ದೇವೆ, ಮೊಮ್ಮಕ್ಕಳೂ ಆಗಿದ್ದೇವೆ. ಮಕ್ಕಳಂತೂ ಆಗಿಯೇ ಇದ್ದೇವೆ, ಈಗ ಮೊಮ್ಮಕ್ಕಳಾಗಿದ್ದೇವೆ. ಈಗ ಬ್ರಹ್ಮಾರವರ ಮೂಲಕ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳಲು ಮೊಮ್ಮಕ್ಕಳಾಗಿದ್ದೇವೆ. ಈಗ ನಿಮಗೆ ತಾತನಿಂದ ಆಸ್ತಿಯು ಸಿಗುತ್ತಿದೆ, ಅವರಿಗೆ ಶಿವಬಾಬಾ ಎಂದು ಹೇಳುತ್ತಾರೆ ಆದರೆ ಬ್ರಹ್ಮಾಕುಮಾರ-ಕುಮಾರಿಯರಾಗಿರುವ ಕಾರಣ ಅವರಿಗೆ ನಾವು ತಾತನೆಂದು ಹೇಳುತ್ತೇವೆ. ಆಸ್ತಿಯು ತಾತನದಾಗಿದೆ, ಬ್ರಹ್ಮಾಬಾಬಾರವರದಲ್ಲ. ವೈಕುಂಠವಾಸಿಗಳಾಗುವ ಆಸ್ತಿಯು ಆ ತಂದೆಯಿಂದ ಸಿಗುತ್ತದೆ. ಅರ್ಧಕಲ್ಪ ಆಸ್ತಿಯನ್ನು ಪಡೆಯುತ್ತೀರಿ, ನಂತರ ನಿಮಗೆ ರಾವಣನಿಂದ ಶಾಪ ಸಿಗುತ್ತದೆ, ಕೆಳಗಿಳಿಯುತ್ತಾ ಬರುತ್ತೀರಿ ಅಂದರೆ ಕೆಳಗಿಳಿಯುವ ಗ್ರಹಚಾರವು ಕುಳಿತುಕೊಳ್ಳುತ್ತದೆ. ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ - ನಮ್ಮ ಗ್ರಹಚಾರ ರಾಹುವಿನ ದೆಶೆಯು ಮುಕ್ತಾಯವಾಯಿತು, ರಾಹುವಿನ ದೆಶೆಯು ಎಲ್ಲದಕ್ಕಿಂತ ಕೆಟ್ಟದ್ದಾಗಿದೆ, ಬೃಹಸ್ಪತಿ ದೆಶೆ ಸರ್ವಶ್ರೇಷ್ಠವಾಗಿದೆ, ಮತ್ತೆ ರಾಹುವಿನ ದೆಶೆ ಬಂದಿದ್ದರಿಂದ 5 ವಿಕಾರಗಳ ಕಾರಣ ನಾವು ಕಪ್ಪಾಗಿ ಬಿಟ್ಟಿದ್ದೇವೆ, ಈಗ ಪುನಃ ತಂದೆಯು ಹೇಳುತ್ತಾರೆ - ದಾನ ಕೊಟ್ಟರೆ ಗ್ರಹಣವು ಬಿಟ್ಟು ಹೋಗುವುದು. ನಿಮ್ಮದೇ ಮಾತಾಗಿದೆ. ಇದನ್ನು ಅವರು ಸೂರ್ಯ-ಚಂದ್ರನ ಗ್ರಹಣವೆಂದು ತಿಳಿದುಕೊಂಡಿದ್ದಾರೆ. ಗ್ರಹಣ ಹಿಡಿದಾಗ ದಾನ ಕೊಡುತ್ತಾರೆ, ಇಲ್ಲಿ ತಂದೆಯು ನಿಮಗೆ ತಿಳಿಸುತ್ತಾರೆ - 5 ವಿಕಾರಗಳ ದಾನ ಕೊಟ್ಟರೆ ಗ್ರಹಚಾರವು ಕಳೆಯುವುದು. ಈ ವಿಕಾರಗಳಿಂದಲೇ ನೀವು ಪಾಪಾತ್ಮರಾಗಿದ್ದೀರಿ, ಮುಖ್ಯವಾದುದು ದೇಹಾಭಿಮಾನವಾಗಿದೆ. ಮೊದಲು ಇಷ್ಟು ಸತೋಪ್ರಧಾನರಾಗಿದ್ದೆವು ನಂತರ ಸತೋ, ರಜೋ, ತಮೋ ಆದೆವು, 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. ದೇವತೆಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂಬುದು ಪಕ್ಕಾ ನಿಶ್ಚಯವಿದೆ ಅಂದಮೇಲೆ ಮೊದಲು ಅವರೇ ತಂದೆಯೊಂದಿಗೆ ಮಿಲನ ಮಾಡಬೇಕು, ಆತ್ಮಗಳು ಪರಮಾತ್ಮನಿಂದ ಬಹುಕಾಲ ಅಗಲಿ ಹೋಗಿದ್ದರೆಂದು ಗಾಯನ ಮಾಡುತ್ತಾರೆ. ತಂದೆಯು ಹೇಳುತ್ತಾರೆ – ಮೊಟ್ಟ ಮೊದಲು ನಿಮ್ಮನ್ನು ಸತ್ಯಯುಗದಲ್ಲಿ ಕಳುಹಿಸಿದ್ದೆನು ನಂತರ ನೀವೇ ಬಂದು ಈಗ ಮಿಲನ ಮಾಡಿದ್ದೀರಿ. ಮೊದಲು ಕೇವಲ ಹಾಡುತ್ತಿದ್ದಿರಿ, ಅದರ ಅರ್ಥವನ್ನು ಈಗ ತಂದೆಯು ತಿಳಿಸುತ್ತಾರೆ. ಎಲ್ಲಾ ವೇದಶಾಸ್ತ್ರ, ಜಪ-ತಪ, ಶ್ಲೋಕ ಏನೆಲ್ಲವೂ ಇದೆಯೋ ಎಲ್ಲದರ ಸಾರವನ್ನು ತಂದೆಯು ತಿಳಿಸುತ್ತಾರೆ. ಚಕ್ರವು ಬಹಳ ಸಹಜವಾಗಿದೆ. ಈಗ ಕಲಿಯುಗ ಮತ್ತು ಸತ್ಯಯುಗದ ಸಂಗಮವಾಗಿದೆ. ಯುದ್ಧವೂ ಸನ್ಮುಖದಲ್ಲಿದೆ, ಸತ್ಯಯುಗದ ಸ್ಥಾಪನೆಯಾಗುತ್ತದೆ ಎಂಬುದೂ ಸಹ ನಿಮಗೆ ನಿಶ್ಚಯವಿದೆ. ಕಲಿಯುಗದಲ್ಲಿ ಯಾರೆಲ್ಲರೂ ಇದ್ದಾರೆಯೋ ಎಲ್ಲರ ಶರೀರಗಳು ಸಮಾಪ್ತಿಯಾಗುತ್ತವೆ. ಬಾಕಿ ಆತ್ಮರು ಪವಿತ್ರರಾಗಿ ಲೆಕ್ಕಾಚಾರವನ್ನು ಮುಗಿಸಿಕೊಂಡು ಹೋಗುತ್ತಾರೆ, ಇದು ಎಲ್ಲರ ಅಂತಿಮ ಸಮಯವಾಗಿದೆ. ಆತ್ಮಗಳು ಶರೀರಗಳನ್ನು ಬಿಟ್ಟು ಹೊರಟು ಹೋಗುತ್ತಾರೆ, ಇದು ಈಗ ನಿಮ್ಮ ಬುದ್ಧಿಯಲ್ಲಿದೆ. ಎಲ್ಲಿಯವರೆಗೆ ನಾವು ಕರ್ಮಾತೀತ ಸ್ಥಿತಿಯನ್ನು ನಾವು ಪಡೆಯುವುದಿಲ್ಲವೋ ಅಲ್ಲಿಯವರೆಗೆ ಸಂಗಮದಲ್ಲಿ ನಿಂತಿರುತ್ತೇವೆ. ಒಂದು ಕಡೆ ಕೋಟ್ಯಾಂತರ ಮನುಷ್ಯರಿದ್ದಾರೆ, ಇನ್ನೊಂದು ಕಡೆ ನೀವು ಕೆಲವರೇ ಇದ್ದೀರಿ, ನಿಮ್ಮಲ್ಲಿಯೂ ಸಹ ಎಷ್ಟೊಂದು ಮಂದಿ ನಿಶ್ಚಯ ಬುದ್ಧಿಯವರಾಗುತ್ತಾ ಹೋಗುತ್ತಾರೆ. ನಿಶ್ಚಯಬುದ್ಧಿ ವಿಜಯಂತಿ, ನಂತರ ಹೋಗಿ ವಿಷ್ಣುವಿನ ಕೊರಳಿನ ಹಾರವಾಗುತ್ತಾರೆ. ಒಂದು ರುದ್ರಾಕ್ಷಿ ಮಾಲೆ, ಇನ್ನೊಂದು ರುಂಡ ಮಾಲೆಯಾಗಿದೆ. ಆ ರುಂಡ ಮಾಲೆಯಲ್ಲಿ ಚಿಕ್ಕ-ಚಿಕ್ಕ ಮುಖಗಳಿರುತ್ತವೆ, ಇದು ಗುರುತಾಗಿದೆ. ನಾವಾತ್ಮರೇ ಬಂದು ಪುನಃ ತಂದೆಯ ಕೊರಳಿನ ಮಾಲೆಯ ಮಣಿಯಾಗುತ್ತೇವೆ ನಂತರ ಇಲ್ಲಿಗೆ ನಂಬರ್ವಾರ್ ಆಗಿ ಬರುತ್ತೇವೆ. 8ರ ಮಾಲೆಯೂ ಇದೆ, 108 ಮತ್ತು 16,108ರ ಮಾಲೆಯೂ ಇದೆ. ಈಗ 16,000ವೇ ಅಥವಾ 5-10 ಸಾವಿರವೇ? ಇದನ್ನು ಲೆಕ್ಕವನ್ನು ಮಾಡಲಾಗುವುದಿಲ್ಲ. ಈ ಮಾಲೆಗಳ ಗಾಯನವಾಗುತ್ತದೆ. ತಂದೆಯು ತಿಳಿಸುತ್ತಾರೆ - ಇದೆಲ್ಲವನ್ನೂ ನೀವೇಕೆ ವಿಚಾರ ಮಾಡುತ್ತೀರಿ! ಕಲ್ಪದ ಮೊದಲೂ ಸತ್ಯ-ತ್ರೇತಾಯುಗದಲ್ಲಿ ಎಷ್ಟು ಮಂದಿ ರಾಜರಾಗಿದ್ದರೋ ಅಷ್ಟೇ ಆಗುವರು. 100 ಮಂದಿಯಾದರೂ ಆಗಲಿ ಅಥವಾ 200-300 ಮಂದಿಯಾದರೂ ಆಗಲಿ, ಇದನ್ನು ಕೇಳುವ ಅವಶ್ಯಕತೆಯಿಲ್ಲ. |
ತಂದೆಯು ತಿಳಿಸುತ್ತಾರೆ - ನೀವು ಎಷ್ಟು ಸನ್ಮುಖದಲ್ಲಿ ಬರುತ್ತಾ ಹೋಗುತ್ತೀರೋ ಆಗ ಇದೆಲ್ಲವನ್ನೂ ತಿಳಿದುಕೊಳ್ಳುತ್ತೀರಿ, ಇಂದು ನಾವು ಇಲ್ಲಿದ್ದೇವೆ, ನಾಳೆ ವಿನಾಶವಾದರೆ ಮತ್ತೆ ಸತ್ಯಯುಗದಲ್ಲಿ ನಾವು ಕೆಲವರೇ ದೇವಿ-ದೇವತೆಗಳಿರುತ್ತೇವೆ ನಂತರದಲ್ಲಿ ವೃದ್ಧಿಯಾಗುತ್ತದೆ. ಸತ್ಯಯುಗದ ದೃಶ್ಯಗಳೂ ಕಂಡು ಬರುತ್ತವೆ. ಬಾಕಿ ಲಕ್ಷಾಂತರ ಮಂದಿ ಹೋಗಿ ಇರುತ್ತಾರೆ. ಲಕ್ಷವಾದರೂ ಇರಬಹುದು ಅಥವಾ 9-10 ಲಕ್ಷವಾದರೂ ಇರಬಹುದು, ಇದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ. ನೀವು ಯಾವಾಗ ಸಂಪೂರ್ಣರಾಗಲು ಯೋಗ್ಯರಾಗುತ್ತೀರೋ ಆಗ ನಿಮಗೆ ಇನ್ನೂ ಹೆಚ್ಚು-ಹೆಚ್ಚು ಸಾಕ್ಷಾತ್ಕಾರಗಳಾಗುವುದು, ಈಗಿನ್ನು ಬಹಳಷ್ಟು ತಿಳಿದುಕೊಳ್ಳುವ ಸಮಯವಿದೆ. ಬಹಳ ಸಾಕ್ಷಾತ್ಕಾರಗಳಾಗುತ್ತಾ ಇರುತ್ತವೆ, ಯುದ್ಧದ ತಯಾರಿಗಳೂ ಬಹಳ ನಡೆಯುತ್ತಿದೆ. ಎಲ್ಲಾ ವಸ್ತುಗಳ ಬೇಡಿಕೆ ಹೆಚ್ಚಾಗುತ್ತಾ ಹೋಗುತ್ತದೆ. ವಿದೇಶದಲ್ಲಿಯೂ ಸಹ ತೆರಿಗೆ ಹೆಚ್ಚುತ್ತಾ ಹೋಗುತ್ತದೆ. ಬಹಳಷ್ಟು ಬೇಡಿಕೆಯಾಗಿ ನಂತರ ಒಮ್ಮೆಲೆ ಎಲ್ಲವೂ ಸಸ್ತಾ ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ಯಾವುದೇ ವಸ್ತುವಿಗಾಗಿ ಖರ್ಚಾಗುವುದಿಲ್ಲ, ಎಲ್ಲಾ ಗಣಿಗಳೂ ಸಂಪನ್ನವಾಗಿ ಬಿಡುತ್ತವೆ. ಹೊಸ ಪ್ರಪಂಚದಲ್ಲಿ ಬಹಳ ವೈಭವವಿರುತ್ತದೆ. ಲಕ್ಷ್ಮೀ-ನಾರಾಯಣರ ಬಳಿ ಬಹಳ ವೈಭವವಿತ್ತಲ್ಲವೆ. ಶ್ರೀನಾಥ ದ್ವಾರದಲ್ಲಿ ಮೂರ್ತಿಗಳ ಮುಂದೆ ಎಷ್ಟೊಂದು ವೈಭವದ ಭೋಗವನ್ನು ಇಡುತ್ತಾರೆ. ಅಲ್ಲಿ ಅನೇಕ ಪ್ರಕಾರದ ಪದಾರ್ಥಗಳನ್ನು ತಯಾರಿಸುತ್ತಾರೆ ಮತ್ತು ತಿನ್ನುತ್ತಾ ಇರುತ್ತಾರೆ. ನಾವು ದೇವತೆಗಳಿಗೆ ಭೋಗವನ್ನು ಇಡುತ್ತೇವೆ ಎಂದು ಹೇಳುತ್ತಾರೆ. ದೇವತೆಗಳಿಗೆ ಭೋಗವನ್ನು ಇಡಲಿಲ್ಲ ಎಂದರೆ ಅವರು ಕೋಪಿಸಿಕೊಳ್ಳುತ್ತಾರೆಂದು ಹೇಳುತ್ತಾರೆ. ಆದರೆ ಇದರಲ್ಲಿ ಕೋಪಿಸಿಕೊಳ್ಳುವ ಮಾತೇ ಇಲ್ಲ. ನೀವು ಯಾರ ಮೇಲೂ ಬೇಸರ ಪಡುವುದಿಲ್ಲ. ನಿಮಗೆ ತಿಳಿದಿದೆ - ಡ್ರಾಮಾನುಸಾರ ಈ ವಿನಾಶವು ಆಗಲೇಬೇಕಾಗಿದೆ. ಕಲಿಯುಗವು ಪರಿವರ್ತನೆಯಾಗಿ ಸತ್ಯಯುಗವಾಗುವುದು, ಡ್ರಾಮಾನುಸಾರ ಈಗ ಹೊಸ ಚಕ್ರವು ಆರಂಭವಾಗಬೇಕೆಂಬುದನ್ನು ತಿಳಿದುಕೊಂಡಿದ್ದೇವೆ. ನೀವೂ ಸಹ ಡ್ರಾಮಾದ ವಶವಾಗಿದ್ದೀರಿ, ಡ್ರಾಮಾನುಸಾರ ತಂದೆಯು ಬಂದಿದ್ದಾರೆ. ಡ್ರಾಮಾದಲ್ಲಿ ಒಂದು ನಿಮಿಷವೂ ಏರುಪೇರಾಗಲು ಸಾಧ್ಯವಿಲ್ಲ. ಹೇಗೆ ತಂದೆಯು ಬಂದರು, ನೀವೂ ನೋಡಿದಿರಿ - ಕಲ್ಪದ ನಂತರವೂ ಚಾಚೂ ತಪ್ಪದೆ ಇದೇ ರೀತಿಯಾಗುವುದು. