text
stringlengths 0
61.5k
|
---|
ಪ್ರಶ್ನೆ: ಆದಿಕಾಲದ ರಾಜ್ಯಾಧಿಕಾರಿಯಾಗುವುದಕ್ಕೆ ಯಾವ ಸಂಸ್ಕಾರವನ್ನು ಈಗಿನಿಂದಲೇ ಧಾರಣೆ ಮಾಡಿಕೊಳ್ಳಬೇಕು? |
ಉತ್ತರ: ತಮ್ಮ ಆದಿ ಅವಿನಾಶಿ ಸಂಸ್ಕಾರ ಈಗಿನಿಂದಲೇ ಧಾರಣೆ ಮಾಡಿಕೊಳ್ಳಬೇಕು. ಒಂದುವೇಳೆ ಯೋದ್ಧತನದ ಸಂಸ್ಕಾರವಿದ್ದರೆ ಎಂದರೆ ಯುದ್ಧ ಮಾಡುತ್ತ - ಮಾಡುತ್ತ ಸಮಯ ಕಳೆಯಿತು. ಇವತ್ತು ವಿಜಯ ನಾಳೆ ಸೋಲು. ಈಗ ಈಗ ಜಯ ಈಗ ಈಗ ಸೋಲು, ಸದಾ ವಿಜಯಿತನದ ಸಂಸ್ಕಾರ ಆಗಲ್ಲಿಲವೆಂದರೆ ಕ್ಷತ್ರಿಯರು ಎಂದು ಹೇಳಲಾಗುವುದು, ಬ್ರಾಹ್ಮಣರಲ್ಲ. ಬ್ರಾಹ್ಮಣರು ದೇವತೆಗಳಾಗುತ್ತಾರೆ, ಕ್ಷತ್ರಿಯರು ಕ್ಷತ್ರಿಯರಲ್ಲಿ ಹೋಗುತ್ತಾರೆ. |
ಪ್ರಶ್ನೆ: ವಿಶ್ವ ಪರಿವರ್ತಕರಾಗುವ ಮೊದಲು ಯಾವ ಪರಿವರ್ತನೆ ಮಾಡುವ ಶಕ್ತಿ ಬೇಕಾಗಿದೆ? |
ಉತ್ತರ; ವಿಶ್ವ ಪರಿವರ್ತಕರಾಗುವ ಮೊದಲು ತಮ್ಮ ಸಂಸ್ಕಾರಗಳ ಪರಿವರ್ತನೆ ಮಾಡಿಕೊಳ್ಳುವ ಶಕ್ತಿ ಬೇಕಾಗಿದೆ. ದೃಷ್ಟಿ ಮತ್ತು ವೃತ್ತಿಯ ಪರಿವರ್ತನೆ ಬೇಕಾಗಿದೆ. ನೀವು ದೃಶ್ಯವನ್ನು ಈ ದೃಷ್ಟಿಯಿಂದ ನೋಡುವವರಾಗಿದ್ದೀರಿ. ದಿವ್ಯ ನೇತ್ರಗಳಿಂದ ನೋಡಿರಿ, ಚರ್ಮದ ನೇತ್ರಗಳಿಂದಲ್ಲ. |
ದಿವ್ಯ ನೇತ್ರಗಳಿಂದ ನೋಡುತ್ತೀರೆಂದರೆ ದಿವ್ಯ ರೂಪವು ಸ್ವತಹವಾಗಿ ಕಾಣಿಸುವುದು. ಚರ್ಮದ ನೇತ್ರವು ಚರ್ಮವನ್ನೇ ನೋಡುವುದು, ಚರ್ಮಗಾಗಿ ಯೋಚಿಸಿ - ಈ ಕೆಲಸ ಫರಿಶ್ತೆಗಳದ್ದು ಬ್ರಾಹ್ಮಣರದ್ದಲ್ಲ. |
ಪ್ರಶ್ನೆ: ಪರಸ್ಪರದಲ್ಲಿ ಸಹೋದರಿ ಸಹೋದರನ ಸಂಬಂಧವಿದ್ದರೂ ಯಾವ ದಿವ್ಯ ನೇತ್ರದಿಂದ ನೋಡಿದರೆ ದೃಷ್ಟಿ ಅಥವಾ ವೃತ್ತಿ ಎಂದಿಗೂ ಚಂಚಲವಾಗುವುದಕ್ಕೆ ಸಾಧ್ಯವಿಲ್ಲ? |
ಉತ್ತರ: ಪ್ರತಿಯೊಬ್ಬ ನಾರಿ ಶರೀರಧಾರಿ ಆತ್ಮವನ್ನು ಶಕ್ತಿರೂಪ, ಜಗತ್ಮಾತಾವಿನ ರೂಪ,ದೇವಿಯ ರೂಪವನ್ನೇ ನೋಡಿ - ಇದೆ ದಿವ್ಯ ನೇತ್ರದಿಂದ ನೋಡುವುದಾಗಿದೆ. ಶಕ್ತಿಯರ ಮುಂದೆ ಯಾರಾದರೂ ಆಸುರೀ ವೃತ್ತಿಯಿಂದ ಬಂದರೆ ಭಸ್ಮವಾಗಿ ಬಿಡುತ್ತಾರೆ ಅದಕ್ಕೆ ನಮ್ಮ ಸಹೋದರಿ ಅಥವಾ ಟೀಚರ್ ಅಲ್ಲ ಆದರೆ ಶಿವ ಶಕ್ತಿಯಾಗಿದ್ದಾರೆ. ಮಾತೆಯರು ಅಕ್ಕಂದಿರೂ ಸಹ ಸದಾ ತಮ್ಮ ಶಕ್ತಿ ಸ್ವರೂಪದಲ್ಲಿ ಸ್ಥಿತರಾಗಿರಿ. ನನ್ನ ವಿಶೇಷ ಸಹೋದರ, ವಿಶೇಷ ಸ್ಟುಡೆಂಟ್(ವಿದ್ಯಾರ್ಥಿ)ಯಲ್ಲ, ಅವರು ಮಹಾವೀರರಾಗಿದ್ದಾರೆ ಮತ್ತು ಅವರು ಶಿವ ಶಕ್ತಿಯಾಗಿದ್ದಾರೆ. |
ಪ್ರಶ್ನೆ: ಮಹಾವೀರನ ವಿಶೇಷತೆ ಏನೆಂದು ತೋರಿಸುತ್ತಾರೆ? |
ಉತ್ತರ: ಅವರ ಹೃದಯದಲ್ಲಿ ಸದಾ ಒಬ್ಬ ರಾಮನಿರುತ್ತಾನೆ. ಮಹಾವೀರ ರಾಮನವರಾದರೆ ಶಕ್ತಿಯು ಶಿವನವರಾಗಿದ್ದಾರೆ. ಯಾವುದೇ ಶರೀರಧಾರಿಯನ್ನು ನೋಡುತ್ತ ಮಸ್ತಕದಲ್ಲಿ ಆತ್ಮವನ್ನೇ ನೋಡಿ. ಆತ್ಮದ ಜೊತೆಯೇ ಮಾತನಾಡಬೇಕು ಶರೀರದ ಜೊತೆಯಲ್ಲ. ಮಸ್ತಕ ಮಣಿಯ ಮೇಲೆಯೇ ದೃಷ್ಟಿ ಹೋಗಬೇಕು. |
ಪ್ರಶ್ನೆ: ಯಾವ ಒಂದು ಶಬ್ದವನ್ನು ಹುಡುಗಾಟಿಕೆಯ ರೂಪದಲ್ಲಿ ಉಪಯೋಗಿಸದೆ ಕೇವಲ ಒಂದು ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು, ಅದು ಯಾವುದಾಗಿದೆ? |
ಉತ್ತರ: ಪುರುಷಾರ್ಥಿ ಶಬ್ದವನ್ನು ಹುಡುಗಾಟಿಕೆಯ ರೂಪದಲ್ಲಿ ಉಪಯೋಗಿಸದೆ ಕೇವಲ ಒಂದು ಎಚ್ಚರಿಕೆಯನ್ನು ಇಟ್ಟುಕೊಳ್ಳಬೇಕು - ಪ್ರತಿ ಮಾತಿನಲ್ಲಿ ನಾನು ದೃಢ ಸಂಕಲ್ಪದವರಾಗಬೇಕಾಗಿದೆ. ಏನೆಲ್ಲಾ ಮಾಡಬೇಕೋ ಅದು ಶ್ರೇಷ್ಠ ಕರ್ಮವನ್ನೇ ಮಾಡಬೇಕು. ಶ್ರೇಷ್ಠರಾಗಬೇಕು. ಓಂ ಶಾಂತಿ. |
ಓಂ ಶಾಂತಿ. ಗೀತೆಯ ಅರ್ಥವನ್ನಂತೂ ಮಕ್ಕಳು ತಿಳಿದುಕೊಂಡಿರಿ. ಅವರು ಭಲೆ ಕರೆಯುತ್ತಾರೆ ಆದರೆ ತಿಳಿದುಕೊಂಡಿಲ್ಲ. ಅವರು ನಮ್ಮ ತಂದೆಯಾಗಿದ್ದಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ವಾಸ್ತವದಲ್ಲಿ ನಿಮಗಷ್ಟೆ ತಂದೆಯಲ್ಲ, ಎಲ್ಲರಿಗೂ ತಂದೆಯಾಗಿದ್ದಾರೆ, ಇದನ್ನು ತಿಳಿದುಕೊಳ್ಳಬೇಕಾಗಿದೆ. ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರಿಗೂ ತಂದೆಯು ಪರಮಾತ್ಮನಾಗಿದ್ದಾರೆ. ಬಾಬಾ, ಬಾಬಾ ಎಂದು ಹೇಳುವುದರಿಂದ ಅವಶ್ಯವಾಗಿ ಆಸ್ತಿಯ ನೆನಪು ಬರುತ್ತದೆ. ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ, ಮಕ್ಕಳೇ ಈಗ ನೀವಾತ್ಮರು ಪತಿತರಾಗಿ ಬಿಟ್ಟಿದ್ದೀರಿ, ಈಗ ಆತ್ಮವನ್ನು ಪಾವನ ಮಾಡಿಕೊಳ್ಳಬೇಕಾಗಿದೆ. ಎಲ್ಲರ ತಂದೆಯಾಗಿದ್ದಾರೆ ಅಂದಮೇಲೆ ಮಕ್ಕಳು ಅವಶ್ಯವಾಗಿ ನಿರ್ವಿಕಾರಿ ಆಗಿರಬೇಕು. ಒಂದಾನೊಂದು ಸಮಯದಲ್ಲಿ ಎಲ್ಲರೂ ನಿರ್ವಿಕಾರಿಯಾಗಿದ್ದರು. ತಂದೆಯೇ ತಿಳಿಸುತ್ತಾರೆ - ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಎಲ್ಲರೂ ನಿರ್ವಿಕಾರಿಗಳಾಗಿದ್ದರು. ಇಷ್ಟೆಲ್ಲಾ ಮನುಷ್ಯಾತ್ಮರನ್ನು ನೋಡುತ್ತೀರಿ, ಅವರೆಲ್ಲರೂ ನಿರ್ವಿಕಾರಿಯಾಗಿದ್ದರು ಏಕೆಂದರೆ ಶರೀರವು ವಿನಾಶವಾಗಿ ಬಿಡುವುದು. ಬಾಕಿ ಆತ್ಮರು ಹೋಗಿ ನಿರಾಕಾರಿ ಪ್ರಪಂಚದಲ್ಲಿರುತ್ತಾರೆ. ಅಲ್ಲಿ ವಿಕಾರದ ಹೆಸರು-ಗುರುತು ಇರುವುದಿಲ್ಲ, ಶರೀರವೇ ಇರುವುದಿಲ್ಲ. ಅಲ್ಲಿಂದಲೇ ಎಲ್ಲಾ ಆತ್ಮರು ಈ ಪ್ರಪಂಚದಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಮೊಟ್ಟ ಮೊದಲು ಭಾರತವಾಸಿಗಳೇ ಬರುತ್ತಾರೆ. ಭಾರತದಲ್ಲಿ ಮೊಟ್ಟ ಮೊದಲು ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಆಗ ಮತ್ತೆಲ್ಲಾ ಧರ್ಮದವರು ನಿರಾಕಾರಿ ಪ್ರಪಂಚದಲ್ಲಿದ್ದರು, ಈ ಸಮಯದಲ್ಲಿ ಎಲ್ಲರೂ ಸಾಕಾರಿ ಪ್ರಪಂಚದಲ್ಲಿದ್ದಾರೆ. ಈಗ ತಂದೆಯು ನೀವು ಮಕ್ಕಳನ್ನು ನಿರ್ವಿಕಾರಿ ದೇವಿ-ದೇವತೆಗಳನ್ನಾಗಿ ಮಾಡಲು ನಿರ್ವಿಕಾರಿಗಳನ್ನಾಗಿ ಮಾಡುತ್ತಾರೆ. ನೀವು ದೇವಿ-ದೇವತೆಗಳು ಆಗಿ ಬಿಡುತ್ತೀರೆಂದರೆ ನಿಮಗಾಗಿ ಹೊಸ ಪ್ರಪಂಚ ಬೇಕು, ಹಳೆಯ ಪ್ರಪಂಚ ಸಮಾಪ್ತಿಯಾಗಬೇಕು. ಶಾಸ್ತ್ರಗಳಲ್ಲಿ ಮಹಾಭಾರತ ಯುದ್ಧವನ್ನೂ ತೋರಿಸಿದ್ದಾರೆ. ಐದು ಜನ ಪಾಂಡವರು ಮಾತ್ರ ಉಳಿದರು, ಅವರೂ ಸಹ ಪರ್ವತಗಳ ಮೇಲೆ ಹೋಗಿ ಕರಗಿದರು. ಯಾರೂ ಉಳಿಯಲಿಲ್ಲವೆಂದು ತೋರಿಸುತ್ತಾರೆ. ಒಳ್ಳೆಯದು, ಇಷ್ಟೆಲ್ಲಾ ಆತ್ಮರು ಎಲ್ಲಿ ಹೋದರು ಏಕೆಂದರೆ ಆತ್ಮವಂತೂ ವಿನಾಶ ಹೊಂದುವುದಿಲ್ಲ. ಅಂದಾಗ ನಿರಾಕಾರಿ, ನಿರ್ವಿಕಾರಿ ಪ್ರಪಂಚದಲ್ಲಿ ಹೋದರೆಂದು ಹೇಳುತ್ತಾರೆ. ತಂದೆಯು ವಿಕಾರಿ ಪ್ರಪಂಚದಿಂದ ನಿರಾಕಾರಿ, ನಿರ್ವಿಕಾರಿ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ತಂದೆಯಿಂದ ಅವಶ್ಯವಾಗಿ ಆಸ್ತಿ ಸಿಗಬೇಕಾಗಿದೆ. ಈಗ ದುಃಖವು ಹೆಚ್ಚಾಗಿ ಬಿಟ್ಟಿದೆ, ಈ ಸಮಯದಲ್ಲಿ ನಮಗೆ ಸುಖ-ಶಾಂತಿ ಎರಡೂ ಬೇಕಾಗಿದೆ. ಭಗವಂತನೊಂದಿಗೇ ಎಲ್ಲರೂ ಹೇ ಭಗವಂತ ನಮಗೆ ಸುಖ ಕೊಡಿ, ಶಾಂತಿ ಕೊಡಿ ಎಂದು ಬೇಡುತ್ತಾರೆ. ಪ್ರತಿಯೊಬ್ಬ ಮನುಷ್ಯನೂ ಹಣಕ್ಕಾಗಿ ಪುರುಷಾರ್ಥ ಮಾಡುತ್ತಾನೆ, ಹಣವಿದ್ದರೆ ಸುಖವಿದೆ. ನಿಮಗೆ ಬೇಹದ್ದಿನ ತಂದೆಯು ಬಹಳ ಹಣವನ್ನು ಕೊಡುತ್ತಾರೆ, ನೀವು ಸತ್ಯಯುಗದಲ್ಲಿ ಎಷ್ಟು ಧನವಂತರಾಗಿದ್ದಿರಿ, ವಜ್ರ ವೈಡೂರ್ಯಗಳ ಮಹಲುಗಳಿತ್ತು, ನಾವು ಪುನಃ ಬೇಹದ್ದಿನ ತಂದೆಯಿಂದ ಬೇಹದ್ದಿನ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳಲು ಬಂದಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚವಂತೂ ಸ್ವರ್ಗದಲ್ಲಿ ಬರುವುದಿಲ್ಲ, ತಂದೆಯೂ ಸಹ ಭಾರತದಲ್ಲಿಯೇ ಬರುತ್ತಾರೆ, ಭಾರತವಾಸಿಗಳೇ ಈ ಸಮಯದಲ್ಲಿ ನರಕವಾಸಿಗಳಾಗಿದ್ದಾರೆ. ಪುನಃ ತಂದೆಯು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಭಕ್ತಿಯಲ್ಲಿ ದುಃಖದ ಕಾರಣ ತಂದೆಯನ್ನು ಜನ್ಮ-ಜನ್ಮಾಂತರ ನೆನಪು ಮಾಡಿದೆವು. ಹೇ ಪರಮಪಿತ ಪರಮಾತ್ಮ, ಹೇ ಕಲ್ಯಾಣಕಾರಿ ದುಃಖಹರ್ತ-ಸುಖಕರ್ತ ತಂದೆಯೇ ಎಂದು ಅವರನ್ನು ನೆನಪು ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಅವರು ಬರುವರಲ್ಲವೆ. ಕೇವಲ ಹಾಗೆಯೇ ನೆನಪು ಮಾಡುವುದಿಲ್ಲ. ಭಗವಂತ ತಂದೆಯು ಬಂದು ಭಕ್ತರಿಗೆ ಫಲ ಕೊಡುವರೆಂದು ತಿಳಿಯುತ್ತಾರೆ ಅಂದಮೇಲೆ ಎಲ್ಲರಿಗೂ ಕೊಡುವರಲ್ಲವೆ. ಅವರು ಎಲ್ಲರಿಗೂ ತಂದೆಯಾಗಿದ್ದಾರಲ್ಲವೆ. |
ನಾವು ಸುಖಧಾಮದಲ್ಲಿ ಹೋಗುತ್ತೇವೆ ಉಳಿದೆಲ್ಲರೂ ಶಾಂತಿಧಾಮದಲ್ಲಿ ಹೋಗುವರು ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಸುಖಧಾಮದಲ್ಲಿದ್ದಾಗ ಇಡೀ ಸೃಷ್ಟಿಯಲ್ಲಿ ಸುಖ-ಶಾಂತಿಯಿರುತ್ತದೆ. ತಂದೆಗೆ ಮಕ್ಕಳ ಮೇಲೆ ಪ್ರೀತಿಯಿರುತ್ತದೆಯಲ್ಲವೆ. ಮತ್ತೆ ಮಕ್ಕಳಿಗೂ ಸಹ ತಂದೆ-ತಾಯಿಯ ಮೇಲೆ ಪ್ರೀತಿಯಿರುತ್ತದೆ. ನೀವು ಮಾತಾಪಿತಾ ನಾನು ನಿಮ್ಮ ಬಾಲಕ..... ಎಂದೂ ಹಾಡುತ್ತಾರೆ. ಶರೀರದ ಮಾತಾಪಿತರಿದ್ದರೂ ಸಹ ನೀವು ಮಾತಾಪಿತಾ ನಾನು ನಿಮ್ಮ ಬಾಲಕ, ನಿಮ್ಮ ಕೃಪೆಯಿಂದ ಅಪಾರ ಸುಖ ಸಿಗುವುದು ಎಂದು ಹಾಡುತ್ತಾರೆ. ಲೌಕಿಕ ತಂದೆ-ತಾಯಿಗೆ ಈ ರೀತಿ ಹೇಳುವುದಿಲ್ಲ. ಭಲೆ ಅವರೂ ಸಹ ಮಕ್ಕಳನ್ನು ಸಂಭಾಲನೆ ಮಾಡುತ್ತಾರೆ, ಪರಿಶ್ರಮ ಪಡುತ್ತಾರೆ, ಆಸ್ತಿಯನ್ನು ಕೊಡುತ್ತಾರೆ. ವಿವಾಹ ಮಾಡಿಸುತ್ತಾರೆ ಆದರೂ ಸಹ ಅಪಾರ ಸುಖವನ್ನು ಪಾರಲೌಕಿಕ ಮಾತಾಪಿತರೇ ಕೊಡುತ್ತಾರೆ. ನೀವೀಗ ಈಶ್ವರೀಯ ಧರ್ಮದ ಮಕ್ಕಳಾಗಿದ್ದೀರಿ, ಅವರೆಲ್ಲರೂ ಆಸುರೀ ಧರ್ಮದ ಮಕ್ಕಳಾಗಿದ್ದಾರೆ, ಸತ್ಯಯುಗದಲ್ಲಿ ಎಂದೂ ಸಹ ಯಾರೂ ಮಕ್ಕಳನ್ನು ದತ್ತು ತೆಗೆದುಕೊಳ್ಳುವುದಿಲ್ಲ. ಅಲ್ಲಿ ಸುಖವೇ ಸುಖವಿರುತ್ತದೆ, ದುಃಖದ ಹೆಸರೇ ಇರುವುದಿಲ್ಲ. ನಾನೀಗ ಪುನಃ ನಿಮಗೆ 21 ಪೀಳಿಗೆಗಳಿಗಾಗಿ ಸ್ವರ್ಗದ ಅಪಾರ ಸುಖವನ್ನು ಕೊಡಲು ಬಂದಿದ್ದೇನೆಂದು ತಂದೆಯು ತಿಳಿಸುತ್ತಾರೆ. |
ಬೇಹದ್ದಿನ ತಂದೆಯಿಂದ ನಾವು ಸ್ವರ್ಗದ ಅಪಾರ ಸುಖವನ್ನು ಪಡೆಯುತ್ತಿದ್ದೇವೆ ಎಂಬುದು ಈಗ ನೀವು ಮಕ್ಕಳಿಗೆ ತಿಳಿದಿದೆ. ಈ ದುಃಖದ ಬಂಧನಗಳೆಲ್ಲವೂ ಸಮಾಪ್ತಿಯಾಗುತ್ತದೆ. ಸತ್ಯಯುಗದಲ್ಲಿ ಸುಖದ ಸಂಬಂಧವಿರುತ್ತದೆ. ಕಲಿಯುಗದಲ್ಲಿ ದುಃಖದ ಬಂಧನವಿದೆ, ತಂದೆಯು ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಅವರಿಗೇ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ತಂದೆಯು ಬಂದು ಮಕ್ಕಳ ಸೇವೆ ಮಾಡುತ್ತಾರೆ, ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ನೀವು ನನ್ನನ್ನು ಅರ್ಧಕಲ್ಪ ಹೇ ತಂದೆಯೇ ಬಂದು ನನಗೆ ಸುಖ ನೀಡಿ ಎಂದು ಕರೆದಿರಿ. ನಾನೀಗ ಸುಖ ನೀಡಲು ಬಂದಿದ್ದೇನೆ ಆದ್ದರಿಂದ ಶ್ರೀಮತದಂತೆ ನಡೆಯಬೇಕಾಗಿದೆ ಎಂದು ತಂದೆಯು ಹೇಳುತ್ತಾರೆ. ಈ ಮೃತ್ಯುಲೋಕವೆಲ್ಲವೂ ಸಮಾಪ್ತಿಯಾಗಲಿವೆ, ಅಮರಲೋಕವು ಸ್ಥಾಪನೆಯಾಗುತ್ತದೆ. ಅಮರಪುರಿಯಲ್ಲಿ ಹೋಗುವುದಕ್ಕಾಗಿ ಅಮರನಾಥ ತಂದೆಯಿಂದ ನೀವು ಅಮರಕಥೆಯನ್ನು ಕೇಳುತ್ತೀರಿ, ಅಲ್ಲಿ ಯಾರೂ ಸಾಯುವುದಿಲ್ಲ. ಇಂತಹವರು ಸತ್ತು ಹೋದರು ಎಂಬ ಮಾತೂ ಸಹ ಬಾಯಿಂದ ಬರುವುದಿಲ್ಲ. ನಾನು ಈ ಜಡಜಡೀಭೂತ ಶರೀರವನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವು ಹೇಳುತ್ತದೆ, ಅದು ಒಳ್ಳೆಯದೇ ಆಯಿತಲ್ಲವೆ. ಅಲ್ಲಿ ಯಾವುದೇ ರೋಗಗಳಿರುವುದಿಲ್ಲ, ಮೃತ್ಯುಲೋಕದ ಹೆಸರಿರುವುದಿಲ್ಲ. ನಾನು ನಿಮ್ಮನ್ನು ಅಮರಪುರಿಯ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಅಲ್ಲಿ ನೀವು ರಾಜ್ಯ ಮಾಡುವಾಗ ಮೃತ್ಯುಲೋಕದ ನೆನಪೂ ಬರುವುದಿಲ್ಲ, ಕೆಳಗಿಳಿಯುತ್ತಾ-ಇಳಿಯುತ್ತಾ ನಾವು ಏನಾಗುತ್ತೇವೆ ಎಂಬುದೂ ಸಹ ತಿಳಿದಿರುವುದಿಲ್ಲ. ಒಂದುವೇಳೆ ತಿಳಿದಿದ್ದೇ ಆದರೆ ಸುಖವೇ ಮಾಯವಾಗುವುದು. ಇಲ್ಲಾದರೆ ನೀವು ಇಡೀ ಚಕ್ರವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಅವಶ್ಯವಾಗಿ ಸ್ವರ್ಗವಿತ್ತು, ಈಗ ನರಕವಾಗಿದೆ ಆದ್ದರಿಂದಲೇ ತಂದೆಯನ್ನು ಕರೆಯುತ್ತಾರೆ. ನೀವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೀರಿ, ಇಲ್ಲಿ ಬಂದು ಪಾತ್ರವನ್ನು ಅಭಿನಯಿಸುತ್ತೀರಿ. ಇಲ್ಲಿಂದ ನೀವು ಸಂಸ್ಕಾರವನ್ನು ತೆಗೆದುಕೊಂಡು ಮನೆಗೆ ಹೋಗುತ್ತೀರಿ. ಮತ್ತೆ ಅಲ್ಲಿಂದ ಬಂದು ಹೊಸ ಶರೀರವನ್ನು ಧಾರಣೆ ಮಾಡಿ ರಾಜ್ಯಭಾರ ಮಾಡುವಿರಿ. ಈಗ ನಿಮಗೆ ನಿರಾಕಾರಿ, ಆಕಾರಿ ಮತ್ತು ಸಾಕಾರಿ ಪ್ರಪಂಚದ ಸಮಾಚಾರವನ್ನು ತಿಳಿಸುತ್ತೇನೆ. ಸತ್ಯಯುಗದಲ್ಲಿ ಇದೇನೂ ತಿಳಿದಿರುವುದಿಲ್ಲ. ಅಲ್ಲಿ ಕೇವಲ ರಾಜ್ಯಭಾರ ಮಾಡುತ್ತೀರಿ. ನಾಟಕವನ್ನು ನೀವು ಈ ಸಮಯದಲ್ಲಿಯೇ ತಿಳಿದುಕೊಂಡಿದ್ದೀರಿ. ಸತ್ಯಯುಗಕ್ಕಾಗಿ ನಾವು ಪುರುಷಾರ್ಥ ಮಾಡುತ್ತಿದ್ದೇವೆ, ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುತ್ತೇವೆಂದು ನೀವಾತ್ಮರಿಗೆ ತಿಳಿದಿದೆ. ತಮ್ಮ ಕಲ್ಯಾಣ ಮತ್ತು ಅನ್ಯರ ಕಲ್ಯಾಣವನ್ನೂ ಮಾಡುತ್ತೀರಿ. ಇದರಿಂದ ಅವರ ಆಶೀರ್ವಾದವು ನಿಮ್ಮ ತಲೆಯ ಮೇಲೆ ಬರುತ್ತಿರುವುದು. ನಿಮ್ಮ ಯೋಜನೆ ನೋಡಿ ಹೇಗಿದೆ! ಈ ಸಮಯದಲ್ಲಿ ಎಲ್ಲರದೂ ತಮ್ಮ ತಮ್ಮದೇ ಆದ ಯೋಜನೆಯಿದೆ, ತಂದೆಯದೂ ಯೋಜನೆಯಿದೆ. ಅವರು ಜಲಾಶಯ ಇತ್ಯಾದಿಗಳನ್ನು ಕಟ್ಟಿಸುತ್ತಾರೆಂದರೆ ವಿದ್ಯುತ್ ಇತ್ಯಾದಿಗಳಾಗಿ ಎಷ್ಟೊಂದು ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಅವೆಲ್ಲವೂ ಆಸುರೀ ಯೋಜನೆಗಳಾಗಿವೆ ನಮ್ಮದು ಈಶ್ವರೀಯ ಯೋಜನೆಯಾಗಿದೆ. ಈಗ ಅವರ ಯೋಜನೆಯು ವಿಜಯವನ್ನು ಪಡೆಯುವರೇ? ಅವರು ಪರಸ್ಪರ ಹೊಡೆದಾಡುತ್ತಾರೆ, ಎಲ್ಲರ ಯೋಜನೆಗಳು ಮಣ್ಣು ಪಾಲಾಗುವುದು. ಅವರ್ಯಾರೂ ಸ್ವರ್ಗದ ಸ್ಥಾಪನೆ ಮಾಡುವುದಿಲ್ಲ, ಅವರು ಏನೆಲ್ಲವನ್ನೂ ಮಾಡುವರೋ ದುಃಖಕ್ಕಾಗಿಯೇ ಮಾಡುವರು, ತಂದೆಗೆ ಸ್ವರ್ಗವನ್ನಾಗಿ ಮಾಡುವ ಯೋಜನೆಯಿದೆ. ನರಕವಾಸಿ ಮನುಷ್ಯರು ನರಕದಲ್ಲಿಯೇ ಇರುವುದಕ್ಕಾಗಿ ಯೋಜನೆ ಮಾಡಿಕೊಳ್ಳುತ್ತಾರೆ. ತಂದೆಯದು ಸ್ವರ್ಗವನ್ನಾಗಿ ಮಾಡುವ ಯೋಜನೆಯು ನಡೆಯುತ್ತಿದೆ ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಿರಬೇಕು! ನಿಮ್ಮ ಕೃಪೆಯಿಂದ ಅಪಾರ ಸುಖ ಸಿಗುವುದೆಂದು ಹಾಡುತ್ತೀರಿ ಅಂದಮೇಲೆ ಅಂತಹ ಪುರುಷಾರ್ಥ ಮಾಡಿ ಬಿಡಬೇಕಲ್ಲವೆ. ತಂದೆಯು ಹೇಳುತ್ತಾರೆ - ಮಕ್ಕಳೇ, ಏನು ಬೇಕೋ ಅದನ್ನು ಪಡೆದುಕೊಳ್ಳಿ, ವಿಶ್ವದ ಮಹಾರಾಜರು, ರಾಜ-ರಾಣಿಯಾದರೂ ಆಗಿರಿ, ದಾಸ-ದಾಸಿಯಾದರೂ ಆಗಿರಿ. ಎಷ್ಟು ಪುರುಷಾರ್ಥ ಮಾಡುವಿರೋ ಅದು ನಿಮ್ಮ ಮೇಲಿದೆ. ತಂದೆಯು ಕೇವಲ ಇಷ್ಟನ್ನೇ ತಿಳಿಸುತ್ತಾರೆ, ಮೊದಲನೆಯದಾಗಿ ಪವಿತ್ರರಾಗಿರಿ ಮತ್ತು ಪ್ರತಿಯೊಬ್ಬರಿಗೆ ತಂದೆಯ ಪರಿಚಯವನ್ನು ಕೊಡುತ್ತಾ ಇರಿ. ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ನಿಮ್ಮದಾಗುವುದು. ತಂದೆಯನ್ನು ನೆನಪು ಮಾಡುವುದರಲ್ಲಿಯೇ ಮಾಯೆಯು ಬಹಳ ವಿಘ್ನಗಳನ್ನು ಹಾಕುತ್ತದೆ, ಬುದ್ಧಿಯೋಗವನ್ನು ತುಂಡರಿಸುತ್ತದೆ. ತಂದೆಯು ಹೇಳುತ್ತಾರೆ, ಎಷ್ಟು ನನ್ನನ್ನು ನೆನಪು ಮಾಡುವಿರೋ ಅಷ್ಟು ಪಾಪಗಳೂ ಭಸ್ಮವಾಗುವುವು ಮತ್ತು ಶ್ರೇಷ್ಠ ಪದವಿಯನ್ನೂ ಪಡೆಯುತ್ತೀರಿ ಆದ್ದರಿಂದ ಭಾರತದ ಪ್ರಾಚೀನ ಯೋಗವು ಪ್ರಸಿದ್ಧವಾಗಿದೆ. ತಂದೆಗೆ ಮುಕ್ತಿದಾತನೆಂತಲೂ ಹೇಳುತ್ತಾರೆ, ತಂದೆಯು 21 ಜನ್ಮಗಳಿಗಾಗಿ ನಿಮ್ಮನ್ನು ದುಃಖದಿಂದ ಬಿಡುಗಡೆ ಮಾಡುತ್ತಾರೆ. ಭಾರತವಾಸಿಗಳು ಸುಖಧಾಮದಲ್ಲಿದ್ದಾಗ ಉಳಿದೆಲ್ಲರೂ ಶಾಂತಿಧಾಮದಲ್ಲಿ ಇರುತ್ತಾರೆ. ನಿರಾಕಾರಿ ಪ್ರಪಂಚ ಮತ್ತು ಸಾಕಾರಿ ಪ್ರಪಂಚದ ಯೋಜನೆಯನ್ನು ತೋರಿಸಿದಾಗ ಅನ್ಯ ಧರ್ಮದವರು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೆ ಕೂಡಲೇ ಅರ್ಥವಾಗುತ್ತದೆ. ಸ್ವರ್ಗದಲ್ಲಿ ದೇವಿ-ದೇವತೆಗಳಿರುತ್ತಾರೆ, ಈ ಡ್ರಾಮಾದ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮಕ್ಕಳು ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿಯೇ ಬರುತ್ತೀರಿ, ಅಪಾರ ಸುಖವಂತೂ ಸತ್ಯಯುಗದಲ್ಲಿಯೇ ಸಿಗುತ್ತದೆ ನಂತರದಲ್ಲಿ ರಾವಣ ರಾಜ್ಯವಾದಾಗ ಅಲ್ಲಿ ಅಪಾರ ದುಃಖವಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯು ನಮಗೆ ಸತ್ಯ-ಸತ್ಯವಾದ ಕಥೆಯನ್ನು ತಿಳಿಸಿ ಅಮರಲೋಕದಲ್ಲಿ ಹೋಗಲು ಯೋಗ್ಯರನ್ನಾಗಿ ಮಾಡುತ್ತಾರೆ. ನೀವೀಗ ಇಂತಹ ಕರ್ಮವನ್ನು ಮಾಡುತ್ತೀರಿ ಆದ್ದರಿಂದಲೇ 21 ಜನ್ಮಗಳಿಗಾಗಿ ಧನವಂತರಾಗುತ್ತೀರಿ. ಧನವಾನ್ಭವ, ಪುತ್ರವಾನ್ಭವ ಎಂದೂ ಹೇಳುತ್ತಾರೆ, ಸತ್ಯಯುಗದಲ್ಲಿ ನಿಮಗೆ ಒಬ್ಬ ಮಗ, ಒಬ್ಬ ಮಗಳು ಇರುತ್ತಾರೆ. ಆಯುಷ್ಯವಾನ್ಭವ, ನಿಮ್ಮ ಆಯಸ್ಸು 150 ವರ್ಷಗಳಿರುವುದು. ಎಂದೂ ಅಕಾಲ ಮೃತ್ಯುವಾಗುವುದಿಲ್ಲ, ಇದನ್ನು ತಂದೆಯೇ ತಿಳಿಸುತ್ತಾರೆ. ನೀವು ಅರ್ಧಕಲ್ಪ ನನ್ನನ್ನು ಕರೆಯುತ್ತಾ ಬಂದಿದ್ದೀರಿ, ಸನ್ಯಾಸಿಗಳು ಈ ರೀತಿ ಹೇಳುವರೇ? ಅವರಿಗೇನು ಗೊತ್ತಿದೆ! ತಂದೆಯು ಕುಳಿತು ಎಷ್ಟು ಪ್ರೀತಿಯಿಂದ ತಿಳಿಸುತ್ತಾರೆ, ಮಕ್ಕಳೇ ಇದೊಂದು ಜನ್ಮದಲ್ಲಿ ಪಾವನರಾಗುತ್ತೀರೆಂದರೆ 21 ಜನ್ಮಗಳು ಪಾವನ ಪ್ರಪಂಚದ ಮಾಲೀಕರಾಗುತ್ತೀರಿ. ಪವಿತ್ರತೆಯಲ್ಲಿ ಸುಖವಿದೆಯಲ್ಲವೆ. ನೀವು ಪವಿತ್ರ ದೈವೀ ಧರ್ಮದವರಾಗಿದ್ದಿರಿ, ಈಗ ಅಪವಿತ್ರರಾಗಿ ದುಃಖದಲ್ಲಿ ಬಂದಿದ್ದೀರಿ. ಸ್ವರ್ಗದಲ್ಲಿ ನಿರ್ವಿಕಾರಿಗಳಾಗಿದ್ದಿರಿ, ಈಗ ವಿಕಾರಿಗಳಾಗಿರುವ ಕಾರಣ ನರಕದಲ್ಲಿ ದುಃಖಿಯಾಗಿದ್ದೀರಿ. ತಂದೆಯಂತೂ ಪುರುಷಾರ್ಥ ಮಾಡಿಸುತ್ತಾರಲ್ಲವೆ. ಸ್ವರ್ಗದ ಮಹಾರಾಜ-ಮಹಾರಾಣಿಯರಾಗಿರಿ ಎಂದು. ನಿಮ್ಮ ಮಮ್ಮಾ-ಬಾಬಾ ಆ ರೀತಿ ಆಗುತ್ತಾರೆಂದಮೇಲೆ ನೀವೂ ಸಹ ಪುರುಷಾರ್ಥ ಮಾಡಿರಿ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ. ತಂದೆಯು ಯಾರಿಗೂ ಕಾಲಿಗೆ ಬೀಳಲು ಹೇಳುವುದಿಲ್ಲ. |
ತಂದೆಯು ತಿಳಿಸುತ್ತಾರೆ - ನಾನು ನಿಮಗೆ ವಜ್ರ ವೈಡೂರ್ಯಗಳ ಮಹಲುಗಳನ್ನು ಕೊಟ್ಟೆನು, ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು. ನಂತರ ಅರ್ಧಕಲ್ಪ ನೀವು ಭಕ್ತಿಮಾರ್ಗದಲ್ಲಿ ಹಣೆಯನ್ನು ಸವೆಸುತ್ತಾ ಬಂದಿರಿ, ಹಣವನ್ನೂ ಕೊಡುತ್ತಾ ಬಂದಿರಿ. ಆ ಚಿನ್ನ, ವಜ್ರಗಳ ಮಹಲುಗಳು ಎಲ್ಲಿ ಹೋಯಿತು? ನೀವು ಸ್ವರ್ಗದಿಂದ ಇಳಿಯುತ್ತಾ-ಇಳಿಯುತ್ತಾ ನರಕದಲ್ಲಿ ಬಂದು ಬಿಟ್ಟಿದ್ದೀರಿ. ನಾನೀಗ ಪುನಃ ನಿಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತೇನೆ, ನಿಮಗೆ ಯಾವುದೇ ಕಷ್ಟ ಕೊಡುವುದಿಲ್ಲ. ಕೇವಲ ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಭಲೆ ಒಂದು ಪೈಸೆಯನ್ನೂ ಕೊಡಬೇಡಿ. ತಿನ್ನಿರಿ, ಕುಡಿಯಿರಿ, ಓದಿರಿ, ರಿಫ್ರೆಷ್ ಆಗಿ ಇಲ್ಲಿಂದ ಹೋಗಿರಿ. ತಂದೆಯು ಕೇವಲ ಓದಿಸುತ್ತಾರೆ, ವಿದ್ಯೆಗೆ ಹಣವೇನನ್ನೂ ತೆಗೆದುಕೊಳ್ಳುವುದಿಲ್ಲ. ಬಾಬಾ, ನಾವು ಅವಶ್ಯವಾಗಿ ಕೊಡುತ್ತೇವೆ, ಇಲ್ಲದಿದ್ದರೆ ಅಲ್ಲಿ ನಮಗೆ ಮಹಲುಗಳು ಹೇಗೆ ಸಿಗುವವು ಎಂದು ಹೇಳುತ್ತಾರೆ. ಭಕ್ತಿಮಾರ್ಗದಲ್ಲಿಯೂ ಸಹ ನೀವು ಈಶ್ವರಾರ್ಥವಾಗಿ ದಾನವನ್ನು ಬಡವರಿಗೆ ನೀಡುತ್ತಿದ್ದಿರಿ. ಫಲವನ್ನೂ ಸಹ ಈಶ್ವರನೇ ಕೊಡುವರು, ಬಡವರು ಕೊಡುವರೇ? ಆದರೆ ಅದು ಒಂದು ಜನ್ಮಕ್ಕಾಗಿ ಸಿಗುವುದು. ಈಗಂತೂ ಬಾಬಾ, ತಾವು ಡೈರೆಕ್ಟ್ ಬಂದಿರುವಿರಿ, ನಾವು ಈ ಸ್ವಲ್ಪ ಹಣವನ್ನು ಕೊಡುತ್ತೇವೆ. ಇದಕ್ಕಾಗಿ ತಾವು ನಮಗೆ 21 ಜನ್ಮಗಳಿಗಾಗಿ ಸ್ವರ್ಗದಲ್ಲಿ ಕೊಡಬೇಕು ಎಂದು ಹೇಳುತ್ತಾರೆ. ತಂದೆಯು ಎಲ್ಲರನ್ನೂ ಸಾಹುಕಾರರನ್ನಾಗಿ ಮಾಡಿ ಬಿಡುತ್ತಾರೆ. ಹಣ ಕೊಡುತ್ತೀರೆಂದರೆ ನಿಮಗಾಗಿಯೇ ಇರುವುದಕ್ಕಾಗಿ ಮನೆಗಳನ್ನು ಕಟ್ಟಿಸುತ್ತಾರೆ, ಇಲ್ಲದಿದ್ದರೆ ಇದೆಲ್ಲವೂ ಹೇಗಾಗುವುದು! ಮಕ್ಕಳೇ ಈ ಮನೆ ಇತ್ಯಾದಿಗಳನ್ನು ಕಟ್ಟಿಸುತ್ತಾರಲ್ಲವೆ. ನಾನಂತೂ ಇದರಲ್ಲಿ ಇರುವುದಿಲ್ಲ, ನೀವೇ ಇರುತ್ತೀರೆಂದರೆ ಶಿವ ತಂದೆಯು ಹೇಳುತ್ತಾರೆ. ಶಿವ ತಂದೆಯು ನಿರಾಕಾರ, ದಾತನಾಗಿದ್ದಾರಲ್ಲವೆ. ನೀವು ಕೊಡುತ್ತೀರೆಂದರೆ ನಿಮಗೆ 21 ಜನ್ಮಗಳಿಗಾಗಿ ಫಲ ಕೊಡುತ್ತೇನೆ, ನಾನಂತೂ ನಿಮ್ಮ ಸ್ವರ್ಗದಲ್ಲಿಯೇ ಬರುವುದಿಲ್ಲ. ನಾನು ನಿಮ್ಮನ್ನು ನರಕದಿಂದ ಹೊರ ತೆಗೆಯುವುದಕ್ಕಾಗಿಯೇ ನರಕದಲ್ಲಿಯೇ ಬರಬೇಕಾಗುತ್ತದೆ. ನಿಮ್ಮ ಗುರುಗಳಂತೂ ಇನ್ನೂ ಗುಣಿಯಲ್ಲಿಯೇ ಬೀಳಿಸುತ್ತಾರೆ, ಅವರ್ಯಾರೂ ಸದ್ಗತಿಯನ್ನು ನೀಡುವುದಿಲ್ಲ. ಈಗ ಪವಿತ್ರ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ. ಇಂತಹ ತಂದೆಯನ್ನು ಏಕೆ ನೆನಪು ಮಾಡುವುದಿಲ್ಲ! ತಂದೆಯು ಹೇಳುತ್ತಾರೆ - ಮಕ್ಕಳೇ, ಭಲೆ ಹಣವೇನನ್ನೂ ಕೊಡಬೇಡಿರಿ ಕೇವಲ ನನ್ನನ್ನು ನೆನಪು ಮಾಡಿರಿ ಆಗ ಪಾಪಗಳು ನಾಶವಾಗುತ್ತವೆ ಮತ್ತು ನನ್ನ ಬಳಿ ಬಂದು ಬಿಡುತ್ತೀರಿ. ಈ ಮನೆ ಇತ್ಯಾದಿಗಳನ್ನು ನೀವು ಮಕ್ಕಳು ತಮಗಾಗಿಯೇ ಮಾಡಿಸಿದ್ದೀರಿ. ಇಲ್ಲಿ ಹಿಡಿ ಅವಲಕ್ಕಿಯ ಗಾಯನವಿದೆಯಲ್ಲವೆ. ಬಡವರು ತಮ್ಮ ಶಕ್ತಿಯನುಸಾರ ಎಷ್ಟು ಕೊಡುವರೋ ಅಷ್ಟು ಅವರದೂ ಭಾಗ್ಯವಾಗುತ್ತದೆ. ಸಾಹುಕಾರರದು ಎಷ್ಟು ಪದವಿಯೋ ಅಷ್ಟು ಬಡವರಿಗೂ ಸಿಗುವುದು. ಇಬ್ಬರದೂ ಒಂದೇ ಆಗುತ್ತದೆ. ಬಡವರ ಬಳಿ ಇರುವುದೇ 100 ರೂಪಾಯಿಗಳು, ಅದರಲ್ಲಿ ಅವರು ಒಂದು ರೂಪಾಯಿಯನ್ನು ಕೊಡುವರು. ಸಾಹುಕಾರರಿಗೆ ಬಹಳಷ್ಟಿರುವುದು, ಅದರಿಂದ ಅವರು 100 ರೂಪಾಯಿಗಳನ್ನು ಕೊಟ್ಟರೆ ಇಬ್ಬರಿಗೂ ಸರಿ ಸಮಾನ ಫಲವು ದೊರೆಯುವುದು ಆದ್ದರಿಂದ ತಂದೆಗೆ ಬಡವರ ಬಂಧುವೆಂದು ಹೇಳಲಾಗುತ್ತದೆ. ಎಲ್ಲದಕ್ಕಿಂತ ಭಾರತವು ಬಡ ದೇಶವಾಗಿದೆ. ನಾನೇ ಬಂದು ಸಾಹುಕಾರರನ್ನಾಗಿ ಮಾಡುತ್ತೇನೆ. ಬಡವರಿಗೇ ದಾನ ಮಾಡಲಾಗುತ್ತದೆಯಲ್ಲವೆ. ತಂದೆಯು ಎಷ್ಟು ಸ್ಪಷ್ಟ ಮಾಡಿ ತಿಳಿಸುತ್ತಾರೆ, ಮಕ್ಕಳೇ ಮೃತ್ಯು ಈಗ ಸನ್ಮುಖದಲ್ಲಿ ನಿಂತಿದೆ, ಈಗ ಬೇಗ ಬೇಗನೆ ಪುರುಷಾರ್ಥ ಮಾಡಿರಿ. ನೆನಪಿನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಿ, ಅತಿ ಪ್ರಿಯ ತಂದೆಯನ್ನು ಎಷ್ಟು ನೆನಪು ಮಾಡುವಿರೋ ಅಷ್ಟು ಆಸ್ತಿಯು ಸಿಗುವುದು. ನೀವು ಬಹಳ ಧನವಂತರಾಗುವಿರಿ. ತಂದೆಯು ನೀವು ತಲೆ ಬಾಗಿಸಿರಿ, ಜಾತ್ರೆ ಇತ್ಯಾದಿಗಳಿಗೆ ಹೋಗಿರಿ ಎಂದು ನಿಮಗೆ ಹೇಳುವುದಿಲ್ಲ. ಮನೆಯಲ್ಲಿ ಕುಳಿತೇ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿರಿ ಸಾಕು. ತಂದೆಯು ಬಿಂದುವಾಗಿದ್ದಾರೆ, ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ. ಪರಮ ಆತ್ಮನು ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠನಾಗಿದ್ದಾರೆ. ತಂದೆಯು ಹೇಳುತ್ತಾರೆ - ನಾನೂ ಬಿಂದುವಾಗಿದ್ದೇನೆ, ನೀವೂ ಬಿಂದುವಾಗಿದ್ದೀರಿ. ಕೇವಲ ಭಕ್ತಿಮಾರ್ಗಕ್ಕಾಗಿ ನನ್ನದು ದೊಡ್ಡ ರೂಪವಾಗಿ ಮಾಡಿ ಇಟ್ಟಿದ್ದಾರೆ, ಇಲ್ಲದಿದ್ದರೆ ಬಿಂದುವಿಗೆ ಹೇಗೆ ಪೂಜೆ ಮಾಡುವುದು! ಲಿಂಗಕ್ಕೆ ಶಿವ ತಂದೆಯೆಂತಲೂ ಹೇಳುತ್ತಾರೆ, ಯಾರು ಹೇಳಿದರು? ಶಿವ ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆಂದು ನೀವೀಗ ಹೇಳುತ್ತೀರಿ. ಆಶ್ಚರ್ಯವಲ್ಲವೆ. 84 ಜನ್ಮಗಳ ಚಕ್ರವು ಸುತ್ತುತ್ತಿರುತ್ತದೆ. ನೀವು ಅನೇಕ ಬಾರಿ ಆಸ್ತಿಯನ್ನು ತೆಗೆದುಕೊಂಡಿದ್ದೀರಿ ಮತ್ತು ತೆಗೆದುಕೊಳ್ಳುತ್ತಲೇ ಇರುತ್ತೀರಿ. ತಂದೆಯು ಎಷ್ಟು ಚೆನ್ನಾಗಿ ತಿಳಿಸಿಕೊಡುತ್ತಾರೆ! ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮೃತ್ಯು ಸನ್ಮುಖದಲ್ಲಿದೆ, ಆದ್ದರಿಂದ ಈಗ ನೆನಪಿನ ತೀವ್ರತೆಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಸತ್ಯಯುಗೀ ಪ್ರಪಂಚದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುವ ಸಂಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. |
2. ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಿ ಆಶೀರ್ವಾದವನ್ನು ಪಡೆಯಬೇಕಾಗಿದೆ. ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. |
