text
stringlengths
0
61.5k
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶರೀರವನ್ನು ಸರಿಯಾಗಿ ಇಟ್ಟುಕೊಳ್ಳಲು ಜ್ಞಾನ-ಯೋಗದ ಧಾರಣೆ ಮಾಡಬೇಕಾಗಿದೆ, ಯಾವುದೇ ಪದಾರ್ಥದ ಲೋಭವನ್ನು ಇಟ್ಟುಕೊಳ್ಳಬಾರದು. ಈ ಜ್ಞಾನ -ಯೋಗದಿಂದ ಶೃಂಗರಿಸಿಕೊಳ್ಳಬೇಕು, ಸ್ಥೂಲ ಶೃಂಗಾರದಿಂದಲ್ಲ.
2. ಒಂದು ಗಂಟೆ, ಅರ್ಧ ಗಂಟೆ ಅವಶ್ಯವಾಗಿ ವಿದ್ಯೆಯನ್ನು ಓದಬೇಕಾಗಿದೆ, ಜ್ಞಾನ ಮತ್ತು ಯೋಗದಲ್ಲಿ ಸ್ಪರ್ಧೆ ಮಾಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಈ ಗೀತೆಯನ್ನು ಕೇಳಿದಿರಿ. ಮಕ್ಕಳಿಗೇ ಅದೃಷ್ಟ ನಕ್ಷತ್ರಗಳೆಂದು ಗಾಯನವಿದೆ. ಜ್ಞಾನಸೂರ್ಯ, ಜ್ಞಾನಚಂದ್ರಮ, ಅದೃಷ್ಟ ಜ್ಞಾನ ನಕ್ಷತ್ರಗಳಾಗಿದ್ದೀರಿ. ಆ ಸೂರ್ಯ, ಚಂದ್ರಮನಂತೂ ಭೂಮಿಗೆ ಬೆಳಕನ್ನು ನೀಡುತ್ತದೆ. ನಿಮ್ಮ ಮಹಿಮೆಯ ಗಾಯನವಿದೆ - ನೀವು ಜ್ಞಾನ ನಕ್ಷತ್ರಗಳಾಗಿದ್ದೀರಿ, ಆ ನಕ್ಷತ್ರಗಳಿಗೆ ಜ್ಞಾನ ನಕ್ಷತ್ರಗಳೆಂದು ಹೇಳಲಾಗುವುದಿಲ್ಲ. ಜ್ಞಾನಸೂರ್ಯ ಎಂಬ ಹೆಸರನ್ನು ಕೇಳಿದೊಡನೆಯೇ ಬಹುಷಃ ಆ ಸೂರ್ಯನೇ ಜ್ಞಾನ ಸ್ವರೂಪನಾಗಿದ್ದಾನೆಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಕಲ್ಲು ಮುಳ್ಳಿನಲ್ಲಿ ಭಗವಂತನಿದ್ದಾರೆಂದು ತಿಳಿದುಕೊಂಡಿರುವ ಕಾರಣ ಸೂರ್ಯನನ್ನೇ ಬಹಳ ಆರಾಧಿಸುತ್ತಾರೆ. ತಮ್ಮನ್ನು ಸೂರ್ಯವಂಶಿಯರೆಂದು ಕರೆಸಿಕೊಳ್ಳುತ್ತಾರೆ, ಸೂರ್ಯನ ಪೂಜೆ ಮಾಡುತ್ತಾರೆ, ಧ್ವಜವೂ ಸೂರ್ಯನದಾಗಿದೆ. ನಿಮ್ಮದು ತ್ರಿಮೂರ್ತಿಯ ಧ್ವಜವಾಗಿದೆ, ಎಷ್ಟು ಅದ್ಭುತವಾಗಿದೆ, ಇದರಲ್ಲಿ ಸತ್ಯಮೇವ ಜಯತೆ ಎಂದು ಬರೆಯಲಾಗಿದೆ. ಸತ್ಯವಾಗಿಯೂ ವಿಶ್ವದ ಮೇಲೆ ವಿಜಯವನ್ನು ಅವರೇ ಪ್ರಾಪ್ತಿ ಮಾಡಿಸುತ್ತಾರೆ. ನೀವು ಶಿವಶಕ್ತಿ ಪಾಂಡವ ಸೇನೆಯಾಗಿದ್ದೀರಿ. ಅವರು ತ್ರಿಮೂರ್ತಿ ಮಾರ್ಗ, ತ್ರಿಮೂರ್ತಿ ನಿಲಯ ಎಂದು ಹೆಸರನ್ನು ಇಟ್ಟುಕೊಂಡಿದ್ದಾರೆ. ಇದರ ಅರ್ಥವನ್ನು ತಂದೆಯು ತಿಳಿಸುತ್ತಾರೆ - ಈ ತ್ರಿಮೂರ್ತಿಗಳಿಂದ ನಾನು ಯಾವ ಕರ್ತವ್ಯ ಮಾಡಿಸುತ್ತೇನೆ ಎಂದು. ಬ್ರಹ್ಮನ ಮೂಲಕ ಸ್ಥಾಪನೆ..... ಮನುಷ್ಯರು ತ್ರಿಮೂರ್ತಿ ಎಂಬುದರಿಂದ ಶಿವನನ್ನು ತೆಗೆದು ಚಿತ್ರವನ್ನು ಖಂಡನೆ ಮಾಡಿ ಬಿಟ್ಟಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ- ಈ ತ್ರಿಮೂರ್ತಿಯ ಚಿತ್ರದಲ್ಲಿ ಎಷ್ಟೊಂದು ರಹಸ್ಯವಿದೆ, ಸತ್ಯ ಶಿವ ತಂದೆಯು ಬ್ರಹ್ಮಾರವರ ಮೂಲಕ ರಾಜ್ಯಭಾಗ್ಯವನ್ನು ಕೊಡುತ್ತಾರೆ. ನಾವು ಮಕ್ಕಳು ಶಿವ ತಂದೆಯ ಮೂಲಕ ಕಲ್ಪದ ಹಿಂದಿನ ತರಹ ಪುನಃ ಪವಿತ್ರತೆ, ಸುಖ, ಶಾಂತಿ ಮತ್ತು ಸಂಪತ್ತಿನ ರಾಜ್ಯವನ್ನು ತೆಗೆದುಕೊಳ್ಳುತ್ತಿದ್ದೇವೆ. ಯಾವಾಗಲೂ ವಿದ್ಯಾಭ್ಯಾಸವನ್ನು ಬ್ರಹ್ಮಚರ್ಯದಲ್ಲಿಯೇ ಮಾಡಲಾಗುತ್ತದೆ, ಈಗಂತೂ ಕೆಲಕೆಲವರು ವಿವಾಹವಾದ ಮೇಲೂ ವಿದ್ಯೆಯನ್ನು ಆರಂಭಿಸುತ್ತಾರೆ ಏಕೆಂದರೆ ಹೆಚ್ಚು ಸಂಪಾದನೆಯಾಗುತ್ತದೆ. ಇಲ್ಲಿ ನಿಮ್ಮ ಸಂಪಾದನೆಯು ಅಪಾರವಾಗಿದೆ, ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಶ್ರೀಮತವು ಶ್ರೇಷ್ಠವೆಂದು ಗಾಯನವಿದೆ, ತಂದೆಯ ಮಕ್ಕಳಾದರು ಎಂದರೆ ಅವಶ್ಯವಾಗಿ ತಂದೆಯ ಮತದಂತೆ ನಡೆಯುವವರು ಸಹೋದರರ ಮತದನುಸಾರವಲ್ಲ. ಸಹೋದರರ ಮತದಂತೆ ಅನೇಕ ಜನ್ಮಗಳಿಂದ ನಡೆದಿರಿ, ಅದರಿಂದ ಏನೂ ಲಾಭವಾಗಲಿಲ್ಲ. ಈಗ ತಂದೆಯ ಮತದಂತೆ ನಡೆಯಬೇಕಾಗಿದೆ, ಸಾಧು-ಸಂತ ಮೊದಲಾದವರೆಲ್ಲರೂ ಸಹೋದರ-ಸಹೋದರರಾಗಿದ್ದಾರೆ, ಈಗ ತಂದೆಯು ಶ್ರೇಷ್ಠ ಮತವನ್ನು ಕೊಡಲು ಬಂದಿದ್ದಾರೆ. ಪ್ರಾಕೃತಿಕ ಚಿಕಿತ್ಸೆಯ ಅನೇಕ ಔಷದೋಪಚಾರ ಮಾಡುತ್ತಾರೆ, ಅದೆಲ್ಲವೂ ಅಲ್ಪಕಾಲಕ್ಕಾಗಿ. ಇದು 21 ಜನ್ಮಗಳಿಗಾಗಿ ಪ್ರಾಕೃತಿಕ ಚಿಕಿತ್ಸೆಯಾಗಿದೆ. ತಣ್ಣೀರಿನಲ್ಲಿ ಸ್ನಾನ ಮಾಡಿ ಆಹಾರ-ಪಾನೀಯಗಳ ಪತ್ಯೆಯನ್ನು ಇಡಿ, ಹೀಗೆ ಮಾಡಿ ಹಾಗೆ ಮಾಡಿ ಎಂದು ಅವರು ಹೇಳುತ್ತಾರೆ. ಇಲ್ಲಿ ಆ ಆಹಾರ-ಪಾನೀಯಗಳ ಮಾತಿಲ್ಲ, ಇಲ್ಲಂತೂ ಮಧುರ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಈಗ ನನ್ನನ್ನು ನೆನಪು ಮಾಡಿದರೆ ನೀವು ಬಹಳ ಮಧುರರಾಗುತ್ತೀರಿ, ದೇವತೆಗಳು ಮಧುರರಲ್ಲವೆ. ಅವರಲ್ಲಿ ಎಷ್ಟೊಂದು ಆಕರ್ಷಣೆಯಿರುತ್ತದೆ! ಹಿಂದಿನ ಕಾಲದಲ್ಲಿ ಶಿವನ ಮಂದಿರದಲ್ಲಿ ಎತ್ತರ-ಎತ್ತರವಾದ ಪರ್ವತಗಳ ಮೇಲೆ ಕಟ್ಟಿಸುತ್ತಿದ್ದರು. ಮನುಷ್ಯರು ನಡೆದುಕೊಂಡೇ ದರ್ಶನ ಮಾಡಲು ಹೋಗುತ್ತಿದ್ದರು ಏಕೆಂದರೆ ಪವಿತ್ರತೆಯು ಆಕರ್ಷಿಸುತ್ತಿತ್ತು. ದೇವತೆಗಳು ಪವಿತ್ರರಾಗಿದ್ದಾಗ ವಿಶ್ವದ ಮೇಲೆ ರಾಜ್ಯ ಮಾಡುತ್ತಿದ್ದರು. ಈಗ ಅವರ ಚಿತ್ರಗಳ ಮುಂದೆ ಹೋಗಿ ನಮನ, ವಂದನೆ ಮಾಡುತ್ತಾರೆ. ಈಗ ಮಧುರ ತಂದೆಯನ್ನು ಎಲ್ಲರೂ ನೆನಪು ಮಾಡುತ್ತಾರೆ ಅಂದಮೇಲೆ ಅವರು ಇಲ್ಲಿಯೇ ಬರಬೇಕಾಗಿದೆ. ಅವಶ್ಯವಾಗಿ ಅವರಿಂದ ವೈಕುಂಠದ ಅಪಾರ ಸುಖವು ಸಿಗುತ್ತದೆ ಆದ್ದರಿಂದಲೇ ಅವರನ್ನು ನೆನಪು ಮಾಡುತ್ತಾರೆ. ಯಾವಾಗ ರಾಮರಾಜ್ಯದ ಅಂತ್ಯವಾಗುವುದೋ ಆಗ ತಂದೆಯು ಬಂದು ಸ್ವರ್ಗದ ರಾಜ್ಯಭಾಗ್ಯವನ್ನು ಕೊಡುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಶಿವ ಜಯಂತಿಯನ್ನೂ ಭಾರತದಲ್ಲಿಯೇ ಆಚರಿಸುತ್ತಾರೆ. ಆದರೆ ಅವರಿಂದ ಏನು ಸಿಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನೀವು ಮಕ್ಕಳನ್ನು ಮಧುರರನ್ನಾಗಿ ಮಾಡಲು ಬಂದಿದ್ದೇನೆ, ನೀವು ಎಷ್ಟೊಂದು ಛೀ ಛೀ ಆಗಿ ಬಿಟ್ಟಿದ್ದಿರಿ. ತಂದೆಯು ಜ್ಞಾನಪೂರ್ಣನಾಗಿದ್ದಾರೆ, ಈಗ ನಿಮಗೆ ಸಂಪೂರ್ಣ ಜ್ಞಾನವು ಸಿಗುತ್ತಿದೆ. ಬೀಜಕ್ಕೆ ಸಂಪೂರ್ಣ ಜ್ಞಾನವಿರುತ್ತದೆಯಲ್ಲವೆ. ತಂದೆಯು ಬೀಜವಾಗಿದ್ದಾರೆ, ಸತ್ಯ ಚೈತನ್ಯನಾಗಿದ್ದಾರೆ ಮತ್ತು ಜ್ಞಾನಸಾಗರನಾಗಿದ್ದಾರೆ. ಸತ್ಯವನ್ನೇ ಹೇಳುತ್ತಾರೆ. ಅವರೂ ಆತ್ಮವೇ ಆಗಿದ್ದಾರೆ ಆದರೆ ಪರಮಆತ್ಮನಾಗಿದ್ದಾರೆ. ಅವರು ಸದಾ ಪರಮಧಾಮದಲ್ಲಿ ಇರುತ್ತಾರೆ, ಸರ್ವಶ್ರೇಷ್ಠನಾಗಿದ್ದಾರೆ. ಅನೇಕರು ಅವರು ನಾಮ-ರೂಪದಿಂದ ಭಿನ್ನ ಎಂದು ಹೇಳುತ್ತಾರೆ ಆದರೆ ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಅವರ ಹೆಸರಾಗಿದೆ- ಶಿವ. ಎಲ್ಲರೂ ಅವರ ಪೂಜೆ ಮಾಡುತ್ತಾರೆ, ಅವರು ನಿರಾಕಾರನಾಗಿದ್ದಾರೆ. ಈಗ ಬಂದಿದ್ದಾರೆ, ಮೊದಲು ನಾವು ದೇಹಾಭಿಮಾನಿಗಳಾಗಿದ್ದೆವು, ಈಗ ಮಕ್ಕಳೇ, ದೇಹೀ-ಅಭಿಮಾನಿಗಳಾಗಿ ಎಂದು ತಂದೆಯು ತಿಳಿಸುತ್ತಾರೆ. ಗೀತೆಯಲ್ಲಿಯೂ ಮನ್ಮನಾಭವ ಇದೆ. ಕೇವಲ ಅದರಲ್ಲಿ ಶಿವನ ಬದಲು ಕೃಷ್ಣನ ಹೆಸರನ್ನು ಹಾಕಿರುವುದರಿಂದ ಖಂಡನೆಯಾಗಿ ಬಿಟ್ಟಿದೆ ಆದರೂ ಸಹ ಪುಸ್ತಕವನ್ನು ಓದುವುದರಿಂದ ರಾಜ್ಯಭಾಗ್ಯವು ಸಿಗುವುದಿಲ್ಲ. ರಾಜ್ಯವು ಇರುವುದೇ ಸತ್ಯಯುಗದಲ್ಲಿ. ತಂದೆಯು ಅವಶ್ಯವಾಗಿ ಸಂಗಮದಲ್ಲಿಯೇ ಬರುವರು. ಈಗ ಡ್ರಾಮಾನುಸಾರ ಭಕ್ತಿಯು ಮುಕ್ತಾಯವಾಗುತ್ತದೆ. ಭಕ್ತಿಯ ನಂತರ ಜ್ಞಾನ, ಇದು ಹಳೆಯ ಪ್ರಪಂಚ, ಸತ್ಯಯುಗವು ಹೊಸ ಪ್ರಪಂಚವಾಗಿದೆ. ಸತ್ಯಯುಗದಲ್ಲಿ ಸೂರ್ಯವಂಶಿಯರು ರಾಜ್ಯಭಾರ ಮಾಡುತ್ತಿದ್ದರು. ಇದು ನರನಿಂದ ನಾರಾಯಣ, ನಾರಿಯಿಂದ ಲಕ್ಷ್ಮಿಯಾಗುವ ರಾಜಯೋಗವಾಗಿದೆ. ಸತ್ಯಯುಗದಲ್ಲಿ ಇವರ ರಾಜ್ಯವಿತ್ತು. ಈಗ ಕಲಿಯುಗದಲ್ಲಿ ನೋಡಿ, ಏನಿದೆ! ನೀವೀಗ ಸತ್ಯಯುಗದಲ್ಲಿ ಹೋಗುವುದಕ್ಕಾಗಿ ಪುನಃ ಓದುತ್ತಿದ್ದೀರಿ. ಭಕ್ತಿಮಾರ್ಗದ ಯಾವುದೆಲ್ಲಾ ಇಷ್ಟ್ಟೊಂದು ವೇದ ಶಾಸ್ತ್ರಗಳಿವೆಯೋ ಇವನ್ನು ಬಿಡಬೇಕಾಗುತ್ತದೆ. ಜ್ಞಾನವು ಸಿಕ್ಕಿ ಬಿಟ್ಟರೆ ನಂತರ ಭಕ್ತಿಯ ಅವಶ್ಯಕತೆಯಿಲ್ಲ. ಜ್ಞಾನದಿಂದ ನಾವು ವಿಶ್ವದ ಮಾಲೀಕರಾಗುತ್ತೇವೆ.
ತಂದೆಯು ಭಕ್ತಿಯ ಫಲವನ್ನು ಕೊಡಲು ಬಂದಿದ್ದಾರೆ, ಜ್ಞಾನವನ್ನು ತಿಳಿಸುತ್ತಿದ್ದಾರೆ. ನಾವೀಗ ಅವಶ್ಯವಾಗಿ ಪತಿತರಿಂದ ಪಾವನರಾಗಬೇಕಾಗಿದೆ ಏಕೆಂದರೆ ಪತಿತರು ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಮುಕ್ತಿಧಾಮದಲ್ಲಿಯೂ ಎಲ್ಲರೂ ಪಾವನ ಆತ್ಮರಿರುತ್ತಾರೆ, ಸುಖಧಾಮದಲ್ಲಿಯೂ ಎಲ್ಲರೂ ಪವಿತ್ರರಿರುತ್ತಾರೆ. ಈಗ ಕಲಿಯುಗದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಈಗ ಅವರನ್ನು ಪಾವನರನ್ನಾಗಿ ಯಾರು ಮಾಡುವರು? ಪತಿತ-ಪಾವನನು ಒಬ್ಬ ತಂದೆಯಾಗಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ - ನಾನು ಇವರ ಬಹಳ ಜನ್ಮಗಳ ಅಂತಿಮದಲ್ಲಿ ಬರುತ್ತೇನೆ. ಎಲ್ಲರಿಗಿಂತ ನಂಬರ್ವನ್ ಭಕ್ತನು ಈ ದಾದಾವರಾಗಿದ್ದರು. ಇವರಿಗೆ ಬ್ರಹ್ಮನೆಂದಾದರೂ ಹೇಳಿ ಅಥವಾ ಲಕ್ಷ್ಮೀ-ನಾರಾಯಣರ ಆತ್ಮವೆಂದಾದರೂ ಹೇಳಿರಿ, ಇದು ತಿಳಿದುಕೊಳ್ಳುವ ಬಹಳ ಗುಹ್ಯ ಮಾತಾಗಿದೆ. ವಿಷ್ಣುವಿನ ನಾಭಿಯಿಂದ ಬ್ರಹ್ಮಾ ಮತ್ತು ಬ್ರಹ್ಮನ ನಾಭಿಯಿಂದ ವಿಷ್ಣು ಬಂದನು.... ಅಂದರೆ ವಿಷ್ಣು 84 ಜನ್ಮಗಳ ನಂತರ ಬ್ರಹ್ಮನಾಗುತ್ತಾರೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿಲ್ಲ. ತಂದೆಯೂ ಸಹ ಗೀತಾಪಾಠಿಯಾಗಿದ್ದರು, ಯಾವಾಗ ಜ್ಞಾನವು ಸಿಕ್ಕಿತು, ತಂದೆಯು ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಎಂಬುದನ್ನು ನೋಡಿದರೋ, ವಿಷ್ಣುವಿನ ಸಾಕ್ಷಾತ್ಕಾರವಾಯಿತೋ ಆಗ ಕೂಡಲೇ ಗೀತೆ ಓದುವುದನ್ನು ಬಿಟ್ಟು ಬಿಟ್ಟರು. ತಂದೆಯ ಪ್ರವೇಶತೆಯಾಯಿತಲ್ಲವೆ. ಮತ್ತೆಂದೂ ಕೈ ಹಾಕಲೂ ಇಲ್ಲ, ಒಬ್ಬ ತಂದೆಯನ್ನೇ ನೆನಪು ಮಾಡತೊಡಗಿದರು. ಇವರು ಹೇಳುತ್ತಾರೆ - ನಾನೂ ಸಹ ಶಿವ ತಂದೆಯಿಂದಲೇ ಕೇಳತೊಡಗಿದೆನು, ಶಿವ ತಂದೆಯು ತಿಳಿಸುತ್ತಾರೆ - ನಾನು ಮಕ್ಕಳಿಗೆ ತಿಳಿಸುವಾಗ ಇವರೂ ಸಹ ಕೇಳಿಸಿಕೊಳ್ಳುತ್ತಿದ್ದರು, ಇವರ ತನುವಿನಲ್ಲಿ ನಾನು ಪ್ರವೇಶ ಮಾಡಿ ಬಂದಿದ್ದೇನೆ ಆದ್ದರಿಂದ ಇವರಿಗೆ ಅರ್ಜುನನೆಂದು ಹೆಸರನ್ನು ಇಟ್ಟಿದ್ದೇನೆ. ಶಾಸ್ತ್ರಗಳಲ್ಲಿ ಕುದುರೆಯ ರಥವನ್ನು ತೋರಿಸುತ್ತಾರೆ, ಎಷ್ಟೊಂದು ಅಂತರವಿದೆ, ಕುದುರೆಗಾಡಿಯಲ್ಲಿ ಕುಳಿತು ಒಬ್ಬರಿಗೇ ಜ್ಞಾನ ಕೊಟ್ಟಿರುವರೇ? ಇದು ಸಾಧ್ಯವಿಲ್ಲ ಎಂದು ನೀವೀಗ ತಿಳಿದುಕೊಂಡಿದ್ದೀರಿ. ತಂದೆಯು ಹೇಗೆ ಓದಿಸುತ್ತಾರೆ, ಎಷ್ಟೊಂದು ಸೇವಾಕೇಂದ್ರಗಳಿವೆ ಎಂಬುದನ್ನು ನೀವು ಪ್ರತ್ಯಕ್ಷದಲ್ಲಿ ನೋಡುತ್ತಿದ್ದೀರಿ ಅಂದಮೇಲೆ ಓದಿಸುವುದಕ್ಕಾಗಿ ಅವಶ್ಯವಾಗಿ ಪಾಠಶಾಲೆಯು ಬೇಕು, ಯುದ್ಧದ ಮೈದಾನವಲ್ಲ. ತಂದೆಯು ರಾಜಯೋಗವನ್ನು ಕಲಿಸುತ್ತಾರೆ, ಸತ್ಯಯುಗದಲ್ಲಿ ಯಾವುದೇ ಶಾಸ್ತ್ರವಿರುವುದಿಲ್ಲ. ನಾನೀಗ ಜ್ಞಾನವನ್ನು ತಿಳಿಸಿದೆನು. ಸತ್ಯಯುಗದಲ್ಲಿ ಮತ್ತೆ ಜ್ಞಾನದ ಅವಶ್ಯಕತೆಯೇ ಇರುವುದಿಲ್ಲ. ಹಳೆಯ ಪ್ರಪಂಚದ್ದೆಲ್ಲವೂ ಮಣ್ಣು ಪಾಲಾಗುವುದು. ಇದು ರಾಜಸ್ವ ಅಶ್ವಮೇಧ ಯಜ್ಞವಾಗಿದೆ. ಈ ರಥಕ್ಕೆ ಅಶ್ವವೆಂದು ಹೇಳಲಾಗುತ್ತದೆ, ಇದನ್ನೂ ಸ್ವಾಹಾ ಮಾಡಬೇಕಾಗಿದೆ. ಆತ್ಮವು ತಂದೆಯ ಮಗುವಾಯಿತೆಂದರೆ ಈ ಹಳೆಯ ಶರೀರವು ಸಮಾಪ್ತಿಯಾಗುವುದು, ಕೃಷ್ಣ ಪುರಿಯಲ್ಲಿ ಈ ಛೀ ಛೀ ಶರೀರವನ್ನು ತೆಗೆದುಕೊಂಡು ಹೋಗುತ್ತೀರಾ! ಆತ್ಮವು ಅಮರವಾಗಿದೆ, ಹೋಲಿಯಲ್ಲಿ ತೋರಿಸುತ್ತಾರೆ. ಕೋಕಿಯು ಸುಟ್ಟು ಹೋಗುತ್ತದೆ ಆದರೆ ದಾರವು ಸುಡುವುದಿಲ್ಲ. ತಂದೆಯು ಬೇಹದ್ದಿನ ಮಾತನ್ನು ತಿಳಿಸುತ್ತಾರೆ - ಇಲ್ಲಿಯವರೆಗೆ ಏನನ್ನು ಕೇಳಿದ್ದೀರೋ ಅದನ್ನು ಮರೆತುಹೋಗಿ. ಈಗ ಭಾರತವು ಅಸತ್ಯಖಂಡವಾಗಿ ಬಿಟ್ಟಿದೆ. ನೆನ್ನೆಯ ದಿನ ಇದು ಸತ್ಯಖಂಡವಾಗಿತ್ತು, ಸತ್ಯಖಂಡವನ್ನು ತಂದೆಯು ಸ್ಥಾಪನೆ ಮಾಡಿದರು ನಂತರ ರಾವಣನು ಅಸತ್ಯ ಖಂಡವನ್ನಾಗಿ ಮಾಡಿದರು. ಈ ರಾವಣನು ಎಲ್ಲರ ಹಳೆಯ ಶತ್ರುವಾಗಿದ್ದಾನೆ, ಕೇವಲ ಯಾರಾದರೂ ಏನಾದರೂ ಹೇಳಿದರೆ ಸಾಕು ಅದರಂತೆ ನಡೆಯತೊಡಗುತ್ತಾರೆ. ಹೇಗೆ ದಿಲ್ವಾಡಾ ಮಂದಿರದಲ್ಲಿ ಆದಿ ದೇವನ ಹೆಸರನ್ನು ಮಹಾವೀರನೆಂದು ಇಟ್ಟಿದ್ದಾರೆ. ಮಹಾವೀರನೆಂದು ಹನುಮಂತನಿಗೆ ಹೇಳಲಾಗುತ್ತದೆ. ಈಗ ಆದಿ ದೇವನೆಲ್ಲಿ! ಮಹಾವೀರನೆಲ್ಲಿ! ಈ ಮಂದಿರದಲ್ಲಿ ನಿಮ್ಮದೇ ಸ್ಪಷ್ಟ ನೆನಪಾರ್ಥವಿದೆ. ಕೆಳಗೆ ತಪಸ್ಸು, ಮೇಲೆ ಸ್ವರ್ಗವಿದೆ, ಚಿನ್ನದಿಂದ ಆದಿನಾಥನ ಮೂರ್ತಿಯನ್ನು ಮಾಡಿದ್ದಾರೆ. ಭಾರತವು ಚಿನ್ನದ ಪಕ್ಷಿಯಾಗಿತ್ತು ಎಂದು ಹೇಳುತ್ತಾರಲ್ಲವೆ. ಭಾರತದಲ್ಲಿನ ಚಿನ್ನವು ಮತ್ತೆಲ್ಲಿಯೂ ಇರಲಿಲ್ಲ. ಚಿನ್ನದಿಂದ ಮಹಲುಗಳಾಗಿತ್ತು. ಮಾಳಿಗೆ ಮತ್ತು ಗೋಡೆಗಳಲ್ಲಿ ವಜ್ರರತ್ನಗಳು ಪೋಣಿಸಲಾಗಿತ್ತು, ಮಂದಿರಗಳಲ್ಲಿ ಎಷ್ಟೊಂದು ವಜ್ರರತ್ನಗಳಿತ್ತು, ಅದನ್ನು ಲೂಟಿ ಮಾಡಿಕೊಂಡು ಹೋದರು. ಮಸೀದಿಗಳಲ್ಲಿ ಅದನ್ನು ಹಾಕಿದರು. ಅಂದಮೇಲೆ ಆ ಸಮಯದಲ್ಲಿ ಎಷ್ಟು ಬೆಲೆಯಿರಬಹುದು! ಅಪಾರ ಧನವಿತ್ತು ಆದ್ದರಿಂದಲೇ ಲೂಟಿ ಮಾಡಿಕೊಂಡು ಹೋದರು. ಇದು ಎಲ್ಲರಿಗೂ ಗೊತ್ತಿದೆ, ಪ್ರಾಚೀನ ಭಾರತವು ಬಹಳ ಸಾಹುಕಾರನಾಗಿತ್ತು, ಈಗ ಎಷ್ಟೊಂದು ಬಡದೇಶವಾಗಿ ಬಿಟ್ಟಿದೆ, ಬಡವರ ಮೇಲೆ ದಯೆ ಬರುತ್ತದೆ. ರಾವಣನು ಎಷ್ಟೊಂದು ನಿರ್ಗಧಿಕರನ್ನಾಗಿ ಮಾಡಿ ಬಿಟ್ಟಿದ್ದಾನೆ. ಪುನಃ ತಂದೆಯು ಸಾಹುಕಾರರನ್ನಾಗಿ ಮಾಡುತ್ತಾರೆ. ಇದು ಬೇಹದ್ದಿನ ನಾಟಕವಾಗಿದೆ, ಇದರ ಆದಿ-ಮಧ್ಯ-ಅಂತ್ಯವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಜ್ಞಾನಪೂರ್ಣನಾಗಿದ್ದಾರೆ ಅಂದರೆ ಎಲ್ಲರ ಹೃದಯದಲ್ಲಿ ಕುಳಿತು ನೋಡುತ್ತಾರೆಂದಲ್ಲ. ಇದೆಲ್ಲವೂ ಡ್ರಾಮಾದಲ್ಲಿ ನಿಗಧಿತವಾಗಿದೆ. ಯಾವ ಪಾಪ ಮಾಡುವರೋ ಅದಕ್ಕೆ ಶಿಕ್ಷೆಯು ಅವಶ್ಯವಾಗಿ ಸಿಗುತ್ತದೆ. ನನ್ನನ್ನು ಜ್ಞಾನಪೂರ್ಣ ಪತಿತ-ಪಾವನನೆಂದು ಹೇಳುತ್ತಾರೆ, ಹೇ ತಂದೆಯೇ ಬಂದು ನಮಗೆ ಜ್ಞಾನವನ್ನು ತಿಳಿಸಿ, ಪಾವನರನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಆದ್ದರಿಂದ ನಾನು ಬಂದು ಈ ಕಾರ್ಯವನ್ನು ಮಾಡುತ್ತೇನೆ. ಬಾಕಿ ಶಾಸ್ತ್ರಗಳ ಯಾವುದೆಲ್ಲಾ ಮಾತುಗಳಿವೆಯೋ ಅವನ್ನು ಮರೆಯಿರಿ ಮತ್ತು ನಾನು ಏನನ್ನು ತಿಳಿಸುತ್ತೇನೆಯೋ ಅದನ್ನು ಕೇಳಿರಿ ಎಂದು ತಂದೆಯು ತಿಳಿಸುತ್ತಾರೆ. ಈಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತಿದ್ದೀರಿ ಮತ್ತೆ ಸೂರ್ಯವಂಶಿಯರಾಗುತ್ತೀರಿ ನಂತರ ಚಂದ್ರವಂಶಿ ವೈಶ್ಯವಂಶಿ ಶೂದ್ರವಂಶಿಯರಾಗುತ್ತೀರಿ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಸತ್ಯಯುಗದಲ್ಲಿ ಎಲ್ಲವೂ ಮರೆತು ಹೋಗುವುದು. ಅಲ್ಲಿ ತಂದೆಯನ್ನು ಯಾರೂ ನೆನಪು ಮಾಡುವುದಿಲ್ಲ, ಆಸ್ತಿಯು ಸಿಕ್ಕಿದ ಮೇಲೆ ಮತ್ತೆ ಏತಕ್ಕಾಗಿ ನೆನಪು ಮಾಡುತ್ತಾರೆ! ತಂದೆಯು ಎಷ್ಟು ಚೆನ್ನಾಗಿ ತಿಳಿಸುತ್ತಾರೆ, ಈ ಮಾತುಗಳು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ವೃಕ್ಷಪತಿಯು ತಂದೆಯಾಗಿದ್ದಾರೆ, ನನ್ನನ್ನು ನೆನಪು ಮಾಡಿ ಎಂದು ಅವರು ತಿಳಿಸುತ್ತಾರೆ. ರಚಯಿತನು ಒಬ್ಬರೇ ಇರುತ್ತಾರೆ, ಕಲ್ಲು-ಮುಳ್ಳಿನಲ್ಲಿಯೂ ರಚಯಿತನಿರುತ್ತಾರೆಯೇ?