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಉದ್ದಗಲವಾಗಿ ಬರೆದಿದ್ದಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿದೆ - ಅವಶ್ಯವಾಗಿ ವಿನಾಶವು ಸನ್ಮುಖದಲ್ಲಿ ನಿಂತಿದೆ. ನೀವೀಗ ಮುನ್ನಡೆಯುತ್ತಿದ್ದೀರಿ, ನಿಮಗೆ ತಿಳಿದಿದೆ - ತಂದೆಯನ್ನು ನೆನಪು ಮಾಡುತ್ತಾ ನಾವು ಅವಶ್ಯವಾಗಿ ಕರ್ಮಾತೀತ ಸ್ಥಿತಿಯನ್ನು ಹೊಂದಬೇಕಾಗಿದೆ ಅರ್ಥಾತ್ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಒಂದುವೇಳೆ ಈಗ ಪುರುಷಾರ್ಥ ಮಾಡದಿದ್ದರೆ ಪದವಿ ಭ್ರಷ್ಟವಾಗಿ ಬಿಡುವುದು. ಹೇ ಆತ್ಮರೇ, ನೀವೀಗ ಪತಿತರಾಗಿ ಬಿಟ್ಟಿದ್ದೀರಿ. ಇದೂ ಸಹ ತಿಳಿದಿದೆ - ಅನೇಕ ಪ್ರಕಾರದವರು ಬರುತ್ತಾರೆ, ಯಾರು ಅನ್ಯ ಧರ್ಮಗಳಲ್ಲಿ ಸೇರಿದ್ದಾರೆಯೋ ಅವರು ಪುನಃ ಅಲ್ಲಿಂದ ಮರಳಿ ಬರುತ್ತಾರೆ, ಬಂದು ತಂದೆಯಿಂದ ತಮ್ಮ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡುತ್ತಿರುತ್ತಾರೆ. ಬ್ರಾಹ್ಮಣ ಧರ್ಮದಲ್ಲಿ ಬಂದು ಮತ್ತೆ ದೇವತಾ ಧರ್ಮದಲ್ಲಿ ಬರುತ್ತಾರೆ. ಬ್ರಾಹ್ಮಣ ಧರ್ಮದಲ್ಲಿ ಬರಲಿಲ್ಲವೆಂದರೆ ದೇವತಾ ಧರ್ಮದಲ್ಲಿ ಹೇಗೆ ಬರುತ್ತಾರೆ? ಬ್ರಾಹ್ಮಣರು ದಿನೇ ದಿನೇ ವೃದ್ಧಿಯಾಗುತ್ತಾ ಇರುತ್ತಾರೆ. ವಿನಾಶವು ಸನ್ಮುಖ ಬಂದು ಬಿಟ್ಟಿದೆ ಎಂಬುದನ್ನು ನೋಡಿದಾಗ ಇವರು ಸತ್ಯ ಹೇಳುತ್ತಾರೆಂದು ಅರ್ಥವಾಗುತ್ತದೆ ಆಗ ವೃದ್ಧಿಯಾಗುತ್ತಾ ಹೋಗುತ್ತದೆ. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗಿ ತುಂಬಿ ಹೋದಾಗ ಹಿಂತಿರುಗಿ ಹೋಗುವಿರಿ. ದೇವತೆಗಳ ವೃಕ್ಷವು ಹೆಚ್ಚಾಗುವುದು. |
ನೀವೀಗ ಸಂಗಮದಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಸಂಗಮಕ್ಕೆ ಕಲ್ಯಾಣಕಾರಿ ಯುಗವೆಂದು ಹೇಳಲಾಗುತ್ತದೆ. ಸಂಗಮದ್ದೇ ಗಾಯನವಿದೆ – ಗಂಗಾ ಸಾಗರದ ಮೇಳವನ್ನು ತೋರಿಸುತ್ತಾರೆ. ಅದೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಇವರು ಜ್ಞಾನ ಸಾಗರ ಮತ್ತು ಜ್ಞಾನ ಸಾಗರನಿಂದ ಹೊರಟಿರುವ ಜ್ಞಾನ ಗಂಗೆಯರಾಗಿದ್ದೀರಿ. ಜ್ಞಾನ ಸಾಗರದೊಂದಿಗೆ ಪತಿತ-ಪಾವನ ಶಬ್ಧವು ಅನ್ವಯಿಸುತ್ತದೆ. ಮನುಷ್ಯರು ಪತಿತ-ಪಾವನಿ ಗಂಗೆಯೆಂದು ತಿಳಿದು ಗಂಗೆಯಲ್ಲಿ ಸ್ನಾನ ಮಾಡುತ್ತಲೇ ಇರುತ್ತಾರೆ. ಈ ನದಿಗಳಂತೂ ಸತ್ಯಯುಗದಿಂದ ಹಿಡಿದು ನಡೆಯುತ್ತಾ ಬಂದಿವೆ. ಈಗಂತೂ ನದಿಗಳೂ ಸಹ ಕೆಲವೊಂದೆಡೆ ಮನುಷ್ಯರನ್ನು ಮುಳುಗಿಸಿ ಬಿಡುತ್ತದೆ. ಪ್ರಕೃತಿಯು ತಮೋಪ್ರಧಾನ, ಸಾಗರವೂ ತಮೋಪ್ರಧಾನವಾಗಿ ಬಿಟ್ಟಿದೆ. ಸಾಗರವು ಸ್ವಲ್ಪ ಉಕ್ಕಿದರೂ ಸಹ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಡುತ್ತದೆ. ಸತ್ಯಯುಗದಲ್ಲಿ ಯಮುನಾ ನದಿಯ ತೀರದಲ್ಲಿ ನಾವು ಕೆಲವರೇ ಭಾರತದಲ್ಲಿರುತ್ತೇವೆ, ದೆಹಲಿಯು ಪರಿಸ್ತಾನವಾಗಿತ್ತು, ಈಗ ಪುನಃ ಆಗುವುದು. ಸತ್ಯಯುಗದಲ್ಲಿ ಕೆಲವರೇ ಜೀವಾತ್ಮರಿರುತ್ತಾರೆ ನಂತರ ನಿಧಾನ-ನಿಧಾನವಾಗಿ ಬರತೊಡಗುತ್ತಾರೆ. ಈಗ ಕಲಿಯುಗದ ಅಂತ್ಯವಾಗಿದೆ, ಈಗ ಎಷ್ಟೊಂದು ಜನಸಂಖ್ಯೆಯಾಗಿದೆ, ಬೇಹದ್ದಿನ ನಾಟಕವಾಗಿದೆ, ಇದನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ಭಲೆ ಯಾರಾದರೂ ತನ್ನನ್ನು ಪಾತ್ರಧಾರಿಯೆಂದು ತಿಳಿದುಕೊಳ್ಳಲೂಬಹುದು ಆದರೆ ಕಲ್ಪವು 5000 ವರ್ಷಗಳಾಗಿದೆ ಎಂಬುದು ಯಾರಿಗೂ ತಿಳಿದಿಲ್ಲ. 84 ಜನ್ಮಗಳೆಲ್ಲಿ! 84 ಲಕ್ಷ ಜನ್ಮಗಳೆಲ್ಲಿ! ನೀವೀಗ ಬೆಳಕಿನಲ್ಲಿದ್ದೀರಿ, ನಿಮಗೀಗ ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಂದೆಯನ್ನು ನೆನಪು ಮಾಡಬೇಕಾಗಿದೆ. ಶಿವ ಭಗವಾನುವಾಚ, ಕೃಷ್ಣನು ಜ್ಞಾನ ಸಾಗರನಲ್ಲ. ಭಗವಂತನ ಮಹಿಮೆ ಮತ್ತು ದೇವತೆಗಳ ಮಹಿಮೆಯಲ್ಲಿ ಬಹಳ ಅಂತರವಿದೆ. ತಂದೆಯು ಯಾವ ಹೊಸ ರಚನೆಯನ್ನು ರಚಿಸುತ್ತಾರೆಯೋ ಅವರ ಮಹಿಮೆಯಾಗಿದೆ - ಸರ್ವಗುಣ ಸಂಪನ್ನರು.... ನೀವೀಗ ಆ ರೀತಿ ಆಗುತ್ತಿದ್ದೀರಿ. ತಂದೆಯ ಮಹಿಮೆ ಮತ್ತು ದೇವತೆಗಳ ಮಹಿಮೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಇದು ರಾಜಯೋಗವಲ್ಲವೆ. ಭಗವಂತನು ರಾಜಯೋಗವನ್ನು ಕಲಿಸುತ್ತಾರೆಂದು ಗಾಯನವಿದೆ, ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ನಿರಾಕಾರಿ ಪ್ರಪಂಚದಿಂದ ಸಾಕಾರಿ ಪ್ರಪಂಚದಲ್ಲಿ ಬರಬೇಕಾಗುತ್ತದೆ. ಭಗವಂತನಿಗೆ ಇಷ್ಟೊಂದು ಮಹಿಮೆಯಿದೆ, ಅಂದಮೇಲೆ ಅವಶ್ಯವಾಗಿ ಬರಬೇಕಾಗಿದೆ. ಅವರದು ದಿವ್ಯ ಅಲೌಕಿಕ ಜನ್ಮವಾಗಿದೆ, ಮತ್ತ್ಯಾರದೂ ದಿವ್ಯ ಜನ್ಮವೆಂದು ಗಾಯನವಾಗುವುದಿಲ್ಲ. ಇದೂ ಸಹ ಮಕ್ಕಳಿಗೆ ತಿಳಿಸಲಾಗಿದೆ - ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಿದ್ದಾರೆ. ಇವರನ್ನೇ ಭಗವಂತನೆಂದು ಹೇಳಿ ನೆನಪು ಮಾಡುತ್ತಾರೆ ಮತ್ತು ಮೂರನೆಯವರು ಅಲೌಕಿಕ ತಂದೆಯಿದ್ದಾರೆ. ಇವರು ಅದ್ಭುತ ತಂದೆಯಾಗಿದ್ದಾರೆ, ತಂದೆಯು ದತ್ತು ಮಾಡಿಕೊಳ್ಳುತ್ತಾರೆ ಅವರ ಮಧ್ಯದಲ್ಲಿ ಈ ಅಲೌಕಿಕ ತಂದೆಯು ಬಂದು ಬಿಡುತ್ತಾರೆ. ಪ್ರಜಾಪಿತ ಬ್ರಹ್ಮನಿಗೆ ಎಷ್ಟೊಂದು ಮಂದಿ ಮಕ್ಕಳಿದ್ದಾರೆ, ಶಿವ ತಂದೆಯು ಬಂದು ಬ್ರಹ್ಮಾರವರ ಮೂಲಕ ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ಎಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರಾಗುತ್ತೀರಿ! ಲೌಕಿಕ ತಂದೆಗೆ 8-10 ಮಂದಿ ಮಕ್ಕಳಿರಬಹುದು, ಶಿವ ತಂದೆಯು ಪಾರಲೌಕಿಕ ತಂದೆಯಾಗಿದ್ದಾರೆ ಅವರಿಗೆ ಅನೇಕ ಮಕ್ಕಳಿದ್ದೀರಿ. ನಾವೆಲ್ಲರೂ ಸಹೋದರರಾಗಿದ್ದೇವೆ ಎಂದು ಎಲ್ಲಾ ಆತ್ಮರೂ ಹೇಳುತ್ತಾರೆ. ಈ ಸಂಗಮದಲ್ಲಿ ಮತ್ತೆ ಅಲೌಕಿಕ ತಂದೆಯು ಸಿಗುತ್ತಾರೆ. ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವಿರುವುದಿಲ್ಲ. ಯಾವಾಗ ತಂದೆಯು ಬಂದು ಹೊಸ ಸೃಷ್ಟಿಯನ್ನು ರಚಿಸುವರೋ ಆಗಲೇ ಪ್ರಜಾಪಿತ ಬ್ರಹ್ಮಾ ತಂದೆಯು ಸಿಗುತ್ತಾರೆ ಅಂದಮೇಲೆ ಇದು ಅಲೌಕಿಕ ಜನ್ಮವಾಯಿತಲ್ಲವೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ ಮತ್ತು ಇವರು ಸಂಗಮಯುಗೀ ಅಲೌಕಿಕ ತಂದೆಯಾಗಿದ್ದಾರೆ. ಸತ್ಯಯುಗದಿಂದ ಹಿಡಿದು ಲೌಕಿಕ ತಂದೆಯರು ಪ್ರತೀ ಜನ್ಮದಲ್ಲಿಯೂ ಸಿಗುತ್ತಾ ಬಂದಿದ್ದಾರೆ, ಪಾರಲೌಕಿಕ ತಂದೆಯನ್ನು ಅಲ್ಲಿ ಯಾರೂ ನೆನಪು ಮಾಡುವುದಿಲ್ಲ. ಅಲ್ಲಿ ಒಬ್ಬರೇ ತಂದೆಯಿರುತ್ತಾರೆ. ಹೇ ಭಗವಂತ, ಹೇ ಪರಮಾತ್ಮ ಎಂದು ಹೇಳಿ ನೆನಪು ಮಾಡುವುದಿಲ್ಲ. ಮತ್ತೆ ದ್ವಾಪರದಲ್ಲಿ ಯಾವಾಗ ಭಕ್ತಿಮಾರ್ಗವು ಪ್ರಾರಂಭವಾಗುವುದೋ ಆಗ ಇಬ್ಬರು ತಂದೆಯರಾಗುತ್ತಾರೆ. ಈ ಸಂಗಮದಲ್ಲಿ ಮೂವರು ತಂದೆಯರಿದ್ದಾರೆ, ಪ್ರಜಾಪಿತ ಬ್ರಹ್ಮನೂ ಸಹ ಈಗ ಸಿಗುತ್ತಾರೆ. ನೀವೀಗ ಅವರ ಮಕ್ಕಳಾಗುತ್ತೀರಿ, ಇವರು ಅಲೌಕಿಕ ತಂದೆಯೆಂದು ನಿಮಗೆ ತಿಳಿದಿದೆ. ಈಗ ನೀವು ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದೀರಿ ಮತ್ತು ನೆನಪು ಮಾಡುತ್ತೀರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಸತ್ಯಯುಗದಲ್ಲಿ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ, ದುಃಖದಲ್ಲಿ ಎಲ್ಲರೂ ಪಾರಲೌಕಿಕ ತಂದೆಯ ಸ್ಮರಣೆ ಮಾಡುತ್ತಾರೆ, ಇದು ಬಹಳ ಸಹಜ ಮಾತಾಗಿದೆ. ಸತ್ಯ-ತ್ರೇತಾಯುಗದಲ್ಲಿ ಒಬ್ಬ ತಂದೆಯಿರುತ್ತಾರೆ, ದ್ವಾಪರದಲ್ಲಿ ಇಬ್ಬರು ತಂದೆಯರಿರುತ್ತಾರೆ. ಈ ಸಮಯದಲ್ಲಿ ನೀವು ಅಲೌಕಿಕ ತಂದೆಯ ಮಕ್ಕಳಾಗಿದ್ದೀರಿ, ಅವರ ಮೂಲಕ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ನೀವು ಮಕ್ಕಳೇ ಬ್ರಾಹ್ಮಣರಾಗುತ್ತೀರಿ ನಂತರ ದೇವತೆಗಳಾಗುತ್ತೀರಿ. ನೀವೇ ವಿನಾಶವನ್ನೂ ಸಹ ನೋಡಬೇಕಾಗಿದೆ. ನೀವು ಈ ಕಣ್ಣುಗಳಿಂದಲೇ ನೋಡುತ್ತೀರಿ, ಬಾಂಬುಗಳನ್ನು ಹಾಕುತ್ತಾರೆ, ಮನುಷ್ಯರಂತೂ ಸಾಯುತ್ತಾರಲ್ಲವೆ. ಜಪಾನಿನಲ್ಲಿ ಬಾಂಬನ್ನು ಹಾಕಿದಾಗ ಮನುಷ್ಯರು ಹೇಗೆ ಸತ್ತರು ಎಂಬುದನ್ನು ನೋಡಿದಿರಲ್ಲವೆ. ಈಗ ಇಲ್ಲಿ ಯುದ್ಧಗಳಾಗುತ್ತಾ ಇರುತ್ತವೆ. ನಾವಂತೂ ದುಃಖಿಗಳಾಗುತ್ತೇವೆಂದು ತಾವೇ ಹೇಳುತ್ತಾರೆ. 