text
stringlengths 0
61.5k
|
---|
ಬ್ರಹ್ಮಾ ತಂದೆಯ ಒಂದು ಆತ್ಮಿಕ ವಾರ್ತಾಲಾಪವನ್ನು ಹೇಳುತ್ತೇವೆ. ಬ್ರಹ್ಮಾ ತಂದೆ ಶಿವ ತಂದೆಯೊಂದಿಗೆ ಹೇಳುತ್ತಾರೆ- ನೀವು ಮಕ್ಕಳಿಂದ ದಿನಾಂಕವನ್ನು ನಿಗದಿ ಮಾಡಿಸಿ, , ನಾನು ಎಲ್ಲಿಯವರೆಗೆ ಪ್ರತಿಕ್ಷಿಸಲಿ? ಈ ದಿನಾಂಕವನ್ನು ನಿಗದಿ ಮಾಡಿಸಿ. ಆಗ ಶಿವ ತಂದೆ ಏನು ಹೇಳುವರು? ಮುಗುಳ್ನಗುತ್ತಾರೆ. ಬಾಪ್ದಾದಾರವರು ಆದರೂ ಸಹ ಹೇಳುತ್ತಾರೆ ಮಕ್ಕಳೇ ದಿನಾಂಕವನ್ನು ನಿಗದಿ ಮಾಡುತ್ತಾರೆ, ಬಾಪ್ದಾದಾರವರು ಮಾಡುವುದಿಲ್ಲ. ಬ್ರಹ್ಮಾ ಬಾಬಾರರವರು ಬಹಳ ನೆನಪು ಮಾಡುತ್ತಾರೆ. ಎಂದ ಮೇಲೆ ದಿನಾಂಕವನ್ನು ನಿಗದಿ ಮಾಡುವಿರಾ? |
ಹೊಸ ವರ್ಷದಲ್ಲಿ ಈ ರೀತಿ ಸಮಾನರಾಗುವ ದೃಢ ಸಂಕಲ್ಪ ಮಾಡಿ. ಲಕ್ಷ್ಯವನ್ನು ಇಡಿ ನಾವು ಫರಿಶ್ತೆ ಆಗಲೇಬೇಕು. ಈಗ ಹಳೆಯ ಮಾತನ್ನು ಸಮಾಪ್ತಿ ಮಾಡಿ. ತಮ್ಮ ಅನಾದಿ ಹಾಗೂ ಆದಿ ಸಂಸ್ಕಾರವನ್ನು ಇಮರ್ಜ್ ಮಾಡಿ. ಸ್ಮೃತಿಯಲ್ಲಿಟ್ಟುಕೊಳ್ಳಿ. ನಡೆದಾಡುತ್ತ ಓಡಾಡುತ್ತಾ ನಾನು ತಂದೆಯ ಸಮಾನ ಫರಿಶ್ತೆಯಾಗಿದ್ದೇನೆ, ನನ್ನ ಹಳೆಯ ಸಂಸ್ಕಾರಗಳೊಂದಿಗೆ, ಹಳೆಯ ಮಾತುಗಳೊಂದಿಗೆ ಯಾವುದೇ ಸಂಬಂಧವಿಲ್ಲ. ತಿಳಿಯಿತೇ? ಈ ಪರಿವರ್ತನೆಯ ಸಂಕಲ್ಪಕ್ಕೆ ನೀರು ಹಾಕುತ್ತಾ ಇರಿ. ಹೇಗೆ ಬೀಜಕ್ಕೆ ನೀರು ಬೇಕಾಗುತ್ತದೆ, ಬೆಳಕು ಬೇಕಾಗುತ್ತದೆ ಆಗಲೇ ಫಲ ಸಿಗುತ್ತದೆ. ಎಂದ ಮೇಲೆ ಈ ಸಂಕಲ್ಪಕ್ಕೆ, ಬೀಜಕ್ಕೆ ಸ್ಮೃತಿಯ ನೀರನ್ನು ಹಾಗೂ ಬೆಳಕನ್ನು ಕೊಡುತ್ತಾ ಇರಿ. ಮತ್ತೆ ಮತ್ತೆ ರಿವೈಸ್ ಮಾಡಿ- ಬಾಪ್ದಾದಾರವರೊಂದಿಗೆ ನನ್ನ ಪ್ರತಿಜ್ಞೆ ಏನಾಗಿದೆ? ಒಳ್ಳೆಯದು. |
ನಾಲ್ಕಾರು ಕಡೆಯ ಮಹಾನ್ ಆತ್ಮಗಳಿಗೆ ಸದಾ ಪರಿವರ್ತನೆಯ ಶಕ್ತಿಯನ್ನು ಪ್ರತಿ ಸಮಯ ಕಾರ್ಯದಲ್ಲಿ ತೊಡಗಿಸುವಂತಹ, ವಿಶ್ವ ಪರಿವರ್ತಕ ಆತ್ಮಗಳಿಗೆ ಸದಾ ದೃಢ ನಿಶ್ಚಯದಿಂದ ಪ್ರತ್ಯಕ್ಷ ಸ್ವರೂಪವನ್ನು ತೋರಿಸುವಂತಹ ಬ್ರಾಹ್ಮಣ ಸೋ ಫರಿಶ್ತಾ ಆತ್ಮಗಳಿಗೆ ಸದಾ ಒಬ್ಬ ತಂದ ಬೇರೊಬ್ಬರಿಲ್ಲ, ತಂದೆಯ ಸಮಾನರಾಗುವಂತಹವರಿಗೆ ಬಾಪ್ದಾದಾರವರ ಪ್ರೀತಿಯ ರಿಟರ್ನ್ ಕೊಡುವಂತಹ ಮಹಾವೀರ ಆತ್ಮಗಳಿಗೆ, ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ನಮಸ್ತೆ. |
ನಾಲ್ಕಾರು ಕಡೆಯ ಮಕ್ಕಳಿಗೆ ಹೊಸ ವರ್ಷ, ಹೊಸ ಯುಗದ, ಹೊಸ ಜೀವನದ ಶುಭಾಷಯಗಳು, ಶುಭಾಷಯಗಳು, ಶುಭಾಷಯಗಳು. ಈ ಹೊಸ ವರ್ಷದಲ್ಲಿ ಬ್ರಹ್ಮಾ ತಂದೆಯ ಮೂಲಕ ಉಚ್ಚರಿತ ಮಹಾ ವಾಕ್ಯಗಳನ್ನು ಸದಾ ನೆನಪಿಟ್ಟುಕೊಳ್ಳಿ- ನಿರಾಕರಿ, ನಿರಹಂಕಾರಿ ಜೊತೆಯಲ್ಲಿ ನವ ನಿರ್ಮಾಣ ದಾರಿ. ಸದಾ ನಿರ್ಮಾಣ ಹಾಗೂ ನಿರ್ಮಾನದ ಕರ್ತವ್ಯದ ಸಮತೋಲನ ಇಟ್ಟುಕೊಳ್ಳುತ್ತಾ ಹಾರುತ್ತಾ ಇರಿ. ಈ ವರ್ಷದಲ್ಲಿ ವಿಶೇಷವಾಗಿ ಸ್ವ ಪರಿವರ್ತನೆಯ ವಿಶೇಷತೆಯನ್ನು ಸಮ್ಮುಖದಲ್ಲಿ ಇಟ್ಟುಕೊಳ್ಳುತ್ತಾ ಹಾರುತ್ತಾ ಹಾಗೂ ಹಾರಿಸುತ್ತಾ ಇರಿ. ಸದಾ ಬ್ರಹ್ಮಾ ತಂದೆಯನ್ನು ಪ್ರತಿಯೊಂದು ಹೆಜ್ಜೆಯಲ್ಲಿ ಫಾಲೋ ಫಾದರ್ (ತಂದೆಯನ್ನು ಅನುಕರಣೆ) ಮಾಡುತ್ತಾ ಇರಿ. ಶುಭಾಷಯಗಳು, ಶುಭಾಷಯಗಳು. ಪದಮದಷ್ಟು ಶುಭಾಷಯಗಳು. ಒಳ್ಳೆಯದು. |
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಗೀತೆಯನ್ನು ಕೇಳಿದಿರಿ ಮತ್ತು ಯಾರು ಯೋಗಯುಕ್ತ ಸೇವಾಧಾರಿ ಮಕ್ಕಳಿದ್ದಾರೆಯೋ ಅವರು ಈ ಅರ್ಥವನ್ನು ಕೂಡಲೇ ತಿಳಿದುಕೊಳ್ಳುತ್ತಾರೆ - ನಾವು ರಾತ್ರಿಯ ಪ್ರಯಾಣಿಕರು ಅರ್ಥಾತ್ ಬ್ರಾಹ್ಮಣರಿಗೆ ಈ ರಾತ್ರಿಯು ಮುಕ್ತಾಯವಾಯಿತು, ಭಕ್ತಿಮಾರ್ಗಕ್ಕೆ ರಾತ್ರಿಯೆಂದು ಹೇಳಲಾಗುತ್ತದೆ. ರಾತ್ರಿಯ ಅರ್ಧಕಲ್ಪವು ಈಗ ಮುಗಿಯುತ್ತದೆ. ನಿತ್ಯವೂ ದಿನ ಮತ್ತು ರಾತ್ರಿ ಇರುತ್ತದೆ, ಆದರೆ ನೀವು ಬ್ರಾಹ್ಮಣರದು ಅರ್ಧ ಕಲ್ಪ ದಿನ ಮತ್ತು ಅರ್ಧ ಕಲ್ಪ ರಾತ್ರಿಯಿರುತ್ತದೆ. ಈ ಸಮಯದಲ್ಲಿ ತಂದೆಯು ಬಂದಾಗ ಅಂಧಕಾರವಿದೆ. ಈಗ ಮುಂಜಾನೆಯಾಗುತ್ತಿದೆ, ಮಕ್ಕಳಿಗೆ ತಿಳಿದಿದೆ, ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೆನಪಿನ ಯಾತ್ರೆಯಲ್ಲಿ ಸುಸ್ತಾಗಬೇಡಿ. ಹೇಗೆ ದೈಹಿಕ ಯಾತ್ರೆಯಿರುತ್ತದೆ, ಮೊದಲು ಪಾದಯಾತ್ರೆಯಲ್ಲಿಯೇ ಹೋಗುತ್ತಿದ್ದರು, ನಿಧಾನ-ನಿಧಾನವಾಗಿ ಮಧ್ಯ ಮಧ್ಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅವರಿಗೆ ನಾವು ಇಂತಿಂತಹ ಸ್ಥಳಗಳಲ್ಲಿ ವಿಶ್ರಾಂತಿ ಪಡೆಯಬೇಕೆಂದು ತಿಳಿದಿರುತ್ತದೆ. ಮೊದಲು ಬಹಳ ಶ್ರದ್ಧೆಯಿಂದ ಪಾದಯಾತ್ರೆ ಮಾಡುತ್ತಿದ್ದರು, ಅದರಲ್ಲಿ ಬಹಳ ಪರಿಶ್ರಮವಿದೆ. ಈಗ ಇದಂತೂ ಬಹಳ ಸಹಜವಾಗಿದೆ, ಇದಕ್ಕೆ ಸಹಜ ನೆನಪು ಅಥವಾ ಯೋಗವೆಂದು ಹೇಳಲಾಗುತ್ತದೆ. ಕೇವಲ ತಂದೆಯನ್ನು ನೆನಪು ಮಾಡಬೇಕು, ಸುಸ್ತಾಗುವ ಅರ್ಥವೇ ಆಗಿದೆ - ದೇಹಾಭಿಮಾನಿ ಆಗುವುದು. ಹಾ! ಇದರಲ್ಲಿ ಯಾವುದೇ ಸಂಶಯವಿಲ್ಲ, ಮಾಯೆಯ ವಿಘ್ನಗಳು ಬರುತ್ತವೆ ಆದರೆ ಇದರಲ್ಲಿ ಸುಸ್ತಾಗಬಾರದು. ಸುಸ್ತಾದರೆ ದೇಹಾಭಿಮಾನವು ಬಂದು ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಶರೀರ ನಿರ್ವಹಣೆಗಾಗಿ ಕಾರ್ಯವನ್ನಂತೂ ಮಾಡಬೇಕಾಗಿದೆ, ಅದಕ್ಕಾಗಿ ಅನುಮತಿಯಿದೆ. 8 ಗಂಟೆಗಳು ಶರೀರ ನಿರ್ವಹಣೆಗಾಗಿ, 8 ಗಂಟೆಯ ಸಮಯ ವಿಶ್ರಾಂತಿಗಾಗಿ ಇನ್ನುಳಿದ 8 ಗಂಟೆಗಳ ಸಮಯವನ್ನು ಇದರಲ್ಲಿ ಕೊಡಿ. ಈಗ ಇನ್ನೂ ಪೂರ್ಣ 8 ಗಂಟೆಗಳ ಸಮಯವನ್ನು ಯಾರೂ ಕೊಡುತ್ತಿಲ್ಲ, ಅಂತ್ಯದಲ್ಲಿ 8 ಗಂಟೆಯವರೆಗೆ ತಲುಪುತ್ತೀರಿ ಆದ್ದರಿಂದ ಚಾರ್ಟನ್ನು ಹೆಚ್ಚಿಸಿಕೊಳ್ಳುತ್ತಾ ಇರಿ. ಇಲ್ಲಿ ಬಂದು ಕುಳಿತುಕೊಂಡಾಗ ನೆನಪು ತರಿಸಲಾಗುತ್ತದೆ. ಇದಕ್ಕೆ ನೀವು ಧ್ಯಾನವೆಂದು ಹೇಳುತ್ತೀರಿ. ಬಂದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳುತ್ತೀರಿ ಅಂದರೆ ಇದರ ಅರ್ಥವು ಕೇವಲ ಇಲ್ಲಿಗೆ ಬಂದು ನೆನಪಿನಲ್ಲಿ ಕುಳಿತುಕೊಳ್ಳಬೇಕೆಂದಲ್ಲ. ಇಂತಹವರು ಅನೇಕರಿದ್ದಾರೆ, 5-10 ನಿಮಿಷ ಯೋಗ ಮಾಡಿ ಹೋಗೋಣವೆಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ, ಕಾರ್ಯ ವ್ಯವಹಾರಗಳನ್ನು ಮಾಡುತ್ತಾ ಎಲ್ಲಿಗೇ ಬಂದರೂ ಹೋದರೂ ಸಹ ನೀವು ಯೋಗದಲ್ಲಿರಿ. ಎಲ್ಲಿಯಾದರೂ ಗಂಗಾ ಸ್ನಾನ ಮಾಡಲು ಹೋಗುತ್ತಾರೆಂದರೆ ರಾಮ, ರಾಮ ಎಂದು ಜಪಿಸುತ್ತಾರಲ್ಲವೆ. ಇಲ್ಲಿ ನೀವು ಏನನ್ನೂ ಜಪಿಸುವಂತಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಈ ತಂದೆಯು ಮಕ್ಕಳೊಂದಿಗೇ ಮಾತನಾಡುತ್ತಿದ್ದಾರೆ. ನಿಮ್ಮ ಕಲ್ಯಾಣವೇ ನೆನಪಿನ ಯಾತ್ರೆಯಾಗಿದೆ. ಇದರಲ್ಲಿ ಸುಸ್ತಾಗಬಾರದು. ಬಹಳ ಬಿರುಗಾಳಿಗಳು ಬರುತ್ತವೆ, ಬಿರುಗಾಳಿಯೆಂದರೆ ಯಾವುದೇ ಮಣ್ಣು-ಧೂಳಿನದಲ್ಲ. ಮಾಯೆಯ ಬಿರುಗಾಳಿಗಳು ಬರುವುದರಿಂದ ಬುದ್ಧಿಯ ಯೋಗವೇ ತುಂಡಾಗಿ ಬಿಡುತ್ತದೆ. ಮತ್ತೆ ದೇಹಾಭಿಮಾನದಲ್ಲಿ ಬರುವುದರಿಂದ ಉದ್ಯೋಗ-ವ್ಯವಹಾರ ಮಕ್ಕಳು ನೆನಪಿಗೆ ಬಂದು ಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುವುದೇನೆಂದರೆ ಈ ಉದ್ಯೋಗ-ವ್ಯವಹಾರ ಎಲ್ಲವೂ ಸಮಾಪ್ತಿಯಾಗಲಿದೆ. ನಿಮ್ಮ ಮಕ್ಕಳು ವಾರಸುಧಾರರು ಆಗುವುದಿಲ್ಲ, ಎಲ್ಲರೂ ಸಮಾಪ್ತಿಯಾಗುವರು. ಈಗಂತೂ ವಾರಸುಧಾರ ಬೇಹದ್ದಿನ ತಂದೆಯಿದ್ದಾರೆ. ಹದ್ದಿನ ಆಸ್ತಿಯೆಲ್ಲವೂ ಸಮಾಪ್ತಿಯಾಗುವುದು. ಮಕ್ಕಳು ದೊಡ್ಡವರಾಗುವರು, ವಿವಾಹವಾಗುವುದು, ಇದಾಗುವುದು, ಅದಾಗುವುದು.. ಎಂದು ಸಾಹುಕಾರರು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಈಗ ಅಷ್ಟೊಂದು ಸಮಯವಿಲ್ಲ ಆದ್ದರಿಂದ ಪ್ರಪಂಚದಿಂದ ಮೋಹವನ್ನು ಸಂಪೂರ್ಣ ತೆಗೆಯಿರಿ. ಇದಂತೂ ಸ್ಮಶಾನವಾಗಿದೆ. ಉದ್ಯೋಗ-ವ್ಯವಹಾರ ಮಕ್ಕಳು ಮೊದಲಾದವರ ಚಿಂತನೆಯಲ್ಲಿ ಶರೀರ ಬಿಡುತ್ತೀರೆಂದರೆ ತಮಗೆ ನಷ್ಟವನ್ನುಂಟು ಮಾಡಿಕೊಳ್ಳುವಿರಿ. ಶಿವ ತಂದೆಯನ್ನು ನೆನಪು ಮಾಡಿರಿ ಆಗ ಲಾಭವಾಗುವುದು. ದೇಹಾಭಿಮಾನದಲ್ಲಿ ಬರುವ ಕಾರಣ ನಷ್ಟವುಂಟಾಗುತ್ತದೆ, ದೇಹೀ-ಅಭಿಮಾನಿ ಆಗುವುದರಲ್ಲಿ ಲಾಭವಾಗುತ್ತದೆ. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಭವಿಷ್ಯ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತೀರಿ. ನೆನಪು ಮಾಡದಿದ್ದರೆ ಬಹಳ ನಷ್ಟವುಂಟಾಗುವುದು. ಅದೇ ಮತ್ತೆ ಕಲ್ಪ-ಕಲ್ಪಾಂತರವೂ ಆಗುತ್ತಾ ಹೋಗುವುದು. ಇಷ್ಟು ದೊಡ್ಡ ನಷ್ಟದ ಮಾತಾಗಿದೆ ಅಂದಮೇಲೆ ನಾವು ಹೇಗೆ ಪೂರ್ಣ ಆಸ್ತಿಯನ್ನು ಪಡೆಯಬೇಕೆಂಬ ವಿಚಾರ ಮಾಡಿರಿ. ಹೆಚ್ಚು ಹಣದ ಲಾಲಸೆಯು ಇರಬಾರದು, ಅತಿಯಲ್ಲಿ ಹೋಗಬಾರದು. ಯಾರಾದರೂ ದಿವಾಳಿಯಾದರೆ ಬಹಳ ಚಿಂತೆಯಾಗಿ ಬಿಡುತ್ತದೆ. ಶಿವ ತಂದೆಯನ್ನು ಮರೆತು ಹೋಗುತ್ತಾರೆ ನಂತರ ಜ್ಞಾನದಲ್ಲಿ ಬಂದ ಕಾರಣವೇ ದಿವಾಳಿಯಾದೆವು, ರೋಗಿಯಾದೆವು ಎಂದು ದೋಷ ಹಾಕುತ್ತಾರೆ ಆದರೆ ಈ ರೀತಿ ಎಂದೂ ತಿಳಿದುಕೊಳ್ಳಬಾರದು. ಖಾಯಿಲೆ ಇತ್ಯಾದಿಗಳು ಬರುವುದೂ ಸಹ ಕರ್ಮ ಭೋಗವಾಗಿದೆ, ಒಳ್ಳೆಯದೇ ಆಗಿದೆ ಏಕೆಂದರೆ ಇದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಧರ್ಮರಾಜನ ಶಿಕ್ಷೆಗಳಿಗಿಂತಲೂ ಖಾಯಿಲೆಯೇ ಒಳ್ಳೆಯದಲ್ಲವೆ. ಕರ್ಮಭೋ ಗವನ್ನು ಕಳೆಯಬೇಕಾಗಿದೆ, ಇದಂತೂ ಮಹಾರೋಗಿ ಶರೀರವಾಗಿದೆ. ಎಷ್ಟೊಂದು ಸಂಭಾಲನೆ ಮಾಡಬೇಕಾಗುತ್ತದೆ. ನಡೆಯುತ್ತಾ-ನಡೆಯುತ್ತಾ ಇದ್ದಂತೆಯೇ ನಿಂತು ಬಿಡುತ್ತದೆ. ಕೆಲವರಿಗೆ ಹೃದಯಾಘಾತವಾಗುತ್ತದೆ, ಇಂತಹ ಹಳೆಯ ಪ್ರಪಂಚವನ್ನಂತೂ ಬುದ್ಧಿಯಿಂದ ಸಂಪೂರ್ಣ ಬಿಡಬೇಕು. ಹೇಗೆ ತಂದೆಯು ಹೊಸ ಮನೆ ಕಟ್ಟಿಸುತ್ತಿರುವುದನ್ನು ನೋಡಿ ಮಕ್ಕಳಿಗೆ ಹಳೆಯ ಮನೆಯಿಂದ ಬುದ್ಧಿಯೋಗವೇ ತುಂಡಾಗುತ್ತದೆ. ಬೇಗನೆ ಮನೆಯನ್ನು ಕಟ್ಟಿಸಿ ಬಿಡಿ ಎಂದು ಹೇಳುತ್ತಾರೆ. ಹಳೆಯ ಮನೆಯಲ್ಲಿ ಹೆಚ್ಚು ಕಷ್ಟವಿರುತ್ತದೆ. ನೀವೂ ಸಹ ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಬಹಳ ಕೊಳಕಾಗಿದೆ, ನಿಮ್ಮದು ಇದು ಬೇಹದ್ದಿನ ಸನ್ಯಾಸವಾಗಿದೆ, ಅವರು ಕೇವಲ ಗೃಹಸ್ಥದ ಸನ್ಯಾಸ ಮಾಡುತ್ತಾರೆ ಅದಕ್ಕೆ ಕೇವಲ ಹದ್ದಿನ ಸನ್ಯಾಸವೆಂದು ಹೇಳಲಾಗುತ್ತದೆ. ನೀವಂತೂ ವಿಕಾರಗಳ ಸನ್ಯಾಸ ಮಾಡುತ್ತೀರಿ. ದೇಹ ಸಹಿತವಾಗಿ ದೇಹದ ನಿಮ್ಮ ಯಾವುದೆಲ್ಲಾ ಸಂಬಂಧಗಳಿವೆಯೋ ಎಲ್ಲವನ್ನೂ ಮರೆತು ನನ್ನೊಬ್ಬನನ್ನೇ ನೆನಪು ಮಾಡಿ, ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರಿ ಎಲ್ಲವನ್ನೂ ಮರೆತು ಬಿಡಿ ಎಂದು ತಂದೆಯು ತಿಳಿಸುತ್ತಾರೆ. ನಾವು ಸ್ವರ್ಗದ ರಾಜಧಾನಿಗಾಗಿ ಪುರುಷಾರ್ಥ ಮಾಡುತ್ತಿದ್ದೇವೆ ಎಂದು ಈಗ ನಿಮ್ಮ ಬುದ್ಧಿಯು ತಿಳಿದುಕೊಂಡಿದೆ. ಜ್ಞಾನದ ಮೂರನೇ ನೇತ್ರವು ದೊರೆತಿದೆ. ಇದೆಲ್ಲವೂ ಸ್ಮಶಾನವಾಗುವುದು, ಅಂದಮೇಲೆ ಇದರೊಂದಿಗೆ ಪ್ರೀತಿಯು ಬೇಡ. ಈಗಿನ ಕಾಲದಲ್ಲಿ ಮನುಷ್ಯರ ಬಳಿ ಬಹಳ ಹಣವಿರುವ ಕಾರಣ ವಿಕಾರವು ಹೆಚ್ಚಾಗಿ ಬಿಟ್ಟಿದೆ. ಕಾಮ ವಿಕಾರವು ಎಷ್ಟು ತೀಕ್ಷ್ಣವಾಗಿದೆ, ಕಾಮವಿಲ್ಲದೆ ಇರಲು ಸಾಧ್ಯವಿಲ್ಲ. ನಾಲ್ಕೈದು ವರ್ಷಗಳವರೆಗೆ ಪವಿತ್ರವಾಗಿದ್ದು ನಂತರ ಪತ್ರ ಬರೆಯುತ್ತಾರೆ. ಬಾಬಾ, ಇಂದು ಇವರಿಗೆ ಭೂತ ಹಿಡಿಯಿತು, ಮುಖ ಕಪ್ಪು ಮಾಡಿಕೊಂಡರು ಎಂದು. ಎಷ್ಟು ಪೆಟ್ಟು ತಿಂದರು ಒಮ್ಮೆಲೆ 5ನೇ ಅಂತಸ್ತಿನಿಂದ ಕೆಳಗೆ ಬಿದ್ದರು. ಮೊಟ್ಟ ಮೊದಲನೆಯದು ದೇಹಾಭಿಮಾನವಾಗಿದೆ. ಮೇಲಿನಿಂದ ಬಿದ್ದರೆ ಮೂಳೆಯು ಪುಡಿ ಪುಡಿಯಾಗುವುದು. ಮತ್ತೆ ಪುರುಷಾರ್ಥ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಇದು ಎಲ್ಲದಕ್ಕಿಂತ ದೊಡ್ಡ ಪೆಟ್ಟಾಗಿದೆ ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ವಿಕಾರಕ್ಕೇ ಪತಿತತನವೆಂದು ಹೇಳಲಾಗುತ್ತದೆ. ಬಾಬಾ, ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ಭಾರತದಲ್ಲಿಯೇ ಸಂಪೂರ್ಣ ನಿರ್ವಿಕಾರಿಗಳಿದ್ದರಲ್ಲವೆ. ಭಾರತವೇ ನಿರ್ವಿಕಾರಿಯಾಗಿತ್ತು, ಈಗ ಭಾರತವು ವಿಕಾರಿಯಾಗಿದೆ. ಸಂಪೂರ್ಣ ನಿರ್ವಿಕಾರಿಗಳೆಂದು ಸೂರ್ಯವಂಶಿಯರಿಗೆ ಹೇಳುತ್ತಾರೆ. ಭಲೆ ರಾಮ ಚಂದ್ರನ ರಾಜ್ಯದಲ್ಲಿಯೂ ವಿಕಾರದ ಮಾತಿರುವುದಿಲ್ಲ ಆದರೆ ಕಲೆಗಳು ಕಡಿಮೆ ಆಗಿ ಬಿಡುತ್ತವೆ. 1250 ವರ್ಷಗಳು ಕಡಿಮೆ ಆಯಿತೆಂದರೆ ಪ್ರಪಂಚದ ಶಕ್ತಿಯು ಕಡಿಮೆ ಆಯಿತಲ್ಲವೆ. ಆದ್ದರಿಂದ ಅವರನ್ನು ಸತೋಪ್ರಧಾನರಿಂದ ಸತೋ ಎಂದು ಹೇಳಲಾಗುತ್ತದೆ. ನಾವು ಮಮ್ಮಾ-ಬಾಬಾರವರನ್ನು ಫಾಲೋ ಮಾಡಿ ಸೂರ್ಯವಂಶಿ ಮಹಾರಾಜ-ಮಹಾರಾಣಿ ಆಗುತ್ತೇವೆಂದು ನೀವು ಬಯಸುತ್ತೀರಿ. ಇದರಲ್ಲಿ ಕಷ್ಟ ಅಥವಾ ಖರ್ಚಿನ ಮಾತಿಲ್ಲ. ಇದರಲ್ಲಿ ಬಾಯಿಂದ ಏನನ್ನೂ ಹೇಳುವಂತಿಲ್ಲ. ಕೇವಲ ನೆನಪು. ಇದಕ್ಕೆ ಸಹಜ ಯೋಗವೆಂದು ಹೇಳಲಾಗುತ್ತದೆ, ಇದರಲ್ಲಿ ಬಹಳ ಪರಿಶ್ರಮ ಬೇಕು. ತಂದೆಯ ಮುಂದೆ ಎಲ್ಲಾ ಮಹಾರಥಿಗಳಿದ್ದಾರೆ. ಇದರಲ್ಲಿ ಯೋಗ ಪೂರ್ಣವಿರಬೇಕು ಆಗ ಬಾಣವು ನಾಟುವುದು. ಯೋಗಬಲವಾಗಿದೆಯಲ್ಲವೆ. ಯೋಗ ಬಹಳ ಕಡಿಮೆಯಿದೆ, ಯೋಗದಲ್ಲಿ ವಿಘ್ನಗಳೂ ಸಹ ಬಹಳಷ್ಟು ಬೀಳುತ್ತವೆ. ಬೇಹದ್ದಿನ ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಕುಳಿತು ತಿಳಿಸುತ್ತಾರೆ. ತಂದೆಯ ಜೊತೆ ಅಥವಾ ವಿದ್ಯೆಯ ಜೊತೆ ಎಂದೂ ಮುನಿಸಿಕೊಳ್ಳಬಾರದು. ಮುನಿಸಿಕೊಳ್ಳುತ್ತೀರೆಂದರೆ 21 ಜನ್ಮದ ಅದೃಷ್ಟದೊಂದಿಗೆ ಮುನಿಸಿಕೊಳ್ಳುವುದಾಗಿದೆ. ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ಮುನಿಸಿಕೊಳ್ಳುತ್ತಾರೆ. ದೇಹದ ಅಹಂಕಾರದ ನಶೆಯೇರುತ್ತಿರುತ್ತದೆ. ನಾನು ಇಷ್ಟೊಂದು ಮಂದಿಗೆ ತಿಳಿಸಿದೆನು ಎಂಬ ದೇಹದ ಅಹಂಕಾರ ಬರುವುದರಿಂದ ಮತ್ತೆ ಬಿದ್ದು ಬಿಡುತ್ತಾರೆ. ಇದರಲ್ಲಿ ಅಹಂಕಾರ ಬರಬಾರದು. ಶಿವ ತಂದೆಗೆ ಯಾವುದೇ ಅಹಂಕಾರವಿದೆಯೇ? ಎಷ್ಟು ನಿರಹಂಕಾರಿಯಾಗಿದ್ದಾರೆ. ಆದರೂ ಸಹ ಎಷ್ಟು ದೊಡ್ಡ ಅಥಾರಿಟಿಯಿದೆ! ನಾನು ಸಾಧಾರಣ ತನುವಿನಲ್ಲಿ, ಸಾಧಾರಣ ಮನೆಯಲ್ಲಿ ಬರುತ್ತೇನೆಂದು ಹೇಳುತ್ತಾರೆ, ಸಾಹುಕಾರರ ಮನೆಯಲ್ಲೇನಾದರೂ ಬರುತ್ತೇನೆಯೇ? ಈಗ ಮಕ್ಕಳು ಜಾಗೃತರಾಗಬೇಕಾಗಿದೆ. ತಂದೆಯು ಬಹಳ ಒಳ್ಳೆಯ ಯುಕ್ತಿಗಳನ್ನು ತಿಳಿಸಿಕೊಡುತ್ತಾರೆ, ನೀವು ಮಕ್ಕಳದೇ ತಡವಾಗಿದೆ. ಡ್ರಾಮಾನುಸಾರ ನಿಮ್ಮ ಸ್ಥಿತಿಯು ಇನ್ನೂ ಅಷ್ಟು ಶಕ್ತಿಶಾಲಿಯಾಗಿಲ್ಲ. ಮುಂದೆ ಹೋದಂತೆ ಶಕ್ತಿಶಾಲಿ ಆಗುವುದು. ನಾವು ಸರ್ಕಾರಕ್ಕೂ ಇದನ್ನು ತಿಳಿಸಬಹುದಾಗಿದೆ - ಇಷ್ಟು ವರ್ಷಗಳಲ್ಲಿ ಸ್ವರ್ಗದ ಸ್ಥಾಪನೆ ಆಗುವುದು. ಇದನ್ನು ಪತ್ರಿಕೆಗಳಲ್ಲಿ ಓದಿ ಬಂದು ನಿಮ್ಮನ್ನು ಕೇಳುತ್ತಾರೆ. ಕೆಲವೇ ವರ್ಷಗಳಲ್ಲಿ ಸ್ಥಾಪನೆ ಆಗುವುದು ಅಂದಮೇಲೆ ವಿನಾಶವೂ ಖಂಡಿತ ಆಗುವುದು, ಅನೇಕರು ಬರುವರು. ಇಲ್ಲಿನ ಸಂಪತ್ತೆಲ್ಲವೂ ಸ್ವಲ್ಪ ಸಮಯಕ್ಕಾಗಿ ಮಾತ್ರ. ಆದ್ದರಿಂದ ಈ ಆಸ್ತಿಯನ್ನು ನೀವು ಆಸ್ತಿಯ ಲೆಕ್ಕದಲ್ಲಿ ತಿಳಿದುಕೊಳ್ಳುವುದಿಲ್ಲ. ಏಕೆಂದರೆ ನಿಮಗೇ ತಿಳಿದಿದೆ - ಇದೆಲ್ಲವೂ ಇನ್ನು ಕೆಲವೇ ದಿನಗಳು ಮಾತ್ರವೇ ಇರುತ್ತದೆ. ಈ ಮನೆ ಇತ್ಯಾದಿಗಳೆಲ್ಲವೂ ಇರುವುದಕ್ಕಾಗಿ ಕಟ್ಟಿಸಲಾಗಿದೆ ಏಕೆಂದರೆ ಮಧುಬನದಲ್ಲಿ ರಿಫ್ರೆಶ್ ಆಗುವುದಕ್ಕಾಗಿ ಮುಂದೆ ಅನೇಕ ಮಕ್ಕಳು ಬರುತ್ತಾರೆ. ಮುಖ್ಯ ಕೇಂದ್ರವಂತೂ ಮಧುಬನವಾಗಿದೆ, ಇಂದು ನೀವು ಏನು ಮಾಡುತ್ತೀರಿ, ನಾಳೆ ಏನು ಮಾಡುವಿರಿ? ಇಲ್ಲಿ ತಪಸ್ಸು ಮಾಡುತ್ತೀರಿ ನಂತರ ದೆಹಲಿ ಬೃಂದಾವನದಲ್ಲಿ ಹೋಗಿ ರಾಜ್ಯಭಾರ ಮಾಡುತ್ತೀರಿ. ನಮ್ಮ ನೆನಪಾರ್ಥವು ಹೇಗೆ ನಿಂತಿದೆ ಎಂಬುದನ್ನು ಚೆನ್ನಾಗಿ ತೋರಿಸಬೇಕಾಗಿದೆ. ಯಾವ ಕೆಲಸವನ್ನು ನಾವೀಗ ಮಾಡುತ್ತಿದ್ದೇವೆಯೋ ಅದನ್ನು 5000 ವರ್ಷಗಳ ಮೊದಲೂ ಸಹ ಮಾಡಿದ್ದೆವು. ಮೊಟ್ಟ ಮೊದಲು ಶಿವ ತಂದೆಯ ಮಂದಿರವನ್ನು ಕಟ್ಟಿಸುತ್ತಾರೆ. ಬಾಕಿ ದಿಲ್ವಾಡಾ ಮಂದಿರ ಮೊದಲಾದವು ನಂತರದಲ್ಲಿ ಕಟ್ಟಿಸಲ್ಪಟ್ಟಿದೆ. ಬುದ್ಧಿಗೆ ಕೆಲಸ ಕೊಡಬೇಕಾಗಿದೆ. ದಿಲ್ವಾಡಾ ಮಂದಿರದ ಲೆಕ್ಕವನ್ನೂ ಸಹ ತೆಗೆಯಬೇಕಾಗಿದೆ. ಇದು ನಮ್ಮದೇ ನೆನಪಾರ್ಥವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಇದು ಸ್ಥಾಪನೆಯ ನೆನಪಾರ್ಥವಾಗಿದೆ. |
ನೀವು ಮಧುರಾತಿ ಮಧುರ ಮಕ್ಕಳಿಗೆ ಬಹಳ ಖುಷಿಯಿರಬೇಕು. ಸೇವೆಯನ್ನು ವೃದ್ಧಿ ಪಡಿಸುವ ಯುಕ್ತಿಗಳನ್ನು ತೆಗೆಯಬೇಕಾಗಿದೆ. ರಾಮನೂ ಹೋದ ರಾವಣನೂ ಹೋದ.... ಅವರದು ಬಹಳ ಪರಿವಾರವಿದೆ. ರಾವಣನ ಪರಿವಾರವನ್ನು ನೋಡಿ ಎಷ್ಟೊಂದು ! ರಾಮನದು ಎಷ್ಟು ಚಿಕ್ಕ ಪರಿವಾರವಾಗಿದೆ. ಅಂದಮೇಲೆ ಗಾಯನವು ಸತ್ಯವಾಗಿದೆ, ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸಿದಾಗಲೂ ನಿಶ್ಚಯ ಬರುವುದಿಲ್ಲ. ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನಂತೂ ಅವಶ್ಯವಾಗಿ ಮಾಡಬೇಕಾಗಿದೆ. ಯಾರು ಸೇವಾಧಾರಿ ಮಕ್ಕಳಿದ್ದಾರೆಯೋ ಅರ್ಥಾತ್ ಪಾಂಡವರಿದ್ದಾರೆಯೋ ಅವರಂತೂ ಸರ್ಕಾರದಿಂದ ಪಾಲನೆ ತೆಗೆದುಕೊಳ್ಳಬಹುದು, ಅವರ ಪೂರ್ಣ ಸಂಭಾಲನೆಯನ್ನೂ ಮಾಡಬೇಕಾಗಿದೆ. ಈಗ ಮಕ್ಕಳ ಸ್ಥಿತಿಯು ಈ ರೀತಿಯಿರಲಿ, ತಂದೆಯ ನೆನಪಿನಲ್ಲಿ ಈ ಪ್ರಪಂಚದ್ದೆಲ್ಲವನ್ನೂ ಮರೆಸುವಂತಿರಲಿ. ಯಾರು ನೆನಪಿನ ಯಾತ್ರೆಯಲ್ಲಿ ಪಕ್ಕಾ ಮಸ್ತರಾಗಿರುವರೋ ಅವರ ಸ್ಥಿತಿಯೂ ಸಹ ಬಹಳ ಶಕ್ತಿಶಾಲಿಯಾಗಿರುವುದು. ಹೇಗೆ ಶಿವ ತಂದೆಯ ನೆನಪಿನಲ್ಲಿದ್ದು ಶರೀರ ಬಿಡುತ್ತೀರಿ. ಸನ್ಯಾಸಿಗಳು ಬ್ರಹ್ಮ್ತತ್ವದ ನೆನಪಿನಲ್ಲಿ ಶರೀರ ಬಿಟ್ಟರೂ ಸಹ ವಾಯುಮಂಡಲ ಪ್ರಶಾಂತವಾಗಿ ಬಿಡುತ್ತದೆ. ಬ್ರಹ್ಮಾ ತಂದೆಗೆ ಅನುಭವವಿದೆ - ಮನುಷ್ಯರು ಮರಣ ಹೊಂದಿದಾಗ ಮನೆಯಲ್ಲಿ ಶಾಂತಿ ಏರ್ಪಡುತ್ತದೆಯಲ್ಲವೆ ಇದರಲ್ಲಿಯೂ ಹಾಗೆಯೇ ಆಗುತ್ತದೆ. ಅಂತಿಮದಲ್ಲಿ ಹೇಗೆ ಎಲ್ಲವನ್ನೂ ಮರೆತು ಬಿಡುತ್ತೀರಿ, ಕೇವಲ ನಾವೀಗ ಮನೆಗೆ ಹಿಂತಿರುಗಿ ಹೋಗಬೇಕಾಗಿದೆ. ದೇಹಾಭಿಮಾನವು ಕಳೆಯುತ್ತಾ ಹೋಗುತ್ತದೆ. ಅಂತಿಮದಲ್ಲಿ ಶರೀರವನ್ನು ಖುಷಿ-ಖುಷಿಯಿಂದ ಬಿಡಬೇಕು, ನಾವು ಎಲ್ಲಿಗೆ ಹೋಗುತ್ತಿದ್ದೇವೆ! ಯಾವಾಗ ಈ ಸ್ಥಿತಿಯು ಬರುವುದೋ ಆಗಲೇ ವಿಜಯಮಾಲೆಯಲ್ಲಿ ಬರಲು ಯೋಗ್ಯರಾಗುತ್ತೀರಿ. ನಿಮ್ಮಲ್ಲಿ ಶಾಂತಿಯ ಶಕ್ತಿಯಿದೆ, ಯಾರು ಬಂದರೂ ಸಹ ಇಲ್ಲಿ ಶಾಂತಿಯಿದೆ ಎಂದು ಹೇಳುತ್ತಾರೆ. ಇದೇ ಸತ್ಯವಾದ ಶಾಂತಿಯಾಗಿದೆ. ಆತ್ಮವು ಶರೀರದಿಂದ ಭಿನ್ನವಾಗಿ ಬಿಡುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ನಾವು ನಮ್ಮ ಸ್ವಧರ್ಮದಲ್ಲಿ ಕುಳಿತುಕೊಳ್ಳುತ್ತೇವೆ ಯಾವುದೇ ಮನುಷ್ಯರು ಕರ್ಮವಿಲ್ಲದೆ ಇರಲು ಸಾಧ್ಯವಿಲ್ಲ. ಅವರು ಹಠಯೋಗದಿಂದ ಏನೇನು ಮಾಡುವುದಿಲ್ಲ! ನೀವೀಗ ತಿಳಿದುಕೊಂಡಿದ್ದೀರಿ, ನಮ್ಮ ಸ್ವಧರ್ಮವೇ ಶಾಂತಿಯಾಗಿದೆ, ನಾವಿಲ್ಲಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ, ಈಗ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ನನ್ನನ್ನು ನೆನಪು ಮಾಡಿರಿ ಮತ್ತು ಮನೆಯನ್ನು ನೆನಪು ಮಾಡಿರಿ ಎಂದು ತಂದೆಯು ತಿಳಿಸುತ್ತಾರೆ. ತಂದೆಯ ನೆನಪಿನಿಂದಲೇ ಆಸ್ತಿಯು ಸಿಗುವುದು. ತಂದೆಯು ಹೇಳುತ್ತಾರೆ - ನನ್ನನ್ನು ಮನೆಯಲ್ಲಿ (ಪರಮಧಾಮ) ನೆನಪು ಮಾಡಿರಿ, ಇಲ್ಲಂತೂ ನಾನು ಸ್ವಲ್ಪ ಸಮಯಕ್ಕಾಗಿ ಬರುತ್ತೇನೆ. ನಿಮ್ಮ ಬುದ್ಧಿಯು ಶಾಂತಿಧಾಮದಲ್ಲಿ ತಂದೆಯ ನೆನಪಿನಲ್ಲಿ ಸ್ಥಿತವಾಗಬೇಕು. ಮನೆಯ ಆಸ್ತಿಯನ್ನೂ ತೆಗೆದುಕೊಳ್ಳಬೇಕಲ್ಲವೆ. ಅದು ಆತ್ಮಗಳ ಮನೆಯಾಗಿದೆ, ಇದು ಜೀವಾತ್ಮರ ಮನೆಯಾಗಿದೆ. ತಮ್ಮ ಮನೆಯನ್ನೂ ಮರೆಯಬೇಡಿ, ತಂದೆಯನ್ನೂ ಮರೆಯಬೇಡಿ. ತಂದೆಯನ್ನು ನೆನಪು ಮಾಡಿದರೆ ಪವಿತ್ರರಾಗಿ ಮನೆಗೆ ಹೋಗುವಿರಿ. ಜ್ಞಾನವನ್ನು ಧಾರಣೆ ಮಾಡಿಕೊಳ್ಳುವುದರಿಂದ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡಲು ಬರುತ್ತೀರಿ ಆದ್ದರಿಂದ ಈಗ ಎಷ್ಟು ಸಾಧ್ಯವೋ ಅಷ್ಟು ಅನ್ಯರಿಗೂ ಮಾರ್ಗವನ್ನು ತಿಳಿಸುತ್ತಾ ಹೋಗಿರಿ. ಸದಾ ತಂದೆಯನ್ನು ನೋಡಿರಿ. ನೀವು ತಿಳಿದುಕೊಂಡಿದ್ದೀರಿ - ತಂದೆಯು ಏನು ಮಾಡಿದರು? ಎಲ್ಲವನ್ನೂ ಮಾತೆಯರಿಗೆ ಕೊಟ್ಟು ಬಿಟ್ಟರು. ಎಲ್ಲವನ್ನೂ ಮಾತೆಯರ ಸೇವೆಯಲ್ಲಿ ತೊಡಗಿಸಿ ಎಂದು ಅವರೇ ಆದೇಶ ನೀಡಿದರು. ಒಬ್ಬರನ್ನು ನೋಡಿ ಇನ್ನೊಬ್ಬರು ಅನುಸರಿಸ ತೊಡಗಿದರು. ಸ್ವಾಹಾ ಆಗಿ ಬಿಟ್ಟರು ಆದರೆ ನಂತರ ಸ್ಥಿರವಾಗಿ ನಿಲ್ಲಬೇಕಲ್ಲವೆ. ಡ್ರಾಮಾನುಸಾರ ಭಟ್ಟಿಯೂ ಆಗಬೇಕಿತ್ತು. ಪಾಕೀಸ್ತಾನ, ಹಿಂದೂಸ್ತಾನವಾಯಿತು, ನಿಮ್ಮ ಭಟ್ಟಿಯು ಮೊದಲು ಪಾಕೀಸ್ತಾನದಲ್ಲಿಯೇ ಆರಂಭವಾಯಿತು, ನೀವು ನದಿಯನ್ನು ದಾಟಿ ಬಂದಿರಿ, ಇದನ್ನು ಶಾಸ್ತ್ರಗಳಲ್ಲಿ ಏನೇನು ಬರೆದಿದ್ದಾರೆ? ಪ್ರತ್ಯಕ್ಷದಲ್ಲಂತೂ ಈಗ ಕೇಳುತ್ತೀರಲ್ಲವೆ ಮತ್ತು ಕಲ್ಪದ ನಂತರ ನೀವೇ ಕೇಳುತ್ತೀರಿ. ಈಗ ತಂದೆಯು ತಿಳಿಸುತ್ತಾರೆ - ಕೆಟ್ಟದ್ದನ್ನು ಕೇಳಬೇಡಿ, ಉದ್ಯೋಗ-ವ್ಯವಹಾರಗಳನ್ನು ಭಲೆ ಮಾಡಿರಿ ಆದರೆ ಕೆಟ್ಟದ್ದನ್ನು ಕೇಳಬೇಡಿ, ಪ್ರತೀ ಮಾತಿನಲ್ಲಿ ಶ್ರೀಮತವನ್ನು ತೆಗೆದುಕೊಂಡು ಬಾಬಾ, ಈ ಸಮಯದಲ್ಲಿ ನಾವು ಏನು ಮಾಡಬೇಕೆಂದು ಕೇಳಿದರೆ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ, ಯಾವುದೇ ಮಾತನ್ನು ಕೇಳಬೇಕಾದರೆ ನೀವು ತಂದೆಯ ಬಳಿ ಬನ್ನಿ. ಏಕೆ ಹೆದರುತ್ತೀರಿ? ಹೆಜ್ಜೆ-ಹೆಜ್ಜೆಯಲ್ಲಿ ಕೇಳಬೇಕಾಗಿದೆ. ಶ್ರೀಮತದಂತೆ ನಡೆದರೆ ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಿದೆ. ನಿಮ್ಮ ಯಾವ ಕ್ಷಣ-ಪ್ರತಿಕ್ಷಣ ಕಳೆಯುತ್ತದೆಯೋ ಅದರಲ್ಲಿ ಪದುಮಗಳಿವೆ ಅಂದಮೇಲೆ ಇಷ್ಟೊಂದು ಸಂಪಾದನೆಯಾಗುತ್ತಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ವಿಜಯಮಾಲೆಯಲ್ಲಿ ಬರುವುದಕ್ಕಾಗಿ ಈ ಶರೀರದಿಂದ ಭಿನ್ನವಾಗುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ದೇಹಾಭಿಮಾನವನ್ನು ಬಿಡುತ್ತಾ ಹೋಗಬೇಕಾಗಿದೆ. ಬುದ್ಧಿಯಿಂದ ಈ ಪ್ರಪಂಚವನ್ನು ಮರೆಯಬೇಕಾಗಿದೆ. |
2. ಅತಿಯಾಗಿ ಧನದ ಲಾಲಸೆಯಲ್ಲಿ ಹೋಗಬಾರದು. ತಂದೆಯ ನೆನಪಿನ ವಿನಃ ಬೇರೇನೂ ಚಿಂತನೆಯಿರಬಾರದು. ಎಂದೂ ತಂದೆಯೊಂದಿಗೆ ಅಥವಾ ವಿದ್ಯೆಯೊಂದಿಗೆ ಮುನಿಸಿಕೊಳ್ಳಬಾರದು. |
"ತನು-ಮನದ ಧಣಿವನ್ನು ಕಳೆಯುವ ಸಾಧನ - ಶಕ್ತಿಶಾಲಿ ನೆನಪು" |
ಇಂದು ಪರದೇಶಿ ತಂದೆಯು ತನ್ನ ಅನಾದಿ ದೇಶವಾಸಿ ಮತ್ತು ಆದಿ ದೇಶವಾಸಿ ಸೇವಾರ್ಥವಾಗಿ ಹೋಗಿರುವ ಎಲ್ಲಾ ವಿದೇಶಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಬಾಪ್ದಾದಾರವರಿಗೆ ತಿಳಿದಿದೆ - ಇವರೇ ನನ್ನ ಅಗಲಿ ಹೋಗಿ ಮರಳಿ ಸಿಕ್ಕಿರುವ ಮುದ್ದು ಮಕ್ಕಳಾಗಿದ್ದಾರೆ. ಅನಾದಿ ದೇಶ ಪರಮಧಾಮ ನಿವಾಸಿಗಳಾಗಿದ್ದಾರೆ. ಜೊತೆ ಜೊತೆಗೆ ಸೃಷ್ಟಿಯ ಆದಿಯ ಇದೇ ಭಾರತ ಭೂಮಿಯಲ್ಲಿ ಯಾವಾಗ ಸತ್ಯಯುಗೀ ಸ್ವದೇಶವಿತ್ತೋ, ತಮ್ಮ ರಾಜ್ಯವಿತ್ತೋ, ಯಾವುದಕ್ಕೆ ಎಲ್ಲರೂ ಭಾರತವೆಂದು ಹೇಳುತ್ತಾರೆ ಅಂದಾಗ ಆದಿಯಲ್ಲಿ ಇದೇ ಭಾರತ ದೇಶವಾಸಿಗಳಾಗಿದ್ದಿರಿ. ಇದೇ ಭಾರತ ಭೂಮಿಯಲ್ಲಿ ಬ್ರಹ್ಮಾ ತಂದೆಯ ಜೊತೆ ಜೊತೆಗೆ ರಾಜ್ಯ ಮಾಡಿದಿರಿ. ಅನೇಕ ಜನ್ಮಗಳು ತಮ್ಮ ರಾಜ್ಯದಲ್ಲಿ ಸುಖ, ಶಾಂತಿ, ಸಂಪನ್ನ ಅನೇಕ ಜೀವನಗಳನ್ನು ವ್ಯತೀತ ಮಾಡಿದ್ದೀರಿ. ಆದ್ದರಿಂದ ಆದಿ ದೇಶವಾಸಿಗಳಾಗಿರುವ ಕಾರಣ ಭಾರತ ಭೂಮಿಯೊಂದಿಗೆ ಹೃದಯದ ಸ್ನೇಹವಿದೆ. ಭಲೆ ಎಷ್ಟಾದರೂ ಈಗ ಅಂತಿಮದಲ್ಲಿ ಭಾರತವು ಬಡದೇಶ ಅಥವಾ ಧೂಳು ಮಣ್ಣಿನದಾಗಿ ಬಿಟ್ಟಿರಬಹುದು ಆದರೂ ಸಹ ತನ್ನ ದೇಶವು ತನ್ನದೇ ಆಗಿರುತ್ತದೆ. ಅಂದಾಗ ತಾವೆಲ್ಲಾ ಆತ್ಮಗಳ ತಮ್ಮ ದೇಶ ಮತ್ತು ಶರೀರಧಾರಿ ದೇವತಾ ಜೀವನದ ತಮ್ಮ ದೇಶವು ಯಾವುದಾಗಿತ್ತು? ಭಾರತವೇ ಆಗಿತ್ತಲ್ಲವೆ. ಎಷ್ಟೊಂದು ಜನ್ಮಗಳು ಭಾರತ ಭೂಮಿಯಲ್ಲಿದ್ದಿರಿ, ಅದು ನೆನಪಿದೆಯೇ? ಎಲ್ಲರೂ ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪ್ರಾಪ್ತಿ ಮಾಡಿಕೊಂಡಿದ್ದೀರಿ ಆದ್ದರಿಂದ 21 ಜನ್ಮಗಳದಂತೂ ಗ್ಯಾರಂಟಿಯು ಇದ್ದೇ ಇದೆ. ನಂತರದಲ್ಲಿಯೂ ಪ್ರತಿಯೊಂದು ಆತ್ಮನ ಕೆಲವು ಜನ್ಮಗಳು ಭಾರತ ಭೂಮಿಯಲ್ಲಿಯೇ ಆಗಿದೆ. ಏಕೆಂದರೆ ಯಾರು ಬ್ರಹ್ಮಾ ತಂದೆಯ ಸಮೀಪ ಆತ್ಮರಿದ್ದಾರೆಯೋ, ಸಮಾನರಾಗುವ ಆತ್ಮರಿದ್ದಾರೆಯೋ ಅವರು ಬ್ರಹ್ಮಾ ತಂದೆಯ ಜೊತೆ ಜೊತೆಗೆ ತಾನೇ ಪೂಜ್ಯ, ತಾನೇ ಪೂಜಾರಿಯ ಪಾತ್ರವನ್ನೂ ಜೊತೆಯಲ್ಲಿಯೇ ಅಭಿನಯಿಸುತ್ತೀರಿ. ದ್ವಾಪರಯುಗದ ಮೊದಲ ಭಕ್ತರೂ ಸಹ ತಾವು ಬ್ರಾಹ್ಮಣ ಆತ್ಮರೇ ಆಗುತ್ತೀರಿ. ಆದಿ ಸ್ವರ್ಗದಲ್ಲಿ ಇದೇ ದೇಶದ ನಿವಾಸಿಗಳಾಗಿದ್ದಿರಿ ಮತ್ತು ಅನೇಕ ಬಾರಿ ಭಾರತ ಭೂಮಿಯ ದೇಶವಾಸಿಗಳಾಗಿದ್ದೀರಿ. ಆದ್ದರಿಂದ ಬ್ರಾಹ್ಮಣರ ಅಲೌಕಿಕ ಸಂಸಾರ ‘ಮಧುಬನ’ದೊಂದಿಗೆ ಅತೀ ಪ್ರೀತಿಯಿದೆ. ಈ ಮಧುಬನವು ಬ್ರಾಹ್ಮಣರ ಚಿಕ್ಕ ಸಂಸಾರವಾಗಿದೆ ಅಂದಾಗ ಈ ಸಂಸಾರವು ಬಹಳ ಇಷ್ಟವಾಗುತ್ತದೆಯಲ್ಲವೆ. ಇಲ್ಲಿಂದ ಹೋಗಲು ಇಷ್ಟವಾಗುವುದಿಲ್ಲ ಅಲ್ಲವೆ. ಒಂದುವೇಳೆ ಈಗೀಗ ಮಧುಬನ ನಿವಾಸಿಗಳಾಗಿ ಬಿಡಿ ಎಂದು ಆಜ್ಞೆ ಮಾಡಿದ್ದೇ ಆದರೆ ಖುಷಿಯಾಗಿ ಬಿಡುತ್ತೀರಲ್ಲವೆ ಅಥವಾ ಸೇವೆಯನ್ನು ಯಾರು ಮಾಡುವರು ಎಂದು ಸಂಕಲ್ಪ ಬರುತ್ತದೆಯೇ? ಸೇವೆಗೋಸ್ಕರವಂತೂ ಹೋಗಲೇಬೇಕಾಗಿದೆ. ಒಂದುವೇಳೆ ಇಲ್ಲಿಯೇ ಕುಳಿತು ಬಿಡಿ ಎಂದು ಬಾಪ್ದಾದಾ ಹೇಳಿದರೆ ಸೇವೆ ನೆನಪಿಗೆ ಬರುವುದೇ? ಸೇವೆ ಮಾಡಿಸುವವರು ಯಾರಾಗಿದ್ದಾರೆ? ತಂದೆಯದು ಯಾವ ಆದೇಶವಿದೆಯೋ, ಶ್ರೀಮತವಿದೆಯೋ ಅದನ್ನು ಅದೇ ರೂಪದಲ್ಲಿ ಪಾಲನೆ ಮಾಡುವವರಿಗೆ ಸತ್ಯ ಆಜ್ಞಾಕಾರಿ ಮಕ್ಕಳೆಂದು ಹೇಳುವರು. ಮಧುಬನದಲ್ಲಿ ಕುಳ್ಳರಿಸಿಕೊಳ್ಳಬೇಕೇ ಅಥವಾ ಸೇವೆಗಾಗಿ ಕಳುಹಿಸಬೇಕೇ ಎಂಬುದು ಬಾಪ್ದಾದಾರವರಿಗೆ ಗೊತ್ತಿದೆ. ಬ್ರಾಹ್ಮಣ ಮಕ್ಕಳು ಪ್ರತೀ ಮಾತಿನಲ್ಲಿ ಎವರೆಡಿ ಆಗಿರಬೇಕಾಗಿದೆ. ಈಗೀಗ ಯಾವುದೇ ಆದೇಶ ಸಿಗಲಿ, ಅದರಲ್ಲಿ ಎವರೆಡಿಯಾಗಿರಿ. ಸಂಕಲ್ಪ ಮಾತ್ರದಲ್ಲಿಯೂ ಮನಮತವು ಬೆರಕೆಯಾಗಬಾರದು. ಇಂತಹವರಿಗೆ ಶ್ರೀಮತದ ಅನುಸಾರ ನಡೆಯುವ ಶ್ರೇಷ್ಠ ಆತ್ಮನೆಂದು ಹೇಳಲಾಗುತ್ತದೆ. |
ಇದನ್ನಂತೂ ತಿಳಿದುಕೊಂಡಿದ್ದೀರಲ್ಲವೆ - ಸೇವೆಯ ಜವಾಬ್ದಾರಿಯು ಬಾಪ್ದಾದಾರವರದಾಗಿದೆ ಅಥವಾ ತಮ್ಮದೇ? ಈ ಜವಾಬ್ದಾರಿಯಿಂದಂತೂ ತಾವು ಹಗುರರಾಗಿದ್ದೀರಲ್ಲವೆ ಅಥವಾ ಜವಾಬ್ದಾರಿಯ ಸ್ವಲ್ಪ-ಸ್ವಲ್ಪ ಹೊರೆಯಿದೆಯೇ? ಇಷ್ಟು ದೊಡ್ಡ ಕಾರ್ಯಕ್ರಮ ಮಾಡಬೇಕಾಗಿದೆ. ಅದನ್ನು ಮಾಡಬೇಕು, ಇದನ್ನು ಮಾಡಬೇಕು – ಇದೆಲ್ಲವೂ ಹೊರೆಯೆಂದು ತಿಳಿದುಕೊಳ್ಳುವುದಿಲ್ಲ ತಾನೆ! ಮಾಡಿಸುವವರು ಮಾಡಿಸುತ್ತಿದ್ದಾರೆ, ಮಾಡಿಸುವವರು ಒಬ್ಬರೇ ತಂದೆಯಾಗಿದ್ದಾರೆ. ಯಾರ ಬುದ್ಧಿಗಾದರೂ ಪ್ರೇರಣೆ ಕೊಟ್ಟು ವಿಶ್ವ ಸೇವೆಯ ಕಾರ್ಯವನ್ನು ಮಾಡಿಸುತ್ತಿದ್ದಾರೆ ಮತ್ತು ಮಾಡಿಸುತ್ತಾ ಇರುತ್ತಾರೆ. ಕೇವಲ ಮಕ್ಕಳನ್ನು ಏತಕ್ಕೋಸ್ಕರ ನಿಮಿತ್ತ ಮಾಡುತ್ತಾರೆಂದರೆ - ಯಾರು ಮಾಡುವರೋ ಅವರು ಪಡೆಯುವರು. ಪಡೆಯುವವರು ಮಕ್ಕಳೇ ಆಗಿದ್ದಾರೆ. ತಂದೆಯಂತೂ ಏನನ್ನೂ ಸ್ವೀಕರಿಸುವುದಿಲ್ಲ. ಪ್ರಾಲಬ್ಧವನ್ನು ಪಡೆಯುವುದು ಅಥವಾ ಸೇವೆಯ ಫಲದ ಅನುಭವ ಮಾಡುವುದು, ಇದು ಆತ್ಮಗಳ ಕರ್ತವ್ಯವಾಗಿದೆ. ಆದ್ದರಿಂದ ಬಾಪ್ದಾದಾ ಮಕ್ಕಳನ್ನು ನಿಮಿತ್ತ ಮಾಡುತ್ತಾರೆ. ಸಾಕಾರ ರೂಪದಲ್ಲಿಯೂ ಸೇವೆ ಮಾಡಿಸುವ ಕಾರ್ಯವನ್ನು ನೋಡಿದಿರಿ ಮತ್ತು ಈಗ ಅವ್ಯಕ್ತ ರೂಪದಲ್ಲಿಯೂ ಸಹ ಮಾಡಿಸುವಂತಹ ತಂದೆಯು ಅವ್ಯಕ್ತ ಬ್ರಹ್ಮಾರವರ ಮೂಲಕವೂ ಹೇಗೆ ಸೇವೆ ಮಾಡಿಸುತ್ತಿದ್ದಾರೆ ಎಂಬುದನ್ನು ನೋಡುತ್ತಿದ್ದೀರಿ. ಅವ್ಯಕ್ತ ಸೇವೆಯ ಗತಿಯು ಇನ್ನೂ ತೀವ್ರ ಗತಿಯಾಗಿದೆ. ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ನೀವು ಕೀಲು ಗೊಂಬೆಯ ಸಮಾನ ನರ್ತಿಸುತ್ತಿದ್ದೀರಿ. ಈ ಸೇವೆಯೂ ಸಹ ಒಂದು ಆಟವಾಗಿದೆ. ಮಾಡಿಸುವವರು ಮಾಡಿಸುತ್ತಿದ್ದಾರೆ ಮತ್ತು ತಾವು ನಿಮಿತ್ತರಾಗಿ ಒಂದು ಹೆಜ್ಜೆಗೆ ಪದುಮದಷ್ಟು ಪ್ರಾಲಬ್ಧವನ್ನು ಮಾಡಿಕೊಳ್ಳುತ್ತಿದ್ದೀರಿ ಅಂದಮೇಲೆ ಹೊರೆಯು ಯಾರ ಮೇಲಿದೆ? ಮಾಡಿಸುವವರ ಮೇಲೋ ಅಥವಾ ಮಾಡುವವರ ಮೇಲೋ? ತಂದೆಯಂತೂ ತಿಳಿದುಕೊಂಡಿದ್ದಾರೆ – ಇದು ಹೊರೆಯಲ್ಲ, ತಾವು ಹೊರೆಯೆಂದು ಹೇಳುತ್ತೀರಿ ಆದ್ದರಿಂದ ತಂದೆಯು ಹೊರೆ ಎಂಬ ಶಬ್ಧವನ್ನು ಉಪಯೋಗಿಸುತ್ತೇವೆ. ತಂದೆಯ ಲೆಕ್ಕದಲ್ಲಿ ಎಲ್ಲವೂ ಆಗಿಯೇ ಬಿಟ್ಟಿದೆ. ಕೇವಲ ಹೇಗೆ ಗೆರೆಯನ್ನು ಎಳೆಯಲಾಗುತ್ತದೆ, ಗೆರೆಯನ್ನು ಎಳೆಯುವುದು ದೊಡ್ಡ ಮಾತೆನಿಸುತ್ತದೆಯೇ? ಈ ರೀತಿ ಬಾಪ್ದಾದಾ ಸೇವೆ ಮಾಡಿಸುತ್ತಾರೆ. ಸೇವೆಯೂ ಸಹ ಹೇಗೆ ಒಂದು ಗೆರೆಯನ್ನು ಎಳೆಯುವಷ್ಟು ಸಹಜವಾಗಿದೆ. ಕೇವಲ ಪುನರಾವರ್ತನೆ ಮಾಡುತ್ತಿದ್ದೀರಿ. ನಿಮಿತ್ತ ಆಟವನ್ನಾಡುತ್ತಿದ್ದೀರಿ. |
ಹೇಗೆ ಮಾಯೆಯ ವಿಘ್ನವು ಆಟವಾಗಿದೆ ಅಂದಾಗ ಸೇವೆಯೂ ಸಹ ಪರಿಶ್ರಮವಲ್ಲ ಆದರೆ ಆಟವಾಗಿದೆ. ಈ ರೀತಿ ತಿಳಿದುಕೊಳ್ಳುವುದರಿಂದ ಸೇವೆಯಲ್ಲಿ ಸದಾ ರಿಫ್ರೆಷ್ಮೆಂಟ್ನ ಅನುಭವ ಮಾಡುತ್ತೀರಿ. ಹೇಗೆ ಯಾವುದೇ ಆಟವನ್ನು ಏತಕ್ಕಾಗಿ ಆಡುತ್ತಾರೆ? ರಿಫ್ರೆಷ್ ಆಗುವುದಕ್ಕಾಗಿ ಆಡುತ್ತಾರೆಯೇ ಹೊರತು ಸುಸ್ತಾಗುವುದಕ್ಕಾಗಿ ಅಲ್ಲ. ಭಲೆ ಎಷ್ಟಾದರೂ ದೊಡ್ಡ ಕಾರ್ಯವಾಗಿರಲಿ ಆದರೆ ಹೇಗೆ ಆಟವಾಡುವುದರಿಂದ ರಿಫ್ರೆಷ್ ಆಗಿ ಬಿಡುವರೋ ಅದೇರೀತಿ ಅನುಭವ ಮಾಡುವಿರಿ. ಭಲೆ ಎಷ್ಟಾದರೂ ಸುಸ್ತು ಮಾಡಿಸುವ ಆಟವಾಗಿರಲಿ ಆದರೆ ಆಟವೆಂದು ತಿಳಿದಾಗ ಸುಸ್ತಾಗುವುದಿಲ್ಲ. ಏಕೆಂದರೆ ತನ್ನ ರುಚಿಯಿಂದ ಆಟವಾಡಲಾಗುತ್ತದೆ. ಭಲೆ ಆಟದಲ್ಲಿ ಎಷ್ಟೇ ಕಠಿಣ ಕೆಲಸ ಮಾಡಬೇಕಾಗಲಿ ಆದರೆ ಅದೂ ಸಹ ಮನೋರಂಜನೆ ಎನಿಸುತ್ತದೆ ಏಕೆಂದರೆ ತಮ್ಮ ಹೃದಯಪೂರ್ವಕವಾಗಿ ಮಾಡುತ್ತೀರಿ. ಯಾವುದೇ ಲೌಕಿಕ ಕಾರ್ಯವು ಹೊರೆಯೆನಿಸುತ್ತದೆ, ನಿರ್ವಹಣಾರ್ಥ ಮಾಡಲೇಬೇಕಾಗುತ್ತದೆ, ಇದು ನಮ್ಮ ಜವಾಬ್ಧಾರಿಯೆಂದು ತಿಳಿದುಕೊಂಡು ಮಾಡುತ್ತೀರಿ ಆದ್ದರಿಂದ ಪರಿಶ್ರಮವೆನಿಸುತ್ತದೆ. ಭಲೆ ಶಾರೀರಿಕ ಪರಿಶ್ರಮದ ಕೆಲಸವಾಗಿರಬಹುದು ಆದರೆ ಬುದ್ಧಿಯ ಪರಿಶ್ರಮದ ಕೆಲಸವಾಗಿರಬಹುದು ಆದರೆ ಅದೊಂದು ಜವಾಬ್ದಾರಿಯೆಂದು ತಿಳಿದು ಮಾಡುವ ಕಾರಣ ಸುಸ್ತಿನ ಅನುಭವ ಮಾಡುತ್ತೀರಿ ಏಕೆಂದರೆ ಹೃದಯದ ಖುಷಿಯಿಂದ ಮಾಡುವುದಿಲ್ಲ, ಯಾವುದನ್ನು ತನ್ನ ಮನಸ್ಸಿನ ಉಲ್ಲಾಸದಿಂದ, ಖುಷಿಯಿಂದ ಕಾರ್ಯ ಮಾಡಲಾಗುತ್ತದೆಯೋ ಅದರಲ್ಲಿ ಸುಸ್ತಾಗುವುದಿಲ್ಲ, ಹೊರೆಯ ಅನುಭವವಾಗುವುದಿಲ್ಲ. ಕೆಲವೊಂದೆಡೆ ಮಕ್ಕಳ ಮೇಲೆ ಸೇವೆಯ ಲೆಕ್ಕದಿಂದ ಹೆಚ್ಚು ಕಾರ್ಯವು ಬಂದು ಬಿಡುತ್ತದೆ ಆದ್ದರಿಂದಲೂ ಕೆಲಕೆಲವೊಮ್ಮೆ ಸುಸ್ತಿನ ಅನುಭವವಾಗುತ್ತದೆ. ಬಾಪ್ದಾದಾ ನೋಡುತ್ತೇವೆ, ಕೆಲವು ಮಕ್ಕಳು ಅವಿಶ್ರಾಂತರಾಗಿ ಸೇವೆ ಮಾಡುವ ಉಲ್ಲಾಸ-ಉತ್ಸಾಹದಲ್ಲಿಯೂ ಇರುತ್ತಾರೆ. ಆದರೂ ಸಾಹಸವನ್ನಿಟ್ಟು ಮುಂದುವರೆಯುತ್ತಿದ್ದಾರೆ, ಇದನ್ನು ನೋಡಿ ಬಾಪ್ದಾದಾ ಹರ್ಷಿತರಾಗುತ್ತಿದ್ದೇವೆ. ಸದಾ ಬುದ್ಧಿಯನ್ನು ಅವಶ್ಯವಾಗಿ ಹಗುರವಾಗಿಟ್ಟುಕೊಳ್ಳಿ. |
ಬಾಪ್ದಾದಾ ಮಕ್ಕಳ ಯೋಜನಾ ಕಾರ್ಯಕ್ರಮವನ್ನು ವತನದಲ್ಲಿ ಕುಳಿತೇ ನೋಡುತ್ತಿರುತ್ತೇವೆ. ಪ್ರತಿಯೊಬ್ಬ ಮಗುವಿನ ಪ್ರತೀ ಸಮಯದ ನೆನಪು ಮತ್ತು ಸೇವೆಯ ರೆಕಾರ್ಡ್ ಬಾಪ್ದಾದಾರವರ ಬಳಿ ಇರುತ್ತದೆ. ಹೇಗೆ ತಮ್ಮ ಸ್ಥೂಲ ಪ್ರಪಂಚದಲ್ಲಿ ರೆಕಾರ್ಡ್ ಇಡುವ ಕೆಲವು ಸಾಧನಗಳಿವೆ ಹಾಗೆಯೇ ತಂದೆಯ ಬಳಿ ವಿಜ್ಞಾನದ ಸಾಧನಗಳಿಗಿಂತಲೂ ರಿಫೈನ್ ಸಾಧನವಿದೆ ಅದು ಸ್ವತಹ ಕಾರ್ಯ ಮಾಡುತ್ತಿರುತ್ತದೆ. ಹೇಗೆ ವಿಜ್ಞಾನದ ಸಾಧನಗಳು ಯಾವುದೆಲ್ಲಾ ಕಾರ್ಯ ಮಾಡುತ್ತದೆಯೋ ಅದು ಲೈಟ್ನ ಆಧಾರದಿಂದ ಮಾಡುತ್ತದೆ. ಸೂಕ್ಷ್ಮ ವತನವೂ ಸಹ ಪ್ರಕಾಶದ್ದಾಗಿದೆ. ಸಾಕಾರ ವತನದ ಬೆಳಕಿನ ಸಾಧನಗಳಾದರೋ ಪ್ರಕೃತಿಯ ಸಾಧನಗಳಾಗಿವೆ ಆದರೆ ಅವ್ಯಕ್ತ ವತನದ ಸಾಧನಗಳು ಪ್ರಕೃತಿಯದಲ್ಲ ಮತ್ತು ಪ್ರಕೃತಿಯು ರೂಪ ಬದಲಾಯಿಸುತ್ತದೆ, ಸತೋ-ರಜೋ-ತಮೋದಲ್ಲಿ ಪರಿವರ್ತನೆಯಾಗುತ್ತದೆ. ಈ ಸಮಯದಲ್ಲಂತೂ ಇರುವುದೇ ತಮೋಗುಣೀ ಪ್ರಕೃತಿ ಆದ್ದರಿಂದ ಈ ಸಾಧನಗಳು ಇಂದು ನಡೆಯುತ್ತವೆ, ನಾಳೆ ನಡೆಯುವುದಿಲ್ಲ. ಆದ್ದರಿಂದ ಅವ್ಯಕ್ತ ವತನದ ಸಾಧನವು ಪ್ರಕೃತಿಯಿಂದ ದೂರವಿದೆ ಆದ್ದರಿಂದ ಅದು ಪರಿವರ್ತನೆಯಲ್ಲಿ ಬರುವುದಿಲ್ಲ. ಯಾವಾಗ ಬೇಕೋ, ಹೇಗೆ ಬೇಕೋ ಸೂಕ್ಷ್ಮ ಸಾಧನವು ಸದಾ ತನ್ನ ಕಾರ್ಯ ಮಾಡುತ್ತಿರುತ್ತದೆ. ಆದ್ದರಿಂದ ಎಲ್ಲಾ ಮಕ್ಕಳ ರೆಕಾರ್ಡ್ ನೋಡುವುದು ಬಾಪ್ದಾದಾರವರಿಗೆ ದೊಡ್ಡ ಮಾತೇನಲ್ಲ. ತಮ್ಮೆಲ್ಲರಿಗಂತೂ ಸಾಧನಗಳನ್ನು ಸಂಭಾಲನೆ ಮಾಡುವುದೇ ಕಷ್ಟವಾಗಿ ಬಿಡುತ್ತದೆಯಲ್ಲವೆ. ಅಂದಾಗ ಬಾಪ್ದಾದಾ ನೆನಪು ಮತ್ತು ಸೇವೆ ಎರಡರ ರೆಕಾರ್ಡನ್ನು ನೋಡುತ್ತೇವೆ ಏಕೆಂದರೆ ಎರಡರ ಬ್ಯಾಲೆನ್ಸ್ ಅಧಿಕ ಬ್ಲೆಸ್ಸಿಂಗ್ನ್ನು ಕೊಡಿಸುತ್ತದೆ. |