ತಂದೆಯು ತಿಳಿಸುತ್ತಾರೆ - ರಾವಣನು ನಿಮ್ಮ ಬುದ್ಧಿಯನ್ನು ಎಷ್ಟ್ಟು ಕೆಡಿಸಿ ಬಿಟ್ಟಿದ್ದಾನೆ! ದೊಡ್ಡ-ದೊಡ್ಡ ವಿದ್ವಾಂಸರಿಗೂ ಎಷ್ಟೊಂದು ಅಹಂಕಾರವಿದೆ, ತಂದೆಯನ್ನೇ ಅರಿತುಕೊಂಡಿಲ್ಲ. ರಚನೆಯ ಆದಿ-ಮಧ್ಯ-ಅಂತ್ಯವನ್ನೇ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ರಾಜ್ಯಭಾಗ್ಯವನ್ನು ಕೊಟ್ಟೆನು ನೀವು ಹಣ-ಅಧಿಕಾರ ಎಲ್ಲವನ್ನೂ ಸಮಾಪ್ತಿ ಮಾಡಿ ಬಿಟ್ಟಿರಿ, ಈಗ ಭಿಕ್ಷೆ ಬೇಡುತ್ತಿದ್ದೀರಿ ಆದ್ದರಿಂದ ಆಸುರೀ ಸಂಪ್ರದಾಯವೆಂದು ಹೇಳಲಾಗಿದೆ. ದೇವತೆಗಳಿಗೆ ಎಷ್ಟೊಂದು ಮಹಿಮೆಯನ್ನು ಹಾಡಿದ್ದಾರೆ, ನಾನು ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ಈಗ ನೀವು ಮಕ್ಕಳು ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ಅವಗುಣಗಳನ್ನು ತೆಗೆದು ಹಾಕಿರಿ. ರಾವಣನು ನಿಮ್ಮನ್ನು ಕೋತಿಯಂತೆ ಮಾಡಿ ಬಿಟ್ಟಿದ್ದಾನೆ. ಈಗ ತಂದೆಯು ನಿಮ್ಮನ್ನು ದೇವತೆಗಳನ್ನಾಗಿ ಮಾಡುತ್ತಾರೆ, ಯಾರಲ್ಲಿ ಪಂಚ ವಿಕಾರಗಳಿದೆಯೋ ಅವರಿಗೆ ಕೋತಿಯೆಂದು ಹೇಳಲಾಗುತ್ತದೆ (ನಾರದನ ಉದಾಹರಣೆ). ಈಗ ನಿಮ್ಮ ಗುಣಗಳು ಬದಲಾಗುತ್ತಾ ಹೋಗುತ್ತಿವೆ. ನಂತರ ನೀವು ದೇವತೆಗಳಾಗಿಬಿಡುತ್ತೀರಿ. ಈ ಜ್ಞಾನ ಮಾನಸ ಸರೋವರದಲ್ಲಿ ಮಿಂದು ಜ್ಞಾನ ಪರಿಗಳಾಗಿ ಬಿಡುತ್ತೀರಿ, ಇದಕ್ಕೆ ಅವರು ಸ್ಥೂಲವಾದ ನೀರನ್ನು ಮಾನಸ ಸರೋವರವೆಂದು ತಿಳಿದುಕೊಂಡಿದ್ದಾರೆ. ಇದು ಜ್ಞಾನ ಸ್ನಾನದ ಮಾತಾಗಿದೆ. ಇದನ್ನಂತೂ ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯೇ 5000 ವರ್ಷಗಳ ಮೊದಲಿನಂತೆ ನಮಗೆ ತಿಳಿಸುತ್ತಿದ್ದಾರೆ. ಇದರಲ್ಲಿ ಯಾವುದೇ ಸಂಶಯ ಬರುವಂತಿಲ್ಲ. ಪತಿತ-ಪಾವನ ತಂದೆಯನ್ನು ಮತ್ತು ವಿಷ್ಣು ಪುರಿಯನ್ನು ನೆನಪು ಮಾಡಿ ಆಗ ನೀವು ಪಾವನರಾಗಿ ಬಿಡುತ್ತೀರಿ. ಮನುಷ್ಯರು ಮುಕ್ತಿಗಾಗಿ ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ ಆದರೆ ಮನೆಯ ಬಗ್ಗೆ ಯಾರಿಗೂ ತಿಳಿದಿಲ್ಲ. ಕೆಲವರು ಆತ್ಮವು ಹೋಗಿ ಲೀನವಾಗುತ್ತದೆ ಎಂದು ತಿಳಿಯುತ್ತಾರೆ. ಇನ್ನೂ ಕೆಲವರು ಆತ್ಮವು ಇನ್ನೊಂದು ಶರೀರವನ್ನು ತೆಗೆದುಕೊಳ್ಳುವುದೇ ಇಲ್ಲವೆಂದು ತಿಳಿಯುತ್ತಾರೆ, ಅನೇಕ ಮತಗಳಿವೆ. ತಂದೆಯನ್ನೇ ಯಾರೂ ಅರಿತುಕೊಂಡಿಲ್ಲ. ಇಡೀ ಪ್ರಪಂಚವು ಕೃಷ್ಣ ಭಗವಾನುವಾಚ ಎಂದು ತಿಳಿದುಕೊಳ್ಳುತ್ತದೆ, ಇಲ್ಲಿ ತಂದೆಯು ತಿಳಿಸುತ್ತಾರೆ – ಶಿವ ಭಗವಾನುವಾಚ. ಎಷ್ಟು ರಾತ್ರಿ-ಹಗಲಿನ ಅಂತರವಿದೆ! ಹೆಸರನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಒಳ್ಳೆಯದು.
ಮಧುರಾತಿ ಮಧುರ ಮಕ್ಕಳೇ ಎಂದು ಬಾಪ್-ದಾದಾ ಇಬ್ಬರೂ ಹೇಳುತ್ತಾರೆ, ಇಬ್ಬರಿಗೂ ಮಕ್ಕಳಲ್ಲವೆ. ಇವರೂ ವಿದ್ಯಾರ್ಥಿ, ನೀವೂ ವಿದ್ಯಾರ್ಥಿಗಳಾಗಿದ್ದೀರಿ. ಇವರೂ ಓದುತ್ತಿದ್ದಾರೆ, ಯಾರು ಭಾರತವನ್ನು ಪಾವನವನ್ನಾಗಿ ಮಾಡುವ ಸೇವೆಯಲ್ಲಿದ್ದಾರೆಯೋ ಅವರೇ ಮಕ್ಕಳಾಗಿದ್ದಾರೆ. ಯಾರು ಪಾವನರಾಗುವುದಿಲ್ಲವೋ ಅವರನ್ನು ತಂದೆಯು ನೋಡಿಯೂ ನೋಡದಂತಿರುತ್ತಾರೆ. ಇವರು ಶಿಕ್ಷೆಗಳನ್ನು ಅನುಭವಿಸಿ ನಂತರ ಬಂದು ಬಹಳ ಕನಿಷ್ಟ ಪದವಿಯನ್ನು ಪಡೆಯುತ್ತಾರೆಂದು ತಂದೆಯು ತಿಳಿದುಕೊಳ್ಳುತ್ತಾರೆ. ಯಾರು ಪಾವನರಾಗುವರೋ ಅವರು ವಿಶ್ವದ ಮಾಲೀಕರಾಗುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಮಧುರರಾಗಲು ಮಧುರ ತಂದೆಯನ್ನು ಬಹಳ ಪ್ರೀತಿಯಿಂದ ನೆನಪು ಮಾಡಬೇಕಾಗಿದೆ. ಸತ್ಯ ತಂದೆಯೊಂದಿಗೆ ಸತ್ಯವಾಗಿರಬೇಕಾಗಿದೆ. ಒಬ್ಬ ತಂದೆಯ ಶ್ರೇಷ್ಠ ಮತದಂತೆ ನಡೆಯಬೇಕಾಗಿದೆ.
2. ಪುರುಷಾರ್ಥ ಮಾಡಿ ಸಂಪೂರ್ಣರಾಗಬೇಕಾಗಿದೆ. ಭಾರತವನ್ನು ಪಾವನವನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಯಾವುದೇ ಮಾತಿನಲ್ಲಿ ಸಂಶಯ ತರಬಾರದು.
ಓಂ ಶಾಂತಿ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದವರು ಇದನ್ನು ತಿಳಿದುಕೊಂಡಿಲ್ಲ - ಬೇಹದ್ದಿನ ತಂದೆಯು ನಿವೃತ್ತಿಯವರೇ ಅಥವಾ ಪ್ರವೃತ್ತಿಯವರೇ? ಎಂದು. ತಂದೆಯು ಬರುತ್ತಾರೆಂದರೆ ಮಕ್ಕಳೇ, ಮಕ್ಕಳೇ ಎಂದು ಕರೆಯುತ್ತಾರೆ ಏಕೆಂದರೆ ಅವರನ್ನು ತ್ವಮೇವ ಮಾತಾಶ್ಚ ಪಿತಾ ಎಂದು ಕರೆಯಲಾಗುತ್ತದೆ. ಆದ್ದರಿಂದ ಅವರೂ ಗೃಹಸ್ಥಿಯಾಗುತ್ತಾರೆ. ಅಲ್ಲಂತೂ ಎಲ್ಲರೂ ತಿಳಿದುಕೊಂಡಿರುತ್ತಾರೆ - ಶಿವನು ನಿರಾಕಾರನಾಗಿದ್ದಾರೆ. ಭಲೆ ಶಿವನ ಆಕಾರವಿದೆ ಆದರೆ ಮರಿ ಮಕ್ಕಳು ಇಲ್ಲ. ಒಂದುವೇಳೆ ಇದ್ದರೂ ಸಹ ಎಲ್ಲಾ ಆತ್ಮರೂ ಮಕ್ಕಳಾಗಿದ್ದಾರೆ, ಎಲ್ಲರೂ ಒಂದೇ ರೀತಿಯ ಮಕ್ಕಳಿದ್ದಾರೆ ಆದ್ದರಿಂದ ಕೆಲವರು ತಿಳಿದುಕೊಳ್ಳುತ್ತಾರೆ - ಎಲ್ಲರೂ ಪರಮಾತ್ಮನಾಗಿದ್ದಾರೆ, ಆತ್ಮವೂ ಬಿಂದು ರೂಪವಾಗಿದೆ, ಪರಮಾತ್ಮನೂ ಬಿಂದು ರೂಪವಾಗಿದ್ದಾರೆ. ತ್ವಮೇವ ಮಾತಾಶ್ಚ ಪಿತಾ.. ಎಂದು ಗೃಹಸ್ಥಿಗಳೇ ಹಾಡುತ್ತಾರೆ. ಸನ್ಯಾಸಿಗಳು ನಿವೃತ್ತಿ ಮಾರ್ಗದವರು ಪರಮಾತ್ಮನನ್ನು ಬ್ರಹ್ಮತತ್ವವೆಂದು ಹೇಳಿ ಬಿಡುತ್ತಾರೆ, ಅವರು ತ್ವಮೇವ ಮಾತಾಶ್ಚ ಪಿತಾ ಎಂದು ಹೇಳುವುದಿಲ್ಲ. ಅವರ ಮಾರ್ಗವೇ ಬೇರೆಯಾಗಿದೆ. ಲಕ್ಷ್ಮೀ-ನಾರಾಯಣರ ಮುಂದೆ ಹೋಗಿ ತ್ವಮೇವ ಮಾತಾಶ್ಚ ಪಿತಾ ಅಥವಾ ಅಚ್ಯುತಂ, ಕೇಶವಂ ಎಂದು ತಪ್ಪಾಗಿ ಹಾಡುತ್ತಾರೆ. ಭಕ್ತಿಮಾರ್ಗದಲ್ಲಿ ಬಹಳಷ್ಟು ಮಹಿಮೆಯನ್ನು ಹಾಡುತ್ತಾರೆ. ವಾಸ್ತವದಲ್ಲಿ ಪರಮಾತ್ಮನು ತಂದೆಯಾಗಿದ್ದಾರೆ. ಅವರಿಂದ ಆಸ್ತಿಯು ಹೇಗೆ ಮತ್ತು ಏನು ಸಿಗುವುದು? ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಅವರು ತಂದೆಯೂ ಆಗಿದ್ದಾರೆ ದಾದಾರವರೂ ಆಗಿದ್ದಾರೆ, ದೊಡ್ಡ ತಾಯಿಯೂ ಆಗಿದ್ದಾರೆ, ಪ್ರಜಾಪಿತನೂ ಆಗಿದ್ದಾರೆ, ಇವರ ಮುಖಾಂತರ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಾನು ನಿಮ್ಮ ತಂದೆಯೂ ಆಗಿದ್ದೇನೆ ಮತ್ತೆ ನಾನೂ ಸಹ ಪ್ರವೃತ್ತಿ ಮಾರ್ಗದಲ್ಲಿ ಬರಬೇಕಾಗುತ್ತದೆ. ಇವರು (ಬ್ರಹ್ಮಾ) ನನ್ನ ಪತ್ನಿಯೂ ಆಗಿದ್ದಾರೆ, ಮಗನೂ ಆಗಿದ್ದಾರೆ. ಯಾವಾಗ ಇವರಲ್ಲಿ ಪ್ರವೇಶ ಮಾಡುತ್ತೇನೆಯೋ ಆಗ ಪ್ರವೃತ್ತಿಯವನಾಗಿ ಬಿಡುತ್ತೇನೆ. ನನ್ನನ್ನೇ ಪರಮಪಿತ, ಪರಮ ಶಿಕ್ಷಕ, ಪರಮ ಸದ್ಗುರುವೆಂದು ಹೇಳುತ್ತಾರೆ. ಗುರುಗಳು ಮುಕ್ತಿಗಾಗಿ ಮಾರ್ಗದರ್ಶನ ನೀಡುತ್ತಾರೆ ಆದರೆ ಅದೆಲ್ಲವೂ ಅಸತ್ಯವಾಗಿದೆ. ಇವರು ಸತ್ಯವಾಗಿದ್ದಾರೆ, ಆಂಗ್ಲ ಭಾಷೆಯಲ್ಲಿ ಪರಮಾತ್ಮನಿಗೆ ಟ್ರುಥ್ ಎಂದು ಹೇಳುತ್ತಾರೆ ಅಂದಾಗ ಆ ಸತ್ಯ ತಂದೆಯು ಬಂದು ಯಾವ ಸತ್ಯವನ್ನು ತಿಳಿಸುತ್ತಾರೆಂಬುದು ಯಾರಿಗೂ ತಿಳಿದಿಲ್ಲ. ನನಗೂ ಮೊದಲು ತಿಳಿದಿರಲಿಲ್ಲ ಅಂದಮೇಲೆ ಇದು ಹೊಸ ಮಾತಾಯಿತಲ್ಲವೆ. ಅವರು ಜ್ಞಾನಸಾಗರ ಸತ್ಯ ಖಂಡವನ್ನು ಸ್ಥಾಪನೆ ಮಾಡುವವರಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ಎಂದೋ ಸತ್ಯವನ್ನು ತಿಳಿಸಿ ಹೋಗಿದ್ದಾರೆ ಆದ್ದರಿಂದಲೇ ಗಾಯನವಿದೆ. ಸತ್ಯ ಖಂಡಕ್ಕೆ ಹೆವೆನ್ ಎಂದು ಹೇಳುತ್ತಾರೆ. ಅಲ್ಲಿ ದೈವೀ ಸಾಮ್ರಾಜ್ಯವನ್ನು ತೋರಿಸುತ್ತಾರೆ. ಈಗ ಇದು ಹಳೆಯ ಪ್ರಪಂಚವಾಗಿದೆ, ಮತ್ತೆ ಹೊಸ ಪ್ರಪಂಚವಾಗಲಿದೆ. ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳುವುದು. ಸ್ಥಾಪನೆಯ ಸಮಯದಲ್ಲಿ ವಿನಾಶವೆಂದು ಗಾಯನವಿದೆ, ಮಾಡಿ-ಮಾಡಿಸುವವರು ಪರಮಾತ್ಮನೆಂದು ಗಾಯನವಿದೆ. ಬ್ರಹ್ಮಾರವರ ಮೂಲಕ ಸ್ಥಾಪನೆ ಮಾಡುತ್ತಾರೆ. ಹೇಗೆ ಮಾಡಿಸುತ್ತಾರೆ? ಅದನ್ನು ಸ್ವಯಂ ಅವರೇ ಬಂದು ತಿಳಿಸುತ್ತಾರೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಪರಮಾತ್ಮನು ಮಾಡಿ-ಮಾಡಿಸುವವರೆಂದು ಹೇಳುತ್ತಾರೆ ನಂತರ ನಾಟಕದ ಬಗ್ಗೆಯೂ ಅರಿವಾಯಿತು. ಕಲಿಯುಗದ ಅಂತ್ಯ, ಸತ್ಯಯುಗದ ಆದಿ.... ಈ ಸಂಗಮವನ್ನೇ ಶ್ರೇಷ್ಠವೆಂದು ಒಪ್ಪಬೇಕಾಗಿದೆ. ಕಲಿಯುಗದ ನಂತರ ಸತ್ಯಯುಗವು ಬರುತ್ತದೆ ಮತ್ತೆ ಅಲ್ಲಿಂದ ಕೆಳಗಿಳಿಯುತ್ತಲೇ ಹೋಗುತ್ತಾರೆ. ಸ್ವರ್ಗ-ನರಕವೆಂದು ಗಾಯನವಿದೆ. ಮನುಷ್ಯರು ಶರೀರ ಬಿಟ್ಟರೆ ಸ್ವರ್ಗವಾಸಿಯಾದರೆಂದೇ ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಯಾವಾಗಲೋ ಸ್ವರ್ಗವಾಸಿಯಾಗಿದ್ದರು. ಇದನ್ನು ವಿಶೇಷವಾಗಿ ಭಾರತವಾಸಿಗಳೇ ಹೇಳುತ್ತಾರೆ ಏಕೆಂದರೆ ಭಾರತವು ಎಲ್ಲದಕ್ಕಿಂತ ಪ್ರಾಚೀನವಾಗಿದೆ ಎಂಬುದು ತಿಳಿದಿದೆ, ಅಂದಮೇಲೆ ಅವಶ್ಯವಾಗಿ ಇದೇ ಮತ್ತೆ ಸ್ವರ್ಗವಾಗುವುದು. ಎಷ್ಟು ಸಹಜ ಮಾತುಗಳಾಗಿವೆ ಆದರೆ ಡ್ರಾಮಾನುಸಾರ ಯಾರೂ ತಿಳಿದುಕೊಂಡಿಲ್ಲ. ಆದ್ದರಿಂದಲೇ ತಿಳಿಸುವುದಕ್ಕಾಗಿ ತಂದೆಯು ಬರುತ್ತಾರೆ. ತಂದೆಯೇ ಬನ್ನಿ, ತಮ್ಮಲ್ಲಿ ಯಾವ ಜ್ಞಾನವಿದೆಯೋ ಅದನ್ನು ನಮಗೆ ಕೊಡಿ, ಪತಿತರನ್ನು ಪಾವನರನ್ನಾಗಿ ಮಾಡಲು ಬನ್ನಿ ಎಂದು ಕರೆಯುತ್ತಾರೆ ಮತ್ತೆ ಹೇಳುತ್ತಾರೆ - ನಮ್ಮ ದುಃಖವನ್ನು ದೂರ ಮಾಡಿ ಸುಖ ನೀಡಿ ಎಂದು ಆದರೆ ಅವರು ಯಾವ ಜ್ಞಾನವನ್ನು ಕೊಡುತ್ತಾರೆ, ಯಾವ ಸುಖವನ್ನು ಕೊಡುತ್ತಾರೆಂಬುದನ್ನು ತಿಳಿದಿಲ್ಲ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಅವರು ತಂದೆಯಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ತಂದೆಯಿಂದಲೇ ರಚನೆಯಾಗಿರಬೇಕು. ತಂದೆ ಎಂದರೆ ರಚಯಿತ. ಮಕ್ಕಳು ತಂದೆಯೆಂದು ಹೇಳಿದರು ಅಂದಮೇಲೆ ಅವರು ರಚನೆಯಾದರು. ರಚನೆಯೂ ಸಹ ಅವಶ್ಯವಾಗಿ ಯಾರಿಂದಲೋ ರಚನೆಯಾಗಿರಬೇಕಲ್ಲವೆ. ಮತ್ತೆ ಮಕ್ಕಳಿಗೆ ಆಸ್ತಿಯನ್ನೂ ಕೊಟ್ಟಿರಬೇಕು. ಇದು ಸಾಮಾನ್ಯ ಮಾತಾಗಿದೆ ಆದ್ದರಿಂದಲೇ ನನ್ನನ್ನು ತ್ವಮೇವ ಮಾತಾಶ್ಚ ಪಿತಾ... ಎಂದು ಹೇಳುತ್ತಾರೆ ಅಂದಮೇಲೆ ನಾನು ದೊಡ್ಡ ಗೃಹಸ್ಥಿಯಾದೆನು ಅಲ್ಲವೆ. ಹೇ ಮಾತಾಪಿತಾ ಬಂದು ನಮ್ಮನ್ನು ಪಾವನ ಮಾಡಿ ಎಂದು ಕರೆಯುತ್ತಾರೆ, ಈಗ ತಂದೆಯಂತೂ ಇದ್ದಾರೆ ಆದರೆ ತಾಯಿಯಿಲ್ಲದೆ ರಚನೆಯಾಗಲು ಹೇಗೆ ಸಾಧ್ಯ! ಇಲ್ಲಿ ತಂದೆಯು ಹೇಗೆ ರಚಿಸುತ್ತಾರೆ ಎಂಬುದು ಸಂಪೂರ್ಣ ಹೊಸ ಮಾತಾಗಿದೆ. ಇಲ್ಲಿಯೂ ಸಹ ಅನೇಕರ ಬುದ್ಧಿಯಲ್ಲಿ ಇದು ಕುಳಿತುಕೊಳ್ಳುವುದಿಲ್ಲ. ಮತ್ತೆಲ್ಲಾ ಜಾಗಗಳಲ್ಲಿ ಕೇವಲ ಪರಮಾತ್ಮನನ್ನು ತಂದೆ ಎಂದು ಕರೆಯುತ್ತಾರೆ. ಇಲ್ಲಿ ತಂದೆ-ತಾಯಿ ಇಬ್ಬರೂ ಇದ್ದಾರೆ ಅಂದಮೇಲೆ ಪ್ರವೃತ್ತಿ ಮಾರ್ಗವಾಯಿತಲ್ಲವೆ. ಅಲ್ಲಿ ಕೇವಲ ತಂದೆ ಎಂದು ಹೇಳುವುದರಿಂದ ಅವರಿಗೆ ಮುಕ್ತಿಯ ಆಸ್ತಿಯು ಸಿಗುತ್ತದೆ, ಅವರು ಬರುವುದೇ ಕೊನೆಯಲ್ಲಿ. ಇದು ಎಲ್ಲರಿಗೂ ಗೊತ್ತಿದೆ, ಕ್ರಿಶ್ಚಿಯನ್ ಧರ್ಮಕ್ಕೆ ಮೊದಲು ಬೌದ್ಧ ಧರ್ಮವಿತ್ತು, ಅದಕ್ಕೆ ಮೊದಲು ಇಸ್ಲಾಂ ಧರ್ಮವಿತ್ತು. ಈ ಏಣಿ ಚಿತ್ರದಲ್ಲಿ ಅನ್ಯ ಧರ್ಮಗಳು ಇಲ್ಲ ಆದ್ದರಿಂದ ಗೋಲದ ಪಕ್ಕದಲ್ಲಿ ಇದನ್ನು ತೋರಿಸಬೇಕು. ಇದು ಪಾಠಶಾಲೆಯಾಗಿದೆ ಆದರೆ ಪಾಠಶಾಲೆಯಲ್ಲಿ ಕೇವಲ ಒಂದು ಪುಸ್ತಕವೇ ಇರುವುದೇ? ಪಾಠಶಾಲೆಯಲ್ಲಿ ನಕ್ಷೆಗಳೂ ಬೇಕಾಗಿದೆ, ಆ ಲೌಕಿಕ ವಿದ್ಯೆಯಂತೂ ಕೆಲಸಕ್ಕೆ ಬರುವುದಿಲ್ಲ, ನಕ್ಷೆಗಳಿಂದ ಮನುಷ್ಯರು ಕೂಡಲೇ ತಿಳಿದುಕೊಳ್ಳುತ್ತಾರೆ. ಇವು ನಿಮ್ಮ ಮುಖ್ಯ ನಕ್ಷೆಗಳಾಗಿವೆ. ಎಷ್ಟು ವಿಸ್ತಾರದಿಂದ ತಿಳಿಸುತ್ತೇನೆ ಆದರೂ ಸಹ ಕಲ್ಲು ಬುದ್ಧಿಯವರು ತಿಳಿದುಕೊಳ್ಳುವುದಿಲ್ಲ. ಪ್ರದರ್ಶನಿಯಲ್ಲಿ ತ್ರಿಮೂರ್ತಿ ಚಿತ್ರದಲ್ಲಿ ಮೊದಲು ತಿಳಿಸಬೇಕಾಗಿದೆ - ಇವರು ನಿಮ್ಮ ತಂದೆಯಾಗಿದ್ದಾರೆ, ಅವರು ದಾದಾ ಆಗಿದ್ದಾರೆ. ಜ್ಞಾನವನ್ನು ಹೇಗೆ ಕೊಡುವರು? ಆಸ್ತಿಯನ್ನು ಹೇಗೆ ಕೊಡುವರು? ಭಾರತವಾಸಿಗಳಿಗೇ ಆಸ್ತಿಯು ಸಿಗಬೇಕಾಗಿದೆ, ಪರಮಪಿತ ಪರಮಾತ್ಮನು ಬ್ರಾಹ್ಮಣ, ದೇವತಾ, ಕ್ಷತ್ರಿಯ ಮೂರು ಧರ್ಮಗಳ ಸ್ಥಾಪನೆ ಮಾಡುತ್ತಾರೆ. ಬ್ರಹ್ಮಾರವರ ಮೂಲಕ ಬ್ರಾಹ್ಮಣರನ್ನು ರಚಿಸುತ್ತಾರೆ. ಇದು ಯಜ್ಞವಾಗಿದೆ, ಇದಕ್ಕೆ ರುದ್ರ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ ಮತ್ತು ಭಕ್ತಿಮಾರ್ಗದ ಯಾವ ಯಜ್ಞಗಳಿವೆಯೋ ಅದು ತಡವಾಗಿ ಆರಂಭವಾಗುತ್ತದೆ ಏಕೆಂದರೆ ಮೊಟ್ಟ ಮೊದಲು ಶಿವನ ಪೂಜೆ ನಂತರ ದೇವತೆಗಳ ಪೂಜೆಯು ನಡೆಯುತ್ತದೆ. ಆ ಸಮಯದಲ್ಲಿ ಯಾವುದೇ ಯಜ್ಞವಿರುವುದಿಲ್ಲ ನಂತರ ಈ ಯಜ್ಞ ಮಾಡುವುದನ್ನು ಆರಂಭಿಸುತ್ತಾರೆ. ಮೊದಲು ದೇವತೆಗಳ ಪೂಜೆ ಮಾಡುತ್ತಾರೆ, ಹೂಗಳನ್ನು ಹಾಕುತ್ತಾರೆ. ನೀವೀಗ ಪೂಜೆಗೆ ಅರ್ಹರಲ್ಲ, ಮನುಷ್ಯರು ಶಿವನ ಮೇಲೆ ಎಕ್ಕದ ಹೂ ಮತ್ತು ದತ್ತೂರಿ ಹೂಗಳನ್ನು ಏಕೆ ಹಾಕುತ್ತಾರೆ? ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಮುಳ್ಳುಗಳಾಗಿದ್ದೀರಿ, ಅದರಲ್ಲಿ ಕೆಲವರು ಸದಾ ಗುಲಾಬಿ, ಕೆಲವರು ಗುಲಾಬಿ, ಕೆಲವರು ಚೆಂಡು ಮಲ್ಲಿಗೆ ಆಗುತ್ತಾರೆ, ಇನ್ನೂ ಕೆಲವರು ಎಕ್ಕದ ಹೂಗಳಾಗಿ ಬಿಡುತ್ತಾರೆ. ಪೂರ್ಣ ರೀತಿಯಿಂದ ಓದದಿದ್ದರೆ ಎಕ್ಕದ ಹೂವಾಗುತ್ತಾರೆ. ಏನೂ ಪ್ರಯೋಜನಕ್ಕೆ ಬರುವುದಿಲ್ಲ. ಶಿವ ತಂದೆಯ ಮೇಲೆ ಎಲ್ಲರೂ ಮುಳ್ಳುಗಳನ್ನು ಹಾಕುತ್ತಾರೆ ಆದರೆ ತಂದೆಯು ಅವರನ್ನು ಹೂಗಳನ್ನಾಗಿ ಮಾಡುತ್ತಾರೆ ಆದರೆ ಹೂಗಳಲ್ಲಿಯೂ ಅನೇಕ ಪ್ರಕಾರದ ಹೂಗಳಾಗುತ್ತಾರೆ. ಹೇಗೆ ಉದ್ಯಾನವನದಲ್ಲಿ ವಿಭಿನ್ನ ಹೂಗಳಿರುತ್ತವೆಯಲ್ಲವೆ, ನಿಮ್ಮಲ್ಲಿಯೂ ನಂಬರ್ವಾರ್ ಇದೆ. ಕೆಲವರು ಸಿಂಹಾಸನಾಧೀಶರಾಗುತ್ತಾರೆ, ಕೆಲವರು ಆಗುವುದಿಲ್ಲ. ಇವೆಲ್ಲಾ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಭಕ್ತಿಮಾರ್ಗವು ಎಷ್ಟು ಉದ್ದಗಲವಾಗಿದೆ ಆದರೆ ಅದರಲ್ಲಿ ಸ್ವಲ್ಪವೂ ಜ್ಞಾನವಿಲ್ಲ. ಸತ್ಯಯುಗದಲ್ಲಿ ದೇವಿ-ದೇವತೆಗಳಿದ್ದರು, ಕಲಿಯುಗದಲ್ಲಿ ಒಬ್ಬ ದೇವತೆಯೂ ಇಲ್ಲ ಅಂದಮೇಲೆ ಪರಮಾತ್ಮನು ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿರಬೇಕು. ಆದ್ದರಿಂದ ತಂದೆಯು ಬಂದು ಇಂತಹ ಕರ್ಮವನ್ನು ಕಲಿಸುತ್ತಾರೆ ಯಾವುದನ್ನು ಮನುಷ್ಯರು ಕಲಿತು ದೈವೀ ಗುಣಗಳನ್ನು ಧಾರಣೆ ಮಾಡಿ ದೇವಿ-ದೇವತೆಗಳಾಗಿ ಬಿಡುವರು. ಅನ್ಯ ಧರ್ಮದವರು ಏನು ಕಲಿಸುತ್ತಾರೆ? ಏಕೆಂದರೆ ಅವರಂತೂ ಮೇಲಿನಿಂದ ಅವರ ಧರ್ಮ ಗುರುಗಳ ಹಿಂದೆ ಬರಬೇಕಾಗಿದೆ, ಅವರು ಕೇವಲ ಪವಿತ್ರತೆಯ ಜ್ಞಾನವನ್ನು ಕೊಡುತ್ತಾರೆ. ಕ್ರಿಸ್ತನು ಬಂದಾಗ ಕ್ರಿಶ್ಚಿಯನ್ನರು ಯಾರೂ ಇರಲಿಲ್ಲ. ಅಂದರೆ ಕ್ರೈಸ್ಟ್ನ ಹಿಂದೆ ಆ ಧರ್ಮದ ಆತ್ಮರು ಕೆಳಗಿಳಿಯುತ್ತಾರೆ. ತಂದೆಯು ತಿಳಿಸಿದ್ದಾರೆ - ನಾಲ್ಕು ಮುಖ್ಯ ಧರ್ಮಗಳಿವೆ, ಯಾರು ಧರ್ಮ ಸ್ಥಾಪನೆ ಮಾಡುತ್ತಾರೆ, ಅವರದು ಯಾವ ಶಾಸ್ತ್ರವಾಗುವುದೋ ಅದಕ್ಕೆ ಧರ್ಮಶಾಸ್ತ್ರವೆಂದು ಹೇಳಲಾಗುತ್ತದೆ ಅಂದಾಗ ಮುಖ್ಯವಾಗಿ ನಾಲ್ಕು ಧರ್ಮಗಳಿವೆ, ಉಳಿದೆಲ್ಲವೂ ಚಿಕ್ಕ-ಚಿಕ್ಕ ಧರ್ಮಗಳಾಗಿವೆ, ಇವು ವೃದ್ಧಿಯಾಗುತ್ತಾ ಇರುತ್ತವೆ ಇಸ್ಲಾಮಿಗಳ ಧರ್ಮಶಾಸ್ತ್ರವೇ ಬೇರೆ, ಬೌದ್ಧರ ಧರ್ಮಶಾಸ್ತ್ರವೇ ಬೇರೆ, ಅಂದಮೇಲೆ ಧರ್ಮಶಾಸ್ತ್ರಗಳು ಕೇವಲ ಇವೇ ಆದವು. ಬ್ರಾಹ್ಮಣ ಧರ್ಮವು ಈಗಿನದಾಗಿದೆ. ಅವರು ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ ಅಂದಮೇಲೆ ಆ ಬ್ರಾಹ್ಮಣರಿಗೆ ತಿಳಿಸಬೇಕಾಗಿದೆ - ಪರಮಾತ್ಮನು ಬ್ರಹ್ಮಾರವರ ಮೂಲಕ ಯಾವ ಬ್ರಹ್ಮಾ ಮುಖವಂಶಾವಳಿಯನ್ನು ರಚಿಸುತ್ತಾರೆಯೋ ಅವರೇ ಸತ್ಯ ಬ್ರಾಹ್ಮಣರಾಗಿದ್ದಾರೆ. ನೀವು ಪ್ರಜಾಪಿತ ಬ್ರಹ್ಮನ ಸಂತಾನರು ಅಲ್ಲವೇ ಅಲ್ಲ, ನೀವು ಕೇವಲ ತಮ್ಮನ್ನು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತೀರಿ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಬ್ರಹ್ಮಾ ಭೋಜನವನ್ನು ತಿನ್ನುವಾಗ ಸಂಸ್ಕೃತದಲ್ಲಿ ಶ್ಲೋಕವನ್ನು ಓದಿ ಬ್ರಹ್ಮಾ ಭೋಜನದ ಮಹಿಮೆ ಹಾಡುತ್ತಾರೆ ಆದರೆ ಈ ಮಹಿಮೆಯೆಲ್ಲವೂ ವ್ಯರ್ಥವಾಗಿದೆ. ಆದ್ದರಿಂದ ಅವರೊಂದಿಗೆ ಕೇಳಬೇಕು - ನೀವು ಬ್ರಾಹ್ಮಣರು ಹೇಗಾದಿರಿ? ಪರಮಾತ್ಮನು ಸೃಷ್ಟಿಯನ್ನು ರಚಿಸಬೇಕಾದರೆ ಅವರಿಗೆ ಬ್ರಹ್ಮನ ಮಾಧ್ಯಮವು ಬೇಕು ಆದ್ದರಿಂದ ಸತ್ಯ ಬ್ರಾಹ್ಮಣರು ನೀವಾಗಿದ್ದೀರಿ, ಬ್ರಾಹ್ಮಣರಿಗೂ ಶಿಖೆಯನ್ನು ತೋರಿಸುತ್ತಾರಲ್ಲವೆ. ವಿರಾಟ ರೂಪದಲ್ಲಿ ಬ್ರಾಹ್ಮಣರನ್ನು ತೋರಿಸುವುದಿಲ್ಲ, ಅಂದಮೇಲೆ ಬ್ರಾಹ್ಮಣರು ಎಲ್ಲಿಂದ ಬಂದರು? ನೀವು ತಮ್ಮನ್ನು ಬ್ರಾಹ್ಮಣರೆಂದು ಕರೆಸಿಕೊಳ್ಳುತ್ತೀರಿ ಅಂದಮೇಲೆ ಯಾವಾಗ ಪರಮಾತ್ಮನು ಬಂದು ಬ್ರಹ್ಮನ ಮೂಲಕ ಹೊಸ ರಚನೆಯನ್ನು ರಚಿಸುವರೋ ಆಗಲೇ ಬ್ರಾಹ್ಮಣರಾಗುತ್ತೀರಿ, ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತೀರಿ. ಬ್ರಾಹ್ಮಣರು ಇರುವುದೇ ಸಂಗಮದಲ್ಲಿ, ಕಲಿಯುಗದಲ್ಲಿ ಎಲ್ಲರೂ ಶೂದ್ರರಿದ್ದಾರೆ. ಬ್ರಾಹ್ಮಣರಿಗೇ ಬಹಳ ಮಹಿಮೆ ಮಾಡುತ್ತಾರೆ, ಇವೆಲ್ಲಾ ಮಾತುಗಳನ್ನು ತಂದೆಯು ತಿಳಿಸುತ್ತಾರೆ. ತಂದೆ ಮತ್ತು ಆಸ್ತಿ, ಉಳಿದೆಲ್ಲವೂ ವಿಸ್ತಾರವಾಗಿದೆ. ಭಕ್ತಿಯ ಬಗ್ಗೆಯೂ ತಿಳಿಸಬೇಕಾಗಿದೆ. ತಂದೆಯು ಕೆಲವೊಮ್ಮೆ ನೀವು ಭಕ್ತರಿದ್ದಂತೆ ಎಂದು ಹೇಳಿ ಬಿಡುತ್ತಾರೆ ಆದರೆ ತಂದೆಯು ಎಂದೂ ಕೋಪಿಸಿಕೊಳ್ಳುವುದಿಲ್ಲ ಆದರೆ ತಿಳುವಳಿಕೆಯಂತೂ ನೀಡುವರಲ್ಲವೆ ಏಕೆಂದರೆ ಮಕ್ಕಳು ಒಂದುವೇಳೆ ತಪ್ಪು ಮಾಡಿದರೆ ಯಾರ ಹೆಸರು ಕೆಡುವುದು? ಶಿವ ತಂದೆಯದು ಆದ್ದರಿಂದ ತಂದೆಯು ಮಕ್ಕಳ ಕಲ್ಯಾಣಾರ್ಥವಾಗಿ ಶಿಕ್ಷಣ ನೀಡುತ್ತಾರೆ. ತಿಳಿದುಕೊಳ್ಳಿ, ಇವರಿಂದ ಯಾವುದೇ ತಪ್ಪಾದರೂ ಸಹ ಅವರನ್ನು ಸುಧಾರಣೆ ಮಾಡುವುದಕ್ಕಾಗಿ ಡ್ರಾಮಾದಲ್ಲಿ ನಿಗಧಿಯಾಗಿದೆ. ಅದರಿಂದಲೂ ಲಾಭವಾಗುವುದು ಏಕೆಂದರೆ ಅವರು ದೊಡ್ಡ ಮಗನಲ್ಲವೆ. ಎಲ್ಲವೂ ಇವರ ಮೇಲೆ ಆಧಾರಿತವಾಗಿದೆ, ಇವರಿಂದ ಯಾವುದೇ ನಷ್ಟವಾಗುವುದಿಲ್ಲ, ಹೀಗೆ ಮಾಡಿರಿ ಎಂದು ಇವರು ಹೇಳಿದರೆ ಅದನ್ನು ಮಾಡಿ ಬಿಡಬೇಕು. ಅದರಿಂದ ನಷ್ಟದಿಂದಲೂ ಸಹ ಲಾಭವೇ ಆಗುವುದು. ಯಾವುದೇ ನಷ್ಟದ ಮಾತಿಲ್ಲ, ಪ್ರತೀ ಮಾತಿನಲ್ಲಿ ಕಲ್ಯಾಣವೇ ಕಲ್ಯಾಣವಿದೆ. ಅಕಲ್ಯಾಣವೂ ಡ್ರಾಮಾದಲ್ಲಿತ್ತು, ತಪ್ಪುಗಳಂತೂ ಎಲ್ಲರಿಂದಲೂ ಆಗುತ್ತಾ ಇರುತ್ತದೆ ಆದರೆ ಅಂತಿಮದಲ್ಲಿ ಯಾವುದೇ ಮಾತಿನಲ್ಲಿಯೂ ಕಲ್ಯಾಣವೇ ಆಗುವುದು ಏಕೆಂದರೆ ತಂದೆಯು ಕಲ್ಯಾಣಕಾರಿಯಾಗಿದ್ದಾರೆ, ಎಲ್ಲರ ಕಲ್ಯಾಣ ಮಾಡಬೇಕಾಗಿದೆ. ಎಲ್ಲರಿಗೆ ಸದ್ಗತಿಯನ್ನು ಕೊಡುತ್ತಾರೆ, ಈಗ ಎಲ್ಲರ ಅಂತಿಮ ಸಮಯವಾಗಿದೆ. ಎಲ್ಲರ ತಲೆಯ ಮೇಲೆ ಪಾಪದ ಹೊರೆಯಿದೆ ಅಂದಮೇಲೆ ಎಲ್ಲರ ಲೆಕ್ಕಾಚಾರವು ಮುಗಿಯುವುದು, ಶಿಕ್ಷೆಗಳು ಸಿಗುವುದರಲ್ಲಿ ನಿಧಾನವಾಗುವುದಿಲ್ಲ. ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ ಅಂದಮೇಲೆ ಸೆಕೆಂಡಿನಲ್ಲಿ ಪಾಪಗಳ ಶಿಕ್ಷೆಯನ್ನು ಅನುಭವಿಸಲು ಸಾಧ್ಯವಿಲ್ಲವೆ. ಹೇಗೆ ಕಾಶಿಯಲ್ಲಿ ಬಲಿಯಾಗುತ್ತಾರೆ ಶರೀರವನ್ನು ಬಿಟ್ಟು ಬಿಡುತ್ತಾರೆ ಆದರೆ ಅವರು ಹೋಗಿ ಶಿವ ತಂದೆಯೊಂದಿಗೆ ಮಿಲನ ಮಾಡಿದರು ಎಂದಲ್ಲ. ಕೇವಲ ಹಿಂದಿನ ಪಾಪಗಳ ಲೆಕ್ಕವು ಮುಗಿದು ಮತ್ತೆ ಹೊಸದಾಗಿ ಆರಂಭವಾಗುತ್ತದೆ. ಮಧ್ಯದಲ್ಲಿಯೇ ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಭಲೆ ಜ್ಞಾನವು ಸೆಕೆಂಡಿನದಾಗಿದೆ ಆದರೆ ವಿದ್ಯೆಯನ್ನು ಓದಬೇಕಾಗಿದೆ, ಪ್ರತಿನಿತ್ಯವೂ ಶಿವ ತಂದೆಯ ಆತ್ಮ ಯಾರು ಜ್ಞಾನ ಸಾಗರನಾಗಿದ್ದಾರೆಯೋ ಅವರೇ ಬಂದು ಓದಿಸುತ್ತಾರೆ. ಕೃಷ್ಣನಂತೂ ದೇಹಧಾರಿಯಾಗಿದ್ದಾನೆ, ಪುನರ್ಜನ್ಮದಲ್ಲಿ ಬರುತ್ತಾನೆ. ತಂದೆಯು ಅಜನ್ಮನಾಗಿದ್ದಾರೆ, ಯಾರು ಇಲ್ಲಿ ಓದುವುದಿಲ್ಲವೊ ಅವರು ಅವಶ್ಯವಾಗಿ ಇಲ್ಲಿ ವಿಘ್ನಗಳನ್ನು ಹಾಕುತ್ತಾರೆ. ಯಜ್ಞದಲ್ಲಿ ವಿಘ್ನಗಳು ಬಂದೇ ಬರುತ್ತವೆ, ಅಬಲೆಯರ ಮೇಲೆ ಅತ್ಯಾಚಾರಗಳಾಗುತ್ತವೆ. ಎಲ್ಲವೂ ಕಲ್ಪದ ಹಿಂದಿನ ತರಹ ಆಗುತ್ತಿದೆ, ಅಸುರರು ಹೇಗೆ ಹೊಡೆದಾಡುತ್ತಾರೆ, ಚಿತ್ರಗಳನ್ನು ಹರಿದು ಹಾಕುತ್ತಾರೆ. ಯಾವುದೇ ಸಮಯದಲ್ಲಿ ಬೆಂಕಿ ಹಚ್ಚುವುದಕ್ಕೂ ನಿಧಾನಿಸುವುದಿಲ್ಲ. ನಾವೇನು ಮಾಡುತ್ತೇವೆ! ಇದೆಲ್ಲವೂ ಡ್ರಾಮಾದ ಪೂರ್ವ ನಿಶ್ಚಿತವೆಂದು ತಿಳಿಯುತ್ತೇವೆ. ಹೊರಗಡೆ ಪೋಲೀಸ್ ಮೊದಲಾದವರಿಗೆ ದೂರು ಕೊಡಬೇಕಾಗುತ್ತದೆ ಆದರೆ ಆಂತರ್ಯದಲ್ಲಿ ಕಲ್ಪದ ಹಿಂದೆ ಏನಾಗಿತ್ತೋ ಅದೇ ಆಗುವುದು ಎಂದು ತಿಳಿದುಕೊಳ್ಳುತ್ತೇವೆ. ಇದರಲ್ಲಿ ಯಾವುದೇ ದುಃಖದ ಮಾತಿಲ್ಲ. ನಷ್ಟವಾದರೆ ಇದೇನೂ ದೊಡ್ಡ ಮಾತಲ್ಲ. ಮತ್ತೆ ಇನ್ನೊಂದು ಬರುವುದು.
ತಂದೆಯು ಹೇಳಿದ್ದಾರೆ - ಎಲ್ಲಿಯೇ ಪ್ರದರ್ಶನಿ ಇತ್ಯಾದಿಗಳನ್ನು ಮಾಡುತ್ತೀರೆಂದರೆ 8 ದಿನಗಳಿಗಾಗಿ ಇನ್ಶೂರ್ ಮಾಡಿಸಿರಿ. ಯಾರಾದರೂ ಒಳ್ಳೆಯ ವ್ಯಕ್ತಿಯಿದ್ದರೆ ಇದಕ್ಕೆ ಹಣವನ್ನೂ ತೆಗೆದುಕೊಳ್ಳುವುದಿಲ್ಲ. ಇನ್ಶೂರೆನ್ಸ್ ಮಾಡದಿದ್ದರೂ ಏನಾಗುವುದು, ಮತ್ತೆ ಹೊಸ ಚಿತ್ರಗಳು ತಯಾರಾಗುತ್ತವೆ. ಹೆಜ್ಜೆ-ಹೆಜ್ಜೆಯಲ್ಲಿ ಪದುಮದಷ್ಟು ಸಂಪಾದನೆಯಿದೆ, ನಿಮ್ಮ ಹೆಜ್ಜೆ-ಹೆಜ್ಜೆ, ಕ್ಷಣ-ಕ್ಷಣವು ಬಹಳ ಅತ್ಯಮೂಲ್ಯವಾಗಿದೆ, ನೀವು ಪದಮಾಪತಿಗಳಾಗುತ್ತೀರಿ, 21 ಜನ್ಮಗಳಿಗಾಗಿ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅಂದಮೇಲೆ ಎಷ್ಟು ಚೆನ್ನಾಗಿ ತಿಳಿಸಬೇಕಾಗಿದೆ! ಸ್ವರ್ಗದಲ್ಲಿ ನಿಮ್ಮ ಬಳಿ ಅಪಾರ ಧನವಿರುವುದು. ಎಣಿಸುವುದಕ್ಕೇ ಸಾಧ್ಯವಿಲ್ಲ ಅಂದಮೇಲೆ ತಂದೆಯು ನಿಮ್ಮನ್ನು ಎಷ್ಟು ಧನವಂತರು ಸುಖಿಯನ್ನಾಗಿ ಮಾಡುತ್ತಾರೆ, ಎಷ್ಟು ದೊಡ್ಡ ಸಂಪಾದನೆಯಿದೆ. ಪ್ರಜೆಗಳೂ ಸಹ ಎಷ್ಟು ಸಾಹುಕಾರರಾಗುತ್ತಾರೆ. 21 ಜನ್ಮಗಳಿಗಾಗಿ ಇದು ಆದಾಯದ ಮೂಲವಾಗಿದೆ, ಇದು ಮನುಷ್ಯರಿಂದ ದೇವತೆಗಳಾಗುವ ಪಾಠಶಾಲೆಯಾಗಿದೆ, ಯಾರು ಓದಿಸುತ್ತಾರೆ? ತಂದೆ. ಅಂದಮೇಲೆ ಇಂತಹ ವಿದ್ಯೆಯಲ್ಲಿ ಹುಡುಗಾಟಿಕೆ ಮಾಡಬಾರದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ಸ್ಮೃತಿಯಿರಲಿ - ಈ ಕಲ್ಯಾಣಕಾರಿ ಯುಗದಲ್ಲಿ ಪ್ರತೀ ಮಾತಿನಲ್ಲಿ ಕಲ್ಯಾಣವಿದೆ, ನಮ್ಮದು ಅಕಲ್ಯಾಣವಾಗಲು ಸಾಧ್ಯವಿಲ್ಲ. ಪ್ರತೀ ಮಾತಿನಲ್ಲಿ ಕಲ್ಯಾಣವಿದೆ ಎಂದು ತಿಳಿದು ಸದಾ ನಿಶ್ಚಿಂತರಾಗಿರಬೇಕಾಗಿದೆ.
2. ಸದಾ ಗುಲಾಬಿಗಳಾಗಲು ವಿದ್ಯೆಯ ಮೇಲೆ ಸಂಪೂರ್ಣ ಗಮನ ಕೊಡಬೇಕಾಗಿದೆ. ವಿದ್ಯೆಯಲ್ಲಿ ಹುಡುಗಾಟಿಕೆ ಮಾಡಬಾರದು. ಎಕ್ಕದ ಹೂವಾಗಬಾರದು.
ತನು, ಮನ, ಧನ ಮತ್ತು ಜನರ ಭಾಗ್ಯ
ಇಂದು ಸತ್ಯ ಸಾಹೇಬನು ತನ್ನ ಮಕ್ಕಳನ್ನು ನೋಡುತ್ತಿದ್ದಾರೆ. ತಂದೆಗೆ ಸತ್ಯವೆಂದು ಹೇಳುತ್ತಾರೆ ಆದ್ದರಿಂದ ಬಾಪ್ದಾದಾರವರ ಮೂಲಕ ಸ್ಥಾಪನೆ ಮಾಡಲ್ಪಟ್ಟಿರುವ ಯುಗದ ಹೆಸರೇ ಆಗಿದೆ - ಸತ್ಯಯುಗ. ತಂದೆಯ ಮಹಿಮೆಯೂ ಸಹ ಸತ್ಯ ತಂದೆ, ಸತ್ಯ ಶಿಕ್ಷಕ, ಸದ್ಗುರುವೆಂದು ಹೇಳುತ್ತಾರೆ. ಸತ್ಯದ ಮಹಿಮೆಯು ಸದಾ ಶ್ರೇಷ್ಠವೇ ಆಗಿದೆ. ಸತ್ಯ ತಂದೆಯ ಮೂಲಕ ತಾವೆಲ್ಲರೂ ಸತ್ಯ ನಾರಾಯಣರಾಗಲು ಸತ್ಯ ಕಥೆಯನ್ನು ಕೇಳುತ್ತಿದ್ದೀರಿ. ಇಂತಹ ಸತ್ಯ ಸಾಹೇಬನು ತಮ್ಮ ಮಕ್ಕಳನ್ನು ನೋಡುತ್ತಿದ್ದಾರೆ. ಎಷ್ಟು ಮಂದಿ ಮಕ್ಕಳು ಸತ್ಯ ಸಾಹೇಬನನ್ನು ರಾಜಿ ಮಾಡಿಕೊಂಡಿದ್ದಾರೆ ಎಂದು. ಸತ್ಯ ಸಾಹೇಬನು ಎಲ್ಲದಕ್ಕಿಂತ ದೊಡ್ಡ ವಿಶೇಷತೆಯಾಗಿದೆ - ಅವರು ದಾತ, ವಿದಾತ, ವರದಾತನಾಗಿದ್ದಾರೆ. ರಾಜಿಯಾಗಿರುವ ಮಕ್ಕಳ ಗುರುತಾಗಿದೆ - ಸದಾ ದಾತಾ ರಾಜಿಯಾಗಿರುತ್ತಾರೆ ಆದ್ದರಿಂದ ಇಂತಹ ಆತ್ಮಗಳು ಸದಾ ತಮ್ಮನ್ನು ಜ್ಞಾನದ ಖಜಾನೆ, ಶಕ್ತಿಗಳ ಖಜಾನೆ, ಗುಣಗಳ ಖಜಾನೆ, ಎಲ್ಲಾ ಖಜಾನೆಗಳಿಂದ ತಮ್ಮನ್ನು ಸಂಪನ್ನ ಅನುಭವ ಮಾಡುತ್ತಾರೆ. ಎಂದೂ ಸಹ ತಮ್ಮನ್ನು ಖಜಾನೆಗಳಿಂದ ಖಾಲಿ ಎಂದು ತಿಳಿದುಕೊಳ್ಳುವುದಿಲ್ಲ. ಯಾವುದೇ ಗುಣ ಹಾಗೂ ಶಕ್ತಿ ಅಥವಾ ಜ್ಞಾನದ ಗುಹ್ಯ ರಹಸ್ಯದಿಂದ ವಂಚಿತರಾಗಿರುವುದಿಲ್ಲ. ಭಲೆ ಗುಣಗಳು ಹಾಗೂ ಶಕ್ತಿಗಳಲ್ಲಿ ಪರ್ಸೆಂಟೇಜ್ ಇರಬಹುದು ಆದರೆ ಯಾವುದೇ ಗುಣ ಅಥವಾ ಯಾವುದೇ ಶಕ್ತಿಯು ಆ ಆತ್ಮನಲ್ಲಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹೇಗೆ ಸಮಯ ಪ್ರಮಾಣ ಕೆಲವು ಮಕ್ಕಳು ಹೇಳುತ್ತಾರೆ - ನನ್ನಲ್ಲಿ ಅನ್ಯ ಶಕ್ತಿಗಳಂತೂ ಇವೆ ಆದರೆ ಈ ಶಕ್ತಿ ಹಾಗೂ ಈ ಗುಣವಿಲ್ಲ ಎಂದು. ‘ಇಲ್ಲ’ ಎಂಬ ಶಬ್ಧವು ನಿಷೇಧವಾಗಿರುತ್ತದೆ. ಇಂತಹ ದಾತನ ಮಕ್ಕಳು ಸದಾ ಧನವಂತರಾಗಿರುತ್ತಾರೆ ಅರ್ಥಾತ್ ಸಂಪನ್ನವಾಗಿರುತ್ತಾರೆ. ಎರಡನೇ ಮಹಿಮೆಯಾಗಿದೆ - ‘ಭಾಗ್ಯವಿದಾತ’. ಭಾಗ್ಯವಿದಾತ ಸಾಹೇಬನನ್ನು ರಾಜಿ ಮಾಡಿಕೊಂಡಿರುವ ಮಕ್ಕಳ ಗುರುತೇನೆಂದರೆ ಆ ಮಾ|| ಭಾಗ್ಯವಿದಾತ ಮಕ್ಕಳ ಮಸ್ತಕದಲ್ಲಿ ಸದಾ ಭಾಗ್ಯದ ನಕ್ಷತ್ರವು ಹೊಳೆಯುತ್ತಿರುತ್ತದೆ ಅರ್ಥಾತ್ ಅವರ ಚಹರೆಯಿಂದ ಸದಾ ಆತ್ಮಿಕ ಹೊಳಪು ಕಂಡುಬರುತ್ತದೆ. ಆ ಮೂರ್ತಿಯಿಂದ ಸದಾ ರಾಜಿಯಾಗಿರುವ ಲಕ್ಷಣಗಳು ಕಂಡು ಬರುತ್ತವೆ. ಚಹರೆಯಿಂದ ಸದಾ ಆತ್ಮಿಕ ಗುಣಗಳ ಅನುಭವವಾಗುತ್ತದೆ, ಇದಕ್ಕೆ ಮಸ್ತಕದಲ್ಲಿ ಹೊಳೆಯುತ್ತಿರುವ ಭಾಗ್ಯದ ನಕ್ಷತ್ರವೆಂದು ಹೇಳಲಾಗುತ್ತದೆ. ಪ್ರತೀ ಮಾತಿನಲ್ಲಿ ತನು, ಮನ, ಧನ, ಜನ - ನಾಲ್ಕೂ ರೂಪಗಳಿಂದ ತಮ್ಮ ಭಾಗ್ಯದ ಅನುಭವ ಮಾಡುತ್ತಾರೆ. ಇದರಲ್ಲಿ ಯಾವುದಾದರೊಂದು ಭಾಗ್ಯದ ಕೊರತೆಯ ಅನುಭವ ಮಾಡುತ್ತಾರೆಂದಲ್ಲ. ನನ್ನ ಭಾಗ್ಯದಲ್ಲಿ ಮೂರು ಮಾತುಗಳಂತೂ ಸರಿಯಾಗಿದೆ ಬಾಕಿ ಒಂದು ಮಾತಿನ ಕೊರತೆಯಿದೆ - ಈ ರೀತಿ ಅವರು ಎಂದೂ ಹೇಳುವುದಿಲ್ಲ.
ತನುವಿನ ಭಾಗ್ಯ - ತನುವಿನ ಲೆಕ್ಕಾಚಾರವು ಕೆಲವೊಮ್ಮೆ ಪ್ರಾಪ್ತಿ ಹಾಗೂ ಪುರುಷಾರ್ಥ ಮಾರ್ಗದಲ್ಲಿ ವಿಘ್ನದ ಅನುಭವವಾಗುವುದಿಲ್ಲ. ತನುವು ಎಂದೂ ಸೇವೆಯಿಂದ ವಂಚಿತರಾಗಲು ಬಿಡುವುದಿಲ್ಲ. ಕರ್ಮಭೋಗದ ಸಮಯದಲ್ಲಿಯೂ ಇಂತಹ ಭಾಗ್ಯವಂತ ಮಕ್ಕಳು ಯಾವುದಾದರೊಂದು ಪ್ರಕಾರದ ಸೇವೆಗೆ ನಿಮಿತ್ತರಾಗುತ್ತಾರೆ. ಕರ್ಮಭೋಗವನ್ನು ನಡೆಸುತ್ತಾರೆ ಆದರೆ ಕರ್ಮಭೋಗಕ್ಕೆ ವಶರಾಗಿ ಚೀರಾಡುವುದಿಲ್ಲ. ಚೀರಾಡುವುದು ಅರ್ಥಾತ್ ಪದೇ-ಪದೇ ಕರ್ಮಭೋಗದ ವರ್ಣನೆ ಮಾಡುವುದು ಹಾಗೂ ಪದೇ-ಪದೇ ಕರ್ಮ ಭೋಗದ ಕಡೆಯೇ ಬುದ್ಧಿ ಹಾಗೂ ಸಮಯವನ್ನು ತೊಡಗಿಸುತ್ತಾ ಇರುವುದು. ಚಿಕ್ಕ ಮಾತನ್ನು ದೊಡ್ಡ ವಿಸ್ತಾರ ಮಾಡುವುದಕ್ಕೆ ಚೀರಾಡುವುದು ಎಂದು ಹೇಳುತ್ತಾರೆ. ಮತ್ತು ದೊಡ್ಡ ಮಾತನ್ನೂ ಸಹ ಜ್ಞಾನದ ಸಾರದಿಂದ ಸಮಾಪ್ತಿ ಮಾಡುವುದಕ್ಕೆ ಶರೀರವನ್ನು ನಡೆಸುವುದು ಎಂದು ಹೇಳುತ್ತಾರೆ ಆದ್ದರಿಂದ ಸದಾ ಈ ಮಾತನ್ನು ನೆನಪಿಟ್ಟುಕೊಳ್ಳಿ - ಯೋಗೀ ಜೀವನಕ್ಕಾಗಿ ಭಲೆ ಚಿಕ್ಕ ಕರ್ಮ ಭೋಗ (ಕಾಯಿಲೆ) ಆಗಿರಲಿ ಅಥವಾ ದೊಡ್ಡದಾಗಿರಲಿ ಆದರೆ ಅದರ ವರ್ಣನೆ ಮಾಡಬೇಡಿ. ಕರ್ಮ ಭೋಗದ ಕಥೆಯ ವಿಸ್ತಾರ ಮಾಡಬೇಡಿ ಏಕೆಂದರೆ ವರ್ಣನೆ ಮಾಡುವುದರಲ್ಲಿಯೇ ಸಮಯ ಮತ್ತು ಶಕ್ತಿಯು ಅದರ ಕಡೆ ಇರುವ ಕಾರಣ ಆತ್ಮಾಭಿಮಾನಿಗಳಲ್ಲ, ಆರೋಗ್ಯದ ಅಭಿಮಾನಿಗಳಾಗಿ ಬಿಡುತ್ತೀರಿ. ಈ ಆರೋಗ್ಯದ ಅಭಿಮಾನವು ಆತ್ಮಿಕ ಶಕ್ತಿಯಿಂದ ನಿಧಾನ-ನಿಧಾನವಾಗಿ ನಿರ್ಬಲರನ್ನಾಗಿ ಮಾಡಿ ಬಿಡುತ್ತದೆ ಆದ್ದರಿಂದ ಎಂದಿಗೂ ಹೆಚ್ಚು ವರ್ಣನೆ ಮಾಡಬೇಡಿ. ಯೋಗಿ ಜೀವನವು ಕರ್ಮ ಭೋಗವನ್ನು ಕರ್ಮ ಯೋಗದಲ್ಲಿ ಪರಿವರ್ತನೆ ಮಾಡುವಂತದ್ದಾಗಿದೆ. ಇವು ತನುವಿನ ಭಾಗ್ಯದ ಗುರುತುಗಳಾಗಿವೆ.
ಮನಸ್ಸಿನ ಭಾಗ್ಯ - ಮನಸ್ಸು ಸದಾ ಹರ್ಷಿತವಾಗಿರುತ್ತದೆ ಏಕೆಂದರೆ ಭಾಗ್ಯದ ಪ್ರಾಪ್ತಿಯ ಗುರುತೇ ಆಗಿದೆ - ಹರ್ಷಿತವಾಗಿರುವುದು. ಯಾರು ಸಂಪನ್ನವಾಗಿರುವರೋ ಅವರು ಸದಾ ಮನಸ್ಸಿನಿಂದ ಮುಗುಳ್ನಗುತ್ತಾ ಇರುತ್ತಾರೆ. ಮನದ ಭಾಗ್ಯವಂತರು ಸದಾ ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯನ್ನು ಹೊಂದಿರುತ್ತಾರೆ. ಭಾಗ್ಯವಿದಾತನನ್ನು ರಾಜಿ ಮಾಡಿಕೊಂಡಿರುವ ಕಾರಣ ಸರ್ವಪ್ರಾಪ್ತಿ ಸಂಪನ್ನ ಅನುಭವ ಮಾಡುವ ಕಾರಣ ಮನಸ್ಸಿನ ಸೆಳೆತ ಹಾಗೂ ಬಾಗುವಿಕೆಯು ವ್ಯಕ್ತಿ ಹಾಗೂ ವಸ್ತುವಿನ ಕಡೆ ಇರುವುದಿಲ್ಲ. ಇದಕ್ಕೇ ಸಾರ ರೂಪದಲ್ಲಿ “ಮನ್ಮನಾಭವ” ಎಂದು ಹೇಳುತ್ತೀರಿ. ಮನಸ್ಸನ್ನು ತಂದೆಯ ಕಡೆ ತೊಡಗಿಸುವುದರಲ್ಲಿ ಪರಿಶ್ರಮವಾಗುವುದಿಲ್ಲ ಆದರೆ ಸಹಜವಾಗಿ ಮನಸ್ಸು ತಂದೆಯ ಪ್ರೀತಿಯ ಸಂಸಾರದಲ್ಲಿರುತ್ತದೆ. ಒಬ್ಬ ತಂದೆಯ ವಿನಃ ಮತ್ತ್ಯಾರೂ ಇಲ್ಲ - ಇದೇ ಅನುಭೂತಿಗೆ ಮನದ ಬಾಗಿಲು ಎಂದು ಹೇಳುತ್ತಾರೆ.
