text
stringlengths 0
61.5k
|
---|
1. ಶ್ರೀಮತದಂತೆ ತನ್ನ ಮತ್ತು ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಯಾರಾದರೂ ಅಸತ್ಯ ಮಾತುಗಳನ್ನು ತಿಳಿಸಿದರೆ ಕೇಳಿಯೂ ಕೇಳದಂತಿರಬೇಕು. ಅದರಮೇಲೆ ಮುನಿಸಿಕೊಳ್ಳಬಾರದು. |
2. ಎಂದೂ ಕೂಡ ದೇವತೆಯಾಗುವಂತಹ ಬ್ರಾಹ್ಮಣ ಕುಲಭೂಷಣರ ಹೆಸರು ಕೆಡಬಾರದು – ಇದರ ಮೇಲೆ ಗಮನ ಕೊಡಬೇಕಾಗಿದೆ. ಎಂದೂ ಯಾವುದೇ ಉಲ್ಟಾ ಕರ್ಮ ಮಾಡಬಾರದು. ಹಿಂದಿನ ಲೆಕ್ಕಾಚಾರಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ತಿಳಿಸುತ್ತಾರೆ ಆದ್ದರಿಂದ ಮಕ್ಕಳೇ, ಆತ್ಮಾಭಿಮಾನಿಗಳಾಗಿ ಕುಳಿತುಕೊಳ್ಳಬೇಕಾಗಿದೆ. ಈ ರೀತಿ ಮತ್ತೆಲ್ಲಿಯೂ ತಿಳಿಸುವುದಿಲ್ಲ. ಯಾವುದೇ ಸಾಧು-ಸಂತ ಮೊದಲಾದವರೂ ಸಹ ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಿರಿ ಎಂದು ತಿಳಿಸುವುದಿಲ್ಲ. ಇದನ್ನು ಒಬ್ಬ ತಂದೆಯೇ ತಿಳಿಸುತ್ತಾರೆ. ಮತ್ತ್ಯಾರಿಗೂ ಹೇಳಲು ಬರುವುದೇ ಇಲ್ಲ, ಈ ಯುಕ್ತಿಯನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ನೀವು ಮಕ್ಕಳೂ ತಿಳಿದುಕೊಂಡಿದ್ದೀರಿ, ನಾವಾತ್ಮರಾಗಿದ್ದೇವೆ, ಆತ್ಮವೇ ಬಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ವಕೀಲ, ಕೆಲವೊಮ್ಮೆ ವೈದ್ಯನಾಗುತ್ತದೆ, ಆತ್ಮವೇ ಈಗ ಪತಿತವಾಗಿದೆ ಮತ್ತೆ ಪಾವನವಾಗುತ್ತದೆ. ಆತ್ಮದಲ್ಲಿ ಜ್ಞಾನ ಧಾರಣೆಯಾಗುತ್ತದೆ. ತಂದೆಯು ನಿರಾಕಾರ ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಬಂದು ಜ್ಞಾನವನ್ನು ತಿಳಿಸುತ್ತಾರಲ್ಲವೆ. ಪತಿತ-ಪಾವನನಾಗಿದ್ದಾರೆ, ಆದ್ದರಿಂದ ಅವಶ್ಯವಾಗಿ ಬಂದು ಪಾವನರನ್ನಾಗಿ ಮಾಡುತ್ತಾರೆ. ಅವರು ಪಾರಲೌಕಿಕ ಪರಮಪಿತ ಪರಮಾತ್ಮನಾಗಿದ್ದಾರೆ. ತಿಳಿಸುತ್ತಾರೆ - ನಾನು ನಿಮ್ಮ ಪಾರಲೌಕಿಕ ತಂದೆಯಾಗಿದ್ದೇನೆ, ಜ್ಞಾನ ಸಾಗರನಾಗಿದ್ದೇನೆ. ನನಗೆ ನನ್ನದೇ ಆದ ಶರೀರವಿಲ್ಲ. ಇದೆಲ್ಲಾ ಜ್ಞಾನವನ್ನು ನೀವಾತ್ಮರು ಧಾರಣೆ ಮಾಡಿಕೊಳ್ಳುತ್ತೀರಿ ಅಂದಾಗ ನೀವು ಆತ್ಮಾಭಿಮಾನಿಗಳಾಗಬೇಕಾಗಿದೆ. ದೇಹಾಭಿಮಾನವನ್ನು ಇಟ್ಟುಕೊಳ್ಳಬಾರದು. ಕೇಳುವವರೂ ಮತ್ತು ಹೇಳುವವರೂ ಇಬ್ಬರೂ ದೇಹಾಭಿಮಾನಿಯಾಗಿರುವ ಸ್ಥಳವು ಮತ್ತೆಲ್ಲಿಯೂ ಇರುವುದಿಲ್ಲ. ತಂದೆಯಂತೂ ನಿರಾಕಾರನಾಗಿದ್ದಾರೆ, ಅವರು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತಾರೆ. ಉಳಿದೆಲ್ಲಾ ಮನುಷ್ಯರು ದೇಹಾಭಿಮಾನಿಗಳಾಗಿದ್ದಾರೆ. ಭಲೆ ಈ ಲಕ್ಷ್ಮೀ-ನಾರಾಯಣರು ಆತ್ಮಾಭಿಮಾನಿಯಾಗಿದ್ದರು ಎಂದು ಹೇಳುತ್ತಾರೆ ಆದರೂ ಸಹ ದೇಹಾಭಿಮಾನವಂತೂ ಇರುತ್ತದೆಯಲ್ಲವೆ. ಈ ಜ್ಞಾನವನ್ನು ಪರಮಪಿತ ಪರಮಾತ್ಮನೇ ಬಂದು ಕೊಡುತ್ತಾರೆ, ಆತ್ಮವು ಧಾರಣೆ ಮಾಡಿಕೊಳ್ಳುತ್ತದೆ. ಆತ್ಮಕ್ಕೆ ಪತಿತನಿಂದ ಪಾವನವಾಗುವ ಯುಕ್ತಿಯನ್ನು ತಿಳಿಸುತ್ತಾರೆ. ಈಗ ಇಡೀ ಪ್ರಪಂಚದ ಅವನತಿಯಾಗಿದೆ, ಪುನಃ ಉನ್ನತಿ ಮಾಡಲು ಬರುತ್ತಾರೆ. ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಅವನತಿ ಎಂದರೆ ವಿನಾಶ, ಉನ್ನತಿ ಎಂದರೆ ಸ್ಥಾಪನೆ. ಸ್ಥಾಪನೆ ಮತ್ತು ವಿನಾಶ. ಯಾವುದರ ಸ್ಥಾಪನೆ? ಹೊಸ ಪ್ರಪಂಚದ ಸ್ಥಾಪನೆ ಸ್ವರ್ಗದ ಸ್ಥಾಪನೆ ಮತ್ತೆ ಹಳೆಯ ಪ್ರಪಂಚ, ನರಕದ ವಿನಾಶ. ಸ್ಥಾಪನೆ ಮತ್ತು ವಿನಾಶ. ಕಲಿಯುಗವು ಹಳೆಯ ಪ್ರಪಂಚವಾಗಿದೆ, ಇದರ ವಿನಾಶವು ಖಂಡಿತ ಆಗಬೇಕಾಗಿದೆ. ವಿನಾಶದ ಚಿಹ್ನೆಯು ಈ ಮಹಾಭಾರಿ ಮಹಾಭಾರತ ಯುದ್ಧವಾಗಿದೆ. ಮಹಾಭಾರತದ ವೃತ್ತಾಂತವನ್ನು ಮಹಾಭಾರತದ ಶಾಸ್ತ್ರದಲ್ಲಿ ತೋರಿಸುತ್ತಾರೆ. ತಂದೆಯು ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಹೊಸ ಪ್ರಪಂಚದ ಸ್ಥಾಪನೆ ಮಾಡುವರಲ್ಲವೆ. ಇದು ಬೇಹದ್ದಿನ ವಿನಾಶ ಮತ್ತು ಬೇಹದ್ದಿನ ಸ್ಥಾಪನೆಯಾಗಿದೆ. ತಂದೆಯೇ ಮಕ್ಕಳಿಗಾಗಿ ಹೊಸ ಮನೆಯನ್ನು ಕಟ್ಟಿಸುತ್ತಾರೆ ಮತ್ತೆ ಹಳೆಯದನ್ನು ಸಮಾಪ್ತಿ ಮಾಡಿಸುತ್ತಾರೆ. ನೀವು ತಿಳಿದುಕೊಳ್ಳುತ್ತೀರಿ - ತಂದೆಯು ಈಗ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಿದ್ದಾರೆ. ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುವುದಕ್ಕಾಗಿ ನಮ್ಮನ್ನು ತಯಾರು ಮಾಡುತ್ತಿದ್ದಾರೆ. ವಿನಾಶಕ್ಕಾಗಿ ಮಹಾಭಾರತ ಯುದ್ಧವು ಪ್ರಸಿದ್ಧವಾಗಿದೆ. ಇದು ಅದೇ ಸಮಯವಾಗಿದೆ, ಅದೇ ನಕ್ಷತ್ರಗಳು ಬಂದು ಪರಸ್ಪರ ಮಿಲನ ಮಾಡಿವೆ ಯಾವುದು ಮಹಾಭಾರತದ ಸಮಯದಲ್ಲಿ ಇತ್ತು. ಈ ಏಣಿಯಲ್ಲಿಯೂ ಬರೆಯಲಾಗಿದೆ - ಭಾರತದ ಉತ್ಥಾನ ಮತ್ತು ಪಥನದ ಅದ್ಭುತ ಕಥೆಯೆಂದು. ಈ ಸಮಯದಲ್ಲಿ ಕಲ್ಪ-ಕಲ್ಪ ಎಂಬ ಹೆಸರು ಬರಬೇಕಾಗಿದೆ. ಆದಿಯಿಂದ ಅಂತ್ಯದವರೆಗೆ ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ಮನುಷ್ಯರ ಬುದ್ಧಿಗೆ ಒಮ್ಮೆಲೆ ಗಾಡ್ರೇಜ್ ಬೀಗವು ಹಾಕಲ್ಪಟ್ಟಿದೆ. ಈ ಮಾತುಗಳನ್ನು ಮನುಷ್ಯರೇ ತಿಳಿದುಕೊಳ್ಳಬೇಕಾಗಿದೆ. ಆತ್ಮರು ಪಾತ್ರವನ್ನಭಿನಯಿಸಲು ಇಲ್ಲಿ ಶರೀರ ಧಾರಣೆ ಮಾಡಿಕೊಳ್ಳುತ್ತೀರಿ ಅಂದಮೇಲೆ ಡ್ರಾಮಾದ ಆದಿ-ಮಧ್ಯ-ಅಂತ್ಯದ ರಚಯಿತ, ನಿರ್ದೇಶಕ, ಮುಖ್ಯ ಪಾತ್ರಧಾರಿ ಮೊದಲಾದವರನ್ನು ಅರಿತುಕೊಳ್ಳಬೇಕಲ್ಲವೆ. ಈಗ ನಿಮಗೆ ಡ್ರಾಮಾದ ಆದಿಯಿಂದ ಹಿಡಿದು ಅಂತ್ಯದವರೆಗೆ ಮೂರೂ ಕಾಲಗಳ ಜ್ಞಾನವು ಅರ್ಥವಾಗಿದೆ. ತಂದೆಯ ಮೂಲಕ ಇದೆಲ್ಲಾ ಜ್ಞಾನವು ಸಿಗುತ್ತಿದೆ - ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ! ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ, ದೈಹಿಕ ಜ್ಞಾನಕ್ಕೆ ಫಿಲಾಸಫಿ ಎಂದು ಹೇಳಲಾಗುತ್ತದೆ. ಆತ್ಮಿಕ ಜ್ಞಾನಕ್ಕೆ ಜ್ಞಾನವೆಂದು ಹೇಳಲಾಗುತ್ತದೆ. ಇವೆಲ್ಲಾ ಮಾತುಗಳನ್ನು ಮಕ್ಕಳ ಬುದ್ಧಿಯಲ್ಲಿ ಕೂರಿಸಿದ್ದಾರೆ. |
ಮಕ್ಕಳಿಗೆ ತಿಳಿದಿದೆ - ಈಗ 84 ಜನ್ಮಗಳ ನಾಟಕವು ಮುಕ್ತಾಯವಾಗುತ್ತದೆ, ನಾವೀಗ ಹಿಂತಿರುಗಿ ಹೋಗುತ್ತೇವೆ ಆದರೆ ಪತಿತರು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಲ್ಲದಿದ್ದರೆ ಇಷ್ಟೊಂದು ಜಪ-ತಪ, ತೀರ್ಥ ಯಾತ್ರೆಗಳನ್ನು ಏಕೆ ಮಾಡುತ್ತಾರೆ! ಪವಿತ್ರರಾಗುವುದಕ್ಕಾಗಿಯೇ ಗಂಗಾ ಸ್ನಾನ ಮಾಡಲು ಹೋಗುತ್ತಾರೆ ಆದರೆ ಅದರಿಂದ ಯಾರೂ ಪಾವನರಾಗಲು ಸಾಧ್ಯವಿಲ್ಲ. ಅದರಿಂದ ಯಾರೂ ಹಿಂತಿರುಗಿ ಹೋಗುವುದಕ್ಕೂ ಸಾಧ್ಯವಿಲ್ಲ. ಇಂತಹವರು ನಿರ್ವಾಣಧಾಮಕ್ಕೆ ಹೋದರು, ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತು ಎಂದು ಸುಮ್ಮನೆ ಹೇಳುತ್ತಿರುತ್ತಾರೆ. ಆದರೆ ತಂದೆಯು ತಿಳಿಸಿದ್ದಾರೆ - ಯಾರೂ ಹಿಂತಿರುಗಿ ಹೋಗುವುದಿಲ್ಲ. ಎಲ್ಲಾ ಪಾತ್ರಧಾರಿಗಳು ಇಲ್ಲಿಯೇ ಇದ್ದಾರೆ, ಈಗ ನಾಟಕವು ಮುಕ್ತಾಯವಾಗುತ್ತದೆ ಆದ್ದರಿಂದ ಎಲ್ಲರೂ ಸ್ಟೇಜಿನ ಮೇಲೆ ನಿಂತಿದ್ದಾರೆ, ಎಲ್ಲರೂ ಇಲ್ಲಿ ಹಾಜರಿದ್ದಾರೆ. ಬೌದ್ಧರು, ಕ್ರಿಶ್ಚಿಯನ್ನರು ಇಲ್ಲಿದ್ದಾರೆಂಬುದು ಮನುಷ್ಯರಿಗೆ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಯಾರೆಲ್ಲಾ ಆತ್ಮಗಳು ಮೇಲಿನಿಂದ ಇಲ್ಲಿಗೆ ಬಂದಿದ್ದಾರೆಯೋ ಎಲ್ಲರೂ ಈ ಸಮಯದಲ್ಲಿ ತಮೋಪ್ರಧಾನರಾಗಿದ್ದಾರೆ. ತಮೋಪ್ರಧಾನರಿಂದ ಸತೋಪ್ರಧಾನರು ಕಲ್ಪದ ಮೊದಲೂ ಆಗಿದ್ದರು, ತಂದೆಯು ಬಂದು ಸ್ಥಾಪನೆ ಮತ್ತು ವಿನಾಶವನ್ನು ಮಾಡಿಸುತ್ತಾರೆ. ತಿಳಿಸುತ್ತಾರೆ, ಈ ಜ್ಞಾನವು ರಾಜರಿಗೂ ರಾಜರನ್ನಾಗಿ ಮಾಡುವಂತದ್ದಾಗಿದೆ. ನಾನು ನಿಮ್ಮನ್ನು ರಾಜಾಧಿ ರಾಜರನ್ನಾಗಿ ಮಾಡುತ್ತೇನೆ. ಕೃಷ್ಣನಂತೂ ಸ್ಥಾಪನೆ ಮಾಡಿಸುವುದಿಲ್ಲ, ತಂದೆಯು ರಚಯಿತನಾಗಿದ್ದಾರೆ. ತಂದೆಯೇ ಬಂದು ತಿಳಿಸುತ್ತಾರೆ - ಮಕ್ಕಳೇ, ಯಾವಾಗ ಸೃಷ್ಟಿಯು ಪತಿತವಾಗುವುದೋ ಆಗ ನೀವು ನನ್ನನ್ನು ಕರೆಯುತ್ತೀರಿ, ನಾನು ಹೊಸ ಸೃಷ್ಟಿಯನ್ನು ರಚಿಸುತ್ತೇನೆಂದಲ್ಲ. ಪ್ರಳಯವಾಗುತ್ತದೆ ಎಂದು ತೋರಿಸಿರುವುದು ತಪ್ಪಾಗಿದೆ. ಮನುಷ್ಯರು ಕರೆಯುವುದೇ ಹೇ ಪತಿತ-ಪಾವನ ಬನ್ನಿ ಎಂದು, ಅಂದಮೇಲೆ ಅವಶ್ಯವಾಗಿ ಪತಿತ ಪ್ರಪಂಚದಲ್ಲಿ ಬರುತ್ತಾರಲ್ಲವೆ. ತಂದೆಯೇ ಬಂದು ಕೃಷ್ಣ ಪುರಿಯ ಸಾಕ್ಷಾತ್ಕಾರ ಮಾಡಿಸುತ್ತಾರೆ, ಕೃಷ್ಣನು ಆಲದ ಎಲೆಯ ಮೇಲೆ ತೇಲಿ ಬಂದನೆಂದು ತೋರಿಸುತ್ತಾರೆ, ಇದು ಸರಿಯಾದ ಮಾತಾಗಿದೆ. ಹೊಸ ಪ್ರಪಂಚದಲ್ಲಿ ಮೊದಲು ಕೃಷ್ಣನೇ ಬರುತ್ತಾನೆ, ಸಾಗರದಲ್ಲಿ ಅಲ್ಲ ಗರ್ಭ ಮಹಲಿನಲ್ಲಿ ಬರುತ್ತಾನೆ. ಬೆರಳನ್ನು ಚೀಪುತ್ತಾ ಬಹಳ ಆರಾಮದಿಂದ ಗರ್ಭ ಮಹಲಿನಲ್ಲಿರುತ್ತಾನೆ. ಸತ್ಯಯುಗದಲ್ಲಿ ಯಾರೆಲ್ಲಾ ಮಕ್ಕಳಿರುವರೋ ಗರ್ಭ ಮಹಲಿನಲ್ಲಿರುತ್ತಾರೆ. ಅವರು ಗರ್ಭ ಮಹಲಿನ ಮಾತನ್ನು ಸಾಗರದಲ್ಲಿ ಎಲೆಯ ಮೇಲೆ ಕುಳ್ಳರಿಸಿ ತೋರಿಸಿದ್ದಾರೆ. ಅದೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ತಂದೆಯೇ ಇವೆಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಇಲ್ಲಿ ಗರ್ಭ ಜೈಲಿನಲ್ಲಿರುತ್ತಾರೆ ಆದ್ದರಿಂದ ನಮ್ಮನ್ನು ಹೊರತೆಗೆಯಲಿ, ಮತ್ತೆ ನಾವು ಪಾಪ ಮಾಡುವುದಿಲ್ಲ ಎಂದು ಆತ್ಮವು ಬೇಡುತ್ತದೆ. ಆದರೆ ರಾವಣನ ಪ್ರಪಂಚದಲ್ಲಿ ಪಾಪಗಳಂತೂ ಆಗಿಯೇ ಆಗುತ್ತವೆ. ಆದರೂ ಪಾಪಗಳನ್ನು ಮಾಡತೊಡಗುತ್ತಾರೆ. ನೀವು ಅರ್ಧಕಲ್ಪ ಪಂಜರದ ಪಕ್ಷಿಗಳಾಗಿ ಬಿಡುತ್ತೀರಿ, ಕಳ್ಳ ಕಾಕರಿಗೆ ಪಂಜರದ ಪಕ್ಷಿಗಳೆಂದು ಹೇಳುತ್ತಾರೆ. ಜೈಲಿನಿಂದ ಹೊರಗೆ ಬರುತ್ತಾರೆ ಮತ್ತೆ ಕಳ್ಳತನ ಮಾಡುತ್ತಾ ಇರುತ್ತಾರೆ. ಪುನಃ ಜೈಲಿಗೆ ಹೋಗಬೇಕಾಗುತ್ತದೆ ಆದ್ದರಿಂದ ಪಂಜರದ ಪಕ್ಷಿಗಳೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ, ಇದು ರಾವಣ ರಾಜ್ಯವಾಗಿದೆ. ಅಲ್ಲಂತೂ ಈ ಮಾತುಗಳಿರುವುದಿಲ್ಲ, ಅದು ರಾಮ ರಾಜ್ಯವಾಗಿರುತ್ತದೆ. ಅಲ್ಲಿ ಗರ್ಭ ಜೈಲಾಗಲಿ, ಸ್ಥೂಲ ಜೈಲಾಗಲಿ ಇರುವುದಿಲ್ಲ. ಇಲ್ಲಂತೂ ಎಷ್ಟೊಂದು ಮನುಷ್ಯರು ಜೈಲಿನಲ್ಲಿ ಬಿದ್ದಿರುತ್ತಾರೆ. ಗರ್ಭವೂ ಜೈಲಾಗಿದೆ ಮತ್ತು ಆ ಜೈಲೂ ಸಹ ಇದೆ. ಡಬಲ್ ಜೈಲುಗಳಿವೆ, ಕಲಿಯುಗದ ಅಂತ್ಯವಲ್ಲವೆ. |
ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ಈಗ ನಿಮಾಣ ಮಾಡುತ್ತಿದ್ದೀರಿ, ಉನ್ನತಿ ಮತ್ತು ಅವನತಿ ಪ್ರತೀ ಕಲ್ಪವೂ ಆಗುತ್ತಲೇ ಇರುತ್ತದೆ. ಪ್ರಪಂಚದ ಉನ್ನತಿ ಮತ್ತು ಅವನತಿಯಾಗುತ್ತದೆ, ಅದರಲ್ಲಿ ಮುಖ್ಯ ಪಾತ್ರವು ಭಾರತದ್ದಾಗಿದೆ. ಪರಮಾತ್ಮ ಮತ್ತು ಆತ್ಮರು ಬಹಳ ಕಾಲ ಅಗಲಿ ಹೋಗಿದ್ದರು ಎಂದು ಹಾಡುತ್ತಿರುತ್ತಾರೆ. ಅದಕ್ಕೂ ಲೆಕ್ಕವು ಬೇಕಲ್ಲವೆ. ಯಾವ ಆತ್ಮರು ಬಹಳ ಕಾಲದಿಂದ ಅಗಲಿ ಹೋಗಿದ್ದರೋ..... ಮೊಟ್ಟ ಮೊದಲು ದೇವಿ-ದೇವತಾ ಧರ್ಮದ ಆತ್ಮರು ಪಾತ್ರವನ್ನಭನಯಿಸಲು ಬರುತ್ತಾರೆ, ಈಗ ಆ ದೇವತೆಗಳಿಲ್ಲ. ಅವರು ರಾಜ್ಯ ಮಾಡಿ ಹೋಗುತ್ತಾರೆ, ಅವರ ಸಾಕ್ಷಿಯಾಗಿ ಚಿತ್ರಗಳಿರುತ್ತವೆ. ರಾಜ್ಯವಂತೂ ಸಮಾಪ್ತಿಯಾಯಿತು, ಸ್ವರ್ಗವೇ ಸಮಾಪ್ತಿಯಾಗುತ್ತದೆ ನಂತರ ನರಕವಾಗುತ್ತದೆ ಮತ್ತೆ ನರಕವೂ ಸಮಾಪ್ತಿಯಾಗಿ ಸ್ವರ್ಗವಾಗುತ್ತದೆ ಅಂದಾಗ ಹೊಸ ಪ್ರಪಂಚದ ಸ್ಥಾಪನೆ, ಹಳೆಯದರ ವಿನಾಶವಾಗುತ್ತದೆ. ಸ್ಥಾಪನೆಗಾಗಿ ಮಕ್ಕಳು ಬೇಕಲ್ಲವೆ. ಇರುವವರೂ ನೀವೇ ಆಗಿದ್ದೀರಿ, ಮೊದಲು ನೀವು ದೈವೀ ಗುಣವಂತ ದೇವತೆಗಳಾಗಬೇಕಾಗಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು.... ಎಂಬುದೂ ಗಾಯನವಿದೆ. ಮನುಷ್ಯರು ಪತಿತರಾಗಿದ್ದಾರಲ್ಲವೆ. ಭಗವಾನುವಾಚ - ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಬೇಕಾಗಿದೆ, ಈಗ ಈ ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಇದರಲ್ಲಿ ಪವಿತ್ರರಾಗಬೇಕಾಗಿದೆ. ಇದನ್ನು ಬಹಳ ಚೆನ್ನಾಗಿ ತಿಳಿಸಬೇಕು. ನಾವು ಈ ಮೃತ್ಯುಲೋಕದ ಅಂತಿಮ ಜನ್ಮ ಪವಿತ್ರರಾಗಿರುತ್ತೇವೆ. ತಂದೆಯು ತಿಳಿಸುತ್ತಾರೆ - ವಿಕಾರಗಳ ಮೇಲೆ ಜಯ ಗಳಿಸಿದರೆ ನೀವು ವಿಶ್ವದ ಮಾಲೀಕರಾಗುವಿರಿ. ಮಕ್ಕಳೂ ಸಹ ಕೇಳಿ ಮತ್ತೆ ಅನ್ಯರಿಗೆ ತಿಳಿಸುತ್ತೀರಿ, ಈ ಹಳೆಯ ಪ್ರಪಂಚದ ವಿನಾಶವು ಸನ್ಮುಖದಲ್ಲಿ ನಿಂತಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ, ಕಾಮ ಮಹಾಶತ್ರುವಾಗಿದೆ ಆದ್ದರಿಂದ ಪ್ರತಿಜ್ಞೆ ಮಾಡಿರಿ. ಈಗ ನೀವು ತಿಳಿದುಕೊಂಡಿದ್ದೀರಿ, ನಾವು ಪವಿತ್ರರಾಗುತ್ತೇವೆ. ಈ ಹಳೆಯ ಪ್ರಪಂಚದ ವಿನಾಶವು ಅವಶ್ಯವಾಗಿ ಆಗಲಿದೆ. ಅದಕ್ಕೆ ಮೊದಲೇ ಪವಿತ್ರರಾಗಬೇಕಾಗಿದೆ. ವಿನಾಶವಾದರೆ ಮತ್ತೆ ಮಾತೇ ಕೇಳಬೇಡಿ, ಹಾಹಾಕಾರವಾಗಿ ಬಿಡುತ್ತದೆ, ಬಹಳ ಕಠಿಣ ಮೃತ್ಯುವಿರುತ್ತದೆ. ನೀವು ನೋಡುವುದಕ್ಕೂ ಸಾಧ್ಯವಿಲ್ಲ, ಹೇಗೆ ಯಾರಿಗಾದರೂ ಆಪರೇಷನ್ ಆಗುತ್ತದೆಯೆಂದರೆ ಅದನ್ನು ನಿರ್ಬಲರು ನೋಡಿ ತಡೆಯುವುದಿಲ್ಲ, ಮೂರ್ಛಿತರಾಗಿ ಬೀಳುತ್ತಾರೆ ಆದ್ದರಿಂದ ವೈದ್ಯರು ಕುಟುಂಬದವರನ್ನು ಬರಲು ಬಿಡುವುದಿಲ್ಲ. ಈಗಂತೂ ಎಷ್ಟು ದೊಡ್ಡ ಆಪರೇಷನ್ ಆಗುವುದು. ಒಬ್ಬರು ಇನ್ನೊಬ್ಬರನ್ನು ಸಾಯಿಸುತ್ತಾ ಇರುತ್ತಾರೆ, ಇದು ಕೊಳಕು ಪ್ರಪಂಚ, ಮುಳ್ಳುಗಳ ಕಾಡಾಗಿದೆ. ಸತ್ಯಯುಗಕ್ಕೆ ಹೂದೋಟ, ಹೂವಿನ ಉದ್ಯಾನವನವೆಂದು ಹೇಳಲಾಗುತ್ತದೆ. ದೇವತೆಗಳು ಚೈತನ್ಯ ಹೂಗಳಲ್ಲವೆ. ಮನುಷ್ಯರಂತೂ ತಿಳಿದುಕೊಳ್ಳುತ್ತಾರೆ, ಸ್ವರ್ಗದಲ್ಲಿ ಯಾವುದೋ ಹೂದೋಟವಿರುತ್ತದೆ ಎಂದು. ಏನನ್ನು ಕೇಳಿಸಿಕೊಳ್ಳುವರೋ ಅದನ್ನೇ ಹೇಳಿ ಬಿಡುತ್ತಾರೆ. ಭಗವಂತನ ಹೂದೋಟವೆಂದು ಹೇಳುತ್ತಾರಲ್ಲವೆ. ಧ್ಯಾನದಲ್ಲಿ ಹೋದಾಗಲೂ ಉದ್ಯಾನವನವನ್ನು ನೋಡುತ್ತಾರೆ, ಅಲ್ಲಾಹ್ನು ಕೈಯಲ್ಲಿ ಹೂ ಕೊಟ್ಟರು ಎಂದು ಹೇಳುತ್ತಾರೆ. ಬುದ್ಧಿಯಲ್ಲಿಯೇ ಅಲ್ಲಾಹ್ನ ಹೂದೋಟವಿರುತ್ತದೆ ಆದ್ದರಿಂದ ಅದರಂತೆಯೇ ಕಾಣುತ್ತದೆ. ಭಕ್ತಿಮಾರ್ಗದಲ್ಲಿ ಸಾಕ್ಷಾತ್ಕಾರಕ್ಕಾಗಿ ಭಕ್ತಿ ಮಾಡುತ್ತಾರೆ. ಸಾಕ್ಷಾತ್ಕಾರವಾಯಿತೆಂದರೆ ಭಗವಂತನು ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ, ಏನು ಕಳೆದು ಹೋಯಿತೋ ಅದು ಪುನಃ ಆಗುವುದು. ಮಕ್ಕಳು ಯಾವ ಉಡುಪಿನಲ್ಲಿ ಹೇಗೆ ಬಂದಿದ್ದೀರೋ ಅದೇ ಉಡುಪುಗಳಲ್ಲಿ ಕಲ್ಪದ ನಂತರವೂ ಬರುತ್ತೀರಿ. ಈ ನಾಟಕವನ್ನು ಕೆಲವರು ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ತಂದೆಯ ಬಳಿ ಯಾರಾದರೂ ಬರುತ್ತಾರೆಂದರೆ ತಂದೆಯು ಕೇಳುತ್ತಾರೆ, ಮೊದಲು ಎಂದಾದರೂ ಬಂದಿದ್ದೀರಾ? ಹೌದು ಬಾಬಾ, ಕಲ್ಪದ ಮೊದಲೂ ಸಹ ತಮ್ಮೊಂದಿಗೆ ಮಿಲನ ಮಾಡಿದ್ದೆವು, ತಮ್ಮಿಂದ ಆಸ್ತಿಯನ್ನು ಪಡೆಯಲು ಬಂದಿದ್ದೆವು ಎಂದು ಹೇಳುತ್ತಾರೆ. ತಂದೆಯು ಕೇಳುತ್ತಾರೆ, ಏನು ಪದವಿಯನ್ನು ಪಡೆದಿದ್ದಿರಿ? ಮಮ್ಮಾ-ಬಾಬಾ ಎಂದು ಹೇಳುತ್ತೇವೆ ಅಂದಮೇಲೆ ಅವಶ್ಯವಾಗಿ ಅವರ ಮನೆತನದಲ್ಲಿ ಬರುತ್ತೇವೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಶ್ರೇಷ್ಠ ಪದವಿಯನ್ನು ಪಡೆಯುವ ಪುರುಷಾರ್ಥ ಮಾಡಿರಿ. ಇವೆಲ್ಲಾ ಮಾತುಗಳು ನಿಮ್ಮ ಬುದ್ಧಿಯಲ್ಲಿವೆ. ಅವಶ್ಯವಾಗಿ ಯುದ್ಧವೂ ಇದೆ, ನರಕದ ವಿನಾಶವಂತೂ ಆಗಲೇಬೇಕಾಗಿದೆ. ನಿಮ್ಮ ಬಳಿ ಒಳ್ಳೊಳ್ಳೆಯ ಚಿತ್ರಗಳಿವೆ. ಕೃಷ್ಣನ ಎರಡು ಗೋಲಗಳಿರುವ ಚಿತ್ರವನ್ನೂ ಸಹ ಮಾಡಿಸಬೇಕು. ಇದರಲ್ಲಿ ಬಹಳ ಸ್ಪಷ್ಟವಾಗಿದೆ. ಸ್ವರ್ಗದ ದ್ವಾರವು ತೆರೆಯುತ್ತದೆಯೆಂದರೆ ನರಕವು ಸಮಾಪ್ತಿಯಾಗುತ್ತದೆ, ನಿಮ್ಮ ಮುಖವು ಸ್ವರ್ಗದ ಕಡೆಯಿದೆ, ಇದು ಬಹಳ ಅಕ್ಯುರೇಟ್ ಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಾವೀಗ ಮನೆಗೆ ಹೋಗಬೇಕಾಗಿದೆ ಅಂದಮೇಲೆ ಮನೆಯನ್ನೇ ನೆನಪು ಮಾಡಬೇಕಾಗಿದೆ. ಹಳೆಯ ಪ್ರಪಂಚವನ್ನು ಮರೆಯಬೇಕಾಗುತ್ತದೆ, ಇದಕ್ಕೆ ಬೇಹದ್ದಿನ ವೈರಾಗ್ಯವೆಂದು ಹೇಳಲಾಗುತ್ತದೆ. ಹಳೆಯ ಪ್ರಪಂಚವನ್ನು ಬಿಟ್ಟು ನಾವು ತಂದೆಯ ಬಳಿ ಹೋಗುತ್ತೇವೆ, ನೆನಪಿನ ಯಾತ್ರೆಯಿಂದಲೇ ಹೋಗುತ್ತೇವೆ. ಮುಖ್ಯವಾದುದು ನೆನಪಿನ ಮಾತಾಗಿದೆ. ನೆನಪನ್ನಂತೂ ಎಲ್ಲರೂ ಮಾಡುತ್ತಾರಲ್ಲವೆ, ಈಗ ತಂದೆಯು ಯಥಾರ್ಥ ಮಾತನ್ನು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ. ಇದು ಅವ್ಯಭಿಚಾರಿ ನೆನಪು ಜೊತೆಗೆ ಅರ್ಥ ಸಹಿತವಾಗಿದೆ. ನೀವು ತಿಳಿದುಕೊಂಡಿದ್ದೀರಿ, ಶಿವ ತಂದೆಯೂ ಬಿಂದುವಾಗಿದ್ದಾರೆ. ತಮ್ಮನ್ನು ಆತ್ಮ ಬಿಂದುವೆಂದು ತಿಳಿಯಿರಿ, ತಂದೆಯನ್ನೂ ಬಿಂದುವೆಂದು ತಿಳಿದುಕೊಳ್ಳಿ. ಹೊಸ ಮಾತನ್ನು ನೋಡಿ ಬೇಗನೆ ಮರೆತು ಹೋಗುತ್ತಾರೆ, ತಮ್ಮನ್ನು ಆತ್ಮನೆಂದು ತಿಳಿದು ತಂದೆ ಮತ್ತು ತಮ್ಮ ಮನೆಯನ್ನು ನೆನಪು ಮಾಡಬೇಕಾಗಿದೆ. ಒಂದುವೇಳೆ ಬಿಂದುವು ಚಿಕ್ಕದೆನಿಸುತ್ತದೆ ಎಂದರೆ ಮನೆಯಂತೂ ದೊಡ್ಡದಾಗಿದೆಯಲ್ಲವೆ. ಮನೆಯನ್ನು ನೆನಪು ಮಾಡಿರಿ, ತಂದೆಯೂ ಅಲ್ಲಿರುತ್ತಾರೆ. ಎಲ್ಲಿ ತಂದೆಯಿರುವರೋ ಅಲ್ಲಿಗೆ ನಾವು ಹೋಗುತ್ತೇವೆ. ಬಿಂದುವು ನೆನಪಿಗೆ ಬರುವುದಿಲ್ಲವೆಂದರೆ ಒಳ್ಳೆಯದು, ಮನೆಯಂತೂ ನೆನಪಿಗೆ ಬರುತ್ತದೆಯಲ್ಲವೆ. ಅದು ಶಾಂತಿಧಾಮ, ಮತ್ತೊಂದು ಸುಖಧಾಮವಾಗಿದೆ, ಇದು ದುಃಖಧಾಮವಾಗಿದೆ. ನೀವೀಗ ನಂಬರ್ವಾರ್ ಪುರುಷಾರ್ಥದನುಸಾರ ಓದುತ್ತಿದ್ದೀರಿ ಮತ್ತೆ ಸುಖಧಾಮದಲ್ಲಿ ಬರುತ್ತೀರಿ. ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವಶ್ಯವಾಗಿ ಸ್ವರ್ಗದ ರಾಜ್ಯಭಾಗ್ಯವು ಬೇಕಲ್ಲವೆ. ಕಲ್ಪದ ಮೊದಲೂ ಸಹ ಶಿವ ತಂದೆಯು ಬಂದಿದ್ದರು, ಸ್ವರ್ಗದ ರಾಜ್ಯಭಾಗ್ಯವನ್ನು ನೀಡಿದ್ದರು, ನೀವು ಮರೆತು ಹೋಗಿದ್ದೀರಿ. ತಂದೆಯು ತಿಳಿಸುತ್ತಾರೆ - ನಿಮಗೆ ಆಸ್ತಿಯನ್ನು ಕೊಡಲು ನಾನೀಗ ಪುನಃ ಬಂದಿದ್ದೇನೆ. ಎಷ್ಟು ಬಾರಿ ನೀವು ರಾಜ್ಯವನ್ನು ತೆಗೆದುಕೊಂಡಿದ್ದೀರಿ ಮತ್ತು ಕಳೆದುಕೊಂಡಿದ್ದೀರಿ, ಲೆಕ್ಕವಿಲ್ಲದಷ್ಟು ಬಾರಿ ಆಸ್ತಿಯನ್ನು ಪಡೆದಿದ್ದೀರಿ ಆದರೂ ಇಂತಹ ತಂದೆಯನ್ನು ಏಕೆ ಮರೆತು ಹೋಗುತ್ತೀರಿ? ಮಾಯೆಯ ಬಿರುಗಾಳಿಯಿಂದ ಬಹಳ ಯುದ್ಧವಾಗುತ್ತದೆ ಆದ್ದರಿಂದ ನಾಟಕವನ್ನೂ ತೋರಿಸುತ್ತಾರೆ - ಮಾಯೆಯು ಒಂದು ಕಡೆ ಎಳೆಯುತ್ತದೆ, ಪ್ರಭು ಇನ್ನೊಂದು ಕಡೆ ಎಳೆಯುತ್ತಾರೆ. ಜ್ಞಾನದಲ್ಲಿ ವಿಘ್ನ ಬೀಳುವುದಿಲ್ಲ, ನೆನಪಿನಲ್ಲಿಯೇ ವಿಘ್ನವಾಗುತ್ತದೆ, ಇದರಲ್ಲಿಯೇ ಪರಿಶ್ರಮವಿದೆ. ಈಗ ತಂದೆಯು ತಿಳಿಸುತ್ತಾರೆ - ಮಹಾರಥಿಗಳಾಗಿರಿ, ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ಈ ಯಜ್ಞದಲ್ಲಿ ಇಡೀ ಹಳೆಯ ಪ್ರಪಂಚವು ಸ್ವಾಹಾ ಆಗುವುದು ಅಂದಮೇಲೆ ಮಹಾವೀರರಾಗಬೇಕಾಗಿದೆ. ನೀವು ಮಕ್ಕಳು ಅಟಲ, ಅಖಂಡ, ಅಡೋಲ ರಾಜ್ಯವನ್ನು ಪಡೆಯಬೇಕಾಗಿದೆ. ನಿಮ್ಮ ಬುದ್ಧಿಯೋಗವು ತಂದೆಯ ಜೊತೆ ಈ ರೀತಿಯಿರಲಿ ಭಲೆ ಎಷ್ಟೊಂದು ಬಿರುಗಾಳಿಗಳು ಬರಲಿ ಮಾಯೆಯು ಏನೂ ಮಾಡಲು ಸಾಧ್ಯವಾಗಬಾರದು. ಇದು ನಿಮ್ಮ ಅಂತಿಮದ ಸ್ಥಿತಿಯಾಗಿದೆ. ಹೇಗೆ ವರ್ಗಾವಣೆಯಾಗುವಾಗ ಶಾಲೆಯಲ್ಲಿ ಅಂತಿಮದಲ್ಲಿ ಪರೀಕ್ಷೆಯಿರುತ್ತದೆ, ನಿಮ್ಮ ಮಾಲೆಯು ಅಂತಿಮದಲ್ಲಿ ಆಗುವುದು. ನಾವು ಈ ರೀತಿಯಾಗುತ್ತೇವೆ, ಇಂತಹವರು ಈ ಪದವಿ ಪಡೆಯುವರು, ಇವರು ದಾಸಿಯಾಗುವರು, ಇದೆಲ್ಲವೂ ನಿಮಗೆ ಸಾಕ್ಷಾತ್ಕಾರವಾಗುವುದು. ಆ ಸಮಯದಲ್ಲಂತೂ ಏನೂ ಮಾಡಲು ಸಾಧ್ಯವಿಲ್ಲ, ಪಶ್ಚಾತ್ತಾಪ ಪಡಬೇಕಾಗುವುದು - ನಾನು ಏನು ಮಾಡಿ ಬಿಟ್ಟೆನು! ಶ್ರೀಮತದಂತೆ ಏಕೆ ನಡೆಯಲಿಲ್ಲ! ಆದರೆ ಆ ಸಮಯದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಹೀಗೆ ಅನೇಕರು ಪಶ್ಚಾತ್ತಾಪ ಪಡುವರು. ಹೇಗೆ ಮನುಷ್ಯರು ಯಾರನ್ನಾದರೂ ಕೊಲೆ ಮಾಡಿ ನಂತರ ಪಶ್ಚಾತ್ತಾಪ ಪಡುತ್ತಾರೆ ಆದರೆ ಕೊಲೆ ಆಗಿ ಹೋಯಿತೆಂದ ಮೇಲೆ ಮತ್ತೇನು ಮಾಡಲು ಸಾಧ್ಯ! ಆದ್ದರಿಂದ ತಂದೆಯು ತಿಳಿಸುತ್ತಾರೆ - ಹುಡುಗಾಟಿಕೆ ಮಾಡಬೇಡಿ, ತಮ್ಮ ಪುರುಷಾರ್ಥ ಮಾಡುತ್ತಾ ಇರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. 84 ಜನ್ಮಗಳ ನಾಟಕವು ಈಗ ಮುಕ್ತಾಯವಾಗುತ್ತದೆ, ಹಿಂತಿರುಗಿ ಮನೆಗೆ ಹೋಗಬೇಕಾಗಿದೆ, ಆದ್ದರಿಂದ ಆತ್ಮಾಭಿಮಾನಿಯಾಗಿದ್ದು ಪಾವನರಾಗಬೇಕಾಗಿದೆ. ದೇಹಾಭಿಮಾನವನ್ನು ಕಳೆಯಬೇಕಾಗಿದೆ. |
2. ಅರ್ಥ ಸಹಿತವಾಗಿ ತನ್ನನ್ನು ಆತ್ಮ ಬಿಂದುವೆಂದು ತಿಳಿದು ಬಿಂದು ತಂದೆಯ ಅವ್ಯಭಿಚಾರಿ ನೆನಪಿನಲ್ಲಿರಬೇಕಾಗಿದೆ. ಮಹಾವೀರರಾಗಿ ತಮ್ಮ ಸ್ಥಿತಿಯನ್ನು ಅಚಲ, ಅಡೋಲವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ತಂದೆಯು ಆತ್ಮಿಕ ಮಕ್ಕಳಿಗೆ ಶ್ರೀಮತವನ್ನು ಕೊಡಲು ಬಂದಿದ್ದಾರೆ. ಇದು ಮಕ್ಕಳಿಗೆ ತಿಳಿದಿದೆ – ಸ್ವಲ್ಪ ಸಮಯದಲ್ಲಿಯೇ ಡ್ರಾಮಾನುಸಾರ ಎಲ್ಲಾ ಕಾರ್ಯವು ಆಗಬೇಕಾಗಿದೆ, ನಾವು ರಾವಣ ಪುರಿಯನ್ನು ವಿಷ್ಣು ಪುರಿಯನ್ನಾಗಿ ಮಾಡುತ್ತೇವೆ. ತಂದೆಯೂ ಗುಪ್ತವಾಗಿದ್ದಾರೆ, ವಿದ್ಯೆಯೂ ಗುಪ್ತವಾಗಿದೆ. ಅನೇಕ ಸೇವಾಕೇಂದ್ರಗಳಿವೆ, ಚಿಕ್ಕ-ಪುಟ್ಟ ಹಳ್ಳಿಗಳಲ್ಲಿ ಸೇವಾಕೇಂದ್ರಗಳಿವೆ ಮತ್ತು ಅನೇಕ ಮಕ್ಕಳೂ ಇದ್ದಾರೆ. ಇನ್ನೂ ದಿನ - ಪ್ರತಿದಿನ ವೃದ್ಧಿಯಾಗುತ್ತಾ ಹೋಗುತ್ತದೆ. ಪುಸ್ತಕಗಳಲ್ಲಿಯೂ ಬರೆಯುತ್ತಾರೆ - ನಾವು ಈ ಭಾರತ ಭೂಮಿಯನ್ನು ಸ್ವರ್ಗವನ್ನಾಗಿ ಮಾಡಿ ತೀರುತ್ತೇವೆ. ನಿಮಗೆ ಈ ಭಾರತ ಭೂಮಿಯು ಬಹಳ ಪ್ರಿಯವಾಗಿದೆ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ, ಈ ಭಾರತವೇ ಸ್ವರ್ಗವಾಗಿತ್ತು, ಇದಕ್ಕೆ 5000 ವರ್ಷಗಳಾಯಿತು. ಭಾರತವು ಬಹಳ ಗೌರವ ಪೂರ್ಣವಾಗಿತ್ತು, ನೀವು ಬ್ರಹ್ಮಾ ಮುಖವಂಶಾವಳಿಗೇ ಈ ಜ್ಞಾನವಿದೆ. ಈ ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡಬೇಕಾಗಿದೆ, ಎಲ್ಲರಿಗೆ ಮಾರ್ಗವನ್ನು ತಿಳಿಸಬೇಕಾಗಿದೆ, ಮತ್ತ್ಯಾವುದೇ ಇಲ್ಲಿ ಕಿರಿಕಿರಿಯ ಮಾತಿಲ್ಲ. ಪರಸ್ಪರ ಕುಳಿತು ಸಲಹೆ ತೆಗೆದುಕೊಳ್ಳಬೇಕು - ಈ ಚಿತ್ರಗಳ ಮೂಲಕ ಇಂತಹ ಯಾವ ಜಾಹೀರಾತು ನೀಡಬೇಕು, ಯಾವುದರಿಂದ ಪತ್ರಿಕೆಗಳಲ್ಲಿಯೂ ಈ ಚಿತ್ರಗಳು ಬರಬೇಕಾಗಿದೆ. ಪರಸ್ಪರ ಇದರ ಬಗ್ಗೆ ಸೆಮಿನಾರ್ ಮಾಡಬೇಕಾಗಿದೆ. ಹೇಗೆ ಆ ಸರ್ಕಾರದವರು ಪರಸ್ಪರ ಸೇರುತ್ತಾರೆ, ಸಲಹೆ ತೆಗೆದುಕೊಳ್ಳುತ್ತಾರೆ - ಭಾರತವನ್ನು ನಾವು ಹೇಗೆ ಸುಧಾರಣೆ ಮಾಡುವುದು! ಈಗ ಇಷ್ಟೊಂದು ಮತ ಭೇದಗಳಾಗಿ ಬಿಟ್ಟಿದೆ, ಅವರನ್ನು ಪರಸ್ಪರ ಸೇರಿಸಿ ಒಂದು ಮಾಡಬೇಕು ಮತ್ತು ಭಾರತದಲ್ಲಿ ಸುಖ-ಶಾಂತಿಯು ಹೇಗೆ ಸ್ಥಾಪನೆಯಾಗುವುದು! ಹಾಗೆಯೇ ನೀವೂ ಸಹ ಆತ್ಮಿಕ ಪಾಂಡವ ಸರ್ಕಾರದವರಾಗಿದ್ದೀರಿ, ಇದು ದೊಡ್ಡ ಈಶ್ವರೀಯ ಸರ್ಕಾರವಾಗಿದೆ. ಪತಿತ-ಪಾವನ ತಂದೆಯೇ ಪತಿತ ಮಕ್ಕಳನ್ನು ಪಾವನರನ್ನಾಗಿ ಮಾಡಿ ಪಾವನ ಪ್ರಪಂಚದ ಮಾಲೀಕರನ್ನಾಗಿ ಮಾಡುತ್ತಾರೆ. ಈ ರಹಸ್ಯವನ್ನು ನೀವು ಮಕ್ಕಳು ಅರಿತುಕೊಂಡಿದ್ದೀರಿ. ಮುಖ್ಯವಾಗಿರುವುದು- ಭಾರತದ ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವ ತಂದೆಗೆ ರುದ್ರನೆಂದು ಹೇಳಲಾಗುತ್ತದೆ, ಈಗ ತಂದೆಯು ಬಂದು ನಿಮ್ಮನ್ನು ಜಾಗೃತಗೊಳಿಸಿದ್ದಾರೆ. ಮತ್ತೆ ನೀವು ಅನ್ಯರನ್ನೂ ಜಾಗೃತಗೊಳಿಸಬೇಕಾಗಿದೆ, ಡ್ರಾಮಾ ಪ್ಲಾನನುಸಾರ ನೀವು ಜಾಗೃತರಾಗುತ್ತಾ ಇರುತ್ತೀರಿ. ಇಲ್ಲಿಯವರೆಗೆ ಯಾರ್ಯಾರು ಎಂತೆಂತಹ ಪುರುಷಾರ್ಥ ಮಾಡಿದ್ದಾರೆಯೋ ಕಲ್ಪದ ಮೊದಲೂ ಅಷ್ಟೇ ಮಾಡಿದ್ದರು, ನಿಮ್ಮದು ಆತ್ಮಿಕ ಯುದ್ಧವಾಗಿದೆ. ಕೆಲವೊಮ್ಮೆ ಮಾಯೆಯ ಪ್ರಭಾವವು ಹೆಚ್ಚಾಗುತ್ತದೆ, ಕೆಲವೊಮ್ಮೆ ಈಶ್ವರನದೂ ಹೆಚ್ಚಾಗುತ್ತದೆ. ಕೆಲಕೆಲವೊಮ್ಮೆ ಸೇವೆಯು ಬಹಳ ತೀವ್ರವಾಗಿ ನಡೆಯುತ್ತದೆ. ಕೆಲವೊಮ್ಮೆ ಕೆಲವು ಮಕ್ಕಳಲ್ಲಿ ಮಾಯೆಯ ವಿಘ್ನಗಳು ಬೀಳುತ್ತವೆ, ಮಾಯೆಯು ಒಮ್ಮೆಲೆ ಮೂರ್ಛಿತರನ್ನಾಗಿ ಮಾಡಿಬಿಡುತ್ತದೆ. ಯುದ್ಧದ ಮೈದಾನವಲ್ಲವೆ. ಮಾಯೆಯು ರಾಮನ ಸಂತಾನರನ್ನು ಮೂರ್ಛಿತಗೊಳಿಸುತ್ತದೆ. ಲವ-ಕುಶರ ಕಥೆಯೂ ಇದೆಯಲ್ಲವೆ. ರಾಮನಿಗೆ ಇಬ್ಬರು ಮಕ್ಕಳನ್ನು ತೋರಿಸುತ್ತಾರೆ, ಇಲ್ಲಂತೂ ತಂದೆಗೆ ಅನೇಕ ಮಕ್ಕಳಿದ್ದಾರೆ. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಕುಂಭಕರ್ಣನ ನಿದ್ರೆಯಲ್ಲಿ ನಿದ್ರಿಸುತ್ತಿದ್ದಾರೆ, ಅವರಿಗೆ ಇದೂ ಸಹ ತಿಳಿದಿಲ್ಲ - ಪರಮಪಿತ ಪರಮಾತ್ಮನು ಮಕ್ಕಳಿಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ, ತಂದೆಯು ಭಾರತದಲ್ಲಿಯೇ ಬರುತ್ತಾರೆ. ಈ ಮಾತನ್ನು ಸಂಪೂರ್ಣ ಮರೆತು ಹೋಗಿದ್ದಾರೆ. ಭಾರತವಾಸಿಗಳೇ ಸ್ವರ್ಗದ ಮಾಲೀಕರಾಗಿದ್ದರು, ಇದರಲ್ಲಿ ಯಾವುದೇ ಸಂಶಯವಿಲ್ಲ. ಪರಮಪಿತ ಪರಮಾತ್ಮನ ಜನ್ಮವು ಇಲ್ಲಿಯೇ ಆಗುತ್ತದೆ. ಆದ್ದರಿಂದ ಭಾರತದಲ್ಲಿ ಶಿವ ಜಯಂತಿಯನ್ನು ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಅವರು ಬಂದು ಏನಾದರೂ ಮಾಡಿರಬೇಕು, ಬುದ್ಧಿಯೂ ಹೇಳುತ್ತದೆ - ಅವಶ್ಯವಾಗಿ ತಂದೆಯು ಬಂದು ಸ್ವರ್ಗದ ಸ್ಥಾಪನೆ ಮಾಡಿರುವರು. ಪ್ರೇರಣೆಯಿಂದ ಸ್ಥಾಪನೆ ಮಾಡಿರುವುದಿಲ್ಲ. ಇಲ್ಲಂತೂ ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲಾಗುತ್ತದೆ, ನೆನಪಿನ ಯಾತ್ರೆಯನ್ನು ಕಲಿಸಲಾಗುತ್ತದೆ, ಪ್ರೇರಣೆಯಿಂದ ಯಾವುದೇ ಶಬ್ಧವು ಕೇಳಿ ಬರುವುದಿಲ್ಲ. ಶಂಕರನು ಪ್ರೇರಣೆಯಿಂದ ವಿನಾಶ ಮಾಡುತ್ತಾನೆಂದು ತಿಳಿಯುತ್ತಾರೆ ಆದರೆ ಇದರಲ್ಲಿ ಪ್ರೇರಣೆಯ ಮಾತಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಡ್ರಾಮಾದಲ್ಲಿ ಅಣ್ವಸ್ತ್ರಗಳನ್ನು ತಯಾರಿಸುವುದೇ ಅವರ ಪಾತ್ರವಿದೆ. ಅವರು ವಿನಾಶಕ್ಕಾಗಿ ನಿಮಿತ್ತರಾಗಿದ್ದಾರೆ. ಪ್ರೇರಣೆಯು ಶಾಸ್ತ್ರಗಳ ಶಬ್ಧವಾಗಿದೆ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಶಂಕರನು ಸೂಕ್ಷ್ಮವತನದಲ್ಲಿರುತ್ತಾರೆ, ಡ್ರಾಮಾನುಸಾರ ವಿನಾಶವಾಗಲೇಬೇಕಾಗಿದೆ. ಮಹಾಭಾರತ ಯುದ್ಧದಲ್ಲಿ ಈ ಅಣ್ವಸ್ತ್ರಗಳೆಲ್ಲವನ್ನೂ ಉಪಯೋಗಿಸಿದ್ದರು ಎಂದು ಗಾಯನವಿದೆ. ಯಾವುದು ಕಳೆದು ಹೋಗಿದೆಯೋ ಅದು ಮತ್ತೆ ಪುನರಾವರ್ತನೆಯಾಗುವುದು. ನೀವು ಗ್ಯಾರಂಟಿ ಕೊಡುತ್ತೀರಿ - ನಾವು ಯೋಗಬಲದಿಂದ ಸ್ವರ್ಗದ ಸ್ಥಾಪನೆ ಮಾಡುತ್ತೇವೆ, ಅಲ್ಲಿ ಒಂದು ಧರ್ಮವಿರುವುದು. ಮತ್ತೆಲ್ಲಾ ಧರ್ಮಗಳು ಎಲ್ಲಿರುತ್ತವೆ? ಅವಶ್ಯವಾಗಿ ವಿನಾಶವಾಗಿ ಬಿಡುತ್ತವೆ. ಇದು ತಿಳಿದುಕೊಳ್ಳುವ ಮಾತಾಗಿವೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಗಾಯನವಿದೆ, ವಿಷ್ಣುವಿನ ಮೂಲಕ ಪಾಲನೆಯಂತೂ ಸರಿಯಾಗಿದೆ ಆದರೆ ಶಂಕರನನ್ನು ಶಿವನ ಜೊತೆ ಸೇರಿಸಿ ಬಿಟ್ಟಿದ್ದಾರೆ ಇದು ತಪ್ಪಾಗಿದೆ. ಶಿವ-ಶಂಕರನೆಂದು ಹೇಳಿ ಬಿಡುತ್ತಾರೆ ಏಕೆಂದರೆ ಶಂಕರನು ಯಾವುದೇ ಕಾರ್ಯವನ್ನು ಮಾಡುವುದಿಲ್ಲ ಆದ್ದರಿಂದ ಶಿವನೊಂದಿಗೆ ಸೇರಿಸಿ ಬಿಟ್ಟಿದ್ದಾರೆ ಆದರೆ ಶಿವ ತಂದೆಯು ತಿಳಿಸುತ್ತಾರೆ - ನಾನಂತೂ ಬಹಳ ಕೆಲಸವನ್ನು ಮಾಡಬೇಕಾಗುತ್ತದೆ, ಎಲ್ಲರನ್ನೂ ಪಾವನ ಮಾಡಬೇಕಾಗುತ್ತದೆ. ನಾನು ಈ ಬ್ರಹ್ಮಾರವರ ತನುವಿನಲ್ಲಿ ಪ್ರವೇಶ ಮಾಡಿ ಈ ಸಾಕಾರದ ಮೂಲಕ ಕಾರ್ಯ ಮಾಡಿಸುತ್ತೇನೆ. ಶಂಕರನ ಪಾತ್ರವೇನೂ ಇಲ್ಲ. ಶಿವನ ಪೂಜೆಯು ನಡೆಯುತ್ತದೆ, ಶಿವನೇ ಕಲ್ಯಾಣಕಾರಿ ಜೋಳಿಗೆಯನ್ನು ತುಂಬಿಸುವವರಾಗಿದ್ದಾರೆ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರಲ್ಲವೆ. ಈ ಬ್ರಹ್ಮನೂ ಸಹ ಪ್ರಜಾಪಿತನಾದರು. ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ, ಇವು ಬಹಳ ಗುಹ್ಯ ಮಾತುಗಳಾಗಿವೆ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಬುದ್ಧಿವಂತ ಮಕ್ಕಳ ಬುದ್ಧಿಯಲ್ಲಿ ಜ್ಞಾನವು ಬಹು ಬೇಗನೆ ಅರ್ಥವಾಗುತ್ತದೆ. ಪತಿತ-ಪಾವನ ತಂದೆಯು ಯಾವಾಗ ಬರುತ್ತಾರೆಂದು ಮನುಷ್ಯರಿಗೇನೂ ತಿಳುವಳಿಕೆಯಿಲ್ಲ. ಈಗಂತೂ ಕಲಿಯುಗದ ಅಂತ್ಯವಾಗಿದೆ, ಒಂದುವೇಳೆ ಕಲಿಯುಗದ ಅಂತ್ಯಕ್ಕೆ ಇನ್ನೂ 40 ಸಾವಿರ ವರ್ಷಗಳಿದೆ ಎಂದು ಹೇಳುವುದಾದರೆ ಇನ್ನೆಷ್ಟು ಪತಿತರಾಗುವರು? ಎಷ್ಟು ದುಃಖವನ್ನು ಸಹನೆ ಮಾಡುವರು? ಕಲಿಯುಗದಲ್ಲಿ ಸುಖವಿರುವುದೇ ಇಲ್ಲ. ಏನನ್ನೂ ಅರಿತುಕೊಂಡಿರದ ಕಾರಣ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳು ಪರಸ್ಪರ ಸೇರಿ ಹೇಗೆ ಸರ್ವೀಸನ್ನು ವೃದ್ಧಿ ಪಡಿಸಬೇಕೆಂದು ಸಲಹೆ ತೆಗೆದುಕೊಳ್ಳಬೇಕು. ತಂದೆಯು ಯುಕ್ತಿಯನ್ನಂತೂ ತಿಳಿಸುತ್ತಾ ಇರುತ್ತಾರೆ. ಮಕ್ಕಳು ಪರಸ್ಪರ ಸೇರಬೇಕಾಗಿದೆ. ಚಿತ್ರಗಳ ಬಗ್ಗೆ ಚೆನ್ನಾಗಿ ತಿಳಿಸಬೇಕಾಗಿದೆ. ಡ್ರಾಮಾನುಸಾರ ಚಿತ್ರಗಳೂ ತಯಾರಾಗುತ್ತಿವೆ. ಮಕ್ಕಳಿಗೆ ತಿಳಿದಿದೆ - ಯಾವ-ಯಾವ ಸಮಯವು ಕಳೆಯುತ್ತಾ ಹೋಗುತ್ತದೆಯೋ ಅದು ಹಾಗೆಯೇ ನಾಟಕವು ನಡೆಯುತ್ತಾ ಇರುತ್ತದೆ, ಮಕ್ಕಳ ಸ್ಥಿತಿಯು ಕೆಲವೊಮ್ಮೆ ಮೇಲೆ, ಕೆಲವೊಮ್ಮೆ ಕೆಳಗೆ, ಇದು ನಡೆಯುತ್ತಾ ಇರುವುದು. ತಂದೆಯೂ ಸಹ ಸಾಕ್ಷಿಯಾಗಿ ನೋಡುತ್ತಾರೆ, ಕೆಲಕೆಲವೊಮ್ಮೆ ಮಕ್ಕಳ ಮೇಲೆ ಗ್ರಹಚಾರಿ ಕುಳಿತುಕೊಳ್ಳುತ್ತದೆಯೆಂದರೆ ಅದನ್ನು ಅಳಿಸುವುದಕ್ಕಾಗಿ ಪ್ರಯತ್ನ ಪಡುತ್ತಾರೆ. ತಂದೆಯು ಪದೇ-ಪದೇ ತಿಳಿಸುತ್ತಾರೆ - ತಂದೆಯನ್ನು ನೆನಪು ಮಾಡಿರಿ. ಆದರೆ ದೇಹಾಭಿಮಾನದಲ್ಲಿ ಬರುವ ಕಾರಣ ಪೆಟ್ಟು ತಿನ್ನುತ್ತಾರೆ. ಇದರಲ್ಲಿ ದೇಹೀ-ಅಭಿಮಾನಿಯಾಗಬೇಕಾಗಿದೆ ಆದರೆ ಮಕ್ಕಳಲ್ಲಿ ಬಹಳ ದೇಹಾಭಿಮಾನವಿದೆ. ನೀವು ದೇಹೀ-ಅಭಿಮಾನಿಯಾಗಿರಿ ಆಗ ತಂದೆಯ ನೆನಪೂ ಇರುವುದು ಮತ್ತು ಸರ್ವೀಸಿನ ಉನ್ನತಿಯೂ ಆಗುತ್ತಿರುವುದು. ಯಾರು ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆಯೋ ಅವರು ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಒಂದುವೇಳೆ ಅದೃಷ್ಟದಲ್ಲಿಲ್ಲವೆಂದರೆ ಪುರುಷಾರ್ಥವನ್ನೂ ಮಾಡುವುದಿಲ್ಲ. ಬಾಬಾ, ನಮಗೆ ಧಾರಣೆಯಾಗುವುದಿಲ್ಲ, ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲವೆಂದು ತಾವೇ ಹೇಳುತ್ತಾರೆ. ಒಂದುವೇಳೆ ಧಾರಣೆಯಾಗುವುದಿಲ್ಲವೆಂದರೆ ಖುಷಿಯೂ ಇರುವುದಿಲ್ಲ. ಯಾರಿಗೆ ಧಾರಣೆಯಾಗುವುದೋ ಅವರಿಗೆ ಖುಷಿಯೂ ಇರುತ್ತದೆ, ಶಿವ ತಂದೆಯು ಬಂದಿದ್ದಾರೆಂಬುದನ್ನು ತಿಳಿದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಬಹಳ ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ ತಿಳಿಸಿರಿ. ಕೆಲವರಂತೂ ಸರ್ವೀಸಿನಲ್ಲಿ ತೊಡಗುತ್ತಾರೆ, ಪುರುಷಾರ್ಥ ಮಾಡುತ್ತಾ ಇರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಯಾವ-ಯಾವ ಕ್ಷಣವು ಕಳೆಯುತ್ತದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ ಮತ್ತೆ ಹಾಗೆಯೇ ಪುನರಾವರ್ತನೆಯಾಗುತ್ತದೆ. ಮಕ್ಕಳಿಗೇ ತಿಳಿಸಲಾಗುತ್ತದೆ - ಹೊರಗಡೆ ಭಾಷಣ ಮಾಡುವ ಸಮಯದಲ್ಲಂತೂ ಅನೇಕ ಪ್ರಕಾರದ ಮನುಷ್ಯರು ಬರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಎಲ್ಲಾ ವೇದಶಾಸ್ತ್ರ, ಗೀತೆ ಮೊದಲಾದುದರ ಮೇಲೆ ಭಾಷಣ ಮಾಡುತ್ತಾರೆ ಆದರೆ ಅವರಿಗೆ ಇಲ್ಲಿ ಈಶ್ವರನು ತನ್ನ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆಂಬುದು ತಿಳಿದೇ ಇಲ್ಲ. ಚಿತ್ರಗಳಲ್ಲಿ ಪರಮಾತ್ಮನು ಯಾರೆಂಬುದನ್ನು ಎಷ್ಟು ಚೆನ್ನಾಗಿ ತೋರಿಸಿದ್ದಾರೆ! ಈ ಚಿತ್ರಗಳ ಬಗ್ಗೆ ಪ್ರೋಜೆಕ್ಟರ್ನಲ್ಲಿ ತಿಳಿಸಲು ಸಾಧ್ಯವಿಲ್ಲ. ಪ್ರದರ್ಶನಿಯಲ್ಲಿ ಚಿತ್ರಗಳೂ ಇವೆ ಮತ್ತು ನೀವು ತಿಳಿಸಿ ಕೇಳಬಹುದು - ಈಗ ಹೇಳಿರಿ - ಗೀತೆಯ ಭಗವಂತನು ಯಾರು? ಜ್ಞಾನ ಸಾಗರ ಯಾರು? ಪವಿತ್ರತೆ, ಸುಖ-ಶಾಂತಿಯ ಸಾಗರ, ಮುಕ್ತಿದಾತ, ಮಾರ್ಗದರ್ಶಕ ಯಾರು? ಕೃಷ್ಣನಿಗೆ ಈ ರೀತಿ ಹೇಳಲು ಸಾಧ್ಯವಿಲ್ಲ, ಪರಮಾತ್ಮನ ಮಹಿಮೆಯೇ ಬೇರೆಯಿದೆ. ಮೊದಲು ಬರೆಸಬೇಕು - ಅಭಿಪ್ರಾಯವನ್ನು ತೆಗೆದುಕೊಳ್ಳಬೇಕು. ಎಲ್ಲರಿಂದ ಸಹಿಯನ್ನೂ ತೆಗೆದುಕೊಳ್ಳಬೇಕಾಗಿದೆ. |