ಹೇಗೆ ಸೇವೆಗಾಗಿ ಸಮಯವನ್ನು ತೆಗೆಯುತ್ತೀರಿ. ಅದರಲ್ಲಿ ಕೆಲವೊಮ್ಮೆ ನಿಯಮಕ್ಕಿಂತಲೂ ಹೆಚ್ಚು ಸಮಯವನ್ನು ತೊಡಗಿಸುತ್ತೀರಿ. ಸೇವೆಯಲ್ಲಿ ಸಮಯವನ್ನು ತೊಡಗಿಸುವುದು ಬಹಳ ಒಳ್ಳೆಯ ಮಾತಾಗಿದೆ ಮತ್ತು ಸೇವೆಯ ಬಲವೂ ಸಿಗುತ್ತದೆ, ಸೇವೆಯಲ್ಲಿ ಬ್ಯುಜಿಯಾಗಿರುವಕಾ ರಣ ಚಿಕ್ಕ-ಚಿಕ್ಕ ಮಾತುಗಳಿಂದ ಪಾರಾಗುತ್ತೀರಿ. ಬಾಪ್ದಾದಾ ಮಕ್ಕಳ ಸೇವೆಯನ್ನು ನೋಡಿ ಬಹಳ ಖುಷಿ ಪಡುತ್ತೀರಿ. ನಿಮ್ಮ ಸಾಹಸಕ್ಕಾಗಿ ಬಲಿಹಾರಿಯಾಗುತ್ತೇವೆ ಆದರೆ ಯಾವ ಸೇವೆಯು ನೆನಪು ಮತ್ತು ಉನ್ನತಿಯಲ್ಲಿ ಸ್ವಲ್ಪ ಅಡಚಣೆ ಮಾಡಲು ನಿಮಿತ್ತವಾದರೂ ಸಹ ಅಂತಹ ಸೇವೆಯ ಸಮಯವನ್ನು ಕಡಿಮೆ ಮಾಡಿಕೊಳ್ಳಬೇಕು. ಹೇಗೆ ರಾತ್ರಿಯಲ್ಲಿ ಬಹಳ ಸಮಯದವರೆಗೆ ಜಾಗೃತವಾಗಿರುತ್ತೀರಿ. 12 ಗಂಟೆ ಅಥವಾ ಒಂದು ಗಂಟೆಯವರೆಗೂ ಜಾಗೃತವಾಗಿರುತ್ತೀರಿ, ಆದ್ದರಿಂದ ಅಮೃತವೇಳೆಯಲ್ಲಿ ಫ್ರೆಷ್ ಇರುವುದಿಲ್ಲ. ಕುಳಿತುಕೊಂಡರೂ ಸಹ ನಿಯಮ ಪ್ರಮಾಣ ಕುಳಿತುಕೊಳ್ಳುತ್ತೀರಿ ಮತ್ತು ಅಮೃತವೇಳೆಯು ಶಕ್ತಿಶಾಲಿಯಿಲ್ಲವೆಂದರೆ ಇಡೀ ದಿನದ ನೆನಪು ಮತ್ತು ಸೇವೆಯಲ್ಲಿ ಅಂತರವಾಗಿ ಬಿಡುತ್ತದೆ. ತಿಳಿದುಕೊಳ್ಳಿ, ಸೇವೆಯ ಯೋಜನೆ ಮಾಡುವುದರಲ್ಲಿ ಅಥವಾ ಸೇವೆಯನ್ನು ಕಾರ್ಯ ರೂಪದಲ್ಲಿ ತರುವುದರಲ್ಲಿ ಸಮಯ ಹಿಡಿಸುತ್ತದೆಯೆಂದರೆ ರಾತ್ರಿಯ ಸಮಯವನ್ನು ಕಟ್ ಮಾಡಿ. 12 ಗಂಟೆಯ ಬದಲು 11 ಗಂಟೆಗೆ ಮಲಗಿ ಬಿಡಿ. ಆ ಒಂದು ಗಂಟೆ ಏನು ಕಡಿಮೆ ಮಾಡಿದಿರೋ ಮತ್ತು ಶರೀರಕ್ಕೆ ವಿಶ್ರಾಂತಿ ನೀಡುತ್ತೀರೋ ಅದರಿಂದ ಅಮೃತವೇಳೆ ಚೆನ್ನಾಗಿರುವುದು ಮತ್ತು ಬುದ್ಧಿಯು ಪ್ರಫುಲ್ಲಿತವಾಗಿರುವುದು. ಇಲ್ಲದಿದ್ದರೆ ಸೇವೆಯನ್ನಂತೂ ಮಾಡುತ್ತಿದ್ದೇವೆ ಆದರೆ ನೆನಪಿನ ಚಾರ್ಟ್ ಎಷ್ಟಿರಬೇಕೋ ಅಷ್ಟಿಲ್ಲ ಎಂದು ಮನಸ್ಸು ತಿನ್ನುತ್ತದೆ. ಇದು ಈ ರೀತಿಯಾಗಬೇಕು ಆದರೆ ಅದನ್ನು ಮಾಡಲು ಆಗುತ್ತಿಲ್ಲ ಎಂದು ಯಾವ ಸಂಕಲ್ಪವು ಹೃದಯದಲ್ಲಿ ಹಾಗೂ ಮನಸ್ಸಿನಲ್ಲಿ ಪದೇ-ಪದೇ ಬರುತ್ತದೆಯೋ ಆ ಸಂಕಲ್ಪದ ಕಾರಣ ಬುದ್ಧಿಯು ಫ್ರೆಷ್ ಆಗಿರುವುದಿಲ್ಲ ಮತ್ತು ಬುದ್ಧಿಯು ಒಂದುವೇಳೆ ಫ್ರೆಷ್ ಆಗಿದ್ದರೆ, ಫ್ರೆಷ್ ಬುದ್ಧಿಯಿಂದ 2-3 ಗಂಟೆಗಳ ಕೆಲಸವನ್ನು ಒಂದು ಗಂಟೆಯಲ್ಲಿಯೇ ಮುಗಿಸಬಲ್ಲಿರಿ. ಸುಸ್ತಾಗಿರುವ ಬುದ್ಧಿಯಲ್ಲಿ ಹೆಚ್ಚು ಸಮಯ ಹಿಡಿಸುತ್ತದೆ. ಈ ಅನುಭವವಿದೆಯಲ್ಲವೆ! ಎಷ್ಟು ಫ್ರೆಷ್ ಬುದ್ಧಿಯಿರುವುದೋ ಶರೀರದ ಲೆಕ್ಕದಿಂದಲೂ ಫ್ರೆಷ್, ಆತ್ಮದ ಉನ್ನತಿಯ ಲೆಕ್ಕದಿಂದಲೂ ಫ್ರೆಷ್ - ಈ ಡಬಲ್ ತಾಜಾತನವಿದ್ದಾಗ ಒಂದು ಗಂಟೆಯ ಕಾರ್ಯವನ್ನು ಅರ್ಧ ಗಂಟೆಯಲ್ಲಿ ಮಾಡಿಬಿಡುತ್ತೀರಿ. ಆದ್ದರಿಂದ ಸದಾ ತಮ್ಮ ದಿನಚರಿಯಲ್ಲಿ ಬುದ್ಧಿಯು ಫ್ರೆಷ್ ಇರುವ ಗಮನವನ್ನಿಡಿ. ಹೆಚ್ಚು ಆಲೋಚಿಸುವ ಹವ್ಯಾಸವೂ ಇರಬಾರದು ಆದರೆ ಶರೀರದ ಲೆಕ್ಕದಿಂದ ಯಾವ ಅವಶ್ಯಕ ಸಮಯ ಬೇಕೋ ಅದರಮೇಲೆ ಗಮನವನ್ನಿಡಿ. ಕೆಲಕೆಲವೊಮ್ಮೆ ಯಾವುದೇ ಸೇವೆಯ ಅವಕಾಶವಿದ್ದಾಗ ಒಂದೆರಡು ತಿಂಗಳಿನಲ್ಲಿ 2-4 ಬಾರಿ ತಡವಾದರೆ ಅದು ಬೇರೆಯ ಮಾತಾಗಿದೆ ಆದರೆ ಒಂದುವೇಳೆ ನಿಯಮಿತ ರೂಪದಿಂದ ಯಾವಾಗಲೂ ಶರೀರವು ಸುಸ್ತಾಗಿದ್ದರೆ ನೆನಪಿನಲ್ಲಿ ಅಂತರವಾಗುವುದು. ಹೇಗೆ ಸೇವೆಯ ಕಾರ್ಯಕ್ರಮ ಮಾಡಿಕೊಳ್ಳುತ್ತೀರಿ, ನಾಲ್ಕು ಗಂಟೆಗಳ ಸಮಯವನ್ನು ತೆಗೆಯಬೇಕೆಂದರೂ ಸಹ ತೆಗೆಯುತ್ತೀರಿ. ಅದೇ ರೀತಿ ನೆನಪಿಗಾಗಿಯೂ ನಿಶ್ಚಿತ ಸಮಯವನ್ನು ತೆಗೆಯಲೇಬೇಕಾಗಿದೆ. ಇದನ್ನೂ ಅವಶ್ಯಕವೆಂದು ತಿಳಿದು ಈ ವಿಧಿಯಿಂದ ತನ್ನ ಕಾರ್ಯಕ್ರಮ ಮಾಡಿಕೊಳ್ಳಿ. ಆಲಸಿಗಳಾಗಬಾರದು ಆದರೆ ಶರೀರಕ್ಕೆ ವಿಶ್ರಾಂತಿ ಕೊಡಬೇಕಾಗಿದೆ - ಈ ವಿಧಿಯಿಂದ ನಡೆಯಿರಿ ಏಕೆಂದರೆ ದಿನ-ಪ್ರತಿದಿನ ಸೇವೆಯಂತೂ ಇನ್ನೂ ತೀವ್ರ ಗತಿಯಿಂದ ಮುಂದುವರೆಯುವ ಸಮಯ ಬರುತ್ತಿದೆ. ಒಳ್ಳೆಯದು - ಈ ಒಂದು ವರ್ಷದ ಕಾರ್ಯವು ಪೂರ್ಣವಾಗಿ ಬಿಟ್ಟರೆ ನಂತರ ವಿಶ್ರಾಂತಿ ತೆಗೆದುಕೊಳ್ಳೋಣ, ಸರಿಪಡಿಸಿಕೊಳ್ಳೋಣ. ಆಗ ನೆನಪನ್ನು ಇನ್ನೂ ಹೆಚ್ಚಿಸಿಕೊಳ್ಳೋಣವೆಂದು ತಾವು ತಿಳಿದುಕೊಳ್ಳುತ್ತೀರಿ ಆದರೆ ಸೇವಾಕಾರ್ಯವಂತೂ ದಿನ-ಪ್ರತಿದಿನ ಹೊಸದಕ್ಕಿಂತ ಹೊಸದು ಮತ್ತು ದೊಡ್ಡದಕ್ಕಿಂತ ದೊಡ್ಡದಾಗಿ ಆಗಲಿದೆ. ಆದ್ದರಿಂದ ಸದಾ ಬ್ಯಾಲೆನ್ಸ್ ಇಟ್ಟುಕೊಳ್ಳಿ. ಅಮೃತವೇಳೆ ಫ್ರೆಷ್ ಆಗಿ ನಂತರ ಅದೇ ಕೆಲಸವನ್ನು ಇಡೀ ದಿನದಲ್ಲಿ ಸಮಯ ಪ್ರಮಾಣ ಮಾಡಿ ಆಗ ತಂದೆಯ ಅಧಿಕ ಆಶೀರ್ವಾದಗಳೂ ಸಿಗುವುದು ಮತ್ತು ಬುದ್ಧಿಯು ಫ್ರೆಷ್ ಆಗಿರುವ ಕಾರಣ ಬಹು ಬೇಗನೆ ಹಾಗೂ ಸಫಲತಾಪೂರ್ವಕವಾಗಿ ಕಾರ್ಯವನ್ನು ಮಾಡಬಲ್ಲಿರಿ. ತಿಳಿಯಿತೆ. |
ಬಾಪ್ದಾದಾ ನೋಡುತ್ತಿದ್ದೇವೆ - ಮಕ್ಕಳಲ್ಲಿ ಬಹಳ ಉಲ್ಲಾಸವಿದೆ. ಆದ್ದರಿಂದ ಶರೀರದ ಬಗ್ಗೆಯೂ ಯೋಚಿಸುವುದಿಲ್ಲ. ಉಲ್ಲಾಸ-ಉತ್ಸಾಹದಿಂದ ಮುಂದುವರೆಯುತ್ತಿದ್ದಾರೆ. ಮುಂದುವರೆಯುವುದು ಬಾಪ್ದಾದಾರವರಿಗೆ ಇಷ್ಟವಾಗುತ್ತದೆ ಆದರೆ ಸಮತೋಲನೆಯು ಅವಶ್ಯವಾಗಿ ಬೇಕು. ಭಲೆ ಮಾಡುತ್ತಿರುತ್ತೀರಿ, ನಡೆಯುತ್ತಿರುತ್ತೀರಿ ಆದರೆ ಕೆಲಕೆಲವೊಮ್ಮೆ ಹೇಗೆ ಬಹಳ ಕೆಲಸವಿದ್ದರೆ ಆ ಹೆಚ್ಚು ಕೆಲಸದಲ್ಲಿ ಒಂದನೆಯದಾಗಿ, ಬುದ್ಧಿಯು ಸುಸ್ತಾಗುವ ಕಾರಣ ಎಷ್ಟು ಬಯಸುತ್ತೀರೋ ಅಷ್ಟು ಮಾಡಲಾಗುವುದಿಲ್ಲ ಮತ್ತು ಇನ್ನೊಂದು ಬಹಳ ಕೆಲಸವಿರುವ ಕಾರಣ ಯಾರ ಮೂಲಕವಾದರೂ ಸ್ವಲ್ಪ ಏರುಪೇರಾದರೂ ಸಹ ಸುಸ್ತಾಗಿರುವ ಕಾರಣ ಸಿಡುಕುವಿಕೆ ಬಂದು ಬಿಡುವುದು. ಅದರಿಂದ ಖುಷಿಯು ಕಡಿಮೆಯಾಗಿ ಬಿಡುತ್ತದೆ. ಹಾಗೆ ನೋಡಿದರೆ ಒಳಗೆ ಸರಿಯಾಗಿಯೇ ಇರುತ್ತೀರಿ, ಸೇವೆಯ ಬಲವೂ ಸಿಗುತ್ತಿದೆ, ಖುಷಿಯೂ ಸಿಗುತ್ತಿದೆ ಆದರೂ ಸಹ ಶರೀರವಂತೂ ಹಳೆಯದಲ್ಲವೆ. ಆದ್ದರಿಂದ ಸೇವೆಯ ಅತಿಯಲ್ಲಿ ಬರಬೇಡಿ. ಸಮತೋಲನೆಯನ್ನು ಇಟ್ಟುಕೊಳ್ಳಿ. ನೆನಪಿನ ಚಾರ್ಟ್ನ ಮೇಲೆ ಸುಸ್ತಿನ ಪ್ರಭಾವವಾಗಬಾರದು. ಎಷ್ಟು ಸೇವೆಯಲ್ಲಿ ಬ್ಯುಜಿಯಾಗಿರುತ್ತೀರೋ, ಭಲೆ ಎಷ್ಟಾದರೂ ಬ್ಯುಜಿಯಾಗಿರಿ ಆದರೆ ಸುಸ್ತನ್ನು ಕಳೆಯುವ ವಿಶೇಷ ಸಾಧನವೆಂದರೆ ಒಂದು ಗಂಟೆ ಅಥವಾ ಎರಡು ಗಂಟೆಗಳಲ್ಲಿ ಒಂದು ನಿಮಿಷವಾದರೂ ಶಕ್ತಿಶಾಲಿ ನೆನಪಿಗಾಗಿ ಅವಶ್ಯವಾಗಿ ತಿಳಿಯಿರಿ. ಹೇಗೆ ಶರೀರದಲ್ಲಿ ಯಾವುದೇ ನಿರ್ಬಲತೆಯಿದ್ದರೆ ಶರೀರಕ್ಕೆ ಶಕ್ತಿ ಕೊಡುವುದಕ್ಕಾಗಿ ವೈದ್ಯರು ಎರಡೆರಡು ಗಂಟೆಗಳ ನಂತರ ಶಕ್ತಿಯ ಟಾನಿಕ್ನ್ನು ಕುಡಿಸಲು ಕೊಡುತ್ತಾರೆ. ಸಮಯವನ್ನು ತೆಗೆದು ಟಾನಿಕ್ನ್ನು ಕುಡಿಯಲೇ ಬೇಕಾಗುತ್ತದೆಯಲ್ಲವೆ ಅದೇರೀತಿ ಮಧ್ಯ-ಮಧ್ಯದಲ್ಲಿ ಒಂದುವೇಳೆ ಒಂದು ನಿಮಿಷವಾದರೂ ಶಕ್ತಿಶಾಲಿ ನೆನಪಿಗಾಗಿ ಸಮಯ ತೆಗೆಯಿರಿ ಅದರಲ್ಲಿ ಎ, ಬಿ, ಸಿ ಎಲ್ಲಾ ವಿಟಮಿನ್ಗಳೂ ಬಂದು ಬಿಡುತ್ತವೆ. |
ತಿಳಿಸಿದೆವಲ್ಲವೆ - ಶಕ್ತಿಶಾಲಿ ನೆನಪು ಸದಾ ಏಕೆ ಇರುವುದಿಲ್ಲ? ಎಂದು. ಯಾವಾಗ ತಂದೆಯವರಾಗಿದ್ದೀರಿ ಮತ್ತು ತಂದೆಯು ತಮ್ಮವರಾಗಿದ್ದಾರೆ, ಸರ್ವ ಸಂಬಂಧವಿದೆ, ಹೃದಯದ ಸ್ನೇಹವಿದೆ, ಜ್ಞಾನಪೂರ್ಣರಾಗಿದ್ದೀರಿ, ಪ್ರಾಪ್ತಿಯ ಅನುಭವಿಗಳಾಗಿದ್ದೀರಿ ಆದರೂ ಸಹ ಸದಾ ಶಕ್ತಿಶಾಲಿ ನೆನಪು ಏಕೆ ಇರುವುದಿಲ್ಲ, ಅದಕ್ಕೆ ಕಾರಣವೇನು? ತಮ್ಮ ನೆನಪಿನ ಬುದ್ಧಿಯೋಗವನ್ನು ಇಟ್ಟುಕೊಳ್ಳುವುದಿಲ್ಲ. ಬುದ್ಧಿಯ ಯೋಗವು ತುಂಡಾಗುತ್ತದೆ ಆದ್ದರಿಂದ ಮತ್ತೆ ಜೋಡಿಸುವುದರಲ್ಲಿ ಸಮಯವೂ ಹಿಡಿಸುತ್ತದೆ, ಪರಿಶ್ರಮವೂ ಆಗುತ್ತದೆ ಮತ್ತು ಶಕ್ತಿಶಾಲಿಗಳ ಬದಲು ನಿರ್ಬಲರಾಗಿ ಬಿಡುತ್ತೀರಿ. ವಿಸ್ಮೃತಿಯಂತೂ ಆಗಲು ಸಾಧ್ಯವಿಲ್ಲ, ನೆನಪಿರುತ್ತದೆ ಆದರೆ ಸದಾ ಶಕ್ತಿಶಾಲಿ ನೆನಪು ಸ್ವತಹ ಇರಬೇಕೆಂದರೆ ಈ ಬುದ್ಧಿಯೋಗವು ತುಂಡಾಗಬಾರದು. ಪ್ರತೀ ಸಮಯ ಬುದ್ಧಿಯಲ್ಲಿ ನೆನಪಿನ ಲಿಂಕ್ ಜೋಡಣೆಯಾಗಿರಲಿ. ಇದು ವಿಧಿಯಾಗಿದೆ. ಇದನ್ನೂ ಸಹ ಅವಶ್ಯಕವೆಂದು ತಿಳಿಯಿರಿ. ಹೇಗೆ ಆ ಕೆಲಸಗಳನ್ನು ಅವಶ್ಯಕವಾಗಿವೆ, ಈ ಯೋಜನೆಯನ್ನು ಪೂರ್ಣ ಮಾಡಿಯೇ ಎದ್ದೇಳಬೇಕೆಂದು ತಿಳಿದುಕೊಳ್ಳುತ್ತೀರಿ ಆದ್ದರಿಂದ ಸಮಯವನ್ನೂ ಕೊಡುತ್ತೀರಿ, ಶಕ್ತಿಯನ್ನೂ ತೊಡಗಿಸುತ್ತೀರಿ ಹಾಗೆಯೇ ಇದೂ ಸಹ ಅತ್ಯವಶ್ಯಕವಾಗಿದೆ. ಈ ಕೆಲಸವನ್ನು ಮೊದಲು ಮುಗಿಸಿ ನಂತರ ನೆನಪು ಮಾಡೋಣವೆಂದು ಇದನ್ನು ಹಿಂದಕ್ಕೆ ಸರಿಸಬೇಡಿ. ಸಮಯ ಪ್ರಮಾಣ ತಮ್ಮ ಕಾರ್ಯಕ್ರಮದಲ್ಲಿ ಇದನ್ನು ಮೊದಲು ಸೇರಿಸಿ. ಹೇಗೆ ಸೇವೆಯ ಯೋಜನೆಗಾಗಿ ಎರಡು ಗಂಟೆಯ ಸಮಯವನ್ನು ನಿಗಧಿ ಪಡಿಸುತ್ತೀರಿ - ಮೀಟಿಂಗ್ ಮಾಡುತ್ತೀರೋ ಅಥವಾ ಪ್ರಾಕ್ಟಿಕಲ್ ಮಾಡುತ್ತೀರೋ, ಸಮಯವನ್ನಂತೂ ತೆಗೆಯುತ್ತೀರಿ. ಆ ಎರಡು ಗಂಟೆಗಳ ಜೊತೆ ಜೊತೆಗೆ ಇದನ್ನೂ ಸಹ ಮಧ್ಯ-ಮಧ್ಯದಲ್ಲಿ ಮಾಡಲೇಬೇಕೆಂದು ನಿಯಮವನ್ನು ಇಟ್ಟುಕೊಳ್ಳಿ. ಒಂದು ಗಂಟೆಯಲ್ಲಿ ಯಾವ ಯೋಜನೆ ಮಾಡುವಿರೋ ಅದು ಅರ್ಧ ಗಂಟೆಯಲ್ಲಿಯೇ ಆಗಿ ಬಿಡುವುದು, ಮಾಡಿ ನೋಡಿ. ಬಹಳ ಫ್ರೆಷ್ನೆಸ್ನ ಕಾರಣ ಅದು ಎರಡು ಗಂಟೆಗೆ ತಾನಾಗಿಯೇ ಎಚ್ಚರವಾಗುತ್ತದೆ, ಅದು ಬೇರೆ ಮಾತಾಗಿದೆ ಆದರೆ ಕಾರ್ಯದ ಕಾರಣ ಜಾಗೃತವಾಗಿ ಇರಬೇಕಾಗುತ್ತದೆ ಎಂದರೆ ಅದರ ಹೆಚ್ಚಿನ ಪ್ರಭಾವವು ಶರೀರದ ಮೇಲೆ ಬೀಳುತ್ತದೆ. ಆದ್ದರಿಂದ ಸಮತೋಲನೆಯ ಮೇಲೆ ಸದಾ ಗಮನವನ್ನಿಡಿ. |
ಬಾಪ್ದಾದಾ ಮಕ್ಕಳು ಇಷ್ಟು ಬ್ಯುಜಿಯಾಗಿರುವುದನ್ನು ನೋಡಿ ಇದನ್ನೇ ಯೋಚಿಸುತ್ತೇವೆ - ಹೋಗಿ ಇವರ ತಲೆಯನ್ನು ಮಾಲೀಷ್ ಮಾಡಬೇಕು. ಆದರೆ ಸಮಯವನ್ನು ತೆಗೆದಿದ್ದೇ ಆದರೆ ವತನದಲ್ಲಿ ಬಾಪ್ದಾದಾ ಮಾಲೀಷ್ನ್ನೂ ಮಾಡಿ ಬಿಡುತ್ತಾರೆ. ಅದು ಲೌಕಿಕ ಮಾಲೀಷ್ನಂತೆ ಅಲ್ಲ, ಅದು ಅಲೌಕಿಕವಾಗಿರುವುದು. ಒಮ್ಮೆಲೆ ಫ್ರೆಷ್ ಆಗಿ ಬಿಡುತ್ತೀರಿ. ಒಂದು ಸೆಕೆಂಡಿನ ಶಕ್ತಿಶಾಲಿ ನೆನಪೂ ಸಹ ತನು-ಮನ ಎರಡನ್ನೂ ಸಹ ಫ್ರೆಷ್ ಮಾಡಿ ಬಿಡುತ್ತದೆ. ತಂದೆಯ ವತನದಲ್ಲಿ ಬಂದು ಬಿಡಿ, ಯಾವ ಸಂಕಲ್ಪ ಮಾಡುವಿರೋ ಅದು ಈಡೇರುವುದು. ಭಲೆ ಶರೀರದ ಸುಸ್ತಿರಲಿ, ಬುದ್ಧಿ ಅಥವಾ ಸ್ಥಿತಿಯ ಸುಸ್ತಿರಲಿ - ತಂದೆಯಂತೂ ಬಂದಿರುವುದೇ ಸುಸ್ತನ್ನು ಕಳೆಯುವುದಕ್ಕಾಗಿ. |
ಇಂದು ಡಬಲ್ ವಿದೇಶಿಯರೊಂದಿಗೆ ವ್ಯಕ್ತಿಗತವಾಗಿ ವಾರ್ತಾಲಾಪ ಮಾಡುತ್ತಿದ್ದೇವೆ. ಬಹಳ ಚೆನ್ನಾಗಿ ಸೇವೆ ಮಾಡಿದ್ದೀರಿ ಮತ್ತು ಮಾಡುತ್ತಲೇ ಇರಬೇಕಾಗಿದೆ. ಸೇವೆ ವೃದ್ಧಿಯಾಗುವುದು - ಇದು ಡ್ರಾಮಾನುಸಾರ ಮಾಡಲ್ಪಟ್ಟಿದೆ. ಈಗಂತೂ ಬಹಳಷ್ಟಾಯಿತು ಎಂದು ತಾವು ಎಷ್ಟಾದರೂ ಆಲೋಚಿಸಿ ಆದರೆ ಡ್ರಾಮಾದ ಪೂರ್ವನಿಶ್ಚಿತವು ಮಾಡಲ್ಪಟ್ಟಿದೆ ಆದ್ದರಿಂದ ಸೇವೆಯ ಯೋಜನೆಗಳು ಬಂದೇ ಬರುತ್ತವೆ ಮತ್ತು ತಾವೆಲ್ಲರೂ ನಿಮಿತ್ತರಾಗಿ ಮಾಡಲೇಬೇಕಾಗಿದೆ. ಈ ಪೂರ್ವ ನಿಶ್ಚಿತವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ. ತಂದೆಯು ಭಲೆ ಒಂದು ವರ್ಷ ಸೇವೆಯಿಂದ ನಿಮಗೆ ವಿಶ್ರಾಂತಿ ಕೊಟ್ಟುಬಿಡಬಹುದು ಆದರೆ ಬದಲಾಗಲು ಸಾಧ್ಯವಿಲ್ಲ. ಸೇವೆಯಿಂದ ಮುಕ್ತರಾಗಿ ಕುಳಿತುಕೊಳ್ಳಲು ಸಾಧ್ಯವೇ? ಹೇಗೆ ನೆನಪು ಬ್ರಾಹ್ಮಣ ಜೀವನದ ಟಾನಿಕ್ ಆಗಿದೆ. ಹಾಗೆಯೇ ಸೇವೆಯೂ ಸಹ ಜೀವನದ ಟಾನಿಕ್ ಆಗಿದೆ. ಈ ಟಾನಿಕ್ ಇಲ್ಲದೆ ಎಂದೂ ಯಾರೂ ಇರಲು ಸಾಧ್ಯವಿಲ್ಲ ಆದರೆ ಸಮತೋಲನೆಯನ್ನು ಖಂಡಿತ ಇಟ್ಟುಕೊಳ್ಳಬೇಕು. ಬುದ್ಧಿಯ ಮೇಲೆ ಹೊರೆ ಆಯಾಗುವಷ್ಟನ್ನೂ ಇಟ್ಟುಕೊಳ್ಳಬೇಡಿ ಅಥವಾ ಎಲ್ಲಾ ಸೇವೆಯನ್ನೂ ಬಿಟ್ಟು ಆಲಸಿಗಳೂ ಆಗಬಾರದು. ಹೊರೆಯೂ ಇರಬಾರದು, ಆಲಸ್ಯವೂ ಆಗಬಾರದು - ಇದಕ್ಕೆ ಬ್ಯಾಲೆನ್ಸ್ ಎಂದು ಹೇಳಲಾಗುತ್ತದೆ. |
ಸದಾ ನೆನಪು ಮತ್ತು ಸೇವೆಯ ಬ್ಯಾಲೆನ್ಸ್ನ ಮೂಲಕ ತಂದೆಯ ಅಶೀರ್ವಾದಕ್ಕೆ ಅಧಿಕಾರಿಗಳು, ಸದಾ ತಂದೆಯ ಸಮಾನ ಡಬಲ್ಲೈಟ್ ಇರುವಂತಹ, ಸದಾ ನಿರಂತರ ಶಕ್ತಿಶಾಲಿ ನೆನಪಿನ ಲಿಂಕ್ನ್ನು ಜೋಡಿಸುವಂತಹ, ಸದಾ ಶರೀರ ಮತ್ತು ಆತ್ಮನನ್ನು ರಿಫ್ರೆಷ್ ಆಗಿಟ್ಟುಕೊಳ್ಳುವಂತಹ, ಪ್ರತೀ ಕರ್ಮವನ್ನು ವಿಧಿಪೂರ್ವಕವಾಗಿ ಮಾಡುವಂತಹ, ಸದಾ ಶ್ರೇಷ್ಠ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವಂತಹ ಶ್ರೇಷ್ಠ, ಸಮೀಪ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಓಂ ಶಾಂತಿ. ಹೇಗೆ ಮಕ್ಕಳಿಗೆ ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತೇನೆಯೋ ಹಾಗೆಯೇ ಈ ಹಾಡುಗಳ ಸಾರವನ್ನೂ ನಿಮಗೆ ತಿಳಿಸುತ್ತೇನೆ. ತಂದೆಯೇ ಎಲ್ಲರ ಆತ್ಮಿಕ ತಂದೆಯಾಗಿದ್ದಾರೆ, ಆತ್ಮಿಕ ಮಕ್ಕಳಿಗೆ ಬ್ರಹ್ಮಾರವರ ತನುವಿನಲ್ಲಿ ಕುಳಿತು ತಿಳಿಸುತ್ತಿದ್ದಾರೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ನೀವು ತಿಳಿದುಕೊಂಡಿದ್ದೀರಿ - ನಮ್ಮದು ವಜ್ರ ಸಮಾನ ಜನ್ಮವಾಗುತ್ತಿದೆ. ತಂದೆಯ ಬಳಿ ಬರುವುದೇ ವಜ್ರ ಸಮಾನ ಜನ್ಮವನ್ನು ಮಾಡಿಕೊಳ್ಳುವುದಕ್ಕಾಗಿ. ಸ್ವರ್ಗವಾಸಿಗಳದು ವಜ್ರ ಸಮಾನ ಜನ್ಮವೆಂದು ಹೇಳಲಾಗುತ್ತದೆ. ಕವಡೆಯ ಸಮಾನ ಜನ್ಮವು ನರಕವಾಸಿಗಳದ್ದಾಗಿದೆ. ನೀವು ಸಂಗಮಯುಗವನ್ನೂ ಸಹ ಅರಿತುಕೊಂಡಿದ್ದೀರಿ, ನಾವೀಗ ಸಂಗಮಯುಗ ವಾಸಿಗಳಾಗಿದ್ದೇವೆ. ಈ ಸಂಗಮಯುಗವು ಎಲ್ಲರಿಗಾಗಿ ಕಲ್ಯಾಣಕಾರಿಯಾಗಿದೆ. ಈ ಸಂಗಮಯುಗದಲ್ಲಿಯೇ ಸರ್ವರ ಗತಿ-ಸದ್ಗತಿಯಾಗುತ್ತದೆ. ಯಾರು ಮಾಡುತ್ತಾರೆ? ಪರಂಧಾಮದಿಂದ ಬರುವ ಯಾತ್ರಿಕ. ಅವರು ಯಾತ್ರಿಕನಾಗಿದ್ದಾರಲ್ಲವೆ. ನೀವು ಯಾತ್ರಿಕರಲ್ಲ, ನೀವು ಬಂದು ಹೋಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಹಳೆಯ ಪ್ರಪಂಚದಲ್ಲಿ ಬಂದು ಮತ್ತೆ ಹಿಂತಿರುಗುತ್ತೇನೆ. ಮಕ್ಕಳಿಗೆ ತಿಳಿದಿದೆ - ಈ ಸೇವೆಯನ್ನು ಮಾಡುವವರು ಕೇವಲ ಒಬ್ಬರೇ ಯಾತ್ರಿಕನಾಗಿದ್ದಾರೆ, ಅವರು ಬಂದು ನಾವು ಮಕ್ಕಳ ಅತಿ ದೊಡ್ಡ ಸೇವೆ ಮಾಡುತ್ತಾರೆ. ಇಂತಹ ಸೇವೆಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಸೇವೆಗಾಗಿಯೇ ಕರೆಯುತ್ತಾರೆ - ತಂದೆಯೇ ಬಂದು ಪತಿತರ ಸೇವೆ ಮಾಡಿರಿ ಎಂದು. ತಂದೆಯು ಹೇಳುತ್ತಾರೆ - ನಾನು ಮಕ್ಕಳ ಸೇವೆಗಾಗಿ ಬಂದಿದ್ದೇನೆ ಏಕೆಂದರೆ ಮಕ್ಕಳು ಬಹಳ ದುಃಖಿಯಾಗಿದ್ದಾರೆ. ನಮ್ಮ ದುಃಖ ದೂರ ಮಾಡಿ ಶಾಂತಿಯನ್ನು ಕೊಡಿ ಎಂದು ಕರೆಯುತ್ತಾರೆ. ಯಾವಾಗಲೂ ಎರಡು ಮಾತುಗಳು ನೆನಪಿರುತ್ತದೆ, ಸುಖ ಮತ್ತು ಶಾಂತಿ. ಇಲ್ಲಿ ದುಃಖ ಮತ್ತು ಅಶಾಂತಿ ಇದೆ ಆದ್ದರಿಂದಲೇ ತಂದೆಯನ್ನು ಕರೆಯುತ್ತಾರೆ. ತಂದೆಯೇ ಬಂದು ಇಡೀ ಸೃಷ್ಟಿಚಕ್ರದ ರಹಸ್ಯವನ್ನು ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳು ತಿಳಿದುಕೊಂಡಿದ್ದೀರಿ - ಈಗ ಭಕ್ತಿಮಾರ್ಗವು ಸಮಾಪ್ತಿಯಾಗುತ್ತದೆ. ಕಲಿಯುಗದ ಅಂತ್ಯವೆಂದರೆ ಭಕ್ತಿಯು ಕೆಳಗಿಳಿಯುತ್ತಾ ಬರುತ್ತದೆ. ಜ್ಞಾನದಿಂದ ನಿಮ್ಮದು ಏರುವ ಕಲೆಯಾಗುತ್ತದೆ. ನೀವು ಶ್ರೇಷ್ಠಾತಿ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ನಂತರ ಆ ಪ್ರಾಲಬ್ಧದ ಸುಖವು ಕಡಿಮೆ ಆಗತೊಡಗುತ್ತದೆ. ಭಕ್ತಿಯಂತೂ ಭಾರತದಲ್ಲಿರುವಷ್ಟು ಮತ್ತೆಲ್ಲಿಯೂ ಇಲ್ಲ, ಅರ್ಧಕಲ್ಪ ಭಕ್ತಿಯು ನಡೆಯುತ್ತದೆ. ಯಾವಾಗಿನಿಂದ ದ್ವಾಪರವು ಆರಂಭವಾಗುತ್ತದೆಯೋ ಮತ್ತು ಅನ್ಯ ಧರ್ಮಗಳು ಸ್ಥಾಪನೆಯಾಗಲು ಆರಂಭವಾಗುತ್ತದೆಯೋ ಆಗಿನಿಂದ ಭಕ್ತಿಯೂ ಆರಂಭವಾಗುತ್ತದೆ. ಭಕ್ತಿಯೂ ಸಹ ಮೊದಲು ಬಹಳ ಚೆನ್ನಾಗಿರುತ್ತದೆ. ಹೇಗೆ ಸ್ವರ್ಗವೂ ಸಹ ಮೊದಲು ಬಹಳ ಸುಂದರವಾಗಿರುತ್ತದೆ ನಂತರ ಕಳೆಯುತ್ತಾ ಹೋದಂತೆ ಕಲೆಗಳೂ ಕಡಿಮೆಯಾಗುತ್ತಾ ಹೋಗುತ್ತವೆ. ಭಕ್ತಿಯು ಆರಂಭವಾದಾಗ ಮೊಟ್ಟ ಮೊದಲು ಶಿವನ ಪೂಜಾರಿಗಳಾಗುತ್ತಾರೆ. ಅರ್ಧಕಲ್ಪ ಯಾವುದೇ ಪೂಜೆಯಾಗುವುದಿಲ್ಲ. ನಂತರ ಭಕ್ತಿಮಾರ್ಗವು ಆರಂಭವಾಗುತ್ತದೆ ಮತ್ತು ಅನ್ಯ ಧರ್ಮಗಳೂ ಸ್ಥಾಪನೆಯಾಗುತ್ತವೆ. ಪೂರ್ಣ ಅರ್ಧಕಲ್ಪ ಭಕ್ತಿಯು ನಡೆಯುತ್ತದೆ, ಇಷ್ಟೊಂದು ಭಕ್ತಿಯನ್ನು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಇದನ್ನೂ ಸಹ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಯಾವ ತಂದೆಯು ಎಲ್ಲರಿಗೆ ವಿಶೇಷವಾಗಿ ಭಾರತಕ್ಕೆ ಸದ್ಗತಿ ನೀಡುತ್ತಾರೆಯೋ, ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆಯೋ ಆ ದೂರ ದೇಶದ ಯಾತ್ರಿಕನು ನಾವು ಮಕ್ಕಳಿಗೆ ಪುನಃ ಸ್ವರ್ಗದ ರಾಜ್ಯಭಾಗ್ಯವನ್ನು ಕೊಡಲು ಬಂದಿದ್ದಾರೆ, ಆಸ್ತಿಯೂ ಸಹ ಎಷ್ಟು ಬಲವಾಗಿತ್ತು! ಆದರೆ ಒಂದು ಮಾತೂ ಸಹ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಭಾರತದಲ್ಲಿ ಎಷ್ಟೊಂದು ಭಕ್ತಿ ಮಾಡುತ್ತಾರೆ, ಎಷ್ಟೊಂದು ಮಂದಿರಗಳಿವೆ! ಭಾರತಖಂಡದಲ್ಲಿ ಅನೇಕ ಮಂದಿರಗಳಿವೆ. ಇದು ಯಾರ ಮಂದಿರವೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಮೊಟ್ಟ ಮೊದಲು ಶಿವ ತಂದೆಯ ಮಂದಿರವಾಗುತ್ತದೆ ನಂತರ ದೇವತೆಗಳ ಮಂದಿರವಾಗುತ್ತದೆ, ಆ ಮಂದಿರಗಳೂ ಸಹ ನಿಮ್ಮ ಸನ್ಮುಖದಲ್ಲಿ ನಿಂತಿದೆ. ಒಂದು ಕಡೆ ಶಿವ ತಂದೆಯ ಪೂಜೆ ಮಾಡುತ್ತಿರುತ್ತಾರೆ, ಇನ್ನೊಂದು ಕಡೆ ಶಿವ ತಂದೆಯು ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಿದ್ದಾರೆ. ನೀವಿಲ್ಲಿ ಪೂಜ್ಯ ದೇವತೆಗಳಾಗಲು ಬಂದಿದ್ದೀರಿ, ಯಾರೆಲ್ಲಾ ದೇವತೆಗಳ ಪೂಜಾರಿಗಳಿದ್ದಾರೆಯೋ ವಾಸ್ತವದಲ್ಲಿ ಅವರೂ ಬಂದು ಇಲ್ಲಿ ಬ್ರಾಹ್ಮಣರಾಗುತ್ತಾರೆ. ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ. ಎಲ್ಲರೂ ಒಟ್ಟಿಗೆ ಓದಲು ಸಾಧ್ಯವಿಲ್ಲ, ಸಮಯ ಹಿಡಿಸುತ್ತದೆ. ಕಲ್ಪದ ಮೊದಲೂ ಯಾರು ಓದಿದ್ದರೋ ಅವರೇ ಪುನಃ ಓದುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಓದಿಸುತ್ತಾ ಇರಬೇಕಾಗಿದೆ. ಎಲ್ಲರಿಗೆ ತಂದೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ ಯಾವುದರಿಂದ ಮನುಷ್ಯರು ಸ್ವರ್ಗದ ಮಾಲೀಕರಾಗಬಹುದು ಆ ರಹಸ್ಯವನ್ನು ಬಂದು ತಿಳಿದುಕೊಳ್ಳಿ. ಈ ನಾಟಕವು ಹೇಗೆ ಸುತ್ತುತ್ತದೆ ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ. ಲಕ್ಷಾಂತರ ವರ್ಷಗಳ ಯಾವುದೇ ಕಥೆಯನ್ನು ತಿಳಿಸಲು ಸಾಧ್ಯವಿಲ್ಲ, ನಿಮಗೆ ತಿಳಿದಿದೆ - 5000 ವರ್ಷಗಳ ಮೊದಲು ಏನಿತ್ತು, ಯಾರ ರಾಜ್ಯವಿತ್ತು! ಭಾರತದಲ್ಲಿ ನಾವು ಪೂಜ್ಯ ದೇವತೆಗಳ ರಾಜ್ಯವಿತ್ತು, ನೆನಪು ಬಂದಿತಲ್ಲವೆ - ನಾವು ಪೂಜ್ಯರಾಗಿದ್ದೆವು ನಂತರ ಪೂಜಾರಿಗಳಾದೆವು. ನಾವೇ ಪೂಜ್ಯರಾಗಿದ್ದೆವು, ನಾವೇ 84 ಜನ್ಮಗಳನ್ನು ತೆಗೆದುಕೊಂಡೆವು ಎಂಬುದು ಮೊದಲು ತಿಳಿದಿರಲಿಲ್ಲ. 84 ಜನ್ಮಗಳ ಕಥೆಯು ಲಕ್ಷ್ಮೀ-ನಾರಾಯಣರದಾಗಿದೆ. ನೀವು ತಮ್ಮ 84 ಜನ್ಮಗಳ ಕಥೆಯನ್ನು ತಿಳಿಸುತ್ತೀರಿ. ಅವರಿಗಂತೂ ತಮ್ಮ ಕಥೆಯನ್ನು ಕುಳಿತು ಬರೆಯುವುದರಲ್ಲಿ ಬಹಳ ಸಮಯ ಹಿಡಿಸುತ್ತದೆ ಆದರೆ ನೀವು ಒಂದು ನಿಮಿಷದಲ್ಲಿ 84 ಜನ್ಮಗಳ ಕಥೆಯನ್ನು ತಿಳಿಸಬಲ್ಲಿರಿ. ಅವರಾದರೆ ಒಂದೊಂದು ಜನ್ಮದ ಕಥೆಯನ್ನು ಬರೆಯುತ್ತಾರೆ. ಬಾಲ್ಯದಲ್ಲಿ ಏನೇನು ಮಾಡಿದೆವು ಎಂಬುದನ್ನೂ ಸಹ ತಮ್ಮ ಕಥೆಯಾಗಿ ತಿಳಿಸುತ್ತಾರೆ. ನಾವು 84 ಜನ್ಮಗಳ ಚಕ್ರವನ್ನು ಹೇಗೆ ಸುತ್ತುತ್ತೇವೆ, ಇದು ಒಬ್ಬರ ಮಾತಲ್ಲ, ಅನೇಕ ಬ್ರಾಹ್ಮಣರಿದ್ದಾರೆ. ನೀವೇ ಈ ಚಕ್ರವನ್ನು ಅರಿತುಕೊಂಡಿದ್ದೀರಿ. ಈ ಚಕ್ರವನ್ನು ಅರಿತುಕೊಳ್ಳುವುದರಿಂದ ನೀವು ರಾಜ-ರಾಣಿಯರಾಗುತ್ತೀರಿ ಮತ್ತೆ ಅನ್ಯರನ್ನೂ ಮಾಡುತ್ತೀರಿ. ಭಾರತವಾಸಿಗಳು ಮಾಡುವಷ್ಟು ಭಕ್ತಿಯನ್ನು ಮತ್ತ್ಯಾರೂ ಮಾಡುವುದಿಲ್ಲ, ಯಾವುದೆಲ್ಲಾ ಮಠ ಪಂಥ, ಧರ್ಮಗಳಿವೆಯೋ ಅವು ನಮ್ಮ ಭಕ್ತಿಯ ಸಮಯದಲ್ಲಿ ಸ್ಥಾಪನೆಯಾಗುತ್ತದೆ. ಮೊದಲು ನಮ್ಮದು ಎಷ್ಟು ಚಿಕ್ಕ ಹೂಗಳ ವೃಕ್ಷವಾಗಿತ್ತು, ಆತ್ಮಿಕ ಹೂದೋಟವಾಗಿತ್ತು, ನೀವು ಚೈತನ್ಯ ಹೂಗಳಾಗಿದ್ದಿರಿ. ಇದಕ್ಕೆ ಹೂವಿನ ಉದ್ಯಾನ ವನವೆಂದು ಹೇಳಲಾಗುತ್ತದೆ ಮತ್ತೆ ಅದೇ ಮುಳ್ಳುಗಳ ಅರಣ್ಯವಾಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಎಲ್ಲರೂ ಮುಳ್ಳುಗಳಾಗಿ ಬಿಟ್ಟಿದ್ದಾರೆ ಮತ್ತೆ ಮುಳ್ಳುಗಳಿಂದ ಹೇಗೆ ಹೂಗಳಾಗಬೇಕೆಂದು ತಂದೆಯು ತಿಳಿಸುತ್ತಾರೆ. ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುವುದು ಮುಳ್ಳು ಚುಚ್ಚುವುದಾಗಿದೆ. ವಿದ್ಯಾರ್ಥಿ ಜೀವನವು ಅತ್ಯುತ್ತಮ ಜೀವನವೆಂದು ಹೇಳಲಾಗುತ್ತದೆ. ಅದು ಬಹಳ ಚೆನ್ನಾಗಿರುತ್ತದೆ. ಮಕ್ಕಳು ಬಹಳ ಖುಷಿಯಲ್ಲಿ ಓದುತ್ತಿರುತ್ತಾರೆ, ವಿವಾಹವಾದರೆ ಸಾಕು ಒಬ್ಬರು ಇನ್ನೊಬ್ಬರಿಗೆ ಮುಳ್ಳು ಚುಚ್ಚುವುದು ಆರಂಭ ಮಾಡುವರು. ಸತ್ಯಯುಗದಲ್ಲಿ ಯಾರೂ ಈ ರೀತಿ ಮಾಡುವುದಿಲ್ಲ. ನೀವೀಗ ಮತ್ತೆ ಹೂಗಳಾಗುತ್ತೀರಿ. ನಿಮಗೆ ತಿಳಿದಿದೆ - ಭಾರತ ಸ್ವರ್ಗವಾಗಿತ್ತು ಆಗ ಎಷ್ಟೊಂದು ಅಪಾರ ಸುಖವಿತ್ತು! ಚಿನ್ನದ ಗಣಿಗಳಿತ್ತು, ಈಗ ಅದು ಖಾಲಿಯಾಗಿದೆ, ಮತ್ತೆ ನಿಮಗೆ ಚಿನ್ನವು ಸಮೃದ್ಧಿಯಾಗಿ ಸಿಗುವುದು. ಭಾರತದಲ್ಲಿಯೇ ಚಿನ್ನ-ವಜ್ರ, ವೈಡೂರ್ಯಗಳ ಗಣಿಗಳಿತ್ತು ಆ ಸಮಯದಲ್ಲಿ ಅಮೇರಿಕಾ ಮುಂತಾದುವುಗಳು ಯಾವುದೂ ಇರಲಿಲ್ಲ, ಬಾಂಬೆಯೂ ಸಹ ಇರಲಿಲ್ಲ. ಆಶ್ಚರ್ಯವಲ್ಲವೆ. ಕಲಿಯುಗದ ಅಂತ್ಯದಲ್ಲಿ ನೋಡಿ, ಕಾಣುವುದಕ್ಕೂ ಚಿನ್ನವು ಸಿಗುವುದಿಲ್ಲ ಮತ್ತೆ ಸತ್ಯಯುಗದಲ್ಲಿ ಇಷ್ಟೊಂದು ಚಿನ್ನದ ಗಣಿಗಳು ಸಮೃದ್ಧವಾಗಿ ಬಿಡುತ್ತವೆ, ಚಿನ್ನದ ಮಹಲುಗಳು ತಯಾರಾಗಿ ಬಿಡುತ್ತವೆ. ಅದ್ಭುತವಲ್ಲವೆ. ಅಲ್ಲಿ ಗಣಿಗಳಿಂದ ಎಷ್ಟೊಂದು ಚಿನ್ನವನ್ನು ಹೊರತೆಗೆಯುತ್ತಾರೆ, ಇಲ್ಲಿ ಹೇಗೆ ಮಣ್ಣಿನಿಂದ ಇಟ್ಟಿಗೆಗಳನ್ನು ತಯಾರಿಸುವರೋ ಹಾಗೆಯೇ ಅಲ್ಲಿ ಚಿನ್ನದಿಂದ ಇಟ್ಟಿಗೆಗಳು ತಯಾರಾಗುತ್ತವೆ. ಮಾಯಾ ಮಚ್ಛಂದರನ ಆಟವನ್ನು ತೋರಿಸುತ್ತಾರಲ್ಲವೆ. ಧ್ಯಾನದಲ್ಲಿ ನೋಡಿದಾಗ ಚಿನ್ನವೇ ಚಿನ್ನವಿತ್ತು, ಅವಶ್ಯವಾಗಿ ಸತ್ಯಯುಗದಲ್ಲಿ ಚಿನ್ನವೇ ಇರುವುದು. ಇಲ್ಲಿ ನೋಡಿ, ಮಣ್ಣಿನ ಇಟ್ಟಿಗೆಗಳೂ ಸಿಗುವುದಿಲ್ಲ. ಇಲ್ಲಿ ಎಷ್ಟು ರೂಪಾಯಿಗಳಿಗೆ ಇಟ್ಟಿಗೆಗಳು ಸಿಗುತ್ತವೆ, ಅಲ್ಲಿ ಅಷ್ಟು ಚಿನ್ನದ ಇಟ್ಟಿಗೆಗಳು ಸಿಗುತ್ತವೆ. ರಾತ್ರಿ-ಹಗಲಿನ ಅಂತರವಿದೆ ಅಂದಮೇಲೆ ಹೊಸ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನೇ ಪಡೆಯುವ ಪುರುಷಾರ್ಥ ಏಕೆ ಮಾಡಬಾರದು. ಇಲ್ಲಿ ಮೋಹ ಜಾಲದಲ್ಲಿ ಏಕೆ ಸಿಕ್ಕಿ ಹಾಕಿಕೊಳ್ಳುವುದು! |
ತಂದೆಯು ತಿಳಿಸುತ್ತಾರೆ - ಹಳೆಯ ಸಂಬಂಧಗಳಲ್ಲಿ ನೀವು ಎಷ್ಟೊಂದು ದುಃಖವನ್ನು ಪಡೆಯುತ್ತೀರಿ, ಇವನ್ನು ಬಿಟ್ಟು ಬಿಡಿ ಎಂದು ತಂದೆಯು ಹೇಳುವುದಿಲ್ಲ, ಕೇವಲ ಒಬ್ಬ ತಂದೆಯೊಂದಿಗೆ ನಿಮ್ಮ ಬುದ್ಧಿಯೋಗವನ್ನಿಡಿ. ಇದರಿಂದ ನೀವು ವಿಶ್ವದ ಮಾಲೀಕರಾಗಿ ಬಿಡುವಿರಿ. ಮನ್ಮನಾಭವದ ಅರ್ಥವೇ ಆಗಿದೆ - ನನ್ನನ್ನು ನೆನಪು ಮಾಡಿ ಮತ್ತು ವಿಷ್ಣು ಚತುರ್ಭುಜ ಅರ್ಥಾತ್ ವಿಷ್ಣುಪುರಿಯನ್ನು ನೆನಪು ಮಾಡಿರಿ. ಮೂಲ ಅಕ್ಷರವು ಒಂದೇ ಆಗಿದೆ - ಭಕ್ತಿಮಾರ್ಗದಲ್ಲಿ ಬಹಳಷ್ಟು ಪಂಚಾಯಿತಿ ಇದೆ. ಈಗ ನೀವೆಲ್ಲಾ ಆತ್ಮರು ಒಬ್ಬ ಪರಮಾತ್ಮ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೀರಿ. ಅವರು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಎಲ್ಲಾ ಆತ್ಮರು ಅವರನ್ನು ನೆನಪು ಮಾಡುತ್ತಾರೆ, ನೀವು ಆತ್ಮಿಕ ಪ್ರಿಯತಮೆಯರು ಒಂದೇ ಬಾರಿ ಆತ್ಮಿಕ ಪ್ರಿಯತಮನ ಪ್ರೇಮಿಕೆಯರಾಗಿದ್ದೀರಿ. ಉಳಿದೆಲ್ಲಾ ಮನುಷ್ಯರು ದೈಹಿಕ ಪ್ರಿಯತಮ-ಪ್ರಿಯತಮೆಯರಾಗಿದ್ದಾರೆ. ಈಗ ಬೇಹದ್ದಿನ ಪ್ರಿಯತಮೆಯರಿಗೆ ಬೇಹದ್ದಿನ ಪ್ರಿಯತಮನು ಬಂದು ಸಿಕ್ಕಿದ್ದಾರೆ, ಬಂದು ನಮ್ಮನ್ನು ಪತಿತರಿಂದ ಪಾವನ ಮಾಡು ಎಂದು ಅವರಿಗೇ ಹೇಳುತ್ತಾರೆ, ಅವರೊಬ್ಬರನ್ನೇ ಕರೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಪತಿತರಾಗಿದ್ದೇವೆ ಆದ್ದರಿಂದ ಪತಿತ-ಪಾವನ ಬನ್ನಿ ಎಂದು ಕರೆಯುತ್ತೇವೆ. ಕುಂಭ ಮೇಳವಾಗುತ್ತದೆ, ಎಷ್ಟೊಂದು ಮಂದಿ ಹೋಗಿ ಗಂಗಾ ಸ್ನಾನ ಮಾಡುತ್ತಾರೆ. ಇದರಿಂದ ಲಾಭವೇನೂ ಇಲ್ಲ, ಯಾರೂ ಪಾವನರಾಗುವುದೂ ಇಲ್ಲ. ಈಗ ತಂದೆಯು ಬಂದು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ನಿಮ್ಮ ಮೇಲೆ ಜ್ಞಾನವೃಷ್ಟಿಯಾಗುತ್ತದೆ, ಇದರಿಂದ ಮುಳ್ಳಿನ ಕಾಡು ಹೂವಿನ ಉದ್ಯಾನವನ ಆಗಿ ಬಿಡುವುದು. ನಿಮಗೆ ತಿಳಿದಿದೆ - ನಮ್ಮ ರಾಜ್ಯವಿದ್ದಾಗ ಅಲ್ಲಿ ಯಾರೂ ಪತಿತರಿರುವುದೇ ಇಲ್ಲ. ಇಡೀ ವಿಶ್ವದ ಮೇಲೆ ಜ್ಞಾನದ ಮಳೆಯಾಗುತ್ತದೆ, ಎಲ್ಲವೂ ಹಚ್ಚ ಹಸುರಾಗುತ್ತವೆ. ವಜ್ರ ವೈಡೂರ್ಯಗಳ ಗಣಿಗಳೂ ಸಹ ಹೊಸದಾಗಿ ಬಿಡುತ್ತವೆ. ಈಗ ನೀವು ಮಕ್ಕಳು ಎಷ್ಟೊಂದು ಖುಷಿಯಲ್ಲಿರಬೇಕು, ಸನ್ಮುಖದಲ್ಲಿ ನೋಡುತ್ತೀರಿ, ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ಭಲೆ ನೀವು ಎಲ್ಲಿಯಾದರೂ ಕುಳಿತುಕೊಳ್ಳಿ, ಸ್ನಾನ ಮಾಡುತ್ತಿದ್ದರೂ ಸಹ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ಆ ಸಮಯದಲ್ಲಿ ನೆನಪು ಮಾಡಲು ಬಿಡುವಿರುತ್ತದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಸಂಪಾದನೆಯಿದೆ. ನೆನಪಿನಿಂದಲೇ ಸಂಪಾದನೆಯಾಗುವುದು. ನೆನಪಿನಿಂದ ಸಂಪಾದನೆಯಾಗುತ್ತದೆ ಎಂದು ಎಂದಾದರೂ ಕೇಳಿದ್ದೀರಾ!! ಎಷ್ಟು ದೊಡ್ಡ ಸಂಪಾದನೆಯಿದೆ, ನೀವು ವಿಷ್ಣುಪುರಿಗೆ ಮಾಲೀಕರಾಗಿ ಬಿಡುತ್ತೀರಿ. ನಿಮಗೆ ತಿಳಿದಿದೆ - ನಾವಾತ್ಮರ ತಂದೆಯು ನಿರಾಕಾರನಾಗಿದ್ದಾರೆ, ಅವರು ಈ ಶರೀರದ (ಬ್ರಹ್ಮಾ) ಆಧಾರ ತೆಗೆದುಕೊಂಡಿದ್ದಾರೆ, ಭಗೀರಥನ ವರ್ಣನೆಯಿದೆಯಲ್ಲವೆ. ಭಾಗ್ಯಶಾಲಿ ರಥವಾಗಿದೆ ಯಾವ ರಥದಲ್ಲಿ ಪರಮಪಿತ ಪರಮಾತ್ಮನು ಸವಾರಿ ಮಾಡುತ್ತಾರೆ. ಆತ್ಮಕ್ಕೆ ರಥವು ಯಾವಾಗ ರಥವು ತಯಾರಾಗಿ ಬಿಡುವುದೋ ಆಗ ಕೂಡಲೇ ಆತ್ಮವು ಬಂದು ಪ್ರವೇಶ ಮಾಡುತ್ತದೆ. ತಂದೆಯು ಈ ರಥದಲ್ಲಿ ಬಂದು ಕೇವಲ ಜ್ಞಾನವನ್ನು ತಿಳಿಸಬೇಕಾಗಿದೆ. ಇವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ವಾನಪ್ರಸ್ಥ ಸ್ಥಿತಿಯಾದಾಗ ತಂದೆಯು ಹೇಳುತ್ತಾರೆ - ನಾನು ಬಂದು ಇವರಲ್ಲಿ ಪ್ರವೇಶ ಮಾಡುತ್ತೇನೆ. ಅಥವಾ ಈ ರಥದಲ್ಲಿ ವಿರಾಜಮಾನ ಆಗುತ್ತೇನೆ ಬಾಕಿ ಯಾವುದೇ ಕುದುರೆ ಗಾಡಿಯ ರಥದ ಮಾತಿಲ್ಲ. ಈಗ ನಿಮಗೆ ಈ ಜ್ಞಾನವು ಸಿಕ್ಕಿದೆ. ತಂದೆಯು ಕುಳಿತು ನೀವು ಮಕ್ಕಳಿಗೆ ಸನ್ಮುಖದಲ್ಲಿ ತಿಳಿಸುತ್ತಾರೆ. ನಿಮಗಂತೂ ಬಹಳ ಖುಷಿಯಿರಬೇಕು. ಐ.ಸಿ.ಎಸ್.,ನ ಪರೀಕ್ಷೆಯನ್ನು ಓದುತ್ತಾರೆಂದರೆ ಬಹಳ ನಶೆಯಿರುತ್ತದೆ, ಅದು ಎಲ್ಲದಕ್ಕಿಂತ ಉನ್ನತ ಪರೀಕ್ಷೆಯಾಗಿರುತ್ತದೆ. ನಿಮ್ಮದೂ ಸಹ ಇದು ವಿದ್ಯೆಯಾಗಿದೆ. ಇದು ಭಗವಂತನ ಪಾಠಶಾಲೆಯಾಗಿದೆ ಅಂದಮೇಲೆ ಈಗ ಪ್ರಶ್ನೆಯೂ ಉದ್ಭವವಾಗುತ್ತದೆ - ಭಗವಂತ ಯಾರು? ಶ್ರೀಕೃಷ್ಣನೋ ಅಥವಾ ಶಿವ ತಂದೆಯೋ? ಎಲ್ಲರ ಭಗವಂತನು ಯಾರು? ಎಲ್ಲರೂ ಒಬ್ಬ ನಿರಾಕಾರನನ್ನು ಬಿಟ್ಟರೆ ಕೃಷ್ಣನನ್ನು ಒಪ್ಪುವುದಿಲ್ಲ. ಎಲ್ಲಾ ಆತ್ಮರಿಗೆ ತಂದೆಯು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ, ಅವರು ಸದಾ ಪರಮಧಾಮದಲ್ಲಿರುತ್ತಾರೆ. ಮಕ್ಕಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಒಂದೇ ಬಾರಿ ಬರುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಆ ತಂದೆಯೇ ಕಲ್ಪ-ಕಲ್ಪವೂ ಬಂದು ನಮ್ಮನ್ನು ಗುಲಾಮರಿಂದ ರಾಜರನ್ನಾಗಿ ಮಾಡುತ್ತಾರೆ. ಭಾರತವು ಈಗ ಗುಲಾಮನಾಗಿದೆ ಅಲ್ಲವೆ! ಇನ್ನೊಂದು ಜನ್ಮದಲ್ಲಿ ಏನಾಗಬೇಕು ಎಂಬುದು ನಿಮಗೆ ಸಾಕ್ಷಾತ್ಕಾರವಾಗಿದೆ. ವಿನಾಶದ ಸಾಕ್ಷಾತ್ಕಾರವನ್ನು ನೋಡಿದ್ದೀರಿ, ಸ್ಥಾಪನೆಯ ಸಾಕ್ಷಾತ್ಕಾರವೂ ಆಗಿದೆ. ಭಗವಾನುವಾಚ - ನಾನು ನಿಮ್ಮನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಬಹಳ ದಾನ-ಪುಣ್ಯ ಮಾಡಿದರೆ ಕೆಲವರಿಗೆ ಅಲ್ಪಕಾಲದ ಸುಖ ಸಿಗುತ್ತದೆ. ರಾಜರ ಬಳಿ ಜನ್ಮ ಪಡೆದು ಕೂಡಲೇ ಸತ್ತು ಹೋಗುತ್ತಾರೆ. ಕೆಲವರು ಗರ್ಭದಲ್ಲಿಯೇ ಸತ್ತು ಹೋಗುತ್ತಾರೆ, ಕೆಲವರು ಕುರುಡ-ಕುಂಟ, ಕಿವುಡನಾಗುತ್ತಾರೆ. ಎಂತಹ ಕರ್ಮ ಮಾಡುವರೋ ಅಂತಹ ಪದವಿಯನ್ನು ಪಡೆಯುತ್ತಾರೆ. ಈಗ ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಬಾಬಾ, ಬಲಿಹಾರಿಯಾಗುತ್ತೇವೆ ಎಂದು ನೀವು ಹೇಳುತ್ತೀರಿ ಅಂದಮೇಲೆ ಅವಶ್ಯವಾಗಿ ರಾಜ್ಯವನ್ನೂ ನೀವೇ ಪಡೆಯುತ್ತೀರಿ. ಭಾರತಕ್ಕೆ ಮಹಾದಾನಿ ಖಂಡವೆಂದು ಹೇಳಲಾಗುತ್ತದೆ. ಇಲ್ಲಿ ಬಹಳ ದಾನ ಪುಣ್ಯ ಮಾಡುತ್ತಾರೆ. ಇದು ಮತ್ತೆ ಭಕ್ತಿಮಾರ್ಗದಲ್ಲಿ ಪ್ರಾರಂಭವಾಗುತ್ತದೆ. ಆಗ ತಂದೆಯು ನಿಮಗೆ 21 ಜನ್ಮಗಳಿಗಾಗಿ ದಾನ ಕೊಡುತ್ತಾರೆ. ನೀವೀಗ ತಂದೆಗೆ ಬಲಿಹಾರಿಯಾಗುತ್ತೀರಿ, ತನು-ಮನ-ಧನ ಎಲ್ಲವನ್ನೂ ಕೊಟ್ಟು ಬಿಟ್ಟಿರಿ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಟ್ರಸ್ಟಿಯಾಗಿರಿ. ತಮ್ಮ ಗೃಹಸ್ಥವನ್ನೂ ಸಂಭಾಲನೆ ಮಾಡಿರಿ, ಎಲ್ಲವೂ ಶಿವ ತಂದೆಯದಾಗಿದೆ. ಬಾಬಾ, ನಾನು ನಿಮ್ಮವನಾಗಿದ್ದೇನೆ, ನಿಮ್ಮನ್ನೇ ನೆನಪು ಮಾಡುತ್ತೇನೆ ಎಂದು ಹೃದಯದಿಂದ ಸಮರ್ಪಣೆ ಮಾಡುತ್ತಾರೆ. ಆಗ ತಂದೆಯು ಹೇಳುತ್ತಾರೆ, ಭಲೆ ಮಹಲಿನಲ್ಲಿರಿ, ತಿನ್ನಿರಿ, ತಿರುಗಾಡಿರಿ. ಮೋಜನ್ನು ಆಚರಿಸಿ ಆದರೆ ಕೇವಲ ನನ್ನನ್ನು ನೆನಪು ಮಾಡಿದರೆ ನೀವು ಬಹಳ ಖುಷಿಯಲ್ಲಿ ಇರುತ್ತೀರಿ. ನೀವು ವಿಶ್ವದ ಮಾಲೀಕರಾಗಿದ್ದಿರಿ, ಈಗ ಪುನಃ ಪುರುಷಾರ್ಥ ಮಾಡಿ ಅವರಂತೆಯೇ ಆಗುತ್ತೀರಿ. ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಯೋಗಬಲದಿಂದಲೇ ನೀವು ವಿಕರ್ಮಾಜೀತರಾಗುತ್ತೀರಿ, ತಂದೆಯ ಬಲದಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ರಾಜ್ಯ ಪದವಿಯನ್ನು ಪಡೆಯಲು ತಂದೆಯ ಮೇಲೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ. ತನು-ಮನ-ಧನ ಎಲ್ಲವನ್ನೂ ಸಮರ್ಪಣೆ ಮಾಡಿ ಟ್ರಸ್ಟಿಯಾಗಿರಬೇಕಾಗಿದೆ. ವಿಕರ್ಮಾಜೀತರಾಗುವ ಪುರುಷಾರ್ಥ ಮಾಡಿರಿ. |
2. ನೆನಪಿನಲ್ಲಿಯೇ ಸಂಪಾದನೆಯಿದೆ ಆದ್ದರಿಂದ ನಿರಂತರ ನೆನಪಿನಲ್ಲಿರುವ ಪುರುಷಾರ್ಥ ಮಾಡಬೇಕಾಗಿದೆ. ಇಂತಹ ಆತ್ಮಿಕ ಹೂಗಳಾಗಬೇಕು ಯಾವುದರಿಂದ ಹೂಗಳ ಪ್ರಪಂಚದ ಅಧಿಕಾರಿಯಾಗಬೇಕಾಗಿದೆ. ಒಳಗೆ ಯಾವುದೇ ಮುಳ್ಳು ಇರಬಾರದು. |
ಓಂ ಶಾಂತಿ. ಈ ಗೀತೆಯನ್ನು ಯಾರು ಹಾಡಿದರು? ಮಕ್ಕಳು. ಮಕ್ಕಳು ಏನು ಹೇಳುತ್ತಾರೆ! ಬಾಬಾ, ಈಗಂತೂ ತಮ್ಮ ಕೊರಳಿನ ಹಾರವಾಗಬೇಕಾಗಿದೆ. ಈ ಶರೀರವನ್ನು ಇಲ್ಲಿಯೇ ಬಿಡಬೇಕಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ಶಾಂತಿಧಾಮ ಅಥವಾ ನಿರ್ವಾಣ ಧಾಮದಲ್ಲಿ ತಂದೆ ಮತ್ತು ನಾವಾತ್ಮರೇ ಇರುತ್ತೇವೆ. ಈಗ ತಂದೆಯು ಮತ್ತೆ ಮತ್ತೆ ತಿಳಿಸುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ನೀವು ತಿಳಿದುಕೊಂಡಿದ್ದೀರಿ - ತಂದೆಯ ಜೊತೆ ನಾವಾತ್ಮರು ನಿರ್ವಾಣ ಧಾಮದಲ್ಲಿದ್ದೆವು ನಂತರ ಈ ಶರೀರ ಧಾರಣೆ ಮಾಡಿ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ. ಮೂಲತಃ ನಾವು ಪರಮಧಾಮ ನಿವಾಸಿಗಳು. ಈಗ ತಂದೆಯು ಪುನಃ ಬಂದಿದ್ದಾರೆ. ನೀವು ಕುಳಿತಿದ್ದೀರಿ, ನೋಡುತ್ತೀರಿ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ. ಇಲ್ಲಿ ಲೌಕಿಕ ಶರೀರದ ಸಂಬಂಧವಿದೆ. ನಾವು ಮೂಲತಃ ಆತ್ಮಗಳಾಗಿದ್ದೇವೆ ಆದರೆ ಲೌಕಿಕ ಸಂಬಂಧದಲ್ಲಿ ಸುಖ-ದುಃಖದ ಜೀವನವನ್ನು ಕಳೆದೆವು. ಈಗ ನೀವಾತ್ಮರು ತ್ರಿಕಾಲದರ್ಶಿಗಳಾಗಿದ್ದೀರಿ, ತಂದೆಯೂ ಸಹ ಮೂರೂ ಕಾಲಗಳು, ಮೂರೂ ಲೋಕಗಳನ್ನು ಅರಿತಿದ್ದಾರೆ. ಅದನ್ನು ನೀವೂ ಸಹ ನಂಬರ್ವಾರ್ ಪುರುಷಾರ್ಥದ ಅನುಸಾರ ಅರಿತುಕೊಂಡಿದ್ದೀರಿ. ವಿದ್ಯೆಯ ನೆನಪಂತೂ ಇರಬೇಕಲ್ಲವೆ. ಈಗ ಸ್ಮೃತಿಗೆ ಬಂದಿದೆ - ತಂದೆಯು ತಿಳಿಸಿದ್ದಾರೆ, ನಾನೂ ಸಹ ಮೂಲವತನದ ನಿವಾಸಿಯಾಗಿದ್ದೇನೆ ಮತ್ತು ನಾನೀಗ ತ್ರಿಕಾಲದರ್ಶಿಯಾಗಿದ್ದೇನೆ. ಈ ಡ್ರಾಮಾದಲ್ಲಿ ನಾವು ಮುಖ್ಯ ಪಾತ್ರಧಾರಿಗಳೆಂದು ನೀವು ಮಕ್ಕಳಿಗೆ ತಿಳಿದಿದೆ - ಇಡೀ ಡ್ರಾಮಾದ ಜ್ಞಾನವು ಈಗ ನಿಮ್ಮ ಬುದ್ಧಿಯಲ್ಲಿದೆ. ಈಗ ಸ್ಮೃತಿಗೆ ಬಂದಿದೆ - ನಾವು ಅರ್ಧಕಲ್ಪ ಸುಖಧಾಮದಲ್ಲಿ ಇರುತ್ತೇವೆ, ಅಲ್ಲಿ ರಾವಣನಿರುವುದಿಲ್ಲ, ನಾವಾತ್ಮರು ಪೂರ್ಣ 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ. ಈಗ ತಂದೆಯು ಸನ್ಮುಖದಲ್ಲಿ ಕುಳಿತಿದ್ದಾರೆ. ಬಾಬಾ, ತಮ್ಮ ಶ್ರೀಮತದಂತೆ ನಡೆದು ನಾವು ನಿಮ್ಮ ಜೊತೆಯಲ್ಲಿಯೇ ಬರುತ್ತೇವೆ. ಎಷ್ಟು ಸಾಧ್ಯವೋ ಅಷ್ಟು ನಿಮ್ಮನ್ನು ನೆನಪು ಮಾಡುತ್ತೇವೆ. ನೀವೀಗ ತ್ರಿಕಾಲದರ್ಶಿಗಳಾಗಿದ್ದೀರಿ ಅಂದಮೇಲೆ ನಿಮಗೆ ಇಡೀ ದಿನ ಇದೇ ಚಿಂತನೆಯಿರಬೇಕು. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ, ಅವರ ಜೊತೆ ನೀವು ಮಕ್ಕಳೂ ಸಹ ಮೂಲವತನದ ನಿವಾಸಿಗಳಾಗಿದ್ದೀರಿ. ಈಗ ನೀವು ಮಕ್ಕಳಿಗೆ ಮನೆಯ ನೆನಪು ಬಂದಿದೆ. ನಾವು ಪವಿತ್ರರಾಗಿ ನಮ್ಮ ಪರಮಧಾಮಕ್ಕೆ ಹೋಗುತ್ತೇವೆ. ತಂದೆ ಶಿವನ ಪೂಜೆ ಮಾಡುವಾಗ ಸಾಲಿಗ್ರಾಮಗಳಿಗೂ ಪೂಜೆಯು ನಡೆಯುತ್ತದೆ. ತಂದೆಯು ಬಂದು ಆತ್ಮರನ್ನು ಪಾವನರನ್ನಾಗಿ ಮಾಡುತ್ತಾರೆ. ಆತ್ಮರನ್ನು ಪವಿತ್ರರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ನೀವೀಗ ಇಡೀ ಡ್ರಾಮಾದ ಆಟವನ್ನು ಅರಿತುಕೊಂಡಿದ್ದೀರಿ. ನಿಮಗೆ ತಿಳಿದಿದೆ - ಇಡೀ ಆಟವು ಭಾರತದ ಮೇಲೆ ಮಾಡಲ್ಪಟ್ಟಿದೆ ಆದ್ದರಿಂದ ಈಗ ನೀವು ಮಕ್ಕಳಿಗೆ ತಂದೆಯು ಸಮ್ಮುಖದಲ್ಲಿ ಕುಳಿತು ತಿಳಿಸುತ್ತಾರೆ- ತಂದೆಯು ಜ್ಞಾನ ಸಾಗರ ಎಂಬುದನ್ನು ಪ್ರತಿಯೊಂದು ಜೀವಾತ್ಮರೂ ತಿಳಿದುಕೊಂಡಿದ್ದಾರೆ. ಅವರನ್ನು ಭಕ್ತಿಮಾರ್ಗದಲ್ಲಿ ಕರೆಯುತ್ತಾ ಬಂದಿದ್ದೀರಿ ಮತ್ತು ಪ್ರತಿಜ್ಞೆ ಮಾಡುತ್ತಾ ಬಂದಿದ್ದೀರಿ- ಬಾಬಾ, ತಾವು ಬಂದರೆ ಅವಶ್ಯವಾಗಿ ನಿಮ್ಮ ಶ್ರೀಮತದಂತೆ ನಡೆಯುತ್ತೇವೆ. ಇದು ಯಾವುದೇ ಲೌಕಿಕ ಸಂಬಂಧದ ಮಾತಲ್ಲ. ನೀವು ಆತ್ಮಾಭಿಮಾನಿಯಾಗಿ ಈ ವಿಚಾರ ಮಾಡಬೇಕಾಗಿದೆ - ನಾವು ಒಬ್ಬ ಬೇಹದ್ದಿನ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಅವರ ಆಜ್ಞೆಯನ್ನೇ ಪಾಲಿಸಬೇಕಾಗಿದೆ. ಅವರಂತೂ ಬಹಳ ಸಹಜವಾಗಿ ತಿಳಿಸುತ್ತಾರೆ. ಈಗ ನಿಮ್ಮ ಜ್ಞಾನದ ಮೂರನೇ ನೇತ್ರವು ತೆರೆದಿದೆ. ಈ ಜ್ಞಾನವು ನಿಮಗೆ ಇಲ್ಲಿಯೇ ಇದೆ. ಮೂಲವತನದಲ್ಲಿ ತಂದೆ ಮತ್ತು ಮಕ್ಕಳಿರುತ್ತಾರೆ, ಅಲ್ಲಿ ಇದು ಯಾರಿಗೂ ತಿಳಿದಿರುವುದಿಲ್ಲ. ಈಗ ನೀವು ಮಕ್ಕಳಿಗೆ ತಂದೆಯು ತನ್ನ ಪರಿಚಯವನ್ನು ಕೊಡುತ್ತಾರೆ. ಅವರೇ ಜ್ಞಾನ ಸಾಗರನಾಗಿದ್ದಾರೆ. ಮತ್ತ್ಯಾವುದೇ ಸತ್ಸಂಗಗಳಲ್ಲಿ ತಂದೆಯು ನಾವಾತ್ಮರಿಗೆ ಓದಿಸುತ್ತಾರೆಂದು ಹೇಳುವುದಿಲ್ಲ, ಇದನ್ನು ನೀವು ತಿಳಿದುಕೊಂಡಿದ್ದೀರಿ. ಆತ್ಮಾಭಿಮಾನಿಗಳಾಗಿ ಎಂದು ನಿಮಗೆ ಪದೇ-ಪದೇ ಹೇಳಬೇಕಾಗುತ್ತದೆ. ಆತ್ಮವು ಈ ಡ್ರಾಮಾದಲ್ಲಿ ಪಾತ್ರಧಾರಿಯಾಗಿದೆ, ಪಾತ್ರವನ್ನಭಿನಯಿಸುತ್ತಿದೆ. ಆತ್ಮವು ಶರೀರವೆಂಬ ವಸ್ತ್ರವನ್ನು ಧರಿಸಿದೆ, ಆ ಪಾತ್ರಧಾರಿಗಳು ವಸ್ತ್ರಗಳನ್ನು ಬದಲಾಯಿಸುತ್ತಾರೆ. |