10-10 ವರ್ಷಗಳವರೆಗೂ ಯುದ್ಧಗಳು ನಡೆಯುತ್ತಲೇ ಇರುತ್ತವೆ. ಬಾಂಬುಗಳಿಂದ ಸೆಕೆಂಡಿನಲ್ಲಿ ಎಲ್ಲವೂ ಸಮಾಪ್ತಿಯಾಗಿ ಬಿಡುವುದು. ಒಂದು ಕಿಡಿ ಬಿದ್ದರೂ ಸಾಕು ನಗರವೇ ನಷ್ಟವಾಗಿ ಬಿಡುವುದು. ಅಂದಮೇಲೆ ಇವಂತೂ ಬಾಂಬುಗಳಾಗಿವೆ, ಬೆಂಕಿಯು ಬೀಳಲಿದೆ. |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಬಂದಿರುವುದೇ ಸ್ಥಾಪನೆ ಮತ್ತು ವಿನಾಶ ಮಾಡಿಸಲು ಅಂದಮೇಲೆ ಅವಶ್ಯವಾಗಿ ಇದೆಲ್ಲವೂ ಆಗುವುದು. ಪುರುಷಾರ್ಥ ಮಾಡಲು ಈಗ ಸಮಯವಿದೆ, ಮಾಯೆಯು ಪದೇ-ಪದೇ ನಿಮ್ಮ ಬುದ್ಧಿಯೋಗವನ್ನು ತುಂಡರಿಸುತ್ತದೆ, ಬಹುಷಃ ನೀವಿನ್ನೂ ಅಡೋಲ ಹಾಗೂ ಸ್ಥಿರವಾಗಿಲ್ಲ. ಬಾಬಾ, ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಕೆಲವರಂತೂ ಇಡೀ ದಿನದಲ್ಲಿ ಒಂದು ಗಂಟೆ ಅಥವಾ ಅರ್ಧ ಗಂಟೆಯೂ ಸಹ ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಕರ್ಮಯೋಗಿಗಳಾಗಿದ್ದೀರಿ, 8 ಗಂಟೆಗಳಂತೂ ಈ ಸೇವೆ ಮಾಡುತ್ತೀರಿ. 8 ಗಂಟೆಗಳ ಸಮಯ ನೆನಪು ಮಾಡುವಷ್ಟು ಪುರುಷಾರ್ಥ ಮಾಡಬೇಕು. ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತವೆ, ಇದಕ್ಕೇ ಯೋಗಾಗ್ನಿಯೆಂದು ಹೇಳಲಾಗುತ್ತದೆ. ಇದು ಪರಿಶ್ರಮವಿದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕೇವಲ ನೆನಪು ಮಾಡಬೇಕಾಗಿದೆ. ಇದನ್ನೂ ತಂದೆಯು ತಿಳಿಸುತ್ತಾರೆ - ಯಾರು ಗೃಹಸ್ಥವನ್ನು ಬಿಟ್ಟಿದ್ದಾರೆಯೋ, ಮಕ್ಕಳಾಗಿದ್ದಾರೆಯೋ ಅವರೂ ಸಹ ಇಷ್ಟೊಂದು ನೆನಪು ಮಾಡುವುದಿಲ್ಲ. ಮನೆಯಲ್ಲಿರುವವರು ಇನ್ನೂ ಹೆಚ್ಚಿನದಾಗಿ ನೆನಪು ಮಾಡುತ್ತಾರೆ. ಅರ್ಜುನ ಮತ್ತು ಏಕಲವ್ಯನ ಉದಾಹರಣೆ ಕೊಡುತ್ತಾರಲ್ಲವೆ. ತಂದೆಯನ್ನು ನೆನಪು ಮಾಡುವುದು ಪರಿಶ್ರಮವಿದೆ ಮತ್ತು ಚಕ್ರವನ್ನು ತಿಳಿದುಕೊಳ್ಳಬೇಕಾಗಿದೆ. ಮಹಾಭಾರತ ಯುದ್ಧವೂ ಸಹ ಖಂಡಿತ ಆಗುವುದು. ಸತ್ಯಯುಗದಲ್ಲಿ ಆಗುವುದೇ! ಈಗ ನೀವು ಮಕ್ಕಳು ಅಂಧರಿಗೆ ಊರುಗೋಲಾಗಬೇಕಾಗಿದೆ. ಎಲ್ಲರಿಗೆ ಮಾರ್ಗ ತಿಳಿಸಬೇಕಾಗಿದೆ - ತಂದೆಯನ್ನು ನೆನಪು ಮಾಡಿ, ಚಕ್ರವನ್ನು ನೆನಪು ಮಾಡಿ, ಸ್ವದರ್ಶನ ಚಕ್ರಧಾರಿಗಳಾಗಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕೊನೆಪಕ್ಷ 8 ಗಂಟೆಗಳ ಕಾಲ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಸ್ಥಿತಿಯನ್ನು ಅಚಲ, ಅಡೋಲವಾಗಿಟ್ಟುಕೊಳ್ಳಲು ನೆನಪಿನ ಅಭ್ಯಾಸವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಹುಡುಗಾಟಿಕೆ ಮಾಡಬಾರದು. |
2. ಈ ನಾಟಕವು ಬಹಳ ನಿಖರವಾಗಿ ಮಾಡಲ್ಪಟ್ಟಿದೆ, ಆದ್ದರಿಂದ ಯಾರ ಮೇಲೂ ಬೇಸರ ಪಡಬಾರದು. ನಿಶ್ಚಯ ಬುದ್ಧಿಯವರಾಗಬೇಕಾಗಿದೆ. |
ಡಬಲ್ ವಿದೇಶಿ ಬ್ರಾಹ್ಮಣ ಮಕ್ಕಳ ವಿಶೇಷತೆಗಳು |
ಇಂದು ಭಾಗ್ಯವಿದಾತ ಬಾಪ್ದಾದಾ ತನ್ನ ಶ್ರೇಷ್ಠ ಭಾಗ್ಯಶಾಲಿ ಮಕ್ಕಳನ್ನು ನೋಡಿ ಹರ್ಷಿತರಾಗುತ್ತಿದ್ದಾರೆ. ಪ್ರತಿಯೊಬ್ಬ ಮಗುವಿನ ಭಾಗ್ಯವಂತೂ ಶ್ರೇಷ್ಠವಾಗಿಯೇ ಇದೆ ಆದರೆ ಅದರಲ್ಲಿಯೂ ನಂಬರ್ವಾರ್ ಇದೆ. ಇಂದು ಬಾಪ್ದಾದಾ ಎಲ್ಲಾ ಮಕ್ಕಳ ಹೃದಯದ ಉಲ್ಲಾಸ-ಉತ್ಸಾಹದ ಧೃಡ ಸಂಕಲ್ಪವನ್ನು ಕೇಳುತ್ತಿದ್ದರು. ಸಂಕಲ್ಪದ ಮೂಲಕ ಯಾರೆಲ್ಲರೂ ವಾರ್ತಾಲಾಪ ಮಾಡಿದರೋ ಅವರು ಬಾಪ್ದಾದಾರವರ ಬಳಿ ಸಂಕಲ್ಪ ಮಾಡುತ್ತಿದ್ದಂತೆಯೇ ತಲುಪಿ ಬಿಟ್ಟರು. “ಸಂಕಲ್ಪ ಶಕ್ತಿ”ಯು ವಾಣಿಯ ಶಕ್ತಿಗಿಂತ ಅತೀ ಸೂಕ್ಷ್ಮವಾಗಿರುವ ಕಾರಣ ಅತೀ ತೀವ್ರ ಗತಿಯಿಂದ ನಡೆಯುತ್ತದೆ ಮತ್ತು ತಲುಪುತ್ತದೆ. ವಾರ್ತಾಲಾಪದ ಭಾಷೆಯೇ ಸಂಕಲ್ಪದ ಭಾಷೆಯಾಗಿದೆ. ವಿಜ್ಞಾನದವರು ಶಬ್ಧವನ್ನು ಗ್ರಹಿಸುತ್ತಾರೆ ಆದರೆ ಸಂಕಲ್ಪವನ್ನು ಗ್ರಹಿಸಲು ಸೂಕ್ಷ್ಮ ಸಾಧನ ಬೇಕು. ಬಾಪ್ದಾದಾ ಪ್ರತಿಯೊಬ್ಬ ಮಗುವಿನ ಸಂಕಲ್ಪದ ಭಾಷೆಯನ್ನು ಸದಾ ಕೇಳುತ್ತಾರೆ ಅರ್ಥಾತ್ ಸಂಕಲ್ಪವನ್ನು ಗ್ರಹಿಸುತ್ತಾರೆ. ಇದಕ್ಕಾಗಿ ಬುದ್ಧಿಯು ಅತೀ ಸೂಕ್ಷ್ಮ, ಸ್ವಚ್ಛ ಮತ್ತು ಸ್ಪಷ್ಟತೆ ಅವಶ್ಯಕವಾಗಿದೆ. ಆಗಲೇ ತಂದೆಯ ವಾರ್ತಾಲಾಪದ ಪ್ರತ್ಯುತ್ತರವನ್ನು ತಿಳಿದುಕೊಳ್ಳಬಲ್ಲಿರಿ. |
ಬಾಪ್ದಾದಾರವರ ಬಳಿ ಎಲ್ಲರ ಸಂತುಷ್ಟತೆಯ ಹಾಗೂ ಖುಷಿಯಾಗಿರುವ, ನಿರ್ವಿಘ್ನರಾಗಿರುವ, ಸದಾ ತಂದೆಯ ಸಮಾನರಾಗುವ ಶ್ರೇಷ್ಠ ಸಂಕಲ್ಪಗಳು ತಲುಪಿದವು ಮತ್ತು ಬಾಪ್ದಾದಾ ಮಕ್ಕಳಿಗೆ ಧೃಡ ಸಂಕಲ್ಪದ ಮೂಲಕ ಸದಾ ಸಫಲತೆಯ ಶುಭಾಷಯಗಳನ್ನು ಕೊಡುತ್ತಿದ್ದಾರೆ ಏಕೆಂದರೆ ಎಲ್ಲಿ ಧೃಡತೆಯಿದೆಯೋ ಅಲ್ಲಿ ಸಫಲತೆಯಿದ್ದೇ ಇದೆ. ಇದು ಶ್ರೇಷ್ಠ ಭಾಗ್ಯವಂತರಾಗುವ ಚಿಹ್ನೆಯಿದೆ. ಸದಾ ಧೃಡತೆ, ಶ್ರೇಷ್ಠತೆಯಿರಲಿ. ಸಂಕಲ್ಪದಲ್ಲಿಯೂ ಬಲಹೀನತೆಯಿರಬಾರದು. ಇದಕ್ಕೆ ಶ್ರೇಷ್ಠತೆಯೆಂದು ಹೇಳಲಾಗುತ್ತದೆ. ಮಕ್ಕಳ ವಿಶಾಲ ಹೃದಯವನ್ನು ನೋಡಿ ಮಕ್ಕಳಿಗೆ ಸದಾ ವಿಶಾಲ ಹೃದಯ, ವಿಶಾಲ ಬುದ್ಧಿ, ವಿಶಾಲ ಸೇವೆ ಮತ್ತು ವಿಶಾಲ ಸಂಸ್ಕಾರ - ಇಂತಹ ‘ಸದಾ ವಿಶಾಲ ಭವ’ದ ವರದಾನವನ್ನೂ ವರದಾತ ತಂದೆಯು ಕೊಡುತ್ತಿದ್ದಾರೆ. ವಿಶಾಲ ಹೃದಯ ಅರ್ಥಾತ್ ಬೇಹದ್ದಿನ ಸ್ಮೃತಿ ಸ್ವರೂಪರು. ಪ್ರತೀ ಮಾತಿನಲ್ಲಿ ಬೇಹದ್ದ್ ಅರ್ಥಾತ್ ವಿಶಾಲ. ಎಲ್ಲಿ ಬೇಹದ್ದ್ ಆಗಿರುವುದೋ ಅಲ್ಲಿ ಯಾವುದೇ ಪ್ರಕಾರದ ಮಿತಿಯು ತನ್ನ ಕಡೆ ಆಕರ್ಷಣೆ ಮಾಡುವುದಿಲ್ಲ. ಇದಕ್ಕೆ ತಂದೆಯ ಸಮಾನ ಫರಿಶ್ತಾ ಜೀವನವೆಂದು ಹೇಳಲಾಗುತ್ತದೆ. ಕರ್ಮಾತೀತ ಎಂಬುದರ ಅರ್ಥವೇ ಆಗಿದೆ - ಸರ್ವ ಪ್ರಕಾರದ ಹದ್ದಿನ ಸ್ವಭಾವ-ಸಂಸ್ಕಾರದಿಂದ ಅತೀತ ಅರ್ಥಾತ್ ಭಿನ್ನ. ಹದ್ದ್ ಎನ್ನುವುದು ಬಂಧನವಾಗಿದೆ, ಬೇಹದ್ದ್ ನಿರ್ಬಂಧನವಾಗಿದೆ ಅಂದಾಗ ಸದಾ ಇದೇ ವಿಧಿಯಿಂದ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಇರುತ್ತೀರಿ. ಎಲ್ಲರೂ ನಾವು ಸದಾ ಅಮರವಾಗಿರುತ್ತೇವೆ, ಅಟಲ, ಅಖಂಡವಾಗಿರುತ್ತೇವೆ ಅರ್ಥಾತ್ ಖಂಡನೆಯಾಗುವವರಲ್ಲ ಎಂದು ಸಂಕಲ್ಪ ಮಾಡಿದಿರಿ. ಈ ರೀತಿಯ ಸಂಕಲ್ಪ ಮಾಡಿದಿರಲ್ಲವೆ. ಮಧುಬನದ ಗೆರೆಯವರೆಗಷ್ಟೆ, ಸಂಕಲ್ಪವಂತೂ ಇಲ್ಲ ಅಲ್ಲವೆ, ಸದಾ ಜೊತೆಯಿರುತ್ತದೆಯಲ್ಲವೆ. |
ಮುರುಳಿಗಳನ್ನಂತೂ ಬಹಳ ಕೇಳಿದ್ದೀರಿ, ಈಗ ಯಾವುದನ್ನು ಕೇಳಿದ್ದೀರೋ ಅದನ್ನು ಮಾಡಬೇಕಾಗಿದೆ ಏಕೆಂದರೆ ಈ ಸಾಕಾರ ಸೃಷ್ಟಿಯಲ್ಲಿ ಸಂಕಲ್ಪ, ಮಾತು ಮತ್ತು ಕರ್ಮ - ಈ ಮೂರಕ್ಕೂ ಮಹತ್ವಿಕೆಯಿದೆ ಮತ್ತು ಮೂರರಲ್ಲಿಯೂ ಮಹಾನತೆಯಿರುವುದು - ಇದಕ್ಕೇ ಸಂಪನ್ನ ಸ್ಥಿತಿ ಎಂದು ಹೇಳಲಾಗುತ್ತದೆ. ಈ ಸಾಕಾರ ಸೃಷ್ಟಿಯಲ್ಲಿಯೇ ಪೂರ್ಣ ಅಂಕಗಳನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿದೆ. ಒಂದುವೇಳೆ ಯಾರಾದರೂ ನನ್ನ ಸಂಕಲ್ಪವಂತೂ ಬಹಳ ಶ್ರೇಷ್ಠವಾಗಿದೆ ಆದರೆ ಕರ್ಮ ಹಾಗೂ ಮಾತಿನಲ್ಲಿ ಅಂತರವು ಕಾಣುತ್ತದೆಯೆಂದು ತಿಳಿಯುವುದಾದರೆ ಅದನ್ನು ಯಾರಾದರೂ ಒಪ್ಪುವರೆ? ಏಕೆಂದರೆ ಸಂಕಲ್ಪದ ಸ್ಥೂಲ ದರ್ಪಣವು ಮಾತು ಹಾಗೂ ಕರ್ಮವಾಗಿದೆ. ಶ್ರೇಷ್ಠ ಸಂಕಲ್ಪದವರ ಮಾತು ಸ್ವತಹ ಶ್ರೇಷ್ಠವಾಗಿರುವುದು ಆದ್ದರಿಂದ ಮೂರರ ವಿಶೇಷತೆಯೇ ‘ನಂಬರ್ವನ್’ ಆಗುವುದಾಗಿದೆ. |
