text
stringlengths
0
61.5k
2. ಸ್ತುತಿ-ನಿಂದೆ ಎಲ್ಲವನ್ನೂ ಸಹನೆ ಮಾಡುತ್ತಾ ತಂದೆಯ ಸಮಾನ ಪ್ರೀತಿಯ ಸಾಗರರಾಗಬೇಕಾಗಿದೆ. ಚಲನೆಯು ಬಹಳ ಘನತೆಯಿಂದ ಇಟ್ಟುಕೊಳ್ಳಬೇಕಾಗಿದೆ. ಬಹಳ ಕಡಿಮೆ ಮಾತನಾಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳು ಭಕ್ತಿಯ ಮಹಿಮೆಯನ್ನು ಕೇಳಿದಿರಿ. ನೀವೂ ಸಹ ಮಹಿಮೆಯನ್ನು ಹಾಡುತ್ತಿದ್ದಿರಿ. ಈಗ ಮಹಿಮೆ ಹಾಡುವುದಿಲ್ಲ ಮತ್ತು ನಿಮಗೆ ಮಹಿಮೆಯ ಅವಶ್ಯಕತೆಯೂ ಇಲ್ಲ. ಯಾವುದನ್ನು ಭಕ್ತರು ಮಾಡುವರೋ ಅದನ್ನು ನೀವು ಮಕ್ಕಳು ಮಾಡುವಂತಿಲ್ಲ. ಮೊದಲು ನೀವು ಭಕ್ತರಾಗಿದ್ದಿರಿ, ಈಗ ನಿಮಗೆ ಭಗವಂತ ಸಿಕ್ಕಿದ್ದಾರೆ. ಎಲ್ಲರಿಗೆ ಒಟ್ಟಿಗೆ ಸಿಗಲು ಸಾಧ್ಯವಿಲ್ಲ. ತಂದೆಯು ಎಲ್ಲರಿಗೆ ಒಟ್ಟಿಗೆ ಹೇಗೆ ಓದಿಸುವರು? ಇದು ಸಾಧ್ಯವಿಲ್ಲ. ಎಲ್ಲಾ ಭಕ್ತರು ಒಟ್ಟಿಗೆ ಇರಲು ಸಾಧ್ಯವಿಲ್ಲ. ಹಾ! ತಂದೆಯು ಅವಶ್ಯವಾಗಿ ಓದಿಸಬೇಕಾಗಿದೆ ಏಕೆಂದರೆ ಇದು ರಾಜಯೋಗವಾಗಿದೆ. ಸೂರ್ಯವಂಶಿ, ಚಂದ್ರವಂಶಿ ರಾಜ್ಯವು ಸ್ಥಾಪನೆಯಾಗಲಿದೆ, ಮಕ್ಕಳು ಪ್ರದರ್ಶನಿಯಲ್ಲಿ ತಿಳಿಸಬೇಕಾಗಿದೆ. ಹಬ್ಬಗಳಿದ್ದಾಗಲೇ ಸರ್ವೀಸ್ ಮಾಡಬಹುದಲ್ಲವೆ. ನೀವು ತಮಗಾಗಿ ರಾಜ್ಯ ಸ್ಥಾಪನೆ ಮಾಡಬೇಕಾಗಿದೆ. ನೀವು ಶಿವಶಕ್ತಿ, ಮಹಾರಥಿ ಸೇನೆಯಾಗಿದ್ದೀರಿ ಮತ್ತ್ಯಾವುದೇ ವ್ಯಾಯಾಮ ಇತ್ಯಾದಿಗಳನ್ನು ಕಲಿಯುವುದಿಲ್ಲ. ನೀವು ಆತ್ಮಿಕ ವ್ಯಾಯಾಮವನ್ನು ಕಲಿಯುತ್ತೀರಿ. ಭಾರತದ ಈ ವ್ಯಾಯಾಮವು ಪ್ರಸಿದ್ಧವಾಗಿದೆ. ಇದು ಯೋಗದ ವ್ಯಾಯಾಮವಾಗಿದೆ, ಆತ್ಮವು ಪರಮಪಿತ ಪರಮಾತ್ಮನೊಂದಿಗೆ ಬುದ್ಧಿಯೋಗವನ್ನು ಇಡಬೇಕಾಗಿದೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಇದರಲ್ಲಿ ಯಾವುದೇ ಯುದ್ಧದ ಮಾತಿಲ್ಲ. ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ, ಇದರಲ್ಲಿ ಯುದ್ಧದ ಸಂಬಂಧವಿಲ್ಲ. ನೀವು ಬೇಹದ್ದಿನ ತಂದೆಯ ವಾರಸುಧಾರರಾಗಿದ್ದೀರಿ ಅಂದಮೇಲೆ ತಂದೆಯ ಮಕ್ಕಳಾಗಿ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ಯುದ್ಧ ಮೊದಲಾದುವುಗಳ ಮತವನ್ನು ತಂದೆಯು ಕೊಡುವುದಿಲ್ಲ. ಕೇವಲ ಇದನ್ನೇ ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ ನೀವು ಸತೋಪ್ರಧಾನರಾಗಿದ್ದಿರಿ, ರಾಜ್ಯಭಾರ ಮಾಡುತ್ತಿದ್ದಿರಿ, ಈಗ ನಿಮಗೆ ಸ್ಮೃತಿ ಬಂದಿದೆ. ನೀವು ತಮ್ಮ ಜನ್ಮಗಳನ್ನೇ ಅರಿತುಕೊಂಡಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ ಎಂಬುದನ್ನೂ ಹೇಳುತ್ತಾರೆ. 84 ಲಕ್ಷ ಜನ್ಮಗಳೆಂಬುದು ಅಸತ್ಯವಾಗಿದೆ. ಭಕ್ತಿಮಾರ್ಗದಲ್ಲಿ ಯಾರಿಗೇನು ಬಂದರೆ ಅದನ್ನು ಓದುತ್ತಿರುತ್ತಾರೆ. ಡ್ರಾಮಾನುಸಾರ ಇದು ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಸತ್ಯ-ತ್ರೇತಾಯುಗದಲ್ಲಿ ಭಕ್ತಿಯಿರುವುದಿಲ್ಲ. ಭಕ್ತಿಯೇ ಬೇರೆ, ಜ್ಞಾನವೇ ಬೇರೆಯಾಗಿದೆ. ನೀವು ಮಕ್ಕಳ ವಿನಃ ಅನ್ಯ ಯಾವುದೇ ಋಷಿ ಮುನಿ ಮೊದಲಾದವರ ಬುದ್ಧಿಯಲ್ಲಿ ಈ ಜ್ಞಾನವಿಲ್ಲ. ಸುಖವೇ ಬೇರೆ, ದುಃಖವೇ ಬೇರೆ. ಸುಖವನ್ನು ತಂದೆಯು ಕೊಡುತ್ತಾರೆ, ದುಃಖವನ್ನು ರಾವಣನನ್ನು ಕೊಡುತ್ತಾನೆ ಎಂಬುದೂ ಸಹ ಅವರಿಗೆ ಗೊತ್ತಿಲ್ಲ. ಯಾರು ಸೂರ್ಯವಂಶಿ, ಚಂದ್ರವಂಶಿಯರಾಗಿದ್ದರು ಅವರೇ 84 ಜನ್ಮಗಳ ಚಕ್ರವನ್ನು ಸುತ್ತಿ ಶೂದ್ರವಂಶಿಯರಾದರು. ನೀವು ವಿಶ್ವದ ಮಾಲೀಕರಾಗಿದ್ದಿರಿ, 84 ಜನ್ಮಗಳನ್ನು ತೆಗೆದುಕೊಂಡು ಕೆಳಗಿಳಿಯುತ್ತಾ ತುಚ್ಛ ಬುದ್ಧಿಯವರು, ತಮೋಪ್ರಧಾನರಾಗಿ ಬಿಟ್ಟಿದ್ದೀರಿ ಎಂದು ತಂದೆಯು ಸ್ಮೃತಿ ತರಿಸುತ್ತಾರೆ. ಸತೋಪ್ರಧಾನರಿಗೆ ಸ್ವಚ್ಛ, ಶ್ರೇಷ್ಠ ಬುದ್ಧಿಯವರೆಂದು ಹೇಳಲಾಗುತ್ತದೆ. ತಮೋಪ್ರಧಾನರಿಗೆ ನೀಚ ಬುದ್ಧಿಯವರೆಂದು ಹೇಳಲಾಗುತ್ತದೆ. ನೀಚ ಬುದ್ಧಿಯವರು ಶ್ರೇಷ್ಠ ಬುದ್ಧಿಯವರಿಗೆ ನಮಸ್ಕಾರ ಮಾಡುತ್ತಾರೆ. ಇದು ನಿಮಗೂ ಸಹ ತಿಳಿದಿರಲಿಲ್ಲ - ನಾವೇ ಶ್ರೇಷ್ಠರಾಗಿದ್ದೆವು, ಈಗ ನಾವೇ ಕನಿಷ್ಟರಾಗಿದ್ದೇವೆ ಎಂದು. ತಂದೆಯು ತಿಳಿಸುತ್ತಾರೆ, ಯಾರು ಮೊದಲ ನಂಬರಿನಲ್ಲಿ ಜನ್ಮ ತೆಗೆದುಕೊಂಡಿದ್ದರೋ ಅವರೇ ಸತೋಪ್ರಧಾನರಾಗುವರು. ಆ ಸೂರ್ಯವಂಶಿಯರೇ 84 ಜನ್ಮಗಳನ್ನು ತೆಗೆದುಕೊಳ್ಳುವರು. ನೀವೀಗ ತಿಳಿದುಕೊಂಡಿದ್ದೀರಿ, ನಾವು ವಿಶ್ವದ ಮಾಲೀಕರಾಗಿದ್ದಾಗ ಪಾವನ, ಸತೋಪ್ರಧಾನರಾಗಿದ್ದೆವು. ಪತಿತರು ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಪಾವನರ ಮಹಿಮೆ ನೋಡಿ, ಎಷ್ಟು ಶ್ರೇಷ್ಠವಾಗಿದೆ! ಸರ್ವಗುಣ ಸಂಪನ್ನರು.... ತ್ರೇತಾಯುಗದಲ್ಲಿ 14 ಕಲಾ ಸಂಪೂರ್ಣರೆಂದು ಹೇಳಲಾಗುವುದಿಲ್ಲ. ಸೂರ್ಯವಂಶಿಯರಿಗೆ 16 ಕಲಾ ಸಂಪೂರ್ಣರೆಂದು ಹೇಳಲಾಗುತ್ತದೆ. 14 ಕಲೆಗಳ ಹಿಂದೆ ಸಂಪೂರ್ಣ ಶಬ್ಧವು ಬರುವುದಿಲ್ಲ. 16 ಕಲೆಯುಳ್ಳವರಿಗೆ ಸಂಪೂರ್ಣ ಎಂದು ಬರೆಯಬೇಕಾಗಿದೆ. ಈಗ ನೀವು ಮಕ್ಕಳು 16 ಕಲಾ ಸಂಪೂರ್ಣರಾಗುತ್ತೀರಿ.
ಇದನ್ನೂ ನೀವು ಮಕ್ಕಳಿಗೆ ತಿಳಿಸಿದ್ದಾರೆ - ಈ ಜ್ಞಾನವು ಅತಿ ಸಹಜವಾಗಿದೆ, ಇದಕ್ಕಿಂತಲೂ ಸಹಜ ಮಾತು ಯಾವುದೂ ಇರುವುದಿಲ್ಲ. ತಂದೆಯು ದಯಾಹೃದಯಿಯಾಗಿದ್ದಾರಲ್ಲವೆ. ಮಕ್ಕಳು ಭಕ್ತಿಯಲ್ಲಿ ಹುಡುಕಾಡಿ-ಹುಡುಕಾಡಿ ಸುಸ್ತಾಗಿ ಬಿಟ್ಟಿದ್ದಾರೆಂದು ತಂದೆಗೆ ಗೊತ್ತಿದೆ. ಆದ್ದರಿಂದ ದ್ರೌಪದಿಯ ಕಾಲು ಒತ್ತಿದರೆಂದು ತೋರಿಸಿದ್ದಾರೆ. ತಂದೆಯ ಬಳಿ ವೃದ್ಧ ಮಾತೆಯರು ಬರುತ್ತಾರೆ. ಅವರಿಗೆ ತಂದೆಯು ಹೇಳುತ್ತಾರೆ - ನೀವು ಭಕ್ತಿಯ ಆಘಾತವನ್ನನುಭವಿಸಿ ಸುಸ್ತಾಗಿ ಬಿಟ್ಟಿದ್ದೀರಿ. ಆದ್ದರಿಂದ ತಂದೆಯು ಈಗ ನಿಮ್ಮ ದಣಿವೆಲ್ಲವನ್ನೂ ದೂರ ಮಾಡುತ್ತಾರೆ. ಭಕ್ತಿಯಲ್ಲಿ ರಾಮ, ರಾಮ ಎಂದು ಜಪಿಸುತ್ತಾರೆ. ಮಾಲೆಯನ್ನು ಜಪಿಸುತ್ತಾ ಇರುತ್ತಾರೆ. ಬ್ರಹ್ಮಾ ತಂದೆಗೆ ಪಾದ್ರಿಗಳೊಂದಿಗೆ ಸಂಪರ್ಕವಿತ್ತು, ಪಾದ್ರಿಗಳೂ ಸಹ ಬೈಬಲನ್ನು ಹಿಡಿದುಕೊಂಡು ತಿಳಿಸುತ್ತಾ ಇರುತ್ತಾರೆ. ಅನೇಕರು ಕ್ರಿಶ್ಚಿಯನ್ನರಾಗಿ ಬಿಡುತ್ತಾರೆ. ಇಲ್ಲಿ ಮಾಲೆ ಇತ್ಯಾದಿಗಳನ್ನು ಜಪಿಸುವ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ. ಬಾಯಿಂದ ಶಿವ, ಶಿವ ಎಂದು ಹೇಳುವ ಅವಶ್ಯಕತೆಯೂ ಇಲ್ಲ. ನಾವಂತೂ ಶಬ್ಧದಿಂದ ದೂರ ಹೋಗಬೇಕಾಗಿದೆ. ತಂದೆಯು ಬಹಳ ಸಹಜ ಯುಕ್ತಿಯನ್ನು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು ಮತ್ತು ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಬೇಕಾಗಿದೆ. ಕಮಲ ಪುಷ್ಫವು ಬಹಳ ಪ್ರಸಿದ್ಧವಾಗಿದೆ. ಅದರ ಬಹಳ ದೊಡ್ಡ ಪಂಚಾಯಿತಿ ಇರುತ್ತದೆ ಆದರೂ ಸಹ ಭಿನ್ನ ಮತ್ತು ಪ್ರಿಯವಾಗಿರುತ್ತದೆ. ನೀವೂ ಸಹ ವಿಷಯ ಸಾಗರದಲ್ಲಿರುತ್ತಾ ಭಿನ್ನ ಮತ್ತು ಪ್ರಿಯರಾಗಿರಿ, ಇದು ವಿಷಯ ಸಾಗರವಾಗಿದೆ. ಇದಕ್ಕೆ ನದಿಯೆಂದು ಹೇಳುವುದಿಲ್ಲ.
ನೀವು ಮಕ್ಕಳು ಈಗ ಎಷ್ಟೊಂದು ಬುದ್ಧಿವಂತರಾಗುತ್ತೀರಿ. ಇದೇ ಬುದ್ಧಿವಂತಿಕೆಯಿಂದ ನೀವು ಮಹಾರಾಜಕುಮಾರ ಆಗಿ ಬಿಡುತ್ತೀರಿ. ನಿಮಗೆ ಬಹಳ ಖುಷಿಯಿರಬೇಕು, ಪುರುಷಾರ್ಥ ಮಾಡಬೇಕು. ಕುಮಾರ ಅಥವಾ ಕುಮಾರಿ ಇಬ್ಬರೂ ಪುರುಷಾರ್ಥ ಮಾಡಬೇಕಾಗಿದೆ. ಲೌಕಿಕ ಸಂಬಂಧದಲ್ಲಿ ತಂದೆಯ ಆಸ್ತಿಯು ಕೇವಲ ಮಗನಿಗೆ ಸಿಗುತ್ತದೆ, ಮಗಳಿಗಿಲ್ಲ. ಇಲ್ಲಿ ಎಲ್ಲಾ ಆತ್ಮರಿಗೆ ಆಸ್ತಿಯು ಸಿಗುತ್ತದೆ. ನೆನಪಿನ ಯಾತ್ರೆಯಿಂದಲೇ ನೀವು ಶ್ರೇಷ್ಠ ಪದವಿಯನ್ನು ಪಡೆಯುತ್ತೀರೆಂದು ತಂದೆಯು ತಿಳಿಸುತ್ತಾರೆ. ಪ್ರದರ್ಶನಿಯಲ್ಲಿ ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ ಅದರ ನಂತರ ತಂದೆಯ ಆಸ್ತಿ. ಮೊದಲು ಈ ನಿಶ್ಚಯವನ್ನು ತರಿಸಿ - ಇವರು ನಿಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಭಗವಂತನು ಒಬ್ಬರೇ ಆಗಿದ್ದಾರೆ, ಬ್ರಹ್ಮಾ-ವಿಷ್ಣು-ಶಂಕರನು ಭಗವಂತರಲ್ಲ, ದೇವತೆಗಳಾಗಿದ್ದಾರೆ. ಭಗವಂತನು ಪತಿತ-ಪಾವನ, ನಿರಾಕಾರ ತಂದೆಯಾಗಿದ್ದಾರೆ. ಅವರ ಮಹಿಮೆಯೇ ಭಿನ್ನವಾಗಿದೆ ಎಂಬುದನ್ನು ಅವರಿಗೆ ತಿಳಿಸಬೇಕಾಗಿದೆ. ಇತ್ತೀಚೆಗೆ ಪ್ರದರ್ಶನಿಯಲ್ಲಿ ತ್ರಿಮೂರ್ತಿಯ ಚಿತ್ರದಲ್ಲಿ ತಿಳಿಸಲಾಗುತ್ತದೆ. ಅವರು ತಂದೆ, ಇವರು ದಾದಾ ಆಗಿದ್ದಾರೆ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ. ಅವರು ನಿರಾಕಾರನಾಗಿದ್ದಾರೆ ಅಂದಮೇಲೆ ಆಸ್ತಿಯು ಹೇಗೆ ಸಿಗುವುದು? ಅವರು ಎಲ್ಲರ ರಚಯಿತನಾಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರನೂ ಸಹ ರಚನೆಯಾಗಿದ್ದಾರೆ. ರಚನೆಗೆ ರಚಯಿತನಿಂದಲೇ ಆಸ್ತಿಯು ಸಿಗಲು ಸಾಧ್ಯ. ಆ ನಿರಾಕಾರ ತಂದೆಯು ಇವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ಎಲ್ಲರ ರಚಯಿತನು ಒಬ್ಬರೇ ಆಗಿದ್ದಾರೆ ಆದ್ದರಿಂದ ಸರ್ವರ ಸದ್ಗತಿದಾತ ಒಬ್ಬರೇ ಎಂದು ಗಾಯನವಿದೆ. ಅವರಿಗೆ ಜ್ಞಾನಸಾಗರನೆಂದು ಹೇಳಲಾಗುತ್ತದೆ. ಬಾಕಿ ಅವರೆಲ್ಲರೂ ಶಾಸ್ತ್ರಗಳ ಅಥಾರಿಟಿಯಾಗಿದ್ದಾರೆ. ಇವರು ಜ್ಞಾನಸಾಗರ ಸ್ವಯಂ ಅಥಾರಿಟಿಯಾಗಿದ್ದಾರೆ. ವಿಶ್ವದ ಆಲ್ಮೈಟಿ ಅಥಾರಿಟಿಯೇ ಹೇಳುತ್ತಾರೆ - ನಾನು ವೇದಶಾಸ್ತ್ರಗಳನ್ನು ತಿಳಿದುಕೊಂಡಿದ್ದೇನೆ ಮತ್ತು ನಿಮಗೆ ಅದರ ಸಾರವನ್ನು ತಿಳಿಸುತ್ತೇನೆ, ಇವೆಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ, ಯಾವುದು ಸತ್ಯ-ತ್ರೇತಾಯುಗದಲ್ಲಿ ಇರುವುದೇ ಇಲ್ಲ. ಭಕ್ತಿಯಲ್ಲಿಯೇ ಏಣಿಯನ್ನು ಕೆಳಗಿಳಿಯಲಾಗುತ್ತದೆ. ಒಬ್ಬ ತಂದೆಗೇ ಸರ್ವಶಕ್ತಿವಂತನೆಂದು ಗಾಯನವಿದೆ, ಅವರ ಜೊತೆ ಯೋಗವನ್ನು ಇಡುವುದರಿಂದಲೇ ನಾವು ಪವಿತ್ರರಾಗಿ ಬಿಡುತ್ತೇವೆ ಅಂದಮೇಲೆ ಸರ್ವಶಕ್ತಿವಂತನಾದರಲ್ಲವೆ. ನಾವು ಎಲ್ಲರನ್ನೂ ಪತಿತರನ್ನು ಪಾವನರನ್ನಾಗಿ ಮಾಡಿ ಬಿಡುತ್ತೇನೆ, ರಾವಣ ರಾಜ್ಯದಿಂದ ಮುಕ್ತಗೊಳಿಸುತ್ತೇವೆ. ನೀವೀಗ ಶಿವ ತಂದೆಯಿಂದ ಶಕ್ತಿಯನ್ನು ಪಡೆಯುತ್ತಿದ್ದೀರಿ, ಎಷ್ಟು ಹೆಚ್ಚು ನೆನಪು ಮಾಡುತ್ತೀರೋ ಅಷ್ಟು ಶಕ್ತಿಯು ಸಿಗುವುದು ಮತ್ತು ತುಕ್ಕು ಬಿಟ್ಟು ಹೋಗುವುದು. ನಿಮಗೆ ಹಗಲು-ರಾತ್ರಿ ಇದೇ ಚಿಂತೆಯಿರಲಿ - ಪತಿತರಿಂದ ಪಾವನರು, ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕು. ಮಾಯೆಯ ಬಿರುಗಾಳಿಗಳು ಬರುತ್ತವೆ. ತಂದೆಯು ತಿಳಿಸುತ್ತಾರೆ - ಎಚ್ಚರಿಕೆಯಿಂದ ಇರಬೇಕು, ನಿಮ್ಮ ಯುದ್ಧವು ಮಾಯೆಯ ಜೊತೆಯಿದೆ. ವ್ಯರ್ಥ ವಿಕಲ್ಪಗಳು ಬಹಳಷ್ಟು ಬರುತ್ತವೆ. ಯಾವ ಸಂಕಲ್ಪಗಳು ಅಜ್ಞಾನ ಕಾಲದಲ್ಲಿಯೂ ಬಂದಿರುವುದಿಲ್ಲವೋ ಅವು ಬರುತ್ತವೆ. ನೀವು ಯುದ್ಧದ ಮೈದಾನದಲ್ಲಿದ್ದೀರಿ, ಪರಿಶ್ರಮವೆಲ್ಲವೂ ನೆನಪಿನ ಯಾತ್ರೆಯಲ್ಲಿದೆ. ಭಾರತದ ಯೋಗವು ಪ್ರಸಿದ್ಧವಾಗಿದೆ. ಯೋಗಕ್ಕಾಗಿಯೇ ತಂದೆಯು ತಿಳಿಸುತ್ತಾರೆ - ನೀವು ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ, ಹೀಗೆ ಮತ್ತ್ಯಾವ ಮನುಷ್ಯರು ತಿಳಿಸಲು ಸಾಧ್ಯವಿಲ್ಲ. ಎಲ್ಲರೂ ಭಗವಂತನ ರೂಪವಾಗಿದ್ದಾರೆ, ಎಲ್ಲಿ ನೋಡಿದರೂ ಪರಮಾತ್ಮನೇ ಪರಮಾತ್ಮನಿದ್ದಾರೆಂದು ಅವರು ಹೇಳಿ ಬಿಡುತ್ತಾರೆ. ಆದರೆ ತಂದೆಯು ತಿಳಿಸುತ್ತಾರೆ - ನೀವು ಆತ್ಮರಾಗಿದ್ದೀರಿ, 84 ಜನ್ಮಗಳನ್ನೂ ತೆಗೆದುಕೊಳ್ಳುತ್ತೀರಿ. ಒಂದುವೇಳೆ ಎಲ್ಲರೂ ಪರಮಾತ್ಮನಾಗಿದ್ದರೆ ಪರಮಾತ್ಮನ ಜನನ-ಮರಣ ಚಕ್ರದಲ್ಲಿ ಬರುತ್ತಾರೆಯೇ? ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಆತ್ಮದಲ್ಲಿ ಒಳ್ಳೆಯ, ಕೆಟ್ಟ ಸಂಸ್ಕಾರವಿರುತ್ತದೆ, ಒಳ್ಳೆಯ ಸಂಸ್ಕಾರ ಇರುವವರ ಮಹಿಮೆಯನ್ನು ಹಾಡುತ್ತಾರೆ. ಕೆಟ್ಟ ಸಂಸ್ಕಾರ ಇರುವವರನ್ನು ನೀಚರು, ಪಾಪಿಗಳೆಂದು ಹೇಳುತ್ತಾರೆ. ತಂದೆಯು ಪವಿತ್ರರಾಗುವ ಸಹಜ ಯುಕ್ತಿಯನ್ನು ತಿಳಿಸುತ್ತಾರೆ. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖ ಕೊಡಬಾರದು, ತನಗೂ ದುಃಖವನ್ನು ಕೊಟ್ಟುಕೊಳ್ಳಬಾರದು. ಯಾವುದೇ ವಿಕರ್ಮ, ಕಳ್ಳತನ ಇತ್ಯಾದಿಗಳನ್ನು ಮಾಡಬಾರದು. ಒಂದುವೇಳೆ ಎಲ್ಲಿಯಾದರೂ ಸುಳ್ಳು ಹೇಳಬೇಕಾಗುತ್ತದೆ ಎಂದರೆ ತಂದೆಯೊಂದಿಗೆ ಸಲಹೆಯನ್ನು ಕೇಳಿರಿ. ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಪಾಪವಾಗಿದೆ, ಅದನ್ನು ಮಾಡಬೇಡಿ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಕೈಗಳಿಂದ ಕೆಲಸ ಮಾಡುತ್ತಾ ಬುದ್ಧಿಯೋಗವನ್ನು ನನ್ನಲ್ಲಿಡಿ (ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನೆನಪು ಮಾಡಲಿ) ತಂದೆಯು ಸರ್ಜನ್ ಆಗಿದ್ದಾರೆ, ಎಲ್ಲರ ಕಾಯಿಲೆಯು ಒಂದೇರೀತಿ ಇರಲು ಸಾಧ್ಯವಿಲ್ಲ. ಎಲ್ಲರ ಕರ್ಮವೂ ಒಂದೇ ರೀತಿ ಇರುವುದಿಲ್ಲ, ಗುರಿಯು ಬಹಳ ಉನ್ನತವಾಗಿದೆ. ಆದ್ದರಿಂದ ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ಕೇಳಬೇಕಾಗಿದೆ. ಅಮರನಾಥ ಯಾತ್ರೆಗೆ ಹೋಗುತ್ತಾರೆಂದರೆ ಅಮರನಾಥನಿಗೆ ಜಯವಾಗಲಿ, ಬದರೀನಾಥನಿಗೆ ಜಯವಾಗಲಿ. ಹೇ ಬದರೀನಾಥ ನಮ್ಮ ರಕ್ಷಣೆ ಮಾಡು ಎಂದು ಹೇಳುತ್ತಾರೆ. ನೀವೀಗ ತೀರ್ಥ ಯಾತ್ರೆ ಇತ್ಯಾದಿಗಳೇನನ್ನೂ ಮಾಡಬೇಕಾಗಿಲ್ಲ. ಈ ಜ್ಞಾನದ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ, ಅವರದೇ ಪಾತ್ರವಿದೆ. ನೀವೂ ಸಹ ತಂದೆಯ ಜೊತೆ ಜೊತೆಗೆ ಪಾತ್ರಧಾರಿಗಳಾಗಿದ್ದೀರಿ. ಯಾರೆಷ್ಟು ಓದುವರೋ ಅಷ್ಟು ಶ್ರೇಷ್ಠ ಪದವಿ ಸಿಗುವುದು. ಇದರಲ್ಲಿ ಯಾರದೂ ಹೆಗ್ಗಳಿಕೆಯಿಲ್ಲ, ಹೆಗ್ಗಳಿಕೆಯೆಲ್ಲವೂ ಒಬ್ಬ ತಂದೆಯದೇ ಆಗಿದೆ ಯಾರು ಸರ್ವ ಮನುಷ್ಯರಿಗೆ ಸದ್ಗತಿ ನೀಡುತ್ತಾರೆ. ಸರ್ವ ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಡ್ರಾಮಾದಲ್ಲಿ ನನಗೂ ಪಾತ್ರವು ಸಿಕ್ಕಿದೆ. ಪಂಚತತ್ವಗಳಿಗೂ ತಮ್ಮ-ತಮ್ಮ ಪಾತ್ರವು ಸಿಕ್ಕಿದೆ ಅದನ್ನು ಅಭಿನಯಿಸಬೇಕಾಗಿದೆ. ಧರಣಿಯು ಅಲುಗಾಡುವುದು, ವಿನಾಶವಾಗುವುದು. ನಿಮ್ಮದೂ ಸಹ ಡ್ರಾಮಾದಲ್ಲಿ ಪಾತ್ರವಿದೆ, ಇದರಲ್ಲಿ ಹೆಗ್ಗಳಿಕೆಯೇನಿದೆ! ರಾಜ್ಯಭಾರ ಮಾಡುತ್ತಾ-ಮಾಡುತ್ತಾ ಪತಿತರಾಗಿ ಬಿಟ್ಟಿರಿ. ನೀವೂ ಸಹ ಮೊದಲು ಏನಾಗಿದ್ದಿರಿ? ಕನಿಷ್ಟರು, ನೀವೀಗ ವಿಶ್ವದ ಮಾಲೀಕರಾಗುತ್ತೀರಿ. ಇದು ನಿಮ್ಮ ಪಾತ್ರವಾಗಿದೆ, ಪುನಃ ಕಲ್ಪದ ನಂತರವೂ ಇದೇರೀತಿ ಆಗಬೇಕಾಗಿದೆ. ಇದರಲ್ಲಿ ಹೆಗ್ಗಳಿಕೆ ಅಥವಾ ಮಹಿಮೆಯ ಮಾತೇನೂ ಇಲ್ಲ. ಈ ನಾಟಕವು ಮಾಡಲ್ಪಟ್ಟಿದೆ, ತಂದೆಯೂ ಸಹ ಬಂದು ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಭಕ್ತರು ಮಹಿಮೆ ಹಾಡುತ್ತಾ ಹೊಗಳುತ್ತಾರೆ. ಆ ಕೆಲಸವನ್ನು ನಾವು ಮಾಡುವುದಿಲ್ಲ. ಇಲ್ಲಂತೂ ತಂದೆಯನ್ನು ನೆನಪು ಮಾಡಬೇಕಾಗಿದೆ - ಬಾಬಾ, ಈ ಡ್ರಾಮಾದ ರಹಸ್ಯವು ಬಹಳ ಅದ್ಭುತವಾಗಿದೆ, ಇದು ಯಾರಿಗೂ ತಿಳಿದಿಲ್ಲ. ಬಾಬಾ, ನಾವು ಸತ್ಯಯುಗದಲ್ಲಿ ಇದನ್ನೂ ಮರೆತು ಹೋಗುತ್ತೇವೆಯೇ! ಬಹಳ ವಿಚಿತ್ರ ನಾಟಕವಾಗಿದೆ, ಹೀಗೆ ತಮ್ಮೊಂದಿಗೆ ಮಾತನಾಡಿಕೊಳ್ಳಿ. ಪಾತ್ರಧಾರಿಗಳು ಯಾರಾದರೂ ಚೆನ್ನಾಗಿ ಪಾತ್ರವನ್ನು ಅಭಿನಯಿಸಿದರೆ ಚಪ್ಪಾಳೆ ತಟ್ಟುತ್ತಾರೆ. ನಾವೂ ಸಹ ಹೇಳುತ್ತೇವೆ. ಮಧುರ ತಂದೆಯದು, ಶಿವ ತಂದೆಯದು ಬಹಳ ಒಳ್ಳೆಯ ಪಾತ್ರವಾಗಿದೆ, ನಾವೂ ಸಹ ತಂದೆಯ ಸಂಗದಲ್ಲಿ ಒಳ್ಳೆಯ ಪಾತ್ರವನ್ನು ಅಭಿನಯಿಸುತ್ತೇವೆ. ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ! ಆದರೂ ಸಹ ಯಾರಿಗಾದರೂ ಅರ್ಥವಾಗಲಿಲ್ಲವೆಂದರೆ ನಮ್ಮ ರಾಜಧಾನಿಯಲ್ಲಿ ಇವರು ಬರುವುದಿಲ್ಲವೆಂದು ತಿಳಿದುಕೊಳ್ಳಲಾಗುತ್ತದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ಯಾರು ಬ್ರಾಹ್ಮಣರಾಗಿದ್ದರೋ ಅವರೇ ನಂತರ ದೇವತೆಗಳಾಗುತ್ತಾರೆ. ದೇವತೆಗಳಲ್ಲಿಯೂ ಪ್ರಜೆ, ಮೊದಲಾದ ಎಲ್ಲಾ ಪದವಿಯವರು ಆಗುತ್ತಾರೆ. ಎಲ್ಲರಿಗೆ ಅನಾದಿ ಪಾತ್ರವು ಸಿಕ್ಕಿದೆ, ಸೃಷ್ಟಿಯು ಒಂದೇ ಆಗಿದೆ ಅದು ನಡೆಯುತ್ತಿರುತ್ತದೆ. ಭಗವಂತ ಒಬ್ಬನೇ, ರಚನೆಯೂ ಒಂದೇ. ಅದೇ ಚಕ್ರವು ಸುತ್ತುತ್ತಿರುತ್ತದೆ. ಮನುಷ್ಯರು ಚಂದ್ರ ಗ್ರಹದಲ್ಲಿ ಏನಿದೆಯೋ ನೋಡೋಣ, ಅದಕ್ಕಿಂತಲೂ ಮೇಲೇನಿದೆ ಎಂದು ಸಂಶೋಧನೆ ಮಾಡುತ್ತಾರೆ. ಅದರ ಮೇಲೆ ಸೂಕ್ಷ್ಮವತನವಿದೆ, ಅಲ್ಲೇನು ನೋಡುವರು? ಪ್ರಕಾಶವೇ ಪ್ರಕಾಶವಿದೆ, ಮೇಲೆ ಹೋಗಬೇಕೆಂದು ಬಹಳ ಪ್ರಯತ್ನ ಪಡುತ್ತಾರೆ ಆದರೆ ವಿಜ್ಞಾನಕ್ಕೂ ಒಂದು ಮಿತಿಯಿದೆಯಲ್ಲವೆ. ಮಾಯೆಯ ಬಹಳ ಆಡಂಬರವಿದೆ, ವಿಜ್ಞಾನವು ಸುಖಕ್ಕಾಗಿಯೂ ಇದೆ, ದುಃಖಕ್ಕಾಗಿಯೂ ಇದೆ, ಸತ್ಯಯುಗದಲ್ಲಿ ವಿಮಾನಗಳೆಂದೂ ಬೀಳುವುದಿಲ್ಲ, ದುಃಖದ ಮಾತಿರುವುದಿಲ್ಲ. ಇಲ್ಲಂತೂ ದುಃಖವೇ ದುಃಖವಿದೆ. ಕಳ್ಳರು ಲೂಟಿ ಮಾಡುತ್ತಾರೆ, ಬೆಂಕಿಯು ಸುಟ್ಟು ಹಾಕುತ್ತದೆ. ಅಲ್ಲಿ ಮನೆಗಳು ಬಹಳ ದೊಡ್ಡದಾಗಿರುತ್ತದೆ. ಒಬ್ಬೊಬ್ಬ ರಾಜನ ಜಮೀನು ಇಡೀ ಅಬುವಿನಷ್ಟಿರುತ್ತದೆ. ನೀವು ಸ್ವರ್ಗವಾಸಿಗಳಾಗಲು ಬಂದಿದ್ದೀರಿ, ತಂದೆಯನ್ನು ನೆನಪು ಮಾಡುವುದರಿಂದಲೇ ತುಕ್ಕು ಕಳೆಯುವುದು. ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಈಗ ನಿಮಗೆ ಪ್ರಿಯತಮನು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ಅಮರಪುರಿಯ ಮಾಲೀಕರಾಗುತ್ತೀರಿ. ಅಲ್ಲಿ ಅಕಾಲಮೃತ್ಯು ಆಗುವುದಿಲ್ಲ. ಸತ್ಯಯುಗದಲ್ಲಿ ಶ್ರೇಷ್ಠಾಚಾರಿ ಪ್ರಪಂಚವಿರುತ್ತದೆ, ಇಲ್ಲಿ ಭ್ರಷ್ಟಾಚಾರಿ ಪ್ರಪಂಚವಾಗಿದೆ. ಎಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ, ನೀವೂ ಸಹ ಆಸ್ತಿಯನ್ನು ತೆಗೆದುಕೊಳ್ಳಿ. ಒಂದುವೇಳೆ ಶ್ರೀಮತದಂತೆ ನಡೆಯದಿದ್ದರೆ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಪ್ರತೀ 5000 ವರ್ಷಗಳ ನಂತರ ತಂದೆಯು ಸ್ವರ್ಗವನ್ನಾಗಿ ಮಾಡಲು ಬರುತ್ತಾರೆ. ಕಲಿಯುಗದಲ್ಲಿ ಬಹಳ ಜನಸಂಖ್ಯೆಯಿದೆ, ಸತ್ಯಯುಗದಲ್ಲಿ ಕೆಲವರೇ ಇರುವರು ಅಂದಮೇಲೆ ಅವಶ್ಯವಾಗಿ ವಿನಾಶವಾಗುವುದು, ಆದ್ದರಿಂದ ಮಹಾಭಾರತ ಯುದ್ಧವು ಸನ್ಮುಖದಲ್ಲಿ ನಿಂತಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮನಸ್ಸಾ-ವಾಚಾ-ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದು. ಕೆಟ್ಟ ಸಂಸ್ಕಾರಗಳನ್ನು ತೆಗೆದು ಒಳ್ಳೆಯ ಸಂಸ್ಕಾರವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಯಾವುದೇ ವಿಕರ್ಮವಾಗದಂತೆ ಗಮನವನ್ನು ಇಡಬೇಕಾಗಿದೆ.
2. ಈ ವಿಚಿತ್ರ ಡ್ರಾಮಾದಲ್ಲಿ ತಮ್ಮ ಶ್ರೇಷ್ಠಭಾಗ್ಯವನ್ನು ನೋಡಿಕೊಳ್ಳುತ್ತಾ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಿ - ನಾವು ಭಗವಂತನ ಜೊತೆ ಪಾತ್ರಧಾರಿಗಳಾಗಿದ್ದೇವೆ, ನಮ್ಮದು ಎಷ್ಟು ಒಳ್ಳೆಯ ಪಾತ್ರವಾಗಿದೆ!
ಓಂ ಶಾಂತಿ. ಆತ್ಮಿಕ ಬೇಹದ್ದಿನ ತಂದೆಯು ಬೇಹದ್ದಿನ ಆತ್ಮಿಕ ಮಕ್ಕಳ ಪ್ರತಿ ತಿಳಿಸುತ್ತಾರೆ. ಈ ಒಂದೊಂದು ಶಬ್ಧವು ಅಥವಾ ಜ್ಞಾನರತ್ನವು ಲಕ್ಷಾಂತರ ರೂಪಾಯಿಗಳ ಮೌಲ್ಯವುಳ್ಳದ್ದಾಗಿದೆ. ತಂದೆಯು ತಿಳಿಸಿದ್ದಾರೆ, ಪರಮಾತ್ಮನಿಗೆ ರೂಪಭಸಂತನೆಂದೂ ಹೇಳುತ್ತಾರೆ. ಅವರಿಗೆ ರೂಪವೂ ಇದೆ, ಶಿವ ತಂದೆಯೆಂಬ ಹೆಸರೂ ಇದೆ, ಅವರು ಜ್ಞಾನಸಾಗರನಾಗಿದ್ದಾರೆ. ಜ್ಞಾನ ಧನವೂ ಆಗಿದೆ, ಜ್ಞಾನ ವಿದ್ಯೆಯೂ ಆಗಿದೆ. ಈ ಜ್ಞಾನವನ್ನು ಆತ್ಮಿಕ ತಂದೆಯೇ ಕೊಡುತ್ತಾರೆ. ಆತ್ಮಕ್ಕೆ ಚೈತನ್ಯ ಶಕ್ತಿ ಎಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ ಆತ್ಮಗಳು ಎಷ್ಟೊಂದು ಅಲೆದಾಡುತ್ತಾರೆ, ಅವರನ್ನು ಹುಡುಕುತ್ತಾರೆ. ಭಗವಂತನು ಒಬ್ಬ ಶಿವನಾಗಿದ್ದಾರೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೂ ಹುಡುಕಾಡುತ್ತಿರುತ್ತಾರೆ. ತಂದೆಯು ಬಂದು ತಿಳಿಸುತ್ತಾರೆ- ಆತ್ಮಿಕ ಮಕ್ಕಳೇ, ನೀವಂತೂ ಅವಿನಾಶಿಯಾಗಿದ್ದೀರಿ. ಪರಮಧಾಮ ನಿವಾಸಿಗಳಾಗಿದ್ದೀರಿ, ಇಲ್ಲಿಗೆ ಪಾತ್ರವನ್ನು ಅಭಿನಯಿಸಲು ಬರುತ್ತೀರಿ. ನೀವು ದೂರ ದೇಶದ ನಿವಾಸಿಗಳಾಗಿದ್ದೀರಿ. ಇದು ನಾಟಕವಾಗಿದೆ, ಇದರ ಹೆಸರು ಸೋಲು-ಗೆಲುವಿನ ಆಟವೆಂದಾಗಿದೆ. ಸುಖ-ದುಃಖದ ಆಟವಾಗಿದೆ. ತಂದೆಯು ತಿಳಿಸುತ್ತಾರೆ- ನಾನು ಮತ್ತು ನೀವೆಲ್ಲರೂ ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಅದಕ್ಕೆ ನಿರ್ವಾಣ ಧಾಮವೆಂತಲೂ ಹೇಳುತ್ತಾರೆ. ಮೊದಲು ಇದನ್ನು ನಿಶ್ಚಯ ಮಾಡಿಕೊಳ್ಳಿ- ನಾವು ಇಲ್ಲಿನ ನಿವಾಸಿಗಳಾಗಿದ್ದೇವೆ! ನಾವಾತ್ಮರ ಸ್ವಧರ್ಮವೇ ಶಾಂತಿಯಾಗಿದೆ, ಬಿಂದು ಆತ್ಮದಲ್ಲಿ ಇಡೀ ಅವಿನಾಶಿ ಪಾತ್ರವು ಅಡಕವಾಗಿದೆ. ತಂದೆಯು ನಿಮಗೆ ಓದಿಸುತ್ತಾರೆ, ನೀವು ಪ್ರಪಂಚದ ಮನುಷ್ಯರ ಚಿಂತೆ ಮಾಡುತ್ತೀರಿ. ಭಗವಾನುವಾಚವು ಸಂಗಮ ಯುಗದಲ್ಲಿಯೇ ಆಗುತ್ತದೆ, ಮತ್ತೆಂದೂ ಸಿಗುವುದಿಲ್ಲ ಎಂಬುದು ನಿಮಗೆ ನಿಶ್ಚಯವಿದೆಯಲ್ಲವೆ. ಮನುಷ್ಯರು ಯಾವುದೇ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಶಾಂತಿಧಾಮ-ಸುಖಧಾಮದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ತಂದೆಯು ಕಲ್ಪದ ಮೊದಲೂ ಸಹ ಮಾಡಿದ್ದರು, ಈಗ ಯಾರು ರಾಷ್ಟ್ರಪತಿಯಾಗಿದ್ದಾರೆಯೋ 5000 ವರ್ಷಗಳ ನಂತರವೂ ಅವರೇ ಆಗುವರು. ಇಡೀ ಪ್ರಪಂಚದ ಯಾವ ದೃಶ್ಯಗಳಿವೆಯೋ ಇವು 5000 ವರ್ಷಗಳ ನಂತರವೂ ಪುನರಾವರ್ತನೆಯಾಗುವವು. ವೃದ್ಧರಿಗೆ ಇಷ್ಟೆಲ್ಲವನ್ನೂ ಧಾರಣೆ ಮಾಡಿಕೊಳ್ಳಲು ಸಾಧ್ಯವಾಗದಿದ್ದರೆ ಅವರಿಗೆ ಹೇಳಲಾಗುತ್ತದೆ - ಕೇವಲ ಮೂರು ಮಾತುಗಳನ್ನು ನೆನಪಿಟ್ಟುಕೊಳ್ಳಿ - ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ ನಂತರ ಸುಖಧಾಮದಲ್ಲಿ ಬರುತ್ತೇವೆ ಮತ್ತೆ ಅರ್ಧಕಲ್ಪದ ನಂತರ ರಾವಣ ರಾಜ್ಯವು ಆರಂಭವಾದಾಗ ವಿಕಾರಿಗಳಾಗಿ ಬಿಡುತ್ತೇವೆ. ಇದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಯಾವಾಗ ದುಃಖಧಾಮವು ಮುಗಿಯುವುದೋ ಆಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ, ನಾನು ನಿಮ್ಮನ್ನು ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬರಬೇಕಾಗುತ್ತದೆ. ಈಗ ಯಾರು ಬಂದು ತಂದೆಯ ಮಕ್ಕಳಾಗಿದ್ದಾರೆಯೋ ಅವರೇ ಆಸ್ತಿಯನ್ನು ಪಡೆಯುತ್ತಾರೆ. ಈ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಕೋಟ್ಯಾಂತರ ಮಂದಿ ಮನುಷ್ಯರು ಬಂದು ತಂದೆಯಿಂದ ಒಂದಲ್ಲ ಒಂದು ಮಾತನ್ನು ಕೇಳುತ್ತಾರೆ, ತಿಳಿದುಕೊಳ್ಳುತ್ತಾರೆ. ವೃದ್ಧಿಯಾಗುತ್ತಾ ಹೋಗುತ್ತದೆ. ನೀವು ಎಲ್ಲಾ ಕಡೆಯೂ ಹೋಗಿ ತಿಳಿಸಬೇಕಾಗುವುದು. ಪತ್ರಿಕೆಗಳ ಮೂಲಕವೂ ಅನೇಕರು ಕೇಳುತ್ತಾರೆ. ಪಾಕೀಸ್ತಾನದಲ್ಲಿಯೂ ಪತ್ರಿಕೆಯ ಮುಖಾಂತರ ಓದುತ್ತಾರೆ. ಅಲ್ಲಿ ಕುಳಿತಿದ್ದಲ್ಲಿಯೇ ಈ ಜ್ಞಾನವನ್ನು ಕೇಳುತ್ತಾರೆ. ಇಡೀ ಪ್ರಪಂಚದಲ್ಲಿ ಗೀತೆಯ ಪ್ರಚಾರ ಬಹಳಷ್ಟಿದೆ. ತಂದೆಯು ತಿಳಿಸುತ್ತಾರೆ- ನನ್ನೊಬ್ಬನನ್ನೇ ನೆನಪು ಮಾಡಿರಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ. ಈ ಮಾತನ್ನು ಪತ್ರಿಕೆಗಳಲ್ಲಿ ಓದಿದರೆ ಇದರಿಂದಲೂ ಅನೇಕರು ಬ್ರಾಹ್ಮಣರಾಗುವರು. ಯಾರು ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆಯೋ ಅವರು ಅವಶ್ಯವಾಗಿ ಬಂದು ತೆಗೆದುಕೊಳ್ಳುತ್ತಾರೆ. ಇನ್ನೂ ಸ್ವಲ್ಪ ಸಮಯವಿದೆ ವೃದ್ಧಿಯಾಗುತ್ತಾ ಇರುತ್ತದೆ. ತಡವಾಗಿ ಬರುವವರು ತೀವ್ರ ಪುರುಷಾರ್ಥ ಮಾಡಬೇಕಾಗುವುದು. ಕಲ್ಪದ ಹಿಂದೆ ಎಷ್ಟು ಮಂದಿ ಸ್ವರ್ಗವಾಸಿಯಾಗಿದ್ದರೋ ಅಷ್ಟೇ ಈಗಲೂ ಅವಶ್ಯವಾಗಿ ಆಗುತ್ತಾರೆ. ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಶಾಂತಿಧಾಮದವರು ಶಾಂತಿಧಾಮಕ್ಕೆ ಹೋಗುತ್ತಾರೆ, ನಂತರ ತಮ್ಮ-ತಮ್ಮ ಸಮಯದಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನೀವು ಮನೆಯನ್ನು ತಲುಪುವಿರಿ. ಸನ್ಯಾಸಿಗಳು ಮುಕ್ತಿಗಾಗಿ ತಲೆ ಕೆಡಿಸಿಕೊಳ್ಳುತ್ತಾರೆ. ಆದ್ದರಿಂದ ಎಲ್ಲರಿಗೆ ಮುಕ್ತಿಯೇ ಸರಿಯೆಂದು ಹೇಳುತ್ತಾರೆ. ಸುಖವು ಕಾಗವಿಷ್ಟ ಸಮಾನವೆಂದು ಹೇಳುತ್ತಾರೆ. ಶಾಸ್ತ್ರಗಳಲ್ಲಿ ಸತ್ಯಯುಗದಲ್ಲಿಯೂ ದುಃಖವಿತ್ತು ಎಂದು ಬರೆದುಬಿಟ್ಟಿದ್ದಾರೆ, ಏನನ್ನೂ ತಿಳಿದುಕೊಂಡಿಲ್ಲ. ಪರಮಾತ್ಮನು ಬರಬೇಕಾಗಿದೆ, ಪತಿತ-ಪಾವನ ಪರಮಾತ್ಮ ಬನ್ನಿ ಬಂದು ನಮಗೆ ಮಾರ್ಗವನ್ನು ತಿಳಿಸಿ ಎಂದು ಹೇಳುತ್ತಾರೆ. ಇನ್ನೊಂದು ಕಡೆ ಗಂಗೆಯು ಪತಿತ-ಪಾವನಿ ಎಂದು ಹೇಳುತ್ತಾರೆ. ಗಂಗಾಸ್ನಾನ, ಯಜ್ಞ, ತಪ, ಯಾತ್ರೆಗಳೆಲ್ಲವನ್ನೂ ಮಾಡುವುದು ಭಗವಂತನೊಂದಿಗೆ ಮಿಲನ ಮಾಡುವ ಯಾತ್ರೆಗಳಾಗಿವೆ ಎಂದು ತಿಳಿಯುತ್ತಾರೆ. ಪರಮಾತ್ಮನನ್ನು ಕರೆಯುತ್ತೀರಿ ಅಂದಮೇಲೆ ಹುಡುಕಾಡುತ್ತೀರಿ!! ಇದೆಲ್ಲವೂ ಭಕ್ತಿಮಾರ್ಗದ ನೊಂದಾವಣೆಯಾಗಿದೆ. ಮನುಷ್ಯರಿಗೆ ಏನು ಬಂದರೆ ಅದನ್ನು ಹೇಳುತ್ತಿರುತ್ತಾರೆ. ಪರಮಾತ್ಮನೊಂದಿಗೆ ಮಿಲನ ಮಾಡಲು ಎಷ್ಟೊಂದು ಪರಿಶ್ರಮ ಪಡುತ್ತಾರೆ, ಈಗ ಭಗವಂತನೊಂದಿಗೆ ಮಿಲನ ಮಾಡಲು ಭಕ್ತರು ಹೋಗುವರು, ಭಗವಂತನು ಇಲ್ಲಿಗೆ ಬರಬೇಕಾಗುವುದೋ? ಪತಿತ ಆತ್ಮರಂತೂ ಹೋಗಲು ಸಾಧ್ಯವಿಲ್ಲ, ತಂದೆಯೇ ಕರೆದುಕೊಂಡು ಹೋಗುವುದಕ್ಕಾಗಿ ಬರುತ್ತಾರೆ. ಎಲ್ಲಾ ಆತ್ಮರ ಮಾರ್ಗದರ್ಶಕನು ಒಬ್ಬರೇ ಆಗಿದ್ದಾರೆ. ನೀವೂ ಸಹ ಪವಿತ್ರರಾಗಿ ಅವರ ಹಿಂದೆ ಹೊರಟು ಹೋಗುತ್ತೀರಿ. ಪ್ರಿಯತಮನು ನಿಮ್ಮನ್ನು ಮಹಾರಾಜ-ಮಹಾರಾಣಿಯರನ್ನಾಗಿ ಮಾಡಲು ಜ್ಞಾನರತ್ನಗಳಿಂದ ಶೃಂಗಾರ ಮಾಡುತ್ತಾರೆ. ಕೃಷ್ಣನು ಪಟ್ಟದ ರಾಣಿಯರನ್ನಾಗಿ ಮಾಡಿಕೊಳ್ಳಲು ಗೋಪಿಕೆಯರನ್ನು ಓಡಿಸಿಕೊಂಡು ಹೋದನೆಂದು ಕೃಷ್ಣನಿಗಾಗಿ ಏನನ್ನು ತೋರಿಸುತ್ತಾರೆಯೋ ಇವೆಲ್ಲವೂ ವಾಸ್ತವಿಕವಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ಸ್ವರ್ಗದ ಮಹಾರಾಣಿಯರಾಗುತ್ತೇವೆ ಎಂದು. ನೀವೇ ಸ್ವರ್ಗವಾಸಿಗಳಾಗಿದ್ದಿರಿ, ಈಗ ತಂದೆಯು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು ಬರುತ್ತಾರೆ, ಇದು 84 ಜನ್ಮಗಳ ಮಾತಾಗಿದೆ. 84 ಲಕ್ಷ ಜನ್ಮಗಳನ್ನು ಯಾರು ನೆನಪು ಮಾಡಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಸತ್ಯಯುಗಕ್ಕೆ ಲಕ್ಷಾಂತರ ವರ್ಷಗಳೆಂದು ಬರೆದಿದ್ದಾರೆ, ತ್ರೇತಾಯುಗಕ್ಕೆ ಕಡಿಮೆ ಬರೆದಿದ್ದಾರೆ. ಈ ಲೆಕ್ಕವು ಸರಿ ಹೊಂದುವುದಿಲ್ಲ. ತಂದೆಯು ಎಷ್ಟು ಸಹಜ ಮಾಡಿ ತಿಳಿಸುತ್ತಾರೆ - ಮಕ್ಕಳೇ, ಕೇವಲ ಎರಡು ಮಾತುಗಳನ್ನು ನೆನಪು ಮಾಡಿಕೊಳ್ಳಿ, ತಂದೆ ಮತ್ತು ಆಸ್ತಿ. ಆಗ ನೀವು ಪವಿತ್ರರೂ ಆಗುತ್ತೀರಿ, ಹಾರುತ್ತೀರಿ ಮತ್ತು ಶ್ರೇಷ್ಠ ಪದವಿಯನ್ನೂ ಪಡೆಯುತ್ತೀರಿ ಆದ್ದರಿಂದ ಹೇಗಾದರೂ ಮಾಡಿ ತಂದೆಯನ್ನು ನೆನಪು ಮಾಡಬೇಕೆಂಬ ಚಿಂತೆಯನ್ನು ಇಟ್ಟುಕೊಳ್ಳಬೇಕು. ಮಾಯೆಯ ಬಿರುಗಾಳಿಗಳು ಬರುತ್ತವೆ ಆದರೆ ಸೋಲನ್ನು ಅನುಭವಿಸಬಾರದು. ಭಲೆ ಯಾರಾದರೂ ಕ್ರೋಧ ಮಾಡಿದರೂ ಸಹ ನೀವು ಮಾತನಾಡಬೇಡಿ. ಸನ್ಯಾಸಿಗಳೂ ಸಹ ಹೇಳುತ್ತಾರೆ - ಬಾಯಲ್ಲಿ ತಾಯತವನ್ನು ಹಾಕಿಕೊಳ್ಳಿ ಆಗ ಅವರೇ ಮಾತನಾಡಿ ಸುಮ್ಮನಾಗಿ ಬಿಡುವರು ಹಾಗೆಯೇ ತಂದೆಯೂ ಹೇಳುತ್ತಾರೆ, ಯಾರಾದರೂ ಕ್ರೋಧದಿಂದ ಮಾತನಾಡಿದರೆ ನೀವು ಶಾಂತವಾಗಿದ್ದು ನೋಡುತ್ತಾ ಇರಿ. ಯಾವುದೆ ಪರಿಸ್ಥಿತಿಯಲ್ಲಿ ನೀವು ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯ ನೆನಪಿನಿಂದಲೇ ಆಸ್ತಿಯು ನೆನಪಿಗೆ ಬರುವುದು. ನಾವು 21 ಜನ್ಮಗಳಿಗಾಗಿ ಸ್ವರ್ಗದ ದೇವತೆಗಳಾಗುತ್ತೇವೆಂದು ನಿಮ್ಮದೇ ಅತೀಂದ್ರಿಯ ಸುಖದ ಗಾಯನವಿದೆ. ಅಲ್ಲಿ ದುಃಖದ ಹೆಸರೂ ಇರುವುದಿಲ್ಲ. ನೀವು 50-60 ಜನ್ಮಗಳು ಸುಖವನ್ನು ಅನುಭವಿಸುತ್ತೀರಿ, ಸುಖದ ಪಾಲು ಹೆಚ್ಚಾಗಿದೆ. ಸುಖ-ದುಃಖ ಸಮಭಾಗವಾಗಿದ್ದರೆ ಲಾಭವಾದರೂ ಏನು? ನಿಮ್ಮ ಬಳಿ ಬಹಳ ಹಣವಿರುತ್ತದೆ, ಇಲ್ಲಿಗೆ ಕೆಲವು ವರ್ಷಗಳ ಮೊದಲು ಇಲ್ಲಿಯೂ ಸಹ ಆಹಾರ-ಧಾನ್ಯಗಳು ಬಹಳ ಅಗ್ಗವಾಗಿತ್ತು. ರಾಜರುಗಳ ರಾಜಧಾನಿಯಿತ್ತು, ತಂದೆಯು (ಬ್ರಹ್ಮಾ) ಹತ್ತಾಣಿಗೆ ಒಂದು ಮೊಣ ಸಜ್ಜೆಯನ್ನು ಮಾರಾಟ ಮಾಡುತ್ತಿದ್ದರು ಅಂದಮೇಲೆ ಅದಕ್ಕಿಂತಲೂ ಮೊದಲು ಎಷ್ಟು ಸಸ್ತಾ ಇರಬಹುದು! ಮನುಷ್ಯರು ಕಡಿಮೆಯಿರುತ್ತಾರೆ, ಆಹಾರದ ಚಿಂತೆಯಿರುವುದಿಲ್ಲ. ಈಗ ಇದನ್ನಂತೂ ನೆನಪಿಟ್ಟುಕೊಳ್ಳಬೇಕು - ಮೊದಲು ನಾವು ಮನೆಗೆ ಹೋಗಿ ನಂತರ ಹೊಸ ಪ್ರಪಂಚದಲ್ಲಿ ಬಂದು ಹೊಸ ಪಾತ್ರವನ್ನು ಅಭಿನಯಿಸುತ್ತೇವೆ, ಅಲ್ಲಿ ನಮ್ಮ ಶರೀರವೂ ಸಹ ಸತೋಪ್ರಧಾನ ತತ್ವಗಳಿಂದ ಆಗುವುದು. ಈಗ ಪಂಚತತ್ವಗಳು ಸಂಪೂರ್ಣ ತಮೋಪ್ರಧಾನ, ಪತಿತ ಆಗಿ ಬಿಟ್ಟಿದೆ. ಆತ್ಮ ಮತ್ತು ಶರೀರ ಎರಡೂ ಪತಿತವಾಗಿದೆ. ಅಲ್ಲಿ ಶರೀರವು ರೋಗಿಯಾಗುವುದಿಲ್ಲ. ಇವೆಲ್ಲವೂ ತಿಳಿದುಕೊಳ್ಳುವ ಮಾತುಗಳಾಗಿವೆ. ಮಕ್ಕಳಿಗೆ ಇಲ್ಲಿ ಬಹಳ ಚೆನ್ನಾಗಿ ತಿಳಿಸುತ್ತೇನೆ, ಮತ್ತೆ ಮನೆಗೆ ಹೋಗಿ ಮರೆತು ಹೋಗುತ್ತಾರೆ. ಇಲ್ಲಿ ಮೋಡಗಳು ತುಂಬಿಕೊಂಡು ಎಷ್ಟೊಂದು ಖುಷಿಯಾಗುತ್ತಾರೆ, ಹೊರಗಡೆ ಹೋಗುತ್ತಿದ್ದಂತೆಯೇ ಮರೆತು ಹೋಗುತ್ತಾರೆ. ಮೊದಲು ಸಾಕ್ಷಾತ್ಕಾರದಲ್ಲಿ ರಾಸವಿಲಾಸಗಳು ಬಹಳ ನಡೆಯುತ್ತಿತ್ತು ನಂತರ ಇದೆಲ್ಲವನ್ನೂ ನಿಲ್ಲಿಸಲಾಯಿತು ಏಕೆಂದರೆ ಮನುಷ್ಯರು ಇದು ಜಾದು ಎಂದು ತಿಳಿಯುತ್ತಿದ್ದರು. ಭಕ್ತಿಯಲ್ಲಿಯೂ ನೌಧಾಭಕ್ತಿ ಮಾಡುತ್ತಾರೆಂದರೆ ಬಹಳ ಅಪರೂಪವಾಗಿ ಸಾಕ್ಷಾತ್ಕಾರವಾಗುತ್ತದೆ. ಇಲ್ಲಿ ಭಕ್ತಿಯ ಮಾತೇ ಇಲ್ಲ, ಕುಳಿತು-ಕುಳಿತಿದ್ದಂತೆಯೇ ಸಾಕ್ಷಾತ್ಕಾರದಲ್ಲಿ ಹೊರಟು ಹೋಗುತ್ತಿದ್ದರು ಆದ್ದರಿಂದ ಮನುಷ್ಯರು ಜಾದು ಎಂದು ತಿಳಿಯುತ್ತಿದ್ದರು.
ಈಗಿನ ಪ್ರಪಂಚದಲ್ಲಿ ಎಷ್ಟೊಂದು ಭಗವಂತರಾಗಿ ಬಿಟ್ಟಿದ್ದಾರೆ. ಸೀತಾರಾಮ, ರಾಧಾಕೃಷ್ಣ ಎಂದು ಹೆಸರನ್ನು ಇಟ್ಟುಕೊಳ್ಳುತ್ತಾರೆ. ಆ ಸ್ವರ್ಗದ ಮಾಲೀಕರೆಲ್ಲಿ, ಈ ನರಕವಸಿಗಳೆಲ್ಲಿ! ಈ ಸಮಯದಲ್ಲಿ ಎಲ್ಲರೂ ನರಕವಾಸಿಗಳಾಗಿದ್ದಾರೆ. ಏಣಿಯ ಚಿತ್ರದಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ - ಏಣಿಯ ಚಿತ್ರವನ್ನು ಮಕ್ಕಳು ತಮ್ಮ ವಿಚಾರ ಸಾಗರ ಮಂಥನದಿಂದ ಮಾಡಿಸಿದ್ದಾರೆ. ಇದನ್ನು ತಂದೆಯು ನೋಡಿ ಖುಷಿ ಪಟ್ಟರು. ಏಣಿಯ ಚಿತ್ರದಲ್ಲಿ ಎಲ್ಲಾ ಮಾತುಗಳು ಬಂದು ಬಿಡುತ್ತವೆ. ದ್ವಾಪರದಿಂದ ವಿಕಾರಿ ರಾಜರು ಹೇಗೆ ಭಕ್ತಿ ಮಾಡುತ್ತಾ-ಮಾಡುತ್ತಾ ಕೆಳಗಿಳಿದು ಬಂದಿದ್ದಾರೆ. ಈಗ ಯಾವುದೇ ಕಿರೀಟವಿಲ್ಲ, ಇದನ್ನು ಚಿತ್ರಗಳಲ್ಲಿ ತಿಳಿಸಲು ಸಹಜವಾಗುತ್ತದೆ. 84 ಜನ್ಮಗಳಲ್ಲಿ ಹೇಗೆ ಇಳಿಯುವ ಕಲೆಯಾಗುತ್ತದೆ ನಂತರ ಹೇಗೆ ಏರುವ ಕಲೆಯಾಗುತ್ತದೆ ಎಂದು. ನಿಮ್ಮ ಏರುವ ಕಲೆಯಿಂದ ಸರ್ವರ ಉದ್ಧಾರವಾಗುವುದು ಎಂದು ಗಾಯನವಿದೆ. ತಂದೆಯು ಬಂದು ಎಲ್ಲರಿಗೆ ಸುಖ ನೀಡುತ್ತಾರೆ. ಹೇ ತಂದೆಯೇ ನಮ್ಮ ದುಃಖವನ್ನು ದೂರ ಮಾಡಿ ಸುಖ ಕೊಡಿ ಎಂದು ಎಲ್ಲರೂ ಕರೆಯುತ್ತಾರೆ ಆದರೆ ಹೇಗೆ ದುಃಖವನ್ನು ದೂರ ಮಾಡುತ್ತಾರೆ, ಸುಖ ಹೇಗೆ ಸಿಗುತ್ತದೆಯೆಂದು ಯಾರಿಗೂ ತಿಳಿದಿಲ್ಲ.