ನೀವಾತ್ಮರು ನಿರಾಕಾರಿ ಪ್ರಪಂಚದಿಂದ ಇಲ್ಲಿಗೆ ಬಂದು ಈ ಶರೀರರೂಪಿ ವಸ್ತ್ರವನ್ನು ಧರಿಸುತ್ತೀರಿ. ಅವರು ಕೇವಲ ತಮ್ಮ ವಸ್ತ್ರಗಳನ್ನು ಬದಲಾಯಿಸುತ್ತಾರೆ, ನಾವಾತ್ಮರಿಗೆ ತಂದೆಯು ಪುನಃ ರಾಜಯೋಗವನ್ನು ಕಲಿಸುತ್ತಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ನಾವು ತಂದೆಗೆ ಸಹಯೋಗಿಗಳಾಗುತ್ತೇವೆ. ಪವಿತ್ರವಾಗಿ ಇಡೀ ಭಾರತವನ್ನು ಪವಿತ್ರವನ್ನಾಗಿ ಮಾಡುತ್ತೇವೆ. ನಾವು ಶ್ರೀಮತದ ಅನುಸಾರವೇ ನಡೆಯಬೇಕಾಗಿದೆ. ಶ್ರೀಮತವು ಹೇಳುತ್ತದೆ - ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾರು ಮಾಡುವರೋ ಅವರು ಪಡೆಯುವರು. ಎಲ್ಲರೂ ಬಂದು ಪುರುಷಾರ್ಥ ಮಾಡುವುದಿಲ್ಲ, ಯಾರು ಕಲ್ಪದ ಮೊದಲು ಪುರುಷಾರ್ಥ ಮಾಡಿದ್ದಾರೆಯೋ ಅವರೇ ಮಾಡುತ್ತಾರೆ. ಈಗ ಹಿಂತಿರುಗಿ ಹೋಗಬೇಕಾಗಿದೆ. ಆದ್ದರಿಂದ ಪುರುಷಾರ್ಥ ಮಾಡಿ ಖಂಡಿತ ಪವಿತ್ರರಾಗಬೇಕಾಗಿದೆ. ನಾವು ಮೇಲೆ ಮೂಲವತನ ನಿವಾಸಿಗಳಾಗಿದ್ದೇವೆ, ಮೊಟ್ಟ ಮೊದಲು ನಾವು ಸ್ವರ್ಗದಲ್ಲಿ ಬಂದೆವು, ನಂತರ ಏಣಿಯನ್ನು ಕೆಳಗಿಳಿಯುತ್ತಾ ಹೋದೆವು. ತಂದೆಯು ಭಾರತವಾಸಿಗಳಿಗೇ ತಿಳಿಸುತ್ತಾರೆ, ಭಾರತದಲ್ಲಿಯೇ ಬರುತ್ತಾರೆ, ಭಾರತದಲ್ಲಿಯೇ ನೆನಪು ಮಾಡುತ್ತಾರೆ - ಭಾರತದಲ್ಲಿ ಬಂದು ನಮ್ಮನ್ನು ಪಾವನ ಮಾಡಿರಿ, ಶರೀರ ಧಾರಣೆ ಮಾಡಿ ನಮಗೆ ಶ್ರೇಷ್ಠ ಕರ್ಮವನ್ನು ಕಲಿಸಿ ಎಂದು ನೆನಪು ಮಾಡುತ್ತಾರೆ. ಶರೀರದ ಹೆಸರೂ ಗಾಯನವಿದೆ. ಇದು ಭಾಗ್ಯಶಾಲಿ ರಥವಾಗಿದೆ. ತಂದೆಯು ಹೇಳುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಪ್ರವೇಶ ಮಾಡುತ್ತೇನೆ. ಮೊದಲೂ ತಿಳಿಸಿದ್ದೆನು - ನೀವು ಮಕ್ಕಳಿಗೆ ಸ್ಮೃತಿ ಬಂದಿದೆ - ಅವಶ್ಯವಾಗಿ 5000 ವರ್ಷಗಳ ಮೊದಲೂ ಸಹ ತಂದೆಯು ಇದನ್ನೇ ಹೇಳಿದ್ದರು, ಮತ್ತ್ಯಾರೂ ಈ ಮಾತನ್ನು ತಿಳಿಸಲು ಸಾಧ್ಯವಿಲ್ಲ, ತಂದೆಯೇ ಹೇಳುತ್ತಾರೆ - 5000 ವರ್ಷಗಳ ಮೊದಲೂ ಸಹ ನಾನು ಈ ಶರೀರದಲ್ಲಿ ಬಂದು ನಿಮಗೆ ತಿಳಿಸಿದ್ದೆನು. ಈಗ ಪುನಃ ನೀವು ಮಕ್ಕಳಿಗೆ ಹೇಳುತ್ತೇನೆ - ಆತ್ಮಾಭಿಮಾನಿಗಳಾಗಿರಿ, ಹೇಗೆ ನಾಟಕದವರಿಗೆ ನಾವು ಯಾವ ವಸ್ತ್ರಗಳನ್ನು ಧರಿಸಿ ಯಾವ-ಯಾವ ಪಾತ್ರವನ್ನು ಅಭಿನಯಿಸುತ್ತೇವೆ ಎಂದು ತಿಳಿದಿರುತ್ತದೆ ಆದರೆ ಅವರು ದೇಹಾಭಿಮಾನಿಗಳಾಗಿದ್ದಾರೆ. ಇದು ಬೇಹದ್ದಿನ ಮಾತಾಗಿದೆ, ಇಲ್ಲಿ ಆತ್ಮಾಭಿಮಾನಿಗಳಾಗಬೇಕಾಗಿದೆ. ನಾವು ನಿಜವಾಗಿಯೂ ಆತ್ಮರೇ ಆಗಿದ್ದೇವೆ. ಈಗ ನಮ್ಮ ಪಾತ್ರವು ಮುಕ್ತಾಯವಾಗುತ್ತದೆ, ತಂದೆಯು ಸನ್ಮುಖದಲ್ಲಿ ಕುಳಿತು ನಿಮಗೆ ಎಲ್ಲವನ್ನೂ ತಿಳಿಸುತ್ತಾರೆ, ಇದನ್ನು ಮರೆಯಬಾರದು. ಮಾಯೆಯು ಎಷ್ಟೊಂದು ವಿಘ್ನಗಳನ್ನು ಹಾಕುತ್ತದೆ ಆದರೆ ಮಕ್ಕಳೇ, ನೀವು ಯಾವುದೇ ವಿಕರ್ಮ ಮಾಡಬೇಡಿ, ಮನಸ್ಸಿನ ಬಿರುಗಾಳಿ ಬಹಳ ಬರುತ್ತದೆ. ತನ್ನನ್ನು ಪರೀಕ್ಷೆ ಮಾಡಿಕೊಳ್ಳಿ, ನನ್ನ ಕರ್ಮೇಂದ್ರಿಯಗಳು ಎಲ್ಲಿಯೂ ಚಂಚಲವಾಗುತ್ತಿಲ್ಲವೇ? ನಾವು ಕಾಮ ವಿಕಾರವನ್ನು ಗೆಲ್ಲಬಲ್ಲೆವೆ? ನಿಮಗಂತೂ ಬಹಳ ಸಹಜವಾಗಿದೆ. ನಾವಾತ್ಮರಾಗಿದ್ದೇವೆ, ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ತಂದೆಯೊಂದಿಗೇ ಬುದ್ಧಿಯೋಗವನ್ನು ಇಡಬೇಕಾಗಿದೆ. ಕರ್ಮೇಂದ್ರಿಯಗಳಲ್ಲಿ ಚಂಚಲತೆ ಬರುವುದೂ ಸಹ ದೇಹಾಭಿಮಾನ ಆಯಿತಲ್ಲವೆ. ನೀವು ಯಾರೊಂದಿಗೂ ಹೆದರಬಾರದು, ನಿರ್ಭಯರಾಗಿ ಇರಬೇಕಾಗಿದೆ. ಎಲ್ಲಿಗೇ ಹೋದರೂ ಸಹ ಸಾಕ್ಷಿಯಾಗಿ ನೋಡಬೇಕಾಗಿದೆ, ನಾವಂತೂ ಆತ್ಮರಾಗಿದ್ದೇವೆ ಎಂದೂ ಈ ಆಟವನ್ನು ಸಂಪೂರ್ಣವಾಗಿ ಅರಿತಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ ಎಂಬುದು ಬುದ್ಧಿಯಲ್ಲಿ ಬಂದಿದೆ. ಅವರಿಗೆ ಬಿಂದುವೆಂದು ಹೇಳಲಾಗುತ್ತದೆ, ನಿರಾಕಾರಿ ಪ್ರಪಂಚದಲ್ಲಿ ಆತ್ಮಗಳ ವೃಕ್ಷವಿದೆ. ಬೀಜದಿಂದ ವೃಕ್ಷವು ಹೊರಬರುತ್ತದೆ ನಂತರ ನಂಬರ್ವಾರ್ ಎಲೆಗಳು ಬರುತ್ತವೆ. ಇಲ್ಲಿಯೂ ಹಾಗೆಯೇ. ನಂಬರ್ವಾರ್ ಆಗಿ ಮೇಲಿನಿಂದ ಆತ್ಮರು ಬರುತ್ತಾರೆ. ಆತ್ಮವು ಹೇಗೆ ಪ್ರವೇಶ ಮಾಡುತ್ತದೆ, ಹೇಗೆ ಹೊರಟು ಹೋಗುತ್ತದೆ ಎಂಬುದನ್ನು ಯಾರೂ ನೋಡಲು ಸಾಧ್ಯವಿಲ್ಲ. ಈಗ ತಂದೆಯು ತಿಳಿಸುತ್ತಾರೆ - ನಿಮ್ಮ ಆತ್ಮವು ಪತಿತವಾಗಿ ಬಿಟ್ಟಿದೆ, ಅದನ್ನು ಪಾವನ ಮಾಡಿಕೊಳ್ಳಿ. ತಂದೆಯು ಇವರ (ಬ್ರಹ್ಮಾ) ಮೂಲಕ ತಿಳಿಸುತ್ತಾರೆ. ಕರ್ಮೇಂದ್ರಿಯಗಳಿಂದಲೇ ಮಾತನಾಡುತ್ತಾರಲ್ಲವೆ. ಇದರಲ್ಲಿ ಆತ್ಮ ಬಿಂದು ಇಲ್ಲದೇ ಇದ್ದರೆ ಕರ್ಮೇಂದ್ರಿಯಗಳು ಏನೂ ಮಾಡಲು ಸಾಧ್ಯವಿಲ್ಲ. ಇಷ್ಟು ಚಿಕ್ಕ ಬಿಂದು ಎಷ್ಟು ಶಕ್ತಿಶಾಲಿಯಾಗಿದೆ, ಅದರಲ್ಲಿ ಸಂಪೂರ್ಣ ಜ್ಞಾನವಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರು ನಿಮಗೆ ತಿಳಿಸಿಕೊಡುತ್ತಾರೆ. ಅವರಲ್ಲಿ ಸಂಪೂರ್ಣ ಜ್ಞಾನವಿದೆ, ಅವರ ಈ ಪಾತ್ರವೂ ಸಹ ನಿಗಧಿಯಾಗಿದೆ. ನೀವಾತ್ಮರಲ್ಲಿಯೂ 84 ಜನ್ಮಗಳ ಪಾತ್ರವಿದೆ, ನೀವು ಸುಖ-ದುಃಖದ ಪಾತ್ರವನ್ನು ಅಭಿನಯಿಸುತ್ತೀರಿ. ದುಃಖದಲ್ಲಿ ಬಹಳ ಕಷ್ಟವನ್ನು ಅನುಭವಿಸುತ್ತೀರಿ. ತಂದೆಯು ಹೇಳುತ್ತಾರೆ - ನಾನಂತೂ ಪುನರ್ಜನ್ಮದಲ್ಲಿ ಬರುವುದಿಲ್ಲ, ನೀವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ, ನಾನು ತೆಗೆದುಕೊಳ್ಳುವುದಿಲ್ಲ. ನಾನು ಬಂದು ನೀವು ಮಕ್ಕಳಿಗೆ ಸಹಜ ಯುಕ್ತಿಯನ್ನು ತಿಳಿಸುತ್ತೇನೆ - ನನ್ನನ್ನು ನೆನಪು ಮಾಡಿದರೆ ಪಾವನರಾಗುವಿರಿ. ನೀವು ಅರ್ಧಕಲ್ಪ ಕಾಮ ಚಿತೆಯ ಮೇಲೆ ಕುಳಿತು ತಮೋಪ್ರಧಾನರಾಗಿದ್ದೀರಿ, ತಂದೆಯು ಆತ್ಮಗಳೊಂದಿಗೇ ಮಾತನಾಡುತ್ತಾರೆ. ಆತ್ಮನ ಕರ್ಮೇಂದ್ರಿಯಗಳು ಮೊದಲು ಚಿಕ್ಕದಾಗಿರುತ್ತವೆ ನಂತರ ದೊಡ್ಡದಾಗುತ್ತವೆ. ಆತ್ಮವು ಚಿಕ್ಕದು, ದೊಡ್ಡದು ಆಗುವುದಿಲ್ಲ. ಹೇ ಪತಿತ-ಪಾವನ ಬನ್ನಿ ಎಂದು ಆತ್ಮವೇ ಹೇಳುತ್ತದೆ, ಆತ್ಮವೇ ತಂದೆಯನ್ನು ಕರೆಯುತ್ತದೆ. ತಂದೆಯು ಹೇಳುತ್ತಾರೆ - ನಾನು ಕಲ್ಪ-ಕಲ್ಪವೂ ನೀವು ಪತಿತರನ್ನು ಪಾವನರನ್ನಾಗಿ ಮಾಡಲು ಬರುತ್ತೇನೆ. ಈಗ ನೀವು ತಿಳಿದುಕೊಂಡಿದ್ದೀರಿ - ಆತ್ಮವು ಹೇಗೆ ಬಂದು ಹೋಗುತ್ತದೆ ಎಂದು. ಆತ್ಮವು ಹೇಗೆ ಹೋಗುತ್ತದೆಯೋ ನೋಡೋಣವೆಂದು ಮನುಷ್ಯರು ಬಹಳ ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಇದು ಯಾರಿಗೂ ತಿಳಿಯುವುದಿಲ್ಲ ಏಕೆಂದರೆ ಆತ್ಮವು ಅತೀ ಸೂಕ್ಷ್ಮವಾಗಿದೆ. ಇಷ್ಟು ಚಿಕ್ಕ ಆತ್ಮನಲ್ಲಿ ಎಷ್ಟೊಂದು ಪಾತ್ರವಿದೆ. ಹೇಗೆ ಬೀಜದಲ್ಲಿ ಸಂಪೂರ್ಣ ಜ್ಞಾನವಿರುತ್ತದೆ, ಅದಂತೂ ಜಡ ಬೀಜವಾಗಿದೆ. ಆಲದ ಮರದ ಬೀಜವು ಎಷ್ಟು ಚಿಕ್ಕದು ಮತ್ತು ಅದರಿಂದ ಬರುವ ವೃಕ್ಷವು ಎಷ್ಟು ಉದ್ದಗಲವಾಗಿರುತ್ತದೆ. ಕಲ್ಕತ್ತಾದ ಆಲದ ಮರವನ್ನು ಕೆಲವರು ನೋಡಿರಬೇಕು, ಬಹಳ ದೊಡ್ಡ ವೃಕ್ಷವಾಗಿದೆ. ಈಗ ಅದರ ಬುಡವು ಸಡಿಲವಾಗಿ ಬಿಟ್ಟಿದೆ. ವೃಕ್ಷವು ಮಾತ್ರ ನಿಂತಿದೆ, ಇದೂ ಹಾಗೆಯೇ ದೇವತಾ ಧರ್ಮದ ಬುಡವೇ ಇಲ್ಲ. ವೃಕ್ಷವೂ ಸಹ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಆದ್ದರಿಂದಲೇ ಸರ್ಕಾರಕ್ಕೂ ಹೇಳುತ್ತೀರಿ - ನಾವು ಇಷ್ಟು ಸಮಯದಲ್ಲಿ ಪ್ರಪಂಚವನ್ನು ಪಾವನ ಮಾಡಿ ತೋರಿಸುತ್ತೇವೆ ಎಂದು. ಮನುಷ್ಯರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ನಿಮಗೆ ನಿಶ್ಚಯವಿದೆ - ನಾವು ಈ ಭಾರತವನ್ನು ಶ್ರೇಷ್ಠಾಚಾರಿ ಪ್ರಪಂಚವನ್ನಾಗಿ ಮಾಡುತ್ತೇವೆ ಆಗಲೇ ಭ್ರಷ್ಟಾಚಾರಿ ಪ್ರಪಂಚದ ವಿನಾಶವಾಗುವುದು. ಶಾಂತಿ ಸ್ಥಾಪನೆಯಾಗಲಿ ಎಂದು ಬಯಸುತ್ತಾರೆ, ಆತ್ಮವು ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಸುಸ್ತಾಗಿ ಬಿಟ್ಟಿದೆ. ಆದ್ದರಿಂದ ಹೇ ಶಾಂತಿ ದೇವ ಎಂದು ಕರೆಯುತ್ತದೆ, ಆತ್ಮವೇ ಶಾಂತ ಸ್ವರೂಪ ಎಂಬುದನ್ನು ತಿಳಿದುಕೊಳ್ಳುತ್ತಾರೆಯೇ! ಆದರೆ ಇಲ್ಲಿ ಆತ್ಮವು ಕರ್ಮೇಂದ್ರಿಯಗಳ ಮೂಲಕ ಕರ್ಮವನ್ನಂತೂ ಅವಶ್ಯವಾಗಿ ಮಾಡಲೇಬೇಕಾಗಿದೆ. ಶಾಂತಿಯನ್ನು ಕೊಡಿ ಎಂದು ಹೇಳುತ್ತಾರೆ, ಆದರೆ ಶಾಂತಿಧಾಮವೇ ಬೇರೆ, ಸುಖಧಾಮವೇ ಬೇರೆ ಎಂಬುದನ್ನು ಅವರು ತಿಳಿದುಕೊಂಡಿಲ್ಲ. ಸುಖಧಾಮದಲ್ಲಿ ಬಹಳ ಕಡಿಮೆ ಜನಸಂಖ್ಯೆ ಇರುತ್ತದೆ ಅಲ್ಲದೆ ಅದು ಪವಿತ್ರ ಪ್ರಪಂಚವಾಗಿರುತ್ತದೆ. ಅಲ್ಲಿ ಯಾರೂ ಶಾಂತಿಗಾಗಿ ಬೇಡುವುದಿಲ್ಲ. ಅಲ್ಲಿಯೂ ಕರ್ಮ ಮಾಡುತ್ತಾರೆ ಆದರೆ ಅಶಾಂತಿಯಿರುವುದಿಲ್ಲ. ಜೀವನ್ಮುಕ್ತಿಧಾಮ, ಶಾಂತಿಧಾಮ ಎರಡೂ ಬೇರೆ-ಬೇರೆಯಾಗಿದೆ. ಸತ್ಯಯುಗದಲ್ಲಿ ಜೀವಾತ್ಮರಿಗೆ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಸದಾ ಆರೋಗ್ಯವಂತರು ಐಶ್ವರ್ಯವಂತರಾಗಿರುತ್ತಾರೆ. |
ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಸ್ವರ್ಗವೆಂದರೇನು ಎಂಬುದು ಯಾರಿಗೂ ತಿಳಿದಿಲ್ಲ. ಇವರು (ಲಕ್ಷ್ಮೀ-ನಾರಾಯಣ) ಮಕ್ಕಳಲ್ಲವೆ. ಈ ಮಕ್ಕಳಿಗೂ ಸಹ ಸುಖವನ್ನು ಯಾರು ಕೊಟ್ಟರು? ಯಾರಾದರೂ ಸುಖ ಕೊಡುವವರಿರಬೇಕಲ್ಲವೆ. ಇವರದು ಪುನಃ ರಾಜ್ಯ ಬರುತ್ತದೆಯೇ? ಸ್ವರ್ಗವು ಅವಶ್ಯವಾಗಿ ಮತ್ತೆ ಪುನರಾವರ್ತನೆಯಾಗುವುದು. ಸ್ವರ್ಗದಲ್ಲಿದ್ದಾಗ ನರಕವು ಪುನಃ ಬರುತ್ತದೆ ಎಂಬುದನ್ನು ಯಾರೂ ಹೇಳುವುದಿಲ್ಲ. ಈಗ ಹೇಳುತ್ತೀರಿ - ಪವಿತ್ರತೆ, ಸುಖ, ಶಾಂತಿಯ ಹೊಸ ಪ್ರಪಂಚವು ಪುನಃ ಪುನರಾವರ್ತನೆಯಾಗುವುದು. ಇದಂತೂ ಹಳೆಯ ಪ್ರಪಂಚ, ದುಃಖಧಾಮವಾಗಿದೆ. ಇದಕ್ಕೆ ಕಲಿಯುಗವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚವೂ ಇತ್ತಲ್ಲವೆ, ಅದಕ್ಕೆ ಸ್ವರ್ಗವೆಂದು ಹೇಳುತ್ತಿದ್ದರು. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಕುಳಿತಿದೆ, ಅವಶ್ಯವಾಗಿ ನಾವು ಪುನಃ ದೇವಿ-ದೇವತೆಗಳಾಗುತ್ತಿದ್ದೇವೆ. ನಿಮ್ಮ ಗುರಿ-ಧ್ಯೇಯವೇ ಇದಾಗಿದೆ - ನಾವು ಪುನಃ ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಅವಶ್ಯವಾಗಿ ಪಡೆಯುತ್ತೇವೆ, ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕಾಗಿದೆ. ನಾವಾತ್ಮರೇ ಮೂಲವತನದಲ್ಲಿರುತ್ತೇವೆ, ಮತ್ತೆ ಅಲ್ಲಿಂದ ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬರುತ್ತೇವೆ. ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದು ಈಗ ಸ್ಮೃತಿಗೆ ಬಂದಿದೆ. ತಂದೆಯು ತಿಳಿಸುವುದೂ ಸಹ ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಿಗೆ ಮಾತ್ರ. ಬ್ರಾಹ್ಮಣರಾಗದೇ ಪ್ರಜಾಪಿತ ಬ್ರಹ್ಮನ ಮಕ್ಕಳಾಗದೆ ಶಿವ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ಪ್ರಜಾಪಿತ ಬ್ರಹ್ಮನು ಹೆಸರುವಾಸಿಯಲ್ಲವೆ. ಬ್ರಹ್ಮಾರವರ ಮೂಲಕ ಹೊಸ ಪ್ರಪಂಚದ ಸ್ಥಾಪನೆಯಾಗುತ್ತದೆ ಅಂದಮೇಲೆ ಹೊಸ ಪ್ರಪಂಚದ ರಾಜ್ಯವೂ ಸಹ ಅವಶ್ಯವಾಗಿ ಅವರಿಗೇ ಸಿಕ್ಕಿರಬೇಕು. 5000 ವರ್ಷಗಳ ಮೊದಲೂ ಸಹ ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗಿತ್ತು. ಈಗ ಮತ್ತೆ ಪುನರಾವರ್ತನೆಯಾಗುವುದು ಅದಕ್ಕಾಗಿ ನೀವು ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಡ್ರಾಮಾ ದೊಡ್ಡದೋ, ಪುರುಷಾರ್ಥ ದೊಡ್ಡದೋ? ಎಂದು ಕೆಲವರು ಕೇಳುತ್ತಾರೆ. ತಿಳಿಸಬೇಕಾಗಿದೆ, ಪುರುಷಾರ್ಥವನ್ನು ಅವಶ್ಯವಾಗಿ ಮಾಡಲೇಬೇಕಾಗಿದೆ. ಪುರುಷಾರ್ಥವಿಲ್ಲದೆ ಪ್ರಾಲಬ್ಧ ಹೇಗೆ ಸಿಗುವುದು, ಆದ್ದರಿಂದ ಸಂಪೂರ್ಣ ಪುರುಷಾರ್ಥ ಮಾಡಬೇಕು. ಯಾರಾದರೂ ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆಂದರೆ ಡ್ರಾಮಾನುಸಾರ ಇವರ ಪುರುಷಾರ್ಥವು ಚೆನ್ನಾಗಿ ನಡೆಯುತ್ತಿದೆ. ಒಳ್ಳೆಯ ಪದವಿಯನ್ನೇ ಪಡೆಯುತ್ತಾರೆ. ಅವರ ಪುರುಷಾರ್ಥವು ಬಹಳ ತೀವ್ರವಾಗಿ ನಡೆಯುತ್ತದೆ ಎಂದು ತಿಳಿಸಲಾಗುತ್ತದೆ. ನಂತರ ನಡೆಯುತ್ತಾ ನಡೆಯುತ್ತಾ ಕೆಲವರದು ಕಡಿಮೆ ಪದವಿಯೂ ಆಗುತ್ತದೆ. ಬ್ರಾಹ್ಮಿಣಿಯರು ತಿಳಿದುಕೊಳ್ಳುತ್ತೀರಿ, ಬ್ರಾಹ್ಮಣಿಯರ ಬಳಿ ಬರುವವರು ತಿಳಿದುಕೊಳ್ಳುತ್ತಾರೆ. ಇಂತಹವರು ಬಹಳ ಚೆನ್ನಾಗಿ ನಡೆಯುತ್ತಿದ್ದರು ಆದರೆ ಇಂದು ಬರುತ್ತಿಲ್ಲ. ಕೆಲವರು ಹೇಳುತ್ತಾರೆ - ನಮ್ಮ ಬುದ್ಧಿಯಲ್ಲಿ ಏಕೆ ಕುಳಿತುಕೊಳ್ಳುವುದಿಲ್ಲವೋ ಗೊತ್ತಿಲ್ಲ, ತಂದೆಯನ್ನು ನೆನಪು ಮಾಡಲು ಆಗುತ್ತಿಲ್ಲ. ನಮ್ಮಿಂದ ನಡೆಯಲು ಸಾಧ್ಯವಿಲ್ಲ. ಗುರಿಯು ಬಹಳ ಉನ್ನತವಾಗಿದೆ ಎಂದು ಬರೆಯುತ್ತಾರೆ. ಮೂಲ ಮಾತೇ ಆಗಿದೆ - ನಿರ್ವಿಕಾರಿಗಳಾಗುವುದು. ವಿಕಾರಗಳನ್ನು ಬಿಡುವುದು ಬಹಳ ಪರಿಶ್ರಮವಾಗಿದೆ, ನೀವು ತಿಳಿದುಕೊಂಡಿದ್ದೀರಿ - ಡ್ರಾಮಾನುಸಾರ ಕಲ್ಪದ ಹಿಂದಿನ ತರಹ ಇವರದು ಅದೇ ಸ್ಥಿತಿಯು ನಡೆದು ಬರುತ್ತಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಬೇಹದ್ದಿನ ನಾಟಕವನ್ನು ಸಾಕ್ಷಿಯಾಗಿ ನೋಡಬೇಕಾಗಿದೆ, ಯಾರೊಂದಿಗೂ ಹೆದರಬಾರದು, ನಿರ್ಭಯರಾಗಲು “ನಾನು ಆತ್ಮನಾಗಿದ್ದೇನೆ” ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ. |
2. ತಮ್ಮ ಪರಿಶೀಲನೆ ಮಾಡಿಕೊಂಡು ಸ್ವಯಂನಿಂದ ಪರೀಕ್ಷೆ ತೆಗೆದುಕೊಳ್ಳಬೇಕು - ಯಾವುದೇ ಕರ್ಮೇಂದ್ರಿಯವು ಚಂಚಲವಾಗುತ್ತಿಲ್ಲವೆ? ಕಾಮ ವಿಕಾರದ ಮೇಲೆ ಜಯ ಗಳಿಸಿದ್ದೇನೆಯೇ? ಎಲ್ಲಿಯವರೆಗೆ ಆತ್ಮಾಭಿಮಾನಿಯಾಗಿದ್ದೇನೆ? |
ಓಂ ಶಾಂತಿ. ಮಕ್ಕಳು ತಂದೆಯ ಮಹಿಮೆಯನ್ನು ಕೇಳಿದಿರಿ. ಇಂದಿನ ದಿನಕ್ಕೆ ವೃಕ್ಷಪತಿ ದಿನವೆಂದು ಹೇಳಲಾಗುತ್ತದೆ, ಇದನ್ನು ಸೇರಿಸಿ ಬೃಹಸ್ಪತಿ ಎಂದು ಹೇಳುತ್ತಾರೆ. ಇದಕ್ಕೇ ಗುರುವಾರವೆಂದು ಹೇಳಲಾಗುತ್ತದೆ. ಕೇವಲ ಗುರುವಾರವಲ್ಲ ಆದರೆ ಸದ್ಗುರುವಾರ ಆಗಿದೆ. ಬಂಗಾಳದಲ್ಲಿ ಬಹಳ ಮಾನ್ಯತೆ ಕೊಡುತ್ತಾರೆ. ಮನುಷ್ಯ ಸೃಷ್ಟಿಯ ಬೀಜರೂಪನೆಂದೂ ಗಾಯನವಿರುವ ಕಾರಣ ವೃಕ್ಷಪತಿಯೆಂದು ಹೇಳುತ್ತಾರೆ. ಬೀಜವೂ ಆದರು ಮತ್ತು ಪತಿಯೂ ಆದರು. ವೃಕ್ಷದ ಬೀಜಕ್ಕೆ ತಂದೆಯೆಂದೂ ಹೇಳುತ್ತಾರೆ, ಅದರಿಂದ ವೃಕ್ಷವು ಉತ್ಪನ್ನವಾಗುತ್ತದೆ. ಇದು ಮನುಷ್ಯ ಸೃಷ್ಟಿರೂಪಿ ವೃಕ್ಷವಾಗಿದೆ, ಇದರ ಬೀಜವು ಮೇಲಿದೆ. ಈಗ ನಾವು ಮಕ್ಕಳ ಮೇಲೆ ಅವಿನಾಶಿ ವೃಕ್ಷಪತಿಯ ದೆಶೆಯಿದೆ ಎಂಬುದು ನಿಮಗೆ ತಿಳಿದಿದೆ ಏಕೆಂದರೆ ಅವಿನಾಶಿ ಸ್ವರಾಜ್ಯ ಸಿಗುತ್ತಿದೆ. ಸತ್ಯಯುಗಕ್ಕೆ ಅವಿನಾಶಿ ಸುಖಧಾಮವೆಂದು ಹೇಳಲಾಗುತ್ತದೆ, ಕಲಿಯುಗಕ್ಕೆ ವಿನಾಶೀ ದುಃಖಧಾಮವೆಂದು ಹೇಳುತ್ತಾರೆ. ಈಗ ಈ ದುಃಖಧಾಮದ ವಿನಾಶವಾಗಲಿದೆ. ಸುಖಧಾಮವು ಅವಿನಾಶಿಯಾಗಿದೆ, ಅರ್ಧಕಲ್ಪ ನಡೆಯುತ್ತದೆ. ಅದನ್ನು ಅವಿನಾಶಿ ವೃಕ್ಷಪತಿ ಸ್ಥಾಪನೆ ಮಾಡುತ್ತಿದ್ದಾರೆ, ಮಕ್ಕಳು ಸರ್ವೀಸಿಗಾಗಿ ಒಳ್ಳೊಳ್ಳೆಯ ಅಂಶಗಳನ್ನು ಬರೆದಿಟ್ಟುಕೊಳ್ಳಬೇಕು, ಪ್ರದರ್ಶನಿಯಲ್ಲಿ ಇಂತಿಂತಹ ಮುಖ್ಯ ಮಾತುಗಳನ್ನು ತಿಳಿಸಬೇಕಾಗಿದೆ ಏಕೆಂದರೆ ಮನುಷ್ಯರಂತೂ ಏನನ್ನೂ ತಿಳಿದಿಲ್ಲ. ಇದು ಜ್ಞಾನವಾಗಿದೆ, ತಂದೆಯು ಹೊಸ ಮತ್ತು ಹಳೆಯ ಪ್ರಪಂಚದ ಮಧ್ಯದಲ್ಲಿಯೇ ಜ್ಞಾನವನ್ನು ಕೊಡುತ್ತಾರೆ ಮತ್ತೆ ಇದು ಪ್ರಾಯಃಲೋಪವಾಗಿ ಬಿಡುತ್ತದೆ. ದೇವತೆಗಳಿಗೆ ಈ ಜ್ಞಾನವಿರುವುದಿಲ್ಲ. ಒಂದುವೇಳೆ ಈ ಚಕ್ರದ ಜ್ಞಾನವು ಇದ್ದಿದ್ದರೆ ಅವರ ರಾಜ್ಯದಲ್ಲಿ ಮಜವೇ ಇರುತ್ತಿರಲಿಲ್ಲ. ಈಗಲೂ ಸಹ ನಿಮಗೆ ಸಂಕಲ್ಪ ಬರುತ್ತದೆಯಲ್ಲವೆ, ನಾವು ರಾಜ್ಯವನ್ನು ತೆಗೆದುಕೊಂಡು ನಂತರ ಕೊನೆಯಲ್ಲಿ ನಮ್ಮದು ಇಂತಹ ಸ್ಥಿತಿಯಾಗುವುದೇ! ಆದರೆ ಇದಂತೂ ನಾಟಕದಲ್ಲಿ ಮಾಡಲ್ಪಟ್ಟಿದೆ. ಚಕ್ರವು ಸುತ್ತಲೇಬೇಕಾಗಿದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತಿದೆ, ಹೇಗೆ ಪುನರಾವರ್ತನೆ ಆಗುವುದು ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಇದು ಮನುಷ್ಯ ಸೃಷ್ಟಿಯಾಗಿದೆ, ನಿಮ್ಮ ಬುದ್ಧಿಯಲ್ಲಿ ಮೂಲವತನದ ವೃಕ್ಷದ ಜ್ಞಾನವಿದೆ. ಅಲ್ಲಿಯೂ ಎಲ್ಲರ ವಿಭಾಗಗಳು ಬೇರೆ-ಬೇರೆಯಾಗಿರುತ್ತದೆ. ಈ ಮಾತುಗಳು ಎಂದೂ ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಯಾವುದೇ ಶಾಸ್ತ್ರಗಳಲ್ಲಿಯೂ ಇದನ್ನು ಬರೆದಿಲ್ಲ, ನಾವಾತ್ಮರು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅವಿನಾಶಿಯಾಗಿದ್ದೇವೆ, ಎಂದೂ ವಿನಾಶ ಹೊಂದುವುದಿಲ್ಲ. ನೀರಿನ ಗುಳ್ಳೆಯು ನೀರಿನಿಂದ ಹೊರಬಂದು ಮತ್ತೆ ಅದರಲ್ಲಿ ಸೇರಿ ಹೋಗುತ್ತದೆ ಎಂದು ಅವರು ತಿಳಿಯುತ್ತಾರೆ. ಆದರೆ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ರಹಸ್ಯವಿದೆ. ಆತ್ಮವು ಅವಿನಾಶಿಯಾಗಿದೆ, ಅದರಲ್ಲಿ ಪಾತ್ರವೆಲ್ಲವೂ ಮೊದಲೇ ನಿಗಧಿಯಾಗಿದೆ. ಈ ಚಕ್ರದ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿಲ್ಲ, ಕೆಲವೊಂದೆಡೆ ಸ್ವಸ್ತಿಕವನ್ನು ತೋರಿಸುತ್ತಾರೆ ಆದರೆ ಕೇವಲ ಹಾಗೆಯೇ ಗೆರೆಗಳನ್ನು ಎಳೆದು ಬಿಡುತ್ತಾರೆ, ಇದರಿಂದಲೇ ಸಿದ್ಧವಾಗುತ್ತದೆ - ಅನೇಕ ಧರ್ಮಗಳಿತ್ತು, ತಂದೆಯು ತಿಳಿಸಿದ್ದಾರೆ ಮುಖ್ಯವಾಗಿ ನಾಲ್ಕು ಧರ್ಮ ಶಾಸ್ತ್ರಗಳಿವೆ, ಸತ್ಯ-ತ್ರೇತಾಯುಗದಲ್ಲಿ ಯಾವುದೇ ಧರ್ಮ ಸ್ಥಾಪನೆಯಾಗುವುದಿಲ್ಲ, ಅಲ್ಲಿ ಯಾವುದೇ ಧರ್ಮ ಶಾಸ್ತ್ರವೂ ಇರುವುದಿಲ್ಲ, ಇವೆಲ್ಲವೂ ದ್ವಾಪರದಿಂದ ಆರಂಭವಾಗುತ್ತದೆ ನಂತರ ನೋಡಿ! ಎಷ್ಟೊಂದು ವೃದ್ಧಿಯಾಗುತ್ತದೆ. ಒಳ್ಳೆಯದು. ಗೀತೆಯನ್ನು ಯಾವಾಗ ತಿಳಿಸಲಾಯಿತು? ನಾನು ಕಲ್ಪದ ಸಂಗಮಯುಗದಲ್ಲಿಯೇ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಈ ಕಲ್ಪದ ಅಕ್ಷರವನ್ನು ತೆಗೆದು ಮನುಷ್ಯರು ಸಂಗಮ ಯುಗೇ ಯುಗೇ ಅರ್ಥಾತ್ ಯುಗ-ಯುಗದಲ್ಲಿ ಬರುತ್ತಾರೆಂದು ಬರೆದಿದ್ದಾರೆ. ವಾಸ್ತವದಲ್ಲಿ ಸಂಗಮಯುಗದಲ್ಲಿ ಮತ್ತ್ಯಾವುದೇ ಧರ್ಮ ಸ್ಥಾಪನೆ ಮಾಡುವುದಿಲ್ಲ. ತ್ರೇತಾದ ಅಂತ್ಯದ ದ್ವಾಪರದ ಆದಿಯ ಸಂಗಮದಲ್ಲಿ ಇಸ್ಲಾಮಿಗಳ ಧರ್ಮ ಸ್ಥಾಪನೆಯಾಯಿತು ಎಂದಲ್ಲ. ದ್ವಾಪರದಲ್ಲಿ ಸ್ಥಾಪನೆಯಾಯಿತು ಎಂದು ಹೇಳುತ್ತಾರೆ. ಈಗಿನ ಸಂಗಮವು ಮಂಗಳಕಾರಿ ಸಮಯವಾಗಿದೆ. ಇದಕ್ಕೆ ಕುಂಭವೆಂದು ಹೇಳುತ್ತಾರೆ. ಸಂಗಮಕ್ಕೆ ಕುಂಭವೆಂದು ಹೇಳಲಾಗುತ್ತದೆ, ಇದು ಆತ್ಮರು ಮತ್ತು ಪರಮಾತ್ಮನ ಮಿಲನದ ಸಂಗಮವಾಗಿದೆ. ಈ ಆತ್ಮಿಕ ಮೇಳವು ಸಂಗಮದಲ್ಲಿಯೇ ಆಗುತ್ತದೆ. ಇದಕ್ಕಾಗಿ ಅವರು ಗಂಗಾಜಲದ ಹೆಸರನ್ನು ಪ್ರಖ್ಯಾತ ಮಾಡಿ ಬಿಟ್ಟಿದ್ದಾರೆ. ಜ್ಞಾನ ಸಾಗರ, ಪತಿತ-ಪಾವನನ್ನು ತಿಳಿದುಕೊಂಡೇ ಇಲ್ಲ. ಅವರು ಹೇಗೆ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡಿದರು ಎಂದು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ಈಗ ನೀವು ಮಕ್ಕಳಿಗೆ ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ, ದೇಹದ ಎಲ್ಲಾ ಧರ್ಮಗಳನ್ನು ತ್ಯಾಗ ಮಾಡಿರಿ. ಯಾರಿಗೆ ತಿಳಿಸುತ್ತಾರೆ? ಆತ್ಮರಿಗೆ. ಇದನ್ನು ಜೀವಿಸಿದ್ದಂತೆಯೇ ಸಾಯುವುದು ಎಂದು ಹೇಳಲಾಗುವುದು. ಮನುಷ್ಯರು ಶರೀರ ಬಿಟ್ಟ ಮೇಲೆ ದೇಹದ ಎಲ್ಲಾ ಸಂಬಂಧಗಳೂ ಬಿಟ್ಟು ಹೋಗುತ್ತವೆ. |
ತಂದೆಯು ತಿಳಿಸುತ್ತಾರೆ - ಯಾವುದೆಲ್ಲಾ ದೇಹದ ಸಂಬಂಧಗಳಿವೆಯೋ ಅವೆಲ್ಲವನ್ನೂ ಬಿಟ್ಟು ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ. ಆತ್ಮಿಕ ನಿಶ್ಚಯ ಬುದ್ಧಿಯವರಾಗಿ. ಎಷ್ಟು ಹೆಚ್ಚು ನೆನಪು ಮಾಡುವಿರೋ ಅಷ್ಟು ಬೃಹಸ್ಪತಿಯ ದೆಶೆಯಿರುವುದು. ನಾವು ಶಿವ ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ ಎಂದು ಪರಿಶೀಲನೆ ಮಾಡಿಕೊಳ್ಳಿ. ನೆನಪಿನಿಂದಲೇ ತುಕ್ಕು ಕಳೆಯುತ್ತಾ ಹೋಗುವುದು ಮತ್ತು ನಿಮಗೆ ಖುಷಿಯಿರುವುದು. ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ ಎಂದು ನೀವೂ ಸಹ ಅನುಭವ ಮಾಡಬಹುದು. ಒಂದುವೇಳೆ ಕಡಿಮೆ ನೆನಪು ಮಾಡಿದರೆ ಕಡಿಮೆ ತುಕ್ಕು ಕಳೆಯುತ್ತದೆ, ಖುಷಿಯೂ ಕಡಿಮೆಯಿರುತ್ತದೆ, ಕಡಿಮೆ ಪದವಿಯನ್ನೇ ಪಡೆಯುವಿರಿ. ಆತ್ಮವೆ ಸತೋ, ರಜೋ, ತಮೋ ಆಗುತ್ತದೆ. ಗೋಪ-ಗೋಪಿಕೆಯರ ಅತೀಂದ್ರಿಯ ಸುಖವು ಈ ಸಮಯದ ಗಾಯನವೇ ಆಗಿದೆ. ಯಾವಾಗ ತಂದೆಯ ವಿನಃ ಮತ್ತೇನೂ ನೆನಪಿಗೆ ಬರುವುದಿಲ್ಲವೋ ಆಗಲೇ ಖುಷಿಯ ನಶೆಯೇರುವುದು. ನಮ್ಮ ಮೇಲೆ ಬೃಹಸ್ಪತಿ ದೆಶೆ ಅಥವಾ ಸದ್ಗುರುವಿನ ದೆಶೆಯಿದೆ. ಯಾವಾಗ ಖುಷಿಯು ಮಾಯವಾಗುವುದೋ ಆಗ ಬೃಹಸ್ಪತಿ ದೆಶೆಯು ಬದಲಾಗಿ ರಾಹುವಿನ ಗ್ರಹಣ ಹಿಡಿದಿದೆ ಎಂದು ಹೇಳುತ್ತಾರೆ. ಯಾರಾದರೂ ಬಹಳ ಸಾಹುಕಾರರಾಗಿರುತ್ತಾರೆ, ಯಾರಾದರೂ ಮೋಸ ಮಾಡಿದರೆಂದರೆ ದಿವಾಳಿ ಆಗಿ ಬಿಡುವರು. ಭಾರತದಲ್ಲಿಯೇ ಯಾವಾಗ ಗ್ರಹಣ ಹಿಡಿಯುವುದೋ ಆಗ ದಾನ ಕೊಟ್ಟರೆ ಗ್ರಹಣವು ಬಿಡುವುದೆಂದು ಹೇಳುತ್ತಾರೆ. ನಿಮ್ಮ ದೇವಿ-ದೇವತಾ ಧರ್ಮವು 16 ಕಲಾ ಸಂಪೂರ್ಣವಾಗಿತ್ತು, ಅದಕ್ಕೆ ಈಗ ಗ್ರಹಣ ಹಿಡಿದಿದೆ, ರಾಹುವಿನ ದೆಶೆ ಕುಳಿತುಕೊಳ್ಳುತ್ತದೆ. ಆದ್ದರಿಂದ ದೇವತೆಗಳ ಮುಂದೆ ಹೋಗಿ ತಾವು ಸರ್ವಗುಣ ಸಂಪನ್ನರು..... ನಾವು ಪಾಪಿಗಳು ಕಪಟಿಗಳು ಎಂದು ಹಾಡುತ್ತಾರೆ. ಈಗ ನೀವು ತಿಳಿದುಕೊಳ್ಳುತ್ತೀರಿ - ರಾಹುವಿನ ಗ್ರಹಣ ಹಿಡಿಯುವುದರಿಂದ ಎಲ್ಲರೂ ಕಪ್ಪಾಗಿ ಬಿಟ್ಟಿದ್ದಾರೆ. ಹೇಗೆ ಚಂದ್ರಮನಿಗೂ ಸಹ ಕೊನೆಯಲ್ಲಿ ಒಂದು ರೇಖೆಯು ಮಾತ್ರವೇ ಉಳಿದಿರುತ್ತದೆ. ತಂದೆಯು ತಿಳಿಸುತ್ತಾರೆ, ನೀವು ದೇವಿ-ದೇವತೆಗಳ ಚಿತ್ರಗಳಿವೆ. ಗೀತೆಯೇ ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ ಆದರೆ ಇವರೇ ತಮ್ಮ ಧರ್ಮವನ್ನು ಅರಿತುಕೊಂಡಿಲ್ಲ. ಧರ್ಮ ಗುರುಗಳ ಸಮ್ಮೇಳನಗಳನ್ನು ಮಾಡುತ್ತಾರೆ, ನೀವು ಅಲ್ಲಿಯೂ ಸಹ ತಿಳಿಸಿರಿ - ಈಶ್ವರ ಸರ್ವವ್ಯಾಪಿಯಲ್ಲ, ಅವರು ಬೇಹದ್ದಿನ ತಂದೆಯಾಗಿದ್ದಾರೆ. ಬಂದು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಸಾಧು-ಸಂತ ಮೊದಲಾದವರಿಗೆ ಆಸ್ತಿಯೇ ಸಿಗುವುದಿಲ್ಲ ಅಂದಮೇಲೆ ಅವರು ಹೇಗೆ ಒಪ್ಪುವರು! ನೀವು ಮಕ್ಕಳಿಗೇ ಆಸ್ತಿಯು ಸಿಗುತ್ತದೆ. ಮುಖ್ಯ ಮಾತು ಇದನ್ನೇ ಸಿದ್ಧ ಮಾಡಬೇಕಾಗಿದೆ - ಈಶ್ವರ ಸರ್ವವ್ಯಾಪಿಯಲ್ಲ, ಶಿವ ಜಯಂತಿಯಾಗುತ್ತದೆ. ಶಿವ ಜಯಂತಿ ಎಂದಾದರೂ ಹೇಳಿ ಅಥವಾ ರುದ್ರ ಜಯಂತಿ ಎಂದಾದರೂ ಹೇಳಿ, ರುದ್ರನು ಈ ಜ್ಞಾನ ಯಜ್ಞವನ್ನು ರಚಿಸುತ್ತಾರೆ. ಶಿವನೇ ಆಗಿದ್ದಾರೆ, ಅದೇ ಗೀತಾ ಜ್ಞಾನ ಯಜ್ಞವಾಗಿದೆ ಇದರಿಂದಲೇ ವಿನಾಶ ಜ್ವಾಲೆಯು ಪ್ರಜ್ವಲಿತವಾಯಿತು. ನಿರಾಕಾರ ತಂದೆಯು ಹೇಗೆ ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ, ಇದು ಬೇಹದ್ದಿನ ಯಜ್ಞವಾಗಿದೆ, ಇದರಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗುವುದು. ಉಳಿದೆಲ್ಲವೂ ಸ್ಥೂಲ ಯಜ್ಞಗಳಾಗಿವೆ. ಎಷ್ಟು ಹಗಲು-ರಾತ್ರಿಯ ವ್ಯತ್ಯಾಸವಿದೆ. ತಂದೆಯು ತಿಳಿಸುತ್ತಾರೆ - ಇದು ರುದ್ರ ಜ್ಞಾನ ಯಜ್ಞವಾಗಿದೆ, ವಿನಾಶವೂ ಆಗಬೇಕಾಗಿದೆ. ಯಾವಾಗ ನೀವು ತೇರ್ಗಡೆಯಾಗಿ ಬಿಡುತ್ತೀರೊ ಆಗ ಸಂಪೂರ್ಣ ಜ್ಞಾನಿ ಮತ್ತು ಯೋಗಿಗಳಾಗಿ ಬಿಡುತ್ತೀರಿ ಆಗ ನಿಮಗಾಗಿ ಹೊಸ ಪ್ರಪಂಚ, ಸ್ವರ್ಗವು ಬೇಕಾಗುವುದು ಮತ್ತು ಅವಶ್ಯವಾಗಿ ನರಕದ ವಿನಾಶವಾಗಬೇಕು. ರಾಜಸ್ವ ಅಶ್ವಮೇಧ ಅಕ್ಷರವು ಸರಿಯಾಗಿದೆ. ಅಶ್ವವನ್ನು ಸ್ವಾಹಾ ಮಾಡುತ್ತಾರೆ, ವಾಸ್ತವದಲ್ಲಿ ನಿಮ್ಮ ಈ ರಥವು ಅಶ್ವವಾಗಿದೆ. ಒಬ್ಬ ಧಕ್ಷ ಪ್ರಜಾಪತಿಯ ಯಜ್ಞವನ್ನು ರಚಿಸುತ್ತಾರೆ, ಅವರದು ಕಥೆಯಿದೆ. |
ಈಗ ನೀವು ಮಕ್ಕಳಿಗೆ ವೃಕ್ಷಪತಿ ತಂದೆಯು ಓದಿಸುತ್ತಿದ್ದಾರೆ ಎಂದು ಎಷ್ಟೊಂದು ಖುಷಿಯಿರಬೇಕು. ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ, ನಿಮ್ಮ ಸ್ಥಿತಿಯು ಬಹಳ ಚೆನ್ನಾಗಿದೆ. ನಡೆಯುತ್ತಾ-ನಡೆಯುತ್ತಾ ಮತ್ತೆ ಪತ್ರ ಬರೆಯುತ್ತಾರೆ - ಬಾಬಾ, ನಾವಂತೂ ಗೊಂದಲಕ್ಕೊಳಗಾಗಿದ್ದೇವೆ. ಮೊದಲು ನಾವು ಬಹಳ ಖುಷಿಯಲ್ಲಿದ್ದೆವು, ಈಗ ಏನಾಯಿತೋ ಗೊತ್ತಿಲ್ಲ. ಇಲ್ಲಿ ಬಂದು ತಂದೆಯ ಮಕ್ಕಳಾಗುವುದು ದೊಡ್ಡ ಯಾತ್ರೆಯಾಗಿದೆ. ಅಲ್ಲಿ ತೀರ್ಥ ಯಾತ್ರೆಗೆ ಹೋಗುತ್ತಾರೆಂದರೆ ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಾರೆ. ಇಲ್ಲಿ ದಾನ ಮಾಡುವ ಮಾತಿಲ್ಲ. ಇದರಲ್ಲಿ ಸ್ವಲ್ಪವೂ ಹಣವನ್ನು ಖರ್ಚು ಮಾಡುವಂತಿಲ್ಲ. ಅವು ದೈಹಿಕ ಯಾತ್ರೆಗಳಾಗಿವೆ, ನಿಮ್ಮದು ಆತ್ಮಿಕ ಯಾತ್ರೆ ಆಗಿದೆ. ಆ ಯಾತ್ರೆಯಿಂದ ಲಾಭವೇನೂ ಇಲ್ಲ ಆದ್ದರಿಂದಲೇ ಗೀತೆಯು ಇದೆಯಲ್ಲವೆ - ನಾಲ್ಕೂ ಧಾಮಗಳನ್ನು ಸುತ್ತಿ ಬಂದೆವು ಆದರೂ ಜನ್ಮ-ಜನ್ಮಾಂತರ ಭಗವಂತನಿಂದ ದೂರ ಉಳಿದೆವು. ಈಗ ನೀವು ತಿಳಿದುಕೊಳ್ಳುತ್ತೀರಿ, ಎಷ್ಟೊಂದು ಯಾತ್ರೆಗಳನ್ನು ಮಾಡಿರಬಹುದು! ಮನುಷ್ಯರು ಒಂದಲ್ಲ ಒಂದು ಕಡೆ ಹೋಗುತ್ತಿರುತ್ತಾರೆ. ಹರಿದ್ವಾರದಲ್ಲಿ ಗಂಗಾ ತೀರಕ್ಕೆ ಹೋಗುತ್ತಾರೆ, ಪತಿತ-ಪಾವನಿ ಗಂಗೆ ಎಂದು ತಿಳಿದುಕೊಳ್ಳುತ್ತಾರಲ್ಲವೆ. ವಾಸ್ತವದಲ್ಲಿ ನೀವು ಸತ್ಯ-ಸತ್ಯವಾದ ಜ್ಞಾನ ಗಂಗೆಯರಾಗಿದ್ದೀರಿ, ನಿಮ್ಮ ಬಳಿಯೂ ಅನೇಕರು ಬಂದು ಜ್ಞಾನ ಸ್ನಾನ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಸದ್ಗುರು ಒಬ್ಬರೇ ಆಗಿದ್ದಾರೆ, ಸರ್ವರ ಸದ್ಗತಿದಾತ ಒಬ್ಬ ಸದ್ಗುರುವಿನ ವಿನಃ ಮತ್ತ್ಯಾರೂ ಗುರುಗಳಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಕಲ್ಪ-ಕಲ್ಪವೂ ಸಂಗಮಯುಗದಲ್ಲಿ ಬಂದು ಸದ್ಗತಿ ನೀಡಿ ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತೇನೆ. ಮತ್ತೆ ನೀವು ಪೂಜಾರಿಗಳಾಗಿ ದುಃಖಿಯಾಗಿ ಬಿಡುತ್ತೀರಿ ಇದೂ ಸಹ ಈಗ ಅರ್ಥವಾಗಿದೆ. ಅವಶ್ಯವಾಗಿ ನಮ್ಮ ಅರ್ಧಕಲ್ಪ ರಾಜ್ಯ ನಡೆಯುತ್ತದೆ ನಂತರ ದ್ವಾಪರದಲ್ಲಿ ನಾವೇ ದೇವಿ-ದೇವತೆಗಳು ವಾಮ ಮಾರ್ಗದಲ್ಲಿ ಇಳಿಯುತ್ತೇವೆ. ಯಾವಾಗ ರಾವಣ ರಾಜ್ಯವು ಆರಂಭವಾಗುತ್ತದೆಯೋ ಆಗಿನಿಂದಲೇ ವಾಮಮಾರ್ಗವು ಆರಂಭವಾಗುತ್ತದೆ. ಅದರ ಸಾಕ್ಷಿಗಳೂ ಇವೆ. ಜಗನ್ನಾಥ ಮಂದಿರದಲ್ಲಿ ನೋಡಿರಿ, ಒಳಗೆ ಕಪ್ಪು ಮೂರ್ತಿಗಳಿವೆ, ಹೊರಗಡೆ ದೇವತೆಗಳ ಕೊಳಕು ಚಿತ್ರಗಳಿವೆ. ಆ ಸಮಯದಲ್ಲಿ ತಮಗೂ ಸಹ ಇದೇನು ಎಂದು ಅರ್ಥವಾಗಿರಲಿಲ್ಲ. ವಿಕಾರಿ ಮನುಷ್ಯರು ವಿಕಾರಿ ದೃಷ್ಟಿಯಿಂದ ನೋಡುತ್ತಾರೆ ಆದ್ದರಿಂದ ದೇವತೆಗಳು ವಿಕಾರಿಗಳಾಗಿದ್ದರು ಎಂದು ತಿಳಿದುಕೊಳ್ಳುತ್ತಿದ್ದರು. ದೇವತೆಗಳು ವಾಮ ಮಾರ್ಗದಲ್ಲಿ ಹೋಗುತ್ತಾರೆಂದು ಬರೆಯಲ್ಪಟ್ಟಿದೆ. ದೇವತೆಗಳ ಉಡುಪುಗಳನ್ನೇ ತೋರಿಸಿದ್ದಾರೆ. ಇಲ್ಲಿಯೂ ದಿಲ್ವಾಡಾ ಮಂದಿರದಲ್ಲಿ ಹೋಗಿ ನೋಡಿರಿ. ಮೇಲೆ ಸ್ವರ್ಗವಿದೆ, ಕೆಳಗೆ ತಪಸ್ಸಿನಲ್ಲಿ ಕುಳಿತಿದ್ದಾರೆ. ಇವೆಲ್ಲಾ ರಹಸ್ಯಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ತಂದೆಯದು ಅನುಭವೀ ರಥವಲ್ಲವೆ. |
ನೀವು ಮಕ್ಕಳು ಈಗ ತಿಳಿದುಕೊಳ್ಳುತ್ತಿದ್ದೀರಿ - ಆತ್ಮರು ಮತ್ತು ಪರಮಾತ್ಮನು ಬಹಳ ಕಾಲ ಅಗಲಿದ್ದರು... ನಿಮ್ಮಲ್ಲಿ ಯಾರು ಮೊದಲು ತಂದೆಯಿಂದ ಅಗಲಿದ್ದೀರೋ ಅವರೇ ಪುನಃ ಬಂದು ಮೊಟ್ಟ ಮೊದಲಿಗೆ ಮಿಲನ ಮಾಡುತ್ತೀರಿ, ಸತ್ಯಯುಗದ ಮೊದಲ ರಾಜಕುಮಾರನು ಶ್ರೀಕೃಷ್ಣನಾಗಿದ್ದಾರೆ. ಕೃಷ್ಣನ ತಂದೆಯೂ ಇರಬೇಕಲ್ಲವೆ. ಕೃಷ್ಣನ ತಂದೆ-ತಾಯಿಯ ಮಹಿಮೆಯನ್ನು ಎಷ್ಟೊಂದು ತೋರಿಸುವುದಿಲ್ಲ, ಕೇವಲ ತಲೆಯ ಮೇಲೆ ಕೂರಿಸಿಕೊಂಡು ನದಿಯನ್ನು ದಾಟಿ ಕರೆದುಕೊಂಡು ಹೋದರೆಂದು ತೋರಿಸುತ್ತಾರೆ. ರಾಜಧಾನಿ ಇತ್ಯಾದಿಗಳೇನೂ ತೋರಿಸಿಲ್ಲ. ಅವರ ತಂದೆಯ ಮಹಿಮೆಯು ಏಕೆ ಇಲ್ಲ! ನೀವೀಗ ತಿಳಿದುಕೊಂಡಿದ್ದೀರಿ - ಈ ಸಮಯದಲ್ಲಿ ಕೃಷ್ಣನ ಆತ್ಮವು ಚೆನ್ನಾಗಿ ವಿದ್ಯೆಯನ್ನು ಓದಿದೆ, ಆದ ಕಾರಣವೇ ತಂದೆ-ತಾಯಿಗಿಂತಲೂ ಶ್ರೇಷ್ಠ ಪದವಿಯನ್ನು ಪಡೆದಿದ್ದಾರೆ. ನೀವು ತಿಳಿದುಕೊಳ್ಳುತ್ತೀರಿ - ನಾವು ಶ್ರೀಕೃಷ್ಣನ ರಾಜ್ಯದಲ್ಲಿದ್ದೆವು, ಸ್ವರ್ಗದಲ್ಲಿದ್ದೆವು ನಂತರ ನಾವು ಚಂದ್ರವಂಶಿಯರಾದೆವು. ಈಗ ಪುನಃ ಸೂರ್ಯವಂಶಿಯರಾಗಲು ಶ್ರೀಮತದಂತೆ ನಡೆದು ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗುತ್ತೇವೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಸ್ಥಿತಿಯನ್ನು ನೋಡಿಕೊಳ್ಳಬಹುದು. ಒಂದುವೇಳೆ ಈ ಸಮಯದಲ್ಲಿ ನಾನು ಶರೀರ ಬಿಟ್ಟರೆ ಯಾವ ಪದವಿಯನ್ನು ಪಡೆಯಬಹುದು ಎಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬಹುದಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತದೆ. ಮನುಷ್ಯರ ಮೇಲೆ ಯಾವುದಾದರೂ ಆಪತ್ತು ಬಂದರೆ, ಇಲ್ಲವೆ ದಿವಾಳಿಯಾದರೆ ಹೋಗಿ ಸಾಧುಗಳ ಸಂಗ ಮಾಡುತ್ತಾರೆ. ನಂತರ ಮನುಷ್ಯರು ತಿಳಿದುಕೊಳ್ಳುತ್ತಾರೆ - ಇವರು ಭಕ್ತಾತ್ಮನಾಗಿದ್ದಾರೆ. ಮೋಸ ಮಾಡುವುದಿಲ್ಲ, ಇಂತಿಂತಹವರೂ ಸಹ 2-4 ವರ್ಷಗಳಲ್ಲಿಯೇ ಬಹಳ ಧನವಂತರಾಗಿ ಬಿಡುತ್ತಾರೆ. ಅವರ ಬಳಿ ಬಹಳ ಹಣವನ್ನು ಕೂಡಿಡುತ್ತಾರೆ. ಪ್ರತಿಯೊಬ್ಬರೂ ತಮ್ಮ ಬುದ್ಧಿಯಿಂದ ತಿಳಿದುಕೊಳ್ಳಬಹುದಾಗಿದೆ, ನಿಮ್ಮಲ್ಲಿಯೂ ಅನೇಕರಿದ್ದಾರೆ. ಬಹಳ ಕಡಿಮೆ ನೆನಪು ಮಾಡುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ - ತಮ್ಮ ಕಲ್ಯಾಣವನ್ನು ಬಯಸುವುದಾದರೆ ತಮ್ಮ ಬಳಿ ಒಂದು ನೋಟ್ಬುಕ್ ಇಟ್ಟುಕೊಳ್ಳಿ, ಚಾರ್ಟನ್ನು ಬರೆಯಿರಿ - ನಾವು ಇಡೀ ದಿನದಲ್ಲಿ ಎಷ್ಟು ಸಮಯ ನೆನಪಿನಲ್ಲಿದ್ದೆವು? ಮನುಷ್ಯರಂತೂ ಇಡೀ ಜೀವನದ ಚರಿತ್ರೆಯನ್ನು ಬರೆಯುತ್ತಾರೆ. ನೀವು ಕೇವಲ ನೆನಪಿನ ಚಾರ್ಟ್ ಬರೆಯಬೇಕಾಗಿದೆ. ಇದರಲ್ಲಿ ತಮ್ಮದೇ ಉನ್ನತಿಯಾಗುವುದು. ತಂದೆಯನ್ನು ನೆನಪು ಮಾಡದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ, ವಿಕರ್ಮವೇ ವಿನಾಶವಾಗಲಿಲ್ಲವೆಂದರೆ ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವಿರಿ ಮತ್ತೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಯಾರು ಪೆಟ್ಟು ತಿನ್ನುವುದಿಲ್ಲವೋ ಅವರಿಗೆ ಬಹಳ ಒಳ್ಳೆಯ ಪದವಿ ಸಿಗುವುದು. ಪೆಟ್ಟು ತಿಂದಮೇಲೆ ಅಲ್ಪಸ್ವಲ್ಪ ಪದವಿಯನ್ನು ಪಡೆಯುವುದರಿಂದ ಏನು ಪ್ರಯೋಜನ? ಧರ್ಮರಾಜನ ಶಿಕ್ಷೆಯನ್ನು ಅನುಭವಿಸಬಾರದು, ಅಗೌರವ ಆಗಬಾರದು ಅಂತಹ ಪುರುಷಾರ್ಥ ಮಾಡಬೇಕಾಗಿದೆ. ನೀವು ನೋಡುತ್ತೀರಿ – ಶಿವ ತಂದೆಯು ಕುಳಿತಿದ್ದಾರೆ, ಮತ್ತೆ ಧರ್ಮರಾಜನೂ ಇದ್ದಾರೆ. ನಿಮಗೆ ಎಲ್ಲವನ್ನೂ ಸಾಕ್ಷಾತ್ಕಾರ ಮಾಡಿಸುತ್ತಾರೆ - ನೀವು ಹೀಗೀಗೆ ಮಾಡಿದ್ದಿರಿ ನೆನಪಿದೆಯೇ? ಅದಕ್ಕಾಗಿ ಈಗ ಶಿಕ್ಷೆಯನ್ನು ಅನುಭವಿಸಿರಿ. ಜನ್ಮ-ಜನ್ಮಾಂತರದಿಂದ ಎಷ್ಟು ಅನುಭವಿಸುತ್ತೀರೋ ಅಷ್ಟೇ ಶಿಕ್ಷೆಯನ್ನು ಆ ಸಮಯದಲ್ಲಿ ಅನುಭವಿಸುತ್ತೀರಿ. ಅಂತ್ಯದಲ್ಲಿ ಅಲ್ಪಸ್ವಲ್ಪ ತುಂಡು ರೊಟ್ಟಿ ಸಿಕ್ಕಿದರೆ ಏನು ಲಾಭ? ಶಿಕ್ಷೆಯನ್ನಂತೂ ಅನುಭವಿಸಬಾರದು. ಆದ್ದರಿಂದ ತಮ್ಮ ಸ್ಥಿತಿಯನ್ನು ಪರಿಶೀಲನೆ ಮಾಡಿಕೊಳ್ಳಿರಿ. ಹೇಗೆ ಲೆಕ್ಕ ಪತ್ರವನ್ನು ಇಡುತ್ತೀರಿ, ಕೆಲವರು ಆರು ತಿಂಗಳದು, ಕೆಲವರು 12 ತಿಂಗಳು, ಕೆಲವರಂತೂ ಪ್ರತಿ ನಿತ್ಯದ ಲೆಕ್ಕವನ್ನು ಇಡುತ್ತಾರೆ. ನೀವೂ ಸಹ ವ್ಯಾಪಾರಿಗಳಾಗಿದ್ದೀರಿ. ಈ ಬೇಹದ್ದಿನ ತಂದೆಯೊಂದಿಗೆ ಕೆಲವರೇ ವಿರಳ ವ್ಯಾಪಾರಿಗಳು ವ್ಯಾಪಾರ ಮಾಡುವರು. ಧನವಿಲ್ಲದಿದ್ದರೂ ತನು, ಮನವಂತೂ ಇದೆಯಲ್ಲವೆ. ಅವರಿಗೆ ಆಚಾರಿ ಎಂದು ಹೇಳುತ್ತಾರೆ. ಎಲ್ಲವನ್ನೂ ಕುಟ್ಟಿ, ಕುಟ್ಟಿ ಸರಿಪಡಿಸುತ್ತಾರಲ್ಲವೆ. ನೀವು ತನು-ಮನ-ಧನವನ್ನು ಕೊಡುತ್ತೀರಿ, ಇದಕ್ಕೆ ಪ್ರತಿಯಾಗಿ 21 ಜನ್ಮಗಳ ಎಷ್ಟೊಂದು ಆಸ್ತಿಯನ್ನು ಪಡೆಯುತ್ತೀರಿ, ಬಾಬಾ ನಾನು ನಿಮ್ಮವನಾಗಿದ್ದೇನೆ, ಇಂತಹ ಯುಕ್ತಿಯನ್ನು ತಿಳಿಸಿ ಅದರಿಂದ ನಮ್ಮ ಆತ್ಮ ಮತ್ತು ಶರೀರವು ಈ ಲಕ್ಷ್ಮೀ-ನಾರಾಯಣರಂತೆ ಆಗಿ ಬಿಡಲಿ. ತಂದೆಯು ಹೇಳುತ್ತಾರೆ - ನಾನು ನಿಮ್ಮನ್ನು ಎಷ್ಟು ಸುಂದರರನ್ನಾಗಿ ಮಾಡುತ್ತೇನೆ, ಒಮ್ಮೆಲೆ ರೂಪವನ್ನೇ ಬದಲಾಯಿಸಿ ಬಿಡುತ್ತೇನೆ. ಇನ್ನೊಂದು ಜನ್ಮದಲ್ಲಿ ನಿಮಗೆ ಬಹಳ ಸುಂದರ ಶರೀರವು ಸಿಗುವುದು. ನೀವು ವೈಕುಂಠದಲ್ಲಿಯೂ ನೋಡುತ್ತೀರಿ, ನಿಮಗೆ ತಿಳಿದಿದೆ - ಈ ಮಮ್ಮಾ-ಬಾಬಾರವರೇ ನಂತರ ಲಕ್ಷ್ಮೀ-ನಾರಾಯಣರಾಗುತ್ತಾರೆ. ಗುರಿ-ಧ್ಯೇಯವನ್ನೂ ತೋರಿಸುತ್ತಾರೆ, ಈಗ ಯಾರೆಷ್ಟು ಪುರುಷಾರ್ಥ ಮಾಡುವರೋ ಅದರಂತೆ ಪಡೆಯುವರು. ಒಂದುವೇಳೆ ಪೂರ್ಣ ಪುರುಷಾರ್ಥ ಮಾಡುವುದಿಲ್ಲ, ಏರುಪೇರು ಮಾಡುತ್ತಿದ್ದರೆ ತಮ್ಮ ಪದವಿಯನ್ನೇ ಭ್ರಷ್ಟ ಮಾಡಿಕೊಳ್ಳುವರು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಮ್ಮ ಸ್ಥಿತಿಯನ್ನು ತಾವೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ತಮ್ಮ ಕಲ್ಯಾಣಕ್ಕಾಗಿ ನಿತ್ಯವೂ ಡೈರಿಯನ್ನು ಇಟ್ಟುಕೊಳ್ಳಬೇಕು, ಅದರಲ್ಲಿ ನೆನಪಿನ ಚಾರ್ಟ್ ಬರೆಯಬೇಕಾಗಿದೆ. |