(ಹಾಲ್ನಲ್ಲಿ ಪಕ್ಷಿಗಳು ಹೊಡೆದಾಡುತ್ತಿವೆ) ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ಜಗಳ-ಕಲಹವೇ ಇದೆ. ಎಲ್ಲರೂ ಪರಸ್ಪರ ಹೊಡೆದಾಡುತ್ತಾ ಇರುತ್ತಾರೆ. ಮನುಷ್ಯರಲ್ಲಿಯೇ ಪಂಚ ವಿಕಾರಗಳ ಗಾಯನವಿದೆ, ಪ್ರಾಣಿಗಳ ಮಾತಿಲ್ಲ. ಮನುಷ್ಯರಿಗಾಗಿಯೇ ವಿಕಾರಿ ಪ್ರಪಂಚ, ನಿರ್ವಿಕಾರಿ ಪ್ರಪಂಚದ ಗಾಯನವಿದೆ. ಕಲಿಯುಗದಲ್ಲಿ ಆಸುರೀ ಸಂಪ್ರದಾಯ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿದೆ, ಮನುಷ್ಯರು ಇಷ್ಟು ತಮೋಪ್ರಧಾನ ಬುದ್ಧಿಯವರಾಗಿದ್ದಾರೆ, ನಾವು ಆಸುರೀ ಸಂಪ್ರದಾಯದವರಾಗಿದ್ದೇವೆ ಎಂದು ತಿಳಿದುಕೊಳ್ಳುವುದೇ ಇಲ್ಲ. ದೇವತೆಗಳ ಮುಂದೆ ಹೋಗಿ ನಾವು ನೀಚರು, ಪಾಪಿಗಳಾಗಿದ್ದೇವೆ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹಾಡುತ್ತಾರೆ. ನೀವು ಅವರಿಗೆ ಸಿದ್ಧ ಮಾಡಿ ತಿಳಿಸಿರಿ. ಏಣಿಯ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿದೆ. ಹೇಗೆ ಏರುವ ಕಲೆಯಾಗುತ್ತದೆ ಮತ್ತು ಇಳಿಯುವ ಕಲೆಯಾಗುತ್ತದೆ ಎಂಬುದನ್ನು ತೋರಿಸಿದ್ದಾರೆ. ಭಾರತವಾಸಿಗಳಿಗೆ ಮುಖ್ಯವಾದುದು ಏಣಿಯ ಚಿತ್ರವಾಗಿದೆ. ಇದು ಎಲ್ಲದಕ್ಕಿಂತ ಒಳ್ಳೆಯ ಚಿತ್ರವಾಗಿದೆ, ಈ ಚಿತ್ರದ ಬಗ್ಗೆ ನೀವು ಬಹಳ ಚೆನ್ನಾಗಿ ತಿಳಿಸಬಲ್ಲಿರಿ. 84 ಜನ್ಮಗಳನ್ನು ಪೂರ್ಣಗೊಳಿಸಿ ಮತ್ತೆ ಮೊದಲ ನಂಬರಿನ ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ, ಮತ್ತೆ ಇಳಿಯುವ ಕಲೆಯಲ್ಲಿ ಬರಬೇಕಾಗುತ್ತದೆ. ಎಲ್ಲರಿಗೆ ಹೇಗೆ ಮಾರ್ಗವನ್ನು ತಿಳಿಸಬೇಕೆಂದು ಪ್ರತಿಯೊಬ್ಬರಿಗೆ ವಿಚಾರ ನಡೆಯಬೇಕು. ವಿಚಾರ ನಡೆಯದಿದ್ದರೆ ಸರ್ವೀಸ್ ಹೇಗೆ ಮಾಡುವಿರಿ? ಚಿತ್ರಗಳ ಬಗ್ಗೆ ತಿಳಿಸುವುದು ಬಹಳ ಸಹಜವಾಗುತ್ತದೆ. ಸತ್ಯಯುಗದ ನಂತರ ಏಣಿಯನ್ನು ಇಳಿಯಲೇಬೇಕಾಗಿದೆ. ಮಕ್ಕಳಿಗೆ ತಿಳಿದಿದೆ - ನಾವೀಗ ವರ್ಗಾವಣೆಯಾಗುತ್ತಿದ್ದೇವೆ ಆದರೆ ನೇರವಾಗಿ ಸತ್ಯಯುಗಕ್ಕೆ ಹೋಗುವುದಿಲ್ಲ. ಮೊದಲು ಶಾಂತಿಧಾಮದಲ್ಲಿ ಹೋಗಬೇಕಾಗಿದೆ. ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ ಬಾಕಿ ನಿಮ್ಮಲ್ಲಿಯೂ ಈ ಡ್ರಾಮಾದ ಪಾತ್ರಧಾರಿಗಳೆಂದು ತಿಳಿದುಕೊಳ್ಳುವವರು ನಂಬರ್ವಾರ್ ಇದ್ದಾರೆ. ನಾವು ಪಾತ್ರಧಾರಿಗಳೆಂದು ಹೇಳುವವರು ಪ್ರಪಂಚದಲ್ಲಿ ಮತ್ತ್ಯಾರೂ ಇಲ್ಲ. ನಾವು ಬರೆಯುತ್ತೇವೆ - ಪ್ರತಿಯೊಬ್ಬ ಮನುಷ್ಯ ಮಾತ್ರನೂ ಈ ಬೇಹದ್ದಿನ ಡ್ರಾಮಾದ ಪಾತ್ರಧಾರಿಯಾಗಿದ್ದರೂ ಸಹ ಡ್ರಾಮಾದ ಮುಖ್ಯ ಪಾತ್ರಧಾರಿಗಳು, ನಿರ್ದೇಶಕ, ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿಲ್ಲ ಆದ್ದರಿಂದ ಅವರು ಬುದ್ಧಿಹೀನರಾಗಿದ್ದಾರೆ. ಇದನ್ನು ಬರೆಯುವುದರಲ್ಲಿ ಏನೂ ಪರವಾಗಿಲ್ಲ. ಒಂದು ಕಿವಿಯಿಂದ ಕೇಳಿ ಇನ್ನೊಂದರಿಂದ ತೆಗೆದುಬಿಡಬಾರದು. ಸರ್ವೀಸ್, ಸರ್ವೀಸ್ ಮತ್ತು ಸರ್ವೀಸ್..... ತಂದೆಗೆ ತಿಳಿದಿದೆ – ಮಕ್ಕಳ ಮೇಲೆ ಕೆಲವೊಮ್ಮೆ ಗ್ರಹಚಾರವು ಕುಳಿತುಕೊಳ್ಳುತ್ತದೆ, ಗ್ರಹಚಾರವು ಕುಳಿತುಕೊಂಡಾಗ ಎಷ್ಟೊಂದು ನಷ್ಟವುಂಟಾಗುತ್ತದೆ. ಅದನ್ನು ತಂದೆಯು ತಿಳಿದುಕೊಂಡಿದ್ದಾರೆ. ಸಾಹುಕಾರರು ಬಡವರಾಗಿ ಬಿಡುತ್ತಾರೆ. ಕಾರಣವಂತೂ ಇರುತ್ತದೆಯಲ್ಲವೆ. ಅನೇಕರಿಗೆ ತಂದೆಯು ತಿಳಿಸುತ್ತಲೂ ಇರುತ್ತಾರೆ - ಮಕ್ಕಳೇ, ನಾಮ-ರೂಪದಲ್ಲಿ ಎಂದೂ ಸಿಲುಕಬೇಡಿ. ಇಲ್ಲವಾದರೆ ಮಾಯೆಯು ಹೀಗಿದೆ, ಅದು ಮೂಗನ್ನಿಡಿದು ಬೀಳಿಸುತ್ತದೆ. ಮಾಯೆಯು ಬಹಳ ಮೋಸ ಮಾಡುತ್ತದೆ, ಇಲ್ಲಿ ಪ್ರಿಯತಮ-ಪ್ರಿಯತಮೆಯರಾಗಬಾರದು. ಯಾವುದೇ ವಿಕಾರಕ್ಕಾಗಿ ಅವರು ಪ್ರಿಯತಮ-ಪ್ರಿಯತಮೆಯರಾಗುವುದಿಲ್ಲ. ಕೆಲವರು ರೂಪಕ್ಕಾಗಿ ಬಲಿಹಾರಿಯಾಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಸೇವಾಕೇಂದ್ರಗಳಲ್ಲಿಯೂ ಇಂತಹ ಮಾಯೆಯ ವಿಘ್ನಗಳು ಬರುತ್ತವೆ, ಒಬ್ಬರು ಇನ್ನೊಬ್ಬರ ನಾಮ-ರೂಪದಲ್ಲಿ ಸಿಲುಕುತ್ತಾರೆ. ಮಾಯೆಯು ಇಷ್ಟು ಪ್ರಬಲವಾಗಿದೆ, ಮಾತೆಯು ಮಾತೆಯ ನಾಮ-ರೂಪದಲ್ಲಿ, ಕನ್ಯೆಯು ಕನ್ಯೆಯ ನಾಮ-ರೂಪದಲ್ಲಿ ಸಿಲುಕುತ್ತಾರೆ. ಪುರುಷಾರ್ಥ ಮಾಡುತ್ತಿದ್ದರೂ ಮಾಯೆಯು ಹಿಡಿದುಕೊಂಡು ಬಿಡುತ್ತದೆ ಆದ್ದರಿಂದ ತಂದೆಯು ಸಾವಧಾನ ನೀಡುತ್ತಾರೆ - ಮಕ್ಕಳೇ, ಮಾಯೆಯು ಬಹಳ ಸಿಕ್ಕಿ ಹಾಕಿಸುವ ಪ್ರಯತ್ನ ಮಾಡುವುದು ಆದರೆ ನೀವು ಸಿಲುಕಬಾರದು. ದೇಹಾಭಿಮಾನದಲ್ಲಿ ಬರಬಾರದು, ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಮಾಯೆಯ ಮೋಸದಿಂದ ದೂರವಿರಬೇಕಾಗಿದೆ. ನೀವು ಮಕ್ಕಳನ್ನು ತಂದೆಯು ಸುಂದರ ಹೂಗಳನ್ನಾಗಿ ಮಾಡಲು ಬಂದಿದ್ದಾರೆ. ನಿಮಗೆ ಯಾವುದೇ ಮಾತಿನಲ್ಲಿ ಸಂಶಯ ಬರಬಾರದು. ಒಂದುವೇಳೆ ಮನಸ್ಸಿನಲ್ಲಿ ಸಂಶಯ ಬಂದರೆ ಚೆನ್ನಾಗಿ ಸರ್ವೀಸ್ ಮಾಡಲು ಸಾಧ್ಯವಿಲ್ಲ. ಒಳಗೆ ಗುಟುಕರಿಸುತ್ತಾ ಇರುತ್ತಾರೆ, ಇದರಲ್ಲಿ ಧೈರ್ಯವನ್ನು ಇಡಬೇಕಾಗಿದೆ. ಸಮಯವು ಬಹಳ ಕಡಿಮೆಯಿದೆ, ತಂದೆಯ ಮುರುಳಿಯನ್ನು ಕೇಳುತ್ತೀರೆಂದರೆ ಉತ್ಸಾಹದಲ್ಲಿ ಬರುತ್ತೀರಿ, ಆತ್ಮ ಪ್ರಕಾಶ ಮಗುವು ಬಹಳ ಚೆನ್ನಾಗಿ ಚಿತ್ರಗಳ ಕಡೆ ಗಮನ ಕೊಡುತ್ತಿದ್ದಾರೆ. ಬಾಂಬೆಯವರಿಗೂ ಬುದ್ಧಿಯಲ್ಲಿ ಬರಬೇಕಾಗಿದೆ. ಮುಖ್ಯ ಚಿತ್ರಗಳನ್ನು ಮೊದಲು ಇವರು ಮಾಡಬೇಕಾಗಿದೆ. ಪರಿಶೀಲನೆ ಮಾಡಿಕೊಳ್ಳಿ, ಹೇಗೆ ಚಿತ್ರಗಳಲ್ಲಿ ಉನ್ನತಿಯಾಗಬೇಕು ಎಂದು ತಂದೆಯು ಡೈರೆಕ್ಷನ್ ಕೊಡುತ್ತಾ ಇರುತ್ತಾರೆ. ಯಾವುದಾದರೂ ಇಂತಹ ಯುಕ್ತಿಯನ್ನು ರಚಿಸಿರಿ. ಏಣಿಚಿತ್ರವು ವಿಮಾನ ನಿಲ್ದಾಣದಲ್ಲಿ ಹಾಕುವಂತಿರಬೇಕು, ಈ ಚಿತ್ರವನ್ನು ನೋಡಿ ಎಲ್ಲರೂ ಖುಷಿ ಪಡುವರು. ಕೊನೆಗೆ ತಿಳಿದುಕೊಳ್ಳುತ್ತಾರೆ - ಇವರಿಗೆ ಮತ ಕೊಡುವವರು ಯಾರು? ಅಂದಾಗ ಮಕ್ಕಳಿಗೆ ಬಹಳ ನಶೆಯೇರಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ನೀವು ಮಕ್ಕಳು ಯುದ್ಧದ ಮೈದಾನದಲ್ಲಿದ್ದೀರಿ, ಮಾಯಾ ರಾವಣನೊಂದಿಗೆ ನಿಮ್ಮ ಯುದ್ಧವಿದೆ, ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ. ಮಕ್ಕಳು ಬಹಳ ಸಾವಧಾನವಾಗಿರಬೇಕು. |
2. ಪ್ರತಿಯೊಬ್ಬರೂ ತಮ್ಮ ಉನ್ನತಿಗಾಗಿ ವಿಚಾರ ಮಾಡಬೇಕು, ಚಿತ್ರಗಳಲ್ಲಿ ಹೇಗೆ ತಿಳಿಸಬೇಕು, ಸರ್ವೀಸನ್ನು ಹೇಗೆ ವೃದ್ಧಿ ಪಡಿಸಬೇಕು...... ಚಿತ್ರಗಳಲ್ಲಿ ಇಂತಹ ಯಾವ ಯುಕ್ತಿಯನ್ನು ರಚಿಸಬೇಕು, ಯಾವುದರಿಂದ ಮನುಷ್ಯರಿಗೆ ಸಹಜವಾಗಿ ಅರ್ಥವಾಗಬೇಕು. |
ಓಂ ಶಾಂತಿ. ಇದು ನೆನಪಿನ ಯಾತ್ರೆಯಾಗಿದೆ. ಮಕ್ಕಳೆಲ್ಲಾ ಈ ಯಾತ್ರೆಯಲ್ಲಿ ಇರುತ್ತಾರೆ, ಕೇವಲ ನೀವು ಇಲ್ಲಿ ಹತ್ತಿರ ಇದ್ದೀರಿ. ಯಾರು-ಯಾರು ಎಲ್ಲೆಲ್ಲಿದ್ದಾರೋ ತಂದೆಯನ್ನು ನೆನಪು ಮಾಡುತ್ತಾರೆ, ಅಂದಾಗ ಅವರು ಸ್ವತಃವಾಗಿಯೇ ಹತ್ತಿರ ಬಂದುಬಿಡುತ್ತಾರೆ. ಹೇಗೆ ಚಂದ್ರಮನ ಮುಂದೆ ಯಾವುದಾದರೂ ನಕ್ಷತ್ರ ಬಹಳ ಹತ್ತಿರ ಇರುತ್ತದೆ. ಕೆಲವು ಬಹಳ ಹೊಳೆಯುತ್ತಿರುತ್ತವೆ. ಕೆಲವು ಹತ್ತಿರ, ಕೆಲವು ದೂರವೂ ಸಹ ಇರುತ್ತವೆ. ಈ ನಕ್ಷತ್ರ ಬಹಳ ಹೊಳೆಯುತ್ತಿದೆ, ಈ ನಕ್ಷತ್ರ ಬಹಳ ಹತ್ತಿರ ಇದೆ, ಇದಂತೂ ಹೊಳೆಯುವುದೇ ಇಲ್ಲ ಎನ್ನುವುದು ಕಂಡುಬರುತ್ತದೆ. ತಾವು ಜ್ಞಾನ ಹಾಗೂ ಯೋಗದ ನಕ್ಷತ್ರಗಳಾಗಿದ್ದೀರಿ ಎಂದು ನಿಮ್ಮದೂ ಸಹ ಗಾಯನವಿದೆ. ಮಕ್ಕಳಿಗೆ ಜ್ಞಾನಸೂರ್ಯ ಸಿಕ್ಕಿದ್ದಾರೆ. ತಂದೆ ಮಕ್ಕಳನ್ನೇ ನೆನಪು ಮಾಡುತ್ತಾರೆ, ಸೇವಾಧಾರಿ ಮಕ್ಕಳನ್ನು ನೆನಪು ಮಾಡುತ್ತಾರೆ. ತಂದೆ ಸರ್ವಶಕ್ತಿವಂತ ಆಗಿದ್ದಾರೆ, ಆ ತಂದೆಯನ್ನೇ ನೆನಪು ಮಾಡುತ್ತೇವೆ, ಅಂದಾಗ ನೆನಪಿನಿಂದ ನೆನಪು ಸಿಗುತ್ತದೆ. ಎಲ್ಲಿ ಇಂತಹ ಸೇವಾಧಾರಿ ಮಕ್ಕಳಿರುತ್ತಾರೆ, ಜ್ಞಾನಸೂರ್ಯ ತಂದೆಯೂ ಸಹ ಅವರನ್ನು ನೆನಪು ಮಾಡುತ್ತಾರೆ. ಮಕ್ಕಳೂ ಸಹ ನೆನಪು ಮಾಡುತ್ತಾರೆ. ಯಾವ ಮಕ್ಕಳು ನೆನಪು ಮಾಡುವುದಿಲ್ಲವೋ ಅವರನ್ನು ತಂದೆಯೂ ಸಹ ನೆನಪು ಮಾಡುವುದಿಲ್ಲ. ಅವರಿಗೆ ತಂದೆಯ ನೆನಪೂ ಸಹ ತಲುಪುವುದಿಲ್ಲ. ನೆನಪಿನಿಂದ ಖಂಡಿತ ನೆನಪು ಸಿಗುತ್ತದೆ. ಮಕ್ಕಳನ್ನೂ ಸಹ ನೆನಪು ಮಾಡಬೇಕು. ಬಾಬಾ ತಾವು ನಮ್ಮನ್ನು ನೆನಪು ಮಾಡುತ್ತೀರಾ? ಎಂದು ಮಕ್ಕಳು ಕೇಳುತ್ತಾರೆ. ತಂದೆ ಹೇಳುತ್ತಾರೆ ಏಕೆ ಮಾಡುವುದಿಲ್ಲ. ಈ ರೀತಿ ಬಾಬಾ ಏಕೆ ನೆನಪು ಮಾಡುವುದಿಲ್ಲ. ಯಾರು ಹೆಚ್ಚು ಪವಿತ್ರವಾಗಿದ್ದಾರೆ ಮತ್ತು ತಂದೆಯ ಜೊತೆ ಹೆಚ್ಚು ಪ್ರೀತಿ ಇದೆ ಮತ್ತು ಅಷ್ಟೇ ಆಕರ್ಷಣೆ ಮಾಡುತ್ತಾರೆ. ನಾವು ಎಷ್ಟು ಬಾಬಾರವರನ್ನು ನೆನಪು ಮಾಡುತ್ತೇವೆ? ಎಂದು ಪ್ರತಿಯೊಬ್ಬರು ತಮ್ಮನ್ನು ತಾವು ಕೇಳಿಕೊಳ್ಳಿ. ಒಬ್ಬರ ನೆನಪಿನಲ್ಲಿ ಇರುವುದರಿಂದ ಮತ್ತೆ ಈ ಹಳೆಯ ಪ್ರಪಂಚ ಮರೆತುಹೋಗುತ್ತದೆ. ಬಾಬಾರವರನ್ನೇ ನೆನಪು ಮಾಡುತ್ತಾ-ಮಾಡುತ್ತಾ ಹೋಗಿ ಮಿಲನ ಮಾಡುತ್ತಾರೆ. ಈಗ ಮಿಲನ ಮಾಡುವ ಸಮಯ ಬಂದಿದೆ. ಡ್ರಾಮಾದ ರಹಸ್ಯವನ್ನೂ ಸಹ ಬಾಬಾ ತಿಳಿಸಿದ್ದಾರೆ. ತಂದೆ ಬರುತ್ತಾರೆ, ಬಂದು ಮಕ್ಕಳನ್ನು ತನ್ನ ಆತ್ಮಿಕ ಮಕ್ಕಳನ್ನಾಗಿ ಮಾಡುತ್ತಾರೆ. ಪತಿತರಿಂದ ಪಾವನ ಹೇಗೆ ಆಗಬೇಕು ಎಂದು ಕಲಿಸುತ್ತಾರೆ. ತಂದೆಯಂತೂ ಒಬ್ಬರೇ ಆಗಿದ್ದಾರೆ, ಅವರನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಆದರೆ ನೆನಪು ಎಲ್ಲರಿಗೆ ನಂಬರ್ವಾರ್ ತನ್ನ-ತನ್ನ ಪುರುಷಾರ್ಥದನುಸಾರ ಸಿಗುತ್ತದೆ. ಅವರು ಎದುರಿನಲ್ಲಿ ನಿಂತಿದ್ದಾರೆ ಎನ್ನುವಷ್ಟು ಬಹಳ ನೆನಪು ಮಾಡುತ್ತಾರೆ. ಕರ್ಮಾತೀತ ಅವಸ್ಥೆಯೂ ಸಹ ಈ ರೀತಿ ಆಗಬೇಕು. ಎಷ್ಟು ನೆನಪು ಮಾಡುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಚಂಚಲ ಆಗುವುದಿಲ್ಲ. ಕರ್ಮೇಂದ್ರಿಯಗಳು ಬಹಳ ಚಂಚಲ ಆಗುತ್ತವೆಯಲ್ಲವೇ, ಇದನ್ನೇ ಮಾ0iÉು ಎಂದು ಹೇಳಲಾಗುತ್ತದೆ. ಕರ್ಮೇಂದ್ರಿಯಗಳಿಂದ ಯಾವುದೇ ಕೆಟ್ಟ ಕರ್ಮ ಆಗಬಾರದು. ಇಲ್ಲಿ ಯೋಗಬಲದಿಂದ ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳಬೇಕು. ಅವರಂತೂ ಔಷಧಿಯಿಂದ ವಶ ಮಾಡಿಕೊಳ್ಳುತ್ತಾರೆ. ಇವು ಏಕೆ ವಶ ಆಗುವುದಿಲ್ಲ? ಎಂದು ಮಕ್ಕಳು ಕೇಳುತ್ತಾರೆ. ನೀವು ಎಷ್ಟು ನೆನಪು ಮಾಡುತ್ತೀರಿ ಅಷ್ಟು ಕರ್ಮೇಂದ್ರಿಯಗಳು ವಶ ಆಗಿಬಿಡುತ್ತವೆ ಎಂದು ತಂದೆ ಹೇಳುತ್ತಾರೆ. ಇದಕ್ಕೆ ಕರ್ಮಾತೀತ ಅವಸ್ಥೆ ಎಂದು ಹೇಳಲಾಗುತ್ತದೆ. ಇದು ಕೇವಲ ನೆನಪಿನ ಯಾತ್ರೆಯಿಂದಲೇ ಆಗುತ್ತದೆ. ಇದಕ್ಕೆ ಭಾರತದ ಪ್ರಾಚೀನ ರಾಜಯೋಗ ಎಂದು ಗಾಯನವೂ ಸಹ ಇದೆ. ಅಂದಾಗ ಭಗವಂತನೇ ಕಲಿಸುತ್ತಾರೆ. ಭಗವಂತ ತನ್ನ ಮಕ್ಕಳಿಗೆ ಕಲಿಸುತ್ತಾರೆ. ನೀವು ವಿಕಾರಿ ಕರ್ಮೇಂದ್ರಿಯಗಳ ಮೇಲೆ ಯೋಗಬಲದಿಂದ ಜಯಗಳಿಸುವ ಪುರುಷಾರ್ಥ ಮಾಡಬೇಕು. ಸಂಪೂರ್ಣರು ಅಂತ್ಯದಲ್ಲಿ ಆಗುತ್ತೀರಿ. ಪರಿಪಕ್ವ ಅವಸ್ಥೆ ಇದ್ದಾಗ ಮತ್ತೆ ಯಾವುದೇ ಕರ್ಮೇಂದ್ರಿಯಗಳು ಚಂಚಲತೆ ಮಾಡುವುದಿಲ್ಲ. ಈಗ ಚಂಚಲತೆ ಸಮಾಪ್ತಿ ಆಗುವುದರಿಂದ ಮತ್ತೆ 21 ಜನ್ಮಗಳಿಗಾಗಿ ಯಾವುದೇ ಕರ್ಮೇಂದ್ರಿಯ ಮೋಸ ಮಾಡುವುದಿಲ್ಲ. 21 ಜನ್ಮಗಳಿಗಾಗಿ ಕರ್ಮೇಂದ್ರಿಯಗಳು ವಶ ಆಗಿಬಿಡುತ್ತವೆ. ಎಲ್ಲದಕ್ಕಿಂತ ಮುಖ್ಯ ಕಾಮ ವಿಕಾರವಾಗಿದೆ. ನೆನಪು ಮಾಡುತ್ತಾ-ಮಾಡುತ್ತಾ ಕರ್ಮೇಂದ್ರಿಯಗಳು ವಶ ಆಗಿಬಿಡುತ್ತವೆ. ಈಗ ಕರ್ಮೇಂದ್ರಿಯಗಳನ್ನು ವಶ ಮಾಡಿಕೊಳ್ಳುವುದರಿಂದ ಅರ್ಧಕಲ್ಪಕ್ಕಾಗಿ ಬಹುಮಾನ ಸಿಗುತ್ತದೆ. ವಶ ಮಾಡಿಕೊಂಡಿಲ್ಲವೆಂದರೆ ಪಾಪ ಉಳಿದುಕೊಂಡುಬಿಡುತ್ತದೆ. ನಿಮ್ಮ ಪಾಪ ಯೋಗಬಲದಿಂದ ಕಡಿಮೆ ಆಗುತ್ತಾ ಹೋಗುತ್ತದೆ. ನೀವು ಪವಿತ್ರರಾಗುತ್ತಾ ಹೋಗುತ್ತೀರಿ. ಇದು ನಂಬರ್ವನ್ ಸಬ್ಜೆಕ್ಟ್ ಆಗಿದೆ. ಕರೆಯುವುದೂ ಸಹ ಪತಿತರಿಂದ ಪಾವನರಾಗಲು. ತಂದೆಯೇ ಬಂದು ಪಾವನರನ್ನಾಗಿ ಮಾಡುತ್ತಾರೆ. |
ತಂದೆಯೇ ಜ್ಞಾನಸಾಗರ ಆಗಿದ್ದಾರೆ, ತಂದೆ ಹೇಳುತ್ತಾರೆ - ತಮ್ಮನ್ನು ಆತ್ಮ ಎಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ. ಇದೂ ಸಹ ಜ್ಞಾನವಾಗಿದೆ. ಒಂದು ಯೋಗದ ಜ್ಞಾನವಾಗಿದೆ, ಇನ್ನೊಂದು 84 ಜನ್ಮಗಳ ಚಕ್ರದ ಜ್ಞಾನವಾಗಿದೆ. ಎರಡು ಪ್ರಕಾರದ ಜ್ಞಾನವಾಗಿದೆ ಮತ್ತೆ ಅದರಲ್ಲಿ ದೈವೀಗುಣಗಳು ಸ್ವತಃವಾಗಿಯೇ ಸಮಾವೇಶವಾಗಿರುತ್ತವೆ. ನಾವು ಮನುಷ್ಯರಿಂದ ದೇವತೆಗಳು ಆಗುತ್ತೇವೆ ಅಂದಾಗ ದೈವೀಗುಣಗಳನ್ನು ಅವಶ್ಯವಾಗಿ ಧಾರಣೆ ಮಾಡಬೇಕು ಎಂದು ಮಕ್ಕಳಿಗೆ ಗೊತ್ತಿದೆ. ತಮ್ಮ ಪರಿಶೀಲನೆ ಮಾಡಿಕೊಳ್ಳಬೇಕು. ನೋಟ್ ಮಾಡಿಕೊಳ್ಳುವುದರಿಂದ ತಮ್ಮ ಮೇಲೆ ಎಚ್ಚರಿಕೆ ಇರುತ್ತದೆ. ತಮ್ಮ ಪರಿಶೀಲನೆ ಮಾಡಿಕೊಂಡರೆ ಯಾವುದೇ ತಪ್ಪು ಆಗುವುದಿಲ್ಲ. ತಂದೆಯು ಸ್ವತಃ ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿ. ನೀವೇ ನನ್ನನ್ನು ಕರೆದಿದ್ದೀರಿ ಏಕೆಂದರೆ ನಿಮಗೆ ತಂದೆ ಪತಿತಪಾವನ ಎಂದು ಗೊತ್ತಿದೆ. ತಂದೆ ಯಾವಾಗ ಬರುತ್ತಾರೆ ಆಗ ಈ ಆದೇಶವನ್ನು ಕೊಡುತ್ತಾರೆ. ಈಗ ಈ ಆದೇಶವನ್ನು ಆತ್ಮಗಳು ಪ್ರತ್ಯಕ್ಷರೂಪದಲ್ಲಿ ತರಬೇಕು. ನೀವು ಈ ಶರೀರದ ಮೂಲಕ ಪಾತ್ರವನ್ನು ಮಾಡುತ್ತೀರಿ. ತಂದೆಯೂ ಸಹ ಈ ಶರೀರದಲ್ಲಿ ಪಾತ್ರವನ್ನು ಅಭಿನಯಿಸಲು ಬರಬೇಕಾಗುತ್ತದೆ. ಇದು ಬಹಳ ಅದ್ಭುತವಾದಂತಹ ಮಾತುಗಳಾಗಿವೆ. ತ್ರಿಮೂರ್ತಿಯ ಚಿತ್ರ ಎಷ್ಟು ಸ್ಪಷ್ಟವಾಗಿದೆ. ಬ್ರಹ್ಮಾ ತಪಸ್ಸು ಮಾಡಿ ಈ ರೀತಿ ಆಗುತ್ತಾರೆ. 84 ಜನ್ಮಗಳ ನಂತರ ಈ ರೀತಿ ಆಗುತ್ತಾರೆ. ನಾವು ಬ್ರಾಹ್ಮಣರೇ ದೇವತೆಗಳಾಗಿದ್ದೆವು ನಂತರ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ ಎಂದೂ ಸಹ ಬುದ್ಧಿಯಲ್ಲಿ ನೆನಪು ಇರಲಿ. ಈಗ ಪುನಃ ದೇವತೆ ಯಾಗಲು ಬಂದಿದ್ದೇವೆ. ದೇವತೆಗಳ ವಂಶ ಪೂರ್ತಿ ಆಗಿಬಿಡುತ್ತದೆ, ಆಗ ಭಕ್ತಿಮಾರ್ಗದಲ್ಲೂ ಸಹ ಬಹಳ ಪ್ರೀತಿಯಿಂದ ಅವರನ್ನು ನೆನಪು ಮಾಡುತ್ತಾರೆ. ಈಗ ಆ ತಂದೆಯು ನೀವು ಪದವಿಯನ್ನು ಪಡೆಯುವ ಸಲುವಾಗಿ ಉಪಾಯವನ್ನು ತಿಳಿಸುತ್ತಿರುತ್ತಾರೆ. ನೆನಪೂ ಸಹ ಬಹಳ ಸಹಜವಾಗಿದೆ. ಕೇವಲ ಇಲ್ಲಿ ಚಿನ್ನದ ಪಾತ್ರೆಯು ಬೇಕಾಗಿದೆ. ಎಷ್ಟೆಷ್ಟು ಪುರುಷಾರ್ಥ ಮಾಡುತ್ತೀರಿ ಅಷ್ಟು ಹೊಸ ಅಂಶಗಳು ಉತ್ಪನ್ನವಾಗುತ್ತದೆ, ಆಗ ಜ್ಞಾನವನ್ನೂ ಸಹ ಅನ್ಯರಿಗೆ ಬಹಳ ಚೆನ್ನಾಗಿ ತಿಳಿಸುತ್ತೀರಿ. ಆಗ ತಂದೆಯೇ ಬಂದು ನಮ್ಮಲ್ಲಿ ಪ್ರವೇಶ ಮಾಡಿ ಹೇಳುತ್ತಿದ್ದಾರೆ ಎಂದು ತಿಳಿಯುತ್ತೀರಿ. ತಂದೆಯೂ ಸಹ ಬಹಳ ಸಹಯೋಗವನ್ನು ಕೊಡುತ್ತಾರೆ. ಅಂದಾಗ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಇದೂ ಸಹ ನಾಟಕದಲ್ಲಿ ನಿಗದಿಯಾಗಿದೆ. ಒಂದು ಸೆಕೆಂಡ್ ಮತ್ತೊಂದು ಸೆಕೆಂಡಿಗೆ ಸಂಬಂಧವಿರುವುದಿಲ್ಲ. ಸಮಯ ಕಳೆಯುತ್ತಾ ಹೋಗುತ್ತದೆ. ಇಷ್ಟೊಂದು ವರ್ಷಗಳು, ಇಷ್ಟೊಂದು ತಿಂಗಳಗಳು ಹೇಗೆ ಕಳೆಯಿತು? ಪ್ರಾರಂಭದಿಂದ ಹಿಡಿದು ಸಮಯ ಕಳೆಯುತ್ತಾ ಬಂದಿದೆ, ಈ ಸೆಕೆಂಡ್ ಮತ್ತೆ 5000 ವರ್ಷಗಳ ನಂತರ ಪುನರಾವರ್ತನೆ ಮಾಡುತ್ತೀರಿ. ಇದನ್ನೂ ಸಹ ಚೆನ್ನಾಗಿ ತಿಳಿದುಕೊಳ್ಳಬೇಕು ಹಾಗೂ ತಂದೆಯನ್ನು ನೆನಪು ಮಾಡಬೇಕು. ಇದರಿಂದ ವಿಕರ್ಮ ವಿನಾಶ ಆಗುತ್ತದೆ. ಇನ್ಯಾವುದೇ ಉಪಾಯವಿಲ್ಲ. ಎಷ್ಟೊಂದು ಸಮಯವನ್ನು ನೀವು ಕಳೆಯುತ್ತಾ ಬಂದಿದ್ದೀರಿ, ಇದೆಲ್ಲವೂ ಭಕ್ತಿ ಆಗಿತ್ತು, ಭಕ್ತಿಯ ಫಲವನ್ನು ಭಗವಂತನೇ ಕೊಡುತ್ತಾರೆ ಎಂದು ಹೇಳುತ್ತಾರೆ ಅಂದಾಗ ಯಾವ ಫಲವನ್ನು ಕೊಡುತ್ತಾರೆ? ಯಾವಾಗ ಮತ್ತು ಯಾವ ಫಲವನ್ನು ಕೊಡುತ್ತಾರೆ? ಇದು ಯಾವುದೂ ಸ್ವಲ್ಪವೂ ಗೊತ್ತಿಲ್ಲ. ಯಾವಾಗ ತಂದೆಯು ಫಲವನ್ನು ಕೊಡಲು ಬರುತ್ತಾರೆಯೋ ಆಗ ಪಡೆಯುವವರು ಹಾಗೂ ಕೊಡುವವರು ಜೊತೆ ಇರಬೇಕು. ನಾಟಕದಲ್ಲಿ ಪಾತ್ರವು ಮುಂದುವರೆಯುತ್ತಾ ಹೋಗುತ್ತದೆ. ಇಡೀ ನಾಟಕದಲ್ಲಿ ಇದು ಅಂತಿಮ ಜೀವನವಾಗಿದೆ. ಈಗಲೂ ಸಹ ಒಂದುವೇಳೆ ಯಾರಾದರೂ ಶರೀರ ಬಿಡಬಹುದು, ಬೇರೆ ಯಾವುದಾದರೂ ಪಾತ್ರವನ್ನಭಿನಯಿಸುವುದರಿಂದ ಜನ್ಮವನ್ನು ಪಡೆಯಬಹುದು. ಯಾರಿಗಾದರೂ ಬಹಳ ಲೆಕ್ಕಾಚಾರ ಇದ್ದರೆ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಯಾರಲ್ಲಿ ಬಹಳ ಪಾಪವಿರುತ್ತದೆಯೋ ಅವರು ಪುನಃ-ಪುನಃ ಒಂದು ಜನ್ಮವನ್ನು ತೆಗೆದುಕೊಂಡು ನಂತರ ಎರಡನೆಯದು, ಮೂರನೆಯದು ಹೀಗೆ ಜನ್ಮವನ್ನು ತೆಗೆದುಕೊಳ್ಳುವುದು ಬಿಡುವುದು ಮಾಡುತ್ತಿರುತ್ತಾರೆ. ಗರ್ಭದಲ್ಲಿ ಹೋಗಿ ದುಃಖವನ್ನು ಅನುಭವ ಮಾಡಿ ಆ ಶರೀರವನ್ನು ಬಿಟ್ಟು ಮತ್ತೊಂದು ತೆಗೆದುಕೊಳ್ಳುತ್ತಾರೆ. ಕಾಶಿ-ಕಲ್ವಟ್ನಲ್ಲಿಯೂ ಸಹ ಇದೇ ಸ್ಥಿತಿ ಇರುತ್ತದೆ. ತಲೆಯ ಮೇಲೆ ಬಹಳ ಪಾಪದ ಹೊರೆ ಇದೆ. ಅಲ್ಲಿ ಯೋಗಬಲವಿಲ್ಲ. ಕಾಶಿಕಲ್ವಟ್ನಲ್ಲಿ ದೇಹ ಬಿಡುವುದು ಎಂದರೆ ತನ್ನ ದೇಹವನ್ನು ಘಾತ ಮಾಡಿಕೊಳ್ಳುವುದಾಗಿದೆ. ಆತ್ಮವೂ ಸಹ ಇದು ಶರೀರದ ಘಾತವೆಂದು ತಿಳಿದುಕೊಳ್ಳುತ್ತದೆ. ಆತ್ಮವು ಹೇಳುತ್ತದೆ – ತಂದೆಯೇ, ಯಾವಾಗ ನೀವು ಬರುತ್ತೀರಿ ಆಗ ನಾವು ನಿಮ್ಮ ಮೇಲೆ ಬಲಿಹಾರಿ ಆಗುತ್ತೇವೆ. ಉಳಿದಂತೆ ಭಕ್ತಿಮಾರ್ಗದಲ್ಲಿ ಬಲಿ ಆಗುತ್ತಾರೆ. ಅದು ಭಕ್ತಿ ಆಗಿಬಿಡುತ್ತದೆ. ದಾನ-ಪುಣ್ಯ, ತೀರ್ಥ ಯಾತ್ರೆ ಮಾಡುವುದೆಲ್ಲವೂ ಯಾರೊಂದಿಗೆ ಲೆಕ್ಕಾಚಾರ ಕೊಟ್ಟು-ತೆಗೆದುಕೊಳ್ಳುವುದಾಗಿಬಿಡುತ್ತದೆ? ಪಾಪಾತ್ಮರೊಂದಿಗೆ. ರಾವಣನ ರಾಜ್ಯವಾಗಿದೆಯಲ್ಲವೇ! ತಂದೆಯು ತಿಳಿಸುತ್ತಾರೆ - ಬಹಳ ಎಚ್ಚರಿಕೆಯಿಂದ ಕೊಟ್ಟು-ತೆಗೆದುಕೊಳ್ಳಬೇಕು. ಒಂದುವೇಳೆ ಎಲ್ಲಿಯಾದರೂ ಕೊಟ್ಟಿದ್ದನ್ನು ಕೆಟ್ಟ ಕರ್ಮದಲ್ಲಿ ತೊಡಗಿಸಿದರೆ ನಿಮ್ಮ ತಲೆಯ ಮೇಲೆ ಹೊರೆ ಏರುತ್ತದೆ. ದಾನ-ಪುಣ್ಯವನ್ನು ಬಹಳ ಎಚ್ಚರಿಕೆಯಿಂದ ಮಾಡಬೇಕಾಗಿದೆ. ಬಡವರಿಗೆ ಅನ್ನ ಹಾಗೂ ವಸ್ತ್ರವನ್ನು ದಾನ ಮಾಡಲಾಗುತ್ತದೆ ಹಾಗೂ ಈ ಸಮಯದಲ್ಲಿ ಧರ್ಮಶಾಲೆಗಳೆನ್ನೆಲ್ಲಾ ಮಾಡಿಕೊಡುತ್ತಾರೆ. ಶ್ರೀಮಂತರಿಗಾಗಿ ದೊಡ್ಡ ಮಹಲ್ಗಳು ಇವೆ. ಬಡವರಿಗೆಗುಡಿಸಲುಗಳು ಇವೆ. ಅವರಂತೂ ಅಶುದ್ದ, ಚರಂಡಿ ಅಂತಹ ಕಾಲುವೆಗಳ ಬಳಿ ಇರುತ್ತಾರೆ. ಆ ಕೊಳಕು ಗೊಬ್ಬರವಾಗುತ್ತದೆ ಮತ್ತು ಅದನ್ನು ಮಾರಾಟ ಮಾಡುತ್ತಾರೆ. ಮತ್ತೆ ಅದರಿಂದ ಬೆಳೆ ಬೆಳೆಯುತ್ತಾರೆ. ಅಂದರೆ ಸತ್ಯಯುಗದಲ್ಲಿ ಈ ರೀತಿ ಕಸದಿಂದ ಬೆಳೆಯನ್ನು ಬೆಳೆಯುವುದಿಲ್ಲ. ಅಲ್ಲಂತೂ ಮಣ್ಣು ಹೊಸದಾಗಿರುತ್ತದೆ, ಅದರ ಹೆಸರು ಸ್ವರ್ಗವಾಗಿದೆ, ಪುಕರಾಜಪುರಿ, ಸಬ್ಜ್ ಪುರಿ ಎಂಬ ಹೆಸರುಗಳ ಗಾಯನವಿದೆ, ಇದೆಲ್ಲವೂ ರತ್ನಗಳಾಗಿವೆಯಲ್ಲವೇ. ಕೆಲವರು ಎಷ್ಟೊಂದು ಸೇವೆ ಮಾಡುತ್ತಾರೆ. ಕೆಲವರು ನಾವು ಸೇವೆ ಮಾಡಲಾಗುವುದಿಲ್ಲವೆಂದು ಹೇಳುತ್ತಾರೆ ಆದರೆ ತಂದೆಗೆ ಎಲ್ಲರೂ ರತ್ನಗಳೇ ಆಗಿದ್ದಾರೆ. ಅದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಪೂಜಿಸಲ್ಪಡುತ್ತಾರೆ. ದೇವತೆಗಳಿಗೆ ಪೂಜೆ ನಡೆಯುತ್ತದೆ, ಭಕ್ತಿಮಾರ್ಗದಲ್ಲಿ ಅನೇಕ ಪೂಜೆಗಳು ನಡೆಯುತ್ತವೆ, ಇದೆಲ್ಲವೂ ನಾಟಕದಲ್ಲಿ ನಿಗದಿತವಾಗಿದೆ, ಇದನ್ನು ನೋಡುತ್ತಾ ಮಜಾ ಎನಿಸುತ್ತದೆ. ನಾವು ಪಾತ್ರಧಾರಿಗಳಾಗಿದ್ದೇವೆ. ಈ ಸಮಯದಲ್ಲಿ ನಿಮಗೆ ಜ್ಞಾನವು ಪ್ರಾಪ್ತಿ ಆಗುತ್ತದೆ. ಆದ್ದರಿಂದ ನೀವು ಬಹಳ ಖುಷಿ ಪಡುತ್ತೀರಿ. ಭಕ್ತಿಯದೂ ಪಾತ್ರವಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಭಕ್ತಿಯಲ್ಲಿಯೂ ಸಹ ಬಹಳ ಖುಷಿ ಪಡುತ್ತಾರೆ. ಗುರು ಮಾಲೆಯ ಜಪ ಮಾಡಿ ಎಂದು ಹೇಳಿದರೆ ಸಾಕು ಆ ಖುಶಿಯಲ್ಲಿ ಜಪ ಮಾಡಲು ತೊಡಗಿಬಿಡುತ್ತಾರೆ. ಆದರೆ ಏನೂ ತಿಳುವಳಿಕೆ ಇರುವುದಿಲ್ಲ. |
ಶಿವತಂದೆಯು ನಿರಾಕಾರನಾಗಿದ್ದಾರೆ. ಭಲೆ ಅವರಿಗೆ ಹಾಲು,ನೀರು ಮುಂತಾದವುಗಳನ್ನು ಏಕೆ ಅರ್ಪಿಸುತ್ತಾರೆ? ಮೂರ್ತಿಗಳಿಗೆ ಭೋಗವನ್ನು ಇಡುತ್ತಾರೆ, ಅವರು ಏನಾದರೂ ತಿನ್ನುತ್ತಾರೆಯೇ? ಭಕ್ತಿಯ ವಿಸ್ತಾರವು ದೊಡ್ಡದಾಗಿದೆ. ಭಕ್ತಿಯು ವೃಕ್ಷವಾಗಿದೆ. ಜ್ಞಾನ ಅದರ ಬೀಜವಾಗಿದೆ. ರಚಯಿತ ಮತ್ತು ರಚನೆಯನ್ನು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿಯುವುದಿಲ್ಲ. ಕೆಲವು ಮಕ್ಕಳಂತೂ ತಮ್ಮ ಮೂಳೆಗಳನ್ನು ಈ ಸೇವೆಯಲ್ಲಿ ಸ್ವಾಹಾ ಮಾಡುವಂತಹವರಾಗಿದ್ದಾರೆ. ಇದು ನಿಮ್ಮ ಕಲ್ಪನೆ ಆಗಿದೆ ಎಂದು ತಮಗೆ ಕೆಲವರು ಹೇಳುತ್ತಾರೆ. ಅರೇ! ಇದಂತೂ ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆ ಆಗುತ್ತದೆ. ಕಲ್ಪನೆಗಳು ಪುನರಾವರ್ತಿತವಾಗುತ್ತದೆಯೇ? ಇದಂತೂ ಜ್ಞಾನವಾಗಿದೆ. ಇದು ಹೊಸ ಮಾತುಗಳು, ಹೊಸ ಪ್ರಪಂಚಕ್ಕಾಗಿಯೇ ಆಗಿವೆ. ಭಗವಾನುವಾಚ. ಭಗವಂತನು ಹೊಸಬರಾಗಿದ್ದಾರೆ, ಅವರ ಮಹಾವಾಕ್ಯಗಳೂ ಸಹ ಹೊಸದಾಗಿವೆ. ಅವರು ಕೃಷ್ಣ ಭಗವಾನುವಾಚ ಎಂದು ಹೇಳುತ್ತಾರೆ. ನೀವು ಶಿವಭಗವಾನುವಾಚ ಎಂದು ಹೇಳುತ್ತೀರಿ. ಪ್ರತಿಯೊಬ್ಬರದು ತಮ್ಮ-ತಮ್ಮ ಮತವಾಗಿದೆ. ಒಬ್ಬರದು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದು ವಿಧ್ಯೆಯಾಗಿದೆ, ಶಾಲೆಯಲ್ಲಿ ಓದುತ್ತೀರಿ ಕಲ್ಪನೆಯ ಮಾತೇ ಇಲ್ಲ ತಂದೆಯಾಗಿದ್ದಾರೆ - ಜ್ಞಾನಸಾಗರ, ಜ್ಞಾನಪೂರ್ಣ, ಋಷಿ-ಮುನಿಗಳು ಹೇಳುತ್ತಾರೆ - ನಾವು ರಚಯಿತ ಮತ್ತು ರಚನೆಯನ್ನು ತಿಳಿದಿಲ್ಲ ಎಂದು. ಯಾವ ಆದಿ-ಸನಾತನ ದೇವೀ-ದೇವತೆಗಳೇ ತಿಳಿದುಕೊಂಡಿಲ್ಲವೆಂದಾಗ ಅವರಿಗೆ ಈ ಜ್ಞಾನವು ಎಲ್ಲಿಂದ ಸಿಗುತ್ತದೆ! ಯಾರು ಇದನ್ನು ತಿಳಿದಿದ್ದಾರೋ ಅವರೆ ಪದವಿ ಪಡೆದುಕೊಳ್ಳುತ್ತಾರೆ. ನಂತರ ಸಂಗಮಯುಗ ಬಂದಾಗ ತಂದೆಯು ಬಂದು ತಿಳಿಸುತ್ತಾರೆ. ಹೊಸಬರು ಈ ಮಾತುಗಳಲ್ಲಿ ಗೊಂದಲ ಕ್ಕೀಡಾಗುತ್ತಾರೆ. ಹೌದು! ನೀವು ಅಷ್ಟೇ ಸತ್ಯ ಉಳಿದೆಲ್ಲವೂ ಅಸತ್ಯ ಎಂದು ಕೇಳುತ್ತಾರೆ. ಗೀತಾ ಮಾತಾ ಯಾವ ತಂದೆ ಆಗಿದ್ದಾರೆಯೋ ಅವರನ್ನೇ ಖಂಡನೆ ಮಾಡಿದ್ದಾರೆ, ಉಳಿದೆಲ್ಲವೂ ರಚನೆ ಆಗಿದೆ ಎಂದು ನೀವು ತಿಳಿಸುತ್ತೀರಿ. ಅವರಿಂದ (ಸನ್ಯಾಸಿಗಳು) ಆಸ್ತಿಯು ಸಿಗಲು ಸಾಧ್ಯವಿಲ್ಲ. ವೇದ ಶಾಸ್ತ್ರಗಳಲ್ಲಿ ರಚಯಿತ ಮತ್ತು ರಚನೆಯ ಜ್ಞಾನವಿರಲು ಸಾಧ್ಯವಿಲ್ಲ. ವೇದಗಳಿಂದ ಯಾವ ಧರ್ಮದ ಸ್ಥಾಪನೆ ಆಯಿತು? ಎಂದು ಮೊದಲು ತಿಳಿಸಿ. ಧರ್ಮಗಳಿರುವುದೇ ನಾಲ್ಕು. ಪ್ರತಿಯೊಂದು ಧರ್ಮದ ಧರ್ಮ ಶಾಸ್ತ್ರ ಒಂದೇ ಆಗಿರುತ್ತದೆ. ತಂದೆಯು ಬ್ರಾಹ್ಮಣ ಕುಲದ ಸ್ಥಾಪನೆಯನ್ನು ಮಾಡುತ್ತಾರೆ. ಬ್ರಾಹ್ಮಣರೇ ಪುನಃ ಸೂರ್ಯವಂಶಿ-ಚಂದ್ರವಂಶಿ ಕುಲದಲ್ಲಿ ತಮ್ಮ ಪದವಿಯನ್ನು ಪಡೆಯುತ್ತಾರೆ. ತಂದೆಯೇ ಬಂದು ತಮ್ಮ ಸನ್ಮುಖದಲ್ಲಿ ತಿಳಿಸುತ್ತಾರೆ - ಈ ರಥದ ಮೂಲಕ ಅಂದಾಗ ರಥ (ಶರೀರ) ವಂತೂ ಅವಶ್ಯವಾಗಿ ಬೇಕಾಗಿದೆ. ಆತ್ಮವಂತೂ ನಿರಾಕಾರನಾಗಿದೆ. ಅವರಿಗೆ ಸಾಕಾರ ಶರೀರವು ಸಿಗುತ್ತದೆ. ಆತ್ಮವು ಎಂತಹದ್ದಾಗಿದೆ ಎಂಬುವುದನ್ನು ತಿಳಿಯದಿದ್ದರೆ ತಂದೆಯನ್ನು ಹೇಗೆ ತಿಳಿಯುತ್ತಾರೆ! ಸತ್ಯವನ್ನಂತೂ ತಂದೆಯೇ ತಿಳಿಸುತ್ತಾರೆ, ಉಳಿದೆಲ್ಲವೂ ಅಸತ್ಯವಾಗಿದೆ, ಆದ್ದರಿಂದ ಯಾವುದೇ ಲಾಭವಿಲ್ಲ. ಯಾರ ಮಾಲೆಯನ್ನು ಸ್ಮರಣೆ ಮಾಡುತ್ತಾರೆ, ಇದೇನೂ ತಿಳಿದಿಲ್ಲ, ತಂದೆಯನ್ನೂ ತಿಳಿದಿಲ್ಲ. ತಂದೆಯು ಸ್ವಯಂ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಜ್ಞಾನದಿಂದ ಸದ್ಗತಿ ಆಗುತ್ತದೆ. ಅರ್ಧಕಲ್ಪ ಜ್ಞಾನ, ಅರ್ಧ ಕಲ್ಪ ಭಕ್ತಿ ಆಗಿದೆ. ರಾವಣರಾಜ್ಯದಿಂದ ಭಕ್ತಿ ಪ್ರಾರಂಭವಾಗುತ್ತದೆ. ಭಕ್ತಿಯಿಂದ ಏಣಿಯನ್ನು ಇಳಿಯುತ್ತಾ-ಇಳಿಯುತ್ತಾ ತಮೋಪ್ರಧಾನವಾಗುತ್ತಾರೆ. ಯಾರ ಕರ್ತವ್ಯಗಳನ್ನೂ ತಿಳಿದಿಲ್ಲ. ಭಗವಂತನಿಗಂತೂ ಎಷ್ಟೊಂದು ಪೂಜೆಯನ್ನು ಮಾಡುತ್ತಾರೆ ಏನನ್ನೂ ತಿಳಿದಿಲ್ಲ. ಅಂದಮೇಲೆ ತಂದೆಯು ತಿಳಿಸುತ್ತಾರೆ - ಶ್ರೇಷ್ಠಪದವಿಯನ್ನು ಪಡೆಯಲು ತಮ್ಮನ್ನು ಆತ್ಮ ಎಂದು ತಿಳಿಯಬೇಕು ಮತ್ತು ತಂದೆಯನ್ನು ನೆನಪು ಮಾಡಬೇಕು. ಇದರಲ್ಲಿಯೇ ಪರಿಶ್ರಮವಿದೆ. ಒಂದುವೇಳೆ ಯಾರ ಬುದ್ಧಿಯಾದರೂ ಮಂದಬುದ್ಧಿಯಾಗಿದ್ದರೆ, ಮಂದಬುದ್ಧಿಯಿಂದಲೇ ನೆನಪು ಮಾಡಲಿ. ಆದರೆ ನೆನಪು ಒಬ್ಬರನ್ನೇ ಮಾಡಲಿ. ಬಾಬಾ ತಾವು ಬಂದರೆ ತಮ್ಮ ಜೊತೆಯೇ ಬುದ್ಧಿಯೋಗವನ್ನು ಜೋಡಿಸುತ್ತೇವೆ ಎಂದು ಹೇಳುತ್ತಾರೆ. ಈಗ ತಂದೆಯೂ ಸಹ ಬಂದಿದ್ದಾರೆ, ತಾವೆಲ್ಲಾ ಯಾರ ಜೊತೆ ಮಿಲನ ಮಾಡಲು ಬಂದಿದ್ದೀರಿ? ಯಾರು ಪ್ರಾಣದಾನ ಕೊಡುತ್ತಾರೆ, ಆತ್ಮನನ್ನು ಅಮರಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ. ಮೃತ್ಯುವಿನ ಮೇಲೆ ವಿಜಯಿಯನ್ನಾಗಿ ಮಾಡುತ್ತೇನೆ, ನಿಮ್ಮನ್ನು ಅಮರಲೋಕಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು ತಿಳಿಸಿದ್ದಾರೆ. ಅಮರ ಕಥೆ ಪಾರ್ವತಿಗೆ ತಿಳಿಸಿದರು ಎಂದು ತೋರಿಸುತ್ತಾರಲ್ಲವೇ. ಈಗ ಅಮರನಾಥ ಒಬ್ಬರೇ ಆಗಿದ್ದಾರೆ. ಹಿಮಾಲಯದ ಪರ್ವತದ ಮೇಲೆ ಕುಳಿತು ಕಥೆ ತಿಳಿಸುತ್ತಾರೇನು. ಭಕ್ತಿಮಾರ್ಗದ ಪ್ರತಿಯೊಂದು ಮಾತಿನಲ್ಲಿ ಆಶ್ಚರ್ಯ ಆಗುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ |
ಧಾರಣೆಗಾಗಿ ಮುಖ್ಯಸಾರ: |
1. ಯೋಗಬಲದಿಂದ ಕರ್ಮೇಂದ್ರಿಯಾಜೀತರಾಗಿ ಸಂಪೂರ್ಣ ಪವಿತ್ರರಾಗಬೇಕು. ಈ ಅವಸ್ಥೆಯನ್ನು ಪಡೆಯಲು ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು. |
2. ಸದಾ ಬುದ್ಧಿಯಲ್ಲಿ ನಾವೇ ಬ್ರಾಹ್ಮಣರಿಂದ ದೇವತೆಗಳಾಗಿದ್ದೆವು ಮತ್ತೆ ಈಗ ದೇವತೆ ಆಗಲು ಬಂದಿದ್ದೇವೆ ಎಂದು ನೆನಪು ಇರಬೇಕು. ಆದ್ದರಿಂದ ಬಹಳ ಎಚ್ಚರಿಕೆಯಿಂದ ಪಾಪ ಹಾಗೂ ಪುಣ್ಯವನ್ನು ತಿಳಿದು ವ್ಯವಹಾರ ಮಾಡಬೇಕು. |
ಓಂ ಶಾಂತಿ. ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ, ತಿಳಿಸುತ್ತಾ-ತಿಳಿಸುತ್ತಾ ಎಷ್ಟೊಂದು ಬುದ್ಧಿವಂತರನ್ನಾಗಿ ಮಾಡಿ ಬಿಡುವರು. ವಿದ್ಯಾಭ್ಯಾಸವೂ ಸಹಜವಿದೆಯಲ್ಲವೆ. ಅದಂತು ಸ್ಥೂಲ ವಿದ್ಯಾಭ್ಯಾಸವಾಗಿದೆ ಮತ್ತು ಇದು ಸೂಕ್ಷ್ಮ ವಿದ್ಯಾಭ್ಯಾಸವಾಗಿದೆ.ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ವಿದ್ಯೆಯನ್ನು ತಂದೆಯಲ್ಲದೆ ಮತ್ತ್ಯಾರೂ ಓದಿಸಲು ಸಾಧ್ಯವಿಲ್ಲ. ತಂದೆಯು ಬಂದಿರುವುದೇ ಪವಿತ್ರರನ್ನಾಗಿ ಮಾಡಲು ಹಾಗೂ ಓದಿಸುವುದಕ್ಕಾಗಿಯೇ ಬಂದಿದ್ದಾರೆ. ಗುರಿ-ಉದ್ದೇಶವೂ ತಮ್ಮ ಸನ್ಮುಖದಲ್ಲಿದೆ ಅಂದಮೇಲೆ ಇಂತಹ ತಂದೆಯನ್ನು ನೆನಪು ಮಾಡುತ್ತಾ ಖುಷಿಯಲ್ಲಿ ರೋಮಾಂಚನದಿಂದ ನಿಂತು ಬಿಡಬೇಕಾಗಿದೆ. ಇದೂ ಸಹ ನೀವು ಮಕ್ಕಳಿಗೆ ಗೊತ್ತಿದೆ - ದಿನ ಕಳೆದಂತೆ ನಾವು ಶಾಂತಿಯಲ್ಲಿಯೇ ಹೋಗಬೇಕಾಗಿದೆ. ಶಾಂತಿಯಂತು ಎಲ್ಲರಿಗೂ ಸಹ ಬಹಳ ಪ್ರಿಯವಾಗುವುದು, ಗಣ್ಯ ವ್ಯಕ್ತಿಗಳು ಹೆಚ್ಚು ಮಾತನಾಡುವುದಿಲ್ಲ ಮತ್ತು ಗಡುಸಾಗಿ ಮಾತನಾಡುವುದಿಲ್ಲ. ನೀವು ಬಹಳ-ಬಹಳ ದೊಡ್ಡ ಗಣ್ಯ ವ್ಯಕ್ತಿಯಾಗುವಿರಿ, ವಾಸ್ತವದಲ್ಲಿ ವ್ಯಕ್ತಿಯೆಂದು ಹೇಳುವುವುದಿಲ್ಲ ನೀವಂತು ದೇವತೆಯಾಗುವಿರಿ. ದೇವತೆಗಳು ಬಹಳ ಸ್ವಲ್ಪವೇ ಮಾತನಾಡುತ್ತಾರೆ. ನೀವೂ ಸಹ ಈಗ ದೇವತೆಗಳಾಗಬೇಕು ಅಂದಮೇಲೆ ಶಬ್ಧಕ್ಕೆ ಬದಲಾಗಿ ಶಾಂತಿಯಲ್ಲಿರುವ ಅಭ್ಯಾಸ ಮಾಡಿರಿ. ಶಾಂತಿಯಲ್ಲಿ ಇರುವವರಿಗಾಗಿ ತಿಳಿಯುವರು - ಇವರಿಗೆ ಸ್ವಯಂನ ಪ್ರತಿ ಗಮನವಿದೆ, ಯಾವಾಗ ನೀವು ಶಾಂತಿಧಾಮಕ್ಕೆ ಹೋಗಬೇಕೆಂದಾಗ ಮಾತನಾಡುವುದನ್ನೂ ಸಹ ಬಹಳ ನಿಧಾನವಾಗಿಯೇ ಮಾತನಾಡಬೇಕು. ನಿಧಾನವಾಗಿ ಮಾತನಾಡುತ್ತಾ-ಮಾತನಾಡುತ್ತಾ ಶಾಂತಿಧಾಮಕ್ಕೆ ಹೋಗಿ ಬಿಡಬೇಕು. ನೀವೆಷ್ಟು ಶಾಂತಿಯಲ್ಲಿ ಇರುತ್ತೀರಿ ಅಷ್ಟು ಶಾಂತಿಯನ್ನು ಹರಡುತ್ತೀರಿ. ನೀವು ಬಹಳಷ್ಟು ಶಾಂತಿಯಲ್ಲಿಯೇ ಇರಬೇಕು. ಹೆಚ್ಚು ಶಬ್ಧದಿಂದ ಮಾತನಾಡುವುದು ಇಷ್ಟವಾಗುವುದಿಲ್ಲ. ಕ್ರೋಧವೂ ಒಳ್ಳೆಯದಲ್ಲ, ಮಕ್ಕಳಲ್ಲಿ ಇದ್ಯಾವುದೇ ವಿಕಾರಗಳೂ ಇರಬಾರದು. ನೋಡಿಕೊಳ್ಳಬೇಕು - ನಾವು ಯಾರೊಂದಿಗೂ ಹೊಡೆದಾಟ-ಜಗಳವನ್ನಂತು ಮಾಡುವುದಿಲ್ಲವೇ! ತಂದೆಯು ತಿಳಿಸಿದ್ದಾರೆ - ಕೆಟ್ಟದ್ದನ್ನು ನೋಡಬಾರದು, ಕೆಟ್ಟದ್ದನ್ನು ಕೇಳಬಾರದು...... ಯಾವ ಮಾತು ನಿಮಗೆ ಇಷ್ಟವಿಲ್ಲವೋ ಆ ಕೆಟ್ಟ ಮಾತುಗಳಿಂದ ನೀವು ದೂರವಾಗಿ ಬಿಡಬೇಕು. ಇದರಿಂದ ಎರಡೂ ಮುಖಗಳು ಬಂಧ್ ಆಗಿರುತ್ತದೆ. ಪ್ರತಿಯೊಂದು ಮಾತಿನಲ್ಲಿಯೂ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು. ಯಾರಾದರೂ ಜೋರಾಗಿ ಮಾತನಾಡಿದರೂ ಹೇಳಿರಿ - ಶಾಂತವಾಗಿರಿ, ಶಬ್ಧವನ್ನುಂಟು ಮಾಡದಿರಿ. ನೀವು ತಿಳಿದಿದ್ದೀರಿ - ನಾವು ಶಾಂತಿ ಸ್ಥಾಪನೆ ಮಾಡುತ್ತೇವೆ. ಸತ್ಯಯುಗದಲ್ಲಿ ಶಾಂತಿಯಲ್ಲಿ ಇರುತ್ತೇವಲ್ಲವೆ. ಮೂಲವತನದಲ್ಲಂತು ಶಾಂತಿಯೇ ಇರುತ್ತದೆ.ಶರೀರವೇ ಇಲ್ಲದಿದ್ದರೆ ಮಾತನಾಡುವುದಾದರೂ ಹೇಗೆ?ತಂದೆಯು ಮಕ್ಕಳಿಗೆ ಬಹಳ ಒಳ್ಳೆಯ ಶ್ರೀಮತವನ್ನಂತು ಕೊಡುತ್ತಾರೆ, ತಿಳಿಸುತ್ತಾರೆ- ಮಧುರ ಮಕ್ಕಳೇ, ಈಗ ನೀವು ತಮ್ಮ ಮನೆಗೆ ನಡೆಯಬೇಕಾಗಿದೆ, ಶಬ್ಧದಿಂದ ಮೂವಿಯಲ್ಲಿ ಬರಬೇಕು ನಂತರ ಶಾಂತಿಯಲ್ಲಿ ಹೊರಟು ಹೋಗುವಿರಿ. ಯಾರೇ ಭೇಟಿಯಾಗುವರು ಅವರಿಗೆ ಇದೇ ಸಂದೇಶವನ್ನು ಕೊಡಬೇಕಾಗಿದೆ. ನೀವೆಷ್ಟು ಶಾಂತಿಯಲ್ಲಿ ಇರುತ್ತೀರಿ, ಅಷ್ಟು ತಿಳಿದುಕೊಳ್ಳುವರು - ಈ ಜನರು ಯಾವುದೋ ಗುಂಗಿನಲ್ಲಿದ್ದಾರೆ. ಶಾಂತಿಯಲ್ಲಿರುವ ಸ್ವಭಾವವು ಬಹಳ ಒಳ್ಳೆಯದು. ಅಂತಹವರು ಬಹಳ ಮಧುರವೆನಿಸುತ್ತಾರೆ. ವ್ಯರ್ಥ ಮಾತುಗಳನ್ನು ಮಾತನಾಡುವುದಕ್ಕಿಂತ ಮಾತನಾಡದೇ ಇರುವುದು ಒಳ್ಳೆಯದು. |
