text
stringlengths
0
61.5k
ವಿದೇಶದಿಂದಲೂ ಬಹಳ ಪ್ರಿಯತಮೆಯರು ಬಹಳ ಮಂದಿ ಬಂದು ಬಿಟ್ಟಿದ್ದೀರಿ. ಬಹಳ ಮಂದಿ ಬಂದಾಗ ಹಂಚಬೇಕಾಗುತ್ತದೆಯಲ್ಲವೆ. ಸಮಯವನ್ನೂ ಹಂಚಬೇಕಾಗುತ್ತದೆ, ರಾತ್ರಿಯನ್ನು ದಿನವನ್ನಂತೂ ಮಾಡುತ್ತೀರಿ ಮತ್ತೇನು ಮಾಡುವಿರಿ! ಇದರಲ್ಲಿಯೂ ಮಹಾದಾನಿಗಳಾಗಿ. ತಂದೆಯ ಸ್ನೇಹವು ನಂಬರ್ವಾರ್ ಇದ್ದರೂ ಸಹ ಎಲ್ಲರಿಗಿಂತ ನಂಬರ್ವನ್ ಆಗಿದೆ. ನನ್ನೊಂದಿಗೆ ತಂದೆಯ ಪ್ರೀತಿಯು ಕಡಿಮೆಯಿದೆ, ಅನ್ಯರೊಂದಿಗೆ ಹೆಚ್ಚಿನದಾಗಿದೆ ಎಂದು ತಿಳಿಯಬೇಡಿ. ಎಲ್ಲರ ಜೊತೆ ಹೆಚ್ಚಿನ ಪ್ರೀತಿಯಿದೆ. ಭಲೆ ಸ್ಥೂಲವಾಗಿ ಕೆಲವೊಮ್ಮೆ ಯಾರೊಂದಿಗಾದರೂ ಹೆಚ್ಚು ಸಮಯ ಮಾತನಾಡಬಹುದು, ಕೆಲವೊಮ್ಮೆ ಕಡಿಮೆಯೂ ಆಗುತ್ತದೆ ಆದರೆ ಹೃದಯದ ಪ್ರೀತಿಯನ್ನು ಮಾತಿನಲ್ಲಿ ಹಂಚಲು ಸಾಧ್ಯವಿಲ್ಲ. ತಂದೆಯ ದೃಷ್ಟಿಯಲ್ಲಿ ಪ್ರತಿಯೊಂದುಮಗು ನಂಬರ್ವನ್ ಆಗಿದೆ. ಈಗಿನ್ನೂ ನಂಬರ್ ಔಟ್ ಆಗಿಲ್ಲ, ಎಲ್ಲಿಯವರೆಗೆ ಫಲಿತಾಂಶ ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ಪ್ರತಿಯೊಬ್ಬರೂ ನಂಬರ್ವನ್ ಆಗಿದ್ದಾರೆ. ಯಾರು ಬೇಕಾದರೂ ಹೋಗಬಹುದು. ತಿಳಿಸಿದೆವಲ್ಲವೆ - ನಂಬರ್ವನ್ ಬ್ರಹ್ಮಾ ತಂದೆಯಾಗಿದ್ದಾರೆ ಆದರೆ ತಂದೆಯ ಜೊತೆ ಫಸ್ಟ್ ನಂಬರಿನಲ್ಲಿ ಬರುವುದು ಎಂದರೆ ಫಸ್ಟ್ ಡಿವಿಜನ್ನಲ್ಲಿ ಬರುವುದು. ಫಸ್ಟ್ ಡಿವಿಜನ್ನಲ್ಲಿ ಬರುವುದೂ ಸಹ ನಂಬರ್ವನ್ ಎಂದೇ ಹೇಳಲಾಗುತ್ತದೆ ಆದ್ದರಿಂದ ಎಲ್ಲಿಯವರೆಗೆ ಫೈನಲ್ ಫಲಿತಾಂಶವು ಹೊರ ಬರುವುದಿಲ್ಲವೋ ಅಲ್ಲಿಯವರೆಗೆ ಬಾಪ್ದಾದಾ ತಿಳಿದುಕೊಂಡಿದ್ದಾರೆ. ವರ್ತಮಾನ ಸಮಯದ ಪ್ರಮಾಣ ಎಲ್ಲರಿಗಿಂತ ಕೊನೆಯಲ್ಲಿ ಇರಬಹುದು ಆದರೂ ಸಹ ತಂದೆಯು ಯಾರನ್ನೂ ಹಿಂದಿರುವವರೆಂದು ತಿಳಿಯುವುದಿಲ್ಲ. ಯಾವಾಗ ಬೇಕಾದರೂ ಲಾಸ್ಟ್ ಸೋ ಫಾಸ್ಟ್ ಆಗಬಹುದು, ಇನ್ನೂ ಸಮಯವಿದೆ. ಕೆಲವೊಮ್ಮೆ ಬಹಳ ವೇಗವಾಗಿ ನಡೆಯುವವರು ಗುರಿಯನ್ನು ಮುಟ್ಟುವಷ್ಟರಲ್ಲಿ ಸುಸ್ತಾಗಿ ಬಿಡುತ್ತಾರೆ, ಆಗ ನಿಂತು ಬಿಡುತ್ತಾರೆ ಮತ್ತು ಯಾರು ನಿಧಾನವಾಗಿ ನಡೆಯುವರೋ ಅವರು ಎಂದೂ ನಿಲ್ಲುವುದಿಲ್ಲ. ಒಂದೇ ಸಮನಾಗಿ ನಡೆಯುತ್ತಾರೆ. ಆದ್ದರಿಂದ ಅವರು ಗುರಿ ತಲುಪುತ್ತಾರೆ ಅಂದಾಗ ಈಗ ತಂದೆಯ ದೃಷ್ಟಿಯಲ್ಲಿ ಎಲ್ಲರೂ ನಂಬರ್ವನ್ ಆಗಿದ್ದಾರೆ. ಯಾವಾಗ ಫಲಿತಾಂಶವು ಹೊರಬರುವುದೋ ಆಗ ಇವರು ಮೊದಲಿಗನವರಾಗಿದ್ದಾರೆ, ಇವರು ಕೊನೆಯವರು ಆಗಿದ್ದಾರೆಂದು ಹೇಳಲಾಗುತ್ತದೆ, ಈಗಲೇ ಹೇಳಲು ಸಾಧ್ಯವಿಲ್ಲ, ಆದ್ದರಿಂದ ತಮ್ಮಲ್ಲಿ ನಿಶ್ಚಯವನ್ನು ಇಟ್ಟು ಹಾರುತ್ತಾ ಹೋಗಿರಿ.
ಬಾಪ್ದಾದಾರವರಿಗೆ ಎಲ್ಲರನ್ನೂ ಮುಂದೆ ಹಾರಿಸುವ ಹೃದಯದ ಪ್ರೀತಿಯು ಎಲ್ಲರೊಂದಿಗೂ ಇದೆ. ಕೆಲವೊಮ್ಮೆ ಯಾರೊಂದಿಗಾದರೂ ಕೇವಲ ಎರಡು ಶಬ್ಧಗಳಿಂದ ಮಾತನಾಡಿದರೆ ಅದು ಕಡಿಮೆ ಪ್ರೀತಿಯೆಂದು ತಿಳಿಯಬೇಡಿ. ಹೃದಯದಲ್ಲಿಯೂ ತಂದೆಯ ಪ್ರೀತಿಯ ಶ್ರೇಷ್ಠ ಶುಭ ಕಾಮನೆಗಳು ಸದಾ ತುಂಬಿರುತ್ತವೆ. “ಹಾರುತ್ತಾ ಇರಿ” - ಇವೆರಡು ಮಾತುಗಳನ್ನು ಮಾತನಾಡಿದರೂ ಸಹ ಇದರಲ್ಲಿಯೇ ಪ್ರೀತಿಯ ಸಾಗರವು ಸಮಾವೇಶವಾಗಿದೆ. ತಂದೆಯು ನನ್ನನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದು ಯಾರೂ ಹೇಳಲು ಸಾಧ್ಯವಿಲ್ಲ. ಒಂದುವೇಳೆ ಯಾರಾದರೂ ಹೇಳಿದರೂ ಸಹ ನಿಮಗಿಂತಲೂ ನನ್ನನ್ನು ಹೆಚ್ಚು ಪ್ರೀತಿ ಮಾಡುತ್ತಾರೆಂದು ಹೇಳಿರಿ. ಕೇವಲ ಹೃದಯವನ್ನು ಖುಷಿ ಪಡಿಸುವುದಕ್ಕಾಗಿ ಹೇಳುತ್ತಿಲ್ಲ, ತಂದೆಗೆ ಗೊತ್ತಿದೆ - ಎಷ್ಟು ಅಲೆದಾಡಿ, ಸುಸ್ತಾಗಿ, ಗೊಂದಲಕ್ಕೊಳಗಾಗಿ ಪುನಃ 5000 ವರ್ಷಗಳ ನಂತರ ಬಂದು ಮಿಲನ ಮಾಡುತ್ತೀರಿ. ತಂದೆಯು ಹುಡುಕಿ-ಹುಡುಕಿ ಆರಿಸಿಕೊಂಡಿದ್ದಾರೆ, ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ - ಎಲ್ಲಾ ಕಡೆಯಿಂದಲೂ ಆರಿಸಿಕೊಂಡಿದ್ದಾರೆ ಅಂದಮೇಲೆ ಯಾರನ್ನು ಹುಡುಕಿ ಆರಿಸಿಕೊಳ್ಳುವರೋ ಅವರೊಂದಿಗೆ ಎಷ್ಟೊಂದು ಪ್ರೀತಿಯಿರಬಹುದು! ಇಲ್ಲದಿದ್ದರೆ ಹುಡುಕುತ್ತಲೇ ಇರಲಿಲ್ಲ ಮತ್ತು ಸಾಗರದ ಬಳಿ ಪ್ರೀತಿಯ ಕೊರತೆಯಿದೆಯೇ? ಪ್ರತಿಯೊಬ್ಬರಿಗೆ ಎಷ್ಟು ಹೃದಯದ ಪ್ರೀತಿಯಿದೆ ಎಂಬುದು ಹೃದಯರಾಮನಿಗೇ ಗೊತ್ತಿದೆ. ಏನೇ ಇರಲಿ, ಪ್ರೀತಿಯಲ್ಲಿ ಎಲ್ಲರೂ ಪಾಸಾಗಿದ್ದೀರಿ. ತಂದೆಯೊಂದಿಗೆ ಪ್ರೀತಿಯ ಸರ್ಟಿಫಿಕೇಟನ್ನು ತಂದೆಯು ಮೊದಲೇ ಕೊಟ್ಟು ಬಿಟ್ಟಿದ್ದೆವು. ಒಳ್ಳೆಯದು.
ನಾಲ್ಕಾರು ಕಡೆಯ ಸ್ನೇಹ ಸಂಪನ್ನ, ಹೃದಯದ ಸಂಗೀತವನ್ನು ಕೇಳಿಸುವಂತಹ ಹೃದಯರಾಮನ ಹೃದಯದ ವಾದ್ಯಗಳಿಗೆ ಸದಾ ಪ್ರತೀ ಕರ್ಮದಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡುವವರು, ಸದಾ ಪ್ರತೀ ಮಾತಿನ ಮೂಲಕ ತಂದೆಯೊಂದಿಗೆ ಸಂಬಂಧ ಜೋಡಿಸುವ, ಸದಾ ತನ್ನ ಆತ್ಮಿಕ ದೃಷ್ಟಿಯಿಂದ ಆತ್ಮರಿಗೆ ತಂದೆಯ ಅನುಭವ ಮಾಡಿಸುವಂತಹ, ತಂದೆಯನ್ನು ಪ್ರತ್ಯಕ್ಷ ಮಾಡುವಂತಹ ತಂದೆಯ ಹೃದಯ ಸಿಂಹಾಸನಜೀತ, ಮಾಯಾಜೀತ, ಜಗತ್ಜೀತ ಮಕ್ಕಳಿಗೆ ಹೃದಯರಾಮ ತಂದೆಯ ನೆನಪು-ಪ್ರೀತಿ ಹಾಗೂ ನಮಸ್ತೆ.
ವ್ಯಕ್ತಿಗತ ವಾರ್ತಾಲಾಪ:
1. ಪ್ರತಿಯೊಂದು ಕಾರ್ಯದಲ್ಲಿ ನೆನಪಿನ ಶಕ್ತಿಯು ಸದಾ ಮುಂದುವರೆಸುವಂತದ್ದಾಗಿದೆ ಹಾಗೂ ಶಕ್ತಿಶಾಲಿಯನ್ನಾಗಿ ಮಾಡುತ್ತದೆ. ಈ ಶಕ್ತಿಯ ಅನುಭೂತಿಯು ಸರ್ವ ಶ್ರೇಷ್ಠ ಅನುಭೂತಿಯಾಗಿದೆ ಹಾಗೂ ಇದೇ ಶಕ್ತಿಯನ್ನು ಪ್ರತಿಯೊಂದು ಕಾರ್ಯದಲ್ಲಿ ಸಫಲತೆಯ ಅನುಭವ ಮಾಡಿಸುತ್ತದೆ. ಇದೇ ಶಕ್ತಿಯ ಅನುಭವದಿಂದ ಮುಂದುವರೆಯುವ ಆತ್ಮನಾಗಿದ್ದೇನೆ ಎಂಬ ಸ್ಮೃತಿಯಲ್ಲಿದ್ದು, ಎಷ್ಟು ಮುಂದುವರೆಯಬೇಕು ಎಂದು ಬಯಸುವಿರಿ ಅಷ್ಟೂ ಮುಂದುವರೆಯಬಹುದು. ಇದೇ ಶಕ್ತಿಯಿಂದ ವಿಶೇಷವಾದ ಸಹಯೋಗದ ಪ್ರಾಪ್ತಿಯಾಗುತ್ತಾ ಇರುತ್ತದೆ.
2. ಪ್ರತಿಯೊಂದು ಕಾರ್ಯವನ್ನು ಮಾಡುತ್ತಾ, ಸದಾ ಸಾಕ್ಷಿ ಸ್ಥಿತಿಯಲ್ಲಿ ಸ್ಥಿತವಾಗುತ್ತಾ ಕಾರ್ಯವನ್ನು ಮಾಡುವಂತಹ ಭಿನ್ನವಾದ ಆತ್ಮನಾಗಿದ್ದೇನೆ - ಇಂತಹ ಅನುಭವ ಮಾಡುತ್ತೀರಾ? ಪ್ರತಿಯೊಂದು ಕಾರ್ಯದಲ್ಲಿ ಸಾಕ್ಷಿತನದ ಸ್ಥಿತಿಯು ಸದಾ ಸಹಜವಾಗಿ ಸಫಲ ಮಾಡುತ್ತದೆ. ಸಾಕ್ಶಿತನದ ಸ್ಥಿತಿಯು ಎಷ್ಟೊಂದು ಭಿನ್ನವೆನಿಸುತ್ತದೆ! ಸಾಕ್ಷಿಯಾಗಿರುತ್ತಾ ಕಾರ್ಯವನ್ನು ಮಾಡುವಂತಹ ಆತ್ಮನು ಸದಾ ಭಿನ್ನವಾಗಿ ಮತ್ತು ತಂದೆಯ ಪ್ರಿಯನಾಗಿರುವನು. ಅಂದಮೇಲೆ ಇದೇ ಅಭ್ಯಾಸದಿಂದ ಕರ್ಮ ಮಾಡುವಂತಹ ಅಲೌಕಿಕ ಆತ್ಮನಾಗಿದ್ದೇನೆ, ಅಲೌಕಿಕ ಅನುಭೂತಿ ಮಾಡುವ, ಅಲೌಕಿಕ ಜೀವನ ಮತ್ತು ಶ್ರೇಷ್ಠ ಜೀವನವುಳ್ಳ ಆತ್ಮನಾಗಿದ್ದೇನೆಂಬ ನಶೆಯು ಇರುತ್ತದೆಯಲ್ಲವೆ? ಕರ್ಮವನ್ನು ಮಾಡುತ್ತಾ ಇದೇ ಅಭ್ಯಾಸವನ್ನು ಹೆಚ್ಚಿಸಿಕೊಳ್ಳುತ್ತಿರಿ. ಈ ಅಭ್ಯಾಸವು ಕರ್ಮಾತೀತ ಸ್ಥಿತಿಯನ್ನು ಪ್ರಾಪ್ತಿ ಮಾಡಿಸುತ್ತದೆ ಹಾಗೂ ಸದಾ ಮುಂದುವರೆಸುತ್ತದೆ, ಕರ್ಮವನ್ನು ಮಾಡುತ್ತಾ ಭಿನ್ನ ಹಾಗೂ ತಂದೆಗೆ ಪ್ರಿಯರಾಗಿರುವುದಕ್ಕೆ ಶ್ರೇಷ್ಠ ಆತ್ಮನೆಂದು ಹೇಳಲಾಗುತ್ತದೆ.
3. ಸದಾ ಶ್ರೇಷ್ಠ ಖಜಾನೆಗಳಿಂದ ಸಂಪನ್ನವಾಗಿರುವ ಆತ್ಮನಾಗಿದ್ದೇನೆ ಎಂಬ ಅನುಭವ ಮಾಡುತ್ತೀರಾ? ಯಾರು ಅಕೂಟ ಖಜಾನೆಗಳಿಂದ ಸಂಪನ್ನವಾಗಿರುವರು, ಅವರಲ್ಲಿ ಎಷ್ಟೊಂದು ಆತ್ಮಿಕ ನಶೆಯಿರುತ್ತದೆ! ಸದಾ ಸರ್ವ ಖಜಾನೆಗಳಿಂದ ಸಂಪನ್ನನಾಗಿದ್ದೇನೆ - ಈ ಆತ್ಮಿಕ ಖುಷಿಯಿಂದ ಮುಂದುವರೆಯುತ್ತಾ ಸಾಗಿರಿ. ಸರ್ವ ಖಜಾನೆಗಳು ಆತ್ಮರನ್ನು ಜಾಗೃತಗೊಳಿಸುತ್ತಾ ಜೊತೆಗಾರರನ್ನಾಗಿ ಮಾಡಿಬಿಡುತ್ತದೆ. ಅಂದಮೇಲೆ ಸಂಪನ್ನ ಹಾಗೂ ಶಕ್ತಿಶಾಲಿ ಆತ್ಮರಾಗಿ ಮುಂದುವರೆಯುತ್ತಾ ಸಾಗಿರಿ.
4. ಸದಾ ಬುದ್ಧಿಯಲ್ಲಿ ಈ ಸ್ಮೃತಿಯು ಇರುತ್ತದೆಯಲ್ಲವೆ - ಮಾಡಿಸುವಂತಹ ತಂದೆಯು ಮಾಡಿಸುತ್ತಿದ್ದಾರೆ, ನಾವು ನಿಮಿತ್ತರಾಗಿದ್ದೇವೆ. ನಿಮಿತ್ತನಾಗಿದ್ದು ಮಾಡುವವರು ಸದಾ ಹಗುರವಾಗಿರುತ್ತಾರೆ ಏಕೆಂದರೆ ಮಾಡಿಸುವಂತಹ ತಂದೆಯು ಜವಾಬ್ದಾರನಾಗಿದ್ದಾರೆ. ಯಾವಾಗ ‘ನಾನು ಮಾಡುತ್ತೇನೆ’ ಎಂಬ ಸ್ಮೃತಿಯಿರುತ್ತದೆಯೋ, ಆಗ ಹೊರೆಯಾಗಿ ಬಿಡುತ್ತದೆ ಮತ್ತು ತಂದೆಯು ಮಾಡಿಸುತ್ತಿದ್ದಾರೆ ಎಂಬ ಸ್ಮೃತಿಯಿದ್ದರೆ ಹಗುರವಾಗಿರುತ್ತೀರಿ. ನಾನು ನಿಮಿತ್ತನು, ಮಾಡಿಸುವವರು ಮಾಡಿಸುತ್ತಿದ್ದಾರೆ, ನಡೆಸುವವರು ನಡೆಸುತ್ತಿದ್ದಾರೆ - ಈ ರೀತಿ ಇರುವವರಿಗೆ ನಿಶ್ಚಿಂತ ಚಕ್ರವರ್ತಿ ಎಂದು ಹೇಳುತ್ತಾರೆ. ಅಂದಮೇಲೆ ಮಾಡಿಸುವವರು ಮಾಡಿಸುತ್ತಿದ್ದಾರೆ - ಇದೇ ವಿಧಿಯಿಂದ ಸದಾ ಮುಂದುವರೆಯುತ್ತಾ ಸಾಗಿರಿ.
5. ತಂದೆಯ ಛತ್ರಛಾಯೆಯಲ್ಲಿ ಇರುವಂತಹ ಶ್ರೇಷ್ಠ ಆತ್ಮನಾಗಿದ್ದೇನೆ - ಇದೇ ಅನುಭೂತಿ ಆಗುತ್ತದೆಯೇ! ಯಾರೀಗ ಛತ್ರಛಾಯೆಯಲ್ಲಿ ಇರುತ್ತಾರೆಯೋ ಅವರೇ ಛತ್ರಧಾರಿಗಳು (ಚಕ್ರವರ್ತಿ) ಆಗುವರು. ಅಂದಮೇಲೆ ಛತ್ರಛಾಯೆಯಲ್ಲಿ ಇರುವಂತಹ ಭಾಗ್ಯಶಾಲಿ ಆತ್ಮನಾಗಿದ್ದೇನೆ ಎಂಬ ಖುಷಿಯು ಇರುತ್ತದೆಯಲ್ಲವೆ! ಛತ್ರಛಾಯೆಯು ಸುರಕ್ಷಿತ ಸಾಧನವಾಗಿದೆ, ಇದರೊಳಗೆ ಯಾರೂ ಸಹ ಬರಲು ಸಾಧ್ಯವಿಲ್ಲ. ತಂದೆಯ ಛತ್ರಛಾಯೆಯ ಒಳಗಿದ್ದೇನೆ ಎಂಬ ಈ ಚಿತ್ರವನ್ನು ಸದಾ ತಮ್ಮ ಮುಂದೆ ಇಟ್ಟುಕೊಳ್ಳಿರಿ.
6. ಸದಾ ತಮ್ಮ ಆತ್ಮಿಕ ಫರಿಶ್ತಾ ಸ್ವರೂಪವು ಸ್ಮೃತಿಯಲ್ಲಿ ಇರುತ್ತದೆಯೇ? ಬ್ರಾಹ್ಮಣನಿಂದ ಫರಿಶ್ತಾ, ಫರಿಶ್ತೆಯಿಂದ ದೇವತಾ - ಮೊದಲ ಈ ಒಗಟನ್ನು ಬಿಡಿಸಿದ್ದೀರಲ್ಲವೆ! ಒಗಟು ಬಿಡಿಸುವುದಕ್ಕೆ ಬರುತ್ತದೆಯೇ! ಸೆಕೆಂಡಿನಲ್ಲಿ ಬ್ರಾಹ್ಮಣನಿಂದ ದೇವತಾ, ದೇವತೆ ರೂಪದಿಂದ ಪರಿಕ್ರಮಣ ಹಾಕುತ್ತಾ ಬ್ರಾಹ್ಮಣ, ನಂತರ ದೇವತಾ - ಇದರಿಂದ ‘ನಾನೇ ಅದು, ಅದೇ ನಾನು’ (ಹಮ್ ಸೊ ಸೊ ಹಮ್) ಈ ಒಗಟು ಸದಾ ಬುದ್ಧಿಯಲ್ಲಿ ಇರುತ್ತದೆಯೇ? ಯಾರು ಒಗಟನ್ನು ಬಿಡಿಸುತ್ತಾರೆಯೋ ಅವರಿಗೇ ಬಹುಮಾನವು ಸಿಗುತ್ತದೆ ಅಂದಮೇಲೆ ಬಹುಮಾನವು ಸಿಕ್ಕಿದೆಯಲ್ಲವೆ! ಈಗೇನು ಸಿಕ್ಕಿದೆಯೋ ಅದು ಭವಿಷ್ಯದಲ್ಲಿಯೂ ಸಿಗುವುದಿಲ್ಲ! ಬಹುಮಾನವೇನು ಸಿಕ್ಕಿದೆ? ಸ್ವಯಂ ತಂದೆಯೇ ಸಿಕ್ಕಿದರು, ತಂದೆಯ ಮಗುವಾಗಿ ಬಿಟ್ಟಿರಿ. ಈ ಪ್ರಾಪ್ತಿಯು ಭವಿಷ್ಯದ ರಾಜ್ಯಭಾಗ್ಯದ ಮುಂದೆ ಎಷ್ಟು ಶ್ರೇಷ್ಠವಾಗಿದೆ! ಅಂದಮೇಲೆ ಸದಾ ಬಹುಮಾನ ತೆಗೆದುಕೊಳ್ಳುವ ಶ್ರೇಷ್ಠಾತ್ಮನಾಗಿದ್ದೇನೆ - ಇದೇ ನಶೆ ಮತ್ತು ಖುಷಿಯಿಂದ ಸದಾ ಮುಂದುವರೆಯುತ್ತಾ ಇರಿ. ಒಗಟು ಮತ್ತು ಬಹುಮಾನ - ಸದಾ ಇವೆರಡರ ಸ್ಮೃತಿಯಲ್ಲಿ ಇರುತ್ತೀರೆಂದರೆ ಸ್ವತಹವಾಗಿಯೇ ಮುಂದುವರೆಯುತ್ತೀರಿ.
7. ಸದಾ ‘ಧೃಡತೆಯು ಸಫಲತೆಯ ಬೀಗದ ಕೈ’ - ಈ ವಿಧಿಯಿಂದ ವೃತ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಶ್ರೇಷ್ಠಾತ್ಮನು ಆಗಿದ್ದೇನೆ ಎಂಬ ಅನುಭವವು ಆಗುತ್ತದೆಯಲ್ಲವೆ! ಧೃಡ ಸಂಕಲ್ಪ ವಿಶೇಷತೆಯು ಕಾರ್ಯದಲ್ಲಿ ಸಹಜವಾಗಿ ಸಫಲರನ್ನಾಗಿ ಮಾಡಿಸಿ, ವಿಶೇಷ ಆತ್ಮರನ್ನಾಗಿ ಮಾಡಿ ಬಿಡುತ್ತದೆ. ಹಾಗೂ ಯಾವಾಗ ಯಾವುದೇ ಕಾರ್ಯದಲ್ಲಿ ವಿಶೇಷ ಆತ್ಮರಾಗುವರೆಂದರೆ, ಎಲ್ಲರ ಆಶೀರ್ವಾದಗಳೂ ಸಹ ಸ್ವತಹವಾಗಿಯೇ ಸಿಗುತ್ತದೆ. ಸ್ಥೂಲದಲ್ಲಿ ಆಶೀರ್ವಾದಗಳನ್ನು ಯಾರೂ ಕೊಡುವುದಿಲ್ಲ ಆದರೆ ಇದು ಸೂಕ್ಷ್ಮವಾದ ಆಶೀರ್ವಾದಗಳಾಗಿವೆ, ಇದರಿಂದ ಆತ್ಮನಲ್ಲಿ ಶಕ್ತಿ ತುಂಬುತ್ತದೆ ಮತ್ತು ಸ್ವ-ಉನ್ನತಿಯಲ್ಲಿ ಸಹಜ ಸಫಲತೆಯ ಪ್ರಾಪ್ತಿಯಾಗುವುದು. ಅಂದಮೇಲೆ ಸದಾ ಧೃಡತೆಯ ಮಹಾನತೆಯಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳುವ ಹಾಗೂ ಸರ್ವರ ಆಶೀರ್ವಾದಗಳನ್ನು ತೆಗೆದುಕೊಳ್ಳುವ ಶ್ರೇಷ್ಠಾತ್ಮನು ಆಗಿದ್ದೇನೆಂಬ ಸ್ಮೃತಿಯಿಂದ ಮುಂದುವರೆಯುತ್ತಾ ಸಾಗಿರಿ.
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ - ಆತ್ಮಿಕ ತಂದೆ ಯಾರು ಎಲ್ಲಾ ಆತ್ಮರ ತಂದೆ ಸರ್ವಶ್ರೇಷ್ಠನಾಗಿದ್ದಾರೆಯೋ ಅವರಿಗೇ ಶಿವಾಯ ನಮಃ ಎಂದು ಹೇಳುತ್ತಾರೆ. ತಂದೆಯೆಂತಲೂ ಹೇಳುತ್ತಾರೆ. ಆ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಅವರಿಗೇ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳಲಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ಅವರ ಸನ್ಮುಖದಲ್ಲಿ ನಾವು ಕುಳಿತಿದ್ದೇವೆ ಎಂದು. ಇದನ್ನು ನೀವು ಮಕ್ಕಳು ತಿಳಿಸಬೇಕಾಗಿದೆ. ಹೇಗೆ ಒಂದು ಕಡೆ ಗೀತಾ ಪಾಠಶಾಲೆಯಲ್ಲಿ ಕೃಷ್ಣನ ಆರು ಅಡಿಯುದ್ದದ ಚಿತ್ರವಿತ್ತು, ಕೃಷ್ಣನನ್ನು ವಾಸ್ತವದಲ್ಲಿ ಚಿಕ್ಕದಾಗಿಯೇ ತೋರಿಸುತ್ತಾರೆ ಮತ್ತೆ ಗೀತೆಯ ಭಗವಂತನಾಗಿದ್ದನು ಎಂದು ಹೇಳುತ್ತಾರೆ ಅಂದಮೇಲೆ ಗೀತೆಯನ್ನು ಯಾವಾಗ ತಿಳಿಸಿದನು? ಬಾಲ್ಯದಲ್ಲಿಯೋ ಅಥವಾ ಯಾವಾಗ ಆರು ಅಡಿಯಷ್ಟು ಬೆಳೆದಾಗ ತಿಳಿಸಿದನೇ? ರಾಧೆ-ಕೃಷ್ಣನ ಜೋಡಿಯಿತ್ತು, ಅವರಿಬ್ಬರ ಪರಸ್ಪರ ಸಂಬಂಧ ಏನಿತ್ತು? ರಾಧೆಗೆ ಭಗವತಿ ಮತ್ತು ಕೃಷ್ಣನಿಗೆ ಭಗವಂತನೆಂದು ಹೇಳುತ್ತಾರೆ. ಇವರಿಬ್ಬರ ಸಂಬಂಧವೇನೆಂಬುದು ಯಾರಿಗೂ ತಿಳಿದಿಲ್ಲ. ಕೃಷ್ಣನು ಗೀತೋಪದೇಶ ಮಾಡಿದನು ಆದರೆ ಯಾವಾಗ? ಹೀಗೆ ನೀವು ಪ್ರಶ್ನೆಗಳನ್ನು ಕೇಳುತ್ತೀರೆಂದರೆ ಆಗ ಮನುಷ್ಯರಿಗೆ ಅರ್ಥವಾಗುತ್ತದೆ - ಬ್ರಹ್ಮಾಕುಮಾರ-ಕುಮಾರಿಯರ ವಿನಃ ಮತ್ತ್ಯಾರೂ ಈ ಪ್ರಶ್ನೆಗಳನ್ನು ಕೇಳಲು ಸಾಧ್ಯವಿಲ್ಲ. ಯಾರೇ ದೊಡ್ಡ-ದೊಡ್ಡ ರಾಜರು ಮೊದಲಾದ ಯಾರೆಲ್ಲರೂ ಇದ್ದಾರೆಯೋ ಅವರು ಸನ್ಯಾಸಿಗಳನ್ನು ನೋಡುತ್ತಿದ್ದಂತೆಯೇ ಅವರ ಕಾಲಿಗೆ ಬೀಳುತ್ತಾರೆ. ಯಾರಿಗೂ ಕೇಳುವ ಧೈರ್ಯವೇ ಇರುವುದಿಲ್ಲ. ನೀವಂತೂ ಸಾಹಸವನ್ನು ಇಡುತ್ತೀರಿ ಆದ್ದರಿಂದ ಹೇಳುತ್ತಾರೆ- ಬ್ರಹ್ಮಾಕುಮಾರಿಯರಲ್ಲಿ ಇಷ್ಟೊಂದು ಜ್ಞಾನವಿದೆ ಅವರು ಕುಳಿತು ರಚಯಿತ ಮತ್ತು ರಚನೆಯ ಜ್ಞಾನವನ್ನು ಕೊಡುತ್ತಾರೆ. ಇಡೀ ಚರಿತ್ರೆಯನ್ನೇ ತಿಳಿಸುತ್ತಾರೆ. ನೀವು ಇದನ್ನು ಕೇಳಬಹುದು – ಶಿವ ಜಯಂತಿಯನ್ನು ಆಚರಿಸುತ್ತೀರಿ, ಪೂಜೆ ಇತ್ಯಾದಿಗಳನ್ನೂ ಮಾಡುತ್ತೀರಿ ಅಂದಮೇಲೆ ಅವರು ಎಂದಾದರೂ ಅವಶ್ಯವಾಗಿ ಬಂದಿರಬೇಕು ಆದ್ದರಿಂದಲೇ ಶಿವ ಜಯಂತಿಯನ್ನು ಆಚರಿಸಲಾಗುತ್ತದೆ. ಅವರು ಯಾವಾಗ ಬಂದರು? ಶಿವ ತಂದೆಯು ನಿರಾಕಾರನಾಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವಶ್ಯವಾಗಿ ಶರೀರದಲ್ಲಿ ಬಂದಿರಬಹುದೇ? ನಿರಾಕಾರನ ಜಯಂತಿಯಾಗಲು ಹೇಗೆ ಸಾಧ್ಯ? ಆತ್ಮವು ಅಮರನಾಗಿದೆ, ಯಾವಾಗ ಸತ್ತ ನಂತರ ಜನ್ಮ ಪಡೆಯುವರೋ ಆಗ ಜಯಂತಿಯನ್ನು ಆಚರಿಸಲಾಗುತ್ತದೆ, ಆತ್ಮದ ಜಯಂತಿಯಾಗುವುದಿಲ್ಲ. ಆತ್ಮವಂತೂ ಅವಿನಾಶಿಯಾಗಿದೆ, ಆತ್ಮದ ಜಯಂತಿಯೆಂದು ಹೇಳಲಾಗುವುದಿಲ್ಲ. ಶಿವನು ನಿರಾಕಾರನಾಗಿದ್ದಾರೆ. ಅವರ ಚಿತ್ರವನ್ನು ಲಿಂಗ ರೂಪದಲ್ಲಿ ಇಡಲಾಗುತ್ತದೆ. ನೀವು ಮಕ್ಕಳಿಗೆ ಈ ಚಿಂತನೆಯಿರಬೇಕು. ಇಲ್ಲಿಂದ ತಮ್ಮ ಮನೆ, ಉದ್ಯೋಗ-ವ್ಯವಹಾರಗಳಲ್ಲಿ ಹೋಗುತ್ತಿದ್ದಂತೆ ಈ ಮಾತುಗಳೇ ಬುದ್ಧಿಯಿಂದ ಹೊರಟು ಹೋಗುತ್ತದೆ, ಚಿಂತನೆ ನಡೆಯುವುದಿಲ್ಲ. ಗುರುಗಳು ಮೊದಲಾದವರ ಜಂಜಾಟದಲ್ಲಿ ಬಹಳ ಸಿಕ್ಕಿ ಹಾಕಿಕೊಂಡಿದ್ದಾರೆ. ಮಾತೇ ಕೇಳಬೇಡಿ. ಅಬಲೆಯರು ಬಹಳ ಮುಗ್ಧರಾಗಿರುತ್ತಾರಲ್ಲವೆ. ನೀವು ಅವರೊಂದಿಗೆ ಕೇಳಬಲ್ಲಿರಿ – ಶಿವ ಜಯಂತಿಯನ್ನು ಆಚರಿಸಲಾಗುತ್ತದೆ ಅಂದಮೇಲೆ ಅವರು ಯಾರು? ಅವರು ಬಂದು ಏನು ಮಾಡಿದರು ಮತ್ತು ಯಾವಾಗ ಬಂದರು? ಜಯಂತಿಯೆಂದರೆ ಜನ್ಮವೆಂದರ್ಥ, ನಿರಾಕಾರ ಶಿವನ ಜನ್ಮದಿನವನ್ನು ಆಚರಿಸಿದರು, ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಅವರ ಜನ್ಮ ದಿನವನ್ನು ಹೇಗೆ ಆಚರಿಸಲಾಗುತ್ತದೆ? ಯಾರಲ್ಲಿ ಬಂದರು? ಆತ್ಮವು ಶರೀರದಲ್ಲಿ ಹೋದಾಗ ಜನ್ಮವಾಯಿತು ಎಂದು ಹೇಳಲಾಗುತ್ತದೆ. ಆತ್ಮವಂತೂ ಆತ್ಮವೇ ಆಗಿದೆ, ಶರೀರದಲ್ಲಿ ಪ್ರವೇಶ ಮಾಡಿದಾಗ ಆತ್ಮವು ಪಾತ್ರವನ್ನು ಅಭಿನಯಿಸುವುದಕ್ಕಾಗಿ ಶರೀರವನ್ನು ತೆಗೆದುಕೊಂಡಿದೆ ಎಂದು ಹೇಳುತ್ತಾರೆ. ತಂದೆಯಂತೂ ನಿರಾಕಾರನಾಗಿದ್ದಾರೆ, ಅವರು ಹೇಗೆ ಜನ್ಮ ತೆಗೆದುಕೊಂಡರು? ಯಾರಲ್ಲಿ ಬಂದರು? ಅವರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಇದು ಯಾರಿಗೂ ತಿಳಿದಿಲ್ಲ. ಭಲೆ ಬಹಳ ಶಾಸ್ತ್ರಗಳನ್ನು ಓದಿದ್ದಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ನೀವೀಗ ಜ್ಞಾನದಿಂದ ಸಂಪನ್ನರಾಗಿದ್ದೀರಿ, ನೀವೀಗ ಜ್ಞಾನವನ್ನೇ ತಿಳಿಸಬೇಕಾಗಿದೆ. ಕೆಲಕೆಲವರು 2-3 ವರ್ಷಗಳ ಕಾಲ ಬರುತ್ತಾರೆ ಮತ್ತೆ ಅಜ್ಞಾನದ ಪ್ರವೇಶತೆಯಾಗಿ ಬಿಡುತ್ತದೆ. ತಂದೆಯು ಪುನಃ ಅಜ್ಞಾನವನ್ನು ತೆಗೆದು ಜ್ಞಾನದ ಧಾರಣೆ ಮಾಡಿಸುತ್ತಾರೆ. ಈಗ ನೀವು ಮಕ್ಕಳಿಗೆ ಜ್ಞಾನ ಕೊಡಲಾಗುತ್ತದೆ ಆದರೆ ಪುರುಷ ಜ್ಞಾನದಲ್ಲಿದ್ದು ಸ್ತ್ರೀಯು ಅಜ್ಞಾನದಲ್ಲಿದ್ದರೆ ಹಂಸ-ಕೊಕ್ಕರೆಗಳಂತೆ ಆಗಿ ಬಿಡುವುದು. ಆದ್ದರಿಂದ ಮೊದಲು ಸ್ತ್ರೀಗೆ ಜ್ಞಾನ ಕೊಡಬೇಕಾಗಿದೆ. ಸ್ತ್ರೀಯು ತನ್ನ ಪತಿಯನ್ನು ಗುರು ಈಶ್ವರನೆಂದು ನಂಬುತ್ತಾಳೆ ಅಂದಮೇಲೆ ಸ್ತ್ರೀಯು ಗುರುವಿನ ಆಜ್ಞೆಯನ್ನು ಪಾಲಿಸಬೇಕಲ್ಲವೆ. ಇದು ಇಲ್ಲಿನ ಮಾತಾಗಿದೆ. ಸತ್ಯಯುಗದಲ್ಲಂತೂ ಆಜ್ಞೆಯನ್ನು ಒಪ್ಪುವ, ಒಪ್ಪದೇ ಇರುವ ಪ್ರಶ್ನೆಯೇ ಇರುವುದಿಲ್ಲ, ಎಲ್ಲರೂ ಪ್ರೀತಿಯಿಂದ ನಡೆಯುತ್ತಾರೆ. ಅಲ್ಲಿ ಇಂತಹ ಯಾವುದೇ ಮಾತಿರುವುದಿಲ್ಲ ಆದ್ದರಿಂದ ಮನೆಯೇ ಮೊದಲ ಪಾಠಶಾಲೆ. ಸ್ತ್ರೀ ಜ್ಞಾನದಲ್ಲಿ ಬರುತ್ತಾರೆ, ಪತಿಯು ಬರುವುದಿಲ್ಲವೆಂದರೆ ಏನು ಮಾಡಲು ಸಾಧ್ಯ? ಜ್ಞಾನದ ಭೂ ಭೂ ಮಾಡಬೇಕಾಗಿದೆ, ಮಕ್ಕಳಿಗೂ ಸಹ ಭೂ ಭೂ ಮಾಡಬೇಕಾಗಿದೆ. ತಮ್ಮ ಜೊತೆಗಾರರ ಕಲ್ಯಾಣ ಮಾಡಿರಿ, ಅವರಿಗೂ ತಿಳಿಸಿರಿ - ತಂದೆಯನ್ನು ನೆನಪು ಮಾಡಿ, ಈಗ ಯುದ್ಧವು ಸನ್ಮುಖದಲ್ಲಿ ನಿಂತಿದೆ, ತಂದೆಯು ಬಂದಿದ್ದಾರೆ - ಹೇ ಪತಿತ-ಪಾವನ ಬನ್ನಿ ಎಂದು ಮನುಷ್ಯರು ಕರೆಯುತ್ತಾರೆ. ಈಗ ಪತಿತ ಪ್ರಪಂಚದ ವಿನಾಶವಾಗಲಿದೆ ಅಂದಮೇಲೆ ಮತ್ತೆ ನೀವೇಕೆ ಪತಿತರಾಗುತ್ತೀರಿ! ಮಾತೆಯು ಜ್ಞಾನದಲ್ಲಿದ್ದರೆ ತಮ್ಮ ಜೊತೆಗಾರರ ಕಲ್ಯಾಣ ಮಾಡುವುದು ಅವರ ಕರ್ತವ್ಯವಾಗಿದೆ. ನೀವೀಗ ತಂದೆಯಿಂದ 21 ಜನ್ಮಗಳಿಗಾಗಿ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ನೀವು ನಿಮ್ಮ ರಾಜ್ಯಕ್ಕೆ ಯಾರೂ ಕೈಹಾಕಲು ಸಾಧ್ಯವಿಲ್ಲ, ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ, ಅಂತರ ನೋಡಿ ಎಷ್ಟಿದೆ! ಇಂತಹ ಆಸ್ತಿಯನ್ನು ಕೊಡುವ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ಇಲ್ಲಂತೂ ಬಹಳ ಮಕ್ಕಳು ಇಡೀ ದಿನದಲ್ಲಿ ತಂದೆಯನ್ನು ನೆನಪೇ ಮಾಡುವುದಿಲ್ಲ. ಇಡೀ ದಿನ ಉದ್ಯೋಗ-ವ್ಯವಹಾರಗಳ ಜಂಜಾಟದಲ್ಲಿಯೇ ಇರುತ್ತಾರೆ. ಇಲ್ಲವಾದರೆ ಮುಂಜಾನೆ ಎದ್ದು ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಲ್ಲವೆ. ಬಾಬಾ, ನಾವು ತಮ್ಮೊಂದಿಗೆ ಪ್ರತಿಜ್ಞೆ ಮಾಡುತ್ತೇವೆ, ತಮ್ಮಿಂದ ಆಸ್ತಿಯನ್ನು ಖಂಡಿತ ತೆಗೆದುಕೊಳ್ಳುತ್ತೇವೆ. ಬಾಬಾ, ತಾವು ಎಷ್ಟು ಮಧುರರಾಗಿದ್ದೀರಿ, ತಮ್ಮ ನೆನಪಿನಿಂದ ನಮ್ಮ ವಿಕರ್ಮಗಳು ವಿನಾಶವಾಗುತ್ತವೆ. ತಮ್ಮೊಂದಿಗೆ ಮಾತನಾಡಿಕೊಳ್ಳುವುದಕ್ಕೆ ವಿಚಾರ ಸಾಗರ ಮಂಥನ ಮಾಡುವುದು ಎಂದು ಹೇಳಲಾಗುತ್ತದೆ. ಬಾಬಾ, ನಾವು ತಮ್ಮಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಂಡೇ ತೀರುತ್ತೇವೆ. ನಾವೀಗ ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಆಗಲೇ ಸತ್ಯಯುಗೀ ರಾಜ್ಯವನ್ನು ಪಡೆಯುವೆವು. ಬಾಬಾ, ತಮ್ಮನ್ನು ನಾವು ನಿರಂತರ ನೆನಪು ಮಾಡುತ್ತೇವೆ. 63 ಜನ್ಮಗಳಲ್ಲಿ ನಾವು ಎಷ್ಟೊಂದು ಪಾಪ ಮಾಡಿದ್ದೇವೆ, ತಲೆಯ ಮೇಲೆ ಎಷ್ಟೊಂದು ಹೊರೆಯಿದೆ ಆದ್ದರಿಂದ ನಾವು ತಮ್ಮನ್ನು ಬಹಳ ನೆನಪು ಮಾಡುತ್ತೇವೆ. ಬಾಬಾ, ಅಡುಗೆ ಮಾಡುವಾಗ ತಿರುಗಾಡುವಾಗಲೂ ಸಹ ನಿಮ್ಮ ನೆನಪಿನಲ್ಲಿರುತ್ತೇವೆ. ಹೀಗೆ ಮಾತನಾಡಿಕೊಳ್ಳುತ್ತಾ ಪ್ರತಿಜ್ಞೆ ಮಾಡುತ್ತೀರೆಂದರೆ ವಿಕರ್ಮಗಳು ವಿನಾಶವಾಗುತ್ತಾ ಹೋಗುತ್ತದೆ. ಬಾಬಾ, ನಾವು ಭೋಜನವನ್ನು ನಿಮ್ಮ ನೆನಪಿನಲ್ಲಿಯೇ ತಯಾರಿಸುತ್ತೇವೆ. ನಾವು ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ನಾಳೆ ನಾವು ಶರೀರ ಬಿಟ್ಟರೆ ಸತೋಪ್ರಧಾನರಾಗುವುದೇ ಇಲ್ಲ. ಮೃತ್ಯುವಿನ ಭಯವಿದೆಯಲ್ಲವೆ. ಬಾಬಾ, ನಾವು ಜೀವಿಸಿದ್ದಂತೆಯೇ ತಮ್ಮಿಂದ ಆಸ್ತಿಯನ್ನು ಅವಶ್ಯವಾಗಿ ಪಡೆಯುತ್ತೇವೆ ಮತ್ತೆ ನೋಡಿಕೊಳ್ಳಬೇಕು - ಈ ದಿನ ನಾನು ಎಷ್ಟು ನೆನಪು ಮಾಡಿದೆನು? ಯಾವುದೇ ಪರಿಸ್ಥಿತಿಯಲ್ಲಿ ಅವಶ್ಯವಾಗಿ ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಯುಕ್ತಿಯಿಂದ ನಡೆಯಬೇಕಾಗಿದೆ. ಹೀಗೆ ತೀವ್ರ ವೇಗದಿಂದ ಪುರುಷಾರ್ಥದಲ್ಲಿ ತೊಡಗಿದರೆ ನೆನಪೂ ಇರುವುದು ಮತ್ತು ಆಯಸ್ಸೂ ಹೆಚ್ಚುವುದು. ಭವಿಷ್ಯದಲ್ಲಿ ನಿಮ್ಮದು ಧೀರ್ಘಾಯಸ್ಸು ಆಗುವುದು, ನೆನಪು ಮಾಡದಿದ್ದರೆ ಪದವಿಯು ಕಡಿಮೆಯಾಗುವುದು. ಪುರುಷಾರ್ಥ ಮಾಡಿ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ ಮತ್ತು ಸ್ವದರ್ಶನ ಚಕ್ರಧಾರಿಗಳು ಆಗಬೇಕಾಗಿದೆ, ಹೇಗೆ ಹಿಂದೂಗಳನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಳ್ಳಲು ನನ್ಸ್ ಬಹಳ ತಿರುಗಾಡುತ್ತಿರುತ್ತಾರೆ. ಮನೆಗಳಿಗೆ, ಅಂಗಡಿಗಳಿಗೆ ಹೋಗುತ್ತಾರೆ. ಬೈಬಲ್ ತೆಗೆದುಕೊಳ್ಳಿ, ಇದನ್ನು ತೆಗೆದುಕೊಳ್ಳಿ, ನಮ್ಮ ಕ್ರಿಶ್ಚಿಯನ್ ಧರ್ಮದಲ್ಲಿ ಬಹಳ ಸುಖವಿದೆ ಎಂದು ಎಲ್ಲರಿಗೆ ಹೇಳುತ್ತಾರೆ. ಅವರದು ಸಂಘವಾಗಿದೆ. ಬೌದ್ಧಿಯರದೂ ಸಂಘವಾಗಿದೆ. ಇವರೇನು ಮಾಡುತ್ತಾರೆ, ನಮ್ಮ ಹಿಂದೂ ಧರ್ಮದವರನ್ನು ಕ್ರಿಶ್ಚಿಯನ್ನರನ್ನಾಗಿ ಮಾಡಿಕೊಳ್ಳುತ್ತಾ ಇರುತ್ತಾರೆ ಎಂಬುದನ್ನು ಹಿಂದೂಗಳು ತಿಳಿದುಕೊಳ್ಳುವುದಿಲ್ಲ. ನೀವು ಪ್ರದರ್ಶನಿಯಲ್ಲಿ ಎಷ್ಟೊಂದು ತಿಳಿಸುತ್ತೀರಿ, ಭಲೆ ಅಭಿಪ್ರಾಯವನ್ನು ಬರೆದು ಕೊಡುತ್ತಾರೆ, ಮನೆಗೆ ಹೋದ ಮೇಲೆ ಸಮಾಪ್ತಿ. ಇದಕ್ಕಾಗಿ ಗಾಯನವಿದೆ - ಕೋತಿಗಳ ಮುಂದೆ ರತ್ನಗಳನ್ನು ಇಟ್ಟರೆ ಅವನ್ನು ಕಲ್ಲುಗಳೆಂದು ತಿಳಿದು ಎಸೆಯುತ್ತವೆ, ಇಲ್ಲಿಯೂ ಸಹ ಅವಿನಾಶಿ ಜ್ಞಾನರತ್ನಗಳನ್ನು ಕಲ್ಲುಗಳೆಂದು ತಿಳಿದು ಎಸೆಯುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರು ಈ ಧರ್ಮದವರಾಗಿರುವರೋ ಅವರಿಗೆ ಅರ್ಥವಾಗುವುದು. ಬಹಳ ಸಹಜ ಮಾತಾಗಿದೆ, ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ತಂದೆಯು ಭಾರತದಲ್ಲಿ ಒಂದೇ ಬಾರಿ ಬರುತ್ತಾರೆ.
ತಂದೆಯು ತಿಳಿಸುತ್ತಾರೆ - ನಾನು ಪತಿತ-ಪಾವನ ತಂದೆಯನ್ನು ನೀವು ಕರೆಯುತ್ತಾ ಬಂದಿದ್ದೀರಿ. ನಾನೀಗ ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನಾವು ಈ ಭ್ರಷ್ಠಾಚಾರಿ ಪ್ರಪಂಚವನ್ನು ಶ್ರೇಷ್ಠಾಚಾರಿಯನ್ನಾಗಿ ಮಾಡಿಯೇ ತೀರುತ್ತೇವೆಂದು ನೀವು ಹೇಳುತ್ತೀರಿ. ಈಗಂತೂ ಎಲ್ಲರೂ ನರಕವಾಸಿಗಳಾಗಿದ್ದಾರೆ, ನೀವೀಗ ಶಿವ ತಂದೆಯ ಶ್ರೀಮತದ ಮೇಲೆ ಇದ್ದೀರಿ. ಶಿವಭಗವಾನುವಾಚ - ನಾನು ನಿಮ್ಮನ್ನು ಸ್ವರ್ಗದ ಮಾಲೀಕರು, ರಾಜಾಧಿರಾಜರನ್ನಾಗಿ ಮಾಡುತ್ತೇನೆ. ಗೀತೆಯಲ್ಲಿ ಬಹಳ ಚೆನ್ನಾಗಿ ಬರೆಯಲ್ಪಟ್ಟಿದೆ, ತಿಳಿಸುತ್ತಾರೆ - ನಾನು ಈ ಸಾಧುಗಳ ಉದ್ಧಾರವನ್ನೂ ಮಾಡಲು ಬರುತ್ತೇನೆ. ಅಂದಮೇಲೆ ಇದನ್ನು ಅವರಿಗೂ ತಿಳಿಸಬೇಕಲ್ಲವೆ. ಪತಿತ-ಪಾವನ ಸೀತಾರಾಮ ಎಂದು ಕರೆಯುತ್ತಾರೆ. ಇದರ ಅರ್ಥವನ್ನೂ ತಿಳಿದುಕೊಂಡಿಲ್ಲ, ಎಲ್ಲರೂ ಭಕ್ತಿನಿಯರು ಅಥವಾ ಸೀತೆಯರಾಗಿದ್ದಾರೆ. ಹೇ ರಾಮ ಬಂದು ನಾವು ಸೀತೆಯರ ಉದ್ಧಾರವನ್ನು ಮಾಡಿ ಎಂದು ಕರೆಯುತ್ತಾರೆ ಮತ್ತೆ ರಘುಪತಿ ರಾಘವ ರಾಜಾ ರಾಮ.... ಎಂದು ಹಾಡುತ್ತಾರೆ. ವಾಸ್ತವದಲ್ಲಿ ರಾಜಾರಾಮನ ಮಾತಿಲ್ಲ, ಮುಖ್ಯ ತಪ್ಪು ಇದಾಗಿದೆ. ಶಿವನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಕೇಳಬೇಕು - ರಾಮ ಹಾಗೂ ಕೃಷ್ಣನನ್ನು ಕಪ್ಪಾಗಿ ಏಕೆ ತೋರಿಸಿದ್ದಾರೆ? ಸತ್ಯ-ತ್ರೇತಾಯುಗದಲ್ಲಿ ಸುಂದರರಾಗಿರುತ್ತಾರೆ ನಂತರ ಶ್ಯಾಮ ಅರ್ಥಾತ್ ಪತಿತರಾಗುತ್ತಾರೆ. ಮೊದಲು ಸತ್ಯಯುಗ ನಂತರ ತ್ರೇತಾ, ದ್ವಾಪರ, ಕಲಿಯುಗ. ಈ ಸಮಯದಲ್ಲಿ ಕಲಿಯುಗವಿದೆ, ಸತ್ಯಯುಗವಿದ್ದಾಗ ಎಷ್ಟೊಂದು ಮಾನ್ಯತೆಯಿತ್ತು ಆದ್ದರಿಂದ ಯುಕ್ತಿಯಿಂದ ಹೋಗಿ ತಿಳಿಸಬೇಕು - ಅವರು ಅಷ್ಟು ಬೇಗನೆ ತಮ್ಮ ಹಠವನ್ನು ಬಿಡುವುದಿಲ್ಲ. ವೃಕ್ಷದ ಆಯಸ್ಸು ಮುಗಿಯುತ್ತದೆ ಎಂದರೆ ವೃಕ್ಷವು ಜಡಜಡೀಭೂತ ಸ್ಥಿತಿಯನ್ನು ತಲುಪುತ್ತದೆ. ಈ ಪ್ರಪಂಚಕ್ಕೂ ಆಯಸ್ಸು ಇದೆಯಲ್ಲವೆ. ಹೊಸ ಪ್ರಪಂಚ, ಹಳೆಯ ಪ್ರಪಂಚ. ಹಳೆಯದು ಎಂದರೆ ಕಲಿಯುಗ, ತಮೋಪ್ರಧಾನ ಪ್ರಪಂಚ, ಇದರಲ್ಲಿ ಯಾರೊಬ್ಬರೂ ಸತೋಪ್ರಧಾನರಿರಲು ಸಾಧ್ಯವಿಲ್ಲ. ಈಗ ತಮೋಪ್ರಧಾನರು ಸಮಾಪ್ತಿಯಾಗಬೇಕಾಗಿದೆ. ಹೊಸ ಪ್ರಪಂಚವನ್ನು ಯಾರು ಸ್ಥಾಪನೆ ಮಾಡುತ್ತಾರೆ? ಅದೇ ತಂದೆ. ಪ್ರಳಯವಾಗುತ್ತದೆ ಎಂದಲ್ಲ, ಯಾವಾಗ ಪತಿತರಾಗುವರೋ ಆಗ ತಂದೆಯನ್ನು ಕರೆಯುತ್ತಾರೆ, ಬಂದು ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಹಳೆಯ ಪ್ರಪಂಚದಲ್ಲಿಯೇ ಬರುವರಲ್ಲವೆ. ಪತಿತ-ಪಾವನನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಅಂತ್ಯದಲ್ಲಿಯೇ ಬರುತ್ತಾರೆ. ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಪಾವನ ಪ್ರಪಂಚವನ್ನಾಗಿ ಮಾಡಲು ಬರುತ್ತೇನೆಂದು ಹೇಳುತ್ತಾರೆ. ಈಗ ಸಂಗಮವಾಗಿದೆ, ತಂದೆಯು ಎಲ್ಲರನ್ನೂ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಇಂತಹ ತಂದೆಯ ಶ್ರೀಮತದಂತೆ ನಡೆಯಬೇಕಲ್ಲವೆ. ತಮ್ಮ ಸ್ಥಿತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಬೇಕು, ತಮ್ಮನ್ನು ಆತ್ಮನೆಂದು ತಿಳಿಯಬೇಕಾಗಿದೆ. ಇವು ಶರೀರದ ಕರ್ಮೇಂದ್ರಿಯಗಳಾಗಿವೆ. ತಂದೆಯು ತಿಳಿಸುತ್ತಾರೆ - ಹೇ ಮಕ್ಕಳೇ, ನಾನು ನಿಮಗೆ ಏನನ್ನು ತಿಳಿಸುತ್ತೇನೆಯೋ ಅದನ್ನೇ ಕೇಳಿರಿ. ಮುಕ್ತಿ-ಜೀವನ್ಮುಕ್ತಿಗಾಗಿ ಮತ್ತ್ಯಾರದೇ ಮಾತನ್ನು ಕೇಳಬೇಡಿ, ಪಾವನರನ್ನಾಗಿ ಮಾಡಲು ತಂದೆಯು ಪರಮಧಾಮದಿಂದ ಬಂದಿದ್ದಾರೆ ಅಂದಮೇಲೆ ನೀವು ಹಳೆಯ ಶಾಸ್ತ್ರಗಳನ್ನು ಏಕೆ ನೆನಪು ಮಾಡುತ್ತೀರಿ! ಭಗವಂತ ಸಿಗುವರೆಂದೇ ಭಕ್ತಿ ಮಾಡುತ್ತಾರೆ, ಅವರಂತೂ ಸದ್ಗತಿದಾತ ತಂದೆಯಾಗಿದ್ದಾರೆ. ತಂದೆಯ ವಿನಃ ಈ ಜ್ಞಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ, ಈ ಲಕ್ಷ್ಮೀ-ನಾರಾಯಣರಿಗೂ ಸಹ ಈ ರಾಜ್ಯವು ಹೇಗೆ ಸಿಕ್ಕಿತು? ಆತ್ಮದ ಬಗ್ಗೆ ಹೇಳುತ್ತಾರೆ - ಆತ್ಮವು ಬಿಂದುವಾಗಿದೆ, ಭೃಕುಟಿಯ ಮಧ್ಯದಲ್ಲಿ ನಕ್ಷತ್ರದಂತೆ ಹೊಳೆಯುತ್ತದೆ, ತಂದೆಯು ತಿಳಿಸುತ್ತಾರೆ - ನೀವು ನನಗೆ ಪರಮ ಆತ್ಮ ಎಂದು ಹೇಳುತ್ತೀರಿ. ಲೌಕಿಕ ತಂದೆಗೆ ಎಂದಾದರೂ ಪರಮಾತ್ಮನೆಂದು ಹೇಳುವರೇ? ಯಾರು ಪರಮಧಾಮದಲ್ಲಿ ಇರುತ್ತಾರೆಯೋ ಅವರಿಗೆ ಪರಮ ಆತ್ಮನೆಂದು ಹೇಳುತ್ತಾರೆ. ಅವರು ನಿಮ್ಮ ತಂದೆಯಾಗಿದ್ದಾರೆ, ಬಂದು ಈ ಶರೀರದಲ್ಲಿ ಪ್ರವೇಶ ಮಾಡುತ್ತಾರೆ. ಗುರುವು ಶಿಷ್ಯನ ಪಕ್ಕದಲ್ಲಿಯೇ ಕುಳಿತುಕೊಳ್ಳುವರಲ್ಲವೆ. ಈ ಮಾತು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ, ನೀವೀಗ ತಿಳಿದುಕೊಂಡಿದ್ದೀರಿ - ಅವರು ನಮ್ಮ ತಂದೆಯಾಗಿದ್ದಾರೆ. 5000 ವರ್ಷಗಳ ಮೊದಲೂ ಸಹ ತಂದೆಯು ಯೋಗವನ್ನು ಕಲಿಸಿದ್ದರು, ನನ್ನನ್ನು ನೆನಪು ಮಾಡಿರಿ ಮತ್ತು ವಿಷ್ಣುಪುರಿಯನ್ನು ನೆನಪು ಮಾಡಿರಿ ಎಂದು. ಅವಶ್ಯವಾಗಿ ಸಂಗಮದಲ್ಲಿಯೇ ಹೇಳುವರಲ್ಲವೆ! ಸತ್ಯಯುಗದಲ್ಲಿ ಒಂದು ಧರ್ಮವಿತ್ತು ಅಂದಮೇಲೆ ಅವಶ್ಯವಾಗಿ ಪುನಃ ಒಂದು ಧರ್ಮವಾಗುವುದಲ್ಲವೆ. ಇಷ್ಟೆಲ್ಲಾ ಧರ್ಮಗಳು ವಿನಾಶವಾಗುತ್ತವೆ, ಇದು ಅದೇ ಸಮಯವಾಗಿದೆ. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಾನು ನಿಮಗೆ ವಿಶ್ವದ ಮಾಲೀಕರನ್ನಾಗಿ ಮಾಡುತ್ತೇನೆ, ತಂದೆಯ ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ಯಾವ ಮಕ್ಕಳು ಚೆನ್ನಾಗಿ ಸೇವೆ ಮಾಡುವರೋ ಅವರನ್ನೂ ನಾನು ನೆನಪು ಮಾಡುತ್ತೇನೆ ಏಕೆಂದರೆ ನನ್ನ ಸಹಯೋಗಿಗಳಾಗಿದ್ದಾರೆ, ಅನೇಕರ ಕಲ್ಯಾಣ ಮಾಡುತ್ತಾರೆ ಆದ್ದರಿಂದ ಅವರು ನನಗೆ ಪ್ರಿಯರೆನಿಸುತ್ತಾರೆ. ನಿಮಗಂತೂ ಒಬ್ಬ ತಂದೆಯೇ ಪ್ರಿಯವೆನಿಸುತ್ತಾರೆ, ಅವರಿಂದಲೇ ಆಸ್ತಿಯು ಸಿಗುತ್ತದೆ. ಆದ್ದರಿಂದ ನೀವು ಮಕ್ಕಳು ಚೆನ್ನಾಗಿ ಪುರುಷಾರ್ಥ ಮಾಡಬೇಕು, ನೆನಪಿನ ಯಾತ್ರೆಯಲ್ಲಿ ಇರಬೇಕಾಗಿದೆ. ಬಹಳ ವ್ಯರ್ಥ ಸಂಕಲ್ಪಗಳು ಬರುತ್ತವೆ, ಭಕ್ತಿಮಾರ್ಗದಲ್ಲಿ ತಮ್ಮನ್ನು ಹೊಡೆದುಕೊಳ್ಳುತ್ತಾರೆ. ನಮಗೆ ಶಿವನ ದರ್ಶನವಾಗಬೇಕು ಎಂದು ದರ್ಶನಕ್ಕಾಗಿ ಬಹಳ ಪರಿಶ್ರಮ ಪಡುತ್ತಾರೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ, ತಂದೆಯ ನೆನಪಿನಿಂದ ಪಾಪಗಳು ಕಳೆಯುತ್ತವೆ ಮತ್ತು 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ದರ್ಶನವಾದರೆ ಯಾವುದೇ ಪಾಪವು ಕಳೆಯುವುದಿಲ್ಲ. ಯಾವ ತಂದೆಯು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ನಾವು ಏನಾಗುತ್ತಿದ್ದೇವೆ, ಇನ್ನೊಂದು ಜನ್ಮದಲ್ಲಿ ಹೋಗಿ ಏನಾಗುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಇದು ಸತ್ಯಯುಗದ ರಾಜಕುಮಾರ-ಕುಮಾರಿಯರಾಗುವ ಕಾಲೇಜು ಆಗಿದೆ. ತಂದೆಯು ಬಂದು ಧರ್ಮದ ಜೊತೆಗೆ ದೈವೀ ರಾಜ್ಯವನ್ನೂ ಸ್ಥಾಪನೆ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯು ಮುಕ್ತಿ-ಜೀವನ್ಮುಕ್ತಿಗಾಗಿ ಏನೆಲ್ಲಾ ಜ್ಞಾನದ ಮಾತುಗಳನ್ನು ತಿಳಿಸಿದ್ದಾರೆಯೋ ಅದನ್ನೇ ಕೇಳಬೇಕು ಹಾಗೂ ಧಾರಣೆ ಮಾಡಿಕೊಳ್ಳಬೇಕಾಗಿದೆ. ಉಳಿದೆಲ್ಲವನ್ನೂ ಮರೆಯಬೇಕಾಗಿದೆ. ತನ್ನ ಮತ್ತು ತನ್ನ ಲೌಕಿಕ ಪರಿವಾರದವರ ಕಲ್ಯಾಣ ಮಾಡಬೇಕಾಗಿದೆ.
2. ವ್ಯರ್ಥ ಚಿಂತನೆಯನ್ನು ಸಮಾಪ್ತಿ ಮಾಡಲು ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ನೆನಪಿನ ಯಾತ್ರೆಯಲ್ಲಿ ತೊಡಗಿರಬೇಕಾಗಿದೆ.