ಧನದ ಭಾಗ್ಯ – ಜ್ಞಾನ ಧನವಂತೂ ಇದ್ದೇ ಇದೆ ಆದರೆ ಸ್ಥೂಲ ಧನಕ್ಕೂ ಮಹತ್ವಿಕೆಯಿದೆ. ಧನದ ಭಾಗ್ಯದ ಅರ್ಥವು ಬ್ರಾಹ್ಮಣ ಜೀವನದಲ್ಲಿ ಲಕ್ಷಾಧೀಶ್ವರರು, ಕೋಟ್ಯಾಧೀಶ್ವರ ಆಗುವುದಲ್ಲ ಆದರೆ ಧನದ ಭಾಗ್ಯದ ಗುರುತೇನೆಂದರೆ ಸಂಗಮಯುಗದಲ್ಲಿ ತಾವು ಬ್ರಾಹ್ಮಣ ಆತ್ಮರಿಗೆ ತಿನ್ನಲು, ಕುಡಿಯಲು ಮತ್ತು ಆರಾಮವಾಗಿರಲು ಎಷ್ಟು ಅವಶ್ಯಕತೆಯಿದೆಯೋ ಅಷ್ಟು ಆರಾಮದಿಂದ ಸಿಗುವುದು ಮತ್ತು ಜೊತೆ ಜೊತೆಗೆ ಸೇವೆಗಾಗಿಯೂ ಧನ ಬೇಕು. ಆದ್ದರಿಂದ ಸೇವೆ ಮಾಡುವುದಕ್ಕೂ ಸಹ ಎಂದೂ ಸಮಯದಲ್ಲಿ ಕೊರತೆ ಅಥವಾ ಕಠಿಣ ಪರಿಸ್ಥಿತಿಯ ಅನುಭವ ಮಾಡುವುದಿಲ್ಲ. ಹೇಗಾದರೂ ಎಲ್ಲಿಂದಲಾದರೂ ಸೇವೆಯ ಸಮಯದಲ್ಲಿ ಭಾಗ್ಯವಿದಾತ ತಂದೆಯು ಯಾರನ್ನಾದರೂ ನಿಮಿತ್ತ ಮಾಡಿಯೇ ಮಾಡುತ್ತಾರೆ. ಧನದ ಭಾಗ್ಯವಂತರು ಎಂದಿಗೂ ಸಹ ತನ್ನ ‘ನಾಮ’, ‘ನಾಮದ ಅಥವಾ ಸ್ಥಾನದ’ ಇಚ್ಛೆಯ ಕಾರಣ ಸೇವೆ ಮಾಡುವುದಿಲ್ಲ. ಒಂದುವೇಳೆ ಹೆಸರು ಮತ್ತು ಸ್ಥಾನದ ಇಚ್ಛೆಯಿದ್ದರೆ ಅಂತಹ ಸಮಯದಲ್ಲಿ ಭಾಗ್ಯವಿದಾತನು ಸಹಯೋಗ ಕೊಡಿಸುವುದಿಲ್ಲ. ಅವಶ್ಯಕತೆ ಮತ್ತು ಇಚ್ಛೆಯಲ್ಲಿ ರಾತ್ರಿ-ಹಗಲಿನ ಅಂತರವಿದೆ. ಸತ್ಯವಾಗಿ ಅವಶ್ಯಕತೆಯಿದೆ ಮತ್ತು ಸತ್ಯ ಮನಸ್ಸಿದ್ದಾಗ ಯಾವುದೇ ಸೇವಾ ಕಾರ್ಯದಲ್ಲಿ ಕಾರ್ಯವಂತೂ ಸಫಲವಾಗಿಯೇ ಆಗುತ್ತದೆ ಆದರೆ ಭಂಡಾರದಲ್ಲಿ ಇನ್ನೂ ಸಂಪನ್ನವಾಗುತ್ತದೆ, ಉಳಿಯುತ್ತದೆ. ಆದ್ದರಿಂದ “ಶಿವನ ಭಂಡಾರ ಮತ್ತು ಭಂಡಾರಿ ಸದಾ ಭರ್ಪೂರ್” ಎಂದು ಗಾಯನವಿದೆ. ಅಂದಾಗ ಸತ್ಯ ಹೃದಯದವರ ಮತ್ತು ಸತ್ಯ ಸಾಹೇಬನಿಗೆ ರಾಜಿಯಾಗಿರುವವರ ಚಿಹ್ನೆಯಾಗಿದೆ - ಭಂಡಾರವೂ ಸಂಪನ್ನ, ಭಂಡಾರಿಯೂ ಸಂಪನ್ನ. ಇದು ಧನದ ಭಾಗ್ಯದ ಚಿಹ್ನೆಯಾಗಿದೆ. ವಿಸ್ತಾರವಂತೂ ಬಹಳಷ್ಟಿದೆ ಆದರೆ ಸಾರದಲ್ಲಿ ತಿಳಿಸುತ್ತಿದ್ದೇವೆ.
ನಾಲ್ಕನೆಯ ಮಾತು - ಜನರ ಭಾಗ್ಯ. ಜನ ಅರ್ಥಾತ್ ಬ್ರಾಹ್ಮಣ ಪರಿವಾರ ಹಾಗೂ ಲೌಕಿಕ ಪರಿವಾರ, ಲೌಕಿಕ ಸಂಬಂಧದಲ್ಲಿ ಬರುವಂತಹ ಆತ್ಮಗಳು ಹಾಗೂ ಅಲೌಕಿಕ ಸಂಬಂಧದಲ್ಲಿ ಬರುವಂತಹ ಆತ್ಮಗಳು. ಅಂದಾಗ ಜನರ ಮೂಲಕ ಭಾಗ್ಯವಂತ ಆತ್ಮಗಳ ಮೊದಲ ಚಿಹ್ನೆಯಾಗಿದೆ - ಜನರ ಭಾಗ್ಯವಂತ ಆತ್ಮನಿಗೆ ಜನರ ಮೂಲಕ ಸದಾ ಸ್ನೇಹ ಹಾಗೂ ಸಹಯೋಗದ ಪ್ರಾಪ್ತಿಯಾಗುತ್ತಾ ಇರುವುದು. ಕೊನೆಪಕ್ಷ 95% ಆತ್ಮಗಳಿಂದ ಪ್ರಾಪ್ತಿಯ ಅನುಭವವು ಅವಶ್ಯವಾಗಿ ಆಗುವುದು. ಮೊದಲೂ ಸಹ ತಿಳಿಸಿದ್ದೆವು - 5% ಆತ್ಮಗಳ ಲೆಕ್ಕಾಚಾರವೂ ಮುಗಿಸಬೇಕಾಗುತ್ತದೆ ಆದ್ದರಿಂದ ಅವರ ಮೂಲಕ ಕೆಲವೊಮ್ಮೆ ಸ್ನೇಹ ಸಿಗುತ್ತದೆ, ಕೆಲವೊಮ್ಮೆ ಪರೀಕ್ಷೆಗಳೂ ಬರುತ್ತವೆ ಆದರೆ 5%ಗಿಂತ ಹೆಚ್ಚಾಗಬಾರದು. ಇಂತಹ ಆತ್ಮಗಳೊಂದಿಗೂ ನಿಧಾನ-ನಿಧಾನವಾಗಿ ಶುಭ ಭಾವನೆ-ಶುಭ ಕಾಮನೆಯ ಮೂಲಕ ಆ ಲೆಕ್ಕಾಚಾರವನ್ನು ಮುಗಿಸಿಕೊಳ್ಳುತ್ತಾ ಇರಿ. ಯಾವಾಗ ಲೆಕ್ಕವು ಮುಗಿಯುವುದೋ ಆಗ ಲೆಕ್ಕಾಚಾರವು ಸಮಾಪ್ತಿ ಆಗುವುದು ನಂತರ ಆ ಲೆಕ್ಕಾಚಾರವೇ ಇರುವುದಿಲ್ಲ ಅಂದಾಗ ಭಾಗ್ಯಶಾಲಿ ಆತ್ಮನ ಚಿಹ್ನೆಯಾಗಿದೆ - ಜನರೊಂದಿಗೆ ಉಳಿದುಕೊಂಡಿರುವ ಲೆಕ್ಕಾಚಾರವನ್ನು ಸಹಜವಾಗಿ ತೀರಿಸುತ್ತಾ ಇರುವುದು ಮತ್ತು 95% ಆತ್ಮಗಳ ಮೂಲಕ ಸದಾ ಸ್ನೇಹ ಮತ್ತು ಸಹಯೋಗದ ಅನುಭೂತಿ ಮಾಡುವುದು. ಜನರ ಭಾಗ್ಯವಿರುವ ಆತ್ಮಗಳೇ ಜನರ ಸಂಬಂಧ-ಸಂಪರ್ಕದಲ್ಲಿ ಬರುತ್ತಾ ಸದಾ ಪ್ರಸನ್ನರಾಗಿರುತ್ತಾರೆ. ಪ್ರಶ್ನಚಿತ್ತರಲ್ಲ ಆದರೆ ಪ್ರಸನ್ನಚಿತ್ತರಾಗಿರುತ್ತಾರೆ. ಇವರು ಹೀಗೇಕೆ ಮಾಡುತ್ತಾರೆ, ಹೀಗೇಕೆ ಹೇಳುತ್ತಾರೆ - ಈ ಮಾತು ಈ ರೀತಿಯಲ್ಲ, ಈ ರೀತಿಯಿರಬೇಕು ಹೀಗೆ ಚಿತ್ತದಲ್ಲಿ ಈ ಪ್ರಶ್ನೆಗಳು ಉತ್ಪನ್ನವಾಗಿರುವವರಿಗೆ ಪ್ರಶ್ನಚಿತ್ತರೆಂದು ಹೇಳಲಾಗುತ್ತದೆ ಮತ್ತು ಪ್ರಶ್ನಚಿತ್ತರೆಂದೂ ಪ್ರಸನ್ನಚಿತ್ತರಾಗಿರಲು ಸಾಧ್ಯವಿಲ್ಲ. ಅವರ ಚಿತ್ತದಲ್ಲಿ ಸದಾ ‘ಕ್ಯು’ (ಏಕೆ) ಎಂಬ ‘ಕ್ಯೂ’ ನಿಂತಿರುತ್ತದೆ ಆದ್ದರಿಂದ ಆ ಕ್ಯೂ ಸಮಾಪ್ತಿ ಮಾಡುವುದರಲ್ಲಿಯೇ ಸಮಯವೂ ಹೊರಟು ಹೋಗುತ್ತದೆ ಮತ್ತು ಈ ಕ್ಯು ಈ ರೀತಿಯಾಗುತ್ತದೆ ತಾವು ಬಿಡಬೇಕೆಂದರೂ ಸಹ ಬಿಡಲು ಸಾಧ್ಯವಾಗುವುದಿಲ್ಲ. ಅದರಲ್ಲಿ ಸಮಯವನ್ನು ಕೊಡಲೇಬೇಕಾಗುತ್ತದೆ ಏಕೆಂದರೆ ಈ ಕ್ಯು ನ ರಚಯಿತರು ತಾವಾಗಿದ್ದೀರಿ. ಯಾವಾಗ ರಚನೆಯನ್ನು ರಚಿಸಿದಿರೆಂದರೆ ಅದರ ಪಾಲನೆ ಮಾಡಲೇಬೇಕಾಗುವುದು. ಪಾಲನೆ ಮಾಡುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಭಲೆ ಎಷ್ಟಾದರೂ ದೂರ ಸರಿಯಿರಿ ಆದರೆ ಸಮಯ, ಶಕ್ತಿಗಳನ್ನು ಖರ್ಚು ಮಾಡಲೇಬೇಕಾಗುವುದು, ಆದ್ದರಿಂದ ಈ ವ್ಯರ್ಥ ರಚನೆಯನ್ನು ನಿಯಂತ್ರಣ ಮಾಡಿ. ಈ ಸಂತಾನ ನಿಯಂತ್ರಣ ಮಾಡಿ. ತಿಳಿಯಿತೆ - ಧೈರ್ಯವಿದೆಯೇ? ಹೇಗೆ ಮನುಷ್ಯರು ಇದು ಈಶ್ವರನ ಕೊಡುಗೆಯಾಗಿದೆ, ನಮ್ಮ ತಪ್ಪೇನಿದೆ ಎಂದು ಹೇಳಿ ಬಿಡುತ್ತಾರೆ ಹಾಗೆಯೇ ಬ್ರಾಹ್ಮಣರೂ ಸಹ ಇದು ಡ್ರಾಮಾದಲ್ಲಿದೆ, ಏನು ಮಾಡುವುದು ಎಂದು ಹೇಳಿ ಬಿಡುತ್ತೀರಿ ಆದರೆ ಡ್ರಾಮಾದ ಮಾ|| ರಚಯಿತ, ಮಾ|| ಜ್ಞಾನಪೂರ್ಣರಾಗಿ, ಪ್ರತೀ ಕರ್ಮವನ್ನು ಶ್ರೇಷ್ಠ ಮಾಡಿಕೊಳ್ಳುತ್ತಾ ಹೋಗಿ. ಒಳ್ಳೆಯದು.
ಟೀಚರ್ಸ್ ಕೇಳಿದಿರಾ! ಸತ್ಯ ಸಾಹೇಬನು ನನ್ನ ಮೇಲೆ ಎಷ್ಟು ರಾಜಿಯಾಗಿದ್ದಾರೆ, ಇದರ ರಹಸ್ಯವನ್ನು ಕೇಳಿದಿರಲ್ಲವೆ. ರಹಸ್ಯವನ್ನು ಕೇಳುವುದರಿಂದ ಎಲ್ಲಾ ಟೀಚರ್ಸ್ ರಹಸ್ಯಯುಕ್ತರಾದಿರಿ ಮತ್ತು ಮನಸ್ಸಿನಲ್ಲಿಯೂ ಬರುತ್ತದೆ - ಈ ಭಾಗ್ಯವು ನನ್ನಲ್ಲಿ ಕಡಿಮೆಯಿದೆಯೇ? ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿಯಲ್ಲಿ, ಕೆಲವೊಮ್ಮೆ ಜನರ ಪರಿಸ್ಥಿತಿಯಲ್ಲಿ - ಇಂತಹ ಜೀವನದ ಅನುಭವವಂತೂ ಮಾಡುತ್ತಿಲ್ಲ ತಾನೇ. ವಿಶೇಷ ನಿಮಿತ್ತ ಶಿಕ್ಷಕಿಯರ ಪ್ರತಿ ಒಂದೇ ಸ್ಲೋಗನ್ ತಿಳಿಸಿದ್ದೆವು ಆದರೆ ಇದು ಎಲ್ಲರ ಪ್ರತಿಯೂ ಆಗಿದೆ. ಪ್ರತಿಯೊಂದು ಮಾತಿನಲ್ಲಿ ತಂದೆಯ ಶ್ರೀಮತದ ಪ್ರಮಾಣ “ಜೀ ಹಜೂರ್, ಜೀ ಹಜೂರ್” (ಆಯಿತು ಪ್ರಭು) ಎನ್ನುತ್ತಾ ಇರಿ. ಮಕ್ಕಳು “ಜೀ ಹಜೂರ್” ಎಂದರೆ ಸಾಕು. ತಂದೆಯು ಮಕ್ಕಳ ಮುಂದೆ “ಹಾಜಿರ್ ಹಜೂರ್” (ಪ್ರಭು ಪ್ರತ್ಯಕ್ಷವಾಗುವರು) ಆಗುವರು. ಯಾವಾಗ ಪ್ರಭು ಪ್ರತ್ಯಕ್ಷವಾಗಿ ಬಿಟ್ಟರೆಂದರೆ ಯಾವುದೇ ಮಾತಿನ ಕೊರತೆಯಿರುವುದಿಲ್ಲ, ಸದಾ ಸಂಪನ್ನರಾಗಿ ಬಿಡುತ್ತೀರಿ. ದಾತ ಮತ್ತು ಭಾಗ್ಯವಿದಾತ ಎರಡರ ಪ್ರಾಪ್ತಿಗಳ ಭಾಗ್ಯದ ನಕ್ಷತ್ರವು ಮಸ್ತಕದ ಮಧ್ಯದಲ್ಲಿ ಹೊಳೆಯ ತೊಡಗುವುದು. ಶಿಕ್ಷಕಿಯರಿಗಂತೂ ಡ್ರಾಮಾನುಸಾರ ಬಹಳ ಭಾಗ್ಯವು ಸಿಕ್ಕಿದೆ. ಇಡೀ ದಿನ ತಂದೆ ಮತ್ತು ಭಾಗ್ಯವನ್ನು ಬಿಟ್ಟರೆ ಅನ್ಯ ಕೆಲಸವಾದರೂ ಏನು! ನಿಮ್ಮ ಉದ್ಯೋಗವೇ ಇದಾಗಿದೆ - ಪ್ರವೃತ್ತಿ ಮಾರ್ಗದವರಾದರೆ ಎಷ್ಟೊಂದು ನಿಭಾಯಿಸಬೇಕಾಗುತ್ತದೆ. ತಮ್ಮೆಲ್ಲರಿಗಂತೂ ಒಂದೇ ಕೆಲಸವಿದೆ, ಕೆಲವು ಮಾತುಗಳಿಂದ ಸ್ವತಂತ್ರ ಪಕ್ಷಿಗಳಾಗಿದ್ದೀರಿ, ತಮ್ಮ ಭಾಗ್ಯವನ್ನು ತಿಳಿದುಕೊಂಡಿದ್ದೀರಾ? ಯಾವುದೇ ಚಿನ್ನದ ಪಂಜರ, ವಜ್ರದ ಪಂಜರವಂತೂ ರೂಪಿಸಿಕೊಳ್ಳುವುದಿಲ್ಲ ತಾನೆ. ತಾವೇ ರೂಪಿಸಿಕೊಳ್ಳುತ್ತಾರೆ, ತಾವೇ ಅದರಲ್ಲಿ ಸಿಲುಕುತ್ತಾರೆ. ತಂದೆಯಂತೂ ಸ್ವತಂತ್ರ ಪಕ್ಷಿಗಳನ್ನಾಗಿ ಮಾಡಿದರು, ಹಾರುವ ಪಕ್ಷಿಗಳನ್ನಾಗಿ ಮಾಡಿದರು. ಬಹಳ-ಬಹಳ-ಬಹಳ ಅದೃಷ್ಟವಂತರು. ತಿಳಿಯಿತೇ? ಪ್ರತಿಯೊಬ್ಬರಿಗೂ ವಿಶೇಷತೆಯು ಅವಶ್ಯವಾಗಿ ಸಿಕ್ಕಿದೆ. ಪ್ರವೃತ್ತಿ ಮಾರ್ಗದ ವಿಶೇಷತೆಯು ತಮ್ಮದೇ ಆಗಿದೆ, ಟೀಚರ್ಸ್ನ ವಿಶೇಷತೆಯೇ ತಮ್ಮದಾಗಿದೆ, ಗೀತಾ ಪಾಠಶಾಲೆಯ ವಿಶೇಷತೆಯೇ ತಮ್ಮದು ಭಿನ್ನ-ಭಿನ್ನ ವಿಶೇಷತೆಗಳಿಂದ ಎಲ್ಲರೂ ವಿಶೇಷ ಆತ್ಮಗಳಾಗಿದ್ದೀರಿ ಆದರೆ ಸೇವಾಕೇಂದ್ರದಲ್ಲಿ ಇರುವಂತಹ ನಿಮಿತ್ತ ಟೀಚರ್ಸ್ಗೆ ಬಹಳ ಅವಕಾಶವಿದೆ. ಒಳ್ಳೆಯದು.
ಸದಾ ಸರ್ವ ಪ್ರಕಾರದ ಭಾಗ್ಯವನ್ನು ಅನುಭವ ಮಾಡುವಂತಹ ಅನುಭವೀ ಆತ್ಮಗಳಿಗೆ, ಸದಾ ಪ್ರತೀ ಹೆಜ್ಜೆಯಲ್ಲಿ “ಜೀ ಹಜೂರ್” ಮಾಡುವಂತಹ ತಂದೆಯ ಸಹಯೋಗದ ಅಧಿಕಾರಿ ಶ್ರೇಷ್ಠ ಆತ್ಮಗಳಿಗೆ, ಸದಾ ಪ್ರಶ್ನಚಿತ್ತಕ್ಕೆ ಬದಲಾಗಿ ಪ್ರಸನ್ನ ಚಿತ್ತರಾಗಿರುವಂತಹ - ಇಂತಹ ಪ್ರಶಂಸೆಗೆ ಯೋಗ್ಯ, ಯೋಗಿ ಆತ್ಮಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ಪಂಜಾಬ್, ಹರಿಯಾಣ, ಹಿಮಾಚಲ್ ಗ್ರೂಪ್:
ಎಲ್ಲರೂ ತಮ್ಮನ್ನು ಮಹಾವೀರ ಮತ್ತು ಮಹಾವೀರಿಣಿಯರೆಂದು ತಿಳಿಯುವಿರಾ? ಮಹಾವೀರರಂತು ಆಗಿದ್ದೀರಿ ಆದರೆ ಸದಾಕಾಲವೂ ಮಹಾವೀರರಾಗಿ ಇರುತ್ತೀರಾ? ಅಥವಾ ಕೆಲವೊಮ್ಮೆ ಮಹಾವೀರರು, ಕೆಲವೊಮ್ಮೆ ಸ್ವಲ್ಪ ಬಲಹೀನರಾಗುತ್ತೀರಾ? ಸದಾಕಾಲವೂ ಮಹಾವೀರರೆಂದರೆ ಸದಾ ಲೈಟ್ಹೌಸ್ ಮತ್ತು ಮೈಟ್ಹೌಸ್ ಆಗಿರುವುದು. ಜ್ಞಾನವು ಲೈಟ್ ಆಗಿದೆ ಮತ್ತು ಯೋಗವು ಮೈಟ್ ಆಗಿದೆ ಅಂದಾಗ ಮಹಾವೀರರೆಂದರೆ ಜ್ಞಾನಿ ಆತ್ಮನೂ ಆಗಿರುವರು ಮತ್ತು ಯೋಗಿ ಆತ್ಮನೂ ಆಗಿರುವರು. ಜ್ಞಾನ ಮತ್ತು ಯೋಗ - ಇವೆರಡೂ ಶಕ್ತಿಗಳು ಅಂದರೆ ಲೈಟ್ ಹಾಗೂ ಮೈಟ್ನಿಂದ ಸಂಪನ್ನವಾಗಿರುವುದು, ಇಂತಹವರಿಗೇ `ಮಹಾವೀರ'ನೆಂದು ಹೇಳಲಾಗುತ್ತದೆ. ಯಾವುದೇ ಪರಿಸ್ಥಿತಿಯಲ್ಲಿಯೂ ಸಹ ಜ್ಞಾನದ ಲೈಟ್ನ ಕೊರತೆಯಿರಬಾರದು ಮತ್ತು ಮೈಟ್ ಅಂದರೆ ಯೋಗದ ಕೊರತೆಯೂ ಆಗಬಾರದು. ಇದರಲ್ಲಿ ಏನಾದರೂ ಒಂದು ಕೊರತೆಯಾದರೂ ಪರಿಸ್ಥಿತಿಯ ಸಮಯದಲ್ಲಿ ಸೆಕೆಂಡಿನಲ್ಲಿ ಪಾರಾಗಲು ಸಾಧ್ಯವಿಲ್ಲ, ಸಮಯವು ಹೊರಟು ಹೋಗುತ್ತದೆ. ಇದರಿಂದ ಪಾಸ್ ಆಗುತ್ತೀರಿ ಆದರೆ ಸಮಯದಲ್ಲಿ ಪಾಸ್ ಆಗದಿದ್ದರೆ ಅನುತ್ತೀರ್ಣರೇ ಆಗುವಿರಿ, ನಂತರ ಇನ್ನೊಂದು ವರ್ಷ ಓದಬೇಕಾಗುತ್ತದೆ, ವರ್ಷದ ನಂತರ ಉತ್ತೀರ್ಣರಾಗುತ್ತೀರಿ ಅಂದರೆ ಸಮಯವು ಹೋಯಿತಲ್ಲವೆ! ಹಾಗೆಯೇ ಯಾರು ಜ್ಞಾನಿ ಮತ್ತು ಯೋಗಿ ಆತ್ಮರಿದ್ದಾರೆಯೋ ಅವರು ಇವೆರಡರ (ಲೈಟ್ ಮತ್ತು ಮೈಟ್) ಸ್ವರೂಪರಾಗಿಲ್ಲ, ಅದರಿಂದಲೂ ಪರಿಸ್ಥಿತಿಗಳಲ್ಲಿ ಉತ್ತೀರ್ಣರಾಗುವುದರಲ್ಲಿ ಸಮಯವನ್ನು ತೆಗೆದುಕೊಳ್ಳುತ್ತದೆ. ಒಂದುವೇಳೆ ಸಮಯದಲ್ಲಿ ಪಾಸ್ ಆಗದಿರುವ ಸಂಸ್ಕಾರವಾಯಿತೆಂದರೆ, ಅಂತಿಮ ಪರೀಕ್ಷೆಯಲ್ಲಿಯೂ ಅದೇ ಸಂಸ್ಕಾರವು ಫುಲ್ಪಾಸ್ ಆಗಲು ಬಿಡುವುದಿಲ್ಲ. ಅಂದಾಗ ಪಾಸ್ ಆಗುವವರಂತು ಇದ್ದೀರಿ ಆದರೆ ಸಮಯದಲ್ಲಿ ಪಾಸ್ ಆಗುವವರಲ್ಲ. ಯಾರು ಸದಾ ಸಮಯದಲ್ಲಿ ಫುಲ್ಪಾಸ್ ಆಗುವರು, ಅವರಿಗೆ ಪಾಸ್-ವಿತ್-ಆನರ್ ಎಂದು ಹೇಳಲಾಗುತ್ತದೆ. ಅಂದರೆ ಧರ್ಮರಾಜನೂ ಸಹ ಅವರಿಗೆ ಗೌರವ ಕೊಡುವರು. ಧರ್ಮರಾಜ ಪುರಿಯಲ್ಲಿಯೂ ಶಿಕ್ಷೆಯಾಗುವುದಿಲ್ಲ, ಗೌರವ ಸಿಗುತ್ತದೆ, ಇವರು ಪಾಸ್-ವಿತ್-ಆನರ್ ಎಂಬ ಗಾಯನವೂ ಆಗುತ್ತದೆ.
ಅಂದಮೇಲೆ ಪಾಸ್-ವಿತ್-ಆನರ್ ಆಗುವುದಕ್ಕಾಗಿ ವಿಶೇಷವಾಗಿ ತಮ್ಮನ್ನು ಯಾವುದೇ ಮಾತಿನಲ್ಲಿ, ಯಾವುದೇ ಸಂಸ್ಕಾರದಲ್ಲಾದರೂ, ಸ್ವಭಾವ, ಗುಣಗಳಲ್ಲಿಯೂ, ಶಕ್ತಿಗಳಲ್ಲಿಯೂ ಕೊರತೆಯಾಗಿ ಇಟ್ಟುಕೊಳ್ಳಬಾರದು. ಎಲ್ಲಾ ಮಾತುಗಳಲ್ಲಿ ಸಂಪೂರ್ಣರಾಗಬೇಕು ಅರ್ಥಾತ್ ಪಾಸ್-ವಿತ್-ಆನರ್ ಆಗುವುದಾಗಿದೆ. ಹಾಗಾದರೆ ಎಲ್ಲರೂ ಈ ರೀತಿ ಆಗಿದ್ದೀರಾ ಅಥವಾ ಆಗುತ್ತಿದ್ದೀರಾ? (ಆಗುತ್ತಿದ್ದೇವೆ) ಆದ್ದರಿಂದಲೇ ವಿನಾಶವು ನಿಂತಿದೆ. ತಾವೇ ತಡೆದಿಟ್ಟಿದ್ದೀರಿ. ವಿಶ್ವದ ವಿನಾಶ ಅರ್ಥಾತ್ ಪರಿವರ್ತನೆ, ಇದರಲ್ಲಿ ಮೊದಲು ಬ್ರಾಹ್ಮಣರ ಕೊರತೆಗಳ ವಿನಾಶವಾಗಬೇಕು. ಒಂದುವೇಳೆ ಬ್ರಾಹ್ಮಣರಲ್ಲಿನ ಕೊರತೆಗಳು ವಿನಾಶವಾಗದಿದ್ದರೆ ವಿಶ್ವದ ವಿನಾಶ ಅಂದರೆ ಪರಿವರ್ತನೆಯು ಹೇಗಾಗುತ್ತದೆ! ಅಂದರೆ ಪರಿವರ್ತನೆಯ ಆಧಾರಮೂರ್ತಿಗಳು ತಾವು ಬ್ರಾಹ್ಮಣರಾಗಿದ್ದೀರಿ.
ಪಂಜಾಬ್, ಹರಿಯಾಣ, ಹಿಮಾಚಲ್ ಪ್ರದೇಶದವರಂತು ಮೊದಲೇ ತಯಾರಾಗಿರಬೇಕು. ತಾವು ಅಂತ್ಯವನ್ನು ತರುವವರು ತಯಾರಾಗಿಲ್ಲ, ಆದ್ದರಿಂದ ಭಯೋತ್ಪಾದಕರು ತಯಾರಾಗಿದ್ದಾರೆ. ಹಾಗಾದರೆ ಎಲ್ಲರೂ ಮೊದಲ ನಂಬರ್ ತೆಗೆದುಕೊಳ್ಳುವವರೇ ಅಥವಾ ಏನು ಸಿಗುತ್ತದೆಯೋ ಅದರಲ್ಲಿಯೇ ಖುಷಿಯಾಗಿ ಇರುವಿರಾ? ಅನೇಕರಿಗಿಂತಲೂ ಚೆನ್ನಾಗಿಯೇ ಇದೆ ಎಂದು ಯೋಚಿಸುತ್ತಿರಲ್ಲವೇ? ಬಹಳ ಚೆನ್ನಾಗಿಯೇ ಇದೆ ಆದರೆ ಒಳ್ಳೆಯದಕ್ಕಿಂತಲೂ ಒಳ್ಳೆಯದಾಗಿ ಇರಬೇಕು. ಕೋಟಿಯಲ್ಲಿ ಕೆಲವರಾಗಿ ಬಿಟ್ಟಿರಿ - ಇದೇನೂ ದೊಡ್ಡ ಮಾತಲ್ಲ ಆದರೆ ಕೋಟಿಯಲ್ಲಿಯೂ ಕೆಲವರಾಗಿರಬೇಕು ಆದ್ದರಿಂದ ಸದಾ ಎವರೆಡಿ ಆಗಿರಬೇಕು. ಅಂತ್ಯದಲ್ಲಿ ರೆಡಿ ಆಗುವುದಲ್ಲ, ಈಗಲೇ ಎವರೆಡಿ ಅಂದರೆ ಸದಾ ರೆಡಿಯಾಗಿ ಇರುವುದು. ಒಂದುವೇಳೆ ರೆಡಿ ಆಗುತ್ತಿದ್ದೇವೆ ಎಂದು ಹೇಳುತ್ತೀರೆಂದರೆ ಪುರುಷಾರ್ಥವು ತೀವ್ರಗೊಳ್ಳುವುದಿಲ್ಲ.
ಬಾಪ್ದಾದಾರವರು ಪಂಜಾಬ್ ಜೋನಿನವರನ್ನು ಸದಾ ಮುಂದಿಡುತ್ತಾರೆ ಆದ್ದರಿಂದ ಎವರೆಡಿ ಆಗಿರಬೇಕು. ತಂದೆಯ ದೃಷ್ಟಿಯೂ ಸಹ ಮೊದಲು ಪಂಜಾಬ್ನವರ ಮೇಲೆ ಹೋಯಿತಲ್ಲವೆ. ಹಾಗಾದರೆ ತಂದೆಯ ಮೊದಲ ದೃಷ್ಟಿಯು ತಮ್ಮ ಮೇಲೆ ಇದೆಯೆಂದರೆ, ಬರಬೇಕಾಗಿರುವುದೂ ಸಹ ಮೊದಲ ನಂಬರಿನಲ್ಲಿ. ಆಧಾರ ಮೂರ್ತಿ ಆಗಿದ್ದೀರಿ ಅಂದಾಗ ಆಧಾರವು (ಫೌಂಡೇಷನ್) ಸದಾ ಪರಿಪಕ್ವವಾಗಿ ಇರುತ್ತದೆ, ಒಂದುವೇಳೆ ಕಚ್ಚಾ ಆಯಿತೆಂದರೆ ಇಡೀ ಕಟ್ಟಡವೇ ಕಚ್ಚಾ ಆಗಿ ಬಿಡುತ್ತದೆ. ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಪಾಸ್-ವಿತ್-ಆನರ್ ಆಗುವವರು - ಈ ವರದಾನವನ್ನೇ ಸದಾ ನೆನಪಿಟ್ಟುಕೊಳ್ಳಿರಿ. ಇದರ ವಿಧಿಯೇನೆಂದರೆ ಎವರೆಡಿ ಆಗಿರುವುದು. ಒಳ್ಳೆಯದು.
ಬಹಳ ದೊಡ್ಡ ಜೋನಂತು ಮಧುಬನವೇ ಆಗಿದೆ. ಎಲ್ಲಾ ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರ ಸತ್ಯ ಮನೆಯು ಮಧುಬನವೇ ಆಗಿದೆಯಲ್ಲವೆ. ಆತ್ಮರ ಮನೆಯು ಪರಮಧಾಮ ಆಗಿದೆ ಆದರೆ ಬ್ರಾಹ್ಮಣರ ಮನೆಯು ಮಧುಬನ ಆಗಿದೆ ಅಂದಮೇಲೆ ಅಮೃತಸರ ಅಥವಾ ಲುಧಿಯಾನದವರಲ್ಲ, ಪಂಜಾಬ್ ಅಥವಾ ಹರಿಯಾಣದವರಲ್ಲ ಆದರೆ ತಮ್ಮ ಸ್ಥಿರವಾದ ವಿಳಾಸ ಮಧುಬನವಾಗಿದೆ. ಬಾಕಿ ಎಲ್ಲವೂ ಸೇವಾ ಸ್ಥಾನಗಳಾಗಿವೆ, ಭಲೆ ಪ್ರವೃತ್ತಿಯಲ್ಲಿಯೇ ಇರಬಹುದು, ಅದೂ ಸೇವಾ ಸ್ಥಾನವಾಗಿದೆ ಮನೆಯಲ್ಲ. ಮಧುರ ಮನೆಯು ಮಧುಬನವಾಗಿದೆ - ಈ ರೀತಿ ತಿಳಿಯುವಿರಲ್ಲವೆ! ಅಥವಾ ಆ ಮನೆಯೇ ನೆನಪಿಗೆ ಬರುತ್ತದೆಯೇ? ಒಳ್ಳೆಯದು.