ಓಂ ಶಾಂತಿ. ತಂದೆಯು ತಿಳಿಸುತ್ತಾರೆ - ಮಧುರ ಮಕ್ಕಳೇ, ನೀವು ಶಿವ ತಂದೆಯನ್ನು ಅರಿತಿದ್ದೀರಿ ಅಂದಮೇಲೆ ಮತ್ತೆ ಈ ಗೀತೆಯನ್ನು ಹಾಡುವುದು ಹೇಗೆ ಭಕ್ತಿಮಾರ್ಗವಾಗಿ ಬಿಡುತ್ತದೆ. ಭಕ್ತಿಮಾರ್ಗದವರು ಶಿವಾಯ ನಮಃ ಎಂತಲೂ ಹೇಳುತ್ತಾರೆ, ಮಾತಾಪಿತಾ ಎಂತಲೂ ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಶಿವ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗಬೇಕು, ನೀವು ಮಕ್ಕಳಿಗಂತೂ ತಂದೆಯು ಸಿಕ್ಕಿದ್ದಾರೆ. ಅವರಿಂದ ಆಸ್ತಿಯು ಸಿಗುತ್ತಿದೆ, ಆದ್ದರಿಂದ ತಂದೆಯನ್ನು ನೆನಪು ಮಾಡುತ್ತೀರಿ. ನಿಮಗೆ ಶಿವ ತಂದೆಯು ಸಿಕ್ಕಿದ್ದಾರೆ, ಪ್ರಪಂಚದವರಿಗೆ ಸಿಕ್ಕಿಲ್ಲ. ಯಾರಿಗೆ ಸಿಕ್ಕಿದ್ದಾರೆಯೋ ಅವರೂ ಸಹ ಒಳ್ಳೆಯ ರೀತಿಯಲ್ಲಿ ನಡೆಯುವುದಿಲ್ಲ. ತಂದೆಯ ಆದೇಶವು ಬಹಳ ಮಧುರವಾಗಿದೆ – ಆತ್ಮಾಭಿಮಾನಿ ಭವ, ಆತ್ಮಗಳೊಂದಿಗೆ ಮಾತನಾಡುತ್ತಾರೆ. ಆತ್ಮಾಭಿಮಾನಿ ತಂದೆಯು ಆತ್ಮಾಭಿಮಾನಿ ಮಕ್ಕಳೊಂದಿಗೆ ಮಾತನಾಡುತ್ತಾರೆ, ತಂದೆಯು ಒಬ್ಬರೇ ಆಗಿದ್ದಾರೆ, ಅವರು ಮಧುಬನದಲ್ಲಿ ನೀವು ಮಕ್ಕಳ ಜೊತೆ ಕುಳಿತಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ತಂದೆಯು ಓದಿಸುವುದಕ್ಕಾಗಿಯೇ ಬಂದಿದ್ದಾರೆ, ಈ ವಿದ್ಯೆಯನ್ನು ಶಿವ ತಂದೆಯ ವಿನಃ ಯಾರೂ ಓದಿಸಲು ಸಾಧ್ಯವಿಲ್ಲ. ಬ್ರಹ್ಮನಾಗಲಿ, ವಿಷ್ಣುವಾಗಲಿ ಓದಿಸುವುದಿಲ್ಲ. ತಂದೆಯೇ ಬಂದು ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ, ಅಮರ ಕಥೆಯನ್ನು ತಿಳಿಸುತ್ತಾರೆ. ಅದನ್ನು ಇಲ್ಲಿಯೇ ತಿಳಿಸುವರಲ್ಲವೆ. ಅಮರನಾಥದಲ್ಲಿ ತಿಳಿಸುವುದಿಲ್ಲ, ಈ ಅಮರಕಥೆಯೇ ಸತ್ಯ ನಾರಾಯಣನ ಕಥೆಯಾಗಿದೆ. ನಾನು ನಿಮಗೆ ಇಲ್ಲಿಯೇ ತಿಳಿಸುತ್ತೇನೆ ಬಾಕಿ ಇವೆಲ್ಲವೂ ಭಕ್ತಿಮಾರ್ಗದ ಪೆಟ್ಟುಗಳಾಗಿವೆ. ಸರ್ವರ ಸದ್ಗತಿದಾತ ರಾಮನು ಒಬ್ಬ ನಿರಾಕಾರನೇ ಆಗಿದ್ದಾರೆ, ಅವರೇ ಪತಿತ-ಪಾವನ ಜ್ಞಾನ ಸಾಗರ, ಶಾಂತಿಯ ಸಾಗರನಾಗಿದ್ದಾರೆ. ಯಾವಾಗ ವಿನಾಶದ ಸಮಯವಾಗುವುದು ಆಗಲೇ ಅವರು ಬರುತ್ತಾರೆ. ಇಡೀ ಜಗತ್ತಿನ ಗುರು ಒಬ್ಬ ಪರಮಪಿತ ಪರಮಾತ್ಮನೇ ಆಗಲು ಸಾಧ್ಯ, ಅವರು ನಿರಾಕಾರನಾಗಿದ್ದಾರಲ್ಲವೆ. ದೇವತೆಗಳಿಗೂ ಮನುಷ್ಯರೆಂದು ಹೇಳಲಾಗುತ್ತದೆ ಆದರೆ ಅವರು ದೈವೀ ಗುಣವಂತ ಮನುಷ್ಯರಾಗಿದ್ದಾರೆ ಆದ್ದರಿಂದ ಅವರಿಗೆ ದೇವತೆಗಳೆಂದು ಹೇಳಲಾಗುತ್ತದೆ. ನಿಮಗೆ ಈಗ ಜ್ಞಾನವು ಸಿಕ್ಕಿದೆ, ಜ್ಞಾನ ಮಾರ್ಗದಲ್ಲಿ ಸ್ಥಿತಿಯನ್ನು ಬಹಳ ಶಕ್ತಿಶಾಲಿಯಾಗಿ ಇಟ್ಟುಕೊಳ್ಳಬೇಕಾಗಿದೆ. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಬೇಕಾಗಿದೆ, ವಿದೇಹಿಗಳಾಗಬೇಕಾಗಿದೆ ಮತ್ತೆ ದೇಹದೊಂದಿಗೆ ಪ್ರೀತಿಯನ್ನೇಕೆ ಮಾಡುವುದು! ತಂದೆಯು ನಿಮಗೆ ತಿಳಿಸುತ್ತಾರೆ – ಶಿವ ತಂದೆಯನ್ನು ನೆನಪು ಮಾಡಿರಿ, ನಂತರ ಇವರ ಬಳಿ ಬನ್ನಿರಿ. ಇವರು ದಾದಾರವರೊಂದಿಗೆ ಮಿಲನ ಮಾಡಲು ಹೋಗುತ್ತಾರೆಂದು ಮನುಷ್ಯರು ತಿಳಿಯುತ್ತಾರೆ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯನ್ನು ನೆನಪು ಮಾಡಿ, ನಾವು ಅವರೊಂದಿಗೆ ಮಿಲನ ಮಾಡುತ್ತೇವೆ. ಪರಮಧಾಮದಲ್ಲಂತೂ ಇರುವುದೇ ನಿರಾಕಾರಿ ಆತ್ಮರು, ಬಿಂದುಗಳು. ಬಿಂದುವಿನೊಂದಿಗೆ ಮಿಲನ ಮಾಡಲು ಸಾಧ್ಯವಿಲ್ಲ ಅಂದಮೇಲೆ ಶಿವ ತಂದೆಯೊಂದಿಗೆ ಹೇಗೆ ಮಿಲನ ಮಾಡುತ್ತೀರಿ! ಆದ್ದರಿಂದ ಇಲ್ಲಿ ತಿಳಿಸಲಾಗುತ್ತದೆ - ಹೇ ಆತ್ಮರೇ, ತಮ್ಮನ್ನು ಆತ್ಮನೆಂದು ತಿಳಿದು ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಿ, ನಾವು ಶಿವ ತಂದೆಯೊಂದಿಗೆ ಮಿಲನ ಮಾಡುತ್ತೇವೆ. ಇದು ಬಹಳ ಗುಹ್ಯ ರಹಸ್ಯವಲ್ಲವೆ. ಕೆಲವರಿಗೆ ಶಿವ ತಂದೆಯ ನೆನಪು ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಸದಾ ಶಿವ ತಂದೆಯನ್ನೇ ನೆನಪು ಮಾಡಿರಿ. ಶಿವ ತಂದೆಯು ತಮ್ಮೊಂದಿಗೆ ಮಿಲನ ಮಾಡಲು ಬರುತ್ತಾರೆ. ಬಾಬಾ, ನಾವು ನಿಮ್ಮವರಾಗಿದ್ದೇವೆ. ತಂದೆಯು ಇವರಲ್ಲಿ ಬಂದು ಜ್ಞಾನವನ್ನು ತಿಳಿಸುತ್ತಾರೆ, ಅವರೂ ಸಹ ನಿರಾಕಾರ ಆತ್ಮನಾಗಿದ್ದಾರೆ, ನೀವೂ ಆತ್ಮರಾಗಿದ್ದೀರಿ. ಒಬ್ಬ ತಂದೆಯೇ ಮಕ್ಕಳಿಗೆ ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಅಂದಮೇಲೆ ಬುದ್ಧಿಯಿಂದ ನೆನಪು ಮಾಡಬೇಕಾಗಿದೆ - ನಾವು ತಂದೆಯ ಬಳಿ ಬಂದಿದ್ದೇವೆ. ತಂದೆಯು ಈ ಪತಿತ ಶರೀರದಲ್ಲಿ ಬಂದಿದ್ದಾರೆ, ನಾವು ಸನ್ಮುಖದಲ್ಲಿ ಬರುತ್ತಿದ್ದಂತೆಯೇ ನಿಶ್ಚಯ ಮಾಡಿಕೊಳ್ಳುತ್ತೇವೆ, ಬಾಬಾ ನಾವು ನಿಮ್ಮವರಾಗಿದ್ದೇವೆ ಎಂದು. ಮುರುಳಿಗಳಲ್ಲಿಯೂ ಇದನ್ನೇ ಕೇಳುತ್ತೀರಿ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವವು. |
ನೀವು ತಿಳಿದುಕೊಂಡಿದ್ದೀರಿ, ಇವರು ಅದೇ ಪತಿತ-ಪಾವನ ತಂದೆಯಾಗಿದ್ದಾರೆ. ಸತ್ಯ-ಸತ್ಯವಾದ ಸದ್ಗುರು ಅವರಾಗಿದ್ದಾರೆ. ನೀವು ಪಾಂಡವರದು ಈಗ ಪರಮಪಿತ ಪರಮಾತ್ಮನೊಂದಿಗೆ ಪ್ರೀತಿಬುದ್ಧಿಯಿದೆ. ಉಳಿದೆಲ್ಲರದೂ ಯಾರಾದರೊಬ್ಬರ ಜೊತೆ ವಿಪರೀತ ಬುದ್ಧಿಯಿದೆ. ಯಾರು ಶಿವ ತಂದೆಯ ಮಕ್ಕಳಾಗುವರೋ ಅವರಿಗಂತೂ ಖುಷಿಯ ನಶೆಯು ಬಹಳ ಜೋರಾಗಿ ಏರಿರಬೇಕು. ಎಷ್ಟು ಸಮಯವು ಸಮೀಪ ಬರುತ್ತದೆಯೋ ಅಷ್ಟು ಖುಷಿಯಾಗುತ್ತದೆ. ಈಗ ನಮ್ಮ 84 ಜನ್ಮಗಳು ಮುಕ್ತಾಯವಾಯಿತು. ಈಗ ಇದು ಅಂತಿಮ ಜನ್ಮವಾಗಿದೆ, ನಾವು ನಮ್ಮ ಮನೆಗೆ ಹೋಗುತ್ತೇವೆ. ಈ ಏಣಿಯ ಚಿತ್ರವು ಬಹಳ ಚೆನ್ನಾಗಿದೆ, ಇದರಲ್ಲಿ ಸ್ಪಷ್ಟವಾಗಿದೆ ಅಂದಾಗ ಮಕ್ಕಳು ಇಡೀ ದಿನ ಬುದ್ಧಿಯನ್ನು ಓಡಿಸಬೇಕು. ಚಿತ್ರಗಳನ್ನು ಮಾಡಿಸುವವರಂತೂ ಬಹಳ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಯಾರು ಮುಖ್ಯಸ್ಥರಿದ್ದಾರೆಯೋ ಅವರಿಗೇ ಇದರ ಬಗ್ಗೆ ವಿಚಾರ ನಡೆಯಬೇಕು. ನೀವಂತೂ ಛಾಲೆಂಜ್ ಮಾಡುತ್ತೀರಿ - ಸತ್ಯಯುಗೀ ಶ್ರೇಷ್ಠಾಚಾರಿ ದೈವೀ ರಾಜ್ಯದಲ್ಲಿ 9 ಲಕ್ಷ ಮಂದಿ ಇರುತ್ತಾರೆ. ಇದಕ್ಕೆ ಸಾಕ್ಷಿಯೇನು ಎಂದು ಯಾರಾದರೂ ಕೇಳುತ್ತಾರೆ ಆಗ ಹೇಳಿರಿ, ಇದಂತೂ ತಿಳುವಳಿಕೆಯ ಮಾತಲ್ಲವೆ. ಸತ್ಯಯುಗದಲ್ಲಿ ಚಿಕ್ಕ ವೃಕ್ಷವೇ ಇರುವುದು. ಒಂದೇ ಧರ್ಮ ಇರುವುದು ಅಂದಮೇಲೆ ಜನಸಂಖ್ಯೆಯು ಕಡಿಮೆಯಿರುತ್ತದೆ. ಏಣಿಯ ಚಿತ್ರದಲ್ಲಿ ಇದರ ಸಂಪೂರ್ಣ ಜ್ಞಾನವು ಬಂದು ಬಿಡುತ್ತದೆ. ಹೇಗೆ ಕುಂಭಕರ್ಣನ ಚಿತ್ರವಿರುತ್ತದೆ, ಇದನ್ನು ಈ ರೀತಿ ಮಾಡಿಸಬೇಕು - ಬಿ.ಕೆ.ಗಳು ಜ್ಞಾನಾಮೃತವನ್ನು ಕುಡಿಸುತ್ತಾರೆ. ಅವರು ವಿಷ (ವಿಕಾರ) ವನ್ನೇ ಬಯಸುತ್ತಾರೆ. ತಂದೆಯು ಮುರುಳಿಯಲ್ಲಿ ಎಲ್ಲಾ ಸೂಚನೆಗಳನ್ನೂ ನೀಡುತ್ತಿರುತ್ತಾರೆ. ಪ್ರತಿಯೊಂದು ಚಿತ್ರದ ತಿಳುವಳಿಕೆಯು ಬಹಳ ಚೆನ್ನಾಗಿದೆ, ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಹೇಳಿರಿ - ಈ ಭಾರತವು ಸ್ವರ್ಗವಾಗಿತ್ತು, ಒಂದು ಧರ್ಮವಿತ್ತು ಅಂದಮೇಲೆ ಎಷ್ಟು ಜನ ಸಂಖ್ಯೆಯಿರಬಹುದು, ಈಗ ಎಷ್ಟು ದೊಡ್ಡ ವೃಕ್ಷವಾಗಿ ಬಿಟ್ಟಿದೆ, ಇದರ ವಿನಾಶವಾಗಲಿದೆ. ಹಳೆಯ ಸೃಷ್ಟಿಯನ್ನು ಪರಿವರ್ತನೆ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ನಾಲ್ಕೈದು ಚಿತ್ರಗಳು ಮುಖ್ಯವಾಗಿದೆ, ಇವುಗಳಿಂದ ಮನುಷ್ಯರಿಗೆ ಬಹುಬೇಗನೆ ಬಾಣವು ನಾಟಿ ಬಿಡುವುದು. ಡ್ರಾಮಾನುಸಾರ ದಿನ-ಪ್ರತಿದಿನ ಜ್ಞಾನದ ಮಾತುಗಳು ಗುಹ್ಯವಾಗುತ್ತಾ ಹೋಗುತ್ತವೆ ಆದ್ದರಿಂದ ಚಿತ್ರಗಳಲ್ಲಿಯೂ ಬದಲಾವಣೆಯಾಗುವುದು. ಮಕ್ಕಳ ಬುದ್ಧಿಯಲ್ಲಿಯೂ ಬದಲಾವಣೆಯಾಗುತ್ತದೆ. ಮೊದಲು ಶಿವ ತಂದೆಯು ಬಿಂದುವಾಗಿದ್ದಾರೆ ಎಂಬುದು ತಿಳಿದುಕೊಂಡಿದ್ದೀರಿ! ಮೊದಲೇ ಏಕೆ ತಿಳಿಸಲಿಲ್ಲ ಎಂದು ಹೇಳುವಂತಿಲ್ಲ. ತಂದೆಯು ತಿಳಿಸುತ್ತಾರೆ - ಇವೆಲ್ಲಾ ಮಾತುಗಳನ್ನೂ ಮೊದಲೇ ತಿಳಿಸಲಾಗುವುದಿಲ್ಲ. ತಂದೆಯು ಜ್ಞಾನ ಸಾಗರನಾಗಿದ್ದಾರೆ ಅಂದಮೇಲೆ ಜ್ಞಾನವನ್ನು ಕೊಡುತ್ತಲೇ ಇರುತ್ತಾರೆ, ಅದರಲ್ಲಿ ತಿದ್ದು ಪಡಿ ಆಗುತ್ತಾ ಇರುತ್ತದೆ. ಮೊದಲೇ ತಿಳಿಸುವರೇನು! ಮೊದಲೇ ತಿಳಿಸಿಬಿಟ್ಟರೆ ಅದು ಕೃತಕವಾಗಿ ಬಿಡುವುದು. ಆಕಸ್ಮಿಕವಾಗಿ ಯಾವುದೇ ಸನ್ನಿವೇಶಗಳು ನಡೆಯುತ್ತಾ ಇರುತ್ತವೆ, ನಂತರ ಡ್ರಾಮಾ ಎಂದು ಹೇಳುತ್ತೀರಿ. ಈ ರೀತಿಯಾಗಬಾರದಿತ್ತು, ಮಮ್ಮಾರವರು ಕೊನೆಯವರಿಗೂ ಇರಬೇಕಾಗಿತ್ತು ಅಂದಮೇಲೆ ಮಮ್ಮಾ ಏಕೆ ಹೊರಟು ಹೋದರು ಎಂದು ಹೇಳುವಂತಿಲ್ಲ. ಡ್ರಾಮಾದಲ್ಲಿ ಏನಾಯಿತೋ ಅದು ಸರಿಯಾಗಿದೆ. ತಂದೆಯೂ ಸಹ ಏನು ಹೇಳಿದರೋ ಅದನ್ನು ಡ್ರಾಮಾ ಅನುಸಾರ ಹೇಳಿದರು, ಡ್ರಾಮಾದಲ್ಲಿ ನನ್ನ ಪಾತ್ರವೇ ಹೀಗಿದೆ ಎಂದು ತಂದೆಯೂ ಸಹ ಡ್ರಾಮಾದ ಮೇಲೆ ಇಟ್ಟು ಬಿಡುತ್ತಾರೆ. ಮನುಷ್ಯರು ಈಶ್ವರನ ಇಚ್ಛೆ ಅಥವಾ ಈಶ್ವರನ ಲೀಲೆಯೆಂದು ಹೇಳಿ ಬಿಡುತ್ತಾರೆ ಆದರೆ ಡ್ರಾಮಾದ ಲೀಲೆಯೆಂದು ಈಶ್ವರನು ಹೇಳುತ್ತಾರೆ. ಈಶ್ವರನು ಹೇಳಿದರೋ ಅಥವಾ ಇವರು ಹೇಳಿದರೋ ಅದು ಡ್ರಾಮಾದಲ್ಲಿತ್ತು. ಯಾವುದೇ ಉಲ್ಟಾ ಕರ್ಮವಾಯಿತೆಂದರೆ ಅದು ಡ್ರಾಮಾದಲ್ಲಿತ್ತು ಮತ್ತೆ ಸುಲ್ಟಾ ಅಗಿ ಬಿಡುವುದು. ಅವಶ್ಯವಾಗಿ ಏರುವ ಕಲೆಯಾಗುವುದು, ಹೇಗೆ ಎತ್ತರದ ಪ್ರದೇಶಕ್ಕೆ ಹೋಗುತ್ತಾರೆಂದರೆ ಕೆಲವೊಮ್ಮೆ ನಡುಗಿ ಬಿಡುತ್ತಾರೆ. ಇವೆಲ್ಲವೂ ಮಾಯೆಯ ಬಿರುಗಾಳಿಗಳಾಗಿವೆ. ಎಲ್ಲಿಯವರೆಗೆ ಮಾಯೆಯಿರುವುದೋ ಅಲ್ಲಿಯವರೆಗೆ ವಿಕಲ್ಪಗಳು ಅವಶ್ಯವಾಗಿ ಬರುತ್ತವೆ. ಸತ್ಯಯುಗದಲ್ಲಿ ಮಾಯೆಯೇ ಇರುವುದಿಲ್ಲ ಅಂದಮೇಲೆ ವಿಕಲ್ಪದ ಮಾತೇ ಇರುವುದಿಲ್ಲ. ಸತ್ಯಯುಗದಲ್ಲಿ ಎಂದೂ ಕರ್ಮವು ವಿಕರ್ಮವಾಗುವುದಿಲ್ಲ. ಇನ್ನು ಕೆಲವೇ ದಿನಗಳಿವೆ, ಖುಷಿಯಿರುತ್ತದೆ, ಇದು ನಮ್ಮ ಅಂತಿಮ ಜನ್ಮವಾಗಿದೆ. ಈಗ ಅಮರಲೋಕದಲ್ಲಿ ಹೋಗುವುದಕ್ಕಾಗಿ ಶಿವ ತಂದೆಯಿಂದ ಅಮರ ಕಥೆಯನ್ನು ಕೇಳುತ್ತೇವೆ. ಈ ಮಾತುಗಳನ್ನು ನೀವೇ ತಿಳಿದುಕೊಳ್ಳುತ್ತೀರಿ. ಅವರಂತೂ ಎಲ್ಲೆಲ್ಲಿಯೋ ಅಮರನಾಥಕ್ಕೆ ಹೋಗಿ ಪೆಟ್ಟು ತಿನ್ನುತ್ತಾ ಇರುತ್ತಾರೆ. ಪಾರ್ವತಿಗೆ ಯಾರು ಕಥೆಯನ್ನು ತಿಳಿಸಿದರು ಎಂಬುದನ್ನು ತಿಳಿದುಕೊಂಡಿಲ್ಲ. ಅಲ್ಲಂತೂ ಶಿವನ ಚಿತ್ರವನ್ನು ತೋರಿಸುತ್ತಾರೆ. ಶಿವನು ಯಾರಲ್ಲಿ ಕುಳಿತುಕೊಂಡರು? ಶಿವ ಮತ್ತು ಶಂಕರನನ್ನು ತೋರಿಸುತ್ತಾರೆ ಅಂದಮೇಲೆ ಶಿವನೇ ಶಂಕರನಲ್ಲಿ ಕುಳಿತು ಕಥೆಯನ್ನು ತಿಳಿಸಿದರೇ? ಏನನ್ನೂ ತಿಳಿದುಕೊಂಡಿಲ್ಲ. ಭಕ್ತಿ ಮಾರ್ಗದವರು ಇಲ್ಲಿಯವರೆಗೂ ತೀರ್ಥ ಯಾತ್ರೆಗಳನ್ನು ಮಾಡಲು ಹೋಗುತ್ತಾರೆ. ವಾಸ್ತವದಲ್ಲಿ ಕಥೆಯೂ ದೊಡ್ಡದಿಲ್ಲ, ಮೂಲವಾಗಿದೆ - ಮನ್ಮನಾಭವ. ಕೇವಲ ಬೀಜವನ್ನು ನೆನಪು ಮಾಡಿರಿ, ಡ್ರಾಮಾದ ಚಕ್ರವನ್ನು ನೆನಪು ಮಾಡಿರಿ. ಯಾವ ಜ್ಞಾನವು ತಂದೆಯ ಬಳಿಯಿದೆಯೋ ಆ ಜ್ಞಾನವು ನಾವಾತ್ಮರಲ್ಲಿಯೂ ಇದೆ. ಅವರೂ ಸಹ ಜ್ಞಾನ ಸಾಗರ, ನಾವಾತ್ಮರೂ ಸಹ ಮಾ|| ಜ್ಞಾನ ಸಾಗರರಾಗುತ್ತೇವೆ, ನಶೆಯೇರಬೇಕಲ್ಲವೆ. ಅವರು ನಾವು ಸಹೋದರರಿಗೆ ತಿಳಿಸುತ್ತಾರೆ, ಶರೀರದ ಮುಖಾಂತರವೇ ತಿಳಿಸುತ್ತಾರೆ. ಇದರಲ್ಲಿ ಸಂಶಯ ತರಬಾರದು. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಇಡೀ ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುತ್ತದೆ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ, ಮಮತೆಯು ಕಳೆಯುತ್ತಾ ಹೋಗುತ್ತದೆ. ಕೆಲವರಿಗೆ ನಾಮ ಮಾತ್ರ ಪ್ರೀತಿಯಿರುತ್ತದೆ, ನಮ್ಮದೂ ಹಾಗೆಯೇ. ಈಗಂತೂ ನಾವು ಸುಖಧಾಮಕ್ಕೆ ಹೋಗುತ್ತೇವೆ, ಇವರೆಲ್ಲರೂ ಹೇಗೆ ಸತ್ತು ಹೋಗಿದ್ದಾರೆ. ಇವರೊಂದಿಗೆ ಮನಸ್ಸನ್ನು ಇಡುವುದೇನು! ಶಾಂತಿಧಾಮದಲ್ಲಿ ಹೋಗಿ ನಂತರ ಸುಖಧಾಮದಲ್ಲಿ ಬಂದು ರಾಜ್ಯಭಾರ ಮಾಡುತ್ತೇವೆ, ಇದಕ್ಕೆ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸಮಾಪ್ತಿಯಾಗಲಿದೆ. ವಿನಾಶದ ನಂತರ ಸ್ವರ್ಗವನ್ನು ನೋಡುತ್ತೀರಿ, ಈಗ ನೀವು ಮಕ್ಕಳು ಬಹಳ ಮಧುರರಾಗಬೇಕು. ಯೋಗದಲ್ಲಿದ್ದು ಯಾವುದೇ ಮಾತನಾಡುತ್ತೀರೆಂದರೆ ಅವರಿಗೆ ಬಹಳ ಆಕರ್ಷಣೆಯಾಗುವುದು. ಈ ಜ್ಞಾನವು ಹೀಗಿದೆ, ಇದರಿಂದ ಮತ್ತೆಲ್ಲವೂ ಮರೆತು ಹೋಗುತ್ತದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಜ್ಞಾನ ಮಾರ್ಗದಲ್ಲಿ ತಮ್ಮ ಸ್ಥಿತಿಯನ್ನು ಬಹಳ ಶಕ್ತಿಶಾಲಿ ಮಾಡಿಕೊಳ್ಳಬೇಕಾಗಿದೆ. ವಿದೇಹಿಯಾಗಬೇಕಾಗಿದೆ. ಒಬ್ಬ ತಂದೆಯೊಂದಿಗೆ ಸತ್ಯ-ಸತ್ಯವಾದ ಪ್ರೀತಿಯನ್ನು ಇಡಬೇಕಾಗಿದೆ. |
2. ಡ್ರಾಮಾದ ವಿಷಯದಲ್ಲಿ ಅಡೋಲರಾಗಿರಬೇಕಾಗಿದೆ. ಡ್ರಾಮಾದಲ್ಲಿ ಏನಾಯಿತೋ ಅದು ಸರಿಯಾಗಿದೆ, ಎಂದೂ ಡೋಲಾಯಮಾನ ಆಗಬಾರದು. ಯಾವುದೇ ಮಾತಿನಲ್ಲಿ ಸಂಶಯ ತರಬಾರದು. |
ಓಂ ಶಾಂತಿ. ಮಕ್ಕಳು ಏನು ಕೇಳಿದಿರಿ? ಭಕ್ತಿಯ ಹಾಡು. ಭಕ್ತಿಯನ್ನು ಆಂಗ್ಲ ಭಾಷೆಯಲ್ಲಿ ಫಿಲಾಸಫಿ ಎಂದು ಹೇಳುತ್ತಾರೆ. ಡಾಕ್ಟರ್ ಆಫ್ ಪಿಲಾಸಫಿ ಎಂದು ಬಿರುದು ಸಿಗುತ್ತದೆ. ಈಗ ಫಿಲಾಸಫಿ (ಭಕ್ತಿ) ಯನ್ನಂತೂ ಚಿಕ್ಕವರು-ದೊಡ್ಡವರು ಎಲ್ಲಾ ಮನುಷ್ಯರೂ ತಿಳಿದುಕೊಂಡಿದ್ದಾರೆ. ಈಶ್ವರನು ಎಲ್ಲಿದ್ದಾರೆಂದು ಯಾರನ್ನೇ ಕೇಳಿದರೂ ಸಹ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಇದೂ ಸಹ ಫಿಲಾಸಫಿಯಾಯಿತಲ್ಲವೆ! ಈಗ ತಂದೆಯು ಯಾವುದೇ ಶಾಸ್ತ್ರಗಳ ಮಾತನ್ನು ತಿಳಿಸುವುದಿಲ್ಲ. ಯಾವುದೇ ಭಕ್ತರಿಗೆ ಜ್ಞಾನ ಸಾಗರನೆಂದು ಹೇಳುವುದಿಲ್ಲ. ಅವರಲ್ಲಿ ಜ್ಞಾನವೂ ಇಲ್ಲ, ಜ್ಞಾನ ಸಾಗರನ ಮಕ್ಕಳೂ ಅಲ್ಲ. ಜ್ಞಾನಸಾಗರ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ತಮ್ಮನ್ನು ಅವರ ಮಗನೆಂದೂ ತಿಳಿದುಕೊಳ್ಳುವುದಿಲ್ಲ, ಅವರೆಲ್ಲರೂ ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಭಕ್ತಿ ಮಾಡುತ್ತಾರೆ ಆದರೆ ಭಗವಂತನನ್ನೇ ಅರಿತುಕೊಂಡಿಲ್ಲ ಅಂದಮೇಲೆ ಭಕ್ತಿಯಿಂದ ಏನು ಲಾಭವಾಗುವುದು? ಅನೇಕರಿಗೆ ಡಾಕ್ಟರ್ ಆಫ್ ಫಿಲಾಸಫಿ ಎಂದು ಬಿರುದು ಸಿಗಬಹುದು. ಅವರ ಬುದ್ಧಿಯಲ್ಲಿ ಈಶ್ವರ ಸರ್ವವ್ಯಾಪಿ ಎಂಬ ಒಂದೇ ಮಾತಿರುತ್ತದೆ, ಅದನ್ನು ಫಿಲಾಸಫಿ ಎಂದು ತಿಳಿಯುತ್ತಾರೆ. ಇದರಿಂದಲೇ ಕನಿಷ್ಟರಾಗುತ್ತಾ ಬಂದಿದ್ದಾರೆ, ಇದಕ್ಕೆ ಧರ್ಮಗ್ಲಾನಿ ಎಂದು ಹೇಳಲಾಗುತ್ತದೆ. ನಾವು ಯಾವುದೇ ಮನುಷ್ಯರೊಂದಿಗೆ ಶಾಸ್ತ್ರಗಳ ವಾದ-ವಿವಾದ ಮಾಡುವುದಿಲ್ಲ. ನಾವು ಯಾವುದೇ ಮನುಷ್ಯರಿಂದ ಓದಿಲ್ಲ. ಮತ್ತೆಲ್ಲಾ ಮನುಷ್ಯರು ಮನುಷ್ಯರ ಮೂಲಕ ಓದಿರುತ್ತಾರೆ. ವೇದ-ಶಾಸ್ತ್ರ ಇತ್ಯಾದಿಗಳೆಲ್ಲವನ್ನೂ ಮನುಷ್ಯರಿಂದಲೇ ಓದುತ್ತಾರೆ. ಬರೆದಿರುವುದೂ ಮನುಷ್ಯರೆ. ನಿಮಗೆ ಈ ಜ್ಞಾನವನ್ನು ತಿಳಿಸುವವರು ಒಬ್ಬರೇ ಆತ್ಮಿಕ ತಂದೆಯಾಗಿದ್ದಾರೆ ಅವರು ಒಂದೇ ಬಾರಿ ಬಂದು ತಿಳಿಸುತ್ತಾರೆ. ನಾವೀಗ ಯಾವುದೇ ಮನುಷ್ಯರಿಂದ ಏನನ್ನೂ ಕಲಿಯುವಂತಿಲ್ಲ. ಆತ್ಮಿಕ ತಂದೆಯಿಂದಲೇ ಹೇಳಬೇಕಾಗಿದೆ. ಕೇಳುವವರು ಆತ್ಮಿಕ ಮಕ್ಕಳು ಆತ್ಮರಾಗಿದ್ದೇವೆ. ಆ ಮನುಷ್ಯರೆಲ್ಲರೂ ಮನುಷ್ಯರಿಗೆ ತಿಳಿಸುತ್ತಾರೆ ಆದರೆ ಇದು ಆತ್ಮಿಕ ತಂದೆಯ ಜ್ಞಾನವಾಗಿದೆ, ಅವರದು ಮನುಷ್ಯರ ಜ್ಞಾನವಾಗಿದೆ. ಇವರೂ ಸಹ (ಬ್ರಹ್ಮಾ ತಂದೆ) ಮನುಷ್ಯನಲ್ಲವೆ. ತಿಳಿಸಿರಿ, ಆತ್ಮಿಕ ತಂದೆಯು ಇವರ ಮೂಲಕ ತಿಳಿಸುತ್ತಾರೆ - ನಾವಾತ್ಮರು ಕೇಳಿಸಿಕೊಳ್ಳುತ್ತೇವೆ. ನಾವಾತ್ಮರು ಮತ್ತೆ ಈ ಶರೀರದ ಮೂಲಕ ಅನ್ಯರಿಗೆ ತಿಳಿಸುತ್ತೇವೆ, ಇದು ಆತ್ಮಿಕ ಜ್ಞಾನವಾಗಿದೆ. ಉಳಿದೆಲ್ಲವೂ ಲೌಕಿಕ ಜ್ಞಾನವಾಗಿದೆ. ಭಕ್ತಿಯಲ್ಲಿ ಶರೀರದ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಮನುಷ್ಯರು ಅಥವಾ ಭಕ್ತರೆಂದು ತಿಳಿಯಬೇಡಿ, ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ನೀವಾತ್ಮರು ಸಹೋದರ-ಸಹೋದರರಾಗಿದ್ದೀರಿ, ಆತ್ಮರು ಮತ್ತು ಪರಮಾತ್ಮನು ಬಹುಕಾಲ ಅಗಲಿದ್ದರೆಂದು ಗಾಯನವಿದೆ ಅಂದಮೇಲೆ ನಾವು ಯಾವುದೇ ಮನುಷ್ಯರಿಂದ ಕೇಳುವಂತಿಲ್ಲ. ಯಾರಾದರೂ ಪ್ರಶ್ನೆ ಕೇಳಿದರೆ ತಿಳಿಸಿ, ನಮ್ಮದು ಶಾಸ್ತ್ರಗಳ ಜ್ಞಾನವಲ್ಲ. ನಾವು ಅದಕ್ಕೆ ಫಿಲಾಸಫಿ ಎಂದು ಹೇಳುತ್ತೇವೆ ಅರ್ಥಾತ್ ಭಕ್ತಿಮಾರ್ಗದ ಜ್ಞಾನವಾಗಿದೆ. ಸದ್ಗತಿ ನೀಡುವ ಜ್ಞಾನವನ್ನು ಕೇವಲ ಒಬ್ಬ ತಂದೆಯೇ ತಿಳಿಸುತ್ತಾರೆ. ಸರ್ವರ ಸದ್ಗತಿದಾತನು ಒಬ್ಬನೇ ಎಂದು ಗಾಯನವಿದೆ ಅಂದಾಗ ನೀವು ಮಕ್ಕಳು ಯಾರೊಂದಿಗೂ ವಾದ ಮಾಡಬಾರದು. |
ತಂದೆಯು ತಿಳಿಸುತ್ತಾರೆ - ಜ್ಞಾನದ ಅಥಾರಿಟಿ, ಜ್ಞಾನಸಾಗರನು ನಾನಾಗಿದ್ದೇನೆ, ನಾನು ನಿಮಗೆ ಯಾವುದೆ ಶಾಸ್ತ್ರ ಇತ್ಯಾದಿಗಳನ್ನು ತಿಳಿಸುವುದಿಲ್ಲ. ನನ್ನದು ಇದು ಆತ್ಮಿಕ ಜ್ಞಾನವಾಗಿದೆ, ಉಳಿದೆಲ್ಲವೂ ದೈಹಿಕ ಜ್ಞಾನವಾಗಿದೆ. ಆ ಸತ್ಸಂಗ ಇತ್ಯಾದಿಗಳೆಲ್ಲವೂ ಭಕ್ತಿ ಮಾರ್ಗಕ್ಕಾಗಿ. ಈ ಆತ್ಮಿಕ ತಂದೆಯು ಆತ್ಮರಿಗೆ ತಿಳಿಸುತ್ತಾರೆ ಆದ್ದರಿಂದ ದೇಹೀ-ಅಭಿಮಾನಿಯಾಗುವುದರಲ್ಲಿ ಮಕ್ಕಳಿಗೆ ಪರಿಶ್ರಮವಾಗುತ್ತದೆ. ನಾವಾತ್ಮರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ತಂದೆಯ ಮಕ್ಕಳು ಅವಶ್ಯವಾಗಿ ತಂದೆಯ ಸಿಂಹಾಸನಕ್ಕೇ ವಾರಸುಧಾರರಾಗುತ್ತಾರೆ ಅಲ್ಲವೆ. ಲಕ್ಷ್ಮೀ-ನಾರಾಯಣರೂ ದೇಹಧಾರಿಗಳಾಗಿದ್ದಾರೆ, ಅವರ ಮಕ್ಕಳು ಲೌಕಿಕ ತಂದೆಯಿಂದ ಆಸ್ತಿಯನ್ನು ಪಡೆಯುತ್ತಾರೆ. ಈ ಮಾತೇ ಭಿನ್ನವಾಗಿದೆ. ಸತ್ಯಯುಗದಲ್ಲಿಯೂ ಲೌಕಿಕದ ಮಾತಿರುತ್ತದೆ, ಅಲ್ಲಿ ಈ ರೀತಿ ಆತ್ಮಿಕ ತಂದೆಯಿಂದ ಆಸ್ತಿಯು ಸಿಗುತ್ತದೆ, ದೇಹಾಭಿಮಾನವನ್ನು ಕಳೆಯಬೇಕಾಗಿದೆ ಎಂದು ಹೇಳುವುದಿಲ್ಲ. ನಾವಾತ್ಮರಾಗಿದ್ದೇವೆ ಮತ್ತು ತಂದೆಯನ್ನು ನೆನಪು ಮಾಡಬೇಕೆಂದು ಇಲ್ಲಿಯೇ ಹೇಳುತ್ತಾರೆ. ಈ ಭಾರತದ ಪ್ರಾಚೀನ ಯೋಗವೇ ಪ್ರಸಿದ್ಧವಾಗಿದೆ, ನೆನಪು ಶಬ್ಧವು ಹಿಂದಿ ಭಾಷೆಯದಾಗಿದೆ. ಅಂದಾಗ ಈ ಜ್ಞಾನವನ್ನು ನಿಮಗೆ ಯಾರು ಕೊಡುತ್ತಾರೆ? ಇದನ್ನು ಯಾವುದೇ ಮನುಷ್ಯರು ತಿಳಿದುಕೊಂಡಿಲ್ಲ. ಜನ್ಮ-ಜನ್ಮಾಂತರದಿಂದ ಮನುಷ್ಯರು ಮನುಷ್ಯರೊಂದಿಗೆ ಮಾತನಾಡುತ್ತಾ ಬಂದಿದ್ದಾರೆ, ಈಗ ಆತ್ಮಿಕ ತಂದೆಯು ಆತ್ಮಿಕ ಮಕ್ಕಳೊಂದಿಗೆ ಮಾತನಾಡುತ್ತಾರೆ. ಪರಮಾತ್ಮನು ತಿಳಿಸುತ್ತಾರೆ ಆದ್ದರಿಂದ ಇದಕ್ಕೆ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಗೀತೆಯನ್ನೂ ಸಹ ಅವರು ಆಧ್ಯಾತ್ಮಿಕ ಜ್ಞಾನವೆಂದು ತಿಳಿಯುತ್ತಾರೆ ಆದರೆ ಅದರಲ್ಲಿ ದೇಹಧಾರಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಯಾವುದೇ ಮನುಷ್ಯರಲ್ಲಿ ಈ ಜ್ಞಾನವಿರಲು ಸಾಧ್ಯವಿಲ್ಲ. ಎಂದಾದರೂ ಯಾರೇ ನಿಮ್ಮೊಂದಿಗೆ ವಾದ-ವಿವಾದ ಮಾಡುತ್ತಾರೆಂದರೆ ಹೇಳಿರಿ, ನಿಮ್ಮದು ಭಕ್ತಿಯ ಜ್ಞಾನವಾಗಿದೆ, ಮನುಷ್ಯರೇ ರಚಿಸಿರುವ ಶಾಸ್ತ್ರಗಳ ಜ್ಞಾನವಾಗಿದೆ. ಸತ್ಯ ಜ್ಞಾನವಂತೂ ಒಬ್ಬ ಜ್ಞಾನಸಾಗರ ತಂದೆಯ ಬಳಿಯೇ ಇದೆ. ಅವರೇ ಸ್ವಯಂ ಜ್ಞಾನವನ್ನು ತಿಳಿಸುತ್ತಾರೆ, ಅವರಿಗೆ ಪಾರಲೌಕಿಕ ತಂದೆಯೆಂದು ಹೇಳುತ್ತಾರೆ. ಪೂಜೆಯೂ ಆ ನಿರಾಕಾರನಿಗೇ ಹೇಳುತ್ತಾರೆ. ಒಂದುವೇಳೆ ಅನ್ಯ ನಿರಾಕಾರಿಗಳ ಪೂಜೆಯಾಗುತ್ತದೆ ಎಂದರೆ ಅವರೂ ಸಹ ಪರಮಾತ್ಮನ ಮಕ್ಕಳೇ ಆಗಿದ್ದಾರೆ. ಮಣ್ಣಿನಿಂದ ಸಾಲಿಗ್ರಾಮಗಳನ್ನು ಮಾಡಿ ಪೂಜೆ ಮಾಡುತ್ತಾರೆ, ರುದ್ರ ಯಜ್ಞವನ್ನು ರಚಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಆ ಪರಮಪಿತ ಪರಮಾತ್ಮನು ನಿರಾಕಾರಿ ಪ್ರಪಂಚದಲ್ಲಿರುತ್ತಾರೆ. ನಾವಾತ್ಮರೂ ಅಲ್ಲಿಯೇ ಇರುತ್ತೇವೆ. ಆ ಜ್ಞಾನಸಾಗರನೇ ಬಂದು ಜ್ಞಾನವನ್ನು ತಿಳಿಸಿ ಎಲ್ಲರ ಸದ್ಗತಿ ಮಾಡುತ್ತಾರೆ. ಅವರು ಅತಿ ಮೇಲೆ ಇರುವಂತಹ ಪರಮಪಿತ ಪರಮಾತ್ಮನಾಗಿದ್ದಾರೆ. ಎಲ್ಲಾ ಆತ್ಮ ಸಹೋದರರಿಗೆ ಪಾತ್ರವು ಸಿಕ್ಕಿದೆ, ಅವರೇ ನಂತರ ಶರೀರ ಧಾರಣೆ ಮಾಡಿ ಸಹೋದರ-ಸಹೋದರಿಯರಾಗುತ್ತಾರೆ. ಆತ್ಮರೆಲ್ಲರೂ ಒಬ್ಬ ತಂದೆಯ ಮಕ್ಕಳಾಗಿದ್ದಾರೆ. ಆತ್ಮವು ಯಾವಾಗ ಶರೀರವನ್ನು ಧಾರಣೆ ಮಾಡುತ್ತದೆಯೋ ಆಗ ಸ್ವರ್ಗದಲ್ಲಿ ಸುಖ, ನರಕದಲ್ಲಿ ದುಃಖವನ್ನೂ ಪಡೆಯುತ್ತದೆ. ಇದು ಏಕೆ ಆಗುತ್ತದೆ? ತಿಳಿಸಲಾಗಿದೆ - ಜ್ಞಾನ ಮತ್ತು ಭಕ್ತಿ. ಜ್ಞಾನವು ದಿನ ಭಕ್ತಿಯು ರಾತ್ರಿಯಾಗಿದೆ. ಜ್ಞಾನದಿಂದ ಸುಖ, ಭಕ್ತಿಯಿಂದ ದುಃಖ, ಈ ಆಟವು ಮಾಡಲ್ಪಟ್ಟಿದೆ. ಸುಖ-ದುಃಖ ಎಲ್ಲವನ್ನೂ ಭಗವಂತನೇ ರಚಿಸುವುದಿಲ್ಲ. ಯಾವಾಗ ದುಃಖಿಯಾಗುವರೋ ಆಗ ಭಗವಂತನನ್ನೇ ಕರೆಯುತ್ತಾರೆ, ಅವರು ಸುಖ ಕೊಡುವವರೆಂದು ತಿಳಿಯುತ್ತಾರೆ. ನಂತರ ಯಾವಾಗ ಸುಖದ ಸಮಯವು ಮುಗಿಯುವುದೋ ಅನಂತರ ರಾವಣನ ಐದು ವಿಕಾರಗಳ ಕಾರಣ ದುಃಖವು ಆರಂಭವಾಗುತ್ತದೆ, ಇದೇ ಆಟವಾಗಿದೆ, ಇದನ್ನು ಯಥಾರ್ಥ ರೀತಿಯಿಂದ ತಿಳಿದುಕೊಳ್ಳಬೇಕಾಗಿದೆ. ಇದನ್ನೇ ಆತ್ಮಿಕ ಜ್ಞಾನವೆಂದು ಹೇಳಲಾಗುತ್ತದೆ. ಉಳಿದೆಲ್ಲವೂ ದೈಹಿಕ ಜ್ಞಾನವಾಗಿದೆ. ಅದನ್ನು ನಾವು ಕೇಳಲು ಬಯಸುವುದಿಲ್ಲ. ನಮಗೆ ಆದೇಶ ಸಿಕ್ಕಿದೆ - ಕೇವಲ ನಾನು ನಿರಾಕಾರ ತಂದೆಯಿಂದಲೇ ಕೇಳಿರಿ, ಕೆಟ್ಟದ್ದನ್ನು ಕೇಳಬೇಡಿ ಎಂದು ತಂದೆಯು ತಿಳಿಸುತ್ತಾರೆ ಆದ್ದರಿಂದ ನಾವು ಒಬ್ಬ ಭಗವಂತನಿಂದಲೇ ಕೇಳುತ್ತೇವೆ, ನೀವು ಮನುಷ್ಯರಿಂದ ಕೇಳುತ್ತೀರಿ, ರಾತ್ರಿ-ಹಗಲಿನ ಅಂತರವಿದೆ. ದೊಡ್ಡ-ದೊಡ್ಡ ವಿದ್ವಾಂಸರು ಶಾಸ್ತ್ರ ಇತ್ಯಾದಿಗಳನ್ನು ಓದುತ್ತಾರೆ, ಅದನ್ನು ನಾವೂ ಸಹ ಬಹಳಷ್ಟು ಓದಿದೆವು. ಈಗ ಭಗವಂತನು ತಿಳಿಸುತ್ತಾರೆ - ನೀವು ಅನೇಕ ಗುರುಗಳನ್ನು ಮಾಡಿಕೊಂಡಿದ್ದೀರಿ, ಈಗ ಎಲ್ಲವನ್ನು ಬಿಟ್ಟು ಬಿಡಿ. ನಾನು ಏನನ್ನು ತಿಳಿಸುತ್ತೇನೆಯೋ ಅದನ್ನೇ ಕೇಳಿರಿ, ಭಗವಂತನು ನಿರಾಕಾರನಾಗಿದ್ದಾರೆ. ಅವರ ಹೆಸರಾಗಿದೆ - ಶಿವ. ನಾವೀಗ ಅವರಿಂದ ಕೇಳುತ್ತಿದ್ದೇವೆ, ತಂದೆಯೇ ತಮ್ಮ ಪರಿಚಯ ಮತ್ತು ತಮ್ಮ ರಚನೆಯ ಆದಿ-ಮಧ್ಯ-ಅಂತ್ಯದ ಪರಿಚಯವನ್ನು ತಿಳಿಸುತ್ತಾರೆ ಅಂದಮೇಲೆ ಮತ್ತೆ ನಾವು ತಮ್ಮಿಂದ ಶಾಸ್ತ್ರಗಳ ಮಾತುಗಳನ್ನು ಏಕೆ ಕೇಳಬೇಕು! ನಾವು ತಮಗೆ ಆತ್ಮಿಕ ಜ್ಞಾನವನ್ನು ತಿಳಿಸುತ್ತೇವೆ, ಕೇಳುವಂತಿದ್ದರೆ ಕೇಳಿರಿ, ತಬ್ಬಿಬ್ಬಾಗುವ ಮಾತೇ ಇಲ್ಲ. ಇಡೀ ಪ್ರಪಂಚವು ಒಂದು ಕಡೆಯಿದೆ ಮತ್ತು ನೀವು ಕೆಲವರು ಇನ್ನೊಂದು ಕಡೆ ಇದ್ದೀರಿ. ಈಗ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ಮೇಲಿರುವ ಪಾಪಗಳ ಹೊರೆಯು ಇಳಿಯುವುದು ಮತ್ತು ನೀವು ಪವಿತ್ರರಾಗಿ ಬಿಡುತ್ತೀರಿ. ಯಾರು ಪವಿತ್ರರಾಗುವರೋ ಅವರೇ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಈಗ ಹಳೆಯ ಪ್ರಪಂಚವು ಪರಿವರ್ತನೆಯಾಗಲಿದೆ, ಕಲಿಯುಗದ ನಂತರ ಸತ್ಯಯುಗವು ಬರಲಿದೆ. ಸತ್ಯಯುಗವು ಪಾವನ ಪ್ರಪಂಚ, ಕಲಿಯುಗದಲ್ಲಿಯೇ ಪಾವನ ಪ್ರಪಂಚವನ್ನಾಗಿ ಮಾಡಲು ಬನ್ನಿ ಎಂದು ನನ್ನನ್ನು ಕರೆಯುತ್ತೀರಿ ಆದ್ದರಿಂದ ನಾನೀಗ ಬಂದಿದ್ದೇನೆ, ಈಗ ನನ್ನೊಬ್ಬನನ್ನೇ ನೆನಪು ಮಾಡಿರಿ. ಈಗ ಪ್ರಪಂಚವು ಬದಲಾಗುತ್ತಿದೆ, ಇದು ಅಂತಿಮ ಜನ್ಮವಾಗಿದೆ. ಈ ಹಳೆಯ ಪ್ರಪಂಚದಲ್ಲಿ ಆಸುರೀ ರಾಜ್ಯವು ಸಮಾಪ್ತಿಯಾಗಿ ರಾಮ ರಾಜ್ಯವು ಸ್ಥಾಪನೆಯಾಗುತ್ತಿದೆ. ಆದ್ದರಿಂದ ಈಗ ಅಂತಿಮ ಜನ್ಮ ಗೃಹಸ್ಥ ವ್ಯವಹಾರದ್ದರೂ ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಇದು ವಿಷಯ ಸಾಗರವಲ್ಲವೆ. ಕಮಲಪುಷ್ಫವು ನೀರಿನ ಮೇಲಿರುತ್ತದೆ ಹಾಗೆಯೇ ನೀವು ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಕಮಲಪುಷ್ಫ ಸಮಾನ ಪವಿತ್ರರಾಗಿರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ಈಗ ಇಡೀ ಪ್ರಪಂಚವೇ ಪರಿವರ್ತನೆಯಾಗುತ್ತಿದೆ, ಆ ಧರ್ಮ ಸ್ಥಾಪಕರಂತೂ ಕೇವಲ ತಮ್ಮ-ತಮ್ಮ ಧರ್ಮಗಳನ್ನು ಸ್ಥಾಪನೆ ಮಾಡುತ್ತಾರೆ. ಅವರು ಮೊದಲು ಪಾವನರಾಗಿರುತ್ತಾರೆ ನಂತರ ಪತಿತರಾಗುತ್ತಾರೆ. ಸದ್ಗುರುವು ಒಬ್ಬರೇ ಸದ್ಗತಿದಾತನಾಗಿದ್ದಾರೆ. ಮನುಷ್ಯರು ಯಾವಾಗ ಸದ್ಗತಿಯಲ್ಲಿ ಹೋಗಬೇಕೆನಿಸುವುದೋ ಆಗಲೇ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಯಾವಾಗ ಬಹಳ ಪಾಪವಾಗುವುದೋ ಆಗ ಆತ್ಮಿಕ ತಂದೆಯು ಜ್ಞಾನವನ್ನು ತಿಳಿಸುತ್ತಾರೆ. ಭಕ್ತಿಯ ಫಲವಾದ ಜ್ಞಾನವು ನಿಮಗೆ ಭಗವಂತನಿಂದ ಸಿಗುತ್ತದೆ. ಭಗವಂತನು ಭಕ್ತಿಯನ್ನು ಕಲಿಸುವುದಿಲ್ಲ, ಅವರು ಜ್ಞಾನವನ್ನು ಕೊಡುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ಎಂದು ತಿಳಿಸುತ್ತಾರೆ. ಪಾವನರಾಗಲು ಮತ್ತ್ಯಾವುದೇ ಉಪಾಯವಿಲ್ಲ, ಹೊಸ ಪ್ರಪಂಚದಲ್ಲಿ ಎಲ್ಲರೂ ಸ್ವರ್ಗವಾಸಿಗಳಾಗಿದ್ದಿರಿ, ಈಗ ಹಳೆಯ ಪ್ರಪಂಚದಲ್ಲಿ ನರಕವಾಸಿಗಳಾಗಿದ್ದೀರಿ ಆದ್ದರಿಂದ ನಾನು ಎಲ್ಲರ ಉದ್ಧಾರ ಮಾಡಲು ಬರುತ್ತೇನೆ. ನಾನೇ ಬಂದು ಆತ್ಮಿಕ ಜ್ಞಾನವನ್ನು ತಿಳಿಸುತ್ತೇನೆ. ತಂದೆಯು ತಮ್ಮ ಪರಿಚಯವನ್ನು ಕೊಡುತ್ತಿದ್ದಾರೆ. ನಾನು ನಿಮ್ಮ ತಂದೆಯಾಗಿದ್ದೇನೆ, ಇದು ನರಕವಾಗಿದೆ. ಹೊಸ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ, ಇಲ್ಲಿಯೇ ಸ್ವರ್ಗ-ನರಕ ಎರಡೂ ಇದೆ, ಯಾರಿಗೆ ಬಹಳ ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆ ಎಂದು ಹೇಗೆ ಹೇಳುವಿರಿ! ಸ್ವರ್ಗವಿರುವುದೇ ಹೊಸ ಪ್ರಪಂಚದಲ್ಲಿ, ಇಲ್ಲಿ ಸ್ವರ್ಗವೆಲ್ಲಿಂದ ಬಂದಿತು ಆದ್ದರಿಂದ ನಾವು ಯಾವುದೇ ಮನುಷ್ಯರ ಮಾತನ್ನು ಕೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು ಎಂದರೆ ನನ್ನೊಬ್ಬನನ್ನೇ ನೆನಪು ಮಾಡಿರಿ. ಇಡೀ ದಿನ ಬುದ್ಧಿಯಲ್ಲಿ ಈ ಜ್ಞಾನವಿರಲಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಯಿಂದಲೇ ಆತ್ಮಿಕ ಮಾತುಗಳನ್ನು ಕೇಳಬೇಕಾಗಿದೆ. ಯಾರೊಂದಿಗೂ ಅನ್ಯ ಮಾತುಗಳ ವಾದ-ವಿವಾದ ಮಾಡಬಾರದು. |