ಓಂ ಶಾಂತಿ. ಈ ಗೀತೆಯ ಅರ್ಥವು ಎಷ್ಟು ವಿಚಿತ್ರವಾಗಿದೆ! ಏತಕ್ಕಾಗಿ ಪ್ರೀತಿಯುಂಟಾಗಿದೆ? (ಸಾಯುವುದಕ್ಕಾಗಿ) ಯಾರೊಂದಿಗೆ ಉಂಟಾಗಿದೆ? ಭಗವಂತನೊಂದಿಗೆ. ಏಕೆಂದರೆ ಈ ಪ್ರಪಂಚದಿಂದ ಸತ್ತು ಅವರ ಬಳಿ ಹೋಗಬೇಕಾಗಿದೆ. ಈ ರೀತಿ ಎಂದಾದರೂ ಯಾರ ಜೊತೆಯಾದರೂ ಪ್ರೀತಿಯುಂಟಾಗಿದೆಯೇ? ಯಾವುದರಿಂದ ನಾವು ಮರಣ ಹೊಂದುತ್ತೇವೆ ಎಂಬುದು ವಿಚಾರದಲ್ಲಿ ಬರುತ್ತದೆ! ಯಾರಿಗಾದರೂ ನಾವು ಮರಣ ಹೊಂದುತ್ತೇವೆ ಎಂದು ತಿಳಿದರೆ ಮತ್ತೆ ಪ್ರೀತಿಯನ್ನು ಇಡುವರೆ? ಗೀತೆಯ ಅರ್ಥವು ಎಷ್ಟು ಅದ್ಭುತವಾಗಿದೆ! ಪತಂಗವು ಜ್ಯೋತಿಯೊಂದಿಗೆ ಪ್ರೀತಿಯನ್ನಿಟ್ಟು ಅದನ್ನು ಸುತ್ತಿ-ಸುತ್ತಿ ಸುಟ್ಟು ಹೋಗುತ್ತದೆ. ನೀವೂ ಸಹ ತಂದೆಯ ಬಳಿ ಬರುತ್ತಾ-ಬರುತ್ತಾ ಈ ಶರೀರವನ್ನು ಬಿಡಬೇಕಾಗಿದೆ ಅರ್ಥಾತ್ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಡಬೇಕಾಗಿದೆ. ಇದಂತೂ ಹೇಗೆ ಬಹಳ ದೊಡ್ಡ ಶತ್ರುವಾಗಿದೆ, ಇದರ ಜೊತೆ ನಾವು ಪ್ರೀತಿಯನ್ನು ಇಟ್ಟೆವು ಮತ್ತು ಸತ್ತು ಹೋದೆವು ಆದ್ದರಿಂದ ಮನುಷ್ಯರು ಹೆದರುತ್ತಾರೆ, ದಾನ-ಪುಣ್ಯ, ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ - ಭಗವಂತನ ಬಳಿ ಹೋಗುವುದಕ್ಕಾಗಿ. ಶರೀರ ಬಿಡುವಾಗಲೂ ಭಗವಂತನನ್ನು ನೆನಪು ಮಾಡಿ ಎಂದು ಮನುಷ್ಯರು ಹೇಳುತ್ತಾರೆ. ಭಗವಂತನು ಎಷ್ಟು ಪ್ರಸಿದ್ಧವಾಗಿದ್ದಾರೆ, ಅವರು ಬರುತ್ತಾರೆಂದರೆ ಇಡೀ ಪ್ರಪಂಚವನ್ನು ಸಮಾಪ್ತಿ ಮಾಡಿ ಬಿಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಹಳೆಯ ಪ್ರಪಂಚದಿಂದ ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿಯೇ ಈ ವಿಶ್ವ ವಿದ್ಯಾಲಯಕ್ಕೆ ಬರುತ್ತೇವೆ. ಹಳೆಯ ಪ್ರಪಂಚಕ್ಕೆ ಪತಿತ ಪ್ರಪಂಚ, ನರಕವೆಂದು ಹೇಳಲಾಗುತ್ತದೆ. ತಂದೆಯು ಹೊಸ ಪ್ರಪಂಚದಲ್ಲಿ ಹೋಗುವ ಮಾರ್ಗವನ್ನು ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿರಿ, ನಾನು ಸ್ವರ್ಗದ ರಚಯಿತನಾಗಿದ್ದೇನೆ. ಆ ತಂದೆಯಿಂದ ನಿಮಗೆ ಹಣ, ಅಧಿಕಾರ, ಸಂಪತ್ತು ಎಲ್ಲವೂ ಸಿಗುವುದು. ವಾಸ್ತವದಲ್ಲಿ ಹೆಣ್ಣು ಮಕ್ಕಳಿಗೆ ಆಸ್ತಿಯು ಸಿಗುವಂತಿಲ್ಲ. ಅವರನ್ನು ಇನ್ನೊಂದು ಮನೆಗೆ ಕಳುಹಿಸಿ ಬಿಡುತ್ತಾರೆ ಅಂದರೆ ಅವರು ವಾರಸುಧಾರರು ಆಗುವುದಿಲ್ಲ ಆದರೆ ಈ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಎಲ್ಲರೂ ಇವರ ಬಳಿಯೇ ಬರಬೇಕಾಗಿದೆ, ಶರೀರವನ್ನು ಬಿಡಬೇಕಾಗಿದೆ. ಅವಶ್ಯವಾಗಿ ಯಾವುದೋ ಸಮಯದಲ್ಲಿ ಬರುತ್ತಾರೆ, ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗುತ್ತಾರೆ ಏಕೆಂದರೆ ಹೊಸ ಪ್ರಪಂಚದಲ್ಲಿ ಬಹಳ ಕೆಲವರೇ ಮನುಷ್ಯರು ಇರುತ್ತಾರೆ. ಹಳೆಯ ಪ್ರಪಂಚದಲ್ಲಿ ಅನೇಕರಿದ್ದಾರೆ, ಹೊಸ ಪ್ರಪಂಚದಲ್ಲಿ ಮನುಷ್ಯರೂ ಕಡಿಮೆ ಮತ್ತು ಬಹಳ ಸುಖ ಇರುತ್ತದೆ. ಹಳೆಯ ಪ್ರಪಂಚದಲ್ಲಿ ಹೆಚ್ಚು ಜನಸಂಖ್ಯೆಯಿರುವ ಕಾರಣ ಹೆಚ್ಚು ದುಃಖವೂ ಇದೆ ಆದ್ದರಿಂದಲೇ ಕರೆಯುತ್ತಾ ಇರುತ್ತಾರೆ. ಬಾಪೂಜಿ ಯಾರನ್ನು ಭಾರತದ ಪಿತಾಮಹ ಎಂದು ತಿಳಿಯುತ್ತಿದ್ದರೋ ಅವರೂ ಸಹ ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಿದ್ದರೋ ಅವರೂ ಸಹ ತಂದೆಯನ್ನು ತಿಳಿದುಕೊಂಡಿರಲಿಲ್ಲ. ಪತಿತ-ಪಾವನ ಪರಮಪಿತ ಪರಮಾತ್ಮನಾಗಿದ್ದಾರೆಂದು ತಿಳಿದುಕೊಳ್ಳುತ್ತಾರೆ, ಅವರೇ ವಿಶ್ವದ ಮುಕ್ತಿದಾತನಾಗಿದ್ದಾರೆ. ರಾಮ-ಸೀತೆಯನ್ನು ಇಡೀ ಪ್ರಪಂಚದವರು ಒಪ್ಪುವುದಿಲ್ಲ ಅಲ್ಲವೆ! ಇದು ತಪ್ಪಾಗಿದೆ. ಇಡೀ ಪ್ರಪಂಚವು ಪರಮಪಿತ ಪರಮಾತ್ಮನನ್ನೇ ಮುಕ್ತಿದಾತ, ಮಾರ್ಗದರ್ಶಕನೆಂದು ಒಪ್ಪುತ್ತದೆ. ತಂದೆಯೇ ದುಃಖದಿಂದ ಬಿಡಿಸುತ್ತಾರೆ ಅಂದಮೇಲೆ ದುಃಖವನ್ನು ಕೊಡುವವರು ಯಾರು? ತಂದೆಯಂತೂ ದುಃಖವನ್ನು ಕೊಡಲು ಸಾಧ್ಯವಿಲ್ಲ ಏಕೆಂದರೆ ಅವರು ಪತಿತ-ಪಾವನನಾಗಿದ್ದಾರೆ. ಪಾವನ ಪ್ರಪಂಚ, ಸುಖಧಾಮದಲ್ಲಿ ಕರೆದುಕೊಂಡು ಹೋಗುವವರಾಗಿದ್ದಾರೆ, ನೀವು ಆ ಆತ್ಮಿಕ ತಂದೆಯ ಆತ್ಮಿಕ ಮಕ್ಕಳಾಗಿದ್ದೀರಿ. ಎಂತಹ ತಂದೆಯೋ ಅಂತಹ ಮಕ್ಕಳು. ಲೌಕಿಕ ತಂದೆಗೆ ಲೌಕಿಕ ಮಕ್ಕಳಿರುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಳ್ಳಬೇಕಾಗಿದೆ - ನಾವು ಆತ್ಮರಾಗಿದ್ದೇವೆ, ಪರಮಪಿತ ಪರಮಾತ್ಮನು ನಮಗೆ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನಾವು ವಿದ್ಯಾರ್ಥಿಗಳಾಗಿದ್ದೇವೆ, ಇದನ್ನು ಮರೆಯಬಾರದು. ಮಕ್ಕಳ ಬುದ್ಧಿಯಲ್ಲಿರುತ್ತದೆ, ಶಿವ ತಂದೆಯು ಮಧುಬನದಲ್ಲಿ ಮುರುಳಿಯನ್ನು ನುಡಿಸುತ್ತಾರೆ, ಆ ಕಟ್ಟಿಗೆಯ ಮುರುಳಿಯಂತೂ ಇಲ್ಲಿ ಇಲ್ಲ. ಕೃಷ್ಣನು ನೃತ್ಯ ಮಾಡುವುದು, ಮುರುಳಿಯನ್ನು ಊದುವುದು ಭಕ್ತಿಮಾರ್ಗದ್ದಾಗಿದೆ. ನೀವು ಕೃಷ್ಣನ ಮುರುಳಿ ಎಂದು ಹೇಳುವುದಿಲ್ಲ, ಶಿವ ತಂದೆಯು ಮುರುಳಿಯನ್ನು ನುಡಿಸುತ್ತಾರೆ. ನಿಮ್ಮ ಬಳಿ ಒಳ್ಳೊಳ್ಳೆಯ ಗೀತೆಗಳನ್ನು ಹಾಡುವವರು ಬರುತ್ತಾರೆ, ಬಹುತೇಕವಾಗಿ ಪುರುಷರೇ ಹಾಡುತ್ತಾರೆ. ನೀವು ಯಾವುದೇ ಭಕ್ತಿಮಾರ್ಗದ ಹಾಡನ್ನು ಹಾಡುವುದಲ್ಲ, ನೀವು ಒಬ್ಬ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ಶಿವನಿಗೆ ಬಿಂದುವೆಂದು ಹೇಳುತ್ತಾರೆ. ವ್ಯಾಪಾರಿಗಳು ಬಿಂದುವನ್ನು (0) ಬರೆಯುವಾಗ ಶಿವ ಎಂದು ಹೇಳುತ್ತಾರೆ. ಒಂದು ಬಿಂದು (0) ವನ್ನಿಟ್ಟರೆ 10 ಆಗುವುದು ಮತ್ತೆ ಇನ್ನೊಂದು ಬಿಂದುವನ್ನಿಟ್ಟರೆ 100...... ನೀವೂ ಸಹ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಶಿವ ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಅರ್ಧ ಕಲ್ಪಕ್ಕಾಗಿ ಬಹಳ ಸಾಹುಕಾರರು ಆಗುತ್ತೀರಿ. ಅಲ್ಲಿ ಬಡವರಿರುವುದೇ ಇಲ್ಲ, ಎಲ್ಲರೂ ಸುಖಿಯಾಗಿರುತ್ತಾರೆ. ದುಃಖದ ಹೆಸರು ಇರುವುದಿಲ್ಲ. ತಂದೆಯ ನೆನಪಿನಿಂದ ವಿಕರ್ಮಗಳು ವಿನಾಶವಾಗುತ್ತವೆ. ನೀವು ಬಹಳ ಧನವಂತರಾಗುತ್ತೀರಿ, ಇದಕ್ಕೆ ಸತ್ಯ ತಂದೆಯ ಮೂಲಕ ಸತ್ಯ ಸಂಪಾದನೆಯೆಂದು ಹೇಳಲಾಗುತ್ತದೆ. ಇದೇ ಜೊತೆ ಬರುತ್ತದೆ. ಮನುಷ್ಯರೆಲ್ಲರೂ ಖಾಲಿ ಕೈಯಲ್ಲಿ ಹೋಗುತ್ತಾರೆ, ನೀವು ತುಂಬಿದ ಕೈಯಲ್ಲಿ ಹೋಗುತ್ತಾರೆ. ತಂದೆಯನ್ನು ನೆನಪು ಮಾಡಬೇಕು ಮತ್ತು ಪವಿತ್ರರಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಪವಿತ್ರತೆಯಿದ್ದರೆ ಸುಖ-ಶಾಂತಿ ಸಿಗುವುದು, ಮೊದಲು ನೀವಾತ್ಮರು ಪವಿತ್ರರಾಗಿದ್ದಿರಿ ನಂತರ ಅಪವಿತ್ರರಾಗುತ್ತೀರಿ. ಸನ್ಯಾಸಿಗಳಿಗೂ ಸಹ ಅರ್ಧ ಪವಿತ್ರರೆಂದು ಹೇಳುತ್ತಾರೆ. ನಿಮ್ಮದು ಪೂರ್ಣ ಸನ್ಯಾಸವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಅವರು ಸುಖವನ್ನು ಪಡೆಯುತ್ತಾರೆ ಎಂದು. ಸ್ವಲ್ಪ ಸುಖವಿರುತ್ತದೆ ಮತ್ತೆ ದುಃಖವೇ ದುಃಖ ಸಿಗುತ್ತದೆ. ಅದೆಲ್ಲವೂ ಭಕ್ತಿಮಾರ್ಗವಾಗಿದೆ. ಭಕ್ತಿಮಾರ್ಗದಲ್ಲಿ ಹನುಮಂತನ ಪೂಜೆ ಮಾಡಿದರೆ ಹನುಮಂತನ ಸಾಕ್ಷಾತ್ಕಾರ ಆಗಿ ಬಿಡುತ್ತದೆ. ಚಂಡಿಕಾ ದೇವಿಯದು ಎಷ್ಟೊಂದು ಮೇಳವಾಗುತ್ತದೆ! ಅವರದು ಚಿತ್ರವೂ ಇರುತ್ತದೆ. ಅವರ ಧ್ಯಾನ ಮಾಡಿದರೆ ಅವರಂತೂ ಸನ್ಮುಖದಲ್ಲಿ ಬಂದೇ ಬರುತ್ತಾರೆ ಆದರೆ ಅದರಿಂದ ಏನು ಸಿಗುವುದು? ಅನೇಕ ಪ್ರಕಾರದ ಮೇಳಗಳಾಗುತ್ತವೆ ಏಕೆಂದರೆ ಸಂಪಾದನೆಯಂತೂ ಆಗುತ್ತದೆಯಲ್ಲವೆ. ಇದೆಲ್ಲವೂ ಅವರ ವ್ಯಾಪಾರವಾಗಿದೆ, ನರನಿಂದ ನಾರಾಯಣನನ್ನಾಗಿ ಮಾಡುವ ವ್ಯಾಪಾರವನ್ನು ಬಿಟ್ಟರೆ ಮತ್ತೆಲ್ಲಾ ವ್ಯಾಪಾರಗಳಲ್ಲಿ ನಷ್ಟವೇ ಇದೆ ಎಂದು ಹೇಳಲಾಗುತ್ತದೆ. ಈ ವ್ಯಾಪಾರವನ್ನು ಕೆಲವರೇ ವಿರಳ ಮಾಡುತ್ತಾರೆ. ತಂದೆಯ ಮಕ್ಕಳಾಗಿ ಎಲ್ಲವನ್ನೂ ದೇಹ ಸಹಿತವಾಗಿ ತಂದೆಗೆ ಕೊಟ್ಟು ಬಿಡಬೇಕು ಏಕೆಂದರೆ ನೀವು ತಿಳಿದುಕೊಂಡಿದ್ದೀರಿ - ನಮಗೆ ಹೊಸ ಶರೀರ ಬೇಕು. ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ಕೃಷ್ಣ ಪುರಿಯಲ್ಲಿ ಹೋಗಬಲ್ಲಿರಿ ಆದರೆ ಆತ್ಮವು ತಮೋಪ್ರಧಾನದಿಂದ ಸತೋಪ್ರಧಾನವಾದಾಗ ಮಾತ್ರ. ನಮ್ಮನ್ನು ಪಾವನರನ್ನಾಗಿ ಮಾಡಿ ಎಂದು ಕೃಷ್ಣ ಪುರಿಯಲ್ಲಿ ಯಾರೂ ಕರೆಯುವುದಿಲ್ಲ, ಇಲ್ಲಿ ಎಲ್ಲಾ ಮನುಷ್ಯ ಮಾತ್ರರು ಹೇ ಮುಕ್ತಿದಾತ ಬನ್ನಿ, ಈ ಪಾಪಾತ್ಮರ ಪ್ರಪಂಚದಿಂದ ನಮ್ಮನ್ನು ಮುಕ್ತಗೊಳಿಸಿ ಎಂದು ಕರೆಯುತ್ತಾರೆ. ಆ ತಂದೆಯು ನಮ್ಮನ್ನು ತಮ್ಮ ಜೊತೆ ಕರೆದುಕೊಂಡು ಹೋಗಲು ಬಂದಿದ್ದಾರೆಂದು ನೀವೀಗ ತಿಳಿದುಕೊಂಡಿದ್ದೀರಿ, ಅಲ್ಲಿಗೆ ಹೋಗುವುದಂತೂ ಒಳ್ಳೆಯದೇ ಅಲ್ಲವೆ. ಮನುಷ್ಯರು ಶಾಂತಿಯನ್ನು ಬಯಸುತ್ತಾರೆ ಆದರೆ ಯಾವುದಕ್ಕೆ ಶಾಂತಿ ಎಂದು ಹೇಳುತ್ತಾರೆ ಅವರಿಗೆ ತಿಳಿದೇ ಇಲ್ಲ. ಯಾವುದೇ ಕರ್ಮ ಅರ್ಥಾತ್ ಕಾರ್ಯ ಮಾಡದೇ ಇರಲು ಸಾಧ್ಯವೇ ಇಲ್ಲ. ಸಂಪೂರ್ಣ ಶಾಂತಿಯು ಶಾಂತಿಧಾಮದಲ್ಲಿರುತ್ತದೆ. ಈ ಶರೀರವನ್ನು ತೆಗೆದುಕೊಂಡು ಕರ್ಮವನ್ನು ಮಾಡಲೇಬೇಕಾಗಿದೆ. ಸತ್ಯಯುಗದಲ್ಲಿ ಕರ್ಮ ಮಾಡುತ್ತಲೂ ಶಾಂತವಾಗಿರುತ್ತಾರೆ. ಮನುಷ್ಯರಿಗೆ ಅಶಾಂತಿಯಲ್ಲಿ ದುಃಖವಾಗುತ್ತದೆ ಆದ್ದರಿಂದ ಶಾಂತಿಯು ಹೇಗೆ ಸಿಗುವುದು ಎಂದು ಕೇಳುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ, ಶಾಂತಿಧಾಮವು ನಮ್ಮ ಮನೆಯಾಗಿದೆ. ಸತ್ಯಯುಗದಲ್ಲಿ ಸುಖ-ಶಾಂತಿ ಎಲ್ಲವೂ ಇರುತ್ತದೆ ಅಂದಮೇಲೆ ಈಗ ಅದು ಬೇಕೋ ಅಥವಾ ಕೇವಲ ಶಾಂತಿ ಬೇಕೋ? ಇಲ್ಲಂತೂ ದುಃಖವಿದೆ ಆದ್ದರಿಂದ ಪತಿತ-ಪಾವನ ತಂದೆಯನ್ನೂ ಇಲ್ಲಿಯೇ ಕರೆಯುತ್ತಾರೆ. ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿಯೇ ಭಕ್ತಿ ಮಾಡುತ್ತಾರೆ. ಭಕ್ತಿಯೂ ಸಹ ಮೊದಲು ಅವ್ಯಭಿಚಾರಿಯಾಗಿರುತ್ತದೆ ನಂತರ ವ್ಯಭಿಚಾರಿಯಾಗುತ್ತದೆ. ವ್ಯಭಿಚಾರಿ ಭಕ್ತಿಯಲ್ಲಿ ನೋಡಿ ಏನೇನು ಮಾಡುತ್ತಾರೆ? ಏಣಿಯಲ್ಲಿ ಎಷ್ಟು ಚೆನ್ನಾಗಿ ತೋರಿಸಿದ್ದಾರೆ ಆದರೆ ಮೊಟ್ಟ ಮೊದಲು ಸಿದ್ಧ ಮಾಡಬೇಕು - ಭಗವಂತ ಯಾರು? ಶ್ರೀಕೃಷ್ಣನನ್ನು ಈ ರೀತಿ ಮಾಡಿದವರು ಯಾರು? ಹಿಂದಿನ ಜನ್ಮದಲ್ಲಿ ಇವರು ಏನಾಗಿದ್ದರು? ತಿಳಿಸುವುದಕ್ಕಾಗಿಯೂ ಬಹಳ ಯುಕ್ತಿ ಬೇಕು. ಯಾರು ಚೆನ್ನಾಗಿ ಸರ್ವೀಸ್ ಮಾಡುವರೋ ಅವರ ಹೃದಯವೂ ಸಾಕ್ಷಿ ನೀಡುತ್ತದೆ, ಯುನಿವರ್ಸಿಟಿಯಲ್ಲಿ ಯಾರು ಚೆನ್ನಾಗಿ ಓದುವರೋ ಅವರು ಅವಶ್ಯವಾಗಿ ಮುಂದೆ ಹೋಗುತ್ತಾರೆ. ನಂಬರ್ವಾರ್ ಇದ್ದೇ ಇರುತ್ತಾರೆ. ಕೆಲವರು ಮಂಧ ಬುದ್ಧಿಯವರೂ ಇರುತ್ತಾರೆ. ನನ್ನ ಬುದ್ಧಿಯ ಬೀಗವನ್ನು ತೆರೆಯಿರಿ ಎಂದು ಆತ್ಮವು ಶಿವ ತಂದೆಗೆ ಹೇಳುತ್ತದೆ. ತಂದೆಯು ಹೇಳುತ್ತಾರೆ - ಬುದ್ಧಿಯ ಬೀಗವನ್ನು ತೆರೆಯುವುದಕ್ಕಾಗಿಯೇ ಬಂದಿದ್ದೇನೆ ಆದರೆ ನಿಮ್ಮ ಕರ್ಮವೇ ಆ ರೀತಿಯಿದೆ, ಎಷ್ಟು ತೆಗೆದರೂ ಬೀಗವು ತೆರೆಯುವುದೇ ಇಲ್ಲ ಅಂದಮೇಲೆ ತಂದೆಯೇನು ಮಾಡುವರು! ಬಹಳ ಪಾಪಗಳನ್ನು ಮಾಡಿದ್ದಾರೆ ಅಂದಮೇಲೆ ಅಂತಹವರಿಗೆ ತಂದೆಯೇನು ಮಾಡುವರು! ನಾವು ಕಡಿಮೆ ಓದುತ್ತೇವೆಂದು ಶಿಕ್ಷಕರಿಗೆ ಹೇಳಿದರೆ ಶಿಕ್ಷಕರು ಏನು ಮಾಡುವರು? ಶಿಕ್ಷಕರು ಯಾವುದೇ ಕೃಪೆ ತೋರುವುದಿಲ್ಲ. ಭಲೆ ಅಧಿಕ ಸಮಯವನ್ನು ಕೊಡುತ್ತಾರೆ. ಅದನ್ನು ನಿಮಗೆ ನಿರಾಕರಿಸುವುದಿಲ್ಲ. ಪ್ರದರ್ಶನಿಯು ಖಾಲಿಯಾಗಿರುತ್ತದೆ, ಅಲ್ಲಿ ಕುಳಿತು ಅಭ್ಯಾಸ ಮಾಡಿರಿ. ಭಕ್ತಿಮಾರ್ಗದಲ್ಲಂತೂ ಕೆಲವರು ಮಾಲೆಯನ್ನು ಜಪಿಸಿ ಎಂದು ಹೇಳುತ್ತಾರೆ, ಇನ್ನೂ ಕೆಲವರು ಈ ಮಂತ್ರವನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಇಲ್ಲಂತೂ ತಂದೆಯು ತಮ್ಮ ಪರಿಚಯವನ್ನು ಕೊಡುತ್ತಾರೆ. ತಂದೆಯನ್ನೇ ನೆನಪು ಮಾಡಬೇಕಾಗಿದೆ, ಅವರಿಂದ ಆಸ್ತಿ ಸಿಗುತ್ತದೆ. ಸತ್ಯಯುಗದಲ್ಲಿ ಪಾರಲೌಕಿಕ ತಂದೆಯ ಆಸ್ತಿಯು ಪ್ರಾಪ್ತಿಯಾದ ಮೇಲೆ ಅವರನ್ನು ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. 21 ಜನ್ಮಗಳಿಗಾಗಿ ಆಸ್ತಿ ಸಿಗುತ್ತದೆ ಅಂದಮೇಲೆ ತಂದೆಯಿಂದ ಚೆನ್ನಾಗಿ ಆಸ್ತಿಯನ್ನು ತೆಗೆದುಕೊಳ್ಳಬೇಕಲ್ಲವೆ. ಇದರಲ್ಲಿಯೂ ತಂದೆಯು ಹೇಳುತ್ತಾರೆ - ವಿಕಾರದಲ್ಲಿ ಎಂದೂ ಹೋಗಬಾರದು, ವಿಕಾರದ ಸ್ವಲ್ಪ ರುಚಿ ಸಿಕ್ಕಿದರೂ ಅದು ವೃದ್ಧಿಯಾಗಿ ಬಿಡುವುದು. ಹೇಗೆ ಸಿಗರೇಟ್ ಸೇದುವ ರುಚಿಯು ಒಂದು ಬಾರಿ ಹತ್ತಿದರೆ ಸಾಕು ಸಂಗದ ರಂಗು ಬಹಳ ಬೇಗನೆ ನಾಟುತ್ತದೆ ಮತ್ತೆ ಆ ಹವ್ಯಾಸವನ್ನು ಬಿಡುವುದೇ ಕಷ್ಟವಾಗುತ್ತದೆ. ಎಷ್ಟೊಂದು ನೆಪ ಹೇಳುತ್ತಾರೆ ಆದ್ದರಿಂದ ಯಾವುದೇ ಹವ್ಯಾಸ ಮಾಡಿಕೊಳ್ಳಬಾರದು, ಕೆಟ್ಟ ಚಟಗಳನ್ನು ಬಿಡಬೇಕಾಗಿದೆ. ತಂದೆಯು ತಿಳಿಸುತ್ತಾರೆ- ಜೀವಿಸಿದ್ದಂತೆಯೇ ದೇಹಭಾನವನ್ನು ಕಳೆಯಿರಿ, ನನ್ನನ್ನು ನೆನಪು ಮಾಡಿರಿ. ದೇವತೆಗಳಿಗೆ ಸದಾ ಪವಿತ್ರ ಆಹಾರವನ್ನೇ ನೈವೇದ್ಯವನ್ನು ಇಡಲಾಗುತ್ತದೆ ಅಂದಮೇಲೆ ನೀವೂ ಸಹ ಪವಿತ್ರ ಭೋಜನವನ್ನು ಸೇವಿಸಿರಿ.
ಈಗ ನೀವು ಮಕ್ಕಳು ಹೂವಿನಂತೆ ಹರ್ಷಿತವಾಗಿರಬೇಕು. ಕನ್ಯೆಗೆ ಪತಿ ಸಿಕ್ಕಿದಾಗ ಮುಖವು ಅರಳುತ್ತದೆಯಲ್ಲವೆ. ಒಳ್ಳೆಯ ಆಭರಣಗಳು, ವಸ್ತ್ರಗಳು ಇತ್ಯಾದಿಯನ್ನು ಧರಿಸುತ್ತಾಳೆಂದರೆ ಮಿಂಚುತ್ತಾಳೆ. ಈಗ ನೀವಂತೂ ಜ್ಞಾನ ರತ್ನಗಳನ್ನು ಧರಿಸುತ್ತೀರಿ, ಸ್ವರ್ಗದಲ್ಲಂತೂ ಸ್ವಾಭಾವಿಕ ಸೌಂದರ್ಯವಿರುತ್ತದೆ. ಕೃಷ್ಣನ ಹೆಸರೇ ಆಗಿದೆ, ಸುಂದರ. ರಾಜಾ-ರಾಣಿ, ರಾಜಕುಮಾರ-ರಾಜಕುಮಾರಿ ಎಲ್ಲರೂ ಸುಂದರರಾಗಿರುತ್ತಾರೆ. ಅಲ್ಲಿ ಪ್ರಕೃತಿಯೂ ಸತೋಪ್ರಧಾನವಾಗಿ ಬಿಡುತ್ತದೆ. ಲಕ್ಷ್ಮೀ-ನಾರಾಯಣರಂತಹ ಸ್ವಾಭಾವಿಕ ಸೌಂದರ್ಯವಂತರನ್ನಾಗಿ ಇಲ್ಲಿ ಯಾರೂ ಮಾಡಲು ಸಾಧ್ಯವಿಲ್ಲ. ಅವರನ್ನು ಯಾರಾದರೂ ಈ ಕಣ್ಣುಗಳಿಂದ ನೋಡಲು ಸಾಧ್ಯವೇ? ಹಾ! ಸಾಕ್ಷಾತ್ಕಾರವಾಗುತ್ತದೆ ಆದರೆ ಸಾಕ್ಷಾತ್ಕಾರದಿಂದ ಅದೇ ತರಹದ ಚಿತ್ರವನ್ನು ಯಾರೂ ಬರೆಯಲು ಸಾಧ್ಯವಿಲ್ಲ. ಹಾ! ಯಾವುದೇ ಕಲಾಕಾರನಿಗೆ ಸಾಕ್ಷಾತ್ಕಾರವಾಗಿ ಮತ್ತೆ ಅದೇ ಸಮಯದಲ್ಲಿ ಕುಳಿತು ಚಿತ್ರವನ್ನು ಬಿಡಿಸಬಹುದು ಆದರೂ ಕಷ್ಟವಾಗುತ್ತದೆ ಅಂದಾಗ ನೀವು ಮಕ್ಕಳಿಗೆ ಬಹಳ ನಶೆಯಿರಬೇಕು - ಈಗ ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ, ತಂದೆಯಿಂದ ನಮಗೆ ಸ್ವರ್ಗದ ಆಸ್ತಿಯು ಸಿಗುತ್ತದೆ. ಈ ನಮ್ಮ 84 ಜನ್ಮಗಳು ಪೂರ್ಣವಾಯಿತು, ಇಂತಹ ವಿಚಾರಗಳು ಬುದ್ಧಿಯಲ್ಲಿದ್ದಾಗ ಖುಷಿಯಿರುವುದು. ವಿಕಾರದ ಸಂಕಲ್ಪವೂ ಬರಬಾರದು. ತಂದೆಯು ತಿಳಿಸುತ್ತಾರೆ - ಕಾಮ ಮಹಾಶತ್ರುವಾಗಿದೆ ಆದ್ದರಿಂದ ದ್ರೌಪದಿಯೂ ಕರೆದಳಲ್ಲವೆ.
ತಂದೆಯು ತಿಳಿಸುತ್ತಾರೆ - ನೀವು ನನ್ನೊಬ್ಬನಿಂದಲೇ ಕೇಳಿರಿ, ಮತ್ತು ಇದೇ ಶ್ರೀಮತವನ್ನು ಅನ್ಯರಿಗೆ ತಿಳಿಸಿರಿ. ತಂದೆಯು ಮಕ್ಕಳನ್ನು ಪ್ರತ್ಯಕ್ಷ ಮಾಡುವರು. ಮಕ್ಕಳು ತಂದೆಯನ್ನು ಪ್ರತ್ಯಕ್ಷ ಮಾಡುವರು. ತಂದೆ ಯಾರು? ಶಿವ ತಂದೆ. ಶಿವ ಮತ್ತು ಸಾಲಿಗ್ರಾಮಗಳ ಗಾಯನವಿದೆ. ಶಿವ ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಅನುಸರಿಸಿರಿ. ಫಾಲೋ ಫಾದರ್. ಈ ಗಾಯನವು ಅವರದೇ ಆಗಿದೆ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನನ್ನನ್ನು ಫಾಲೋ ಮಾಡಿ, ಪವಿತ್ರರಾಗಿರಿ. ಫಾಲೋ ಮಾಡುವುದರಿಂದಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಲೌಕಿಕ ತಂದೆಯನ್ನು ಫಾಲೋ ಮಾಡುವುದರಿಂದ 63 ಜನ್ಮಗಳಿಂದ ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಈಗ ಪಾರಲೌಕಿಕ ತಂದೆಯನ್ನು ಫಾಲೋ ಮಾಡಿ ಮೇಲೇರಬೇಕಾಗಿದೆ, ತಂದೆಯ ಜೊತೆ ಹೋಗಬೇಕಾಗಿದೆ. ಒಂದೊಂದು ರತ್ನವೂ ಲಕ್ಷಾಂತರ ರೂಪಾಯಿಗಳು ಬೆಲೆ ಬಾಳುವಂತದ್ದಾಗಿದೆ. ತಂದೆಯು ನಿತ್ಯವೂ ತಿಳಿಸುತ್ತಾ ಇರುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಮೊಟ್ಟ ಮೊದಲು ಎಲ್ಲರಿಗೆ ಇಬ್ಬರು ತಂದೆಯರ ಪರಿಚಯ ಕೊಡಬೇಕಾಗಿದೆ. ಲೌಕಿಕ ತಂದೆಯು ಪತಿತರಾಗುವ ಆಸ್ತಿಯನ್ನು ಕೊಡುತ್ತಾರೆ, ಪಾರಲೌಕಿಕ ತಂದೆಯು ಪಾವನರಾಗುವ ಆಸ್ತಿಯನ್ನು ಕೊಡುತ್ತಾರೆ. ಎಷ್ಟೊಂದು ಅಂತರವಿದೆ! ಈಗ ಪಾರಲೌಕಿಕ ತಂದೆಯು ಹೇಳುತ್ತಾರೆ - ಮಕ್ಕಳೇ, ಪಾವನರಾಗಿರಿ. ವಿಕಾರದಲ್ಲಿ ಹೋಗುವವರಿಗೆ ಪತಿತರೆಂದು ಹೇಳಲಾಗುತ್ತದೆ.
ನಿಮ್ಮದು ಪತಿತರಿಂದ ಪಾವನರನ್ನಾಗಿ ಮಾಡುವ, ಮಾರ್ಗ ತಿಳಿಸುವ ಸಂಸ್ಥೆಯಾಗಿದೆ. ಪಾರಲೌಕಿಕ ತಂದೆಯು ಈಗ ತಿಳಿಸುತ್ತಾರೆ - ಪಾವನರಾಗಿ, ಈಗ ವಿನಾಶವು ಸನ್ಮುಖದಲ್ಲಿ ನಿಂತಿದೆ ಅಂದಮೇಲೆ ಈಗ ಏನು ಮಾಡಬೇಕು? ಅವಶ್ಯವಾಗಿ ಪಾರಲೌಕಿಕ ತಂದೆಯ ಮತದಂತೆ ನಡೆಯಬೇಕಲ್ಲವೆ. ಪ್ರದರ್ಶನಿಯಲ್ಲಿ ಈ ಪ್ರತಿಜ್ಞೆಯನ್ನೂ ಬರೆಸಿಕೊಳ್ಳಬೇಕು - ಪಾರಲೌಕಿಕ ತಂದೆಯನ್ನು ಫಾಲೋ ಮಾಡುತ್ತೀರಾ? ಪತಿತರಾಗುವುದನ್ನು ಬಿಡುತ್ತೀರಾ? ಹಾಗಾದರೆ ಬರೆಯಿರಿ. ತಂದೆಯೇ ಗ್ಯಾರಂಟಿ ತೆಗೆದುಕೊಳ್ಳುತ್ತಾರೆ, ನೀವೂ ಸಹ ಗ್ಯಾರಂಟಿಯನ್ನು ತೆಗೆದುಕೊಳ್ಳಬಹುದು. ನೀವು ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ ಅಂದಮೇಲೆ ಪತಿತರಾಗುವುದಾದರೂ ಏಕೆ? ಎಲ್ಲವೂ ಪವಿತ್ರತೆಯ ಮೇಲಿದೆ. ನೀವು ಮಕ್ಕಳಿಗೆ ದಿನ-ಪ್ರತಿದಿನ ಖುಷಿಯಿರಬೇಕು - ನಮಗೆ ತಂದೆಯು ಸ್ವರ್ಗದ ಆಸ್ತಿಯನ್ನು ಕೊಡುತ್ತಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಕೆಟ್ಟ ಹವ್ಯಾಸಗಳನ್ನು ಮಾಡಿಕೊಳ್ಳಬಾರದು. ಜೀವಿಸಿದ್ದಂತೆಯೇ ದೇಹಭಾನವನ್ನು ಕಳೆಯಬೇಕಾಗಿದೆ. ಹೂವಿನಂತೆ ಹರ್ಷಿತರಾಗಿರಬೇಕಾಗಿದೆ.
2. ಪಾರಲೌಕಿಕ ತಂದೆಯನ್ನು ಫಾಲೋ ಮಾಡಿ ಪಾವನರಾಗಬೇಕು. ಅವರ ಶ್ರೀಮತದಂತೆ ನಡೆಯುವ ಪ್ರತಿಜ್ಞೆ ಮಾಡಬೇಕು ಮತ್ತು ಮಾಡಿಸಬೇಕಾಗಿದೆ.
ಓಂ ಶಾಂತಿ. ಗೀತೆ, ಕವಿತೆ, ಭಜನೆ, ವೇದ-ಶಾಸ್ತ್ರ, ಉಪನಿಷತ್ತು ದೇವತೆಗಳ ಮಹಿಮೆ ಇತ್ಯಾದಿಗಳನ್ನು ನೀವು ಭಾರತವಾಸಿ ಮಕ್ಕಳು ಬಹಳಷ್ಟು ಕೇಳುತ್ತಾ ಬಂದಿರಿ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ - ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂದು. ಭೂತಕಾಲವನ್ನೂ ಮಕ್ಕಳೂ ತಿಳಿದುಕೊಂಡಿದ್ದೀರಿ, ವರ್ತಮಾನ ಪ್ರಪಂಚವು ಏನಾಗಿದೆ ಎಂಬುದನ್ನೂ ನೋಡಿದ್ದೀರಿ. ಅದನ್ನು ಪ್ರತ್ಯಕ್ಷದಲ್ಲಿ ಅನುಭವ ಮಾಡಿದ್ದೀರಿ ಬಾಕಿ ಏನಾಗುವುದಿದೆಯೋ ಅದನ್ನೂ ಇನ್ನೂ ಪ್ರತ್ಯಕ್ಷದಲ್ಲಿ ಅನುಭವ ಮಾಡಿಲ್ಲ. ಕಳೆದು ಹೋಗಿರುವುದನ್ನು ಅನುಭವ ಮಾಡಿದ್ದೀರಿ. ತಂದೆಯೇ ತಿಳಿಸಿದ್ದಾರೆ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಅನೇಕ ಮನುಷ್ಯರಿದ್ದಾರೆ ಆದರೆ ಅವರು ಏನನ್ನೂ ತಿಳಿದುಕೊಂಡಿಲ್ಲ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿಲ್ಲ. ಈಗ ಕಲಿಯುಗದ ಅಂತ್ಯವಾಗಿದೆ, ಇದೂ ಸಹ ಮನುಷ್ಯರಿಗೆ ಗೊತ್ತಿಲ್ಲ. ಹಾ! ಮುಂದೆ ಹೋಂದತೆ ಅಂತ್ಯವನ್ನು ತಿಳಿದುಕೊಳ್ಳುತ್ತಾರೆ, ಮೂಲವನ್ನು ಅರಿತುಕೊಳ್ಳುತ್ತಾರೆ, ಇಡೀ ಜ್ಞಾನವನ್ನು ಅರಿತುಕೊಳ್ಳುವುದಿಲ್ಲ, ಓದುವಂತಹ ವಿದ್ಯಾರ್ಥಿಗಳೇ ಅರಿತುಕೊಳ್ಳುವರು. ಇದು ಮನುಷ್ಯರಿಂದ ರಾಜಾಧಿರಾಜರಾಗುವುದಾಗಿದೆ. ಅದರಲ್ಲಿಯೂ ಆಸುರೀ ರಾಜರಲ್ಲ, ದೈವೀ ರಾಜರು. ದೈವೀ ರಾಜರನ್ನು ಆಸುರೀ ರಾಜರೂ ಸಹ ಪೂಜಿಸುತ್ತಾರೆ, ಇವೆಲ್ಲಾ ಮಾತುಗಳನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ, ವಿದ್ವಾಂಸ, ಆಚಾರ್ಯ ಮೊದಲಾದವರು ಏನನ್ನೂ ತಿಳಿದುಕೊಂಡಿಲ್ಲ. ಯಾವ ಭಗವಂತನನ್ನು ಪರಂಜ್ಯೋತಿಯೆಂದು ಕರೆಯುವರೋ ಅವರನ್ನೇ ತಿಳಿದುಕೊಂಡಿಲ್ಲ. ಹಾಡುಗಳನ್ನು ಹಾಡುವವರೂ ಸಹ ತಿಳಿದುಕೊಳ್ಳುವುದಿಲ್ಲ. ಕೇವಲ ಮಹಿಮೆಯನ್ನು ಹಾಡುತ್ತಾರೆ, ಭಗವಂತನೂ ಸಹ ಯಾವುದೇ ಸಮಯದಲ್ಲಿ ಈ ಪ್ರಪಂಚದ ಸಭೆಯಲ್ಲಿ ಬಂದಿದ್ದರು. ಸಭೆ ಅರ್ಥಾತ್ ಎಲ್ಲಿ ಅನೇಕರು ಸೇರುವರು. ಸಭೆಯಲ್ಲಿ ತಿನ್ನುವುದು, ಕುಡಿಯುವುದು, ಮಧ್ಯಪಾನ ಇತ್ಯಾದಿಗಳು ಸಿಗುತ್ತದೆ. ಈಗ ಈ ಸಭೆಯಲ್ಲಿ ನಿಮಗೆ ತಂದೆಯಿಂದ ಅವಿನಾಶಿ ಜ್ಞಾನ ರತ್ನಗಳ ಖಜಾನೆ ಸಿಗುತ್ತಿದೆ ಅಥವಾ ತಂದೆಯಿಂದ ನಮಗೆ ವೈಕುಂಠದ ರಾಜ್ಯಭಾಗ್ಯ ಸಿಗುತ್ತದೆ. ಇಡೀ ಸಭೆಯಲ್ಲಿ ಮಕ್ಕಳೇ ತಂದೆಯನ್ನು ಅರಿತುಕೊಳ್ಳುತ್ತಾರೆ - ತಂದೆಯೇ ನಮಗೆ ಉಡುಗೊರೆಯನ್ನು ಕೊಡಲು ಬಂದಿದ್ದಾರೆ. ತಂದೆಯು ಸಭೆಯಲ್ಲಿ ಏನನ್ನು ಕೊಡುತ್ತಾರೆ ಮತ್ತು ಮನುಷ್ಯರ ಸಭೆಯಲ್ಲಿ ಒಬ್ಬರು ಇನ್ನೊಬ್ಬರಿಗೆ ಏನನ್ನು ಕೊಡುತ್ತಾರೆ? ಇದರಲ್ಲಿ ರಾತ್ರಿ-ಹಗಲಿನ ಅಂತರವಿದೆ. ತಂದೆಯು ಹೇಗೆ ಹಲ್ವ ತಿನ್ನಿಸುತ್ತಾರೆ ಮತ್ತು ಮನುಷ್ಯರು ಬಹಳ ಅಗ್ಗವಾದ ವಸ್ತು ಕಡಲೆಯನ್ನು ತಿನ್ನಿಸುತ್ತಾರೆ. ಹಲ್ವ ಮತ್ತು ಕಡಲೆ ಎರಡರಲ್ಲಿ ಎಷ್ಟೊಂದು ವ್ಯತ್ಯಾಸವಿದೆ. ಒಬ್ಬರು ಇನ್ನೊಬ್ಬರಿಗೆ ಕಡಲೆ ತಿನ್ನಿಸುತ್ತಾ ಇರುತ್ತಾರೆ. ಯಾರಾದರೂ ಸಂಪಾದಿಸುವುದಿಲ್ಲವೆಂದರೆ ಇವರು ಕುಳಿತು ಕಡಲೆ ತಿನ್ನುತ್ತಿದ್ದಾರೆಂದು ಹೇಳಲಾಗುತ್ತದೆ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಬೇಹದ್ದಿನ ತಂದೆಯು ನಮಗೆ ಸ್ವರ್ಗದ ರಾಜ್ಯಭಾಗ್ಯದ ವರದಾನವನ್ನು ಕೊಡುತ್ತಿದ್ದಾರೆ. ಶಿವ ತಂದೆಯು ಈ ಸಭೆಯಲ್ಲಿ ಬರುತ್ತಾರಲ್ಲವೆ. ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಬಂದು ಏನು ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ಅವರು ತಂದೆಯಾಗಿದ್ದಾರೆ ಅಂದಮೇಲೆ ತಂದೆಯು ಅವಶ್ಯವಾಗಿ ಏನನ್ನಾದರೂ ತಿನ್ನಿಸುತ್ತಾರೆ, ಕೊಡುತ್ತಾರೆ. ಮಾತಾಪಿತಾ ಜೀವನದ ಪಾಲನೆಯಂತೂ ಮಾಡುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ, ಮಾತಾಪಿತಾ ಬಂದು ಜೀವನದ ಸಂಭಾಲನೆ ಮಾಡುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ಮಕ್ಕಳು ಸ್ವಯಂ ಹೇಳುತ್ತಾರೆ - ಬಾಬಾ, ನಾವು ನಿಮ್ಮ 10 ದಿನದ ಮಗುವಾಗಿದ್ದೇನೆ ಅರ್ಥಾತ್ 10 ದಿನಗಳಿಂದ ನಿಮ್ಮವನಾಗಿದ್ದೇನೆ ಅಂದಾಗ ತಿಳಿದುಕೊಳ್ಳಬೇಕು - ನಾವು ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ಹಕ್ಕುದಾರರಾಗಿ ಬಿಟ್ಟಿದ್ದೇವೆ, ಮಡಿಲನ್ನು ತೆಗೆದುಕೊಂಡಿದ್ದೇವೆ, ಜೀವಿಸಿದ್ದಂತೆಯೇ ಯಾರದೇ ಮಡಿಲು ತೆಗೆದುಕೊಂಡರೆ ಅಂಧಶ್ರದ್ಧೆಯಿಂದಂತೂ ತೆಗೆದುಕೊಳ್ಳುವುದಿಲ್ಲ. ತಂದೆ-ತಾಯಿಯು ಮಕ್ಕಳನ್ನು ದತ್ತಿನಲ್ಲಿ ಕೊಡುತ್ತಾರೆ. ನಮ್ಮ ಮಗುವು ಅವರ ಬಳಿ ಹೆಚ್ಚು ಸುಖಿಯಾಗಿರುವರು, ಇನ್ನೂ ಪ್ರೀತಿಯಿಂದ ಸಂಭಾಲನೆ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ. ನೀವೂ ಸಹ ಲೌಕಿಕ ತಂದೆಯ ಮಕ್ಕಳು ಇಲ್ಲಿ ಬೇಹದ್ದಿನ ತಂದೆಯ ಮಡಿಲು ತೆಗೆದುಕೊಳ್ಳುತ್ತೀರಿ. ಬೇಹದ್ದಿನ ತಂದೆಯು ಎಷ್ಟು ರುಚಿಯಿಂದ ದತ್ತು ಮಾಡಿಕೊಳ್ಳುತ್ತಾರೆ! ಬಾಬಾ, ನಾನು ನಿಮ್ಮವನಾಗಿ ಬಿಟ್ಟೆನು ಎಂದು ಮಕ್ಕಳು ಬರೆಯುತ್ತಾರೆ. ಕೇವಲ ದೂರದಿಂದಲೇ ಹೇಳುವುದಿಲ್ಲ, ಪ್ರತ್ಯಕ್ಷದಲ್ಲಿ ದತ್ತು ಮಾಡಿಕೊಳ್ಳಲಾಗುತ್ತದೆ ಆದ್ದರಿಂದಲೇ ಆಚರಣೆ ಮಾಡುತ್ತಾರಲ್ಲವೆ. ಹೇಗೆ ಜನ್ಮ ದಿನವನ್ನು ಆಚರಿಸುತ್ತಾರೆ, ಅಂದಾಗ ಇಲ್ಲಿಯೂ ಯಾರು ಮಕ್ಕಳಾಗುವರೋ ಅವರು ಹೇಳುತ್ತಾರೆ - ನಾವು ನಿಮ್ಮವರಾಗಿದ್ದೇವೆ ಅಂದಮೇಲೆ 6-7 ದಿನಗಳ ನಂತರ ನಾಮಕರಣವನ್ನೂ ಆಚರಣೆ ಮಾಡಬೇಕಲ್ಲವೆ ಆದರೆ ಯಾರೂ ಆಚರಿಸುವುದಿಲ್ಲ. ತಮ್ಮ ಜನ್ಮಾಷ್ಟಮಿಯಂತೂ ಬಹಳ ವಿಜೃಂಭಣೆಯಿಂದ ಆಚರಣೆ ಮಾಡಬೇಕು ಆದರೆ ಆಚರಿಸುವುದೇ ಇಲ್ಲ. ನಾವು ಜಯಂತಿಯನ್ನು ಆಚರಿಸಬೇಕೆಂಬ ಜ್ಞಾನವೂ ಇಲ್ಲ, 12 ದಿನಗಳಾದ ಮೇಲೆ ಆಚರಿಸುತ್ತಾರೆ. ಅರೆ! ಮೊದಲು ಆಚರಿಸಲಿಲ್ಲ, 12 ತಿಂಗಳಿನ ನಂತರ ಏಕೆ ಆಚರಿಸುತ್ತೀರಿ? ಜ್ಞಾನವೂ ಇಲ್ಲ, ನಿಶ್ಚಯವೂ ಇರುವುದಿಲ್ಲ. ಒಂದು ಬಾರಿ ಜನ್ಮದಿನವನ್ನು ಆಚರಿಸಿದರೆ ಅವರು ಪಕ್ಕಾ ಆಗಿ ಬಿಟ್ಟರು ನಂತರ ಒಂದುವೇಳೆ ಜನ್ಮದಿನವನ್ನು ಆಚರಿಸದಮೇಲೂ ಅವರು ಬಿಟ್ಟು ಹೋದರೆ ಸತ್ತು ಹೋದರೆಂದು ತಿಳಿಯಲಾಗುವುದು. ತಮ್ಮ ಲೌಕಿಕ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ, ಯಾರಾದರೂ ಬಡವರಾಗಿದ್ದರೆ ಕಡಲೆ-ಬೆಲ್ಲವನ್ನು ಹಂಚುತ್ತಾರೆ. ಇನ್ನೇನೂ ಇಲ್ಲ. ಮಕ್ಕಳಿಗೆ ಸಂಪೂರ್ಣವಾಗಿ ಅರ್ಥವಾಗುವುದಿಲ್ಲ ಆದ್ದರಿಂದ ಖುಷಿಯಿರುವುದಿಲ್ಲ. ಜನ್ಮದಿನವನ್ನು ಆಚರಿಸಿದರೆ ನೆನಪೂ ಸಹ ಪಕ್ಕಾ ಇರುವುದು ಆದರೆ ಆ ಬುದ್ಧಿಯಿಲ್ಲ. ಆದರೂ ಇಂದು ತಂದೆಯು ತಿಳಿಸುತ್ತಾರೆ - ಯಾರು-ಯಾರು ಹೊಸದಾಗಿ ಮಕ್ಕಳಾದರೋ ಅವರಿಗೆ ನಿಶ್ಚಯವೂ ಇದ್ದಿದ್ದೇ ಆದರೆ ತಮ್ಮ ಅಲೌಕಿಕ ಜನ್ಮ ದಿನವನ್ನು ಆಚರಿಸಿರಿ. ಇಂತಹ ದಿನದಂದು ನಮಗೆ ನಿಶ್ಚಯವಾಯಿತು, ಆಗಿನಿಂದ ಜನ್ಮಾಷ್ಟಮಿಯು ಆರಂಭವಾಗುತ್ತದೆ ಅಂದಾಗ ಮಕ್ಕಳು ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು. ನಾನು ಇಂತಹವರ ಮಗನಾಗಿದ್ದೇನೆ ಎಂಬುದನ್ನು ಲೌಕಿಕದಲ್ಲಿ ಯಾವ ಮಕ್ಕಳಾದರೂ ಮರೆಯುತ್ತಾರೆಯೇ! ಇಲ್ಲಿ ನೋಡಿದರೆ ಬಾಬಾ, ನಮಗೆ ನಿಮ್ಮ ನೆನಪೇ ಬರುವುದಿಲ್ಲ ಎಂದು ಹೇಳುತ್ತಾರೆ. ಈ ರೀತಿಯಾಗಿ ಜ್ಞಾನವಿಲ್ಲದವರೂ ಸಹ ಎಂದೂ ಹೇಳುವುದಿಲ್ಲ. ನೆನಪು ಬಾರದೇ ಇರುವ ಪ್ರಶ್ನೆಯೇ ಬರುವುದಿಲ್ಲ. ನೀವು ತಂದೆಯನ್ನು ನೆನಪು ಮಾಡುತ್ತೀರಿ, ತಂದೆಯಂತೂ ಎಲ್ಲರನ್ನೂ ನೆನಪು ಮಾಡಿಯೇ ಮಾಡುತ್ತಾರೆ. ನನ್ನ ಮಕ್ಕಳೆಲ್ಲರೂ ಕಾಮ ಚಿತೆಯನ್ನು ಏರಿ ಭಸ್ಮವಾಗಿ ಬಿಟ್ಟಿದ್ದಾರೆ. ಈ ರೀತಿ ಮತ್ತ್ಯಾವುದೇ ಗುರು ಅಥವಾ ಮಹಾತ್ಮರು ಹೇಳುವುದಿಲ್ಲ. ಇದು ಭಗವಾನುವಾಚವೇ ಆಗಿದೆ - ಎಲ್ಲರೂ ನನ್ನ ಮಕ್ಕಳಾಗಿದ್ದಾರೆ, ಭಗವಂತನಿಗೆ ಎಲ್ಲರೂ ಮಕ್ಕಳಲ್ಲವೆ. ಎಲ್ಲಾ ಆತ್ಮರೂ ಪರಮಾತ್ಮ ತಂದೆಯ ಮಕ್ಕಳಾಗಿದ್ದಾರೆ. ತಂದೆಯೂ ಸಹ ಶರೀರದಲ್ಲಿ ಬಂದಾಗಲೇ ಹೇಳುತ್ತಾರೆ - ಈ ಆತ್ಮರೆಲ್ಲರೂ ನನ್ನ ಮಕ್ಕಳಾಗಿದ್ದಾರೆ. ಕಾಮ ಚಿತೆಯನ್ನು ಏರಿ ಭಸ್ಮೀಭೂತ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಭಾರತವಾಸಿಗಳು ಎಷ್ಟೊಂದು ತಮೋಪ್ರಧಾನವಾಗಿ ಬಿಟ್ಟಿದ್ದಾರೆ. ಕಾಮ ಚಿತೆಯ ಮೇಲೆ ಕುಳಿತು ಎಲ್ಲರೂ ಕಪ್ಪಾಗಿ ಬಿಟ್ಟಿದ್ದಾರೆ. ಯಾರು ನಂಬರ್ವನ್ ಪಾವನನಾಗಿದ್ದರೋ ಅವರೇ ಈಗ ಪೂಜಾರಿ, ಪತಿತನಾಗಿ ಬಿಟ್ಟಿದ್ದಾರೆ. ಸುಂದರನಿಂದ ಶ್ಯಾಮನಾಗಿದ್ದಾರೆ, ಈ ಕಾಮ ಚಿತೆಯನ್ನು ಏರುವುದು ಎಂದರೆ ಸರ್ಪದ ಮೇಲೆ ಏರುವುದಾಗಿದೆ. ವೈಕುಂಠದಲ್ಲಿ ಯಾರಿಗಾದರೂ ಕಚ್ಚಲು ಅಲ್ಲಿ ಸರ್ಪಗಳೇ ಇರುವುದಿಲ್ಲ, ಈ ರೀತಿಯ ಮಾತುಗಳೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಐದು ವಿಕಾರಗಳ ಪ್ರವೇಶತೆಯ ಕಾರಣ ನೀವು ಕಾಡಿನ ಮುಳ್ಳುಗಳಾಗಿ ಬಿಟ್ಟಿದ್ದೀರಿ. ಬಾಬಾ, ನಾವು ಇದು ಮುಳ್ಳುಗಳ ಕಾಡಾಗಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇವೆ ಎಂದು ಹೇಳುತ್ತಾರೆ. ಒಬ್ಬರು ಇನ್ನೊಬ್ಬರಿಗೆ ಕಚ್ಚಿ ಎಲ್ಲರೂ ಭಸ್ಮೀಭೂತರಾಗಿ ಬಿಟ್ಟಿದ್ದಾರೆ. ಭಗವಾನುವಾಚ – ಜ್ಞಾನ ಸಾಗರನಾದ ನನ್ನ ಮಕ್ಕಳು ಯಾರನ್ನು ನಾನು ಕಲ್ಪದ ಮೊದಲೂ ಸಹ ಬಂದು ಸ್ವಚ್ಛವನ್ನಾಗಿ ಮಾಡಿದ್ದೆನೋ ಅವರು ಈಗ ಪತಿತ, ಕಪ್ಪಾಗಿ ಬಿಟ್ಟಿದ್ದಾರೆ. ಮಕ್ಕಳಿಗೆ ತಿಳಿದಿದೆ - ನಾವು ಹೇಗೆ ಪಾವನರಿಂದ ಪತಿತರಾಗಿದ್ದೇವೆ! ಇಡೀ 84 ಜನ್ಮಗಳ ಚರಿತ್ರೆ-ಭೂಗೋಳವು ಸ್ಪಷ್ಟವಾಗಿ ಬುದ್ಧಿಯಲ್ಲಿದೆ, ಈ ಸಮಯದಲ್ಲಿ ನೀವು ತಿಳಿದುಕೊಂಡಿದ್ದೀರಿ - ಯಾರಾದರೂ 5-6 ವರ್ಷಗಳಿಂದ ಹಿಡಿದು ನಂಬರ್ವಾರ್ ಬುದ್ಧಿಯನುಸಾರ ತಮ್ಮ ಜೀವನ ಚರಿತ್ರೆಯನ್ನು ತಿಳಿದುಕೊಂಡಿರುತ್ತಾರೆ, ಪ್ರತಿಯೊಬ್ಬರಿಗೂ ತಮ್ಮ ಹಿಂದಿನ ಚರಿತ್ರೆಯು ತಿಳಿದಿರುತ್ತದೆ, ನಾವು ಏನು ಮಾಡಿದೆವು? ಏನು ಕೆಟ್ಟ ಕರ್ಮ ಮಾಡಿದೆವು ಎಂದು. ನಾವು ಏನೇನೋ ಮಾಡಿದೆವು ಎಂದು ಚಿಕ್ಕ-ಪುಟ್ಟ ಮಾತುಗಳಂತೂ ತಿಳಿಸಬಹುದಾಗಿದೆ. ಹಿಂದಿನ ಜನ್ಮಗಳ ಮಾತನ್ನು ತಿಳಿಸಲು ಸಾಧ್ಯವಿಲ್ಲ. ಜನ್ಮ-ಜನ್ಮಾಂತರಗಳ ಚರಿತ್ರೆಯನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಬಾಕಿ ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ ಎಂಬುದನ್ನು ತಂದೆಯು ಕುಳಿತು ತಿಳಿಸುತ್ತಾರೆ. ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರಿಗೇ ಸ್ಮೃತಿಯಲ್ಲಿ ಬರುತ್ತದೆ. ಮನೆಯಲ್ಲಿ ಹೋಗುವುದಕ್ಕಾಗಿ ನಾನು ನಿಮಗೆ ಮತ ಕೊಡುತ್ತೇನೆ, ಈ ಜ್ಞಾನವು ಎಲ್ಲಾ ಧರ್ಮದವರಿಗಾಗಿ ಇದೆ. ಒಂದುವೇಳೆ ಮುಕ್ತಿಧಾಮ ಮನೆಗೆ ಹೋಗಲು ಬಯಸುತ್ತೀರೆಂದರೆ ತಂದೆಯೇ ಕರೆದುಕೊಂಡು ಹೋಗುತ್ತಾರೆ. ತಂದೆಯ ವಿನಃ ಮತ್ತ್ಯಾರೂ ತಮ್ಮ ಮನೆಗೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ತಂದೆಯನ್ನು ನೆನಪು ಮಾಡಿ ಅಲ್ಲಿಗೆ ತಲುಪಲು ಮತ್ತ್ಯಾರಿಗೂ ಈ ಯುಕ್ತಿಯಿಲ್ಲ, ಎಲ್ಲರೂ ಪುನರ್ಜನ್ಮವನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಮೋಕ್ಷದ ವಿಚಾರವನ್ನು ಎಂದೂ ಮಾಡಬಾರದು, ಇದು ಸಾಧ್ಯವೇ ಇಲ್ಲ. ಇದು ಅನಾದಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ಎಲ್ಲರಿಗೆ ಒಬ್ಬ ತಂದೆಯೇ ಮುಕ್ತಿದಾತ ಮಾರ್ಗದರ್ಶಕನಾಗಿದ್ದಾರೆ, ಅವರೇ ಬಂದು ಯುಕ್ತಿಯನ್ನು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ಪುರುಷಾರ್ಥ ಮಾಡದಿದ್ದರೆ ಇವರು ಇಲ್ಲಿಯವರಲ್ಲ ಎಂದು ತಿಳಿಯಲಾಗುತ್ತದೆ. ಮುಕ್ತಿ-ಜೀವನ್ಮುಕ್ತಿಯ ಮಾರ್ಗವನ್ನು ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದ ಅನುಸಾರ ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರೂ ತಿಳಿಸುವ ಶೈಲಿಯು ತಮ್ಮ-ತಮ್ಮದೇ ಆಗಿರುತ್ತದೆ. ನೀವೂ ಸಹ ಹೇಳಬಲ್ಲಿರಿ - ಈ ಸಮಯದಲ್ಲಿ ಪತಿತ ಪ್ರಪಂಚವಾಗಿದೆ, ಎಷ್ಟೊಂದು ಹೊಡೆದಾಟಗಳಿವೆ, ಸತ್ಯಯುಗದಲ್ಲಿ ಇದೇನೂ ಇರುವುದಿಲ್ಲ, ಈಗ ಕಲಿಯುಗವಾಗಿದೆ. ಇದನ್ನು ಎಲ್ಲಾ ಮನುಷ್ಯರು ಒಪ್ಪುತ್ತಾರೆ. ಸತ್ಯಯುಗ-ತ್ರೇತಾಯುಗ.... ಗೋಲ್ಡನ್ ಏಜ್, ಸಿಲ್ವರ್ ಏಜ್..... ಅನ್ಯ ಭಾಷೆಗಳಲ್ಲಿಯೂ ಅವರವರ ಭಾಷೆಗೆ ತಕ್ಕಂತೆ ಹೆಸರುಗಳಿರುತ್ತವೆ. ಆಂಗ್ಲ ಭಾಷೆಯನ್ನಂತೂ ಅವರು ತಿಳಿದುಕೊಂಡಿರುತ್ತಾರೆ. ಇಂಗ್ಲೀಶ್ ಮತ್ತು ಹಿಂದಿ ಭಾಷೆಯ ಶಬ್ಧಕೋಶವೂ ಇರುತ್ತದೆ. ಆಂಗ್ಲರು ಬಹಳ ಸಮಯ ರಾಜ್ಯ ಮಾಡಿ ಹೋದರು. ಅವರ ಆಂಗ್ಲ ಭಾಷೆಯು ಕೆಲಸಕ್ಕೆ ಬರುತ್ತಿದೆ.
ಮನುಷ್ಯರು ಈ ಸಮಯದಲ್ಲಿ ಇದನ್ನಂತೂ ಒಪ್ಪುತ್ತಾರೆ, ನಮ್ಮಲ್ಲಿ ಯಾವುದೇ ಗುಣವಿಲ್ಲ, ಬಾಬಾ ಬಂದು ದಯೆ ತೋರಿಸು. ಪುನಃ ನಮ್ಮನ್ನು ಪವಿತ್ರರನ್ನಾಗಿ ಮಾಡಿ ನಾವು ಪತಿತರಾಗಿದ್ದೇವೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಪತಿತ ಆತ್ಮರು ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರೂ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಈಗ ತಂದೆಯು ಈ ಪತಿತ ಸಭೆಯಲ್ಲಿ ಬರುತ್ತಾರೆ. ಎಷ್ಟು ದೊಡ್ಡ ಸಭೆಯಾಗಿದೆ, ನಾನು ದೇವತೆಗಳ ಸಭೆಯಲ್ಲಿ ಎಂದೂ ಬರುವುದಿಲ್ಲ. ಎಲ್ಲಿ ಬಹಳ ಸಂಪತ್ತು, 36 ಪ್ರಕಾರದ ಭೋಜನ ಸಿಗುವುದೋ ಅಲ್ಲಿ ನಾನು ಬರುವುದಿಲ್ಲ. ಎಲ್ಲಿ ಮಕ್ಕಳಿಗೆ ರೊಟ್ಟಿಯೂ ಸಿಗುವುದಿಲ್ಲವೋ ಅವರ ಬಳಿ ಬಂದು ಮಡಿಲಿಗೆ ತೆಗೆದುಕೊಂಡು ಮಕ್ಕಳನ್ನಾಗಿ ಮಾಡಿ ಆಸ್ತಿಯನ್ನು ಕೊಡುತ್ತೇನೆ, ಸಾಹುಕಾರರನ್ನು ದತ್ತು ತೆಗೆದುಕೊಳ್ಳುವುದಿಲ್ಲ. ಅವರಂತೂ ತಮ್ಮದೇ ನಶೆಯಲ್ಲಿ ಮುಳುಗಿರುತ್ತಾರೆ. ನಮಗಾಗಿ ಇಲ್ಲಿಯೇ ಸ್ವರ್ಗವಿದೆ ಎಂದು ಹೇಳುತ್ತಾರೆ ಮತ್ತೆ ಯಾರಾದರೂ ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಇದು ಅರ್ಥವಾಯಿತಲ್ಲವೆ. ಇದನ್ನು ನೀವೇಕೆ ತಿಳಿಸುವುದಿಲ್ಲ? ಇದುವರೆಗೂ ಪತ್ರಿಕೆಗಳಲ್ಲಿಯೂ ಯಾರು ಯುಕ್ತಿಯುಕ್ತವಾಗಿ ಹಾಕಿಸಿಲ್ಲ. ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ಡ್ರಾಮಾ, ಪುರುಷಾರ್ಥ ಮಾಡಿಸುತ್ತದೆ, ನಾವು ಏನು ಪುರುಷಾರ್ಥ ಮಾಡುತ್ತೇವೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ, ಪುರುಷಾರ್ಥವನ್ನು ಮಾಡಲೇಬೇಕಾಗಿದೆ. ಡ್ರಾಮಾ ಎಂದು ಹೇಳಿ ಕುಳಿತುಕೊಳ್ಳಬಾರದು. ಪ್ರತೀ ಮಾತಿನಲ್ಲಿ ಅವಶ್ಯವಾಗಿ ಪುರುಷಾರ್ಥ ಮಾಡಲೇಬೇಕಾಗಿದೆ. ಕರ್ಮಯೋಗಿ, ರಾಜಯೋಗಿಗಳಲ್ಲವೆ. ಅವರು ಕರ್ಮ ಸನ್ಯಾಸಿ, ಹಠಯೋಗಿ ಕರ್ಮ ಸನ್ಯಾಸಿಗಳಾಗಿದ್ದಾರೆ. ನೀವಂತೂ ಎಲ್ಲವನ್ನೂ ಮಾಡುತ್ತೀರಿ, ಮನೆಯಲ್ಲಿರುತ್ತಾ ಮರಿ ಮಕ್ಕಳನ್ನೂ ಸಂಭಾಲನೆ ಮಾಡುತ್ತೀರಿ. ಸನ್ಯಾಸಿಗಳಂತೂ ಬಿಟ್ಟು ಹೊರಟು ಹೋಗುತ್ತಾರೆ. ಅವರಿಗೆ ಇಷ್ಟವಾಗುವುದಿಲ್ಲ ಆದರೆ ಆ ಪವಿತ್ರತೆಯು ಭಾರತದಲ್ಲಿ ಬೇಕಲ್ಲವೆ. ಆದರೂ ಒಳ್ಳೆಯವರಾಗಿದ್ದಾರೆ. ಈಗಂತೂ ಯಾವ ಮನುಷ್ಯರೂ ಪವಿತ್ರರೂ ಆಗಿರುವುದಿಲ್ಲ. ಅವರು ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕೂ ಸಾಧ್ಯವಿಲ್ಲ. ತಂದೆಯ ವಿನಃ ಮತ್ತ್ಯಾರೂ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ - ಶಾಂತಿಧಾಮವು ನಮ್ಮ ಮನೆಯಾಗಿದೆ ಆದರೆ ಹೇಗೆ ಹೋಗುವುದು? ಬಹಳ ಪಾಪಗಳನ್ನು ಮಾಡಿದ್ದಾರೆ. ಈಶ್ವರನನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ, ಈ ರೀತಿ ಹೇಳಿದರೆ ಯಾರ ಮರ್ಯಾದೆಯನ್ನು ಕಳೆಯುತ್ತಾರೆ? ಶಿವ ತಂದೆಯ ಮರ್ಯಾದೆಯನ್ನು. ನಾಯಿ, ಬೆಕ್ಕು, ಕಣ-ಕಣದಲ್ಲಿ ಪರಮಾತ್ಮನಿದ್ದಾನೆಂದು ಹೇಳುತ್ತಾರೆ, ಈಗ ಯಾರಿಗೆ ದೂರು ಕೊಡುವುದು! ತಂದೆಯು ತಿಳಿಸುತ್ತಾರೆ - ನಾನೇ ಸಮರ್ಥನಾಗಿದ್ದೇನೆ, ನನ್ನ ಜೊತೆ ಧರ್ಮರಾಜನೂ ಇದ್ದಾರೆ. ಇದು ಎಲ್ಲರಿಗಾಗಿ ಅಂತಿಮ ಸಮಯವಾಗಿದೆ. ಎಲ್ಲರೂ ಶಿಕ್ಷೆಗಳನ್ನು ಅನುಭವಿಸಿ ಹಿಂತಿರುಗಿ ಮನೆಗೆ ಹೋಗುತ್ತಾರೆ. ಡ್ರಾಮಾದ ನೊಂದಾವಣೆಯೇ ಈ ರೀತಿಯಿದೆ, ಶಿಕ್ಷೆಗಳನ್ನು ಅನುಭವಿಸಲೇಬೇಕಾಗಿದೆ, ಇದು ಸಾಕ್ಷಾತ್ಕಾರವಾಗುತ್ತದೆ. ಗರ್ಭ ಜೈಲಿನಲ್ಲಿಯೂ ಸಾಕ್ಷಾತ್ಕಾರವಾಗುತ್ತದೆ, ನೀವು ಇಂತಿಂತಹ ಕರ್ಮಗಳನ್ನು ಮಾಡಿದ್ದೀರಿ ಅದಕ್ಕಾಗಿ ಈ ಶಿಕ್ಷೆಗಳು ಸಿಗುತ್ತದೆ ಎಂದು. ಆಗ ಈ ಜೈಲಿನಿಂದ ಹೊರ ತೆಗೆಯಿರಿ, ನಾವು ಮತ್ತೆಂದೂ ಪಾಪ ಮಾಡುವುದಿಲ್ಲವೆಂದು ಹೇಳುತ್ತಾರೆ. ತಂದೆಯು ಇಲ್ಲಿ ಸನ್ಮುಖದಲ್ಲಿ ಬಂದು ಇವೆಲ್ಲಾ ಮಾತುಗಳನ್ನು ನಿಮಗೆ ತಿಳಿಸುತ್ತಾರೆ. ಆತ್ಮಗಳು ಗರ್ಭದಲ್ಲಿ ಶಿಕ್ಷೆಗಳನ್ನು ಅನುಭವಿಸುತ್ತಾರೆ, ಗರ್ಭವೂ ಸಹ ಜೈಲಾಗಿದೆ, ದುಃಖದ ಅನುಭವವಾಗುತ್ತದೆ. ಸತ್ಯಯುಗದಲ್ಲಿ ಇವೆರಡು ಜೈಲುಗಳೂ ಇರುವುದಿಲ್ಲ, ಶಿಕ್ಷೆಯೂ ಇರುವುದಿಲ್ಲ.
ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ತುಕ್ಕು ಕಳೆಯುವುದು. ಈ ನಿಮ್ಮ ಮಾತುಗಳನ್ನು ಅನೇಕರು ಒಪ್ಪುತ್ತಾರೆ. ಭಗವಂತನ ಹೆಸರಂತೂ ಇದೆ, ಕೇವಲ ಕೃಷ್ಣನ ಹೆಸರನ್ನು ಹಾಕಿ ತಪ್ಪು ಮಾಡಿದ್ದಾರೆ, ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ಏನೆಲ್ಲವನ್ನೂ ಕೇಳುತ್ತೀರಿ. ಕೇಳಿ ಪತ್ರಿಕೆಗಳಲ್ಲಿ ಹಾಕಿಸಿರಿ, ಶಿವ ತಂದೆಯು ಈ ಸಮಯದಲ್ಲಿ ಎಲ್ಲರಿಗೂ ಹೇಳುತ್ತಾರೆ - 84 ಜನ್ಮಗಳನ್ನು ಭೋಗಿಸಿ ತಮೋಪ್ರಧಾನವಾಗಿದ್ದೀರಿ. ಈಗ ಪುನಃ ನಾನು ಸಲಹೆ ಕೊಡುತ್ತೇನೆ - ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ಮತ್ತೆ ನೀವು ಮುಕ್ತಿ-ಜೀವನ್ಮುಕ್ತಿಧಾಮದಲ್ಲಿ ಹೋಗುತ್ತೀರಿ. ತಂದೆಯದು ಇದು ಆಜ್ಞೆಯಾಗಿದೆ- ನನ್ನನ್ನು ನೆನಪು ಮಾಡಿದರೆ ತುಕ್ಕು ಕಳೆಯುವುದು. ಒಳ್ಳೆಯದು - ಮಕ್ಕಳೇ, ಎಷ್ಟು ತಿಳಿಸಲಿ, ಎಷ್ಟು ತಿಳಿಸಲಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪ್ರತೀ ಮಾತಿಗಾಗಿ ಅವಶ್ಯವಾಗಿ ಪುರುಷಾರ್ಥ ಮಾಡಬೇಕಾಗಿದೆ. ಡ್ರಾಮಾ ಎಂದು ಹೇಳಿ ಕುಳಿತು ಬಿಡಬಾರದು. ಕರ್ಮಯೋಗಿ, ರಾಜಯೋಗಿಗಳಾಗಬೇಕು. ಕರ್ಮ ಸನ್ಯಾಸಿ, ಹಠಯೋಗಿಗಳಲ್ಲ.