ನೀವು ಸತ್ಯ-ಸತ್ಯ ಸಂದೇಶವಾಹಕರು ಆಗಿದ್ದೀರಿ. ನಿಮ್ಮೆಲ್ಲರ ಮೇಲೆ ಕೃಪೆ ಇರಬೇಕು. ಕೃಪೆ ತೋರಿಸುವ ಮಕ್ಕಳು ಬಹಳ ಶಾಂತಿಯಲ್ಲಿದ್ದು ತಂದೆಯ ನೆನಪಿನಲ್ಲಿ ಇರುವರು. ಕೇವಲ ಇಷ್ಟೇ ಸಂದೇಶವನ್ನು ಕೊಡಬೇಕಾಗಿದೆ - ಬೇಹದ್ದಿನ ತಂದೆಯನ್ನು ನೆನಪು ಮಾಡುತ್ತೀರೆಂದರೆ, ಬೇಹದ್ದಿನ ಸುಖ-ಶಾಂತಿ ಸಿಗುವುದು. ಲೌಕಿಕ ತಂದೆಯ ಬಹಳ ಬಹಳ ಹಣವಿದೆಯೆಂದರೆ ಬಹಳ ಆಸ್ತಿಯು ಸಿಗುತ್ತದೆಯಲ್ಲವೆ. ಬೇಹದ್ದಿನ ತಂದೆಯ ಬಳಿಯಂತು ವಿಶ್ವದ ರಾಜ್ಯಭಾಗ್ಯವೇ ಇದೆ, ಅವರಿಂದ ಪ್ರತೀ 5000 ವರ್ಷಗಳ ನಂತರ ನಿಮಗೆ ವಿಶ್ವದ ರಾಜ್ಯಭಾಗ್ಯವು ಸಿಗುವುದು. |
ನೀವು ಮಕ್ಕಳಿಗೆ ಬಹಳ ಆಸಕ್ತಿಯಿಂದ ಸರ್ವರ ಸೇವೆಯನ್ನು ಮಾಡಬೇಕಾಗಿದೆ. ಪ್ರತಿಯೊಬ್ಬರೂ ಸೇವೆಗೆ ಯೋಗ್ಯರಾಗಬೇಕು. ಯಾರು ಅನ್ಯರ ಸೇವೆಯನ್ನು ಪ್ರೀತಿಯಿಂದ ಮಾಡುವರು, ಅವರನ್ನು ಸರ್ವರೂ ಪ್ರೀತಿಸುವರು. ಎಂದಿಗೂ ಸಹ ಸೇವೆಯ ಅಹಂಕಾರದಲ್ಲಿ ಬರಬಾರದು. ನಿಮಗೆ ತಂದೆಯ ಮೂಲಕ ಜ್ಞಾನದ ಕಸ್ತೂರಿ ಸಿಕ್ಕಿದೆ, ಅದನ್ನು ಅನ್ಯರಿಗೂ ಕೊಡಬೇಕಾಗಿದೆ. ಒಬ್ಬರಿನ್ನೊಬ್ಬರಿಗೆ ಶಿವ ತಂದೆಯ ನೆನಪಿದೆಯೇ?ಎಂದು ನೆನಪು ತರಿಸುತ್ತಿರಿ. ಇದರಲ್ಲಿ ಖುಷಿಯೂ ಆಗುವುದು. ನೆನಪು ತರಿಸುವವರಿಗೆ ಧನ್ಯವಾದಗಳನ್ನು ಕೊಡಬೇಕು. ನೆನಪಿನ ಯಾತ್ರೆಯಿಂದ ನೀವು ಮಕ್ಕಳು ಬಹಳಷ್ಟು ಸುರಕ್ಷಿತವಾಗಿ ಇರುತ್ತೀರಿ. ಯಾರೆಷ್ಟು ನೆನಪಿನಲ್ಲಿ ಇರುತ್ತಾರೆಯೋ ಅವರಷ್ಟು ಖುಷಿಯಾಗಿಯೂ ಇರುವರು ಮತ್ತು ನಡುವಳಿಕೆಯೂ ಸುಧಾರಣೆ ಆಗುತ್ತಿರುತ್ತದೆ. ನೀವು ತಮ್ಮ ನಡುವಳಿಕೆಯನ್ನು ಅವಶ್ಯವಾಗಿ ಸುಧಾರಣೆ ಮಾಡಿಕೊಳ್ಳಬೇಕಾಗಿದೆ. ಪ್ರತಿಯೊಬ್ಬರೂ ತಮ್ಮ ಹೃದಯದಿಂದ ಕೇಳಿಕೊಳ್ಳಿರಿ - ನಮ್ಮ ಸ್ವಭಾವವು ಬಹಳ-ಬಹಳ ಮಧುರವಾಗಿದೆಯೇ? ಎಂದಿಗೂ ಯಾರನ್ನೂ ಬೇಸರ ಮಾಡುವುದಿಲ್ಲವೆ! ಇಂತಹ ವಾತಾವರಣವೂ ಸಹ ಎಂದಿಗೂ ಇರಬಾರದು, ಅದರಿಂದ ಯಾರಾದರೂ ಬೇಸರವಾಗಿ ಬಿಡುವರು. ಇಂತಹ ಪ್ರಯತ್ನ ಪಡುತ್ತಿರಬೇಕು ಏಕೆಂದರೆ ನೀವು ಮಕ್ಕಳು ಬಹಳ ಶ್ರೇಷ್ಠವಾದ ಸೇವೆಯಲ್ಲಿದ್ದೀರಿ. ನೀವು ಇಡೀ ಸೃಷ್ಟಿಯ ರಂಗಮಂಚಕ್ಕೇ ಬೆಳಕನ್ನು ಕೊಡಬೇಕಾಗಿದೆ. ನೀವು ಧರಣಿಯ ಚೈತನ್ಯ ನಕ್ಷತ್ರಗಳಾಗಿದ್ದೀರಿ. ಇದನ್ನೂ ಹೇಳಲಾಗುತ್ತದೆ - ನಕ್ಷತ್ರ ದೇವತಾ..... ಈಗ ಆ ನಕ್ಷತ್ರಗಳೇನೂ ದೇವತೆಯಲ್ಲ, ನೀವಂತು ಅದಕ್ಕಿಂತಲೂ ಮಹಾನ್ ಬಲಶಾಲಿ ಆಗಿದ್ದೀರಿ ಏಕೆಂದರೆ ನೀವು ಇಡೀ ವಿಶ್ವವನ್ನೇ ಪ್ರಕಾಶತೆಗೊಳಿಸುತ್ತೀರಿ. ನೀವೇ ದೇವತೆಯಾಗುವವರೂ ಆಗಿದ್ದೀರಿ. ಹೇಗೆ ಮೇಲೆ ನಕ್ಷತ್ರಗಳ ಶೋಭೆಯಿದೆ, ಕೆಲವು ನಕ್ಷತ್ರಗಳು ಬಹಳ ಹೊಳೆಯುತ್ತಿರುತ್ತವೆ ಮತ್ತು ಕೆಲವು ಸ್ವಲ್ಪ ಕಡಿಮೆ. ಕೆಲವು ಚಂದ್ರಮನ ಸಮೀಪವಿರುತ್ತವೆ. ನೀವು ಮಕ್ಕಳೂ ಸಹ ಯೋಗಬಲದಿಂದ ಪವಿತ್ರರಾಗುತ್ತೀರೆಂದರೆ ಹೊಳೆಯುತ್ತೀರಿ. |
ಈಗ ನೀವು ಮಕ್ಕಳಿಗೆ ಅವಿನಾಶಿ ಜ್ಞಾನರತ್ನಗಳ ಲಾಟರಿ ಸಿಗುತ್ತಿದೆ ಅಂದಾಗ ಎಷ್ಟೊಂದು ಖುಷಿಯಿರಬೇಕು! ಒಳಗೆ ಖುಷಿಯಲ್ಲಿ ನರ್ತಿಸುತ್ತಿರಿ. ಈ ನಿಮ್ಮ ಜನ್ಮವು ವಜ್ರ ಸಮಾನ ಎಂದು ಮಹಿಮೆ ಮಾಡಲಾಗುತ್ತದೆ. ನೀವು ಬ್ರಾಹ್ಮಣರೇ ಜ್ಞಾನಪೂರ್ಣರು ಆಗುತ್ತೀರಿ ಅಂದಾಗ ನಿಮಗೆ ಜ್ಞಾನದಲ್ಲಿಯೇ ಖುಷಿಯಿರುತ್ತದೆ. ಈ ದೇವತೆಗಳಿಗಿಂತಲೂ ನೀವು ಶ್ರೇಷ್ಠರಾಗಿದ್ದೀರಿ ಅಂದಾಗ ನಿಮ್ಮ ಚಹರೆಯು ಸದಾ ಖುಷಿಯಿಂದ ಅರಳಿರಲಿ. ತಂದೆಯು ಮಕ್ಕಳಿಗೆ ಆಶೀರ್ವಾದ ಮಾಡುತ್ತಾರೆ - ಮಧುರ ಮಕ್ಕಳೇ, ಸದಾ ಶಾಂತಚಿತ್ತರಾಗಿರಿ, ಚಿರಂಜೀವಿ ಆಗಿರಿ ಅರ್ಥಾತ್ ಬಹಳ ಜನ್ಮಗಳವರೆಗೆ ಅಮರರಾಗಿರಿ. ತಂದೆಯಿಂದ ಆಶೀರ್ವಾದವಂತು ಸಿಗುವುದು ಆದರೂ ಸಹ ಚಿರಂಜೀವಿ ಆಗಿರುವುದು ಹೇಗೆ! ಎಂದು ಪ್ರತಿಯೊಬ್ಬರೂ ತಮ್ಮ-ತಮ್ಮ ಪುರುಷಾರ್ಥವನ್ನು ಮಾಡಬೇಕು. ತಂದೆಯನ್ನು ನೆನಪು ಮಾಡುವುದರಿಂದ ನೀವು ಚಿರಂಜೀವಿ ಆಗುತ್ತಿದ್ದೀರಿ (ಅಮರರಾಗುತ್ತಿದ್ದೀರಿ), ಈ ಆಶೀರ್ವಾದವನ್ನು ತಂದೆಯು ಕೊಡುವರು. ಬ್ರಾಹ್ಮಣರೂ ಸಹ ಹೇಳುತ್ತಾರೆ - ಆಯುಷ್ಯವಾನ್ ಭವ. ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ಸದಾ ಅಮರರಾಗಿರಿ. ಅರ್ಧ ಕಲ್ಪದಲ್ಲಿ ನಿಮ್ಮನ್ನು ಕಾಲ ಕಬಳಿಸುವುದಿಲ್ಲ. ಸತ್ಯಯುಗದಲ್ಲಿ ಸಾಯುವ ಹೆಸರೇ ಇರುವುದಿಲ್ಲ. ಇಲ್ಲಂತು ಮನುಷ್ಯರು ಸಾವಿಗೆ ಭಯಪಡುವರಲ್ಲವೆ! ನೀವಂತು ಸಾಯುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ಶರೀರವನ್ನು ಬಿಟ್ಟು, ಶಿವ ತಂದೆಯ ಬಳಿ ಹೋಗುತ್ತೇವೆ ನಂತರ ಸ್ವರ್ಗವಾಸಿ ಆಗುತ್ತೇವೆ ಎನ್ನುವುದನ್ನು ನೀವು ತಿಳಿದಿದ್ದೀರಿ. |
ಈಗ ನೀವು ಅತಿ ಪ್ರಿಯ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನೀವೂ ಸಹ ತಂದೆಯಂತೆ ಬಹಳ-ಬಹಳ ಮಧುರ, ಬಹಳ ಪ್ರೀತಿಯುಳ್ಳವರು ಆಗಬೇಕಾಗಿದೆ. ತಂದೆಯವರು ಪತ್ರಗಳಲ್ಲಿ ಬರೆಯುತ್ತಾರೆ - ಮಧುರಾತಿ ಮಧುರ ಮುದ್ದಾದ ಅಗಲಿ ಸಿಕ್ಕಿರುವ ಮಕ್ಕಳೇ...... ಬಾಬಾ ಬಹಳ ಮಧುರವಲ್ಲವೆ. ಪ್ರತ್ಯಕ್ಷದಲ್ಲಿಯೂ ಅನುಭವ ಮಾಡುತ್ತೀರಿ - ಬಾಬಾರವರು ಎಷ್ಟೊಂದು ಮಧುರ, ಎಷ್ಟೊಂದು ಪ್ರಿಯವಾಗಿದ್ದಾರೆ. ನಮ್ಮನ್ನೂ ಇದೇ ರೀತಿ ಮಾಡುತ್ತಾರೆ. ನೀವೂ ಇದನ್ನು ತಿಳಿದಿದ್ದೀರಿ - ನಾವೆಷ್ಟು ಮಧುರ, ಎಷ್ಟೊಂದು ಪ್ರಿಯರಿದ್ದೆವು, ನಾವೇ ಪೂಜ್ಯರಿದ್ದವರು ನಂತರ ಪೂಜಾರಿಯಾದಾಗ, ಸ್ವಯಂನ್ನು ಪೂಜಿಸುತ್ತಿದ್ದೆವು. ಇದೂ ಸಹ ಬಹಳ ವಿಚಿತ್ರವಾದ ತಿಳಿದುಕೊಳ್ಳುವ ಮಾತುಗಳಾಗಿವೆ. |
ನೀವು ಮಕ್ಕಳು ತಿಳಿದಿದ್ದೀರಿ - ನಮ್ಮೆಲ್ಲರ ಅರ್ಧಕಲ್ಪದ ದುಃಖವನ್ನು ದೂರಗೊಳಿಸುವಂತಹ ತಂದೆಯೀಗ ಬಂದಿದ್ದಾರೆ. ಹರ ಹರ ಮಹದೇವ ಎಂದು ಹೇಳುತ್ತಾರೆ, ಈಗ ಮಹದೇವನಂತು ಅವರಲ್ಲ, ದುಃಖವನ್ನಂತು ತಂದೆಯೇ ಹರಣ ಮಾಡುವರು. ದುಃಖವನ್ನು ಹರಣ ಮಾಡಿ ಸುಖ ಕೊಡುವವರು ತಂದೆಯಾಗಿದ್ದಾರೆ. ಅರ್ಧ ಕಲ್ಪದಲ್ಲಿ ನೀವು ಬಹಳ ದುಃಖವನ್ನು ನೋಡಿದ್ದೀರಿ. 5 ವಿಕಾರಗಳ ರೋಗವಂತು ಬಹಳಷ್ಟು ಹೆಚ್ಚಾಗಿ ಬಿಟ್ಟಿದೆ, ಈ ರೋಗವು ಬಹಳ ದುಃಖಿಯನ್ನಾಗಿಯೂ ಮಾಡಿದೆ. ಆದ್ದರಿಂದ ತಂದೆಯು ಹೇಳುವರು - ಮಧುರ ಮಕ್ಕಳೇ, ಕರ್ಮಗಳ ಖಾತೆಯೇನಿದೆಯೋ ಅದನ್ನೀಗ ಸರಿಪಡಿಸಿಕೊಳ್ಳಿರಿ. ವ್ಯಾಪಾರಿಗಳೂ ಸಹ 12 ತಿಂಗಳ ಖಾತೆಯನ್ನು ಇಡುತ್ತಾರಲ್ಲವೆ. |
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಇಡೀ ಸೃಷ್ಟಿಯಲ್ಲಿ ಎಷ್ಟೊಂದು ಕೊಳಕಿದೆ (ಅಶುದ್ಧತೆ) ನೋಡಿ, ಇದಂತು ಇರುವುದೇ ನರಕ ಅದಕ್ಕಾಗಿಯೇ ತಂದೆಯು ನರಕವನ್ನು ಸ್ವರ್ಗವನ್ನಾಗಿ ಮಾಡಲು ಬರಬೇಕಾಗುವುದು. ತಂದೆಯು ಬಹಳ ಪ್ರೀತಿಯಿಂದ ಬರುತ್ತಾರೆ. ನಾನು ನನ್ನ ಮಕ್ಕಳ ಸೇವೆಯಲ್ಲಿ ಬರಬೇಕಾಗಿದೆ ಎನ್ನುವುದು ಗೊತ್ತಿದೆ. ನಾನು ಕಲ್ಪ-ಕಲ್ಪವೂ ನೀವು ಮಕ್ಕಳ ಸೇವೆಯಲ್ಲಿ ಹಾಜರಾಗುವೆನು. ಯಾವಾಗ ನಾನೇ ಬರುವೆನು ಆಗ ಮಕ್ಕಳು ತಿಳಿದುಕೊಳ್ಳುವರು - ತಂದೆಯು ನಮ್ಮ ಸೇವೆಯಲ್ಲಿ ಹಾಜರಾಗಿದ್ದಾರೆ. ಇಲ್ಲಿ ಕುಳಿತುಕೊಂಡೇ ಎಲ್ಲರ ಸೇವೆಯಾಗಿ ಬಿಡುತ್ತದೆ. ಇಡೀ ಸೃಷ್ಟಿಯ ಕಲ್ಯಾಣಕಾರಿ ದಾತಾ ಒಬ್ಬ ತಂದೆಯ ಆಗಿರುವರಲ್ಲವೆ! ತಂದೆಗೆ ಗೊತ್ತಿದೆ - ಇಡೀ ಪ್ರಪಂಚದಲ್ಲಿ ಎಷ್ಟೆಲ್ಲಾ ಆತ್ಮರಿದ್ದಾರೆ, ಸರ್ವರಿಗೂ ನಾನೇ ಆಸ್ತಿಯನ್ನು ಕೊಡುವುದಕ್ಕಾಗಿ ಬಂದಿದ್ದೇನೆ. ಬೇಹದ್ದಿನ ತಂದೆಯ ದೃಷ್ಟಿಯು ಪ್ರಪಂಚದಲ್ಲಿರುವ ಆತ್ಮರ ಕಡೆಗೇ ಹೋಗುವುದು. ಭಲೆ ಇಲ್ಲಿ ಕುಳಿತಿರಬಹುದು ಆದರೆ ದೃಷ್ಟಿಯು ಇಡೀ ವಿಶ್ವದ ಮೇಲೆ ಹಾಗೂ ಇಡೀ ವಿಶ್ವದಲ್ಲಿ ಇರುವಂತಹ ಮನುಷ್ಯಾತ್ಮರ ಮೇಲಿದೆ ಏಕೆಂದರೆ ಇಡೀ ವಿಶ್ವವನ್ನೇ ಪರಿವರ್ತನೆ ಮಾಡಬೇಕಾಗಿದೆ. ಡ್ರಾಮಾದ ಯೋಜನೆಯನುಸಾರ ಕಲ್ಪದ ಮೊದಲಿನಂತೆ ಇಡೀ ವಿಶ್ವದ ಆತ್ಮರು ಪರಿವರ್ತನೆ ಆಗಿ ಬಿಡುವರು. ತಂದೆಯು ಎಲ್ಲಾ ಮಕ್ಕಳನ್ನು ನೆನಪು ಮಾಡುತ್ತಾರೆ, ದೃಷ್ಟಿಯಂತು ಹೋಗುವುದಲ್ಲವೆ. ಸಂಗಮಯುಗದಲ್ಲಿಯೇ ತಂದೆಯು ಮಕ್ಕಳ ಸೇವೆಯಲ್ಲಿ ಹಾಜರಾಗುವರು. ಅವರ ಹೋಲಿಕೆಯಲ್ಲಿ ಯಾರೂ ಸಹ ಸೇವೆಯನ್ನು ಮಾಡಲು ಸಾಧ್ಯವಿಲ್ಲ, ಅವರದು ಬೇಹದ್ದಿನ ಸೇವೆಯಾಗಿದೆ. ನೀವು ಮಕ್ಕಳೂ ಸಹ ತಂದೆಯಂತೆ ಸೇವೆ ಮಾಡಿದಾಗಲೇ ತಂದೆಯನ್ನು ಪ್ರತ್ಯಕ್ಷಗೊಳಿಸುವಿರಿ. ಸೇವೆ ಮಾಡುವವರಿಗೆ ಫಲವೂ ಸಹ ಬಹಳ ಶ್ರೇಷ್ಠವಾಗಿರುವುದೇ ಸಿಗುವುದು. ಮಕ್ಕಳಿಗೆ ನಶೆಯೂ ಏರುವುದು - ನಾವು ಶ್ರೀಮತದಂತೆ ಇಡೀ ವಿಶ್ವದ ಮನುಷ್ಯರಿಗೆ ಸುಖ ಕೊಡುತ್ತೇವೆ ಎಂದು. |
ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ಈಗ ತಮ್ಮ ಜೋಳಿಗೆಯನ್ನು ಬಹಳ ಚೆನ್ನಾಗಿ ಜ್ಞಾನರತ್ನಗಳಿಂದ ತುಂಬಿಕೊಳ್ಳಿರಿ, ಎಷ್ಟು ತುಂಬಿಕೊಳ್ಳಬೇಕೋ ಅಷ್ಟು ತುಂಬಿರಿ. ತಮ್ಮ ಸಮಯವನ್ನು ವ್ಯರ್ಥ ಮಾಡದಿರಿ. ತಂದೆಯ ನೆನಪಿನಲ್ಲಿಯೇ ಸಮಯವನ್ನು ಸಫಲಗೊಳಿಸಿರಿ. ಯಾರು ಬಹಳ ಚೆನ್ನಾಗಿ ಧಾರಣೆ ಮಾಡುವರೋ ಅವರು ಅನ್ಯರ ಸೇವೆಯನ್ನು ಅವಶ್ಯವಾಗಿ ಬಹಳ ಚೆನ್ನಾಗಿ ಮಾಡುವರು. ಸಮಯವನ್ನು ವ್ಯರ್ಥ ಮಾಡುವುದಿಲ್ಲ. ಮಕ್ಕಳೇ ನೀವು ಪುರುಷಾರ್ಥ ಮಾಡಿ ಅಂತರ್ಮುಖಿ ಆಗಬೇಕಾಗಿದೆ. ನಾವು ಆತ್ಮರಿಗೆ ತಂದೆಯು ತಿಳಿಸುತ್ತಿದ್ದಾರೆ ಎಂಬ ನಿಶ್ಚಯ ಮಾಡಿಕೊಳ್ಳಬೇಕು. ಆತ್ಮಾಭಿಮಾನಿ ಆಗಿರುವುದೇ ಸತ್ಯ-ಸತ್ಯವಾದ ಅಂತರ್ಮುಖಿ ಆಗುವುದಾಗಿದೆ. ಅಂತರ್ಮುಖಿ ಎಂದರೆ ಒಳಗೆ ಆತ್ಮವೇನಿದೆ, ಅದು ಎಲ್ಲದರ ಬಗ್ಗೆಯೂ ತಂದೆಯಿಂದಲೇ ಕೇಳಬೇಕಾಗಿದೆ. ತಂದೆಯು ಮತ್ತೆ-ಮತ್ತೆ ಪ್ರೀತಿಯಿಂದ ತಿಳಿಸುತ್ತಿದ್ದಾರೆ. ಮಾತಾ-ಪಿತ ಹಾಗೂ ಯಾರೆಲ್ಲರೂ ಅನನ್ಯ ಸಹೋದರ-ಸಹೋದರಿ ಇದ್ದಾರೆ, ಯಾರು ಬಹಳ ಚೆನ್ನಾಗಿ ಸೇವೆ ಮಾಡುತ್ತಾರೆ ಅವರಿಂದಲೂ ಕಲಿಯುತ್ತಾ ಸಾಗಿರಿ. ಆಂತರ್ಯದಲ್ಲಿ ಈ ನಿಶ್ಚಯ ಮಾಡಿಕೊಳ್ಳಿ - ನಾವು ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಶರೀರ ನಿರ್ವಹಣೆಯನ್ನೂ ಮಾಡಬೇಕು, ನಮ್ಮ ರಚನೆಯನ್ನೂ ನೋಡಿಕೊಳ್ಳಬೇಕು, ಅದರಲ್ಲಿ ಕೇವಲ ಮಮತ್ವವನ್ನಿಡಬಾರದು. ಮಮತ್ವವಿಡುವುದರಿಂದ ಹಾನಿಯಾಗುವುದು. ಒಬ್ಬ ತಂದೆಯಲ್ಲಿ ಮಾತ್ರವೇ ಮಮತ್ವವನ್ನಿಡಿ. ಇಲ್ಲಿ ನೀವು ತಂದೆಯ ಸನ್ಮುಖದಲ್ಲಿ ಇದ್ದೀರಿ. ಆತ್ಮರು ಮತ್ತು ಪರಮಾತ್ಮ ಸನ್ಮುಖದಲ್ಲಿದ್ದಾರೆ ಏಕೆಂದರೆ ಇಲ್ಲಿ ಸ್ವಯಂ ತಂದೆಯೇ ಆತ್ಮರಿಗೆ ವಿದ್ಯಾಭ್ಯಾಸ ಮಾಡಿಸುತ್ತಾರೆ. ಅಲ್ಲಿ ಆತ್ಮರು ಆತ್ಮರಿಗೆ ವಿದ್ಯಾಭ್ಯಾಸ ಮಾಡಿಸುತ್ತಾರೆ. |
ಇವೆಲ್ಲಾ ಮಾತುಗಳ ಬಗ್ಗೆ ನೀವು ಮಕ್ಕಳ ಆಂತರ್ಯದಲ್ಲಿ ಮಥನವಾಗಬೇಕು. ವಿದ್ಯಾರ್ಥಿಯ ಬುದ್ಧಿಯಲ್ಲಿ ಇಡೀದಿನ ವಿದ್ಯಾಭ್ಯಾಸವೇ ಇರುತ್ತದೆಯಲ್ಲವೆ. ನಿಮ್ಮ ಬುದ್ಧಿಯಲ್ಲಿಯೂ ಸಂಪೂರ್ಣ ಜ್ಞಾನವಿದೆ, ಇದು ಆತ್ಮಿಕ ವಿದ್ಯೆಯಾಗಿದೆ. ಯಾರು ಒಳ್ಳೆಯ ವಿದ್ಯಾರ್ಥಿ ಆಗಿರುತ್ತಾರೆಯೋ ಅವರು ಸದಾ ಏಕಾಂತದಲ್ಲಿ ಹೋಗಿ ಓದಿಕೊಳ್ಳುವರು. ವಿದ್ಯಾರ್ಥಿಯು ಪರಸ್ಪರದಲ್ಲಿ ಹೊಂದಾಣಿಕೆಯಿರುತ್ತದೆ ಎಂದರೆ ವಿದ್ಯಾಭ್ಯಾಸದ ಬಗ್ಗೆಯೇ ವಾರ್ತಾಲಾಪ ಮಾಡುತ್ತಾರೆ. ಈ ಬೇಹದ್ದಿನ ವಿದ್ಯೆಯಲ್ಲಂತು ಇನ್ನೂ ಖುಷಿಯಿಂದ ತೊಡಗಿ ಬಿಡಬೇಕು. |
ನೀವು ಮಕ್ಕಳೀಗ ತಂದೆಯ ಸಹಯೋಗಿ ಆಗುವಿರಿ. ನೆನಪಿನಲ್ಲಿರುವುದೇ ಸಹಯೋಗ ಕೊಡುವುದಾಗಿದೆ ಏಕೆಂದರೆ ನೆನಪಿನ ಯಾತ್ರೆ ಅಂದರೆ ಶಾಂತಿಯ ಯಾತ್ರೆಯಲ್ಲಿರುವುದು. ಆದ್ದರಿಂದ ಹೇಳಲಾಗುತ್ತದೆ - ಪ್ರತಿಯೊಬ್ಬರೂ ತಮ್ಮ ಮನೆಯನ್ನು ಸ್ವರ್ಗವನ್ನಾಗಿ ಮಾಡಿರಿ. ಪ್ರತಿಯೊಬ್ಬರ ಬುದ್ಧಿಯಲ್ಲಿ ತಂದೆ ಮತ್ತು ಆಸ್ತಿ ಇದೆ. ತಂದೆಯನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯವು ಸಿಗುವುದು, ಮತ್ತೇನೂ ಮಾಡಬೇಕಾಗಿಲ್ಲ. ಕೇವಲ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತೀರೆಂದರೆ ರಾಜ್ಯಭಾಗ್ಯ ನಿಮ್ಮದು. ನೀವು ಮಕ್ಕಳು ಎಲ್ಲರಿಗೂ ಇದೇ ಸಂದೇಶವನ್ನು ಕೊಡುತ್ತಿರಿ - ತಂದೆಯನ್ನು ನೆನಪು ಮಾಡುತ್ತೀರೆಂದರೆ ಸ್ವರ್ಗದ ರಾಜ್ಯಭಾಗ್ಯವು ಸಿಗುವುದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ಹೃದಯಪೂರ್ವಕವಾಗಿ ಬಹಳ ಪ್ರೀತಿಯಿಂದ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ತಂದೆಯ ನೆನಪಿನಲ್ಲಿ ತಮ್ಮ ಸಮಯವನ್ನು ಸಫಲಗೊಳಿಸಬೇಕು. ಅಮೂಲ್ಯವಾದ ಈ ಸಮಯವನ್ನು ಎಲ್ಲಿಯೂ ವ್ಯರ್ಥಗೊಳಿಸಬಾರದು. ಪುರುಷಾರ್ಥ ಮಾಡಿ ಅಂತರ್ಮುಖಿ ಅರ್ಥಾತ್ ಆತ್ಮಭಿಮಾನಿ ಆಗಿರಬೇಕು. |
2. ಈಗ ನಾವು ದೇವತೆಗಳಿಗಿಂತಲೂ ಶ್ರೇಷ್ಠವಾದ ಬ್ರಾಹ್ಮಣರಾಗಿದ್ದೇವೆ, ಈಗ ತಂದೆಯ ಮೂಲಕ ಅವಿನಾಶಿ ಜ್ಞಾನ ರತ್ನಗಳ ಲಾಟರಿ ಸಿಕ್ಕಿದೆ, ಜ್ಞಾನ ಪೂರ್ಣರು ಆಗಿದ್ದೀರಿ ಅಂದಮೇಲೆ ಚಹರೆಯು ಸದಾ ಖುಷಿಯಿಂದ ಅರಳಿರಲಿ. ಆಂತರ್ಯದಲ್ಲಿ ಖುಷಿಯಿಂದ ನರ್ತನ ಮಾಡುತ್ತಿರಿ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ, ಈ ಗೀತೆಯು ನಾವು ರಚಿಸಿರುವಂತಹ ಗೀತೆಯಲ್ಲ. ಹೇಗೆ ಅನ್ಯ ವೇದ ಶಾಸ್ತ್ರಗಳ ಸಾರವನ್ನು ತಿಳಿಸಲಾಗುತ್ತಿದೆಯೋ ಹಾಗೆಯೇ ಮನುಷ್ಯರು ಬರೆದಿರುವ ಈ ಹಾಡುಗಳ ಸಾರವನ್ನೂ ತಿಳಿಸುತ್ತೇವೆ. ಮಕ್ಕಳಿಗೆ ತಿಳಿದಿದೆ - ಅಂಬಿಗ ಅಥವಾ ಹೂದೋಟದ ಮಾಲೀಕ ಹಾಗೂ ಸದ್ಗತಿದಾತ ಒಬ್ಬರೇ ತಂದೆಯಾಗಿದ್ದಾರೆ, ಎಲ್ಲರೂ ಜೀವನ್ಮುಕ್ತಿಗಾಗಿಯೇ ಭಕ್ತಿ ಮಾಡುತ್ತಾರೆ ಆದರೆ ಜೀವನ್ಮುಕ್ತಿ ಅಥವಾ ಸದ್ಗತಿದಾತನು ಒಬ್ಬ ಭಗವಂತನಾಗಿದ್ದಾರೆ. ಅದರ ಅರ್ಥವನ್ನು ಮಕ್ಕಳೇ ತಿಳಿದುಕೊಳ್ಳುತ್ತೀರಿ, ಮನುಷ್ಯರಿಗೆ ಅರ್ಥವಾಗುವುದಿಲ್ಲ. ಸದ್ಗತಿ ಅರ್ಥಾತ್ ದುಃಖದಿಂದ ಬಿಡಿಸಿ ಶಾಂತಿಯ ಪ್ರಾಪ್ತಿ ಮಾಡಿಸುತ್ತಾರೆ. ಭಾರತವಾಸಿ ಮಕ್ಕಳಿಗೆ ತಿಳಿದಿದೆ - ಈ ಲಕ್ಷ್ಮೀ- ನಾರಾಯಣರ ರಾಜ್ಯವಿದ್ದಾಗ ಇಲ್ಲಿ ಸುಖ-ಶಾಂತಿ, ಪವಿತ್ರತೆಯಿತ್ತು, ರಾಧೆ-ಕೃಷ್ಣನ ರಾಜ್ಯವೆಂದು ಹೇಳುವುದಿಲ್ಲ. ವಾಸ್ತವದಲ್ಲಿ ಮಾತೆಯರ ಜೊತೆಗಾತಿ ರಾಧೆಯಾಗಿದ್ದಾಳೆ. ರಾಧೆಯನ್ನು ಹೆಚ್ಚು ಪ್ರೀತಿ ಮಾಡಬೇಕು ಆದರೆ ಮಾತೆಯರು ಕೃಷ್ಣನನ್ನೇ ಹೆಚ್ಚು ಪ್ರೀತಿ ಮಾಡುತ್ತಾರೆ, ಉಯ್ಯಾಲೆಯಲ್ಲಿ ತೂಗುತ್ತಾರೆ. ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ, ರಾಧೆಯ ಜಯಂತಿಯನ್ನು ಆಚರಿಸುವುದಿಲ್ಲ. ವಾಸ್ತವದಲ್ಲಿ ಇಬ್ಬರ ಜಯಂತಿಯನ್ನೂ ಆಚರಿಸಬೇಕು ಆದರೆ ಮನುಷ್ಯರಿಗೆ ತಿಳುವಳಿಕೆಯಿಲ್ಲ, ಅವರ ಜೀವನ ಕಥೆಯನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಬಂದು ತನ್ನ ಮತ್ತು ಎಲ್ಲರ ಜೀವನ ಚರಿತ್ರೆಯನ್ನು ತಿಳಿಸುತ್ತಾರೆ. ಮನುಷ್ಯರು ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಆದರೆ ಅವರ ಜೀವನ ಕಥೆಯನ್ನು ತಿಳಿದುಕೊಂಡಿಲ್ಲ. ಮನುಷ್ಯರ ಜೀವನ ಕಥೆಗೆ ಇತಿಹಾಸ-ಭೂಗೋಳವೆಂದು ಹೇಳಲಾಗುತ್ತದೆ. ಹೇಗೆ ಎಷ್ಟು ಪ್ರಾಂತ್ಯಗಳಲ್ಲಿ ಯಾರ್ಯಾರು ರಾಜ್ಯ ಮಾಡುತ್ತಿದ್ದರು? ಎಷ್ಟು ಭೂಮಿಯ ಮೇಲೆ ರಾಜ್ಯ ಮಾಡುತ್ತಿದ್ದರು ಎಂದು ಪ್ರಪಂಚದ ಇತಿಹಾಸ-ಭೂಗೋಳವನ್ನು ತಿಳಿಸಲಾಗುತ್ತದೆಯಲ್ಲವೆ. ಹೇಗೆ ರಾಜ್ಯ ಮಾಡಿದರು? ಮತ್ತೆ ಅವರು ಎಲ್ಲಿಗೆ ಹೋದರು.... ಈ ಮಾತುಗಳು ಯಾರಿಗೂ ತಿಳಿದಿಲ್ಲ. ನೀವು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ, ರಚಯಿತ ಮತ್ತು ರಚನೆಯ ಜ್ಞಾನವನ್ನು ಮಕ್ಕಳಿಗೆ ತಿಳಿಸುತ್ತೇನೆ. ನೀವು ಮಕ್ಕಳಿಗೆ ಅರ್ಥವಾಗಿದೆ, ಅವಶ್ಯವಾಗಿ ಈಗ ಕಲಿಯುಗದ ಅಂತ್ಯವಾಗಿದೆ ಮತ್ತು ಸತ್ಯಯುಗದ ಆದಿಯಾಗಿದೆ. ಸಂಗಮಯುಗದಲ್ಲಿಯೇ ಪರಮಪಿತ ಪರಮಾತ್ಮನು ಬಂದು ಮನುಷ್ಯರನ್ನು ಪಾವನ ದೇವತೆಗಳನ್ನಾಗಿ ಮಾಡುತ್ತಾರೆ. ಉತ್ತಮ ಪುರುಷರು ಅಥವಾ ಪುರುಷೋತ್ತಮರನ್ನಾಗಿ ಮಾಡುತ್ತಾರೆ ಏಕೆಂದರೆ ಈ ಸಮಯದ ಪುರುಷರು ಉತ್ತಮರಲ್ಲ, ಕನಿಷ್ಠರಾಗಿದ್ದಾರೆ. ಉತ್ತಮ, ಮಧ್ಯಮ, ಕನಿಷ್ಟ, ಸತೋ-ರಜೋ-ತಮೋ ಇರುತ್ತಾರೆ. ಯಾರು ಚೆನ್ನಾಗಿ ಜ್ಞಾನವನ್ನು ಕೇಳುವರೋ ಅವರಿಗೆ ಸತೋಗುಣಿಯೆಂದು ಹೇಳುವರು. ಯಾರು ಸ್ವಲ್ಪ ಕೇಳುವರೋ ಅವರಿಗೆ ರಜೋಗುಣಿಯೆಂತಲೂ, ಯಾರು ಕೇಳುವುದೇ ಇಲ್ಲವೋ ಅವರಿಗೆ ತಮೋಗುಣಿಯೆಂದು ಹೇಳಲಾಗುವುದು. ವಿದ್ಯೆಯಲ್ಲಿಯೂ ಇದೇ ರೀತಿಯಾಗುತ್ತದೆ. ನೀವು ಮಕ್ಕಳಿಗೆ ಸತೋಪ್ರಧಾನ ವಿದ್ಯೆಯು ಬೇಕಾಗಿದೆ, ಆದ್ದರಿಂದ ನಿಮಗೆ ಸತೋಪ್ರಧಾನ ಲಕ್ಷ್ಮೀ-ನಾರಾಯಣರಾಗುವ ಜ್ಞಾನವನ್ನು ಕೊಡಲಾಗುತ್ತದೆ. ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗಬೇಕಾಗಿದೆ. ಭಗವದ್ಗೀತೆಯನ್ನೂ ಇದು ಸತ್ಯವಾದ ಗೀತೆಯೆಂದು ನೀವು ಹೇಳುತ್ತೀರಿ. ನೀವು ಇದನ್ನೂ ಬರೆಯಬಹುದು - ಇದು ಸತ್ಯ ಗೀತಾ ಪಾಠಶಾಲೆಯಾಗಿದೆ ಅರ್ಥಾತ್ ಸತ್ಯ ನಾರಾಯಣನಾಗುವ ಕಥೆ ಅಥವಾ ಸತ್ಯ ಅಮರ ಕಥೆ, ಸತ್ಯ ಮೂರನೇ ನೇತ್ರದ ಕಥೆಯಾಗಿದೆ. ಚಿತ್ರಗಳೆಲ್ಲವೂ ನಿಮ್ಮ ಬಳಿಯಿದೆ, ಇದರಲ್ಲಿ ಸಂಪೂರ್ಣ ಜ್ಞಾನವಿದೆ, ನೀವು ಮಕ್ಕಳು ಪ್ರತಿಜ್ಞೆ ಮಾಡುತ್ತೀರಿ - ನಾವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರು ಭಾರತವನ್ನು ಸತೋಪ್ರಧಾನ ಸ್ವರ್ಗವನ್ನಾಗಿ ಮಾಡಿಯೇ ತೀರುತ್ತೇವೆ. ನೀವು ಇದನ್ನು ಪ್ರತಿಜ್ಞೆ ಮಾಡಬೇಕಾಗಿದೆ. ಗಾಂಧೀಜಿಯೂ ಸಹ ಪಾವನ ರಾಜ್ಯವನ್ನು ಬಯಸುತ್ತಿದ್ದರು ಅಂದಮೇಲೆ ಅವಶ್ಯವಾಗಿ ಈಗ ಪತಿತ ರಾಜ್ಯವಾಗಿದೆ ಆದರೆ ನಾವು ಪತಿತರಾಗಿದ್ದೇವೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಪಂಚ ವಿಕಾರಗಳೇ ರಾವಣನಾಗಿದೆ, ರಾಮ ರಾಜ್ಯ ಬೇಕೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಆಸುರೀ ಸಂಪ್ರದಾಯದವರಾದರಲ್ಲವೆ ಆದರೆ ಇಲ್ಲಿ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಎಷ್ಟು ದೊಡ್ಡ-ದೊಡ್ಡ ಗುರುಗಳೂ ಸಹ ಇದನ್ನು ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳು ಪ್ರತಿಜ್ಞೆ ಮಾಡುತ್ತೀರಿ, ನಾವು ಶ್ರೀಮತದಂತೆ ಬ್ರಹ್ಮಾರವರ ಮೂಲಕ 5000 ವರ್ಷಗಳ ಹಿಂದಿನ ತರಹ ದೈವೀರಾಜ್ಯವನ್ನು ಸ್ಥಾಪನೆ ಮಾಡುತ್ತೇವೆ. ಇದು ಪುರುಷೋತ್ತಮ ಸಂಗಮಯುಗವಾಗಿದೆ. ಈ ಸಮಯದಲ್ಲಿಯೇ ನೀವು ಕನಿಷ್ಟ ಪುರುಷರಿಂದ ಸತೋಪ್ರಧಾನ ಪುರುಷೋತ್ತಮರಾಗುತ್ತೀರಿ. ಮರ್ಯಾದಾ ಪುರುಷೋತ್ತಮ, ಆದಿ ಸನಾತನ ದೇವಿ-ದೇವತಾ ಧರ್ಮವೇ ಆಗಿದೆ. ಈಗ ಒಂದೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ ಮತ್ತ್ಯಾವುದೂ ಆಗುವುದಿಲ್ಲ. ನೀವು ಮಕ್ಕಳು ಸಿದ್ಧ ಮಾಡಿ ತಿಳಿಸುತ್ತೀರಿ - ಸತ್ಯಯುಗದಲ್ಲಿ ಒಂದು ಧರ್ಮ, ಒಂದು ರಾಜ್ಯವಿತ್ತು. ಭಲೆ ತ್ರೇತಾದಲ್ಲಿ ಸೂರ್ಯವಂಶಿಯರಿಂದ ಬದಲಾಗಿ ಚಂದ್ರವಂಶಿಯರಾಗುತ್ತಾರೆ ಆದರೆ ಭಾಷೆಯು ಮಾತ್ರ ಒಂದೇ ಇರುತ್ತದೆ. ಈಗಂತೂ ಭಾರತದಲ್ಲಿ ಅನೇಕ ಭಾಷೆಗಳಿವೆ. ಮಕ್ಕಳಿಗೆ ತಿಳಿದಿದೆ - ನಮ್ಮ ರಾಜ್ಯದಲ್ಲಿ ಒಂದೇ ಭಾಷೆಯಿತ್ತು, ಈಗಂತೂ ಬಹಳಷ್ಟು ನೋಡುತ್ತಾ ಇರುತ್ತೀರಿ. ಹೇಗೆ ತೀರ್ಥ ಯಾತ್ರೆಯಿಂದ ಮರಳಿ ಬರುವಾಗ ತನ್ನ ದೇಶವು ಸಮೀಪಿಸುತ್ತಿದ್ದಂತೆ ನೋಡಿ ಈಗ ನಮ್ಮ ಮನೆ ಬಂದು ಬಿಟ್ಟಿತು, ಹೋಗಿ ಮಿಲನ ಮಾಡುತ್ತೇವೆಂದು ಖುಷಿಯಾಗುತ್ತದೆ. ನಿಮಗೂ ಸಹ ನಿಮ್ಮ ರಾಜಧಾನಿಯ ಸಾಕ್ಷಾತ್ಕಾರವಾಗುತ್ತಾ ಇರುವುದು. ತಮ್ಮ ಪುರುಷಾರ್ಥದ ಸಾಕ್ಷಾತ್ಕಾರವೂ ಆಗುವುದು. ನೋಡುತ್ತೀರಿ, ತಂದೆಯು ನಮಗೆ ಪುರುಷಾರ್ಥ ಮಾಡಿ ಎಂದು ಎಷ್ಟೊಂದು ಹೇಳುತ್ತಾರೆ, ಇಲ್ಲದಿದ್ದರೆ ಹಾಯ್ ಹಾಯ್ ಎನ್ನಬೇಕಾಗುವುದು ಮತ್ತು ಪದವಿಯೂ ಕಡಿಮೆಯಾಗುವುದು. ಯೋಗದ ಯಾತ್ರೆಯನ್ನು ಎಲ್ಲರಿಗೂ ತಿಳಿಸುತ್ತಾ ಇರಿ. ತಿಳಿಸುವುದು ಬಹಳ ಸಹಜವಾಗಿದೆ, ಏಣಿಯ ಜ್ಞಾನವು ಎಷ್ಟು ಸಹಜವಾಗಿದೆ! ಯಾರು ತಡವಾಗಿ ಬರುವರೋ ಅವರಿಗೆ ದಿನ-ಪ್ರತಿದಿನ ಇನ್ನೂ ಸಹಜ ಜ್ಞಾನವು ಸಿಗುತ್ತದೆ. ಒಂದು ವಾರದಲ್ಲಿಯೇ ಸಹಜವಾಗಿ ತಿಳಿದುಕೊಳ್ಳುತ್ತಾರೆ. ಆ ರೀತಿಯಲ್ಲಿ ಚಿತ್ರಗಳು ತಯಾರಾಗಿವೆ ಯಾವುದರಲ್ಲಿ ಬಹಳ ಸ್ಪಷ್ಟ ಜ್ಞಾನವಿದೆ. 84 ಜನ್ಮಗಳ ಚಕ್ರದ ಜ್ಞಾನವು ಸರಿಯಾಗಿದೆ. ಇದು ಭಾರತವಾಸಿಗಳಿಗಾಗಿ ಇದೆ. ನೀವು ಮಕ್ಕಳ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ, ಪತಿತ-ಪಾವನ, ಸದ್ಗತಿದಾತ ಶಿವ ತಂದೆಯ ಮತದಂತೆ ನಾವು ಪುನಃ ಸಹಜ ರಾಜಯೋಗ ಬಲದಿಂದ ನಮ್ಮ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೇವೆ, ಮತ್ತ್ಯಾರದೇ ಧನವನ್ನು ನಾವು ಉಪಯೋಗಿಸುವುದಿಲ್ಲ. ನಮ್ಮದೇ ತನು-ಮನ-ಧನದಿಂದ ನಾವು ಸೇವೆ ಮಾಡುತ್ತೇವೆ. ಯಾರೆಷ್ಟು ಮಾಡುವರೋ ಅವರು ತಮ್ಮ ಭವಿಷ್ಯಕ್ಕಾಗಿ ಮಾಡಿಕೊಳ್ಳುವರು. ನೀವೇ ಮನೆಯ ಮಕ್ಕಳಾಗಿದ್ದೀರಿ. ನಿಮ್ಮಿಂದಲೇ ತಂದೆಯು ಸತ್ಯಯುಗೀ ಸ್ವರಾಜ್ಯವನ್ನು ಸ್ಥಾಪನೆ ಮಾಡಿಸುತ್ತಿದ್ದಾರೆ. ನೀವೇ ಖರ್ಚು ಮಾಡುತ್ತೀರಿ, ನಿಮ್ಮದೇನೂ ಜಾಸ್ತಿ ಖರ್ಚಿಲ್ಲ. ನೀವು ಕೇವಲ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಕನ್ಯೆಯರು ಏನು ಖರ್ಚು ಮಾಡುವರು, ಅವರ ಬಳಿ ಏನಾದರೂ ಇದೆಯೇ? ತಂದೆಯು ಮಕ್ಕಳಿಂದ ಶುಲ್ಕವನ್ನೇನು ತೆಗೆದುಕೊಳ್ಳುವರು! ಏನೂ ಇಲ್ಲ. ಶಾಲೆಗಳಲ್ಲಿ ಮೊದಲು ಶುಲ್ಕದ ಮಾತನ್ನಾಡುತ್ತಾರೆ. ಅಲ್ಲಿ ವಿದ್ಯಾಭ್ಯಾಸ ಮಾಡಲು ಎಷ್ಟೊಂದು ಖರ್ಚಾಗುತ್ತದೆ, ಇಲ್ಲಂತೂ ಶಿವ ತಂದೆಯು ಮಕ್ಕಳಿಂದ ಹಣವನ್ನು ಹೇಗೆ ತೆಗೆದುಕೊಳ್ಳುವರು! ಶಿವ ತಂದೆಯು ಹಣ ತೆಗೆದುಕೊಳ್ಳಲು ತನಗಾಗಿ ಮನೆ ಕಟ್ಟಿಸಬೇಕಾಗಿದೆಯೇ? ನೀವು ಮಕ್ಕಳು ಭವಿಷ್ಯ ಸ್ವರ್ಗದಲ್ಲಿ ಹೋಗಿ ವಜ್ರ-ವೈಡೂರ್ಯಗಳ ಮಹಲುಗಳನ್ನು ಕಟ್ಟಿಸಬೇಕಾಗಿದೆ ಆದ್ದರಿಂದ ನೀವಿಲ್ಲಿ ಏನೆಲ್ಲವನ್ನೂ ಮಾಡುತ್ತೀರೋ ಅದಕ್ಕೆ ಮರುಪಾವತಿಯಾಗಿ ಭವಿಷ್ಯದಲ್ಲಿ ನಿಮಗೆ ಮಹಲು ಸಿಕ್ಕಿ ಬಿಡುತ್ತದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಯಾರೆಷ್ಟು ತನ್ನ ತನು-ಮನ-ಧನದಿಂದ ಸೇವೆ ಮಾಡುವರೋ ಅಷ್ಟೇ ಅವರು ಅಲ್ಲಿ ಪಡೆಯುತ್ತಾರೆ. ಕಾಲೇಜು ಅಥವಾ ಆಸ್ಪತ್ರೆಗಳನ್ನು ಕಟ್ಟಿಸುತ್ತಾರೆ, ಅದರಲ್ಲಿ 10-20 ಲಕ್ಷ ರೂ.ಗಳನ್ನು ತೊಡಗಿಸಬೇಕಾಗುತ್ತದೆ, ಇಲ್ಲಂತೂ ಅಷ್ಟೊಂದು ಖರ್ಚಿಲ್ಲ. ಚಿಕ್ಕ ಮನೆಯಲ್ಲಿಯೇ ಆತ್ಮಿಕ ಆಸ್ಪತ್ರೆ ಕಮ್ ಯುನಿವರ್ಸಿಟಿಯನ್ನು ತೆರೆಯುತ್ತೀರಿ. ಪಾಂಡವರ ಪತಿಯು ಯಾರಾಗಿದ್ದಾರೆ? ಅದರಲ್ಲಿ ಕೃಷ್ಣನ ಹೆಸರನ್ನು ಬರೆದು ಬಿಟ್ಟಿದ್ದಾರೆ, ವಾಸ್ತವದಲ್ಲಿ ನಿರಾಕಾರ ಭಗವಂತನಾಗಿದ್ದಾರೆ. ನಿಮಗೆ ಶ್ರೀಮತವನ್ನು ಕೊಡುವವರು ಭಗವಂತನಾಗಿದ್ದಾರೆ, ಉಳಿದೆಲ್ಲರೂ ರಾವಣ ರಾಜ್ಯದಲ್ಲಿ ರಾವಣನ ಮತದ ಮೇಲಿದ್ದಾರೆ. ರಾವಣನ ಮತದಂತೆ ಎಷ್ಟೊಂದು ಪತಿತರಾಗಿ ಬಿಟ್ಟಿದ್ದಾರೆ. ಈಗ ಇದೇ ಹಳೆಯ ಸೃಷ್ಟಿಯು ಹೊಸದಾಗುತ್ತದೆ. ಸೃಷ್ಟಿಯಲ್ಲಿ ಭಾರತವಿತ್ತು, ನವಭಾರತ-ಹಳೆಯ ಭಾರತವೆಂದು ಹೇಳುತ್ತಾರೆ. ನವಭಾರತವಂತೂ ಸ್ವರ್ಗವಾಗಿತ್ತು, ಈಗ ಭಾರತವು ಹಳೆಯದಾಗಿದೆ ಆದ್ದರಿಂದ ನರಕವಾಗಿದೆ, ಇದಕ್ಕೆ ರೌರವ ನರಕವೆಂದು ಹೇಳಲಾಗುತ್ತದೆ, ಮನುಷ್ಯರದೇ ಮಾತಾಗಿದೆ. ಇಲ್ಲಿ ಸುಖದ ಹೆಸರು, ಗುರುತೂ ಇಲ್ಲ. ಇಲ್ಲಿರುವ ಸುಖವು ಸುಖವಲ್ಲ. ಈ ಸಮಯದ ಸುಖವು ಕಾಗವಿಷ್ಟ ಸಮಾನವೆಂದು ಸನ್ಯಾಸಿಗಳು ಹೇಳುತ್ತಾರೆ ಆದ್ದರಿಂದ ಅವರು ಗೃಹಸ್ಥ ವ್ಯವಹಾರವನ್ನು ಬಿಟ್ಟು ಬಿಡುತ್ತಾರೆ. ಆದರೆ ಅವರು ಸ್ವರ್ಗ ಅಥವಾ ಸತ್ಯಯುಗದ ಸ್ಥಾಪನೆ ಮಾಡಲು ಸಾಧ್ಯವಿಲ್ಲ, ಪರಮಾತ್ಮನೇ ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುತ್ತಾರೆ. ಶ್ರೀಕೃಷ್ಣನ ಆತ್ಮ ಮತ್ತು ಶರೀರ ಎರಡೂ ಸತೋಪ್ರಧಾನವಾಗಿತ್ತು ಆದ್ದರಿಂದ ಎಲ್ಲರೂ ಬಹಳ ಪ್ರೀತಿ ಮಾಡುತ್ತಾರೆ ಏಕೆಂದರೆ ಪವಿತ್ರನಲ್ಲವೆ. ಚಿಕ್ಕ ಮಕ್ಕಳು ಬ್ರಹ್ಮ ಜ್ಞಾನಿಗಳ ಸಮಾನರೆಂದು ಗಾಯನವಿದೆ, ಚಿಕ್ಕ ಮಕ್ಕಳಿಗೆ ವಿಕಾರದ ಬಗ್ಗೆ ತಿಳಿದಿರುವುದಿಲ್ಲ. ಸನ್ಯಾಸಿಗಳಿಗಾದರೂ ತಿಳಿದಿರುತ್ತದೆ ಮಕ್ಕಳು ಜನ್ಮದಿಂದಲೇ ಮಹಾತ್ಮರಾಗಿರುತ್ತಾರೆ. ಮಕ್ಕಳಿಗೆ ಪವಿತ್ರ ಹೂಗಳೆಂದು ಹೇಳಲಾಗುತ್ತದೆ. ನಂಬರ್ವನ್ ಹೂ ಶ್ರೀಕೃಷ್ಣನಾಗಿದ್ದಾನೆ. ಸ್ವರ್ಗ ಹೊಸ ಪ್ರಪಂಚದ ಮೊದಲ ರಾಜಕುಮಾರನಾಗಿದ್ದಾನೆ. ಜನ್ಮ ಪಡೆದುಕೊಂಡಾಗ ಮೊದಲ ರಾಜಕುಮಾರನೆಂದು ಹೇಳುತ್ತಾರೆ. ಶ್ರೀಕೃಷ್ಣನಂತಹ ಮಗುವಾಗಲಿ ಎಂದು ಕೃಷ್ಣನನ್ನು ಎಲ್ಲರೂ ನೆನಪು ಮಾಡುತ್ತಾರೆ. ಈಗ ತಂದೆಯು ಹೇಳುತ್ತಾರೆ - ನೀವು ಏನು ಪದವಿಯನ್ನು ಪಡೆಯಬೇಕಾದರೂ ಈಗ ಪಡೆಯಿರಿ. ಕೇವಲ ಒಬ್ಬ ಕೃಷ್ಣನೇ ಆಗುವುದಿಲ್ಲ. ಎಷ್ಟೊಂದು ಮಂದಿ ರಾಜಕುಮಾರರಾಗುತ್ತಾರೆ! ಪ್ರಥಮ, ದ್ವಿತೀಯ, ತೃತಿಯ ಹೀಗೆ ಇರುತ್ತಾರಲ್ಲವೆ ಅಂದಾಗ ಇಲ್ಲಿಯೂ ರಾಜಧಾನಿಯಿದೆ. ತಂದೆಯ ಹಿಂದೆ ಮತ್ತೆ ಅನ್ಯರು ಸಿಂಹಾಸನವನ್ನೇರುತ್ತಾರೆ. ಹೇಗೆ ಮನೆತನವಿರುತ್ತದೆಯಲ್ಲವೆ ಹಾಗೆಯೇ ಇದೂ ಸಹ ಮನೆತನವಾಗಿದೆ. ನಿಮ್ಮ ಸಂಬಂಧವು ಕ್ರಿಶ್ಚಿಯನ್ನಿರೊಂದಿಗೆ ಇದೆ. ಕೃಷ್ಣ ಮತ್ತು ಕ್ರಿಶ್ಚಿಯನ್ ಇಬ್ಬರದೂ ಒಂದೇ ರಾಶಿಯಾಗಿದೆ. ಲೇವಾದೇವಿಯೂ ಸಹ ಪರಸ್ಪರ ಬಹಳ ನಡೆಯುತ್ತಿದೆ. ಭಾರತದಿಂದ ಅವರು ಎಷ್ಟೊಂದು ಹಣವನ್ನು ತೆಗೆದುಕೊಂಡು ಹೋಗಿದ್ದಾರೆ, ಈಗ ಮತ್ತೆ ಕೊಡುತ್ತಿದ್ದಾರೆ. ರಿಟರ್ನ್ ಸೇವೆ ಮಾಡುತ್ತಿದ್ದಾರೆ. ಈ ಯುರೋಪಿಯನ್ನರು ಪರಸ್ಪರ ಹೊಡೆದಾಡಿ ಸಮಾಪ್ತಿಯಾಗಿ ಬಿಡುತ್ತಾರೆ. ಇದರ ಮೇಲೆ ಕಥೆಯೂ ಇದೆ - ಎರಡು ಬೆಕ್ಕುಗಳು ಕಾದಾಡಿದವು, ಮಧ್ಯದಲ್ಲಿ ಬೆಣ್ಣೆಯನ್ನು ಕೋತಿಯು ತಿಂದು ಹೋಯಿತು..... ಈ ಮಾತು ಈಗಿನದಾಗಿದೆ. ಅವರು ಪರಸ್ಪರ ಹೊಡೆದಾಡುತ್ತಾರೆ ಮತ್ತು ರಾಜ್ಯಭಾಗ್ಯವು ನಿಮಗೆ ಸಿಗುತ್ತದೆ. ಈಗ ನೀವು ಮಕ್ಕಳಿಗೆ ಅಪಾರ ಜ್ಞಾನವಿದೆ, ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವೆಲ್ಲರೂ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ನಾವು ಗುಜರಾತಿನವರಾಗಿದ್ದೇವೆ, ಬಂಗಾಳದವರಾಗಿದ್ದೇವೆ ಎಂಬುದೇನೂ ಇಲ್ಲ. ಈ ಮತ ಭೇದವೂ ಹೊರಟು ಹೋಗಬೇಕು. ನಾವು ಒಬ್ಬ ತಂದೆಯ ಸಂತಾನರಾಗಿದ್ದೇವೆ, ಬ್ರಹ್ಮಾರವರ ಮೂಲಕ ಶಿವ ತಂದೆಯ ಶ್ರೀಮತದಂತೆ ಪುನಃ ನಾವು ನಮ್ಮ ಸ್ವರಾಜ್ಯವನ್ನು ಜ್ಞಾನ ಮತ್ತು ಯೋಗಬಲದಿಂದ ಸ್ಥಾಪನೆ ಮಾಡುತ್ತಿದ್ದೇವೆ. ಯೋಗಬಲದಿಂದಲೇ ನಾವು ಪಾವನರಾಗುತ್ತೇವೆ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರಿಂದ ಬಲ ಸಿಗುತ್ತದೆ. ನೀವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ, ಇದರಲ್ಲಿ ಯುದ್ಧ ಇತ್ಯಾದಿಗಳ ಮಾತಿಲ್ಲ, ಎಲ್ಲವೂ ಪವಿತ್ರತೆಯ ಮೇಲೆ ಆಧಾರಿತವಾಗಿದೆ. ಬಂದು ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ಹೇಳುತ್ತಾರೆ ಅಂದಮೇಲೆ ಇದು ನೆನಪಿನದೇ ಬಲವಾಗಿದೆ. ಇಲ್ಲಿಂದ ಹೋದ ನಂತರ ಕಾರ್ಯ ವ್ಯವಹಾರಗಳಲ್ಲಿ ಎಲ್ಲವನ್ನೂ ಮರೆತು ಬಿಡುವುದಲ್ಲ, ಇಲ್ಲಿ ಸನ್ಮುಖದಲ್ಲಂತೂ ಜ್ಞಾನ ಸಾಗರನ ಅಲೆಗಳನ್ನು ನೋಡುತ್ತಾ ಇರುತ್ತೀರಿ. ನದಿಗಳಲ್ಲಿ ಈ ಅಲೆಗಳು ಇರುವುದಿಲ್ಲ, ಸಾಗರದ ಒಂದು ಅಲೆಯು ಎಷ್ಟೊಂದು ನಷ್ಟವನ್ನುಂಟು ಮಾಡಿ ಬಿಡುತ್ತದೆ. ಯಾವಾಗ ಭೂಕಂಪವಾಗುವುದೋ ಆಗ ಸಾಗರವು ಉಕ್ಕುತ್ತದೆ. ಸಾಗರವನ್ನು ಒಣಗಿಸಿ ಜಮೀನನ್ನು ಮಾಡಿಕೊಂಡಿದ್ದಾರೆ, ಆ ಜಮೀನನ್ನು ಎಷ್ಟೊಂದು ಬೆಲೆಗೆ ಮಾರುತ್ತಾರೆ. ನಿಮಗೆ ತಿಳಿದಿದೆ - ಮೊದಲು ಈ ಬಾಂಬೆ ಇರಲಿಲ್ಲ. ಇದು ಬಹಳ ಚಿಕ್ಕ ಹಳ್ಳಿಯಾಗಿತ್ತು, ಮಾತೆಯರಂತೂ ಬಹಳ ಮುಗ್ಧರಾಗಿದ್ದಾರೆ. ಇವರು ಎಷ್ಟೊಂದು ವಿದ್ಯಾವಂತರಲ್ಲ, ಇಲ್ಲಂತೂ ಓದಿರುವುದೆಲ್ಲವನ್ನೂ ಮರೆಯಬೇಕಾಗಿದೆ. ನೀವು ಏನನ್ನೂ ಓದಿಲ್ಲವೆಂದರೆ ಇನ್ನೂ ಒಳ್ಳೆಯದಾಗಿದೆ. ಓದಿರುವ ಮನುಷ್ಯರು ಇದನ್ನು ತಿಳಿದುಕೊಳ್ಳುವ ಸಮಯದಲ್ಲಿ ಎಷ್ಟೊಂದು ಪ್ರಶ್ನೆಗಳನ್ನು ಮಾಡುತ್ತಾರೆ, ಇಲ್ಲಂತೂ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿ ಮನುಷ್ಯರನ್ನು ನೆನಪು ಮಾಡುವ ಅವಶ್ಯಕತೆಯಿಲ್ಲ. ಮಹಿಮೆಯು ಒಬ್ಬ ಬೇಹದ್ದಿನ ತಂದೆಯದಾಗಿದೆ. ನಿಮಗೆ ತಿಳಿದಿದೆ - ಒಬ್ಬ ಭಗವಂತನೇ ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ, ಅವರ ನಂತರ ಬ್ರಹ್ಮಾ, ಇವರಿಗಿಂತಲೂ ಶ್ರೇಷ್ಠರು ಮತ್ತ್ಯಾರೂ ಇಲ್ಲ, ಇವರಿಗಿಂತ ದೊಡ್ಡ ವ್ಯಕ್ತಿಗಳೂ ಯಾರೂ ಇಲ್ಲ ಆದರೆ ಇವರು ಎಷ್ಟು ಸಾಧಾರಣವಾಗಿ ನಡೆಯುತ್ತಾರೆ, ನೋಡಿರಿ. ಮಕ್ಕಳೊಂದಿಗೆ ಎಷ್ಟು ಸಾಧಾರಣ ರೀತಿಯಿಂದ ಕುಳಿತುಕೊಳ್ಳುತ್ತಾರೆ, ರೈಲಿನಲ್ಲಿ ಹೋಗುತ್ತಾರೆ. ಇವರು ಯಾರು ಎಂಬುದು ಯಾರಿಗೇನು ತಿಳಿದಿದೆ! ಭಗವಂತನು ಬಂದು ಜ್ಞಾನವನ್ನು ಕೊಡುತ್ತಾರೆ ಅಂದಮೇಲೆ ಅವಶ್ಯವಾಗಿ ಪ್ರವೇಶ ಮಾಡಿ ಜ್ಞಾನ ಕೊಡುವರಲ್ಲವೆ. ಒಂದುವೇಳೆ ಕೃಷ್ಣನಿದ್ದಿದ್ದರೆ ಇಲ್ಲಿ ಬಹಳ ಜನಸಂದಣಿಯಾಗಿ ಬಿಡುತ್ತಿತ್ತು, ಮತ್ತೆ ಓದಿಸಲೂ ಸಾಧ್ಯವಾಗುತ್ತಿರಲಿಲ್ಲ, ಕೇವಲ ದರ್ಶನ ಮಾಡುತ್ತಾ ಇರುತ್ತಿದ್ದರು. ಇಲ್ಲಂತೂ ತಂದೆಯು ಗುಪ್ತ, ಸಾಧಾರಣ ವೇಷದಲ್ಲಿ ಕುಳಿತು ಓದಿಸುತ್ತಾರೆ. |