ಇತ್ತೀಚೆಗೆ ಮನುಷ್ಯರು ಗೀತೆಯನ್ನು ಕಂಠಪಾಠ ಮಾಡಿ ತಿಳಿಸುತ್ತಾರೆ. ಸಾರ ರೂಪದಲ್ಲಿ ಅರ್ಥವನ್ನೂ ತಿಳಿಸುತ್ತಾರೆ. ಸಂಸ್ಕೃತದಲ್ಲಿ ಶ್ಲೋಕಗಳನ್ನು ಕಂಠಪಾಠ ಮಾಡಿ ತಿಳಿಸುತ್ತಾರೆಂದರೆ ಈ ಮಹಾತ್ಮರು ಒಳ್ಳೆಯವರೆಂದು ಹೇಳಿ ಬಿಡುತ್ತಾರೆ. ಲಕ್ಷಾಂತರ ಮಂದಿ ಹೋಗಿ ಅವರ ಕಾಲಿಗೆ ಬೀಳುತ್ತಾರೆ. ಆ ವಿದ್ಯೆಯಲ್ಲಾದರೆ (ಲೌಕಿಕ ವಿದ್ಯೆ) 15-20 ವರ್ಷಗಳು ಹಿಡಿಸುತ್ತವೆ. ಇದರಲ್ಲಿ ಯಾರಾದರೂ ಬುದ್ಧಿವಂತರಾಗಿದ್ದರೆ ಕೂಡಲೇ ಕಂಠಪಾಠ ಮಾಡಿ ತಿಳಿಸುತ್ತಾರೆ, ಆಗ ಬಹಳಷ್ಟು ಹಣವನ್ನು ಸಂಪಾದಿಸುವರು. ಇವೆಲ್ಲವೂ ಸಂಪಾದನೆಯ ಮಾರ್ಗಗಳಾಗಿವೆ. ಯಾರಾದರೂ ದಿವಾಳಿಯಾದಾಗಲೂ ಹೋಗಿ ಸನ್ಯಾಸ ಧಾರಣೆ ಮಾಡಿಕೊಳ್ಳುತ್ತಾರೆ ಆಗ ಎಲ್ಲಾ ಚಿಂತೆಗಳು ದೂರವಾಗಿ ಬಿಡುತ್ತವೆ. ನಂತರ ಒಂದಲ್ಲ ಒಂದು ಮಂತ್ರ ತಂತ್ರಗಳನ್ನು ನೆನಪು ಮಾಡಿಕೊಳ್ಳುತ್ತಾರೆ, ತಿರುಗಾಡುತ್ತಾ ಇರುತ್ತಾರೆ. ರೈಲಿನಲ್ಲಿಯೂ ಸುತ್ತಾಡುತ್ತಾ ಇರುತ್ತಾರೆ. ಇಲ್ಲಂತೂ ತಂದೆಯು ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿ. ತಂದೆ ಮತ್ತು ಆತ್ಮರೆಲ್ಲರೂ ನಿರಾಕಾರಿ ಪ್ರಪಂಚದಲ್ಲಿ ಇರುತ್ತಾರೆ. ಅಲ್ಲಿಂದ ಸಾಕಾರ ಪ್ರಪಂಚಕ್ಕೆ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಈಗ ನಾಟಕವು ಮುಕ್ತಾಯವಾಗಲಿದೆ. ನೀವು ತಮೋಪ್ರಧಾನರಾಗಿರುವ ಕಾರಣ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಈಗ ತಂದೆಯು ನಿಮ್ಮನ್ನು ಸತೋಪ್ರಧಾನರನ್ನಾಗಿ ಮಾಡಲು ಬಂದಿದ್ದಾರೆ. ಎಲ್ಲರೂ ತಮ್ಮ ಮನೆಗೆ ಹೋಗುವರು, ಸ್ವರ್ಗದಲ್ಲಿ ಕೇವಲ ದೇವಿ-ದೇವತೆಗಳ ರಾಜ್ಯವೇ ಇರುವುದು. ಶಾಂತಿಧಾಮ, ಸುಖಧಾಮ, ದುಃಖಧಾಮವು ಯಾವಾಗ-ಯಾವಾಗ ಇತ್ತು ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ ಏಕೆಂದರೆ ಘೋರ ಅಂಧಕಾರದಲ್ಲಿದ್ದಾರೆ. ಕಲಿಯುಗವು ಸಾವಿರಾರು ವರ್ಷಗಳ ನಂತರ ಅಂತ್ಯವಾಗುತ್ತದೆಯೆಂದು ತಿಳಿದುಕೊಳ್ಳುತ್ತಾರೆ. ಯಾವುದೇ ಲೆಕ್ಕವೇ ಇಲ್ಲ, ಜನಸಂಖ್ಯೆಯು ಹೆಚ್ಚುತ್ತಾ ಹೋಗುತ್ತದೆ. ಆಹಾರವು ಸಿಗುವುದೇ ಇಲ್ಲ. ಇನ್ನೂ 40 ಸಾವಿರ ವರ್ಷಗಳಿರುವುದೇ ಆದರೆ ಏನಾಗಿ ಬಿಡುವುದೋ ಗೊತ್ತಿಲ್ಲ. ಏನು ಹೇಳುವರೋ ಅದು ಸಂಪೂರ್ಣ ಅಸತ್ಯವಾಗಿದೆ. ಸತ್ಯದ ಅಂಶವೂ ಇಲ್ಲ. ಈಗ ರಾವಣನ ಮೇಲೆ ಹೇಗೆ ವಿಜಯ ಪಡೆಯಬೇಕೆಂದು ತಂದೆಯು ಕಲಿಸುತ್ತಾರೆ. ರಾವಣನ ಮೇಲೆ ನೀವೇ ವಿಜಯ ಗಳಿಸುತ್ತೀರಿ. ಇಡೀ ಪ್ರಪಂಚವನ್ನು ತಂದೆಯು ರಾವಣನಿಂದ ಬಿಡುಗಡೆ ಮಾಡುತ್ತಾರೆ. ನಿಮ್ಮದು ಶಕ್ತಿಸೇನೆಯಾಗಿದೆ. ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ಎಷ್ಟು ಒಳ್ಳೊಳ್ಳೆಯ ಮಾತುಗಳನ್ನು ತಂದೆಯು ತಿಳಿಸುತ್ತಾರೆ ಅಂದಮೇಲೆ ನಿಮಗೆ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಎಷ್ಟೊಂದು ಖುಷಿಯಿರಬೇಕು. ಜ್ಞಾನಮಾರ್ಗದಲ್ಲಿ ಬಹಳ ಖುಷಿಯಿರುತ್ತದೆ, ಈಗ ತಂದೆಯು ಬಂದಿದ್ದಾರೆ. ನಾವೀಗ ಈ ಹಳೆಯ ಪ್ರಪಂಚದಿಂದ ಹೋದೆವು ಎಂದರೆ ಹೋದೆವು. ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗುತ್ತೇವೆ. ಇಲ್ಲದಿದ್ದರೆ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು ನಂತರ ಒಂದುವೇಳೆ ರೊಟ್ಟಿ ತುಂಡು ಸಿಕ್ಕಿದರೂ ಸಹ ಏನು ಲಾಭ? ಈಗ ಎಷ್ಟು ಸಾಧ್ಯವೋ ತಮ್ಮ ಪುರುಷಾರ್ಥ ಮಾಡಬೇಕು, ಶ್ರೀಮತದಂತೆ ನಡೆಯಬೇಕಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯಿಂದ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ. ಬಾಬಾ, ವ್ಯಾಪಾರದಲ್ಲಿ ಸುಳ್ಳು ಹೇಳಬೇಕಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ- ವ್ಯಾಪಾರದಲ್ಲಿ ಸುಳ್ಳಂತೂ ಇದ್ದೇ ಇರುತ್ತದೆ, ನೀವು ತಂದೆಯನ್ನು ನೆನಪು ಮಾಡುತ್ತಾ ಇರಿ. ವಿಕಾರದಲ್ಲಿ ಹೋಗಿ ಮತ್ತೆ ಬಾಬಾ, ನಾನು ನೆನಪಿನಲ್ಲಿದ್ದೆನು ಎಂದು ಹೇಳುವುದಲ್ಲ. ವಿಕಾರದಲ್ಲಿ ಹೋದರೆ ಮತ್ತೆ ಅವರು ಇಲ್ಲಿಂದ ಸತ್ತರೆಂದರ್ಥ. ತಂದೆಯ ಜೊತೆ ಪ್ರತಿಜ್ಞೆ ಮಾಡಿದ್ದೀರಲ್ಲವೆ. ಪವಿತ್ರತೆಗಾಗಿಯೇ ಶ್ರೀರಕ್ಷೆಯನ್ನು ಕಟ್ಟಿಸಿಕೊಳ್ಳಲಾಗುತ್ತದೆ, ಕ್ರೋಧಕ್ಕಾಗಿ ಎಂದೂ ರಾಖಿಯನ್ನು ಕಟ್ಟುವುದಿಲ್ಲ. ರಾಖಿಯ ಅರ್ಥವೇ ಆಗಿದೆ- ವಿಕಾರದಲ್ಲಿ ಹೋಗಬಾರದು. ಪತಿತ-ಪಾವನ ಬನ್ನಿ ಎಂದು ಮನುಷ್ಯರು ಕೂಗುತ್ತಾರೆ.
ನೀವು ಮಕ್ಕಳಲ್ಲಿ ಬಹಳ ಖುಷಿಯಿರಬೇಕು, ತಂದೆಯು ನಮಗೆ ಓದಿಸುತ್ತಿದ್ದಾರೆ ಮತ್ತು ತಂದೆಯು ಜೊತೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಸ್ವರ್ಗದಲ್ಲಿ ಬರುತ್ತೇವೆ. ಎಷ್ಟು ಸಾಧ್ಯವೋ ಮುಂಜಾನೆ ಎದ್ದು ತಂದೆಯನ್ನು ನೆನಪು ಮಾಡಬೇಕಾಗಿದೆ. ನೆನಪು ಮಾಡುವುದು ಎಂದರೆ ಸಂಪಾದನೆ ಮಾಡಿಕೊಳ್ಳುವುದು. ಇದರಲ್ಲಿ ಆಶೀರ್ವಾದ ಮಾಡುವುದಿಲ್ಲ. ನಾವು ನೆನಪು ಮಾಡುವಂತೆ ನೀವು ಆಶೀರ್ವಾದ ಮಾಡಿ ಎಂದು ಹೇಳಲು ಸಾಧ್ಯವೇ? ಎಲ್ಲರ ಮೇಲೆ ಆಶೀರ್ವಾದ ಮಾಡುವುದಾದರೆ ಎಲ್ಲರೂ ಸ್ವರ್ಗದಲ್ಲಿ ಬಂದು ಬಿಡುವರು ಆದರೆ ಇಲ್ಲಿ ಪರಿಶ್ರಮ ಪಡಬೇಕಾಗಿದೆ. ಎಷ್ಟು ಸಾಧ್ಯವೋ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆ ಎಂದರೆ ಆಸ್ತಿ. ಎಷ್ಟು ನೆನಪು ಮಾಡುತ್ತೀರೊ ಅಷ್ಟು ರಾಜ್ಯಭಾಗ್ಯವು ಸಿಗುವುದು, ನೆನಪಿನಿಂದ ಬಹಳ ಲಾಭವಿದೆ. ಸಸ್ತಾ ವ್ಯಾಪಾರವಾಗಿದೆ. ಇಂತಹ ಸಸ್ತಾ ವ್ಯಾಪಾರವನ್ನು ಯಾರೂ ಮಾಡಲು ಸಾಧ್ಯವಿಲ್ಲ. ಇದನ್ನೂ ಸಹ ಕೆಲವರೇ ವಿರಳ ತೆಗೆದುಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವಾಗ ಯಾರಾದರೂ ಕ್ರೋಧ ಮಾಡಿದರೆ ಬಹಳ-ಬಹಳ ಶಾಂತವಾಗಿರಬೇಕಾಗಿದೆ. ಕ್ರೋಧಿಗಳ ಜೊತೆ ಕ್ರೋಧಿಯಾಗಬಾರದು. ಮಾಯೆಯ ಯಾವುದೇ ಬಿರುಗಾಳಿಗೆ ಸೋಲಬಾರದು.
2. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಬೇಕು, ತಮ್ಮ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ. ಪವಿತ್ರತೆಯ ಪಕ್ಕಾ ಶ್ರೀರಕ್ಷೆಯನ್ನು ಕಟ್ಟಿಕೊಳ್ಳಬೇಕಾಗಿದೆ.
ಓಂ ಶಾಂತಿ. ಆತ್ಮರ ಪ್ರತಿ ಆತ್ಮಿಕ ತಂದೆ ಅರ್ಥಾತ್ ಪರಮಾತ್ಮನು ಕುಳಿತು ತಿಳಿಸುತ್ತಿದ್ದಾರೆ. ಆತ್ಮಿಕ ತಂದೆಗೆ ಪರಮಾತ್ಮನೆಂದು ಹೇಳಲಾಗುತ್ತದೆ. ಎಲ್ಲಾ ಆತ್ಮರ ತಂದೆಯು ಒಬ್ಬ ಪರಮಪಿತ ಪರಮಾತ್ಮನಾಗಿದ್ದಾರೆ. ಅವರು ಕುಳಿತು ಬ್ರಹ್ಮಾರವರ ತನುವಿನ ಮೂಲಕ ತಿಳಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರು ತ್ರಿಮೂರ್ತಿ ಬ್ರಹ್ಮಾ ಎಂದು ಹೇಳುತ್ತಾರೆ. ಈಗ ನೀವು ಬ್ರಾಹ್ಮಣರು ಈ ರೀತಿ ಹೇಳುವುದಿಲ್ಲ. ನೀವು ಹೇಳುತ್ತೀರಿ - ತ್ರಿಮೂರ್ತಿ ಶಿವ ಅರ್ಥಾತ್ ಬ್ರಹ್ಮಾ-ವಿಷ್ಣು-ಶಂಕರನ ರಚಯಿತ ಶಿವನಾಗಿದ್ದಾರೆ. ತ್ರಿಮೂರ್ತಿ ಬ್ರಹ್ಮಾ ಎಂಬುದಕ್ಕೆ ಯಾವುದೇ ಅರ್ಥವಿಲ್ಲ. ಈ ಮೂವರು ದೇವತೆಗಳ ರಚಯಿತ ಶಿವನಾಗಿದ್ದಾರೆ ಆದ್ದರಿಂದ ತ್ರಿಮೂರ್ತಿ ಶಿವನೆಂದು ಹೇಳಲಾಗುತ್ತದೆ. ಒಬ್ಬರು ರಚಯಿತ ಉಳಿದೆಲ್ಲವೂ ರಚನೆಯಾಗಿದೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಲೌಕಿಕ ತಂದೆಯು ಪ್ರತಿಯೊಬ್ಬರಿಗೂ ಬೇರೆ-ಬೇರೆಯಾಗಿದ್ದಾರೆ. ಈ ಸಮಯದಲ್ಲಿ ಎಲ್ಲರೂ ಶಿವ ತಂದೆಯ ಮಕ್ಕಳಾಗಿದ್ದಾರೆ. ಮಕ್ಕಳಿಗೆ ತಿಳಿದಿದೆ - ನಾವಾತ್ಮರು 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಅಂದರೆ 84 ಮಂದಿ ತಂದೆಯರಾಗುತ್ತಾರೆ. ಸತ್ಯಯುಗದಲ್ಲಿ ತಂದೆ-ತಾಯಿಯು ಯಾವುದೇ ಬೇಹದ್ದಿನ ಆಸ್ತಿಯನ್ನು ಕೊಡುವುದಿಲ್ಲ. ಸತ್ಯಯುಗಕ್ಕಾಗಿ ಬೇಹದ್ದಿನ ಆಸ್ತಿಯು ಈಗ ನಿಮಗೆ ಸಿಗುತ್ತದೆ. ಅಲ್ಲಿ ಲಕ್ಷ್ಮೀ-ನಾರಾಯಣರ ರಾಜಧಾನಿಯಿರುತ್ತದೆ ಮತ್ತು ಯಾರೆಲ್ಲಾ ರಾಜವಂಶದವರಿರುವರೋ ಅವರ ಮಕ್ಕಳಿಗೆ ತಮ್ಮ-ತಮ್ಮ ತಂದೆಯ ಆಸ್ತಿಯು ಸಿಗುತ್ತದೆ. ಆದರೂ ಅಲ್ಲಿ ಬಹಳ ಸುಖವಿರುತ್ತದೆ. ಈ ಸಮಯದಲ್ಲಿ ನಿಮ್ಮನ್ನು ಬೇಹದ್ದಿನ ತಂದೆಯು ಬೇಹದ್ದಿನ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. 21 ಜನ್ಮಗಳಿಗಾಗಿ ಸದಾ ಸುಖದ ಆಸ್ತಿಯು ಸಿಗುತ್ತದೆ. ಅಲ್ಲಿ ದುಃಖದ ಹೆಸರು, ಗುರುತೂ ಇರುವುದಿಲ್ಲ. ವಾಮ ಮಾರ್ಗವು ಆರಂಭವಾಗುವುದರಿಂದಲೇ ದುಃಖವು ಆರಂಭವಾಗುತ್ತದೆ. ಯಾರೇ ಬಂದರೂ ಅವರಿಗೆ ಇದನ್ನು ತಿಳಿಸಿರಿ - ನಿಮಗೆ ಇಬ್ಬರು ತಂದೆಯರಿದ್ದಾರೆ, 84 ಜನ್ಮಗಳಲ್ಲಿ 84 ಲೌಕಿಕ ತಂದೆಯರು ಸಿಗುತ್ತಾರೆ. ಬೇಹದ್ದಿನ ತಂದೆಯು ಒಬ್ಬರೇ ಆಗಿದ್ದಾರೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಮೂಲವತನವೆಂದರೇನು ಎಂಬ ತಿಳುವಳಿಕೆಯೂ ಇದೆ. ಮೂಲವತನ ಯಾವುದನ್ನು ಚಿತ್ರದಲ್ಲಿ ತೋರಿಸುತ್ತೀರೋ ಆ ಚಿತ್ರವನ್ನು ದೊಡ್ಡ-ದೊಡ್ಡದಾಗಿ ಮಾಡಿಸಬೇಕು. ಅದರಲ್ಲಿ ಚಿಕ್ಕ-ಚಿಕ್ಕ ಆತ್ಮರು ನಕ್ಷತ್ರಗಳಂತೆ ಕಾಣಿಸಲಿ. ಚಿತ್ರವು ದೊಡ್ಡದಾಗಿರಲಿ ಅದರಲ್ಲಿ ಚಿಕ್ಕ-ಚಿಕ್ಕ ಆತ್ಮರು ನಕ್ಷತ್ರದಂತೆ ಹೊಳೆಯುತ್ತಿರಲಿ. ಹೇಗೆ ಮೊದಲು ನೀವು ಮಿಂಚು ಹುಳುವಿನ ಹಾರವನ್ನು ಮಾಡುತ್ತಿದ್ದಿರಿ. ಹಾಗೆಯೇ ಈ ಮೂಲವತನದ ಚಿತ್ರವನ್ನೂ ಮಾಡಿಸಬೇಕು. ಪ್ರೊಜೆಕ್ಟರ್ ಶೋ ತೋರಿಸುವಾಗಲೂ ಅದರಲ್ಲಿ ಮೂಲವತನದ ಚಿತ್ರವನ್ನು ಈ ರೀತಿ ತೋರಿಸಬೇಕು. ವೃಕ್ಷವು ದೊಡ್ಡದಾಗಿರಲಿ ಮತ್ತು ನಾವಾತ್ಮರು ಅಲ್ಲಿರುತ್ತೇವೆ ಎಂಬುದು ಸ್ಪಷ್ಟವಾಗಿ ಕಾಣಿಸಲಿ. ಮಕ್ಕಳಿಗೆ ತಿಳಿದುಕೊಳ್ಳುವುದಕ್ಕೂ ಸಹಜವಾಗುತ್ತದೆ. ಇವರು ಬೇಹದ್ದಿನ ತಂದೆಯಾಗಿದ್ದಾರೆ, ಬ್ರಹ್ಮಾರವರ ಮೂಲಕ ದೈವೀ ಸಂಪ್ರದಾಯದ ಸ್ಥಾಪನೆ ಮಾಡುತ್ತಿದ್ದಾರೆ. ನೀವೀಗ ಬ್ರಾಹ್ಮಣರಾಗಿದ್ದೀರಿ, ನಂತರ ದೈವೀ ಗುಣವಂತ ದೇವತೆಗಳಾಗುತ್ತೀರಿ. ಹೀಗೆ ಎಲ್ಲರಲ್ಲಿ ಆಸುರೀ ಗುಣಗಳಿವೆ. ಅದಕ್ಕೆ ಆಸುರೀ ಅವಗುಣಗಳೆಂದು ಹೇಳುತ್ತಾರೆ. ವಾಮಮಾರ್ಗದಿಂದ ದುಃಖವು ಆರಂಭವಾಗುತ್ತದೆ. ರಜೋಪ್ರಧಾನರಿಂದ ಕೂಡಲೇ ಯಾರೂ ದುಃಖಿಗಳಾಗುವುದಿಲ್ಲ, ಸ್ವಲ್ಪ-ಸ್ವಲ್ಪವಾಗಿಯೇ ಕಲೆಗಳು ಕಡಿಮೆಯಾಗುತ್ತವೆ. ಮುಖ್ಯ ಚಿತ್ರಗಳಾಗಿವೆ - ತ್ರಿಮೂರ್ತಿ, ಸೃಷ್ಟಿಚಕ್ರ ಮತ್ತು ನರಕ-ಸ್ವರ್ಗದ ಗೋಲ. ಇವು ಮೊಟ್ಟ ಮೊದಲು ತಿಳಿಸುವುದಕ್ಕಾಗಿ ಬಹಳ ಅತ್ಯವಶ್ಯಕವಾಗಿದೆ. ವೃಕ್ಷದ ಚಿತ್ರದಲ್ಲಿಯೂ ಕಲ್ಪದ ಅರ್ಧ-ಅರ್ಧಭಾಗದ ಸ್ಪಷ್ಟ ಜ್ಞಾನವಿದೆ. ಚಿತ್ರವು ಸ್ಪಷ್ಟವಾಗಿದ್ದಾಗ ತಿಳಿಸಲು ಸಾಧ್ಯವಾಗುವುದು. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಪದೇ-ಪದೇ ತಿಳಿಸುವುದಕ್ಕಾಗಿ ತ್ರಿಮೂರ್ತಿಯ ಚಿತ್ರವು ಅವಶ್ಯವಾಗಿ ಬೇಕಾಗಿದೆ. ಇವರು ನಿರಾಕಾರ ಬೇಹದ್ದಿನ ತಂದೆಯಾಗಿದ್ದಾರೆ, ಇವರನ್ನು ಎಲ್ಲರೂ ನೆನಪು ಮಾಡುತ್ತಾರೆ. ಆತ್ಮಕ್ಕೆ ಗೊತ್ತಿದೆ, ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಅವರನ್ನು ದುಃಖದಲ್ಲಿ ಎಲ್ಲರೂ ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ನೆನಪು ಮಾಡುವ ಅವಶ್ಯಕತೆಯೇ ಇರುವುದಿಲ್ಲ. ಅದು ಸುಖಧಾಮವಾಗಿರುತ್ತದೆ. ದೇವತೆಗಳೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬರುತ್ತಾರೆ, ಇದೂ ಸಹ ಯಾರಿಗೂ ತಿಳಿದಿಲ್ಲ.
ಸತೋಪ್ರಧಾನರಿಂದ ನಾವು ಹೇಗೆ ಸತೋ, ರಜೋ, ತಮೋದಲ್ಲಿ ಬರುತ್ತೇವೆ. ಆತ್ಮದಲ್ಲಿ ತುಕ್ಕು ಹಿಡಿಯುತ್ತಾ ಹೋಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳ ಪಾತ್ರವನ್ನು ಅಭಿನಯಿಸಬೇಕಾಗಿದೆ ಎಂಬುದು ನೀವಾತ್ಮರಿಗೆ ತಿಳಿದಿದೆ. ಅದು ನಿಖರವಾಗಿ ಆತ್ಮದಲ್ಲಿ ನಿಗಧಿತವಾಗಿದೆ. ಇಷ್ಟು ಚಿಕ್ಕ ಆತ್ಮದಲ್ಲಿ ಎಷ್ಟೊಂದು ಪಾತ್ರವು ನಿಗಧಿಯಾಗಿದೆ. ಇವು ಅತಿ ಗುಹ್ಯ, ತಿಳಿದುಕೊಳ್ಳುವ ಮಾತುಗಳಾಗಿವೆ. ಯಾವುದೇ ಮನುಷ್ಯ ಮಾತ್ರರು ಸಾಧು ಸನ್ಯಾಸಿ ಮೊದಲಾದವರ ಬುದ್ಧಿಯಲ್ಲಿ ಈ ಮಾತುಗಳು ಬರಲು ಸಾಧ್ಯವಿಲ್ಲ. ಭಲೆ ನಾಟಕವೆಂದು ಹೇಳುತ್ತಾರೆ, ನಾಟಕಕ್ಕೆ ಡ್ರಾಮಾ ಎಂದು ಹೇಳಲಾಗುವುದಿಲ್ಲ. ವಾಸ್ತವದಲ್ಲಿ ಇದು ಡ್ರಾಮಾ ಆಗಿದೆ. ಡ್ರಾಮಾ, ಸಿನೆಮಾ ಇತ್ಯಾದಿಗಳು ಮೊದಲು ಇರಲಿಲ್ಲ. ಮೊದಲು ಮೂಖ ಚಲನಚಿತ್ರಗಳಿತ್ತು. ಈಗ ಅವು ಶಬ್ಧದಿಂದ ಕೂಡಿದೆ. ನಾವಾತ್ಮರೂ ಸಹ ಶಾಂತಿಯಿಂದ ನಂತರ ಶಬ್ಧದಲ್ಲಿ ಬರುತ್ತೇವೆ. ಶಬ್ಧದಿಂದ ಮತ್ತೆ ಮೂವ್ಹಿಯಲ್ಲಿ ಹೋಗಿ ನಂತರ ಸೈಲೆನ್ಸ್ನಲ್ಲಿ ಹೋಗುತ್ತೇವೆ. ಆದ್ದರಿಂದಲೇ ಹೆಚ್ಚು ಮಾತನಾಡಬೇಡಿ ಎಂದು ನೀವು ಮಕ್ಕಳಿಗೆ ಕಲಿಸಲಾಗುತ್ತದೆ. ರಾಯಲ್ ಮನುಷ್ಯರು ಬಹಳ ಕಡಿಮೆ ಮಾತನಾಡುತ್ತಾರೆ. ನೀವೀಗ ಸೂಕ್ಷ್ಮವತನದಲ್ಲಿ ಹೋಗಬೇಕಾಗಿದೆ. ಸೂಕ್ಷ್ಮವತನದ ಜ್ಞಾನವನ್ನು ಈಗ ತಂದೆಯು ತಿಳಿಸಿದ್ದಾರೆ. ಇದು ಟಾಕಿ ಪ್ರಪಂಚ (ಶಬ್ಧ ಪ್ರಪಂಚ) ವಾಗಿದೆ, ಅದು ಮ್ಹೂವಿ ಪ್ರಪಂಚವಾಗಿದೆ. ಅಲ್ಲಿ ಈಶ್ವರನೊಂದಿಗೆ ವಾರ್ತಾಲಾಪ ನಡೆಯುತ್ತದೆ. ಅಲ್ಲಿ ಬಿಳಿಯ ಬೆಳಕಿನ ರೂಪವಿದೆ, ಶಬ್ದವಿಲ್ಲ. ಅಲ್ಲಿನ ಮ್ಹೂವಿ ಭಾಷೆಯನ್ನು ಒಬ್ಬರು ಇನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ. ನೀವೀಗ ಸೈಲೆನ್ಸ್ನಲ್ಲಿ ಮ್ಹೂವಿ ಮುಖಾಂತರ ಹೋಗಬೇಕಾಗಿದೆ (ಸೂಕ್ಷ್ಮವತನದ ಮೂಲಕ). ತಂದೆಯು ತಿಳಿಸುತ್ತಾರೆ - ನಾನು ಮೊಟ್ಟ ಮೊದಲು ಸೂಕ್ಷ್ಮ ಸೃಷ್ಟಿಯನ್ನು ರಚಿಸಬೇಕಾಗಿದೆ ನಂತರ ಸ್ಥೂಲ ಸೃಷ್ಟಿ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ.... ಎಂದು ಗಾಯನವಿದೆ. ಬ್ರಹ್ಮಾ-ವಿಷ್ಣು-ಶಂಕರ ಸೂಕ್ಷ್ಮ ವತನವಾಸಿಗಳಾಗಿದ್ದಾರೆ. ಅಲ್ಲಿ ಯಾವುದೇ ಪ್ರಪಂಚವಿಲ್ಲ ಎಂಬುದು ಮನುಷ್ಯರಿಗೆ ತಿಳಿದಿಲ್ಲ, ಕೇವಲ ಬ್ರಹ್ಮಾ-ವಿಷ್ಣು-ಶಂಕರ ಕಾಣಿಸುತ್ತಾರೆ. ಚತುರ್ಭುಜ ವಿಷ್ಣುವನ್ನು ನೋಡುತ್ತೀರಿ, ಇದರಿಂದಲೇ ಸತ್ಯಯುಗದಲ್ಲಿ ಪ್ರವೃತ್ತಿ ಮಾರ್ಗವಿರುತ್ತದೆ ಎಂಬುದು ಸಿದ್ಧವಾಗುತ್ತದೆ. ಸನ್ಯಾಸಿಗಳದು ನಿವೃತ್ತಿ ಮಾರ್ಗವಾಗಿದೆ, ಇದೂ ಸಹ ಡ್ರಾಮಾ ಆಗಿದೆ. ಇದರ ವರ್ಣನೆ ಮಾಡಿ ತಂದೆಯು ತಿಳಿಸುತ್ತಾರೆ. ಮುಖ್ಯ ಮಾತನ್ನು ತಂದೆಯು ಹೇಳುತ್ತಾರೆ - ಮನ್ಮನಾಭವ. ಉಳಿದೆಲ್ಲವೂ ವಿಸ್ತಾರವಾಗಿದೆ. ಅದನ್ನೇ ತಿಳಿದುಕೊಳ್ಳುವುದರಲ್ಲಿ ಸಮಯ ಹಿಡಿಸುತ್ತದೆ. ಸಾರ ರೂಪದಲ್ಲಿದೆ - ಬೀಜ ಮತ್ತು ವೃಕ್ಷ. ಬೀಜವನ್ನು ನೋಡುವುದರಿಂದ ಇಡೀ ವೃಕ್ಷವೇ ಬುದ್ಧಿಯಲ್ಲಿ ಬಂದು ಬಿಡುತ್ತದೆ. ತಂದೆಯು ಬೀಜರೂಪನಾಗಿದ್ದಾರೆ, ಅವರಿಗೆ ಈ ವೃಕ್ಷದ ಮತ್ತು ಸೃಷ್ಟಿಚಕ್ರದ ಸಂಪೂರ್ಣ ಜ್ಞಾನವಿದೆ. ತಿಳಿಸುವುದಕ್ಕಾಗಿ ಸೃಷ್ಟಿಚಕ್ರವೇ ಬೇರೆಯಾಗಿದೆ, ಕಲ್ಪವೃಕ್ಷವೇ ಬೇರೆಯಾಗಿದೆ. ವೃಕ್ಷದಲ್ಲಿ ಇವೆಲ್ಲಾ ಚಿತ್ರಗಳನ್ನು ತೋರಿಸಿದ್ದಾರೆ. ಯಾವುದೇ ಧರ್ಮದವರಿಗೆ ತೋರಿಸಿದರೂ ಸಹ ಅರ್ಥ ಮಾಡಿಕೊಳ್ಳುವರು. ನಾವು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲವೆಂದು. ಭಾರತವು ಪ್ರಾಚೀನವಾಗಿದ್ದಾಗ ಕೇವಲ ದೇವಿ-ದೇವತೆಗಳೇ ಇದ್ದರು, ಉಳಿದೆಲ್ಲರೂ ಶಾಂತಿಧಾಮದಲ್ಲಿರುತ್ತಾರೆ. ನೀವು ಬೀಜ ಮತ್ತು ವೃಕ್ಷ ಎರಡನ್ನೂ ತಿಳಿದುಕೊಂಡಿದ್ದೀರಿ. ಬೀಜವು ಮೇಲಿದೆ, ಅವರಿಗೆ ವೃಕ್ಷಪತಿಯೆಂದು ಹೇಳುತ್ತಾರೆ. ನೀವೀಗ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನಿಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ. ಯಾರು ತಂದೆಯ ಮಕ್ಕಳಾಗುವರು ಅವರ ಮೇಲೆ ಬೃಹಸ್ಪತಿ ದೆಶೆಯಿದೆ ಎಂದು ಹೇಳುತ್ತೇವೆ. ನಂತರ ಶುಕ್ರ ದೆಶೆ, ಬುಧ ದೆಶೆ. ಬೃಹಸ್ಪತಿ ದೆಶೆಯಿರುವವರು ಸೂರ್ಯವಂಶಿಯರಾಗುತ್ತಾರೆ. ಬುಧ ದೆಶೆಯವರು ಪ್ರಜೆಗಳಲ್ಲಿ ಬರುತ್ತಾರೆ, ಅವರು ಸರ್ವೀಸ್ ಮಾಡುವುದಿಲ್ಲ. ತಂದೆಯನ್ನು ನೆನಪು ಮಾಡದಿದ್ದರೆ ಅವರು ಬುದ್ಧುಗಳಾದರು. ಇದರಲ್ಲಿಯೂ ನಂಬರ್ವಾರ್ ಬುದ್ಧುಗಳಾಗುತ್ತಾರೆ. ಕೆಲವರು ಉತ್ತಮ ಪ್ರಜೆಗಳು, ಕೆಲವರು ಕನಿಷ್ಟ ಪ್ರಜೆಗಳು, ಸಾಹುಕಾರ ಪ್ರಜೆಗಳಲ್ಲಿ ಮತ್ತೆ ಅವರಿಗೂ ನೌಕರ-ಚಾಕರರು ಆಗುವುದೆಲ್ಲಿ! ಎಲ್ಲವೂ ವಿದ್ಯೆಯ ಮೇಲೆ ಆಧಾರಿತವಾಗಿದೆ. ವಿದ್ಯಾಭ್ಯಾಸವೂ ಸಹ ಸತೋಗುಣಿ, ರಜೋಗುಣಿ, ತಮೋಗುಣಿಯಾಗಿರುತ್ತದೆ. ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಯಾರು ಬುದ್ಧಿವಂತರಾಗಿದ್ದಾರೆಯೋ ಅವರು ತಂದೆಯ ನೆನಪಿನಲ್ಲಿಯೂ ಇರುತ್ತಾರೆ. ಇಡೀ ವೃಕ್ಷವು ಬುದ್ಧಿಯಲ್ಲಿರುತ್ತದೆ. ವಿದ್ಯೆಯಿಂದಲೇ ಟೀಚರ್, ಬ್ಯಾರಿಸ್ಟರ್ ಆಗುತ್ತಾರೆ. ಟೀಚರ್ ಮತ್ತೆ ಅನ್ಯರಿಗೂ ಓದಿಸುತ್ತಾರೆ. ಎಲ್ಲರೂ ಓದುತ್ತಾರೆ, ಒಂದೇ ವಿದ್ಯೆಯಾಗಿದೆ ಆದರೆ ಕೆಲವರು ಓದಿ ಮೇಲೇರುತ್ತಾರೆ, ಇನ್ನೂ ಕೆಲವರು ಅಲ್ಲಿಯೇ ಟೀಚರ್ ಆಗಿ ಬಿಡುತ್ತಾರೆ. ಏನು ಕಲಿತಿದ್ದಾರೆಯೋ ಅದನ್ನು ಓದಿಸುತ್ತಾರೆ. ಈಗ ನೀವೂ ಸಹ ಓದುತ್ತೀರಿ, ಕೆಲವರು ಓದುತ್ತಾ-ಓದುತ್ತಾ ಶಿಕ್ಷಕರಾಗಿ ಬಿಡುತ್ತಾರೆ. ಶಿಕ್ಷಕರ ಕರ್ತವ್ಯವಾಗಿದೆ - ತಮ್ಮ ಸಮಾನ ಶಿಕ್ಷಕರನ್ನಾಗಿ ಮಾಡುವುದು, ಶಿಕ್ಷಕರಾಗದಿದ್ದರೆ ಅನ್ಯರ ಕಲ್ಯಾಣವನ್ನು ಹೇಗೆ ಮಾಡುವುದು! ಸಮಯವು ಕಡಿಮೆಯಿದೆ, ವಿನಾಶವಾಗುವವರೆಗೆ ಕಲಿಯುತ್ತಲೇ ಇರುತ್ತೀರಿ ನಂತರ ಕಲಿಯುವುದು ನಿಂತು ಹೋಗುವುದು. ಪುನಃ ತಂದೆಯು 5000 ವರ್ಷಗಳ ನಂತರ ಬಂದು ಕಲಿಸುತ್ತಾರೆ. ಈ ವಿದ್ಯೆಯು ಯಾವುದೇ ಸಾವಿರಾರು ವರ್ಷಗಳು ನಡೆಯುವುದಿಲ್ಲ. ಈ ವಿದ್ಯೆಯು ಇರುವುದೇ ಅಂತಿಮ ಜನ್ಮಕ್ಕಾಗಿ ಆದ್ದರಿಂದ ಓದಬೇಕು ಮತ್ತು ಓದಿಸಬೇಕಾಗಿದೆ. ಎಲ್ಲರೂ ಶಿಕ್ಷಕರಾಗುವುದಿಲ್ಲ. ಒಂದುವೇಳೆ ಎಲ್ಲರೂ ಶಿಕ್ಷಕರಾಗಿದ್ದರೆ ಎಲ್ಲರೂ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವರು. ಆದ್ದರಿಂದ ನಂಬರ್ವಾರಂತೂ ಇದ್ದೇ ಇರುತ್ತಾರೆ. ಮೊಟ್ಟ ಮೊದಲು ಯಾರಿಗಾದರೂ ಇಬ್ಬರು ತಂದೆಯರ ಪರಿಚಯವನ್ನು ಕೊಡಿ. ಚಿತ್ರಗಳಿದ್ದಾಗ ಬಹಳ ಚೆನ್ನಾಗಿ ತಿಳಿದುಕೊಳ್ಳುವರು. ತ್ರಿಮೂರ್ತಿಯ ಚಿತ್ರವು ಅವಶ್ಯವಾಗಿ ಜೊತೆಯಿರಬೇಕು, ಇವರು ಶಿವ ತಂದೆ, ಇವರು ಪ್ರಜಾಪಿತ ಬ್ರಹ್ಮ ಎಲ್ಲರ ಮನುಕುಲದ ಪಿತಾಮಹನಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮೊದಲು ಬಂದಿರಬೇಕಲ್ಲವೆ. ಎಲ್ಲರಿಗಿಂತ ಮುಂದಿರುವವರು ಬ್ರಹ್ಮಾ. ಈಗ ರಚನೆಯನ್ನು ರಚಿಸುತ್ತಿದ್ದಾರೆ. ನೀವು ಬ್ರಾಹ್ಮಣರಾಗಿದ್ದೀರಿ ನಂತರ ಬ್ರಾಹ್ಮಣರೇ ದೇವತೆಗಳಾಗುತ್ತೀರಿ. ಬ್ರಾಹ್ಮಣರ ವೃಕ್ಷವು ಚಿಕ್ಕದಾಗಿದೆ, ದೇವತೆಗಳು ಕೆಲವರೇ ಇರುತ್ತಾರೆ ನಂತರ ವೃದ್ಧಿಯಾಗುತ್ತಾ ಹೋಗುತ್ತದೆ. ಈ ನಿಮ್ಮ ಹೊಸ ವೃಕ್ಷವು ಸ್ಥಾಪನೆಯಾಗುತ್ತಿದೆ. ಆ ಅನ್ಯ ಧರ್ಮದ ಆತ್ಮರು ಮೇಲಿಂದ ಪಾತ್ರವನ್ನು ಅಭಿನಯಿಸಲು ಬರುತ್ತಾರೆ, ಇಲ್ಲಿ ನಿಮ್ಮದು ಹೊಸ ವೃಕ್ಷವು ಸ್ಥಾಪನೆಯಾಗುತ್ತದೆ. ಮಾಯೆಯು ಸನ್ಮುಖದಲ್ಲಿದೆ, ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಲೇಬೇಕಾಗಿದೆ, ವರ್ಗಾಯಿತರಾಗಬೇಕಾಗಿದೆ ಏಕೆಂದರೆ ಪ್ರಪಂಚವು ಬದಲಾಗುತ್ತಿದೆ ಆದ್ದರಿಂದ ಪರಿಶ್ರಮವಾಗುತ್ತದೆ. ಈ ಸಂಗಮದಲ್ಲಿಯೇ ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ. ಸತ್ಯಯುಗವು ಎಷ್ಟು ವರ್ಷಗಳು ನಡೆಯುತ್ತವೆ, ಸತ್ಯಯುಗದಿಂದ ಹೇಗೆ ಕಲಿಯುಗವಾಗುತ್ತದೆ ಎಂಬುದನ್ನು ನೀವು ತಿಳಿಸಿರಿ. ಕಲಿಯುಗದಲ್ಲಿ ತಮೋಪ್ರಧಾನರಾಗಲೇಬೇಕಾಗಿದೆ. ತಮೋಪ್ರಧಾನರಾದಾಗಲೇ ಪುನಃ ಸತೋಪ್ರಧಾನರಾಗುವಿರಿ. ನೀವು ಸತೋಪ್ರಧಾನರಾಗಿದ್ದಿರಿ, ನಂತರ ತುಕ್ಕು ಹಿಡಿಯುತ್ತಾ ಹೋಯಿತು, ಈಗ ಭಲೆ ಯಾವುದೇ ಹೊಸ ಆತ್ಮವು 2-3 ಜನ್ಮಗಳು ತೆಗೆದುಕೊಂಡರೂ ಸಹ ಕೂಡಲೇ ಅದರಲ್ಲಿ ತುಕ್ಕು ಹಿಡಿಯುತ್ತಾ ಹೋಗುತ್ತದೆ. ಆಗಲೇ ಸುಖ, ಆಗಲೇ ದುಃಖವನ್ನು ಅನುಭವಿಸುತ್ತದೆ. ಕೆಲವರದು ಒಂದು ಜನ್ಮವೂ ಇರುತ್ತದೆ. ಯಾವಾಗ ಆತ್ಮರ ಬರುವಿಕೆಯು ನಿಂತು ಹೋಗುವುದು ಆಗ ವಿನಾಶವಾಗುವುದು, ಪುನಃ ಎಲ್ಲಾ ಆತ್ಮರು ಹಿಂತಿರುಗಿ ಹೋಗಬೇಕಾಗುವುದು. ಪಾಪಾತ್ಮರು ಮತ್ತು ಪುಣ್ಯಾತ್ಮರು ಒಟ್ಟಿಗೆ ಹೋಗುತ್ತಾರೆ ನಂತರ ಪುಣ್ಯಾತ್ಮರು ಪಾತ್ರವನ್ನು ಅಭಿನಯಿಸಲು ಕೆಳಗಿಳಿಯುತ್ತಾರೆ. ಸಂಗಮದಲ್ಲಿ ಎಲ್ಲವೂ ಬದಲಾಗುತ್ತದೆ ಅಂದಾಗ ಮಕ್ಕಳು ಇಡೀ ಡ್ರಾಮಾವನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕು. ತಂದೆಯ ಬಳಿ ಸಂಪೂರ್ಣ ಜ್ಞಾನವಿದೆಯಲ್ಲವೆ. ಹೇಳುತ್ತಾರೆ - ನಾನು ಬಂದು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ಎಲ್ಲಾ ರಹಸ್ಯವನ್ನು ತಿಳಿಸುತ್ತೇನೆ. ಭಕ್ತಿಮಾರ್ಗದಲ್ಲಿ ಈ ಜ್ಞಾನವನ್ನು ತಿಳಿಸುವುದಿಲ್ಲ. ಭಕ್ತರು ನೆನಪು ಮಾಡುತ್ತಾರೆಂದರೆ ಅವರಿಗೆ ಸಾಕ್ಷಾತ್ಕಾರ ಮಾಡಿಸುತ್ತೇನೆ. ಭಕ್ತಿಮಾರ್ಗವು ಆರಂಭವಾಗುತ್ತದೆ ಎಂದರೆ ನನ್ನ ಪಾತ್ರವೂ ಆರಂಭವಾಗುತ್ತದೆ. ಸತ್ಯ-ತ್ರೇತಾಯುಗದಲ್ಲಿ ನಾನು ವಾನಪ್ರಸ್ಥದಲ್ಲಿ ಇರುತ್ತೇನೆ. ಮಕ್ಕಳನ್ನು ಸುಖದಲ್ಲಿ ಕಳುಹಿಸಿದ ಮೇಲೆ ಇನ್ನೇನಿದೆ? ನಾನು ವಾನಪ್ರಸ್ಥವನ್ನು ತೆಗೆದುಕೊಳ್ಳುತ್ತೇನೆ. ಈ ವಾನಪ್ರಸ್ಥವನ್ನು ಸ್ವೀಕರಿಸುವ ಪದ್ಧತಿಯು ಭಾರತದಲ್ಲಿಯೇ ಇದೆ. ನಾನು ವಾನಪ್ರಸ್ಥದಲ್ಲಿ ಕುಳಿತು ಬಿಡುತ್ತೇನೆಂದು ಬೇಹದ್ದಿನ ತಂದೆಯು ತಿಳಿಸುತ್ತಾರೆ. ಬೇಹದ್ದಿನ ತಂದೆಯೇ ಬಂದು ಗುರುವಿನ ರೂಪದಲ್ಲಿ ವಾನಪ್ರಸ್ಥದಲ್ಲಿ ಕರೆದುಕೊಂಡು ಹೋಗುತ್ತಾರೆ. ಮನುಷ್ಯರು ಭಗವಂತನೊಂದಿಗೆ ಮಿಲನ ಮಾಡುವುದಕ್ಕಾಗಿ ಗುರುಗಳ ಸಂಗವನ್ನು ಮಾಡಿಕೊಳ್ಳುತ್ತಾರೆ ಶಾಸ್ತ್ರಗಳನ್ನು ಓದುತ್ತಾರೆ. ತೀರ್ಥ ಯಾತ್ರೆಗಳನ್ನು ಮಾಡುತ್ತಾರೆ. ಗಂಗಾಸ್ನಾನ ಮಾಡುತ್ತಾರೆ ಆದರೆ ಸಿಗುವುದೇನೂ ಇಲ್ಲ. ಈಗ ನಿಮಗೆ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ದುಃಖದಿಂದ ಬಿಡಿಸಿ ರಾವಣ ರಾಜ್ಯದಿಂದ ಬಿಡಿಸಿ ರಾಮ ರಾಜ್ಯದಲ್ಲಿ ಹೋಗುತ್ತಾರೆ. ಬೇಹದ್ದಿನ ತಂದೆಯು ಒಂದೇ ಬಾರಿ ಬಂದು ರಾವಣನ ದುಃಖದಿಂದ ಬಿಡಿಸುತ್ತಾರೆ ಆದ್ದರಿಂದ ಅವರಿಗೆ ಮುಕ್ತಿದಾತನೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ರಾಮ ರಾಜ್ಯವೇ ಇರುತ್ತದೆ. ಉಳಿದ ಆತ್ಮರು ಶಾಂತಿಧಾಮಕ್ಕೆ ಹೋಗುತ್ತಾರೆ. ಇದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನಾನಾತ್ಮನ ಸ್ವಧರ್ಮವೇ ಶಾಂತಿಯಾಗಿದೆ. ಇಲ್ಲಿ ಪಾತ್ರದಲ್ಲಿ ಬರುವ ಕಾರಣ ಅಶಾಂತರಾಗಿದ್ದಾರೆ ಆದ್ದರಿಂದ ಶಾಂತಿಯು ನೆನಪಿಗೆ ಬರುತ್ತದೆ. ಮೂಲತಃ ಶಾಂತಿಧಾಮದ ನಿವಾಸಿಗಳಾಗಿದ್ದೀರಿ. ನನಗೆ ಶಾಂತಿ ಬೇಕು, ಮನಸ್ಸಿಗೆ ಶಾಂತಿ ಬೇಕು ಎಂದು ಈಗ ಹೇಳುತ್ತಾರೆ. ಆತ್ಮವು ಮನ-ಬುದ್ಧಿ ಸಹಿತವಾಗಿದೆ. ಆತ್ಮವು ಶಾಂತ ಸ್ವರೂಪನಾಗಿದೆ. ಮತ್ತೆ ಇಲ್ಲಿ ಕರ್ಮದಲ್ಲಿ ಬರುತ್ತದೆ. ಇಲ್ಲಿ ಸಂಪೂರ್ಣ ಶಾಂತಿಯು ಹೇಗೆ ಸಿಗುವುದು? ಇದಂತೂ ಅಶಾಂತಿಧಾಮವಾಗಿದೆ. ಸತ್ಯಯುಗದಲ್ಲಿ ಸುಖ-ಶಾಂತಿ ಎರಡೂ ಇರುತ್ತದೆ. ಪವಿತ್ರತೆಯೂ ಇರುತ್ತದೆ, ಹಣ ಅಧಿಕಾರವೂ ಇರುತ್ತದೆ.
ತಂದೆಯು ತಿಳಿಸುತ್ತಾರೆ - ನಿಮಗೆ ಎಷ್ಟೊಂದು ಸುಖ-ಶಾಂತಿ, ಹಣ, ಅಧಿಕಾರ ಎಲ್ಲವೂ ಇತ್ತು. ಈಗ ಮತ್ತೆ ಅನ್ಯರಿಗೂ ತಿಳಿಸಬೇಕಾಗಿದೆ - ಯಾರು ಕಲ್ಪದ ಮೊದಲು ಆಸ್ತಿಯನ್ನು ತೆಗೆದುಕೊಂಡಿದ್ದರೋ ಅವರೇ ಚೆನ್ನಾಗಿ ತಿಳಿದುಕೊಳ್ಳುವ ಪ್ರಯತ್ನ ಪಡುತ್ತಾರೆ. ಭಲೆ ತಡವಾಗಿ ಬರುತ್ತಾರೆ ಆದರೆ ಹಳಬರಿಗಿಂತಲೂ ಮುಂದೆ ಹೋಗುತ್ತಾರೆ. ತಡವಾಗಿ ಬರುವವರಿಗೆ ಇನ್ನೂ ಒಳ್ಳೊಳ್ಳೆಯ ಅಂಶಗಳು ಸಿಗುತ್ತವೆ, ದಿನ-ಪ್ರತಿದಿನ ಸಹಜವಾಗುತ್ತಾ ಹೋಗುತ್ತದೆ. ಇದನ್ನೂ ಸಹ ತಿಳಿದುಕೊಳ್ಳುತ್ತಾರೆ - ಈಗ ನಾವು ಎಲ್ಲವನ್ನೂ ತಿಳಿದುಕೊಂಡಿದ್ದೇವೆ ಅಂದಮೇಲೆ ತಮೋಪ್ರಧಾನರಿಂದ ಸತೋಪ್ರಧಾನರಾಗುವ ಪರಿಶ್ರಮವನ್ನೂ ಪಡಬೇಕಾಗಿದೆ ಅದಕ್ಕಾಗಿ ತೀವ್ರ ಪುರುಷಾರ್ಥವನ್ನೂ ಮಾಡತೊಡಗುತ್ತಾರೆ ಏಕೆಂದರೆ ಸಮಯವು ಕಡಿಮೆಯಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಎಷ್ಟು ಸಾಧ್ಯವೋ ಪುರುಷಾರ್ಥದಲ್ಲಿ ತೊಡಗೋಣ. ಮೃತ್ಯುವಿಗೆ ಮೊದಲೇ ನಾವು ಪುರುಷಾರ್ಥ ಮಾಡೋಣವೆಂದು ಅವರು ತಮ್ಮ ಚಾರ್ಟ್ ಇಟ್ಟುಕೊಳ್ಳುತ್ತಾರೆ. ವಿದ್ಯೆಯು ಬಹಳ ಸಹಜವಾಗಿದೆ, ಉಳಿದುದು ನೆನಪಿನ ಮಾತಾಗಿದೆ. ಮುಂಜಾನೆಯಲ್ಲಿ ರಾಮನನ್ನು ಸ್ಮರಿಸು ಮನವೆ ಎಂಬ ಗಾಯನವಿದೆ. ಆತ್ಮವೇ ಹೇಳುತ್ತದೆ - ಹೇ ನನ್ನ ಮನವೇ ರಾಮನ ಸ್ಮರಣೆ ಮಾಡು ಎಂದು. ಭಕ್ತಿಮಾರ್ಗದಲ್ಲಿ ರಾಮ ಯಾರೆಂಬುದೂ ಸಹ ಯಾರಿಗೂ ತಿಳಿದಿರುವುದಿಲ್ಲ. ಅವರು ರಘುಪತಿ ರಾಘವ ರಾಜಾರಾಮ ಎಂದು ಹೇಳಿಬಿಡುತ್ತಾರೆ, ಎಷ್ಟೊಂದು ಗಡಿ ಬಿಡಿ ಮಾಡಿದ್ದಾರೆ. ಎಲ್ಲರ ಭಗವಂತ ಆ ರಾಮನು ಯಾರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಸಮಯವನ್ನು, ಹಣವನ್ನು ವ್ಯರ್ಥ ಮಾಡುತ್ತಿರುತ್ತಾರೆ. ನೀವು ಮಕ್ಕಳಿಗೆ ನಾನು ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು ಮತ್ತೆ ಎಲ್ಲಿ ಹೋಯಿತು? 5000 ವರ್ಷಗಳ ಮೊದಲು ನಿಮಗೆ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟಿದ್ದೆನು, ಅದನ್ನು ಎಲ್ಲಿ ಕಳೆದಿರಿ? ಹೇಗೆ ನಾವು ಕೆಳಗೆ ಇಳಿಯುತ್ತಾ ಬಂದಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಈಗ ಪುನಃ ಮೇಲೇರಬೇಕಾಗಿದೆ. ಏರುವ ಕಲೆಯು ಒಂದು ಸೆಕೆಂಡಿನಲ್ಲಿ, ಇಳಿಯುವ ಕಲೆಯು 5000 ವರ್ಷಗಳಲ್ಲಿ ಆಗುತ್ತದೆ. ಬ್ರಹ್ಮನಿಂದ ವಿಷ್ಣುವಾಗುವುದರಲ್ಲಿ ಒಂದು ಸೆಕೆಂಡ್, ವಿಷ್ಣುವಿನಿಂದ ಬ್ರಹ್ಮನಾಗುವುದರಲ್ಲಿ 5000 ವರ್ಷಗಳು ಹಿಡಿಸುತ್ತವೆ. ಎಷ್ಟೊಂದು ಮಾತುಗಳನ್ನು ತಿಳಿಸುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈಗ ಟಾಕಿಯಿಂದ ಮ್ಹೂವಿ, ಮ್ಹೂವಿಯಿಂದ ಸೈಲೆನ್ಸ್ನಲ್ಲಿ ಹೋಗಬೇಕಾಗಿದೆ ಆದ್ದರಿಂದ ಟಾಕಿ (ಮಾತು) ಯನ್ನು ಬಹಳ ಕಡಿಮೆ ಮಾಡಿಕೊಳ್ಳಬೇಕಾಗಿದೆ. ಘನತೆಯಿಂದ ಬಹಳ ನಿಧಾನವಾಗಿ ಮಾತನಾಡಬೇಕಾಗಿದೆ.