ಬಾಪ್ದಾದಾ ಡಬಲ್ ವಿದೇಶಿ ಮಕ್ಕಳನ್ನು ನೋಡಿ ಸದಾ ಮಕ್ಕಳ ವಿಶೇಷತೆಗಾಗಿ ಹರ್ಷಿತರಾಗುತ್ತೇವೆ. ಆ ವಿಶೇಷತೆಯೇನಾಗಿದೆ? ಹೇಗೆ ಬ್ರಹ್ಮಾ ತಂದೆಯ ಶ್ರೇಷ್ಠ ಸಂಕಲ್ಪದ ಮೂಲಕ ಹಾಗೂ ಶ್ರೇಷ್ಠ ಸಂಕಲ್ಪದ ಆಹ್ವಾನದ ಮೂಲಕ ದಿವ್ಯ ಜನ್ಮವನ್ನು ಪ್ರಾಪ್ತಿ ಮಾಡಿಕೊಂಡಿದ್ದಾರೆ ಅದೇರೀತಿ ಶ್ರೇಷ್ಠ ಸಂಕಲ್ಪದ ವಿಶೇಷ ರಚನೆಯಾಗಿರುವ ಕಾರಣ ತನ್ನ ಸಂಕಲ್ಪಗಳನ್ನು ಶ್ರೇಷ್ಠ ಮಾಡಿಕೊಳ್ಳುವುದರಲ್ಲಿ ವಿಶೇಷ ಗಮನವನ್ನು ಇಟ್ಟಿರುತ್ತಾರೆ. ಸಂಕಲ್ಪದ ಮೇಲೆ ಗಮನವಿರುವ ಕಾರಣ ಯಾವುದೇ ಪ್ರಕಾರದ ಮಾಯೆಯ ಸೂಕ್ಷ್ಮ ಯುದ್ಧವನ್ನು ಬಹು ಬೇಗನೆ ಅರಿತುಕೊಳ್ಳುತ್ತಾರೆ ಮತ್ತು ಅದನ್ನು ಪರಿವರ್ತನೆ ಮಾಡಿಕೊಳ್ಳಲು ಅಥವಾ ವಿಜಯಿಗಳಾಗಲು ಪುರುಷಾರ್ಥ ಮಾಡಿ ಅದನ್ನು ಬೇಗನೆ ಸಮಾಪ್ತಿ ಮಾಡುವ ಪ್ರಯತ್ನ ಪಡುತ್ತಾರೆ. ಸಂಕಲ್ಪ ಶಕ್ತಿಯನ್ನು ಸದಾ ಶುದ್ಧ ಮಾಡಿಕೊಳ್ಳುವ ಗಮನವು ಚೆನ್ನಾಗಿರುತ್ತದೆ. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳುವ ಅಭ್ಯಾಸ ಚೆನ್ನಾಗಿರುತ್ತದೆ. ಸೂಕ್ಷ್ಮ ಪರಿಶೀಲನೆಯ ಕಾರಣ ಚಿಕ್ಕ ತಪ್ಪು ಸಹ ರಿಯಲೈಜ್ ಮಾಡಿ ತಂದೆಯ ಮುಂದೆ, ನಿಮಿತ್ತರಾಗಿರುವ ಮಕ್ಕಳ ಮುಂದೆ ಇಡುವುದರಲ್ಲಿ ಸ್ವಚ್ಛ ಹೃದಯಿಗಳಾಗಿದ್ದಾರೆ ಆದ್ದರಿಂದ ಈ ವಿಧಿಯ ಕಾರಣ ಬುದ್ಧಿಯಲ್ಲಿ ಸ್ವಲ್ಪವೂ ಕಸವು ಉಳಿದುಕೊಳ್ಳುವುದಿಲ್ಲ. ಮೆಜಾರಿಟಿ ಮಕ್ಕಳು ಸ್ವಚ್ಛ ಹೃದಯದಿಂದ ಮಾತನಾಡುವುದರಲ್ಲಿ ಸಂಕೋಚ ಪಡುವುದಿಲ್ಲ. ಆದ್ದರಿಂದ ಎಲ್ಲಿ ಸ್ವಚ್ಛತೆಯಿರುವುದೋ ಅಲ್ಲಿ ದೇವತಾ ಗುಣಗಳು ಸಹಜವಾಗಿ ಧಾರಣೆಯಾಗುತ್ತವೆ. ದಿವ್ಯ ಗುಣಗಳ ಧಾರಣೆ ಅರ್ಥಾತ್ ಆಹ್ವಾನ ಮಾಡುವ ವಿಧಿಯೇ ‘ಸ್ವಚ್ಛತೆ’ಯಾಗಿದೆ. ಹೇಗೆ ಭಕ್ತಿಯಲ್ಲಿಯೂ ಲಕ್ಷ್ಮಿಯ ಅಥವಾ ಯಾವುದೇ ದೇವಿಯ ಆಹ್ವಾನ ಮಾಡಿದಾಗ ಆ ಆಹ್ವಾನ ಮಾಡುವ ವಿಧಿಯಾಗಿ ಸ್ವಚ್ಛತೆಯನ್ನು ತನ್ನದನ್ನಾಗಿ ಮಾಡಿಕೊಳ್ಳುತ್ತದೆ ಅಂದಾಗ ಈ ಸ್ವಚ್ಛತೆಯ ಶ್ರೇಷ್ಠ ಸ್ವಭಾವವು ದೈವೀ ಸ್ವಭಾವವನ್ನು ಸ್ವತಹ ಆಹ್ವಾನ ಮಾಡುತ್ತದೆ ಅಂದಾಗ ಈ ವಿಶೇಷತೆಯು ಮೆಜಾರಿಟಿ ಡಬಲ್ ವಿದೇಶಿ ಮಕ್ಕಳಲ್ಲಿದೆ. ಆದ್ದರಿಂದ ತೀವ್ರ ಗತಿಯಿಂದ ಮುಂದುವರೆಯುವ ಸುವರ್ಣವಕಾಶವು ಡ್ರಾಮಾನುಸಾರ ಸಿಕ್ಕಿದೆ. ‘ಇದಕ್ಕೆ ಲಾಸ್ಟ್ ಸೋ ಫಾಸ್ಟ್’ ಎಂದು ಹೇಳುತ್ತಾರೆ ಅಂದಾಗ ವಿಶೇಷವಾಗಿ ಫಾಸ್ಟ್ ಹೋಗುವ ಈ ವಿಶೇಷತೆಯು ಡ್ರಾಮಾನುಸಾರ ಸಿಕ್ಕಿದೆ. ಈ ವಿಶೇಷತೆಯನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಲಾಭ ಪಡೆಯುತ್ತಾ ಇರಿ. ಬಂದಿತು, ಸ್ಪಷ್ಟ ಮಾಡಿಕೊಂಡಿರಿ ಮತ್ತು ಹೊರಟು ಹೋಯಿತು - ಇದಕ್ಕೇ ಪರ್ವತವನ್ನೂ ಸಹ ಹತ್ತಿಯ ಸಮಾನ ಮಾಡಿಕೊಳ್ಳುವುದೆಂದು ಹೇಳುತ್ತಾರೆ. ಹತ್ತಿಯು ಸೆಕೆಂಡಿನಲ್ಲಿ ಹಾರುತ್ತದೆಯಲ್ಲವೆ, ಹಾಗೆ ಪರ್ವತಕ್ಕೆ ಎಷ್ಟು ಸಮಯ ಹಿಡಿಸುವುದು! ಆದ್ದರಿಂದ ಸ್ಪಷ್ಟ ಮಾಡಿಕೊಂಡಿರಿ, ತಂದೆಯ ಮುಂದೆ ಇಟ್ಟಿರಿ ಮತ್ತು ಸ್ವಚ್ಛತೆಯ ವಿಧಿಯಿಂದ ಫರಿಶ್ತೆಯಾಗಿ ಹಾರಿ ಹೋದಿರಿ. ಇದಕ್ಕೆ ಲಾಸ್ಟ್ ಸೋ ಫಾಸ್ಟ್ ಗತಿಯಿಂದ ಹಾರುವುದೆಂದು ಹೇಳುತ್ತಾರೆ. ಡ್ರಾಮಾನುಸಾರ ಈ ವಿಶೇಷತೆ ಸಿಕ್ಕಿದೆ. ಬಾಪ್ದಾದಾ ನೋಡುತ್ತೇವೆ - ಕೆಲವು ಪರಿಶೀಲನೆಯನ್ನೂ ಮಾಡಿಕೊಳ್ಳುತ್ತಾರೆ ಮತ್ತು ತಮ್ಮನ್ನು ಪರಿವರ್ತನೆಯೂ ಮಾಡಿಕೊಳ್ಳುತ್ತಾರೆ ಏಕೆಂದರೆ ನಾವು ವಿಜಯಿಗಳಾಗಬೇಕೆಂಬ ಲಕ್ಷ್ಯವಿದೆ. ಬಹುತೇಕ ಮಕ್ಕಳದು ಈ ನಂಬರ್ವನ್ ಲಕ್ಷ್ಯವಿದೆ. |
ಎರಡನೇ ವಿಶೇಷತೆಯಾಗಿದೆ - ಜನ್ಮ ಪಡೆಯುತ್ತಿದ್ದಂತೆಯೇ ಆಸ್ತಿ ಪ್ರಾಪ್ತಿ ಮಾಡಿಕೊಳ್ಳುತ್ತಾ ಸೇವೆಯ ಉಲ್ಲಾಸ-ಉತ್ಸಾಹವು ಸ್ವತಹ ಬರುತ್ತದೆ. ಸೇವೆಯಲ್ಲಿ ತೊಡಗುವುದರಿಂದ ಮೊದಲನೆಯದಾಗಿ ಸೇವೆಯ ಪ್ರತ್ಯಕ್ಷ ಫಲ ‘ಖುಷಿ’ಯೂ ಸಿಗುತ್ತದೆ ಮತ್ತು ಸೇವೆಯಿಂದ ವಿಶೇಷ ಬಲವೂ ಸಿಗುತ್ತದೆ ಹಾಗೂ ಸೇವೆಯಲ್ಲಿ ಬ್ಯುಜಿಯಾಗಿರುವ ಕಾರಣ ನಿರ್ವಿಘ್ನರಾಗುವುದರಲ್ಲಿಯೂ ಸಹಯೋಗ ಸಿಗುತ್ತದೆ ಅಂದಾಗ ಸೇವೆಯ ಉಲ್ಲಾಸ-ಉತ್ಸಾಹವು ಸ್ವತಹವಾಗಿಯೇ ಬರುವುದು, ಸಮಯ ತೆಗೆಯುವುದು ಮತ್ತು ತನ್ನ ತನು-ಮನ-ಧನವನ್ನು ಸಫಲ ಮಾಡಿಕೊಳ್ಳುವುದು - ಇದೂ ಸಹ ಡ್ರಾಮಾನುಸಾರ ವಿಶೇಷತೆಯ ಲಿಫ್ಟ್ ಸಿಕ್ಕಿದೆ. ತಮ್ಮ ವಿಶೇಷತೆಗಳನ್ನು ತಿಳಿದುಕೊಂಡಿದ್ದೀರಲ್ಲವೆ! ಈ ವಿಶೇಷತೆಗಳಿಂದ ತಮ್ಮನ್ನು ಎಷ್ಟು ಮುಂದುವರೆಸಿಕೊಳ್ಳಬೇಕೋ ಅಷ್ಟು ಮುಂದುವರೆಯಬಲ್ಲಿರಿ. ಡ್ರಾಮಾನುಸಾರ ಯಾವುದೇ ಆತ್ಮನ ಈ ದೂರು ಉಳಿಯಲು ಸಾಧ್ಯವಿಲ್ಲ - ನಾವು ಕೊನೆಯಲ್ಲಿ ಬಂದಿದ್ದೇವೆ ಆದ್ದರಿಂದ ಮುಂದುವರೆಯಲು ಸಾಧ್ಯವಾಗುತ್ತಿಲ್ಲ ಎಂದು. ಡಬಲ್ ವಿದೇಶಿ ಮಕ್ಕಳಿಗೆ ತಮ್ಮ ವಿಶೇಷತೆಗಳ ಸುವರ್ಣಾವಕಾಶವಿದೆ. ಭಾರತವಾಸಿಗಳಿಗೆ ಮತ್ತೆ ತಮ್ಮದೇ ಆದ ಸುವರ್ಣಾವಕಾಶವಿದೆ ಆದರೆ ಇಂದು ಡಬಲ್ ವಿದೇಶಿ ಮಕ್ಕಳೊಂದಿಗೆ ಮಿಲನ ಮಾಡುತ್ತಿದ್ದೇವೆ. ಡ್ರಾಮಾದಲ್ಲಿ ವಿಶೇಷವಾಗಿ ನಿಗಧಿಯಾಗಿರುವ ಕಾರಣ ಯಾರೇ ಕೊನೆಯಲ್ಲಿ ಬಂದಂತಹ ಆತ್ಮನ ದೂರು ನಡೆಯುವುದಿಲ್ಲ ಏಕೆಂದರೆ ನಾಟಕವು ಬಹಳ ನಿಖರವಾಗಿ ಮಾಡಲ್ಪಟ್ಟಿದೆ. ಈ ವಿಶೇಷತೆಗಳಿಂದ ಸದಾ ತೀವ್ರ ಗತಿಯಿಂದ ಹಾರುತ್ತಾ ನಡೆಯಿರಿ. ತಿಳಿಯಿತೆ - ಸ್ಪಷ್ಟವಾಯಿತೇ ಅಥವಾ ಇನ್ನೂ ಯಾವುದಾದರೂ ದೂರು ಇದೆಯೇ? ‘ದಿಲ್ಖುಷ್’ ಮಿಠಾಯಿಯನ್ನು ತಂದೆಗೆ ತಿನ್ನಿಸಿದ್ದೀರಿ. ‘ಧೃಡ ಸಂಕಲ್ಪ’ ಮಾಡಿದಿರಿ ಅರ್ಥಾತ್ ದಿಲ್ಖುಷ್ ಮಿಠಾಯಿಯನ್ನು ತಂದೆಗೆ ತಿನ್ನಿಸಿದಿರಿ. ಇದು ಅವಿನಾಶಿ ಮಿಠಾಯಿಯಾಗಿದೆ. ಸದಾ ಮಕ್ಕಳ ಬಾಯಿಯು ಸಿಹಿ ಮತ್ತು ತಂದೆಯ ಬಾಯಂತೂ ಸದಾ ಸಿಹಿಯಾಗಿರುತ್ತದೆ ಆದರೆ ನಂತರ ಇನ್ನೊಂದು ಪ್ರಕಾರದ ಭೋಗವನ್ನು ತಿನ್ನಿಸುವುದಲ್ಲ, ದಿಲ್ಖುಷ್ ಮಿಠಾಯಿಯ ಭೋಗವನ್ನೇ ತಿನ್ನಿಸಬೇಕು. ಸ್ಥೂಲ ಭೋಗವನ್ನು ಯಾವುದು ಬೇಕಾದರೂ ಇಡಿ ಆದರೆ ಮನಸ್ಸಿನ ಸಂಕಲ್ಪದ ಭೋಗವನ್ನು ಸದಾ ದಿಲ್ಖುಷ್ ಮಿಠಾಯಿಯನ್ನೇ ಇಡುತ್ತಾ ಇರಿ. |
ಬಾಪ್ದಾದಾ ಸದಾ ಹೇಳುತ್ತೇವೆ - ಪತ್ರವನ್ನು ಬರೆಯುವಾಗ ಕೇವಲ ಎರಡು ಅಕ್ಷರದ ಪತ್ರವು ಸದಾ ತಂದೆಗೆ ಬರೆಯಿರಿ. ಆ ಎರಡು ಶಬ್ಧಗಳು ಯಾವುದಾಗಿದೆ? ಓ.ಕೆ. ಆಗ ಇಷ್ಟೊಂದು ಕಾಗದಗಳು, ಶಾಹಿ (ಇಂಕು) ಮತ್ತು ಸಮಯ ಯಾವುದೂ ವ್ಯರ್ಥವಾಗುವುದಿಲ್ಲ, ಎಲ್ಲವೂ ಉಳಿತಾಯವಾಗುವುದು. ಓ.ಕೆ. ಅರ್ಥಾತ್ ಓ (o) ಎಂದರೆ ತಂದೆಯ ನೆನಪೂ ಇದೆ ಮತ್ತು ಕೆ (ಞ) ಎಂದರೆ ಕಿಂಗ್ಡಮ್ ಅರ್ಥಾತ್ ರಾಜ್ಯವೂ ನೆನಪಿದೆ. ಓ (o) ಎಂದು ಬರೆದಾಗ ತಂದೆಯ ಚಿತ್ರವಾಗಿ ಬಿಡುತ್ತದೆ ಮತ್ತು ಕೆ (ಞ) ಎಂದರೆ ಕಿಂಗ್ಡಮ್ ಆದ್ದರಿಂದ ಓ.ಕೆ. ಎಂದು ಬರೆದರೆ ತಂದೆ ಮತ್ತು ಆಸ್ತಿ ಎರಡೂ ನೆನಪಿಗೆ ಬಂದು ಬಿಡುತ್ತವೆ ಅಂದಾಗ ಪತ್ರವನ್ನು ಖಂಡಿತ ಬರೆಯಿರಿ ಆದರೆ ಎರಡು ಶಬ್ಧಗಳಲ್ಲಿ. ಆಗ ಪತ್ರವು ತಲುಪಿ ಬಿಡುವುದು. ಬಾಕಿ ಹೃದಯದ ಉಲ್ಲಾಸವನ್ನಂತೂ ಬಾಪ್ದಾದಾ ತಿಳಿದುಕೊಂಡಿದ್ದೇವೆ - ಪ್ರೀತಿಯ ಹೃದಯದ ಮಾತುಗಳಂತೂ ಹೃದಯರಾಮ ತಂದೆಯ ಬಳಿ ಖಂಡಿತ ತಲುಪುತ್ತವೆ. ಈ ಪತ್ರ ಬರೆಯಲು ಎಲ್ಲರಿಗೆ ಬರುತ್ತದೆಯಲ್ಲವೆ? ಭಾಷೆಯು ಗೊತ್ತಿಲ್ಲದವರೂ ಸಹ ಬರೆಯಬಹುದು. ಇದರಲ್ಲಿ ಎಲ್ಲರ ಭಾಷೆಯೂ ಸಹ ಒಂದೇ ಆಗಿ ಬಿಡುವುದು. ಈ ಪತ್ರವು ಇಷ್ಟವಾಗಿದೆಯಲ್ಲವೆ. ಒಳ್ಳೆಯದು. |
ಇಂದು ಮೊದಲ ಗ್ರೂಪ್ನ ಕೊನೆಯ ದಿನವಾಗಿದೆ. ಸಮಸ್ಯೆಗಳೆಲ್ಲವೂ ಸಮಾಪ್ತಿಯಾಯಿತು ಬಾಕಿ ಟೋಲಿಯನ್ನು ತಿನ್ನಬೇಕು ಮತ್ತು ತಿನ್ನಿಸಬೇಕಾಗಿದೆ. ಇನ್ನೇನು ಉಳಿಯಿತು? ಈಗ ಅನ್ಯರನ್ನು ಆ ರೀತಿ ಮಾಡಬೇಕಾಗಿದೆ. ಸೇವೆಯನ್ನಂತೂ ಮಾಡಬೇಕಲ್ಲವೆ. ನಿರ್ವಿಘ್ನ ಸೇವಾಧಾರಿಗಳಾಗಿರಿ. ಒಳ್ಳೆಯದು - |