2. ಬೇಹದ್ದಿನ ತಂದೆಯೊಂದಿಗೆ ಸತ್ಯ-ಸತ್ಯವಾದ ವ್ಯಾಪಾರ ಮಾಡಬೇಕಾಗಿದೆ, ತಮ್ಮ ತನು-ಮನ-ಧನವನ್ನು ತಂದೆಗೆ ಅರ್ಪಣೆ ಮಾಡಿ 21 ಜನ್ಮಗಳಿಗಾಗಿ ಪ್ರತಿಫಲವನ್ನೇ ಪಡೆಯಬೇಕಾಗಿದೆ. ನಿಶ್ಚಯ ಬುದ್ಧಿಯವರಾಗಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. |
ಡಬಲ್ ಓಂ ಶಾಂತಿ. ಒಂದನ್ನು ಶಿವ ತಂದೆಯು ಹೇಳುತ್ತಾರೆ, ಇನ್ನೊಂದನ್ನು ಬ್ರಹ್ಮಾದಾದಾರವರು ಹೇಳುತ್ತಾರೆ. ಇಬ್ಬರ ಸ್ವಧರ್ಮವೂ ಶಾಂತಿಯಾಗಿದೆ. ಇಬ್ಬರೂ ಶಾಂತಿಧಾಮ ನಿವಾಸಿಯಾಗಿದ್ದಾರೆ. ನೀವು ಮಕ್ಕಳೂ ಸಹ ಶಾಂತಿಧಾಮ ನಿವಾಸಿಯಾಗಿದ್ದೀರಿ, ನಿರಾಕಾರ ದೇಶದಲ್ಲಿರುವವರು ಸಾಕಾರಿ ದೇಶದಲ್ಲಿ ಪಾತ್ರವನ್ನು ಅಭಿನಯಿಸಲು ಬಂದಿದ್ದೀರಿ ಏಕೆಂದರೆ ಇದು ಡ್ರಾಮಾ ಅಲ್ಲವೆ. ಮಕ್ಕಳಿಗೆ ಮೇಲಿನಿಂದ ಹಿಡಿದು ಕೆಳಗಿನವರೆಗೆ ಡ್ರಾಮಾದ ಆದಿ-ಮಧ್ಯ-ಅಂತ್ಯದ ಜ್ಞಾನವು ಬುದ್ಧಿಯಲ್ಲಿ ತುಂಬಲ್ಪಟ್ಟಿದೆ, ಸರ್ವಶ್ರೇಷ್ಠ ಭಗವಂತ ಮತ್ತು ಅವರ ಜೊತೆ ಮಕ್ಕಳು. ಈ ಮಾತುಗಳನ್ನು ಚೆನ್ನಾಗಿ ತಿಳಿದುಕೊಳ್ಳಿ. ನಿಮ್ಮ ವಿನಃ ಯಾರಲ್ಲಿಯೂ ಈ ಜ್ಞಾನವಿಲ್ಲ. ನೀವು ಈಶ್ವರನ ಶಾಲೆಯಲ್ಲಿ ಓದುತ್ತೀರಿ, ಭಗವಾನುವಾಚ - ಭಗವಂತನು ಒಬ್ಬರೇ ಆಗಿದ್ದಾರೆ, ಯಾವುದೇ 10-20 ಮಂದಿ ಭಗವಂತರಿಲ್ಲ. ಯಾವುದೆಲ್ಲಾ ಧರ್ಮದವರಿದ್ದಾರೆಯೋ ಅವರ ಯಾರೆಲ್ಲಾ ಆತ್ಮರಿದ್ದಾರೆಯೋ ಎಲ್ಲರಿಗೂ ಒಬ್ಬರೇ ತಂದೆಯಾಗಿದ್ದಾರೆ. ನಂತರ ತಂದೆಯು ಸೃಷ್ಟಿಯನ್ನು ರಚಿಸುತ್ತಾರೆಂದರೆ ಆಗ ಪ್ರಜಾಪಿತ ಬ್ರಹ್ಮಾ ಎಂದು ಹೇಳಲಾಗುತ್ತದೆ. ಶಿವನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ, ಪ್ರಜೆಗಳಂತೂ ಜನನ-ಮರಣದಲ್ಲಿ ಬರುತ್ತಾರೆ, ಆತ್ಮವು ಸಂಸ್ಕಾರದ ಆಧಾರದಿಂದ ಜನನ-ಮರಣದಲ್ಲಿ ಬರುತ್ತದೆ ಅಂದಮೇಲೆ ಪ್ರಜಾಪಿತ ಬ್ರಹ್ಮನು ಬೇಕಾಗಿದೆ. ಪರಮಪಿತ ಪರಮಾತ್ಮನು ಪ್ರಜಾಪಿತ ಬ್ರಹ್ಮನ ಮೂಲಕ ರಚನೆಯನ್ನು ರಚಿಸುತ್ತಾರೆಂದು ಗಾಯನವಿದೆ. ಅವರನ್ನು ಪತಿತ-ಪಾವನ ಬನ್ನಿ ಎಂದು ಕರೆಯಲಾಗುತ್ತದೆ. ಯಾವಾಗ ಪ್ರಪಂಚವು ಪತಿತವಾಗುತ್ತದೆಯೋ ಮತ್ತು ಅದರ ಅಂತ್ಯವಾಗುತ್ತದೆಯೋ ಆಗಲೇ ತಂದೆಯು ಪತಿತರಿಂದ ಪಾವನರನ್ನಾಗಿ ಮಾಡಲು ಬರುತ್ತಾರೆ, ನೀವೀಗ ತಿಳಿದುಕೊಂಡಿದ್ದೀರಿ - ತಂದೆಯು ಒಂದೇ ಬಾರಿ ಬರುತ್ತಾರೆ, ಮತ್ತೆಂದೂ ಬರುವುದಿಲ್ಲ. ಈಗ ನಿಮಗೆ ಸಂಪೂರ್ಣ ಜ್ಞಾನ ಸಿಕ್ಕಿದೆ, ನೀವು ಡ್ರಾಮಾದ ಪಾತ್ರಧಾರಿಗಳಾಗಿದ್ದೀರಲ್ಲವೆ. ಡ್ರಾಮಾದ ಪಾತ್ರಧಾರಿಗಳಿಗೆ ಯಾರ್ಯಾರದ್ದು ಯಾವ-ಯಾವ ಪಾತ್ರವೆಂದು ಎಲ್ಲರ ಪಾತ್ರದ ಬಗ್ಗೆ ಅವಶ್ಯವಾಗಿ ತಿಳಿದಿರಬೇಕು. ಅದಂತೂ ಚಿಕ್ಕ ಹದ್ದಿನ ನಾಟಕವಾಗಿರುತ್ತದೆ, ಅದರ ಬಗ್ಗೆ ಎಲ್ಲರಿಗೂ ತಿಳಿಯುತ್ತದೆ, ನೀವೂ ಸಹ ನೋಡಿ ಬರುತ್ತೀರಿ. ಬೇಕಾದರೆ ನೀವು ಅದನ್ನು ಬರೆಯಲೂಬಹುದು, ನೆನಪು ಮಾಡಿಕೊಳ್ಳಲೂಬಹುದು. ಬಹಳ ಚಿಕ್ಕದಾಗಿರುತ್ತದೆ ಆದರೆ ಇದು ಬಹಳ ದೊಡ್ಡ ಬೇಹದ್ದಿನ ನಾಟಕವಾಗಿದೆ. ಇದನ್ನು ನೀವು ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೆ ತಿಳಿದಿದ್ದೀರಿ. ಈಗ ನಿಮಗೆ ತಿಳಿದಿದೆ - ನಮಗೆ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ ಮತ್ತೆ ಹದ್ದಿನ ತಂದೆಯಿಂದ ಹದ್ದಿನ ಆಸ್ತಿ, ಹದ್ದಿನ ಸಂಪತ್ತು ಸಿಗುತ್ತದೆ. ತಂದೆಯು ತಿಳಿಸಿದ್ದರು, ಯಾರು ರಾಜರಾಗುವರೋ ಅವರು ಹಿಂದಿನ ಜನ್ಮದಲ್ಲಿ ದಾನ, ಪುಣ್ಯ ಇತ್ಯಾದಿಗಳನ್ನು ಮಾಡಿರುವುದರಿಂದ ಒಂದು ಜನ್ಮಕ್ಕಾಗಿ ರಾಜರಾಗುತ್ತಾರೆ, ಅವರು ಇನ್ನೊಂದು ಜನ್ಮದಲ್ಲಿಯೂ ರಾಜರಾಗುತ್ತಾರೆ ಎಂದಲ್ಲ. ನೀವು ಯಾರು ಸತ್ಯಯುಗದಲ್ಲಿ ರಾಜ-ಮಹಾರಾಜರಾಗಿದ್ದಿರೋ, ನಿಮ್ಮ ರಾಜ್ಯವು ಮರೆಯಾಗಿ ಬಿಡುತ್ತದೆ ಎಂದು ತಿಳಿದುಕೊಳ್ಳಬೇಡಿ, ನಂತರ ಯಾವಾಗ ಭಕ್ತಿಮಾರ್ಗವಾಗುವುದೋ ಆಗಲೂ ಸಹ ಅವರು ಹೆಚ್ಚು ದಾನ-ಪುಣ್ಯ ಮಾಡುತ್ತಾರೆಂದರೆ ಅವರೂ ಸಹ ರಾಜಧಾನಿಯಲ್ಲಿ ಹೋಗುತ್ತಾರೆ ಆದರೆ ಅವರು ವಿಕಾರಿ ರಾಜರಾಗಿ ಬಿಡುತ್ತಾರೆ. ನೀವೇ ಯಾರು ಪೂಜ್ಯರಾಗಿದ್ದಿರೋ ನಂತರ ಪೂಜಾರಿಗಳಾಗಿದ್ದೀರಿ, ಅದು ಅಲ್ಪಕಾಲದ ಸುಖವಿರುತ್ತದೆ, ದುಃಖವಂತೂ ಕೇವಲ ಈಗಲೇ ಇರುತ್ತದೆ. ಈಗ ತಮೋಪ್ರಧಾನತೆಯಲ್ಲಿಯೂ ಸಹ ನಿಮಗೆ ಸುಖವಿದೆ, ಯಾವುದೇ ಕಲಹ-ಜಗಳಗಳ ಮಾತಿಲ್ಲ. ಇದಂತೂ ನಂತರದಲ್ಲಿ ಆಗುತ್ತದೆ, ಯಾವಾಗ ಲಕ್ಷಾಂತರ ಅಂದಾಜಿನಲ್ಲಿ ಆಗಿ ಬಿಡುವರೋ ಆಗ ಯುದ್ಧ ಇತ್ಯಾದಿಗಳು ಆರಂಭವಾಗುತ್ತದೆ. ನೀವು ಮಕ್ಕಳಿಗೆ ಸತ್ಯಯುಗ, ತ್ರೇತಾ-ದ್ವಾಪರದಲ್ಲಿಯೂ ಸುಖವಿರುತ್ತದೆ. ಯಾವಾಗ ತಮೋಪ್ರಧಾನತೆಯು ಹೆಚ್ಚಾಗುವುದೋ ಆಗ ಸ್ವಲ್ಪ ದುಃಖವಿರುತ್ತದೆ. ಈಗಂತೂ ಬಹಳ ತಮೋಪ್ರಧಾನತೆಯಿದೆ, ಇದು ತಮೋಪ್ರಧಾನ ಪ್ರಪಂಚವೆಂದು ತಂದೆಯು ತಿಳಿಸುತ್ತಾರೆ. ನಿಮಗೆ ತಿಳಿದಿದೆ - ಇದು ಬೇಹದ್ದಿನ ನಾಟಕವಾಗಿದೆ, ಇದರಿಂದ ಯಾರೂ ಬಿಡುಗಡೆಯಾಗಲು ಸಾಧ್ಯವಿಲ್ಲ. ಮನುಷ್ಯರು ಯಾವಾಗ ದುಃಖದಲ್ಲಿ ಬೇಸತ್ತು ಹೋಗುವರೋ ಆಗ ಭಗವಂತನು ಇಂತಹ ಆಟವನ್ನು ಏಕೆ ರಚಿಸಿದರು ಎಂದು ಹೇಳುತ್ತಾರೆ. ಒಂದುವೇಳೆ ಭಗವಂತನು ರಚಿಸದೇ ಇದ್ದಿದ್ದರೆ ಪ್ರಪಂಚವೇ ಇರುತ್ತಿರಲಿಲ್ಲ, ಏನೂ ಇರುತ್ತಿರಲಿಲ್ಲ. ರಚಯಿತ ಮತ್ತು ರಚನೆಯಂತೂ ಇದೆಯಲ್ಲವೆ. ಅದರ ವಿವರವೂ ಇದೆ, ಸತ್ಯಯುಗದಿಂದ ಕಲಿಯುಗದ ಅಂತ್ಯದವರೆಗೆ ಇನ್ನು ಕೆಲವೇ ದಿನಗಳಿವೆ, ನೀವು ಪ್ರತ್ಯಕ್ಷದಲ್ಲಿ ನೋಡುತ್ತೀರಿ. ಮೊದಲೇ ತೋರಿಸುವುದಿಲ್ಲ. 5000 ವರ್ಷಗಳ ಚಕ್ರದಲ್ಲಿ ಇನ್ನು ಸ್ವಲ್ಪವೇ ಇದೆ, ಅದನ್ನು ಈಗಲೇ ತೋರಿಸಿ ಬಿಡುವುದಿಲ್ಲ. ಯಾವಾಗ ಆಗುವುದೋ ಆಗ ಅದನ್ನೂ ಸಹ ಸಾಕ್ಷಿಯಾಗಿ ನೋಡುತ್ತೀರಿ, ಏನಾಗಬೇಕಾಗಿದೆಯೋ ಅದು ಕಲ್ಪದ ಹಿಂದಿನ ತರಹ ಆಗುವುದು. ಇದನ್ನಂತೂ ನೋಡುತ್ತಲೇ ಇದ್ದೀರಿ, ತಯಾರಿಗಳೂ ನಡೆಯುತ್ತಿದೆ, ವಿನಾಶವಂತೂ ಖಂಡಿತ ಆಗುವುದು. ಎಲ್ಲದರ ತಯಾರಿ ಆಗುತ್ತಿದೆ, ಅದು ಡ್ರಾಮಾದಲ್ಲಿ ಮೊದಲಿನಿಂದಲೇ ನಿಗಧಿಯಾಗಿದೆ, ವಿನಾಶವು ಖಂಡಿತ ಆಗುವುದು. ಈಗ ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ - ನಿಮ್ಮ ಆತ್ಮವು ತಮೋಪ್ರಧಾನವಾಗಿದೆ ಅದನ್ನೂ ಸಹ ಇಲ್ಲಿಯೇ ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ, ಇದನ್ನು ನೀವೀಗ ತಿಳಿದುಕೊಂಡಿದ್ದೀರಿ. |
ತಂದೆಯು ಗುಪ್ತವಾಗಿ ಬರುತ್ತಾರೆ, ಗುಪ್ತವಾಗಿಯೇ ನಿಮಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಗುಪ್ತ ರೀತಿಯಿಂದ ನೀವು ವಿಶ್ವದ ರಾಜ್ಯವನ್ನು ತೆಗೆದುಕೊಳ್ಳುತ್ತೀರಿ, ಯಾವುದೆ ಗಲಾಟೆಯಿಲ್ಲ. ಸಂಪೂರ್ಣ ಗುಪ್ತ ದಾನವೆಂದು ಹೇಳಲಾಗುತ್ತದೆಯಲ್ಲವೆ. ತಂದೆಯು ಬಂದು ಮಕ್ಕಳಿಗೆ ಅವಿನಾಶಿ ಜ್ಞಾನ ರತ್ನಗಳ ಗುಪ್ತದಾನವನ್ನು ಕೊಡುತ್ತಾರೆ. ತಂದೆಯೂ ಸಹ ಎಷ್ಟೊಂದು ಗುಪ್ತವಾಗಿದ್ದಾರೆ, ಯಾರೂ ತಿಳಿದುಕೊಂಡಿಲ್ಲ. ಇವರೆಲ್ಲರೂ ಎಲ್ಲಿ ಹೋಗುತ್ತಾರೆ? ಬ್ರಹ್ಮಾಕುಮಾರ-ಕುಮಾರಿಯರು ಏನು ಮಾಡುತ್ತಾರೆ? ಎಂಬುದೇನನ್ನೂ ತಿಳಿದುಕೊಂಡಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಎಷ್ಟು ಗುಪ್ತವಾಗಿದ್ದಾರೆ! ನೀವು ಮಕ್ಕಳನ್ನು ಗುಪ್ತ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಯಾವುದೇ ಯುದ್ಧವಿಲ್ಲ, ಸಿಡಿ ಮದ್ದುಗಳಿಲ್ಲ. ಯಾವುದೇ ಖರ್ಚಿಲ್ಲ. ಇಲ್ಲಾದರೆ ಒಂದು ಚಿಕ್ಕ ಹಳ್ಳಿಯನ್ನು ತೆಗೆದುಕೊಳ್ಳುವುದರಲ್ಲಿಯೇ ಎಷ್ಟೊಂದು ಜಗಳ-ಕಲಹಗಳಾಗುತ್ತವೆ! ತಂದೆಯು ಬಂದು ಗುಪ್ತದಾನವನ್ನು ಕೊಡುತ್ತಾರೆ. ಅವಿನಾಶಿ ಜ್ಞಾನ ರತ್ನಗಳಿಂದ ನಿಮ್ಮ ಜೋಳಿಗೆಯನ್ನು ತುಂಬಿಸುತ್ತಾರೆ. ಶಿವ ಭೋಲಾ ಭಂಡಾರಿಯೇ ನಮ್ಮ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. |
ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಅವಿನಾಶಿ ಜ್ಞಾನರತ್ನಗಳಿಂದ ನಮ್ಮ ಜೋಳಿಗೆಯನ್ನು ತುಂಬಿಸುತ್ತಿದ್ದಾರೆ ಅಂದಾಗ ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳು ಬೆಲೆ ಬಾಳುವಂತದ್ದಾಗಿದೆ. ನೀವು ಎಷ್ಟೊಂದು ರತ್ನಗಳನ್ನು ಕೊಡುತ್ತೀರಿ, ಎಷ್ಟೊಂದು ಜ್ಞಾನಿಯಾಗುತ್ತೀರಿ, ಅದೂ ಸಹ ಗುಪ್ತವಾಗಿದೆ. ದೇವತೆಗಳಿಗೆ ಎಷ್ಟೊಂದು ಆಯುಧಗಳು, ಭುಜಗಳನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಅದೇನೂ ಇರುವುದಿಲ್ಲ. ಸತ್ಯಯುಗದಲ್ಲಿ ದೇವತೆಗಳಿಗೆ ಇಷ್ಟೊಂದು ಭುಜಗಳಿರುವುದೇ ಇಲ್ಲ. ಕಲಿಯುಗದಲ್ಲಿ ಅನೇಕ ಪ್ರಕಾರದ ಆಯುಧಗಳನ್ನು ತೋರಿಸುತ್ತಾರೆ. ವಿನಾಶಕ್ಕಾಗಿ ಅಣು ಬಾಂಬುಗಳಿವೆ ಅಂದಮೇಲೆ ಕತ್ತಿ, ಬಾಣಗಳನ್ನು ಏನು ಮಾಡುವರು? ನೀವು ಹೇಳುತ್ತೀರಿ - ಈ ಜ್ಞಾನ ಖಡ್ಗವನ್ನು ಅವರು ಆಯುಧಗಳೆಂದು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ಏನೂ ಇಲ್ಲ. ನಿಮಗೆ ಗುಪ್ತದಾನ ಸಿಗುತ್ತದೆ. ನೀವು ಮತ್ತೆ ಎಲ್ಲರಿಗೆ ಗುಪ್ತದಾನ ಮಾಡುತ್ತೀರಿ. ನಿಮಗೆ ತಿಳಿದಿದೆ, ತಂದೆಯು ಶ್ರೀಮತವನ್ನು ಕೊಡುತ್ತಿದ್ದಾರೆ. ಶ್ರೀಮತವು ಭಗವಂತನದ್ದಾಗಿದೆ. ನಾವು ನರನಿಂದ ನಾರಾಯಣರಾಗಲು ಬರುತ್ತೇವೆಂದು ನಿಮಗೆ ತಿಳಿದಿದೆ. ಲಕ್ಷ್ಮೀ-ನಾರಾಯಣರಿಗೆ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ, ದೈವೀ ಗುಣಧಾರಿ ಎಂದು ಹೇಳುತ್ತಾರೆ. ದೈವೀ ಗುಣಗಳು ಕೇವಲ ಆ ದೇವಿ-ದೇವತೆಗಳಲ್ಲಿ ಇರುತ್ತವೆ ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ಹೇಗೆ ಪೂರ್ಣ ಚಂದ್ರಮನ ಬೆಳಕು ಬಹಳ ಚೆನ್ನಾಗಿರುತ್ತದೆ. ನಂತರ ಕಡಿಮೆಯಾಗುತ್ತಾ ಹೋಗುತ್ತದೆ. ಕಡಿಮೆಯಾಗುತ್ತಾ ಆಗುತ್ತಾ ಕೊನೆಗೆ ಒಂದು ಚಿಕ್ಕಗೆರೆ ಉಳಿಯುತ್ತದೆ. ಪೂರ್ಣ ಮಾಯವಾಗುವುದಿಲ್ಲ. ಒಂದು ಚಿಕ್ಕ ಗೆರೆಯಷ್ಟು ಉಳಿದುಕೊಳ್ಳುತ್ತದೆ, ಅದಕ್ಕೆ ಅಮಾವಾಸ್ಯೆ ಎಂದು ಹೇಳುತ್ತಾರೆ. ಈಗ ನಿಮ್ಮದು ಬೇಹದ್ದಿನ ಮಾತಾಗಿದೆ. ನೀವು 16 ಕಲಾ ಸಂಪೂರ್ಣರಾಗಿದ್ದೀರಿ, ಕೃಷ್ಣನ ಬಾಯಲ್ಲಿ ಮಾತೆಯರು ಚಂದ್ರಮನನ್ನು ನೋಡುತ್ತಾರೆಂದು ತೋರಿಸುತ್ತಾರೆ. ಇವು ಸಾಕ್ಷಾತ್ಕಾರದ ಮಾತುಗಳಾಗಿವೆ, ತಂದೆಯು ಇದರ ತಿಳುವಳಿಕೆ ನೀಡುತ್ತಾರೆ. ನೀವೀಗ ಸಂಪೂರ್ಣರಾಗಬೇಕಾಗಿದೆ, ಮಾಯೆಯ ಸಂಪೂರ್ಣ ಗ್ರಹಣ ಹಿಡಿದಿದೆ. ಕೊನೆಗೆ ಗೆರೆಯಷ್ಟು ಮಾತ್ರವೇ ಉಳಿದುಕೊಳ್ಳುತ್ತದೆ. ಏಣಿಯನ್ನು ಇಳಿಯುತ್ತಾ ಬಂದಿದ್ದಾರೆ. ಎಲ್ಲರೂ ಏಣಿಯನ್ನು ಇಳಿಯಲೇಬೇಕಾಗಿದೆ, ಆಗಲೇ ಪುನಃ ಎಲ್ಲರೂ ಹಿಂತಿರುಗಿ ಹೋಗುವರು. ನೀವಂತೂ ಈಗ ಕೆಲವರೇ ಇದ್ದೀರಿ, ದಿನ ಕಳೆದಂತೆ ವೃದ್ಧಿಯಾಗುವುದು. ವಿದ್ಯೆಯಲ್ಲಿ ಎಲ್ಲರೂ ತೇರ್ಗಡೆಯಾಗುವುದಿಲ್ಲ. ನಿಮ್ಮ ಸೇವಾಕೇಂದ್ರಗಳೂ ಸಹ ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಇರುತ್ತವೆ. ಸಮಯವು ಸಮೀಪಿಸುತ್ತಾ ಹೋದಂತೆ ಇವರಲ್ಲಿ ಏನಿದೆ ಎಂದು ತಿಳಿದುಕೊಳ್ಳುತ್ತಾರೆ. ದಿನ-ಪ್ರತಿದಿನ ವೃದ್ಧಿಯಾಗುತ್ತಾ ಇರುತ್ತೀರಿ. ಈಗ ಹೇಳುತ್ತಾರೆ - ಇವರು ಎಲ್ಲಿಯವರೆಗೆ ನಡೆಯುತ್ತಾರೆ? ಇವರದು ಸಮಾಪ್ತಿಯಾಗುತ್ತದೆ ಎಂದು ನಾವು ತಿಳಿದುಕೊಂಡಿದ್ದೆವು, ಆರಂಭದಲ್ಲಿ ಈ ಭಯದಿಂದ ಅನೇಕರು ಬಿಟ್ಟು ಹೋದರು. ಏನಾಗುವುದೋ ಗೊತ್ತಿಲ್ಲ, ಇಲ್ಲಿಯೂ ಇಲ್ಲ ಅಲ್ಲಿಯೂ ಇಲ್ಲ ಎನ್ನುವಂತಾಗಬಹುದು. ಇದಕ್ಕಿಂತಲೂ ಹೊರಟು ಹೋಗೋಣವೆಂದು ಅನೇಕರು ಹೊರಟು ಹೋದರು. ಪುನಃ ಅವರಲ್ಲಿ ಕೆಲವರು ಬರುತ್ತಿದ್ದಾರೆ. ತಂದೆಯು ಎಷ್ಟು ಸಹಜ ರೀತಿಯಿಂದ ತಿಳಿಸುತ್ತಾರೆ. ಈ ಅಬಲೆಯರು, ಅಹಲ್ಯೆಯರಿಗೆ ಏನೂ ಕಷ್ಟ ಕೊಡುವುದಿಲ್ಲ, ಇವರ ಉದ್ಧಾರವೂ ಸಹ ಆಗಬೇಕಾಗಿದೆ. ಬಾಬಾ, ನಾವಂತೂ ಏನೂ ಓದಿಲ್ಲ, ಅವಿದ್ಯಾವಂತರಾಗಿದ್ದೇವೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಏನನ್ನೂ ಓದಿಲ್ಲದಿದ್ದರೆ ಇನ್ನೂ ಒಳ್ಳೆಯದೇ ಆಗಿದೆ. ಶಾಸ್ತ್ರ ಇತ್ಯಾದಿ ಏನೆಲ್ಲವನ್ನೂ ಓದಿದ್ದೀರೋ ಎಲ್ಲವನ್ನೂ ಮರೆತು ಬಿಡಿ. ನಾನು ಹೆಚ್ಚಿನದಾಗಿ ಏನನ್ನೂ ಓದಿಸುವುದಿಲ್ಲ. ಕೇವಲ ಹೇಳುತ್ತೇನೆ - ನನ್ನನ್ನು ನೆನಪು ಮಾಡಿದರೆ ರಾಜ್ಯಭಾಗ್ಯವು ನಿಮ್ಮದಾಗುವುದು. ನಿಮ್ಮ ದೋಣಿಯು ಪಾರಾಗಿ ಬಿಡುವುದು. ಮಗು ಜನ್ಮ ಪಡೆಯಿತೆಂದರೆ ಅಪ್ಪ ಎಂದು ಹೇಳುತ್ತಾರೆ. ಆಸ್ತಿಗೆ ಹಕ್ಕುದಾರನಾಗಿ ಬಿಡುತ್ತಾರೆ. ಹಾಗೆಯೇ ಇಲ್ಲಿಯೂ ನೀವು ಹಕ್ಕುದಾರರಾಗಿ ಬಿಡುತ್ತೀರಿ. ಬಾಪ್ದಾದಾರವರನ್ನು ನೆನಪು ಮಾಡಿದರೆ ಸಾಕು ರಾಜಧಾನಿಯು ನಿಮ್ಮದಾಗುವುದು ಆದ್ದರಿಂದಲೇ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಸಾಹುಕಾರರ ಪಾತ್ರವಂತೂ ಅಂತಿಮದಲ್ಲಿರುತ್ತದೆ. ಮೊದಲು ಬಡವರೇ ಬಂದು ಜ್ಞಾನ ಪಡೆಯುವರು. ನಿಮ್ಮ ಬಳಿ ತಾವಾಗಿಯೇ ಬರುತ್ತಾರೆ. ಕೆಲಸಗಾರರ ಉದ್ಧಾರವನ್ನೂ ಸಹ ಮಾಡಬೇಕಾಗಿದೆ. ಬಿಲ್ಲಿನಿಯರ ಗಾಯನವೂ ಇದೆ. ರಾಮನು ಬಿಲ್ಲಿನಿಯರ ಬೇರಿ ಹಣ್ಣು ತಿಂದನೆಂದು ಹೇಳುತ್ತಾರೆ. ವಾಸ್ತವದಲ್ಲಿ ರಾಮನೂ ಇಲ್ಲ, ಶಿವ ತಂದೆಯೂ ಇಲ್ಲ. ಹಾ! ಈ ಬ್ರಹ್ಮಾರವರು ತಿನ್ನಬಹುದು, ಬಿಲ್ಲಿನಿಯರು (ಕಾಡು ಜನಾಂಗ) ಬರುತ್ತಾರೆ. ತಿಳಿದುಕೊಳ್ಳಿ, ಅವರು ಟೋಲಿ ಇತ್ಯಾದಿಗಳನ್ನು ತರುತ್ತಾರೆಂದರೆ ಅದನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಬಿಲ್ಲಿನಿಯರು, ಗಣಿಕೆಯರು ತೆಗೆದುಕೊಂಡು ಬಂದರೆ ನೀವೂ ಸಹ ತಿನ್ನುವಿರಿ. ಶಿವ ತಂದೆಯು ಹೇಳುತ್ತಾರೆ - ನಾನಂತೂ ತಿನ್ನುವುದಿಲ್ಲ, ನಾನು ಅಭೋಕ್ತನಾಗಿದ್ದೇನೆ. ನಿಮ್ಮ ಬಳಿ ಎಲ್ಲರೂ ಬರುತ್ತಾರೆ, ಮೊದಲು ಇವರನ್ನು ಮೇಲೆತ್ತಿರಿ ಎಂದು ಸರ್ಕಾರವೂ ಸಹ ಸಹಯೋಗ ನೀಡುವುದು. ನಿಮಗೂ ಸಹ ತಾನಾಗಿಯೇ ಪ್ರೇರಣೆಯಾಗುವುದು. ತಂದೆಯು ಬಡವರ ಬಂಧುವಾಗಿದ್ದಾರೆ ಅಂದಮೇಲೆ ನಾವೂ ಸಹ ಬಡವರಿಗೆ ತಿಳಿಸೋಣ, ಕಾಡು ಜನರಲ್ಲಿಯೂ ಕೆಲವರಾದರೂ ಬಂದೇ ಬರುತ್ತಾರೆ. ಇಷ್ಟು ದೊಡ್ಡ ವೃಕ್ಷವಿದೆ, ಇದರಲ್ಲಿ ಒಬ್ಬರೂ ದೇವಿ-ದೇವತಾ ಧರ್ಮದವರಿಲ್ಲ, ಮತ್ತೆಲ್ಲಾ ಧರ್ಮಗಳಲ್ಲಿ ಹೋಗಿ ಸೇರಿ ಬಿಟ್ಟಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಯಾರು ಭಕ್ತಿ ಮಾಡುವವರಿದ್ದಾರೆಯೋ ಅವರಿಗೆ ತಿಳಿಸಿಕೊಡಿ. ನೀವು ನೋಡುತ್ತಿದ್ದೀರಿ - ಹೇಗೆ ನಾಟಿಯಾಗುತ್ತಿದೆ! ಹೇಗೆ ಬ್ರಾಹ್ಮಣರಾಗುತ್ತಾರೆ! ಯಾರು ಸೂರ್ಯವಂಶಿ, ಚಂದ್ರವಂಶಿ ದೇವತೆಗಳಾಗ ಬೇಕಾಗಿದೆಯೋ ಅವರೇ ಬರತೊಡಗುತ್ತಾರೆ. ಒಂದು ಬಾರಿ ಈ ಜ್ಞಾನವನ್ನು ಕೇಳಿದರೂ ಸಹ ಸ್ವರ್ಗದಲ್ಲಿ ಖಂಡಿತ ಬಂದೇ ಬರುತ್ತಾರೆ. ತಂದೆಯು ಕಾಶಿಯಲ್ಲಿ ಬಲಿಯಾಗುವ ಉದಾಹರಣೆಯನ್ನೂ ತಿಳಿಸಿದ್ದಾರೆ. ಅಲ್ಲಿ ಹೋಗಿ ಶಿವನಿಗೆ ಬಲಿಯಾಗುತ್ತಾರೆ. ಅವರಿಗೂ ಸಹ ಏನಾದರೂ ಸಿಗಬೇಕಲ್ಲವೆ. ನೀವು ಬಲಿಹಾರಿಯಾಗುತ್ತೀರಿ, ರಾಜ್ಯ ಪದವಿಗಾಗಿ ಪುರುಷಾರ್ಥ ಮಾಡುತ್ತೀರಿ. ಭಕ್ತಿಮಾರ್ಗದಲ್ಲಿ ರಾಜ್ಯವಂತೂ ಇರುವುದಿಲ್ಲ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಏನಾಗುತ್ತದೆ, ಅವರು ಯಾವ ಪಾಪಗಳನ್ನು ಮಾಡಿದ್ದಾರೆಯೋ ಅದರ ಶಿಕ್ಷೆಯನ್ನು ಅನುಭವಿಸಿ ಅದನ್ನು ಮುಗಿಸಿಕೊಳ್ಳುತ್ತಾರೆ ನಂತರ ಹೊಸದಾಗಿ ಜನ್ಮವಾಗುತ್ತದೆ. ಮತ್ತೆ ಹೊಸದಾಗಿ ಪಾಪವಾಗಲು ಆರಂಭವಾಗುತ್ತದೆ ಬಾಕಿ ಅವರು ಎಲ್ಲಿಯೂ ಹೋಗುವುದಿಲ್ಲ, ಇಲ್ಲಿಯೇ ಜನ್ಮ ಕಳೆಯಬೇಕಾಗಿದೆ. ನೀವೇ ಮೊಟ್ಟ ಮೊದಲಿಗರಾಗಿದ್ದೀರಿ, ನೀವೇ 84 ಜನ್ಮಗಳನ್ನು ಭೋಗಿಸುತ್ತೀರಿ. ಎಲ್ಲರೂ ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಇಡೀ ಮನುಷ್ಯ ಸೃಷ್ಟಿಯ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿ ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ. ಒಬ್ಬ ಕುಂಭಕರ್ಣನಿರಲಿಲ್ಲ, ಅನೇಕರಿದ್ದಾರೆ. ನೀವು ಇಷ್ಟಾದರೂ ತಿಳಿಸಿ, ಅವರು ಕೇಳಿಸಿಕೊಳ್ಳುವುದೇ ಇಲ್ಲ. ಯಾರದು ಪಾತ್ರವಿದೆಯೋ ಅವರು ಪುರುಷಾರ್ಥ ಮಾಡುತ್ತಾರೆ ಮತ್ತು ಅವರೇ ಮಾತಾಪಿತರ ಹೃದಯವನ್ನೇರುತ್ತಾರೆ, ಅವರೇ ಸಿಂಹಾಸನಾಧೀಶರಾಗುತ್ತಾರೆ. ಬಾಬಾ ಮಕ್ಕಳಿಗೆ ಶಿಕ್ಷಣ ಕೊಡಬೇಕಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಇದಕ್ಕೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದನ್ನು ಆಲೋಚಿಸಬೇಡಿ, ನಾವು ಪತಿತರನ್ನು ಪಾವನ ಮಾಡಿ ಎಂದು ನೀವು ಕರೆಯುತ್ತೀರಿ. ತಂದೆಯೂ ಸಹ ಹೇಳುತ್ತಾರೆ, ಕಾಮ ಮಹಾಶತ್ರುವಾಗಿದೆ. ಕ್ರೋಧವು ಶತ್ರುವೆಂದು ಹೇಳಲಾಗುವುದಿಲ್ಲ. ಪುರುಷರು ಬಹಳ ಹೊಡೆದಾಡುತ್ತಾರೆ, ಮಾತೆಯರಲ್ಲಿ ಅಷ್ಟೊಂದು ಇರುವುದಿಲ್ಲ. ಈಗ ತಂದೆಯು ನೀವು ಮಾತೆಯರನ್ನು ಮುಂದಿಟ್ಟಿದ್ದಾರೆ. ವಂದೇ ಮಾತರಂ. ಪತಿಯು ನಿಮಗೆ ಗುರು, ಈಶ್ವರನಾಗಿದ್ದಾರೆ, ಅವರ ಮತದಂತೆ ನಡೆಯಬೇಕೆಂದು ಮಾತೆಯರಿಗೆ ಹೇಳಿಕೊಡುತ್ತಾರೆ. ಮಾಂಗಲ್ಯ ಕಟ್ಟಿದರೆ ಸಾಕು ಕೂಡಲೇ ಪತಿತರಾಗುವರು. ಅವರಿಗೆ ಈ ಈಶ್ವರ ಸಿಕ್ಕಿದನೇ! ಈಗ ರಾಮ ರಾಜ್ಯವು ಸ್ಥಾಪನೆಯಾಗುತ್ತದೆ, ಉಳಿದೆಲ್ಲರೂ ಹೊರಟು ಹೋಗುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ಎಂದೂ ತಂದೆಯು ತಿಳಿಸುತ್ತಾರೆ. ಈಗ ನಿಮಗೆ ಪರಮಪಿತ ಪರಮಾತ್ಮನೊಂದಿಗೆ ಪ್ರೀತಿಬುದ್ಧಿಯಿದೆ. ಶಿವ ತಂದೆಯು ಇವರಲ್ಲಿ ಬರುತ್ತಾರೆ, ಇವರ ಮೂಲಕ ನಾವು ಕೇಳುತ್ತಿದ್ದೇವೆ ಎಂದು ನೀವಾತ್ಮರಿಗೆ ತಿಳಿದಿದೆ. ಆತ್ಮವು ಚಿಕ್ಕ ಬಿಂದುವಾಗಿದೆ. ಶಿವ ತಂದೆಗೆ ಇದು ತಾತ್ಕಾಲಿಕ ರಥವಾಗಿದೆ. ಇವರ ಮೂಲಕ ಈ ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ಇದು ವೃದ್ಧಿಯಾಗುತ್ತಲೇ ಹೋಗುವುದು. ಮಕ್ಕಳ ಹನಿ ಹನಿಗೂಡಿ ಹಳ್ಳವಾಗುವುದು. ಮಕ್ಕಳು ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳುತ್ತಾ ಇರುತ್ತೀರಿ ಏಕೆಂದರೆ ಇದೆಲ್ಲವೂ ಮಣ್ಣು ಪಾಲಾಗಲಿದೆ, ಏನೂ ಉಳಿಯುವುದಿಲ್ಲ. ಆದ್ದರಿಂದ ಇಷ್ಟಾದರೂ ಸಫಲವಾಗಲಿ. ಸುಧಾಮನ ಉದಾಹರಣೆ ಇದೆಯಲ್ಲವೆ. ಹೆಣ್ಣು ಮಕ್ಕಳು ತಂದೆಯ ಬಳಿ ಹಿಡಿ ಅವಲಕ್ಕಿ ಅಥವಾ 6-8 ರೂಪಾಯಿಗಳನ್ನು ಕಳುಹಿಸುತ್ತಾರೆ. ವಾಹ್ ಮಗುವೆ! ತಂದೆಯಂತೂ ಬಡವರ ಬಂಧುವಲ್ಲವೆ. ಇದಂತೂ ಡ್ರಾಮದಲ್ಲಿ ನಿಗಧಿಯಾಗಿದೆ, ಇದು ಕಲ್ಪದ ನಂತರವೂ ಆಗುವುದು. ಬಂಧನದಲ್ಲಿ ಇರುವವರಿದ್ದಾರೆ, ತಂದೆಯು ಹೇಳುತ್ತಾರೆ - ನೀವು ಭಾಗ್ಯಶಾಲಿಗಳಾಗಿದ್ದೀರಿ, ಶಿವ ತಂದೆಯ ಕೈಯಂತೂ ಸಿಕ್ಕಿದೆಯಲ್ಲವೆ. ಮುಂದೆ ಒಂದು ದಿನ ಬರುವುದು ಎಲ್ಲಾ ಆರ್ಯ ಸಮಾಜಿಗಳೂ ಬರುತ್ತಾರೆ. ಇನ್ನೆಲ್ಲಿಗೆ ಹೋಗುವರು? ಮುಕ್ತಿ-ಜೀವನ್ಮುಕ್ತಿಯ ಅಂಗಡಿಯು ಇದೊಂದೇ ಆಗಿದೆ, ಶಿಕ್ಷೆಗಳನ್ನು ಅನುಭವಿಸಿ ಮುಕ್ತಿಯಲ್ಲಿ ಹೋಗಬೇಕಾಗಿದೆ, ಇದು ಅಂತಿಮ ಸಮಯವಾಗಿದೆ. ಎಲ್ಲರೂ ಹಿಂತಿರುಗಿ ಹೋಗುತ್ತಾರೆ. ಇದು ಪ್ರಿಯತಮನ ಮೆರವಣಿಗೆಯಾಗಿದೆ. ಹೇಗೆ ಮೆರವಣಿಗೆಯು ನಡೆಯುತ್ತದೆ ಎಂಬುದೂ ಸಹ ಸಾಕ್ಷಾತ್ಕಾರವಾಗುವುದು. ನಿಮ್ಮ ವಿನಃ ಮತ್ತ್ಯಾರೂ ನೋಡಲು ಸಾಧ್ಯವಿಲ್ಲ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ಮೂಲಕ ಜ್ಞಾನದ ಯಾವ ಗುಪ್ತ ದಾನ ಸಿಕ್ಕಿದೆಯೊ ಅದರ ಬೆಲೆಯನ್ನರಿತು ತಮ್ಮ ಜೋಳಿಗೆಯನ್ನು ಜ್ಞಾನ ರತ್ನಗಳಿಂದ ತುಂಬಿಸಿಕೊಳ್ಳಬೇಕಾಗಿದೆ. ಎಲ್ಲರಿಗೆ ಗುಪ್ತ ದಾನವನ್ನು ಕೊಡುತ್ತಾ ಹೋಗಬೇಕಾಗಿದೆ. |
2. ಈ ಅಂತಿಮ ಸಮಯದಲ್ಲಿ ಹಿಂತಿರುಗಿ ಹೋಗಬೇಕಾಗಿದೆ, ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಬೇಕು. ಪ್ರೀತಿ ಬುದ್ಧಿಯವರು ಆಗಬೇಕಾಗಿದೆ, ಎಲ್ಲರಿಗೆ ಮುಕ್ತಿ ಹಾಗೂ ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸಬೇಕಾಗಿದೆ. |
ಓಂ ಶಾಂತಿ. ಮಕ್ಕಳು ತಿಳಿದುಕೊಳ್ಳುತ್ತೀರಿ, ತಂದೆಯೂ ತಿಳಿದುಕೊಳ್ಳುತ್ತಾರೆ - ಮಕ್ಕಳು (ಯೋಗ ಮಾಡಿಸುವವರು) ಇಲ್ಲಿ ಏನು ಮಾಡುತ್ತಿದ್ದಾರೆ! ನೆನಪಿನ ಯಾತ್ರೆಯ ಡ್ರಿಲ್ ಮಾಡಿಸುತ್ತಿದ್ದೀರಿ. ಬಾಯಿಂದ ಏನನ್ನೂ ಹೇಳುವಂತಿಲ್ಲ. ಯಾರ ನೆನಪಿದೆ? ಪರಮಪಿತ ಪರಮಾತ್ಮ ಶಿವ ತಂದೆಯ ನೆನಪಿದೆ. ಅವರ ನೆನಪಿನಲ್ಲಿ ಇರುವುದರಿಂದ ನಮ್ಮ ಯಾವುದೆಲ್ಲಾ ವಿಕರ್ಮಗಳಿವೆಯೋ ಅವು ಭಸ್ಮವಾಗುತ್ತವೆ ಮತ್ತು ವಿಕರ್ಮಾಜೀತರಾಗಿ ಬಿಡುತ್ತೇವೆ. ಯಾರೆಷ್ಟು ನೆನಪಿನ ಡ್ರಿಲ್ನಲ್ಲಿ ಇರುವರೋ ಅಷ್ಟು ಆಗುವರು. ಇದು ಆತ್ಮದ ವ್ಯಾಯಾಮವಾಗಿದೆ, ಶರೀರದ್ದಲ್ಲ, ಭಾರತದಲ್ಲಿ ಯಾವುದೆಲ್ಲಾ ವ್ಯಾಯಾಮಗಳನ್ನು ಕಲಿಸುತ್ತಾರೆಯೋ ಅವೆಲ್ಲವೂ ದೈಹಿಕವಾಗಿದೆ, ಇದು ಆತ್ಮಿಕ ವ್ಯಾಯಾಮವಾಗಿದೆ, ಇದನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. |
ಈ ಆತ್ಮಿಕ ವ್ಯಾಯಾಮದ ಸೂಚನೆಯು ಅವಶ್ಯವಾಗಿ ಗೀತೆಯಲ್ಲಿದೆ. ಭಗವಾನುವಾಚ ಅಥವಾ ಭಗವಂತನ ಮಕ್ಕಳ ಉವಾಚವೂ ಆಗಿದೆ. ನೀವೀಗ ಭಗವಂತ ಶಿವ ತಂದೆಯ ಮಕ್ಕಳಾಗಿದ್ದೀರಲ್ಲವೆ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು ಮಕ್ಕಳಿಗೆ ಆದೇಶ ಸಿಕ್ಕಿದೆ. ತಂದೆಯೂ ಸಹ ವ್ಯಾಯಾಮವನ್ನು ಕಲಿಸುತ್ತಾರೆ. ಮಕ್ಕಳೂ ಸಹ ಇದೇ ವ್ಯಾಯಾಮವನ್ನು ಕಲಿಸುತ್ತೀರಿ, ಕಲ್ಪದ ಮೊದಲೂ ತಂದೆಯು ಇದನ್ನೇ ಹೇಳಿದ್ದರು - ತಂದೆಯಾದ ನನ್ನನ್ನು ನೆನಪು ಮಾಡಿರಿ. ಇದರಲ್ಲಿ ಮತ್ತೆ-ಮತ್ತೆ ಹೇಳುವ ಅವಶ್ಯಕತೆಯಿಲ್ಲ ಆದರೂ ಹೇಳಬೇಕಾಗುತ್ತದೆ. ಇಲ್ಲಿ ಕುಳಿತಿದ್ದರೂ ಸಹ ಕೆಲವರು ತಮ್ಮ ಮಿತ್ರ-ಸಂಬಂಧಿಗಳನ್ನು, ಉದ್ಯೋಗ-ವ್ಯವಹಾರಗಳನ್ನು ನೆನಪು ಮಾಡುತ್ತಾ ಇರುತ್ತಾರೆ. ಅಂತಹವರು ವಾಯುಮಂಡಲದಲ್ಲಿ ವಿಘ್ನ ಹಾಕುತ್ತಾರೆ. ತಂದೆಯು ತಿಳಿಸುತ್ತಾರೆ - ಹೇಗೆ ನೀವಿಲ್ಲಿ ನೆನಪಿನಲ್ಲಿ ಕುಳಿತಿದ್ದೀರೋ ಅದೇರೀತಿ ನಡೆಯುತ್ತಾ-ತಿರುಗಾಡುತ್ತಾ, ಕರ್ಮ ಮಾಡುತ್ತಾ ನೆನಪಿನಲ್ಲಿ ಇರಬೇಕಾಗಿದೆ. ಹೇಗೆ ಪ್ರಿಯತಮೆ, ಪ್ರಿಯತಮನು ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ, ಅವರದು ದೈಹಿಕ ನೆನಪಾಗಿದೆ ನಿಮ್ಮದು ಆತ್ಮಿಕ ನೆನಪಾಗಿದೆ. ಆತ್ಮರು ಭಕ್ತಿಮಾರ್ಗದಲ್ಲಿಯೂ ಪರಮಪಿತ ಪರಮಾತ್ಮ ಪ್ರಿಯತಮನಿಗೆ ಪ್ರಿಯತಮೆಯರು ಆಗಿರುತ್ತಾರೆ ಆದರೆ ಆ ಪ್ರಿಯತಮನನ್ನು ಅರಿತುಕೊಂಡಿರುವುದಿಲ್ಲ ಮತ್ತು ತನ್ನನ್ನು ಆತ್ಮನೆಂದಾಗಲಿ ಅರಿತಿರುವುದಿಲ್ಲ. ಪ್ರಿಯತಮ ತಂದೆಯು ಬಂದಿದ್ದಾರೆ, ಭಕ್ತಿಮಾರ್ಗದಿಂದ ಹಿಡಿದು ಆತ್ಮರು ಪ್ರಿಯತಮೆಯರಾಗಿದ್ದಾರೆ, ಇದು ಆತ್ಮರು ಮತ್ತು ಪರಮಾತ್ಮನ ಮಾತಾಗಿದೆ. ತಂದೆಯು ಮಕ್ಕಳಿಗೆ ಸನ್ಮುಖದಲ್ಲಿ ತಿಳಿಸುತ್ತಾರೆ - ನೀವು ಪ್ರಿಯತಮೆಯರು ಪ್ರಿಯತಮನಾದ ನನ್ನನ್ನು ಬಾಬಾ ಬನ್ನಿರಿ, ಬಂದು ನಮ್ಮನ್ನು ದುಃಖದಿಂದ ಬಿಡಿಸಿ, ತಮ್ಮ ಜೊತೆ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಿ ಎಂದು ನೆನಪು ಮಾಡುತ್ತೀರಿ. ನಿಮಗೆ ತಿಳಿದಿದೆ - ಈಗ ಈ ದುಃಖಧಾಮ, ಮೃತ್ಯುಲೋಕದ ವಿನಾಶವಾಗಲಿದೆ. ಅಮರಲೋಕದ ಜಯ ಜಯಕಾರ, ಮೃತ್ಯುಲೋಕದ ವಿನಾಶವಾಗುವುದು. ನೀವೀಗ ಬ್ರಾಹ್ಮಣ ಮಕ್ಕಳಾಗಿದ್ದೀರಿ, ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದ ಅನುಸಾರ ಇದ್ದಾರೆ. ನೀವು ಮಕ್ಕಳಿಗೆ ಪೂರ್ಣ ನಿಶ್ಚಯವಿರಲಿ - ನಾವೀಗ 21 ಜನ್ಮಗಳಿಗಾಗಿ ನರಕವಾಸಿಗಳಿಂದ ಸ್ವರ್ಗವಾಸಿಗಳಾಗುತ್ತೇವೆ. ಯಾರಾದರೂ ಮರಣ ಹೊಂದಿದರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಆದರೆ ಎಷ್ಟು ಸಮಯಕ್ಕಾಗಿ ಸ್ವರ್ಗವಾಸಿಯಾದರು ಎಂಬುದನ್ನು ಯಾರೂ ಅರಿತುಕೊಂಡಿಲ್ಲ. ನೀವೀಗ ಸ್ವರ್ಗವಾಸಿಯಾಗಲು ಪುರುಷಾರ್ಥ ಮಾಡುತ್ತಿದ್ದೀರಿ. ಇದನ್ನು ಯಾರು ನಿಶ್ಚಯ ಮಾಡಿಸುತ್ತಾರೆ? ಅವರು ಗೀತೆಯ ಭಗವಂತನಾಗಿದ್ದಾರೆ. ಆದರೆ ಒಬ್ಬನೇ ನಿರಾಕಾರ ಗೀತೆಯ ಭಗವಂತನಾಗಲು ಸಾಧ್ಯ. ನಿರಾಕಾರನೇ ಆಗಿದ್ದಾರೆ, ಅವರು ಹೇಗೆ ಇಲ್ಲಿ ಬಂದು ಕಲಿಸುವರು? ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ತಂದೆಯನ್ನು ಅರಿಯದ ಕಾರಣ ಡ್ರಾಮಾ ಅನುಸಾರ ತಪ್ಪಾಗಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈ ಸಮಯದಲ್ಲಿ ಕೃಷ್ಣ ಮತ್ತು ಶಿವನ ಸಂಬಂಧವು ಬಹಳ ಸಮೀಪದಲ್ಲಿದೆ. ಸಂಗಮದಲ್ಲಿ ಶಿವ ಜಯಂತಿ ಆಗುತ್ತದೆ, ಮತ್ತೆ ನಾಳೆ ಕೃಷ್ಣ ಜಯಂತಿ ಆಗುವುದು. ಶಿವ ಜಯಂತಿಯು ರಾತ್ರಿಯಲ್ಲಿಯೂ, ಕೃಷ್ಣ ಜಯಂತಿಯು ಮುಂಜಾನೆಯಲ್ಲಿಯೂ ಆಗುವುದು, ಇದಕ್ಕೆ ಪ್ರಭಾತವೆಂದು ಹೇಳುತ್ತಾರೆ. ಶಿವರಾತ್ರಿಯು ಮುಕ್ತಾಯವಾದಾಗ ಕೃಷ್ಣ ಜಯಂತಿಯಾಗುತ್ತದೆ. ಈ ಮಾತುಗಳನ್ನು ಮಕ್ಕಳೇ ತಿಳಿದುಕೊಳ್ಳುತ್ತೀರಿ. ಇಲ್ಲಿನ ನಿಯಮವೇನೆಂದರೆ ಈ ಸಭೆಯಲ್ಲಿ ಯಾರೂ ಬಾಹರ್ಮುಖಿ ಆಗಿರಬಾರದು, ತಂದೆಯ ನೆನಪಿನಲ್ಲಿ ಇರಬೇಕು. ಮನುಷ್ಯರು ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಕರೆಯುತ್ತಾರೆ ಆದರೆ ಡ್ರಾಮಾ ಅನುಸಾರ ಕಲ್ಲು ಬುದ್ಧಿಯವರಾಗಿರುವ ಕಾರಣ ಏನನ್ನೂ ತಿಳಿದುಕೊಂಡಿಲ್ಲ. ಒಂದುವೇಳೆ ತಿಳಿದುಕೊಂಡಿದ್ದೇ ಆದರೆ ತಿಳಿಸುತ್ತಿದ್ದರು. ಈಗ ಕಲಿಯುಗದ ಅಂತ್ಯವಾಗಿದೆ, ನಂತರ ಯಾವಾಗ ತಂದೆಯು ಬರುವರೋ ಆಗ ಆದಿಯಾಗುತ್ತದೆ ಎಂಬುದೂ ಸಹ ಅವರಿಗೆ ತಿಳಿದಿಲ್ಲ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ. ಕಲಿಯುಗವು ಇನ್ನೂ 40 ಸಾವಿರ ವರ್ಷಗಳಿರುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ, ಲೌಕಿಕ ತಂದೆಯೆಂದೂ ಪತಿತ-ಪಾವನನಾಗಲು ಸಾಧ್ಯವಿಲ್ಲ. ಬಾಪೂಜಿ ಎಂದು ಅನೇಕರಿಗೆ ಹೆಸರನ್ನಿಟ್ಟಿದ್ದಾರೆ, ವೃದ್ಧರಿಗೂ ಸಹ ಬಾಪೂ ಅಥವಾ ಪಿತಾಜೀ ಎಂದು ಹೇಳುತ್ತಾರೆ. ಈ ಆತ್ಮಿಕ ಪಿತಾಶ್ರೀ ಅಂತೂ ಒಬ್ಬರೇ ಆಗಿದ್ದಾರೆ, ಅವರು ಪತಿತ-ಪಾವನ, ಜ್ಞಾನ ಸಾಗರನಾಗಿದ್ದಾರೆ. ಮಕ್ಕಳು ಪಾವನರಾಗಲು ಜ್ಞಾನವು ಬೇಕಾಗಿದೆ, ನೀರಿನಲ್ಲಿ ಸ್ನಾನ ಮಾಡುವುದರಿಂದ ಯಾರೂ ಪಾವನರಾಗುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮ್ಮ ಮುಂದೆ ಈ ತನುವಿನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಬ್ರಹ್ಮಾನ ಮೂಲಕ ರಾಜಯೋಗವನ್ನು ಕಲಿಸುತ್ತಿದ್ದಾರೆ. ಅವರಂತೂ ಭಗವಾನುವಾಚ ಅರ್ಜುನನ ಪ್ರತಿಯಾಗಿದೆ ಎಂದು ಹೇಳಿ ಬಿಡುತ್ತಾರೆ. ಬ್ರಾಹ್ಮಣರ ಹೆಸರು, ಗುರುತೂ ಇಲ್ಲ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ ಎಂದು ಗಾಯನವಾಗುತ್ತದೆ, ಸ್ಥಾಪನೆಯನ್ನಂತೂ ಬ್ರಹ್ಮಾರವರ ಮುಖಾಂತರವೇ ಮಾಡುತ್ತಾರೆ. ವಿಷ್ಣುವಿನ ಮೂಲಕವಾಗಲಿ, ಶಂಕರನ ಮೂಲಕವಾಗಲಿ ಅಲ್ಲ. ನೀವು ಮಕ್ಕಳಿಗೆ ಈಗ ಈ ತಿಳುವಳಿಕೆ ಸಿಕ್ಕಿದೆ, ತಂದೆಯು ಇಲ್ಲಿ ಬರಬೇಕಾಗುತ್ತದೆ. ಯಾವುದೇ ಆತ್ಮನು ಹಿಂತಿರುಗಿ ಹೋಗಲು ಸಾಧ್ಯವಿಲ್ಲ, ಯಾರೆಲ್ಲರೂ ಬರುವರೋ ಎಲ್ಲರೂ ಸತೋ, ರಜೋ, ತಮೋವನ್ನು ಪಾರು ಮಾಡಲೇಬೇಕಾಗಿದೆ. ಕೃಷ್ಣನೂ ಸಹ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ ಮತ್ತು ಪೂರ್ಣ 5000 ವರ್ಷಗಳ ಕಾಲ ಪಾತ್ರವನ್ನು ಅಭಿನಯಿಸಿದನು. ಆತ್ಮವು ಗರ್ಭದಲ್ಲಿದ್ದಾಗಲೂ ಜನ್ಮವಾಗಿದೆ ಎಂದೇ ಅರ್ಥ, ಕೃಷ್ಣನ ಆತ್ಮವು ಸತ್ಯಯುಗದಲ್ಲಿ ಬರುತ್ತದೆ. ಗರ್ಭದಲ್ಲಿ ಪ್ರವೇಶ ಮಾಡಿದಾಗಿನಿಂದ ಹಿಡಿದು 5000 ವರ್ಷಗಳಲ್ಲಿ 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗಿದೆ. ಹೇಗೆ ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಇವರಲ್ಲಿ ಕುಳಿತಿದ್ದಾರಲ್ಲವೆ. ಕೃಷ್ಣನ ಆತ್ಮವೂ ಸಹ ಗರ್ಭದಲ್ಲಿ ಬಂದಾಗ ಸ್ವಲ್ಪ ಕದಲುತ್ತದೆ ಆ ಸಮಯದಿಂದ ಹಿಡಿದು 5000 ವರ್ಷಗಳ ಲೆಕ್ಕವು ಪ್ರಾರಂಭವಾಗುತ್ತದೆ. ಒಂದುವೇಳೆ ಹೆಚ್ಚು ಕಡಿಮೆ ಇದ್ದರೆ ಮತ್ತೆ 5000 ವರ್ಷಗಳಲ್ಲಿ ಕಡಿಮೆಯಾಗಿ ಬಿಡುವುದು. ಇವು ಸೂಕ್ಷ್ಮ ತಿಳಿದುಕೊಳ್ಳುವ ಮಾತುಗಳಾಗಿವೆ, ಮಕ್ಕಳಿಗೆ ತಿಳಿದಿದೆ - ಕೃಷ್ಣನ ಆತ್ಮವು ಪುನಃ ಶ್ರೀಕೃಷ್ಣನಾಗುವುದಕ್ಕಾಗಿ ಈ ಜ್ಞಾನವನ್ನು ಪಡೆಯುತ್ತಿದೆ. ನೀವೂ ಸಹ ಕಂಸ ಪುರಿಯಿಂದ ಕೃಷ್ಣ ಪುರಿಯಲ್ಲಿ ಹೋಗುತ್ತೀರಿ, ಈ ಮಾತುಗಳನ್ನು ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. |