2. ಜ್ಞಾನವನ್ನು ತಿಳಿದುಕೊಂಡ ನಂತರ ತೀವ್ರ ಪುರುಷಾರ್ಥ ಮಾಡಿ ಸತೋಪ್ರಧಾನರಾಗಬೇಕಾಗಿದೆ. ನೆನಪಿನ ಚಾರ್ಟ್ ಇಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ತಮ್ಮ ತಂದೆಯ ಮಹಿಮೆಯನ್ನು ಕೇಳಿದಿರಿ. ಅವರು ಹಾಡುತ್ತಿರುತ್ತಾರೆ, ಇಲ್ಲಿ ನೀವು ಪ್ರತ್ಯಕ್ಷದಲ್ಲಿ ಆ ತಂದೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ನಿಮಗೆ ತಿಳಿದಿದೆ, ತಂದೆಯು ನಮ್ಮ ಮೂಲಕ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದಾರೆ. ಯಾರ ಮೂಲಕ ಮಾಡುತ್ತಿದ್ದಾರೆಯೋ ಅವಶ್ಯವಾಗಿ ಅವರೇ ಸುಖಧಾಮದ ಮಾಲೀಕರಾಗುತ್ತಾರೆ. ಮಕ್ಕಳಿಗೆ ಬಹಳ ಖುಷಿಯಿರಬೇಕು. ತಂದೆಯ ಮಹಿಮೆಯು ಅಪರಮಪಾರವಾಗಿದೆ, ಅವರಿಂದ ನಾವು ಆಸ್ತಿಯನ್ನು ಪಡೆಯುತ್ತಿದ್ದೇವೆ. ಈಗ ನೀವು ಮಕ್ಕಳ ಮೇಲಷ್ಟೇ ಅಲ್ಲ, ಇಡೀ ಪ್ರಪಂಚದ ಮೇಲೆ ಬೃಹಸ್ಪತಿ ದೆಶೆಯಿದೆ, ಇದನ್ನು ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ, ಎಲ್ಲರ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆ ಏಕೆಂದರೆ ಈಗ 16 ಕಲಾ ಸಂಪೂರ್ಣರಾಗುತ್ತೀರಿ. ಈ ಸಮಯದಲ್ಲಿ ಯಾವುದೇ ಕಲೆಯಿಲ್ಲ, ಮಕ್ಕಳಿಗೆ ಬಹಳ ಖುಶಿಯಿರಬೇಕಾಗಿದೆ. ಇಲ್ಲಿ ಖುಷಿಯಾಗಿದ್ದು ಹೊರಗಡೆ ಹೋಗುತ್ತಿದ್ದಂತೆಯೇ ಖುಷಿಯು ಮಾಯವಾಗಬಾರದು. ಯಾರ ಮಹಿಮೆಯನ್ನು ಹಾಡುತ್ತಾ ಬಂದಿದ್ದೀರೋ ಅವರೇ ನಿಮ್ಮ ಬಳಿ ಹಾಜರಿದ್ದಾರೆ. ತಂದೆಯು ತಿಳಿಸುತ್ತಾರೆ - 5000 ವರ್ಷಗಳ ಮೊದಲೂ ಸಹ ರಾಜ್ಯಭಾಗ್ಯವನ್ನು ಕೊಟ್ಟು ಹೋಗಿದ್ದೆನು, ನೀವು ನೋಡುತ್ತೀರಿ - ಇನ್ನೂ ಕಳೆಯುತ್ತಾ ಹೋದಂತೆ ಎಲ್ಲರೂ ಕೂಗುತ್ತಾ ಇರುತ್ತಾರೆ. ನಿಮ್ಮ ಘೋಷಣಾ ವಾಕ್ಯಗಳೂ ಸಹ ಹೆಸರುವಾಸಿಯಾಗುತ್ತವೆ. ಹೇಗೆ ಯಾರಾದರೂ ಒಂದು ಧರ್ಮವಿರಲಿ, ಒಂದು ರಾಜ್ಯವಿರಲಿ, ಒಂದು ಭಾಷೆಯಿರಲಿ ಎಂದು ಹೇಳುತ್ತಾರೆ. ಅದನ್ನು ಆತ್ಮರೇ ಹೇಳುತ್ತಾರಲ್ಲವೆ. ಆತ್ಮಕ್ಕೆ ತಿಳಿದಿದೆ, ಅವಶ್ಯವಾಗಿ ಭಾರತದಲ್ಲಿ ಒಂದು ದೇವಿ-ದೇವತೆಗಳ ರಾಜಧಾನಿಯಿತ್ತು. ಈ ಪರಿಮಳವು ಹರಡುತ್ತಾ ಹೋಗುವುದು. ನೀವು ಈ ಸುಗಂಧವನ್ನು ಬೀರುತ್ತಾ ಹೋಗುತ್ತೀರಿ. ಡ್ರಾಮಾನುಸಾರ ಯುದ್ಧದ ಚಿಹ್ನೆಗಳೂ ಕಂಡು ಬರುತ್ತಿವೆ, ಇವೇನೂ ಹೊಸ ಮಾತಲ್ಲ. ಭಾರತವು ಅವಶ್ಯವಾಗಿ 16 ಕಲಾ ಸಂಪೂರ್ಣನಾಗಬೇಕಾಗಿದೆ. ನಾವು ಈ ಯೋಗಬಲದಿಂದ 16 ಕಲಾ ಸಂಪೂರ್ಣ ಆಗುತ್ತಿದ್ದೇವೆಂದು ನಿಮಗೆ ತಿಳಿದಿದೆ. ದಾನ ಕೊಟ್ಟರೆ ಗ್ರಹಣ ಬಿಡುವುದೆಂದು ಹೇಳುತ್ತಾರಲ್ಲವೆ. ತಂದೆಯೂ ಸಹ ವಿಕಾರಗಳ, ಅವಗುಣಗಳ ದಾನವನ್ನು ಕೊಡಿ ಎಂದು ಹೇಳುತ್ತಾರೆ. ಇದು ರಾವಣ ರಾಜ್ಯವಾಗಿದೆ ಅಲ್ಲವೆ. ತಂದೆಯು ಬಂದು ಇದರಿಂದ ಬಿಡಿಸುತ್ತಾರೆ, ಅದರಲ್ಲಿಯೂ ಕಾಮ ವಿಕಾರವು ಅತಿ ದೊಡ್ಡ ವಿಕಾರವಾಗಿದೆ. ನೀವು ದೇಹಾಭಿಮಾನಿಗಳಾಗಿ ಬಿಟ್ಟಿದ್ದೀರಿ, ಈಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ಶರೀರದ ಭಾನವನ್ನೂ ಬಿಟ್ಟು ಬಿಡಿ. ಈ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ, ಪ್ರಪಂಚದವರಿಗೆ ಗೊತ್ತಿಲ್ಲ. ಭಾರತವು 16 ಕಲಾ ಸಂಪೂರ್ಣನಾಗಿತ್ತು, ಸಂಪೂರ್ಣ ದೇವತೆಗಳ ರಾಜ್ಯವಿತ್ತು, ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತು, ಭಾರತವೇ ಸ್ವರ್ಗವಾಗಿತ್ತು. ಈಗ 5 ವಿಕಾರಗಳ ಗ್ರಹಣ ಹಿಡಿದಿದೆ ಆದ್ದರಿಂದ ತಂದೆಯು ಹೇಳುತ್ತಾರೆ - ದಾನ ಕೊಟ್ಟರೆ ಗ್ರಹಣವು ಬಿಡುವುದು. ಈ ಕಾಮ ವಿಕಾರವೇ ಬೀಳಿಸುವಂತದ್ದಾಗಿದೆ, ಆದ್ದರಿಂದ ಈ ದಾನವನ್ನು ಕೊಟ್ಟು ಬಿಡಿ. ಆಗ 16 ಕಲಾ ಸಂಪೂರ್ಣ ಆಗಿ ಬಿಡುತ್ತೀರೆಂದು ತಂದೆಯು ಹೇಳುತ್ತಾರೆ. ಒಂದುವೇಳೆ ಕೊಡದಿದ್ದರೆ ಆಗುವುದಿಲ್ಲ. ಆತ್ಮರಿಗೆ ತಮ್ಮ ತಮ್ಮದೇ ಆದ ಪಾತ್ರವು ಸಿಕ್ಕಿದೆಯಲ್ಲವೆ. ಇದೂ ಸಹ ನಿಮ್ಮ ಬುದ್ಧಿಯಲ್ಲಿದೆ, ನೀವಾತ್ಮರಲ್ಲಿ ಎಷ್ಟೊಂದು ಪಾತ್ರವಿದೆ! ನೀವು ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೀರಿ, ಇದು ಬೇಹದ್ದಿನ ನಾಟಕವಾಗಿದೆ, ಅನೇಕ ಪಾತ್ರಧಾರಿಗಳಿದ್ದಾರೆ. ಇದರಲ್ಲಿ ಬಹಳ ಒಳ್ಳೆಯ ಪಾತ್ರಧಾರಿಗಳು ಈ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಇವರದು ನಂಬರ್ವನ್ ಪಾತ್ರವಾಗಿದೆ. ವಿಷ್ಣುವಿನಿಂದ ಬ್ರಹ್ಮಾ-ಸರಸ್ವತಿ ಮತ್ತೆ ಬ್ರಹ್ಮಾ ಸರಸ್ವತಿಯೇ ವಿಷ್ಣುವಾಗುತ್ತಾರೆ. ಇವರು ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತುತ್ತಾರೆ ಎಂಬುದೆಲ್ಲವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ವ್ಯಾಪಾರಿಗಳು ತಮ್ಮ ಲೆಕ್ಕ ಪುಸ್ತಕದಲ್ಲಿ ಸ್ವಸ್ತಿಕವನ್ನು ಬಿಡಿಸುತ್ತಾರೆ. ಗಣೇಶನ ಪೂಜೆ ಮಾಡುತ್ತಾರೆ. ಇದು ಬೇಹದ್ದಿನ ಲೆಕ್ಕ ಪುಸ್ತಕವಾಗಿದೆ. ಸ್ವಸ್ತಿಕದಲ್ಲಿ ನಾಲ್ಕು ಭಾಗಗಳಿರುತ್ತವೆ, ಹೇಗೆ ಜಗನ್ನಾಥ ಪುರಿಯಲ್ಲಿ ಅನ್ನವನ್ನು ತಯಾರಿಸುತ್ತಾರೆ. ಅದು ತಯಾರಾದ ನಂತರ ಅದರಲ್ಲಿ ನಾಲ್ಕು ಭಾಗಗಳಾಗುತ್ತವೆ, ಅಲ್ಲಿ ಅನ್ನದ ನೈವೇದ್ಯವನ್ನೇ ಇಡಲಾಗುತ್ತದೆ. ಈಗ ನೀವು ಮಕ್ಕಳಿಗೆ ಯಾರು ಓದಿಸುತ್ತಿದ್ದಾರೆ? ಪ್ರಿಯಾತಿ ಪ್ರಿಯ ತಂದೆಯು ಬಂದು ನಿಮ್ಮ ಸೇವಕನಾಗಿದ್ದಾರೆ, ನಿಮ್ಮ ಸೇವೆ ಮಾಡುತ್ತಾರೆ. ಮನುಷ್ಯರಂತೂ ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ, ನೀವೀಗ ತಿಳಿದುಕೊಂಡಿದ್ದೀರಿ - ಆತ್ಮದಲ್ಲಿ 84 ಜನ್ಮಗಳ ಪಾತ್ರವು ಇದ್ದೇ ಇದೆ ಅಂದಮೇಲೆ ಅದನ್ನು ಮತ್ತೆ ನಿರ್ಲೇಪವೆಂದು ಹೇಳುವುದು ಎಷ್ಟು ರಾತ್ರಿ-ಹಗಲಿನ ಅಂತರವಾಗಿ ಬಿಡುತ್ತದೆ. ಈ ಜ್ಞಾನವನ್ನು ಯಾರಾದರೂ ಒಂದು ಒಂದುವರೆ ತಿಂಗಳು ಕುಳಿತು ತಿಳಿದುಕೊಂಡಾಗಲೇ ಇದು ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ದಿನ-ಪ್ರತಿದಿನ ಬಹಳಷ್ಟು ಜ್ಞಾನದ ಅಂಶಗಳು ತಿಳಿದುಬರುತ್ತವೆ. ಇದು ಕಸ್ತೂರಿಯಾಗಿದೆ. ಶಾಸ್ತ್ರಗಳಲ್ಲಿ ಏನೂ ಸಾರವಿಲ್ಲ. ತಂದೆಯು ಹೇಳುತ್ತಾರೆ - ಈಗ ಅದೆಲ್ಲವನ್ನೂ ಬುದ್ಧಿಯಿಂದ ತೆಗೆಯಿರಿ, ಜ್ಞಾನಸಾಗರನು ನಾನೊಬ್ಬನೇ ಆಗಿದ್ದೇನೆ. ಯಾವಾಗ ಪೂರ್ಣ ನಿಶ್ಚಯವು ಕುಳಿತುಕೊಳ್ಳುವುದೋ ಆಗ ಅವಶ್ಯವಾಗಿ ಇವೆಲ್ಲವೂ ಇರುವುದು ಭಕ್ತಿ ಮಾರ್ಗಕ್ಕಾಗಿ. ಪರಮಪಿತ ಪರಮಾತ್ಮನೇ ಬಂದು ದುರ್ಗತಿಯಿಂದ ಸದ್ಗತಿ ಮಾಡುತ್ತಾರೆ ಎಂದು ಅರ್ಥವಾಗುತ್ತದೆ. ಏಣಿಯ ಚಿತ್ರದಲ್ಲಿಯೂ ಸ್ಪಷ್ಟವಾಗಿ ತೋರಿಸಬೇಕಾಗಿದೆ. ಭಕ್ತಿಮಾರ್ಗವು ಆರಂಭವಾದಾಗ ರಾವಣರಾಜ್ಯವೂ ಆರಂಭವಾಗುತ್ತದೆ, ಈಗ ಗೀತಾಭಾಗವು ಪುನರಾವರ್ತನೆ ಆಗುತ್ತಿದೆ. ತಂದೆಯು ಹೇಳುತ್ತಾರೆ - ನಾನು ಕಲ್ಪ-ಕಲ್ಪವೂ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ಮನುಷ್ಯರು ನನಗೆ ಮೀನು, ಮೊಸಳೆ ಅವತಾರವೆಂದು ಹೇಳಿ ಬಿಟ್ಟಿದ್ದಾರೆ. 24 ಅವತಾರಗಳೆಂದು ಹೇಳುತ್ತಾರೆ, ಆದರೆ ಇದು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ, ಈಗ ನಿಮ್ಮ ಮೇಲೆ ಬೃಹಸ್ಪತಿ ದೆಶೆಯಿದೆ. ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಿದೆನು, ರಾವಣನು ರಾಹುವಿನ ದೆಶೆಯನ್ನು ಕೂರಿಸಿದ್ದಾನೆ. ಈಗ ಪುನಃ ತಂದೆಯು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ ಆದ್ದರಿಂದ ತಮ್ಮನ್ನು ಮೋಸದಲ್ಲಿ ಸಿಲುಕಿಸಿಕೊಳ್ಳಬಾರದು. ವ್ಯಾಪಾರಿಗಳು ತಮ್ಮ ಖಾತೆಯನ್ನು ಯಾವಾಗಲೂ ಸರಿಯಾಗಿಟ್ಟುಕೊಳ್ಳುತ್ತಾರೆ. ತಮಗೆ ನಷ್ಟವನ್ನು ಉಂಟು ಮಾಡಿಕೊಳ್ಳುವವರಿಗೆ ಅನಾಡಿಗಳೆಂದು ಹೇಳಲಾಗುತ್ತದೆ. ತಂದೆಯು ಎಲ್ಲರಿಗಿಂತ ದೊಡ್ಡ ವ್ಯಾಪಾರಿಯಾಗಿದ್ದಾರೆ. ಇವರೊಂದಿಗೆ ವ್ಯಾಪಾರ ಮಾಡುವವರು ಕೆಲವರೇ ವಿರಳ. ಇದೇ ಅವಿನಾಶಿ ವ್ಯಾಪಾರವಾಗಿದೆ, ಮತ್ತೆಲ್ಲಾ ವ್ಯಾಪಾರಗಳು ಮಣ್ಣು ಪಾಲಾಗುವವು. ಈಗ ನಿಮ್ಮದು ಸತ್ಯ ವ್ಯಾಪಾರವಾಗುತ್ತಿದೆ. ತಂದೆಯು ಬೇಹದ್ದಿನ ರತ್ನಾಗಾರ, ವ್ಯಾಪಾರಿಯಾಗಿದ್ದಾರೆ ಮತ್ತು ಅವರಿಗೆ ಜ್ಞಾನಸಾಗರನೆಂದೂ ಹೇಳಲಾಗುತ್ತದೆ. ಪ್ರದರ್ಶನಿಯಿಟ್ಟಾಗ ನೋಡಿ, ಎಷ್ಟೊಂದು ಮಂದಿ ಬರುತ್ತಾರೆ. ಸೇವಾಕೇಂದ್ರಕ್ಕೆ ಕೆಲವರೇ ಬರುತ್ತಾರೆ. ಭಾರತವಂತೂ ಬಹಳ ಉದ್ದಗಲವಾಗಿದೆಯಲ್ಲವೆ. ನೀವು ಎಲ್ಲಾ ಕಡೆ ಹೋಗಿ ಸರ್ವೀಸ್ ಮಾಡಬೇಕಾಗಿದೆ, ನೀರಿನ ಗಂಗೆಯಂತೂ ಇಡೀ ಭಾರತದಲ್ಲಿ ಇಲ್ಲ. ಇದನ್ನೂ ಸಹ ನೀವು ತಿಳಿಸಬೇಕಾಗಿದೆ - ನೀರಿನ ಗಂಗೆಯು ಪತಿತ-ಪಾವನಿಯಲ್ಲ. ನೀವು ಜ್ಞಾನ ಗಂಗೆಯರೇ ಹೋಗಬೇಕಾಗಿದೆ. ನಾಲ್ಕಾರು ಕಡೆ ಪ್ರದರ್ಶನಿ ಮೇಳಗಳನ್ನು ಮಾಡುತ್ತಾ ಇರಿ, ದಿನ-ಪ್ರತಿದಿನ ಒಳ್ಳೊಳ್ಳೆಯ ಆಧುನಿಕ ಚಿತ್ರಗಳೂ ತಯಾರಾಗುತ್ತಿರುತ್ತವೆ. ಶೋಭನೀಕ ಚಿತ್ರಗಳು ಈ ರೀತಿಯಿರಲಿ, ಅವನ್ನು ನೋಡುತ್ತಿದ್ದಂತೆಯೇ ಖುಷಿಯಾಗಿ ಬಿಡಲಿ - ಇವರು ಸತ್ಯವನ್ನು ತಿಳಿಸುತ್ತಾರೆ, ಈಗ ಲಕ್ಷ್ಮೀ-ನಾರಾಯಣರ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಬ್ರಾಹ್ಮಣ ಧರ್ಮದ ಸ್ಥಾಪನೆಯಾಗುತ್ತಿದೆ. ಈ ಬ್ರಾಹ್ಮಣರೇ ದೇವಿ-ದೇವತೆಗಳಾಗುತ್ತಾರೆ. ನೀವೀಗ ಪುರುಷಾರ್ಥ ಮಾಡುತ್ತಿದ್ದೀರಿ ಅಂದಮೇಲೆ ಹೃದಯದಲ್ಲಿ ತಮ್ಮೊಂದಿಗೆ ಕೇಳಿಕೊಳ್ಳುತ್ತಾ ಇರಿ - ನನ್ನಲ್ಲಿ ಯಾವುದೇ ಚಿಕ್ಕ ಪುಟ್ಟ ಮುಳ್ಳಂತೂ ಇಲ್ಲವೆ! ಕಾಮದ ಮುಳ್ಳು ಇಲ್ಲವೆ! ಕ್ರೋಧದ ಚಿಕ್ಕ ಮುಳ್ಳೂ ಸಹ ಬಹಳ ಕೆಟ್ಟದ್ದಾಗಿದೆ. ದೇವತೆಗಳು ಕ್ರೋಧಿಯಾಗಿರುವುದಿಲ್ಲ. ಶಂಕರನು ಕಣ್ಣು ತೆರೆದ ಕೂಡಲೇ ವಿನಾಶವಾಗಿ ಬಿಡುತ್ತದೆ ಎಂದು ತೋರಿಸುತ್ತಾರೆ. ಆದರೆ ಇದೂ ಸಹ ಶಂಕರನ ಮೇಲೆ ಕಳಂಕ ಹೊರಿಸಿದಂತೆ. ವಿನಾಶವಂತೂ ಆಗಲೇಬೇಕಾಗಿದೆ. ಸೂಕ್ಷ್ಮ ವತನದಲ್ಲಿ ಶಂಕರನಿಗೆ ಯಾವುದೇ ಸರ್ಪ ಇತ್ಯಾದಿಗಳಿರುವುದಿಲ್ಲ. ಸರ್ಪ ಇತ್ಯಾದಿ ಬರಲು ಅಲ್ಲಿ ಧರಣಿಯಾದರೂ ಎಲ್ಲಿದೆ? ಆಕಾಶದಲ್ಲಿ ಸರ್ಪಗಳು ಓಡಾಡುತ್ತವೆಯೇ? ಸೂಕ್ಷ್ಮವತನ ಮತ್ತು ಮೂಲವತನದಲ್ಲಿ ತೋಟ, ಉದ್ಯಾನವನ, ಸರ್ಪ ಇತ್ಯಾದಿಗಳೇನೂ ಇರುವುದಿಲ್ಲ. ಇವೆಲ್ಲವೂ ಇಲ್ಲಿಯೇ ಇರುತ್ತದೆ, ಸ್ವರ್ಗವೂ ಇಲ್ಲಿಯೇ ಆಗುತ್ತದೆ. ಈ ಸಮಯದಲ್ಲಿ ಮನುಷ್ಯರು ಮುಳ್ಳಿನ ಸಮಾನ ಆಗಿ ಬಿಟ್ಟಿದ್ದಾರೆ ಆದ್ದರಿಂದ ಇದಕ್ಕೆ ಮುಳ್ಳುಗಳ ಕಾಡು ಎಂದು ಹೇಳಲಾಗುತ್ತದೆ. ಸತ್ಯಯುಗವು ಹೂದೋಟವಾಗಿದೆ, ತಂದೆಯು ಹೇಗೆ ಹೂದೋಟವನ್ನಾಗಿ ಮಾಡುತ್ತಾರೆ, ಅತಿ ಸುಂದರ ಹೂಗಳನ್ನಾಗಿ ಮಾಡುತ್ತಾರೆ. ಎಲ್ಲರನ್ನೂ ಸುಂದರರನ್ನಾಗಿ ಮಾಡುತ್ತಾರೆಂದು ನೀವು ನೋಡುತ್ತೀರಿ. ತಂದೆಯಂತೂ ಸದಾ ಸುಂದರನಾಗಿದ್ದಾರೆ, ಎಲ್ಲಾ ಪ್ರಿಯತಮೆಯರನ್ನು ಅರ್ಥಾತ್ ಮಕ್ಕಳನ್ನು ಸುಂದರರನ್ನಾಗಿ ಮಾಡುತ್ತಾರೆ. ರಾವಣನು ಸಂಪೂರ್ಣ ಕಪ್ಪು ಮಾಡಿ ಬಿಟ್ಟಿದ್ದಾನೆ. ಈಗ ನೀವು ಮಕ್ಕಳಿಗೆ ನಮ್ಮ ಮೇಲೆ ಬೃಹಸ್ಪತಿ ದೆಶೆಯು ಕುಳಿತಿದೆಯೆಂಬ ಖುಷಿಯಿರಬೇಕಾಗಿದೆ. ಒಂದುವೇಳೆ ಅರ್ಧ ಸಮಯ ದುಃಖ, ಅರ್ಧ ಸಮಯ ಸುಖವಿರುವುದಾದರೆ ಇದರಿಂದ ಲಾಭವಾದರೂ ಏನು? ಈ ರೀತಿಯಿರಲು ಸಾಧ್ಯವಿಲ್ಲ, ಮುಕ್ಕಲು ಭಾಗ ಸುಖವಿರುತ್ತದೆ. ಇದು ನಾಟಕದಲ್ಲಿ ಮಾಡಲ್ಪಟ್ಟಿದೆ. ಈ ನಾಟಕವನ್ನು ಹೀಗೇಕೆ ರಚಿಸಿದ್ದಾರೆ ಎಂದು ಅನೇಕರು ಕೇಳುತ್ತಾರೆ. ಇದು ಅನಾದಿ ನಾಟಕವಲ್ಲವೆ. ಏಕಾಯಿತು ಎಂಬ ಪ್ರಶ್ನೆಯೇ ಬರುವಂತಿಲ್ಲ. ಇದು ಅನಾದಿ-ಅವಿನಾಶಿ ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಆಗಬೇಕಾಗಿರುವುದೇ ನಡೆಯುತ್ತಿದೆ, ಯಾರಿಗೂ ಮೋಕ್ಷ ಸಿಗಲು ಸಾಧ್ಯವಿಲ್ಲ. ಈ ಅನಾದಿ ಸೃಷ್ಟಿಯು ನಡೆದು ಬರುತ್ತಿದೆ, ನಡೆಯುತ್ತಾ ಇರುವುದು. ಎಂದೂ ಪ್ರಳಯವಾಗುವುದಿಲ್ಲ. ತಂದೆಯು ಹೊಸ ಪ್ರಪಂಚವನ್ನಾಗಿ ಮಾಡುತ್ತಾರೆ. ಯಾವಾಗ ಮನುಷ್ಯರು ಪತಿತ, ದುಃಖಿಯಾಗುವರೋ ಆಗಲೇ ಕರೆಯುತ್ತಾರೆ. ತಂದೆಯು ಬಂದು ಎಲ್ಲರ ಕಾಯವನ್ನು ಕಲ್ಪವೃಕ್ಷ ಸಮಾನ ಮಾಡುತ್ತಾರೆ. ನೀವಾತ್ಮರು ಪವಿತ್ರರಾಗಿ ಬಿಟ್ಟರೆ ಶರೀರವೂ ಪವಿತ್ರವಾದುದೇ ಸಿಗುವುದು ಅಂದಾಗ ತಂದೆಯು ನಿಮ್ಮ ಕಾಯವನ್ನು ಕಲ್ಪತರುವನ್ನಾಗಿ ಮಾಡುತ್ತಾರೆ. ಅರ್ಧಕಲ್ಪ ಎಂದೂ ನಿಮ್ಮದು ಅಕಾಲ ಮೃತ್ಯುವಾಗುವುದಿಲ್ಲ. ನೀವು ಕಾಲದ ಮೇಲೆ ಜಯ ಗಳಿಸುತ್ತೀರಿ. ನೀವು ಮಕ್ಕಳು ಬಹಳ ಪುರುಷಾರ್ಥ ಮಾಡಬೇಕಾಗಿದೆ. ಎಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರೋ ಅಷ್ಟು ಒಳ್ಳೆಯದೇ ಆಗಿದೆ. ಪ್ರತಿಯೊಬ್ಬರೂ ಹೆಚ್ಚು ಸಂಪಾದನೆಗಾಗಿಯೇ ಪುರುಷಾರ್ಥ ಮಾಡುತ್ತಾರೆ. ಸೌದೆ ಮಾರುವವರೂ ಸಹ ನಾವು ಹೆಚ್ಚು ಸೌದೆಯನ್ನು ತೆಗೆದುಕೊಂಡು ಹೋದರೆ ಹೆಚ್ಚು ಸಂಪಾದನೆಯಾಗುವುದು ಎಂದು ಹೇಳುತ್ತಾರೆ. ಕೆಲವರಂತೂ ಮೋಸದಿಂದಲೂ ಸಂಪಾದನೆ ಮಾಡುತ್ತಾರೆ. ಸತ್ಯಯುಗದಲ್ಲಿ ಇಂತಹ ಯಾವುದೇ ದುಃಖದ ಮಾತುಗಳಿರುವುದಿಲ್ಲ. ನೀವೀಗ ತಂದೆಯಿಂದ ಎಷ್ಟೊಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಆದ್ದರಿಂದ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ - ನಾವು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗಿದ್ದೇವೆಯೇ? (ನಾರದನ ಉದಾಹರಣೆಯಂತೆ) ಶಾಸ್ತ್ರಗಳಲ್ಲಿ ಅನೇಕ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ಈ ತೀರ್ಥ ಯಾತ್ರೆ ಇತ್ಯಾದಿಗಳೆಲ್ಲವನ್ನೂ ಬಿಟ್ಟು ಬಿಡಿ. ನಾಲ್ಕಾರು ಕಡೆ ಸುತ್ತಿದೆವು ಆದರೂ ನಿಮ್ಮಿಂದ ದೂರ ಉಳಿದೆವು ಎಂದು ಗೀತೆಯಿದೆಯಲ್ಲವೆ. ಈಗ ತಂದೆಯು ನಿಮಗೆ ಎಷ್ಟು ಒಳ್ಳೆಯ ಯಾತ್ರೆಯನ್ನು ಕಲಿಸುತ್ತಾರೆ, ಇದರಲ್ಲಿ ಯಾವುದೇ ಕಷ್ಟವಿಲ್ಲ. ಕೇವಲ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿರಿ, ಆಗ ವಿಕರ್ಮಗಳು ವಿನಾಶವಾಗುತ್ತವೆ. ಬಹಳ ಒಳ್ಳೆಯ ಯುಕ್ತಿಯನ್ನು ನಿಮಗೆ ತಿಳಿಸುತ್ತೇನೆ. ಮಕ್ಕಳೇ, ಕೇಳಿಸಿಕೊಳ್ಳುತ್ತಿದ್ದೀರಾ! ಇದನ್ನು ನಾನು ಲೋನ್ ಆಗಿ ತೆಗೆದುಕೊಂಡಿರುವ ರಥವಾಗಿದೆ. ಈ ತಂದೆಗೆ (ಬ್ರಹ್ಮಾ) ಎಷ್ಟೊಂದು ಖುಷಿಯಾಗುತ್ತದೆ - ನಾನು ತಂದೆಗೆ ಶರೀರವನ್ನು ಲೋನ್ ಆಗಿ ಕೊಟ್ಟಿದ್ದೇನೆ, ತಂದೆಯು ನನ್ನನ್ನು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ ಎಂದು. ಭಗೀರಥ ಎಂದು ಹೆಸರೂ ಇದೆ, ನಿಮಗೆ ತಿಳಿದಿದೆ - ಬಾಂಬುಗಳೆಲ್ಲವೂ ತಯಾರಾಗುತ್ತಿದೆ, ಇದಕ್ಕೆ ಬೆಂಕಿ ಬೀಳಲಿದೆ. ರಾವಣನ ಗೊಂಬೆಯನ್ನೂ ಸಹ ತಯಾರು ಮಾಡುತ್ತಾರೆ, ಸಾಯಿಸುವುದಕ್ಕಾಗಿ. ಇಲ್ಲಿ ಸಾಯಿಸುವ ಮಾತೆಲ್ಲಿ! ಈ ರಾವಣ ರಾಜ್ಯವು ಸಮಾಪ್ತಿಯೇ ಆಗುತ್ತಿದೆ. ನೀವು ಮಕ್ಕಳು ರಾಮ ಪುರಿಯಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೀರಿ ಅಂದಮೇಲೆ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ, ಮುಳ್ಳಾಗಬಾರದು.
ನೀವು ಬ್ರಾಹ್ಮಣ-ಬ್ರಾಹ್ಮಿಣಿಯರಾಗಿದ್ದೀರಿ. ಎಲ್ಲರ ಆಧಾರವು ಮುರುಳಿಯ ಮೇಲಿದೆ. ನಿಮಗೆ ಮುರುಳಿ ಸಿಗಲಿಲ್ಲವೆಂದರೆ ಏನು ಮಾಡುತ್ತೀರಿ? ಕೇವಲ ಒಬ್ಬ ಬ್ರಾಹ್ಮಿಣಿಯೇ ಓದಿ ತಿಳಿಸಬೇಕೆಂದಿಲ್ಲ. ಯಾರು ಬೇಕಾದರೂ ಮುರುಳಿಯನ್ನು ಹೇಳಬಹುದಾಗಿದೆ. ಇಂದು ನೀವೂ ಮುರುಳಿಯನ್ನು ಓದಿರಿ ಎಂದು ಹೇಳಬೇಕು. ಈಗಂತೂ ತಿಳಿಸುವುದಕ್ಕಾಗಿ ಒಳ್ಳೊಳ್ಳೆಯ ಚಿತ್ರಗಳೂ ಇವೆ. ಈ ಮುಖ್ಯ ಚಿತ್ರಗಳನ್ನು ತಮ್ಮ ಅಂಗಡಿಗಳಲ್ಲಿ ಇಟ್ಟುಕೊಂಡು ಅನೇಕರ ಕಲ್ಯಾಣ ಮಾಡಿರಿ. ಆ ವ್ಯಾಪಾರದ ಜೊತೆ ಜೊತೆಗೆ ಈ ವ್ಯಾಪಾರವನ್ನೂ ಮಾಡಿರಿ. ಇದು ತಂದೆಯ ಅವಿನಾಶಿ ಜ್ಞಾನರತ್ನಗಳ ಅಂಗಡಿಯಾಗಿದೆ. ಮನೆ ಇತ್ಯಾದಿಗಳನ್ನು ಕಟ್ಟಿಸಬೇಡಿ ಎಂದು ತಂದೆಯು ಹೇಳುವುದಿಲ್ಲ. ಭಲೆ ಕಟ್ಟಿಸಿರಿ. ಹಣವಿದ್ದರೂ ಸಹ ಮಣ್ಣು ಪಾಲಾಗುವುದು. ಇದಕ್ಕಿಂತಲೂ ಮನೆ ಕಟ್ಟಿಸಿ ಆರಾಮದಿಂದ ಇರಿ. ಹಣವನ್ನು ಕಾರ್ಯದಲ್ಲಿ ತೊಡಗಿಸಿರಿ. ಮನೆಯನ್ನೂ ಕಟ್ಟಿಸಿ, ತಿನ್ನುವುದಕ್ಕಾಗಿಯೂ ಇಟ್ಟುಕೊಳ್ಳಿ, ದಾನ ಪುಣ್ಯಗಳನ್ನೂ ಮಾಡಿರಿ. ಕಾಶ್ಮೀರದ ರಾಜನು ಮರಣ ಹೊಂದಿದಾಗ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ಆರ್ಯ ಸಮಾಜದವರಿಗೆ ದಾನವಾಗಿ ಕೊಟ್ಟು ಬಿಟ್ಟರು. ತಮ್ಮ ಧರ್ಮಕ್ಕಾಗಿ ದಾನ ಮಾಡುತ್ತಾರಲ್ಲವೆ. ಇಲ್ಲಂತೂ ಆ ಮಾತಿಲ್ಲ. ಎಲ್ಲರೂ ಮಕ್ಕಳಾಗಿದ್ದೀರಿ, ದಾನದ ಮಾತಿಲ್ಲ. ಅದು ಹದ್ದಿನ ದಾನವಾಗಿದೆ, ನಾನಂತೂ ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತೇನೆ. ಡ್ರಾಮಾನುಸಾರ ಭಾರತವಾಸಿಗಳೇ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವಿರಿ. ಭಕ್ತಿಮಾರ್ಗದಲ್ಲಿ ವ್ಯಾಪಾರಿಗಳು ಒಂದಲ್ಲ ಒಂದು ದಾನ-ಧರ್ಮವನ್ನು ಮಾಡುತ್ತಾ ಇರುತ್ತಾರೆ, ಅದಕ್ಕಾಗಿ ಇನ್ನೊಂದು ಜನ್ಮದಲ್ಲಿ ಅಲ್ಪಕಾಲಕ್ಕಾಗಿ ಸಿಗುತ್ತದೆ. ಈಗಂತೂ ನಾನು ಡೈರೆಕ್ಟ್ ಬಂದಿದ್ದೇನೆ ಅಂದಮೇಲೆ ನೀವು ಈ ಕಾರ್ಯದಲ್ಲಿ ತೊಡಗಿಸಿರಿ. ನನಗೇನೂ ಬೇಕಿಲ್ಲ, ಶಿವ ತಂದೆಯು ತನಗಾಗಿ ಮನೆಯನ್ನು ಕಟ್ಟಿಸಿಕೊಳ್ಳಬೇಕಾಗಿದೆಯೇ!!! ಇದೆಲ್ಲವೂ ಬ್ರಾಹ್ಮಣರಿಗಾಗಿ ಇದೆ. ಬಡವರು-ಸಾಹುಕಾರರು ಎಲ್ಲರೂ ಒಟ್ಟಿಗೆ ಇರುತ್ತೀರಿ ಅಂದಮೇಲೆ ಇದೆಲ್ಲವೂ ಮಕ್ಕಳದೇ ಆಗಿದೆ. ಮನೆಯಲ್ಲಿ ಅವರು ಆರಾಮದಿಂದ ಇರುವವರಾದರೆ ಅವರಿಗಾಗಿ ಅಂತಹ ಪ್ರಬಂಧವನ್ನೂ ಮಾಡಬೇಕಾಗುತ್ತದೆ. ಆದ್ದರಿಂದಲೇ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಎಲ್ಲರಿಗೆ ಚೆನ್ನಾಗಿ ಉಪಚಾರ ಮಾಡಿ, ಯಾವುದೇ ವಸ್ತುವಿಲ್ಲದಿದ್ದರೆ ಭಂಡಾರದಲ್ಲಿ ಸಿಗುತ್ತದೆ. ತಂದೆಗೆ ಮಕ್ಕಳ ಮೇಲೆ ಪ್ರೀತಿಯಿರುತ್ತದೆ. ಇಷ್ಟು ಪ್ರೀತಿ ಮತ್ತ್ಯಾರಿಗೂ ಇರಲು ಸಾಧ್ಯವಿಲ್ಲ. ಮಕ್ಕಳಿಗೆ ಎಷ್ಟೊಂದು ತಿಳಿಸುತ್ತಾರೆ - ಪುರುಷಾರ್ಥ ಮಾಡಿರಿ, ಅನ್ಯರಿಗಾಗಿ ಯುಕ್ತಿಯನ್ನು ರಚಿಸಿ. ಇದರಲ್ಲಿ ಕೇವಲ ಮೂರು ಹೆಜ್ಜೆಗಳಷ್ಟು ಸ್ಥಳವಿದ್ದರೆ ಸಾಕು, ಅಲ್ಲಿ ಬಂದು ಕನ್ಯೆಯರು ಜ್ಞಾನವನ್ನು ತಿಳಿಸುತ್ತಾ ಇರಲಿ. ಯಾರಾದರೂ ದೊಡ್ಡ ವ್ಯಕ್ತಿಯ ಹಾಲ್ ಇತ್ಯಾದಿಗಳಿದ್ದರೆ ತಿಳಿಸಿ, ನಾವು ಈ ಅತ್ಯವಶ್ಯಕವಾದ ಚಿತ್ರಗಳನ್ನು ಇಟ್ಟು ಸರ್ವೀಸ್ ಮಾಡುತ್ತೇವೆ. ಬೆಳಗ್ಗೆ-ಸಂಜೆ ಒಂದೆರಡು ಗಂಟೆಗಳ ಕಾಲ ತರಗತಿಯನ್ನು ನಡೆಸಿ ಹೊರಟು ಹೋಗುತ್ತೇವೆ. ಖರ್ಚು ನಮ್ಮದು, ಕೀರ್ತಿ ನಿಮ್ಮದಾಗುತ್ತದೆ. ಅನೇಕರು ಬಂದು ಕವಡೆಯಿಂದ ವಜ್ರ ಸಮಾನರಾಗುವರು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅವಿನಾಶಿ ತಂದೆಯೊಂದಿಗೆ ಸತ್ಯ-ಸತ್ಯವಾದ ಅವಿನಾಶಿ ವ್ಯಾಪಾರ ಮಾಡಬೇಕಾಗಿದೆ. ಆ ವ್ಯಾಪಾರದ ಜೊತೆಗೆ ಈ ವ್ಯಾಪಾರದಲ್ಲಿಯೂ ಸಮಯ ಕೊಡಬೇಕಾಗಿದೆ. ಜ್ಞಾನ ಗಂಗೆಯರಾಗಿ ಎಲ್ಲರನ್ನೂ ಪಾವನ ಮಾಡಬೇಕಾಗಿದೆ.
2. ಬ್ರಾಹ್ಮಣ ಜೀವನದ ಆಧಾರವು ಮುರುಳಿಯಾಗಿದೆ, ಇದನ್ನು ಪ್ರೀತಿಯಿಂದ ಕೇಳಬೇಕು ಹಾಗೂ ಹೇಳಬೇಕಾಗಿದೆ. ಒಳಗೆ ಯಾವುದೇ ಮುಳ್ಳು ಇದ್ದರೆ ಅದನ್ನು ತೆಗೆದು ಹಾಕಬೇಕಾಗಿದೆ. ಅವಗುಣಗಳ ದಾನ ಮಾಡಬೇಕಾಗಿದೆ.
ಓಂ ಶಾಂತಿ. ಕೇವಲ ಮಧುರಾತಿ ಮಧುರ ಬ್ರಹ್ಮಾಕುಮಾರ-ಕುಮಾರಿಯರೇ ಇದನ್ನು ತಿಳಿದುಕೊಂಡಿದ್ದೀರಿ - ಪಾಪದ ಪ್ರಪಂಚ ಮತ್ತು ಪುಣ್ಯದ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ. ಭಲೆ ಮನುಷ್ಯರು ಹೇ ಪತಿತ-ಪಾವನ ತಂದೆಯೇ ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡಲು ಬನ್ನಿ ಎಂದು ಹೇಳುತ್ತಾರೆ ಆದರೆ ತಿಳಿದುಕೊಂಡಿಲ್ಲ. ಇದನ್ನೂ ಸಹ ಆತ್ಮವೇ ಹೇಳುತ್ತದೆ - ಹೇ ಪತಿತ-ಪಾವನ.... ಎಂದು. ಎಲ್ಲಾ ಮನುಷ್ಯ ಮಾತ್ರರು ಕರೆಯುತ್ತಾ ಇರುತ್ತಾರೆ ಆದರೆ ಇದು ಪಾವನ ಪ್ರಪಂಚವೆಂದು ಯಾವುದಕ್ಕೆ ಹೇಳಲಾಗುತ್ತದೆ, ಅದು ಯಾವಾಗ ಮತ್ತು ಹೇಗೆ ಸ್ಥಾಪನೆಯಾಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ನೀವೀಗ ಜ್ಞಾನಪೂರ್ಣ ತಂದೆಯ ಮಕ್ಕಳಾಗಿದ್ದೀರಿ ಆದ್ದರಿಂದ ಜ್ಞಾನಪೂರ್ಣ, ಜ್ಞಾನಸಾಗರ ತಂದೆಯನ್ನು ಕೇವಲ ನೀವೇ ಅರಿತುಕೊಂಡಿದ್ದೀರಿ. ಪಾವನ ಪ್ರಪಂಚವು ಹೇಗೆ ಪತಿತವಾಗುತ್ತದೆ, ಪತಿತ ಪ್ರಪಂಚವು ಮತ್ತೆ ಹೇಗೆ ಪಾವನವಾಗುತ್ತದೆ ಎಂದು ಯಾರೂ ತಿಳಿದುಕೊಂಡಿಲ್ಲ. ಪತಿತ ಪ್ರಪಂಚದಲ್ಲಿ ಯಾರಿದ್ದಾರೆ ಮತ್ತು ಪಾವನ ಪ್ರಪಂಚದಲ್ಲಿ ಯಾರು ಇರುತ್ತಾರೆ, ಇವೆಲ್ಲಾ ಮಾತುಗಳನ್ನು ನೀವೇ ಈಗ ತಿಳಿದುಕೊಂಡಿದ್ದೀರಿ. ಸತ್ಯಯುಗಕ್ಕೆ ಪಾವನ ಪ್ರಪಂಚವೆಂದು ಹೇಳಲಾಗುತ್ತದೆ. ಅವಶ್ಯವಾಗಿ ಪಾವನ ಪ್ರಪಂಚ ಭಾರತದಲ್ಲಿಯೇ ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮದ ರಾಜ್ಯವಿತ್ತು ಆದ್ದರಿಂದ ಭಾರತವು ಎಲ್ಲದಕ್ಕಿಂತ ಪ್ರಾಚೀನ ದೇಶವೆಂದು ಗಾಯನವಿದೆ. ನೀವೀಗ ತಿಳಿದುಕೊಳ್ಳುತ್ತೀರಿ, ನಮ್ಮನ್ನು ಪುನಃ ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಪತಿತ-ಪಾವನ ತಂದೆಯು ಯುಕ್ತಿಗಳನ್ನು ತಿಳಿಸುತ್ತಿದ್ದಾರೆ. ಒಂದು ಸೆಕೆಂಡಿನಲ್ಲಿ ಯುಕ್ತಿಯನ್ನು ತಿಳಿಸುತ್ತೇನೆಂದು ಹೇಳುತ್ತಾರೆ. ತಂದೆಯು ಬರುವುದೇ ಹೊಸ ಪ್ರಪಂಚದ ರಾಜ್ಯಭಾಗ್ಯವನ್ನು ಕೊಡಲು. ಇದು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯಾಗಿದೆ. ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ. ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ತಂದೆಯು ಹೇಳುತ್ತಾರೆ - ನೀವೇ ಸತೋಪ್ರಧಾನರಾಗಿದ್ದಿರಿ, ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಹಿಂದೂ ಧರ್ಮವಲ್ಲ. ಭಾರತಕ್ಕೆ ಮೊಟ್ಟ ಮೊದಲು ದೇವಿ-ದೇವತಾ ಧರ್ಮವಿತ್ತು ನಂತರ ಅವಶ್ಯವಾಗಿ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಬಂದಿದ್ದಾರೆ. ಹೇಗೆ ಕ್ರಿಶ್ಚಿಯನ್ನರೂ ಸಹ ಪುನರ್ಜನ್ಮವನ್ನು ತೆಗೆದುಕೊಂಡು ವೃದ್ಧಿ ಹೊಂದುತ್ತಾರೆ, ಬೌದ್ಧರ ಧರ್ಮ ಸ್ಥಾಪನೆ ಮಾಡುವವರು ಬುದ್ಧನಾಗಿದ್ದಾರೆ. ಅವರು ಧರ್ಮ ಸ್ಥಾಪಕನಾದರು, ಒಬ್ಬ ಬುದ್ಧನಿಂದ ಎಷ್ಟೊಂದು ಮಂದಿ ಬೌದ್ಧಿಯರಾದರು. ಕ್ರೈಸ್ಟ್ ಒಬ್ಬರೇ ಇದ್ದರೆ ಈಗ ನೋಡಿ ಎಷ್ಟೊಂದು ಮಂದಿ ಕ್ರಿಶ್ಚಿಯನ್ನರಾಗಿ ಬಿಟ್ಟಿದ್ದಾರೆ. ಎಲ್ಲಾ ಧರ್ಮಗಳೂ ಸಹ ಇದೇ ರೀತಿ ನಡೆಯುತ್ತಾ ಬಂದಿದೆ. ಹಾಗೆಯೇ ಯಾವಾಗ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತೊ ಆಗ ಮತ್ತ್ಯಾವ ಧರ್ಮವಿರಲಿಲ್ಲ. ಕ್ರೈಸ್ಟ್ ಕ್ರಿಶ್ಚಿಯನ್ ಧರ್ಮವನ್ನು, ಇಬ್ರಾಹಿಂ ಇಸ್ಲಾಂ ಧರ್ಮವನ್ನು ಸ್ಥಾಪನೆ ಮಾಡಿದರೆಂದು ಅನ್ಯ ಧರ್ಮದವರ ಬಗ್ಗೆ ತಿಳಿದುಕೊಂಡಿರುತ್ತಾರೆ. ಒಳ್ಳೆಯದು - ಸತ್ಯಯುಗದಲ್ಲಿ ಯಾವ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಅದನ್ನು ಯಾರು ಸ್ಥಾಪನೆ ಮಾಡಿದರು? ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜಧಾನಿಯು ನಡೆಯಿತಲ್ಲವೆ ಅಂದಮೇಲೆ ಅವಶ್ಯವಾಗಿ ಯಾರೋ ರಾಜ್ಯ ಸ್ಥಾಪನೆ ಮಾಡಿದ್ದಾರೆ, ಸತ್ಯಯುಗದಲ್ಲಿ ದೇವಿ-ದೇವತಾ ಧರ್ಮವಿತ್ತು, ಅದನ್ನು ಈಗ ತಂದೆಯು ಸ್ಥಾಪನೆ ಮಾಡುತ್ತಿದ್ದಾರೆ. ಆದ್ದರಿಂದ ತಂದೆಯು ಸಂಗಮಯುಗದಲ್ಲಿಯೇ ಬರಬೇಕಾಗುತ್ತದೆ. ಈಗ ಎಲ್ಲಾ ಮನುಷ್ಯ ಮಾತ್ರವು ಪತಿತ ಪ್ರಪಂಚದಲ್ಲಿ ಕುಳಿತಿದ್ದಾರೆ, ಹಳೆಯ ಪ್ರಪಂಚದಲ್ಲಿ ಕೋಟ್ಯಾಂತರ ಜನಸಂಖ್ಯೆಯಿದೆ. ಹೊಸ ಪ್ರಪಂಚದಲ್ಲಿ ಇಷ್ಟೊಂದು ಮಂದಿ ಇರಲು ಸಾಧ್ಯವಿಲ್ಲ. ಅಲ್ಲಿ ಒಂದು ಧರ್ಮವಿತ್ತು, ಇಸ್ಲಾಮಿ, ಬೌದ್ಧಿ, ಕ್ರಿಶ್ಚಿಯನ್ ಮೊದಲಾದವರು ಯಾರೂ ಇರಲಿಲ್ಲ. ಆ ದೇವತಾ ಧರ್ಮವು ಈಗ ಪ್ರಾಯಲೋಪವಾಗಿದೆ. ಅದನ್ನು ಹೇಗೆ ಭಗವಂತನು ಸ್ಥಾಪನೆ ಮಾಡಿದ್ದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ದೇವತಾ ಧರ್ಮದ ಹೆಸರನ್ನೇ ಮರೆತು ಹೋಗಿದ್ದಾರೆ. ಹಿಂದೂ ಧರ್ಮವೆಂದು ಹೇಳಿಬಿಡುತ್ತಾರೆ. ಈಗ ತಂದೆಯು ತಿಳಿಸುತ್ತಿದ್ದಾರೆ, ಯಾವಾಗ ಹಳೆಯ ಪ್ರಪಂಚವನ್ನು ಪರಿವರ್ತನೆ ಮಾಡಬೇಕಾಗಿದೆಯೋ ಆಗಲೇ ನಾನು ಬರುತ್ತೇನೆ. ಈಗ ಈ ಹಳೆಯ ಪ್ರಪಂಚದ ಅಂತ್ಯವಾಗಿದೆ, ಇದನ್ನು ಕೇವಲ ನೀವು ಬ್ರಾಹ್ಮಣರೇ ತಿಳಿದುಕೊಂಡಿದ್ದೀರಿ. ಈ ಮಹಾಭಾರಿ ಯುದ್ಧದಿಂದಲೇ ಹಳೆಯ ಪ್ರಪಂಚದ ಅಂತ್ಯವಾಗಿತ್ತು, ಗೀತೆಯಲ್ಲಿ ತೋರಿಸುತ್ತಾರೆ - ಎಲ್ಲರೂ ಸಮಾಪ್ತಿಯಾಗಿ ಬಿಟ್ಟರು, ಯಾರೂ ಉಳಿಯಲಿಲ್ಲ. ಪಂಚ ಪಾಂಡವರು ಉಳಿದರು ಅವರೂ ಸಹ ಪರ್ವತಗಳ ಮೇಲೆ ಕರಗಿ ಹೋದರು ಎಂದು ತೋರಿಸಿದ್ದಾರೆ ಆದರೆ ಈ ರೀತಿ ಆಗುವುದಿಲ್ಲ. ಇದನ್ನು ತಂದೆಯೇ ಸ್ಥಾಪನೆ ಮಾಡುತ್ತಾರೆ. ಪ್ರಳಯ ಅಥವಾ ಜಲಮಯವಾಗುವುದಿಲ್ಲ. ಹೇ ಪತಿತ-ಪಾವನ ಬನ್ನಿ, ನಮ್ಮ ದುಃಖವನ್ನು ದೂರ ಮಾಡಿ ಸುಖ ನೀಡಿ ಎಂದು ತಂದೆಯನ್ನು ಕರೆಯುತ್ತಾರೆ ಏಕೆಂದರೆ ಈಗ ರಾವಣ ರಾಜ್ಯವಾಗಿದೆ. ರಾಮ ರಾಜ್ಯವನ್ನು ಬಯಸುತ್ತಾರೆ ಅಂದಮೇಲೆ ಅವಶ್ಯವಾಗಿ ರಾವಣ ರಾಜ್ಯವಿದೆಯಲ್ಲವೆ. ತಂದೆಯು ತಿಳಿಸುತ್ತಾರೆ - ಈಗ ರಾಮರಾಜ್ಯದ ಸ್ಥಾಪನೆ, ರಾವಣ ರಾಜ್ಯದ ವಿನಾಶವಾಗುತ್ತದೆ. ನಾನು ಯಾವ ಯುಕ್ತಿಯನ್ನು ಕಲಿಸುತ್ತೇನೆ, ಯಾರು ಕಲಿಯುತ್ತಾರೆಯೋ ಅವರೇ ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತಾರೆ. ಈ ಜ್ಞಾನವು ಅಲ್ಲಿ ಸ್ವಲ್ಪವೂ ಇರುವುದಿಲ್ಲ. ಈಗ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ, ಯಾರ ಬುದ್ಧಿಯಲ್ಲಿ ಇದೆಯೋ ಅವರು ಅನ್ಯರಿಗೂ ತಿಳಿಸುತ್ತಾರೆ. ನಂಬರ್ವಾರಂತೂ ಇರುತ್ತಾರಲ್ಲವೆ. ಸೇವಾಧಾರಿ ಮಕ್ಕಳ ಬುದ್ಧಿಯಲ್ಲಿ ಜ್ಞಾನವೇ ಹನಿಯುತ್ತಾ ಇರುತ್ತದೆ. ಸತ್ಯಯುಗದಲ್ಲಿ ಮೊಟ್ಟ ಮೊದಲು ದೇವಿ-ದೇವತಾ ಧರ್ಮದವರಿದ್ದರು, ಇದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಮೊಟ್ಟ ಮೊದಲು ಪ್ರಜಾಪಿತ ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ. ಇದು ಜ್ಞಾನ ಯಜ್ಞವಲ್ಲವೆ ಅಂದಮೇಲೆ ಅವಶ್ಯವಾಗಿ ಬ್ರಾಹ್ಮಣ ಸಂಪ್ರದಾಯದವರೇ ಬೇಕಾಗಿದೆ. ಅವಶ್ಯವಾಗಿ ಸಂಗಮಯುಗದಲ್ಲಿಯೇ ಬ್ರಾಹ್ಮಣ ಸಂಪ್ರದಾಯದವರಿರುವರು. ಕಲಿಯುಗದಲ್ಲಿ ಆಸುರೀ ಸಂಪ್ರದಾಯದವರಿದ್ದಾರೆ, ಸತ್ಯಯುಗದಲ್ಲಿ ದೈವೀ ಸಂಪ್ರದಾಯವಿರುವುದು. ಅಂದಮೇಲೆ ಅವಶ್ಯವಾಗಿ ಸಂಗಮದಲ್ಲಿಯೇ ದೈವೀ ಸಂಪ್ರದಾಯದ ಸ್ಥಾಪನೆಯಾಗುವುದು. ಬಾಜೋಲಿ ಆಟವನ್ನು ಆಡುವಾಗ ಕಾಲು ಮತ್ತು ತಲೆಯು ಒಂದು ಕಡೆ ಕೂಡುತ್ತದೆ. ನೀವು ಬ್ರಾಹ್ಮಣರಾಗಿದ್ದೀರಿ, ಮತ್ತೆ ನೆನಪು ಬರುತ್ತದೆ, ವಿರಾಟ ರೂಪದ ಚಿತ್ರವೂ ಸಹ ಅವಶ್ಯಕವಾಗಿದೆ, ಇದರ ತಿಳುವಳಿಕೆಯು ಬಹಳ ಚೆನ್ನಾಗಿದೆ. ಬಾಬಾ, ನಾವು ನಿಮ್ಮ ಆರು ತಿಂಗಳ ಮಕ್ಕಳಾಗಿದ್ದೇವೆ, ನಾಲ್ಕು ದಿನಗಳ ಮಗುವಾಗಿದ್ದೇವೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಾನು ಒಂದು ದಿನದ ಮಗುವಾಗಿದ್ದೇನೆ ಅರ್ಥಾತ್ ನಾನು ಇಂದೇ ಬಾಬನ ಮಗುವಾಗಿದ್ದೇನೆ, ಮುಖ ವಂಶಾವಳಿ ಆಗಿದ್ದೇನೆಂದು ಹೇಳುತ್ತಾರೆ. ಯಾರು ಜೀವಿಸಿದ್ದಂತೆಯೇ ತಂದೆಯ ಮಗುವಾಗುವರೋ ಅವರು ಬಾಬಾ, ನಾವು ನಿಮ್ಮವರಾಗಿದ್ದೇವೆ ಎಂದು ಹೇಳುತ್ತಾರೆ. ಚಿಕ್ಕ ಮಗುವಂತೂ ಈ ರೀತಿ ಹೇಳಲು ಸಾಧ್ಯವಿಲ್ಲ. ಈ ಜ್ಞಾನವು ದೊಡ್ಡವರಿಗಾಗಿ ಇದೆ. ಬಾಬಾ, ನಾನು ನಿಮ್ಮ ಚಿಕ್ಕ ಮಗುವಾಗಿದ್ದೇನೆಂದು ಹೇಳುತ್ತಾರೆ. ಚಿಕ್ಕ ಮಕ್ಕಳಿಗೆ ಚಿತ್ರವನ್ನು ತೋರಿಸಿ ತಿಳಿಸುವುದು ಸಹಜವಾಗುತ್ತದೆ. ದಿನ-ಪ್ರತಿದಿನ ಜ್ಞಾನವು ವಿಸ್ತಾರವಾಗುತ್ತಾ ಹೋಗುತ್ತದೆ. ಈ ಚಿತ್ರಗಳ ಯುಕ್ತಿಯು ಡ್ರಾಮಾ ಪ್ಲಾನನುಸಾರ 5000 ವರ್ಷಗಳ ಮೊದಲು ಹೊರ ಬಂದಿದೆ. ಇದರಲ್ಲಿ ಆರಂಭದಲ್ಲಿಯೇ ಇದೆಲ್ಲವೂ ಏಕೆ ತಿಳಿಯಲಿಲ್ಲ, ಈಗಲೇ ಏಕೆ ತಿಳಿಸುತ್ತಿದ್ದಾರೆಂದು ಪ್ರಶ್ನೆ ಬರುವಂತಿಲ್ಲ. ಡ್ರಾಮಾನುಸಾರ ಯಾವ ಯುಕ್ತಿಯು ಯಾವಾಗ ಹೊಳೆಯಬೇಕಾಗಿರುವುದೊ ಆಗಲೇ ಹೊಳೆಯುವುದು. ಶಾಲೆಯಲ್ಲಿ ವಿದ್ಯೆಯ ನಂಬರ್ವಾರ್ ದರ್ಜೆಗಳಿರುತ್ತವೆ. ಮೊದಲೇ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿ ಬಿಡುವುದಿಲ್ಲ. ಮೊದಲು ಕೇವಲ ಒಂದು-ಎರಡು ಹೇಳಿಕೊಡಲಾಗುತ್ತದೆ, ಇಲ್ಲಂತೂ ತಂದೆಯ ಮಕ್ಕಳಾಗುತ್ತಿದ್ದಂತೆಯೇ ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯನ್ನು ತಂದೆಯೆಂದು ಹೇಳಿದ ಮೇಲೆ ನಿಶ್ಚಯವು ತುಂಡಾಗುವುದಿಲ್ಲ. ಇಲ್ಲಂತೂ ಬಾಬಾ, ಬಾಬಾ ಎಂದು ಹೇಳುತ್ತಿದ್ದರೂ ಸಹ ಕೆಲವೊಮ್ಮೆ ನಿಶ್ಚಯವು ಮುರಿಯುತ್ತದೆ. ನೀವು ತಿಳಿದುಕೊಂಡಿದ್ದೀರಿ, ಇವರು ಬೇಹದ್ದಿನ ತಂದೆಯಾಗಿದ್ದಾರೆ. ನೀವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ ಅಂದಮೇಲೆ ಅವರ ಶ್ರೀಮತದಂತೆ ನಡೆಯಬೇಕಾಗಿದೆ. ತಂದೆಯು ತಿಳಿಸುತ್ತಿದ್ದಾರೆ, ಮತ್ತೆಲ್ಲಾ ಮಾತುಗಳನ್ನು ಬಿಟ್ಟು ನನ್ನನ್ನು ನೆನಪು ಮಾಡಿರಿ ಮತ್ತು ಆಸ್ತಿಯನ್ನು ನೆನಪು ಮಾಡಿರಿ. ನಡೆಯುತ್ತಾ-ತಿರುಗಾಡುತ್ತಾ ಇದನ್ನು ನೆನಪು ಮಾಡಿದಾಗ ಖುಷಿಯಿರುವುದು ಆದರೆ ಈ ನೆನಪು ಏಕೆ ನಿಲ್ಲುವುದಿಲ್ಲ. ನಿಮ್ಮದು ಗ್ಯಾರಂಟಿಯಿದೆ - ಬಾಬಾ, ನಾವು ನಿಮ್ಮವರಾಗಿದ್ದೇವೆ ಅಂದಮೇಲೆ ನಮಗೆ ಮತ್ತ್ಯಾರೊಂದಿಗೆ ಮಮತೆಯಿರುವುದಿಲ್ಲ. ನಾವು ನಿಮ್ಮ ಮತದನುಸಾರವೇ ನಡೆಯುತ್ತೇವೆ. ತಂದೆಯೂ ಸಹ ಹೇಳುತ್ತಾರೆ- ಶ್ರೀಮತದಂತೆ ನಡೆಯದಿದ್ದರೆ ತಪ್ಪುಗಳಾಗುತ್ತಾ ಇರುತ್ತವೆ. ಶ್ರೀಮತದಂತೆ ನಡೆಯುವುದರಿಂದ ಖುಷಿಯ ನಶೆಯೇರುವುದು. ಆತ್ಮಕ್ಕೆ ಅತೀಂದ್ರಿಯ ಸುಖ ಸಿಗುತ್ತದೆಯೆಂದರೆ ಎಷ್ಟೊಂದು ಖುಷಿಯಾಗುತ್ತದೆ. ಆತ್ಮಕ್ಕೆ ತಿಳಿದಿದೆ - ಪರಮಪಿತ ಪರಮಾತ್ಮನು ನಮಗೆ ರಾಜ್ಯಭಾಗ್ಯವನ್ನು ಕೊಟ್ಟಿದ್ದರು ಅದನ್ನು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕಳೆದುಕೊಂಡಿದ್ದೇವೆ, ಅದನ್ನು ಪುನಃ ತಂದೆಯು ಕೊಡುತ್ತಿದ್ದಾರೆ ಅಂದಮೇಲೆ ಅಪಾರ ಖುಷಿಯಿರಬೇಕಲ್ಲವೆ. ಆಂತರಿಕ ಖುಷಿಯೂ ಸಹ ಕಾಣುತ್ತದೆಯಲ್ಲವೆ. ಈ ಲಕ್ಷ್ಮೀ-ನಾರಾಯಣರ ಚಹರೆಯಲ್ಲಿ ಕಂಡು ಬರುತ್ತದೆಯಲ್ಲವೆ. ಭಲೆ ಅಜ್ಞಾನ ಕಾಲದಲ್ಲಿ ಕೆಲಕೆಲವರು ಬಹಳ ಚೆನ್ನಾಗಿ ಖುಷಿಯಲ್ಲಿ ಇರುತ್ತಾರೆ, ಮಾತನಾಡುವುದರಲ್ಲಿಯೂ ಚೆನ್ನಾಗಿರುತ್ತಾರೆ.
ಮನುಷ್ಯ ಸೃಷ್ಟಿಯಲ್ಲಿ ಎಲ್ಲರಿಗಿಂತ ಶ್ರೇಷ್ಠ ಪದವಿ ಯಾರದಾಗಿದೆ? ವಾಸ್ತವದಲ್ಲಿ ಎಲ್ಲರಿಗಿಂತ ಶ್ರೇಷ್ಠರು ಶಿವ ಪರಮಾತ್ಮನಾಗಿದ್ದಾರೆ ಯಾರನ್ನು ಎಲ್ಲರೂ ತಂದೆ ಎಂದು ಕರೆಯುತ್ತಾರೆ ಆದರೆ ಅವರ ಪರಿಚಯವನ್ನು ತಿಳಿದುಕೊಂಡಿಲ್ಲ. ಯಾವಾಗ ತಂದೆಯೇ ಬರುವರೋ ಆಗ ತಮ್ಮ ಪರಿಚಯ ಕೊಡುವರು. ನಮಗೆ ತಂದೆಯಿಂದ ವೈಕುಂಠದ ರಾಜ್ಯಭಾಗ್ಯವು ಸಿಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ಖುಷಿಯಿರಬೇಕಲ್ಲವೆ. ನಾವು ನರನಿಂದ ನಾರಾಯಣನಾಗುತ್ತೇವೆಂದು ಕೆಲವರು ಭಲೆ ಕೈಯತ್ತುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಯಾರಿಗೆ ನಿಶ್ಚಯವಿರುತ್ತದೆಯೋ ಅವರಿಗೆ ಈ ಖುಷಿಯಿರುತ್ತದೆ - ನಾವೀಗ 84 ಜನ್ಮಗಳನ್ನು ಪೂರ್ಣ ಮಾಡಿದೆವು. ನಾವೀಗ ತಂದೆಯ ಮತದಂತೆ ನಡೆದು ವಿಶ್ವದ ಮಾಲೀಕರಾಗುತ್ತೇವೆ. ಈ ವಿದ್ಯೆಯ ನಶೆ ಎಷ್ಟೊಂದಿರಬೇಕು! ರಾಜ್ಯಪಾಲ, ರಾಷ್ಟ್ರಪತಿ ಮೊದಲಾದವರಿಗೆ ನಶೆಯಿರುತ್ತದೆಯಲ್ಲವೆ. ಅವರೊಂದಿಗೆ ಮಿಲನ ಮಾಡಲು ದೊಡ್ಡ-ದೊಡ್ಡ ವ್ಯಕ್ತಿಗಳು ಬರುತ್ತಾರೆ. ಪದವಿಯನ್ನು ಅರಿತುಕೊಳ್ಳದೆ ಎಂದೂ ಯಾರೊಂದಿಗೂ ಮಿಲನ ಮಾಡುವುದಿಲ್ಲ. ತಂದೆಯೂ ಸಹ ಎಂದೂ ಮಿಲನ ಮಾಡುವುದಿಲ್ಲ. ತಂದೆಯ ಪದವಿಯನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಅದರಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಭಲೆ ಬ್ರಹ್ಮಾಕುಮಾರರೆಂದು ಕೆಲವರು ಕರೆಸಿಕೊಳ್ಳುತ್ತಾರೆ ಆದರೆ ಬುದ್ಧಿಯಲ್ಲಿ ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಅವರಿಂದ ನಾವು ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದು ಬುದ್ಧಿಯಲ್ಲಿರುವುದಿಲ್ಲ. ತಂದೆಯನ್ನಾಗಲಿ, ಆಸ್ತಿಯನ್ನಾಗಲಿ ನೆನಪು ಮಾಡುವುದಿಲ್ಲ. ನೆನಪಿದ್ದಾಗಲೇ ಆಂತರಿಕ ಖುಷಿಯೂ ಇರುವುದಲ್ಲವೆ.
ಹೇಗೆ ಕನ್ಯೆಗೆ ವಿವಾಹ ಮಾಡುತ್ತಾರೆಂದರೆ ಅವರಿಗೆ ಗುಪ್ತ ದಾನವನ್ನು ಕೊಡಲಾಗುತ್ತದೆ. ಪೆಟ್ಟಿಗೆಯಲ್ಲಿ ತುಂಬಿಸಿ ಬೀಗ ಹಾಕಿ ಬೀಗದ ಕೈಯನ್ನು ಕೈಯಲ್ಲಿ ಕೊಡುತ್ತಾರೆ. ತಂದೆಯೂ ಸಹ ನಿಮಗೆ ವಿಶ್ವದ ರಾಜ್ಯಭಾಗ್ಯದ ಬೀಗದಕೈಯನ್ನು ಕೈಯಲ್ಲಿ ಕೊಡುತ್ತಾರೆ. ನೀವು ಹೊಸ ಸತ್ಯಯುಗೀ ವಿಶ್ವದ ಉದ್ಘಾಟನೆ ಮಾಡುತ್ತೀರಿ. ನೀವು ಸ್ವರ್ಗದಲ್ಲಿಯೂ ಹೋಗುತ್ತೀರಿ. ತಂದೆಯು ನಿಮ್ಮನ್ನು ಯೋಗ್ಯರನ್ನಾಗಿ ಮಾಡುತ್ತಾರೆ. ಭಕ್ತರು ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುವುದಿಲ್ಲ. ಅವರು ತಂದೆಯ ಜ್ಞಾನವನ್ನು ಪಡೆದು ಪವಿತ್ರರಾದಾಗ ಯೋಗ್ಯರಾಗುವರು ಆದ್ದರಿಂದಲೇ ನಾರದನ ಉದಾಹರಣೆಯಿದೆ. ಭಲೆ ಒಳ್ಳೊಳ್ಳೆಯ ಭಕ್ತರಿದ್ದಾರೆ ಆದರೆ ಆತ್ಮವಂತೂ ಪತಿತವಾಗಿದೆಯಲ್ಲವೆ. ಜನ್ಮ-ಜನ್ಮಾಂತರದಿಂದ ಅವರು ಪತಿತರಾಗುತ್ತಾ ಬಂದಿದ್ದಾರೆ. ಎಲ್ಲಿಯವರೆಗೆ ತಂದೆಯು ಸಿಗುವುದಿಲ್ಲವೋ ಅಲ್ಲಿಯವರೆಗೆ ಸ್ವರ್ಗದಲ್ಲಿ ಹೋಗಲು ಸಾಧ್ಯವಿಲ್ಲ. ನಿಮ್ಮನ್ನು ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ನೀವೇ ಹೋಗಿ ಹೊಸ ಪ್ರಪಂಚದಲ್ಲಿ ರಾಜ್ಯಭಾರ ಮಾಡುತ್ತೀರಿ, ಮತ್ತ್ಯಾರೂ ಹೊಸ ರಾಜಧಾನಿಯನ್ನು ಸ್ಥಾಪನೆ ಮಾಡುವುದಿಲ್ಲ ಮತ್ತು ಯಾರಿಗೂ ತಿಳಿದಿಲ್ಲ. ತಂದೆಯೇ ಸಂಗಮಯುಗದಲ್ಲಿ ಬಂದು ಭವಿಷ್ಯ 21 ಜನ್ಮಗಳ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ಈ ತಂದೆಯನ್ನು ಯಾರೂ ಅರಿತುಕೊಂಡಿಲ್ಲ, ನೀವೀಗ ತಿಳಿದುಕೊಂಡಿದ್ದೀರಿ - 5000 ವರ್ಷಗಳ ಮೊದಲು ಅವಶ್ಯವಾಗಿ ತಂದೆಯು ಬಂದಿದ್ದರು, ಗೀತಾ ಜ್ಞಾನವನ್ನು ತಿಳಿಸಿದ್ದರು, ಇದರಿಂದ ಮನುಷ್ಯರಿಂದ ದೇವತೆಗಳಾಗಿದ್ದರು. ಗೀತೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಸತ್ಯಯುಗದಲ್ಲಿ ಯಾವುದೇ ಶಾಸ್ತ್ರಗಳಿರುವುದಿಲ್ಲ. ತಂದೆಯು ಹೇಳುತ್ತಾರೆ - ನಾನು ಸಂಗಮಯುಗದಲ್ಲಿಯೇ ಬರುತ್ತೇನೆ, ಪುನಃ ಬಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತೇನೆ, ಅವರೇ ದೇವಿ-ದೇವತೆಗಳಾಗುತ್ತಾರೆ. ನಂತರ ಅವರೇ 84 ಜನ್ಮಗಳನ್ನು ಸುತ್ತಿ ಅಂತ್ಯದಲ್ಲಿ ಬಂದಾಗ ನಾನು ಬಂದು ಅವರಿಗೆ ಪುನಃ ತಿಳಿಸುತ್ತೇನೆ. ಮಧ್ಯದಲ್ಲಿ ಎಂದೂ ನಾನು ಬರುವುದಿಲ್ಲ. ಕ್ರಿಸ್ತನು ಮಧ್ಯದಲ್ಲಿ ಬಂದು ಬಿಡುವುದಿಲ್ಲ. ಯಾರೆಲ್ಲರೂ ಧರ್ಮ ಸ್ಥಾಪನೆ ಮಾಡುವರೋ ಅದು ಈ ಪ್ರಪಂಚಕ್ಕಾಗಿ. ನಾನು ಸಂಗಮದಲ್ಲಿ ಹೊಸ ಪ್ರಪಂಚವನ್ನು ಸ್ಥಾಪನೆ ಮಾಡಲು ಬರುತ್ತೇನೆ. ಕ್ರೈಸ್ಟ್ನ ಆತ್ಮವು ಬಂದು ಪ್ರವೇಶ ಮಾಡಿ ತಮ್ಮ ಧರ್ಮವನ್ನು ಸ್ಥಾಪನೆ ಮಾಡುತ್ತದೆ. ಇಲ್ಲಂತೂ ತಂದೆಯು ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಈ ಲಕ್ಷ್ಮೀ-ನಾರಾಯಣರ ರಾಜಧಾನಿಯನ್ನು ಯಾರು, ಯಾವಾಗ ಸ್ಥಾಪನೆ ಮಾಡಿದರು ಎಂಬುದು ಯಾರಿಗೂ ಗೊತ್ತಿಲ್ಲ. ಲಕ್ಷ್ಮೀ-ನಾರಾಯಣರ ಮಂದಿರ ಕಟ್ಟಿಸುವವರನ್ನು ಕೇಳಬೇಕು, ನೀವು ಸಭೆಯಲ್ಲಿಯೂ ಕೇಳಬಹುದು. ಈ ರಹಸ್ಯವು ನಿಮ್ಮ ಬುದ್ಧಿಯಲ್ಲಿದೆ. ತಂದೆಯು ಬ್ರಹ್ಮಾರವರ ಮೂಲಕ ಕಲ್ಪ-ಕಲ್ಪವೂ ಸ್ಥಾಪನೆ ಮಾಡುತ್ತಾರೆ, ಮತ್ತ್ಯಾರೂ ಇದನ್ನು ಅರಿತುಕೊಳ್ಳಲು ಆಗುವುದಿಲ್ಲ. ಈ ಶಬ್ಧವೂ ಇದೆ ಆದರೆ ಯಥಾರ್ಥ ರೀತಿಯಲ್ಲಿ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಕೆಲಕೆಲವು ಮಕ್ಕಳ ಮೇಲೆ ಗ್ರಹಚಾರವು ಕುಳಿತುಕೊಳ್ಳುತ್ತದೆ. ದೇಹಾಭಿಮಾನವು ಮೊಟ್ಟ ಮೊದಲ ಗ್ರಹಚಾರವಾಗಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಅತ್ಮಾಭಿಮಾನಿಗಳಾಗಿ. ಈ ಲಕ್ಷ್ಮೀ-ನಾರಾಯಣರ ಚಿತ್ರ ಮತ್ತು ಏಣಿಯ ಚಿತ್ರವು ಅನ್ಯರಿಗೆ ತಿಳಿಸಲು ಬಹಳ ಚೆನ್ನಾಗಿದೆ, ಇದರಿಂದ ಅನೇಕರ ಕಲ್ಯಾಣವಾಗುತ್ತದೆ ಆದರೆ ಡ್ರಾಮಾದಲ್ಲಿ ಬಹುಷಃ ಇನ್ನೂ ಸಮಯವಿದೆ ಆದ್ದರಿಂದ ರಾಜಧಾನಿಯು ಸ್ಥಾಪನೆಯಾಗುವುದರಲ್ಲಿ ವಿಘ್ನಗಳು ಬೀಳುತ್ತವೆ. ತಂದೆಯು ಹೇಳುತ್ತಾರೆ - ಬಹಳ ವಿಘ್ನಗಳು ಬರುತ್ತವೆ, ಮಾಯೆಯು ಬಹಳ ಸಮರ್ಥನಾಗಿದೆ. ನನ್ನ ಮಕ್ಕಳನ್ನು ಕೂಡಲೇ ಮೂಗಿನಿಂದ, ಕಿವಿಯಿಂದ ಹಿಡಿದುಕೊಳ್ಳುತ್ತದೆ, ಇದಕ್ಕೆ ರಾಹುವಿನ ಗ್ರಹಚಾರವೆಂದು ಹೇಳಲಾಗುತ್ತದೆ. ಭಾರತದಲ್ಲಿ ವಿಶೇಷವಾಗಿ ಈ ಸಮಯದಲ್ಲಿ ವಿಕಾರಗಳೆಂಬ ರಾಹುವಿನ ಪೂರ್ಣ ಗ್ರಹಚಾರವು ಕುಳಿತಿದೆ, ನೀವು ಸೆಕೆಂಡಿನಲ್ಲಿ ಸಿದ್ಧ ಮಾಡುತ್ತೀರಿ - ಇದೇ ಭಾರತವು ಪಾವನ, ವಜ್ರ ಸಮಾನವಾಗಿತ್ತು, ಈಗ ವಿಕಾರಿ ಕವಡೆಯಂತಗಿ ಬಿಟ್ಟಿದೆ. ಪುನಃ ವಜ್ರ ಸಮಾನ ಆಗಬೇಕಾಗಿದೆ. ಕಥೆಯೆಲ್ಲವೂ ಭಾರತದ್ದಾಗಿದೆ. ತಂದೆಯು ಬಂದು ವಜ್ರ ಸಮಾನರನ್ನಾಗಿ ಮಾಡುತ್ತಾರೆ ಆದರೂ ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ. ದೇಹಾಭಿಮಾನದ ಬಹಳ ದೊಡ್ಡ ವಿಘ್ನ ಬೀಳುತ್ತದೆ. ಲಕ್ಷ್ಮೀ-ನಾರಾಯಣರ ಚಿತ್ರದಲ್ಲಿಯೂ ಅನ್ಯರಿಗೆ ತಿಳಿಸಲು ಬಹಳ ಸಹಜವಾಗುತ್ತದೆ. ಮಕ್ಕಳಿಗೆ ಸರ್ವೀಸಿನ ಬಹಳ ಉಮ್ಮಂಗವಿರಬೇಕು. ಸೇವೆಯು ಅನೇಕ ಪ್ರಕಾರದ್ದಿದೆಯಲ್ಲವೆ. ಅನೇಕರಿಗೆ ಸುಖ ಕೊಡುತ್ತೀರೆಂದರೆ ಅದರ ಪ್ರತಿಫಲವೂ ಬಹಳ ಸಿಗುತ್ತದೆ. ಕೆಲವರು ಆಲ್ರೌಂಡ್ ಅವಿಶ್ರಾಂತ ಸೇವೆ ಮಾಡುತ್ತಾರೆ ಅಂದಾಗ ನಾವು ಆಲ್ರೌಂಡರ್ ಆಗಬೇಕೆಂಬ ಖುಷಿಯಿರಬೇಕು. ಬಾಬಾ, ನಾವು ಸರ್ವೀಸಿನಲ್ಲಿ ಹಾಜರಿದ್ದೇವೆ. ಒಳ್ಳೊಳ್ಳೆಯ ಮಕ್ಕಳು ಆತ್ಮಿಕ ಸೇವೆ ಮಾಡುವವರು ತಮ್ಮ ಕೈಯಿಂದ ಊಟವನ್ನು ತಯಾರಿಸುತ್ತಾರೆ. ನಿಮಗೆ ತಿಳಿದಿದೆ - ಮಕ್ಕಳೂ ಸಹ ಇಷ್ಟು ಬುದ್ಧಿವಂತರು ಆಗಿ ಬಿಡುತ್ತಾರೆ ಗದ್ದುಗೆಯನ್ನು ಪಡೆಯುತ್ತಾರೆ. ಇಲ್ಲಂತೂ ಮನೆಯನ್ನು ಸಂಭಾಲನೆ ಮಾಡುವ ಮಾತೆಯರಿದ್ದಾರೆ. ಈಗ ಮಾತೆಯರು, ಕುಮಾರಿಯರು ಈ ಸರ್ವೀಸಿನಲ್ಲಿ ಎದ್ದು ನಿಲ್ಲಬೇಕು. ಮಮ್ಮಾರವರಂತೂ ಸರ್ವೀಸ್ ಮಾಡಿ ತೋರಿಸಬೇಕು, ಪ್ರತ್ಯಕ್ಷತೆ ಮಾಡಬೇಕಾಗಿದೆ. ಕೇವಲ ಮಮ್ಮಾ-ಮಮ್ಮಾ ಎಂದು ಹೇಳುವುದರಿಂದೇನು ಲಾಭ! ಅವರಂತೆ ಆಗಿ ತೋರಿಸಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ದೇಹಾಭಿಮಾನದ ಗ್ರಹಚಾರವೇ ಯಜ್ಞದಲ್ಲಿ ವಿಘ್ನ ರೂಪವಾಗುತ್ತದೆ ಆದುದರಿಂದ ಎಷ್ಟು ಸಾಧ್ಯವೋ ದೇಹೀ-ಅಭಿಮಾನಿಗಳಾಗುವ ಪುರುಷಾರ್ಥ ಮಾಡಬೇಕಾಗಿದೆ.