2. ದೇಹೀ-ಅಭಿಮಾನಿಗಳಾಗುವ ಪರಿಶ್ರಮ ಪಡಬೇಕಾಗಿದೆ. ಸತೋಪ್ರಧಾನರಾಗಲು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ತಂದೆಯು ಮಕ್ಕಳಿಗೆ ತಿಳಿಸಿದ್ದಾರೆ. ಓಂ ಎಂದರೆ ನಾನು ಆತ್ಮ, ನನ್ನ ಸ್ವಧರ್ಮವು ಶಾಂತಿಯಾಗಿದೆ, ಶಾಂತಿಧಾಮದಲ್ಲಿ ಹೋಗುವುದಕ್ಕಾಗಿ ಯಾವುದೇ ಪುರುಷಾರ್ಥ ಮಾಡಬೇಕಾಗುವುದಿಲ್ಲ. ಆತ್ಮವು ಸ್ವಯಂ ಶಾಂತ ಸ್ವರೂಪ, ಶಾಂತಿಧಾಮದ ನಿವಾಸಿಯಾಗಿದೆ. ಇಲ್ಲಿ ಸ್ವಲ್ಪವೇ ಸಮಯಕ್ಕಾಗಿ ಶಾಂತವಾಗಿರಬಹುದು. ಆತ್ಮವು ಹೇಳುತ್ತದೆ - ನನ್ನ ಕರ್ಮೇಂದ್ರಿಯಗಳ ರಥವು ಸುಸ್ತಾಗಿ ಬಿಟ್ಟಿದೆ. ನಾನು ನನ್ನ ಸ್ವಧರ್ಮದಲ್ಲಿ ಸ್ಥಿತನಾಗುತ್ತೇನೆ, ಶರೀರದಿಂದ ಭಿನ್ನವಾಗಿ ಬಿಡುತ್ತೇನೆ. ಆದರೆ ಕರ್ಮವನ್ನಂತೂ ಮಾಡಲೇಬೇಕಾಗಿದೆ. ಎಲ್ಲಿಯವರೆಗೆ ಶಾಂತಿಯಲ್ಲಿ ಕುಳಿತಿರುತ್ತೀರಿ? ಆತ್ಮವು ಹೇಳುತ್ತದೆ - ನಾನು ಶಾಂತಿ ದೇಶದ ನಿವಾಸಿಯಾಗಿದ್ದೇನೆ. ಕೇವಲ ಇಲ್ಲಿ ಶರೀರದಲ್ಲಿ ಬರುವುದರಿಂದ ನಾನು ಶಬ್ಧದಲ್ಲಿ ಬಂದಿದ್ದೇನೆ. ನಾನೂ ಆತ್ಮ, ನನ್ನದು ಶರೀರವಾಗಿದೆ. ಆತ್ಮವೇ ಪತಿತ ಮತ್ತು ಪಾವನವಾಗುತ್ತದೆ. ಆತ್ಮವು ಪತಿತವಾದರೆ ಶರೀರವೂ ಪತಿತವಾಗುತ್ತದೆ ಏಕೆಂದರೆ ಸತ್ಯಯುಗದಲ್ಲಿ ಪಂಚ ತತ್ವಗಳೂ ಸತೋಪ್ರಧಾನವಾಗಿರುತ್ತವೆ. ಇಲ್ಲಿ ಪಂಚ ತತ್ವಗಳೂ ತಮೋಪ್ರಧಾನವಾಗಿವೆ. ಚಿನ್ನದಲ್ಲಿ ಅಲಾಯಿ ಸೇರ್ಪಡೆಯಾದರೆ ಚಿನ್ನವು ನಕಲಿಯಾಗಿ ಬಿಡುತ್ತದೆ. ಮತ್ತೆ ಅದನ್ನು ಸ್ವಚ್ಛ ಮಾಡುವುದಕ್ಕಾಗಿ ಭಟ್ಟಿಯಲ್ಲಿ ಹಾಕಲಾಗುತ್ತದೆ. ಅದಕ್ಕೆ ಯೋಗಾಗ್ನಿಯೆಂದು ಹೇಳಲಾಗುವುದಿಲ್ಲ. ಈ ಯೋಗವು ಅಗ್ನಿಯೂ ಆಗಿದೆ, ಇದರಿಂದ ಪಾಪಗಳು ಭಸ್ಮವಾಗುತ್ತವೆ. ಆತ್ಮವನ್ನು ಪತಿತನಿಂದ ಪಾವನವನ್ನಾಗಿ ಮಾಡುವವರು ಪರಮಾತ್ಮನಾಗಿದ್ದಾರೆ. ಒಬ್ಬರದೇ ಹೆಸರಿದೆ, ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಡ್ರಾಮಾನುಸಾರ ಎಲ್ಲರೂ ಪತಿತ, ತಮೋಪ್ರಧಾನರಾಗಲೇಬೇಕಾಗಿದೆ. ಇದು ವೃಕ್ಷವಲ್ಲವೆ. ಆ ವೃಕ್ಷದ ಬೀಜವು ಕೆಳಭಾಗದಲ್ಲಿರುತ್ತದೆ, ಇದರ ಬೀಜವು ಮೇಲಿದ್ದಾರೆ. ತಂದೆಯನ್ನು ಕರೆಯುವಾಗ ಬುದ್ಧಿಯು ಮೇಲುಗಡೆ ಹೋಗುತ್ತದೆ. ಯಾರಿಂದ ನೀವು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರೋ ಅವರೀಗ ಕೆಳಗೆ ಬಂದು ಬಿಟ್ಟಿದ್ದಾರೆ. ತಿಳಿಸುತ್ತಾರೆ - ಮಕ್ಕಳೇ, ನಾನೇ ಬರಬೇಕಾಗುತ್ತದೆ. ನನ್ನ ಈ ಯಾವ ಮನುಷ್ಯ ಸೃಷ್ಟಿ ವೃಕ್ಷವಿದೆಯೋ ಇದು ಅನೇಕ ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಈಗ ಇದು ತಮೋಪ್ರಧಾನ ಪತಿತ ಜಡಜಡೀಭೂತ ಸ್ಥಿತಿಯನ್ನು ಹೊಂದಿದೆ. ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ - ಸತ್ಯಯುಗದಲ್ಲಿ ಮೊಟ್ಟ ಮೊದಲು ದೇವಿ-ದೇವತೆಗಳಿರುತ್ತಾರೆ, ಈಗ ಕಲಿಯುಗದಲ್ಲಿ ಅಸುರರಿದ್ದಾರೆ ಬಾಕಿ ಅಸುರರು ಮತ್ತು ದೇವತೆಗಳ ಯುದ್ಧವಾಗಲಿಲ್ಲ. ನೀವು ಯೋಗಬಲದಿಂದ ಈ ಅಸುರೀ ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ. ಬಾಕಿ ಯಾವುದೇ ಹಿಂಸಕ ಯುದ್ಧದ ಮಾತಿಲ್ಲ. ನೀವು ಯಾವುದೇ ಪ್ರಕಾರದ ಹಿಂಸೆ ಮಾಡುವುದಿಲ್ಲ. ನೀವು ಯಾರ ಮೇಲೆ ಕೈ ಮಾಡುವುದೂ ಇಲ್ಲ, ನೀವು ಡಬಲ್ ಅಹಿಂಸಕರಾಗಿದ್ದೀರಿ. ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ. ತಂದೆಯು ತಿಳಿಸುತ್ತಾರೆ - ಈ ಕಾಮ ಕಟಾರಿಯು ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ ಆದ್ದರಿಂದ ವಿಕಾರದಲ್ಲಿ ಹೋಗಬಾರದು. ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳೆಂದು ಮಹಿಮೆಯನ್ನು ಹಾಡುತ್ತಾರೆ. ಆತ್ಮವು ಈ ಕರ್ಮೇಂದ್ರಿಯಗಳ ಮೂಲಕ ಅರಿತುಕೊಂಡಿದೆ. ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಎಂದೋ ಪಾವನರಾಗಿದ್ದರು. ಆದ್ದರಿಂದಲೇ ನಾವು ಪತಿತರಾಗಿದ್ದೇವೆಂದು ಹೇಳುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ, ಪಾವನರಾಗಿದ್ದಾಗ ಯಾರೂ ಕರೆಯುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಇಲ್ಲಂತೂ ಸಾಧು ಸಂತ ಮೊದಲಾದವರು ಪತಿತ-ಪಾವನ ಸೀತಾರಾಮ.... ಎಂದು ಎಷ್ಟು ಜೋರಾಗಿ ಹಾಡುತ್ತಿರುತ್ತಾರೆ. ಎಲ್ಲಿಗೆ ಹೋದರೂ ಹಾಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ - ಇಡೀ ಪ್ರಪಂಚವು ಪತಿತವಾಗಿದೆ, ರಾವಣ ರಾಜ್ಯವಲ್ಲವೆ. ರಾವಣನನ್ನು ಸುಡುತ್ತಾರೆ, ಆದರೆ ಅವರ ರಾಜ್ಯವು ಯಾವಾಗಿನಿಂದ ಆಯಿತು ಯಾರಿಗೂ ತಿಳಿದಿಲ್ಲ. ಭಕ್ತಿ ಮಾರ್ಗದ ಸಾಮಗ್ರಿಯು ಬಹಳಷ್ಟಿದೆ, ಒಬ್ಬೊಬ್ಬರು ಒಂದೊಂದು ರೀತಿ ಮಾಡುತ್ತಾರೆ. ಸನ್ಯಾಸಿಗಳೂ ಸಹ ಎಷ್ಟೊಂದು ಯೋಗಗಳನ್ನು ಕಲಿಸುತ್ತಾರೆ. ವಾಸ್ತವದಲ್ಲಿ ಯಾವುದಕ್ಕೆ ಯೋಗವೆಂದು ಹೇಳಲಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಇದು ಯಾರ ದೋಷವೂ ಅಲ್ಲ. ಈ ನಾಟಕವು ಮಾಡಿ-ಮಾಡಲ್ಪಟ್ಟಿದೆ, ಎಲ್ಲಿಯವರೆಗೆ ನಾನು ಬರುವುದಿಲ್ಲವೋ ಅಲ್ಲಿಯವರೆಗೆ ಇವರು ತಮ್ಮ ಪಾತ್ರವನ್ನು ಅಭಿನಯಿಸಲೇಬೇಕಾಗಿದೆ. ಜ್ಞಾನ ಮತ್ತು ಭಕ್ತಿ. ಜ್ಞಾನವು ದಿನ ಸತ್ಯ-ತ್ರೇತಾಯುಗ, ಭಕ್ತಿಯು ರಾತ್ರಿ ದ್ವಾಪರ-ಕಲಿಯುಗವಾಗಿದೆ ನಂತರ ವೈರಾಗ್ಯವಾಗುತ್ತದೆ ಅಂದರೆ ಹಳೆಯ ಪ್ರಪಂಚದಿಂದ ವೈರಾಗ್ಯ. ಇದು ಬೇಹದ್ದಿನ ವೈರಾಗ್ಯ. ಅವರದು ಹದ್ದಿನ ವೈರಾಗ್ಯವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಈಗ ಸಮಾಪ್ತಿಯಾಗಲಿದೆ. ಹೊಸ ಮನೆಯನ್ನು ಕಟ್ಟಿಸುತ್ತಾರೆಂದರೆ ಹಳೆಯದರೊಂದಿಗೆ ವೈರಾಗ್ಯವುಂಟಾಗಿ ಬಿಡುತ್ತದೆ. |
ನೋಡಿ, ಬೇಹದ್ದಿನ ತಂದೆಯು ಹೇಗಿದ್ದಾರೆ? ನಿಮಗೆ ಸ್ವರ್ಗರೂಪಿ ಮನೆಯನ್ನು ಕಟ್ಟಿಸಿಕೊಡುತ್ತಾರೆ. ಹೊಸ ಪ್ರಪಂಚವು ಸ್ವರ್ಗವಾಗಿದೆ, ಹಳೆಯ ಪ್ರಪಂಚವು ನರಕವಾಗಿದೆ. ಹೊಸದರಿಂದ ಹಳೆಯದು ಅದೇ ಮತ್ತೆ ಹೊಸದಾಗುತ್ತದೆ. ಹೊಸ ಪ್ರಪಂಚದ ಆಯಸ್ಸು ಎಷ್ಟಿದೆ ಎಂಬುದು ಯಾರಿಗೂ ತಿಳಿದಿಲ್ಲ. ಈಗ ಹಳೆಯ ಪ್ರಪಂಚದಲ್ಲಿದ್ದು ನಾವು ಹೊಸ ಪ್ರಪಂಚವನ್ನು ಸ್ಥಾಪಿಸುತ್ತೇವೆ, ಹಳೆಯ ಸ್ಮಶಾನದಲ್ಲಿ ನಾವು ಪರಿಸ್ತಾನವನ್ನಾಗಿ ಮಾಡುತ್ತೇವೆ. ಇದೇ ಯಮುನಾ ನದಿಯ ತೀರದಲ್ಲಿ ಮಹಲುಗಳು ತಯಾರಾಗುತ್ತವೆ. ಇದೇ ದೆಹಲಿಯು ಯಮುನಾ ನದಿಯ ತೀರದಲ್ಲಿರುವುದು. ಪಾಂಡವರ ಕೋಟೆಗಳಿತ್ತು ಎಂದು ಯಾವುದನ್ನು ತೋರಿಸುತ್ತಾರೆಯೋ ಇದೆಲ್ಲವೂ ಡ್ರಾಮಾನುಸಾರ ಕಲ್ಪದ ನಂತರವೂ ಇರುತ್ತವೆ. ಹೇಗೆ ನೀವು ಯಜ್ಞ ತಪ, ದಾನ-ಪುಣ್ಯಗಳನ್ನು ಮಾಡಿದ್ದೀರೋ ಇದೆಲ್ಲವನ್ನು ಪುನಃ ಮಾಡಬೇಕಾಗುವುದು. ಮೊದಲು ಶಿವನ ಭಕ್ತಿಯನ್ನು ಮಾಡುತ್ತೀರಿ, ಬಹಳ ಸುಂದರವಾದ ಮಂದಿರವನ್ನು ಕಟ್ಟಿಸುತ್ತೀರಿ, ಅದಕ್ಕೆ ಅವ್ಯಭಿಚಾರಿ ಭಕ್ತಿಯೆಂದು ಹೇಳಲಾಗುತ್ತದೆ. ನೀವೀಗ ಜ್ಞಾನ ಮಾರ್ಗದಲ್ಲಿದ್ದೀರಿ, ಇದು ಅವ್ಯಭಿಚಾರಿ ಜ್ಞಾನವಾಗಿದೆ, ಒಬ್ಬರೇ ಶಿವ ತಂದೆಯಿಂದ ನೀವು ಕೇಳುತ್ತೀರಿ. ಅವರಿಗೆ ನೀವು ಮೊದಲು ಭಕ್ತಿ ಮಾಡಿದಿರಿ ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ. ನೀವು ಬಹಳ ಸುಖಿಯಾಗಿರುತ್ತೀರಿ. ದೇವತಾ ಧರ್ಮವು ಬಹಳ ಸುಖ ನೀಡುವಂತದ್ದಾಗಿದೆ. ಹೆಸರನ್ನು ತೆಗೆದುಕೊಳ್ಳುತ್ತಿದ್ದಂತೆಯೇ ಬಾಯಿ ಮಧುರವಾಗುತ್ತದೆ. ನೀವು ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳುತ್ತೀರಿ, ತಂದೆಯು ತಿಳಿಸುತ್ತಾರೆ - ನೀವು ಮತ್ತ್ಯಾರಿಂದಲೂ ಕೇಳಬೇಡಿ. ನಿಮ್ಮದು ಇದು ಅವ್ಯಭಿಚಾರಿ ಜ್ಞಾನವಾಗಿದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ತಂದೆಯಿಂದಲೇ ಆಸ್ತಿಯು ಸಿಗುವುದು ನಂಬರ್ವಾರ್ ಪುರುಷಾರ್ಥದನುಸಾರ. ತಂದೆಯು ಸ್ವಲ್ಪ ಸಮಯಕ್ಕಾಗಿ ಸಾಕಾರದಲ್ಲಿ ಬಂದಿದ್ದಾರೆ. ತಿಳಿಸುತ್ತಾರೆ, ನಾನು ನೀವು ಮಕ್ಕಳಿಗೇ ಜ್ಞಾನವನ್ನು ಕೊಡಬೇಕಾಗಿದೆ, ನನ್ನದು ಇದು ಶಾಶ್ವತ ಶರೀರವಲ್ಲ. ನಾನು ಇವರಲ್ಲಿ ಪ್ರವೇಶ ಮಾಡುತ್ತೇನೆ, ಶಿವ ಜಯಂತಿಯಿಂದ ಕೂಡಲೇ ಗೀತಾ ಜಯಂತಿಯಾಗುತ್ತದೆ. ಅಲ್ಲಿಂದ ಜ್ಞಾನವನ್ನು ಹೇಳಲು ಆರಂಭಿಸುತ್ತಾರೆ. ಈ ಆತ್ಮಿಕ ವಿದ್ಯೆಯನ್ನು ಪರಮಾತ್ಮನೇ ಕೊಡುತ್ತಿದ್ದಾರೆ, ನೀರಿನ ಮಾತಿಲ್ಲ. ನೀರಿಗೆ ಜ್ಞಾನವೆಂದು ಹೇಳುವರೇ! ಜ್ಞಾನದಿಂದಲೇ ಪತಿತರಿಂದ ಪಾವನರಾಗುತ್ತೀರಿ, ನೀರಿನಿಂದ ಪಾವನರಾಗುವುದಿಲ್ಲ. ನದಿಗಳಂತೂ ಇಡೀ ಪ್ರಪಂಚದಲ್ಲಿವೆ. ಜ್ಞಾನ ಸಾಗರ ತಂದೆಯು ಇವರಲ್ಲಿ ಪ್ರವೇಶ ಮಾಡಿ ಜ್ಞಾನವನ್ನು ತಿಳಿಸುತ್ತಾರೆ. ಮನುಷ್ಯರು ಗೋಮುಖಕ್ಕೆ ಹೋಗುತ್ತಾರೆ. ವಾಸ್ತವದಲ್ಲಿ ನೀವು ಚೈತನ್ಯದಲ್ಲಿ ಗೋಮುಖವಾಗಿದ್ದೀರಿ, ನಿಮ್ಮ ಬಾಯಿಂದ ಜ್ಞಾನಾಮೃತವು ಬರುತ್ತದೆ ಬಾಕಿ ಹಸುವಿನಿಂದಂತೂ ಹಾಲು ಸಿಗುತ್ತದೆ, ನೀರಿನ ಮಾತಿಲ್ಲ. ಇದೆಲ್ಲವನ್ನೂ ತಂದೆಯು ತಿಳಿಸುತ್ತಾರೆ - ಅವರು ಎಲ್ಲರ ಸದ್ಗತಿದಾತನಾಗಿದ್ದಾರೆ. ಈಗ ಎಲ್ಲರೂ ದುರ್ಗತಿಯಲ್ಲಿದ್ದಾರೆ. ಮೊದಲು ನೀವು ರಾವಣನನ್ನು ಏಕೆ ಸುಡುತ್ತಾರೆ ಎಂಬುದನ್ನು ತಿಳಿದುಕೊಂಡಿರಲಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಬೇಹದ್ದಿನ ದಶಹರಾ ಆಗುವುದಿದೆ. ಇಡೀ ಪ್ರಪಂಚವೇ ದ್ವೀಪವಾಗಿದೆ. ಇಡೀ ಸೃಷ್ಟಿಯಲ್ಲಿಯೇ ರಾವಣ ರಾಜ್ಯವಿದೆ. ವಾನರ ಸೇನೆಯ ಸಹಯೋಗದಿಂದ ಸೇತುವೆ ಕಟ್ಟಿದರು.... ಎಂದು ಯಾವುದು ಶಾಸ್ತ್ರಗಳಲ್ಲಿದೆಯೋ ಇವೆಲ್ಲವೂ ದಂತ ಕಥೆಗಳಾಗಿವೆ. ಭಕ್ತಿ ಇತ್ಯಾದಿಗಳು ನಡೆಯುತ್ತವೆ. ಮೊದಲು ಅವ್ಯಭಿಚಾರಿ ಭಕ್ತಿಯಿರುತ್ತದೆ ನಂತರ ವ್ಯಭಿಚಾರಿ ಭಕ್ತಿಯಾಗುತ್ತದೆ. ದಶಹರಾ, ರಕ್ಷಾಬಂಧನ ಇವೆಲ್ಲವೂ ಈಗಿನ ಹಬ್ಬಗಳಾಗಿವೆ. ಶಿವ ಜಯಂತಿಯ ನಂತರ ಕೃಷ್ಣ ಜಯಂತಿಯಾಗುತ್ತದೆ. ಈಗ ಕೃಷ್ಣ ಪುರಿಯ ಸ್ಥಾಪನೆಯಾಗುತ್ತಿದೆ. ಇಂದು ಕಂಸ ಪುರಿಯಾಗಿದೆ, ನಾಳೆ ಕೃಷ್ಣ ಪುರಿಯಾಗುವುದು. ಆಸುರೀ ಸಂಪ್ರದಾಯಕ್ಕೆ ಕಂಸನೆಂದು ಹೇಳಲಾಗುತ್ತದೆ. ಪಾಂಡವರು ಮತ್ತು ಕೌರವರ ಯುದ್ಧವಿಲ್ಲ. ಕೃಷ್ಣನ ಜನ್ಮವು ಸತ್ಯಯುಗದಲ್ಲಿ ಆಗುತ್ತದೆ, ಕೃಷ್ಣನು ಮೊದಲ ರಾಜಕುಮಾರನಾಗಿದ್ದಾನೆ. ಓದಲು ಶಾಲೆಗೆ ಹೋಗುತ್ತಾನೆ. ದೊಡ್ಡವನಾದ ಮೇಲೆ ಸಿಂಹಾಸನವನ್ನು ಏರುತ್ತಾನೆ ಆದ್ದರಿಂದ ಮಹಿಮೆಯೆಲ್ಲವೂ ಶಿವ ತಂದೆಯದಾಗಿದೆ, ಇವರೇ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಬಾಕಿ ಈ ರಾಸಲೀಲೆ ಇತ್ಯಾದಿಗಳು ಪರಸ್ಪರ ಖುಷಿಯನ್ನು ಆಚರಿಸುತ್ತಾರೆ. ಬಾಕಿ ಕೃಷ್ಣನು ಯಾರಿಗಾದರೂ ಜ್ಞಾನವನ್ನು ತಿಳಿಸಲು ಹೇಗೆ ಸಾಧ್ಯ. ತಂದೆಯು ತಿಳಿಸುತ್ತಾರೆ - ಭಕ್ತಿ ಮಾಡಬೇಡಿ ಎಂದು ಯಾರಿಗೂ ಹೇಳಬಾರದು. ಭಕ್ತಿಯು ತಾನಾಗಿಯೇ ಬಿಟ್ಟು ಹೋಗುತ್ತದೆ. ಭಕ್ತಿಯನ್ನು ಬಿಡುತ್ತಾರೆ, ವಿಕಾರವನ್ನು ಬಿಡುತ್ತಾರೆ, ಇದರಿಂದಲೇ ಕಲಹಗಳಾಗುತ್ತವೆ. ತಂದೆಯು ತಿಳಿಸುತ್ತಾರೆ - ನಾನು ರುದ್ರ ಯಜ್ಞವನ್ನು ರಚಿಸುತ್ತೇನೆ, ಇದರಲ್ಲಿ ಆಸುರೀ ಸಂಪ್ರದಾಯದವರ ವಿಘ್ನಗಳು ಬೀಳುತ್ತವೆ. ಇದು ಶಿವ ತಂದೆಯ ಬೇಹದ್ದಿನ ಯಜ್ಞವಾಗಿದೆ. ಇದರಿಂದ ಮನುಷ್ಯರಿಂದ ದೇವತೆಗಳಾಗುತ್ತೀರಿ. ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಕಟವಾಯಿತೆಂದು ಗಾಯನವಿದೆ. ಯಾವಾಗ ಹಳೆಯ ಪ್ರಪಂಚದ ವಿನಾಶವಾಗುವುದೋ ಆಗ ನೀವು ಹೊಸ ಪ್ರಪಂಚದಲ್ಲಿ ಆಗ ನೀವು ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುತ್ತೀರಿ. ನಾವು ಶಾಂತಿ ಸ್ಥಾಪನೆಯಾಗಲಿ ಎಂದು ಹೇಳಿದರೆ ಈ ಬಿ.ಕೆ.ಗಳು ವಿನಾಶವಾಗಲಿ ಎನ್ನುತ್ತಾರೆ ಎಂದು ಮನುಷ್ಯರು ಹೇಳುತ್ತಾರೆ. ಜ್ಞಾನವಿಲ್ಲದ ಕಾರಣ ಈ ರೀತಿ ಮಾತನಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಇಡೀ ಹಳೆಯ ಪ್ರಪಂಚವು ಈ ಜ್ಞಾನ ಯಜ್ಞದಲ್ಲಿ ಸ್ವಾಹಾ ಆಗಿ ಬಿಡುವುದು. ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ. ಪ್ರಾಕೃತಿಕ ವಿಕೋಪಗಳಾಗುವವು, ಎಲ್ಲರೂ ಸಾಸಿವೆಯಂತೆ ಚೂರು ಚೂರಾಗಿ ಸಮಾಪ್ತಿಯಾಗುವರು. ಕೆಲವರೇ ಆತ್ಮರು ಉಳಿಯುವರು, ಆತ್ಮವಂತೂ ಅವಿನಾಶಿಯಾಗಿದೆ. ಈಗ ಬೇಹದ್ದಿನ ಹೋಲಿಕಾ ಆಗುವುದು, ಅದರಲ್ಲಿ ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ ಬಾಕಿ ಆತ್ಮವು ಪವಿತ್ರವಾಗಿ ಹೊರಟು ಹೋಗುವವು. ಬೆಂಕಿಯಲ್ಲಿ ವಸ್ತು ಶುದ್ಧವಾಗುತ್ತದೆ. ಶುದ್ಧತೆಗಾಗಿ ಹೋಮ ಮಾಡುತ್ತಾರೆ, ಅವೆಲ್ಲವೂ ಸ್ಥೂಲ ಮಾತುಗಳಾಗಿವೆ. ಈಗ ಇಡೀ ಪ್ರಪಂಚವೇ ಸ್ವಾಹಾ ಆಗಲಿದೆ. ವಿನಾಶಕ್ಕೆ ಮೊದಲು ಅವಶ್ಯವಾಗಿ ಸ್ಥಾಪನೆಯಾಗಬೇಕು. ಯಾರಿಗೇ ಆಗಲಿ ಈ ರೀತಿ ತಿಳಿಸಿರಿ - ಮೊದಲು ಸ್ಥಾಪನೆ ನಂತರ ವಿನಾಶ, ಬ್ರಹ್ಮನ ಮೂಲಕ ಸ್ಥಾಪನೆ. ಪ್ರಜಾಪಿತನು ಪ್ರಸಿದ್ಧರಾಗಿದ್ದಾರೆ, ಆದಿ ದೇವ-ಆದಿ ದೇವಿ... ಜಗದಂಬೆಯ ಲಕ್ಷಾಂತರ ಮಂದಿರಗಳಿವೆ. ಎಷ್ಟೊಂದು ಮೇಳಗಳಾಗುತ್ತವೆ, ನೀವು ಜಗದಂಬೆಯ ಮಕ್ಕಳು ಜ್ಞಾನ ಜ್ಞಾನೇಶ್ವರಿ ಆಗಿದ್ದೀರಿ ನಂತರ ರಾಜ ರಾಜೇಶ್ವರಿಯರಾಗುತ್ತೀರಿ. ನೀವು ಬಹಳ ಧನವಂತರಾಗುತ್ತೀರಿ. ಮತ್ತೆ ಭಕ್ತಿ ಮಾರ್ಗದಲ್ಲಿ ದೀಪಾವಳಿಯಂದು ಲಕ್ಷ್ಮಿಯಿಂದ ವಿನಾಶೀ ಧನವನ್ನು ಬೇಡುತ್ತಾರೆ. ಇಲ್ಲಿ ನಿಮಗೆ ಎಲ್ಲವೂ ಲಭಿಸುತ್ತದೆ - ಆಯುಷ್ಯವಾನ್ಭವ, ಪುತ್ರವಾನ್ಭವ. ಸತ್ಯಯುಗದಲ್ಲಿ 150 ವರ್ಷ ಆಯಸ್ಸು ಇರುತ್ತದೆ, ಇಲ್ಲಿ ನೀವು ಎಷ್ಟು ಯೋಗ ಮಾಡುತ್ತೀರೋ ಅಷ್ಟು ಆಯಸ್ಸು ಹೆಚ್ಚುತ್ತಾ ಹೋಗುವುದು. ನೀವು ಈಶ್ವರನೊಂದಿಗೆ ಯೋಗವನ್ನಿಟ್ಟು ಯೋಗೇಶ್ವರರಾಗುತ್ತೀರಿ. |
ತಂದೆಯು ತಿಳಿಸುತ್ತಾರೆ - ನಾನು ಅಗಸನಾಗಿದ್ದೇನೆ, ಎಲ್ಲಾ ಕೊಳಕಾದ ಆತ್ಮರನ್ನು ಸ್ವಚ್ಛಗೊಳಿಸುತ್ತೇನೆ ಮತ್ತೆ ಶರೀರವು ಶುದ್ಧವಾಗಿರುವುದೇ ಸಿಗುವುದು. ನಾನು ಸೆಕೆಂಡಿನಲ್ಲಿ ಪ್ರಪಂಚದ ಎಲ್ಲಾ ವಸ್ತ್ರಗಳನ್ನು ಸ್ವಚ್ಛ ಮಾಡಿ ಬಿಡುತ್ತೇನೆ. ಕೇವಲ ಮನ್ಮನಾಭವ ಆಗಿರುವುದರಿಂದ ಆತ್ಮ ಮತ್ತು ಶರೀರವೆರಡೂ ಪವಿತ್ರವಾಗಿ ಬಿಡುತ್ತದೆ. ಛೂ ಮಂತ್ರವಾಯಿತಲ್ಲವೆ. ಸೆಕೆಂಡಿನಲ್ಲಿ ಜೀವನ್ಮುಕ್ತಿ, ಎಷ್ಟು ಸಹಜ ಉಪಾಯವಾಗಿದೆ! ನಡೆಯುತ್ತಾ-ತಿರುಗಾಡುತ್ತಾ ಕೇವಲ ತಂದೆಯನ್ನು ನೆನಪು ಮಾಡಿರಿ, ಮತ್ತೇನೂ ಕಷ್ಟವನ್ನು ಕೊಡುವುದಿಲ್ಲ. ಈಗ ನಿಮ್ಮದು ಒಂದು ಸೆಕೆಂಡಿನಲ್ಲಿ ಏರುವ ಕಲೆಯಾಗುತ್ತದೆ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳ ಸೇವಕನಾಗಿ ಬಂದಿದ್ದೇನೆ, ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ನೀವೇ ಕರೆದಿರಿ ಅಂದಮೇಲೆ ಸೇವಕನಾದರಲ್ಲವೆ. ಯಾವಾಗ ನೀವು ಬಹಳ ಪತಿತರಾಗುತ್ತೀರೋ ಆಗ ಜೋರಾಗಿ ಕರೆಯುತ್ತೀರಿ. ನಾನೀಗ ಬಂದಿದ್ದೇನೆ, ನಾನು ಕಲ್ಪ-ಕಲ್ಪವೂ ಬಂದು ಮಕ್ಕಳಿಗೆ ಮಂತ್ರವನ್ನು ಕೊಡುತ್ತೇನೆ - ನನ್ನನ್ನು ನೆನಪು ಮಾಡಿರಿ. ಮನ್ಮನಾಭವದ ಅರ್ಥವೇ ಇದಾಗಿದೆ ನಂತರ ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ನೀವು ವಿಷ್ಣು ಪುರಿಯ ರಾಜ್ಯವನ್ನು ಪಡೆಯಲು ಬಂದಿದ್ದೀರಿ. ರಾವಣ ಪುರಿಯ ನಂತರ ವಿಷ್ಣು ಪುರಿಯಾಗುವುದು. ಕಂಸ ಪುರಿಯ ನಂತರ ಕೃಷ್ಣ ಪುರಿಯಾಗುವುದು. ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ. ತಂದೆಯು ಹೇಳುತ್ತಾರೆ - ಈ ಹಳೆಯ ಪ್ರಪಂಚದಿಂದ ಕೇವಲ ಮಮತೆಯನ್ನು ತೆಗೆಯಿರಿ. ನಾವೀಗ 84 ಜನ್ಮಗಳನ್ನು ಪೂರ್ಣಗೊಳಿಸಿದ್ದೇವೆ. ಈ ಹಳೆಯ ವಸ್ತ್ರವನ್ನು ಬಿಟ್ಟು ನಾವು ಹೊಸ ಪ್ರಪಂಚಕ್ಕೆ ಹೋಗುತ್ತೇವೆ. ನೆನಪಿನಿಂದಲೇ ಪಾಪಗಳು ಕಳೆಯುತ್ತವೆ, ಇಷ್ಟೂ ಸಾಹಸವನ್ನು ಇಡಬೇಕು. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮುಖದಿಂದ ಸದಾ ಜ್ಞಾನಾಮೃತವೇ ಬರುತ್ತಿರಬೇಕಾಗಿದೆ. ಜ್ಞಾನದಿಂದಲೇ ಎಲ್ಲರ ಸದ್ಗತಿ ಮಾಡಬೇಕಾಗಿದೆ. ಒಬ್ಬ ತಂದೆಯಿಂದಲೇ ಜ್ಞಾನವನ್ನು ಕೇಳಬೇಕು, ಅನ್ಯರಿಂದಲ್ಲ. |
2. ಏರುವ ಕಲೆಯಲ್ಲಿ ಹೋಗುವುದಕ್ಕಾಗಿ ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ. ಈ ಹಳೆಯ ಪ್ರಪಂಚ ಹಳೆಯ ವಸ್ತ್ರದಿಂದ ಮಮತೆಯನ್ನು ತೆಗೆಯಬೇಕಾಗಿದೆ. |
ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಯಾರಾದರೂ ಶರೀರ ಬಿಡುತ್ತಾರೆಂದರೆ ಇನ್ನೊಬ್ಬ ತಂದೆಯ ಬಳಿ ಜನ್ಮ ಪಡೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರಾಗಿದ್ದೇವೆ. ಅದಂತೂ ಶರೀರದ ಮಾತಾಯಿತು. ಒಂದು ಶರೀರವನ್ನು ಬಿಟ್ಟು ಮತ್ತೆ ಇನ್ನೊಬ್ಬ ತಂದೆಯ ಬಳಿ ಹೋಗುತ್ತಾರೆ. ನೀವು ಎಷ್ಟೊಂದು ಸಾಕಾರಿ ತಂದೆಯರನ್ನು ಪಡೆದಿದ್ದೀರಿ. ಮೂಲತಃ ನಿರಾಕಾರಿ ತಂದೆಯ ಮಕ್ಕಳಾಗಿದ್ದೀರಿ. ನೀವಾತ್ಮರು ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೀರಿ. ಅಲ್ಲಿನ ನಿವಾಸಿಗಳಾಗಿದ್ದೀರಿ ಯಾವುದನ್ನು ನಿರ್ವಾಣಧಾಮ, ಶಾಂತಿಧಾಮವೆಂದು ಕರೆಯಲಾಗುತ್ತದೆ. ತಂದೆಯೂ ಅಲ್ಲಿರುತ್ತಾರೆ, ಇಲ್ಲಿ ನೀವು ಬಂದು ಲೌಕಿಕ ತಂದೆಯ ಮಕ್ಕಳಾಗುತ್ತೀರಿ ನಂತರ ಆ ತಂದೆಯನ್ನೇ ಮರೆತು ಹೋಗುತ್ತೀರಿ. ಸತ್ಯಯುಗದಲ್ಲಿ ನೀವು ಸುಖಿಯಾಗಿ ಬಿಡುತ್ತೀರಿ ಆದ್ದರಿಂದ ಆ ಪಾರಲೌಕಿಕ ತಂದೆಯನ್ನು ಮರೆತು ಹೋಗುತ್ತೀರಿ. ಸುಖದಲ್ಲಿ ಆ ತಂದೆಯ ಸ್ಮರಣೆ ಮಾಡುವುದಿಲ್ಲ, ದುಃಖದಲ್ಲಿ ನೆನಪು ಮಾಡುತ್ತೀರಿ ಮತ್ತು ಆತ್ಮವೇ ನೆನಪು ಮಾಡುತ್ತದೆ. ಲೌಕಿಕ ತಂದೆಯನ್ನು ನೆನಪು ಮಾಡಿದಾಗ ಬುದ್ಧಿಯು ಶರೀರದ ಕಡೆ ಹೋಗುತ್ತದೆ. ಆ ತಂದೆಯನ್ನು ನೆನಪು ಮಾಡಿದಾಗ ಓ ತಂದೆಯೇ ಎಂದು ಹೇಳುತ್ತಾರೆ. ಇಬ್ಬರೂ ತಂದೆಯರಾಗಿದ್ದಾರೆ. ಸರಿಯಾದ ಶಬ್ಧವು ತಂದೆಯೆಂಬುದೇ ಆಗಿದೆ, ಅವರೂ ತಂದೆಯಾಗಿದ್ದಾರೆ, ಇವರೂ ತಂದೆಯಾಗಿದ್ದಾರೆ. ಆತ್ಮವು ಆತ್ಮಿಕ ತಂದೆಯನ್ನು ನೆನಪು ಮಾಡುತ್ತದೆ ಆಗ ಬುದ್ಧಿಯೋಗವು ಮೇಲೆ ಹೋಗುತ್ತದೆ, ಇದನ್ನು ತಂದೆಯು ಮಕ್ಕಳಿಗೆ ತಿಳಿಸುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ, ತಂದೆಯೂ ಬಂದಿದ್ದಾರೆ. ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ – ಮೊಟ್ಟ ಮೊದಲು ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದೆನು, ನೀವು ಬಹಳ ಸಾಹುಕಾರರಾಗಿದ್ದಿರಿ ನಂತರ 84 ಜನ್ಮಗಳನ್ನು ತೆಗೆದುಕೊಂಡು ಡ್ರಾಮಾನುಸಾರ ನೀವೀಗ ದುಃಖಿಯಾಗಿ ಬಿಟ್ಟಿದ್ದೀರಿ. ಡ್ರಾಮಾನುಸಾರ ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ನಿಮ್ಮ ಆತ್ಮ ಮತ್ತು ಈ ಶರೀರ ರೂಪಿ ವಸ್ತ್ರವು ಸತೋಪ್ರಧಾನವಾಗಿತ್ತು ನಂತರ ಸತ್ಯಯುಗದಿಂದ ಆತ್ಮವು ತ್ರೇತಾಯುಗದಲ್ಲಿ ಬಂದಾಗ ಶರೀರವು ಬೆಳ್ಳಿಯ ಸಮಾನವಾಯಿತು ನಂತರ ದ್ವಾಪರಯುಗದಲ್ಲಿ ಬಂದಿರಿ, ಈಗ ನೀವಾತ್ಮರು ಸಂಪೂರ್ಣ ಪತಿತರಾಗಿ ಬಿಟ್ಟಿದ್ದೀರಿ. ಆದ್ದರಿಂದ ಶರೀರವೂ ಪತಿತವಾಗಿದೆ. ಹೇಗೆ 14 ಕ್ಯಾರೇಟ್ನ ಚಿನ್ನವನ್ನು ಯಾರೂ ಬಯಸುವುದಿಲ್ಲ, ಕಪ್ಪಾಗಿ ಬಿಡುತ್ತದೆ. ನೀವೂ ಸಹ ಈಗ ಕಪ್ಪು, ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಆತ್ಮ ಮತ್ತು ಶರೀರ ಯಾವುದು ಇಷ್ಟು ಕಪ್ಪಾಗಿ ಬಿಟ್ಟಿದೆಯೋ ಅದು ಪುನಃ ಪವಿತ್ರವಾಗುವುದು ಹೇಗೆ? ಆತ್ಮವು ಪವಿತ್ರವಾದರೆ ಪವಿತ್ರ ಶರೀರವೇ ಸಿಗುವುದು. ಅದು ಹೇಗಾಗುವುದು? ಗಂಗಾ ಸ್ನಾನ ಮಾಡುವುದರಿಂದ ಆಗುವುದೇ? ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಈ ರೀತಿ ಹೇಳಿದಾಗ ಆತ್ಮದ ಬುದ್ದಿಯು ಪಾರಲೌಕಿಕ ತಂದೆಯ ಕಡೆ ಹೋಗುತ್ತದೆ. ಹೇ ತಂದೆಯೇ, ತಂದೆ ಎಂಬ ಶಬ್ಧವೇ ಎಷ್ಟು ಮಧುರವಾಗಿದೆ. ಭಾರತದಲ್ಲಿಯೇ ತಂದೆ, ತಂದೆ ಎಂದು ಹೇಳುತ್ತಾರೆ. ನೀವೀಗ ಆತ್ಮಾಭಿಮಾನಿಗಳಾಗಿ ತಂದೆಯ ಮಕ್ಕಳಾಗಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಸ್ವರ್ಗದಲ್ಲಿ ಕಳುಹಿಸಿದ್ದೆನು, ಹೊಸ ಶರೀರವನ್ನು ಧಾರಣೆ ಮಾಡಿದ್ದಿರಿ. ಈಗ ನೀವು ಏನಾಗಿ ಬಿಟ್ಟಿದ್ದೀರಿ! ಈ ಮಾತುಗಳು ಸದಾ ಆಂತರ್ಯದಲ್ಲಿರಬೇಕು. ತಂದೆಯನ್ನೇ ನೆನಪು ಮಾಡಬೇಕು. ಎಲ್ಲರೂ ನೆನಪು ಮಾಡುತ್ತಾರಲ್ಲವೆ - ಹೇ ಬಾಬಾ, ನಾವಾತ್ಮರು ಪತಿತರಾಗಿ ಬಿಟ್ಟಿದ್ದೇವೆ. ಈಗ ಬಂದು ನಮ್ಮನ್ನು ಪಾವನ ಮಾಡಿರಿ. ಡ್ರಾಮಾದಲ್ಲಿ ಇದೂ ಪಾತ್ರವಿದೆ, ಆದ್ದರಿಂದಲೇ ಕರೆಯುತ್ತಾರೆ. ಯಾವಾಗ ಹಳೆಯ ಪ್ರಪಂಚದಿಂದ ಹೊಸದಾಗಬೇಕಾಗಿದೆಯೋ ಆಗಲೇ ತಂದೆಯು ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ. ನೀವು ಮಕ್ಕಳಿಗೆ ನಿಶ್ಚಯವಿದೆ – ಅತಿ ಪ್ರಿಯ ತಂದೆಯಾಗಿದ್ದಾರೆ. ಸ್ವೀಟ್-ಸ್ವೀಟೆಸ್ಟ್... ಎಂದು ಹೇಳುತ್ತಾರೆ ಅಂದಮೇಲೆ ಈಗ ಸ್ವೀಟ್ ಯಾರು? ಲೌಕಿಕ ಸಂಬಂಧದಲ್ಲಿ ಮೊದಲು ತಂದೆಯಾಗಿದ್ದಾರೆ, ಅವರು ಜನ್ಮ ಕೊಡುತ್ತಾರೆ. ನಂತರ ಶಿಕ್ಷಕರು ಶಿಕ್ಷಕರಿಂದ ಓದಿ ನೀವು ಪದವಿಯನ್ನು ಪಡೆಯುತ್ತೀರಿ. ವಿದ್ಯೆಯು ಸಂಪಾದನೆಯ ಮೂಲವೆಂದು ಹೇಳಲಾಗುತ್ತದೆ. ಜ್ಞಾನವು ವಿದ್ಯೆಯಾಗಿದೆ, ಯೋಗವು ನೆನಪಾಗಿದೆ ಅಂದಾಗ ಬೇಹದ್ದಿನ ತಂದೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಚಿತ್ರಗಳಲ್ಲಿ ಸ್ಪಷ್ಟವಾಗಿ ತೋರಿಸಿದ್ದಾರೆ, ಬ್ರಹ್ಮಾರವರ ಮೂಲಕ ಶಿವ ತಂದೆಯು ಸ್ಥಾಪನೆ ಮಾಡಿಸುತ್ತಾರೆ. ಕೃಷ್ಣನು ರಾಜಯೋಗವನ್ನು ಹೇಗೆ ಕಲಿಸುವರು? ರಾಜಯೋಗವನ್ನು ಸತ್ಯಯುಗಕ್ಕಾಗಿಯೇ ಕಲಿಸುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯು ಸಂಗಮಯುಗದಲ್ಲಿಯೇ ಕಲಿಸಿರುವರು. ಸತ್ಯಯುಗದ ಸ್ಥಾಪನೆ ಮಾಡುವವರು ತಂದೆಯಾಗಿದ್ದಾರೆ. ಬ್ರಹ್ಮಾರವರ ಮೂಲಕ ಮಾಡಿಸುತ್ತಾರೆ. ಮಾಡಿ-ಮಾಡಿಸುವವರಲ್ಲವೆ. ಅವರಂತೂ ತ್ರಿಮೂರ್ತಿ ಬ್ರಹ್ಮಾ ಎಂದು ಹೇಳಿ ಬಿಡುತ್ತಾರೆ ಆದರೆ ಶ್ರೇಷ್ಠಾತಿ ಶ್ರೇಷ್ಠರು ಶಿವನಲ್ಲವೆ! ಬ್ರಹ್ಮನು ಸಾಕಾರಿ, ಶಿವ ನಿರಾಕಾರಿಯಾಗಿದ್ದಾರೆ. ಸೃಷ್ಟಿಯು ಇದೇ ಆಗಿದೆ, ಈ ಸೃಷ್ಟಿಯೇ ಚಕ್ರದಂತೆ ಸುತ್ತುತ್ತಾ ಇರುತ್ತದೆ, ಪುನರಾವರ್ತನೆಯಾಗುತ್ತಾ ಇರುತ್ತದೆ. ಸೂಕ್ಷ್ಮವತನದ ಸೃಷ್ಟಿಯ ಚಕ್ರವೆಂದು ಹೇಳುವುದಿಲ್ಲ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ, ಸತ್ಯ-ತ್ರೇತಾ, ದ್ವಾಪರ-ಕಲಿಯುಗವೆಂದು ಹಾಡುತ್ತಾರೆ. ಮಧ್ಯದಲ್ಲಿ ಅವಶ್ಯವಾಗಿ ಸಂಗಮಯುಗವು ಬೇಕಾಗಿದೆ, ಇಲ್ಲದಿದ್ದರೆ ಕಲಿಯುಗವನ್ನು ಸತ್ಯಯುಗವನ್ನಾಗಿ ಯಾರು ಮಾಡುತ್ತಾರೆ? ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಲು ತಂದೆಯು ಸಂಗಮದಲ್ಲಿಯೇ ಬರುತ್ತಾರೆ. ಎಷ್ಟು ಹಳೆಯ ಪ್ರಪಂಚವೋ ಅಷ್ಟು ದುಃಖವು ಹೆಚ್ಚಾಗಿರುವುದು. ಆತ್ಮವು ಎಷ್ಟು ತಮೋಪ್ರಧಾನವಾಗುತ್ತಾ ಹೋಗುವುದೋ ಅಷ್ಟು ದುಃಖಿಯಾಗುತ್ತದೆ. ದೇವತೆಗಳು ಸತೋಪ್ರಧಾನರಾಗಿದ್ದಾರೆ, ಇದಂತೂ ಹೈಯಸ್ಟ್ ಅಥಾರಿಟಿ, ಈಶ್ವರೀಯ ಸರ್ಕಾರವಾಗಿದೆ. ಜೊತೆಯಲ್ಲಿ ಧರ್ಮರಾಜನೂ ಇದ್ದಾರೆ. ತಂದೆಯು ತಿಳಿಸುತ್ತಾರೆ, ನೀವು ಶಿವಾಲಯದ ನಿವಾಸಿಗಳಾಗಿದ್ದಿರಿ, ಈಗ ವೇಶ್ಯಾಲಯವಾಗಿದೆ. ನೀವು ಪಾವನರಾಗಿದ್ದಿರಿ, ಈಗ ಪತಿತರಾಗಿದ್ದೀರಿ ಆದ್ದರಿಂದ ನಾವಂತೂ ಪಾಪಿಗಳಾಗಿದ್ದೇವೆ ಎಂದು ಹೇಳುತ್ತೀರಿ. ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಆತ್ಮವು ಹೇಳುತ್ತದೆ. ಯಾವುದೇ ದೇವತೆಯ ಮಂದಿರದಲ್ಲಿ ಹೋದರೆ ಅವರ ಮುಂದೆ ಈ ರೀತಿ ಹೇಳುತ್ತಾರೆ. ವಾಸ್ತವದಲ್ಲಿ ತಂದೆಯ ಮುಂದೆ ಹೇಳಬೇಕಾಗಿದೆ. ತಂದೆಯನ್ನು ಬಿಟ್ಟು ತಮ್ಮ ಸಹೋದರರ ಮುಂದೆ ಹೇಳುತ್ತಾರೆ ಅಂದರೆ ಈ ದೇವತೆಗಳು ನಿಮಗೆ ಸಹೋದರರಾದರಲ್ಲವೆ. ಸಹೋದರರಿಂದ ಏನೂ ಸಿಗುವುದಿಲ್ಲ, ಸಹೋದರರ ಪೂಜೆ ಮಾಡುತ್ತಾ-ಮಾಡುತ್ತಾ ಕೆಳಗಿಳಿಯುತ್ತಾ ಬಂದಿದ್ದೀರಿ. ಈಗ ನಿಮಗೆ ತಿಳಿದಿದೆ - ತಂದೆಯು ಬಂದಿದ್ದಾರೆ, ಅವರಿಂದ ನಮಗೆ ಆಸ್ತಿಯು ಸಿಗುತ್ತದೆ. ಬಾಕಿ ಮನುಷ್ಯರಂತೂ ತಂದೆಯನ್ನೇ ಅರಿತುಕೊಂಡಿಲ್ಲ, ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ಇನ್ನೂ ಕೆಲವರು ಅಖಂಡ ಜ್ಯೋತಿ ತತ್ವವೆಂದು ಹೇಳುತ್ತಾರೆ. ಇನ್ನೂ ಹಲವರು ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ. ಅರೆ! ಅಖಂಡ ಜ್ಯೋತಿ ಸ್ವರೂಪವೆಂದು ಹೇಳುತ್ತಾರೆ ಅಂದಮೇಲೆ ಮತ್ತೆ ನಾಮ-ರೂಪದಿಂದ ಭಿನ್ನವೆಂದು ಹೇಗೆ ಹೇಳುತ್ತಾರೆ! ತಂದೆಯನ್ನು ಅರಿತುಕೊಳ್ಳದ ಕಾರಣ ಪತಿತರಾಗಿ ಬಿಟ್ಟಿದ್ದಾರೆ. ತಮೋಪ್ರಧಾನರೂ ಆಗಲೇಬೇಕಾಗಿದೆ. ನಂತರ ಯಾವಾಗ ತಂದೆಯು ಬರುವರೋ ಆಗ ಎಲ್ಲರನ್ನೂ ಪಾವನರನ್ನಾಗಿ ಮಾಡುವರು. ಆತ್ಮರು ನಿರಾಕಾರಿ ಪ್ರಪಂಚದಲ್ಲಿ ತಂದೆಯ ಜೊತೆ ಇರುತ್ತಾರೆ. ನಂತರ ಇಲ್ಲಿಗೆ ಬಂದು ಸತೋ-ರಜೋ-ತಮೋ ಪಾತ್ರವನ್ನು ಅಭಿನಯಿಸುತ್ತಾರೆ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ತಂದೆಯು ಬರುತ್ತಾರೆ, ನಾನು ಬ್ರಹ್ಮನ ಆಧಾರವನ್ನು ತೆಗೆದುಕೊಳ್ಳುತ್ತೇನೆಂದು ಹೇಳುತ್ತಾರೆ. ಇದು ಭಾಗ್ಯಶಾಲಿ ರಥವಾಗಿದೆ, ಆತ್ಮವಿಲ್ಲದೆ ರಥವಿರುತ್ತದೆಯೇ! ಭಗೀರಥನು ಗಂಗೆಯನ್ನು ತಂದನೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ನಾವು ಏನು ಹೇಳುತ್ತೇವೆ ಎಂಬುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. |