ತಂದೆಯು ಹೇಳುತ್ತಾರೆ - ಮಾಯೆಯು ಬಹಳ ಪ್ರಬಲವಾಗಿದೆ, ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹ ಸೋಲಿಸಿ ಬಿಡುತ್ತದೆ. ಜ್ಞಾನವನ್ನು ಪಡೆಯುತ್ತಾ-ಪಡೆಯುತ್ತಾ ಕೆಲವೊಮ್ಮೆ ಗ್ರಹಚಾರವು ಕುಳಿತುಕೊಳ್ಳುತ್ತದೆ, ಆಶ್ಚರ್ಯವೆನಿಸುವಂತೆ ನನ್ನವರಾಗಿ ನಡೆಯುತ್ತಾ-ನಡೆಯುತ್ತಾ ಮತ್ತೆ ಮಾಯೆಗೆ ವಶರಾಗಿ ಹೊರಟು ಹೋಗುತ್ತಾರೆ. ಸಂಪಾದನೆಯಲ್ಲಿ ಗ್ರಹಚಾರವು ಕುಳಿತುಕೊಳ್ಳುತ್ತದೆ. ಎಲ್ಲರಿಗೂ ರಾಹುವಿನ ಗ್ರಹಣ ಹಿಡಿದಿದೆ, ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆ ಕುಳಿತಿದೆ, ಮತ್ತೆ ನಡೆಯುತ್ತಾ-ನಡೆಯುತ್ತಾ ಕೆಲವರ ಮೇಲೆ ರಾಹುವಿನ ಗ್ರಹಣವು ಕುಳಿತುಕೊಳ್ಳುತ್ತದೆ. ಆದ್ದರಿಂದಲೇ ಹೇಳುತ್ತಾರೆ - ಈ ಪ್ರಪಂಚದಲ್ಲಿ ಮಹಾಮೂರ್ಖರನ್ನು ನೋಡಬೇಕೆಂದರೂ ಇಲ್ಲಿ ನೋಡಿರಿ, ನಾವು ತಂದೆಯಿಂದ ಸದಾ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ನಿಮ್ಮ ಆತ್ಮವು ಹೇಳುತ್ತದೆ. ಬಾಬಾ, ತಮ್ಮಿಂದ ಕಲ್ಪದ ಮೊದಲೂ ಸಹ ಈ ಆಸ್ತಿಯನ್ನು ತೆಗೆದುಕೊಂಡಿದ್ದೇವೆ, ಪುನಃ ಈಗ ತಂದೆಯ ಬಳಿ ಬಂದಿದ್ದೇವೆ. ತಂದೆಯು ತಿಳಿಸಿದ್ದಾರೆ - ಹೊರಗಿನ ನಿಮ್ಮ ಸೇವಾಕೇಂದ್ರಗಳಲ್ಲಿ ತಿಳಿದುಕೊಳ್ಳಲು ಅನೇಕರು ಬರುತ್ತಾರೆ, ಇಲ್ಲಿ ಇದು ಇಂದ್ರಸಭೆಯಾಗಿದೆ, ಇಂದ್ರನು ಶಿವ ತಂದೆಯಾಗಿದ್ದಾರಲ್ಲವೆ. ಅವರು ಜ್ಞಾನದ ಮಳೆಯನ್ನು ಸುರಿಸುತ್ತಾರೆ ಅಂದಮೇಲೆ ಇಂತಹ ಸಭೆಯಲ್ಲಿ ಪತಿತರು ಬರುವಂತಿಲ್ಲ. ನೀಲಮಣಿ, ಪಚ್ಚೆ.... ಯಾವ ಬ್ರಾಹ್ಮಣಿಯರು ಮಾರ್ಗದರ್ಶಕರಾಗಿ ಬರುತ್ತಾರೆಯೋ ಅವರಿಗೆ ಹೇಳುತ್ತೇವೆ - ತಮ್ಮ ಜೊತೆ ವಿಕಾರದಲ್ಲಿ ಹೋಗುವವರನ್ನು ಕರೆದುಕೊಂಡು ಬರಬೇಡಿರಿ. ಇಲ್ಲವಾದರೆ ಅದಕ್ಕೆ ನೀವೇ ಜವಾಬ್ದಾರರಾಗುತ್ತೀರಿ. ಯಾರಾದರೂ ವಿಕಾರಿಯನ್ನು ಕರೆತರುತ್ತೀರೆಂದರೆ ಅವರಮೇಲೆ ಬಹಳ ಕಲೆಯುಂಟಾಗಿ ಬಿಡುತ್ತದೆ. ಬಹಳ ಭಾರಿ ಶಿಕ್ಷೆಯು ಸಿಗುತ್ತದೆ. ಬ್ರಾಹ್ಮಣಿಯರ ಮೇಲೆ ಬಹಳ ಜವಾಬ್ದಾರಿಯಿದೆ. ಮಾನಸ ಸರೋವರದಲ್ಲಿ ಸ್ನಾನ ಮಾಡಿದರೆ ದೇವತೆಗಳಾಗಿ ಬಿಡುತ್ತಾರೆ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಇದು ಜ್ಞಾನ ಮಾನಸ ಸರೋವರವಾಗಿದೆ. ತಂದೆಯು ಮನುಷ್ಯನ ತನುವಿನಲ್ಲಿ ಜ್ಞಾನದ ಮಳೆ ಸುರಿಸುತ್ತಾರೆ. ಜ್ಞಾನ ಸಾಗರನಲ್ಲವೆ. ನೀವು ನದಿಗಳೂ ಆಗಿದ್ದೀರಿ, ಸರೋವರವೂ ಆಗಿದ್ದೀರಿ, ಜ್ಞಾನ ಸಾಗರನು ಇವರಲ್ಲಿ ಕುಳಿತು ಮಕ್ಕಳನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಸ್ವರ್ಗದಲ್ಲಿ ಶ್ರೀಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ, ಇದು ಪ್ರವೃತ್ತಿ ಮಾರ್ಗದ ಗುರಿ-ಧ್ಯೇಯವಾಗಿದೆ. ನಾವಿಬ್ಬರೂ ಜ್ಞಾನ ಚಿತೆಯ ಮೇಲೆ ಕುಳಿತು ಲಕ್ಷ್ಮೀ-ನಾರಾಯಣರಾಗುತ್ತೇವೆ ಎಂದು ಹೇಳುತ್ತಾರೆ, ಶ್ರೇಷ್ಠ ಪದವಿಯನ್ನೇ ಪಡೆಯಬೇಕಲ್ಲವೆ. ಆತ್ಮರು ಅರ್ಧಕಲ್ಪ ಅಲೆದಾಡುತ್ತಾ ಇರುತ್ತಾರೆ - ಬಾಬಾ, ಬಂದು ನಮಗೆ ರಾಜಯೋಗವನ್ನು ಕಲಿಸಿ ಪಾವನರನ್ನಾಗಿ ಮಾಡಿರಿ ಎಂದು. ತಂದೆಯು ಸಲಹೆ ನೀಡುತ್ತಾರೆ. ಭಾರತವಾಸಿಗಳು ಯಾರು ದೇವಿ-ದೇವತೆಗಳನ್ನು ಒಪ್ಪುವವರಿದ್ದಾರೆಯೋ ಅವರು ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆ. ಪ್ರಯತ್ನ ಪಟ್ಟು ದೇವಿ-ದೇವತೆಗಳ ಭಕ್ತರಿಗೆ ಹೋಗಿ ತಿಳಿಸಿಕೊಡಿ, ತಂದೆಯು ಹೇಗೆ ಬಂದು ಮೂರು ಧರ್ಮಗಳನ್ನು ಸ್ಥಾಪನೆ ಮಾಡುತ್ತಾರೆ! ಬ್ರಾಹ್ಮಣ, ಸೂರ್ಯವಂಶಿ, ಚಂದ್ರವಂಶಿ ಮೂರು ಧರ್ಮಗಳನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಅರ್ಧಕಲ್ಪದವರೆಗೂ ಮತ್ತ್ಯಾವುದೇ ಧರ್ಮವು ಸ್ಥಾಪನೆಯಾಗುವುದಿಲ್ಲ. ನಂತರ ಅರ್ಧಕಲ್ಪದಲ್ಲಿ ಎಷ್ಟೊಂದು ಮಠಪಂಥ, ಧರ್ಮಗಳು ಸ್ಥಾಪನೆಯಾಗುತ್ತವೆ! ಅರ್ಧಕಲ್ಪದಲ್ಲಿ ಒಂದು ಧರ್ಮವು ಸ್ಥಾಪನೆಯಾಗುತ್ತದೆ, ಅದು ಈ ಸಂಗಮಯುಗದಲ್ಲಿ ಭವಿಷ್ಯಕ್ಕಾಗಿ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಅವರೆಲ್ಲರೂ ಹಳೆಯ ಪ್ರಪಂಚದಲ್ಲಿ ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಇಲ್ಲಿ ತಂದೆಯು ಅರ್ಧಕಲ್ಪಕ್ಕಾಗಿ ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ, ಮತ್ತ್ಯಾರಲ್ಲಿಯೂ ಈ ಬಲವಿಲ್ಲ. ತಂದೆಯು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡು ಸೂರ್ಯವಂಶಿ, ಚಂದ್ರವಂಶಿ ಮನೆತನವನ್ನು ಸ್ಥಾಪನೆ ಮಾಡಿ ಮತ್ತೆಲ್ಲದರ ವಿನಾಶ ಮಾಡಿಸುತ್ತಾರೆ. ಎಲ್ಲಾ ಆತ್ಮರೂ ಶಾಂತಿಯಲ್ಲಿ ಹೊರಟು ಹೋಗುತ್ತಾರೆ, ನೀವು ಸುಖದಲ್ಲಿ ಬರುತ್ತೀರಿ. ಆ ಸಮಯದಲ್ಲಿ ತಂದೆಯನ್ನು ನೆನಪು ಮಾಡಲು ಯಾವುದೇ ದುಃಖವಿರುವುದೇ ಇಲ್ಲ. ಈ ಜ್ಞಾನವೂ ಸಹ ನಿಮ್ಮ ಬುದ್ಧಿಯಲ್ಲಿದೆ. ನೀವು ತಿಳಿದುಕೊಂಡಿದ್ದೀರಿ - ಯಾವ ತಂದೆಯು ಜ್ಞಾನ ಸಾಗರನಾಗಿದ್ದಾರೆಯೋ ಅವರು ಜ್ಞಾನವನ್ನು ಕೊಡುತ್ತಿದ್ದಾರೆ, ಸಾಗರನು ಒಬ್ಬರೇ ಆಗಿದ್ದಾರೆ. ನೀವು ತಮ್ಮನ್ನು ಸಾಗರನೆಂದು ಕರೆಸಿಕೊಳ್ಳುವುದಿಲ್ಲ, ನೀವು ತಂದೆಗೆ ಸಹಯೋಗಿಗಳಾಗುತ್ತೀರಿ ಆದ್ದರಿಂದ ನಿಮಗೆ ಜ್ಞಾನ ಗಂಗೆಯರೆಂದು ಹೆಸರಿದೆ. ಬಾಕಿ ಅವೆಲ್ಲವೂ ನೀರಿನ ನದಿಗಳಾಗಿವೆ, ತಂದೆಯು ತಿಳಿಸುತ್ತಾರೆ - ನಾನು ಸಾಗರನ ಮಕ್ಕಳು ನೀವು ಕಾಮ ಚಿತೆಯನ್ನೇರಿ ಸುಟ್ಟು ಹೋಗಿದ್ದೀರಿ ಅರ್ಥಾತ್ ಪತಿತರಾಗಿ ಬಿಟ್ಟಿದ್ದೀರಿ, ಈಗ ಪುನಃ ನನ್ನನ್ನು ನೆನಪು ಮಾಡುವುದರಿಂದಲೇ ನೀವು ಪಾವನರಾಗುವಿರಿ. ಇದು 5000 ವರ್ಷಗಳ ಸೃಷ್ಟಿ ಚಕ್ರವಾಗಿದೆ, ಇದೂ ಸಹ ಯಾರಿಗೂ ತಿಳಿದಿಲ್ಲ. ಸೃಷ್ಟಿ ಚಕ್ರವು ಪೂರ್ಣ ನಾಲ್ಕೂ ಭಾಗಗಳಲ್ಲಿದೆ. ನಾಲ್ಕು ಯುಗಗಳಿವೆಯಲ್ಲವೆ. ಈ ಸಂಗಮಯುಗವು ಕಲ್ಯಾಣಕಾರಿಯಾಗಿದೆ, ಕುಂಭವೆಂದು ಹೇಳುತ್ತಾರಲ್ಲವೆ. ಮೇಳಕ್ಕೆ ಕುಂಭವೆಂದು ಹೇಳಲಾಗುತ್ತದೆ. ನದಿಗಳು ಬಂದು ಸಾಗರಕ್ಕೆ ಸೇರುತ್ತವೆ, ಆತ್ಮವು ಬಂದು ಪರಮಾತ್ಮನೊಂದಿಗೆ ಸೇರುತ್ತದೆ. ಇದಕ್ಕೇ ಕುಂಭವೆಂದು ಹೇಳುತ್ತಾರೆ, ಆತ್ಮ-ಪರಮಾತ್ಮನ ಮೇಳವನ್ನು ನೀವು ನೋಡುತ್ತೀರಿ. ನೀವು ಪರಸ್ಪರ ಮಿಲನ ಮಾಡುತ್ತೀರಿ. ಚರ್ಚಾಗೋಷ್ಟಿಗಳನ್ನು ಮಾಡುತ್ತೀರಿ, ಅದಕ್ಕೆ ಕುಂಭವೆಂದು ಹೇಳುವುದಿಲ್ಲ. ಸಾಗರನಂತೂ ತಮ್ಮ ಜಾಗದಲ್ಲಿ ಕುಳಿತಿದ್ದಾರೆ, ಈ ತನುವಿನಲ್ಲಿದ್ದಾರಲ್ಲವೆ. ಇವರ ತನುವೆಲ್ಲಿಯೋ ಅಲ್ಲಿಯೇ ಜ್ಞಾನ ಸಾಗರನಿರುತ್ತಾರೆ. ಉಳಿದಂತೆ ನೀವು ಜ್ಞಾನ ಗಂಗೆಯರು ಪರಸ್ಪರ ಸೇರುತ್ತೀರಿ, ನದಿಗಳಲ್ಲಿಯೂ ಚಿಕ್ಕದು-ದೊಡ್ಡದು ಇರುತ್ತದೆಯಲ್ಲವೆ. ಅಲ್ಲಿಗೆ ಸ್ನಾನ ಮಾಡಲು ಹೋಗುತ್ತಾರೆ, ಗಂಗಾ, ಯಮುನಾ, ಸರಸ್ವತಿ ಇತ್ಯಾದಿಗಳಂತೂ ಇದ್ದೇ ಇವೆ. ದೆಹಲಿ ಜಮುನಾ ನದಿಯ ತೀರದಲ್ಲಿ ಸ್ವರ್ಗವಿರುತ್ತದೆ, ಕೃಷ್ಣಪುರಿಯಂತೂ ಇರುತ್ತದೆ. ದೆಹಲಿಯೇ ಪರಿಸ್ಥಾನವಾಗಿತ್ತು ಎಂದು ಹೇಳುತ್ತಾರೆ. ಆಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಕೃಷ್ಣನ ರಾಜ್ಯವಿತ್ತು ಎಂದು ಹೇಳುವುದಿಲ್ಲ, ರಾಧೆ-ಕೃಷ್ಣರು ಯಾವಾಗ ದಂಪತಿಗಳಾಗುವರೋ ಆಗಲೇ ರಾಜ್ಯ ಮಾಡುವರು. ಈಗ ನೀವು ಮಕ್ಕಳು ಎಷ್ಟು ಖುಷಿಯಲ್ಲಿದ್ದೀರಿ! ಮಾಯೆಯ ಬಿರುಗಾಳಿಗಳಂತೂ ಬಹಳ ಬರುತ್ತವೆ, ಬೇಹದ್ದಿನ ಮಲ್ಲ ಯುದ್ದವಾಗಿದೆ, ಪ್ರತಿಯೊಬ್ಬರಿಗೆ 5 ವಿಕಾರಗಳ ಜೊತೆ ಯುದ್ಧ ನಡೆಯುತ್ತದೆ, ತಂದೆಯನ್ನು ನಿರಂತರ ನೆನಪು ಮಾಡಬೇಕೆಂದು ನಾವು ಬಯಸುತ್ತೇವೆ, ಮಾಯೆಯು ನಮ್ಮ ಯೋಗವನ್ನು ತುಂಡರಿಸಿ ಬಿಡುತ್ತದೆ. ಒಂದು ಆಟವನ್ನೂ ತೋರಿಸುತ್ತಾರೆ - ಅದರಲ್ಲಿ ಒಂದು ಕಡೆ ಪರಮಾತ್ಮನು ತನ್ನ ಕಡೆ ಎಳೆಯುತ್ತಾರೆ, ಮಾಯೆಯು ತನ್ನಕಡೆ ಎಳೆಯುತ್ತಿದೆ - ಹೀಗೆ ಒಂದು ನಾಟಕವನ್ನೂ ಮಾಡಿದ್ದಾರೆ. ಸಿನಿಮಾದ ಫ್ಯಾಷನ್ ಈಗ ಹೊರಬಂದಿದೆ. ನಿಮಗೆ ಡ್ರಾಮಾನುಸಾರ ಸಿನಿಮಾದ ಬಗ್ಗೆಯೇ ತಿಳಿಸಬೇಕಾಗಿತ್ತು, ನಾಟಕದಲ್ಲಂತೂ ಅದಲು ಬದಲಾಗುವ ಸಾಧ್ಯತೆಯಿದೆ, ಇದಂತೂ ಅನಾದಿ-ಅವಿನಾಶಿ ನಾಟಕವು ಮಾಡಿ-ಮಾಡಲ್ಪಟ್ಟಿದೆ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ... ಯಾರಾದರೂ ಮರಣ ಹೊಂದಿದರೆ ಅವರದು ಅಷ್ಟೇ ಪಾತ್ರವಿತ್ತು, ನಾವೇಕೆ ಚಿಂತೆ ಮಾಡುವುದು? ಡ್ರಾಮಾ ಅಲ್ಲವೆ. ಶರೀರವನ್ನು ಬಿಟ್ಟ ಮೇಲೆ ಪುನಃ ಬರಲು ಸಾಧ್ಯವೇ? ಅಳುವುದರಿಂದೇನು ಲಾಭ? ಇದರ ಹೆಸರೇ ದುಃಖಧಾಮವಾಗಿದೆ, ಸತ್ಯಯುಗದಲ್ಲಿ ಮೋಹಜೀತ ರಾಜರಿರುತ್ತಾರೆ. ಇದರ ಮೇಲೆ ಒಂದು ಕಥೆಯಿದೆ - ಸತ್ಯಯುಗದಲ್ಲಿ ಮೋಹದ ಮಾತಿರುವುದಿಲ್ಲ, ಇಲ್ಲಂತೂ ಮನುಷ್ಯರಲ್ಲಿ ಎಷ್ಟೊಂದು ಮೋಹವಿದೆ! ಯಾರಿಗಾದರೂ ಅಳುಬರದಿದ್ದರೆ ತಾನು ಅಳುತ್ತಾ ಅವರನ್ನೂ ಅಳುವಂತೆ ಮಾಡಿ ಬಿಡುತ್ತಾರೆ. ಅದರಿಂದ ಇವರು ದುಃಖಿಸುತ್ತಿದ್ದಾರೆಂದು ತಿಳಿಯಲಿ, ಇಲ್ಲದಿದ್ದರೆ ನಿಂಧನೆಯಾಗುವುದು ಎಂದು ಈ ರೀತಿ ಮಾಡುತ್ತಾರೆ. ಭಾರತದಲ್ಲಿಯೇ ಇವೆಲ್ಲಾ ಪದ್ಧತಿಗಳಿವೆ, ಭಾರತದಲ್ಲಿಯೇ ಸುಖ ಭಾರತದಲ್ಲಿಯೇ ದುಃಖವಾಗುತ್ತದೆ. ಭಾರತದಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು, ವಿದೇಶಿಗಳು ಹಳೆಯ ಚಿತ್ರಗಳನ್ನು ಬಹಳ ಖುಷಿಯಿಂದ ತೆಗೆದುಕೊಳ್ಳುತ್ತಾರೆ, ಹಳೆಯ ವಸ್ತುಗಳಿಗೆ ಬಹಳ ಮಾನ್ಯತೆಯಿರುತ್ತದೆ. ಎಲ್ಲರಿಗಿಂತ ಹಳಬರಾದ ಶಿವನಂತೂ ಇಲ್ಲಿ ಬಂದಿದ್ದರಲ್ಲವೆ. ಅವರಿಗೆ ಎಷ್ಟೊಂದು ಪೂಜೆ ಮಾಡುತ್ತಾರೆ! ಈಗಂತೂ ಶಿವ ತಂದೆಯು ಬಂದಿದ್ದಾರೆ, ನೀವು ಪೂಜೆ ಮಾಡುವುದಿಲ್ಲ. ಅವರು ಬಂದು ಹೋಗಿದ್ದಾರೆ, ಆದ್ದರಿಂದಲೇ ಅವರ ಪೂಜೆ ಮಾಡುತ್ತಾ ಇರುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಡ್ರಾಮಾದ ಜ್ಞಾನವನ್ನು ಬುದ್ಧಿಯಲ್ಲಿಟ್ಟುಕೊಂಡು ನಿಶ್ಚಿಂತರಾಗಬೇಕಾಗಿದೆ, ಯಾವುದೇ ಪ್ರಕಾರದ ಚಿಂತೆ ಮಾಡಬಾರದು. ಏಕೆಂದರೆ ನಿಮಗೆ ತಿಳಿದಿದೆ - ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ.... ನಿರ್ಮೋಹಿಗಳಾಗಬೇಕಾಗಿದೆ. |
2. ತಂದೆಯ ಮೂಲಕ ಬೃಹಸ್ಪತಿಯ ದೆಶೆ ಕುಳಿತಿದೆ ಅಂದಮೇಲೆ ಮತ್ತೆ ರಾಹುವಿನ ಗ್ರಹಣ ಹಿಡಿಯದಂತೆ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ಗ್ರಹಚಾರವಿದ್ದರೆ ಅದನ್ನು ಜ್ಞಾನ ದಾನದಿಂದ ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿರಿ ಅರ್ಥಾತ್ ಅಶರೀರಿಯಾಗಿರಿ ಅರ್ಥಾತ್ ಡೆಡ್ ಸೈಲೆನ್ಸ್. ಹೇಗೆ ಮನುಷ್ಯರು ಶರೀರ ಬಿಟ್ಟಾಗ ಅಲ್ಲಿ ಶೂನ್ಯ ಶಾಂತಿಯಾಗಿ ಬಿಡುತ್ತದೆ. ಇವರ ಶರೀರ ಶಾಂತವಾಗಿ ಬಿಟ್ಟಿತು ಎಂದು ಹೇಳುತ್ತಾರೆ. ಶರೀರ ಮತ್ತು ಆತ್ಮ ಪ್ರತ್ಯೇಕವಾಯಿತು, ಸಮಾಪ್ತಿಯಾಯಿತು. ಇಲ್ಲಿಯೂ ಸಹ ನೀವು ಮಕ್ಕಳು ಯಾವಾಗ ಕುಳಿತುಕೊಳ್ಳುತ್ತೀರೆಂದರೆ ಇದಕ್ಕೆ ಶೂನ್ಯ ಶಾಂತಿ ಎಂದು ಹೇಳಲಾಗುತ್ತದೆ. ಜೀವಿಸಿದ್ದಂತೆಯೇ ಅಶರೀರಿಯಾಗಿ ಬಿಡಿ, ತಮ್ಮನ್ನು ಆತ್ಮನೆಂದು ತಿಳಿಯಿರಿ ತಂದೆಯನ್ನು ನೆನಪು ಮಾಡಿ. ನೀವು ತಿಳಿದುಕೊಂಡಿದ್ದೀರಿ - ಈಗ ಸತ್ಯ ಶಾಂತಿಯಾಗಿದೆ. ಅವರು ಶಾಂತಿಯೆಂದರೆ ಏನು ಎಂಬುದನ್ನು ತಿಳಿದುಕೊಂಡಿಲ್ಲ. ಶೂನ್ಯ ಶಾಂತಿಯ ಅರ್ಥವಂತೂ ಅವರಿಗೆ ತಿಳಿದೇ ಇಲ್ಲ. ಶೂನ್ಯ ಶಾಂತಿಯೆಂದು ಏಕೆ ಹೇಳುತ್ತಾರೆ? ಅವರು ಶರೀರ ಬಿಟ್ಟರು, ಶಾಂತವಾಗಿ ಬಿಟ್ಟರು ಎಂದು ನೆನಪು ತರಿಸುತ್ತಾರೆ. ನೀವು ಶರೀರದ ಭಿನ್ನವಾಗಿ ನೀವೂ ಸಹ ಶಾಂತವಾಗಿ ಬಿಡಿ, ದೊಡ್ಡ-ದೊಡ್ಡ ವ್ಯಕ್ತಿಗಳಾದ ಗಾಂಧೀಜಿ ಮೊದಲಾದವರ ಸಮಾಧಿಯ ಬಳಿ ಹೋಗುತ್ತಾರೆ. ಅಲ್ಲಿ ಹೋಗಿ ಡೆಡ್ಲಿ ಸೈಲೆನ್ಸ್ ಅಂದರೆ ಶಾಂತಿಯಲ್ಲಿ ಕುಳಿತುಕೊಳ್ಳಿ ಎಂದು ಹೇಳುತ್ತಾರೆ. ನಿಮಗೂ ಸಹ ತಿಳಿದಿದೆ - ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ಪ್ರಪಂಚದವರಿಗೆ ತಿಳಿದೇ ಇಲ್ಲ. ನಾವು ನಮ್ಮ ಸ್ವಧರ್ಮದಲ್ಲಿ ಸ್ಥಿತರಾಗುತ್ತೇವೆ, ನಮ್ಮ ಸ್ವ ಧರ್ಮವೇ ಶಾಂತಿಯಾಗಿದೆ. ನಾವಾತ್ಮರು ಶಾಂತ ಸ್ವರೂಪರಾಗಿದ್ದೇವೆ, ಅವರಿಗೆ ಇದು ತಿಳಿದೇ ಇಲ್ಲ ಆದ್ದರಿಂದ ಶಾಂತಿಯನ್ನು ಬೇಡುತ್ತಾರೆ. ಆತ್ಮವು ಶಾಂತಿ ಬೇಕೆಂದು ಹೇಳುತ್ತದೆ. ಆತ್ಮವೇ ತನ್ನ ಸ್ವಧರ್ಮವನ್ನು ಮರೆತು ಬಿಟ್ಟಿದೆ. ವಾಸ್ತವದಲ್ಲಿ ಆತ್ಮನ ಧರ್ಮವೇ ಶಾಂತಿಯಾಗಿದೆ ಅಂದಮೇಲೆ ಅಶಾಂತಿಯಾಗಿದೆ ಎಂದು ಆತ್ಮವು ಏಕೆ ಹೇಳುತ್ತದೆ? ಅಶರೀರಿಯಾಗಿ ಕುಳಿತು ಬಿಡಿ, ಅವರಂತೂ ಹಠದಿಂದ ಪ್ರಾಣಾಯಾಮಗಳನ್ನು ಮಾಡುತ್ತಾರಲ್ಲವೆ. ಹೇಗೆ ಅವರು ಶರೀರದಿಂದ ಸತ್ತಂತೆ ಇರುತ್ತಾರೆ, ಅದಕ್ಕೆ ತಾತ್ಕಾಲಿಕ ಶಾಂತಿ ಎಂದು ಹೇಳಲಾಗುತ್ತದೆ. ನೀವು ಮಕ್ಕಳಿಗಂತೂ ನಮ್ಮ ಸ್ವಧರ್ಮವೇ ಶಾಂತಿ ಎಂಬುದು ಅರ್ಥವಾಗಿದೆ. ನೀವಾತ್ಮರು ಸ್ವರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ, ಆತ್ಮನೇ ಎಲ್ಲವೂ ಆಗುತ್ತದೆ. ಆತ್ಮವೇ ವಕೀಲನಾಗುತ್ತದೆ. ನಮಗೆ ರಾಜ್ಯ ಬೇಕೆಂದು ಆತ್ಮವೇ ಹೇಳುತ್ತದೆ. ಮೊದಲೂ ಸಹ ತಂದೆಯಿಂದ ರಾಜ್ಯವನ್ನು ಪಡೆದುಕೊಂಡಿದ್ದಿರಿ, ಈಗ ಪುನಃ ಪಡೆಯಲು ಬಂದಿದ್ದೀರಿ, ಮನುಷ್ಯರು ದೇಹಾಭಿಮಾನದಲ್ಲಿ ಇರುವ ಕಾರಣ ದುಃಖದಲ್ಲಿದ್ದಾರೆ. |
ನೀವೀಗ ತಿಳಿದುಕೊಳ್ಳುತ್ತೀರಿ - ನಾವಾತ್ಮರಾಗಿದ್ದೇವೆ, ನಾವು ನಮ್ಮ ಪರಮಪಿತ ಪರಮಾತ್ಮನಿಂದ ಸ್ವರಾಜ್ಯವನ್ನು ಪಡೆಯಲು ಬಂದಿದ್ದೇವೆ, ನೀವಾತ್ಮರಿಗೆ ರಾಜ್ಯ ಬೇಕಾಗಿದೆ. ಈ ಸಮಯದಲ್ಲಿ ಆತ್ಮವು ಬೇಹದ್ದಿನ ತಂದೆಯಿಂದ ಸ್ವರಾಜ್ಯವನ್ನು ಬಯಸುತ್ತದೆ. ಶ್ರೀಕೃಷ್ಣನಿಗೂ ಸ್ವರಾಜ್ಯವಿತ್ತು, ನಂತರ ಅದು ಕಳೆದು ಹೋಯಿತು. ಈಗ ತಂದೆಯು ಬಂದು ನೀವಾತ್ಮರಿಗೆ ರಾಜ್ಯವನ್ನು ಕೊಡುತ್ತಾರೆ. ಇದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ಪರಮಪಿತ ಪರಮಾತ್ಮನು ರಾಜಯೋಗವನ್ನು ಕಲಿಸುತ್ತಾರೆ, ಮನುಷ್ಯರು ದೇಹಾಭಿಮಾನಿಗಳಾಗಿರುವ ಕಾರಣ ನಾನು ಇಂತಹವನಾಗಿದ್ದೇನೆ ಎಂದು ಹೇಳುತ್ತಾರೆ. ದೇಹವನ್ನೇ “ನಾನು” ಎಂದು ತಿಳಿದುಕೊಳ್ಳುತ್ತಾರೆ. ವಾಸ್ತವದಲ್ಲಿ “ನಾನು”, “ನಾನು” ಎಂದು ಆತ್ಮವೇ ಹೇಳುತ್ತದೆ. ನಾನು ಈ ವಸ್ತುವನ್ನು ತೆಗೆದುಕೊಳ್ಳುತ್ತೇನೆ ಎಂದು ಆತ್ಮವೇ ಹೇಳುತ್ತದೆ. ವಾಸ್ತವದಲ್ಲಿ ಆತ್ಮವು ಪುರುಷನಾಗಿದೆ, ನಾನಾತ್ಮನು ತಂದೆಯ ಮಗುವಾಗಿದ್ದೇನೆ. ಬಾಬಾ, ನಾವು ತಮ್ಮಿಂದ ಸ್ವರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಆತ್ಮವು ಹೇಳುತ್ತದೆ. ಆತ್ಮಕ್ಕೆ ಪರಮಾತ್ಮನು ಸ್ವರಾಜ್ಯವನ್ನು ಕೊಡುತ್ತಾರೆ, ಭಕ್ತಿ ಮತ್ತು ಜ್ಞಾನದಲ್ಲಿ ನೋಡಿ ಎಷ್ಟೊಂದು ಅಂತರವಿದೆ! ಶಿವನ ಮಂದಿರವು ಇರುತ್ತದೆ, ಎಲ್ಲದಕ್ಕಿಂತ ಹೆಚ್ಚಿನದಾಗಿ ಶಿವನ ಮಂದಿರದಲ್ಲಿಯೇ ಗಂಟೆಯನ್ನು ಬಾರಿಸುತ್ತಾರೆ, ಅವರನ್ನು ಏಳಿಸುತ್ತಾರೆ. ವಾಸ್ತವದಲ್ಲಿ ಎಲ್ಲರನ್ನೂ ಏಳಿಸುತ್ತಾರೆ, ಬೆಳಗ್ಗೆ-ಬೆಳಗ್ಗೆ ವಾದ್ಯಗಳನ್ನು ಬಾರಿಸುತ್ತಾರೆ, ಇಲ್ಲಿ ತಂದೆಯು ಮಕ್ಕಳನ್ನು ಜಾಗೃತಗೊಳಿಸಿ ದೇವತೆಗಳನ್ನಾಗಿ ಮಾಡುತ್ತಾರೆ. ಸ್ಥೂಲವಾಗಿ ಗಂಟೆಯನ್ನು ಹೊಡೆಯುವ ಮಾತಿಲ್ಲ. ತಂದೆಯು ಹೇಳುತ್ತಾರೆ - ನಿಮಗೆ ಸ್ವರಾಜ್ಯವು ಬೇಕೆಂದರೆ ಮೊದಲು ಪವಿತ್ರರಾಗಿ, ಗುರಿ-ಧ್ಯೇಯವಂತೂ ಬುದ್ಧಿಯಲ್ಲಿರುತ್ತದೆ. ನಾವು ಈ ಮೆಟ್ರಿಕ್ನ್ನು ತೇರ್ಗಡೆ ಮಾಡುತ್ತೇವೆ ನಂತರ ಇದನ್ನು ಮಾಡುತ್ತೇವೆಂದು ವಿದ್ಯಾರ್ಥಿಗಳು ಹೇಳುತ್ತಾರೆ. ಸನ್ಯಾಸಿಗಳು ನಮಗೆ ಮನಃಶ್ಯಾಂತಿ ಬೇಕೆಂದು ಬಯಸುತ್ತಾರೆ. ಒಂದು ಕಥೆಯೂ ಇದೆಯಲ್ಲವೆ. ರಾಣಿಯ ಕೊರಳಲ್ಲಿಯೇ ಹಾರವಿತ್ತು ಆದರೆ ಅದಕ್ಕಾಗಿ ಹೊರಗಡೆ ಹುಡುಕುತ್ತಿದ್ದಳು ಹಾಗೆಯೇ ಅವರೂ ಸಹ ಶಾಂತಿಯನ್ನು ಹೊರಗೆ ಹುಡುಕುತ್ತಾರೆ ಆದರೆ ಆತ್ಮವಂತೂ ಸ್ವಯಂ ಶಾಂತ ಸ್ವರೂಪವಾಗಿದೆ. ಆತ್ಮವು ತನ್ನ ಸ್ವಧರ್ಮವನ್ನು ಮರೆತು ತನ್ನನ್ನು ಶರೀರವೆಂದು ತಿಳಿದು ಕುಳಿತಿದೆ. ತಂದೆಯು ಪುನಃ ಸ್ಮೃತಿ ತರಿಸುತ್ತಾರೆ - ನೀವಾತ್ಮರಾಗಿದ್ದೀರಿ, ನೀವು 84 ಜನ್ಮಗಳನ್ನು ಭೋಗಿಸಿದ್ದೀರಿ, ಈ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ - ನೀವು ತಮ್ಮ ಜನ್ಮಗಳನ್ನೇ ತಿಳಿದುಕೊಂಡಿಲ್ಲ. ನಾನು ನಿಮಗೆ ತಿಳಿಸುತ್ತೇನೆ. ನೀವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ, ಪವಿತ್ರತೆಯಿಲ್ಲದೆ ಜ್ಞಾನದ ಧಾರಣೆಯಾಗಲು ಸಾಧ್ಯವಿಲ್ಲ. ಹೇಗೆ ಸಿಂಹದ ಹಾಲಿಗೆ ಚಿನ್ನದ ಪಾತ್ರೆಯು ಬೇಕೆಂದು ಹೇಳುತ್ತಾರಲ್ಲವೆ. ಹಾಗೆಯೇ ಇಲ್ಲಿಯೂ ಬುದ್ಧಿಯು ಚಿನ್ನದ ಪಾತ್ರೆಯಾಗಬೇಕು. ಆತ್ಮವು ತಂದೆಯನ್ನು ನೆನಪು ಮಾಡುವುದರಿಂದ ಚಿನ್ನದ ಸಮಾನವಾಗಿ ಬಿಡುತ್ತದೆ. ತಂದೆಯೂ ಸಹ ಸತ್ಯ ಚಿನ್ನವಾಗಿದ್ದಾರೆ, ಆತ್ಮವು ತಂದೆಯನ್ನು ನೆನಪು ಮಾಡುತ್ತದೆ ಆಗ ಜ್ಞಾನವು ಬಂದು ಬಿಡುತ್ತದೆ. ನೀವು ಸತ್ಯ ಚಿನ್ನ ಅರ್ಥಾತ್ ಪವಿತ್ರರಾಗಿದ್ದಿರಿ - ಈ ಜ್ಞಾನದ ಪ್ರಭಾವವು ಯಾರಿಗೂ ಬೀರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನೀವಾತ್ಮರಿಗೆ ಸ್ವರಾಜ್ಯ ಕೊಡುತ್ತೇನೆ. ಯಾವಾಗ ಈ ಹಳೆಯ ಸೃಷ್ಟಿಯ ಅಂತ್ಯ ಮತ್ತು ಹೊಸ ಸೃಷ್ಟಿಯ ಆದಿಯಾಗುವುದೋ ಆಗಲೇ ಸ್ವರಾಜ್ಯ ಸಿಗುವುದು. ಮನುಷ್ಯರಿಗೆ ಹದ್ದಿನ ರಾಜ್ಯವಿದೆ, ಬೇಹದ್ದಿನ ರಾಜ್ಯವು ಮನುಷ್ಯರಿಗೆಂದೂ ಸಿಗುವುದಿಲ್ಲ, ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ನೀವು ತಂದೆಯ ಮೂಲಕ ಆಗುತ್ತೀರಿ. ಭಗವಂತ ತಂದೆಗೆ ಮಾತ್ರವೇ ನಿಮ್ಮ 84 ಜನ್ಮಗಳ ಬಗ್ಗೆ ತಿಳಿದಿದೆ. ದೇವತೆಗಳೂ ಸಹ ತಮ್ಮ ಜನ್ಮಗಳನ್ನು ಅರಿತುಕೊಂಡಿರುವುದಿಲ್ಲ, ಒಂದುವೇಳೆ ಅಲ್ಲಿ ಅವರಿಗೆ ತಮ್ಮ ಪುನರ್ಜನ್ಮದ ಬಗ್ಗೆ ತಿಳಿದಿದ್ದರೆ ನಾವು ಏಣಿಯನ್ನು ಕೆಳಗಿಳಿಯುತ್ತಾ ಹೋಗುತ್ತೇವೆಯೇ ಎಂದು ದುಃಖಿಯಾಗಿ ಬಿಡುತ್ತಿದ್ದರು. ರಾಜ್ಯಭಾಗ್ಯದ ಸುಖವೇ ಅಲ್ಲಿ ಮಾಯವಾಗಿ ಬಿಡುತ್ತಿತ್ತು. ನಿಮಗೆ ಇಲ್ಲಿ ಜ್ಞಾನವು ತಿಳಿದಿದೆ, ನಾವಾತ್ಮರಾಗಿದ್ದೇವೆ. ಇದರಲ್ಲಿ ಸಂಶಯದ ಮಾತಿಲ್ಲ. ಒಬ್ಬರು ಇನ್ನೊಬ್ಬರಿಂದ ಕೇಳುತ್ತಾ ವೃದ್ಧಿಯಾಗುತ್ತಾ ಹೋಗುತ್ತದೆ. ಈ ದೈವೀ ಧರ್ಮದ ವೃಕ್ಷವು ಸ್ಥಾಪನೆಯಾಗುತ್ತಿದೆ. ನೀವು ತಿಳಿದುಕೊಳ್ಳುತ್ತೀರಿ - ಇವರು ನಮ್ಮ ಬ್ರಾಹ್ಮಣ ಕುಲದವರು ಬಂದಿದ್ದಾರೆ, ಇವರು ಪೂರ್ಣ ಭಕ್ತಿ ಮಾಡಿದ್ದಾರೆ. ಆದ್ದರಿಂದ ತಂದೆಯಿಂದ ಪುನಃ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದಾರೆ. ಜ್ಞಾನವು ಮುಗಿಯುತ್ತದೆ ನಂತರ ಭಕ್ತಿಯು ಪ್ರಾರಂಭವಾಗುತ್ತದೆ, ಇದು ಯಾರಿಗೂ ತಿಳಿದಿಲ್ಲ. ಮನೆಯೂ ಸಹ ಹೊಸದರಿಂದ ಮತ್ತೆ ಹಳೆಯದಾಗುತ್ತದೆಯಲ್ಲವೆ. ಹಳೆಯ ಮನೆಯ ಆಯಸ್ಸು ಅವಶ್ಯವಾಗಿ ಕಡಿಮೆಯಿರುತ್ತದೆ. ಇತ್ತೀಚೆಗೆ ಮನೆಗಳನ್ನು ಬಹಳ ಪ್ರಬಲವಾಗಿ ಕಟ್ಟಿಸುತ್ತಾರೆ. ಭಲೆ ಭೂಕಂಪಗಳಾದರೂ ಸಹ ಮನೆ ಬೀಳದಿರಲಿ, ನಷ್ಟವಾಗದಿರಲಿ ಎಂದು ಬಹಳ ಬಲವಾಗಿ ಕಟ್ಟಿಸುತ್ತಾರೆ. ಬಲವಾಗಿ ತಳಪಾಯ ಹಾಕಿಸುತ್ತಾರೆ. ಹಾಗೆಯೇ ಈಗ ಸ್ವರಾಜ್ಯದ ತಳಪಾಯವು ಹಾಕಲ್ಪಡುತ್ತಿದೆ, ಆತ್ಮಕ್ಕೆ 21 ಜನ್ಮಗಳಿಗಾಗಿ ರಾಜ್ಯವು ಸಿಗುತ್ತದೆ. ಇಲ್ಲಿನ ರಾಜ್ಯವಂತೂ ಏನೇನೂ ಇಲ್ಲ. ಇಂದು ರಾಜ್ಯವಿದೆ, ನಾಳೆ ಯಾರಾದರೂ ಮುತ್ತಿಗೆ ಹಾಕಿದರೆ ಸಮಾಪ್ತಿ. ಯಾರದೂ ಶಾಶ್ವತವಿಲ್ಲ, ಮನುಷ್ಯರಿಗೂ ಸಹ ಗ್ಯಾರಂಟಿಯಿಲ್ಲ, ಇಂದು ಇರುತ್ತಾರೆ ನಾಳೆ ಹೊರಟು ಹೋಗುತ್ತಾರೆ. ಈಗ ನಿಮ್ಮ ತಳಪಾಯವನ್ನು ತಂದೆಯು ಪ್ರಬಲವಾಗಿ ಹಾಕುತ್ತಾರೆ. ಅದರಿಂದ 21 ಜನ್ಮಗಳವರೆಗೆ ನೀವು ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಈಗ ನಿಮ್ಮ ರಾಜಧಾನಿಯ ಬಲವಾದ ತಳಹದಿಯು ಹಾಕಲ್ಪಡುತ್ತದೆ. ನಿಮ್ಮನ್ನು ಯಾವುದೇ ಧರಣಿಯ ಬಿರುಗಾಳಿಯು ಅಲುಗಾಡಿಸಲು ಸಾಧ್ಯವಿಲ್ಲ. ಗೀತೆಯಲ್ಲಿಯೂ ಹೇಳುತ್ತಾರೆ - ತಂದೆಯು ನಮಗೆ ಸ್ವರಾಜ್ಯವನ್ನು ಕೊಡುತ್ತಾರೆ ಯಾವುದನ್ನು ಯಾರೂ ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ, ಬೀಳಿಸಲು ಸಾಧ್ಯವಿಲ್ಲ. ಇಂತಹ ರಾಜ್ಯವನ್ನು ಕೊಡುತ್ತಾರೆ ಎಲ್ಲಿ ದುಃಖದ ಮಾತು ಇರುವುದಿಲ್ಲ ಅಂದಮೇಲೆ ಆತ್ಮಕ್ಕೆ ಎಷ್ಟೊಂದು ಖುಷಿಯಿರಬೇಕು! ನಿಶ್ಚಯವಂತೂ ಇದೆಯಲ್ಲವೆ. ನಿಶ್ಚಯವಿಲ್ಲದಿದ್ದರೆ ಅವರು ಸ್ವರ್ಗದಲ್ಲಿ ಹೋಗಲು ಯೋಗ್ಯರಲ್ಲ. ಇಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರು ವೃದ್ಧಿಯಾಗುತ್ತಾ ಇರುತ್ತೀರಿ. |
ನೀವು ತಿಳಿದುಕೊಂಡಿದ್ದೀರಿ – ಜ್ಞಾನ ಸಾಗರ, ಪತಿತ-ಪಾವನನು ನಮಗೆ ಓದಿಸಿ, ರಾಜಯೋಗವನ್ನು ಕಲಿಸುತ್ತಿದ್ದಾರೆ. ಮನುಷ್ಯರು ಕೃಷ್ಣನು ಕಲಿಸಿದನೆಂದು ಹೇಳಿಬಿಡುತ್ತಾರೆ. ಶಿವ ತಂದೆಯು ಮನುಷ್ಯನ ತನುವಿನಲ್ಲಿ ಬಂದು ಕಲಿಸಿದರು ಎಂಬುದನ್ನು ಹೇಗೆ ತಿಳಿದುಕೊಳ್ಳುವುದು! ಭಾರತವೇ ಪವಿತ್ರವಾಗಿತ್ತು, ಈಗ ಅಪವಿತ್ರ, ಪತಿತನಾಗಿದೆ. ದೇವತೆಗಳ ಮುಂದೆ ಹೋಗಿ ಅವರ ಮಹಿಮೆಯನ್ನು ಹಾಡುತ್ತಾರೆ. ಶಿವನ ಮುಂದೆ ಎಂದೂ ಸಹ ನೀವು ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರಾಗಿದ್ದೀರಿ ಎಂದು ಹಾಡುವುದಿಲ್ಲ. ಶಿವನ ಮಹಿಮೆಯೇ ಬೇರೆಯಾಗಿದೆ, ಅವರು ಜ್ಞಾನ ಸಾಗರ, ಪತಿತ-ಪಾವನ, ಸರ್ವರ ಸದ್ಗತಿ ಮಾಡುವವರು, ಸರ್ವರ ಜೋಳಿಗೆಯನ್ನು ತುಂಬುವಂತಹ ಭೋಲಾನಾಥನಾಗಿದ್ದಾರೆ. ಇಂತಹ ತಂದೆಯನ್ನು ಎಲ್ಲರೂ ಮರೆತಿದ್ದಾರೆ. ನಮ್ಮ ದುಃಖ ದೂರ ಮಾಡಿ ಸುಖ ಕೊಡಿ ಎಂದು ಪರಮಪಿತ ಪರಮಾತ್ಮನನ್ನು ಕರೆಯುತ್ತಾರೆ. ದುಃಖಹರ್ತ-ಸುಖಕರ್ತನು ಒಬ್ಬರೇ ಆಗಿದ್ದಾರೆ. ಅವರದೇ ಶ್ರೇಷ್ಠ ಮತವಾಗಿದೆ. ಅದು ಶ್ರೀ ಶ್ರೀ ಭಗವಂತನ ಮತವಾಗಿದೆ, ಅದರಿಂದ ನೀವು ಮಕ್ಕಳೂ ಶ್ರೇಷ್ಠರಾಗುತ್ತೀರಿ. ಇದು ಭ್ರಷ್ಟಾಚಾರಿ ಪ್ರಪಂಚವಾಗಿದೆ ಎಂದು ಸರ್ಕಾರವೂ ಸಹ ಹೇಳುತ್ತದೆ. ಈಗ ಶ್ರೇಷ್ಠರನ್ನಾಗಿ ಯಾರು ಮಾಡುವರು? ಎಂಬುದು ಅರ್ಥವಾಗುವುದೇ ಇಲ್ಲ. ಸಾಧು-ಸಂತರು ಮಾಡುವರೆಂದು ತಿಳಿಯುತ್ತಾರೆ ಆದರೆ ಅವರು ಶ್ರೇಷ್ಠರನ್ನಾಗಿ ಮಾಡಲು ಸಾಧ್ಯವಿಲ್ಲ. ಇದು ತಂದೆಯ ಕರ್ತವ್ಯವೇ ಆಗಿದೆಯಲ್ಲವೆ. ಮೊದಲು ಒಬ್ಬ ರಾಜನ ಆಜ್ಞೆಯಂತೆ ನಡೆಯುತ್ತಿದ್ದರು. ಸತ್ಯಯುಗದಲ್ಲಿ ನಿಮಗೆ ಮಂತ್ರಿ ಮೊದಲಾದವರು ಯಾರೂ ಇರುವುದಿಲ್ಲ. ರಾಜನಲ್ಲಿಯೂ ಶಕ್ತಿಯಿರುತ್ತದೆ, ಮಂತ್ರಿಯ ಹೆಸರೇ ಇರುವುದಿಲ್ಲ. ನೀವು ತಿಳಿದುಕೊಳ್ಳುತ್ತೀರಿ, ನಾವು ವಿಶ್ವದ ಮಾಲೀಕರಾಗಿ ರಾಜ್ಯ ನಡೆಸಿದ್ದೆವು. ಹೇಗೆ ನಡೆಸಿದ್ದೆವೋ ಅದೇರೀತಿ ಈಗಲೂ ಹೋಗಿ ನಡೆಸಬೇಕಾಗಿದೆ. ಅವಶ್ಯವಾಗಿ ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಪ್ರತಿಯೊಬ್ಬರಿಗೆ ತಮ್ಮ-ತಮ್ಮ ರಾಜಧಾನಿ ಸಿಗುವುದು. ಕೃಷ್ಣನಿಗೂ ತನ್ನ ರಾಜಧಾನಿಯಿರುವುದು. ಅನ್ಯ ರಾಜರೂ ಇರುತ್ತಾರಲ್ಲವೆ. ಕೊನೆಪಕ್ಷ 8 ಮಂದಿಯಾದರೂ ಇರುತ್ತಾರಲ್ಲವೆ. 8 ಮಂದಿಯೋ ಅಥವಾ 108 ಮಂದಿ ಇರುವರೋ? ಅದು ಮುಂದೆ ಹೋದಂತೆ ಅರ್ಥವಾಗುವುದು. ಯಾವುದನ್ನು ಅಂತ್ಯದಲ್ಲಿ ಜ್ಞಾನ ಕೊಡಬೇಕಾಗಿದೆಯೋ ಅದನ್ನು ಈಗ ಕೊಡುತ್ತೇವೆ ಎಂದಲ್ಲ. ಯಾರು ಉಳಿಯುವರೋ ಅವರಿಗೆ ತಂದೆಯು ಜ್ಞಾನ ಕೊಡುತ್ತಾರೆ, ಕೊಡಲೇಬೇಕಾಗಿದೆ. ಡ್ರಾಮಾದಲ್ಲಿ ನಿಗಧಿಯಾಗಿದೆ. ಪರಮಾತ್ಮನದು ಈಗ ಪಾತ್ರವಿದೆ. ಈ ಜ್ಞಾನವನ್ನು ಕೊಡುವ ಪಾತ್ರವು ಈಗ ನಿಗಧಿಯಾಗಿದೆ. ತಂದೆಯು ಹೇಳುತ್ತಾರೆ - ಮುಂದೆ ಹೋದಂತೆ ನೀವು ಬಹಳ ತಿಳಿದುಕೊಳ್ಳುವಿರಿ. ದಿನ-ಪ್ರತಿದಿನ ತಿಳಿಸುತ್ತಲೇ ಇರುತ್ತೇವೆ. ಅಲ್ಲಿ ಹೇಗೆ ರಾಜಧಾನಿಯನ್ನು ನಡೆಸುತ್ತಾರೆ? ಹೇಗೆ ಸ್ವಯಂವರವಾಗುತ್ತದೆ? ಎಂಬುದೂ ಸಹ ಅರ್ಥವಾಗುವುದು. ನೀವು ಧ್ಯಾನದಲ್ಲಿ ಹೋಗುತ್ತೀರಿ, ವೈಕುಂಠದಲ್ಲಿ ಹೋಗಿ ನೋಡುತ್ತೀರಿ, ಅಲ್ಲಿ ಚಿನ್ನದ ಮಹಲುಗಳಿರುತ್ತವೆ. ಚಿನ್ನವೇ ಚಿನ್ನವಿರುತ್ತದೆ. ತಮ್ಮನ್ನು ಪಾರಸ ಪುರಿಯಲ್ಲಿ ನೋಡಿಕೊಳ್ಳುತ್ತೀರಿ, ಚಿನ್ನದ ಇಟ್ಟಿಗೆಗಳ ಮನೆಗಳು ತಯಾರಾಗುತ್ತಿವೆ. ಕೆಲವು ಇಟ್ಟಿಗೆಗಳನ್ನು ತೆಗೆದುಕೊಂಡು ಹೋಗೋಣವೆಂದು ತಿಳಿದು ಕೆಳಗಡೆ ಬರುತ್ತೀರೆಂದರೆ ತಮ್ಮನ್ನು ಇಲ್ಲಿ ನೋಡುತ್ತೀರಿ. ಮೀರಾ ಧ್ಯಾನದಲ್ಲಿ ತನ್ನನ್ನು ನೃತ್ಯ ಮಾಡುತ್ತಾ ಕೃಷ್ಣನ ಜೊತೆಯಿರುವಂತೆ ನೋಡುತ್ತಿದ್ದಳು. ನೀವೂ ಸಹ ಸೂಕ್ಷ್ಮವತನದಲ್ಲಿ ಹೋಗುತ್ತೀರಿ, ಅಲ್ಲಿ ಮೂಳೆ-ಮಾಂಸಗಳಿರುವುದಿಲ್ಲ, ಫರಿಶ್ತೆಗಳಾಗಿ ಬಿಡುತ್ತಾರೆ. ಬ್ರಹ್ಮನ ಸೂಕ್ಷ್ಮ ಶರೀರವೂ ಸಹ ಅಲ್ಲಿ ಕಾಣುತ್ತದೆ, ಸಾಕಾರ ಬ್ರಹ್ಮನೇ ಫರಿಶ್ತೆಯಾಗಿದ್ದಾರೆ. ಅಲ್ಲಿ ನೀವು ಹೂದೋಟ ಇತ್ಯಾದಿಗಳನ್ನು ನೋಡುತ್ತೀರಿ, ಇದೆಲ್ಲವನ್ನೂ ತಂದೆಯು ಸಾಕ್ಷಾತ್ಕಾರ ಮಾಡಿಸುತ್ತಾರೆ. ತಂದೆಯು ನಮಗೆ ಶೂಬೀ ರಸವನ್ನು ಕುಡಿಸುತ್ತಾರೆಂದು ನೀವು ಹೇಳುತ್ತೀರಿ. ಸೂಕ್ಷ್ಮವತನದಲ್ಲಂತೂ ಕುಡಿಸಲು ಸಾಧ್ಯವಿಲ್ಲ, ವೈಕುಂಠದಲ್ಲಿ ಫಲ ಪುಷ್ಫಗಳು ಬಹಳ ಸುಂದರವಾಗಿರುತ್ತವೆ. ಸೂಕ್ಷ್ಮವತನದಲ್ಲಂತೂ ಯಾವುದೇ ಹೂದೋಟ ಇತ್ಯಾದಿಗಳಿರುವುದಿಲ್ಲ, ಉದ್ಯಾನವನದಲ್ಲಿ ಹೋದೆವು ಅಲ್ಲಿ ರಾಜಕುಮಾರ-ಕುಮಾರಿಯರಿದ್ದರು ಎಂದು ನೀವು ತಿಳಿಸುತ್ತೀರಿ. ಅದಂತೂ ವೈಕುಂಠದಲ್ಲಿಯೇ ಇರಲು ಸಾಧ್ಯವಲ್ಲವೆ. ನಿಮಗೆ ಕಾಣುವುದು ಕೇವಲ ಸಾಕ್ಷಾತ್ಕಾರವಾಗಿದೆ. ವೈಕುಂಠದ ವೈಭವವು ಇಲ್ಲಿ ಸಿಗಲು ಸಾಧ್ಯವಿಲ್ಲ, ಅಲ್ಲಂತೂ ಬಹಳ ವೈಭವಗಳಿರುತ್ತವೆ. ತಂದೆಯು ತಿಳಿಸುತ್ತಾರೆ, ನಾನು ನಿಮ್ಮನ್ನು ವೈಕುಂಠದ ಮಾಲೀಕರನ್ನಾಗಿ ಮಾಡುತ್ತೇನೆ, ಇಲ್ಲಂತೂ ದುಃಖವೇ ದುಃಖವಿದೆ. ಹೇ ಭಗವಂತ ದುಃಖದಿಂದ ಬಿಡಿಸು ಎಂದು ಹೇಳದೇ ಇರುವಂತಹ ಮನುಷ್ಯರಿಲ್ಲ, ದುಃಖದಲ್ಲಿಯೇ ನೆನಪು ಮಾಡುತ್ತಾರೆ. ಕೃಷ್ಣನ ಪೂಜಾರಿಗಳು, ಕೃಷ್ಣ ಎನ್ನಿರಿ ಎಂದು ಹೇಳುತ್ತಾರೆ, ಹನುಮಂತನ ಪೂಜಾರಿಗಳು ಹನುಮಂತನಿಗೆ ಜಯವಾಗಲಿ... ಎಂದು ಹೇಳುತ್ತಾರೆ. ಇಲ್ಲಿ ತಂದೆಯು ಹೇಳುತ್ತಾರೆ - ತಂದೆಯಾದ ನನ್ನನ್ನು ನಿರಂತರ ನೆನಪು ಮಾಡಿರಿ, ಈ ರೀತಿ ನೆನಪು ಮಾಡಿರಿ ಅಂತಿಮ ಕಾಲದಲ್ಲಿ ಯಾರದೇ ಸ್ಮೃತಿ ಬಾರದಿರಲಿ. ಕಾಶಿಗೆ ಹೋಗಿ ಬಲಿಯಾಗುತ್ತಿದ್ದರು, ಅದರಲ್ಲಿ ಮಾಡಿರುವ ಪಾಪಗಳು ಅಂತಿಮ ಸಮಯದಲ್ಲಿ ಈ ರೀತಿ ಅನುಭವವಾಗುತ್ತದೆ, ಹೇಗೆ ನಾವು ಜನ್ಮ-ಜನ್ಮಾಂತರದ ಶಿಕ್ಷೆಗಳನ್ನು ಭೋಗಿಸುತ್ತಿದ್ದೇವೆ ಬಹಳ ಪಾಪ ಮಾಡಿದ್ದೇವೆ ಎಂದೆನಿಸುತ್ತದೆ. ಇದಕ್ಕೆ ಪಾಪಾತ್ಮರ ಪ್ರಪಂಚವೆಂದು ಹೇಳಲಾಗುತ್ತದೆ. ಆತ್ಮವು ಪಾಪಿಯಾಗಿದೆ, ಹೇ ಪರಮಪಿತ ಪರಮಾತ್ಮ, ಹೇ ಪರಮಧಾಮ ನಿವಾಸಿ ಶಿವ ತಂದೆ ಎಂದು ಆತ್ಮವೇ ತಂದೆಯನ್ನು ಕರೆಯುತ್ತದೆ. ತಂದೆಯ ಮೂಲ ಹೆಸರು ಒಂದೇ ಆಗಿದೆ, ಅವರು ಆತ್ಮರ ತಂದೆಯಾಗಿದ್ದಾರೆ. ರುದ್ರನ ಜೊತೆ ಸಾಲಿಗ್ರಾಮ ಎಂಬ ಹೆಸರು ಶೋಭಿಸುವುದಿಲ್ಲ, ಶಿವ ಮತ್ತು ಸಾಲಿಗ್ರಾಮ ಎಂಬುದು ಶೋಭಿಸುತ್ತದೆ. ಶಿವನ ಮಣ್ಣಿನ ಲಿಂಗವನ್ನು ಮಾಡುತ್ತಾರೆ ಆಗ ಸಾಲಿಗ್ರಾಮಗಳನ್ನೂ ಮಾಡುತ್ತಾರೆ, ಪತಿತ-ಪಾವನನಂತೂ ಅವರೇ ಆಗಿದ್ದಾರಲ್ಲವೆ. ಇಲ್ಲಿ ಯಜ್ಞಗಳನ್ನು ರಚಿಸುತ್ತಾರೆ, ಭಾರತವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ ಆದರೆ ದೇವತಾ ಧರ್ಮವನ್ನು ಮರೆತು ಬಿಟ್ಟಿದ್ದಾರೆ. ನಿಮ್ಮದು ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ. ಅದೇ ನಡೆದು ಬರಬೇಕಲ್ಲವೆ. ಹಿಂದೂ ಧರ್ಮವೆಂಬುದು ಯಾವುದೂ ಇಲ್ಲ, ದೇವತಾ ಧರ್ಮದವರೇ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ತಮೋದಲ್ಲಿ ಬಂದಾಗ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ಹಿಂದೂ ಎಂಬುದು ಧರ್ಮವೇ ಇಲ್ಲ, ಆದ್ದರಿಂದಲೇ ನೀವಿಲ್ಲಿ ದೇವಿ-ದೇವತೆಗಳಾಗಬಹುದು ಬಂದು ತಿಳಿದುಕೊಳ್ಳಿ ಎಂದು ಹೇಳಿದಾಗ ನಮಗೆ ಬಿಡುವೆಲ್ಲಿದೆ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಶಾಂತಿ ಮತ್ತು ಸುಖದ ಆಸ್ತಿಯನ್ನು ಕೊಡುವುದಕ್ಕಾಗಿ ನನ್ನವರನ್ನಾಗಿ ಮಾಡಿಕೊಳ್ಳುತ್ತೇನೆ, ಕೆಲವು ಪರಿವಾರಗಳಲ್ಲಿ ಪರಸ್ಪರ ಒಟ್ಟಿಗೆ ಇರುತ್ತಾರೆ, ಬಹಳ ಪ್ರೀತಿಯಿಂದ ನಡೆಯುತ್ತಾರೆ. ಎಲ್ಲರ ಸಂಪಾದನೆಯು ಒಟ್ಟಾಗಿ ಸೇರುತ್ತದೆ. ಯಾವುದೇ ಏರುಪೇರುಗಳಿರುವುದಿಲ್ಲ, ಆದರೂ ಸಹ ಇದಕ್ಕೆ ಸ್ವರ್ಗವೆಂದು ಹೇಳಲು ಸಾಧ್ಯವಿಲ್ಲ ಅಲ್ಲವೆ? ಸತ್ಯಯುಗದಲ್ಲಿ ಯಾವ ಒಂದು ಮನೆಯಲ್ಲಿಯೂ ರೋಗಿ, ದುಃಖಿಯಾಗಿರುವುದಿಲ್ಲ, ಹೆಸರೇ ಆಗಿದೆ - ಸ್ವರ್ಗ, ಅಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ. ತಂದೆಯಿಂದ ನೀವು ಸುಖದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೀರಿ, ನಿಮಗೆ ಜ್ಞಾನ ಸಿಕ್ಕಿದೆ. ಬಾಬಾ, ತಾವು ಪತಿತ-ಪಾವನ ಆಗಿದ್ದೀರಿ, ನಮ್ಮನ್ನು ಪಾವನ ಮಾಡಿ ಎಂದು ಹೇಳುತ್ತೀರಿ. ತಂದೆಯ ಜೊತೆ ನೀವು ಮಕ್ಕಳೂ ಸಹ ಈಶ್ವರೀಯ ಸೇವಾಧಾರಿಗಳಾಗಿದ್ದೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸ್ವರಾಜ್ಯವನ್ನು ತೆಗೆದುಕೊಳ್ಳಲು ಪವಿತ್ರತೆಯ ತಳಪಾಯವನ್ನು ಈಗಿನಿಂದಲೇ ಬಲಪಡಿಸಿಕೊಳ್ಳಬೇಕಾಗಿದೆ. ಹೇಗೆ ತಂದೆಯು ಪತಿತ-ಪಾವನನಾಗಿದ್ದಾರೆಯೋ ಹಾಗೆಯೇ ತಂದೆಯ ಸಮಾನ ಪಾವನರಾಗಬೇಕಾಗಿದೆ. |
2. ತನ್ನ ಸ್ವಧರ್ಮ ಶಾಂತಿಯಲ್ಲಿ ಸ್ಥಿತರಾಗಿರಬೇಕಾಗಿದೆ. ಎಷ್ಟು ಸಾಧ್ಯವೋ ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿರಬೇಕಾಗಿದೆ. ಡೆಡ್ ಸೈಲೆನ್ಸ್ ಅರ್ಥಾತ್ ಅಶರೀರಿಯಾಗಿರುವ ಅಭ್ಯಾಸ ಮಾಡಬೇಕಾಗಿದೆ. |
“ಸದಾ ಉತ್ಸಾಹದಲ್ಲಿದ್ದು ಉತ್ಸವವನ್ನಾಚರಿಸಿ” |
ಇಂದು ವಿಶ್ವೇಶ್ವರ ತಂದೆಯು ತನ್ನ ವಿಶ್ವದ ಶ್ರೇಷ್ಠ ರಚನೆ ಅಥವಾ ಶ್ರೇಷ್ಠ ಆದಿ ರತ್ನಗಳೊಂದಿಗೆ ಅತಿಸ್ನೇಹಿ ಮತ್ತು ಸಮೀಪ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ವಿಶ್ವದ ಸರ್ವ ಆತ್ಮರು ವಿಶ್ವೇಶ್ವರ ತಂದೆಯ ಮಕ್ಕಳಾಗಿದ್ದಾರೆ ಆದರೆ ಬ್ರಾಹ್ಮಣ ಆತ್ಮರು ಅತಿ ಸ್ನೇಹಿ, ಸಮೀಪದ ಆತ್ಮರಾಗಿದ್ದೀರಿ ಏಕೆಂದರೆ ಬ್ರಾಹ್ಮಣ ಆತ್ಮಗಳು ಆದಿ ರಚನೆಯಾಗಿದ್ದೀರಿ. ತಂದೆಯ ಜೊತೆ ಜೊತೆಗೆ ಬ್ರಾಹ್ಮಣ ಆತ್ಮರೂ ಸಹ ಬ್ರಾಹ್ಮಣ ಜೀವನದಲ್ಲಿ ಅವತರಿತರಾಗಿದ್ದೀರಿ. ತಂದೆಯ ಕಾರ್ಯದಲ್ಲಿ ಸಹಯೋಗಿ ಆತ್ಮರಾಗುತ್ತೀರಿ. ಆದ್ದರಿಂದ ಬಾಪ್ದಾದಾ ಇಂದಿನ ದಿನದಂದು ಮಕ್ಕಳ ಬ್ರಾಹ್ಮಣ ಜೀವನದ ಅವತರಣೆಯ ಜನ್ಮ ದಿನವನ್ನು ಆಚರಿಸಲು ಬಂದಿದ್ದೇವೆ. ಮಕ್ಕಳು ತಂದೆಯ ಜನ್ಮ ದಿನವನ್ನು ಆಚರಿಸಲು ಉಲ್ಲಾಸ-ಉತ್ಸಾಹದಿಂದ ಖುಷಿಯಲ್ಲಿ ನರ್ತಿಸುತ್ತಿದ್ದೀರಿ. ಆದರೆ ಬಾಪ್ದಾದಾ ಮಕ್ಕಳ ಈ ಬ್ರಾಹ್ಮಣ ಜೀವನವನ್ನು ನೋಡಿ ಸ್ನೇಹ ಮತ್ತು ಸಹಯೋಗದಲ್ಲಿ ತಂದೆಯ ಜೊತೆ ಜೊತೆಗೆ ಪ್ರತೀ ಕಾರ್ಯದಲ್ಲಿ ಸಾಹಸದಿಂದ ಮುಂದುವರೆಯುತ್ತಿರುವುದನ್ನು ನೋಡಿ ಹರ್ಷಿತರಾಗುತ್ತಿದ್ದೇವೆ ಅಂದಾಗ ತಾವು ಬಾಪ್ದಾದಾರವರ ಜನ್ಮ ದಿನವನ್ನು ಆಚರಿಸುತ್ತೀರಿ ಮತ್ತು ತಂದೆಯು ಮಕ್ಕಳ ಜನ್ಮ ದಿನವನ್ನು ಆಚರಿಸುತ್ತಾರೆ. ತಾವು ಬ್ರಾಹ್ಮಣರದೂ ಜನ್ಮದಿನವಾಗಿದೆಯಲ್ಲವೆ ಆದ್ದರಿಂದ ಎಲ್ಲರಿಗೆ ಬಾಪ್ದಾದಾ, ಜಗದಂಬಾ ಮತ್ತು ತಮ್ಮ ಸರ್ವ ಜೊತೆಗಾರರಾದ ಅಡ್ವಾನ್ಸ್ ಪಾರ್ಟಿಯವರ ವಿಶೇಷ ಶ್ರೇಷ್ಠಾತ್ಮರ ಸಹಿತ ತಮ್ಮ ಅಲೌಕಿಕ ಬ್ರಾಹ್ಮಣ ಜನ್ಮದ ಸ್ನೇಹದಿಂದ ಸುವರ್ಣ ಪುಷ್ಫ ವರ್ಷದ ಸಹಿತ ಶುಭಾಷಯಗಳು ಶುಭಾಷಯಗಳು. ಇದು ಹೃದಯದ ಶುಭಾಷಯವಾಗಿದೆ, ಕೇವಲ ಬಾಯಿಯ ಶುಭಾಷಯವಲ್ಲ ಆದರೆ ಹೃದಯರಾಮ ತಂದೆಯ ಹೃದಯದ ಶುಭಾಷಯಗಳು ಸರ್ವಶ್ರೇಷ್ಠ ಆತ್ಮರಿಗೆ ಸನ್ಮುಖದಲ್ಲಿ ಕುಳಿತಿರಬಹುದು, ಮನಸ್ಸಿನಿಂದ ತಂದೆಯ ಸನ್ಮುಖದಲ್ಲಿ ಇರಬಹುದು, ನಾಲ್ಕಾರು ಕಡೆಯ ಮಕ್ಕಳಿಗೆ ಶುಭಾಷಯಗಳು, ಶುಭಾಷಯಗಳು. |
ಇಂದಿನ ದಿನದಂದು ಭಕ್ತಾತ್ಮರ ಬಳಿ ತಂದೆಯ ಬಿಂದು ರೂಪದ ವಿಶೇಷ ಸ್ಮೃತಿಯಿರುತ್ತದೆ. ಶಿವ ಜಯಂತಿ ಅಥವಾ ಶಿವರಾತ್ರಿಯು ಯಾವುದೇ ಸಾಕಾರ ರೂಪದ ನೆನಪಾರ್ಥವಲ್ಲ. ನಿರಾಕಾರ ತಂದೆಯು ಜ್ಯೋತಿರ್ಬಿಂದು ಯಾವ ಶಿವಲಿಂಗದ ರೂಪದಲ್ಲಿ ಪೂಜಿಸುತ್ತಾರೆಯೋ ಆ ಬಿಂದುವಿನ ಮಹತ್ವಿಕೆಯಾಗಿದೆ. ತಮ್ಮೆಲ್ಲರ ಹೃದಯದಲ್ಲಿ ತಂದೆಯ ಬಿಂದು ರೂಪದ ಸ್ಮೃತಿ ಸದಾ ಇರುತ್ತದೆ ಅಂದಾಗ ತಾವೂ ಬಿಂದು ಮತ್ತು ತಂದೆಯೂ ಬಿಂದು ಆದ್ದರಿಂದ ಇಂದಿನದಿನ ಭಾರತದಲ್ಲಿ ಪ್ರತಿಯೊಬ್ಬ ಭಕ್ತಾತ್ಮನಲ್ಲಿ ವಿಶೇಷ ಬಿಂದು ರೂಪದ ಮಹತ್ವಿಕೆಯಿರುತ್ತದೆ. ಬಿಂದು ಎಷ್ಟು ಸೂಕ್ಷ್ಮವಾಗಿದೆಯೋ ಅಷ್ಟೇ ಶಕ್ತಿಶಾಲಿಯಾಗಿದೆ. ಆದ್ದರಿಂದ ಬಿಂದು ತಂದೆಯನ್ನು ಜ್ಞಾನ, ಗುಣ, ಶಕ್ತಿಗಳ ಸಿಂಧು ಅರ್ಥಾತ್ ಸಾಗರ ಎಂದು ಹೇಳಲಾಗುತ್ತದೆ ಅಂದಾಗ ಇಂದು ಎಲ್ಲಾ ಮಕ್ಕಳ ಹೃದಯದಲ್ಲಿ ಜನ್ಮ ದಿನದ ವಿಶೇಷ ಉತ್ಸಾಹದ ಅಲೆಯು ಅಮೃತವೇಳೆಯಿಂದಲೂ ಬಾಪ್ದಾದಾರವರ ಬಳಿ ತಲುಪುತ್ತಿದೆ. ಹೇಗೆ ತಾವು ಮಕ್ಕಳು ವಿಶೇಷ ಸೇವಾರ್ಥವಾಗಿ ಹಾಗೂ ಸ್ನೇಹ ಸ್ವರೂಪರಾಗಿ ತಂದೆಯ ಬಾವುಟವನ್ನು ಹಾರಿಸಿದಿರಿ. ತಂದೆಯೂ ಸಹ ಯಾವ ಬಾವುಟವನ್ನು ಹಾರಿಸಿದರು? ತಾವೆಲ್ಲರೂ ಶಿವ ತಂದೆಯ ಧ್ವಜವನ್ನು ಹಾರಿಸಿದಿರಿ. ತಂದೆಯು ಈ ಧ್ವಜವನ್ನು ಹಾರಿಸುವರೇ? ಇದು ಸೇವೆಯ ಸಾಕಾರ ರೂಪದ ಜವಾಬ್ದಾರಿಯನ್ನು ಮಕ್ಕಳಿಗೆ ಕೊಟ್ಟರು. ತಂದೆಯೂ ಸಹ ಧ್ವಜವನ್ನು ಹಾರಿಸಿದರು ಆದರೆ ಯಾವ ಧ್ವಜ ಮತ್ತು ಎಲ್ಲಿ ಹಾರಿಸಿದರು? ಬಾಪ್ದಾದಾರವರು ತಮ್ಮ ಹೃದಯದಲ್ಲಿ ಎಲ್ಲಾ ಮಕ್ಕಳ ವಿಶೇಷತೆಗಳ, ಸ್ನೇಹದ ಧ್ವಜವನ್ನು ಹಾರಿಸಿದರು. ಎಷ್ಟು ಧ್ವಜಗಳನ್ನು ಹಾರಿಸಿರಬಹುದು? ಈ ಪ್ರಪಂಚದಲ್ಲಿ ಇಷ್ಟೊಂದು ಧ್ವಜಗಳನ್ನು ಮತ್ತ್ಯಾರೂ ಹಾರಿಸಲು ಸಾಧ್ಯವಿಲ್ಲ, ಎಷ್ಟು ಸುಂದರ ದೃಶ್ಯವಿರಬಹುದು! |
ಒಬ್ಬೊಬ್ಬ ಮಗುವಿನ ವಿಶೇಷತೆಯ ಧ್ವಜವು ಬಾಪ್ದಾದಾರವರ ಹೃದಯದಲ್ಲಿ ಹಾರುತ್ತಿದೆ, ಕೇವಲ ತಾವೆಲ್ಲರೂ ಧ್ವಜವನ್ನು ಹಾರಿಸಲಿಲ್ಲ ಆದರೆ ಬಾಪ್ದಾದಾರವರೇ ಹಾರಿಸಿದರು. ಈ ಧ್ವಜವನ್ನು ಹಾರಿಸುವಾಗ ಏನಾಗುತ್ತದೆ? ಹೂವಿನ ಮಳೆ ಸುರಿಯುತ್ತದೆ. ಹಾಗೆಯೇ ಬಾಪ್ದಾದಾರವರೂ ಸಹ ಮಕ್ಕಳ ವಿಶೇಷತೆಯ ಸ್ನೇಹದ ಧ್ವಜವನ್ನು ಹಾರಿಸುವಾಗ ಯಾವ ಮಳೆ ಸುರಿಯುತ್ತದೆ? ಪ್ರತಿಯೊಬ್ಬ ಮಗುವಿನ ಮೇಲೆ "ಅವಿನಾಶಿ ಭವ" "ಅಮರ ಭವ" "ಅಚಲ-ಅಡೋಲ ಭವ" - ಈ ವರದಾನಗಳ ಮಳೆ ಸುರಿಯುತ್ತದೆ. ಈ ವರದಾನಗಳೇ ಬಾಪ್ದಾದಾರವರ ಅವಿನಾಶಿ ಅಲೌಕಿಕ ಪುಷ್ಫಗಳಾಗಿವೆ. ಬಾಪ್ದಾದಾರವರದು ಈ ಅವತರಣಾ ದಿವಸ ಅರ್ಥಾತ್ ಶಿವ ಜಯಂತಿ ದಿವಸದಂದು ಮಕ್ಕಳಿಗಿಂತಲೂ ಹೆಚ್ಚು ಖುಷಿಯಿದೆ. ಖುಷಿಯಲ್ಲಿ ಖುಷಿಯಿದೆ ಏಕೆಂದರೆ ಈ ಅವತರಣೆಯ ದಿವಸವನ್ನು ಪ್ರತೀ ವರ್ಷ ನೆನಪಾರ್ಥವನ್ನಂತೂ ಆಚರಿಸುತ್ತಾರೆ ಆದರೆ ಯಾವಾಗ ಸಾಕಾರ ಬ್ರಹ್ಮಾರವರ ತನುವಿನಲ್ಲಿ ತಂದೆಯ ಅವತರಣೆಯಾದಾಗ ಬಾಪ್ದಾದಾರವರಿಗೆ ಅದರಲ್ಲಿಯೂ ವಿಶೇಷವಾಗಿ ಶಿವ ತಂದೆಗೆ ವಿಶೇಷವಾಗಿ ಈ ಮಾತಿನ ಖುಷಿಯಿರುತ್ತದೆ - ಎಷ್ಟೊಂದು ಸಮಯದಿಂದ ತನ್ನ ಸಮೀಪ ಸ್ನೇಹೀ ಮಕ್ಕಳಿಂದ ಅಗಲಿ ಪರಮಧಾಮದಲ್ಲಿದ್ದೆನು, ಭಲೆ ಪರಮಧಾಮದಲ್ಲಿ ಆತ್ಮಗಳೂ ಇರುತ್ತಾರೆ ಆದರೆ ಯಾರು ಮೊದಲ ರಚನೆಯ ಆತ್ಮಗಳಿದ್ದೀರೋ, ತಂದೆಯ ಸಮಾನರಾಗುವ ಸೇವೆಯ ಜೊತೆಗಾರ ಆತ್ಮಗಳಿದ್ದೀರೋ ಅವರು ಎಷ್ಟೊಂದು ಸಮಯದ ನಂತರ ಅವತರಿತರಾದಾಗ ಪುನಃ ಬಂದು ಮಿಲನ ಮಾಡುತ್ತೀರಿ! ಎಷ್ಟೊಂದು ಸಮಯದಿಂದ ಅಗಲಿರುವ ಶ್ರೇಷ್ಠಾತ್ಮರು ಪುನಃ ಬಂದು ಮಿಲನ ಮಾಡುತ್ತೀರಿ! ಒಂದುವೇಳೆ ಯಾರಾದರೂ ಅತಿಸ್ನೇಹಿ ಅಗಲಿರುವವರು ಮತ್ತೆ ಸಿಕ್ಕಿಬಿಟ್ಟರೆ ಖುಷಿಯಲ್ಲಿಯೂ ವಿಶೇಷವಾಗಿ ಖುಷಿಯಾಗುತ್ತದೆಯಲ್ಲವೆ. ಅವತರಣೆಯ ದಿವಸ ಅರ್ಥಾತ್ ತನ್ನ ಆದಿರಚನೆಯೊಂದಿಗೆ ಪುನಃ ಮಿಲನ ಮಾಡುವ ದಿವಸವಾಗಿದೆ. ನಮಗೆ ತಂದೆಯು ಸಿಕ್ಕಿಬಿಟ್ಟರು ಎಂದು ತಾವು ಯೋಚಿಸುತ್ತೀರಿ ಮತ್ತು ನನಗೆ ಮಕ್ಕಳು ಸಿಕ್ಕಿಬಿಟ್ಟರು ಎಂದು ತಂದೆಯು ಹೇಳುತ್ತಾರೆ ಅಂದಾಗ ತಂದೆಗೆ ತನ್ನ ಆದಿರಚನೆಯ ಮೇಲೆ ಹೆಮ್ಮೆಯಿದೆ. ತಾವೆಲ್ಲರೂ ಆದಿರಚನೆಯಲ್ಲವೆ, ಕ್ಷತ್ರಿಯರಂತೂ ಅಲ್ಲತಾನೆ? ಎಲ್ಲರೂ ಸೂರ್ಯವಂಶಿ ಆದಿ ರಚನೆಯಾಗಿದ್ದೀರಿ. ಬ್ರಾಹ್ಮಣರಿಂದ ದೇವತೆಗಳಾಗುತ್ತೀರಲ್ಲವೆ ಅಂದಾಗ ಬ್ರಾಹ್ಮಣ ಆತ್ಮರು ಆದಿ ರಚನೆಯಾಗಿದ್ದೀರಿ. ಅನಾದಿ ರಚನೆಯಂತೂ ಎಲ್ಲರೂ ಆಗಿದ್ದಾರೆ, ಇಡೀ ವಿಶ್ವದ ಆತ್ಮರು ಅನಾದಿ ರಚನೆಯಾಗಿದ್ದಾರೆ ಆದರೆ ತಾವು ಅನಾದಿ ಮತ್ತು ಆದಿ ರಚನೆಯಾಗಿದ್ದೀರಿ ಆದ್ದರಿಂದ ಡಬಲ್ ನಶೆಯಿದೆಯಲ್ಲವೆ. |