2. ತಮ್ಮ ವಿದ್ಯೆ ಮತ್ತು ಸತ್ಯಯುಗೀ ಪದವಿಯ ಖುಷಿ ಹಾಗೂ ನಶೆಯಲ್ಲಿ ಇರಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ. ಯಾವುದೇ ತಪ್ಪು ಮಾಡಬಾರದು.
ಓಂ ಶಾಂತಿ. ಶಿವತಂದೆಯು ತನ್ನ ಮಕ್ಕಳು ಆತ್ಮಗಳೊಂದಿಗೆ ಮತನಾಡುತ್ತಿದ್ದಾರೆ. ಆತ್ಮವೇ ಕೇಳುತ್ತದೆ- ತಮ್ಮನ್ನು ಆತ್ಮವೆಂದು ನಿಶ್ಚಯ ಮಾಡಬೇಕಾಗಿದೆ. ನಿಶ್ಚಯ ಮಾಡಿಕೊಂಡು ನಂತರ ಬೇಹದ್ದಿನ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗುವುದಕ್ಕಾಗಿ ಬಂದಿದ್ದಾರೆಂದು ತಿಳಿಸಬೇಕಾಗಿದೆ. ದುಃಖದ ಬಂಧನದಿಂದ ಬಿಡಿಸಿ ಸುಖದ ಸಂಬಂಧದಲ್ಲಿ ಕರೆದುಕೊಂಡು ಹೋಗುತ್ತಾರೆ. ಸಂಬಂಧ ಸುಖವೆಂದು, ಬಂಧನವು ದುಃಖವೆಂದು ಹೇಳಲಾಗುತ್ತದೆ. ಈಗ ಇಲ್ಲಿ ಯಾರದೇ ನಾಮ-ರೂಪ ಮುಂತಾದವುದರಲ್ಲಿ ಮನಸ್ಸನ್ನಿಡಬಾರದು. ತಮ್ಮ ಮನೆಗೆ ಹೋಗುವುದಕ್ಕೆ ತಯಾರಿ ಮಾಡಿಕೊಳ್ಳಬೇಕಾಗಿದೆ. ಎಲ್ಲಾ ಆತ್ಮಗಳನ್ನು ಕರೆದುಕೊಂಡು ಹೋಗಲು ಬೇಹದ್ದಿನ ತಂದೆಯು ಬಂದಿದ್ದಾರೆ ಆದ್ದರಿಂದ ಇಲ್ಲಿ ಯಾವುದರೊಂದಿಗೂ ಮನಸ್ಸಿಡಬಾರದು. ಇದೆಲ್ಲವೂ ಕೊಳಕು ಬಂಧನವಾಗಿದೆ. ನೀವು ತಿಳಿದುಕೊಂಡಿದ್ದೀರಿ- ನಾವು ಈಗ ಪವಿತ್ರರಾಗುತ್ತೇವೆ ಆದರೆ ನಮ್ಮ ಶರೀರವನ್ನು ಯಾವುದೇ ಕೊಳಕು ವಿಚಾರಗಳಿಂದ ಮುಟ್ಟಬಾರದು. ಆ ವಿಚಾರಗಳೇ ಹೊರಟುಹೋಗುತ್ತವೆ. ಪವಿತ್ರರಾಗದ ವಿನಃ ಹಿಂತಿರುಗಿ ಮನೆಗೆ ಹೋಗಲು ಸಾಧ್ಯವಿಲ್ಲ ನಂತರ ಒಂದುವೇಳೆ ಸುಧಾರಣೆ ಆಗಲಿಲ್ಲವೆಂದರೆ ಶಿಕ್ಷೆಯನ್ನನುಭವಿಸಬೇಕು. ಈ ಸಮಯದಲ್ಲಿ ಎಲ್ಲಾ ಆತ್ಮಗಳು ಅಸುಧಾರಿತರಾಗಿ. ಶರೀರದ ಜೊತೆ ಕೆಟ್ಟಕಾರ್ಯ ಮಾಡುತ್ತಾರೆ. ಕೊಳಕು ದೇಹಧಾರಿಗಳ ಜೊತೆ ಮನಸ್ಸು ಸಿಲುಕಿಹಾಕಿಕೊಂಡಿದೆ. ಈ ಎಲ್ಲಾ ಕೊಳಕು ವಿಚಾರಗಳನ್ನು ಬಿಟ್ಟುಬಿಡಿ ಎಂದು ತಂದೆಯು ಬಂದು ತಿಳಿಸುತ್ತಿದ್ದಾರೆ. ಆತ್ಮವು ಶರೀರದಿಂದ ಬೇರೆಯಾಗಿ ಮನೆಗೆ ಹೋಗಬೇಕಾಗಿದೆ. ಇದು ಬಹಳ ಕೊಳಕು ಪ್ರಪಂಚವಾಗಿದೆ. ಇದರಲ್ಲಿ ನಾವು ಇರಬಾರದಾಗಿದೆ. ಯಾರನ್ನೂ ನೋಡಲು ಮನಸ್ಸಾಗುವುದಿಲ್ಲ. ಈಗಂತೂ ತಂದೆಯು ಸ್ವರ್ಗದಲ್ಲಿ ಕರೆದುಕೊಂಡು ಹೋಗಲು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಪವಿತ್ರರಾಗಲು ತಂದೆಯನ್ನು ನೆನಪು ಮಾಡಿ. ಯಾವುದೇ ದೇಹಧಾರಿಯ ಜೊತೆ ಮನಸ್ಸನ್ನಿಡಬಾರದು. ಮಮತ್ವವಂತೂ ಸಂಪೂರ್ಣವಾಗಿ ಅಳಿಸಿಹಾಕಬೇಕಾಗಿದೆ. ಸ್ತ್ರೀ-ಪುರುಷರಲ್ಲಿ ಬಹಳ ಪ್ರೀತಿಯಿರುತ್ತದೆ. ಒಬ್ಬರನ್ನು ಬಿಟ್ಟು ಒಬ್ಬರು ಅಗಲುವುದೇ ಇಲ್ಲ. ಈಗ ಇದು ಆತ್ಮ ಸಹೋದರ-ಸಹೋದರ ಎಂದು ತಿಳಿಯಬೇಕು. ಕೊಳಕು ಆಲೋಚನೆಗಳಿರಬಾರದು. ಈಗ ಇದು ವೇಶ್ಯಾಲಯವಾಗಿದೆ. ವಿಕಾರಗಳ ಕಾರಣವೇ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆದಿರಿ. ತಂದೆಯು ಈಗ ತಿರಸ್ಕಾರ ತರಿಸುತ್ತಾರೆ. ಈಗ ನೀವು ಹೋಗುವುದಕ್ಕಾಗಿ ಸ್ಟೀಮರ್ನಲ್ಲಿ ಕುಳಿತುಕೊಂಡಿದ್ದೀರಿ. ಈಗ ನಾವು ತಂದೆಯ ಬಳಿಗೆ ಹೋಗುತ್ತಿದ್ದೇವೆಂದು ಆತ್ಮವೇ ತಿಳಿದಿದೆ. ಈ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ಈ ಛೀ ಛೀ ಪ್ರಪಂಚ, ನರಕ, ವೇಶ್ಯಾಲಯದಲ್ಲಿ ನಾವು ಇರಬಾರದು. ಹೀಗೆ ಯೋಚಿಸಿದ ನಂತರ ಮತ್ತೆ ವಿಕಾರದ ಕೆಟ್ಟಸಂಕಲ್ಪಗಳು ಬರುವುದು ಬಹಳ ಕೆಟ್ಟದ್ದಾಗಿದೆ, ಪದವಿಯೂ ಭ್ರಷ್ಟವಾಗಿಬಿಡುತ್ತದೆ. ತಂದೆಯು ತಿಳಿಸುತ್ತಾರೆ- ನಾನು ನಿಮ್ಮನ್ನು ಸುಂದರ ಪ್ರಪಂಚದಲ್ಲಿ, ಸುಖಧಾಮದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ನಾನು ನಿಮ್ಮನ್ನು ಈ ವೇಶ್ಯಾಲಯದಿಂದ ತೆಗೆದು ಶಿವಾಲಯಕ್ಕೆ ಕರೆದುಕೊಂಡು ಹೋಗುತ್ತೇನೆ ಅಂದಮೇಲೆ ಈಗ ಬುದ್ಧಿಯೋಗವು ಹೊಸಪ್ರಪಂಚದಲ್ಲಿರಬೇಕು. ಎಷ್ಟೊಂದು ಖುಷಿಯಿರಬೇಕು. ಬೇಹದ್ದಿನ ತಂದೆಯು ನಮಗೆ ಓದಿಸುತ್ತಾರೆ, ಈ ಬೇಹದ್ದಿನ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದಂತೂ ಬುದ್ಧಿಯಲ್ಲಿದೆ. ಸೃಷ್ಟಿಚಕ್ರವು ಅರಿತುಕೊಳ್ಳುವುದರಿಂದ ಅರ್ಥಾತ್ ಸ್ವದರ್ಶನ ಚಕ್ರಧಾರಿಗಳಾಗುವುದರಿಂದ ನೀವು ಚಕ್ರವರ್ತಿ ರಾಜರಾಗುತ್ತೀರಿ. ಒಂದುವೇಳೆ ದೇಹಧಾರಿಗಳೊಂದಿಗೆ ಬುದ್ಧಿಯೋಗವನ್ನಿಟ್ಟರೆ ಪದವಿಯು ಭ್ರಷ್ಟವಾಗಿಬಿಡುವುದು. ಯಾವುದೇ ದೇಹದ ಸಂಬಂಧವು ನೆನಪಿಗೆ ಬರಬಾರದು. ಇದಂತೂ ದುಃಖದ ಪ್ರಪಂಚವಾಗಿದೆ. ಇದರಲ್ಲಿ ಎಲ್ಲರೂ ದುಃಖ ಕೊಡುವವರೇ ಇದ್ದಾರೆ.
ತಂದೆಯು ಈ ಕೊಳಕು ಪ್ರಪಂಚದಿಂದ ಎಲ್ಲರನ್ನೂ ಕರೆದುಕೊಂಡು ಹೋಗುತ್ತಾರೆ ಆದ್ದರಿಂದ ಈಗ ಬುದ್ಧಿಯೋಗವನ್ನು ತಮ್ಮ ಮನೆಯೊಂದಿಗೆ ಜೋಡಿಸಬೆಕು. ಮನುಷ್ಯರು ಮುಕ್ತಿಯಲ್ಲಿ ಹೋಗುವುದಕ್ಕಾಗಿ ಭಕ್ತಿ ಮಾಡುತ್ತಾರೆ. ನೀವೂ ಸಹ ಹೇಳುತ್ತೀರಿ- ನಾವಾತ್ಮಗಳು ಇಲ್ಲಿರಬಾರದು. ನಾವು ಈ ಛೀ ಛೀ ಶರೀರವನ್ನು ಬಿಟ್ಟು ನಮ್ಮ ಮನೆಗೆ ಹೋಗುತ್ತೇವೆ. ಇದಂತೂ (ಶರೀರ) ಹಳೆಯ ಪಾದರಕ್ಷೆಯಾಗಿದೆ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಈ ಶರೀರವೂ ಸಹ ಬಿಟ್ಟುಹೋಗುವುದು. ಅಂತ್ಯಕಾಲದಲ್ಲಿ ತಂದೆಯ ವಿನಃ ಮತ್ತ್ಯಾವುದೇ ವಸ್ತು ನೆನಪಿರಬಾರದು. ಈ ಶರೀರವನ್ನೂ ಸಹ ಇಲ್ಲಿಯೇ ಬಿಡಬೇಕಾಗಿದೆ. ಶರೀರ ಹೋಯಿತೆಂದರೆ ಎಲ್ಲವೂ ಹೋಯಿತು. ದೇಹ ಸಹಿತ ಏನೆಲ್ಲವೂ ಇದೆಯೋ ಯಾವುದನ್ನು ನೀವು ನನ್ನದು-ನನ್ನದು ಎಂದು ಹೇಳುತ್ತೀರೋ ಇದೆಲ್ಲವನ್ನೂ ಮರೆಯಬೇಕಾಗಿದೆ. ಈ ಛೀ ಛೀ ಪ್ರಪಂಚಕ್ಕೆ ಬೆಂಕಿ ಬೀಳುವುದಿದೆ ಆದ್ದರಿಂದ ಈಗ ಇದರೊಂದಿಗೆ ಮನಸ್ಸನ್ನಿಡಬಾರದು ಆದ್ದರಿಂದಲೇ ತಂದೆಯು ತಿಳಿಸಿಕೊಡುತ್ತಾರೆ- ಮಧುರಾತಿ ಮಧುರ ಮಕ್ಕಳೇ, ನಾನು ನಿಮಗಾಗಿ ಸ್ವರ್ಗಸ್ಥಾಪನೆ ಮಾಡುತ್ತಿದ್ದೇನೆ. ಅಲ್ಲಿ ನೀವೇ ಹೋಗಿ ಇರುತ್ತೀರಿ. ಈಗ ನಿಮ್ಮ ಮುಖದ ಅದರಕಡೆ ಇದೆ. ತಂದೆಯನ್ನೂ, ಮನೆಯನ್ನೂ, ಸ್ವರ್ಗವನ್ನೂ ನೆನಪು ಮಾಡಬೇಕು. ದುಃಖಧಾಮದಿಂದ ತಿರಸ್ಕಾರವು ಬರುತ್ತದೆ. ಈ ಶರೀರಗಳಿಂದಲೂ ತಿರಸ್ಕಾರ ಬರುತ್ತದೆ ಅಂದಮೇಲೆ ವಿವಾಹ ಮಾಡಿಕೊಳ್ಳುವ ಅವಶ್ಯಕತೆಯಾದರೂ ಏನಿದೆ! ವಿವಾಹ ಮಾಡಿಕೊಳ್ಳುವುದರಿಂದ ಶರೀರದೊಂದಿಗೆ ಮನಸ್ಸು ತೊಡಗಿಬಿಡುತ್ತದೆ. ತಂದೆಯು ಹೇಳುತ್ತಾರೆ- ಈ ಹಳೆಯ ಪಾದರಕ್ಷೆಗಳೊಂದಿಗೆ ಸ್ನೇಹವನ್ನಿಡಬೇಡಿ. ಇದಂತೂ ವೇಶ್ಯಾಲಯವಾಗಿದೆ, ಎಲ್ಲರೂ ಪತಿತರೇ-ಪತಿತರಾಗಿದ್ದಾರೆ, ರಾವಣರಾಜ್ಯವಾಗಿದೆ. ಇಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರ ಜೊತೆಯೂ ಮನಸ್ಸನ್ನಿಡಬಾರದು. ತಂದೆಯನ್ನು ನೆನಪು ಮಾಡದಿದ್ದರೆ ಜನ್ಮ-ಜನ್ಮಾಂತರದ ಪಾಪಗಳು ಪರಿಹಾರವಾಗುವುದಿಲ್ಲ ಮತ್ತು ಶಿಕ್ಷೆಯೂ ಬಹಳ ಕಠಿಣವಾಗಿರುತ್ತದೆ ಮತ್ತು ಪದವಿಯೂ ಭ್ರಷ್ಟವಾಗಿಬಿಡುತ್ತದೆ ಅಂದಮೇಲೆ ಈ ಕಲಿಯುಗೀ ಬಂಧನವನ್ನು ಏಕೆ ಬಿಡಬಾರದು! ತಂದೆಯು ಎಲ್ಲರಿಗಾಗಿ ಈ ಬೇಹದ್ದಿನ ಮಾತನ್ನು ತಿಳಿಸುತ್ತಾರೆ. ಯಾವಾಗ ರಜೋಪ್ರಧಾನ ಸನ್ಯಾಸಿಗಳಿದ್ದರೋ ಆಗ ಪ್ರಪಂಚವು ಇಷ್ಟು ಕೊಳಕಾಗಿರಲಿಲ್ಲ. ಸನ್ಯಾಸಿಗಳು ಅರಣ್ಯದಲ್ಲಿ ಇರುತ್ತಿದ್ದರು, ಎಲ್ಲರಿಗೂ ಆಕರ್ಷಣೆಯಾಗುತ್ತಿತ್ತು. ಮನುಷ್ಯರು ಆಹಾರ ಮೊದಲಾದವುಗಳನ್ನು ಅಲ್ಲಿಗೇ ಹೋಗಿ ಕೊಟ್ಟು ಬರುತ್ತಿದ್ದರು. ಸನ್ಯಾಸಿಗಳು ನಿರ್ಭಯರಾಗಿರುತ್ತಿದ್ದರು, ನೀವೂ ಸಹ ನಿರ್ಭಯರಾಗಬೇಕು. ಇದರಲ್ಲಿ ಬಹಳ ವಿಶಾಲಬುದ್ಧಿಯಿರಬೇಕು. ತಂದೆಯ ಬಳಿ ಬರುತ್ತಾರೆಂದರೆ ಮಕ್ಕಳಿಗೆ ಖುಷಿಯಿರುತ್ತದೆ- ನಾವು ಬೇಹದ್ದಿನ ತಂದೆಯಿಂದ ಸುಖಧಾಮದ ಆಸ್ತಿಯನ್ನು ಪಡೆಯುತ್ತೇವೆ. ಇಲ್ಲಂತೂ ಎಷ್ಟೊಂದು ದುಃಖವಿದೆ, ಕೆಲವು ಬಹಳ ಕೊಳಕಾದ ರೋಗಗಳು ಬರುತ್ತವೆ. ತಂದೆಯಂತೂ ಗ್ಯಾರಂಟಿ ಕೊಡುತ್ತಾರೆ- ಮಕ್ಕಳೇ, ಎಲ್ಲಿ ದುಃಖ-ಅಶಾಂತಿ, ರೋಗದ ಹೆಸರೇ ಇರುವುದಿಲ್ಲವೋ ಅಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ. ಅರ್ಧಕಲ್ಪಕ್ಕೆ ನಿಮ್ಮನ್ನು ಆರೋಗ್ಯವಂತರನ್ನಾಗಿ ತಂದೆಯು ಮಾಡುತ್ತಾರೆ ಅಂದಾಗ ಇಲ್ಲಿ ಯಾರಲ್ಲಾದರೂ ಪ್ರೀತಿಯನ್ನಿಟ್ಟರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು.
ನೀವು ಇದನ್ನು ತಿಳಿಸಬಹುದು- ಅವರು ಮೂರು ನಿಮಿಷ ಸೈಲೆನ್ಸ್ ಎಂದು ಹೇಳುತ್ತಾರೆ ಅದಕ್ಕೆ ನೀವು ತಿಳಿಸಿ, ಕೇವಲ ಸೈಲೆನ್ಸ್ ನಿಂದ (ಮೌನ) ಏನಾಗುತ್ತದೆ? ಇಲ್ಲಂತೂ ತಂದೆಯನ್ನು ನೆನಪು ಮಾಡಬೇಕು ಇದರಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಶಾಂತಿಯ ವರದಾನವನ್ನು ಕೊಡುವವರು ತಂದೆಯಾಗಿದ್ದಾರೆ. ಅವರನ್ನು ನೆನಪು ಮಾಡದಿದ್ದರೆ ಶಾಂತಿ ಹೇಗೆ ಸಿಗುವುದು? ಅವರನ್ನು ನೆನಪು ಮಾಡಿದಾಗಲೇ ಆಸ್ತಿಯು ಸಿಗುವುದು. ಶಿಕ್ಷಕರಿಗೂ ಸಹ ಬಹಳ ಪಾಠವನ್ನು ಓದಿಸಬೇಕು. ಎಲ್ಲರೂ ಎದ್ದು ನಿಲ್ಲಬೇಕು ಆಗ ಯಾರೂ ಏನೂ ಹೇಳುವುದಿಲ್ಲ. ತಂದೆಗೆ ಅರ್ಪಣೆಯಾಗಿದ್ದೀರೆಂದರೆ ಹೊಟ್ಟೆಗಂತೂ ಖಂಡಿತ ಸಿಗುತ್ತದೆ ಶರೀರ ನಿರ್ವಹಣೆಗಂತೂ ಬಹಳ ಸಿಗುತ್ತದೆ. ಹೇಗೆ ವೇದಾಂತಿ ಮಗು (ವೇದಾಂತಿ ಬೆಹೆನ್) ಪರೀಕ್ಷೆಯನ್ನು ಬರೆಯಬೇಕಾದರೆ ಆ ಪ್ರಶ್ನೆ ಪತ್ರಿಕೆಯಲ್ಲಿ ಗೀತೆಯ ಭಗವಂತ ಯಾರು? ಎಂಬ ಪ್ರಶ್ನೆಯಿತ್ತು. ಅದಕ್ಕೆ ಅವರು ಪರಮಪಿತ ಪರಮಾತ್ಮ ಶಿವ ಎಂದು ಬರೆದುಬಿಟ್ಟರು ಆದ್ದರಿಂದ ಅವರನ್ನು ಅನುತ್ತೀರ್ಣ ಮಾಡಿಬಿಟ್ಟರು ಮತ್ತು ಯಾರು ಗೀತೆಯ ಭಗವಂತ ಕೃಷ್ಣನೆಂದು ಬರೆದಿದ್ದರು ಅವರನ್ನು ತೇರ್ಗಡೆ ಮಾಡಿದರು. ಈ ಮಗುವು ಸತ್ಯವನ್ನು ತಿಳಿಸಿದ್ದರಿಂದ ಅವರಿಗೆ ಅದರು ತಿಳಿಯದ ಕಾರಣ ಅನುತ್ತೀರ್ಣ ಮಾಡಿದರು. ಈ ಮಗುವು ಸತ್ಯ-ಸತ್ಯವಾಗಿ ಬರೆದೆನೆಂದು ಅವರನ್ನು ಕೇಳಬೇಕಿತ್ತು ಏಕೆಂದರೆ ಗೀತೆಯ ಭಗವಂತ ನಿರಾಕಾರ ಪರಮಪಿತ ಪರಮಾತ್ಮನೇ ಆಗಿದ್ದಾರೆಯೇ ಹೊರತು ದೇಹಧಾರಿ ಕೃಷ್ಣನಾಗಿರಲು ಸಾಧ್ಯವಿಲ್ಲ ಆದರೆ ಮಗುವಿಗೆ ಮುಂದೆ ಓದಲು ಇಷ್ಟವಿಲ್ಲದಿದ್ದ ಕಾರಣ ಈ ಆತ್ಮಿಕ ಸೇವೆ ಮಾಡುವ ಮನಸ್ಸಿದ್ದ ಕಾರಣ ಆ ವಿದ್ಯೆಯನ್ನೇ ಬಿಟ್ಟರು.
ನಿಮಗೆ ತಿಳಿದಿದೆ- ಈಗ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ನಮ್ಮ ಈ ಶರೀರವನ್ನೂ ಬಿಟ್ಟು ಶಾಂತಿಧಾಮಕ್ಕೆ ಹೋಗಬೇಕಾಗಿದೆ. ನೆನಪು ಮಾಡುವುದರಿಂದ ಆರೋಗ್ಯ-ಐಶ್ವರ್ಯ ಎರಡೂ ಸಿಗುತ್ತದೆ. ಭಾರತದಲ್ಲಿ ಸುಖ-ಶಾಂತಿಯಿತ್ತಲ್ಲವೆ! ಇಂತಿಂತಹ ಮಾತುಗಳು ನೀವು ಕುಮಾರಿಯರು ಕುಳಿತು ತಿಳಿಸುತ್ತೀರೆಂದರೆ ಯಾರೂ ಮಾತನಾಡುವುದಿಲ್ಲ. ಒಂದುವೇಳೆ ಯಾರೇ ಹೆದರಿಸಿದರೆ ಖಾಯಿದೆಯನುಸಾರ ನೀವೂ ಸಹ ಮಾತನಾಡಿ, ದೊಡ್ಡ-ದೊಡ್ಡ ಅಧಿಕಾರಿಗಳ ಬಳಿ ಹೋಗಿ ಏನು ಮಾಡುತ್ತಾರೆ? ನೀವು ಹಸಿವಿನಿಂದ ಸಾಯಬೇಕೆಂದಲ್ಲ. ಬಾಳೆಹಣ್ಣು ಅಥವಾ ಮೊಸರಿನೊಂದಿಗಾದರೂ ರೊಟ್ಟಿಯನ್ನು ತಿನ್ನಬಹುದು. ಮನುಷ್ಯರು ಹೊಟ್ಟೆಗಾಗಿ ಎಷ್ಟೊಂದು ಪಾಪ ಮಾಡುತ್ತಾರೆ! ತಂದೆಯು ಬಂದು ಎಲ್ಲರನ್ನೂ ಪಾಪಾತ್ಮರಿಂದ ಪುಣ್ಯಾತ್ಮರನ್ನಾಗಿ ಮಾಡುತ್ತಾರೆ. ಇದರಲ್ಲಿ ಪಾಪ ಮಾಡುವ, ಸುಳ್ಳು ಹೇಳುವ ಅವಶ್ಯಕತೆಯೇನಿಲ್ಲ. ನಿಮಗಂತೂ 3/4 ಭಾಗ ಸುಖ ಸಿಗುತ್ತದೆ. ಉಳಿದಂತೆ 1/4 ಭಾಗ ದುಃಖವನ್ನು ಭೋಗಿಸುತ್ತೀರಿ. ಈಗ ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಿಮ್ಮ ಜನ್ಮ-ಜನ್ಮಾಂತರದ ಪಾಪಗಳು ಭಸ್ಮವಾಗುತ್ತವೆ ಮತ್ತ್ಯಾವುದೇ ಉಪಾಯವಿಲ್ಲ. ಭಕ್ತಿಮಾರ್ಗದಲ್ಲಂತೂ ಬಹಳ ಪೆಟ್ಟನ್ನು ತಿನ್ನುತ್ತೀರಿ. ಶಿವನ ಪೂಜೆಯಂತೂ ಮನೆಯಲ್ಲಿಯೂ ಮಾಡಬಹುದು ಆದರೆ ಹೊರಗಡೆ ಮಂದಿರಕ್ಕೆ ಅವಶ್ಯವಾಗಿ ಹೋಗುತ್ತಾರೆ. ಇಲ್ಲಂತೂ ನಿಮಗೆ ತಂದೆಯು ಸಿಕ್ಕಿದ್ದಾರೆ. ನಿಮಗೆ ಚಿತ್ರವನ್ನಿಟ್ಟುಕೊಳ್ಳುವ ಅವಶ್ಯಕತೆಇಲ್ಲ, ನೀವು ತಂದೆಯನ್ನು ತಿಳಿದುಕೊಂಡಿದ್ದೀರಿ ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ಮಕ್ಕಳಿಗೆ ಸ್ವರ್ಗದ ರಾಜ್ಯಭಾಗ್ಯದ ಆಸ್ತಿಯನ್ನು ಕೊಡುತ್ತಿದ್ದಾರೆ. ನೀವು ತಂದೆಯಿಂದ ಆಸ್ತಿಯನ್ನು ಪಡೆಯಲು ಬರುತ್ತೀರಿ ಅಂದಮೇಲೆ ಇಲ್ಲಿ ಯಾವುದೇ ಶಾಸ್ತ್ರಗಳನ್ನು ಓದುವ ಮಾತಿಲ್ಲ. ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ - ಬಾಬಾ, ನಾವು ಈಗ ಬಂದೆವೆಂದರೆ ಬಂದೆವು ನೀವು ಮನೆಯನ್ನು ಬಿಟ್ಟು ಎಷ್ಟು ಸಮಯವಾಯಿತು? ಸುಖಧಾಮವನ್ನು ಬಿಟ್ಟು 63 ಜನ್ಮಗಳಾಯಿತು, ಈಗ ತಂದೆ ಹೇಳುತ್ತಾರೆ ಈಗ ಶಾಂತಿಧಾಮ, ಸುಖಧಾಮಕ್ಕೆ ನಡೆಯಿರಿ. ಈ ದುಃಖಧಾಮವನ್ನು ಮರೆತುಹೋಗಿ. ಶಾಂತಿಧಾಮ-ಸುಖಧಾಮವನ್ನು ನೆನಪು ಮಾಡಿ ಮತ್ತ್ಯಾವುದೇ ಕಷ್ಟದ ಮಾತಿಲ್ಲಶಿವಬಾಬಾನಿಗೆ ಯಾವುದೇ ಶಾಸ್ತ್ರಮೊದಲಾದುವುಗಳನ್ನು ಓದುವ ಅವಶ್ಯಕತೆ ಇಲ್ಲ. ಈ ಬ್ರಹ್ಮಾ ಓದಿದ್ದಾರೆ ನಿಮಗಂತೂ ಈ ಶಿವಬಾಬಾ ಓದಿಸುತ್ತಾರೆ. ಈ ಬ್ರಹ್ಮಾರವರೂ ಸಹ ಓದಿಸಬಹುದು ಆದರೆ ನೀವು ಸದಾ ಶಿವತಂದೆಯೇ ಓದಿಸುತ್ತಾರೆಂದು ತಿಳಿಯಿರಿ. ಅವರನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ. ಮಧ್ಯದಲ್ಲಿ ಇವರೂ ಇದ್ದಾರೆ.
ಈಗ ತಂದೆಯು ತಿಳಿಸುತ್ತಾರೆ- ಮಕ್ಕಳೇ, ಸಮಯ ಕಡಿಮೆಯಿದೆ ಹೆಚ್ಚು ಇಲ್ಲ. ಅದೃಷ್ಟದಲ್ಲಿ ಏನಿದ್ದರೆ ಅದು ಸಿಗುತ್ತದೆಯೆಂಬ ವಿಚಾರ ಮಾಡಬೇಡಿ. ಶಾಲೆಯಲ್ಲಿ ವಿದ್ಯಾಭ್ಯಾಸದ ಪುರುಷಾರ್ಥ ಮಾಡುತ್ತಾರಲ್ಲವೆ. ಅವರು ಅದೃಷ್ಠದಲ್ಲಿದ್ದಂತೆ ಆಗುತ್ತದೆಯೆಂದು ತಿಳಿದು ಕುಳಿತುಬಿಡುವುದಲ್ಲ. ಹಾಗೆಯೇ ಇಲ್ಲಿ ಒಂದುವೇಳೆ ಓದದಿದ್ದರೆ ಅಲ್ಲಿ ಜನ್ಮ-ಜನ್ಮಾಂತರ ನೌಕರಿ-ಚಾಕರಿ ಮಾಡುತ್ತಿರುತ್ತೀರಿ, ರಾಜ್ಯವು ಸಿಗುವುದಿಲ್ಲ. ಎಲ್ಲಾ ಮುಗಿದನಂತರ ಕೊನೆಯಲ್ಲಿ ಒಮ್ಮೆ ರಾಜನಿಗೆ ಕಿರೀಟವನ್ನಿಟ್ಟುಕೊಳ್ಳಬಹುದು ಅದೂ ತ್ರೇತಾದಲ್ಲಿ, ಮೂಲಮಾತು ಪವಿತ್ರರನ್ನಾಗಿ ಅನ್ಯರನ್ನೂ ಮಾಡುವುದಾಗಿದೆ. ಸತ್ಯನಾರಾಯಣನ ಸತ್ಯವಾದ ಕಥೆಯನ್ನು ತಿಳಿಸುವುದು ಸಹಜವಾಗಿದೆ. ಮೊಟ್ಟಮೊದಲು ಎಲ್ಲರಿಗೂ ತಿಳಿಸಿ ನಿಮಗೆ ಇಬ್ಬರು ತಂದೆಯರಿದ್ದಾರೆ- ಲೌಕಿಕ ತಂದೆಯಿಂದ ಕ್ಷಣಿಕ ಆಸ್ತಿಯು ಸಿಗುತ್ತದೆ, ಪಾರಲೌಕಿಕ ತಂದೆಯಿಂದ ಅಪರಿಮಿತವಾದ ಆಸ್ತಿಯು ಸಿಗುವುದು. ಬೇಹದ್ದಿನ ತಂದೆಯನ್ನು ನೆನಪು ಮಾಡುವುದರಿಂದ ದೇವತೆಗಳಾಗುತ್ತೀರಿ ಆದರೆ ಅದರಲ್ಲಿಯೂ ಶ್ರೇಷ್ಠಪದವಿಯನ್ನೇ ಪಡೆಯಬೇಕು. ಪದವಿಯನ್ನು ಪಡೆಯುವುದಕ್ಕಾಗಿಯೇ ಎಷ್ಟೊಂದು ಹೊಡೆದಾಟ ಮಾಡುತ್ತಾರೆ. ಅಂತಿಮದಲ್ಲಿ ಪರಸ್ಪರ ಬಾಂಬುಗಳ ಸಹಯೋಗ ನೀಡುತ್ತಾರೆ. ಇಷ್ಟೊಂದು ಧರ್ಮಗಳು ಮೊದಲೂ ಇರಲಿಲ್ಲ, ಕೊನೆಯಲ್ಲಿಯೂ ಇರುವುದಿಲ್ಲ. ನೀವು ರಾಜ್ಯ ಮಾಡುವವರಾಗಿದ್ದೀರಿ ಅಂದಮೇಲೆ ತಮ್ಮಮೇಲೆ ದಯೆ ತೋರಿಸಿಕೊಳ್ಳಿ- ಕೊನೆಪಕ್ಷ ಶ್ರೇಷ್ಠಪದವಿಯನ್ನಾದರೂ ಪಡೆಯಿರಿ. ಮಕ್ಕಳು ನಮ್ಮ ಒಂದು ಇಟ್ಟಿಗೆಯನ್ನಾದರೂ ಹಾಕಿ ಎಂದು ಎಂಟಾಣೆಯನ್ನು ಕೊಡುತ್ತಾರೆ. ಸುಧಾಮನ ಉದಾಹರಣೆಕೇಲಿದ್ದೀರಲ್ಲವೆ, ಹಿಡಿ ಅವಲಕ್ಕಿಗೆ ಬದಲಾಗಿ ಮಹಲು ಸಿಕ್ಕಿಬಿಟ್ಟಿತು, ಬಡವರ ಬಳಿ ಇರುವುದೇ ಎಂಟಾಣೆ ಅಂದಮೇಲೆ ಅದನ್ನೇ ಕೊಡುವರಲ್ಲವೆ. ಬಾಬಾ ನಾವು ಬಡವರು ಎಂದು ಹೇಳುತ್ತಾರೆ. ಈಗ ನೀವು ಮಕ್ಕಳು ಸತ್ಯಸಂಪಾದನೆ ಮಾಡಿಕೊಳ್ಳುತ್ತೀರಿ. ಇಲ್ಲಿ ಎಲ್ಲರದೂ ಅಸತ್ಯ ಸಂಪಾದನೆಯಾಗಿದೆ. ದಾನ-ಪುಣ್ಯ ಇತ್ಯಾದಿ ಏನೆಲ್ಲಾ ಮಾಡುತ್ತಾರೆಈ ಪಾಪಾತ್ಮರಿಗೇ ಮಾಡುತ್ತಾರೆ ಆದ್ದರಿಂದ ಪುಣ್ಯದ ಬದಲು ಪಾಪವಾಗಿಬಿಡುತ್ತದೆ. ಹಣ ಕೊಡುವವರ ಮೇಲೂ ಪಾಪವಾಗಿಬಿಡುತ್ತದೆ. ಹೀಗೆ ಮಾಡುತ್ತಾ-ಮಾಡುತ್ತಾ ಎಲ್ಲರೂ ಪಾಪಾತ್ಮರಾಗಿಬಿಡುತ್ತಾರೆ. ಸತ್ಯಯುಗದಲ್ಲೇ ಪುಣ್ಯಾತ್ಮರಿರುತ್ತಾರೆ. ಅದು ಪುಣ್ಯಾತ್ಮರ ಪ್ರಪಂಚವಾಗಿದೆ, ಅದನ್ನಂತೂ ತಂದೆಯೇ ಮಾಡುತ್ತಾರೆ. ಪಾಪಾತ್ಮರನ್ನಾಗಿ ರಾವಣ ಮಾಡುತ್ತಾನೆ, ಅದರಿಂದ ಕೊಳಕಾಗಿಬಿಡುತ್ತಾರೆ ಈಗ ತಂದೆ ಹೇಳುತ್ತಾರೆ- ಮಕ್ಕಳೇ, ಕೊಳಕು ಕರ್ಮವನ್ನು ಮಾಡಬೇಡಿ. ಹೊಸ ಪ್ರಪಂಚದಲ್ಲಿ ಈ ಕೊಳಕಿರುವುದಿಲ್ಲ. ಹೆಸರೇ ಆಗಿದೆ ಸ್ವರ್ಗ ಅಂದಮೇಲೆ ಮತ್ತೇನು! ಸ್ವರ್ಗವೆಂದು ಹೇಳುವುದರಿಂದಲೇ ಬಾಯಲ್ಲಿ ನೀರು ಬರುತ್ತದೆ. ದೇವತೆಗಳು ಇದ್ದು ಹೋಗಿದ್ದಾರೆ ಆದ್ದರಿಂದಲೇ ನೆನಪಾರ್ಥವಿದೆ. ಆತ್ಮವು ಅವಿನಾಶಿಯಾಗಿದೆ. ಎಷ್ಟೊಂದು ಪಾತ್ರಧಾರಿಗಳಿದ್ದಾರೆ, ಎಲ್ಲಿಯೋ ಕುಳಿತಿರಬೇಕು, ಅಲ್ಲಿಂದ ಪಾತ್ರವನ್ನಭಿನಯಿಸಲು ಬರುತ್ತಾರೆ. ಈಗ ಕಲಿಯುಗದಲ್ಲಿ ಎಷ್ಟೋಂದು ಮನುಷ್ಯರಿದ್ದಾರೆ. ದೇವಿ-ದೇವತೆಗಳ ರಾಜ್ಯವು ಇಲ್ಲವೇ ಇಲ್ಲ. ಯಾರಿಗಾದರೂ ತಿಳಿಸುವುದು ಬಹಳ ಸಹಜವಾಗಿದೆ. ಈಗ ಪುನಃ ಒಂದು ಧರ್ಮದ ಸ್ಥಾಪನೆಯಾಗುತ್ತಿದೆ, ಉಳಿದೆಲ್ಲಾ ಧರ್ಮಗಳು ಸಮಾಪ್ತಿಯಾಗುತ್ತವೆ. ನೀವು ಸ್ವರ್ಗದಲ್ಲಿದ್ದಾಗ ಮತ್ತ್ಯಾವುದೆ ಧರ್ಮವಿರಲಿಲ್ಲ. ಚಿತ್ರದಲ್ಲಿ ರಾಮನಿಗೆ ಬಾಣವನ್ನು ತೋರಿಸಿದ್ದಾರೆ ಆದರೆ ಅಲ್ಲಿ ಬಾಣಗಳ ಮಾತೇ ಇಲ್ಲ. ಇದೂ ಸಹ ನಿಮಗೆ ತಿಳಿದಿದೆ- ಕಲ್ಪದ ಹಿಂದೆ ಯಾರೆಷ್ಟು ಸರ್ವೀಸ್ ಮಾಡಿದ್ದಾರೆಯೋ ಅವರೇ ಈಗ ಮಾಡುತ್ತಾರೆ. ಯಾರು ಬಹಳ ಸರ್ವೀಸ್ ಮಾಡುವರೋ ಅವರು ತಂದೆಗೂ ಬಹಳ ಪ್ರಿಯರಾಗುತ್ತಾರೆ, ಲೌಕಿಕ ತಂದೆಗೂ ಸಹ ಯಾವ ಮಕ್ಕಳು ಚೆನ್ನಾಗಿ ಓದುತ್ತಾರೆ ಅವರಪ್ರತಿ ತಂದೆಗೆ ಬಹಳ ಪ್ರೀತಿಯಿರುತ್ತದೆ. ಯಾರು ಹೊಡೆದಾಡುತ್ತಾ-ಜಗಳವಾಡುತ್ತಾ, ತಿನ್ನುತ್ತಾ ಓಡಾಡಿದರೆ ಅವರನ್ನು ಪ್ರೀತಿ ಮಾಡುತ್ತಾರೆಯೇ! ಸರ್ವೀಸ್ ಮಾಡುವವರು ಬಹಳ ಪ್ರಿಯರಾಗುತ್ತಾರೆ.
ಒಂದು ಕಥೆಯಿದೆ- ಎರಡು ಬೆಕ್ಕುಗಳು ಕಚ್ಚಾಡಿದವು, ಬೆಣ್ಣೆಯನ್ನು ಕೃಷ್ಣನು ತಿಂದುಬಿಟ್ಟನು. ಇಡೀ ವಿಶ್ವರಾಜ್ಯರೂಪಿ ಬೆಣ್ಣೆಯು ನಿಮಗೆ ಸಿಗುತ್ತದೆ ಅಂದಾಗ ಈಗ ತಪ್ಪು ಮಾಡಬಾರದು, ಪತಿತರಾಗಬಾರದು. ಇದರಹಿಂದೆ ರಾಜ್ಯಭಾಗ್ಯವನ್ನು ಕಳೆದುಕೊಳ್ಳಬೇಡಿ. ತಂದೆಯ ಆದೇಶ ಸಿಗುತ್ತದೆ, ನೆನಪು ಮಾಡದಿದ್ದರೆ ಪಾಪದ ಹೊರೆಯು ಏರುತ್ತಾಹೋಗುವುದು ಮತ್ತೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು. ತುಂಬಾ-ತುಂಬಾ ಅಳುತ್ತೀರಿ. 21 ಜನ್ಮಗಳ ರಾಜ್ಯಭಾಗ್ಯವು ಸಿಗುತ್ತದೆ. ಒಂದುವೇಳೆ ಇದರಲ್ಲಿ ಅನುತ್ತೀರ್ಣರಾದರೆ ಬಹಳ ಅಳುತ್ತೀರಿ. ತಂದೆಯು ತಿಳಿಸುತ್ತಾರೆ- ಅತ್ತೆಯ ಮನೆಯನ್ನಾಗಲಿ, ತಂದೆಯ ಮನೆಯನ್ನಾಗಲಿ ನೆನಪು ಮಾಡಬಾರದು ಭವಿಷ್ಯ ಹೊಸ ಮನೆಯನ್ನೇ ನೆನಪು ಮಾಡಬೇಕು.
ತಂದೆಯು ತಿಳಿಸುತ್ತಾರೆ- ಯಾರನ್ನಾದರೂ ನೋಡಿ ಅವರ ಹಿಂದೆ ಸಿಕ್ಕಿಕೊಳ್ಳಬಾರದು, ಹೂವುಗಳಾಗಬೇಕು. ದೇವತೆಗಳು ಹೂವಾಗಿದ್ದರು, ಕಲಿಯುಗದಲ್ಲಿ ಮುಳ್ಳಾಗಿದ್ದರು. ಈಗ ನೀವು ಸಂಗಮದಲ್ಲಿ ಹೂಗಳಾಗುತ್ತಿದ್ದೀರಿ ಅಂದ ಮೇಲೆ ಯಾರಿಗೂ ದುಃಖವನ್ನು ಕೊಡಬಾರದು. ಇಲ್ಲಿ ಈ ರೀತಿಯಾದಾಗ ಸತ್ಯಯುಗದಲ್ಲಿ ಹೋಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಅಂತ್ಯ ಕಾಲದಲ್ಲಿ ಒಬ್ಬ ತಂದೆಯ ವಿನಃ ಮತ್ತ್ಯಾರೂ ನೆನಪಿಗೆ ಬರಬಾರದು ಅದಕ್ಕಾಗಿ ಈ ಪ್ರಪಂಚದಲ್ಲಿ ಯಾರೊಂದಿಗೂ ಮನಸ್ಸನ್ನು ಇಡಬಾರದು. ಪತಿತ ಶರೀರಗಳೊಂದಿಗೆ ಪ್ರೀತಿ ಮಾಡಬಾರದು. ಕಲಿಯುಗೀ ಬಂಧನವನ್ನು ಕತ್ತರಿಸಬೇಕು.
2. ವಿಶಾಲಬುದ್ಧಿಯವರಾಗಿ ನಿರ್ಭಯರಾಗಬೇಕು. ಪುಣ್ಯಾತ್ಮರಾಗುವುದಕ್ಕಾಗಿ ಈಗ ಯಾವುದೇ ಪಾಪವನ್ನು ಮಾಡಬಾರದು. ಹೊಟ್ಟೆಗಾಗಿ ಸುಳ್ಳು ಹೇಳಬಾರದು. ಹಿಡಿ ಅವಲಕ್ಕಿಯನ್ನು ಸಫಲ ಮಾಡಿ ಸತ್ಯ-ಸತ್ಯ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ, ತಮ್ಮ ಮೇಲೆ ದಯೆತೋರಿಸಿಕೊಳ್ಳಬೇಕಾಗಿದೆ.
ದಿವ್ಯತೆಯು ಸಂಗಮಯುಗೀ ಬ್ರಾಹ್ಮಣರ ಶೃಂಗಾರವಾಗಿದೆ
ಇಂದು ದಿವ್ಯ ಬುದ್ಧಿ ವಿದಾತ, ದಿವ್ಯ ದೃಷ್ಠಿದಾತ, ತನ್ನ ದಿವ್ಯ ಜನ್ಮಧಾರಿ ದಿವ್ಯ ಆತ್ಮಗಳನ್ನು ನೋಡುತ್ತಿದ್ದಾರೆ. ಬಾಪ್ದಾದಾ ಪ್ರತಿಯೊಬ್ಬ ಮಗುವನ್ನೂ ದಿವ್ಯ ಜೀವನ ಅರ್ಥಾತ್ ದಿವ್ಯ ಸಂಕಲ್ಪ, ದಿವ್ಯ ಮಾತು, ದಿವ್ಯ ಕರ್ಮ ಮಾಡುವಂತಹ ದಿವ್ಯ ಮೂರ್ತಿಗಳನ್ನಾಗಿ ಮಾಡಿದ್ದಾರೆ. ದಿವ್ಯತೆಯು ತಾವು ಸಂಗಮಯುಗೀ ಮಕ್ಕಳ ಶ್ರೇಷ್ಠ ಶೃಂಗಾರವಾಗಿದೆ. ಒಂದು ಸಾಧಾರಣತೆ, ಇನ್ನೊಂದು ದಿವ್ಯತೆಯಾಗಿದೆ. ದಿವ್ಯತೆಯ ಲಕ್ಷಣಗಳನ್ನು ತಾವೆಲ್ಲರೂ ತಿಳಿದುಕೊಂಡಿದ್ದೀರಿ. ದಿವ್ಯ ಜನ್ಮಧಾರಿ ಆತ್ಮನು ಯಾವುದೇ ಆತ್ಮನಿಗೆ ತನ್ನ ದಿವ್ಯ ನಯನಗಳ ಮೂಲಕ ಅರ್ಥಾತ್ ದಿವ್ಯ ದೃಷ್ಠಿಯ ಮೂಲಕ ಸಾಧಾರಣತೆಯಿಂದ ದೂರ ದಿವ್ಯಾನುಭೂತಿಯನ್ನು ಮಾಡಿಸುವರು. ಸನ್ಮುಖದಲ್ಲಿ ಬರುತ್ತಿದ್ದಂತೆಯೇ ಸಾಧಾರಣ ಆತ್ಮವು ತನ್ನ ಸಾಧಾರಣತೆಯನ್ನು ಮರೆತು ಹೋಗುವುದು ಏಕೆಂದರೆ ಈಗಿನ ಸಮಯದನುಸಾರ ವರ್ತಮಾನ ಸಾಧಾರಣ ಜೀವನದಿಂದ ಮೆಜಾರಿಟಿ ಆತ್ಮಗಳು ಸಂತುಷ್ಟರಿಲ್ಲ. ಮುಂದೆ ಹೋದಂತೆ ಈ ಜೀವನವು ಯಾವುದೇ ಜೀವನವಲ್ಲ, ಜೀವನದಲ್ಲಿ ಯಾವುದಾದರೂ ನವೀನತೆ ಬೇಕೆಂಬ ಶಬ್ಧವು ಎಲ್ಲರಿಂದ ಕೇಳುತ್ತೀರಿ. “ಅಲೌಕಿಕತೆ” “ದಿವ್ಯತೆ”ಯು ಜೀವನದ ವಿಶೇಷ ಆಧಾರವಾಗಿದೆ ಎಂಬುದನ್ನು ಅನುಭವ ಮಾಡುತ್ತಾರೆ. ಏನಾದರೂ ಬೇಕು, ಏನಾದರೂ ಬೇಕು - ಈ ‘ಬೇಕು’ ಎಂಬ ಬಾಯಾರಿಕೆಯಿಂದ ನಾಲ್ಕಾರು ಕಡೆ ಹುಡುಕುತ್ತಾರೆ. ಹೇಗೆ ಸ್ಥೂಲ ನೀರಿನ ಬಾಯಾರಿಕೆಯಲ್ಲಿ ಚಡಪಡಿಸುತ್ತಿರುವ ಮಾನವನು ನಾಲ್ಕಾರು ಕಡೆ ನೀರಿನ ಹನಿಗಾಗಿ ಹುಡುಕುತ್ತಾನೆ. ಹಾಗೆಯೇ ದಿವ್ಯತೆಗೆ ಬಾಯಾರಿರುವ ಆತ್ಮವು ನಾಲ್ಕಾರು ಕಡೆ ಅಂಚಲಿಗಾಗಿ ಚಡಪಡಿಸುತ್ತಿರುವುದು ಕಂಡು ಬರುತ್ತದೆ. ಅವರು ಹುಡುಕುತ್ತಾ ಎಲ್ಲಿ ಬರುತ್ತಾರೆ? ತಮ್ಮೆಲ್ಲರ ಬಳಿ ಬರುತ್ತಾರೆ. ಅಂದಮೇಲೆ ತಾವು ದಿವ್ಯತೆಯ ಖಜಾನೆಯಿಂದ ಸಂಪನ್ನರಾಗಿದ್ದೀರಾ? ಪ್ರತೀ ಸಮಯ ದಿವ್ಯತೆಯ ಅನುಭವವಾಗುತ್ತದೆಯೋ ಅಥವಾ ಕೆಲವೊಮ್ಮೆ ಸಾಧಾರಣ, ಕೆಲವೊಮ್ಮೆ ದಿವ್ಯತೆಯೋ? ಯಾವಾಗ ತಂದೆಯು ದಿವ್ಯ ದೃಷ್ಠಿ, ದಿವ್ಯ ಬುದ್ಧಿಯ ವರದಾನವನ್ನು ಕೊಟ್ಟು ಬಿಟ್ಟರು ಅಂದಮೇಲೆ ದಿವ್ಯ ಬುದ್ಧಿಯಲ್ಲಿ ಸಾಧಾರಣ ಮಾತು ಹೊರಬರಲು ಸಾಧ್ಯವಿಲ್ಲ. ದಿವ್ಯ ಜನ್ಮಧಾರಿ ಬ್ರಾಹ್ಮಣರು ತನುವಿನಿಂದ ಸಾಧಾರಣ ಕರ್ಮ ಮಾಡಲು ಸಾಧ್ಯವಿಲ್ಲ. ಭಲೆ ಮನುಷ್ಯರಿಗೆ ನೋಡಲು ಸಾಧಾರಣ ಕರ್ಮವೇ ಆಗಿರಬಹುದು, ಬೇರೆಯವರ ಸಮಾನ ತಾವೆಲ್ಲರೂ ವ್ಯವಹಾರ ಮಾಡುತ್ತೀರಿ, ವ್ಯಾಪಾರ ಮಾಡುತ್ತೀರಿ ಅಥವಾ ಸರ್ಕಾರದ ನೌಕರಿ ಮಾಡುತ್ತೀರಿ, ಮಾತೆಯರು ಭೋಜನವನ್ನು ತಯಾರಿಸುತ್ತೀರಿ. ಭಲೆ ನೋಡಲು ಸಾಧಾರಣ ಕರ್ಮವಾಗಿದೆ ಆದರೆ ಈ ಸಾಧಾರಣ ಕರ್ಮದಲ್ಲಿಯೂ ತಮ್ಮದು ಮತ್ತೆಲ್ಲರಿಗಿಂತ ಭಿನ್ನ “ಅಲೌಕಿಕ” ದಿವ್ಯ ಕರ್ಮವಾಗಿರಲಿ. ಈ ಮಹಾನ್ ಅಂತರವನ್ನು ಏಕೆ ತಿಳಿಸಿದೆವು ಎಂದರೆ ದಿವ್ಯ ಜನ್ಮಧಾರಿ ಬ್ರಾಹ್ಮಣರು ತನುವಿನಿಂದ ಸಾಧಾರಣ ಕರ್ಮವನ್ನು ಮಾಡುವುದಿಲ್ಲ. ಮನಸ್ಸಿನಿಂದ ಸಾಧಾರಣ ಸಂಕಲ್ಪ ಮಾಡಲು ಸಾಧ್ಯವಿಲ್ಲ, ಧನವನ್ನೂ ಸಹ ಸಾಧಾರಣ ರೀತಿಯಿಂದ ತೊಡಗಿಸುವಂತಿಲ್ಲ ಏಕೆಂದರೆ ತನು, ಮನ, ಧನ ಮೂರಕ್ಕೂ ಟ್ರಸ್ಟಿಗಳಾಗಿದ್ದೀರಿ ಆದ್ದರಿಂದ ಮಾಲೀಕ ತಂದೆಯ ಶ್ರೀಮತವಿಲ್ಲದೆ ಕಾರ್ಯದಲ್ಲಿ ತೊಡಗಿಸುವಂತಿಲ್ಲ. ಪ್ರತೀ ಸಮಯ ತಂದೆಯ ದಿವ್ಯ ಕರ್ತವ್ಯವನ್ನು ಮಾಡುವ ಶ್ರೀಮತ ಸಿಗುತ್ತದೆ ಆದ್ದರಿಂದ ಪರಿಶೀಲನೆ ಮಾಡಿಕೊಳ್ಳಿ - ಇಡೀ ದಿನದಲ್ಲಿ ಸಾಧಾರಣ ಮಾತು ಮತ್ತು ಕರ್ಮವು ಎಷ್ಟು ಸಮಯವಿತ್ತು ಮತ್ತು ದಿವ್ಯ ಅಲೌಕಿಕ ಎಷ್ಟು ಸಮಯವಿತ್ತು? ಕೆಲವು ಮಕ್ಕಳು ಕೆಲಕೆಲವೊಂದೆಡೆ ಬಹಳ ಭೋಲಾ ಆಗಿ ಬಿಡುತ್ತಾರೆ. ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ಭೋಲಾತನದಲ್ಲಿ. ಇಡೀ ದಿನದಲ್ಲಿ ಯಾವುದೇ ವಿಶೇಷ ತಪ್ಪನ್ನಂತೂ ಮಾಡಲಿಲ್ಲ, ಕೆಟ್ಟದ್ದನ್ನು ಆಲೋಚಿಸಲಿಲ್ಲ, ಕೆಟ್ಟದ್ದನ್ನು ಮಾತನಾಡಲಿಲ್ಲ ಎಂದು ತಿಳಿದುಕೊಳ್ಳುತ್ತಾರೆ ಆದರೆ ಇದನ್ನು ಪರಿಶೀಲನೆ ಮಾಡಿಕೊಂಡಿರಾ? ದಿವ್ಯ ಹಾಗೂ ಅಲೌಕಿಕ ಕರ್ಮ ಮಾಡಿದೆವೇ? ಏಕೆಂದರೆ ಸಾಧಾರಣ ಮಾತು ಹಾಗೂ ಕರ್ಮವು ಜಮಾ ಆಗುವುದಿಲ್ಲ, ಕಳೆಯುವುದೂ ಇಲ್ಲ, ಜಮಾ ಆಗುವುದೂ ಇಲ್ಲ. ವರ್ತಮಾನದ ದಿವ್ಯ ಸಂಕಲ್ಪ ಹಾಗೂ ದಿವ್ಯ ಮಾತು ಮತ್ತು ಕರ್ಮವು ಭವಿಷ್ಯಕ್ಕೆ ಜಮಾ ಮಾಡುತ್ತದೆ. ಜಮಾದ ಖಾತೆಯು ಹೆಚ್ಚುವುದಿಲ್ಲವೆಂದರೆ ಜಮಾ ಮಾಡುವ ಲೆಕ್ಕದಲ್ಲಿ ಭೋಲಾ ಆಗಿ ಬಿಡುತ್ತಾರೆ - ನಾನಂತೂ ವ್ಯರ್ಥ ಮಾಡಲಿಲ್ಲವೆಂದು ಖುಷಿಯಾಗಿರುತ್ತಾರೆ ಆದರೆ ಕೇವಲ ಇದರಲ್ಲಿ ಖುಷಿಯಾಗಿರಬಾರದು. ವ್ಯರ್ಥವನ್ನಂತೂ ಮಾಡಲಿಲ್ಲ ಆದರೆ ಸಮರ್ಥವಾದುದನ್ನು ಎಷ್ಟು ಮಾಡಿದಿರಿ? ಕೆಲವುಬಾರಿ ಮಕ್ಕಳು ಹೇಳುತ್ತಾರೆ - ನಾನು ಇಂದು ಯಾರಿಗೂ ದುಃಖ ಕೊಡಲಿಲ್ಲವೆಂದು ಆದರೆ ಸುಖವನ್ನು ಕೊಟ್ಟಿರಾ? ದುಃಖವನ್ನು ಕೊಡಲಿಲ್ಲ - ಇದರಿಂದ ವರ್ತಮಾನವನ್ನು ಚೆನ್ನಾಗಿ ಮಾಡಿಕೊಂಡಿರಿ ಆದರೆ ಸುಖ ಕೊಡುವುದರಿಂದ ಭವಿಷ್ಯಕ್ಕೆ ಜಮಾ ಆಗುತ್ತದೆ. ಅದನ್ನು ಮಾಡಿಕೊಂಡಿರಾ ಅಥವಾ ಕೇವಲ ವರ್ತಮಾನದಲ್ಲಿ ಖುಷಿಯಾಗಿ ಬಿಟ್ಟಿರಾ? ಸುಖದಾತನ ಮಕ್ಕಳು ಸುಖದ ಖಾತೆಯನ್ನು ಜಮಾ ಮಾಡಿಕೊಳ್ಳುತ್ತಾರೆ ಆದ್ದರಿಂದ ಇಂದು ದುಃಖವನ್ನು ಕೊಡಲಿಲ್ಲವೆಂದು ಕೇವಲ ಇಷ್ಟನ್ನು ಪರಿಶೀಲನೆ ಮಾಡಿಕೊಳ್ಳಬೇಡಿ. ಎಷ್ಟು ಸುಖವನ್ನು ಕೊಟ್ಟೆವು ಎಂದು ನೋಡಿಕೊಳ್ಳಿ. ಯಾರೇ ಸಂಬಂಧ-ಸಂಪರ್ಕದಲ್ಲಿ ಬರಲಿ ಮಾ|| ಸುಖದಾತನ ಮೂಲಕ ಪ್ರತೀ ಹೆಜ್ಜೆಯಲ್ಲಿ ಸುಖದ ಅನುಭೂತಿ ಮಾಡಲಿ. ಇದಕ್ಕೇ ದಿವ್ಯತೆ ಹಾಗೂ ಅಲೌಕಿಕತೆಯೆಂದು ಹೇಳಲಾಗುತ್ತದೆ. ಆದ್ದರಿಂದ ಪರಿಶೀಲನೆಯನ್ನೂ ಸಾಧಾರಣವಾಗಿ ಅಲ್ಲ, ಗುಹ್ಯ ಪರಿಶೀಲನೆ ಮಾಡಿಕೊಂಡು ಪ್ರತೀ ಸಮಯ ಇದು ಸ್ಮೃತಿಯಿರಲಿ - ಒಂದು ಜನ್ಮದಲ್ಲಿ 21 ಜನ್ಮಗಳ ಖಾತೆಯನ್ನು ಜಮಾ ಮಾಡಿಕೊಳ್ಳಬೇಕಾಗಿದೆ ಆದ್ದರಿಂದ ಎಲ್ಲರೂ ಖಾತೆಯನ್ನು ನೋಡಿಕೊಳ್ಳಿ - ತನುವಿನಿಂದ ಎಷ್ಟು ಜಮಾ ಮಾಡಿಕೊಂಡಿರಿ? ಮನಸ್ಸಿನ ದಿವ್ಯಸಂಕಲ್ಪದಿಂದ ಎಷ್ಟು ಜಮಾ ಮಾಡಿಕೊಂಡಿರಿ? ಮತ್ತು ಧನವನ್ನು ಶ್ರೀಮತದ ಪ್ರಮಾಣ ಶ್ರೇಷ್ಠ ಕಾರ್ಯದಲ್ಲಿ ತೊಡಗಿಸಿ ಎಷ್ಟು ಜಮಾ ಮಾಡಿಕೊಂಡಿರಿ? ಜಮಾದ ಖಾತೆಯ ಕಡೆ ವಿಶೇಷ ಗಮನ ಕೊಡಿ ಏಕೆಂದರೆ ತಾವು ವಿಶೇಷ ಆತ್ಮರ ಜಮಾ ಮಾಡಿಕೊಳ್ಳುವ ಸಮಯವು ಈ ಚಿಕ್ಕದಾದ ಜನ್ಮವನ್ನು ಬಿಟ್ಟರೆ ಇಡೀ ಕಲ್ಪದಲ್ಲಿ ಮತ್ತ್ಯಾವ ಸಮಯವೂ ಇಲ್ಲ. ಅನ್ಯ ಆತ್ಮಗಳ ಲೆಕ್ಕವೇ ಬೇರೆಯಾಗಿದೆ ಆದರೆ ತಾವು ಶ್ರೇಷ್ಠಾತ್ಮರಿಗಾಗಿ - “ಈಗಿಲ್ಲದಿದ್ದರೆ ಇನ್ನೆಂದಿಗೂ ಇಲ್ಲ”. ಅಂದಾಗ ಏನು ಮಾಡಬೇಕೆಂದು ತಿಳಿಯಿತೇ? ಇದರಲ್ಲಿ ಭೋಲಾ ಆಗಬೇಡಿ, ಹಳೆಯ ಸಂಸ್ಕಾರಗಳಲ್ಲಿ ಮುಗ್ಧರಾಗಬೇಡಿ. ಬಾಪ್ದಾದಾರವರು ಫಲಿತಾಂಶವನ್ನು ನೋಡಿದೆವು, ಅನೇಕ ಮಕ್ಕಳ ಫಲಿತಾಂಶದಲ್ಲಿ ಜಮಾದ ಖಾತೆಯು ಬಹಳ ಕಡಿಮೆಯಿದೆ, ಅದರ ವಿಸ್ತಾರವನ್ನು ಮತ್ತೆ ತಿಳಿಸುತ್ತೇವೆ.