2. ಶಿಕ್ಷೆಯನ್ನು ಅನುಭವಿಸದೇ ತಂದೆಯ ಜೊತೆ ಮನೆಗೆ ಹೋಗುವುದಕ್ಕಾಗಿ ನೆನಪಿನಲ್ಲಿದ್ದು ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ. ಪತಿತರಿಂದ ಪಾವನರಾಗಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಿಳಿದುಕೊಳ್ಳುತ್ತೀರಿ - ಕೇವಲ ನೀವಷ್ಟೇ ಅಲ್ಲ, ಎಲ್ಲಾ ಸೇವಾಕೇಂದ್ರಗಳ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣ ಸರ್ವೋತ್ತಮ ಕುಲಭೂಷಣರು ತಿಳಿದುಕೊಂಡಿದ್ದೀರಿ, ಯಾರು ಯಾವ ಕುಲದವರಾಗಿರುವರೋ ಅವರು ತಮ್ಮ ಕುಲದ ಬಗ್ಗೆ ಅರಿತುಕೊಂಡಿರುತ್ತಾರೆ. ಉತ್ತಮ ಕುಲದವರು ಆಗಿರಲಿ, ಕನಿಷ್ಟ ಕುಲದವರೇ ಆಗಿರಲಿ, ಪ್ರತಿಯೊಬ್ಬರೂ ತಮ್ಮ ಕುಲವನ್ನು ತಿಳಿದುಕೊಂಡಿರುತ್ತಾರೆ ಮತ್ತು ಇವರ ಕುಲವು ಒಳ್ಳೆಯದಾಗಿದೆ ಎಂಬುದನ್ನೂ ತಿಳಿದುಕೊಂಡಿರುತ್ತಾರೆ. ಕುಲವೆಂದಾದರೂ ಹೇಳಿ, ಜಾತಿಯೆಂದಾದರೂ ಹೇಳಿ, ಪ್ರಪಂಚದಲ್ಲಿ ಬ್ರಾಹ್ಮಣರದೇ ಸರ್ವೋತ್ತಮ ಕುಲವೆಂದು ನೀವು ಮಕ್ಕಳ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ನೀವು ಬ್ರಾಹ್ಮಣರದೇ ಮೊಟ್ಟ ಮೊದಲ ಕುಲವೆಂದು ಹೇಳಲಾಗುತ್ತದೆ. ಬ್ರಾಹ್ಮಣ ಕುಲ ಅರ್ಥಾತ್ ಈಶ್ವರೀಯ ಕುಲ. ಮೊದಲು ನಿರಾಕಾರಿ ಕುಲದವರಾಗಿರುತ್ತೀರಿ ನಂತರ ಸಾಕಾರ ಸೃಷ್ಟಿಯಲ್ಲಿ ಬರುತ್ತೀರಿ. ಸೂಕ್ಷ್ಮವತನದಲ್ಲಂತೂ ಕುಲವಿರುವುದಿಲ್ಲ. ಸಾಕಾರದಲ್ಲಿ ಸರ್ವ ಶ್ರೇಷ್ಠವಾದುದು ನೀವು ಬ್ರಾಹ್ಮಣರದಾಗಿದೆ. ನೀವು ಬ್ರಾಹ್ಮಣರು ಪರಸ್ಪರ ಸಹೋದರ-ಸಹೋದರಿಯರಾಗಿದ್ದೀರಿ. ಸಹೋದರ-ಸಹೋದರಿಯರಾಗಿರುವ ಕಾರಣ ವಿಕಾರದಲ್ಲಿ ಹೋಗಲು ಸಾಧ್ಯವಿಲ್ಲ. ನೀವು ಅನುಭವದಿಂದ ಹೇಳುತ್ತೀರಿ - ಪವಿತ್ರರಾಗಿರಲು ಇದು ಬಹಳ ಒಳ್ಳೆಯ ಯುಕ್ತಿಯಾಗಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ ಎಂದು ಪ್ರತಿಯೊಬ್ಬರೂ ಹೇಳುತ್ತಾರೆ. ಎಲ್ಲರೂ ಶಿವವಂಶಿಯರಾಗಿದ್ದಾರೆ ಮತ್ತೆ ಸಾಕಾರದಲ್ಲಿ ಬಂದಾಗ ಪ್ರಜಾಪಿತನ ಹೆಸರಿರುವ ಕಾರಣ ಸಹೋದರ-ಸಹೋದರಿಯರಾಗುತ್ತಾರೆ. ಪ್ರಜಾಪಿತ ಬ್ರಹ್ಮಾರವರು ಅವಶ್ಯವಾಗಿ ರಚಯಿತನಾಗಿದ್ದಾರೆ, ದತ್ತು ಮಾಡಿಕೊಳ್ಳುತ್ತಾರೆ. ನೀವು ಕುಖ ವಂಶಾವಳಿಯಲ್ಲ, ಮುಖ ವಂಶಾವಳಿ ಆಗಿದ್ದೀರಿ. ಮನುಷ್ಯರು ಮುಖ ವಂಶಾವಳಿ ಮತ್ತು ಕುಖ ವಂಶಾವಳಿಯ ಅರ್ಥವನ್ನೂ ತಿಳಿದುಕೊಂಡಿಲ್ಲ ಮುಖ ವಂಶಾವಳಿ ಎಂದರೆ ದತ್ತು ಮಕ್ಕಳು, ಕುಖ ವಂಶಾವಳಿ ಎಂದರೆ ಜನ್ಮ ಪಡೆಯುವವರು. ನಿಮ್ಮದು ಅಲೌಕಿಕ ಜನ್ಮವಾಗಿದೆ. ತಂದೆಗೆ ಲೌಕಿಕ, ಅಲೌಕಿಕ, ಪಾರಲೌಕಿಕ ಎಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮನಿಗೆ ಅಲೌಕಿಕ ತಂದೆಯೆಂದು ಹೇಳಲಾಗುತ್ತದೆ. ಲೌಕಿಕ ತಂದೆಯಂತೂ ಎಲ್ಲರಿಗೂ ಇದ್ದಾರೆ, ಅದು ಸಾಮಾನ್ಯ ಮಾತಾಗಿದೆ. ಪಾರಲೌಕಿಕ ತಂದೆಯೂ ಎಲ್ಲರಿಗೂ ಇದ್ದಾರೆ. ಭಕ್ತಿಮಾರ್ಗದಲ್ಲಿ ಹೇ ಭಗವಂತ, ಹೇ ಪರಮಪಿತ ಎಂದು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಈ ತಂದೆಯನ್ನು (ಪ್ರಜಾಪಿತ ಬ್ರಹ್ಮಾ) ಎಂದೂ ಯಾರೂ ಕರೆಯುವುದಿಲ್ಲ. ಇವರು ಬ್ರಾಹ್ಮಣ ಮಕ್ಕಳ ತಂದೆಯಾಗಿದ್ದಾರೆ. ಅವರಿಬ್ಬರನ್ನೂ ಎಲ್ಲರೂ ತಿಳಿದುಕೊಂಡಿರುತ್ತಾರೆ ಆದರೆ ಈ ಬ್ರಹ್ಮಾರವರ ಮಾತಿನಲ್ಲಿ ತಬ್ಬಿಬ್ಬಾಗುತ್ತಾರೆ ಏಕೆಂದರೆ ಬ್ರಹ್ಮನಿರುವುದು ಸೂಕ್ಷ್ಮವತನದಲ್ಲಿ ಎಂದು. ಇಲ್ಲಂತೂ ತೋರಿಸುವುದಿಲ್ಲ, ಚಿತ್ರಗಳಲ್ಲಿಯೂ ಸಹ ಬ್ರಹ್ಮನಿಗೆ ದಾಡಿ, ಮೀಸೆಗಳನ್ನು ತೋರಿಸುತ್ತಾರೆ ಏಕೆಂದರೆ ಪ್ರಜಾಪಿತ ಬ್ರಹ್ಮನು ಇದೇ ಸೃಷ್ಟಿಯಲ್ಲಿದ್ದಾರೆ. ಸೂಕ್ಷ್ಮವತನದಲ್ಲಿ ಪ್ರಜೆಗಳನ್ನು ರಚಿಸುವುದಿಲ್ಲ. ಇಲ್ಲಿಯೇ ಪ್ರಜೆಗಳನ್ನು ರಚಿಸಿ ನಂತರ ಸೂಕ್ಷ್ಮವತನವಾಸಿ ಆಗುತ್ತಾರೆ, ಇದೂ ಸಹ ಯಾರ ಬುದ್ಧಿಯಲ್ಲಿಯೂ ಇಲ್ಲ. ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ, ಈ ಆತ್ಮಿಕ ಯಾತ್ರೆಯ ಗಾಯನವಿದೆ. ಆತ್ಮಿಕ ಯಾತ್ರೆ ಎಂದರೆ ಎಲ್ಲಿಂದ ಮತ್ತೆ ಹಿಂತಿರುಗಿ ಬರುವುದಿಲ್ಲ. ಅನ್ಯ ಯಾತ್ರೆಗಳನ್ನಂತೂ ಎಲ್ಲರೂ ಜನ್ಮ-ಜನ್ಮಾಂತರದಿಂದ ಮಾಡುತ್ತಾ ಇರುತ್ತಾರೆ. ಯಾತ್ರೆಗೆ ಮರಳಿ ಬರುತ್ತಾರೆ. ಅದು ಸ್ಥೂಲ ಯಾತ್ರೆ ಆಗಿದೆ, ನಿಮ್ಮದು ಇದು ಆತ್ಮಿಕ ಯಾತ್ರೆಯಾಗಿದೆ. ಈ ಆತ್ಮಿಕ ಯಾತ್ರೆ ಮಾಡುವುದರಿಂದ ನೀವು ಮೃತ್ಯುಲೋಕಕ್ಕೆ ಹಿಂತಿರುಗುವುದಿಲ್ಲ. ತಂದೆಯು ನಿಮಗೆ ಅಮರಲೋಕದ ಯಾತ್ರೆಯನ್ನು ಕಲಿಸುತ್ತಾರೆ. ಮನುಷ್ಯರು ಕಾಶ್ಮೀರದ ಕಡೆ ಅಮರನಾಥದ ಯಾತ್ರೆ ಮಾಡಲು ಹೋಗುತ್ತಾರೆ ಆದರೆ ಅಮರ ಲೋಕವಲ್ಲ. ಅಮರ ಲೋಕವು ಒಂದು ಆತ್ಮಗಳ ಲೋಕವಾಗಿದೆ, ಇನ್ನೊಂದು ಮನುಷ್ಯರ ಅಮರ ಲೋಕವಾಗಿದೆ. ಯಾವುದಕ್ಕೆ ಸ್ವರ್ಗ ಅಥವಾ ಅಮರಲೋಕವೆಂದು ಹೇಳುತ್ತಾರೆ. ಆತ್ಮಗಳ ಲೋಕವು ನಿರ್ವಾಣಧಾಮವಾಗಿದೆ ಬಾಕಿ ಅಮರಲೋಕವು ಸತ್ಯಯುಗವಾಗಿದೆ ಮತ್ತು ಮೃತ್ಯುಲೋಕವು ಕಲಿಯುಗವಾಗಿದೆ ಮತ್ತು ನಿರ್ವಾಣಧಾಮವು ಶಾಂತಿಧಾಮವಾಗಿದೆ ಎಲ್ಲಿ ಆತ್ಮರಿರುತ್ತಾರೆ. ತಂದೆಯು ಹೇಳುತ್ತಾರೆ - ನೀವು ಅಮರಪುರಿಯ ಯಾತ್ರೆಯಲ್ಲಿದ್ದೀರಿ, ಅವು ಕಾಲ್ನಡಿಗೆಯಲ್ಲಿ ಹೋಗುವ ಶಾರೀರಿಕ ಯಾತ್ರೆಗಳಾಗಿವೆ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ಅದನ್ನು ಕಲಿಸುವವರು ಒಬ್ಬರೇ ಆತ್ಮಿಕ ತಂದೆಯಾಗಿದ್ದಾರೆ ಮತ್ತು ಒಂದೇ ಬಾರಿ ಬಂದು ಕಲಿಸಿಕೊಡುತ್ತಾರೆ. ಅದಂತೂ ಜನ್ಮ ಜನ್ಮಾಂತರದ ಮಾತಾಗಿದೆ, ಇದು ಮೃತ್ಯುಲೋಕದ ಅಂತಿಮ ಯಾತ್ರೆಯಾಗಿದೆ. ಇದನ್ನು ನೀವು ಬ್ರಾಹ್ಮಣ ಕುಲಭೂಷಣರೇ ತಿಳಿದುಕೊಂಡಿದ್ದೀರಿ. ಆತ್ಮಿಕ ಯಾತ್ರೆ ಅರ್ಥಾತ್ ನೆನಪಿನಲ್ಲಿದ್ದೀರಿ. ಅಂತ್ಯ ಮತಿ ಸೋ ಗತಿಯೆಂದು ಗಾಯನವಿದೆ. ನಿಮಗೆ ತಂದೆಯ ಮನೆಯೇ ನೆನಪು ಬರುತ್ತದೆ ಏಕೆಂದರೆ ತಿಳಿದುಕೊಂಡಿದ್ದೀರಿ, ಈಗ ನಾಟಕವು ಮುಕ್ತಾಯವಾಗುತ್ತದೆ, ಇದು ಹಳೆಯ ವಸ್ತ್ರ, ಹಳೆಯ ಶರೀರವಾಗಿದೆ. ಆತ್ಮದಲ್ಲಿ ತುಕ್ಕು ಬೀಳುವುದರಿಂದ ಶರೀರದಲ್ಲಿಯೂ ತುಕ್ಕು ಬೀಳುತ್ತದೆ. ಯಾವಾಗ ಆತ್ಮವು ಪವಿತ್ರವಾಗುವುದೋ ಆಗ ನಮಗೆ ಪವಿತ್ರ ಶರೀರವೇ ಸಿಗುತ್ತದೆ. ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಹೊರಗಿನವರು ಏನನ್ನೂ ತಿಳಿದುಕೊಂಡಿಲ್ಲ. ನೀವು ನೋಡುತ್ತೀರಿ - ಕೆಲಕೆಲವರು ತಿಳಿದುಕೊಳ್ಳಲೂಬಹುದು ಆದರೆ ಅವರ ಬುದ್ಧಿಯಲ್ಲಿ ಈ ಜ್ಞಾನವಿರುವುದಿಲ್ಲ, ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರು ಅನ್ಯರಿಗೆ ತಿಳಿಸುವರು. ಮನುಷ್ಯರು ತೀರ್ಥ ಯಾತ್ರೆಗಳನ್ನು ಮಾಡುವಾಗ ಪವಿತ್ರರಾಗಿರುತ್ತಾರೆ ಮತ್ತೆ ಮನೆಗೆ ಬಂದು ಅಪವಿತ್ರರಾಗುತ್ತಾರೆ. ಒಂದೆರಡು ತಿಂಗಳು ಪವಿತ್ರವಾಗಿರುತ್ತಾರೆ, ಯಾತ್ರೆ ಮಾಡುವುದಕ್ಕೂ ಒಂದು ಸೀಜನ್ ಇರುತ್ತದೆ. ಸದಾ ಯಾತ್ರೆ ಮಾಡಲು ಸಾಧ್ಯವಿಲ್ಲ. ಚಳಿ ಹಾಗೂ ಮಳೆಗಾಲದ ಸಮಯದಲ್ಲಿ ಯಾರೂ ಹೋಗುವುದಿಲ್ಲ. ನಿಮ್ಮ ಯಾತ್ರೆಯಲ್ಲಿ ಯಾವುದೇ ಬಿಸಿಲು-ಚಳಿಯ ಮಾತಿಲ್ಲ. ಬುದ್ಧಿಯಿಂದ ತಿಳಿದುಕೊಳ್ಳುತ್ತೀರಿ, ನಾವು ತಂದೆಯ ಮನೆಗೆ ಹೋಗುತ್ತಿದ್ದೇವೆ. ಎಷ್ಟು ನಾವು ನೆನಪು ಮಾಡುತ್ತೇವೆಯೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ತಂದೆಯ ಮನೆಗೆ ಹೋಗಿ ಮತ್ತೆ ನಾವು ಹೊಸ ಪ್ರಪಂಚದಲ್ಲಿ ಬರುತ್ತೇವೆ. ಇದನ್ನು ತಂದೆಯೇ ತಿಳಿಸುತ್ತಾರೆ. ಇಲ್ಲಿಯೂ ನಂಬರ್ವಾರ್ ಮಕ್ಕಳಿದ್ದಾರೆ. ವಾಸ್ತವದಲ್ಲಿ ಯಾತ್ರೆಯನ್ನು ಮರೆಯಬಾರದು ಆದರೆ ಮಾಯೆಯು ಮರೆಸಿ ಬಿಡುತ್ತದೆ. ಆದ್ದರಿಂದ ಬಾಬಾ, ನಿಮ್ಮ ನೆನಪು ಮರೆತು ಹೋಗುತ್ತದೆ ಎಂದು ಬರೆಯುತ್ತಾರೆ. ಅರೆ! ನೆನಪಿನ ಯಾತ್ರೆಯಿಂದ ನೀವು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ಇಂತಹ ಔಷಧಿಯನ್ನೇ ನೀವು ಮರೆತು ಹೋಗುತ್ತೀರಾ? ಕೆಲವೊಮ್ಮೆ ಮಕ್ಕಳು ಇದನ್ನೂ ಹೇಳುತ್ತಾರೆ - ತಂದೆಯನ್ನು ನೆನಪು ಮಾಡುವುದು ಬಹಳ ಸಹಜವಾಗಿದೆ ಎಂದು. ತಮ್ಮ ಜೊತೆ ಮಾತನಾಡಿಕೊಳ್ಳಬೇಕು - ನಾನಾತ್ಮನು ಮೊದಲು ಸತೋಪ್ರಧಾನನಾಗಿದ್ದೇನೆ, ಈಗ ತಮೋಪ್ರಧಾನನಾಗಿದ್ದೇನೆ. ಈಗ ಶಿವ ತಂದೆಯು ನಮಗೆ ಬಹಳ ಒಳ್ಳೆಯ ಯುಕ್ತಿಯನ್ನು ತಿಳಿಸುತ್ತಾರೆ ಬಾಕಿ ಅಭ್ಯಾಸ ಮಾಡಬೇಕಾಗಿದೆ. ಕಣ್ಣು ಮುಚ್ಚಿ ವಿಚಾರ ಮಾಡಲು ಆಗುವುದಿಲ್ಲ (ತಂದೆಯು ಅದನ್ನು ನಟನೆ ಮಾಡಿ ತೋರಿಸಿದರು). ತನ್ನೊಂದಿಗೆ ತಾನು ಮಾತನಾಡಿಕೊಳ್ಳಿ - ನಾವು ಸತೋಪ್ರಧಾನರಾಗಿದ್ದೆವು, ನಾವೇ ರಾಜ್ಯ ಮಾಡುತ್ತಿದ್ದೆವು, ಅದು ಸತ್ಯಯುಗವಾಗಿತ್ತು ನಂತರ ತ್ರೇತಾಯುಗ, ದ್ವಾಪರಯುಗ, ಕಲಿಯುಗದಲ್ಲಿ ಬಂದು ಬಿಟ್ಟೆವು. ಈಗ ಕಲಿಯುಗದ ಅಂತ್ಯವಾಗಿದೆ ಆದ್ದರಿಂದ ತಂದೆಯು ಬಂದಿದ್ದಾರೆ. ತಂದೆಯು ನಾವಾತ್ಮರಿಗೆ ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ ಮತ್ತು ತಮ್ಮ ಮನೆಯನ್ನೂ ನೆನಪು ಮಾಡಿರಿ. ಅಲ್ಲಿಂದಲೇ ನೀವು ಬಂದಿದ್ದೀರಿ, ಈ ಸ್ಮೃತಿಯಿದ್ದಾಗ ಅಂತಿಮ ಸ್ಮೃತಿಯಂತೆ ಅಂತಹದ್ದೇ ಗತಿಯಾಗುವುದು. ನೀವು ಅಲ್ಲಿಯೇ ಹೋಗಬೇಕಾಗಿದೆ, ಈ ಯುಕ್ತಿಯನ್ನು ತಂದೆಯು ತಿಳಿಸುತ್ತಾರೆ. ಮುಂಜಾನೆ ಎದ್ದು ತಮ್ಮೊಂದಿಗೆ ಮಾತನಾಡಿಕೊಳ್ಳಿ. ತಂದೆಯು ಮಾಡಿ ತೋರಿಸುತ್ತಾರೆ - ನಾನೂ ಸಹ ಮುಂಜಾನೆ ಎದ್ದು ವಿಚಾರ ಸಾಗರ ಮಂಥನ ಮಾಡುತ್ತೇನೆ. ಸತ್ಯ ಸಂಪಾದನೆ ಮಾಡಿಕೊಳ್ಳಬೇಕಲ್ಲವೆ. ಮುಂಜಾನೆಯ ಸ್ವಾಮಿ........ ಆ ಸ್ವಾಮಿಯನ್ನು ನೆನಪು ಮಾಡುವುದರಿಂದ ನಿಮ್ಮ ದೋಣಿಯು ಪಾರಾಗುವುದು. ತಂದೆಯು ಏನು ಮಾಡುವರು, ಹೇಗೆ ಮಾಡುವರೋ ಅದನ್ನು ಮಕ್ಕಳಿಗೂ ತಿಳಿಸುತ್ತಾರೆ. ಇದರಲ್ಲಿ ಮತ್ತ್ಯಾವುದೇ ಮಾತಿಲ್ಲ. ಇದು ಸಂಪಾದನೆಯ ಬಹಳ ಒಳ್ಳೆಯ ಯುಕ್ತಿಯಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ತಂದೆಯ ಆಸ್ತಿಯು ಅವಶ್ಯವಾಗಿ ಪ್ರಾಪ್ತಿಯಾಗುವುದು. ಮಕ್ಕಳಿಗೆ ತಿಳಿದಿದೆ - ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ತಂದೆಯು ಬೀಜರೂಪ, ಜ್ಞಾನ ಸಾಗರ ಆಗಿದ್ದಾರೆ ಅಂದಮೇಲೆ ನಾವೂ ಸಹ ವೃಕ್ಷವನ್ನು ಪೂರ್ಣವಾಗಿ ಅರಿತುಕೊಂಡಿದ್ದೇವೆ. ಇದೂ ಸಹ ವಿಸ್ತಾರವಾದ ಜ್ಞಾನವಾಗಿದೆ. ಈ ವೃಕ್ಷವು ಆದಿಯಲ್ಲಿ ಹೇಗೆ ವೃದ್ಧಿಯನ್ನು ಹೊಂದುತ್ತದೆ ನಂತರ ಹೇಗೆ ಅದರ ಆಯಸ್ಸು ಮುಗಿಯುತ್ತದೆ ಮತ್ತು ವೃಕ್ಷವು ಬಿರುಗಾಳಿಗಳು ಬಂದರೆ ಸಾಕು ಕೆಳಗೆ ಬೀಳುತ್ತದೆ ಆದರೆ ಈ ಮನುಷ್ಯ ಸೃಷ್ಟಿ ವೃಕ್ಷದ ಮೊದಲ ಬುನಾದಿಯೇ ಸುಟ್ಟು ಹೋಗುತ್ತದೆ. ಈ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗುತ್ತದೆ, ಇದು ಆಗಲೇಬೇಕಾಗಿದೆ. ಯಾವಾಗ ಇದು ಸಮಾಪ್ತಿಯಾಗುವುದೋ ಆಗ ಒಂದು ಧರ್ಮದ ಪುನಃ ಸ್ಥಾಪನೆ ಮತ್ತು ಅನೇಕ ಧರ್ಮಗಳ ವಿನಾಶವೆಂದು ಹೇಳಲಾಗುವುದು. ಕಲ್ಪ-ಕಲ್ಪವೂ ಈ ಧರ್ಮವು ಪ್ರಾಯಲೋಪವಾಗುತ್ತದೆ. ಆತ್ಮದಲ್ಲಿ ತುಕ್ಕು ಬೀಳುವುದರಿಂದ ಆಭರಣಗಳೂ ನಕಲಿಯಾಗುತ್ತವೆ. ಮಕ್ಕಳು ತಿಳಿದುಕೊಳ್ಳುತ್ತೀರಿ - ನಾವಾತ್ಮರಲ್ಲಿ ತುಕ್ಕು ಹಿಡಿದಿದೆ, ನಾವೀಗ ಸ್ವಚ್ಛವಾಗುತ್ತೇವೆ ಆಗ ಅನ್ಯರಿಗೂ ಮಾರ್ಗ ತಿಳಿಸುತ್ತೇವೆ. ಪ್ರಪಂಚವು ತಮೋಪ್ರಧಾನ, ಸ್ವರ್ಗವಾಗಿತ್ತು ಅಂದಾಗ ಮಕ್ಕಳು ಬೆಳಗ್ಗೆ-ಬೆಳಗ್ಗೆ ಎದ್ದು ತಮ್ಮೊಂದಿಗೆ ಮಾತನಾಡಿಕೊಳ್ಳಬೇಕು ಅರ್ಥಾತ್ ವಾರ್ತಾಲಾಪ ಮಾಡಿಕೊಳ್ಳಬೇಕು, ವಿಚಾರ ಸಾಗರ ಮಂಥನ ಮಾಡಬೇಕು. ನಂತರ ಇದು 84 ಜನ್ಮಗಳ ಚಕ್ರವಾಗಿದೆ. ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಯಾರು ತೆಗೆದುಕೊಳ್ಳುತ್ತಾರೆ, ಯಾರು ಮೊಟ್ಟ ಮೊದಲು ಬರುವರೋ ಅವರೇ ತೆಗೆದುಕೊಳ್ಳುತ್ತಾರೆ ಎಂದು ಅನ್ಯರಿಗೆ ತಿಳಿಸಬಹುದಾಗಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಬಂದು 84 ಜನ್ಮಗಳ ಚಕ್ರವನ್ನು ತಿಳಿಸುತ್ತಾರೆ. ತಂದೆಯು ಎಲ್ಲಿ ಬಂದಿದ್ದಾರೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಸ್ವಯಂ ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ, ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ, ಮನ್ಮನಾಭವ. ನನ್ನನ್ನು ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುವವು. ಈ ರೀತಿಯಾಗಿ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಭಲೆ ಗೀತೆಯನ್ನು ಓದಿ ತಿಳಿಸುತ್ತಾರೆ, ಅನೇಕರು ಅಲ್ಲಿಗೆ ಹೋಗುತ್ತಿರುತ್ತಾರೆ ಆದರೆ ಭಗವಂತನು ಎಂದಾದರೂ ಬಂದಿರಬೇಕು, ಜ್ಞಾನವನ್ನು ತಿಳಿಸಿರಬೇಕಲ್ಲವೆ. ಅವರು ಬಂದಾಗಲೇ ಜ್ಞಾನವನ್ನು ತಿಳಿಸುವರಲ್ಲವೆ! ಮನುಷ್ಯರು ಗೀತಾ ಪುಸ್ತಕವನ್ನು ತೆಗೆದುಕೊಂಡು ಓದಿ ತಿಳಿಸುತ್ತಾರೆ, ಇಲ್ಲಂತೂ ಭಗವಂತನು ಜ್ಞಾನ ಸಾಗರನಾಗಿದ್ದಾರೆ, ಇವರಿಗೆ ಯಾವುದನ್ನು ಕೈಯಲ್ಲಿ ಹಿಡಿದುಕೊಂಡು ಓದುವ ಅವಶ್ಯಕತೆಯೂ ಇಲ್ಲ, ಇವರು ಯಾರಿಂದಲೂ ಕಲಿಯುವುದಿಲ್ಲ. ಕಲ್ಪದ ಮೊದಲೂ ಸಹ ಬಂದು ನೀವು ಮಕ್ಕಳಿಗೆ ಸಂಗಮದಲ್ಲಿ ಕಲಿಸಿದ್ದರು, ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ, ಇದು ನೆನಪಿನ ಯಾತ್ರೆಯಾಗಿದೆ. ನಿಮ್ಮ ಬುದ್ಧಿಯೇ ತಿಳಿದುಕೊಂಡಿದೆ - ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರ ವಿನಃ ಮತ್ತ್ಯಾವ ಮನುಷ್ಯರಲ್ಲಿಯೂ ಈ ಜ್ಞಾನವಿರುವುದಿಲ್ಲ. ಎಲ್ಲರಲ್ಲಿ ಸರ್ವವ್ಯಾಪಿಯ ಜ್ಞಾನವೇ ತುಂಬಿದೆ. ಪರಮಾತ್ಮನು ಬಿಂದುವಾಗಿದ್ದಾರೆ, ಜ್ಞಾನ ಸಾಗರ, ಪತಿತ-ಪಾವನ ಆಗಿದ್ದಾರೆ ಎಂಬುದು ಯಾರಿಗೂ ತಿಳಿದಿಲ್ಲ. ಕೇವಲ ಹಾಗೆಯೇ ಹಾಡುತ್ತಿರುತ್ತಾರೆ, ಗುರುಗಳನ್ನು ಏನನ್ನು ಕಲಿಸುವರೋ ಅದನ್ನೇ ಸತ್ಯ-ಸತ್ಯವೆಂದು ಹೇಳಿ ಮಾಡುತ್ತಿರುತ್ತಾರೆ. ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಇದು ಸತ್ಯವೇ ಅಥವಾ ಅಲ್ಲವೆ? ಎಂಬುದನ್ನೂ ಸಹ ವಿಚಾರ ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ನಡೆಯುತ್ತಾ-ತಿರುಗಾಡುತ್ತಾ ನೆನಪಿನ ಯಾತ್ರೆಯಲ್ಲಿ ಖಂಡಿತ ಇರಬೇಕಾಗಿದೆ, ಇಲ್ಲದಿದ್ದರೆ ವಿಕರ್ಮಗಳು ವಿನಾಶವಾಗುವುದಿಲ್ಲ. ಯಾವುದೇ ಕರ್ಮ ಮಾಡುತ್ತಾ ಇರಿ ಆದರೆ ಬುದ್ಧಿಯಲ್ಲಿ ತಂದೆಯ ನೆನಪಿರಲಿ. ಶ್ರೀನಾಥ ದ್ವಾರದಲ್ಲಿ ಭೋಜನವನ್ನು ತಯಾರಿಸುವಾಗ ಬುದ್ಧಿಯಲ್ಲಿ ಶ್ರೀನಾಥನ ಧ್ಯಾನವೇ ಇರುತ್ತದೆಯಲ್ಲವೆ. ಅವರು ಕುಳಿತಿರುವುದೇ ಮಂದಿರದಲ್ಲಿ. ತಿಳಿದಿರುತ್ತದೆ, ನಾವು ಶ್ರೀನಾಥನಿಗಾಗಿ ತಯಾರಿಸುತ್ತಿದ್ದೇವೆ. ಭೋಜನಗಳು ತಯಾರಿಸಿ, ನೈವೇದ್ಯವನ್ನಿಟ್ಟರು ಎಂದರೆ ಮನೆ, ಮಕ್ಕಳು ಎಲ್ಲವೂ ನೆನಪು ಬರುತ್ತಿರುತ್ತದೆ. ಅಲ್ಲಿ ಭೋಜನವನ್ನು ತಯಾರಿಸುತ್ತಾರೆ. ಬಾಯಿಗೆ ಬಟ್ಟೆ ಕಟ್ಟಿಕೊಳ್ಳುತ್ತಾರೆ ಮಾತನಾಡುವುದಿಲ್ಲ. ಮನಸ್ಸಿನಿಂದ ಯಾವುದೇ ವಿಕರ್ಮವಾಗುವುದಿಲ್ಲ, ಅವರು ಶ್ರೀನಾಥನ ಮಂದಿರದಲ್ಲಿ ಕುಳಿತಿರುತ್ತಾರೆ. ಇಲ್ಲಿ ನೀವು ಶಿವತಂದೆಯ ಬಳಿ ಕುಳಿತಿದ್ದೀರಿ, ಇಲ್ಲಿಯೂ ತಂದೆಯು ಯುಕ್ತಿಯನ್ನು ತಿಳಿಸುತ್ತಾ ಇರುತ್ತಾರೆ - ಮಕ್ಕಳೇ, ಯಾವುದೇ ವ್ಯರ್ಥ ಮಾತುಗಳನ್ನು ಮಾತನಾಡಬಾರದು, ಸದಾ ತಂದೆಯೊಂದಿಗೆ ಮಧುರಾತಿ ಮಧುರ ಮಾತುಗಳನ್ನು ಮಾತನಾಡಬೇಕಾಗಿದೆ. ತಂದೆಯು ಹೇಗೋ ಹಾಗೆಯೇ ಮಕ್ಕಳು. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ತಂದೆಯ ಸ್ಮೃತಿಯಿರುತ್ತದೆ ಆದ್ದರಿಂದ ಬಂದು ನೀವು ಮಕ್ಕಳಿಗೆ ತಿಳಿಸುತ್ತಾರೆ. ನೀವೂ ಸಹ ತಿಳಿದುಕೊಂಡಿದ್ದೀರಿ - ನಮ್ಮ ತಂದೆಯು ಮನುಷ್ಯ ಸೃಷ್ಟಿಯ ಬೀಜ ರೂಪನಾಗಿದ್ದಾರೆ, ಚೈತನ್ಯನಾಗಿದ್ದಾರೆ, ಎಷ್ಟು ಸಹಜ ಮಾತಾಗಿದೆ. ಆದರೂ ಸಹ ತಿಳಿದುಕೊಳ್ಳುವುದಿಲ್ಲ ಏಕೆಂದರೆ ಕಲ್ಲು ಬುದ್ಧಿಯವರಲ್ಲವೆ. ಆ ಬೀಜಕ್ಕೆ ನಾವು ಚೈತನ್ಯವೆಂದು ಹೇಳುವುದಿಲ್ಲ, ಈ ಬೀಜವು ಜ್ಞಾನಪೂರ್ಣನಾಗಿದ್ದಾರೆ, ಚೈತನ್ಯನಾಗಿದ್ದಾರೆ, ಇವರು ಒಬ್ಬರೇ ಇದ್ದಾರೆ, ಆ ಬೀಜಗಳಲ್ಲಿ ಅನೇಕ ಪ್ರಕಾರದ್ದಿರುತ್ತದೆ. ಭಗವಂತನಿಗೆ ಮನುಷ್ಯ್ ಸೃಷ್ಟಿಯ ಬೀಜರೂಪನೆಂದು ಹೇಳಲಾಗುತ್ತದೆ ಅಂದಮೇಲೆ ಅವರು ತಂದೆಯಾದರಲ್ಲವೆ. ಆತ್ಮಗಳ ತಂದೆಯು ಪರಮಾತ್ಮನಾಗಿದ್ದಾರೆ ಅಂದಮೇಲೆ ಎಲ್ಲರೂ ಸಹೋದರರಾದರು. ಎಲ್ಲಿ ನೀವಾತ್ಮರು ನಿವಾಸ ಮಾಡುತ್ತೀರೋ ಅಲ್ಲಿಯೇ ತಂದೆಯೂ ಇರುತ್ತಾರೆ. ನಿರ್ವಾಣಧಾಮದಲ್ಲಿ ತಂದೆ ಮತ್ತು ನೀವು ಮಕ್ಕಳಿರುತ್ತೀರಿ, ಈ ಸಮಯದಲ್ಲಿ ನೀವು ಪ್ರಜಾಪಿತ ಬ್ರಹ್ಮರವರ ಸಂತಾನರು ಸಹೋದರ-ಸಹೋದರಿಯಾಗಿದ್ದೀರಿ ಆದ್ದರಿಂದ ಶಿವವಂಶಿ ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೀರಿ. ಇದನ್ನೂ ಸಹ ನೀವು ಬರೆಯಬೇಕಾಗಿದೆ - ನೀವು ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯಾಗಿದ್ದೀರಿ, ತಂದೆಯು ಬ್ರಹ್ಮಾರವರ ಮೂಲಕ ಸೃಷ್ಟಿಯನ್ನು ರಚಿಸುತ್ತಾರೆಂದರೆ ಸಹೋದರ-ಸಹೋದರಿಯಾದರಲ್ಲವೆ. ತಂದೆಯು ಕಲ್ಪ-ಕಲ್ಪವೂ ಇದೇರೀತಿ ರಚಿಸುತ್ತಾರೆ, ದತ್ತು ಮಾಡಿಕೊಳ್ಳುತ್ತಾ ಹೋಗುತ್ತಾರೆ. ಮನುಷ್ಯರಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳಲಾಗುತ್ತದೆ. ಭಲೆ ಬಾಬಾ ಎಂದು ಹೇಳುತ್ತಾರೆ ಆದರೆ ಅವರೆಲ್ಲರೂ ಹದ್ದಿನ ಬಾಬಾ ಆಗಿದ್ದಾರೆ. ಇವರಿಗೆ ಪ್ರಜಾಪಿತನೆಂದು ಹೇಳುತ್ತಾರೆ ಏಕೆಂದರೆ ಅನೇಕ ಪ್ರಜೆಗಳಿದ್ದಾರೆ ಅರ್ಥಾತ್ ಮಕ್ಕಳಿದ್ದಾರೆ ಅಂದಾಗ ಬೇಹದ್ದಿನ ತಂದೆಯು ಮಕ್ಕಳಿಗೆ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ - ಈ ಪ್ರಪಂಚವು ಬಹಳ ಕೆಟ್ಟು ಹೋಗಿದೆ, ಈಗ ನಿಮ್ಮನ್ನು ವಾಹ್-ವಾಹ್ನ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತೇನೆ. ನಿಮ್ಮಲ್ಲಿಯೂ ಬಹಳ ಮಕ್ಕಳು ಮರೆತು ಹೋಗುತ್ತಾರೆ. ಒಂದುವೇಳೆ ನೆನಪಿರುವುದೇ ಆದರೆ ತಂದೆಯ ನೆನಪೂ ಇರುವುದು ಮತ್ತು ಗುರುವಿನ ನೆನಪೂ ಇರುವುದು - ಈಗ ಹಿಂತಿರುಗಿ ಹೋಗಬೇಕಾಗಿದೆ. ಹಳೆಯ ಶರೀರವನ್ನು ಬಿಟ್ಟು ಹೋಗುತ್ತೇವೆ ಏಕೆಂದರೆ ಯಾವುದೇ ಶರೀರವು ಪ್ರಯೋಜನಕ್ಕಿಲ್ಲ. ಆತ್ಮವು ಈಗ ಪವಿತ್ರವಾಗುತ್ತಾ ಹೋಗುತ್ತದೆ ಆದ್ದರಿಂದ ಶರೀರವೂ ಪವಿತ್ರವಾಗಬೇಕಾಗಿದೆ. ಪರಸ್ಪರ ಕುಳಿತು ಇದೇ ಮಾತುಗಳನ್ನಾಡಬೇಕು, ಇದಕ್ಕೆ ಶುಭ ಸಮ್ಮೇಳನವೆಂದು ಹೇಳಲಾಗುತ್ತದೆ ಯಾವುದರಲ್ಲಿ ಒಳ್ಳೊಳ್ಳೆಯ ಮಾತುಗಳಿರುತ್ತವೆ! ಸೇವೆಯನ್ನು ಹೇಗೆ ವೃದ್ಧಿ ಮಾಡುವುದು, ಹೇಗೆ ಕಲ್ಯಾಣ ಮಾಡುವುದು! ಅವರದಂತೂ ಛೀ ಛೀ ಸಮ್ಮೇಳನಗಳಾಗಿವೆ, ಸುಳ್ಳು ಹೇಳುತ್ತಿರುತ್ತಾರೆ. ಇಲ್ಲಿ ಅಸತ್ಯದ ಮಾತಿಲ್ಲ, ಇದಕ್ಕೆ ಸತ್ಯ-ಸತ್ಯವಾದ ಸಮ್ಮೇಳನವೆಂದು ಹೇಳಲಾಗುತ್ತದೆ. ನಿಮಗೆ ಈ ಕಥೆಯನ್ನೂ ತಿಳಿಸಲಾಗಿದೆ - ಇದು ಕಲಿಯುಗವಾಗಿದೆ, ಸತ್ಯಯುಗಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಭಾರತವು ಸ್ವರ್ಗವಾಗಿತ್ತು, ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈಗ ಅಂತ್ಯದಲ್ಲಿದ್ದೀರಿ, ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಇದರಲ್ಲಿ ಯಾವುದೇ ಗಂಗಾ ಸ್ನಾನ ಇತ್ಯಾದಿಗಳನ್ನು ಮಾಡುವಂತಿಲ್ಲ. ಭಗವಾನುವಾಚ ಏನೆಂದರೆ ನಾನು ಎಲ್ಲರ ತಂದೆಯಾಗಿದ್ದೇನೆ, ಕೃಷ್ಣನು ಎಲ್ಲರ ತಂದೆಯಾಗಲು ಸಾಧ್ಯವಿಲ್ಲ. ಒಬ್ಬರು ಅಥವಾ ಇಬ್ಬರು ಮಕ್ಕಳ ತಂದೆಯು ಶ್ರೀ ನಾರಾಯಣನಾಗಿದ್ದಾನೆ, ಶ್ರೀ ಕೃಷ್ಣನಲ್ಲ. ಶ್ರೀ ಕೃಷ್ಣನು ಕುಮಾರನಾಗಿದ್ದಾನೆ. ಈ ಪ್ರಜಾಪಿತ ಬ್ರಹ್ಮನಿಗೆ ಅನೇಕ ಮಕ್ಕಳಿದ್ದಾರೆ, ಕೃಷ್ಣ ಭಗವಾನುವಾಚವೆಲ್ಲಿ ಶಿವ ಭಗವಾನುವಾಚವೆಲ್ಲಿ, ಎಷ್ಟು ದೊಡ್ಡ ತಪ್ಪನ್ನು ಮಾಡಿದ್ದಾರೆ! ಎಲ್ಲಿ ಪ್ರದರ್ಶನಿಯನ್ನು ಇಟ್ಟರೂ ಸಹ ಮುಖ್ಯ ಮಾತು ಇದೇ ಆಗಿದೆ - ಗೀತೆಯ ಭಗವಂತನು ಶಿವನೋ ಅಥವಾ ಕೃಷ್ಣನೋ? ಮೊಟ್ಟ ಮೊದಲು ಇದನ್ನು ತಿಳಿಸಬೇಕು. ಶಿವನಿಗೇ ಭಗವಂತನೆಂದು ಹೇಳಲಾಗುತ್ತದೆ, ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಇದರ ಬಗ್ಗೆ ಅಭಿಪ್ರಾಯದ ಪುಸ್ತಕವಿರಬೇಕು. ಗೀತೆಯ ಭಗವಂತನ ಚಿತ್ರವು ಇದ್ದೇ ಇರಬೇಕು, ಕೆಳಗಡೆ ಬರೆದಿರಲಿ - ಪರಿಶೀಲನೆ ಮಾಡಿ ಮತ್ತು ಬಂದು ತಿಳಿದುಕೊಳ್ಳಿ ಎಂದು. ನಂತರ ಬರೆಸಿಕೊಂಡು ಅವರಿಂದ ಸಹಿ ಮಾಡಿಸಿಕೊಳ್ಳಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಪರಸ್ಪರ ಶುಭ ಸಮ್ಮೇಳನ ಮಾಡಿ ಸೇವೆಯ ವೃದ್ಧಿಯ ಯುಕ್ತಿಗಳನ್ನು ರಚಿಸಬೇಕಾಗಿದೆ. ತನ್ನ ಮತ್ತು ಸರ್ವರ ಕಲ್ಯಾಣದ ಯುಕ್ತಿಯನ್ನು ರಚಿಸಬೇಕಾಗಿದೆ. ಎಂದೂ ಯಾವುದೇ ವ್ಯರ್ಥ ಮಾತುಗಳನ್ನು ಆಡಬಾರದು.
2. ಬೆಳಗ್ಗೆ-ಬೆಳಗ್ಗೆ ಎದ್ದು ತನ್ನೊಂದಿಗೆ ತಾನು ಮಾತನಾಡಿಕೊಳ್ಳಬೇಕು, ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಭೋಜನವನ್ನು ತಯಾರಿಸುವಾಗ ಒಬ್ಬ ತಂದೆಯ ನೆನಪಿನಲ್ಲಿ ಇರಬೇಕಾಗಿದೆ. ಮನಸ್ಸು ಸಹ ಹೊರಗೆ ಅಲೆಯಬಾರದು. ಇದರ ಕಡೆ ಗಮನವನ್ನು ಇಡಬೇಕಾಗಿದೆ.
ಓಂ ಶಾಂತಿ. ತಂದೆಯಿಂದ ಒಂದು ಸೆಕೆಂಡಿನಲ್ಲಿ ಆಸ್ತಿ ಅರ್ಥಾತ್ ಜೀವನ್ಮುಕ್ತಿಯೆಂದು ಗಾಯನವಿದೆ. ಮತ್ತೆಲ್ಲರೂ ಜೀವನಬಂಧನದಲ್ಲಿ ಇದ್ದಾರೆ. ಈ ತ್ರಿಮೂರ್ತಿ ಮತ್ತು ಗೋಲ ಚಿತ್ರವೊಂದೇ ಸಾಕಷ್ಟಾಗಿದೆ, ಇದು ಮುಖ್ಯವಾಗಿದೆ. ಇದನ್ನು ಬಹಳ ದೊಡ್ಡದನ್ನಾಗಿ ಮಾಡಿಸಬೇಕು, ಕುರುಡರಿಗೆ ಬಹಳ ದೊಡ್ಡಕನ್ನಡಿಯಾಗಬೇಕು. ಅದನ್ನು ಬಹಳಚೆನ್ನಾಗಿ ನೋಡಲು ಸಾಧ್ಯವಾಗುವಂತಿರಬೇಕು ಏಕೆಂದರೆ ಈಗ ಎಲ್ಲರ ದೃಷ್ಟಿಯು ನಿರ್ಬಲವಾಗಿದೆ, ಬುದ್ಧಿಯು ಕಡಿಮೆಯಾಗಿದೆ, ಮೂರನೆಯ ನೇತ್ರಕ್ಕೆ ಬುದ್ಧಿಯೆಂದು ಹೇಳಲಾಗುತ್ತದೆ. ನಿಮ್ಮ ಬುದ್ಧಿಯಲ್ಲಿ ಈಗ ಖುಷಿಯಿದೆ, ಖುಷಿಯಲ್ಲಿ ಯಾರಿಗೆ ರೋಮಾಂಚನವಾಗುವುದಿಲ್ಲವೋ ಅವರು ಶಿವತಂದೆಯನ್ನು ನೆನಪು ಮಾಡುವುದಿಲ್ಲವೆಂದರ್ಥ ಆಗಿದೆ. ಅಂದಾಗ ಇವರ ಜ್ಞಾನದ ನೇತ್ರವು ಸ್ವಲ್ಪವೇ ತೆರೆದಿದೆ, ಮಂಜು-ಮಂಜಾಗಿ ಕಾಣುತ್ತಿದೆಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ- ಯಾರಿಗೇ ಆದರೂ ಸಂಕ್ಷಿಪ್ತವಾಗಿ ತಿಳಿಸಬೇಕಾಗಿದೆ. ದೊಡ್ಡ-ದೊಡ್ಡ ಮೇಳವಾಗುತ್ತದೆ. ಮಕ್ಕಳಿಗೆ ತಿಳಿದಿದೆ- ಸರ್ವೀಸ್ ಮಾಡುವುದಕ್ಕಾಗಿ ವಾಸ್ತವದಲ್ಲಿ ಒಂದು ಚಿತ್ರವಷ್ಟೇ ಸಾಕು. ಭಲೆ ಗೋಲದ ಚಿತ್ರವಿದ್ದರೂ ಪರವಾಗಿಲ್ಲ. ತಂದೆಯು ಡ್ರಾಮಾ ಮತ್ತು ವೃಕ್ಷದ ಅಥವ ಕಲ್ಪವೃಕ್ಷದ ಮತ್ತು 84 ಜನ್ಮಗಳ ಚಕ್ರದ ರಹಸ್ಯವನ್ನು ತಿಳಿಸುತ್ತಾರೆ. ಬ್ರಹ್ಮಾರವರ ಮೂಲಕ ತಂದೆಯ ಆಸ್ತಿಯು ಸಿಗುತ್ತದೆ. ಇದೂ ಸಹ ಬಹಳ ಸ್ಪಷ್ಟವಾಗಿರುವುದಾಗಿದೆ. ಈ ಒಂದು ಚಿತ್ರದಲ್ಲಿ ಎಲ್ಲವೂ ಬಂದುಬಿಡುತ್ತದೆ ಮತ್ತು ಇಷ್ಟೆಲ್ಲಾ ಚಿತ್ರಗಳ ಅವಶ್ಯಕತೆಯೂ ಇಲ್ಲ. ಇವೆರಡು ಚಿತ್ರಗಳು ಬಹಳದೊಡ್ಡ ಅಕ್ಷರಗಳಲ್ಲಿರಲಿ, ಬರವಣಿಗೆಯೂ ಇರಬೇಕು. ಜೀವನ್ಮುಕ್ತಿಯು ಈಶ್ವರೀಯ ಜನ್ಮಸಿದ್ಧ ಅಧಿಕಾರವಾಗಿದೆ, ಮುಂದೆಬರುವ ವಿನಾಶಕ್ಕೆ ಮೊದಲೇ ಈ ಜನ್ಮಸಿದ್ಧ ಅಧಿಕಾರವನ್ನು ಪಡೆಯಿರಿ. ವಿನಾಶವು ಅವಶ್ಯವಾಗಿ ಆಗಲೇಬೇಕಾಗಿದೆ. ಡ್ರಾಮಾದ ಯೋಜನೆಯನುಸಾರವಾಗಿ ಸ್ವಯಂ ತಿಳಿದುಕೊಳ್ಳುತ್ತಾರೆ, ನೀವು ತಿಳಿಸುವ ಅವಶ್ಯಕತೆಯಿರುವುದಿಲ್ಲ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ, ಇದು ಸರಿಯಾಗಿ ನೆನಪಿರಬೇಕು ಆದರೆ ಮಾಯೆಯು ನಿಮ್ಮಿಂದ ಮರೆಸಿಬಿಡುತ್ತದೆ, ಸಮಯವು ವ್ಯರ್ಥವಾಗಿ ಹೋಗುತ್ತದೆ. ಬಹಳ ಕಳೆದುಹೋಯಿತು, ಸ್ವಲ್ಪವೇ ಉಳಿದಿದೆಯೆಂದು ಗಾಯನವಿದೆಯಲ್ಲವೆ. ವಿನಾಶವಾಗುವುದರಲ್ಲಿ ಸ್ವಲ್ಪಸಮಯವಿದೆ, ಆ ಸ್ವಲ್ಪದರಲ್ಲಿಯೂ ಕಡಿಮೆಯಾಗುತ್ತಿದೆ. ಮತ್ತೇನಾಗುತ್ತದೆಯೆಂದು ವಿಚಾರ ಮಾಡಬೇಕಾಗುತ್ತದೆ. ಈಗ ಜಾಗೃತರಾಗುವುದಿಲ್ಲ, ಕೊನೆಯಲ್ಲಿ ಜಾಗೃತಗೊಳ್ಳುತ್ತಾರೆ ಕಣ್ಣುಗಳು ತೆರೆಯುತ್ತದೆ. ಈ ಸ್ಥೂಲ ಕಣ್ಣುಗಳಲ್ಲ, ಬುದ್ಧಿಯ ಕಣ್ಣಿನ ಜಾಗೃತಿಯಾಗಿದೆ. ಚಿಕ್ಕ-ಚಿಕ್ಕ ಚಿತ್ರಗಳಿಂದ ಮಜಾ ಬರುವುದಿಲ್ಲ. ದೊಡ್ಡ-ದೊಡ್ಡಚಿತ್ರಗಳು ತಯಾರು ಮಾಡಲಾಗುತ್ತದೆ, ವಿಜ್ಞಾನವೂ ಸಹ ಎಷ್ಟೊಂದು ಸಹಯೋಗ ಕೊಡುತ್ತದೆ. ವಿನಾಶದಲ್ಲಿ ತತ್ವಗಳೂ ಸಹ ಸಹಾಯ ಮಾಡುತ್ತದೆ. ಕವಡೆಯಷ್ಟು ಖರ್ಚಿಲ್ಲದೆಯೇ ತಮಗೆ ಎಷ್ಟೊಂದು ಸಹಯೋಗ ಕೊಡುತ್ತದೆ. ನಿಮಗಾಗಿ ಎಲ್ಲವನ್ನೂ ಸ್ವಚ್ಛ ಮಾಡಿಬಿಡುತ್ತದೆ. ಇದು ಸಂಪೂರ್ಣ ಛೀ ಛೀ ಪ್ರಪಂಚವಾಗಿದೆ. ಅಜ್ಮೀರ್ನಲ್ಲಿ ಸ್ವರ್ಗದ ನೆನಪಾರ್ಥವಿದೆ, ಇಲ್ಲಿ ದಿಲ್ವಾಡಾ ಮಂದಿರದಲ್ಲಿ ಸ್ಥಾಪನೆಯ ನೆನಪಾರ್ಥವಿದೆ ಆದರೆ ಇದರಿಂದ ಮನುಷ್ಯರು ಅರಿತುಕೊಳ್ಳುವುದೇ ಇಲ್ಲ. ಈಗ ನೀವು ಬುದ್ಧಿವಂತರಾಗಿದ್ದೀರಿ. ವಿನಾಶವಾಗುತ್ತದೆಯೋ ಅಥವ ಇಲ್ಲವೋ ಅರ್ಥವಾಗುತ್ತಿಲ್ಲವೆಂದು ಮನುಷ್ಯರು ಭಲೆ ಹೇಳಬಹುದು. ಒಂದು ಕಥೆಯಿದೆಯಲ್ಲವೆ- ಹುಲಿ ಬಂದಿತು, ಹುಲಿ ಬಂದಿತು... ಎಂದು ನಿತ್ಯವೂ ಹೇಳುತ್ತಿದ್ದರು, ಅದನ್ನು ಯಾರೂ ನಂಬುತ್ತಿರಲಿಲ್ಲ. ಒಂದುದಿನ ಹುಲಿಯು ಬಂದುಬಿಟ್ಟಿತು, ಎಲ್ಲಾ ಹಸುಗಳನ್ನು ತಿಂದುಬಿಟ್ಟಿತು. ಈ ಹಳೆಯ ಪ್ರಪಂಚವು ಹೋಯಿತೆಂದರೆ ಹೋಯಿತು, ಬಹಳಷ್ಟು ಹೋಯಿತು ಸ್ವಲ್ಪವೇ ಉಳಿದುಕೊಂಡಿದೆ ಎಂದೂ ಸಹ ನೀವು ಹೇಳುತ್ತಿರುತ್ತೀರಿ. ಇದರ ಪೂರ್ಣಜ್ಞಾನವು ತಾವು ಮಕ್ಕಳ ಬುದ್ಧಿಯಲ್ಲಿರಬೇಕು. ಆತ್ಮವೇ ಧಾರಣೆ ಮಾಡುತ್ತದೆ, ತಂದೆಯಲ್ಲಿಯೇ ಜ್ಞಾನವಿರುವುದಾಗಿದೆ. ಅವರು ಯಾವಾಗ ಶರೀರವನ್ನು ಧಾರಣೆ ಮಾಡುತ್ತಾರೆಯೋ ಆಗ ಜ್ಞಾನವನ್ನು ಕೊಡುತ್ತಾರೆ. ಅವಶ್ಯವಾಗಿ ಅವರಲ್ಲಿ ಜ್ಞಾನವಿದೆ, ಆದ್ದರಿಂದಲೇ ಅವರನ್ನು ಜ್ಞಾನಸಾಗರ, ಪರಮಾತ್ಮನೆಂದು ಹೇಳಲಾಗುತ್ತದೆ. ಅವರು ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದಾರೆ. ತನ್ನನ್ನು ಅರಿತಿದ್ದಾರಲ್ಲವೆ ಮತ್ತು ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆಯೆನ್ನುವ ಜ್ಞಾನವೂ ಇದೆ ಆದ್ದರಿಂದ ಆಂಗ್ಲಭಾಷೆಯಲ್ಲಿ ನಾಲೆಡ್ಜ್ ಫುಲ್ ಎಂದು ಹೇಳಲಾಗುತ್ತದೆ. ಇದು ಬಹಳ ಚೆನ್ನಾಗಿ ಬುದ್ಧಿಯಲ್ಲಿರಬೇಕು. ಎಲ್ಲರ ಬುದ್ಧಿಯಲ್ಲಿ ಏಕರಸವಾಗಿ ಧಾರಣೆಯಾಗುವುದಿಲ್ಲ. ಭಲೆ ಬರೆಯುತ್ತಾರೆ ಆದರೆ ಧಾರಣೆಯಿರುವುದಿಲ್ಲ. ನಾಮಮಾತ್ರಕ್ಕೆ ಬರೆಯುತ್ತಾರೆ, ವಾಸ್ತವದಲ್ಲಿ ಅವರು ಯಾರಿಗೂ ತಿಳಿಸುವುದಿಲ್ಲ. ಕೇವಲ ಕಾಗದಕ್ಕೆ ತಿಳಿಸುತ್ತಾರಷ್ಟೆ, ಕಾಗದವೇನು ಮಾಡುತ್ತದೆ? ಕಾಗದದಿಂದ ಯಾರೂ ಸಹ ಅರಿತುಕೊಳ್ಳುವುದಿಲ್ಲ. ಈ ದೊಡ್ಡ-ದೊಡ್ಡಚಿತ್ರಗಳಿಂದ ಬಹಳ ಚೆನ್ನಾಗಿ ಅರಿತುಕೊಳ್ಳುತ್ತಾರೆ. ಇದು ಬಹಳ ಶ್ರೇಷ್ಠವಾದ ಜ್ಞಾನವಾಗಿರುವುದರಿಂದ ಅಕ್ಷರವೂ ಸಹ ದೊಡ್ಡ-ದೊಡ್ಡದಾಗಿರಬೇಕು, ಈ ದೊಡ್ಡಚಿತ್ರಗಳನ್ನು ಮನುಷ್ಯರು ನೋಡಿ ತಿಳಿಯುತ್ತಾರೆ- ಇದರಲ್ಲಿ ಅವಶ್ಯವಾಗಿ ಏನೋ ಸಾರವಿದೆ. ಸ್ಥಾಪನೆ ಮತ್ತು ವಿನಾಶವೆಂದು ಬರೆಯಲಾಗಿದೆ, ರಾಜಧಾನಿಯ ಸ್ಥಾಪನೆಯು ಈಶ್ವರೀಯ ಜನ್ಮಸಿದ್ಧ ಅಧಿಕಾರವಾಗಿದೆ, ಪ್ರತಿಯೊಂದು ಮಗುವಿನ ಜೀವನ್ಮುಕ್ತಿಯ ಅಧಿಕಾರವಿದೆ ಅಂದಮೇಲೆ ಎಲ್ಲರೂ ಜೀವನಬಂಧನದಲ್ಲಿದ್ದಾರೆ. ಇವರನ್ನು ಜೀವನಬಂಧನದಿಂದ ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುವುದು ಹೇಗೆ ಎಂದು ಮಕ್ಕಳ ಬುದ್ಧಿಯಲ್ಲಿ ವಿಚಾರವು ಬರಬೇಕು. ಮೊದಲು ಶಾಂತಿಧಾಮಕ್ಕೆ ಹೋಗುತ್ತೀರಿ ನಂತರ ಸುಖಧಾಮದಲ್ಲಿ ಬರುತ್ತೀರಿ. ಸುಖಧಾಮಕ್ಕೆ ಜೀವನ್ಮುಕ್ತಿಯೆಂದು ಹೇಳಲಾಗುತ್ತದೆ. ಈ ಚಿತ್ರವು ವಿಶೇಷವಾಗಿ ದೊಡ್ಡ-ದೊಡ್ಡದಾಗಿ ಮಾಡಿಸಬೇಕಾಗಿದೆ. ಮುಖ್ಯವಾದ ಚಿತ್ರವಾಗಿದೆಯಲ್ಲವೆ! ಬಹಳ ದೊಡ್ಡ-ದೊಡ್ಡ ಅಕ್ಷರಗಳಲ್ಲಿರಬೇಕು. ಇದರಿಂದ ಮನುಷ್ಯರು ಹೇಳುತ್ತಾರೆ- ಈ ಬ್ರಹ್ಮಾಕುಮಾರ-ಕುಮಾರಿಯರು ಇಷ್ಟು ದೊಡ್ಡಚಿತ್ರಗಳನ್ನು ಮಾಡಿಸಿದ್ದಾರೆ ಅಂದಮೇಲೆ ಅವಶ್ಯವಾಗಿ ಏನೋ ತಿಳುವಳಿಕೆಯಿದೆ. ಆದ್ದರಿಂದ ಎಲ್ಲಿ ನೋಡಿದರಲ್ಲಿ ನಿಮ್ಮ ದೊಡ್ಡಚಿತ್ರಗಳನ್ನು ಹಾಕಿರಬೇಕು. ಅದರಿಂದ ಇವೆಲ್ಲಾ ಏನೆಂದು ಮನುಷ್ಯರು ಕೇಳುತ್ತಾರೆ, ತಾವು ತಿಳಿಸಿರಿ- ಇಷ್ಟೆಲ್ಲಾ ದೊಡ್ಡಚಿತ್ರಗಳನ್ನು ತಾವು ತಿಳಿದುಕೊಳ್ಳುವುದಕ್ಕಾಗಿ ಮಾಡಲಾಗಿದೆ. ಇದರಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟಿದೆ. ಬೇಹದ್ದಿನ ಆಸ್ತಿಯು ಇವರಿಗಿತ್ತು, ಇದು ನೆನ್ನೆಯ ಮಾತಾಗಿದೆ, ಈಗ ಅವರಿಲ್ಲ ಏಕೆಂದರೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಳಗೆ ಬಂದುಬಿಟ್ಟಿದ್ದಾರೆ. ಸತೋಪ್ರಧಾನದಿಂದ ತಮೋಪ್ರಧಾನರಾಗಲೇಬೇಕಾಗಿದೆ. ಜ್ಞಾನ ಮತ್ತು ಭಕ್ತಿ, ಪೂಜ್ಯ ಮತ್ತು ಪೂಜಾರಿಯ ಆಟವಾಗಿದೆಯಲ್ಲವೆ. ಪೂರ್ಣಆಟವು ಅರ್ಧ-ಅರ್ಧವಾಗಿ ಮಾಡಲ್ಪಟ್ಟಿದೆ ಅಂದಮೇಲೆ ಇಂತಹ ದೊಡ್ಡ-ದೊಡ್ಡ ಚಿತ್ರಗಳನ್ನು ಮಾಡಿಸುವ ಸಾಹಸವಿರಬೇಕು, ಸರ್ವೀಸಿನ ಉಮ್ಮಂಗವಿರಬೇಕು. ದೆಹಲಿಯಲ್ಲಿ ಮೂಲೆ-ಮೂಲೆಯಲ್ಲಿಯೂ ಸರ್ವೀಸ್ ಮಾಡಬೇಕು, ಮೇಳದಲ್ಲಿ ಬಹಳಮಂದಿ ಓದುತ್ತಾರೆ, ಈ ಚಿತ್ರಗಳು ನಿಮಗೆ ಕೆಲಸಕ್ಕೆ ಬರುತ್ತದೆ. ಅದರಲ್ಲಿಯೂ ತ್ರಿಮೂರ್ತಿ, ಗೋಲ ಮುಖ್ಯಚಿತ್ರವಾಗಿದೆ. ಇವು ಬಹಳ ಒಳ್ಳೆಯ ಚಿತ್ರಗಳಾಗಿವೆ, ಇವು ಅಂಧರ ಮುಂದೆ ಕನ್ನಡಿಯಿದ್ದಂತೆ. ಅಂಧರಿಗೆ ಓದಿಸಲಾಗುತ್ತದೆ, ಓದುವುದಂತು ಆತ್ಮವಲ್ಲವೆ ಆದರೆ ಆತ್ಮದ ಕರ್ಮೆಂದ್ರಿಯಗಳು ಚಿಕ್ಕದಾಗಿರುವುದರಿಂದ ಓದಿಸುವುದಕ್ಕಾಗಿ ಚಿತ್ರಗಳನ್ನು ತೋರಿಸಲಾಗುತ್ತದೆ. ನಂತರ ಸ್ವಲ್ಪ ದೊಡ್ಡವರಾದಾಗ ಪ್ರಪಂಚದ ನಕ್ಷೆಯನ್ನು ತೋರಿಸುತ್ತಾರೆ ಮತ್ತು ಆ ನಕ್ಷೆಯು ಬುದ್ಧಿಯಲ್ಲಿರುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿ ಪೂರ್ಣನಾಟಕದ ನಕ್ಷೆಯಿದೆ, ಅದರಲ್ಲಿ ಇಷ್ಟೆಲ್ಲಾ ಧರ್ಮಗಳಿವೆ, ನಂತರದಲ್ಲಿ ನಂಬರ್ವಾರ್ ಬರುತ್ತಾರೆ ಮತ್ತು ಹೋಗುತ್ತಾರೆ, ಇದೊಂದೇ ಆದಿಸನಾತನ ದೇವಿ-ದೇವತಾ ಧರ್ಮವಾಗಿದೆ, ಇದಕ್ಕೆ ಸ್ವರ್ಗವೆಂದು ಹೇಳುತ್ತಾರೆ. ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸುವುದರಿಂದ ಪತಿತ ಆತ್ಮವು ಪಾವನವಾಗಿಬಿಡುತ್ತದೆ. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ, ಯೋಗವೆಂದರೆ ನೆನಪು. ತಂದೆಯಾದ ನನ್ನನ್ನು ನೆನಪು ಮಾಡಿ ಎಂದು ಪಾರಲೌಕಿಕ ತಂದೆಯು ಹೇಳಬೇಕಾಗುತ್ತದೆ ಆದರೆ ಲೌಕಿಕ ತಂದೆಯು ಹೇಳಬೇಕಾಗುವುದಿಲ್ಲ, ಮಕ್ಕಳು ತಾವಾಗಿಯೇ ಅಪ್ಪ-ಅಮ್ಮ ಎಂದು ಹೇಳುತ್ತಿರುತ್ತಾರೆ. ಅವರು ಲೌಕಿಕ ಮಾತಾ-ಪಿತ ಆಗಿದ್ದಾರೆ, ಇವರು ಪಾರಲೌಕಿಕ ಪಿತನಾಗಿದ್ದಾರೆ. ನಿಮ್ಮ ಕೃಪೆಯಿಂದ ಅಪಾರ ಸುಖವು ಸಿಗುತ್ತದೆಯೆಂಬ ಗಾಯನವಿದೆ, ಯಾರಿಗೆ ದುಃಖವಿದೆಯೋ ಅವರೇ ಹಾಡುತ್ತಾರೆ. ಸುಖದಲ್ಲಿ ಹಾಡುವ ಅವಶ್ಯಕತೆಯೇ ಇರುವುದಿಲ್ಲ. ದುಃಖದಲ್ಲಿದ್ದಾರೆ ಆದ್ದರಿಂದಲೇ ಕರೆಯುತ್ತಾರೆ. ಇವರು ಮಾತಾಪಿತನಾಗಿದ್ದಾರೆ ಎಂಬುದನ್ನೀಗ ನೀವು ಅರಿತುಕೊಂಡಿದ್ದೀರಿ. ನಾನು ನಿಮಗೆ ದಿನ-ಪ್ರತಿದಿನ ಗುಹ್ಯಾತಿಗುಹ್ಯ ಮಾತುಗಳನ್ನು ತಿಳಿಸುತ್ತೇನೆ. ಮಾತಾಪಿತ ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದು ನಿಮಗೆ ಮೊದಲಿನಿಂದಲೇ ತಿಳಿದುಕೊಂಡಿದ್ದಿರಾ? ತಂದೆಯೆಂದು ಅವರಿಗೇ ಹೇಳಲಾಗುತ್ತದೆ, ಬ್ರಹ್ಮಾರವರ ಮೂಲಕ ತಂದೆಯ ಆಸ್ತಿಯು ಸಿಗುತ್ತದೆ, ತಾಯಿಯೂ ಇರಬೇಕಲ್ಲವೆ ಏಕೆಂದರೆ ಮಕ್ಕಳನ್ನು ದತ್ತು ಮಾಡಿಕೊಳ್ಳಬೇಕಾಗಿದೆ, ಈ ಮಾತುಗಳು ಯಾರ ಗಮನದಲ್ಲಿಯೂ ಬರುವುದಿಲ್ಲ ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ- ಮಧುರಾತಿ ಮಧುರ ಮಕ್ಕಳೇ, ತಂದೆಯನ್ನು ನೆನಪು ಮಾಡಿರಿ, ಲಕ್ಷ್ಯವು ಸಿಕ್ಕಿತೆಂದರೆ ಮತ್ತೆಲ್ಲಿಯಾದರೂ ಹೋಗಿರಿ, ವಿದೇಶಕ್ಕೇ ಹೋಗಿರಿ, ಕೋರ್ಸನ್ನು ತಿಳಿದುಕೊಂಡಿರೆಂದರೆ ಸಾಕು. ತಂದೆಯಿಂದ ಆಸ್ತಿಯನ್ನು ಪಡೆಯಲೇಬೇಕು, ಆತ್ಮರು ನೆನಪಿನಿಂದಲೇ ಪಾವನವಾಗುತ್ತಾರೆ. ಸ್ವರ್ಗದ ಮಾಲೀಕನಾಗುತ್ತೇವೆ ಎಂಬ ಲಕ್ಷ್ಯವು ಬುದ್ಧಿಯಲ್ಲಿದೆಯೆಂದರೆ ಭಲೆ ಮತ್ತೆಲ್ಲಿಯಾದರೂ ಹೋಗಿರಿ, ಗೀತಾಜ್ಞಾನದ ಸಾರವು ಈ ಬ್ಯಾಡ್ಜ್ನಲ್ಲಿದೆ. ಏನು ಮಾಡಬೇಕು ಎಂದು ಯಾರನ್ನೂ ಕೇಳುವ ಅವಶ್ಯಕತೆಯಿಲ್ಲ. ತಂದೆಯಿಂದ ಆಸ್ತಿಯನ್ನು ಪಡೆಯಬೇಕೆಂದರೆ ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕು. ನೀವು ಈ ಆಸ್ತಿಯನ್ನು ತಂದೆಯಿಂದ ಅನೇಕಬಾರಿ ಪಡೆದಿದ್ದೀರಿ. ಶಿಕ್ಷಕನಿಂದ ಓದಿಕೊಂಡು ಯಾವುದಾದರೊಂದು ಪದವಿಯನ್ನು ಪಡೆದುಕೊಳ್ಳುತ್ತಾರೆ, ವಿದ್ಯೆಯಲ್ಲಿ ಬುದ್ಧಿಯೋಗವು ಶಿಕ್ಷಕನೊಂದಿಗೆ ಇರುತ್ತದೆಯಲ್ಲವೆ. ಪರೀಕ್ಷೆಯು ಬಹಳ ದೊಡ್ಡದಾಗಿ ಇರಬಹುದು ಅಥವ ಚಿಕ್ಕದಾಗಿರಬಹುದು, ಆದರೆ ಓದುವುದಂತು ಆತ್ಮವಲ್ಲವೆ! ಇವರ (ಬ್ರಹ್ಮಾ) ಆತ್ಮವು ಓದುತ್ತಿದೆಯಲ್ಲವೆ. ಶಿಕ್ಷಕನನ್ನು ಮತ್ತು ಗುರಿ-ಉದ್ದೇಶವನ್ನು ನೆನಪು ಮಾಡಬೇಕಾಗಿದೆ, ಸೃಷ್ಟಿ ಚಕ್ರವನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು. ದೈವೀಗುಣಗಳನ್ನು ಧಾರಣೆ ಮಾಡಬೇಕಾಗಿದೆ. ಧಾರಣೆಯನ್ನು ಎಷ್ಟು ಮಾಡಿಕೊಳ್ಳುತ್ತೀರೋ ಅಷ್ಟು ಶ್ರೇಷ್ಠಪದವಿಯನ್ನು ಪಡೆಯುತ್ತೀರಿ. ಚೆನ್ನಾಗಿ ನೆನಪು ಮಾಡುತ್ತೀರುತ್ತೀರೆಂದರೆ ಪುನಃ ಇಲ್ಲಿಗೆ (ಮಧುಬನ) ಬರುವ ಅವಶ್ಯಕತೆ ಏನಿದೆ? ಆದರೂ ಪುನಃ ಬರುತ್ತಾರೆ. ಇಂತಹ ಶ್ರೇಷ್ಟ ತಂದೆ, ಯಾರಿಂದ ಬೇಹದ್ದಿನ ಆಸ್ತಿ ಸಿಗುತ್ತದೆ, ಅಂತಹ ತಂದೆಯನ್ನು ಮಿಲನ ಮಾಡಿ ಹೋಗಲಿ. ಎಲ್ಲರೂ ಮಂತ್ರವನ್ನು ತೆಗೆದುಕೊಂಡು ಬರುತ್ತಾರೆ. ನಮಗಂತೂ ಬಹಳ ದೊಡ್ಡ ಮಂತ್ರ ಸಿಗುತ್ತದೆ. ಜ್ಞಾನವಂತೂ ಬುದ್ಧಿಯಲ್ಲಿ ಚೆನ್ನಾಗಿದೆ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ವಿನಾಶಿ ಸಂಪಾದನೆಯಹಿಂದೆ ಅಧಿಕ ಸಮಯವನ್ನು ವ್ಯರ್ಥ ಮಾಡಬಾರದು. ಅದೆಲ್ಲವೂ ಮಣ್ಣುಪಾಲಾಗಿಬಿಡುತ್ತದೆ. ತಂದೆಗೆ ಏನಾದರೂ ಬೇಕಾಗಿದೆಯೇ? ಏನೂ ಇಲ್ಲ. ಏನಾದರೂ ಖರ್ಚು ಮಾಡುತ್ತೀರೆಂದರೆ ತಮಗಾಗಿಯೇ ಮಾಡುತ್ತೀರಿ. ಇದರಲ್ಲಿ ಒಂದುಪೈಸೆಯಷ್ಟು ಖರ್ಚು ಮಾಡಬೇಕಾಗಿಲ್ಲ, ಯುದ್ಧಕ್ಕಾಗಿ ಯಾವುದೇ ಬಂದೂಕು ಹಾಗೂ ಟ್ಯಾಂಕುಗಳನ್ನು ಖರೀದಿಸಬೇಕಾಗಿಲ್ಲ, ಯಾವುದೇ ಖರ್ಚಿಲ್ಲ. ನೀವು ಯುದ್ಧ ಮಾಡುತ್ತಿದ್ದರೂ ಇಡೀ ಪ್ರಪಂಚದಿಂದ ಗುಪ್ತವಾಗಿದ್ದೀರಿ. ನಿಮ್ಮ ಯುದ್ಧವು ಹೇಗಿದೆ ನೋಡಿ! ಇದಕ್ಕೆ ಯೋಗಬಲವೆಂದು ಹೇಳಲಾಗುತ್ತದೆ. ಇದರಲ್ಲಿ ಎಲ್ಲವೂ ಗುಪ್ತಮಾತಾಗಿದೆ, ಇದರಲ್ಲಿ ಯಾರನ್ನೂ ಸಾಯಿಸುವ ಅವಶ್ಯಕತೆಯಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಇವರೆಲ್ಲರ ಮೃತ್ಯುವು ನಾಟಕದಲ್ಲಿ ನಿಗಧಿಯಾಗಿದೆ. ಪ್ರತೀ 5000 ವರ್ಷಗಳ ನಂತರ ಯೋಗಬಲವನ್ನು ಜಮಾ ಮಾಡಿಕೊಳ್ಳಲು ನೀವು ವಿದ್ಯೆಯನ್ನು ಓದುತ್ತೀರಿ. ವಿದ್ಯಾಭ್ಯಾಸವು ಮುಕ್ತಾಯವಾಯಿತೆಂದರೆ ಮತ್ತೆ ಹೊಸಪ್ರಪಂಚಕ್ಕೆ ಬರಬೇಕಾಗಿದೆ. ಈ ಹಳೆಯ ಪ್ರಪಂಚಕ್ಕಾಗಿ ಪ್ರಾಕೃತಿಕ ವಿಕೋಪಗಳಾಗುತ್ತವೆ. ಗಾಯನವೂ ಇದೆಯಲ್ಲವೆ- ತಮ್ಮ ಕುಲದ ವಿನಾಶವನ್ನು ಹೇಗೆ ಮಾಡಿಕೊಳ್ಳುತ್ತಾರೆ, ಯಾದವರದು ಎಷ್ಟು ದೊಡ್ಡಕುಲವಿದೆಯೆಂದರೆ ಇಡೀ ಯುರೋಪ್ ಬಂದುಬಿಡುತ್ತದೆ. ನೀವು ಇಡೀವಿಶ್ವದ ಮೇಲೆ ಜಯಗಳಿಸುತ್ತೀರಿ. ಈ ಲಕ್ಷ್ಮೀ-ನಾರಾಯಣರಂತು ಪವಿತ್ರರಾಗಿರುತ್ತಾರೆ, ಅಲ್ಲಿ ವಿಕಾರಿದೃಷ್ಟಿಯೇ ಇರುವುದಿಲ್ಲ. ಮುಂದೆಹೋದಂತೆ ತಮಗೆ ಬಹಳಷ್ಟು ಸಾಕ್ಷಾತ್ಕಾರವಾಗುತ್ತದೆ. ತನ್ನ ದೇಶದ ಸಮೀಪಕ್ಕೆ ಬಂದಾಗ ಅಲ್ಲಿನ ವೃಕ್ಷಗಳು ಸ್ಪಷ್ಟವಾಗಿ ಕಾಣಿಸುತ್ತದೆಯಲ್ಲವೆ. ನಾವು ನಮ್ಮ ಮನೆಯ ಸಮೀಪದಲ್ಲಿ ತಲುಪುತ್ತಿದ್ದೇವೆಂದು ಖುಷಿಯಾಗುತ್ತದೆ. ಅದೇರೀತಿ ತಾವೂ ಸಹ ಮನೆಗೆ ಹೊರಡುತ್ತಿದ್ದೀರಿ, ನಂತರ ತಮ್ಮ ಸುಖಧಾಮಕ್ಕೆ ಬರುತ್ತೀರಿ. ಸ್ವರ್ಗವನ್ನು ಬಿಟ್ಟುಬಂದು ಎಷ್ಟು ಸಮಯವಾಗಿದೆ! ಅದರಲ್ಲಿ ಇನ್ನು ಸ್ವಲ್ಪಸಮಯವಿದೆಯಷ್ಟೆ. ಈಗ ಸ್ವರ್ಗವು ಮತ್ತೆ ಸಮೀಪಕ್ಕೆ ಬಂದಿದೆ. ಈಗ ನಿಮ್ಮ ಬುದ್ಧಿಯು ಮೇಲೆ ಹೋಗುತ್ತದೆ, ಅದು ನಿರಾಕಾರಿ ಪ್ರಪಂಚವಾಗಿದೆ. ಅದಕ್ಕೆ ಬ್ರಹ್ಮಾಂಡವೆಂದೂ ಹೇಳಲಾಗುತ್ತದೆ, ನಾವು ಅಲ್ಲಿನ ನಿವಾಸಿಯಾಗಿದ್ದೇವೆ. ಇಲ್ಲಿ 84 ಜನ್ಮಗಳ ಪಾತ್ರವನ್ನಭಿನಯಿಸಿದೆವು, ಈಗ ಹಿಂತಿರುಗಿ ಮನೆಗೆ ಹೋಗುತ್ತೇವೆ. ಮಕ್ಕಳು ಆಲ್ರೌಂಡ್ ಪಾತ್ರಧಾರಿಗಳಾಗಿದ್ದೀರಿ. ಪ್ರಾರಂಭದಿಂದ ಪೂರ್ಣವಾಗಿ 84 ಜನ್ಮಗಳನ್ನು ತೆಗೆದುಕೊಳ್ಳುವವರಾಗಿದ್ದೀರಿ, ನಂತರದಲ್ಲಿ ಬರುವವರಿಗೆ ಸರ್ವತೋಮುಖ ಪಾತ್ರಧಾರಿಗಳೆಂದು ಹೇಳುವುದಿಲ್ಲ. ಕನಿಷ್ಟ ಮತ್ತು ಗರಿಷ್ಟದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಂದೆಯು ತಿಳಿಸಿದ್ದಾರೆ. ಕನಿಷ್ಟವೆಂದರೆ 1 ಜನ್ಮವಿದೆ, ಅಂತ್ಯದಲ್ಲಿ ಎಲ್ಲರೂ ಹಿಂತಿರುಗಿ ಹೊರಟುಹೋಗುತ್ತಾರೆ. ಆಟವು ಪೂರ್ಣವಾಯಿತೆಂದರೆ ಎಲ್ಲವೂ ಸಮಾಪ್ತಿ. ಈಗ ತಂದೆಯು ತಿಳಿಸುತ್ತಾರೆ- ನನ್ನನ್ನು ನೆನಪು ಮಾಡಿ, ಅದರಿಂದ ಅಂತ್ಯಮತಿ ಸೋ ಗತಿಯಾಗಿಬಿಡುತ್ತದೆ, ತಂದೆಯ ಬಳಿ ಪರಮಧಾಮಕ್ಕೆ ಹೋಗುತ್ತೀರಿ. ಅದಕ್ಕೆ ಮುಕ್ತಿಧಾಮವೆಂದೂ ಹೇಳಲಾಗುತ್ತದೆ. ಶಾಂತಿಧಾಮದ ನಂತರ ಸುಖಧಾಮ, ಇದು ದುಃಖಧಾಮವಾಗಿದೆ. ಪ್ರತಿಯೊಬ್ಬರೂ ಸಹ ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಕನಿಷ್ಟವೆಂದರೆ ಒಂದು ಜನ್ಮವಿದ್ದರೂ ಸಹ ಈ ನಾಲ್ಕೂಸ್ಥಿತಿಯನ್ನು ಪಾರು ಮಾಡುತ್ತಾರೆ. ತಂದೆಯು ಮಕ್ಕಳಿಗೆ ಎಷ್ಟುಚೆನ್ನಾಗಿ ತಿಳಿಸಿಕೊಡುತ್ತಾರೆ, ಆದರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ, ತಂದೆಯನ್ನು ಮರೆತುಬಿಡುತ್ತಾರೆ. ನಂಬರ್ವಾರಂತು ಇರುವರಲ್ಲವೆ. ಮಕ್ಕಳಿಗೆ ತಿಳಿದಿದೆ- ನಂಬರ್ವಾರ್ ಪುರುಷಾರ್ಥದನುಸಾರವಾಗಿ ರುದ್ರಮಾಲೆಯಾಗುತ್ತದೆ. ಎಷ್ಟು ಕೋಟ್ಯಾಂತರ ಆತ್ಮರ ರುದ್ರಮಾಲೆಯಿದೆ, ಇದು ಬೇಹದ್ದಿನ ವಿಶ್ವದ ಮಾಲೆಯಾಗಿದೆ. ಬ್ರಹ್ಮಾ ಸೋ ವಿಷ್ಣು, ವಿಷ್ಣು ಸೋ ಬ್ರಹ್ಮಾ- ಇಬ್ಬರ ಉಪನಾಮವನ್ನು ನೋಡಿರಿ- ಇದು ಪ್ರಜಾಪಿತ ಬ್ರಹ್ಮಾರವರ ಹೆಸರಾಗಿದೆ, ಅರ್ಧಕಲ್ಪದ ನಂತರ ರಾವಣನು ಬರುತ್ತಾನೆ. ಮೊದಲು ದೇವತಾಧರ್ಮ ನಂತರ ಇಸ್ಲಾಂಧರ್ಮ, ಅವರು ಆದಂ-ಬೀಬಿಯನ್ನು ನೆನಪು ಮಾಡುತ್ತಾರೆ. ಪ್ಯಾರಡೈಸ್ನ್ನು ನೆನಪು ಮಾಡುತ್ತಾರೆ ಎಂದರೆ ಭಾರತವು ಪ್ಯಾರಡೈಸ್ ಸ್ವರ್ಗವಾಗಿತ್ತು. ತಂದೆಯು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರು ಸರ್ವ ಶ್ರೇಷ್ಠ ವಿದ್ಯೆಯನ್ನು ಓದಿಸುತ್ತಾರೆ, ಅದರಿಂದ ಸರ್ವ ಶ್ರೇಷ್ಠ ಪದವಿಯು ಸಿಗುತ್ತದೆ- ಇದರಿಂದ ಮಕ್ಕಳಿಗೆ ಖುಷಿಯಾಗಬೇಕು. ಎಲ್ಲರಿಗಿಂತ ಸರ್ವಶ್ರೇಷ್ಠ ಶಿಕ್ಷಕನು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗುವ ಸದ್ಗುರುವೂ ಆಗಿದ್ದಾರೆ. ಇಂತಹ ತಂದೆಯ ನೆನಪು ಏಕೆ ಇರುವುದಿಲ್ಲ! ಇದರಲ್ಲಿ ಖುಷಿಯ ನಶೆಯೇರಿರಬೇಕು. ಆದರೆ ಇದು ಯುದ್ಧದ ಮೈದಾನವಾಗಿರುವುದರಿಂದ ಮಾಯೆಯು ಸ್ಥಿರವಾಗಿರಲು ಬಿಡುವುದಿಲ್ಲ. ಪದೇ-ಪದೇ ಬೀಳುತ್ತಿರುತ್ತಾರೆಂದರೆ ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೆನಪಿನಿಂದಲೇ ಮಾಯಾಜೀತರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಸ್ವರೂಪದಲ್ಲಿ ತರಬೇಕಾಗಿದೆ. ಕೇವಲ ಕಾಗದದಲ್ಲಿ ಬರೆದುಕೊಳ್ಳುವಂತಾಗಬಾರದು. ವಿನಾಶಕ್ಕೆ ಮೊದಲು ಜೀವನಬಂಧನದಿಂದ ಜೀವನ್ಮುಕ್ತ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಬೇಕಾಗಿದೆ.
2. ತಮ್ಮ ಸಮಯವನ್ನು ವಿನಾಶಿ ಸಂಪಾದನೆಯಲ್ಲಿ ಅಧಿಕವಾಗಿ ವ್ಯರ್ಥವಾಗಿ ಕಳೆಯಬಾರದು ಏಕೆಂದರೆ ಇದೆಲ್ಲವೂ ಮಣ್ಣುಪಾಲಾಗಲಿದೆ. ಆದ್ದರಿಂದ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಇದು ಅತಿಚಿಕ್ಕ ಹೂದೋಟವಾಗಿದೆ. ಇದು ಮಾನವರ ಹೂದೋಟ, ತೋಟದಲ್ಲಿ ಹೋದಾಗ ಅಲ್ಲಿ ಬಿನ್ನ ಬಿನ್ನ ವಾಗಿರುವ ಹಳೆಯ ವೃಕ್ಷಗಳು ಇರುತ್ತವೆ, ಕೆಲವುಕಡೆ ಮೊಗ್ಗುಗಳೂ ಇರುತ್ತವೆ, ಕೆಲವುಕಡೆ ಅರ್ಧ ಅರಳಿರುವ ಮೊಗ್ಗುಗಳಿರುತ್ತವೆ, ಇದು ತೋಟವಾಗಿದೆಯಲ್ಲವೆ. ಈಗ ಇದನ್ನು ಮಕ್ಕಳು ತಿಳಿದುಕೊಂಡಿದ್ದೀರಿ- ಇಲ್ಲಿ ಬಂದಿರುವುದೇ ಮುಳ್ಳುಗಳಿಂದ ಹೂಗಳಾಗಲು. ನಾವು ಶ್ರೀಮತದಂತೆ ಮುಳ್ಳುಗಳಿಂದ ಹೂಗಳಾಗುತ್ತಿದ್ದೇವೆ. ಮುಳ್ಳುಗಳು ಕಾಡಿನಲ್ಲಿರುತ್ತವೆ, ಹೂಗಳು ತೋಟದಲ್ಲಿರುತ್ತವೆ. ತೋಟವು ಸ್ವರ್ಗವಾಗಿದೆ, ಕಾಡು ನರಕವಾಗಿದೆ. ತಂದೆಯು ತಿಳಿಸುತ್ತಾರೆ- ಇದು ಪತಿತ, ಮುಳ್ಳಿನ ಕಾಡಾಗಿದೆ, ಅದು ಹೂವಿನ ತೋಟವಾಗಿದೆ. ಹೂದೋಟವಿತ್ತು ಅದು ಈಗ ಮುಳ್ಳಿನ ಕಾಡಾಗಿದೆ. ದೇಹಾಭಿಮಾನವು ಎಲ್ಲದಕ್ಕಿಂತ ದೊಡ್ಡ ಕಾಡಾಗಿದೆ, ಅದರ ಹಿಂದೆ ಎಲ್ಲಾ ವಿಕಾರಗಳು ಬರುತ್ತವೆ. ಅಲ್ಲಿ ನೀವು ದೇಹಿ-ಅಭಿಮಾನಿಯಾಗಿರುತ್ತೀರಿ, ಈಗ ನಮ್ಮ ಆಯಸ್ಸು ಪೂರ್ಣವಾಯಿತು. ಈಗ ನಾವು ಈ ಹಳೆಯ ಶರೀರವನ್ನು ಬಿಟ್ಟು ಬೇರೆ ಶರೀರವನ್ನು ಪಡೆಯುತ್ತೇವೆಂಬ ಆತ್ಮಜ್ಞಾನವಿರುತ್ತದೆ. ನಾವು ಗರ್ಭಮಹಲಿನಲ್ಲಿ ವಿರಾಜಮಾನವಾಗುತ್ತೇವೆಂಬ ಸಾಕ್ಷಾತ್ಕಾರವೂ ಆಗುತ್ತದೆ. ಮೊದಲು ಮೊಗ್ಗಾಗಿ, ಮೊಗ್ಗಿನಿಂದ ಹೂವಾಗುತ್ತವೆ ಆದರೆ ಅಲ್ಲಿ ಸೃಷ್ಟಿಚಕ್ರ ಹೇಗೆ ತಿರುಗುತ್ತದೆ ಎಂಬ ಜ್ಞಾನವಿರುವುದಿಲ್ಲ ಕೇವಲ ಇದು ಹಳೆಯ ಶರೀರವಾಗಿದೆ, ಇದನ್ನು ಬದಲಾಯಿಸಬೇಕೆಂಬ ಜ್ಞಾನವಿರುತ್ತದೆ. ಆಂತರ್ಯದಲ್ಲಿ ಬದಲಾಯಿಸುವಂತಹ ಖುಷಿಯಿರುತ್ತದೆ. ಈ ಕಲಿಯುಗೀ ಪದ್ಧತಿಗಳು ಅಲ್ಲಿರುವುದಿಲ್ಲ. ಇಲ್ಲಿ ಪ್ರಪಂಚದ ಕುಲಮರ್ಯಾದೆ ಇರುತ್ತದೆ ಈ ಅಂತರವಿದೆ. ಅಲ್ಲಿಯ ಮರ್ಯಾದೆಗೆ ಸತ್ಯ ಮರ್ಯಾದೆಯೆಂದು ಕರೆಯಲಾಗುವುದು, ಇಲ್ಲಿ ಅಸತ್ಯ ಮರ್ಯಾದೆಗಳಿವೆ. ಸೃಷ್ಟಿಯಂತೂ ಇದೆಯಲ್ಲವೆ. ಯಾವಾಗ ಆಸುರೀ ಸಂಪ್ರದಾಯವಿರುತ್ತದೆಯೋ ಆಗ ತಂದೆಯು ಬರುತ್ತಾರೆ. ಅದರಲ್ಲಿಯೂ ಯಾವಾಗ ದೈವೀ ಸಂಪ್ರದಾಯವು ಸ್ಥಾಪನೆಯಾಗುತ್ತದೆಯೋ ಆಗ ವಿನಾಶವಾಗುತ್ತದೆ. ಅಗತ್ಯವಾಗಿ ಈಗ ಅಸುರೀ ಸಂಪ್ರದಾಯವಿದೆ, ಈ ಆಸುರೀ ಸಂಪ್ರದಾಯದಲ್ಲಿಯೇ ದೈವೀಗುಣವುಳ್ಳ ಸಂಪ್ರದಾಯ ಸ್ಥಾಪನೆಯಾಗುತ್ತಿದೆ.
ಯೋಗಬಲದಿಂದ ನಿಮ್ಮ ಜನ್ಮ-ಜನ್ಮಾಂತರದ ಪಾಪವು ನಷ್ಟವಾಗುತ್ತದೆಯೆಂದು ತಿಳಿಸಲಾಗಿದೆ. ಈ ಜನ್ಮದಲ್ಲಿಯೂ ಯಾವ ಪಾಪ ಮಾಡಲಾಗಿದೆ ಅದನ್ನೂ ಹೇಳಬೇಕಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಿಕಾರದ ಮಾತೇ ಆಗಿದೆ. ನೆನಪಿನಲ್ಲಿ ಶಕ್ತಿಯಿದೆ, ತಂದೆಯು ಸರ್ವಶಕ್ತಿವಂತನಾಗಿದ್ದಾರೆ. ಯಾರು ಸರ್ವರಿಗೂ ತಂದೆಯಾಗಿದ್ದಾರೆ ಅವರ ಜೊತೆ ಸಂಬಂಧ ಜೋಡಿಸುವುದರಿಂದ ಪಾಪವು ಭಸ್ಮವಾಗುತ್ತದೆ ಎಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈ ಲಕ್ಷ್ಮೀ-ನಾರಾಯಣ ಸರ್ವಶಕ್ತಿವಂತರಾಗಿದ್ದಾರೆ, ಇಡೀ ವಿಶ್ವದ ಮೇಲೆ ಇವರ ರಾಜ್ಯವಿದೆ, ಅದು ಹೊಸಪ್ರಪಂಚವಾಗಿರುತ್ತದೆ. ಅಲ್ಲಿ ಪ್ರತಿಯೊಂದು ವಸ್ತು ಹೊಸದಾಗಿರುತ್ತದೆ, ಈಗ ನೆಲವೂ ಸಹ ಬಂಜರುಭೂಮಿಯಾಗಿಬಿಟ್ಟಿದೆ. ಈಗ ನೀವು ಮಕ್ಕಳು ಹೊಸಪ್ರಪಂಚದ ಮಾಲೀಕರಾಗುತ್ತೀರಿ ಆದ್ದರಿಂದ ಎಷ್ಟೊಂದು ಖುಷಿಯಿರಬೇಕಾಗಿದೆ. ವಿದ್ಯಾರ್ಥಿಗಳು ಹೇಗಿರುತ್ತಾರೆಯೋ ಹಾಗೆಯೇ ಖುಷಿಯೂ ಹೆಚ್ಚಾಗಿರುತ್ತದೆ. ಇದು ನಿಮ್ಮ ಸರ್ವಶ್ರೇಷ್ಠ ವಿಶ್ವವಿದ್ಯಾಲಯವಾಗಿದೆ, ಓದಿಸುವವರೂ ಸಹ ಶ್ರೇಷ್ಠಾತಿಶ್ರೇಷ್ಠವಾಗಿದ್ದಾರೆ. ಮಕ್ಕಳೂ ಸಹ ಶ್ರೇಷ್ಠಾತಿಶ್ರೇಷ್ಠರಾಗಲು ಓದುತ್ತಾರೆ. ನೀವು ಮಕ್ಕಳು ಎಷ್ಟೊಂದು ಕನಿಷ್ಠರಾಗಿದ್ದವರು ಒಮ್ಮೆಲೆ ಕನಿಷ್ಠರಿಂದ ಶ್ರೇಷ್ಠರಾಗುತ್ತೀರಿ. ಸ್ವಯಂ ತಂದೆಯೇ ಹೇಳುತ್ತಾರೆ- ಈಗ ನೀವು ಸ್ವರ್ಗಕ್ಕೆ ಯೋಗ್ಯರಾಗಿದ್ದೀರೇನು? ಅಪವಿತ್ರರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಕನಿಷ್ಠರಾಗಿರುವ ಕಾರಣ ಶ್ರೇಷ್ಠ ದೇವತೆಗಳ ಮುಂದೆ ಹೋಗಿ ಮಹಿಮೆ ಮಾಡುತ್ತಾರೆ. ಮಂದಿರಗಳಿಗೆ ಹೋಗಿ ದೇವತೆಗಳ ಶ್ರೇಷ್ಠತೆ ಹಾಗೂ ತಮ್ಮ ಕನಿಷ್ಠತೆಯನ್ನು ವರ್ಣನೆ ಮಾಡುತ್ತಾರೆ. ನಂತರ ನಾವೂ ಈ ರೀತಿಯಾಗಿ ಶ್ರೇಷ್ಠರಾಗುತ್ತೇವೆ, ದಯೆ ತೋರಿಸಿ ಎಂದು ಬೇಡುತ್ತಾರೆ ಮತ್ತು ಅವರ ಮುಂದೆ ತಲೆಬಾಗುತ್ತಾರೆ. ಅವರೂ ಸಹ ಮನುಷ್ಯರಾಗಿದ್ದಾರೆ ಆದರೆ ಅವರಲ್ಲಿ ದೈವೀಗುಣಗಳಿವೆ. ಮಂದಿರಗಳಿಗೆ ಹೋಗಿ ಅವರಂತೆಯೇ ನಾವೂ ಆಗಬೇಕೆಂದು ಪೂಜಿಸುತ್ತಾರೆ. ಇವರನ್ನು ಈ ರೀತಿಯಾಗಿ ಮಾಡಿದವರು ಯಾರೆಂಬುದು ಯಾರಿಗೂ ಗೊತ್ತಿಲ್ಲ. ಇಡೀ ನಾಟಕವೇ ನೀವು ಮಕ್ಕಳ ಬುದ್ಧಿಯಲ್ಲಿ ಕುಳಿತಿದೆ, ದೈವೀವೃಕ್ಷದ ಸಸಿಯ ನಾಟಿಯು ಹೇಗೆ ನಡೆಯುತ್ತಿದೆ. ತಂದೆಯು ಸಂಗಮಯುಗದಲ್ಲಿಯೇ ಬರುತ್ತಾರೆ, ಇದು ಪತಿತ ಪ್ರಪಂಚವಾಗಿದೆ ಆದ್ದರಿಂದ ತಂದೆಯೇ ಬಂದು ಪತಿತರಿಂದ ಪಾವನ ಮಾಡು ಎಂದು ಕರೆಯುತ್ತಾರೆ. ಈಗ ನೀವು ಪಾವನರಾಗಲು ಪುರುಷಾರ್ಥ ಮಾಡುತ್ತೀರಿ. ಉಳಿದವರೆಲ್ಲರೂ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಶಾಂತಿಧಾಮಕ್ಕೆ ಹೊರಟುಹೋಗುತ್ತಾರೆ. ಮನ್ಮನಾಭವದ ಮಂತ್ರವು ಮುಖ್ಯವಾಗಿದೆ, ಅದನ್ನು ತಂದೆಯೇ ನಿಮಗೆ ಕೊಡುತ್ತಾರೆ. ಗುರುಗಳಂತೂ ಅನೇಕರಿದ್ದಾರೆ, ಎಷ್ಟೊಂದು ಮಂತ್ರಗಳವನ್ನೂ ಕೊಡುತ್ತಾರೆ. ತಂದೆಯದ್ದು ಒಂದೇ ಮಂತ್ರವಾಗಿದೆ. ತಂದೆಯು ಭಾರತದಲ್ಲಿ ಬಂದು ಮಂತ್ರವನ್ನು ಕೊಟ್ಟಿದ್ದರು ಆದ್ದರಿಂದ ನೀವು ದೇವಿ-ದೇವತೆಗಳಾಗಿದ್ದಿರಿ. ಭಗವಾನುವಾಚ ಇದೆಯಲ್ಲವೆ- ಇವರು ಶ್ಲೋಕ ಮೊದಲಾದವುಗಳನ್ನು ಹೇಳಿಬಿಟ್ಟಿದ್ದಾರೆ ಆದರೆ ಅರ್ಥವೇನೂ ತಿಳಿದುಕೊಂಡಿಲ್ಲ, ನೀವು ಅರ್ಥವನ್ನೂ ತಿಳಿಸುತ್ತೀರಿ. ಕುಂಭಮೇಳದಲ್ಲಿಯೂ ನೀವು ಎಲ್ಲರಿಗೂ ತಿಳಿಸಬಹುದು, ಇದು ಪತಿತ ಪ್ರಪಂಚವಾಗಿದೆ ನರಕವಾಗಿದೆ. ಸತ್ಯಯುಗ ಪಾವನ ಪ್ರಪಂಚವಾಗಿತ್ತು, ಅದನ್ನು ಸ್ವರ್ಗವೆಂದು ಕರೆಯಲಾಗುವುದು. ಪತಿತ ಪ್ರಪಂಚದಲ್ಲಿ ಪಾವನರು ಯಾರೂ ಇರುವುದಿಲ್ಲ. ಮನುಷ್ಯರು ಪಾವನರಾಗುವ ಸಲುವಾಗಿ ಗಂಗಾಸ್ನಾನ ಮಾಡಲು ಹೋಗುತ್ತಾರೆ ಏಕೆಂದರೆ ಶರೀರವನ್ನೇ ಪಾವನ ಮಾಡಿಕೊಳ್ಳಬೇಕೆಂದು ತಿಳಿದುಕೊಂಡಿದ್ದಾರೆ. ಆತ್ಮವಂತೂ ಸದಾ ಪಾವನವಾಗಿಯೇ ಇರುತ್ತದೆ. ಆತ್ಮವೇ ಪರಮಾತ್ಮನೆಂದು ಹೇಳಿಬಿಡುತ್ತಾರೆ. ಆತ್ಮವು ಜ್ಞಾನಸ್ನಾನದಿಂದ ಪವಿತ್ರವಾಗುತ್ತದೆಯೇ ವಿನಃ ನೀರಿನ ಸ್ನಾನದಿಂದಲ್ಲ ಎಂದು ನೀವು ಬರೆಯಬಹುದು. ನೀರಿನ ಸ್ನಾನವನ್ನಂತೂ ಪ್ರತಿನಿತ್ಯ ಮಾಡುತ್ತೇವೆ, ಎಲ್ಲಿ ನದಿಗಳಿವೆ ಅಲ್ಲಿ ಪ್ರತಿನಿತ್ಯ ಸ್ನಾನ ಮಾಡುತ್ತಾರೆ, ಅದೇ ನೀರನ್ನು ಕುಡಿಯುತ್ತಾರೆ. ಈಗ ನೀರಿನಿಂದಲೇ ಎಲ್ಲವೂ ಮಾಡಲಾಗುವುದು. ಮಾತಂತೂ ಎಷ್ಟು ಸಹಜವಾಗಿದೆ ಆದರೆ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ.
ಜ್ಞಾನದಿಂದ ಒಂದು ಸೆಕೆಂಡಿನಲ್ಲಿ ಸದ್ಗತಿಯಾಗುತ್ತದೆ. ಮತ್ತೆ ಅಪಾರವಾದ ಜ್ಞಾನವಿದೆ, ಸಮುದ್ರವನ್ನು ಶಾಹಿಯನ್ನಾಗಿ ಮಾಡಿಕೊಂಡು, ಕಾಡನ್ನು ಲೇಖನಿಯನ್ನಾಗಿ ಮಾಡಿ, ಭೂಮಿಯನ್ನು ಕಾಗದವನ್ನಾಗಿ ಮಾಡಿಕೊಂಡು ಬರೆದರೂ ಅದಕ್ಕೆ ಅಂತ್ಯವಿಲ್ಲವೆಂದು ಹೇಳುತ್ತಾರೆ. ತಂದೆಯು ಪ್ರತಿನಿತ್ಯ ಭಿನ್ನ-ಭಿನ್ನ ಮಾತುಗಳನ್ನು ತಿಳಿಸುತ್ತಿರುತ್ತಾರೆ. ಇಂದು ನಿಮಗೆ ಬಹಳ ಗುಹ್ಯಮಾತುಗಳನ್ನು ಹೇಳುತ್ತೇನೆಂದು ತಿಳಿಸುತ್ತಾರೆ. ಮೊದಲು ಏಕೆ ತಿಳಿಸಲಿಲ್ಲ! ಎಂದು ಮಕ್ಕಳು ಕೇಳುತ್ತಾರೆ. ಅರೆ! ಮೊದಲೇ ಹೇಗೆ ಹೇಳಲಿ..... ಕಥೆಯನ್ನು ಆರಂಭದಿಂದ ಹಿಡಿದು ನಂಬರ್ವಾರ್ ಆಗಿ ಹೇಳುತ್ತಾರಲ್ಲವೆ. ಅಂತ್ಯದ ಪಾತ್ರವನ್ನು ಮೊದಲೇ ಹೇಗೆ ಹೇಳಲು ಸಾಧ್ಯ! ಇದನ್ನೂ ಸಹ ತಂದೆಯು ಹೇಳುತ್ತಿರುತ್ತಾರೆ. ಈ ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡಿದ್ದೀರಿ. ನಿಮ್ಮನ್ನು ಯಾರೇ ಕೇಳಿದರೂ ಸಹ ತಕ್ಷಣ ನೀವು ಉತ್ತರ ನೀಡುತ್ತೀರಿ. ನಿಮ್ಮಲ್ಲಿಯೂ ಸಹ ಜ್ಞಾನವು ನಂಬರ್ವಾರ್ ಆಗಿ ಬುದ್ಧಿಯಲ್ಲಿ ಕುಳಿತಿರುತ್ತದೆ. ನಿಮ್ಮ ಬಳಿ ಬಂದು ಸರಿಯಾದ ಉತ್ತರವು ಸಿಗದಿದ್ದಾಗ ಅವರು ಹೊರಗೆ ಹೋದ ನಂತರ ಇಲ್ಲಿ ಸಂಪೂರ್ಣ ತಿಳುವಳಿಕೆ ಸಿಗುವುದಿಲ್ಲ, ವ್ಯರ್ಥವಾದ ಚಿತ್ರಗಳನ್ನಿಟ್ಟಿದ್ದಾರೆಂದು ಹೇಳುತ್ತಾರೆ ಆದ್ದರಿಂದ ಅಂತಹವರಿಗೆ ತಿಳಿಸುವವರು ಬಹಳ ಅನುಭವಿಯಾಗಿರಬೇಕು. ಇಲ್ಲವೆಂದರೆ ಅವರೂ ಸಹ ಸರಿಯಾಗಿ ತಿಳಿದುಕೊಳ್ಳುವುದಿಲ್ಲ. ತಿಳಿಸಿಕೊಡುವವರೇ ಸರಿಯಿಲ್ಲದಿದ್ದಾಗ ತಿಳಿದುಕೊಳ್ಳುವಾರೂ ಅದೇ ರೀತಿಯಿರುತ್ತಾರೆ. ತಂದೆಯು ತಿಳಿಸುತ್ತಾರೆ- ಒಂದೊಂದು ಕಡೆ ಕೆಲವು ವ್ಯಕ್ತಿಗಳು ಬಹಳ ಬುದ್ಧಿವಂತರಿರುತ್ತಾರೆ ಆದರೆ ಮಕ್ಕಳು ಅಷ್ಟೊಂದು ಬುದ್ಧಿವಂತರಾಗಿಲ್ಲದ್ದನ್ನು ನೋಡಿ ನಾನೇ ಅವರಲ್ಲಿ ಪ್ರವೇಶ ಮಾಡಿ ಸಹಯೋಗ ಕೊಡುತ್ತೇನೆ ಏಕೆಂದರೆ ತಂದೆಯಂತೂ ಅತಿಸೂಕ್ಷ್ಮ ರಾಕೆಟ್ ಆಗಿದ್ದಾರೆ. ಬಂದು-ಹೋಗಲು ಸಮಯ ತೆಗೆದುಕೊಳ್ಳುವುದಿಲ್ಲ. ಅವರು ಇದನ್ನು ಬಹುರೂಪಿ ಅಥವಾ ಸರ್ವವ್ಯಾಪಿಯ ರೂಪದಲ್ಲಿ ತೆಗೆದುಕೊಂಡುಬಿಟ್ಟಿದ್ದಾರೆ. ಇದನ್ನು ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ. ಕೆಲಕೆಲವು ಮನುಷ್ಯರು ಬಹಳ ಬುದ್ಧಿವಂತರಾಗಿದ್ದು ಅವರಿಗೆ ತಿಳಿಸಿಕೊಡುವವರಿಗೂ ಸಹ ಹಾಗೆಯೇ ಇರಬೇಕಾಗುತ್ತದೆ. ಈ ಸಮಯದಲ್ಲಿ ಕೆಲವರು ಚಿಕ್ಕಂದಿನಿಂದಲೇ ಶಾಸ್ತ್ರಗಳನ್ನು ಕಂಠಪಾಠ ಮಾಡಿಕೊಂಡಿರುತ್ತಾರೆ ಏಕೆಂದರೆ ಆತ್ಮವು ಸಂಸ್ಕಾರವನ್ನು ತೆಗೆದುಕೊಂಡು ಬರುತ್ತದೆ. ಎಲ್ಲಾದರೂ ಜನ್ಮ ಪಡೆದುಕೊಳ್ಳಲಿ ಅಲ್ಲಿ ವೇದಶಾಸ್ತ್ರಗಳನ್ನು ಓದಲು ತೊಡಗುತ್ತಾರೆ. ಅಂತ್ಯದಲ್ಲಿ ಎಂತಹ ಸ್ಥಿತಿ ಇರುತ್ತದೋ ಅಂತಹ ಗತಿ ಪಡೆದುಕೊಳ್ಳುತ್ತಾರಲ್ಲವೇ. ಆತ್ಮವು ತನ್ನ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ಕೊನೆಗೂ ಆ ದಿನ ಇಂದು ಬಂದಿದೆ....... ಈಗ ಸ್ವರ್ಗದ ಬಾಗಿಲು ಸತ್ಯವಾಗಿ ತೆರೆಯಲ್ಪಡುತ್ತದೆ. ಹೊಸಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವಾಗಬೇಕಾಗಿದೆ. ಸ್ವರ್ಗವು ಹೊಸಪ್ರಪಂಚದಲ್ಲಿರುತ್ತದೆ ಎಂದು ಮನುಷ್ಯರಿಗಂತೂ ಗೊತ್ತಿಲ್ಲ. ನಾವು ಸತ್ಯ-ಸತ್ಯ ಸತ್ಯನಾರಾಯಣನ ಕಥೆ ಅಥವಾ ಅಮರನಾಥನ ಕಥೆಯನ್ನು ಕೇಳುತ್ತಿದ್ದೇವೆಂದು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಇವೆರಡೂ ಒಂದೇ ಕಥೆಯಾಗಿದ್ದು ಹೇಳಿದವರೂ ಒಬ್ಬರೇ ಆಗಿದ್ದಾರೆ ನಂತರ ಅವುಗಳನ್ನು ಶಾಸ್ತ್ರವನ್ನಾಗಿ ಮಾಡಿದ್ದಾರೆ. ಇದೆಲ್ಲವೂ ನಿಮ್ಮದೇ ಉದಾಹರಣೆಯಾಗಿದೆ ಅದನ್ನು ಮತ್ತೆ ಭಕ್ತಿಮಾರ್ಗದಲ್ಲಿ ಆಚರಿಸುತ್ತಾರೆ. ಈಗ ತಂದೆಯು ಸಂಗಮಯುಗದಲ್ಲಿ ಬಂದು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ. ಇದು ಅತಿದೊಡ್ಡ ಬೇಹದ್ದಿನ ಆಟವಗಿದೆ, ಈ ಆಟದಲ್ಲಿ ಮೊದಲು ಸತ್ಯ-ತ್ರೇತಾದಲ್ಲಿ ರಾಮರಾಜ್ಯ ನಂತರ ರಾವಣರಾಜ್ಯವಾಗುತ್ತದೆ. ಈ ನಾಟಕವು ಮೊದಲೆ ಮಾಡಲ್ಪಟ್ಟಿದೆ, ಇದನ್ನು ಅನಾದಿ-ಅವಿನಾಶಿ ಎಂದು ಕರೆಯಲಾಗುವುದು. ನಾವೆಲ್ಲರೂ ಆತ್ಮರಾಗಿದ್ದೇವೆ, ತಂದೆಯು ಕೊಡುತ್ತಿರುವಂತಹ ಜ್ಞಾನವು ಯಾರಲ್ಲಿಯೂ ಇಲ್ಲದಾಗಿದೆ. ಆತ್ಮಗಳೆಲ್ಲರ ಪಾತ್ರವು ಈ ನಾಟಕದಲ್ಲಿನಿಗದಿಯಾಗಿದೆ. ಯಾವ ಸಮಯದಲ್ಲಿ ಯಾರ ಪಾತ್ರವಿರುತ್ತದೆ ಅವರು ಅದೇ ಸಮಯದಲ್ಲಿ ಬರುತ್ತಾರೆ ಮತ್ತು ವೃದ್ಧಿಯಾಗುತ್ತಾ ಇರುತ್ತದೆ.
ಪತಿತರಿಂದ ಪಾವನರಾಗುವುದೇ ಮಕ್ಕಳಿಗೆ ಮುಖ್ಯವಾದ ಮಾತಾಗಿದೆ. ಹೇ ಪತಿತ-ಪಾವನನೆಂದೇ ಕರೆಯುತ್ತಾರೆ, ಈ ರೀತಿಯಾಗಿ ಮಕ್ಕಳೇ ಕರೆಯುತ್ತಾರೆ. ನನ್ನ ಮಕ್ಕಳು ಕಾಮಚಿತೆಯ ಮೇಲೆ ಕುಳಿತು ಭಸ್ಮವಾಗಿಬಿಟ್ಟರೆಂದು ತಂದೆಯು ಹೇಳುತ್ತಾರೆ. ಇವು ಯಥಾರ್ಥವಾದ ಮಾತುಗಳಾಗಿವೆ. ಅಕಾಲನಾಗಿರುವ ಅತ್ಮನಿಗೆ ಇದು ಸಿಂಹಾಸನವಾಗಿದೆ. ಇದನ್ನು (ಬ್ರಹ್ಮಾ) ಲೋನ್ ತೆಗೆದುಕೊಳ್ಳಲಾಗಿದೆ. ಬ್ರಹ್ಮನನ್ನು ನೋಡಿ ಇವರು ಯಾರೆಂದು ನಿಮ್ಮನ್ನು ಕೇಳುತ್ತಾರೆ. ಈಗ ನೀವು ಹೇಳಿ..... ನೋಡಿ ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆಂದು ಭಗವಾನುವಾಚ ಬರೆಯಲ್ಪಟ್ಟಿದೆ. ಆ ಶೃಂಗರಿಸಲ್ಪಟ್ಟಿರುವ ಕೃಷ್ಣನೇ 84 ಜನ್ಮಗಳನ್ನು ಪಡೆದು ಸಾಧಾರಣನಾಗುತ್ತಾನೆ. ಸಾಧಾರಣನೇ ಮತ್ತೆ ಶ್ರೀಕೃಷ್ಣನಾಗುತ್ತಾನೆ, ಕೆಳಗೆ ಕುಳಿತು ತಪಸ್ಸನ್ನು ಮಾಡುತ್ತಿದ್ದಾನೆ. ನಾವು ಈ ರೀತಿ (ದೇವತೆ) ಆಗುತ್ತೇವೆಂದು ತಿಳಿದುಕೊಂಡಿದ್ದಾರೆ. ಅನೇಕರು ತ್ರಿಮೂರ್ತಿಯನ್ನು ನೋಡಿದ್ದಾರೆ ಆದರೆ ಅದರ ಅರ್ಥವೂ ಆಗಬೇಕಲ್ಲವೆ. ಸ್ಥಾಪನೆ ಮಾಡುವವರೇ ಪಾಲನೆಯನ್ನೂ ಮಾಡುತ್ತಾರೆ. ಸ್ಥಾಪನೆಯ ಸಮಯದ ನಾಮ-ರೂಪ, ದೇಶ-ಕಾಲ ಬೇರೆಯಾಗಿರುತ್ತದೆ, ಪಾಲನೆಯ ಸಮಯದ ನಾಮ-ರೂಪ, ದೇಶ-ಕಾಲವೇ ಬೇರೆಯಾಗಿರುತ್ತದೆ. ಈ ಮಾತುಗಳನ್ನು ತಿಳಿಸಿಕೊಡಲು ಬಹಳ ಸಹಜವಾಗಿದೆ. ಅವರು ಕೆಳಗೆ ತಪಸ್ಸನ್ನು ಮಾಡುತ್ತಿದ್ದಾರೆ ಮತ್ತೆ ಹೀಗೆ (ದೇವತೆ) ಆಗುವವರಾಗಿದ್ದಾರೆ. ಇವರೇ 84 ಜನ್ಮಗಳನ್ನು ಪಡೆದು ಈ ರೀತಿಯಾಗುತ್ತಾರೆ. ಇದು ಒಂದು ಸೆಕೆಂಡಿನ ಜ್ಞಾನವಾಗಿದೆ, ನಾವು ದೇವತೆಯಾಗುತ್ತಿದ್ದೇವೆಂದು ಬುದ್ಧಿಯಲ್ಲಿ ಜ್ಞಾನವಿದೆ. 84 ಜನ್ಮಗಳನ್ನೂ ಸಹ ದೇವತೆಗಳೇ ಪಡೆಯುತ್ತಾರೆಯೇ ಹೊರತು ಬೇರೆ ಯಾರೂ ಪಡೆಯುವುದಿಲ್ಲ. 84 ಜನ್ಮಗಳ ರಹಸ್ಯವನ್ನು ಮಕ್ಕಳಿಗೆ ತಿಳಿಸಲಾಗಿದೆ. ದೇವತೆಗಳೇ ಮೊಟ್ಟಮೊದಲು ಜನ್ಮ ತೆಗೆದುಕೊಳ್ಳುತ್ತಾರೆ. ಮೀನಿನ ಆಟದ ಸಾಮಾನು ಗೊಂಬೆಯಿರುತ್ತದೆಯಲ್ಲವೆ. ಅಲ್ಲಿ ಮೀನು ಕೆಳಗೆ ಬಂದು ಮತ್ತೆ ಮೇಲೆ ಹೋಗುತ್ತದೆ. ಅದೂ ಸಹ ಒಂದು ಏಣಿಯಂತೆ ಇದೆ. ಭ್ರಮರಿ, ಆಮೆ ಮೊದಲಾದವುಗಳ ಉದಾಹರಣೆಯನ್ನು ನೀಡಲಾಗುತ್ತದೆ. ಅದೆಲ್ಲವೂ ಸಹ ಈ ಸಮಯದ ಉದಾಹರಣೆಯಾಗಿದೆ. ಭ್ರಮರಿಗೂ ಸಹ ಎಷ್ಟೊಂದು ಬುದ್ಧಿಯಿದೆ ನೋಡಿ! ಆದರೆ ಮನುಷ್ಯನು ತಾನು ಬಹಳ ಬುದ್ಧಿವಂತನೆಂದು ತಿಳಿದುಕೊಂಡಿದ್ದಾನೆ ಆದರೆ ಭ್ರಮರಿಗಿರುವಷ್ಟು ಬುದ್ಧಿಯೂ ಸಹ ಇಲ್ಲವೆಂದು ತಂದೆಯು ತಿಳಿಸುತ್ತಾರೆ. ಸರ್ಪವು ಹಳೆಯ ಪೆÇರೆಯನ್ನು ಕಳಚಿ ಹೊಸಪೆÇರೆಯನ್ನು ಪಡೆಯುತ್ತದೆ. ಮಕ್ಕಳನ್ನು ಎಷ್ತೊಂದು ಯೋಗ್ಯ ಹಾಗೂ ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ಆತ್ಮವು ಅಪವಿತ್ರವಾಗಿರುವ ಕಾರಣ ಯೋಗ್ಯವಾಗಿಲ್ಲ, ಅದನ್ನು ಪವಿತ್ರ ಮಾಡಿ ಯೋಗ್ಯ ಮಾಡಲಾಗುವುದು. ಅದು (ಸತ್ಯಯುಗ) ಯೋಗ್ಯತೆಯುಳ್ಳ ಪ್ರಪಂಚವಾಗಿದೆ, ಹೀಗೆ ಇಡೀ ಪ್ರಪಂಚವನ್ನು ನರಕದಿಂದ ಸ್ವರ್ಗವನ್ನಾಗಿ ಮಾಡುವುದು ತಂದೆಯ ಕಾರ್ಯವಾಗಿದೆ. ಸ್ವರ್ಗವು ಹೇಗಿರುತ್ತದೆಯೆಂದು ಈ ಮನುಷ್ಯರಿಗೆ ತಿಳಿದಿಲ್ಲ. ದೇವಿ-ದೇವತೆಗಳ ರಾಜಧಾನಿಗೆ ಸ್ವರ್ಗವೆಂದು ಕರೆಯಲಾಗುವುದು. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು. ಸತ್ಯಯುಗ ಹೊಸ ಪ್ರಪಂಚದಲ್ಲಿ ನಾವೇ ರಾಜ್ಯಭಾಗ್ಯವನ್ನು ಮಾಡುತ್ತಿದ್ದೆವೆಂದು ನೀವು ತಿಳಿದುಕೊಂಡಿದ್ದೀರಿ. 84 ಜನ್ಮಗಳನ್ನು ನಾವೇ ತೆಗೆದುಕೊಂಡಿರಬೇಕು. ಎಷ್ಟು ಬಾರಿ ರಾಜ್ಯ ಮಾಡಿ ಕಳೆದುಕೊಂಡಿದ್ದೇವೆಂಬುದು ನೀವು ತಿಳಿದಿದ್ದೀರಿ. ರಾಮನ ಮತದಿಂದ ನೀವು ರಾಜ್ಯವನ್ನು ಪಡೆದು ರಾವಣನ ಮತದಿಂದ ರಾಜ್ಯವನ್ನು ಕಳೆದುಕೊಂಡಿದ್ದೀರಿ. ಈಗ ಪುನಃ ಏರುವ ಸಲುವಾಗಿ ನಿಮಗೆ ರಾಮನ ಮತ ಸಿಗುತ್ತದೆ, ಇಳಿಯುವ ಸಲುವಾಗಿ ಸಿಗುವುದಿಲ್ಲ. ನೀವು ಬಹಳ ಚೆನ್ನಾಗಿ ತಿಳಿಸಿಕೊಡುತ್ತೀರಿ ಆದರೆ ಭಕ್ತಿಮಾರ್ಗದ ಬುದ್ಧಿಯು ಬಹಳ ಕಷ್ಟದಿಂದ ಪರಿವರ್ತನೆಯಾಗುತ್ತದೆ. ಭಕ್ತಿಯು ಬಹಳ ಆಡಂಬರವಾಗಿದೆ, ಅದು ಕೆಸರಾಗಿದ್ದು ಒಮ್ಮೆಯೇ ಕುತ್ತಿಗೆಯವರೆಗೂ ಮುಳುಗಿಸಿಬಿಟ್ಟಿದ್ದಾರೆ. ಯಾವಾಗ ಎಲ್ಲದರ ಅಂತ್ಯವಾಗುತ್ತದೆ ಆಗ ನಾನು ಬಂದು ಜ್ಞಾನದಿಂದ ದೂರ ಕರೆದುಕೊಂಡು ಹೋಗುತ್ತೇನೆ. ನಾನು ಬಂದು ಮಕ್ಕಳ ಮೂಲಕ ಕಾರ್ಯವನ್ನು ಮಾಡಿಸುತ್ತೇನೆ. ತಂದೆಯೊಂದಿಗೆ ಸೇವೆ ಮಾಡುವಂತಹವರು ನೀವು ಬ್ರಾಹ್ಮಣರಾಗಿದ್ದೀರಿ, ನಿಮಗೆ ಈಶ್ವರೀಯ ಸೇವಾಧಾರಿಗಳೆಂದು ಹೇಳಲಾಗುವುದು. ಇದು ಎಲ್ಲದಕ್ಕಿಂತ ಉತ್ತಮವಾದ ಸೇವೆಯಾಗಿದೆ, ಮಕ್ಕಳಿಗೂ ಸಹ ಈ ರೀತಿಯಾಗಿ ಮಾಡಲು ಶ್ರೀಮತ ಸಿಗುತ್ತದೆ ನಂತರ ಅದರಲ್ಲಿಯೂ ಆಯ್ಕೆಯಾಗಿ ಬರುತ್ತಾರೆ ಅಂದಾಗ ಇದು ಹೊಸ ಮಾತೇನಲ್ಲ. ಕಲ್ಪದ ಹಿಂದೆ ಎಷ್ಟು ದೇವಿ-ದೇವತೆಗಳು ಆಯ್ಕೆಯಾಗಿದ್ದರು ಅವರೇ ಆಯ್ಕೆಯಾಗುತ್ತಾರೆ. ಇದು ನಾಟಕದಲ್ಲಿ ನಿಗದಿಯಾಗಿಬಿಟ್ಟಿದೆ. ನೀವು ಕೇವಲ ಸಂದೇಶವನ್ನು ತಲುಪಿಸಬೇಕು. ಅದೂ ಸಹ ಸಹಜವೇ ಆಗಿದೆ. ಯಾವಾಗ ಭಕ್ತಿಯು ಸಂಪೂರ್ಣ ಶಕ್ತಿಶಾಲಿಯಾಗಿರುತ್ತದೆಯೋ ಆಗ ಭಗವಂತ ಕಲ್ಪದ ಸಂಗಮಯುಗದಲ್ಲಿ ಬರುತ್ತಾರೆಂದು ನೀವು ತಿಳಿದಿದ್ದೀರಿ. ತಂದೆಯು ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ. ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ, ನೀವೆಲ್ಲರೂ ಸ್ವರ್ಗದಲ್ಲಿ ಹೋಗುತ್ತೀರಿ ಆದರೆ ವಿದ್ಯೆಯಲ್ಲಿ ನಂಬರ್ವಾರ್ ಆಗಿರುತ್ತಾರೆ. ಕೆಲವರ ಮೇಲೆ ಮಂಗಳದೆಶೆ, ಇನ್ನೂ ಕೆಲವರ ಮೇಲೆ ರಾಹುದೆಶೆ ಕುಳಿತಿರುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯೋಗ್ಯ ಹಾಗೂ ಬುದ್ಧಿವಂತರಾಗಲು ಪವಿತ್ರರಾಗಬೇಕು. ಇಡೀ ವಿಶ್ವವನ್ನು ನರಕದಿಂದ ಸ್ವರ್ಗವನ್ನಾಗಿ ಮಾಡಲು ತಂದೆಯೊಂದಿಗೆ ಸೇವೆ ಮಾಡಬೇಕಾಗಿದೆ. ಈಶ್ವರೀಯ ಸೇವಾಧಾರಿಗಳಾಗಬೇಕು.
2. ಕಲಿಯುಗೀ ಪ್ರಪಂಚದ ರೀತಿ-ಪದ್ಧತಿ, ಕುಲ ಮರ್ಯಾದೆಗಳೆಲ್ಲವನ್ನೂ ಬಿಟ್ಟು ಸತ್ಯಮರ್ಯಾದೆಗಳನ್ನು ಪಾಲನೆ ಮಾಡಬೇಕು. ದೈವೀ ಗುಣ ಸಂಪನ್ನರಾಗಿ ದೈವೀ ಸಂಪ್ರದಾಯದ ಸ್ಥಾಪನೆ ಮಾಡಬೇಕು.
ಓಂ ಶಾಂತಿ. ನೀವು ಮಕ್ಕಳು ಇಲ್ಲಿ ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ ಅಂದಾಗ ನೀವು ತಿಳಿದುಕೊಂಡಿದ್ದೀರಿ - ಅವರು ನಮ್ಮನ್ನು ಪುನಃ ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಮಕ್ಕಳ ಬುದ್ಧಿಯಲ್ಲಿ ಎಷ್ಟೊಂದು ಆಂತರಿಕ ಖುಷಿಯಿರಬೇಕು. ಇಲ್ಲಿ ಕುಳಿತೇ ಮಕ್ಕಳಿಗೆ ಖಜಾನೆಯು ಸಿಗುತ್ತಿದೆಯಲ್ಲವೆ. ಅನೇಕ ಪ್ರಕಾರದ ಕಾಲೇಜುಗಳಲ್ಲಿ, ಯುನಿವರ್ಸಿಟಿಯಲ್ಲಿ ಯಾರದೇ ಬುದ್ಧಿಯಲ್ಲಿ ಈ ಮಾತುಗಳಿರುವುದಿಲ್ಲ, ನೀವೇ ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ಈ ಖುಷಿಯಿರಬೇಕಲ್ಲವೆ. ಈ ಸಮಯದಲ್ಲಿ ಮತ್ತೆಲ್ಲಾ ಚಿಂತನೆಗಳನ್ನು ಬಿಟ್ಟು ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಬುದ್ಧಿಯಲ್ಲಿ ನಶೆಯಿರಲಿ, ನಾವೀಗ ಸುಖಧಾಮದ ಮಾಲೀಕರಾಗುತ್ತಿದ್ದೇವೆ. ನಾವು ಕಲ್ಪ-ಕಲ್ಪವೂ ಸುಖ ಮತ್ತು ಶಾಂತಿಯ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ, ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಕಲ್ಪದ ಮೊದಲೂ ಸಹ ಮನುಷ್ಯರು ಅಜ್ಞಾನ ಅಂಧಕಾರದಲ್ಲಿ, ಕುಂಭಕರ್ಣನ ನಿದ್ರೆಯಲ್ಲಿ ಮಲಗಿ ಸಮಾಪ್ತಿಯಾಗಿದ್ದರು, ಪುನಃ ಇದೇರೀತಿ ಆಗುವುದು. ಮಕ್ಕಳು ತಿಳಿದುಕೊಳ್ಳುತ್ತೀರಿ, ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ ಹಾಗೂ ನಾವು ಶಿವ ತಂದೆಯ ಧರ್ಮದ ಮಡಿಲನ್ನು ಪಡೆದಿದ್ದೇವೆ. ಅವರೇ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದಾರೆ. ನಾವೀಗ ಬ್ರಾಹ್ಮಣರಾಗಿದ್ದೇವೆ, ನಾವು ಸತ್ಯ-ಸತ್ಯವಾದ ಗೀತಾಪಾಠವನ್ನು ಕೇಳುತ್ತಿದ್ದೇವೆ. ನಾವು ತಂದೆಯಿಂದ ಪುನಃ ರಾಜಯೋಗ ಮತ್ತು ಜ್ಞಾನ ಬಲದಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇಂತಿಂತಹ ವಿಚಾರಗಳು ಆಂತರ್ಯದಲ್ಲಿ ಬರಬೇಕಲ್ಲವೆ. ತಂದೆಯೂ ಸಹ ಖುಷಿಯ ಮಾತುಗಳನ್ನು ತಿಳಿಸುತ್ತಾರಲ್ಲವೆ. ತಂದೆಗೆ ಗೊತ್ತಿದೆ, ಮಕ್ಕಳು ಕಾಮ ಚಿತೆಯ ಮೇಲೆ ಕುಳಿತು ಭಸ್ಮೀಭೂತರಾಗಿ ಬಿಟ್ಟಿದ್ದಾರೆ. ಆದ್ದರಿಂದ ಅಮರಲೋಕದಿಂದ ಮೃತ್ಯುಲೋಕದಲ್ಲಿ ಬರುತ್ತೇನೆ. ಮತ್ತೆ ನೀವು ಹೇಳುತ್ತೀರಿ, ನಾವು ಮೃತ್ಯುಲೋಕದಿಂದ ಅಮರಲೋಕಕ್ಕೆ ಹೋಗುತ್ತೇವೆ. ತಂದೆಯು ತಿಳಿಸುತ್ತಾರೆ - ನಾನು ಮೃತ್ಯುಲೋಕದಲ್ಲಿ ಬರುತ್ತೇನೆ ಎಲ್ಲಿ ಎಲ್ಲರ ಮೃತ್ಯುವಾಗಿ ಬಿಟ್ಟಿದೆ ಅವರನ್ನು ಪುನಃ ಅಮರಲೋಕದಲ್ಲಿ ಕರೆದುಕೊಂಡು ಹೋಗುತ್ತೇನೆ. ಶಾಸ್ತ್ರಗಳಲ್ಲಿ ಏನೇನನ್ನೋ ಬರೆದು ಬಿಟ್ಟಿದ್ದಾರೆ. ಅವರು ಸರ್ವಶಕ್ತಿವಂತನಾಗಿದ್ದಾರೆ. ಏನು ಬೇಕಾದರೂ ಮಾಡಬಲ್ಲರು ಎಂದು ಹೇಳುತ್ತಾರೆ ಆದರೆ ಮಕ್ಕಳು ತಿಳಿದುಕೊಂಡಿದ್ದೀರಿ - ಅವರನ್ನು ಕರೆಯುವುದೇ ಹೇ ಪತಿತ-ಪಾವನ ಬನ್ನಿ, ನಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡಿ. ದುಃಖವನ್ನು ಹರಿಸಿ, ಸುಖವನ್ನು ನೀಡಿ ಎಂದು. ಇದರಲ್ಲಿ ಜಾದುವಿನ ಯಾವುದೇ ಮಾತಿಲ್ಲ. ತಂದೆಯು ಬರುವುದೇ ಮುಳ್ಳುಗಳಿಂದ ಹೂಗಳನ್ನಾಗಿ ಮಾಡಲು.
ನೀವೀಗ ತಿಳಿದುಕೊಂಡಿದ್ದೀರಿ - ನಾವೇ ಸುಖಧಾಮದ ದೇವತೆಗಳಾಗಿದ್ದೆವು, ಸತೋಪ್ರಧಾನರಾಗಿದ್ದೆವು, ಪ್ರತಿಯೊಬ್ಬರೂ ಸತೋಪ್ರಧಾನತೆಯಿಂದ ತಮೋಪ್ರಧಾನತೆಯಲ್ಲಿ ಬರಲೇಬೇಕಾಗಿದೆ. ನೀವು ಮಕ್ಕಳು ಇಲ್ಲಿ ಕುಳಿತುಕೊಂಡಾಗ ಇನ್ನೂ ಆನಂದವಾಗಬೇಕು, ನೆನಪಿರಬೇಕು, ಇಡೀ ಪ್ರಪಂಚವು ತಂದೆಯನ್ನು ನೆನಪು ಮಾಡುತ್ತದೆ - ಹೇ ಮುಕ್ತಿದಾತ, ಮಾರ್ಗದರ್ಶಕ, ಪತಿತ-ಪಾವನ ಬನ್ನಿ ಎಂದು. ರಾವಣ ರಾಜ್ಯದಲ್ಲಿದ್ದಾಗ ಕರೆಯುತ್ತಾರೆ. ಸತ್ಯಯುಗದಲ್ಲಿ ಕರೆಯುವುದಿಲ್ಲ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ಇದನ್ನು ಯಾರು ತಿಳಿಸಿದರು? ತಂದೆಗೂ ಮಹಿಮೆ ಮಾಡುತ್ತಾರೆ. ಶಿಕ್ಷಕ, ಸದ್ಗುರುವಿಗೂ ಮಹಿಮೆ ಮಾಡುತ್ತಾರೆ, ಮೂವರೂ ಒಬ್ಬರೇ ಆಗಿದ್ದಾರೆ. ಇದು ನಿಮ್ಮ ಬುದ್ಧಿಯಲ್ಲಿದೆ. ಇವರು ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಪತಿತರನ್ನು ಪಾವನ ಮಾಡುವುದೇ ತಂದೆಯ ಕರ್ತವ್ಯವಾಗಿದೆ. ಪತಿತರು ಅವಶ್ಯವಾಗಿ ದುಃಖಿಯಾಗುತ್ತಾರೆ. ಸತೋಪ್ರಧಾನರು ಸುಖಿ, ತಮೋಪ್ರಧಾನರು ದುಃಖಿಯಾಗುತ್ತಾರೆ. ಈ ದೇವತೆಗಳಿಗೆ ಎಷ್ಟೊಂದು ಸತೋಗುಣಿ ಸ್ವಭಾವವಿದೆ, ಇಲ್ಲಿನ ಮನುಷ್ಯರದು ಕಲಿಯುಗೀ ತಮೋಗುಣಿ ಸ್ವಭಾವವಾಗಿದೆ. ಬಾಕಿ ಮನುಷ್ಯರು ನಂಬರ್ವಾರ್ ಒಳ್ಳೆಯ ಹಾಗೂ ಕೆಟ್ಟವರಿರುತ್ತಾರೆ. ಸತ್ಯಯುಗದಲ್ಲಿ ಎಂದೂ ಸಹ ಇವರು ಕೆಟ್ಟವರು, ಇವರು ಇಂತಹವರಾಗಿದ್ದಾರೆ ಎಂಬ ಮಾತನ್ನು ಹೇಳುವುದಿಲ್ಲ. ಅಲ್ಲಿ ಕೆಟ್ಟ ಲಕ್ಷಣಗಳು ಯಾವುದೂ ಇರುವುದಿಲ್ಲ, ಅದು ದೈವೀ ಸಂಪ್ರದಾಯವಾಗಿದೆ. ಹಾ! ಸಾಹುಕಾರರು ಮತ್ತು ಬಡವರಿರುತ್ತಾರೆ. ಬಾಕಿ ಒಳ್ಳೆಯ ಹಾಗೂ ಕೆಟ್ಟ ಗುಣಗಳ ಹೋಲಿಕೆಯು ಅಲ್ಲಿರುವುದಿಲ್ಲ, ಎಲ್ಲರೂ ಸುಖಿಯಾಗಿರುತ್ತಾರೆ ದುಃಖದ ಹೆಸರು ಇರುವುದಿಲ್ಲ. ಹೆಸರೇ ಆಗಿದೆ - ಸುಖಧಾಮ ಅಂದಮೇಲೆ ಮಕ್ಕಳು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕು, ತಮ್ಮ ಚಿತ್ರ ಹಾಗೂ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಇಟ್ಟುಕೊಳ್ಳಬಹುದು. ಇವರಿಗೆ ಕಲಿಸುವವರು ಯಾರೋ ಇರಬೇಕು ಎಂದು ಹೇಳುತ್ತಾರೆ. ಇದು ಭಗವಾನುವಾಚ ಅಲ್ಲವೆ. ಭಗವಂತನಿಗೆ ತನ್ನ ಶರೀರವಿಲ್ಲ, ಅವರು ಬಂದು ಶರೀರವನ್ನು ಲೋನ್ ಆಗಿ ತೆಗೆದುಕೊಳ್ಳುತ್ತಾರೆ. ಭಗೀರಥನೆಂಬ ಗಾಯನವಿದೆ ಅಂದಮೇಲೆ ಅವಶ್ಯವಾಗಿ ರಥದಲ್ಲಿ ವಿರಾಜಮಾನನಾಗುತ್ತಾರೆ. ಅವರು ಎತ್ತಿನ ಮೇಲೆ ಬರುವರೇ? ಶಿವ ಮತ್ತು ಶಂಕರನನ್ನು ಸೇರಿಸಿ ಬಿಟ್ಟಿದ್ದಾರೆ. ಆದ್ದರಿಂದ ಬಸವನನ್ನು ತೋರಿಸಿ ಬಿಟ್ಟಿದ್ದಾರೆ. ತಂದೆಯು ತಿಳಿಸುತ್ತಾರೆ - ನಾವು ತಂದೆಯ ಮಕ್ಕಳಾಗಿದ್ದೇವೆಂದು ನಿಮಗೆ ಎಷ್ಟೊಂದು ಖುಷಿಯಿರಬೇಕು! ಮಕ್ಕಳೇ, ನೀವು ನನ್ನವರಾಗಿದ್ದೀರಿ ಎಂದು ತಂದೆಯೂ ಹೇಳುತ್ತಾರೆ, ತಂದೆಗೆ ಪದವಿಯನ್ನು ಪಡೆಯುವ ಖುಷಿಯಿಲ್ಲ, ಶಿಕ್ಷಕರು ಶಿಕ್ಷಕರೇ ಆಗಿದ್ದಾರೆ ಅವರು ಓದಿಸಬೇಕಾಗಿದೆ. ತಂದೆಯು ಹೇಳುತ್ತಾರೆ - ಮಕ್ಕಳೇ, ನಾನು ಸುಖದ ಸಾಗರನಾಗಿದ್ದೇನೆ, ಈಗ ನಾನು ದತ್ತು ಮಾಡಿಕೊಂಡಿರುವ ಕಾರಣ ನಿಮಗೆ ಅತೀಂದ್ರಿಯ ಸುಖದ ಭಾಸವಾಗುತ್ತದೆ. ಭಿನ್ನ-ಭಿನ್ನ ಪ್ರಕಾರದ ದತ್ತು ಪದ್ಧತಿಯಿರುತ್ತದೆ. ಪುರುಷನು ಕನ್ಯೆಯನ್ನು ದತ್ತು ಮಾಡಿಕೊಳ್ಳುತ್ತಾರೆ ಆಗ ಇವರು ನನ್ನ ಪತಿಯೆಂದು ಕನ್ಯೆಯು ತಿಳಿದುಕೊಳ್ಳುತ್ತಾಳೆ. ನೀವೀಗ ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಪ್ರಪಂಚದಲ್ಲಿ ಈ ಮಾತುಗಳನ್ನು ತಿಳಿದುಕೊಂಡಿಲ್ಲ, ಅವರದು ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುವ ದತ್ತು ಆಗಿದೆ. ಉದಾಹರಣೆಗೆ: ರಾಜನು ಯಾರದೇ ಮಗುವನ್ನು ಮಡಿಲಿಗೆ ತೆಗೆದುಕೊಳ್ಳುತ್ತಾರೆ, ಸುಖಕ್ಕಾಗಿ ದತ್ತು ಮಾಡಿಕೊಳ್ಳುತ್ತಾರೆ ಆದರೆ ಅದು ಅಲ್ಪಕಾಲದ ಸುಖವಾಗಿದೆ. ಸನ್ಯಾಸಿಗಳೂ ಸಹ ದತ್ತು ಮಾಡಿಕೊಳ್ಳುತ್ತಾರಲ್ಲವೆ. ಇವರು ನಮ್ಮ ಗುರುವೆಂದು ಶಿಷ್ಯರು ಹೇಳುತ್ತಾರೆ, ಇವರು ನಮ್ಮ ಅನುಯಾಯಿಗಳೆಂದು ಗುರುಗಳು ಹೇಳುತ್ತಾರೆ. ಎಷ್ಟೊಂದು ದತ್ತು ಪದ್ಧತಿಗಳಿವೆ! ತಂದೆಯು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಅವರಿಗೆ ಸುಖವನ್ನಂತೂ ಕೊಡುತ್ತಾರೆ ನಂತರ ವಿವಾಹ ಮಾಡಿಸುವುದರಿಂದ ಹೇಗೆ ದುಃಖದ ಆಸ್ತಿಯನ್ನು ಕೊಟ್ಟಂತಾಗುತ್ತದೆ. ಗುರುವಿನ ದತ್ತು ಪದ್ಧತಿ ಎಷ್ಟೊಂದು ಚೆನ್ನಾಗಿದೆ ಮತ್ತು ನಿಮ್ಮದು ಈಶ್ವರನು ಆತ್ಮಗಳನ್ನು ತನ್ನವರನ್ನಾಗಿ ಮಾಡಿಕೊಳ್ಳುವ ಪದ್ಧತಿಯಾಗಿದೆ. ಈಗ ನೀವು ಮಕ್ಕಳು ಎಲ್ಲರ ದತ್ತನ್ನು ನೋಡಿ ಬಿಟ್ಟಿದ್ದೀರಿ. ಸನ್ಯಾಸಿಗಳಿಗೆ ಅನುಯಾಯಿಗಳಾಗಿದ್ದರೂ ಸಹ ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ದತ್ತು ಮಾಡಿಕೊಂಡು ಪಾವನರನ್ನಾಗಿ ಮಾಡಿ ಎಂದು ಹಾಡುತ್ತಿರುತ್ತಾರೆ. ಎಲ್ಲರೂ ಸಹೋದರರಾಗಿದ್ದಾರೆ ಆದರೆ ತಂದೆಯು ಬಂದು ತನ್ನವರನ್ನಾಗಿ ಮಾಡಿಕೊಳ್ಳುವರಲ್ಲವೆ. ಬಾಬಾ, ನಾವು ದುಃಖಿಯಾಗಿ ಬಿಟ್ಟಿದ್ದೇವೆ ಎಂದು ಹೇಳುತ್ತಾರೆ. ರಾವಣ ರಾಜ್ಯದ ಅರ್ಥವನ್ನೂ ತಿಳಿದುಕೊಳ್ಳುವುದಿಲ್ಲ. ಪ್ರತಿಮೆಯನ್ನು ಮಾಡಿ ಸುಡುತ್ತಾ ಇರುತ್ತಾರೆ. ಹೇಗೆ ಯಾರಾದರೂ ದುಃಖ ಕೊಡುತ್ತಾರೆಂದರೆ ಇವರ ಮೇಲೆ ಮೊಕದ್ದಮೆ ಹೂಡಬೇಕು ಎಂದು ತಿಳಿಯುತ್ತಾರೆ ಆದರೆ ಯಾವಾಗಿನಿಂದ ಶತ್ರುವಾಗಿದ್ದಾನೆ? ಕೊನೆಗೂ ಈ ಶತ್ರು ಸಾಯುವನೇ ಅಥವಾ ಇಲ್ಲವೆ? ಈ ಶತ್ರುವಿನ ಬಗ್ಗೆ ನಿಮಗೇ ತಿಳಿದಿದೆ, ರಾವಣನ ಮೇಲೆ ಜಯ ಗಳಿಸುವುದಕ್ಕಾಗಿಯೇ ನಿಮ್ಮನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಇದನ್ನೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ವಿನಾಶವಾಗುವುದು ಅದಕ್ಕಾಗಿ ಅಣು ಬಾಂಬುಗಳು ತಯಾರಾಗಿವೆ. ಈ ಜ್ಞಾನ ಯಜ್ಞದಿಂದಲೇ ವಿನಾಶ ಜ್ವಾಲೆಯು ಹೊರಡುವುದು. ನೀವೀಗ ರಾವಣನ ಮೇಲೆ ಜಯ ಗಳಿಸಿ ನಂತರ ಹೊಸ ಸೃಷ್ಟಿಯಲ್ಲಿ ರಾಜ್ಯಭಾರ ಮಾಡುತ್ತೀರಿ. ಈಗ ಉಳಿದೆಲ್ಲವೂ ಗೊಂಬೆಗಳ ಆಟವಾಗಿದೆ. ರಾವಣನ ಗೊಂಬೆಯಂತೂ ಎಷ್ಟೊಂದು ಖರ್ಚು ಮಾಡಿಸುತ್ತದೆ. ಮನುಷ್ಯರು ಬಹಳ ಹಣವನ್ನು ವ್ಯರ್ಥವಾಗಿ ಕಳೆಯುತ್ತಾರೆ. ಎಷ್ಟೊಂದು ರಾತ್ರಿ-ಹಗಲಿನ ಅಂತರವಿದೆ. ಅವರು ಅಲೆದಾಡುತ್ತಾ-ದುಃಖಿಯಾಗುತ್ತಾರೆ, ಮೋಸ ಹೋಗುತ್ತಿರುತ್ತಾರೆ ಮತ್ತು ನಾವೀಗ ಶ್ರೀಮತದಂತೆ ಶ್ರೇಷ್ಠಾಚಾರಿಗಳು ಸತ್ಯಯುಗೀ ಸ್ವರಾಜ್ಯವನ್ನು ಪಡೆಯುತ್ತಿದ್ದೇವೆ. ಶ್ರೇಷ್ಠಾತಿ ಶ್ರೇಷ್ಠ ಸತ್ಯಯುಗವನ್ನು ಸ್ಥಾಪನೆ ಮಾಡುವ ಶಿವ ತಂದೆಯು ನಮ್ಮನ್ನು ಶ್ರೇಷ್ಠ ದೇವತೆ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಶ್ರೀ ಶ್ರೀ ಶಿವ ತಂದೆಯೇ ನಮ್ಮನ್ನು ಶ್ರೀಗಳನ್ನಾಗಿ ಮಾಡುತ್ತಾರೆ. ಒಬ್ಬರಿಗೆ ಶ್ರೀ ಶ್ರೀ ಎಂದು ಹೇಳಲಾಗುತ್ತದೆ. ದೇವತೆಗಳಿಗೂ ಸಹ ಕೇವಲ ಶ್ರೀ ಎಂದು ಹೇಳಲಾಗುತ್ತದೆ ಏಕೆಂದರೆ ಅವರು ಪುನರ್ಜನ್ಮದಲ್ಲಿ ಬರುತ್ತಾರಲ್ಲವೆ. ವಾಸ್ತವದಲ್ಲಿ ವಿಕಾರಿ ರಾಜರಿಗೂ ಸಹ ಶ್ರೀ ಎಂದು ಹೇಳುವಂತಿಲ್ಲ.