ಇಂದಿನ ದಿನದಂದು ಬಾಪ್ದಾದಾ ವಿಶೇಷವಾಗಿ ಒಂದು ಸ್ಲೋಗನ್ ಕೊಡುತ್ತಿದ್ದೇವೆ - ಇಂದಿನ ದಿನಕ್ಕೆ ಉತ್ಸವದ ದಿನವೆಂದು ಹೇಳಲಾಗುತ್ತದೆ. ಶಿವರಾತ್ರಿ ಅಥವಾ ಶಿವ ಜಯಂತಿ ಉತ್ಸವವನ್ನು ಆಚರಿಸುತ್ತಾರೆ, ಉತ್ಸವದ ದಿನದ ಇದೇ ಸ್ಲೋಗನ್ ನೆನಪಿಟ್ಟುಕೊಳ್ಳಿ - ಬ್ರಾಹ್ಮಣ ಜೀವನದ ಪ್ರತೀ ಘಳಿಗೆಯು ಉತ್ಸವದ ಘಳಿಗೆಯಾಗಿದೆ. ಬ್ರಾಹ್ಮಣ ಜೀವನ ಅರ್ಥಾತ್ ಸದಾ ಉತ್ಸವವನ್ನು ಆಚರಿಸುವುದು. ಸದಾ ಉತ್ಸಾಹದಲ್ಲಿ ಇರುವುದು ಮತ್ತು ಸದಾ ಪ್ರತೀ ಕರ್ಮದಲ್ಲಿ ಆತ್ಮನಿಗೆ ಉತ್ಸಾಹ ತರಿಸುವುದಾಗಿದೆ ಅಂದಾಗ ಉತ್ಸವವನ್ನು ಆಚರಿಸಬೇಕು, ಉತ್ಸಾಹದಲ್ಲಿ ಇರಬೇಕು ಮತ್ತು ಉತ್ಸಾಹ ತರಿಸಬೇಕಾಗಿದೆ. ಎಲ್ಲಿ ಉತ್ಸಾಹವಿರುವುದೋ ಅಲ್ಲಿ ಎಂದೂ ಯಾವುದೇ ಪ್ರಕಾರದ ವಿಘ್ನವು ಉತ್ಸಾಹವುಳ್ಳ ಆತ್ಮನನ್ನು ಉತ್ಸಾಹದಿಂದ ದೂರಸರಿಸಲು ಸಾಧ್ಯವಿಲ್ಲ. ಹೇಗೆ ಅಲ್ಪಕಾಲದ ಉತ್ಸಾಹದಲ್ಲಿ ಎಲ್ಲಾ ಮಾತುಗಳು ಮರೆತು ಹೋಗುತ್ತವೆಯಲ್ಲವೆ. ಯಾವುದೇ ಉತ್ಸವವನ್ನು ಆಚರಿಸುತ್ತೀರೆಂದರೆ ಆ ಸಮಯದಲ್ಲಿ ಖುಷಿಯ ವಿನಃ ಮತ್ತೇನೂ ನೆನಪಿರುವುದಿಲ್ಲ. ಬ್ರಾಹ್ಮಣ ಜೀವನದಲ್ಲಿಯೂ ಪ್ರತೀ ಘಳಿಗೆ ಉತ್ಸವವಾಗಿದೆ ಅರ್ಥಾತ್ ಪ್ರತೀ ಘಳಿಗೆ ಉತ್ಸಾಹದಲ್ಲಿದ್ದೀರಿ ಅಂದಾಗ ಮತ್ತ್ಯಾವುದೇ ಮಾತುಗಳು ಬರುತ್ತವೆಯೇ? ಯಾವುದೇ ಹದ್ದಿನ ಉತ್ಸವಕ್ಕೆ ಹೋಗುತ್ತೀರೆಂದರೆ ಅಲ್ಲಿ ಏನಿರುತ್ತದೆ? ಕುಣಿಯುವುದು, ನರ್ತಿಸುವುದು, ತಿನ್ನುವುದು, ಆಟವಾಡುವುದು, ಇದೇ ಇರುತ್ತದೆಯಲ್ಲವೆ. ಅಂದಾಗ ಬ್ರಾಹ್ಮಣ ಜೀವನದ ಉತ್ಸವದಲ್ಲಿ ಇಡೀ ದಿನ ಏನು ಮಾಡುತ್ತೀರಿ? ಸೇವೆಯನ್ನೂ ಮಾಡುತ್ತೀರೆಂದರೂ ಅದು ಆಟವೆಂದು ತಿಳಿದು ಮಾಡುತ್ತೀರೋ ಅಥವಾ ಹೊರೆಯೆನಿಸುತ್ತದೆಯೋ? ಈಗಿನ ಪ್ರಪಂಚದಲ್ಲಿ ಯಾವುದೇ ಅಜ್ಞಾನಿ ಆತ್ಮಗಳು ಸ್ವಲ್ಪ ಬುದ್ಧಿಯಿಂದ ಕೆಲಸ ಮಾಡಿದರೂ ಸಹ ಬಹಳ ಸುಸ್ತಾಗಿದ್ದೇವೆ, ಬುದ್ಧಿಯಲ್ಲಿ ಕೆಲಸದ ಹೊರೆ ಬಹಳ ಇದೆ ಎಂದು ಹೇಳುತ್ತಾರೆ ಮತ್ತು ತಾವೂ ಸಹ ಸೇವೆ ಮಾಡಿ ಬರುತ್ತೀರಿ ಆದರೆ ತಾವೇನು ಹೇಳುತ್ತೀರಿ - ಸೇವೆಯ ಪ್ರತ್ಯಕ್ಷ ಫಲವನ್ನು ತಿಂದುಬಂದಿದ್ದೇವೆ ಎಂದು ಹೇಳುತ್ತೀರಿ ಏಕೆಂದರೆ ಎಷ್ಟು ದೊಡ್ಡದಕ್ಕಿಂತ ದೊಡ್ಡ ಸೇವೆಗೆ ನಿಮಿತ್ತರಾಗುತ್ತೀರೋ ಅಷ್ಟೇ ಸೇವೆಯ ಪ್ರತ್ಯಕ್ಷ ಫಲವು ಬಹಳ ದೊಡ್ಡದು ಮತ್ತು ಬಹಳ ಸುಂದರವಾದುದು ಸಿಗುತ್ತದೆ ಅಂದಮೇಲೆ ಪ್ರತ್ಯಕ್ಷ ಫಲವನ್ನು ಸೇವಿಸುವುದರಿಂದ ಇನ್ನೂ ಶಕ್ತಿ ಬಂದು ಬಿಡುತ್ತದೆಯಲ್ಲವೆ. ಖುಷಿಯ ಶಕ್ತಿಯು ಹೆಚ್ಚುತ್ತದೆ ಆದ್ದರಿಂದ ಭಲೆ ಶರೀರದ ಎಷ್ಟು ದೊಡ್ಡ ಕಠಿಣ ಕಾರ್ಯವೇ ಇರಬಹುದು ಅಥವಾ ಬುದ್ಧಿಯಿಂದ ಯೋಚಿಸುವ ಕಾರ್ಯವಿರಬಹುದು ಆದರೆ ತಮಗೆ ಸುಸ್ತಿನ ಅನುಭವಾಗುವುದಿಲ್ಲ. ಇದು ರಾತ್ರಿ ಅಥವಾ ಹಗಲು ಎಂಬುದೇ ಗೊತ್ತಾಗುವುದಿಲ್ಲ. ಒಂದುವೇಳೆ ಗಡಿಯಾರವು ತಮ್ಮ ಬಳಿ ಇರಲಿಲ್ಲವೆಂದರೆ ಎಷ್ಟು ಘಂಟೆಯಾಗಿದೆ ಎಂಬುದು ಅರ್ಥವಾಗುತ್ತಿರಲಿಲ್ಲ. ಉತ್ಸವವನ್ನು ಆಚರಿಸುತ್ತಿದ್ದೀರಿ ಆದ್ದರಿಂದ ಸೇವೆಯು ಉತ್ಸಾಹ ತರಿಸುತ್ತದೆ ಮತ್ತು ಉತ್ಸಾಹದ ಅನುಭವ ಮಾಡಿಸುತ್ತದೆ. |
ಬ್ರಾಹ್ಮಣ ಜೀವನದಲ್ಲಿ ಒಂದು ಸೇವೆಯಾಗಿದೆ, ಇನ್ನೊಂದು ಏನಾಗುತ್ತದೆ? ಮಾಯೆ ಬರುತ್ತದೆ. ಮಾಯೆಯ ಹೆಸರನ್ನು ಕೇಳಿ ನಗುತ್ತೀರಿ ಏಕೆಂದರೆ ನಿಮಗೆ ತಿಳಿದಿದೆ - ಮಾಯೆಗೆ ನಮ್ಮೊಂದಿಗೆ ಬಹಳ ಪ್ರೀತಿಯಿದೆ, ಮಾಯೆಯ ಜೊತೆ ನಮಗೆ ಪ್ರೀತಿಯಿಲ್ಲ, ಮಾಯೆಗೆ ನಮ್ಮೊಂದಿಗೆ ಪ್ರೀತಿಯಿದೆ. ಉತ್ಸವದಲ್ಲಿ ಆಟವನ್ನೂ ನೋಡಲಾಗುತ್ತದೆ. ಇತ್ತೀಚೆಗೆ ಎಲ್ಲರಿಗೆ ಯಾವ ಆಟವು ಬಹಳ ಇಷ್ಟವಾಗುತ್ತದೆ? ಮಿಕ್ಕಿಮೌಸ್ನ ಆಟವನ್ನು ಬಹಳ ಆಡುತ್ತಾರೆ. ಜಾಹೀರಾತನ್ನೂ ಸಹ ಮಿಕ್ಕಿ ಮೌಸ್ನ ಆಟದಲ್ಲಿ ತೋರಿಸುತ್ತಾರೆ. ಭಲೆ ಮ್ಯಾಚ್ನ್ನು ಇಷ್ಟ ಪಡಬಹುದು ಅಥವಾ ಮಿಕ್ಕಿ ಮೌಸ್ನ ಆಟವನ್ನು ಇಷ್ಟ ಪಡಬಹುದು. ಇಲ್ಲಿಯೂ ಸಹ ಮಾಯೆಯು ಬರುತ್ತದೆಯೆಂದರೆ ಅದರೊಂದಿಗೆ ಮ್ಯಾಚ್ ಆಡಿ. ಚೆಂಡನ್ನು ಹೊಡೆಯಿರಿ, ಆಟದಲ್ಲಿ ಏನು ಮಾಡುತ್ತೀರಿ? ಚೆಂಡು ನಿಮ್ಮ ಮುಂದೆ ಬಂದಾಗ ನೀವು ಚೆಂಡನ್ನು ಇನ್ನೊಂದು ಕಡೆ ಎಸೆಯುತ್ತೀರಿ ಮತ್ತು ನೀವು ಕ್ಯಾಚ್ ಮಾಡುತ್ತೀರೆಂದರೆ ವಿಜಯಿಗಳಾಗಿ ಬಿಡುತ್ತೀರಿ ಹಾಗೆಯೇ ಇದು ಮಾಯೆಯ ಚೆಂಡಾಗಿದೆ - ಕೆಲವೊಮ್ಮೆ ‘ಕಾಮ’ದ ರೂಪದಲ್ಲಿ ಬರುತ್ತದೆ, ಕೆಲವೊಮ್ಮೆ ‘ಕ್ರೋಧ’ದ ರೂಪದಲ್ಲಿ ಬರುತ್ತದೆ. ಇದನ್ನು ಕ್ಯಾಚ್ ಮಾಡಿ, ಇದು ಮಾಯೆಯ ಆಟವಾಗಿದೆ. ಒಂದುವೇಳೆ ಮಾಯೆಯ ಆಟವನ್ನು ಆಟವೆಂದು ತಿಳಿದು ಮಾಡಿದರೆ ಉತ್ಸಾಹ ಹೆಚ್ಚುವುದು ಆದರೆ ಒಂದುವೇಳೆ ಮಾಯೆಯ ಯಾವುದೇ ಪರಿಸ್ಥಿತಿಯನ್ನು ಶತ್ರುವೆಂದು ತಿಳಿದು ನೋಡುತ್ತೀರೆಂದರೆ ಗಾಬರಿಯಾಗುತ್ತೀರಿ. ಮಿಕ್ಕಿ ಮೌಸ್ನ ಆಟದಲ್ಲಿಯೂ ಕೆಲವೊಮ್ಮೆ ಕೋತಿಯು ಬರುತ್ತದೆ, ಕೆಲವೊಮ್ಮೆ ನಾಯಿ, ಬೆಕ್ಕು, ಇನ್ನೂ ಕೆಲವೊಮ್ಮೆ ಇಲಿಯೂ ಬಂದು ಬಿಡುತ್ತದೆ ಆದರೆ ತಾವು ಗಾಬರಿಯಾಗುತ್ತೀರೇನು? ನೋಡಲು ಮಜಾ ಬರುತ್ತದೆಯಲ್ಲವೆ ಹಾಗೆಯೇ ಇದನ್ನೂ ಸಹ ಉತ್ಸವದ ರೂಪದಲ್ಲಿ ಮಾಯೆಯ ಭಿನ್ನ-ಭಿನ್ನ ಪರಿಸ್ಥಿತಿಗಳ ಆಟವನ್ನು ನೋಡುವುದರಲ್ಲಿ ಯಾರಾದರೂ ಗಾಬರಿಯಾಗಿ ಬಿಟ್ಟರೆ ಅವರಿಗೆ ಏನು ಹೇಳುವರು? ಆಟವನ್ನು ನೋಡುತ್ತಾ-ನೋಡುತ್ತಾ ಒಂದುವೇಳೆ ಚೆಂಡು ನನ್ನ ಬಳಿಯೇ ಬರುತ್ತಿದೆ, ಅದು ನನಗೆ ತಗುಲದಿರಲಿ ಎಂದು ಯೋಚಿಸಿದರೆ ಅವರು ಆಟವನ್ನು ನೋಡಲು ಸಾಧ್ಯವೇ? ಅಂದಾಗ ಖುಷಿ ಮತ್ತು ಆನಂದದಿಂದ ಆಟವನ್ನು ನೋಡಿ ಮಾಯೆಗೆ ಗಾಬರಿಯಾಗಬೇಡಿ. ಒಂದು ಮನೋರಂಜನೆಯೆಂದು ತಿಳಿಯಿರಿ. ಭಲೆ ಅದು ಹುಲಿಯ ರೂಪದಲ್ಲಾದರೂ ಬರಲಿ ಗಾಬರಿಯಾಗಬೇಡಿ, ಇದೇ ಸ್ಮೃತಿಯಿರಲಿ - ಬ್ರಾಹ್ಮಣ ಜೀವನದ ಪ್ರತೀ ಘಳಿಗೆ ಉತ್ಸವವಾಗಿದೆ, ಉತ್ಸಾಹವಾಗಿದೆ. ಅದರ ಮಧ್ಯದಲ್ಲಿ ಈ ಆಟವನ್ನೂ ನೋಡುತ್ತಿದ್ದೀರಿ, ಖುಷಿಯಲ್ಲಿ ನರ್ತಿಸುತ್ತಿದ್ದೀರಿ ಮತ್ತು ತಂದೆಯ ಬ್ರಾಹ್ಮಣ ಪರಿವಾರದ ವಿಶೇಷತೆಗಳ ಗುಣಗಳ ಗೀತೆಯನ್ನೂ ಹಾಡುತ್ತಿದ್ದೀರಿ ಮತ್ತು ಬ್ರಹ್ಮಾಭೋಜನವನ್ನೂ ಮಜವಾಗಿ ತಿನ್ನುತ್ತಿದ್ದೀರಿ. |
ತಮ್ಮಂತಹ ಶುದ್ಧ ಭೋಜನ ನೆನಪಿನ ಭೋಜನವು ವಿಶ್ವದಲ್ಲಿ ಮತ್ತ್ಯಾರಿಗೂ ಪ್ರಾಪ್ತಿಯಾಗಿಲ್ಲ. ಈ ಭೋಜನಕ್ಕೆ ದುಃಖಭಂಜನ ಭೋಜನವೆಂದು ಹೇಳಲಾಗುತ್ತದೆ. ಈ ನೆನಪಿನ ಭೋಜನವು ಎಲ್ಲಾ ದುಃಖಗಳನ್ನು ದೂರ ಮಾಡಿ ಬಿಡುತ್ತದೆ ಏಕೆಂದರೆ ಶುದ್ಧ ಅನ್ನದಿಂದ ತನು ಮತ್ತು ಮನ ಎರಡೂ ಶುದ್ಧವಾಗಿ ಬಿಡುತ್ತದೆ. ಒಂದುವೇಳೆ ಅಶುದ್ಧ ಧನವು ಬಂದರೂ ಸಹ ಆ ಅಶುದ್ಧ ಧನವು ಖುಷಿಯನ್ನು ಹಾಳು ಮಾಡುತ್ತದೆ, ಚಿಂತೆಯನ್ನು ತರಿಸುತ್ತದೆ. ಎಷ್ಟು ಅಶುದ್ಧ ಹಣವು ಬರುವುದೋ ಅದು ಭಲೆ ಒಂದು ಲಕ್ಷ ರೂಪಾಯಿಯೇ ಬರಬಹುದು ಆದರೆ ಚಿಂತೆಯೂ ಪದುಮದಷ್ಟು ಬರುವುದು ಮತ್ತು ಚಿಂತೆಯನ್ನು ಸದಾ ಚಿತೆಯೆಂದು ಹೇಳಲಾಗುತ್ತದೆ ಅಂದಾಗ ಚಿತೆಯ ಮೇಲೆ ಕುಳಿತುಕೊಳ್ಳುವವರಿಗೆ ಖುಷಿಯಿರುವುದೇ! ಮತ್ತು ಶುದ್ಧ ಅನ್ನವು ಮನಸ್ಸನ್ನು ಶುದ್ಧ ಮಾಡಿ ಬಿಡುತ್ತದೆ ಆದ್ದರಿಂದ ಧನವೂ ಶುದ್ಧವಾಗಿ ಬಿಡುತ್ತದೆ. ನೆನಪಿನ ಆಹಾರದ ಮಹತ್ವಿಕೆಯಿದೆ, ಆದ್ದರಿಂದ ಬ್ರಹ್ಮಾಭೋಜನದ ಮಹಿಮೆಯಿದೆ. ಒಂದುವೇಳೆ ನೆನಪಿನಲ್ಲಿದ್ದು ತಯಾರಿಸುವುದಿಲ್ಲ ಮತ್ತು ಅಂತಹದ್ದನ್ನು ತಿನ್ನುತ್ತೀರೆಂದರೆ ಆ ಆಹಾರವು ಸ್ಥಿತಿಯನ್ನು ಏರುಪೇರು ಮಾಡಬಲ್ಲದು. ನೆನಪಿನಲ್ಲಿದ್ದು ತಯಾರಿಸಿದ ಮತ್ತು ನೆನಪಿನಲ್ಲಿದ್ದು ಸ್ವೀಕಾರ ಮಾಡುವವರ ಆಹಾರವು ಔಷಧಿಯ ಕೆಲಸವನ್ನೂ ಮಾಡುತ್ತದೆ ಮತ್ತು ಆಶೀರ್ವಾದದ ಕೆಲಸವನ್ನೂ ಮಾಡುತ್ತದೆ. ನೆನಪಿನ ಆಹಾರವು ಎಂದೂ ನಷ್ಟವನ್ನುಂಟು ಮಾಡುವುದಿಲ್ಲ. ಆದ್ದರಿಂದ ಪ್ರತೀಘಳಿಗೆ ಉತ್ಸವನ್ನು ಆಚರಿಸಿ. ಮಾಯೆಯು ಎಂತಹದ್ದೇ ರೂಪದಲ್ಲಿ ಬರಲಿ. ಮೋಹದ ರೂಪದಲ್ಲಿ ಬಂದರೂ ಸಹ ಅದು ಕೋತಿಯ ಆಟವನ್ನು ತೋರಿಸಲು ಬಂದಿದೆಯೆಂದು ತಿಳಿದುಕೊಳ್ಳಿ. ಆಟವನ್ನು ಸಾಕ್ಷಿಯಾಗಿ ನೋಡಿ. ಸ್ವಯಂ ಮಾಯೆಯ ಚಕ್ರದಲ್ಲಿ ಬಂದು ಬಿಡಬೇಡಿ. ಚಕ್ರದಲ್ಲಿ ಬರುತ್ತೀರೆಂದರೆ ಗಾಬರಿಯಾಗುತ್ತೀರಿ. ಇತ್ತೀಚೆಗೆ ಚಿಕ್ಕ-ಚಿಕ್ಕ ಮಕ್ಕಳಿಗೆ ಇಂತಹ ಮನೋರಂಜನೆಯ ಆಟ ಆಡಿಸುತ್ತಾರೆ. ಮೇಲೆ ಹತ್ತಿಸುತ್ತಾರೆ ಮತ್ತು ಕೆಳಗೆ ತಂದು ಬಿಡುತ್ತಾರೆ ಅಂದಾಗ ಇದೂ ಸಹ ಮನೋರಂಜನೆಯಾಗಿದೆ, ಆಟವಾಗಿದೆ. ಯಾವುದೇ ರೂಪದಲ್ಲಿ ಬರಲಿ, ಮಿಕ್ಕಿ ಮೌಸ್ನ ಆಟವನ್ನು ನೋಡಿ. ಯಾರು ಬರುವರೋ ಅವರು ಹೋಗುವರೂ ಕೂಡ ಆದ್ದರಿಂದ ಮಾಯೆಯು ಯಾವುದೇ ರೂಪದಲ್ಲಿ ಬಂದರೂ ಸಹ ಈಗೀಗ ಬಂದಿತು, ಈಗೀಗ ಹೋಯಿತು. ತಾವು ಮಾಯೆಯ ಜೊತೆ ಶ್ರೇಷ್ಠ ಸ್ಥಿತಿಯಿಂದ ಕೆಳಗಿಳಿದು ಬಿಡಬೇಡಿ. ಮಾಯೆಯು ಬಂದರೆ ಬರಲಿ ತಾವು ಅದರ ಜೊತೆ ಏಕೆ ಹೋಗುತ್ತೀರಿ! ಆಟದಲ್ಲಂತೂ ಇದು ಇದ್ದೇ ಇರುತ್ತದೆ. ಕೆಲವೊಂದು ಬರುತ್ತದೆ, ಕೆಲವು ಹೋಗುತ್ತದೆ, ಕೆಲವೊಂದು ಬದಲಾಗುತ್ತದೆ. ಒಂದುವೇಳೆ ದೃಶ್ಯ ಬದಲಾಗದಿದ್ದರೆ ಆಟವೇ ಪ್ರಿಯವೆನಿಸುವುದಿಲ್ಲ. ಮಾಯೆಯೂ ಸಹ ಯಾವುದೇ ರೂಪದಿಂದ ಬರಲಿ, ಯಾವುದೇ ದೃಶ್ಯವು ಬರುತ್ತದೆಯೆಂದರೆ ಅದು ಖಂಡಿತ ಬದಲಾಗುತ್ತದೆ. ಭಲೆ ದೃಶ್ಯವು ಬದಲಾಗುತ್ತಿರಲಿ ಆದರೆ ತಮ್ಮ ಶ್ರೇಷ್ಠ ಸ್ಥಿತಿಯು ಬದಲಾಗದಿರಲಿ. ಯಾವುದೇ ಆಟದಲ್ಲಿ ಯಾರಾದರೂ ಪಾತ್ರವನ್ನು ಅಭಿನಯಿಸುತ್ತಾರೆಂದರೆ ಅವರ ಜೊತೆ ತಾವೂ ಸಹ ಹಾಗೆಯೇ ಓಡತೊಡಗುತ್ತೀರಾ? ನೋಡುವವರು ಕೇವಲ ನೋಡುತ್ತಾ ಇರುತ್ತೀರಲ್ಲವೆ. ಅದೇರೀತಿ ಮಾಯೆಯೂ ಸಹ ಕೆಳಗಿಳಿಸಲು ಬರಲಿ ಅಥವಾ ಯಾವುದೇ ಸ್ವರೂಪದಲ್ಲಿ ಬರಲಿ ಆದರೆ ತಾವು ಅದರ ಆಟವನ್ನು ನೋಡಿ. ಅದು ಹೇಗಾದರೂ ಕೆಳಗೆ ಬೀಳಿಸಲು ಬಂದರೂ ಸಹ ನೀವು ಅದರ ರೂಪವನ್ನು ಗ್ರಹಿಸಿ ಅದನ್ನು ಆಟವೆಂದು ತಿಳಿದು ಆ ದೃಶ್ಯವನ್ನು ಸಾಕ್ಷಿಯಾಗಿದ್ದು ನೋಡಿ. ಮುಂದಿನದಕ್ಕಾಗಿ ಸ್ವಸ್ಥಿತಿಯನ್ನು ಶಕ್ತಿಶಾಲಿ ಮಾಡಿಕೊಳ್ಳುವ ಶಿಕ್ಷಣವನ್ನು ಪಡೆದುಕೊಂಡು ಮುಂದುವರೆಯಿರಿ. |
ಶಿವರಾತ್ರಿಯ ಉತ್ಸವ ಅರ್ಥಾತ್ ಉತ್ಸಾಹವನ್ನು ತರಿಸುವಂತಹ ಉತ್ಸವವಾಗಿದೆ. ಕೇವಲ ಇಂದಿನ ದಿನವಲ್ಲ, ತಮಗಾಗಿ ಸದಾ ಉತ್ಸವವಾಗಿದೆ ಮತ್ತು ಉತ್ಸಾಹವೂ ಜೊತೆಗಿದೆ. ಈ ಸ್ಲೋಗನ್ನ್ನು ಸದಾ ನೆನಪಿಟ್ಟುಕೊಳ್ಳಿ ಮತ್ತು ಅನುಭವ ಮಾಡುತ್ತಾ ಇರಿ. ಅದರ ವಿಧಿಯು ಕೇವಲ ಎರಡು ಶಬ್ಧಗಳದಾಗಿದೆ. ಸದಾ ಸಾಕ್ಷಿಯಾಗಿ ನೋಡಿ ಮತ್ತು ತಂದೆಯ ಸಾತಿ (ಜೊತೆಗಾರ) ಯಾಗಿ ಇರಿ. ಸದಾ ತಂದೆಯ ಸಾಥಿಯಾಗಿದ್ದರೆ ಎಲ್ಲಿ ತಂದೆಯಿರುವರೋ ಅಲ್ಲಿ ಸಾಕ್ಷಿಯಾಗಿ ನೋಡುವುದರಿಂದ ಸಹಜವಾಗಿ ಮಾಯಾಜೀತರಾಗಿ ಅನೇಕ ಜನ್ಮಗಳಿಗಾಗಿ ಜಗತ್ಜೀತರಾಗುವಿರಿ. ಅಂದಾಗ ಏನು ಮಾಡಬೇಕೆಂದು ತಿಳಿಯಿತೆ? ಸ್ವಯಂ ತಂದೆಯು ಪ್ರತಿಯೊಬ್ಬ ಮಗುವಿಗೆ ಜೊತೆ ಕೊಡುವುದಕ್ಕಾಗಿ ಸುವರ್ಣಾವಕಾಶವನ್ನೂ ಕೊಡುತ್ತಿದ್ದಾರೆ ಆದ್ದರಿಂದ ಸದಾ ಜೊತೆಯಿರಿ. ಹಾಗೆ ನೋಡಿದರೆ ಡಬಲ್ ವಿದೇಶಿಯರು ಒಂಟಿಯಾಗಿರಲು ಇಷ್ಟಪಡುತ್ತಾರೆ. ಅಲ್ಲಿ ಬಂಧನದಲ್ಲಿ ಬಂಧಿತರಾಗಬಾರದು, ಸ್ವತಂತ್ರರಾಗಿರಬೇಕೆಂದು ಅವರು ಜೊತೆಯಿರುವುದಿಲ್ಲ ಆದರೆ ಇವರ ಜೊತೆಯಲ್ಲಿ ಜೊತೆಯಿದ್ದರೂ ಸಹ ಸ್ವತಂತ್ರರಾಗಿರುತ್ತೀರಿ. ಬಂಧನದ ಅನುಭವವಾಗುವುದಿಲ್ಲ. |
ಅಂದಾಗ ಇಂದಿನ ದಿನವು ಡಬಲ್ ಉತ್ಸವದ ದಿನವಾಗಿದೆ. ಹಾಗೆ ನೋಡಿದರೆ ಜೀವನವೂ ಉತ್ಸವವಾಗಿದೆ ಮತ್ತು ನೆನಪಾರ್ಥವೂ ಉತ್ಸವವಾಗಿದೆ. ಬಾಪ್ದಾದಾ ಎಲ್ಲಾ ವಿದೇಶದ ಮಕ್ಕಳನ್ನು ಸದಾ ನೆನಪು ಮಾಡುತ್ತಾರೆ ಮತ್ತು ಇಂದೂ ಸಹ ವಿಶೇಷವಾಗಿ ಶಿವ ಜಯಂತಿ ದಿನದ ನೆನಪನ್ನು ಕೊಡುತ್ತಿದ್ದಾರೆ ಏಕೆಂದರೆ ಯಾರೆಲ್ಲಾ ಎಲ್ಲಿಂದ ಬಂದಿರುವರೋ ಎಲ್ಲರ ನೆನಪಿನ ಪತ್ರಗಳು ತಂದಿರುತ್ತೀರಿ. ಕಾರ್ಡ್, ಪತ್ರ, ಟೋಲಿಗಳನ್ನು ತಂದಿದ್ದೀರಿ. ಯಾವ ಮಕ್ಕಳು ಹೃದಯದ ಉತ್ಸಾಹದ ನೆನಪು, ಪ್ರೀತಿ ಹಾಗೂ ಯಾವುದೇ ರೂಪದಿಂದ ತಮ್ಮ ನೆನಪಿನ ಚಿಹ್ನೆಗಳನ್ನು ಕಳುಹಿಸಿದ್ದೀರೋ ಆ ಎಲ್ಲಾ ಮಕ್ಕಳಿಗೆ ಬಾಪ್ದಾದಾರವರೂ ಸಹ ವಿಶೇಷವಾಗಿ ನೆನಪಿಗೆ ಮರುಪಾವತಿಯಾಗಿ ಪದುಮದಷ್ಟನ್ನು ಕೊಡುತ್ತಿದ್ದೇವೆ ಮತ್ತು ಬಾಪ್ದಾದಾ ನೋಡುತ್ತಿದ್ದೇವೆ - ಪ್ರತಿಯೊಬ್ಬ ಮಗುವಿನಲ್ಲಿ ಸೇವೆಯ ಮತ್ತು ಸದಾ ಮಾಯಾಜೀತರಾಗುವ ಉಲ್ಲಾಸ-ಉತ್ಸಾಹವು ಬಹಳ ಚೆನ್ನಾಗಿದೆ. ಪ್ರತಿಯೊಬ್ಬ ಮಗುವು ತಮ್ಮ ಶಕ್ತಿಗಿಂತಲೂ ಮೀರಿ ಸೇವೆಯಲ್ಲಿ ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಯುತ್ತಲೇ ಇರುತ್ತೀರಿ. ಉಳಿದಂತೆ ಯಾರು ಸತ್ಯ ಹೃದಯದಿಂದ ಹೃದಯದ ಸಮಾಚಾರವನ್ನು ತಂದೆಯ ಮುಂದಿಡುವರೋ ಅಂತಹವರ ಸತ್ಯ ಹೃದಯದ ಮೇಲೆ ತಂದೆಯು ಸದಾ ರಾಜಿಯಾಗುತ್ತಾರೆ ಆದ್ದರಿಂದ ಹೃದಯದ ಸಮಾಚಾರದಲ್ಲಿ ಏನೆಲ್ಲಾ ಚಿಕ್ಕ-ಚಿಕ್ಕ ಮಾತುಗಳು ಬಂದರೂ ಸಹ ಅವು ತಂದೆಯ ವಿಶೇಷ ನೆನಪಿನ ವರದಾನದಿಂದ ಸಮಾಪ್ತಿ ಆಗಿಯೇ ಬಿಡುತ್ತವೆ. ತಂದೆಯು ರಾಜಿಯಾಗುವುದು ಅರ್ಥಾತ್ ಸಹಜ ತಂದೆಯ ಸಹಯೋಗದಿಂದ ಮಾಯಾಜೀತರಾಗುವುದು ಆದ್ದರಿಂದ ಯಾವುದನ್ನು ತಂದೆಗೆ ಕೊಟ್ಟು ಬಿಟ್ಟಿರೋ ಅದು ಸಮಾಚಾರದ ರೂಪದಲ್ಲಿ ಇರಬಹುದು, ಪತ್ರ ಅಥವಾ ವಾರ್ತಾಲಾಪದ ರೂಪದಲ್ಲಿ ಇರಬಹುದು, ಯಾವಾಗ ತಂದೆಯ ಮುಂದೆ ಇಟ್ಟು ಬಿಟ್ಟಿರಿ, ಕೊಟ್ಟು ಬಿಟ್ಟಿರಿ ಅಂದಮೇಲೆ ಯಾವ ವಸ್ತುವನ್ನು ತಂದೆಗೆ ಕೊಡಲಾಗುತ್ತದೆಯೋ ಅದು ಮತ್ತೆ ತನ್ನದಾಗುವುದಿಲ್ಲ. ಅದು ಬೇರೆಯವರದಾಗಿ ಬಿಡುತ್ತದೆ. ಒಂದುವೇಳೆ ನಿರ್ಬಲತೆಯ ಸಂಕಲ್ಪವನ್ನೂ ಸಹ ತಂದೆಯ ಮುಂದೆ ಅರ್ಪಣೆ ಮಾಡಿದಿರೆಂದರೆ ಆ ನಿರ್ಬಲತೆಯು ತಮ್ಮದಲ್ಲ. ತಾವು ಕೊಟ್ಟು ಬಿಟ್ಟಿರಿ ಅದರಿಂದ ಮುಕ್ತರಾಗಿ ಬಿಟ್ಟಿರಿ ಆದ್ದರಿಂದ ಇದೇ ನೆನಪಿಟ್ಟುಕೊಳ್ಳಿ - ನಾನು ತಂದೆಯ ಮುಂದೆ ಇಟ್ಟೆನು ಅರ್ಥಾತ್ ಕೊಟ್ಟು ಬಿಟ್ಟೆನು. ಬಾಕಿ ವಿದೇಶದ ಉಲ್ಲಾಸ-ಉತ್ಸಾಹದ ಅಲೆಯು ಬಹಳ ಚೆನ್ನಾಗಿ ನಡೆಯುತ್ತಿದೆ. ಬಾಪ್ದಾದಾ ಮಕ್ಕಳನ್ನು ನಿರ್ವಿಘ್ನರಾಗುವ ಉಲ್ಲಾಸ ಮತ್ತು ಸೇವೆಯಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡುವ ಉಲ್ಲಾಸವನ್ನು ನೋಡಿ ಹರ್ಷಿತರಾಗುತ್ತೇವೆ. ಒಳ್ಳೆಯದು. |
ಸದಾ ಅನಾದಿ ಮತ್ತು ಆದಿ ರಚನೆಯ ಆತ್ಮಿಕ ನಶೆಯಲ್ಲಿ ಇರುವವರು, ಸದಾ ಪ್ರತೀ ಘಳಿಗೆಯನ್ನು ಉತ್ಸವದ ಸಮಾನ ಆಚರಿಸುವವರು, ಸದಾ ನೆನಪು ಮತ್ತು ಸೇವೆಯ ಉತ್ಸಾಹದಲ್ಲಿ ಇರುವವರು, ಸದ ಮಾಯೆಯ ಪ್ರತೀ ಪರಿಸ್ಥಿತಿಯನ್ನು ಆಟವೆಂದು ತಿಳಿದು ಸಾಕ್ಷಿಯಾಗಿ ನೋಡುವವರು, ಸದಾ ತಂದೆಯ ಜೊತೆ ಪ್ರತೀ ಹೆಜ್ಜೆಯಲ್ಲಿ ಜೊತೆಗಾರರಾಗಿ ನಡೆಯುವಂತಹ ಸರ್ವ ಶ್ರೇಷ್ಠ ಬ್ರಾಹ್ಮಣ ಆತ್ಮರಿಗೆ, ಅಲೌಕಿಕ ಜನ್ಮದ ಶುಭಾಷಯಗಳ ಜೊತೆ ಜೊತೆಗೆ ನೆನಪು, ಪ್ರೀತಿ ಹಾಗೂ ನಮಸ್ತೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ನಾವು ಮಕ್ಕಳನ್ನು ಬೆಳಗ್ಗೆ-ಬೆಳಗ್ಗೆ ಏಳಿಸಲು ಯಾರು ಬಂದಿದ್ದಾರೆ ಯಾವುದರಿಂದ ನಮ್ಮ ಜ್ಞಾನದ ಮೂರನೇ ನೇತ್ರವು ಒಮ್ಮೆಲೆ ತೆರೆಯಿತು? ಜ್ಞಾನ ಸಾಗರ ಪರಮಪಿತ ಪರಮಾತ್ಮನ ಮೂಲಕ ನಮ್ಮ ಜ್ಞಾನದ ಮೂರನೇ ನೇತ್ರವು ತೆರೆದಿದೆ. ತಂದೆಯು ಜ್ಯೋತಿಯನ್ನು ಜಾಗೃತಗೊಳಿಸುವವರು ಎಂದು ಹೇಳುತ್ತಾರೆ ಆದರೆ ಅವರು ತಂದೆಯಾಗಿದ್ದಾರೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಅವರು ಜ್ಯೋತಿಯಾಗಿದ್ದಾರೆ ಎಂದು ಬ್ರಹ್ಮ ಸಮಾಜಿಗಳು ಹೇಳುತ್ತಾರೆ. ಮಂದಿರಗಳಲ್ಲಿ ಯಾವಾಗಲೂ ಜ್ಯೋತಿಯನ್ನೇ ಬೆಳಗಿಸುತ್ತಾರೆ ಏಕೆಂದರೆ ಅವರು ಪರಮಾತ್ಮನನ್ನು ಜ್ಯೋತಿ ಸ್ವರೂಪನೆಂದು ಒಪ್ಪುತ್ತಾರೆ ಆದ್ದರಿಂದ ಅಲ್ಲಿ ಮಂದಿರದಲ್ಲಿ ಜ್ಯೋತಿಯನ್ನು ಬೆಳಗಿಸುತ್ತಲೇ ಇರುತ್ತಾರೆ. ವಾಸ್ತವದಲ್ಲಿ ತಂದೆಯು ಯಾವುದೇ ಬೆಂಕಿ ಪೊಟ್ಟಣದಿಂದ ಜ್ಯೋತಿಯನ್ನು ಬೆಳಗಿಸುವುದಿಲ್ಲ. ಈ ಮಾತೇ ಭಿನ್ನವಾಗಿದೆ - ಈಶ್ವರನ ಗತಿಮತವು ಭಿನ್ನವಾಗಿದೆ ಎಂದು ಗಾಯನವಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಸದ್ಗತಿಗಾಗಿ ಜ್ಞಾನ-ಯೋಗವನ್ನು ಕಲಿಸುತ್ತಾರೆ, ಕಲಿಸುವವರಂತೂ ಅವಶ್ಯವಾಗಿ ಬೇಕಲ್ಲವೆ. ಶರೀರವಂತೂ ಕಲಿಸುವುದಿಲ್ಲ, ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಆತ್ಮದಲ್ಲಿ ಒಳ್ಳೆಯ ಅಥವಾ ಕೆಟ್ಟ ಸಂಸ್ಕಾರವಿರುತ್ತದೆ. ಈ ಸಮಯದಲ್ಲಿ ರಾವಣನ ಪ್ರವೇಶತೆಯಾಗಿರುವ ಕಾರಣ ಮನುಷ್ಯರ ಸಂಸ್ಕಾರವೂ ಕೆಟ್ಟದ್ದಾಗಿರುತ್ತದೆ ಅರ್ಥಾತ್ ಪಂಚ ವಿಕಾರಗಳ ಪ್ರವೇಶತೆಯಾಗಿದೆ. ದೇವತೆಗಳಲ್ಲಿ ಈ ಪಂಚ ವಿಕಾರಗಳು ಇರುವುದಿಲ್ಲ. ಭಾರತದಲ್ಲಿ ದೈವೀ ಸ್ವರಾಜ್ಯವಿದ್ದಾಗ ಈ ಕೆಟ್ಟ ಸಂಸ್ಕಾರವು ಇರಲಿಲ್ಲ. ಸರ್ವಗುಣ ಸಂಪನ್ನರಾಗಿದ್ದರು, ದೇವಿ-ದೇವತೆಗಳದು ಎಷ್ಟು ಒಳ್ಳೆಯ ಸಂಸ್ಕಾರವಿತ್ತು, ಅದನ್ನು ನೀವೀಗ ಧಾರಣೆ ಮಾಡಿಕೊಳ್ಳುತ್ತಿದ್ದೀರಿ. ತಂದೆಯೇ ಬಂದು ಸೆಕೆಂಡಿನಲ್ಲಿ ಸರ್ವರಿಗೆ ಸದ್ಗತಿ ನೀಡುತ್ತಾರೆ. ಬಾಕಿ ಗುರು-ಗೋಸಾಯಿಗಳಂತೂ ಭಕ್ತಿಮಾರ್ಗದಲ್ಲಿ ನಡೆಯುತ್ತಾ ಬಂದಿದ್ದಾರೆ, ಅವರು ಯಾರೊಬ್ಬರಿಗೂ ಗತಿ-ಸದ್ಗತಿ ನೀಡಲು ಸಾಧ್ಯವಿಲ್ಲ. ತಂದೆಯು ಬರುತ್ತಿದ್ದಂತೆಯೇ ಸರ್ವರ ಸದ್ಗತಿಯಾಗುತ್ತದೆ. ಬಂದು ಪತಿತ ಪ್ರಪಂಚದ ವಿನಾಶ ಮಾಡಿ ಪಾವನ ಪ್ರಪಂಚದ ಉದ್ಘಾಟನೆ ಮಾಡಿ ಅಥವಾ ಬಾಗಿಲನ್ನು ತೆರೆಯಿರಿ ಎಂದೇ ಪರಮಪಿತ ಪರಮಾತ್ಮನನ್ನು ಕರೆಯುತ್ತಾರೆ. ತಂದೆಯು ಬಂದು ಶಿವಶಕ್ತಿ ಮಾತೆಯರ ಮೂಲಕ ಸ್ವರ್ಗದ ಬಾಗಿಲನ್ನು ತೆರೆಸುತ್ತಾರೆ. ವಂದೇ ಮಾತರಂ ಎಂದು ಗಾಯನವಿದೆ. ಈ ಸಮಯದಲ್ಲಿ ಯಾವುದೇ ಮಾತೆಗೆ ವಂದನೆ ಮಾಡಲಾಗುವುದಿಲ್ಲ ಏಕೆಂದರೆ ಯಾರೊಬ್ಬರೂ ಶ್ರೇಷ್ಠಾಚಾರಿ ಮಾತೆಯರಿಲ್ಲ. ಯೋಗಬಲದಿಂದ ಜನ್ಮ ಪಡೆಯುವವರಿಗೆ ಶ್ರೇಷ್ಠಾಚಾರಿಗಳೆಂದು ಹೇಳಲಾಗುತ್ತದೆ. ಲಕ್ಷ್ಮೀ-ನಾರಾಯಣರಿಗೆ ಶ್ರೇಷ್ಠಾಚಾರಿಗಳೆಂದು ಹೇಳಲಾಗುತ್ತದೆ. ಭಾರತದಲ್ಲಿ ದೇವಿ-ದೇವತೆಗಳಿದ್ದಾಗ ಭಾರತವು ಶ್ರೇಷ್ಠಾಚಾರಿಯಾಗಿತ್ತು, ಈ ಮಾತುಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅವರು ತಮ್ಮದೇ ಯೋಜನೆಗಳನ್ನು ಮಾಡುತ್ತಿದ್ದಾರೆ, ಗಾಂಧೀಜಿಯೂ ಸಹ ರಾಮ ರಾಜ್ಯವನ್ನು ಬಯಸುತ್ತಿದ್ದರು. ಈಗ ರಾವಣ ರಾಜ್ಯವಾಗಿದೆ ಎಂಬುದು ಇದರಿಂದಲೇ ಸಿದ್ಧವಾಗುತ್ತದೆ. ಭಾರತವು ಪತಿತವಾಗಿದೆ, ಆದರೆ ರಾಮ ರಾಜ್ಯವನ್ನು ಸ್ಥಾಪನೆ ಮಾಡುವುದಕ್ಕಾಗಿ ಬೇಹದ್ದಿನ ಬಾಪೂಜಿ ಬೇಕಾಗಿದೆ. ಅವರೇ ರಾಮ ರಾಜ್ಯದ ಸ್ಥಾಪನೆ ಮತ್ತು ರಾವಣ ರಾಜ್ಯದ ವಿನಾಶ ಮಾಡುವರು. ರಾವಣ ರಾಜ್ಯಕ್ಕೆ ಈಗ ಬೆಂಕಿ ಬೀಳಲಿದೆ ಎಂದು ಮಕ್ಕಳಿಗೆ ತಿಳಿದಿದೆ. ಎಲ್ಲಾ ಆತ್ಮರು ಅಜ್ಞಾನ ಅಂಧಕಾರದಲ್ಲಿ ಮಲಗಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ನಾವೂ ಸಹ ಮಲಗಿದ್ದೆವು, ತಂದೆಯು ಬಂದು ಜಾಗೃತ ಮಾಡುತ್ತಾರೆ. ಈಗ ಭಕ್ತಿಯ ರಾತ್ರಿಯು ಮುಕ್ತಾಯವಾಗಿದೆ ದಿನವು ಪ್ರಾರಂಭವಾಗುತ್ತದೆ. ರಾತ್ರಿಯು ಮುಗಿದು ಈಗ ಹಗಲಾಗುತ್ತಿದೆ, ತಂದೆಯು ಸಂಗಮದಲ್ಲಿ ಬಂದಿದ್ದಾರೆ. ಮಕ್ಕಳಿಗೆ ದಿವ್ಯ ದೃಷ್ಟಿ ಮತ್ತು ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಾರೆ. ಇದರಿಂದ ನೀವು ಇಡೀ ವಿಶ್ವವನ್ನು ಅರಿತುಕೊಂಡಿದ್ದೀರಿ. ನಿಮ್ಮ ಬುದ್ಧಿಯಲ್ಲಿ ಕುಳಿತಿದೆ - ಇದು ಮಾಡಿ-ಮಾಡಲ್ಪಟ್ಟ ಅವಿನಾಶಿ ನಾಟಕವಾಗಿದೆ, ಇದು ಸುತ್ತುತ್ತಲೇ ಇರುತ್ತದೆ. ನೀವೀಗ ಎಷ್ಟೊಂದು ಜಾಗೃತರಾಗಿದ್ದೀರಿ, ಇಡೀ ಪ್ರಪಂಚವು ಮಲಗಿದೆ. ಈಗ ನೀವು ಮಕ್ಕಳಿಗೆ ಇಡೀ ವಿಶ್ವದ ಆದಿ-ಮಧ್ಯ-ಅಂತ್ಯ, ಮೂಲವತನ-ಸೂಕ್ಷ್ಮವತನ-ಸ್ಥೂಲವತನದ ಬಗ್ಗೆ ತಿಳಿದಿದೆ. ಇಡೀ ಪ್ರಪಂಚವು ಕುಂಭಕರ್ಣನ ಅಜ್ಞಾನ ನಿದ್ರೆಯಲ್ಲಿ ಮಲಗಿದೆ. ಪತಿತ-ಪಾವನ ಯಾರೆಂಬುದು ಯಾರಿಗೂ ತಿಳಿದಿಲ್ಲ, ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಆದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಿ ಎಂದು ಹೇಳುವುದಿಲ್ಲ. ತಂದೆಯು ಹೇಳುತ್ತಾರೆ - ನೀವು ಈ ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದರಿಂದಲೇ ಚಕ್ರವರ್ತಿ ರಾಜರಾಗುತ್ತೀರಿ, ನೆನಪಿನಿಂದಲೇ ಪಾವನರಾಗುತ್ತೀರಿ. ಇದೂ ಸಹ ನಿಮಗೆ ತಿಳಿದಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ. ಯುದ್ಧವೂ ಆಗಲಿದೆ ಆದರೆ ಯಾವುದೇ ಕೌರವರ ಪಾಂಡವರ ಯುದ್ಧವಾಗಲಿಲ್ಲ. ಪಾಂಡವರು ಯಾರಾಗಿದ್ದರು! ಇದೂ ಸಹ ಯಾರಿಗೂ ತಿಳಿದಿಲ್ಲ. ಇಲ್ಲಿ ಸೈನ್ಯ ಇತ್ಯಾದಿಗಳ ಮಾತಿಲ್ಲ. ನಿಮ್ಮ ಕಡೆ ಸಾಕ್ಷಾತ್ ಪಾರಲೌಕಿಕ ಪರಮಪಿತನಿದ್ದಾರೆ, ಆ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ನೀವು ಇದನ್ನು ಅರಿತಿದ್ದೀರಿ, ಕೃಷ್ಣನ ಆತ್ಮವು 84 ಜನ್ಮಗಳನ್ನು ತೆಗೆದುಕೊಂಡು ಈಗ ಪುನಃ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತಿದೆ. ಈಗ ನೀವು ಮಕ್ಕಳು ವಿನಾಶಕ್ಕೆ ಮೊದಲೇ ಸತೋಪ್ರಧಾನರಾಗಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಬೇಕಾಗಿದೆ. ಭಗವಾನುವಾಚ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಇದೊಂದು ಜನ್ಮ ಪವಿತ್ರರಾಗಿರಿ ಎಂದು ಗಾಯನವಿದೆ. ಕಳೆದದ್ದು ಕಳೆದುಹೋಯಿತು, ಇದಂತೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಸೃಷ್ಟಿಯು ಸತೋಪ್ರಧಾನವಾಗಲೇಬೇಕಾಗಿದೆ. ಇದು ಡ್ರಾಮಾದ ಪೂರ್ವ ನಿಶ್ಚಿತವಾಗಿದೆ. ಈಶ್ವರನ ಲೀಲೆಯಲ್ಲ, ಡ್ರಾಮಾದ ಲೀಲೆಯು ಹೀಗೆ ಮಾಡಲ್ಪಟ್ಟಿದೆ ಅದನ್ನು ತಂದೆಯು ತಿಳಿಸುತ್ತಾರೆ. ಅರ್ಧಕಲ್ಪವು ಮುಗಿದ ನಂತರ ತಂದೆಯು ಬರುತ್ತಾರೆ. ತಂದೆಯು ತಿಳಿಸುತ್ತಾರೆ - ಯಾವಾಗ ರಾತ್ರಿಯು ಮುಗಿದು ದಿನವು ಆರಂಭವಾಗುತ್ತದೆಯೋ ಆಗಲೇ ನಾನು ಬರುತ್ತೇನೆ, ಶಿವರಾತ್ರಿ ಎಂದೂ ಹೇಳುತ್ತಾರಲ್ಲವೆ. ಶಿವನ ಪೂಜಾರಿಗಳು ಶಿವರಾತ್ರಿಯನ್ನು ಆಚರಿಸುತ್ತಾರೆ ಆದರೆ ಸರ್ಕಾರವಂತೂ ರಜಾದಿನವನ್ನೂ ನಿಲ್ಲಿಸಿ ಬಿಟ್ಟಿದೆ. ಕೊನೆಪಕ್ಷ ಒಂದು ತಿಂಗಳಾದರೂ ರಜಾ ದಿನಗಳನ್ನು ಘೋಷಿಸಬೇಕು. ಶಿವ ತಂದೆಯು ಸರ್ವರ ಸದ್ಗತಿ ಮಾಡುವವರಾಗಿದ್ದಾರೆ, ಅವರೇ ಸರ್ವರ ದುಃಖಹರ್ತ-ಸುಖಕರ್ತನಾಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರ ಜಯಂತಿಯನ್ನಂತೂ ಬಹಳ ವಿಜೃಂಭಣೆಯಿಂದ ಒಂದು ತಿಂಗಳವರೆಗೆ ಎಲ್ಲಾ ಧರ್ಮದವರೂ ಆಚರಿಸಬೇಕಾಗಿದೆ ಏಕೆಂದರೆ ವಿಶೇಷವಾಗಿ ತಂದೆಯು ಬಂದು ಭಾರತಕ್ಕೆ ಸದ್ಗತಿ ನೀಡುತ್ತಾರೆ. ಭಾರತವು ಸ್ವರ್ಗವಾಗಿದ್ದಾಗ ದೇವಿ-ದೇವತೆಗಳ ರಾಜ್ಯವಿತ್ತು, ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ದೇವತೆಗಳು ವಿಶ್ವದ ಮಾಲೀಕರಾಗಿದ್ದರು. ಯಾವುದೇ ವಿಭಜನೆಯಿರಲಿಲ್ಲ ಆದ್ದರಿಂದ ಹೇಳಲಾಗುತ್ತದೆ- ಅಟಲ, ಅಖಂಡ, ಸುಖ-ಶಾಂತಿ, ಸಂಪತ್ತಿನ ದೈವೀ ರಾಜ್ಯವನ್ನು ಪುನಃ ನಾವು ಪ್ರಾಪ್ತಿ ಮಾಡಿಕೊಳ್ಳುತ್ತಿದ್ದೇವೆ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು 5000 ವರ್ಷಗಳ ಮೊದಲೂ ಸಿಕ್ಕಿತ್ತು, ಸೂರ್ಯವಂಶಿ-ಚಂದ್ರವಂಶಿಯರ ರಾಜ್ಯದಲ್ಲಿ ದುಃಖದ ಹೆಸರೂ ಇರಲಿಲ್ಲ. ಅದಕ್ಕಾಗಿಯೇ ರಾಮ ರಾಜ, ರಾಮ ಪ್ರಜೆ.... ಎಂದು ಗಾಯನವಿದೆ. ಅಲ್ಲಿ ಯಾವುದೇ ಅಧರ್ಮದ ಮಾತಿರುವುದಿಲ್ಲ. |
ತಂದೆಯು ನಿಮಗೆ ಬ್ರಹ್ಮಾ ಮತ್ತು ವಿಷ್ಣುವಿನ ಬಗ್ಗೆ ತಿಳಿಸಿದ್ದಾರೆ - ಇವರಿಬ್ಬರಿಗೂ ಪರಸ್ಪರ ಏನು ಸಂಬಂಧವಿದೆ ಎಂದು. ವಿಷ್ಣುವಿನ ನಾಭಿ ಕಮಲದಿಂದ ಬ್ರಹ್ಮನು ಹೊರ ಬಂದನು, ಇದು ಎಂತಹ ಅದ್ಭುತ ಚಿತ್ರವನ್ನು ಮಾಡಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ಲಕ್ಷ್ಮೀ-ನಾರಾಯಣರೇ ಅಂತ್ಯದಲ್ಲಿ ಬಂದು ಬ್ರಹ್ಮಾ-ಸರಸ್ವತಿ, ಜಗದಂಬಾ-ಜಗತ್ಪಿತನಾಗಿದ್ದಾರೆ. ಇವರಿಬ್ಬರೂ ಪುನಃ ವಿಷ್ಣು ಅರ್ಥಾತ್ ಲಕ್ಷ್ಮೀ-ನಾರಾಯಣನಾಗುತ್ತಾರೆ. ತಂದೆಯು ತಿಳಿಸುತ್ತಾರೆ - ಯಾವುದೆಲ್ಲಾ ಚಿತ್ರಗಳನ್ನು ನೋಡುತ್ತೀರೋ ಇದರಲ್ಲಿ ಯಾವುದೂ ಯಥಾರ್ಥವಲ್ಲ. ಶಿವನ ದೊಡ್ಡ ಚಿತ್ರವನ್ನು ತೋರಿಸುತ್ತಾರೆ, ಅದೂ ಸಹ ಅಯತಾರ್ಥವಾಗಿದೆ. ಭಕ್ತಿಯ ಕಾರಣ ದೊಡ್ಡ ಗಾತ್ರದಲ್ಲಿ ಮಾಡಿದ್ದಾರೆ ಇಲ್ಲದಿದ್ದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು? ಮತ್ತೆ ಬ್ರಹ್ಮಾ-ವಿಷ್ಣು, ಶಂಕರನ ಬಗ್ಗೆಯೂ ತಿಳಿದುಕೊಂಡಿಲ್ಲ. ತ್ರಿಮೂರ್ತಿ ಬ್ರಹ್ಮಾ ಎಂದು ಹೇಳುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ, ವಿಷ್ಣುವಿನ ಮೂಲಕ ಪಾಲನೆ ಎಂಬುದನ್ನೂ ಹೇಳುತ್ತಾರೆ ಆದರೆ ಬ್ರಹ್ಮನಂತೂ ಸ್ಥಾಪನೆ ಮಾಡುವುದಿಲ್ಲ. ಬ್ರಹ್ಮನು ಸ್ವರ್ಗದ ಸ್ಥಾಪನೆ ಮಾಡುವರೇ? ಇಲ್ಲ. ಪರಮಪಿತ ಪರಮಾತ್ಮನೇ ಸ್ಥಾಪನೆ ಮಾಡುತ್ತಾರೆ, ಈ (ಬ್ರಹ್ಮಾ) ಆತ್ಮವಂತೂ ಪತಿತನಾಗಿದೆ. ಇವರಿಗೆ ವ್ಯಕ್ತ ಬ್ರಹ್ಮನೆಂದು ಹೇಳಲಾಗುತ್ತದೆ, ಇದೇ ಆತ್ಮವು ಪಾವನವಾಗಿ ಮತ್ತೆ ಹೊರಟು ಹೋಗುವುದು. ನಂತರ ಸತ್ಯಯುಗದಲ್ಲಿ ಇವರೇ ನಾರಾಯಣನಾಗುತ್ತಾರೆ ಅಂದಮೇಲೆ ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ ಆದರೆ ಚಿತ್ರವನ್ನು ಅಲ್ಲಿ ತೋರಿಸಿದ್ದಾರೆ. ಹೇಗೆ ವಾಸ್ತವದಲ್ಲಿ ಈ ಜ್ಞಾನದ ಅಲಂಕಾರಗಳು ನಿಮ್ಮದಾಗಿವೆ ಆದರೆ ವಿಷ್ಣುವಿಗೆ ತೋರಿಸಿದ್ದಾರೆ. ನೌಧಾಭಕ್ತಿಯಲ್ಲಿಯೂ ಸಾಕ್ಷಾತ್ಕಾರವಾಗುತ್ತದೆ, ಮೀರಾಳ ಹೆಸರಿನ ಗಾಯನವಿದೆಯಲ್ಲವೆ. ಪುರುಷನಲ್ಲಿ ಮೊಟ್ಟ ಮೊದಲನೇ ಭಕ್ತ ನಾರದನೆಂದು, ಮಾತೆಯರಲ್ಲಿ ಮೀರಾ ಎಂದು ಗಾಯನವಿದೆ. ನೀವೀಗ ನಾರಾಯಣ ಅಥವಾ ಲಕ್ಷ್ಮಿಯನ್ನು ವರಿಸುವುದಕ್ಕಾಗಿ ಈ ಜ್ಞಾನ ಕೇಳುತ್ತಿದ್ದೀರಿ, ನಿಮ್ಮದೇ ಸ್ವಯಂವರವಾಗುತ್ತದೆ. ಸಭೆಯಲ್ಲಿ ಬಂದು ನಾನು ಲಕ್ಷ್ಮಿಯನ್ನು ವರಿಸಬಲ್ಲೆನೆ? ಎಂದು ನಾರದನು ಕೇಳಿದನೆಂದು ತೋರಿಸುತ್ತಾರೆ. ನೀವೀಗ ಲಕ್ಷ್ಮಿಯನ್ನು ವರಿಸಲು ಯೋಗ್ಯರಾಗುತ್ತಿದ್ದೀರಿ ಬಾಕಿ ಅವೆಲ್ಲವೂ ಭಕ್ತಿಮಾರ್ಗದ ಕಥೆಗಳಾಗಿವೆ. ತಂದೆಯು ಸತ್ಯ ಮಾತನ್ನು ತಿಳಿಸುತ್ತಾರೆ. ಲಕ್ಷ್ಮಿಯಿರುವುದು ಸತ್ಯಯುಗದಲ್ಲಿ, ನಾರದ ಭಕ್ತನಿರುವುದು ದ್ವಾಪರದಲ್ಲಿ ಅಂದಮೇಲೆ ನಾರದನು ಸತ್ಯಯುಗದಲ್ಲಿ ಎಲ್ಲಿಂದ ಬಂದನು! ರಾಧೆ-ಕೃಷ್ಣನಿಗೆ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣ ಎಂದು ಹೆಸರಿಡಲಾಗುತ್ತದೆ. ಇದನ್ನೂ ಸಹ ಭಾರತವಾಸಿಗಳು ತಿಳಿದುಕೊಂಡಿಲ್ಲ. ಎಷ್ಟು ಅಜ್ಞಾನ ಅಂಧಕಾರವಿದೆ! ತಂದೆಯು ಕಲ್ಯಾಣಕಾರಿಯಾಗಿದ್ದಾರೆ, ನಿಮ್ಮನ್ನೂ ಸಹ ಕಲ್ಯಾಣಕಾರಿಗಳನ್ನಾಗಿ ಮಾಡುತ್ತಾರೆ. ಅನ್ಯರಿಗೆ ಹೇಗೆ ತಿಳಿಸಬೇಕೆಂದು ಈಗ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಚಿತ್ರ ಇತ್ಯಾದಿಗಳನ್ನು ಹೇಗೆ ರಚಿಸಿದ್ದಾರೆ! ಗಾಂಧೀಜಿಯ ನಾಭಿಯಿಂದ ನೆಹರು ಬಂದರು, ಈಗ ವಿಷ್ಣು ದೇವತೆಯರೆಲ್ಲಿ, ಆ ಮನುಷ್ಯರೆಲ್ಲಿ.... ಇವೆಲ್ಲಾ ಮಾತುಗಳನ್ನು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆಂದು ನಿಮಗೆ ನಂಬರ್ವಾರ್ ಖುಷಿಯಿದೆ. ಇದನ್ನಂತೂ ಎಂದೂ ಹೇಳಿಲ್ಲ ಏಕೆಂದರೆ ಗೀತೆಯನ್ನು ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಭಗವಂತನು ಯಾವಾಗ ಬಂದರು? ಯಾವಾಗ ಬಂದು ಗೀತೆಯನ್ನು ತಿಳಿಸಿದರು! ತಿಥಿ, ತಾರೀಖು ಏನೂ ಇಲ್ಲ. ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ. ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಈಗ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ. ಬ್ರಾಹ್ಮಣ ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ. ವೃದ್ಧಿಯಾಗಿ ಬಹಳಷ್ಟು ಮಂದಿ ಮಕ್ಕಳಾಗುವರು. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ವರ್ಣಗಳಲ್ಲಿ ಹೇಗೆ ಸುತ್ತುತ್ತೇವೆ? ನಾವು ಬ್ರಾಹ್ಮಣರ ವರ್ಣವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ನಾವು ಭಾರತದ ಗುಪ್ತವಾದ ಸತ್ಯ ಆತ್ಮಿಕ ಸಮಾಜ ಸೇವಕರಾಗಿದ್ದೇವೆ. ಪರಮಪಿತ ಪರಮಾತ್ಮನು ನಮ್ಮಿಂದ ಸೇವೆ ಮಾಡಿಸುತ್ತಿದ್ದಾರೆ. ನಾವು ಆತ್ಮಿಕ ಸೇವೆ ಮಾಡುತ್ತೇವೆ, ಅವರು ದೈಹಿಕ ಸೇವೆ ಮಾಡುತ್ತಾರೆ. ನೀವು ಭಾರತಕ್ಕೆ ಏನು ಸೇವೆ ಮಾಡುತ್ತೀರಿ ಎಂದು ನಿಮ್ಮನ್ನು ಕೇಳುತ್ತಾರೆ. ಆಗ ತಿಳಿಸಿರಿ, ನಾವು ಆತ್ಮಿಕ ಸೇವಾಧಾರಿಗಳಾಗಿದ್ದೇವೆ. ಸ್ವರ್ಗದ ಉದ್ಘಾಟನೆ ಮಾಡಿಸುತ್ತಿದ್ದೇವೆ. ಸ್ಥಾಪನೆ ಮಾಡಿಸುತ್ತಿದ್ದೇವೆ. ಶಿವ ತಂದೆಯು ಮಾಡಿ-ಮಾಡಿಸುವವರಾಗಿದ್ದಾರೆ, ಅವರು ಮಾಡಿಸುತ್ತಿದ್ದಾರೆ ಮತ್ತು ತಾನೂ ಮಾಡುತ್ತಾರೆ, ಮುರುಳಿಯನ್ನು ಯಾರು ನುಡಿಸುತ್ತಾರೆ? ಅಂದಾಗ ತಂದೆಯು ಕರ್ಮ ಮಾಡುತ್ತಾರೆ. ನಿಮಗೂ ಹೀಗೆ ಮಾಡಿರಿ ಎಂದು ಕಲಿಸುತ್ತಾರೆ. ಮನ್ಮನಾಭವ ಮಂತ್ರವನ್ನು ಕೊಡುತ್ತಾರೆ ಅಂದಾಗ ಕರ್ಮವನ್ನು ಕಲಿಸಿದಂತಾಯಿತಲ್ಲವೆ. ನಂತರ ಅನ್ಯರಿಗೂ ಕಲಿಸಿಕೊಡಿ ಎಂದು ನಿಮಗೆ ಹೇಳುತ್ತಾರೆ ಆದ್ದರಿಂದ ಅವರಿಗೆ ಮಾಡಿ-ಮಾಡಿಸುವವರು ಎಂದು ಹೇಳಲಾಗುತ್ತದೆ. ನೀವು ಮಕ್ಕಳೂ ಸಹ ಇದೇ ಶಿಕ್ಷಣವನ್ನು ಕೊಡುತ್ತೀರಿ - ತಂದೆಯನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ನೀವು ಮಕ್ಕಳು ಇದೇ ಸಂದೇಶವನ್ನು ಕೊಡಬೇಕಾಗಿದೆ. ಅನ್ಯರಿಗೆ ಸಂದೇಶ ಕೊಟ್ಟು ತಾನು ನೆನಪಿನಲ್ಲಿ ಇಲ್ಲವೆಂದರೆ ಏನಾಗುವುದು? ಅನ್ಯರು ಮಾತ್ರ ಪುರುಷಾರ್ಥ ಮಾಡಿ ಮೇಲೇರುತ್ತಾರೆ, ಸಂದೇಶವನ್ನು ಕೊಡುವವರು ಹಿಂದುಳಿಯುತ್ತೀರಿ. ನೆನಪಿನ ಪುರುಷಾರ್ಥ ಮಾಡದಿದ್ದರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಸಂದೇಶವನ್ನು ಪಡೆದವರು ನೆನಪಿನ ಯಾತ್ರೆಯಿಂದ ಪಾವನರಾಗಿಬಿಡುತ್ತಾರೆ. ಹೇಗೆ ತಂದೆಯು ಬಂಧನದಲ್ಲಿ ಇರುವವರ ಉದಾಹರಣೆ ನೀಡುತ್ತಾರೆ. ಅವರು ಹೆಚ್ಚು ನೆನಪಿನಲ್ಲಿರುತ್ತಾರೆ. ತಂದೆಯನ್ನು ನೋಡಿರದಿದ್ದರೂ ಸಹ ಪತ್ರ ಬರೆಯುತ್ತಾರೆ - ಬಾಬಾ, ನಾವು ನಿಮ್ಮವರು ಆಗಿ ಬಿಟ್ಟಿದ್ದೇವೆ, ನಾವು ಖಂಡಿತವಾಗಿಯೂ ಪವಿತ್ರರಾಗಿರುತ್ತೇವೆ ಎಂದು. ನೀವು ಮಕ್ಕಳಿಗೆ ತಂದೆಯ ಜೊತೆ ಪ್ರೀತಿ ಬುದ್ಧಿಯಿದೆ, ನಿಮ್ಮದೇ ಮಾಲೆಯು ಮಾಡಲ್ಪಟ್ಟಿದೆ. ವಿಷ್ಣುವಿನ ಮಾಲೆ ಮತ್ತು ರುದ್ರಾಕ್ಷಿ ಮಾಲೆಯಲ್ಲಿ ಮೇಲೆ ಜೋಡಿ ಮಣಿಗಳಿವೆ, ಮಾಲೆಯನ್ನು ಕೈಗೆತ್ತಿಕೊಂಡ ಕೂಡಲೇ ಮೊದಲು ಹೂ ಮತ್ತು ಎರಡು ಮಣಿಗಳು ಕೈಗೆ ಬರುತ್ತವೆ. ಅದಕ್ಕೆ ನಮಸ್ಕರಿಸುತ್ತಾರೆ, ಅದರ ನಂತರ ಇಡೀ ಮಾಲೆಯನ್ನು ಜಪಿಸುತ್ತಾರೆ. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ ಆದ್ದರಿಂದ ಈ ಮಾಲೆಯು ನಿಮ್ಮದೇ ನೆನಪಾರ್ಥವಾಗಿದೆ. ತಂದೆಯು ಈ ಗೀತಾ ಜ್ಞಾನ ಯಜ್ಞವನ್ನು ರಚಿಸಿದ್ದಾರೆ, ಇದರಲ್ಲಿ ಇಡೀ ಹಳೆಯ ಪ್ರಪಂಚವೇ ಸ್ವಾಹಾ ಆಗುವುದು. ತಂದೆಯು ಅತಿ ಪ್ರಿಯನಾಗಿದ್ದಾರೆ, ನಿಮಗೆ ಭವಿಷ್ಯ 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯನ್ನು ಕೊಡುತ್ತಾರೆ. ಯಾರು ಕಲ್ಪದ ಹಿಂದೆ ಡ್ರಾಮಾದ ಅನುಸಾರ ಬಂದು ಆಸ್ತಿಯನ್ನು ತೆಗೆದುಕೊಂಡಿದ್ದಾರೆಯೋ ಅವರು ಅವಶ್ಯವಾಗಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸುಖಧಾಮದಲ್ಲಿ ಹೋಗಬೇಕೆಂದರೆ ಪವಿತ್ರರಾಗಿರಿ, ನನ್ನನ್ನು ನೆನಪು ಮಾಡಿರಿ. ಬಾಬಾ, ಕೃಪೆ ಮಾಡಿ-ಸಹಾಯ ಮಾಡಿ ಎಂದು ಏನನ್ನೂ ಬೇಡಬಾರದು. ನಾನಂತೂ ಎಲ್ಲರಿಗೂ ಸಹಯೋಗ ನೀಡುತ್ತೇನೆ ಆದರೆ ಪುರುಷಾರ್ಥವನ್ನಂತೂ ನೀವೇ ಮಾಡಬೇಕಾಗಿದೆ. ಇಲ್ಲಿ ಆಶೀರ್ವಾದದ ಮಾತಿಲ್ಲ. ಕೇವಲ ನನ್ನೊಬ್ಬನನ್ನೇ ನೆನಪು ಮಾಡಿರಿ. ನೆನಪು ಮಾಡುವುದು ನಿಮ್ಮ ಕರ್ತವ್ಯವಾಗಿದೆ. ಆದೇಶ ನೀಡುವುದು ನನ್ನ ಕೃಪೆಯಾಗಿದೆ. ಭಲೆ ತಿನ್ನಿರಿ, ಕುಡಿಯಿರಿ, ಸುತ್ತಾಡಿರಿ.... ಆದರೆ ನೀವು ಪವಿತ್ರ ಭೋಜನವನ್ನೇ ಸ್ವೀಕರಿಸಬೇಕಾಗಿದೆ. ನಾವು ದೇವಿ-ದೇವತೆಗಳಾಗುತ್ತೇವೆ ಅಂದಮೇಲೆ ಅಲ್ಲಿ ಈ ಈರುಳ್ಳಿ ಇತ್ಯಾದಿಗಳು ಇರುತ್ತವೆಯೇ? ಇದೆಲ್ಲವನ್ನೂ ಇಲ್ಲಿಯೇ ಬಿಡಬೇಕಾಗುತ್ತದೆ. ಈ ಪದಾರ್ಥಗಳು ಅಲ್ಲಿರುವುದಿಲ್ಲ, ಬೀಜವೇ ಇರುವುದಿಲ್ಲ. ಹೇಗೆ ಸತ್ಯಯುಗದಲ್ಲಿ ಖಾಯಿಲೆ ಇತ್ಯಾದಿಗಳು ಇರುವುದೇ ಇಲ್ಲ. ಈಗ ನೋಡಿ, ಎಷ್ಟೊಂದು ಖಾಯಿಲೆಗಳು ಬಂದು ಬಿಟ್ಟಿವೆ! ಅಲ್ಲಿ ತಮೋಗುಣಿಯಾದ ಯಾವುದೇ ವಸ್ತುವಿರುವುದಿಲ್ಲ. ಪ್ರತಿಯೊಂದು ವಸ್ತು ಸತೋಪ್ರಧಾನಾವಾಗಿ ಇರುತ್ತದೆ. ಇಲ್ಲಿ ನೋಡಿ ಮನುಷ್ಯರು ಎಂತೆಂತಹ ಪದಾರ್ಥಗಳನ್ನು ತಿನ್ನುತ್ತಾರೆ! ಈಗ ತಂದೆ ಮಕ್ಕಳಿಗೆ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಮತ್ತು ಎಲ್ಲಾ ಸಂಗಗಳನ್ನು ಬಿಟ್ಟು ನನ್ನ ಸಂಗ ಮಾಡಿರಿ ಆಗ ನೀವು ಪಾವನರಾಗುವಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕಳೆದದ್ದು ಕಳೆದು ಹೋಯಿತು, ಏನು ಕಳೆಯಿತೋ ಅದನ್ನು ಮರೆತು ಗೃಹಸ್ಥ ವ್ಯವಹಾರದಲ್ಲಿರುತ್ತಾ ಸತೋಪ್ರಧಾನರಾಗುವ ಪುರುಷಾರ್ಥ ಮಾಡಬೇಕಾಗಿದೆ. ವಿನಾಶಕ್ಕೆ ಮೊದಲೇ ಅವಶ್ಯವಾಗಿ ಪಾವನರಾಗಬೇಕಾಗಿದೆ. |
2. ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸತ್ಯ-ಸತ್ಯವಾದ ಸೇವೆಯಲ್ಲಿ ತತ್ಫರರಾಗಿರಬೇಕಾಗಿದೆ. ಆಹಾರ-ಪಾನೀಯಗಗಳು ಬಹಳ ಶುದ್ಧವಾಗಿರಲಿ. ಪವಿತ್ರ ಭೋಜನವನ್ನೇ ಸ್ವೀಕರಿಸಬೇಕಾಗಿದೆ. |