ಈಗ ನೀವು ಮಕ್ಕಳಿಗೆ ತಿಳಿಸಲಾಗಿದೆ - ಇದು ಜ್ಞಾನದ ಮಳೆಯಾಗಿದೆ, ಇದರಿಂದೇನಾಗುತ್ತದೆ? ಪತಿತರಿಂದ ಪಾವನರಾಗುತ್ತೀರಿ. ಗಂಗಾ, ಯಮುನಾ ನದಿಗಳು ಸತ್ಯಯುಗದಲ್ಲಿಯೂ ಇರುತ್ತವೆ. ಕೃಷ್ಣನು ಯಮುನಾ ನದಿಯ ತೀರದಲ್ಲಿ ಆಟವಾಡುತ್ತಾನೆಂದು ಹೇಳುತ್ತಾರೆ. ವಾಸ್ತವದಲ್ಲಿ ಈ ಮಾತಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ ಅಂದಮೇಲೆ ಕೃಷ್ಣನಿಗೆ ಬಹಳ ಸಂಭಾಲನೆಯಿಂದ ಪಾಲನೆಯಾಗುತ್ತದೆ ಏಕೆಂದರೆ ಮೊದಲ ಹೂವಲ್ಲವೆ. ಹೂ ಎಷ್ಟು ಸುಂದರವಾಗಿರುತ್ತದೆ, ಹೂವಿನಿಂದ ಎಲ್ಲರೂ ಬಂದು ಸುಗಂಧವನ್ನು ತೆಗೆದುಕೊಳ್ಳುತ್ತಾರೆ. ಮುಳ್ಳುಗಳಿಂದ ಸುಗಂಧವನ್ನು ತೆಗೆದುಕೊಳ್ಳುವರೇ? ಈಗಂತೂ ಮುಳ್ಳುಗಳ ಪ್ರಪಂಚವಾಗಿದೆ, ತಂದೆಯು ಬಂದು ಅರಣ್ಯವನ್ನು ಉದ್ಯಾನವನವನ್ನಾಗಿ ಮಾಡುತ್ತಾರೆ, ಆದ್ದರಿಂದ ತಂದೆಗೆ ಬಬುಲ್ನಾಥನೆಂದು ಹೆಸರನ್ನಿಟ್ಟಿದ್ದಾರೆ. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆ, ಆದ್ದರಿಂದ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ತಂದೆಯೆಂದು ಮಹಿಮೆ ಮಾಡುತ್ತಾರೆ. ಈಗ ನೀವು ಮಕ್ಕಳಿಗೆ ತಂದೆಯ ಜೊತೆ ಎಷ್ಟೊಂದು ಪ್ರೀತಿಯಿರಬೇಕು! ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆಂದು ನೀವು ತಿಳಿದುಕೊಂಡಿದ್ದೀರಿ, ಈಗ ನಿಮ್ಮ ಸಂಬಂಧವು ಅವರೊಂದಿಗೂ ಇದೆ ಮತ್ತು ಲೌಕಿಕದೊಂದಿಗೂ ಇದೆ. ಪಾರಲೌಕಿಕ ತಂದೆಯನ್ನು ನೆನಪು ಮಾಡುವುದರಿಂದ ನೀವು ಪಾವನರಾಗುತ್ತೀರಿ, ಅವರು ನಮ್ಮ ಲೌಕಿಕ ತಂದೆ, ಇವರು ಪಾರಲೌಕಿಕ ತಂದೆಯೆಂದು ಆತ್ಮಕ್ಕೆ ತಿಳಿದಿದೆ. ಭಕ್ತಿ ಮಾರ್ಗದಲ್ಲಿಯೂ ಆತ್ಮಕ್ಕೆ ಇದು ತಿಳಿದಿರುತ್ತದೆ, ಅವಿನಾಶಿ ತಂದೆಯನ್ನು ನೆನಪು ಮಾಡುತ್ತಾರೆ, ಆ ತಂದೆಯು ಯಾವಾಗ ಬಂದು ಸ್ವರ್ಗವನ್ನು ಸ್ಥಾಪನೆ ಮಾಡುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ತಂದೆಯು ಪತಿತರನ್ನು ಪಾವನ ಮಾಡುವುದಕ್ಕಾಗಿ ಬರುತ್ತಾರೆ ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ಬರುತ್ತಾರೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಲಕ್ಷಾಂತರ ವರ್ಷಗಳೆಂದು ಬರೆದು ಮನುಷ್ಯರನ್ನು ಘೋರ ಅಂಧಕಾರದಲ್ಲಿ ಹಾಕಿ ಬಿಟ್ಟಿದ್ದಾರೆ. ಯಾರು ಬಹಳ ಭಕ್ತಿ ಮಾಡುವರೋ ಅವರಿಗೆ ಭಗವಂತ ಸಿಗುವರೆಂದು ಹೇಳುತ್ತಾರೆ ಅಂದಮೇಲೆ ಎಲ್ಲರಿಗಿಂತ ಹೆಚ್ಚು ಭಕ್ತಿ ಮಾಡುವವರಿಗೆ ಅವಶ್ಯವಾಗಿ ಮೊದಲು ಸಿಗಬೇಕಾಗಿದೆ. ತಂದೆಯು ಲೆಕ್ಕವನ್ನೂ ತಿಳಿಸಿದ್ದಾರೆ. ಎಲ್ಲರಿಗಿಂತ ಮೊದಲು ನೀವು ಭಕ್ತಿ ಮಾಡುತ್ತೀರಿ. ಅಂದಮೇಲೆ ನಿಮಗೇ ಮೊಟ್ಟ ಮೊದಲು ಭಗವಂತನ ಮೂಲಕ ಜ್ಞಾನ ಸಿಗಬೇಕು ಮತ್ತೆ ನೀವೇ ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯ ಮಾಡುವಿರಿ. ಬೇಹದ್ದಿನ ತಂದೆಯು ನೀವು ಮಕ್ಕಳಿಗೆ ಜ್ಞಾನವನ್ನು ಕೊಡುತ್ತಿದ್ದಾರೆ. ಇದರಲ್ಲಿ ಯಾವುದೇ ಕಷ್ಟದ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಅರ್ಧಕಲ್ಪ ನೆನಪು ಮಾಡಿದ್ದೀರಿ, ಸುಖದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಅಂತ್ಯದಲ್ಲಿ ಯಾವಾಗ ದುಃಖಿಯಾಗುವಿರೋ ಆಗ ನಾನು ಬಂದು ಸುಖಿಯನ್ನಾಗಿ ಮಾಡುತ್ತೇನೆ. ಈಗ ನೀವು ಬಹಳ ದೊಡ್ಡ ವ್ಯಕ್ತಿಗಳಾಗುತ್ತೀರಿ. ಮುಖ್ಯಮಂತ್ರಿ, ಪ್ರಧಾನಮಂತ್ರಿ ಮೊದಲಾದವರ ಬಂಗಲೆಗಳು ಎಷ್ಟು ಸುಂದರವಾಗಿರುತ್ತವೆ. ಪೀಠೋಪಕರಣಗಳೂ ಅದೇ ರೀತಿ ಇರುತ್ತವೆ. ನೀವಂತೂ ಅವರಿಗಿಂತಲೂ ಎಷ್ಟು ದೊಡ್ಡ ವ್ಯಕ್ತಿ (ದೇವತೆ) ಗಳಾಗುತ್ತೀರಿ. ದೈವೀ ಗುಣವಂತ ದೇವತೆಗಳು, ಸ್ವರ್ಗದ ಮಾಲೀಕರಾಗುತ್ತೀರಿ. ಅಲ್ಲಿ ನಿಮಗಾಗಿ ವಜ್ರ ರತ್ನಗಳ ಮಹಲುಗಳಿರುತ್ತವೆ. ಅಲ್ಲಿ ನಿಮ್ಮ ಪೀಠೋಪಕರಣಗಳು ರತ್ನಜಡಿತವಾಗಿರುತ್ತವೆ. |
ಇದು ರುದ್ರ ಜ್ಞಾನ ಯಜ್ಞವಾಗಿದೆ. ಶಿವನಿಗೆ ರುದ್ರನೆಂತಲೂ ಹೇಳುತ್ತಾರೆ. ಯಾವಾಗ ಭಕ್ತಿಯು ಮುಕ್ತಾಯವಾಗುವುದೋ ಆಗ ಭಗವಂತನು ರುದ್ರ ಯಜ್ಞವನ್ನು ರಚಿಸುತ್ತಾರೆ. ಸತ್ಯಯುಗದಲ್ಲಿ ಯಜ್ಞ ಅಥವಾ ಭಕ್ತಿಯ ಮಾತೇ ಇರುವುದಿಲ್ಲ. ಈ ಸಮಯದಲ್ಲಿ ತಂದೆಯು ಈ ಅವಿನಾಶಿ ರುದ್ರ ಜ್ಞಾನ ಯಜ್ಞವನ್ನು ರಚಿಸುತ್ತಾರೆ ನಂತರ ಇದರ ಗಾಯನವು ನಡೆಯುತ್ತದೆ. ಭಕ್ತಿಯಂತೂ ಸದಾ ನಡೆಯುತ್ತಾ ಇರುವುದಿಲ್ಲ. ಭಕ್ತಿ ಮತ್ತು ಜ್ಞಾನ. ಭಕ್ತಿಯು ರಾತ್ರಿಯಾಗಿದೆ ಜ್ಞಾನವು ದಿನವಾಗಿದೆ. ತಂದೆಯು ಬಂದು ದಿನವನ್ನಾಗಿ ಮಾಡುತ್ತಾರೆ ಅಂದಮೇಲೆ ತಂದೆಯ ಜೊತೆ ಮಕ್ಕಳಿಗೆ ಎಷ್ಟೊಂದು ಪ್ರೀತಿಯಿರಬೇಕು! ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಪ್ರಿಯಾತಿ ಪ್ರಿಯ ತಂದೆಯಲ್ಲವೆ. ಅವರಿಗಿಂತ ಹೆಚ್ಚು ಪ್ರಿಯವಾದ ವಸ್ತು ಯಾವುದೂ ಇರಲು ಸಾಧ್ಯವಿಲ್ಲ. ಅರ್ಧಕಲ್ಪದಿಂದ ನೆನಪು ಮಾಡುತ್ತಾ ಬಂದಿದ್ದೀರಿ, ತಂದೆಯೇ ಬಂದು ನಮ್ಮ ದುಃಖ ದೂರ ಮಾಡಿ ಎಂದು. ಈಗ ತಂದೆಯು ಬಂದು ತಿಳಿಸುತ್ತಾರೆ - ಮಕ್ಕಳೇ, ನೀವು ತಮ್ಮ ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಇಲ್ಲಿ ತಂದೆಯ ಬಳಿ ಎಷ್ಟು ಜನರೆಂದು ಕುಳಿತುಕೊಳ್ಳುತ್ತೀರಿ! ಜೊತೆಯಲ್ಲಿ ಪರಮಧಾಮದಲ್ಲಿಯೇ ಇರಲು ಸಾಧ್ಯ, ಇಲ್ಲಂತೂ ಇರಲು ಸಾಧ್ಯವಿಲ್ಲ. ಇಲ್ಲಿ ವಿದ್ಯೆಯನ್ನು ಓದಬೇಕಾಗಿದೆ, ವಿದ್ಯೆಯನ್ನು ಓದುವವರು ಕೆಲವರೇ ಇರುತ್ತಾರೆ. ಎಲ್ಲರನ್ನೂ ಒಟ್ಟಿಗೆ ಸೇರಿಸಿ ಬಹಳ ಮಂದಿಗೆ ವಿದ್ಯೆಯನ್ನು ಓದಿಸಲಾಗುವುದಿಲ್ಲ, ಹಾಗಿದ್ದರೆ ಶಿಕ್ಷಕರು ಪ್ರಶ್ನೆಯನ್ನು ಕೇಳುವುದು ಹೇಗೆ? ಪ್ರತ್ಯುತ್ತರ ಹೇಗೆ ಕೊಡಲು ಸಾಧ್ಯವಾಗುತ್ತದೆ. ಆದ್ದರಿಂದ ಕಡಿಮೆ ವಿದ್ಯಾರ್ಥಿಗಳಿಗೆ ಓದಿಸುತ್ತಾರೆ. ಕಾಲೇಜುಗಳು ಬಹಳಷ್ಟಿರುತ್ತವೆ ಮತ್ತೆ ಎಲ್ಲರಿಗೆ ಪರೀಕ್ಷೆಗಳಿರುತ್ತವೆ. ಫಲಿತಾಂಶವೂ ಹೊರ ಬರುತ್ತದೆ, ಇಲ್ಲಂತೂ ಒಬ್ಬ ತಂದೆಯೇ ಓದಿಸುತ್ತಾರೆ. ಇದನ್ನೂ ತಿಳಿಸಬೇಕಾಗಿದೆ - ಇಬ್ಬರು ತಂದೆಯರಿದ್ದಾರೆ, ಲೌಕಿಕ ಮತ್ತು ಪಾರಲೌಕಿಕ. ದುಃಖದಲ್ಲಿ ಆ ಪಾರಲೌಕಿಕ ತಂದೆಯನ್ನೇ ಸ್ಮರಣೆ ಮಾಡುತ್ತಾರೆ, ಆ ತಂದೆಯು ಈಗ ಬಂದುಬಿಟ್ಟಿದ್ದಾರೆ. ಮಹಾಭಾರತ ಯುದ್ಧವೂ ಸನ್ಮುಖದಲ್ಲಿದೆ, ಮಹಾಭಾರತ ಯುದ್ಧದಲ್ಲಿ ಕೃಷ್ಣನು ಬಂದನೆಂದು ಅವರು ತಿಳಿಯುತ್ತಾರೆ ಆದರೆ ಕೃಷ್ಣನು ಬರಲು ಸಾಧ್ಯವಿಲ್ಲ. ಪಾಪ! ಗೊಂದಲದಲ್ಲಿದ್ದಾರೆ ಆದರೂ ಸಹ ಕೃಷ್ಣ, ಕೃಷ್ಣ ಎಂತಲೂ ಹೇಳುತ್ತಿರುತ್ತಾರೆ. ಶಿವನು ಪ್ರಿಯಾತಿ ಪ್ರಿಯನಾಗಿದ್ದಾರೆ ಮತ್ತು ಕೃಷ್ಣನೂ ಆಗಿದ್ದಾರೆ ಆದರೆ ಒಬ್ಬರು ನಿರಾಕಾರ ಮತ್ತು ಇನ್ನೊಬ್ಬರು ಸಾಕಾರಿಯಾಗಿದ್ದಾರೆ. ನಿರಾಕಾರ ತಂದೆಯು ಎಲ್ಲಾ ಆತ್ಮರ ತಂದೆಯಾಗಿದ್ದಾರೆ. ಇಬ್ಬರೂ ಪ್ರಿಯಾತಿ ಪ್ರಿಯರಾಗಿದ್ದಾರೆ, ಕೃಷ್ಣನೂ ಸಹ ವಿಶ್ವದ ಮಾಲೀಕನಲ್ಲವೆ. ಈಗ ನೀವೇ ನಿರ್ಣಯಿಸಿ- ಹೆಚ್ಚು ಪ್ರಿಯರು ಯಾರು? ಶಿವ ತಂದೆಯೇ ಇಷ್ಟು ಯೋಗ್ಯರನ್ನಾಗಿ ಮಾಡುತ್ತಾರಲ್ಲವೆ. ಕೃಷ್ಣನೇನು ಮಾಡುತ್ತಾನೆ? ತಂದೆಯೇ ಅವರನ್ನು ಈ ರೀತಿ ಮಾಡುತ್ತಾರಲ್ಲವೆ ಆದ್ದರಿಂದ ಹೆಚ್ಚು ಗಾಯನ ತಂದೆಗೆ ಇರಬೇಕಲ್ಲವೆ. ತಂದೆಯು ತಿಳಿಸಿದ್ದಾರೆ - ನೀವೆಲ್ಲರೂ ಪಾರ್ವತಿಯರಾಗಿದ್ದೀರಿ, ಈ ಶಿವ ಅಮರನಾಥನು ನಿಮಗೆ ಕಥೆಯನ್ನು ತಿಳಿಸುತ್ತಿದ್ದಾರೆ. ನೀವೇ ಅರ್ಜುನರಾಗಿದ್ದೀರಿ, ನೀವೆಲ್ಲರೂ ದ್ರೌಪದಿಯರಾಗಿದ್ದೀರಿ. ಈ ವಿಕಾರಿ ಪ್ರಪಂಚಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ, ಸತ್ಯಯುಗವು ನಿರ್ವಿಕಾರಿ ಪ್ರಪಂಚವಾಗಿದೆ. ವಿಕಾರದ ಮಾತಿರುವುದಿಲ್ಲ. ನಿರಾಕಾರ ತಂದೆಯು ವಿಕಾರಿ ಪ್ರಪಂಚವನ್ನು ರಚಿಸುವರೇ? ವಿಕಾರದಲ್ಲಿಯೇ ದುಃಖವಿದೆ. ಸನ್ಯಾಸಿಗಳದು ಹಠಯೋಗ, ನಿವೃತ್ತಿ ಮಾರ್ಗವಾಗಿದೆ. ಕರ್ಮ ಸನ್ಯಾಸವಂತೂ ಎಂದೂ ಆಗುವುದಿಲ್ಲ. ಆತ್ಮವು ಶರೀರವನ್ನು ಬಿಟ್ಟು ಹೋದಾಗಲೇ ಕರ್ಮ ಸನ್ಯಾಸವಾಗುವುದು. ಗರ್ಭ ಜೈಲಿನಲ್ಲಿ ಮತ್ತೆ ಕರ್ಮಗಳ ಲೆಕ್ಕಾಚಾರವು ಆರಂಭವಾಗಿ ಬಿಡುತ್ತದೆ. ಬಾಕಿ ಕರ್ಮ ಸನ್ಯಾಸವೆಂದು ಹೇಳುವುದು ತಪ್ಪಾಗಿದೆ. ಬಹಳ ಹಠಯೋಗಗಳನ್ನು ಕಲಿಯುತ್ತಾರೆ, ಗುಹೆಗಳಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಬೆಂಕಿಯಲ್ಲಿ ನಡೆಯುತ್ತಾರೆ, ರಿದ್ಧಿಸಿದ್ಧಿಯು ಬಹಳಷ್ಟಿದೆ. ಜಾದುವಿನಿಂದ ಬಹಳ ವಸ್ತುಗಳನ್ನು ಹೊರ ತೆಗೆಯುತ್ತಾರೆ, ಭಗವಂತನಿಗೂ ಜಾದುಗಾರ, ರತ್ನಾಗರ, ವ್ಯಾಪಾರಿಯೆಂದು ಹೇಳುತ್ತಾರೆ ಆದರೆ ಆ ಮನುಷ್ಯರಿಂದ ಯಾರಿಗೂ ಗತಿ-ಸದ್ಗತಿ ಸಿಗಲು ಸಾಧ್ಯವಿಲ್ಲ. ಅದನ್ನು ಒಬ್ಬ ಸದ್ಗುರುವೇ ಬಂದು ಎಲ್ಲರ ಗತಿ ಸದ್ಗತಿ ಮಾಡುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಮುಳ್ಳುಗಳಿಂದ ಹೂಗಳನ್ನಾಗಿ ಮಾಡುವವರು ಒಬ್ಬರೇ ಪ್ರಿಯಾತಿ ಪ್ರಿಯ ತಂದೆಯಾಗಿದ್ದಾರೆ. ಅವರನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸುಗಂಧ ಭರಿತ ಪಾವನ ಹೂಗಳಾಗಿ ಎಲ್ಲರಿಗೆ ಸುಖ ಕೊಡಬೇಕಾಗಿದೆ. |
2. ಈ ಜ್ಞಾನವು (ವಿದ್ಯೆ) ಆದಾಯದ ಮೂಲವಾಗಿದೆ. ಇದರಿಂದ 21 ಜನ್ಮಗಳಿಗಾಗಿ ನೀವು ಬಹಳ ದೊಡ್ಡ ವ್ಯಕ್ತಿಗಳಾಗುತ್ತೀರಿ, ಆದ್ದರಿಂದ ಇದನ್ನು ಚೆನ್ನಾಗಿ ಓದಬೇಕು ಹಾಗೂ ಓದಿಸಬೇಕು, ಆತ್ಮಾಭಿಮಾನಿಗಳಾಗಬೇಕಾಗಿದೆ. |
ಬ್ರಹ್ಮಾ ತಂದೆಯ ಸಮಾನ ತ್ಯಾಗ, ತಪಸ್ಸು ಹಾಗೂ ಸೇವೆಯ ಪ್ರಕಂಪನಗಳನ್ನು ವಿಶ್ವದಲ್ಲಿ ಹರಡಿ |
ಇಂದು ಸಮರ್ಥ ಬಾಪ್ದಾದಾರವರು ತಮ್ಮ ಸಮರ್ಥ ಮಕ್ಕಳನ್ನು ನೋಡುತ್ತಿದ್ದರು. ಇಂದಿನ ದಿನ ಸ್ಮೃತಿ ದಿವಸ ಹಾಗೂ ಸಮರ್ಥಿ ದಿವಸವಾಗಿದೆ. ಇಂದಿನ ದಿನ ಮಕ್ಕಳಿಗೆ ಸರ್ವ ಶಕ್ತಿಗಳನ್ನು ವಿಲ್ ಮಾಡಿ ಕೊಡುವಂತಹ ದಿವಸವಾಗಿದೆ. ಪ್ರಪಂಚದಲ್ಲಿ ಅನೇಕ ಪ್ರಕಾರದ ವಿಲ್ ಇರುತ್ತದೆ ಆದರೆ ಬ್ರಹ್ಮಾ ತಂದೆಯು ತಂದೆಯಿಂದ ಪ್ರಾಪ್ತವಾಗಿರುವಂತಹ ಸರ್ವ ಶಕ್ತಿಗಳನ್ನು ಮಕ್ಕಳಿಗೆ ವಿಲ್ ಮಾಡಿದರು. ಇಂತಹ ಅಲೌಕಿಕ ವಿಲ್ (ಅರ್ಪಣೆ) ಬೇರೆ ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯು ಬ್ರಹ್ಮಾ ತಂದೆಯನ್ನು ಸಾಕಾರದಲ್ಲಿ ನಿಮಿತರನ್ನಾಗಿ ಮಾಡಿದರು ಹಾಗೂ ಬ್ರಹ್ಮಾ ತಂದೆಯು ಮಕ್ಕಳಿಗೆ ‘ನಿಮಿತ್ತ ಭಾವದ' ವರದಾನವನ್ನು ಕೊಟ್ಟು ವಿಲ್ ಮಾಡಿದರು. ಈ ವಿಲ್ ಮಕ್ಕಳಲ್ಲಿ ಸಹಜವಾಗಿ ಶಕ್ತಿಗಳ ಅನುಭೂತಿಯನ್ನು ಮಾಡಿಸುತ್ತಾ ಇರುತ್ತದೆ. ಒಂದಾಗಿದೆ ತಮ್ಮ ಪುರುಷಾರ್ಥದ ಶಕ್ತಿಗಳು ಹಾಗೂ ಇದಾಗಿದೆ ಪರಮಾತ್ಮ- ವಿಲ್ ಮೂಲಕ ಶಕ್ತಿಗಳ ಪ್ರಾಪ್ತಿ. ಇದು ಪ್ರಭುವಿನ ಕೊಡುಗೆಯಾಗಿದೆ, ಪ್ರಭುವಿನ ವರದಾನವಾಗಿದೆ. ಈ ಪ್ರಭು ವರದಾನವೇ ನಡೆಸುತ್ತಿದೆ. ವರದಾನದಲ್ಲಿ ಪುರುಷಾರ್ಥದ ಪರಿಶ್ರಮವಲ್ಲ ಆದರೆ ಸಹಜ ಹಾಗೂ ಸ್ವತಹ ನಿಮಿತ್ತರನ್ನಾಗಿ ಮಾಡಿ ನಡೆಸುತ್ತಾ ಇರುತ್ತದೆ. ಸಮ್ಮುಖದಲ್ಲಿ ಸ್ವಲ್ಪ ಉಳಿದುಕೊಂಡಿದ್ದಾರೆ ಆದರೆ ಬಾಪ್ದಾದಾರವರ ಮೂಲಕ, ವಿಶೇಷ ಬ್ರಹ್ಮಾ ತಂದೆಯ ಮೂಲಕ ವಿಶೇಷ ಮಕ್ಕಳಿಗೆ ಈ ವಿಲ್ ಪವರ್ ಪ್ರಾಪ್ತಿಯಾಗಿದೆ ಹಾಗೂ ಬಾಪ್ದಾದಾರವರು ಸಹ ನೋಡಿದರು- ಯಾವ ಮಕ್ಕಳಿಗೆ ಬಾಪ್ದಾದಾರವರು ವಿಲ್ ಮಾಡಿದರು ಆ ಎಲ್ಲಾ ಮಕ್ಕಳು (ಆದಿರತ್ನಗಳು ಹಾಗೂ ಸೇವೆಯ ನಿಮಿತ್ತ ಮಕ್ಕಳು) ಪ್ರಾಪ್ತಿಯಾದ ಶಕ್ತಿಗಳನ್ನು ಚೆನ್ನಾಗಿ ಕಾರ್ಯದಲ್ಲಿ ತೊಡಗಿಸಿದರು. ಹಾಗೂ ಆ ವಿಲ್ನ ಕಾರಣ ಇಂದು ಈ ಬ್ರಾಹ್ಮಣ ಪರಿವಾರ ದಿನ ಪ್ರತಿ ದಿನ ವೃದ್ಧಿಯಾಗುತ್ತಲೇ ಹೋಗುತ್ತದೆ. ಮಕ್ಕಳ ವಿಶೇಷತೆಯ ಕಾರಣ ವೃದ್ಧಿಯಾಗಬೇಕಾಗಿತ್ತು ಹಾಗೂ ಆಗುತ್ತಲೇ ಇದೆ. |
ಬಾಪ್ದಾದಾರವರು ನೋಡಿದರೂ- ನಿಮಿತ್ತರಾಗಿರುವ ಹಾಗೂ ಜೊತೆ ಕೊಡುವಂತಹ ಎರಡು ಪ್ರಕಾರದ ಮಕ್ಕಳಲ್ಲಿ ಎರಡು ವಿಶೇಷತೆಗಳು ಬಹಳ ಚೆನ್ನಾಗಿದೆ. ಮೊದಲನೇಯ ವಿಶೇಷತೆ- ಸ್ಥಾಪನೆಯ ಆದಿರತ್ನರಾಗಿರಲಿ, ಅಥವಾ ಸೇವೆಯ ರತ್ನ ಆಗಿರಲಿ ಇಬ್ಬರಲ್ಲೂ ಸಂಘಟನೆಯ ಒಗ್ಗಟ್ಟು ಬಹಳ ಬಹಳ ಚೆನ್ನಾಗಿತ್ತು. ಯಾರಲ್ಲಿಯೂ ಸಹ ಏಕೆ, ಏನು, ಹೇಗೆ... ಇಂತಹ ಸಂಕಲ್ಪ ಮಾತ್ರವೂ ಸಹ ಇರಲಿಲ್ಲ. ಎರಡನೆಯ ವಿಶೇಷತೆ- ಒಬ್ಬರು ಹೇಳಿದರು ಇನ್ನೊಬ್ಬರು ಅದನ್ನು ಒಪ್ಪಿಕೊಂಡರು. ಇದು ಹೆಚ್ಚು ಶಕ್ತಿಯ ವಿಲ್ ನ ವಾಯುಮಂಡಲದಲ್ಲಿ ವಿಶೇಷತೆ ಇತ್ತು. ಆದ್ದರಿಂದ ಸರ್ವ ನಿಮಿತ್ತರಾಗಿರುವಂತಹ ಆತ್ಮಗಳಿಗೆ ಬಾಬಾ-ಬಾಬಾರವರೆ ಕಾಣಿಸುತ್ತಾ ಇದ್ದರು. |
ಬಾಬಾರವರು ಇಂತಹ ಸಮಯದಲ್ಲಿ ನಿಮಿತ್ತರಾಗಿರುವಂತಹ ಮಕ್ಕಳಿಗೆ ಹೃದಯದಿಂದ ಪ್ರೀತಿ ಕೊಡುತ್ತಿದ್ದಾರೆ. ತಂದೆಯ ಚಮತ್ಕಾರವಂತೂ ಇದೆ ಆದರೆ ಮಕ್ಕಳ ಚಮತ್ಕಾರವೂ ಸಹ ಕಡಿಮೆ ಏನಿಲ್ಲ. ಹಾಗೂ ಆ ಸಮಯದ ಸಂಘಟನೆ, ಒಗ್ಗಟ್ಟು- ನಾವೆಲ್ಲರೂ ಒಂದಾಗಿದ್ದೇವೆ, ಇದೆ ಇಂದೂ ಸಹ ಸೇವೆಯನ್ನು ವೃದ್ಧಿ ಮಾಡುತ್ತಿದೆ. ಹೇಳಿ? ನಿಮಿತ್ತರಾಗಿರುವಂತಹ ಆತ್ಮಗಳ ಫೌಂಡೇಶನ್ ಪಕ್ಕಾ ಇತ್ತಲ್ಲವೇ. ಮಕ್ಕಳು ನಾಲ್ಕಾರು ಕಡೆಯಿಂದ ಪ್ರೀತಿಯ ಮಾಲೆಗಳನ್ನು ತೊಡಿಸಿದರು ಹಾಗೂ ತಂದೆ ಮಕ್ಕಳ ಚಮತ್ಕಾರದ ಗುಣ ಗಾಯನ ಮಾಡಿದರು. ಇಷ್ಟು ಸಮಯ ನಡೆಯುತ್ತೇವೆ, ಎಂದು ಯೋಚಿಸಿದ್ದಿರೇ? ಎಷ್ಟು ಸಮಯವಾಯಿತು? ಎಲ್ಲರ ಮುಖದಿಂದ, ಹೃದಯದಿಂದ ಇದೆ ಹೊರಬರುತ್ತದೆ, ಈಗ ಹೊರಡಬೇಕು, ಈಗ ಹೊರಡಬೇಕು... ಆದರೆ ಬಾಪ್ದಾದಾರವರು ತಿಳಿದಿದ್ದರು- ಇನ್ನೂ ಅವ್ಯಕ್ತ ರೂಪದ ಸೇವೆ ನಡೆಯಬೇಕು. ಸಾಕಾರದಲ್ಲಿ ಇಷ್ಟು ದೊಡ್ಡ ಹಾಲ್ ತಯಾರಿಸಿದ್ದಿರಾ? ಬಾಬಾರವರ ಅತಿ ಪ್ರಿಯ ಡಬಲ್ ವಿದೇಶಿಯರು ಬಂದಿದ್ದಾರೆಯೇ? ವಿಶೇಷವಾಗಿ ಡಬಲ್ ವಿದೇಶಿಯರ ಅವ್ಯಕ್ತ ಪಾಲನೆಯ ಮೂಲಕ ಜನ್ಮವಾಗಲೇ ಬೇಕಾಗಿತ್ತು, ಇಷ್ಟೆಲ್ಲಾ ಮಕ್ಕಳು ಬರಲೇಬೇಕಾಗಿತ್ತು. ಆದ್ದರಿಂದ ಬ್ರಹ್ಮಾ ತಂದೆಯು ತನ್ನ ಸಾಕಾರ ಶರೀರವನ್ನು ಬಿಡಬೇಕಾಗಿ ಬಂತು. ಡಬಲ್ ವಿದೇಶಿಯರಿಗೆ ನಶೆ ಇದೆಯೇ- ನಾವು ಅವ್ಯಕ್ತ ಪಾಲನೆಯ ಪಾತ್ರರಾಗಿದ್ದೇವೆ? |
ಬ್ರಹ್ಮಾ ತಂದೆಯ ತ್ಯಾಗ ಡ್ರಾಮದಲ್ಲಿ ವಿಶೇಷವಾಗಿ ನೋಂದಣಿ ಆಗಿದೆ. ಆದಿಯಿಂದ ಬ್ರಹ್ಮಾ ತಂದೆಯ ತ್ಯಾಗ ಹಾಗೂ ನೀವು ಮಕ್ಕಳ ಭಾಗ್ಯ ನೋಂದಣಿಯಾಗಿದೆ. ಎಲ್ಲರಿಗಿಂತ ಮೊದಲನೇ ನಂಬರಿನ ತ್ಯಾಗದ ಉದಾಹರಣೆ, ಬ್ರಹ್ಮಾ ತಂದೆಯಾದರು. ಎಲ್ಲವೂ ಪ್ರಾಪ್ತಿಯಾಗಿದ್ದರೂ ಸಹ ತ್ಯಾಗ ಮಾಡುವುದು- ಇದಕ್ಕೆ ತ್ಯಾಗ ಎಂದು ಹೇಳಲಾಗುವುದು. ಸಮಯ ಅನುಸಾರ, ಸಮಸ್ಯೆಗಳ ಅನುಸಾರ ತ್ಯಾಗ- ಶ್ರೇಷ್ಠ ತ್ಯಾಗವಲ್ಲ. ಆದಿಯಿಂದ ನೋಡಿ ತನು, ಮನ, ಧನ, ಸಂಬಂಧ, ಸರ್ವಪ್ರಾಪ್ತಿಗಳು ಇದ್ದರೂ ಸಹ ತ್ಯಾಗ ಮಾಡಿದರು. ಶರೀರವನ್ನು ತ್ಯಾಗ ಮಾಡಿದರು, ಎಲ್ಲಾ ಸಾಧನೆಗಳು ಇದ್ದರೂ ಸಹ ಸ್ವಯಂ ಹಳೆಯದರಲ್ಲಿಯೇ ಇದ್ದರು. ಸಾಧನಗಳ ಆರಂಭವಾಗಿಬಿಟ್ಟಿತ್ತು. ಎಲ್ಲಾ ಇದ್ದರೂ ಸಹ ಸಾಧನೆಯಲ್ಲಿ ನಿರಂತರವಾಗಿದ್ದರು. ಈ ಬ್ರಹ್ಮಾ ತಂದೆಯ ತಪಸ್ಸು ನೀವೆಲ್ಲ ಮಕ್ಕಳ ಭಾಗ್ಯವನ್ನು ಮಾಡಿ ಹೋಯಿತು. ಡ್ರಾಮಾ ಅನುಸಾರ ಇಂತಹ ತ್ಯಾಗದ ಉದಾಹರಣೆ ರೂಪದಲ್ಲಿ ಬ್ರಹ್ಮಾರವರೆ ಆದರೂ ಹಾಗೂ ಇದೇ ತ್ಯಾಗದಿಂದ ಸಂಕಲ್ಪ ಶಕ್ತಿಯ ಸೇವೆಯ ವಿಶೇಷ ಪಾತ್ರವನ್ನು ಮಾಡಿದರು. ಯಾವುದರಿಂದ ಹೊಸ ಹೊಸ ಮಕ್ಕಳು ಸಂಕಲ್ಪ ಶಕ್ತಿಯಿಂದ ತೀವ್ರ ವೇಗದ ವೃದ್ಧಿಯ ಪ್ರಾಪ್ತಿ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ತಿಳಿಯಿತೆ ಬ್ರಹ್ಮಾನ ತ್ಯಾಗದ ಕಥೆ. |
ಬ್ರಹ್ಮನ ತಪಸ್ಸಿನ ಫಲ ನೀವು ಮಕ್ಕಳಿಗೆ ಸಿಗುತ್ತಿದೆ. ತಪಸ್ಸಿನ ಪ್ರಭಾವ ಈ ಮಧುಬನ ಭೂಮಿಯಲ್ಲಿ ಸಮಾವೇಶವಾಗಿದೆ. ಜೊತೆಯಲ್ಲಿ ಮಕ್ಕಳು ಇದ್ದಾರೆ, ಮಕ್ಕಳ ತಪಸ್ಸು ಸಹ ಇದೆ ಆದರೆ ನಿಮಿತ್ತ ಅಂತೂ ಬ್ರಹ್ಮಾ ತಂದೆ ಎಂದೇ ಹೇಳುತ್ತೇವೆ. ಯಾರೆಲ್ಲಾ ಮಧುಬನ ತಪಸ್ವಿ ಭೂಮಿಯಲ್ಲಿ ಬರುತ್ತಾರೆ ಆಗ ಬ್ರಾಹ್ಮಣ ಮಕ್ಕಳು ಸಹ ಅನುಭವ ಮಾಡುತ್ತಾರೆ- ಇಲ್ಲಿನ ವಾಯುಮಂಡಲ, ಇಲ್ಲಿನ ಪ್ರಕಂಪನಗಳು ಸಹಜ ಯೋಗಿಯನ್ನಾಗಿ ಮಾಡಿಬಿಡುತ್ತದೆ. ಯೋಗವನ್ನು ಜೋಡಿಸುವ ಪರಿಶ್ರಮವಿಲ್ಲ, ಸಹಜವಾಗಿಯೇ ಯೋಗ ಜೋಡಣೆಯಾಗುತ್ತದೆ ಮತ್ತು ಬೇರೆ ಯಾವುದೇ ಆತ್ಮಗಳು ಬರುತ್ತಾರೆ ಎಂದರೆ, ಅವರು ಏನಾದರೂ ಒಂದು ಅನುಭವವನ್ನು ಮಾಡಿಯೇ ಹೋಗುತ್ತಾರೆ. ಜ್ಞಾನವನ್ನು ತಿಳಿಯದೆ ಇದ್ದರೂ ಸಹ ಅಲೌಕಿಕ ಪ್ರೀತಿ ಹಾಗೂ ಶಾಂತಿಯ ಅನುಭವ ಮಾಡಿ ಹೋಗುತ್ತಾರೆ. ಯಾವುದಾದರೂ ಒಂದು ಪರಿವರ್ತನೆಯ ಸಂಕಲ್ಪವನ್ನು ಮಾಡಿ ಹೋಗುತ್ತಾರೆ. ಇದಾಗಿದೆ ಬ್ರಹ್ಮಾ ಹಾಗೂ ಬ್ರಾಹ್ಮಣ ಮಕ್ಕಳ ತಪಸ್ಸಿನ ಪ್ರಭಾವ. ಜೊತೆಯಲ್ಲಿ ಸೇವೆಯ ವಿಧಿ- ಭಿನ್ನ ಭಿನ್ನ ಪ್ರಕಾರದ ಸೇವೆಗಳು ಮಕ್ಕಳಿಂದ ಪ್ರಾಕ್ಟಿಕಲ್ನಲ್ಲಿ ಮಾಡಿಸಿ ತೋರಿಸಿದರು. ಅದೇ ವಿಧಿಯನ್ನು ಈಗ ವಿಸ್ತಾರದಲ್ಲಿ ತರುತ್ತಿರುವಿರಿ. ಹಾಗಾದರೆ ಹೇಗೆ ಬ್ರಹ್ಮಾ ತಂದೆಯ, ತ್ಯಾಗ, ತಪಸ್ಸು, ಸೇವೆಯ ಫಲ ನೀವು ಮಕ್ಕಳಿಗೆ ಸಿಗುತ್ತಿದೆ. ಇದೇ ರೀತಿ ಪ್ರತಿಯೊಂದು ಮಗು ತಮ್ಮ ತ್ಯಾಗ, ತಪಸ್ಸು ಹಾಗೂ ಸೇವೆಯ ಪ್ರಕಂಪನಗಳನ್ನು ವಿಶ್ವದಲ್ಲಿ ಹರಡಬೇಕು. ಹೇಗೆ ವಿಜ್ಞಾನದ ಬಲ ತನ್ನ ಪ್ರಭಾವವನ್ನು ಪ್ರತ್ಯಕ್ಷ ರೂಪದಲ್ಲಿ ತೋರಿಸುತ್ತಿದೆ ಅದೇ ರೀತಿ ವಿಜ್ಞಾನದ ರಚೈತ ಶಾಂತಿಯ ಬಲವಾಗಿದೆ. ಶಾಂತಿಯ ಬಲವನ್ನು ಈಗ ಪ್ರತ್ಯಕ್ಷವಾಗಿ ತೋರಿಸುವ ಸಮಯವಾಗಿದೆ. ಶಾಂತಿಯ ಬಲದ ಪ್ರಕಂಪನಗಳು ತೀವ್ರಗತಿಯಿಂದ ಹರಡುವ ಸಾಧನವಾಗಿದೆ- ಮನಸ್ಸು ಬುದ್ಧಿಯ ಏಕಾಗ್ರತೆ. ಈ ಏಕಾಗ್ರತೆಯ ಅಭ್ಯಾಸವನ್ನು ಹೆಚ್ಚಿಸಬೇಕು. ಏಕಾಗ್ರತೆಯ ಶಕ್ತಿಯಿಂದಲೇ ವಾಯುಮಂಡಲವನ್ನು ತಯಾರಿಸಲು ಸಾಧ್ಯ. ಏರುಪೇರಿನ ಕಾರಣ ಶಕ್ತಿಶಾಲಿ ಪ್ರಕಂಪನಗಳನ್ನು ಹರಡಲು ಸಾಧ್ಯವಿಲ್ಲ. |
ಬಾಪ್ದಾದಾರವರು ಇಂದು ನೋಡುತ್ತಿದ್ದರು - ಏಕಾಗ್ರತೆಯ ಶಕ್ತಿ ಈಗ ಹೆಚ್ಚು ಬೇಕಾಗಿದೆ. ಎಲ್ಲಾ ಮಕ್ಕಳದು ಒಂದೇ ದೃಢ ಸಂಕಲ್ಪವಿರಲಿ- ಈಗ ತಮ್ಮ ಸಹೋದರ ಸಹೋದರಿಯರ ದುಃಖದ ಘಟನೆಗಳು ಪರಿವರ್ತನೆಯಾಗಿ ಬಿಡಲಿ. ಹೃದಯದಿಂದ ದಯೆ ಇಮರ್ಜ್ ಆಗಲಿ. ಸೈನ್ಸ್(ವಿಜ್ಞಾನ) ನ ಶಕ್ತಿ ಏರುಪೇರನ್ನು ತರಬಹುದು ಎಂದ ಮೇಲೆ ಇಷ್ಟೆಲ್ಲ ಬ್ರಾಹ್ಮಣರ ಶಾಂತಿಯ ಶಕ್ತಿ, ದಯಾ ಹೃದಯದ ಭಾವನೆಯ ಮೂಲಕ ಹಾಗೂ ಸಂಕಲ್ಪದ ಮೂಲಕ ಏರುಪೇರನ್ನು ಪರಿವರ್ತನೆ ಮಾಡಲು ಸಾಧ್ಯವಿಲ್ಲವೇ! ಮಾಡಲೇಬೇಕು ಎಂದ ಮೇಲೆ, ಆಗಲೇಬೇಕು ಎಂದ ಮೇಲೆ ವಿಶೇಷವಾಗಿ ಈ ಮಾತಿನ ಮೇಲೆ ಗಮನ ಹರಿಸಿ. ಈಗ ನೀವು ಗ್ರೇಟ್ ಗ್ರೇಟ್ ಗ್ರಾಂಡ್ ಫಾದರ್ನ ಮಕ್ಕಳಾಗಿದ್ದೀರಿ, ಎಲ್ಲರೂ ನಿಮ್ಮ ವಂಶಜರಾಗಿದ್ದಾರೆ, ರೆಂಬೆ-ಕೊಂಬೆಗಳಾಗಿದ್ದಾರೆ, ಪರಿವಾರದವರಾಗಿದ್ದಾರೆ, ನೀವು ಸಹ ಭಕ್ತರ ಇಷ್ಟ ದೇವರಾಗಿದ್ದೀರಿ! ಅವರು ಕರೆಯುತ್ತಿದ್ದಾರೆ- ಹೇ ಇಷ್ಟದೇವ, ನೀವು ಕೇವಲ ಕೇಳಿಸಿಕೊಳ್ಳುತ್ತಿದ್ದೀರಿ, ಅವರಿಗೆ ಪ್ರತಿಕ್ರಿಯೆ ನೀಡುತ್ತಿಲ್ಲವೇ? ಬಾಪ್ದಾದಾರವರು ಹೇಳುತ್ತಾರೆ ಹೇ ಭಕ್ತರ ಇಷ್ಟ ದೇವ ಈಗ ಕೂಗನ್ನು ಕೇಳಿಸಿಕೊಳ್ಳಿ, ಪ್ರತಿಕ್ರಿಯೆ ಕೊಡಿ, ಕೇವಲ ಕೇಳಿಸಿಕೊಳ್ಳುವುದಲ್ಲ. ಏನೆಂದು ಪ್ರತಿಕ್ರಿಯೆ ಕೊಡುವಿರಿ? ಪರಿವರ್ತನೆಯ ವಾಯುಮಂಡಲವನ್ನು ತಯಾರಿಸಿ. ನಿಮ್ಮ ಪ್ರತಿಕ್ರಿಯೆ ಅವರಿಗೆ ಸಿಗುತ್ತಿಲ್ಲ ಆದ್ದರಿಂದ ಅವರು ಸಹ ಹುಡುಗಾಟಕೆಯಲ್ಲಿ ಬಂದುಬಿಡುತ್ತಾರೆ. ಕೂಗಾಡುತ್ತಾರೆ ನಂತರ ಮತ್ತೆ ಸುಮ್ಮನಾಗಿ ಬಿಡುತ್ತಾರೆ. |
ಬ್ರಹ್ಮಾ ತಂದೆಯ ಪ್ರತಿಯೊಂದು ಕಾರ್ಯದ ಉತ್ಸಾಹವನ್ನು ನೋಡಿದ್ದೀರಿ. ಯಾವ ರೀತಿ ಆರಂಭದಲ್ಲಿ ಉಮಂಗವಿತ್ತು- ಚಾವಿ ಬೇಕು! ಈಗಲೂ ಸಹ ಬ್ರಹ್ಮಾ ತಂದೆ ಶಿವ ತಂದೆಗೆ ಹೇಳುತ್ತಾರೆ- ಈಗ ಮನೆಯ ಬಾಗಿಲಿನ ಚಾವಿಯನ್ನು ಕೊಡಿ. ಆದರೆ ಜೊತೆಯಲ್ಲಿ ಹೋಗುವವರು ಸಹ ತಯಾರಾಗಬೇಕಲ್ಲವೇ. ಒಬ್ಬರೇ ಏನು ಮಾಡುವರು! ಎಲ್ಲರೂ ಜೊತೆಯಲ್ಲಿ ಹೋಗಬೇಕಲ್ಲವೇ ಅಥವಾ ಹಿಂದೆ ಹಿಂದೆ ಹೋಗಬೇಕೆ? ಜೊತೆಯಲ್ಲಿ ಹೋಗಬೇಕಲ್ಲವೇ? ಬ್ರಹ್ಮಾ ತಂದೆ ಹೇಳುತ್ತಾರೆ- ಮಕ್ಕಳನ್ನು ಕೇಳಿ, ಒಂದುವೇಳೆ ಚಾವಿಯನ್ನು ಕೊಟ್ಟರೆ ತಾವು ಎವರ್-ರೆಡಿ (ಸದಾ-ಸಿದ್ಧ) ಆಗಿದ್ದೀರಾ? ಎವರ್-ರೆಡಿ ಆಗಿದ್ದೀರಾ ಅಥವಾ ರೆಡಿಯಾಗಿದ್ದೀರಾ(ಸಿದ್ಧ), ಕೇವಲ ಸಿದ್ಧ ಅಲ್ಲ, ಸದಾ ಸಿದ್ಧ. ತ್ಯಾಗ ತಪಸ್ಸು ಸೇವೆ 3 ಪೇಪರ್ಗಳು ತಯಾರಾಗಿದೆಯೇ? ಬ್ರಹ್ಮಾ ತಂದೆ ಮುಗುಳ್ನಗುತ್ತಾರೆ- ಪ್ರೀತಿಯ ಕಣ್ಣೀರನ್ನು ಬಹಳ ಸುರಿಸುತ್ತಾರೆ ಹಾಗೂ ಬ್ರಹ್ಮಾ ತಂದೆ ಆ ಕಣ್ಣೀರನ್ನು ಮುತ್ತಿನ ಸಮಾನ ಹೃದಯದಲ್ಲಿ ಸಮಾವೇಶವನ್ನು ಸಹ ಮಾಡಿಕೊಳ್ಳುತ್ತಾರೆ ಆದರೆ ಒಂದು ಸಂಕಲ್ಪ ಅವಶ್ಯವಾಗಿ ನಡೆಯುತ್ತದೆ- ಎಲ್ಲರೂ ಯಾವಾಗ ಸದಾ ಸಿದ್ಧರಾಗುತ್ತಾರೆ! ದಿನಾಂಕವನ್ನು ಕೊಡಬೇಕು. ನೀವಂತೂ ಹೇಳುತ್ತೀರಿ ನಾವಂತೂ ಎವರ್ ರೆಡಿಯಾಗಿದ್ದೇವೆ, ಆದರೆ ನಿಮ್ಮ ಜೊತೆಗಾರರು ಯಾರಿದ್ದಾರೆ ಅವರನ್ನು ಸಹ ತಯಾರು ಮಾಡಿ ಅಥವಾ ಅವರನ್ನು ಬಿಟ್ಟು ನೀವು ಹೊರಟು ಹೋಗುತ್ತೀರಾ? ನೀವು ಹೇಳುವಿರಿ ಬ್ರಹ್ಮಾ ತಂದೆಯು ಸಹ ಹೊರಟು ಹೋದರು ಅಲ್ಲವೇ! ಆದರೆ ಅವರಿಗಂತು ಈ ರಚನೆಯನ್ನು ರಚಿಸಬೇಕಾಗಿತ್ತು? ಎಲ್ಲರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕಲ್ಲವೇ ಒಬ್ಬರೇ ಹೋಗುವರೇ? ಎಂದ ಮೇಲೆ ಎಲ್ಲರೂ ಸದಾ ಸಿದ್ಧರಾಗಿದ್ದೀರಾ ಅಥವಾ ಆಗಿಬಿಡುವಿರಾ? ಹೇಳಿ. ಕಡಿಮೆ ಎಂದರೆ ಕಡಿಮೆ 9 ಲಕ್ಷವಂತ ಜೊತೆಯಲ್ಲಿ ಹೋಗಬೇಕು. ಇಲ್ಲವಾದರೆ ಯಾರ ಮೇಲೆ ರಾಜ್ಯ ಮಾಡುವಿರಿ? ತಮ್ಮ ಮೇಲೆ ರಾಜ್ಯ ಮಾಡುತ್ತೀರಾ ? ಎಂದ ಮೇಲೆ ಬ್ರಹ್ಮಾ ತಂದೆಗೆ ಎಲ್ಲಾ ಮಕ್ಕಳ ಪ್ರತಿ ಇದೇ ಶುಭಕಾಮನೆಗಳಿದೆ- ಎವರ್ ರೆಡಿಯಾಗಿ ಹಾಗೂ ಎವರ್ ರೆಡಿಯನ್ನಾಗಿ ಮಾಡಿ. |
ಇಂದು ವತನದಲ್ಲಿಯೂ ಸಹ ಎಲ್ಲಾ ವಿಶೇಷ ಆದಿರತ್ನ ಹಾಗೂ ಸೇವೆಯ ಆದಿರತ್ನಗಳು ಇಮರ್ಜ್ ಆಗಿದ್ದರು. ಅಡ್ವಾನ್ಸ್ ಪಾರ್ಟಿ ಅವರು ಹೇಳುತ್ತಾರೆ ನಾವಂತೂ ತಯಾರಾಗಿದ್ದೇವೆ. ಯಾವ ಮಾತಿಗಾಗಿ ತಯಾರಾಗಿದ್ದಾರೆ? ಅವರು ಹೇಳುತ್ತಾರೆ ಈ ಪ್ರತ್ಯಕ್ಷತೆಯ ನಗಾರಿಯನ್ನು ಬಾರಿಸಿದರೆ ನಾವೆಲ್ಲರೂ ಪ್ರತ್ಯಕ್ಷರಾಗಿ ಹೊಸ ಸೃಷ್ಟಿಯ ರಚನೆಯ ನಿಮಿತ್ತಾಗುತ್ತೇವೆ. ನಾವಂತೂ ಆಹ್ವಾನ ಮಾಡುತ್ತಿದ್ದೇವೆ- ಹೊಸ ಸೃಷ್ಟಿಯ ರಚನೆ ಮಾಡುವವರು ಬರಲಿ. ಈಗ ಎಲ್ಲಾ ಕೆಲಸವು ನಿಮ್ಮ ಮೇಲಿದೆ. ನಗಾರಿಯನ್ನು ಹೊಡೆಯಿರಿ. ಬಂದುಬಿಟ್ಟರು, ಬಂದುಬಿಟ್ಟರು... ಇದರ ನಗಾರಿಯನ್ನು ಹೊಡೆಯಿರಿ. ನಗಾರಿಯನ್ನು ಬಾರಿಸಲು ಬರುತ್ತದೆಯೇ? ಬಾರಿಸಬೇಕಲ್ಲವೇ! ಈಗ ಬ್ರಹ್ಮಾ ತಂದೆ ಹೇಳುತ್ತಾರೆ ದಿನಾಂಕವನ್ನು ನಿಗದಿಪಡಿಸಿ. ನೀವು ಸಹ ಹೇಳುತ್ತೀರಲ್ಲವೇ ದಿನಾಂಕದ ಹೊರತು ಕೆಲಸವಾಗುವುದಿಲ್ಲ. ಹಾಗಾದರೆ ಇದರ ದಿನಾಂಕವನ್ನು ಸಹ ನಿಗದಿಸಿ. ದಿನಾಂಕವನ್ನು ನಿಗದಿಸಲು ಸಾಧ್ಯವೇ? ತಂದೆಯಂತು ಹೇಳುತ್ತಾರೆ ನೀವು ನಿಗದಿಸಿ. ತಂದೆಯಂತು ಹೇಳುತ್ತಾರೆ ಇಂದೇ ನಿಗದಿಪಡಿಸಿ. ಸಮ್ಮೇಳನದ ದಿನಾಂಕವನ್ನು ನಿಗದಿ ಪಡಿಸುತ್ತೀರಿ ಹಾಗೂ ಇದರ ಸಮ್ಮೇಳನವನ್ನು ಸಹ ಮಾಡಿ! ವಿದೇಶದವರು ಏನು ಹೇಳುತ್ತೀರಿ, ದಿನಾಂಕ ನಿಗದಿಪಡಿಸಲು ಈಗ ಸಾಧ್ಯವೇ? ದಿನಾಂಕ ಫಿಕ್ಸ್ ಮಾಡುತ್ತೀರಾ? ಸರಿಯೇ ಇಲ್ಲವೇ! ಒಳ್ಳೆಯದು ದಾದಿ ಜಾನಕಿಜಿಯವರ ಜೊತೆ ತೀರ್ಮಾನ ಮಾಡಿ, ಮಾಡಿ. ಒಳ್ಳೆಯದು. |
ದೇಶವಿದೇಶದ ನಾಲ್ಕಾರು ಕಡೆಯ, ಬಾಪ್ದಾದಾರವರ ಅತಿ ಸಮೀಪ, ಅತಿಪ್ರಿಯ ಹಾಗೂ ಭಿನ್ನ, ಬಾಪ್ದಾದಾರವರು ನೋಡುತ್ತಿದ್ದಾರೆ- ಎಲ್ಲಾ ಮಕ್ಕಳು ಪ್ರೀತಿಯಲ್ಲಿ ಮಗ್ನರಾಗಿ ನವಲೀನ ಸ್ವರೂಪದಲ್ಲಿ ಕುಳಿತಿದ್ದಾರೆ. ಕೇಳಿಸಿಕೊಳ್ಳುತ್ತಿದ್ದಾರೆ ಹಾಗೂ ಮಿಲನದ ಉಯ್ಯಾಲೆಯಲ್ಲಿ ತೂಗುತ್ತಿದ್ದಾರೆ. ದೂರವಿಲ್ಲ ಆದರೆ ನಯನಗಳ ಸಮ್ಮುಖದಲ್ಲಿಯೂ ಅಲ್ಲ ಆದರೆ ಸಮಾವೇಶವಾಗಿದ್ದಾರೆ. ಇಂತಹ ಸಮ್ಮುಖ ಮಿಲನ ಆಚರಿಸುವಂತಹ ಹಾಗೂ ಅವ್ಯಕ್ತ ರೂಪದಲ್ಲಿ ಲವಲೀನ ಮಕ್ಕಳಿಗೆ, ಸದಾ ತಂದೆಯ ಸಮಾನ ತ್ಯಾಗ, ತಪಸ್ಸು ಹಾಗೂ ಸೇವೆಯ ಪುರಾವೆಯನ್ನು ತೋರಿಸುವಂತಹ ಸುಪುತ್ರ ಮಕ್ಕಳಿಗೆ, ಸದಾ ಏಕಾಗ್ರತೆಯ ಶಕ್ತಿಯ ಮೂಲಕ ವಿಶ್ವದ ಪರಿವರ್ತನೆ ಮಾಡುವಂತಹ ವಿಶ್ವ ಪರಿವರ್ತಕ ಮಕ್ಕಳಿಗೆ, ಸದಾ ತಂದೆಯ ಸಮಾನ ತೀವ್ರ ಪುರುಷಾರ್ಥದ ಮೂಲಕ ಹಾರುವಂತಹ ಡಬಲ್ ಲೈಟ್ ಮಕ್ಕಳಿಗೆ ಬಹಳ ಬಹಳ ನೆನಪು ಪ್ರೀತಿ ಹಾಗೂ ನಮಸ್ತೆ. |
ರಾಜಸ್ಥಾನದ ಸೇವಾಧಾರಿ:- ಬಹಳ ಒಳ್ಳೆಯ ಸೇವೆಯ ಚಾನ್ಸ್ ರಾಜಸ್ಥಾನದವರಿಗೆ ಸಿಕ್ಕಿದೆ. ರಾಜಸ್ಥಾನದ ಹೇಗೆ ಹೆಸರು ರಾಜಸ್ಥಾನ ಎಂದಿದೆ, ಎಂದ ಮೇಲೆ ರಾಜಸ್ಥಾನದಿಂದ ರಾಜ ಕ್ವಾಲಿಟಿಯವರು ಬರುತ್ತಾರೆ. ಪ್ರಜೆ ಅಲ್ಲ ರಾಜ ಮನೆತನದ ರಾಜರನ್ನು ಹೊರತನ್ನಿ. ಹೇಗೆ ಹೆಸರು ರಾಜಸ್ಥಾನ ಎಂದಿದೆ, ಅಂತಹವರನ್ನೇ ಹೊರತನ್ನಿ, ಎಂತಹ ಹೆಸರು ಅಂತಹ ಕ್ವಾಲಿಟಿಯವರು. ಇನ್ನೂ ಯಾರಾದರೂ ಅಡಗಿಕೊಂಡಿರುವ ರಾಜರು ಇದ್ದಾರೆಯೇ ಅಥವಾ ಇನ್ನೂ ಸಹ ಮೋಡಗಳ ಹಿಂದೆ ಇದ್ದಾರೆ? ಹೇಗೆ ವ್ಯಾಪಾರಿಗಳು ಇರುತ್ತಾರೆ, ಅವರ ಸೇವೆಯ ಮೇಲೆ ವಿಶೇಷ ಗಮನ ಕೊಡಿ. ಈ ಮಂತ್ರಿಗಳು ಹಾಗೂ ಸೆಕ್ರೆಟರಿಗಳಂತೂ ಬದಲಾಗುತ್ತಾ ಇರುತ್ತಾರೆ ಆದರೆ ವ್ಯಾಪಾರಿಗಳು ತಂದೆಯೊಂದಿಗೂ ಸಹ ವ್ಯಾಪಾರವನ್ನು ಮಾಡುವುದರಲ್ಲಿ ಮುಂದುವರೆಯಬಹುದು. ಮತ್ತು ವ್ಯಾಪಾರಸ್ಥರ ಸೇವೆ ಮಾಡುವುದರಿಂದ ಅವರ ಪರಿವಾರದ ಮಾತೆಯರು ಸಹಜವಾಗಿ ಬಂದುಬಿಡಬಹುದು. ಮಾತೆಯರೊಬ್ಬರೇ ನಡೆಯಲು ಸಾಧ್ಯವಿಲ್ಲ ಆದರೆ ಒಂದು ವೇಳೆ ಮನೆಯ ಸ್ತಂಭ ಬಂದುಬಿಡುತ್ತದೆ ಎಂದರೆ ಪರಿವಾರ ಸ್ವತಹವಾಗಿಯೇ ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ ಆದ್ದರಿಂದ ರಾಜಸ್ಥಾನದವರಿಗೆ ರಾಜ ಕ್ವಾಲಿಟಿಯವರನ್ನು ತರಬೇಕು. ಅಂತಹವರು ಯಾರು ಇಲ್ಲ, ಎಂದು ಹೇಳಬೇಡಿ. ಸ್ವಲ್ಪ ಹುಡುಕಬೇಕಾಗುತ್ತದೆ ಆದರೆ ಇದ್ದಾರೆ. ಸ್ವಲ್ಪ ಅವರಿಗಾಗಿ ಸಮಯ ಕೊಡಬೇಕಾಗುತ್ತದೆ. ವ್ಯಸ್ತರಾಗಿರುತ್ತಾರೆ ಅಲ್ಲವೇ! ಯಾವುದಾದರೂ ಇಂತಹ ವಿಧಿಯನ್ನು ಮಾಡಬೇಕಾಗುತ್ತದೆ ಯಾವುದರಿಂದ ಅವರು ಸಮೀಪ ಬರಬೇಕು. ಬಾಕಿ ಚೆನ್ನಾಗಿದ್ದಾರೆ, ಸೇವೆಯ ಚಾನ್ಸ್ ತೆಗೆದುಕೊಂಡಿದ್ದೀರಿ, ಪ್ರತಿಯೊಂದು ಜೋನಿನವರು ತೆಗೆದುಕೊಳ್ಳುತ್ತೀರಿ ಇದು ಸಮೀಪ ಬರುವ ಹಾಗೂ ಆಶೀರ್ವಾದಗಳನ್ನು ಪಡೆದುಕೊಳ್ಳುವ ಸಾಧನವಾಗಿದೆ. ನಿಮ್ಮನ್ನು ಎಲ್ಲರೂ ನೋಡಲಿ ಅಥವಾ ನೋಡದೆ ಇರಲಿ, ತಿಳಿಯಲಿ ಅಥವಾ ತಿಳಿಯದಿರಲಿ, ಆದರೆ ಎಷ್ಟು ಚೆನ್ನಾಗಿ ಸೇವೆ ಮಾಡುತ್ತೀರಿ, ಇದರಿಂದ ಸ್ವತಹವಾಗಿಯೇ ಆಶೀರ್ವಾದಗಳು ಸಿಗುತ್ತದೆ ಹಾಗೂ ಆ ಆಶೀರ್ವಾದಗಳು ಬಹಳ ಬೇಗ ತಲುಪುತ್ತದೆ. ಹೃದಯದ ಆಶೀರ್ವಾದಗಳಾಗಿವೆ ಅಲ್ಲವೇ! ಎಂದ ಮೇಲೆ ಹೃದಯಕ್ಕೆ ಬೇಗ ತಲುಪುತ್ತದೆ. ಬಾಪ್ದಾದಾರವರು ಹೇಳುತ್ತಾರೆ ಎಲ್ಲಕ್ಕಿಂತ ಸಹಜ ಪುರುಷಾರ್ಥವಾಗಿದೆ- ಆಶೀರ್ವಾದಗಳನ್ನು ಕೊಡಿ ಹಾಗೂ ಆಶೀರ್ವಾದಗಳನ್ನು ಪಡೆದುಕೊಳ್ಳಿ. ಆಶೀರ್ವಾದಗಳಿಂದ ಎಲ್ಲಾ ಖಾತೆ ತುಂಬಿ ಹೋಗುತ್ತದೆ ಎಂದರೆ ಸಂಪನ್ನ ಖಾತೆಯಲ್ಲಿ ಮಾಯೆಯೂ ಸಹ ಡಿಸ್ಟರ್ಬ್(ತೊಂದರೆ) ಮಾಡುವುದಿಲ್ಲ. ಜಮಾದ ಬಲ ಸಿಗುತ್ತದೆ. ಸಂತುಷ್ಟರಾಗಿರಿ ಹಾಗೂ ಎಲ್ಲರನ್ನೂ ಸಂತುಷ್ಟರನ್ನಾಗಿ ಮಾಡಿ. ಪ್ರತಿಯೊಬ್ಬರ ಸ್ವಭಾವದ ರಹಸ್ಯವನ್ನು ತಿಳಿದುಕೊಂಡು ಸಂತುಷ್ಟರನ್ನಾಗಿ ಮಾಡಿ. ಇವರಂತೂ ಕೋಪ ಮಾಡಿಕೊಳ್ಳುತ್ತಾರೆ ಎಂದು ಹೇಳಬೇಡಿ. ನೀವು ಸ್ವಯಂ ರಹಸ್ಯವನ್ನು ತಿಳಿದುಕೊಂಡು ಬಿಡಿ. ಅವರ ನಾಡಿಯನ್ನು ತಿಳಿದುಕೊಂಡು ಬಿಡಿ ನಂತರ ಆಶೀರ್ವಾದದ ಔಷಧಿಯನ್ನು ಕೊಡಿ. ಆಗ ಸಹಜವಾಗಿಬಿಡುವುದು. ಸರಿಯೇ ರಾಜಸ್ಥಾನದವರು! ರಾಜಸ್ಥಾನದ ಶಿಕ್ಷಕಿಯರು ನಿಂತುಕೊಳ್ಳಿ. ಸೇವೆಯ ಶುಭಾಶಯಗಳು. ಸಹಜ ಪುರುಷಾರ್ಥ ಮಾಡಿ, ಆಶೀರ್ವಾದಗಳನ್ನು ಕೊಡುತ್ತಾ ಹೋಗಿ. ಪಡೆದುಕೊಳ್ಳುವ ಸಂಕಲ್ಪವನ್ನು ಮಾಡಬೇಡಿ, ಕೊಡುತ್ತಾ ಹೋದರೆ ಸಿಗುತ್ತಾ ಹೋಗುತ್ತದೆ. ಕೊಡುವುದೇ ತೆಗೆದುಕೊಳ್ಳುವುದಾಗಿದೆ. ಸರಿಯೇ! ಈ ರೀತಿ ಆಗಿದೆ ಅಲ್ಲವೇ! ದಾತನ ಮಕ್ಕಳಾಗಿದ್ದೀರಲ್ಲವೇ! ಯಾರಾದರೂ ಕೊಟ್ಟರೆ ಕೊಡುತ್ತೇವೆ, ಅಲ್ಲ. ದಾತ ಆಗಿ ಕೊಡುತ್ತಾ ಹೋದರೆ ಸ್ವತಹವಾಗಿಯೇ ಸಿಗುತ್ತದೆ. ಒಳ್ಳೆಯದು. |