ನೀವು ಗುಪ್ತ ಸೈನಿಕರಾಗಿದ್ದೀರಿ. ನಿಮಗೆ ತಿಳಿದಿದೆ, ನಾವಾತ್ಮರು ಯೋಗಬಲದಿಂದ ಪುನಃ ನಮ್ಮ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈ ಹಳೆಯ ಶರೀರವನ್ನು ಬಿಟ್ಟು ಹೋಗಿ ಹೊಸ ಸುಂದರ ಶರೀರವನ್ನು ಧಾರಣೆ ಮಾಡಿಕೊಳ್ಳುತ್ತೇವೆ. ಈಗ ಆಸುರೀ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ ಸಂಪ್ರದಾಯದವರಾಗುತ್ತೇವೆ. ನಾನು ಹೊಸ ಪ್ರಪಂಚದಲ್ಲಿ ದೈವೀ ಶರೀರವನ್ನು ಧಾರಣೆ ಮಾಡಿ ರಾಜ್ಯಭಾರ ಮಾಡುತ್ತೇವೆಂದು ಆತ್ಮವು ಹೇಳುತ್ತದೆ. ಆತ್ಮವು ಪುರುಷನಾಗಿದೆ, ಶರೀರವು ಪ್ರಕೃತಿಯಾಗಿದೆ. ಆತ್ಮವು ಸದಾ ಪುರುಷನಾಗಿರುತ್ತದೆ, ಬಾಕಿ ಲೆಕ್ಕಾಚಾರದಿಂದ ಆತ್ಮಕ್ಕೆ ಸ್ತ್ರೀ-ಪುರುಷರ ಶರೀರ ಸಿಗುತ್ತದೆ ಆದರೆ ನಾನು ಅವಿನಾಶಿ ಆತ್ಮನಾಗಿದ್ದೇನೆ, ಈ ಚಕ್ರವು ಸುತ್ತುತ್ತಾ ಇರುತ್ತದೆ. ಕಲಿಯುಗದ ವಿನಾಶವೂ ಅವಶ್ಯವಾಗಿ ಆಗುವುದು, ವಿನಾಶದ ಚಿಹ್ನೆಗಳನ್ನೂ ಸನ್ಮುಖದಲ್ಲಿ ನೋಡುತ್ತೀರಿ. ಅದೇ ಮಹಾಭಾರತ ಯುದ್ಧವಾಗಿದೆ ಅಂದಮೇಲೆ ಅವಶ್ಯವಾಗಿ ಭಗವಂತನೂ ಇರುವರು. ಯಾವ ರೂಪದಲ್ಲಿ, ಯಾವ ತನುವಿನಲ್ಲಿದ್ದಾರೆ ಎಂಬುದು ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ. ನಾನು ಸಂಪೂರ್ಣ ಸಾಧಾರಣ ತನುವಿನಲ್ಲಿ ಬರುತ್ತೇನೆ, ನಾನು ಕೃಷ್ಣನ ತನುವಿನಲ್ಲಿ ಬರುವುದಿಲ್ಲವೆಂದು ತಂದೆಯು ಹೇಳುತ್ತಾರೆ. ಈ ಕೃಷ್ಣನ ಆತ್ಮವೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ. 84 ಜನ್ಮಗಳನ್ನು ಸೂರ್ಯವಂಶಿ ಮನೆತನದವರೇ ತೆಗೆದುಕೊಳ್ಳುತ್ತಾರೆ. ಅವರೇ ಮೊದಲ ನಂಬರಿನಲ್ಲಿ ಬರುತ್ತಾರೆ. ನಿಮಗೆ ಸಾಕಾರಿ ವೃಕ್ಷ ಮತ್ತು ನಿರಾಕಾರಿ ವೃಕ್ಷ ಎರಡರ ಸಂಪೂರ್ಣ ಜ್ಞಾನವಿದೆ. ಮೂಲವತನದಿಂದ ಆತ್ಮರು ನಂಬರ್ವಾರ್ ಆಗಿ ಬರುತ್ತಾರೆ, ಮೊಟ್ಟ ಮೊದಲು ದೇವಿ-ದೇವತಾ ಧರ್ಮದ ಆತ್ಮರು ಬರುತ್ತಾರೆ ನಂತರ ನಂಬರ್ವಾರ್ ಅನ್ಯ ಧರ್ಮದವರು ಬರುತ್ತಾರೆ. ಚಿತ್ರಗಳಲ್ಲಿ ಬಹಳ ಶ್ರೇಷ್ಠ ಜ್ಞಾನವಿದೆ. ಮಕ್ಕಳು ಇದನ್ನು ತಿಳಿಸಬೇಕಾಗಿದೆ. ಇದರಲ್ಲಿ ಕುಮಾರಿಯರು ಎದ್ದು ನಿಲ್ಲಬೇಕು. ಯಾರಾದರೂ ಕನ್ಯೆಯರು ಇಂತಿಂತಹ ಮಾತುಗಳನ್ನು ತಿಳಿಸಿದರೆ ಚಮತ್ಕಾರವಾಗುವುದಲ್ಲವೆ. ಹೆಸರು ಪ್ರಸಿದ್ಧವಾಗುವುದು. ಲೌಕಿಕ, ಅಲೌಕಿಕ ಹೆಸರನ್ನು ಪ್ರಸಿದ್ಧಗೊಳಿಸುವಿರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸಂಗಮಯುಗದಲ್ಲಿ ಶ್ರೇಷ್ಠ ಕರ್ಮ ಮಾಡಿ ಪುರುಷೋತ್ತಮರಾಗಬೇಕಾಗಿದೆ. ಕನಿಷ್ಟರಾಗುವಂತಹ ಯಾವುದೇ ಕರ್ಮ ಮಾಡಬಾರದು. |
2. ಗುಪ್ತ ರೂಪದಲ್ಲಿ ತಂದೆಯ ಸಹಯೋಗಿಗಳಾಗಿ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ತಮ್ಮದೇ ತನು-ಮನ-ಧನದಿಂದ ಭಾರತವನ್ನು ಸ್ವರ್ಗವನ್ನಾಗಿ ಮಾಡಬೇಕಾಗಿದೆ. ನೆನಪು ಮತ್ತು ಪವಿತ್ರತೆಯ ಬಲವನ್ನು ಜಮಾ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಇದರ ಅರ್ಥವನ್ನು ಹೃದಯದಲ್ಲಿ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ ಮತ್ತು ಖುಷಿಯಲ್ಲಿ ಬರಬೇಕಾಗಿದೆ ಏಕೆಂದರೆ ಇವು ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿವೆ. ಈ ಹೊಸ ಮಾತುಗಳನ್ನು ಈಗ ಕೇಳಬೇಕಾಗಿದೆ. ಮಕ್ಕಳು ಈಗ ತಿಳಿದುಕೊಂಡಿದ್ದೀರಿ, ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುವವರು ಯಾವುದೇ ಮನುಷ್ಯರಾಗಿರಲು ಸಾಧ್ಯವಿಲ್ಲ, ನೀವು ಈ ಮಾತುಗಳನ್ನು ಕೇಳಿದಾಗ ತಿಳಿದುಕೊಳ್ಳುತ್ತೀರಿ, ಇವು 5000 ವರ್ಷಗಳ ಹಿಂದಿನ ಹಳೆಯ ಮಾತುಗಳಾಗಿವೆ, ಅವನ್ನು ಪುನಃ ಹೊಸದಾಗಿ ತಿಳಿಸಲಾಗುತ್ತದೆ ಅಂದಾಗ ಹಳೆಯದರಿಂದ ಹೊಸದು, ಹೊಸದರಿಂದ ಹಳೆಯದಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, 5000 ವರ್ಷಗಳ ಹಿಂದಿನ ಅದೇ ಮಾತುಗಳನ್ನು ತಂದೆಯು ಹೊಸದಾಗಿ ತಿಳಿಸುತ್ತಾರೆ. ಅವೇ ಮಾತುಗಳಾಗಿವೆ, ಏತಕ್ಕಾಗಿ ತಿಳಿಸುತ್ತಾರೆ? ಹೊಸ ಪ್ರಪಂಚದ ಆಸ್ತಿಯನ್ನು ಪಡೆಯಲು. ಇದರಲ್ಲಿ ಜ್ಞಾನ ನೃತ್ಯವನ್ನು ಮಾಡಲಾಗುತ್ತದೆ. ಭಟ್ಟಿಯಲ್ಲಿಯೂ ಬಹಳ ನೃತ್ಯ ಮಾಡುತ್ತಾರೆ. ನಾಲ್ಕೂ ಕಡೆ ಸುತ್ತುತ್ತಾ ನರ್ತನ ಮಾಡುತ್ತಾರೆ. ಜ್ಞಾನದ ನರ್ತನವಂತೂ ಬಹಳ ಸಹಜವಾಗಿದೆ. ಆ ನರ್ತನದಲ್ಲಿ ಕರ್ಮೇಂದ್ರಿಯಗಳಿಂದ ಮಾಡಲಾಗುತ್ತದೆ, ಪರಿಶ್ರಮ ಪಡಬೇಕಾಗುತ್ತದೆ. ಇದಂತೂ ಕೇವಲ ಒಳಗೆ ಜ್ಞಾನ ನರ್ತನವು ನಡೆಯುತ್ತದೆ. ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ಜ್ಞಾನವಿದೆ, ಇದರಲ್ಲಿ ಏನೂ ಕಷ್ಟವಿಲ್ಲ. ಹಾ! ನೆನಪಿನಲ್ಲಿ ಪರಿಶ್ರಮವಾಗುತ್ತದೆ, ಕೆಲವು ಮಕ್ಕಳು ಅನುತ್ತೀರ್ಣರಾಗಿ ಬಿಡುತ್ತಾರೆ. ಒಂದಲ್ಲ ಒಂದು ಕಡೆ ಕೆಳಗೆ ಬೀಳುತ್ತಾರೆ. ಎಲ್ಲದಕ್ಕಿಂದ ಮುಖ್ಯ ಮಾತೇನೆಂದರೆ ನಾಮ-ರೂಪದಲ್ಲಿ ಸಿಲುಕಬಾರದು. ಸ್ತ್ರೀ-ಪುರುಷರ ಕಾಮಕ್ಕೆ ವಶರಾಗಿ ನಾಮ-ರೂಪದಲ್ಲಿ ಸಿಲುಕುತ್ತಾರಲ್ಲವೆ. ಕ್ರೋಧವು ನಾಮ-ರೂಪದಲ್ಲಿ ಸಿಲುಕಿಸುವುದಿಲ್ಲ, ಮೊಟ್ಟ ಮೊದಲನೆಯದು ಇದಾಗಿದೆ. ಇದರ ಬಹಳ ಸಂಭಾಲನೆ ಮಾಡಬೇಕಾಗಿದೆ, ಯಾರದೇ ನಾಮ-ರೂಪದಲ್ಲಿ ಸಿಲುಕಬಾರದು, ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ. ನಾವಾತ್ಮರು ಅಶರೀರಿಯಾಗಿ ಬಂದಿದ್ದೆವು ಈಗ ಅಶರೀರಿಯಾಗಿ ಹೋಗಬೇಕಾಗಿದೆ. ಈ ಶರೀರದ ಪರಿವೆಯನ್ನು ಕಳೆಯಬೇಕಾಗಿದೆ. ಈ ನಾಮ-ರೂಪದಲ್ಲಿ ಸಿಲುಕುವುದು ಬಹಳ ಕೆಟ್ಟ ಖಾಯಿಲೆಯಾಗಿದೆ. ತಂದೆಯು ಮಕ್ಕಳಿಗೆ ಸಾವಧಾನ ನೀಡುತ್ತಾರೆ. ಕೆಲಕೆಲವರು ಈ ಮಾತನ್ನು ತಿಳಿದುಕೊಳ್ಳುವುದಿಲ್ಲ, ನಾಮ-ರೂಪದಲ್ಲಿ ಸಿಲುಕಬೇಡಿ ಎಂದು ತಂದೆಯು ಸುಮ್ಮನೆ ಹೇಳುತ್ತಾರೆ ಎಂದು ತಿಳಿದುಕೊಳ್ಳಬೇಡಿ ಆದರೆ ಇದು ಗುಪ್ತ ಖಾಯಿಲೆಯಾಗಿದೆ. ಆದ್ದರಿಂದ ಪ್ರಿಯತಮ-ಪ್ರಿಯತಮೆಯರನ್ನು ಅಥವಾ ತಂದೆಯು ಮಕ್ಕಳನ್ನು ಜಾಗೃತಗೊಳಿಸುತ್ತಾರೆ. ಮಕ್ಕಳೇ, ಜಾಗೃತರಾಗಿರಿ ಈಗ ಪುನಃ ಕಲಿಯುಗದ ನಂತರ ಸತ್ಯಯುಗವು ಬರಲಿದೆ. ತಂದೆಯು ಜ್ಯೋತಿಯನ್ನು ಜಾಗೃತ ಮಾಡಲು ಬರುತ್ತಾರೆ, ಮನುಷ್ಯರು ಸತ್ತಾಗ ಅವರ ಜ್ಯೋತಿಯನ್ನು ಬೆಳಗಿಸುತ್ತಾರೆ. ಆ ದೀಪವು ನಂದಿ ಹೋಗದಿರಲಿ, ಆತ್ಮಕ್ಕೆ ಅಂಧಕಾರವಾಗದಿರಲಿ ಎಂದು ಬಹಳ ಸಂಭಾಲನೆ ಮಾಡುತ್ತಾರೆ. ವಾಸ್ತವದಲ್ಲಿ ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಆತ್ಮವಂತೂ ಸೆಕೆಂಡಿನಲ್ಲಿ ಹೊರಟು ಹೋಗುತ್ತದೆ, ಕೆಲವರು ಜ್ಯೋತಿಯನ್ನೂ ಭಗವಂತನೆಂದು ತಿಳಿದುಕೊಳ್ಳುತ್ತಾರೆ. ಬ್ರಹ್ಮ್ತತ್ವವನ್ನು ದೊಡ್ಡ ಜ್ಯೋತಿಯೆಂದು ತಿಳಿಯುತ್ತಾರೆ. ಬ್ರಹ್ಮ ಸಮಾಜಿಗಳ ಮಂದಿರವಿರುತ್ತದೆ, ಅಲ್ಲಿ ಹಗಲು-ರಾತ್ರಿ ಜ್ಯೋತಿಯು ಬೆಳಗುತ್ತದೆ. ಎಷ್ಟೊಂದು ಖರ್ಚಾಗುತ್ತದೆ! ಎಣ್ಣೆಯು ವ್ಯರ್ಥವಾಗಿ ಹೋಗುತ್ತದೆ. ಇಲ್ಲಿ ಅದೇನೂ ಹಾಕುವಂತಿಲ್ಲ, ನೆನಪಿನ ಎಣ್ಣೆಯು ಕೆಲಸ ಮಾಡುತ್ತದೆ. ನೆನಪು ಎಂಬುದೇ ಎಣ್ಣೆಯಾಗಿದೆ, ಅಂದಾಗ ಮಧುರಾತಿ ಮಧುರ ಮಕ್ಕಳು ಇದನ್ನು ತಿಳಿದುಕೊಳ್ಳುತ್ತೀರಿ. ಹೊಸ ಮಾತಾಗಿರುವ ಕಾರಣ ಜಗಳವಾಗುತ್ತದೆ. ತಂದೆಯು ಹೇಳುತ್ತಾರೆ-ನಾನು ಮಧುರ ಮಕ್ಕಳ ಬಳಿ ಬರುತ್ತೇನೆ. ಭಾರತದಲ್ಲಿಯೇ ಬರುತ್ತೇನೆ. ತನ್ನ ಜನ್ಮದೇಶವು ಎಲ್ಲರಿಗೆ ಪ್ರಿಯವೆನಿಸುತ್ತದೆಯಲ್ಲವೆ. ತಂದೆಗಂತೂ ಎಲ್ಲರೂ ಪ್ರಿಯರೆನಿಸುತ್ತಾರೆ ಆದರೂ ನಾನು ಭಾರತ ದೇಶದಲ್ಲಿಯೇ ಬರುತ್ತೇನೆ. ಗೀತೆಯಲ್ಲಿ ಒಂದುವೇಳೆ ಕೃಷ್ಣನ ಹೆಸರು ಇಲ್ಲದೇ ಹೋಗಿದ್ದರೆ ಎಲ್ಲಾ ಮನುಷ್ಯ ಮಾತ್ರರೂ ಶಿವ ತಂದೆಯನ್ನು ಒಪ್ಪುತ್ತಿದ್ದರು, ಶಿವನ ಮಂದಿರಕ್ಕೆ ಎಷ್ಟೊಂದು ಮಂದಿ ಹೋಗುತ್ತಾರೆ! ಬಹಳ ದೊಡ್ಡ ಮಂದಿರವು ಸೋಮನಾಥ ಮಂದಿರವಾಗಿತ್ತು, ಈಗಂತೂ ಅನೇಕಾನೇಕ ಮಂದಿರಗಳಾಗಿವೆ. ಎಷ್ಟು ಬೇಹದ್ದಿನ ತಂದೆಯನ್ನು ಒಪ್ಪುವರೋ ಅಷ್ಟು ಕೃಷ್ಣನನ್ನು ಒಪ್ಪುವುದಿಲ್ಲ ಅಂದಾಗ ಈ ಸಮಯದಲ್ಲಿ ಇವರಂತಹ ಪ್ರಿಯವಾದ ವಸ್ತು ಮತ್ತ್ಯಾರೂ ಇಲ್ಲ. ಇದರಲ್ಲಿ ಸಾಕಾರದ ಮಹಿಮೆಯು ಏನೂ ಇಲ್ಲ. ಇದು ನಿರಾಕಾರನ ಮಹಿಮೆಯಾಗಿದೆ, ಯಾರು ಅಭೋಕ್ತನಾಗಿದ್ದಾರೆ. ಬೇಹದ್ದಿನ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ ಅಂದಮೇಲೆ ಅವರಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಲ್ಲವೆ. |
ಇಂದು ನಾಳೆ ಎನ್ನುತ್ತಾ-ಎನ್ನುತ್ತಾ ಕಾಲವು ಕಬಳಿಸಿ ಬಿಡುವುದು. ಸಮಯವು ಇನ್ನು ಸ್ವಲ್ಪವೇ ಇದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಅಭಿಪ್ರಾಯವನ್ನು ಬರೆಯುವಾಗ ಇದನ್ನೂ ಸಹ ತಿಳಿಸಬೇಕಾಗಿದೆ - ಯಾವಾಗ ಅವರು ಬೇಹದ್ದಿನ ತಂದೆಯಾಗಿದ್ದಾರೆ ಎಂಬುದನ್ನು ನಿಶ್ಚಯ ಮಾಡುತ್ತೀರಿ ಅಂದಮೇಲೆ ಆ ತಂದೆಯಿಂದ ಆಸ್ತಿಯನ್ನು ಪಡೆಯುವ ಪುರುಷಾರ್ಥ ಮಾಡಿರಿ, ಇಲ್ಲದಿದ್ದರೆ ಹೊರಗೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ತಂದೆಯಂತೂ ಕಲ್ಯಾಣಕಾರಿಯಾಗಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ಈ ಯೋಗದಿಂದಲೇ ನಿಮ್ಮ ಎಲ್ಲಾ ದುಃಖಗಳು 21 ಜನ್ಮಗಳಿಗಾಗಿ ದೂರವಾಗಲಿವೆ, ಕನ್ಯೆಯರು ಮನೆಯಲ್ಲಿಯೂ ಸಹ ತಿಳಿಸುತ್ತಾ ಇರಿ - ಈಗ ಎಲ್ಲಾ ದುಃಖಗಳನ್ನು ದೂರ ಮಾಡುವಂತಹ ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಅವಶ್ಯವಾಗಿ ಪವಿತ್ರರಾಗಿರಬೇಕಾಗಿದೆ. ಮೂಲಮಾತು ಪವಿತ್ರತೆಯದಾಗಿದೆ. ಎಷ್ಟೇಷ್ಟು ನೆನಪಿನಲ್ಲಿರುತ್ತೀರೊ ಅಷ್ಟು ಇಂದ್ರಿಯಗಳು ಶಾಂತವಾಗಿ ಬಿಡುವುದು. ಎಲ್ಲಿಯವರೆಗೂ ಯೋಗದ ಸಿದ್ಧಿಯು ಪೂರ್ಣವಾಗುವುದಿಲ್ಲವೋ ಅಲ್ಲಿಯವರೆಗೆ ಇಂದ್ರಿಯಗಳು ಶಾಂತವಾಗುವುದಿಲ್ಲ, ಪ್ರತಿಯೊಬ್ಬರೂ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ಕಾಮ ವಿಕಾರವು ನನಗೆ ಮೋಸ ಮಾಡುತ್ತಿಲ್ಲವೆ? ಒಂದುವೇಳೆ ನಾನು ಪಕ್ಕಾ ಯೋಗಿಯಾಗಿದ್ದೇನೆ ಎಂಬುದಾದರೆ ಯಾವುದೇ ಚಂಚಲತೆಯಿರಬಾರದು. ಇದು ವಾನಪ್ರಸ್ಥ ಸ್ಥಿತಿಯಾಗಿದೆ. ತಂದೆಯನ್ನೇ ನೆನಪು ಮಾಡುತ್ತಾ ಇರಬೇಕಾಗಿದೆ. ತಂದೆಯು ಎಲ್ಲಾ ಮಕ್ಕಳಿಗೆ ತಿಳಿಸುತ್ತಾರೆ - ಯಾವಾಗ ನೀವು ಒಳ್ಳೆಯ ಯೋಗಿಗಳಾಗುವಿರೋ ಆಗ ಎಲ್ಲಿಯೂ ನಿಮ್ಮ ಕಣ್ಣುಗಳು ಮುಳುಗುವುದಿಲ್ಲ ಮತ್ತು ನಿಮ್ಮ ಇಂದ್ರಿಯಗಳು ಶಾಂತವಾಗುವುವು. ಮುಖ್ಯವಾದವು ಈ ಕಣ್ಣುಗಳಾಗಿವೆ, ಎಲ್ಲರಿಗೆ ಮೋಸ ಮಾಡುತ್ತವೆ. ಯೋಗದಲ್ಲಿ ಬಹಳ ಒಳ್ಳೆಯ ಸ್ಥಿತಿಯು ಆಗುತ್ತದೆಯೆಂದರೆ ಆಗ ನಾವು ಹೇಗೆ ಯವ್ವನದಲ್ಲಿಯೂ ವಾನಪ್ರಸ್ಥ ಸ್ಥಿತಿಗೆ ಬಂದು ಬಿಟ್ಟಿದ್ದೇವೆ ಎಂಬ ಅನುಭವವಾಗುವುದು. ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ ಆದ್ದರಿಂದ ತಮ್ಮ ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ. ಎಷ್ಟು ನೆನಪಿನಲ್ಲಿರುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶಾಂತವಾಗುವುವು ಮತ್ತು ಸ್ವಭಾವವು ಬಹಳ ಮಧುರವಾಗುವುದು ಮತ್ತು ಅನುಭವವಾಗುವುದು, ನಾನು ಮೊದಲು ಎಷ್ಟು ಕಹಿಯಾಗಿದ್ದೆನು? ಈಗ ಎಷ್ಟೊಂದು ಮಧುರವಾಗಿ ಬಿಟ್ಟೆನು! ತಂದೆಯು ಪ್ರೇಮ ಸಾಗರನಾಗಿದ್ದಾರಲ್ಲವೆ ಅಂದಮೇಲೆ ಮಕ್ಕಳೂ ಆಗಬೇಕಾಗಿದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ – ಎಲ್ಲರ ಜೊತೆ ಪ್ರೀತಿಯ ದೃಷ್ಟಿಯಿರಲಿ, ಒಂದುವೇಳೆ ಯಾರಿಗಾದರೂ ದುಃಖ ಕೊಡುತ್ತೀರೆಂದರೆ ದುಃಖಿಯಾಗಿ ಸಾಯುವಿರಿ ಆದ್ದರಿಂದ ಬಹಳ ಮಧುರರಾಗಬೇಕಾಗಿದೆ. |
ತಂದೆಯು ತಿಳಿಸುತ್ತಾರೆ - ನಾನು ರೂಪ ಭಸಂತನಾಗಿದ್ದೇನೆ ಅಲ್ಲವೆ. ತಂದೆಯಿಂದ ಎಷ್ಟು ಅಮೂಲ್ಯ ಜ್ಞಾನ ರತ್ನಗಳು ಸಿಗುತ್ತವೆ, ಇದರಿಂದ ನೀವು ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ. ಅವರು ಶಂಕರನ ಮುಂದೆ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ. ಜೋಳಿಗೆಯನ್ನು ತುಂಬಿಸುವವರು ಶಂಕರನಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಈಗ ನೀವು ತಿಳಿದುಕೊಳ್ಳುತ್ತೀರಿ, ಜ್ಞಾನ ಸಾಗರ ತಂದೆಯು ಜ್ಞಾನ ರತ್ನಗಳಿಂದ ನಾವು ಮಕ್ಕಳ ಜೋಳಿಗೆಯನ್ನು ತುಂಬಿಸುತ್ತಾರೆ. ನೀವೂ ಸಹ ರೂಪ ಭಸಂತರಾಗಿದ್ದೀರಿ, ಪ್ರತಿಯೊಬ್ಬರ ಆತ್ಮವು ರೂಪ ಭಸಂತನಾಗಿದೆ. ತಮ್ಮನ್ನು ನೋಡಿಕೊಳ್ಳುತ್ತಾ ಇರಿ - ನಾವು ಎಷ್ಟು ಜ್ಞಾನ ರತ್ನಗಳನ್ನು ಧಾರಣೆ ಮಾಡಿಕೊಂಡು ಜ್ಞಾನ ನರ್ತನ ಮಾಡುತ್ತೇವೆ ಅಥವಾ ರತ್ನಗಳ ದಾನ ಮಾಡುತ್ತೇವೆ! ಎಲ್ಲದಕ್ಕಿಂತ ಒಳ್ಳೆಯ ರತ್ನವಾಗಿದೆ - ಮನ್ಮನಾಭವ. ತಂದೆಯನ್ನು ನೆನಪು ಮಾಡುವುದರಿಂದ ತಂದೆಯ ಆಸ್ತಿಯನ್ನು ಪಡೆಯುತ್ತೀರಿ. ಹೇಗೆ ತಂದೆಯಲ್ಲಿ ಜ್ಞಾನವು ತುಂಬಲ್ಪಟ್ಟಿದೆಯೋ ಹಾಗೆಯೇ ಮಕ್ಕಳನ್ನೂ ಸಹ ತಂದೆಯು ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಗುರುಗಳೂ ಸಹ ತಮ್ಮ ಸಮಾನರನ್ನಾಗಿ ಮಾಡುತ್ತಾರೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಇವರ ರೂಪವು ಬಿಂದುವಾಗಿದೆ. ನೀವೂ ಸಹ ಬಿಂದುರೂಪರಾಗಿದ್ದೀರಿ, ನಿಮ್ಮನ್ನೇ ತಂದೆಯು ತಮ್ಮಸಮಾನ ಜ್ಞಾನ ಸಾಗರರನ್ನಾಗಿ ಮಾಡುತ್ತಾರೆ. ಎಷ್ಟು ಧಾರಣೆ ಮಾಡುವಿರಿ, ಮಾಡಿಸುವಿರಿ.... ಅವರು ತಿಳಿದುಕೊಳ್ಳಿ, ನಮ್ಮದು ಶ್ರೇಷ್ಠ ಪದವಿಯಾಗಿದೆ ಎಂದು. ಅನೇಕರಿಗೆ ಕಲ್ಯಾಣಕಾರಿಗಳಾಗುತ್ತೀರಲ್ಲವೆ. ಅನೇಕರ ಆಶೀರ್ವಾದವು ಸಿಗುವುದು. ತಂದೆಯು ಪ್ರತಿನಿತ್ಯ ಸೇವೆ ಮಾಡುತ್ತಾರಲ್ಲವೆ. ಹೇಗೆ ಈ ಗುಲ್ಜಾರ್ ಮಗುವು ಎಷ್ಟು ಮಧುರವಾಗಿ ತಿಳಿಸುತ್ತಾರೆ. ಎಲ್ಲರಿಗೆ ಇಷ್ಟವಾಗುತ್ತದೆ. ಇಂತಹ ಬ್ರಾಹ್ಮಣಿ ನಮಗೆ ಸಿಗಲಿ ಎಂದು ಎಲ್ಲರಿಗೂ ಇಷ್ಟವಾಗುತ್ತದೆ. ಈಗ ಒಬ್ಬ ಬ್ರಾಹ್ಮಣಿಯು ಎಲ್ಲಾ ಕಡೆ ಹೋಗಲು ಸಾಧ್ಯವಿಲ್ಲ ಆದರೂ ತಂದೆಯು ತಿಳಿಸುತ್ತಾರೆ - ನಾನು ಚೆನ್ನಾಗಿ ತಿಳಿಸುತ್ತೇನೆಂದು ಯಾರು ತಿಳಿದುಕೊಳ್ಳುವರೋ ಅವರು ಆಲ್ರೌಂಡ್ ಸರ್ವೀಸ್ ಮಾಡಬೇಕು, ತಮಗೇ ಉಮ್ಮಂಗವಿರಬೇಕಾಗಿದೆ. ನಾನು ಸೇವಾಕೇಂದ್ರಗಳನ್ನು ಸುತ್ತಿ ಬರುತ್ತೇನೆ.... ನಾನು ಅನೇಕರ ಕಲ್ಯಾಣ ಮಾಡಬಲ್ಲೆನು, ನನ್ನ ಒಳ್ಳೆಯ ಸುಗಂಧವು ಹರಡುತ್ತದೆಯೆಂದು ಯಾರು-ಯಾರು ತಿಳಿದುಕೊಳ್ಳುವರೋ ಅವರಿಗೆ ಉಮ್ಮಂಗವಿರಬೇಕು- 10-15 ದಿನಗಳ ಕಾಲ ಹೋಗಿ ಸೇವಾಕೇಂದ್ರಗಳನ್ನು ಸುತ್ತಿ ಸರ್ವೀಸ್ ಮಾಡಿ ಬರಬೇಕು. ಒಬ್ಬರನ್ನು ನೋಡಿ ಅನ್ಯರು ಕರೆಯುತ್ತಾರೆ, ಯಾರು ಮಾಡುವರೋ ಅವರು ಪಡೆಯುವರು. ಈ ಸೇವೆಯು ಬಹಳ ಕಲ್ಯಾಣಕಾರಿಯಾಗಿದೆ, ನೀವು ಮನುಷ್ಯರಿಗೆ ಜೀವ ದಾನ ನೀಡುತ್ತೀರಿ, ಇದು ಬಹಳ ಅತ್ಯುತ್ತಮ ಕಾರ್ಯವಾಗಿದೆ. ಉದ್ಯೋಗ -ವ್ಯವಹಾರಗಳಲ್ಲಿರುವವರೂ ಸಹ ಯುಕ್ತಿಯಿಂದ ಸಮಯವನ್ನು ತೆಗೆದು ಸರ್ವೀಸ್ ಮಾಡಬೇಕಾಗಿದೆ. ಸೇವಾಧಾರಿಗಳನ್ನು ತಂದೆಯು ಪ್ರೀತಿಯೂ ಮಾಡುತ್ತಾರೆ, ಪಾಲನೆಯನ್ನೂ ಕೊಡುತ್ತಾರೆ. ಯಾರಿಗೆ ಸರ್ವೀಸಿನ ಉಮ್ಮಂಗವಿರುವುದೋ ಅವರು ಸರ್ವೀಸ್ ಇಲ್ಲದೇ ಇರಲು ಸಾಧ್ಯವಿಲ್ಲ. ತಂದೆಯು ಸಹಯೋಗವನ್ನೂ ಕೊಡುತ್ತಾರಲ್ಲವೆ. ಮಕ್ಕಳು ಬಹಳ ದಯಾಹೃದಯಿಗಳಾಗಬೇಕಾಗಿದೆ. ಪಾಪ! ಮನುಷ್ಯರದು ಬಹಳ ದುಃಖಿ ಜೀವನವಾಗಿದೆ, ನೀವು ಜೀವದಾನ ನೀಡುತ್ತೀರಿ. ಅನ್ಯರಿಗೆ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುವುದು - ಇಂತಹ ಸರ್ವೋತ್ತಮ ಜ್ಞಾನ ದಾನವು ಮತ್ತ್ಯಾವುದೂ ಇಲ್ಲ. ಬಹಳ ದಯಾಹೃದಯಿಗಳಾಗಬೇಕಾಗಿದೆ. ಬ್ರಾಹ್ಮಣಿಯರು ನಿರ್ಬಲರಾಗುವ ಕಾರಣ ಸೇವೆಯು ಡೀಲಾ ಆಗಿ ಬಿಡುತ್ತದೆ ಆದ್ದರಿಂದ ಒಳ್ಳೆಯ ಶಿಕ್ಷಕಿಯು ಬೇಕು ಎಂದು ಹೇಳುತ್ತಾರೆ. ಯಾವಾಗ ವಿಚಾರ ಬರುವುದೋ ಆಗ ಹೊರಟು ಹೋಗಬೇಕು. ಬಾಬಾ, ಯಾವ ಸೇವಾಕೇಂದ್ರದಲ್ಲಿ ಸೇವೆಯು ಕಡಿಮೆಯಾಗಿದೆ ನಾವು ಹೋಗಿ ಸರ್ವೀಸ್ ಮಾಡಿ ಬರುತ್ತೇವೆ ಎಂದು ಹೇಳುವಂತಿರಬೇಕು. ಪ್ರದರ್ಶನಿ ಚಿತ್ರಗಳಲ್ಲಿ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ನಾವು ಹೇಗೆ ಸರ್ವೀಸನ್ನು ವೃದ್ಧಿ ಪಡಿಸಬೇಕೆಂಬ ವಿಚಾರ ನಡೆಯಬೇಕು, ತಂದೆಯೂ ಸಹ ಎಲ್ಲರ ಜೀವನವನ್ನು ವಜ್ರ ಸಮಾನ ಮಾಡುತ್ತಾರೆ. ನೀವು ಮಕ್ಕಳೂ ಸಹ ಸರ್ವೀಸ್ ಮಾಡಬೇಕಾಗಿದೆ. ವಂದೇ ಮಾತರಂ ಎಂದು ಗಾಯನವಿದೆ ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಪತಿತ ಮನುಷ್ಯರ ಅಥವಾ ಪೃಥ್ವಿ ಇತ್ಯಾದಿಗಳಿಗೆ ಎಂದೂ ವಂದನೆ ಮಾಡಲಾಗುವುದಿಲ್ಲ. ಇವಂತೂ ಪಂಚ ತತ್ವಗಳಾಗಿವೆ, ಅದಕ್ಕೇನು ವಂದನೆ ಮಾಡುವಿರಿ? ಪಂಚತತ್ವಗಳಿಂದಾದ ಶರೀರವಾಗಿದೆ ಅಂದಮೇಲೆ ಶರೀರದ ಪೂಜೆ ಮಾಡುವುದೂ ಸಹ ಭೂತ ಪೂಜೆಯಾಯಿತು. ಶಿವ ತಂದೆಗಂತೂ ಶರೀರವಿಲ್ಲ, ಅವರ ಪೂಜೆಯು ಎಲ್ಲದಕ್ಕಿಂತ ಉತ್ತಮವಾಗಿದೆ. ಉಳಿದೆಲ್ಲರದೂ ಮಧ್ಯಮವಾಗಿದೆ, ಇತ್ತೀಚೆಗೆ ಮನುಷ್ಯರಿಗೂ ಪೂಜಿಸುತ್ತಿರುತ್ತಾರೆ. ಅವರು ಪತಿತರಾಗಿದ್ದಾರೆ, ಮಹಾನ್ ಆತ್ಮರು ದೇವತೆಗಳಾಗಿರುತ್ತಾರೆ. ಸನ್ಯಾಸಿಗಳಿಗಿಂತಲೂ ಅವರು ಹೆಚ್ಚು ಪವಿತ್ರರಾಗಿರುತ್ತಾರೆ. |
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ದೇವತೆಗಳಾಗುತ್ತಿದ್ದೇವೆ, ತಂದೆಯು ನಮಗೆ ಈ ಅವಿನಾಶಿ ಜ್ಞಾನ ರತ್ನಗಳ ದಾನ ಮಾಡುವುದನ್ನು ಕಲಿಸುತ್ತಾರೆ. ಇಂತಹ ಶ್ರೇಷ್ಠ ಜ್ಞಾನವು ಮತ್ತ್ಯಾವುದೂ ಇರುವುದಿಲ್ಲ. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಶಿವ ಮತ್ತು ಲಕ್ಷ್ಮೀ-ನಾರಾಯಣರ ಚಿತ್ರಗಳಂತೂ ಇರುತ್ತವೆ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಹಾಕಿಕೊಳ್ಳಿ ಆಗ ನೆನಪಿರುವುದು – ಶಿವ ತಂದೆಯೇ ನಮ್ಮನ್ನು ಈ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ಈ ಸಮಯದಲ್ಲಿ ನೀವು ಆಗುತ್ತಿದ್ದೀರಿ, ಸ್ವರ್ಗದ ರಚಯಿತನು ಶಿವ ತಂದೆಯಾಗಿದ್ದಾರೆ, ಸತ್ಯಯುಗದಲ್ಲಂತೂ ಆಸ್ತಿಯನ್ನು ಕೊಡುವುದಿಲ್ಲ. ಈ ಅಂತಿಮ ಜನ್ಮದಲ್ಲಿ ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನೀವು ಈ ರೀತಿಯಾಗುವಿರಿ ಮತ್ತೆಲ್ಲಾ ಮಾತುಗಳನ್ನು ಬಿಟ್ಟು ಕೇವಲ ಸರ್ವೀಸ್-ಸರ್ವೀಸ್..... ತಂದೆಯನ್ನು ನೆನಪು ಮಾಡುತ್ತೀರೆಂದರೂ ಸಹ ಬಹಳ ದೊಡ್ಡ ಸರ್ವೀಸ್ ಮಾಡುತ್ತೀರೆಂದರ್ಥ. ತತ್ವ ಇತ್ಯಾದಿಗಳೆಲ್ಲವೂ ಕಾರಣವಾಗಿ ಬಿಡುತ್ತವೆ, ಯೋಗದ ಮಹಿಮೆಯು ಬಹಳ ದೊಡ್ಡದಾಗಿದೆ. ಪ್ರಪಂಚದಲ್ಲಿ ಯೋಗಾಶ್ರಮಗಳು ಅನೇಕ ಇವೆ ಆದರೆ ಅವೆಲ್ಲವೂ ದೈಹಿಕ ಹಠಯೋಗಗಳಾಗಿವೆ, ನಿಮ್ಮದು ಇದು ರಾಜಯೋಗವಾಗಿದೆ, ಇದರಿಂದ ನಿಮ್ಮ ದೋಣಿಯು ಪಾರಾಗುತ್ತದೆ. ಆ ಅನೇಕ ಪ್ರಕಾರದ ಹಠಯೋಗಗಳಿಂದ ಏಣಿಯನ್ನು ಇಳಿಯುತ್ತಾ ಬಂದಿದ್ದೀರಿ, ಮೂಲ ಮಾತು ನೆನಪಿನದಾಗಿದೆ. ನೋಡಿಕೊಳ್ಳಿ, ನನ್ನ ಮನಸ್ಸು ಎಲ್ಲಿಯೂ ವಿಕಾರದ ಕಡೆ ಹೋಗುತ್ತಿಲ್ಲವೇ? ವಿಕಾರಿಗಳಿಗೇ ಪತಿತರೆಂದು ಹೇಳಲಾಗುತ್ತದೆ ಅರ್ಥಾತ್ ಕವಡೆಯ ಸಮಾನರು. ವಿಕಾರದಲ್ಲಿ ಬೀಳುವುದರಿಂದ ತಮ್ಮದೇ ನಷ್ಟವನ್ನುಂಟು ಮಾಡಿಕೊಳ್ಳುತ್ತಾರೆ, ಯಾರು ಮಾಡುವರೋ ಅವರು ಅದನ್ನು ಪಡೆಯುವರು. ತಂದೆಯು ನೋಡಲಿ, ನೋಡದಿರಲಿ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ನಾವು ತಂದೆಯ ಸರ್ವೀಸ್ ಮಾಡುತ್ತೇವೆಯೇ! ನಮ್ಮಲ್ಲಿ ಯಾವುದೇ ಅವಗುಣವಿಲ್ಲವೆ! ಒಂದುವೇಳೆ ಇದ್ದರೆ ಅದನ್ನು ತೆಗೆದುಹಾಕಬೇಕು. ತಮ್ಮಿಂದ ಅವಗುಣಗಳನ್ನು ತೆಗೆಯುವುದಕ್ಕಾಗಿ ತಂದೆಯು ಬಹಳ ತಿಳಿಸುತ್ತಿರುತ್ತಾರೆ, ನಿರ್ಗುಣ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಯಾರಲ್ಲಿ ಯಾವುದೇ ಗುಣವಿಲ್ಲವೋ ಅಂತಹ ನಿರ್ಗುಣ ಬಾಲಕರ ಮಂಡಲಿಯು ಏನು ಮಾಡಲು ಸಾಧ್ಯ! ಅರ್ಥವಿಲ್ಲದೆ ಏನು ಬಂದರೆ ಅದನ್ನು ಹೇಳಿ ಬಿಡುತ್ತಾರೆ, ಅನೇಕ ಮತಗಳಿವೆಯಲ್ಲವೆ. ನಿಮಗೆ ಒಂದು ಮತ ಸಿಗುತ್ತದೆ, ಅದರಿಂದ ನಿಮಗೆ ಅಪಾರ ಖುಷಿಯಿರಬೇಕು. ತಂದೆಯು ಕೇವಲ ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ ಮತ್ತು ಕಮಲ ಪುಷ್ಫ ಸಮಾನರಾಗಿರಿ. ಮನಸಾ-ವಾಚಾ-ಕರ್ಮಣಾ ಪವಿತ್ರರಾಗಿರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಬ್ರಾಹ್ಮಣರು ಶ್ರೀಮತದನುಸಾರ ನಮ್ಮದೇ ತನು-ಮನ-ಧನದಿಂದ ನಮ್ಮ ಮತ್ತು ಇಡೀ ವಿಶ್ವದ ಸೇವೆ ಮಾಡುತ್ತಿದ್ದೇವೆ. ತಂದೆಯು ಭಾರತದಲ್ಲಿಯೇ ಬರುತ್ತಾರಲ್ಲವೆ. ನೀವು ಪಾಂಡವರು ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆ ಮಾಡುತ್ತಿದ್ದೀರಿ. ನೀವು ತಮ್ಮ ಕರ್ತವ್ಯ ಮಾಡುತ್ತೀರಿ, ಕೊನೆಗೂ ಪಾಂಡವರದೇ ವಿಜಯವಾಗುವುದು, ಇದರಲ್ಲಿ ಯುದ್ಧದ ಮಾತಿಲ್ಲ. ನೀವು ಡಬಲ್ ಅಹಿಂಸಕರಾಗಿದ್ದೀರಿ, ವಿಕಾರದಲ್ಲಿಯೂ ಹೋಗುವುದಿಲ್ಲ, ಹಿಂಸೆಯನ್ನೂ ಮಾಡುವುದಿಲ್ಲ. ಹಿಂಸೆಯಿಂದ ಯಾರೂ ವಿಶ್ವದ ಮೇಲೆ ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ - ಆ ಕ್ರಿಶ್ಚಿಯನ್ನರಿಬ್ಬರೂ ಒಂದುವೇಳೆ ಪರಸ್ಪರ ಸೇರಿ ಒಂದಾದರೆ ಇಡೀ ವಿಶ್ವದ ಮೇಲೆ ರಾಜ್ಯಭಾರ ಮಾಡಬಲ್ಲರು ಆದರೆ ಡ್ರಾಮಾದಲ್ಲಿ ಈ ನಿಯಮವಿಲ್ಲ. ಕ್ರಿಶ್ಚಿಯನ್ನರೇ ಕೃಷ್ಣ ಪುರಿಯನ್ನು ಆವರಿಸಿದ್ದಾರೆ. ಮೂಲತಃ ಭಾರತವು ಕೃಷ್ಣ ಪುರಿಯಾಗಿತ್ತಲ್ಲವೆ. ಯುದ್ಧ ಮಾಡಿ ರಾಜ್ಯವನ್ನು ತೆಗೆದುಕೊಂಡರು, ಬಹಳ ಹಣವನ್ನು ತೆಗೆದುಕೊಂಡು ಹೋದರು. ಈಗ ಪುನಃ ಹಣವು ಹಿಂತಿರುಗಿ ಬರುತ್ತಿದೆ ಮತ್ತು ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ತಂದೆಯು ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾರೆ! ಅವರೇ ನಿಮ್ಮ ರಾಜ್ಯವನ್ನು ಕಸಿದುಕೊಂಡಿದ್ದಾರೆ. ಮತ್ತೆ ಅವರು ಪರಸ್ಪರ ಹೊಡೆದಾಡುತ್ತಾರೆ ಮತ್ತು ನೀವು ವಿಶ್ವದ ಮಾಲೀಕರಾಗಿ ಬಿಡುತ್ತೀರಿ. ಎಷ್ಟು ದೊಡ್ಡ ರಾಜ್ಯ ಪದವಿಯಾಗಿದೆ, ಕೇವಲ ಇದರಲ್ಲಿಯೇ ಪರಿಶ್ರಮವಿದೆ - ನೆನಪು ಮಾಡುತ್ತಾ ಇರಿ ಮತ್ತು ತಮ್ಮ ಆಸ್ತಿಯನ್ನು ತೆಗೆದುಕೊಳ್ಳಿ. ಇದರಲ್ಲಿ ಸೋತು ಹೋಗಬಾರದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಅನ್ಯ ಎಲ್ಲಾ ಮಾತುಗಳನ್ನು ಬಿಟ್ಟು ಜ್ಞಾನ ದಾನ ಮಾಡಬೇಕಾಗಿದೆ. ರೂಪ ಭಸಂತರಾಗಬೇಕಾಗಿದೆ. ತಮ್ಮ ಅವಗುಣಗಳನ್ನು ತೆಗೆಯುವ ಪುರುಷಾರ್ಥ ಮಾಡಬೇಕಾಗಿದೆ. ಅನ್ಯರನ್ನು ನೋಡಬಾರದು. |
2. ತಮ್ಮ ಸ್ವಭಾವವನ್ನು ಬಹಳ ಮಧುರ ಮಾಡಿಕೊಳ್ಳಬೇಕಾಗಿದೆ, ಎಲ್ಲರ ಮೇಲೆ ಪ್ರೀತಿಯ ದೃಷ್ಟಿಯಿರಲಿ, ಯಾರಿಗೂ ದುಃಖ ಕೊಡಬಾರದು, ಕರ್ಮೇಂದ್ರಿಯಾಜೀತರಾಗಬೇಕಾಗಿದೆ. |
ಭಾಗ್ಯಶಾಲಿ ಮಕ್ಕಳ ಶ್ರೇಷ್ಠ ಭಾಗ್ಯದ ಪಟ್ಟಿ |
ಇಂದು ಭಾಗ್ಯವಿದಾತ ಬಾಪ್ದಾದಾ ತನ್ನ ಭಾಗ್ಯಶಾಲಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಬ್ರಾಹ್ಮಣ ಮಗುವಿನ ಭಾಗ್ಯವು ಪ್ರಪಂಚದ ಸಾಧಾರಣ ಆತ್ಮಗಳಿಗಿಂತ ಅತೀ ಶ್ರೇಷ್ಠವಾಗಿದೆ ಏಕೆಂದರೆ ಪ್ರತಿಯೊಬ್ಬ ಬ್ರಾಹ್ಮಣ ಆತ್ಮನು ಕೋಟಿಯಲ್ಲಿ ಕೆಲವರು, ಕೆಲವರಲ್ಲಿಯೂ ಕೆಲವರಾಗಿದ್ದಾರೆ. 550 ಕೋಟಿ ಆತ್ಮರೆಲ್ಲಿ! ತಾವು ಬ್ರಾಹ್ಮಣರ ಚಿಕ್ಕ ಸಂಸಾರವೆಲ್ಲಿ! ಅವರ ಲೆಕ್ಕದಲ್ಲಿ ನೀವು ಎಷ್ಟು ಕಡಿಮೆ ಸಂಖ್ಯೆಯಲ್ಲಿದ್ದೀರಿ. ಆದ್ದರಿಂದ ಅಜ್ಞಾನಿ, ಅಪರಿಚಿತ ಆತ್ಮಗಳ ಅಂತರದಲ್ಲಿ ತಾವೆಲ್ಲಾ ಬ್ರಾಹ್ಮಣರು ಶ್ರೇಷ್ಠ ಭಾಗ್ಯಶಾಲಿಗಳಾಗಿದ್ದೀರಿ. ಬಾಪ್ದಾದಾ ನೋಡುತ್ತಿದ್ದೇವೆ - ಪ್ರತಿಯೊಬ್ಬ ಬ್ರಾಹ್ಮಣನ ಮಸ್ತಕದಲ್ಲಿ ಭಾಗ್ಯದ ರೇಖೆಯು ಬಹಳ ಸ್ಪಷ್ಟವಾಗಿ ತಿಲಕದಂತೆ ಹೊಳೆಯುತ್ತಿದೆ. ಲೌಕಿಕ ಜ್ಯೋತಿಷಿಗಳು ಹಸ್ತರೇಖೆಯನ್ನು ನೋಡುತ್ತಾರೆ. ಆದರೆ ಈ ದಿವ್ಯ ಈಶ್ವರೀಯ ಭಾಗ್ಯದ ರೇಖೆಯು ಪ್ರತಿಯೊಬ್ಬರ ಮಸ್ತಕದಲ್ಲಿ ಕಂಡು ಬರುತ್ತಿದೆ. ಎಷ್ಟು ಶ್ರೇಷ್ಠ ಭಾಗ್ಯವೋ ಅಷ್ಟು ಭಾಗ್ಯಶಾಲಿ ಮಕ್ಕಳ ಮಸ್ತಕವು ಸದಾ ಅಲೌಕಿಕ ಪ್ರಕಾಶದಲ್ಲಿ ಹೊಳೆಯುತ್ತಿರುತ್ತದೆ. ಭಾಗ್ಯವಂತ ಮಕ್ಕಳಲ್ಲಿ ಇನ್ನ್ಯಾವ ಲಕ್ಷಣಗಳು ಕಂಡು ಬರುತ್ತವೆ? ಸದಾ ಮುಖದಲ್ಲಿ ಈಶ್ವರೀಯ ಆತ್ಮಿಕ ಮುಗುಳ್ನಗೆಯ ಅನುಭವವಾಗುವುದು. ಭಾಗ್ಯಶಾಲಿಗಳ ನಯನ ಅರ್ಥಾತ್ ದಿವ್ಯ ದೃಷ್ಟಿಯು ಯಾರಿಗಾದರೂ ಸದಾ ಖುಷಿಯ ಅಲೆಯನ್ನು ಉತ್ಪನ್ನ ಮಾಡಿಸಲು ನಿಮಿತ್ತವಾಗುತ್ತದೆ. ಅವರಿಂದ ಯಾರಿಗೇ ದೃಷ್ಟಿ ಸಿಕ್ಕಿದರೂ ಸಹ ಅವರು ಆತ್ಮೀಯತೆಯ, ಆತ್ಮಿಕ ತಂದೆಯ, ಪರಮಾತ್ಮನ ನೆನಪಿನ ಅನುಭವ ಮಾಡುವರು. ಭಾಗ್ಯಶಾಲಿ ಆತ್ಮನ ಸಂಪರ್ಕದಲ್ಲಿ ಪ್ರತಿಯೊಂದು ಆತ್ಮನಿಗೆ ಹಗುರತೆಯ ಅನುಭೂತಿಯಾಗುವುದು. ಬ್ರಾಹ್ಮಣ ಆತ್ಮರಲ್ಲಿಯೂ ಸಹ ಕೊನೆಯವರೆಗೂ ನಂಬರ್ವಾರ್ ಇದ್ದೇ ಇರುತ್ತಾರೆ ಆದರೆ ಲಕ್ಷಣಗಳು ನಂಬರ್ವಾರ್ ಎಲ್ಲಾ ಭಾಗ್ಯಶಾಲಿ ಮಕ್ಕಳಿಗೆ ಇದೆ. ಮುಂದೆ ಇನ್ನೂ ಪ್ರತ್ಯಕ್ಷವಾಗುತ್ತಾ ಹೋಗುವುದು. |
ಇನ್ನು ಸ್ವಲ್ಪ ಸಮಯವು ಕಳೆದರೆ ನೋಡುವಿರಿ - ಸ್ವಲ್ಪ ಸಮಯದಲ್ಲಿಯೇ ಯಾವಾಗ ಅತೀ ಮತ್ತು ಅಂತ್ಯ ಎರಡೂ ಅನುಭವವಾಗುವುದು ಆಗ ನಾಲ್ಕಾರು ಕಡೆಯ ಅಪರಿಚಿತ ಆತ್ಮರು ಹದ್ದಿನ ವೈರಾಗ್ಯ ವೃತ್ತಿಯಲ್ಲಿ ಬರುತ್ತಾರೆ ಮತ್ತು ತಾವು ಭಾಗ್ಯಶಾಲಿ ಆತ್ಮರು ಬೇಹದ್ದಿನ ವೈರಾಗ್ಯ ವೃತ್ತಿಯ ಅನುಭವದಲ್ಲಿರುತ್ತೀರಿ. ಈಗಂತೂ ಪ್ರಪಂಚದವರಲ್ಲಿಯೂ ವೈರಾಗ್ಯವಿಲ್ಲ. ಒಂದುವೇಳೆ ಅಲ್ಪಸ್ವಲ್ಪ ವಿನಾಶದ ಮುನ್ಸೂಚನೆಗಳು ಆಗುತ್ತಿದ್ದರೂ ಸಹ ಇದಂತೂ ಆಗುತ್ತಲೇ ಇರುತ್ತದೆ ಎಂದು ಇನ್ನೂ ಆಲಸ್ಯದ ನಿದ್ರೆಯಲ್ಲಿ ಮಲಗಿ ಬಿಡುತ್ತಾರೆ. ಆದರೆ ಯಾವಾಗ `ಅತಿ' ಮತ್ತು `ಅಂತ್ಯ'ದ ಚಿಹ್ನೆಗಳು ಸನ್ಮುಖದಲ್ಲಿ ಕಾಣುವವೋ ಆಗ ಸ್ವತಹವಾಗಿಯೇ ಹದ್ದಿನ ವೈರಾಗ್ಯ ವೃತ್ತಿಯು ಉತ್ಪನ್ನವಾಗುವುದು ಮತ್ತು ಅತೀ ಟೆನ್ಶನ್ (ಒತ್ತಡ) ಆಗುವ ಕಾರಣ ಎಲ್ಲರ ಅಟೆನ್ಷನ್ (ಗಮನ) ಒಬ್ಬ ತಂದೆಯ ಕಡೆ ಹೋಗುವುದು. ಆ ಸಮಯದಲ್ಲಿ ಸರ್ವ ಆತ್ಮರ ಹೃದಯದಿಂದ ಇದೇ ಕೂಗು ಹೊರ ಬರುವುದು - ಎಲ್ಲರ ರಚಯಿತ, ಎಲ್ಲರ ತಂದೆಯು ಒಬ್ಬರೇ ಆಗಿದ್ದಾರೆ ಮತ್ತು ಬುದ್ಧಿಯು ಅನೇಕ ಕಡೆಯಿಂದ ತೆಗೆದು ಸ್ವತಹವಾಗಿ ಒಬ್ಬರ ಕಡೆ ಹೋಗುವುದು. ಇಂತಹ ಸಮಯದಲ್ಲಿ ತಾವು ಭಾಗ್ಯಶಾಲಿ ಆತ್ಮರ ಬೇಹದ್ದಿನ ವೈರಾಗ್ಯ ವೃತ್ತಿಯ ಸ್ಥಿತಿಯು ಸ್ವತಃ ಮತ್ತು ನಿರಂತರವಾಗಿ ಬಿಡುವುದು ಮತ್ತು ಪ್ರತಿಯೊಬ್ಬರ ಮಸ್ತಕದಿಂದ ಭಾಗ್ಯದ ರೇಖೆಗಳು ಸ್ಪಷ್ಟವಾಗಿ ಕಾಣಿಸುವವು. ಈಗಲೂ ಸಹ ಶ್ರೇಷ್ಠ ಭಾಗ್ಯಶಾಲಿ ಮಕ್ಕಳ ಬುದ್ಧಿಯಲ್ಲಿ ಸದಾ ಏನಿರುತ್ತದೆ? `ಭಗವಂತ' ಮತ್ತು `ಭಾಗ್ಯ'. |
ಅಮೃತವೇಳೆಯಿಂದ ತಮ್ಮ ಭಾಗ್ಯದ ಪಟ್ಟಿಯನ್ನು ತೆಗೆಯಿರಿ. ಭಾಗ್ಯವಂತ ಮಕ್ಕಳನ್ನು ಅಮೃತವೇಳೆಯಲ್ಲಿ ಸ್ವಯಂ ತಂದೆಯೇ ಏಳಿಸುತ್ತಾರೆ ಮತ್ತು ಆಹ್ವಾನ ಮಾಡುತ್ತಾರೆ. ಯಾರು ಅತೀ ಸ್ನೇಹಿ ಮಕ್ಕಳಿದ್ದಾರೆಯೋ ಅವರ ಅನುಭವವಾಗಿದೆ - ಮಲಗಿದರೂ ಸಹ ಯಾರೋ ಮಲಗಲು ಬಿಡುತ್ತಿಲ್ಲ, ಯಾರೋ ಏಳಿಸುತ್ತಿದ್ದಾರೆ, ಕರೆಯುತ್ತಿದ್ದಾರೆ ಎಂದು. ಈ ರೀತಿ ಅನುಭವ ಆಗುತ್ತದೆಯಲ್ಲವೆ. ಅಮೃತವೇಳೆಯಿಂದ ತಮ್ಮ ಭಾಗ್ಯವನ್ನೂ ನೋಡಿಕೊಳ್ಳಿ, ಭಕ್ತಿಯಲ್ಲಿ ದೇವತೆಗಳನ್ನು ಭಗವಂತನೆಂದು ತಿಳಿದು ಭಕ್ತರು ಘಂಟೆಯನ್ನು ಬಾರಿಸಿ ಏಳಿಸುತ್ತಾರೆ ಮತ್ತು ತಮ್ಮನ್ನು ನೋಡಿ, ಸ್ವಯಂ ಭಗವಂತನೇ ಏಳಿಸುತ್ತಾರೆ. ಎಷ್ಟು ಭಾಗ್ಯವಾಗಿದೆ! ಅಮೃತವೇಳೆಯಿಂದ ಹಿಡಿದು ತಂದೆಯು ಮಕ್ಕಳ ಸೇವಾಧಾರಿಯಾಗಿ ಸೇವೆ ಮಾಡುತ್ತಾರೆ ಮತ್ತು ``ಬನ್ನಿ, ತಂದೆಯ ಸಮಾನ ಸ್ಥಿತಿಯ ಅನುಭವ ಮಾಡಿ, ನನ್ನ ಜೊತೆ ಕುಳಿತುಕೊಳ್ಳಿ'' ಎಂದು ಆಹ್ವಾನ ಮಾಡುತ್ತಾರೆ. ಅಂದಾಗ ತಂದೆಯು ಎಲ್ಲಿ ಕುಳಿತಿದ್ದಾರೆ? ಉನ್ನತ ಸ್ಥಾನದಲ್ಲಿ ಮತ್ತು ಉನ್ನತ ಸ್ಥಿತಿಯಲ್ಲಿ. ಯಾವಾಗ ತಂದೆಯ ಜೊತೆ ಕುಳಿತು ಬಿಡುತ್ತೀರೋ ಆಗ ಸ್ಥಿತಿಯು ಹೇಗಿರುವುದು! ಅಂದಮೇಲೆ ಪರಿಶ್ರಮವನ್ನು ಏಕೆ ಪಡುತ್ತೀರಿ, ಕೇವಲ ಜೊತೆಯಲ್ಲಿ ಕುಳಿತುಕೊಳ್ಳಿ ಆಗ ಸಹಜವಾಗಿಯೇ ಸಂಗದ ರಂಗು ಅಂಟುವುದು. ಸ್ಥಾನದ ಪ್ರಮಾಣ ಸ್ಥಿತಿ ಸ್ವತಹವಾಗಿ ಇರುವುದು. ಹೇಗೆ ಮಧುಬನದಲ್ಲಿ ಬರುತ್ತೀರೆಂದರೆ ನಿಮ್ಮ ಮನೋಸ್ಥಿತಿಯು ಹೇಗಿರುತ್ತದೆ? ಯೋಗ ಮಾಡಬೇಕಾಗುತ್ತದೆಯೋ ಅಥವಾ ಯೋಗವು ಸ್ವತಹವಾಗಿಯೇ ಇರುತ್ತದೆಯೋ? ಸ್ವತಹ ಇರುತ್ತದೆ ಆದ್ದರಿಂದಲೇ ಇಲ್ಲಿರುವುದಕ್ಕೆ ಹೆಚ್ಚಿನದಾಗಿ ಇಷ್ಟಪಡುತ್ತೀರಲ್ಲವೆ! ಈಗ ಇನ್ನೂ 15 ದಿನ ಇಲ್ಲಿಯೇ ಇದ್ದು ಬಿಡಿ ಎಂದು ಹೇಳಿದರೆ ಖುಷಿಯಲ್ಲಿ ನರ್ತಿಸುತ್ತೀರಲ್ಲವೆ. ಅಂದಾಗ ಹೇಗೆ ಸ್ಥಾನದ ಪ್ರಭಾವವು ಸ್ಥಿತಿಯ ಮೇಲೆ ಬೀರುತ್ತದೆಯೋ ಹಾಗೆಯೇ ಅಮೃತವೇಳೆಯಲ್ಲಿ ಪರಮಧಾಮಕ್ಕೆ ಅಥವಾ ಸೂಕ್ಷ್ಮವತನದಲ್ಲಿ ಹೊರಟುಹೋಗಿ ತಂದೆಯ ಜೊತೆ ಕುಳಿತುಬಿಡಿ. ಅಮೃತವೇಳೆ ಶಕ್ತಿಶಾಲಿಯಾಗಿದ್ದರೆ ಇಡೀ ದಿನ ಸ್ವತಹವಾಗಿ ಸಹಯೋಗ ಸಿಗುವುದು. ಅಂದಾಗ ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ - ``ವಾಹ್ ನನ್ನ ಭಾಗ್ಯವೇ ವಾಹ್!'' ದಿನಚರಿಯೇ ಭಗವಂತನಿಂದ ಆರಂಭವಾಗುತ್ತದೆ. |
ಮತ್ತೆ ತಮ್ಮ ಭಾಗ್ಯವನ್ನು ನೋಡಿಕೊಳ್ಳಿ - ಸ್ವಯಂ ತಂದೆಯೇ ಶಿಕ್ಷಕನಾಗಿ ಎಷ್ಟು ದೂರ ದೇಶದಿಂದ ತಮಗೆ ಓದಿಸಲು ಬರುತ್ತಾರೆ. ಮನುಷ್ಯರಾದರೆ ಭಗವಂತನ ಬಳಿ ಹೋಗುವುದಕ್ಕಾಗಿ ಪ್ರಯತ್ನ ಪಡುತ್ತಾರೆ ಆದರೆ ಸ್ವಯಂ ಭಗವಂತನೇ ತಮ್ಮ ಬಳಿ ಶಿಕ್ಷಕನಾಗಿ ಓದಿಸಲು ಬರುತ್ತಾರೆ, ಇದು ಎಷ್ಟು ದೊಡ್ಡಭಾಗ್ಯವಾಗಿದೆ! ಮತ್ತು ಎಷ್ಟು ಸಮಯದಿಂದ ತನ್ನ ಸೇವೆಯ ಪಾತ್ರವನ್ನು ಅಭಿನಯಿಸುತ್ತಿದ್ದಾರೆ! ಎಂದಾದರೂ ದಣಿಯುತ್ತಾರೆಯೇ? ಅಥವಾ ಎಂದಾದರೂ ಇಂದು ತಲೆ ನೋವಾಗುತ್ತಿದೆ, ಇಂದು ರಾತ್ರಿ ಮಲಗಿರಲಿಲ್ಲ ಎಂದು ನೆಪ ಹೇಳುತ್ತಾರೆಯೇ? ಅಂದಮೇಲೆ ಹೇಗೆ ತಂದೆಯು ಅವಿಶ್ರಾಂತ ಸೇವಾಧಾರಿಯಾಗಿ ಸೇವೆ ಮಾಡುತ್ತಾರೆಯೋ ಹಾಗೆಯೇ ತಂದೆಯ ಸಮಾನ ಮಕ್ಕಳೂ ಸಹ ಅವಿಶ್ರಾಂತ ಸೇವಾಧಾರಿಗಳು. ತಮ್ಮ ದಿನಚರಿಯನ್ನು ನೋಡಿಕೊಳ್ಳಿ ಎಷ್ಟು ದೊಡ್ಡ ಭಾಗ್ಯವಿದೆ! ತಂದೆಯು ಸದಾ ಸ್ನೇಹಿ, ಮುದ್ದಾದ ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ, ಯಾವುದೇ ಸೇವೆ ಮಾಡುತ್ತೀರಿ, ಲೌಕಿಕವಿರಲಿ ಅಥವಾ ಅಲೌಕಿಕವಿರಲಿ, ಪರಿವಾರದಲ್ಲಿರಲಿ ಸೇವಾಕೇಂದ್ರದಲ್ಲಿರಲಿ, ಯಾವುದೇ ಕರ್ಮ ಮಾಡಿ, ಯಾವುದೇ ಕರ್ತವ್ಯವನ್ನು ಪಾಲಿಸಿ ಆದರೆ ಸದಾ ಈ ಅನುಭವ ಮಾಡಿ - ಮಾಡಿಸುವವರು ನಾನು ನಿಮಿತ್ತ ಮಾಡುವವನ ಮೂಲಕ ಮಾಡಿಸುತ್ತಿದ್ದಾರೆ. ನಾನು ಸೇವೆ ಮಾಡುವುದಕ್ಕಾಗಿ ನಿಮಿತ್ತನಾಗಿದ್ದೇನೆ, ಮಾಡಿಸುವ ತಂದೆಯು ಮಾಡಿಸುತ್ತಿದ್ದಾರೆ. ಇಲ್ಲಿಯೂ ಸಹ ನೀವು ಒಂಟಿಯಾಗಿ ಇಲ್ಲ, ಮಾಡಿಸುವವರ ರೂಪದಲ್ಲಿ ತಂದೆಯು ಕರ್ಮ ಮಾಡುವ ಸಮಯದಲ್ಲಿಯೂ ಜೊತೆಯಿದ್ದಾರೆ. ತಾವಂತೂ ಕೇವಲ ನಿಮಿತ್ತರಾಗಿದ್ದೀರಿ. ವಿಶೇಷವಾಗಿ ಭಗವಂತನು ಮಾಡಿಸುವವರಾಗಿದ್ದಾರೆ ಅಂದಮೇಲೆ ತಾವು ಒಂಟಿಯಾಗಿ ಒಬ್ಬರೇ ಏಕೆ ಮಾಡುತ್ತೀರಿ? ನಾನೊಬ್ಬನೇ ಮಾಡುತ್ತೇನೆಂಬ ಸ್ಮೃತಿ ಇದ್ದರೆ ಈ `ನಾನು' ಎಂಬುದು ಮಾಯೆಯ ದ್ವಾರವಾಗಿದೆ. ನಂತರ ಮಾಯೆಯು ಬಂದು ಬಿಟ್ಟಿತು ಎಂದು ಹೇಳುತ್ತೀರಿ. ಬಾಗಿಲನ್ನು ತೆರೆಯುತ್ತೀರೆಂದರೆ ಮಾಯೆಯಂತೂ ಮೊದಲೇ ಕಾಯುತ್ತಿದೆ ಮತ್ತು ತಾವು ಅದಕ್ಕೆ ಚೆನ್ನಾಗಿ ಅವಕಾಶ ಕೊಡುತ್ತೀರೆಂದರೆ ಅದು ಏಕೆ ತಾನೇ ಬರುವುದಿಲ್ಲ? |
ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ - ಮಾಡಿಸುವಂತಹ ತಂದೆಯು ಪ್ರತೀ ಕರ್ಮದಲ್ಲಿ ಮಾಡಿಸುತ್ತಿದ್ದಾರೆ ಅಂದಾಗ ಅಲ್ಲಿ ಹೊರೆಯೆನಿಸುವುದಿಲ್ಲ. ಹೊರೆಯೆಲ್ಲವೂ ಮಾಲೀಕನಿಗೆ ಇರುತ್ತದೆ. ಯಾರು ಸಹಯೋಗಿಗಳು ಆಗಿರುವರೋ ಅವರಿಗೆ ಭಾರವೆನಿಸುವುದಿಲ್ಲ. ನೀವು ಮಾಲೀಕರು ಆಗಿ ಬಿಡುತ್ತೀರೆಂದರೆ ಎಲ್ಲಾ ಹೊರೆಯು ನಿಮ್ಮ ಮೇಲೆ ಬಂದು ಬಿಡುತ್ತದೆ. ಆದ್ದರಿಂದ ನಾನು ಬಾಲಕನಾಗಿದ್ದೇನೆ, ತಂದೆಯು ಮಾಲೀಕನಾಗಿದ್ದಾರೆ, ನಾನು ಬಾಲಕನ ಮೂಲಕ ಮಾಲೀಕನು ಮಾಡಿಸುತ್ತಿದ್ದಾರೆ ಎಂಬ ಸ್ಮೃತಿಯಿರಲಿ. ತಾವೇ ದೊಡ್ಡವರಾಗಿ ಬಿಡುತ್ತೀರೆಂದರೆ ದೊಡ್ಡ ದುಃಖವು ಬಂದು ಬಿಡುತ್ತದೆ ಆದ್ದರಿಂದ ಬಾಲಕನಾಗಿ ಮಾಲೀಕನ ಆದೇಶದನುಸಾರ ಮಾಡಿರಿ. ಇದು ಎಷ್ಟು ದೊಡ್ಡ ಭಾಗ್ಯವಾಗಿದೆ! ಪ್ರತೀ ಕರ್ಮದಲ್ಲಿ ತಂದೆಯು ಜವಾಬ್ದಾರನಾಗಿ ಹಗುರರನ್ನಾಗಿ ಮಾಡಿ ಹಾರಿಸುತ್ತಿದ್ದಾರೆ ಆದರೆ ಆಗುವುದೇನೆಂದರೆ ಯಾವುದೇ ಸಮಸ್ಯೆಯು ಬಂದಾಗ ಬಾಬಾ, ಈಗ ತಮಗೇ ಗೊತ್ತೆಂದು ಹೇಳುತ್ತೀರಿ ಮತ್ತು ಯಾವಾಗ ಸಮಸ್ಯೆಯು ಸಮಾಪ್ತಿ ಆಗಿ ಬಿಡುವುದೋ ಆಗ ಮಸ್ತರಾಗಿ ಬಿಡುತ್ತೀರಿ ಆದರೆ ಸಮಸ್ಯೆಯು ಬರುವಂತೆ ಮಾಡಿಕೊಳ್ಳುವುದಾದರೂ ಏಕೆ? ಮಾಡಿಸುವ ತಂದೆಯ ಆದೇಶದಂತೆ ಪ್ರತೀ ಕರ್ಮವನ್ನು ಮಾಡುತ್ತಾ ಹೋಗಿ ಆಗ ಕರ್ಮವೂ ಶ್ರೇಷ್ಠ ಮತ್ತು ಶ್ರೇಷ್ಠ ಕರ್ಮದ ಫಲವಾಗಿ ಸದಾ ಖುಷಿ, ಸದಾ ಹಗುರತೆ, ಫರಿಶ್ತಾ ಜೀವನದ ಅನುಭವ ಮಾಡುತ್ತಾ ಇರುತ್ತೀರಿ. `ಫರಿಶ್ತೆಗಳು ಕರ್ಮದ ಸಂಬಂಧದಲ್ಲಿ ಬರುವರೇ ಹೊರತು ಕರ್ಮದ ಬಂಧನದಲ್ಲಿ ಬಂಧಿತರಾಗುವುದಿಲ್ಲ' ಮತ್ತು ಮಾಡಿಸುವ ತಂದೆಯ ಜೊತೆ ಸಂಬಂಧವು ಏರ್ಪಟ್ಟಿದೆ ಆದ್ದರಿಂದ ನಿಮಿತ್ತ ಭಾವದಲ್ಲಿ ಎಂದೂ `ನಾನು' ಎಂಬ ಅಭಿಮಾನವು ಬರುವುದಿಲ್ಲ. ಸದಾ ನಿರ್ಮಾನರಾಗಿ, ನಿರ್ಮಾಣದ ಕಾರ್ಯ ಮಾಡುತ್ತೀರಿ ಅಂದಮೇಲೆ ತಮ್ಮದು ಎಷ್ಟು ದೊಡ್ಡ ಭಾಗ್ಯವಾಗಿದೆ! |
ಮತ್ತೆ ಬ್ರಹ್ಮಾ ಭೋಜನವನ್ನು ಯಾರು ತಿನ್ನಿಸುತ್ತಾರೆ? ಹೆಸರೇ ಆಗಿದೆ – ಬ್ರಹ್ಮಾ ಭೋಜನ. ಬ್ರಹ್ಮ ಭೋಜನವಲ್ಲ, ಬ್ರಹ್ಮಾ ಭೋಜನ. ಅಂದಾಗ ಬ್ರಹ್ಮಾರವರು ಸದಾ ಯಜ್ಞದ ರಕ್ಷಕನಾಗಿದ್ದಾರೆ. ಪ್ರತಿಯೊಬ್ಬ ಯಜ್ಞ ವತ್ಸರಿಗೆ ಅಥವಾ ಬ್ರಹ್ಮಾ ವತ್ಸರಿಗೆ ಬ್ರಹ್ಮಾ ತಂದೆಯ ಮೂಲಕ ಬ್ರಹ್ಮಾ ಭೋಜನವು ಅವಶ್ಯವಾಗಿ ಸಿಗುವುದು. ಮನುಷ್ಯರಂತೂ ಕೇವಲ ಹಾಗೆಯೇ ನಮಗೆ ಭಗವಂತನು ತಿನ್ನಿಸುತ್ತಿದ್ದಾರೆಂದು ಹೇಳುತ್ತಾರೆ. ಭಗವಂತ ಯಾರು ಎಂಬುದೇ ಗೊತ್ತಿಲ್ಲ ಆದರೆ ಭಗವಂತನು ತಿನ್ನಿಸುತ್ತಾರೆಂದು ಹೇಳುತ್ತಾರೆ. ಆದರೆ ಬ್ರಾಹ್ಮಣ ಮಕ್ಕಳಿಗಂತೂ ತಂದೆಯೇ ತಿನ್ನಿಸುತ್ತಾರೆ. ಭಲೆ ಲೌಕಿಕ ಸಂಪಾದನೆ ಮಾಡಿ, ಹಣವನ್ನು ಜಮಾ ಮಾಡುತ್ತೀರಿ ಅದರಿಂದಲೇ ಭೋಜನವನ್ನು ತಯಾರಿಸುತ್ತೀರಿ ಆದರೆ ಮೊದಲು ತಮ್ಮ ಸಂಪಾದನೆಯನ್ನೂ ಸಹ ತಂದೆಯ ಭಂಡಾರದಲ್ಲಿ ಹಾಕುತ್ತೀರಿ ಆದ್ದರಿಂದ ತಂದೆಯ ಭಂಡಾರಿಯು ಭೋಲಾನಾಥನ ಭಂಡಾರವಾಗಿ ಬಿಡುತ್ತದೆ. ಈ ವಿಧಿಯನ್ನು ಎಂದೂ ಮರೆಯಬೇಡಿ, ಇಲ್ಲವೆಂದರೆ ನಾನೇ ಸಂಪಾದಿಸುತ್ತೇನೆ. ನಾನೇ ತಿನ್ನುತ್ತೇನೆ ಎಂದು ತಿಳಿದುಕೊಳ್ಳುತ್ತೀರಿ. ಹಾಗೆ ನೋಡಿದರೆ ನೀವು ಟ್ರಸ್ಟಿಗಳಾಗಿದ್ದೀರಿ. ಟ್ರಸ್ಟಿಗಳದೇನೂ ಇರುವುದಿಲ್ಲ. ನಾವು ನಮ್ಮ ಸಂಪಾದನೆಯಿಂದ ತಿನ್ನುತ್ತೇವೆಂದು ಸಂಕಲ್ಪವೂ ಬರುವುದಿಲ್ಲ. ಯಾವಾಗ ಟ್ರಸ್ಟಿಗಳಾಗಿದ್ದೀರಿ ಅಂದಮೇಲೆ ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡಿದಿರಿ, ನನ್ನದೇನೂ ಇಲ್ಲ, ಎಲ್ಲವೂ ನಿನ್ನದು ಎಂದಾಯಿತು. ಟ್ರಸ್ಟಿ ಅರ್ಥಾತ್ ನಿನ್ನದು ಮತ್ತು ಗೃಹಸ್ಥಿ ಅರ್ಥಾತ್ ನನ್ನದು. ಅಂದಮೇಲೆ ತಾವು ಯಾರಾಗಿದ್ದೀರಿ? ಗೃಹಸ್ಥಿಗಳಂತೂ ಅಲ್ಲ ತಾನೇ! ಭಗವಂತನು ತಿನ್ನಿಸುತ್ತಿದ್ದಾರೆ, ಬ್ರಹ್ಮಾ ಭೋಜನವು ಸಿಗುತ್ತಿದೆ - ಬ್ರಾಹ್ಮಣ ಆತ್ಮರಿಗೆ ಈ ನಶೆಯು ಸ್ವತಹವಾಗಿ ಇರುತ್ತದೆ ಮತ್ತು ತಂದೆಯ ಗ್ಯಾರಂಟಿಯಾಗಿದೆ - 21 ಜನ್ಮಗಳವರೆಗೆ ಬ್ರಾಹ್ಮಣ ಆತ್ಮನು ಎಂದೂ ಹಸಿವಿನಿಂದ ಇರಲು ಸಾಧ್ಯವಿಲ್ಲ. ಬಹಳ ಪ್ರೀತಿಯಿಂದ ರೊಟ್ಟಿ, ಪಲ್ಯವನ್ನಾದರೂ ತಿನ್ನಿಸುತ್ತೇವೆ. ಈ ಜನ್ಮದಲ್ಲಿಯೂ ರೊಟ್ಟಿ, ಪಲ್ಯವನ್ನು ಪ್ರೀತಿಯಿಂದ ತಿನ್ನುತ್ತೀರಿ, ಪರಿಶ್ರಮದಿಂದಲ್ಲ ಆದ್ದರಿಂದ ಸದಾ ಈ ಸ್ಮೃತಿಯಿರಲಿ - ಅಮೃತವೇಳೆಯಿಂದ ಹಿಡಿದು ಯಾವ-ಯಾವ ಭಾಗ್ಯವು ಪ್ರಾಪ್ತಿಯಾಗಿದೆ! ಇಡೀ ದಿನಚರಿಯನ್ನು ನೋಡಿಕೊಳ್ಳಿ. |
ತಂದೆಯೇ ಜೋಗುಳವನ್ನು ಹಾಡಿ ಮಲಗಿಸುತ್ತಾರೆ, ತಂದೆಯ ಮಡಿಲಿನಲ್ಲಿ ಮಲಗಿ ಬಿಡಿ ಆಗ ಸುಸ್ತು, ಖಾಯಿಲೆ ಎಲ್ಲವೂ ಮರೆತು ಹೋಗುವುದು ಮತ್ತು ವಿಶ್ರಾಂತಿ ಪಡೆಯುತ್ತೀರಿ. ಕೇವಲ `ಹಾ-ರಾಮ್' (ರಾಮನೇ ಬನ್ನಿ) ಎಂದು ಕೇವಲ ಆಹ್ವಾನ ಮಾಡಿ ಆಗ ಆರಾಮವಾಗಿ ಬಿಡುವುದು ಅರ್ಥಾತ್ ವಿಶ್ರಾಂತಿ ಸಿಗುವುದು. ಹಾಗೆಯೇ ಒಂಟಿಯಾಗಿ ಮಲಗುತ್ತೀರೆಂದರೆ ಬೇರೆ-ಬೇರೆ ಸಂಕಲ್ಪಗಳು ನಡೆಯುತ್ತವೆ. ತಂದೆಯ ಜೊತೆ `ನೆನಪಿನ ಮಡಿಲಿನಲ್ಲಿ' ಮಲಗಿಬಿಡಿ. `ಮಧುರ ಮಕ್ಕಳೇ, ಪ್ರಿಯ ಮಕ್ಕಳೇ' ಎನ್ನುವ ಜೋಗುಳವನ್ನು ಕೇಳುತ್ತಾ-ಕೇಳುತ್ತಾ ಮಲಗಿ ಬಿಡಿ ಆಗ ನೋಡಿ, ಎಷ್ಟು ಅಲೌಕಿಕ ಅನುಭವವಾಗುತ್ತದೆ! ಅಮೃತವೇಳೆಯಿಂದ ಹಿಡಿದು ರಾತ್ರಿಯವರೆಗೆ ಎಲ್ಲವನ್ನೂ ಭಗವಂತನು ಮಾಡಿಸುತ್ತಿದ್ದಾರೆ, ನಡೆಸುವವರು ನಡೆಸುತ್ತಿದ್ದಾರೆ, ಮಾಡಿಸುವವರು ಮಾಡಿಸುತ್ತಿದ್ದಾರೆ - ಸದಾ ಈ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ, ಇಮರ್ಜ್ ಮಾಡಿಕೊಳ್ಳಿ. ಮಧ್ಯಪಾನವನ್ನೂ ಸಹ ಎಲ್ಲಿಯವರೆಗೆ ಕುಡಿಯುವುದಿಲ್ಲವೋ ಅಲ್ಲಿಯವರೆಗೆ ನಶೆಯೇರುವುದಿಲ್ಲ, ಕೇವಲ ಹಾಗೆಯೇ ಬಾಟಲಿನಲ್ಲಿ ಇಟ್ಟುಕೊಂಡು ನೋಡುತ್ತಿದ್ದರೆ ನಶೆಯೇರುವುದೇ? ಹಾಗೆಯೇ ಇದೂ ಸಹ ಬುದ್ಧಿಯಲ್ಲಿ ಸಮಾವೇಶವಾಗಿದೆ ಆದರೆ ಇದನ್ನು ಉಪಯೋಗಿಸಿ, ಅದನ್ನು ಸ್ಮೃತಿಯಲ್ಲಿ ತರುವುದು ಎಂದರೆ ಕುಡಿಯುವುದು, ಇಮರ್ಜ್ ಮಾಡಿಕೊಳ್ಳುವುದು. ಇದಕ್ಕೇ ಸ್ಮೃತಿ ಸ್ವರೂಪರಾಗಿ ಎಂದು ಹೇಳುತ್ತಾರೆ. ಬುದ್ಧಿಯಲ್ಲಿ ಕೇವಲ ಸಮಾವೇಶ ಮಾಡಿಟ್ಟುಕೊಳ್ಳಿ ಎಂದು ಹೇಳಿಲ್ಲ. ಜೊತೆಗೆ ಸ್ಮೃತಿ ಸ್ವರೂಪರಾಗಿ. ಎಷ್ಟು ಭಾಗ್ಯಶಾಲಿಗಳಾಗಿದ್ದೀರಿ, ನಿತ್ಯವೂ ತಮ್ಮ ಭಾಗ್ಯವನ್ನು ಸ್ಮೃತಿಯಲ್ಲಿಟ್ಟುಕೊಂಡು ಸಮರ್ಥರಾಗಿ ಮತ್ತು ಹಾರುತ್ತಾ ಇರಿ. ಏನು ಮಾಡಬೇಕೆಂದು ತಿಳಿಯಿತೇ? ಡಬಲ್ ವಿದೇಶಿಯರು ಹದ್ದಿನ ನಶೆಯ ಅನುಭವಿಗಳಂತೂ ಆಗಿದ್ದೀರಿ, ಈಗ ಈ ಬೇಹದ್ದಿನ ನಶೆಯನ್ನು ಸ್ಮೃತಿಯಲ್ಲಿಟ್ಟುಕೊಳ್ಳಿ ಆಗ ಸದಾ ಭಾಗ್ಯದ ಶ್ರೇಷ್ಠ ರೇಖೆಯು ಮಸ್ತಕದಲ್ಲಿ ಹೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣುವುದು. ಈಗಿನ್ನೂ ಕೆಲವರ ರೇಖೆಯು ಸ್ಪಷ್ಟವಾಗಿ ಕಾಣುತ್ತಿಲ್ಲ, ಕೆಲವರದು ಸ್ಪಷ್ಟವಾಗಿ ಕಾಣುತ್ತಿದೆ ಆದರೆ ಸದಾ ಸ್ಮೃತಿಯಲ್ಲಿದ್ದಾಗ ಮಸ್ತಕದಲ್ಲಿ ಹೊಳೆಯುತ್ತಿರುವುದು, ಅನ್ಯರಿಗೂ ಅನುಭವ ಮಾಡಿಸುತ್ತಾ ಇರುತ್ತೀರಿ. ಒಳ್ಳೆಯದು. |
ಸದಾ ಭಗವಂತ ಮತ್ತು ಭಾಗ್ಯ - ಇಂತಹ ಸ್ಮೃತಿ ಸ್ವರೂಪ, ಸಮರ್ಥ ಆತ್ಮರಿಗೆ, ಸದಾ ಪ್ರತೀ ಕರ್ಮದಲ್ಲಿ ಮಾಡುವವನಾಗಿ ಕರ್ಮ ಮಾಡುವ ಶ್ರೇಷ್ಠಾತ್ಮರಿಗೆ, ಸದಾ ಅಮೃತವೇಳೆ ತಂದೆಯ ಜೊತೆ ಶ್ರೇಷ್ಠ ಸ್ಥಾನ, ಶ್ರೇಷ್ಠ ಸ್ಥಿತಿಯಲ್ಲಿ ಸ್ಥಿತರಾಗಿರುವ ಭಾಗ್ಯಶಾಲಿ ಮಕ್ಕಳಿಗೆ, ಸದಾ ತಮ್ಮ ಮಸ್ತಕದ ಮೂಲಕ ಶ್ರೇಷ್ಠ ಭಾಗ್ಯದ ರೇಖೆಗಳನ್ನು ಅನ್ಯರಿಗೂ ಅನುಭವ ಮಾಡಿಸುವ ವಿಶೇಷ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ವಿದಾಯಿ ಸಮಯದಲ್ಲಿ ದಾದಿ ಜಾನಕಿಯವರು ಬಾಂಬೆ ಹಾಗೂ ಕುರುಕ್ಷೇತ್ರದ ಸೇವೆಯಲ್ಲಿ ಹೋಗುವುದಕ್ಕಾಗಿ ಅನುಮತಿ ಪಡೆಯುತ್ತಿದ್ದಾರೆ; |
ಮಹಾರಥಿಗಳು ಪಾದಗಳಲ್ಲಿ ಸೇವೆಯ ಚಕ್ರವಂತು ಇದ್ದೇ ಇದೆ. ಎಲ್ಲಿಯೇ ಹೋಗುತ್ತಾರೆ, ಅಲ್ಲಿ ಸೇವೆಯಿಲ್ಲದೇ ಮತ್ತೇನೂ ಇಲ್ಲ. ಭಲೆ ಯಾವುದೇ ಕಾರಣದಿಂದ ಹೋಗಬಹುದು ಆದರೆ ಸೇವೆಯು ಸಮಾವೇಶವಾಗಿದೆ. ಪ್ರತೀ ಹೆಜ್ಜೆಯಲ್ಲಿ ಸೇವೆಯಿಲ್ಲದೆ ಮತ್ತೇನೂ ಇಲ್ಲ. ಒಂದುವೇಳೆ ನಡೆಯುತ್ತಲೇ ಇರಬಹುದು, ಅದರಲ್ಲಿಯೂ ಸೇವೆಯಿದೆ. ಒಂದುವೇಳೆ ಆಹಾರ ಸೇವನೆ ಮಾಡಬಹುದು, ಯಾರಿಗೆ ನಿಮಂತ್ರಣ ಕೊಟ್ಟು ಉಟೋಪಚಾರ ಮಾಡಬಹುದು, ಸ್ನೇಹದಿಂದ ಸ್ವೀಕಾರ ಮಾಡುತ್ತಾರೆಂದರೂ ಸೇವೆಯಾಯಿತು. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ ಇರುವಾಗಲೂ ಸೇವೆಯೇ ಇದೆ, ಇಂತಹ ಸೇವಾಧಾರಿ ಆಗಿದ್ದೀರಿ. ಸೇವೆಯ ಅವಕಾಶವು ಸಿಗುವುದೂ ಸಹ ಭಾಗ್ಯದ ಸಂಕೇತವಾಗಿದೆ. ಶ್ರೇಷ್ಠ ಚಕ್ರವರ್ತಿ ಆಗಬೇಕೆಂದರೆ ಸೇವೆಯ ಪರಿಕ್ರಮಣವೂ ದೊಡ್ಡದಾಗಿರುತ್ತದೆ. ಒಳ್ಳೆಯದು! |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಧೈರ್ಯ ತರಿಸುತ್ತಾರೆ. ಹೇಗೆ ಲೌಕಿಕ ತಂದೆಯೂ ಸಹ ಧೈರ್ಯ ಕೊಡುತ್ತಾರಲ್ಲವೆ. ಯಾರಾದರೂ ರೋಗಿಯಾದರೆ ಅವರಿಗೆ ಸಮಾಧಾನ ನೀಡುತ್ತಾರೆ - ನಿಮ್ಮ ರೋಗದ ದುಃಖದ ದಿನಗಳು ಬದಲಾಗಿ ಸುಖದ ದಿನಗಳು ಬರುತ್ತವೆ ಎಂದು. ಅಲ್ಲಿ ಹದ್ದಿನ ತಂದೆಯು ಹದ್ದಿನ ಧೈರ್ಯವನ್ನು ತರಿಸುತ್ತಾರೆ, ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ, ಮಕ್ಕಳಿಗೆ ಬೇಹದ್ದಿನ ಧೈರ್ಯವನ್ನು ತರಿಸುತ್ತಿದ್ದಾರೆ - ಮಕ್ಕಳೇ, ಈಗ ನಿಮ್ಮ ಸುಖದ ದಿನಗಳು ಬರುತ್ತಿವೆ. ಇನ್ನು ಕೆಲವೇ ದಿನಗಳಿವೆ, ನೀವೀಗ ತಂದೆಯ ನೆನಪಿನಲ್ಲಿದ್ದು ಅನ್ಯರಿಗೂ ಕಲಿಸಿಕೊಡಿ. ನೀವು ಶಿವಶಕ್ತಿಯರಾಗಿದ್ದೀರಲ್ಲವೆ. ಶಿವ ತಂದೆಯ ಶಕ್ತಿಸೈನ್ಯವು ಪುನಃ ಪ್ರಕಟವಾಗಿದೆ. ಇವರೂ (ಪಾಂಡವರು) ಇದ್ದಾರೆ. ಇವರೆಲ್ಲರೂ ಶಿವನಿಂದ ಶಕ್ತಿಯನ್ನು ತೆಗೆದುಕೊಳ್ಳುತ್ತಾರೆ, ನೀವೂ ಶಕ್ತಿಯನ್ನು ತೆಗೆದುಕೊಳ್ಳುತ್ತೀರಿ, ತಂದೆಯು ತಿಳಿಸಿದ್ದಾರೆ - ಇದರಲ್ಲಿ ಕೃಪೆ ಅಥವಾ ಆಶೀರ್ವಾದದ ಮಾತಿಲ್ಲ. ನೆನಪಿನಲ್ಲಿದ್ದು ಶಕ್ತಿಯನ್ನು ತೆಗೆದುಕೊಳ್ಳುತ್ತಾ ಹೋಗಿರಿ, ನೆನಪಿನಿಂದಲೇ ನಿಮ್ಮ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತವೆ ಮತ್ತು ನೀವು ಶಕ್ತಿವಂತರಾಗುತ್ತಾ ಹೋಗುತ್ತೀರಿ. ಶಿವನ ಶಕ್ತಿ ಸೇನೆಯು ಇಷ್ಟು ಸರ್ವಶಕ್ತಿವಂತನಾಗಿತ್ತು, ಯಾವುದು ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಿ ಹೊಸದನ್ನಾಗಿ ಮಾಡಿ ಬಿಟ್ಟಿತು. ನಿಮಗೆ ತಿಳಿದಿದೆ - ಯೋಗಬಲದಿಂದ ಈ ಹಳೆಯ ಪ್ರಪಂಚವನ್ನೇ ಪರಿವರ್ತಿಸುತ್ತೀರಿ. ಮನುಷ್ಯರು ಬೆರಳು ಮೇಲೆ ಮಾಡಿ ತೋರಿಸಿ ಹೇಳುತ್ತಾರೆ - ಅಲ್ಲಾಹ್ನನ್ನು, ಗಾಡ್ನ್ನು ನೆನಪು ಮಾಡಿರಿ ಎಂದು. ಈಗ ಮಕ್ಕಳಿಗೆ ಅರ್ಥವಾಗಿದೆ - ತಂದೆಯ ನೆನಪಿನಿಂದ ಈ ಕಲ್ಲುಗಳ ಪರ್ವತವು ಅರ್ಥಾತ್ ಪ್ರಪಂಚವು ಪರಿವರ್ತನೆ ಆಗಿ ಬಿಡುವುದು. ನಾವೀಗ ಪರಿಸ್ತಾನವನ್ನು ಸ್ಥಾಪನೆ ಮಾಡುತ್ತಿದ್ದೇವೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಪ್ರದರ್ಶನಿಯಲ್ಲಿ ಹೆಚ್ಚು ಸರ್ವೀಸ್ ಮಾಡಿರಿ, ಪರಿಶ್ರಮ ಪಡಿ. ಸಮಯ ಸಿಕ್ಕಿದಾಗಲೆಲ್ಲಾ ಕುಳಿತು ಕಲಿಯಿರಿ. ಬಹಳ ಸಹಜವಾಗಿದೆ, ಮಕ್ಕಳಿಗೆ ಪ್ರತಿಯೊಂದು ಪ್ರಕಾರದ ಶಿಕ್ಷಣವು ಸಿಗುತ್ತಾ ಇರುತ್ತದೆ. ಪ್ರತಿಯೊಬ್ಬರ ಕರ್ಮಗಳ ಲೆಕ್ಕಾಚಾರವಿದೆ. ಕನ್ಯೆಯರ ಕರ್ಮವು ಒಳ್ಳೆಯದಾಗಿದೆ, ಯಾರಿಗೆ ವಿವಾಹವಾಗಿದೆಯೋ ಅವರು ಹೇಳುತ್ತಾರೆ - ಈ ಸಮಯದಲ್ಲಿ ಒಂದುವೇಳೆ ನಾವು ಕನ್ಯೆಯಾಗಿದ್ದರೆ ಇವೆಲ್ಲಾ ಬಂಧನಗಳಿಂದ ಮುಕ್ತರಾಗಿ ಸ್ವತಂತ್ರ ಪಕ್ಷಿಯಾಗಿರುತ್ತಿದ್ದೆವು. ಕನ್ಯೆಯರು ಸ್ವತಂತ್ರ ಪಕ್ಷಿಗಳಾಗಿದ್ದಾರೆ ಆದರೆ ಕೆಟ್ಟ ಸಂಗದಲ್ಲಿ ಬಂದಾಗ ನಷ್ಟವುಂಟಾಗುತ್ತದೆ. ಸ್ತ್ರೀಯರಿಗೆ ಪುರುಷ ಮತ್ತು ಮಕ್ಕಳು ಮೊದಲಾದವರ ಎಷ್ಟೊಂದು ಬಂಧನವಿರುತ್ತದೆ, ಇದರಲ್ಲಿ ರೀತಿ-ನೀತಿಗಳು ಮೊದಲಾದ ಎಷ್ಟೊಂದು ಬಂಧನಗಳಿರುತ್ತದೆ, ಕನ್ಯೆಯರಿಗೆ ಯಾವುದೇ ಬಂಧನವಿಲ್ಲ. ಬಾಂಬೆಯಲ್ಲಿಯೂ ಕನ್ಯೆಯರು ತಯಾರಾಗುತ್ತಿದ್ದಾರೆ. ನಮ್ಮ ಪ್ರಾಂತ್ಯವನ್ನು ನಾವೇ ಸಂಭಾಲನೆ ಮಾಡಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಎಲ್ಲರೂ ತಮ್ಮ ಪ್ರಾಂತ್ಯಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ನಮ್ಮ ಗುಜರಾತ್, ನಮ್ಮ ಯು.ಪಿ.,... ಎಂದು ಹೇಳುತ್ತಾರೆ. ನೀವು ಈಗ ತಮ್ಮ ಸ್ವರಾಜ್ಯವನ್ನು ಪಡೆಯುತ್ತೀರಿ. ಇದರಲ್ಲಿ ನಾನು ಇಂತಹವನಾಗಿದ್ದೇನೆ, ಇಂತಹ ಪ್ರಾಂತ್ಯದವನಾಗಿದ್ದೇನೆ, ಇದೂ ಸಹ ಇರಬಾರದು. ನಿಮಗೆ ಯಾರೊಂದಿಗೂ ಈರ್ಷ್ಯೆ ಇರಬಾರದು. ಯಾರದೇ ಅವಗುಣವನ್ನು ನೋಡಿ ತಲೆ ಕೆಡಿಸಿಕೊಳ್ಳಬಾರದು. ತಮ್ಮನ್ನು ನೋಡಿಕೊಳ್ಳಿ - ಎಷ್ಟು ಆತ್ಮರಿಗೆ ಅರ್ಥಾತ್ ಸಹೋದರ-ಸಹೋದರಿಯರಿಗೆ ಸುಖದ ಮಾರ್ಗವನ್ನು ತಿಳಿಸಿದ್ದೇವೆ! ಒಂದುವೇಳೆ ಮಾರ್ಗವನ್ನು ತಿಳಿಸಿಲಿಲ್ಲವೆಂದರೆ ಅವರೇನೂ ಪ್ರಯೋಜನಕ್ಕಿಲ್ಲ. ತಂದೆಯ ಹೃದಯವನ್ನೇರಲು ಸಾಧ್ಯವಿಲ್ಲ. ಬಾಪ್ದಾದಾರವರ ಹೃದಯವನ್ನೇರದಿದ್ದರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುವುದಕ್ಕೂ ಸಾಧ್ಯವಿಲ್ಲ. ತಂದೆಗೆ ಗೊತ್ತಿದೆ, ಕೆಲ ಕೆಲವು ಮಕ್ಕಳಿಗೆ ಸೇವೆಯ ಬಹಳ ಉಮ್ಮಂಗವಿದೆ, ಸ್ವಲ್ಪವೂ ದೇಹಾಭಿಮಾನವಿಲ್ಲ. ಕೆಲವರಂತೂ ಬಹಳ ಅಹಂಕಾರದಲ್ಲಿರುತ್ತಾರೆ. ತನ್ನ ಮೇಲೆ ಕೃಪೆಯಲ್ಲ, ತಂದೆಯ ಮೇಲೆ ಕೃಪೆ ತೋರುತ್ತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಎಂದೂ ಯಾರದೇ ಅವಗುಣವನ್ನು ನೋಡಬಾರದು, ಇಂತಹವರು ಹೀಗಿದ್ದಾರೆ, ಹೀಗೆ ಮಾಡುತ್ತಾರೆ, ಇದೇನೂ ಮಾಡಬಾರದು. ಇಂತಹ ಬುದ್ಧಿವಂತರೂ ಇದ್ದಾರೆ ಒಬ್ಬರು ಇನ್ನೊಬ್ಬರ ಡಿಸ್ಸರ್ವೀಸ್ನ ಗಾಯನ ಮಾಡುತ್ತಾರೆ, ಇಂತಹವರು ಹೀಗೆ ಮಾಡುತ್ತಾರೆ, ಹೀಗೆ ಮಾಡುತ್ತಾರೆ ಎಂದು. ಅರೆ! ನೀವು ತಮ್ಮ ಸರ್ವೀಸ್ ಮಾಡಿ, ಸರ್ವೀಸಿನಲ್ಲಿ ತೊಡಗುವುದು ಬ್ರಾಹ್ಮಣ ಮಕ್ಕಳ ಕರ್ತವ್ಯವಾಗಿದೆ. ತಂದೆಯು ಕುಳಿತಿದ್ದಾರೆ, ತಂದೆಯ ಬಳಿ ಎಲ್ಲಾ ಸಮಾಚಾರವು ಬರುತ್ತದೆ. ಪ್ರತಿಯೊಬ್ಬರ ಸ್ಥಿತಿಯನ್ನು ತಂದೆಯು ತಿಳಿದುಕೊಂಡಿದ್ದಾರೆ. ಸರ್ವೀಸನ್ನು ನೋಡಿ ಮಹಿಮೆ ಮಾಡುತ್ತಾರೆ, ಮಕ್ಕಳಲ್ಲಿ ಸರ್ವೀಸಿನ ಹುರುಪು ಬರಬೇಕಾಗಿದೆ. ಈ ಆತ್ಮಿಕ ಸೇವೆಯಿಂದ ಪ್ರತಿಯೊಬ್ಬರೂ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ, ಆ ಉದ್ಯೋಗ-ವ್ಯಾಪಾರವನ್ನಂತೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿರಿ. ಈ ವ್ಯಾಪಾರವನ್ನು ಕೆಲವರೇ ವಿರಳ ವ್ಯಾಪಾರಿಗಳು ಮಾಡುವರು. ತಂದೆಯು ಸರ್ವೀಸಿನ ಬಹಳ ಸಹಜ ವಿಧಾನವನ್ನು ತಿಳಿಸುತ್ತಾರೆ, ಎಂದಿಗೂ ಇನ್ನೊಬ್ಬರ ನಿಂದನೆ ಮಾಡಬೇಡಿ. ಅನೇಕರು ಈ ರೀತಿ ಮಾಡುತ್ತಾರೆ. ಒಳ್ಳೊಳ್ಳೆಯ ಮಹಾರಥಿಗಳನ್ನೂ ಸಹ ಮಾಯೆಯು ಮೂಗನ್ನು ಹಿಡಿದುಕೊಳ್ಳುತ್ತದೆ, ತಂದೆಯನ್ನು ನೆನಪು ಮಾಡದಿದ್ದರೆ ಮಾಯೆಯು ಹಿಡಿದುಕೊಳ್ಳುವುದು. ತಂದೆಯೂ ಹೇಳುತ್ತಾರಲ್ಲವೆ, ನಾನು ಸಾಧಾರಣ ತನುವಿನಲ್ಲಿ ಬಂದಿರುವುದನ್ನು ನೋಡಿ ನನ್ನನ್ನು ಗುರುತಿಸುವುದಿಲ್ಲ. ಆದ್ದರಿಂದ ತಂದೆಗೂ ಸಹ ಹೀಗ್ಹೀಗೆ ಮಾಡಬೇಕೆಂದು ಸಲಹೆ ಕೊಡುತ್ತಾರೆ. ಸ್ಥಿತಿಯು ಈ ರೀತಿಯಿರುತ್ತದೆ, ಅಂತಹವರಿಗೆ ತಂದೆಯು ಸ್ವಲ್ಪ ಏನಾದರೂ ಹೇಳಿದರೂ ಸಹ ವಿರೋಧಿಗಳಾಗಿ ಬಿಡುತ್ತಾರೆ. ತಂದೆಗೂ ತಮ್ಮ ಮತವನ್ನು ಕಳುಹಿಸುತ್ತಾರೆ. ಗಾದೆಯಿದೆಯಲ್ಲವೆ - ಇಲಿಗೆ ಹರಿಶಿನ ಕೊಂಬು ಸಿಕ್ಕಿದ ಕೂಡಲೇ ನಾನೇ ಅಂಗಡಿ ಮಾಲೀಕನೆಂದು ತಿಳಿದುಕೊಂಡಿತು.... ನಾವು ಡಿಸ್ಸರ್ವೀಸ್ ಮಾಡುತ್ತೇವೆಂದೂ ತಿಳಿದುಕೊಳ್ಳುವುದಿಲ್ಲ, ತಪ್ಪುಗಳಂತೂ ಅನೇಕರಿಂದ ಆಗುತ್ತಿರುತ್ತವೆ. ಸ್ಥಿತಿಯು ಕೆಲವೊಮ್ಮೆ ಉತ್ತಮ, ಕೆಲವೊಮ್ಮೆ ಕನಿಷ್ಟ, ಹೀಗೆ ನಡೆಯುತ್ತಾ ಬಂದಿದೆ. ಪ್ರತಿಯೊಬ್ಬರೂ ತಮ್ಮ ಮನೋಸ್ಥಿತಿಯನ್ನು ನೋಡಿಕೊಳ್ಳಿ, ಪ್ರಾಮಾಣಿಕ ಮಕ್ಕಳು ತಮ್ಮ ಸ್ಥಿತಿಯನ್ನು ಕೂಡಲೇ ತಿಳಿಸಿ ಬಿಡುತ್ತಾರೆ, ಕೆಲವರಂತೂ ತಮ್ಮ ತಪ್ಪುಗಳನ್ನು ಬಚ್ಚಿಟ್ಟುಕೊಳ್ಳುತ್ತಾರೆ. ಇಲ್ಲಂತೂ ಬಹಳ ನಿರಹಂಕಾರಿತನವಿರಬೇಕು. ಸರ್ವೀಸನ್ನು ವೃದ್ಧಿ ಪಡಿಸುವುದರಲ್ಲಿ ತೊಡಗಬೇಕು. ಯಾವಾಗಲೂ ಈ ಸಂಕಲ್ಪವಿರಲಿ - ಎಂತಹ ಕರ್ಮವನ್ನು ನಾನು ಮಾಡುವೆನೋ ನನ್ನನ್ನು ನೋಡಿ ಅನ್ಯರು ಮಾಡುವರು. ನಾನು ಯಾರದೇ ನಿಂದನೆ ಮಾಡುತ್ತೇನೆಂದರೆ ಅನ್ಯರೂ ಮಾಡತೊಡಗುವರು. ಅನೇಕರಿಗೆ ಈ ಗಮನವಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ತಮ್ಮ ಸರ್ವೀಸಿನಲ್ಲಿ ತೊಡಗಿರಿ ಇಲ್ಲದಿದ್ದರೆ ಬಹಳ ಪಶ್ಚಾತ್ತಾಪ ಪಡುವಿರಿ. ಅನೇಕರು ಶತ್ರುಗಳೂ ಆಗುತ್ತಾರೆ. |
ನೀವೀಗ ಶೂದ್ರರಿಂದ ಬದಲಾಗಿ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿ ಬಿಟ್ಟಿರಿ. ಯಾರಲ್ಲಿ 5 ವಿಕಾರಗಳಿದೆಯೋ ಅವರು ಆಸುರೀ ಸಂಪ್ರದಾಯದವರಾಗಿದ್ದಾರೆ. ನೀವು ದೈವೀ ಸಂಪ್ರದಾಯದವರಾಗಿದ್ದೀರಿ, ದೇವತೆಗಳಾಗುವುದಕ್ಕಾಗಿ ನೀವು ವಿಕಾರಗಳ ಮೇಲೆ ವಿಜಯ ಗಳಿಸುತ್ತಿದ್ದೀರಿ. ದೇವತೆಗಳಂತೂ ಇಲ್ಲಿ ಇಲ್ಲ, ದೇವತೆಗಳು ಸತ್ಯಯುಗದಲ್ಲಿರುತ್ತಾರೆ. ನೀವೀಗ ದೈವೀ ಸಂಪ್ರದಾಯದವರಾಗುತ್ತಿದ್ದೀರಿ. |
ನೀವು ಮಕ್ಕಳಿಗೆ ಈಗ ತಿಳಿಸುವುದಕ್ಕಾಗಿ ಅವಕಾಶ ಸಿಗುತ್ತದೆ ಅಂದಮೇಲೆ ಪ್ರದರ್ಶನಿಯಲ್ಲಿ ತಿಳಿಸುತ್ತಾ ಇರಿ. ಪ್ರದರ್ಶನಿ, ಮೇಳಗಳಲ್ಲಿ ಪ್ರತಿಯೊಬ್ಬರ ನಾಡಿಯ ಬಗ್ಗೆ ಅರ್ಥವಾಗುತ್ತದೆ. ಪೋಜೆಕ್ಟರ್ನಲ್ಲಿ ಯಾರಿಗೂ ತಿಳಿಸುವುದಕ್ಕೆ ಆಗುವುದಿಲ್ಲ, ಸನ್ಮುಖದಲ್ಲಿ ತಿಳಿಸುವುದರಿಂದಲೇ ಮನುಷ್ಯರಿಗೆ ಅರ್ಥವಾಗುವುದು ಆದ್ದರಿಂದ ಪ್ರದರ್ಶನಿ, ಮೇಳವು ಒಳ್ಳೆಯ ಸಾಧನವಾಗಿದೆ. ಅದರಲ್ಲಿ ಬರೆಯಲೂಬಹುದು. ಪ್ರದರ್ಶನಿ, ಮೇಳ ಮಾಡುವ ಉಮಂಗವಿರಬೇಕು, ನಿಯಮಿತವಾಗಿ ಓದುವುದರಿಂದಲೇ ನಶೆಯಿರುವುದು. ಒಂದುವೇಳೆ ಬಂಧನದಲ್ಲಿರುವವರಾದರೆ ಮನೆಯಲ್ಲಿದ್ದು ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ವಿಕರ್ಮಗಳು ವಿನಾಶವಾಗುವವು. ಮನೆಯಲ್ಲಿ ಕುಳಿತುಕೊಂಡು ನೆನಪು ಮಾಡುವುದೂ ಸಹ ಒಳ್ಳೆಯದಾಗಿದೆ. ಆದರೆ ನೆನಪು ಮಾಡುವುದು ಎಂದರೆ ಮಕ್ಕಳಿಗೆ ಬಹಳ ಕಷ್ಟದ ಮಾತಾಗಿ ಬಿಟ್ಟಿದೆ. ಯಾವ ತಂದೆಯಿಂದ 21 ಜನ್ಮಗಳ ಆಸ್ತಿ ಸಿಗುತ್ತದೆಯೋ ಅವರನ್ನೇ ನೆನಪು ಮಾಡುವುದಿಲ್ಲ. ಒಳ್ಳೊಳ್ಳೆಯ ಭಾಷಣ ಮಾಡುವಂತಹ ಮಕ್ಕಳೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ. ಅಮೃತವೇಳೆ ಏಳುವುದಿಲ್ಲ, ಎದ್ದರೂ ಕುಳಿತ ಕೂಡಲೇ ತೂಕಡಿಸುತ್ತಾರೆ. ನೆನಪು ಮಾಡುವುದಕ್ಕಾಗಿ ಮುಂಜಾನೆಯ ಸಮಯವು ಬಹಳ ಒಳ್ಳೆಯದಾಗಿದೆ. ಭಕ್ತಿಮಾರ್ಗದಲ್ಲಿ ಮುಂಜಾನೆ ಎದ್ದು ತೊಡಗುತ್ತಾರೆ. ಅವರದು ಇಳಿಯುವ ಕಲೆಯಾಗಿದೆ, ಇಲ್ಲಂತೂ ಏರುವ ಮಾತಾಗಿದೆ. ಮಾಯೆಯು ಎಷ್ಟೊಂದು ವಿಘ್ನಗಳನ್ನು ಹಾಕುತ್ತದೆ. ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡದಿದ್ದರೆ ಧಾರಣೆ ಹೇಗಾಗುವುದು, ಹೇಗೆ ವಿಕರ್ಮ ವಿನಾಶವಾಗುವುದು! ಕೇವಲ ಮುರುಳಿಯನ್ನು ತಿಳಿಸುವುದಂತೂ ಚಿಕ್ಕ ಮಕ್ಕಳೂ ಸಹ ಕಲಿತು ತಿಳಿಸಬಲ್ಲರು. ಈ ವಿದ್ಯೆಯು ದೊಡ್ಡವರಿಗಾಗಿ ಇದೆ, ಇದು ಎಷ್ಟು ದೊಡ್ಡ ವಿಶ್ವ ವಿದ್ಯಾಲಯವಾಗಿದೆ, ನಮಗೆ ಓದಿಸುವವರು ಯಾರು! ಎಂಬುದು ಮಕ್ಕಳಿಗೆ ನಶೆಯಿರುವುದಿಲ್ಲ. ಮಾಯೆಯು ಯಾರಿಗಾದರೂ ಮೋಸ ಮಾಡುತ್ತದೆಯೆಂದರೆ ಅಂತಹವರನ್ನು ನಾವು ನೋಡದೇ ನಮ್ಮ ಸರ್ವೀಸಿನಲ್ಲಿ ತೊಡಗಿರಬೇಕಾಗಿದೆ. ತಂದೆಯ ಬಳಿ ಎಲ್ಲಾ ಸಮಾಚಾರಗಳೂ ಬರುತ್ತಿರುತ್ತವೆ, ಕೆಲವರು ದೇಹಾಭಿಮಾನದಲ್ಲಿ ಬಂದು ಇವರು ಹೀಗೆ ಮಾಡುತ್ತಾರೆ, ಹಾಗೆ ಮಾಡುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಅನ್ಯರ ನಿಂದನೆ ಮಾಡುತ್ತಾ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಸರ್ವೀಸಿನಲ್ಲಿರುವುದು ನಿಮ್ಮ ಕರ್ತವ್ಯವಾಗಿದೆ. ಯಾವುದೇ ಮಾತಿದ್ದರೆ ತಂದೆಗೆ ತಿಳಿಸಿ ಬಿಟ್ಟು ಬಿಡಬೇಕಾಗಿದೆ, ಪರಚಿಂತನೆ ಮಾಡಬಾರದು. ಮಕ್ಕಳು ದಿನ-ರಾತ್ರಿ ಸರ್ವೀಸಿನಲ್ಲಿ ತೊಡಗಬೇಕು. ನಿಮ್ಮ ಕರ್ತವ್ಯವೇ ಇದಾಗಿದೆ, ಪ್ರತಿನಿತ್ಯವೂ ಪ್ರದರ್ಶನಿಯಲ್ಲಿ ತಿಳಿಸಿರಿ. ಇವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ಕಲ್ಪದ ಮೊದಲೂ ಸಹ ಪ್ರಜಾಪಿತ ಬ್ರಹ್ಮಾರವರ ಗಾಯನವಿದೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ತಂದೆಯು ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಅಂದರೆ ಇದರ ಅರ್ಥವು ಮನುಷ್ಯರು ಇರಲೇ ಇಲ್ಲವೆಂದಲ್ಲ. ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಎಂದರೆ ಅರ್ಥ ಮುಳ್ಳುಗಳಂತೆ ಇರುವವರನ್ನು ಹೂಗಳನ್ನಾಗಿ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆಂದರೆ ಮೇಲೇನೂ ರಚಿಸುವುದಿಲ್ಲ. ಬ್ರಹ್ಮಾರವರು ಇಲ್ಲಿಯೇ ಇರಬೇಕಲ್ಲವೆ. ಇದನ್ನು ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ! |
ತಂದೆಯು ತಿಳಿಸುತ್ತಾರೆ - ನಾನು ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಪ್ರವೇಶ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡುತ್ತೇನೆ, ಆದ್ದರಿಂದ ಮಕ್ಕಳು ಸರ್ವೀಸಿನಲ್ಲಿ ಹಗಲು-ರಾತ್ರಿ ಪರಿಶ್ರಮ ಪಡಬೇಕಾಗಿದೆ. ಉದ್ಯೋಗ ವ್ಯವಹಾರಗಳಿಂದ ಸ್ವಲ್ಪ ಸಮಯವನ್ನು ತೆಗೆದು ಇದರಲ್ಲಿ ತೊಡಗಬೇಕಾಗಿದೆ. ಬಿಡುವು ಸಿಗುವುದಿಲ್ಲವೆಂದಲ್ಲ. ಒಂದುವೇಳೆ ಖಾಯಿಲೆ ಬಂದರೆ ಆಗ ಬಿಡುವಿಲ್ಲವೆಂದು ಹೇಳುವಿರಾ? ಆದ್ದರಿಂದ ಪುರುಷಾರ್ಥ ಮಾಡಬೇಕಾಗಿದೆ, ಪ್ರೇರಣೆಯಿಂದ ಏನೂ ಆಗುವುದಿಲ್ಲ, ಭಗವಂತನಿಂದಲೇ ಪ್ರೇರಣೆಯ ಮೂಲಕ ಏನೂ ಆಗಲು ಸಾಧ್ಯವಿಲ್ಲ ಅಂದಮೇಲೆ ಅನ್ಯರಿಂದ ಹೇಗಾಗುವುದು! ಭಗವಂತನು ಏನು ತಾನೆ ಮಾಡಲು ಸಾಧ್ಯವಿಲ್ಲ, ಸತ್ತಿರುವವರನ್ನು ಬದುಕಿಸಬಲ್ಲರು ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಅರೆ! ಭಗವಂತನಿಗೆ ನೀವು ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಹೇಳುತ್ತೀರಿ. ಮತ್ತ್ಯಾವುದೇ ಮಾತನ್ನು ಹೇಳುವುದಿಲ್ಲ. ಬಂದು ಸತ್ತವರನ್ನು ಬದುಕಿಸಿ ಎಂದು ಹೇಳುತ್ತೀರೇನು! ಅವರು ಪತಿತ-ಪಾವನನಾಗಿದ್ದಾರೆ, ಭಾರತವು ಪಾವನವಾಗಿತ್ತಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ಪಾವನರನ್ನಾಗಿ ಮಾಡುತ್ತೇನೆ, ಮತ್ತೆ ಮಾಯೆಯು ಬಂದು ಪತಿತರನ್ನಾಗಿ ಮಾಡುತ್ತದೆ, ಈಗ ಪುನಃ ಪಾವನರನ್ನಾಗಿ ಮಾಡಲು ನಾನು ಬಂದಿದ್ದೇನೆ. ಎಷ್ಟು ಸಹಜ ಮಾತನ್ನು ತಿಳಿಸುತ್ತಾರೆ. ನಾಟಿ ವೈದ್ಯರು ದೊಡ್ಡ ಖಾಯಿಲೆಯನ್ನೂ ಸಹ ಗಿಡ ಮೂಲಿಕೆಗಳಿಂದ ಸರಿಪಡಿಸುತ್ತಾರೆ ಆಗ ಅವರಿಗೆ ಮಹಿಮೆಯು ಆಗುತ್ತದೆ, ಯಾರಿಗಾದರೂ ಮಗುವಾಯಿತು ಅಥವಾ ಹಣ ಸಿಕ್ಕಿತೆಂದರೆ ಗುರುವಿನ ಕೃಪೆಯಾಯಿತೆಂದು ಹೇಳುತ್ತಾರೆ. ಒಳ್ಳೆಯದು, ಮಗುವು ಸತ್ತು ಹೋದರೆ ಇದು ಈಶ್ವರನ ಲೀಲೆಯೆಂದು ಹೇಳುತ್ತಾರೆ. ಇವೆಲ್ಲಾ ಮಾತುಗಳನ್ನು ಈಗ ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ. ಸನ್ಯಾಸಿಗಳು ಪವಿತ್ರರಾಗುತ್ತಾರೆಂದರೆ ಅವರಿಗೆ ಬಹಳ ಮಾನ್ಯತೆಯಿರುತ್ತದೆ ಆದರೆ ಅವರು ಹಠಯೋಗಿಗಳಾಗಿದ್ದಾರೆ, ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ, ಅವರು ಸನ್ಯಾಸಿಗಳು, ನಾವು ಗೃಹಸ್ಥಿಗಳಾಗಿದ್ದೇವೆ ಅಂದಮೇಲೆ ನಾನು ನಮ್ಮನ್ನು ಅನುಯಾಯಿಗಳೆಂದು ಕರೆಸಿಕೊಳ್ಳಲು ಹೇಗೆ ಸಾಧ್ಯ! ತಂದೆಯು ತಿಳಿಸುತ್ತಾರೆ - ಮಕ್ಕಳು ಸಂಪೂರ್ಣ ಫಾಲೋ ಮಾಡಬೇಕಾಗಿದೆ - ಮನ್ಮನಾಭವ, ನನ್ನನ್ನು ನೆನಪು ಮಾಡಿದರೆ ನೀವು ಪವಿತ್ರರಾಗುವಿರಿ ಮತ್ತು ನನ್ನ ಜೊತೆ ಬರುವಿರಿ, ನಾನಂತೂ ಸದಾ ಪಾವನನಾಗಿದ್ದೇನೆ. ಮನುಷ್ಯರು ಪತಿತರನ್ನಾಗಿ ಮಾಡುತ್ತಾರೆ, ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ. ಅವರು ಪವಿತ್ರತೆ, ಸುಖ-ಶಾಂತಿಯ ಸಾಗರನಾಗಿದ್ದಾರೆ, ನಿಮ್ಮನ್ನು ಅದೇರೀತಿ ಮಾಡುತ್ತಿದ್ದಾರೆ. ನೀವು ಯೋಗಬಲದಿಂದ ಆತ್ಮವನ್ನು ಪವಿತ್ರವನ್ನಾಗಿ ಮಾಡಿಕೊಳ್ಳುತ್ತೀರಿ. ನಮಗೆ ಸುಂದರ ಶರೀರ ಸಿಗುವುದೆಂದು ನಿಮಗೆ ತಿಳಿದಿದೆ, ಮನುಷ್ಯರನ್ನು ಪ್ರತ್ಯಕ್ಷದಲ್ಲಿ ದೇವತೆಗಳನ್ನಾಗಿ ಮಾಡಬೇಕಾಗಿದೆ. ಕೇವಲ ದೇವತೆಗಳ ಉಡುಪುಗಳನ್ನು ಧರಿಸಿದರೆ ಸಾಕು ಎಂದಲ್ಲ. ತಮ್ಮಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ, ದೇಹಾಭಿಮಾನ ಬರಬಾರದು. ಬಾಬಾ, ನಾವಂತೂ ತಮ್ಮಿಂದ ಆಸ್ತಿಯನ್ನು ಪಡೆದೇ ತೀರುತ್ತೇವೆ. ನಾವು ಭಾರತವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡಿಯೇ ತೀರುತ್ತೇವೆ. ನಿಶ್ಚಯ ಬುದ್ಧಿಯವರೇ ಹೇಳುತ್ತಾರಲ್ಲವೆ. ಕೆಲವರಂತೂ ಇಷ್ಟು ಸ್ವಲ್ಪ ಸಮಯದಲ್ಲಿ ಹೇಗಾಗುವುದೋ ಎಂದು ಹೇಳುತ್ತಾರೆ. ವಾಸ್ತವದಲ್ಲಿ ಎಂದೂ ಈ ಸಂಶಯವನ್ನು ತರಬಾರದು. ಸಂಶಯದಲ್ಲಿ ಬಂದರೆ ಮತ್ತೆ ಸರ್ವೀಸಿನಲ್ಲಿ ಹಿಂದುಳಿಯುತ್ತೀರಿ, ಸಮಯವು ಬಹಳ ಕಡಿಮೆಯಿದೆ. ಎಷ್ಟು ಸಾಧ್ಯವೋ ತೀವ್ರ ಪುರುಷಾರ್ಥ ಮಾಡಬೇಕಾಗಿದೆ. ಸ್ವಲ್ಪ ಯುದ್ಧ ಮೊದಲಾದವುಗಳ ಸೂಚನೆಗಳು ಕಾಣಿಸಿಕೊಂಡರೆ ನಂತರ ನೋಡಿ, ಎಷ್ಟು ಪರಿಶ್ರಮ ಪಡುತ್ತಾರೆ. ನಾವು ಪೂರ್ಣ ನೆನಪಿನಲ್ಲಿ ಇರಲಿಲ್ಲವೆಂದರೆ ಆ ಸಮಯದಲ್ಲಂತೂ ನಾವು ಮಾಡಿ ಬಿಡಲು ಸಾಧ್ಯವಿಲ್ಲ ಎಂಬುದು ಅರ್ಥವಾಗುತ್ತದೆಯಲ್ಲವೆ. ಆ ಸಮಯದಲ್ಲಂತೂ ಬಹಳ ಆಪತ್ತುಗಳಿರುತ್ತವೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ಈಗಲೇ ತೀವ್ರ ಪುರುಷಾರ್ಥ ಮಾಡಿರಿ. ಇದು ಆತ್ಮಗಳ ಸ್ಪರ್ಧೆಯಾಗಿದೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಗುರಿಯನ್ನು ತಲುಪಿ ಅರ್ಥಾತ್ ತಂದೆಯ ಮನೆಗೆ ಹೋಗಿ ಮತ್ತೆ ಹೊಸ ಪ್ರಪಂಚದಲ್ಲಿ ಬರಬೇಕಾಗಿದೆ, ಇದು ಬಹಳ ಒಳ್ಳೆಯ ಸ್ಪರ್ಧೆಯಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ಮುಟ್ಟಿ ಅರ್ಥಾತ್ ಮೂಲ ಮನೆಗೆ ಹೋಗಿ ಪುನಃ ಬರಬೇಕಾಗಿದೆ. ಮೊಟ್ಟ ಮೊದಲು ಯಾರು ಯೋಗ ಯುಕ್ತರಾಗಿರುವರೋ ಅವರೇ ಬರುತ್ತಾರೆ. ನಾವು ಮುಕ್ತಿಧಾಮಕ್ಕೆ ಹೋಗಬೇಕೆಂದು ಬಯಸುತ್ತಾರೆ. ಆದ್ದರಿಂದ ತಂದೆಯು ತಿಳಿಸುವುದೇನೆಂದರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು ಮುಕ್ತಿಧಾಮಕ್ಕೆ ಬರುವಿರಿ. ಮುಕ್ತಿಧಾಮವಂತೂ ಎಲ್ಲರಿಗೂ ಇಷ್ಟವಿದೆ, ಪುನಃ ಪಾತ್ರವನ್ನು ಅಭಿನಯಿಸಲು ಇಲ್ಲಿಗೇ ಬರುತ್ತೀರಿ. ಮೋಕ್ಷವು ಯಾರಿಗೂ ಸಿಗುವುದಿಲ್ಲ. ಈಶ್ವರೀಯ ಇತಿಹಾಸ-ಭೂಗೋಳದಲ್ಲಿ ಮೋಕ್ಷವೆಂಬ ಪದವಿಲ್ಲ. ನಿಮಗೆ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ. ಉಳಿದೆಲ್ಲರೂ ಮುಕ್ತರಾಗಿ ಬಿಡುತ್ತಾರೆ. ರಾವಣ ರಾಜ್ಯದಿಂದ ಮುಕ್ತರಾಗಲೇಬೇಕಾಗಿದೆ. ಯಾರು ಪುರುಷಾರ್ಥ ಮಾಡುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ಮಕ್ಕಳು ಬಹಳ ಮಧುರರಾಗಬೇಕಾಗಿದೆ, ಸ್ವಭಾವವು ಬಹಳ ಮಧುರವಾಗಿರಲಿ, ಕ್ರೋಧಿಗಳಾಗಬಾರದು. ದುರ್ವಾಸ ಮುನಿಯ ಹೆಸರಿದೆಯಲ್ಲವೆ. ಈ ರಾಜಋಷಿಗಳಲ್ಲಿಯೂ ಕೆಲಕೆಲವರು ಈ ರೀತಿಯಿದ್ದಾರೆ ಆದ್ದರಿಂದ ಸದಾ ತಮ್ಮ ಹೃದಯದ ಮೇಲೆ ಕೈಯಿಟ್ಟು ಕೇಳಿಕೊಳ್ಳಿ - ನಾನು ಏನು ಮಾಡುತ್ತೇನೆ! ಇದರಿಂದ ನನಗೆ ಏನು ಪದವಿ ಸಿಗುವುದು! ಒಂದುವೇಳೆ ಸರ್ವೀಸ್ ಮಾಡಲಿಲ್ಲ, ತನ್ನ ಸಮಾನರನ್ನಾಗಿ ಮಾಡಿಕೊಳ್ಳದಿದ್ದರೆ ಏನು ಪದವಿ ಸಿಗುವುದು, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬಾರದು. ನೀವು ಮಕ್ಕಳಿಗೂ ಸಂಪೂರ್ಣ ರಾಜ್ಯವನ್ನು ಕೊಡುವುದಕ್ಕಾಗಿ ನಾನು ಬಂದಿದ್ದೇನೆ ಅಂದಮೇಲೆ ಸಾಹಸವನ್ನಿಟ್ಟು ಮಾಡಿ ತೋರಿಸಬೇಕಾಗಿದೆ. ಕೇವಲ ಕೇಳುವುದರಿಂದ ಏನೂ ಸಾಧ್ಯವಿಲ್ಲ. ತಂದೆಯ ಸೇವೆಯಲ್ಲಿ ತಮ್ಮ ಮೂಳೆ-ಮೂಳೆಗಳನ್ನು ಉಪಯೋಗಿಸಬೇಕಾಗಿದೆ. ಮಾಡಿಯೂ ಮಾಡುತ್ತಾರೆ ಆದರೆ ಕೆಲವೊಮ್ಮೆ ದೇಹಾಭಿಮಾನವು ಬರುವುದರಿಂದ ನಶೆಯು ಬಂದು ಬಿಡುತ್ತದೆ ಮತ್ತು ಕೆಳಗೆ ಬೀಳುತ್ತಾರೆ. ಮಾಯೆಯೂ ಸಹ ಕಡಿಮೆ ಶಕ್ತಿಶಾಲಿಯಲ್ಲ, ತಂದೆಯ ಶ್ರೀಮತದಂತೆ ನಡೆಯದಿದ್ದರೆ ಮಾಯೆಯು ಯುದ್ಧ ಮಾಡುತ್ತದೆ ಆಗ ತಂದೆಗೆ ವಿಚ್ಛೇದನ ಕೊಟ್ಟು ಬಿಡುತ್ತಾರೆ. ತಂದೆಯು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ತಮ್ಮ ಮೇಲೆ ದಯೆ ಬರಬೇಕು. ತಂದೆಯು ಬಹಳ ಸಹಜವಾದ ಸೂಚನೆ ನೀಡುತ್ತಾರೆ. ಮಾಯೆಯ ಬಿರುಗಾಳಿಗಳಂತೂ ಬಹಳ ಬರುತ್ತವೆ ಆದರೆ ಮಹಾವೀರರಾಗಬೇಕಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸರ್ವೀಸಿನ ಉಮಂಗವನ್ನು ಇಟ್ಟುಕೊಂಡು ತಮ್ಮ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಯಾರದೇ ಡಿಸ್ಸರ್ವೀಸ್ನ ಗಾಯನ ಮಾಡಬಾರದು. ಪರಚಿಂತನೆಯಲ್ಲಿ ತಮ್ಮ ಸಮಯವನ್ನು ಕಳೆಯಬಾರದು. |
2. ಪ್ರಾಮಾಣಿಕ ಹಾಗೂ ನಿರಹಂಕಾರಿಯಾಗಿ ಸೇವೆಯನ್ನು ವೃದ್ಧಿ ಪಡಿಸಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಎದ್ದು ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ನುಡಿಯುವುದು ಮತ್ತು ನಡೆಯುವುದು ಸಮಾನವನ್ನಾಗಿ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಅರ್ಥಾತ್ ಶಿವ ತಂದೆ ಯಾರು ಪರಮಾತ್ಮನಾಗಿದ್ದಾರೆಯೋ ಅವರ ಮಕ್ಕಳಾದ ಆತ್ಮರು ಶರೀರರೂಪಿ ಕರ್ಮೇಂದ್ರಿಯಗಳ ಮೂಲಕ ಗೀತೆಯನ್ನು ಕೇಳಿದಿರಿ. ಈಗ ಮಕ್ಕಳು ಆತ್ಮಾಭಿಮಾನಿಗಳಾಗಬೇಕಾಗಿದೆ, ಬಹಳ ಪರಿಶ್ರಮವೂ ಇದೆ. ಪುನಃ-ಪುನಃ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ, ಇದು ಗುಪ್ತ ಪರಿಶ್ರಮವಾಗಿದೆ. ತಂದೆಯು ಗುಪ್ತವಾದ್ದರಿಂದ ಗುಪ್ತ ಪರಿಶ್ರಮ ಮಾಡಿಸುತ್ತಾರೆ. ಸ್ವಯಂ ತಂದೆಯೇ ಬಂದು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಇದರಿಂದ 5000 ವರ್ಷಗಳ ಹಿಂದಿನ ತರಹ ಸತೋಪ್ರಧಾನರಾಗುವಿರಿ. ಮಕ್ಕಳಿಗೆ ತಿಳಿದಿದೆ - ನಾವೇ ಸತೋಪ್ರಧಾನರಾಗಿದ್ದೆವು ಮತ್ತೆ ನಾವೇ ಈಗ ತಮೋಪ್ರಧಾನರಾಗಿದ್ದೇವೆ. ಪುನಃ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಗೀತೆಯಲ್ಲಿಯೂ ಹಾಡುತ್ತಾರೆ, ಯಾವ ಅದೃಷ್ಟವನ್ನು ಕಳೆದುಕೊಂಡಿದ್ದಾರೆಯೋ ಅದನ್ನು ಪುನಃ ಪಡೆಯುವುದಕ್ಕಾಗಿ ಪುರುಷಾರ್ಥ ಮಾಡಿಸುವವರು ಒಬ್ಬರೇ ಸರ್ವಶಕ್ತಿವಂತ ತಂದೆಯಾಗಿದ್ದಾರೆ ಏಕೆಂದರೆ ಎಲ್ಲರನ್ನೂ ಪಾವನರನ್ನಾಗಿ ಮಾಡುತ್ತಾರಲ್ಲವೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಹೇಗೆ ಆತ್ಮಿಕ ಮಕ್ಕಳೇ, ಈಗ ಅದೃಷ್ಟವನ್ನು ರೂಪಿಸಿಕೊಳ್ಳಲು ಬಂದಿದ್ದೀರಿ. ವಿದ್ಯಾರ್ಥಿಗಳು ಅದೃಷ್ಟವನ್ನು ರೂಪಿಸಿಕೊಳ್ಳಲು ಶಾಲೆಗೆ ಹೋಗುತ್ತಾರಲ್ಲವೆ. ಅವರಂತೂ ಚಿಕ್ಕ ಮಕ್ಕಳಾಗಿರುತ್ತಾರೆ. ನೀವು ಚಿಕ್ಕವರಲ್ಲ, ನೀವಂತೂ ವಾನಪ್ರಸ್ಥಿಗಳಾಗಿದ್ದೀರಿ. ಅದೃಷ್ಟವನ್ನು ರೂಪಿಸಿಕೊಳ್ಳುತ್ತಿದ್ದೀರಿ. ಕೆಲವರು ಬಹಳ ವೃದ್ಧರೂ ಇದ್ದೀರಿ, ವೃದ್ಧಾಪ್ಯಕ್ಕಿಂತಲೂ ಯವ್ವನದಲ್ಲಿ ಓದುವುದು ಚೆನ್ನಾಗಿರುತ್ತದೆ. ಯುವಕರ ಬುದ್ಧಿಯು ಚುರುಕಾಗಿರುತ್ತದೆ. ಈ ವಿದ್ಯೆಯಂತೂ ಎಲ್ಲರಿಗಾಗಿ ಅತಿ ಸಹಜವಾಗಿದೆ. ನಿಮ್ಮ ಶರೀರವಂತೂ ದೊಡ್ಡದಾಗಿದೆಯಲ್ಲವೆ. (ಮಗುವನ್ನು ನೋಡುತ್ತಾ) ಇದಂತೂ ಮಗುವಾಗಿದೆ, ಇದಕ್ಕೆ ಅಷ್ಟೊಂದು ಅರ್ಥವಾಗುವುದಿಲ್ಲ, ಏಕೆಂದರೆ ಕರ್ಮೇಂದ್ರಿಯಗಳು ಚಿಕ್ಕದಾಗಿದೆ ಆದರೆ ನೀವು ಹೊಗಳಿಕೆ-ತೆಗಳಿಕೆ, ಸುಖ-ದುಃಖ ಇವೆಲ್ಲಾ ಮಾತುಗಳನ್ನು ತಿಳಿದುಕೊಳ್ಳಬಲ್ಲಿರಿ. ಆತ್ಮವಂತೂ ಬಿಂದುವಾಗಿದೆ, ಶರೀರವು ಬೆಳವಣಿಗೆಯಾಗುತ್ತಾ ಇರುತ್ತದೆ. ಆತ್ಮವಂತೂ ಏಕರಸವಾಗಿರುತ್ತದೆ, ಎಂದೂ ಅದು ಹೆಚ್ಚುವುದಾಗಲಿ, ಸವೆಯುವುದಾಗಲಿ ಇಲ್ಲ. ಆ ಆತ್ಮದ ಬುದ್ಧಿಗಾಗಿಯೇ ತಂದೆಯು ಕಸ್ತೂರಿಯಂತಹ ಉಡುಗೊರೆಯನ್ನು ಕೊಡುತ್ತಿದ್ದಾರೆ ಏಕೆಂದರೆ ಬುದ್ಧಿಯು ಸಂಪೂರ್ಣ ತಮೋಪ್ರಧಾನವಾಗಿ ಬಿಟ್ಟಿದೆ. ಅದು ಈಗ ಸ್ವಚ್ಛವಾಗುತ್ತಿದೆ, ಈ ಚಿತ್ರಗಳು ತಿಳಿಸಿಕೊಡಲು ನಿಮಗೆ ಬಹಳ ಸಹಾಯಕವಾಗುತ್ತದೆ. ಭಕ್ತಿಮಾರ್ಗದಲ್ಲಿ ದೇವತೆಗಳ ಮುಂದೆ ಹೋಗಿ ತಲೆ ಬಾಗುತ್ತಾರೆ, ಪೂಜೆ ಮಾಡುತ್ತಾರೆ. ಮೊದಲು ನೀವೂ ಸಹ ಅಂಧಶ್ರದ್ಧೆಯಿಂದ ಹೋಗುತ್ತಿದ್ದಿರಿ, ಶಿವನ ಮಂದಿರಕ್ಕೆ ಹೋಗುತ್ತಿದ್ದಿರಿ ಆದರೆ ಇವರು ಶಿವತಂ ದೆಯಾಗಿದ್ದಾರೆ, ತಂದೆಯಿಂದ ಅವಶ್ಯವಾಗಿ ಆಸ್ತಿಯು ಸಿಕ್ಕಿದೆ ಆದ್ದರಿಂದಲೇ ಅವರ ಮಹಿಮೆಯನ್ನು ಗಾಯನ ಮಾಡಲಾಗುತ್ತದೆ ಎಂಬುದು ನಿಮಗೆ ತಿಳಿದಿರಲಿಲ್ಲ. ಯಾರಾದರೂ ಒಳ್ಳೆಯ ಕೆಲಸ ಮಾಡಿ ಹೋಗುತ್ತಾರೆಂದರೆ ಅವರ ಮಹಿಮೆಯನ್ನು ಹಾಡಲಾಗುತ್ತದೆ. ವಾಸ್ತವದಲ್ಲಿ ಒಬ್ಬ ಶಿವ ತಂದೆಯ ಅಂಚೆ ಚೀಟಿಯನ್ನು ಮಾಡಿಸಬೇಕು. ಶಿವ ತಂದೆಯು ಗೀತಾ ಜ್ಞಾನ ದಾತನಾಗಿದ್ದಾರೆ.... ಈ ಅಂಚೆ ಚೀಟಿಯು ಸಹಜವಾಗಿ ಆಗಬಲ್ಲದು. ಆ ತಂದೆಯು ಎಲ್ಲರಿಗೆ ಸುಖ ನೀಡುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುವವನಾಗಿದ್ದೇನೆ. ವೃದ್ಧರೂ ಸಹ ಇದನ್ನು ತಿಳಿದುಕೊಳ್ಳಬಹುದಲ್ಲವೆ - ನಾವು ಶಿವ ತಂದೆಯ ಬಳಿ ಬಂದಿದ್ದೇವೆ, ಅವರು ವಿಚಿತ್ರನಾಗಿದ್ದಾರೆ. ಅವರೇ ಈ ಚಿತ್ರದಲ್ಲಿ (ಶರೀರ) ಪ್ರವೇಶ ಮಾಡಿದ್ದಾರೆ, ನಿರಾಕಾರನಿಗೆ ವಿಚಿತ್ರನೆಂದು ಹೇಳಲಾಗುತ್ತದೆ. ನಾವು ಶಿವ ತಂದೆಯ ಬಳಿ ಹೋಗುತ್ತೇವೆ, ಅವರು ತಾತ್ಕಾಲಿಕವಾಗಿ ಈ ಶರೀರವನ್ನು ಧಾರಣೆ ಮಾಡಿದ್ದಾರೆಂದು ಬುದ್ಧಿಯಲ್ಲಿರುತ್ತದೆ, ಪತಿತರನ್ನು ಪಾವನರನ್ನಾಗಿ ಮಾಡಿ ಮುಕ್ತಿ-ಜೀವನ್ಮುಕ್ತಿಯನ್ನು ಕೊಡುತ್ತಾರೆ ಅಥವಾ ಶಾಂತಿಧಾಮ, ಸುಖಧಾಮದ ನಿವಾಸಿಗಳನ್ನಾಗಿ ಮಾಡುತ್ತಾರೆ. ಮನುಷ್ಯರು ಶಾಂತಿಗಾಗಿಯೇ ಪ್ರಯತ್ನ ಪಡುತ್ತಾರೆ. ಭಗವಂತ ಸಿಕ್ಕಿದರೆ ಶಾಂತಿ ಸಿಗುವುದು ಎಂದು ಪ್ರಯತ್ನ ಪಡುತ್ತಾರೆ. ಸುಖಕ್ಕಾಗಿ ಪುರುಷಾರ್ಥ ಮಾಡುವುದಿಲ್ಲ, ತಂದೆಯ ಬಳಿ ಮನೆಗೆ ಹೋಗಬೇಕು, ಭಗವಂತ ಸಿಗಬೇಕೆಂದು ಪುರುಷಾರ್ಥ ಮಾಡುತ್ತಾರೆ. ಈ ಸಮಯದಲ್ಲಿ ಎಲ್ಲರೂ ಮುಕ್ತಿಯನ್ನು ಬಯಸುವವರಾಗಿದ್ದಾರೆ. ಜೀವನ್ಮುಕ್ತಿಯನ್ನು ಪಡೆಯುವವರು ಕೇವಲ ನೀವು ಬ್ರಾಹ್ಮಣರೇ ಆಗಿದ್ದೀರಿ, ಉಳಿದೆಲ್ಲರೂ ಮುಕ್ತಿಯನ್ನು ಬಯಸುವವರಾಗಿದ್ದಾರೆ. ಜೀವನ್ಮುಕ್ತಿಯ ಮಾರ್ಗವನ್ನು ತಿಳಿಸುವವರು ಮತ್ತ್ಯಾರೂ ಇಲ್ಲ. ಸನ್ಯಾಸಿಗಳು ಮೊದಲಾದವರ ಬಳಿ ಹೋಗಿ ಶಾಂತಿಯನ್ನು ಬೇಡುತ್ತಾರೆ, ಮನಃಶ್ಯಾಂತಿ ಹೇಗೆ ಸಿಗುವುದು ಎಂದು ಕೇಳುತ್ತಾರೆ. ಯಾರೆಲ್ಲಾ ಮಾರ್ಗ ತಿಳಿಸುವವರಿದ್ದಾರೆಯೋ ಅವರೆಲ್ಲರೂ ಮುಕ್ತಿಯಲ್ಲಿ ಹೋಗುವವರಾಗಿದ್ದಾರೆ. ಮೋಕ್ಷವೆಂದರೇನು ಎಂಬುದೂ ಸಹ ಬುದ್ಧಿಯಲ್ಲಿ ಬರುವುದಿಲ್ಲ. ಜೀವನದಿಂದ ಬೇಸತ್ತು ಹೇಳುತ್ತಾರೆ - ಮುಕ್ತಿಯಲ್ಲಿ ಹೋಗುವುದೇ ಒಳ್ಳೆಯದು ಎಂದು. ವಾಸ್ತವದಲ್ಲಿ ಮುಕ್ತಿಧಾಮವು ಆತ್ಮಗಳಿರುವ ಸ್ಥಾನವಾಗಿದೆ. ಇಷ್ಟೊಂದು ಸೇವಾಕೇಂದ್ರಗಳಲ್ಲಿ ಮಕ್ಕಳಿದ್ದಾರೆ, ಎಲ್ಲರೂ ತಿಳಿದುಕೊಂಡಿದ್ದಾರೆ - ನಾವು ಹೊಸ ಪ್ರಪಂಚಕ್ಕಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ತಂದೆಯು ನಮಗೆ ಹೊಸ ಪ್ರಪಂಚದ ರಾಜ್ಯವನ್ನು ಕೊಡುತ್ತಾರೆ. ಎಲ್ಲಿ ಕೊಡುತ್ತಾರೆ? ಹೊಸ ಪ್ರಪಂಚದಲ್ಲಿ ಕೊಡುವರೋ ಅಥವಾ ಹಳೆಯ ಪ್ರಪಂಚದಲ್ಲಿ ಕೊಡುವರೋ? ತಂದೆಯು ತಿಳಿಸುತ್ತಾರೆ, ನಾನು ಸಂಗಮದಲ್ಲಿ ಬರುತ್ತೇನೆ, ಸತ್ಯಯುಗದಲ್ಲಾಗಲಿ ಕಲಿಯುಗದಲ್ಲಾಗಲಿ ಬರುವುದಿಲ್ಲ. ಎರಡರ ಮಧ್ಯದಲ್ಲಿ ಬರುತ್ತೇನೆ. ತಂದೆಯಂತೂ ಎಲ್ಲರಿಗೆ ಸದ್ಗತಿ ನೀಡುತ್ತಾರಲ್ಲವೆ. ಎಲ್ಲರನ್ನು ದುರ್ಗತಿಯಲ್ಲಿ ಬಿಟ್ಟು ಹೋಗುತ್ತಾರೆಂದಲ್ಲ. ಸದ್ಗತಿ ಮತ್ತು ದುರ್ಗತಿ ಒಟ್ಟಿಗೆ ಇರಲು ಸಾಧ್ಯವಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ, ಈ ಹಳೆಯ ಪ್ರಪಂಚದ ವಿನಾಶವಾಗುವುದು ಆದ್ದರಿಂದ ಇದರೊಂದಿಗೆ ಪ್ರೀತಿಯನ್ನು ಇಟ್ಟುಕೊಳ್ಳಬಾರದು. ನಾವೀಗ ಸಂಗಮಯುಗದಲ್ಲಿದ್ದೇವೆ. ಈ ಪ್ರಪಂಚವು ಬದಲಾಗಲಿದೆ ಎಂದು ಬುದ್ಧಿಯು ಹೇಳುತ್ತದೆ. ಈಗ ತಂದೆಯು ಬಂದಿದ್ದಾರೆ, ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಸಂಗಮದಲ್ಲಿ ಬರುತ್ತೇನೆ, ನಿಮ್ಮನ್ನು ದುಃಖದಿಂದ ಬಿಡಿಸಿ ಹರಿದ್ವಾರಕ್ಕೆ ಕರೆದುಕೊಂಡು ಹೋಗುತ್ತೇನೆ. ಇದು ಜ್ಞಾನದ ಮಾತಾಗಿದೆ. ಹರಿದ್ವಾರ, ಕೃಷ್ಣನ ದ್ವಾರ ಎಂದು ಕೃಷ್ಣ ಪುರಿಗೆ ಹೇಳಲಾಗುತ್ತದೆ. ಅದರ ನಂತರ ಲಕ್ಷ್ಮಣನ ಉಯ್ಯಾಲೆಯನ್ನು ಹಾಕಿದ್ದಾರೆ. ಮೊದಲು ಹರಿದ್ವಾರ ಬರುವುದು. ಸತ್ಯಯುಗಕ್ಕೆ ಹರಿದ್ವಾರವೆಂದು ಹೇಳಲಾಗುತ್ತದೆ. ನಂತರ ರಾಮ-ಲಕ್ಷ್ಮಣ ಮೊದಲಾದವರನ್ನು ತೋರಿಸುತ್ತಾರೆ ಆದರೆ ಅಂತಹ ಮಾತೇನೂ ಇಲ್ಲ. ಇವು ಕಲ್ಪನೆಯ ಮಾತುಗಳಾಗಿವೆ. ರಾಮನಿಗೆ 4 ಮಂದಿ ಸಹೋದರರನ್ನು ತೋರಿಸಿದ್ದಾರೆ ಆದರೆ 4 ಜನರಂತೂ ಇರುವುದಿಲ್ಲ. 4-8 ಮಂದಿ ಈ ಕಲಿಯುಗದಲ್ಲಿರುತ್ತಾರೆ. ಒಂದು ಕಡೆ ಈಶ್ವರೀಯ ಸಂತಾನರಿದ್ದೀರಿ, ಇನ್ನೊಂದು ಕಡೆ ಆಸುರೀ ಸಂತಾನರಿದ್ದಾರೆ. |
ಈಗ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಬ್ರಹ್ಮಾರವರ ತನುವಿನಲ್ಲಿ ಬಂದಿದ್ದಾರೆ. ಶಿವನು ತಂದೆಯಾಗಿದ್ದಾರೆ, ಬ್ರಹ್ಮಾರವರು ದಾದಾ ಆಗಿದ್ದಾರೆ, ಪ್ರಜಾಪಿತ ಆಗಿದ್ದಾರೆ. ಆ ಆತ್ಮರ ಪಿತನಂತೂ ಅನಾದಿಯಾಗಿದ್ದಾರೆ, ಈ ಸಮಯದಲ್ಲಿ ಬ್ರಾಹ್ಮಣರನ್ನು ರಚಿಸುತ್ತಾರೆ. ಶಿವ ತಂದೆಯು ಸಾಲಿಗ್ರಾಮಗಳನ್ನು ರಚಿಸುವುದಿಲ್ಲ, ಸಾಲಿಗ್ರಾಮಗಳಂತೂ ಅವಿನಾಶಿಯಾಗಿದೆ. ಕೇವಲ ತಂದೆಯು ಬಂದು ಸಾಲಿಗ್ರಾಮಗಳನ್ನೇ ಪವಿತ್ರರನ್ನಾಗಿ ಮಾಡುತ್ತಾರೆ. ಆತ್ಮವು ಪವಿತ್ರವಾಗುವವರೆಗೆ ಶರೀರವು ಪವಿತ್ರವಾಗಲು ಹೇಗೆ ಸಾಧ್ಯ! ನಾವಾತ್ಮರು ಪವಿತ್ರರಾಗಿದ್ದಾಗ ಸತೋಪ್ರಧಾನರಾಗಿದ್ದೆವು, ಈಗ ಅಪವಿತ್ರ, ತಮೋಪ್ರಧಾನರಾಗಿದ್ದೇವೆ ಅಂದಮೇಲೆ ಪುನಃ ಸತೋಪ್ರಧಾನರಾಗುವುದು ಹೇಗೆ? ಇವಂತೂ ಸಹಜವಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ಈ ಸಮಯದಲ್ಲಿ ಆತ್ಮದಲ್ಲಿ ತುಕ್ಕು ಸೇರಿರುವ ಕಾರಣ ನೀವು ಪತಿತ, ತಮೋಪ್ರಧಾನರಾಗಿ ಬಿಟ್ಟಿದ್ದೀರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಎಲ್ಲರೂ ಶಾಂತಿಧಾಮ ಹಾಗೂ ಸುಖಧಾಮದಲ್ಲಿ ಬರುತ್ತೀರಿ. ಆತ್ಮಗಳು ಹೇಗೆ ಬರುತ್ತಾರೆ ಎಂಬುದನ್ನೂ ಸಹ ನಿರಾಕಾರಿ ವೃಕ್ಷವನ್ನು ಮಾಡಿ ಅದರಲ್ಲಿ ಬಲ್ಬುಗಳನ್ನು ಹಾಕಿ ಕ್ರಿಶ್ಚಿಯನ್ನರು ಆಚರಣೆ ಮಾಡುತ್ತಾರೆ. ನಿಮಗೆ ತಿಳಿದಿದೆ - ಇವರೆಲ್ಲರೂ ಭಿನ್ನ-ಭಿನ್ನ ಶಾಖೆಗಳಾಗಿದ್ದಾರೆ. ಅಲ್ಲಿಂದ ಮೊಟ್ಟ ಮೊದಲು ಆತ್ಮರು ಹೇಗೆ ಕೆಳಗಿಳಿಯುತ್ತಾರೆ ಎಂಬ ಜ್ಞಾನವು ನಿಮಗೆ ಸಿಕ್ಕಿದೆ. ನಾವಾತ್ಮರ ಮನೆಯು ಶಾಂತಿಧಾಮವಾಗಿದೆ, ಈಗ ಸಂಗಮವಾಗಿದೆ. ಅಲ್ಲಿಂದ ಎಲ್ಲಾ ಆತ್ಮರು ಬಂದು ಬಿಡುತ್ತಾರೆ ನಂತರ ಎಲ್ಲರೂ ಹೋಗುತ್ತಾರೆ. ಪ್ರಳಯವಂತೂ ಆಗುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ, ತಂದೆಯಿಂದ ನಾವು ಅದೃಷ್ಟವನ್ನು ರೂಪಿಸಿಕೊಳ್ಳಲು ಪುನಃ ಸ್ವರಾಜ್ಯವನ್ನು ಪಡೆಯಲು ಬಂದಿದ್ದೇವೆ. ಇದು ಕೇವಲ ಹೇಳುವುದಕ್ಕೆ ಮಾತ್ರವಲ್ಲ, ನೆನಪಿನಿಂದಲೇ ಆಸ್ತಿಯು ಸಿಗುವುದು. ತಂದೆಯು ತಿಳಿಸುತ್ತಾರೆ – ದೇಹ ಸಹಿತ ಯಾರೆಲ್ಲಾ ದೇಹದ ಮಿತ್ರ ಸಂಬಂಧಿ ಮೊದಲಾದವರಿದ್ದಾರೆಯೋ ಎಲ್ಲರನ್ನೂ ಮರೆಯಿರಿ. ಚಿತ್ರ ಮತ್ತು ವಿಚಿತ್ರನು ಇದ್ದಾರಲ್ಲವೆ. ಯಾರನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲವೋ ಅವರಿಗೆ ವಿಚಿತ್ರನೆಂದು ಹೇಳಲಾಗುತ್ತದೆ, ಇವು ಬಹಳ ಸೂಕ್ಷ್ಮ ಮಾತುಗಳಾಗಿವೆ. ಆತ್ಮವು ಎಷ್ಟು ಚಿಕ್ಕದಾಗಿದೆ, ಅದು ಪದೇ-ಪದೇ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ, ಮತ್ತ್ಯಾರ ಬುದ್ಧಿಯಲ್ಲಿಯೂ ಈ ಮಾತುಗಳಿರುವುದಿಲ್ಲ. ಮೊಟ್ಟ ಮೊದಲು ಇದನ್ನು ಬುದ್ಧಿಯಲ್ಲಿ ಕುಳ್ಳರಿಸಬೇಕಾಗಿದೆ - ನಾವಾತ್ಮರಾಗಿದ್ದೇವೆ, ಅವರು ನಮ್ಮ ತಂದೆಯಾಗಿದ್ದಾರೆ, ಅವರನ್ನೇ ಪತಿತ-ಪಾವನ, ಹೇ ಭಗವಂತ ಎಂದು ಹೇಳಿ ನೆನಪು ಮಾಡುತ್ತಾರೆ, ಮತ್ತೆಲ್ಲಿಯೂ ಹೋಗಬೇಕಾಗಿಲ್ಲ ಅಂದಮೇಲೆ ಒಬ್ಬರನ್ನೇ ನೆನಪು ಮಾಡಬೇಕಲ್ಲವೆ. ಭಗವಂತನನ್ನು ನೆನಪು ಮಾಡುತ್ತಾರೆ, ಅಂದಮೇಲೆ ಅವಶ್ಯವಾಗಿ ಅವರಿಂದ ಏನೋ ಸಿಗುವುದಲ್ಲವೆ! ಮತ್ತೆ ಅಲ್ಲಿ-ಇಲ್ಲಿ ಏಕೆ ಅಲೆಯುತ್ತೀರಿ. ಭಗವಂತನು ಪರಮಧಾಮದಿಂದ ಬರಬೇಕಾಗುತ್ತದೆಯಲ್ಲವೆ. ನಾವಂತೂ ಹೋಗಲು ಸಾಧ್ಯವಿಲ್ಲ ಏಕೆಂದರೆ ಪತಿತರಾಗಿದ್ದೇವೆ. ಪತಿತರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ, ನೀವೀಗ ಆಶ್ಚರ್ಯ ಚಕಿತರಾಗುತ್ತೀರಿ, ಭಕ್ತಿಮಾರ್ಗದ ಪಾತ್ರವು ಎಷ್ಟು ಅದ್ಭುತವಾಗಿದೆ! ಹೇ ಈಶ್ವರ, ಹೇ ಪರಮಪಿತ, ಓ ಗಾಡ್ಫಾದರ್ ಎಂದು ಒಬ್ಬ ಭಗವಂತನನ್ನು ನೆನಪು ಮಾಡುತ್ತಾರೆ. ಯಾವಾಗ ಅವರೊಬ್ಬರೇ ಆಗಿದ್ದಾರೆ ಅಂದಮೇಲೆ ಮತ್ತೆ ಅಲ್ಲಿ-ಇಲ್ಲಿ ಏಕೆ ಅಲೆದಾಡುತ್ತೀರಿ! ಅವರು ಮೇಲಿರುತ್ತಾರೆ ಆದರೆ ಇದೆಲ್ಲವೂ ನಿಗಧಿಯಾಗಿದೆ. ಡ್ರಾಮಾನುಸಾರ ತಿಳುವಳಿಕೆಹೀನರಾಗಿ ಭಕ್ತಿ ಮಾಡುತ್ತಾರೆ. ನೀವೀಗ ಪುನಃ ಬೇಹದ್ದಿನ ಬುದ್ಧಿವಂತರಾಗುತ್ತೀರಿ. ಶ್ರೀಮತದಂತೆ ನಡೆಯುವವರೇ ಬುದ್ಧಿವಂತರಾಗುತ್ತಾರೆ. ಅವರು ಗುಪ್ತವಾಗಿರಲು ಸಾಧ್ಯವಿಲ್ಲ, ಅವರು ಸದಾ ಶ್ರೇಷ್ಠಾಚಾರಿ ಕಾರ್ಯಗಳನ್ನೇ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ದುಃಖಹರ್ತ, ಸುಖಕರ್ತನಾಗಿದ್ದೇನೆ ಅಂದಮೇಲೆ ಮಕ್ಕಳೂ ಸಹ ಎಷ್ಟೊಂದು ಮಧುರರಾಗಬೇಕು! ತಂದೆಯ ಬಲ ಭುಜವಾಗಬೇಕು. ಇಂತಹ ಮಕ್ಕಳೇ ತಂದೆಗೆ ಪ್ರಿಯರಾಗುತ್ತಾರೆ. ಬಲ ಭುಜಗಳಲ್ಲವೆ. ನಿಮಗೆ ತಿಳಿದಿದೆ – ಎಡ ಗೈಯಿಂದ ಅಷ್ಟೊಂದು ಕೆಲಸ ಮಾಡಲು ಸಾಧ್ಯವಿಲ್ಲ ಏಕೆಂದರೆ ಬಲ ಗೈ ಒಳ್ಳೆಯ ಕಾರ್ಯವನ್ನು ಮಾಡುತ್ತದೆ ಆದ್ದರಿಂದ ಬಲ ಗೈಯನ್ನು ಶುಭ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಯಾವಾಗಲೂ ಬಲ ಗೈಯಿಂದಲೇ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಪ್ರತೀ ಮಾತಿನಲ್ಲಿ ಸತ್ಯವಂತರಾಗಿ. ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಖುಷಿಯಿರಬೇಕಲ್ಲವೆ. |
ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಇದರಿಂದ ಮತ್ತೆ ಅಂತ್ಯ ಮತಿ ಸೋ ಗತಿಯಾಗುವುದು. ಮತ ಮತ್ತು ಗತಿ ಅಥವಾ ಗತಿ ಕೊಡುವ ಮತವು ಒಂದೇ ಆಗಿದೆ. ಈಶ್ವರನ ಗತಿ ಮತವು ಈಶ್ವರನಿಗೇ ಗೊತ್ತು ಎಂದು ಗಾಯನವಿದೆ, ಅವರೇ ಪತಿತ-ಪಾವನನಾಗಿದ್ದಾರೆ. ಮನುಷ್ಯರನ್ನು ಪಾವನರನ್ನಾಗಿ ಮಾಡಿ ಹೇಗೆ ನಾನು ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗಬೇಕೆಂದು ಅವರಿಗೆ ತಿಳಿದಿದೆ. ಭಕ್ತಿಮಾರ್ಗದಲ್ಲಿ ಎಷ್ಟೊಂದು ಪರಿಶ್ರಮ ಪಡುತ್ತಾರೆ ಆದರೆ ಸದ್ಗತಿ ಸಿಗುವುದಿಲ್ಲ. ಫಲವೇನೂ ಸಿಗುವುದಿಲ್ಲ. ಸದ್ಗತಿ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ. ಭಕ್ತಿಯಲ್ಲಿ ಯಾರು ಯಾವ ಭಾವನೆಯಿಂದ ಪೂಜೆ ಮಾಡುವರೋ ಅವರಿಗೆ ಫಲ ನೀಡುವವನು ನಾನೇ ಆಗಿದ್ದೇನೆ, ಅದು ಡ್ರಾಮಾದಲ್ಲಿ ನಿಗಧಿಯಾಗಿದೆ. ಅವರಿಗೆ ತನ್ನ ಪುರುಷಾರ್ಥದಿಂದ ತಾನಾಗಿಯೇ ಸಿಕ್ಕಿ ಬಿಡುತ್ತದೆ. ಈಗ ಮಕ್ಕಳು ತಮ್ಮ ಪುರುಷಾರ್ಥದಿಂದ ಪವಿತ್ರರಾಗಬೇಕಾಗಿದೆ. ಆದ್ದರಿಂದ ಮಧುರಾತಿ ಮಧುರ ತಂದೆಯನ್ನು ನೆನಪು ಮಾಡಿರಿ, ಅವರೇ ಸರ್ವಶಕ್ತಿವಂತ ಆಲ್ಮೈಟಿ ಅಥಾರಿಟಿ ಎಷ್ಟು ಚೆನ್ನಾಗಿ ಮಾಡುತ್ತಾರೆ. ನೀವು ಎಲ್ಲವನ್ನೂ ಅರಿತುಕೊಂಡಿದ್ದೀರಿ ಮತ್ತು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ರಚಯಿತ ಮತ್ತು ರಚನೆಯ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಈಗ ನೀವು ತಿಳಿದುಕೊಂಡಿದ್ದೀರಿ, ಈ ಜ್ಞಾನವು ನಮ್ಮಲ್ಲಿರಲಿಲ್ಲ, ಯಜ್ಞ-ತಪ ಇತ್ಯಾದಿಗಳನ್ನು ಮಾಡುವುದು ಶಾಸ್ತ್ರಗಳನ್ನು ಕೇಳುವುದು ಇದೆಲ್ಲವೂ ಶಾಸ್ತ್ರಗಳ ಜ್ಞಾನವಾಗಿದೆ, ಅದಕ್ಕೆ ಭಕ್ತಿಯೆಂದು ಹೇಳಲಾಗುತ್ತದೆ. ಅದರಲ್ಲಿ ಗುರಿ-ಧ್ಯೇಯವೇನೂ ಇಲ್ಲ. ವಿದ್ಯೆಯಲ್ಲಿ ಸದಾ ಗುರಿ-ಧ್ಯೇಯವಿರುತ್ತದೆ, ಯಾವುದಾದರೊಂದು ಪ್ರಕಾರದ ಜ್ಞಾನವಿರುತ್ತದೆ. ನಮಗೆ ಪತಿತರಿಂದ ಪಾವನರಾಗುವ ಜ್ಞಾನವನ್ನು ಪತಿತ-ಪಾವನ ತಂದೆಯು ನೀಡಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ, ಇದರಲ್ಲಿ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ, ಈ ಅನಾದಿ ನಾಟಕವು ಮಾಡಲ್ಪಟ್ಟಿದೆ ಎಂಬ ಈ ಬೇಹದ್ದಿನ ಜ್ಞಾನವು ಅವಶ್ಯವಾಗಿ ಇರಬೇಕಾಗಿದೆ. |
ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನೀವು ಈಗ ಘೋರ ಅಂಧಕಾರದಿಂದ ಘೋರ ಪ್ರಕಾಶತೆಯಲ್ಲಿ ಹೋಗುತ್ತಿದ್ದೀರಿ. ನೀವೀಗ ದೇವತೆಗಳಾಗುತ್ತಿದ್ದೀರಿ. ಇದನ್ನೂ ತಿಳಿಸಬೇಕಾಗಿದೆ – ಆದಿ ಸನಾತನ ದೇವಿ-ದೇವತಾ ಧರ್ಮವಾಗಿದೆ, ಇದನ್ನು ಹಿಂದೂ ಧರ್ಮವೆಂದು ಹೇಳಿ ಬಿಟ್ಟಿದ್ದಾರೆ. ಕೊನೆಗೆ ಈ ಮಾತೂ ಸಹ ಮನುಷ್ಯರಿಗೆ ಅರ್ಥವಾಗುತ್ತದೆ ಆದ್ದರಿಂದ ಮಕ್ಕಳು ಎದ್ದು ನಿಲ್ಲಬೇಕು. ಇದರಲ್ಲಿ ಬಹಳ ಮಂದಿ ಮಕ್ಕಳು ಬೇಕಾಗಿದೆ. ದೆಹಲಿಯಲ್ಲಿ ಸಮ್ಮೇಳನಗಳನ್ನು ಮಾಡಬೇಕಾಗಿದೆ, ದೆಹಲಿಗೆ ಪರಿಸ್ತಾನವೆಂದು ಹೇಳಲಾಗುತ್ತದೆ, ಇದೇ ಜಮುನಾ ನದಿಯ ತೀರವಾಗಿತ್ತು, ದೆಹಲಿಯು ರಾಜಧಾನಿಯಾಗಿದೆ. ಅನೇಕರ ಕೈಸೇರಿದೆ. ದೇವತೆಗಳ ರಾಜಧಾನಿಯೂ ಇದೇ ಆಗಿತ್ತು ಆದ್ದರಿಂದ ದೆಹಲಿಯಲ್ಲಿ ಬಹಳ ದೊಡ್ಡ ಸಮ್ಮೇಳನಗಳನ್ನು ಮಾಡಬೇಕು ಆದರೆ ಮಾಯೆಯು ಮಾಡಲು ಬಿಡುವುದಿಲ್ಲ, ಬಹಳ ವಿಘ್ನಗಳನ್ನೂ ಹಾಕುತ್ತದೆ. ಇಂದು ಭಾವ-ಸ್ವಭಾವಗಳು ಹೆಚ್ಚಾಗುತ್ತಿದೆ (ಮತ-ಭೇದ). ಮಕ್ಕಳು ಪರಸ್ಪರ ಸೇರಿ ಸರ್ವೀಸಿನಲ್ಲಿ ತೊಡಗಬೇಕಾಗಿದೆ. ಹೇಗೆ ಅವರೂ ಸಹ ಪರಸ್ಪರ ಹೊಂದಿಕೊಳ್ಳದಿದ್ದರೆ ರಾಜ್ಯವೇ ಹೊರಟು ಹೋಗುತ್ತದೆ. ಎರಡು ಪಂಗಡಗಳಾಗಿ ಬಿಟ್ಟರೆ ರಾಷ್ಟ್ರಪತಿಯನ್ನೂ ಹಾರಿಸಿ ಬಿಡುತ್ತಾರೆ. ದ್ವೈತ ಮತವು ಬಹಳ ನಷ್ಟವನ್ನುಂಟು ಮಾಡುತ್ತದೆ ಮತ್ತೆ ಭಗವಂತನಿಗೂ ಎದುರು ನಿಲ್ಲಲು ನಿಧಾನಿಸುವುದಿಲ್ಲ. ಬಹಳ ನಷ್ಟ ಹೊಂದುತ್ತಾರೆ. ಕ್ರೋಧದ ಭೂತವು ಬಂದು ಬಿಟ್ಟರೆ ಮಾತೇ ಕೇಳಬೇಡಿ, ಆದ್ದರಿಂದಲೇ ತಂದೆಯು ಹೇಳುತ್ತಾರೆ - ಬೆಲ್ಲದ ರುಚಿ ಬೆಲ್ಲಕ್ಕೆ ಗೊತ್ತು, ಬೆಲ್ಲದ ಚೀಲಕ್ಕೆ ಗೊತ್ತು. ತಂದೆಯು ಮಕ್ಕಳಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಿದ್ದಾರೆ. ಈಗ ಧಾರಣೆ ಮಾಡುವುದು, ಬಿಡುವುದು ಅವರವರ ಪುರುಷಾರ್ಥದ ಮೇಲಿದೆ. ತಂದೆಯು ಆಶೀರ್ವಾದ ಅಥವಾ ಕೃಪೆ ಮಾಡಿ ಬಿಡುತ್ತಾರೆ ಎಂದಲ್ಲ. ಇದರಲ್ಲಿ ಕೃಪೆಯ ಮಾತಿಲ್ಲ. ಒಂದುವೇಳೆ ಪ್ರೇರಣೆಯಿಂದ ಯೋಗ ಮತ್ತು ಜ್ಞಾನವನ್ನು ಕಲಿಸುವಂತಿದ್ದರೆ ನಾನೇಕೆ ಈ ಕೊಳಕು ಪ್ರಪಂಚದಲ್ಲಿ ಬರುತ್ತಿದ್ದೆನು? ಪ್ರೇರಣೆ, ಆಶೀರ್ವಾದ ಇವೆಲ್ಲವೂ ಭಕ್ತಿಮಾರ್ಗದ ಮಾತುಗಳಾಗಿವೆ. ಇಲ್ಲಂತೂ ಪುರುಷಾರ್ಥ ಮಾಡಬೇಕಾಗಿದೆ, ಪ್ರೇರಣೆಯ ಮಾತಿಲ್ಲ. ನಿಮಗೆ ಒಟ್ಟಿಗೆ ಮೂರು ಇಂಜಿನ್ಗಳು ಸಿಕ್ಕಿವೆ, ಅಲ್ಲಾದರೆ ತಂದೆಯೇ ಬೇರೆ, ಶಿಕ್ಷಕನೇ ಬೇರೆ ಸಿಗುತ್ತಾರೆ ಮತ್ತು ಕೊನೆಯಲ್ಲಿ ಗುರುಗಳು ಸಿಗುತ್ತಾರೆ. ಇಲ್ಲಿ ಮೂವರೂ ಒಟ್ಟಿಗೆ ಇರುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತೇನೆ, ನೀವು ಮತ್ತೆ ಪೂಜಾರಿಗಳಾಗಿ ಬಿಡುತ್ತೀರಿ. ಬಹಳ ಯುಕ್ತಿಯಿಂದ ತಿಳಿಸಬೇಕಾಗಿದೆ. ಯಾರೂ ಮೂರ್ಛಿತರಾಗುವಂತಾಗಬಾರದು. ಮೊಟ್ಟ ಮೊದಲು ಇಬ್ಬರು ತಂದೆಯರ ಮಾತನ್ನು ತಿಳಿಸಬೇಕಾಗಿದೆ, ಭಗವಂತನು ತಂದೆಯಾಗಿದ್ದಾರೆ. ಅವರ ಜನ್ಮ ಶಿವ ಜಯಂತಿಯನ್ನು ಇಲ್ಲಿಯೇ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಆ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡುವರು. ಭಾರತದಲ್ಲಿಯೇ ಸ್ವರ್ಗವಿತ್ತು, ಈಗ ನರಕದ ವಿನಾಶಕ್ಕಾಗಿ ಮಹಾಭಾರತ ಯುದ್ಧವು ನಿಂತಿದೆ. ಅವಶ್ಯವಾಗಿ ತಂದೆಯು ಹೊಸ ಪ್ರಪಂಚದ ಸ್ಥಾಪನೆಯನ್ನು ಮಾಡಿಸುವವರೂ ಆಗಿದ್ದಾರೆ. ತಂದೆಯ ಶ್ರೀಮತದ ಅನುಸಾರವೇ ನಾವು ಹೇಳುತ್ತೇವೆ - ನಾವು ಭಾರತವನ್ನು ಪಾವನವನ್ನಾಗಿ ಮಾಡಿಯೇ ತೀರುತ್ತೇವೆ ಎಂದು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಹೇಗೆ ತಂದೆಯು ದುಃಖಹರ್ತ-ಸುಖಕರ್ತನಾಗಿದ್ದಾರೆಯೋ ಹಾಗೆಯೇ ತಂದೆಯ ಸಮಾನರಾಗಬೇಕಾಗಿದೆ. ಬಹಳ ಮಧುರರಾಗಬೇಕಾಗಿದೆ. ಸದಾ ಶುಭ ಕಾರ್ಯ ಮಾಡಿ ಬಲ ಭುಜಗಳಾಗಬೇಕಾಗಿದೆ. |
2. ಎಂದೂ ಎರಡು ಅಥವಾ ದ್ವೈತ ಮತವನ್ನು ಮಾಡಿಕೊಳ್ಳಬಾರದು. ಭಾವ-ಸ್ವಭಾವದಲ್ಲಿ (ಘರ್ಷಣೆಯಲ್ಲಿ) ಬಂದು ಒಬ್ಬರು ಇನ್ನೊಬ್ಬರಿಗೆ ಎದುರಾಗಬಾರದು. ಕ್ರೋಧದ ಭೂತವನ್ನು ತೆಗೆಯಬೇಕಾಗಿದೆ. |
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಿದ್ದಾರೆ. ಇಂದು ಮಕ್ಕಳಿಗೆ ಹಠಯೋಗ ಮತ್ತು ರಾಜಯೋಗವನ್ನು ಕುರಿತು ತಿಳಿಸುತ್ತೇವೆ. ಮಕ್ಕಳಿಗೆ ಅರ್ಥವಾಗಿದೆ - ಅವರು ಏನೆಲ್ಲವನ್ನೂ ಕಲಿಸುತ್ತಾರೆಯೋ ಎಲ್ಲವೂ ಹಠಯೋಗವಾಗಿದೆ ಏಕೆಂದರೆ ಅವರು ಕರ್ಮ ಸನ್ಯಾಸಿಗಳಾಗಿದ್ದಾರೆ. ವಾಸ್ತವದಲ್ಲಿ ಗೃಹಸ್ಥಿಗಳು ಹಠಯೋಗ, ಕರ್ಮ ಸನ್ಯಾಸವನ್ನು ಕಲಿಯುವಂತಿಲ್ಲ ಏಕೆಂದರೆ ಸನ್ಯಾಸಗಳದು ನಿವೃತ್ತಿ ಮಾರ್ಗವಾಗಿದೆ, ಆ ಧರ್ಮವೇ ಬೇರೆಯಾಗಿದೆ. ನಿಮ್ಮದು ದೇವಿ-ದೇವತಾ ಧರ್ಮವಾಗಿದೆ, ಆ ದೇವಿ-ದೇವತೆಗಳು ರಾಜಯೋಗದಿಂದಲೇ ರಾಜ್ಯವನ್ನು ಪಡೆದಿದ್ದಾರೆ. ನೀವೀಗ ರಾಜಋಷಿಗಳಾಗಿದ್ದೀರಿ, ಯಾರು ಪವಿತ್ರರಾಗಿರುವರೋ ಅವರಿಗೇ ಋಷಿಗಳೆಂದು ಹೇಳಲಾಗುತ್ತದೆ. ನೀವೀಗ ಪವಿತ್ರರಾಗಿದ್ದೀರಿ. ಒಂದುವೇಳೆ ಪವಿತ್ರರಾಗಿರದಿದ್ದರೆ ಅವರಿಗೆ ಋಷಿಗಳೆಂದು ಹೇಳಲಾಗುವುದಿಲ್ಲ. ನೀವು ರಾಜ್ಯಭಾಗ್ಯವನ್ನು ಪಡೆಯುವುದಕ್ಕಾಗಿ ಪವಿತ್ರರಾಗುತ್ತೀರಿ. ಅವರು ರಾಜ್ಯ ಪದವಿಗಾಗಿ ಪವಿತ್ರರಾಗುವುದಿಲ್ಲ. ನಿಮಗೆ ತಿಳಿದಿದೆ, ಪವಿತ್ರ ಪ್ರಪಂಚದಲ್ಲಿ ನಮಗೆ ಪವಿತ್ರ ರಾಜ್ಯವಿತ್ತು ಭಾರತದಲ್ಲಿಯೇ 5000 ವರ್ಷಗಳ ಮೊದಲು ದೇವಿ-ದೇವತೆಗಳ ಪೂಜ್ಯ ಪವಿತ್ರ ಪ್ರವೃತ್ತಿ ಮಾರ್ಗವಿತ್ತು, ಈಗ ಪೂಜಾರಿ ಪತಿತರಾಗಿ ಬಿಟ್ಟಿದ್ದಾರೆ. ಹೇಗೆ ಪತಿತರಾದರು? 84 ಜನ್ಮಗಳ ಲೆಕ್ಕವಿದೆಯಲ್ಲವೆ. ತಂದೆಯು ಯಾವ ಸಹಜ ರಾಜಯೋಗವನ್ನು ಕಲಿಸುತ್ತಿದ್ದಾರೆಯೋ ಅವರೇ ನಿಮಗೆ 84 ಜನ್ಮಗಳ ಕಥೆಯನ್ನು ತಿಳಿಸುತ್ತಾರೆ. ಅನ್ಯ ಧರ್ಮದ ಬಗ್ಗೆ ಸನ್ಯಾಸ ಧರ್ಮದವರಿಗೆ ಏನು ಗೊತ್ತು! ಇದು ದೇವಿ-ದೇವತೆಗಳ ಪ್ರಾಚೀನ ಧರ್ಮವಾಗಿದೆ, ಅದು ಕೊನೆಯಲ್ಲಿ ಬಂದ ಧರ್ಮವಾಗಿದೆ. ಏನು ಕಳೆದು ಹೋಗಿದೆಯೋ ಅದನ್ನು ಸನ್ಯಾಸಿಗಳು ತಿಳಿದುಕೊಳ್ಳಲು ಸಾಧ್ಯವಿಲ್ಲ. ಯಾವುದು ಕೊನೆಯಲ್ಲಿ ಅವರ ಕಣ್ಮುಂದೆ ಕಾಣುವುದೋ ಅದನ್ನು ತಿಳಿಸುತ್ತಾ ಹೋಗುತ್ತಾರೆ. ನಿಮಗೆ ತಿಳಿದಿದೆ, ಹಠಯೋಗಗಳು ಅನೇಕ ಪ್ರಕಾರವಾಗಿದೆ. ದ್ವಾಪರದಿಂದ ಭಕ್ತಿಮಾರ್ಗದ ಜೊತೆಗೆ ಹಠಯೋಗವು ಆರಂಭವಾಗುತ್ತದೆ. ಈಗ ಇದು ರಾಜಯೋಗವಾಗಿದೆ, ಆ ಹಠಯೋಗವನ್ನು ಪ್ರತೀ ಜನ್ಮದಲ್ಲಿಯೂ ಕಲಿಯುತ್ತಾ ಬಂದಿದ್ದಾರೆ. ರಾಜಯೋಗವನ್ನು ನೀವು ಇದೊಂದು ಜನ್ಮದಲ್ಲಿಯೇ ಕಲಿಯುತ್ತೀರಿ. ಅವರಂತೂ ಪ್ರತೀ ಜನ್ಮದಲ್ಲಿ ಪುನರ್ಜನ್ಮವನ್ನು ತೆಗೆದುಕೊಂಡು ಹಠಯೋಗವನ್ನು ಕಲಿಯಲೇಬೇಕಾಗಿದೆ. ನೀವು ರಾಜಯೋಗವನ್ನು ಕಲಿಯಲು ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗುವುದಿಲ್ಲ. ನೀವು ಕೇವಲ ಈ ಸಂಗಮದಲ್ಲಿಯೇ ರಾಜಯೋಗವನ್ನು ಕಲಿಯುತ್ತೀರಿ. ರಾಜ್ಯವು ಪ್ರಾಪ್ತಿಯಾಯಿತು, ಸ್ವರ್ಗವಾಯಿತೆಂದರೆ ಮತ್ತೆಲ್ಲಾ ಧರ್ಮಗಳು ಸಮಾಪ್ತಿಯಾಗುತ್ತವೆ. ನೀವು ರಾಜಋಷಿಗಳಾಗಿದ್ದೀರಿ. ರಾಧೆ-ಕೃಷ್ಣರೂ ಸಹ ಪವಿತ್ರರಲ್ಲವೆ, ಪವಿತ್ರರಿಗೆ ಮಹಾತ್ಮರೆಂತಲೂ ಹೇಳುತ್ತಾರೆ. ಮಹಾತ್ಮರು ಪವಿತ್ರರಾಗಿರುತ್ತಾರೆ. ನೀವೂ ಸಹ ಈಗ ಮಹಾತ್ಮರು ಅಥವಾ ರಾಜಋಷಿಗಳಾಗಿದ್ದೀರಿ. ಮಹಾತ್ಮ ಅರ್ಥಾತ್ ಪವಿತ್ರ, ಮಹಾನ್ ಆತ್ಮ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ, ಶಾಸ್ತ್ರಗಳು ಕೊನೆಯಲ್ಲಿ ರಚಿಸಲ್ಪಡುತ್ತವೆ. ಕಥೆಗಳ ರೂಪದಲ್ಲಿ ಬರೆಯುತ್ತಾರೆ, ಯಾವುದು ಕಳೆದು ಹೋಗಿರುತ್ತದೆಯೋ ಅದನ್ನು ಕುಳಿತು ಆಟದಂತೆ ಬರೆಯುತ್ತಾರೆ. ಸತ್ಯವಂತೂ ಏನೂ ಇಲ್ಲ. ಈಗ ತಂದೆಯು ಮಕ್ಕಳಿಗೆ ಸನ್ಮುಖದಲ್ಲಿ ಓದಿಸುತ್ತಾರೆ, ನಂತರ ಇವರದು ಚರಿತ್ರೆಯಾಗುತ್ತದೆ. ಯಾದವರು-ಕೌರವರು, ಪಾಂಡವರಿದ್ದರು ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಇರಲು ಸಾಧ್ಯ. ಸಂಗಮಯುಗದ ಚರಿತ್ರೆಯನ್ನು ಅವರು ಬರೆದಿದ್ದಾರೆ. ಹಬ್ಬಗಳೆಲ್ಲವೂ ಈ ಸಂಗಮಯುಗದ್ದಾಗಿದೆ, ರಕ್ಷಾಬಂಧನವೂ ಸಹ ಪವಿತ್ರತೆಯ ಮೇಲಿದೆ, ನಂತರದಲ್ಲಿ ಅದರ ನೆನಪಾರ್ಥವು ನಡೆಯುತ್ತದೆ. ಇಲ್ಲಿ ತಂದೆಯು ಎಲ್ಲರನ್ನೂ ಪವಿತ್ರರನ್ನಾಗಿ ಮಾಡಿ ಪ್ರತಿಜ್ಞೆ ಮಾಡಿಸುತ್ತಾರೆ. ಸಿಖ್ಖರು ಕಂಕಣವನ್ನು ಧರಿಸುತ್ತಾರೆ, ಅದೂ ಸಹ ಪವಿತ್ರತೆಯ ಸಂಕೇತವಾಗಿದೆ. ಹಿಂದೂ ಜನರು ಜನಿವಾರವನ್ನು ಧರಿಸುತ್ತಾರೆ, ಅದೂ ಸಹ ಪವಿತ್ರತೆಯ ಸಂಕೇತವಾಗಿದೆ ಆದರೆ ಅವರು ಪವಿತ್ರರಾಗಿರುವುದಿಲ್ಲ. ಶ್ರೀ ರಕ್ಷೆಯನ್ನು ಕಟ್ಟಿಸಿಕೊಳ್ಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಹಿಂದಿನ ಕಾಲದಲ್ಲಿ ಬ್ರಾಹ್ಮಣರು ಶ್ರೀ ರಕ್ಷೆಯನ್ನು ಕಟ್ಟುತ್ತಿದ್ದರು ಆದರೆ ಈಗ ಸಹೋದರಿಯು ಸಹೋದರನಿಗೆ ಶ್ರೀ ರಕ್ಷೆಯನ್ನು ಕಟ್ಟುತ್ತಾಳೆ. ಅದಕ್ಕಾಗಿ ಸಹೋದರನು ಹಣ ಕೊಡುತ್ತಾರೆ. ಇದೆಲ್ಲವೂ ಈಗ ಫ್ಯಾಷನ್ ಬಂದಿದೆ, ವಾಸ್ತವದಲ್ಲಿ ಇದು ಪವಿತ್ರತೆಯ ಮಾತಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಆ ಬ್ರಾಹ್ಮಣರು ಈ ರೀತಿ ತಿಳಿಸುವುದಿಲ್ಲ, ಈಗ ಬೇಹದ್ದಿನ ತಂದೆಯು ಹೇಳುತ್ತಾರೆ. ಮಕ್ಕಳೇ, ನಾವು ಪವಿತ್ರರಾಗಿರುತ್ತೇವೆ, ಎಂದೂ ವಿಕಾರದಲ್ಲಿ ಹೋಗುವುದಿಲ್ಲವೆಂದು ಪ್ರತಿಜ್ಞೆ ಮಾಡಿರಿ. ತಾವು ಬಂದು ಪತಿತರನ್ನು ಪಾವನ ಮಾಡಿ ಎಂದೇ ನನ್ನನ್ನು ಕರೆಯುತ್ತೀರಿ, ಸತ್ಯ-ತ್ರೇತಾಯುಗದಲ್ಲಿ ಯಾರೂ ಕರೆಯುವುದಿಲ್ಲ. ಅದು ರಾಮ ರಾಜ್ಯ, ಇದು ರಾವಣ ರಾಜ್ಯವಾಗಿದೆ. ರಾಮ ರಾಜ್ಯದಲ್ಲಿ ಪಂಚ ವಿಕಾರಗಳಿರುವುದಿಲ್ಲ, ಯಥಾ ರಾಜ-ರಾಣಿ ತಥಾ ಪ್ರಜಾ. ಈಗ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ನಾವು ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ, ಈ ನರಕದಿಂದ ಖಂಡಿತವಾಗಿಯೂ ಹೋಗಬೇಕಾಗಿದೆ. ಪಾವನರನ್ನಾಗಿ ಮಾಡಿ ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ ಅಂದಮೇಲೆ ನಾವೇಕೆ ಪಾವನರಾಗಬಾರದು. ಅವರದು ಅನೇಕ ಪ್ರಕಾರದ ಹಠಯೋಗಗಳಿದೆ. ಜೈಪುರದ ಮ್ಯೂಜಿಯಂನಲ್ಲಿ ಹೋಗಿ ನೋಡಿರಿ, ಎಷ್ಟೊಂದು ಪ್ರಕಾರದ ಹಠಯೋಗಿಗಳ ಚಿತ್ರವಿದೆ! ಅದರಿಂದ ಆಗುವುದೇನೂ ಇಲ್ಲ. ಇನ್ನೂ ಏಣಿಯನ್ನು ಕೆಳಗಿಳಿಯುತ್ತಲೇ ಹೋಗುತ್ತಾರೆ. |
ತಂದೆಯು ತಿಳಿಸಿದ್ದಾರೆ, ಭಾರತವು ಯಾವಾಗ ಪತಿತವಾಗುತ್ತದೆಯೋ, ರಾವಣನ ರಾಜ್ಯವಾಗುತ್ತದೆಯೋ ಆಗ ಧರಣಿಯು ಅಲುಗಾಡತೊಡಗುತ್ತದೆ. ಚಿನ್ನದ ಮಹಲುಗಳೆಲ್ಲವೂ ಕೆಳಗಡೆ ಹೊರಟು ಹೋಗುತ್ತವೆ. ಮಹಲು ಮೊದಲಾದುವುಗಳನ್ನು ಯಾರೂ ಲೂಟಿ ಮಾಡಲಿಲ್ಲ. ಆ ಇಸ್ಲಾಮಿಗಳು ಕೇವಲ ಮಂದಿರಗಳನ್ನು ಲೂಟಿ ಮಾಡಿದ್ದಾರೆ, ಕೆಲವು ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ. ಆಭರಣಗಳ ಆಸಕ್ತಿ ಎಲ್ಲರಿಗಿಂತ ಹೆಚ್ಚು ಆಸಕ್ತಿ ನಿಮಗಿದೆ. ನೀವು ಸ್ವರ್ಗದಲ್ಲಿ ಬರುತ್ತಿದ್ದಂತೆಯೇ ಆಭರಣಗಳನ್ನು ಧರಿಸುತ್ತೀರಿ, ರಾಜ್ಯಭಾರ ಮಾಡುತ್ತೀರಿ, ಅನ್ಯ ಧರ್ಮದವರು ಬರುತ್ತಿದ್ದಂತೆಯೇ ರಾಜ್ಯಭಾರ ಮಾಡುವುದಿಲ್ಲ, ನೀವು ಬೇಹದ್ದಿನ ತಂದೆಯಿಂದ ಸ್ವರ್ಗದ ರಾಜಧಾನಿಯ ಆಸ್ತಿಯನ್ನು ಪಡೆಯುತ್ತೀರಿ ಅಂದಾಗ ತಂದೆಯು ಕುಳಿತು ಇದೆಲ್ಲವನ್ನೂ ತಿಳಿಸುತ್ತಾರೆ. ಇವರು ಗೀತೆಯನ್ನು ಓದಿ ತಿಳಿಸುವುದಿಲ್ಲ. ಗೀತೆಯಲ್ಲಿ ಏನೆಲ್ಲವನ್ನು ಓದಿ ಬರೆದಿದ್ದಾರೆಯೋ ಅದೆಲ್ಲವನ್ನೂ ನಾನೂ ಹೇಳಲಿಲ್ಲ, ಆ ಮನುಷ್ಯರು ನನ್ನ ಮಹಾವಾಕ್ಯಗಳನ್ನು ನಂತರದಲ್ಲಿ ಕುಳಿತು ಶಾಸ್ತ್ರಗಳ ರೂಪದಲ್ಲಿ ಬರೆದಿದ್ದಾರೆ. ನಾನು ಏನನ್ನು ತಿಳಿಸಿದೆನೋ ಅದನ್ನು ನೀವೇ ಯಥಾರ್ಥವಾಗಿ ಕೇಳಿದಿರಿ ನಂತರ ಹೋಗಿ ರಾಜ್ಯಭಾರ ಮಾಡಿದಿರಿ. ಅಲ್ಲಿ ಈ ಜ್ಞಾನ ಇರುವುದಿಲ್ಲ. ಇಲ್ಲಂತೂ ತಂದೆಯು ಶಿಕ್ಷಕನಾಗಿ ಶಿಕ್ಷಣವನ್ನು ಕೊಡುತ್ತಾರೆ. ತಂದೆಯು ಹಿಂಧಿ ಭಾಷೆಯಲ್ಲಿಯೇ ತಿಳಿಸುತ್ತಾರೆ, ಇಲ್ಲಿ ಎಲ್ಲರೂ ಹಿಂದಿ ಹಿಂದಿ ಹೇಳುತ್ತಿರುತ್ತಾರಲ್ಲವೆ. ಯಾವುದು ಅವರ ಭಾಷೆಯಾಗಿರುವುದೋ ಅದನ್ನು ಹೇಳುತ್ತಿರುತ್ತಾರೆ. ವಾಸ್ತವದಲ್ಲಿ ಪ್ರಾಚೀನ ಭಾಷೆಯು ಹಿಂದಿಯಾಗಿದೆ, ಸಂಸ್ಕೃತವಲ್ಲ. ಈ ಸಂಸ್ಕೃತವು ಶಂಕರಾಚಾರ್ಯರ ನಂತರ ಬಂದಿರುವುದಾಗಿದೆ. ಯಾರು ಬರುವರೋ ಅವರು ತಮ್ಮ ಭಾಷೆಯನ್ನು ಪ್ರಚಲಿತ ಮಾಡುತ್ತಾರೆ. ತಂದೆಯು ಗೀತೆಯನ್ನು ಸಂಸ್ಕೃತದಲ್ಲಿ ತಿಳಿಸಲಿಲ್ಲ, ಗುರುನಾನಕರದು ತಮ್ಮದೇ ಆದ ಗ್ರಂಥವಿದೆ, ಅವರು ಸಿಖ್ಖ್ಧರ್ಮವನ್ನು ಸ್ಥಾಪನೆ ಮಾಡಿದರು. ಅವರನ್ನೂ ಸಹ ಅವತಾರವೆಂದು ತಿಳಿಯುತ್ತಾರೆ. ಅವರಲ್ಲಿ ರಾಜರೂ ಇರುತ್ತಾರೆ, ಸನ್ಯಾಸಿಗಳಲ್ಲಿಯೂ ರಾಜ್ಯಭಾರ ಇರುವುದಿಲ್ಲ. ತಂದೆಯು ತಿಳಿಸಿದ್ದಾರೆ, ಬುದ್ಧ-ಕ್ರೈಸ್ಟ್ ಮೊದಲಾದವರು ಮೊದಲು ಗೃಹಸ್ಥಿ ಆತ್ಮ ಆಗಿದ್ದರು. ಗೃಹಸ್ಥಿ, ಪತಿತ ಆತ್ಮರಂತೂ ಧರ್ಮ ಸ್ಥಾಪನೆ ಮಾಡಲು ಸಾಧ್ಯವಿಲ್ಲ ಆದ ಕಾರಣ ಅವರಲ್ಲಿ ಸಮಯನುಸಾರ ಪವಿತ್ರ ಆತ್ಮವು ಪ್ರವೇಶ ಮಾಡಿತು ಆಗ ಅವರು ಧರ್ಮ ಸ್ಥಾಪನೆ ಮಾಡಿದರು. ಅನ್ಯ ಧರ್ಮಗಳು ಭಿನ್ನ-ಭಿನ್ನ ಪ್ರಕಾರದಲ್ಲಿದೆ, ಅವರು ಬಂದು ತಮ್ಮ ಚಿಕ್ಕ ಮಠ-ಪಂಥಗಳನ್ನು ಸ್ಥಾಪನೆ ಮಾಡುತ್ತಾರೆ. ವೃಕ್ಷದ ಚಿತ್ರದಲ್ಲಿಯೂ ತೋರಿಸಿದ್ದಾರಲ್ಲವೆ ಅಂದಾಗ ಹಠಯೋಗ ಮತ್ತು ರಾಜಯೋಗದಲ್ಲಿ ಬಹಳ ಅಂತರವಿದೆ. ಈ ಮಾತುಗಳನ್ನು ತಿಳಿದುಕೊಳ್ಳಬೇಕಾಗಿದೆ. ಯಾರಿಗೆ ಇವು ಅರ್ಥವಾಗುವುದಿಲ್ಲವೋ ಅವರು ತೂಕಡಿಸುತ್ತಾ ಇರುತ್ತಾರೆ ಅಥವಾ ಆಕಳಿಸುತ್ತಾ ಇರುತ್ತಾರೆ. ಇಲ್ಲಂತೂ ನಿಮಗೆ ಖಜಾನೆಯು ಸಿಗುತ್ತದೆ, ಬಹಳ ದೊಡ್ಡ ಸಂಪಾದನೆಯಿದೆ. ನೀವು ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳುತ್ತೀರಿ ಅಂದಮೇಲೆ ಇಲ್ಲಿ ಕಣ್ಣುಗಳನ್ನು ತೆರೆದು ಕೇಳಬೇಕಾಗಿದೆ. ಆಕಳಿಸುತ್ತಾ ಇರುತ್ತೀರಿ ಅಥವಾ ಬುದ್ಧಿಯು ಹೊರಗಡೆ ಅಲೆದಾಡುತ್ತಾ ಇದ್ದರೆ ಅವರು ರಾಜ್ಯವನ್ನು ಪಡೆಯಲು ಸಾಧ್ಯವಿಲ್ಲ. |