ಎಲ್ಲರೂ ಸ್ನೇಹದಲ್ಲಿ ಎಲ್ಲವನ್ನೂ ಮರೆತು ಬಂದು ಬಿಟ್ಟಿದ್ದೀರಿ, ಬಾಪ್ದಾದಾರವರೂ ಸಹ ಮಕ್ಕಳ ಸ್ನೇಹವನ್ನು ನೋಡಿ ಒಂದು ಘಳಿಗೆಯ ಸ್ನೇಹಕ್ಕೆ ರಿಟರ್ನ್ ಆಗಿ ಅನೇಕ ಘಳಿಗೆಗಳು ಪ್ರಾಪ್ತಿಯನ್ನು ನೀಡುತ್ತಲೇ ಇರುತ್ತೇವೆ. ತಮ್ಮೆಲ್ಲರಿಗೆ ಇಷ್ಟು ದೊಡ್ಡ ಸಂಘಟನೆಯಲ್ಲಿ ಬರುವುದಕ್ಕಾಗಿ ಏನೇನನ್ನು ಪಕ್ಕಾ ಮಾಡಿಸಲಾಯಿತು? ಮೊದಲಂತೂ ನೆಲದ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ, ನಾಲ್ಕು ದಿನಗಳಷ್ಟೇ ಇರಬೇಕಾಗುತ್ತದೆ, ಬಂದು ಹೋಗಲೇಬೇಕಾಗುತ್ತದೆ ಆದರೆ ಇವೆಲ್ಲಾ ಮಾತುಗಳನ್ನೂ ಕೇಳಿಯೂ ಸಹ ಸ್ನೇಹದಲ್ಲಿ ಬಂದು ಬಿಟ್ಟಿರಿ, ಇದನ್ನೂ ತಮ್ಮ ಭಾಗ್ಯವೆಂದೇ ತಿಳಿದುಕೊಳ್ಳಿ, ಇಷ್ಟಾದರೂ ಸಿಗುತ್ತಿದೆ. ಆ ಜಡ ಮೂರ್ತಿಗಳ ದರ್ಶನದಂತೆ ನಿಂತು-ನಿಂತುಕೊಂಡೇ ರಾತ್ರಿಯನ್ನಂತೂ ಕಳೆಯುತ್ತಿಲ್ಲ ಅಲ್ಲವೆ. ಮೂರು ಹೆಜ್ಜೆಗಳಷ್ಟು ಪೃಥ್ವಿಯಾದರೂ ಎಲ್ಲರಿಗೆ ಸಿಕ್ಕಿದೆಯಲ್ಲವೆ. ಇಲ್ಲಿಯೂ ಸಹ ಆರಾಮದಿಂದ ಕುಳಿತಿದ್ದೀರಿ, ಮುಂದೆ ಇನ್ನೂ ವೃದ್ಧಿಯಾದಾಗ ಸ್ವತಹ ವಿಧಿಯೂ ಸಹ ಪರಿವರ್ತನೆಯಾಗುತ್ತಾ ಇರುವುದು ಆದರೆ ಸದಾ ಈ ಅನುಭವ ಮಾಡಿ - ಏನೆಲ್ಲಾ ಸಿಗುತ್ತಿದೆಯೋ ಅದು ಬಹಳ ಚೆನ್ನಾಗಿದೆ, ಏಕೆಂದರೆ ವೃದ್ಧಿಯಂತೂ ಆಗಲೇಬೇಕು ಮತ್ತು ಪರಿವರ್ತನೆಯೂ ಆಗಲೇಬೇಕಾಗಿದೆ ಅಂದಾಗ ಎಲ್ಲರಿಗೆ ಆರಾಮದಿಂದ ಇರಲು, ತಿನ್ನಲು ಸಿಗುತ್ತಿದೆಯಲ್ಲವೆ. ತಿನ್ನುವುದು ಮತ್ತು ಮಲಗುವುದು ಎರಡೇ ಬೇಕಲ್ಲವೆ. ಮಾತೆಯರಿಗಂತೂ ಬಹಳ ಖುಷಿಯಾಗುತ್ತದೆ ಏಕೆಂದರೆ ತಯಾರಾಗಿರುವ ಭೋಜನವು ಸಿಗುತ್ತದೆ. ಅಲ್ಲಂತೂ ತಯಾರು ಮಾಡಿ ಭೋಗವನ್ನಿಟ್ಟು ನಂತರ ತಿನ್ನಬೇಕಾಗುವುದು, ಇಲ್ಲಿ ತಯಾರಾದ ಭೋಗವನ್ನಿಟ್ಟ ಭೋಜನವು ಸಿಗುತ್ತದೆ ಆದ್ದರಿಂದ ಮಾತೆಯರಿಗೆ ಒಳ್ಳೆಯ ಆರಾಮವಿದೆ. ಕುಮಾರರಿಗೂ ಸಹ ವಿಶ್ರಾಂತಿ ಸಿಗುತ್ತದೆ ಏಕೆಂದರೆ ಅವರಿಗೆ ಭೋಜನವನ್ನು ತಯಾರಿಸುವುದೇ ಬಹಳ ದೊಡ್ಡ ಸಮಸ್ಯೆಯಾಗುತ್ತದೆ, ಇಲ್ಲಂತೂ ಆರಾಮದಿಂದ ಸಿದ್ಧವಾಗಿರುವ ಭೋಜನವನ್ನು ಮಾಡಿದಿರಲ್ಲವೆ. ಸದಾ ಇದೇ ರೀತಿ ಸರಳವಾಗಿರಿ, ಯಾರ ಸಂಸ್ಕಾರವು ಸರಳವಾಗಿರುವುದೋ ಅವರಿಗೆ ಪ್ರತೀ ಕಾರ್ಯವು ಸಹಜ ಅನುಭವವಾಗುವ ಕಾರಣ ಸಹಜವಾಗಿರುತ್ತಾರೆ. ಸಂಸ್ಕಾರವು ಬಿಗಿಯಾಗಿದ್ದರೆ ಪರಿಸ್ಥಿತಿಯೂ ಸಹ ಬಿಗಿಯಾಗಿ ಬಿಡುತ್ತವೆ. ಸಂಬಂಧ-ಸಂಪರ್ಕದವರೂ ಸಹ ಬಹಳ ಬಿಗಿಯಾಗಿ ವ್ಯವಹಾರ ಮಾಡುತ್ತಾರೆ, ಬಿಗಿಯಾಗಿರುವುದು ಎಂದರೆ ಎಳೆದಾಟದಲ್ಲಿ ಇರುವವರು ಅಂದಾಗ ಎಲ್ಲರೂ ಡ್ರಾಮಾದ ಪ್ರತೀ ದೃಶ್ಯವನ್ನು ನೋಡಿ, ನೋಡಿ ಹರ್ಷಿತರಾಗಿ ಇರುವವರಾಗಿದ್ದೀರಲ್ಲವೆ. ಅಥವಾ ಕೆಲವೊಮ್ಮೆ ಒಳ್ಳೆಯ-ಕೆಟ್ಟದರ ಆಕರ್ಷಣೆಯಲ್ಲಿ ಬಂದು ಬಿಡುತ್ತೀರೋ? ಒಳ್ಳೆಯದು-ಕೆಟ್ಟದ್ದು ಎರಡರಲ್ಲಿಯೂ ಆಕರ್ಷಿತರಾಗಬೇಡಿ, ಸದಾ ಹರ್ಷಿತರಾಗಿರಿ. ಒಳ್ಳೆಯದು.
ಸದಾ ಪ್ರತೀ ಹೆಜ್ಜೆಯಲ್ಲಿ ದಿವ್ಯತೆಯ ಅನುಭವ ಮಾಡುವವರು ಮತ್ತು ಮಾಡಿಸುವಂತಹ ದಿವ್ಯಮೂರ್ತಿಗಳಿಗೆ, ಸದಾ ತನ್ನ ಜಮಾದ ಖಾತೆಯನ್ನು ಹೆಚ್ಚಿಸಿಕೊಳ್ಳುವ ಜ್ಞಾನಪೂರ್ಣ ಆತ್ಮರಿಗೆ, ಸದಾ ಪ್ರತಿಯೊಂದು ಸಮಸ್ಯೆಯನ್ನು ಸರಳ ಸ್ಥಿತಿಯ ಮೂಲಕ ಸರಳವಾಗಿ ಪಾರು ಮಾಡುವಂತಹ ಬುದ್ಧಿವಂತ ಮಕ್ಕಳಿಗೆ, ಅನೇಕ ಆತ್ಮರ ಜೀವನದ ಬಾಯಾರಿಕೆಯನ್ನು ನೀಗಿಸುವಂತಹ ಮಾ|| ಜ್ಞಾನಸಾಗರ ಶ್ರೇಷ್ಠಾತ್ಮರಿಗೆ ಜ್ಞಾನಸಾಗರ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.
ಬಾಂಬೆ (ಸಾಂತಾಕುಜ್-ಪಾರ್ಲಾ) ಗ್ರೂಪ್:
ಬಾಂಬೆ ನಿವಾಸಿ ಮಕ್ಕಳು ಸರ್ವ ಖಜಾನೆಗಳಿಂದ ಸಂಪನ್ನರಾಗಿದ್ದೀರಿ ಅಲ್ಲವೆ. ಸದಾ ತಮ್ಮನ್ನು ಸಂಪನ್ನ ಆತ್ಮನಾಗಿದ್ದೇನೆ ಎಂಬ ಅನುಭವ ಮಾಡುತ್ತೀರಲ್ಲವೆ? ಸಂಪನ್ನತೆಯು ಸಂಪೂರ್ಣತೆಯ ಚಿಹ್ನೆಯಾಗಿದೆ, ಇದರ ಪರಿಶೀಲನೆಯನ್ನು ತಮ್ಮ ಸಂಪನ್ನತೆಯಿಂದ ಮಾಡಿಕೊಳ್ಳಬಹುದು ಏಕೆಂದರೆ ಸಂಪೂರ್ಣತೆಯೆಂದರೆ ಸರ್ವ ಖಜಾನೆಗಳಿಂದ ಸಂಪನ್ನರಾಗುವುದು. ಹೇಗೆ ಚಂದ್ರಮನು ಯಾವಾಗ ಸಂಪನ್ನನಾಗುವನೋ ಅದೇ ಸಂಪೂರ್ಣತೆಯ ಚಿಹ್ನೆಯಾಗುತ್ತದೆ. ಇದಕ್ಕಿಂತ ಹೆಚ್ಚಾಗುವುದಿಲ್ಲ, ಇದಷ್ಟೇ ಸಂಪೂರ್ಣತೆಯಾಗಿದೆ, ಅಲ್ಪಸ್ವಲ್ಪವೂ ಕಡಿಮೆಯಾಗುವುದಿಲ್ಲ, ಸಂಪನ್ನವಾಗಿರುತ್ತದೆ. ಅಂದಾಗ ತಾವೆಲ್ಲರೂ ಜ್ಞಾನ, ಯೋಗ, ಧಾರಣೆ, ಸೇವೆ - ಎಲ್ಲದರಲ್ಲಿಯೂ ಸಂಪನ್ನರಾಗಿರುವುದಕ್ಕೇ ಸಂಪೂರ್ಣತೆ ಎಂದು ಹೇಳಲಾಗುತ್ತದೆ. ಇದರಿಂದ ತಾವು ತಿಳಿಯಬಹುದು - ಸಂಪೂರ್ಣತೆಗೆ ಸಮೀಪನಿದ್ದೇನೆಯೇ ಅಥವಾ ದೂರವಿದ್ದೇನಾ!! ಸಂಪನ್ನರು ಆಗಿದ್ದೀರೆಂದರೆ ಸಂಪೂರ್ಣತೆಯ ಸಮೀಪವಿದ್ದೀರಿ, ಅಂದಮೇಲೆ ಎಲಲ್ರೂ ಸಮೀಪವಿದ್ದೀರಾ? ಎಷ್ಟು ಸಮೀಪದಲ್ಲಿದ್ದೀರಿ? 8ರವರೆಗೆ, 100ರವರೆಗೆ ಅಥವಾ 16000...ದವರೆಗೆ ಸಮೀಪವಿದ್ದೀರಾ - ಇದನ್ನೇ ಪರಿಶೀಲನೆ ಮಾಡಿಕೊಳ್ಳಬೇಕಾಗಿದೆ. ಇದೂ ಸಹ ಒಳ್ಳೆಯದು ಏಕೆಂದರೆ ಪ್ರಪಂಚದ ಕೋಟ್ಯಾಂತರ ಆತ್ಮರೆಲ್ಲರಿಂದ ತಾವು ಬಹಳ-ಬಹಳ ಭಾಗ್ಯಶಾಲಿ ಆಗಿದ್ದೀರಿ, ಅವರು ಚಡಪಡಿಸುತ್ತಾ ಇರುವವರು ಮತ್ತು ತಾವು ಸಂಪನ್ನ ಆತ್ಮರು- ಪ್ರಾಪ್ತಿ ಸ್ವರೂಪ ಆತ್ಮರಾಗಿದ್ದೀರಿ - ಈ ಖುಷಿಯಿದೆಯಲ್ಲವೆ. ಪ್ರತಿನಿತ್ಯವೂ ತಮ್ಮೊಂದಿಗೆ ಮಾತನಾಡಿಕೊಳ್ಳಿರಿ - ನಾವಲ್ಲದೆ ಮತ್ತ್ಯಾರು ಖುಷಿಯಾಗಿರಲು ಸಾಧ್ಯವಿದೆ? ಸದಾ ಇದೇ ವರದಾನವನ್ನು ಸ್ಮೃತಿಯಲ್ಲಿಯೂ ಇಟ್ಟುಕೊಳ್ಳಿರಿ - ಸಮೀಪವಿದ್ದೇವೆ, ಸಂಪನ್ನವಾಗಿದ್ದೇವೆ. ಈಗಂತು ಸಮೀಪದಲ್ಲಿ ಮಿಲನವಾಗಿ ಬಿಟ್ಟಿದೆ. ಹೇಗೆ ಸ್ಥೂಲದಲ್ಲಿ ಸಮೀಪವು ಪ್ರಿಯವೆನಿಸುತ್ತದೆಯೋ ಹಾಗೆಯೇ ಸ್ಥಿತಿಯಲ್ಲಿಯೂ ಸದಾ ಸಮೀಪ ಅಂದರೆ ಸದಾ ಸಂಪನ್ನವಾಗಿರಿ. ಒಳ್ಳೆಯದು.
ಗುಜರಾತ್-ಪೂನಾ ಗ್ರೂಪ್:
ಎಲ್ಲರೂ ದೃಷ್ಟಿಯ ಮೂಲಕ ಶಕ್ತಿಗಳ ಪ್ರಾಪ್ತಿಯ ಅನುಭೂತಿ ಮಾಡುವ ಅನುಭವಿ ಆಗಿದ್ದೀರಲ್ಲವೆ. ಹೇಗೆ ವಾಣಿಯ ಮೂಲಕ ಶಕ್ತಿಯ ಅನುಭವ ಮಾಡುತ್ತೀರಿ, ಮುರುಳಿಯನ್ನು ಕೇಳುತ್ತೀರೆಂದರೆ ಶಕ್ತಿ ಸಿಕ್ಕಿತೆಂದು ತಿಳಿಯುವಿರಲ್ಲವೆ! ಹಾಗೆಯೇ ದೃಷ್ಟಿಯ ಮೂಲಕ ಶಕ್ತಿಗಳ ಪ್ರಾಪ್ತಿಯ ಅನುಭೂತಿಯ ಅಭ್ಯಾಸಿಗಳೂ ಆಗಿದ್ದೀರಾ ಅಥವಾ ವಾಣಿಯ ಮೂಲಕ ಅನುಭವವಾಗುತ್ತದೆ, ದೃಷ್ಟಿಯ ಮೂಲಕ ಕಡಿಮೆಯಿದೆಯೇ? ದೃಷ್ಟಿಯ ಮೂಲಕ ಶಕ್ತಿಯನ್ನು ಕ್ಯಾಚ್ ಮಾಡಬಲ್ಲಿರಾ? ಏಕೆಂದರೆ ಕ್ಯಾಚ್ ಮಾಡುವ ಅಭ್ಯಾಸಿ ಆಗುತ್ತೀರೆಂದರೆ, ತಮ್ಮ ದಿವ್ಯದೃಷ್ಟಿಯ ಮೂಲಕ ಅನ್ಯರಿಗೂ ಅನುಭವ ಮಾಡಿಸಬಹುದು. ಮುಂದೆ ನಡೆದಂತೆ ವಾಣಿಯ ಮೂಲಕ ಎಲ್ಲರಿಗೂ ಪರಿಚಯ ಕೊಡುವ ಸಮಯವೂ ಇರುವುದಿಲ್ಲ ಹಾಗೂ ಆ ಸಂದರ್ಭವೂ ಸಿಗುವುದಿಲ್ಲ, ಆಗೇನು ಮಾಡುವಿರಿ? ವರದಾನಿ ದೃಷ್ಟಿಯ ಮೂಲಕ, ಮಹಾದಾನಿ ದೃಷ್ಟಿಯ ಮೂಲಕ ಮಹಾದಾನ-ವರದಾನವನ್ನು ಕೊಡುವಿರಿ. ದೃಷ್ಟಿಯ ಮೂಲಕ ಶಾಂತಿಯ ಶಕ್ತಿ, ಪ್ರೇಮದ ಶಕ್ತಿ, ಸುಖ ಹಾಗೂ ಆನಂದ ಶಕ್ತಿಗಳೆಲ್ಲವೂ ಪ್ರಾಪ್ತಿಯಾಗುವುದು. ಜಡಮೂರ್ತಿಗಳ ಮುಂದೆ ಹೋಗುತ್ತಾರೆಂದರೆ, ಜಡಮೂರ್ತಿಯು ಮಾತನಾಡವುದಂತು ಇಲ್ಲ ಅಲ್ಲವೆ. ಆದರೂ ಭಕ್ತಾತ್ಮರಿಗೆ ಏನಾದರೊಂದು ಪ್ರಾಪ್ತಿಯಾಗುತ್ತದೆ, ಆದ್ದರಿಂದ ಹೋಗುತ್ತಾರಲ್ಲವೆ. ಅದು ಹೇಗೆ ಪ್ರಾಪ್ತಿಯಾಗುತ್ತದೆ? ಅವರ ದಿವ್ಯತೆಯ ಪ್ರಕಂಪನಗಳಿಂದ ಹಾಗೂ ದಿವ್ಯ ನಯನಗಳ ದೃಷ್ಟಿಯನ್ನು ನೋಡುತ್ತಾ ಪ್ರಕಂಪನಗಳನ್ನು ತೆಗೆದುಕೊಳ್ಳುತ್ತಾರೆ. ಯಾವುದೇ ದೇವತೆ ಅಥವಾ ದೇವಿಯ ಮೂರ್ತಿಗಳಲ್ಲಿ ನಯನಗಳ ಕಡೆಗೇ ವಿಶೇಷವಾಗಿ ಗಮನವಿಟ್ಟು ನೋಡುವರು. ಚಹರೆಯ ಕಡೆಗೆ ಗಮನ ಹರಿಯುತ್ತದೆ ಏಕೆಂದರೆ ಮಸ್ತಕದ ಮೂಲಕ ಪ್ರಕಂಪನಗಳು ಸಿಗುತ್ತವೆ, ನಯನಗಳ ಮೂಲಕ ದಿವ್ಯತೆಯ ಅನುಭೂತಿ ಆಗುತ್ತದೆ. ಅದಂತು ಜಡಮೂರ್ತಿ ಆಗಿದೆ ಆದರೆ ಅದು ಯಾರದು? ತಾವು ಚೈತನ್ಯ ಮೂರ್ತಿಗಳ ಜಡಮೂರ್ತಿಗಳಾಗಿವೆ. ಇದು ನಮ್ಮ ಮೂರ್ತಿ ಆಗಿದೆಯೆಂದು ನಶೆಯಿದೆಯೇ? ಚೈತನ್ಯದಲ್ಲಿ ಈ ಸೇವೆಯನ್ನು ಮಾಡಲಾಗಿದೆ ಆದ್ದರಿಂದ ಜಡಮೂರ್ತಿಗಳಿವೆ. ಅಂದಾಗ ದೃಷ್ಟಿಯ ಮೂಲಕ ಶಕ್ತಿಯನ್ನು ತೆಗೆದುಕೊಳ್ಳುವುದು ಮತ್ತು ದೃಷ್ಟಿಯ ಮೂಲಕ ಶಕ್ತಿ ಕೊಡುವುದರ ಅಭ್ಯಾಸ ಮಾಡಿರಿ. ಶಾಂತಿಯ ಶಕ್ತಿಯ ಅನುಭೂತಿಯು ಅತ್ಯಂತ ಶ್ರೇಷ್ಠವಾದುದು. ಹೇಗೆ ವರ್ತಮಾನ ಸಮಯದಲ್ಲಿ ವಿಜ್ಞಾನದ ಶಕ್ತಿಯು ಹೊರ ಬಂದಿತು, ಯಾವುದರಿಂದ? ಶಾಂತಿಯ ಶಕ್ತಿಯಿಂದ ಅಲ್ಲವೆ! ಯಾವಾಗ ವಿಜ್ಞಾನದ ಶಕ್ತಿಯು ಅಲ್ಪಕಾಲದ ಪ್ರಾಪ್ತಿಯನ್ನು ಪ್ರಾಪ್ತಿ ಮಾಡಿಸುತ್ತಿದೆ, ಅಂದಮೇಲೆ ಶಾಂತಿಯ ಶಕ್ತಿಯು ಇನ್ನೆಷ್ಟು ಪ್ರಾಪ್ತಿ ಮಾಡಿಸಬಹುದು! ಅದಕ್ಕಾಗಿ ತಮ್ಮಲ್ಲಿ ತಂದೆಯ ದಿವ್ಯ ದೃಷ್ಟಿಯ ಮೂಲಕ ಶಕ್ತಿಯನ್ನು ಜಮಾ ಮಾಡಿಕೊಳ್ಳಿರಿ, ಜಮಾ ಮಾಡಿಕೊಂಡಿರುವ ಶಕ್ತಿಗಳನ್ನು ಸಮಯದಲ್ಲಿ ಕೊಡಬಹುದು. ತಮಗಾಗಿಯೇ ಜಮಾ ಮಾಡಿಕೊಂಡಿರಿ ಮತ್ತು ಕಾರ್ಯದಲ್ಲಿ ಉಪಯೋಗಿಸುವುದು ಎಂದರೆ ಸಂಪಾದನೆ ಮಾಡಿ ಖಾಲಿ ಮಾಡಿದಂತೆ. ಯಾರು ಹೀಗೆ ಮಾಡುತ್ತಾರೆಯೋ ಅವರಲ್ಲಿ ಎಂದಿಗೂ ಜಮಾ ಆಗುವುದಿಲ್ಲ. ಮತ್ತು ಯಾರದು ಜಮಾ ಆಗುವುದಿಲ್ಲವೋ ಅವರಿಗೆ ಸಮಯದಲ್ಲಿ ಮೋಸವೇ ಆಗುತ್ತದೆ. ಇದರಿಂದ ದುಃಖದ ಪ್ರಾಪ್ತಿಯೇ ಆಗುತ್ತದೆ. ಇದೇರೀತಿ ಶಾಂತಿಯ ಶಕ್ತಿಯ ಜಮಾ ಆಗಲಿಲ್ಲ, ದೃಷ್ಟಿಯ ಮಹತ್ವದ ಅನುಭವವಾಗದಿದ್ದರೆ ಅಂತಿಮ ಸಮಯದ ಶ್ರೇಷ್ಠ ಪದವಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದರಲ್ಲಿಯೂ ಮೋಸವನ್ನೇ ಅನುಭವಿಸುತ್ತೀರಿ. ನಂತರ ದುಃಖವಾಗುತ್ತದೆ, ಪಶ್ಚಾತ್ತಾಪ ಆಗುತ್ತದೆ ಆದ್ದರಿಂದ ಈಗಿನಿಂದಲೇ ತಂದೆಯ ದೃಷ್ಟಿಯ ಮೂಲಕ ಪ್ರಾಪ್ತಿಯಾಗಿರುವ ಶಕ್ತಿಗಳನ್ನು ಅನುಭವ ಮಾಡುತ್ತಾ ಜಮಾ ಮಾಡುತ್ತಿರಿ. ಹಾಗಾದರೆ ಜಮಾ ಮಾಡಿಕೊಳ್ಳುವುದು ಬರುತ್ತದೆಯೇ? ಜಮಾ ಆಗಿದೆಯೆಂದರೆ ಅದರ ಚಿಹ್ನೆಯೇನಾಗಿದೆ? ನಶೆಯಿರುತ್ತದೆ. ಹೇಗೆ ಸಾಹುಕಾರರ ಚಲನೆ, ಕುಳಿತುಕೊಳ್ಳುವ, ಏಳುವುದರಲ್ಲಿಯೂ ನಶೆಯು ಕಾಣಿಸುತ್ತದೆ, ನಶೆಯು ಎಷ್ಟಿರುತ್ತದೆಯೋ ಅಷ್ಟೇ ಖುಷಿಯಾಗುತ್ತದೆ. ಇದಂತು ಆತ್ಮಿಕ ನಶೆಯಾಗಿದೆ, ಈ ನಶೆಯಲ್ಲಿ ಇರುವುದರಿಂದ ಖುಷಿಯು ಸ್ವತಹವಾಗಿಯೇ ಆಗುತ್ತದೆ. ಖುಷಿಯೇ ಜನ್ಮ-ಸಿದ್ಧ ಅಧಿಕಾರವೂ ಆಗಿದೆ. ಸದಾ ಈ ಖುಷಿಯ ಹೊಳಪಿನಿಂದ, ಅನ್ಯರಿಗೂ ಆತ್ಮಿಕ ಹೊಳಪನ್ನು ತೋರಿಸುವವರಾಗಿರಿ - ಸದಾ ಇದೇ ವರದಾನವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಏನಾದರೂ ಆಗಲಿ ಆದರೆ ಖುಷಿಯ ವರದಾನವನ್ನು ಕಳೆಯಬಾರದು. ಸಮಸ್ಯೆಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ಅದರ ಮಧ್ಯೆ ಖುಷಿಯು ಹೋಗಿ ಬಿಡಬಾರದು ಏಕೆಂದರೆ ಖುಷಿಯು ನಮ್ಮ ವಸ್ತುವಾಗಿದೆ, ಸಮಸ್ಯೆಯು ಪರಿಸ್ಥಿತಿ ಆಗಿದೆ ಮತ್ತು ಅದು ಅನ್ಯರ ಕಡೆಯಿಂದ ಬಂದಿರುವಂತದ್ದು. ತನ್ನ ವಸ್ತುವನ್ನಂತು ಸದಾ ಜೊತೆಯಲ್ಲಿ ಇಟ್ಟುಕೊಳ್ಳಬೇಕಲ್ಲವೆ. ಪರರ ವಸ್ತುವಂತು ಅವಶ್ಯವಾಗಿ ಬರುತ್ತದೆ ಮತ್ತು ಅವಶ್ಯವಾಗಿ ಹೋಗುತ್ತದೆ. ಪರಿಸ್ಥಿತಿಯು ಮಾಯೆಯದಾಗಿದೆ, ತಮ್ಮದಲ್ಲ ಆದರೆ ತಮ್ಮ ವಸ್ತುವನ್ನು ಕಳೆದುಕೊಳ್ಳಬಾರದು ಅಂದರೆ ಖುಷಿಯನ್ನು ಕಳೆದುಕೊಳ್ಳಬಾರದು. ಭಲೆ ಈ ಶರೀರವೂ ಹೊರಟು ಹೋಗಲಿ ಆದರೆ ಖುಷಿಯು ಹೋಗಬಾರದು. ಖುಷಿಯಿಂದ ಶರೀರವೂ ಹೋಗುತ್ತದೆಯೆಂದರೆ, ಅದಕ್ಕಿಂತಲೂ ಶ್ರೇಷ್ಠವಾಗಿರುವುದು ಸಿಗುತ್ತದೆ. ಹಳೆಯದು ಹೋಗುತ್ತದೆ, ಹೊಸದು ಸಿಗುತ್ತದೆ ಮತ್ತು ಈ ಮಹಾನತೆಯಲ್ಲಿ ಮಹಾರಾಷ್ಟ್ರದವರು ಸದಾ ಇರಬೇಕು, ಖುಷಿಯಲ್ಲಿ ಮಹಾನರಾಗಿ ಇರಬೇಕಾಗಿದೆ. ಒಳ್ಳೆಯದು.
ಆಂಧ್ರಪ್ರದೇಶ ಮತ್ತು ಕರ್ನಾಟಕ ಗ್ರೂಪ್:
ಈ ಡ್ರಾಮಾದಲ್ಲಿ ವಿಶೇಷ ಪಾತ್ರವನ್ನು ಅಭಿನಯಿಸುವ ವಿಶೇಷ ಆತ್ಮರಾಗಿದ್ದೇವೆ - ಇದನ್ನು ಅನುಭವ ಮಾಡುತ್ತೀರಾ? ಯಾವಾಗ ತನ್ನನ್ನು ವಿಶೇಷ ಆತ್ಮನೆಂದು ತಿಳಿಯುತ್ತೀರೋ ಆಗ ಆ ರೀತಿ ಮಾಡುವಂತಹ ತಂದೆಯ ನೆನಪು ಸ್ವತಹ ಇರುತ್ತದೆ, ಸಹಜವೆನಿಸುತ್ತದೆ ಏಕೆಂದರೆ ‘ಸಂಬಂಧ’ವು ನೆನಪಿಗೆ ಆಧಾರವಾಗಿದೆ. ಎಲ್ಲಿ ಸಂಬಂಧವಿರುವುದೋ ಅಲ್ಲಿ ನೆನಪೂ ಸ್ವತಹ ಹಾಗೂ ಸಹಜವಾಗಿ ಬಿಡುತ್ತದೆ. ಯಾವಾಗ ಸರ್ವ ಸಂಬಂಧಗಳು ಒಬ್ಬ ತಂದೆಯೊಂದಿಗೆ ಆಗಿ ಬಿಟ್ಟಿತು ಅಂದಮೇಲೆ ಮತ್ತ್ಯಾರೂ ಇಲ್ಲವೇ ಇಲ್ಲ. ಒಬ್ಬ ತಂದೆಯೇ ಸರ್ವ ಸಂಬಂಧಿಯಾಗಿದ್ದಾರೆ, ಈ ಸ್ಮೃತಿಯಿಂದ ಸಹಜಯೋಗಿಗಳಾಗಿ ಬಿಟ್ಟಿರಿ, ಎಂದೂ ಕಷ್ಟವೆನಿಸುವುದಿಲ್ಲ ಅಲ್ಲವೆ. ಯಾವಾಗ ಮಾಯೆಯ ಯುದ್ಧವಾಗುವುದೋ ಆಗ ಪರಿಶ್ರಮವೆನಿಸುತ್ತದೆಯೇ - ಮಾಯೆಗೆ ಸದಾಕಾಲಕ್ಕಾಗಿ ವಿದಾಯಿ ನೀಡುವವರಾಗಿ. ಯಾವಾಗ ಮಾಯೆಗೆ ವಿದಾಯಿ ನೀಡುವಿರೋ ಆಗ ತಂದೆಯ ಬದಾಯಿ (ಶುಭಾಷಯಗಳು) ಬಹಳ ಮುಂದುವರೆಸುತ್ತವೆ. ಭಕ್ತಿಮಾರ್ಗದಲ್ಲಿ ಆಶೀರ್ವಾದ ಕೊಡಿ ಎಂದು ಎಷ್ಟು ಬಾರಿ ಬೇಡಿದಿರಿ, ಆದರೆ ಈಗ ತಂದೆಯಿಂದ ಆಶೀರ್ವಾದವನ್ನು ಪಡೆಯುವ ಸಹಜ ಸಾಧನವನ್ನು ತಿಳಿಸಲಾಗಿದೆ - ಎಷ್ಟು ಮಾಯೆಗೆ ವಿದಾಯಿ ನೀಡುತ್ತೀರೋ ಅಷ್ಟು ಆಶೀರ್ವಾದಗಳು ಸ್ವತಹ ಸಿಗುವುದು. ಪರಮಾತ್ಮನ ಆಶೀರ್ವಾದಗಳು ಒಂದು ಜನ್ಮಕ್ಕಲ್ಲ ಆದರೆ ಅನೇಕ ಜನ್ಮಗಳು ಶ್ರೇಷ್ಠರನ್ನಾಗಿ ಮಾಡುತ್ತಾರೆ. ಸದಾ ಇದನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳಿ - ನಾವು ಸದಾ ಪ್ರತೀ ಹೆಜ್ಜೆಯಲ್ಲಿ ತಂದೆಯ, ಬ್ರಾಹ್ಮಣ ಪರಿವಾರದ ಆಶೀರ್ವಾದಗಳನ್ನು ತೆಗೆದುಕೊಳ್ಳುತ್ತಾ, ಸಹಜವಾಗಿ ಹಾರುತ್ತಾ ಹೋಗಬೇಕು. ಡ್ರಾಮಾದಲ್ಲಿ ವಿಶೇಷ ಆತ್ಮರಾಗಿದ್ದೀರಿ, ವಿಶೇಷ ಕರ್ಮ ಮಾಡಿ ಅನೇಕ ಜನ್ಮಗಳಿಗಾಗಿ ವಿಶೇಷ ಪಾತ್ರವನ್ನು ಅಭಿನಯಿಸುವವರಾಗಿದ್ದೀರಿ. ಸಾಧಾರಣ ಕರ್ಮವಲ್ಲ, ವಿಶೇಷ ಕರ್ಮ, ವಿಶೇಷ ಸಂಕಲ್ಪ, ವಿಶೇಷ ಮಾತುಗಳಿರಲಿ ಅಂದಾಗ ಆಂಧ್ರದವರು ವಿಶೇಷವಾಗಿ ಇದೇ ಸೇವೆ ಮಾಡಿ - ತನ್ನ ಶ್ರೇಷ್ಠ ಕರ್ಮದ ಮೂಲಕ, ತನ್ನ ಶ್ರೇಷ್ಠ ಪರಿವರ್ತನೆಯ ಮೂಲಕ ಅನೇಕ ಆತ್ಮರನ್ನು ಪರಿವರ್ತನೆ ಮಾಡಿ. ತಮ್ಮನ್ನು ಕನ್ನಡಿಯನ್ನಾಗಿ ಮಾಡಿಕೊಳ್ಳಿ ಮತ್ತು ತಮ್ಮ ಕನ್ನಡಿಯಲ್ಲಿ ತಂದೆಯು ಕಾಣಿಸಲಿ. ಇಂತಹ ವಿಶೇಷ ಸೇವೆ ಮಾಡಿ ಆದ್ದರಿಂದ ಇದನ್ನೇ ನೆನಪಿಟ್ಟುಕೊಳ್ಳಿ - ನಾನು ದಿವ್ಯ ಕನ್ನಡಿಯಾಗಿದ್ದೇನೆ, ನಾನು ಕನ್ನಡಿಯ ಮೂಲಕ ತಂದೆಯೇ ಕಂಡುಬರಲಿ. ತಿಳಿಯಿತೆ. ಒಳ್ಳೆಯದು.
ಓಂ ಶಾಂತಿ. ಮಕ್ಕಳ ಬುದ್ಧಿಯಲ್ಲಿ ಈಗ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ ಎರಡೂ ಇದೆ ಏಕೆಂದರೆ ಮಕ್ಕಳಿಗೆ ತಿಳಿದಿದೆ - ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ ಮತ್ತು ಹೊಸ ಪ್ರಪಂಚವನ್ನು ತಂದೆಯೇ ರಚಿಸುತ್ತಾರೆ. ಮಕ್ಕಳಿಗೆ ತಿಳಿದಿದೆ, ಶಿವ ಜಯಂತಿಯನ್ನು ಆಚರಿಸುತ್ತಾರೆ, ಶಿವರಾತ್ರಿಯನ್ನೂ ಆಚರಿಸುತ್ತಾರೆ. ಎರಡೂ ಪದಗಳ ಅರ್ಥವು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ಶಿವ ಜಯಂತಿ ಅರ್ಥಾತ್ ಶಿವನ ಜನ್ಮ. ಈಗ ಇಲ್ಲಂತೂ ಮನುಷ್ಯರ ಜನ್ಮದಿನವನ್ನು ಆಚರಿಸುತ್ತಾರೆ. ಶಿವನ ಜನ್ಮವಂತೂ ಆಗುವುದೇ ಇಲ್ಲ. ಅವರು ಹೇಗೆ ಜನ್ಮ ಪಡೆಯುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ. ಶ್ರೀಕೃಷ್ಣನಿಗಂತೂ ಜನ್ಮವಾಯಿತೆಂದು ಗಾಯನವಿದೆ ಆದರೆ ಶಿವ ಜಯಂತಿಯ ಪ್ರತಿ ಯಾವುದೆ ವರ್ಣನೆಯೇ ಇಲ್ಲ. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ ಅಂದಾಗ ಸೂಕ್ಷ್ಮವತನದಲ್ಲಿ ಕುಳಿತು ಯಾರಿಗಾದರೂ ಪ್ರೇರಣೆ ನೀಡುತ್ತಾರೆಯೇ? ಇದು ಸಾಧ್ಯವಿಲ್ಲ. ಪತಿತ-ಪಾವನ ತಂದೆಯನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಯಾವಾಗ ತಂದೆಯೇ ಸ್ವಯಂ ಬಂದು ತಿಳಿಸುವರೋ ಆಗ ಮನುಷ್ಯರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಇದು ಡ್ರಾಮಾದಲ್ಲಿ ಇರುವ ಕಾರಣ ತಂದೆಯು ಸಂಗಮದಲ್ಲಿಯೇ ಬರಬೇಕಾಗಿದೆ. ಆ ತಂದೆಯು ಬಂದಿದ್ದಾರೆ ಎಂಬುದು ನೀವು ಮಕ್ಕಳಿಗೆ ತಿಳಿದಿದೆ ಆದರೆ ಈ ಮಾತನ್ನು ಇಲ್ಲಿಯವರೆಗೂ ತಿಳಿದುಕೊಳ್ಳುವವರು ಬಹಳ ವಿರಳ. ಪರಮಾತ್ಮನು ಬ್ರಹ್ಮನ ಮೂಲಕ ಭಾರತವನ್ನು ಪುನಃ ಶ್ರೇಷ್ಠಾಚಾರಿ ಸತ್ಯಯುಗೀ ಪ್ರಪಂಚವನ್ನಾಗಿ ಮಾಡುತ್ತಿದ್ದಾರೆಂದು ಯಾರೂ ತಮ್ಮ ಅಭಿಪ್ರಾಯವನ್ನು ಬರೆದುಕೊಡುವುದಿಲ್ಲ. ತಂದೆಯು ಬಂದಿದ್ದಾರೆ ಸ್ವರ್ಗದ ರಾಜಧಾನಿಯ ಆಸ್ತಿಯನ್ನು ಕೊಡುತ್ತಿದ್ದಾರೆ, ರಾಜಯೋಗವನ್ನು ಕಲಿಸುತ್ತಿದ್ದಾರೆ ಎಂಬುದನ್ನು ಯಥಾರ್ಥವಾಗಿ ಯಾರೂ ತಿಳಿದುಕೊಂಡಿಲ್ಲ. ಸಾವಿರಾರು ಮಂದಿ ಬರುತ್ತಾರೆ, ಅದರಲ್ಲಿ ಕೆಲವರೇ ಪಕ್ಕಾ ಆಗುತ್ತಾರೆ. ಅವರಲ್ಲಿಯೂ ಬರುತ್ತಾ-ಬರುತ್ತಾ ಕಡಿಮೆಯಾಗತೊಡಗುತ್ತಾರೆ. ಎಷ್ಟೊಂದು ತಮೋಪ್ರಧಾನ ಬುದ್ಧಿಯಾಗಿದೆ, ಇಷ್ಟು ಸಹಜ ಮಾತನ್ನೂ ತಿಳಿದುಕೊಳ್ಳುವುದಿಲ್ಲ! ತಂದೆಯು ಹೇಳುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುವುದು. ಇದು ಯೋಗಾಗ್ನಿಯಾಗಿದೆ. ಇದರಿಂದ ನೀವು ಸತೋಪ್ರಧಾನರಾಗಿ ಬಿಡುತ್ತೀರಿ. ಯಾವುದೇ ವಿಕರ್ಮ ಮಾಡಬೇಡಿ, ವಿಕರ್ಮ ಮಾಡಿಸುವವನು ರಾವಣನಾಗಿದ್ದಾನೆ. ರಾವಣನ ಮತದಂತೆ ನಡೆಯಬೇಡಿ. ಯಾರಿಗೂ ದುಃಖ ಕೊಡಬೇಡಿ. ತಂದೆಯು ಪತಿತರನ್ನು ಪಾವನರನ್ನಾಗಿ ಮಾಡಲು ಬಂದಿದ್ದಾರೆ. ತಂದೆಯು ತಿಳಿಸುತ್ತಾರೆ - ನಿಮ್ಮದೂ ಸಹ ಇದೇ ಕರ್ತವ್ಯವಾಗಿದೆ. ಹಗಲು-ರಾತ್ರಿ ಇದೇ ಚಿಂತನೆ ಮಾಡಿರಿ - ನಾವು ಪತಿತರಿಗೆ ಪಾವನರಾಗುವ ಮಾರ್ಗವನ್ನು ಹೇಗೆ ತಿಳಿಸುವುದು! ಮಾರ್ಗವು ಬಹಳ ಸಹಜವಾಗಿದೆ, ಯೋಗಬಲದಿಂದಲೇ ನಾವು ಸತೋಪ್ರಧಾನರಾಗುತ್ತೇವೆ. ಇದು ಅವಿನಾಶಿ ಸರ್ಜನ್ನ ಔಷಧಿಯಾಗಿದೆ. ಇದು ಯಾವುದೆ ಮಂತ್ರವಲ್ಲ, ಇಲ್ಲಿ ಕೇವಲ ತಂದೆಯನ್ನು ನೆನಪು ಮಾಡಬೇಕಾಗಿದೆ. ಎಷ್ಟು ಸ್ಪಷ್ಟವಾಗಿ ತಿಳಿಸುತ್ತಾರೆ! ಕಲ್ಪ-ಕಲ್ಪವೂ ಇದನ್ನು ತಿಳಿಸಿದ್ದರು. ಜ್ಞಾನ, ಭಕ್ತಿ, ವೈರಾಗ್ಯ ಎಂಬ ಮಾತಿದೆ ಅಂದಾಗ ಯಾವುದರ ವೈರಾಗ್ಯ? ಈ ಹಳೆಯ ಛೀ ಛೀ ಪ್ರಪಂಚದ ವೈರಾಗ್ಯ. ಹಳೆಯ ಪ್ರಪಂಚದಲ್ಲಿ ಸಂಪೂರ್ಣ ಪಾಪಾತ್ಮರಾಗಿ ಬಿಟ್ಟಿದ್ದಾರೆ. ಪತಿತ-ಪಾವನ ಮುಕ್ತಿದಾತ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಯಾವುದರಿಂದ ಮುಕ್ತ ಮಾಡಬೇಕಾಗಿದೆ? ದುಃಖದಿಂದ, ರಾವಣ ರಾಜ್ಯದಿಂದ. ರಾವಣನನ್ನು ಆಂಗ್ಲಭಾಷೆಯಲ್ಲಿ ಇವಿಲ್ (ಶೈತಾನ್) ಎಂದು ಹೇಳುತ್ತಾರೆ. ಆದ್ದರಿಂದ ಈ ಶೈತಾನನ ರಾಜ್ಯದಿಂದ ಮುಕ್ತ ಮಾಡಿ ಮನೆಗೆ ಕರೆದುಕೊಂಡು ಹೋಗಿರಿ. ನಮ್ಮ ಮಾರ್ಗದರ್ಶಕನಾಗಿ ಜೊತೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ. ಹೇಗೆ ಯಾರಾದರೂ ಜೈಲಿನಿಂದ ಬಿಡಿಸಿ ಬಹಳ ಪ್ರೀತಿಯಿಂದ ಮನೆಗೆ ಕರೆದುಕೊಂಡು ಹೋಗುತ್ತಾರೆ. ಬೇಹದ್ದಿನ ತಂದೆಯು ಎಲ್ಲಾ ಮಕ್ಕಳಿಗೆ ಭರವಸೆ ನೀಡುತ್ತಾರೆ- ಮಕ್ಕಳೇ, ನಾನು ನಿಮ್ಮನ್ನು ಬಂಧನದಿಂದ ಬಿಡಿಸಲು ಬಂದಿದ್ದೇನೆ. ಮೇಳ, ಪ್ರದರ್ಶನಿಯಲ್ಲಿಯೂ ಇದನ್ನು ಮಾದರಿ ರೂಪದಲ್ಲಿ ತೋರಿಸಲಾಗಿದೆ - ಹೇಗೆ ಎಲ್ಲರೂ ಜೈಲಿನಲ್ಲಿದ್ದಾರೆ ಆದರೂ ಸಹ ಮನುಷ್ಯರು ತಿಳಿದುಕೊಳ್ಳುತ್ತಾರೆಯೇ! ತಂದೆಯು ಎಷ್ಟು ಸಹಜ ರೀತಿಯಲ್ಲಿ ತಿಳಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪಗಳು ಕಳೆಯುತ್ತವೆ. ನೀವು ಸತ್ಯಯುಗದ ಮಾಲೀಕರಾಗುತ್ತೀರೆಂದು ತಿಳಿಸುತ್ತಾರೆ. ಇದು ಎಷ್ಟು ಸಹಜವಾಗಿದೆ. ಯಾವ ಧರ್ಮದವರಾದರೂ ತಿಳಿದುಕೊಳ್ಳಬಹುದು. ತಿಳಿಸಿರಿ, ಯಾವ ಧರ್ಮವು ಯಾವಾಗ ಸ್ಥಾಪನೆಯಾಗುತ್ತದೆ? ಅಂತಿಮದಲ್ಲಿ ಎಲ್ಲಾ ಆತ್ಮರು ತಮ್ಮ-ತಮ್ಮ ವಿಭಾಗಗಳಲ್ಲಿ ಹೋಗಿ ಸ್ಥಿತರಾಗುತ್ತಾರೆ ನಂತರ ಮೊದಲನೆಯದಾಗಿ ದೇವಿ-ದೇವತಾ ಧರ್ಮವು ಆರಂಭವಾಗುತ್ತದೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಬರೆಯಲಾಗಿದೆ, ತ್ರಿಮೂರ್ತಿಯ ಚಿತ್ರವು ಬಹಳ ಸುಂದರವಾಗಿದೆ. ತ್ರಿಮೂರ್ತಿ ಮತ್ತು ಸೃಷ್ಟಿಚಕ್ರದ ಚಿತ್ರದಲ್ಲಿ ಬಹಳ ಸ್ಪಷ್ಟವಾಗಿ ತಿಳಿಸಬಹುದಾಗಿದೆ. ಇದನ್ನೂ ತಿಳಿಸಿದ್ದಾರೆ - ಒಂದು ಶಾಂತಿಧಾಮ, ಇನ್ನೊಂದು ಸುಖಧಾಮವಾಗಿದೆ ಮತ್ತು ಇದು ದುಃಖಧಾಮವಾಗಿದೆ. ಈ ದುಃಖಧಾಮದಿಂದ ವೈರಾಗ್ಯವಿರಬೇಕು. ಈಗ ಭಕ್ತಿಯ ರಾತ್ರಿಯು ಮುಗಿಯಿತು, ಸತ್ಯ-ತ್ರೇತಾಯುಗದ ದಿನವು ಆರಂಭವಾಗುತ್ತದೆ.
ತಂದೆಯು ತಿಳಿಸುತ್ತಾರೆ - ಈಗ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ, ಆದ್ದರಿಂದ ಇದರೊಂದಿಗೆ ವೈರಾಗ್ಯವಿರಲಿ. ಅವರದು ಹದ್ದಿನ ವೈರಾಗ್ಯ, ನಿಮ್ಮದು ಬೇಹದ್ದಿನ ವೈರಾಗ್ಯವಿದೆ. ಸನ್ಯಾಸಿಗಳು ಹೊಸ ಪ್ರಪಂಚವನ್ನು ರಚಿಸುವುದಿಲ್ಲ. ರಚಯಿತನು ತಂದೆಯಾಗಿದ್ದಾರಲ್ಲವೆ. ಅವರಿಗೆ ಸ್ವರ್ಗ ಸ್ಥಾಪಕನೆಂದು ಹೇಳಲಾಗುತ್ತದೆ, ಮತ್ತ್ಯಾರಿಂದಲೂ ಸಾಧ್ಯವಿಲ್ಲ. ಈ ವಿದ್ಯೆಯು ಸತ್ಯಯುಗೀ ರಾಜಧಾನಿಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಇದೆ. ಜ್ಞಾನ ಸಾಗರನೇ ಬಂದು ಜ್ಞಾನವನ್ನು ಕೊಡುತ್ತಾರೆ. ಜ್ಞಾನಸಾಗರ, ಪತಿತ-ಪಾವನನೆಂದು ಅವರಿಗೇ ಹೇಳಲಾಗುತ್ತದೆ. ಯಾವುದರ ಜ್ಞಾನ? ಬ್ಯಾರಿಸ್ಟರ್, ಸರ್ಜನ್ ಆಗುವ ಜ್ಞಾನವೇ? ಪರಮಾತ್ಮನಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅದರಲ್ಲಿ ಎಲ್ಲಾ ಜ್ಞಾನವು ಬಂದು ಬಿಡುತ್ತದೆ - ಬ್ಯಾರಿಸ್ಟರಿ, ಇಂಜಿನಿಯರಿ ಮೊದಲಾದ ಎಲ್ಲದರ ಮೂಲ ಬೆಣ್ಣೆಯು ಈಶ್ವರೀಯ ಜ್ಞಾನವಾಗಿದೆ. ಆ ಲೌಕಿಕ ಜ್ಞಾನವನ್ನು ಓದುವುದು, ಇಂಜಿನಿಯರ್ ಇತ್ಯಾದಿ ಆಗುವುದು ದೊಡ್ಡ ಮಾತೇನೂ ಅಲ್ಲ. ಇದನ್ನಂತೂ ನೀವು ತಿಳಿದುಕೊಂಡಿದ್ದೀರಿ, ಸತ್ಯಯುಗೀ ಹೊಸ ಪ್ರಪಂಚದ ರೀತಿ ಪದ್ಧತಿಗಳು ಏನಿರುವುದೋ ಅದೇ ಅಲ್ಲಿ ನಡೆಯುತ್ತದೆ. ನಾವು ಕಲ್ಪದ ಹಿಂದೆ ಹೇಗೆ ಮಹಲು ಇತ್ಯಾದಿಗಳನ್ನು ಕಟ್ಟಿಸಿದ್ದೆವೋ ಅದೇ ಪುನರಾವರ್ತನೆ ಮಾಡುತ್ತೇವೆ. ಅದಕ್ಕೆ ಸತ್ಯಯುಗವೆಂದು ಹೇಳಲಾಗುತ್ತದೆ. ಅಲ್ಲಿನ ರೀತಿ ಪದ್ಧತಿಗಳನ್ನು ಮನುಷ್ಯರು ತಿಳಿದುಕೊಂಡಿಲ್ಲ. ಅಲ್ಲಿ ವಜ್ರ ವೈಡೂರ್ಯಗಳ ಮಹಲುಗಳಾಗುತ್ತವೆ. ದೇವತೆಗಳು 16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳೆಂದೇ ಗಾಯನವಿದೆ. ಯಾವ ರೀತಿ-ನೀತಿಗಳಿರುವುದೋ ಅದರ ಅನುಸಾರವೇ ರಾಜ್ಯಭಾರ ನಡೆಯುವುದು. ಅದು ಡ್ರಾಮಾದಲ್ಲಿ ನಿಗಧಿತವಾಗಿದೆ. ಆತ್ಮರು ತಮ್ಮ ಪಾತ್ರವನ್ನೂ ಅಭಿನಯಿಸುತ್ತಾರೆ. ಮನೆಗಳನ್ನು ಹೇಗೆ ಕಟ್ಟಿಸುತ್ತಾರೆ, ಹೇಗೆ ಇರುತ್ತಾರೆ ಅದೆಲ್ಲವೂ ಮೊದಲೇ ನಿಗಧಿತವಾಗಿದೆ. ಹೇಗೆ ಈ ಹಳೆಯ ಪ್ರಪಂಚದ ರೀತಿನೀತಿಗಳು ನಡೆಯುತ್ತವೆಯೋ ಹಾಗೆಯೇ ಸತ್ಯಯುಗದ ರೀತಿನೀತಿಗಳು ಅಲ್ಲಿ ನಡೆಯುತ್ತವೆ. ಇಲ್ಲಿ ಅಸುರರಿದ್ದಾರೆ, ಅಲ್ಲಿ ದೇವತೆಗಳಿರುತ್ತಾರೆ. ಶಾಸ್ತ್ರಗಳಲ್ಲಿ ಈ ಮಾತುಗಳೇನೂ ಇಲ್ಲ. ಜ್ಞಾನ ಮತ್ತು ಭಕ್ತಿ. ಬ್ರಹ್ಮನ ದಿನ, ಬ್ರಹ್ಮನ ರಾತ್ರಿಯೆಂದು ಹೇಳುತ್ತಾ ಇರುತ್ತಾರೆ. ಬ್ರಹ್ಮನ ಹೆಸರನ್ನೇ ತೆಗೆದುಕೊಳ್ಳುತ್ತಾರೆ, ವಿಷ್ಣುವಿನದಲ್ಲ. ಬ್ರಹ್ಮನೇ ವಿಷ್ಣುವಾಗುತ್ತಾರೆ. ಬ್ರಹ್ಮಾ-ಸರಸ್ವತಿಯು ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದ್ದರಿಂದ ತಂದೆಯು ತಿಳಿಸಿದ್ದಾರೆ, ಲಕ್ಷ್ಮೀ-ನಾರಾಯಣರೇ 84 ಜನ್ಮಗಳ ನಂತರ ಬ್ರಹ್ಮಾ-ಸರಸ್ವತಿಯಾಗುತ್ತಾರೆ. ರಾಜಯೋಗದ ತಪಸ್ಸನ್ನು ಇಲ್ಲಿಯೇ ಮಾಡುತ್ತಾರೆ. ಸೂಕ್ಷ್ಮ ವತನದಲ್ಲಿ ಅಲ್ಲ. ಯಜ್ಞ ಇತ್ಯಾದಿಗಳನ್ನೂ ಇಲ್ಲಿಯೇ ರಚಿಸಲಾಗುತ್ತದೆ, ತಂದೆಯು ತಿಳಿಸುತ್ತಾರೆ - ಇದು ಅಂತಿಮ ಯಜ್ಞವಾಗಿದೆ, ಇದರ ನಂತರ ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯಜ್ಞವಾಗುವುದಿಲ್ಲ. ಇಲ್ಲಿ ಭಿನ್ನ-ಭಿನ್ನ ಪ್ರಕಾರ ಯಜ್ಞಗಳನ್ನು ರಚಿಸುತ್ತಾರೆ. ಮಳೆಯಾಗದಿದ್ದರೆ ಯಜ್ಞವನ್ನು ರಚಿಸುತ್ತಾರೆ, ಯಾವುದೇ ದುಃಖ ಬಂದರೂ ಸಹ ಯಜ್ಞವನ್ನು ರಚಿಸುತ್ತಾರೆ. ಯಜ್ಞದಿಂದ ದುಃಖವು ದೂರವಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಇದಂತೂ ಎಲ್ಲದಕ್ಕಿಂತ ದೊಡ್ಡ ಯಜ್ಞವಾಗಿದೆ. ಯಾವ ಜ್ಞಾನ ಯಜ್ಞದಿಂದ ಇಡೀ ಸೃಷ್ಟಿಯ ದುಃಖವು ದೂರವಾಗುತ್ತದೆ. ಇದು ರಾಜಸ್ವ ಅಶ್ವಮೇಧ ಅವಿನಾಶಿ ಜ್ಞಾನ ಯಜ್ಞವಾಗಿದೆ. ಎಲ್ಲವೂ ಇದರಲ್ಲಿ ಸ್ವಾಹಾ ಆಗಿ ಬಿಡುತ್ತದೆ. ಎಷ್ಟು ಚೆನ್ನಾಗಿ ತಿಳಿಸಲಾಗುತ್ತದೆ. ದೆಹಲಿಯಲ್ಲಿ ಮಂಟಪ ಮಾಡಿ ಮೇಳ ಮಾಡಿದ್ದಾರೆ. ಇದೂ ಸಹ ಒಳ್ಳೆಯದಾಗಿದೆ. ಮಂಟಪವನ್ನು ಮಾಡುವುದರಲ್ಲಿ ನಿಧಾನವಾಗುವುದಿಲ್ಲ. ಈ ಹಾಲ್ನ್ನು ಮಾಡಿಸುವುದಕ್ಕಾಗಿ ಎಷ್ಟು ಪರಿಶ್ರಮ ಪಡಬೇಕಾಗುತ್ತದೆ ಆದರೆ ಇದಕ್ಕಿಂತಲೂ ನಮ್ಮದೇ ಶೈಲಿಯಲ್ಲಿ ಮಂಟಪವನ್ನು ತಯಾರಿಸಿ. ಚಿಕ್ಕ-ಚಿಕ್ಕ ಹಳ್ಳಿಗಳಲ್ಲಿ ಚಿಕ್ಕ ಮಂಟಪವನ್ನು ತಯಾರು ಮಾಡಿ. ಹಳ್ಳಿಗಳಲ್ಲಿ ವಿದ್ಯುತ್ ಇಲ್ಲದಿದ್ದರೆ ದಿನದಲ್ಲಿ ಬೇಕಾದರೂ ಪ್ರದರ್ಶನಿಯನ್ನು ಇಡಬಹುದು ಆದ್ದರಿಂದ ನಮ್ಮದೇ ಆದ ಸಾಮಾನುಗಳಿರಲಿ. ಬಾಡಿಗೆಗೆ ಏಕೆ ತೆಗೆದುಕೊಳ್ಳುವುದು! ತಂದೆಯು ಪ್ರದರ್ಶನಿ ಕಮಿಟಿಗೆ ಸಲಹೆ ನೀಡುತ್ತಿದ್ದಾರೆ. ವಾಟರ್ ಪ್ರೂಫ್ ಮಂಟಪವನ್ನು ಮಾಡಿಸಿರಿ, ಭಲೆ ಮಳೆ ಬಂದರೂ ಏನೂ ಆಗುವುದಿಲ್ಲ. ಬಾಬಾರವರು ದೆಹಲಿಗೆ ಹೋಗಿದ್ದಾಗ ಚಳಿಯಲ್ಲಿಯೂ ಮಂಟಪದಲ್ಲಿ ಹೋಗಿ ಭಾಷಣ ಮಾಡುತ್ತಿದ್ದರು. ಚಳಿಗಾಲಕ್ಕಾಗಿ ಎಲ್ಲರಿಗೂ ಬೆಚ್ಚನೆಯ ವಸ್ತ್ರಗಳಿವೆ. ಪ್ರದರ್ಶನಿಗಾಗಿ ನೀವು ಎಷ್ಟು ಮಂಟಪಗಳನ್ನು ಬೇಕಾದರೂ ಮಾಡಬಹುದು. ಯಾರು ವಿಘ್ನಗಳನ್ನು ಹಾಕದಂತೆ ಇನ್ಶೂರೆನ್ಸ್ ಮಾಡಿಸಿ ಬಿಡಿ. ಸರ್ವೀಸನ್ನು ಮಾಡಬೇಕಲ್ಲವೆ. ತಿಳಿಸಲೂ ಬೇಕಾಗಿದೆ, ತಂದೆಯ ಪೂರ್ಣ ಪರಿಚಯ ಕೊಡಬೇಕಾಗಿದೆ. ಈಗಂತೂ ನಾವು ತಂದೆಯ ಜೊತೆಯಿದ್ದೇವೆ, ಜ್ಞಾನ ಸಾಗರ ತಂದೆಯಿಂದ ನಮಗೆ ಜ್ಞಾನವು ಸಿಗುತ್ತಿದೆ, ಸತ್ಯಯುಗದಲ್ಲಿ ಜ್ಞಾನದ ಅವಶ್ಯಕತೆಯಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಸದ್ಗತಿಗಾಗಿ ಬಂದಿದ್ದೇನೆ, ಮತ್ತೆ ರಾವಣನಿಂದ ದುರ್ಗತಿಯಾಗುತ್ತದೆ. ಸದ್ಗತಿದಾತನು ಒಬ್ಬ ತಂದೆಯೇ ಆಗಿದ್ದಾರೆ. ಎಷ್ಟು ಸ್ಪಷ್ಟವಾಗಿ ತಿಳಿಸಲಾಗುತ್ತದೆ ಆದರೆ ಮನುಷ್ಯರು ಇದನ್ನು ತಿಳಿದುಕೊಳ್ಳದೇ ಕೇವಲ ಇದು ಮನುಷ್ಯರಿಗಾಗಿ ಬಹಳ ಚೆನ್ನಾಗಿದೆ ಎಂದಷ್ಟೇ ಹೇಳಿ ಬಿಡುತ್ತಾರೆ. ತಾನು ತಿಳಿದುಕೊಳ್ಳಲು ಬಿಡುವಿಲ್ಲವೆಂದು ಹೇಳುತ್ತಾರೆ. ದೊಡ್ಡ-ದೊಡ್ಡವರಿಗೂ ಸಹ ಹೋಗಿ ಎಷ್ಟೊಂದು ತಿಳಿಸುತ್ತೀರಿ. ತಂದೆಯು ಹೇಗೆ ಶ್ರೇಷ್ಠಾಚಾರಿ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆ ಎಂಬುದನ್ನಾದರೂ ತಿಳಿದುಕೊಳ್ಳಿ. ಶ್ರೇಷ್ಠಾಚಾರಿಗಳನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ ಆದ್ದರಿಂದಲೇ ತಂದೆಯನ್ನು ಕರೆಯುತ್ತಾರೆ. ದುಃಖ ದೂರ ಮಾಡಿ ಸುಖ ನೀಡಿ ಎಂದು ಹೇಳುತ್ತಾ ಇರುತ್ತಾರೆ. ತಂದೆಯು ಬಂದು ಬಿಟ್ಟರೆ ನಾವು ಬಲಿಹಾರಿಯಾಗುತ್ತೇವೆ, ಶ್ರೀಮತದಂತೆ ನಡೆಯುತ್ತೇವೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ತಂದೆಯ ಶ್ರೀಮತದಂತೆ ನಡೆಯುವುದೇ ಇಲ್ಲ. ಭಗವಂತ ಎಂದರೆ ಯಾರು ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ಸರ್ವವ್ಯಾಪಿ ಎಂದು ಹೇಳಿಬಿಡುತ್ತಾರೆ. ಅರೆ! ಪತಿತ-ಪಾವನ ಭಗವಂತನಂತೂ ಒಬ್ಬರೇ ಆಗಿದ್ದಾರಲ್ಲವೆ. ಅವರು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ಹಾಗಿದ್ದರೆ ಎಲ್ಲರೂ ಭಗವಂತನೆಂದು ಕರೆಸಿಕೊಳ್ಳುವರು. ಭಗವಂತನು ಚಿಕ್ಕವರು, ದೊಡ್ಡವರು ಆಗುವುದಿಲ್ಲ. ಪ್ರದರ್ಶನಿಯಲ್ಲಿ ಇದನ್ನೂ ತೋರಿಸಲಾಗಿದೆ - ಕೆಲವರು ಮಾಂಸ, ಮಧ್ಯಗಳನ್ನು ಸೇವಿಸುತ್ತಾರೆ. ಕೆಲವರು ಹೊಡೆದಾಡುತ್ತಾರೆ..... ಇವೆಲ್ಲವನ್ನೂ ಭಗವಂತನು ಮಾಡುತ್ತಾರೆಯೇ! ಆ ಸಮಯದಲ್ಲಿ ಮನುಷ್ಯರು ಖುಷಿಯಾಗಿ ಹೋಗುತ್ತಾರೆ. ಹೊರಗೆ ಹೋದ ಕೂಡಲೇ ಇಲ್ಲಿಯ ಮಾತು ಇಲ್ಲಿಯೇ ಉಳಿದುಕೊಳ್ಳುತ್ತದೆ. ಅಂತಹವರು ಕೇವಲ ಪ್ರಜೆಗಳಾಗುತ್ತಾರೆ. ರಾಜರಾಗುವುದಕ್ಕಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತೀರಿ! ರಾಜರಾಗಲು ಎಲ್ಲರೂ ಕೈಯೆತ್ತುತ್ತುತ್ತಾರೆ. ಮತ್ತೆ 5-7 ದಿನಗಳ ನಂತರ ನೋಡಿದರೆ ಅಲ್ಲಿ ಇರುವುದೇ ಇಲ್ಲ. ಮಾಯೆಯು ಎಷ್ಟು ಪ್ರಬಲವಾಗಿದೆ! ಬಹು ಬೇಗನೆ ಸಿಕ್ಕಿ ಹಾಕಿಸಿ ಬಿಡುತ್ತದೆ. ರಾಜಧಾನಿಯನ್ನು ಸ್ಥಾಪನೆ ಮಾಡುವುದು ಎಷ್ಟು ಕಷ್ಟವಿದೆ. ಧರ್ಮ ಸ್ಥಾಪನೆ ಮಾಡುವುದರಲ್ಲಿ ಕಷ್ಟವಿಲ್ಲ, ಅಲ್ಲಿ ಅಸುರರ ವಿಘ್ನಗಳು ಬರುವುದಿಲ್ಲ. ಇಲ್ಲಿ ಮಕ್ಕಳು ನಾವು ವಿವಾಹವಾಗುವುದಿಲ್ಲ ಎಂದು ಹೇಳುತ್ತಾರೆ. ವಿವಾಹ ಮಾಡಿಕೊಳ್ಳಲೇಬೇಕು. ವಿವಾಹವಿಲ್ಲದೆ ಪ್ರಪಂಚವು ಹೇಗೆ ನಡೆಯುವುದು ಎಂದು ಅವರ ತಂದೆಯು ಹೇಳುತ್ತಾರೆ. ಎಷ್ಟೊಂದು ವಿಘ್ನಗಳು ಬರುತ್ತವೆ. ಅರೆ! ವಿವಾಹವಾಗುವುದೇ ಇರುವುದೇ ಒಳ್ಳೆಯದಲ್ಲವೆ. ವಿವಾಹ ಮಾಡಿಕೊಳ್ಳದೇ ಇದ್ದರೆ ಮಕ್ಕಳೂ ಆಗುವುದಿಲ್ಲ. ಜನಸಂಖ್ಯಾ ನಿಯಂತ್ರಣವಾಗುತ್ತದೆ. ಯಾರು ಮಾಡುವರೋ ಅವರು ಪಡೆಯುವರು. ಮುಂದೆ ಹೋದಂತೆ ಅವರು ಬಹಳ ಬೇಗ-ಬೇಗ ತಯಾರಾಗುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಹೇಗೆ ಕಲ್ಪದ ಹಿಂದೆ ಸ್ಥಾಪನೆಯಾಗಿತ್ತೊ ಹಾಗೆಯೇ ಆಗುವುದು. ಯಾವ ದಿನವು ಕಳೆದು ಹೋಯಿತೋ ಅದು ಕಲ್ಪದ ಹಿಂದಿನಂತೆ ಕಳೆಯಿತು. ರಾತ್ರಿಯಲ್ಲಿ ಮಲಗುವಾಗ ವಿಚಾರ ನಡೆಯುತ್ತದೆ - ಇಂದು ಇಡೀ ದಿನ ಏನು ಕಳೆದು ಹೋಯಿತು ಅದು ಡ್ರಾಮಾನುಸಾರ, ಮತ್ತೆ ನಾಳೆ ಏನಾಗಬೇಕಾಗಿದೆಯೋ ಅದೂ ಡ್ರಾಮಾನುಸಾರ ಆಗುವುದು. ಇದು ಡ್ರಾಮಾ ಆಗಿದೆ, ಇದರ ಆದಿ-ಮಧ್ಯ-ಅಂತ್ಯ ಏನಾಗಿದೆ ಎಂಬುದು ನಿಮ್ಮ ವಿನಃ ಮತ್ತ್ಯಾರಿಗೂ ತಿಳಿದಿಲ್ಲ. ನಿಮಗೆ ತಿಳಿದಿದೆ, ನೀವು ಪುರುಷಾರ್ಥ ಮಾಡುತ್ತೀರಿ ಮತ್ತೆಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ಏನೆಲ್ಲಾ ಪಾತ್ರವು ನಡೆಯುತ್ತದೆಯೋ ಡ್ರಾಮಾನುಸಾರ ನಡೆಯುತ್ತದೆ. ಇಂದು ಇಲ್ಲಿ ಕುಳಿತಿದ್ದೀರಿ ಮತ್ತು ನಾಳೆ ರೋಗಿಯಾಗಿಬಿಟ್ಟರೆ ಅದನ್ನೂ ಸಹ ಡ್ರಾಮಾನುಸಾರ ಅನುಭವಿಸಬೇಕಾಗಿದೆ. ಕಲ್ಪ-ಕಲ್ಪವೂ ಇದೇರೀತಿ ಆಗುವುದು. ಸೃಷ್ಟಿ ನಾಟಕದ ಜ್ಞಾನವು ಬುದ್ಧಿಯಲ್ಲಿ ಇರುವುದರಿಂದ ಯಾವುದೇ ಚಿಂತೆಯಾಗುವುದಿಲ್ಲ. ವಿಘ್ನಗಳು ಬರುತ್ತವೆ, ಕೆಲಸಗಳು ತಡವಾಗುತ್ತವೆ ಆದರೂ ಸಹ ಕಲ್ಪ-ಕಲ್ಪವೂ ಇದೇರೀತಿ ಆಗುವುದು ಎಂದು ತಿಳಿಯುತ್ತೇವೆ. ಶ್ರೇಷ್ಠ ಪದವಿಯನ್ನು ಪಡೆಯಲು ಬಹಳ ಪುರುಷಾರ್ಥ ಮಾಡಬೇಕಾಗಿದೆ. ನೋಡಿಕೊಳ್ಳಿ, ನಾವು ಮೇಲೆರುತ್ತಿದ್ದೇವೆಯೇ? ತಂದೆಯ ಸೇವೆ ಮಾಡುತ್ತೇವೆಯೇ ಅಥವಾ ಒಂದು ಜಾಗದಲ್ಲಿ ನಿಂತು ಬಿಟ್ಟಿದ್ದೇವೆಯೇ? ನಾವು ಅನ್ಯರ ಕಲ್ಯಾಣ ಮಾಡುತ್ತೇವೆಯೇ? ಅನೇಕರ ಕಲ್ಯಾಣ ಮಾಡಿದರೆ ನಮ್ಮ ಕಲ್ಯಾಣವೂ ಆಗುವುದು. ಯಾವಾಗ ಪರೀಕ್ಷೆಯು ಮುಗಿಯುವುದೋ ಆಗ ನಾವು ಇಂತಹ ಪದವಿಯನ್ನು ಪಡೆಯುತ್ತೇವೆಂದು ಎಲ್ಲವೂ ಅರ್ಥವಾಗುವುದು. ಕಲ್ಪ-ಕಲ್ಪಾಂತರದ ಆಟವಾಗಿದೆ. ನಂತರ ಕೊನೆಯಲ್ಲಿ ನಾವು ಇಷ್ಟು ಸಮಯ ಏಕೆ ಪುರುಷಾರ್ಥ ಮಾಡಲಿಲ್ಲ? ತಂದೆಯ ಶ್ರೀಮತದಂತೆ ಏಕೆ ನಡೆಯಲಿಲ್ಲವೆಂದು ಬಹಳ ಪಶ್ಚಾತ್ತಾಪ ಪಡುವರು ಆದ್ದರಿಂದಲೇ ತಂದೆಯು ಕೇವಲ ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ನನ್ನನ್ನು ನೆನಪು ಮಾಡಿರಿ ಎಂದು ಎಷ್ಟು ಪ್ರೀತಿಯಿಂದ ಹೇಳುತ್ತಾರೆ. ಅನ್ಯರಿಗೂ ಮಾರ್ಗವನ್ನು ತಿಳಿಸುವ ಸರ್ವೀಸ್ ಮಾಡಿರಿ. ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಏಕೆ ಪಡೆಯಬಾರದು! ಅಂತಹವರಿಗೆ ಬುದ್ಧಿವಂತ ಸುಪುತ್ರರೆಂದು ಹೇಳಲಾಗುವುದು. ಓದಿಸುವವರೂ ಸಹ ತಿಳಿದುಕೊಳ್ಳುತ್ತಾರೆ - ಇವರು ಶ್ರೀಮತದಂತೆ ನಡೆಯುವುದಿಲ್ಲ, ಅನ್ಯರ ಕಲ್ಯಾಣ ಮಾಡುವುದಿಲ್ಲ ಅಂದಮೇಲೆ ಅವಶ್ಯವಾಗಿ ಕಡಿಮೆ ಪದವಿ ಸಿಗುವುದು. ಅನೇಕರಿಗೆ ಎಷ್ಟು ಮಾರ್ಗ ತಿಳಿಸುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ತಮಗಾಗಿ ಸರ್ವೀಸ್ ಮಾಡಬೇಕಾಗಿದೆ. ಯಾರು ಮಾಡುವರೋ ಅವರು ಪಡೆಯುವರು ಅಂದಮೇಲೆ ನಾವೂ ಇಂತಹ ಸರ್ವೀಸ್ ಮಾಡಬೇಕು ಎಂದು ಪುರುಷಾರ್ಥ ಮಾಡಬೇಕು. ಎಲ್ಲಿಯಾದರೂ ಪ್ರದರ್ಶನಿಯನ್ನು ಇಟ್ಟರೆ ಅಲ್ಲಿ ಅರ್ಧದಿನ ರಜೆ ಹಾಕಿಯಾದರೂ ಸರ್ವೀಸ್ ಮಾಡುತ್ತಾರೆ. ಕೆಲವರು ಪೂರ್ಣ ದಿನ ರಜೆ ಹಾಕಿ ಸರ್ವೀಸ್ ಮಾಡುತ್ತಾರೆ. ಆದ್ದರಿಂದ ತಂದೆಯು ಹೇಳುತ್ತಾರೆ, ಅಂತಹವರಿಗೆ ಅವರ ಮಕ್ಕಳು ಮೊದಲಾದವರಿಗಾಗಿ ಏನು ಬೇಕೋ ಅದನ್ನು ಕಳುಹಿಸಿಕೊಡಿ. ಶರೀರ ನಿರ್ವಹಣೆಯನ್ನಂತೂ ಸಾವಿರ ರೂಪಾಯಿಗಳಿಂದಲೂ ಮಾಡಬಹುದು, ಕೇವಲ 10 ರೂಪಾಯಿಗಳಿಂದಲೂ ಮಾಡಬಹುದು. ಯಾರ ಬಳಿಯಾದರೂ ಬಹಳ ಹಣವಿದ್ದರೆ ಲಕ್ಷಾಂತರ ರೂಪಾಯಿಗಳನ್ನೂ ಶರೀರ ನಿರ್ವಹಣೆಗಾಗಿ ಖರ್ಚು ಮಾಡುತ್ತಾರೆ. ತಂದೆಯು ಹೇಳುವುದೇನೆಂದರೆ ಭಲೆ ನೀವು ಹುಲ್ಲನ್ನು ಕತ್ತರಿಸುವಾಗಲೂ ಕೇವಲ ತಂದೆಯನ್ನು ನೆನಪು ಮಾಡಿರಿ. ಇದರಿಂದ 21 ಜನ್ಮಗಳಿಗಾಗಿ ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಲ್ಲಾ ಚಿಂತೆಗಳಿಂದ ಮುಕ್ತರಾಗಲು ಡ್ರಾಮಾದ ಜ್ಞಾನವನ್ನು ಯಥಾರ್ಥ ರೀತಿಯಿಂದ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಏನು ಕಳೆಯಿತೊ ಅದು ಕಲ್ಪದ ಹಿಂದಿನಂತೆ.