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು, ಆತ್ಮಿಕ ಮಕ್ಕಳು ಬಂದು ಬ್ರಾಹ್ಮಣರಾಗಿ ಆತ್ಮಿಕ ತಂದೆಯಿಂದ ಇದನ್ನು ಅವಶ್ಯವಾಗಿ ತಿಳಿದುಕೊಂಡಿದ್ದೀರಿ - ನಾವು ಸಂಗಮಯುಗೀ ಬ್ರಾಹ್ಮಣರಾಗಿದ್ದೇವೆ, ತಂದೆಯು ನಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ. ಈಗ ನಾವು ತಿಳಿದುಕೊಂಡಿದ್ದೇವೆ - ಇದು ಸಂಗಮಯುಗವಾಗಿದೆ, ಮನುಷ್ಯರು ಯಾರೆಲ್ಲಾ ಪತಿತ ಭ್ರಷ್ಟಾಚಾರಿ ಆಗಿದ್ದಾರೆಯೋ ಅವರು ಮತ್ತೆ ಪಾವನರಾಗಿ ಭವಿಷ್ಯದಲ್ಲಿ ಪಾವನ ಶ್ರೇಷ್ಠಾಚಾರಿ ಪುರುಷೋತ್ತಮರೆಂದು ಕರೆಸಿಕೊಳ್ಳುತ್ತಾರೆ. ಈ ಲಕ್ಷ್ಮೀ-ನಾರಾಯಣರು ಎಂದೋ ಪುರುಷಾರ್ಥ ಮಾಡಿ ಪುರುಷೋತ್ತಮರಾಗಿದ್ದಾರಲ್ಲವೇ. ಇವರ ಚರಿತ್ರೆಯೂ ಅವಶ್ಯವಾಗಿ ಬೇಕು. ಈ ಲಕ್ಷ್ಮೀ-ನಾರಾಯಣರ ರಾಜ್ಯವು ಯಾವಾಗ ಸ್ಥಾಪನೆಯಾಯಿತು? ಕಲಿಯುಗದಲ್ಲಾಗಲಿ, ಸತ್ಯಯುಗದಲ್ಲಾಗಲಿ ಆಗಲಿಲ್ಲ. ಸ್ವರ್ಗ ಸ್ಥಾಪನೆಯಾಗುವುದೇ ಸಂಗಮಯುಗದಲ್ಲಿ. ಇಷ್ಟು ವಿಸ್ತಾರದಲ್ಲಿ ಯಾರೂ ಹೋಗುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ - ಇದು ಸಂಗಮಯುಗವಾಗಿದೆ. ಕಲಿಯುಗದ ನಂತರ ಸತ್ಯಯುಗ ಹೊಸ ಪ್ರಪಂಚವು ಬರುತ್ತದೆ ಅಂದಮೇಲೆ ಅವಶ್ಯವಾಗಿ ಸಂಗಮಯುಗವು ಇರುವುದು. ನಂತರ ಹೊಸ ಪ್ರಪಂಚದಲ್ಲಿ ಹೊಸ ರಾಜ್ಯವಿರುತ್ತದೆ. ಬುದ್ಧಿ ಓಡಿಸಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ, ತಂದೆಯ ಮೂಲಕ ನಮಗೆ ಒಳ್ಳೆಯ ಬುದ್ಧಿ ಮತ್ತು ಶ್ರೀಮತ ಸಿಗುತ್ತಿದೆ. ಹೇ ಈಶ್ವರ, ಇವರಿಗೆ ಸದಾ ಸುಮತ ಅಥವಾ ಶ್ರೇಷ್ಠ ಮತವನ್ನು ಕೊಡಿ ಎಂದು ಹೇಳುತ್ತಾರೆ. ಅವರು ಇಡೀ ಜಗತ್ತಿನ ತಂದೆಯಾಗಿದ್ದಾರೆ. ಎಲ್ಲರಿಗೆ ಒಳ್ಳೆಯ ಮತವನ್ನು ಕೊಡುವವರಾಗಿದ್ದಾರೆ. ಸಂಗಮಯುಗದಲ್ಲಿ ಬಂದು ತಮ್ಮ ಮಕ್ಕಳಿಗೆ ಒಳ್ಳೆಯ ಮತವನ್ನು ಕೊಡುತ್ತಾರೆ. ಯಾರನ್ನು ಪಾಂಡವ ಸಂಪ್ರದಾಯ ಮತ್ತು ದೈವೀ ಸಂಪ್ರದಾಯದವರೆಂದು ಬರೆದಿದ್ದಾರೆ. ಬ್ರಾಹ್ಮಣ ಸಂಪ್ರದಾಯ ಮತ್ತು ದೈವೀ ಸಂಪ್ರದಾಯವನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮನ ಮುಖಾಂತರವೇ ಬ್ರಾಹ್ಮಣ ಸಂಪ್ರದಾಯದವರಾಗುತ್ತಾರೆ. ಪರಮಪಿತ ಪರಮಾತ್ಮನೇ ಬ್ರಹ್ಮನ ಮೂಲಕ ಈ ರಚನೆಯನ್ನು ರಚಿಸುತ್ತಾರೆ. ಪ್ರಜಾಪಿತನು ಇರುವುದರಿಂದಲೇ ಇಷ್ಟೆಲ್ಲಾ ಬ್ರಹ್ಮಾಕುಮಾರ-ಕುಮಾರಿಯರಿದ್ದೀರಿ. ಎಲ್ಲಿಯವರೆಗೆ ಯಾರಾದರೂ ಬಂದು ನೀವು ಬ್ರಾಹ್ಮಣರ ಮೂಲಕ ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಸದ್ಗತಿಯಾಗಲು ಹೇಗೆ ಸಾಧ್ಯ! ನಿಮ್ಮ ಬಳಿ ಅನೇಕರು ಬರುತ್ತಾರೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸನ್ಯಾಸಿಗಳೂ ಬರುತ್ತಾರೆ, ಅನ್ಯ ಧರ್ಮದವರೂ ಬರುತ್ತಾರೆ. ಸ್ವರ್ಗದಲ್ಲಿ ಅವರ ಪಾತ್ರವಿಲ್ಲ ಆದರೆ ತಂದೆಯು ಬಂದಿದ್ದಾರೆಂದು ಸಂದೇಶವನ್ನಂತೂ ಎಲ್ಲರಿಗೂ ಕೊಡಬೇಕಾಗಿದೆ. ಈ ಸಮಯದಲ್ಲಿ ಹಿಂದೂಗಳೆಂದು ಕರೆಸಿಕೊಳ್ಳುವವರು ಯಾರೂ ಸಹ ದೇವಿ-ದೇವತಾ ಧರ್ಮವನ್ನೇ ತಿಳಿದುಕೊಂಡಿಲ್ಲ. ಅವರು ಯಾರು ಮೊದಲು ಸತೋಪ್ರಧಾನರಾಗಿದ್ದರೋ ಅವರೇ ತಮೋದಲ್ಲಿ ಬರುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ರಾವಣ ರಾಜ್ಯವು ಇಲ್ಲಿಯೇ ಆಗುತ್ತದೆ ಮತ್ತು ಪರಮಪಿತ ಪರಮಾತ್ಮ ಯಾರಿಗೆ ರಾಮನೆಂದೂ ಹೇಳುತ್ತಾರೆ ಅವರ ಜನ್ಮವೂ ಇಲ್ಲಿಯೇ ಆಗುತ್ತದೆ. ಪತಿತ-ಪಾವನ ಸೀತಾರಾಮ ಎಂದು ಹಾಡುತ್ತಾರೆ ಆದರೆ ಪತಿತರನ್ನಾಗಿ ಯಾರು ಮಾಡಿದರು, ರಾವಣ ಯಾರು? ಪತಿತ-ಪಾವನ ತಂದೆಯೆಂದು ಏಕೆ ಕರೆಯುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮಲ್ಲಿರುವ ಪಂಚವಿಕಾರಗಳೇ ರಾವಣನೆಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಯಾರಲ್ಲಿ ಪಂಚ ವಿಕಾರಗಳಿಲ್ಲವೋ ಅವರು ರಾಮ ಸಂಪ್ರದಾಯದವರಾಗಿದ್ದಾರೆ. ಈಗ ರಾಮ ರಾಜ್ಯವಿಲ್ಲ ಆದ್ದರಿಂದ ಹೊಸ ಪ್ರಪಂಚ, ಹೊಸ ಪವಿತ್ರ ರಾಜ್ಯವು ಬೇಕೆಂದು ಎಲ್ಲರೂ ಬಯಸುತ್ತಾರೆ. ಶಿವ ತಂದೆಗೆ ರಾಮನೆಂದು ಹೇಳಲಾಗುತ್ತದೆ ಆದರೆ ಅವರು ತ್ರೇತಾಯುಗದ ರಾಮನನ್ನೇ ಪರಮಾತ್ಮನೆಂದು ತಿಳಿದುಕೊಂಡಿದ್ದಾರೆ ಆದ್ದರಿಂದ ಶಿವ ತಂದೆಯನ್ನು ಮರೆತು ಬಿಟ್ಟಿದ್ದಾರೆ. ನೀವು ತಿಳಿಸಬಹುದು - ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ. ಶಾಸ್ತ್ರಗಳಲ್ಲಿ ಸೀತೆಯ ಅಪಹರಣವಾಯಿತೆಂದು ಬರೆದಿದ್ದಾರೆ ಆದರೆ ರಾಮನ ರಾಣಿಯಾದ ಸೀತೆಯನ್ನು ಯಾರಾದರೂ ಅಪಹರಿಸಿ ತೆಗೆದುಕೊಂಡು ಹೋಗಲು ಸಾಧ್ಯವೇ! ಅನೇಕ ಶಾಸ್ತ್ರಗಳಿವೆ, ಮುಖ್ಯವಾದ ಶಾಸ್ತ್ರವು ಗೀತೆಯಾಗಿದೆ. ಬ್ರಹ್ಮನ ಮೂಲಕ ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮದ ಸ್ಥಾಪನೆ ಮಾಡುತ್ತಾರೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ ಅಂದಮೇಲೆ ಪ್ರಜಾಪಿತನು ಇಲ್ಲಿಯೇ ಬೇಕಲ್ಲವೆ. ಬ್ರಹ್ಮನಿಗೆ ಇಷ್ಟೊಂದು ಮಂದಿ ಮಕ್ಕಳಿದ್ದಾರೆ ಅಂದಮೇಲೆ ಇವರು ಮುಖವಂಶಾವಳಿಯಾಗಿದ್ದಾರೆ. ಇಷ್ಟು ಜನ ಕುಖವಂಶಾವಳಿ ಆಗಿರಲು ಸಾಧ್ಯವಿಲ್ಲ. ಸರಸ್ವತಿಯೂ ಸಹ ಮುಖವಂಶಾವಳಿಯಾಗಿದ್ದಾರೆ. ಆದ್ದರಿಂದ ಬ್ರಹ್ಮನ ಸ್ತ್ರೀಯಾಗಲು ಸಾಧ್ಯವಿಲ್ಲ. ಈಗ ತಂದೆಯು ಹೇಳುತ್ತಾರೆ - ಬ್ರಹ್ಮನ ಮುಖದ ಮೂಲಕ ನೀವು ಬ್ರಾಹ್ಮಣರಾಗುತ್ತೀರಿ, ನನ್ನ ಮಕ್ಕಳಾಗುತ್ತೀರಿ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಗೆ ಎಷ್ಟೊಂದು ಮಹಿಮೆಯಿದೆ! ತಂದೆಯು ಪತಿತ-ಪಾವನ, ಮುಕ್ತಿದಾತನೂ ಆಗಿದ್ದಾರೆ, ಇದನ್ನು ಎಲ್ಲರೂ ಹಾಡುತ್ತಾರೆ ಆದರೆ ತಿಳಿದುಕೊಂಡಿಲ್ಲ ಆದ್ದರಿಂದ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ - ಅವರು ಪತಿತ-ಪಾವನನಾಗಿದ್ದಾರೆ, ಗೀತೆಯ ಭಗವಂತನೂ ಆಗಿದ್ದಾರೆ. ನಿರಾಕಾರ ಶಿವ ತಂದೆಯು ಅವಶ್ಯವಾಗಿ ಬಂದು ಜ್ಞಾನವನ್ನು ತಿಳಿಸಿರಬೇಕು. ಈಗ ಯಾವ ಶರೀರದ ಮೂಲಕ ಜ್ಞಾನವನ್ನು ತಿಳಿಸುತ್ತಾರೆಯೋ ಅವರಿಗೆ ಬ್ರಹ್ಮನೆಂದು ಹೆಸರನ್ನು ಇಟ್ಟಿದ್ದಾರೆ, ಇಲ್ಲದಿದ್ದರೆ ಬ್ರಹ್ಮನೆಲ್ಲಿಂದ ಬಂದರು! ಬ್ರಹ್ಮನ ತಂದೆ ಯಾರು? ಬ್ರಹ್ಮಾ, ವಿಷ್ಣು, ಶಂಕರನ ರಚಯಿತ ಯಾರು? ಇದು ಗುಹ್ಯಪ್ರಶ್ನೆಯಾಗಿದೆ. ತ್ರಿಮೂರ್ತಿ ದೇವತೆಗಳೆಂದು ಹೇಳುತ್ತಾರೆ ಆದರೆ ಇವರು ಎಲ್ಲಿಂದ ಬಂದರು! ಈಗ ತಂದೆಯು ತಿಳಿಸುತ್ತಾರೆ, ಇವರಿಗೂ ರಚಯಿತ ಶ್ರೇಷ್ಠ್ಠಾತಿ ಶ್ರೇಷ್ಠ ಭಗವಂತನೇ ಆಗಿದ್ದಾರೆ. ಅವರಿಗೆ ಶಿವನೆಂದು ಹೇಳುತ್ತಾರೆ. ಈ ಮೂವರು ದೇವತೆಗಳು ಸೂಕ್ಷ್ಮ ಶರೀರಧಾರಿಗಳಾಗಿದ್ದಾರೆ, ಇವರಲ್ಲಿ ಮೂಳೆ ಮಾಂಸಗಳಿಲ್ಲ ಆದರೆ ಇದನ್ನು ಮಂದ ಬುದ್ಧಿಯವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇದರಬಗ್ಗೆ ತಿಳಿಸಬೇಕಾಗಿದೆ – ಶ್ರೇಷ್ಠಾತಿ ಶ್ರೇಷ್ಠನು ಭಗವಂತನಾಗಿದ್ದಾರೆ, ಅವರು ಬ್ರಹ್ಮನ ಮೂಲಕ ಸ್ವರ್ಗದ ಆಸ್ತಿಯನ್ನು ಕೊಡುತ್ತಾರೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರೆಂದು ಹಾಡುತ್ತಾರೆ ನಂತರ ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ತೋರಿಸುತ್ತಾರೆ. ಎಂದಾದರೂ ನಾಭಿಯಿಂದ ಮಗುವಾಗುತ್ತದೆಯೇ? ಈಗ ತಂದೆಯು ಕುಳಿತು ಎಲ್ಲಾ ರಹಸ್ಯಗಳನ್ನು ತಿಳಿಸುತ್ತಾರೆ ಆದರೆ ಇದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬೇಕಲ್ಲವೆ.
ನೀವು ತಿಳಿದುಕೊಂಡಿದ್ದೀರಿ - ಆತ್ಮವನ್ನೇ ಪಾಪಾತ್ಮ, ಪುಣ್ಯಾತ್ಮ ಎಂದು ಹೇಳಲಾಗುತ್ತದೆ. ಪವಿತ್ರ ಆತ್ಮವೇ ಸೋ ಪರಮಾತ್ಮನೆಂದಲ್ಲ. ಪರಮಾತ್ಮ ತಂದೆಯು ಸದಾ ಪಾವನನಾಗಿದ್ದಾರೆ. ತಮೋಪ್ರಧಾನರಿಗೆ ಪತಿತರೆಂದು ಹೇಳಲಾಗುತ್ತದೆ, ಸತ್ಯಯುಗದಲ್ಲಿ ಸುಖವಿದ್ದಾಗ ದುಃಖದ ಹೆಸರೂ ಇರಲಿಲ್ಲ, ಮನುಷ್ಯರು ಈಗಲೇ ಸ್ವರ್ಗವಿದೆ ಎಂದು ಹೇಳುತ್ತಾರೆ, ಏನನ್ನೂ ತಿಳಿದುಕೊಂಡಿಲ್ಲ ಆದರೆ ಅಂತಿಮದಲ್ಲಿ ಬಂದು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ - ನಾವು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಮತ್ತ್ಯಾರೂ ವಿಶ್ವದ ಮಾಲೀಕರನ್ನಾಗಿ ಮಾಡಲು ಸಾಧ್ಯವಿಲ್ಲ. ಸತ್ಯಯುಗದಲ್ಲಿ ಇಡೀ ವಿಶ್ವದ ಮೇಲೆ ರಾಜ್ಯಭಾರವಿರುತ್ತದೆ, ಕಲಿಯುಗದಲ್ಲಿ ಆ ರೀತಿ ಮಾಡಲು ಸಾಧ್ಯವಿಲ್ಲ. ಇದೂ ಸಹ ಯಾರಿಗೂ ತಿಳಿದಿಲ್ಲ. ಗೀತೆಯಲ್ಲಿಯೂ ಇದೆ - ಮಹಾಭಾರಿ ಯುದ್ಧವಾಗಿತ್ತು, ಆಗಲೇ ಎಲ್ಲಾ ಧರ್ಮದವರು ವಿನಾಶವಾಗುತ್ತಾರೆ ಎಂದು. ಹೇಗೆ ಒಂದು ವಟವೃಕ್ಷ (ಬಿದಿರು) ವಿರುತ್ತದೆ, ಅದು ಯಾವಾಗ ಒಣಗಿ ಹೋಗುತ್ತದೆಯೋ ಆಗ ಪರಸ್ಪರ ಉಜ್ಜಿದಾಗ ಅಲ್ಲಿ ಬೆಂಕಿ ಹತ್ತಿಕೊಳ್ಳುತ್ತದೆ ಮತ್ತು ಇಡೀ ಅರಣ್ಯವೇ ಸುಟ್ಟು ಹೋಗುತ್ತದೆ. ಈಗ ಈ ಮನುಷ್ಯ ಸೃಷ್ಟಿ ವೃಕ್ಷವೂ ಸಹ ಜಡಜಡೀಭೂತವಾಗಿ ಬಿಟ್ಟಿದೆ. ಇದಕ್ಕೂ ಈಗ ಬೆಂಕಿಬೀಳಲಿದೆ. ಎಲ್ಲರೂ ಪರಸ್ಪರ ಹೊಡೆದಾಡಿ ಸಮಾಪ್ತಿಯಾಗುತ್ತಾರೆ. ಬೆಂಕಿಯ ಸಾಮಾನುಗಳನ್ನು ತಯಾರಿಸುತ್ತಲೇ ಇರುತ್ತಾರೆ, ಈಗ ಈ ಅಣು ಬಾಂಬುಗಳ ಮೂಲಕ ಬೆಂಕಿ ಬೀಳಲಿದೆ. ಈ ರಹಸ್ಯವು ಅವರಿಗೆ ಗೊತ್ತಿಲ್ಲ. ಈಗ ಕಲಿಯುಗ ನರಕವು ಬದಲಾಗಿ ಸ್ವರ್ಗವಾಗುವುದಿದೆ. ಈ ಜ್ಞಾನದಲ್ಲಿ ಬಹಳ ನಶೆಯಿರಬೇಕು. ತನ್ನನ್ನು ನೋಡಿಕೊಳ್ಳಿ - ನಾವು ಆ ಖುಷಿ ಮತ್ತು ನಶೆಯಲ್ಲಿ ಇರುತ್ತೇವೆಯೇ? ನಾವು ಪರಮಾತ್ಮನ ಸಂತಾನರಾಗಿದ್ದೇವೆ, ಅವರಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತಿದ್ದೇವೆ, ಪರಸ್ಪರ ಮಾತನಾಡುವುದೂ ಸಹ ಘನತೆಯಿಂದ ಇರಬೇಕು, ಇಲ್ಲಿಂದಲೇ ಎಲ್ಲವನ್ನೂ ಕಲಿಯಬೇಕಾಗಿದೆ ನಂತರ ಅದೇ ಸಂಸ್ಕಾರವನ್ನು ತೆಗೆದುಕೊಂಡು ಹೋಗುತ್ತೀರಿ. ಅತಿ ಮಧುರರಾಗಬೇಕಾಗಿದೆ. ಬಹಳ ನಶೆಯಿರಬೇಕು. ನಾವು ಶಿವ ತಂದೆಗೆ ಮಕ್ಕಳಾಗಿದ್ದೇವೆ, ದೇವತಾ ಪದವಿಯನ್ನು ಪಡೆಯುವವರಾಗಿದ್ದೇವೆ ಅಂದಮೇಲೆ ಪರಸ್ಪರ ಎಷ್ಟು ಪ್ರೀತಿಯಿಂದ ಮಾತನಾಡಬೇಕು ಆದರೆ ಮಕ್ಕಳ ಬಾಯಿಂದ ಹೂವಿನಂತಹ ಮಾತುಗಳು ಹೊರ ಬರುವುದಿಲ್ಲ. ನೀವು ಎಷ್ಟು ಶ್ರೇಷ್ಠರಾಗಿದ್ದಿರಿ, ಇದು ನಿಮಗೆ ನೆನಪಿರಲಿ - ನಾವು ಶಿವ ತಂದೆಯ ಸಂತಾನರಾಗಿದ್ದೇವೆ ನಂತರ ಸತ್ಯಯುಗದಲ್ಲಿ ಮಹಾರಾಜನಾಗುತ್ತೇವೆ ಅಂದರೆ ನಾವು ವಿಶ್ವದ ರಾಜಕುಮಾರರಾಗುತ್ತೇವೆ.
ನೀವು ಮಕ್ಕಳಿಗೆ ಆಂತರಿಕ ಖುಷಿಯಿರಬೇಕು - ನಾವು ಪರಮಾತ್ಮನ ಸನ್ಮುಖದಲ್ಲಿ ಕುಳಿತಿದ್ದೇವೆ, ಅವರಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಅವರ ಶ್ರೀಮತದಂತೆ ನಡೆಯಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ - ತಮ್ಮ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ರಾಜಧಾನಿಯಲ್ಲಿ ಎಲ್ಲರೂ ಬೇಕಾಗಿದೆ ಆದರೆ ನೀವು ಮಕ್ಕಳ ಬಾಯಿಂದ ಸದಾ ರತ್ನಗಳೇ ಹೊರ ಬರಬೇಕು. ತಂದೆಯು ರೂಪನೂ ಆಗಿದ್ದಾರೆ, ಭಸಂತನೂ ಆಗಿದ್ದಾರೆ. ಕಥೆಗಳೆಲ್ಲವೂ ಈಗಿನದಾಗಿದೆ. ತಂದೆಯು ಜ್ಞಾನ ಸಾಗರನಾಗಿದ್ದಾರೆ, ಅವರು ಜ್ಞಾನದ ಮಳೆಯನ್ನು ಸುರಿಸುತ್ತಾರೆ. ಬಾಕಿ ಆ ಇಂದ್ರ ದೇವತೆಯು ಮಳೆ ಸುರಿಸುತ್ತಾನೆ ಎಂಬ ಮಾತಿಲ್ಲ. ಈ ಮೋಡಗಳು ಸ್ವಾಭಾವಿಕವಾಗಿ ಮಳೆಯನ್ನು ಸುರಿಸುತ್ತದೆ. ಸತ್ಯಯುಗದಲ್ಲಿ ಈ ಪಂಚತತ್ವಗಳೂ ಸಹ ನಿಮ್ಮ ಗುಲಾಮನಾಗಿ ಬಿಡುತ್ತವೆ ಮತ್ತು ಇಲ್ಲಿ ಮನುಷ್ಯರಿಗೆ ಎಲ್ಲರಿಗೆ ಗುಲಾಮರಾಗಿಬಿಟ್ಟಿದ್ದಾರೆ. ಇಲ್ಲಿ ಪ್ರತೀ ಮಾತಿನಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಅಲ್ಲಿ ಎಲ್ಲಾ ಮಾತುಗಳು ಸ್ವತಹವಾಗಿ ಬಿಡುತ್ತವೆ ಅಂದಾಗ ಮಕ್ಕಳು ಸದಾ ತಂದೆಯ ನೆನಪಿನಲ್ಲಿರಬೇಕು. ಇದರಿಂದಲೇ ಸದಾ ಖುಷಿಯ ನಶೆಯೇರಿರುವುದು. ಹೇಗೆ ವಿಜ್ಞಾನಿಗಳೂ ಸಹ ಮಂಥನ ಮಾಡುತ್ತಾರೆ, ನೀವು ಮಕ್ಕಳು ವಾಣಿಯ ಮಂಥನ ಮಾಡಬೇಕಾಗಿದೆ. ವಾಣಿಯ ಪ್ರವಾಹವು ಕೆಲಕೆಲವೊಮ್ಮೆ ಬಹಳ ಚೆನ್ನಾಗಿರುತ್ತದೆ. ಕೆಲವೊಮ್ಮೆ ಕಡಿಮೆ. ಇದಕ್ಕೆ ಮಂಥನ ಮಾಡುವುದು ಎಂದು ಹೇಳಲಾಗುತ್ತದೆ. ಮಕ್ಕಳು ತಂದೆಯ ಸ್ಥಿತಿಯನ್ನು ನೋಡುತ್ತಿದ್ದೀರಿ ಮತ್ತು ತಂದೆಯೂ ಸಹ ತಮ್ಮ ಅನುಭವವನ್ನು ತಿಳಿಸುತ್ತಾರೆ ಅಂದಾಗ ಕೆಲವೊಮ್ಮೆ ವಾಣಿಯ ಉಮ್ಮಂಗವು ಬಹಳ ಚೆನ್ನಾಗಿರುತ್ತದೆ, ಕೆಲವೊಮ್ಮೆ ಕಡಿಮೆ. ಕೆಲವೊಮ್ಮೆ ಬಹಳಷ್ಟು ಅಂಶಗಳು ಹೊರ ಬರುತ್ತವೆ, ತಂದೆಯೂ ಸಹ ಸಹಯೋಗಿ ಆಗಿ ಬಿಡುತ್ತಾರೆ. ಇದನ್ನು ನೀವೂ ಸಹ ಅನುಭವ ಮಾಡುತ್ತೀರಿ, ತಂದೆಯು ಎಂದೂ ಕೈಯಲ್ಲಿ ಮುರುಳಿಯನ್ನು ತೆಗೆದುಕೊಳ್ಳುವುದಿಲ್ಲ. ಮಕ್ಕಳು ಮಾಸ ಪತ್ರಿಕೆಯನ್ನು ಬರೆಯುತ್ತೀರಿ, ತಂದೆಯು ಕೆಲಕೆಲವೊಮ್ಮೆ ನೋಡುತ್ತಾರೆ - ಮಕ್ಕಳು ಎಂದೂ ತಪ್ಪು ಮಾಡುವುದಿಲ್ಲವೆ? ಮ್ಯಾಗಜಿನ್ ನಲ್ಲಿಯೂ ಒಳ್ಳೊಳ್ಳೆಯ ಅಂಶಗಳು ಬರುತ್ತವೆ ಮತ್ತು ಎಲ್ಲಾ ಕಡೆಯೂ ಹರಡುತ್ತದೆ. ಯಾರಿಗಾದರೂ ಮುರುಳಿಯು ಸಿಗುವುದಿಲ್ಲವೆಂದರೆ ತಂದೆಯು ಹೇಳುತ್ತಾರೆ - ರಚಯಿತ ಮತ್ತು ರಚನೆಯ ಜ್ಞಾನವನ್ನು 7 ದಿನಗಳಲ್ಲಿ ತಿಳಿದುಕೊಂಡಿದ್ದೀರಲ್ಲವೆ, ಇನ್ನೇನು ಬೇಕು? ಬಾಕಿ 5 ವಿಕಾರಗಳನ್ನು ಭಸ್ಮ ಮಾಡಿಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ, ಮತ್ತ್ಯಾವುದೇ ಕಷ್ಟವಿಲ್ಲ.
ನೀವು ಮಕ್ಕಳು ಯಾವುದೇ ಸತ್ಸಂಗದಲ್ಲಿ ಹೋಗಬಲ್ಲಿರಿ. ಸೇವೆ ಮಾಡುವ ಉಮ್ಮಂಗ ಬರಬೇಕು. ಯಾವಾಗ ಸರ್ವ ಧರ್ಮದವರು ಒಟ್ಟಿಗೆ ಸೇರುತ್ತಾರೆಯೋ ಆಗ ತಿಳಿಸಿರಿ - ಪ್ರತಿಯೊಬ್ಬರ ಧರ್ಮವೂ ಬೇರೆ-ಬೇರೆಯಾಗಿದೆ. ನಾವು ಸಹೋದರ-ಸಹೋದರರೆಂದು ಹೇಳುತ್ತಾರೆ ಆದರೆ ಸೇರಿ ಒಂದಾಗುವುದಿಲ್ಲ. ಇದು ಕೇವಲ ಹೇಳಿಕೆಗೆ ಮಾತ್ರವಿದೆ. ತಂದೆಯು ತಿಳಿಸುತ್ತಾರೆ - ನಾನು ಬಂದು ಬ್ರಾಹ್ಮಣರನ್ನಾಗಿ ಮಾಡಿ ನಂತರ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುತ್ತೇನೆ, ಅಲ್ಲಿ ಮತ್ತ್ಯಾವುದೇ ಧರ್ಮವಿರುವುದಿಲ್ಲ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಗೀತೆಯಲ್ಲಿಯೂ ಇದರ ವರ್ಣನೆ ಮಾಡಿದ್ದಾರೆ, ಇದೊಂದೇ ವಿದ್ಯೆಯಾಗಿದೆ ಓದಿಸುವವರು ಒಬ್ಬರೇ ಆಗಿದ್ದಾರೆ. ಯಾವಾಗ ಜ್ಞಾನವು ಪೂರ್ತಿಯಾಗುವುದು ಆಗ ನಾನು ಹೊರಟು ಹೋಗುವೆನು. ನಾನು ಕಲಿಯುಗದ ಅಂತಿಮದಲ್ಲಿಯೇ ಜ್ಞಾನವನ್ನು ತಿಳಿಸಬೇಕಾಗಿದೆ, ನಾನು ಕಲ್ಪ-ಕಲ್ಪವೂ ಬರಬೇಕಾಗಿದೆ, ಇದರಲ್ಲಿ ಒಂದು ಕ್ಷಣವೂ ಹೆಚ್ಚು ಕಡಿಮೆಯಾಗುವುದಿಲ್ಲ ಎಂದು ತಂದೆಯು ತಿಳಿಸುತ್ತಾರೆ. ಯಾವಾಗ ಜ್ಞಾನವು ಪೂರ್ಣವಾಗುವುದೋ ಆಗ ಕರ್ಮಾತೀತ ಸ್ಥಿತಿಯಲ್ಲಿ ಹೊರಟು ಹೋಗುವರು ನಂತರ ವಿನಾಶವಾಗುವುದು. ದಿನ-ಪ್ರತಿದಿನ ನಿಮ್ಮ ಸೇವೆಯು ಹೆಚ್ಚುತ್ತಾ ಹೋಗುವುದು. ಇಲ್ಲಂತೂ ಯಾರಲ್ಲಿಯೂ ಪವಿತ್ರತೆಯೂ ಇಲ್ಲ, ದೈವೀ ಗುಣಗಳ ಧಾರಣೆಯೂ ಇಲ್ಲ. ಅಲ್ಲಿ ಪವಿತ್ರತೆಯ ಅಂತರ ನೋಡಿ, ಎಷ್ಟ್ಟೊಂದಿದೆ! ನೀವೀಗ ಸಂಗಮದಲ್ಲಿ ಕುಳಿತಿದ್ದೀರಿ, ಇದೇ ಪುರುಷೋತ್ತಮ ಯುಗವಾಗಿದೆ, ನೀವೀಗ ಪುರುಷೋತ್ತಮರಾಗುತ್ತಿದ್ದೀರಿ ಆದರೆ ಆ ಶೌರ್ಯ, ಆ ಚಲನೆಯೂ ಬೇಕಲ್ಲವೆ. ಎಂದೂ ಮುಖದಿಂದ ಕಲ್ಲುಗಳು ಬರಬಾರದು. ರತ್ನಗಳೇ ಹೊರ ಬರಬೇಕು. ನೀವೀಗ ದೇವತೆಗಳಂತೆ ಹೂಗಳಾಗುತ್ತಿದ್ದೀರಿ. ಭಗವಂತನು ಬಂದು ಭಗವಾನ್-ಭಗವತಿಯರನ್ನಾಗಿ ಮಾಡುತ್ತಾರೆ. ದೇವತೆಗಳಿಗೇ ಭಗವಾನ್-ಭಗವತಿಯೆಂದು ಹೇಳುತ್ತಾರೆ ಆದರೆ ಈ ರೀತಿ ಯಾರು ಮಾಡುತ್ತಾರೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮ ಬುದ್ಧಿಯಲ್ಲಿ ರಚಯಿತ ಮತ್ತು ರಚನೆಯ ಸಂಪೂರ್ಣ ಜ್ಞಾನವಿದೆ ಅಂದಮೇಲೆ ಅನ್ಯರನ್ನೂ ತಮ್ಮ ಸಮಾನರನ್ನಾಗಿ ಮಾಡುವ ಜವಾಬ್ದಾರಿಯೂ ನಿಮ್ಮ ಮೇಲಿದೆ. ಅನೇಕರು ಬರುತ್ತಾ ಇರುತ್ತಾರೆ. ಬ್ರಾಹ್ಮಣರೇ ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. ಮಾಯೆಯ ಬಿರುಗಾಳಿಗಳು ಮಕ್ಕಳಿಗೇ ಬರುತ್ತವೆ. ಕೆಲವೊಮ್ಮೆ ಬಿರುಗಾಳಿಗಳು ಬಂದಾಗ ಕೆಳಗೆ ಬಿದ್ದು ಮೂಳೆಗಳು ಪುಡಿ ಪುಡಿಯಾಗುತ್ತವೆ ಅಂದರೆ ನಡೆಯುತ್ತಾ-ನಡೆಯುತ್ತಾ ಕೆಲವರು ಡಿಸ್ಸರ್ವೀಸ್ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ - ಯಾವುದೇ ಛೀ ಛೀ ಕೆಲಸ ಮಾಡಬೇಡಿ, ನೀವು ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ, ಅವರು ಕುಖವಂಶಾವಳಿಯಾಗಿದ್ದಾರೆ. ಎಷ್ಟೊಂದು ಅಂತರವಿದೆ! ಅವರು ತೀರ್ಥ ಯಾತ್ರೆಗಳಿಗೆ ಕರೆದುಕೊಂಡು ಹೋಗುತ್ತಾರೆ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ನೀವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಇದೂ ಸಹ ಕೆಲವರಲ್ಲಿ ಅರ್ಥ ಮಾಡಿಕೊಳ್ಳುವ ಬುದ್ಧಿಯಿಲ್ಲ- ನಾವೂ ಬ್ರಾಹ್ಮಣರು, ಅವರೂ ಬ್ರಾಹ್ಮಣರಾಗಿದ್ದಾರೆ ಆದರೆ ಸತ್ಯ ಬ್ರಾಹ್ಮಣರು ಯಾರು? ಆ ಬ್ರಾಹ್ಮಣರು ತಮ್ಮನ್ನು ಬ್ರಹ್ಮಾಕುಮಾರರೆಂದು ಕರೆಸಿಕೊಳ್ಳುವುದಿಲ್ಲ, ನೀವು ತಮ್ಮನ್ನು ಬ್ರಹ್ಮಾಕುಮಾರರೆಂದು ಕರೆಸಿಕೊಳ್ಳುತ್ತೀರಿ ಅಂದಮೇಲೆ ಅವಶ್ಯವಾಗಿ ಬ್ರಹ್ಮನೂ ಇರುವರು ಆದರೆ ಅವರ ಬುದ್ಧಿಯಲ್ಲಿ ಈ ಮಾತುಗಳು ಕೇಳಲು ಬರುವುದೇ ಇಲ್ಲ. ತಂದೆಯು ಕಲ್ಪ-ಕಲ್ಪವೂ ಬಂದು ನೀವು ಮಕ್ಕಳಿಗೆ ಈ ಮಾತುಗಳನ್ನು ತಿಳಿಸುತ್ತಾರೆ - ನೀವು ಬ್ರಹ್ಮನ ಸಂತಾನರು ಬ್ರಾಹ್ಮಣರು ಎಲ್ಲರೂ ಸಹೋದರ-ಸಹೋದರರಾಗಿದ್ದೀರಿ ಅಂದಮೇಲೆ ವಿಕಾರದಲ್ಲಿ ಹೋಗಲು ಹೇಗೆ ಸಾಧ್ಯ! ಒಂದುವೇಳೆ ಯಾರಾದರೂ ಹೋಗುತ್ತಾರೆಂದರೆ ಬ್ರಾಹ್ಮಣ ಕುಲವನ್ನೇ ಕಳಂಕಿತ ಮಾಡುತ್ತಾರೆ, ತಮ್ಮನ್ನು ಬ್ರಹ್ಮಾಕುಮಾರ-ಕುಮಾರಿಯೆಂದು ಕರೆಸಿಕೊಂಡು ಮತ್ತೆ ಪತಿತರಾಗಲು ಸಾಧ್ಯವಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಾಣಿಯಲ್ಲಿ ಏನು ಕೇಳುತ್ತೀರೋ ಅದನ್ನು ಮಂಥನ ಮಾಡಬೇಕಾಗಿದೆ. ಪುರುಷೋತ್ತಮರಾಗುತ್ತಿದ್ದೀರಿ ಆದ್ದರಿಂದ ಚಲನೆಯು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬಾಯಿಂದ ಎಂದೂ ಕಲ್ಲುಗಳು ಹೊರ ಬರಬಾರದು.
2. ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡುವುದು ನಮ್ಮ ಜವಾಬ್ದಾರಿಯೆಂದು ತಿಳಿದು ಸೇವೆಯಲ್ಲಿ ತತ್ಪರರಾಗಿರಬೇಕಾಗಿದೆ. ಯಾವುದೇ ಛೀ ಛೀ ಕೆಟ್ಟ ಕರ್ಮಗಳನ್ನು ಮಾಡಿ ಡಿಸ್ಸರ್ವೀಸ್ ಮಾಡಬಾರದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಮೊಟ್ಟ ಮೊದಲು ಈ ಮಾತನ್ನು ತಿಳಿದುಕೊಳ್ಳಬೇಕು ಮತ್ತು ತಿಳಿಸಬೇಕಾಗಿದೆ - ತಂದೆಯು ಯಾರು? ಮಕ್ಕಳಿಗೆ ಯಾವಾಗ ನಾವು ಬೇಹದ್ದಿನ ತಂದೆಯ ಸಂತಾನರಾಗಿದ್ದೇವೆಂದು ನಿಶ್ಚಯ ಮಾಡಿಕೊಳ್ಳುತ್ತೀರೋ ಆಗಲೇ ಅತೀಂದ್ರಿಯ ಸುಖದ ಅನುಭವವಾಗುತ್ತದೆ. ಕೇವಲ ಇದೊಂದೇ ಮಾತಿನಿಂದ ಖುಷಿಯ ನಶೆಯೇರುತ್ತದೆ. ಇದು ಸ್ಥಿರವಾದ ಖುಷಿಯ ಮಾತಾಗಿದೆ. ನೀವು ತಿಳಿದುಕೊಂಡಿದ್ದೀರಿ - ನಾವು ತಮ್ಮನ್ನು ಬ್ರಹ್ಮಾಕುಮಾರ-ಕುಮಾರಿಯರೆಂದು ಕರೆಸಿಕೊಳ್ಳುತ್ತೇವೆ. ಇದು ಹೊಸ ರಚನೆಯಾಗಿದೆ ಅಂದಮೇಲೆ ಮೊದಲು ಎಲ್ಲರಿಗೆ ನಿಶ್ಚಯ ಮಾಡಿಸಬೇಕಾಗಿದೆ - ಇವರು ನಿಮ್ಮ ತಂದೆಯಾಗಿದ್ದಾರೆ. ತಂದೆಯ ಕೆಳಗಡೆ ವಿಷ್ಣು ಇದ್ದಾರೆ (ತ್ರಿಮೂರ್ತಿಯ ಚಿತ್ರದಲ್ಲಿ) ತಂದೆಯಿಂದ ವಿಷ್ಣು ಪುರಿಯ ಆಸ್ತಿಯು ಸಿಗುತ್ತದೆ ಅಂದಮೇಲೆ ಎಷ್ಟೊಂದು ಖುಷಿಯಿರಬೇಕು. ಇದನ್ನು ನಿಶ್ಚಯ ಮಾಡಿಸಿ ನಂತರ ಬರೆಸಬೇಕು. ವಿಷ್ಣುವಿನ ಅರ್ಥವು ವೈಷ್ಣವರೆಂಬುದನ್ನು ಹೇಳುತ್ತಾರೆ. ಭಾರತವಾಸಿಗಳು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಈ ದೇವಿ-ದೇವತೆಗಳು ನಿರ್ವಿಕಾರಿಯಾಗಿದ್ದರು, ಸ್ವರ್ಗದಲ್ಲಿ ಇವರದು ಪವಿತ್ರ ಪ್ರವೃತ್ತಿ ಮಾರ್ಗವಿತ್ತು. ತಾವು ಸಂಪೂರ್ಣ ನಿರ್ವಿಕಾರಿಗಳು ನಾವು ವಿಕಾರಿಗಳೆಂದು ಹಾಡುತ್ತಾರೆ, ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳು, ಕಲಿಯುಗದಲ್ಲಿ ಸಂಪೂರ್ಣ ವಿಕಾರಿಗಳಿದ್ದಾರೆ. ವಿಕಾರಿಗಳಿಗೆ ಪತಿತರು, ಭ್ರಷ್ಟಾಚಾರಿಗಳೆಂದು ಹೇಳುತ್ತಾರೆ. ಕ್ರೋಧಿಗೆ ಪತಿತ, ಭ್ರಷ್ಟಾಚಾರಿ ಎಂದು ಹೇಳಲಾಗುವುದಿಲ್ಲ, ಕ್ರೋಧವಂತೂ ಸನ್ಯಾಸಿಗಳಲ್ಲಿಯೂ ಇರುತ್ತದೆ ಅಂದಮೇಲೆ ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯು ಯಾವಾಗ ಭಾರತದಲ್ಲಿ ಬರುತ್ತಾರೆಯೋ ಆಗ ಈ ಮಹಾಭಾರಿ ಯುದ್ಧವೂ ಆಗುತ್ತದೆ ಏಕೆಂದರೆ ಪರಮಾತ್ಮನು ಬಂದು ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ಎಲ್ಲರ ಶರೀರಗಳ ವಿನಾಶವಾಗುವುದು ಅಂದಾಗ ಈ ನಿಶ್ಚಯವಿರಲಿ - ನಮಗೆ ತಂದೆಯು ಓದಿಸುತ್ತಾರೆ ಅಂದಮೇಲೆ ಎಷ್ಟು ನಿಯಮಿತವಾಗಿ ಓದಬೇಕು. ಇಲ್ಲಿ ಹಾಸ್ಟೆಲ್ ಇಲ್ಲ, ಹಾಸ್ಟೆಲ್ ಮಾಡಿಸಿದರೆ ಮತ್ತೆ ಬಹಳಷ್ಟು ಮನೆಗಳು ಬೇಕಾಗುವುದು. ಕೇವಲ ಏಳು ದಿನ, ನಾಲ್ಕು ದಿನಗಳಿಗಾಗಿ ಬಂದರೂ ಸಹ ಮನೆಗಳನ್ನು ಕಟ್ಟಿಸಬೇಕಾಗುವುದು. ಆದ್ದರಿಂದ ತಂದೆಯು ತಿಳಿಸುತ್ತಾರೆ - ಗೃಹಸ್ಥ ವ್ಯವಹಾರದಲ್ಲಿದ್ದು ಕೇವಲ ತಂದೆಯನ್ನು ನೆನಪು ಮಾಡಿರಿ, ತಂದೆಯೇ ಪತಿತ-ಪಾವನನಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿದರೆ ನಾನು ಗ್ಯಾರಂಟಿ ಕೊಡುತ್ತೇನೆ, ನಿಮ್ಮ ಎಲ್ಲಾ ಪಾಪಗಳು ಭಸ್ಮವಾಗುತ್ತವೆ. ಮೊದಲು ಇದನ್ನು ಬರೆಸಿಕೊಳ್ಳಬೇಕು - ಅವಶ್ಯವಾಗಿ ನಾವು ಶಿವ ತಂದೆಯ ಸಂತಾನರಾಗಿದ್ದೇವೆ, ಮತ್ತೆ ವಿಶ್ವದ ಮಾಲೀಕತ್ವಕ್ಕೆ ಹಕ್ಕುದಾರರಾಗುತ್ತೇವೆ. ರಾಜ-ರಾಣಿ, ಪ್ರಜೆಗಳೆಲ್ಲರೂ ವಿಶ್ವದ ಮಾಲೀಕರಾಗುತ್ತಾರೆ. ಮೇಳ, ಪ್ರದರ್ಶನಿಗಳಲ್ಲಿ ಯಾರೆಲ್ಲರೂ ತಿಳಿಸುವವರಾಗಿದ್ದಾರೆಯೋ ಅವರಿಗೆ ತಂದೆಯು ಆದೇಶ ನೀಡುತ್ತಾರೆ, ಮೂಲ ಮಾತನ್ನು ತಿಳಿಸಬೇಕಾಗಿದೆ – ಶ್ರೇಷ್ಠಾತಿ ಶ್ರೇಷ್ಠ ಭಗವಂತನು ಒಬ್ಬರೇ ಆಗಿದ್ದಾರೆ, ಅವರೇ ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ. ಜ್ಞಾನಸಾಗರನೆಂದ ಮೇಲೆ ಅವಶ್ಯವಾಗಿ ಅವರೇ ಆದೇಶ ನೀಡುತ್ತಾರೆ, ಕೃಷ್ಣನಂತೂ ನೀಡಲು ಸಾಧ್ಯವಿಲ್ಲ. ಶಿವ ತಂದೆಯ ವಿನಃ ಮತ್ತ್ಯಾರೂ ಭಗವಂತನಲ್ಲ, ಬ್ರಹ್ಮಾ-ವಿಷ್ಣು-ಶಂಕರನೂ ಸಹ ದೇವತೆಗಳಾಗಿದ್ದಾರೆ. ಸ್ವರ್ಗದಲ್ಲಿ ಎಲ್ಲರೂ ದೈವೀ ಗುಣವಂತ ಮನುಷ್ಯರಿರುತ್ತಾರೆ, ಇಲ್ಲಿ ಕಲಿಯುಗದಲ್ಲಿ ಆಸುರೀ ಗುಣವಂತ ಮನುಷ್ಯರಿದ್ದಾರೆ. ಇದನ್ನೂ ಸಹ ನಂತರ ತಿಳಿಸಬೇಕಾಗಿದೆ. ಮೊಟ್ಟ ಮೊದಲು ತಂದೆಯ ಪರಿಚಯವನ್ನು ನೀಡಿ, ಸಹಿ ಮಾಡಿಸಿಕೊಳ್ಳಬೇಕು. ವಿಚಾರ ಸಾಗರ ಮಂಥನ ಮಾಡಲು ಭಿನ್ನ-ಭಿನ್ನ ಯುಕ್ತಿಗಳನ್ನು ತೆಗೆಯಬೇಕು ಮತ್ತು ಬಾಬಾ, ಈ ಪ್ರಕಾರದ ಪ್ರಶ್ನೆಯನ್ನು ಹೇಳುತ್ತಾರೆ, ನಾವು ಈ ಪ್ರಕಾರದಿಂದ ತಿಳಿಸಿದೆವು ಎಂದು ತಂದೆಗೆ ತಿಳಿಸಬೇಕಾಗಿದೆ. ನಂತರ ತಂದೆಯೂ ಸಹ ಇಂತಹ ಮಾತನ್ನು ತಿಳಿಸುತ್ತಾರೆ ಯಾವುದು ಅವರಿಗೆ ಪ್ರಭಾವ ಬೀರುತ್ತದೆ. ತಂದೆಗೆ ಸರ್ವವ್ಯಾಪಿ ಅಥವಾ ಮೀನು-ಮೊಸಳೆ ಅವತಾರವೆಂದು ಹೇಳುವುದೂ ಸಹ ನಿಂದನೆಯಾಗಿದೆ ಆದ್ದರಿಂದ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ. ತಂದೆಯೇ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಈ ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರು ಸತೋಪ್ರಧಾನರಾಗಿದ್ದರು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ತಮೋಪ್ರಧಾನರಾಗಿ ಬಿಟ್ಟಿದ್ದಾರೆ ಮತ್ತೆ ತಂದೆಯು ತಿಳಿಸುತ್ತಾರೆ - ಈಗ ಮತ್ತೆ ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಯಾವುದೇ ಧರ್ಮದವರಾಗಿರಲಿ ತಂದೆಯ ಸಂದೇಶವು ಎಲ್ಲರಿಗೋಸ್ಕರ ಇದೆ. ಅವರಿಗೆ ಗಾಡ್ ಫಾದರ್, ಲಿಬರೇಟರ್ ಎಂದು ಹೇಳುತ್ತಾರೆ. ಲಿಬರೇಟ್ ಮಾಡಲು ಅವಶ್ಯವಾಗಿ ಪತಿತ ಪ್ರಪಂಚದಲ್ಲಿ ಬರುತ್ತಾರೆ. ಕಲಿಯುಗದ ಅಂತ್ಯದಲ್ಲಿ ಇಡೀ ಪ್ರಪಂಚವೇ ತಮೋಪ್ರಧಾನವಾಗಿದೆ. ಯಾವಾಗ ಸತೋಪ್ರಧಾನವಾಗುವರೋ ಆಗಲೇ ಹೊಸ ಪ್ರಪಂಚದಲ್ಲಿ ಹೋಗಲು ಸಾಧ್ಯ ಬಾಕಿ ಯಾರು ಅಲ್ಲಿಗೆ ಬರುವುದಿಲ್ಲವೋ ಅವರು ಶಾಂತಿಧಾಮದಲ್ಲಿ ಇರುತ್ತಾರೆ. ಇದನ್ನು ಬುದ್ಧಿಯಲ್ಲಿ ಕೂರಿಸಬೇಕಾಗಿದೆ, ಇದರಿಂದ ಅವರು ತಿಳಿದುಕೊಳ್ಳಲಿ- ನಾವು ಆ ತಂದೆಯನ್ನು ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ತಂದೆಯು ವಿದೇಹಿಯಾಗಿದ್ದಾರೆ, ವಿಚಿತ್ರನಾಗಿದ್ದಾರೆ ಮತ್ತೆಲ್ಲರಿಗೂ ಭಿನ್ನ-ಭಿನ್ನ ಚಿತ್ರಗಳಿವೆ (ಶರೀರವಿದೆ). ಅನ್ಯರಿಗೆ ತಿಳಿಸುವ ಉಮ್ಮಂಗವಿರಬೇಕು. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಅಷ್ಟು ಮಂದಿ ಸೇವಾಕೇಂದ್ರಕ್ಕೆ ಬರುವುದಿಲ್ಲ. ಸೇವೆಯಲ್ಲಿದ್ದಾಗ ಮಕ್ಕಳಿಗೆ ಬಹಳ ಉಲ್ಲಾಸವಿರುವುದು. ಇಲ್ಲಿ ತಂದೆಯನ್ನು ಪದೇ-ಪದೇ ಮರೆತು ಹೋಗುತ್ತಾರೆ. ಸರ್ವೀಸಿನಲ್ಲಿದ್ದಾಗ ನೆನಪಿನ ಯಾತ್ರೆಯನ್ನು ಮರೆಯುವುದಿಲ್ಲ. ಸ್ವಯಂ ನೆನಪು ಮಾಡುತ್ತಾರೆ ಅನ್ಯರಿಗೂ ನೆನಪು ತರಿಸುತ್ತಾರೆ. ನೀವು ಮಕ್ಕಳು ಓದುತ್ತಿದ್ದೀರಿ, ನಿಮ್ಮ ಬುದ್ಧಿಯಲ್ಲಿದೆ - ನಾವು ಅವಶ್ಯವಾಗಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತೇವೆಂದು ನಿಮ್ಮ ಬುದ್ಧಿಯಲ್ಲಿದೆ. ಇದು ನೆನಪಿನಲ್ಲಿದ್ದರೂ ಸಾಕು ಖುಷಿಯಿರುತ್ತದೆ. ಮರೆತು ಹೋಗುವುದರಿಂದಲೇ ಗಾಬರಿಯಾಗುತ್ತದೆ.
ತಂದೆಗೆ ಬರೆಯಬೇಕು - ಬಾಬಾ, ನಾವು ಅತೀಂದ್ರಿಯ ಸುಖದಲ್ಲಿದ್ದೇವೆ, ಇನ್ನು ಸ್ವಲ್ಪವೇ ಸಮಯವಿದೆ, ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. 63 ಜನ್ಮಗಳು ನಾವು ಬಹಳ ರೋಗಿಯಾಗಿದ್ದೆವು, ಯಾವುದೇ ಔಷಧೋಪಚಾರ ಸಿಗಲಿಲ್ಲ, ಯಾರಿಂದಲೂ ಸಹಕಾರ ಸಿಗಲಿಲ್ಲ ಆದ್ದರಿಂದ ರೋಗ ಇನ್ನೂ ಮನೆ ಮಾಡಿಕೊಂಡಿತು. ಇದು ಇಂತಹ ಕಾಯಿಲೆಯಾಗಿದೆ ಅವಿನಾಶಿ ಸರ್ಜನ್ನಿನ ಚಿಕಿತ್ಸೆಯಿಲ್ಲದೆ ಇದು ಬಿಟ್ಟು ಹೋಗುವುದಿಲ್ಲ. ಈಗ ಎಲ್ಲರ ಕಾಯಿಲೆಯು ಬಿಡುಗಡೆಯಾಗುವ ಸಮಯವಾಗಿದೆ. ಪವಿತ್ರರಾಗಿ ಮುಕ್ತಿಧಾಮದಲ್ಲಿ ಹೊರಟು ಹೋಗುತ್ತೀರಿ, ಕೆಲವರು ಮುಕ್ತಿಯಲ್ಲಿರುವುದು ಒಳ್ಳೆಯದು. ಪಾತ್ರವೇ ಇರುವುದಿಲ್ಲವೆಂದು ಹೇಳುತ್ತಾರೆ. ಹೇಗೆ ನಾಟಕದಲ್ಲಿ ಯಾರಾದರೂ ಸ್ವಲ್ಪ ಪಾತ್ರ ಮಾಡಿ ಹೊರಟು ಹೋದರೆ ಹೀರೋ-ಹೀರೋಯಿನ್ ಅಥವಾ ಉತ್ತಮ ಪಾತ್ರಧಾರಿಗಳೆಂದು ಹೇಳಲಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ಅಷ್ಟು ತಂದೆಯನ್ನು ನೆನಪು ಮಾಡಿರಿ ಆಗ ಪಕ್ಕಾ ಆಗಿಬಿಡುವಿರಿ. ನೆನಪನ್ನು ಎಂದೂ ಮರೆಯಬಾರದು. ಮುಖ್ಯವಾದವರು ಒಬ್ಬ ತಂದೆಯಾಗಿದ್ದಾರೆ ಬಾಕಿ ತಿಳಿಸುವುದಕ್ಕಾಗಿ ಚಿಕ್ಕ-ಚಿಕ್ಕ ಚಿತ್ರಗಳಿವೆ. ಇದರಿಂದ ಸಿದ್ಧ ಮಾಡಬೇಕಾಗಿದೆ, ಶಿವ-ಶಂಕರ ಒಂದೇ ಅಲ್ಲ. ಸೂಕ್ಷ್ಮವತನದಲ್ಲಿ ಇದ್ಯಾವುದೇ ಮಾತಿರುವುದಿಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ, ಇದೆಲ್ಲವೂ ಭಕ್ತಿಮಾರ್ಗವಾಗಿದೆ, ಜ್ಞಾನವನ್ನು ಕೊಡುವವರು ಒಬ್ಬ ತಂದೆಯಾಗಿದ್ದಾರೆ. ಅವರು ಸಂಗಮಯುಗದಲ್ಲಿಯೇ ಕೊಡುತ್ತಾರೆ. ಇದನ್ನು ಪಕ್ಕಾ ಮಾಡಿಕೊಳ್ಳಿ. ಭಾರತವಾಸಿಗಳಿಗಂತೂ ಕಲ್ಪ-ಕಲ್ಪವೂ ಸ್ವರ್ಗದ ಆಸ್ತಿಯು ಸಿಗುತ್ತದೆ. ಇದು 5000 ವರ್ಷಗಳ ಮಾತಾಗಿದೆ, ಇದನ್ನು ಅವರು ಲಕ್ಷಾಂತರ ವರ್ಷಗಳೆಂದು ಹೇಳಿಬಿಡುತ್ತಾರೆ. ಕೇವಲ ಕಲಿಯುಗಕ್ಕೇ ಲಕ್ಷಾಂತರ ವರ್ಷಗಳೆಂದು ಅವರು ಹೇಳಿ ಬಿಡುತ್ತಾರೆ ಮತ್ತು ಇಡೀ ಚಕ್ರವೇ 5000 ವರ್ಷಗಳು ಎಂದು ನಾವು ಹೇಳುತ್ತೇವೆ. ಅವರು ಎಷ್ಟು ದೊಡ್ಡ ಅಸತ್ಯವನ್ನು ಬರೆದಿದ್ದಾರೆ. ಹೇ ಪತಿತ-ಪಾವನ ಎಂದು ಕರೆಯುತ್ತಾರೆ, ಕೃಷ್ಣನಿಗೆ ಪತಿತ-ಪಾವನನೆಂದು ಹೇಳುವುದಿಲ್ಲ. ಯಾವುದೇ ಧರ್ಮದವರು ಕೃಷ್ಣನಿಗೆ ಮುಕ್ತಿದಾತನೆಂದು ಹೇಳುವುದಿಲ್ಲ. ಹೇ ಪತಿತ-ಪಾವನ ಎಂದು ಕರೆಯುತ್ತಾರೆಂದರೆ ಬುದ್ಧಿಯು ಮೇಲೆ ಹೋಗುತ್ತದೆ ಆದರೂ ಸಹ ತಿಳಿದುಕೊಳ್ಳುವುದಿಲ್ಲ. ಎಷ್ಟೊಂದು ಮಾಯೆಯ ಅಂಧಕಾರವಿದೆ. ಶಾಸ್ತ್ರಗಳು ಅನಾದಿಯೆಂದು ಹೇಳುತ್ತಾರೆ ಆದರೆ ಸತ್ಯ-ತ್ರೇತಾಯುಗದಲ್ಲಿ ಇವು ಇರುವುದೇ ಇಲ್ಲ. ಇದು ಇಂತಹ ವಿದ್ಯೆಯಾಗಿದೆ, ಕಾಯಿಲೆಯ ಸಮಯದಲ್ಲಿ ತರಗತಿಯಲ್ಲಿ ಕುಳಿತು ಓದಬಹುದಾಗಿದೆ, ಇಲ್ಲಿ ನೆಪಗಳು ನಡೆಯುವುದಿಲ್ಲ. ಹಸು ಬಹಳ ಒಳ್ಳೆಯದಾಗಿರುತ್ತದೆ, ಕೆಲವು ಹಸುಗಳಂತೂ ಒದೆಯುತ್ತವೆ, ಇಲ್ಲಿಯೂ ಯಾರಲ್ಲಿಯಾದರೂ ಕ್ರೋಧವಿದೆಯೆಂದರೆ ಅಹಂಕಾರಕ್ಕೆ ವಶರಾಗಿ ಒದೆಯುವುದನ್ನೂ ಮಾಡುತ್ತಾರೆ, ಡಿಸ್ಸರ್ವೀಸ್ ಮಾಡಿಬಿಡುತ್ತಾರೆ. ಈಗ ನೀವು ಮಕ್ಕಳಲ್ಲಿ ಯಾವುದೇ ಅವಗುಣವಿರಬಾರದು ಆದರೆ ಕರ್ಮ ಬಂಧನವು ಹೀಗಿದೆ, ಅದು ಶ್ರೇಷ್ಠ ಪದವಿಯನ್ನು ಪಡೆಯಲು ಬಿಡುವುದಿಲ್ಲ. ತಂದೆಯೇ ಶ್ರೇಷ್ಠ ಅದೃಷ್ಟವನ್ನು ರೂಪಿಸಿಕೊಳ್ಳುವ ಮಾರ್ಗವನ್ನು ತಿಳಿಸುತ್ತಾರೆ ಆದರೆ ಅದನ್ನು ರೂಪಿಸಿಕೊಳ್ಳುವುದಿಲ್ಲ ಎಂದರೆ ತಂದೆಯೇನು ಮಾಡುವರು? ಇದು ಬಹಳ ದೊಡ್ಡ ಸಂಪಾದನೆಯಾಗಿದೆ, ಸಂಪಾದನೆಯ ನಶೆಯಿರಬೇಕು. ಸಂಪಾದನೆ ಮಾಡದಿದ್ದರೆ ಪರಿಣಾಮವೇನಾಗುವುದು! ಕಲ್ಪ-ಕಲ್ಪವೂ ಇದೇ ಗತಿಯಾಗುವುದು. ತಂದೆಯಂತೂ ಎಲ್ಲರಿಗೆ ಸಾವಧಾನ ನೀಡುತ್ತಾರೆ, ನಿಂದನೆ ಮಾಡುವುದಿಲ್ಲ, ಮಕ್ಕಳಲ್ಲಿ ಯಾವುದೇ ಛೀ ಛೀ ಹವ್ಯಾಸವಿರಬಾರದು. ಸುಳ್ಳು ಹೇಳುವುದು ಬಹಳ ಕೆಟ್ಟದ್ದಾಗಿದೆ. ಯಜ್ಞದ ಸೇವೆಯನ್ನು ಖುಷಿ-ಖುಷಿಯಿಂದ ಮಾಡಬೇಕು. ತಂದೆಯ ಬಳಿ ಬರುತ್ತಾರೆ, ತಂದೆಯು ಸೇವೆ ಮಾಡಿ ಎಂದು ಸೂಚನೆ ನೀಡುತ್ತಾರೆ, ಯಾರು ನಿಮಗೆ ತಿನ್ನಿಸುತ್ತಾರೆಯೋ ಅವರ ಸೇವೆಯನ್ನು ಅವಶ್ಯವಾಗಿ ಮಾಡಬೇಕಲ್ಲವೆ. ಸೇವೆ ಮಾಡುವುದನ್ನು ತಂದೆಯು ಕಲಿಸುತ್ತಾರೆ. ನೋಡಿ, ಶ್ರೇಷ್ಠಾತಿ ಶ್ರೇಷ್ಠ ತಂದೆಯೂ ಸಹ ಎಷ್ಟೊಂದು ಸೇವೆ ಮಾಡುತ್ತಾರೆ! ಯಾವ ಸೇವೆಯನ್ನು ಅಜ್ಞಾನದಲ್ಲಿಯೂ ಮಾಡಲಿಲ್ಲವೋ ಅದನ್ನು ಮಾಡಬೇಕಾಗುತ್ತದೆ. ಇಷ್ಟು ನಿರಹಂಕಾರಿಗಳಾಗಬೇಕಾಗಿದೆ. ಕಾಯಿದೆಗೆ ವಿರುದ್ಧವಾಗಿ ಯಾವುದೇ ಕೆಲಸ ಮಾಡಬಾರದು, ಎಷ್ಟು ಸಾಧ್ಯವೋ ಅನ್ಯರ ಕಲ್ಯಾಣಾರ್ಥವಾಗಿ ಎಲ್ಲವನ್ನೂ ಕೈಗಳಿಂದ ಮಾಡಬೇಕಾಗಿದೆ. ಅಂತಹ ಕಠಿಣ ಪರಿಸ್ಥಿತಿಯಲ್ಲಿ ಸೇವೆ ತೆಗೆದುಕೊಂಡರೆ ಅದು ಬೇರೆ ಮಾತಾಗಿದೆ. ತನ್ನನ್ನು ನಿರಹಂಕಾರಿ, ನಿರ್ಮೋಹಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ, ತಂದೆಯ ನೆನಪಿಲ್ಲದೇ ಯಾರದೇ ಕಲ್ಯಾಣವಾಗಲು ಸಾಧ್ಯವಿಲ್ಲ. ಎಷ್ಟು ನೆನಪು ಮಾಡುವರೋ ಅಷ್ಟು ಪಾವನರಾಗುವರು. ನೆನಪಿನಲ್ಲಿಯೇ ವಿಘ್ನಗಳು ಬೀಳುತ್ತವೆ, ಜ್ಞಾನದಲ್ಲಿ ಇಷ್ಟೊಂದು ವಿಘ್ನ ಬೀಳುವುದಿಲ್ಲ. ಜ್ಞಾನದ ಅನೇಕ ಮಾತುಗಳಿವೆ. ತಂದೆಯನ್ನು ನೆನಪು ಮಾಡುವುದರಿಂದಲೇ ಸುಗಂಧಭರಿತ ಹೂಗಳಾಗುತ್ತಾರೆ. ಕಡಿಮೆ ನೆನಪು ಮಾಡಿದರೆ ಚೆಂಡು ಮಲ್ಲಿಗೆಯಾಗುತ್ತಾರೆ, ಎಕ್ಕದ ಹೂವೂ ಆಗುತ್ತಾರೆ ಆದ್ದರಿಂದ ತಮ್ಮನ್ನು ಸುಗಂಧಭರಿತ ಹೂವನ್ನಾಗಿ ಮಾಡಿಕೊಳ್ಳಬೇಕು, ಯಾವುದೇ ದುರ್ಗಂಧ ಇರಬಾರದು. ಆತ್ಮವು ಸುಗಂಧಭರಿತವಾಗಬೇಕಾಗಿದೆ, ಇಷ್ಟು ಚಿಕ್ಕ ಬಿಂದುವಿನಲ್ಲಿ ಸಂಪೂರ್ಣ ಜ್ಞಾನವು ಅಡಕವಾಗಿದೆ! ಇದು ಎಷ್ಟು ಅದ್ಭುತವಾಗಿದೆ. ಸೃಷ್ಟಿಯು ಒಂದೇ ಆಗಿದೆ, ಮೇಲಾಗಲಿ ಅಥವ ಕೆಳಗಡೆಯಾಗಲಿ ಸೃಷ್ಟಿಯಿಲ್ಲ. ತ್ರಿಮೂರ್ತಿಯ ಅರ್ಥವನ್ನೂ ಸಹ ನೀವು ತಿಳಿದುಕೊಂಡಿದ್ದೀರಿ. ಅವರು ಕೇವಲ ತ್ರಿಮೂರ್ತಿ ಮಾರ್ಗವೆಂದು ಹೆಸರನ್ನು ಇಟ್ಟಿದ್ದಾರೆ. ಕೆಲವರಿಗೆ ಬ್ರಹ್ಮನಿಗೆ ತ್ರಿಮೂರ್ತಿಯೆಂದು ಹೇಳಿ ಬಿಡುತ್ತಾರೆ, ಅವರ ಚರಿತ್ರೆಯನ್ನೇ ತಿಳಿದುಕೊಂಡಿಲ್ಲ. ಶಾಸ್ತ್ರಗಳಲ್ಲಿ ಶ್ರೇಷ್ಠಾಚಾರಿ ಮನುಷ್ಯರ ಜೀವನ ಚರಿತ್ರೆಯಿದೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣ ಮೊದಲಾದವರೆಲ್ಲರೂ ಮನುಷ್ಯರೇ ಆಗಿದ್ದಾರೆ ಆದರೆ ಅನ್ಯರ ಜೀವನ ಕಥೆಗೆ ಶಾಸ್ತ್ರವೆಂದು ಹೇಳಲಾಗುವುದಿಲ್ಲ, ದೇವತೆಗಳ ಜೀವನ ಚರಿತ್ರೆಗೆ ಶಾಸ್ತ್ರವೆಂದು ಹೇಳಲಾಗುತ್ತದೆ ಬಾಕಿ ಶಿವ ತಂದೆಯ ಜೀವನ ಚರಿತ್ರೆ ಎಲ್ಲಿದೆ? ಅವರಂತೂ ನಿರಾಕಾರನಾಗಿದ್ದಾರೆ. ಸ್ವಯಂ ಅವರೇ ತಿಳಿಸುತ್ತಾರೆ - ನಾನು ಪತಿತ-ಪಾವನನಾಗಿದ್ದೇನೆ, ನನ್ನನ್ನು ಎಲ್ಲರೂ ತಂದೆ ಎಂದು ಹೇಳಿ ಕರೆಯುತ್ತಾರೆ, ನಾನು ಬಂದು ಸ್ವರ್ಗದ ಸ್ಥಾಪನೆ ಮಾಡುತ್ತೇನೆ, ಭಾರತವು 5000 ವರ್ಷಗಳ ಮೊದಲು ಸ್ವರ್ಗವಾಗಿತ್ತು ಈಗ ಪುನಃ ಆಗಬೇಕಾಗಿದೆ. ಎಷ್ಟು ಸಹಜವಾಗಿದೆ! ಆದರೆ ಇಷ್ಟು ಕಲ್ಲು ಬುದ್ಧಿಯವರಾಗಿದ್ದಾರೆ, ಬುದ್ಧಿಯ ಬೀಗವೇ ತೆರೆಯುವುದಿಲ್ಲ. ಜ್ಞಾನ ಮತ್ತು ಯೋಗದ ಬೀಗವು ಬಂಧ್ ಆಗಿದೆ.