ಓಂ ಶಾಂತಿ. ಶಿವಭಗವಾನುವಾಚ- ಇಲ್ಲಿ ಬೇರೆ ಯಾರ ಹೆಸರನ್ನು ತೆಗೆದುಕೊಂಡಿಲ್ಲ. ಇವರ (ಬ್ರಹ್ಮಾ) ಹೆಸರನ್ನೂ ತೆಗೆದುಕೊಳ್ಳುವುದಿಲ್ಲ, ಪತಿತ-ಪಾವನ ಆ ತಂದೆಯಾಗಿದ್ದರಿಂದ ಅವರು ಅಗತ್ಯವಾಗಿ ಪತಿತರನ್ನು ಪಾವನ ಮಾಡಲು ಇಲ್ಲಿಗೆ ಬರುತ್ತಾರೆ. ಪಾವನ ಮಾಡುವಂತಹ ಯುಕ್ತಿಯನ್ನು ಇಲ್ಲಿ ತಿಳಿಸುತ್ತಾರೆ. ಶಿವಭಗವಾನುವಾಚ ಎಂದಿದೆ ಆದರೆ ಕೃಷ್ಣಭಗವಾನುವಾಚ ಎಂದಿಲ್ಲ. ಇದನ್ನು ಅಗತ್ಯವಾಗಿ ತಿಳಿಸಿಕೊಡಬೇಕು. ಬ್ಯಾಡ್ಜ್ ಸಹ ನಿಮ್ಮ ಬಳಿಯಿದೆ, ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಪೂರ್ಣ ರಹಸ್ಯವು ಈಗ ಈ ಬ್ಯಾಡ್ಜ್ ನಲ್ಲಿ ತೋರಿಸಲಾಗಿದೆ. ಈ ಬ್ಯಾಡ್ಜ್ ಕಡಿಮೆಯೇನಲ್ಲ, ಇದು ಸನ್ನೆಯ ಮಾತಾಗಿದೆ. ನೀವೆಲ್ಲರೂ ನಂಬರ್ವಾರ್ ಪುರುಷಾರ್ಥದನುಸಾರ ಆಸ್ತಿಕರಾಗಿದ್ದೀರಿ, ಅಗತ್ಯವಾಗಿ ನಂಬರ್ವಾರ್ ಎಂದು ಹೇಳಲಾಗುತ್ತದೆ ಏಕೆಂದರೆ ಕೆಲವರು ರಚಯಿತ-ರಚನೆಯ ಜ್ಞಾನವನ್ನು ತಿಳಿಸಿಕೊಡುವುದಿಲ್ಲ. ಅಂತಹವರಿಗೆ ಸತೋಪ್ರಧಾನ ಬುದ್ಧಿಯವರೆಂದು ಹೇಳಲಾಗುತ್ತದೆಯೇನು! ಸತೋಪ್ರಧಾನ ಬುದ್ಧಿ ನಂತರ ರಜೋಬುದ್ಧಿ, ತಮೋಬುದ್ಧಿಯವರೂ ಇದ್ದಾರೆ. ಯಾರು ಹೇಗೆ-ಹೇಗೆ ತಿಳಿದುಕೊಳ್ಳುತ್ತಾರೆಯೋ ಅವರಿಗೆ ಅಂತಹ ಬಿರುದು ಸಿಗುತ್ತದೆ. ಇವರು ಸತೋಪ್ರಧಾನ ಬುದ್ಧಿಯವರು, ಇವರು ರಜೋಬುದ್ಧಿಯವರು ಆದರೆ ಹಾಗೆಂದು ಹೇಳಲು ಆಗುವುದಿಲ್ಲ ಏಕೆಂದರೆ ಮೂರ್ಚಿತರಾಗದಿರಲಿ ಎಂದು. ನಂಬರ್ವಾರ್ ಅಂತೂ ಆಗಿರುತ್ತಾರೆ, ಫಸ್ಟ್ ಕ್ಲಾಸ್ ಇರುವವರ ಬೆಲೆ ಬಹಳ ಉನ್ನತವಾಗಿರುತ್ತದೆ. ಈಗ ನಿಮಗೆ ಸತ್ಯ-ಸತ್ಯ ಸದ್ಗುರುವು ಸಿಕ್ಕಿದ್ದಾರೆ. ಸದ್ಗುರುವು ಸಿಕ್ಕಿ ಒಂದೇಸಾರಿ ಸತ್ಯ-ಸತ್ಯ ಮಾಡುತ್ತಿದ್ದಾರೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯವಾಗಿರುವವರು ದೇವಿ-ದೇವತೆಗಳು ಅವರೇ ನಂತರ ವಾಮ ಮಾರ್ಗದಲ್ಲಿ ಹೋಗಿ ಅಸತ್ಯರಾಗಿಬಿಡುತ್ತಾರೆ. ಸತ್ಯ ಯುಗದಲ್ಲಿ ಕೇವಲ ನೀವು ದೇವೀದೇವತೆಗಳಿರುತ್ತೀರಿ ಬೇರೆ ಯಾರೂ ಇರುವುದಿಲ್ಲ. ಕೆಲವರು ಜ್ಞಾನವಿಲ್ಲದ ಕಾರಣ ಇದು ಹೇಗೆ ಸಾಧ್ಯವಿದೆಯೆಂದು ಕೇಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾವು ನಾಸ್ತಿಕರಿಂದ ಆಸ್ತಿಕರಾಗಿದ್ದೇವೆ, ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಯಥಾವತ್ತಾಗಿ ತಿಳಿದುಕೊಂಡಿದ್ದೀರಿ. ನಾಮ-ರೂಪದಿಂದ ಭಿನ್ನವಾಗಿರುವ ವಸ್ತು ನೋಡುವುದಕ್ಕೂ ಸಾಧ್ಯವಿಲ್ಲ. ಹೇಗೆ ಆಕಾಶ ದೃವ ಪ್ರದೇಶವಾಗಿದೆ, ಇದು ಆಕಾಶವೆಂದು ಅನುಭವ ಮಾಡಲಾಗುತ್ತದೆ. ಇದೂ ಸಹ ಜ್ಞಾನವಾಗಿದೆ. ಪೂರ್ಣ ಆಧಾರ ಬುದ್ಧಿಯ ಮೇಲಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವು ಸಿಗುತ್ತದೆ. ಈ ರೀತಿ ಅನೇಕ ಸ್ಲೋಗನ್ಗಳಿವೆ. ದಿನ-ಪ್ರತಿದಿನ ಹೊಸ-ಹೊಸ ಅಂಶ, ಹೊಸ-ಹೊಸ ಸ್ಲೋಗನ್ ತಯಾರಾಗುತ್ತಿರುತ್ತದೆ. ಆಸ್ತಿಕರಾಗಲು ರಚಯಿತ ಹಾಗೂ ರಚನೆಯ ಜ್ಞಾನವು ಅವಶ್ಯವಾಗಿ ಬೇಕು ಅದರಿಂದ ನಾಸ್ತಿಕತನವು ದೂರವಾಗಿಬಿಡುತ್ತದೆ. ನೀವು ಆಸ್ತಿಕರಾಗಿ ವಿಶ್ವದ ಮಾಲೀಕರಾಗಿಬಿಡುತ್ತೀರಿ. ನೀವಿಲ್ಲಿ ಆಸ್ತಿಕರಾಗಿದ್ದೀರಿ ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ತಿಳಿದುಕೊಳ್ಳುವುದು ಮನುಷ್ಯರೇ ತಿಳಿದುಕೊಳ್ಳುತ್ತಾರೆ ಆದರೆ ಪ್ರಾಣಿಗಳು ತಿಳಿದುಕೊಳ್ಳುವುದಿಲ್ಲ. ಮನುಷ್ಯರೇ ಬಹಳ ಉತ್ತಮರಾಗಿದ್ದಾರೆ, ಮನುಷ್ಯರೇ ಬಹಳ ಕನಿಷ್ಟರಾಗಿದ್ದಾರೆ. ಯಾವುದೇ ಮನುಷ್ಯಮಾತ್ರರಿಗೆ ರಚಯಿತ-ರಚನೆಯ ಜ್ಞಾನವನ್ನು ತಿಳಿದುಕೊಂಡಿಲ್ಲ. ಬುದ್ಧಿಗೆ ಒಂದೇಸಾರಿ ಗೋದ್ರೇಜ್ ಬೀಗವನ್ನು ಹಾಕಲ್ಪಟ್ಟಿದೆ. ನಾವು ತಂದೆಯ ಬಳಿ ವಿಶ್ವದ ಮಾಲೀಕರಾಗಬೇಕೆಂದು ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ನೀವು 100% ಪವಿತ್ರತೆಯಲ್ಲಿರುತ್ತೀರಿ, ಪವಿತ್ರತೆಯೂ ಇದೆ, ಶಾಂತಿಯೂ ಇದೆ, ಸಂಪತ್ತೂ ಇದೆ. ಹೀಗೆ ಆಶೀರ್ವಾದವನ್ನು ಕೊಡುತ್ತಾರಲ್ಲವೆ ಆದರೆ ಈ ಅಕ್ಷರ ಭಕ್ತಿಮಾರ್ಗದ್ದಾಗಿದೆ. ಈ ಲಕ್ಷ್ಮೀ-ನಾರಾಯಣರಂತೂ ನೀವು ವಿದ್ಯೆಯಿಂದ ಆಗುತ್ತೀರಿ. ಓದಿ ನಂತರ ನೀವು ಎಲ್ಲರಿಗೂ ಓದಿಸಬೇಕು. ಶಾಲೆಗೆ ಕುಮಾರ-ಕುಮಾರಿಯರು ವಿದ್ಯಾಭ್ಯಾಸ ಮಾಡಲು ಹೋಗುತ್ತಾರೆ, ಜೊತೆಯಲ್ಲಿಯೇ ಇರುವಕಾರಣ ನಂತರ ಬಹಳ ಕೆಟ್ಟುಹೋಗುತ್ತಾರೆ ಏಕೆಂದರೆ ದೃಷ್ಟಿಯು ಅಪವಿತ್ರವಾಗಿಬಿಡುತ್ತದೆ. ಅಪವಿತ್ರ ದೃಷ್ಟಿಯಾಗುವ ಕಾರಣ ಸೆರಗನ್ನು ಹಾಕುತ್ತಾರೆ. ಅಲ್ಲಿ ಕುದೃಷ್ಟಿಯಿರುವುದೇ ಇಲ್ಲ ಆದುದರಿಂದ ಸೆರಗನ್ನು (ಮುಸುಕು)ಹಾಕುವ ಅವಶ್ಯಕತೆಯಿರುವುದಿಲ್ಲ. ಈ ಲಕ್ಷ್ಮೀ-ನಾರಾಯಣರಿಗೆ ಮುಸುಕು ಹಾಕಿರುವುದನ್ನು ಎಂದಾದರೂ ನೋಡಿದ್ದೇರೇನು! ಅಲ್ಲಿ ಈ ರೀತಿ ಅಶುದ್ಧ ವಿಚಾರಗಳು ಬರುವುದಿಲ್ಲ. ಇದಂತೂ ರಾವಣರಾಜ್ಯವಾಗಿದೆ, ಈ ಕಣ್ಣುಗಳು ದೊಡ್ಡ ಶೈತಾನ್ (ಭೂತ) ಆಗಿದೆ. ತಂದೆಯು ಬಂದು ಜ್ಞಾನದ ನೇತ್ರವನ್ನು ಕೊಡುತ್ತಾರೆ. ಆತ್ಮವೇ ಎಲ್ಲವನ್ನೂ ಕೇಳುತ್ತದೆ, ಮಾತನಾಡುತ್ತದೆ, ಎಲ್ಲವನ್ನೂ ಆತ್ಮವೇ ಮಾಡುತ್ತದೆ, ಈಗ ನಿಮ್ಮ ಆತ್ಮವು ಸುಧಾರಣೆಯಾಗುತ್ತಿದೆ. ಆತ್ಮವೇ ಕೆಟ್ಟು ಪಾಪಾತ್ಮವಾಗಿಬಿಟ್ಟಿತ್ತು. ಯಾರಿಗೆ ಅಪವಿತ್ರ ದೃಷ್ಟಿಯಿರುತ್ತದೆ ಅವರಿಗೆ ಪಾಪಾತ್ಮನೆಂದು ಕರೆಯಲಾಗುವುದು. ಆ ಅಪವಿತ್ರ ದೃಷ್ಟಿಯನ್ನು ತಂದೆಯ ವಿನಃ ಬೇರೆ ಯಾರೂ ಸುಧಾರಣೆ ಮಾಡಲು ಸಾಧ್ಯವಿಲ್ಲ. ಜ್ಞಾನದ ಪವಿತ್ರ ದೃಷ್ಟಿಯನ್ನು ತಂದೆಯೊಬ್ಬರೇ ಕೊಡುತ್ತಾರೆ, ಈ ಜ್ಞಾನವನ್ನೂ ಸಹ ನೀವೇ ತಿಳಿದುಕೊಂಡಿದ್ದೀರಿ. ಶಾಸ್ತ್ರಗಳಲ್ಲಂತೂ ಈ ಜ್ಞಾನವು ಸ್ವಲ್ಪವೂ ಇಲ್ಲ. |
ತಂದೆಯು ತಿಳಿಸುತ್ತಾರೆ- ಈ ವೇದ-ಶಾಸ್ತ್ರ, ಉಪನಿಷತ್ತುಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಜಪ-ತಪ ಮುಂತಾದವುಗಳೆಲ್ಲವನ್ನೂ ಮಾಡುವುದರಿಂದ ನನ್ನೊಂದಿಗೆ ಮಿಲನ ಮಾಡುವುದಿಲ್ಲ. ಭಕ್ತಿಮಾರ್ಗವು ಅರ್ಧಕಲ್ಪ ನಡೆಯುತ್ತದೆ, ಈಗ ನೀವು ಮಕ್ಕಳು ಎಲ್ಲರಿಗೂ ಈ ಸಂದೇಶವನ್ನು ನೀಡಬೇಕು- ಬನ್ನಿ, ನಾವು ನಿಮಗೆ ರಚಯಿತ ಹಾಗೂ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಹೇಳುತ್ತೇವೆ, ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ತಿಳಿಸುತ್ತೇವೆ. ಮನುಷ್ಯರಂತೂ ಅಂಶಮಾತ್ರವೂ ತಿಳಿದುಕೊಂಡಿಲ್ಲ. ಮುಖ್ಯವಾಗಿದೆ- ಸಹೋದರ-ಸಹೋದರಿಯರೇ ಬನ್ನಿ, ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೇಳಿ ವಿದ್ಯಾಭ್ಯಾಸವನ್ನು ಮಾಡಿ ಇದರಿಂದ ನೀವು ಹೀಗೆ ಆಗುತ್ತೀರಿ. ಈ ಜ್ಞಾನವನ್ನು ಪಡೆಯುವುದರಿಂದ ಅಥವಾ ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಇಂತಹ ಚಕ್ರವರ್ತಿ ಸತ್ಯಯುಗದ ಮಹಾರಾಜ-ಮಹಾರಾಣಿಯಾಗಬಹುದು. ಈ ಲಕ್ಷ್ಮೀ-ನಾರಾಯಣರು ಈ ವಿದ್ಯೆಯಿಂದಲೇ ಆಗಿದ್ದಾರೆ, ನೀವೂ ಸಹ ವಿದ್ಯೆಯಿಂದ ಆಗುತ್ತಿದ್ದೀರಿ. ಈ ಪುರುಷೋತ್ತಮ ಸಂಗಮಯುಗಕ್ಕೆ ಬಹಳ ಮಹಿಮೆಯಿದೆ. ತಂದೆಯು ಬರುವುದೇ ಭಾರತದಲ್ಲಿ, ಅನ್ಯ ಯಾವುದೇ ಖಂಡದಲ್ಲಿ ಏಕೆ ಬರುತ್ತಾರೆ? ತಂದೆಯು ಅವಿನಾಶಿ ಸರ್ಜನ್ ಆಗಿದ್ದಾರೆ, ಅವರು ಬರುವುದೇ ಯಾವ ಭೂಮಿ ಸದಾ ಶಾಶ್ವತವಾಗಿರುತ್ತದೆಯೋ ಆ ಧರಣಿಯಲ್ಲಿ ಭಗವಂತನ ಹೆಜ್ಜೆ ಸ್ಪರ್ಶವಾಗುತ್ತದೆಯೋ ಆ ಧರಣಿಯು ಎಂದಿಗೂ ವಿನಾಶವಾಗುವುದಿಲ್ಲ. ಈ ಭಾರತವು ದೇವತೆಗಳಿಗಾಗಿಯೇ ಇರುತ್ತದೆಯಲ್ಲವೆ, ಇದು ಕೇವಲ ಪರಿವರ್ತನೆಯಾಗುತ್ತದೆ. ಬಾಕಿ ಭಾರತವೇ ಸತ್ಯಖಂಡವಾಗಿದೆ, ಅಸತ್ಯಖಂಡವೂ ಭಾರತವೇ ಆಗಿದೆ. ಆಲ್ರೌಂಡ್ ಪಾತ್ರವೂ ಭಾರತದ್ದೇ ಇದೆ, ಅನ್ಯಖಂಡಗಳಿಗೆ ಈ ರೀತಿ ಹೇಳಲು ಸಾಧ್ಯವಿಲ್ಲ. ಸತ್ಯ ಅಥವಾ ಟ್ರೂಥ್ ಭಗವಂತನೇ ಬಂದು ಮಾಡುತ್ತಾರೆ ನಂತರ ಇದನ್ನೇ ಅಸತ್ಯಖಂಡವನ್ನಾಗಿ ರಾವಣನು ಮಾಡುತ್ತಾನೆ. ನಂತರ ಅಂಶಮಾತ್ರವೂ ಸತ್ಯತೆಯು ಇರುವುದಿಲ್ಲ ಆದ್ದರಿಂದ ಸತ್ಯವಾದ ಗುರು ಸಹ ಸಿಗುವುದಿಲ್ಲ. ಆ ಸನ್ಯಾಸಿ, ಅನುಯಾಯಿ ಗೃಹಸ್ಥಿಗಳು, ಇವರನ್ನು ಹೇಗೆ ಅನುಯಾಯಿಗಳೆಂದು ಹೇಳುತ್ತಾರೆ. ಈಗ ಸ್ವಯಂ ತಂದೆಯೇ ಹೇಳುತ್ತಾರೆ- ಮಕ್ಕಳೇ, ಪವಿತ್ರರಾಗಿ ದೈವೀಗುಣಗಳನ್ನು ಧಾರಣೆ ಮಾಡಿ. ನೀವೀಗ ದೇವತೆಗಳಾಗಬೇಕು, ಯಾವುದೇ ಸನ್ಯಾಸಿ ಸಂಪೂರ್ಣ ನಿರ್ವಿಕಾರಿಯಾಗಿದ್ದಾರೇನು! ಪದೇ-ಪದೇ ವಿಕಾರಿಗಳ ಬಳಿಗೆ ಹೋಗಿ ಜನ್ಮ ಪಡೆಯುತ್ತಾರೆ. ಕೆಲವರು ಬಾಲಬ್ರಹ್ಮಾಚಾರಿಗಳೂ ಆಗಿರುತ್ತಾರೆ, ಈ ರೀತಿಯಂತೂ ಬಹಳಷ್ಟು ಮಂದಿಯಿರುತ್ತಾರೆ, ವಿದೇಶದಲ್ಲಿಯೂ ಇರುತ್ತಾರೆ. ಯಾವಾಗ ವೃದ್ಧಾಪ್ಯವಾಗುತ್ತದೆಯೋ ಆಗ ತಮ್ಮ ಪಾಲನೆಗಾಗಿ ವಿವಾಹ ಮಾಡಿಕೊಳ್ಳುತ್ತಾರೆ. ನಂತರ ಅವರನ್ನು ಪಾಲನೆ ಮಾಡುತ್ತಿದವರಿಗೆ ಬಿಟ್ಟು ಹೋಗುತ್ತಾರೆ, ಉಳಿದ ಹಣವನ್ನು ದಾನ ಮಾಡುತ್ತಾರೆ. ಇಲ್ಲಂತೂ ಅವರಿಗೆ ತಮ್ಮ ಮಕ್ಕಳ ಮೇಲೆ ಬಹಳ ಮೋಹವಿರುತ್ತದೆ, 60 ವರ್ಷಗಳ ನಂತರವೂ ಮಕ್ಕಳಿಗೆ ಒಪ್ಪಿಸುತ್ತಾರೆ ನಮ್ಮ ನಂತರ ಸರಿಯಾಗಿ ನಡೆಸಿಕೊಂಡು ಹೋಗುತ್ತಾರೆಯೋ ಅಥವಾ ಇಲ್ಲವೋ ಎಂದು ನೋಡುತ್ತಾರೆ. ಆದರೆ ಇಂದಿನ ಮಕ್ಕಳಂತೂ ತಂದೆಯು ವಾನಪ್ರಸ್ಥದಲ್ಲಿ ಹೋದರೆ ಒಳ್ಳೆಯದು, ಬೀಗದ ಕೈಯಂತೂ ನನಗೆ ದೊರೆಯಿತಲ್ಲವೆ ಎಂದು ತಿಳಿಯುತ್ತಾರೆ. ಅವರು ಬದುಕಿದ್ದಂತೆಯೇ ಎಲ್ಲಾ ಹಾಳುಮಾಡುತ್ತಾರೆ ನಂತರ ತಂದೆಗೂ ಇಲ್ಲಿಂದ ಹೊರಟುಹೋಗು ಎಂದು ಹೇಳುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಪ್ರದರ್ಶನಿಯಲ್ಲಿ ಇದನ್ನೂ ಸಹ ಬರೆಯಬೇಕು - ಸಹೋದರ-ಸಹೋದರಿಯರೇ ಬಂದು ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೇಳಿ. ಈ ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದರಿಂದ ನೀವು ಚಕ್ರವರ್ತಿ ದೇವಿ-ದೇವತಾ ವಿಶ್ವಮಹಾರಾಜ-ಮಹಾರಾಣಿಯಾಗಿಬಿಡುತ್ತೀರಿ- ತಂದೆಯು ಈ ಡೈರೆಕ್ಷನ್ ಕೊಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ- ಈ ಜನ್ಮ ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ನಾನು ಈ (ಬ್ರಹ್ಮಾ) ಶರೀರದಲ್ಲಿಯೇ ಪ್ರವೇಶ ಮಾಡುತ್ತೇನೆ, ಬ್ರಹ್ಮನ ಮುಂದೆ ವಿಷ್ಣು ಇದ್ದಾರೆ, ವಿಷ್ಣುವಿಗೆ ನಾಲ್ಕುಭುಜಗಳನ್ನು ಏಕೆ ಕೊಟ್ಟಿದ್ದಾರೆ? ಎರಡು ಭುಜ ಸ್ತ್ರೀಯದ್ದಾಗಿದೆ, ಎರಡು ಭುಜ ಪುರುಷನದ್ದಾಗಿದೆ (ಲಕ್ಷ್ಮೀ-ನಾರಾಯಣ) ಇಲ್ಲಿ ನಾಲ್ಕುಭುಜಗಳುಳ್ಳ ಯಾವುದೇ ಮನುಷ್ಯರಿರುವುದಿಲ್ಲ. ಇದು ತಿಳಿಸಿಕೊಡುವ ಸಲುವಾಗಿ ಇದೆ. ವಿಷ್ಣುವೆಂದರೆ ಲಕ್ಷ್ಮೀ-ನಾರಾಯಣರೆಂದಾಗಿದೆ. ಬ್ರಹ್ಮನಿಗೂ ತೋರಿಸುತ್ತಾರೆ- ಎರಡು ಭುಜ ಬ್ರಹ್ಮಾ ಮತ್ತು ಎರಡು ಭುಜ ಸರಸ್ವತಿಯದ್ದಾಗಿದೆ. ಇಬ್ಬರೂ ಬೇಹದ್ದಿನ ಸನ್ಯಾಸಿಗಳಾಗಿದ್ದಾರೆ. ಸನ್ಯಾಸ ಮಾಡಿ ಬೇರೆಕಡೆ ಹೋಗುವುದು ಎಂದಲ್ಲ. ತಂದೆಯು ತಿಳಿಸುತ್ತಾರೆ- ಗೃಹಸ್ಥ ವ್ಯವಹಾರದಲ್ಲಿದ್ದು ನರಕದಿಂದ ಬುದ್ಧಿಯನ್ನು ತ್ಯಾಗ ಮಾಡಿ. ನರಕವನ್ನು ಮರೆತು ಸ್ವರ್ಗವನ್ನು ಬುದ್ಧಿಯಿಂದ ನೆನಪು ಮಾಡಬೇಕು. ನರಕವಾಸಿಗಳಿಂದ ಬುದ್ಧಿಯೋಗವನ್ನು ತೊರೆದು ಸ್ವರ್ಗವಾಸಿ ದೇವತೆಗಳೊಂದಿಗೆ ಜೋಡಿಸಬೇಕು. ಯಾರು ಓದುತ್ತಾರೆಯೋ ಅವರ ಬುದ್ಧಿಯಲ್ಲಿ, ನಾವು ಉತ್ತೀರ್ಣರಾದ ನಂತರ ಈ ರೀತಿ ಆಗುತ್ತೇವೆಂದು ಇರುತ್ತದೆ. ಮೊದಲೆಲ್ಲಾ ವಾನಪ್ರಸ್ಥ ಜೀವನದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಿದ್ದರು. ತಂದೆಯು ತಿಳಿಸುತ್ತಾರೆ- ನಾನೂ ಸಹ ಇವರ ವಾನಪ್ರಸ್ಥ ಸ್ಥಿತಿಯಲ್ಲಿಯೇ ಪ್ರವೇಶ ಮಾಡುತ್ತೇನೆ. ಅವರೇ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿದ್ದಾರೆ. ಭಗವಾನುವಾಚ- ನಾನು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿಯೇ ಪ್ರವೇಶ ಮಾಡುತ್ತೇನೆ. ಯಾರು ಪ್ರಾರಂಭದಿಂದ ಅಂತ್ಯದವರೆಗೂ ಪಾತ್ರವನ್ನಭಿನಯಿಸಿದ್ದಾರೆ ಅವರಲ್ಲಿಯೇ ಪ್ರವೇಶ ಮಾಡುತ್ತೇನೆ ಏಕೆಂದರೆ ಅವರೇ ಮೊದಲನೆ ನಂಬರಿನಲ್ಲಿ ಹೋಗಬೇಕಾಗಿದೆ. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ..... ಇಬ್ಬರಿಗೂ ನಾಲ್ಕುಭುಜಗಳನ್ನು ಕೊಡುತ್ತಾರೆ. ಲೆಕ್ಕಾಚಾರಕ್ಕನುಗುಣವಾಗಿ ಬ್ರಹ್ಮಾ-ಸರಸ್ವತಿಯಿಂದ ಲಕ್ಷ್ಮೀ-ನಾರಾಯಣರು ಮತ್ತೆ ಲಕ್ಷ್ಮೀ-ನಾರಾಯಣರಿಂದಬ್ರಹ್ಮಾ-ಸರಸ್ವತಿ. ನೀವು ಮಕ್ಕಳು ತಕ್ಷಣವೆ ಈ ಲೆಕ್ಕಾಚಾರವನ್ನು ತಿಳಿಸುತ್ತೀರಿ. ವಿಷ್ಣು ಅರ್ಥಾತ್ ಈ ಲಕ್ಷ್ಮೀ-ನಾರಾಯಣರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಅಂತ್ಯದಲ್ಲಿ ಬಂದು ಸಾಧಾರಣ ಈ ಬ್ರಹ್ಮಾ-ಸರಸ್ವತಿಯಾಗುತ್ತಾರೆ ನಂತರ ಇವರಿಗೆ ತಂದೆಯು ಬ್ರಹ್ಮಾ ಎಂದು ಹೆಸರಿಟ್ಟಿದ್ದಾರೆ. ಇಲ್ಲವೆಂದರೆ ಬ್ರಹ್ಮನಿಗೆ ತಂದೆ ಯಾರು? ಅಗತ್ಯವಾಗಿ ಶಿವತಂದೆಯೆಂದು ಹೇಳಬೇಕು. ಹೇಗೆ ರಚಿಸಿದರು? ದತ್ತು ತೆಗೆದುಕೊಂಡರು. ತಂದೆಯು ತಿಳಿಸುತ್ತಾರೆ- ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ ಆದ್ದರಿಂದ ಈ ರೀತಿ ಬರೆಯಬೇಕು, ಶಿವಭಗವಾನುವಾಚ- ನಾನು ಬ್ರಹ್ಮನಲ್ಲಿ ಪ್ರವೇಶ ಮಾಡುತ್ತೇನೆ. ಅವರು ತಮ್ಮ ಜನ್ಮಗಳನ್ನು ತಿಳಿದುಕೊಂಡಿರುವುದಿಲ್ಲ. ಅವರ ಅನೇಕ ಜನ್ಮಗಳ ಅಂತ್ಯದ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ಅದೂ ಸಹ ಯಾವಾಗ ವಾನಪ್ರಸ್ಥ ಸ್ಥಿತಿಯಾಗುತ್ತದೆಯೋ ಆಗ ನಾನು ಬರುತ್ತೇನೆ ಹಾಗೂ ಯಾವಾಗ ಈ ಪ್ರಪಂಚವು ಹಳೆಯದಾಗಿ ಪತಿತವಾಗುತ್ತದೆಯೋ ಆಗ ನಾನು ಬರುತ್ತೇನೆ. ಹೀಗೆ ಎಷ್ಟು ಸಹಜವಾಗಿ ತಿಳಿಸುತ್ತಾರೆ! ಮೊದಲೆಲ್ಲಾ 60 ವರ್ಷದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಿದ್ದರು, ಈಗಂತೂ ಜನ್ಮತಃ ಗುರುಗಳನ್ನು ಮಾಡಿಕೊಳ್ಳುತ್ತಾರೆ, ಇದನ್ನು ಕ್ರಿಶ್ಚಿಯನ್ನರಿಂದ ಕಲಿತಿದ್ದಾರೆ. ಅರೆ!.... ಬಾಲ್ಯದಲ್ಲಿಯೇ ಗುರುವನ್ನು ಮಾಡಿಕೊಳ್ಳುವ ಅವಶ್ಯಕತೆಯೇನಿದೆ? ಏಕೆಂದರೆ ಬಾಲ್ಯದಲ್ಲಿಯೇ ಒಂದುವೇಳೆ ಶರೀರಬಿಟ್ಟರೆ ಸದ್ಗತಿಯನ್ನು ಪಡೆಯುವರೆಂದು ತಿಳಿದುಕೊಂಡಿದ್ದಾರೆ. ಆದರೆ ತಂದೆಯು ತಿಳಿಸುತ್ತಾರೆ- ಇಲ್ಲಿ ಯಾರ ಸದ್ಗತಿಯೂ ಆಗುವುದಿಲ್ಲ. ಈಗ ತಂದೆಯು ನಿಮಗೆ ಎಷ್ಟೊಂದು ಸಹಜವಾಗಿ ತಿಳಿಸುತ್ತಿದ್ದಾರೆ, ಶ್ರೇಷ್ಠ ಮಾಡುತ್ತಿದ್ದಾರೆ. ಭಕ್ತಿಯಲ್ಲಂತೂ ನೀವು ಮೆಟ್ಟಿಲನ್ನು (ಜನ್ಮಗಳನ್ನು) ಇಳಿಯುತ್ತಾ ಬಂದಿದ್ದೀರಿ. ಇದು ರಾವಣರಾಜ್ಯವಾಗಿದೆಯಲ್ಲವೆ. ವಿಕಾರಿ ಪ್ರಪಂಚ ಪ್ರಾರಂಭವಾಗುತ್ತದೆ. ಎಲ್ಲರೂ ಗುರುವನ್ನಂತೂ ಮಾಡಿಕೊಂಡಿದ್ದಾರೆ. ಇವರು (ಬ್ರಹ್ಮಾ) ಸ್ವಯಂ ಹೇಳುತ್ತಾರೆ- ನಾನು ಬಹಳ ಗುರುಗಳನ್ನು ಮಾಡಿಕೊಂಡಿದ್ದೆನು. ಸರ್ವರ ಸದ್ಗತಿಯನ್ನು ಮಾಡುವಂತ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಭಕ್ತಿಯಲ್ಲಿಯು ಬಹಳ ಕಠಿಣವಾದ ಬಂಧನಗಳು ಮಾಡಲ್ಪಟ್ಟಿವೆ. ಕೆಲವು ಸರಪಳಿ (ಬಂಧನ) ಗಳು ದೊಡ್ಡದಾಗಿರುತ್ತವೆ, ಕೆಲವು ತೆಳ್ಳಗಿರುತ್ತವೆ. ಯಾವುದೇ ಭಾರವಾದ ವಸ್ತುವನ್ನು ಎತ್ತುವಾಗ ಎಷ್ಟು ದಪ್ಪದಾದ ಸರಪಳಿಯನ್ನು ಕಟ್ಟಿ ಎತ್ತುತ್ತಾರೆ, ಇಲ್ಲಿಯೂ ಹಾಗೆಯೇ ಆಗಿದೆ. ಕೆಲವರು ತಕ್ಷಣ ಬಂದು ನೀವು ಹೇಳುವುದನ್ನು ಕೇಳುತ್ತಾರೆ, ಚೆನ್ನಾಗಿ ಓದುತ್ತಾರೆ. ಕೆಲವರು ತಿಳಿದುಕೊಳ್ಳುವುದೇ ಇಲ್ಲ. ನಂಬರ್ವಾರ್ ಮಾಲೆಯ ಮಣಿಯಾಗುತ್ತಾರೆ. ಮನುಷ್ಯರು ಭಕ್ತಿಮಾರ್ಗದಲ್ಲಿ ಮಾಲೆಯನ್ನು ಸ್ಮರಿಸುತ್ತಾರೆ ಆದರೆ ಜ್ಞಾನವಂತೂ ಸ್ವಲ್ಪವೂ ಇಲ್ಲ. ಮಾಲೆಯನ್ನು ಜಪ ಮಾಡಿ ಎಂದು ಗುರುಗಳು ಹೇಳಿದ ತಕ್ಷಣ ರಾಮ-ರಾಮ ಎಂಬ ಧ್ವನಿ ಮಾಡಲು ತೊಡಗುತ್ತಾರೆ. ಹೇಗೆ ವಾಧ್ಯಗಳು ಮೊಳಗುತ್ತಿರುತ್ತವೆ, ಆ ಶಬ್ಧ ಬಹಳ ಮಧುರವೆನಿಸುತ್ತದೆ. ಉಳಿದಂತೆ ಏನೂ ಗೊತ್ತಿರುವುದಿಲ್ಲ. ರಾಮ ಎಂದು ಯಾರಿಗೆ ಹೇಳಲಾಗುತ್ತದೆ, ಕೃಷ್ಣ ಎಂದು ಯಾರಿಗೆ ಹೇಳುತ್ತಾರೆ, ಯಾವಾಗ ಬರುತ್ತಾರೆ ಎಂದು ಏನನ್ನೂ ತಿಳಿದುಕೊಂಡಿಲ್ಲ. ಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ ಇದನ್ನು ಯಾರು ಕಲಿಸಿದರು ಗುರುಗಳು, ಕೃಷ್ಣನು ದ್ವಾಪರದಲ್ಲಿ ಬಂದಿದ್ದಾದರೆ ನಂತರ ಕಲಿಯುಗ ಬಂದುಬಿಟ್ಟಿತಲ್ಲವೆ! ತಮೋಪ್ರಧಾನವಾಗಿಬಿಟ್ಟನಲ್ಲವೆ! ತಂದೆಯು ತಿಳಿಸುತ್ತಾರೆ- ನಾನು ಸಂಗಮದಲ್ಲಿಯೇ ಬಂದು ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುತ್ತೇನೆ. ನೀವು ಎಷ್ಟೊಂದು ಅಂದಶ್ರದ್ಧೆಯುಳ್ಳವರಾಗಿಬಿಟ್ಟಿದ್ದೀರಿ. ತಂದೆಯು ತಿಳಿಸುತ್ತಾರೆ- ಮುಳ್ಳಿನಿಂದ ಹೂವಾಗುವವರಿದ್ದರೆ ತಕ್ಷಣ ತಿಳಿದುಬಿಡುತ್ತಾರೆ. ಹಾ! ಇದು ಸಂಪೂರ್ಣ ಸತ್ಯವಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಕೆಲಕೆಲವರು ಬಹಳ ಚೆನ್ನಾಗಿ ತಿಳಿದುಕೊಂಡು ನೀವು ಬಹಳ ಚೆನ್ನಾಗಿ ತಿಳಿಸಿಕೊಟ್ಟಿರೆಂದು ಹೇಳುತ್ತಾರೆ. 84 ಜನ್ಮಗಳ ಕಥೆಯಂತೂ ಯಥಾರ್ಥವಾಗಿದೆ. ಜ್ಞಾನಸಾಗರ ತಂದೆಯು ಒಬ್ಬರೇ ಆಗಿದ್ದಾರೆ. ಅವರೇ ಬಂದು ನಿಮಗೆ ಪೂರ್ಣಜ್ಞಾನವನ್ನು ಕೊಡುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸದ್ಗುರು ತಂದೆಯ ನೆನಪಿನಿಂದ ಬುದ್ಧಿಯನ್ನು ಸತೋಪ್ರಧಾನ ಮಾಡಿಕೊಳ್ಳಬೇಕು. ಸತ್ಯವಾಗಬೇಕು. ಆಸ್ತಿಕರಾಗಿ ಅನ್ಯರನ್ನು ಆಸ್ತಿಕರನ್ನಾಗಿ ಮಾಡುವ ಸೇವೆ ಮಾಡಬೇಕು. |
2. ಈಗ ವಾನಪ್ರಸ್ಥ ಸ್ಥಿತಿಯಾಗಿದೆ ಆದ್ದರಿಂದ ಬೇಹದ್ದಿನ ಸನ್ಯಾಸಿಯಾಗಿ ಎಲ್ಲದರಿಂದ ಬುದ್ಧಿಯೋಗವನ್ನು ತೆಗೆಯಬೇಕು. ಪಾವನರಾಗಬೇಕು ಹಾಗೂ ದೈವೀಗುಣವನ್ನು ಧಾರಣೆ ಮಾಡಬೇಕು. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ, ಇದು ಪಾಪದ ಪ್ರಪಂಚವಾಗಿದೆ. ಇದು ಪಾಪಾತ್ಮರ ಪ್ರಪಂಚವೆಂದು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ. ಇದು ಎಷ್ಟು ಕೆಟ್ಟ ಅಕ್ಷರವಾಗಿದೆ ಆದರೆ ನಿಜವಾಗಿಯೂ ಇದು ಪಾಪಾತ್ಮರ ಪ್ರಪಂಚವಾಗಿದೆ, ಅವಶ್ಯವಾಗಿ ಯಾವುದೋ ಪುಣ್ಯಾತ್ಮರ ಪ್ರಪಂಚವಿತ್ತು ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಪಾಪಾತ್ಮರ ಪ್ರಪಂಚಕ್ಕೆ ನರಕವೆಂದು ಹೇಳಲಾಗುತ್ತದೆ. ಭಾರತದಲ್ಲಿಯೇ ಸ್ವರ್ಗ ಮತ್ತು ನರಕದ ಬಹಳ ಚರ್ಚೆ ಇದೆ. ಮನುಷ್ಯರು ಸತ್ತರೂ ಸಹ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಇದುವರೆಗೂ ನರಕವಾಸಿಯಾಗಿದ್ದರು, ಪತಿತ ಪ್ರಪಂಚದಿಂದ ಪಾವನ ಪ್ರಪಂಚದಲ್ಲಿ ಹೋದರೆಂದು ಇದರಿಂದ ಸಿದ್ಧವಾಗುತ್ತದೆ ಆದರೆ ಮನುಷ್ಯರಿಗೆ ಏನೂ ತಿಳಿದಿಲ್ಲ, ಏನು ಬರುತ್ತದೆಯೋ ಅದನ್ನು ಹೇಳಿ ಬಿಡುತ್ತಾರೆ. ಯಥಾರ್ಥ ಅರ್ಥವೇನನ್ನೂ ತಿಳಿದುಕೊಂಡಿಲ್ಲ. |
ತಂದೆಯು ಬಂದು ನೀವು ಮಕ್ಕಳಿಗೆ ಸಮಾಧಾನ ಪಡಿಸುತ್ತಾರೆ - ಇನ್ನೂ ಸ್ವಲ್ಪ ತಾಳ್ಮೆ ವಹಿಸಿ, ನೀವು ಪಾಪಗಳ ಹೊರೆಯಿಂದ ಬಹಳ ಭಾರಿಯಾಗಿ ಬಿಟ್ಟಿದ್ದೀರಿ, ಈಗ ನಿಮ್ಮನ್ನು ಪುಣ್ಯಾತ್ಮರನ್ನಾಗಿ ಮಾಡಿ ಇಂತಹ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೇನೆ, ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿ ಯಾವುದೇ ಪಾಪವಾಗಲಿ, ದುಃಖವಾಗಲಿ ಇರುವುದಿಲ್ಲ. ಮಕ್ಕಳಿಗೆ ಈಗ ಧೈರ್ಯ ಸಿಕ್ಕಿದೆ, ನಾವು ಇಂದು ಇಲ್ಲಿದ್ದೇವೆ ನಾಳೆ ನಮ್ಮ ಶಾಂತಿಧಾಮ, ಸುಖಧಾಮಕ್ಕೆ ಹೋಗುತ್ತೇವೆ. ಹೇಗೆ ರೋಗಿ ಮನುಷ್ಯರು ಸ್ವಲ್ಪ ಸರಿಹೋದರೆ ಸಾಕು, ವೈದ್ಯರು ನೀವು ಬಹುಬೇಗನೆ ಚೆನ್ನಾಗಿ ಆಗಿಬಿಡುತ್ತೀರಿ ಎಂದು ಧೈರ್ಯ ತರಿಸುತ್ತಾರೆ. ಈಗ ಇದಂತೂ ಬೇಹದ್ದಿನ ಧೈರ್ಯವಾಗಿದೆ. ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವಂತೂ ಬಹಳ ದುಃಖಿ, ಪತಿತರಾಗಿ ಬಿಟ್ಟಿದ್ದೀರಿ. ನಾನೀಗ ನೀವು ಮಕ್ಕಳನ್ನು ಆಸ್ತಿಕರನ್ನಾಗಿ ಮಾಡುತ್ತೇನೆ. ಮತ್ತೆ ರಚನೆಯ ಪರಿಚಯವನ್ನೂ ಕೊಡುತ್ತೇನೆ. ಋಷಿ-ಮುನಿಗಳಂತೂ ನಾವು ರಚಯಿತ ಮತ್ತು ರಚನೆಯನ್ನು ಅರಿತುಕೊಂಡಿಲ್ಲವೆಂದು ಹೇಳುತ್ತಾ ಬಂದಿದ್ದಾರೆ ಅಂದಮೇಲೆ ಈಗ ಅವರನ್ನು ಯಾರು ಅರಿತುಕೊಂಡಿದ್ದಾರೆ? ಯಾವಾಗ ಮತ್ತು ಯಾರ ಮೂಲಕ ಅರಿತುಕೊಳ್ಳಬಹುದು ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ಯಾರೂ ಅರಿತುಕೊಂಡಿಲ್ಲ. ತಂದೆಯು ಹೇಳುತ್ತಾರೆ - ನಾನು ಸಂಗಮಯುಗದಲ್ಲಿ ಬಂದು ಡ್ರಾಮಾ ಅನುಸಾರ ನೀವು ಮಕ್ಕಳನ್ನು ಮೊಟ್ಟ ಮೊದಲು ಆಸ್ತಿಕರನ್ನಾಗಿ ಮಾಡುತ್ತೇನೆ. ನಂತರ ನಿಮಗೆ ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತೇನೆ ಅರ್ಥಾತ್ ನಿಮ್ಮ ಜ್ಞಾನದ ಮೂರನೇ ನೇತ್ರವನ್ನು ತೆರೆಯುತ್ತೇನೆ. ನಿಮಗೆ ಪ್ರಕಾಶತೆಯು ಸಿಕ್ಕಿದೆ, ಹೇಗೆ ಕಣ್ಣಿನ ದೃಷ್ಟಿಯು ಹೊರಟುಹೋದರೆ ಮನುಷ್ಯರು ಅಂಧರಾಗಿ ಬಿಡುತ್ತಾರೆ. ಈ ಸಮಯದಲ್ಲಿ ಮನುಷ್ಯರಿಗೆ ಜ್ಞಾನದ ಮೂರನೇ ನೇತ್ರವಿಲ್ಲ, ಮನುಷ್ಯರಾಗಿಯೂ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲವೆಂದರೆ ಅವರಿಗೆ ಬುದ್ಧಿಹೀನರೆಂದು ಹೇಳಲಾಗುತ್ತದೆ. ಅಂಧರ ಮಕ್ಕಳು ಅಂಧರು, ಒಳ್ಳೆಯವರ ಮಕ್ಕಳು ಒಳ್ಳೆಯವರೆಂದು ಗೀತೆಯಲ್ಲಿಯೂ ಇದೆ. ಮಹಾಭಾರತ ಯುದ್ಧವಾಗಿತ್ತು ಮತ್ತು ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗಿತ್ತು ಎಂದು ತೋರಿಸುತ್ತಾರೆ. ತಂದೆಯು ಬಂದು ಆತ್ಮರಿಗೆ ಸತ್ಯಯುಗೀ ಸ್ವರಾಜ್ಯವನ್ನು ಕೊಡುವುದಕ್ಕಾಗಿ ರಾಜಯೋಗವನ್ನು ಕಲಿಸಿದ್ದರು. ಆತ್ಮರು ಹೇಳುತ್ತಾರೆ - ನಾನು ರಾಜನಾಗಿದ್ದೇನೆ, ನಾನು ವಕೀಲನಾಗಿದ್ದೇನೆ ಎಂದು. ಈಗ ವಿಶ್ವದ ರಚಯಿತ ತಂದೆಯ ಮೂಲಕ ನಾವು ವಿಶ್ವದ ಸ್ವರಾಜ್ಯವನ್ನು ಪಡೆಯುತ್ತಿದ್ದೇವೆಂದು ನೀವಾತ್ಮರಿಗೆ ತಿಳಿದಿದೆ, ಅವರು ಯಾವುದರ ರಚಯಿತನಾಗಿದ್ದಾರೆ? ಹೊಸ ಪ್ರಪಂಚದ ರಚಯಿತ. ತಂದೆಯು ಹೊಸ ಸೃಷ್ಟಿಯನ್ನು ರಚಿಸುತ್ತಾರೆ, ರಚಯಿತನೂ ಆಗಿದ್ದಾರೆ ಮತ್ತು ಅವರಲ್ಲಿ ಸಂಪೂರ್ಣ ಜ್ಞಾನವೂ ಇದೆ. ಇಡೀ ವಿಶ್ವದ ಚರಿತ್ರೆಯನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ, ಯಾರಿಗೂ ಜ್ಞಾನದ ಮೂರನೇ ನೇತ್ರವಿಲ್ಲ. ತಂದೆಯ ವಿನಃ ಯಾರೂ ಮೂರನೇ ನೇತ್ರವನ್ನು ಕೊಡಲು ಸಾಧ್ಯವಿಲ್ಲ. ವಿಶ್ವದ ಚರಿತ್ರೆ-ಭೂಗೋಳ, ಮೂಲವತನ, ಸೂಕ್ಷ್ಮವತನ, ಸ್ಥೂಲವತನ... ಇದೆಲ್ಲವನ್ನೂ ನೀವು ತಿಳಿದುಕೊಂಡಿದ್ದೀರಿ. ಮೂಲವತನವು ಆತ್ಮರ ಸೃಷ್ಟಿಯಾಗಿದೆ. ನಾವು ಬ್ರಹ್ಮತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ಸನ್ಯಾಸಿಗಳು ಹೇಳುತ್ತಾರೆ ಆದರೆ ಇಲ್ಲ, ನಿಮಗೆ ತಿಳಿದಿದೆ - ಹೋಗಿ ಬ್ರಹ್ಮ್ತತ್ವದಲ್ಲಿ ನಿವಾಸ ಮಾಡುತ್ತಾರೆ ಅದು ಶಾಂತಿಧಾಮ, ಮನೆಯಾಗಿದೆ. ಸನ್ಯಾಸಿಗಳು ಬ್ರಹ್ಮತತ್ವವೇ ಭಗವಂತನೆಂದು ಹೇಳುತ್ತಾರೆ, ಎಷ್ಟೊಂದು ಅಂತರವಿದೆ! ಬಹ್ಮ್ವಂತೂ ತತ್ವವಾಗಿದೆ, ಹೇಗೆ ಆಕಾಶ ತತ್ವವಿದೆ ಹಾಗೆಯೇ ಬ್ರಹ್ಮ್ ವೂ ತತ್ವವಾಗಿದೆ. ಅಲ್ಲಿ ನಾವಾತ್ಮರು ಮತ್ತು ಪರಮಪಿತ ಪರಮಾತ್ಮನು ನಿವಾಸ ಮಾಡುತ್ತಾರೆ, ಅದಕ್ಕೆ ಮಧುರ ಮನೆಯೆಂದು ಹೇಳಲಾಗುತ್ತದೆ, ಅದು ಆತ್ಮಗಳ ಮನೆಯಾಗಿದೆ. ಮಕ್ಕಳಿಗೆ ಅರ್ಥವಾಗಿದೆ, ಬ್ರಹ್ಮ್ ತತ್ವದಲ್ಲಿ ಯಾವುದೇ ಆತ್ಮರು ಲೀನವಾಗುವುದಿಲ್ಲ ಮತ್ತು ಆತ್ಮವೆಂದೂ ವಿನಾಶ ಹೊಂದುವುದಿಲ್ಲ. ಆತ್ಮವು ಅವಿನಾಶಿಯಾಗಿದೆ, ಈ ನಾಟಕವೂ ಸಹ ಮಾಡಿ-ಮಾಡಲ್ಪಟ್ಟ ಅವಿನಾಶಿಯಾಗಿದೆ. ಈ ಡ್ರಾಮಾದಲ್ಲಿ ಎಷ್ಟೊಂದು ಮಂದಿ ಪಾತ್ರಧಾರಿಗಳಿದ್ದಾರೆ. ಈಗ ಸಂಗಮಯುಗವಾಗಿದೆ, ಈಗ ಎಲ್ಲಾ ಪಾತ್ರಧಾರಿಗಳು ಹಾಜರಾಗಿದ್ದಾರೆ. ಹೇಗೆ ನಾಟಕವು ಮುಕ್ತಾಯವಾದಾಗ ಎಲ್ಲಾ ಪಾತ್ರಧಾರಿಗಳು ನಿರ್ದೇಶಕ ಮೊದಲಾದವರೆಲ್ಲರೂ ಬಂದು ಹಾಜರಾಗುತ್ತಾರೆ, ಈ ಸಮಯದಲ್ಲಿ ಈ ಬೇಹದ್ದಿನ ನಾಟಕವೂ ಸಹ ಮುಕ್ತಾಯವಾಗುತ್ತದೆ ಮತ್ತೆ ಪುನರಾವರ್ತನೆ ಆಗುತ್ತದೆ. ಆ ಹದ್ದಿನ ನಾಟಕಗಳಲ್ಲಿ ಬದಲಾವಣೆ ಆಗಬಹುದು, ನಾಟಕವು ಹಳೆಯದಾಗಿ ಬಿಡುತ್ತದೆ ಆದರೆ ಈ ಬೇಹದ್ದಿನ ನಾಟಕವು ಅನಾದಿ-ಅವಿನಾಶಿಯಾಗಿದೆ. ತಂದೆಯು ತ್ರಿಕಾಲದರ್ಶಿ, ತ್ರಿನೇತ್ರಿಗಳನ್ನಾಗಿ ಮಾಡುತ್ತಾರೆ. ದೇವತೆಗಳು ತ್ರಿಕಾಲದರ್ಶಿಗಳಾಗಿರುವುದಿಲ್ಲ. ಶೂದ್ರ ವರ್ಣದವರು ತ್ರಿಕಾಲದರ್ಶಿಗಳಾಗಿರುವುದಿಲ್ಲ, ಕೇವಲ ನೀವು ಬ್ರಾಹ್ಮಣ ವರ್ಣದವರೇ ತ್ರಿಕಾಲದರ್ಶಿಗಳಾಗಿದ್ದೀರಿ. ಎಲ್ಲಿಯವರೆಗೆ ಬ್ರಾಹ್ಮಣರು ಆಗುವುದಿಲ್ಲವೋ ಅಲ್ಲಿಯವರೆಗೆ ಜ್ಞಾನದ ಮೂರನೇ ನೇತ್ರವು ಸಿಗಲು ಸಾಧ್ಯವಿಲ್ಲ. ನೀವು ವೃಕ್ಷದ ಆದಿ-ಮಧ್ಯ-ಅಂತ್ಯವನ್ನು ಎಲ್ಲಾ ಧರ್ಮಗಳನ್ನೂ ತಿಳಿದುಕೊಂಡಿದ್ದೀರಿ. ನೀವೂ ಸಹ ಮಾ|| ಜ್ಞಾನಪೂರ್ಣನಾಗುತ್ತೀರಿ. ತಂದೆಯು ಮಕ್ಕಳನ್ನು ತನ್ನ ಸಮಾನರನ್ನಾಗಿ ಮಾಡುತ್ತಾರಲ್ಲವೆ. ಜ್ಞಾನ ಸಾಗರನು ಒಬ್ಬರೇ ತಂದೆಯಾಗಿದ್ದಾರೆ, ಅವರು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲಾ ಮಕ್ಕಳನ್ನು ಆಸ್ತಿಕರನ್ನಾಗಿ ಮಾಡಿ ತ್ರಿಕಾಲದರ್ಶಿಗಳನ್ನಾಗಿ ಮಾಡುತ್ತಾರೆ. ಈಗ ನೀವು ಮಕ್ಕಳು ಇದನ್ನು ಎಲ್ಲರಿಗೆ ಹೇಳಬೇಕಾಗಿದೆ – ಶಿವ ತಂದೆಯು ಬಂದಿದ್ದಾರೆ, ಅವರನ್ನು ನೆನಪು ಮಾಡಿರಿ. ಯಾರು ಆಸ್ತಿಕರಾಗುವರೋ ಅವರು ತಂದೆಯನ್ನು ಬಹಳ ಚೆನ್ನಾಗಿ ಪ್ರೀತಿ ಮಾಡುತ್ತಾರೆ. ನಿಮ್ಮಮೇಲೆ ತಂದೆಗೂ ಪ್ರೀತಿಯಿದೆ, ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ವಿನಶ್ಯಂತಿ ಮತ್ತು ವಿನಾಶಕಾಲೇ ಪ್ರೀತಿ ಬುದ್ಧಿ ವಿಜಯಂತಿ ಎಂದು ಗಾಯನವಿದೆ. ಗೀತೆಯಲ್ಲಿ ಕೆಲಕೆಲವು ಅಕ್ಷರಗಳು ಸತ್ಯವಾಗಿವೆ. ಶ್ರೀಮದ್ಭಗವದ್ಗೀತೆಯು ಸರ್ವೋತ್ತಮ ಶಾಸ್ತ್ರವಾಗಿದೆ, ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಇದನ್ನೂ ತಿಳಿಸಿದ್ದಾರೆ - ಮುಖ್ಯವಾಗಿ ನಾಲ್ಕು ಧರ್ಮ ಶಾಸ್ತ್ರಗಳಿವೆ ಮತ್ತು ಅನ್ಯ ಧರ್ಮದವರೆಲ್ಲರೂ ಕೇವಲ ತಮ್ಮ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಅವರು ರಾಜ್ಯಭಾರ ಮಾಡುವ ಮಾತಿಲ್ಲ ಮತ್ತು ಅವರಿಗೆ ಗುರುಗಳೆಂದೂ ಹೇಳಲು ಸಾಧ್ಯವಿಲ್ಲ. ಹಿಂತಿರುಗಿ ಕರೆದುಕೊಂಡು ಹೋಗುವುದೇ ಗುರುಗಳ ಕರ್ತವ್ಯವಾಗಿದೆ. ಇಬ್ರಾಹಿಂ, ಬುದ್ಧ, ಕ್ರೈಸ್ಟ್ ಮೊದಲಾದವರು ಬರುತ್ತಾರೆ, ಅವರ ಹಿಂದೆ ಅವರ ವಂಶಾವಳಿಯೂ ಬರುತ್ತದೆ ಆದರೆ ಯಾರು ದುಃಖದಿಂದ ಬಿಡಿಸಿ ಸುಖದಲ್ಲಿ ಕರೆದುಕೊಂಡು ಹೋಗುವರೋ ಅವರೇ ನಿಜವಾದ ಗುರುವಾಗಿದ್ದಾರೆ. ಇವರಂತೂ ಕೇವಲ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ, ಇಲ್ಲಿ ಅನೇಕರಿಗೆ ಗುರುಗಳೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಬ್ರಹ್ಮಾ-ವಿಷ್ಣು-ಶಂಕರನಿಗೂ ಸಹ ಗುರುಗಳೆಂದು ಹೇಳಲು ಸಾಧ್ಯವಿಲ್ಲ. ಶಿವತಂದೆಯೊಬ್ಬರೇ ಸರ್ವರ ಸದ್ಗತಿದಾತನಾಗಿದ್ದಾರೆ. ಒಬ್ಬ ರಾಮನನ್ನೇ ಕರೆಯುತ್ತಾರೆ. ಶಿವತಂದೆಗೂ ರಾಮನೆಂದು ಹೇಳುತ್ತಾರೆ. ಅನೇಕ ಭಾಗಗಳಿವೆ ಆದ್ದರಿಂದ ಅನೇಕ ಹೆಸರಗಳನ್ನು ಇಟ್ಟುಬಿಟ್ಟಿದ್ದಾರೆ. ಮೂಲ ಹೆಸರಾಗಿದೆ ಶಿವ. ಅವರಿಗೆ ಸೋಮನಾಥನೆಂದೂ ಹೇಳುತ್ತಾರೆ, ಸೋಮರಸವನ್ನು ಕುಡಿಸಿದರು ಅರ್ಥಾತ್ ಜ್ಞಾನ ಧನವನ್ನು ಕೊಟ್ಟರು, ಬಾಕಿ ನೀರು ಇತ್ಯಾದಿಗಳ ಮಾತಿಲ್ಲ. ನಿಮ್ಮನ್ನು ಸಮ್ಮುಖದಲ್ಲಿ ಜ್ಞಾನಪೂರ್ಣ, ಆನಂದ ಸ್ವರೂಪರನ್ನಾಗಿ ಮಾಡುತ್ತಿದ್ದಾರೆ. ತಂದೆಯಂತೂ ಆನಂದ ಸಾಗರನಾಗಿದ್ದಾರೆ, ನೀವು ಮಕ್ಕಳನ್ನು ಜ್ಞಾನ ನದಿಗಳನ್ನಾಗಿ ಮಾಡುತ್ತಾರೆ. ಸಾಗರವು ಒಂದೇ ಇರುತ್ತದೆ, ಒಂದು ಸಾಗರದಿಂದ ಅನೇಕ ನದಿಗಳು ಉಕ್ಕುತ್ತವೆ, ನೀವೀಗ ಸಂಗಮದಲ್ಲಿದ್ದೀರಿ, ಈ ಸಮಯದಲ್ಲಿ ಇಡೀ ಧರಣಿಯೇ ರಾವಣನ ಸ್ಥಾನವಾಗಿದೆ, ಕೇವಲ ಒಂದು ಲಂಕೆಯಷ್ಟೇ ಇರಲಿಲ್ಲ, ಇಡೀ ಧರಣಿಯ ಮೇಲೆ ರಾವಣ ರಾಜ್ಯವಿತ್ತು. ರಾಮ ರಾಜ್ಯದಲ್ಲಿ ಬಹಳ ಕೆಲವರೇ ಮನುಷ್ಯರಿರುತ್ತಾರೆ, ಇದು ಕೇವಲ ಈಗ ನಿಮ್ಮ ಬುದ್ಧಿಯಲ್ಲಿದೆ, ತಂದೆಯು ತಿಳಿಸಿದ್ದಾರೆ - ನಾನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಮೂರು ಧರ್ಮಗಳ ಸ್ಥಾಪನೆ ಮಾಡುತ್ತೇನೆ ನಂತರ ವೈಶ್ಯ, ಶೂದ್ರ ವರ್ಣದಲ್ಲಿ ಮತ್ತೆಲ್ಲರೂ ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ. ಅನೇಕ ಧರ್ಮಗಳ ವಿನಾಶವನ್ನೂ ಮಾಡಿಸುತ್ತಾರೆ. ಭಾರತದಲ್ಲಿ ತ್ರಿಮೂರ್ತಿಯ ಚಿತ್ರವನ್ನೂ ಮಾಡುತ್ತಾರೆ ಆದರೆ ಅದರಲ್ಲಿ ಶಿವನ ಚಿತ್ರವನ್ನು ಮರೆ ಮಾಡಿ ಬಿಟ್ಟಿದ್ದಾರೆ. ಶಿವನಿಂದಲೇ ಸಿದ್ಧವಾಗುತ್ತದೆ - ಪರಮಪಿತ ಪರಮಾತ್ಮ ಶಿವನು ಬ್ರಹ್ಮಾರವರ ಮೂಲಕ ಸ್ಥಾಪನೆಯನ್ನು, ವಿಷ್ಣುವಿನ ಮೂಲಕ ಪಾಲನೆಯನ್ನು ಮಾಡಿಸುತ್ತಾರೆ. ಅವರಿಗೆ ಮಾಡಿ-ಮಾಡಿಸುವವರೆಂದು ಹೇಳಲಾಗುತ್ತದೆ. ತಾನೂ ಕರ್ಮ ಮಾಡುತ್ತಾರೆ, ನೀವು ಮಕ್ಕಳಿಗೂ ಕಲಿಸುತ್ತಾರೆ. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ರಾವಣ ರಾಜ್ಯದಲ್ಲಿ ನೀವು ಯಾವ ಕರ್ಮ ಮಾಡುತ್ತೀರೋ ಅದು ವಿಕರ್ಮವಾಗಿ ಬಿಡುತ್ತದೆ, ಸತ್ಯಯುಗದಲ್ಲಿ ನೀವು ಯಾವ ಕರ್ಮ ಮಾಡುತ್ತೀರೋ ಅದು ಅಕರ್ಮವಾಗುತ್ತದೆ. ಇಲ್ಲಿ ವಿಕರ್ಮವೇ ಆಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ಸತ್ಯಯುಗದಲ್ಲಿ 5 ವಿಕಾರಗಳಿರುವುದೇ ಇಲ್ಲ. ಒಂದೊಂದು ಮಾತು ತಿಳಿದುಕೊಳ್ಳುವಂತದ್ದಾಗಿದೆ ಮತ್ತು ಸೆಕೆಂಡಿನಲ್ಲಿ ತಿಳಿಸಲಾಗುತ್ತದೆ. ಓಂನ ಅರ್ಥವನ್ನು ಮನುಷ್ಯರು ಬಹಳ ವಿಸ್ತಾರವಾಗಿ ತಿಳಿಸುತ್ತಾರೆ, ತಂದೆಯು ಹೇಳುತ್ತಾರೆ - ಓಂ ಎಂದರೆ ನಾನು ಆತ್ಮ, ಇದು ನನ್ನ ಶರೀರವಾಗಿದೆ. ಎಷ್ಟು ಸಹಜವಾಗಿದೆ, ನಾವು ಸುಖಧಾಮದಲ್ಲಿ ಹೋಗುತ್ತಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ. ಕೃಷ್ಣನ ಮಂದಿರಕ್ಕೆ ಸುಖಧಾಮವೆಂದು ಹೇಳುತ್ತಾರೆ ವಾಸ್ತವದಲ್ಲಿ ಕೃಷ್ಣ ಪುರಿಯಾಗಿದೆ. ಮಾತೆಯರು ಕೃಷ್ಣ ಪುರಿಯಲ್ಲಿ ಹೋಗುವುದಕ್ಕಾಗಿ ಬಹಳ ಪರಿಶ್ರಮ ಪಡುತ್ತಾರೆ, ನೀವೀಗ ಭಕ್ತಿ ಮಾಡುವುದಿಲ್ಲ. ನಿಮಗೆ ಜ್ಞಾನ ಸಿಕ್ಕಿದೆ ಮತ್ತ್ಯಾವುದೇ ಮನುಷ್ಯ ಮಾತ್ರರಲ್ಲಿ ಈ ಜ್ಞಾನವಿಲ್ಲ. ನಾನು ನಿಮ್ಮನ್ನು ಪಾವನರನ್ನಾಗಿ ಮಾಡಿ ಹೋಗುತ್ತೇನೆ ನಂತರ ಪತಿತರನ್ನಾಗಿ ಯಾರು ಮಾಡುತ್ತಾರೆ? ಇದನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಎಲ್ಲಾ ಪುರುಷರು ಅಥವಾ ಸ್ತ್ರೀಯರು ಭಕ್ತಿನಿಯರಾಗಿದ್ದಾರೆ, ಸೀತೆಯರಾಗಿದ್ದಾರೆ, ಎಲ್ಲರ ಸದ್ಗತಿ ಮಾಡುವವರು ತಂದೆಯಾಗಿದ್ದಾರೆ. ಎಲ್ಲರೂ ರಾವಣನ ಬಂಧನದಲ್ಲಿದ್ದಾರೆ. ಇದು ದುಃಖಧಾಮವಾಗಿದೆ. ತಂದೆಯು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ, ಇಂತಹ ತಂದೆಯನ್ನು 5000 ವರ್ಷಗಳ ನಂತರ ಕೇವಲ ನೀವು ನೋಡುತ್ತೀರಿ. ಲಕ್ಷ್ಮೀ-ನಾರಾಯಣರ ಆತ್ಮಕ್ಕೆ ಈಗ ಜ್ಞಾನವಿದೆ, ನಾವು ಬಾಲ್ಯದಲ್ಲಿ ಈ ಕೃಷ್ಣನಾಗಿರುತ್ತೇನೆ ನಂತರ ದೊಡ್ಡವನಾಗಿ ಹೀಗೆ ಶರೀರ ಬಿಡುತ್ತೇನೆ ಮತ್ತೆ ಇನ್ನೊಂದು ಶರೀರ ತೆಗೆದುಕೊಳ್ಳುತ್ತೇನೆ ಮತ್ತ್ಯಾರಿಗೂ ಈ ಜ್ಞಾನವಿಲ್ಲ. |
ತಂದೆಯು ಹೇಳುತ್ತಾರೆ - ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಶಿವ ತಂದೆಯು ನಿಮ್ಮನ್ನು ಅಮರರನ್ನಾಗಿ ಮಾಡಲು ಅಮರಲೋಕದಲ್ಲಿ ಕರೆದುಕೊಂಡು ಹೋಗುವುದಕ್ಕಾಗಿ ಅಮರ ಕಥೆಯನ್ನು ತಿಳಿಸುತ್ತಿದ್ದಾರೆ. ಇದು ಮೃತ್ಯುಲೋಕವಾಗಿದೆ. ನೀವೆಲ್ಲಾ ಪಾರ್ವತಿಯರು ಅಮರನಾಥನ ಮೂಲಕ ಅಮರ ಕಥೆಯನ್ನು ಕೇಳುತ್ತಿದ್ದೀರಿ, ನೀವು ಸತ್ಯ-ಸತ್ಯವಾಗಿ ಆಗುತ್ತೀರಿ. ಕೇವಲ ತಂದೆಯನ್ನು ನೆನಪು ಮಾಡಿದರೆ ನಿಮ್ಮ ಆತ್ಮವು ಅಮರನಾಗುತ್ತದೆ. ಅಲ್ಲಿ ದುಃಖದ ಮಾತುಗಳಿರುವುದಿಲ್ಲ, ಹೇಗೆ ಸರ್ಪವು ಒಂದು ಪೋರೆಯನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ಇವೆಲ್ಲಾ ಉದಾಹರಣೆಗಳು ಇಲ್ಲಿಯದಾಗಿದೆ. ಭ್ರಮರಿಯ ಉದಾಹರಣೆಯೂ ಇಲ್ಲಿಯದಾಗಿದೆ. ನೀವು ಬ್ರಾಹ್ಮಣರು ಏನು ಮಾಡುತ್ತೀರಿ? ವಿಕಾರಿ ಕೀಟಗಳನ್ನು ಪರಿವರ್ತನೆ ಮಾಡಿ ದೇವತೆಗಳನ್ನಾಗಿ ಮಾಡುವಿರಿ. ಮನುಷ್ಯರದೇ ಮಾತಾಗಿದೆ. ಭ್ರಮರಿಯದಂತೂ ಇದೊಂದು ದೃಷ್ಟಾಂತವಾಗಿದೆ. ನೀವು ಬ್ರಾಹ್ಮಣ ಮಕ್ಕಳು ಈಗ ತಂದೆಯ ಮೂಲಕ ಅಮರ ಕಥೆಯನ್ನು ಕೇಳುತ್ತಿದ್ದೀರಿ, ಅನ್ಯರಿಗೆ ಕುಳಿತು ಜ್ಞಾನದ ಭೂ ಭೂ ಮಾಡುತ್ತೀರಿ, ಇದರಿಂದ ಮನುಷ್ಯನಿಂದ ದೇವತೆ, ಸ್ವರ್ಗದ ಪರಿಗಳಾಗಿ ಬಿಡುವರು. ಕೇವಲ ಮಾನಸ ಸರೋವರದಲ್ಲಿ ಮುಳುಗಿದರೆ ಯಾರೂ ದೇವತೆಗಳಾಗುವುದಿಲ್ಲ, ಇದೆಲ್ಲವೂ ಸುಳ್ಳಾಗಿದೆ. ನೀವು ಸುಳ್ಳನ್ನೇ ಕೇಳುತ್ತಾ ಬಂದಿದ್ದೀರಿ, ಈಗ ತಂದೆಯು ಸತ್ಯವಂತರನ್ನಾಗಿ ಮಾಡುತ್ತಾರೆ. ತಂದೆಯು ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿಯಿರಿ, ನೀವು ತಿಳಿದುಕೊಂಡಿದ್ದೀರಿ - ನಿರಾಕಾರ ಪರಮಪಿತ ಪರಮಾತ್ಮನು ಈ ಮುಖದ ಮೂಲಕ ತಿಳಿಸುತ್ತಿದ್ದಾರೆ. ನಾವು ಈ ಕಿವಿಗಳ ಮೂಲಕ ಕೇಳುತ್ತಿದ್ದೇವೆ, ಆತ್ಮಾಭಿಮಾನಿಗಳಾಗಬೇಕಾಗಿದೆ, ಮತ್ತೆ ಪರಮಾತ್ಮನೂ ಸಹ ನಾನು ಯಾರು ಎಂಬುದನ್ನು ಅನುಭೂತಿ ಮಾಡಿಸುತ್ತಾರೆ ಮತ್ತ್ಯಾರೂ ಆತ್ಮಾಭಿಮಾನಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆಯ ವಿನಃ ಆತ್ಮಾಭಿಮಾನಿಗಳಾಗಿ ಎಂಬುದನ್ನು ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರ ಜಯಂತಿ ಹೇಗಾಗುವುದು? ಎಂಬುದನ್ನು ತಿಳಿದುಕೊಂಡಿಲ್ಲ. ತಂದೆಯೇ ಸ್ವಯಂ ಬಂದು ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಇಲ್ಲದಿದ್ದರೆ ಬ್ರಹ್ಮಾ ಎಲ್ಲಿಂದ ಬರುವರು? ಪತಿತ ಶರೀರವೇ ಬೇಕಾಗಿದೆ, ಸೂಕ್ಷ್ಮ ವತನವಾಸಿ ಬ್ರಹ್ಮನಲ್ಲಿ ವಿರಾಜಮಾನನಾಗಿ ಬ್ರಾಹ್ಮಣರನ್ನು ರಚಿಸುವುದಿಲ್ಲ. ನಾನು ಪತಿತ ಶರೀರ, ಪತಿತ ಪ್ರಪಂಚದಲ್ಲಿ ಬರುತ್ತೇನೆ. ಬ್ರಹ್ಮನ ಮೂಲಕ ಸ್ಥಾಪನೆಯೆಂದು ಗಾಯನವಿದೆ, ಯಾವುದರ ಸ್ಥಾಪನೆ ಮಾಡುವರೋ, ಯಾರು ಈ ಜ್ಞಾನವನ್ನು ಪಡೆಯುವರೋ ಅವರು ಈ ದೇವತೆಗಳು ಆಗಿ ಬಿಡುತ್ತಾರೆ. ಮನುಷ್ಯರು ಬ್ರಹ್ಮನ ಚಿತ್ರವನ್ನು ನೋಡಿ ತಬ್ಬಿಬ್ಬಾಗುತ್ತಾರೆ, ಇದಂತೂ ದಾದಾರವರ ಚಿತ್ರವೆಂದು ಹೇಳುತ್ತಾರೆ. ಪ್ರಜಾಪಿತ ಬ್ರಹ್ಮನಂತೂ ಅವಶ್ಯವಾಗಿ ಇಲ್ಲಿಯೇ ಇರುವರು. ಸೂಕ್ಷ್ಮವತನದಲ್ಲಿ ಪ್ರಜೆಗಳನ್ನು ಹೇಗೆ ರಚಿಸುವರು! ಪ್ರಜಾಪಿತನ ಮಕ್ಕಳು ಸಾವಿರಾರು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆ ಅಂದಮೇಲೆ ಇದು ಸುಳ್ಳಾಗಿದೆಯೇ? ನಾವು ಶಿವ ತಂದೆಯ ಮೂಲಕ ಆಸ್ತಿಯನ್ನು ಪಡೆಯುತ್ತಿದ್ದೇವೆ, ನೀವು ಮಕ್ಕಳಿಗೆ ತಿಳಿಸಲಾಗಿದೆ - ಸೂಕ್ಷ್ಮವತನದಲ್ಲಿರುವವರು ಅವ್ಯಕ್ತ ಬ್ರಹ್ಮನಾಗಿದ್ದಾರೆ, ಪ್ರಜಾಪಿತನಂತೂ ಸಾಕಾರದಲ್ಲಿ ಬೇಕು. ಈ ಪತಿತರೇ ನಂತರ ಪಾವನನಾಗುತ್ತಾರೆ. ತತ್ತ್ವಂ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಆತ್ಮಾಭಿಮಾನಿಗಳಾಗಿ ಈ ಕಿವಿಗಳ ಮೂಲಕ ಅಮರ ಕಥೆಯನ್ನು ಕೇಳಬೇಕಾಗಿದೆ. ಜ್ಞಾನದ ಭೂ ಭೂ ಮಾಡಿ ತಮ್ಮ ಸಮಾನ ಮಾಡಿಕೊಳ್ಳುವ ಸೇವೆಯಲ್ಲಿ ಇರಬೇಕಾಗಿದೆ. |