ಯಾರು ಈ ಕಲ್ಪದಲ್ಲಿ ಮೊದಲ ಬಾರಿ ಬಂದಿದ್ದೀರಿ ಅವರು ಕೈ ಎತ್ತಿ. ಅರ್ಧ ಹೊಸಬರು ಬಂದಿದ್ದಾರೆ, ಅರ್ಧ ಮೊದಲಿದ್ದವರು ಬಂದಿದ್ದಾರೆ. ಒಳ್ಳೆಯದು. ಹಿಂದಿನವರು ಕೋಣೆಯಲ್ಲಿ ಕುಳಿತುಕೊಂಡು ಸಹ ಎಲ್ಲರೂ ಸಹಜ ಯೋಗಿ ಆಗಿದ್ದೀರಾ? ಸಹಜ ಯೋಗಿ ಆಗಿದ್ದರೆ ಒಂದು ಕೈಯನ್ನು ಎತ್ತಿ. ಒಳ್ಳೆಯದು. |
ಬೀಳ್ಕೊಡುಗೆಯ ಸಮಯ: (ಬಾಪ್ದಾದಾರವರಿಗೆ ರಥಯಾತ್ರೆಯ ಸಮಾಚಾರವನ್ನು ತಿಳಿಸಿದರು) ನಾಲ್ಕಾರು ಕಡೆಯ ಯಾತ್ರೆಗಳ ಸಮಾಚಾರ ಸಮಯ ಪ್ರತಿ ಸಮಯ ಬಾಪ್ದಾದಾರವರ ಬಳಿ ಬರುತ್ತಾ ಇರುತ್ತದೆ. ಒಳ್ಳೆಯದು ಎಲ್ಲರೂ ಉಮಂಗ ಉತ್ಸಾಹದಿಂದ ಸೇವೆಯ ಪಾತ್ರವನ್ನು ಅಭಿನಯಿಸುತ್ತಿದ್ದೀರಿ. ಭಕ್ತರಿಗೆ ಆಶೀರ್ವಾದಗಳು ಸಿಗುತ್ತಿದೆ ಹಾಗೂ ಯಾವ ಭಕ್ತರ ಭಕ್ತಿ ಪೂರ್ತಿಯಾಯಿತು, ಅವರಿಗೆ ತಂದೆಯ ಪರಿಚಯ ಸಿಕ್ಕಿಬಿಡುವುದು ಹಾಗೂ ಪರಿಚಯ ಸಿಕ್ಕವರು ಯಾರು ಮಕ್ಕಳಾಗಬೇಕಾಗಿದೆಯೋ ಅವರು ಸಹ ಕಾಣಿಸುತ್ತಾ ಇರುತ್ತಾರೆ. ಉಳಿದಿರುವ ಸೇವೆ ಚೆನ್ನಾಗಿ ನಡೆಯುತ್ತಿದೆ ಹಾಗೂ ಏನೆಲ್ಲಾ ಸಾಧನ ತಯಾರಿಸಿದ್ದೀರಿ ಆ ಸಾಧನ ಚೆನ್ನಾಗಿ ಎಲ್ಲರಿಗೂ ಆಕರ್ಷಣೆ ಮಾಡುತ್ತಿದೆ. ಈಗ ಫಲಿತಾಂಶದಲ್ಲಿ ಯಾರು ಯಾರು ಯಾವ ಕೆಟಗರಿ(ವರ್ಗ) ದಲ್ಲಿ ಬರುತ್ತಾರೆ ಅದು ತಿಳಿದುಬಿಡುತ್ತದೆ ಆದರೆ ಭಕ್ತರಿಗೂ ಸಹ ನಿಮ್ಮೆಲ್ಲರ ದೃಷ್ಟಿ ಸಿಕ್ಕಿದೆ, ಪರಿಚಯ ಸಿಕ್ಕಿದೆ- ಇದು ಸಹ ಒಳ್ಳೆಯ ಸಾಧನವಾಗಿದೆ. ಈಗ ಮುಂದುವರೆದು ಇವರ ಸೇವೆಯನ್ನು ಮಾಡಿ ಮುಂದುವರೆಸುತ್ತಾ ಇರಬೇಕು. ಯಾರೆಲ್ಲ ರಥ ಯಾತ್ರೆಯಲ್ಲಿ ಸೇವೆ ಮಾಡುತ್ತಿದ್ದಾರೆ, ಅವಿಶ್ರಾತರಾಗಿ ಸೇವೆ ಮಾಡುತ್ತಿದ್ದಾರೆ, ಅವರೆಲ್ಲರಿಗೂ ನೆನಪು ಪ್ರೀತಿ. ಬಾಪ್ದಾದಾರವರು ಎಲ್ಲರನ್ನು ನೋಡುತ್ತಾ ಇರುತ್ತಾರೆ ಹಾಗೂ ಸಫಲತೆಯಂತೂ ಜನ್ಮಸಿದ್ಧ ಅಧಿಕಾರವಾಗಿದೆ. ಒಳ್ಳೆಯದು. |
ಮರಿಷಿಯಸ್ನಲ್ಲಿ ನಮ್ಮ ಈಶ್ವರೀಯ ವಿಶ್ವವಿದ್ಯಾಲಯಕ್ಕೆ ನ್ಯಾಷನಲ್ ಯೂನಿಟಿ ಅವಾರ್ಡ್ ಪ್ರಧಾನ ಮಂತ್ರಿಯ ಮೂಲಕ ಸಿಕ್ಕಿದೆ:- ಮರೀಶಿಯಸ್ ನಲ್ಲಿ ವಿ.ಐ.ಪಿ ಯ ಕನೆಕ್ಷನ್ ಚೆನ್ನಾಗಿದೆ ಹಾಗೂ ಪ್ರಭಾವವು ಸಹ ಚೆನ್ನಾಗಿದೆ ಆದ್ದರಿಂದ ಗುಪ್ತ ಸೇವೆಯ ಫಲ ಸಿಗುತ್ತದೆ ಆದ್ದರಿಂದ ಎಲ್ಲರಿಗೂ ವಿಶೇಷ ಶುಭಾಶಯಗಳು. ಒಳ್ಳೆಯದು. ಓಂ ಶಾಂತಿ. |
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ಈಗ ಬೇಹದ್ದಿನ ತಂದೆಯನ್ನು ಹೇಗೆ ಮರೆಯುವಿರಿ, ಯಾರಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ. ಅವರನ್ನು ಅರ್ಧ ಕಲ್ಪ ನೆನಪು ಮಾಡುತ್ತಿದ್ದಿರಿ, ಇದನ್ನಂತೂ ತಿಳಿಸಿದ್ದಾರೆ - ಮನುಷ್ಯರಿಗೆಂದೂ ಭಗವಂತನೆಂದು ಹೇಳುವುದಿಲ್ಲ ಅಂದಮೇಲೆ ಈಗ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರ ನೆನಪಿನಲ್ಲಿಯೇ ಚಮತ್ಕಾರವಿದೆ. ಪತಿತ-ಪಾವನ ತಂದೆಯನ್ನು ಎಷ್ಟು ನೆನಪು ಮಾಡುತ್ತೀರೋ ಅಷ್ಟು ಪಾವನರಾಗುತ್ತಾ ಹೋಗುತ್ತೀರಿ. ನೀವೀಗ ತಮ್ಮನ್ನು ಪಾವನರೆಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಯಾವಾಗ ಸಂಪೂರ್ಣ ಪಾವನರಾಗಿ ಬಿಡುತ್ತೀರೋ ಆಗ ಈ ಶರೀರವನ್ನು ಬಿಟ್ಟು ಹೋಗಿ ಸಂಪೂರ್ಣ ಪವಿತ್ರ ಶರೀರವನ್ನು ತೆಗೆದುಕೊಳ್ಳುತ್ತೀರಿ. ಯಾವಾಗ ಸತ್ಯಯುಗದಲ್ಲಿ ಹೊಸ ಶರೀರ ಸಿಗುವುದೋ ಆಗ ಸಂಪೂರ್ಣರೆಂದು ಹೇಳಲಾಗುವುದು. ನಂತರ ರಾವಣ ರಾಜ್ಯವು ಸಮಾಪ್ತಿ ಆಗಿ ಬಿಡುತ್ತದೆ. ಸತ್ಯಯುಗದಲ್ಲಿ ರಾವಣನ ಪ್ರತಿಮೆಯನ್ನು ಮಾಡುವುದಿಲ್ಲ ಅಂದಾಗ ನೀವು ಮಕ್ಕಳು ಕುಳಿತುಕೊಳ್ಳುತ್ತೀರಿ, ನಡೆಯುತ್ತಾ-ತಿರುಗಾಡುತ್ತಾ ಇರುತ್ತೀರೆಂದರೆ ಬುದ್ಧಿಯಲ್ಲಿ ಇದೇ ಇರಲಿ, ನಾವೀಗ 84 ಜನ್ಮಗಳ ಚಕ್ರವನ್ನು ಪೂರ್ಣಗೊಳಿಸಿದ್ದೇವೆ. ಈಗ ಮತ್ತೆ ಹೊಸ ಚಕ್ರವು ಆರಂಭವಾಗುತ್ತದೆ. ಅದು ಹೊಸ ಪವಿತ್ರ ಪ್ರಪಂಚವಾಗಿದೆ, ಹೊಸ ಭಾರತ ಹೊಸ ದೆಹಲಿಯಾಗಿರುತ್ತದೆ. ಮಕ್ಕಳಿಗೆ ತಿಳಿದಿದೆ - ಮೊದಲು ಜಮುನಾ ನದಿಯ ತೀರದಲ್ಲಿ ಪರಿಸ್ತಾನವನ್ನಾಗಿ ಮಾಡಬೇಕಾಗಿದೆ. ಮಕ್ಕಳಿಗೆ ಬಹಳ ಚೆನ್ನಾಗಿ ತಿಳಿಸಲಾಗುತ್ತದೆ, ಮಕ್ಕಳೇ ಮೊಟ್ಟ ಮೊದಲು ತಂದೆಯನ್ನು ನೆನಪು ಮಾಡಿ. ಭಗವಂತ ತಂದೆಯು ಓದಿಸುತ್ತಾರೆ, ಅವರೇ ತಂದೆ, ಶಿಕ್ಷಕ, ಗುರುವಾಗಿದ್ದಾರೆ. ಇದನ್ನು ನೆನಪಿಟ್ಟುಕೊಳ್ಳಿ. ತಂದೆಯು ಈ ಮಾತನ್ನೂ ತಿಳಿಸಿದ್ದರು - ನೀವು ಬಾಜೋಲಿ ಆಟವನ್ನು ಆಡುತ್ತೀರಿ, ವರ್ಣಗಳ ಚಿತ್ರವು ಬಹಳ ಅತ್ಯವಶ್ಯಕವಾಗಿದೆ. ಎಲ್ಲರಿಗಿಂತ ಮೇಲೆ ಶಿವ ತಂದೆಯಿದ್ದಾರೆ ನಂತರ ಶಿಖೆಗೆ ಸಮಾನರಾದ ಬ್ರಾಹ್ಮಣರಿದ್ದೀರಿ, ಇದನ್ನು ತಿಳಿಸುವುದಕ್ಕಾಗಿ ತಂದೆಯು ಹೇಳುತ್ತಾರೆ. ಒಳ್ಳೆಯದು - ಇದನ್ನು ಬುದ್ಧಿಯಲ್ಲಿಟ್ಟುಕೊಳ್ಳಿ - ನಾವು 84 ಜನ್ಮಗಳ ಬಾಜೋಲಿಯನ್ನು ಆಡುತ್ತೇವೆ. ಈಗ ಸಂಗಮವಾಗಿದೆ. ತಂದೆಯು ಹೆಚ್ಚು ಸಮಯ ಇರುವುದಿಲ್ಲ ಆದರೂ 100 ವರ್ಷಗಳಂತೂ ಹಿಡಿಸುತ್ತದೆ. ಎಲ್ಲಾ ಅಲ್ಲೋಲ-ಕಲ್ಲೋಲ, ಏರುಪೇರುಗಳೆಲ್ಲವೂ ಮುಗಿದು ರಾಜ್ಯವು ಆರಂಭವಾಗುತ್ತದೆ. ಮಹಾಭಾರತ ಯುದ್ಧವೂ ಅದೇ ಆಗಿದೆ ಯಾವುದರಲ್ಲಿ ಅನೇಕ ಧರ್ಮಗಳ ವಿನಾಶ, ಒಂದು ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತಿದೆ. ನಿಮ್ಮ ಬಾಜೋಲಿ ಆಟವು ನೋಡಿ, ಎಷ್ಟು ಅದ್ಭುತವಾಗಿದೆ. ನಿಮಗೆ ತಿಳಿದಿದೆ- ಸನ್ಯಾಸಿಗಳು ಈ ಆಟವನ್ನು ಆಡುತ್ತಾರೆ. ತೀರ್ಥ ಸ್ಥಾನಗಳಿಗೆ ಹೋಗುತ್ತಾರೆ, ಮನುಷ್ಯರಿಗೆ ಶ್ರದ್ಧೆಯಿರುತ್ತದೆಯಲ್ಲವೆ ಆದ್ದರಿಂದ ಅವರಿಗೆ ಏನಾದರೊಂದನ್ನು ಕೊಟ್ಟು ಬಿಡುತ್ತಾರೆ. ಅದರಿಂದಲೇ ಅವರ ಪಾಲನೆಯು ನಡೆಯುತ್ತಿರುತ್ತದೆ ಏಕೆಂದರೆ ಇಂತಹ ಮನುಷ್ಯರು ತಮ್ಮ ಜೊತೆ ಏನು ತೆಗೆದುಕೊಂಡು ಹೋಗುತ್ತಾರೆ? ತಂದೆಯು ಇವೆಲ್ಲಾ ಮಾತುಗಳ ಅನುಭವಿಯಾಗಿದ್ದಾರೆ ಆದ್ದರಿಂದಲೇ ಶಿವ ತಂದೆಯು ಅನುಭವೀ ರಥವನ್ನು ತೆಗೆದುಕೊಂಡಿದ್ದಾರೆ. ಇವರು ಗುರುಗಳನ್ನೂ ಮಾಡಿಕೊಂಡಿದ್ದರು. ಬಹಳಷ್ಟು ನೋಡಿದರು, ತೀರ್ಥ ಯಾತ್ರೆಗಳನ್ನು ಮಾಡಿದರು. ಈಗ ತಂದೆಯು ತಿಳಿಸುವುದೇನೆಂದರೆ ನೀವು ಬಾಜೋಲಿ ಆಟವನ್ನು (ತಲೆ ಮತ್ತು ಕಾಲು ಒಂದು ಕಡೆ ಸೇರುವ ಒಂದು ಪ್ರಕಾರದ ಆಟ) ನೆನಪು ಮಾಡಿಕೊಳ್ಳಬಹುದು. ನಾವೀಗ ಬ್ರಾಹ್ಮಣರಾಗಿದ್ದೇವೆ ನಂತರ ದೇವತಾ, ಕ್ಷತ್ರಿಯರಾಗುತ್ತೇವೆ. ಇವೆಲ್ಲವೂ ಭಾರತದ ಮಾತಾಗಿದೆ. ತಂದೆಯು ತಿಳಿಸಿದ್ದಾರೆ, ಅನ್ಯ ಧರ್ಮಗಳು ಹೇಗೆ ಶಾಖೆಗಳಿದ್ದಂತೆ. ತಂದೆಯು ನಿಮಗೇ 84 ಜನ್ಮಗಳ ಕಥೆಯನ್ನು ತಿಳಿಸಿದ್ದಾರೆ, ಯಾರು ಬುದ್ಧಿವಂತರಿದ್ದಾರೆಯೋ ಅವರ ಲೆಕ್ಕದಿಂದ ಅವರು ತಿಳಿದುಕೊಳ್ಳಬಲ್ಲರು. ಇಸ್ಲಾಮಿ ಬರುತ್ತಾರೆಂದರೆ ಅವರದು ಅಂದಾಜು ಎಷ್ಟು ಜನ್ಮಗಳಿರಬಹುದು! ನಿಖರವಾದ ಲೆಕ್ಕದ ಅವಶ್ಯಕತೆಯೇನೂ ಇಲ್ಲ. ಈ ಮಾತುಗಳಲ್ಲಿ ಯಾವುದೇ ಚಿಂತೆಯ ಮಾತಿಲ್ಲ. ಎಲ್ಲದಕ್ಕಿಂತ ಹೆಚ್ಚಿನ ಚಿಂತೆಯು ಇದೇ ಇರುತ್ತದೆ - ನಾವು ತಂದೆಯನ್ನು ನೆನಪು ಮಾಡುತ್ತಾ ಇರಬೇಕು ಅಷ್ಟೆ. ಒಬ್ಬರನ್ನು ನೆನಪು ಮಾಡುವುದೇ ಚಿಂತೆಯಾಗಿದೆ. ಪದೇ-ಪದೇ ಮಾಯೆಯು ಅನ್ಯ ಚಿಂತೆಗಳಲ್ಲಿ ಸಿಲುಕಿಸುತ್ತದೆ. ಇದರಲ್ಲಿ ಮಾಯೆಯು ಚಿಂತೆಯಲ್ಲಿ ಬಹಳ ತರುತ್ತದೆ, ಆದರೆ ಮಕ್ಕಳು ನೆನಪು ಮಾಡಲೇಬೇಕು - ನಾವೀಗ ಮನೆಗೆ ಹೋಗಬೇಕಾಗಿದೆ. ಮಧುರ ಮನೆಯು ಯಾರಿಗೂ ನೆನಪು ಬರುವುದಿಲ್ಲ. ಶಾಂತಿ ದೇವ ಎಂದು ಹಾಡುತ್ತಾರೆ, ನಮಗೆ ಶಾಂತಿಯನ್ನು ಕೊಡಿ ಎಂದು ಭಗವಂತನಿಗೆ ಹೇಳುತ್ತಾರೆ. |
ಈಗ ನೀವು ಮಕ್ಕಳು ಇದನ್ನಂತೂ ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ಅನ್ಯ ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ. ಶಾಂತಿಯು ಸತ್ಯಯುಗದಲ್ಲಿಯೇ ಇರುತ್ತದೆ, ಒಂದು ಧರ್ಮ, ಒಂದು ಭಾಷೆ, ರೀತಿ ನೀತಿಗಳು ಒಂದೇ ಇರುವವು. ಅಲ್ಲಿರುವುದೇ ಶಾಂತಿಯ ರಾಜ್ಯ, ಅದ್ವೈತದ ಮಾತೇ ಇಲ್ಲ. ಅಲ್ಲಂತೂ ಒಂದೇ ರಾಜಧಾನಿಯಿರುತ್ತದೆ, ಸತೋಪ್ರಧಾನರಿರುತ್ತಾರೆ. ಯುದ್ಧವಾಗಲು ರಾವಣ ರಾಜ್ಯವೇ ಇರುವುದಿಲ್ಲ ಅಂದಾಗ ನೀವು ಮಕ್ಕಳಿಗೆ ಖುಷಿಯ ನಶೆಯೇರಬೇಕು. ಶಾಸ್ತ್ರಗಳಲ್ಲಿ ಅತೀಂದ್ರಿಯ ಸುಖವನ್ನು ಗೋಪ-ಗೋಪಿಯರಿಂದ ಕೇಳಿರಿ ಎಂಬ ಯಾವ ಗಾಯನವಿದೆಯೋ ಆ ಗೋಪ-ಗೋಪಿಕೆಯರು ನೀವೇ ಆಗಿದ್ದೀರಿ. ನೀವು ಸನ್ಮುಖದಲ್ಲಿ ಕುಳಿತಿದ್ದೀರಿ, ನಿಮ್ಮಲ್ಲಿಯೇ ನಂಬರ್ವಾರ್ ಇದ್ದಾರೆ. ತಂದೆಯು ನಮ್ಮ ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ ಎಂಬುದು ಕೆಲವರಿಗೇ ನೆನಪಿರುತ್ತದೆ. ಇದಂತೂ ಆಶ್ಚರ್ಯವಾಗಿದೆಯಲ್ಲವೆ! ಜೀವನಪರ್ಯಂತ ಜೊತೆ ಕೊಡುತ್ತಾರೆ. ಮಡಿಲಿಗೆ ತೆಗೆದುಕೊಂಡು ಮತ್ತೆ ವಿದ್ಯೆಯನ್ನು ಆರಂಭಿಸುತ್ತಾರೆ ಅಂದಮೇಲೆ ಇದು ನೆನಪಿದ್ದರೂ ಸಹ ಬಹಳ ಖುಷಿಯಿರುವುದು ಆದರೆ ಮಾಯೆಯು ಇದನ್ನು ಮರೆಸಿ ಬಿಡುತ್ತದೆ. ಮಕ್ಕಳು ಇದನ್ನೂ ಸಹ ತಿಳಿಸಬೇಕಾಗುತ್ತದೆ. ಇನ್ನೂ ಸ್ವಲ್ಪವೇ ಸಮಯವಿದೆ ಎಂದು ಹೇಳುತ್ತೀರಿ, ಇದಕ್ಕೇನು ಸಾಕ್ಷಿ ಎಂದು ಮನುಷ್ಯರು ಕೇಳುತ್ತಾರೆ. ಆಗ ತಿಳಿಸಿರಿ, ನೋಡಿ ಇದರಲ್ಲಿ ಭಗವಾನುವಾಚ ಎಂದು ಬರೆಯಲ್ಪಟ್ಟಿದೆ. ಯಜ್ಞವನ್ನೂ ರಚಿಸಿದ್ದಾರೆ, ಇದು ಜ್ಞಾನ ಯಜ್ಞವಾಗಿದೆ. ಈಗ ಕೃಷ್ಣನು ಯಜ್ಞವನ್ನು ರಚಿಸಲು ಸಾಧ್ಯವಿಲ್ಲ. |
ಮಕ್ಕಳಿಗೆ ಇದೂ ಸಹ ಬುದ್ಧಿಯಲ್ಲಿರಬೇಕು - ನಾವು ಈ ಬೇಹದ್ದಿನ ಯಜ್ಞದ ಬ್ರಾಹ್ಮಣರಾಗಿದ್ದೇವೆ, ತಂದೆಯು ನಮ್ಮನ್ನು ನಿಮಿತ್ತ ಮಾಡಿದ್ದಾರೆ. ಯಾವಾಗ ನೀವು ಚೆನ್ನಾಗಿ ಜ್ಞಾನ ಮತ್ತು ಯೋಗದ ಧಾರಣೆ ಮಾಡುತ್ತೀರೋ ಆತ್ಮವು ಸಂಪೂರ್ಣವಾಗಿ ಬಿಡುತ್ತದೆಯೋ ಆಗ ಈ ಬಿದುರಿನ ಕಾಡಿಗೆ ಬೆಂಕಿ ಬೀಳುವುದು. ಇದು ಬೇಹದ್ದಿನ ಕರ್ಮಕ್ಷೇತ್ರವಾಗಿದೆ ಎಲ್ಲಿ ಎಲ್ಲರೂ ಬಂದು ಆಟವಾಡುತ್ತಾರೆ ಎಂಬುದು ಮನುಷ್ಯರಿಗೇ ತಿಳಿದಿರುತ್ತದೆಯಲ್ಲವೆ. ಮಾಡಿ-ಮಾಡಲ್ಪಟ್ಟಿರುವುದೇ ನಡೆಯುತ್ತಿದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಡ್ರಾಮಾದಲ್ಲಿ ಇಲ್ಲದೇ ಇರುವುದು ನಡೆದರೆ ಚಿಂತೆ ಮಾಡಬೇಕು, ಏನು ನಡೆಯಿತೋ ಅದು ಡ್ರಾಮಾದಲ್ಲಿತ್ತು ಅಂದಮೇಲೆ ಅದರ ಚಿಂತನೆಯನ್ನೇಕೆ ಮಾಡಬೇಕು! ನಾವು ನಾಟಕವನ್ನು ನೋಡುತ್ತೇವೆ, ಡ್ರಾಮಾದಲ್ಲಿ ಯಾವುದೇ ಅಂತಹ ದುಃಖದಾಯಕ ದೃಶ್ಯವಿದ್ದರೆ ಅದನ್ನು ನೋಡಿ ಮನುಷ್ಯರು ಅಳುತ್ತಾರೆ ಆದರೆ ಈಗ ಅದು ಸುಳ್ಳು ನಾಟಕವಾಗಿದೆ, ಇದು ಸತ್ಯವಾದ ನಾಟಕವಾಗಿದೆ. ಸತ್ಯ-ಸತ್ಯವಾಗಿ ಪಾತ್ರವನ್ನು ಅಭಿನಯಿಸುತ್ತಾರೆ ಆದರೆ ನಿಮಗೆ ಯಾವುದೆ ದುಃಖದ ಕಣ್ಣೀರು ಬರಬಾರದು. ನೀವು ಸಾಕ್ಷಿಯಾಗಿ ನೋಡಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ, ಇದು ನಾಟಕವಾಗಿದೆ, ಇದರಲ್ಲಿ ಅಳುವ ಅವಶ್ಯಕತೆಯೇನಿದೆ! ಕಳೆದದ್ದು ಕಳೆದುಹೋಯಿತು, ಎಂದೂ ವಿಚಾರವನ್ನೂ ಮಾಡಬಾರದು. ನೀವು ಮುಂದುವರೆಯುತ್ತಾ ತಂದೆಯನ್ನು ನೆನಪು ಮಾಡುತ್ತಾ ಇರಿ ಮತ್ತು ಎಲ್ಲರಿಗೆ ಮಾರ್ಗ ತಿಳಿಸುತ್ತಾ ಇರಿ. ತಂದೆಯಂತೂ ಸಲಹೆ ನೀಡುತ್ತಾ ಇರುತ್ತಾರೆ. ನಿಮ್ಮ ಬಳಿ ತ್ರಿಮೂರ್ತಿಯ ಚಿತ್ರವಿದೆ, ಅದರಲ್ಲಿ ಅವರು ಶಿವ ತಂದೆ, ಇದು ಅವರ ಆಸ್ತಿ ಎಂದು ಸ್ಪಷ್ಟವಾಗಿ ಬರೆಯಲ್ಪಟ್ಟಿದೆ. ನೀವು ಮಕ್ಕಳಿಗೆ ಈ ಚಿತ್ರವನ್ನು ನೋಡುತ್ತದ್ದಂತೆಯೇ ಬಹಳ ಖುಷಿಯಾಗಬೇಕು - ತಂದೆಯಿಂದ ನಮಗೆ ವಿಷ್ಣು ಪುರಿಯ ಆಸ್ತಿ ಸಿಗುತ್ತದೆ, ಹಳೆಯ ಪ್ರಪಂಚದ ಸಮಾಪ್ತಿಯಾಗಲಿದೆ. ಈ ಚಿತ್ರವನ್ನು ಮುಂಭಾಗದಲ್ಲಿಡಿ, ಇದರಲ್ಲಿ ಖರ್ಚೆನೂ ಇಲ್ಲ. ವೃಕ್ಷದ ಚಿತ್ರವು ಬಹಳ ಚೆನ್ನಾಗಿದೆ. ನಿತ್ಯವೂ ಮುಂಜಾನೆಯೆದ್ದು ವಿಚಾರ ಸಾಗರ ಮಂಥನ ಮಾಡಿರಿ. ತಮಗೆ ತಾವೇ ಶಿಕ್ಷಕರಾಗಿ ಓದಿಸಿ, ಎಲ್ಲರಿಗೂ ಬುದ್ಧಿಯಿದೆ - ತಮ್ಮ ಮನೆಯಲ್ಲಿ ಚಿತ್ರವನ್ನು ಇಟ್ಟುಕೊಳ್ಳಿ. ತಮ್ಮ ಚಿತ್ರದಲ್ಲಿ ಬಹಳ ಒಳ್ಳೆಯ ಜ್ಞಾನವಿದೆ. ವಿನಾಶವಾಗುತ್ತದೆ ಎಂದು ಹೇಳುತ್ತಾರೆ ಅಂದಮೇಲೆ ತಂದೆಯ ಜೊತೆ ಪ್ರೀತಿಯಿದೆಯಲ್ಲವೆ. ಶಿವ ತಂದೆಯು ದಲ್ಲಾಳಿಯಾಗಿ ನಮ್ಮ ವಿವಾಹ ಮಾಡಿಸುತ್ತಾರೆ. ಯಾವಾಗ ಸದ್ಗುರು ದಲ್ಲಾಳಿಯ ರೂಪದಲ್ಲಿ ಸಿಕ್ಕಿದರೋ ಆಗ ಎಷ್ಟು ಒಳ್ಳೊಳ್ಳೆಯ ಮಾತು ತಿಳಿದುಕೊಳ್ಳಲು ಮತ್ತು ತಿಳಿಸುವುದಕ್ಕಾಗಿ ಸಿಕ್ಕಿದೆ ಆದರೂ ಮಾಯೆಯ ಪ್ರಭಾವ ಬಹಳಷ್ಟಿದೆ. 100 ವರ್ಷಗಳ ಮೊದಲು ಈ ವಿದ್ಯುತ್, ಗ್ಯಾಸ್ ಇತ್ಯಾದಿಯೇನೂ ಇರಲಿಲ್ಲ. ಹಿಂದಿನ ಕಾಲದಲ್ಲಿ ವೈಸರಾಯ್ ಮೊದಲಾದವರು ನಾಲ್ಕು ಕುದುರೆಗಳ, ಎಂಟು ಕುದುರೆಗಳ ಗಾಡಿಯಲ್ಲಿ ಬರುತ್ತಿದ್ದರು. ಮೊದಲು ಸಾಹುಕಾರರು ಗಾಡಿಯಲ್ಲಿ ಬರುತ್ತಿದ್ದರು, ಈಗಂತೂ ವಿಮಾನಗಳು ಬಂದು ಬಿಟ್ಟಿದೆ, ಹಿಂದೆ ಇದೇನೂ ಇರಲಿಲ್ಲ. 100 ವರ್ಷಗಳಲ್ಲಿ ಇದು ಏನಾಗಿ ಬಿಟ್ಟಿದೆ! ಇದೇ ಸ್ವರ್ಗವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸ್ವರ್ಗವು ಸ್ವರ್ಗವೇ ಆಗಿರುತ್ತದೆ. ಇಲ್ಲಿರುವ ವಸ್ತುಗಳೆಲ್ಲವೂ ಬಿಡುಗಾಸಿನದಾಗಿದೆ, ಇದಕ್ಕೆ ತಾತ್ಕಾಲಿಕ ಆಡಂಬರವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳಿಗೆ ನಾವು ತಂದೆಯನ್ನು ನೆನಪು ಮಾಡಬೇಕು ಎಂಬ ಒಂದೇ ಚಿಂತೆಯಿರಲಿ, ಇದರಲ್ಲಿ ಮಾಯೆಯು ವಿಘ್ನಗಳನ್ನು ಹಾಕುತ್ತದೆ. ತಂದೆಯು ತಮ್ಮ ಉದಾಹರಣೆಯನ್ನು ತಿಳಿಸುತ್ತಾರೆ, ಭೋಜನವನ್ನು ಮಾಡುವಾಗ ನೆನಪಿನಲ್ಲಿದ್ದು ತಿನ್ನಬೇಕೆಂದು ಬಹಳ ಪ್ರಯತ್ನ ಪಡುತ್ತೇನೆ ಆದರೂ ಮರೆತು ಹೋಗುತ್ತೇನೆ ಆಗ ಮಕ್ಕಳಿಗೆ ಇನ್ನೆಷ್ಟು ಪರಿಶ್ರಮವಾಗಬಹುದು! ಎಂದು ತಿಳಿದುಕೊಳ್ಳುತ್ತೇನೆ. ಒಳ್ಳೆಯದು ಮಕ್ಕಳೇ, ನೀವು ಪ್ರಯತ್ನ ಪಟ್ಟು ನೋಡಿರಿ. ತಂದೆಯ ನೆನಪಿನಲ್ಲಿದ್ದು ತೋರಿಸಿ, ನೋಡಿಕೊಳ್ಳಿ - ಇಡೀ ಸಮಯ ನೆನಪು ಇರುತ್ತದೆಯೇ? ಇದರ ಅನುಭವವನ್ನು ತಿಳಿಸಬೇಕು. ಬಾಬಾ, ಇಡೀ ಸಮಯ ನೆನಪು ಇರುವುದಿಲ್ಲ, ಬಹಳ ಭಿನ್ನ-ಭಿನ್ನ ಪ್ರಕಾರದ ಮಾತುಗಳು ನೆನಪಿಗೆ ಬಂದು ಬಿಡುತ್ತವೆ. ತಂದೆಯು ಸ್ವಯಂ ತಮ್ಮ ಅನುಭವವನ್ನು ತಿಳಿಸುತ್ತಾರೆ. ತಂದೆಯು ಯಾರಲ್ಲಿ ಪ್ರವೇಶ ಮಾಡಿದರೋ ಇವರೂ ಸಹ ಪುರುಷಾರ್ಥಿಯಾಗಿದ್ದಾರೆ, ಇವರಿಗೂ ಬಹಳ ಜಂಜಾಟವಿದೆ. ದೊಡ್ಡವರೆಂದು ಕರೆಸಿಕೊಳ್ಳುವುದು ಎಂದರೆ ದೊಡ್ಡ ದುಃಖವನ್ನು ಅನುಭವಿಸುವುದು. ಎಷ್ಟೊಂದು ಸಮಾಚಾರಗಳು ಬರುತ್ತವೆ, ವಿಕಾರಗಳ ಕಾರಣ ಎಷ್ಟೊಂದು ಹೊಡೆಯುತ್ತಾರೆ, ಮನೆಯಿಂದ ಹೊರ ಹಾಕುತ್ತಾರೆ. ನಾನು ಈಶ್ವರನ ಮಡಿಲಿಗೆ ಬಂದಿದ್ದೇವೆಂದು ಕನ್ಯೆಯರು ಹೇಳುತ್ತಾರೆ, ಎಷ್ಟೊಂದು ವಿಘ್ನಗಳು ಬೀಳುತ್ತವೆ. ಕೆಲವರ ಬಳಿ ಶಾಂತಿಯಿರುವುದಿಲ್ಲ, ನೀವು ಮಕ್ಕಳಿಗೆ ಎಲ್ಲಾ ಸೌಲಭ್ಯವಿದೆ, ಈಗ ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆದು ಶಾಂತಿಯಲ್ಲಿರುತ್ತೀರಿ. ಈ ತಂದೆಯು (ಬ್ರಹ್ಮಾ) ಇಲ್ಲಿಯೂ ಕೆಲವು ಇಂತಹ ಮನೆಗಳನ್ನು ನೋಡಿದ್ದಾರೆ ಎಲ್ಲಿ ಪರಸ್ಪರ ಹೊಂದಾಣಿಕೆಯಿಂದ, ಪ್ರೀತಿಯಿಂದ ಇರುತ್ತಾರೆ. ಎಲ್ಲರೂ ದೊಡ್ಡವರ ಆಜ್ಞೆಯಂತೆ ನಡೆಯುತ್ತಾರೆ. ನಮ್ಮ ಮನೆಯಲ್ಲಿ ಸ್ವರ್ಗವೇ ಇದೆಯೆಂದು ಹೇಳುತ್ತಾರೆ. |
ಈಗ ತಂದೆಯು ನಿಮ್ಮನ್ನು ಇಂತಹ ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಎಲ್ಲಾ ಪ್ರಕಾರದ ಸುಖವಿರುತ್ತದೆ. ದೇವತೆಗಳ 36 ಪ್ರಕಾರದ ಭೋಜನದ ಗಾಯನವಿದೆ, ನೀವೀಗ ತಂದೆಯಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಅಲ್ಲಂತೂ ಎಷ್ಟು ಸ್ವಾಧಿಷ್ಟ ಭೋಜನವನ್ನು ಸೇವಿಸುತ್ತಾರೆ ಮತ್ತು ಪವಿತ್ರರಾಗಿರುತ್ತಾರೆ. ನೀವೀಗ ಅಂತಹ ಪ್ರಪಂಚದ ಮಾಲೀಕರಾಗುತ್ತೀರಿ, ರಾಜ-ರಾಣಿ ಪ್ರಜೆಗಳಲ್ಲಿ ಅಂತರವಿರುತ್ತದೆಯಲ್ಲವೆ. ಮೊದಲು ರಾಜರು ಬಹಳ ಆಡಂಬರದಿಂದಿರುತ್ತಿದ್ದರು. ಇವರಂತೂ ಪತಿತರಾದರು ಮತ್ತು ರಾವಣ ರಾಜ್ಯದಲ್ಲಿದ್ದಾರೆ ಅಂದಮೇಲೆ ವಿಚಾರ ಮಾಡಿ, ಸತ್ಯಯುಗದಲ್ಲಿ ಹೇಗಿರಬಹುದು! ಸನ್ಮುಖದಲ್ಲಿ ಲಕ್ಷ್ಮೀ-ನಾರಾಯಣರ ಚಿತ್ರವನ್ನು ಇಟ್ಟಿದ್ದಾರೆ. ಕೃಷ್ಣನಿಗೆ ಎಷ್ಟೊಂದು ಸುಳ್ಳು ಮಾತುಗಳನ್ನು ಬರೆದು ಕಳಂಕವನ್ನು ಹೊರಿಸಿದ್ದಾರೆ. ಸುಳ್ಳೆಂದರೆ ಸುಳ್ಳು, ಸತ್ಯತಾ ಅಂಶವೂ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವು ಸ್ವರ್ಗದ ಮಾಲೀಕರಾಗಿದ್ದೆವು ಅಂದರೆ 84 ಜನ್ಮಗಳನ್ನು ತೆಗೆದುಕೊಂಡು ಸಂಪೂರ್ಣ ಶೂದ್ರ ಬುದ್ಧಿಯವರಾಗಿ ಬಿಟ್ಟಿದ್ದೇವೆ. ಯಾವ ಸ್ಥಿತಿಯಾಗಿ ಬಿಟ್ಟಿದೆ. ಈಗ ಪುನಃ ಪುರುಷಾರ್ಥ ಮಾಡಿ ಹೇಗಾಗುತ್ತೀರಿ! ನೀವು ಏನಾಗುವಿರಿ ಎಂದು ತಂದೆಯು ಕೇಳುತ್ತಾರಲ್ಲವೆ ಆಗ ಸೂರ್ಯವಂಶಿಯರಾಗುತ್ತೇವೆ, ನಾವು ಮಾತಾಪಿತರನ್ನು ಪೂರ್ಣ ಫಾಲೋ ಮಾಡುತ್ತೇವೆ, ಕಡಿಮೆ ಪುರುಷಾರ್ಥ ಮಾಡುವುದಿಲ್ಲವೆಂದು ಎಲ್ಲರೂ ಕೈಯನ್ನು ಎತ್ತುತ್ತಾರೆ. ಎಲ್ಲಾ ಪರಿಶ್ರಮವು ನೆನಪು ಮತ್ತು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವುದರ ಮೇಲಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ಎಷ್ಟು ಸಾಧ್ಯವೋ ಸರ್ವೀಸ್ ಮಾಡುವುದನ್ನು ಕಲಿಯಿರಿ, ಇದು ಬಹಳ ಸಹಜವಾಗಿದೆ. ಇವರು ಶಿವ ತಂದೆಯಾಗಿದ್ದಾರೆ, ಇದು ವಿಷ್ಣು ಪುರಿ ಲಕ್ಷ್ಮೀ-ನಾರಾಯಣರ ರಾಜ್ಯವಿರುವುದು. ಈ ತಂದೆಯೇ ಬಹಳ ಅನುಭವಿಯಾಗಿದ್ದಾರೆ. ಏಣಿ ಚಿತ್ರದಲ್ಲಿ ನೀವು ತಿಳಿಸಬಹುದು. |
ನೀವು ಮಕ್ಕಳಿಗೆ ಈ ವೃಕ್ಷ, ಚಕ್ರವನ್ನು ನೋಡುತ್ತಿದ್ದಂತೆಯೇ ಬುದ್ಧಿಯಲ್ಲಿ ಇಡೀ ಜ್ಞಾನವು ಬಂದು ಬಿಡಬೇಕು. ಈ ಯಾವ ಲಕ್ಷ್ಮೀ-ನಾರಾಯಣರಿದ್ದಾರೆಯೋ ಇವರ ರಾಜಧಾನಿಯು ಎಲ್ಲಿ ಹೋಯಿತು! ಯಾರು ಯುದ್ಧ ಮಾಡಿದರು! ಯಾರಿಂದ ಸೋಲಿಸಿದರು! ಈಗಂತೂ ಆ ರಾಜ್ಯವೂ ಇಲ್ಲ, ಈ ಈಶ್ವರೀಯ ಮಾತುಗಳನ್ನು ಯಾರೂ ತಿಳಿದುಕೊಂಡಿಲ್ಲ. ನೀವು ಮಕ್ಕಳಿಗೆ ಇದೂ ಸಾಕ್ಷಾತ್ಕಾರವಾಗಿದೆ, ಹೇಗೆ ಗುಹೆಗಳಲ್ಲಿ ಗಣಿಗಳಿಂದ ಹೋಗಿ ವಜ್ರ ರತ್ನಗಳನ್ನು ತೆಗೆದುಕೊಂಡು ಬರುತ್ತಾರೆ. ಈ ವಿಜ್ಞಾನವು ನಿಮ್ಮ ಸುಖಕ್ಕಾಗಿ ಇರುವುದು, ಇಲ್ಲಿ ದುಃಖಕ್ಕಾಗಿಯೇ ಇದೆ, ಸತ್ಯಯುಗದಲ್ಲಿ ವಿಮಾನಗಳು ಫುಲ್ಪ್ರೂಫ್ ಆಗಿರುತ್ತವೆ. ಮಕ್ಕಳು ಆರಂಭದಲ್ಲಿ ಇದೆಲ್ಲವನ್ನೂ ಸಾಕ್ಷಾತ್ಕಾರದಲ್ಲಿ ನೋಡಿದ್ದಾರೆ, ಅಂತಿಮದಲ್ಲಿಯೂ ನೀವು ಬಹಳ ಸಾಕ್ಷಾತ್ಕಾರಗಳನ್ನು ನೋಡುತ್ತೀರಿ. ಇದನ್ನೂ ನೀವು ಸಾಕ್ಷಾತ್ಕಾರ ಮಾಡಿದ್ದೀರಿ, ಕಳ್ಳರು ಲೂಟಿ ಮಾಡಲು ಬರುತ್ತಾರೆ ನಂತರ ನಿಮ್ಮ ಶಕ್ತಿ ರೂಪವನ್ನು ನೋಡಿ ಓಡಿ ಹೋಗುತ್ತಾರೆ, ಅವೆಲ್ಲವೂ ನಿಮ್ಮ ಅಂತಿಮ ಸಮಯದ ಮಾತಾಗಿದೆ. ಕಳ್ಳರು ಲೂಟಿ ಮಾಡಲು ಬರುತ್ತಾರೆ ಆಗ ನೀವು ತಂದೆಯ ನೆನಪಿನಲ್ಲಿ ನಿಂತಿದ್ದರೆ ಅವರು ಓಡಿ ಹೋಗುವರು. |
ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ತೀವ್ರ ಪುರುಷಾರ್ಥ ಮಾಡಿರಿ. ಮುಖ್ಯ ಮಾತು ಪವಿತ್ರತೆಯಾಗಿದೆ, ಒಂದು ಜನ್ಮದಲ್ಲಿ ಪವಿತ್ರರಾಗಬೇಕಾಗಿದೆ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಪ್ರಾಕೃತಿಕ ಆಪತ್ತುಗಳು ಬಹಳ ಕಠಿಣವಾಗಿ ಬರುತ್ತವೆ, ಇದರಲ್ಲಿ ಎಲ್ಲವೂ ಸಮಾಪ್ತಿಯಾಗುತ್ತದೆ. ಶಿವ ತಂದೆಯು ಇವರ ಮೂಲಕ ಹೇಳುತ್ತಾರೆ, ಇವರ ಆತ್ಮವೂ ಕೇಳಿಸಿಕೊಳ್ಳುತ್ತದೆ. ಈ ತಂದೆಯು ಎಲ್ಲವನ್ನೂ ತಿಳಿಸುತ್ತಾರೆ, ಶಿವ ತಂದೆಗಂತೂ ಅನುಭವವಿಲ್ಲ, ಮಕ್ಕಳಿಗೇ ಅನುಭವವಿರುತ್ತದೆ - ಮಾಯೆಯ ಬಿರುಗಾಳಿಗಳು ಹೇಗೆ ಬರುತ್ತವೆ ಎಂದು. ಮೊಟ್ಟ ಮೊದಲಿಗರು ಇವರಾಗಿದ್ದಾರೆ ಅಂದಮೇಲೆ ಇವರಿಗೆ ಎಲ್ಲಾ ಅನುಭವವಿರುವುದು. ಅಂದಾಗ ಇದರಲ್ಲಿ ಹೆದರಬಾರದು, ಅಡೋಲರಾಗಿರಬೇಕಾಗಿದೆ. ತಂದೆಯ ನೆನಪಿನಲ್ಲಿದ್ದಾಗಲೇ ಶಕ್ತಿಯು ಸಿಗುತ್ತದೆ. ಕೆಲವು ಮಕ್ಕಳು ಚಾರ್ಟ್ ಬರೆಯುತ್ತಾರೆ ಮತ್ತೆ ನಡೆಯುತ್ತಾ-ನಡೆಯುತ್ತಾ ನಿಲ್ಲಿಸಿ ಬಿಡುತ್ತಾರೆ. ಇವರು ಸುಸ್ತಾಗಿದ್ದಾರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಪಾರಲೌಕಿಕ ತಂದೆ ಯಾರಿಂದ ಇಷ್ಟು ದೊಡ್ಡ ಆಸ್ತಿಯು ಸಿಗುತ್ತದೆಯೋ ಇಂತಹ ತಂದೆಗೆ ಎಂದೂ ಪತ್ರವನ್ನೂ ಬರೆಯುವುದಿಲ್ಲ, ನೆನಪೇ ಮಾಡುವುದಿಲ್ಲ, ಇಂತಹ ತಂದೆಯನ್ನು ಎಷ್ಟೊಂದು ನೆನಪು ಮಾಡಬೇಕು! ಬಾಬಾ, ನಾವು ನಿಮ್ಮನ್ನು ಬಹಳ ನೆನಪು ಮಾಡುತ್ತೇವೆ, ಬಾಬಾ ತಮ್ಮ ನೆನಪಿಲ್ಲದೆ ನಾವು ಇರಲು ಹೇಗೆ ಸಾಧ್ಯ! ಯಾವ ತಂದೆಯಿಂದ ವಿಶ್ವದ ರಾಜ್ಯಭಾಗ್ಯವು ಸಿಗುತ್ತದೆಯೋ ಇಂತಹ ತಂದೆಯನ್ನು ಹೇಗೆ ಮರೆಯುವುದು! ಒಂದು ಪತ್ರವನ್ನು ಬರೆದರೂ ಸಹ ನೆನಪು ಮಾಡಿದಂತಾಯಿತಲ್ಲವೆ. ಲೌಕಿಕ ತಂದೆಯೂ ಸಹ ಮಕ್ಕಳಿಗೆ ಕಣ್ಮಣಿಗಳೇ ಎಂದು ಪತ್ರವನ್ನು ಬರೆಯುತ್ತಾರೆ. ಸ್ತ್ರೀಯು ಪತಿಗೆ ಹೇಗೆ ಪತ್ರವನ್ನು ಬರೆಯುತ್ತಾಳೆ? ಇಲ್ಲಂತೂ ಎರಡು ಸಂಬಂಧಗಳಿವೆ, ಇದೂ ಸಹ ನೆನಪು ಮಾಡುವ ಯುಕ್ತಿಯಾಗಿದೆ, ಎಷ್ಟು ಮಧುರ ತಂದೆಯಾಗಿದ್ದಾರೆ! ನಮ್ಮಿಂದ ಏನನ್ನು ಬಯಸುತ್ತಾರೆ? ಏನೂ ಇಲ್ಲ. ಅವರು ದಾತನಾಗಿದ್ದಾರೆ, ನೀಡುವವರಾಗಿದ್ದಾರಲ್ಲವೆ. ಇವರು ತೆಗೆದುಕೊಳ್ಳುವವರಲ್ಲ, ಮಧುರ ಮಕ್ಕಳೇ ನಾನು ಬಂದಿದ್ದೇನೆ, ಭಾರತವನ್ನು ಸುಗಂಧಭರಿತ ಹೂದೋಟವನ್ನಾಗಿ ಮಾಡಿ ಹೋಗುತ್ತೇನೆಂದು ಹೇಳುತ್ತಾರೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಸೂರ್ಯವಂಶಿಯರಾಗಲು ಮಾತಾಪಿತರನ್ನು ಸಂಪೂರ್ಣ ಫಾಲೋ ಮಾಡಬೇಕಾಗಿದೆ. ನೆನಪಿನಲ್ಲಿರುವ ಮತ್ತು ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡುವ ಪರಿಶ್ರಮ ಪಡಬೇಕಾಗಿದೆ. |
2. ಪುರುಷಾರ್ಥ ಮಾಡಿ ಶ್ರೀಮತದಂತೆ ನಡೆದು ಶಾಂತವಾಗಿರಬೇಕಾಗಿದೆ. ಹಿರಿಯರ ಆಜ್ಞೆಯನ್ನು ಪಾಲಿಸಬೇಕಾಗಿದೆ. |
‘ವಾಚಾ’ ಮತ್ತು ‘ಕರ್ಮಣಾ’ - ಎರಡು ಶಕ್ತಿಗಳನ್ನು ಜಮಾ ಮಾಡಿಕೊಳ್ಳುವ ಈಶ್ವರೀಯ ಸ್ಕೀಮ್ |
ಇಂದು ಆತ್ಮಿಕ ಜ್ಯೋತಿ ತಂದೆಯು ತನ್ನ ಆತ್ಮಿಕ ಪತಂಗಗಳನ್ನು ನೋಡುತ್ತಿದ್ದಾರೆ. ನಾಲ್ಕಾರು ಕಡೆಯ ಪತಂಗಗಳು ಪರಂಜ್ಯೋತಿಗೆ ಅರ್ಪಣೆ ಅರ್ಥಾತ್ ಬಲಿಹಾರಿಯಾಗಿ ಬಿಟ್ಟಿದ್ದಾರೆ. ಬಲಿಹಾರಿಯಾಗುವ ಪತಂಗಗಳು ಅನೇಕರಿದ್ದಾರೆ ಆದರೆ ಬಲಿಹಾರಿಯಾದ ನಂತರ ಪರಂಜ್ಯೋತಿಯ ಸ್ನೇಹದಲ್ಲಿ ‘ಜ್ಯೋತಿಯ ಸಮಾನ’ ಆಗುವುದರಲ್ಲಿ, ಬಲಿಹಾರಿ ಆಗುವುದರಲ್ಲಿ ನಂಬರ್ವಾರ್ ಇದ್ದಾರೆ. ವಾಸ್ತವದಲ್ಲಿ ಬಲಿಹಾರಿ ಆಗುವುದೇ ಹೃದಯದ ಸ್ನೇಹದ ಕಾರಣದಿಂದ. ‘ಹೃದಯದ ಸ್ನೇಹ’ ಮತ್ತು ‘ಸ್ನೇಹ’ - ಇದರಲ್ಲಿಯೂ ಅಂತರವಿದೆ. ಎಲ್ಲರಿಗೂ ಸ್ನೇಹವಿದೆ, ಸ್ನೇಹದ ಕಾರಣದಿಂದಲೇ ಬಲಿಹಾರಿಯಾಗಿದ್ದೀರಿ ಆದರೆ ‘ಹೃದಯದ ಸ್ನೇಹಿ’ಗಳು ತಂದೆಯ ಹೃದಯದ ಮಾತುಗಳನ್ನು ಅಥವಾ ಹೃದಯದ ಆಸೆಗಳನ್ನು ತಿಳಿದುಕೊಳ್ಳುತ್ತಾರೆ ಮತ್ತು ಪೂರ್ಣ ಮಾಡುತ್ತಾರೆ. ಹೃದಯದ ಸ್ನೇಹಿಗಳು ಹೃದಯದ ಆಸೆಗಳನ್ನು ಈಡೇರಿಸುವವರಾಗಿದ್ದಾರೆ. ಹೃದಯದ ಸ್ನೇಹಿ ಅರ್ಥಾತ್ ತಂದೆಯ ಹೃದಯವು ಏನು ಹೇಳಿತು ಅದು ಮಕ್ಕಳ ಹೃದಯದಲ್ಲಿ ಸಮಾವೇಶವಾಯಿತು. ಯಾವುದು ಹೃದಯದಲ್ಲಿ ಸಮಾವೇಶವಾಗುವುದೋ ಅದು ಕರ್ಮದಲ್ಲಿ ಸ್ವತಹ ಬರುವುದು. ಸ್ನೇಹಿ ಆತ್ಮಗಳು ಕೆಲವರು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಬುದ್ಧಿಯಲ್ಲಿ ಸಮಾವೇಶ ಮಾಡಿಕೊಳ್ಳುತ್ತಾರೆ. ಯಾರು ಹೃದಯದಲ್ಲಿ ಸಮಾವೇಶ ಮಾಡಿಕೊಳ್ಳುವರೋ ಅವರು ಕರ್ಮದಲ್ಲಿ ತರುತ್ತಾರೆ. ಬುದ್ಧಿಯಲ್ಲಿ ಸಮಾವೇಶ ಮಾಡಿಕೊಳ್ಳುವವರಿಗೆ ವಿಚಾರ ನಡೆಯುತ್ತದೆ - ಮಾಡಲಾಗುತ್ತದೆಯೋ, ಇಲ್ಲವೋ? ಮಾಡುವುದಂತೂ ಮಾಡಬೇಕಾಗಿದೆ, ಸಮಯ ಬಂದಾಗ ಆಗಿ ಬಿಡುವುದು. ಹೀಗೆ ಆಲೋಚನೆ ನಡೆಯುವ ಕಾರಣ ಅದು ಆಲೋಚನೆಯವರೆಗೇ ಉಳಿದುಬಿಡುತ್ತದೆ. ಕರ್ಮದವರೆಗೆ ಬರುವುದಿಲ್ಲ. |
ಇಂದು ಬಾಪ್ದಾದಾ ನೋಡುತ್ತಿದ್ದೆವು - ಬಲಿಹಾರಿ ಆಗುವವರಂತೂ ಎಲ್ಲರೂ ಆಗಿದ್ದಾರೆ. ಒಂದುವೇಳೆ ಬಲಿಹಾರಿಯಾಗದಿದ್ದರೆ ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತಿರಲಿಲ್ಲ ಆದರೆ ತಂದೆಯ ಸ್ನೇಹದ ಹಿಂದೆ ತಂದೆಯು ಏನನ್ನು ಹೇಳಿದರೋ ಅದನ್ನು ಮಾಡುವುದಕ್ಕಾಗಿ ಬಲಿಹಾರಿ ಮಾಡಬೇಕಾಗುತ್ತದೆ ಅರ್ಥಾತ್ ನನ್ನತನವನ್ನು, ಭಲೆ ನನ್ನತನದಲ್ಲಿ ಅಭಿಮಾನವಿರಲಿ ಅಥವಾ ಬಲಹೀನತೆಯಿರಲಿ - ಎರಡರ ತ್ಯಾಗ ಮಾಡಬೇಕಾಗುತ್ತದೆ. ಇದಕ್ಕೇ ಅರ್ಪಣೆಯೆಂದು ಹೇಳಲಾಗುತ್ತದೆ. ಬಲಿಹಾರಿಯಾಗುವವರು ಅನೇಕರಿದ್ದಾರೆ ಆದರೆ ಬಲಿಹಾರಿ ಮಾಡುವುದಕ್ಕಾಗಿ ಸಾಹಸವನ್ನು ಇಡುವವರು ನಂಬರ್ವಾರ್ ಇದ್ದಾರೆ. |