ತಂದೆಯು ತಿಳಿಸುತ್ತಾರೆ – ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ ಎಂಬ ಸಂದೇಶವನ್ನು ಮನೆಮನೆಗೂ ತಿಳಿಸಿರಿ. ಫಸ್ಟ್ ಫ್ಲೋರ್ ಮೂಲವತನ, ಸೆಕೆಂಡ್ ಫ್ಲೋರ್ ಸೂಕ್ಷ್ಮವತನ, ಥರ್ಡ್ ಫ್ಲೋರ್ ಈ ಸಾಕಾರಿ ಪ್ರಪಂಚವಾಗಿದೆ. ಒಂದುವೇಳೆ ಮಕ್ಕಳಿಗೆ ಇವುಗಳ ನೆನಪಿದ್ದರೂ ಸಹ ಮೊದಲು ತಂದೆಯು ಅವಶ್ಯವಾಗಿ ನೆನಪಿಗೆ ಬರುವರು. ಸೇವೆಗಾಗಿ ಓಡಬೇಕಾಗಿದೆ, ತಂದೆಯು ಎಲ್ಲಿಗೂ ಹೋಗುವುದನ್ನು ನಿರಾಕರಿಸುವುದಿಲ್ಲ. ಭಲೆ ವಿವಾಹಗಳಿಗೆ ಹೋಗಿರಿ, ತೀರ್ಥ ಸ್ಥಾನಗಳಿಗೆ ಹೋಗಿರಿ, ಸರ್ವೀಸ್ ಮಾಡಲು ಹೋಗಿರಿ. ಭಾಷಣ ಮಾಡಿರಿ, ಇದನ್ನೇ ತಿಳಿಸಿರಿ - ಒಂದು ಆತ್ಮಿಕ ಯಾತ್ರೆಯಾಗಿದೆ, ಇನ್ನೊಂದು ದೈಹಿಕ ಯಾತ್ರೆಯಾಗಿದೆ. ಜ್ಞಾನ ಬಿಂದುಗಳಂತೂ ಬಹಳ ಸಿಗುತ್ತಿರುತ್ತವೆ, ವಾನಪ್ರಸ್ಥಿಗಳ ಸಂಗದಲ್ಲಿ ಹೋಗಿ ಸರ್ವೀಸ್ ಮಾಡಿರಿ. ಅವರದನ್ನು ಕೇಳಿರಿ, ಅವರು ಏನು ಹೇಳುತ್ತಾರೆ ಎಂದು. ಕೈಯಲ್ಲಿ ಭಿತ್ತಿ ಪತ್ರವಿರಲಿ. ಮುಖ್ಯವಾದ ನಾಲ್ಕೈದು ಮಾತುಗಳು ಅದರಲ್ಲಿ ಬರೆದಿರಲಿ - ಈಶ್ವರ ಸರ್ವವ್ಯಾಪಿ ಅಲ್ಲ, ಗೀತೆಯ ಭಗವಂತ ಕೃಷ್ಣನಲ್ಲ, ಇದನ್ನು ಸ್ಪಷ್ಟವಾಗಿ ಬರೆದು ಬಿಡಿ. ಅದನ್ನು ಯಾರಾದರೂ ಓದಿದರೆ ಇದು ಸತ್ಯವೇ ಆಗಿದೆ ಎಂಬುದನ್ನು ತಿಳಿದುಕೊಳ್ಳಲು ಇದರಲ್ಲಿ ಬಹಳ ಚತುರತೆ ಬೇಕಾಗಿದೆ. ತಂದೆಯೂ ತ್ರಿಮೂರ್ತಿಯ ಚಿತ್ರದ ಬಗ್ಗೆಯೂ ತಿಳಿಸುತ್ತಾರೆ. ಈ ಚಿತ್ರವನ್ನು ಪದೇ-ಪದೇ ಜೇಬಿನಿಂದ ತೆಗೆದು ನೋಡುತ್ತಾ ಇರಿ, ಯಾರಿಗಾದರೂ ತಿಳಿಸಿರಿ. ಇದು ತಂದೆ, ಇದು ಆಸ್ತಿ. ವಿಷ್ಣುವಿನ ಚಿತ್ರವೂ ಚೆನ್ನಾಗಿದೆ, ನೀವು ರೈಲಿನಲ್ಲಿಯೂ ಸರ್ವೀಸ್ ಮಾಡಬಹುದು, ತಂದೆಯನ್ನು ನೆನಪು ಮಾಡಿದರೆ ವಿಶ್ವದ ಮಾಲೀಕರಾಗಿ ಬಿಡುತ್ತೀರಿ ಎಂದು. ಬಹಳಷ್ಟು ಸೇವೆಯಾಗುತ್ತದೆ ಆದರೆ ಯಾರಿಗೂ ಬುದ್ಧಿಯು ಬರುವುದೂ ಇಲ್ಲ. ಬಹಳ ಪುರುಷಾರ್ಥ ಮಾಡಬೇಕಾಗಿದೆ. ಯುದ್ಧದ ಮೈದಾನದಲ್ಲಿ ಸುಸ್ತಿಯಾಗಬಾರದು. ಬಹಳ ಎಚ್ಚರಿಕೆ ವಹಿಸಬೇಕಾಗಿದೆ, ಮಂದಿರಗಳಲ್ಲಿಯೂ ಬಹಳಷ್ಟು ಸರ್ವೀಸ್ ನಡೆಯುತ್ತದೆ. ಕೇವಲ ತಂದೆಯು ತಿಳಿಸುತ್ತಾರೆ - ಮನ್ಮನಾಭವ. ತಮೋಪ್ರಧಾನರಿಂದ ಸತೋಪ್ರಧಾನರಾಗಿರಿ. ಮುಖ್ಯ ಮಾತನ್ನು ಪಕ್ಕಾ ಮಾಡಿಸಬೇಕು. ಮಕ್ಕಳಿಗೆ ಸರ್ವೀಸಿನ ಬಹಳ ವಿಚಾರವಿರಬೇಕು - ತ್ರಿಮೂರ್ತಿಯ ಚಿತ್ರದಲ್ಲಿ ಇಡೀ ಜ್ಞಾನವು ಅಡಕವಾಗಿದೆ, ಏಣಿಯ ಚಿತ್ರದಲ್ಲಿಯೂ ಚೆನ್ನಾಗಿದೆ. ಪ್ರತಿಯೊಬ್ಬರೂ ಹಣ ಸಂಪಾದಿಸಲು ತಮ್ಮ ಉನ್ನತಿಯನ್ನು ಬಯಸುತ್ತಾರೆ. ಚಿಕ್ಕ ಮಕ್ಕಳಿಗೂ ಸಹ ಯುಕ್ತಿಗಳನ್ನು ಕಲಿಸಿ, ಆಗ ಎಲ್ಲರೂ ಶಭಾಷ್ ಹೇಳುತ್ತಾರೆ. ಬ್ರಹ್ಮಾಕುಮಾರ-ಕುಮಾರಿಯರದು ಕಮಾಲ್ ಆಗಿದೆ, ಚಿಕ್ಕ ಮಕ್ಕಳೂ ಸಹ ಎಷ್ಟೊಂದು ಜ್ಞಾನವನ್ನು ಕೊಡುತ್ತಾರೆ ಅದನ್ನು ಯಾವುದೇ ಸನ್ಯಾಸಿಗಳೂ ಕೊಡಲು ಸಾಧ್ಯವಿಲ್ಲ. ಉಚಿತವಾಗಿ ವಸ್ತು ಸಿಕ್ಕಿದರೆ ಇದನ್ನು ನಮ್ಮ ಕಲ್ಯಾಣಕ್ಕಾಗಿ ಕೊಡುತ್ತಾರೆಂದು ತಿಳಿಯುತ್ತಾರೆ. ಆಗ ತಿಳಿಸಿ, ಇದು ಉಚಿತವಾಗಿದೆ, ಭಲೆ ತಾವು ಓದಿರಿ, ಇದರಿಂದ ತಮ್ಮ ಕಲ್ಯಾಣ ಮಾಡಿಕೊಳ್ಳಿ. ಶಿವ ತಂದೆಯು ಭೋಲಾ ಭಂಡಾರಿ ಆಗಿದ್ದಾರಲ್ಲವೆ. ಅನೇಕ ಮಕ್ಕಳಿದ್ದಾರೆ, ತಂದೆಗೆ ಹಣದ ಅವಶ್ಯಕತೆಯೇನಿದೆ! ರೈಲಿನಲ್ಲಿಯೂ ನೀವು ಬಹಳ ಸರ್ವೀಸ್ ಮಾಡಬಹುದು. ಒಳ್ಳೆಯ ವ್ಯಕ್ತಿಯನ್ನು ನೋಡಿ ಕೂಡಲೇ ಅವರಿಗೆ ತಿಳಿಸಿ, ಚಿತ್ರವನ್ನು ಕೊಟ್ಟು ಬಿಡಿ. ಹೇಳಿರಿ, ನೀವು ತಮ್ಮ ಕಲ್ಯಾಣವನ್ನೂ ಮಾಡಿಕೊಳ್ಳಿ ಮತ್ತು ಅನ್ಯರ ಕಲ್ಯಾಣವನ್ನೂ ಮಾಡಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಯಾವುದೇ ಕಾಯಿದೆಗೆ ವಿರುದ್ಧವಾದ ಕೆಲಸವನ್ನು ಮಾಡಬಾರದು, ಬಹಳ-ಬಹಳ ನಿರಹಂಕಾರಿ, ನಿರ್ಮೋಹಿಗಳಾಗಬೇಕಾಗಿದೆ. ಎಷ್ಟು ಸಾಧ್ಯವೋ ಪ್ರತೀ ಕಾರ್ಯವನ್ನು ತಮ್ಮ ಕೈಗಳಿಂದ ಮಾಡಬೇಕಾಗಿದೆ. ಯಜ್ಞದ ಸೇವೆಯನ್ನು ಬಹಳ ಖುಷಿಯಿಂದ ಮಾಡಬೇಕಾಗಿದೆ
2. ವಿದ್ಯೆಯಲ್ಲಿ ಎಂದೂ ನೆಪ ಹೇಳಬಾರದು, ಕಾಯಿಲೆಯ ಸಮಯದಲ್ಲಿಯೂ ಅವಶ್ಯವಾಗಿ ಓದಬೇಕು, ಉಲ್ಲಾಸದಲ್ಲಿರಲು ಸರ್ವೀಸಿನ ಉಮ್ಮಂಗವನ್ನು ಇಟ್ಟುಕೊಳ್ಳಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಅರ್ಥವನ್ನು ತಿಳಿದುಕೊಂಡಿರಿ. ಬಾಲ್ಯವು ಮೂರು ಪ್ರಕಾರದ್ದಾಗಿದೆ. ಒಂದು ಲೌಕಿಕ ಬಾಲ್ಯ, ಇನ್ನೊಂದು ನಿವೃತ್ತಿ ಮಾರ್ಗದ ಬಾಲ್ಯ, ಗೃಹಸ್ಥವನ್ನು ಬಿಟ್ಟು ಜೀವಿಸುತ್ತಿದ್ದಂತೆಯೇ ಸತ್ತು ಗುರುವಿಗೆ ಅಥವಾ ಸನ್ಯಾಸಿಗಳಿಗೆ ಶಿಷ್ಯರಾಗುತ್ತಾರೆ. ಗುರುಗಳೇನು ಶಿಷ್ಯರಿಗೆ ತಂದೆಯಲ್ಲ, ಅವರ ಶಿಷ್ಯರಾಗಿ ಅವರ ಜೊತೆಯಿರುತ್ತಾರೆ. ತಂದೆಯ ಮಕ್ಕಳಾಗುವುದು ಎಂದರೆ ಅದು ಬಾಲ್ಯವಾಗಿದೆ. ಅವರೂ ಸಹ ಜೀವಿಸಿದ್ದಂತೆಯೇ ಸತ್ತು ಗುರುವಿನ ಶಿಷ್ಯರಾಗುತ್ತಾರೆ, ಕಾಡಿಗೆ ಹೊರಟು ಹೋಗುತ್ತಾರೆ. ಮೂರನೆಯದಾಗಿದೆ - ನಿಮ್ಮದು ಇದು ಅದ್ಭುತವಾದ ಮರುಜೀವಾ ಜನ್ಮ. ಒಬ್ಬ ಮಾತಾಪಿತರನ್ನು ಬಿಟ್ಟು ಇನ್ನೊಬ್ಬ ಮಾತಾಪಿತರ ಮಕ್ಕಳಾಗುತ್ತೀರಿ, ಇವರು ಆತ್ಮಿಕ ತಂದೆ-ತಾಯಿಯಾಗಿದ್ದಾರೆ. ನಿಮ್ಮದು ಇದು ಮರುಜೀವ ಜನ್ಮವಾಗಿದೆ. ಈಶ್ವರೀಯ ಮಡಿಲಿನಲ್ಲಿ ಆತ್ಮೀಯ ಜನ್ಮವಾಗಿದೆ. ನಿಮ್ಮೊಂದಿಗೆ ಈಗ ಆತ್ಮಿಕ ತಂದೆಯು ಮಾತನಾಡುತ್ತಿದ್ದಾರೆ. ಅವರೆಲ್ಲರೂ ಲೌಕಿಕ ತಂದೆಯರಾಗಿದ್ದಾರೆ, ಇವರು ಆತ್ಮಿಕ ತಂದೆಯಾಗಿದ್ದಾರೆ ಆದ್ದರಿಂದಲೇ ಹಾಡುತ್ತಾರೆ - ತಂದೆಯ ಮಕ್ಕಳಾಗಿ ಮರುಜೀವಿಗಳಾಗಿ ಮತ್ತೆ ಇದನ್ನು ಮರೆಯಬಾರದು. ಶಿವ ತಂದೆಯು ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ಯಾರಾದರೂ ಗೀತೆ ಇತ್ಯಾದಿಗಳ ಮೇಲೆ ವಾದ ಮಾಡುತ್ತಾರೆಂದರೆ ಮೊಟ್ಟ ಮೊದಲು ಈ ಮಾತನ್ನು ಕೇಳಬೇಕಾಗಿದೆ- ಶ್ರೇಷ್ಠಾತಿ ಶ್ರೇಷ್ಠ ಭಗವಂತ ಯಾರು? ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ ನಂತರ ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ. ಶಿವನು ಎಲ್ಲಾ ಧರ್ಮದವರಿಗೂ ತಂದೆಯಾಗಿದ್ದಾರೆ, ಮೊಟ್ಟ ಮೊದಲು ಈ ಮಾತನ್ನು ತಿಳಿಸಿರಿ - ಆ ಶ್ರೇಷ್ಠಾತಿ ಶ್ರೇಷ್ಠ ತಂದೆಯು ಒಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣುವಿಗೆ ಭಗವಂತನೆಂದು ಹೇಳುವುದಿಲ್ಲ. ಮೊದಲು ಇದನ್ನು ಪಕ್ಕಾ ಮಾಡಿಸಿರಿ - ಪರಮಪಿತನು ಒಬ್ಬರೇ ಆಗಿದ್ದಾರೆ, ಅವರು ನಿರಾಕಾರನಾಗಿದ್ದಾರೆ. ಅವರಿಗೆ ರಚಯಿತನೆಂತಲೂ ಹೇಳುತ್ತಾರೆ, ಪತಿತ-ಪಾವನನೆಂತಲೂ ಹೇಳುತ್ತಾರೆ ಅಂದಮೇಲೆ ತಂದೆಯಿಂದ ಅವಶ್ಯವಾಗಿ ಆಸ್ತಿಯು ಸಿಗುವುದು. ಇದನ್ನು ವಿಚಾರ ಮಾಡಿ - ಬೇಹದ್ದಿನ ತಂದೆಯಿಂದ ಆಸ್ತಿಯು ಯಾರಿಗೆ ಸಿಕ್ಕಿತು? ತಂದೆಯು ಹೊಸ ಪ್ರಪಂಚವನ್ನು ರಚಿಸುವವರಾಗಿದ್ದಾರೆ, ಅವರ ಹೆಸರಾಗಿದೆ - ಶಿವ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ, ಅವರ ಜಯಂತಿಯನ್ನೂ ಆಚರಿಸುತ್ತಾರೆ. ಅವರೇ ಪತಿತ-ಪಾವನ, ರಚಯಿತ, ಜ್ಞಾನಪೂರ್ಣನಾಗಿದ್ದಾರೆ ಎಂದು ಹೇಳಿದಾಗ ಸರ್ವವ್ಯಾಪಿಯ ಮಾತು ಹೊರಟು ಹೋಗುತ್ತದೆ. ಕರ್ತವ್ಯದ ಆಧಾರದ ಮೇಲೆ ಅವರ ಮಹಿಮೆಯಿದೆ. ಯಾರು ಕರ್ತವ್ಯವನ್ನು ಮಾಡಿ ಹೋಗುತ್ತಾರೆಯೋ ಅವರದು ನಂತರ ಮಹಿಮೆ ಮಾಡಲಾಗುತ್ತದೆ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ, ಅವರಿಗೆ ಮುಕ್ತಿದಾತನೆಂದು ಹೇಳುತ್ತಾರೆ. ದಯಾಸಾಗರ, ದುಃಖಹರ್ತ-ಸುಖಕರ್ತನೆಂದೂ ಹೇಳುತ್ತಾರೆ, ಮಾರ್ಗದರ್ಶಕನೆಂದೂ ಹೇಳುತ್ತಾರೆ. ಯಾವುದೇ ಹೊಸ ಸ್ಥಾನಕ್ಕೆ ಹೋಗುತ್ತಾರೆಂದರೆ ಮಾರ್ಗದರ್ಶಕರನ್ನು ಕರೆದುಕೊಂಡು ಹೋಗುತ್ತಾರೆ. ವಿದೇಶದಿಂದ ಬರುತ್ತಾರೆಂದರೆ ಅವರಿಗೆ ಎಲ್ಲವನ್ನು ತೋರಿಸುವುದಕ್ಕಾಗಿ ಇಲ್ಲಿನ ಮಾರ್ಗದರ್ಶಕರನ್ನು ನೇಮಿಸುತ್ತಾರೆ. ತೀರ್ಥ ಯಾತ್ರೆಯಲ್ಲಿ ಕರೆದುಕೊಂಡು ಹೋಗುವುದಕ್ಕೂ ಮಾರ್ಗದರ್ಶಕರಿರುತ್ತಾರೆ. ಈಗ ತಂದೆಯನ್ನು ಮಾರ್ಗದರ್ಶಕನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ಎಲ್ಲಿಗೋ ಕರೆದುಕೊಂಡು ಹೋಗಲು ಮಾರ್ಗದರ್ಶನ ನೀಡಿರಬೇಕಲ್ಲವೆ. ಅವರಿಗೆ ಸರ್ವವ್ಯಾಪಿ ಎಂದು ಹೇಳಿದರೆ ಈ ಮಾತುಗಳೆಲ್ಲವೂ ಸಮಾಪ್ತಿ ಆಗಿಬಿಡುತ್ತದೆ ಆದ್ದರಿಂದ ಮೊಟ್ಟ ಮೊದಲು ತಿಳಿಸಿರಿ- ಎಲ್ಲರಿಗೆ ತಂದೆಯು ಒಬ್ಬರೇ ಆಗಿದ್ದಾರೆ. ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆಯಾಗಿದೆ, ಅದು ಭಗವಂತನೇ ಹೇಳಿರುವಂತಹ ಗೀತೆಯಾಗಿದೆ. ಅದನ್ನು ಸಿದ್ಧ ಮಾಡಿ ಬಿಟ್ಟರೆ ನಂತರ ಅದರ ಮರಿ ಮಕ್ಕಳೆಲ್ಲವೂ ಸಿದ್ಧರಾಗಿ ಬಿಡುತ್ತಾರೆ. ಮೊಟ್ಟ ಮೊದಲಿಗೆ ಸತ್ಯ ಗೀತೆಯ ಸಾರವನ್ನು ತಿಳಿಸಬೇಕು. ಶಿವ ಭಗವಾನುವಾಚ - ಈಗ ಶಿವ ತಂದೆಯ ಚರಿತ್ರೆ ಏನಿರಬಹುದು! ಅವರು ಇಷ್ಟನ್ನೇ ಹೇಳುತ್ತಾರೆ - ನಾನು ಈ ಶರೀರದ ಆಧಾರವನ್ನು ತೆಗೆದುಕೊಂಡು ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುವ ಮಾರ್ಗವನ್ನು ತಿಳಿಸುತ್ತೇನೆ. ಮಕ್ಕಳಿಗೆ ರಾಜಯೋಗವನ್ನು ಕಲಿಸಲು ಬರುತ್ತೇನೆ. ಇದರಲ್ಲಿ ಚರಿತ್ರೆಯನ್ನೇನು ಮಾಡುತ್ತೀರಿ! ಇವರಂತೂ ವೃದ್ಧನಾಗಿದ್ದಾರೆ. ಕೇವಲ ಬಂದು ಮಕ್ಕಳಿಗೆ ಓದಿಸುತ್ತಾರೆ. ಪತಿತರನ್ನು ಪಾವನರನ್ನಾಗಿ ಮಾಡಲು ರಾಜಯೋಗವನ್ನು ಕಲಿಸುತ್ತಾರೆ. ನೀವು ಸತ್ಯಯುಗದಲ್ಲಿ ಹೋಗಿ ರಾಜ್ಯಭಾರ ಮಾಡುತ್ತೀರಿ. ನಿಮಗೆ ಆಸ್ತಿಯು ಸಿಗುತ್ತದೆ ಉಳಿದೆಲ್ಲಾ ಆತ್ಮರು ಮುಕ್ತಿಧಾಮ, ನಿರಾಕಾರಿ ಪ್ರಪಂಚದಲ್ಲಿ ಇರುತ್ತಾರೆ. ಇದು ಬಹಳ ಸಹಜ ಮಾತಾಗಿದೆ. ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು. ಒಂದೇ ಧರ್ಮವಿತ್ತು. ಈಗ ಕಲಿಯುಗದಲ್ಲಿ ಎಷ್ಟೊಂದು ಜನಸಂಖ್ಯೆಯಿದೆ! ಸತ್ಯಯುಗದಲ್ಲಿ ಬಹಳ ಕಡಿಮೆಯಿರುತ್ತದೆ. ಪರಮಪಿತ ಪರಮಾತ್ಮನು ಒಂದು ಧರ್ಮದ ಸ್ಥಾಪನೆ ಅನೇಕ ಧರ್ಮಗಳ ವಿನಾಶ ಮಾಡಿಸಲು ಬರುತ್ತಾರೆ. ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಅಲ್ಲಿ ಯಾವುದೇ ಅಪವಿತ್ರ ಆತ್ಮನು ಇರಲು ಸಾಧ್ಯವಿಲ್ಲ. ಅವರ ಹೆಸರೇ ಆಗಿದೆ - ಪತಿತ-ಪಾವನ, ಸರ್ವರ ಸದ್ಗತಿದಾತ. ಇದು ಹಳೆಯ ಪ್ರಪಂಚ ಕಬ್ಬಿಣದ ಯುಗವಾಗಿದೆ. ಸತ್ಯಯುಗಕ್ಕೆ ಸ್ವರ್ಣಿಮ ಯುಗವೆಂದು ಹೇಳಲಾಗುತ್ತದೆ. ಯಾರು ದೇವತೆಗಳ ಪೂಜಾರಿಗಳಿದ್ದಾರೆಯೋ ಅವರು ಸಹಜವಾಗಿ ಎಲ್ಲವನ್ನೂ ಅರ್ಥ ಮಾಡಿಕೊಳ್ಳುತ್ತಾರೆ. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಗಳಾಗುತ್ತಾರೆ ಆದ್ದರಿಂದ ಮೊಟ್ಟ ಮೊದಲು ತಂದೆಯ ಪರಿಚಯ ಕೊಡಬೇಕಾಗಿದೆ - ನಾವು ಅವರ ಮಕ್ಕಳಾಗಿದ್ದೇವೆ, ಇದನ್ನು ಮರೆಯಬೇಡಿ. ಮರೆತರೆ ಅಳಬೇಕಾಗುವುದು. ಒಂದಲ್ಲ ಒಂದು ಮಾಯೆಯ ಪೆಟ್ಟು ಬೀಳುವುದು. ದೇಹೀ-ಅಭಿಮಾನಿಗಳಾಗಬೇಕಾಗಿದೆ. ನಾವಾತ್ಮರು ಹಿಂತಿರುಗಿ ತಂದೆಯ ಬಳಿಗೆ ಹೋಗಬೇಕಾಗಿದೆ. ಇಷ್ಟೊಂದು ಮನುಷ್ಯರು ಸಾಯುತ್ತಾರೆಂದರೆ ಮತ್ತೆ ಯಾರು-ಯಾರಿಗಾಗಿ ಅಳುವರು? ಭಾರತದಲ್ಲಿ ಎಲ್ಲರಿಗಿಂತ ಜಾಸ್ತಿ ಅಳುತ್ತಾರೆ, ಮೊದಲ 12 ತಿಂಗಳು ಅಯ್ಯೊ ಅಯ್ಯೊ ಎನ್ನುತ್ತಾರೆ, ಹಣೆ ಬಡಿದುಕೊಳ್ಳುತ್ತಾ ಇರುತ್ತಾರೆ. ಇದು ಮೃತ್ಯುಲೋಕದ ರೀತಿ ಪದ್ಧತಿಯಾಗಿದೆ. ತಂದೆಯು ನಿಮಗೆ ಈಗ ಅಮರಲೋಕದ ಎಲ್ಲಾ ರೀತಿ ಪದ್ಧತಿಗಳನ್ನು ಕಲಿಸುತ್ತಿದ್ದಾರೆ. ಈಗ ನಿಮಗೆ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ, ಇದೆಲ್ಲವೂ ಸಮಾಪ್ತಿಯಾಗಲಿದೆ, ನಾವೀಗ ಮನೆಗೆ ಹೋಗುತ್ತಿದ್ದೇವೆ. ನಾಟಕವು ಮುಕ್ತಾಯವಾಗುತ್ತಿದೆ. ನಾಟಕದಲ್ಲಿ ಎಲ್ಲರೂ ಪಾತ್ರಧಾರಿಗಳಾಗಿದ್ದಾರೆ ಅಂದಮೇಲೆ ಯಾರು-ಯಾರಲ್ಲಿ ಮೋಹವನ್ನಿಡುತ್ತೀರಿ! ಇವರು ಹೋಗಿ ಇನ್ನೊಂದು ಪಾತ್ರವನ್ನು ಅಭಿನಯಿಸಬೇಕಾಗಿದೆ ಎಂಬುದನ್ನೂ ತಿಳಿದುಕೊಂಡಿದ್ದೀರಿ ಅಂದಮೇಲೆ ಅಳುವ ಅವಶ್ಯಕತೆಯೇನಿದೆ! ಪ್ರತಿಯೊಬ್ಬರ ಪಾತ್ರವು ನಿಗಧಿತವಾಗಿದೆ. ಹೇಗೆ ತಂದೆಯು ಜ್ಞಾನ ಸಾಗರ, ಆನಂದ ಸಾಗರ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ತಂದೆಯನ್ನು ಫಾಲೋ ಮಾಡಿ ಅದೇರೀತಿ ಆಗಬೇಕಾಗಿದೆ. ಸಾಗರದಿಂದ ನದಿಗಳು ಉಕ್ಕುತ್ತವೆ ಎಲ್ಲರೂ ನಂಬರ್ವಾರ್ ಇದ್ದಾರೆ. ಕೆಲವರು ಚೆನ್ನಾಗಿ ಮಳೆ ಸುರಿಸುತ್ತಾರೆ, ಅನೇಕರನ್ನು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ, ಅಂಧರಿಗೆ ಊರುಗೋಲಾಗುತ್ತಾರೆ. ತಂದೆಗೆ ಬಹಳ ಮಂದಿ ಸಹಯೋಗಿಗಳು ಬೇಕು. ತಂದೆಯು ತಿಳಿಸುತ್ತಾರೆ - ನೀವು ಅಂಧರಿಗೆ ಊರುಗೋಲಾಗಿರಿ, ಎಲ್ಲರಿಗೆ ಮಾರ್ಗವನ್ನು ತಿಳಿಸಿರಿ, ಕೇವಲ ಒಬ್ಬ ಬ್ರಾಹ್ಮಿಣಿ ಮಾತ್ರ ಅಂಧರಿಗೆ ಊರುಗೋಲಾಗುವುದಲ್ಲ, ನೀವೆಲ್ಲರೂ ಆಗಬೇಕಾಗಿದೆ. ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ, ಇದಕ್ಕೆ ಮೂರನೇ ನೇತ್ರದ ಕಥೆ ಎಂದು ಹೇಳಲಾಗುತ್ತದೆ, ಆತ್ಮಕ್ಕೆ ಇದು ದಿವ್ಯ ನೇತ್ರವಾಗಿದೆ. ಮನುಷ್ಯರಂತೂ ಏನನ್ನೂ ತಿಳಿದುಕೊಂಡಿಲ್ಲ, ತುಚ್ಛ ಬುದ್ಧಿಯವರಾಗಿ ಬಿಟ್ಟಿದ್ದಾರೆ. ನಮ್ಮ ಧರ್ಮವನ್ನು ಯಾರು ಸ್ಥಾಪನೆ ಮಾಡುತ್ತಾರೆ ಎಂಬುದನ್ನೇ ಭಾರತವಾಸಿಗಳು ತಿಳಿದುಕೊಂಡಿಲ್ಲ. ತಂದೆಯ ಜನ್ಮವು ಇಲ್ಲಿಯೇ ಆಗುತ್ತದೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಅಂದಮೇಲೆ ಅವರು ಸರ್ವವ್ಯಾಪಿಯಾಗಲು ಹೇಗೆ ಸಾಧ್ಯ! ತಂದೆ ಮತ್ತು ರಚನೆಯನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಋಷಿಮುನಿಗಳೆಲ್ಲರೂ ಸಹ ನೇತಿ-ನೇತಿ (ಗೊತ್ತಿಲ್ಲ-ಗೊತ್ತಿಲ್ಲ) ಎಂದು ಹೇಳುತ್ತಾ ಹೋದರು ಆದರೆ ಒಂದು ದೊಡ್ಡ ತಪ್ಪು ಮಾಡಿದ್ದಾರೆ - ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ನೀವು ಸಿದ್ಧ ಮಾಡಿ ತಿಳಿಸಿರಿ- ಅವರು ಸರ್ವರ ತಂದೆಯಾಗಿದ್ದಾರೆ, ಪತಿತ-ಪಾವನ, ಮುಕ್ತಿದಾತನಾಗಿದ್ದಾರೆ. ಹಳೆಯ ಪ್ರಪಂಚದಿಂದ ಹೊಸ ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ದುಃಖದ ಮಾತಿರುವುದಿಲ್ಲ, ಶಾಸ್ತ್ರಗಳಲ್ಲಿ ಏನೇನು ಬರೆದು ಬಿಟ್ಟಿದ್ದಾರೆ. ಲಕ್ಷ್ಮೀ-ನಾರಾಯಣರಿಗೂ ಸಹ ಅಲ್ಲಿ ಅವರಿಗೆ ವಿಕಾರವಿಲ್ಲದೆ ಮಕ್ಕಳು ಹೇಗೆ ಜನಿಸುವರು ಎಂದು ಕೇಳುತ್ತಾರೆ. ಅರೆ! ಅವರಿಗೆ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳು ಎಂದು ಹೇಳಲಾಗುತ್ತದೆ. ಅದು ನಿರ್ವಿಕಾರಿ ಪ್ರಪಂಚವಾಗಿದೆ, ಇದಕ್ಕೆ ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ ಅಂದಮೇಲೆ ಅಲ್ಲಿಯೂ ವಿಕಾರವಿರುತ್ತದೆ ಎಂದು ಹೇಗೆ ಹೇಳುವಿರಿ? ಮೊಟ್ಟ ಮೊದಲು ಎಲ್ಲಿಯವರೆಗೆ ತಂದೆಯನ್ನು ಅರಿತುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಮತ್ತೇನನ್ನೂ ಅರಿತುಕೊಳ್ಳಲು ಸಾಧ್ಯವಿಲ್ಲ. ಸರ್ವವ್ಯಾಪಿ ಎಂದು ಹೇಳುವುದು ಬಹಳ ದೊಡ್ಡ ತಪ್ಪಾಗಿದೆ. ತಂದೆಯನ್ನು ಅರಿತುಕೊಂಡಾಗಲೇ ಆ ತಪ್ಪಿನಿಂದ ಹೊರಬರುವರು. ನಿಶ್ಚಯ ಮಾಡಿಕೊಳ್ಳಿ - ಬಾಬಾ, ತಮ್ಮಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವುದಕ್ಕಾಗಿ ನಾವು ಪುನಃ ನಿಮ್ಮವರಾಗಿದ್ದೇವೆ. ಶಾಸ್ತ್ರಗಳಲ್ಲಿ ಏನೇನೋ ಬರೆದು ಬಿಟ್ಟಿದ್ದಾರೆ, ಲಕ್ಷ್ಮೀ-ನಾರಾಯಣರನ್ನು ಸತ್ಯಯುಗದಲ್ಲಿ ತೋರಿಸುತ್ತಾರೆ ಮತ್ತು ಬಾಲ್ಯದ ರಾಧಾಕೃಷ್ಣರನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಕೃಷ್ಣನಂತೂ ಸ್ವರ್ಗದ ರಾಜಕುಮಾರನಾಗಿದ್ದಾನೆ, ನಂತರ ಕೃಷ್ಣನದು ಪ್ರತೀ ಜನ್ಮದಲ್ಲಿ ಮುಖ ಲಕ್ಷಣಗಳು ಬದಲಾಗುತ್ತಾ ಹೋಗುತ್ತವೆ. ಒಂದೇ ರೀತಿಯ ರೂಪವು ಮತ್ತೆಂದೂ ಇರಲು ಸಾಧ್ಯವಿಲ್ಲ. ಕೃಷ್ಣನು ಮತ್ತೆ ಅದೇ ರೂಪದಿಂದ ದ್ವಾಪರ ಯುಗದಲ್ಲಿ ಬರಲು ಸಾಧ್ಯವೇ! ಇದು ಅಸಂಭವವಾಗಿದೆ.