ನೀವು ರಾಜಋಷಿಗಳಾಗಿದ್ದೀರಿ, ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದೀರಿ. ತಂದೆಯೇ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ, ಶೀಕೃಷ್ಣನು ಮಾಡುವುದಿಲ್ಲ. ಕೃಷ್ಣನೂ ಸಹ ತಂದೆಯ ಆಸ್ತಿಯನ್ನು ಪಡೆದುಕೊಳ್ಳುತ್ತಾನೆ, ನಿಮ್ಮ ತಂದೆಯು ನಿರಾಕಾರನಾಗಿದ್ದಾರೆ ಅವರಿಂದ ವಿಶ್ವದ ರಾಜ್ಯ ಪದವಿಯ ಆಸ್ತಿಯನ್ನು ಪಡೆಯುತ್ತಿದ್ದೀರಿ. ನೀವು ಎಷ್ಟೊಂದು ಸಾಹುಕಾರರಾಗಿದ್ದೀರಿ. ಇಲ್ಲಿ ಒಬ್ಬ ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಅದರಲ್ಲಿಯೂ ನೀವು ತಿನ್ನಿರಿ, ಕುಡಿಯಿರಿ, ತಿರುಗಾಡಿರಿ ಕೇವಲ ತಂದೆಯನ್ನು ನೆನಪು ಮಾಡಿರಿ. ಸಾಹುಕಾರರು ಅವಶ್ಯವಾಗಿ ಚೆನ್ನಾಗಿ ತಿನ್ನುತ್ತಾರೆ. ಅವರಂತೂ ತಮ್ಮ ಸಂಪಾದನೆಯ ಫಲವನ್ನು ತಿನ್ನುತ್ತಾರೆ. ಭಕ್ಷ್ಯ ಭೋಜನವನ್ನಾದರೂ ತಿನ್ನಿರಿ ಅಥವಾ ರೊಟ್ಟಿಯನ್ನಾದರೂ ತಿನ್ನಿರಿ ಆದರೆ ತಂದೆಯನ್ನು ನೆನಪು ಮಾಡಿರಿ. ಭಲೆ ಏನನ್ನಾದರೂ ತಿನ್ನಿರಿ, ಹಣವಿರುವುದಾದರೂ ಏತಕ್ಕೆ! ಬಾಬಾ ಇದನ್ನು ನಿರಾಕರಿಸುವುದಿಲ್ಲ. ಕೇವಲ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ. ಈ ರಾಜಧಾನಿಯನ್ನು ಸ್ಥಾಪನೆ ಮಾಡುವುದರಲ್ಲಿ ಯಾವುದೇ ಖರ್ಚಿಲ್ಲ, ಆ ಯುದ್ಧ ಮೊದಲಾದುವುಗಳಲ್ಲಿ ಎಷ್ಟೊಂದು ಖರ್ಚಾಗುತ್ತದೆ. ವಿಮಾನಗಳಿಗಾಗಿ ಎಷ್ಟೊಂದು ಖರ್ಚಾಗುತ್ತದೆ ಒಂದುವೇಳೆ ಕೆಳಗೆಬಿದ್ದರೆ ಒಮ್ಮೆಲೆ ಸಮಾಪ್ತಿಯಾಗಿ ಬಿಡುತ್ತಾರೆ, ಎಷ್ಟೊಂದು ನಷ್ಟವುಂಟಾಗುತ್ತದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ನಡೆಯುತ್ತಾ, ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ, ಸ್ವದರ್ಶನ ಚಕ್ರವನ್ನು ತಿರುಗಿಸುತ್ತಾ ಇರಿ. ನಾವು 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ, ಈಗ ವತನದ ಕಡೆಗೆ ಹೋಗಬೇಕಾಗಿದೆ. ಮನೆಗೆ ಹೋಗಿ ನಂತರ ಬಂದು ರಾಜ್ಯಭಾರ ಮಾಡುತ್ತೇವೆ. ನೀವು ಪಾತ್ರಧಾರಿಗಳಲ್ಲವೆ. ಆ ಚಲನ ಚಿತ್ರವು 2-3 ಗಂಟೆಗಳ ಕಾಲ ನಡೆಯುತ್ತದೆ, ಈ ಬೇಹದ್ದಿನ ನಾಟಕವು 5000 ವರ್ಷ ನಡೆಯುತ್ತದೆ. ಇದನ್ನು ಮನುಷ್ಯರೇ ತಿಳಿದುಕೊಳ್ಳಲು ಸಾಧ್ಯ. ಈ ಪ್ರಪಂಚವು ಮುಳ್ಳುಗಳ ಕಾಡಾಗಿದೆ. ವಿಕಾರದ ಮುಳ್ಳು ಅತಿ ದೊಡ್ಡ ಮುಳ್ಳಾಗಿದೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಎರಡನೇ ಮುಳ್ಳು ಕ್ರೋಧವಾಗಿದೆ. ಅದರ ಗುರುತು, ಈ ಮಹಾಭಾರತ ಯುದ್ಧವನ್ನು ನೋಡಿರಿ. ಯಾವುದೇ ಮಾತಿನಲ್ಲಿ ಕ್ರೋಧ ಬಂದರೆ ಸಾಕು ಕೂಡಲೇ ಬಾಂಬುಗಳನ್ನು ಹಾಕಲು ಆರಂಭಿಸುತ್ತಾರೆ. ಈಗಂತೂ ಇಂತಿಂತಹ ಬಾಂಬುಗಳನ್ನು ತಯಾರಿಸಿದ್ದಾರೆ, ಅದರ ಮಾತೇ ಕೇಳಬೇಡಿ. ಸತ್ಯಯುಗದಲ್ಲಿ ಯಾವುದೇ ಯುದ್ಧ ಇತ್ಯಾದಿಗಳಾಗುವುದಿಲ್ಲ. ಸಂಗಮದಲ್ಲಿ ಈ ಮಹಾಭಾರತ ಯುದ್ಧವನ್ನು ತೋರಿಸಿದ್ದಾರೆ, ಮತ್ತ್ಯಾವುದೇ ಶಾಸ್ತ್ರಗಳಲ್ಲಿ ಯುದ್ಧದ ಮಾತಿಲ್ಲ. ಅಲ್ಲಂತೂ ನೀವು ಇಡೀ ವಿಶ್ವದ ಮಾಲೀಕರಾಗಿರುತ್ತೀರಿ, ಯುದ್ಧದ ಮಾತಿರಲು ಸಾಧ್ಯವಿಲ್ಲ, ಶಾಸ್ತ್ರಗಳಲ್ಲಿ ಅಸುರರು ಮತ್ತು ದೇವತೆಗಳ ಯುದ್ಧವನ್ನು ತೋರಿಸಿದ್ದಾರೆ ಆದರೆ ದೇವತೆಗಳು ಅಹಿಂಸಕರಾಗಿದ್ದಾರೆ. ನೀವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಇದು ಶಾಂತಿಯ ಬಲವಾಗಿದೆ, ಇದರಲ್ಲಿ ನೀವು ಏನನ್ನೂ ಹೇಳುವಂತಿಲ್ಲ. ನೆನಪಿನ ಬಲದಿಂದ ನೀವು ತಂದೆಯಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ. ಅಂತರವು ನೋಡಿ, ಎಷ್ಟಿದೆ! ವಿಜ್ಞಾನದ ಬಲದಿಂದ ವಿನಾಶವಾಗುತ್ತದೆ ಮತ್ತೆ ಅದೇ ವಿಜ್ಞಾನದಿಂದ ನೀವು ಸತ್ಯಯುಗದಲ್ಲಿ ಸುಖವನ್ನೂ ನೋಡುತ್ತೀರಿ, ವಿಜ್ಞಾನದಿಂದ ಅನ್ವೇಷಣೆ ಮಾಡುತ್ತಾರೆ, ಅದನ್ನು ಸುಖಕ್ಕಾಗಿಯೇ ಮಾಡುತ್ತಾರೆ. ವಿಜ್ಞಾನದವರೂ ಸಹ ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ, ಪ್ರದರ್ಶನಿಗೆ ಎಲ್ಲರೂ ಬರುತ್ತಾರೆ. ಮುಂದೆ ಹೋದಂತೆ ಎಲ್ಲರೂ ಬರುವರು, ನಿಮ್ಮ ಈ ಶಾಂತಿಯ ಶಕ್ತಿಯ ಪ್ರಭಾವ ಬೀರುವುದು. |
ಗೀತೆಯ ಭಗವಂತ ಯಾರು ಎಂದು ನೀವು ಪ್ರಶ್ನೆಯನ್ನು ಕೇಳುತ್ತೀರಿ, ಈ ರೀತಿ ಮತ್ತ್ಯಾರೂ ಕೇಳಲು ಸಾಧ್ಯವಿಲ್ಲ. ಎಲ್ಲಿ ಈ ಪ್ರಶ್ನೆಗಳನ್ನು ಬರೆಯುವಿರೋ ಅದರ ಜೊತೆಗೆ ಚಿತ್ರಗಳನ್ನೂ ಕೊಡಿ. ಗೀತೆಯ ಭಗವಂತ ಪರಮಪಿತ ಪರಮಾತ್ಮನೋ ಅಥವಾ ಶ್ರೀಕೃಷ್ಣನೋ? ಶ್ರೀಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ, ಪತಿತರಿಂದ ಪಾವನರನ್ನಾಗಿ ಮಾಡುವವರು ತಂದೆಯೇ ಆಗಿದ್ದಾರೆ. ಕೃಷ್ಣನ ಆತ್ಮವಂತೂ 84 ಜನ್ಮಗಳನ್ನು ತೆಗೆದುಕೊಂಡು ಪತಿತನಾಗಿದೆ. ಅವರಿಗೇ ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ನೀವು ನಿಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ. ನಾವು 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ ಎಂಬುದನ್ನು ಪಾತ್ರಧಾರಿಗಳಿಗೆ ತಿಳಿದಿರಬೇಕಲ್ಲವೆ. ಸನ್ಯಾಸಿಗಳ ಧರ್ಮವೇ ಬೇರೆಯಾಗಿದೆ. ಭಾರತವಾಸಿಗಳಿಗೆ ತಮ್ಮ ಧರ್ಮದ ಬಗ್ಗೆ ಅರಿವಿಲ್ಲದ ಕಾರಣ ಅನ್ಯ ಧರ್ಮಗಳಲ್ಲಿ ಹೋಗುತ್ತಿರುತ್ತಾರೆ. ಯಾವ ಗುರುವಿನ ಆಶೀರ್ವಾದದಿಂದಾದರೂ ಯಾರಿಗಾದರೂ ಹಣ ಸಿಕ್ಕಿತೆಂದರೆ ಅವರ ಹಿಂದೆ ಬೀಳುತ್ತಾರೆ, ಮತ್ತೆ ದಿವಾಳಿಯಾದರೆ ಅದು ಭಗವಂತನ ಇಚ್ಛೆಯೆಂದು ಹೇಳುತ್ತಾರೆ. ಗಂಡು ಮಗುವಾಯಿತೆಂದರೆ ಬಹಳ ಖುಷಿಯಾಗುತ್ತದೆ, ಒಂದುವೇಳೆ 10-12 ದಿನಗಳ ನಂತರ ಮಗು ಸತ್ತು ಹೋಯಿತೆಂದರೆ ಇದು ಈಶ್ವರನ ಲೀಲೆಯೆಂದು ಹೇಳುತ್ತಾರೆ. ಇವರನ್ನು ಬದುಕಿಸುವುದು ನಮ್ಮ ಕೈಯಲ್ಲಿಲ್ಲ ಎನ್ನುತ್ತಾರೆ. ಬ್ರಹ್ಮಾ ತಂದೆಯು ಇಂತಹ ಅನೇಕ ಉದಾಹರಣೆಗಳನ್ನು ನೋಡಿದ್ದಾರೆ, ಇಂತಹವರು ಅನೇಕರಿದ್ದಾರೆ. ಇಲ್ಲಂತೂ ತಂದೆಯು ಕುಳಿತಿದ್ದಾರೆ, ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಪಾವನರಾಗಿ. ನಿಮಗೆ ನೆನಪಿದೆಯೇ, ಯಾವಾಗ ಮಹಾಭಾರತ ಯುದ್ಧವಾಗಿತ್ತೊ ಆಗ ಬಾಬಾ, ನಮ್ಮನ್ನು ಈ ದುಶ್ಯಾಸನರು ಅಪವಿತ್ರವನ್ನಾಗಿ ಮಾಡುತ್ತಾರೆ, ಇದರಿಂದ ರಕ್ಷಣೆ ಮಾಡಿ ಎಂದು ದ್ರೌಪದಿಯು ಕರೆದಿದ್ದಳು. ಇದು 5000 ವರ್ಷಗಳ ಮಾತಾಗಿದೆ. ವಿಕಾರಕ್ಕಾಗಿಯೇ ಅಬಲೆಯರ ಮೇಲೆ ಅತ್ಯಾಚಾರಗಳಾಗುತ್ತವೆ, ಕೆಲವರು ಸ್ತ್ರೀಯರೂ ಸಹ ಈ ರೀತಿಯಿರುತ್ತಾರೆ, ಅವರು ವಿಕಾರವಿಲ್ಲದೆ ಇರಲು ಸಾಧ್ಯವಾಗುವುದಿಲ್ಲ. ಶೂರ್ಪನಖಿ, ಪೂತನ ಎಂದು ಅವರ ಹೆಸರನ್ನು ಇಡಲಾಗಿದೆ. ಯಾರು ವಿಕಾರಕ್ಕಾಗಿ ತೊಂದರೆ ಕೊಡುವರೋ ಅವರು ಕಂಸ, ಜರಾಸಂಧ, ಶಿಶುಪಾಲ..... ಆಗಿದ್ದಾರೆ. ಇವರೆಲ್ಲರೂ ವಿನಾಶವನ್ನು ಹೊಂದಲೇಬೇಕಾಗಿದೆ. ಈ ಸಮಯದಲ್ಲಿ ಆಸುರೀ ರಾವಣ ರಾಜ್ಯವಿದೆ, ನಂತರ ಈಶ್ವರೀಯ ರಾಜ್ಯವಿರುವುದು. ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ನೀವು ಈ ಇಡೀ ಚಕ್ರವನ್ನು ಅರಿತುಕೊಂಡಿದ್ದೀರಿ. ಯಾವಾಗ ವಿಕಾರದಲ್ಲಿ ಹೋಗುವರೋ ಆಗ ಇದೆಲ್ಲವೂ ಮರೆತು ಹೋಗುತ್ತದೆ. ವಿಕಾರದಲ್ಲಿ ಹೋಗುವವರ ಮುಖವೇ ಬಾಡಿ ಹೋಗುತ್ತದೆ. ನಾವು ಏನು ಮಾಡಿ ಬಿಟ್ಟೆವು ಎಂದು ಸ್ವಯಂ ಅವರೇ ತಿಳಿದುಕೊಳ್ಳುತ್ತಾರೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಈ ವಿಕಾರದ ಗುಣಿಯಲ್ಲಿ ಬೀಳಬೇಡಿ, ಇದು ನಿಮಗೆ ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುವಂತದ್ದಾಗಿದೆ. ಇದರಲ್ಲಿ ಬೀಳಬಾರದು. ಪ್ರತಿಜ್ಞೆ ಮಾಡಿರಿ, ನಾವೆಂದೂ ವಿಕಾರದಲ್ಲಿ ಹೋಗುವುದಿಲ್ಲ, ಭಗವಾನುವಾಚ ಇದೆ - ಕಾಮ ಮಹಾಶತ್ರುವಾಗಿದೆ. ಪ್ರತಿಯೊಂದು ಚಿತ್ರದಲ್ಲಿ ಮೊದಲು ಇದನ್ನು ಬರೆಯಿರಿ. ಜ್ಞಾನ ಸಾಗರ, ಪತಿತ-ಪಾವನ ಗೀತಾ ಜ್ಞಾನ ದಾತ ಶಿವ ಭಗವಾನುವಾಚ - ಈ ರೀತಿ ಬರೆದಾಗ ಕೃಷ್ಣನ ಹೆಸರೇ ಹೊರಟು ಹೋಗುವುದು. ನಮಗೆ ಗೀತೆಯ ಭಗವಂತನೇ ಕುಳಿತು ಇದನ್ನು ತಿಳಿಸುತ್ತಾರೆ. ಅದೇ ಜ್ಞಾನವನ್ನು ನಾವು ತೆಗೆದುಕೊಳ್ಳುತ್ತೇವೆ, ಭಗವಂತನೇ ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ ಮತ್ತೆ ಹಳೆಯ ಪ್ರಪಂಚದ ವಿನಾಶವಾಗುತ್ತದೆ. ಇದು ರುದ್ರ ಜ್ಞಾನ ಯಜ್ಞವಲ್ಲವೆ. ಇದಕ್ಕೆ ಮೂಲ ಶಿವ ತಂದೆಯಾಗಿದ್ದಾರೆ. ರುದ್ರ ತಂದೆ ಎಂದು ಹೇಳುವುದಿಲ್ಲ, ಬಾಂಬೆಯಲ್ಲಿ ಬಬೂಲ್ನಾಥನ ಮಂದಿರವೂ ಇದೆ. ಮುಳ್ಳುಗಳಿಗೆ ಬಬುಲ್ ಎಂದು ಹೇಳಲಾಗುತ್ತದೆ ಅಂದಮೇಲೆ ಬಬೂಲ್ನಾಥ ಎಂಬ ಹೆಸರನ್ನು ಏಕೆ ಇಟ್ಟಿದ್ದಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಚಿತ್ರವಂತೂ ಶಿವನದಾಗಿದೆ. ಬಾಕಿ ಅದಕ್ಕೆ ಅನೇಕ ಹೆಸರುಗಳನ್ನು ಇಟ್ಟು ಬಿಟ್ಟಿದ್ದಾರೆ. ಶಿವ ತಂದೆಯೇ ಬಂದು ಮುಳ್ಳುಗಳ ಕಾಡನ್ನು ಹೂದೋಟವನ್ನಾಗಿ ಮಾಡುತ್ತಾರೆ, ಅವರೇ ನಿಮ್ಮ ತಂದೆಯಾಗಿದ್ದಾರೆ. ಅವರ ಹೆಸರಾಗಿದೆ - ಶಿವ. ಶಿವ ಪರಮಾತ್ಮಾಯ ನಮಃ, ಬ್ರಾಹ್ಮಣ ದೇವಿ-ದೇವತಾಯ ನಮಃ ಶಬ್ಧವು ಸಂಪೂರ್ಣ ಸ್ಪಷ್ಟವಾಗಿದೆ. ಆ ಪರಮಪಿತ ಪರಮಾತ್ಮನೇ ಕುಳಿತು ಈಗ ಈ ರಥದ ಮೂಲಕ ತಿಳಿಸುತ್ತಿದ್ದಾರೆ. ಹೇಗೆ ಲೌಕಿಕ ತಂದೆಯು ತಿಳಿಸುತ್ತಾರಲ್ಲವೆ - ಮಕ್ಕಳೇ, ನನ್ನ ಕುಲಕ್ಕೆ ಕಳಂಕ ತರಬೇಡಿ, ಯಾವುದೇ ಕೆಟ್ಟ ಕೆಲಸವನ್ನು ಮಾಡಬೇಡಿ ಎಂದು. ಅದೇರೀತಿ ಈ ತಂದೆಯೂ ಸಹ ಹೇಳುತ್ತಾರೆ - ಮಕ್ಕಳೇ, ವಿಕಾರದಲ್ಲಿ ಹೋಗಬೇಡಿರಿ. ಪವಿತ್ರರಾಗದೇ ಸ್ವರ್ಗದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ನೀವು ಬಹಳ ದೊಡ್ಡ ಸಂಪಾದನೆಯನ್ನೂ ಮಾಡಿಕೊಳ್ಳುತ್ತಿದ್ದೀರಿ, ಉಳಿದೆಲ್ಲರೂ ಕಳೆದುಕೊಳ್ಳುತ್ತಿದ್ದಾರೆ. ಭಲೆ ಯಾರ ಬಳಿಯಾದರೂ ಪದುಮದಷ್ಟಿರಬಹುದು. ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸುತ್ತಿದ್ದಾರೆ, ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ ಆದರೆ ನಿಮಗೆ ತಿಳಿದಿದೆ - ಇದೆಲ್ಲವೂ ಸಮಯದ ವ್ಯರ್ಥವಾಗಿದೆ. ಇದೇನೂ ಕೆಲಸಕ್ಕೆ ಬರುವುದಿಲ್ಲ, ಎಲ್ಲವೂ ಸಮಾಪ್ತಿಯಾಗಿ ಬಿಡುವುದು. ಇನ್ನೂ 10-12 ಸಾವಿರ ವರ್ಷಗಳು ನಡೆಯುತ್ತದೆ ಎಂದು ಅವರು ತಿಳಿದುಕೊಳ್ಳುತ್ತಾರೆ. ಆದರೆ ನಿಮಗೆ ಗೊತ್ತಿದೆ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ, ತಲೆಯ ಮೇಲೆ ನಿಂತಿದೆ. ಸ್ವಲ್ಪ ಸಮಯದಲ್ಲಿಯೇ ಈ ಭೂಕಂಪ ಇತ್ಯಾದಿಗಳು ಆಗಿ ಎಲ್ಲವೂ ಡೋಲಾಯನಮಾನವಾಗಿ ಆಗಿ ಬಿಡುವುದು. ಭೂಕಂಪದಲ್ಲಿ ಅಸಂಖ್ಯಾತ ಜನರು ಸಾಯುತ್ತಾರೆ, ಈಗಂತೂ ವಿನಾಶವಾಗಲೇಬೇಕಾಗಿದೆ, ವಿನಾಶದ ಸಾಕ್ಷಾತ್ಕಾರ ಮತ್ತು ಸ್ಥಾಪನೆಯ ಸಾಕ್ಷಾತ್ಕಾರವನ್ನು ನೋಡಿದ್ದೀರಿ, ಈಗ ಮತ್ತೆ ಈ ಸ್ಥೂಲ ಕಣ್ಣುಗಳಿಂದ ನೋಡುತ್ತೀರಿ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನೂ ಮಾಡುತ್ತಾರೆ ಆದರೆ ಯಾರೂ ವೈಕುಂಠದಲ್ಲಿ ಹೋಗಲು ಸಾಧ್ಯವಿಲ್ಲ, ಜ್ಞಾನವಿಲ್ಲದೆ ಸದ್ಗತಿಯಿಲ್ಲ. ಇವೆಲ್ಲವೂ ಭಕ್ತಿಮಾರ್ಗದ ಗೊಂಬೆಗಳಾಗಿವೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಕುಲಕಳಂಕಿತ ಮಾಡುವಂತಹ ಯಾವುದೇ ಕೆಟ್ಟ ಕೆಲಸವನ್ನು ಮಾಡಬಾರದು. ತಮ್ಮೊಂದಿಗೆ ತಾವೇ ಪವಿತ್ರರಾಗುವ ಪ್ರತಿಜ್ಞೆ ಮಾಡಿಕೊಳ್ಳಬೇಕಾಗಿದೆ. |
2. ಈಗ ತಮ್ಮ ಹಣ, ಸಮಯವನ್ನು ವ್ಯರ್ಥವಾಗಿ ಕಳೆಯಬಾರದು. ಹೂದೋಟದಲ್ಲಿ ಹೋಗುವುದಕ್ಕಾಗಿ ಮುಳ್ಳುಗಳನ್ನು ತೆಗೆದು ಹಾಕಬೇಕಾಗಿದೆ. |
ಓಂ ಶಾಂತಿ. ಇವರು ಕೇವಲ ಪ್ರೀತಿಯ ಸಾಗರನಲ್ಲ, ಜ್ಞಾನ ಸಾಗರನಾಗಿದ್ದಾರೆ. ಜ್ಞಾನ ಮತ್ತು ಅಜ್ಞಾನ. ಜ್ಞಾನಕ್ಕೆ ದಿನವೆಂತಲೂ ಅಜ್ಞಾನಕ್ಕೆ ರಾತ್ರಿಯೆಂತಲೂ ಹೇಳಲಾಗುತ್ತದೆ, ಜ್ಞಾನ ಎಂಬ ಅಕ್ಷರವೇ ಚೆನ್ನಾಗಿದೆ. ಅಜ್ಞಾನವೆಂಬುದು ಕೆಟ್ಟ ಅಕ್ಷರವಾಗಿದೆ. ಅರ್ಧ ಕಲ್ಪ ಜ್ಞಾನದ ಪ್ರಾಲಬ್ಧವಿರುತ್ತದೆ, ಇನ್ನರ್ಧ ಕಲ್ಪ ಅಜ್ಞಾನದ ಪ್ರಾಲಬ್ಧವಿರುತ್ತದೆ. ಅಜ್ಞಾನದ ಪ್ರಾಲಬ್ಧವು ದುಃಖವಾಗಿದೆ, ಜ್ಞಾನದ ಪ್ರಾಲಬ್ಧವು ಸುಖವಾಗಿದೆ, ಇವು ಬಹಳ ಸಹಜ ತಿಳಿದುಕೊಳ್ಳುವ ಮಾತುಗಳಾಗಿವೆ. ಜ್ಞಾನವು ದಿನವಾಗಿದೆ, ಅಜ್ಞಾನವು ರಾತ್ರಿಯಾಗಿದೆ. ಇದೂ ಸಹ ಯಾರಿಗೂ ತಿಳಿದಿಲ್ಲ. ಜ್ಞಾನವೆಂದು ಯಾವುದಕ್ಕೆ ಹೇಳಲಾಗುತ್ತದೆ, ಯಾವುದಕ್ಕೆ ಅಜ್ಞಾನವೆಂದು ಹೇಳಲಾಗುತ್ತದೆ, ಇವು ಬೇಹದ್ದಿನ ಮಾತುಗಳಾಗಿವೆ. ಜ್ಞಾನವೆಂದರೇನು, ಭಕ್ತಿಯೆಂದರೇನು ಎಂಬುದನ್ನು ನೀವು ಎಲ್ಲರಿಗೂ ತಿಳಿಸುತ್ತೀರಿ. ಜ್ಞಾನದಿಂದ ನೀವು ಪೂಜ್ಯರಾಗುತ್ತಿದ್ದೀರಿ. ಯಾವಾಗ ಪೂಜ್ಯರಾಗಿ ಬಿಡುತ್ತೀರೋ ಆಗ ನಿಮಗೆ ಪೂಜೆಯ ಸಾಮಗ್ರಿ ಅಂದರೆ ಯಾವುದೆಲ್ಲಾ ಮಂದಿರ ಇತ್ಯಾದಿಗಳಿದೆಯೋ ಇದೆಲ್ಲದರ ಅರಿವಾಗುತ್ತದೆ. ನಿಮಗೆ ತಿಳಿದಿದೆ, ಇವೆಲ್ಲವೂ ನೆನಪಾರ್ಥವಾಗಿದೆ. ಅವರ ಜೀವನ ಚರಿತ್ರೆಯು ಏನೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಯಾರು ಪೂಜೆ ಮಾಡಲು ಹೋಗುತ್ತಾರೆಯೋ ಅವರೂ ಸಹ ತಿಳಿದುಕೊಂಡಿಲ್ಲ. ಪೂಜೆಗೆ ಭಕ್ತಿಯೆಂದು ಹೇಳಲಾಗುತ್ತದೆ, ಭಗವಂತನು ಭಕ್ತಿಯ ಫಲವನ್ನು ಕೊಡುವುದಕ್ಕಾಗಿ ಭಕ್ತರೊಂದಿಗೆ ಮಿಲನ ಮಾಡಬೇಕಾಗಿದೆ ಅಂದಮೇಲೆ ಭಗವಂತನೇ ಬಂದು ಪೂಜಾರಿಗಳಿಂದ ಪೂಜ್ಯರನ್ನಾಗಿ ಮಾಡುತ್ತಾರೆ. ಪೂಜ್ಯರು ಸತ್ಯಯುಗದಲ್ಲಿಯೂ, ಪೂಜಾರಿಗಳು ಕಲಿಯುಗದಲ್ಲಿಯಿರುತ್ತಾರೆ. ಇಂದು ಏನಿದೆ? ನಾಳೆ ಏನಾಗುವುದು ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ವಿನಾಶವಂತೂ ಅವಶ್ಯವಾಗಿ ಆಗುವುದು. ಯಾವ ಸಮಯದಲ್ಲಿ ಬೇಕಾದರೂ ಆಗುವ ಸಾಧ್ಯತೆಯಿದೆ. ತಯಾರಿ ಆಗುತ್ತಿದೆ, ಅನೇಕ ಪ್ರಾಕೃತಿಕ ಆಪತ್ತುಗಳು ಬರುತ್ತವೆ ಎಂದು ಗಾಯನವಿದೆ. ಇದನ್ನು ಬರೆಯಬೇಕು – ಗೃಹ ಯುದ್ಧ ಮತ್ತು ಪ್ರಾಕೃತಿಕ ಆಪತ್ತುಗಳಿಗೆ ಈಶ್ವರೀಯ ವಿಕೋಪಗಳೆಂದು ಹೇಳುವುದಿಲ್ಲ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಇದರಲ್ಲಿ ಪ್ರಾಕೃತಿಕ ಆಪತ್ತುಗಳೆಲ್ಲವೂ ಬರಲಿವೆ. ವಿನಾಶದಲ್ಲಿ ಸಹಯೋಗ ಕೊಡುತ್ತದೆ. ಬೆಂಕಿಯ ಮಳೆ ಬೀಳುತ್ತದೆ, ಜನರು ಹಸಿವಿನಿಂದ ಸಾಯುತ್ತಾರೆ, ಭೂಕಂಪಗಳಾಗಲಿವೆ. ಇದರ ಮುಖಾಂತರವೇ ವಿನಾಶವಾಗಬೇಕಾಗಿದೆ. ಮಕ್ಕಳಿಗೆ ತಿಳಿದಿದೆ, ಇದಂತೂ ಅವಶ್ಯವಾಗಿ ಆಗುವುದು ಇಲ್ಲದಿದ್ದರೆ ಸತ್ಯಯುಗದಲ್ಲಿ ಅಷ್ಟು ಕಡಿಮೆ ಜನಸಂಖ್ಯೆಯು ಹೇಗೆ ಇರುವುದು? ಅಂದಮೇಲೆ ಅವಶ್ಯವಾಗಿ ಒಟ್ಟಿಗೆ ವಿನಾಶವಾಗುವುದು. ಮಕ್ಕಳು ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಎಲ್ಲಾ ಬಟ್ಟೆಗಳನ್ನು ಈಗ ಒಗೆಯಲಾಗುತ್ತದೆ. ಇದು ಬೇಹದ್ದಿನ ಬಹಳ ದೊಡ್ಡ ಯಂತ್ರವಾಗಿದೆ. ಕೊಳಕಾದ ಬಟ್ಟೆಗಳನ್ನು ಒಗೆದರು ಎಂದು ಗಾಯನವಿದೆ. ವಾಸ್ತವದಲ್ಲಿ ಬಟ್ಟೆಗಳ ಮಾತಿಲ್ಲ, ಇದು ಶರೀರದ ಮಾತಾಗಿದೆ. ಆತ್ಮರನ್ನು ಯೋಗಬಲದಿಂದ ತೊಳೆಯಬೇಕಾಗಿದೆ. ಈ ಸಮಯದಲ್ಲಿ ಪಂಚ ತತ್ವಗಳೇ ತಮೋಪ್ರಧಾನವಾಗಿರುವುದರಿಂದ ಶರೀರವೂ ಅದೇರೀತಿ ಇರುತ್ತದೆ. ಪತಿತ-ಪಾವನ ತಂದೆಯು ಬಂದು ಪಾವನರನ್ನಾಗಿ ಮಾಡುತ್ತಾರೆ, ಮತ್ತೆಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಹೇಗೆ ಪಾವನರಾಗುತ್ತೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಬಹಳ ಸಹಜ ಮಾರ್ಗವನ್ನು ತಿಳಿಸುತ್ತಾರೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಎಲ್ಲೆಲ್ಲಿ ಭಕ್ತಿ, ಯಜ್ಞ ಇತ್ಯಾದಿಗಳು ನಡೆಯುತ್ತವೆಯೋ ಅಲ್ಲಿಗೆ ಹೋಗಿ ತಿಳಿಸಿ - ನೀವು ಯಾರ ಭಕ್ತಿ ಮಾಡುತ್ತಿದ್ದೀರೋ ಅವರ ಚರಿತ್ರೆಯನ್ನೂ ತಿಳಿದುಕೊಳ್ಳುವುದರಿಂದಲೇ ನೀವು ದೇವತೆಗಳಾಗಲು ಸಾಧ್ಯ. ಅವರು ಹೇಗೆ ಜೀವನ್ಮುಕ್ತಿಯನ್ನು ಪಡೆದರು ಎಂಬುದನ್ನು ನೀವು ತಿಳಿದುಕೊಳ್ಳಿ ಆಗ ನೀವೂ ಸಹ ಜೀವನ್ಮುಕ್ತರಾಗುವಿರಿ. ಮಂದಿರಗಳಲ್ಲಿ ಕುಳಿತು ಜೀವನ ಚರಿತ್ರೆಯನ್ನು ತಿಳಿಸಿದರೆ ಚೆನ್ನಾಗಿ ತಿಳಿದುಕೊಳ್ಳುವರು. |
ನೀವೂ ಸಹ ತಂದೆಯಿಂದ ಈಗ ಜೀವನ ಕಥೆಯನ್ನು ಕೇಳುತ್ತೀರಿ, ನೀವು ಮಕ್ಕಳಿಗೆ ಎಷ್ಟೊಂದು ತಿಳುವಳಿಕೆ ಸಿಕ್ಕಿದೆ. ಪರಮಪಿತ ಪರಮಾತ್ಮನ ಜೀವನ ಚರಿತ್ರೆಯನ್ನು ಯಾರೂ ತಿಳಿದುಕೊಂಡಿಲ್ಲ. ಸರ್ವವ್ಯಾಪಿಯೆಂದು ಹೇಳುವುದಾದರೆ ಅಲ್ಲಿ ಜೀವನ ಚರಿತ್ರೆಯ ಮಾತೇ ಬರುವುದಿಲ್ಲ. ನೀವು ಮಕ್ಕಳು ಈಗ ಪರಮಪಿತ ಪರಮಾತ್ಮನ ಜೀವನ ಕಥೆಯನ್ನು ತಿಳಿದುಕೊಂಡಿದ್ದೀರಿ ಅಂದರೆ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೀರಿ. ಈ ಸಮಯಕ್ಕೆ ಆದಿಯೆಂದು ಹೇಳುತ್ತಾರೆ, ಈಗಲೇ ತಂದೆಯು ಬಂದು ಪತಿತರನ್ನು ಪಾವನ ಮಾಡುತ್ತಾರೆ ನಂತರ ಮಧ್ಯದಲ್ಲಿ ಭಕ್ತಿಯ ಪಾತ್ರವು ನಡೆಯುತ್ತದೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ನಾನು ಬಂದು ಸ್ಥಾಪನೆ ಮಾಡುತ್ತೇನೆ, ಮಾಡಿಸುತ್ತೇನೆ. ಮಾಡಿ-ಮಾಡಿಸುವವನಾಗಿದ್ದೇನೆ. ಪ್ರೇರಣೆ ಕೊಡುವುದಾದರೆ ಅದಕ್ಕೆ ಮಾಡುವುದೆಂದು ಹೇಳುವುದಿಲ್ಲ, ತಂದೆಯು ಬಂದು ಇವರ ಕರ್ಮೇಂದ್ರಿಯಗಳ ಮೂಲಕ ಮಾಡುತ್ತಾರೆ. ಇದರಲ್ಲಿ ಪ್ರೇರಣೆಯ ಮಾತಿಲ್ಲ. ಮಾಡಿ-ಮಾಡಿಸುವವರು ಅವಶ್ಯವಾಗಿ ಸನ್ಮುಖದಲ್ಲಿದ್ದಾಗಲೇ ಮಾಡಿಸುವರು. ಪ್ರೇರಣೆಯಿಂದ ಏನೂ ಆಗಲು ಸಾಧ್ಯವಿಲ್ಲ. ಆತ್ಮವು ಶರೀರವಿಲ್ಲದೆ ಏನೂ ಮಾಡಲು ಸಾಧ್ಯವಿಲ್ಲ. ಅನೇಕರು ಹೇಳುತ್ತಾರೆ, ಈಶ್ವರನೇ ಪ್ರೇರಣೆಯಿಂದ ಎಲ್ಲವನ್ನೂ ಮಾಡುತ್ತಾರೆ. ಬಾಬಾ, ತಾವು ಪ್ರೇರಣೆ ಕೊಡಿ, ನಮ್ಮ ಪತಿಯ ಬುದ್ಧಿಯು ಸರಿಹೋಗಲಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದರಲ್ಲಿ ಪ್ರೇರಣೆಯ ಮಾತಿಲ್ಲ. ಹಾಗಿದ್ದರೆ ಶಿವ ಜಯಂತಿಯನ್ನು ಏಕೆ ಆಚರಿಸಲಾಗುತ್ತಿತ್ತು! ಪ್ರೇರಣೆಯಿಂದ ಕೆಲಸವಾಗುವಂತಿದ್ದರೆ ಮತ್ತೆ ಬರುವುದಾದರೂ ಏಕೆ? ಮೊದಲನೆಯದಾಗಿ ಈಶ್ವರನೆಂದರೆ ಯಾರು ಎಂಬುದನ್ನೂ ತಿಳಿದುಕೊಂಡಿಲ್ಲ. ಕೇವಲ ಈಶ್ವರನ ಪ್ರೇರಣೆಯಿಂದ ಎಲ್ಲವೂ ಆಗುತ್ತದೆಯೆಂದು ಹೇಳಿ ಬಿಡುತ್ತಾರೆ. ನಿರಾಕಾರನು ಪ್ರೇರಣೆಯಿಂದ ಹೇಗೆ ಮಾಡುತ್ತಾರೆ, ಅವರಂತೂ ಮಾಡಿ-ಮಾಡಿಸುವವರಾಗಿದ್ದಾರೆ. ಅವರೇ ಬಂದು ಮಾರ್ಗವನ್ನು ತಿಳಿಸುತ್ತಾರೆ. ಕರ್ಮೇಂದ್ರಿಯಗಳಿಂದ ಮುರುಳಿಯನ್ನು ನುಡಿಸುತ್ತಾರೆ. ಎಲ್ಲಿಯವರೆಗೆ ಕರ್ಮೇಂದ್ರಿಯಗಳ ಆಧಾರ ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮುರುಳಿಯನ್ನು ಹೇಗೆ ನುಡಿಸುವುದು! ಜ್ಞಾನ ಸಾಗರನೆಂದ ಮೇಲೆ ತಿಳಿಸುವುದಕ್ಕಾಗಿ ಮುಖ ಬೇಕಲ್ಲವೆ. ಈಗ ನೀವು ಮಕ್ಕಳಿಗೆ ಇಡೀ ಪ್ರಪಂಚದ ಆದಿ-ಮಧ್ಯ-ಅಂತ್ಯದ ಬಗ್ಗೆ ತಿಳಿದಿದೆ. ಸಂಪೂರ್ಣ ಜ್ಞಾನ ಸಿಕ್ಕಿದೆ, ಜ್ಞಾನವಿಲ್ಲದೆ ಗತಿಯಿಲ್ಲವೆಂದು ತಿಳಿಯುತ್ತಾರೆ ಅಂದಮೇಲೆ ಜ್ಞಾನವನ್ನು ಯಾರು ಕೊಡುವರು? ಜ್ಞಾನಮಾರ್ಗ ಮತ್ತು ಅಜ್ಞಾನ ಮಾರ್ಗದಲ್ಲಿ ಇರುವ ಅಂತರವನ್ನಾದರೂ ನೋಡಿರಿ. ವಿಜ್ಞಾನವೆಂದೂ ಹೇಳುತ್ತಾರೆ, ಅಜ್ಞಾನವು ಅಂಧಕಾರವಾಗಿದೆ ಬಾಕಿ ಜ್ಞಾನ ಮತ್ತು ವಿಜ್ಞಾನಕ್ಕೆ ನಾವು ಮುಕ್ತಿ-ಜೀವನ್ಮುಕ್ತಿಯೆಂದು ಹೇಳಬಹುದು. ಈಗ ನಿಮಗೆ ಪಾವನರಾಗುವ ಜ್ಞಾನವು ಸಿಗುತ್ತದೆ. ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಯಾರಾದರೂ ಕೇಳಿದರೆ ಆಶ್ಚರ್ಯಚಕಿತರಾಗುತ್ತಾರೆ. ಆತ್ಮವು ಜ್ಞಾನವನ್ನು ತೆಗೆದುಕೊಳ್ಳುತ್ತದೆ ಎಂದು ಹೇಳುತ್ತಾರೆ ಅಂದಮೇಲೆ ಆತ್ಮವು ಅವಶ್ಯವಾಗಿ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆಯಲ್ಲವೆ. ಮನುಷ್ಯರಿಂದ ದೇವತೆಗಳಾಗುತ್ತೀರೆಂದರೆ ಜ್ಞಾನವಿರಬೇಕಾಗಿದೆ ಆದರೆ ತಂದೆಯು ತಿಳಿಸುತ್ತಾರೆ - ಪ್ರಾಲಬ್ಧಕ್ಕಾಗಿ ಇದು ಪುರುಷಾರ್ಥವಾಗಿದೆ. ಪ್ರಾಲಬ್ಧವನ್ನು ಪಡೆದ ಮೇಲೆ ಮತ್ತೆ ಜ್ಞಾನದ ಅವಶ್ಯಕತೆಯೇನಿದೆ! ಸತ್ಯಯುಗವು ನೀವು ಮಕ್ಕಳಿಗಾಗಿ ಪ್ರಾಲಬ್ಧವಾಗಿದೆ, ಈ ಮಾತುಗಳನ್ನು ಕೇಳುತ್ತಿದ್ದಂತೆಯೇ ಆಶ್ಚರ್ಯಚಕಿತರಾಗುತ್ತಾರೆ. ಈ ಜ್ಞಾನವು ಪರಂಪರೆಯಿಂದ ಏಕೆ ನಡೆಯುತ್ತಾ ಬಂದಿಲ್ಲ ಎಂದು ಕೇಳುತ್ತಾರೆ. ಇದು ಪ್ರಾಯಃಲೋಪವಾಗಿ ಬಿಡುತ್ತದೆ. ದಿನವಾಯಿತೆಂದರೆ ಮತ್ತೆ ಅಜ್ಞಾನವಿರುವುದಿಲ್ಲ, ಅಜ್ಞಾನವಿದ್ದಾಗಲೇ ಜ್ಞಾನದ ಅವಶ್ಯಕತೆಯಿರುವುದು. ಇವೂ ಸಹ ತಿಳಿದುಕೊಳ್ಳುವ ಮತ್ತು ತಿಳಿಸುವ ಮಾತುಗಳಾಗಿವೆ, ಕೂಡಲೇ ಯಾರೂ ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ, ಮಕ್ಕಳಿಗಾಗಿ ಉಡುಗೊರೆಯನ್ನು ತೆಗೆದುಕೊಂಡು ಬರುತ್ತಾರೆ. ಭಕ್ತಿಯ ಫಲವನ್ನು ಕೊಡುವುದಕ್ಕಾಗಿ ಬರುತ್ತಾರೆ. ಭಕ್ತಿಯ ನಂತರ ಸದ್ಗತಿ, ವಿನಾಶವೂ ಅವಶ್ಯವಾಗಿ ಆಗುವುದು. ಅದಕ್ಕಾಗಿ ಎಲ್ಲಾ ತಯಾರಿಗಳೂ ಆಗಿವೆ, ನೀವು ಕೇಳುತ್ತಾ ಇರುತ್ತೀರಿ, ಒಂದು ಕಿಡಿ ಬಿದ್ದರೂ ಸಹ ಒಂದೆರಡು ಗಂಟೆಯಲ್ಲಿ ಇಡೀ ಮನೆಯೇ ಸುಟ್ಟು ಭಸ್ಮವಾಗಿ ಬಿಡುತ್ತದೆ. ಇದೇನೂ ಹೊಸ ಮಾತಲ್ಲ, ವಿನಾಶವು ಖಂಡಿತ ಆಗಬೇಕಾಗಿದೆ. ಸತ್ಯಯುಗದಲ್ಲಿ ಇರುವುದೇ ಕಡಿಮೆ ಜನಸಂಖ್ಯೆ, ಅದರಲ್ಲಿಯೂ ಶ್ರೇಷ್ಠಾಚಾರಿಗಳಿರುತ್ತಾರೆ. ಅಂದಾಗ ಶ್ರೇಷ್ಠಾಚಾರಿಗಳಾಗುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ, ಮಾಯೆಯು ಒಮ್ಮೆಲೆ ಮೂಗನ್ನು ಹಿಡಿದುಕೊಳ್ಳುತ್ತದೆ. ಹೀಗೆ ಬೀಳುವವರಿಗೆ ಬಹಳ ಪೆಟ್ಟು ಬೀಳುತ್ತದೆ, ಸಮಯ ಹಿಡಿಸುತ್ತದೆ. ಕಾಮ ವಿಕಾರವು ಅತಿ ದೊಡ್ಡ ಪೆಟ್ಟಾಗಿದೆ, ಆದ್ದರಿಂದಲೇ ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ಇದೇ ಪತಿತರನ್ನಾಗಿ ಮಾಡುತ್ತದೆ. ವಿಕಾರದ ಮೇಲೆಯೇ ಜಗಳವಾಗುತ್ತದೆ, ಪವಿತ್ರರಾಗಿರಲು ಬಿಡದೇ ಇದ್ದಾಗ ಅವಶ್ಯವಾಗಿ ಹೇಳುತ್ತಾರೆ - ಇದಕ್ಕಿಂತಲೂ ಪಾತ್ರೆಯನ್ನು ತೊಳೆಯುವುದೇ ಒಳ್ಳೆಯದು, ಕಸಗುಡಿಸಿ ಪಾತ್ರೆಯನ್ನು ತೊಳೆದರೂ ಪರವಾಗಿಲ್ಲ ಆದರೆ ಪವಿತ್ರವಾಗಿರುತ್ತೇವೆ, ಇದರಲ್ಲಿ ಬಹಳ ಧೈರ್ಯಬೇಕು. ಯಾವಾಗ ಯಾರಾದರೂ ತಂದೆಯ ಆಶ್ರಯದಲ್ಲಿ ಬರುತ್ತಾರೆಯೋ ಆಗ ಮಾಯೆಯೂ ಸಹ ಯುದ್ಧ ಮಾಡಲು ಆರಂಭಿಸುತ್ತದೆ, ಪಂಚ ವಿಕಾರಗಳ ರೋಗವು ಇನ್ನೂ ಅಧಿಕವಾಗಿ ಹೊರಬರುತ್ತದೆ. ಮೊದಲು ಪಕ್ಕಾ ನಿಶ್ಚಯ ಬುದ್ಧಿಯವರಾಗಬೇಕು. ಜೀವಿಸಿದ್ದಂತೆಯೇ ಸತ್ತಿದ್ದೀರಿ, ಇಲ್ಲಿಂದ ನಿಮ್ಮ ದೋಣಿಯು ಹೊರಟಿದೆ. ನೀವು ಕಲಿಯುಗೀ ವಿಕಾರಿ ತೀರವನ್ನು ಬಿಟ್ಟಿದ್ದೀರಿ. ನೀವೀಗ ಯಾತ್ರೆಯಲ್ಲಿ ಹೋಗುತ್ತಿದ್ದೀರಿ, ಅಶರೀರಿಯಾಗಿ ತಮ್ಮ ಮನೆಗೆ ಹೋಗುತ್ತೀರಿ. ಆತ್ಮಕ್ಕೆ ಈ ಜ್ಞಾನವಿದೆ - ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಹೋಗುತ್ತೇವೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿ ಯಾತ್ರೆಯಲ್ಲಿರುತ್ತೇವೆ. ಬುದ್ಧಿಯಲ್ಲಿ ನೆನಪಿರಲಿ - ಇದಂತೂ ಸ್ಮಶಾನವಾಗಿದೆ, ನಾವೀಗ ಸುಖಧಾಮಕ್ಕೆ ಹೋಗುತ್ತೇವೆ. ತಂದೆಯು ನಮಗೆ ಆಸ್ತಿಯನ್ನು ಕೊಡುವ ಯುಕ್ತಿಯನ್ನು ತಿಳಿಸುತ್ತಿದ್ದಾರೆ. ಪಾವನರಾಗಲು ನಾವು ಯೋಗದಲ್ಲಿರುತ್ತೇವೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಆಗ ಆತ್ಮವು ಶರೀರವನ್ನು ಬಿಡುವುದು. ಯಾತ್ರೆಯು ಎಷ್ಟು ಅದ್ಭುತವಾಗಿದೆ ಕೇವಲ ತಂದೆಯನ್ನು ನೆನಪು ಮಾಡಿ, ತಮ್ಮ ರಾಜಧಾನಿಯನ್ನು ನೆನಪು ಮಾಡಿರಿ. ಇಷ್ಟು ಸಹಜ ಮಾತೂ ಸಹ ನೆನಪಿಗೆ ಬರುವುದಿಲ್ಲ, ತಂದೆಯನ್ನು ನೆನಪು ಮಾಡಿ ಸಾಕು ಆದರೆ ಮಾಯೆಯು ಅವರನ್ನೂ ನೆನಪು ಮಾಡಲು ಬಿಡುವುದಿಲ್ಲ, ಪರಿಶ್ರಮವಾಗುತ್ತದೆ. ನಮ್ಮ ತಂದೆಯು ಬಂದಿದ್ದಾರೆಂದು ಆತ್ಮಕ್ಕೆ ಜ್ಞಾನ ಸಿಕ್ಕಿದೆ. ಆತ್ಮವೇ ಓದುತ್ತದೆಯಲ್ಲವೆ. ಆತ್ಮವು ಶರೀರದ ಮೂಲಕ ಜನ್ಮ ಪಡೆಯುತ್ತದೆ, ಆತ್ಮವು ಸಹೋದರ -ಸಹೋದರನಾಗಿದೆ, ದೇಹಾಭಿಮಾನದಲ್ಲಿ ಬರುವುದರಿಂದ ಮತ್ತೆ ಅನೇಕ ಸಂಬಂಧಗಳಾಗಿ ಬಿಡುತ್ತವೆ, ಇಲ್ಲಿ ನೀವು ಸಹೋದರ-ಸಹೋದರರಾಗಿದ್ದೀರಿ, ಪರಸ್ಪರ ಸಹೋದರ-ಸಹೋದರಿಯೂ ಆಗಿದ್ದೀರಿ. ಪ್ರವೃತ್ತಿ ಮಾರ್ಗವಲ್ಲವೆ. ಇಬ್ಬರಿಗೂ ಆಸ್ತಿಯು ಬೇಕು. ಆತ್ಮವೇ ಪುರುಷಾರ್ಥ ಮಾಡುತ್ತದೆ, ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುವುದೇ ಪರಿಶ್ರಮವಿದೆ, ದೇಹಾಭಿಮಾನವಿರಬಾರದು. ಶರೀರವೇ ಇಲ್ಲವೆಂದ ಮೇಲೆ ಯಾವುದರಿಂದ ವಿಕಾರ ನಡೆಸುವುದು! ನಾವಾತ್ಮರಾಗಿದ್ದೇವೆ, ತಂದೆಯ ಬಳಿ ಹೋಗಬೇಕಾಗಿದೆ. ಶರೀರದ ಅಭಿಮಾನವೇ ಇರಬಾರದು. ಎಷ್ಟು ಯೋಗಿಗಳಾಗುತ್ತಾ ಹೋಗುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶೀತಲವಾಗುತ್ತಾ ಹೋಗುವವು. ದೇಹಾಭಿಮಾನದಲ್ಲಿ ಬರುವುದರಿಂದ ಕರ್ಮೇಂದ್ರಿಯಗಳು ಚಂಚಲವಾಗುತ್ತವೆ. ಆತ್ಮಕ್ಕೆ ತಿಳಿದಿದೆ, ನಮಗೆ ಪ್ರಾಪ್ತಿಯಾಗುತ್ತಿದೆ, ಶರೀರದಿಂದ ಭಿನ್ನವಾಗುತ್ತಾ ಹೋದಾಗ ಕರ್ಮೇಂದ್ರಿಯಗಳು ಶಾಂತವಾಗುತ್ತಾ ಹೋಗುವುದು. ಸನ್ಯಾಸಿಗಳು ಔಷಧಿಯನ್ನು ಸೇವಿಸಿ ಕರ್ಮೇಂದ್ರಿಯಗಳನ್ನು ಶಾಂತ ಮಾಡಿಕೊಳ್ಳುತ್ತಾರೆ, ಅದಂತೂ ಹಠಯೋಗವಾಯಿತಲ್ಲವೆ. ನೀವು ಯೋಗದಿಂದ ಕೆಲಸ ತೆಗೆದುಕೊಳ್ಳಬೇಕಾಗಿದೆ. ಯೋಗಬಲದಿಂದ ನೀವು ಕರ್ಮೇಂದ್ರಿಯಗಳನ್ನು ವಶ ಪಡಿಸಿಕೊಳ್ಳಲು ಸಾಧ್ಯವಿಲ್ಲವೆ! ಎಷ್ಟು ಆತ್ಮಾಭಿಮಾನಿಯಾಗುತ್ತಾ ಹೋಗುತ್ತೀರೋ ಅಷ್ಟು ಕರ್ಮೇಂದ್ರಿಯಗಳು ಶಾಂತವಾಗಿ ಬಿಡುತ್ತವೆ, ಬಹಳ ಪರಿಶ್ರಮ ಪಡಬೇಕಾಗುತ್ತದೆ. ಪ್ರಾಪ್ತಿಯು ಬಹಳ ಉನ್ನತವಾಗಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಯೋಗಬಲದಿಂದ ನೀವು ವಿಶ್ವದ ಮಾಲೀಕರಾಗುತ್ತೀರಿ, ಕರ್ಮೇಂದ್ರಿಯಗಳ ಮೇಲೆ ಜಯ ಗಳಿಸುತ್ತೀರಿ ಆದ್ದರಿಂದ ಭಾರತದ ಯೋಗವು ಪ್ರಸಿದ್ಧವಾಗಿದೆ. ನೀವು ಮನುಷ್ಯನಿಂದ ದೇವತೆ, ಪತಿತರಿಂದ ಪಾವನರಾಗುತ್ತೀರಿ, ಪ್ರಜೆಗಳೂ ಸಹ ಸ್ವರ್ಗವಾಸಿಗಳೇ ಅಲ್ಲವೆ. ಯೋಗಬಲದಿಂದ ನೀವು ಸ್ವರ್ಗವಾಸಿಗಳಾಗುತ್ತೀರಿ, ಬಾಹುಬಲದಿಂದ ಸಾಧ್ಯವಿಲ್ಲ. ಇದರಲ್ಲಿ ಏನೂ ಕಷ್ಟವಿಲ್ಲ, ಕುಮಾರಿಯರಿಗಂತೂ ಸ್ವಲ್ಪವೂ ಪರಿಶ್ರಮವೇ ಇಲ್ಲ. ಬಂಧನಮುಕ್ತರಾಗಿದ್ದಾರೆ, ವಿಕಾರದಲ್ಲಿ ಹೋದರೆಂದರೆ ಬಹಳ ದೊಡ್ಡ ಪಂಚಾಯಿತಿಯಾಗಿ ಬಿಡುತ್ತದೆ, ಕುಮಾರಿಯರಾಗಿರುವುದೇ ಒಳ್ಳೆಯದಾಗಿದೆ. ಇಲ್ಲವಾದರೆ ಮತ್ತೆ ಅಧರ್ ಕುಮಾರಿಯೆಂದು ಹೆಸರು ಬರುತ್ತದೆ. ಅಂದಮೇಲೆ ದಂಪತಿಗಳಾಗುವುದಾದರೂ ಏಕೆ? ಇದರಲ್ಲಿಯೂ ನಾಮ-ರೂಪದ ನಶೆಯೇರುತ್ತದೆ, ಇದೂ ಸಹ ಮೂರ್ಖತೆಯಾಗಿದೆ. ದಂಪತಿಗಳಾದ ಮೇಲೆ ಪವಿತ್ರರಾಗಿರಲು ಬಹಳ ದೊಡ್ಡ ಸಾಹಸ ಬೇಕು. ಜ್ಞಾನದ ಪರಾಕಾಷ್ಠತೆಯನ್ನು ಹೊಂದಿರಬೇಕು, ಅನೇಕರು ಇದರಲ್ಲಿ ಸಾಹಸವನ್ನು ಇಡುತ್ತಾರೆ ಆದರೆ ವಿಕಾರದ ಬೆಂಕಿಯ ಶಾಖವು ಬಂದು ಬಿಟ್ಟರೆ ಆಟವೇ ಸಮಾಪ್ತಿಯಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ, ಕುಮಾರಿಯಾಗಿರುವುದೇ ಒಳ್ಳೆಯದು, ಅಧರ್ಕುಮಾರಿಯಾಗುವ ಸಂಕಲ್ಪವಾದರೂ ಏಕೆ ಮಾಡಬೇಕು! ಕುಮಾರಿಯರ ಹೆಸರು ಪ್ರಸಿದ್ಧಿಯಾಗಿದೆ, ಬಾಲ ಬ್ರಹ್ಮಚಾರಿಯಾಗಿದ್ದೀರಿ, ಬಾಲ ಬ್ರಹ್ಮಚಾರಿಯಾಗುವುದು ಒಳ್ಳೆಯದಾಗಿದೆ, ಪವಿತ್ರತೆಯ ಶಕ್ತಿಯಿರುತ್ತದೆ, ಮತ್ತ್ಯಾರ ನೆನಪೂ ಬರುವುದಿಲ್ಲ ಬಾಕಿ ಸಾಹಸವಿದ್ದರೆ ಮಾಡಿ ತೋರಿಸಿ, ಇದರಲ್ಲಿಯೇ ಪರಿಶ್ರಮವಿದೆ. ಕುಮಾರಿಯಾಗಿದ್ದಾಗ ಒಬ್ಬರೇ ಇರುತ್ತಾರೆ, ವಿವಾಹವಾಗಿ ಬಿಟ್ಟರೆ ಅಲ್ಲಿ ಇಬ್ಬರಾಗಿ ಬಿಡುತ್ತಾರೆ. ಇಬ್ಬರಿಂದ ದ್ವೈತವು ಬಂದು ಬಿಡುತ್ತದೆ, ಸಾಧ್ಯವಾದಷ್ಟು ಕುಮಾರಿಯಾಗಿರುವುದೇ ಒಳ್ಳೆಯದಾಗಿದೆ. ಕುಮಾರಿಯರು ಸೇವೆಗಾಗಿ ಹೊರಡಬಹುದಾಗಿದೆ, ಬಂಧನದಲ್ಲಿ ಬಿದ್ದರೆ ಮತ್ತೆ ಗೊಂದಲವು ವೃದ್ಧಿಯಾಗುತ್ತಾ ಹೋಗುತ್ತದೆ ಅಂದಮೇಲೆ ಬುದ್ಧಿಯು ಸಿಕ್ಕಿ ಹಾಕಿಕೊಳ್ಳುವಂತಹ ಜಾಲವನ್ನು ರಚಿಸುವುದಾದರೂ ಏಕೆ! ಇಂತಹ ಜಾಲದಲ್ಲಿ ಸಿಲುಕುವುದು ಸರಿಯಲ್ಲ, ಕುಮಾರಿಯರಿಗಂತೂ ಇನ್ನೂ ಒಳ್ಳೆಯದಾಗಿದೆ. ಕುಮಾರಿಯರು ಹೆಸರನ್ನು ತಂದಿದ್ದೀರಿ, ಕನ್ನಯ್ಯ ಎಂಬ ಹೆಸರು ಗಾಯನವಿದೆಯಲ್ಲವೆ. ಕುಮಾರಿಯಾಗಿರುವುದು ಬಹಳ ಒಳ್ಳೆಯದಾಗಿದೆ. ನಿಮಗಾಗಿ ಬಹಳ ಸಹಜವಾಗಿದೆ. ವಿದ್ಯಾರ್ಥಿ ಜೀವನವು ಪವಿತ್ರ ಜೀವನವೂ ಆಗಿದೆ, ಬುದ್ಧಿಯು ತಾಜಾ ಆಗಿರುತ್ತದೆ, ಕುಮಾರಿಯರು ಭೀಷ್ಮ ಪಿತಾಮಹರಂತೆ ಆಗಬೇಕಾಗಿದೆ. ಕಲ್ಪದ ಮೊದಲೂ ಸಹ ಇದ್ದಿರಿ ಆದ್ದರಿಂದಲೇ ದಿಲ್ವಾಡಾ ಮಂದಿರದಲ್ಲಿ ನೆನಪಾರ್ಥವಿದೆ, ಈಗ ತಂದೆಯು ಮಕ್ಕಳಿಗೆ ಆದೇಶ ನೀಡುತ್ತಾರೆ - ನನ್ನನ್ನು ನೆನಪು ಮಾಡಿರಿ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ನೀವು ನಿಮ್ಮ ಕಲ್ಯಾಣ ಮಾಡಿಕೊಳ್ಳಿರಿ. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಕಲ್ಯಾಣವಿದೆ. ತಪ್ಪುಗಳಾಗುತ್ತವೆಯೆಂದರೆ ಮಕ್ಕಳು ಬಿದ್ದು ಹೋಗುತ್ತಾರೆ, ನೀವು ಪರಚಿಂತನೆಯನ್ನು ಬಿಟ್ಟು ತಮ್ಮ ಕಲ್ಯಾಣ ಮಾಡಿಕೊಳ್ಳಿ. ಅನ್ಯ ಚಿಂತನೆಯಲ್ಲಿ ಹೋಗಲೇಬೇಡಿ. ನೀವು ಚಿನ್ನದಂತೆ ಆಗಿಬಿಡಿ, ಅನ್ಯರಿಗೂ ಮಾರ್ಗವನ್ನು ತೋರಿಸಿರಿ. ಸತೋಪ್ರಧಾನರಾಗಲು ಇದೊಂದೇ ಉಪಾಯವಾಗಿದೆ, ಪಾವನರಾಗದ ವಿನಃ ಮುಕ್ತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಒಂದೇ ಉಪಾಯವಾಗಿದೆ, ಇದರಿಂದಲೇ ಮತ್ತೆ ಅಂತ್ಯ ಮತಿ ಸೋ ಗತಿಯಾಗುವುದು. ಈಗ ಅಲ್ಲ ಸಲ್ಲದ ಮಾತುಗಳನ್ನು ಬಿಟ್ಟು ಬಿಡಿ ಇಲ್ಲದಿದ್ದರೆ ತಮ್ಮದೇ ನಷ್ಟ ಮಾಡಿಕೊಳ್ಳುವಿರಿ. ತಂದೆಯು ಶಾಪ ಕೊಡುವುದಿಲ್ಲ. ಶ್ರೀಮತದಂತೆ ನಡೆಯದಿದ್ದರೆ ತಮ್ಮನ್ನು ತಾವೇ ಶಾಪಗ್ರಸ್ತರನ್ನಾಗಿ ಮಾಡಿಕೊಳ್ಳುತ್ತೀರಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ನಿಶ್ಚಯ ಬುದ್ಧಿಯವರಾಗಿ ಜೀವಿಸಿದ್ದಂತೆಯೇ ಈ ಹಳೆಯ ಪ್ರಪಂಚದ ತಮ್ಮ ದೋಣಿಯ ಹಗ್ಗವನ್ನು ಬಿಚ್ಚಬೇಕಾಗಿದೆ. ತಂದೆಯ ಪ್ರತೀ ಆಜ್ಞೆಯನ್ನು ಪಾಲನೆ ಮಾಡಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ. |
2. ಅನ್ಯರ ಚಿಂತನೆಯನ್ನು ಬಿಟ್ಟು ತಮ್ಮ ಬುದ್ಧಿಯನ್ನು ಸ್ವಚ್ಛ ಚಿನ್ನದಂತೆ ಮಾಡಿಕೊಳ್ಳಬೇಕಾಗಿದೆ, ಅಲ್ಲಸಲ್ಲದ ಮಾತುಗಳಲ್ಲಿ ತಮ್ಮ ಸಮಯವನ್ನು ನಷ್ಟ ಮಾಡಿಕೊಳ್ಳಬಾರದು. ಯೋಗಬಲದಿಂದ ತಮ್ಮ ಕರ್ಮೇಂದ್ರಿಯಗಳನ್ನು ಶಾಂತ, ಶೀತಲ ಮಾಡಿಕೊಳ್ಳಬೇಕಾಗಿದೆ. |