2. ತಂದೆಯ ಸಮಾನ ಜ್ಞಾನ ಸ್ವರೂಪ ಆನಂದ ಸ್ವರೂಪರಾಗಬೇಕಾಗಿದೆ. ಸೋಮ ರಸವನ್ನೂ ಕುಡಿಯಬೇಕು ಮತ್ತು ಕುಡಿಸಬೇಕಾಗಿದೆ. |
ಓಂ ಶಾಂತಿ. ಯಾರ ಮಹಿಮೆಯನ್ನು ಕೇಳಿದಿರಿ? ಬೇಹದ್ದಿನ ತಂದೆಯ ಮಹಿಮೆ. ಶ್ರೇಷ್ಠಾತಿ ಶ್ರೇಷ್ಠ ತಂದೆ ಪರಮಪಿತ ಪರಮಾತ್ಮನೆ ಆಗಿದ್ದಾರೆ, ಲೌಕಿಕ ತಂದೆಗಂತೂ ಈ ರೀತಿ ಯಾರೂ ಹೇಳುವುದಿಲ್ಲ. ಎಲ್ಲಾ ಆತ್ಮಗಳ ಪಾರಲೌಕಿಕ ತಂದೆಯು ಶ್ರೇಷ್ಠಾತಿಶ್ರೇಷ್ಠನಾಗಿದ್ದಾರೆ ಎಂದು ಮಕ್ಕಳು ತಿಳಿದಿದ್ದೀರಿ. ಅವರ ಹೆಸರು ಶಿವ ಎಂದಾಗಿದೆ. ಹೆಸರಿಲ್ಲದೆ ಯಾವ ವಸ್ತುವೂ ಇರಲು ಸಾಧ್ಯವಿಲ್ಲ, ಈ ಸಮಯದಲ್ಲಿ ಎಲ್ಲರಿಗೂ ರಾಹುವಿನ ಗ್ರಹಣ ಹಿಡಿದಿದೆ ಆದ್ದರಿಂದಲೇ ಇದನ್ನು ಕಬ್ಬಿಣದ ಯುಗವೆಂದು ಹೇಳಲಾಗುತ್ತದೆ. ದೆಶೆಗಳೂ ಇರುತ್ತದೆಯಲ್ಲವೆ. ಬೃಹಸ್ಪತಿ ದೆಶೆ, ಶುಕ್ರ ದೆಶೆ..... ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನೀವು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಮಹಿಮೆಯನ್ನೂ ಕೇಳಿದಿರಿ. ವಾಸ್ತವದಲ್ಲಿ ಅವರ ಹೆಸರು ಶಿವ ಎಂದಾಗಿದೆ ಉಳಿದಂತೆ ಅನೇಕ ಪ್ರಕಾರವಾಗಿ ಹೆಸರುಗಳನ್ನು ಇಟಿದ್ದಾರೆ. ವಾಸ್ತವದಲ್ಲಿ ಶಿವಬಾಬಾ ಎಂಬುದು ಹೆಸರಿದೆ. ನಾನು ಬೀಜರೂಪ, ಚೈತನ್ಯನಾಗಿದ್ದೇನೆ. ಸತ್ಚಿತ್ ಎಂದು ಹೇಳುತ್ತಾರೆ ನಂತರ ಸುಖದ ಸಾಗರ, ಆನಂದ ಸಾಗರ, ಶಾಂತಿಯ ಸಾಗರನೆಂದು ಹೇಳುತ್ತಾರೆ. ಅವರೊಬ್ಬರದೇ ಎಲ್ಲಾ ಮಹಿಮೆಗಳಿವೆ. ಭಾರತವಾಸಿಗಳು ಮಹಿಮೆ ಮಾಡುತ್ತಾರೆ ಆದರೆ ಸ್ವಲ್ಪವೂ ತಿಳಿದಿಲ್ಲ. ಕಲ್ಲು ಬುದ್ಧಿಯವರಾಗಿದ್ದಾರೆ, ಕಲ್ಲು ಬುದ್ಧಿಯವರನ್ನಾಗಿ ರಾವಣನು ಮಾಡಿದನು. ಸತ್ಯಯುಗದಲ್ಲಿ ಭಾರತವಾಸಿಗಳು ಪಾರಸ ಬುದ್ಧಿಯವರಾಗಿದ್ದರು, 5000 ವರ್ಷಗಳ ಹಿಂದೆ ಈ ಭಾರತವು ಪಾರಸ ಪುರಿಯಾಗಿತ್ತು, ಅದರಲ್ಲಿ ದೇವಿ-ದೇವತೆಗಳು ವಾಸ ಮಾಡುತ್ತಿದ್ದರು. ಭಾರತವನ್ನೇ ಅವಿನಾಶಿ ಖಂಡವೆಂದು ಗಾಯನ ಮಾಡುತ್ತಾರೆ, ಭಾರತದಲ್ಲಿಯೇ ಪಾರಸ ಬುದ್ಧಿಯಿರುವ ದೇವತೆಗಳಿದ್ದರು, ಈ ಸಮಯದಲ್ಲಿ ಕಲ್ಲು ಬುದ್ಧಿ ಪತಿತರಿದ್ದಾರೆ. ಪತಿತರು ಹೇಗಾಗುತ್ತಾರೆ ಎಂದು ನೀವು ಮಕ್ಕಳಿಗೆ ತಂದೆಯು ತಿಳಿಸುತ್ತಾರೆ. ದ್ವಾಪರದಿಂದ ನೀವು ಯಾವಾಗ ಕಾಮಚಿತೆಯ ಮೇಲೆ ಕುಳಿತುಕೊಳ್ಳುತ್ತೀರೋ ಆಗ ನೀವು ಕಪ್ಪಾಗಿ ಬಿಡುತ್ತೀರಿ. ಕಾಮಾಗ್ನಿಯಿಂದ ಎಲ್ಲವೂ ಭಸ್ಮವಾಗಿ ಬಿಡುತ್ತದೆ, ಅದರಲ್ಲಿಯೂ ಮುಖ್ಯವಾಗಿ ಭಾರತದ ಮಾತಾಗಿದೆ. ಭಾರತದಲ್ಲಿ ಪಾರಸಬುದ್ಧಿ ದೇವತೆಗಳ ರಾಜ್ಯವಿತ್ತು, ಅದಕ್ಕೆ ವಿಷ್ಣು ಪುರಿ, ರಾಮ ರಾಜ್ಯವೆಂದೂ ಸಹ ಹೇಳಲಾಗುತ್ತದೆ. ಈಗ ತಂದೆಯು ಬಂದು ತಿಳಿಸುತ್ತಾರೆ - ಮಧುರಾತಿ ಮಧುರ ಮುದ್ದಾದ ಮಕ್ಕಳೇ, ನೀವು ಸತ್ಯಯುಗದಲ್ಲಿದ್ದಿರಿ, ಸರ್ವಗುಣ ಸಂಪನ್ನರಾಗಿದ್ದಿರಿ - ಇದು ನಿಮ್ಮ ಮಹಿಮೆಯಾಗಿದೆ. ಸತ್ಯಯುಗದಲ್ಲಿ ವಿಕಾರಗಳಿರುವುದೇ ಇಲ್ಲ, ದ್ವಾಪರದಿಂದ ರಾವಣ ಮತ್ತು ಪಂಚ ವಿಕಾರಗಳ ರಾಜ್ಯವು ಆರಂಭವಾಗುತ್ತದೆ ಅಂದಮೇಲೆ ರಾಮ ರಾಜ್ಯವು ಹೋಗಿ ರಾವಣ ರಾಜ್ಯವಾಗುತ್ತದೆ. ಈಗ ಗ್ರಹಣ ಹಿಡಿದಿದೆ, ಭಾರತವು ಖಂಡಿತ ಕಪ್ಪಾಗಿ ಬಿಟ್ಟಿದೆ. ಬೃಹಸ್ಪತಿ ದೆಶೆಯು ಎಲ್ಲಾ ದೆಶೆಗಳಿಗಿಂತ ಒಳ್ಳೆಯ ದೆಶೆಯಾಗಿದೆ. ಭಾರತದಲ್ಲಿ ಬೃಹಸ್ಪತಿ ದೆಶೆಯು ಸತ್ಯಯುಗದಲ್ಲಿತ್ತು, ನಂತರ ತ್ರೇತಾದಲ್ಲಿ ಶುಕ್ರ ದೆಶೆಯಿತ್ತು ಅಂದರೆ ಎರಡು ಕಲೆಗಳು ಕಡಿಮೆಯಾಯಿತು. ಅದಕ್ಕೆ ಬೆಳ್ಳಿಯ ಯುಗವೆಂದು ಹೇಳಲಾಗುತ್ತದೆ ನಂತರ ದ್ವಾಪರ-ಕಲಿಯುಗ ಬಂದಿತು. ಏಣಿಯನ್ನು ಇಳಿಯುತ್ತಲೇ ಬಂದಿರಿ. ಶನಿ ದೆಶೆಯೂ ಹಿಡಿಯಿತು. ಈ ಸಮಯದಲ್ಲಿ ಎಲ್ಲರ ಮೇಲೆ ಸಂಪೂರ್ಣ ರಾಹುವಿನ ದೆಶೆಯಿದೆ. ಸೂರ್ಯ ಗ್ರಹಣವಾದಾಗ ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದೆಂದು ಹೇಳುತ್ತಾರೆ. |
ಇದು ಆತ್ಮಿಕ ಜ್ಞಾನವಾಗಿದೆ ಎಂದು ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಇದು ಯಾವುದೇ ಶಾಸ್ತ್ರಗಳ ಜ್ಞಾನವಲ್ಲ, ಶಾಸ್ತ್ರಗಳಲ್ಲಿ ಜ್ಞಾನವನ್ನು ಭಕ್ತಿಮಾರ್ಗವೆಂದು ಹೇಳಲಾಗುತ್ತದೆ, ಸತ್ಯಯುಗದಲ್ಲಿ ಭಕ್ತಿಮಾರ್ಗವು ಇರುವುದಿಲ್ಲ. ಜ್ಞಾನ ಮತ್ತು ಭಕ್ತಿ ನಂತರ ವೈರಾಗ್ಯ ಅರ್ಥಾತ್ ಈ ಹಳೆಯ ಪ್ರಪಂಚವನ್ನು ಬಿಡಬೇಕಾಗುತ್ತದೆ. ಇದು ಶೂದ್ರ ವರ್ಣವಾಗಿದೆ. ವಿರಾಟ ರೂಪದ ಚಿತ್ರದಲ್ಲಿ ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ.... ತೋರಿಸುತ್ತಾರೆ. ಇದು ಭಾರತದ್ದೇ ಕಥೆಯಾಗಿದೆ. ವಿರಾಟ ರೂಪದ ಚಿತ್ರವನ್ನೂ ಮಾಡುತ್ತಾರೆ ಆದರೆ ಕಲ್ಲು ಬುದ್ಧಿಯವರು ತಿಳಿದುಕೊಳ್ಳುವುದಿಲ್ಲ. ಕಲ್ಲು ಬುದ್ಧಿಯವರು ಏಕೆ ಆಗಿದ್ದಾರೆ? ಏಕೆಂದರೆ ಎಲ್ಲರೂ ಪತಿತರಾಗಿದ್ದಾರೆ. ಭಾರತವಾಸಿಗಳೇ ಪಾರಸ ಬುದ್ಧಿಯವರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, 5000 ವರ್ಷಗಳ ಹಿಂದೆ ಭಾರತವು ಸ್ವರ್ಗವಾಗಿತ್ತು, ಮತ್ತ್ಯಾವುದೇ ಖಂಡವಿರಲಿಲ್ಲ. ಇದನ್ನು ತಂದೆಯೇ ತಿಳಿಸುತ್ತಾರೆ. ಈ ರಾಜಯೋಗವನ್ನು ಯಾರು ಕಲಿಸುತ್ತಾರೆ? ಜ್ಞಾನ ಸಾಗರನಾದ ಶಿವಾಚಾರ್ಯ ಕಲಿಸುತ್ತಾರೆ, ಯಾವುದೇ ಮನುಷ್ಯನಿಗೆ ಜ್ಞಾನ ಸಾಗರ, ಸರ್ವರ ಪತಿತ-ಪಾವನನೆಂದು ಹೇಳಲಾಗುವುದಿಲ್ಲ. ಎಲ್ಲರ ಮುಕ್ತಿದಾತ ಒಬ್ಬರೇ ಆಗಿದ್ದಾರೆ, ದುಃಖದಲ್ಲಿ ರಾವಣನಿಂದ ಬಿಡಿಸಲು ಸ್ವಯಂ ತಂದೆಯೇ ಬಂದು ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ, ಅವರಿಗೇ ಆತ್ಮೀಯ ಮಾರ್ಗದರ್ಶಕನೆಂದು ಹೇಳಲಾಗುತ್ತಾರೆ. ನಾನು ನೀವೆಲ್ಲಾ ಆತ್ಮರ ಮಾರ್ಗದರ್ಶಕನಾಗಿದ್ದೇನೆ, ನಿಮ್ಮೆಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆ ಎಂದು ತಿಳಿಸುತ್ತಾರೆ. ನನ್ನಂತಹ ಮಾರ್ಗದರ್ಶಕನು ಯಾರೂ ಇರಲು ಸಾಧ್ಯವಿಲ್ಲ. ಗಾಡ್ ಈಜ್ ಲಿಬರೇಟರ್, ಗೈಡ್, ಬ್ಲಿಸ್ಫುಲ್.... (ಭಗವಂತನು ಮುಕ್ತಿದಾತ, ಮಾರ್ಗದರ್ಶಕ, ಆನಂದ ಸಾಗರನಾಗಿದ್ದಾನೆ) ಎಲ್ಲರ ಮೇಲೆ ದಯೆ ತೋರಿಸುತ್ತಾರೆ ಏಕೆಂದರೆ ಸಾಗರನ ಮಕ್ಕಳೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಹೋಗಿದ್ದಾರೆ, ಅದರಲ್ಲಿಯೂ ಮುಖ್ಯವಾಗಿ ಭಾರತದ್ದೇ ಮಾತಾಗಿದೆ. ನೀವು 16 ಕಲಾ ಸಂಪೂರ್ಣರಾಗಿದ್ದಿರಿ, ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ ಎಂದು ತಂದೆಯು ತಿಳಿಸುತ್ತಾರೆ. ಈಗ ಕಾಮ ಚಿತೆಯ ಮೇಲೆ ಕುಳಿತು ಏನಾಗಿ ಬಿಟ್ಟಿದ್ದೀರಿ! ಈಗ ತಂದೆಯು ಪುನಃ ಬಂದಿದ್ದಾರೆ. ವೃಕ್ಷಪತಿ ತಂದೆಯು ಬಂದು ಮನುಷ್ಯರೆಲ್ಲರ ಮೇಲೆ ಬೃಹಸ್ಪತಿ ದೆಶೆಯನ್ನು ಕೂರಿಸುತ್ತಾರೆ. ಮುಖ್ಯವಾಗಿ ಭಾರತ ಮತ್ತು ಇಡೀ ಪ್ರಪಂಚದ ಮೇಲೆ ಈ ಸಮಯದಲ್ಲಿ ರಾಹುವಿನ ಗ್ರಹಣ ಹಿಡಿದಿದೆ. ತಂದೆಯು ತಿಳಿಸುತ್ತಾರೆ - ನಾನೇ ಬಂದು ಮುಖ್ಯವಾಗಿ ಭಾರತ ಮತ್ತು ಇಡೀ ಪ್ರಪಂಚಕ್ಕೆ ಗತಿ-ಸದ್ಗತಿಯನ್ನು ಕೊಡುತ್ತೇನೆ. ಇಲ್ಲಿ ನೀವು ಪಾರಸ ಬುದ್ಧಿಯವರಾಗಲು ಬಂದಿದ್ದೀರಿ, ಅತಿಪ್ರಿಯ ತಂದೆಯು ಎಲ್ಲಾ ಪ್ರಿಯತಮೆಯರ ಒಬ್ಬರೇ ಪ್ರಿಯತಮನಾಗಿದ್ದಾರೆ. ಎಲ್ಲಾ ದೇಶಗಳಲ್ಲಿಯೂ ಅವಶ್ಯವಾಗಿ ಶಿವಲಿಂಗವನ್ನು ಇಡುತ್ತಾರೆ ಏಕೆಂದರೆ ಎಲ್ಲರ ತಂದೆಯಾಗಿದ್ದಾರಲ್ಲವೆ. ಶಿವನ ಮಂದಿರಗಳು ಭಾರತದಲ್ಲಿ ಬಹಳಷ್ಟಿವೆ ಶಿವನಿರುವ ಸ್ಥಾನವೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮದ ಮನುಷ್ಯರಿದ್ದರೆ ಆದರೆ ಆ ಧರ್ಮವು ಯಾವಾಗಿತ್ತು, ಅವರ ರಾಜ್ಯವು ಯಾವಾಗಿತ್ತು.... ಇದು ಯಾರಿಗೂ ತಿಳಿದಿಲ್ಲ. ಸತ್ಯಯುಗದ ಆಯಸ್ಸನ್ನು ಬಹಳ ಉದ್ದವಾಗಿ ಬರೆದು ಬಿಟ್ಟಿದ್ದಾರೆ. 21 ಜನ್ಮಗಳಿಗಾಗಿ ನಿಮ್ಮ ಮೇಲೆ ಈಗ ಬೃಹಸ್ಪತಿ ದೆಶೆಯು ಕುಳಿತಿದೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರೂ ಯಾರನ್ನು ಕರೆಯುತ್ತಾರೆಯೋ ಅವರು ವೃಕ್ಷಪತಿ, ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ನೀವು ತಂದೆ-ತಾಯಿ, ನಾವು ನಿಮ್ಮ ಮಕ್ಕಳಾಗಿದ್ದೇವೆಂದು ಅವರ ಮಹಿಮೆಯನ್ನು ಮಾಡುತ್ತಾರೆ. ಅವಶ್ಯವಾಗಿ ಸತ್ಯಯುಗ-ತ್ರೇತಾದಲ್ಲಿ ಅಪಾರ ಸುಖವಿತ್ತು, ತಂದೆಯು ಹೆವೆನ್ಲೀ ಗಾಡ್ಫಾದರ್ ಆಗಿದ್ದಾರೆ, ಸ್ವರ್ಗದ ರಚಯಿತನೂ ಆಗಿದ್ದಾರೆಂದ ಮೇಲೆ ಸ್ವರ್ಗವು ಇರಬೇಕಲ್ಲವೆ! ನೀವೆಲ್ಲರೂ ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿದ್ದೀರಿ. ಭಾರತದ್ದೇ ಆದಿ ಸನಾತನ ದೇವಿ-ದೇವತಾ ಧರ್ಮವಾಗಿತ್ತು. ಹೇಗೆ ಕ್ರಿಶ್ಚಿಯನ್ ಧರ್ಮವಿದೆಯೆಂದರೆ ಅಲ್ಲಿ ಕ್ರಿಶ್ಚಿಯನ್ನರೇ ಇರುತ್ತಾರೆ. ನೀವು ದೇವಿ-ದೇವತಾ ಧರ್ಮದವರು ನಿಮ್ಮ ಧರ್ಮವನ್ನು ಏಕೆ ಮರೆತು ಹೋದಿರಿ? ನೀವು ದೇವಿ-ದೇವತಾ ಧರ್ಮದವರೇ ಆಗಿದ್ದಿರಿ ಎಂದು ತಂದೆಯು ತಿಳಿಸುತ್ತಾರೆ. |
ಎಲ್ಲರಿಗಿಂತ ಶ್ರೇಷ್ಠ ಧರ್ಮ-ಕರ್ಮ ನಿಮ್ಮದೇ ಆಗಿತ್ತು ಎಂದು ಸ್ಮೃತಿ ತರಿಸುತ್ತಾರೆ. ಈಗ ನೀವು ನೀಚ, ಪಾಪಿ, ಕಂಗಾಲರಾಗಿದ್ದೀರಿ. ನೀವು ದೇವತೆಗಳ ಪೂಜಾರಿಗಳಾಗಿದ್ದೀರಿ ಅಂದಮೇಲೆ ನಿಮ್ಮನ್ನು ನೀವು ಹಿಂದೂಗಳೆಂದು ಏಕೆ ಕರೆದುಕೊಳ್ಳುತ್ತೀರಿ? ನೋಡಿ, ಭಾರತದ ಸ್ಥಿತಿ ಏನಾಗಿ ಬಿಟ್ಟಿದೆ! ಯಾರು ದೇವತಾ ಧರ್ಮದವರಾಗಿದ್ದರೋ ಅವರು ವಿಕಾರಿಗಳಾದ ಕಾರಣ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ. ಈ ಪತಿತ ಪ್ರಪಂಚದ ಅಂತ್ಯವಾಗಿದೆ, ಮಹಾಭಾರತದ ಯುದ್ಧ ಸಮ್ಮುಖದಲ್ಲಿ ನಿಂತಿದೆ. ಭಗವಾನುವಾಚ - ನಾನು ನಿಮಗೆ ಸತ್ಯಯುಗಕ್ಕಾಗಿ ರಾಜಯೋಗವನ್ನು ಕಲಿಸುತ್ತೇನೆ. ಭಗವಂತನಂತೂ ಒಬ್ಬರೇ ಆಗಿದ್ದಾರೆ, ನಾವೆಲ್ಲರೂ ಅವರ ಮಕ್ಕಳು ಸಾಲಿಗ್ರಾಮಗಳಾಗಿದ್ದೇವೆ. ನೀವು ಪೂಜ್ಯರಾಗಿದ್ದಿರಿ, ನೀವೇ ಪೂಜಾರಿ ಭಕ್ತರಾಗಿ ಬಿಟ್ಟಿರಿ. ಈಗ ಪುನಃ ಜ್ಞಾನ ಪಡೆದು ಪೂಜ್ಯ ದೇವತೆಗಳಾಗುತ್ತಿದ್ದೀರಿ ನಂತರ ದ್ವಾಪರದಿಂದ ಪೂಜ್ಯ ಸೋ ಪುಜಾರಿಗಳಾಗಿ ಬಿಡುತ್ತೀರಿ. ನೀವು ಸಂಪೂರ್ಣ 84 ಜನ್ಮಗಳನ್ನು ಪಡೆಯುತ್ತೀರಿ. ಯಾರು 84 ಜನ್ಮಗಳನ್ನು ಪಡೆದಿದ್ದರೋ ಅವರೇ ಬಂದು ಬ್ರಹ್ಮಾಕುಮಾರ-ಕುಮಾರಿಯರಾಗುತ್ತಾರೆ. ಬ್ರಹ್ಮನ ಮುಖಾಂತರ ಆದಿ ಸನಾತನ ಧರ್ಮದ ಸ್ಥಾಪನೆಯಾಯಿತು, ಇದೂ ಸಹ ಗಾಯನವಿದೆ. ಪ್ರಜಾಪಿತನಿದ್ದಾರೆ ಎಂದರೆ ಅವರ ಮಕ್ಕಳೂ ಇರಬೇಕಲ್ಲವೆ. ಅವರು ಅವಶ್ಯವಾಗಿ ಇಲ್ಲಿಯೇ ಇರಬೇಕು. ಎಷ್ಟೊಂದು ಮಂದಿ ಪ್ರಜೆಗಳಿದ್ದಾರೆ, ಈ ಬ್ರಾಹ್ಮಣರೇ ನಂತರ ದೇವತೆಗಳಾಗುವರು. ತಂದೆಯು ಬಂದು ಶೂದ್ರರನ್ನು ಪರಿವರ್ತನೆ ಮಾಡಿ ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಈ ಸಂಗಮಯುಗದಲ್ಲಿಯೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ, ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ. ಈ ಯುದ್ಧವನ್ನೇ ಕಲ್ಯಾಣಕಾರಿ ಎಂದು ಹೇಳಲಾಗುತ್ತದೆ. ಈ ವಿನಾಶದ ನಂತರದ ಸ್ವರ್ಗದ ದ್ವಾರ ತೆರೆಯಲ್ಪಡುತ್ತದೆ. ನೀವಿಲ್ಲಿ ಸ್ವರ್ಗವಾಸಿಗಳಾಗಲು, ವಿಷ್ಣು ಪುರಿಯಲ್ಲಿ ಹೋಗುವುದಕ್ಕಾಗಿಯೇ ಬರುತ್ತೀರಿ. ನೀವು ಮಕ್ಕಳ ಮೇಲೆ ಈಗ ಅವಿನಾಶಿ ಬೃಹಸ್ಪತಿ ದೆಶೆ ಕುಳಿತಿದೆ, 16 ಕಲಾ ಸಂಪೂರ್ಣ ಎಂದು ಹೇಳಲಾಗುತ್ತದೆ ನಂತರ 2 ಕಲೆಗಳು ಕಡಿಮೆ ಆಗುತ್ತದೆಯೆಂದರೆ ಶುಕ್ರ ದೆಶೆಯೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಬೃಹಸ್ಪತಿಯ ದೆಶೆಯಿತ್ತು ನಂತರ ತ್ರೇತಾದಲ್ಲಿ ಶುಕ್ರ ದೆಶೆಯಿತ್ತು, ನಂತರ ಕೆಳಗಿಳಿಯುತ್ತಾ ಬರುತ್ತಾ ಮಂಗಳ, ಶನಿ, ರಾಹು ದೆಶೆಗಳಾಗುತ್ತವೆ. ಜನ್ಮ-ಜನ್ಮಾಂತರದಿಂದಲೂ ಉಲ್ಟಾ ದೆಶೆಗಳೇ ಆಗುತ್ತಾ ಬರುತ್ತವೆ. ಈಗ ತಂದೆಯ ಮೂಲಕ ಬೃಹಸ್ಪತಿ ದೆಶೆ ಕುಳಿತಿದೆ. ಈ ಬೇಹದ್ದಿನ ತಂದೆಯು ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಅವರೇ ನಿಮ್ಮ ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಉಳಿದಂತೆ ಎಲ್ಲರೂ ಅಸತ್ಯವನ್ನೇ ಹೇಳುತ್ತಾರೆ, ಯಾರಿಗೂ ಸದ್ಗತಿಯನ್ನು ಕೊಡಲು ಸಾಧ್ಯವಿಲ್ಲ, ಇದಕ್ಕೇ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ, ಅದು ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಈ ವಿಕಾರಿ ಪ್ರಪಂಚದಲ್ಲಿ ಎಲ್ಲರೂ ದುಃಖಿಗಳಾಗಿದ್ದಾರೆ, ಯುದ್ಧ ಹೊಡೆದಾಟಗಳು ಏನೆಲ್ಲಾ ನಡೆಯುತ್ತಿವೆ, ಇದಕ್ಕೆ ರಕ್ತದ ಕೋಡಿ ಹರಿಯುತ್ತದೆ..... ತಪ್ಪು ಮಾಡದೇ ಇದ್ದವರನ್ನೂ ಏನೆಲ್ಲಾ ಮಾಡುತ್ತಾರೆ! ಒಂದೇ ಒಂದು ಬಾಂಬು ಬಿದ್ದರೆ ಸಾಕು ಕ್ಷಣ ಮಾತ್ರದಲ್ಲಿಯೇ ಎಲ್ಲವೂ ಸಮಾಪ್ತಿ ಆಗಿ ಬಿಡುವುದು. ಇದೇ ಆ ಸಂಗಮಯುಗದ ಸಮಯವಾಗಿದೆ. ನೀವು ದೇವತೆಗಳಿಗೆ ನಂತರ ಹೊಸ ಪ್ರಪಂಚ ಬೇಕಲ್ಲವೆ. ಮಧುರಾತಿ ಮಧುರ ಮಕ್ಕಳೇ - ಮನ್ಮನಾಭವ. ಯಾವ ತಂದೆ ಹೇಳಿದರು? ಶಿವ ತಂದೆಯು ಹೇಳಿದರು. ಅವರಂತೂ ನಿರಾಕಾರನಾಗಿದ್ದಾರೆ, ನೀವೂ ನಿರಾಕಾರರಾಗಿದ್ದೀರಲ್ಲವೆ. ಆದರೆ ನೀವು ಪುನರ್ಜನ್ಮದಲ್ಲಿ ಬರುತ್ತೀರಿ ನಾನು ಬರುವುದಿಲ್ಲ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ, ಯಾರೂ ಪಾವನರಿಲ್ಲ. ಪತಿತರಾಗಲೇಬೇಕು, ಸತೋ-ರಜೋ-ತಮೋದಲ್ಲಿ ಬರಲೇಬೇಕಾಗಿದೆ. ಈ ಸಮಯದಲ್ಲಿ ಇಡೀ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ಹಿಡಿದಿದೆ. ಪ್ರಪಂಚವು ಅವಶ್ಯವಾಗಿ ಹಳೆಯದಾಗಿ ಬಿಟ್ಟಿದೆ. ಈಗ ಮತ್ತೆ ಇದನ್ನು ಹೊಸದನ್ನಾಗಿ ಮಾಡಬೇಕಾಗಿದೆ. ಪತಿತ ಪ್ರಪಂಚವನ್ನು ನೋಡಿ, ಎಷ್ಟೊಂದು ಮನುಷ್ಯರಿದ್ದಾರೆ! ಪಾವನ ಪ್ರಪಂಚದಲ್ಲಿ ಬಹಳ ಕಡಿಮೆ ಜನ ರಾಜ್ಯ ಮಾಡುತ್ತಾರೆ. ಒಂದೇ ಧರ್ಮವಿರುತ್ತದೆ, ಮತ್ತ್ಯಾವ ಧರ್ಮವೂ ಇರುವುದಿಲ್ಲ. ಭಾರತವನ್ನೇ ಹೆವೆನ್ ಎಂದು ಹೇಳಲಾಗುತ್ತದೆ. ಘಟದಲ್ಲಿ ಸೂರ್ಯ, ಘಟದಲ್ಲಿ ಚಂದ್ರ ಎಂದು ಗಾಯನವಿದೆ, ಸತ್ಯಯುಗದಲ್ಲಿ 9 ಲಕ್ಷ ಜನಸಂಖ್ಯೆಯಿರುತ್ತದೆ ನಂತರ ವೃದ್ಧಿಯಾಗುತ್ತದೆ. ಮೊದಲು ಹೂವಿನ ಗಿಡ ಚಿಕ್ಕದಾಗಿರುತ್ತದೆ, ಮುಳ್ಳಿನ ಕಾಡು ಎಷ್ಟು ದೊಡ್ಡದಾಗಿದೆ! ದೆಹಲಿಯಲ್ಲಿ ಮೊಗಲ್ ಗಾರ್ಡನ್ ಎಷ್ಟು ಚೆನ್ನಾಗಿದೆ ನೋಡಿ! ಅದಕ್ಕಿಂತಲೂ ದೊಡ್ಡ ಗಾರ್ಡನ್ ಮತ್ತ್ಯಾವುದೂ ಇಲ್ಲ. ಕಾಡನ್ನು ನೋಡಿ ಎಷ್ಟೊಂದು ದೊಡ್ಡದಾಗಿರುತ್ತದೆ, ಸತ್ಯಯುಗದ ಗಾರ್ಡನ್ ಸಹ ಚಿಕ್ಕದಾಗಿರುತ್ತದೆ ನಂತರ ವೃದ್ಧಿ ಹೊಂದುತ್ತಾ-ಹೊಂದುತ್ತಾ ದೊಡ್ಡದಾಗುತ್ತದೆ. ಈಗಂತೂ ಮುಳ್ಳಿನ ಕಾಡಾಗಿ ಬಿಟ್ಟಿದೆ. ರಾವಣನು ಬಂದು ಮುಳ್ಳಿನ ಕಾಡನ್ನಾಗಿ ಮಾಡುತ್ತಾನೆ, ಇದು ಮುಳ್ಳಿನ ಕಾಡಾಗಿದೆ. ಪರಸ್ಪರದಲ್ಲಿ ಹೊಡೆದಾಡುತ್ತಾರೆ ಅಂದಮೇಲೆ ಒಬ್ಬರನ್ನೊಬ್ಬರು ಕೊಲೆ ಮಾಡುತ್ತಾರೆ. ಎಷ್ಟೊಂದು ಕೋಪವಿದೆ! ವಾನರನಿಗಿಂತ ಕೀಳು ಮಟ್ಟವೆಂದು ಹೇಳಲಾಗುತ್ತದೆ. ನನ್ನ ಮುದ್ದಾದ ಮಕ್ಕಳೇ, ನಿಮ್ಮ ಮೇಲೆ ಈಗ ವೃಕ್ಷಪತಿಯ ದೆಶೆಯಿದೆ ಎಂದು ತಂದೆಯು ತಿಳಿಸುತ್ತಾರೆ. ಈಗ ದಾನ ಕೊಟ್ಟರೆ ಗ್ರಹಣ ಬಿಡುವುದು. ಸಂಪೂರ್ಣ ನಿರ್ವಿಕಾರಿಗಳು ಇಲ್ಲಿಯೇ ಆಗಬೇಕಾಗಿದೆ. ನಂತರ ಶರೀರ ಬಿಟ್ಟು ಮತ್ತೆ ಶಿವಾಲಯದಲ್ಲಿ ಬರುತ್ತೇವೆ. ಶಿವಾಲಯದಲ್ಲಿ ಬಹಳ ಸುಖವಿರುತ್ತದೆ, ದೇವಿ-ದೇವತೆಗಳ ರಾಜ್ಯವಿರುತ್ತದೆ. ಸತ್ಯಯುಗವನ್ನು ಶಿವಾಲಯ, ಕಲಿಯುಗವನ್ನು ವೇಶ್ಯಾಲಯವೆಂದು ಹೇಳಲಾಗುತ್ತದೆ. ಇದು ವೇಶ್ಯಾಲಯ, ರಾವಣನು ಸ್ಥಾಪನೆ ಮಾಡಿದನು. ಪತಿತರಿಂದ ಪಾವನರಾಗಬೇಕಾಗಿದೆ ಅಂದಮೇಲೆ ಹೇಗಾಗುವುದು? ತ್ರಿವೇಣಿ ಸಂಗಮದಲ್ಲಿನ ಗಂಗಾ ಸ್ನಾನದಿಂದ ಪಾವನರಾಗುವಿರೇನು? ಇದನ್ನಂತೂ ಜನ್ಮ-ಜನ್ಮಾಂತರ ಮಾಡುತ್ತಲೇ ಬಂದಿರಿ, ಕೋಟಿ ಗಟ್ಟಲೇ ಮನುಷ್ಯರು ಹೋಗಿ ಸ್ನಾನ ಮಾಡುತ್ತಾರೆ. ಬಹಳಷ್ಟು ನದಿಗಳು, ಕಾಲುವೆಗಳು, ಕೊಳಗಳು ಇತ್ಯಾದಿಗಳಿವೆ, ಎಲ್ಲಿ ನೀರನ್ನು ನೋಡುತ್ತಾರೆಂದರೆ ಅಲ್ಲಿಗೆ ಹೋಗಿ ಸ್ನಾನ ಮಾಡುತ್ತಾರೆ ಏಕೆಂದರೆ ತಮ್ಮನ್ನು ತಾವು ಪತಿತರಾಗಿದ್ದೇವೆ ಎಂದು ತಿಳಿದುಕೊಂಡಿದ್ದಾರೆ. ಈಗ ನಿಮ್ಮನ್ನು ಪಾರಸನಾಥನು ಪಾರಸ ಬುದ್ಧಿಯವರನ್ನಾಗಿ ಮಾಡುತ್ತಿದ್ದಾರೆ ಅಂದಮೇಲೆ ಅಂತಹ ಪಾರಸನಾಥ ತಂದೆಯನ್ನು ಎಷ್ಟೊಂದು ಪ್ರೀತಿಯಿಂದ ನೆನಪು ಮಾಡಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಈ ಮುಳ್ಳಿನ ಪ್ರಪಂಚದಿಂದ ಹೂದೋಟಕ್ಕೆ ಹೋಗಲು ಯಾವುದೇ ಮುಳ್ಳು (ವಿಕಾರ) ಗಳಿವೆ ಅವನ್ನು ತೆಗೆಯಬೇಕು. ಪಾರಸ ಬುದ್ಧಿಯವರಾಗಲು ಒಬ್ಬ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. |
2. ಈ ಕಲ್ಯಾಣಕಾರಿ ಸಂಗಮಯುಗದಲ್ಲಿ ಶೂದ್ರರಿಂದ ಬ್ರಾಹ್ಮಣ ಸೋ ದೇವತೆಗಳಾಗುವ ಪುರುಷಾರ್ಥ ಮಾಡಬೇಕಾಗಿದೆ. ರಾಹುವಿನ ಗ್ರಹಣದಿಂದ ಬಿಡಿಸಿಕೊಳ್ಳಲು ವಿಕಾರಗಳ ದಾನ ಕೊಡಬೇಕಾಗಿದೆ. |
ಓಂ ಶಾಂತಿ. ಬಾಪ್ದಾದಾ ಇಬ್ಬರೂ ಇದ್ದಾರಲ್ಲವೆ. ಈಗ ಇದಂತೂ ಮಕ್ಕಳಿಗೆ ತಿಳಿದಿದೆ - ಆತ್ಮಗಳ ತಂದೆಯು ಶಿವ ತಂದೆಯಾಗಿದ್ದಾರೆ. ನಾನು ಪತಿತ-ಪಾವನನಾಗಿದ್ದೇನೆ, ನಿರಾಕಾರನಾಗಿದ್ದೇನೆ, ನೀವೂ ಸಹ ನಿರಾಕಾರಿಯಾಗಿದ್ದೀರಿ, ಶಾಂತ ಸ್ವರೂಪರಾಗಿದ್ದೀರಿ ಎಂಬುದನ್ನೂ ತಿಳಿದುಕೊಂಡಿದ್ದೀರಿ. ನಿರಾಕಾರ ತಂದೆಯೂ ಸಹ ಶಾಂತ ಸ್ವರೂಪನಾಗಿದ್ದಾರೆ, ಆತ್ಮವೂ ಶಾಂತ ಸ್ವರೂಪವಾಗಿದೆ. ಆತ್ಮದ ಸ್ವಧರ್ಮವೇ ಶಾಂತಿಯಾಗಿದೆ, ನಿಮ್ಮ ನಿವಾಸ ಸ್ಥಾನವು ಶಾಂತಿಧಾಮವಾಗಿದೆ. ಯಜ್ಞ ಇತ್ಯಾದಿಗಳನ್ನು ರಚಿಸುವಾಗ ಶಾಂತಿದೇವ ಎಂದು ಹೇಳುತ್ತಾರೆ ಏಕೆಂದರೆ ಶಾಂತಿಯ ಸಾಗರನಂತೂ ಆ ಪರಮಾತ್ಮನಾಗಿದ್ದಾರೆ. ಇಡೀ ಪ್ರಪಂಚಕ್ಕೆ ಶಾಂತಿಯನ್ನು ಕೊಡುವವರು ಆ ತಂದೆಯಾಗಿದ್ದಾರೆ, ಅನೇಕರಿಗೆ ಆ ಶಾಂತಿಯ ಹಿಂದೆ ಬಹುಮಾನ ಸಿಗುತ್ತದೆ. ಯಾರಿಗಾದರೂ ಬಹುಮಾನ ಸಿಕ್ಕಿದಾಗ ಇವರು ಶಾಂತಿ ಸ್ಥಾಪನೆ ಮಾಡಲು ನಿಮಿತ್ತರಾಗಿದ್ದಾರೆ ಎಂದು ಹೇಳುತ್ತಾರೆ. ಇದರಲ್ಲಿ ದೊಡ್ಡ-ದೊಡ್ಡವರ ಹೆಸರನ್ನು ತೆಗೆದುಕೊಳ್ಳುತ್ತಾರೆ. ಈಗಂತೂ ಇಡೀ ಪ್ರಪಂಚದಲ್ಲಿ ಶಾಂತಿ ಬೇಕಾಗಿದೆ, ಇಲ್ಲದಿದ್ದರೆ ಅಶಾಂತಿಯಲ್ಲಿ ಇರುವವರು ಅನ್ಯರನ್ನೂ ಅಶಾಂತಗೊಳಿಸುತ್ತಾರೆ. ಇದು ರಾವಣ ರಾಜ್ಯವಾಗಿದೆ, ರಾವಣನು ಶತ್ರುವಲ್ಲವೆ. ರಾಮನಿಗೆ ಶತ್ರುವೆಂದು ಹೇಳುವುದಿಲ್ಲ. ರಾಮನ ಪ್ರತಿಮೆಯನ್ನೆಂದೂ ಸುಡುವುದಿಲ್ಲ. ತ್ರೇತಾಯುಗದ ರಾಮನ ಪ್ರತಿಮೆಯಾಗಲಿ, ಪರಮಪಿತ ಪರಮಾತ್ಮನದಾಗಲಿ ಸುಡುವುದಿಲ್ಲ. ರಾಮ ರಾಜ್ಯವನ್ನು ಎಲ್ಲರೂ ಬಯಸುತ್ತಾರೆ. ಆದರೆ ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಹೊಸ ಪ್ರಪಂಚವಾಗಲಿ, ಹೊಸ ದೆಹಲಿಯಲ್ಲಿ ರಾಮ ರಾಜ್ಯವಿರಲಿ ಎಂದು ಹೇಳುತ್ತಾರೆ. ನವದೆಹಲಿಯೆಂದು ಹೇಳುತ್ತಾರೆ. ಬಹಳ ಹೆಸರುಗಳನ್ನು ಇಡುತ್ತಾರೆ. ದೆಹಲಿಯು ಎಲ್ಲರ ರಾಜಧಾನಿ ಆಗಿರುತ್ತದೆ. ದೆಹಲಿಯೇ ಪರಿಸ್ಥಾನವಾಗಿತ್ತು, ರಾಧೆ-ಕೃಷ್ಣರನ್ನೂ ಸಹ ಅಲ್ಲಿಯೇ ತೋರಿಸುತ್ತಾರೆ. ಇವರಿಬ್ಬರೂ ಮುಖ್ಯ ರಾಜಕುಮಾರ-ಕುಮಾರಿಯರಾಗಿದ್ದಾರೆ. ಕೇವಲ ಇಬ್ಬರೇ ಅಲ್ಲ, ಅವಶ್ಯವಾಗಿ ಅನ್ಯರೂ ಇರುತ್ತಾರೆ. 8 ರಾಜ್ಯಭಾರಗಳೆಂದು ಗಾಯನವಿದೆ, ಬುದ್ಧಿಗೆ ಕೆಲಸ ಕೊಡಬೇಕಾಗಿದೆ. ಸತ್ಯಯುಗದಲ್ಲಿ ಅವಶ್ಯವಾಗಿ ಅನ್ಯ ರಾಜ್ಯಗಳೂ ಇರುವುದು. ಇಲ್ಲಿಯೂ ನೋಡಿ, ಎಷ್ಟು ರಾಜ್ಯಗಳಿದೆ! ವೃದ್ಧಿಯಾಗುತ್ತಾ ಆಗುತ್ತಾ ಬಹಳಷ್ಟು ಆಗಿ ಬಿಡುತ್ತದೆ, ಇಂತಿಂತಹ ಪ್ರಾಂತ್ಯದ ಮಹಾರಾಜ ಎಂದು ಹೇಳುತ್ತಾರೆ. ಚಿಕ್ಕ-ಚಿಕ್ಕ ಪ್ರಾಂತ್ಯಗಳು ಬಹಳಷ್ಟು ಇವೆಯಲ್ಲವೆ. ಸತ್ಯಯುಗದಲ್ಲಿ ಇಷ್ಟೊಂದು ಇರಲಿಲ್ಲ. ಲಕ್ಷ್ಮೀ-ನಾರಾಯಣರ ಹೆಸರೇ ಪ್ರಸಿದ್ಧವಾಗಿದೆ. 2500 ವರ್ಷಗಳು ಅವರ ರಾಜ್ಯವು ನಡೆದಿದೆ. ಲಕ್ಷಾಂತರ ವರ್ಷಗಳಾಯಿತೆಂದು ಮನುಷ್ಯರು ಹೇಳುತ್ತಾರೆ, ಇದು ವಿಚಾರ ಮಾಡುವ ಮಾತುಗಳಾಗಿವೆ. ಆತ್ಮರಿಗಾಗಿ ಇದು ಭೋಜನವಾಗಿದೆ. ತಂದೆಯು ನಿಮ್ಮ ಬುದ್ಧಿಗೆ, ಆತ್ಮಕ್ಕೆ ಈ ಆತ್ಮಿಕ ಭೋಜನವನ್ನು ಕೊಡುತ್ತಾರೆ, ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲವೆಂದು ಋಷಿ-ಮುನಿ ಮೊದಲಾದವರೆಲ್ಲರೂ ಹೇಳುತ್ತಿದ್ದರು. ಈಗ ನೀವು ಮಕ್ಕಳು ಆ ರೀತಿ ಹೇಳುವುದಿಲ್ಲ. ನೀವಂತೂ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ. ನೀವು ತಮ್ಮ 84 ಜನ್ಮಗಳ ಚಕ್ರವನ್ನೂ ಅರಿತುಕೊಂಡಿದ್ದೀರಿ. ಆದಿಯಲ್ಲಿ ನೀವು ದೇವಿ-ದೇವತೆಗಳಾಗಿದ್ದಿರಿ ನಂತರ ಮಧ್ಯದಲ್ಲಿ ರಾವಣನ ಪ್ರವೇಶತೆಯಾಗುವ ಕಾರಣ ವಿಕಾರಿಗಳಾಗಿ ಬಿಟ್ಟಿದ್ದೀರಿ. ಈಗ ಅಂತ್ಯವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಈಗ ಹಳೆಯ ಪ್ರಪಂಚದ ವಿನಾಶವಾಗಿ ನಂತರ ಆದಿಯಾಗುವುದು. ಆದಿಯಲ್ಲಿ ರಾಮ ರಾಜ್ಯವಿರುವುದು, ಮಧ್ಯದಿಂದ ರಾವಣ ರಾಜ್ಯವು ಆರಂಭವಾಗುತ್ತದೆ. ಈಗ ರಾವಣ ರಾಜ್ಯವು ಮುಕ್ತಾಯವಾಗಿ ಪುನಃ ರಾಮ ರಾಜ್ಯವು ಆರಂಭವಾಗುವುದು, ನರನಿಂದ ನಾರಾಯಣರಾಗಬೇಕಲ್ಲವೆ. ಇದು ಸತ್ಯ ನಾರಾಯಣನ ಕಥೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ - ಸರ್ವಶಾಸ್ತ್ರಮಯಿ ಶಿರೋಮಣಿ ಶ್ರೀಮತ್ಭಗವದ್ಗೀತೆ ಆಗಿದೆ. ಶ್ರೇಷ್ಠರಾಗುವುದಕ್ಕಾಗಿ ಶ್ರೀಮತ ಸಿಗುತ್ತದೆ. ಶ್ರೀ ಎಂದು ಶ್ರೇಷ್ಠರಿಗೇ ಹೇಳುತ್ತಾರೆ. ಒಂದು ಗೀತಾ ಶಾಸ್ತ್ರವನ್ನೇ ದೇವಿ-ದೇವತಾ ಧರ್ಮದ ಶಾಸ್ತ್ರವೆಂದು ಹೇಳಲಾಗುತ್ತದೆ. ಇದರಿಂದ ಸಂಗಮದಲ್ಲಿ ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಪಾವನರನ್ನಾಗಿ ಮಾಡಲು ಸತ್ಯಯುಗದಲ್ಲಿ ಯಾರೂ ಪತಿತರೇ ಇರುವುದಿಲ್ಲ. ಈಗ ನಿಮಗೆ ತಂದೆಯು ತಿಳಿಸುತ್ತಾರೆ - ಗೀತೆಗೆ ಪತಿತ-ಪಾವನಿ ಎಂದು ಹೇಳಲು ಸಾಧ್ಯವಿಲ್ಲ. ಗೀತೆಯ ಮೂಲಕ ಪಾವನರಾಗುವುದಿಲ್ಲ. ಗೀತೆಯ ಭಗವಂತನಿಗೆ ಪತಿತ-ಪಾವನನೆಂದು ಹೇಳುತ್ತಾರೆ, ಇದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಗೀತೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಗೀತೆಯ ಸಮಯದಲ್ಲಿಯೇ ಮಹಾಭಾರಿ ಮಹಾಭಾರತ ಯುದ್ಧವೂ ಆಗಿತ್ತು, ಇದರಿಂದ ಅನೇಕ ಧರ್ಮಗಳ ವಿನಾಶ ಮತ್ತು ಒಂದು ಧರ್ಮದ ಸ್ಥಾಪನೆಯಾಯಿತು. ಗೀತೆಗೆ ದೇವಿ-ದೇವತಾ ಧರ್ಮದ ಶಾಸ್ತ್ರವೆಂದು ಹೇಳುತ್ತಾರೆ, ಬ್ರಾಹ್ಮಣರ ಶಾಸ್ತ್ರವೆಂದು ಹೇಳುವುದಿಲ್ಲ, ಬ್ರಾಹ್ಮಣರ ಹೆಸರು ಗೀತೆಯಲ್ಲಿ ಇಲ್ಲವೇ ಇಲ್ಲ. ಪರಮಪಿತ ಪರಮಾತ್ಮನೇ ಬಂದು ಬ್ರಹ್ಮಾರವರ ಮೂಲಕ ಇವೆಲ್ಲಾ ವೇದಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ನೀವು ತಿಳಿದುಕೊಳ್ಳುತ್ತೀರಿ - ಸತ್ಯಯುಗದಲ್ಲಿ ಬ್ರಾಹ್ಮಣರಿರುವುದಿಲ್ಲ, ಅಲ್ಲಿ ಲಕ್ಷ್ಮೀ-ನಾರಾಯಣರು ದೇವತೆಗಳಿರುತ್ತಾರೆ. ಬ್ರಹ್ಮನ ನಂತರ ವಿಷ್ಣು. ಚಿತ್ರಗಳಲ್ಲಿಯೂ ಸಹ ಬ್ರಹ್ಮನ ಮೂಲಕ ವಿಷ್ಣುಪುರಿಯ ಸ್ಥಾಪನೆಯೆಂದು ತೋರಿಸಿದ್ದಾರೆ. ಬ್ರಹ್ಮಾ ಮತ್ತು ವಿಷ್ಣು ಒಟ್ಟಿಗೆ ಇರುವುದಿಲ್ಲ, ಬ್ರಹ್ಮನ ಮೂಲಕ ದೇವತಾ ಧರ್ಮದ ಸ್ಥಾಪನೆಯಾಗುವುದು. ಇವು ವಿವರವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ನೀವು ಮಕ್ಕಳು ಶಿವ ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಹಕ್ಕುದಾರರಲ್ಲವೆ. ನಾಲ್ಕು ಮುಖ್ಯ ಧರ್ಮ ಶಾಸ್ತ್ರಗಳಿವೆ, ಶ್ರೀಮತ್ಭಗವದ್ಗೀತೆಯು ನಂಬರ್ವನ್ ಶಾಸ್ತ್ರವಾಗಿದೆ, ಇದರಿಂದ ನಂಬರ್ವನ್ ಧರ್ಮವು ಸ್ಥಾಪನೆ ಆಗುತ್ತದೆ. ನಂತರ ಇಸ್ಲಾಮಿ, ಬೌದ್ಧರು ಬರುತ್ತಾರೆ. ಒಂದು ಗೀತೆಯಲ್ಲಿಯೇ ಶ್ರೀಮದ್ಭಗವದ್ಗೀತೆ ಎಂದು ಬರೆಯಲ್ಪಟ್ಟಿದೆ ಮತ್ತ್ಯಾವುದೇ ಶಾಸ್ತ್ರದಲ್ಲಿ ಶ್ರೀಮತವಿಲ್ಲ. ಇಸ್ಲಾಮಿಗಳ ಶ್ರೀಮತ, ಬೌದ್ಧರ ಶ್ರೀಮತವೆಂದು ಗಾಯನ ಆಗುವುದಿಲ್ಲ. ಶ್ರೀಮತ್ಭಗವದ್ಗೀತೆಯು ಒಂದೇ ಆಗಿದೆ. ಅದರಿಂದ ಯಾವ ಧರ್ಮದ ಸ್ಥಾಪನೆ ಮಾಡಿದರು? ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಯಿತು ಮತ್ತು ಅಂತ್ಯದಲ್ಲಿಯೇ ಸ್ಥಾಪನೆಯಾಗುತ್ತದೆ, ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಈಗ ತಂದೆಯು ನಮಗೆ ಶಿಕ್ಷಕನ ರೂಪದಲ್ಲಿ ಓದಿಸುತ್ತಾರೆ - ಇದು ಬುದ್ಧಿಯಲ್ಲಿ ಇರಬೇಕಾಗಿದೆ, ಇವರು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ. ತಂದೆಯು ವಿದ್ಯೆಯಿಂದ ಸರ್ವರ ಸದ್ಗತಿ ಮಾಡುತ್ತಾರೆ ಆದ್ದರಿಂದ ಸದ್ಗುರುವೂ ಆದರು. ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ, ಆದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಕೃಷ್ಣನಂತೂ ಜ್ಞಾನ ಸಾಗರನಲ್ಲ, ಕೃಷ್ಣನನ್ನೂ ಸಹ ಜ್ಞಾನ ಸಾಗರ ತಂದೆಯೇ ಈ ರೀತಿ ಮಾಡಿದ್ದಾರೆ ಅಂದಮೇಲೆ ತಂದೆಯು ಶಿಕ್ಷಕನೂ ಆಗಿದ್ದಾರೆ. ಇಲ್ಲಿ ನೀವು ಹೊಸ ಮಾತುಗಳನ್ನು ಕೇಳುತ್ತೀರಿ, ಶಾಸ್ತ್ರ ಇತ್ಯಾದಿಗಳನ್ನು ಬಹಳ ಕೇಳುತ್ತಾ, ಓದುತ್ತಾ ಬಂದಿದ್ದೀರಿ. ನೀವೀಗ ತಂದೆಯ ಮೂಲಕ ಡೈರೆಕ್ಟ್ ಕೇಳುತ್ತೀರಿ. ಮೊದಲು ಶರೀರಧಾರಿ ಮನುಷ್ಯರ ಮೂಲಕ ಕೇಳುತ್ತಿದ್ದಿರಿ, ನೀವೀಗ ತಿಳಿದುಕೊಂಡಿದ್ದೀರಿ - ನಾವಾತ್ಮರು ಮೂಲತಃ ಅಶರೀರಿಯಾಗಿದ್ದೆವು. ನಂತರ ಈ ಶರೀರ ಧಾರಣೆ ಮಾಡಿದ್ದೇವೆ. ತಂದೆಯೂ ಅಶರೀರಿಯಾಗಿದ್ದಾರೆ, ಶಿವ ಲಿಂಗವನ್ನು ಮಾಡುತ್ತಾರಲ್ಲವೆ. ಆತ್ಮವು ಶರೀರದ ಮೂಲಕ ಅವರನ್ನು ಪೂಜಿಸುತ್ತದೆ. ಹೇ ಪರಮಪಿತ ಪರಮಾತ್ಮ ಬಂದು ನಾವು ಪತಿತರನ್ನು ಪಾವನ ಮಾಡಿ ಎಂದು ಕರೆಯುತ್ತಾರೆ. ಲಿಂಗದ ಪೂಜೆ ಮಾಡುತ್ತಾರೆ ಆದರೆ ಇವರು ಪತಿತ-ಪಾವನ ತಂದೆಯಾಗಿದ್ದಾರೆ, ಇವರನ್ನೇ ನಾವು ಕರೆಯುತ್ತೇವೆ ಎಂಬುದನ್ನು ತಿಳಿದುಕೊಂಡಿಲ್ಲ. ಶಿವ ಭಗವಂತನಾಗಿದ್ದಾರೆ, ಈಶ್ವರನಾಗಿದ್ದಾರೆ, ಕೇವಲ ಇದೇ ರೀತಿ ನೆನಪು ಮಾಡುತ್ತಾರೆ, ಅವರಿಗೆ ತಂದೆಯೆಂದು ಹೇಳಿದಾಗಲೇ ಆ ತಂದೆಯಿಂದ ಆಸ್ತಿಯು ಸಿಗಬೇಕು ಎಂಬುದು ಬುದ್ಧಿಯಲ್ಲಿ ಬರುವುದು. ನಮಗೆ ಆಸ್ತಿಯು ಸಿಕ್ಕಿದೆ ಆದ್ದರಿಂದಲೇ ನಾವು ಪೂಜಿಸುತ್ತೇವೆ, ಭಾರತವಾಸಿಗಳಿಗೆ ಅವಶ್ಯವಾಗಿ ಆಸ್ತಿಯು ಸಿಕ್ಕಿದೆ ಆದರೆ ಯಾವಾಗ ಸಿಕ್ಕಿತು ಎಂಬುದನ್ನು ಮರೆತು ಹೋಗಿದ್ದಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ನಾವು ತಂದೆಯ ಬಳಿ ಬಂದಿದ್ದೇವೆ, ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದು ತಿಳಿಸುತ್ತಾರೆಂದು ಮಕ್ಕಳು ಹೇಳುತ್ತಾರೆ. ತ್ರಿಮೂರ್ತಿಯ ಹೆಸರು ಪ್ರಸಿದ್ಧವಾಗಿದೆ. ತ್ರಿಮೂರ್ತಿ ಮಾರ್ಗ ಎಂಬ ಹೆಸರನ್ನೂ ಇಟ್ಟಿದ್ದಾರೆ. ತಂದೆಯ ಮಹಿಮೆಯೂ ಬಹಳಷ್ಟಿದೆ. ಗೀತೆಯಲ್ಲಿಯೂ ಕೇಳಿದಿರಿ - ಅವರು ಪ್ರೀತಿಯ ಸಾಗರನಾಗಿದ್ದಾರೆ..... ಸರ್ವರ ಸದ್ಗತಿದಾತನಾಗಿದ್ದಾರೆ. ಸರ್ವರಿಗೆ ಸುಖ-ಶಾಂತಿಯನ್ನು ಕೊಡುವವರು, ಸರ್ವರ ದುಃಖಹರ್ತ-ಸುಖಕರ್ತನಾಗಿದ್ದಾರೆ. ಬಹಳ ಪ್ರಿಯರಲ್ಲವೆ. ಅವರಂತಹ ಪ್ರಿಯವಾದವರು ಮತ್ತ್ಯಾರೂ ಇಲ್ಲ. ಯಾವ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಿದರೋ ಅವರು ಅವಶ್ಯವಾಗಿ ಪ್ರಿಯರಾಗಿರುವರಲ್ಲವೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ, ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನಿಂದ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆಯಲ್ಲವೆ. ನೀವಾತ್ಮರು ಸಹೋದರ-ಸಹೋದರರಾಗಿದ್ದೀರಿ, ಈಗ ತಂದೆಯ ಮೂಲಕ ಕೇಳುತ್ತಿದ್ದೀರಿ - ಬಾಬಾ, ಬಂದು ನಮ್ಮನ್ನು ಪಾವನ ಮಾಡಿ ಎಂದು ಎಲ್ಲಾ ಆತ್ಮರು ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ಪಾವನರನ್ನಾಗಿ ಮಾಡಲು ಬಂದಿದ್ದಾರೆಂದು ಈಗ ಆತ್ಮವು ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ 5000 ವರ್ಷಗಳ ಮೊದಲು ನಿಮ್ಮನ್ನು ಪಾವನರನ್ನಾಗಿ ಮಾಡಲು ಬಂದಿದ್ದೆನು, ಈಗ ತಂದೆಯಾದ ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನಿಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಥವಾ ಪತಿತ-ಪಾವನ ಸೀತಾರಾಂ ಎಂದು ಕೂಗುತ್ತಿರುತ್ತಾರೆ ಅಂದಮೇಲೆ ಸ್ವಯಂ ಪತಿತರಾದರಲ್ಲವೆ. ಇದು ನರಕವಾಗಿದೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ. ಗರುಡ ಪುರಾಣದಲ್ಲಿ ಭಯಂಕರ ಮಾತುಗಳನ್ನು ಬರೆದು ಬಿಟ್ಟಿದ್ದಾರೆ - ಇದನ್ನು ಮಾಡಿದರೆ ಈ ರೀತಿಯಾಗುವಿರಿ. ಇದಾಗುವುದು.... ಎಂದು. ಗೋವಿನ ಬಾಲವನ್ನು ಹಿಡಿದುಕೊಂಡರೆ ಸ್ವರ್ಗದಲ್ಲಿ ಹೊರಟು ಹೋಗುವರೆಂದು ತಿಳಿದುಕೊಳ್ಳುತ್ತಾರೆ. ಹೀಗೆ ಕೆಲವೊಂದು ಮಾತುಗಳು ಬರೆಯಲ್ಪಟ್ಟಿದೆ. ವಾಸ್ತವದಲ್ಲಿ ಪ್ರಾಣಿಗಳ ಮಾತಿಲ್ಲ. ನೀವು ಮಾತೆಯರು ಗೋವುಗಳಾಗಿದ್ದೀರಲ್ಲವೆ. ಎಲ್ಲಿಯವರೆಗೆ ನಿಮ್ಮ ಬಾಲ ಅಥವಾ ನಿಮ್ಮ ಬೆನ್ನು ಹಿಡಿಯುವುದಿಲ್ಲವೋ ಅಲ್ಲಿಯವರೆಗೆ ಯಾರಿಗೂ ಮಾರ್ಗವೂ ಸಿಗಲು ಸಾಧ್ಯವಿಲ್ಲ. ಬಾಲವಂತೂ ಇಲ್ಲ, ನಿಮ್ಮ ಬಾಲ ಹಿಡಿದುಕೊಂಡು ಪಾರಾಗುತ್ತೇವೆ ಎಂದು ಹೇಳುತ್ತಾರೆ. ಈಗ ಇಲ್ಲಿ ಬಾಲವನ್ನಂತೂ ಹಿಡಿಯಬೇಕಾಗಿಲ್ಲ ಆದರೆ ಫಾಲೋ ಮಾಡಬೇಕಾಗಿದೆ. ಸನ್ಯಾಸಿಗಳ ಅನುಯಾಯಿಗಳಂತೂ ಅನೇಕರಿದ್ದಾರೆ ಆದರೆ ಫಾಲೋ ಮಾಡುವುದು ಅಂದರೆ ಪವಿತ್ರರಾಗುವುದು. ನೀವು ಸತ್ಯ-ಸತ್ಯವಾದ ಅನುಯಾಯಿಗಳಾಗಿದ್ದೀರಿ. ಶಿವ ತಂದೆಯು ತಿಳಿಸುತ್ತಾರೆ - ನಾನು ನಿಮ್ಮೆಲ್ಲರನ್ನೂ ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದೇನೆ, ನೀವು ನನ್ನನ್ನು ನೆನಪು ಮಾಡಿರಿ, ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಪಾವನರಾಗದೇ ಫಾಲೋ ಮಾಡಲು ಸಾಧ್ಯವಿಲ್ಲ. ಶಿವ ತಂದೆಯನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ಫಾಲೋ ಮಾಡುವುದಕ್ಕಾಗಿಯೇ ನೀವಿಲ್ಲಿ ಕುಳಿತಿದ್ದೀರಿ. ಭಕ್ತಿಮಾರ್ಗದಲ್ಲಿಯೂ ನೀವು ನನ್ನನ್ನು ನೆನಪು ಮಾಡುತ್ತಾ ಬಂದಿದ್ದೀರಿ. ನಿಮಗೆ ತಿಳಿದಿದೆ - ಪರಮಾತ್ಮ ಪ್ರಿಯತಮನಾಗಿದ್ದಾರೆ, ಆತ್ಮರು ಪ್ರಿಯತಮೆಯರಾಗಿದ್ದೀರಿ. ಆತ್ಮರು ಅವರನ್ನು ನೆನಪು ಮಾಡುತ್ತಾರೆ ಮತ್ತು ಅವರು ಕರೆದುಕೊಂಡು ಹೋಗಲು ಬಂದಿದ್ದಾರೆ. ನನ್ನನು ಫಾಲೋ ಮಾಡಿದರೆ ನಿಮ್ಮನ್ನು ಜೊತೆ ಕರೆದುಕೊಂಡು ಹೋಗುತ್ತೇನೆ. ಹೇಗೆ ಫಾಲೋ ಮಾಡುವುದು ಎಂಬುದನ್ನೂ ಸಹ ತಿಳಿಸುತ್ತಾರೆ. ನಾನು ಪಾವನನಾಗಿದ್ದೇನೆ, ನೀವು ಪತಿತರಾಗಿದ್ದೀರಿ ಆದ್ದರಿಂದ ಅವಶ್ಯವಾಗಿ ಪಾವನರಾಗಬೇಕಾಗಿದೆ. ಫಾಲೋ ಮಾಡಬೇಕಾಗಿದೆ. ವಿಕಾರಿಗಳಂತೂ ಫಾಲೋ ಮಾಡಲು ಸಾಧ್ಯವಿಲ್ಲ. ಫಾಲೋ ಮಾಡುವುದಕ್ಕಾಗಿ ನನ್ನ ಸಮಾನ ಪವಿತ್ರರಾಗಿ. ನಾನು ಪತಿತರನ್ನು ನನ್ನ ಜೊತೆ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆಯೇ! ಇಷ್ಟೇಲ್ಲಾ ಮನುಷ್ಯರು ಭಕ್ತಿ, ತಪ, ದಾನ, ಪುಣ್ಯ ಇತ್ಯಾದಿಗಳನ್ನು ಮುಕ್ತಿಗಾಗಿ ಮಾಡುತ್ತಾರೆ ಏಕೆಂದರೆ ಇಲ್ಲಿ ದುಃಖವಿದೆ ಆದ್ದರಿಂದ ನಮ್ಮ ಮನೆಗೆ ಹಿಂತಿರುಗಿ ಹೋಗಬೇಕೆಂದು ಬಯಸುತ್ತಾರೆ. ಇದಕ್ಕಾಗಿ ತಂದೆಯು ಹೇಳುತ್ತಾರೆ - ಮಕ್ಕಳೇ ಅವಶ್ಯವಾಗಿ ಪವಿತ್ರ ಆಗಬೇಕಾಗುವುದು. ನಾನು ಪಾವನನಾಗಿದ್ದೇನೆ, ಆದ್ದರಿಂದ ನಿಮ್ಮನ್ನೂ ಪಾವನರನ್ನಾಗಿ ಮಾಡುತ್ತೇನೆ. ಬ್ರಹ್ಮಾ ತನುವಿನಲ್ಲಿ ಬರುತ್ತೇನೆ, ರಚಯಿತನಾಗಿದ್ದೇನೆ. ನಾನು ಈ ಬ್ರಹ್ಮಾರವರ ತನುವಿನಲ್ಲಿ ಬರುತ್ತೇನೆ, ಬ್ರಹ್ಮಾ ಮೂಲಕ ತಂದೆಯು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದು ತೋರಿಸುತ್ತಾರೆ. ನೀವು ಬಿ.ಕೆ. ಆಗಿದ್ದೀರಿ. ಶಿವ ತಂದೆಯನ್ನು ಫಾಲೋ ಮಾಡಬೇಕೆಂದು ನಿಮಗೆ ತಿಳಿದಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದ್ದೇ ಆದರೆ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೇನೆಂದು ಪ್ರತಿಜ್ಞೆ ಮಾಡುತ್ತೇನೆ ಮತ್ತ್ಯಾವುದೇ ಉಪಾಯವಿಲ್ಲ. ಪತಿತ-ಪಾವನ ಎಂದು ಹೇಳುತ್ತಾರೆ, ಹೀಗೆ ಹೇಳಿದಾಗ ದೃಷ್ಟಿಯು ಮೇಲೆ ಹೋಗುತ್ತದೆ, ಇಲ್ಲವೆ ನೀರಿನ ಕಡೆ ಹೋಗುತ್ತದೆ. ಗಂಗೆಯಂತೂ ಪತಿತ-ಪಾವನಿಯಲ್ಲ, ಇವು ಸಾಗರದಿಂದ ಹೊರಟಿರುವ ನದಿಗಳಾಗಿವೆ. ಈಗ ಹಿಡಿಯುವುದಾದರೆ ನಿಮ್ಮ ಬಾಲವನ್ನು ಹಿಡಿದುಕೊಳ್ಳಬೇಕು. |
Subsets and Splits
No community queries yet
The top public SQL queries from the community will appear here once available.