2. ಹಗಲು-ರಾತ್ರಿ ಇದೇ ಚಿಂತನೆ ಮಾಡಬೇಕಾಗಿದೆ - ನಾವು ಪತಿತರನ್ನು ಪಾವನರನ್ನಾಗಿ ಮಾಡುವ ಮಾರ್ಗವನ್ನು ಹೇಗೆ ತಿಳಿಸುವುದು! ಶ್ರೀಮತದಂತೆ ತನ್ನ ಹಾಗೂ ಅನ್ಯರ ಕಲ್ಯಾಣ ಮಾಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಅತಿ ಮಧುರ, ಈ ರೀತಿ ಹೇಳಬಹುದಲ್ಲವೆ! ಬೇಹದ್ದಿನ ತಂದೆ ಮತ್ತು ಬೇಹದ್ದಿನ ಪ್ರೀತಿಯಾಗಿದೆ. ಹೇಳುತ್ತಾರೆ - ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳೇ ಗೀತೆಯನ್ನು ಕೇಳಿದಿರಾ. ಮಾರ್ಗವನ್ನು ಒಬ್ಬ ತಂದೆಯೇ ತೋರಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮಾರ್ಗ ತಿಳಿಸುವವರು ಯಾರೂ ಇಲ್ಲ. ಅಲ್ಲಿಯೇ ಹುಡುಕಾಡುತ್ತಾ ಇರುತ್ತಾರೆ. ಈಗ ನಿಮಗೆ ಮಾರ್ಗವು ಸಿಕ್ಕಿದೆ ಆದರೂ ಸಹ ತಂದೆಯ ಜೊತೆ ಬುದ್ಧಿಯೋಗವನ್ನು ಇಡಲು ಮಾಯೆಯು ಬಿಡುವುದಿಲ್ಲ. ಒಬ್ಬ ತಂದೆಯನ್ನು ನೆನಪು ಮಾಡುವುದರಿಂದ ನಮ್ಮ ಎಲ್ಲಾ ದುಃಖಗಳು ದೂರವಾಗುತ್ತವೆ. ಚಿಂತೆಯ ಯಾವುದೇ ಮಾತಿರುವುದಿಲ್ಲ ಎಂಬುದನ್ನೂ ತಿಳಿದುಕೊಳ್ಳುತ್ತಾರೆ ಆದರೆ ಮರೆತು ಹೋಗುತ್ತಾರೆ. ತಂದೆಯು ಹೇಳುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ಪತಿತ-ಪಾವನ ತಂದೆಯಾದ ನನ್ನನ್ನು ನೆನಪು ಮಾಡಿರಿ. ತಂದೆಯು ಜ್ಞಾನ ಸಾಗರನಾಗಿದ್ದಾರಲ್ಲವೆ, ಅವರೇ ಗೀತಾ ಜ್ಞಾನದಾತನಾಗಿದ್ದಾರೆ. ಸ್ವರ್ಗದ ರಾಜ್ಯಭಾಗ್ಯ ಸದ್ಗತಿಯನ್ನು ಕೊಡುತ್ತಾರೆ. ಕೃಷ್ಣನಿಗೆ ಜ್ಞಾನಸಾಗರನೆಂದು ಹೇಳಲು ಸಾಧ್ಯವಿಲ್ಲ. ಈ ಭೂಮಿಯ ನಾಲ್ಕೂ ಕಡೆ ಸಾಗರವೇ ಸಾಗರವಿದೆ. ಸಾಗರವೆಲ್ಲವೂ ಒಂದೇ ಆಗಿದೆ, ಆದರೆ ಅದನ್ನು ಹಂಚಲಾಗಿದೆ. ನೀವು ವಿಶ್ವದ ಮಾಲೀಕರಾಗುತ್ತೀರೆಂದರೆ ಇಡೀ ಸಾಗರ, ಧರಣಿಗೆ ನೀವು ಮಾಲೀಕರಾಗುತ್ತೀರಿ. ಇದು ನಮ್ಮ ಭಾಗ, ನಮ್ಮ ಎಲ್ಲೆಯ ಒಳಗಡೆ ಬರಬೇಡಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಇಲ್ಲಿ ಸಾಗರದಲ್ಲಿಯೂ ತುಂಡು-ತುಂಡು ಮಾಡಿ ಬಿಟ್ಟಿದ್ದಾರೆ. ನೀವು ತಿಳಿದುಕೊಂಡಿದ್ದೀರಿ - ಇಡೀ ವಿಶ್ವವೇ ಭಾರತವಾಗಿತ್ತು, ಅದಕ್ಕೆ ನೀವು ಮಾಲೀಕರಾಗಿದ್ದಿರಿ. ಗೀತೆಯೂ ಇದೆ, ಬಾಬಾ ತಮ್ಮಿಂದ ನಾವು ಇಂತಹ ರಾಜ್ಯಭಾಗ್ಯವನ್ನು ಪಡೆಯುತ್ತೇವೆ ಯಾವುದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ನೋಡಿ, ನೀರಿಗಾಗಿಯೂ ಜಗಳವಾಗುತ್ತದೆ, ಒಬ್ಬರು ಇನ್ನೊಬ್ಬರಿಗೆ ನೀರು ಕೊಡಬೇಕೆಂದರೆ ಲಕ್ಷಾಂತರ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ನೀವು ಮಕ್ಕಳಿಗೆ ಇಡೀ ವಿಶ್ವದ ರಾಜ್ಯಭಾಗ್ಯವು ಕಲ್ಪದ ಹಿಂದಿನ ತರಹ ಸಿಗುತ್ತಿದೆ. ತಂದೆಯು ಜ್ಞಾನದ ಮೂರನೇ ನೇತ್ರವನ್ನು ಕೊಟ್ಟಿದ್ದಾರೆ. ಜ್ಞಾನದಾತನು ಪರಮಪಿತ ಪರಮಾತ್ಮನಾಗಿದ್ದಾರೆ. ಈ ಸಮಯದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ಬಳಿಯೂ ಈ ಜ್ಞಾನವಿರುವುದಿಲ್ಲ. ಹಾ! ಈ ರೀತಿ ಹೇಳಬಹುದು, ಇವರು ಮೊದಲಿನ ಜನ್ಮದಲ್ಲಿ ಜ್ಞಾನವನ್ನು ಪಡೆದು ಈ ರೀತಿಯಾಗಿದ್ದಾರೆ. ನೀವೇ ಆಗಿದ್ದಿರಿ, ನೀವು ಹೇಳುತ್ತೀರಿ - ಬಾಬಾ, ತಾವು ಅದೇ ಕಲ್ಪದ ಹಿಂದಿನ ತಂದೆಯಾಗಿದ್ದೀರಿ. ತಾವು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಿದ್ದಿರಿ. ತಂದೆಯು ಹೇಳುತ್ತಾರೆ - ನನ್ನ ಮತವು ಬಹಳ ಉದ್ದಗಲವಾಗಿ ಇಲ್ಲ. ಆ ಲೌಕಿಕ ವಿದ್ಯೆಯು ಎಷ್ಟು ದೊಡ್ಡದಾಗಿರುತ್ತದೆ. ಇದಂತೂ ಬಹಳ ಸಹಜವಾಗಿದೆ. ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ನೀವು ತಿಳಿದುಕೊಂಡು ಅನ್ಯರಿಗೆ ತಿಳಿಸುತ್ತಾ ಇರುತ್ತೀರಿ - ಹೇಗೆ 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ ಎಂದು. ಈಗ ತಂದೆಯ ಬಳಿ ಹಿಂತಿರುಗಿ ಹೋಗಬೇಕಾಗಿದೆ. ಇದನ್ನೂ ತಂದೆಯು ತಿಳಿಸಿದ್ದಾರೆ, ಮಕ್ಕಳೇ, ಮಾಯೆಯ ಬಿರುಗಾಳಿಗಳು ಬಹಳಷ್ಟು ಬರುತ್ತವೆ. ಇದಕ್ಕೆ ಹೆದರಬೇಡಿ. ಬೆಳಗ್ಗೆ ಎದ್ದು ಕುಳಿತುಕೊಳ್ಳುತ್ತಾರೆ, ಬುದ್ಧಿಯು ಬೇರೆ-ಬೇರೆ ವಿಚಾರಗಳಲ್ಲಿ ಹೊರಟು ಹೋಗುತ್ತವೆ. ಎರಡು ನಿಮಿಷಗಳೂ ನೆನಪಿರುವುದಿಲ್ಲ. ತಂದೆಯು ಹೇಳುತ್ತಾರೆ, ಸುಸ್ತಾಗಬೇಡಿ. ಒಳ್ಳೆಯದು - ಒಂದು ನಿಮಿಷ ನೆನಪು ಮಾಡಿದಿರಿ ಮತ್ತೆ ನಾಳೆ ಕುಳಿತುಕೊಳ್ಳಿ, ನಾಡಿದ್ದು ಕುಳಿತುಕೊಳ್ಳಿರಿ. ಒಳಗೆ ಇದನ್ನು ಪಕ್ಕಾ ಮಾಡಿಕೊಳ್ಳಿರಿ - ನಾವು ನೆನಪು ಮಾಡಲೇಬೇಕಾಗಿದೆ. ಒಂದುವೇಳೆ ಯಾರಾದರೂ ವಿಕಾರದಲ್ಲಿ ಹೋಗುತ್ತಾ ಇದ್ದರೆ ಮತ್ತೆ ಅನೇಕ ಬಿರುಗಾಳಿಗಳು ಬರುತ್ತವೆ. ಪವಿತ್ರತೆಯೇ ಮುಖ್ಯವಾಗಿದೆ. ಇಂದು ಈ ಪ್ರಪಂಚವು ಪತಿತ ವೇಶ್ಯಾಲಯವಾಗಿದೆ. ನಾಳೆ ಪಾವನ ಶಿವಾಲಯವಾಗುವುದು. ತಿಳಿದುಕೊಂಡಿದ್ದೀರಿ, ಇದು ಹಳೆಯ ಶರೀರವಾಗಿದೆ. ತಂದೆಯನ್ನು ನೆನಪು ಮಾಡುತ್ತಾ ಇದ್ದರೆ ಯಾವುದೇ ಸಮಯದಲ್ಲಿ ಶರೀರ ಬಿಟ್ಟರೂ ಸಹ ಸ್ವರ್ಗದಲ್ಲಿ ಹೋಗಲು ಯೋಗ್ಯರಾಗುತ್ತೀರಿ. ತಂದೆಯಿಂದ ಅಲ್ಪಸ್ವಲ್ಪ ಜ್ಞಾನವನ್ನು ಕೇಳಿರುತ್ತಾರಲ್ಲವೆ. ಇಂತಹವರು ಅನೇಕರಿದ್ದಾರೆ ಯಾರು ಇಲ್ಲಿಂದ ಬಿಟ್ಟು ಹೊರಟು ಹೋಗಿದ್ದಾರೆಯೋ ಅವರೂ ಸಹ ಬಂದು ತಮ್ಮ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ಅಂತ್ಯ ಮತಿ ಸೋ ಗತಿಯಾಗುವುದು. ಉದಾಹರಣೆಗೆ, ಯಾರಾದರೂ ಶರೀರ ಬಿಡುತ್ತಾರೆ, ಜ್ಞಾನದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಮತ್ತೆ ಬಾಲ್ಯದಲ್ಲಿಯೇ ಅವರಿಗೆ ಈ ಜ್ಞಾನದ ಕಡೆ ಸೆಳೆತವಾಗುವುದು. ಭಲೆ ಕರ್ಮೇಂದ್ರಿಯಗಳು ಚಿಕ್ಕದಾಗಿರುವ ಕಾರಣ ಹೇಳಲು ಸಾಧ್ಯವಾಗುವುದಿಲ್ಲ ಆದರೆ ಆಕರ್ಷಣೆಯಾಗುತ್ತದೆ. ಬಾಲ್ಯದಿಂದಲೇ ಒಳ್ಳೆಯ ಸಂಸ್ಕಾರ ಇರುತ್ತದೆ, ಸುಖದಾಯಿಯಾಗುತ್ತಾರೆ. ತಂದೆಯು ಆತ್ಮಕ್ಕೇ ಕಲಿಸುತ್ತಾರಲ್ಲವೆ. ಹೇಗೆ ತಂದೆಯು ಸೈನಿಕರ ಉದಾಹರಣೆಯನ್ನು ತಿಳಿಸುತ್ತಾರೆ - ಯುದ್ಧದ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತಾರೆಂದರೆ ಮತ್ತೆ ಸೈನ್ಯದಲ್ಲಿ ಬಂದು ಸೇರುತ್ತಾರೆ. ಹಾಗೆಯೇ ಶಾಸ್ತ್ರಗಳನ್ನು ಓದುವವರು ಸಂಸ್ಕಾರವನ್ನು ತೆಗೆದುಕೊಂಡು ಹೋಗುವ ಕಾರಣ ಮುಂದಿನ ಜನ್ಮದಲ್ಲಿ ಬಾಲ್ಯದಲ್ಲಿಯೇ ಶಾಸ್ತ್ರಗಳು ಕಂಠಪಾಠವಾಗಿ ಬಿಡುತ್ತದೆ, ಅವರ ಮಹಿಮೆಯೂ ಆಗುತ್ತದೆ. ಅಂದಾಗ ಇಲ್ಲಿಂದ ಯಾರು ಹೋಗುತ್ತಾರೆಯೋ ಅವರದು ಬಾಲ್ಯದಲ್ಲಿಯೇ ಮಹಿಮೆಯಾಗುತ್ತದೆ. ಆತ್ಮವೇ ಜ್ಞಾನವನ್ನು ಧಾರಣೆ ಮಾಡಿಕೊಳ್ಳುತ್ತದೆಯಲ್ಲವೆ. ಬಾಕಿ ಉಳಿದಿರುವ ಲೆಕ್ಕಾಚಾರಗಳನ್ನು ಮುಗಿಸಬೇಕಾಗುತ್ತದೆ. ಸ್ವರ್ಗದಲ್ಲಂತೂ ಬರುತ್ತಾರಲ್ಲವೆ. ತಂದೆಯ ಬಳಿ ಬಂದು ನಮಸ್ಕಾರ ಮಾಡುತ್ತಾರೆ. ಹೀಗೆ ಪ್ರಜೆಗಳಂತೂ ಅನೇಕರಾಗುವರು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವರು. ಅಂತಿಮದಲ್ಲಿನ ಹೇಳಿಕೆಯಿದೆಯಲ್ಲವೆ - ಓಹೋ ಪ್ರಭು! ನಿನ್ನ ಲೀಲೆ ಅಪರಮಪಾರ......
ನೀವೀಗ ತಿಳಿದುಕೊಳ್ಳುತ್ತೀರಿ - ಓಹೋ ಬಾಬಾ! ತಮ್ಮ ಲೀಲೆಯು ಡ್ರಾಮಾ ಪ್ಲಾನನುಸಾರ ಈ ರೀತಿಯಿದೆ, ತಮ್ಮ ಪಾತ್ರವು ಎಲ್ಲಾ ಮನುಷ್ಯ ಮಾತ್ರರಿಗಿಂತ ಭಿನ್ನವಾಗಿದೆ. ಯಾರು ತಂದೆಯ ಸರ್ವೀಸನ್ನು ಚೆನ್ನಾಗಿ ಮಾಡುವರೋ ಅವರಿಗೆ ಬಹಳ ದೊಡ್ಡ ಬಹುಮಾನವು ಸಿಗುತ್ತದೆ. ವಿಜಯಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಇದು ಆತ್ಮಿಕ ಜ್ಞಾನವಾಗಿದೆ, ಆತ್ಮಿಕ ತಂದೆಯೇ ಆತ್ಮರಿಗೆ ಕೊಡುತ್ತಾರೆ. ಮನುಷ್ಯರಂತೂ ಎಲ್ಲರೂ ಶರೀರಗಳನ್ನೇ ನೆನಪು ಮಾಡುತ್ತಾರೆ. ಶಿವಾನಂದ, ಗಂಗೇಶ್ವರಾನಂದ....... ಮೊದಲಾದವರು ಈ ಜ್ಞಾನವನ್ನು ಕೊಡುತ್ತಾರೆಂದು ಹೇಳುತ್ತಾರೆ ಅಂದರೆ ಶರೀರವೇ ನೆನಪಿಗೆ ಬರುತ್ತದೆ. ಇಲ್ಲಂತೂ ನಿರಾಕಾರ ಶಿವ ತಂದೆಯು ಜ್ಞಾನವನ್ನು ಕೊಡುತ್ತಾರೆಂದು ಹೇಳುತ್ತೀರಿ. ನಾನು ಸರ್ವಶ್ರೇಷ್ಠನಾಗಿದ್ದೇನೆ, ನಾನಾತ್ಮನ ಹೆಸರಾಗಿದೆ - ಶಿವ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ಮತ್ತೆ ಬ್ರಹ್ಮಾ-ವಿಷ್ಣು-ಶಂಕರನಿಗೆ ದೇವತಾಯ ನಮಃ ಎಂದು ಹೇಳುತ್ತಾರೆ. ತ್ರಿಮೂರ್ತಿಗಳು ರಚನೆಯಾಗಿದ್ದಾರೆ, ಅವರಿಂದ ಆಸ್ತಿಯು ಸಿಗುವುದಿಲ್ಲ. ನೀವು ಪರಸ್ಪರ ಸಹೋದರ-ಸಹೋದರರಾಗಿದ್ದೀರಿ. ಸಹೋದರರನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದಿಲ್ಲ. ಇವರೂ (ಬ್ರಹ್ಮದಾದಾ) ಸಹ ನಿಮ್ಮ ಸಹೋದರನಾಗಿದ್ದಾರೆ, ವಿದ್ಯಾರ್ಥಿಯಲ್ಲವೆ. ಇವರೂ ಓದುತ್ತಿದ್ದಾರೆ, ಇವರಿಂದ ಆಸ್ತಿಯು ಸಿಗುವುದಿಲ್ಲ. ಇವರೂ ಸಹ ಶಿವ ತಂದೆಯಿಂದಲೇ ಆಸ್ತಿ ಪಡೆಯುತ್ತಿದ್ದಾರೆ, ಮೊದಲು ಇವರು ಕೇಳಿಸಿಕೊಳ್ಳುತ್ತಾರೆ. ನಾನು (ಬ್ರಹ್ಮಾ) ತಂದೆಗೆ ಹೇಳುತ್ತೇನೆ, ಬಾಬಾ ನಾನಂತೂ ನಿಮ್ಮ ಮೊಟ್ಟ ಮೊದಲ ಮಗನಾಗಿದ್ದೇನೆ, ತಮ್ಮಿಂದ ನಾನು ಕಲ್ಪ-ಕಲ್ಪವೂ ಆಸ್ತಿಯನ್ನು ತೆಗೆದುಕೊಳ್ಳುತ್ತೇನೆ. ಕಲ್ಪ-ಕಲ್ಪವೂ ತಮಗೆ ರಥವಾಗುತ್ತೇನೆ. ಶಿವನ ರಥವು ಬ್ರಹ್ಮನಾಗಿದ್ದಾರೆ, ಬ್ರಹ್ಮನ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತದೆ. ನೀವು ಬ್ರಾಹ್ಮಣರೂ ಸಹ ಸಹಯೋಗಿಗಳಾಗಿದ್ದೀರಿ. ನಂತರ ನೀವು ಮಾಲೀಕರಾಗುತ್ತೀರಿ. ಈಗ ನಿಮಗೆ ತಿಳಿದಿದೆ, ನಾವು 5000 ವರ್ಷಗಳ ಹಿಂದಿನ ತರಹ ತಂದೆಯ ಮೂಲಕ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆ. ಯಾರು ಕಲ್ಪದ ಹಿಂದೆ ರಾಜ್ಯಭಾಗ್ಯವನ್ನು ತೆಗೆದುಕೊಂಡಿದ್ದರೋ ಅವರೇ ಬರುತ್ತಾರೆ. ಪ್ರತಿಯೊಬ್ಬರ ಪುರುಷಾರ್ಥದಿಂದಲೇ ಯಾರು ಮಹಾರಾಜ-ಮಹಾರಾಣಿಯಾಗುತ್ತಾರೆ, ಯಾರು ಪ್ರಜೆಗಳಾಗುತ್ತಾರೆ ಎಂಬುದು ಅರ್ಥವಾಗುತ್ತದೆ. ಕೊನೆಯಲ್ಲಿ ನಿಮಗೆ ಎಲ್ಲವೂ ಸಾಕ್ಷಾತ್ಕಾರವಾಗುವುದು. ಎಲ್ಲವೂ ಪುರುಷಾರ್ಥದ ಮೇಲೆ ಅವಲಂಭಿಸಿದೆ. ಬಲಿಹಾರಿಯಾಗಬೇಕಾಗಿದೆ. ತಂದೆಯು ಹೇಳುತ್ತಾರೆ - ನಾನು ಬಡವರ ಬಂಧುವಾಗಿದ್ದೇನೆ, ನೀವು ಬಡವರೇ ನನಗೆ ಬಲಿಹಾರಿಯಾಗುತ್ತೀರಿ. ಯಾವಾಗಲೂ ದಾನವನ್ನು ಬಡವರಿಗೇ ಮಾಡಲಾಗುತ್ತದೆ. ಉದಾಹರಣೆಗೆ, ಯಾರಾದರೂ ಕಾಲೇಜು ಕಟ್ಟಿಸುತ್ತಾರೆ ಅದೇನೂ ಬಡವರಿಗೆ ದಾನವಾಗುವುದಿಲ್ಲ. ಅದೇನೂ ಈಶ್ವರಾರ್ಥವಾಗಿ ಕೊಡುವುದಾಗಲಿಲ್ಲ ಆದರೆ ದಾನವನ್ನಂತೂ ಮಾಡುತ್ತಾರಲ್ಲವೆ. ಕಾಲೇಜು ತೆರೆಯುತ್ತಾರೆಂದರೆ ಅದಕ್ಕೆ ಫಲವು ಸಿಗುತ್ತದೆ. ಇನ್ನೊಂದು ಜನ್ಮದಲ್ಲಿ ಚೆನ್ನಾಗಿ ಓದುತ್ತಾರೆ. ಇದು ಆಶೀರ್ವಾದ ಸಿಗುತ್ತದೆ. ಭಾರತದಲ್ಲಿಯೇ ಎಲ್ಲದಕ್ಕಿಂತ ಹೆಚ್ಚು ದಾನ-ಪುಣ್ಯವಾಗುತ್ತದೆ. ಈ ಸಮಯದಲ್ಲಿ ಬಹಳ ದಾನವಾಗುತ್ತದೆ. ನೀವು ತಂದೆಗೆ ದಾನ ಮಾಡುತ್ತೀರಿ, ತಂದೆಯು ನಿಮಗೆ ದಾನ ಮಾಡುತ್ತಾರೆ. ನಿಮ್ಮಿಂದ ಕೆಲಸಕ್ಕೆ ಬಾರದೇ ಇರುವುದನ್ನು ತೆಗೆದುಕೊಂಡು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಈ ಸಮಯದಲ್ಲಿ ನೀವು ತನು-ಮನ-ಧನ ಎಲ್ಲವನ್ನೂ ತಂದೆಗೆ ದಾನವಾಗಿ ಕೊಡುತ್ತೀರಿ. ಮನುಷ್ಯರಾದರೆ ಶರೀರ ಬಿಡುವಾಗ ವ್ಹಿಲ್ ಮಾಡಿ ಹೋಗುತ್ತಾರೆ- ಇಂತಹ ಆಶ್ರಮಕ್ಕೆ ಕೊಡುವುದು ಅಥವಾ ಇದು ಆರ್ಯ ಸಮಾಜದವರಿಗೆ ಸಿಗಲಿ ಎಂದು. ವಾಸ್ತವದಲ್ಲಿ ಯಾರು ಹಸಿವಿನಿಂದ ಇರುತ್ತಾರೆಯೋ ಅಂತಹ ಬಡವರಿಗೆ ದಾನ ಕೊಡಬೇಕಾಗಿದೆ. ಈಗ ಭಾರತವು ಬಡ ದೇಶವಾಗಿದೆಯಲ್ಲವೆ. ಸ್ವರ್ಗದಲ್ಲಿ ಭಾರತವು ಎಷ್ಟು ಸಾಹುಕಾರನಾಗಿರುತ್ತದೆ! ನೀವು ತಿಳಿದುಕೊಂಡಿದ್ದೀರಿ, ಅಲ್ಲಿ ನಿಮ್ಮ ಬಳಿ ಎಷ್ಟು ಆಹಾರ-ದಾನ್ಯ ಇತ್ಯಾದಿಗಳಿರುತ್ತದೆಯೋ ಅಷ್ಟು ಮತ್ತ್ಯಾರ ಬಳಿಯೂ ಇರುವುದಿಲ್ಲ. ಅಲ್ಲಂತೂ ಯಾವುದಕ್ಕೂ ಹಣ ಕೊಡಬೇಕಾಗುವುದಿಲ್ಲ. ಹಿಡಿ ಅವಲಕ್ಕಿಯನ್ನು ಈಗ ದಾನ ಮಾಡುತ್ತೀರೆಂದರೆ ಅದಕ್ಕೆ ಪ್ರತಿಯಾಗಿ 21 ಜನ್ಮಗಳಿಗಾಗಿ ಮಹಲು ಸಿಗುತ್ತದೆ, ಆಸ್ತಿಯೂ ಸಿಗುತ್ತದೆ. ಈಗ ತತ್ವಗಳು ತಮೋಪ್ರಧಾನವಾಗಿರುವ ಕಾರಣ ದುಃಖ ಕೊಡುತ್ತದೆ, ಅಲ್ಲಿ ತತ್ವಗಳೂ ಸತೋಪ್ರಧಾನವಾಗಿರುತ್ತವೆ. ಸತ್ಯಯುಗದಲ್ಲಿ ಯಾರು-ಯಾರು ಬರುತ್ತಾರೆ ಮತ್ತೆ ದ್ವಾಪರದಲ್ಲಿ ಯಾರು ಬರುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಕಲಿಯುಗದ ಅಂತಿಮದಲ್ಲಿ ಚಿಕ್ಕ-ಚಿಕ್ಕ ರೆಂಬೆಗಳು ಅಂದರೆ ಮತಪಂಥ ಇತ್ಯಾದಿಗಳು ಹುಟ್ಟಿಕೊಳ್ಳುತ್ತಾ ಇರುತ್ತವೆ. ಈಗ ನಿಮ್ಮ ಬುದ್ಧಿಯಲ್ಲಿ ಕಲ್ಪವೃಕ್ಷ, ಸೃಷ್ಟಿನಾಟಕದ ಜ್ಞಾನವಿದೆ, ತಂದೆಯ ಪಾತ್ರವನ್ನೂ ಅರಿತುಕೊಂಡಿದ್ದೀರಿ. ಮಹಾಭಾರತ ಯುದ್ಧದಲ್ಲಿ ಪಂಚ ಪಾಂಡವರು ಉಳಿದರು ಎಂದು ತೋರಿಸುತ್ತಾರೆ. ಒಳ್ಳೆಯದು - ನಂತರ ಏನಾಯಿತು? ಅವಶ್ಯವಾಗಿ ಯಾರು ರಾಜಯೋಗವನ್ನು ಕಲಿತರೋ ಅವರೇ ಹೋಗಿ ರಾಜ್ಯಭಾರ ಮಾಡುತ್ತಾರಲ್ಲವೆ. ಮೊದಲು ನೀವೂ ಸಹ ಏನನ್ನೂ ತಿಳಿದುಕೊಂಡಿರಲಿಲ್ಲ. ಬ್ರಹ್ಮಾ ತಂದೆಯು ಮೊದಲು ಗೀತೆಯನ್ನು ಓದುತ್ತಿದ್ದರು, ನಾರಾಯಣನ ಭಕ್ತಿ ಮಾಡುತ್ತಿದ್ದರು. ಗೀತೆಯ ಜೊತೆ ಬಹಳ ಪ್ರೀತಿಯಿತ್ತು. ರೈಲಿನಲ್ಲಿ ಹೋಗುವಾಗಲೂ ಗೀತೆಯನ್ನು ಓದುತ್ತಿದ್ದರು. ಆದರೆ ನೋಡಿದರೂ ಇದರಿಂದ ಏನೂ ಅರ್ಥವಾಗಲಿಲ್ಲ. ಭಕ್ತಿಮಾರ್ಗದಲ್ಲಿ ಏನೆಲ್ಲವನ್ನು ಮಾಡುತ್ತಾ ಬಂದರು ಆದರೆ ಉದ್ಧಾರವಂತೂ ಆಗಲಿಲ್ಲ. ಪ್ರಪಂಚದಲ್ಲಿ ಎಷ್ಟೊಂದು ಕಲಹವಿದೆ, ಇಲ್ಲಿಯೂ ಸಹ ಎಲ್ಲರೂ ಪವಿತ್ರರಾಗಲು ಸಾಧ್ಯವಿಲ್ಲ. ಆದ್ದರಿಂದಲೇ ಪವಿತ್ರತೆಗಾಗಿ ಗಲಾಟೆಗಳಾಗುತ್ತವೆ. ತಂದೆಯ ಆಶ್ರಯವನ್ನೂ ತೆಗೆದುಕೊಳ್ಳುತ್ತಾರೆ ಆದರೂ ತಂದೆಯು ಹೇಳುತ್ತಾರೆ - ಮಕ್ಕಳೇ, ಕಾಯಿಲೆಯು ಅವಶ್ಯವಾಗಿ ಹೆಚ್ಚಾಗುವುದು. ಮಕ್ಕಳು ಮೊದಲಾದವರು ನೆನಪಿಗೆ ಬರುವರು ಆದರೆ ಇದರಲ್ಲಿ ನಷ್ಟಮೋಹಿಗಳಾಗಬೇಕಾಗಿದೆ. ತಿಳಿದುಕೊಳ್ಳಿ, ನಾವು ಸತ್ತು ಹೋಗಿದ್ದೇವೆ, ತಂದೆಯವರಾದೆವು ಅರ್ಥಾತ್ ಈ ಪ್ರಪಂಚದಿಂದ ಸತ್ತೆವು ಮತ್ತೆ ಶರೀರ ಭಾನವೂ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ಏನೆಲ್ಲಾ ಸಂಬಂಧಗಳಿದೆಯೋ ಅದನ್ನು ಮರೆಯಬೇಕಾಗಿದೆ. ಈ ಪ್ರಪಂಚದಲ್ಲಿ ಏನೆಲ್ಲವನ್ನು ನೋಡುತ್ತೀರೋ ಅದೆಲ್ಲವೂ ಇಲ್ಲವೇ ಇಲ್ಲ. ಈ ಹಳೆಯ ಶರೀರವನ್ನೂ ಬಿಡಬೇಕಾಗಿದೆ. ನಾವು ಮನೆಗೆ ಹೋಗಬೇಕಾಗಿದೆ. ಮನೆಗೆ ಹೋಗಿ ನಂತರ ಬಂದು ಹೊಸ ಸುಂದರ ಶರೀರವನ್ನು ತೆಗೆದುಕೊಳ್ಳುತ್ತೀರಿ. ಈಗ ಶ್ಯಾಮ ಆಗಿದ್ದೀರಿ, ಈಗ ಸುಂದರರಾಗುತ್ತೀರಿ. ಭಾರತವು ಈಗ ಶ್ಯಾಮ ಅರ್ಥಾತ್ ಪತಿತನಾಗಿದೆ ಮತ್ತೆ ಇದೇ ಸುಂದರವಾಗುವುದು. ಈಗ ಭಾರತವು ಮುಳ್ಳುಗಳ ಕಾಡಾಗಿದೆ. ಎಲ್ಲರೂ ಒಬ್ಬರು ಇನ್ನೊಬ್ಬರನ್ನು ಕುಟುಕುತ್ತಾ ಇರುತ್ತಾರೆ. ಯಾವುದೇ ಮಾತಿನಲ್ಲಿ ಮುನಿಸಿಕೊಂಡರೆ ಸಾಕು, ನಿಂದನೆ ಮಾಡುತ್ತಾರೆ ಹೊಡೆದಾಡುತ್ತಾರೆ. ನೀವು ಮಕ್ಕಳು ಮನೆಯಲ್ಲಿಯೂ ಬಹಳ ಮಧುರರಾಗಿ ಇರಬೇಕಾಗಿದೆ. ಇಲ್ಲದಿದ್ದರೆ ಇವರು ಪಂಚ ವಿಕಾರಗಳನ್ನು ದಾನ ಮಾಡಿದ್ದಾರೆ ಮತ್ತೇಕೆ ಕ್ರೋಧ ಮಾಡಿಕೊಳ್ಳುತ್ತಾರೆ? ಬಹುಷಃ ಕ್ರೋಧವನ್ನು ದಾನ ಮಾಡಲಿಲ್ಲವೆಂದು ಮನುಷ್ಯರು ಹೇಳತೊಡಗುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಜೋಳಿಗೆಯಲ್ಲಿ ಐದು ವಿಕಾರಗಳ ದಾನವನ್ನು ಕೊಟ್ಟು ಬಿಡಿ ಆಗ ನಿಮ್ಮ ಗ್ರಹಣ ಬಿಟ್ಟು ಹೋಗುವುದು. ಚಂದ್ರಮನಿಗೆ ಗ್ರಹಣ ಹಿಡಿಯುತ್ತದೆಯಲ್ಲವೆ. ನೀವೂ ಸಹ ಈಗ ಸಂಪೂರ್ಣರಾಗುತ್ತೀರಿ ಆದ್ದರಿಂದ ಈ ವಿಕಾರಗಳನ್ನು ದಾನವಾಗಿ ಕೊಟ್ಟುಬಿಡಿ. ನಿಮಗೆ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆಯೆಂದು ತಂದೆಯು ಹೇಳುತ್ತಾರೆ. ಆತ್ಮಕ್ಕೆ ತಂದೆಯಿಂದಲೇ ಆಸ್ತಿಯು ಸಿಗುತ್ತದೆ. ಆತ್ಮವು ಹೇಳುತ್ತದೆ - ಈ ಹಳೆಯ ಪ್ರಪಂಚದಲ್ಲಿ ಇನ್ನು ಸ್ವಲ್ಪವೇ ಸಮಯವಿದೆ, ಎಲ್ಲಾ ಕೆಲಸವನ್ನು ಇಳಿಸಿಕೊಳ್ಳಬೇಕಾಗಿದೆ. ಎಲ್ಲಾ ವಿಚಾರಗಳನ್ನು ಕಡಿಮೆ ಮಾಡಿಕೊಳ್ಳಬೇಕು, ತಂದೆಗೆ ಗೊತ್ತಿದೆ - ಅನೇಕ ಪ್ರಕಾರದ ವಿಚಾರಗಳು ಬರುತ್ತವೆ. ಉದ್ಯೋಗ-ವ್ಯವಹಾರಗಳ ವಿಚಾರಗಳು ಬರುತ್ತವೆ, ಭಕ್ತಿಮಾರ್ಗದಲ್ಲಿ ಭಕ್ತಿ ಮಾಡುವ ಸಮಯದಲ್ಲಿ ಗ್ರಾಹಕರು ಉದ್ಯೋಗ-ವ್ಯಾಪಾರಗಳು ನೆನಪಿಗೆ ಬಂದರೆ ತಮಗೆ ತಾವೇ ಪೆಟ್ಟು ಕೊಟ್ಟುಕೊಳ್ಳುತ್ತಾರೆ. ನಾನು ನಾರಾಯಣನ ನೆನಪಿನಲ್ಲಿ ಕುಳಿತಿದ್ದೇನೆ ಅಂದಮೇಲೆ ಮತ್ತೆ ಈ ಮಾತುಗಳು ಏಕೆ ನೆನಪಿಗೆ ಬಂದಿತು! ಇಲ್ಲಿಯೂ ಅದೇ ರೀತಿ ಆಗುತ್ತದೆ. ಯಾವಾಗ ಈ ಆತ್ಮಿಕ ಸೇವೆಯಲ್ಲಿ ಚೆನ್ನಾಗಿ ತೊಡಗುವರೋ ಆಗ ತಿಳಿಸಲಾಗುತ್ತದೆ - ಒಳ್ಳೆಯದು, ಉದ್ಯೋಗ-ವ್ಯವಹಾರಗಳನ್ನು ಬಿಡಿ, ತಂದೆಯ ಸೇವೆಯಲ್ಲಿ ತೊಡಗಿರಿ. ಬಿಟ್ಟರೆ ಬಿಡುಗಡೆಯಾಗುತ್ತದೆ ಎಂದು ಹೇಳುತ್ತಾರೆ. ದೇಹಾಭಿಮಾನವನ್ನು ಬಿಡುತ್ತಾ ಹೋದಿರಿ. ಕೇವಲ ತಂದೆಯನ್ನು ನೆನಪು ಮಾಡಿರಿ ಆಗ ಮಂಗನಿಂದ ಮಂದಿರ ಯೋಗ್ಯರಾಗುವಿರಿ. ಭ್ರಮರಿ, ಆಮೆಯ ಎಲ್ಲಾ ಉದಾಹರಣೆಗಳನ್ನು ತಂದೆಯು ಕೊಡುತ್ತಾರೆ. ಇದನ್ನು ಭಕ್ತಿಮಾರ್ಗದಲ್ಲಿಯೂ ಮನುಷ್ಯರು ಉದಾಹರಣೆಯಾಗಿ ತಿಳಿಸುತ್ತಾರೆ. ಆ ಕೀಟಗಳು ಯಾರು ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಬ್ರಾಹ್ಮಿಣಿಯರಾಗಿದ್ದೀರಿ, ಜ್ಞಾನದ ಭೂ ಭೂ ಮಾಡುತ್ತೀರಿ. ಈ ದೃಷ್ಟಾಂತವು ಈಗಿನದಾಗಿದೆ, ಅವರು ತಿಳಿಸಲು ಸಾಧ್ಯವಿಲ್ಲ. ಹಬ್ಬಗಳೆಲ್ಲವೂ ಈ ಸಮಯದ್ದಾಗಿದೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಹಬ್ಬವಾಗುವುದಿಲ್ಲ, ಇವೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಈಗ ನೋಡಿ, ಕೃಷ್ಣ ಜಯಂತಿಯಾಯಿತು, ಮಣ್ಣಿನಿಂದ ಕೃಷ್ಣನನ್ನು ಮಾಡಿ ಪೂಜೆ ಮಾಡಿ ಮತ್ತೆ ಕೆರೆಯಲ್ಲಿ ಮುಳುಗಿಸಿದರು. ಇವರು ಏನು ಮಾಡುತ್ತಾರೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಇದು ಅಂಧಶ್ರದ್ಧೆಯಾಗಿದೆ. ನೀವು ಯಾರಿಗೆ ತಿಳಿಸಿದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ. ಯಾರಿಗಾದರೂ ಕಾಯಿಲೆಯಾದರೆ ನೋಡಿ ನೀವು ಕೃಷ್ಣನ ಪೂಜೆಯನ್ನು ಬಿಟ್ಟಿರಿ ಆದ್ದರಿಂದಲೇ ಈ ಸ್ಥಿತಿಯಾಯಿತು ಎಂದು ಹೇಳತೊಡಗುತ್ತಾರೆ. ಹೀಗೆ ಅನೇಕರು ಆಶ್ಚರ್ಯವೆನಿಸುವಂತೆ ಕೇಳುತ್ತಾ-ಹೇಳುತ್ತಾ ಮತ್ತೆ ಬಿಟ್ಟು ಹೊರಟು ಹೋಗುತ್ತಾರೆ ಆದ್ದರಿಂದ ಬ್ರಾಹ್ಮಣರ ಮಾಲೆಯು ತಯಾರಾಗುವುದಿಲ್ಲ. ಈ ಬ್ರಾಹ್ಮಣ ಕುಲಭೂಷಣರು ಶ್ರೇಷ್ಠರಾಗಿದ್ದಾರೆ ಆದರೆ ಮಾಲೆಯು ಮಾತ್ರ ತಯಾರಾಗುವುದಿಲ್ಲ ಏಕೆಂದರೆ ಬದಲಾಗುತ್ತಿರುತ್ತಾರೆ. ನಿಮ್ಮ ಬುದ್ಧಿಯಲ್ಲಿದೆ, ಇದು ಶಿವ ತಂದೆಯ ಮಾಲೆಯಾಗಿದೆ ನಂತರ ನಾವು ಹೋಗಿ ಸತ್ಯಯುಗದಲ್ಲಿ ನಂಬರ್ವಾರ್ ವಿಷ್ಣುವಿನ ಮಾಲೆಯ ಮಣಿಯಾಗುತ್ತೇವೆ. ನಿಮ್ಮ ಒಂದೊಂದು ಶಬ್ಧವು ಈ ರೀತಿಯಿದೆ, ಅದು ಯಾರಿಗೂ ಅರ್ಥವಾಗುವುದಿಲ್ಲ. ತಂದೆಯು ಓದಿಸುತ್ತಾ ಇರುತ್ತಾರೆ, ವೃದ್ಧಿಯಾಗುತ್ತಾ ಇರುತ್ತದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಇರುತ್ತಾರೆ, ನಾವು ಹೋಗಿ ತಿಳಿದುಕೊಳ್ಳುತ್ತೇವೆ ಎಂದು ಹೇಳಿ ಹೋಗುತ್ತಾರೆ. ಮನೆಗೆ ಹೋದಮೇಲೆ ಸಮಾಪ್ತಿ. ಇಲ್ಲಿಯದು ಇಲ್ಲಿಯೇ ಉಳಿಯುವುದು. ಪ್ರಭುವಿನೊಂದಿಗೆ ಮಿಲನ ಮಾಡಲು ಬಹಳ ಒಳ್ಳೆಯ ಮಾರ್ಗವನ್ನು ತಿಳಿಸುತ್ತಾರೆಂದು ಹೇಳುತ್ತಾರೆ ಆದರೆ ನಾವು ಅದರಂತೆ ನಡೆಯಬೇಕು, ಆಸ್ತಿಯನ್ನು ಪಡೆಯಬೇಕು ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ. ಬ್ರಹ್ಮಾಕುಮಾರಿಯರು ಬಹಳ ಒಳ್ಳೆಯ ಸೇವೆ ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ. ಅರೆ! ನೀವೂ ತಿಳಿದುಕೊಳ್ಳಿರಿ, ದೈಹಿಕ ಸೇವೆಯನ್ನಂತೂ ಮಾಡುತ್ತಾ ಇರುತ್ತೀರಿ. ಈಗ ಈ ಆತ್ಮಿಕ ಸೇವೆ ಮಾಡಿರಿ. ಸಂಘ ಸಂಸ್ಥೆಗಳ ಸೇವೆಯನ್ನು ಎಲ್ಲಾ ಮನುಷ್ಯರು ಮಾಡುತ್ತಾರೆ. ಸುಮ್ಮನೆ ಯಾರೂ ಸೇವೆ ಮಾಡುವುದಿಲ್ಲ, ಇಲ್ಲದಿದ್ದರೆ ತಿನ್ನುವುದಕ್ಕೆ ಎಲ್ಲಿಂದ ಬರುತ್ತದೆ? ನೀವು ಮಕ್ಕಳು ಬಹಳ ಸೇವೆ ಮಾಡುತ್ತೀರಿ. ನಿಮಗೆ ಭಾರತದ ಬಗ್ಗೆ ಬಹಳ ದಯೆ ಬರುತ್ತದೆ, ನಮ್ಮ ಭಾರತವು ಹೇಗಿತ್ತು ನಂತರ ರಾವಣನು ಯಾವ ಗತಿಯಲ್ಲಿ ತಂದಿದ್ದಾನೆ? ನಾವೀಗ ತಂದೆಯ ಶ್ರೀಮತದಂತೆ ನಡೆದು ಅವಶ್ಯವಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ.
ನೀವು ತಿಳಿದುಕೊಂಡಿದ್ದೀರಿ, ನಾವು ಸಂಗಮಯುಗ ವಾಸಿಗಳಾಗಿದ್ದೇವೆ ಉಳಿದೆಲ್ಲರೂ ಕಲಿಯುಗಿಗಳಾಗಿದ್ದಾರೆ. ನಾವು ಆ ತೀರವನ್ನು ಸೇರುತ್ತಿದ್ದೇವೆ. ಯಾರು ತಂದೆಯ ನೆನಪಿನಲ್ಲಿ ಚೆನ್ನಾಗಿ ಇರುವರೋ ಅವರು ಹಾಗೆಯೇ ಕುಳಿತಲ್ಲಿಯೇ ನೆನಪು ಮಾಡುತ್ತಾ-ಮಾಡುತ್ತಾ ಶರೀರ ಬಿಟ್ಟು ಬಿಡುತ್ತಾರೆ. ಮತ್ತೆ ಆತ್ಮವು ಹಿಂತಿರುಗಿ ಬರುವುದಿಲ್ಲ. ಕುಳಿತು-ಕುಳಿತಿದ್ದಂತೆಯೇ ತಂದೆಯ ನೆನಪಿನಲ್ಲಿ ಹೊರಟುಹೋದರು. ಇಲ್ಲಿ ಯಾವುದೇ ಹಠಯೋಗದ ಮಾತಿಲ್ಲ. ಹೇಗೆ ನೋಡುತ್ತೀರಿ, ಅವರು ಧ್ಯಾನದಲ್ಲಿ ಕುಳಿತು ಕುಳಿತಲ್ಲಿಯೇ ಹೊರಟು ಹೋಗುತ್ತಾರೆ. ಹಾಗೆಯೇ ನೀವೂ ಈ ಶರೀರವನ್ನು ಬಿಟ್ಟು ಬಿಡುತ್ತೀರಿ. ಸೂಕ್ಷ್ಮವತನಕ್ಕೆ ಹೋಗಿ ನಂತರ ತಂದೆಯ ಬಳಿಗೆ ಹೋಗುತ್ತೀರಿ. ಯಾರು ನೆನಪಿನ ಯಾತ್ರೆಯ ಹೆಚ್ಚು ಪರಿಶ್ರಮ ಪಡುವರೋ ಅವರು ಇದೇರೀತಿ ಶರೀರ ಬಿಡುತ್ತಾರೆ, ಸಾಕ್ಷಾತ್ಕಾರವಾಗುತ್ತದೆ. ಹೇಗೆ ಯಜ್ಞದ ಆದಿಯಲ್ಲಿ ಕೆಲವರಿಗೆ ಬಹಳ ಸಾಕ್ಷಾತ್ಕಾರವಾಯಿತು ಹಾಗೆಯೇ ಅಂತಿಮದಲ್ಲಿಯೂ ನೀವು ಬಹಳಷ್ಟು ನೋಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಂದಿರಕ್ಕೆ ಯೋಗ್ಯರಾಗಲು ದೇಹಾಭಿಮಾನವನ್ನು ಬಿಡಬೇಕಾಗಿದೆ. ಆತ್ಮಿಕ ಸೇವೆಯಲ್ಲಿ ತೊಡಗಬೇಕಾಗಿದೆ.
2. ಈಗ ಮನೆಗೆ ಹೋಗುವ ಸಮಯವಾಗಿದೆ ಆದ್ದರಿಂದ ಏನೆಲ್ಲವೂ ಲೆಕ್ಕಾಚಾರವಿದೆಯೋ, ಉದ್ಯೋಗ-ವ್ಯವಹಾರಗಳ ಯೋಚನೆಯಿದೆಯೋ ಅದನ್ನು ಇಳಿಸಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆಯ ಪರಿಶ್ರಮ ಪಡಬೇಕಾಗಿದೆ.
ಓಂ ಶಾಂತಿ. ಮಕ್ಕಳ ಮುಂದೆ ನಿರಾಕಾರ ಪರಮಪಿತ ಪರಮಾತ್ಮನು ಮಾತನಾಡುತ್ತಿದ್ದಾರೆ, ಇದನ್ನು ಮಕ್ಕಳೇ ತಿಳಿದುಕೊಂಡಿದ್ದೀರಿ. ಭಗವಂತನಿಗೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಅವರ ಧಾಮವೂ ಶ್ರೇಷ್ಠವಾಗಿದೆ. ಅವರು ಇರುವ ಸ್ಥಾನವಂತೂ ಪ್ರಸಿದ್ಧವಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ಮೂಲವತನದ ನಿವಾಸಿಗಳಾಗಿದ್ದೇವೆ. ಮನುಷ್ಯರಿಗೆ ಇವೆಲ್ಲಾ ಮಾತುಗಳ ಬಗ್ಗೆ ಏನೂ ತಿಳಿದಿಲ್ಲ. ಪರಮಾತ್ಮನು ಹೇಳುತ್ತಾರೆ - ನೀವು ಮಕ್ಕಳ ವಿನಃ ಮತ್ತ್ಯಾವ ಮನುಷ್ಯರಿಗೂ ಸಹ ನಿರಾಕಾರ ಭಗವಂತನೇ ಮಾತನಾಡುತ್ತಾರೆಂದು ತಿಳಿದಿರುವುದಿಲ್ಲ. ನಿರಾಕಾರನಾಗಿರುವ ಕಾರಣ ಭಗವಂತನು ಹೇಗೆ ಮಾತನಾಡುತ್ತಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಇದು ತಿಳಿಯದ ಕಾರಣ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈಗ ಮಕ್ಕಳ ಮುಂದೆ ಮಾತನಾಡುತ್ತಿದ್ದಾರೆ. ಸನ್ಮುಖದಲ್ಲಿ ಇಲ್ಲದೇ ಇದ್ದರೆ ಕೇಳಲು ಸಾಧ್ಯವಿಲ್ಲ. ದೂರದಿಂದ ಭಲೆ ಕೇಳಿಸಿಕೊಳ್ಳುತ್ತಾರೆ ಆದರೆ ನಿಶ್ಚಯವಾಗುವುದಿಲ್ಲ. ಭಗವಾನುವಾಚವನ್ನು ಕೇಳುವುದಂತೂ ಕೇಳುತ್ತಾರೆ ಆದರೆ ಯಥಾರ್ಥ ರೀತಿಯಿಂದ ನೀವೇ ತಿಳಿದುಕೊಳ್ಳುತ್ತೀರಿ. ಭಗವಂತನು ಶಿವ ತಂದೆಯಾಗಿದ್ದಾರೆ, ಆ ತಂದೆಯು ನಮಗೆ ಜ್ಞಾನ ತಿಳಿಸುತ್ತಿದ್ದಾರೆ ಎಂಬುದನ್ನು ನೀವೇ ಪ್ರತ್ಯಕ್ಷದಲ್ಲಿ ತಿಳಿದುಕೊಂಡಿದ್ದೀರಿ. ನಿಮ್ಮ ಬುದ್ಧಿಯು ಕೂಡಲೇ ಮೇಲೆ ಹೋಗುತ್ತದೆ. ಶಿವ ತಂದೆಯು ಅತೀ ಮೇಲಿನ ಧಾಮದ ನಿವಾಸಿಯಾಗಿದ್ದಾರೆ. ಹೇಗೆ ಯಾವುದೇ ದೊಡ್ಡ ವ್ಯಕ್ತಿ ರಾಜಾ-ರಾಣಿ ಮೊದಲಾದವರು ಬರುತ್ತಾರೆಂದರೆ ಇವರು ಇಂತಹ ಕಡೆಯಿರುವವರು ಈ ಸಮಯದಲ್ಲಿ ಇಲ್ಲಿಗೆ ಬಂದಿದ್ದಾರೆಂದು ತಿಳಿದಿರುತ್ತದೆ. ನೀವು ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಕರೆದುಕೊಂಡು ಹೋಗಲು ಬಂದಿದ್ದಾರೆ. ನಾವೂ ಸಹ ತಂದೆಯ ಜೊತೆ ಹಿಂತಿರುಗಿ ಹೋಗುತ್ತೇವೆ. ನಾವು ಪರಮಧಾಮದ ನಿವಾಸಿಗಳಾಗಿದ್ದೇವೆ. ಈಗ ನಿಮಗೆ ತಂದೆ ಮತ್ತು ಮನೆಯ ನೆನಪು ಬರುತ್ತದೆ. ಆ ತಂದೆಯೇ ಸೃಷ್ಟಿಯ ರಚಯಿತನಾಗಿದ್ದಾರೆ. ತಂದೆಯು ಬಂದು ನೀವು ಮಕ್ಕಳಿಗೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ರಹಸ್ಯವನ್ನು ತಿಳಿಸಿದ್ದಾರೆ. ಯಾರ ಬುದ್ಧಿಯಲ್ಲಿ ಇರುವುದೋ ಅವರು ತಿಳಿದುಕೊಳ್ಳುತ್ತಾರೆ. ಅವಶ್ಯವಾಗಿ ಭವಿಷ್ಯ 21 ಜನ್ಮಗಳಿಗಾಗಿ ತಂದೆಯಿಂದ ಆಸ್ತಿಯನ್ನು ಪಡೆಯಲು ನಾವು ಪುರುಷಾರ್ಥ ಮಾಡುತ್ತಿದ್ದೇವೆ. ಪುರುಷಾರ್ಥವನ್ನಂತೂ ಮಾಡಲೇಬೇಕಾಗಿದೆ. ಪುರುಷಾರ್ಥವನ್ನೆಂದೂ ಬಿಡಬಾರದು. ಶಾಲೆಯ ಮಕ್ಕಳಿಗೆ ತಿಳಿದಿರುತ್ತದೆ, ಪರೀಕ್ಷೆಯು ಮುಗಿಯುವವರೆಗೂ ನಾವು ಓದಲೇಬೇಕಾಗಿದೆ. ಇದೇ ಗುರಿ-ಧ್ಯೇಯವಿರುತ್ತದೆ. ನಾವು ಬಹಳ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುತ್ತೇವೆ. ಒಂದು ಕಾಲೇಜನ್ನು ಬಿಟ್ಟು ಇನ್ನೊಂದು, ಮತ್ತೊಂದು ಕಾಲೇಜಿಗೆ ಹೋಗುತ್ತೀರಿ ಅಂದರೆ ಅರ್ಥವೇನೆಂದರೆ ಓದುತ್ತಲೇ ಇರಬೇಕಾಗಿದೆ. ದೊಡ್ಡ ವ್ಯಕ್ತಿಗಳ ಮಕ್ಕಳಾಗಿದ್ದರೆ ಅವಶ್ಯವಾಗಿ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡುವ ವಿಚಾರವಿರುತ್ತದೆ. ನಾವು ಬಹಳ ದೊಡ್ಡ ತಂದೆಯ ಮಕ್ಕಳಾಗಿದ್ದೇವೆ. ನಾವು ಶಿವ ತಂದೆಯ ಸಂತಾನರಾಗಿದ್ದೇವೆ ಎಂದು ಪ್ರಪಂಚದಲ್ಲಿ ಯಾರಿಗೂ ಗೊತ್ತಿಲ್ಲ. ನೀವು ಬಹಳ ದೊಡ್ಡ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಕ್ಕಳಾಗಿದ್ದೀರಿ. ಬಹಳ ದೊಡ್ಡ ವಿದ್ಯೆಯನ್ನು ಓದುತ್ತೀರಿ. ನಿಮಗೆ ತಿಳಿದಿದೆ, ಇದು ಬಹಳ ಶ್ರೇಷ್ಠವಾದ ವಿದ್ಯೆಯಾಗಿದೆ, ಓದಿಸುವವರು ತಂದೆಯಾಗಿದ್ದಾರೆ ಅಂದಮೇಲೆ ಎಷ್ಟೊಂದು ಉಮ್ಮಂಗ ಮತ್ತು ಖುಷಿಯಲ್ಲಿ ಇರಬೇಕು! ಇದನ್ನು ಯಾರಿಗೆ ಬೇಕಾದರೂ ತಿಳಿಸಬಲ್ಲಿರಿ - ನಾವು ಬಹಳ ದೊಡ್ಡ ತಂದೆಯ ಮಕ್ಕಳಾಗಿದ್ದೇವೆ. ಬಹಳ ದೊಡ್ಡ ಸದ್ಗುರುವಿನ ಮತದಂತೆ ನಡೆಯುತ್ತೇವೆ. ಶಿಕ್ಷಕರ, ಗುರುವಿನ ಮತದಂತೆ ನಡೆಯಲಾಗುತ್ತದೆಯಲ್ಲವೆ. ಅಂತಹವರಿಗೆ ಅನುಯಾಯಿಗಳೆಂದು ಹೇಳಿ ಬಿಡುತ್ತಾರೆ. ಇಲ್ಲಿ ತಂದೆಯ ಮತದಂತೆ ನಡೆಯಬೇಕಾಗಿದೆ. ಶಿಕ್ಷಕರ ಮತದ ಅನುಸಾರವೂ ನಡೆಯಬೇಕಾಗಿದೆ ಮತ್ತು ಗುರುವಿನ ಮತದಂತೆಯೂ ನಡೆಯಬೇಕಾಗಿದೆ. ಅವರು ನಮ್ಮ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ, ಅವರ ಮತದಂತೆ ಅವಶ್ಯವಾಗಿ ನಡೆಯಬೇಕಾಗಿದೆ. ಇವರೊಬ್ಬರೇ ಶ್ರೇಷ್ಠಾತಿ ಶ್ರೇಷ್ಠ ಶಿವ ತಂದೆಯಾಗಿದ್ದಾರೆ. ಅವರೇ ಮಾತನಾಡುತ್ತಾರೆ.