ಸದಾ ತಂದೆಯ ಸಮಾನರಾಗುವ ಉಲ್ಲಾಸ-ಉತ್ಸಾಹದಿಂದ ಹಾರುವವರು, ಸದಾ ಸ್ವಯಂನ್ನು ಪರಿಶೀಲನೆ ಮಾಡಿ ಪರಿವರ್ತನೆ ಮಾಡಿಕೊಂಡು ಸಂಪೂರ್ಣರಾಗುವವರು, ಸದಾ ಸಂಕಲ್ಪ, ಮಾತು ಮತ್ತು ಕರ್ಮ - ಮೂರರಲ್ಲಿಯೂ ಶ್ರೇಷ್ಠರಾಗುವವರು, ಸದಾ ಸ್ವಚ್ಚತೆಯ ಮೂಲಕ ಶ್ರೇಷ್ಠತೆಯನ್ನು ಧಾರಣೆ ಮಾಡಿಕೊಳ್ಳುವವರು - ಇಂತಹ ತೀವ್ರ ಗತಿಯಿಂದ ಹಾರುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಆಸ್ಟ್ರೇಲಿಯಾದ ಚಿಕ್ಕ ಮಕ್ಕಳೊಂದಿಗೆ ಬಾಪ್ದಾದಾರವರ ವಾರ್ತಾಲಾಪ: |
ಎಲ್ಲರೂ ಈಶ್ವರೀಯ ವಿದ್ಯಾರ್ಥಿಗಳಾಗಿದ್ದೀರಲ್ಲವೆ. ನಿತ್ಯವೂ ವಿದ್ಯಾಭ್ಯಾಸ ಮಾಡುತ್ತೀರಾ? ಹೇಗೆ ಆ ವಿದ್ಯೆಯನ್ನು ನಿತ್ಯವೂ ಓದುತ್ತೀರೋ ಅದೇರೀತಿ ಇದನ್ನೂ ಅಭ್ಯಾಸ ಮಾಡುತ್ತೀರಾ? ಮುರುಳಿಯನ್ನು ಕೇಳುವುದು ಇಷ್ಟವಾಗುತ್ತದೆಯೇ? ಮುರುಳಿಯು ಅರ್ಥವಾಗುತ್ತಿದೆಯೇ? ತಂದೆಯನ್ನು ನಿತ್ಯವೂ ನೆನಪು ಮಾಡುತ್ತೀರಾ? ಮುಂಜಾನೆ ಏಳುತ್ತಿದ್ದಂತೆಯೇ ಗುಡ್ಮಾರ್ನಿಂಗ್ ಹೇಳುತ್ತೀರಾ? ಈ ಗುಡ್ಮಾರ್ನಿಂಗ್ ಹೇಳುವುದನ್ನು ಎಂದೂ ತಪ್ಪಿಸಬಾರದು. ಗುಡ್ಮಾರ್ನಿಂಗ್ ಹೇಳಬೇಕು ಮತ್ತು ಗುಡ್ನೈಟ್ನ್ನೂ ಹೇಳಬೇಕು ಹಾಗೂ ಯಾವಾಗ ಭೋಜನ ಮಾಡುತ್ತೀರೋ ಆಗಲೂ ನೆನಪು ಮಾಡಬೇಕು. ಹಸಿವಾದರೆ ತಂದೆಯನ್ನು ಮರೆತು ತಿಂದು ಬಿಡುವುದಲ್ಲ. ತಿನ್ನುವುದಕ್ಕೆ ಮೊದಲು ಅವಶ್ಯವಾಗಿ ನೆನಪು ಮಾಡಬೇಕು. ನೆನಪು ಮಾಡುತ್ತೀರೆಂದರೆ ವಿದ್ಯೆಯಲ್ಲಿ ಬಹಳ ಚೆನ್ನಾಗಿ ಅಂಕಗಳನ್ನು ಪಡೆದುಕೊಳ್ಳುತ್ತೀರಿ ಏಕೆಂದರೆ ಯಾರು ತಂದೆಯನ್ನು ನೆನಪು ಮಾಡುವರೋ ಅವರು ಸದಾ ಉತ್ತೀರ್ಣರಾಗುತ್ತಾರೆ, ಎಂದೂ ಅನುತ್ತೀರ್ಣರಾಗಲು ಸಾಧ್ಯವಿಲ್ಲ ಅಂದಮೇಲೆ ಸದಾ ಉತ್ತೀರ್ಣರಾಗುತ್ತೀರಾ? ಒಂದುವೇಳೆ ನೀವು ಉತ್ತೀರ್ಣರಾಗದಿದ್ದರೆ ಎಲ್ಲರೂ ಶಿವ ತಂದೆಯ ಮಕ್ಕಳೂ ಸಹ ಅನುತ್ತೀರ್ಣರಾಗುತ್ತಾರೆಂದು ಹೇಳತೊಡಗುತ್ತಾರೆ. ಪ್ರತಿನಿತ್ಯವೂ ಮುರುಳಿಯ ಒಂದು ಅಂಶವನ್ನಾದರೂ ನಿಮ್ಮ ತಾಯಿಯಿಂದ ಖಂಡಿತ ಕೇಳಿರಿ. ಒಳ್ಳೆಯದು - ಬಹಳ ಭಾಗ್ಯಶಾಲಿಗಳಾಗಿದ್ದೀರಿ ಏಕೆಂದರೆ ಭಾಗ್ಯವಿದಾತನ ಧರಣಿಯಲ್ಲಿ ಬಂದಿದ್ದೀರಿ. ತಂದೆಯೊಂದಿಗೆ ಮಿಲನ ಮಾಡುವ ಭಾಗ್ಯವು ಸಿಕ್ಕಿದೆ. ಇದು ಕಡಿಮೆ ಭಾಗ್ಯವಲ್ಲ! ಒಳ್ಳೆಯದು. |
ವ್ಯಕ್ತಿಗತ ವಾರ್ತಾಲಾಪದ ಸಮಯದಲ್ಲಿ ಬಾಪ್ದಾದಾರವರ ಮೂಲಕ ವರದಾನದ ರೂಪದಲ್ಲಿ ನುಡಿಸಿರುವ ಮಹಾವಾಕ್ಯಗಳು: |
1. ತಂದೆಯವರ ಮೂಲಕ ಸಿಕ್ಕಿರುವ ಸರ್ವ ಖಜಾನೆಗಳನ್ನು, ಸರ್ವ ಆತ್ಮರುಗಳಿಗಾಗಿ ಉಪಯೋಗಿಸುವಂತಹ, ಸಂಪನ್ನರಾಗಿದ್ದು ಅನ್ಯರನ್ನೂ ಸಂಪನ್ನರನ್ನಾಗಿ ಮಾಡುವಂತಹ ಆತ್ಮರಾಗಿದ್ದೀರಿ. ತಾವೆಷ್ಟು ಖಜಾನೆಗಳಿಂದ ಸಂಪನ್ನರಾಗಿದ್ದೀರಿ? ಯಾರು ಸಂಪನ್ನವಾಗಿ ಇರುತ್ತಾರೆಯೋ ಅವರು ಸದಾ ಹಂಚುತ್ತಾರೆ. ಅವಿನಾಶಿ ಭಂಡಾರವನ್ನಿಡಲಾಗಿದೆ, ಯಾರೇ ಬರುವರು ಸಂಪನ್ನರಾಗಿ ಹೋಗಲಿ, ಯಾರೂ ಸಹ ಖಾಲಿಯಾಗಿ ಹೋಗಲು ಸಾಧ್ಯವಿಲ್ಲ - ಇದಕ್ಕೆ ಅಖಂಡ ಭಂಡಾರವೆಂದು ಹೇಳಲಾಗುತ್ತದೆ. ಕೆಲವೊಮ್ಮೆ ಮಹಾದಾನಿಯಾಗಿ ದಾನ ಮಾಡುತ್ತಾ, ಕೆಲವೊಮ್ಮೆ ಜ್ಞಾನಿಯಾಗಿ ಜ್ಞಾನ-ಅಮೃತವನ್ನು ಕುಡಿಸುತ್ತಾ, ಕೆಲವೊಮ್ಮೆ ದಾತಾ ಆಗಿದ್ದು, ಧನ-ದೇವಿಯಾಗಿರುತ್ತಾ ಧನವನ್ನು ಕೊಡುವವರು - ಇಂತಹ ಸರ್ವರ ಶುಭ-ಆಶೆಗಳನ್ನು ತಂದೆಯ ಮೂಲಕ ಪೂರ್ಣ ಮಾಡಿಸುವವರು ಆಗಿದ್ದೀರಿ. ಯಾರೆಷ್ಟು ಖಜಾನೆಗಳನ್ನು ಹಂಚುವರು, ಅಷ್ಟೂ ಹೆಚ್ಚಾಗುತ್ತಿರುತ್ತದೆ - ಇವರಿಗೆ ಸದಾ ಸಂಪದ್ಭರಿತರು ಎಂದು ಹೇಳಲಾಗುತ್ತದೆ. ಯಾರೂ ಸಹ ಖಾಲಿಯಾಗಿ ಹೋಗಬಾರದು, ಎಲ್ಲರ ಮುಖದಿಂದ ಇದೇ ಆಶೀರ್ವಾದಗಳು ಬರಲಿ – ‘ವಾಹ್, ನಮ್ಮ ಭಾಗ್ಯವೇ!’ ಇದೇರೀತಿ ಮಹಾದಾನಿ, ವರದಾನಿಯಾಗಿ ಸತ್ಯ ಸೇವಾಧಾರಿ ಆಗಿರಿ. |
2. ಡ್ರಾಮಾನುಸಾರ ಸೇವೆಯ ವರದಾನವೂ ಸಹ ಸದಾ ಮುಂದುವರೆಸುತ್ತದೆ. ಒಂದು - ಯೋಗ್ಯತೆಯ ಮೂಲಕ ಸೇವೆಯ ಪ್ರಾಪ್ತಿಯಾಗುವುದು ಮತ್ತು ಇನ್ನೊಂದು - ವರದಾನದ ಮೂಲಕ ಸೇವೆಯ ಪ್ರಾಪ್ತಿಯಾಗುವುದು. ಸ್ನೇಹವೂ ಸಹ ಸೇವೆಯ ಸಾಧನವಾಗುತ್ತದೆ. ಭಲೆ ಭಾಷೆಯು ಗೊತ್ತಿಲ್ಲದೇ ಇರಬಹುದು ಆದರೆ ಸ್ನೇಹದ ಭಾಷೆಯಂತು ಎಲ್ಲಾ ಭಾಷೆಗಳಿಗಿಂತಲೂ ಶ್ರೇಷ್ಠವಾದುದು. ಆದ್ದರಿಂದ ಸ್ನೇಹಿ ಆತ್ಮನಿಗೆ ಸದಾ ಸಫಲತೆಯು ಸಿಗುತ್ತದೆ. ಸ್ನೇಹದ ಭಾಷೆಯನ್ನು ಯಾರು ತಿಳಿದಿರುತ್ತಾರೆಯೋ ಅವರೆಲ್ಲಿಯಾದರೂ ಸಫಲರಾಗಿ ಬಿಡುವರು. ಸೇವೆಯು ಸದಾ ನಿರ್ವಿಘ್ನವಾಗಿರಲಿ - ಇದಕ್ಕೆ ಸೇವೆಯಲ್ಲಿ ಸಫಲತೆ ಎಂದು ಹೇಳಲಾಗುತ್ತದೆ. ಅಂದಮೇಲೆ ಸ್ನೇಹದ ವಿಶೇಷತೆಯಿಂದ ಆತ್ಮರು ತೃಪ್ತರಾಗಿ ಬಿಡುತ್ತಾರೆ. ಸ್ನೇಹದ ಭಂಡಾರದಿಂದ ಸಂಪನ್ನವಾಗಿ ಇದೆ, ಇದನ್ನು ಹಂಚುತ್ತಾ ಮುಂದೆ ಸಾಗಿರಿ. ಯಾರು ತಂದೆಯಿಂದ ತುಂಬಿಕೊಂಡಿದ್ದರೆಯೋ ಅವರು ಹಂಚಿರಿ. ತಂದೆಯಿಂದ ಪಡೆದಿರುವ ಸ್ನೇಹವೇ ಮುಂದುವರೆಸುತ್ತಾ ಇರುತ್ತದೆ. |
3. ಸ್ನೇಹದ ವರದಾನವೂ ಸಹ ಸೇವೆಗೆ ನಿಮಿತ್ತರನ್ನಾಗಿ ಮಾಡಿ ಬಿಡುತ್ತದೆ. ತಂದೆಯೊಂದಿಗೆ ಸ್ನೇಹವಿದೆಯೆಂದರೆ ಅನ್ಯರನ್ನೂ ತಂದೆಯ ಸ್ನೇಹಿಯನ್ನಾಗಿ ಮಾಡುತ್ತಾ, ಸಮೀಪಕ್ಕೆ ಕರೆದುಕೊಂಡು ಬರುತ್ತೀರಿ. ತಂದೆಯ ಸ್ನೇಹವು ಯಾವ ರೀತಿ ತಮ್ಮನ್ನು ತಂದೆಯ ಮಗುವನ್ನಾಗಿಸಿತು, ಅದರಿಂದ ಎಲ್ಲವೂ ಮರೆತು ಹೋಯಿತು. ಅದೇರೀತಿ ತಾವು ಅನುಭವಿಯಾಗಿ ಅನ್ಯರನ್ನೂ ಅನುಭವಿಯನ್ನಾಗಿ ಮಾಡುತ್ತಿರಿ. ಸದಾ ತಂದೆಯ ಸ್ನೇಹದಲ್ಲಿ ಅರ್ಪಣೆ ಆಗುವಂತಹ ಆತ್ಮನಾಗಿದ್ದೇನೆ ಎಂಬ ನಶೆಯಲ್ಲಿರಿ. ತಂದೆ ಹಾಗೂ ಸೇವೆ - ಇದೇ ಲಗನ್ ಮುಂದುವರೆಸುವ ಸಾಧನವಾಗಿದೆ. ಭಲೆ ಎಷ್ಟಾದರೂ ಮಾತುಗಳು ಬರಲಿ ಆದರೆ ತಂದೆಯ ಸ್ನೇಹವು ಸಹಯೋಗವನ್ನು ಕೊಡುತ್ತಾ ಮುಂದುವರೆಸುತ್ತದೆ. ಏಕೆಂದರೆ ಸ್ನೇಹಿಗೆ ಸ್ನೇಹದ ರಿಟರ್ನ್ನಲ್ಲಿ ಪದಮಪಟ್ಟು ಸಿಗುತ್ತದೆ. ಸ್ನೇಹವು ಅಂತಹ ಶಕ್ತಿಯಾಗಿದೆ, ಅದರಿಂದ ಯಾವುದೇ ಮಾತು ಕಷ್ಟವೆನಿಸುವುದಿಲ್ಲ ಏಕೆಂದರೆ ಸ್ನೇಹದಲ್ಲಿ ಮುಳುಗಿರುತ್ತಾರೆ - ಇದಕ್ಕೆ ಪರಂಜ್ಯೋತಿಯ ಮೇಲೆ ಪತಂಗವು ಅರ್ಪಣೆಯಾಗಿರುವುದು ಎಂದು ಹೇಳಲಾಗುತ್ತದೆ. ಜ್ಯೋತಿಯ ಸುತ್ತಲೂ ಸುತ್ತುವವರಲ್ಲ, ಅರ್ಪಣೆಯಾಗುವ ಹಾಗೂ ಪ್ರೀತಿಯ ರೀತಿಯನ್ನು ನಿಭಾಯಿಸುವವರು ಅಂದಮೇಲೆ ಸ್ನೇಹ ಮತ್ತು ಶಕ್ತಿ - ಇವೆರಡರ ಸಮತೋಲನದಿಂದ ಸದಾ ಮುಂದುವರೆಯುತ್ತಾ ಹಾಗೂ ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಈ ಸಮತೋಲವೇ ತಂದೆಯ ಆಶೀರ್ವಾದಗಳನ್ನು ಕೊಡಿಸುತ್ತದೆ ಹಾಗೂ ಕೊಡಿಸುತ್ತಾ ಇರುತ್ತದೆ. ಹಿರಿಯರ ಛತ್ರಛಾಯೆಯೂ ಸಹ ಸದಾ ಮುಂದುವರೆಸುತ್ತಾ ಇರುತ್ತದೆ. ತಂದೆಯ ಛತ್ರಛಾಯೆಯಂತು ಇದ್ದೇ ಇದೆ ಆದರೆ ಹಿರಿಯರ ಛತ್ರಛಾಯೆಯೂ ಸಹ ಸುವರ್ಣಾವಕಾಶ ಆಗಿದೆ. ಅಂದಮೇಲೆ ಸದಾ ಶಹಭಾಸ್ ತೆಗೆದುಕೊಳ್ಳುತ್ತಾ ಮುಂದುವರೆಯುತ್ತಾ ಇರುತ್ತೀರೆಂದರೆ, ತಮ್ಮ ಭವಿಷ್ಯವೂ ಸ್ಪಷ್ಟವಾಗುತ್ತಾ ಹೋಗುತ್ತದೆ. |
4. ಪ್ರತೀ ಹೆಜ್ಜೆಯಲ್ಲಿ ತಂದೆಯವರ ಜೊತೆ ಅನುಭವವನ್ನು ಮಾಡುವವರಲ್ಲವೆ. ಯಾವ ಮಕ್ಕಳನ್ನು ತಂದೆಯವರು ವಿಶೇಷ ಸೇವಾರ್ಥವಾಗಿ ನಿಮಿತ್ತರನ್ನಾಗಿ ಮಾಡಿದ್ದಾರೆಂದರೆ, ನಿಮಿತ್ತರಾಗುವುದರ ಜೊತೆ ಜೊತೆಗೆ ಸೇವೆಯ ಪ್ರತೀ ಹೆಜ್ಜೆಯಲ್ಲಿ ಸಹಯೋಗಿಯೂ ಆಗುತ್ತಾರೆ. ಭಾಗ್ಯವಿದಾತನು ಪ್ರತಿಯೊಂದು ಮಕ್ಕಳಿಗೂ ಭಾಗ್ಯದ ವಿಶೇಷತೆಯನ್ನು ಕೊಟ್ಟಿದ್ದಾರೆ. ಆ ವಿಶೇಷತೆಯನ್ನು ಕಾರ್ಯದಲ್ಲಿ ಉಪಯೋಗಿಸುತ್ತಾ ಸದಾಕಾಲ ಮುಂದುವರೆಯುತ್ತಾ ಮತ್ತು ಅನ್ಯರನ್ನೂ ಮುಂದುವರೆಸುತ್ತಾ ಸಾಗಿರಿ. ಸೇವೆಯಂತು ಶ್ರೇಷ್ಠ ಬ್ರಾಹ್ಮಣ ಆತ್ಮರ ಹಿಂದೆ-ಹಿಂದೆ ಬರುವುದಿದೆ. ತಾವು ಸೇವೆಯ ಹಿಂದೆ ಹೋಗಬೇಕಾಗಿರುವುದಿಲ್ಲ, ಎಲ್ಲಿಗೆ ಹೋಗುವಿರಿ ಅಲ್ಲಿ ಸೇವೆಯು ಹಿಂದೆಯೇ ಬರುತ್ತದೆ. ಉದಾ: ಎಲ್ಲಿ ಪ್ರಕಾಶತೆಯಿರುತ್ತದೆ ಅಲ್ಲಿ ಅವಶ್ಯವಾಗಿ ನೆರಳು ಬರುತ್ತದೆ. ಅದೇರೀತಿ ತಾವು ಡಬಲ್ ಲೈಟ್ ಆಗಿದ್ದೀರೆಂದಾಗ ತಮ್ಮ ಹಿಂದೆ ಸೇವೆಯೂ ಸಹ ನೆರಳಿನಂತೆ ಬರುತ್ತದೆ. ಆದ್ದರಿಂದ ಸದಾ ನಿಶ್ಚಿಂತರಾಗಿದ್ದು ತಂದೆಯ ಛತ್ರಛಾಯೆಯಲ್ಲಿ ನಡೆಯುತ್ತಾ ಇರಬೇಕು. |