ಈಗ ನಿಮ್ಮ ಬುದ್ಧಿಯು ಎಷ್ಟೊಂದು ವಿಶಾಲ ಬುದ್ಧಿಯಾಗಬೇಕು. ನಿಮಗೆ ತಿಳಿದಿದೆ - ನಾವು ಈ ವಿದ್ಯೆಯಿಂದ ಡಬಲ್ ಕಿರೀಟಧಾರಿಗಳಾಗುತ್ತೇವೆ, ನಾವೇ ಡಬಲ್ ಕಿರೀಟಧಾರಿಗಳಾಗಿದ್ದೆವು, ಈಗಂತೂ ಸಿಂಗಲ್ ಕಿರೀಟವೂ ಇಲ್ಲ. ಪತಿತರಲ್ಲವೆ. ಇಲ್ಲಿ ಯಾರಿಗೂ ಪ್ರಕಾಶತೆಯ ಕಿರೀಟವನ್ನು ತೋರಿಸುವಂತಿಲ್ಲ. ಈ ಚಿತ್ರಗಳಲ್ಲಿ ಎಲ್ಲಿ ನೀವು ತಪಸ್ಸಿನಲ್ಲಿ ಕುಳಿತಿದ್ದೀರೋ ಅಲ್ಲಿಯೂ ಸಹ ವಾಸ್ತವದಲ್ಲಿ ಪ್ರಕಾಶತೆಯ ಕಿರೀಟವನ್ನು ತೋರಿಸಬಾರದು, ನೀವು ಭವಿಷ್ಯದಲ್ಲಿ ಡಬಲ್ ಕಿರೀಟಧಾರಿಗಳಾಗಬೇಕಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ತಂದೆಯಿಂದ ಡಬಲ್ ಕಿರೀಟಧಾರಿ ಮಹಾರಾಜ-ಮಹಾರಾಣಿ ಆಗುವುದಕ್ಕಾಗಿ ಬಂದಿದ್ದೇವೆ, ಈ ಖುಷಿಯಿರಬೇಕು. ಶಿವ ತಂದೆಯನ್ನು ನೆನಪು ಮಾಡಬೇಕು ಆಗ ಪತಿತರಿಂದ ಪಾವನರಾಗಿ ಸ್ವರ್ಗದ ಮಾಲೀಕರಾಗುತ್ತೀರಿ, ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ, ಇಲ್ಲಿ ನೀವು ವಿದ್ಯಾರ್ಥಿಗಳು ಕುಳಿತಿದ್ದೀರಿ. ಹೊರಗಡೆ ಮಿತ್ರ ಸಂಬಂಧಿ ಮೊದಲಾದವರ ಬಳಿ ಹೋದಾಗ ವಿದ್ಯಾರ್ಥಿ ಜೀವನವು ಹೊರಟು ಹೋಗುತ್ತದೆ. ಮತ್ತೆ ಮಿತ್ರ ಸಂಬಂಧಿಗಳು ನೆನಪಿಗೆ ಬಂದು ಬಿಡುತ್ತಾರೆ. ಮಾಯೆಯ ಪ್ರಭಾವವಿದೆಯಲ್ಲವೆ. ಹಾಸ್ಟೆಲ್ನಲ್ಲಿ ಇರುವುದರಿಂದ ಚೆನ್ನಾಗಿ ಓದುತ್ತಾರೆ, ಹೊರಗಡೆ ಬಂದು ಹೋದರೆ ಸಂಗದೋಷದಲ್ಲಿ ಕೆಟ್ಟು ಹೋಗುತ್ತಾರೆ. ಇಲ್ಲಿಂದ ಹೊರಗಡೆ ಹೋಗುತ್ತಾರೆಂದರೆ ಈ ವಿದ್ಯಾರ್ಥಿ ಜೀವನದ ನಶೆಯೇ ಮಾಯವಾಗಿ ಬಿಡುತ್ತದೆ. ಓದಿಸುವಂತಹ ಬ್ರಾಹ್ಮಣಿಯರಿಗೂ ಸಹ ಇಲ್ಲಿ ಎಷ್ಟು ನಶೆಯಿರುವುದೋ ಅಷ್ಟು ಅಲ್ಲಿ ಹೊರಗಡೆ ಇದ್ದಾಗ ಇರುವುದಿಲ್ಲ. ಮಧುಬನವು ಮುಖ್ಯಕೇಂದ್ರವಾಗಿದೆ. ವಿದ್ಯಾರ್ಥಿಗಳು ಶಿಕ್ಷಕರ ಸನ್ಮುಖದಲ್ಲಿರುತ್ತಾರೆ, ಇಲ್ಲಿ ಯಾವುದೇ ಉದ್ಯೋಗದ ಜಂಜಾಟವಿರುವುದಿಲ್ಲ. ಅಲ್ಲಿನ ವಾತಾವರಣ ಮತ್ತು ಇಲ್ಲಿನ ವಾತಾವರಣದಲ್ಲಿ ರಾತ್ರಿ-ಹಗಲಿನ ಅಂತರವಿದೆ. ಕೆಲವರಂತೂ ಇಡೀ ದಿನ ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ಶಿವ ತಂದೆಗೆ ಸಹಯೋಗಿಗಳೂ ಆಗುವುದಿಲ್ಲ. ಶಿವ ತಂದೆಯ ಮಕ್ಕಳಾಗಿದ್ದೀರೆಂದರೆ ಸರ್ವೀಸ್ ಮಾಡಿರಿ. ಒಂದುವೇಳೆ ಸರ್ವೀಸ್ ಮಾಡದಿದ್ದರೆ ಅವರು ಕುಪುತ್ರರೆಂದರ್ಥ. ತಂದೆಯಂತೂ ತಿಳಿದುಕೊಳ್ಳುತ್ತಾರಲ್ಲವೆ, ಇವರ ಕರ್ತವ್ಯವಾಗಿದೆ - ನನ್ನನ್ನು ನೆನಪು ಮಾಡಿರಿ ಎಂದು ಹೇಳುವುದು. ಅದನ್ನು ಫಾಲೋ ಮಾಡಿದರೆ ಬಹಳ-ಬಹಳ ಕಲ್ಯಾಣವಿದೆ, ವಿಕಾರಿ ಸಂಬಂಧಗಳಂತೂ ಭ್ರಷ್ಠಾರಿಯಾಗಿದೆ, ಅದನ್ನು ಬಿಡುತ್ತಾ ಹೋಗಿ ಅವರ ಸಂಗವನ್ನು ಇಟ್ಟುಕೊಳ್ಳಬೇಡಿ. ತಂದೆಯಂತೂ ತಿಳಿಸುತ್ತಾರೆ ಆದರೆ ಅದೃಷ್ಟದಲ್ಲಿಯೂ ಇರಬೇಕಲ್ಲವೆ. ಚಾರ್ಟ್ ಇಡಬೇಕೆಂದು ತಂದೆಯು ಹೇಳಿದರು, ಇದರಿಂದಲೂ ಬಹಳ ಕಲ್ಯಾಣವಾಗುವುದು. ಕೆಲವರು ಒಂದು ಗಂಟೆಯ ಸಮಯವೂ ಸಹ ನೆನಪಿನಲ್ಲಿರಲು ಕಷ್ಟ. 8 ಗಂಟೆಗಳಂತೂ ಅಂತ್ಯದಲ್ಲಿಯೇ ತಲುಪುವಿರಿ, ಕರ್ಮಯೋಗಿಗಳಾಗಿದ್ದೀರಲ್ಲವೆ. ಕೆಲಕೆಲವರಿಗೆ ಕೆಲವೊಮ್ಮೆ ಉಮ್ಮಂಗವು ಬಂದಾಗ ಚಾರ್ಟ್ ಇಡುತ್ತಾರೆ, ಇದು ಒಳ್ಳೆಯದಾಗಿದೆ. ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಲಾಭವಿದೆ. ಅಂತ್ಯಕಾಲದಲ್ಲಿ ಯಾರು ನಾರಾಯಣನನ್ನು ಸ್ಮರಿಸಿದರೋ...... ಅವರು ಬಾರಿ ಬಾರಿ ನಾರಾಯಣನ ಯೋನಿಯಲ್ಲಿ ಬರುವರು ಎಂದು ಗಾಯನವಿದೆ. ಈ ಬಾರಿ-ಬಾರಿ ಎಂಬುದರ ಅರ್ಥವೇನಾಗಿದೆ? ಯಾರು ಚೆನ್ನಾಗಿ ನೆನಪು ಮಾಡುವುದಿಲ್ಲವೋ ಅವರಿಗೆ ಜನ್ಮ-ಜನ್ಮಾಂತರದ ಯಾವ ಹೊರೆಯಿದೆಯೋ ಅದನ್ನು ಪದೇ ಪದೇ (ಬಾರಿ ಬಾರಿ) ಜನ್ಮ ಕೊಟ್ಟು ಸಾಕ್ಷಾತ್ಕಾರ ಮಾಡಿಸಿ ನಂತರ ಶಿಕ್ಷೆಯನ್ನು ಕೊಡಲಾಗುತ್ತದೆ. ಹೇಗೆ ಕಾಶಿಯಲ್ಲಿ ಬಲಿಯಾಗುವಾಗ ಪಾಪಗಳ ಸಾಕ್ಷಾತ್ಕಾರಗಳಾಗುತ್ತದೆ, ನಾವು ಪಾಪಗಳ ಶಿಕ್ಷೆಯನ್ನು ಅನುಭವಿಸುತ್ತೇವೆ, ಬಹಳ ಶಿಕ್ಷೆಯನ್ನು ಅನುಭವಿಸುವವರಾಗಿದ್ದೇವೆ ಎಂದು ಅನುಭವವಾಗುತ್ತದೆ. ತಂದೆಯ ಸೇವೆಯಲ್ಲಿ ಯಾರು ವಿಘ್ನಗಳನ್ನು ಹಾಕುವರೋ ಅವರು ಶಿಕ್ಷೆಗಳಿಗೆ ಗುರಿಯಾಗುವರು. ತಂದೆಯ ಸೇವೆಯಲ್ಲಿ ತೊಂದರೆ ಮಾಡುತ್ತಾರೆ. ತಂದೆಗೆ ಬಲಭುಜ ಧರ್ಮರಾಜನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ತಮ್ಮ ಜೊತೆ ಪ್ರತಿಜ್ಞೆ ಮಾಡಿರಿ ಏಕೆಂದರೆ ತಂದೆಯ ನೆನಪಿನಿಂದಲೇ ಪಾವನರಾಗುತ್ತೀರಿ, ಇಲ್ಲವಾದರೆ ಇಲ್ಲ. ತಂದೆಯು ಪ್ರತಿಜ್ಞೆ ಮಾಡಿಸುತ್ತಾರೆ, ಮಾಡಿ ಮಾಡದೇ ಇರಿ ಅದು ನಿಮ್ಮಿಷ್ಟ. ಯಾರು ಮಾಡುವರೋ ಅವರು ಪಡೆಯುವರು. ಅನೇಕರಿದ್ದಾರೆ, ಪ್ರತಿಜ್ಞೆ ಮಾಡಿಯೂ ಮತ್ತೆ ಕೆಟ್ಟ ಕರ್ಮಗಳನ್ನು ಮಾಡುತ್ತಿರುತ್ತಾರೆ. ಭಕ್ತಿಮಾರ್ಗದಲ್ಲಿ ನನ್ನವರು ಒಬ್ಬ ತಂದೆಯ ವಿನಃ ಯಾರೂ ಇಲ್ಲವೆಂದು ಹಾಡುತ್ತಿರುತ್ತಾರೆ ಆದರೆ ಆ ಮಾತು ಈಗ ಬುದ್ಧಿಯಲ್ಲಿ ಬರುತ್ತದೆ - ಆತ್ಮವು ಏಕೆ ಈ ರೀತಿ ಹಾಡುತ್ತಾ ಬಂದಿದೆ! ನನ್ನವರು ಗಿರಿಧರ ಗೋಪಾಲನ ಹೊರತು ಯಾರೂ ಇಲ್ಲ..... ಎಂದು ಇಡೀ ದಿನ ಹಾಡುತ್ತಿರುತ್ತಾರೆ. ತಂದೆಯು ಸಂಗಮದಲ್ಲಿ ಬಂದಾಗಲೇ ತಮ್ಮ ಮನೆಗೆ ಕರೆದುಕೊಂಡು ಹೋಗುತ್ತಾರೆ. ಕೃಷ್ಣ ಪುರಿಯಲ್ಲಿ ಹೋಗುವುದಕ್ಕಾಗಿಯೇ ನೀವು ಓದುತ್ತೀರಲ್ಲವೆ. ರಾಜಕುಮಾರ-ಕುಮಾರಿಯರ ಕಾಲೇಜುಗಳಿರುತ್ತವೆ ಎಲ್ಲಿ ರಾಜಕುಮಾರ-ಕುಮಾರಿಯರು ಓದುತ್ತಾರೆ. ಅದಂತೂ ಹದ್ದಿನ ಮಾತಾಗಿದೆ. ಕೆಲವೊಮ್ಮೆ ರೋಗಿಯಾಗುತ್ತಾರೆ, ಕೆಲವೊಮ್ಮೆ ಶರೀರವನ್ನೂ ಬಿಡುತ್ತಾರೆ ಆದರೆ ಇದಂತೂ ರಾಜಕುಮಾರ-ಕುಮಾರಿಯರಾಗುವ ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ರಾಜಯೋಗವಲ್ಲವೆ. ನೀವು ನರನಿಂದ ನಾರಾಯಣ ಆಗುತ್ತೀರಿ, ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡು ಸತ್ಯಯುಗದ ರಾಜಕುಮಾರ-ಕುಮಾರಿಯರಾಗುತ್ತೀರಿ. ತಂದೆಯು ಎಷ್ಟೊಂದು ಮಜಾ ಬರುವಂತಹ ಮಾತುಗಳನ್ನು ತಿಳಿಸುತ್ತಾರೆ. ಇವು ನೆನಪಿರಬೇಕಲ್ಲವೆ. ಕೆಲವರಂತೂ ಇಲ್ಲಿಂದ ಹೊರಗಡೆ ಹೋಗುತ್ತಿದ್ದಂತೆಯೇ ಸಿಕ್ಕಿ ಹಾಕಿಕೊಳ್ಳುತ್ತಾರೆ. ತಂದೆಯನ್ನು ನೆನಪೂ ಸಹ ನಂಬರ್ವಾರ್ ಮಾಡುತ್ತಾರೆ. ಯಾರು ಹೆಚ್ಚು ನೆನಪು ಮಾಡುವರೋ ಅವರು ಅನ್ಯರಿಗೂ ನೆನಪು ತರಿಸುತ್ತಾ ಇರುತ್ತಾರೆ. ಹೇಗೆ ಅನೇಕರ ಕಲ್ಯಾಣ ಮಾಡಬೇಕೆಂಬುದೇ ಬುದ್ಧಿಯಲ್ಲಿ ಇರಬೇಕಾಗಿದೆ. ಹೊರಗಿನವರು ಪ್ರಜೆಗಳಲ್ಲಿ ದಾಸ-ದಾಸಿಯರು, ಇಲ್ಲಿನವರು ರಾಜರಲ್ಲಿ ದಾಸ-ದಾಸಿಯರಾಗುವರು. ಮುಂದೆಹೋದಂತೆ ಎಲ್ಲವೂ ಸಾಕ್ಷಾತ್ಕಾರವಾಗುತ್ತಾ ಹೋಗುವುದು, ನಿಮಗೂ ಅನುಭವವಾಗುತ್ತದೆ, ನಾವು ಪೂರ್ಣ ಪುರುಷಾರ್ಥ ಮಾಡಲಿಲ್ಲ ಎಂದು. ಬಹಳ ಚಮತ್ಕಾರವನ್ನು ನೋಡುವಿರಿ, ಯಾರು ಚೆನ್ನಾಗಿ ಓದುವರೋ ಅವರೇ ನವಾಬರಾಗುವರು. ತಂದೆಯು ಎಷ್ಟೊಂದು ಹೇಳುತ್ತಿರುತ್ತಾರೆ - ಸೇವಾಕೇಂದ್ರಗಳಿಗೆ ಪ್ರದರ್ಶನಿ ಚಿತ್ರಗಳನ್ನು ಕೊಡುತ್ತೇನೆ. ಇದರಿಂದ ಮಕ್ಕಳಿಗೆ ಕಲಿಸಿ ಬುದ್ಧಿವಂತರನ್ನಾಗಿ ಮಾಡಲಿ ಎಂದು. ಆಗಲೇ ತಂದೆಯು ತಿಳಿದುಕೊಳ್ಳುತ್ತಾರೆ - ಬ್ರಹ್ಮಾಕುಮಾರ-ಕುಮಾರಿಯರು ಸರ್ವೀಸ್ ಮಾಡುವುದನ್ನು ತಿಳಿದುಕೊಂಡಿದ್ದಾರೆ. ಸರ್ವೀಸ್ ಮಾಡಿದರೆ ಶ್ರೇಷ್ಠ ಪದವಿಯನ್ನು ಪಡೆಯುವಿರಿ ಆದ್ದರಿಂದ ತಂದೆಯು ಪ್ರದರ್ಶನಿಯನ್ನು ಇಡುವುದಕ್ಕಾಗಿ ಒತ್ತುಕೊಟ್ಟು ಹೇಳುತ್ತಿದ್ದೇವೆ. ಚಿತ್ರಗಳನ್ನು ಮಾಡಿಸುವುದಂತೂ ಸಾಮಾನ್ಯ ಮಾತಾಗಿದೆ. ಧೈರ್ಯವನ್ನು ಇಟ್ಟು ಪ್ರದರ್ಶನಿ ಚಿತ್ರಗಳನ್ನು ಮಾಡಿಸುವುದರಲ್ಲಿ ಸಹಯೋಗ ನೀಡಬೇಕು ಇದರಿಂದ ಮಕ್ಕಳಿಗೆ ತಿಳಿಸುವುದರಲ್ಲಿ ಸಹಜವಾಗುವುದು. ತಂದೆಯು ತಿಳಿದುಕೊಳ್ಳುತ್ತಾರೆ - ಟೀಚರ್ಸ್, ಮ್ಯಾನೇಜರ್ಗಳು ತಣ್ಣಗಾಗಿದ್ದಾರೆ. ಕೆಲಕೆಲವು ಬ್ರಾಹ್ಮಣಿಯರು ಮ್ಯಾನೇಜರ್ ಆಗುತ್ತಾರೆಂದರೆ ದೇಹಾಭಿಮಾನವು ಬಂದು ಬಿಡುತ್ತದೆ, ಎಲ್ಲವನ್ನೂ ಅರಿತವನೆಂದು ತಿಳಿದುಕೊಳ್ಳುತ್ತಾರೆ. ನಾವು ಬಹಳ ಚೆನ್ನಾಗಿ ನಡೆಯುತ್ತೇವೆ ಎಂದು ತಿಳಿದುಕೊಳ್ಳುತ್ತಾರೆ, ಅನ್ಯರೊಂದಿಗೆ ಕೇಳಿದರೆ ಹತ್ತು ಮಾತುಗಳನ್ನು ತಿಳಿಸುತ್ತಾರೆ. ಮಾಯೆಯು ಬಹಳ ಸುಳಿಯಲ್ಲಿ ಹಾಕುತ್ತದೆ. ಮಕ್ಕಳಂತೂ ಸರ್ವೀಸ್ ಮತ್ತು ಸರ್ವೀಸಿನಲ್ಲಿರಬೇಕು. ತಂದೆಯು ದಯಾಹೃದಯಿ, ದುಃಖಹರ್ತ -ಸುಖಕರ್ತನಾಗಿದ್ದಾರೆ ಅಂದಮೇಲೆ ಮಕ್ಕಳೂ ಸಹ ಆಗಬೇಕಾಗಿದೆ. ಕೇವಲ ತಂದೆಯ ಪರಿಚಯವನ್ನು ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನರಕವಾಸಿಗಳಿಂದ ಸ್ವರ್ಗವಾಸಿಗಳಾಗಿರಿ, ಎಷ್ಟು ಸಹಜವಾಗಿದೆ. ನನ್ನನ್ನು ನೆನಪು ಮಾಡುವುದರಿಂದ ಪತಿತರಿಂದ ಪಾವನರಾಗಿ ನೀವು ಶಾಂತಿಧಾಮ-ಸುಖಧಾಮದಲ್ಲಿ ಬರುತ್ತೀರೆಂದು ತಂದೆಯು ತಿಳಿಸುತ್ತಾರೆ. ಅವರಿಗೆ ನಿಶ್ಚಯವಿದ್ದರೆ ಅವರಿಂದ ಬರೆಸಿಕೊಳ್ಳಬೇಕು - ಅವಶ್ಯವಾಗಿ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ ಅಂದಮೇಲೆ ಇಂತಹ ತಂದೆಗೆ ನಾವು ಮಕ್ಕಳಾಗಬೇಕು, ಅವರ ಮಡಿಲನ್ನು ಪಡೆಯಬೇಕೆಂದು ತಿಳಿದುಕೊಳ್ಳುತ್ತೇವೆ ಎಂಬುದನ್ನೂ ಬರೆಯುತ್ತಾರೆ. ನೀವು ತಂದೆಯ ಆಶ್ರಯವನ್ನು ಪಡೆದಿದ್ದೀರಿ ಅರ್ಥಾತ್ ತಂದೆಯ ಮಡಿಲಿಗೆ ಬಂದಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯ ಸಮಾನ ದಯಾಹೃದಯಿ, ದುಃಖಹರ್ತ-ಸುಖಕರ್ತರಾಗಬೇಕಾಗಿದೆ.
2. ಸಂಗ ದೋಷದಿಂದ ತಮ್ಮನ್ನು ಬಹಳ-ಬಹಳ ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ತಂದೆಯನ್ನೇ ಅನುಸರಿಸಬೇಕಾಗಿದೆ. ಅನೇಕರ ಕಲ್ಯಾಣದ ಸೇವೆ ಮಾಡಬೇಕಾಗಿದೆ. ಎಂದೂ ಅಹಂಕಾರದಲ್ಲಿ ಬಂದು ಎಲ್ಲಾ ಅರಿತವನೆಂದು ತಿಳಿದುಕೊಳ್ಳಬಾರದು.
ಓಂ ಶಾಂತಿ. ಇದು ಮನೆಯೂ ಆಗಿದೆ ಮತ್ತು ವಿಶ್ವ ವಿದ್ಯಾಲಯವೂ ಆಗಿದೆ. ಇದಕ್ಕೆ ಈಶ್ವರೀಯ ವಿಶ್ವ ವಿದ್ಯಾಲಯವೆಂದು ಹೇಳಲಾಗುತ್ತದೆ ಏಕೆಂದರೆ ಇಡೀ ಪ್ರಪಂಚದ ಮನುಷ್ಯ ಮಾತ್ರರ ಸದ್ಗತಿಯಾಗುತ್ತದೆ. ನಿಜವಾದ ವಿಶ್ವ ವಿದ್ಯಾಲಯವು ಇದಾಗಿದೆ. ಮನೆಗೆ ಮನೆಯೂ ಆಗಿದೆ, ಮಾತಾಪಿತರ ಸನ್ಮುಖದಲ್ಲಿ ಕುಳಿತಿದ್ದೀರಿ ಮತ್ತು ವಿಶ್ವ ವಿದ್ಯಾಲಯವೂ ಆಗಿದೆ, ಆತ್ಮಿಕ ತಂದೆಯು ಕುಳಿತಿದ್ದಾರೆ. ಇದು ಆತ್ಮಿಕ ಜ್ಞಾನವಾಗಿದೆ ಯಾವುದು ಆತ್ಮಿಕ ತಂದೆಯ ಮೂಲಕ ಸಿಗುತ್ತಿದೆ. ಆತ್ಮಿಕ ಜ್ಞಾನವು ಆತ್ಮಿಕ ತಂದೆಯ ವಿನಃ ಮತ್ತ್ಯಾವುದೇ ಮನುಷ್ಯರು ಕೊಡಲು ಸಾಧ್ಯವಿಲ್ಲ. ಅವರಿಗೇ ಜ್ಞಾನ ಸಾಗರನೆಂದು ಹೇಳಲಾಗುತ್ತದೆ ಮತ್ತು ಜ್ಞಾನದಿಂದಲೇ ಸದ್ಗತಿಯಾಗುತ್ತದೆ. ಆದ್ದರಿಂದ ಜ್ಞಾನ ಸಾಗರ ಸರ್ವರ ಸದ್ಗತಿದಾತನು ಒಬ್ಬ ತಂದೆಯೇ ಆಗಿದ್ದಾರೆ. ತಂದೆಯ ಮೂಲಕ ಇಡೀ ವಿಶ್ವದ ಮನುಷ್ಯರಷ್ಟೇ ಅಲ್ಲ ಪ್ರತಿಯೊಂದು ವಸ್ತು ಪಂಚ ತತ್ವಗಳೂ ಸತೋಪ್ರಧಾನ ಆಗಿ ಬಿಡುತ್ತವೆ. ಎಲ್ಲದರ ಸದ್ಗತಿ ಆಗಿ ಬಿಡುತ್ತದೆ. ಈ ಮಾತುಗಳು ಬಹಳ ತಿಳಿದುಕೊಳ್ಳುವಂತದ್ದಾಗಿದೆ. ಈಗ ಎಲ್ಲರ ಸದ್ಗತಿ ಆಗಬೇಕಾಗಿದೆ. ಹಳೆಯ ಪ್ರಪಂಚ ಮತ್ತು ಪ್ರಪಂಚದಲ್ಲಿ ಇರುವವರೆಲ್ಲರೂ ಪರಿವರ್ತನೆ ಆಗಿ ಬಿಡುತ್ತಾರೆ. ಏನೆಲ್ಲವನ್ನೂ ಇಲ್ಲಿ ನೋಡುತ್ತೀರೋ ಅದೆಲ್ಲವೂ ಪರಿವರ್ತನೆಯಾಗಿ ಹೊಸದಾಗುವುದು. ಗಾಯನವಿದೆ - ಇಲ್ಲಿ ಸುಳ್ಳು ಮಾಯೆ-ಸುಳ್ಳು ಕಾಯವಾಗಿದೆ...... ಇದು ಅಸತ್ಯ ಖಂಡ ಆಗಿ ಬಿಡುತ್ತದೆ. ಭಾರತವು ಸತ್ಯ ಖಂಡವಾಗಿತ್ತು, ಈಗ ಅಸತ್ಯ ಖಂಡವಾಗಿದೆ. ರಚಯಿತ ಮತ್ತು ರಚನೆಯ ಬಗ್ಗೆ ಮನುಷ್ಯರು ಕೇಳುವುದೆಲ್ಲವೂ ಸುಳ್ಳಾಗಿದೆ, ನೀವೀಗ ತಂದೆಯ ಮೂಲಕ ಭಗವಾನುವಾಚವನ್ನು ತಿಳಿದುಕೊಂಡಿದ್ದೀರಿ. ಭಗವಂತನು ಒಬ್ಬರೇ ತಂದೆಯಾಗಿದ್ದಾರಲ್ಲವೆ. ಅವರು ನಿರಾಕಾರನಾಗಿದ್ದಾರೆ. ಮೂಲತಃ ಎಲ್ಲಾ ಆತ್ಮರು ನಿರಾಕಾರಿಯಾಗಿದ್ದಾರೆ ನಂತರ ಇಲ್ಲಿ ಬಂದು ಸಾಕಾರ ರೂಪವನ್ನು ತೆಗೆದುಕೊಳ್ಳುತ್ತಾರೆ, ಅಲ್ಲಿ ಆಕಾರವಿರುವುದಿಲ್ಲ, ಆತ್ಮರು ಮೂಲವತನ ಅಥವಾ ಬ್ರಹ್ಮ ಮಹಾತತ್ವದಲ್ಲಿ ನಿವಾಸ ಮಾಡುತ್ತಾರೆ. ಅದು ನಾವಾತ್ಮರ ಮನೆ ಬ್ರಹ್ಮ ಮಹಾತತ್ವವಾಗಿದೆ. ಇದು ಆಕಾಶ ತತ್ವವಾಗಿದೆ ಎಲ್ಲಿ ಸಾಕಾರಿ ಪಾತ್ರವು ನಡೆಯುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆ, ಇದರ ಅರ್ಥವನ್ನೂ ತಿಳಿದುಕೊಂಡಿಲ್ಲ, ಕೇವಲ ಪುನರಾವರ್ತನೆ ಆಗುತ್ತದೆಯೆಂದು ಹೇಳುತ್ತಾರೆ. ಚಿನ್ನದ ಯುಗ, ಬೆಳ್ಳಿಯುಗ...... ಮತ್ತೇನು? ಪುನಃ ಸತ್ಯಯುಗವು ಅವಶ್ಯವಾಗಿ ಬರುವುದು. ಸಂಗಮಯುಗವು ಒಂದೇ ಆಗಿದೆ, ಸತ್ಯ-ತ್ರೇತಾ ಹಾಗೂ ತ್ರೇತಾ ಮತ್ತು ದ್ವಾಪರದ ಸಂಗಮವೆಂದು ಹೇಳಲಾಗುವುದಿಲ್ಲ. ಅದು ತಪ್ಪಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಯಾವಾಗ ಪತಿತರಾಗುವರೋ ಆಗಲೇ ನನ್ನನ್ನು ಪಾವನರನ್ನಾಗಿ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಪಾವನರಿರುವುದೇ ಸತ್ಯಯುಗದಲ್ಲಿ. ಈಗ ಸಂಗಮವಾಗಿದೆ, ಇದಕ್ಕೆ ಕಲ್ಯಾಣಕಾರಿ ಸಂಗಮಯುಗವೆಂದು ಹೇಳಲಾಗುತ್ತದೆ, ಆತ್ಮ ಮತ್ತು ಪರಮಾತ್ಮನ ಮಿಲನದ ಸಂಗಮ, ಇದಕ್ಕೆ ಕುಂಭವೆಂದೂ ಹೇಳಲಾಗುತ್ತದೆ. ಅವರು ಮತ್ತೆ ನದಿಗಳ ಮೇಳವನ್ನೂ ತೋರಿಸುತ್ತಾರೆ. ಎರಡು ನದಿಗಳಂತೂ ಇವೆ, ಮೂರನೆಯದು ಗುಪ್ತ ನದಿಯೆಂದು ಹೇಳುತ್ತಾರೆ, ಇದೂ ಸಹ ಸುಳ್ಳಾಗಿದೆ. ಎಂದಾದರೂ ಗುಪ್ತ ನದಿ ಇರುತ್ತದೆಯೇ? ಗುಪ್ತ ನದಿ ಇರುತ್ತದೆಯೆಂಬ ಮಾತನ್ನು ವಿಜ್ಞಾನದವರೂ ಸಹ ಒಪ್ಪುವುದಿಲ್ಲ. ಬಾಣ ಹೊಡೆದರು, ಗಂಗೆಯು ಹೊರ ಬಂದಿತು, ಇವೆಲ್ಲವೂ ಅಸತ್ಯವಾಗಿದೆ. ಜ್ಞಾನ, ಭಕ್ತಿ ಮತ್ತು ವೈರಾಗ್ಯವೆಂದು ಗಾಯನವಿದೆ. ಈ ಶಬ್ಧವನ್ನು ಹಿಡಿದುಕೊಂಡಿದ್ದಾರೆ ಆದರೆ ಅರ್ಥವನ್ನು ತಿಳಿದುಕೊಳ್ಳುವುದಿಲ್ಲ. ಮೊಟ್ಟ ಮೊದಲು ಜ್ಞಾನವು ದಿನ ಮತ್ತು ಸುಖವಾಗಿದೆ, ಭಕ್ತಿಯು ರಾತ್ರಿ ಮತ್ತು ದುಃಖವಾಗಿದೆ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿ. ಕೇವಲ ಒಬ್ಬರ ರಾತ್ರಿ-ಹಗಲಿನ ಮಾತಲ್ಲ ಅನೇಕರಿರುವವರಲ್ಲವೆ. ಅರ್ಧಕಲ್ಪ ದಿನವಾಗುತ್ತದೆ, ಇನ್ನರ್ಧ ಕಲ್ಪ ರಾತ್ರಿಯಾಗುತ್ತದೆ ನಂತರ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವುಂಟಾಗುತ್ತದೆ.
ತಂದೆಯು ತಿಳಿಸುತ್ತಾರೆ – ದೇಹ ಸಹಿತವಾಗಿ ಏನೆಲ್ಲವನ್ನೂ ಈ ಕಣ್ಣುಗಳಿಂದ ನೋಡುತ್ತೀರೋ ಅದನ್ನು ಜ್ಞಾನದಿಂದ ಮರೆಯಬೇಕಾಗಿದೆ. ಉದ್ಯೋಗ-ವ್ಯವಹಾರ ಎಲ್ಲವನ್ನೂ ಮಾಡಬೇಕಾಗಿದೆ, ಮಕ್ಕಳನ್ನು ಸಂಭಾಲನೆ ಮಾಡಬೇಕಾಗಿದೆ ಆದರೆ ಬುದ್ಧಿಯೋಗವು ಒಬ್ಬ ತಂದೆಯೊಂದಿಗೆ ಇರಲಿ. ಅರ್ಧ ಕಲ್ಪ ನೀವು ರಾವಣನ ಮತದಂತೆ ನಡೆಯುತ್ತೀರಿ, ಈಗ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಏನನ್ನೇ ಮಾಡಿದರೂ ತಂದೆಯ ಸಲಹೆಯಂತೆ ಮಾಡಿರಿ. ಇಷ್ಟು ಸಮಯದಿಂದ ಪತಿತರೊಂದಿಗೆ ನಿಮ್ಮ ಲೇವಾದೇವಿಯು ನಡೆಯುತ್ತಾ ಬಂದಿದೆ, ಅದರ ಫಲವೇನಾಯಿತು! ದಿನ-ಪ್ರತಿದಿನ ಪತಿತರಾಗುತ್ತಲೇ ಬಂದಿದ್ದೀರಿ ಏಕೆಂದರೆ ಭಕ್ತಿಮಾರ್ಗವು ಇಳಿಯುವ ಕಲೆಯ ಮಾರ್ಗವಾಗಿದೆ, ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ಅವಶ್ಯವಾಗಿ ಇಳಿಯಲೇಬೇಕಾಗಿದೆ. ಇದರಿಂದ ಯಾರೂ ಬಿಡಿಸಲು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರಿಗೆ 84 ಜನ್ಮಗಳೆಂದು ತಿಳಿಸಲಾಗಿದೆ ಅಲ್ಲವೆ. ಆಂಗ್ಲ ಭಾಷೆಯ ಪದಗಳು ಬಹಳ ಚೆನ್ನಾಗಿದೆ - ಗೋಲ್ಡನ್ ಏಜ್, ಸಿಲ್ವರ್ ಏಜ್.... ಹೀಗೆ ಬರುತ್ತಾ ಈ ಸಮಯದಲ್ಲಿ ಬಂದು ಐರನ್ ಏಜ್ ಆಗಿದ್ದೀರಿ. ಗೋಲ್ಡನ್ಏಜ್ನಲ್ಲಿ ಹೊಸ ಪ್ರಪಂಚವಿತ್ತು, ಹೊಸ ಭಾರತವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದು ನೆನ್ನೆಯ ಮಾತಾಗಿದೆ. ಶಾಸ್ತ್ರಗಳಲ್ಲಿ ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ - ನಿಮ್ಮ ಶಾಸ್ತ್ರಗಳು ಸರಿಯೋ ಅಥವಾ ನಾನು ಸರಿಯೋ? ತಂದೆಗೆ ಸರ್ವ ಶಕ್ತಿವಂತನೆಂದು ಹೇಳಲಾಗುತ್ತದೆ. ಯಾರು ಬಹಳ ವೇದ ಶಾಸ್ತ್ರಗಳನ್ನು ಓದುವರೋ ಅವರಿಗೆ ಅಥಾರಿಟಿಯೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಇವರೆಲ್ಲರೂ ಭಕ್ತಿಮಾರ್ಗದ ಅಥಾರಿಟಿಯಾಗಿದ್ದಾರೆ. ಜ್ಞಾನಕ್ಕಾಗಿ ನನ್ನದೇ ಗಾಯನ ಮಾಡುತ್ತಾರೆ - ತಾವು ಜ್ಞಾನ ಸಾಗರನಾಗಿದ್ದೀರಿ, ನಾವಲ್ಲ ಎಂದು. ಮನುಷ್ಯರೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿದ್ದಾರೆ, ಸತ್ಯಯುಗದಲ್ಲಿ ಯಾರೂ ವಿಕಾರದಲ್ಲಿ ಹೋಗುವುದಿಲ್ಲ. ಕಲಿಯುಗದಲ್ಲಿ ಮನುಷ್ಯರು ಆದಿ-ಮಧ್ಯ-ಅಂತ್ಯ ದುಃಖಿಯಾಗುತ್ತಿರುತ್ತಾರೆ. ತಂದೆಯು ಕಲ್ಪದ ಮೊದಲೂ ಸಹ ಈ ರೀತಿ ತಿಳಿಸಿದ್ದರು, ಈಗ ಪುನಃ ತಿಳಿಸುತ್ತಿದ್ದಾರೆ. ಮಕ್ಕಳು ತಿಳಿದುಕೊಳ್ಳುತ್ತಾರೆ - ಕಲ್ಪದ ಮೊದಲೂ ಸಹ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ಪಡೆದಿದ್ದೆವು, ಈಗ ಪುನಃ ಓದಿ ಪಡೆಯುತ್ತಿದ್ದೇವೆ. ಸಮಯವು ಬಹಳ ಕಡಿಮೆಯಿದೆ, ಇದೆಲ್ಲವೂ ವಿನಾಶವಾಗಲಿದೆ. ಆದ್ದರಿಂದ ಬೇಹದ್ದಿನ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಅವರು ತಂದೆ, ಶಿಕ್ಷಕ, ಸದ್ಗುರುವೂ ಆಗಿದ್ದಾರೆ. ಪರಮಪಿತ, ಪರಮಶಿಕ್ಷಕ ಆಗಿದ್ದಾರೆ. ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆ ಆಗುತ್ತದೆ ಎಂಬುದನ್ನು ತಿಳಿಸುತ್ತಾರೆ, ಇದನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಈಗ ಮಕ್ಕಳು 5000 ವರ್ಷಗಳ ಹಿಂದಿನ ತರಹ ತಿಳಿದುಕೊಳ್ಳುತ್ತೀರಿ, ಇವರು ಅದೇ ಗೀತೆಯ ಭಗವಂತನಾಗಿದ್ದಾರೆ, ಶ್ರೀಕೃಷ್ಣನಲ್ಲ. ಮನುಷ್ಯರಿಗೆ ಭಗವಂತನೆಂದು ಹೇಳಲಾಗುವುದಿಲ್ಲ, ಭಗವಂತನು ಪುನರ್ಜನ್ಮ ರಹಿತನಾಗಿದ್ದಾರೆ, ಇದಕ್ಕೆ ದಿವ್ಯ ಜನ್ಮವೆಂದು ಹೇಳುತ್ತಾರೆ. ಇಲ್ಲದಿದ್ದರೆ ನಿರಾಕಾರನಾದ ನಾನು ಹೇಗೆ ಮಾತನಾಡಲಿ? ನಾನು ಬಂದು ಪಾವನರನ್ನಾಗಿ ಮಾಡಬೇಕೆಂದರೆ ಅವಶ್ಯವಾಗಿ ಯುಕ್ತಿಯನ್ನು ತಿಳಿಸಬೇಕಾಗುತ್ತದೆ, ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಅಮರರಾಗಿದ್ದೇವೆ. ರಾವಣ ರಾಜ್ಯದಲ್ಲಿ ನೀವೆಲ್ಲರೂ ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ, ಸತ್ಯಯುಗದಲ್ಲಿ ದೇಹೀ-ಅಭಿಮಾನಿಗಳಿರುತ್ತಾರೆ ಆದರೆ ಪರಮಾತ್ಮ ರಚಯಿತ ಮತ್ತು ಅವರ ರಚನೆಯನ್ನು ಅಲ್ಲಿಯೂ ಯಾರೂ ತಿಳಿದುಕೊಂಡಿರುವುದಿಲ್ಲ. ಒಂದುವೇಳೆ ನಾವು ಪುನಃ ಹೀಗೆ ಕೆಳಗೆ ಇಳಿಯಬೇಕಾಗುತ್ತದೆ ಎಂಬುದು ಅಲ್ಲಿ ತಿಳಿದಿದ್ದರೆ ರಾಜ್ಯಭಾಗ್ಯದ ಖುಷಿಯೇ ಇರುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಜ್ಞಾನವು ಅಲ್ಲಿ ಪ್ರಾಯಲೋಪವಾಗಿ ಬಿಡುತ್ತದೆ, ನಿಮ್ಮದು ಸದ್ಗತಿಯಾಗಿ ಬಿಡುತ್ತದೆ ನಂತರ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ದುರ್ಗತಿಯಲ್ಲಿಯೇ ಜ್ಞಾನದ ಅವಶ್ಯಕತೆಯಿರುತ್ತದೆ. ಈ ಸಮಯದಲ್ಲಿ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಎಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಹೋಗಿದ್ದಾರೆ. ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳು ಆತ್ಮರು ಯಾರು ಶರೀರದ ಮೂಲಕ ಬಂದು ಪಾತ್ರವನ್ನು ಅಭಿನಯಿಸುವರೋ ಅವರು ಕಾಮ ಚಿತೆಯ ಮೇಲೆ ಕುಳಿತು ತಮೋಪ್ರಧಾನರಾಗಿ ಬಿಟ್ಟಿದ್ದಾರೆ, ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ. ಪತಿತರಾಗುವುದೇ ಕಾಮ ಚಿತೆಯಿಂದ, ಕ್ರೋಧ ಅಥವಾ ಲೋಭದಿಂದ ಪತಿತರಾಗುವುದಿಲ್ಲ. ಸಾಧು-ಸಂತ ಮೊದಲಾದವರು ಪಾವನರಾಗಿರುತ್ತಾರೆ, ದೇವತೆಗಳು ಪಾವನರಾಗಿದ್ದಾರೆ. ಆದ್ದರಿಂದ ಪತಿತ ಮನುಷ್ಯರು ಹೋಗಿ ತಲೆ ಬಾಗುತ್ತಾರೆ. ತಾವು ನಿರ್ವಿಕಾರಿಗಳು ನಾವು ವಿಕಾರಿಗಳೆಂದು ಹಾಡುತ್ತಾರೆ. ವಿಕಾರಿ ಪ್ರಪಂಚ, ನಿರ್ವಿಕಾರಿ ಪ್ರಪಂಚದ ಗಾಯನವಿದೆಯಲ್ಲವೆ. ಭಾರತವೇ ನಿರ್ವಿಕಾರಿ ಪ್ರಪಂಚವಾಗಿತ್ತು, ಈಗ ವಿಕಾರಿಯಾಗಿದೆ. ಭಾರತದ ಜೊತೆ ಇಡೀ ವಿಶ್ವವೇ ವಿಕಾರಿಯಾಗಿದೆ. ನಿರ್ವಿಕಾರಿ ಪ್ರಪಂಚದಲ್ಲಿ ಇಂದಿಗೆ 5000 ವರ್ಷಗಳ ಮೊದಲು ಒಂದೇ ಧರ್ಮವಿತ್ತು, ಪವಿತ್ರತೆಯಿದ್ದಾಗ ಸುಖ-ಶಾಂತಿ ಮೂರೂ ಇತ್ತು. ಮೊದಲು ಪವಿತ್ರತೆಯಾಗಿದೆ. ಈಗ ಪವಿತ್ರತೆಯಿಲ್ಲ ಆದ್ದರಿಂದ ಸುಖ-ಶಾಂತಿಯೂ ಇಲ್ಲ.
ಜ್ಞಾನ ಸಾಗರ, ಸುಖದ ಸಾಗರ, ಪ್ರೀತಿಯ ಸಾಗರನು ಒಬ್ಬರೇ ತಂದೆಯಾಗಿದ್ದಾರೆ. ನಿಮ್ಮನ್ನು ಪ್ರಿಯರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಲ್ಲಿ ಎಲ್ಲರೂ ಪ್ರಿಯರಾಗಿದ್ದಾರೆ. ಮನುಷ್ಯ ಮಾತ್ರರು, ಪ್ರಾಣಿ ಪಕ್ಷಿಗಳೆಲ್ಲವೂ ಪ್ರಿಯವಾಗಿರುತ್ತವೆ. ಹುಲಿ, ಹಸು ಒಟ್ಟಿಗೆ ನೀರು ಕುಡಿಯುತ್ತವೆ. ಇದೊಂದು ಉದಾಹರಣೆಯಿದೆ. ಅಲ್ಲಿ ಇಂತಹ ಕೊಳಕು ಮಾಡುವ ಪ್ರಾಣಿಗಳಾಗಲಿ, ಪಕ್ಷಿಗಳಾಗಲಿ ಇರುವುದಿಲ್ಲ. ಇಲ್ಲಿ ಕಾಯಿಲೆಗಳು, ಸೊಳ್ಳೆ, ಕೀಟಾಣುಗಳು ಇರುತ್ತವೆ, ಅಲ್ಲಿ ಇಂತಹ ಮಾತುಗಳಿರುವುದಿಲ್ಲ. ಸಾಹುಕಾರ ವ್ಯಕ್ತಿಗಳ ಬಳಿ ಬಹಳ ಸುಂದರ ಪೀಠೋಪಕರಣಗಳಿರುತ್ತವೆ. ಬಡವರ ಪೀಠೋಪಕರಣಗಳು ಸಾಧಾರಣವಾಗಿರುತ್ತವೆ. ನಮ್ಮ ದೇಶವು ಈಗ ಬಡ ಭಾರತವಾಗಿದೆ, ಎಷ್ಟೊಂದು ಕೊಳಕಾಗಿ ಬಿಟ್ಟಿದೆ. ಸತ್ಯಯುಗದಲ್ಲಿ ಎಷ್ಟು ಸ್ವಚ್ಛತೆಯಿರುತ್ತದೆ, ಚಿನ್ನದ ಮಹಲುಗಳು ಎಷ್ಟು ಸುಂದರವಾಗಿರುತ್ತವೆ. ವೈಕುಂಠದ ಹಸುಗಳು ನೋಡಿ ಅತಿಸುಂದರವಾಗಿರುತ್ತವೆ. ಕೃಷ್ಣನಿಗೆ ಎಷ್ಟು ಒಳ್ಳೆಯ ಹಸುಗಳನ್ನು ತೋರಿಸುತ್ತಾರೆ, ಕೃಷ್ಣ ಪುರಿಯಲ್ಲಿ ಹಸುಗಳೂ ಇರುತ್ತವೆಯಲ್ಲವೆ. ಆದರೆ ಅಲ್ಲಿ ಬಹಳ ಸುಂದರ ಪ್ರಾಣಿಗಳಿರುತ್ತವೆ. ಸ್ವರ್ಗವೆಂದರೆ ಮತ್ತೇನು? ಈ ಹಳೆಯ ಛೀ ಛೀ ಪ್ರಪಂಚದಲ್ಲಿ ಎಷ್ಟೊಂದು ಕೊಳಕಿದೆ, ಇದೆಲ್ಲವೂ ಈ ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುವುದು. ಬಾಂಬುಗಳನ್ನು ಹೇಗೆ ತಯಾರು ಮಾಡುತ್ತಾ ಇರುತ್ತಾರೆ! ಬಾಂಬು ಹಾಕಿದರೆ ಸಾಕು ಬೆಂಕಿ ಹರಡುವುದು. ಇತ್ತೀಚೆಗೆ ಇಂತಹ ಜೀವಾಣುಗಳನ್ನೂ ಹಾಕುತ್ತಾರೆ, ಇಂತಹ ವಿನಾಶ ಮಾಡುತ್ತಾರೆ ಯಾವುದರಿಂದ ಬೇಹದ್ದಿನಲ್ಲಿ ಸಮಾಪ್ತಿಯಾಗಲಿ ಎಂದು. ಔಷಧೋಪಚಾರ ನೀಡಲು ಯಾವುದೇ ಆಸ್ಪತ್ರೆಗಳೂ ಉಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳಿಗೆ ಯಾವುದೇ ಕಷ್ಟವಾಗಬಾರದು ಆದ್ದರಿಂದ ಪ್ರಾಕೃತಿಕ ವಿಕೋಪಗಳು, ಅಣ್ವಸ್ತ್ರಗಳ ಮಳೆ ಸುರಿಯುವುದು ಎಂದು ಗಾಯನವಿದೆ. ಮಕ್ಕಳು ವಿನಾಶದ ಸಾಕ್ಷಾತ್ಕಾರವನ್ನೂ ನೋಡಿದ್ದೀರಿ, ವಿನಾಶವು ಅವಶ್ಯವಾಗಿ ಆಗುವುದೆಂದು ಬುದ್ಧಿಯೂ ಹೇಳುತ್ತದೆ. ವಿನಾಶದ ಸಾಕ್ಷಾತ್ಕಾರವಾಗಲಿ, ಆಗ ಒಪ್ಪುತ್ತೇವೆ ಎಂದು ಯಾರಾದರೂ ಕೇಳಿದರೆ ಒಪ್ಪಿಕೊಳ್ಳಿ ಅಥವಾ ಒಪ್ಪದಿರಿ ಅದು ನಿಮ್ಮಿಷ್ಟ ಎಂದು ಹೇಳಿರಿ. ನಾವು ಆತ್ಮದ ಸಾಕ್ಷಾತ್ಕಾರ ಮಾಡಿದಾಗಲೇ ನಂಬುವೆವು ಎಂದು ಕೆಲವರು ಹೇಳುತ್ತಾರೆ, ಆತ್ಮವಂತೂ ಬಿಂದುವಾಗಿದೆ ಅದನ್ನು ಸಾಕ್ಷಾತ್ಕಾರದಲ್ಲಿ ನೋಡಿ ಬಿಟ್ಟರೆ ಏನಾಯಿತು? ಇದರಿಂದ ಸದ್ಗತಿಯಾಗುವುದೇ? ಪರಮಾತ್ಮನು ಅಖಂಡ ಜ್ಯೋತಿ ಸ್ವರೂಪ, ಕೋಟಿ ಸೂರ್ಯ ತೇಜೋಮಯನಾಗಿದ್ದಾನೆ, ಅದಕ್ಕಾಗಿ ಅರ್ಜುನನು ಸಾಕು ಮಾಡಿ, ನಾನು ಸಹನೆ ಮಾಡಲಾರೆ ಎಂದು ಹೇಳಿದನೆಂದು ಗೀತೆಯಲ್ಲಿ ಬರೆದಿದ್ದಾರೆ. ಆದರೆ ಇಂತಹ ಮಾತಿಲ್ಲ. ತಂದೆಯನ್ನು ಮಕ್ಕಳು ನೋಡಿ ನಾವು ಸಹನೆ ಮಾಡಲು ಸಾಧ್ಯವಿಲ್ಲ ಎಂದು ಹೇಳುವುದುಂಟೆ! ಹೇಗೆ ಆತ್ಮವಿದೆಯೋ ಹಾಗೆಯೇ ಪರಮಪಿತ ಪರಮಾತ್ಮ ತಂದೆಯೂ ಇದ್ದಾರೆ. ಕೇವಲ ಅವರು ಜ್ಞಾನ ಸಾಗರನಾಗಿದ್ದಾರೆ, ನಿಮ್ಮಲ್ಲಿಯೂ ಜ್ಞಾನವಿದೆ. ತಂದೆಯು ಬಂದು ಓದಿಸುತ್ತಾರೆ, ಮತ್ತ್ಯಾವುದೇ ಮಾತಿಲ್ಲ, ಯಾರು-ಯಾರು ಯಾವ ಭಾವನೆಯಿಂದ ನೆನಪು ಮಾಡುವರೋ ಅವರ ಭಾವನೆಯನ್ನು ಪೂರ್ಣ ಮಾಡುತ್ತೇವೆ. ಇದೂ ಡ್ರಾಮಾದಲ್ಲಿ ನಿಗಧಿಯಾಗಿದೆ ಆದರೆ ಯಾರಿಗೂ ಭಗವಂತನು ಸಿಗಲು ಸಾಧ್ಯವಿಲ್ಲ. ಭಕ್ತ ಮೀರಾ ಸಾಕ್ಷಾತ್ಕಾರದಲ್ಲಿ ಎಷ್ಟೊಂದು ಖುಷಿ ಪಡುತ್ತಿದ್ದಳು, ಇನ್ನೊಂದು ಜನ್ಮದಲ್ಲಿಯೂ ಭಕ್ತಿನಿಯೇ ಆಗಿರಬೇಕು, ವೈಕುಂಠದಲ್ಲಂತೂ ಹೋಗಲು ಸಾಧ್ಯವಿಲ್ಲ. ನೀವು ಮಕ್ಕಳು ವೈಕುಂಠದಲ್ಲಿ ಹೋಗುವ ತಯಾರು ಮಾಡಿಕೊಳ್ಳುತ್ತಿದ್ದೀರಿ. ನಾವು ವೈಕುಂಠ, ಕೃಷ್ಣ ಪುರಿಯ ಮಾಲೀಕರಾಗುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ಇಲ್ಲಿ ಎಲ್ಲರೂ ನರಕದ ಮಾಲೀಕರಾಗಿದ್ದಾರೆ, ಈ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತದೆಯಲ್ಲವೆ. ನಾವು ನಮ್ಮ ರಾಜ್ಯಭಾಗ್ಯವನ್ನು ಪುನಃ ಪಡೆಯುತ್ತಿದ್ದೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ, ಇದು ರಾಜಯೋಗ ಬಲವಾಗಿದೆ, ಬಾಹುಬಲದ ಯುದ್ಧಗಳಂತೂ ಅನೇಕ ಬಾರಿ ಅನೇಕ ಜನ್ಮಗಳಿಂದ ನಡೆದಿದೆ. ಯೋಗ ಬಲದಿಂದ ನಿಮ್ಮದು ಏರುವ ಕಲೆಯಾಗುತ್ತದೆ. ನಿಮಗೆ ತಿಳಿದಿದೆ - ಅವಶ್ಯವಾಗಿ ಸ್ವರ್ಗದ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಯಾರು ಕಲ್ಪದ ಮೊದಲು ಪುರುಷಾರ್ಥ ಮಾಡಿರುವರೋ ಹಾಗೆಯೇ ಮಾಡುತ್ತಾರೆ. ಇದರಲ್ಲಿ ನಿಮಗೆ ಆಘಾತವಾಗಬಾರದು. ಯಾವ ಮಕ್ಕಳು ನಿಶ್ಚಯ ಬುದ್ದಿಯವರು ಆಗಿದ್ದಾರೆಯೋ ಅವರಿಗೆ ಎಂದೂ ಸಂಶಯ ಬರಲು ಸಾಧ್ಯವಿಲ್ಲ. ಸಂಶಯ ಬುದ್ಧಿಯವರು ಆಗಿ ಬಿಡುತ್ತಾರೆ. ತಂದೆಯು ಹೇಳಿದ್ದಾರೆ - ಆಶ್ಚರ್ಯವೆನಿಸುವಂತೆ ಕೇಳಿ ಅನ್ಯರಿಗೆ ಹೇಳಿ ನಡೆಯುತ್ತಾ ಮತ್ತೆ ಬಿಟ್ಟು ಹೋಗುತ್ತಾರೆ. ಓಹೋ ಮಾಯೆ ನೀನು ಇವರ ಮೇಲೆ ಜಯ ಗಳಿಸುತ್ತೀಯೇ? ಮಾಯೆಯು ಬಹಳ ಬಲಶಾಲಿಯಾಗಿದೆ. ಒಳ್ಳೊಳ್ಳೆಯ ಸರ್ವೀಸ್ ಮಾಡುವಂತಹ ಸೇವಾಕೇಂದ್ರವನ್ನು ನಡೆಸುವವರಿಗೂ ಸಹ ಮಾಯೆಯು ಪೆಟ್ಟು ಕೊಡುತ್ತದೆ. ಆಗ ಬಾಬಾ, ವಿವಾಹ ಮಾಡಿಕೊಂಡು ಮುಖ ಕಪ್ಪು ಮಾಡಿಕೊಂಡೆನು ಎಂದು ಬರೆಯುತ್ತಾರೆ. ಕಾಮದ ಕಟಾರಿಯಿಂದ ನಾವು ಸೋಲನ್ನು ಅನುಭವಿಸಿದೆವು. ಈಗಂತೂ ತಮ್ಮ ಸನ್ಮುಖದಲ್ಲಿಯೂ ಬರುವುದಕ್ಕೆ ಅರ್ಹರಲ್ಲ ಎಂದು ಹೇಳುತ್ತಾರೆ. ಪುನಃ ಬಾಬಾ, ನಾವು ಸನ್ಮುಖದಲ್ಲಿ ಬರಬೇಕೆನಿಸುತ್ತದೆ ಎಂದು ಬರೆಯುತ್ತಾರೆ. ಅದಕ್ಕೆ ತಂದೆಯು ಬರೆಯುತ್ತಾರೆ - ಮುಖ ಕಪ್ಪು ಮಾಡಿಕೊಂಡಿರಿ, ಈಗ ಇಲ್ಲಿ ನೀವು ಬರುವಂತಿಲ್ಲ, ಇಲ್ಲಿ ಬಂದು ಏನು ಮಾಡುತ್ತೀರಿ? ಅಲ್ಲಿಯೇ ಇದ್ದು ಪುರುಷಾರ್ಥ ಮಾಡಿರಿ, ಒಂದು ಸಲ ಬಿದ್ದರೆಂದರೆ ಬಿದ್ದರು, ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಹೇಳಲಾಗುತ್ತದೆಯಲ್ಲವೆ - ಏರಿದರೆ ವೈಕುಂಠ ರಸ ಬಿದ್ದರೆ ಚಂಡಾಲರಾಗುವರು..... ಮೂಳೆಗಳು ಪುಡಿ ಪುಡಿಯಾಗುತ್ತವೆ. ಹೇಗೆ ಐದನೇ ಅಂತಸ್ತಿನಿಂದ ಬಿದ್ದಂತೆ. ಮತ್ತೆ ಕೆಲವರು ಸತ್ಯವನ್ನು ಬರೆಯುತ್ತಾರೆ, ಕೆಲವರು ತಿಳಿಸುವುದೇ ಇಲ್ಲ. ಇಂದ್ರಪ್ರಸ್ಥದ ದೇವತೆಗಳ ಉದಾಹರಣೆಯೂ ಇದೆಯಲ್ಲವೆ. ಇದ್ದೆಲ್ಲವೂ ಜ್ಞಾನದ ಮಾತಾಗಿದೆ. ಈ ಸಭೆಯಲ್ಲಿ ಪತಿತರು ಕುಳಿತುಕೊಳ್ಳಲು ಅನುಮತಿಯಿಲ್ಲ ಆದರೆ ಕೆಲವು ಸನ್ನಿವೇಶಗಳಲ್ಲಿ ಕುಳ್ಳರಿಸಬೇಕಾಗುತ್ತದೆ. ಪತಿತರೇ ಬರುವರಲ್ಲವೆ. ಈಗಂತೂ ನೋಡಿ, ಎಷ್ಟೊಂದು ದ್ರೌಪದಿಯರು ಹೋಗುತ್ತಾರೆ. ಬಾಬಾ, ನಮ್ಮನ್ನು ಅಪವಿತ್ರರಾಗುವುದರಿಂದ ಬಿಡಿಸಿ ಎಂದು ಹೇಳುತ್ತಾರೆ. ಬಂಧನದಲ್ಲಿ ಇರುವವರ ಪಾತ್ರವು ನಡೆಯುತ್ತದೆ. ಕಾಮೇಶು, ಕ್ರೋಧೇಶುಗಳು ಇರುತ್ತಾರಲ್ಲವೆ. ಇದರಿಂದ ಬಹಳ ಏರುಪೇರುಗಳಾಗುತ್ತವೆ. ತಂದೆಯ ಬಳಿ ಸಮಾಚಾರ ಬರುತ್ತದೆ, ಬೇಹದ್ದಿನ ತಂದೆಯು ಹೇಳುತ್ತಾರೆ - ಮಕ್ಕಳೇ, ಇದರ ಮೇಲೆ ಜಯ ಗಳಿಸಿರಿ, ಈಗ ಪವಿತ್ರರಾಗಿರಿ, ನನ್ನನ್ನು ನೆನಪು ಮಾಡಿರಿ ಆಗ ಗ್ಯಾರಂಟಿ ಏನೆಂದರೆ ನೀವು ವಿಶ್ವದ ಮಾಲೀಕರಾಗುವಿರಿ. ವಿಜ್ಞಾನಿಗಳು ಪತ್ರಿಕೆಗಳಲ್ಲಿಯೂ ಹಾಕುತ್ತಾರೆ, ಯಾರೋ ಪ್ರೇರಕರು ನಮ್ಮಿಂದ ಈ ಬಾಂಬುಗಳನ್ನು ತಯಾರು ಮಾಡಿಸುತ್ತಾರೆ. ಇದರಿಂದ ನಮ್ಮದೇ ಕುಲದ ನಾಶವಾಗುವುದು ಆದರೆ ಏನು ಮಾಡುವುದು ಡ್ರಾಮಾದಲ್ಲಿ ನಿಗಧಿಯಾಗಿದೆ. ದಿನ-ಪ್ರತಿದಿನ ತಯಾರಿಸುತ್ತಲೇ ಹೋಗುತ್ತಾರೆ. ಇನ್ನು ಸಮಯವಂತೂ ಬಹಳ ಇಲ್ಲ ಅಲ್ಲವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸತ್ಯಯುಗೀ ಪ್ರೀತಿಯ ರಾಜಧಾನಿಯಲ್ಲಿ ಹೋಗುವುದಕ್ಕಾಗಿ ಬಹಳ-ಬಹಳ ಪ್ರಿಯರಾಗಬೇಕಾಗಿದೆ. ರಾಜ್ಯ ಪದವಿಗಾಗಿ ಅವಶ್ಯವಾಗಿ ಪಾವನರಾಗಬೇಕಾಗಿದೆ. ಮೊದಲನೆಯದು ಪವಿತ್ರತೆಯಾಗಿದೆ, ಆದ್ದರಿಂದ ಕಾಮ ಮಹಾಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ.
2. ಈ ಹಳೆಯ ಪ್ರಪಂಚದಿಂದ ಬೇಹದ್ದಿನ ವೈರಾಗಿಗಳಾಗುವುದಕ್ಕಾಗಿ ಈ ಕಣ್ಣುಗಳಿಂದ ದೇಹ ಸಹಿತ ಏನೆಲ್ಲವೂ ಕಾಣುತ್ತಿದೆಯೋ ಎಲ್ಲವನ್ನೂ ನೋಡಿಯೂ ನೋಡದಂತಿರಬೇಕು. ಪ್ರತೀ ಹೆಜ್ಜೆಯಲ್ಲಿ ತಂದೆಯಿಂದ ಸಲಹೆ ತೆಗೆದುಕೊಂಡು ನಡೆಯಬೇಕಾಗಿದೆ.
`ನೆನಪಿನಲ್ಲಿ' ರಮಣೀಕತೆಯನ್ನು ತರುವ ಯುಕ್ತಿಗಳು
ಇಂದು ವಿದಾತ, ವರದಾತ ಬಾಪ್ದಾದಾ ತನ್ನ ಮಾ|| ವಿದಾತ, ವರದಾತ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗುವೂ ವಿದಾತನೂ ಆಗಿದ್ದಾರೆ, ವರದಾತನೂ ಆಗಿದ್ದಾರೆ. ಜೊತೆ ಜೊತೆಗೆ ಬಾಪ್ದಾದಾ ನೋಡುತ್ತಿದ್ದರು - ಮಕ್ಕಳ ಪದವಿಯು ಎಷ್ಟು ಮಹಾನ್ ಆಗಿದೆ, ಈ ಸಂಗಮಯುಗದ ಬ್ರಾಹ್ಮಣ ಜೀವನಕ್ಕೆ ಎಷ್ಟೊಂದು ಮಹತ್ವಿಕೆಯಿದೆ! ವಿದಾತ, ವರದಾತನ ಜೊತೆಗೆ ವಿಧಿ-ವಿದಾತರೂ ತಾವು ಬ್ರಾಹ್ಮಣರಾಗಿದ್ದೀರಿ. ತಮ್ಮ ಪ್ರತೀ ವಿಧಿಯು ಸತ್ಯಯುಗದಲ್ಲಿ ಹೇಗೆ ಪರಿವರ್ತನೆಯಾಗುತ್ತದೆ ಎಂಬುದನ್ನು ಮೊದಲೇ ತಿಳಿಸಲಾಗಿದೆ. ಈ ಸಮಯದ ಪ್ರತೀ ಕರ್ಮದ ವಿಧಿಯು ಭವಿಷ್ಯದಲ್ಲಿ ನಡದೇ ನಡೆಯುತ್ತದೆ ಆದರೆ ದ್ವಾಪರದ ನಂತರವೂ ಸಹ ಈ ಸಮಯದ ಶ್ರೇಷ್ಠ ಕರ್ಮಗಳ ವಿಧಿಯು ಭಕ್ತಿ ಮಾರ್ಗದ ವಿಧಿಯಾಗಿ ಬಿಡುತ್ತದೆ ಅಂದಾಗ ಪೂಜ್ಯ ರೂಪದಲ್ಲಿಯೂ ಈ ಸಮಯದ ವಿಧಿಯು ಜೀವನದ ಶ್ರೇಷ್ಠ ವಿಧಾನದ ರೂಪದಲ್ಲಿ ನಡೆಯುತ್ತದೆ ಮತ್ತು ಪೂಜಾರಿ ಮಾರ್ಗ ಅರ್ಥಾತ್ ಭಕ್ತಿ ಮಾರ್ಗದಲ್ಲಿಯೂ ತಮ್ಮ ಪ್ರತಿಯೊಂದು ವಿಧಿಯು ರೀತಿ-ನೀತಿಯಲ್ಲಿ ನಡೆಯುತ್ತಾ ಬರುತ್ತದೆ ಅಂದಾಗ ವಿದಾತ-ವರದಾತ ಮತ್ತು ವಿಧಿ-ವಿದಾತರೂ ಆಗಿದ್ದೀರಿ.