ಓಂ ಶಾಂತಿ. ಜನ್ಮ-ಜನ್ಮಾಂತರದಿಂದ ಅರ್ಧಕಲ್ಪ ಮಕ್ಕಳು ಸತ್ಸಂಗ ಮಾಡಿದ್ದೀರಿ, ಸಾಧು-ಸಂತ, ಪಂಡಿತ ಮೊದಲಾದವರ ಎಲ್ಲಾ ಮನುಷ್ಯರ ಸತ್ಸಂಗಗಳಿರುತ್ತವೆ. ಈಗ ಇಲ್ಲಿಯದು ಮನುಷ್ಯರ ಸತ್ಸಂಗವಲ್ಲ, ಇದಕ್ಕೆ ಆತ್ಮಿಕ ಸತ್ಸಂಗವೆಂದು ಹೇಳಲಾಗುತ್ತದೆ. ಪರಮಾತ್ಮನು ಆತ್ಮಗಳ ಜೊತೆ ಆತ್ಮಿಕ ವಾರ್ತಾಲಾಪ ಅರ್ಥಾತ್ ಸತ್ಸಂಗ ಮಾಡುತ್ತಾರೆ, ನೀವಿಲ್ಲಿ ಯಾವುದೇ ಮನುಷ್ಯರಿಂದ ಕೇಳುವುದಿಲ್ಲ ಅಥವಾ ದೇವತೆಗಳಿಂದಲೂ ಕೇಳುವುದಿಲ್ಲ, ನೀವು ಭಗವಂತನಿಂದ ಕೇಳುತ್ತೀರಿ. ಭಗವಂತನನ್ನು ಯಾವಾಗಲೂ ನಿರಾಕಾರನೆಂದು ಹೇಳಲಾಗುತ್ತದೆ ಮತ್ತು ಭಗವಂತನು ಮಕ್ಕಳನ್ನು ಭಗವಾನ್-ಭಗವತಿಯರನ್ನಾಗಿ ಮಾಡುವುದಕ್ಕಾಗಿ ಓದಿಸಲು ಬರುತ್ತಾರೆ. ಭಗವಾನ್ ಮತ್ತು ಭಗವತಿಯ ಪದವಿಯನ್ನು ಭಗವಂತನ ವಿನಃ ಅನ್ಯರ್ಯಾರೂ ಕೊಡಲು ಸಾಧ್ಯವಿಲ್ಲ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ಕಲ್ಪ-ಕಲ್ಪವೂ ಸಂಗಮಯುಗವಾದಾಗ ನಿರಾಕಾರ ಭಗವಂತನು ಬಂದು ನಮಗೆ ಜ್ಞಾನವನ್ನು ಕೊಡುತ್ತಾರೆ. ಇದನ್ನೂ ಸಹ ಕೇವಲ ನೀವೇ ತಿಳಿದುಕೊಳ್ಳುತ್ತೀರಿ. ಅನ್ಯರು ತಿಳಿದುಕೊಳ್ಳುವುದು ಬಹಳ ವಿರಳ. ಶಿವ ತಂದೆಯು ಖಂಡಿತ ಬರುತ್ತಾರೆ ಆದರೆ ಅವರ ಬದಲು ಕೃಷ್ಣನನ್ನು ಗೀತೆಯ ಭಗವಂತನೆಂದು ಹೇಳಿದ್ದಾರೆ ಆದ್ದರಿಂದ ಎಲ್ಲರ ಬುದ್ಧಿಯಲ್ಲಿ ಮನುಷ್ಯನ ತನುವೇ ಬರುತ್ತಿರುವುದು. ನೀವೇ ದೈವೀ ಗುಣವಂತರಾಗಿದ್ದಿರಿ, ಈಗ ಆಸುರೀ ಗುಣವಂತರಾಗಿದ್ದೀರಿ. ಈಗ ಪುನಃ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುತ್ತೀರಿ. ದೈವೀ ಗುಣವುಳ್ಳವರಿಗೆ ಈಶ್ವರೀಯ ಸಂಪ್ರದಾಯವೆಂದು, ಆಸುರೀ ಗುಣವಿರುವವರಿಗೆ ಆಸುರೀ ಸಂಪ್ರದಾಯದವರೆಂದು ಹೇಳಲಾಗುತ್ತದೆ. ಈಗ ನಿರಾಕಾರ ತಂದೆಯು ನಿರಾಕಾರ ಸಂಪ್ರದಾಯ ಅರ್ಥಾತ್ ಆತ್ಮರಿಗೆ ಓದಿಸುತ್ತಾರೆ ಆದ್ದರಿಂದ ಈಶ್ವರೀಯ ಸಂಪ್ರದಾಯ ಅಥವಾ ಆತ್ಮಿಕ ಸಂಪ್ರದಾಯವೆಂದು ಹೇಳಲಾಗುತ್ತದೆ. ಅವರಿಗೇ ಆತ್ಮಿಕ ತಂದೆಯು ಬಂದು ಓದಿಸುತ್ತಾರೆ. ನೀವೀಗ ಆತ್ಮಾಭಿಮಾನಿಗಳಾಗುತ್ತೀರಿ. ನಾವಾತ್ಮರಾಗಿದ್ದೇವೆ, ತಂದೆಯು ನಮಗೆ ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ, ಮಕ್ಕಳೇ ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. ತಂದೆಯು ಆತ್ಮರಿಗೇ ಓದಿಸುತ್ತಾರೆ, ಅವರೇ ಜ್ಞಾನಪೂರ್ಣನಾಗಿದ್ದಾರೆ ಮತ್ತು ಋಷಿ ಮುನಿ ಮೊದಲಾದವರೆಲ್ಲರೂ ನೇತಿ ನೇತಿ ಎಂದು ಹೇಳುತ್ತಾ ಹೋದರು ಅರ್ಥಾತ್ ನಾವು ಪರಮಾತ್ಮನನ್ನು ತಿಳಿದುಕೊಂಡಿಲ್ಲ ಎಂದು. ಎಲ್ಲಿಯವರೆಗೆ ಆ ಜ್ಞಾನ ಸಾಗರನೇ ಸನ್ಮುಖದಲ್ಲಿ ಬರುವುದಿಲ್ಲವೋ ಅಲ್ಲಿಯವರೆಗೆ ಜ್ಞಾನವನ್ನು ಹೇಗೆ ತಿಳಿಸುವುದು! ಇವು ಬಹಳ ಚೆನ್ನಾಗಿ ತಿಳಿದುಕೊಳ್ಳುವ ಮಾತುಗಳಾಗಿವೆ. ನಮಗೆ ಯಾವುದೇ ಮನುಷ್ಯರು ಓದಿಸುತ್ತಿಲ್ಲ, ತಂದೆಯು ಓದಿಸುತ್ತಾರೆ. ಅವರು ಬೇಹದ್ದಿನ ನಿರಾಕಾರನಾಗಿದ್ದಾರೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ - ಪ್ರತಿಯೊಬ್ಬರಿಗೆ ಸಾಕಾರ ಮತ್ತು ನಿರಾಕಾರ ಇಬ್ಬರು ತಂದೆಯರಿರುತ್ತಾರೆ. ಒಬ್ಬರು ಆತ್ಮಿಕ ತಂದೆ, ಇನ್ನೊಬ್ಬರು ದೈಹಿಕ ತಂದೆ. ಆತ್ಮಿಕ ತಂದೆಯೇ ಬಂದು ಆತ್ಮರನ್ನು ಪಾವನ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವು ಪಾವನರಾಗಿದ್ದೆವು ನಂತರ ಪತಿತರಾದೆವು. ಈಗ ಪುನಃ ಪತಿತರಿಂದ ಹೇಗೆ ಪಾವನರಾಗುತ್ತೇವೆ! ಚಿತ್ರಗಳು ಸನ್ಮುಖದಲ್ಲಿವೆ. ತಂದೆಯು ಸಲಹೆ ನೀಡುತ್ತಾರೆ - ಪದೇ-ಪದೇ ಚಕ್ರದ ಮುಂದೆ ಹೋಗಿ ಕುಳಿತುಕೊಳ್ಳಿ ಆಗ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವು ಬಂದು ಬಿಡುತ್ತದೆ - ನಾವೀಗ ಸಂಗಮಯುಗದಲ್ಲಿ ಕುಳಿತಿದ್ದೇವೆ ಮತ್ತೆಲ್ಲರೂ ತಮ್ಮನ್ನು ಕಲಿಯುಗದಲ್ಲಿದ್ದೇವೆಂದು ತಿಳಿಯುತ್ತಾರೆ. ಕಲಿಯುಗಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ನೀವೀಗ ಸಂಗಮದಲ್ಲಿದ್ದೀರಿ, ಈಗ ನಿಮಗೆ ಪ್ರಕಾಶತೆಯಿದೆ ಮತ್ತೆ ಸತ್ಯಯುಗದಲ್ಲಿ ನಿಮಗೆ ಈ ಜ್ಞಾನವು ಸಿಗುವುದಿಲ್ಲ. ತಂದೆಯು ಬಂದಾಗಲೇ ಘೋರ ಪ್ರಕಾಶತೆಯಾಗುತ್ತದೆ. ಈ ಸಂಗಮಯುಗವೇ ಕಲ್ಯಾಣಕಾರಿ ಯುಗವಾಗಿದೆ. ಇಂತಹ ಯುಗವು ಮತ್ತ್ಯಾವುದೂ ಇಲ್ಲ. ಈ ಸಮಯದಲ್ಲಿಯೇ ತಂದೆಯು ಬರುತ್ತಾರೆ. ಸತ್ಯಯುಗಕ್ಕೂ ಕಲ್ಯಾಣಕಾರಿ ಎಂದು ಹೇಳುವುದಿಲ್ಲ, ಅಲ್ಲಿ ಯಾರದೇ ಕಲ್ಯಾಣವಾಗುವುದಿಲ್ಲ. ಕಲ್ಯಾಣವು ಸಂಗಮಯುಗದಲ್ಲಿಯೇ ಆಗುತ್ತದೆ, ಸತ್ಯಯುಗದಲ್ಲಂತೂ ಕಲ್ಯಾಣವಾಗಿಯೇ ಇರುತ್ತದೆ. ಸಂಗಮದಲ್ಲಿಯೇ ಎಷ್ಟೊಂದು ಸತ್ಯಯುಗ, ಕಲ್ಯಾಣಕಾರಿಯನ್ನಾಗಿ ಮಾಡುತ್ತಾರೆ ಅಂದಮೇಲೆ ಈಗ ನೋಡಿ, ನಿಮ್ಮದು ಎಷ್ಟೊಂದು ಕಲ್ಯಾಣವಾಗುತ್ತದೆ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡುವುದರಲ್ಲಿ ನಿಮ್ಮದು ಎಷ್ಟು ಸಂಪಾದನೆಯಿದೆ! ಸಂಪಾದನೆಯೂ ಇದೆ ಮತ್ತೊಂದು ಕಡೆ ಆರೋಗ್ಯವೂ ಇದೆ. ನಿಮ್ಮ ಜೀವನವು ಅಮರವಾಗುತ್ತದೆ, ಎಂದೂ ಅಕಾಲ ಮೃತ್ಯುವಾಗುವುದಿಲ್ಲ. ಅಂದಾಗ ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು! ಏಕೆಂದರೆ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ. ಇಲ್ಲಿ ನೀವು ಮಕ್ಕಳು ಬರುತ್ತೀರೆಂದರೆ ಪುರುಷಾರ್ಥ ಮಾಡಿ ಮ್ಯೂಜಿಯಂನ ಚಿತ್ರಗಳ ಬಗ್ಗೆ ತಿಳಿಸಲು ಯೋಗ್ಯರಾಗಬೇಕು. ತಮ್ಮನ್ನು ಯೋಗ್ಯನನ್ನಾಗಿ ಮಾಡಿಕೊಳ್ಳಲು 7-8 ದಿನಗಳವರೆಗೆ ಕುಳಿತು ಕಲಿತುಕೊಳ್ಳಿ. ಅಭ್ಯಾಸವಾಯಿತೆಂದರೆ ಸೇವೆಗಾಗಿ ಹೊರಡಿರಿ. ಸೇವೆ ಮಾಡಿ ಮರಳಿ ಬನ್ನಿರಿ, ಇದನ್ನು ಕಲಿಯುವುದಂತೂ ಬಹಳ ಸಹಜವಾಗಿದೆ. ಚಿತ್ರವನ್ನು ಸನ್ಮುಖದಲ್ಲಿ ನೋಡುತ್ತಿದ್ದಂತೆಯೇ ಬುದ್ಧಿಯಲ್ಲಿ ಬಂದು ಬಿಡುತ್ತದೆ - ನಾವು ಸಂಗಮದಲ್ಲಿ ಕುಳಿತಿದ್ದೇವೆ, ಈಗಿನ ಪ್ರಪಂಚದಲ್ಲಿ ಬಹಳ ಜನಸಂಖ್ಯೆಯಿದೆ. ನಾಳೆಯ ದಿನ ಬಹಳ ಕಡಿಮೆ ಸಂಖ್ಯೆಯಿರುತ್ತದೆ, ಏಕೆಂದರೆ ಇಷ್ಟೊಂದು ಮನುಷ್ಯರೆಲ್ಲರೂ ಹಿಂತಿರುಗಿ ಹೋಗುವರು. ಈಗ ಸ್ವಯಂ ತಂದೆಯೇ ಬಂದಿದ್ದಾರೆ, ಮಕ್ಕಳಿಗೆ ಎಷ್ಟೊಂದು ಗೌರವ ಕೊಡುತ್ತಾರೆ. ದೂರ ದೇಶದಲ್ಲಿ ಇರುವವರು ಪರದೇಶದಲ್ಲಿ ಬಂದರು..... ರಾವಣನ ದೇಶವು ಪರದೇಶವಲ್ಲವೆ. ರಾಮನ ದೇಶದಲ್ಲಿ ಎಂದೂ ರಾವಣನು ಬರಲು ಸಾಧ್ಯವಿಲ್ಲ, ಇದರ ಮೇಲೆ ಒಂದು ಕಥೆಯನ್ನೂ ತಿಳಿಸುತ್ತಾರೆ. ಏನೆಲ್ಲಾ ಕಥೆಗಳನ್ನು ತಿಳಿಸುತ್ತಾರೆಯೋ ಅವೆಲ್ಲವೂ ದಂತ ಕಥೆಗಳಾಗಿವೆ. ಈ ಕಥೆಗಳಲ್ಲಿ ಯಾವುದೇ ಸಾರವೂ ಇಲ್ಲ, ಕಾದಂಬರಿಗಳಲ್ಲಿಯೂ ಯಾವುದೇ ಸಾರವಿಲ್ಲ. ಎಷ್ಟೊಂದು ಕಾದಂಬರಿ, ಪುಸ್ತಕಗಳು ಮಾರಾಟವಾಗುತ್ತವೆ. ಕೇವಲ ಇವನ್ನು ಮಾರುವವರೇ ಲಕ್ಷಾಧಿಪತಿಗಳಾಗುತ್ತಾರೆ. |
ಈಗ ನೀವು ಮಕ್ಕಳ ಪಾಲನೆಯು ತಂದೆಯ ಕೈಯಲ್ಲಿದೆ. ನಿಮ್ಮೊಂದಿಗೇ ತಿನ್ನುವೆನು ಅರ್ಥಾತ್ ನಿಮ್ಮ ಭಂಡಾರದಿಂದಲೇ ತಿನ್ನುವೆನು..... ನಿಮ್ಮ ಎಲ್ಲಾ ಪಾಲನೆಯು ಇಲ್ಲಿಯೇ ಆಗುತ್ತದೆ, ಯಾರು ಸಮರ್ಪಿತರಾಗುತ್ತಾರೆಯೋ ಅವರ ಪಾಲನೆಯಂತೂ ಆಗಿಯೇ ಆಗುತ್ತದೆ ಆದರೆ ಮನಸ್ಸಿನಿಂದಲೂ ಇದೆಲ್ಲವೂ ಈಶ್ವರ ತಂದೆಯದಾಗಿದೆ, ನಾನು ಟ್ರಸ್ಟಿಯಾಗಿದ್ದೇನೆ, ನಾನು ಶ್ರೀಮತದ ಅನುಸಾರವೇ ನಡೆದು ಖರ್ಚು ಮಾಡುತ್ತೇನೆಂದು ಯಾರು ತಿಳಿದುಕೊಳ್ಳುವರೋ ಅವರೂ ಸಹ ಶಿವತಂದೆಯ ಭಂಡಾರದಿಂದಲೇ ಸ್ವೀಕಾರ ಮಾಡಿದಂತಾಗುತ್ತದೆ. ಶಿವ ತಂದೆಯ ಭಂಡಾರದಿಂದ ಸೇವಿಸುವುದರಿಂದ ಹೃದಯವು ಶುದ್ಧವಾಗುತ್ತದೆ. ಹೊರಗಿರುವವರು ಶಿವ ತಂದೆಯ ಭಂಡಾರದಿಂದ ಸ್ವೀಕಾರ ಮಾಡುವುದಿಲ್ಲ ಎಂದಲ್ಲ. ತಂದೆಯ ಆದೇಶದನುಸಾರ ನಡೆಯುವವರೂ ಸಹ ತಂದೆಯ ಭಂಡಾರದಿಂದಲೇ ಸೇವಿಸಿದಂತಾಗುತ್ತದೆ. ಯಾವ ಭಂಡಾರದಿಂದ ಸ್ವೀಕರಿಸುವರೋ ಆ ಭಂಡಾರ ಸಂಪನ್ನ ಮತ್ತು ಕಾಲ ಕಂಟಕಗಳು ದೂರವಾಗುತ್ತವೆ.... ಅದರ ನಂತರ ನೀವೆಂದೂ ಅಕಾಲಮೃತ್ಯು ಹೊಂದುವುದಿಲ್ಲ. ಈ ಸಮಯದಲ್ಲಿಯೇ ಶಿವ ತಂದೆಯು ಬರುತ್ತಾರೆ, ಅವರ ಮಹಿಮೆಯ ಗಾಯನವೂ ಇದೆ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರ ಜಯಂತಿ ಹೇಗಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯೂ ಸಹ ಅವಶ್ಯವಾಗಿ ಬರುತ್ತಾರಲ್ಲವೆ. ಯಾವ ಮಕ್ಕಳೆಲ್ಲರೂ ಬರುತ್ತಾರೆಯೋ ಅವರಿಗೆ ಶಿವ ತಂದೆಯ ಭಂಡಾರದಿಂದಲೇ ಆಹಾರವು ಸಿಗುತ್ತದೆ. ಪುರುಷರು ಸಮರ್ಪಿತರಾದರೆ ಸರಿ, ಒಂದುವೇಳೆ ಅವರು ಸಮರ್ಪಿತ ಆಗದಿದ್ದರೆ ಮಾತೆಯರು ಏನು ಮಾಡುವುದು? ಏಕೆಂದರೆ ಅದು ಪತಿಯ ಸಂಪಾದನೆಯಾಗಿರುತ್ತದೆ. ಅವರಂತೂ ಸಮರ್ಪಣೆಯಾಗುವುದಿಲ್ಲ. ಅವರು ಯಾವಾಗ ಸಂಪಾದಿಸುವರೋ ಆಗಲೇ ಸ್ತ್ರೀಯರು ಸ್ವೀಕರಿಸುವರು. ದಂಪತಿಗಳಿಬ್ಬರೂ ಸಮರ್ಪಿತ (ಮನಸ್ಸಿನಿಂದ) ರಾಗಿದ್ದಾಗ ಅಂತಹವರು ಪಾಲನೆಯು ಶಿವ ತಂದೆಯ ಭಂಡಾರದಿಂದ ಆಗುತ್ತದೆ ಎಂದರ್ಥ. ಇದೆಲ್ಲವನ್ನೂ ತಂದೆಯು ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸುತ್ತಾರೆ. ಬುದ್ಧಿಯಲ್ಲಿರಲಿ - ನಾವು ಕರ್ಮಾತೀತ ಆಗುವವರೆಗೆ ತಂದೆಯ ಬಳಿ ಕುಳಿತಿರುತ್ತೇವೆ. ದಿನ-ಪ್ರತಿದಿನ ನಾವು ನಮ್ಮ ಸ್ವರಾಜ್ಯಕ್ಕೆ ಸಮೀಪಿಸುತ್ತಾ ಹೋಗುತ್ತೇವೆ. ಸಮಯವು ಕಳೆಯುತ್ತಾ ಹೋಗುತ್ತದೆ. ನೀವು ಸಮೀಪ ಬರುತ್ತಾ ಹೋಗುತ್ತೀರಿ. ಸತ್ಯಯುಗದ ಮೊದಲ ವರ್ಷಕ್ಕೆ ಇನ್ನೆಷ್ಟು ವರ್ಷಗಳಿರಬಹುದು? ಈಗ ಎಷ್ಟು ಸಮೀಪ ಬಂದಿದ್ದೀರಿ? ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ನಿಮ್ಮ 84 ಜನ್ಮಗಳ ಚಕ್ರವು ಮುಕ್ತಾಯವಾಗುತ್ತದೆ, ನೀವೀಗ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿದ್ದೀರಿ. ಚಕ್ರವನ್ನು ನೋಡುತ್ತಿದ್ದಂತೆಯೇ ನಾವೀಗ ಸಂಗಮಯುಗದಲ್ಲಿ ಇದ್ದೇವೆಂದು ಹೇಳುತ್ತಾರೆ. ಒಂದು ಕಡೆ ಕಲಿಯುಗ, ಇನ್ನೊಂದು ಕಡೆ ಸತ್ಯಯುಗವಿದೆ. ನಾಳೆ ನಾವು ನಮ್ಮ ಸುಖಧಾಮದಲ್ಲಿರುತ್ತೇವೆ. ಪ್ರಪಂಚದವರಿಗೆ ತಿಳಿದಿಲ್ಲ, ಅವರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ನೀವು ಮಕ್ಕಳಿಗೆ ಬಹಳ ಖುಷಿಯಿರಬೇಕು, ಬೇಹದ್ದಿನ ತಂದೆಯಿಂದ ನಾವು 21 ಜನ್ಮಗಳ ಸಂಪಾದನೆ ಮಾಡಿಕೊಳ್ಳುತ್ತೇವೆ. ಸದಾ ಸುಖದ ಆಸ್ತಿಯನ್ನು ಪಡೆಯುತ್ತಿದ್ದೇವೆಂದು ಖುಷಿಯಿರುತ್ತದೆ, ಸ್ವರ್ಗವಾಸಿಗಳಾಗುವುದು ನಿಮ್ಮ ಅದೃಷ್ಟದಲ್ಲಿಯೂ ಇದೆ. ಸ್ವರ್ಗವು ಒಂದು ಅತ್ಯದ್ಭುತವಾಗಿದೆ. ಹೇಗೆ ಏಳು ಅದ್ಭುತಗಳನ್ನು ತೋರಿಸುತ್ತಾರಲ್ಲವೆ. ಸ್ವರ್ಗವಂತೂ ಎಲ್ಲದಕ್ಕಿಂತ ದೊಡ್ಡ ಅದ್ಭುತವಾಗಿದೆ. ಅದ್ಭುತ ಸ್ವರ್ಗದ ಚಿತ್ರವೂ ಇದೆ, ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು ಆದ್ದರಿಂದ ತಂದೆಯು ಬರೆದಿದ್ದರು - ಮೇಲೆ ಸೂರ್ಯವಂಶಿಯರ ಹೆಸರು, ಅದರ ಕೆಳಗಡೆ ಚಂದ್ರವಂಶಿಯರ ಹೆಸರನ್ನು ಬರೆಯಿರಿ ಆಗ ಅರ್ಧಕಲ್ಪ ಪೂರ್ಣವಾಗುವುದು. ಸೂರ್ಯವಂಶಿ, ಚಂದ್ರವಂಶಿ ಒಂದೊಂದಕ್ಕೂ 1250 ವರ್ಷಗಳು ನಡೆಯುತ್ತವೆ, ಇದರಿಂದ ಲಕ್ಷಾಂತರ ವರ್ಷಗಳ ಮಾತು ಹೊರಟು ಹೋಗುವುದು. ಅಲ್ಲಿ ಬಾಹುಬಲದಲ್ಲಿ ಎಷ್ಟೊಂದು ಖರ್ಚಾಗುತ್ತದೆ, ಇಲ್ಲಿ ಆದಿಯಿಂದ ಹಿಡಿದು ಅಂತ್ಯದವರೆಗೆ ಏನೂ ಖರ್ಚಾಗುವುದಿಲ್ಲ, ಇದಂತೂ ತಂದೆ-ಮಕ್ಕಳ ಲೆಕ್ಕವಾಗಿದೆ, ಖರ್ಚಿನ ಮಾತಿಲ್ಲ. ಇಲ್ಲಿ ಮಕ್ಕಳು ರಿಫ್ರೆಶ್ ಆಗಲಿ ಎಂದು ಮನೆಗಳನ್ನು ಕಟ್ಟಿಸಲಾಗುತ್ತದೆ. ಇದು ಮಕ್ಕಳದೇ ಹಣವಾಗಿದೆ, ಅದರಲ್ಲಿಯೂ ಎಷ್ಟೊಂದು ದಿನಗಳು ಕಳೆದು ಹೋಯಿತು, ಇನ್ನು ಕೆಲವೇ ದಿನಗಳಿವೆ, ಖರ್ಚೇನೂ ಇಲ್ಲ, ನೀವು ಕವಡೆಯೂ ಖರ್ಚಿಲ್ಲದೆ ಜೀವನ್ಮುಕ್ತಿಯನ್ನು ಪಡೆಯುತ್ತೀರಿ. ಇದರಲ್ಲಿ ಕೇವಲ ಪರಿಶ್ರಮದ ಮಾತಾಗಿದೆ. ಭಗವಂತನನ್ನು ಎಲ್ಲಾ ಭಕ್ತರು ನೆನಪು ಮಾಡುತ್ತಾರೆ ಆದರೆ ಭಗವಂತ ಯಾರೆಂಬುದನ್ನು ತಿಳಿದುಕೊಂಡಿಲ್ಲ. ಭಗವಂತನನ್ನು ಅರಿಯದ ಕಾರಣ ಅನೇಕರನ್ನು ಭಗವಂತನೆಂದು ನಂಬುತ್ತಾರೆ. ಈಗ ನೀವು ಮಕ್ಕಳು ಸತ್ಯ ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯು ಎಷ್ಟು ಬಾರಿ ತಿಳಿಸಿದ್ದಾರೆ, ದೊಡ್ಡ-ದೊಡ್ಡ ಚಿತ್ರಗಳನ್ನು ಮುಖ್ಯ ಸ್ಥಾನಗಳು ಅಂದರೆ ವಿಮಾನ ನಿಲ್ದಾಣದಂತಹ ಸ್ಥಾನಗಳಲ್ಲಿ ಹಾಕಿರಿ. ವಿಮಾನ ನಿಲ್ದಾಣದವರು ಏನು ತೆಗೆದುಕೊಳ್ಳುವರು? ಅವರಿಗೆ ತಿಳಿಸಿ, ಇದು ಎಲ್ಲಾ ಮನುಷ್ಯರ ಕಲ್ಯಾಣಕ್ಕಾಗಿ ಇವೆ, ಇದರ ಬಗ್ಗೆ ತಿಳಿದುಕೊಳ್ಳುವುದರಿಂದಲೇ ಮನುಷ್ಯರು ತಂದೆಯಿಂದ ಆಸ್ತಿಯನ್ನು ಪಡೆದು ವಿಶ್ವದ ಮಾಲೀಕರಾಗುವರು. ಮುಖ್ಯವಾದುದು ದೆಹಲಿಯಾಗಿದೆ, ದೆಹಲಿಯು ರಾಜಧಾನಿಯಲ್ಲವೆ. ಅಲ್ಲಿ ಎಲ್ಲರೂ ಒಟ್ಟಿಗೆ ಸೇರುತ್ತಾರೆ, ಅಲ್ಲಿ ಇಂತಹ ದೊಡ್ಡ-ದೊಡ್ಡ ಚಿತ್ರಗಳಿರಲಿ. ಮುಖ್ಯವಾದವು ತ್ರಿಮೂರ್ತಿ, ಸೃಷ್ಟಿಚಕ್ರ ಮತ್ತು ಕಲ್ಪವೃಕ್ಷವಾಗಿದೆ. ಈ ಏಣಿಯ ಚಿತ್ರವು ಚಮತ್ಕಾರ ಮಾಡುವಂತದ್ದಾಗಿದೆ, ಇದರಲ್ಲಿ ವಿನಾಶದ ಬಗ್ಗೆ ಬಹಳ ಚೆನ್ನಾಗಿ ಬರೆಯಲ್ಪಟ್ಟಿದೆ ಮತ್ತು ಪತಿತ-ಪಾವನ ಪರಮಪಿತ ಪರಮಾತ್ಮನೋ ಅಥವಾ ನೀರಿನ ನದಿಯೋ? ನಿರ್ಣಯಿಸಿರಿ. ಬ್ರಹ್ಮಾಕುಮಾರ-ಕುಮಾರಿಯರು ಕೇಳುತ್ತಾರೆ - ಈಶ್ವರ ಸರ್ವವ್ಯಾಪಿಯೇ ಅಥವಾ ಒಬ್ಬ ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆಯೇ? ತಂದೆಯಿಂದ ಮಕ್ಕಳಿಗೆ ಆಸ್ತಿಯು ಸಿಗುತ್ತದೆ. ಈ ಚಿತ್ರವೂ ಮುಖ್ಯವಾಗಿದೆ. ತ್ರಿಮೂರ್ತಿಯ ಚಿತ್ರವೂ ಸಹ ಬಹಳ-ಬಹಳ ಅಮೂಲ್ಯವಾಗಿದೆ. ಬ್ರಹ್ಮನ ಮೂಲಕ ವಿಷ್ಣುಪುರಿಯ ಸ್ಥಾಪನೆಯಾಗುತ್ತದೆ ಮತ್ತೆ ಅವರೇ ಪಾಲನೆಯನ್ನೂ ಮಾಡುತ್ತಾರೆ. |
ಮಕ್ಕಳಿಗೆ ಅಪಾರ ಖುಷಿಯಿರಲಿ - ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ ಸ್ವರ್ಗದ ಮಾಲೀಕರನ್ನಾಗಿ ಮಾಡುವುದಕ್ಕಾಗಿ. ತಂದೆಯು ಬಂದು ಸ್ವರ್ಗದ ಸ್ಥಾಪನೆ, ನರಕದ ವಿನಾಶ ಮಾಡಿಸುತ್ತಾರೆ. ಆದ್ದರಿಂದ ಮಹಾಭಾರತ ಯುದ್ಧವೂ ಜೊತೆಯಲ್ಲಿದೆ. ಪ್ರತೀ 5000 ವರ್ಷಗಳ ನಂತರ ಈ ಚಕ್ರವು ಸುತ್ತುತ್ತದೆ, ತಂದೆಯೂ ಸಹ ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆ. ಇದನ್ನು ಅವರು ಭಗವದ್ಗೀತೆಯಲ್ಲಿ ಯುಗ-ಯುಗಗಳಲ್ಲಿ ಬರುತ್ತಾರೆಂದು ಹೇಳಿದ್ದಾರೆ. ಅದರಲ್ಲಿಯೂ ಐದು ಯುಗಗಳಿವೆ ಅಂದಮೇಲೆ ಐದು ಬಾರಿ ಬರುವರೇ? ಹಾಗಾದರೆ 24 ಅವತಾರ ಎಂದು ಏಕೆ ಬರೆದಿದ್ದಾರೆ! ಮನುಷ್ಯರು ಎಷ್ಟೊಂದು ಯಜ್ಞ, ತಪ, ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ, ಇವೆಲ್ಲವೂ ಭಗವಂತನೊಂದಿಗೆ ಮಿಲನ ಮಾಡುವ ಮಾರ್ಗಗಳೆಂದು ತಿಳಿಯುತ್ತಾರೆ ಆದ್ದರಿಂದ ಭಗವಂತನ ಬಳಿ ಯಾರೂ ಹೋಗಲು ಸಾಧ್ಯವಿಲ್ಲ. ಅರ್ಧಕಲ್ಪ ಎಷ್ಟೊಂದು ತಲೆ ಕೆಡಿಸಿಕೊಂಡಿದ್ದೀರಿ, ಜನ್ಮ-ಜನ್ಮಾಂತರದಿಂದ ತಿರುಗಾಡಿದಿರಿ ಆದರೂ ಸಹ ತಂದೆಯು ಸಿಗಲಿಲ್ಲ. ಈಗ ತಂದೆಯು ನೀವು ಮಕ್ಕಳಿಗೆ ಎಷ್ಟು ಸಮೀಪವಿದ್ದಾರೆ, ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ, ನಿಮಗೆ ತಿಳಿಸುತ್ತಿದ್ದಾರೆ. ನೀವು ತಿಳಿದುಕೊಳ್ಳುತ್ತೀರಿ, ಕಲ್ಪ-ಕಲ್ಪವೂ ನಾವು ಇದೇರೀತಿ ಮಿಲನ ಮಾಡುತ್ತೇವೆ, ಏನು ಕಳೆಯಿತೋ ಅದು ಕಲ್ಪ-ಕಲ್ಪವೂ ಆಗುವುದು, ಆ ದಾದಾರವರೇ ವಜ್ರ ವ್ಯಾಪಾರಿಯಾಗುವರು ಮತ್ತೆ ಅವರಲ್ಲಿಯೇ ತಂದೆಯು ಪ್ರವೇಶ ಮಾಡುವರು ಮತ್ತೆ ಅದೇ ಮಕ್ಕಳು ಬಂದು ತಂದೆಯ ಮಡಿಲು ಸೇರುತ್ತೀರಿ, ಪುನಃ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ನೀವು ಮಕ್ಕಳ ಜೊತೆ ತಂದೆಯ ಈ ಅನಾದಿ, ಅವಿನಾಶಿ ಪಾತ್ರವು ಕಲ್ಪ-ಕಲ್ಪವೂ ಇದೇರೀತಿ ಪುನರಾವರ್ತನೆಯಾಗುತ್ತಾ ಇರುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ, ಇದರಲ್ಲಿ ಪ್ರತೀ ಮಾತಿನಲ್ಲಿ ಕಲ್ಯಾಣವಿದೆ, ಸಂಪಾದನೆಯೇ ಸಂಪಾದನೆಯಿದೆ. ತಂದೆಯನ್ನು ಮತ್ತು ಆಸ್ತಿಯನ್ನು ನೆನಪು ಮಾಡಿ, 21 ಜನ್ಮಗಳಿಗಾಗಿ ಜೀವನವನ್ನು ಅಮರ ಮಾಡಿಕೊಳ್ಳಬೇಕಾಗಿದೆ. |
2. ಪ್ರವೃತ್ತಿಯಲ್ಲಿರುತ್ತಾ ಮನಸ್ಸು-ಬುದ್ಧಿಯಿಂದ ಸಮರ್ಪಣೆಯಾಗಬೇಕಾಗಿದೆ. ಶ್ರೀಮತ ಪ್ರಮಾಣ ಖರ್ಚು ಮಾಡಬೇಕಾಗಿದೆ. ಸಂಪೂರ್ಣ ಟ್ರಸ್ಟಿಯಾಗಿರಬೇಕಾಗಿದೆ. ಶಿವ ತಂದೆಯ ಭಂಡಾರವು ಬರ್ಪೂರ್, ಕಾಲಕಂಟಕ ದೂರ.... |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳಿಗೆ ಈಗ ಸ್ಮೃತಿ ಬಂದಿದೆ, ಅವಶ್ಯವಾಗಿ ಅರ್ಧ ಕಲ್ಪ ನಾವು ನೆನಪು ಮಾಡಿದ್ದೇವೆ, ರಾವಣ ರಾಜ್ಯವು ಆರಂಭವಾದಾಗಿನಿಂದ ನೆನಪು ಮಾಡಿದ್ದೇವೆ. ಪೂರ್ಣ ಅರ್ಧಕಲ್ಪ ನೆನಪು ಮಾಡಿದ್ದೀರಿ ಎಂದಲ್ಲ. ಯಾವ-ಯಾವ ಸಮಯದಲ್ಲಿ ದುಃಖವು ಹೆಚ್ಚಾಗುತ್ತಾ ಬಂದಿದೆಯೋ ಆಗಿನಿಂದಲೇ ನೆನಪು ಮಾಡುತ್ತಾ ಬಂದಿದ್ದೀರಿ. ಈಗ ನಿಮಗೆ ಅರ್ಥವಾಗಿದೆ - ಭಕ್ತಿ ಮಾರ್ಗದಿಂದ ನಾವು ಕೆಳಗಿಳಿಯುತ್ತಾ ಬಂದಿದ್ದೇವೆ, ಡ್ರಾಮಾದ ರಹಸ್ಯವು ಬುದ್ಧಿಯಲ್ಲಿದೆ. ಬಾಯಿಂದ ಏನನ್ನೂ ಹೇಳುವಂತಿಲ್ಲ. ನಾವು ತಂದೆಯ ಮಕ್ಕಳಾಗಿ ಬಿಟ್ಟೆವು ಆದ್ದರಿಂದ ಹೆಚ್ಚು ಜ್ಞಾನದ ಅವಶ್ಯಕತೆಯಿಲ್ಲ. ತಂದೆಯ ಮಕ್ಕಳಾದರೆ ಸಾಕು, ತಂದೆಯ ಆಸ್ತಿಗೆ ಮಾಲೀಕರಾಗಿ ಬಿಟ್ಟರು. ಕರ್ಮೇಂದ್ರಿಯಗಳಿಂದ ಏನನ್ನೂ ಮಾಡುವಂತಿಲ್ಲ. ಭಕ್ತಿಮಾರ್ಗದಲ್ಲಿ ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಎಷ್ಟೊಂದು ಯಜ್ಞ, ತಪ, ದಾನ-ಪುಣ್ಯಗಳನ್ನು ಮಾಡುತ್ತಾರೆ. ಎಲ್ಲಿಯಾದರೂ ಹೋಗಿರಿ, ಎಲ್ಲಾ ತೀರ್ಥ ಸ್ಥಾನಗಳಲ್ಲಿ ಬಹಳಷ್ಟು ಮಂದಿರಗಳಿವೆ. ಭಾರತದ ಎಲ್ಲಾ ತೀರ್ಥ ಸ್ಥಾನಗಳು ಮತ್ತು ಎಲ್ಲಾ ಮಂದಿರಗಳನ್ನು ಸುತ್ತಿರುವ ಮನುಷ್ಯರು ಯಾರೂ ಇಲ್ಲ. ಒಂದುವೇಳೆ ಸುತ್ತಿದರೂ ಸಹ ಸಿಗುವುದೇನೂ ಇಲ್ಲ. ಅಲ್ಲಿ ಗಂಟೆ, ಜಾಗಟೆಗಳ ಎಷ್ಟೊಂದು ಗದ್ದಲವಿರುತ್ತದೆ, ಇಲ್ಲಂತೂ ಸದ್ದಿನ ಮಾತಿಲ್ಲ. ಭಜನೆ ಮಾಡುವ, ಹಾಡುಗಳನ್ನು ಹಾಡುವ ಮಾತಿಲ್ಲ. ಮನುಷ್ಯರಂತೂ ಏನೇನು ಮಾಡುತ್ತಾರೆ! ಬಹಳ ಕರ್ಮಕಾಂಡವಿದೆ. ಇಲ್ಲಿ ನೀವು ಮಕ್ಕಳು ಕೇವಲ ನೆನಪು ಮಾಡಬೇಕಾಗಿದೆ, ಮತ್ತೇನೂ ಇಲ್ಲ. ಮನೆಯಲ್ಲಿರುತ್ತಾ ಎಲ್ಲವನ್ನು ಮಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ನಾವೀಗ ದೇವತೆಗಳಾಗುತ್ತೇವೆಂದು ನಿಮಗೆ ತಿಳಿದಿದೆ, ಇಲ್ಲಿಯೇ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಆಹಾರ-ಪಾನೀಯಗಳು ಶುದ್ಧವಾಗಿರಬೇಕು. 36 ಪ್ರಕಾರದ ಭೋಜನವಂತೂ ಅಲ್ಲಿ ಸಿಗುತ್ತವೆ. ಇಲ್ಲಿ ಸಾಧಾರಣ ಆಗಿರಬೇಕಾಗಿದೆ, ಬಹಳ ಉತ್ತಮವೂ ಅಲ್ಲ, ಬಹಳ ಕನಿಷ್ಠವೂ ಅಲ್ಲ, ಮಧ್ಯಮ ಸ್ಥಿತಿಯಲ್ಲಿರಬೇಕು. ಎಲ್ಲಾ ಮಾತುಗಳಲ್ಲಿ ಸಹನಾಶೀಲತೆ ಇರಬೇಕಾಗಿದೆ. ಹೊಗಳಿಕೆ-ತೆಗಳಿಕೆ, ಜಯ-ಪರಾಜಯ, ಚಳಿ-ಬಿಸಿಲು ಎಲ್ಲವನ್ನೂ ಸಹನೆ ಮಾಡಬೇಕಾಗುತ್ತದೆ. ಸಮಯವೇ ಹೀಗಿದೆ. ನೀರು ಸಿಗುವುದಿಲ್ಲ, ಮತ್ತೊಂದು ಸಿಗುವುದಿಲ್ಲ, ಸೂರ್ಯನೂ ಸಹ ತನ್ನ ತಾಪವನ್ನು ತೋರಿಸುವನು, ಪ್ರತೀ ವಸ್ತುವು ತಮೋಪ್ರಧಾನವಾಗುತ್ತದೆ. ಈ ಸೃಷ್ಟಿಯೇ ತಮೋಪ್ರಧಾನವಾಗಿದೆ. ತತ್ವಗಳೂ ತಮೋಪ್ರಧಾನವಾಗಿದೆ ಆದ್ದರಿಂದ ಇವು ದುಃಖ ಕೊಡುತ್ತವೆ. ಈಗ ಹೊಗಳಿಕೆ-ತೆಗಳಿಕೆಯಲ್ಲಿಯೂ ಹೋಗಬಾರದು. ಅನೇಕರು ಇದರಲ್ಲಿ ಬಹು ಬೇಗನೆ ಮುನಿಸಿಕೊಳ್ಳುತ್ತಾರೆ, ಯಾರಾದರೂ ಉಲ್ಟಾ ಸುಲ್ಟಾ ಯಾರಿಗೇನಾದರೂ ತಿಳಿಸಿದರೆಂದರೆ ಸಾಕು. ಏಕೆಂದರೆ ಇತ್ತೀಚೆಗೆ ಕಲ್ಪನೆಯ ಮಾತುಗಳು ಬಹಳ ಇರುತ್ತವೆಯಲ್ಲವೆ. ನಿಮ್ಮ ಬಗ್ಗೆ ಇವರಿಗೆ ದೇಹಾಭಿಮಾನವಿದೆ, ಹೊರಗಿನ ಆಡಂಬರ ಬಹಳಷ್ಟಿದೆ ಎಂದು ತಂದೆಯು ಹೇಳಿದರು ಎಂದು ಯಾರಾದರೂ ಹೇಳಿದರೆ ಸಾಕು, ಚಳಿ ಜ್ವರ ಬಂದು ಬಿಡುವುದು. ನಿದ್ರೆಯೂ ಸಹ ಬರುವುದಿಲ್ಲ, ಅರ್ಧ ಕಲ್ಪದಿಂದ ಮನುಷ್ಯರು ಈ ರೀತಿಯಿದ್ದಾರೆ. ಯಾರಿಗಾದರೂ ಬಹು ಬೇಗನೆ ಚಳಿ ಜ್ವರ ಬರುವಂತೆ ಮಾಡುತ್ತಾರೆ. ಆಗ ಅವರು ಕೂಡಲೇ ಸಪ್ಪೆಯಾಗಿ ಬಿಡುತ್ತಾರೆ ಆದ್ದರಿಂದ ತಂದೆಯು ಹೇಳುತ್ತಾರೆ - ಯಾವುದೇ ಇಂತಹ ವ್ಯರ್ಥ ಮಾತುಗಳನ್ನು ಕೇಳಬೇಡಿ. ತಂದೆಯು ಎಂದೂ ಯಾರ ನಿಂದನೆಯನ್ನೂ ಮಾಡುವುದಿಲ್ಲ, ತಂದೆಯು ಕೇವಲ ತಿಳಿಸುವುದಕ್ಕಾಗಿ ಹೇಳುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಉಲ್ಟಾ ಸುಲ್ಟಾ ಮಾತುಗಳನ್ನು ತಿಳಿಸುವುದರಿಂದ ಒಳ್ಳೊಳ್ಳೆಯ ಮಕ್ಕಳೂ ಸಹ ಮುನಿಸಿಕೊಳ್ಳುತ್ತಾರೆ ಆಗ ವಿರೋಧಿಗಳಾಗಿ ಹೋಗಿ ಒಬ್ಬರು ಇನ್ನೊಬ್ಬರಿಗೆ ವ್ಯರ್ಥ ಮಾತುಗಳನ್ನು ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ಎಂತೆಂತಹ ಕಥೆಗಳನ್ನು ಬರೆದಿದ್ದಾರೆ, ಈಗ ನಿಮಗೆ ಜ್ಞಾನ ಸಿಕ್ಕಿದೆ ಆದ್ದರಿಂದ ನೀವೆಂದೂ ಸಹ ಹೇ ರಾಮ ಅಥವಾ ಅಯ್ಯೊ ಭಗವಂತ ಎಂದು ಹೇಳುವಂತಿಲ್ಲ. ಈ ಶಬ್ಧವು ಭಕ್ತಿಮಾರ್ಗದ್ದಾಗಿದೆ. ನಿಮ್ಮ ಬಾಯಿಂದ ಇಂತಹ ಶಬ್ಧಗಳು ಬರಲೇಬಾರದು. |
ತಂದೆಯು ಕೇವಲ ತಿಳಿಸುತ್ತಾರೆ - ಮಧುರ ಮುದ್ದಾದ ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ತಂದೆಯು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ, ಯಾರ ಮಾತನ್ನೂ ಕೇಳಬೇಡಿ, ವ್ಯರ್ಥ ಪರಚಿಂತನೆ ಮಾಡಬೇಡಿರಿ. ಒಂದು ಮಾತನ್ನು ಪಕ್ಕಾ ಮಾಡಿಕೊಳ್ಳಿ - ನಾವಾತ್ಮರಾಗಿದ್ದೇವೆ, ಆತ್ಮವು ಅವಿನಾಶಿ, ಶರೀರ ವಿನಾಶಿಯಾಗಿದೆ. ಆತ್ಮವೇ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳುತ್ತದೆ, ಈಗ ನೀವು ಮಕ್ಕಳು ಆತ್ಮಾಭಿಮಾನಿ ಆಗಬೇಕಾಗಿದೆ. ದ್ವಾಪರದಿಂದ ನೀವು ರಾವಣ ರಾಜ್ಯದಲ್ಲಿ ದೇಹಾಭಿಮಾನಿಗಳಾಗಿರುತ್ತೀರಿ ಆದ್ದರಿಂದ ಈಗ ದೇಹೀ-ಅಭಿಮಾನಿ ಆಗುವುದರಲ್ಲಿ ಪರಿಶ್ರಮವಾಗುತ್ತದೆ. ಪದೇ-ಪದೇ ಬುದ್ಧಿಯಲ್ಲಿ ಇದೇ ಬರಲಿ - ನಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಕಲ್ಪ-ಕಲ್ಪವೂ ತಂದೆಯು ಆಸ್ತಿಯನ್ನು ಕೊಡುತ್ತಾರೆ, ಈಗ ಅವರ ಮತದಂತೆ ನಡೆಯುತ್ತಾರೆ. ನೀವು ಮಾತಾಪಿತಾ...... ಎಂದು ಅವರಿಗಾಗಿಯೇ ಗಾಯನವಿದೆ. ಅವರು ಎಲ್ಲಾ ಸಂಬಂಧಗಳ ಸುಖ ಕೊಡುವವರಾಗಿದ್ದಾರೆ. ಅವರಲ್ಲಿ ಎಲ್ಲಾ ಮಧುರತೆಯೂ ಇದೆ. ಉಳಿದೆಲ್ಲಾ ಮಿತ್ರ ಸಂಬಂಧಿ ಮೊದಲಾದವರು ದುಃಖವನ್ನೇ ಕೊಡುವವರಾಗಿದ್ದಾರೆ. ಒಬ್ಬ ತಂದೆಯೇ ಎಲ್ಲರಿಗೆ ಸುಖ ಕೊಡುವವರಾಗಿದ್ದಾರೆ, ಅವರಿಗೆ ಎಷ್ಟು ಸಹಜ ಮಾರ್ಗವನ್ನು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ, ಇದೇನೂ ಹೊಸ ಮಾತಲ್ಲ. ನಿಮಗೆ ತಿಳಿದಿದೆ - ಪ್ರತೀ 5000 ವರ್ಷಗಳ ನಂತರ ನಾವು ಇಂತಹ ತಂದೆಯ ಬಳಿ ಬರುತ್ತೇವೆ. ಇವರು ಯಾವುದೇ ಸಾಧು-ಸಂತನಲ್ಲ. ನೀವು ಯಾವುದೇ ಸಾಧು-ಸಂತ ಮೊದಲಾದವರ ಬಳಿಯಿರುವುದಿಲ್ಲ ಬಾಕಿ ತಂದೆಯು ತಿಳಿಸುವುದೇನೆಂದರೆ ಪ್ರವೃತ್ತಿ ಮಾರ್ಗದ ಸಂಬಂಧವನ್ನೂ ಸಹ ನಿಭಾಯಿಸಬೇಕಾಗಿದೆ ಇಲ್ಲದಿದ್ದರೆ ಇನ್ನೂ ಕಿರಿ ಕಿರಿಯಾಗುತ್ತದೆ ಆದ್ದರಿಂದ ಯುಕ್ತಿಯಿಂದ ನಡೆಯಿರಿ. ಪ್ರತಿಯೊಬ್ಬರಿಗೆ ಪ್ರೀತಿಯಿಂದ ತಿಳಿಸಿಕೊಡಬೇಕಾಗಿದೆ - ನೋಡಿ, ಈಗ ವಿನಾಶದ ಸಮಯವು ಸಮೀಪವಿದೆ, ಈ ಆಸುರೀ ಪ್ರಪಂಚವು ಸಮಾಪ್ತಿಯಾಗಲಿದೆ. ಆದ್ದರಿಂದ ಈಗ ದೇವತೆಗಳಾಗಬೇಕು, ದೈವೀ ಗುಣಗಳನ್ನು ಇಲ್ಲಿಯೇ ಧಾರಣೆ ಮಾಡಿಕೊಳ್ಳಬೇಕಾಗಿದೆ, ಹೀಗೆ ಪ್ರೀತಿಯಿಂದ ತಿಳಿಸಿಕೊಡಬೇಕು. ದೇವತೆಗಳೂ ಸಹ ಈರುಳ್ಳಿ, ಬೆಳ್ಳುಳ್ಳಿ ಇತ್ಯಾದಿಗಳನ್ನು ತಿನ್ನುವುದಿಲ್ಲ, ನಾವೂ ಸಹ ಮನುಷ್ಯರಿಂದ ದೇವತೆಗಳಾಗುತ್ತೇವೆ ಅಂದಮೇಲೆ ಇದೆಲ್ಲವನ್ನೂ ನಾವು ಹೇಗೆ ತಿನ್ನಲು ಸಾಧ್ಯ! ನಿಮಗೂ ಸಹ ಸಲಹೆ ನೀಡುತ್ತೇವೆ - ಇದನ್ನು ಬಿಟ್ಟು ಬಿಡಿ. ಇಂತಹ ಪದಾರ್ಥಗಳನ್ನು ತಿನ್ನುವುದಿಲ್ಲ, ಈಗ ನಿಮಗೆ ಬೇಹದ್ದಿನ ತಂದೆ ದೈವೀ ಗುಣಗಳನ್ನು ಕಲಿಸುವವರು ಸಿಕ್ಕಿದ್ದಾರೆ ಅಂದಮೇಲೆ ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕಾಗಿದೆ. ಇಲ್ಲಿಯೇ ಆಗುತ್ತೀರಿ ಆದ್ದರಿಂದಲೇ ಮತ್ತೆ ಭವಿಷ್ಯ ಹೊಸ ಪ್ರಪಂಚವು ಬರುವುದು. ಇದು ರಾತ್ರಿಯ ನಂತರ ಹಗಲು, ಹಗಲಿನ ನಂತರ ರಾತ್ರಿಯಾದಂತೆ. ಈಗ ರಾತ್ರಿಯ ಅಂತಿಮದಲ್ಲಿಯೇ ದೈವೀ ಗುಣಗಳನ್ನೂ ಧಾರಣೆ ಮಾಡಿಕೊಳ್ಳಬೇಕಾಗಿದೆ, ಇದರನಂತರ ಮುಂಜಾನೆಯಾಗುವುದು. ಪ್ರತಿಯೊಬ್ಬರೂ ತಮ್ಮಿಂದ ತಾವು ಪರೀಕ್ಷೆ ತೆಗೆದುಕೊಳ್ಳಬೇಕು. ತಂದೆಗಂತೂ ಎಲ್ಲವೂ ಗೊತ್ತಿಲ್ಲ ಎಂದಲ್ಲ. ನೀವು ತಮ್ಮನ್ನು ನೋಡಿಕೊಳ್ಳಿ, ವಿದ್ಯಾರ್ಥಿಗಳು ಎಂದಾದರೂ ಎಲ್ಲವೂ ಶಿಕ್ಷಕರಿಗೆ ಗೊತ್ತಿದೆ ಎಂದು ಹೇಳುವರೇ! ಪರೀಕ್ಷೆಯ ದಿನಗಳು ಸಮೀಪಿಸಿದಂತೆ ನಾವು ಎಷ್ಟು ತೇರ್ಗಡೆಯಾಗುತ್ತೇವೆ, ಯಾವ ಸಬ್ಜೆಕ್ಟ್ನಲ್ಲಿ ಹಿಂದುಳಿದಿದ್ದೇವೆ ಎಂದು ಮಕ್ಕಳು ಸ್ವಯಂ ತಿಳಿದುಕೊಳ್ಳುತ್ತಾರೆ. ಅದರಲ್ಲಿ ಅಂಕಗಳನ್ನು ತೆಗೆದುಕೊಳ್ಳುತ್ತಾರೆ ನಂತರ ಎಲ್ಲವನ್ನೂ ಸೇರಿಸಿ ತೇರ್ಗಡೆಯಾಗಿ ಬಿಡುತ್ತಾರೆ. ಅಂದಮೇಲೆ ಇಲ್ಲಿಯೂ ಸಹ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ - ನನ್ನಲ್ಲಿ ಯಾವ ಕೊರತೆಯಿದೆ? ನಾನು ಬಹಳ ಮಧುರನಾಗಿದ್ದೇನೆಯೇ? ಎಲ್ಲರಿಗೆ ಪ್ರೀತಿಯಿಂದ ತಿಳಿಸಬೇಕಾಗಿದೆ - ನಾವಾತ್ಮರ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಮನುಷ್ಯರ ಮಾತಿಲ್ಲ, ನಾವು ನಿರಾಕಾರನಿಗೆ ಭಗವಂತನೆಂದು ಹೇಳುತ್ತೇವೆ. ಭಗವಂತ ರಚಯಿತನು ಒಬ್ಬರೇ ಆಗಿದ್ದಾರೆ ಉಳಿದೆಲ್ಲರೂ ರಚನೆಯಾಗಿದ್ದಾರೆ. ರಚನೆಯಿಂದ ಯಾರಿಗೂ ಆಸ್ತಿಯು ಸಿಗುವುದಿಲ್ಲ, ಇದು ನಿಯಮವಿಲ್ಲ. ಈಗ ಸರ್ವ ರಚನೆಯ ಸದ್ಗತಿದಾತನು ಒಬ್ಬರೇ ರಚಯಿತ ತಂದೆಯಾಗಿದ್ದಾರೆ. ರಚನೆಯಲ್ಲಿ ಸಾಧು-ಸಂತ ಎಲ್ಲರೂ ಬಂದು ಬಿಟ್ಟರು. ಅವರೂ ಸಹ ಆತ್ಮರಲ್ಲವೆ. ಹಾ! ಮನುಷ್ಯರು ಒಳ್ಳೆಯವರು-ಕೆಟ್ಟವರಂತೂ ಇದ್ದೇ ಇರುತ್ತಾರೆ. ಪದವಿಯು ಶ್ರೇಷ್ಠ ಮತ್ತು ಕನಿಷ್ಟವಿರುತ್ತದೆ, ಸನ್ಯಾಸಿಗಳಲ್ಲಿಯೂ ನಂಬರ್ವಾರ್ ಇರುತ್ತಾರೆ, ಕೆಲವರನ್ನು ನೋಡಿದರೆ ಭಿಕ್ಷೆ ಬೇಡುತ್ತಿರುತ್ತಾರೆ, ಇನ್ನೂ ಕೆಲವರಿಗೆ ಕಾಲಿಗೆ ಬೀಳುತ್ತಿರುತ್ತಾರೆ. ನೀವು ಮಕ್ಕಳೂ ಸಹ ಶ್ರೇಷ್ಠರಾಗಿರಿ, ಬಹಳ ಮಧುರರಾಗಿರಿ. ಎಂದೂ ಕ್ರೋಧದಿಂದ ಮಾತನಾಡಬಾರದು. ಎಷ್ಟು ಸಾಧ್ಯವೋ ಅಷ್ಟು ಪ್ರೀತಿಯಿಂದ ಕೆಲಸ ತೆಗೆದುಕೊಳ್ಳಿರಿ. ಬಾಬಾ, ಮಕ್ಕಳು ಬಹಳ ಚಂಚಲತೆ ಮಾಡುತ್ತಾರೆಂದು ಹೇಳುತ್ತಾರೆ, ಈಗಿನ ಮಕ್ಕಳು ಇರುವುದೇ ಹಾಗೆ ಆದ್ದರಿಂದ ಅವರಿಗೆ ಪ್ರೀತಿಯಿಂದ ತಿಳಿಸಿಕೊಡಿ. ಕೃಷ್ಣನು ಚಂಚಲತೆ ಮಾಡುತ್ತಿದ್ದನು, ಅವನನ್ನು ಹಗ್ಗದಿಂದ ಕಟ್ಟಿ ಹಾಕುತ್ತಿದ್ದರೆಂದು ತೋರಿಸುತ್ತಾರೆ. ಎಷ್ಟು ಸಾಧ್ಯವೋ ಪ್ರೀತಿಯಿಂದ ತಿಳಿಸಬೇಕು ಇಲ್ಲವೆ ಚಿಕ್ಕ ಪುಟ್ಟ ಶಿಕ್ಷೆ ಕೊಡಬೇಕಾಗಿದೆ. ಪಾಪ, ಮಕ್ಕಳು ಮುಗ್ಧರಾಗಿರುತ್ತಾರೆ. ಸಮಯವೂ ಅದೇರೀತಿ ಇದೆ, ಹೊರಗಿನ ಸಂಗದೋಷವು ಬಹಳ ಕೆಟ್ಟದ್ದಾಗಿದೆ. ಈಗ ಬೇಹದ್ದಿನ ತಂದೆಯು ತಿಳಿಸುತ್ತಾರೆ - ನೀವು ಮೂರ್ತಿ ಇತ್ಯಾದಿಗಳನ್ನು ಇಟ್ಟುಕೊಳ್ಳುವ ಅವಶ್ಯಕತೆಯಿಲ್ಲ. ಏನೂ ಪರಿಶ್ರಮ ಪಡಬೇಕಾಗಿಲ್ಲ. ಶಿವನ ಚಿತ್ರವನ್ನೂ ಏಕೆ ಇಟ್ಟುಕೊಳ್ಳುವುದು! ಅವರಂತೂ ನಿಮ್ಮ ತಂದೆಯಲ್ಲವೆ. ಮನೆಯಲ್ಲಿ ಮಕ್ಕಳು ತಂದೆಯ ಚಿತ್ರವನ್ನು ಏಕೆ ಇಟ್ಟುಕೊಳ್ಳುತ್ತಾರೆ? ತಂದೆಯಂತೂ ಪ್ರತ್ಯಕ್ಷವಾಗಿರುತ್ತಾರಲ್ಲವೆ. ಹಾಗೆಯೇ ತಂದೆಯು ತಿಳಿಸುತ್ತಾರೆ, ನಾನೀಗ ನಿಮ್ಮ ಮುಂದೆ ಪ್ರತ್ಯಕ್ಷವಾಗಿದ್ದೇನೆ ಅಂದಮೇಲೆ ಚಿತ್ರಗಳ ಅವಶ್ಯಕತೆಯಿಲ್ಲ. ನಾನು ಕುಳಿತು ಮಕ್ಕಳಿಗೆ ತಿಳಿಸುತ್ತೇನೆ. ಬಾಪ್ದಾದಾರವರನ್ನು ನೋಡಬೇಕೆಂದು ಹೇಳುತ್ತಾರೆ, ತಂದೆಯಂತೂ ನಿರಾಕಾರನಾಗಿದ್ದಾರೆ, ಅವರನ್ನು ನೋಡಲು ಸಾಧ್ಯವಿಲ್ಲ. ಬುದ್ಧಿಯಿಂದ ತಿಳಿದುಕೊಳ್ಳಬಹುದಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿ ನಿಮಗೆ ಜ್ಞಾನವನ್ನು ತಿಳಿಸುತ್ತೇನೆ, ಇಲ್ಲದಿದ್ದರೆ ಹೇಗೆ ಬರಲಿ! ಕೃಷ್ಣನ ತನುವಿನಲ್ಲಿ ಹೇಗೆ ಬರುವೆನು! ಸನ್ಯಾಸಿಗಳಲ್ಲಿಯೂ ಬರಲು ಸಾಧ್ಯವಿಲ್ಲ, ಯಾರು ಮೊದಲ ನಂಬರಿನಲ್ಲಿದ್ದರೋ ಅವರೇ ಈಗ ಕೊನೆಯಲ್ಲಿದ್ದಾರೆ ಅವರ ಶರೀರದಲ್ಲಿ ನಾನು ಬರುತ್ತೇನೆ. ನೀವೂ ಸಹ ಈಗ ಓದಿ ಮೊದಲ ನಂಬರಿನಲ್ಲಿ ಹೋಗಬೇಕಾಗಿದೆ. ಓದಿಸುವವರು ಒಬ್ಬರೇ ಆಗಿದ್ದಾರೆ, ಅವರಿಗೆ ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ನಿಮಗೆ ಬಹಳ ಒಳ್ಳೆಯ ಜ್ಞಾನವು ಸಿಗುತ್ತದೆ. ನೀವು ತಿಳಿದುಕೊಂಡಿದ್ದೀರಿ, ಶಾಂತಿಧಾಮವು ನಮ್ಮ ಮನೆಯಾಗಿದೆ, ಸುಖಧಾಮವು ನಮ್ಮ ರಾಜಧಾನಿಯಾಗಿದೆ. ದುಃಖಧಾಮವು ರಾವಣ ರಾಜ್ಯವಾಗಿದೆ. ಮಧುರಾತಿ ಮಧುರ ಮಕ್ಕಳೇ, ಈಗ ತಮ್ಮ ಮನೆ ಶಾಂತಿಧಾಮವನ್ನು ನೆನಪು ಮಾಡಿ, ಸುಖಧಾಮವನ್ನು ನೆನಪು ಮಾಡಿರಿ. ದುಃಖಧಾಮದ ಬಂಧನವನ್ನು ಮರೆಯುತ್ತಾ ಹೋಗಿರಿ. ಹೀಗೆ ಮತ್ತ್ಯಾರೂ ಹೇಳಲು ಸಾಧ್ಯವಿಲ್ಲ. ಅವರು ಹೋಗುವುದಕ್ಕೂ ಸಾಧ್ಯವಿಲ್ಲ. ನಾಟಕದ ಮಧ್ಯದಲ್ಲಿ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಇಂತಹವರು ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು, ನಿರ್ವಾಣಗೈದರು ಎಂದು ಹೇಳುತ್ತಾರೆ ಆದರೆ ಯಾರೊಬ್ಬರೂ ಹೋಗುವುದಿಲ್ಲ. ಎಲ್ಲರ ತಂದೆ ಅಥವಾ ಮಾಲೀಕನು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಎಲ್ಲಾ ಪ್ರಿಯತಮೆಯರ ಒಬ್ಬರೇ ಪ್ರಿಯತಮನಾಗಿದ್ದಾರೆ. ಆ ದೈಹಿಕ ಪ್ರಿಯತಮ-ಪ್ರಿಯತಮೆಯರು ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾರೆ. ಬುದ್ಧಿಯಲ್ಲಿ ಅವರ ಚಿತ್ರವು ಬಂದು ಬಿಡುತ್ತದೆ. ಮತ್ತೆ ಒಬ್ಬರು ಇನ್ನೊಬ್ಬರನ್ನು ನೆನಪು ಮಾಡುತ್ತಾ ಇರುತ್ತಾರೆ. ಭೋಜನವನ್ನು ಮಾಡುತ್ತಾ ಇರುತ್ತಾರೆ, ನೆನಪು ಮಾಡುತ್ತಾ ಇರುತ್ತಾರೆ. ಅವರಂತೂ ಒಂದು ಜನ್ಮದ ಪ್ರಿಯತಮ-ಪ್ರಿಯತಮೆಯರಾಗಿದ್ದಾರೆ. ನೀವು ಒಬ್ಬ ಪ್ರಿಯತಮನಿಗೆ ಜನ್ಮ-ಜನ್ಮಾಂತರದ ಪ್ರಿಯತಮೆಯರಾಗಿದ್ದೀರಿ, ನೀವು ಮತ್ತೇನನ್ನೂ ಮಾಡಬೇಕಾಗಿಲ್ಲ, ಕೇವಲ ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಆ ಪ್ರಿಯತಮ-ಪ್ರಿಯತಮೆಯರ ಮುಂದೆ ಚಿತ್ರವು ಬಂದು ಬಿಡುತ್ತದೆ. ಅವರನ್ನು ನೋಡುತ್ತಾ-ನೋಡುತ್ತಾ ಕೆಲಸವೂ ನಿಂತು ಹೋಗುತ್ತದೆ ಮತ್ತೆ ಅವರ ಚಹರೆಯು ಮಾಯವಾಗಿ ಬಿಡುತ್ತದೆ ಆಗ ಕೆಲಸ ಮಾಡತೊಡಗುತ್ತಾರೆ. ಇಲ್ಲಂತೂ ಆ ರೀತಿಯಿಲ್ಲ, ಆತ್ಮವೂ ಬಿಂದು, ಪರಮಾತ್ಮನೂ ಬಿಂದುವಾಗಿದ್ದಾರೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿಯೇ ಪರಿಶ್ರಮವಿದೆ, ಯಾರೂ ಇಂತಹ ಅಭ್ಯಾಸ ಮಾಡುವುದಿಲ್ಲ. ಆತ್ಮದ ಜ್ಞಾನ ಸಿಕ್ಕಿತು ಅರ್ಥಾತ್ ಆತ್ಮಾನುಭೂತಿ ಮಾಡಿದರೆಂದರೆ ಇನ್ನು ಪರಮಾತ್ಮನ ಪರಿಚಯ ಉಳಿಯಿತು. ಅದನ್ನೂ ನೀವು ತಿಳಿದುಕೊಂಡಿದ್ದೀರಿ. ತಂದೆಯು ಬಂದು ಇವರ ಭೃಕುಟಿಯಲ್ಲಿ ಕುಳಿತುಕೊಳ್ಳುತ್ತಾರೆ, ಇವರ ಸ್ಥಾನವೂ ಇಲ್ಲಿಯೇ ಇದೆ. ಆತ್ಮವು ಎಲ್ಲಿಂದಲಾದರೂ ಹೊರಟು ಹೋಗುತ್ತದೆ, ಅದು ತಿಳಿಯುವುದೇ ಇಲ್ಲ. ಅದರ ಮುಖ್ಯ ಸ್ಥಾನವು ಭೃಕುಟಿಯಾಗಿದೆ. ತಂದೆಯು ತಿಳಿಸುತ್ತಾರೆ - ನಾನೂ ಬಿಂದುವಾಗಿದ್ದೇನೆ, ಇವರಲ್ಲಿ ಬಂದು ಕುಳಿತುಕೊಳ್ಳುತ್ತೇನೆ. ನಾನು ಬರುವುದು ನಿಮಗೆ ತಿಳಿಯುವುದೇ ಇಲ್ಲ. ತಂದೆಯು ನೀವು ಮಕ್ಕಳಿಗೆ ಕುಳಿತು ತಿಳಿಸುತ್ತಾರೆ- ನಿಮಗೆ ಏನನ್ನು ತಿಳಿಸುತ್ತಾರೆಯೋ ಅದನ್ನು ನಾನೂ ಕೇಳಿಸಿಕೊಳ್ಳುತ್ತೇನೆ. ಈ ತಿಳುವಳಿಕೆಯು ಸಂಪೂರ್ಣ ಸರಿಯಾಗಿದೆ, ಯಾರು ದೈವೀ ಧರ್ಮದವರಾಗಿದ್ದಾರೆಯೋ ಅವರಿಗೆ ಕೂಡಲೇ ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದು ಅರ್ಥವಾಗಿ ಬಿಡುತ್ತದೆ. ಮೊದಲು ಸ್ಥಾಪನೆ ನಂತರ ವಿನಾಶವೂ ಆಗುವುದು. ಮತ್ತ್ಯಾವುದೇ ಧರ್ಮ ಸ್ಥಾಪಕರು ಈ ರೀತಿ ಮಾಡುವುದಿಲ್ಲ. ಅವರು ಕೇವಲ ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ನಂತರ ವೃದ್ಧಿಯನ್ನು ಪಡೆಯುತ್ತಾರೆ. ಇಲ್ಲಂತೂ ಯಾರು ಎಷ್ಟು ಪುರುಷಾರ್ಥ ಮಾಡುವರೋ ಅಷ್ಟು ಭವಿಷ್ಯದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನೀವು ಭವಿಷ್ಯ 21 ಜನ್ಮಗಳಿಗಾಗಿ ಪ್ರಾಲಬ್ಧವನ್ನು ಮಾಡಿಕೊಳ್ಳುತ್ತೀರಿ ಅಂದಮೇಲೆ ಎಷ್ಟೊಂದು ಪುರುಷಾರ್ಥ ಮಾಡಬೇಕು ಮತ್ತು ಸಹಜವೂ ಆಗಿದೆ, ಯೋಗವೂ ಸಹಜವಾಗಿದೆ. ಇದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ. |
Subsets and Splits
No community queries yet
The top public SQL queries from the community will appear here once available.