5. ಸದಾ ಹೃದಯದಲ್ಲಿ ತಂದೆಯ ಸಮಾನರಾಗುವ ಉಮ್ಮಂಗವು ಇರುತ್ತದೆಯಲ್ಲವೇ? ಯಾವಾಗ ಸಮಾನರಾಗುವಿರಿ ಆಗಲೇ ಸಮೀಪವಿರುತ್ತೀರಿ, ಸಮೀಪವಂತು ಇರಲೇಬೇಕು ಅಲ್ಲವೆ. ಸಮೀಪವಿರುವವರ ಬಳಿ ಸಮಾನರಾಗುವ ಉಮ್ಮಂಗವು ಇದ್ದೇ ಇರುತ್ತದೆ ಮತ್ತು ಸಮಾನರಾಗುವುದು ಕಷ್ಟವಾಗುವುದಿಲ್ಲ. ಆದರೆ ಕೇವಲ ಯಾವುದೇ ಕರ್ಮವನ್ನು ಮಾಡುವಿರೆಂದರೆ, ಮಾಡುವುದಕ್ಕೆ ಮೊದಲು ಇದನ್ನು ಸ್ಮೃತಿಯಲ್ಲಿ ತಂದುಕೊಳ್ಳಬೇಕು - ಈ ಕರ್ಮವನ್ನು ತಂದೆಯವರು ಹೇಗೆ ಮಾಡುತ್ತಾರೆ. ಈ ಸ್ಮೃತಿಯು ಸ್ವತಹವಾಗಿಯೇ ತಂದೆಯ ಕರ್ಮದಂತೆ ಅನುಸರಣೆ ಮಾಡಿಸುತ್ತದೆ. ಇದರಬಗ್ಗೆ ಯೋಚಿಸುವ ಮಾತೇ ಇಲ್ಲ, ಏಣಿಯನ್ನು ಇಳಿಯುತ್ತಾ-ಹತ್ತುತ್ತಾ ಇರುವಾಗಲೂ ಯೋಚಿಸಬಹುದು. ಬಹಳ ಸಹಜ ವಿಧಿಯೂ ಆಗಿದೆ. ಅಂದಮೇಲೆ ಕೇವಲ ತಂದೆಯೊಂದಿಗೆ ಮಿಲನ ಮಾಡುತ್ತಾ ಸಾಗಿರಿ ಮತ್ತು ಇದನ್ನೇ ನೆನಪಿಟ್ಟುಕೊಳ್ಳಿರಿ - ನಾವು ಅವಶ್ಯವಾಗಿ ತಂದೆಯ ಸಮಾನ ಆಗಲೇಬೇಕು. ಇದರಿಂದ ಸಹಜವಾಗಿಯೇ ಪ್ರತಿಯೊಂದು ಕರ್ಮದಲ್ಲಿ ಸಫಲತೆಯ ಅನುಭವವನ್ನು ಮಾಡುತ್ತಾ ಇರುತ್ತೀರಿ. ಒಳ್ಳೆಯದು! |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮಕ್ಕಳು ಹೇಳುತ್ತಾರೆ - ಬಾಬಾ, ನಾವು ಎಲ್ಲಿಂದ ಬಂದೆವು ಯಾವಾಗ ಬಂದೆವು ಮತ್ತೆ ಹಿಂತಿರುಗಿ ಹೋಗುವ ಮಾರ್ಗವನ್ನು ಹೇಗೆ ಮರೆತೆವು ಎಂದು ಈ ಡ್ರಾಮಾವನ್ನು ಕಿವಿಗಳಲ್ಲಿ ತಿಳಿಸಿಬಿಡಿ. ನಾವು ಯಾರಾಗಿದ್ದೇವೆ, ಎಲ್ಲಿಂದ ಬಂದೆವು ಮತ್ತು ಎಲ್ಲಿಗೆ ಹೊರಟು ಹೋದೆವು! ಒಂದು ಜ್ಞಾನದ ಹನಿಯನ್ನಾದರೂ ಕೊಟ್ಟು ಬಿಡಿ ಏಕೆಂದರೆ ಜ್ಞಾನ ಸಾಗರನಲ್ಲವೆ. ಈಗ ಮಕ್ಕಳಿಗೆ ತಿಳಿದಿದೆ, ನಾವಾತ್ಮರು ಎಲ್ಲಿನ ನಿವಾಸಿಗಳಾಗಿದ್ದೇವೆ ಮತ್ತು ತಂದೆ ಹಾಗೂ ನಮ್ಮ ಸ್ವರ್ಗವನ್ನು ಹೇಗೆ ಮರೆತೆವು ನಂತರ ಹೇಗೆ ಬಂದು ಇಲ್ಲಿ ದುಃಖಿಯಾದೆವು ಎಂಬ ರಹಸ್ಯವನ್ನು ಕಿವಿಗಳಲ್ಲಿ ತಿಳಿಸಿ. ತಂದೆಯು ಜ್ಞಾನ ಸಾಗರನೂ ಆಗಿದ್ದಾರೆ, ಪವಿತ್ರತೆಯ ಸಾಗರನೂ ಆಗಿದ್ದಾರೆ, ಪ್ರೇಮ ಸಾಗರನೂ ಆಗಿದ್ದಾರೆ. ಶಾಂತಿ-ಸುಖ ಮತ್ತು ಸಂಪತ್ತಿನ ಸಾಗರನೂ ಆಗಿದ್ದಾರೆ. ಈಗ ಬೇಹದ್ದಿನ ತಂದೆಯ ಮೂಲಕ ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳುತ್ತೀರಿ, ಆದಿಯಲ್ಲಿ ಎಲ್ಲಿಂದ ಬಂದೆವು ನಂತರ ಮಧ್ಯದಲ್ಲಿ ಏನಾಯಿತು, ಯಾವುದರಿಂದ ನಾವು ಮಾರ್ಗವನ್ನು ಮರೆತು ದುಃಖಿಯಾದೆವು! ಈಗ ಪುನಃ ಬಾಬಾ ನಮಗೆ ಮಾರ್ಗವನ್ನು ತಿಳಿಸಿ, ನಾವು ನಮ್ಮ ಸುಖಧಾಮ-ಶಾಂತಿಧಾಮಕ್ಕೆ ಹೋಗಬೇಕೆಂದು ತಂದೆಗೆ ಹೇಳುತ್ತಾರೆ. ನೀವು ಆದಿಯಲ್ಲಿ ಯಾರಾಗಿದ್ದಿರಿ, ಮಧ್ಯದಲ್ಲಿ ಏನಾಯಿತು ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಭಕ್ತಿಮಾರ್ಗವು ಹೇಗೆ ಆರಂಭವಾಯಿತು, ಅಂತಿಮದಲ್ಲಿ ಏನಾಯಿತು - ಈ ಆದಿ-ಮಧ್ಯ-ಅಂತ್ಯದ ರಹಸ್ಯವು ಈಗ ಬುದ್ಧಿಯಲ್ಲಿ ಕುಳಿತಿದೆ. ಇದು ನಾಟಕವಲ್ಲವೆ. ಇದನ್ನು ಮನುಷ್ಯರು ಅವಶ್ಯವಾಗಿ ತಿಳಿದುಕೊಳ್ಳಬೇಕಾಗಿದೆ ಏಕೆಂದರೆ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ. ನಿಮಗೆ ತಿಳಿದಿದೆ - ನಾವಾತ್ಮರು ನಿರಾಕಾರಿ ಶಾಂತಿಧಾಮದಿಂದ ಇಲ್ಲಿ ಶಬ್ಧ ಪ್ರಪಂಚದಲ್ಲಿ ಬರುತ್ತೇವೆ. ಮೂಲವತನ, ಸೂಕ್ಷ್ಮವತನ ನಂತರ ಇದು ಸ್ಥೂಲವತನವಾಗಿದೆ. ಮೂಲವತನದಿಂದ ಆತ್ಮರು ಈ ಶಬ್ಧ ಪ್ರಪಂಚದಲ್ಲಿ ಶರೀರ ಧಾರಣೆ ಮಾಡಿ ಪಾತ್ರವನ್ನು ಅಭಿನಯಿಸಲು ಬರುತ್ತೀರಿ. ಆತ್ಮದ ನಿವಾಸ ಸ್ಥಾನವು ಶಾಂತಿಧಾಮವಾಗಿದೆ. ಈ ಮಾತುಗಳನ್ನೂ ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಇದನ್ನು ಜ್ಞಾನ ಸಾಗರ ತಂದೆಯೇ ಬಂದು ತಿಳಿಸುತ್ತಾರೆ, ಈಗಲೂ ತಿಳಿಸುತ್ತಿದ್ದಾರೆ. ಪಾರಲೌಕಿಕ ಪರಮಪಿತ ಪರಮಾತ್ಮನಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ಮನುಷ್ಯರಿಗೆ ಹೇಳಲು ಸಾಧ್ಯವಿಲ್ಲ. ಕೇವಲ ಒಬ್ಬ ತಂದೆಗೇ ಈ ಮಹಿಮೆಯನ್ನು ಹಾಡಲಾಗುತ್ತದೆ. ಇದನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಗ ವಿನಾಶದ ಸಮಯವಾಗಿದೆ, ವಿನಾಶ ಕಾಲೇ ವಿಪರೀತ ಬುದ್ಧಿ ಯೂರೋಪಿಯನ್ನರು..... ಎಂದು ಗಾಯನವಿದೆ. ಈಗ ತಂದೆಯು ನಿಮ್ಮ ಬುದ್ಧಿಯೋಗವನ್ನು ತಮ್ಮ ಜೊತೆ ಜೋಡಣೆ ಮಾಡಿಸಿದ್ದಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ. ನಾನು ಮುಸಲ್ಮಾನನಾಗಿದ್ದೇನೆ, ಹಿಂದೂ ಆಗಿದ್ದೇನೆ, ಬೌದ್ಧಿ ಆಗಿದ್ದೇನೆ.... ಇವೆಲ್ಲವೂ ದೇಹದ ಧರ್ಮಗಳಾಗಿವೆ, ಆತ್ಮವಂತೂ ಆತ್ಮವೇ ಆಗಿದೆ. ದೇಹದ ಎಲ್ಲಾ ಧರ್ಮಗಳನ್ನು ಬಿಟ್ಟು ತನ್ನನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿದರೆ ಪತಿತರಿಂದ ಪಾವನರಾಗಿ ಬಿಡುತ್ತೀರಿ. ತಂದೆಯು ತಿಳಿಸುತ್ತಾರೆ - ಈ ದೇಹವನ್ನೂ ಸಹ ಮರೆಯಿರಿ. ಇದು ಎಲ್ಲರಿಗಾಗಿ ತಂದೆಯ ಸಂದೇಶವಾಗಿದೆ. ದೇಹ ಸಹಿತ ದೇಹದ ಏನೆಲ್ಲಾ ಸಂಬಂಧಗಳಿವೆಯೋ ಎಲ್ಲವನ್ನೂ ಮರೆಯಿರಿ. ನಾನಾತ್ಮನಾಗಿದ್ದೇನೆ. ನಾವೆಲ್ಲಾ ಸಹೋದರರ ತಂದೆಯು ಒಬ್ಬರೇ ಆಗಿದ್ದಾರೆ. ಈ ಬ್ರಹ್ಮಾರವರೂ ಸಹ ಹೇಳುತ್ತಾರೆ - ನಾನಾತ್ಮನಾಗಿದ್ದೇನೆ ಎಂದು, ಇದರಿಂದ ಎಲ್ಲರೂ ಸಹೋದರ-ಸಹೋದರರಾದರು. ಈ ಸಮಯದಲ್ಲಿ ಎಲ್ಲಾ ಸಹೋದರರು ಪತಿತ, ದುಃಖಿಯಾಗಿದ್ದಾರೆ. ಎಲ್ಲರೂ ಕಾಮ ಚಿತೆಯನ್ನೇರಿ ಭಸ್ಮವಾಗಿ ಬಿಟ್ಟಿದ್ದಾರೆ. ಯಾವಾಗ ದ್ವಾಪರದ ಆದಿಯಲ್ಲಿ ರಾವಣ ರಾಜ್ಯವು ಆರಂಭವಾಯಿತು, ನಂತರ ನೀವು ವಾಮ ಮಾರ್ಗದಲ್ಲಿ ಇಳಿಯುತ್ತೀರಿ ಆಗಲೇ ಮತ್ತೆಲ್ಲಾ ಧರ್ಮಗಳು ಆರಂಭವಾಗುತ್ತವೆ. ಅರ್ಧ ಸಮಯ ನೀವು ಪವಿತ್ರರಾಗಿರುತ್ತೀರಿ, ಇನ್ನರ್ಧ ಸಮಯದಲ್ಲಿ ನೀವು ಪತಿತರಾಗುತ್ತೀರಿ. 21 ಜನ್ಮಗಳು ಭಾರತದಲ್ಲಿಯೇ ಗಾಯನವಿದೆ. 21 ಕುಲದ ಉದ್ಧಾರ ಮಾಡುವವರೇ ಕುಮಾರಿ ಎಂದು ಹೇಳಲಾಗುತ್ತದೆ. ಕನ್ಯೆಗೆ ಮಾನ್ಯತೆಯಿದೆ. ನೀವು ಭಾರತವನ್ನಷ್ಟೇ ಅಲ್ಲ, ಇಡೀ ಪ್ರಪಂಚದ ಉದ್ಧಾರ ಮಾಡುತ್ತಿದ್ದೀರಿ. ನಿಮಗೆ ತಿಳಿದಿದೆ, ಎಲ್ಲಾ ಆತ್ಮರು ಶಿವ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಕುಮಾರರೇ ಆದರು. ಯಾವಾಗ ಪ್ರಜಾಪಿತ ಬ್ರಹ್ಮನ ಸಂತಾನರಾಗುತ್ತೀರೋ ಆಗ ಸಹೋದರ-ಸಹೋದರಿಯರಾಗುತ್ತಾರೆ. ಇದು ನೀವು ಮಕ್ಕಳಿಗೆ ಜ್ಞಾನವಿದೆ - ನಾವೆಲ್ಲಾ ಆತ್ಮರು ಸಹೋದರ-ಸಹೋದರರಾಗಿದ್ದೇವೆ. ಹೇ ಪತಿತ-ಪಾವನ ಬನ್ನಿ, ಇಲ್ಲಿ ರಾವಣ ರಾಜ್ಯದಿಂದ ದುಃಖದಿಂದ ನಮ್ಮನ್ನು ಮುಕ್ತಗೊಳಿಸಿ, ನಮ್ಮ ಮಾರ್ಗದರ್ಶಕನಾಗಿ ನಮ್ಮನ್ನು ಮನೆಗೆ ಕರೆದುಕೊಂಡು ಹೋಗಿ, ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ಎಲ್ಲರೂ ತಂದೆಯನ್ನು ಕರೆಯುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ತಂದೆಯು ಬಂದಿದ್ದಾರೆ ನಮ್ಮನ್ನು ಈ ಕಲಿಯುಗೀ ರಾವಣ ರಾಜ್ಯದಿಂದ ಬಿಡಿಸಿ ಜೊತೆಗೆ ಕರೆದುಕೊಂಡು ಹೋಗುತ್ತಾರೆ. ತಂದೆಗೆ ಗೊತ್ತಿದೆ, ಎಲ್ಲಾ ಆತ್ಮರು ಪತಿತರಾಗಿದ್ದಾರೆ. ಆದ್ದರಿಂದ ಶರೀರವೂ ಪತಿತವಾಗಿದೆ, ಆತ್ಮವನ್ನೇ ಪಾವನ ಮಾಡಿ ನಿರ್ವಾಣಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಭೂತ ಕಾಲದಿಂದ ವರ್ತಮಾನ, ಮತ್ತೆ ಭವಿಷ್ಯವಾಗುವುದು. ಆದಿ-ಮಧ್ಯ-ಅಂತ್ಯ ಪುನಃ ಆದಿ. ಸತ್ಯಯುಗದ ಆದಿ, ಕಲಿಯುಗದ ಅಂತ್ಯ ಮತ್ತೆ ಭವಿಷ್ಯ ಸತ್ಯಯುಗವು ಬರುವುದು. ಇದು ಸಹಜವಲ್ಲವೆ. ಅಂದಮೇಲೆ ಮಧ್ಯದಲ್ಲಿ ಏನಾಯಿತು? ನಾವು ಹೇಗೆ ಕೆಳಗಿಳಿದೆವು? ನಾವು ಪಾವನ ದೇವತೆಗಳಾಗಿದ್ದೆವು, ನಂತರ ಪಾವನರಿಂದ ಹೇಗೆ ಪತಿತರಾದೆವು! ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ – ರಾವಣ ರಾಜ್ಯವು ಆರಂಭವಾದಾಗಲಿಂದ ನೀವು ಪತಿತರಾಗುತ್ತೀರಿ, ಈಗ ಪುನಃ ನಿಮ್ಮನ್ನು ಭವಿಷ್ಯ ದೇವತೆಗಳನ್ನಾಗಿ ಮಾಡಲು ಬಂದಿದ್ದೇನೆ, ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ನಾನು ನಿಮ್ಮನ್ನು ವಿಷಯ ಸಾಗರದಿಂದ ಪಾರು ಮಾಡುತ್ತೇನೆ. ನನ್ನ ಜೀವನದ ದೋಣಿಯನ್ನು ದಡ ಸೇರಿಸು ಎಂದು ಹಾಡುತ್ತಾರೆ. ಎಲ್ಲರೂ ಒಬ್ಬ ತಂದೆಯನ್ನು ಕರೆಯುತ್ತಾರೆ - ತಂದೆಯೇ, ನಮ್ಮ ದೋಣಿಯು ಮುಳುಗಿಹೋಗಿದೆ ಅದನ್ನು ಕ್ಷೀರ ಸಾಗರದ ಕಡೆಗೆ ಕರೆದುಕೊಂಡು ಹೋಗಿರಿ. ತಂದೆಗೆ ಅಂಬಿಗ, ಹೂದೋಟದ ಮಾಲೀಕನೆಂತಲೂ ಹೇಳಲಾಗುತ್ತದೆ. ನಾವೀಗ ಮುಳ್ಳುಗಳ ಕಾಡಿನಲ್ಲಿದ್ದೇವೆ ನಮ್ಮನ್ನು ಪುನಃ ಹೂದೋಟಕ್ಕೆ ಕರೆದುಕೊಂಡು ಹೋಗಿರಿ. ದೇವತೆಗಳು ಹೂಗಳಲ್ಲವೆ! ಈಗ ಎಲ್ಲರೂ ಇಲ್ಲಿ ಮುಳ್ಳುಗಳಾಗಿದ್ದಾರೆ, ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ದೇವತೆಗಳೆಂದೂ ಯಾರಿಗೂ ದುಃಖ ಕೊಡುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ. ಅವರು ಕೇವಲ ಹಾಡುತ್ತಾರೆ, ನೀವಿಲ್ಲಿ ಸನ್ಮುಖದಲ್ಲಿ ಕುಳಿತಿದ್ದೀರಿ. ಹೇಳುತ್ತೀರಲ್ಲವೆ- ಬಾಬಾ, ನಾವು ಎಲ್ಲಿಂದ ಮರೆತೆವು! ಈ ಸೃಷ್ಟಿ ಚಕ್ರವನ್ನು ನಾವು ಹೇಗೆ ಮರೆತೆವು! ಸತ್ಯ-ತ್ರೇತಾಯುಗದಲ್ಲಿ ಇದನ್ನು ತಿಳಿದುಕೊಂಡಿರಲಿಲ್ಲ ಏಕೆಂದರೆ ಅಲ್ಲಿ ನಾವು ಸುಖಿಯಾಗಿದ್ದೆವು ನಂತರ ಯಾವಾಗ ದುಃಖಿಯಾದೆವು? ರಾವಣ ರಾಜ್ಯವು ಆರಂಭವಾದಾಗ. ಭಾರತವಾಸಿಗಳು ರಾವಣನನ್ನು ಸುಡುತ್ತಲೇ ಇರುತ್ತಾರೆ, ಎಲ್ಲಿಯವರೆಗೆ ರಾವಣನ ವಿನಾಶವಾಗುವುದಿಲ್ಲವೋ ಅಲ್ಲಿಯವರೆಗೆ ಸುಡುತ್ತಲೇ ಇರುತ್ತಾರೆ. ಮತ್ತೆ ಸತ್ಯಯುಗದಲ್ಲಿ ಪ್ರತೀವರ್ಷ ಸುಡುವುದಿಲ್ಲ. ಇದು ಭಕ್ತಿಮಾರ್ಗವಾಗಿದೆ, ಈ ರಾವಣ ರಾಜ್ಯವು ಸಮಾಪ್ತಿಯಾಗಲಿದೆ. ಭಕ್ತಿಮಾರ್ಗದಲ್ಲಿ ರಾವಣನನ್ನು ಪ್ರತಿ ವರ್ಷ ಸುಡುತ್ತಾರೆ ಆದರೆ ಸಾಯುವುದೇ ಇಲ್ಲ. ಈಗ ನಿಮ್ಮ ಮುಂದೆ ರಾವಣನು ಸತ್ತು ಹೋದಂತೆಯೇ. ನಿಮಗೆ ತಿಳಿದಿದೆ - ಈಗ ರಾವಣ ರಾಜ್ಯವು ಸಮಾಪ್ತಿಯಾಗಲಿದೆ. ಪಂಚ ಭೂತಗಳ ತಲೆಯನ್ನು ಕತ್ತರಿಸಲಾಗುತ್ತದೆ. ಮೊಟ್ಟ ಮೊದಲು ಕಾಮದ ತಲೆಯನ್ನು ಕತ್ತರಿಸುತ್ತೀರಿ. ಕಾಮವೇ ಮಹಾಶತ್ರುವಾಗಿದೆ. ತಂದೆಯು ತಿಳಿಸುತ್ತಾರೆ - ಈ ಐದು ಭೂತಗಳ ಮೇಲೆ ಜಯಶೀಲರಾಗುವುದರಿಂದಲೇ ನೀವು ವಿಶ್ವದ ಮೇಲೆ ಜಯ ಗಳಿಸುತ್ತೀರಿ. ನಾವು ಪತಿತರೆಂದು ಮನುಷ್ಯರೂ ಹೇಳುತ್ತಾರೆ ಆದ್ದರಿಂದಲೇ ಪತಿತರನ್ನು ಪಾವನ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಹೇ ಪತಿತ-ಪಾವನ, ಹೇ ತಂದೆಯೇ, ಅಂಬಿಗನೇ, ದಯಾ ಸಾಗರ ತಂದೆಯೇ ಬನ್ನಿ ಎಂದು ಆತ್ಮವು ಕರೆಯುತ್ತದೆ. ತಂದೆಯು ಹೇಳುತ್ತಾರೆ - ನಾನು ಕಲ್ಪ-ಕಲ್ಪವೂ ಬರುತ್ತೇನೆ, ಹೇಗೆ ಬರುತ್ತೇನೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಭಗವಂತನೇ ಬಂದು ರಾಜಯೋಗವನ್ನು ಕಲಿಸಿದರೆಂದು ಗೀತೆಯಲ್ಲಿಯೂ ಇದೆ ಆದರೆ ಭಗವಂತ ಯಾರು, ಯಾವಾಗ ಬಂದರು ಎಂಬುದು ಯಾರಿಗೂ ತಿಳಿದಿಲ್ಲ. ಗೀತೆಯನ್ನಂತೂ ಖಂಡನೆ ಮಾಡಿ ಬಿಡುತ್ತಾರೆ. ಕೃಷ್ಣನನ್ನೂ ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಆದರೆ ದ್ವಾಪರದ ನಂತರ ಪ್ರಪಂಚವು ಇನ್ನೂ ಪತಿತವಾಗುತ್ತದೆ ಅಂದಮೇಲೆ ಕೃಷ್ಣನು ದ್ವಾಪರದಲ್ಲಿ ಬಂದು ಏನು ಮಾಡಿದಂತಾಯಿತು! ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಸಂಪೂರ್ಣ ಅಸತ್ಯವಂತರಾಗಿದ್ದಾರೆ, ಸತ್ಯಯುಗದಲ್ಲಿ ಸತ್ಯವಂತರಿರುತ್ತಾರೆ. ನೀವೀಗ ಅಸತ್ಯವಂತರಿಂದ ಸತ್ಯವಂತರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನೀವೇ ಸಂಪೂರ್ಣ ನಿರ್ವಿಕಾರಿ ಪೂಜ್ಯರಾಗಿದ್ದಿರಿ, ನೀವೇ ಈಗ ವಿಕಾರಿ ಪೂಜಾರಿಗಳಾಗಿದ್ದೀರಿ. ತಾವೇ ಪೂಜ್ಯ, ತಾವೇ ಪೂಜಾರಿ... 21 ಜನ್ಮಗಳವರೆಗೆ ನೀವು ಮೊದಲು ಪೂಜ್ಯರಾಗುತ್ತೀರಿ ನಂತರ ಪೂಜಾರಿಗಳಾಗಿದ್ದೀರಿ. ಸತ್ಯಯುಗದಲ್ಲಿ 8 ಜನ್ಮಗಳನ್ನು ಮತ್ತು ತ್ರೇತಾಯುಗದಲ್ಲಿ 12 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ನೀವು ಹೇಗೆ ಪತಿತರಾದಿರಿ, ಹೇಗೆ ಕೆಳಗಿಳಿದಿದ್ದೀರಿ ಎಂಬುದನ್ನು ತಂದೆಯೇ ತಿಳಿಸುತ್ತಾರೆ. ಈ ಸೃಷ್ಟಿಚಕ್ರವು ಸುತ್ತುತ್ತಿರುತ್ತದೆ, ಇಡೀ ವಿಶ್ವದ ಚರಿತ್ರೆ-ಭೂಗೋಳ, ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಎಲ್ಲರೂ ಏಕರಸವಾಗಿ ತಿಳಿದುಕೊಳ್ಳುವುದಿಲ್ಲ, ನಂಬರ್ವಾರ್ ತಿಳಿದುಕೊಳ್ಳುವರು. |
ತಂದೆಯು ತಿಳಿಸುತ್ತಾರೆ - ನಾನು ಬಂದು ರಾಜಧಾನಿಯನ್ನು ಸ್ಥಾಪನೆ ಮಾಡುತ್ತೇನೆ. ನೀವೀಗ ಸರ್ವಗುಣ ಸಂಪನ್ನರಾಗಬೇಕಾಗಿದೆ, ಅಲ್ಲಿಯವರೆಗೂ ಸತ್ಯಯುಗದಲ್ಲಿ ಹೋಗಲು ಸಾಧ್ಯವಿಲ್ಲ. ಇಲ್ಲಿಯೇ ಆಗಬೇಕಾಗಿದೆ ಮತ್ತೆ ಭವಿಷ್ಯದಲ್ಲಿ ಹೋಗಿ ನೀವು ರಾಜ್ಯಭಾರ ಮಾಡುವಿರಿ. ಅದರ ಮಧ್ಯದಲ್ಲಿ ಎಲ್ಲವೂ ವಿನಾಶವಾಗಿ ಬಿಡುವುದು. ವಿನಾಶವನ್ನೂ ಖಂಡಿತ ಮಾಡುತ್ತೀರಿ, ನೀವು ಪ್ರತ್ಯಕ್ಷದಲ್ಲಿ ತಮ್ಮ ಪಾತ್ರವನ್ನು ಅಭಿನಯಿಸುತ್ತೀರಿ. ಮುಂದೆ ಏನಾಗುವುದು ಎಂದು ನಿಮಗೆ ತಿಳಿಯುತ್ತದೆಯೇ! ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುವುದು. |
ನಿಮಗೆ ಒಟ್ಟಾಗಿ ಹೇಳಲಾಗುತ್ತದೆ - ಸ್ಥಾಪನೆ ಮತ್ತು ವಿನಾಶವಾಗುವುದು. ವಿನಾಶವು ಹೇಗಾಗುವುದು? ಅದನ್ನೂ ಯಾವಾಗ ಆಗುವುದೋ ಆಗಲೇ ನೋಡುತ್ತೀರಿ, ದಿವ್ಯ ದೃಷ್ಟಿಯಿಂದ ವಿನಾಶವನ್ನಂತೂ ನೋಡಿದ್ದೀರಿ, ಮುಂದೆ ಹೋದಂತೆ ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಸ್ಥಾಪನೆಯ ಸಾಕ್ಷಾತ್ಕಾರವನ್ನು ದಿವ್ಯ ದೃಷ್ಟಿಯಿಂದ ನೋಡಿದ್ದೀರಿ ಮತ್ತು ಪ್ರತ್ಯಕ್ಷದಲ್ಲಿಯೂ ನೋಡುತ್ತೀರಿ ಆದ್ದರಿಂದ ಹೆಚ್ಚು ಧ್ಯಾನದಲ್ಲಿ ಹೋಗುವುದೂ ಸಹ ಸರಿಯಲ್ಲ. ಕೆಲವರು ವೈಕುಂಠದಲ್ಲಿ ಹೋಗಿ ನೃತ್ಯ ಮಾಡತೊಡಗುತ್ತಾರೆ. ಜ್ಞಾನವೂ ಇಲ್ಲ, ಯೋಗವೂ ಇಲ್ಲ, ಎರಡರಿಂದಲೂ ವಂಚಿತರಾಗಿ ಬಿಡುತ್ತಾರೆ ಆದ್ದರಿಂದ ಧ್ಯಾನದಲ್ಲಿ ಹೋಗುವ ಅವಶ್ಯಕತೆಯಿಲ್ಲ. ಇದಂತೂ ಕೇವಲ ಭೋಗವನ್ನು ಇಡಲಾಗುತ್ತದೆ. ನೀವು ಬ್ರಾಹ್ಮಣರು ಅಲ್ಲಿಗೆ ಹೋಗುತ್ತೀರಿ, ಅಲ್ಲಿ (ಸೂಕ್ಷ್ಮವತನ) ದೇವತೆಗಳು ಮತ್ತು ಬ್ರಾಹ್ಮಣರ ಸಭೆಯು ಸೇರುತ್ತದೆ, ನೀವಿಲ್ಲಿ ತಂದೆಯ ಮನೆಯಲ್ಲಿ ಕುಳಿತಿದ್ದೀರಿ ಮತ್ತೆ ನಿಮ್ಮನ್ನು ವಿಷ್ಣುಪುರಿಗೆ ಹೋಗುವುದಕ್ಕಾಗಿ ಯೋಗ್ಯರನ್ನಾಗಿ ಮಾಡಲಾಗುತ್ತದೆ. ಕನ್ಯೆಗೆ ವಿವಾಹವಾಗುವಾಗ ಅವರಿಗೆ ಎಲ್ಲವನ್ನೂ ತಿಳಿಸಲಾಗುತ್ತದೆ - ಮಾವನ ಮನೆಯಲ್ಲಿ ಹೇಗೆ ನಡೆಯಬೇಕು, ಎಲ್ಲರೊಂದಿಗೆ ಪ್ರೀತಿಯಿಂದ ನಡೆಯಬೇಕು, ಜಗಳ-ಕಲಹ ಮಾಡಬಾರದು.... ಎಂದು. ಇಲ್ಲಿಯೂ ಹಾಗೆಯೇ ತಂದೆಯು ಹೇಳುತ್ತಾರೆ - ಮಕ್ಕಳೇ, ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ, ಸ್ವರ್ಗದಲ್ಲಿ ಈ ಜಗಳ-ಕಲಹ ಏನೂ ಇರುವುದಿಲ್ಲ. ನೀವೀಗ ಮಾವನ ಮನೆಯಾದ ವಿಷ್ಣು ಪುರಿಗೆ ಹೋಗುತ್ತೀರಿ. ಅಲ್ಲಿ ಮಹಾನ್ ವೈಷ್ಣವರಿರುತ್ತಾರೆ. ಸೃಷ್ಟಿಯಲ್ಲಿ ಅವರಂತಹ ವೈಷ್ಣವರು ಮತ್ತ್ಯಾರೂ ಇರುವುದಿಲ್ಲ. ವೈಷ್ಣವ ದೇವತೆಗಳು ವಿಕಾರದಲ್ಲಿ ಹೋಗುವುದಿಲ್ಲ. ವಿಕಾರವೂ ಸಹ ಹಿಂಸೆಯಾಗಿದೆ. ಅಹಿಂಸಾ ಪರಮೋ ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ - ನಾವು ತಂದೆಯ ಮನೆಯಲ್ಲಿ ಕುಳಿತಿದ್ದೇವೆ, ಈಗ ವಿಷ್ಣು ಪುರಿಯಲ್ಲಿ ಹೋಗಬೇಕಾಗಿದೆ. ನಿಮಗೆ ತಿಳಿದಿದೆ, ಅಲ್ಲಿ ಬಹಳ ಸುಖವಿರುತ್ತದೆ. ವಿವಾಹಕ್ಕೆ ಮೊದಲು ಕನ್ಯೆಯು ಹರಿದಿರುವ ವಸ್ತ್ರಗಳನ್ನು ಧರಿಸಿರುತ್ತಾಳೆ, ಅದಕ್ಕೆ ವನವಾಸವೆಂದು ಹೇಳಲಾಗುತ್ತದೆ. ಈಗ ನಿಮ್ಮ ಬಳಿಯೂ ಏನಿದೆ? ಏನೂ ಇಲ್ಲ. ಇಲ್ಲಿನದೆಲ್ಲವೂ ಕಲ್ಲು-ಚೂರುಗಳಾಗಿದೆ. ಇಲ್ಲಿ ನೀವು ಯಾವುದೇ ಆಭರಣ ಇತ್ಯಾದಿಗಳನ್ನು ಧರಿಸುವ ಅವಶ್ಯಕತೆಯಿಲ್ಲ ಅದರೆ ಗೃಹಸ್ಥ ವ್ಯವಹಾರದಲ್ಲಿ ಇರುತ್ತೀರಿ, ಆದ್ದರಿಂದ ಮದುವೆ-ಮುಂಜಿಗಳಿಗೆ ಹೋಗಬೇಕಾಗುತ್ತದೆ ಅಂದಾಗ ಒಡವೆ ಇತ್ಯಾದಿಗಳನ್ನು ಧರಿಸಿ, ಅದನ್ನು ನಿರಾಕರಿಸುವುದಿಲ್ಲ. ಇಲ್ಲದಿದ್ದರೆ ಇವರು ವಿಧವೆಯಂತಿದ್ದಾರೆ, ಆಭರಣಗಳನ್ನು ಧರಿಸುವುದಿಲ್ಲವೆಂದು ಮಾತನಾಡುತ್ತಾರೆ, ಕೆಟ್ಟ ಹೆಸರು ಬರುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಹೆಸರಿಗೆ ಕಳಂಕ ತರಬಾರದು. ಏನಾದರೂ ಧರಿಸಿ ಆದರೆ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ಭಲೆ ಎಲ್ಲಿಯಾದರೂ ಹೋಗಿರಿ ಆದರೆ ಈ ಮಂತ್ರವನ್ನು ನೆನಪಿಟ್ಟುಕೊಳ್ಳಿರಿ. ನಾವು ನೆನಪಿನಲ್ಲಿರುತ್ತೇವೆಯೇ ಎಂದು ಪರೀಕ್ಷಿಸಿಕೊಳ್ಳಿ. ನಾವು ತಂದೆಯ ಆದೇಶ ಅನುಸಾರ ಅಲ್ಲಿಗೆ ಹೋಗುತ್ತೇವೆ ಎಂದು ನೆನಪಿರಲಿ. ಅವರ ಜೊತೆಯೂ ಸಂಬಂಧವನ್ನು ನಿಭಾಯಿಸಬೇಕಾಗಿದೆ ಆದರೆ ಕೈ ಕೆಲಸ ಮಾಡುತ್ತಿರಲಿ ಆದರೆ ಬುದ್ಧಿಯು ತಂದೆಯನ್ನು ನೆನಪು ಮಾಡಲಿ ಆಗ ಇವರು ಶಕ್ತಿಶಾಲಿಗಳೆಂದು ತಿಳಿಯುತ್ತಾರೆ. ಒಡವೆ ಇತ್ಯಾದಿಗಳನ್ನು ಭಲೆ ಧರಿಸಿ, ವಿವಾಹ ಮೊದಲಾದವುಗಳಿಗೆ ಹೋಗಿರಿ, ಎಲ್ಲರೊಂದಿಗೆ ಇರಿ ಆದರೆ ಮಹಾವೀರರಾಗಿ ಇರಿ. ಸನ್ಯಾಸಿಗಳ ಬಗ್ಗೆಯೂ ತೋರಿಸುತ್ತಾರಲ್ಲವೆ - ಗುರುವು ವೇಶ್ಯೆಯ ಬಳಿ ಕಳುಹಿಸಿದರು, ಸರ್ಪದ ಬಳಿ ಕಳುಹಿಸಿಕೊಟ್ಟರು...... ಯಾರು ಸಾಹಸದಿಂದ ಉತ್ತೀರ್ಣರಾಗಿ ತೋರಿಸುವರೋ ಅವರಿಗೆ ಮಹಾವೀರರೆಂದು ಹೇಳಲಾಗುತ್ತದೆ. ತಂದೆಯ ನೆನಪಿನಲ್ಲಿದ್ದಾಗ ಕರ್ಮೇಂದ್ರಿಯಗಳಿಂದ ಯಾವುದೇ ಚಂಚಲತೆಯಾಗುವುದಿಲ್ಲ, ತಂದೆಯನ್ನು ಮರೆತರೆ ಕರ್ಮೇಂದ್ರಿಯಗಳು ಚಂಚಲವಾಗುವುದು. ನೀವು ವಿಶ್ವದ ಮಾಲೀಕರಾಗುತ್ತೀರಿ. ಇದು ಕಡಿಮೆ ಮಾತೇನು! ಸನ್ಯಾಸಿಗಳು ಈ ಮಾತುಗಳನ್ನು ಸ್ವಲ್ಪವೂ ಅರಿತುಕೊಂಡಿಲ್ಲ. ಭಲೆ ಶಾಸ್ತ್ರಗಳಲ್ಲಿ ಕೆಲವು ಮಾತುಗಳಿವೆ ಆದರೆ ಖಂಡನೆ ಮಾಡಿ ಬಿಟ್ಟಿದ್ದಾರೆ. ಭಗವಾನುವಾಚ - ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಎಲ್ಲಿಯವರೆಗೂ ಜೀವಿಸಿರುತ್ತೀರೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಾ ಇರಿ, ಕೇಳುತ್ತಾ ಇರಿ. ರಾಜಧಾನಿಯು ಸ್ಥಾಪನೆಯಾಗುವುದು, ಮಕ್ಕಳಿಗೆ ಪದೇ-ಪದೇ ಶಿಕ್ಷಣ ಕೊಡಲಾಗುತ್ತದೆ - ಒಬ್ಬ ತಂದೆಯನ್ನು ನೆನಪು ಮಾಡಿರಿ, ದೈವೀ ಲಕ್ಷಣಗಳನ್ನು ಕಲಿಯಿರಿ, ಯಾವುದೇ ವಿಕರ್ಮವಾಗಬಾರದು. ಇದಂತೂ ಅಸುರರ ಕೆಲಸವಾಗಿದೆ. ನೀವೀಗ ದೇವತೆಗಳಾಗುತ್ತೀರಿ ಅಂದರೆ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡದು ಕಾಮ ವಿಕಾರದ ಮುಳ್ಳಾಗಿದೆ. ಇದು ಹವ್ಯಾಸವಾಗಿದ್ದರೆ ಪದೇ-ಪದೇ ಬೀಳುತ್ತಾರೆ. ಮಾಯೆಯು ಪೆಟ್ಟನ್ನು ಕೊಟ್ಟು ಬೀಳಿಸಿ ಬಿಡುತ್ತದೆ ಆದ್ದರಿಂದಲೇ ಗಾಯನವಿದೆ, ಆಶ್ಚರ್ಯವೆನಿಸುವಂತೆ ಕೇಳಿ ಅನ್ಯರಿಗೂ ಹೇಳಿ ಮತ್ತೆ ಮಾಯೆಗೆ ವಶವಾಗಿ ಹೊರಟು ಹೋಗುವರು.... ನೀವೀಗ ಒಬ್ಬ ತಂದೆಯ ಮಕ್ಕಳಾಗಿದ್ದೀರಿ. ಇದೆಲ್ಲವೂ ಈಶ್ವರನೇ ಕೊಟ್ಟಿದ್ದಾರೆಂದು ಹೇಳುತ್ತೀರಿ ಆದ್ದರಿಂದ ನೀವು ಟ್ರಸ್ಟಿಯಾಗಿ ಬಿಡುತ್ತೀರಿ - ಇದೆಲ್ಲವೂ ತಂದೆಯದಾಗಿದೆ, ನಾವು ಅವರ ಶ್ರೀಮತದಂತೆ ನಡೆಯಬೇಕಾಗಿದೆ. ತಂದೆಯೂ ಸಹ ನೋಡುತ್ತಾರೆ - ನನಗೆ ಎಲ್ಲವನ್ನೂ ಅರ್ಪಣೆ ಮಾಡಿದ ಮೇಲೆ ಹೇಗೆ ನನ್ನ ಶ್ರೀಮತದನುಸಾರ ನಡೆಯುತ್ತಾರೆ? ಯಾವುದೇ ಉಲ್ಟಾ-ಸುಲ್ಟಾ ಖರ್ಚು ಮಾಡಿ ಪಾಪಾತ್ಮರಿಗೆ ಕೊಡುತ್ತಿಲ್ಲವೆ? ಆದಿಯಲ್ಲಿ ಈ ಬ್ರಹ್ಮಾರವರೂ ಸಹ ಟ್ರಸ್ಟಿಯಾಗಿ ತೋರಿಸಿದರಲ್ಲವೆ, ಎಲ್ಲವನ್ನೂ ಈಶ್ವರನಿಗೆ ಅರ್ಪಣೆ ಮಾಡಿ ಸ್ವಯಂ ಟ್ರಸ್ಟಿಯಾಗಿ ಬಿಟ್ಟರು. ಯಾರಿಗೆ ಏನೂ ಕೊಡಲಿಲ್ಲ. ಈಶ್ವರಾರ್ಪಣೆ ಮಾಡಿದೆವು ಅಂದಮೇಲೆ ಈಶ್ವರನ ಸೇವೆಯಲ್ಲಿಯೇ ತೊಡಗಿಸಬೇಕಾಗಿದೆ. ಶರೀರ ನಿರ್ವಹಣೆಯೂ ಸಹ ಆಗುತ್ತಿತ್ತು ಅಲ್ಲವೆ. ಏನೆಲ್ಲವೂ ಇತ್ತೋ ಅದೆಲ್ಲವನ್ನೂ ಸೇವೆಯಲ್ಲಿ ತೊಡಗಿಸಿದರು. ಇವರನ್ನು ನೋಡಿ ಅನ್ಯರೂ ಅದೇರೀತಿ ಮಾಡಿದರು. ಭಟ್ಟಿಯಾಯಿತು, ಭಟ್ಟಿಯಾಗದಿದ್ದರೆ ಇಷ್ಟೊಂದು ಮಂದಿ ಮಕ್ಕಳು ಸೇವೆಗಾಗಿ ಎಲ್ಲಿ ಬುದ್ಧಿವಂತರಾಗುತ್ತಿದ್ದರು! ಪಾಕೀಸ್ತಾನದಲ್ಲಿಯೂ ಕಲಿತರು ಮತ್ತು ಇಲ್ಲಿಗೆ ಬಂದು ಕಲಿತರು. ಯಾವಾಗ ಅನ್ಯರಿಗೆ ತಿಳಿಸಲು ಯೋಗ್ಯರಾದರೋ ಆಗ ಸೇವೆಗಾಗಿ ಹೊರಟರು. ಈಗಂತೂ ನೋಡಿ ಎಷ್ಟೊಂದು ಪ್ರದರ್ಶನಿಗಳನ್ನು ಮಾಡುತ್ತಾ ಇರುತ್ತೀರಿ, ದೊಡ್ಡ-ದೊಡ್ಡವರಿಗೆ ನಿಮಂತ್ರಣ ಕೊಡುತ್ತೀರಿ. ಈ ಜ್ಞಾನ ಯಜ್ಞದಲ್ಲಿ ಅನೇಕ ಪ್ರಕಾರದ ವಿಘ್ನಗಳೂ ಬರುತ್ತವೆ, ವಿಘ್ನಗಳಿಗೆ ಹೆದರಬಾರದು. ಅಬಲೆಯರ ಮೇಲೆ ಎಷ್ಟೊಂದು ಅತ್ಯಾಚಾರಗಳಾಗುತ್ತವೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯೋಗ ಬಲದಲ್ಲಿದ್ದು ಅವರಿಗೆ ತಿಳಿಸಿರಿ, ಭಗವಂತ ತಂದೆಯ ಮಕ್ಕಳಾಗಿಯೂ ಮತ್ತೆ ತಂದೆಯನ್ನು ಮರೆತು ಹೋಗುತ್ತೀರಿ, ಮಾಯೆಗೆ ವಶವಾಗಿ ಬಿಡುತ್ತೀರಿ. ಇದೂ ಸಹ ಸೋಲು-ಗೆಲುವಿನ ಕುಸ್ತಿಯಾಗಿದೆ ಆದರೆ ಇದು ಮಲ್ಲ ಯುದ್ಧದಂತಿದೆ. ಮಾಯೆಯೂ ಪೆಟ್ಟು ಕೊಡುತ್ತದೆ ಆಗ ಮೂರ್ಚಿತರಾಗುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಾಯೆಗೆ ಎಂದೂ ಸೋಲಬೇಡಿರಿ, ಪವಿತ್ರರಾಗಿರಿ ಆಗ ವಿಶ್ವದ ಮಾಲೀಕರಾಗುತ್ತೀರಿ. ಎಷ್ಟು ದೊಡ್ಡ ಸಂಪಾದನೆಯಿದೆ. ಒಂದುವೇಳೆ ಪೂರ್ಣ ಪುರುಷಾರ್ಥ ಮಾಡದಿದ್ದರೆ ಹೋಗಿ ದಾಸ-ದಾಸಿಯರಾಗುತ್ತೀರಿ, ರಾಜಧಾನಿಯೆಲ್ಲವೂ ಇಲ್ಲಿಯೇ ಸ್ಥಾಪನೆಯಾಗುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಎಲ್ಲಿಯವರೆಗೆ ಜೀವಿಸಬೇಕಾಗಿದೆಯೋ ಅಲ್ಲಿಯವರೆಗೆ ಜ್ಞಾನಾಮೃತವನ್ನು ಕುಡಿಯುತ್ತಿರಬೇಕಾಗಿದೆ. ಮಹಾವೀರರಾಗಿ ಮಾಯೆಯ ಯುದ್ಧದಲ್ಲಿ ವಿಜಯಿಗಳಾಗಬೇಕಾಗಿದೆ. ಎಲ್ಲರ ಜೊತೆ ಸಂಬಂಧ ನಿಭಾಯಿಸುತ್ತಾ ಬುದ್ಧಿಯೋಗವು ಒಬ್ಬ ತಂದೆಯಲ್ಲಿರಬೇಕಾಗಿದೆ. |
2. ವಿಘ್ನಗಳಿಗೆ ಹೆದರಬಾರದು. ಸೇವೆಯಲ್ಲಿ ತಮ್ಮದೆಲ್ಲವನ್ನೂ ಸಫಲ ಮಾಡಬೇಕಾಗಿದೆ. ಈಶ್ವರಾರ್ಪಣೆ ಮಾಡಿ ಟ್ರಸ್ಟಿಯಾಗಿರಬೇಕಾಗಿದೆ. ಉಲ್ಟಾ-ಸುಲ್ಟಾ ಕಾರ್ಯದಲ್ಲಿ ಹಣವನ್ನು ತೊಡಗಿಸಬಾರದು. |
Subsets and Splits
No community queries yet
The top public SQL queries from the community will appear here once available.