ತಮ್ಮ ಮೂಲ ಸಿದ್ಧಾಂತವು ಸಿದ್ಧಿ ಪ್ರಾಪ್ತಿಯಾಗಲು ಸಾಧನವಾಗಿ ಬಿಡುತ್ತದೆ. ಹೇಗೆ ಮೂಲ ಸಿದ್ಧಾಂತವಾಗಿದೆ - ``ತಂದೆಯು ಒಬ್ಬರೇ ಆಗಿದ್ದಾರೆ, ಧರ್ಮಾತ್ಮರು ಅನೇಕರಿದ್ದಾರೆ, ಮಹಾನ್ ಆತ್ಮರೂ ಅನೇಕರಿದ್ದಾರೆ ಆದರೆ ಪರಮಾತ್ಮನು ಒಬ್ಬರೇ ಆಗಿದ್ದಾರೆ'' ಇದೇ ಮೂಲ ಸಿದ್ಧಾಂತದ ಮೂಲಕ ಅರ್ಧ ಕಲ್ಪ ನಾವು ಶ್ರೇಷ್ಠಾತ್ಮರಿಗೆ ಒಬ್ಬ ತಂದೆಯ ಮೂಲಕ ಪ್ರಾಪ್ತಿಯಾಗಿರುವ ಆಸ್ತಿಯು ಸಿದ್ಧಿಯ ರೂಪದಲ್ಲಿ ಪ್ರಾಪ್ತವಾಗುತ್ತದೆ. ಪ್ರಾಲಬ್ಧವು ಸಿಗುವುದು ಎಂದರೆ ಸಿದ್ಧಿ ಸ್ವರೂಪರಾಗುವುದು ಏಕೆಂದರೆ ಒಬ್ಬರೇ ತಂದೆಯಾಗಿದ್ದಾರೆ, ಉಳಿದವರು ಮಹಾನ್ ಆತ್ಮರು ಹಾಗೂ ಧರ್ಮಾತ್ಮರೆಲ್ಲರೂ ಸಹೋದರ-ಸಹೋದರರಾಗಿದ್ದಾರೆಯೇ ಹೊರತು ತಂದೆಯಲ್ಲ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ, ಸಹೋದರರಿಂದಲ್ಲ. ಅಂದಾಗ ಈ ಮೂಲ ಸಿದ್ಧಾಂತದ ಮೂಲಕ ಅರ್ಧಕಲ್ಪ ನಿಮಗೆ ಸಿದ್ಧಿಯು ಪ್ರಾಪ್ತಿಯಾಗುತ್ತದೆ ಮತ್ತು ಭಕ್ತಿಯಲ್ಲಿಯೂ ಸಹ `ಭಗವಂತ ಒಬ್ಬನೇ' - ಇದೇ ಸಿದ್ಧಾಂತವು ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುವ ಆಧಾರವಾಗುತ್ತದೆ. ಭಕ್ತಿಯ ಆದಿಯ ಆಧಾರವೂ ಸಹ ಒಬ್ಬ ತಂದೆಯ ಶಿವಲಿಂಗದ ರೂಪದಿಂದ ಆರಂಭವಾಗುತ್ತದೆ. ಇದಕ್ಕೆ `ಅವ್ಯಭಿಚಾರಿ ಭಕ್ತಿ' ಎಂದು ಹೇಳಲಾಗುತ್ತದೆ ಅಂದಾಗ ಭಕ್ತಿಮಾರ್ಗದಲ್ಲಿಯೂ ಸಹ ಇದೇ ಒಂದು ಸಿದ್ಧಾಂತದ ಮೂಲಕವೇ ಸಿದ್ಧಿಯು ಪ್ರಾಪ್ತಿಯಾಗುತ್ತದೆ - ತಂದೆಯು ಒಬ್ಬರೇ ಆಗಿದ್ದಾರೆ. ಹೇಗೆ ತಮ್ಮ ಯಾವುದೆಲ್ಲಾ ಮೂಲ ಸಿದ್ಧಾಂತಗಳಿವೆಯೋ ಆ ಒಂದೊಂದು ಸಿದ್ಧಾಂತದ ಮೂಲಕ ಸಿದ್ಧಿಯು ಪ್ರಾಪ್ತಿಯಾಗುತ್ತಾ ಇರುತ್ತದೆ. ಹೇಗೆ ಈ ಜೀವನದ ಮೂಲ ಸಿದ್ಧಾಂತವು ಪವಿತ್ರತೆಯಾಗಿದೆ, ಈ ಪವಿತ್ರತೆಯ ಮೂಲ ಸಿದ್ಧಾಂತದ ಮೂಲಕ ತಾವಾತ್ಮರಿಗೆ ಭವಿಷ್ಯದಲ್ಲಿ ಸಿದ್ಧಿ ಸ್ವರೂಪದ ರೂಪದಲ್ಲಿ ಪ್ರಕಾಶತೆಯ ಕಿರೀಟವು ಸದಾ ಪ್ರಾಪ್ತಿಯಾಗುತ್ತದೆ. ಇದರ ನೆನಪಾರ್ಥ ರೂಪವಾಗಿ ಡಬಲ್ ಕಿರೀಟವನ್ನು ತೋರಿಸುತ್ತಾರೆ ಮತ್ತು ಭಕ್ತಿಯಲ್ಲಿ ಯಾವಾಗ ಯಥಾರ್ಥ ಮತ್ತು ಹೃದಯಪೂರ್ವಕವಾಗಿ ಭಕ್ತಿ ಮಾಡುವರೋ ಆಗ ಪವಿತ್ರತೆಯ ಸಿದ್ಧಾಂತವನ್ನು ಮೂಲಾಧಾರ ಎಂದು ತಿಳಿದುಕೊಳ್ಳುತ್ತಾರೆ ಮತ್ತು ಪವಿತ್ರತೆಯಿಲ್ಲದೆ ಭಕ್ತಿಯ ಸಿದ್ಧಿಯು ಪ್ರಾಪ್ತಿಯಾಗಲು ಸಾಧ್ಯವಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಭಲೆ ಅಲ್ಪಕಾಲಕ್ಕಾಗಿ ಅಂದರೆ ಎಷ್ಟು ಸಮಯ ಭಕ್ತಿ ಮಾಡುವರೋ ಅಷ್ಟು ಸಮಯವೇ ಧಾರಣೆ ಮಾಡಿಕೊಳ್ಳಲಿ ಆದರೆ `ಪವಿತ್ರತೆಯೇ ಸಿದ್ಧಿಯ ಸಾಧನವಾಗಿದೆ' - ಈ ಸಿದ್ಧಾಂತವನ್ನು ಅವಶ್ಯವಾಗಿ ಅಳವಡಿಸಿಕೊಳ್ಳುತ್ತಾರೆ. ಇದೇ ಪ್ರಕಾರವಾಗಿ ಪ್ರತಿಯೊಂದು ಜ್ಞಾನದ ಸಿದ್ಧಾಂತ ಹಾಗೂ ಧಾರಣೆಯ ಮೂಲ ಸಿದ್ಧಾಂತವನ್ನು ಬುದ್ಧಿಯಿಂದ ಆಲೋಚಿಸಿ - ಪ್ರತಿಯೊಂದು ಸಿದ್ಧಾಂತವು ಸಿದ್ಧಿಯ ಸಾಧನ ಹೇಗಾಗುತ್ತದೆ? ಇದನ್ನು ಮನನದ ಕೆಲಸ ಕೊಡುತ್ತಿದ್ದೇನೆ, ಹೇಗೆ ಒಂದು ಉದಾಹರಣೆಗೆ ತಿಳಿಸಿದೆವಲ್ಲವೆ ಅದೇರೀತಿ ಮತ್ತೆಲ್ಲವನ್ನೂ ವಿಚಾರ ಮಾಡಿ.
ತಾವು ವಿಧಿ-ವಿದಾತರೂ ಆಗುತ್ತೀರಿ, ಸಿದ್ಧಿ ದಾತರೂ ಆಗುತ್ತೀರಿ ಆದ್ದರಿಂದ ಇಲ್ಲಿಯವರೆಗೂ ಯಾವ ಭಕ್ತಾತ್ಮರು ಯಾವ ಯಾವ ಸಿದ್ಧಿಯನ್ನು ಬಯಸುವರೋ ಅವರು ಭಿನ್ನ-ಭಿನ್ನ ದೇವತೆಗಳ ಮೂಲಕ ಭಿನ್ನ-ಭಿನ್ನ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಅದೇ ದೇವತೆಯ ಪೂಜೆ ಮಾಡುತ್ತಾರೆ ಅಂದಾಗ ಸಿದ್ಧಿದಾತ ತಂದೆಯ ಮೂಲಕ ತಾವೂ ಸಹ ಸಿದ್ಧಿದಾತರಾಗುತ್ತೀರಿ - ತಮ್ಮನ್ನು ಹೀಗೆ ತಿಳಿದುಕೊಳ್ಳುತ್ತೀರಲ್ಲವೆ. ಯಾರಿಗೆ ಸ್ವಯಂ ಸಿದ್ಧಿಗಳು ಪ್ರಾಪ್ತಿಯಾಗಿದೆಯೋ ಅವರೇ ಅನ್ಯರಿಗೂ ಸಿದ್ಧಿಯನ್ನು ಪ್ರಾಪ್ತಿ ಮಾಡಿಸಲು ನಿಮಿತ್ತರಾಗಿದ್ದಾರೆ. ಸಿದ್ಧಿಯು ಕೆಟ್ಟ ಕೆಲಸವಲ್ಲ ಏಕೆಂದರೆ ನಿಮ್ಮದು ರಿದ್ಧಿ-ಸಿದ್ಧಿಯಲ್ಲ. ರಿದ್ಧಿ ಸಿದ್ಧಿಯು ಅಲ್ಪಕಾಲಕ್ಕಾಗಿ ಪ್ರಭಾವಶಾಲಿ ಆಗಿರುತ್ತದೆ ಆದರೆ ತಮ್ಮದು ಯಥಾರ್ಥ ವಿಧಿಯ ಮೂಲಕ ಸಿದ್ಧಿಯಾಗಿದೆ. ಈಶ್ವರೀಯ ವಿಧಿಯ ಮೂಲಕ ಯಾವ ಸಿದ್ಧಿಯು ಪ್ರಾಪ್ತಿ ಆಗುತ್ತದೆಯೋ ಆ ಸಿದ್ಧಿಯೂ ಈಶ್ವರೀಯ ಸಿದ್ಧಿಯಾಗಿದೆ. ಹೇಗೆ ಈಶ್ವರನು ಅವಿನಾಶಿಯಾಗಿದ್ದಾರೆ ಆದ್ದರಿಂದ ಈಶ್ವರೀಯ ವಿಧಿ ಮತ್ತು ಸಿದ್ಧಿಯೂ ಅವಿನಾಶಿಯಾಗಿದೆ. ರಿದ್ಧಿ-ಸಿದ್ಧಿಯನ್ನು ತೋರಿಸುವರು ಸ್ವಯಂ ಅಲ್ಪಜ್ಞ ಆತ್ಮರಾಗಿದ್ದಾರೆ ಆದ್ದರಿಂದ ಅವರ ಸಿದ್ಧಿಯೂ ಸಹ ಅಲ್ಪಕಾಲದ್ದಾಗಿದೆ ಆದರೆ ತಮ್ಮ ಸಿದ್ಧಿಯು ಸಿದ್ಧಾಂತದ ವಿಧಿಯ ಮೂಲಕ ಸಿದ್ಧಿಯಾಗಿದೆ ಆದ್ದರಿಂದ ಅರ್ಧಕಲ್ಪ ಸ್ವಯಂ ಸಿದ್ಧಿ ಸ್ವರೂಪರಾಗುತ್ತೀರಿ. ಇನ್ನರ್ಧಕಲ್ಪ ತಮ್ಮ ಸಿದ್ಧಾಂತದ ಮೂಲಕ ಭಕ್ತಾತ್ಮರು ಯಥಾಶಕ್ತಿಯಂತೆ ಫಲದ ಪ್ರಾಪ್ತಿ ಮತ್ತು ಸಿದ್ಧಿಯ ಪ್ರಾಪ್ತಿ ಮಾಡಿಕೊಳ್ಳುತ್ತಾ ಬರುತ್ತಾರೆ ಏಕೆಂದರೆ ಭಕ್ತಿಯ ಶಕ್ತಿಯು ಸಮಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಸತೋಪ್ರಧಾನದ ಭಕ್ತಿಯ ಶಕ್ತಿಯು ಇತ್ತೀಚಿನ ಭಕ್ತಾತ್ಮರಿಗಿಂತಲೂ ಹೆಚ್ಚು ಸಿದ್ಧಿಯ ಅನುಭೂತಿ ಮಾಡಿಸುತ್ತಿತ್ತು. ಈ ಸಮಯದ ಭಕ್ತಿಯು ತಮೋಪ್ರಧಾನವಾಗಿರುವುದರಿಂದ ಯಥಾರ್ಥವಾದ ಭಕ್ತಿಯೂ ಇಲ್ಲ, ಸಿದ್ಧಿಯೂ ಇಲ್ಲ.
ಅಂದಾಗ ನಾನು ಯಾರು ಎಂದು ಇಷ್ಟೊಂದು ನಶೆಯಿರುತ್ತದೆಯೇ? ಸದಾ ಈ ಶ್ರೇಷ್ಠ ಸ್ವಮಾನದ ಸ್ಥಿತಿಯ ಸೀಟ್ನಲ್ಲಿ ಸ್ಥಿತರಾಗಿರುತ್ತೀರಾ? ಇಷ್ಟು ದೊಡ್ಡ ಸೀಟ್ ಆಗಿದೆಯಲ್ಲವೆ! ಯಾವಾಗ ಸೀಟ್ನಲ್ಲಿ ಸೆಟ್ ಆಗಿರುತ್ತೀರೋ ಘಳಿಗೆ-ಘಳಿಗೆಗೆ ಅಪ್ಸೆಟ್ ಆಗುವುದಿಲ್ಲ, ಇದು ಸ್ಥಿತಿಯಾಗಿದೆಯಲ್ಲವೆ. ಇಷ್ಟೊಂದು ದೊಡ್ಡ ಸ್ಥಿತಿಯಾಗಿದೆ! ವಿಧಿ-ವಿಧಾನದ ದಾತನಾಗಿದ್ದಾರೆ. ಯಾವಾಗ ಈ ಸ್ಥಿತಿಯಲ್ಲಿ ಸ್ಥಿತರಾಗಿರುತ್ತೀರೋ ಆಗ ಮಾಯೆಯು ವಿರೋಧ ಮಾಡುವುದಿಲ್ಲ, ಸದಾ ಸುರಕ್ಷಿತರಾಗಿರುತ್ತೀರಿ. ಅಪ್ಸೆಟ್ ಆಗುವುದರ ಕಾರಣ ತಮ್ಮ ಶ್ರೇಷ್ಠ ಸ್ಥಿತಿಯ ಸೀಟ್ನಿಂದ ಸಾಧಾರಣ ಸ್ಥಿತಿಗೆ ಬಂದು ಬಿಡುತ್ತೀರಿ. ನೆನಪಿನಲ್ಲಿ ಇರುವುದು ಅಥವಾ ಸೇವೆ ಮಾಡುವುದು ಒಂದು ಸಾಧಾರಣ ದಿನಚರಿ ಆಗಿ ಬಿಡುತ್ತದೆ ಆದರೆ ನೆನಪಿನಲ್ಲಂತೂ ಕುಳಿತುಕೊಳ್ಳುತ್ತೀರಿ ಅಂದಾಗ ತಮ್ಮ ಭಿನ್ನ-ಭಿನ್ನವಾದ ಶ್ರೇಷ್ಠ ಸ್ವಮಾನದಲ್ಲಿ ಕುಳಿತುಕೊಳ್ಳಬೇಕು. ಕೇವಲ ನೆನಪಿನ ಸ್ಥಾನದಲ್ಲಿ ಕುಳಿದ್ದೀರಿ ಎಂದಲ್ಲ. ಯೋಗದ ಕೊಠಡಿಯಲ್ಲಿರಬಹುದು, ಹಾಸಿಗೆಯಿಂದ ಎದ್ದು ಇಡೀ ದಿನ ಬಾಬನ ಕುಟೀರದಲ್ಲಿ ಕುಳಿತಿರಬಹುದು ಆದರೆ ಹೇಗೆ ಶರೀರಕ್ಕೆ ಯೋಗ್ಯವಾದ ಸ್ಥಾನವನ್ನು ಕೊಡುತ್ತೀರೋ ಹಾಗೆಯೇ ಬುದ್ಧಿಗೆ ಸ್ಥಿತಿಯ ಸ್ಥಾನವನ್ನು ಕೊಡಬೇಕಾಗಿದೆ. ಬುದ್ಧಿಯ ಸ್ಥಾನವು ಸರಿಯಾಗಿದೆಯೇ ಎಂದು ಪರಿಶೀಲನೆ ಮಾಡಿಕೊಳ್ಳಿ. ಈಶ್ವರೀಯ ನಶೆಯು ಸೀಟ್ನಿಂದ ಸ್ವತಹ ಬರುತ್ತದೆ. ಇತ್ತೀಚೆಗೆ ಕುರ್ಚಿಯ ನಶೆಯೆಂದು ಹೇಳುತ್ತಾರಲ್ಲವೆ. ನಿಮ್ಮದು ಶ್ರೇಷ್ಠ ಸ್ಥಿತಿಯ ಆಸನವಾಗಿದೆ. ಕೆಲವೊಮ್ಮೆ ಮಾ|| ಬೀಜ ರೂಪ ಸ್ಥಿತಿಯ ಆಸನದಲ್ಲಿ ಸೆಟ್ ಆಗಿ, ಕೆಲವೊಮ್ಮೆ ಅವ್ಯಕ್ತ ಫರಿಶ್ತೆಯ ಸೀಟ್ನಲ್ಲಿ ಸೆಟ್ ಆಗಿ, ಕೆಲವೊಮ್ಮೆ ವಿಶ್ವ ಕಲ್ಯಾಣಕಾರಿ ಸೀಟ್ನಲ್ಲಿ ಸೆಟ್ ಆಗಿ. ಹೀಗೆ ಭಿನ್ನ-ಭಿನ್ನ ಸ್ಥಿತಿಯ ಆಸನದ ಮೇಲೆ ಸೆಟ್ ಆಗಿ ಕುಳಿತುಕೊಳ್ಳಿ. ಒಂದುವೇಳೆ ಯಾರಿಗಾದರೂ ಸೀಟಿನಲ್ಲಿ ಸೆಟ್ ಆಗಲು ಆಗದಿದ್ದರೆ ಏರುಪೇರಿನಲ್ಲಿ ಬರುತ್ತಾರಲ್ಲವೆ. ಒಮ್ಮೆ ಹೀಗೆ, ಒಮ್ಮೆ ಹಾಗೆ ಮಾಡುತ್ತಿರುತ್ತಾರೆ. ಯಾವಾಗ ಸೀಟಿನಲ್ಲಿ ಸೆಟ್ ಆಗದಿದ್ದಾಗ ಈ ಬುದ್ಧಿಯೂ ಸಹ ಏರುಪೇರಿನಲ್ಲಿ ಬಂದು ಬಿಡುತ್ತದೆ. ನಾವು ಇಂತಹವರು, ಇಂತಹವರು ಎಂದು ಎಲ್ಲವನ್ನೂ ತಿಳಿದುಕೊಂಡಿದ್ದೀರಿ. ಒಂದುವೇಳೆ ನೀವು ಯಾರು? ಎಂದು ಕೇಳಿದರೆ ದೊಡ್ಡ ಲಿಸ್ಟ್ ತೆಗೆಯುತ್ತೀರಿ ಆದರೆ ಪ್ರತೀ ಸಮಯ ತಿಳಿದುಕೊಳ್ಳುವುದಷ್ಟೇ ಅಲ್ಲ, ಅದನ್ನು ನೀವು ಒಪ್ಪಿಕೊಳ್ಳಬೇಕು. ಕೇವಲ ತಿಳಿಯುವುದಲ್ಲ, ಒಪ್ಪಿಕೊಳ್ಳಿ ಏಕೆಂದರೆ ತಿಳಿದುಕೊಳ್ಳುವುದರಿಂದ ಹೌದು ನಾನು ಇಂತಹವನಾಗಿದ್ದೇನೆಂದು ಖುಷಿಯು ಸಿಗುತ್ತದೆ. ಒಪ್ಪಿಕೊಂಡು ನಡೆಯುವುದರಿಂದ ನಶೆಯಿರುತ್ತದೆ. ಹೇಗೆ ಯಾರೇ ಒಳ್ಳೆಯ ಸ್ಥಾನದ ಸೀಟ್ನಲ್ಲಿ ಸೆಟ್ ಆಗಿದ್ದರೆ ಖುಷಿಯಂತೂ ಇರುತ್ತದೆ ಆದರೆ ಶಕ್ತಿಯಿರುವುದಿಲ್ಲ. ತಿಳಿದುಕೊಂಡಿದ್ದೀರಿ ಆದರೆ ಒಪ್ಪಿಕೊಂಡು ಅದರಂತೆ ನಡೆಯಬೇಕು ಮತ್ತು ಪದೇ-ಪದೇ ತಮ್ಮನ್ನು ಕೇಳಿಕೊಳ್ಳಬೇಕು. ಪರಿಶೀಲನೆ ಮಾಡಿಕೊಳ್ಳಿ - ಸೀಟಿನಲ್ಲಿ ಸೆಟ್ ಆಗಿದ್ದೇನೆಯೇ? ಅಥವಾ ಸಾಧಾರಣ ಸ್ಥಿತಿಯಲ್ಲಿ ಕೆಳಗಿಳಿದಿದ್ದೇನೆಯೇ? ಬೇರೆಯವರಿಗೆ ಸಿದ್ಧಿಕೊಡುವಂತಹವರು ತಮ್ಮ ಪ್ರತಿಯೊಂದು ಸಂಕಲ್ಪ, ಪ್ರತೀ ಕರ್ಮದಲ್ಲಿ ಅವಶ್ಯವಾಗಿ ಸಿದ್ಧಿ ಸ್ವರೂಪರು ಮತ್ತು ದಾತರಾಗಿರುತ್ತಾರೆ. ನಾನು ಎಷ್ಟೊಂದು ಪುರುಷಾರ್ಥ ಮಾಡುತ್ತಿದ್ದೇನೆ ಅಥವಾ ಶ್ರಮ ಪಡುತ್ತಿದ್ದೇನೆ, ಇದರ ಫಲ ಕಾಣಿಸುತ್ತಿಲ್ಲ, ಎಷ್ಟೊಂದು ನೆನಪಿನ ಅಭ್ಯಾಸ ಮಾಡುತ್ತಿದ್ದೇನೆ ಆದರೆ ಅದರ ಸಿದ್ಧಿಯ ಅನುಭವ ಆಗುತ್ತಿಲ್ಲವೆಂದು ಸಿದ್ಧಿ-ದಾತರು ಎಂದೂ ಯೋಚಿಸುವುದಿಲ್ಲ, ಇದರಿಂದ ಸೀಟ್ನ ಮೇಲೆ ಸೆಟ್ ಆಗುವುದು ಯಥಾರ್ಥವಾಗಿ ಗೊತ್ತಿಲ್ಲವೆಂದು ಸಿದ್ಧವಾಗುತ್ತದೆ.
ಇದು ರಮಣೀಕ ಜ್ಞಾನವಾಗಿದೆ. ರಮಣೀಕ ಅನುಭವವು ಸ್ವತಹವಾಗಿ ಸುಸ್ತನ್ನು ಓಡಿಸಿ ಬಿಡುತ್ತದೆ. ಹಾಗೆಯೇ ಕುಳಿತರೆ ನಿದ್ರೆ ಬರುವುದಿಲ್ಲ, ಯೋಗದಲ್ಲಿ ಕುಳಿತರೆ ಅವಶ್ಯವಾಗಿ ನಿದ್ರೆ ಬರುತ್ತದೆ ಎಂದು ಹೇಳುತ್ತಾರಲ್ಲವೆ ಅಂದಾಗ ಈ ರೀತಿ ಏಕೆ ಆಗುತ್ತದೆ? ಸುಸ್ತಿಲ್ಲ ಎಂಬ ಮಾತಲ್ಲ ಆದರೆ ರಮಣೀಕ ರೀತಿ ಅಥವಾ ಸ್ವಾಭಾವಿಕ ರೂಪದಿಂದ ಬುದ್ಧಿಯನ್ನು ಸೀಟಿನ ಮೇಲೆ ಸೆಟ್ ಮಾಡುವುದಿಲ್ಲ. ಕೇವಲ ಒಂದು ರೂಪದಲ್ಲಲ್ಲ, ವಿಧ ವಿಧವಾದ ರೂಪದಲ್ಲಿ ಸೆಟ್ ಮಾಡಿ. ಒಂದೇ ವಸ್ತುವನ್ನು ಒಂದುವೇಳೆ ವಿಧವಿಧವಾದ ರೂಪದಲ್ಲಿ ಪರಿವರ್ತನೆ ಮಾಡಿ ಉಪಯೋಗಿಸಿದರೆ ಮನಸ್ಸಿಗೆ ಖುಷಿಯಾಗುತ್ತದೆ. ಭಲೆ ಚೆನ್ನಾಗಿರುವ ವಸ್ತುವೇ ಆಗಿರಬಹುದು ಆದರೆ ಒಂದೇ ವಸ್ತುವನ್ನು ಮತ್ತೆ-ಮತ್ತೇ ತಿನ್ನುತ್ತೀರೆಂದರೆ ಏನಾಗುತ್ತದೆ! ಬೀಜರೂಪ ಸ್ಥಿತಿಯಲ್ಲಂತೂ ಸ್ಥಿತರಾಗಿ ಆದರೆ ಕೆಲವೊಮ್ಮೆ ಲೈಟ್ಹೌಸ್ ರೂಪದಲ್ಲಿ, ಕೆಲವೊಮ್ಮೆ ಮೈಟ್ಹೌಸ್ ರೂಪದಲ್ಲಿ, ಕೆಲವೊಮ್ಮೆ ವೃಕ್ಷದ ಮೇಲೆ ಬೀಜ ರೂಪದಲ್ಲಿ, ಕೆಲವೊಮ್ಮೆ ಸೃಷ್ಟಿ ಚಕ್ರದ ಮೇಲೆ ನಿಂತು ಶಕ್ತಿಯನ್ನು ಕೊಡಿ. ಭಿನ್ನ-ಭಿನ್ನವಾದ ಬಿರುದುಗಳು ಸಿಗುತ್ತವೆ, ಆ ಭಿನ್ನ-ಭಿನ್ನವಾದ ಬಿರುದುಗಳನ್ನು ಅನುಭವ ಮಾಡಿ. ಕೆಲವೊಮ್ಮೆ ಕಣ್ಮಣಿಯಾಗಿ ಬಾಬಾನ ಕಣ್ಣುಗಳಲ್ಲಿ ಸಮಾವೇಶವಾಗಿರುವ ಅನುಭೂತಿ ಮಾಡಿ. ಕೆಲವೊಮ್ಮೆ ಮಸ್ತಕ ಮಣಿಯಾಗಿ, ಕೆಲವೊಮ್ಮೆ ಹೃದಯ ಸಿಂಹಾಸನಾಧೀಶರಾಗಿ ಭಿನ್ನ-ಭಿನ್ನ ಸ್ವರೂಪಗಳ ಅನುಭವ ಮಾಡಿ. ವಿಧ ವಿಧವಾಗಿ ಮಾಡುವುದರಿಂದ ರಮಣೀಕತೆ ಬರುತ್ತದೆ. ಬಾಪ್ದಾದಾ ಪ್ರತಿನಿತ್ಯವೂ ಭಿನ್ನ-ಭಿನ್ನವಾದ ಬಿರುದುಗಳನ್ನು ಕೊಡುತ್ತಾರೆ - ಏಕೆ? ಅದೇ ಸೀಟಿನಲ್ಲಿ ಸೆಟ್ ಆಗಿ ಮತ್ತು ಮಧ್ಯ ಮಧ್ಯದಲ್ಲಿ ಪರಿಶೀಲನೆ ಮಾಡಿ. ಮೊದಲೂ ತಿಳಿಸಲಾಗಿತ್ತು ಆದರೆ ನೀವು ಮರೆತು ಹೋಗುತ್ತೀರಿ. 6-8 ಗಂಟೆ ಕಳೆದು ಹೋದ ನಂತರ ಯೋಚಿಸುತ್ತೀರಿ ಆದ್ದರಿಂದ ಉದಾಸರಾಗಿ ಅರ್ಧದಿನ ವ್ಯರ್ಥವಾಯಿತೆಂದು ತಿಳಿದುಕೊಳ್ಳುತ್ತೀರಿ. ಇದು ಸ್ವಾಭಾವಿಕವಾಗಿ ಅಭ್ಯಾಸವಾಗಬೇಕು ಆಗಲೇ ವಿಧಿ-ವಿದಾತ, ಸಿದ್ಧ-ದಾತ ಆಗಿ ಆಗ ವಿಶ್ವದ ಆತ್ಮಗಳಿಗೆ ಕಲ್ಯಾಣ ಮಾಡಬಹುದು. ತಿಳಿಯಿತೆ. ಒಳ್ಳೆಯದು.
ಇಂದು ಮಧುಬನದವರ ದಿನವಾಗಿದೆ. ಡಬಲ್ ವಿದೇಶಿಗಳು ಮಧುಬನ ನಿವಾಸಿಗಳಿಗೆ ತಮ್ಮ ಸಮಯದ ಅವಕಾಶವನ್ನು ಕೊಟ್ಟು ಖುಷಿ ಪಡುತ್ತಿದ್ದಾರೆ. ಮಧುಬನ ನಿವಾಸಿಗಳು ಹೇಳುತ್ತಾರೆ - ಮಹಿಮೆ ಮಾಡಬೇಡಿ, ಮಹಿಮೆಯನ್ನಂತೂ ಬಹಳ ಕೇಳಿದ್ದೇವೆ. ಮಹಿಮೆಯನ್ನು ಕೇಳಿಯೇ ಮಹಾನ್ ಆಗುತ್ತಿದ್ದೇವೆ ಏಕೆಂದರೆ ಈ ಮಹಿಮೆಯು ಒಂದು ಗುರಾಣಿಯಾಗುತ್ತದೆ. ಹೇಗೆ ಯುದ್ಧದಲ್ಲಿ ಸುರಕ್ಷಿತರಾಗಿರುವುದಕ್ಕಾಗಿ ಗುರಾಣಿ ಇರುತ್ತದೆಯಲ್ಲವೆ ಅಂದಾಗ ಈ ಮಹಿಮೆಯೂ ಸಹ ನಾವು ಎಷ್ಟು ಮಹಾನ್ ಆಗಿದ್ದೇವೆಂಬ ಸ್ಮೃತಿಯನ್ನು ತರಿಸುತ್ತದೆ. ಮಧುಬನ ಕೇವಲ ಮಧುಬನವಲ್ಲ ಆದರೆ ವಿಶ್ವದ ಸ್ಟೇಜ್ ಆಗಿದೆ. ಮಧುಬನದಲ್ಲಿ ಇರುವುದು ಎಂದರೆ ವಿಶ್ವದ ಸ್ಟೇಜಿನ ಮೇಲೆ ಇರುವುದಾಗಿದೆ. ಸ್ಟೇಜಿನ ಮೇಲೆ ಯಾರು ಇರುತ್ತಾರೆಯೋ ಅವರು ಎಷ್ಟು ಗಮನವನ್ನು ಇಟ್ಟುಕೊಂಡಿರುತ್ತಾರೆ. ಸಾಧಾರಣ ರೀತಿಯಿಂದ ಯಾವುದೇ ಸ್ಥಾನದಲ್ಲಿದ್ದರೆ ಅಷ್ಟೊಂದು ಗಮನವಿರುವುದಿಲ್ಲ ಆದರೆ ಸ್ಟೇಜಿನ ಮೇಲೆ ಬಂದಾಗ ಪ್ರತೀ ಸಮಯ, ಪ್ರತೀ ಕರ್ಮದ ಬಗ್ಗೆ ಇಷ್ಟೊಂದು ಗಮನ ಬರುತ್ತದೆ ಅಂದಾಗ ಮಧುಬನವು ವಿಶ್ವದ ಸ್ಟೇಜ್ ಆಯಿತಲ್ಲವೆ. ನಾಲ್ಕೂ ಕಡೆಯ ದೃಷ್ಟಿಯು ಮಧುಬನದ ಕಡೆಯಿದೆ. ಅಂದಾಗ ಎಲ್ಲರ ಗಮನವು ಸ್ಟೇಜಿನ ಕಡೆಯೇ ಇರುತ್ತದೆ ಅಂದಮೇಲೆ ಮಧುಬನ ನಿವಾಸಿಗಳು ಸದಾ ವಿಶ್ವದ ಸ್ಟೇಜಿನ ಮೇಲೆ ಸ್ಥಿತರಾಗಿರುತ್ತಾರೆ. ಜೊತೆ ಜೊತೆಗೆ ಮಧುಬನವು ಒಂದು ವಿಚಿತ್ರ ಗುಮ್ಮಟವಾಗಿದೆ. ಗುಮ್ಮಟದಲ್ಲಿ ಯಾವುದೇ ಶಬ್ಧ ಮಾಡಿದರೆ ಅದು ಪ್ರತಿಧ್ವನಿಸುತ್ತದೆ ಆದರೆ ಮಧುಬನವು ಇಂತಹ ವಿಚಿತ್ರವಾದ ಗುಮ್ಮಟವಾಗಿದೆ - ಮಧುಬನದ ಸ್ವಲ್ಪ ಶಬ್ಧವೇ ಆಗಿರಲಿ ಅದು ಇಡೀ ವಿಶ್ವದಲ್ಲಿ ಹರಡುವುದು. ಇತ್ತೀಚೆಗೆ ಹಳೆಯ ಕಾಲದ ಸ್ಥಾನಗಳಲ್ಲಿ ಕೆಲವು ಗುರುತುಗಳಿವೆ - ಯಾವ ಒಂದು ಗೋಡೆಯನ್ನು ಮುಟ್ಟಿದರೆ ಅಥವಾ ಶಬ್ಧ ಮಾಡಿದರೆ 10 ಗೋಡೆಗಳಲ್ಲಿ ಪ್ರತಿಧ್ವನಿಸುವುದು ಮತ್ತು ಅದೇ ರೀತಿ ಕೇಳಿಸುವುದು. ಹೇಗೆ ಗೋಡೆಯೇ ಅಲುಗಾಡುತ್ತಿದೆ ಅಥವಾ ಶಬ್ಧ ಮಾಡುತ್ತಿದೆಯೇನೋ ಎಂಬಂತೆ ಬರುತ್ತದೆ. ಅಂದಾಗ ಮಧುಬನವೂ ಒಂದು ವಿಚಿತ್ರ ಗುಮ್ಮಟವಾಗಿದೆ. ಮಧುಬನದ ಶಬ್ಧವು ಕೇವಲ ಮಧುಬನದಲ್ಲಿರದೇ ನಾಲ್ಕೂ ಕಡೆಯೂ ಹರಡುತ್ತದೆ, ಅದು ಮಧುಬನದಲ್ಲಿ ಇರುವವರಿಗೇ ಗೊತ್ತಾಗುವುದಿಲ್ಲ ಅಂದಮೇಲೆ ಇದು ವಿಚಿತ್ರವಾಗಿದೆಯಲ್ಲವೆ, ಹೊರಗಡೆಯೂ ಹರಡುತ್ತದೆ. ಹೀಗೆ ತಿಳಿದುಕೊಳ್ಳಬಾರದು - ಇಲ್ಲಿ ನೋಡಿದರು, ಇಲ್ಲಿ ಕೇಳಿದರು ಎಂದು. ಆದರೆ ವಿಶ್ವದವರೆಗೆ ಗಾಳಿಯ ರೀತಿಯಲ್ಲಿ ಹರಡುತ್ತದೆ ಏಕೆಂದರೆ ಎಲ್ಲರ ದೃಷ್ಟಿಯಲ್ಲಿ ಬುದ್ಧಿಯಲ್ಲಿ ಮಧುಬನ ಮತ್ತು ಮಧುಬನದ ಬಾಪ್ದಾದಾ ಇರುತ್ತಾರೆ. ಅಂದಮೇಲೆ ಮಧುಬನ ತಂದೆಯ ಕಣ್ಣಿನಲ್ಲಿರುತ್ತದೆ, ಅಂದಾಗ ಮಧುಬನವೂ ಬರುತ್ತದೆಯಲ್ಲವೆ. ಮಧುಬನದ ಬಾಬಾ ಎಂದಾಗ ಮಧುಬನವೂ ಬರುತ್ತದೆ ಮತ್ತು ಮಧುಬನ ಕೇವಲ ಬಾಬಾರವರಿಲ್ಲ, ಮಕ್ಕಳೂ ಸಹ ಇದ್ದಾರೆ ಅಂದಮೇಲೆ ಮಧುಬನ ನಿವಾಸಿಗಳು ಎಲ್ಲರ ದೃಷ್ಟಿಯಲ್ಲಿ ಅವಶ್ಯವಾಗಿ ಬರುತ್ತಾರೆ. ಯಾವುದೇ ಬ್ರಾಹ್ಮಣನನ್ನು ಕೇಳಿದರೆ, ಎಷ್ಟೇ ದೂರದಲ್ಲಿರಲಿ ಏನು ನೆನಪಿಗೆ ಬರುತ್ತದೆ ಮತ್ತು ಮಧುಬನದ ಬಾಬಾ ಎನ್ನುತ್ತಾರೆ. ಅಂದಾಗ ಮಧುಬನ ನಿವಾಸಿಗಳಿಗೆ ಎಷ್ಟೊಂದು ಮಹತ್ವಿಕೆಯಿದೆಲ್ಲವೆ. ತಿಳಿಯಿತೆ. ಒಳ್ಳೆಯದು.
ನಾಲ್ಕೂ ಕಡೆಯ ಎಲ್ಲಾ ಸೇವೆಯ ಉಲ್ಲಾಸ-ಉತ್ಸಾಹದಲ್ಲಿರುವ ಸದಾ ಒಬ್ಬ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ, ಸದಾ ಪ್ರತಿಯೊಂದು ಕರ್ಮವನ್ನು ವಿಧಿಯ ಮೂಲಕ ಸಿದ್ಧಿಯ ಅನುಭವ ಮಾಡುವಂತಹ, ಸದಾ ಸ್ವಯಂನ್ನು ವಿಶ್ವ ಕಲ್ಯಾಣಕಾರಿ ಎಂದು ಅನುಭವ ಮಾಡಿ ಪ್ರತಿಯೊಂದು ಸಂಕಲ್ಪದಲ್ಲಿ, ಮಾತಿನಲ್ಲಿ ಶ್ರೇಷ್ಠ ಕಲ್ಯಾಣದ ಭಾವನೆ ಮತ್ತು ಶ್ರೇಷ್ಠ ಕಾಮನೆಯ ಮೂಲಕ ಸೇವೆಯಲ್ಲಿ ಬ್ಯುಜಿಯಾಗಿರುವಂತಹ ತಂದೆಯ ಸಮಾನ ಸದಾ ಅಥಕ್ ಸೇವಾಧಾರಿ ಮಕ್ಕಳಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ವ್ಯಕ್ತಿಗತ ಭೇಟಿ:
1. ಸ್ವಯಂನ್ನು ಕರ್ಮಯೋಗಿ ಶ್ರೇಷ್ಠ ಆತ್ಮನೆಂದು ಅನುಭವ ಮಾಡುವಿರಾ? ಕರ್ಮಯೋಗಿ ಆತ್ಮನು ಕರ್ಮದ ಪ್ರತ್ಯಕ್ಷ ಫಲವಾದ ಖುಷಿ ಮತ್ತು ಶಕ್ತಿಯನ್ನು ಸದಾ ಹಾಗೂ ಸ್ವತಹವಾಗಿಯೇ ಅನುಭವ ಮಾಡುತ್ತಾರೆ. ಅಂದಮೇಲೆ ಕರ್ಮಯೋಗಿ ಆತ್ಮನು ಅರ್ಥಾತ್ ಪ್ರತ್ಯಕ್ಷ ಫಲವಾದ `ಖುಷಿ' ಹಾಗೂ `ಶಕ್ತಿ'ಯ ಅನುಭವ ಮಾಡಿಸುವವರು. ತಂದೆಯು ಸದಾ ಮಕ್ಕಳಿಗೆ ಪ್ರತ್ಯಕ್ಷ ಫಲವನ್ನು ಪ್ರಾಪ್ತಿ ಮಾಡಿಸುವವರಾಗಿದ್ದಾರೆ. ಹೇಗೆಂದರೆ, ಈಗೀಗ ಕರ್ಮ ಮಾಡಿದರು, ಕರ್ಮ ಮಾಡುತ್ತಾ ಖುಷಿ ಹಾಗೂ ಶಕ್ತಿಯ ಅನುಭವ ಮಾಡಿದರು! - ಇಂತಹ ಕರ್ಮಯೋಗಿ ಆತ್ಮನಾಗಿದ್ದೇನೆಂಬ ಸ್ಮೃತಿಯಿಂದ ಮುಂದುವರೆಯುತ್ತಾ ಇರಿ.
2. ಬೇಹದ್ದಿನ ಸೇವೆಯನ್ನು ಮಾಡುವುದರಿಂದ ಸ್ವತಹವಾಗಿಯೇ ಬೇಹದ್ದಿನ ಖುಷಿಯ ಅನುಭವ ಆಗುವುದಲ್ಲವೆ! ಬೇಹದ್ದಿನ ತಂದೆಯು ಬೇಹದ್ದಿನ ಅಧಿಕಾರಿಯನ್ನಾಗಿ ಮಾಡುವರು. ಬೇಹದ್ದಿನ ಸೇವೆಯ ಫಲವು ಸ್ವತಹವಾಗಿಯೇ ಬೇಹದ್ದಿನ ರಾಜ್ಯಭಾಗ್ಯದ ಪ್ರಾಪ್ತಿಯಾಗುವುದು. ಯಾವಾಗ ಬೇಹದ್ದಿನ ಸ್ಥಿತಿಯಲ್ಲಿ ಸ್ಥಿತರಾಗಿದ್ದು ಸೇವೆಯನ್ನು ಮಾಡುತ್ತೀರೆಂದರೆ - ಯಾವ ಆತ್ಮರಿಗಾಗಿ ನಿಮಿತ್ತರಾಗುವಿರಿ, ಅವರ ಆಶೀರ್ವಾದಗಳೂ ಸಹ ಸ್ವತಹವಾಗಿಯೇ ಶಕ್ತಿ ಹಾಗೂ ಖುಷಿಯ ಅನುಭೂತಿ ಮಾಡಿಸುತ್ತದೆ. ಒಂದು ಸ್ಥಾನದಲ್ಲಿದ್ದರೂ ಬೇಹದ್ದಿನ ಬೇಹದ್ದಿನ ಸೇವೆಯ ಫಲವು ಸಿಗುತ್ತಿದೆ ಎಂಬ ಬೇಹದ್ದಿನ ನಶೆಯಿಂದ, ಬೇಹದ್ದಿನ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಾ ಮುಂದುವರೆಯುತ್ತಾ ಸಾಗಿರಿ.
ಓಂ ಶಾಂತಿ. ಆತ್ಮಿಕ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ಆತ್ಮಿಕ ಶಬ್ಧವನ್ನು ಹೇಳದೇ ಕೇವಲ ತಂದೆಯೆಂದು ಹೇಳಿದರೂ ಇವರು ಆತ್ಮಿಕತಂದೆ ಎಂಬುದು ಸಿದ್ಧವಾಗುತ್ತದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಎಲ್ಲರೂ ತಮ್ಮನ್ನು ಸಹೋದರ-ಸಹೋದರನೆಂದು ಹೇಳಿಕೊಳ್ಳುತ್ತೀರಿ ಅಂದಮೇಲೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಎಲ್ಲರಿಗೂ ತಿಳಿಸುವುದಿಲ್ಲ. ಗೀತೆಯಲ್ಲಿಯೂ ಭಗವಾನುವಾಚ ಎಂದು ಬರೆಯಲ್ಪಟ್ಟಿದೆ - ಅದು ಯಾರ ಪ್ರತಿ? ಭಗವಂತನಿಗೆ ಎಲ್ಲರೂ ಮಕ್ಕಳಾಗಿದ್ದಾರೆ, ಆ ಭಗವಂತನು ತಂದೆಯಾಗಿದ್ದಾರೆ ಅಂದಮೇಲೆ ಭಗವಂತನ ಮಕ್ಕಳೆಲ್ಲರೂ ಸಹೋದರರಾಗಿದ್ದೀರಿ. ಭಗವಂತನೇ ತಿಳಿಸಿರುವರು, ರಾಜಯೋಗವನ್ನು ಕಲಿಸಿರುವರು. ಈಗ ನಿಮ್ಮ ಬುದ್ಧಿಯ ಬೀಗವು ತೆರೆದಿದೆ. ನಿಮ್ಮ ವಿನಃ ಮತ್ತ್ಯಾರಿಗೂ ಇಂತಹ ವಿಚಾರಗಳು ನಡೆಯಲು ಸಾಧ್ಯವಿಲ್ಲ. ಯಾರು-ಯಾರಿಗೆ ಸಂದೇಶ ಸಿಗುತ್ತಾ ಹೋಗುವುದೋ ಅವರು ಶಾಲೆಗೆ ಬರತೊಡಗುತ್ತಾರೆ, ಓದುತ್ತಾ ಹೋಗುತ್ತಾರೆ. ಪ್ರದರ್ಶನಿಯನ್ನಂತೂ ನೋಡಿದೆವು, ಈಗ ಹೋಗಿ ಇನ್ನೂ ಹೆಚ್ಚಿನದಾಗಿ ಕೇಳೋಣವೆಂದು ತಿಳಿದುಕೊಳ್ಳುತ್ತಾರೆ. ಮೊಟ್ಟ ಮೊದಲ ಮುಖ್ಯ ಮಾತಾಗಿದೆ- ಜ್ಞಾನ ಸಾಗರ ಪತಿತ-ಪಾವನ ಗೀತಾ ಜ್ಞಾನದಾತ ಶಿವ ಭಗವಾನುವಾಚ. ಇವರಿಗೆ ಕಲಿಸುವವರು, ತಿಳಿಸಿಕೊಡುವವರು ಯಾರೆಂಬುದು ಅವರಿಗೆ ಅರ್ಥವಾಗಲಿ. ಅವರೇ ಪರಮ ಆತ್ಮ, ಜ್ಞಾನ ಸಾಗರ, ನಿರಾಕಾರನಾಗಿದ್ದಾರೆ. ಅವರೇ ಸತ್ಯವಾಗಿದ್ದಾರೆ. ಅವರು ಸತ್ಯವನ್ನೇ ತಿಳಿಸುತ್ತಾರೆ. ಅದರಲ್ಲಿ ಮತ್ತ್ಯಾವುದೇ ಪ್ರಶ್ನೆಯು ಬರಲು ಸಾಧ್ಯವಿಲ್ಲ. ನೀವು ಸತ್ಯದ ಮೇಲೆ ಎಲ್ಲವನ್ನೂ ಬಿಟ್ಟು ಬಿಟ್ಟಿರಿ ಅಂದಮೇಲೆ ಮೊಟ್ಟ ಮೊದಲಿಗೆ ಇದರ ಮೇಲೆ ತಿಳಿಸಬೇಕಾಗಿದೆ, ನಮಗೆ ಪರಮಪಿತ ಪರಮಾತ್ಮನೇ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಾರೆ, ಇದು ರಾಜ್ಯ ಪದವಿಯಾಗಿದೆ. ಯಾರು ಎಲ್ಲರ ತಂದೆಯಾಗಿದ್ದಾರೆಯೋ ಆ ಪಾರಲೌಕಿಕ ತಂದೆಯೇ ಕುಳಿತು ತಿಳಿಸುತ್ತಾರೆ, ಅವರೇ ಎಲ್ಲರಿಗಿಂತ ದೊಡ್ಡ ಅಥಾರಿಟಿಯಾಗಿದ್ದಾರೆ ಎಂದು ಯಾರಿಗೆ ನಿಶ್ಚಯವಾಗಿ ಬಿಡುವುದೋ ಅವರಿಗೆ ಮತ್ತ್ಯಾವುದೇ ಪ್ರಶ್ನೆಯು ಬರುವುದಕ್ಕೇ ಸಾಧ್ಯವಿಲ್ಲ. ಅವರು ಪತಿತ-ಪಾವನನಾಗಿದ್ದಾರೆ. ಅವರು ಇಲ್ಲಿಗೆ ಬರುತ್ತಾರೆಂದರೆ ಅವಶ್ಯವಾಗಿ ತಮ್ಮ ಸಮಯದಲ್ಲಿಯೇ ಬರುವರು. ನೀವು ನೋಡುತ್ತೀರಿ, ಇದು ಅದೇ ಮಹಾಭಾರತ ಯುದ್ಧವಾಗಿದೆ, ವಿನಾಶದ ನಂತರ ನಿರ್ವಿಕಾರಿ ಪ್ರಪಂಚವು ಬರಲಿದೆ. ಭಾರತವೇ ನಿರ್ವಿಕಾರಿಯಾಗಿತ್ತು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಬುದ್ಧಿಯು ಓಡುವುದೇ ಇಲ್ಲ, ಗಾಡ್ರೇಜ್ನ ಬೀಗವನ್ನು ಹಾಕಲ್ಪಟ್ಟಿದೆ, ಅದರ ಕೀಲಿಯು ಒಬ್ಬ ತಂದೆಯ ಬಳಿಯೇ ಇದೆ ಆದ್ದರಿಂದ ನಿಮಗೆ ಓದಿಸುವವರು ಯಾರೆಂಬುದು ಯಾರಿಗೂ ಗೊತ್ತಿಲ್ಲ. ಈ ದಾದಾರವರೇ ಓದಿಸುತ್ತಾರೆಂದು ತಿಳಿದುಕೊಳ್ಳುವ ಕಾರಣ ಟೀಕೆ ಮಾಡುತ್ತಾರೆ, ಹಾಗೆ ಹೀಗೆ ಮಾತನಾಡುತ್ತಾರೆ ಆದ್ದರಿಂದ ಮೊಟ್ಟ ಮೊದಲಿಗೆ ಇದನ್ನು ತಿಳಿಸಿರಿ - ಇದರಲ್ಲಿ ಶಿವ ಭಗವಾನುವಾಚ ಎಂದು ಬರೆಯಲಾಗಿದೆ, ಅವರು ಸತ್ಯವಾಗಿದ್ದಾರೆ, ಜ್ಞಾನ ಸಾಗರ ಆಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಈ ಶಿಕ್ಷಣವು ಈಗ ನಿಮಗೆ ಆ ಬೇಹದ್ದಿನ ತಂದೆಯಿಂದ ಸಿಗುತ್ತದೆ. ಅವರೇ ಸೃಷ್ಟಿಯ ರಚಯಿತ, ಪತಿತ ಸೃಷ್ಟಿಯನ್ನು ಪಾವನ ಮಾಡುವವರಾಗಿದ್ದಾರೆ ಅಂದಮೇಲೆ ಮೊಟ್ಟ ಮೊದಲು ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ. ಆ ಪರಮಪಿತ ಪರಮಾತ್ಮನೊಂದಿಗೆ ತಮ್ಮ ಸಂಬಂಧವೇನಾಗಿದೆ? ಅವರು ನರನಿಂದ ನಾರಾಯಣನಾಗುವ ಸತ್ಯ ಜ್ಞಾನವನ್ನು ಕೊಡುತ್ತಾರೆ. ಮಕ್ಕಳಿಗೆ ತಿಳಿದಿದೆ, ತಂದೆಯು ಸತ್ಯವಾಗಿದ್ದಾರೆ. ಆ ತಂದೆಯೇ ಸತ್ಯ ಖಂಡವನ್ನಾಗಿ ಮಾಡುತ್ತಾರೆ. ಇಲ್ಲಿಯೇ ನೀವು ನರನಿಂದ ನಾರಾಯಣನಾಗುವುದಕ್ಕಾಗಿಯೇ ಬಂದಿದ್ದೀರಿ. ಹೇಗೆ ವಕೀಲರ ಬಳಿ ಹೋದರೆ ನಾವು ವಕೀಲರಾಗಲು ಬಂದಿದ್ದೇವೆಂದು ತಿಳಿದುಕೊಳ್ಳುತ್ತಾರೆ, ಈಗ ನಿಮಗೆ ನಿಶ್ಚಯವಿದೆ - ನಮಗೆ ಭಗವಂತನು ಓದಿಸುತ್ತಾರೆ. ಕೆಲವರು ನಿಶ್ಚಯವನ್ನೂ ಇಡುತ್ತಾರೆ, ಮತ್ತೆ ಸಂಶಯಬುದ್ಧಿಯವರು ಆಗಿ ಬಿಡುತ್ತಾರೆ. ಆಗ ಎಲ್ಲರೂ ಅವರಿಗೆ ಹೇಳತೊಡಗುತ್ತಾರೆ - ನಮಗೆ ಭಗವಂತನು ಓದಿಸುತ್ತಾರೆಂದು ನೀವು ಹೇಳುತ್ತಿದ್ದಿರಿ, ಅಂದಮೇಲೆ ಭಗವಂತನನ್ನು ಏಕೆ ಬಿಟ್ಟು ಬಂದಿದ್ದೀರಿ? ಸಂಶಯ ಬರುವುದರಿಂದಲೇ ಬಿಟ್ಟು ಹೋಗುತ್ತಾರೆ. ಯಾವುದಾದರೊಂದು ವಿಕರ್ಮ ಮಾಡುತ್ತಾರೆ. ಭಗವಾನುವಾ ಚ- ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸುವುದರಿಂದಲೇ ಜಗಜ್ಜೀತರಾಗುವಿರಿ. ಯಾರು ಪಾವನವಾಗುವರೋ ಅವರೇ ಪಾವನ ಪ್ರಪಂಚದಲ್ಲಿ ಹೋಗುತ್ತಾರೆ, ಇಲ್ಲಿ ರಾಜಯೋಗದ ಮಾತಾಗಿದೆ. ನೀವು ಹೋಗಿ ರಾಜ್ಯಭಾರ ಮಾಡುತ್ತೀರಿ. ಉಳಿದ ಆತ್ಮರು ತಮ್ಮ ಲೆಕ್ಕಾಚಾರಗಳನ್ನು ಮುಗಿಸಿ ಹಿಂತಿರುಗಿ ಹೋಗುವರು. ಇದು ಅಂತಿಮ ಸಮಯವಾಗಿದೆ. ಬುದ್ಧಿಯು ಹೇಳುತ್ತದೆ - ಸತ್ಯಯುಗವು ಅವಶ್ಯವಾಗಿ ಸ್ಥಾಪನೆಯಾಗಲಿದೆ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಉಳಿದೆಲ್ಲರೂ ಮುಕ್ತಿಧಾಮಕ್ಕೆ ಹೊರಟು ಹೋಗುತ್ತಾರೆ ನಂತರ ಅವರು ತಮ್ಮ ಪಾತ್ರವನ್ನು ಪುನರಾವರ್ತಿಸಬೇಕಾಗುವುದು. ನೀವೂ ಸಹ ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗುವುದಕ್ಕಾಗಿ ತಮ್ಮ ಪುರುಷಾರ್ಥ ಮಾಡುತ್ತಾ ಇರುತ್ತೀರಿ. ತಮ್ಮನ್ನು ಮಾಲೀಕರೆಂದು ತಿಳಿದುಕೊಳ್ಳುವರಲ್ಲವೆ. ಪ್ರಜೆಗಳೂ ಮಾಲೀಕರಾಗಿರುತ್ತಾರೆ. ಈಗಲೂ ಪ್ರಜೆಗಳು ನಮ್ಮ ಭಾರತವೆಂದು ಹೇಳುತ್ತಾರಲ್ಲವೆ. ನೀವು ತಿಳಿದುಕೊಂಡಿದ್ದೀರಿ- ಎಲ್ಲರೂ ಈಗ ನರಕವಾಸಿಗಳಾಗಿದ್ದಾರೆ. ನಾವೀಗ ಸ್ವರ್ಗವಾಸಿಗಳಾಗುವುದಕ್ಕಾಗಿ ರಾಜಯೋಗವನ್ನು ಕಲಿಯುತ್ತಿದ್ದೇವೆ. ಎಲ್ಲರೂ ಸ್ವರ್ಗವಾಸಿಗಳಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಯಾವಾಗ ಭಕ್ತಿಮಾರ್ಗವು ಮುಕ್ತಾಯವಾಗುವುದೋ ಆಗಲೇ ನಾನು ಬರುತ್ತೇನೆ, ನಾನೇ ಬಂದು ಎಲ್ಲಾ ಭಕ್ತರಿಗೆ ಭಕ್ತಿಯ ಫಲವನ್ನು ಕೊಡಬೇಕಾಗಿದೆ. ಬಹುತೇಕ ಸಂಖ್ಯೆಯು ಭಕ್ತರದಾಗಿದೆಯಲ್ಲವೆ. ಎಲ್ಲರೂ ಸಹ ಓ ಗಾಡ್ಫಾದರ್ ಎಂದು ಕರೆಯುತ್ತಿರುತ್ತಾರೆ. ಭಕ್ತರ ಬಾಯಿಂದ ಓ ಗಾಡ್ಫಾದರ್, ಹೇ ಭಗವಂತ ಎಂದು ಅವಶ್ಯವಾಗಿ ಹೊರ ಬರುತ್ತದೆ. ಈಗ ಭಕ್ತಿ ಮತ್ತು ಜ್ಞಾನದಲ್ಲಿ ಅಂತರವಿದೆ. ನಿಮ್ಮ ಬಾಯಿಂದ ಎಂದೂ ಸಹ ಹೇ ಈಶ್ವರ, ಹೇ ಭಗವಂತ ಎಂಬುದು ಬರುವುದಿಲ್ಲ. ಮನುಷ್ಯರಿಗಂತೂ ಇದು ಅರ್ಧಕಲ್ಪದಿಂದ ಹವ್ಯಾಸವಾಗಿ ಬಿಟ್ಟಿದೆ. ನೀವು ತಿಳಿದುಕೊಂಡಿದ್ದೀರಿ, ಅವರು ನಮ್ಮ ತಂದೆಯಾಗಿದ್ದಾರೆ ಅಂದಮೇಲೆ ಹೇ ತಂದೆಯೇ ಎಂದು ಹೇಳುವಂತಿಲ್ಲ. ತಂದೆಯಿಂದ ನೀವು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಮೊದಲು ಈ ನಿಶ್ಚಯವಿರಲಿ - ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯು ಮಕ್ಕಳನ್ನು ಆಸ್ತಿ ತೆಗೆದುಕೊಳ್ಳಲು ಅಧಿಕಾರಿಗಳನ್ನಾಗಿ ಮಾಡುತ್ತಾರೆ. ಇವರು ಸತ್ಯ ತಂದೆಯಲ್ಲವೆ. ತಂದೆಗೆ ಗೊತ್ತಿದೆ, ನಾನು ಯಾವ ಮಕ್ಕಳಿಗೆ ಜ್ಞಾನಾಮೃತವನ್ನು ಕುಡಿಸಿ ಜ್ಞಾನ ಚಿತೆಯ ಮೇಲೆ ಕುಳ್ಳರಿಸಿ ವಿಶ್ವದ ಮಾಲೀಕರು ದೇವತೆಗಳನ್ನಾಗಿ ಮಾಡಿದ್ದೆನು, ಅವರೇ ಕಾಮ ಚಿತೆಯ ಮೇಲೆ ಕುಳಿತು ಭಸ್ಮೀಭೂತರಾಗಿ ಬಿಟ್ಟಿದ್ದಾರೆ. ನಾನೀಗ ಪುನಃ ಜ್ಞಾನ ಚಿತೆಯ ಮೇಲೆ ಕುಳ್ಳರಿಸಿ ಘೋರ ನಿದ್ರೆಯಿಂದ ಎಬ್ಬಿಸಿ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ.
ತಂದೆಯು ತಿಳಿಸಿದ್ದಾರೆ - ನೀವಾತ್ಮರು ಅಲ್ಲಿ ಶಾಂತಿಧಾಮ ಮತ್ತು ಸುಖಧಾಮದಲ್ಲಿ ಇರುತ್ತೀರಿ, ಸುಖಧಾಮಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಅಲ್ಲಿ ದೇವತೆಗಳಿರುತ್ತಾರೆ. ಪರಮಧಾಮವು ಆತ್ಮಗಳ ಮಧುರ ಮನೆ ಆಗಿದೆ, ಎಲ್ಲಾ ಪಾತ್ರಧಾರಿಗಳು ಪಾತ್ರವನ್ನು ಅಭಿನಯಿಸಲು ಆ ಶಾಂತಿಧಾಮದಿಂದ ಬರುತ್ತಾರೆ. ನಾವಾತ್ಮರು ಇಲ್ಲಿನ ನಿವಾಸಿಗಳಲ್ಲ, ಆ ನಾಟಕದ ಪಾತ್ರಧಾರಿಗಳು ಇಲ್ಲಿನ ನಿವಾಸಿಗಳಾಗಿರುತ್ತಾರೆ, ಕೇವಲ ಮನೆಯಿಂದ ಬಂದು ಉಡುಪುಗಳನ್ನು ಬದಲಾಯಿಸಿ ಪಾತ್ರವನ್ನು ಅಭಿನಯಿಸುತ್ತಾರೆ. ನೀವಂತೂ ತಿಳಿದುಕೊಂಡಿದ್ದೀರಿ - ನಮ್ಮ ಮನೆಯು ಶಾಂತಿಧಾಮವಾಗಿದೆ, ಎಲ್ಲಿಗೆ ನಾವು ಮತ್ತೆ ಮರಳಿ ಹೋಗುತ್ತೇವೆ. ಯಾವಾಗ ಎಲ್ಲಾ ಪಾತ್ರಧಾರಿಗಳೂ ಸ್ಟೇಜಿನ ಮೇಲೆ ಬಂದು ಬಿಡುವರೋ ಆಗ ತಂದೆಯು ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಅವರಿಗೆ ಮುಕ್ತಿದಾತ, ಮಾರ್ಗದರ್ಶಕನೆಂದು ಹೇಳುತ್ತಾರೆ. ದುಃಖಹರ್ತ-ಸುಖಕರ್ತನಾಗಿದ್ದಾರೆ ಅಂದಮೇಲೆ ಇಷ್ಟೆಲ್ಲಾ ಮನುಷ್ಯರು ಎಲ್ಲಿಗೆ ಹೋಗುವರು, ವಿಚಾರ ಮಾಡಿ - ಪತಿತ-ಪಾವನನನ್ನು ಏತಕ್ಕಾಗಿ ಕರೆಯುತ್ತಾರೆ? ತಮ್ಮ ಮೃತ್ಯುವಿಗಾಗಿ. ದುಃಖದ ಪ್ರಪಂಚದಲ್ಲಿರಲು ಇಷ್ಟವಿಲ್ಲ, ಆದ್ದರಿಂದ ಮನೆಗೆ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ. ಇವರೆಲ್ಲರೂ ಮುಕ್ತಿಯನ್ನೇ ಒಪ್ಪುವವರಾಗಿದ್ದಾರೆ, ಭಾರತದ ಪ್ರಾಚೀನ ಯೋಗವು ಎಷ್ಟು ಪ್ರಸಿದ್ಧವಾಗಿದೆ! ಪ್ರಾಚೀನ ರಾಜಯೋಗವನ್ನು ಕಲಿಸಲು ವಿದೇಶಕ್ಕೂ ಹೋಗುತ್ತಾರೆ. ಕ್ರಿಶ್ಚಿಯನ್ನರಲ್ಲಿ ಅನೇಕರು ಸನ್ಯಾಸಿಗಳಿಗೆ ಗೌರವ ಕೊಡುತ್ತಾರೆ. ಕಾವೀ ಬಟ್ಟೆಯ ಯಾವ ಉಡುಪು ಇದೆಯೋ ಅದು ಹಠಯೋಗದ್ದಾಗಿದೆ. ನೀವಂತೂ ಮನೆ ಮಠವನ್ನು ಬಿಡಬೇಕಾಗಿಲ್ಲ. ಯಾವುದೇ ಶ್ವೇತ ವಸ್ತ್ರಗಳನ್ನೇ ಧರಿಸಬೇಕೆಂಬ ಬಂಧನವಿಲ್ಲ ಆದರೆ ಬಿಳಿಯ ಬಣ್ಣವು ಬಹಳ ಚೆನ್ನಾಗಿದೆ. ನೀವು ಭಟ್ಟಿಯಲ್ಲಿ ಇದ್ದಿರಿ ಆದ್ದರಿಂದ ಉಡುಪುಗಳೂ ಸಹ ಇವೇ ಆಗಿ ಬಿಟ್ಟಿದೆ. ಇತ್ತೀಚೆಗೆ ಬಿಳಿಯ ಬಣ್ಣವನ್ನು ಇಷ್ಟ ಪಡುತ್ತಾರೆ. ಮನುಷ್ಯರು ಮರಣ ಹೊಂದಿದಾಗ ಬಿಳಿಯ ಹೊದಿಕೆಯನ್ನು ಹೊದಿಸುತ್ತಾರೆ ಅಂದಾಗ ಮೊದಲು ಯಾರಿಗಾದರೂ ತಂದೆಯ ಪರಿಚಯ ಕೊಡಬೇಕಾಗಿದೆ. ಇಬ್ಬರು ತಂದೆಯರಿದ್ದಾರೆ, ಈ ಮಾತುಗಳನ್ನು ತಿಳಿದುಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಪ್ರದರ್ಶನಿಯಲ್ಲಿ ಇಷ್ಟೊಂದು ತಿಳಿಸುವುದಕ್ಕೆ ಆಗುವುದಿಲ್ಲ. ಸತ್ಯಯುಗದಲ್ಲಿ ಒಬ್ಬರು ತಂದೆಯಿರುತ್ತಾರೆ, ಈ ಸಮಯದಲ್ಲಿ ನಿಮಗೆ ಮೂವರು ತಂದೆಯರಿದ್ದಾರೆ ಏಕೆಂದರೆ ಭಗವಂತನು ಪ್ರಜಾಪಿತ ಬ್ರಹ್ಮನ ತನುವಿನಲ್ಲಿ ಬರುತ್ತಾರೆ ಆದ್ದರಿಂದ ಬ್ರಹ್ಮನೂ ಸಹ ಎಲ್ಲರ ತಂದೆಯಾದರು, ಈಗ ಮೂವರು ತಂದೆಯರಲ್ಲಿ ಶ್ರೇಷ್ಠ ಆಸ್ತಿಯು ಯಾರದು? ನಿರಾಕಾರ ತಂದೆಯು ಆಸ್ತಿಯನ್ನು ಹೇಗೆ ಕೊಡುವರು? ಅವರು ಬ್ರಹ್ಮಾರವರ ಮೂಲಕ ಕೊಡುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ ಮತ್ತು ಬ್ರಹ್ಮನ ಮೂಲಕವೇ ಆಸ್ತಿಯನ್ನು ಕೊಡುತ್ತಾರೆ. ಈ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು, ಶಿವನು ತಂದೆಯಾಗಿದ್ದಾರೆ ಮತ್ತು ಈ ಪ್ರಜಾಪಿತ ಬ್ರಹ್ಮನು ಆದಿ ದೇವ ಮತ್ತು ಇವರು ಆದಿ ದೇವಿಯಾಗಿದ್ದಾರೆ. ಇವರು ಮನುಕುಲದ ಮೂಲಪಿತನಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನು ಶಿವನಿಗೆ ಮನುಕುಲದ ಪಿತಾಮಹನೆಂದು ಹೇಳುವುದಿಲ್ಲ. ನಾನು ಎಲ್ಲರ ತಂದೆಯಾಗಿದ್ದೇನೆ, ಇವರು ಪ್ರಜಾಪಿತ ಬ್ರಹ್ಮನಾಗಿದ್ದಾರೆ. ನೀವು ಸಹೋದರ-ಸಹೋದರಿಯರಾದಿರಿ, ಪರಸ್ಪರ ಕುದೃಷ್ಟಿಯನ್ನು ಇಡಲು ಸಾಧ್ಯವಿಲ್ಲ. ಒಂದುವೇಳೆ ಪರಸ್ಪರ ವಿಕಾರ ದೃಷ್ಟಿಯು ಸೆಳೆಯುತ್ತದೆ ಎಂದರೆ ಅಂತಹವರು ಕೆಳಗೆ ಬೀಳುತ್ತಾರೆ, ತಂದೆಯನ್ನೇ ಮರೆತು ಹೋಗುತ್ತಾರೆ. ತಂದೆಯು ತಿಳಿಸುತ್ತಾರೆ, ನೀವು ನನ್ನ ಮಕ್ಕಳಾಗಿ ಮುಖ ಕಪ್ಪು ಮಾಡಿಕೊಳ್ಳುತ್ತೀರಿ, ಬೇಹದ್ದಿನ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ನಿಮಗೆ ಈ ನಶೆಯೇರಿದೆ. ತಿಳಿದುಕೊಂಡಿದ್ದೀರಿ, ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಭೌತಿಕ ಸಂಬಂಧಗಳನ್ನೂ ನೋಡಿಕೊಳ್ಳಬೇಕಾಗಿದೆ. ಲೌಕಿಕ ತಂದೆಯನ್ನು ನೀವು ತಂದೆಯೆಂದೇ ಹೇಳುತ್ತೀರಲ್ಲವೆ. ಅವರನ್ನು ನೀವು ಸಹೋದರನೆಂದು ಹೇಳುವಂತಿಲ್ಲ. ಸಾಮಾನ್ಯ ರೀತಿಯಲ್ಲಿ ತಂದೆಯನ್ನು ತಂದೆಯೆಂತಲೂ ಹೇಳಬೇಕಾಗುತ್ತದೆ ಆದರೆ ಬುದ್ಧಿಯಲ್ಲಿದೆ, ಇವರು ಅಲೌಕಿಕ ತಂದೆಯಾಗಿದ್ದಾರೆ ಎಂದು. ಜ್ಞಾನವಂತೂ ಇದೆಯಲ್ಲವೆ, ಈ ಜ್ಞಾನವು ಬಹಳ ವಿಚಿತ್ರವಾಗಿದೆ. ಇತ್ತೀಚೆಗೆ ಹೆಸರನ್ನೂ ತೆಗೆದುಕೊಳ್ಳುತ್ತಾರೆ ಆದರೆ ಯಾರಾದರೂ ಹೊರಗಿನ ವ್ಯಕ್ತಿಗಳ ಮುಂದೆ ಸಹೋದರನೆಂದು ಹೇಳಿದ್ದೇ ಆದರೆ ಇವರ ತಲೆಯು ಕೆಟ್ಟು ಹೋಗಿದೆ ಎಂದು ತಿಳಿದುಕೊಳ್ಳುತ್ತಾರೆ. ಇದರಲ್ಲಿ ಬಹಳ ಯುಕ್ತಿ ಬೇಕಾಗಿದೆ. ನಿಮ್ಮದು ಗುಪ್ತ ಜ್ಞಾನ, ಗುಪ್ತ ಸಂಬಂಧವಾಗಿದೆ. ಬಹಳ ಮಟ್ಟಿಗೆ ಸ್ತ್ರೀ ತನ್ನ ಪತಿಯನ್ನು ಹೆಸರಿಂದ ಕರೆಯುವುದಿಲ್ಲ. ಪತಿಯು ಸ್ತ್ರೀ ಹೆಸರನ್ನು ತೆಗೆದುಕೊಳ್ಳುತ್ತಾರೆ. ಇದರಲ್ಲಿ ಬಹಳ ಯುಕ್ತಿಯಿಂದ ನಡೆಯಬೇಕಾಗಿದೆ. ಲೌಕಿಕದೊಂದಿಗೂ ಸಂಬಂಧವನ್ನು ನಿಭಾಯಿಸಬೇಕಾಗಿದೆ ಆದರೆ ಬುದ್ಧಿಯು ಮಾತ್ರ ಮೇಲಿರಲಿ, ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಬಾಕಿ ಚಿಕ್ಕಪ್ಪನನ್ನು ಚಿಕ್ಕಪ್ಪ, ತಂದೆಯನ್ನು ತಂದೆಯೆಂತಲೂ ಹೇಳಬೇಕಾಗುತ್ತದೆ. ಯಾರು ಬ್ರಹ್ಮಾಕುಮಾರ ಕುಮಾರಿಯರಾಗಿಲ್ಲವೋ ಅವರು ಸಹೋದರ-ಸಹೋದರಿಯೆಂದು ತಿಳಿದುಕೊಳ್ಳುವುದಿಲ್ಲ. ಯಾರು ಬಿ.ಕೆ.ಗಳಾಗಿರುವರೋ ಅವರು ಈ ಮಾತುಗಳನ್ನು ತಿಳಿದುಕೊಳ್ಳುವರು. ಹೊರಗಿನವರಂತೂ ಮೊದಲೇ ಎದುರಾಗುತ್ತಾರೆ. ಇದರಲ್ಲಿ ತಿಳಿದುಕೊಳ್ಳುವ ಬುದ್ಧಿಯು ಚೆನ್ನಾಗಿರಬೇಕು. ತಂದೆಯು ಮಕ್ಕಳನ್ನು ವಿಶಾಲ ಬುದ್ಧಿಯವರಾನ್ನಾಗಿ ಮಾಡುತ್ತಾರೆ, ನೀವು ಮೊದಲು ಮಿತವಾದ ಬುದ್ಧಿಯವರಾಗಿದ್ದಿರಿ, ಈಗ ಬುದ್ಧಿಯು ಬೇಹದ್ದಿನಲ್ಲಿ ಹೋಗುತ್ತದೆ, ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ, ಇವರೆಲ್ಲರೂ ನಮ್ಮ ಸಹೋದರ-ಸಹೋದರಿಯರಾಗಿದ್ದಾರೆ. ಆದರೆ ಮನೆಯಲ್ಲಿ ಅತ್ತೆಯನ್ನು ಅತ್ತೆಯೆಂದೇ ಹೇಳುತ್ತಾರೆ, ಸಹೋದರಿಯೆಂದು ಹೇಳುವರೇ! ಮನೆಯಲ್ಲಿರುತ್ತಾ ಬಹಳ ಯುಕ್ತಿಯಿಂದ ನಡೆದುಕೊಳ್ಳಬೇಕು, ಇಲ್ಲವಾದರೆ ಇವರು ಪತಿಗೆ ಸಹೋದರ, ಅತ್ತೆಗೆ ಸಹೋದರಿಯೆಂದು ಹೇಳುತ್ತಾರೆ. ಇವರಿಗೇನಾಗಿದೆ? ಈ ಜ್ಞಾನದ ಮಾತುಗಳು ನಿಮಗೇ ಗೊತ್ತಿದೆ, ಮತ್ತ್ಯಾರಿಗೂ ಗೊತ್ತಿಲ್ಲ. ಪ್ರಭು ನಿನ್ನ ಗತಿಮತವು ನಿಮಗೇ ಗೊತ್ತು ಎಂದು ಹೇಳುತ್ತಾರಲ್ಲವೆ. ನೀವೀಗ ಅವರ ಮಕ್ಕಳಾಗುತ್ತೀರಿ ಅಂದಮೇಲೆ ನಿಮ್ಮ ಗತಿಮತವು ನಿಮಗೇ ತಿಳಿದಿದೆ. ಬಹಳ ಸಂಭಾಲನೆಯಿಂದ ನಡೆಯಬೇಕಾಗುತ್ತದೆ. ಎಲ್ಲಿಯೂ ಯಾರು ತಬ್ಬಿಬ್ಬಾಗಬಾರದು ಆದ್ದರಿಂದ ಪ್ರದರ್ಶನಿಯಲ್ಲಿ ನೀವು ಮಕ್ಕಳು ಮೊಟ್ಟ ಮೊದಲು ತಿಳಿಸಬೇಕಾಗಿದೆ - ನಮಗೆ ಓದಿಸುವವರು ಭಗವಂತನಾಗಿದ್ದಾರೆ. ಈಗ ತಿಳಿಸಿ - ಭಗವಂತನು ಯಾರು? ನಿರಾಕಾರ ಶಿವನೋ ಅಥವಾ ದೇಹಧಾರಿ ಶ್ರೀಕೃಷ್ಣನೋ! ಗೀತೆಯಲ್ಲಿ ಯಾವ ಭಗವಾನುವಾಚ ಇದೆಯೋ ಅದನ್ನು ಶಿವ ಪರಮಾತ್ಮನು ಮಹಾವಾಕ್ಯಗಳನ್ನು ಉಚ್ಛರಿಸಿದ್ದಾರೆಯೋ ಅಥವಾ ಶ್ರೀಕೃಷ್ಣನೋ? ಕೃಷ್ಣನಂತೂ ಸ್ವರ್ಗದ ಮೊದಲ ರಾಜಕುಮಾರನಾಗಿದ್ದಾನೆ. ಎಂದೂ ಸಹ ಕೃಷ್ಣ ಜಯಂತಿಯೇ ಶಿವ ಜಯಂತಿಯೆಂದು ಹೇಳಲು ಸಾಧ್ಯವಿಲ್ಲ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿ ಆಗುತ್ತದೆ, ಶಿವ ಜಯಂತಿಯಿಂದ ಶ್ರೀಕೃಷ್ಣನು ಸ್ವರ್ಗದ ರಾಜಕುಮಾರನು ಹೇಗಾದನು ಎಂಬುದನ್ನು ತಿಳಿದುಕೊಳ್ಳುವ ಮಾತಾಗಿದೆ. ಶಿವ ಜಯಂತಿಯ ನಂತರ ಗೀತಾ ಜಯಂತಿ, ಅನಂತರ ಕೃಷ್ಣ ಜಯಂತಿ ಆಗುತ್ತದೆ ಏಕೆಂದರೆ ತಂದೆಯು ರಾಜಯೋಗವನ್ನು ಕಲಿಸುತ್ತಾರಲ್ಲವೆ. ಮಕ್ಕಳ ಬುದ್ಧಿಯಲ್ಲಿ ಬಂದಿದೆಯಲ್ಲವೆ. ಎಲ್ಲಿಯವರೆಗೆ ಶಿವ ಪರಮಾತ್ಮನು ಬರುವುದಿಲ್ಲವೋ ಅಲ್ಲಿಯವರೆಗೆ ಶಿವ ಜಯಂತಿಯನ್ನು ಆಚರಿಸಲು ಸಾಧ್ಯವಿಲ್ಲ. ಎಲ್ಲಿಯವರೆಗೆ ಶಿವನು ಬಂದು ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುವುದಿಲ್ಲವೋ ಅಲ್ಲಿಯವರೆಗೆ ಕೃಷ್ಣ ಜಯಂತಿಯನ್ನು ಹೇಗೆ ಆಚರಿಸಲಾಗುವುದು! ಕೃಷ್ಣನ ಜನ್ಮವನ್ನಂತೂ ಆಚರಿಸುತ್ತಾರೆ, ಆದರೆ ತಿಳಿದುಕೊಳ್ಳುವುದಿಲ್ಲ. ಕೃಷ್ಣನು ರಾಜಕುಮಾರನಾಗಿದ್ದನು ಅಂದಮೇಲೆ ಅವಶ್ಯವಾಗಿ ಸತ್ಯಯುಗದಲ್ಲಿಯೇ ಇರುವನಲ್ಲವೆ. ಅವಶ್ಯವಾಗಿ ದೇವಿ-ದೇವತೆಗಳ ರಾಜಧಾನಿಯಿರುವುದು, ಕೇವಲ ಒಬ್ಬ ಕೃಷ್ಣನಿಗೇ ಮಾತ್ರವೇ ರಾಜಧಾನಿಯು ಸಿಗಲಿಲ್ಲ. ಅವಶ್ಯವಾಗಿ ಕೃಷ್ಣ ಪುರಿಯೂ ಇರಬೇಕಲ್ಲವೆ, ಕೃಷ್ಣ ಪುರಿಯೆಂದು ಹೇಳುತ್ತಾರೆ ಆದರೆ ಇದು ಕಂಸ ಪುರಿಯಾಗಿದೆ. ಹೊಸ ಪ್ರಪಂಚವು ಕೃಷ್ಣ ಪುರಿ, ಹಳೆಯ ಪ್ರಪಂಚವು ಕಂಸ ಪುರಿಯಾಗಿದೆ. ದೇವತೆಗಳು ಮತ್ತು ಅಸುರರ ಯುದ್ಧವಾಯಿತು, ದೇವತೆಗಳ ವಿಜಯವಾಯಿತೆಂದು ಹೇಳುತ್ತಾರೆ ಆದರೆ ಈ ರೀತಿ ಆಗಲಿಲ್ಲ. ಕಂಸಪುರಿ ಸಮಾಪ್ತಿಯಾಯಿತು ನಂತರ ಕೃಷ್ಣ ಪುರಿಯು ಸ್ಥಾಪನೆಯಾಯಿತಲ್ಲವೆ. ಕಂಸ ಪುರಿಯು ಹಳೆಯ ಪ್ರಪಂಚದಲ್ಲಿಯೇ ಇರುವುದು, ಹೊಸ ಪ್ರಪಂಚದಲ್ಲಿ ಈ ಕಂಸ ಮೊದಲಾದ ದೈತ್ಯರಿರುವರೇ? ಇಲ್ಲಿ ನೋಡಿ, ಎಷ್ಟೊಂದು ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಬಹಳ ಕಡಿಮೆಯಿರುತ್ತಾರೆ. ಇದನ್ನು ನೀವು ತಿಳಿದುಕೊಳ್ಳುತ್ತೀರಿ, ಈಗ ನಿಮ್ಮ ಬುದ್ಧಿಯು ಕೆಲಸ ಮಾಡುತ್ತದೆ, ದೇವತೆಗಳು ಯಾವುದೇ ಯುದ್ಧ ಮಾಡಲಿಲ್ಲ. ದೈವೀ ಸಂಪ್ರದಾಯದವರು ಸತ್ಯಯುಗದಲ್ಲಿಯೇ ಇರುತ್ತಾರೆ, ಇಲ್ಲಿ ಆಸುರೀ ಸಂಪ್ರದಾಯದವರು ಇದ್ದಾರೆ. ಬಾಕಿ ದೇವತೆಗಳು ಮತ್ತು ಅಸುರರ ಯುದ್ಧವಾಗಲಿ, ಕೌರವರು-ಪಾಂಡವರ ಯುದ್ಧವಾಗಲಿ ಆಗಲಿಲ್ಲ. ನೀವು ರಾವಣನ ಮೇಲೆ ಜಯ ಗಳಿಸುತ್ತೀರಿ. ತಂದೆಯು ತಿಳಿಸುತ್ತಾರೆ - ಈ ವಿಕಾರಗಳ ಮೇಲೆ ಜಯ ಗಳಿಸಿದರೆ ಜಗಜ್ಜೀತರಾಗುವಿರಿ. ಇದರಲ್ಲಿ ಯಾವುದೇ ಹೊಡೆದಾಡುವುದಿಲ್ಲ, ಯುದ್ಧದ ಹೆಸರನ್ನು ತೆಗೆದುಕೊಂಡರೆ ಹಿಂಸಕರು ಎಂದು ಆಗಿ ಬಿಡುವುದು. ರಾವಣನ ಮೇಲೆ ಜಯ ಗಳಿಸಬೇಕಾಗಿದೆ ಆದರೆ ಅಹಿಂಸೆಯಿಂದ. ಕೇವಲ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದು. ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ತಂದೆಯು ತಿಳಿಸುತ್ತಾರೆ – ನನ್ನ ಜೊತೆ ಬುದ್ಧಿಯೋಗವನ್ನಿಡಿ ಆಗ ನಿಮ್ಮ ಪಾಪಗಳು ಭಸ್ಮವಾಗುವುದು. ತಂದೆಯು ಪತಿತ-ಪಾವನನಾಗಿದ್ದಾರೆ ಅಂದಮೇಲೆ ಬುದ್ಧಿಯೋಗವನ್ನು ಆ ತಂದೆಯೊಂದಿಗೆ ಜೋಡಿಸಬೇಕಾಗಿದೆ ಆಗಲೇ ನೀವು ಪತಿತರಿಂದ ಪಾವನರಾಗಿ ಬಿಡುತ್ತೀರಿ. ನೀವೀಗ ಪ್ರತ್ಯಕ್ಷದಲ್ಲಿ ಅವರೊಂದಿಗೆ ಯೋಗವನ್ನು ಇಡುತ್ತೀರಿ, ಇದರಲ್ಲಿ ಯಾವುದೇ ಯುದ್ಧದ ಮಾತಿಲ್ಲ. ಯಾರು ಚೆನ್ನಾಗಿ ಓದುವರೋ, ತಂದೆಯ ಜೊತೆ ಯೋಗವನ್ನು ಇಡುವರೋ ಅವರೇ ಕಲ್ಪದ ಮೊದಲಿನ ತರಹ ತಂದೆಯಿಂದ ಆಸ್ತಿಯನ್ನು ಪಡೆಯುವರು. ಈ ಹಳೆಯ ಪ್ರಪಂಚದ ವಿನಾಶವೂ ಆಗುವುದು, ಎಲ್ಲರೂ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೋಗುತ್ತಾರೆ ಮತ್ತೆ ತರಗತಿಯೂ ವರ್ಗಾವಣೆಯಾಗಿ ನಂಬರ್ವಾರ್ ಹೋಗಿ ಕುಳಿತುಕೊಳ್ಳುತ್ತಾರಲ್ಲವೆ. ನೀವೂ ಸಹ ನಂಬರ್ವಾರ್ ಹೋಗಿ ಅಲ್ಲಿ ರಾಜ್ಯಭಾರ ಮಾಡುತ್ತೀರಿ, ಎಷ್ಟೊಂದು ತಿಳಿದುಕೊಳ್ಳುವ ಮಾತುಗಳಾಗಿವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಅಂತಿಮ ಸಮಯದಲ್ಲಿ ಸತ್ಯಯುಗದ ಸ್ಥಾಪನೆಯಾಗುತ್ತಿದೆ ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ತಂದೆ ಮತ್ತು ತಂದೆಯ ಕಾರ್ಯದಲ್ಲಿ ಎಂದೂ ಸಂಶಯ ಬರಬಾರದು.