ಇಂದು ಬಾಪ್ದಾದಾ ಕೇವಲ ಒಂದು ತಿಂಗಳಿನ ಫಲಿತಾಂಶವನ್ನು ನೋಡುತ್ತಿದ್ದೆವು, ಇದೇ ಸೀಜನ್ನಿನಲ್ಲಿ ವಿಶೇಷವಾಗಿ ಬಾಪ್ದಾದಾ ‘ತಂದೆಯ ಸಮಾನ’ರಾಗುವ ಭಿನ್ನ-ಭಿನ್ನ ರೂಪಗಳಿಂದ ಎಷ್ಟೊಂದು ಬಾರಿ ಸೂಚನೆ ನೀಡಿದ್ದಾರೆ ಮತ್ತು ಬಾಪ್ದಾದಾರವರಿಗೆ ವಿಶೇಷವಾಗಿ ಇದೇ ಹೃದಯದ ಶ್ರೇಷ್ಠ ಆಸೆಯಿದೆ. ಎಷ್ಟೊಂದು ಖಜಾನೆ ಸಿಕ್ಕಿತು, ಎಷ್ಟೊಂದು ವರದಾನ ಸಿಕ್ಕಿತು. ವರದಾನಕ್ಕಾಗಿ ಓಡೋಡಿ ಬಂದಿರಿ. ಮಕ್ಕಳು ಸ್ನೇಹದಿಂದ ಮಿಲನ ಮಾಡಲು ಬರುತ್ತಾರೆ, ವರದಾನವನ್ನು ಪಡೆದುಕೊಂಡು ಖುಷಿಯಾಗುತ್ತಾರೆಂದು ತಂದೆಗೂ ಖುಷಿಯಿದೆ ಆದರೆ ತಂದೆಯ ಹೃದಯದ ಆಸೆಯನ್ನು ಪೂರ್ಣ ಮಾಡುವವರು ಯಾರು? ಯಾವುದನ್ನು ತಂದೆಯನ್ನು ತಿಳಿಸಿದರೋ ಅದನ್ನು ಕರ್ಮದಲ್ಲಿ ಎಲ್ಲಿಯವರೆಗೆ ತಂದಿರಿ? ಮನಸ್ಸಾ-ವಾಚಾ-ಕರ್ಮಣಾ - ಮೂರರ ಫಲಿತಾಂಶವು ಎಲ್ಲಿಯವರೆಗೆ ಇದೆಯೆಂದು ತಿಳಿದುಕೊಳ್ಳುತ್ತೀರಿ? ಶಕ್ತಿಶಾಲಿ ಮನಸ್ಸಾ, ಸಂಬಂಧ-ಸಂಪರ್ಕದಲ್ಲಿ ಎಲ್ಲಿಯವರೆಗೆ ಬಂದಿದೆ? ಕೇವಲ ಇದು ಸ್ವ-ಉನ್ನತಿಗಾಗಿ ಬಹಳ ಒಳ್ಳೆಯದಾಗಿದೆ ಮತ್ತು ಮಾಡಲೇಬೇಕೆಂದು ತಮಗೆ ತಾವು ಮನನ ಮಾಡಿದಿರಿ ಆದರೆ ಶ್ರೇಷ್ಠ ಆತ್ಮರ ಶ್ರೇಷ್ಠ ಮನಸ್ಸು ಅರ್ಥಾತ್ ಸಂಕಲ್ಪವು ಶಕ್ತಿಶಾಲಿಯಾಗಿರುತ್ತದೆ, ಶುಭಭಾವನೆ-ಶುಭಕಾಮನೆಯಿಂದ ಕೂಡಿರುತ್ತದೆ. ಮನಸ್ಸಾ ಶಕ್ತಿಯ ದರ್ಪಣ ಯಾವುದಾಗಿದೆ? ಮಾತು ಮತ್ತು ಕರ್ಮವೇ ದರ್ಪಣವಾಗಿದೆ. ಅಜ್ಞಾನಿ ಆತ್ಮರಿರಲಿ, ಜ್ಞಾನಿ ಆತ್ಮರಿರಲಿ - ಇಬ್ಬರ ಸಂಬಂಧ-ಸಂಪರ್ಕದಲ್ಲಿಯೂ ಮಾತು ಮತ್ತು ಕರ್ಮವು ಮನಸ್ಸಿನ ದರ್ಪಣವಾಗಿದೆ. ಒಂದುವೇಳೆ ಮಾತು ಮತ್ತು ಕರ್ಮವು ಶುಭಭಾವನೆ-ಶುಭಕಾಮನೆಯಿಂದ ಕೂಡಿರದಿದ್ದರೆ ಮನಸ್ಸಾ ಶಕ್ತಿಯ ಪ್ರತ್ಯಕ್ಷ ಸ್ವರೂಪವು ಹೇಗೆ ಕಂಡು ಬರುವುದು? ಯಾರ ಮನಸ್ಸು ಶಕ್ತಿಶಾಲಿ ಅಥವಾ ಶುಭವಾಗಿದೆಯೋ ಅವರ ಮಾತು ಮತ್ತು ಕರ್ಮವು ಸ್ವತಹ ಶಕ್ತಿಶಾಲಿ ಮತ್ತು ಶುದ್ಧವಾಗಿರುವುದು, ಶುಭ ಭಾವನೆಯಿಂದ ಕೂಡಿರುವುದು. ಮನಸ್ಸಾ ಶಕ್ತಿಶಾಲಿ ಅರ್ಥಾತ್ ನೆನಪಿನ ಶಕ್ತಿಯೂ ಶ್ರೇಷ್ಠವಾಗಿರುವುದು, ಶಕ್ತಿಶಾಲಿಗಳು ಸಹಜಯೋಗಿಗಳೂ ಆಗಿರುವರು. ಕೇವಲ ಸಹಜಯೋಗಿಗಳಷ್ಟೇ ಅಲ್ಲ, ಸಹಜ ಕರ್ಮಯೋಗಿಗಳೂ ಆಗಿರುತ್ತಾರೆ. |
ಬಾಪ್ದಾದಾ ನೋಡಿದೆವು - ನೆನಪನ್ನು ಶಕ್ತಿಶಾಲಿ ಮಾಡಿಕೊಳ್ಳುವುದರಲ್ಲಿ ಮೆಜಾರಿಟಿ ಮಕ್ಕಳಿಗೆ ಗಮನವಿದೆ. ನೆನಪನ್ನು ಸಹಜ ಮತ್ತು ನಿರಂತರ ಮಾಡಿಕೊಳ್ಳುವುದಕ್ಕಾಗಿ ಉಲ್ಲಾಸ-ಉತ್ಸಾಹವೂ ಇದೆ. ಮುಂದುವರೆಯುತ್ತಿದ್ದಾರೆ ಮತ್ತು ಮುಂದುವರೆಯುತ್ತಲೇ ಇರುತ್ತಾರೆ ಏಕೆಂದರೆ ತಂದೆಯ ಜೊತೆ ಸ್ನೇಹವು ಚೆನ್ನಾಗಿದೆ. ಆದ್ದರಿಂದ ನೆನಪಿನ ಗಮನವು ಚೆನ್ನಾಗಿದೆ ಮತ್ತು ನೆನಪಿಗೆ ಆಧಾರವೇ ಆಗಿದೆ – ‘ಸ್ನೇಹ’. ತಂದೆಯೊಂದಿಗೆ ವಾರ್ತಾಲಾಪ ಮಾಡುವುದರಲ್ಲಿಯೂ ಎಲ್ಲರೂ ಚೆನ್ನಾಗಿದ್ದಾರೆ. ಕೆಲಕೆಲವೊಮ್ಮೆ ಸ್ವಲ್ಪ ಕಣ್ಣು ಬಿಡುತ್ತಾರೆ. ಅದೂ ಸಹ ಯಾವಾಗ ಪರಸ್ಪರ ಸ್ವಲ್ಪ ಮುನಿಸಿಕೊಳ್ಳುವರೋ ಆಗ. ಮತ್ತೆ ತಂದೆಗೆ ದೂರು ಕೊಡುತ್ತಾರೆ - ತಾವೇಕೆ ಇದನ್ನು ಸರಿಪಡಿಸುತ್ತಿಲ್ಲ ಎಂದು. ಆದರೂ ಸಹ ಅದು ಸ್ನೇಹ ತುಂಬಿದ ಪ್ರೀತಿಯ ದೃಷ್ಟಿಯಾಗಿದೆ ಆದರೆ ಸಂಘಟನೆಯಲ್ಲಿ ಬರುತ್ತಾ ಕರ್ಮದಲ್ಲಿ, ಕಾರೋಬಾರ್ನಲ್ಲಿ, ಪರಿವಾರದಲ್ಲಿ ಬಂದಾಗ ಸಂಘಟನೆಯಲ್ಲಿ ಮಾತು ಅರ್ಥಾತ್ ವಾಚಾ ಶಕ್ತಿ ಇದರಲ್ಲಿ ವ್ಯರ್ಥವು ಹೆಚ್ಚು ಕಂಡು ಬರುತ್ತಿದೆ. |
ವಾಣಿಯ ಶಕ್ತಿಯು ವ್ಯರ್ಥವಾಗಿ ಹೋಗುವ ಕಾರಣ ವಾಣಿಯಲ್ಲಿ ತಂದೆಯನ್ನು ಪ್ರತ್ಯಕ್ಷ ಮಾಡಲು ಯಾವ ಹರಿತ ಅಥವಾ ಶಕ್ತಿಯ ಅನುಭವ ಮಾಡಿಸಬೇಕೋ ಅದು ಕಡಿಮೆಯಾಗಿ ಬಿಡುತ್ತದೆ. ಅವರ ಮಾತುಗಳೇನೋ ಇಷ್ಟವಾಗುತ್ತದೆ, ಇದು ಬೇರೆ ಮಾತಾಗಿದೆ ಏಕೆಂದರೆ ತಂದೆಯ ಮಾತುಗಳನ್ನೇ ಪುನರಾವರ್ತನೆ ಮಾಡುವ ಕಾರಣ ಅವು ಖಂಡಿತ ಇಷ್ಟವಾಗುತ್ತದೆ. ಆದರೆ ವಾಚಾದ ಶಕ್ತಿಯು ವ್ಯರ್ಥವಾಗಿ ಹೋಗುವ ಕಾರಣ ಶಕ್ತಿಯು ಜಮಾ ಆಗುವುದಿಲ್ಲ ಆದ್ದರಿಂದ ತಂದೆಯನ್ನು ಪ್ರತ್ಯಕ್ಷ ಮಾಡುವ ಶಬ್ಧವು ಕೇಳಿಬರುವುದರಲ್ಲಿ ಇನ್ನೂ ತಡವಾಗುತ್ತಿದೆ. ಸಾಧಾರಣ ಮಾತು ಹೆಚ್ಚಿನದಾಗಿದೆ ಆದರೆ ಈಗ `ಅಲೌಕಿಕ ಮಾತಾಗಿರಲಿ' `ಫರಿಶ್ತೆಗಳ ಮಾತಿರಲಿ' ಈಗ ಈ ವರ್ಷದಲ್ಲಿ ಇದರ ಮೇಲೆ ಅಂಡರ್ಲೈನ್ ಮಾಡಿಕೊಳ್ಳಿ. ಹೇಗೆ ಬ್ರಹ್ಮಾ ತಂದೆಯನ್ನು ನೋಡಿದಿರಿ, ತಂದೆಯದು ಫರಿಶ್ತೆಗಳ ಮಾತಾಗಿತ್ತು, ಕಡಿಮೆ ಮಾತು ಮತ್ತು ಮಧುರ ಮಾತಾಗಿತ್ತು. ಯಾವ ಮಾತಿಗೆ ಫಲ ಸಿಗಬೇಕು, ಅದು ಯಥಾರ್ಥ ಮಾತಾಗಿದೆ. ಯಾವ ಮಾತಿಗೆ ಯಾವುದೇ ಫಲವಿಲ್ಲವೋ ಅದು ವ್ಯರ್ಥವಾಗಿದೆ. ಭಲೆ ಕಾರೋಬಾರ್ನ ಫಲವಾಗಿರಲಿ, ಕಾರೋಬಾರ್ಗಾಗಿಯೂ ಮಾತನಾಡಲೇ ಬೇಕಾಗುತ್ತದೆ ಆದರೆ ಅದನ್ನೂ ಸಹ ಬಹಳ ಉದ್ದಗಲವಾಗಿ ಮಾತನಾಡಬೇಡಿ. ಈಗ ಶಕ್ತಿಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಹೇಗೆ `ನೆನಪಿನಿಂದ' ಮನಸ್ಸಾ ಶಕ್ತಿಯನ್ನು ಜಮಾ ಮಾಡಿಕೊಳ್ಳುತ್ತೀರಿ. ಶಾಂತಿಯಲ್ಲಿ ಕುಳಿತುಕೊಳ್ಳುತ್ತೀರೆಂದರೆ `ಸಂಕಲ್ಪ ಶಕ್ತಿ'ಯನ್ನು ಜಮಾ ಮಾಡಿಕೊಳ್ಳುತ್ತೀರಿ. ಹಾಗೆಯೇ ವಾಣಿಯ ಶಕ್ತಿಯನ್ನೂ ಜಮಾ ಮಾಡಿಕೊಳ್ಳಿ. |
ಒಂದು ಹಾಸ್ಯದ ಮಾತನ್ನು ತಿಳಿಸುತ್ತೇವೆ - ಬಾಪ್ದಾದಾರವರ ವತನದಲ್ಲಿ ಎಲ್ಲರ ಉಳಿತಾಯದ ಭಂಡಾರಗಳಿವೆ. ತಮ್ಮ ಸೇವಾಕೇಂದ್ರದಲ್ಲಿಯೂ ಭಂಡಾರಗಳು ಇವೆಯಲ್ಲವೆ ಆದರೆ ತಂದೆಯ ವತನದಲ್ಲಿ ಮಕ್ಕಳ ಭಂಡಾರವಿದೆ. ಇಡೀ ದಿನದಲ್ಲಿ ಪ್ರತಿಯೊಬ್ಬರೂ ಮನಸ್ಸಾ-ವಾಚಾ-ಕರ್ಮಣಾ ಮೂರು ಶಕ್ತಿಗಳನ್ನು ಉಳಿತಾಯ ಮಾಡಿ ಜಮಾ ಮಾಡಿಕೊಳ್ಳುತ್ತೀರಿ. ಆ ಭಂಡಾರವು ವತನದಲ್ಲಿದೆ. ಮನಸ್ಸಾ ಶಕ್ತಿಯನ್ನು ಎಷ್ಟು ಜಮಾ ಮಾಡಿಕೊಂಡಿರಿ, ವಾಚಾಶಕ್ತಿ, ಕರ್ಮಣಾ ಶಕ್ತಿಯನ್ನು ಎಷ್ಟು ಜಮಾ ಮಾಡಿಕೊಂಡಿರಿ. ಇದೆಲ್ಲವೂ ಲೆಕ್ಕವಿದೆ. ತಾವೂ ಸಹ ಇಲ್ಲಿ ಖರ್ಚು ಮತ್ತು ಉಳಿತಾಯದ ಲೆಕ್ಕಪತ್ರಗಳನ್ನು ಕಳುಹಿಸುತ್ತೀರಲ್ಲವೆ ಅಂದಾಗ ಬಾಪ್ದಾದಾ ಈ ಉಳಿತಾಯದ ಭಂಡಾರವನ್ನು ನೋಡಿದೆವು ಅಂದಮೇಲೆ ಅದರಲ್ಲಿ ಏನಿರಬಹುದು. ಜಮಾದ ಖಾತೆಯು ಎಷ್ಟು ಬಂದಿರಬಹುದು? ಪ್ರತಿಯೊಬ್ಬರ ಫಲಿತಾಂಶವು ಬೇರೆ-ಬೇರೆಯಾಗಿದೆ. ಭಂಡಾರಗಳಂತೂ ಬಹಳ ತುಂಬಿತ್ತು ಆದರೆ ಚಿಲ್ಲರೆಯು ಹೆಚ್ಚಾಗಿತ್ತು. ಚಿಕ್ಕ ಮಕ್ಕಳು ಭಂಡಾರದಲ್ಲಿ ಚಿಲ್ಲರೆಯನ್ನು ಜಮಾ ಮಾಡುತ್ತಾರೆ ಆಗ ಭಂಡಾರವು ಎಷ್ಟು ಭಾರಿಯಾಗಿ ಬಿಡುತ್ತದೆ. ಅದೇರೀತಿ ವಾಚಾದ ಫಲಿತಾಂಶದಲ್ಲಿ ವಿಶೇಷವಾಗಿ ಚಿಲ್ಲರೆಯನ್ನು ಹೆಚ್ಚು ನೋಡಿದೆವು. ಹೇಗೆ ನೆನಪಿನ ಮೇಲೆ ಗಮನವಿದೆಯೋ ಹಾಗೆ ವಾಚಾದ ಮೇಲೆ ಅಷ್ಟೊಂದು ಗಮನವಿಲ್ಲ. ಆದ್ದರಿಂದ ಈ ವರ್ಷದಲ್ಲಿ ವಾಚಾ ಮತ್ತು ಕರ್ಮಣಾ - ಇವೆರಡೂ ಶಕ್ತಿಗಳನ್ನು ಜಮಾ ಮಾಡಿಕೊಳ್ಳುವ ಉಳಿತಾಯ ಯೋಜನೆ ಮಾಡಿಕೊಳ್ಳಿ. ಹೇಗೆ ಸರ್ಕಾರವೂ ಸಹ ಭಿನ್ನ-ಭಿನ್ನ ವಿಧಿಯಿಂದ ಉಳಿತಾಯ ಯೋಜನೆ ಮಾಡುತ್ತದೆಯಲ್ಲವೆ ಹಾಗೆಯೇ ಇದರಲ್ಲಿ ಮೂಲವು ಮನಸ್ಸಾ ಶಕ್ತಿಯಾಗಿದೆ. ಇದಂತೂ ಎಲ್ಲರಿಗೂ ತಿಳಿದಿದೆ ಆದರೆ ಮನಸ್ಸಾ ಜೊತೆ ಜೊತೆಗೆ ವಿಶೇಷವಾಗಿ ವಾಚಾ ಮತ್ತು ಕರ್ಮಣಾ - ಇದು ಸಂಬಂಧ-ಸಂಪರ್ಕದಲ್ಲಿ ಸ್ಪಷ್ಟವಾಗಿ ಕಂಡು ಬರುತ್ತದೆ. ಮನಸ್ಸಾ ಶಕ್ತಿಯಾದರೂ ಗುಪ್ತವಾಗಿದೆ ಆದರೆ ಇದು ಪ್ರತ್ಯಕ್ಷವಾಗಿ ಕಾಣುವಂತದ್ದಾಗಿದೆ. ವಾಚಾ ಶಕ್ತಿಯನ್ನು ಜಮಾ ಮಾಡಿಕೊಳ್ಳುವ ಸಾಧನವಾಗಿದೆ - `ಕಡಿಮೆ ಮಾತನಾಡಿ, ಮಧುರವಾಗಿ ಮಾತನಾಡಿ ಮತ್ತು ಸ್ವಮಾನದಿಂದ ಮಾತನಾಡಿ' ಹೇಗೆ ಬ್ರಹ್ಮಾ ತಂದೆಯು ಕಿರಿಯರು ಅಥವಾ ಹಿರಿಯರನ್ನು ಸ್ವಮಾನದ ಮಾತಿನಿಂದ ತಮ್ಮವರನ್ನಾಗಿ ಮಾಡಿಕೊಂಡರು. ಈ ವಿಧಿಯಿಂದ ಎಷ್ಟು ಮುಂದುವರೆಯುತ್ತೀರೋ ಅಷ್ಟು ವಿಜಯದ ಮಾಲೆಯು ಬೇಗನೆ ತಯಾರಾಗುವುದು ಅಂದಾಗ ಈ ವರ್ಷದಲ್ಲಿ ಏನು ಮಾಡಬೇಕಾಗಿದೆ? ಸೇವೆಯ ಜೊತೆಗೆ ವಿಶೇಷವಾಗಿ ಈ ಶಕ್ತಿಗಳನ್ನು ಜಮಾ ಮಾಡಿಕೊಳ್ಳುತ್ತಾ ಸೇವೆ ಮಾಡಬೇಕಾಗಿದೆ. |
ಸೇವಾ ಯೋಜನೆಗಳನ್ನಂತೂ ಎಲ್ಲರೂ ಬಹಳ ಚೆನ್ನಾಗಿ ಮಾಡಿದ್ದೀರಿ ಮತ್ತು ಇಲ್ಲಿಯವರೆಗೆ ಯೋಜನೆಯ ಪ್ರಮಾಣ ಸೇವೆ ಮಾಡುತ್ತಿದ್ದೀರಿ. ನಾಲ್ಕಾರು ಕಡೆ ಭಾರತದಲ್ಲಿರಲಿ, ವಿದೇಶದಲ್ಲಿರಲಿ ಚೆನ್ನಾಗಿ ಮತ್ತು ಮುಂದೆಯೂ ಮಾಡುವವರಿದ್ದೀರಿ. ಹೇಗೆ ಸೇವೆಯಲ್ಲಿ ಒಬ್ಬರು ಇನ್ನೊಬ್ಬರಿಗಿಂತ ಬಹಳ ಚೆನ್ನಾಗಿ ಫಲಿತಾಂಶ ತರುವ ಶುಭ ಭಾವನೆಯಿಂದ ಮುಂದುವರೆಯುತ್ತಿದ್ದೀರಿ. ಅದೇರೀತಿ ಸೇವೆಯಲ್ಲಿ ಸಂಘಟಿತ ರೂಪದಲ್ಲಿ ಸದಾ ಸಂತುಷ್ಟವಾಗಿರುವ ಮತ್ತು ಸಂತುಷ್ಟ ಪಡಿಸುವ ಸಂಕಲ್ಪವೂ ಸಹ ಸದಾ ಜೊತೆ ಜೊತೆಯಿರಲಿ ಏಕೆಂದರೆ ಒಂದೇ ಸಮಯದಲ್ಲಿ ಮೂರು ಪ್ರಕಾರದ ಸೇವೆಯು ಒಟ್ಟಿಗೆ ನಡೆಯುತ್ತದೆ. ಒಂದನೆಯದು - ತನ್ನ ಸಂತುಷ್ಟತೆ, ಇದು ಸ್ವಯಂನ ಸೇವೆಯಾಗಿದೆ. ಎರಡನೆಯದು - ಸಂಘಟನೆಯಲ್ಲಿ ಸಂತುಷ್ಟತೆ, ಇದು ಪರಿವಾರದ ಸೇವೆಯಾಗಿದೆ. ಮೂರನೆಯದು - ಭಾಷೆಯ ಮೂಲಕ ಅಥವಾ ಯಾವುದೇ ವಿಧಿಯ ಮೂಲಕ ವಿಶ್ವದ ಆತ್ಮಗಳ ಸೇವೆಯಾಗಿದೆ. ಒಂದೇ ಸಮಯದಲ್ಲಿ ಮೂರು ಸೇವೆಗಳಾಗುತ್ತವೆ. ಯಾವುದೇ ಕಾರ್ಯಕ್ರಮ ಮಾಡುತ್ತೀರೆಂದರೆ ಅದರಲ್ಲಿ ಮೂರು ಸೇವೆಗಳು ಸಮಾವೇಶವಾಗಿವೆ. ಹೇಗೆ ವಿಶ್ವ ಸೇವೆಯ ಫಲಿತಾಂಶ ಹಾಗೂ ವಿಧಿಯನ್ನು ಗಮನದಲ್ಲಿ ಇಟ್ಟುಕೊಳ್ಳುತ್ತೀರೋ ಅದೇರೀತಿ ಎರಡು ಸೇವೆಗಳು `ಸ್ವ ಮತ್ತು ಸಂಘಟನೆ' - ಈ ಮೂರು ನಿರ್ವಿಘ್ನವಾಗಿರಲಿ ಆಗ ಸೇವೆಯ ನಂಬರ್ವನ್ ಸಫಲತೆಯೆಂದು ಹೇಳಲಾಗುವುದು. ಈ ಮೂರೂ ಸಫಲತೆಗಳು ಒಟ್ಟಿಗೆ ಆಗುವುದೇ ನಂಬರ್ ತೆಗೆದುಕೊಳ್ಳುವುದಾಗಿದೆ. ಈ ವರ್ಷ ಮೂರೂ ಸೇವೆಗಳ ಸಫಲತೆಯು ಜೊತೆ ಜೊತೆಯಿರಲಿ - ಈ ಘಂಟೆಯು ಮೊಳಗಲಿ. ಒಂದುವೇಳೆ ಒಂದು ಮೂಲೆಯಲ್ಲಿ ಘಂಟೆ ಬಾರಿಸಿದರೆ ಕುಂಭಕರ್ಣರ ಕಿವಿಗಳವರೆಗೆ ತಲುಪುವುದಿಲ್ಲ. ಯಾವಾಗ ನಾಲ್ಕಾರು ಕಡೆ ಈ ಘಂಟೆ ಮೊಳಗುವುದೋ ಆಗ ಈ ಕುಂಭಕರ್ಣರು ಜಾಗೃತರಾಗುವರು. ಈಗ ಒಬ್ಬರು ಏಳುತ್ತಾರೆ, ಇನ್ನೊಬ್ಬರು ಮಲಗುತ್ತಾರೆ. ಇನ್ನೊಬ್ಬರು ಎದ್ದಾಗ ಮೂರನೆಯವರು ಮಲಗುತ್ತಾರೆ. ಸ್ವಲ್ಪ ಜಾಗೃತರಾದರೂ ಸಹ `ಚೆನ್ನಾಗಿದೆ-ಚೆನ್ನಾಗಿದೆ' ಎಂದು ಹೇಳಿ ಮತ್ತೆ ಮಲಗಿ ಬಿಡುತ್ತಾರೆ. ಆದರೆ ಈಗ ಜಾಗೃತರಾಗಲಿ ಮತ್ತು ಬಾಯಿಂದ ಹಾಗೂ ಮನಸ್ಸಿನಿಂದ `ಅಹೋ ಪ್ರಭು!' ಎಂದು ಹೇಳಲಿ ಮತ್ತು ಮುಕ್ತಿಯ ಆಸ್ತಿಯನ್ನೂ ತೆಗೆದುಕೊಳ್ಳಲಿ ಆಗ ಸಮಾಪ್ತಿಯಾಗುವುದು. ಜಾಗೃತರಾದಾಗಲೇ ಮುಕ್ತಿಯ ಆಸ್ತಿಯನ್ನು ತೆಗೆದುಕೊಳ್ಳುವರು ಅಂದಾಗ ಏನು ಮಾಡಬೇಕೆಂದು ತಿಳಿಯಿತೆ? ಒಬ್ಬರು ಇನ್ನೊಬ್ಬರ ಸಹಯೋಗಿಗಳಾಗಿ. ಇನ್ನೊಬ್ಬರ ಉಳಿತಾಯದಲ್ಲಿ ತನ್ನ ಉಳಿತಾಯವಾಗಿ ಬಿಡುವುದು. |
ಸೇವಾ ಯೋಜನೆಯಲ್ಲಿ ಎಷ್ಟು ಸಂಪರ್ಕದಲ್ಲಿ ಸಮೀಪ ತರುತ್ತೀರೋ ಅಷ್ಟು ಸೇವೆಯ ಪ್ರತ್ಯಕ್ಷ ಫಲಿತಾಂಶವು ಕಂಡುಬರುವುದು. ಸಂದೇಶ ಕೊಡುವಂತಹ ಸೇವೆಯನ್ನಂತೂ ಮಾಡುತ್ತಾ ಬಂದಿದ್ದೀರಿ, ಮಾಡುತ್ತಾ ಇರಿ ಆದರೆ ವಿಶೇಷವಾಗಿ ಈ ವರ್ಷದಲ್ಲಿ ಕೇವಲ ಸಂದೇಶ ಕೊಡುವುದಲ್ಲ, ಸಹಯೋಗಿಗಳನ್ನಾಗಿ ಮಾಡಬೇಕಾಗಿದೆ ಅರ್ಥಾತ್ ಸಂಪರ್ಕದಲ್ಲಿ ಸಮೀಪ ತರಬೇಕಾಗಿದೆ. ಕೇವಲ ಫಾರ್ಮನ್ನು ತುಂಬಿಸಿದಿರಿ, ಇದಂತೂ ನಡೆಯುತ್ತಾ ಇರುತ್ತದೆ ಆದರೆ ಈ ವರ್ಷದಲ್ಲಿ ಮುಂದುವರೆಯಿರಿ, ಅವರಿಂದ ಕೇವಲ ಫಾರ್ಮ್ ತುಂಬಿಸಿ ಬಿಟ್ಟು ಬಿಡಬೇಡಿ. ಅವರನ್ನು ಸಂಬಂಧದಲ್ಲಿ ತನ್ನಿರಿ. ಎಂತಹ ವ್ಯಕ್ತಿಯೋ ಅದೇ ರೀತಿ ಅವರನ್ನು ಸಂಪರ್ಕದಲ್ಲಿ ತರುವ ಯೋಜನೆ ಮಾಡಿ. ಭಲೆ ಚಿಕ್ಕ-ಚಿಕ್ಕ ಕಾರ್ಯಕ್ರಮಗಳನ್ನೇ ಮಾಡಿ ಆದರೆ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ. ಕೇವಲ ಒಂದು ಗಂಟೆಗಾಗಿ ಅಥವಾ ಫಾರ್ಮನ್ನು ತುಂಬಿಸಿಕೊಳ್ಳುವ ಸಮಯದವರೆಗೆ ಅವರನ್ನು ಸಹಯೋಗಿಗಳನ್ನಾಗಿ ಮಾಡುವುದಲ್ಲ ಆದರೆ ಸಹಯೋಗದ ಮೂಲಕ ಅವರನ್ನು ಸಮೀಪ ತರಬೇಕಾಗಿದೆ. ಸಂಪರ್ಕದಲ್ಲಿ, ಸಂಬಂಧದಲ್ಲಿ ತನ್ನಿ, ಇದರಿಂದ ಮುಂದೆ ಹೋದಂತೆ ಸೇವೆಯ ರೂಪವು ಪರಿವರ್ತನೆಯಾಗುವುದು. ತಾವು ತಮ್ಮ ಬಗ್ಗೆ ಹೇಳಿಕೊಳ್ಳುವುದಲ್ಲ, ತಮ್ಮ ಕಡೆಯಿಂದ ತಮ್ಮ ಸಂಬಂಧದಲ್ಲಿ ಬರುವವರು ಮಾತನಾಡುತ್ತಾರೆ, ತಮ್ಮ ಮಹಿಮೆ ಮಾಡುತ್ತಾರೆ. ಕೇವಲ ತಾವು ಆಶೀರ್ವಾದ ಮತ್ತು ದೃಷ್ಟಿ ನೀಡಬೇಕಾಗುವುದು. ಹೇಗೆ ಇತ್ತೀಚೆಗೆ ಶಂಕರಾಚಾರ್ಯರನ್ನು ಆಸನದ ಮೇಲೆ ಕೂರಿಸುತ್ತಾರೆ ಅದೇರೀತಿ ತಮ್ಮನ್ನು ಪೂಜ್ಯ ಸ್ಥಿತಿಯ ಕುರ್ಚಿಯ ಮೇಲೆ ಕುಳ್ಳರಿಸುತ್ತಾರೆ, ಬೆಳ್ಳಿಯದಲ್ಲ. ಧರಣಿಯನ್ನು ತಯಾರು ಮಾಡುವವರು ನಿಮಿತ್ತರಾಗಿರುತ್ತಾರೆ ಮತ್ತು ತಾವು ಕೇವಲ ದೃಷ್ಟಿಯಿಂದ ಬೀಜವನ್ನು ಹಾಕಬೇಕಾಗಿದೆ, ಆಶೀರ್ವಾದದ ಎರಡು ಮಾತನ್ನು ಮಾತನಾಡಬೇಕಾಗಿದೆ ಆಗಲೇ ಪ್ರತ್ಯಕ್ಷತೆಯಾಗುವುದು. ತಮ್ಮಲ್ಲಿ ತಂದೆಯು ಕಾಣಿಸುವವರು ಮತ್ತು ತಂದೆಯ ದೃಷ್ಟಿ, ತಂದೆಯ ಸ್ನೇಹದ ಅನುಭೂತಿಯು ಪಡೆಯುತ್ತಿದ್ದಂತೆಯೇ ಪ್ರತ್ಯಕ್ಷತೆಯ ಘಂಟೆಯು ಮೊಳಗಲು ಆರಂಭಿಸುವುದು. |
ಈಗ ಸೇವೆಯ ಸುವರ್ಣ ಮಹೋತ್ಸವವನ್ನು ಪೂರ್ಣ ಮಾಡಿದಿರಿ. ಈಗಿನ್ನೂ ಅನ್ಯರು ಸೇವೆ ಮಾಡುತ್ತಿದ್ದಾರೆ ಮತ್ತು ತಾವು ನೋಡಿ-ನೋಡಿ ಹರ್ಷಿತರಾಗುತ್ತಾ ಇರುತ್ತೀರಿ. ಹೇಗೆ ಪೋಪ್ ಏನು ಮಾಡುತ್ತಾರೆ? ಇಷ್ಟು ದೊಡ್ಡ ಸಭೆಯ ಮಧ್ಯದಲ್ಲಿ ದೃಷ್ಟಿ ನೀಡಿ ಆಶೀರ್ವಚನಗಳನ್ನು ಕೊಡುತ್ತಾರೆ. ಅವರ ಪ್ರತಿ ಅನ್ಯರು ಉದ್ದಗಲವಾಗಿ ಭಾಷಣ ಮಾಡಲು ನಿಮಿತ್ತರಾಗುತ್ತಾರೆ. ಹಾಗೆಯೇ ಅಂತಿಮದಲ್ಲಿ ನಮಗೆ ಇದನ್ನು ತಂದೆಯು ತಿಳಿಸಿದ್ದಾರೆಂದು ತಾವು ಹೇಳುವುದಲ್ಲ. ನಿಮ್ಮ ಪರವಾಗಿ ಅನ್ಯರು ಹೇಳುತ್ತಾರೆ - ಇವರು ಏನನ್ನು ತಿಳಿಸಿದರೋ ಅವು ತಂದೆಯ ಮಾತುಗಳಾಗಿವೆ, ಮತ್ತ್ಯಾರದೂ ಅಲ್ಲ. ಹೀಗೆ ಕಳೆಯುತ್ತಾ ಹೋದಂತೆ ಇಂತಹ ಭುಜಗಳು ತಯಾರಾಗುತ್ತಾರೆ ಹೇಗೆ ಸೇವಾಕೇಂದ್ರಗಳನ್ನು ಸಂಭಾಲನೆ ಮಾಡಲು ಭುಜಗಳು ತಯಾರಾದರಲ್ಲವೆ. ಅದೇ ರೀತಿ ಸ್ಟೇಜಿನ ಮೇಲೆ ತಮ್ಮ ಪರವಾಗಿ ಮಾತನಾಡುವವರು, ಅನುಭವ ಮಾಡಿ ಹೇಳುವವರು ಅನ್ಯರು ಬರುತ್ತಾರೆ. ಕೇವಲ ಮಹಿಮೆ ಮಾಡುವವರಲ್ಲ, ಜ್ಞಾನದ ಗುಹ್ಯ ಮಾತುಗಳನ್ನು ಸ್ಪಷ್ಟ ಮಾಡುವವರು ಪರಮಾತ್ಮನ ಜ್ಞಾನವನ್ನು ಸಿದ್ಧ ಮಾಡುವಂತಹವರು ನಿಮಿತ್ತರಾಗುತ್ತಾರೆ ಆದರೆ ಅದಕ್ಕಾಗಿ ಅಂತಹ ವ್ಯಕ್ತಿಗಳನ್ನು ಸ್ನೇಹಿ, ಸಹಯೋಗಿ ಮತ್ತು ಸಂಪರ್ಕದಲ್ಲಿ ತರುತ್ತಾ, ಸಂಬಂಧದಲ್ಲಿ ತನ್ನಿ. ಈ ಇಡೀ ಕಾರ್ಯಕ್ರಮದ ಲಕ್ಷ್ಯವೇ ಇದಾಗಿದೆ - ಇಂತಹ ಸಹಯೋಗಿಗಳನ್ನು ತಯಾರು ಮಾಡಿ, ತಾವು `ಮೈಟ್' ಆಗಿ ಮತ್ತು ಅವರು `ಮೈಕ್' ಆಗಲಿ. ಈ ವರ್ಷದ ಸಹಯೋಗದ ಸೇವೆಯ ಲಕ್ಷ್ಯವು `ಮೈಕ್' ಗಳನ್ನು ತಯಾರು ಮಾಡಬೇಕಾಗಿದೆ. ಅವರು ಅನುಭವದ ಆಧಾರದಿಂದ ತಮ್ಮ ಮತ್ತು ತಂದೆಯ ಜ್ಞಾನವನ್ನು ಪ್ರತ್ಯಕ್ಷ ಮಾಡಲಿ. ಇದರ ಪ್ರಭಾವವು ಸ್ವತಹ ಅನ್ಯರ ಮೇಲೆ ಬೀರುತ್ತದೆ. ಇಂತಹ ಮೈಕ್ ಆತ್ಮಗಳನ್ನು ತಯಾರು ಮಾಡಿ. ಸೇವೆಯ ಉದ್ದೇಶವೇನೆಂದು ತಿಳಿಯಿತೇ! ಇಷ್ಟೆಲ್ಲಾ ಯಾವ ಕಾರ್ಯಕ್ರಮಗಳನ್ನು ಮಾಡಿದ್ದೀರೋ ಅದರ ಫಲಿತಾಂಶವು ಏನು ಬರಬಹುದು? ಹೆಚ್ಚಿನ ಸೇವೆ ಮಾಡಿ ಆದರೆ ಈ ವರ್ಷದಲ್ಲಿ ಸಂದೇಶ ಕೊಡುವುದರ ಜೊತೆ ಜೊತೆಗೆ ಇದನ್ನೂ ಸೇರಿಸಿಕೊಳ್ಳಿ. ಗಮನದಲ್ಲಿಡಿ - ಯಾರು-ಯಾರು ಇದಕ್ಕೆ ಪಾತ್ರರಾಗಿದ್ದಾರೆ ಮತ್ತು ಅವರನ್ನು ಸಮಯ-ಪ್ರತಿ ಸಮಯ ಭಿನ್ನ-ಭಿನ್ನ ವಿಧಿಗಳಿಂದ ಸಂಪರ್ಕದಲ್ಲಿ ತನ್ನಿ. ಒಂದು ಕಾರ್ಯಕ್ರಮ ಮಾಡಿದಿರಿ. ಮತ್ತೆ ಇನ್ನೊಂದು ಮಾಡಿದಿರಿ, ಮೂರನೆಯದು ಮಾಡಿದಿರಿ ಆದರೆ ಮೊದಲಿನವರು ಅಲ್ಲಿಯೇ ಉಳಿದು, ಮೂರನೆಯವರು ಬಂದು ಬಿಡುವುದಲ್ಲ. ಜಮಾದ ಶಕ್ತಿಯನ್ನು ಪ್ರಯೋಗದಲ್ಲಿ ತರಬೇಕಾಗುವುದು. ಪ್ರತೀ ಬಾರಿ ಹಿಂದಿನವರನ್ನೂ ಸೇರಿಸುವ ಪ್ರಯತ್ನ ಮಾಡಿ. ಪ್ರತೀ ಕಾರ್ಯಕ್ರಮದಲ್ಲಿ ಅವರನ್ನು ಸೇರಿಸುತ್ತಾ ಹೋಗಿ. ಕೊನೆಯಲ್ಲಿ ಇಂತಹ ಸಂಬಂಧ-ಸಂಪರ್ಕದ ಆತ್ಮಗಳದು ಮಾಲೆಯಾಗಿ ಬಿಡಲಿ. ತಿಳಿಯಿತೆ? ಇನ್ನೇನು ಉಳಿಯಿತು? ಮಿಲನ ಮಾಡುವ ಕಾರ್ಯಕ್ರಮ. |
ಈ ವರ್ಷ ಬಾಪ್ದಾದಾ 6 ತಿಂಗಳಿನ ಸೇವೆಯ ಫಲಿತಾಂಶವನ್ನು ನೋಡ ಬಯಸುತ್ತೇವೆ. ಸೇವೆಯಲ್ಲಿ ಯಾವುದೆಲ್ಲಾ ಯೋಜನೆಗಳನ್ನು ಮಾಡಿದ್ದೀರೋ ಅದನ್ನು ನಾಲ್ಕಾರೂ ಕಡೆ ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾಗಿ ಹೆಚ್ಚು-ಹೆಚ್ಚು ಸುತ್ತಾಡಿದಿರಿ. ಎಲ್ಲಾ ಹಿರಿಯರು-ಕಿರಿಯರನ್ನು ಉಲ್ಲಾಸ-ಉತ್ಸಾಹದಲ್ಲಿ ತಂದು ಮೂರು ಪ್ರಕಾರದ ಸೇವೆಯಲ್ಲಿ ಮುಂದುವರೆಸಿರಿ ಅದಕ್ಕಾಗಿ ಬಾಪ್ದಾದಾ ಈ ವರ್ಷದಲ್ಲಿ ಇಡೀ ರಾತ್ರಿಯನ್ನೇ ಹಗಲು ಮಾಡಿ ಸೇವೆಯನ್ನು ಕೊಟ್ಟಿದ್ದೇವೆ. ಈಗ ಮೂರೂ ಪ್ರಕಾರದ ಸೇವೆಯ ಫಲವನ್ನು ಸ್ವೀಕರಿಸುವ ವರ್ಷವು ಇದಾಗಿದೆ. ಕೇವಲ ಬರುವುದಲ್ಲ, ಫಲವನ್ನು ಸ್ವೀಕಾರ ಮಾಡಬೇಕಾಗಿದೆ. ಈ ವರ್ಷದಲ್ಲಿ ಬರುವ ನೊಂದಣಿಯಿಲ್ಲ, ತಂದೆಯ ಸಕಾಶವಂತೂ ಸದಾ ಜೊತೆಯಲ್ಲಿ ಇದ್ದೇ ಇದೆ. ಡ್ರಾಮಾದಲ್ಲಿ ಏನು ನಿಗಧಿಯಾಗಿದೆಯೋ ಅದನ್ನು ತಿಳಿಸಿದೆವು. ಡ್ರಾಮಾದ ಸಮ್ಮತಕ್ಕೆ ಸಮ್ಮತ ನೀಡಲೇಬೇಕಾಗಿದೆ. ಹೆಚ್ಚಿನ ಸೇವೆ ಮಾಡಿ ಆರು ತಿಂಗಳಿನಲ್ಲಿಯೇ ಫಲಿತಾಂಶವು ಅರ್ಥವಾಗುವುದು. ತಂದೆಯ ಆಸೆಗಳನ್ನು ಪೂರ್ಣ ಮಾಡುವ ಯೋಜನೆ ಮಾಡಿ. ಇಲ್ಲಿಯೂ ನೋಡಿ, ಯಾರನ್ನೇ ನೋಡಿದರೂ ಸಹ ಪ್ರತಿಯೊಬ್ಬರ ಸಂಕಲ್ಪ, ಮಾತು ಮತ್ತು ಕರ್ಮವು ತಂದೆಯ ಆಶಾದೀಪಗಳನ್ನು ಬೆಳಗಿಸುವಂತದ್ದಾಗಿರಲಿ. ಮೊದಲು ಮಧುಬನದಲ್ಲಿ ಈ ಉದಾಹರಣೆಯನ್ನು ತೋರಿಸಿ. ಉಳಿತಾಯದ ಯೋಜನೆಯ ಮಾದರಿಯನ್ನು ಮೊದಲು ಮಧುಬನದಲ್ಲಿ ಮಾಡಿ. ಮೊದಲು ಈ ಬ್ಯಾಂಕ್ನಲ್ಲಿ ಜಮಾ ಮಾಡಿ. ಮಧುಬನದವರಿಗೂ ಸಹ ವರದಾನವಂತೂ ಸಿಕ್ಕಿಯೇ ಬಿಟ್ಟಿತು ಬಾಕಿ ಯಾರು ಉಳಿದುಕೊಂಡಿದ್ದಾರೆ! ಅವರನ್ನೂ ಈ ವರ್ಷದಲ್ಲಿ ಬೇಗನೆ ಪೂರ್ಣ ಮಾಡುತ್ತೇವೆ ಏಕೆಂದರೆ ತಂದೆಯ ಸ್ನೇಹವು ಎಲ್ಲಾ ಮಕ್ಕಳ ಜೊತೆ ಇದೆ. ಹಾಗೆ ನೋಡಿದರೆ ಪ್ರತಿಯೊಬ್ಬ ಮಗುವಿನ ಪ್ರತಿ ಪ್ರತೀ ಹೆಜ್ಜೆಯಲ್ಲಿ ವರದಾನವಿದೆ. ಯಾರು ಹೃದಯದ ಸ್ನೇಹೀ ಆತ್ಮರಿದ್ದಾರೆಯೋ ಅವರು ಪ್ರತೀ ಹೆಜ್ಜೆಯಲ್ಲಿ ವರದಾನದಿಂದಲೇ ನಡೆಯುತ್ತಾರೆ. ತಂದೆಯ ವರದಾನವು ಕೇವಲ ಬಾಯಿಂದ ಅಲ್ಲ, ಹೃದಯದಿಂದ ಇದೆ ಮತ್ತು ಹೃದಯದ ವರದಾನವು ಸದಾ ಹೃದಯದಲ್ಲಿ ಖುಷಿ ಹಾಗೂ ಉಲ್ಲಾಸ-ಉತ್ಸಾಹದ ಅನುಭವ ಮಾಡಿಸುತ್ತದೆ. ಇದು ಹೃದಯದ ವರದಾನದ ಗುರುತಾಗಿದೆ. ಹೃದಯದ ವರದಾನವನ್ನು ಯಾರೆಲ್ಲಾ ತಮ್ಮ ಹೃದಯದಿಂದ ಧಾರಣೆ ಮಾಡಿಕೊಳ್ಳುವರೋ ಅವರ ಗುರುತು ಇದೇ ಆಗಿದೆ - ಅವರು ಸದಾ ಖುಷಿ ಮತ್ತು ಉಲ್ಲಾಸ-ಉತ್ಸಾಹದಿಂದ ಮುಂದುವರೆಯುತ್ತಿರುತ್ತಾರೆ, ಎಂದೂ ಯಾವುದೇ ಮಾತುಗಳಲ್ಲಿ ಸಿಲುಕುವುದೂ ಇಲ್ಲ, ನಿಲ್ಲುವುದೂ ಇಲ್ಲ. ವರದಾನದಿಂದ ಹಾರುತ್ತಾ ಇರುತ್ತಾರೆ ಮತ್ತು ಮಾತುಗಳೆಲ್ಲವೂ ಕೆಳಗೆ ಉಳಿಯುತ್ತವೆ. ಬದಿಯ ದೃಶ್ಯಗಳೂ ಸಹ ಹಾರುವವರನ್ನು ತಡೆಯಲಾರವು. |
ಇಂದು ಬಾಪ್ದಾದಾ ಎಲ್ಲಾ ಮಕ್ಕಳಿಗೆ ಯಾರೆಲ್ಲಾ ಹೃದಯಪೂರ್ವಕವಾಗಿ ಅವಿಶ್ರಾಂತರಾಗಿ ಸೇವೆ ಮಾಡಿದರು ಆ ಎಲ್ಲಾ ಸೇವಾಧಾರಿಗಳಿಗೆ ಈ ಸೀಜನ್ನಿನ ಸೇವೆಯ ಶುಭಾಷಯಗಳನ್ನು ನೀಡುತ್ತಿದ್ದೇವೆ. ಮಧುಬನಕ್ಕೆ ಬಂದು ಮಧುಬನದ ಶೃಂಗಾರವಾದಿರಿ, ಇಂತಹ ಶೃಂಗಾರವಾಗುವ ಮಕ್ಕಳಿಗೂ ಸಹ ಬಾಪ್ದಾದಾ ಶುಭಾಷಯಗಳನ್ನು ನೀಡುತ್ತಿದ್ದೇವೆ ಮತ್ತು ನಿಮಿತ್ತರಾಗಿರುವ ಶ್ರೇಷ್ಠ ಆತ್ಮರಿಗೂ ಸಹ ಸದಾ ಅವಿಶ್ರಾಂತರಾಗಿ ತಂದೆಯ ಸಮಾನ ತಮ್ಮ ಸೇವೆಗಳಿಂದ ಸರ್ವರನ್ನೂ ರಿಫ್ರೆಷ್ ಮಾಡುವ ಶುಭಾಷಯಗಳನ್ನು ನೀಡುತ್ತಿದ್ದೇವೆ ಮತ್ತು ರಥಕ್ಕೂ ಶುಭಾಷಯಗಳು. ನಾಲ್ಕಾರು ಕಡೆಯ ಸೇವಾಧಾರಿ ಮಕ್ಕಳಿಗೂ ಶುಭಾಷಯಗಳು. ನಿರ್ವಿಘ್ನರಾಗಿ ಮುಂದುವರೆಯುತ್ತಿದ್ದೀರಿ ಮತ್ತು ಮುಂದುವರೆಯುತ್ತಲೇ ಇರಬೇಕಾಗಿದೆ. ದೇಶ-ವಿದೇಶದ ಎಲ್ಲಾ ಮಕ್ಕಳಿಗೆ ಇಲ್ಲಿಗೆ ಬರುವುದಕ್ಕೂ ಶುಭಾಷಯಗಳು ಮತ್ತು ರಿಫ್ರೆಷ್ ಆಗುವುದಕ್ಕೂ ಶುಭಾಷಯಗಳು ಆದರೆ ಕೇವಲ ಆರುತಿಂಗಳು ರಿಫ್ರೆಷ್ ಆಗಿರುವುದಲ್ಲ, ಸದಾ ರಿಫ್ರೆಷ್ ಆಗಿರಿ. ರಿಫ್ರೆಷ್ನಲ್ಲಿ ರಿಫ್ರೆಷ್ ಆಗಲು ಭಲೆ ಮತ್ತೆ-ಮತ್ತೆ ಬನ್ನಿ ಏಕೆಂದರೆ ತಂದೆಯ ಖಜಾನೆಗಳ ಮೇಲೆಸ್ ಎಲ್ಲಾ ಮಕ್ಕಳಿಗೆ ಸದಾ ಅಧಿಕಾರವಿದೆ. ತಂದೆ ಮತ್ತು ಖಜಾನೆಯು ಸದಾ ಜೊತೆಯಿದೆ ಮತ್ತು ಸದಾ ಜೊತೆಯಲ್ಲಿಯೇ ಇರುವುದು. ಕೇವಲ ಯಾವ ಅಂಡರ್ ಲೈನ್ ಮಾಡಿಸಿದೆವೋ ಅದರಲ್ಲಿ ವಿಶೇಷವಾಗಿ ಸ್ವಯಂನ್ನು ಮಾದರಿಯನ್ನಾಗಿ ಮಾಡಿಕೊಂಡು ಪರೀಕ್ಷೆಯಲ್ಲಿ ಅಧಿಕ ಅಂಕಗಳನ್ನು ಪಡೆದುಕೊಳ್ಳಿ, ಅನ್ಯರನ್ನು ನೋಡಬೇಡಿ. ತನ್ನನ್ನು ಮಾದರಿಯನ್ನಾಗಿ ಮಾಡಿಕೊಳ್ಳಿ, ಇದರಲ್ಲಿ ಯಾರು ಮೊದಲು ಮಾಡುವರೋ ಅವರೇ ಅರ್ಜುನರು ಅರ್ಥಾತ್ ನಂಬರ್ವನ್. ಇನ್ನೊಂದು ಬಾರಿ ಬಾಪ್ದಾದಾ ಬಂದಾಗ ಎಲ್ಲರೂ ಫರಿಶ್ತೆಗಳ ಕರ್ಮ, ಫರಿಶ್ತೆಗಳ ಮಾತು, ಫರಿಶ್ತೆಗಳ ಸಂಕಲ್ಪವನ್ನು ಧಾರಣೆ ಮಾಡಿಕೊಂಡಿರುವವರೇ ಕಂಡುಬರಬೇಕು. ಇಂತಹ ಪರಿವರ್ತನೆಯ ಸಂಘಟನೆಯು ಕಂಡುಬರಲಿ ಅದರಿಂದ ಪ್ರತಿಯೊಬ್ಬರೂ ಅನುಭವ ಮಾಡಲಿ - ಈ ಫರಿಶ್ತೆಗಳ ಮಾತು, ಫರಿಶ್ತೆಗಳ ಕರ್ಮವು ಎಷ್ಟು ಅಲೌಕಿಕವಾಗಿದೆ! ಈ ಪರಿವರ್ತನಾ ಸಮಾರೋಹ ಸಮಾರಂಭವನ್ನು ಬಾಪ್ದಾದಾ ನೋಡ ಬಯಸುತ್ತೇವೆ. ಒಂದುವೇಳೆ ಪ್ರತಿಯೊಬ್ಬರೂ ತಮ್ಮ ಇಡೀ ದಿನದ ಮಾತುಗಳನ್ನು ಟೇಪ್ ಮಾಡಿದರೆ ತಮ್ಮ ಬಗ್ಗೆ ಬಹಳ ಚೆನ್ನಾಗಿ ಅರ್ಥವಾಗುವುದು. ಪರಿಶೀಲನೆ ಮಾಡಿಕೊಂಡಾಗ ನನ್ನ ಮಾತು ಎಷ್ಟು ವ್ಯರ್ಥವಾಗಿ ಹೋಗುತ್ತದೆ ಎಂಬುದು ತಿಳಿದುಬರುತ್ತದೆ. ಮನಸ್ಸಿನ ಟೇಪ್ನಲ್ಲಿ ಪರಿಶೀಲನೆ ಮಾಡಿಕೊಳ್ಳಿ. ಸ್ಥೂಲ ಟೇಪ್ ಅಲ್ಲ. ಸಾಧಾರಣ ಮಾತೂ ಸಹ ವ್ಯರ್ಥದಲ್ಲಿ ಜಮಾ ಆಗುತ್ತದೆ. ಒಂದುವೇಳೆ ನಾಲ್ಕು ಮಾತಿನ ಬದಲು 24 ಮಾತುಗಳನ್ನಾಡಿದರೆ 20 ಮಾತುಗಳು ಯಾವುದರಲ್ಲಿ ಹೋಯಿತು? ಶಕ್ತಿಯನ್ನು ಜಮಾ ಮಾಡಿಕೊಳ್ಳಿ ಆಗ ತಮ್ಮ ಎರಡು ಮಾತುಗಳು ಆಶೀರ್ವಾದದ ಹಾಗೂ ಒಂದು ಗಂಟೆಯ ಭಾಷಣದ ಕೆಲಸ ಮಾಡುತ್ತವೆ. ಒಳ್ಳೆಯದು. |
ನಾಲ್ಕಾರು ಕಡೆಯ ಸರ್ವ ಬಲಿಹಾರಿ ಆಗುವಂತಹ ಆತ್ಮಿಕ ಪತಂಗಗಳಿಗೆ, ಸರ್ವ ತಂದೆಯ ಸಮಾನರಾಗುವ ಧೃಡ ಸಂಕಲ್ಪದಿಂದ ಮುಂದುವರೆಯುವಂತಹ ವಿಶೇಷ ಆತ್ಮರಿಗೆ, ಸದಾ ಹಾರುವ ಕಲೆಯ ಮೂಲಕ ಯಾವುದೇ ಪ್ರಕಾರದ ಬದಿಯ ದೃಶ್ಯವನ್ನು ಪಾರು ಮಾಡುವಂತಹ ಡಬಲ್ಲೈಟ್ ಮಕ್ಕಳಿಗೆ ಆತ್ಮಿಕ ಜ್ಯೋತಿ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ. |
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಆತ್ಮಗಳೇ, ಗೀತೆಯನ್ನು ಕೇಳಿದಿರಾ! ಯಾರು ಹೇಳಿದರು? ಆತ್ಮಗಳ ಆತ್ಮಿಕ ತಂದೆ. ಆತ್ಮಿಕ ತಂದೆಗೆ ಆತ್ಮಿಕ ಮಕ್ಕಳು ಹೇಳಿದರು - ಬಾಬಾ ಎಂದು. ಅವರಿಗೆ ಈಶ್ವರನೆಂದೂ ಹೇಳಲಾಗುತ್ತದೆ, ಪಿತನೆಂದೂ ಹೇಳಲಾಗುತ್ತದೆ. ಯಾವ ಪಿತಾ? ಪರಮಪಿತ. ಇಬ್ಬರು ತಂದೆಯರಿದ್ದಾರೆ. ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ. ಲೌಕಿಕ ತಂದೆಯ ಮಕ್ಕಳು ಪಾರಲೌಕಿಕ ತಂದೆಯನ್ನು ಕರೆಯುತ್ತಾರೆ ಹೇ ತಂದೆಯೇ ಎಂದು. ಆ ತಂದೆಯ ಹೆಸರೇನು? ಶಿವ. ಆ ಶಿವ ನಿರಾಕಾರನಿಗೆ ಪೂಜೆಯಾಗುತ್ತದೆ, ಅವರಿಗೆ ಪರಮಪಿತನೆಂದು ಹೇಳಲಾಗುತ್ತದೆ. ಲೌಕಿಕ ತಂದೆಗೆ ಪರಮಪಿತನೆಂದು ಹೇಳುವುದಿಲ್ಲ. ಎಲ್ಲಾ ಆತ್ಮರ ಸರ್ವ ಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ. ಎಲ್ಲಾ ಜೀವಾತ್ಮರು ಆ ತಂದೆಯನ್ನು ನೆನಪು ಮಾಡುತ್ತಾರೆ ಆದರೆ ನಮ್ಮ ತಂದೆಯು ಯಾರೆಂಬುದನ್ನೇ ಆತ್ಮರು ಮರೆತು ಹೋಗಿದ್ದಾರೆ. ಓ ತಂದೆಯೇ ನಾವು ಕಣ್ಣಿಲ್ಲದ ಕುರುಡರಿಗೆ ಕಣ್ಣನ್ನು ಕೊಡಿ ಅದರಿಂದ ನಾವು ನಮ್ಮ ತಂದೆಯನ್ನು ಅರಿತುಕೊಳ್ಳುವೆವು ಎಂದು ಕೂಗುತ್ತಾರೆ. ಭಕ್ತಿಮಾರ್ಗದಲ್ಲಿ ನಾವು ಅಂಧರಾಗಿ ಹುಡುಕುತ್ತಾ ಇರುತ್ತೇವೆ. ಈಗ ಈ ಹುಡುಕಾಟದಿಂದ ಬಿಡಿಸು ಎಂದು ಹೇಳುತ್ತಾರೆ. ತಂದೆಯೇ ಕಲ್ಪ-ಕಲ್ಪವೂ ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಈಗ ಕಲಿಯುಗವಾಗಿದೆ, ಸತ್ಯಯುಗವು ಬರಲಿದೆ. ಕಲಿಯುಗ ಮತ್ತು ಸತ್ಯಯುಗದ ನಡುವಿನ ಸಮಯಕ್ಕೆ ಸಂಗಮವೆಂದು ಹೇಳಲಾಗುತ್ತದೆ. ಇದು ಪುರುಷೋತ್ತಮ ಸಂಗಮ ಯುಗವಾಗಿದೆ. ಬೇಹದ್ದಿನ ತಂದೆಯು ಬಂದು ಭ್ರಷ್ಟಾಚಾರಿ ಅಗಿರುವವರನ್ನು ಶ್ರೇಷ್ಠಾಚಾರಿ ಪುರುಷೋತ್ತಮರನ್ನಾಗಿ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರು ಪುರುಷೋತ್ತಮರಾಗಿದ್ದರು, ಲಕ್ಷ್ಮೀ-ನಾರಾಯಣರ ವಂಶಾವಳಿಯ ರಾಜ್ಯವಿತ್ತು, ಇದನ್ನು ತಂದೆಯು ಬಂದು ಸ್ಮೃತಿ ತರಿಸುತ್ತಾರೆ. ನೀವು ಭಾರತವಾಸಿಗಳು ಇಂದಿಗೆ 5000 ವರ್ಷಗಳ ಮೊದಲು ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿದ್ದೀರಿ. ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು, ಭಾರತಕ್ಕೆ ಬಹಳ ಮಹಿಮೆಯಿತ್ತು. ವಜ್ರ ವೈಡೂರ್ಯಗಳ ಮಹಲುಗಳಿತ್ತು, ಈಗ ಏನೂ ಇಲ್ಲ. ಆ ಸಮಯದಲ್ಲಿ ಮತ್ತ್ಯಾವುದೇ ಧರ್ಮವಿರಲಿಲ್ಲ, ಕೇವಲ ಸೂರ್ಯವಂಶಿಯರಿದ್ದರು, ಚಂದ್ರವಂಶಿಯರು ಕೊನೆಯಲ್ಲಿ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೇ ಸೂರ್ಯವಂಶಿಗಳಾಗಿದ್ದಿರಿ, ಇಲ್ಲಿಯವರೆಗೂ ಮನುಷ್ಯರು ಲಕ್ಷ್ಮೀ-ನಾರಾಯಣರ ಮಂದಿರಗಳನ್ನು ಕಟ್ಟಿಸುತ್ತಾ ಇರುತ್ತಾರೆ ಆದರೆ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತು? ಅವರು ಹೇಗೆ ರಾಜ್ಯವನ್ನು ಪಡೆದರು? ಇದು ಯಾರಿಗೂ ತಿಳಿದಿಲ್ಲ. ಪೂಜೆ ಮಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ. ಅಂದಮೇಲೆ ಅಂಧಶ್ರದ್ಧೆಯಾಯಿತಲ್ಲವೆ. ಶಿವನಿಗೆ ಲಕ್ಷ್ಮೀ-ನಾರಾಯಣರಿಗೆ ಪೂಜೆ ಮಾಡುತ್ತಾರೆ. ಅವರ ಚರಿತ್ರೆಯನ್ನು ಯಾರೂ ತಿಳಿದುಕೊಂಡಿಲ್ಲ. ಭಾರತವಾಸಿಗಳೇ ಸ್ವಯಂ ಹೇಳುತ್ತಾರೆ - ನಾವು ಪತಿತರಾಗಿದ್ದೇವೆ. ಹೇ ಪತಿತ-ಪಾವನ ತಂದೆಯೇ ಬನ್ನಿ, ಬಂದು ನಮ್ಮನ್ನು ದುಃಖದಿಂದ ರಾವಣ ರಾಜ್ಯದಿಂದ ಬಿಡಿಸಿ ಎಂದು. ತಂದೆಯು ಬಂದು ಎಲ್ಲರನ್ನು ಬಿಡುಗಡೆ ಮಾಡುತ್ತಾರೆ. ಮಕ್ಕಳಿಗೆ ತಿಳಿದಿದೆ - ಸತ್ಯಯುಗದಲ್ಲಿ ಒಂದೇ ರಾಜ್ಯವಿತ್ತು, ಕಾಂಗ್ರೆಸ್ಸಿನವರು ಅಥವಾ ಬಾಪೂಜಿಯೂ ಸಹ ನಮಗೆ ಪುನಃ ರಾಮರಾಜ್ಯ ಬೇಕು, ನಾವು ಸ್ವರ್ಗವಾಸಿಗಳಾಗ ಬಯಸುತ್ತೇವೆ ಎಂದೇ ಹೇಳುತ್ತಿದ್ದರು. ಈಗ ನರಕವಾಸಿಗಳದು ಯಾವ ಸ್ಥಿತಿಯಾಗಿದೆ, ನೋಡುತ್ತಿದ್ದೀರಾ! ಇದಕ್ಕೆ ನರಕ, ಭೂತ ಪ್ರಪಂಚ ಎಂದು ಹೇಳಲಾಗುತ್ತದೆ. ಇದೇ ಭಾರತವು ದೈವೀ ಪ್ರಪಂಚವಾಗಿತ್ತು, ಈಗ ಭೂತಗಳ ಪ್ರಪಂಚವಾಗಿ ಬಿಟ್ಟಿದೆ. |