ತಂದೆಯು ಮಕ್ಕಳೊಂದಿಗೆ ಕೇಳುತ್ತಾರೆ – ಶಿವ ತಂದೆಯು ಮಾತನಾಡುತ್ತಾರೆಯೋ, ಶಂಕರನು ಮಾತನಾಡುತ್ತಾರೆಯೋ? ಬ್ರಹ್ಮನು ಮಾತನಾಡುತ್ತಾರೆಯೇ ಅಥವಾ ವಿಷ್ಣುವು ಮಾತನಾಡುತ್ತಾರೆಯೇ? (ಒಬ್ಬರು ಹೇಳಿದರು - ಶಿವ ಮತ್ತು ಬ್ರಹ್ಮನು ಮಾತನಾಡುತ್ತಾರೆ, ವಿಷ್ಣು ಮತ್ತು ಶಂಕರನು ಮಾತನಾಡುವುದಿಲ್ಲ) ವಿಷ್ಣುವಿನ ಎರಡು ರೂಪಗ ಲಕ್ಷ್ಮೀ-ನಾರಾಯಣರೆಂದು ಹೇಳುತ್ತೀರಿ ಅಂದಮೇಲೆ ಅವರು ಮಾತನಾಡುವುದಿಲ್ಲವೆ? ಮೂಖರಾಗಿದ್ದಾರೆಯೇ? (ಜ್ಞಾನ ಹೇಳುವುದಿಲ್ಲ) ನಾವು ಜ್ಞಾನದ ಮಾತನಾಡುತ್ತಿಲ್ಲ. ಮಾತನಾಡುವ ಮಾತನ್ನು ಕೇಳುತ್ತಿದ್ದೇನೆ. ವಿಷ್ಣು, ಲಕ್ಷ್ಮೀ-ನಾರಾಯಣರು ಮಾತನಾಡುತ್ತಾರೆಯೇ? ಶಂಕರನು ಮಾತನಾಡುವುದಿಲ್ಲ, ಅದು ಸರಿಯಾಗಿದೆ. ಇನ್ನುಳಿದ ಮೂವರು ಏಕೆ ಮಾತನಾಡುವುದಿಲ್ಲ? ವಿಷ್ಣುವಿನ ಎರಡು ರೂಪ ಲಕ್ಷ್ಮೀ-ನಾರಾಯಣರಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಮಾತನಾಡುತ್ತಾರಲ್ಲವೆ. ಮನುಷ್ಯರು ನಿರಾಕಾರ ಶಿವ ತಂದೆಯು ಹೇಗೆ ಮಾತನಾಡುವರು ಎಂದು ತಿಳಿದುಕೊಂಡಿರಬಹುದು. ನಿಮಗೆ ತಿಳಿದಿದೆ – ಶಿವ ತಂದೆಯೂ ಸಹ ಇವರಲ್ಲಿ ಬಂದು ಮಾತನಾಡುತ್ತಾರೆ, ಬ್ರಹ್ಮನೂ ಸಹ ಮಾತನಾಡುತ್ತಾರೆ. ದತ್ತು ಪುತ್ರನಲ್ಲವೆ. ಸನ್ಯಾಸಿಗಳೂ ಸಹ ಸನ್ಯಾಸತ್ವದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಳ್ಳುತ್ತಾರೆ, ನೀವೂ ಸಹ ಸನ್ಯಾಸ ಮಾಡಿದ್ದೀರಿ ಅಂದಮೇಲೆ ನಿಮ್ಮ ಹೆಸರು ಬದಲಾಗಬೇಕು. ಮೊದಲು (ಆದಿಯಲ್ಲಿ) ತಂದೆಯ ಹೆಸರುಗಳನ್ನು ಇಟ್ಟಿದ್ದರು ಆದರೆ ಹೆಸರು ಬದಲಾಯಿಸಿದ್ದರೂ ಸಹ ಆಶ್ಚರ್ಯವೆನಿಸುವಂತೆ ಜ್ಞಾನ ಬಿಟ್ಟು ಹೊರಟು ಹೋಗುವುದನ್ನು ನೋಡಿದರು ಆದ್ದರಿಂದ ಎಷ್ಟು ಮಂದಿಗೆ ಎಷ್ಟು ಹೆಸರುಗಳೆಂದು ಇಡುವುದು? ಅದಕ್ಕಾಗಿ ನಿಲ್ಲಿಸಿ ಬಿಟ್ಟರು. ಇತ್ತೀಚೆಗೆ ಮಾಯೆಯೂ ಸಹ ಬಹಳ ತೀಕ್ಷ್ಣವಾಗಿದೆ. ಬುದ್ಧಿಯು ಹೇಳುತ್ತದೆ - ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಅದಕ್ಕೆ ವಿಷ್ಣು ಪುರಿಯೆಂದು ಹೇಳಲಾಗುತ್ತಿತ್ತು. ಈ ಗುರಿ-ಧ್ಯೇಯವು ಬುದ್ಧಿಯಲ್ಲಿದೆ. ವಿಷ್ಣುವಿನ ಎರಡುರೂಪ ಲಕ್ಷ್ಮೀ-ನಾರಾಯಣರ ರಾಜ್ಯ ಮಾಡುತ್ತಾರೆಂದ ಮೇಲೆ ಏಕೆ ಮಾತನಾಡುವುದಿಲ್ಲ!! ತಂದೆಯು ಇಲ್ಲಿನ ಮಾತನ್ನು ಹೇಳುತ್ತಿಲ್ಲ. ಮನುಷ್ಯರಂತೂ ನಿರಾಕಾರನು ಹೇಗೆ ಮಾತನಾಡುತ್ತಾರೆಂದು ಕೇಳುತ್ತಾರೆ. ನಿರಾಕಾರನು ಹೇಗೆ ಬರುತ್ತಾರೆ ಎಂಬುದು ಅವರಿಗೆ ತಿಳಿದೇ ಇಲ್ಲ. ಅವರಿಗೆ ಪತಿತ-ಪಾವನನೆಂದು ಹೇಳುತ್ತಾರೆ. ಅವರು ಜ್ಞಾನ ಸಾಗರನೂ ಆಗಿದ್ದಾರೆ, ಚೈತನ್ಯನೂ ಆಗಿದ್ದಾರೆ, ಪ್ರೀತಿಯ ಸಾಗರನೂ ಆಗಿದ್ದಾರೆ. ಈಗ ಪ್ರೀತಿಯು ಪ್ರೇರಣೆಯಿಂದ ಸಿಗುವುದಿಲ್ಲ. ಅವರೂ ಸಹ ಈ ರಥದಲ್ಲಿ ಪ್ರವೇಶ ಮಾಡಿ ಮಕ್ಕಳಿಗೆ ಪ್ರೀತಿ ಮಾಡುತ್ತಾರಲ್ಲವೆ ಆದ್ದರಿಂದಲೇ ನಾವು ಪರಮಪಿತ ಪರಮಾತ್ಮನ ಮಡಿಲಿಗೆ ಬರುತ್ತೇವೆಂದು ಹೇಳುತ್ತೀರಿ. ಬಾಬಾ, ನಿಮ್ಮೊಂದಿಗೇ ತಿನ್ನುವೆನು, ನಿಮ್ಮಿಂದಲೇ ಕೇಳುವೆನು..... ಬುದ್ಧಿಯು ಅವರ ಕಡೆ ಹೊರಟು ಹೋಗುತ್ತದೆ. ಬುದ್ಧಿಯಲ್ಲಿ ಶ್ರೀಕೃಷ್ಣನು ಬರುವುದಿಲ್ಲ ಆದ್ದರಿಂದ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನಿಮ್ಮಂತಹ ಸೌಭಾಗ್ಯಶಾಲಿಗಳು ಬೇರೆ ಯಾರೂ ಇಲ್ಲ. ನಾವು ಎಷ್ಟು ಶ್ರೇಷ್ಠ ಪಾತ್ರಧಾರಿಗಳೆಂದು ನಿಮಗೆ ತಿಳಿದಿದೆ. ಇದು ಆಟವಲ್ಲವೆ. ಇದಕ್ಕೆ ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ, ಈಗ ತಂದೆಯು ಪ್ರವೇಶ ಮಾಡಿದ್ದಾರೆ ಆದ್ದರಿಂದ ಡ್ರಾಮಾನುಸಾರ ಅವರ ಮೂಲಕ ಕೇಳುತ್ತಿದ್ದೀರಿ.
ತಂದೆಯು ಹೇಳುತ್ತಾರೆ - ಮಧುರಾತಿ ಮಧುರ ಮಕ್ಕಳೇ, ನೀವು ತಿಳಿದುಕೊಂಡಿದ್ದೀರಿ, ತಂದೆಯು ನಿರಾಕಾರನಾಗಿದ್ದಾರೆ. ಅವರು ನಾವಾತ್ಮರ ತಂದೆಯಾಗಿದ್ದಾರೆ. ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಬರೆದಿಲ್ಲ. ಈಗ ನಿಮ್ಮದು ವಿಶಾಲ ಬುದ್ಧಿಯಾಗಿದೆ. ವಿದ್ಯಾರ್ಥಿಗಳು ಓದುತ್ತಾರೆ, ಬುದ್ಧಿಯಲ್ಲಿ ಇಡೀ ಚರಿತ್ರೆ-ಭೂಗೋಳವೇ ಬಂದು ಬಿಡುತ್ತದೆ. ಆದರೆ ತಂದೆಯು ಎಲ್ಲಿದ್ದಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಇಲ್ಲ. ಯಥಾರ್ಥ ರೀತಿಯಿಂದ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ ಮತ್ತು ಪ್ರತ್ಯಕ್ಷದಲ್ಲಿ ಆ ಖುಷಿಯಿದೆ. ತಂದೆಯು ಪರಮಧಾಮದಿಂದ ಬರುತ್ತಾರೆ, ನಮಗೆ ಓದಿಸುತ್ತಾರೆ. ಇಡೀ ದಿನ ಪರಸ್ಪರ ಇದೇ ವಾರ್ತಾಲಾಪವು ನಡೆಯಲಿ. ಈ ಜ್ಞಾನವನ್ನು ಬಿಟ್ಟರೆ ಉಳಿದೆಲ್ಲವೂ ಸತ್ಯನಾಶ ಮಾಡುವ ಮಾತುಗಳಾಗಿವೆ. ಶರೀರ ನಿರ್ವಹಣೆಗಾಗಿ ನೀವು ಉದ್ಯೋಗ-ವ್ಯವಹಾರಗಳನ್ನೂ ಮಾಡಬೇಕಾಗಿದೆ, ಜೊತೆ ಜೊತೆಗೆ ಈ ಆತ್ಮಿಕ ಸೇವೆಯನ್ನೂ ಕೂಡ.
ನಿಮಗೆ ತಿಳಿದಿದೆ - ಅವಶ್ಯವಾಗಿ ಈ ಭಾರತವು ಸ್ವರ್ಗವಾಗಿತ್ತು, ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಏನೆಲ್ಲಾ ದೇವಿ-ದೇವತೆಗಳ ಚಿತ್ರಗಳಿದೆಯೋ ಅದರ ಯಥಾರ್ಥ ಜ್ಞಾನವು ಬುದ್ಧಿಯಲ್ಲಿ ಬಂದು ಬಿಟ್ಟಿದೆ. ನಂಬರ್ವನ್ ಲಕ್ಷ್ಮೀ-ನಾರಾಯಣರ ಚಿತ್ರವನ್ನು ತೆಗೆದುಕೊಳ್ಳಿ. ವಿಚಾರ ಮಾಡಿರಿ - ಅವಶ್ಯವಾಗಿ ಇವರು ಭಾರತದಲ್ಲಿ ರಾಜ್ಯ ಮಾಡುತ್ತಿದ್ದರು. ಆಗ ಒಂದೇ ಧರ್ಮವಿತ್ತು. ರಾತ್ರಿಯು ಮುಕ್ತಾಯವಾಗಿ ದಿನವು ಆರಂಭವಾಯಿತು ಅರ್ಥಾತ್ ಕಲಿಯುಗವು ಮುಕ್ತಾಯವಾಗಿ ಸತ್ಯಯುಗವು ಆರಂಭವಾಯಿತು. ಕಲಿಯುಗವು ರಾತ್ರಿಯಾಗಿದೆ, ಸತ್ಯಯುಗವು ಮುಂಜಾನೆಯಾಗಿದೆ. ಇವರು ಈ ರಾಜ್ಯವನ್ನು ಹೇಗೆ ಪಡೆದರು ಎಂಬುದನ್ನು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಹೇಗೆ ಸಾಗರದಲ್ಲಿ ಕಲ್ಲನ್ನು ಹಾಕಿದರೆ ಅಲೆಗಳು ಏಳುತ್ತವೆಯೆಂದು ಹೇಳಲಾಗುತ್ತದೆ. ಹಾಗೆಯೇ ನೀವೂ ಸಹ ಬುದ್ಧಿಗೆ ಕಲ್ಲು ಹೊಡೆಯಿರಿ, ಮನುಷ್ಯರಿಗೆ ತಿಳಿಸಿಕೊಡಿ - ಇದೇ ವಿಚಾರ ಮಾಡಿರಿ, ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತಲ್ಲವೆ. ಅವರೇ ಮತ್ತೆ ಭಕ್ತಿಮಾರ್ಗದಲ್ಲಿ ಮಂದಿರಗಳನ್ನು ಕಟ್ಟಿಸಿದ್ದಾರೆ. ಅದನ್ನು ಮುಸಲ್ಮಾನರು ಲೂಟಿ ಮಾಡಿದರು. ಇದು ನೆನ್ನೆಯ ಮಾತಾಗಿದೆ. ಈಗ ಭಕ್ತಿಮಾರ್ಗವಾಗಿದೆ ಅಂದಮೇಲೆ ಅದಕ್ಕೆ ಮೊದಲು ಜ್ಞಾನ ಮಾರ್ಗವಿರುವುದು. ಇವೆಲ್ಲಾ ಮಾತುಗಳು ಈಗ ನಿಮ್ಮ ಬುದ್ಧಿಯಲ್ಲಿದೆ. ತಂದೆಯೂ ಸಹ ಬಂದು ತಮ್ಮ ಜೀವನ ಕಥೆಯನ್ನು ತಿಳಿಸುತ್ತಾರೆ. ನಿಮಗೆ ಇದೇಕೆ ನೆನಪಿಗೆ ಬರುವುದಿಲ್ಲ! ತಂದೆಯು ಬಂದು ನಮಗೆ ಇಡೀ ಜ್ಞಾನವನ್ನು ತಿಳಿಸುತ್ತಾರೆ, ತಿಳುವಳಿಕೆಯೂ ಬೇಕಲ್ಲವೆ. ಯಾರಿಗಾದರೂ ಇದೇ ಮಾತನ್ನು ತಿಳಿಸಿರಿ. ಇದು ಗುರಿ-ಧ್ಯೇಯದ ಚಿತ್ರವಾಗಿದೆ. ಈ ಲಕ್ಷ್ಮೀ-ನಾರಾಯಣರು ಎಲ್ಲರಿಗಿಂತ ದೊಡ್ಡ ರಾಜ-ರಾಣಿಯಾಗಿದ್ದಾರೆ. ಭಾರತವು ಸ್ವರ್ಗವಾಗಿತ್ತಲ್ಲವೆ. ಇದು ನೆನ್ನೆಯ ಮಾತಾಗಿದೆ. ನಂತರ ಇವರು ಈ ರಾಜ್ಯ ಸಿಂಹಾಸನವನ್ನು ಹೇಗೆ ಕಳೆದುಕೊಂಡರು! ತಮ್ಮ ಮಕ್ಕಳು ಭಲೆ ಇದೆಲ್ಲವನ್ನೂ ಕೇಳುತ್ತಾರೆ ಆದರೆ ಎಂದೂ ಬುದ್ಧಿಯಲ್ಲಿ ಇದು ಹನಿಯುವುದಿಲ್ಲ. ಬುದ್ಧಿಯಲ್ಲಿ ನೆನಪೂ ಬರುವುದಿಲ್ಲ. ಒಂದುವೇಳೆ ನೆನಪಿಗೆ ಬಂದರೆ ಅನ್ಯರಿಗೂ ತಿಳಿಸುವರು. ಇದು ಬಹಳ ಸಹಜವಾಗಿದೆ. ನೀವಿಲ್ಲಿ ಲಕ್ಷ್ಮೀ-ನಾರಾಯಣರಂತೆ ಆಗಲು ಬರುತ್ತೀರಿ. ತಿಳಿಸಿದ್ದಾರೆ - 5000 ವರ್ಷಗಳ ಮಾತಾಗಿದೆ. ಇದಕ್ಕಿಂತಲೂ ಹಿಂದೆ ಯಾರೂ ಇರುವುದಿಲ್ಲ. ಎಲ್ಲದಕ್ಕಿಂತ ಬಹಳ ಹಳೆಯ ಭಾರತದ ಕಥೆಯು ಇದಾಗಿದೆ. ವಾಸ್ತವದಲ್ಲಿ ಸತ್ಯ-ಸತ್ಯವಾದ ಕಥೆಯು ಇದೇ ಇರಬೇಕಾಗಿದೆ. ಎಲ್ಲದಕ್ಕಿಂತ ದೊಡ್ಡ ಕಥೆಯು ಇದಾಗಿದೆ. ಹಿಂದೆ ಇವರ ರಾಜ್ಯವಿತ್ತು, ಈಗ ಅದು ಇಲ್ಲ. ಯಾರಿಗೂ ಸ್ವಲ್ಪವೂ ಗೊತ್ತಿಲ್ಲ. ನಿಮ್ಮ ಬುದ್ಧಿಯಲ್ಲಿ ನಂಬರ್ವಾರ್ ಹನಿಯುತ್ತದೆ. ನನ್ನನ್ನು ನೆನಪು ಮಾಡಿರಿ ಎಂದು ತಂದೆಯು ತಿಳಿಸುತ್ತಾರೆ. ಪೂರ್ಣ ರೀತಿಯಿಂದ ಯಾರೂ ಸಹ ನೆನಪು ಮಾಡುವುದಿಲ್ಲ. ತಂದೆಯು ಬಿಂದುವಾಗಿದ್ದಾರೆ, ನಾವೂ ಬಿಂದುವಾಗಿದ್ದೇವೆ, ಇದು ಬುದ್ಧಿಯಲ್ಲಿ ನಿಲ್ಲುವುದೇ ಇಲ್ಲ. ಕೆಲ ಕೆಲವರ ಬುದ್ಧಿಯಲ್ಲಿ ಬಹಳ ಚೆನ್ನಾಗಿ ಹನಿಯುತ್ತದೆ. ಯಾರಿಗಾದರೂ ಕುಳಿತು ತಿಳಿಸುತ್ತಾರೆಂದರೆ 4-5 ಗಂಟೆಗಳೂ ಹಿಡಿಸುತ್ತವೆ. ಇವು ಬಹಳ ಅದ್ಭುತ ಮಾತುಗಳಾಗಿವೆ. ಹೇಗೆ ಸತ್ಯ ನಾರಾಯಣನ ಕಥೆಯನ್ನು ಕುಳಿತು ಕೇಳುತ್ತಾರಲ್ಲವೆ. ಯಾರಿಗಾದರೂ ಅಭಿರುಚಿಯಿದ್ದರೆ ಅವರು 2-3 ಗಂಟೆಗಳ ಕಾಲ ಕುಳಿತು ಕೇಳುತ್ತಾರೆ. ಇದರಲ್ಲಿಯೂ ಹಾಗೆಯೇ, ಯಾರಿಗೆ ಬಹಳ ರುಚಿಯಿರುವುದೋ ಅವರಿಗೂ ಮತ್ತೇನೂ ತೋಚುವುದಿಲ್ಲ. ಈ ಮಾತುಗಳನ್ನು ತಿಳಿದುಕೊಳ್ಳುವುದರಲ್ಲಿಯೇ ಆನಂದವಾಗುತ್ತದೆ. ಈ ಮಾತುಗಳು ಇಷ್ಟವಾಗುತ್ತವೆ. ನಾವು ಈ ಸೇವೆಯಲ್ಲಿಯೇ ತೊಡಗಬೇಕು, ಅನ್ಯ ಉದ್ಯೋಗ-ವ್ಯವಹಾರಗಳನ್ನೆಲ್ಲಾ ಬಿಟ್ಟು ಬಿಡೋಣವೆಂದು. ಆದರೆ ಈ ರೀತಿ ಯಾರೂ ಕುಳಿತುಕೊಳ್ಳುವಂತಿಲ್ಲ. ನೀವು ಮಕ್ಕಳು ಈ ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಿದ್ದೀರಿ. ಈಗ ನಿಮ್ಮ ಬುದ್ಧಿಯಲ್ಲಿ ಎಷ್ಟು ಒಳ್ಳೆಯ ಮಾತುಗಳು ತಿರುಗುತ್ತವೆ. ನಾವು ಈ ಸಾಮಾನುಗಳನ್ನು ಹಂಚುವುದಕ್ಕಾಗಿ ಎವರೆಡಿಯಾಗಿದ್ದೇನೆ. ಸಾಮಗ್ರಿಗಳು ಸದಾ ತಯಾರಿರಬೇಕು. ಈ ಚಿತ್ರವನ್ನೂ ಸಹ ನೀವು ತೋರಿಸಿ ತಿಳಿಸಬಹುದು - ಈ ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವು ಹೇಗೆ ಸಿಕ್ಕಿತು? ಎಷ್ಟು ವರ್ಷಗಳ ಮೊದಲು ಇವರು ವಿಶ್ವದ ಮಾಲೀಕರಾಗಿದ್ದರು? ಆ ಸಮಯದ ಸೃಷ್ಟಿಯಲ್ಲಿ ಎಷ್ಟು ಜನಸಂಖ್ಯೆಯಿತ್ತು, ಈಗ ಎಷ್ಟೊಂದಿದೆ. ಒಂದಲ್ಲ ಒಂದು ಕಲ್ಲನ್ನು (ಬಾಣ) ಹಾಕಬೇಕು ಆಗ ವಿಚಾರ ಸಾಗರ ಮಂಥನ ನಡೆಯುವುದು. ನಮ್ಮ ಕುಲದವರಾಗಿದ್ದರೆ ಕೂಡಲೆ ಅಲೆಯು ಏಳುವುದು. ನಮ್ಮ ಕುಲದವರಲ್ಲದಿದ್ದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ, ಹೊರಟು ಹೋಗುತ್ತಾರೆ. ಇದು ನಾಡಿಯನ್ನು ನೋಡುವ ಮಾತಾಗಿದೆ. ಈ ಮಧುರಾತಿ ಮಧುರ ಜ್ಞಾನದ ಮಾತುಗಳನ್ನು ಬಿಟ್ಟರೆ ಬೇರೇನೂ ಮಾತನಾಡಬಾರದು. ಒಂದುವೇಳೆ ಜ್ಞಾನದ ಮಾತನ್ನು ಬಿಟ್ಟು ಅನ್ಯ ಮಾತುಗಳನ್ನು ಮಾತನಾಡುತ್ತಾರೆಂದರೆ ತಿಳಿದುಕೊಳ್ಳಿ, ಅವು ಕೆಟ್ಟ ಮಾತುಗಳಾಗಿವೆ. ಅದರಲ್ಲಿ ಯಾವುದೇ ಸಾರವಿಲ್ಲ, ನಮ್ಮ ಬಳಿ ಇಂತಹ ಅನೇಕ ಮಕ್ಕಳಿದ್ದಾರೆ ಯಾರಿಗೆ ಕೇಳಲು ಬಹಳ ಆಸಕ್ತಿಯಿರುತ್ತದೆ. ತಂದೆಯು ತಿಳಿಸುತ್ತಾರೆ – ಕೆಟ್ಟ ಮಾತುಗಳನ್ನು ಎಂದೂ ಕೇಳಬಾರದು, ಕಲ್ಯಾಣದ ಮಾತುಗಳನ್ನೇ ಕೇಳಿರಿ. ಇಲ್ಲದಿದ್ದರೆ ತಮ್ಮದೇ ಸತ್ಯನಾಶ ಮಾಡಿಕೊಳ್ಳುತ್ತೀರಿ. ತಂದೆಯು ಬಂದು ನಿಮಗೆ ಜ್ಞಾನವನ್ನು ತಿಳಿಸುತ್ತಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಹೇಳುತ್ತಾರೆ- ಮಕ್ಕಳೇ, ಮತ್ತ್ಯಾವುದೇ ಮಾತುಗಳನ್ನು ಆಡಬೇಡಿ, ಇದರಲ್ಲಿ ಬಹಳ ಸಮಯವನ್ನು ವ್ಯರ್ಥ ಮಾಡುತ್ತೀರಿ. ಇವರು ಹೀಗಿದ್ದಾರೆ, ಅವರು ಹೀಗೆ ಮಾಡುತ್ತಾರೆ..... ಇದಕ್ಕೆ ಕೆಟ್ಟ ಮಾತುಗಳೆಂದು ಹೇಳಲಾಗುತ್ತದೆ. ಪ್ರಪಂಚದ ಮಾತೇ ಬೇರೆಯಾಗಿದೆ. ನಿಮ್ಮ ಒಂದೊಂದು ಸೆಕೆಂಡಿನ ಸಮಯವು ಬಹಳ ಅತ್ಯಮೂಲ್ಯವಾಗಿದೆ, ನೀವು ಎಂದೂ ಇಂತಹ ಮಾತುಗಳನ್ನು ಕೇಳಲೂಬೇಡಿ, ಮಾತನಾಡಲೂ ಬೇಡಿ. ಇದಕ್ಕಿಂತಲೂ ನೀವು ಬೇಹದ್ದಿನ ತಂದೆಯನ್ನು ನೆನಪು ಮಾಡಿದರೆ ನಿಮಗೆ ಬಹಳ ಸಂಪಾದನೆ ಆಗುವುದು. ಎಲ್ಲಿಯಾದರೂ ಹೋಗಿ ತಂದೆಯ ಪರಿಚಯ ನೀಡಿರಿ. ಇದೇ ಆತ್ಮಿಕ ಸೇವೆಯನ್ನು ಮಾಡುತ್ತಾ ಇರಿ.
ಸತ್ಯ-ಸತ್ಯ ಮಹಾವೀರರು ನೀವಾಗಿದ್ದೀರಿ. ಕೇವಲ ಇಡೀ ದಿನ ಇದೇ ಚಿಂತೆಯಿರಲಿ - ಯಾರಿಗಾದರೂ ಮಾರ್ಗ ತಿಳಿಸೋಣ. ತಂದೆಯು ಹೇಳುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿದರೆ ಆಸ್ತಿ ಸಿಗುವುದು. ಎಷ್ಟು ಸಹಜವಾಗಿದೆ! ಹೀಗೀಗೆ ಹೋಗಿ ಸರ್ವೀಸ್ ಮಾಡಬೇಕು. ಮಕ್ಕಳು ಸರ್ವೀಸಿನ ಮೇಲೆ ಬಹಳ ಗಮನ ಕೊಡಬೇಕು. ತನ್ನ ಮತ್ತು ಅನ್ಯರ ಕಲ್ಯಾಣ ಮಾಡಬೇಕು. ತಂದೆಯೂ ಸಹ ನೀವು ಮಕ್ಕಳಿಗೆ ತಿಳಿಸುವುದಕ್ಕಾಗಿಯೇ ಬಂದಿದ್ದಾರಲ್ಲವೆ. ನೀವು ಮಕ್ಕಳೂ ಸಹ ಓದಲು ಮತ್ತು ಓದಿಸಲು ಬಂದಿದ್ದೀರಿ. ಸಮಯ ವ್ಯರ್ಥ ಮಾಡಲು ಅಥವಾ ಕೇವಲ ಅಡಿಗೆ ಮಾಡಲು ನೀವು ಬಂದಿಲ್ಲ. ಇಡೀ ದಿನ ಸರ್ವೀಸಿನಲ್ಲಿ ಬುದ್ಧಿಯನ್ನು ಓಡಿಸಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವ ಮಾತುಗಳು ತಮ್ಮ ಕೆಲಸಕ್ಕೆ ಬರುವುದಿಲ್ಲವೋ ಅವನ್ನು ಕೇಳುವ ಮತ್ತು ಮಾತನಾಡುವುದರಲ್ಲಿ ತಮ್ಮ ಸಮಯವನ್ನು ವ್ಯರ್ಥ ಮಾಡಬಾರದು. ಎಷ್ಟು ಸಾಧ್ಯವೋ ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ.
2. ಸದಾ ಖುಷಿ ಮತ್ತು ಉಮ್ಮಂಗದಲ್ಲಿರಿ - ನಮಗೆ ಓದಿಸುವವರು ಯಾರು!! ಪುರುಷಾರ್ಥವನ್ನೆಂದೂ ಬಿಡಬಾರದು. ಬಾಯಿಂದ ಜ್ಞಾನ ರತ್ನಗಳೇ ಹೊರ ಬರುತ್ತಿರಲಿ.
ಓಂ ಶಾಂತಿ. ನೀವು ಒಂಟಿ ಆತ್ಮನಾಗಿದ್ದೀರಿ. ಪ್ರತಿಯೊಬ್ಬರೂ ಓಂ ಶಾಂತಿ ಎಂದು ಹೇಳುತ್ತೀರಿ, ಇವರು (ಬಾಪ್ದಾದಾ) ಇಬ್ಬರಿದ್ದಾರೆ, ಇವರು ಎರಡು ಬಾರಿ ಓಂ ಶಾಂತಿ, ಓಂ ಶಾಂತಿ ಎಂದು ಹೇಳಬೇಕಾಗುತ್ತದೆ. ಈಗ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ನೀವಿಲ್ಲಿ ಯುದ್ಧದ ಮೈದಾನದಲ್ಲಿ ಕುಳಿತಿದ್ದೀರಿ, ಹೇಗೆ ಅವರು ಪರಸ್ಪರ ಹೊಡೆದಾಡುತ್ತಾರೆಯೋ ಆ ರೀತಿ ಅಲ್ಲ. ಆ ರೀತಿಯಂತೂ ಮನೆ ಮನೆಯಲ್ಲಿಯೂ ಜಗಳ-ಕಲಹವಾಡುತ್ತಾ ಇರುತ್ತಾರೆ. ಅನೇಕರ ಮಾತನ್ನು ಹೇಳಲಾಗುತ್ತದೆ. ನಂಬರ್ವನ್ ದೇಹಾಭಿಮಾನವಾಗಿದೆ, ಎರಡನೆಯದು ಕಾಮ ವಿಕಾರವಾಗಿದೆ. ನೀವೀಗ ನೆನಪಿನ ಬಲದಿಂದ ಐದು ವಿಕಾರಗಳೆಂಬ ರಾವಣನ ಮೇಲೆ ಜಯ ಗಳಿಸುತ್ತೀರಿ. ನೆನಪಿನ ಬಲವಿದ್ದಾಗ ನೀವು ಬೀಳುವುದಿಲ್ಲ. ನಿಮ್ಮದು ಒಬ್ಬ ರಾವಣನೊಂದಿಗೆ ಯುದ್ಧವಿದೆ. ಅಲ್ಲಂತೂ ಅನೇಕ ಪ್ರಕಾರದ ಮಾತುಗಳಿರುತ್ತವೆ, ಇಲ್ಲಿ ಒಂದೇ ಮಾತಾಗಿದೆ. ನಿಮ್ಮ ಯುದ್ಧವು ರಾವಣನ ಜೊತೆಯಿದೆ. ನಿಮಗೆ ಕಲಿಸಿ ಕೊಡುವವರು ಯಾರು? ಪತಿತ-ಪಾವನ ಭಗವಂತ. ಅವರು ಪತಿತರಿಂದ ಪಾವನರನ್ನಾಗಿ ಮಾಡುವವರಾಗಿದ್ದಾರೆ. ಪಾವನರು ಅರ್ಥಾತ್ ದೇವತೆಗಳು. ನೀವು ವಿಶ್ವದ ಮಾಲೀಕರಾಗುತ್ತೀರಿ. ರಾವಣನ ಮುಖಾಂತರವೇ ಪತಿತರಾಗಿದ್ದೇವೆ ಎಂಬುದನ್ನು ಯಾವ ಮನುಷ್ಯರೂ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸಿದ್ದಾರೆ - ಈ ಸಮಯದಲ್ಲಿ ಇಡೀ ಪ್ರಪಂಚದಲ್ಲಿ ರಾವಣ ರಾಜ್ಯವಿದೆ, ಹಾಗೆಯೇ ಸತ್ಯ-ತ್ರೇತಾಯುಗದಲ್ಲಿ ರಾಮ ರಾಜ್ಯವಿರುತ್ತದೆ ಆದರೆ ಅಲ್ಲಿ ಇಷ್ಟೊಂದು ಜನಸಂಖ್ಯೆಯಿರುವುದಿಲ್ಲ. ನೀವು ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತಿದ್ದೀರಿ. ಇಲ್ಲಿ ಕುಳಿತುಕೊಂಡಾಗಲೇ ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಬೇಕು ಎಂದಲ್ಲ. ಇದು ಪ್ರತೀ ಸಮಯ ಬುದ್ಧಿಯಲ್ಲಿರಲಿ. ನಾವು ಸ್ವರ್ಗದಲ್ಲಿ ಅರ್ಧಕಲ್ಪ ರಾಜ್ಯಭಾರ ಮಾಡಿದೆವು ನಂತರ ರಾವಣನ ಶ್ರಾಪ ಸಿಗುವುದರಿಂದ ಕೆಳಗಿಳಿಯುತ್ತೇವೆ. ಕನಿಷ್ಟರಾಗುವುದರಲ್ಲಿ ಸಮಯವಂತೂ ಹಿಡಿಸುತ್ತದೆ, 84 ಪೀಳಿಗೆಗಳು ಇಳಿಯಬೇಕಾಗುತ್ತದೆ. ಏರುವ ಕಲೆಯಲ್ಲಿ ಸಮಯವೇ ಹಿಡಿಸುವುದಿಲ್ಲ. ಒಂದುವೇಳೆ ಒಂದು ಪೀಳಿಗೆ ಹಿಡಿಸಿದರೂ ಸಹ ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಹೇಗೆ ಹೇಳುವುದು? ನಿಮಗೆ 2500 ವರ್ಷಗಳು ಇಳಿಯುವುದರಲ್ಲಿ ಹಿಡಿಸುತ್ತದೆ ಮತ್ತು ನೀವು ಕೆಲವೇ ವರ್ಷಗಳಲ್ಲಿ ಏರುವ ಕಲೆಯಲ್ಲಿ ಬಂದು ಬಿಡುತ್ತೀರಿ. ನಿಮ್ಮದು ಯೋಗ ಬಲವಾಗಿದೆ, ಅವರದು ಬಾಹುಬಲವಾಗಿದೆ. ದ್ವಾಪರದಿಂದ ಹಿಡಿದು ಕೆಳಗಿಳಿಯುತ್ತಾರೆ ನಂತರ ಬಾಹುಬಲವು ಆರಂಭವಾಗುತ್ತದೆ. ಸತ್ಯಯುಗದಲ್ಲಿ ಹೊಡೆಯುವ ಮಾತೇ ಇರುವುದಿಲ್ಲ. ಕೃಷ್ಣನನ್ನು ಹಗ್ಗದಿಂದ ಕಟ್ಟಿದರು ಎಂದು ತೋರಿಸಿದ್ದಾರೆ ಆದರೆ ಈ ಮಾತು ಇರುವುದಿಲ್ಲ. ಅಲ್ಲಿ ಮಕ್ಕಳೆಂದೂ ಚಂಚಲತೆ ಮಾಡುವುದಿಲ್ಲ. ಕೃಷ್ಣನಂತೂ ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣನಾಗಿರುತ್ತಾನೆ. ಕೃಷ್ಣನನ್ನು ಎಷ್ಟೊಂದು ನೆನಪು ಮಾಡುತ್ತಾ ಬಂದಿದ್ದಾರೆ. ಒಳ್ಳೆಯ ವಸ್ತುವಿನ ನೆನಪು ಬರುತ್ತದೆಯಲ್ಲವೆ. ಹೇಗೆ ಪ್ರಪಂಚದಲ್ಲಿ 7 ಅದ್ಭುತಗಳಿವೆ, ಆದ್ದರಿಂದ ಮನುಷ್ಯರು ಅವನ್ನು ನೆನಪು ಮಾಡಿಕೊಳ್ಳುತ್ತಾರೆ. ನೋಡಲು ಹೋಗುತ್ತಾರೆ. ಅಬುಪರ್ವತದಲ್ಲಿ ಒಳ್ಳೆಯದಕ್ಕಿಂತ ಒಳ್ಳೆಯ ವಸ್ತು ಏನಿದೆ, ಯಾವುದನ್ನು ಮನುಷ್ಯರು ನೋಡಲು ಬರುತ್ತಾರೆ? ಧಾರ್ಮಿಕ ವ್ಯಕ್ತಿಗಳಂತೂ ಬರುವುದೇ ಮಂದಿರವನ್ನು ನೋಡುವುದಕ್ಕಾಗಿ, ಭಕ್ತಿಮಾರ್ಗದಲ್ಲಿ ಅನೇಕ ಮಂದಿರಗಳಿರುತ್ತವೆ. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಮಂದಿರವಿರುವುದಿಲ್ಲ. ಮಂದಿರಗಳು ಕೊನೆಯಲ್ಲಿ ನೆನಪಾರ್ಥಕ್ಕಾಗಿ ಕಟ್ಟಿಸಲ್ಪಡುತ್ತದೆ. ಸತ್ಯಯುಗದಲ್ಲಿ ಯಾವುದೇ ಹಬ್ಬಗಳು ಇರುವುದಿಲ್ಲ. ದೀಪಾವಳಿಯೂ ಸಹ ಇಲ್ಲಿನ ತರಹ ಅಲ್ಲಿ ಆಗುವುದಿಲ್ಲ. ಹಾ! ಯಾವಾಗ ಲಕ್ಷ್ಮೀ-ನಾರಾಯಣರು ಸಿಂಹಾಸನಾಧೀಶರಾಗುವರೋ ಆಗ ಪಟ್ಟಾಭಿಷೇಕದ ದಿನವನ್ನು ಆಚರಿಸುತ್ತಾರೆ. ಅಲ್ಲಂತೂ ಎಲ್ಲರ ಜ್ಯೋತಿಯು ಸದಾ ಬೆಳಗಿರುತ್ತದೆ.
ನಿಮ್ಮ ಬಳಿ ಒಂದು ಗೀತೆಯೂ ಇದೆ - ನವಯುಗ ಬಂದಿತು...... ಇದು ಕೇವಲ ನಿಮಗೇ ತಿಳಿದಿದೆ, ನಾವು ನವಯುಗ ಅರ್ಥಾತ್ ಸತ್ಯಯುಗಕ್ಕಾಗಿ ದೇವಿ-ದೇವತೆಗಳಾಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ. ವಿದ್ಯೆಯನ್ನು ಸಂಪೂರ್ಣ ರೀತಿಯಿಂದ ಓದಬೇಕಾಗಿದೆ. ಜೀವಿಸಿರುವವರೆಗೂ ಜ್ಞಾನಾಮೃತವನ್ನು ಕುಡಿಯಬೇಕಾಗಿದೆ. ಈ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿದುಕೊಳ್ಳಬೇಕಾಗಿದೆ. ಇದರಲ್ಲಿ ಯಾವುದೇ ಜ್ಞಾನವನ್ನು ಕಲಿಸಿಕೊಡುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡಬೇಕು ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಬೇಕಾಗಿದೆ. ನೀವಿಲ್ಲಿ ಕುಳಿತಿದ್ದೀರಿ, ಸ್ವದರ್ಶನ ಚಕ್ರಧಾರಿಗಳಾಗಿದ್ದೀರಿ. ನಿಮ್ಮ ಬುದ್ಧಿಯಲ್ಲಿದೆ - ನಮ್ಮ 84 ಜನ್ಮಗಳ ಚಕ್ರವು ಪೂರ್ಣವಾಯಿತು, ಈಗ ಹಳೆಯ ಶರೀರ ಹಳೆಯ ಸಂಬಂಧವನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕಾಗಿದೆ. ವಿಷ್ಣು ಪುರಿಯ ಮಾಲೀಕರಾಗುವುದಕ್ಕಾಗಿ ತಂದೆಯು ನಮ್ಮಿಂದ ಪುರುಷಾರ್ಥ ಮಾಡಿಸುತ್ತಿದ್ದಾರೆ. ಪ್ರಪಂಚದಲ್ಲಿ ಮತ್ತೆಲ್ಲವೂ ಆಸುರೀ ಸಂಪ್ರದಾಯವಾಗಿದೆ. ಭಗವಾನುವಾಚ - ಇದು ಅದೇ ಗೀತಾ ಯುಗವು ನಡೆಯುತ್ತಿದೆ. ಇದು ಕಲ್ಪ-ಕಲ್ಪದ ಸಂಗಮಯುಗವಾಗಿದೆ. ತಂದೆಯು ತಿಳಿಸುತ್ತಾರೆ - ನಾನು ಈ ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ನಾನು ಅದೇ ಗೀತೆಯ ಭಗವಂತನಾಗಿದ್ದೇನೆ. ಹೊಸ ಪ್ರಪಂಚ ಸ್ವರ್ಗವನ್ನು ರಚಿಸಲು ನಾನು ಇಲ್ಲಿ ಬರುತ್ತೇನೆ. ನಾನು ದ್ವಾಪರದಲ್ಲಿ ಹೇಗೆ ಬರಲಿ! ಇದೊಂದು ದೊಡ್ಡ ತಪ್ಪಾಗಿದೆ. ಕೆಲವು ಚಿಕ್ಕದು, ಕೆಲವು ದೊಡ್ಡ ತಪ್ಪುಗಳಾಗುತ್ತವೆ, ಇದು ಅತಿ ದೊಡ್ಡ ತಪ್ಪಾಗಿದೆ. ಶಿವ ಭಗವಂತ ಯಾರು ಪುನರ್ಜನ್ಮ ರಹಿತನಾಗಿದ್ದಾರೆಯೋ ಅವರ ಬದಲು 84 ಜನ್ಮಗಳನ್ನು ತೆಗೆದುಕೊಳ್ಳುವವರ ಹೆಸರನ್ನು ಬರೆದು ಬಿಟ್ಟಿದ್ದಾರೆ. ನೀವೀಗ ತಿಳಿದುಕೊಂಡಿದ್ದೀರಿ, ನನ್ನೊಬ್ಬನನ್ನೇ ನೆನಪು ಮಾಡಿ ಎಂಬ ಮಾತನ್ನು ಶ್ರೀಕೃಷ್ಣನು ಹೇಳಲು ಸಾಧ್ಯವಿಲ್ಲ. ಕೃಷ್ಣನನ್ನು ಎಲ್ಲಾ ಧರ್ಮದವರು ಒಪ್ಪುತ್ತಾರೆಯೇ! ಶಿವನು ನಿರಾಕಾರನಾಗಿದ್ದಾರೆ, ನೀವು ಶಿವಶಕ್ತಿ ಸೇನೆಯಾಗಿದ್ದೀರಿ. ಶಿವ ತಂದೆಯ ಜೊತೆ ಯೋಗವನ್ನಿಟ್ಟು ಶಕ್ತಿಯನ್ನು ತೆಗೆದುಕೊಳ್ಳುತ್ತೀರಿ, ಇದರಲ್ಲಿ ಸ್ತ್ರೀ-ಪುರುಷರ ಮಾತಿಲ್ಲ. ನೀವಾತ್ಮರೆಲ್ಲರೂ ಸಹೋದರರಾಗಿದ್ದೀರಿ, ಎಲ್ಲರೂ ತಂದೆಯಿಂದ ಶಕ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ತಂದೆಯೇ ಆಸ್ತಿಯನ್ನು ಕೊಡುವರಲ್ಲವೆ. ಅವರೇ ಸರ್ವಶಕ್ತಿವಂತನಾಗಿದ್ದಾರೆ. ಈ ಲಕ್ಷ್ಮೀ-ನಾರಾಯಣರಿಗೂ ಸಹ ಸರ್ವಶಕ್ತಿವಂತನೆಂದು ಹೇಳುತ್ತಾರೆ. ಏಕೆಂದರೆ ಇಡೀ ವಿಶ್ವದ ಮಾಲೀಕನಾಗಿದ್ದಾರೆ ಅವರು ಈ ರಾಜ್ಯವನ್ನು ಹೇಗೆ ಪಡೆದರು? ಈಗ ಭಾರತವಷ್ಟೇ ಅಲ್ಲ. ಇಡೀ ಪ್ರಪಂಚದಲ್ಲಿ ರಾವಣ ರಾಜ್ಯವಿದೆ. ಯಾರಾದರೂ ರಾಜರಿದ್ದರೆ ಅವರಿಗಿಂತ ಹಿರಿಯರು ಈ ರಾಜ್ಯಭಾರ ಮಾಡಿದ್ದಾರೆ, ಅದು ನಡೆದು ಬರುತ್ತಿದೆ ಎಂದು ತಿಳಿದಿರುತ್ತದೆ. ಇದಂತೂ ಸತ್ಯಯುಗದ ಆದಿಯಿಂದಲೂ ನಡೆದಿದೆ ಅಂದಮೇಲೆ ಅವಶ್ಯವಾಗಿ ಅವರ ಹಿಂದಿನ ಜನ್ಮದಲ್ಲಿ ಇಂತಹ ಪುರುಷಾರ್ಥ ಮಾಡಿರಬೇಕು, ದಾನ, ಪುಣ್ಯ ಮಾಡುವುದರಿಂದ ಪತಿತ ರಾಜ್ಯಭಾಗ್ಯವು ಸಿಗುತ್ತದೆ, ಈ ಸಂಗಮಯುಗದಲ್ಲಿ ಜ್ಞಾನ ಮತ್ತು ಯೋಗಬಲದಿಂದ ನೀವು 21 ಜನ್ಮಗಳಿಗಾಗಿ ರಾಜ್ಯಭಾಗ್ಯ ಪಡೆಯುತ್ತೀರಿ. ನಿಮಗೆ ತಿಳಿದಿದೆ, ಈ ಹಳೆಯ ಪ್ರಪಂಚವೆಲ್ಲವೂ ವಿನಾಶವಾಗಲಿದೆ, ಈ ದೇಹವೂ ಉಳಿಯುವುದಿಲ್ಲ ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಬಾಬಾ, ಬಾಬಾ ಎನ್ನುವುದನ್ನು ಕಲಿಯಿರಿ. ಹೇಗೆ ಲೌಕಿಕ ಮಕ್ಕಳಿಗೆ ಕಲಿಸಲಾಗುತ್ತದೆ. ಅವರು ಅದೇ ತಂದೆಯನ್ನು ನೆನಪು ಮಾಡುತ್ತಾರೆ, ಈಗ ಆತ್ಮಿಕ ತಂದೆಯು ನೀವು ಮಕ್ಕಳಿಗೆ ಹೇಳುತ್ತಾರೆ - ಹೇ ಮಕ್ಕಳೇ ಎಂದು. ಇದು ಹೊಸ ಮಾತಾಗಿದೆ. ತಂದೆಯು ಹೇಳುತ್ತಾರೆ- ಆತ್ಮಿಕ ತಂದೆಯಾದ ನನ್ನನ್ನು ನೆನಪು ಮಾಡಿರಿ ಏಕೆಂದರೆ ಮರಳಿ ಮನೆಗೆ ಹೋಗಬೇಕಾಗಿದೆ. ಆತ್ಮ ಅವಿನಾಶಿ, ಶರೀರವು ವಿನಾಶಿಯಾಗಿದೆ ಅಂದಾಗ ಶಕ್ತಿಶಾಲಿ ಯಾರಾದರು? ಶರೀರವು ಆತ್ಮದ ಆಧಾರದ ಮೇಲೆ ನಡೆಯುತ್ತದೆ. ಆತ್ಮವು ಹೊರಟು ಹೋದರೆ ಶರೀರವನ್ನು ಬೆಂಕಿಯಲ್ಲಿ ಸುಡಬೇಕಾಗುತ್ತದೆ. ಆತ್ಮವು ಅವಿನಾಶಿಯಾಗಿದೆ, ಅದು ಬಿಂದುವೇ ಆಗಿದೆ. ಆ ಆತ್ಮವನ್ನು ಯಾರೂ ಅರಿತುಕೊಂಡಿಲ್ಲ. ಭಲೆ ಯಾರಿಗಾದರೂ ಸಾಕ್ಷಾತ್ಕಾರವಾಗಬಹುದು ಆದರೂ ಏನು! ಅವರಿಗೆ ಆತ್ಮವು ಬಿಂದುವಾಗಿದೆ, ಅದರಲ್ಲಿ 84 ಜನ್ಮಗಳ ಅವಿನಾಶಿ ಪಾತ್ರವು ತುಂಬಲ್ಪಟ್ಟಿದೆ ಎಂಬುದು ತಿಳಿದಿರುವುದೇ ಇಲ್ಲ. ಈ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ. ರಾಜಯೋಗವನ್ನು ಕಲಿಸುವವರು ಆ ತಂದೆಯೇ ಆಗಿದ್ದಾರೆ ಬಾಕಿ ವಕೀಲರು, ವೈದ್ಯರು, ಇಂಜಿನಿಯರ್ ಮೊದಲಾದವರೆಲ್ಲರೂ ಹೊರಟು ಹೋಗುತ್ತಾರೆ. ಇಲ್ಲಿ ಮನುಷ್ಯರಿಂದ ದೇವತೆಗಳಾಗಬೇಕಾಗಿದೆ. ಅವರೂ ಮನುಷ್ಯರೇ, ಆದರೆ ಅವರನ್ನು ದೇವತೆಗಳೆಂದು ಹೇಳಲಾಗುತ್ತದೆ. ದೇವತೆಗಳು ಅರ್ಥಾತ್ ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳುವವರು. ನೀವು ಪುರುಷಾರ್ಥ ಮಾಡಿ ಇಂತಹ ದೈವೀ ಗುಣವಂತರು ಆಗಬೇಕಾಗಿದೆ, ಇದು ನಿಮ್ಮ ಗುರಿ-ಧ್ಯೇಯವಾಗಿದೆ. ಈ ದೇವತೆಗಳಲ್ಲಿ ಯಾವ ಗುಣಗಳಿವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನಾವೂ ಅವರಂತೆಯೇ ಆಗಬೇಕಾಗಿದೆ, ಅನೇಕರು ಪ್ರಜಾ ಪದವಿಯನ್ನು ಪಡೆಯುತ್ತಾರೆ ಆದರೆ ರಾಜ-ರಾಣಿಯಾಗುವುದರಲ್ಲಿ ಪರಿಶ್ರಮವಾಗುತ್ತದೆ. ಯಾರು ಹೆಚ್ಚು ಪರಿಶ್ರಮ ಪಡುವರೋ ಅವರು ರಾಜ-ರಾಣಿಯಾಗುತ್ತಾರೆ. ಯಾರು ಅನೇಕರಿಗೆ ಜ್ಞಾನವನ್ನು ಕೊಡುವರೋ ಅವರು ಪ್ರತಿಯೊಬ್ಬರೂ ತಮ್ಮ ಹೃದಯದಿಂದ ತಿಳಿದುಕೊಳ್ಳಬಹುದಾಗಿದೆ. ಆತ್ಮವು ಹೇಳುತ್ತದೆ - ನಾನು ಬೇಹದ್ದಿನ ತಂದೆಗೆ ಅವಶ್ಯವಾಗಿ ಮಗುವಾಗುತ್ತೇನೆ, ಅವರಿಗೆ ಬಲಿಹಾರಿಯಾಗುತ್ತೇನೆ, ನನ್ನ ಬಳಿ ಏನೆಲ್ಲವೂ ಇದೆಯೋ ಎಲ್ಲವನ್ನೂ ಅರ್ಪಣೆ ಮಾಡುತ್ತೇನೆ. ಈಶ್ವರನಿಗೆ ಕೊಡುತ್ತಾರಲ್ಲವೆ. ನೀವು ಒಲಿದು ಬಂದರೆ ನಾವು ನಿಮಗೆ ಬಲಿಹಾರಿಯಾಗುತ್ತೇವೆ. ಅದರ ಬದಲು ತಮ್ಮಿಂದ ಹೊಸ ತನು-ಮನ-ಧನವನ್ನು ಪಡೆಯುತ್ತೇವೆ. ಹೊಸ ಮನಸ್ಸನ್ನು ಹೇಗೆ ಪಡೆಯುತ್ತೀರಿ? - ತಂದೆಯು ಆತ್ಮವನ್ನು ಹೊಸದ (ಪವಿತ್ರ) ನ್ನಾಗಿ ಮಾಡುತ್ತಾರೆ ನಂತರ ಹೊಸ ಶರೀರವನ್ನೇ ಪಡೆಯುತ್ತೀರಿ. ರಾಜ್ಯಭಾಗ್ಯವನ್ನೂ ಪಡೆಯುತ್ತೀರಿ. ನೀವೀಗ ಪಡೆಯುತ್ತಿದ್ದೀರಲ್ಲವೆ. ಹೇ ತಂದೆಯೇ ಈ ಶರೀರ ಸಹಿತವಾಗಿ ನಾನು ನಿಮ್ಮವನಾಗಿದ್ದೇನೆ, ನಾನು ನಿಮ್ಮ ಮಡಿಲಿಗೆ ಬರುತ್ತೇನೆ ಎಂದು ಆತ್ಮವು ಹೇಳುತ್ತದೆ. ರಾವಣ ರಾಜ್ಯದಲ್ಲಿ ಎಲ್ಲರೂ ಬಹಳ ದುಃಖಿಯಾಗಿದ್ದಾರೆ ಆದ್ದರಿಂದ ಬಾಬಾ, ಈಗ ಇದರಿಂದ ಬಿಡಿಸಿ ನಮ್ಮ ರಾಜಧಾನಿಯಲ್ಲಿ ಕರೆದುಕೊಂಡು ಹೋಗಿರಿ ಎಂದು ಹೇಳುತ್ತಾರೆ. ಶಿವ ತಂದೆಯು ಸಿಕ್ಕಿ ಬಿಟ್ಟರು ಅಂದಮೇಲೆ ಇನ್ನೇನು ಬೇಕು? ಶಿವ ತಂದೆಯ ಶ್ರೀಮತದಿಂದ ಸ್ವರ್ಗವಾಗುತ್ತದೆ, ಆಸುರೀ ರಾವಣನ ಮತದಿಂದ ನರಕವಾಗುತ್ತದೆ, ಈಗ ಪುನಃ ಶ್ರೀಮತದಿಂದ ಸ್ವರ್ಗವಾಗಲಿದೆ. ಅವಶ್ಯವಾಗಿ ಕಲ್ಪದ ಹಿಂದೆ ಯಾರು ಬಂದಿದ್ದರೋ ಅವರೇ ಬರುತ್ತಾರೆ, ಶ್ರೀಮತದಿಂದ ಶ್ರೇಷ್ಠರಾಗುತ್ತಾರೆ. ರಾವಣನ ಮತದಂತೆ ನಡೆಯುವುದರಿಂದ ಕೆಳಗೆ ಬೀಳುತ್ತಾರೆ, ಈಗ ನಿಮ್ಮದು ಏರುವ ಕಲೆಯಾಗುತ್ತದೆ. ಉಳಿದೆಲ್ಲರದೂ ಇಳಿಯುವ ಕಲೆಯಾಗಿದೆ. ಎಷ್ಟು ವಿಭಿನ್ನ ಧರ್ಮಗಳಿವೆ, ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿತ್ತು, ಈಗ ಅದು ಪ್ರಾಯಲೋಪವಾಗಿ ಬಿಟ್ಟಿದೆ (ಆಲದ ಮರದ ಉದಾಹರಣೆಯಂತೆ).
ನೀವು ತಿಳಿದುಕೊಂಡಿದ್ದೀರಿ - ದೇವಿ-ದೇವತಾ ಧರ್ಮದ ನಿದರ್ಶನಗಳಿವೆ. ಅವಶ್ಯವಾಗಿ ದೇವಿ-ದೇವತೆಗಳ ರಾಜ್ಯವಿತ್ತು, ಇದು 5000 ವರ್ಷಗಳ ಮಾತಾಗಿದೆ. ನೀವು ಸಿದ್ಧ ಮಾಡಿ ತಿಳಿಸುತ್ತೀರಿ - ಇದು 5000 ವರ್ಷಗಳ ಚಕ್ರವಾಗಿದೆ, ಇದರಲ್ಲಿ 4 ಯುಗಗಳಿವೆ. ಪ್ರತಿಯೊಂದು ಯುಗದ ಆಯಸ್ಸು 1250 ವರ್ಷಗಳಾಗಿದೆ. ಮನುಷ್ಯರಂತೂ ಲಕ್ಷಾಂತರ ವರ್ಷಗಳೆಂದು ಬರೆದು ಬಿಟ್ಟಿದ್ದಾರೆ, ಬಹಳ ಅಂತರವಿರುವ ಕಾರಣ ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಹೇಗೆ ಅನ್ಯ ಸಂಸ್ಥೆಗಳಿವೆಯೋ ಹಾಗೆಯೇ ಇದೂ ಸಹ ಬ್ರಹ್ಮಾಕುಮಾರಿಯರ ಸಂಸ್ಥೆಯಾಗಿದೆ, ಇವರು ಗೀತೆಯನ್ನು ಹೇಳುತ್ತಾರೆ ಎಂದು ತಿಳಿಯುತ್ತಾರೆ. ಗೀತೆಯನ್ನು ಕೃಷ್ಣ ಭಗವಂತನು ತಿಳಿಸಿದನು ಆದರೆ ಇವರು ದಾದಾ ವಜ್ರ ವ್ಯಾಪಾರಿಯನ್ನು ತೋರಿಸಿದ್ದಾರೆಂದು ಮನುಷ್ಯರು ತಬ್ಬಿಬ್ಬಾಗುತ್ತಾರಲ್ಲವೆ. ತಂದೆಯು ಹೇಳುತ್ತಾರೆ - ನಾನು ಹೇಗಿದ್ದೇನೆ, ಯಾರಾಗಿದ್ದೇನೆ ಹಾಗೆಯೇ ನನ್ನನ್ನು ಇಲ್ಲಿಯವರೆಗೂ ನನ್ನನ್ನು ಯಾರೂ ಅರಿತುಕೊಂಡಿಲ್ಲ. ಕೊನೆಯಲ್ಲಿ ನೀವು ಪೂರ್ಣ ರೀತಿಯಿಂದ ಅರಿತುಕೊಳ್ಳುತ್ತೀರಿ. ಇಲ್ಲಿಯವರೆಗೂ ನಂಬರ್ವಾರ್ ಅರಿತುಕೊಂಡಿದ್ದೀರಿ ಆದ್ದರಿಂದ ಶ್ರೀಮತದಂತೆ ನಡೆಯುವುದು ಬಹಳ ಕಷ್ಟವೆಂದು ತಿಳಿಯುತ್ತೀರಿ. ಒಳ್ಳೊಳ್ಳೆಯ ಮಕ್ಕಳೂ ಸಹ ಶ್ರೀಮತದಂತೆ ನಡೆಯುವುದಿಲ್ಲ. ನಡೆಯಲು ರಾವಣನು ಬಿಡುವುದಿಲ್ಲ, ತಮ್ಮ ಮತವನ್ನು ನಡೆಸುತ್ತಾರೆ. ಕೆಲವರೇ ಶ್ರೀಮತದಂತೆ ಪೂರ್ಣ ರೀತಿಯಿಂದ ನಡೆಯುವವರಿದ್ದಾರೆ. ಮುಂದೆ ಹೋದಂತೆ ಸಂಪೂರ್ಣ ಅರಿತುಕೊಂಡಾಗ ಶ್ರೀಮತದಂತೆ ನಡೆಯುತ್ತಾರೆ. ನಾನು ಹೇಗಿದ್ದೇನೋ, ಯಾರಾಗಿದ್ದೇನೋ ಅದು ಮುಂದೆ ಹೋದಂತೆ ಅರ್ಥವಾಗುವುದು. ಈಗಿನ್ನೂ ತಿಳಿದುಕೊಳ್ಳುತ್ತಾ ಹೋಗುತ್ತೀರಿ. ಪೂರ್ಣ ತಿಳಿದು ಬಿಟ್ಟರೆ ಇನ್ನೇನು ಬೇಕು! ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ ಆದರೆ ಮಾಯಾಶತ್ರು ಶ್ರೀಮತದಂತೆ ನಡೆಯುವುದನ್ನು ತಡೆಯುತ್ತದೆ. ಬಾಬಾ, ಮಾಯೆಯ ಬಿರುಗಾಳಿಯು ಬಹಳ ಬರುತ್ತದೆ, ಮಾಯೆಯು ತಮ್ಮ ನೆನಪನ್ನು ಮರೆಸಿ ಬಿಡುತ್ತದೆ ಎಂದು ಹೇಳುತ್ತಾರೆ. ಹಾ! ನೀವು ಪುರುಷಾರ್ಥವನ್ನು ತೀವ್ರವಾಗಿ ಮಾಡುತ್ತಾ-ಮಾಡುತ್ತಾ ಇದ್ದರೆ ಕೊನೆಗೆ ಮಾಯೆಯು ಸುಸ್ತಾಗಿ ಬಿಡುವುದು. 8ರ ಮಾಲೆಯಿದೆ, ಮುಖ್ಯವಾಗಿ 8 ರತ್ನಗಳಿದೆ. 8 ರತ್ನಗಳು ಜೋಡಿಯಾಗಿದೆ. 9ನೇ ರತ್ನವಾಗಿ ಮಧ್ಯದಲ್ಲಿ ಶಿವ ತಂದೆಯನ್ನು ಇಡುತ್ತಾರೆ. ಕೆಲವರು ಕೆಂಪು ಬಣ್ಣದ, ಇನ್ನೂ ಕೆಲವರು ಬಿಳಿಯ ಬಣ್ಣದ ರತ್ನವನ್ನು ಇಡುತ್ತಾರೆ. ಶಿವ ತಂದೆಯಂತೂ ಬಿಂದುವಾಗಿದ್ದಾರೆ, ಬಿಂದುವು ಕೆಂಪು ಬಣ್ಣದಲ್ಲಿ ಇರುವುದಿಲ್ಲ, ಬಿಳಿಯ ಬಣ್ಣದಲ್ಲಿರುತ್ತದೆ. ಅವರು ಬಹಳ ಸೂಕ್ಷ್ಮವಾಗಿದ್ದಾರೆ. ದಿವ್ಯ ದೃಷ್ಟಿಯ ವಿನಃ ಅವರನ್ನು ಯಾರೂ ನೋಡಲು ಸಾಧ್ಯವಿಲ್ಲ. ವೈದ್ಯರು ಮೊದಲಾದವರು ಬಿಂದುವನ್ನು ನೋಡಲು ಎಷ್ಟೊಂದು ಪ್ರಯತ್ನ ಪಡುತ್ತಾರೆ. ಆದರೆ ನೋಡಲು ಸಾಧ್ಯವಿಲ್ಲ ಏಕೆಂದರೆ ಅವ್ಯಕ ವಸ್ತುವಲ್ಲವೆ! ಆದ್ದರಿಂದ ಕೇಳಲಾಗುತ್ತದೆ - ನಾವಾತ್ಮರಾಗಿದ್ದೇವೆ ಎಂದು ನೀವು ಹೇಳುತ್ತೀರಿ ಅಂದಮೇಲೆ ಆತ್ಮವನ್ನು ಎಂದಾದರೂ ನೋಡಿದ್ದೀರಾ? ತಮ್ಮನ್ನೇ ನೋಡಲು ಸಾಧ್ಯವಿಲ್ಲ ಅಂದಮೇಲೆ ತಂದೆಯನ್ನು ನೋಡಲು ಹೇಗೆ ಸಾಧ್ಯ! ಆತ್ಮದಲ್ಲಿ ಹೇಗೆ ಪಾತ್ರವು ಅಡಕವಾಗಿದೆ ಎಂದು ಮೊದಲು ಆತ್ಮವನ್ನು ತಿಳಿದುಕೊಳ್ಳಬೇಕಾಗಿದೆ. ಇದನ್ನು ಯಾರೂ ತಿಳಿದುಕೊಂಡಿಲ್ಲ. 84 ಜನ್ಮಗಳ ಬದಲು 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ. ತಂದೆಯು ಬಂದು ಮಕ್ಕಳಿಗೂ ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ - ಇಂದಿನ ಭಾರತವು ಏನಾಗಿದೆ? ನಾಳೆಯ ಭಾರತವು ಹೇಗಿರುವುದು! ಎಂದು. ಮಹಾಭಾರತ ಯುದ್ಧವೂ ಇದೆ, ಗೀತಾ ಜ್ಞಾನವನ್ನು ತಿಳಿಸಿದ್ದಾರೆ. ಈ ರುದ್ರ ಯಜ್ಞವೂ ಇದೆ, ಈಗ ಎಲ್ಲಾ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆಯಾಗುತ್ತಿದೆ.