2. ಜ್ಞಾನ ಮತ್ತು ಸಂಬಂಧವು ಗುಪ್ತವಾಗಿದೆ ಆದ್ದರಿಂದ ಲೌಕಿಕದಲ್ಲಿ ಬಹಳ ಯುಕ್ತಿಯಿಂದ ವಿಶಾಲ ಬುದ್ಧಿಯವರಾಗಿ ನಡೆಯಬೇಕಾಗಿದೆ. ಕೇಳುವವರು ತಬ್ಬಿಬ್ಬಾಗುವಂತಹ ಶಬ್ಧಗಳನ್ನು ಮಾತನಾಡಬಾರದು.
ಓಂ ಶಾಂತಿ. ಮಕ್ಕಳು ಕರೆದರು ತಂದೆಯು ಪ್ರತ್ಯುತ್ತರ ನೀಡಿದರು. ಮಕ್ಕಳು ಪ್ರತ್ಯಕ್ಷದಲ್ಲಿ ಏನು ಹೇಳುತ್ತಾರೆಂದರೆ ಬಾಬಾ ತಾವು ಪುನಃ ರಾವಣ ರಾಜ್ಯದಲ್ಲಿ ಬಂದು ಬಿಡಿ, ಪುನಃ ಮಾಯೆಯ ನೆರಳು ಬಿದ್ದಿದೆ ಎಂಬ ಶಬ್ಧವೂ ಇದೆಯಲ್ಲವೆ. ರಾವಣನಿಗೆ ಮಾಯೆಯೆಂದು ಹೇಳಲಾಗುತ್ತದೆ ಆದ್ದರಿಂದ ಕೂಗುತ್ತಾರೆ. ರಾವಣ ರಾಜ್ಯವು ಬಂದು ಬಿಟ್ಟಿದೆ ಆದ್ದರಿಂದ ಈಗ ಪುನಃ ಬಂದು ಬಿಡಿ, ಈ ರಾವಣ ರಾಜ್ಯದಲ್ಲಿ ಬಹಳ ದುಃಖವಿದೆ, ನಾವು ಬಹಳ ದುಃಖಿ-ಪಾಪಾತ್ಮರಾಗಿ ಬಿಟ್ಟಿದ್ದೇವೆ. ಈಗ ತಂದೆಯು ಸನ್ಮುಖದಲ್ಲಿದ್ದಾರೆ. ಮಕ್ಕಳಿಗೆ ತಿಳಿದಿದೆ - ಪುನಃ ಅದೇ ಮಹಾಭಾರತ ಯುದ್ಧವು ನಿಂತಿದೆ. ತಂದೆಯು ಜ್ಞಾನ ಮತ್ತು ರಾಜಯೋಗವನ್ನು ಕಲಿಸುತ್ತಿದ್ದಾರೆ. ಹೇ ನಿರಾಕಾರ ಪರಮಪಿತ ಪರಮಾತ್ಮ, ನಿರಾಕಾರನು ಬಂದು ಇಲ್ಲಿ ಸಾಕಾರ ರೂಪವನ್ನು ಧಾರಣೆ ಮಾಡಿ ರೂಪ ಬದಲಾಯಿಸಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೂ ಸಹ ಆ ಬ್ರಹ್ಮ ತತ್ವ ಅಥವಾ ನಿರಾಕಾರಿ ಪ್ರಪಂಚದ ನಿವಾಸಿಗಳಾಗಿದ್ದೀರಿ. ನೀವೂ ಸಹ ರೂಪ ಬದಲಾಯಿಸಿದ್ದೀರಿ, ಇದು ಯಾರಿಗೂ ಗೊತ್ತಿಲ್ಲ. ಯಾವ ಆತ್ಮವು ನಿರಾಕಾರನಾಗಿದೆಯೋ ಅದೇ ಬಂದು ಸಾಕಾರವನ್ನು ಧಾರಣೆ ಮಾಡಿಕೊಳ್ಳುತ್ತದೆ. ಅದು ನಿರಾಕಾರಿ ಪ್ರಪಂಚವಾಗಿದೆ, ಇದು ಸಾಕಾರಿ ಪ್ರಪಂಚವಾಗಿದೆ, ಮಧ್ಯದಲ್ಲಿರುವುದು ಆಕಾರಿ ಪ್ರಪಂಚ, ಅದು ಬೇರೆಯಾಗಿದೆ. ನಾವು ಶಾಂತಿಧಾಮ ಅಥವಾ ನಿರ್ವಾಣಧಾಮದಿಂದ ಬರುತ್ತೇವೆಂಬುದು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಯಾವಾಗ ಮೊಟ್ಟ ಮೊದಲು ಹೊಸ ರಚನೆಯನ್ನು ರಚಿಸಬೇಕಾಗುತ್ತದೆಯೋ ಆಗ ಸೂಕ್ಷ್ಮವತನವನ್ನೇ ರಚಿಸುತ್ತಾರೆ. ಸೂಕ್ಷ್ಮವತನದಲ್ಲಿ ನೀವು ಹೋಗಬಲ್ಲಿರಿ, ಮತ್ತ್ಯಾವುದೇ ಸಮಯದಲ್ಲಿ ಅಲ್ಲಿಗೆ ಹೋಗುವುದಿಲ್ಲ. ಮೊಟ್ಟ ಮೊದಲಿಗೆ ನೀವು ಬಂದಾಗ ಸೂಕ್ಷ್ಮವತನದ ಮೂಲಕ ಬರುವುದಿಲ್ಲ. ನೇರವಾಗಿ ಬರುತ್ತೀರಿ, ಈಗ ನೀವು ಸೂಕ್ಷ್ಮವತನಕ್ಕೆ ಬಂದು ಹೋಗುತ್ತೀರಿ. ಕಾಲ್ನಡಿಗೆಯಲ್ಲಿ ಹೋಗುವ ಮಾತಿಲ್ಲ, ಇದು ನೀವು ಮಕ್ಕಳಿಗೆ ಸಾಕ್ಷಾತ್ಕಾರವಾಗುತ್ತದೆ. ಮೂಲವತನದ ಸಾಕ್ಷಾತ್ಕಾರವೂ ಆಗುತ್ತದೆ ಆದರೆ ಹೋಗಲು ಸಾಧ್ಯವಿಲ್ಲ. ವೈಕುಂಠದ ಸಾಕ್ಷಾತ್ಕಾರವೂ ಆಗುತ್ತದೆ, ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ಸಂಪೂರ್ಣ ಪವಿತ್ರರಾಗುವವರೆಗೆ ನೀವು ಹೋಗಲು ಸಾಧ್ಯವಿಲ್ಲ. ನಾವು ಸೂಕ್ಷ್ಮವತನಕ್ಕೆ ಹೋಗಬಲ್ಲೆವು ಎಂದು ಹೇಳುವಂತಿಲ್ಲ. ನೀವು ಸಾಕ್ಷಾತ್ಕಾರ ಮಾಡಬಹುದು, ಶಿವ ತಂದೆ ಮತ್ತು ದಾದಾ ಮತ್ತು ನೀವು ಮಕ್ಕಳಿದ್ದೀರಿ. ನೀವು ಮಕ್ಕಳು ಹೇಗೆ ಹೊಸ-ಹೊಸ ಆತ್ಮಿಕ ಮಾತುಗಳನ್ನು ಕೇಳುತ್ತೀರಿ, ಈ ಮಾತುಗಳು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಭಲೆ ನಿರಾಕಾರಿ ಪ್ರಪಂಚವೆಂದು ಹೇಳುತ್ತಾರೆ ಆದರೆ ಅದು ಹೇಗಿರುತ್ತದೆ ಎಂಬುದನ್ನು ಮನುಷ್ಯರಿಗೆ ತಿಳಿದಿಲ್ಲ. ಮೊದಲಿಗೆ ಆತ್ಮನನ್ನೇ ತಿಳಿದುಕೊಂಡಿಲ್ಲ ಅಂದಮೇಲೆ ಮತ್ತೆ ನಿರಾಕಾರಿ ಪ್ರಪಂಚವನ್ನೇನು ತಿಳಿದುಕೊಳ್ಳುವರು! ತಂದೆಯು ಮೊದಲು ಬಂದು ಆತ್ಮಾನುಭೂತಿ ಮಾಡಿಸುತ್ತಾರೆ. ನೀವಾತ್ಮರಾಗಿದ್ದೀರಿ, ರೂಪ ಬದಲಾಯಿಸಿದ್ದೀರಿ ಅರ್ಥಾತ್ ನಿರಾಕಾರಿಯಿಂದ ಸಾಕಾರದಲ್ಲಿ ಬಂದಿದ್ದೀರಿ. ನಾವಾತ್ಮರು ಹೇಗೆ 84 ಜನ್ಮಗಳನ್ನು ಪಡೆಯುತ್ತೇವೆ ಎಂಬುದನ್ನು ನೀವೀಗ ತಿಳಿದುಕೊಳ್ಳುತ್ತೀರಿ. ಇದೆಲ್ಲಾ ಪಾತ್ರವು ಆತ್ಮದಲ್ಲಿ ರೆಕಾರ್ಡ್ನಂತೆ ಅಡಕವಾಗಿದೆ. ಮೊದಲು ಈ ಮಾತುಗಳನ್ನು ತಿಳಿಸುತ್ತಿದ್ದರು, ಈಗ ತಂದೆಯು ಹೇಳುತ್ತಾರೆ - ನಿಮಗೆ ಗುಹ್ಯ ರಮಣೀಕ ಮಾತುಗಳನ್ನು ತಿಳಿಸುತ್ತೇನೆ ಯಾವುದನ್ನು ನೀವು ಮೊದಲು ತಿಳಿದುಕೊಂಡಿರಲಿಲ್ಲ ಅದನ್ನು ಈಗ ತಿಳಿದುಕೊಂಡಿದ್ದೀರಿ. ಹೊಸ-ಹೊಸ ಮಾತುಗಳು ಬುದ್ಧಿಯಲ್ಲಿ ಬರತೊಡಗುತ್ತವೆ ಆದ್ದರಿಂದ ನೀವು ಅನ್ಯರಿಗೂ ಬಹು ಬೇಗನೆ ತಿಳಿಸಬಲ್ಲಿರಿ. ದಿನ-ಪ್ರತಿದಿನ ಈ ಬ್ರಾಹ್ಮಣ ವೃಕ್ಷವು ವೃದ್ಧಿಯಾಗುತ್ತಾ ಹೋಗುವುದು, ಇದೇ ಮತ್ತೆ ದೈವೀ ವೃಕ್ಷವಾಗುವುದು, ಬ್ರಾಹ್ಮಣರೇ ವೃದ್ಧಿಯಾಗುತ್ತಾರೆ. ನೋಡಲು ಎಷ್ಟು ಚಿಕ್ಕದಾಗಿ ಕಾಣುತ್ತದೆ, ಹೇಗೆ ವಿಶ್ವದ ನಕ್ಷೆಯಲ್ಲಿ ಭಾರತವನ್ನು ನೋಡಿದಾಗ ಎಷ್ಟು ಚಿಕ್ಕದಾಗಿ ಕಾಣಿಸುತ್ತದೆ! ವಾಸ್ತವದಲ್ಲಿ ಭಾರತವು ಎಷ್ಟು ದೊಡ್ಡದಾಗಿದೆ. ಹಾಗೆಯೇ ಜ್ಞಾನಕ್ಕಾಗಿ ಹೇಳಲಾಗುತ್ತದೆ - ಮನ್ಮನಾಭವ ಅರ್ಥಾತ್ ತಂದೆಯನ್ನು ನೆನಪು ಮಾಡಿ. ಬೀಜವು ಎಷ್ಟು ಚಿಕ್ಕದಾಗಿರುತ್ತದೆ ಅದರಿಂದ ಎಷ್ಟು ದೊಡ್ಡ ವೃಕ್ಷವು ಬರುತ್ತದೆಯೋ ಹಾಗೆಯೇ ಈ ಬ್ರಾಹ್ಮಣ ಕುಲವೂ ಚಿಕ್ಕದಾಗಿದೆ, ವೃದ್ಧಿಯಾಗುತ್ತಾ ಹೋಗುತ್ತದೆ. ನಿಮ್ಮ ಬುದ್ಧಿಯಲ್ಲಿದೆ, ನಾವು ಈ ಸಮಯದಲ್ಲಿ ಬ್ರಾಹ್ಮಣರಾಗಿದ್ದೇವೆ ನಂತರ ದೇವತೆಗಳಾಗುತ್ತೇವೆ. 84 ಜನ್ಮಗಳ ಏಣಿಯು ಬಹಳ ಚೆನ್ನಾಗಿದೆ. ನೀವು ಮಕ್ಕಳು ತಿಳಿಸಬಹುದು - ಯಾರು 84 ಜನ್ಮಗಳನ್ನು ತೆಗೆದುಕೊಳ್ಳುವರೋ ಅವರೇ ಬಂದು ತಿಳಿದುಕೊಳ್ಳುತ್ತಾರೆ. ಮತ್ತೆ ಕೆಲವರು 84, ಕೆಲವರು 80 ಜನ್ಮಗಳನ್ನೂ ತೆಗೆದುಕೊಳ್ಳುವರು. ಇದನ್ನಂತೂ ತಿಳಿದುಕೊಳ್ಳುತ್ತಾರೆ - ನಾವು ದೈವೀ ಕುಲದವರಾಗಿದ್ದೇವೆ, ನಾವು ಸೂರ್ಯವಂಶಿ ಮನೆತನದವರಾಗಿದ್ದೇವೆ. ಒಂದುವೇಳೆ ಅನುತ್ತೀರ್ಣರಾದರೆ ಮತ್ತೆ ತಡವಾಗಿ ಬರುವರು, ಎಲ್ಲರೂ ಒಟ್ಟಿಗೆ ಬರುವುದಿಲ್ಲ. ಭಲೆ ಬಹಳ ಜ್ಞಾನವನ್ನು ತೆಗೆದುಕೊಳ್ಳುತ್ತಾ ಇರುತ್ತಾರೆ ಆದರೆ ಒಟ್ಟಿಗೆ ಬರುವುದಿಲ್ಲ ಅಲ್ಲವೆ. ಒಟ್ಟಿಗೆ ಹೋಗುತ್ತಾರೆ, ಬರುವಾಗ ಕೆಲಕೆಲವರೇ ಬರುತ್ತಾರೆ. ಇದು ತಿಳಿದುಕೊಳ್ಳುವ ಮಾತಲ್ಲವೆ. ಎಲ್ಲರೂ ಒಟ್ಟಿಗೆ ಹೇಗೆ 84 ಜನ್ಮಗಳನ್ನು ತೆಗೆದುಕೊಳ್ಳುವರು! ತಂದೆಯನ್ನು ಕರೆಯುತ್ತಾರೆ, ಬಾಬಾ ಪುನಃ ಬಂದು ಗೀತಾ ಜ್ಞಾನವನ್ನು ತಿಳಿಸಿರಿ. ಇದರಿಂದಲೇ ಸಿದ್ಧವಾಗುತ್ತದೆ, ಯಾವಾಗ ಮಹಾಭಾರತ ಯುದ್ಧವು ಆರಂಭವಾಗುವುದೋ ಆ ಸಮಯದಲ್ಲಿಯೇ ತಂದೆಯು ಬಂದು ಗೀತಾ ಜ್ಞಾನವನ್ನು ತಿಳಿಸುತ್ತಾರೆ, ಅದಕ್ಕೆ ರಾಜಯೋಗವೆಂದು ಹೇಳಲಾಗುತ್ತದೆ. ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ, ಕಲ್ಪ-ಕಲ್ಪವೂ 5000 ವರ್ಷಗಳ ನಂತರ ತಂದೆಯು ಬಂದು ನಮಗೆ ಜ್ಞಾನವನ್ನು ಕೊಡುತ್ತಾರೆ, ಸತ್ಯ ನಾರಾಯಣನ ಕಥೆಯನ್ನೂ ಕೇಳುತ್ತಾರಲ್ಲವೆ. ಇವರು ಎಲ್ಲಿಂದ ಬರುವರು ಮತ್ತೆ ಎಲ್ಲಿಗೆ ಹೋದರು, ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ರಾವಣನ ಯಾವ ನೆರಳು ಬಿದ್ದಿದೆಯೋ ಡ್ರಾಮಾನುಸಾರ ಈ ರಾವಣ ರಾಜ್ಯವು ಈಗ ಸಮಾಪ್ತಿಯಾಗಲಿದೆ. ಸತ್ಯಯುಗದಲ್ಲಿ ರಾಮ ರಾಜ್ಯವಿರುತ್ತದೆ ಮತ್ತು ಈ ಸಮಯದಲ್ಲಿ ರಾವಣ ರಾಜ್ಯವಿದೆ. ಈಗ ನೀವು ತಿಳಿದುಕೊಳ್ಳುತ್ತೀರಿ - ನಮ್ಮಲ್ಲಿ ಯಾವ ಜ್ಞಾನ ಬಂದಿದೆಯೋ ಅದು ಈ ಪ್ರಪಂಚದಲ್ಲಿ ಯಾರಿಗೂ ಇಲ್ಲ. ನಮ್ಮದು ಇದು ಹೊಸ ಪ್ರಪಂಚಕ್ಕಾಗಿ ಹೊಸ ವಿದ್ಯೆಯಾಗಿದೆ. ಗೀತೆಯಲ್ಲಿ ಕೃಷ್ಣನ ಹೆಸರನ್ನೇ ಬರೆದಿದ್ದಾರೆ, ಅದಂತೂ ಹಳೆಯ ಮಾತಾಯಿತಲ್ಲವೆ. ನೀವೀಗ ಹೊಸ ಮಾತುಗಳನ್ನು ಕೇಳುತ್ತಿದ್ದೀರಿ. ಇದನ್ನು ಕೇಳಿದಾಗ ಶಿವ ಭಗವಾನುವಾಚ ಎಂಬುದನ್ನು ನಾವು ಎಂದೂ ಕೇಳಿರಲಿಲ್ಲ, ಕೃಷ್ಣ ಭಗವಾನುವಾಚ ಎಂದು ಕೇಳುತ್ತಾ ಬಂದೆವು ಎಂದು ಹೇಳುತ್ತಾರೆ. ನೀವು ಹೊಸ ಪ್ರಪಂಚಕ್ಕಾಗಿ ಎಲ್ಲವೂ ಹೊಸ ಮಾತುಗಳನ್ನು ಕೇಳುತ್ತೀರಿ. ಇದು ಎಲ್ಲರಿಗೂ ತಿಳಿದಿದೆ, ಭಾರತವು ಪ್ರಾಚೀನವಾಗಿದೆ ಆದರೆ ಯಾವಾಗ ಆಗಿತ್ತು? ಈ ಲಕ್ಷ್ಮೀ-ನಾರಾಯಣರ ರಾಜ್ಯವು ಹೇಗೆ ನಡೆಯಿತು? ಇವರು ಹೇಗೆ ರಾಜ್ಯವನ್ನು ಪಡೆದರು? ಮತ್ತೆ ಎಲ್ಲಿಗೆ ಹೋದರು? ಇದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಇವರ ರಾಜ್ಯವು ಸಮಾಪ್ತಿಯಾಗಬೇಕಾದರೆ ಏನಾಯಿತು? ಯಾರ ಗೆದ್ದರು? ಏನನ್ನೂ ತಿಳಿದುಕೊಳ್ಳುವುದಿಲ್ಲ. ಅವರಂತೂ ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಆದರೆ ಲಕ್ಷ್ಮೀ-ನಾರಾಯಣರು ಲಕ್ಷಾಂತರ ವರ್ಷಗಳು ರಾಜ್ಯ ಮಾಡಿರಲು ಸಾಧ್ಯವೇ ಇಲ್ಲ. ಆ ರೀತಿ ಇದ್ದಿದ್ದೇ ಆದರೆ ಸೂರ್ಯವಂಶಿ ರಾಜರು ಅನೇಕ ಮಂದಿ ಆಗಿ ಬಿಡುವರು. ಯಾರದು ಹೆಸರೇ ಇಲ್ಲ, 1250 ವರ್ಷಗಳ ಕಥೆಯೇ ಯಾರಿಗೂ ತಿಳಿದಿಲ್ಲ, ಜೊತೆಗೆ ಲಕ್ಷ್ಮೀ-ನಾರಾಯಣರ ರಾಜ್ಯವು ಎಲ್ಲಿಯವರೆಗೆ ನಡೆಯಿತು, ಇದೂ ಸಹ ಯಾರಿಗೂ ಗೊತ್ತಿಲ್ಲ, ಲಕ್ಷಾಂತರ ವರ್ಷಗಳ ಮಾತು ಯಾರಿಗೆ ಹೇಗೆ ತಿಳಿಯುತ್ತದೆ, ಯಾರ ಬುದ್ಧಿಯೂ ಕೆಲಸ ಮಾಡುವುದಿಲ್ಲ. ಈಗ ನೀವು ಚಿಕ್ಕ-ಚಿಕ್ಕ ಮಕ್ಕಳು ಬಹು ಬೇಗನೆ ತಿಳಿಸಬಲ್ಲಿರಿ, ಇದು ಬಹಳ ಸಹಜವಾಗಿದೆ. ಎಲ್ಲವೂ ಭಾರತದ್ದೇ ಕಥೆಯಾಗಿದೆ. ಸತ್ಯ-ತ್ರೇತಾಯುಗದಲ್ಲಿ ಭಾರತವಾಸಿ ರಾಜರಿದ್ದರು, ಬೇರೆ-ಬೇರೆ ಚಿತ್ರಗಳೂ ಇವೆ. ಇಂದಿಗೆ 5000 ವರ್ಷಗಳ ಮೊದಲೂ ರಾಜರಿದ್ದರು, ಇಲ್ಲಂತೂ ಸಾವಿರಾರು ವರ್ಷಗಳೆಂದು ಹೇಳಿ ಬಿಡುತ್ತಾರೆ. ತಂದೆಯು ತಿಳಿಸುತ್ತಾರೆ - ಇದು ಕೇವಲ 5000 ವರ್ಷಗಳ ಕಥೆಯಾಗಿದೆ, ಇಂದಿಗೆ 5000 ವರ್ಷಗಳ ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ವಂಶಾವಳಿಯಿತ್ತು ನಂತರ ಪುನರ್ಜನ್ಮ ತೆಗೆದುಕೊಳ್ಳಬೇಕಾಯಿತು. ಚಿಕ್ಕ-ಚಿಕ್ಕ ಮಕ್ಕಳು ಇಷ್ಟು ತಿಳಿಸಿದರೂ ಸಹ ಇವರು ಬಹಳ ಒಳ್ಳೆಯ ಜ್ಞಾನವನ್ನು ಓದಿದ್ದಾರೆಂದು ತಿಳಿದುಕೊಳ್ಳುತ್ತಾರೆ. ಈ ಆಧ್ಯಾತ್ಮಿಕ ಜ್ಞಾನವು ಆತ್ಮಿಕ ತಂದೆಯ ವಿನಃ ಮತ್ತ್ಯಾರ ಬಳಿಯೂ ಇಲ್ಲ. ನಮಗೂ ಸಹ ಆತ್ಮಿಕ ತಂದೆಯು ತಿಳಿಸಿದ್ದಾರೆ ಎಂದು ನೀವು ಹೇಳುತ್ತೀರಿ. ಆತ್ಮವು ಶರೀರದ ಮೂಲಕ ಕೇಳಿಸಿಕೊಳ್ಳುತ್ತದೆ, ನಾನು ಇಂತಹವನಾಗುತ್ತೇನೆ ಎಂದು ಆತ್ಮವೇ ಹೇಳುತ್ತದೆ. ಮನುಷ್ಯರು ಸ್ವಯಂನ್ನು ಅರಿತುಕೊಳ್ಳುವುದಿಲ್ಲ. ತಂದೆಯು ನಮಗೆ ಆತ್ಮಾನುಭೂತಿ ಮಾಡಿಸಿದ್ದಾರೆ, ನಾವಾತ್ಮರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ಇಂತಿಂತಹ ಮಾತುಗಳನ್ನು ಕುಳಿತು ತಿಳಿಸಿದರೆ ಇವರಿಗೆ ಬಹಳ ಒಳ್ಳೆಯ ಜ್ಞಾನವಿದೆಯೆಂದು ಹೇಳುತ್ತಾರೆ. ಭಗವಂತನು ಜ್ಞಾನ ಸಾಗರನಲ್ಲವೆ. ಭಗವಂತ ಜ್ಞಾನ ಸಾಗರ, ಆನಂದ ಸಾಗರ, ಮುಕ್ತಿದಾತ, ಮಾರ್ಗದರ್ಶಕನೆಂದು ಹಾಡುತ್ತಾರೆ ಆದರೆ ಮಾರ್ಗದರ್ಶಕನಾಗಿ ಎಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಇದನ್ನು ಮಕ್ಕಳು ತಿಳಿಸಬಹುದು. ಆತ್ಮಿಕ ತಂದೆಯು ಜ್ಞಾನ ಸಾಗರನಾಗಿದ್ದಾರೆ, ಇವರಿಗೆ ಆನಂದ ಸಾಗರನೆಂದು ಹೇಳಲಾಗುತ್ತದೆ. ಯಾವಾಗ ಮನುಷ್ಯರು ಬಹಳ ದುಃಖಿಯಾಗುವರೋ ಆಗ ತಂದೆಯು ಬಂದು ಮುಕ್ತಗೊಳಿಸುತ್ತಾರೆ. ಒಂದು ರಾವಣನ ರಾಜ್ಯವಿರುತ್ತದೆ, ಸ್ವರ್ಗದ ರಚಯಿತ ತಂದೆಯೆಂದು ಹೇಳಲಾಗುತ್ತದೆ. ನರಕಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ಈ ಜ್ಞಾನವನ್ನು ಯಾರಿಗಾದರೂ ಕುಳಿತು ತಿಳಿಸಿದರೆ ಹೋಗಿ ಎಲ್ಲರಿಗೂ ತಿಳಿಸಿರಿ ಎಂದು ಹೇಳುತ್ತಾರೆ ಆದರೆ ನಿಮ್ಮಲ್ಲಿ ಧಾರಣೆಯು ಬಹಳ ಚೆನ್ನಾಗಿರಬೇಕು. ಪ್ರದರ್ಶನಿ ಚಿತ್ರಗಳ ಪುಸ್ತಕವೂ ಇದೆ. ಇನ್ನೂ ಹೆಚ್ಚು ತಿಳಿದುಕೊಂಡಿದ್ದೇ ಆದರೆ ಇದರ ಮೇಲೆ ಬಹಳ ಸರ್ವೀಸ್ ಮಾಡಬಹುದು.
ಈ ಮಗುವು (ಜಯಂತಿ ಬೆಹೆನ್) ಸಹ ಲಂಡನ್ನಲ್ಲಿ ತಮ್ಮ ಶಿಕ್ಷಕರಿಗೆ ತಿಳಿಸಬಹುದಾಗಿದೆ. ಅಲ್ಲಿ ಈ ಸರ್ವೀಸ್ ಮಾಡಬಹುದು. ಪ್ರಪಂಚದಲ್ಲಿ ಬಹಳಷ್ಟು ಮೋಸವಿದೆಯಲ್ಲವೆ. ರಾವಣನು ಎಲ್ಲರಿಗೆ ಮೋಸ ಮಾಡಿದ್ದಾನೆ, ಮಕ್ಕಳು ಇಡೀ ವಿಶ್ವದ ಚರಿತ್ರೆ-ಭೂಗೋಳವನ್ನು ತಿಳಿಸಬಹುದಾಗಿದೆ, ಲಕ್ಷ್ಮೀ-ನಾರಾಯಣರ ರಾಜ್ಯವು ಎಷ್ಟು ಸಮಯ ನಡೆಯಿತು ಮತ್ತು ಯಾವ ಸಂವತ್ಸರದಿಂದ ಇಸ್ಲಾಮಿ, ಬೌದ್ಧ, ಕ್ರಿಶ್ಚಿಯನ್ನರು ಬರುತ್ತಾರೆ, ವೃದ್ಧಿಯಾಗುತ್ತಾ ಆಗುತ್ತಾ ವಿಭಿನ್ನ ಧರ್ಮಗಳ ವೃಕ್ಷವು ಎಷ್ಟು ದೊಡ್ಡದಾಗಿ ಬಿಡುತ್ತದೆ. ಅರ್ಧ ಕಲ್ಪದ ನಂತರ ಅನ್ಯ ಧರ್ಮಗಳೂ ಬರುತ್ತವೆ. ಇಂತಿಂತಹ ಮಾತುಗಳನ್ನು ಕುಳಿತು ತಿಳಿಸಿದ್ದೇ ಆದರೆ ಕೇಳುವವರು ಇವರಿಗೆ ಆಧ್ಯಾತ್ಮಿಕ ಲೀಡರ್, ಇವರಲ್ಲಿ ಆಧ್ಯಾತ್ಮಿಕ ಜ್ಞಾನವಿದೆ ಎಂದು ಹೇಳುವರು. ಈ ಜ್ಞಾನವು ಭಾರತದಲ್ಲಿ ಸಿಗುತ್ತಿದೆ, ಆತ್ಮಿಕ ತಂದೆಯು ಕೊಡುತ್ತಿದ್ದಾರೆ. ಅವರು ಬೀಜ ರೂಪನಾಗಿದ್ದಾರೆ, ಇದು ಉಲ್ಟಾ ವೃಕ್ಷವಾಗಿದೆ. ಬೀಜವು ಜ್ಞಾನಪೂರ್ಣನಾಗಿದ್ದಾರೆ, ಬೀಜಕ್ಕೆ ವೃಕ್ಷದ ಜ್ಞಾನವಿರುತ್ತದೆಯಲ್ಲವೆ. ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ, ಭಾರತದ ದೇವತಾ ಧರ್ಮವೆಂದು ಇದಕ್ಕೆ ಹೇಳಲಾಗುತ್ತದೆ. ಮೊದಲು ಲಕ್ಷ್ಮೀ-ನಾರಾಯಣರ ರಾಜ್ಯ, ನಂತರ ರಾಮ-ಸೀತೆಯರ ರಾಜ್ಯವಾಗುತ್ತದೆ, ಇದು ಅರ್ಧ ಕಲ್ಪ ನಡೆಯುತ್ತದೆ ನಂತರ ಇಸ್ಲಾಮಿಗಳು ಬರುತ್ತಾರೆ. ವೃಕ್ಷವು ವೃದ್ಧಿಯಾಗುತ್ತಾ ಇರುತ್ತದೆ, ಹೀಗೆ ಈ ಮಗು ಹೋಗಿ ಭಾಷಣ ಮಾಡಿದರೆ ಮತ್ತು ಈ ವೃಕ್ಷವು ಹೇಗೆ ಇಮರ್ಜ್ ಆಗುತ್ತದೆ, ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನಾವು ತಿಳಿಸುತ್ತೇವೆ. ಕೇಳಬಹುದಾಗಿದೆ, ವಿದೇಶದಲ್ಲಿ ಮತ್ತ್ಯಾರೂ ಇಲ್ಲ. ಈ ಮಗು ಹೋಗಿ ತಿಳಿಸಲಿ - ಇದು ಕಲಿಯುಗದ ಅಂತ್ಯವಾಗಿದೆ, ಸತ್ಯಯುಗ ಬರಲಿದೆ. ಇದನ್ನು ಕೇಳಿದವರು ಬಹಳ ಖುಷಿ ಪಡುತ್ತಾರೆ. ತಂದೆಯು ಯುಕ್ತಿಯನ್ನು ತಿಳಿಸುತ್ತಿರುತ್ತಾರೆ, ಇದರ ಮೇಲೆ ಗಮನ ಕೊಡಬೇಕಾಗಿದೆ, ಚಿಕ್ಕ ಮಕ್ಕಳಿಗೆ ಬಹಳ ಮಾನ್ಯತೆಯು ಸಿಗುವುದು. ಚಿಕ್ಕವರು ಯಾವುದೇ ಸಾಹಸದ ಕಾರ್ಯವನ್ನು ಮಾಡುತ್ತಾರೆಂದರೆ ಅವರನ್ನು ಬಹಳ ಪ್ರೀತಿ ಮಾಡುತ್ತಾರೆ, ತಂದೆಗೆ ಇದೇ ವಿಚಾರವಿರುತ್ತದೆ - ಇಂತಿಂತಹ ಮಕ್ಕಳು ಈ ಜ್ಞಾನದಲ್ಲಿ ಗಮನ ನೀಡಿದ್ದೇ ಆದರೆ ಆಧ್ಯಾತ್ಮಿಕ ಲೀಡರ್ ಆಗಬಹುದು. ಆತ್ಮಿಕ ತಂದೆಯೇ ಕುಳಿತು ಜ್ಞಾನವನ್ನು ಕೊಡುತ್ತಾರೆ, ಕೃಷ್ಣನಿಗೇ ಭಗವಂತನೆಂದು ಹೇಳುವುದು ತಪ್ಪಾಗಿದೆ. ಭಗವಂತ ನಿರಾಕಾರನಾಗಿದ್ದಾರೆ, ನಾವೆಲ್ಲರೂ ಸಹೋದರರಾಗಿದ್ದೇವೆ, ಅವರು ತಂದೆಯಾಗಿದ್ದಾರೆ. ಎಲ್ಲರೂ ಕಲಿಯುಗದಲ್ಲಿ ಯಾವಾಗ ದುಃಖಿಯಾಗುವರೋ ಆಗ ತಂದೆಯು ಬರುತ್ತಾರೆ. ಯಾವಾಗ ಮತ್ತೆ ಕಲಿಯುಗವಾಗುವುದೋ ಆಗ ತಂದೆಯು ಸ್ವರ್ಗ ಸ್ಥಾಪನೆ ಮಾಡಲು ಬರಬೇಕಾಗುತ್ತದೆ. ಭಾರತವು ಪ್ರಾಚೀನ ಸುಖಧಾಮವಾಗಿತ್ತು, ಸ್ವರ್ಗವಾಗಿತ್ತು, ಬಹಳ ಕಡಿಮೆ ಮನುಷ್ಯರಿದ್ದರು ಬಾಕಿ ಇಷ್ಟೆಲ್ಲಾ ಆತ್ಮರು ಎಲ್ಲಿದ್ದರು? ಶಾಂತಿಧಾಮದಲ್ಲಿ ಇದ್ದರಲ್ಲವೆ ಅಂದಮೇಲೆ ಈ ರೀತಿ ತಿಳಿಸಬೇಕು, ಇದರಲ್ಲಿ ಹೆದರುವ ಮಾತಿಲ್ಲ. ಇದು ಕಥೆಯಾಗಿದೆ. ಕಥೆಯನ್ನು ಖುಷಿಯಿಂದ ಹೇಳಲಾಗುತ್ತದೆ, ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ, ಅದಕ್ಕೆ ಕಥೆಯೆಂದೂ ಹೇಳಬಹುದು, ಜ್ಞಾನವೆಂದೂ ಹೇಳಬಹುದು, ನಿಮಗೆ ಇದು ಪಕ್ಕಾ ನೆನಪಿರಲಿ. ತಂದೆಯು ತಿಳಿಸುತ್ತಾರೆ - ನಾನಾತ್ಮನಲ್ಲಿ ಇಡೀ ವೃಕ್ಷದ ಜ್ಞಾನವಿದೆ, ಅದನ್ನು ನಾನು ಪುನರಾವರ್ತಿಸುತ್ತೇನೆ. ಜ್ಞಾನ ಸಾಗರ ತಂದೆಯು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಿದ್ದಾರೆ, ಇವರು ಹೋಗಿ ಜ್ಞಾನ ಕೊಟ್ಟಿದ್ದೇ ಆದರೆ ತಾವು ಅನ್ಯರನ್ನೂ ಕರೆದುಕೊಂಡು ಬನ್ನಿ ಎಂದು ಹೇಳುತ್ತಾರೆ. ಆಗ ಕರೆದುಕೊಂಡು ಬರುತ್ತೇವೆಂದು ಹೇಳಿರಿ ಏಕೆಂದರೆ ಅವರು ಇದನ್ನು ತಿಳಿದುಕೊಳ್ಳಬಯಸುತ್ತಾರೆ - ಭಾರತದ ಪ್ರಾಚೀನ ರಾಜಯೋಗವು ಯಾವುದಾಗಿತ್ತು, ಯಾವುದರಿಂದ ಭಾರತವು ಸ್ವರ್ಗವಾಯಿತು, ಅದನ್ನು ಯಾರಾದರೂ ಬಂದು ತಿಳಿಸಲಿ. ಸನ್ಯಾಸಿಗಳು ಏನು ತಿಳಿಸುವರು? ಆತ್ಮಿಕ ಜ್ಞಾನವು ಕೇವಲ ಗೀತೆಯಲ್ಲಿದೆ ಆದ್ದರಿಂದ ಅವರು ಹೋಗಿ ಗೀತೆಯನ್ನೇ ತಿಳಿಸುತ್ತಾರೆ. ಗೀತೆಯನ್ನು ಎಷ್ಟೊಂದು ಓದುತ್ತಾರೆ, ಕಂಠಪಾಠ ಮಾಡಿಕೊಳ್ಳುತ್ತಾ ಇರುತ್ತಾರೆ. ಇದು ಆತ್ಮಿಕ ಜ್ಞಾನವೇ? ಇದಂತೂ ಮನುಷ್ಯರ ಹೆಸರಿನ ಮೇಲೆ ಬರೆದಿದ್ದಾರೆ, ಮನುಷ್ಯರು ಆತ್ಮಿಕ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ನೀವೀಗ ಅಂತರವನ್ನು ತಿಳಿದುಕೊಂಡಿದ್ದೀರಿ, ಆ ಗೀತೆಯಲ್ಲಿ ಮತ್ತು ತಂದೆಯು ಯಾವುದನ್ನು ತಿಳಿಸುತ್ತಾರೆಯೋ ಅದರಲ್ಲಿ ರಾತ್ರಿ-ಹಗಲಿನ ಅಂತರವಿದೆ. ತಂದೆಯು ಜ್ಞಾನ ಕೊಟ್ಟರು ಮತ್ತು ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಸತ್ಯಯುಗದಲ್ಲಿ ಕೃಷ್ಣನಿಗೆ ಈ ಜ್ಞಾನವು ಇರುವುದಿಲ್ಲ, ಜ್ಞಾನ ಸಾಗರನು ತಂದೆಯಾಗಿದ್ದಾರೆ. ಇವು ಎಷ್ಟು ರಹಸ್ಯಯುಕ್ತ ಮಾತುಗಳಾಗಿವೆ! ಕೃಷ್ಣನ ಆತ್ಮವು ಸತ್ಯಯುಗದಲ್ಲಿದ್ದಾಗ ಜ್ಞಾನವಿರಲಿಲ್ಲ, ಸೂತ್ರವು ಎಷ್ಟೊಂದು ಗಂಟಾಗಿ ಬಿಟ್ಟಿದೆ. ಇವರೆಲ್ಲರೂ ವಿದೇಶಕ್ಕೆ ಹೋಗಿ ಹೆಸರು ಗಳಿಸಬಹುದಾಗಿದೆ, ಭಾಷಣ ಮಾಡಬಹುದು. ತಿಳಿಸಿರಿ, ವಿಶ್ವದ ಚರಿತ್ರೆ-ಭೂಗೋಳದ ಜ್ಞಾನವನ್ನು ನಾವು ನಿಮಗೆ ಕೊಡಬಲ್ಲೆವು, ಭಗವಂತನು ಹೇಗೆ ಸ್ವರ್ಗ ಸ್ಥಾಪನೆ ಮಾಡುತ್ತಾರೆ, ಅದು ಸ್ವರ್ಗದಿಂದ ಮತ್ತೆ ಹೇಗೆ ನರಕವಾಗುತ್ತದೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ, ಈ ರೀತಿ ಭಾಷಣದ ವಿಷಯವನ್ನು ಬರೆಯಿರಿ, ನಂತರ ನಾನು ಯಾವುದೇ ಮಾತನ್ನು ಮರೆತಿಲ್ಲವೆ ಎಂದು ನೋಡಿಕೊಳ್ಳಿ, ಮತ್ತೆ ನೆನಪು ಮಾಡಿಕೊಂಡು ಬರೆಯಿರಿ. ಈ ಅಭ್ಯಾಸ ಮಾಡುವುದರಿಂದ ಬಹಳ ಚೆನ್ನಾಗಿ ಬರೆಯುತ್ತೀರಿ. ಬಹಳ ಚೆನ್ನಾಗಿ ತಿಳಿಸುತ್ತೀರಿ ಆಗ ಹೆಸರು ಪ್ರಸಿದ್ಧವಾಗುವುದು. ಇಲ್ಲಿಂದಲೂ ಸಹ ತಂದೆಯು ಯಾರನ್ನಾದರೂ ವಿದೇಶಕ್ಕೆ ಕಳುಹಿಸಬಹುದು. ಇವರು ಹೋಗಿ ತಿಳಿಸಿದರೂ ಸಹ ಬಹಳ ಒಳ್ಳೆಯದು. ಏಳು ದಿನಗಳಲ್ಲಿಯೂ ಬಹಳ ಬುದ್ಧಿವಂತರಾಗಿ ಬಿಡುತ್ತಾರೆ. ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಬೀಜ ಮತ್ತು ವೃಕ್ಷ, ಇದು ವಿವರವಾದ ಜ್ಞಾನವಾಗಿದೆ. ಚಿತ್ರಗಳ ಮೇಲೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಸರ್ವೀಸಿನ ಬಹಳ ಉಮ್ಮಂಗವಿರಬೇಕು. ಬಹಳ ಶ್ರೇಷ್ಠ ಪದವಿಯಾಗುವುದು, ಜ್ಞಾನವು ಅತಿ ಸಹಜವಾಗಿದೆ. ಇದು ಹಳೆಯ ಛೀ ಛೀ ಪ್ರಪಂಚವಾಗಿದೆ, ಸ್ವರ್ಗದ ಮುಂದೆ ಈ ಹಳೆಯ ಪ್ರಪಂಚವು ಹೇಗೆ ಗೊಬ್ಬರದ ಸಮಾನವಾಗಿದೆ, ಇದರಿಂದ ದುರ್ಗಂಧವು ಬರುತ್ತದೆ. ಅದು ಚಿನ್ನದ ಪ್ರಪಂಚ, ಇದು ಗೊಬ್ಬರದ ಪ್ರಪಂಚವಾಗಿದೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಈಗ ಈ ಶರೀರವನ್ನು ಬಿಟ್ಟು ಹೋಗಿ ರಾಜಕುಮಾರ-ಕುಮಾರಿಯರಾಗುತ್ತೇವೆ, ಈ ರೀತಿ ಶಾಲೆಗೆ ಓದಲು ಹೋಗುತ್ತೇವೆ. ಅಲ್ಲಿ ಇಂತಹ ವಿಮಾನಗಳಿರುತ್ತವೆ, ಪೂರ್ಣ ಸುರಕ್ಷಿತವಾಗಿರುತ್ತದೆ. ಈ ಖುಷಿಯು ಮಕ್ಕಳಿಗೆ ಆಂತರ್ಯದಲ್ಲಿದ್ದಾಗ ಎಂದೂ ಯಾವುದೇ ಮಾತಿನಲ್ಲಿ ಅಳು ಬರುವುದಿಲ್ಲ. ನಾವು ರಾಜಕುಮಾರ-ಕುಮಾರಿಯರಾಗುತ್ತೇವೆ ಎಂದು ನೀವು ತಿಳಿದುಕೊಂಡಿದ್ದೀರಲ್ಲವೆ ಅಂದಮೇಲೆ ಆಂತರ್ಯದಲ್ಲಿ ನಿಮಗೆ ಏಕೆ ಖುಷಿಯಿರಬಾರದು! ಭವಿಷ್ಯದಲ್ಲಿ ಹೀಗೆ ಶಾಲೆಗೆ ಹೋಗುತ್ತೀರಿ, ಹೀಗೀಗೆ ಮಾಡುತ್ತೀರಿ. ಇದು ಮಕ್ಕಳಿಗೆ ಏಕೆ ಮರೆತು ಹೋಗುತ್ತದೆ! ಬಹಳ ನಶೆಯಿರಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಹಳೆಯ ಛೀ ಛೀ ಗೊಬ್ಬರದ ಸಮಾನ ಪ್ರಪಂಚವನ್ನು ಬುದ್ಧಿಯಿಂದ ಮರೆತು ಸತ್ಯಯುಗೀ ಪ್ರಪಂಚವನ್ನು ನೆನಪು ಮಾಡಿ ಅಪಾರ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ, ಎಂದೂ ಅಳಬಾರದು.
2. ತಂದೆಯು ಯಾವ ಗುಹ್ಯ ರಮಣೀಕ ಮಾತುಗಳನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಿಕೊಂಡು ಎಲ್ಲರಿಗೂ ತಿಳಿಸಬೇಕಾಗಿದೆ, ಆಧ್ಯಾತ್ಮಿಕ ಲೀಡರ್ ಎಂಬ ಬಿರುದನ್ನು ತೆಗೆದುಕೊಳ್ಳಬೇಕಾಗಿದೆ.