ತಂದೆಯು ತಿಳಿಸುತ್ತಾರೆ - ನೀವು 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, 84 ಲಕ್ಷವಲ್ಲ. 84 ಲಕ್ಷವೆಂದು ಶಾಸ್ತ್ರಗಳಲ್ಲಿ ಸುಳ್ಳು ಬರೆದಿದ್ದಾರೆ. ಇಂದಿಗೆ 5000 ವರ್ಷಗಳ ಮೊದಲು ಸದ್ಗತಿ ಮಾರ್ಗವಿತ್ತು. ಅಲ್ಲಿ ಭಕ್ತಿಯಾಗಲಿ, ದುಃಖದ ಹೆಸರು-ಗುರುತಾಗಲಿ ಇರಲಿಲ್ಲ. ಅದಕ್ಕೆ ಸುಖಧಾಮವೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ನೀವು ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬಂದಿದ್ದೀರಿ. 84 ಪುನರ್ಜನ್ಮಗಳು ಇರುತ್ತವೆಯೇ ಹೊರತು 84 ಲಕ್ಷವಲ್ಲ. ಈಗ ಬೇಹದ್ದಿನ ತಂದೆಯೇ ನೀವು ಮಕ್ಕಳಿಗೆ ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನೀವಾತ್ಮಗಳೊಂದಿಗೆ ಮಾತನಾಡುತ್ತಾರೆ. ಅನ್ಯ ಸತ್ಸಂಗಗಳಲ್ಲಿ ಮನುಷ್ಯರು ಮನುಷ್ಯರಿಗೆ ಭಕ್ತಿಯ ಮಾತುಗಳನ್ನು ತಿಳಿಸುತ್ತಾರೆ. ಅರ್ಧಕಲ್ಪ ಭಾರತವು ಸ್ವರ್ಗವಾಗಿದ್ದಾಗ ಯಾರೊಬ್ಬರೂ ಪತಿತರಿರಲಿಲ್ಲ. ಈಗ ಒಬ್ಬರೂ ಪಾವನರಿಲ್ಲ. ಇದು ಪತಿತ ಪ್ರಪಂಚವಾಗಿದೆ. ತಂದೆಯು ತಿಳಿಸುತ್ತಾರೆ - ಗೀತೆಯಲ್ಲಿ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಕೃಷ್ಣನು ಭಗವಂತನಲ್ಲ, ಗೀತೆಯನ್ನೂ ತಿಳಿಸಲಿಲ್ಲ. ಇವರು ತಮ್ಮ ಧರ್ಮಶಾಸ್ತ್ರವನ್ನೂ ಸಹ ತಿಳಿದುಕೊಂಡಿಲ್ಲ, ತಮ್ಮ ಧರ್ಮವನ್ನೇ ಮರೆತು ಬಿಟ್ಟಿದ್ದಾರೆ. ನಾಲ್ಕು ಮುಖ್ಯ ಧರ್ಮಗಳಿವೆ. ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮ, ಸೂರ್ಯವಂಶಿಯರು ನಂತರ ಚಂದ್ರವಂಶಿಯರು ಇಬ್ಬರನ್ನೂ ಸೇರಿಸಿ ದೇವಿ-ದೇವತಾ ಧರ್ಮವೆಂದು ಹೇಳುತ್ತಾರೆ. ಅಲ್ಲಿ ದುಃಖದ ಹೆಸರುಗಳೂ ಇರಲಿಲ್ಲ. 21 ಜನ್ಮಗಳು ನೀವು ಸುಖಧಾಮದಲ್ಲಿದ್ದಿರಿ, ನಂತರ ರಾವಣ ರಾಜ್ಯ ಭಕ್ತಿಮಾರ್ಗವು ಆರಂಭವಾಗುತ್ತದೆ. ಶಿವ ತಂದೆಯು ಯಾವಾಗ ಬರುತ್ತಾರೆ? ರಾತ್ರಿಯಾದಾಗ. ಭಾರತವಾಸಿಗಳು ಘೋರ ಅಂಧಕಾರದಲ್ಲಿ ಬಂದಾಗ ತಂದೆಯು ಬರುತ್ತಾರೆ, ಮನುಷ್ಯರು ಗೊಂಬೆಗಳ ಪೂಜೆ ಮಾಡುತ್ತಿರುತ್ತಾರೆ. ಒಬ್ಬರ ಚರಿತ್ರೆಯನ್ನೂ ತಿಳಿದುಕೊಂಡಿಲ್ಲ. ಭಕ್ತಿಮಾರ್ಗದಲ್ಲಿ ಹಲವಾರು ಕಡೆ ಹುಡುಕುತ್ತಾರೆ. ತೀರ್ಥ ಯಾತ್ರೆಗಳನ್ನು ಮಾಡಿ ತಿರುಗಾಡುತ್ತಾರೆ ಆದರೆ ಯಾವುದೇ ಪ್ರಾಪ್ತಿಯಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಬಂದು ನಿಮಗೆ ಬ್ರಹ್ಮಾರವರ ಮೂಲಕ ಯಥಾರ್ಥ ಜ್ಞಾನವನ್ನು ತಿಳಿಸುತ್ತೇನೆ, ನಮಗೆ ಸುಖಧಾಮ ಮತ್ತು ಶಾಂತಿಧಾಮದ ಮಾರ್ಗವನ್ನು ತಿಳಿಸಿ ಎಂದು ಕರೆಯುತ್ತಾರೆ. ತಂದೆಯು ತಿಳಿಸುತ್ತಾರೆ - ಇಂದಿಗೆ 5000 ವರ್ಷಗಳ ಮೊದಲು ಬಹಳ ಸಾಹುಕಾರರನ್ನಾಗಿ ಮಾಡಿದ್ದೆನು, ಎಷ್ಟೊಂದು ಹಣವನ್ನು ಕೊಟ್ಟೆನು, ಅದನ್ನು ಎಲ್ಲಿ ಕಳೆದಿರಿ. ನೀವು ಎಷ್ಟೊಂದು ಸಾಹುಕಾರರಾಗಿದ್ದಿರಿ, ಭಾರತವೇ ಎಲ್ಲದಕ್ಕಿಂತ ಸರ್ವಶ್ರೇಷ್ಠ ಖಂಡವಾಗಿತ್ತು. ವಾಸ್ತವದಲ್ಲಿ ಇದು ಎಲ್ಲರ ತೀರ್ಥ ಸ್ಥಾನವಾಗಿದೆ ಏಕೆಂದರೆ ಪತಿತ-ಪಾವನ ತಂದೆಯ ಜನ್ಮ ಭೂಮಿಯಾಗಿದೆ. ಯಾರೆಲ್ಲಾ ಧರ್ಮದವರಿದ್ದಾರೆಯೋ ಎಲ್ಲರ ತಂದೆಯು ಬಂದು ಸದ್ಗತಿ ಮಾಡುತ್ತಾರೆ. ಈಗ ರಾವಣ ರಾಜ್ಯವು ಕೇವಲ ಲಂಕೆಯಲ್ಲ, ಇಡೀ ಸೃಷ್ಟಿಯಲ್ಲಿಯೇ ಇದೆ. ಸೂರ್ಯವಂಶಿ ರಾಜ್ಯವಿದ್ದಾಗ ಈ ವಿಕಾರವಿರಲಿಲ್ಲ. ಭಾರತವು ನಿರ್ವಿಕಾರಿಯಾಗಿತ್ತು, ಈಗ ವಿಕಾರಿಯಾಗಿದೆ. ಎಲ್ಲರೂ ನರಕವಾಸಿಗಳಾಗಿದ್ದಾರೆ. ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿತ್ತು, ಅವರು 84 ಜನ್ಮಗಳನ್ನು ಪಡೆದು ಆಸುರೀ ಸಂಪ್ರದಾಯದವರಾಗಿದ್ದಾರೆ. ಪುನಃ ದೈವೀ ಸಂಪ್ರದಾಯದವರಾಗಲಿದ್ದಾರೆ. ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಬಡ ಭಾರತವಾಗಿದೆ ಆದ್ದರಿಂದ ಭಿಕ್ಷೆ ಬೇಡುತ್ತಿದ್ದಾರೆ. ತಂದೆಯು ನೀವು ಬಡ ಮಕ್ಕಳಿಗೆ ಸ್ಮೃತಿ ತರಿಸುತ್ತಾರೆ - ಮಕ್ಕಳೇ, ನೀವು ಎಷ್ಟೊಂದು ಸುಖಿಯಾಗಿದ್ದಿರಿ, ನಿಮ್ಮಂತಹ ಸುಖ ಯಾರಿಗೂ ಸಿಗಲು ಸಾಧ್ಯವಿಲ್ಲ. ಆಕಾಶ, ಭೂಮಿ ಎಲ್ಲವೂ ನಿಮ್ಮ ಕೈಯಲ್ಲಿತ್ತು, ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಬಹಳ ಉದ್ದವಾಗಿ ಬರೆದು ಎಲ್ಲರನ್ನೂ ಕುಂಭಕರ್ಣನ ಆಸುರೀ ನಿದ್ರೆಯಲ್ಲಿ ಮಲಗಿಸಿ ಬಿಟ್ಟಿದ್ದಾರೆ. ಈ ಭಾರತವು ಶಿವ ತಂದೆಯು ಸ್ಥಾಪನೆ ಮಾಡಿರುವ ಶಿವಾಲಯವಾಗಿತ್ತು, ಅಲ್ಲಿ ಪವಿತ್ರತೆಯಿತ್ತು. ಆ ಹೊಸ ಪ್ರಪಂಚದಲ್ಲಿ ದೇವಿ-ದೇವತೆಗಳು ರಾಜ್ಯಭಾರ ಮಾಡುತ್ತಿದ್ದರು. ಮನುಷ್ಯರು ಇದನ್ನೂ ಸಹ ತಿಳಿದುಕೊಂಡಿಲ್ಲ - ರಾಧೆ-ಕೃಷ್ಣರ ಪರಸ್ಪರ ಸಂಬಂಧವೇನು? ಇವರು ಬೇರೆ-ಬೇರೆ ರಾಜಧಾನಿಯವರಾಗಿದ್ದರು. ಮತ್ತೆ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾದರು. ಈ ಜ್ಞಾನವು ಯಾವ ಮನುಷ್ಯ ಮಾತ್ರರಲ್ಲಿಯೂ ಇಲ್ಲ. ಆತ್ಮಿಕ ಜ್ಞಾನವನ್ನು ಕೇವಲ ಒಬ್ಬ ತಂದೆಯೇ ಕೊಡುತ್ತಾರೆ. ಈಗ ತಂದೆಯು ಹೇಳುತ್ತಾರೆ - ಆತ್ಮಾಭಿಮಾನಿಯಾಗಿರಿ. ಪರಮಪಿತನಾದ ನನ್ನನ್ನು ನೆನಪು ಮಾಡಿರಿ. ನೆನಪಿನಿಂದಲೇ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೀವಿಲ್ಲಿ ಮನುಷ್ಯರಿಂದ ದೇವತೆ ಅಥವಾ ಪತಿತರಿಂದ ಪಾವನರಾಗಲು ಬರುತ್ತೀರಿ. ಈಗ ಇದು ರಾವಣ ರಾಜ್ಯವಾಗಿದೆ. ಭಕ್ತಿಯಲ್ಲಿ ರಾವಣ ರಾಜ್ಯವು ಆರಂಭವಾಗುತ್ತದೆ. ಭಕ್ತಿ ಮಾಡುವವರೆಲ್ಲರೂ ರಾವಣನ ಬಂಧನದಲ್ಲಿದ್ದಾರೆ, ಇಡೀ ಪ್ರಪಂಚವು 5 ವಿಕಾರಗಳೆಂಬ ರಾವಣನ ಬಂಧನದಲ್ಲಿದೆ, ಶೋಕವಾಟಿಕೆಯಲ್ಲಿದೆ. ತಂದೆಯು ಬಂದು ಎಲ್ಲರನ್ನೂ ಬಿಡುಗಡೆ ಮಾಡಿ ಮಾರ್ಗದರ್ಶಕನಾಗಿ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ, ಅದಕ್ಕಾಗಿಯೇ ಈ ಮಹಾಭಾರತ ಯುದ್ಧವಿದೆ. ಇದು 5000 ವರ್ಷಗಳ ಮೊದಲೂ ಸಹ ನಡೆದಿತ್ತು, ಈಗ ತಂದೆಯು ಪುನಃ ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಯಾರಿಗೆ ಬಹಳಷ್ಟು ಹಣವಿದೆಯೋ ಅವರು ಸ್ವರ್ಗದಲ್ಲಿದ್ದಾರೆಂದಲ್ಲ. ಈಗ ಇರುವುದೇ ನರಕವಾಗಿದೆ. ಪತಿತ-ಪಾವನ ಎಂದು ತಂದೆಗೆ ಹೇಳಲಾಗುತ್ತದೆ, ನದಿಗಳಿಗಲ್ಲ. ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಈ ಮಾತುಗಳನ್ನು ತಂದೆಯೇ ಬಂದು ತಿಳಿಸುತ್ತಾರೆ. ಇದನ್ನಂತೂ ತಿಳಿದುಕೊಂಡಿದ್ದೀರಿ, ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ, ಮೂರನೆಯವರು ಅಲೌಕಿಕ ತಂದೆಯಾಗಿದ್ದಾರೆ. ಈಗ ಪಾರಲೌಕಿಕ ತಂದೆಯು ಬ್ರಹ್ಮಾರವರ ಮೂಲಕ ಬ್ರಾಹ್ಮಣ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಬ್ರಾಹ್ಮಣರನ್ನು ದೇವತೆಗಳನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ಆತ್ಮವೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವೇ ಹೇಳುತ್ತದೆ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ. ಇದರಿಂದ ನೀವು ಪಾವನರಾಗುತ್ತೀರಿ. ಯಾವುದೇ ದೇಹಧಾರಿಗಳನ್ನು ನೆನಪು ಮಾಡಬೇಡಿ. ಈಗ ಮೃತ್ಯುಲೋಕದ ಅಂತ್ಯವಾಗಿದೆ, ಅಮರಲೋಕದ ಸ್ಥಾಪನೆಯಾಗುತ್ತಿದೆ. ಉಳಿದೆಲ್ಲಾ ಅನೇಕ ಧರ್ಮಗಳು ಸಮಾಪ್ತಿಯಾಗುತ್ತವೆ. ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿತ್ತು ನಂತರ ಚಂದ್ರವಂಶಿ ರಾಮ-ಸೀತೆಯು ತ್ರೇತಾಯುಗದಲ್ಲಿದ್ದರು. ನೀವು ಮಕ್ಕಳಿಗೆ ಇಡೀ ಚಕ್ರದ ನೆನಪು ತರಿಸುತ್ತಾರೆ. ಶಾಂತಿಧಾಮ ಮತ್ತು ಸುಖಧಾಮದ ಸ್ಥಾಪನೆಯನ್ನು ತಂದೆಯೇ ಮಾಡುತ್ತಾರೆ, ಮನುಷ್ಯರು ಮನುಷ್ಯರಿಗೆ ಸದ್ಗತಿ ನೀಡಲು ಸಾಧ್ಯವಿಲ್ಲ. ಅವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. |
ನೀವೀಗ ಈಶ್ವರೀಯ ಸಂತಾನರಾಗಿದ್ದೀರಿ, ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದೀರಿ. ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಪ್ರಜೆಗಳಂತೂ ಅನೇಕರು ತಯಾರಾಗುವರು ಆದರೆ ಕೋಟಿಯಲ್ಲಿ ಕೆಲವರೇ ರಾಜರಾಗುತ್ತಾರೆ. ಸತ್ಯಯುಗಕ್ಕೆ ಹೂವಿನ ಉದ್ಯಾನ ವನವೆಂದು ಹೇಳಲಾಗುತ್ತದೆ. ಈಗ ಮುಳ್ಳುಗಳ ಕಾಡಾಗಿದೆ. ರಾವಣ ರಾಜ್ಯವು ಬದಲಾಗುತ್ತಿದೆ. ವಿನಾಶವಾಗಲಿದೆ, ಈ ಜ್ಞಾನವು ಈಗ ನಿಮಗೆ ಸಿಗುತ್ತಿದೆ, ಲಕ್ಷ್ಮೀ-ನಾರಾಯಣರಿಗೆ ಈ ಜ್ಞಾನವಿರುವುದಿಲ್ಲ. ಇದು ಪ್ರಾಯಲೋಪ ಆಗಿ ಬಿಡುತ್ತದೆ. ಭಕ್ತಿಮಾರ್ಗದಲ್ಲಿ ತಂದೆಯನ್ನು ಯಾರೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ತಂದೆಯು ರಚಯಿತನಾಗಿದ್ದಾರೆ, ಬ್ರಹ್ಮಾ-ವಿಷ್ಣು-ಶಂಕರನೂ ಸಹ ರಚಯಿತನಾಗಿದ್ದಾನೆ, ಸರ್ವವ್ಯಾಪಿ ಎಂದು ಹೇಳಿದರೆ ಆಸ್ತಿಯ ಅಧಿಕಾರವೇ ಸಮಾಪ್ತಿಯಾಗುತ್ತದೆ. ತಂದೆಯು ಬಂದು ಎಲ್ಲರಿಗೆ ಆಸ್ತಿಯನ್ನು ಕೊಡುತ್ತಾರೆ. ಯಾರು ಮೊಟ್ಟ ಮೊದಲು ಸತ್ಯಯುಗದಲ್ಲಿ ಬರುವರೋ ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಕ್ರಿಶ್ಚಿಯನ್ನರು ಹೆಚ್ಚೆಂದರೆ 40 ಜನ್ಮಗಳನ್ನು ತೆಗೆದುಕೊಳ್ಳಬಹುದು. ಒಬ್ಬ ಭಗವಂತನನ್ನು ಹುಡುಕುವುದಕ್ಕಾಗಿ ಎಷ್ಟೊಂದು ಪರಿಶ್ರಮ ಪಡುತ್ತಾರೆ. ಈಗ ನಿಮಗೆ ಯಾವುದೇ ಪರಿಶ್ರಮವಿಲ್ಲ, ಒಬ್ಬ ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ಇದು ಯಾತ್ರೆಯಾಗಿದೆ. ಇದು ಈಶ್ವರೀಯ ವಿಶ್ವವಿದ್ಯಾಲಯವಾಗಿದೆ. ನೀವಾತ್ಮರು ಓದುತ್ತೀರಿ, ಸಾಧು-ಸಂತರು ಆತ್ಮವು ನಿರ್ಲೇಪವೆಂದು ಹೇಳುತ್ತಾರೆ ಆದರೆ ಆತ್ಮವೇ ಕರ್ಮಗಳ ಅನುಸಾರ ಇನ್ನೊಂದು ಜನ್ಮವನ್ನು ತೆಗೆದುಕೊಳ್ಳುತ್ತದೆ. ಆತ್ಮವೇ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳನ್ನು ಮಾಡುತ್ತದೆ. ಈ ಸಮಯದಲ್ಲಿ (ಕಲಿಯುಗದಲ್ಲಿ) ನಿಮ್ಮ ಕರ್ಮಗಳು ವಿಕರ್ಮಗಳಾಗುತ್ತವೆ. ಸತ್ಯಯುಗದಲ್ಲಿ ಕರ್ಮವು ಅಕರ್ಮವಾಗುತ್ತದೆ. ಅಲ್ಲಿ ವಿಕರ್ಮವಾಗುವುದಿಲ್ಲ, ಅದು ಪುಣ್ಯಾತ್ಮರ ಪ್ರಪಂಚವಾಗಿದೆ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಒಬ್ಬ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಶ್ರೇಷ್ಠ ಕರ್ಮಗಳನ್ನೇ ಮಾಡಬೇಕಾಗಿದೆ. ತಂದೆಯು ಸಿಕ್ಕಿದ್ದಾರೆ ಅಂದಮೇಲೆ ಯಾವುದೇ ಪ್ರಕಾರದ ಪೆಟ್ಟು ತಿನ್ನಬಾರದು ಅರ್ಥಾತ್ ಹುಡುಕಾಡಬಾರದು. |
2. ತಂದೆಯು ಯಾವ ಸ್ಮೃತಿ ತರಿಸಿದ್ದಾರೆಯೋ ಅದನ್ನು ಸ್ಮೃತಿಯಲ್ಲಿ ಇಟ್ಟುಕೊಂಡು ಅಪಾರ ಖುಷಿಯಲ್ಲಿ ಇರಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. |
ಓಂ ಶಾಂತಿ. ಆತ್ಮಿಕ ಪಾಠಶಾಲೆಯಲ್ಲಿ ಆತ್ಮಿಕ ತಂದೆಯ ಮುಂದೆ ಆತ್ಮಿಕ ಮಕ್ಕಳು ಕುಳಿತಿದ್ದೀರಿ. ಇದು ಲೌಕಿಕ ಪಾಠಶಾಲೆಯಲ್ಲ, ಆತ್ಮಿಕ ಪಾಠಶಾಲೆಯಲ್ಲಿ ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಪುನಃ ನರನಿಂದ ನಾರಾಯಣ ಅಥವಾ ದೇವಿ-ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಆತ್ಮಿಕ ತಂದೆಯ ಬಳಿ ಕುಳಿತಿದ್ದೇವೆ, ಇದು ಹೊಸ ಮಾತಾಗಿದೆ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರು ಡಬಲ್ ಕಿರೀಟಧಾರಿಗಳಾಗಿದ್ದರು, ಪ್ರಕಾಶತೆಯ ಕಿರೀಟ ಮತ್ತು ರತ್ನಜಡಿತ ಕಿರೀಟ ಎರಡೂ ಇತ್ತು. ಮೊಟ್ಟ ಮೊದಲು ಪ್ರಕಾಶತೆಯ ಕಿರೀಟವಿರುತ್ತದೆ. ಯಾರು ಇದ್ದು ಹೋದರೋ ಅವರಿಗೆ ಶ್ವೇತ ಪ್ರಕಾಶವನ್ನು ತೋರಿಸುತ್ತಾರೆ, ಇದು ಪವಿತ್ರತೆಯ ಸಂಕೇತವಾಗಿದೆ. ಅಪವಿತ್ರರಿಗೆ ಎಂದೂ ಪ್ರಕಾಶತೆಯನ್ನು ತೋರಿಸುವುದಿಲ್ಲ. ನಿಮ್ಮ ಭಾವಚಿತ್ರವನ್ನು ತೆಗೆದರೆ ಅದರಲ್ಲಿ ಪ್ರಕಾಶತೆಯ ಕಿರೀಟವನ್ನು ತೋರಿಸುವುದಿಲ್ಲ. ಇದು ಪವಿತ್ರತೆಯ ಸಂಕೇತವಾಗಿ ತೋರಿಸುತ್ತಾರೆ. ಬೆಳಕು ಮತ್ತು ಕತ್ತಲೆ. ಬ್ರಹ್ಮನ ದಿನ, ಬೆಳಕು. ಬ್ರಹ್ಮನ ರಾತ್ರಿ ಕತ್ತಲೆ. ಕತ್ತಲೆ ಅರ್ಥಾತ್ ಅವರ ಮೇಲೆ ಪ್ರಕಾಶತೆಯಿಲ್ಲ. ನೀವು ತಿಳಿದುಕೊಂಡಿದ್ದೀರಿ - ತಂದೆಯೇ ಬಂದು ಇಷ್ಟು ಯಾರೆಲ್ಲಾ ಪತಿತರು ಅರ್ಥಾತ್ ಕತ್ತಲೆಯೇ ಕತ್ತಲೆಯಿದೆಯೋ ಅವರನ್ನು ಪಾವನರನ್ನಾಗಿ ಮಾಡುತ್ತಾರೆ. ಈಗಂತೂ ಪವಿತ್ರ ರಾಜಧಾನಿಯೇ ಇಲ್ಲ, ಸತ್ಯಯುಗದಲ್ಲಿ ಯಥಾರಾಜ-ರಾಣಿ ತಥಾಪ್ರಜೆ ಎಲ್ಲರೂ ಪವಿತ್ರರಾಗಿದ್ದರು. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇದರ ಮೇಲೆ ನೀವು ಮಕ್ಕಳು ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಇದು ನಿಮ್ಮ ಗುರಿ-ಧ್ಯೇಯವಾಗಿದೆ. ತಿಳಿಸುವುದಕ್ಕಾಗಿ ಇನ್ನೂ ಒಳ್ಳೊಳ್ಳೆಯ ಚಿತ್ರಗಳಿವೆ ಆದ್ದರಿಂದ ಇಷ್ಟೊಂದು ಚಿತ್ರಗಳನ್ನು ಇಡಲಾಗುತ್ತದೆ. ಮನುಷ್ಯರು ನಾವು ನೆನಪಿನ ಯಾತ್ರೆಯಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೇವೆ. ನಂತರ ಮುಕ್ತಿ-ಜೀವನ್ಮುಕ್ತಿಯಲ್ಲಿ ಹೋಗುತ್ತೇವೆಂದು ಕೂಡಲೇ ತಿಳಿದುಕೊಳ್ಳುವುದಿಲ್ಲ. ಜೀವನ್ಮುಕ್ತಿಯೆಂದು ಯಾವುದಕ್ಕೆ ಹೇಳಲಾಗುತ್ತದೆ ಎಂದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಇತ್ತೆಂಬುದು ಯಾರಿಗೂ ಗೊತ್ತಿಲ್ಲ. ನಾವು ತಂದೆಯಿಂದ ಪವಿತ್ರತೆಯ ದೈವೀ ಸ್ವರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಈಗ ನಿಮಗೆ ತಿಳಿದಿದೆ. ಚಿತ್ರಗಳ ಮೇಲೆ ನೀವು ಬಹಳ ಚೆನ್ನಾಗಿ ತಿಳಿಸಬಹುದು. ಭಾರತದಲ್ಲಿಯೇ ಡಬಲ್ ಕಿರೀಟಧಾರಿಗಳ ಪೂಜೆ ಮಾಡುತ್ತಾರೆ. ಇಂತಹ ಚಿತ್ರವು ಏಣಿಯ ಚಿತ್ರದಲ್ಲಿದೆ. ಸ್ಥೂಲವಾದ ಕಿರೀಟವಿದೆ ಆದರೆ ಪ್ರಕಾಶತೆಯ ಕಿರೀಟವಿಲ್ಲ, ಪವಿತ್ರರಿಗೇ ಪೂಜೆಯಾಗುತ್ತದೆ. ಪ್ರಕಾಶತೆಯು ಪವಿತ್ರತೆಯ ಸಂಕೇತವಾಗಿದೆ ಆದರೆ ಯಾರಾದರೂ ಸಿಂಹಾಸನದ ಮೇಲೆ ಕುಳಿತುಕೊಳ್ಳುತ್ತಿದ್ದಂತೆಯೇ ಬೆಳಕು ಬರುತ್ತದೆ ಎಂದಲ್ಲ, ಇದು ಪವಿತ್ರತೆಯ ಸಂಕೇತವಾಗಿದೆ. ನೀವೀಗ ಪುರುಷಾರ್ಥಿಗಳಾಗಿದ್ದೀರಿ ಆದ್ದರಿಂದ ನಿಮಗೆ ಪ್ರಕಾಶವನ್ನು ತೋರಿಸಲು ಸಾಧ್ಯವಿಲ್ಲ. ದೇವಿ-ದೇವತೆಗಳಿಗೆ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುತ್ತದೆ, ಇಲ್ಲಂತೂ ಯಾರಿಗೂ ಪವಿತ್ರ ಶರೀರವಿಲ್ಲ ಆದ್ದರಿಂದ ಪ್ರಕಾಶತೆಯನ್ನು ತೋರಿಸುವಂತಿಲ್ಲ. ನಿಮ್ಮಲ್ಲಿಯೂ ಕೆಲವರು ಪೂರ್ಣ ಪವಿತ್ರರಾಗಿರುತ್ತಾರೆ, ಕೆಲವರು ಅರ್ಧಂಬರ್ಧ ಪವಿತ್ರರಾಗಿರುತ್ತಾರೆ. ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಅಂತಹವರಿಗೆ ಅರ್ಧ ಪವಿತ್ರರೆಂದು ಹೇಳಲಾಗುತ್ತದೆ. ಕೆಲವರಂತೂ ಒಮ್ಮೆಲೆ ಪತಿತರಾಗಿ ಬಿಡುತ್ತಾರೆ. ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಸ್ವಯಂ ತಿಳಿದುಕೊಳ್ಳುತ್ತಾರೆ. ಆತ್ಮವೇ ಪತಿತನಾಗುತ್ತದೆ ಅದಕ್ಕೆ ಪ್ರಕಾಶತೆಯನ್ನು ತೋರಿಸುವಂತಿಲ್ಲ. |
ನೀವು ಮಕ್ಕಳು ಇದನ್ನು ಮರೆಯಬಾರದು- ನಾವು ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಎಷ್ಟೊಂದು ಘನತೆಯಿರಬೇಕು. ತಿಳಿದುಕೊಳ್ಳಿ - ಯಾರಾದರೂ ಕೂಲಿ ಕಾರ್ಮಿಕರಾಗಿದ್ದಾರೆ, ಅವರು ಎಂ.ಎಲ್, ಎ., ಎಂ.ಪಿ., ಆಗಿ ಬಿಡುತ್ತಾರೆ ಅಥವಾ ವಿದ್ಯೆಯನ್ನು ಓದಿ ಯಾವುದಾದರೂ ಪದವಿಯನ್ನು ಪಡೆಯುತ್ತಾರೆಂದರೆ ಟಿಪ್ಟಾಪ್ ಆಗಿ ಬಿಡುತ್ತಾರೆ. ಇಂತಹವರು ಅನೇಕರು ಇದ್ದು ಹೋಗಿದ್ದಾರೆ. ಭಲೆ ಜಾತಿಯು ಅದೇ ಆಗಿರುತ್ತದೆ ಆದರೆ ಪದವಿ ಸಿಕ್ಕಿದರೆ ನಶೆ ಏರಿ ಬಿಡುತ್ತದೆ. ಮತ್ತೆ ಅದರಂತೆಯೇ ಅವರು ಉಡುಪುಗಳನ್ನು ಧರಿಸುತ್ತಾರೆ. ಹಾಗೆಯೇ ನೀವೂ ಸಹ ಈಗ ಪತಿತರಿಂದ ಪಾವನರಾಗುವುದಕ್ಕಾಗಿ ಓದುತ್ತಿದ್ದೀರಿ. ಅವರೂ ಸಹ ವಿದ್ಯೆಯಿಂದ ವೈದ್ಯರು, ವಕೀಲರು ಆಗುತ್ತಾರೆ ಆದರೆ ಪತಿತರೇ ಆಗಿದ್ದಾರಲ್ಲವೆ ಏಕೆಂದರೆ ಅವರ ವಿದ್ಯೆಯು ಪಾವನರಾಗುವುದಕ್ಕಾಗಿ ಅಲ್ಲ. ನಾವು ಭವಿಷ್ಯದಲ್ಲಿ ಪವಿತ್ರ ದೇವಿ-ದೇವತೆಗಳಾಗುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ಶೂದ್ರರ ಹವ್ಯಾಸಗಳು ಕಳೆಯುತ್ತಾ ಹೋಗುವವು. ಆಂತರ್ಯದಲ್ಲಿ ಈ ನಶೆಯಿರಲಿ - ಪರಮಪಿತ ಪರಮಾತ್ಮನು ನಮ್ಮನ್ನು ಡಬಲ್ ಕಿರೀಟಧಾರಿಗಳನ್ನಾಗಿ ಮಾಡುತ್ತಾರೆ, ನಾವು ಶೂದ್ರರಿಂದ ಬ್ರಾಹ್ಮಣರಾಗುತ್ತೇವೆ ನಂತರ ದೇವತೆಗಳಾಗುತ್ತೇವೆ. ಇದು ನೆನಪಿದ್ದಾಗ ಆ ಕೊಳಕು ವಿಕಾರಿ ಹವ್ಯಾಸಗಳು ಕಳೆಯುತ್ತಾ ಹೋಗುತ್ತವೆ. ಆಸುರೀ ಪದಾರ್ಥಗಳು ತಿನ್ನುವುದನ್ನು ಬಿಡಬೇಕಾಗಿದೆ. ಕೂಲಿ ಮಾಡುವವರು ಎಂ.ಪಿ., ಆಗಿ ಬಿಡುತ್ತಾರೆಂದರೆ ಅವರ ರೀತಿ ನೀತಿ, ಮನೆ ಎಲ್ಲವೂ ಬಹಳ ಬದಲಾವಣೆ ಆಗಿ ಬಿಡುತ್ತದೆ. ಅವರದಂತೂ ಈ ಸಮಯಕ್ಕಾಗಿ ಪದವಿಯಿದೆ, ನೀವು ತಿಳಿದುಕೊಂಡಿದ್ದೀರಿ - ನಾವು ಭವಿಷ್ಯದಲ್ಲಿ ಏನಾಗಲಿದ್ದೇವೆ! ತಮ್ಮ ಜೊತೆ ಹೀಗೀಗೆ ಮಾತನಾಡಿಕೊಳ್ಳಬೇಕು, ನಾವು ಹೇಗಿದ್ದೆವು, ಈಗ ಏನಾಗಿದ್ದೇವೆ! ನೀವು ಶೂದ್ರ ಜಾತಿಯವರಾಗಿದ್ದಿರಿ, ಈಗ ವಿಶ್ವದ ಮಾಲೀಕರಾಗುತ್ತೀರಿ. ಯಾರಾದರೂ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆಂದರೆ ಮತ್ತೆ ಆ ನಶೆಯಿರುತ್ತದೆ ಅಂದಮೇಲೆ ನೀವು ಏನಾಗಿದ್ದಿರಿ? (ಪತಿತರು) ಛೀ ಛೀ ಆಗಿದ್ದಿರಿ. ಈಗ ನಿಮಗೆ ಭಗವಂತನು ಓದಿಸಿ ಬೇಹದ್ದಿನ ಮಾಲೀಕರನ್ನಾಗಿ ಮಾಡುತ್ತಾರೆ. ಇದನ್ನೂ ನೀವು ತಿಳಿದುಕೊಳ್ಳುತ್ತೀರಿ, ಪರಮಪಿತ ಪರಮಾತ್ಮನು ಅವಶ್ಯವಾಗಿ ಇಲ್ಲಿಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ಮೂಲವತನ, ಸೂಕ್ಷ್ಮವತನದಲ್ಲಿ ಕಲಿಸುವುದಿಲ್ಲ. ನೀವೆಲ್ಲರೂ ದೂರದೇಶದಲ್ಲಿ ಇರುವ ಆತ್ಮರಾಗಿದ್ದೀರಿ, ಇಲ್ಲಿಗೇ ಬಂದು ಪಾತ್ರವನ್ನು ಅಭಿನಯಿಸುತ್ತೀರಿ. 84 ಜನ್ಮಗಳ ಪಾತ್ರವನ್ನು ಅಭಿನಯಿಸಲೇಬೇಕಾಗಿದೆ. ಮನುಷ್ಯರಂತೂ 84 ಲಕ್ಷ ಯೋನಿಗಳೆಂದು ಹೇಳಿ ಬಿಡುತ್ತಾರೆ. ಎಷ್ಟು ಘೋರ ಅಂಧಕಾರದಲ್ಲಿದ್ದಾರೆ. ನೀವೀಗ ತಿಳಿದುಕೊಳ್ಳುತ್ತೀರಿ, 5000 ವರ್ಷಗಳ ಮೊದಲು ನಾವು ದೇವಿ-ದೇವತೆಗಳಾಗಿದ್ದೆವು, ಈಗಂತೂ ಪತಿತರಾಗಿ ಬಿಟ್ಟಿದ್ದೀರಿ. ಹೇ ಪತಿತ-ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಹಾಡುತ್ತಾರೆ ಆದರೆ ತಿಳಿದುಕೊಳ್ಳುವುದಿಲ್ಲ. ಈಗ ತಂದೆಯು ಸ್ವಯಂ ಪಾವನರನ್ನಾಗಿ ಮಾಡಲು ಬಂದಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ. ವಿದ್ಯೆಯಿಲ್ಲದೆ ಯಾರೂ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮಗೆ ಓದಿಸಿ ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ, ಗುರಿ-ಧ್ಯೇಯವು ಸನ್ಮುಖದಲ್ಲಿದೆ. ಪ್ರಜಾಪದವಿಯು ನಿಮ್ಮ ಗುರಿ-ಧ್ಯೇಯವಲ್ಲ, ಲಕ್ಷ್ಮೀ-ನಾರಾಯಣರ ಚಿತ್ರವೂ ಇದೆ. ಇಂತಹ ಚಿತ್ರಗಳನ್ನು ಮತ್ತೆಲ್ಲಿಯಾದರೂ ಇಟ್ಟು ಓದಿಸುವವರಿದ್ದಾರೆಯೇ? ನಾವು 84 ಜನ್ಮಗಳನ್ನು ತೆಗೆದುಕೊಂಡು ಪತಿತರಾಗಿದ್ದೇವೆ ಎಂದು ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ, ಏಣಿಯ ಚಿತ್ರವು ಬಹಳ ಚೆನ್ನಾಗಿದೆ. ಇದು ಪತಿತ ಪ್ರಪಂಚ ಅಲ್ಲವೆ, ಇದರಲ್ಲಿ ಸಾಧು-ಸಂತ ಎಲ್ಲರೂ ಬಂದು ಬಿಡುತ್ತಾರೆ. ಪತಿತ-ಪಾವನ ಬನ್ನಿ ಎಂದು ಅವರೂ ಸಹ ಹಾಡುತ್ತಿರುತ್ತಾರೆ, ಪತಿತ ಪ್ರಪಂಚಕ್ಕೆ ಪಾವನವೆಂದು ಹೇಳುವುದಿಲ್ಲ. ಹೊಸ ಪ್ರಪಂಚವು ಪಾವನ ಪ್ರಪಂಚವಾಗಿದೆ, ಹಳೆಯ ಪತಿತ ಪ್ರಪಂಚದಲ್ಲಿ ಯಾರೂ ಪಾವನರಿರಲು ಸಾಧ್ಯವಿಲ್ಲ. ಅಂದಮೇಲೆ ನೀವು ಮಕ್ಕಳಿಗೆ ಎಷ್ಟೊಂದು ನಶೆಯಿರಬೇಕು! ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ, ಈಶ್ವರನು ನಮಗೆ ಓದಿಸುತ್ತಾರೆ. ತಂದೆಯು ಬಡವರಿಗೇ ಬಂದು ಓದಿಸುತ್ತಾರೆ, ಬಡವರ ವಸ್ತ್ರಗಳು ಮೈಲಿಗೆ ಆಗಿರುತ್ತದೆಯಲ್ಲವೆ. ನಿಮ್ಮ ಆತ್ಮವೇ ಓದುತ್ತದೆ. ಆತ್ಮಕ್ಕೆ ತಿಳಿದಿದೆ, ಇದು ಹಳೆಯ ಶರೀರವಾಗಿದೆ, ಇದಕ್ಕೆ ಎಂತಹುದೇ ಸಡಿಲ ಸಾಧಾರಣ ವಸ್ತ್ರಗಳನ್ನು ತೊಡಿಸಿದರೂ ಪರವಾಗಿಲ್ಲ. ಇಲ್ಲಿ ಯಾವುದೇ ವೇಷ ಭೂಷಣಗಳನ್ನು ಬದಲಾಯಿಸುವ ಆಡಂಬರದಿಂದ ಇರುವ ಮಾತಿಲ್ಲ. ಉಡುಪುಗಳ ಜೊತೆ ಯಾವುದೇ ಸಂಬಂಧವೇ ಇಲ್ಲ. ತಂದೆಯಂತೂ ಆತ್ಮರಿಗೇ ಓದಿಸುತ್ತಾರೆ, ಶರೀರವು ಪತಿತವಾಗಿದೆ, ಇದಕ್ಕೆ ಎಷ್ಟಾದರೂ ಒಳ್ಳೆಯ ವಸ್ತ್ರವನ್ನು ಧರಿಸಿ ಆದರೆ ಆತ್ಮ ಮತ್ತು ಶರೀರವು ಪತಿತವಾಗಿದೆಯಲ್ಲವೆ. ಕೃಷ್ಣನನ್ನು ಕಪ್ಪಾಗಿ ತೋರಿಸುತ್ತಾರಲ್ಲವೆ. ಅವರ ಆತ್ಮ ಮತ್ತು ಶರೀರ ಎರಡೂ ಕಪ್ಪಾಗಿತ್ತು, ಗೊಲ್ಲ ಬಾಲಕನಾಗಿದ್ದನು ಎಂದು ಹೇಳುತ್ತಾರೆ. ವಾಸ್ತವದಲ್ಲಿ ನೀವೆಲ್ಲರೂ ಸಾಧಾರಣರಾಗಿದ್ದೀರಿ, ಪ್ರಪಂಚದಲ್ಲಿ ಮನುಷ್ಯ ಮಾತ್ರರು ನಿರ್ಗಧಿಕರಾಗಿದ್ದಾರೆ. ತಂದೆಯನ್ನೇ ಅರಿತುಕೊಂಡಿಲ್ಲ. ಲೌಕಿಕ ತಂದೆಯಂತೂ ಎಲ್ಲರಿಗೂ ಇದ್ದಾರೆ, ಬೇಹದ್ದಿನ ತಂದೆಯು ನೀವು ಬ್ರಾಹ್ಮಣರಿಗೇ ಸಿಕ್ಕಿದ್ದಾರೆ, ಈಗ ಬೇಹದ್ದಿನ ತಂದೆಯು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಭಕ್ತಿ ಮತ್ತು ಜ್ಞಾನ. ಭಕ್ತಿಯ ಅಂತ್ಯವಾದಾಗ ಮತ್ತೆ ತಂದೆಯು ಬಂದು ಜ್ಞಾನವನ್ನು ಕೊಡುವರು. ಈಗ ಅಂತಿಮವಾಗಿದೆ, ಸತ್ಯಯುಗದಲ್ಲಿ ಇದೇನೂ ಇರುವುದಿಲ್ಲ. ಈಗ ಹಳೆಯ ಪ್ರಪಂಚದ ವಿನಾಶವು ಬಹಳ ಸಮೀಪದಲ್ಲಿದೆ, ಪಾವನ ಪ್ರಪಂಚಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಚಿತ್ರಗಳಲ್ಲಿ ಎಷ್ಟು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಧೆ-ಕೃಷ್ಣರೇ ನಂತರ ಲಕ್ಷ್ಮೀ-ನಾರಾಯಣನಾಗುತ್ತಾರೆ. ಇದೂ ಸಹ ಯಾರಿಗೂ ತಿಳಿದಿಲ್ಲ. ನೀವು ತಿಳಿದುಕೊಂಡಿದ್ದೀರಿ - ಇಬ್ಬರೂ ಬೇರೆ-ಬೇರೆ ರಾಜ್ಯದವರಾಗಿದ್ದರು, ನೀವು ಸ್ವರ್ಗದ ಸ್ವಯಂವರವನ್ನೂ ನೋಡಿದ್ದೀರಿ. ಪಾಕೀಸ್ತಾನದಲ್ಲಿ ನೀವು ಮಕ್ಕಳನ್ನು ಖುಷಿ ಪಡಿಸುವುದಕ್ಕಾಗಿ ಎಲ್ಲಾ ಸಾಕ್ಷಾತ್ಕಾರಗಳು ನಿಮಗೆ ಆಗುತ್ತಿತ್ತು. |
ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆಂದು ನೀವೀಗ ತಿಳಿದುಕೊಂಡಿದ್ದೀರಿ ಅಂದಮೇಲೆ ಇದನ್ನು ಮರೆಯಬಾರದು. ಭಲೆ ಅಡಿಗೆ ಮಾಡುತ್ತಿರಲಿ ಅಥವಾ ಪಾತ್ರೆ ತೊಳೆಯುತ್ತಿರಲಿ ಆದರೆ ಎಲ್ಲರ ಆತ್ಮವೇ ಓದುತ್ತದೆಯಲ್ಲವೆ! ಇಲ್ಲಿ ಎಲ್ಲರೂ ಬಂದು ಕುಳಿತುಕೊಳ್ಳುತ್ತಾರೆ ಆದ್ದರಿಂದ ಇಲ್ಲಿ ಎಲ್ಲರೂ ಬಡವರೇ ಇದ್ದಾರೆ, ನಮಗೆ ಸಂಕೋಚವಾಗುತ್ತದೆ ಎಂದು ದೊಡ್ಡ-ದೊಡ್ಡ ವ್ಯಕ್ತಿಗಳು ಬರುವುದೆ ಇಲ್ಲ. ತಂದೆಯು ಬಡವರ ಬಂಧುವಾಗಿದ್ದಾರೆ, ಕೆಲವು ಸೇವಾಕೇಂದ್ರಗಳಲ್ಲಿ ಕೂಲಿ ಮಾಡುವವರು ಬಂದು ಬಿಡುತ್ತಾರೆ, ಕೆಲವರು ಮುಸಲ್ಮಾನರೂ ಬರುತ್ತಾರೆ. ತಂದೆಯು ತಿಳಿಸುತ್ತಾರೆ - ದೇಹದ ಎಲ್ಲಾ ಧರ್ಮಗಳನ್ನು ಬಿಡಿ, ನಾವು ಗುಜರಾತಿಯಾಗಿದ್ದೇನೆ, ನಾನು ಇಂತಹವನಾಗಿದ್ದೇನೆ ಇದೆಲ್ಲವೂ ದೇಹಾಭಿಮಾನವಾಗಿದೆ. ಇಲ್ಲಂತೂ ಆತ್ಮರಿಗೆ ಪರಮಾತ್ಮನು ಓದಿಸುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬಂದಿದ್ದೇನೆ ಅಂದಮೇಲೆ ಸಾಧಾರಣರ ಬಳಿ ಸಾಧಾರಣರೇ ಬರುತ್ತಾರೆ. ಇದಂತೂ ತಿಳಿದಿದೆ, ಇವರು ವಜ್ರ ವ್ಯಾಪಾರಿಯಾಗಿದ್ದರು, ಸ್ವಯಂ ತಂದೆಯೂ ಸಹ ಪುನಃ ನೆನಪಿಗೆ ತರಿಸುತ್ತಾರೆ - ಕಲ್ಪದ ಮೊದಲೂ ನಾನು ಹೇಳಿದ್ದೆನು - ನಾನು ಸಾಧಾರಣ ವೃದ್ಧ ತನುವಿನಲ್ಲಿ ಬರುತ್ತೇನೆ. ಇವರ ಅನೇಕ ಜನ್ಮಗಳ ಅಂತಿಮದಲ್ಲಿಯೂ ಅಂತಿಮ ಜನ್ಮದಲ್ಲಿ ನಾನು ಪ್ರವೇಶ ಮಾಡುತ್ತೇನೆ. ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲವೆಂದು ತಂದೆಯು ಇವರಿಗೆ ಹೇಳುತ್ತಾರೆ. ಕೇವಲ ಕುದುರೆ ಗಾಡಿಯ ರಥದಲ್ಲಿ ಒಬ್ಬ ಅರ್ಜುನನಿಗೆ ಜ್ಞಾನವನ್ನು ಕೊಡಲಿಲ್ಲ, ಅದಕ್ಕೆ ಪಾಠಶಾಲೆಯೆಂದು ಹೇಳಲಾಗುವುದಿಲ್ಲ. ಯುದ್ಧದ ಮೈದಾನವೂ ಇರಲಿಲ್ಲ, ಇದು ವಿದ್ಯೆಯಾಗಿದೆ. ಮಕ್ಕಳು ವಿದ್ಯೆಯ ಮೇಲೆ ಪೂರ್ಣ ಗಮನ ಕೊಡಬೇಕಾಗಿದೆ. ನಾವು ಪೂರ್ಣ ಓದಿ ಡಬಲ್ ಕಿರೀಟಧಾರಿಗಳು ಆಗಬೇಕಾಗಿದೆ. ಈಗಂತೂ ಯಾವುದೇ ಕಿರೀಟವಿಲ್ಲ. ಭವಿಷ್ಯದಲ್ಲಿ ಡಬಲ್ ಕಿರೀಟಧಾರಿಗಳು ಆಗಬೇಕಾಗಿದೆ. ದ್ವಾಪರದಿಂದ ಪ್ರಕಾಶತೆಯ ಕಿರೀಟವು ಹೊರಟು ಹೋಗುತ್ತದೆ, ಕೇವಲ ಸಿಂಗಲ್ ಕಿರೀಟವಿರುತ್ತದೆ. ಸಿಂಗಲ್ ಕಿರೀಟವಿರುವವರು ಡಬಲ್ ಕಿರೀಟಧಾರಿಗಳಿಗೆ ಪೂಜಿಸುತ್ತಾರೆ. ಇದೂ ಸಹ ಚಿಹ್ನೆಯು ಅವಶ್ಯವಾಗಿ ಇರಬೇಕು. ತಂದೆಯು ಚಿತ್ರಗಳಿಗಾಗಿ ಸಲಹೆ ನೀಡುತ್ತಾ ಇರುತ್ತಾರೆ - ಚಿತ್ರಗಳನ್ನು ಮಾಡಿಸುವವರಿಗೆ ಮುರುಳಿಯ ಮೇಲೆ ಬಹಳ ಗಮನ ಕೊಡಬೇಕಾಗಿದೆ. ಚಿತ್ರಗಳಲ್ಲಿ ಯಾರಿಗೇ ಇರಲಿ ತಿಳಿಸುವುದು ಬಹಳ ಸಹಜವಾಗುತ್ತದೆ. ಹೇಗೆ ಕಾಲೇಜಿನಲ್ಲಿ ನಕ್ಷೆಯನ್ನು ತೋರಿಸಿದರೆ ಸಾಕು, ಬುದ್ಧಿಯಲ್ಲಿ ಬಂದು ಬಿಡುತ್ತದೆ - ಯುರೋಪ್ ಅತ್ತ ಕಡೆ ಇದೆ, ದ್ವೀಪವಿದೆ, ಇತ್ತ ಕಡೆ ಲಂಡನ್ ಇದೆ, ನಕ್ಷೆಯನ್ನೇ ನೋಡದಿದ್ದರೂ ಯುರೋಪ್ ಎಲ್ಲಿದೆ ಎಂದು ಅವರಿಗೇನು ತಿಳಿಯುತ್ತದೆ! ನಕ್ಷೆಯನ್ನು ನೋಡಿದರೆ ಕೂಡಲೇ ಬುದ್ಧಿಯಲ್ಲಿ ಬಂದು ಬಿಡುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಚಿತ್ರದ ಮೇಲ್ಭಾಗದಲ್ಲಿ ಪೂಜ್ಯ ಡಬಲ್ ಕಿರೀಟಧಾರಿ ದೇವಿ-ದೇವತೆಗಳಿರುತ್ತಾರೆ ನಂತರ ಕೆಳಗೆ ಬಂದಾಗ ಪೂಜಾರಿಗಳಾಗುತ್ತಾರೆ. ಏಣಿಯನ್ನು ಇಳಿಯುತ್ತಾರಲ್ಲವೆ. ಈ ಏಣಿಯಂತೂ ಬಹಳ ಸಹಜವಾಗಿದೆ, ಇದನ್ನು ಯಾರು ಬೇಕಾದರೂ ತಿಳಿದುಕೊಳ್ಳಬಹುದು ಆದರೆ ಕೆಲವರ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ಅವರ ಅದೃಷ್ಟವೇ ಹೀಗಿದೆ, ಶಾಲೆಯಲ್ಲಿ ಉತ್ತೀರ್ಣ-ಅನುತ್ತೀರ್ಣರು ಆಗಿಯೇ ಆಗುತ್ತಾರೆ, ಅದೃಷ್ಟದಲ್ಲಿ ಇಲ್ಲದಿದ್ದರೆ ಪುರುಷಾರ್ಥವೂ ಇರುವುದಿಲ್ಲ, ಕಾಯಿಲೆಗೆ ಒಳಗಾಗುತ್ತಾರೆ. ಓದಲು ಸಾಧ್ಯವಿಲ್ಲ, ಕೆಲವರಂತೂ ಸಂಪೂರ್ಣ ಓದುತ್ತಾರೆ, ಆದರೂ ಅದು ಲೌಕಿಕ ವಿದ್ಯೆ, ಇದು ಆತ್ಮಿಕ ವಿದ್ಯೆಯಾಗಿದೆ. ಇದಕ್ಕಾಗಿ ಬುದ್ಧಿಯು ಚಿನ್ನದ ಸಮಾನವಿರಲಿ. ಸತ್ಯ ಚಿನ್ನವಾದ ತಂದೆಯು ಸದಾ ಪಾವನನಾಗಿದ್ದಾರೆ. ಅವರನ್ನು ನೆನಪು ಮಾಡುವುದರಿಂದ ನೀವಾತ್ಮರು ಚಿನ್ನದ ಸಮಾನವಾಗುತ್ತಾ ಹೋಗುವಿರಿ. ಇಲ್ಲಂತೂ ಮನುಷ್ಯರದು ಕಲ್ಲು ಬುದ್ಧಿಯಾಗಿದೆ ಎಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಈ ರೀತಿ ಹೇಳುವುದಿಲ್ಲ. ಅದಂತೂ ಸ್ವರ್ಗವಾಗಿತ್ತು, ಭಾರತವೇ ಸ್ವರ್ಗವಾಗಿತ್ತು ಎಂಬುದನ್ನು ಮರೆತು ಹೋಗಿದ್ದಾರೆ. ಇದನ್ನು ಎಲ್ಲಿಯಾದರೂ ಪ್ರದರ್ಶನಿಗಳಲ್ಲಿ ತಿಳಿಸಬಹುದು, ಮತ್ತು ಪುನರಾವರ್ತನೆಯನ್ನೂ ಮಾಡಿಸಬಹುದು. ಪ್ರೊಜೆಕ್ಟರ್ನಲ್ಲಿ ಇದು ಸಾಧ್ಯವಿಲ್ಲ. ಮೊಟ್ಟ ಮೊದಲು ಈ ತ್ರಿಮೂರ್ತಿ, ಲಕ್ಷ್ಮೀ-ನಾರಾಯಣ ಮತ್ತು ಏಣಿಯ ಚಿತ್ರವು ಅತ್ಯವಶ್ಯಕವಾಗಿದೆ. ಈ ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿ ಇಡೀ 84 ಜನ್ಮಗಳ ಜ್ಞಾನವು ಬಂದು ಬಿಡುತ್ತದೆ. ಮಕ್ಕಳಿಗೆ ಇಡೀ ದಿನ ಇದೇ ಚಿಂತನೆ ನಡೆಯಬೇಕು - ಪ್ರತಿಯೊಂದು ಸೇವಾಕೇಂದ್ರದಲ್ಲಿ ಮುಖ್ಯ ಚಿತ್ರಗಳನ್ನು ಅವಶ್ಯವಾಗಿ ಇಡಬೇಕಾಗಿದೆ. ಚಿತ್ರಗಳಲ್ಲಿ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ಬ್ರಹ್ಮನ ಮೂಲಕ ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ನಾವು ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಮೊದಲು ನಾವು ಶೂದ್ರ ವಂಶದವರಾಗಿದ್ದೆವು. ಈಗ ಬ್ರಾಹ್ಮಣ ವರ್ಣದವರಾಗಿದ್ದೇವೆ. ಈಗ ಮತ್ತೆ ದೇವತೆಗಳಾಗಬೇಕಾಗಿದೆ. ಶಿವ ತಂದೆಯು ನಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ನಮ್ಮ ಗುರಿ-ಧ್ಯೇಯವು ಸನ್ಮುಖದಲ್ಲಿ ನಿಂತಿದೆ. ಈ ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದರು ನಂತರ ಇವರು ಹೇಗೆ ಕೆಳಗಿಳಿದರು? ಹೇಗಿದ್ದವರು ಹೇಗಾಗುತ್ತಾರೆ? ಒಮ್ಮೆಲೆ ಬುದ್ಧುಗಳಾಗಿ ಬಿಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಭಾರತದಲ್ಲಿ ರಾಜ್ಯಭಾರ ಮಾಡುತ್ತಿದ್ದರು, ಭಾರತವಾಸಿಗಳಿಗೆ ಇವು ತಿಳಿದಿರಬೇಕಲ್ಲವೆ. ನಂತರ ಏನಾಯಿತು? ಇವರು ಎಲ್ಲಿ ಹೋದರು? ಇವರ ಮೇಲೆ ಯಾರಾದರೂ ವಿಜಯ ಪಡೆದರೇ? ಅವರು ಯುದ್ಧದಲ್ಲಿ ಯಾರನ್ನಾದರೂ ಸೋಲಿಸಿದರೇ? ಯಾರೊಂದಿಗೂ ಜಯಿಸಲೂ ಇಲ್ಲ, ಸೋಲಲೂ ಇಲ್ಲ. ಇದೆಲ್ಲವೂ ಮಾಯೆಯ ಮಾತಾಗಿದೆ. ರಾವಣ ರಾಜ್ಯವು ಆರಂಭವಾಯಿತು ಮತ್ತು 5 ವಿಕಾರಗಳಲ್ಲಿ ಬಿದ್ದು ರಾಜ್ಯಭಾಗ್ಯವನ್ನು ಕಳೆದುಕೊಂಡರು ಈಗ ಪುನಃ ಪಂಚ ವಿಕಾರಗಳ ಮೇಲೆ ಜಯ ಗಳಿಸುವುದರಿಂದ ಮತ್ತೆ ಶ್ರೇಷ್ಠರಾಗುವರು. ಈಗ ರಾವಣ ರಾಜ್ಯದ ಆಡಂಬರವಿದೆ, ನಾವು ಗುಪ್ತ ರೀತಿಯಲ್ಲಿ ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ. ನೀವು ಎಷ್ಟು ಸಾಧಾರಣರಾಗಿದ್ದೀರಿ! ಓದಿಸುವವರು ಎಷ್ಟು ಸರ್ವಶ್ರೇಷ್ಠನಾಗಿದ್ದಾರೆ ಮತ್ತು ನಿರಾಕಾರ ತಂದೆಯು ಪತಿತ ಶರೀರದಲ್ಲಿ ಬಂದು ಮಕ್ಕಳನ್ನು ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ. ದೂರ ದೇಶದಿಂದ ಪತಿತ ಪ್ರಪಂಚ, ಪತಿತ ಶರೀರದಲ್ಲಿ ಬರುತ್ತಾರೆ. ಆದರೂ ನೀವು ಮಕ್ಕಳನ್ನೇ ಲಕ್ಷ್ಮೀ-ನಾರಾಯಣರನ್ನಾಗಿ ಮಾಡುತ್ತಾರೆ, ಅವರು ಸ್ವಯಂ ಆಗುವುದಿಲ್ಲ. ಆದರೂ ಸಹ ಆ ರೀತಿ ಆಗುವುದಕ್ಕಾಗಿ ನೀವು ಪೂರ್ಣ ಪುರುಷಾರ್ಥ ಮಾಡುವುದಿಲ್ಲ. ಹಗಲು-ರಾತ್ರಿ ಓದಬೇಕು ಮತ್ತು ಓದಿಸಬೇಕಾಗಿದೆ. ತಂದೆಯು ದಿನ-ಪ್ರತಿದಿನ ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ಲಕ್ಷ್ಮೀ-ನಾರಾಯಣರಿಂದಲೇ ಆರಂಭ ಮಾಡಬೇಕು - ಅವರು ಹೇಗೆ 84 ಜನ್ಮಗಳನ್ನು ತೆಗೆದುಕೊಂಡರು ಮತ್ತೆ ಅಂತಿಮ ಜನ್ಮದಲ್ಲಿ ಓದುತ್ತಿದ್ದಾರೆ ಪುನಃ ಅವರ ರಾಜಧಾನಿಯು ಸ್ಥಾಪನೆಯಾಗುತ್ತದೆ, ಎಷ್ಟೊಂದು ತಿಳಿಸುವ ಮಾತುಗಳಿವೆ, ಚಿತ್ರಗಳಿಗಾಗಿ ತಂದೆಯು ಎಷ್ಟೊಂದು ಸಲಹೆ ಕೊಡುತ್ತಾರೆ. ಯಾವುದೇ ಚಿತ್ರವನ್ನು ತಯಾರು ಮಾಡಿದ ಮೇಲೆ ಕೂಡಲೇ ಅದನ್ನು ತಂದೆಯ ಬಳಿ ತಂದು ತೋರಿಸಬೇಕು. ತಂದೆಯು ಅದನ್ನು ತಿದ್ದುಪಡಿ ಮಾಡಿ ಎಲ್ಲಾ ಸಲಹೆಗಳನ್ನು ಕೊಡುವರು. |
ತಂದೆಯು ತಿಳಿಸುತ್ತಾರೆ - ನಾನು ಬಹಳ ಸಾಹುಕಾರನಾಗಿದ್ದೇನೆ. ಹುಂಡಿಯೂ ತಾನಾಗಿಯೇ ತುಂಬುವುದು, ಚಿಂತೆಯ ಯಾವುದೇ ಮಾತಿಲ್ಲ. ಇಷ್ಟೊಂದು ಮಕ್ಕಳು ಕುಳಿತಿದ್ದಾರೆ. ತಂದೆಗೆ ಗೊತ್ತಿದೆ - ಯಾರಿಂದಲಾದರೂ ಹುಂಡಿಯನ್ನು ತುಂಬಿಸುತ್ತಾರೆ, ತಂದೆಗೆ ಸಂಕಲ್ಪವಿದೆ - ಜೈಪುರವನ್ನು ಚೆನ್ನಾಗಿ ವೃದ್ಧಿ ಮಾಡಬೇಕಾಗಿದೆ. ಅಲ್ಲಿಯೇ ಹಠಯೋಗಿಗಳ ಮ್ಯೂಸಿಯಂ ಇದೆ, ಅಲ್ಲಿ ನಿಮ್ಮದು ರಾಜಯೋಗದ ಮ್ಯೂಸಿಯಂ ಬಹಳ ಚೆನ್ನಾಗಿ ಮಾಡಿಸಬೇಕು. ಅದನ್ನು ಎಲ್ಲರೂ ಬಂದು ನೋಡುವಂತಿರಲಿ. ಒಳ್ಳೆಯದು. |
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ. |
ಧಾರಣೆಗಾಗಿ ಮುಖ್ಯಸಾರ: |
1. ಪವಿತ್ರ ಜ್ಞಾನವನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಲು ತಮ್ಮ ಬುದ್ಧಿರೂಪಿ ಪಾತ್ರೆಯನ್ನು ಚಿನ್ನದ ಪಾತ್ರೆಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೆನಪಿನಿಂದಲೇ ಪಾತ್ರೆಯು ಚಿನ್ನದ ಸಮಾನವಾಗುತ್ತದೆ. |
2. ಈಗ ಬ್ರಾಹ್ಮಣರಾಗಿದ್ದೀರಿ ಆದ್ದರಿಂದ ಶೂದ್ರರ ಎಲ್ಲಾ ಹವ್ಯಾಸಗಳನ್ನು ಅಳಿಸಬೇಕಾಗಿದೆ, ಬಹಳ ಘನತೆಯಿಂದ ಇರಬೇಕಾಗಿದೆ. ನಾವು ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂಬ ನಶೆಯಲ್ಲಿರಬೇಕಾಗಿದೆ. |
ಓಂ ಶಾಂತಿ. ಓಂ ಶಾಂತಿಯ ಅರ್ಥವನ್ನು ಮಕ್ಕಳಿಗೆ ತಿಳಿಸಲಾಗಿದೆ. ಓಂ ಎಂದರೆ ನಾನು ಆತ್ಮನಾಗಿದ್ದೇನೆ, ಶರೀರವು ನನ್ನದಾಗಿದೆ, ಆತ್ಮವಂತೂ ಕಾಣುವುದಿಲ್ಲ, ಇದು ಅರ್ಥವಾಗುತ್ತದೆ - ನಾನಾತ್ಮನಾಗಿದ್ದೇನೆ, ಇದು ನನ್ನ ಶರೀರವಾಗಿದೆ ಎಂದು. ಆತ್ಮದಲ್ಲಿಯೇ ಮನಸ್ಸು-ಬುದ್ಧಿಯಿದೆ, ಶರೀರದಲ್ಲಿ ಬುದ್ಧಿಯಿಲ್ಲ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿರುತ್ತದೆ. ಮುಖ್ಯವಾದುದು ಆತ್ಮವಾಗಿದೆ. ಆ ಆತ್ಮನನ್ನು ಯಾರೂ ಸ್ಥೂಲ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ, ಶರೀರವನ್ನು ಆತ್ಮವೇ ನೋಡುತ್ತದೆ, ಆತ್ಮವನ್ನು ಶರೀರವು ನೋಡಲು ಸಾಧ್ಯವಿಲ್ಲ. ಇದನ್ನು ತಿಳಿದುಕೊಳ್ಳಬಹುದು, ಆತ್ಮವು ಬಿಟ್ಟು ಹೋದಾಗ ಶರೀರವು ಜಡವಾಗಿ ಬಿಡುತ್ತದೆ. ಆತ್ಮವನ್ನು ನೋಡಲು ಸಾಧ್ಯವಿಲ್ಲ. ಶರೀರವನ್ನು ನೋಡಲಾಗುತ್ತದೆ ಹಾಗೆಯೇ ಆತ್ಮಕ್ಕೆ ಯಾವ ತಂದೆಯಿದ್ದಾರೆಯೋ ಯಾರನ್ನು ಪರಮಾತ್ಮನೆಂದು ಹೇಳುತ್ತಾರೆಯೋ ಅವರೂ ಸಹ ಕಣ್ಣಿಗೆ ಕಾಣುವುದಿಲ್ಲ. ಅವರನ್ನು ತಿಳಿದುಕೊಳ್ಳಲಾಗುತ್ತದೆ, ಅನುಭವ ಮಾಡಲಾಗುತ್ತದೆ, ಆತ್ಮರೆಲ್ಲರೂ ಸಹೋದರರಾಗಿದ್ದಾರೆ. ಶರೀರದಲ್ಲಿ ಬಂದಾಗ ಇವರು ಸಹೋದರ-ಸಹೋದರಿಯರು ಅಥವಾ ಸಹೋದರ-ಸಹೋದರರೆಂದೇ ಹೇಳುತ್ತಾರೆ. ಆತ್ಮರ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ದೈಹಿಕ ಸಹೋದರ-ಸಹೋದರಿಯರು ಒಬ್ಬರು ಇನ್ನೊಬ್ಬರನ್ನು ನೋಡಬಲ್ಲರು. ಆತ್ಮರ ತಂದೆಯು ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ಅವರನ್ನೂ ಸ್ಥೂಲ ಕಣ್ಣಿನಿಂದ ನೋಡಲು ಸಾಧ್ಯವಿಲ್ಲ ಅಂದಾಗ ತಂದೆಯು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬಂದಿದ್ದಾರೆ. ಹೊಸ ಪ್ರಪಂಚವು ಸತ್ಯಯುಗವಾಗಿತ್ತು, ಈ ಹಳೆಯ ಪ್ರಪಂಚವು ಕಲಿಯುಗವಾಗಿದೆ, ಇದು ಈಗ ಪರಿವರ್ತನೆಯಾಗಲಿದೆ. ಹೇಗೆ ಹಳೆಯ ಮನೆಯು ಸಮಾಪ್ತಿಯಾಗಿ ಹೊಸ ಮನೆಯಾಗುತ್ತದೆ ಹಾಗೆಯೇ ಈ ಹಳೆಯ ಪ್ರಪಂಚವೂ ಸಮಾಪ್ತಿಯಾಗಲಿದೆ. ಸತ್ಯಯುಗದ ನಂತರ ತ್ರೇತಾ, ದ್ವಾಪರ, ಕಲಿಯುಗ ಪುನಃ ಸತ್ಯಯುಗವು ಅವಶ್ಯವಾಗಿ ಬರಬೇಕಾಗಿದೆ. ವಿಶ್ವದ ಚರಿತ್ರೆ, ಭೂಗೋಳವು ಪುನರಾವರ್ತನೆಯಾಗುವುದು. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿರುತ್ತದೆ. ಅರ್ಧಕಲ್ಪ ಸೂರ್ಯವಂಶಿ ಮತ್ತು ಚಂದ್ರವಂಶಿಯರ ರಾಜ್ಯವು ನಡೆಯುತ್ತದೆ. ಸತ್ಯಯುಗಕ್ಕೆ ಲಕ್ಷ್ಮೀ-ನಾರಾಯಣರ ರಾಜ್ಯ, ತ್ರೇತಾಯುಗಕ್ಕೆ ರಾಮ-ಸೀತೆಯರ ರಾಜ್ಯವೆಂದು ಹೇಳಲಾಗುತ್ತದೆ ಅಂದಾಗ ಇದು ಸಹಜವಾಗಿದೆಯಲ್ಲವೆ. ನಂತರ ದ್ವಾಪರ-ಕಲಿಯುಗದಲ್ಲಿ ಅನ್ಯ ಧರ್ಮಗಳು ಬರುತ್ತವೆ ಆಗ ಯಾರು ದೇವಿ-ದೇವತೆಗಳು ಪವಿತ್ರರಾಗಿದ್ದರೋ ಅವರು ಅಪವಿತ್ರರಾಗಿ ಬಿಡುತ್ತಾರೆ. ಇದಕ್ಕೇ ರಾವಣ ರಾಜ್ಯವೆಂದು ಹೇಳಲಾಗುತ್ತದೆ, ರಾವಣನನ್ನು ಪ್ರತೀ ವರ್ಷವೂ ಸುಡುತ್ತಾರೆ ಆದರೆ ಸುಟ್ಟು ಹೋಗುವುದೇ ಇಲ್ಲ. ರಾವಣನು ಎಲ್ಲರ ದೊಡ್ಡ ಶತ್ರುವಾಗಿದ್ದಾನೆ ಆದ್ದರಿಂದ ಅವನನ್ನು ಸುಡುವ ಪದ್ಧತಿಯಾಗಿ ಬಿಟ್ಟಿದೆ. ಭಾರತದ ನಂಬರ್ವನ್ ಶತ್ರು ರಾವಣನಾಗಿದ್ದಾನೆ ಮತ್ತು ನಂಬರ್ವನ್ ಮಿತ್ರನು ಸದಾ ಸುಖ ಕೊಡುವಂತಹ ಭಗವಂತನಾಗಿದ್ದಾರೆ. ಖುದಾನಿಗೆ ದೋಸ್ತ್ ಎಂದು ಹೇಳುತ್ತಾರಲ್ಲವೆ. ಇದರ ಮೇಲೆ ಒಂದು ಕಥೆಯೂ ಇದೆ ಅಂದಮೇಲೆ ಖುದನು ದೋಸ್ತ್ ಅರ್ಥಾತ್ ಗೆಳೆಯನಾಗಿದ್ದಾರೆ, ರಾವಣನು ಶತ್ರುವಾಗಿದ್ದಾನೆ. ಖುದಾ-ದೋಸ್ತ್ನನ್ನು ಎಂದೂ ಸುಡುವುದಿಲ್ಲ, ರಾವಣನು ಶತ್ರುವಾಗಿದ್ದಾನೆ ಆದ್ದರಿಂದ ಹತ್ತು ತಲೆಯ ರಾವಣನನ್ನು ಮಾಡಿ ವರ್ಷ-ವರ್ಷವೂ ಸುಡುತ್ತಾರೆ. ನಮಗೆ ರಾಮ ರಾಜ್ಯವು ಬೇಕೆಂದು ಗಾಂಧೀಜಿಯೂ ಹೇಳುತ್ತಿದ್ದರು, ರಾಮ ರಾಜ್ಯದಲ್ಲಿ ಸುಖ, ರಾವಣ ರಾಜ್ಯದಲ್ಲಿ ದುಃಖವಿದೆ. ಈಗ ಇದನ್ನು ಯಾರು ತಿಳಿಸುತ್ತಾರೆ? ಪತಿತ-ಪಾವನ ಶಿವ ಬಾಬಾ ತಂದೆಯಾಗಿದ್ದಾರೆ, ಬ್ರಹ್ಮಾರವರು ದಾದಾ ಆಗಿದ್ದಾರೆ. ಇವರು ಯಾವಾಗಲೂ ಬಾಪ್ದಾದಾ ಎಂದು ಸಹಿ ಮಾಡುತ್ತಾರೆ. ಪ್ರಜಾಪಿತ ಬ್ರಹ್ಮನೂ ಸಹ ಎಲ್ಲರವರಾಗಿರುವರು, ಅವರಿಗೇ ಆಡಂ ಎಂದು ಹೇಳಲಾಗುವುದು ಮತ್ತು ಗ್ರೇಟ್ ಗ್ರೇಟ್ ಗ್ರಾಂಡ್ಫಾದರ್ (ಮನುಕುಲದ ಮುತ್ತಜ್ಜ) ಎಂದು ಹೇಳಲಾಗುತ್ತದೆ. ಮನುಷ್ಯ ಸೃಷ್ಟಿಯಲ್ಲಿ ಪ್ರಜಾಪಿತನಾದರು. ಪ್ರಜಾಪಿತ ಬ್ರಹ್ಮನ ಮೂಲಕ ಬ್ರಾಹ್ಮಣರು ನಂತರ ಬ್ರಾಹ್ಮಣರಿಂದ ದೇವಿ-ದೇವತೆಗಳಾಗುತ್ತೀರಿ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರಾಗಿ ಬಿಡುತ್ತಾರೆ, ಇವರಿಗೆ ಪ್ರಜಾಪಿತ ಮನುಕುಲಕ್ಕೆ ಹಿರಿಯರೆಂದು ಹೇಳಲಾಗುತ್ತದೆ. ಪ್ರಜಾಪಿತ ಬ್ರಹ್ಮನಿಗೆ ಅನೇಕ ಮಕ್ಕಳಿದ್ದಾರೆ, ಬಾಬಾ ಬಾಬಾ ಎನ್ನುತ್ತಿರುತ್ತಾರೆ. ಇವರು ಸಾಕಾರ ತಂದೆಯಾಗಿದ್ದಾರೆ, ಶಿವ ತಂದೆಯು ನಿರಾಕಾರ ತಂದೆಯಾಗಿದ್ದಾರೆ. ಪ್ರಜಾಪಿತ ಬ್ರಹ್ಮನ ಮೂಲಕ ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದು ಗಾಯನವಿದೆ, ಇದು ಪತಿತ ಪ್ರಪಂಚ, ರಾವಣ ರಾಜ್ಯವಾಗಿದೆ. ಈಗ ರಾವಣನ ಆಸುರೀ ಪ್ರಪಂಚವು ಸಮಾಪ್ತಿಯಾಗುವುದು. ಅದಕ್ಕಾಗಿ ಈ ಮಹಾಭಾರತ ಯುದ್ಧವಿದೆ, ನಂತರ ಸತ್ಯಯುಗದಲ್ಲಿ ಈ ರಾವಣ ಶತ್ರುವನ್ನು ಯಾರೂ ಸುಡುವುದಿಲ್ಲ. ರಾವಣನಿರುವುದೇ ಇಲ್ಲ. ರಾವಣನೇ ಈ ದುಃಖದ ಪ್ರಪಂಚವನ್ನು ರಚಿಸಿದ್ದಾನೆ. ಯಾರಲ್ಲಿ ಬಹಳಷ್ಟು ಹಣವಿದೆಯೋ, ದೊಡ್ಡ-ದೊಡ್ಡ ಮಹಲುಗಳಿವೆಯೋ ಅವರು ಸ್ವರ್ಗದಲ್ಲಿ ಇದ್ದಾರೆಂದಲ್ಲ, ತಂದೆಯು ತಿಳಿಸುತ್ತಾರೆ - ಭಲೆ ಯಾರ ಬಳಿಯಾದರೂ ಕೋಟಿಗಳಿರಬಹುದು ಆದರೆ ಶಾಂತಿಯಿರುವುದಿಲ್ಲ. ಹಣವೆಲ್ಲವೂ ಮಣ್ಣು ಪಾಲಾಗಲಿದೆ. ಹೊಸ ಪ್ರಪಂಚದಲ್ಲಿ ಮತ್ತೆ ಹೊಸ ಗಣಿಗಳಾಗುತ್ತವೆ. ಇದರಿಂದ ಹೊಸ ಪ್ರಪಂಚದ ಮಹಲು ಇತ್ಯಾದಿಗಳನ್ನು ಕಟ್ಟಿಸಲಾಗುತ್ತದೆ. ಈ ಹಳೆಯ ಪ್ರಪಂಚವೇ ಈಗ ಸಮಾಪ್ತಿಯಾಗಲಿದೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ಅಲ್ಲಿನ ಮಕ್ಕಳು ಯೋಗಬಲದಿಂದ ಜನಿಸುತ್ತಾರೆ. ಅಲ್ಲಿ ವಿಕಾರ ಇರುವುದೇ ಇಲ್ಲ, ದೇಹಾಭಿಮಾನವಾಗಲಿ, ಕ್ರೋಧವಾಗಲಿ ಪಂಚ ವಿಕಾರಗಳೇ ಇರುವುದಿಲ್ಲ ಆದ್ದರಿಂದ ಅಲ್ಲಿ ಎಂದೂ ರಾವಣನನ್ನು ಸುಡುವುದಿಲ್ಲ. ಇಲ್ಲಂತೂ ರಾವಣ ರಾಜ್ಯವಿದೆ ಆದ್ದರಿಂದ ಹೇ ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಅವರು ಮುಕ್ತಿದಾತನೂ ಆಗಿದ್ದಾರೆ, ಎಲ್ಲರ ದುಃಖಹರ್ತನಾಗಿದ್ದಾರೆ. ಈಗ ಎಲ್ಲರೂ ರಾವಣ ರಾಜ್ಯದಲ್ಲಿದ್ದಾರೆ, ತಂದೆಯು ಬಂದು ಬಿಡಿಸಬೇಕಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ, ನೀವು ಪವಿತ್ರರಾಗಿರಿ, ಈ ಪತಿತ ಪ್ರಪಂಚವು ಸಮಾಪ್ತಿಯಾಗಲಿದೆ. ಯಾರು ಶ್ರೀಮತದಂತೆ ನಡೆಯುವರೋ ಅವರು ಶ್ರೇಷ್ಠ ದೇವಿ-ದೇವತೆಗಳಾಗುತ್ತಾರೆ, ವಿನಾಶವಂತೂ ಆಗುತ್ತದೆ ಎಲ್ಲರೂ ಸಮಾಪ್ತಿ ಆಗಿ ಬಿಡುತ್ತಾರೆ ಅಂದಮೇಲೆ ಯಾರು ಉಳಿಯುವರು? ಯಾರು ಶ್ರೀಮತದಂತೆ ಪವಿತ್ರರಾಗಿರುವರೋ ಅವರೇ ತಂದೆಯ ಮತದಂತೆ ನಡೆದು ವಿಶ್ವದ ರಾಜಧಾನಿಯ ಆಸ್ತಿಯನ್ನು ಪಡೆಯುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತಲ್ಲವೆ. ಈಗಂತೂ ರಾವಣ ರಾಜ್ಯವಿದೆ, ಇದು ಸಮಾಪ್ತಿ ಆಗಬೇಕಾಗಿದೆ. ಸತ್ಯಯುಗೀ ರಾಮ ರಾಜ್ಯವು ಸ್ಥಾಪನೆ ಆಗಲಿದೆ, ರಾಮನೆಂದರೆ ಆ ಸೀತಾರಾಮನಲ್ಲ, ಶಾಸ್ತ್ರಗಳಲ್ಲಿ ಅನೇಕ ವ್ಯರ್ಥ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಇಡೀ ಪ್ರಪಂಚವೇ ಲಂಕೆಯಾಗಿದೆ, ಇದರಲ್ಲಿ ರಾವಣ ರಾಜ್ಯವಿದೆ. ಸತ್ಯಯುಗದಲ್ಲಿ ಭಾರತವು ಚಿನ್ನದ ಪಕ್ಷಿಯಾಗಿತ್ತು, ಮತ್ತ್ಯಾವುದೇ ರಾಜ್ಯವಿರಲಿಲ್ಲ. ತಂದೆಯು ಭಾರತದಲ್ಲಿ ಬಂದು ಪುನಃ ಚಿನ್ನದ ಪಕ್ಷಿ ಸ್ವರ್ಗವನ್ನಾಗಿ ಮಾಡುತ್ತಾರೆ. ಬಾಕಿ ಇಷ್ಟೆಲ್ಲಾ ಧರ್ಮಗಳು ಸಮಾಪ್ತಿ ಆಗುವವು. ಸಮುದ್ರವು ಉಕ್ಕುತ್ತದೆ, ಬಾಂಬೆಯು ಹೇಗಿತ್ತು, ಒಂದು ಚಿಕ್ಕ ಹಳ್ಳಿಯಂತೆ ಇತ್ತು. ಈಗ ಸತ್ಯಯುಗದ ಸ್ಥಾಪನೆಯಾಗುತ್ತದೆ ನಂತರ ಬಾಂಬೆ ಇತ್ಯಾದಿಗಳು ಯಾವುದೂ ಇರುವುದಿಲ್ಲ. ಸತ್ಯಯುಗದಲ್ಲಿ ಕೆಲವರೇ ಮನುಷ್ಯ ಇರುತ್ತಾರೆ. ದೆಹಲಿಯು ರಾಜಧಾನಿಯಾಗಿರುತ್ತದೆ. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ದೆಹಲಿಯು ಸತ್ಯಯುಗದಲ್ಲಿ ಪರಿಸ್ತಾನವಾಗಿತ್ತು, ದೆಹಲಿಯೇ ರಾಜಧಾನಿಯಾಗಿತ್ತು. ರಾಮ ರಾಜ್ಯದಲ್ಲಿಯೂ ದೆಹಲಿಯೇ ರಾಜಧಾನಿಯಾಗಿರುತ್ತದೆ ಆದರೆ ರಾಮ ರಾಜ್ಯದಲ್ಲಿ ವಜ್ರ ವೈಡೂರ್ಯಗಳ ಮಹಲಿತ್ತು, ಅಪಾರ ಸುಖವಿತ್ತು. ತಂದೆಯು ತಿಳಿಸುತ್ತಾರೆ - ನೀವು ವಿಶ್ವದ ರಾಜ್ಯವನ್ನು ಕಳೆದುಕೊಂಡಿದ್ದೀರಿ, ನಾನು ಪುನಃ ಕೊಡುತ್ತೇನೆ. ನೀವು ನನ್ನ ಮತದಂತೆ ನಡೆಯಿರಿ, ಶ್ರೇಷ್ಠರಾಗಬೇಕೆಂದರೆ ಕೇವಲ ನನ್ನನ್ನೇ ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ, ನೀವು ನನ್ನ ಬಳಿ ಬಂದು ಬಿಡುತ್ತೀರಿ. ನನ್ನ ಕೊರಳಿನ ಮಾಲೆಯಾಗಿ ಮತ್ತೆ ವಿಷ್ಣುವಿನ ಕೊರೈನ ಮಾಲೆಯಾಗುತ್ತೀರಿ, ನಾನು ಮಾಲೆಯಲ್ಲಿ ಮೇಲ್ಭಾಗದಲ್ಲಿ ಇದ್ದೇನೆ ನಂತರ ಜೋಡಿಮಣಿಗಳು ಬ್ರಹ್ಮಾ-ಸರಸ್ವತಿ ಆಗಿದ್ದಾರೆ. ಅವರೇ ಸತ್ಯಯುಗದ ಮಹಾರಾಜ-ಮಹಾರಾಣಿಯಾಗುತ್ತಾರೆ. ಯಾರು ನಂಬರ್ವಾರ್ ಆಗಿ ಸಿಂಹಾಸನವನ್ನು ಏರುವರೋ ಅವರದೇ ಇಡೀ ಮಾಲೆಯಾಗಿದೆ. ನಾನು ಭಾರತವನ್ನು ಈ ಬ್ರಹ್ಮಾ-ಸರಸ್ವತಿ ಮತ್ತು ಬ್ರಾಹ್ಮಣರ ಮೂಲಕ ಸ್ವರ್ಗವನ್ನಾಗಿ ಮಾಡುತ್ತೇನೆ, ಯಾರು ಪರಿಶ್ರಮ ಪಡುವರೋ ಅವರದೇ ನಂತರ ನೆನಪಾರ್ಥವಾಗುತ್ತದೆ. ಆತ್ಮಗಳಿರುವ ಸ್ಥಾನವು ಪರಮಧಾಮವಾಗಿದೆ ಯಾವುದನ್ನು ಬ್ರಹ್ಮಾಂಡವೆಂದೂ ಹೇಳುತ್ತಾರೆ. ನಾವೆಲ್ಲಾ ಆತ್ಮರು ತಂದೆಯ ಜೊತೆ ಮಧುರ ಮನೆಯಲ್ಲಿ ಇರುವವರಾಗಿದ್ದೇವೆ. ಅದು ಶಾಂತಿಧಾಮವಾಗಿದೆ. ನಾವು ಮುಕ್ತಿಧಾಮದಲ್ಲಿ ಹೋಗಬೇಕೆಂದು ಮನುಷ್ಯರು ಬಯಸುತ್ತಾರೆ ಆದರೆ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಎಲ್ಲರೂ ಪಾತ್ರದಲ್ಲಿ ಬರಲೇಬೇಕಾಗಿದೆ ಅಲ್ಲಿಯವರೆಗೆ ತಂದೆಯು ನಿಮ್ಮನ್ನು ತಯಾರು ಮಾಡುತ್ತಾ ಇರುತ್ತಾರೆ. ನೀವು ತಯಾರಾಗಿ ಬಿಟ್ಟರೆ ಅಲ್ಲಿ ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರೂ ಬಂದು ಬಿಡುವರು ನಂತರ ಸಮಾಪ್ತಿ ಆಗುವುದು. ನೀವು ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ ನಂತರ ನಂಬರ್ವಾರ್ ಚಕ್ರವು ನಡೆಯುವುದು. ಕೊನೆಗೂ ಆ ದಿನ ಇಂದು ಬಂದಿತು ಎಂದು ಗೀತೆಯಲ್ಲಿ ಕೇಳಿದಿರಲ್ಲವೆ. ಭಕ್ತಿಮಾರ್ಗದಲ್ಲಿ ಅಲೆದಾಡುತ್ತಿದ್ದಿರಿ, ತಂದೆಯು ಜ್ಞಾನ ಸೂರ್ಯನಾಗಿದ್ದಾರೆ. ಜ್ಞಾನ ಸೂರ್ಯ ಪ್ರಕಟ, ಅಜ್ಞಾನ ಅಂಧಕಾರ ವಿನಾಶ.... ಈಗ ನಿಮ್ಮ ಬುದ್ಧಿಯಲ್ಲಿ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ. ನೀವು ತಿಳಿದುಕೊಂಡಿದ್ದೀರಿ, ಯಾವ ಭಾರತವಾಸಿಗಳು ನರಕವಾಸಿಗಳಾಗಿದ್ದಾರೆಯೋ ಅವರೇ ಪುನಃ ಸ್ವರ್ಗವಾಸಿಗಳಾಗುತ್ತಾರೆ. ಬಾಕಿ ಇಷ್ಟೆಲ್ಲಾ ಆತ್ಮರು ಶಾಂತಿಧಾಮಕ್ಕೆ ಹೊರಟು ಹೋಗುವರು. ಬಹಳ ಸ್ವಲ್ಪವೇ ತಿಳಿಸಬೇಕಾಗಿದೆ- ತಂದೆ ಮತ್ತು ಆಸ್ತಿ. ತಂದೆಯ ಮೂಲಕ ಆಸ್ತಿಯು ಸಿಗುತ್ತದೆ ಆಗ ಗುಲಾಮಿತನವು ಸಮಾಪ್ತಿಯಾಗುತ್ತದೆ. ಅದರ ಕಥೆಯನ್ನು ತಂದೆಯು ತಿಳಿಸುತ್ತಾರೆ - ಇದು ಸತ್ಯವಾದ ಸತ್ಯ ನಾರಾಯಣನ ಕಥೆಯಾಗಿದೆ, ಉಳಿದೆಲ್ಲವೂ ದಂತ ಕಥೆಗಳಾಗಿವೆ. ತಂದೆಯೇ ನರನಿಂದ ನಾರಾಯಣನಾಗುವುದಕ್ಕಾಗಿ ಈ ಜ್ಞಾನವನ್ನು ತಿಳಿಸುತ್ತಾರೆ. ಚರಿತ್ರೆ-ಭೂಗೋಳವಲ್ಲವೆ. ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಆರಂಭವಾಯಿತು, ಎಲ್ಲಿಯವರೆಗೆ ನಡೆಯಿತು, ಇದು ಕಥೆಯೂ ಆಯಿತಲ್ಲವೆ! ಯಾರು ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರೋ ಅವರು 84 ಜನ್ಮಗಳನ್ನು ತೆಗೆದುಕೊಂಡು ಸಂಪೂರ್ಣ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. |
ಈಗ ತಂದೆಯು ತಿಳಿಸುತ್ತಾರೆ - ನಾನು ಅದೇ ರಾಜ್ಯವನ್ನು ಪುನಃ ಸ್ಥಾಪನೆ ಮಾಡುತ್ತೇನೆ, ನೀವು ಹೇಗೆ ಪತಿತರಿಂದ ಪಾವನರು, ಪಾವನರಿಂದ ಪತಿತರಾಗುತ್ತೀರಿ ಎಂಬ ಇಡೀ ಚರಿತ್ರೆ-ಭೂಗೋಳವನ್ನು ತಿಳಿಸುತ್ತೇನೆ. ಮೊಟ್ಟ ಮೊದಲು ಸೂರ್ಯವಂಶಿಯರ ರಾಜ್ಯ ನಂತರ ಚಂದ್ರವಂಶಿಯರ ರಾಜ್ಯ..... ಮಧ್ಯದಲ್ಲಿ ಬೌದ್ಧಿಯರು, ಇಸ್ಲಾಮಿಗಳು, ಕ್ರಿಶ್ಚಿಯನ್ನರು ಬಂದರು. ಆಗ ಯಾವ ದೇವಿ-ದೇವತಾ ಧರ್ಮವಿತ್ತೋ ಅದು ಮರೆಯಾಯಿತು. ಪುನಃ ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುವುದು. ಶಾಸ್ತ್ರಗಳಲ್ಲಿ ಬ್ರಹ್ಮನ ಆಯಸ್ಸನ್ನು 100 ವರ್ಷಗಳು ತೋರಿಸಿದ್ದಾರೆ. ಈ ಬ್ರಹ್ಮನಲ್ಲಿಯೇ ತಂದೆಯು ಕುಳಿತು ಆಸ್ತಿಯನ್ನು ಕೊಡುತ್ತಾರೆ. ಇವರ ಶರೀರವೂ ಬಿಟ್ಟು ಹೋಗುವುದು. ತಂದೆಯು ಕುಳಿತು ಆತ್ಮರಿಗೆ ತಿಳಿಸುತ್ತಾರೆ - ಅವರೇ ಪತಿತ-ಪಾವನನಾಗಿದ್ದಾರೆ. ಮನುಷ್ಯರು ಮನುಷ್ಯರನ್ನು ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಯಾರು ತಾವೇ ಮುಕ್ತರಾಗಲು ಸಾಧ್ಯವಿಲ್ಲವೋ ಅವರು ಅನ್ಯರನ್ನು ಹೇಗೆ ಮಾಡುವರು? ಭಕ್ತಿಯನ್ನು ಕಲಿಸಿಕೊಡುವ ಗುರುಗಳು ಅನೇಕರಿದ್ದಾರೆ, ಇಂತಹವರ ಭಕ್ತಿ ಮಾಡಿ ಎಂದು ಕೆಲವರು ಹೇಳುತ್ತಾರೆ. ಶಾಸ್ತ್ರಗಳನ್ನು ಕೇಳಿರಿ ಎಂದು ಕೆಲವರು ಹೇಳುತ್ತಾರೆ. ಅನೇಕಾನೇಕ ಮತ-ಮತಾಂತರಗಳಿವೆ ಆದ್ದರಿಂದ ಎಲ್ಲರೂ ಇನ್ನೂ ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ಈಗ ತಂದೆಯು ಬಂದು ಬುದ್ಧಿವಂತರನ್ನಾಗಿ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರು ಬುದ್ಧಿವಂತರು, ವಿಶ್ವದ ಮಾಲೀಕರಾಗಿದ್ದರಲ್ಲವೆ. ಈಗ ಎಷ್ಟೊಂದು ಕಂಗಾಲರಾಗಿ ಬಿಟ್ಟಿದ್ದಾರೆ. ಪುನಃ ಶಿವ ತಂದೆಯು ಬಂದು ನರಕವಾಸಿಗಳಿಂದ ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಇಲ್ಲಿ ಅದೃಷ್ಟವು ಬೆಳಗಲಿ ಎಂದು ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ. ಎಲ್ಲಾ ಮನುಷ್ಯ ಮಾತ್ರರ ಅದೃಷ್ಟವನ್ನು ಬೆಳಗಿಸುವುದಕ್ಕಾಗಿಯೇ ತಂದೆಯು ಬರುತ್ತಾರೆ. ಎಲ್ಲರೂ ಪತಿತ, ದುಃಖಿಯಾಗಿದ್ದಾರಲ್ಲವೆ. ಎಲ್ಲರೂ ತ್ರಾಹಿ ತ್ರಾಹಿ ಎನ್ನುತ್ತಾ ವಿನಾಶವಾಗುತ್ತಾರೆ. ಆದ್ದರಿಂದ ತಂದೆಯು ತಿಳಿಸುವುದೇನೆಂದರೆ ತ್ರಾಹಿ ತ್ರಾಹಿ ಎನ್ನುವುದಕ್ಕೆ ಮೊದಲೇ ಬೇಹದ್ದಿನ ತಂದೆಯಿಂದ ಏನಾದರೂ ಆಸ್ತಿಯನ್ನು ತೆಗೆದುಕೊಳ್ಳಿ. ಈ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತೀರೋ ಅದೆಲ್ಲವೂ ಸಮಾಪ್ತಿಯಾಗಲಿದೆ. ಭಾರತದ ಉತ್ಥಾನ ಮತ್ತು ಪಥನ, ಭಾರತದ ಮೇಲೇ ಆಟವು ಮಾಡಲ್ಪಟ್ಟಿದೆ. ಸತ್ಯಯುಗದಲ್ಲಿ ಭಾರತದ ಉನ್ನತಿಯಾಗುವುದು, ಈಗ ಕಲಿಯುಗದಲ್ಲಿ ಅವನತಿಯಾಗುವುದು. ಇದೆಲ್ಲವೂ ರಾವಣ ರಾಜ್ಯದ ಆಡಂಬರವಾಗಿದೆ, ಈಗ ವಿನಾಶವಾಗಲಿದೆ. ವಿಶ್ವದ ಉತ್ಥಾನ ಹಾಗೂ ಪಥನ. ಸತ್ಯಯುಗದಲ್ಲಿ ಯಾರು-ಯಾರು ರಾಜ್ಯ ಮಾಡುತ್ತಾರೆ ಎಂಬುದನ್ನು ತಿಳಿಸುತ್ತಾರೆ. ಭಾರತದ ಉತ್ಥಾನವಿದ್ದಾಗ ದೇವತೆಗಳ ರಾಜ್ಯವಿರುತ್ತದೆ. ಭಾರತದ ಅವನತಿಯಾದಾಗ ರಾವಣ ರಾಜ್ಯವಾಗುತ್ತದೆ. ಈಗ ಹೊಸ ಪ್ರಪಂಚವಾಗುತ್ತಿದೆ, ಹಳೆಯ ಪ್ರಪಂಚವು ಸಮಾಪ್ತಿಯಾಗುವುದು. ಇದಕ್ಕೆ ಮೊದಲೇ ತಂದೆಯಿಂದ ಆಸ್ತಿಯನ್ನು ಪಡೆಯುವುದಕ್ಕಾಗಿ ಓದುತ್ತಿದ್ದೀರಿ. ಎಷ್ಟು ಸಹಜವಾಗಿದೆ. ಇದು ಮನುಷ್ಯರಿಂದ ದೇವತೆಗಳ ವಿದ್ಯೆಯಾಗಿದೆ. ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ. ಆ ಧರ್ಮವೇ ಬೇರೆಯಾಗಿದೆ, ಅವರಂತೂ ಗೃಹಸ್ಥ ವ್ಯವಹಾರವನ್ನು ಬಿಟ್ಟು ಹೊರಟು ಹೋಗುತ್ತಾರೆ. ಅವರದು ಹದ್ದಿನ ಸನ್ಯಾಸವಾಗಿದೆ, ನೀವು ಹಳೆಯ ಪ್ರಪಂಚದ ಸನ್ಯಾಸ ಮಾಡಿ, ಪುನಃ ಇಲ್ಲಿಯೇ ಬರುವುದಿಲ್ಲ. ಯಾವ-ಯಾವ ಧರ್ಮಗಳು ಯಾವಾಗ ಬರುತ್ತವೆ ಎಂಬುದನ್ನೂ ಸಹ ಚೆನ್ನಾಗಿ ತಿಳಿಸಿಕೊಡಬೇಕಾಗಿದೆ. ದ್ವಾಪರದ ನಂತರವೇ ಅನ್ಯ ಧರ್ಮಗಳು ಬರುತ್ತವೆ. ಮೊದಲು ಸುಖವನ್ನು ಅನುಭವಿಸುತ್ತಾರೆ ನಂತರ ದುಃಖ, ಈ ಇಡೀ ಚಕ್ರವನ್ನು ಬುದ್ಧಿಯಲ್ಲಿ ಕೂರಿಸಲಾಗುತ್ತದೆ. ನೀವು ಚಕ್ರದಲ್ಲಿ ಯಾವಾಗ ಬರುತ್ತೀರೋ ಆಗ ಮಹಾರಾಜ-ಮಹಾರಾಣಿಯಾಗುತ್ತೀರಿ. ಕೇವಲ ತಂದೆ ಮತ್ತು ಆಸ್ತಿಯ ಬಗ್ಗೆ ತಿಳಿಸಬೇಕಾಗಿದೆ. |
ತಂದೆಯು ಯಾರಿಗೂ ವಿದೇಶಕ್ಕೆ ಹೋಗುವುದನ್ನು ನಿರಾಕರಿಸುವುದಿಲ್ಲ. ವಾಸ್ತವದಲ್ಲಿ ಎಲ್ಲರೂ ತಮ್ಮ ದೇಶದಲ್ಲಿಯೇ ಮೃತ್ಯುವಾಗಬೇಕೆಂದು ಬಯಸುತ್ತಾರೆ. ಈಗ ವಿನಾಶವಂತೂ ಆಗಲೇಬೇಕಾಗಿದೆ. ಇಷ್ಟೊಂದು ಹೊಡೆದಾಟಗಳಾಗುವುದು ವಿದೇಶದಿಂದ ಬರುವುದಕ್ಕೂ ಸಾಧ್ಯವಾಗುವುದಿಲ್ಲ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಭಾರತ ಭೂಮಿಯೇ ಎಲ್ಲದಕ್ಕಿಂತ ಉತ್ತಮವಾಗಿದೆ, ಇಲ್ಲಿ ತಂದೆಯು ಬಂದು ಅವತರಿಸುತ್ತಾರೆ, ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ, ಕೇವಲ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಇಡೀ ಮಹಿಮೆಯೇ ಸಮಾಪ್ತಿಯಾಗಿದೆ. ಸರ್ವ ಮನುಷ್ಯ ಮಾತ್ರರ ಮುಕ್ತಿದಾತನು ಇಲ್ಲಿಯೇ ಬಂದು ಅವತರಿಸುತ್ತಾರೆ. ಪರಮಾತ್ಮನೇ ಬಂದು ಮುಕ್ತಗೊಳಿಸುತ್ತಾರೆ ಅಂದಮೇಲೆ ಇಂತಹ ತಂದೆಗೆ ನಮನ ಮಾಡಬೇಕು, ಅವರ ಜಯಂತಿಯನ್ನು ಆಚರಿಸಬೇಕು ಆದರೆ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಬೆಲೆಯೆಲ್ಲವೂ ಮರೆಯಾಗಿ ಬಿಟ್ಟಿದೆ, ಇಲ್ಲವಾದರೆ ಭಾರತವು ಎಲ್ಲದಕ್ಕಿಂತ ಶ್ರೇಷ್ಠ ತೀರ್ಥ ಸ್ಥಾನವಾಗಿದೆ. ಆ ತಂದೆಯು ಇಲ್ಲಿಯೇ ಬಂದು ಎಲ್ಲರನ್ನೂ ಪಾವನ ಮಾಡುತ್ತಾರೆ, ಅಂದಮೇಲೆ ಇದು ಎಲ್ಲದಕ್ಕಿಂತ ದೊಡ್ಡ ತೀರ್ಥ ಸ್ಥಾನವಾಯಿತು. ಎಲ್ಲರನ್ನೂ ದುರ್ಗತಿಯಿಂದ ಬಿಡಿಸಿ ಸದ್ಗತಿ ನೀಡುತ್ತಾರೆ. ಈ ನಾಟಕವು ಮಾಡಲ್ಪಟ್ಟಿದೆ, ಈಗ ನೀವಾತ್ಮರು ತಿಳಿದುಕೊಂಡಿದ್ದೀರಿ - ನಮ್ಮ ತಂದೆಯು ಈ ಶರೀರದ ಮೂಲಕ ರಹಸ್ಯವನ್ನು ತಿಳಿಸುತ್ತಿದ್ದಾರೆ. ನಾವಾತ್ಮರು ಈ ಶರೀರದ ಮೂಲಕ ಕೇಳಿಸಿಕೊಳ್ಳುತ್ತೇವೆ, ಆತ್ಮಾಭಿಮಾನಿ ಆಗಬೇಕಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ ಆಗ ತುಕ್ಕು ಕಳೆಯುತ್ತಾ ಹೋಗುವುದು ಮತ್ತು ಪವಿತ್ರರಾಗಿ, ನೀವು ತಂದೆಯ ಬಳಿ ಬಂದು ಬಿಡುವಿರಿ. ಎಷ್ಟು ನೆನಪು ಮಾಡುವಿರೋ ಅಷ್ಟು ಪವಿತ್ರರಾಗುತ್ತೀರಿ. ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತೀರೆಂದರೆ ಅನೇಕರ ಆಶೀರ್ವಾದಗಳು ಸಿಗುವುದು. ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ ಆದ್ದರಿಂದ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ಒಳ್ಳೆಯದು. |
Subsets and Splits
No community queries yet
The top public SQL queries from the community will appear here once available.