ಇದು ಶಿವ ತಂದೆಯ ಭಂಡಾರವಾಗಿದೆ, ಇದರಿಂದ ನಿಮಗೆ ಪವಿತ್ರ ಭೋಜನವು ಸಿಗುತ್ತದೆ. ಬ್ರಾಹ್ಮಣ-ಬ್ರಾಹ್ಮಿಣಿಯರು ತಯಾರಿಸುತ್ತಾರೆ ಆದ್ದರಿಂದ ಈ ಭೋಜನಕ್ಕೆ ಅಪರಮಪಾರ ಮಹಿಮೆಯಿದೆ, ಇದರಿಂದ ನೀವು ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ ಆದ್ದರಿಂದ ಪವಿತ್ರ ಭೋಜನವು ಒಳ್ಳೆಯದಾಗಿದೆ. ನೀವು ಎಷ್ಟು ಶ್ರೇಷ್ಠರಾಗುತ್ತಾ ಹೋಗುತ್ತೀರೋ ಅಷ್ಟು ಶುದ್ಧ ಭೋಜನವು ನಿಮಗೆ ಸಿಗುತ್ತದೆ. ಯಾರಾದರೂ ಯೋಗಯುಕ್ತರಾಗಿ ಭೋಜನವನ್ನು ತಯಾರಿಸಿದರೆ ಅದರಿಂದ ಬಹಳ ಶಕ್ತಿಯು ಸಿಗುವುದು. ಅದೂ ಸಹ ಮುಂದೆ ಹೋದಂತೆ ಸಿಗುತ್ತದೆ. ಸೇವಾಧಾರಿ ಮಕ್ಕಳು ಯಾರು ಸೇವಾಕೇಂದ್ರದಲ್ಲಿ ಇರುತ್ತಾರೆಯೋ ಅವರು ತಮ್ಮದೇ ಕೈಗಳಿಂದ ಭೋಜನವನ್ನು ತಯಾರಿಸಿ ಸೇವಿಸಿದರೆ ಅದರಲ್ಲಿ ಬಹಳಷ್ಟು ಶಕ್ತಿ ದೊರೆಯುತ್ತದೆ. ಹೇಗೆ ಪತಿವ್ರತಾ ಸ್ತ್ರೀಯು ತನ್ನ ಪತಿಯ ವಿನಃ ಮತ್ತ್ಯಾರನ್ನೂ ನೆನಪು ಮಾಡುವುದಿಲ್ಲ. ಹಾಗೆಯೇ ನೀವು ಮಕ್ಕಳೂ ಸಹ ನೆನಪಿನಲ್ಲಿದ್ದು ಭೋಜನವನ್ನು ತಯಾರಿಸಿ ಸೇವಿಸಿದರೆ ಬಹಳ ಶಕ್ತಿ ಸಿಗುವುದು. ತಂದೆಯ ನೆನಪಿನಲ್ಲಿ ಇರುವುದರಿಂದ ನೀವು ವಿಶ್ವದ ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ತಂದೆಯು ಸಲಹೆಯನ್ನಂತೂ ಕೊಡುತ್ತಾರೆ ಆದರೆ ಯಾರ ಬುದ್ಧಿಯಲ್ಲಿಯೂ ಇದು ಬರುತ್ತಿಲ್ಲ. ಮುಂದೆ ಹೋದಂತೆ ನಾವು ನಮ್ಮ ಕೈಗಳಿಂದ ಯೋಗಯುಕ್ತರಾಗಿ ಭೋಜನವನ್ನು ತಯಾರಿಸುತ್ತೇವೆ ಎಂದು ತಾವೇ ಹೇಳುತ್ತಾರೆ, ಇದರಿಂದ ಎಲ್ಲರ ಕಲ್ಯಾಣವಾಗುವುದು.
ತಂದೆಯು ಮಕ್ಕಳಿಗೆ ಪ್ರತಿಯೊಂದು ಪ್ರಕಾರದಿಂದ ಮತವನ್ನು ಕೊಡುತ್ತಾರಲ್ಲವೆ. ತ್ರಿಮೂರ್ತಿ ಚಿತ್ರವು ಸನ್ಮುಖದಲ್ಲಿರಲಿ. ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಒಂದಲ್ಲ ಒಂದು ಯುಕ್ತಿಯನ್ನು ಮಾಡುತ್ತಾ ಇರಿ. ತಂದೆಯು ತಮ್ಮ ಉದಾಹರಣೆಯನ್ನು ತಿಳಿಸುತ್ತಾರೆ - ಭಕ್ತಿಮಾರ್ಗದಲ್ಲಿ ನಾನು ನಾರಾಯಣನ ಚಿತ್ರವನ್ನು ಬಹಳ ಪ್ರೀತಿ ಮಾಡುತ್ತಿದ್ದೆನು. ನಾರಾಯಣನನ್ನು ನೆನಪು ಮಾಡುತ್ತಾ ಕಣ್ಣುಗಳಲ್ಲಿ ಪ್ರೀತಿ ಬಂದು ಬಿಡುತ್ತಿತ್ತು, ಏಕೆಂದರೆ ಆ ಸಮಯದಲ್ಲಿ ವೈರಾಗ್ಯವಿತ್ತು. ಬಾಲ್ಯದಲ್ಲಿಯೇ ವೈರಾಗ್ಯ ವೃತ್ತಿಯಿತ್ತು. ಇಲ್ಲಂತೂ ಇವು ಬೇಹದ್ದಿನ ಮಾತುಗಳಾಗಿವೆ. ಪುನಃ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮನ್ಮನಾಭವ. ಯೋಗದಲ್ಲಿ ಇರುವುದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ನೆನಪಿನಲ್ಲಿರುವ ಚಿಂತೆಯನ್ನು ಇಟ್ಟುಕೊಳ್ಳಬೇಕಾಗಿದೆ. ಶ್ರೀಮತ ಸಿಗುತ್ತಿದೆ, ತಂದೆಯು ಹೇಳುತ್ತಾರೆ ನನ್ನನ್ನು ನೆನಪು ಮಾಡಿರಿ, ನಾನು ಸೃಷ್ಟಿಯ ರಚಯಿತನಾಗಿದ್ದೇನೆ ಅಂದಮೇಲೆ ನೀವೂ ಹೊಸ ಪ್ರಪಂಚದ ಮಾಲೀಕರಾಗುತ್ತೀರಲ್ಲವೆ. ಪಾವನರಾಗದಿದ್ದರೆ ಶಿಕ್ಷೆಗಳನ್ನೂ ಅನುಭವಿಸುವಿರಿ ಮತ್ತು ಪದವಿಯೂ ಭ್ರಷ್ಟವಾಗುವುದು. ನೀವು ಶರೀರ ಬಿಡುವುದಕ್ಕೆ ಮೊದಲೇ ಇದೇ ಚಿಂತೆಯನ್ನು ಇಟ್ಟುಕೊಳ್ಳಬೇಕು - ನಾವು ಹೇಗೆ ಸತೋಪ್ರಧಾನರಾಗುವುದು! ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕಾಗಿದೆ, ಇದು ಅತಿ ದೊಡ್ಡ ಚಿಂತೆಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯೋಗ ಯುಕ್ತರಾಗಿ ತಮ್ಮ ಕೈಗಳಿಂದ ಭೋಜನ ತಯಾರಿಸಬೇಕು ಹಾಗೂ ಸೇವಿಸಬೇಕಾಗಿದೆ. ಪವಿತ್ರ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಪವಿತ್ರ ಭೋಜನವನ್ನು ಸ್ವೀಕರಿಸಬೇಕಾಗಿದೆ, ಅದರಲ್ಲಿಯೇ ಬಲವಿದೆ.
2. ಹೊಸ ತನು-ಮನ-ಧನವನ್ನು ಪ್ರಾಪ್ತಿ ಮಾಡಿಕೊಳ್ಳಲು ಹಳೆಯದೆಲ್ಲವನ್ನೂ ತಂದೆಗೆ ಅರ್ಪಣೆ ಮಾಡಬೇಕಾಗಿದೆ, ಈ ಶರೀರ ಸಹಿತವಾಗಿ ತಂದೆಗೆ ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ.
ಓಂ ಶಾಂತಿ. ಶಿವ ಭಗವಾನುವಾಚ. ಶಿವ ತಂದೆಯು ನಮಗೆ ತಿಳಿಸುತ್ತಾರೆಂದು ನೀವು ಮಕ್ಕಳು ತಿಳಿದುಕೊಳ್ಳುತ್ತೀರಿ, ಶಿವ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ಆ ಕಲಿಯುಗೀ ಮನುಷ್ಯರು ಶಿವ ತಂದೆಯ ಜಡ ಮಂದಿರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ. ಅಂತರವನ್ನು ತಿಳಿದುಕೊಂಡಿದ್ದೀರಲ್ಲವೆ. ಬುದ್ಧಿಯ ಬೀಗವನ್ನು ಸ್ವಲ್ಪ ತೆರೆಯಿರಿ. ನೀವು ತಿಳಿದುಕೊಳ್ಳುತ್ತೀರಿ, ನಾವು ಚೈತನ್ಯ ಶಿವ ತಂದೆಯ ಬಳಿ ಕುಳಿತಿದ್ದೇವೆ. ತಂದೆಯು ನಮ್ಮೊಂದಿಗೆ ಸನ್ಮುಖದಲ್ಲಿ ವಾರ್ತಾಲಾಪ ಮಾಡುತ್ತಿದ್ದಾರೆ. ಈ ಬ್ರಹ್ಮಾರವರ ಮೂಲಕ ರಾಜಯೋಗವನ್ನು ಕಲಿಸುತ್ತಿದ್ದಾರೆ ಮತ್ತು ಇನ್ನೊಂದು ಕಡೆ ನೋಡಿ, ಮನುಷ್ಯರು ಶಿವ ತಂದೆಯ ಪೂಜೆ ಮಾಡುತ್ತಿದ್ದಾರೆ. ಅಮರನಾಥಕ್ಕೆ, ಕಾಶಿಗೆ ಹುಡುಕಲು ಹೋಗುತ್ತಿದ್ದಾರೆ. ಮತ್ತೆ ನಾವು ಶಿವ ತಂದೆಯ ಬಳಿ ಕುಳಿತಿದ್ದೇವೆ ಎಂಬುದನ್ನು ನೀವು ಪದೇ-ಪದೇ ಏಕೆ ಮರೆತು ಹೋಗುತ್ತೀರಿ? ಶಿವ ತಂದೆಗೆ ಪರಮಪಿತ ಪರಮಾತ್ಮನೆಂದು ಹೇಳಲಾಗುತ್ತದೆ, ಅವರಿಗೆ ಎಷ್ಟೊಂದು ಮಹಿಮೆಯಿದೆ! ಅವರಿಗೆ ನೀವು ಬಾಬಾ, ಬಾಬಾ ಎಂದು ಹೇಳುತ್ತೀರಿ. ನಿಮಗೆ ತಿಳಿದಿದೆ, ಶಿವ ತಂದೆಯ ಮತದಂತೆ ನಡೆದು ವಿಶ್ವದ ಮಾಲೀಕರಾಗುವ ಆಸ್ತಿಯನ್ನು ಪಡೆಯುತ್ತಿದ್ದೀರಿ. ಮನುಷ್ಯರು ಇನ್ನೂ ಮಂದಿರಗಳು, ತೀರ್ಥ ಸ್ಥಾನಗಳಲ್ಲಿ ಸುತ್ತುತ್ತಿದ್ದಾರೆ ಮತ್ತು ನೀವು ಆಸ್ತಿಯನ್ನು ಪಡೆಯುತ್ತಿದ್ದೀರಿ. ಎಷ್ಟೊಂದು ವ್ಯತ್ಯಾಸವಿದೆ ನೋಡಿ! ನಿಮ್ಮ ಹೋಲಿಕೆಯಲ್ಲಿ ಅವರು ಎಷ್ಟು ಅಮಾಯಕರಾಗಿದ್ದಾರೆ! ಶಿವ ತಂದೆಯು ತಿಳಿಸುತ್ತಾರೆ, ನಾನು ನಿಮ್ಮ ವಿಧೇಯ ಸೇವಕನಾಗಿದ್ದೇನೆ. ನಾನು ನಿಮಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆ. ಮನುಷ್ಯರು ಪರಮಪಿತನನ್ನು ಕರೆಯುತ್ತಾ ಇರುತ್ತಾರೆ. ಇಲ್ಲಂತೂ ನೀವು ಅವರ ಸನ್ಮುಖದಲ್ಲಿಯೇ ಕುಳಿತಿದ್ದೀರಿ. ಇಲ್ಲಿರುವಾಗ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ, ಮತ್ತೆ ಮನೆಗೆ ಹೋಗುತ್ತಿದ್ದಂತೆಯೇ ಹೇಗೆ ಮರೆತು ಹೋಗುತ್ತೀರಿ? ಇಲ್ಲಿ ನಿಮಗಾಗಿ ದಿನವಾಗಿದೆ, ಅಲ್ಲಿ ಅವರಿಗೆ ರಾತ್ರಿಯಾಗಿದೆ. ಅವರು ಚೀರಾಡುತ್ತಿರುತ್ತಾರೆ, ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮ್ಮೊಂದಿಗೇ ಕುಳಿತುಕೊಳ್ಳುವೆನು, ನಿಮ್ಮಿಂದಲೇ ಕೇಳುವೆನು.... ಎಂದು ಹೇಳುತ್ತೀರಿ ಆದರೆ ಮನೆಗೆ ಹೋಗಿ ಮರೆತು ಹೋಗುತ್ತೀರಿ. ಮಾಯೆಯು ಎಷ್ಟು ಪ್ರಬಲವಾಗಿದೆ! ಶಿವ ತಂದೆಯ ಮಕ್ಕಳಾಗಿ ಪೂಜಾರಿಗಳಿಂದ ಪೂಜ್ಯರಾಗುವ ಪುರುಷಾರ್ಥವನ್ನೂ ಮಾಡುತ್ತಾರೆ ಮತ್ತೆ ಹೊರಗೆ ಹೋಗಿ ಪೂಜಾರಿಗಳಾಗಿ ಬಿಡುತ್ತಾರೆ. ಶಿವ ತಂದೆಯ ಜಡ ಮಂದಿರಗಳಿಗೆ ಹೋಗುತ್ತಿರುತ್ತಾರೆ.
ಇಲ್ಲಂತೂ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಶ್ರೀಮತದಂತೆ ನಡೆಯುವುದರಿಂದಲೇ ನೀವು ಶ್ರೇಷ್ಠರಾಗುತ್ತೀರಿ, ಮುಖ್ಯವಾದುದು ಪವಿತ್ರತೆಯಾಗಿದೆ. ಅಲ್ಲಿ ಜಡ ಚಿತ್ರಗಳ ಮುಂದೆ ಹೋಗಿ ಬಲಿಯಾಗುತ್ತಾರೆ. ಇಲ್ಲಂತೂ ಚೈತನ್ಯದಲ್ಲಿ ಕುಳಿತಿದ್ದೇನೆ. ಇಲ್ಲಿ ನನಗೆ ಬಲಿಯಾಗುವ ಮಾತಿಲ್ಲ, ಇದು ಜೀವಿಸಿದ್ದಂತೆಯೇ ಸಾಯುವುದಾಗಿದೆ. ಶ್ರೀಮತದಂತೆ ನಡೆಯಿರಿ ಎಂದು ತಂದೆಯು ಹೇಳುತ್ತಾರೆ, ಇಲ್ಲಿಂದ ಹೊರಗೆ ಹೋಗುತ್ತಿದ್ದಂತೆಯೇ ತಂದೆಯನ್ನೇ ಮರೆತು ಹೋಗುತ್ತಾರೆ, ಎಂದೂ ಪತ್ರವನ್ನೂ ಬರೆಯುವುದಿಲ್ಲ. ಕೆಲವರು ಈ ರೀತಿಯೂ ಇದ್ದಾರೆ ಎಂದೂ ನೋಡಿಯೂ ಇಲ್ಲ, ಮಿಲನವನ್ನೂ ಮಾಡಿಲ್ಲ. ಅವರು ತವಕಿಸುತ್ತಾ ಪತ್ರಗಳನ್ನು ಬರೆಯುತ್ತಿರುತ್ತಾರೆ ಮತ್ತು ಯಾರು ಸನ್ಮುಖದಲ್ಲಿ ಮಿಲನ ಮಾಡಿ ಹೋಗುತ್ತಾರೆಯೋ ಅವರು ಒಮ್ಮೆಲೆ ಮರೆತು ಹೋಗುತ್ತಾರೆ. ನೀವಂತು ಶಿವ ತಂದೆಯ ಮೇಲೆ ಬಲಿಹಾರಿ ಆಗಬೇಕಲ್ಲವೆ. ಭಕ್ತಿಮಾರ್ಗದಲ್ಲಿ ಶಿವ ತಂದೆಯೊಂದಿಗೆ ಮಿಲನ ಮಾಡುವುದಕ್ಕಾಗಿ ತನ್ನನ್ನು ಬಲಿ ಕೊಟ್ಟುಕೊಳ್ಳುತ್ತಿದ್ದಿರಿ. ಆದರೆ ಅಲ್ಲಿ ಭಗವಂತನು ಸಿಗುತ್ತಿರಲಿಲ್ಲ, ಈಗ ತಂದೆಯು ಚೈತನ್ಯದಲ್ಲಿ ಬಂದು ಹೇಳುತ್ತಾರೆ - ಮಕ್ಕಳೇ, ನನ್ನವರಾಗಿರಿ. ನಾನು ಕರೆದುಕೊಂಡು ಹೋಗಲು ಬಂದಿದ್ದೇನೆ, ಪವಿತ್ರರಾಗದೆ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಪವಿತ್ರರನ್ನಾಗಿ ಮಾಡಲು ನಾನೇ ಬರಬೇಕಾಗುತ್ತದೆ. ಸರ್ವರ ಸದ್ಗತಿದಾತ ತಂದೆಯು ನಿಮ್ಮ ಬಳಿ ಕುಳಿತಿದ್ದಾರೆ. ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಯಾವುದನ್ನು ಭಗವಂತನು ಕಲಿಸಿದ್ದರು. ಅಲ್ಲಿ ಅವರು ಕೃಷ್ಣನನ್ನು ಭಗವಂತನೆಂದು ತಿಳಿಸಿದ್ದರು. ನಿಮಗೆ ತಿಳಿದಿದೆ, ಗೀತೆಯ ಭಗವಂತನು ಶಿವ ತಂದೆಯಾಗಿದ್ದಾರೆ. ನೀವು ಪತ್ರದಲ್ಲಿಯೂ ಶಿವಬಾಬಾ ಛಿ/o ಬ್ರಹ್ಮಾ ಎಂದು ಬರೆಯುತ್ತೀರಿ. ನಿಮಗೆ ತಂದೆಯು ಸನ್ಮುಖದಲ್ಲಿ ಕುಳಿತು ತಿಳಿಸುತ್ತಾರೆ ಆದರೂ ನಶೆಯೇರುವುದಿಲ್ಲ. ಓಹೋ ಶಿವ ತಂದೆಯು ನಮ್ಮನ್ನು ಮಡಿಲಿಗೆ ತೆಗೆದುಕೊಂಡಿದ್ದಾರೆ, ದತ್ತು ಮಗುವನ್ನಾಗಿ ಮಾಡಿಕೊಂಡಿದ್ದಾರೆ! ಆದರೆ ಎಲ್ಲರನ್ನೂ ಇಲ್ಲಿಯೇ ಇಟ್ಟುಕೊಳ್ಳಲು ಸಾಧ್ಯವಿಲ್ಲ ಅಲ್ಲವೆ. ಸಾವಿರಾರು ಮಂದಿ ಮಕ್ಕಳಿದ್ದಾರೆ, ಎಲ್ಲರನ್ನೂ ಇಲ್ಲಿಯೇ ಹೇಗೆ ಇಟ್ಟುಕೊಳ್ಳುವುದು, ಅಷ್ಟು ಸ್ಥಳವಾದರೂ ಎಲ್ಲಿದೆ! ಆದ್ದರಿಂದ ತಂದೆಯು ತಿಳಿಸುತ್ತಾರೆ - ನೀವು ತಮ್ಮ ಮನೆಯಲ್ಲಿಯೇ ಇರಿ, ಕೇವಲ ನನ್ನನ್ನು ನೆನಪು ಮಾಡಬೇಕಾಗಿದೆ. ಎಲ್ಲರಿಗಿಂತ ಮಧುರ ಬೇಹದ್ದಿನ ತಂದೆಯಾಗಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಕಾಮ ಚಿತೆಯನ್ನು ಏರಿ ಸುಟ್ಟು ಹೋಗಿದ್ದೀರಿ, ನೀವೀಗ ಜ್ಞಾನ ಚಿತೆಯ ಮೇಲೆ ಕುಳಿತು ದೇವತೆಗಳಾಗಿರಿ, ದೇವತೆಗಳ ಪೂಜೆಯನ್ನೂ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಇದೂ ಸಹ ಡ್ರಾಮಾದ ಲೀಲೆಯೆಂದೇ ಹೇಳಲಾಗುತ್ತದೆ. ನೀವೀಗ ಚೈತನ್ಯ ಶಿವ ತಂದೆಯ ಬಳಿ ಕುಳಿತಿದ್ದೀರಿ. ಶಿವ ತಂದೆಯು ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯಾವುದೇ ಪಾಪ ಕರ್ಮ ಮಾಡಬೇಡಿ, ದೇಹಾಭಿಮಾನದಲ್ಲಿ ಬರಬೇಡಿ. ನೀವೀಗ ನಡೆಯುತ್ತಾ -ತಿರುಗಾಡುತ್ತಾ ಪ್ರಿಯತಮನನ್ನು ನೆನಪು ಮಾಡಬೇಕಾಗಿದೆ ಯಾರನ್ನು ನೀವು ಅರ್ಧ ಕಲ್ಪದಿಂದ ನೆನಪು ಮಾಡುತ್ತಿದ್ದಿರಿ ಅವರು ಈಗ ನಿಮ್ಮ ಸೇವೆಯಲ್ಲಿ ಉಪಸ್ಥಿತರಿದ್ದಾರೆ. ಆತ್ಮೀಯ ಸಮಾಜ ಸೇವಕನಾಗಿದ್ದಾರೆ. ನಿಮಗೆ ಆತ್ಮಿಕ ಸೇವೆಯನ್ನು ಕಲಿಸುತ್ತಾರೆ, ಸಮಾಜ ಸೇವೆಯ ಮುಖ್ಯಸ್ಥರೂ ಇರುತ್ತಾರಲ್ಲವೆ. ಇದು ಆತ್ಮಿಕ ಸೇವೆಯಾಗಿದೆ. ಅವರು ಮನುಷ್ಯರ ಸಂಘದ ದೈಹಿಕ ಸೇವೆ ಮಾಡುವವರಾಗಿರುತ್ತಾರೆ. ಈಗ ನೋಡಿ, ಗೋ-ಹತ್ಯೆ ಮಾಡುವುದನ್ನು ನಿಲ್ಲಿಸಬೇಕೆಂದು ಅವರು ಹೇಳುತ್ತಾರೆ. ನೀವು ಇದನ್ನು ಬರೆಯಬಹುದು - ಒಬ್ಬರು ಇನ್ನೊಬ್ಬರ ಮೇಲೆ ಕಾಮ ಕಟಾರಿಯನ್ನು ನಡೆಸುವುದು ಎಲ್ಲದಕ್ಕಿಂತ ದೊಡ್ಡ ಹತ್ಯೆಯಾಗಿದೆ. ಮೊದಲು ಇದನ್ನು ನಿಲ್ಲಿಸಿರಿ. ಇದಕ್ಕಾಗಿಯೇ ಭಗವಂತನು ಹೇಳಿದ್ದಾರೆ, ಕಾಮ ಮಹಾಶತ್ರು, ಆದಿ-ಮಧ್ಯ-ಅಂತ್ಯ ದುಃಖ ಕೊಡುವಂತದ್ದಾಗಿದೆ. ನೀವು ಗೀತೆಯ ಭಗವಂತನನ್ನು ಮರೆತು ಹೋಗಿದ್ದೀರಿ. ತಂದೆಗೆ ಆಶ್ಚರ್ಯವೆನಿಸುತ್ತದೆ. ಒಂದು ಕಡೆ ಅಮರನಾಥದಲ್ಲಿ, ಪರ್ವತಗಳಲ್ಲಿ ಹುಡುಕುತ್ತಿರುತ್ತಾರೆ. ಪಾರ್ವತಿಗೆ ಅಲ್ಲಿ ಅಮರ ಕಥೆಯನ್ನು ತಿಳಿಸಿದರೆಂದು ತಿಳಿಯುತ್ತಾರೆ. ಒಬ್ಬ ಪಾರ್ವತಿಗೆ ತಿಳಿಸುವುದರಿಂದ ಏನಾಗುವುದು! ತಂದೆಯು ತಿಳಿಸುತ್ತಾರೆ - ಇವರೆಲ್ಲರೂ ಪಾರ್ವತಿಯರಾಗಿದ್ದಾರೆ, ಎಲ್ಲರಿಗೆ ಅಮರ ಕಥೆಯನ್ನು ತಿಳಿಸುತ್ತಿದ್ದೇನೆ - ಮಕ್ಕಳೇ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಮೃತ್ಯುಲೋಕದಲ್ಲಿ ಬಂದು ತಲುಪಿದ್ದೀರಿ. ಒಳ್ಳೆಯದು - ಲಕ್ಷ್ಮೀ-ನಾರಾಯಣರು ಎಲ್ಲಿ ಹೋದರು? ಹಿಂತಿರುಗಿ ಹೋದರೇ ಅಥವಾ ಜ್ಯೋತಿಯಲ್ಲಿ ಜ್ಯೋತಿಯು ಸಮಾವೇಶವಾಯಿತೆ? ಸೂರ್ಯವಂಶಿ ರಾಜ-ರಾಣಿ, ಪ್ರಜೆ ಅವರೆಲ್ಲರೂ ಎಲ್ಲಿ ಹೋದರು? ಅವಶ್ಯವಾಗಿ ಸತೋಪ್ರಧಾನರಿಂದ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿ ಬಿಟ್ಟಿರಬಹುದು. ತಿಳಿದುಕೊಂಡಿದ್ದೀರಲ್ಲವೆ! ಇದನ್ನು ಬ್ರಹ್ಮಾರವರ ಮೂಲಕ ಶಿವ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನೀಗ ನಿಮ್ಮ ಅದೃಷ್ಟವನ್ನು ಬೆಳಗಿಸಲು ಬಂದಿದ್ದೇನೆ ಮತ್ತೆ ನೀವು ಅದೃಷ್ಟಕ್ಕೆ ಅಡ್ಡ ಗೆರೆಯನ್ನೇಕೆ ಎಳೆದುಕೊಳ್ಳುತ್ತೀರಿ! ಸ್ವಲ್ಪ ಅರ್ಥ ಮಾಡಿಕೊಳ್ಳಿ, ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನೀವು ನನ್ನ ಮತದಂತೆ ನಡೆಯುವುದಿಲ್ಲವೆ!!! ಮನೆಗೆ ಹೋಗುತ್ತಿದ್ದಂತೆಯೇ ಏಕೆ ಮರೆತು ಹೋಗುತ್ತೀರಿ!! ತಂದೆಯು ಪದೇ-ಪದೇ ತಿಳಿಸುತ್ತಾರೆ - ನೀವೀಗ ಸಂಗಮಯುಗಿಗಳಾಗಿದ್ದೀರಿ. ಅವರು ಕಲಿಯುಗಿಗಳಾಗಿದ್ದಾರೆ. ನೀವು ಪೂಜ್ಯರು, ಅವರು ಪೂಜಾರಿಗಳಾಗಿದ್ದಾರೆ. ನಿಮ್ಮ ಅಲೆದಾಟವು ಈಗ ನಿಂತು ಹೋಯಿತು. ಭಲೆ ಅವರು ನಿಮ್ಮನ್ನು ನಾಸ್ತಿಕರೆಂದು ತಿಳಿಯುತ್ತಾರೆ, ನೀವು ಅವರಿಗೆ ನಾಸ್ತಿಕರೆಂದು ಹೇಳುತ್ತೀರಿ. ನೀವು ಭಕ್ತಿ ಮಾಡುವುದಿಲ್ಲ ಆದ್ದರಿಂದ ನೀವು ನಾಸ್ತಿಕರೆಂದು ಅವರು ಹೇಳುತ್ತಾರೆ. ನೀವು ತಂದೆಯನ್ನೇ ಅರಿತುಕೊಂಡಿಲ್ಲ ಆದ್ದರಿಂದ ನೀವು ನಾಸ್ತಿಕರಾಗಿದ್ದೀರಿ, ನಾವು ಆಸ್ತಿಕರಾಗಿದ್ದೇವೆ. ತಂದೆಯನ್ನು ಅರಿತು ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ನೀವು ತಿಳಿದುಕೊಂಡಿಲ್ಲ ಆದ್ದರಿಂದ ಇನ್ನೂ ಹುಡುಕುತ್ತಾ ಇದ್ದೀರಿ ಎಂದು ನೀವು ಹೇಳುತ್ತೀರಿ. ಕುಂಭಮೇಳದಲ್ಲಿ ಎಷ್ಟೊಂದು ಮಂದಿ ಹೋಗುತ್ತಾರೆ ಮತ್ತು ದಾನ-ಪುಣ್ಯ ಮಾಡುತ್ತಾರೆ. ಈಗ ತಂದೆಯು ತಿಳಿಸುತ್ತಾರೆ - ಇವೆಲ್ಲಾ ಮಾತುಗಳನ್ನು ಬಿಡಿ, ನಿಮಗೆ ಜ್ಞಾನ ಸಾಗರನು ಸಿಕ್ಕಿದ್ದಾರೆ ಅಂದಮೇಲೆ ಮತ್ತೆಲ್ಲಿಗೆ ಹೋಗುತ್ತೀರಿ! ಇವರು ಜ್ಞಾನ ನದಿಗಳಾಗಿದ್ದಾರೆ, ಜ್ಞಾನ ಸಾಗರನ ಬಳಿ ಜ್ಞಾನ ಸ್ನಾನ ಮಾಡಿಸಲು ನಿಮ್ಮನ್ನು ಕರೆ ತರುತ್ತಾರೆ. ಎಷ್ಟು ಒಳ್ಳೊಳ್ಳೆಯ ಮಕ್ಕಳು ತಂದೆಯ ಬಳಿ ಬಂದು ಹೋಗಿ ಮತ್ತೆ ಕೊಳಕು ಕರ್ಮಗಳನ್ನು ಮಾಡುತ್ತಾರೆ. ಕೆಲವರಂತೂ ತಂದೆಯ ಮತದನುಸಾರವೆ ನಡೆಯುತ್ತಾರೆ. ಬಾಬಾ, ವಿನಾಶಿ ಧನವನ್ನು ಹೇಗೆ ಸಫಲ ಮಾಡುವುದು ಎಂದು ತಂದೆಯೊಂದಿಗೆ ಕೇಳುತ್ತಾರೆ ಮತ್ತೆ ಅವರಿಗೆ ತಿಳಿಸಲಾಗುತ್ತದೆ - ಮುಳುಗುವ ದೋಣಿಯಿಂದ ಎಷ್ಟು ಹೊರ ಬಂದರೂ ಒಳ್ಳೆಯದೆ. ಭಾರತದ ಸೇವೆಯಲ್ಲಿ ತೊಡಗಿಸಿ ಅದನ್ನು ಸಫಲ ಮಾಡಿಕೊಳ್ಳಿ. ಯಾವುದಾದರೂ ಸೇವಾಕೇಂದ್ರವನ್ನು ತೆರೆಯಿರಿ. ಈ ಚಿತ್ರಗಳೂ ಸಹ ಎಷ್ಟೊಂದು ತಯಾರಾಗುತ್ತಿರುತ್ತವೆ. ತಂದೆಯ ಬಳಿ ಇಂತಿಂತಹ ಮಕ್ಕಳಿದ್ದಾರೆ, ಹೇಳುತ್ತಾರೆ - ಬಾಬಾ, ಅವಶ್ಯಕತೆ ಬಂದಾಗ ನಮ್ಮನ್ನು ನೆನಪು ಮಾಡಿಕೊಳ್ಳಿರಿ, ನಾವು ಸಹಯೋಗ ನೀಡುವುದಕ್ಕಾಗಿ ಹಾಜರಾಗುತ್ತೇವೆ. ಯಜ್ಞದ ಒಳ್ಳೊಳ್ಳೆಯ ಕೆಲಸಕ್ಕಾಗಿ ಅವಶ್ಯಕತೆಯಿದ್ದಾಗ ನಮ್ಮನ್ನು ನೆನಪು ಮಾಡಿಕೊಳ್ಳಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಯಾರನ್ನೂ ನೆನಪು ಮಾಡಿಕೊಳ್ಳುವುದಿಲ್ಲ. ಏನು ಮಾಡಬೇಕೋ ಅದನ್ನು ಮಾಡಿರಿ, ನಾನಂತೂ ದಾತನಾಗಿದ್ದೇನೆ. ನಾನು ಬಂದಿರುವುದೇ ಭಾರತವನ್ನು ಸ್ವರ್ಗವನ್ನಾಗಿ ಮಾಡಲು, ನೀವು ಸ್ವರ್ಗದಲ್ಲಿ ಹೋಗುತ್ತೀರಿ. ಎಷ್ಟು ಮಾಡುತ್ತೀರೋ ಅಷ್ಟು ಪಡೆಯುತ್ತೀರಿ ಆದರೆ ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ತಲೆಯ ಮೇಲಿದೆ, ಅದನ್ನು ಇಳಿಸಿಕೊಳ್ಳಬೇಕಾಗಿದೆ. ಇಲ್ಲದಿದ್ದರೆ ಅದಕ್ಕೆ ಬಹಳ ಶಿಕ್ಷೆಯಾಗುವುದು. ಸ್ವರ್ಗದಲ್ಲಿ ಬರುತ್ತಾರೆ ಆದರೆ ಶಿಕ್ಷೆಗಳು ಉಳಿದುಕೊಂಡರೆ ಪದವಿ ಪಡೆಯಲು ಸಾಧ್ಯವಿಲ್ಲ. ಶಿವ ತಂದೆಯ ಭಂಡಾರ ಕಾಲ ಕಂಟಕ ದೂರ ಎಂದು ಗಾಯನವಿದೆ. ಇವರಿಗೆ ಯಾವುದೇ ಚಿಂತೆಯಿಲ್ಲ. ತಂದೆಯು ಹೇಳುತ್ತಾರೆ - ಹುಂಡಿಯು ತಾನಾಗಿಯೇ ತುಂಬುವುದು.
ನೀವು ಮಕ್ಕಳು ಶ್ರೀಮತದಂತೆ ನಡೆಯಬೇಕಾಗಿದೆ. ಇದರಲ್ಲಿಯೇ ಕಲ್ಯಾಣವಿದೆ. ಎಂದೂ ಅಕಲ್ಯಾಣವೆಂದು ತಿಳಿಯಬೇಡಿ. ಉದಾಹರಣೆಗೆ, ದೆಹಲಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಕಾಲು ಕತ್ತರಿಸಿ ಹೋಗುತ್ತದೆಯೆಂದರೆ ಇದರಲ್ಲಿಯೂ ಕಲ್ಯಾಣವಿದೆಯೆಂದು ತಿಳಿಯಿರಿ. ಆತ್ಮವಂತೂ ತುಂಡಾಗಲಿಲ್ಲ ಅಲ್ಲವೆ. ಕಾಲು ತುಂಡಾಯಿತು ಪರವಾಗಿಲ್ಲ, ನಾನು ನಿಮ್ಮ ಆತ್ಮದೊಂದಿಗೆ ಮಾತನಾಡುತ್ತೇನೆ. ತಂದೆಯು ತಿಳಿಸುತ್ತಾರೆ - ಇದು ರಾವಣ ರಾಜ್ಯವಾಗಿದೆ ಆದ್ದರಿಂದಲೇ ರಾವಣನನ್ನು ಸುಡುತ್ತಾರೆ. ನಾವು ಹೇಗಿದ್ದೆವು, ತಂದೆಯು ನಮ್ಮನ್ನು ಹೇಗಿದ್ದವರನ್ನು ಹೇಗೆ ಮಾಡಿ ಬಿಡುತ್ತಾರೆ. ಪ್ರಪಂಚದ ಸ್ಥಿತಿಗತಿಗಳು ನೋಡಿ, ಹೇಗಿದೆ! ಈಗ ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಂದಮೇಲೆ ಅವರ ಮತದಂತೆ ನಡೆಯಬೇಕಾಗಿದೆ. ಯಾವುದೇ ಪಾಪ ಕರ್ಮವನ್ನು ಮಾಡಬಾರದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರರಾಗಿರಿ. ಇದೇ ಸತ್ಯ ನಾರಾಯಣನ ಕಥೆಯನ್ನು ಕೇಳುತ್ತಾ ಇರಿ. ಇದು ಎಷ್ಟು ದೊಡ್ಡದಾಗಿದೆ! ಇಡೀ ಸಾಗರವನ್ನು ಶಾಹಿಯನ್ನಾಗಿ ಮಾಡಿ ಬರೆದರೂ ಸಹ ಇದು ಮುಗಿಯುವುದಿಲ್ಲ. ಅಂದಮೇಲೆ ತಂದೆಯ ಮತದಂತೆ ನಡೆಯಬೇಕಲ್ಲವೆ. ನಾವು ಭಗವಂತನ ಶ್ರೀಮತದಂತೆ ರಾಜ್ಯವನ್ನು ಪಡೆಯುತ್ತೇವೆ. ಮನುಷ್ಯರು ದೇವತೆಯಾಗುತ್ತೇವೆಂದು ನಿಮಗೆ ತಿಳಿದಿದೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ. ಆಕಸ್ಮಿಕವಾಗಿ ಹೃದಯಾಘಾತಗಳಾಗುತ್ತಾ ಇರುತ್ತವೆ. ಅಪಘಾತಗಳಲ್ಲಿ ಶರೀರ ಬಿಡುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮೃತ್ಯುವಿಗೆ ಮೊದಲೇ ಹೆಚ್ಚಿನ ಪುರುಷಾರ್ಥ ಮಾಡಿರಿ. ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮ್ಮ ಸಂಪಾದನೆ ಮಾಡಿಕೊಳ್ಳಿ, ಬೇಹದ್ದಿನ ತಂದೆಯ ಮಕ್ಕಳಾಗಿ ಮತ್ತೆ ಪಾಪ ಮಾಡಿದರೆ ಒಂದಕ್ಕೆ ನೂರು ಪಟ್ಟು ಆಗಿ ಬಿಡುವುದು. ನಂತರ ಮನುಷ್ಯರು ಏನು ಹೇಳುವರೋ ಎಂದು ಸಂಕೋಚವೂ ಆಗುವುದು. ಶಿವ ತಂದೆಯು ಹೇಳುತ್ತಾರೆ - ನಾನು ಧರ್ಮರಾಜನಿಂದ ಬಹಳ ಶಿಕ್ಷೆಗಳನ್ನು ಕೊಡಿಸುತ್ತೇನೆ ಆ ಸಮಯದಲ್ಲಿ ಇವರು ನನ್ನ ಮಗುವಾಗಿದ್ದಾರೆಂದು ಹೇಳುವುದಿಲ್ಲ. ಇದರಲ್ಲಿ ಬಹಳ ದೊಡ್ಡ ಕಾಯಿದೆಗಳಿವೆ. ನ್ಯಾಯಾಧೀಶರ ಮಕ್ಕಳು ಪಾಪ ಮಾಡಿದರೆ ಶಿಕ್ಷೆಯನ್ನು ಅನುಭವಿಸಲೇಬೇಕಾಗುತ್ತದೆ, ಏನು ಮಾಡಲೂ ಸಾಧ್ಯವಿಲ್ಲ. ಹಾಗೆಯೇ ತಂದೆಯು ನಿತ್ಯವೂ ತಿಳಿಸುತ್ತಾರೆ - ಮಕ್ಕಳೇ, ಪಾಪಕರ್ಮ ಮಾಡಬೇಡಿ. ಎಲ್ಲದಕ್ಕಿಂತ ದೊಡ್ಡದು ವಿಕಾರದ ಪಾಪವಾಗಿದೆ. ಭಲೆ ಅನೇಕ ಬಿರುಗಾಳಿಗಳು ಬರುತ್ತವೆ, ಹೊರಗಡೆ ಬಹಳ ಕೊಳಕಿದೆ. ಮಾತೇ ಕೇಳಬೇಡಿ. ಇದು ವೇಶ್ಯಾಲಯವಾಗಿದೆ. ಯಾರಾದರೂ ದೊಡ್ಡ ವ್ಯಕ್ತಿಗಳಿಗೆ ನೀವು ತಿಳಿಸುತ್ತೀರಿ, ಅವರು ಈಶ್ವರೀಯ ವಿದ್ಯಾರ್ಥಿಯಾಗಿ ಬಿಡುತ್ತಾರೆಂದರೆ ಇವರಿಗೆ ಬ್ರಹ್ಮಾಕುಮಾರಿಯರ ಜಾದು ಹಿಡಿದಿದೆ ಎಂದು ಹೇಳುತ್ತಾರೆ. ದೊಡ್ಡ-ದೊಡ್ಡವರು ಬಂದು ನಿಜವಾಗಿಯೂ ತಾವು ಸತ್ಯವನ್ನು ಹೇಳುತ್ತೀರಿ. ಗೀತೆಯ ಭಗವಂತನು ಶಿವನಾಗಿದ್ದಾರೆ, ಶ್ರೀಕೃಷ್ಣನಲ್ಲ ಎಂಬುದನ್ನೂ ಬರೆಯುತ್ತಾರೆ ಮತ್ತೆ ಮನೆಗೆ ಹೋದ ಮೇಲೆ ಸಮಾಪ್ತಿ. ಬಹಳ ಪರಿಶ್ರಮ ಪಡಬೇಕಾಗುತ್ತದೆ.
ತಂದೆಯು ತಿಳಿಸುತ್ತಾರೆ - ಮಧುರಾತಿ ಮಧುರ ಮಕ್ಕಳೇ, ಮರೆಯಬೇಡಿ. ಮಾಯೆಯು ಬಹಳ ಪ್ರಬಲವಾಗಿದೆ. ತಂದೆಯ ನೆನಪು ಪಾದರಸದಂತೆ, ಬಹು ಬೇಗನೆ ಮರೆತು ಹೋಗುತ್ತದೆ. ತಂದೆಯು ಹೇಳುತ್ತಾರೆ - ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ. ಕೇವಲ ಪವಿತ್ರರಾಗಿರಿ. ಪುರುಷಾರ್ಥವನ್ನಂತೂ ಮಾಡಬೇಕಲ್ಲವೆ. ತಂದೆಯು ಒಂದೊಂದು ಮಗುವಿಗೂ ಬಹಳ ಪ್ರೀತಿಯಿಂದ ಹೇಳುತ್ತಾರೆ. ಈಗ ನನ್ನ ಮಕ್ಕಳಾಗಿ ಮತ್ತೆ ಯಾವುದೇ ಪಾಪ ಕರ್ಮವನ್ನು ಮಾಡಬಾರದು. ತಂದೆಯನ್ನು ಅರಿತುಕೊಂಡಿದ್ದೀರಲ್ಲವೆ. ಸೃಷ್ಟಿ ಚಕ್ರದ ರಹಸ್ಯವೂ ಬುದ್ಧಿಯಲ್ಲಿದೆ. ವಿದ್ವಾಂಸ, ಪಂಡಿತ ಆಚಾರ್ಯರಂತೂ ತಮ್ಮನ್ನೇ ಶಿವೋಹಂ ಎಂದು ಹೇಳಿಕೊಂಡು ಪೂಜೆ ಮಾಡಿಸಿಕೊಳ್ಳುತ್ತಾರೆ. ಬಹುತೇಕವಾಗಿ ಸನ್ಯಾಸಿಗಳು ಹರಿದ್ವಾರದಲ್ಲಿ ಹೋಗಿ ಇರುತ್ತಾರೆ. ಇಡೀ ದಿನ ಶಿವಕಾಶಿ ವಿಶ್ವನಾಥ ಗಂಗಾ ಎಂದು ಹೇಳುತ್ತಿರುತ್ತಾರೆ. ತಂದೆಯು ಎಷ್ಟು ಚೆನ್ನಾಗಿ ಕುಳಿತು ತಿಳಿಸುತ್ತಾರೆ. ತಂದೆಗೆ ಅಕಾಲ ಮೂರ್ತಿಯೆಂದು ಹೇಳುತ್ತಾರೆ. ಅಕಾಲ ಸಿಂಹಾಸನವೆಂದರೆ ಯಾವುದೇ ಗದ್ದುಗೆಯಲ್ಲ, ಅಕಾಲಮೂರ್ತಿ ತಂದೆಗೆ ಈ ರಥ (ಬ್ರಹ್ಮಾ)ವು ಸಿಂಹಾಸನವಾಗಿದೆ. ಹೇಗೆ ನಿಮಗೂ ಈ ರಥ (ಶರೀರ) ಇದೆ. ತಂದೆಯೂ ಸಹ ಹೇಳುತ್ತಾರೆ - ನಾನು ಈ ರಥವನ್ನು ಆಧಾರವಾಗಿ ತೆಗೆದುಕೊಂಡಿದ್ದೇನೆ. ಭೃಕುಟಿಯಲ್ಲಿ ಒಂದು ಕಡೆ ಶಿಷ್ಯ ಮತ್ತೊಂದು ಕಡೆ ಗುರುವು ಕುಳಿತಿದ್ದಾರೆ. ಅವಶ್ಯವಾಗಿ ಇವರ ಪಕ್ಕದಲ್ಲಿಯೇ ಕುಳಿತುಕೊಳ್ಳುತ್ತೇನೆ ಅಲ್ಲವೆ. ನಾನೂ ಬಿಂದುವಾಗಿದ್ದೇನೆ, ನಾನು ಬಹಳ ದೊಡ್ಡ ಗಾತ್ರದಲ್ಲಿಲ್ಲ.
ಮಧುರಾತಿ ಮಧುರ ಮಕ್ಕಳೇ, ಇದು ನಿಮ್ಮ ಸತ್ಯ-ಸತ್ಯವಾದ ನೆನಪಿನ ಚೈತನ್ಯ ಯಾತ್ರೆಯಾಗಿದೆ. ಬಾಪ್ದಾದಾ ಇಬ್ಬರೂ ಸಿಕ್ಕಿದ್ದಾರೆ. ಬಾಪ್-ದಾದಾ ಎಂಬುದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ಪತ್ರದಲ್ಲಿ ಬಾಪ್ದಾದಾ ಎಂದು ಸಹಿ ಮಾಡುತ್ತಾರೆ. ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಶಿವ ತಂದೆಯು ನಿಮಗೆ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮನು ದಾದಾ ಆಗಿದ್ದಾರೆ ಅಂದಮೇಲೆ ಬಾಪ್ದಾದಾ ಆದರಲ್ಲವೆ. ನಾನೀಗ ಇವರ ಮೂಲಕ ನಿಮಗೆ ಆಸ್ತಿಯನ್ನು ಕೊಡಲು ಬಂದಿದ್ದೇನೆಂದು ತಂದೆಯು ಹೇಳುತ್ತಾರೆ. ಶಿವ ತಂದೆಯು ನಿಮ್ಮವರಾಗಿದ್ದಾರೆ, ಪ್ರಜಾಪಿತ ಬ್ರಹ್ಮನೂ ಸಹ ಎಲ್ಲವರನಾದರು. ಆಸ್ತಿಯು ಶಿವ ತಂದೆಯಿಂದಲೇ ಸಿಗುತ್ತದೆ ಅಂದಮೇಲೆ ಇದೇ ರೀತಿ ಸಹಿ ಮಾಡುತ್ತಾರಲ್ಲವೆ. ಬಾಪ್ದಾದಾ ಎಂದು ಹೇಳಲಾಗುತ್ತದೆ. ನನ್ನೊಬ್ಬನನ್ನೇ ನೆನಪು ಮಾಡಿರಿ ಎಂದು ಶಿವ ತಂದೆಯು ಹೇಳಿದರೂ ಸಹ ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ಸಾವಿರಾರು ಮಂದಿ ಬರುತ್ತಾರೆ. ಅವರಲ್ಲಿ 8-10 ಮಂದಿ ಮಾತ್ರ ತಿಳಿದುಕೊಳ್ಳಲು ಬರುತ್ತಾರೆ ಮತ್ತೆ ಕಳೆಯುತ್ತಾ ಹೋದಂತೆ ಅವರಲ್ಲಿಯೂ ಒಬ್ಬರು ಅಥವಾ ಇಬ್ಬರೇ ಉಳಿದುಕೊಳ್ಳುತ್ತಾರೆ. ಆದ್ದರಿಂದಲೇ ಕೋಟಿಯಲ್ಲಿ ಕೆಲವರು ಎಂದು ಗಾಯನವಿದೆ. ಅಂದಮೇಲೆ ಕೋಟಿಯಲ್ಲಿ ಕೆಲವರು ಬರಬೇಕಾದರೆ ಎಷ್ಟೊಂದು ಪ್ರದರ್ಶನಿಗಳನ್ನು ಇಡಬೇಕಾಗಿದೆ. ಕೆಲವರಂತೂ ನಾಲ್ಕೈದು ವರ್ಷಗಳ ಕಾಲ ಬಂದು ನಂತರ ಮಾಯವಾಗಿ ಬಿಡುತ್ತಾರೆ, ತಂದೆಗೆ ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶಿವ ತಂದೆಯು ಸಂಪೂರ್ಣ ಬಲಿಹಾರಿಯಾಗಬೇಕಾಗಿದೆ ಅರ್ಥಾತ್ ಜೀವಿಸಿದ್ದಂತೆಯೇ ಸಾಯಬೇಕಾಗಿದೆ. ಶ್ರೀಮತದಂತೆ ನಡೆಯಬೇಕಾಗಿದೆ.
2. ಶಿವ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಯಾವುದೇ ಪಾಪಕರ್ಮ ಮಾಡಬಾರದು. ಪವಿತ್ರರಾಗಿ ತಮ್ಮ ಕಲ್ಯಾಣ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ತಂದೆಯು ಹೇಳಿದರು, ಇಲ್ಲಿ ನೀವು ಮಕ್ಕಳು ಆತ್ಮಾಭಿಮಾನಿಯಾಗಿ ಕುಳಿತುಕೊಳ್ಳಬೇಕಾಗಿದೆ. ಪರಮಪಿತ ಪರಮಾತ್ಮ ಮತ್ತು ಮಕ್ಕಳು ಈಗ ಬಂದು ಮಿಲನ ಮಾಡಿದ್ದೀರಿ. ಇದಕ್ಕೆ ಈ ಸೃಷ್ಟಿಯಲ್ಲಿ ಆತ್ಮರು ಮತ್ತು ಪರಮಪಿತ ಪರಮಾತ್ಮನ ಮೇಳವೆಂದು ಹೇಳಲಾಗುತ್ತದೆ. ಈ ಮೇಳವು ಒಂದೇ ಬಾರಿ ಆಗುತ್ತದೆ, ಅರ್ಧಕಲ್ಪ ಸತ್ಯ-ತ್ರೇತಾಯುಗದಲ್ಲಿ ಯಾರೂ ಕರೆಯುವುದೇ ಇಲ್ಲ. ನೀವು ಮಕ್ಕಳು ಸುಖಿಯಾಗಿರುತ್ತೀರಿ. ಆ ಸುಖವನ್ನು ನೀವೀಗ ಪಡೆಯುತ್ತಿದ್ದೀರಿ. ಮೊದಲು ನೀವು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನ ಪತಿತರಾಗಿ ಬಿಟ್ಟಿದ್ದೀರಿ. ಮತ್ತೆ ತಂದೆಯು ಪಾವನರನ್ನಾಗಿ ಮಾಡುತ್ತಾರೆ. ನೀವು ಪೂಜಾರಿಗಳಾಗುತ್ತೀರಿ ಆದ್ದರಿಂದ ದುಃಖಿಯಾಗುತ್ತೀರಿ. ಪಂಚ ವಿಕಾರಗಳ ಕಾರಣದಿಂದಲೇ ದುಃಖವಾಗುತ್ತದೆ. ಎಷ್ಟೆಷ್ಟು ಏಣಿಯನ್ನು ಇಳಿಯುತ್ತಾ ಹೋಗುತ್ತೀರೋ ಅಷ್ಟು ದುಃಖಿಯಾಗುತ್ತಾ ಹೋಗುತ್ತೀರಿ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ದುಃಖದ ಬೆಟ್ಟಗಳೇ ಬೀಳಲಿವೆ, ಈಗ ಈ ಹಳೆಯ ಪ್ರಪಂಚದ ವಿನಾಶವಾಗಲಿದೆ. ತಂದೆಯು ನಿರಾಕಾರನಾಗಿದ್ದಾರೆ, ಅವರು ಶಿಕ್ಷಕನಾಗಿ ನಾವು ಸಾಲಿಗ್ರಾಮಗಳಿಗೆ ಓದಿಸುತ್ತಾರೆಂದು ನೀವು ಮಕ್ಕಳಿಗೆ ತಿಳಿದಿದೆ. ಆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ಪುನಃ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. 5000 ವರ್ಷಗಳ ಮೊದಲೂ ಸಹ ನೀವು ಸ್ವರ್ಗದ ಮಾಲೀಕರಾಗಿದ್ದಿರಿ. ನೆನಪಿದೆಯಲ್ಲವೆ. ಸಂಗಮದಲ್ಲಿಯೇ ನಿಮ್ಮನ್ನು ಆ ರೀತಿ ಮಾಡಿದ್ದೆನು, ಈಗ ಪುನಃ ನಿಮ್ಮನ್ನು ಮನುಷ್ಯರಿಂದ ದೇವತೆ, ವೈಕುಂಠ ಸ್ವರ್ಗದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ನಿಮಗೆ ಈ ಆಸ್ತಿಯನ್ನು ಕೊಟ್ಟಿದ್ದೆನು, ನಂತರ ನೀವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಯಿತು. ಈಗ ನಿಮ್ಮ 84 ಜನ್ಮಗಳು ಮುಗಿಯಿತು. ನಾನೀಗ ಬಂದಿದ್ದೇನೆ, ನೀವು ಪುನಃ ಮೊದಲನೇ ಜನ್ಮದಿಂದ ಪ್ರಾರಂಭ ಮಾಡಬೇಕಾಗಿದೆ. ನಾನು ನಿಮ್ಮ ತಂದೆ ನಿಮಗೆ ಓದಿಸುತ್ತೇನೆ ಅಂದಾಗ ತಂದೆಯು ಓದಿಸುವ ಶುಲ್ಕವನ್ನೂ ಮಕ್ಕಳಿಂದ ತೆಗೆದುಕೊಳ್ಳುವರೇ? ಮಕ್ಕಳಿಂದ ಶುಲ್ಕವನ್ನು ಹೇಗೆ ತೆಗೆದುಕೊಳ್ಳುವರು!! ಒಂದು ಪೈಸೆ ಶುಲ್ಕವನ್ನೂ ತೆಗೆದುಕೊಳ್ಳುವುದಿಲ್ಲ. ಎಷ್ಟು ದೂರ ಪರಮಧಾಮದಿಂದ ನಿಮಗೆ ಓದಿಸಲು ಬರುತ್ತೇನೆ. ಈ ನೌಕರಿ ಮಾಡಲು ನಿತ್ಯವೂ ಬರುತ್ತೇನೆ, ಯಾರಿಗಾದರೂ ನೌಕರಿಯು ಎಲ್ಲಿಯಾದರೂ ದೂರದಲ್ಲಿ ಇರುತ್ತದೆಯೆಂದರೆ ನಿತ್ಯವೂ ಹೋಗಿ ಬರುತ್ತಾರಲ್ಲವೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಜ್ಞಾನಸಾಗರನಾಗಿದ್ದಾರೆ, ಅವರು ನಮಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆ. ಭಗವಾನುವಾಚ - ನಾನು ನಿರಾಕಾರ ಪರಮಾತ್ಮನಾಗಿದ್ದೇನೆ, ಶ್ರೀಕೃಷ್ಣನಲ್ಲ. ನೀವು ಯಾವ ಕೃಷ್ಣನನ್ನು ಭಗವಂತನೆಂದು ತಿಳಿದುಕೊಳ್ಳುತ್ತೀರೋ ಅವರು ಭಗವಂತನಾಗಲು ಸಾಧ್ಯವಿಲ್ಲ. ಕೃಷ್ಣನೂ ಸಹ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ. ಭಗವಂತನಿಗೆ ತನ್ನದೇ ಆದ ಶರೀರವಿಲ್ಲ. ಹೇಗೆ ನೀವು ಆತ್ಮನಾಗಿದ್ದೀರೋ ಹಾಗೆಯೇ ಅವರೂ ಆತ್ಮನಾಗಿದ್ದಾರೆ ಆದರೆ ಕೇವಲ ಆತ್ಮನೆಂದು ಹೇಳಿದರೆ ಎಲ್ಲರ ಜೊತೆ ಸೇರಿ ಹೋಗುತ್ತಾರೆ ಆದ್ದರಿಂದ ನನ್ನನ್ನು ಪರಮ ಆತ್ಮನೆಂದು ಹೇಳುತ್ತಾರೆ. ಡ್ರಾಮಾನುಸಾರ ನಾನಾತ್ಮನ ಹೆಸರಾಗಿದೆ - ಶಿವ. ನಾನು ನಿರಾಕಾರನಾಗಿದ್ದೇನೆ, ನನ್ನನ್ನು ಶಿವ ತಂದೆ ಎಂತಲೇ ಕರೆಯುತ್ತಾರೆ. ನನ್ನ ಮೂಲ ಹೆಸರು ಒಂದೇ ಆಗಿದೆ ಆದರೆ ಭಿನ್ನ-ಭಿನ್ನ ಹೆಸರುಗಳನ್ನು ಇಟ್ಟಿದ್ದಾರೆ. ನನ್ನ ಹೆಸರು ರುದ್ರ ಎಂದಲ್ಲ. ಕೃಷ್ಣನು ಯಾವುದೇ ಯಜ್ಞವನ್ನು ರಚಿಸಲಿಲ್ಲ, ಇದೆಲ್ಲವೂ ಅಸತ್ಯವಾಗಿದೆ. ನಾನೇ ಬಂದು ನಿಮಗೆ ಸತ್ಯವನ್ನು ತಿಳಿಸುತ್ತೇನೆ, ನಿಮ್ಮನ್ನು ಸತ್ಯ-ಸತ್ಯ ನರನಿಂದ ನಾರಾಯಣನನ್ನಾಗಿ ಮಾಡಲು ಬಂದಿದ್ದೇನೆ, ನನ್ನ ಮನೆಯು ಬಹಳ ದೂರವಿದೆ. ಇಲ್ಲಿ ಬಂದು ಈ ಶರೀರದ ಮೂಲಕ ನಿಮಗೆ ಓದಿಸುತ್ತೇನೆ. ಇವರಲ್ಲಿ (ಬ್ರಹ್ಮಾ) ನಾನು ಇಡೀ ದಿನ ಕುಳಿತುಕೊಳ್ಳುವುದಿಲ್ಲ, ಸುತ್ತಾಡುತ್ತಾ ಇರುತ್ತೇನೆ. ನನ್ನ ನಿಂದನೆ ಮಾಡುವ ಕಾರಣ ನೀವು ಬಹಳ ದುಃಖಿ, ಮಹಾನ್ ಪತಿತರಾಗಿ ಬಿಟ್ಟಿದ್ದೀರಿ. ಬ್ರಹ್ಮನಿಗೂ ಸಹ ಕೆಲವರು ಆದಿದೇವ, ಕೆಲವರು ಆಡಂ, ಇನ್ನೂ ಕೆಲವರು ಮಹಾವೀರ ಎಂದು ಹೇಳುತ್ತಾರೆ, ನೀವು ಅವರಿಗೆ ಪ್ರಜಾಪಿತ ಎಂದು ಹೇಳುತ್ತೀರಿ. ನೀವು ನನ್ನನ್ನು ಅರ್ಧ ಕಲ್ಪದಿಂದ ನೆನಪು ಮಾಡಿದ್ದೀರಿ, ಆದ್ದರಿಂದ ನಾನು ಈ ಪರದೇಶದಲ್ಲಿ ಬರಬೇಕಾಯಿತು. ಎಲ್ಲರೂ ಪತಿತ, ದುಃಖಿಯಾಗಿದ್ದಾರೆ, ಅನಾಥರಾಗಿದ್ದಾರೆ, ದಣಿ-ದೋಣಿ ಯಾರೂ ಇಲ್ಲ. ಅನಾಥರಿಗೆ ಓದಿಸಲು ಸರ್ಕಾರವು ಶುಲ್ಕ ತೆಗೆದುಕೊಳ್ಳುವುದಿಲ್ಲ. ಇಲ್ಲಂತೂ ಇದು ಬಹಳ ದೊಡ್ಡ ಆತ್ಮಿಕ ಸರ್ಕಾರವಾಗಿದೆ. ಬೇಹದ್ದಿನ ತಂದೆಯನ್ನು ಯಾರೂ ತಿಳಿದುಕೊಂಡಿಲ್ಲ. ಎಷ್ಟೊಂದು ಜಪ-ತಪ, ದಾನ-ಪುಣ್ಯ ಇತ್ಯಾದಿಗಳನ್ನು ಮಾಡುತ್ತಾರೆ. ಇದನ್ನು ಏಕೆ ಮಾಡುತ್ತೀರಿ ಎಂದು ಕೇಳಿದರೆ ಇದರಿಂದ ಭಗವಂತನ ಬಳಿ ತಲುಪುತ್ತೇವೆ ಎಂದು ಹೇಳುತ್ತಾರೆ. ಕೆಲವರು ಜಪ-ತಪ ಮಾಡುವುದರಿಂದ, ಇನ್ನೂ ಕೆಲವರು ಶಾಸ್ತ್ರಗಳನ್ನು ಓದುವುದರಿಂದ ತಲುಪುತ್ತೇವೆಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ, ಇದು ಸಾಧ್ಯವಿಲ್ಲ. ಭಕ್ತಿ ಮಾಡುತ್ತಾ-ಮಾಡುತ್ತಾ ನೀವು ಇನ್ನೂ ಪತಿತರಾಗಿ ಬಿಟ್ಟಿದ್ದೀರಿ. ರೆಕ್ಕೆಗಳು ಕತ್ತರಿಸಿ ಹೋಗಿವೆ, ನೀವು ಹಾರಲು ಸಾಧ್ಯವಿಲ್ಲ. ಈಗ ನಿಮ್ಮಲ್ಲಿ ಜ್ಞಾನದ ಎಣ್ಣೆಯನ್ನು ಹಾಕಬೇಕಾಗಿದೆ. ಎಣ್ಣೆ ಅಥವಾ ಪೆಟ್ರೋಲ್ ಮುಗಿದು ಹೋಗಿರುವ ಕಾರಣದಿಂದಲೇ ಆತ್ಮ ಜ್ಯೋತಿಯು ನಂದಿ ಹೋಗಿದೆ, ಪುನಃ ನಾನು ಬಂದು ತುಂಬಿಸುತ್ತೇನೆ.