ಓಂ ಶಾಂತಿ. ವಿಶೇಷವಾಗಿ ಈ ಭಾರದಲ್ಲಿ ಇಡೀ ಪ್ರಪಂಚದಲ್ಲಿ ಅನೇಕ ಪ್ರಕಾರದ ಸತ್ಸಂಗಗಳಿರುತ್ತವೆ. ನಾವು ಈ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂದು ಮನುಷ್ಯರ ಬುದ್ಧಿಯಲ್ಲಿರುವಂತಹ ಯಾವುದೇ ಸತ್ಸಂಗ ಅಥವಾ ಚರ್ಚ್ ಅಥವಾ ಮಂದಿರ ಮತ್ತ್ಯಾವುದೂ ಇರುವುದಿಲ್ಲ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ಎಲ್ಲಾ ಸೇವಾಕೇಂದ್ರಗಳಲ್ಲಿ ತಮ್ಮ ಬೇಹದ್ದಿನ ತಂದೆಯ ನೆನಪಿನಲ್ಲಿ ಈ ವಿಚಾರದಿಂದ ಕುಳಿತಿದ್ದಾರೆ - ನಾವು ನಮ್ಮ ತಂದೆಯಿಂದ ಸುಖಧಾಮದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಈ ರೀತಿ ಮತ್ತ್ಯಾವುದೇ ಸತ್ಸಂಗ ಅಥವಾ ಚರ್ಚ್ ಇತ್ಯಾದಿಗಳಲ್ಲಿ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿಯೇ ಇದೆ. ನೀವು ತಿಳಿದುಕೊಂಡಿದ್ದೀರಿ - ನಾವು ಬೇಹದ್ದಿನ ತಂದೆಯ ನೆನಪಿನಲ್ಲಿ ಕುಳಿತಿದ್ದೇವೆ. ಹೊಸ ಪ್ರಪಂಚ ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ. ಎಲ್ಲಾ ಮಕ್ಕಳು ಒಬ್ಬ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದಾರೆ. ಇಷ್ಟೊಂದು ಮಕ್ಕಳು ವೃದ್ಧಿಯಾಗುತ್ತಲೇ ಇರುತ್ತಾರೆ. ಎಲ್ಲರಿಗೆ ಶ್ರೀಮತ ಸಿಗುತ್ತಿದೆ, ಮುಂಜಾನೆ ಎದ್ದು ನೆನಪು ಮಾಡಿರಿ. ನಾವು ತಂದೆಯಿಂದ ಈ ಆಸ್ತಿಯನ್ನು ತೆಗೆದುಕೊಳ್ಳುವವರಿದ್ದೇವೆ, ನಾವು ಅವರ ಮಕ್ಕಳಾಗಿದ್ದೇವೆ. ಇದು ಈಗ ಆತ್ಮಕ್ಕೆ ತಂದೆಯಿಂದ ಪರಿಚಯ ಸಿಕ್ಕಿದೆ. ತಂದೆಯು ಸಲಹೆ ನೀಡುತ್ತಾರೆ - ನನ್ನನ್ನು ನೆನಪು ಮಾಡಿರಿ ಮತ್ತು ಗೃಹಸ್ಥ ವ್ಯವಹಾರದಲ್ಲಿರುತ್ತ ಕಮಲಪುಷ್ಫ ಸಮಾನ ಪವಿತ್ರರಾಗಿ ಇರಿ. ಎಲ್ಲರೂ ಇಲ್ಲಿ ಬಂದು ಇರಲು ಸಾಧ್ಯವಿಲ್ಲ. ಹೇಗೆ ಶಾಲೆಯಲ್ಲಿ ವಿದ್ಯಾರ್ಥಿಗಳು ಹೋಗಿ ಮತ್ತೆ ತಮ್ಮ-ತಮ್ಮ ಮನೆಗೆ ಹೊರಟು ಹೋಗುತ್ತಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯು ತಮ್ಮ ಶಿಕ್ಷಕರಿಂದ ಆಸ್ತಿಯನ್ನು ಪಡೆಯುತ್ತಾರೆ, ಇಲ್ಲಿಯೂ ಹಾಗೆಯೇ ಪ್ರತಿನಿತ್ಯವೂ ಓದಿ ಮತ್ತೆ ಮನೆಗೆ ಹೋಗಿ ಉದ್ಯೋಗ-ವ್ಯವಹಾರ ಇತ್ಯಾದಿಗಳನ್ನು ಮಾಡಿರಿ. ನೀವು ಗೃಹಸ್ಥ ವ್ಯವಹಾರದಲ್ಲಿಯೂ ಇದ್ದೀರಿ ಮತ್ತು ವಿದ್ಯಾರ್ಥಿಗಳೂ ಆಗಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಫ ಸಮಾನ ಆಗಿರಬೇಕಾಗಿದೆ. ಈ ರೀತಿ ಮತ್ತ್ಯಾವುದೇ ಸನ್ಯಾಸಿ ಮೊದಲಾದವರು ಹೇಳುವುದಿಲ್ಲ. ನೀವಿಲ್ಲಿ ಪ್ರತ್ಯಕ್ಷದಲ್ಲಿ ಕುಳಿತಿದ್ದೀರಿ. ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಪವಿತ್ರರಾಗುತ್ತೀರಿ. ಪವಿತ್ರರಾಗಿ ಪರಮಪಿತ ಪರಮಾತ್ಮನನ್ನು ಮತ್ತ್ಯಾರೂ ನೆನಪು ಮಾಡುವುದಿಲ್ಲ. ಭಲೆ ಗೀತೆಯನ್ನು ಕೇಳುತ್ತಾರೆ, ಓದುತ್ತಾರೆ ಆದರೆ ನೆನಪು ಮಾಡುವುದಿಲ್ಲ ಅಲ್ಲವೆ. ನುಡಿಯುವುದು ಮತ್ತು ನಡೆಯುವುದರಲ್ಲಿ ಅಂತರವಿರುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ತಂದೆಯು ಜ್ಞಾನಪೂರ್ಣನಾಗಿದ್ದಾರೆ. ಅವರಲ್ಲಿ ಇಡೀ ಡ್ರಾಮಾ ಚಕ್ರದ ಜ್ಞಾನವಿದೆ. ಈಗ ನಮಗೂ ಜ್ಞಾನ ಸಿಗುತ್ತಿದೆ, ಈ ಚಕ್ರವು ಬಹಳ ಚೆನ್ನಾಗಿದೆ. ಇದು ಪುರುಷೋತ್ತಮ ಯುಗವಾಗಿರುವ ಕಾರಣ ನಿಮ್ಮ ಈ ಜನ್ಮವು ಪುರುಷೋತ್ತಮವಾಗಿದೆ. ಅಧಿಕ ಮಾಸವಿರುತ್ತದೆ ಅಲ್ಲವೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯಿಂದ ಪುರುಷೋತ್ತಮರಾಗುತ್ತಿದ್ದೇವೆ. ನಾವು ಪುನಃ ಮರ್ಯಾದಾ ಪುರುಷೋತ್ತಮರಾಗುತ್ತಿದ್ದೇವೆ. 84 ಜನ್ಮಗಳ ಚಕ್ರವನ್ನು ಸುತ್ತಿದೆವು ಎಂಬುದು ಬುದ್ಧಿಯಲ್ಲಿ ಜ್ಞಾನವಿದೆ, ಮತ್ತ್ಯಾವುದೇ ಸತ್ಸಂಗಗಳಲ್ಲಿ ಇದನ್ನು ತಿಳಿಸುವುದಿಲ್ಲ. ನಾವು ಈ ಲಕ್ಷ್ಮೀ-ನಾರಾಯಣರಂತೆ ಆಗಬೇಕೆಂದು ನೀವು ತಿಳಿದುಕೊಳ್ಳುತ್ತೀರಿ. ಅವರಂತೆ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ. ಈ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಅವಶ್ಯವಾಗಿ ಬ್ರಹ್ಮನ ಮೂಲಕ ಯೋಗಬಲದಿಂದ ಇವರು ಈ ಪದವಿಯನ್ನು ಪಡೆದಿದ್ದಾರೆ. ಹೀಗೆ ಬುದ್ಧಿಯಲ್ಲಿ ಇಮರ್ಜ್ ಮಾಡಿಕೊಳ್ಳಬೇಕು. ಬ್ರಹ್ಮಾ-ಸರಸ್ವತಿ, ಲಕ್ಷ್ಮೀ-ನಾರಾಯಣರ ಎರಡೂ ರೂಪಗಳನ್ನು ತೋರಿಸಿದ್ದಾರೆ. ಬ್ರಹ್ಮಾ-ಸರಸ್ವತಿ ಮತ್ತು ಪ್ರಜೆಗಳನ್ನೂ ತೋರಿಸಬೇಕಾಗಿದೆ. ಪ್ರತಿಯೊಂದು ಮಾತಿನ ಮೇಲೆ ಬಹಳ ಚೆನ್ನಾಗಿ ವಿಚಾರ ಮಾಡಬೇಕು. ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿರಿ, ನನ್ನನ್ನು ನೆನಪು ಮಾಡಿದರೆ ನೀವು ಈ ರೀತಿಯಾಗುತ್ತೀರಿ ಎಂದು ಈ ಬ್ರಹ್ಮಾರವರಿಗೂ ಹೇಳುತ್ತಾರೆ. ಬ್ರಹ್ಮಾ ಮುಖವಂಶಾವಳಿಯಾದ ಎಲ್ಲರಿಗೂ ನನ್ನನ್ನು ನೆನಪು ಮಾಡಿರಿ ಎಂದು ಹೇಳುತ್ತಾರೆ. ಹೇಗೆ ನೆನಪು ಮಾಡಬೇಕಾಗಿದೆ ಎಂಬುದೂ ಸಹ ಬುದ್ಧಿಯಲ್ಲಿದೆ. ಚಿತ್ರಗಳನ್ನೂ ಸನ್ಮುಖದಲ್ಲಿ ಇಡಲಾಗಿದೆ. ಇದರ ಬಗ್ಗೆ ತಿಳಿಸುವುದು ಬಹಳ ಸಹಜವಾಗಿದೆ. ತಂದೆಯ ಪರಿಚಯ ಕೊಡಬೇಕಾಗಿದೆ. ಪ್ರದರ್ಶನಿಯಲ್ಲಿಯೂ ಇದರ ಮೇಲೆ ತಿಳಿಸಿಕೊಡಿ, ಈ ನಿಶ್ಚಯ ಕುಳಿತುಕೊಳ್ಳುತ್ತದೆ - ಅವಶ್ಯವಾಗಿ ಇವರು ಎಲ್ಲರ ಬೇಹದ್ದಿನ ತಂದೆಯಾಗಿದ್ದಾರೆ. ಈ ಲೆಕ್ಕದಿಂದ ನಮಗೆ ಬೇಹದ್ದಿನ ಆಸ್ತಿಯು ಸಿಗಬೇಕಾಗಿದೆ. ನಾವು ನಿರಾಕಾರಿ ಆತ್ಮರು ಸಹೋದರ-ಸಹೋದರರಾಗಿದ್ದೇವೆ, ಸಾಕಾರದಲ್ಲಿ ಬಂದಾಗ ಸಹೋದರ-ಸಹೋದರಿಯರಾಗುತ್ತೇವೆ ಆಗಲೇ ಓದಲು ಸಾಧ್ಯ. ಸಹೋದರ-ಸಹೋದರಿಯರಾಗುವುದು ಬ್ರಹ್ಮನ ಮಕ್ಕಳು. ಆಸ್ತಿಯು ತಂದೆಯಿಂದ ಸಿಗುತ್ತದೆ. ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಯಾರಿಗಾದರೂ ತಿಳಿಸಿ, ಮೊದಲು ತಂದೆಯ ಪರಿಚಯ ನೀಡಿ. ನಾವು ಸಹೋದರರಾಗಿದ್ದೇವೆ, ಸರ್ವವ್ಯಾಪಿಯೆಂದು ಹೇಳಿದರೆ ವಿಶ್ವ ಪಿತೃತ್ವವಾಗಿ ಬಿಡುತ್ತದೆ. ವಿಶ್ವ ಪಿತೃತ್ವವಾದರೆ ಆಸ್ತಿಯು ಯಾರಿಂದ ಸಿಗುವುದು? ಎಲ್ಲರೂ ಭಗವಂತರೇ ಎಂದು ಹೇಳುತ್ತಾ ಬೀಳುತ್ತಾ ಬಂದಿದ್ದಾರೆ, ಆಸ್ತಿಯೇನೂ ಇಲ್ಲ. ಈಗ ವಿಶ್ವ ಭ್ರಾತೃತ್ವ ಎಂದು ತಿಳಿಯುವುದರಿಂದಲೇ ಆಸ್ತಿಯು ಸಿಗುವುದು ಅಂದಾಗ ಇದರ ಬಗ್ಗೆ ಚೆನ್ನಾಗಿ ತಿಳಿಸುವುದರಿಂದ ಬುದ್ಧಿಯಲ್ಲಿ ಯಾವ ಅಷ್ಟ ದೇವತೆಗಳು ಇತ್ಯಾದಿ ಕುಳಿತಿದೆಯೋ ಅದೆಲ್ಲವೂ ಹೊರಟು ಹೋಗುವುದು. ತಿಳಿಸಿರಿ, ಇಬ್ಬರು ತಂದೆಯರಿದ್ದಾರೆ, ಆತ್ಮಿಕ ತಂದೆಯಿಂದ ಸರ್ವರ ಸದ್ಗತಿಯಾಗುವುದು, ಅವರೇ ಸುಖ-ಶಾಂತಿಯ ಆಸ್ತಿಯನ್ನು ಕೊಡುತ್ತಾರೆ. ಎಲ್ಲರೂ ಸುಖಿಯಾಗಿ ಬಿಡುತ್ತಾರೆ. ತಂದೆಗೆ ಸ್ವರ್ಗದ ರಚಯಿತನೆಂದು ಹೇಳಲಾಗುತ್ತದೆ. ಮೊದಲು ತಂದೆಯ ಪ್ರಭಾವವನ್ನು ಬುದ್ಧಿಯಲ್ಲಿ ಕೂರಿಸಬೇಕು. ಇವರು ಆತ್ಮರ ಬೇಹದ್ದಿನ ತಂದೆಯಾಗಿದ್ದಾರೆ, ಅವರಿಗೇ ಪತಿತ-ಪಾವನನೆಂದು ಹೇಳುತ್ತಾರೆ. ನೀವಾತ್ಮರು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಿ. ಈ ನಿಶ್ಚಯವನ್ನು ಪಕ್ಕಾ ಮಾಡಿಕೊಳ್ಳಿ. ಮೂಲ ಮಾತು ಮೊಟ್ಟ ಮೊದಲನೆಯದಾಗಿ ಇದನ್ನೇ ಬುದ್ಧಿಯಲ್ಲಿ ಕುಳ್ಳರಿಸಬೇಕಾಗಿದೆ, ಇದನ್ನು ತಿಳಿದುಕೊಂಡಾಗಲೇ ಖುಷಿಯಿರುವುದು ಮತ್ತು ನಾವು ತಂದೆಯನ್ನು ಅವಶ್ಯವಾಗಿ ನೆನಪು ಮಾಡುತ್ತೇವೆ. ನಮಗೆ ನಿಶ್ಚಯವಿದೆ. ನಾವು ತಂದೆಯನ್ನು ನೆನಪು ಮಾಡಿ ವಿಶ್ವದ ಮಾಲೀಕರಾಗುತ್ತೇವೆಂದು ಹೇಳುತ್ತಾರೆ. ಇದು ಬಹಳ ಖುಷಿಯಿರುತ್ತದೆ. ಬುದ್ಧಿವಂತರಾಗಿದ್ದರೆ ಬುದ್ಧಿಯಲ್ಲಿ ಪೂರ್ಣ ನಿಶ್ಚಯವಿದ್ದರೆ ಹೇಳುವರು - ಇಂತಹ ಬೇಹದ್ದಿನ ತಂದೆ ಯಾರು ದಾದಾರವರಲ್ಲಿ ಬರುವರೋ ಅವರೊಂದಿಗೆ ಮೊದಲು ಹೋಗಿ ಮಿಲನ ಮಾಡಬೇಕು. ಶಿವ ತಂದೆಯು ಬ್ರಹ್ಮಾರವರ ಮುಖಾಂತರವೇ ನಮ್ಮೊಂದಿಗೆ ಮಾತನಾಡುವರು. ನೀವಾತ್ಮರು ಅವರೊಂದಿಗೆ ಮಿಲನ ಮಾಡಿಯೇ ಇಲ್ಲವೆಂದರೆ ಹೇಗೆ ನೆನಪು ಮಾಡುವಿರಿ? ದತ್ತು ಮಕ್ಕಳಾದಾಗಲೇ ನೆನಪು ಬರುವುದು. ದತ್ತು ಮಕ್ಕಳಾಗದಿದ್ದರೆ ಹೇಗೆ ನೆನಪು ಬರುತ್ತದೆ? ಮೊದಲು ಅವರ ಮಕ್ಕಳಾಗಿದ್ದೀರಿ, ಇಂತಹ ತಂದೆಯೊಂದಿಗಂತೂ ಕೂಡಲೇ ಮಿಲನ ಮಾಡಬೇಕು. ತಂದೆಯೂ ಸಹ ಇದನ್ನೇ ಕೇಳುತ್ತಾರೆ - ನೀವು ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳುತ್ತೀರಾ? ನಾನು ನೀವಾತ್ಮರಿಗೆ ತಂದೆಯಾಗಿದ್ದೇನೆ, ಶಿವ ತಂದೆಯು ನಿಮ್ಮೊಂದಿಗೆ ಮಾತನಾಡುತ್ತಿದ್ದಾರೆ. ನಾವಾತ್ಮರ ತಂದೆಯೇ ನಿಮಗೂ ತಂದೆಯಾಗಿದ್ದಾರೆ. ಅವರು ಕೇಳುತ್ತಾರೆ - ಎಲ್ಲಾ ಆತ್ಮರ ತಂದೆಯು ಖಂಡಿತವಾಗಿ ಅವರೊಬ್ಬರೇ ಆಗಿದ್ದಾರೆಂದು ನಿಮಗೆ ನಿಶ್ಚಯವಿದೆಯೇ! ಅವರೇ ಆಸ್ತಿಯನ್ನು ಕೊಡುತ್ತಾರೆ, ಪವಿತ್ರರೂ ಆಗಬೇಕಾಗಿದೆ. ಅವರ ವಿನಃ ಮತ್ತೆಲ್ಲರನ್ನೂ ಮರೆಯಬೇಕಾಗಿದೆ. ನೀವಾತ್ಮರು ಮನೆಯಿಂದ ಅಶರೀರಿಯಾಗಿ ಬಂದಿದ್ದೀರಲ್ಲವೆ. ಬಂದಾಗ ಯಾವುದೇ ದೇಹ, ಸಂಬಂಧವಿರಲಿಲ್ಲ. ಆತ್ಮವು ಶರೀರದಲ್ಲಿ ಪ್ರವೇಶ ಮಾಡಿ ದೊಡ್ಡದಾದಾಗಲೇ ಇವರು ನಿಮ್ಮ ತಂದೆಯಾಗಿದ್ದಾರೆ..... ಎಂದು ತಿಳಿಸಲಾಗುತ್ತಿದೆ. ಆತ್ಮವು ಎಲ್ಲಾ ಸಂಬಂಧಗಳಿಂದ ಭಿನ್ನವಾಗಿದೆ. ಆತ್ಮವು ಹೊರಟು ಹೋದರೆ ತಾನು ಸತ್ತರೆ ಜಗತ್ತೇ ಸತ್ತಂತೆ ಎಂದು ಹೇಳಲಾಗುತ್ತದೆ, ಬಂಧನರಹಿತ ಆಗಿ ಬಿಡುತ್ತಾರೆ. ಇನ್ನೊಂದು ಶರೀರ ಬಿಡುವವರೆಗೂ ನಿರ್ಬಂಧನರಾಗಿರುತ್ತಾರೆ, ತಾಯಿಯ ಗರ್ಭದಲ್ಲಿ ಹೋಗಿ ಹೊರ ಬಂದು ಬುದ್ಧಿವಂತರಾದಾಗ ನಂತರ ಸಂಬಂಧದ ಮಾತು ಇರುತ್ತದೆ. ಅಂದಮೇಲೆ ಇಲ್ಲಿಯೂ ಸಹ ನೀವು ಮಕ್ಕಳು ತಿಳಿಸಿಕೊಡಬೇಕಾಗಿದೆ. ಜೀವಿಸಿದ್ದಂತೆಯೇ ಎಲ್ಲವನ್ನೂ ಮರೆಯಬೇಕಾಗಿದೆ. ಒಬ್ಬ ತಂದೆಯನ್ನು ನೆನಪು ಮಾಡುವುದೇ ಅವ್ಯಭಿಚಾರಿ ನೆನಪಾಗಿದೆ. ಇದಕ್ಕೆ ಯೋಗವೆಂದು ಹೇಳಲಾಗುತ್ತದೆ. ಇಲ್ಲಂತೂ ಮನುಷ್ಯರಿಗೆ ಅನೇಕರ ನೆನಪಿರುತ್ತದೆ, ನಿಮ್ಮದು ಅವ್ಯಭಿಚಾರಿ ನೆನಪಾಗಿದೆ. ಆತ್ಮಕ್ಕೆ ತಿಳಿದಿದೆ - ಇವೆಲ್ಲಾ ಶರೀರದ ಸಂಬಂಧಗಳು ಸಮಾಪ್ತಿಯಾಗಲಿದೆ, ನಮ್ಮ ಸಂಬಂಧವು ಒಬ್ಬ ತಂದೆಯೊಂದಿಗಿದೆ. ಒಬ್ಬ ತಂದೆಯನ್ನು ಎಷ್ಟು ನೆನಪು ಮಾಡುವರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ. ಮಿತ್ರ ಸಂಬಂಧಿಗಳನ್ನು ನೆನಪು ಮಾಡಿದರೆ ವಿಕರ್ಮವಾಗುತ್ತವೆ ಎಂದಲ್ಲ. ಯಾವಾಗ ಅಂತಹ ಯಾವುದಾದರೂ ತಪ್ಪು ಕರ್ಮ ಮಾಡಿದಾಗ ವಿಕರ್ಮವಾಗುತ್ತದೆ. ಬಾಕಿ ಮತ್ತ್ಯಾರನ್ನಾದರೂ ನೆನಪು ಮಾಡುವುದರಿಂದ ವಿಕರ್ಮಗಳಂತೂ ಆಗುವುದಿಲ್ಲ ಆದರೆ ಸಮಯವು ವ್ಯರ್ಥವಾಗುತ್ತದೆ. ಒಬ್ಬ ತಂದೆಯನ್ನೇ ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಇದು ಪಾಪವನ್ನು ಕಳೆಯುವ ಯುಕ್ತಿಯಾಗಿದೆ ಬಾಕಿ ಸಂಬಂಧಗಳಂತೂ ನೆನಪಿರುತ್ತದೆ. ಶರೀರ ನಿರ್ವಹಣಾರ್ಥವಾಗಿ ಉದ್ಯೋಗ-ವ್ಯವಹಾರ ಎಲ್ಲವನ್ನೂ ಮಾಡಿರಿ ಆದರೆ ಸಮಯ ಸಿಕ್ಕಿದರೆ ನೆನಪು ಮಾಡುತ್ತಾ ಇರಿ. ಇದರಿಂದ ತುಕ್ಕು ಬಿಟ್ಟು ಹೋಗಲಿ. ಮೂಲ ಮಾತೇ ಇದಾಗಿದೆ. ಪತಿತರಿಂದ ಹೇಗೆ ಪಾವನರಾಗುವುದು ಎಂದು ಆಂತರ್ಯದಲ್ಲಿ ವಿಚಾರ ಮಾಡಿ, ಅದಕ್ಕಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿ ಇರಬೇಕಾಗಿದೆ. ಸನ್ಯಾಸಿಗಳೂ ಸಹ ಶರೀರವನ್ನು ಬಿಟ್ಟು ಹೋಗಿ ಮತ್ತೆ ಗೃಹಸ್ಥಿಗಳ ಬಳಿ ಜನ್ಮ ಪಡೆಯುತ್ತಾರೆ. ಅವರು ಜನ್ಮ-ಜನ್ಮಾಂತರಕ್ಕಾಗಿ ಪಾವನರಾಗಿ ಬಿಡುತ್ತಾರೆ ಎಂದಲ್ಲ. ಈಗ ನಿರ್ವಿಕಾರಿ ಪ್ರಪಂಚವಂತೂ ಯಾವುದೂ ಇಲ್ಲ. ಇದು ವಿಕಾರಿ ಪ್ರಪಂಚವಾಗಿದೆ, ಇದರಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ವಿಕಾರಿ ಪ್ರಪಂಚದಲ್ಲಿರುವ ಕಾರಣ ಒಂದಲ್ಲ ಒಂದು ನಿರ್ಬಲತೆಗಳು ಅವಶ್ಯವಾಗಿ ಇರುತ್ತದೆ ಬಾಕಿ ಪ್ರಪಂಚಗಳಂತೂ ಇರುವುದೇ ಎರಡು - ವಿಕಾರಿ ಪ್ರಪಂಚ ಮತ್ತು ನಿರ್ವಿಕಾರಿ ಪ್ರಪಂಚ. ಪಾವನ ಪ್ರಪಂಚದಲ್ಲಿ ದೇವತೆಗಳು ಇರುತ್ತಿದ್ದರು ಅಂದಾಗ ಇದನ್ನು ತಿಳಿಸುವುದರಲ್ಲಿ ಬಹಳ ಸಹಜವಾಗುವುದು. ಈಗ ಈ ಪತಿತ ಪ್ರಪಂಚದ ವಿನಾಶವಾಗಲಿದೆ, ವಿನಾಶವಾಗುವ ಮೊದಲೇ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ತಂದೆಯು ತಿಳಿಸುತ್ತಾರೆ - ದೇಹದ ಸಂಬಂಧಗಳನ್ನು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿರಿ ಆಗ ನೀವು ಪಾವನರಾಗುತ್ತೀರಿ. ತಂದೆಯು ತಿಳಿಸುತ್ತಾರೆ - ನೀವು ನನ್ನನ್ನು ಪತಿತ-ಪಾವನನೆಂದು ಹೇಳುತ್ತೀರಲ್ಲವೆ. ಗಂಗೆಯಲ್ಲಿ ಮುಳುಗುವವರಂತೂ ಅನೇಕರಿದ್ದಾರೆ, ಮುಳುಗುವುದರಿಂದ ಪಾವನರಾಗಿ ಬಿಡುವರೇ! ಪ್ರದರ್ಶನಿಯಲ್ಲಿ ಬಹಳ ಚೆನ್ನಾಗಿ ತಿಳಿಸಬೇಕಾಗುತ್ತದೆ. ಪ್ರಜಾಪಿತನಂತೂ ಇಲ್ಲಿಯೇ ಬೇಕಲ್ಲವೆ. ಕೆಳಗೆ ಈ ಬ್ರಹ್ಮಾ ಮತ್ತು ಬ್ರಹ್ಮಾಕುಮಾರ-ಕುಮಾರಿಯರು ತಪಸ್ಸು ಮಾಡುತ್ತಿದ್ದಾರೆ. ಈ ಮಾತನ್ನು ಚೆನ್ನಾಗಿ ತಿಳಿಸಬೇಕು. ಯಾರಿಗೇ ಆದರೂ ಬಹಳ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ತಡವರಿಸುವುದರಿಂದ ಹೆಸರನ್ನು ಕೆಡಿಸುತ್ತೀರಿ. ಒಂದುವೇಳೆ ಯಾವುದೇ ಚಿತ್ರದಲ್ಲಿ ತಿಳಿಸಲು ಆಗದಿದ್ದರೆ ಆಗ ಹೇಳಿರಿ - ಸ್ವಲ್ಪ ನಿಲ್ಲಿರಿ, ನಾವು ಮತ್ತೊಬ್ಬ ಸಹೋದರಿಯನ್ನು ಕಳುಹಿಸುತ್ತೇವೆ ಎಂದು. ಒಬ್ಬರು ಇನ್ನೊಬ್ಬರಿಗಿಂತ ತೀಕ್ಷ್ಣವಾಗಿರುತ್ತಾರಲ್ಲವೆ. ಪ್ರದರ್ಶನಿ, ಮೇಳಗಳಲ್ಲಿ ಬಹಳ ಬುದ್ಧಿವಂತರಾಗಿರಬೇಕು, ನಾವು ಸರಿಯಾಗಿ ತಿಳಿಸುತ್ತೇವೆಯೇ, ಯಾರೂ ವಾದ ಮಾಡುತ್ತಿಲ್ಲವೆ? ಎಂದು ನೋಡಬೇಕು. ಮುಖ್ಯ ದ್ವಾರದಲ್ಲಿ ಪರಿಚಯದವರಿರಬೇಕು, ಅನೇಕ ಪ್ರಕಾರದವರು ಬರುತ್ತಾರಲ್ಲವೆ. ಹಿರಿಯ ವ್ಯಕ್ತಿಗಳಿಗೆ ಅವಶ್ಯವಾಗಿ ಗೌರವ ಕೊಡುತ್ತಾರೆ. ಅಂತರವಂತೂ ಅವಶ್ಯವಾಗಿ ಇರುತ್ತದೆ. ಇದರಲ್ಲಿ ಇವರ ಮೇಲೆ ಪ್ರೀತಿಯಿದೆ, ಇವರ ಮೇಲೆ ಇಲ್ಲ, ದ್ವೈತ ದೃಷ್ಟಿಯಿದೆ ಎಂಬುದು ಬರಬಾರದು. ಇದಕ್ಕೆ ದ್ವೈತವೆಂದು ಹೇಳಲಾಗುವುದಿಲ್ಲ. ಇಲ್ಲಿ ದೊಡ್ಡ ವ್ಯಕ್ತಿಗಳಿಗೆ ಉಪಚಾರ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ ಆದರೆ ಸೇವಾಧಾರಿಗಳಿಗೆ ಉಪಚಾರ ಮಾಡಬೇಕಲ್ಲವೆ. ಯಾರಾದರೂ ಮನೆಯನ್ನು ಕಟ್ಟಿಸಿಕೊಡುತ್ತಾರೆಂದರೆ ಅವಶ್ಯವಾಗಿ ಉಪಚಾರ ಮಾಡಬೇಕಾಗುತ್ತದೆ. ನಿಮಗಾಗಿಯೇ ಮನೆಯು ತಯಾರಾಗುತ್ತದೆಯಲ್ಲವೆ. ಯಾರು ಪರಿಶ್ರಮ ಪಟ್ಟು ರಾಜರಾಗುವರೋ ಅವರಿಗೆ ಪ್ರಜೆಗಳು ಸ್ವತಹ ಉಪಚಾರ ಮಾಡುತ್ತಾರಲ್ಲವೆ. ಕಡಿಮೆ ದರ್ಜೆಯವರಿಗಿಂತ ಉತ್ತಮ ದರ್ಜೆಯವರಿಗೆ ಆತಿಥ್ಯವಂತೂ ಸಿಗುತ್ತದೆಯಲ್ಲವೆ. ಬೇಹದ್ದಿನ ತಂದೆಗೆ ಇಡೀ ಪ್ರಪಂಚದ ಆತ್ಮರು ಮಕ್ಕಳಾಗಿದ್ದಾರೆ ಆದರೆ ಭಾರತದಲ್ಲಿ ತಂದೆಯು ಅವತರಣೆ ಮಾಡಿದ್ದಾರೆ. ಭಾರತವಾಸಿಗಳು ಯಾರು ಮೊದಲು ಶ್ರೇಷ್ಠರಾಗಿದ್ದರೋ ಅವರು ಈಗ ಕನಿಷ್ಟರಾಗಿ ಬಿಟ್ಟರು ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ಓದಿಸಲು ಬಂದಿದ್ದೇನೆ, ನಾನು ಭಾರತದಲ್ಲಿ ಬರುತ್ತೇನೆಂದರೆ ಎಲ್ಲರ ಕಲ್ಯಾಣವಾಗಿ ಬಿಡುತ್ತದೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಕಲ್ಯಾಣವಾಗುತ್ತದೆಯಲ್ಲವೆ. ಈಗ ಭಾರತವೇ ನರಕವಾಗಿದೆ, ಮತ್ತೆ ಸ್ವರ್ಗವಾಗಬೇಕಾಗಿದೆ ಅಂದಮೇಲೆ ಭಾರತದಲ್ಲಿಯೇ ಬರುತ್ತೇನೆ. ಮತ್ತೆಲ್ಲಿಯಾದರೂ ಹೋಗಿ ಏನು ಮಾಡಬೇಕು! ಭಾರತದಲ್ಲಿಯೇ ಭಕ್ತಿಮಾರ್ಗದಲ್ಲಿ ಮೊಟ್ಟ ಮೊದಲು ಬಹಳ ಸುಂದರವಾದ ಸೋಮನಾಥನ ಮಂದಿರವನ್ನು ಕಟ್ಟಿಸಿದ್ದರು, ಹೇಗೆ ವಿದೇಶದಲ್ಲಿ ದೊಡ್ಡ-ದೊಡ್ಡ ಚರ್ಚ್ ಕಟ್ಟಿಸುತ್ತಾರೆ ಏಕೆಂದರೆ ಪೋಪ್ ತೆಗೆದುಕೊಂಡಿರುವ ರಾಜ್ಯವಾಗಿದೆ. ಎಲ್ಲಾ ಚರ್ಚ್ಗಳು ಒಂದೇ ರೀತಿ ಇರುವುದಿಲ್ಲ, ನಂಬರ್ವಾರ್ ಇರುತ್ತದೆಯಲ್ಲವೆ. ಸೋಮನಾಥ ಮಂದಿರವು ಎಷ್ಟೊಂದು ವಜ್ರ ರತ್ನಗಳಿಂದ ಸಂಪನ್ನವಾಗಿತ್ತು, ಮುಸಲ್ಮಾನರು ಲೂಟಿ ಮಾಡಿಕೊಂಡು ಹೋದರು. ಇಲ್ಲಿ ಬಹಳ ಧನವಂತರಾಗಿದ್ದರು, ಚರ್ಚ್ನಿಂದ ಏನನ್ನು ಲೂಟಿ ಮಾಡುವರು? ಮನುಷ್ಯರು ಹಣದ ಹಿಂದೆ ಬೀಳುತ್ತಾರಲ್ಲವೆ. ಮಹಮ್ಮದ್ ಘಜನಿಯು ಎಷ್ಟೊಂದು ತೆಗೆದುಕೊಂಡು ಹೋದನು, ಮತ್ತೆ ಬ್ರಿಟಿಷರು ಬಂದರು ಅವರೂ ಇಲ್ಲಿಂದ ಹಣವನ್ನು ಕಳುಹಿಸುತ್ತಾ ಹೋದರು. ಬಹಳ ಹಣವನ್ನು ತೆಗೆದುಕೊಂಡು ಹೋದರು. ಅದು ಈಗ ನಿಮಗೆ ಪುನಃ ಹಿಂತಿರುಗಿಸುತ್ತಿದ್ದಾರೆ. ಕೋಟ್ಯಾಂತರ ರೂಪಾಯಿಗಳನ್ನು ಕೊಡುತ್ತಾರೆ. ಇದೆಲ್ಲವೂ ಸಮಯದಲ್ಲಿ ಸಿಗುತ್ತಿದೆ. ಲೆಕ್ಕವು ಸಿಗದಿದ್ದರೆ ಮತ್ತೆ ಹೇಗೆ ನಡೆಸುವುದು! ತಂದೆಯು ತಿಳಿಸುತ್ತಾರೆ - ಈ ನಾಟಕವು ಹೇಗೆ ಮಾಡಲ್ಪಟ್ಟಿದೆ, ಈ ಲೇವಾದೇವಿಯ ಲೆಕ್ಕವು ಹೇಗಿದೆ! ಆದರೂ ನೀವು ಮಕ್ಕಳೀಗ ಸ್ವರ್ಗದ ಮಾಲೀಕರಾಗಬೇಕಾಗಿದೆ. ಈ ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಸುತ್ತುತ್ತದೆ, ಅದನ್ನೂ ಸಹ ಮಕ್ಕಳಿಗೆ ತಿಳಿಸಲಾಗಿದೆ. ಈಗ ಪುನಃ ತಿಳಿಸುತ್ತೇನೆ, ಮಕ್ಕಳೇ ಮನ್ಮನಾಭವ, ಇದು ಮತ್ತೆ ಪುನರಾವರ್ತನೆಯಾಗುವುದು. ಪ್ರತೀ ವಸ್ತು ಸತೋಪ್ರಧಾನದಿಂದ ತಮೋಪ್ರಧಾನವಾಗುವುದು. ದಿನದಲ್ಲಿ ಉದ್ಯೋಗ-ವ್ಯವಹಾರವನ್ನು ಮಾಡುತ್ತೀರಿ, ಆ ಸಮಯವನ್ನಂತೂ ಬಿಟ್ಟು ಬಿಡಿ. ಉಳಿದಂತೆ ಎಷ್ಟು ಸಮಯ ಸಿಗುವುದೋ ಅದರಲ್ಲಿ ನನ್ನನ್ನು ನೆನಪು ಮಾಡಿರಿ. ವ್ಯಾಪಾರ ಇತ್ಯಾದಿಗಳಲ್ಲಿಯೂ ಕೆಲಕೆಲವೊಮ್ಮೆ ಸಮಯ ಸಿಗುತ್ತದೆ. ಕೆಲವರಿಗಂತೂ ಇಂತಹ ಸೇವೆಯಿರುತ್ತದೆ ಕೇವಲ ಸಹಿ ಹಾಕುವುದಷ್ಟೇ. ಸಹಿ ಹಾಕಿದರೆ ಮುಗಿಯಿತು. ಹೀಗೆ ಅನೇಕರು ಖಾಲಿಯಾಗಿರುತ್ತಾರೆ. ಹೇಗೇ ಇರಲಿ ರಾತ್ರಿಯ (ಅಮೃತವೇಳೆ) ಸಮಯವಂತೂ ತಮ್ಮದಾಗಿದೆ, ದಿನದಲ್ಲಿ ಶರೀರ ನಿರ್ವಹಣೆಗಾಗಿ ಸಂಪಾದನೆ ಮಾಡುತ್ತೀರಿ ಮತ್ತೆ ರಾತ್ರಿಯಲ್ಲಿ ಈ ಸಂಪಾದನೆ ಮಾಡಿಕೊಳ್ಳಿ. ಇದು ಭವಿಷ್ಯ 21 ಜನ್ಮಗಳಿಗಾಗಿ ಸಂಪಾದನೆಯಾಗಿದೆ. ಒಂದು ಘಳಿಗೆ, ಅರ್ಧ ಘಳಿಗೆ ಎಷ್ಟು ಸಾಧ್ಯವೋ ತಂದೆಯ ನೆನಪಿನಲ್ಲಿರಿ, ಇದರಿಂದ ನಿಮ್ಮದು ಬಹಳ ಸಂಪಾದನೆಯಾಗುವುದು. ಯಾರು ಬುದ್ಧಿವಂತರಾಗುವರೋ ಅವರೇ ತಿಳಿದುಕೊಳ್ಳುವರು - ಅವಶ್ಯವಾಗಿ ಬಹಳ ಸಂಪಾದನೆ ಮಾಡಿಕೊಳ್ಳಬಹುದಾಗಿದೆ. ಬಾಬಾ, ನಾವು ಇಷ್ಟು ಸಮಯ ನೆನಪು ಮಾಡಿದೆವು ಎಂದು ಕೆಲವರು ಚಾರ್ಟ್ ಬರೆಯುತ್ತಾರೆ, ಅಜ್ಞಾನಿಗಳೂ ಸಹ ಕೆಲವರು ತಮ್ಮ ದಿನಚರಿಯನ್ನು ಬರೆಯುತ್ತಾರೆ. ನೀವೂ ಸಹ ಚಾರ್ಟ್ ಬರೆಯುತ್ತೀರೆಂದರೆ ಗಮನವಿರುವುದು. ನನ್ನ ಸಮಯವು ವ್ಯರ್ಥವಾಗಿ ಹೋಗುತ್ತಿಲ್ಲವೆ! ಯಾವುದೇ ವಿಕರ್ಮವನ್ನಂತೂ ಮಾಡುತ್ತಿಲ್ಲವೇ ಎಂದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದ್ವೈತ ಭಾವನೆಯನ್ನು ಸಮಾಪ್ತಿ ಮಾಡಿ ಎಲ್ಲರ ಪ್ರತಿ ಗೌರವವನ್ನು ಇಡಬೇಕಾಗಿದೆ. ಯಾರಿಗೇ ಆದರೂ ಬಹಳ ಪ್ರೀತಿಯಿಂದ ತಿಳಿಸಬೇಕಾಗಿದೆ. ಸಂಪಾದನೆಯಲ್ಲಿ ನಿರತರಾಗಿರಬೇಕಾಗಿದೆ.
2. ಜೀವಿಸಿದ್ದಂತೆಯೇ ಎಲ್ಲವನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡಬೇಕಾಗಿದೆ. ಶರೀರ ನಿರ್ವಹಣಾರ್ಥವಾಗಿ ಕರ್ಮವನ್ನೂ ಮಾಡಬೇಕು. ಜೊತೆ ಜೊತೆಗೆ ಬುದ್ಧಿವಂತರಾಗಿ ಅವಿನಾಶಿ ಸಂಪಾದನೆಯನ್ನೂ ಮಾಡಿಕೊಳ್ಳಬೇಕಾಗಿದೆ. ನೆನಪಿನ ಚಾರ್ಟ್ ಇಡಬೇಕಾಗಿದೆ.
ಓಂ ಶಾಂತಿ. ಪತಿತ ಪಾವನ ಶಿವ ಭಗವಾನುವಾಚ. ಈಗ ತಂದೆಯು ಕುಳಿತು ಮಕ್ಕಳಿಗೆ ಜ್ಞಾನವನ್ನು ತಿಳಿಸುತ್ತಾರೆ. ಮಕ್ಕಳಿಗೆ ತಿಳಿಸಲಾಗಿದೆ - ಇಲ್ಲಿಗೆ ಯಾವಾಗ ನಾನು ಬರುವೆನು ಆಗ ಪತಿತರನ್ನು ಪಾವನಗೊಳಿಸುವುದಕ್ಕಾಗಿ ಜ್ಞಾನವನ್ನು ತಿಳಿಸುತ್ತೇನೆ, ಇದನ್ನು ಮತ್ತ್ಯಾರೂ ಸಹ ಕಲಿಸಿಕೊಡಲು ಸಾಧ್ಯವಿಲ್ಲ. ಅವರುಗಳೂ ಸಹ ಭಕ್ತಿಯನ್ನೇ ಕಲಿಸುತ್ತಾರೆ, ಕೇವಲ ನೀವು ಮಕ್ಕಳೇ ಜ್ಞಾನವನ್ನು ಕಲಿಯುತ್ತೀರಿ. ಅದರಿಂದ ನೀವು ತಮ್ಮನ್ನು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿ ಎಂದು ತಿಳಿದುಕೊಳ್ಳುತ್ತೀರಿ. ದಿಲ್ವಾಡಾ ಮಂದಿರವು ತಮ್ಮ ಸನ್ಮುಖದಲ್ಲಿ ಪ್ರತ್ಯಕ್ಷದಲ್ಲಿದೆ. ಅಲ್ಲಿಯೂ ರಾಜಯೋಗದ ತಪಸ್ಸಿನಲ್ಲಿ ಕುಳಿತುಕೊಂಡಿದ್ದಾರೆ. ಜಗದಂಬೆಯೂ ಇದ್ದಾರೆ, ಪ್ರಜಾಪಿತನೂ ಇದ್ದಾರೆ. ಕುಮಾರಿ ಕನ್ಯೆ, ಅಧರ್ ಕುಮಾರಿಯೂ ಇದ್ದಾರೆ. ತಂದೆಯು ರಾಜಯೋಗವನ್ನು ಕಲಿಸುತ್ತಿದ್ದಾರೆ, ಮೇಲೆ ರಾಜ್ಯದ ಚಿತ್ರಗಳೂ ಪ್ರತ್ಯಕ್ಷವಾಗಿದೆ. ತಂದೆಯು ಯಾವುದೇ ಭಕ್ತಿಯನ್ನು ಕಲಿಸಿಕೊಡುವುದಿಲ್ಲ. ಭಕ್ತಿಯನ್ನು ಅವರೇ ಮಾಡುತ್ತಾರೆ, ಯಾರು ಕಲಿಸಿಕೊಟ್ಟು ಹೋದರು. ಆದರೆ ಅವರಿಗೆ ಗೊತ್ತೇ ಇಲ್ಲ - ಯಾರು ಈ ರಾಜಯೋಗವನ್ನು ಕಲಿಸಿ ಕೊಟ್ಟು ರಾಜಧಾನಿಯ ಸ್ಥಾಪನೆ ಮಾಡಿ ಹೋದರು. ನೀವು ಮಕ್ಕಳೀಗ ತಿಳಿದುಕೊಂಡಿದ್ದೀರಿ - ಭಕ್ತಿ ವಿಭಾಗವೇ ಬೇರೆ, ಜ್ಞಾನವೇ ಬೇರೆ ಆಗಿದೆ. ಜ್ಞಾನವನ್ನು ತಿಳಿಸುವವರು ಕೇವಲ ಒಬ್ಬರೇ ಆಗಿದ್ದಾರೆ, ಮತ್ತ್ಯಾರೂ ಜ್ಞಾನವನ್ನು ಕಲಿಸಲು ಸಾಧ್ಯವಿಲ್ಲ. ಜ್ಞಾನದ ಸಾಗರನು ಒಬ್ಬರೇ ಆಗಿದ್ದಾರೆ, ಅವರೇ ಬಂದು ಜ್ಞಾನದಿಂದ ಪತಿತರಿಂದ ಪಾವನಗೊಳಿಸುತ್ತಾರೆ. ಅನ್ಯ ಯಾವುದೆಲ್ಲಾ ಸತ್ಸಂಗಗಳಿವೆಯೋ ಅದರಲ್ಲಿ ಯಾರೂ ಸಹ ಜ್ಞಾನವನ್ನು ಕಲಿಸಲು ಸಾಧ್ಯವಿಲ್ಲ. ಭಲೆ ತನ್ನನ್ನು ಶ್ರೀ ಶ್ರೀ 108 ಜಗದ್ಗುರು, ಭಗವಂತನೆಂದೂ ಹೇಳುತ್ತಾರೆ ಆದರೆ ಎಲ್ಲರ ಪರಮಪಿತನು ಜ್ಞಾನ ಸಾಗರನಾಗಿದ್ದಾರೆ ಎಂದು ಯಾರೂ ಸಹ ಹೇಳುವುದಿಲ್ಲ. ಅವರನ್ನಂತು ಯಾರೂ ಸಹ ಪರಮಪಿತನೆಂದು ಹೇಳುವುದಿಲ್ಲ. ಇದಂತು ಗೊತ್ತಿದೆ - ಪರಮಪಿತನು ಪತಿತ-ಪಾವನನಾಗಿದ್ದಾರೆ. ಇವೆಲ್ಲಾ ಅಂಶಗಳನ್ನು ಬಹಳ ಚೆನ್ನಾಗಿ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಮನುಷ್ಯರು ಹೇಳುತ್ತಾರೆ - ಈ ಬ್ರಹ್ಮಾಕುಮಾರಿಯರಂತು ಭಕ್ತಿಗೆ ವಿಚ್ಛೇದನವನ್ನೇ ಕೊಟ್ಟು ಬಿಡುತ್ತಾರೆ. ಆದರೆ ಯಾವಾಗ ಜ್ಞಾನವು ಲಭಿಸುತ್ತದೆಯೋ ಆಗ ಭಕ್ತಿಗೆ ವಿಚ್ಛೇದನ ಕೊಡಲೇಬೇಕಾಗಿದೆ. ಹೀಗೂ ತಿಳಿಯಬಾರದು - ಯಾವಾಗ ಭಕ್ತಿಯಲ್ಲಿ ಹೋಗುತ್ತೇವೆಯೋ ಆಗ ಸಮಯದಲ್ಲಿ ನಾವು ಜ್ಞಾನಕ್ಕೆ ವಿಚ್ಛೇದನವನ್ನು ಕೊಡುತ್ತೇವೆ ಎಂಬುದು ಗೊತ್ತೇ ಇರುವುದಿಲ್ಲ. ಆ ಸಮಯದಲ್ಲಿ ಸ್ವತಹವಾಗಿಯೇ ರಾವಣ ರಾಜ್ಯದಲ್ಲಿ ಬಂದು ಬಿಡುತ್ತೇವೆ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ - ಬಾಬಾರವರು ನಮಗೆ ರಾಜಯೋಗವನ್ನು ಕಲಿಸಿ ಕೊಡುತ್ತಿದ್ದಾರೆ. ರಾಜಯೋಗವು ಜ್ಞಾನವಾಗಿದೆ, ಇದನ್ನು ಭಕ್ತಿಯೆಂದು ಹೇಳುವುದಿಲ್ಲ. ಭಗವಂತನು ಜ್ಞಾನದ ಸಾಗರನಾಗಿದ್ದಾರೆ, ಅವರೆಂದಿಗೂ ಭಕ್ತಿಯನ್ನು ಕಲಿಸಿಕೊಡುವುದಿಲ್ಲ. ಭಕ್ತಿಯ ಫಲವಂತು ಜ್ಞಾನವೇ ಆಗಿದೆ, ಜ್ಞಾನದಿಂದ ಸದ್ಗತಿ ಆಗುವುದು. ಕಲಿಯುಗದ ಅಂತ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರೆ ಆದ್ದರಿಂದ ಈ ಹಳೆಯ ಪ್ರಪಂಚವನ್ನು ದುಃಖಧಾಮವೆಂದು ಹೇಳಲಾಗುತ್ತದೆ. ಈ ಮಾತುಗಳನ್ನು ನೀವು ಈಗಲೇ ತಿಳಿದುಕೊಳ್ಳುವಿರಿ. ತಂದೆಯು ಭಕ್ತಿಯ ಫಲವ ಅರ್ಥಾತ್ ಸದ್ಗತಿ ಕೊಡುವುದಕ್ಕಾಗಿಯೇ ಬಂದಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದಿರುವುದೇ ಹಳೆಯ ಪ್ರಪಂಚ, ಇದರ ವಿನಾಶವಾಗುವುದಿದೆ. ನಮಗೆ ಹೊಸ ಪ್ರಪಂಚದಲ್ಲಿ ರಾಜ್ಯವು ಬೇಕಾಗಿದೆ. ಇದು ರಾಜಯೋಗದ ಜ್ಞಾನವಾಗಿದೆ. ಜ್ಞಾನವನ್ನು ಕಲಿಸುವವರು ಒಬ್ಬರೇ ಪರಮಪಿತ ಪರಮಾತ್ಮ ಶಿವನಾಗಿದ್ದಾರೆ. ಅವರನ್ನೇ ಜ್ಞಾನದ ಸಾಗರನೆಂದು ಕರೆಯಲಾಗುತ್ತದೆ, ಶ್ರೀಕೃಷ್ಣನಿಗಲ್ಲ. ಕೃಷ್ಣನ ಮಹಿಮೆಯೇ ಬೇರೆಯಿದೆ, ಅವಶ್ಯವಾಗಿ ಅವನು ಹಿಂದಿನ ಜನ್ಮದಲ್ಲಿ ಅಂತಹ ಕರ್ತವ್ಯವನ್ನು ಮಾಡಿದ್ದಾನೆ, ಅದರಿಂದ ರಾಜಕುಮಾರನಾಗಿದ್ದಾನೆ.
ಈಗ ನೀವು ತಿಳಿದುಕೊಂಡಿದ್ದೀರಿ - ನಾವು ರಾಜಯೋಗದ ಜ್ಞಾನವನ್ನು ಪಡೆದು ಹೊಸ ಪ್ರಪಂಚದಲ್ಲಿ ಸ್ವರ್ಗದ ರಾಜಕುಮಾರ-ರಾಜಕುಮಾರಿ ಆಗುವೆವು. ಸ್ವರ್ಗವನ್ನು ಸದ್ಗತಿ, ನರಕಕ್ಕೆ ದರ್ಗತಿಯೆಂದು ಹೇಳಲಾಗುತ್ತದೆ. ನಾವು ನಮಗಾಗಿ ರಾಜ್ಯ ಸ್ಥಾಪನೆ ಮಾಡುತ್ತಿದ್ದೇವೆ. ಉಳಿದವರು ಯಾರು ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ, ಪಾವನರು ಆಗುವುದಿಲ್ಲವೋ ಅವರು ರಾಜಧಾನಿಯಲ್ಲಿ ಬರಲು ಸಾಧ್ಯವಿಲ್ಲ ಏಕೆಂದರೆ ಸತ್ಯಯುಗದಲ್ಲಿ ಬಹಳ ಸ್ವಲ್ಪವೇ ಮಂದಿಯಿರುತ್ತಾರೆ. ಕಲಿಯುಗದ ಅಂತ್ಯದಲ್ಲಿ ಇಷೆಲ್ಲಾ ಅನೇಕ ಮನುಷ್ಯರಿದ್ದಾರೆಯೋ ಅವರು ಅವಶ್ಯವಾಗಿ ಮುಕ್ತಿಧಾಮದಲ್ಲಿ ಹೋಗುವರು, ಮಾಯವಾಗಿ ಬಿಡುವುದಿಲ್ಲ, ಎಲ್ಲರೂ ಮನೆಗೆ ಹೊರಟು ಹೋಗುವರು. ಈಗಂತು ಮಕ್ಕಳಿಗೆ ಮನೆಯ ನೆನಪಿರುತ್ತದೆ - ಈಗ 84 ಜನ್ಮಗಳ ಚಕ್ರವನ್ನು ಪೂರ್ಣಗೊಳಿಸಿದೆವು, ನಾಟಕವು ಸಂಪೂರ್ಣವಾಯಿತು. ಈ ಚಕ್ರವನ್ನು ಅನೇಕ ಬಾರಿ ಸುತ್ತಿದ್ದೇವೆ ಎನ್ನುವುದನ್ನು ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ. ಬ್ರಾಹ್ಮಣರಂತು ಆಗುತ್ತಿರುತ್ತಾರೆ, 16,108ರ ಮಾಲೆಯಿದೆ. ಸತ್ಯಯುಗದಲ್ಲಂತು ಬಹಳಷ್ಟಿರುವುದಿಲ್ಲ. ಸತ್ಯಯುಗದ ಮಾದರಿಯನ್ನೂ ತೋರಿಸುತ್ತಾರಲ್ಲವೆ. ದೊಡ್ಡ ವಸ್ತುವಿನ ಮಾದರಿಯು ಚಿಕ್ಕದಾಗಿರುತ್ತದೆ. ಹೇಗೆ ಚಿನ್ನದ ದ್ವಾರಿಕೆಯನ್ನು ತೋರಿಸುತ್ತಾರೆ, ಆಗ ಹೇಳುತ್ತಾರೆ - ದ್ವಾರಕಾದಲ್ಲಿ ಕೃಷ್ಣನ ರಾಜ್ಯವಿತ್ತು. ಈಗ ದ್ವಾರಕದಲ್ಲಿ ಇದ್ದನೆಂದು ಹೇಳುವರೇ ಅಥವಾ ದೆಹಲಿಯಲ್ಲಿಯೇ? ಜಮುನಾ ನದಿ ತೀರವಂತು ದೆಹಲಿಯಲ್ಲಿದೆ. ಅಲ್ಲಂತು ಸಾಗರವಿದೆ. ಜಮುನಾ ತೀರದಲ್ಲಿ ರಾಜಧಾನಿಯಿತ್ತು, ದ್ವಾರಕಾ ರಾಜಧಾನಿ ಆಗಿರಲಿಲ್ಲ ಎನ್ನುವುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ದೆಹಲಿಯು ಪ್ರಸಿದ್ಧವಿದೆ, ಜಮುನಾ ನದಿಯೂ ಇರಬೇಕು. ಜಮುನಾದ ಮಹಿಮೆಯೂ ಇದೆ. ಪರಿಸ್ತಾನವೆಂದು ದೆಹಲಿಗೇ ಹೇಳಲಾಗುತ್ತದೆ. ಶ್ರೇಷ್ಠವಾದ ಸಿಂಹಾಸನವಂತು ದೆಹಲಿಯ ಸಿಂಹಾಸನವೇ ಆಗಿರುತ್ತದೆ. ಈಗ ಭಕ್ತಿಮಾರ್ಗವು ಸಮಾಪ್ತಿಯಾಗಿ ಜ್ಞಾನಮಾರ್ಗವು ಆರಂಭವಾಗುವುದೆಂದು ಮಕ್ಕಳು ತಿಳಿದುಕೊಂಡಿದ್ದಾರೆ. ಈ ದೈವೀ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ತಂದೆಯು ಹೇಳುತ್ತಾರೆ – ಮುಂದೆ ನಡೆದಂತೆ ನಿಮಗೆ ಯಾರ್ಯಾರು ಎಷ್ಟು ಉತ್ತೀರ್ಣರಾಗುತ್ತಾರೆ ಎನ್ನುವುದೆಲ್ಲವೂ ತಿಳಿದು ಬರುವುದು. ಶಾಲೆಯಲ್ಲಿಯೂ ಇಂತಿಂತಹವರು ಎಷ್ಟು ಅಂಕಗಳಿಂದ ಉತ್ತೀರ್ಣರಾಗುವರು, ಮುಂದಿನ ತರಗತಿಗೆ ಹೋಗುವರು ಎನ್ನುವುದು ತಿಳಿಯುವುದು. ಕೊನೆಯ ಸಮಯದಲ್ಲಿ ಯಾರ್ಯಾರು ಉತ್ತೀರ್ಣರಾಗುವರು, ನಂತರ ವರ್ಗಾವಣೆಯಾಗುವರು ಎನ್ನುವುದು ಹೆಚ್ಚಾಗಿ ತಿಳಿದುಬರುವುದು. ತರಗತಿಯಂತು ದೊಡ್ಡದಾಗಿದೆ ಅಲ್ಲವೆ, ಬೇಹದ್ದಿನ ತರಗತಿಯಾಗಿದೆ. ಸೇವಾಕೇಂದ್ರಗಳಂತು ದಿನ ಕಳೆದಂತೆ ಹೆಚ್ಚಾಗುತ್ತಿರುವುದು. ಯಾರಾದರೂ ಬಂದು 7 ದಿನದ ಕೋರ್ಸ್ನ್ನು ಚೆನ್ನಾಗಿ ತೆಗೆದುಕೊಳ್ಳುವರು. ಒಂದೆರಡು ದಿನಗಳ ಕೋರ್ಸ್ ಸಹ ಕಡಿಮೆಯಾಗುವುದಿಲ್ಲ. ಕಲಿಯುಗದ ವಿನಾಶವು ಸನ್ಮುಖದಲ್ಲಿ ಬಂದು ನಿಂತಿದೆ ಎನ್ನುವುದನ್ನು ನೋಡುತ್ತಾರೆ, ಈಗ ಸತೋಪ್ರಧಾನರು ಆಗಬೇಕಾಗಿದೆ. ತಂದೆಯು ಹೇಳಿದ್ದಾರೆ - ಬುದ್ಧಿಯೋಗವನ್ನು ನನ್ನೊಂದಿಗೆ ಇಡುತ್ತೀರೆಂದರೆ ಸತೋಪ್ರಧಾನರು ಆಗಿ ಬಿಡುತ್ತೀರಿ. ಪವಿತ್ರ ಪ್ರಪಂಚದಲ್ಲಿ ಬರುವಿರಿ. ಹೇಗೆ ಡ್ರಾಮಾದಲ್ಲಿ ಕಲ್ಪದ ಮೊದಲಿನಂತೆ ಪಾತ್ರವನ್ನು ಅಭಿನಯಿಸಲಾಗಿದೆ. ಹಾಗೆಯೇ ಪಾತ್ರವನ್ನಂತು ಅವಶ್ಯವಾಗಿ ಅಭಿನಯಿಸಲೇಬೇಕು. ಭಾರತವಾಸಿಗಳೇ ರಾಜ್ಯವನ್ನಾಳುತ್ತಾರೆ, ನಂತರ ವೃದ್ಧಿ ಹೊಂದುತ್ತದೆ. ವೃಕ್ಷವು ವೃದ್ಧಿಯನ್ನು ಪಡೆಯುತ್ತಿರುತ್ತದೆ. ಭಾರತವಾಸಿಗಳು ದೇವಿ-ದೇವತಾ ಧರ್ಮದವರಾಗಿದ್ದಾರೆ. ಹೇಗೆ ಕ್ರಿಶ್ಚಿಯನ್ನರು ಕ್ರೈಸ್ಟ್ನ್ನು ಪೂಜಿಸುತ್ತಾರೆ ಹಾಗೆಯೇ ಭಾರತವಾಸಿಗಳು ಈಗ ಪಾವನವಿರದೇ ಇರುವ ಕಾರಣದಿಂದ, ಪಾವನರಿರುವ ದೇವತೆಗಳನ್ನು ಪೂಜಿಸುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮವಿರುವುದು ಸತ್ಯಯುಗದಲ್ಲಿ. ಸತ್ಯಯುಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಅವಶ್ಯವಾಗಿ ಸತ್ಯಯುಗದಲ್ಲಿ ಈ ದೇವತೆಗಳ ರಾಜ್ಯವಿತ್ತು ಅಂದಮೇಲೆ ಅವಶ್ಯವಾಗಿ ಒಂದು ಜನ್ಮದ ಹಿಂದೆ ಅಂತಹ ಪುರುಷಾರ್ಥವನ್ನು ಮಾಡಿರುತ್ತಾರೆ. ಅವಶ್ಯವಾಗಿ ಅದು ಸಂಗಮವೇ ಆಗಿರುತ್ತದೆ. ಯಾವಾಗ ಹಳೆಯ ಪ್ರಪಂಚವು ಬದಲಾಗಿ ಹೊಸ ಪ್ರಪಂಚವಾಗುತ್ತದೆ, ಕಲಿಯುಗದ ನಂತರ ಸತ್ಯಯುಗವು ಬರಬೇಕು ಅಂದಮೇಲೆ ಕಲಿಯುಗದಲ್ಲಿ ಪತಿತರಾಗಿರುತ್ತಾರೆ. ಬಾಬಾರವರು ತಿಳಿಸಿದ್ದಾರೆ - ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಚಿತ್ರಿಸುತ್ತೀರಿ ಅಥವಾ ಆಧ್ಯಾತ್ಮಿಕ ಪುಸ್ತಕಗಳನ್ನು ತಯಾರು ಮಾಡುತ್ತೀರೆಂದರೆ, ಅದರಲ್ಲಿ ಇದನ್ನು ಬರೆಯಬೇಕು - ಇವರು ತನ್ನ ಹಿಂದಿನ ಜನ್ಮದಲ್ಲಿ ಈ ಸಹಜ ರಾಜಯೋಗದ ಜ್ಞಾನದಿಂದ ಈ ಪುರುಷಾರ್ಥವನ್ನು ಮಾಡಿದ್ದಾರೆ. ಕೇವಲ ರಾಜ-ರಾಣಿ ಆಗುವುದಿಲ್ಲ, ಪ್ರಜೆಗಳೂ ಆಗುವರಲ್ಲವೆ. ಅಜ್ಞಾನದಲ್ಲಂತು ಮನುಷ್ಯರು ಏನನ್ನೂ ತಿಳಿದುಕೊಳ್ಳದೆ, ಕೇವಲ ಪೂಜೆ ಮಾಡುತ್ತಿರುತ್ತಾರೆ.ಈಗ ನೀವು ತಿಳಿಯುತ್ತೀರಿ - ಅವರು ಪೂಜೆ ಮಾಡುತ್ತಿರಬೇಕಾದರೆ ಕೇವಲ ಲಕ್ಷ್ಮೀ-ನಾರಾಯಣನನ್ನೇ ನೋಡುತ್ತಿರುತ್ತಾರೆ. ತಿಳುವಳಿಕೆಯಂತು ಇಲ್ಲ. ಜನರು ತಿಳಿಯುತ್ತಾರೆ - ಭಕ್ತಿ ಮಾಡದೇ ಭಗವಂತನೇ ಸಿಗುವುದಿಲ್ಲ. ನೀವು ಯಾರಿಗಾದರೂ ಭಗವಂತನು ಬಂದಿದ್ದಾರೆ ಎಂದು ಹೇಳುತ್ತೀರೆಂದರೆ, ಅವರು ನಗುತ್ತಾರೆ. ಭಗವಂತನಂತು ಕಲಿಯುಗದ ಅಂತಿಮದಲ್ಲಿ ಬರುತ್ತಾರೆ, ಈಗ ಎಲ್ಲಿಂದ ಬರುವರು! ಕಲಿಯುಗದ ಅಂತ್ಯದಲ್ಲಿಯೇ ಬರುತ್ತಾರೆ ಎಂದು ಏಕೆ ಹೇಳುತ್ತಾರೆ ಎನ್ನುವುದನ್ನೂ ತಿಳಿದುಕೊಂಡಿಲ್ಲ. ಅವರಂತು ಕೃಷ್ಣನನ್ನು ದ್ವಾಪರದಲ್ಲಿ ಬರುವನೆಂದು ಹೇಳುತ್ತಾರೆ, ಮನುಷ್ಯರಿಗೆ ತಿಳುವಳಿಕೆಯಿಲ್ಲದೆ ಏನೆನಿಸುತ್ತದೆಯೋ ಅದನ್ನೇ ಹೇಳಿ ಬಿಡುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ - ನೀವು ಸಂಪೂರ್ಣವಾಗಿ ಬುದ್ಧಿಹೀನರು ಆಗಿ ಬಿಟ್ಟಿದ್ದೀರಿ. ತಂದೆಯನ್ನೇ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಭಕ್ತಿಯು ಹೊರಗಿನಿಂದ ಬಹಳ ಸುಂದರವಾದ ರೂಪದಲ್ಲಿ ಕಾಣಿಸುತ್ತದೆ, ಭಕ್ತಿಯ ಆಕರ್ಷಣೆಯು ಎಷ್ಟೊಂದಿದೆ! ನಿಮ್ಮ ಬಳಿಯಂತು ಏನೂ ಇಲ್ಲ. ಮತ್ತೆಲ್ಲಿಯಾದರೂ ಸತ್ಸಂಗ ಮುಂತಾದ ಕಡೆಗಳಲ್ಲಿ ಹೋದರೆ ಅವಶ್ಯವಾಗಿ ಧ್ವನಿ ಮೊಳಗುತ್ತದೆ, ಹಾಡನ್ನು ಹಾಡುತ್ತಾರೆ. ಇಲ್ಲಂತು ತಂದೆಯವರು ಹಾಡನ್ನೂ ಬಯಸುವುದಿಲ್ಲ. ಮುಂದೆ ನಡೆದಂತೆ ಇದೂ ಸಹ ಸ್ಥಗಿತಗೊಳ್ಳುತ್ತದೆ.
ತಂದೆಯು ಹೇಳುತ್ತಾರೆ - ನಿಮಗೆ ಈ ಹಾಡುಗಳು ಇತ್ಯಾದಿಗಳೆಲ್ಲದರ ಸಾರವನ್ನು ತಿಳಿಸಿದ್ದೇವೆ. ನೀವು ಅರ್ಥವನ್ನು ತಿಳಿದುಕೊಂಡಿದ್ದೀರಿ. ಇದು ವಿದ್ಯಾಭ್ಯಾಸವಾಗಿದೆ, ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಒಂದುವೇಳೆ ಸ್ವಲ್ಪವೇ ಓದಿದರೆ ಪ್ರಜೆಗಳಲ್ಲಿ ಹೋಗಿ ಬಿಡುತ್ತೀರಿ ಆದ್ದರಿಂದ ಯಾರು ಬಹಳ ಬುದ್ಧಿವಂತರಾಗಿದ್ದಾರೆ, ಅವರನ್ನು ಫಾಲೋ ಮಾಡಬೇಕಾಗಿದೆ. ಏಕೆಂದರೆ ಅವರಿಗೆ ವಿದ್ಯಾಭ್ಯಾಸದ ಕಡೆಗೆ ಹೆಚ್ಚು ಗಮನವಿರುವುದರಿಂದ ಲಾಭವಾಗುವುದು. ಯಾರು ಬಹಳ ಚೆನ್ನಾಗಿ ತಿಳಿಸುವವರಿದ್ದಾರೆಯೋ ಅವರಿಂದ ಕಲಿಯಬೇಕಾಗಿದೆ. ಯಾರು ಚೆನ್ನಾಗಿ ತಿಳಿಸುತ್ತಾರೆಯೋ ಅವರನ್ನು ಸೇವಾಕೇಂದ್ರಗಳಲ್ಲಿಯೂ ನೆನಪು ಮಾಡುವರಲ್ಲವೆ. ಬ್ರಹ್ಮಾಕುಮಾರಿಯಂತು ಕುಳಿತಿದ್ದಾರೆ, ಆದರೂ ಹೇಳುತ್ತಾರೆ - ಇಂತಹವರು ಬರಲಿ, ಇವರು ಬಹಳ ಬುದ್ಧಿವಂತರೆಂದು ತಿಳಿಯುತ್ತಾರೆ. ಈ ರೀತಿಯಿದ್ದಾಗ ಅವರಿಗೆ ಅಂತಹ ಆತಿಥ್ಯವನ್ನೇ ಕೊಡಬೇಕಾಗುತ್ತದೆ. ಮತ್ತೆ ಅದೇರೀತಿ ಜ್ಞಾನದಲ್ಲಿ ಅವರು ನಮಗಿಂತ ತೀಕ್ಷ್ಣವಿದ್ದಾರೆ ಎಂದು ಹಿರಿಯರಿಗೆ ಗೌರವವನ್ನಿಡಬೇಕಾಗುತ್ತದೆ. ಇವರಿಗೆ ಅವಶ್ಯವಾಗಿ ಶ್ರೇಷ್ಠ ಪದವಿಯು ಸಿಗುವುದು, ಇದರಲ್ಲಿ ಅಹಂಕಾರ ಬರಬಾರದು. ಹಿರಿಯರಿಗೆ ಬಹಳಷ್ಟು ಗೌರವವಿರುತ್ತದೆ, ಪ್ರಧಾನಮಂತ್ರಿಯವರಿಗೆ ಅವಶ್ಯವಾಗಿ ಹೆಚ್ಚು ಗೌರವವಿರುತ್ತದೆ. ಪ್ರತಿಯೊಬ್ಬರದೂ ನಂಬರ್ವಾರ್ ಗೌರವವಿರುತ್ತದೆ. ಒಬ್ಬರಿನ್ನೊಬ್ಬರ ಬಗ್ಗೆ ಅವಶ್ಯವಾಗಿ ಗೌರವವನ್ನಿಡಬೇಕಲ್ಲವೆ. ವಕೀಲರಲ್ಲಿಯೂ ನಂಬರ್ವಾರ್ ಆಗಿರುತ್ತಾರೆ, ದೊಡ್ಡ ಕೇಸುಗಳಲ್ಲಿ ಬಹಳ ಬುದ್ಧಿವಂತ ವಕೀಲರನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.ಕೆಲವರಂತು ಲಕ್ಷಾಂತರ ರೂಪಾಯಿಗಳ ಕೇಸನ್ನು ತೆಗೆದುಕೊಳ್ಳುತ್ತಾರೆ, ಅವರಲ್ಲಿಯೂ ಅವಶ್ಯವಾಗಿ ನಂಬರ್ವಾರ್ ಆಗಿರುತ್ತಾರೆ. ನಮಗಿಂತಲೂ ಬುದ್ಧಿವಂತರಾಗಿದ್ದರೆ ಗೌರವವನ್ನಿಡಬೇಕು. ಸೇವಾಕೇಂದ್ರವನ್ನು ಸಂಭಾಲನೆ ಮಾಡಬೇಕು, ಎಲ್ಲಾ ಪ್ರಕಾರದ ಕಾರ್ಯವನ್ನೂ ಮಾಡಬೇಕಾಗಿದೆ. ಬಾಬಾರವರಿಗೆ ಇಡೀ ದಿನದಲ್ಲಿ ಪ್ರದರ್ಶನಿ ಹೇಗೆ ಮಾಡುವುದು ಎಂದು ವಿಚಾರವಿರುತ್ತದೆಯಲ್ಲವೆ, ಸಂಪೂರ್ಣ ಗಮನ ಕೊಡಬೇಕಾಗಿದೆ. ತಂದೆಯು ಬಂದಿರುವುದೇ ಸತೋಪ್ರಧಾನರನ್ನಾಗಿ ಮಾಡುವುದಕ್ಕಾಗಿ ಅಂದಮೇಲೆ ನಾವು ತಮೋಪ್ರಧಾನರಿಂದ ಸತೋಪ್ರಧಾನರು ಹೇಗಾಗುವುದು! ಪತಿತ-ಪಾವನನು ತಂದೆಯೇ ಆಗಿದ್ದಾರೆ, ಆದರೆ ಇಲ್ಲಂತು ಹೇಳುತ್ತಾರೆ - ಪತಿತ-ಪಾವನಿ ಗಂಗೆ ಆಗಿದ್ದಾಳೆ, ಅದರಲ್ಲಂತು ಜನ್ಮ-ಜನ್ಮಾಂತರದಿಂದ ಸ್ನಾನ ಮಾಡುತ್ತಾ ಬಂದಿದ್ದೇವೆ. ಯಾರೂ ಸಹ ಪಾವರನಾಗಲೇ ಇಲ್ಲ, ಇದೆಲ್ಲವೂ ಭಕ್ತಿಯಾಗಿದೆ. ಯಾವಾಗ ಹೇ ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ, ಅಂದಾಗ ಅವರು ಅವಶ್ಯವಾಗಿ ಸಂಗಮದಲ್ಲಿ ಬರುತ್ತಾರೆ ಮತ್ತು ಒಂದೇ ಬಾರಿ ಬರುತ್ತಾರೆ. ಪ್ರತಿಯೊಬ್ಬರದೂ ತನ್ನ-ತನ್ನ ರೀತಿ-ಪದ್ಧತಿಗಳಿವೆ. ಹೇಗೆ ನೇಪಾಳದಲ್ಲಿ ಅಷ್ಟಮಿಯಂದು ಬಲಿ ಅರ್ಪಿಸುತ್ತಾರೆ, ಚಿಕ್ಕ ಮಕ್ಕಳ ಕೈಯಲ್ಲಿ ಬಂದೂಕನ್ನು ಕೊಟ್ಟು ಗುಂಡನ್ನಾರಿಸುತ್ತಾರೆ.ಆ ಚಿಕ್ಕಮಕ್ಕಳೂ ಬಲಿ ಕೊಡುತ್ತಾರೆ. ಅವರು ದೊಡ್ಡವರಾದಾಗ ಒಂದೇ ಏಟಿಗೆ ಕರುವನ್ನು ಕತ್ತರಿಸುತ್ತಾರೆ. ಯಾರಾದರೂ ಸ್ವಲ್ಪವೇ ಶಕ್ತಿಯನು ಉಪಯೋಗಿಸಿದರು, ಒಂದೇ ಏಟಿಗೆ ಸಾಯದಿದ್ದರೆ ಅದು ಅರ್ಪಣೆಯಾಗಲಿಲ್ಲ, ಅದನ್ನು ದೇವಿಗೆ ಅರ್ಪಣೆ ಮಾಡುವುದಿಲ್ಲ - ಇದೆಲ್ಲವೂ ಭಕ್ತಿಮಾರ್ಗವಾಗಿದೆ. ಪ್ರತಿಯೊಬ್ಬರದೂ ತನ್ನ-ತನ್ನ ಕಲ್ಪನೆಯಾಗಿದೆ. ಕಲ್ಪನೆಯ ಮೇಲೆ ಅನುಯಾಯಿಗಳು ಆಗುತ್ತಾರೆ. ಇಲ್ಲಂತು ಹೊಸ ಮಾತಾಗಿದೆ. ಇದನ್ನಂತು ಮಕ್ಕಳೇ ತಿಳಿದುಕೊಳ್ಳಬಹುದು. ಒಬ್ಬ ತಂದೆಯೇ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ, ನಾವು ಸ್ವದರ್ಶನ ಚಕ್ರಧಾರಿ ಆಗಿದ್ದೇವೆಂದು ನಿಮಗೆ ಖುಷಿಯಿರುತ್ತದೆ, ಮತ್ತ್ಯಾರೂ ಸಹ ಇದನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಿಮಗೆ ನಾವು ಸಭೆಯಲ್ಲಿ ಹೇಳುತ್ತೇವೆ - ಸರ್ವೋತ್ತಮ ಬ್ರಾಹ್ಮಣ ಕುಲ ಭೂಷಣ, ಸ್ವದರ್ಶನ ಚಕ್ರಧಾರಿಗಳು, ಅಂದಾಗ ಇದರ ಅರ್ಥವನ್ನೂ ನೀವು ತಿಳಿದುಕೊಳ್ಳುವಿರಿ. ಯಾರಾದರೂ ಹೊಸಬರಿದ್ದರೆ ಇದೇನು ಹೇಳುತ್ತಿದ್ದಾರೆ? ಎಂದು ತಬ್ಬಿಬ್ಬಾಗುತ್ತಾರೆ. ಸ್ವದರ್ಶನ ಚಕ್ರಧಾರಿಯಂತು ವಿಷ್ಣುವಾಗಿದ್ದಾನೆ. ಇದು ಹೊಸ ಮಾತಲ್ಲವೆ ಆದ್ದರಿಂದ ನಮಗಾಗಿ ಹೇಳುತ್ತಾರೆ - ಹೊರಗೆ ಮೈದಾನದಲ್ಲಿ ಬರುತ್ತೀರೆಂದರೆ ಗೊತ್ತಾಗುವುದು.
ನಿಮ್ಮದು ಜ್ಞಾನ ಮಾರ್ಗವಾಗಿದೆ. ನೀವು 5 ವಿಕಾರಗಳ ಮೇಲೆ ವಿಜಯವನ್ನು ಪಡೆಯುತ್ತೀರಿ. ಈ ಅಸುರರೊಂದಿಗೆ (5 ವಿಕಾರಗಳು) ನಿಮ್ಮ ಯುದ್ಧವಿದೆ. ನಂತರ ನೀವು ದೇವತೆಗಳಾಗುತ್ತೀರಿ. ಮತ್ತ್ಯಾವುದೇ ಯುದ್ಧದ ಮಾತಾಗುವುದಿಲ್ಲ. ಎಲ್ಲಿ ಅಸುರರಿರುತ್ತಾರೆ ಅಲ್ಲಿ ದೇವತೆಗಳು ಇರುವುದಿಲ್ಲ. ನೀವು ಯಾರು ಪುರುಷಾರ್ಥ ಮಾಡುತ್ತಿದ್ದೀರಿ ಅಂತಹವರು ಬ್ರಾಹ್ಮಣರು ದೇವತೆಗಳಾಗುವವರು ಆಗಿದ್ದೀರಿ. ರುದ್ರ ಜ್ಞಾನ ಯಜ್ಞದಲ್ಲಿ ಅವಶ್ಯವಾಗಿ ಬ್ರಾಹ್ಮಣರಿರಬೇಕು. ಬ್ರಾಹ್ಮಣರಿಲ್ಲದೆ ಯಜ್ಞವಾಗುವುದೇ ಇಲ್ಲ. ರುದ್ರನು ಶಿವನಾಗಿದ್ದಾರೆ, ಹಾಗಾದರೆ ಕೃಷ್ಣನ ಹೆಸರೆಲ್ಲಿಂದ ಬಂದಿತು! ನೀವು ಪ್ರಪಂಚದವರಿಗಿಂತ ಸಂಪೂರ್ಣ ಭಿನ್ನವಾಗಿದ್ದೀರಿ, ಹಾಗೆಯೇ ನೀವು ಇಷ್ಟು ಕೆಲವರೇ ಇದ್ದೀರಿ. ಪಕ್ಷಿಗಳು ಸಾಗರವನ್ನು ನುಂಗಿ ಬಿಟ್ಟಿತು, ಈ ರೀತಿ ಶಾಸ್ತ್ರಗಳಲ್ಲಿ ಎಷ್ಟೊಂದು ಕಟ್ಟು ಕಥೆಗಳಿವೆ. ತಂದೆಯು ಹೇಳುತ್ತಾರೆ - ಈಗ ಅವೆಲ್ಲವನ್ನೂ ಮರೆತು ನನ್ನೊಬ್ಬನನ್ನೇ ನೆನಪು ಮಾಡಿರಿ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ತಂದೆಯಂತು ಒಬ್ಬರೇ ಆಗಿದ್ದಾರಲ್ಲವೆ. ಹೇ ಪರಮಾತ್ಮ ಅಥವಾ ಪ್ರಭುವೆಂದು ಹೇಳುತ್ತಾರೆಂದರೆ, ಆ ಸಮಯದಲ್ಲಿ ಲಿಂಗವೂ ನೆನಪಿಗೆ ಬರುವುದಿಲ್ಲ. ಕೇವಲ ಈಶ್ವರ ಅಥವಾ ಪ್ರಭು ಎಂದು ಹೇಳಿ ಬಿಡುತ್ತಾರೆ. ಆತ್ಮನಿಗೆ ತಂದೆಯಿಂದ ಅರ್ಧಕಲ್ಪದ ಸುಖವು ಸಿಕ್ಕಿರುತ್ತದೆ ಆದ್ದರಿಂದ ಆನಂತರ ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತದೆ. ಈಗ ನಿಮಗೆ ತಿಳುವಳಿಕೆಯು ಸಿಕ್ಕಿದೆ - ಆತ್ಮವೆಂದರೇನು, ಪರಮಾತ್ಮನು ಏನಾಗಿದ್ದಾರೆ, ನಾವೆಲ್ಲಾ ಆತ್ಮರು ಮೂಲವತನದಲ್ಲಿ ಇರುವವರು, ಅಲ್ಲಿಂದ ನಂಬರ್ವಾರ್ ಪಾತ್ರವನ್ನಭಿನಯಿಸಲು ಬರುತ್ತೇವೆ. ಮೊದಲು ಬರುವುದು ದೇವಿ-ದೇವತೆಗಳು. ಹೇಳುತ್ತಾರೆ - ಕ್ರೈಸ್ಟ್ಗೆ ಮೊದಲು ದೇವಿ-ದೇವತಾ ಧರ್ಮವಿತ್ತು. ಇದು 5 ಸಾವಿರ ವರ್ಷಗಳ ಮಾತಾಗಿದೆ. ಅವರುಗಳು ಹೇಳಿ ಬಿಡುತ್ತಾರೆ - ಇದು 50 ಸಾವಿರಗಳ ಪುರಾತನ ವಸ್ತುವಾಗಿದೆ. ಆದರೆ 50 ಸಾವಿರ ವರ್ಷಗಳ ಪುರಾತನ ವಸ್ತುವಂತು ಯಾವುದೂ ಸಹ ಇರಲು ಸಾಧ್ಯವಿಲ್ಲ. ಡ್ರಾಮಾದ ಸಮಯವಿರುವುದೇ 5 ಸಾವಿರ ವರ್ಷಗಳು. ಇದೇ ಮುಖ್ಯವಾದ ಧರ್ಮವಾಗಿದೆ. ಈ ಧರ್ಮದವರದೇ ಕಟ್ಟಡ ಮುಂತಾದವುಗಳು ಇರುತ್ತವೆ. ಮೊಟ್ಟ ಮೊದಲಂತು ರಜೋ ಗುಣಿ ಬುದ್ಧಿಯವರಿದ್ದರು. ಈಗಂತು ಇನ್ನೂ ತಮೋ ಗುಣಿ ಬುದ್ಧಿಯವರಾಗಿದ್ದಾರೆ. ಪ್ರದರ್ಶನಿಯಲ್ಲಿ ಎಷ್ಟೊಂದು ತಿಳಿಸಲಾಗುತ್ತದೆ, ಯಾರ ಬುದ್ಧಿಯಲ್ಲಾದರೂ ತಿಳಿಯುತ್ತದೆಯೇ! ಬ್ರಾಹ್ಮಣರಲ್ಲಿಯೇ ನಾಟಿಯಾಗುವುದು. ಅಂದಮೇಲೆ ಮಕ್ಕಳಿಗೆ ತಿಳಿಸಲಾಗಿದೆ - ಜ್ಞಾನವೇ ಭಿನ್ನವಾದಂತಹ ವಸ್ತು, ಭಕ್ತಿಯೇ ಬೇರೆ ಆಗಿದೆ. ಜ್ಞಾನದಿಂದ ಸದ್ಗತಿಯಾಗುವುದು ಆದ್ದರಿಂದ ಹೇಳುತ್ತಾರೆ - ಹೇ ಪತಿತ-ಪಾವನ ಬನ್ನಿರಿ, ದುಃಖದಿಂದ ಮುಕ್ತಗೊಳಿಸಿರಿ. ನಂತರ ಮಾರ್ಗದರ್ಶಕನಾಗಿ ಜೊತೆಗೆ ಕರೆದುಕೊಂಡು ಹೋಗುವರು. ತಂದೆಯವರೇ ಬಂದು ಆತ್ಮರನ್ನು ಕರೆದುಕೊಂಡು ಹೋಗುತ್ತಾರೆ. ಎಲ್ಲರ ಶರೀರವಂತು ಇಲ್ಲಿಯೇ ಸಮಾಪ್ತಿಯಾಗಿ ಬಿಡುತ್ತದೆ, ವಿನಾಶವಾಗುತ್ತದೆ ಅಲ್ಲವೆ. ಶಾಸ್ತ್ರಗಳಲ್ಲಿ ಒಂದೇ ಒಂದು ಮಹಾಭಾರತ ಯುದ್ಧದ ಮಹಿಮೆಯಿದೆ, ಹೇಳುತ್ತಾರೆ - ಇದು ಅದೇ ಮಹಾಭಾರತ ಯುದ್ಧವಾಗಿದೆ. ಅದಂತು ಆಗಲೇಬೇಕು. ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡುತ್ತಿರಿ. ತಮೋಪ್ರಧಾನರಿಂದ ಸತೋಪ್ರಧಾನರಾಗುವ ಉಪಾಯವಂತು ಇದೊಂದೇ ಆಗಿದೆ. ತಂದೆಯು ಹೇಳುತ್ತಾರೆ - ನನ್ನೊಬ್ಬನ್ನೇ ನೆನಪು ಮಾಡುತ್ತೀರೆಂದರೆ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಆತ್ಮವು ನನ್ನಜೊತೆ ಹೊರಟು ಬಿಡುತ್ತದೆ. ಇದನ್ನು ಎಲ್ಲರಿಗೂ ಸಂದೇಶವನ್ನು ಕೊಡುತ್ತಾ ಇರುತ್ತೀರೆಂದರೆ, ಅನೇಕರ ಕಲ್ಯಾಣವಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ.ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.