ನಾವು ಮೂಲತಃ ಮೂಲವತನದ ನಿವಾಸಿಗಳಾಗಿದ್ದೇವೆ, ಇದು ನಮ್ಮ ಮಧುರ ಮನೆಯಾಗಿದೆ, ಅದಕ್ಕಾಗಿಯೇ ಮನುಷ್ಯರು ಭಕ್ತಿ ಮಾಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ನಮಗೆ ಶಾಂತಿ ಬೇಕೆಂದು ಹೇಳುತ್ತಾರೆ, ಆತ್ಮಕ್ಕೆ ಪಾತ್ರವನ್ನು ಅಭಿನಯಿಸುವುದಕ್ಕಾಗಿ ಕರ್ಮೇಂದ್ರಿಯಗಳು ಸಿಕ್ಕಿವೆ ಅಂದಮೇಲೆ ಶಾಂತಿಯಲ್ಲಿರಲು ಹೇಗೆ ಸಾಧ್ಯ! ಶಾಂತಿಗಾಗಿಯೇ ಹಠಯೋಗಗಳನ್ನು ಕಲಿಯುತ್ತಾರೆ, ಗುಹೆಗಳಲ್ಲಿ ಕುಳಿತುಕೊಳ್ಳುತ್ತಾರೆ. ಯಾರಾದರೂ ಒಂದು ತಿಂಗಳು ಗುಹೆಯಲ್ಲಿ ಕುಳಿತುಕೊಂಡರೆ ಅದು ಅವರಿಗಾಗಿ ಶಾಂತಿಧಾಮವೇ!! ನೀವು ತಿಳಿದುಕೊಂಡಿದ್ದೀರಿ, ನಾವೀಗ ಶಾಂತಿಧಾಮದಲ್ಲಿ ಹೋಗಿ ಮತ್ತೆ ಸುಖಧಾಮದಲ್ಲಿ ಪಾತ್ರವನ್ನು ಅಭಿನಯಿಸುತ್ತೇವೆ. ಮನುಷ್ಯರಾದರೆ ಯಾರು ಸುಖಿಯಾಗಿದ್ದಾರೆಯೋ ಅವರಿಗೆ ಇದು ಸ್ವರ್ಗವಾಗಿದೆ, ದುಃಖಿಯಾಗಿರುವವರಿಗೆ ಇದು ನರಕವಾಗಿದೆ ಎಂದು ತಿಳಿಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಸ್ವರ್ಗವು ಹೊಸ ಪ್ರಪಂಚ ಮತ್ತು ನರಕವೆಂದು ಹಳೆಯ ಪ್ರಪಂಚಕ್ಕೆ ಹೇಳಲಾಗುತ್ತದೆ. ಭಗವಾನುವಾಚ - ಈ ಭಕ್ತಿ, ಯಜ್ಞ, ತಪ, ದಾನ, ಪುಣ್ಯ ಇತ್ಯಾದಿಗಳನ್ನು ಮಾಡುವುದು ಭಕ್ತಿಮಾರ್ಗವಾಗಿದೆ, ಇದರಲ್ಲಿ ಯಾವುದೇ ಸಾರವಿಲ್ಲ. ಸತ್ಯ-ತ್ರೇತಾಯುಗಕ್ಕೆ ಬ್ರಹ್ಮನ ದಿನವೆಂದು ಹೇಳಲಾಗುತ್ತದೆ. ಬ್ರಹ್ಮನ ದಿನವೇ ನೀವು ಬ್ರಾಹ್ಮಣರ ದಿನವಾಗಿದೆ ನಂತರ ನಿಮ್ಮದು ರಾತ್ರಿಯು ಆರಂಭವಾಗುತ್ತದೆ. ನೀವು ಮೊಟ್ಟ ಮೊದಲು ಸತ್ಯಯುಗಕ್ಕೆ ಹೋಗುತ್ತೀರಿ ನಂತರ ನೀವೇ ಚಕ್ರದಲ್ಲಿ ಬರುತ್ತೀರಿ. ಬ್ರಾಹ್ಮಣ, ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರರು ನೀವೇ ಆಗುತ್ತೀರಿ. ನೀವು ಶಿವ ಭಗವಾನುವಾಚ ಎಂದು ಹೇಳುತ್ತೀರಿ ಮತ್ತು ಅವರು ಕೃಷ್ಣ ಭಗವಾನುವಾಚವೆಂದು ಹೇಳುತ್ತಾರೆ. ಬಹಳ ದೊಡ್ಡ ಅಂತರವಿದೆ. ಕೃಷ್ಣನು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾನೆ, ಕೃಷ್ಣ್ಣನ ಜೊತೆ ಇಡೀ ಸೂರ್ಯವಂಶ ಸಂಪ್ರದಾಯದವರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ ಪುನಃ ಅಂತಿಮದಲ್ಲಿ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುತ್ತಿದ್ದಾರೆ. ನೀವು ಮಕ್ಕಳು ಯಾರು ತಿಳಿದುಕೊಂಡಿದ್ದೀರೋ ಅವರಿಗೆ ಮಜಾ ಬರುತ್ತದೆ. ಹೊಸಬರಿಗೆ ಮಜಾ ಬರುವುದಿಲ್ಲ. ನೀವು ಯಾರದೇ ನಿಂದನೆ ಮಾಡುವುದಿಲ್ಲ, ತಂದೆಯು ನಿಮಗೆ ಎಷ್ಟು ಸಹಜವಾಗಿ ತಿಳಿಸುತ್ತಾರೆ. ಇಲ್ಲಿ ನೀವು ತಂದೆಯ ಸಂಗದಲ್ಲಿ ಕುಳಿತಿದ್ದಾಗ ಚೆನ್ನಾಗಿ ತಿಳಿದುಕೊಳ್ಳುತ್ತೀರಿ. ಹೊರಗಡೆ ಹೋಗುತ್ತಿದ್ದಂತೆಯೇ ಆ ಸಂಗದಲ್ಲಿ ಏನಾಗುವುದೋ ತಿಳಿಯುವುದೇ ಇಲ್ಲ. ಸಂಗದೋಷವು ಬಹಳ ಕೆಟ್ಟದ್ದಾಗಿದೆ. ಸ್ವರ್ಗದಲ್ಲಿ ಈ ರೀತಿಯ ಮಾತುಗಳಿರುವುದಿಲ್ಲ. ಅದರ ಹೆಸರೇ ಆಗಿದೆ - ಸ್ವರ್ಗ, ವೈಕುಂಠ, ಸುಖಧಾಮ. ಅಲ್ಲಿಯೂ ಅಸುರರಿದ್ದರೆಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ, ಈಗ ನಿಮಗೆ ಅರ್ಥವಾಗಿದೆ - ನಾವು ವಿಶ್ವದ ಮಾಲೀಕರಾಗಿದ್ದೆವು. ಅಲ್ಲಿ ಆಕಾಶ, ಭೂಮಿ ಯಾವುದರಲ್ಲಿಯೂ ವಿಭಾಗಗಳಿರುವುದಿಲ್ಲ. ಈಗಂತೂ ಎಷ್ಟೊಂದು ವಿಭಜನೆಯಾಗಿದೆ! ತಮ್ಮ-ತಮ್ಮ ಎಲ್ಲೆಗಳನ್ನು ಹಾಕಿಕೊಳ್ಳುತ್ತಾರೆ. ಪ್ರಪಂಚದಲ್ಲಿ ಎಷ್ಟೊಂದು ಜಗಳವಾಗುತ್ತಿದೆ. ಯಾರೇ ಬಂದರೂ ಸಹ ಮೊಟ್ಟ ಮೊದಲು ಅವರಿಗೆ ತಿಳಿಸಿ- ತಂದೆ ಯಾರು, ಯಾರಿಗೆ ಭಗವಂತನೆಂದು ಹೇಳಲಾಗುತ್ತದೆ? ಬ್ರಹ್ಮಾ-ವಿಷ್ಣು-ಶಂಕರನು ದೇವತೆಗಳಾಗಿದ್ದಾರೆ, ಭಗವಂತನು ಒಬ್ಬರೇ ಆಗಿದ್ದಾರೆ, 10 ಮಂದಿಯಲ್ಲ. ಕೃಷ್ಣನು ಭಗವಂತನಾಗಲು ಸಾಧ್ಯವಿಲ್ಲ, ಭಗವಂತನು ಹಿಂಸೆಯನ್ನು ಹೇಗೆ ಕಲಿಸುವರು! ಭಗವಾನುವಾಚ - ಕಾಮ ಮಹಾಶತ್ರುವಾಗಿದೆ, ಅದನ್ನು ಜಯಿಸುವುದಕ್ಕಾಗಿಯೇ ಪ್ರತಿಜ್ಞೆ ಮಾಡಿರಿ. ಶ್ರೀರಕ್ಷೆಯನ್ನು ಕಟ್ಟಿಕೊಳ್ಳಿ, ಇದು ಈಗಿನ ಮಾತಾಗಿದೆ. ಏನೆಲ್ಲವೂ ಕಳೆದು ಹೋಗಿದೆಯೋ ಅದು ಪುನಃ ಭಕ್ತಿಮಾರ್ಗದಲ್ಲಿ ಆಗುವುದು. ದೀಪಾವಳಿಯಂದು ಮಹಾಲಕ್ಷ್ಮಿಯ ಪೂಜೆ ಮಾಡುತ್ತಾರೆ ಆದರೆ ಲಕ್ಷ್ಮೀ-ನಾರಾಯಣ ಇಬ್ಬರು ಒಟ್ಟಿಗೆ ಇದ್ದಾರೆಂಬುದು ಯಾರಿಗಾದರೂ ತಿಳಿದಿದೆಯೇ? ಲಕ್ಷ್ಮಿಗೆ ಹಣವೆಲ್ಲಿಂದ ಸಿಗುವುದು? ಸಂಪಾದನೆ ಮಾಡುವವರು ಪುರುಷನಾಗಿರುತ್ತಾರಲ್ಲವೆ ಆದರೆ ಲಕ್ಷ್ಮಿಯ ಹೆಸರು ಗಾಯನವಿದೆ - ಮೊದಲು ಲಕ್ಷ್ಮಿ ನಂತರ ನಾರಾಯಣ. ಲಕ್ಷ್ಮಿಯನ್ನು ಪ್ರತ್ಯೇಕವೆಂದು ತಿಳಿದುಕೊಳ್ಳುತ್ತಾರೆ. ಲಕ್ಷ್ಮಿಗೂ ನಾಲ್ಕು ಭುಜಗಳನ್ನು ತೋರಿಸುತ್ತಾರೆ. ವಾಸ್ತವದಲ್ಲಿ ಎರಡು ಭುಜ ಲಕ್ಷ್ಮಿಯದು, ಎರಡು ಭುಜ ನಾರಾಯಣದು. ಆದರೆ ಅವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ನೀವೀಗ ವಿವರವಾಗಿ ತಿಳಿದುಕೊಂಡಿದ್ದೀರಿ.
ಬಾಲ್ಯದ ದಿನಗಳನ್ನು ಮರೆಯಬಾರದು ಎಂದು ಗೀತೆಯನ್ನು ಕೇಳಿದಿರಿ, ಆತ್ಮವು ಕೇಳುತ್ತದೆ - ಬಾಬಾ, ನಮಗೆ ಈಗ ಸ್ಮೃತಿ ಬಂದಿದೆ ಎಂದು. ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯೊಂದಿಗೆ ಮಾತನಾಡಬೇಕು. ಅಮೃತವೇಳೆ ತಂದೆಯನ್ನು ನೆನಪು ಮಾಡುವುದು ಒಳ್ಳೆಯದಲ್ಲವೆ. ಸಾಯಂಕಾಲದ ಸಮಯದಲ್ಲಿ ಏಕಾಂತದಲ್ಲಿ ಕುಳಿತುಕೊಳ್ಳಿ. ಭಲೆ ಪರಸ್ಪರ ಸ್ತ್ರೀ-ಪುರುಷರು ಇಬ್ಬರು ಒಟ್ಟಿಗೆ ಇದ್ದರೂ ಸಹ ಇದೇ ಮಾತನಾಡುತ್ತಾ ಇರಿ – ಶಿವ ತಂದೆಯು ಬ್ರಹ್ಮಾರವರ ತನುವಿನಿಂದ ಏನು ಹೇಳುತ್ತಾರೆ, ನಾವು ಪೂಜ್ಯರಾದಾಗ ನನ್ನನ್ನು ನೆನಪು ಮಾಡುತ್ತಿರಲಿಲ್ಲ. ಯಾವಾಗ ಪೂಜಾರಿಗಳಾಗುತ್ತೇವೆಯೋ ಆಗ ತಂದೆಯನ್ನು ನೆನಪು ಮಾಡುತ್ತೇವೆ. ಹೀಗೆ ಮಾತನಾಡಿಕೊಳ್ಳಬೇಕು. ಯಾರಾದರೂ ಕೇಳಿಸಿಕೊಂಡರೆ ಆಶ್ಚರ್ಯಚಕಿತರಾಗುವರು. ನಾವು ಅರ್ಧಕಲ್ಪ ಕಾಮ ಚಿತೆಯನ್ನು ಏರಿ ಸುಟ್ಟು ಭಸ್ಮವಾಗಿ ಬಿಟ್ಟಿದ್ದೆವು. ಸ್ಮಶಾನ ಯೋಗ್ಯರಾಗಿ ಬಿಟ್ಟಿದ್ದೆವು ನಾವೀಗ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಬೇಕಾಗಿದೆ, ಸ್ವರ್ಗದಲ್ಲಿ ಹೋಗಬೇಕಾಗಿದೆ. ಇದು ಹಳೆಯ ಪ್ರಪಂಚವಾಗಿದೆ. ಭಾರತವಾಸಿಗಳು ಇದೇ ಸ್ವರ್ಗವೆಂದು ತಿಳಿದುಕೊಳ್ಳುತ್ತಾರೆ. ಇದೇ ಸ್ವರ್ಗವಂತೂ ಸತ್ಯಯುಗದಲ್ಲಿರುತ್ತದೆ. ಸ್ವರ್ಗದಲ್ಲಿ ದೇವಿ-ದೇವತೆಗಳ ರಾಜ್ಯವಿತ್ತು, ಇಲ್ಲಂತೂ ಮಾಯೆಯ ಆಡಂಬರವಿದೆ. ಈಗ ತಂದೆಯು ತಿಳಿಸುತ್ತಾರೆ - ಸಂಗದೋಷದಲ್ಲಿ ಬಂದು ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳಬೇಡಿ ಇಲ್ಲದಿದ್ದರೆ ಬಹಳ ಪಶ್ಚಾತ್ತಾಪ ಪಡುವಿರಿ. ಪರೀಕ್ಷೆಯ ಫಲಿತಾಂಶವು ಹೊರಬಂದಾಗ ಎಲ್ಲವೂ ಅರ್ಥವಾಗುತ್ತದೆ. ಮೊದಲು ಮಕ್ಕಳು ಧ್ಯಾನದಲ್ಲಿ ಹೋಗಿ ಇವರು ರಾಣಿಯಾಗುತ್ತಾರೆ, ಇವರು ದಾಸಿಯಾಗುತ್ತಾರೆ ಎಂದು ಎಲ್ಲವನ್ನೂ ತಿಳಿಸುತ್ತಿದ್ದರು ನಂತರ ತಂದೆಯು ಅದನ್ನೂ ನಿಲ್ಲಿಸಿ ಬಿಟ್ಟರು. ಹಾಗೆಯೇ ಅಂತಿಮದಲ್ಲಿಯೂ ಸಹ ನಾವು ತಂದೆಯ ಸೇವೆಯನ್ನು ಎಷ್ಟು ಮಾಡಿದೆವು. ಎಷ್ಟು ಮಂದಿಯನ್ನು ನಮ್ಮ ಸಮಾನ ಮಾಡಿಕೊಂಡೆವು ಎಂಬುದೆಲ್ಲವೂ ಅರ್ಥವಾಗಿ ಬಿಡುವುದು. ಎಲ್ಲವೂ ನೆನಪಿಗೆ ಬರುವುದು. ಸಾಕ್ಷಾತ್ಕಾರವಿಲ್ಲದೆ ಧರ್ಮರಾಜನೂ ಸಹ ಶಿಕ್ಷೆ ಕೊಡಲು ಸಾಧ್ಯವಿಲ್ಲ. ಮಕ್ಕಳಿಗೆ ಮತ್ತೆ-ಮತ್ತೆ ತಿಳಿಸಿದ್ದಾರೆ - ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ ಎಂದು. ತಂದೆಯು ಬಂದು ಮಧುರಾತಿ ಮಧುರ ವೃಕ್ಷದ ಸಸಿಯನ್ನು ನಾಟಿ ಮಾಡುತ್ತಾರೆ. ಆ ಸರ್ಕಾರದವರು ವೃಕ್ಷಗಳ ಸಸಿಯನ್ನು ನೆಡುತ್ತಾರೆ, ಉತ್ಸವವನ್ನು ಆಚರಿಸುತ್ತಾರೆ. ಇಲ್ಲಿ ಹೊಸ ಪ್ರಪಂಚದ ನಾಟಿ ಮಾಡಲಾಗುತ್ತಿದೆ ಅಂದಮೇಲೆ ಇಂತಹ ತಂದೆಯನ್ನು ಮರೆಯಬೇಡಿ, ತಂದೆಯ ಸೇವೆಯಲ್ಲಿ ತೊಡಗಿರಿ. ಇಲ್ಲದಿದ್ದರೆ ಅಂತಿಮದಲ್ಲಿ ಬಹಳ ಪಶ್ಚಾತ್ತಾಪ ಪಡಬೇಕಾಗುವುದು. ಈಗ ಆಸ್ತಿಯನ್ನು ತೆಗೆದುಕೊಳ್ಳದಿದ್ದರೆ ಕಲ್ಪ-ಕಲ್ಪಾಂತರವೂ ಇದೇರೀತಿ ಆಗಿ ಬಿಡುವುದು. ಆದ್ದರಿಂದ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಹೇಗೆ ತಂದೆಯು ಜ್ಞಾನ, ಆನಂದ, ಪ್ರೀತಿಯ ಸಾಗರನಾಗಿದ್ದಾರೆ ಅದೇರೀತಿ ತಂದೆಯ ಸಮಾನರಾಗಬೇಕು ಮತ್ತು ತಮ್ಮ ಸಮಾನರನ್ನಾಗಿ ಮಾಡಿಕೊಳ್ಳುವ ಸೇವೆ ಮಾಡಬೇಕಾಗಿದೆ. ಎಲ್ಲರಿಗೆ ಜ್ಞಾನದ ಮೂರನೇ ನೇತ್ರವನ್ನು ಕೊಡಬೇಕಾಗಿದೆ.
2. ಕೊನೆಯಲ್ಲಿ ಪಶ್ಚಾತ್ತಾಪ ಪಡುವಂತಹ ಯಾರದೇ ಸಂಗ ಮಾಡಬಾರದು. ಸಂಗದೋಷವು ಬಹಳ ಕೆಟ್ಟದ್ದಾಗಿದೆ ಆದ್ದರಿಂದ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕಾಗಿದೆ. ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ತಂದೆಗೆ ಮಾಡಿ ಮಾಡಿಸುವವರು ಎಂದು ಹೇಳಲಾಗುತ್ತದೆ. ನೀವು ಮಾಲೀಕನ ಮಕ್ಕಳಾಗಿದ್ದೀರಿ. ಈ ಸೃಷ್ಟಿಯಲ್ಲಿ ನಿಮ್ಮದು ಶ್ರೇಷ್ಠಾತಿ ಶ್ರೇಷ್ಠ ಸ್ಥಾನವಿದೆ. ನೀವು ಮಕ್ಕಳಿಗೆ ನಶೆಯಿರಬೇಕು ನಾವು ಮಾಲೀಕನ ಮಕ್ಕಳು, ಅವರ ಮತದಂತೆ ಈಗ ಪುನಃ ನಮ್ಮ ರಾಜ್ಯಭಾಗ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಅದೂ ಸಹ ಯಾರ ಬುದ್ಧಿಯಲ್ಲಿ ನೆನಪಿರುವುದಿಲ್ಲ. ಪ್ರತಿಯೊಂದು ಸೇವಾಕೇಂದ್ರದ ಮಕ್ಕಳಿಗಾಗಿ ಹೇಳುತ್ತಾರೆ - ಅನೇಕ ಸೇವಾಕೇಂದ್ರಗಳಿವೆ, ಅನೇಕ ಮಕ್ಕಳು ಬರುತ್ತಾರೆ. ಪ್ರತಿಯೊಬ್ಬರ ಬುದ್ಧಿಯಲ್ಲಿ ಸದಾ ನೆನಪಿರಲಿ - ನಾವು ತಂದೆಯ ಶ್ರೀಮತದಂತೆ ಪುನಃ ವಿಶ್ವದಲ್ಲಿ ಶಾಂತಿ ಸುಖದ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆ. ಸುಖ ಮತ್ತು ಶಾಂತಿ – ಇವೆರಡು ಶಬ್ದಗಳನ್ನೇ ನೆನಪು ಮಾಡಬೇಕಾಗಿದೆ. ನೀವು ಮಕ್ಕಳಿಗೆ ಎಷ್ಟೊಂದು ಜ್ಞಾನವು ಸಿಗುತ್ತದೆ ಅಂದಮೇಲೆ ನಿಮ್ಮ ಬುದ್ಧಿಯಲ್ಲಿ ಎಷ್ಟೊಂದು ವಿಶಾಲವಾಗಿರಬೇಕು. ಇದರಲ್ಲಿ ಮಂದ ಬುದ್ಧಿಯು ಕೆಲಸ ಮಾಡುವುದಿಲ್ಲ. ತಮ್ಮನ್ನು ಪ್ರಭುವಿನ ಸಂತಾನರೆಂದು ತಿಳಿದಾಗ ಪಾಪವು ಸಮಾಪ್ತಿಯಾಗುತ್ತದೆ. ಅನೇಕರಿಗೆ ಇಡೀ ದಿನದಲ್ಲಿ ತಂದೆಯ ನೆನಪೇ ಇರುವುದಿಲ್ಲ. ತಂದೆಯು ಕೇಳುತ್ತಾರೆ - ನಿಮ್ಮ ಬುದ್ಧಿಯು ಏಕೆ ಮಂದವಾಗುತ್ತದೆ? ಸೇವಾಕೇಂದ್ರಗಳಲ್ಲಿ ಇಂತಿಂತಹ ಮಕ್ಕಳು ಬರುತ್ತಾರೆ, ನಾವು ಶ್ರೀಮತದನುಸಾರ ವಿಶ್ವದಲ್ಲಿ ದೈವೀ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ಅವರ ಬುದ್ಧಿಯಲ್ಲಿರುವುದೇ ಇಲ್ಲ. ಆಂತರ್ಯದಲ್ಲಿ ಈ ಖುಷಿ ನಶೆಯಿರಬೇಕು. ಮುರಳಿಯನ್ನು ಕೇಳಿ ರೋಮಾಂಚನವಾಗಬೇಕು. ಇಲ್ಲಿಯಂತೂ ತಂದೆ ನೋಡುತ್ತಾರೆ ಮಕ್ಕಳಲ್ಲಿ ಇನ್ನೂ ಇನ್ನೂ ರೋಮಾಂಚನ ಇರುವುದೇ ಇಲ್ಲ, ಅನೇಕರಿಗೆ ಬುದ್ಧಿಯಲ್ಲಿ ನಾವು ಶ್ರೀಮತದಂತೆ ತಂದೆಯ ನೆನಪಿನಿಂದ ವಿಕರ್ಮ ವಿನಾಶ ಮಾಡಿಕೊಂಡು ನಮ್ಮ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ನೆನಪಿರುವುದೇ ಇಲ್ಲ. ಪ್ರತಿನಿತ್ಯವೂ ತಂದೆ ತಿಳಿಸುತ್ತಾರೆ - ಮಕ್ಕಳೇ, ನೀವು ಯೋಧರಾಗಿದ್ದೀರಿ, ರಾವಣನ ಮೇಲೆ ಜಯಗಳಿಸುವವರಿದ್ದೀರಿ. ತಂದೆಯು ನಿಮ್ಮನ್ನು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ ಆದರೆ ಮಕ್ಕಳಿಗೆ ಇಷ್ಟೊಂದು ನಶೆ ಹಾಗೂ ಖುಷಿ ಇರುವುದೇ ಇಲ್ಲ, ಯಾವುದೇ ವಸ್ತು ಸಿಗಲಿಲ್ಲವೆಂದರೆ ಮುನಿಸಿಕೊಳ್ಳುತ್ತಾರೆ. ಮಕ್ಕಳ ಸ್ಥಿತಿಯನ್ನು ನೋಡಿ ತಂದೆಗೆ ಆಶ್ಚರ್ಯವೆನಿಸುತ್ತದೆ. ಮಾಯೆಯ ಜಂಜಾಟದಲ್ಲಿ ಸಿಕ್ಕಿಕೊಳ್ಳುತ್ತಾರೆ. ನಿಮ್ಮ ಗೌರವ, ನಿಮ್ಮ ಕಾರ್ಯವ್ಯವಹಾರ, ನಿಮ್ಮ ಖುಷಿ ಅದ್ಭುತವಾಗಿರಬೇಕು. ಯಾರು ಮಿತ್ರ ಸಂಬಂಧಿಗಳನ್ನು ಮರೆಯುವುದಿಲ್ಲವೋ ಅವರೆಂದೂ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ. ಅವರೇನು ಪದವಿ ಪಡೆಯುತ್ತಾರೆ! ಆಶ್ಚರ್ಯವೆನಿಸುತ್ತದೆ.
ತಾವು ಮಕ್ಕಳಲ್ಲಂತೂ ಬಹಳ ನಶೆಯಿರಬೇಕು. ತಮ್ಮನ್ನು ಮಾಲೀಕನ ಸಂತಾನರೆಂದು ತಿಳಿದರೆ ಏನನ್ನೂ ಬೇಡುವ ಇಚ್ಛೆ ಇರುವುದಿಲ್ಲ. ತಂದೆ ನಮಗೆ ಅಪಾರ ಖಜಾನೆ ಕೊಡುತ್ತಾರೆ, ಅದರಿಂದ 21 ಜನ್ಮಗಳವರೆಗೆ ಏನನ್ನೂ ಬೇಡಬೇಕಾಗಿಲ್ಲ. ಇಷ್ಟೊಂದು ನಶೆಯಿರಬೇಕು. ಆದರೆ ಸಂಪೂರ್ಣ ಮಂದ ಬುದ್ಧಿಯವರಾಗಿದ್ದಾರೆ. ನೀವು ಮಕ್ಕಳ ಬುದ್ಧಿಯಂತೂ 7 ಅಡಿ ಎತ್ತರವಿರಬೇಕು. ಮನುಷ್ಯರ ಎತ್ತರ ಹೆಚ್ಚೆಂದರೆ 6-7 ಅಡಿಯಿರುತ್ತದೆ. ತಂದೆ ಮಕ್ಕಳನ್ನು ಎಷ್ಟು ಉಲ್ಹಾಸದಲ್ಲಿ ತರುತ್ತಾರೆ. ಮಕ್ಕಳೇ, ನೀವು ಪ್ರಭುವಿನ ಸಂತಾನರಾಗಿದ್ದೀರಿ, ಪ್ರಪಂಚದವರು ಏನನ್ನೂ ತಿಳಿದುಕೊಂಡಿಲ್ಲ, ಅವರಿಗೆ ನೀವು ತಿಳಿಸುತ್ತೀರಿ. ನೀವು ಕೇವಲ ಇಷ್ಟನ್ನು ತಿಳಿದುಕೊಳ್ಳಿ, ನಾವು ತಂದೆಯ ಸನ್ಮುಖದಲ್ಲಿ ಕುಳಿತಿದ್ದೇವೆ. ತಂದೆಯನ್ನು ನೆನಪು ಮಾಡುತ್ತಿದ್ದರೆ ವಿಕರ್ಮ ವಿನಾಶವಗುತ್ತದೆ. ಮಕ್ಕಳೇ ಮಾಯೆಯು ನಿಮ್ಮ ಬಹಳ ಕಠಿಣ ಶತ್ರುವಾಗಿದೆ. ನಿಮಗೆ ಶತ್ರುವಾದಷ್ಟು ಅನ್ಯರಿಗೆ ಆಗಿಲ್ಲ. ಮನುಷ್ಯರಂತೂ ಅರಿತುಕೊಂಡಿಲ್ಲ. ತುಚ್ಛ ಬುದ್ಧಿಯವರಾಗಿದ್ದಾರೆ. ತಂದೆ ಪ್ರತಿನಿತ್ಯವೂ ಮಕ್ಕಳಿಗೆ ತಿಳಿಸುತ್ತಾರೆ - ತಾವು ಮಾಲೀಕನ ಸಂತಾನರಾಗಿದ್ದಿರಿ, ತಂದೆಯನ್ನು ನೆನಪು ಮಾಡಿರಿ ಹಾಗೂ ಅನ್ಯರನ್ನು ನಿಮ್ಮ ಸಮಾನ ಮಾಡಿಕೊಳ್ಳಿ. ನೀವು ಎಲ್ಲರಿಗೂ ಇದನ್ನು ತಿಳಿಸಿ - ಭಗವಂತನು ಸತ್ಯ ಸಾಹೇಬರಾಗಿದ್ದಾರೆ. ಅಂದ ಮೇಲೆ ಅವರ ಮಕ್ಕಳಾದ ನಾವು ಸಾಹೇಬನ ಸಂತಾನರಾದೆವು. ಇದನ್ನು ನೀವು ಮಕ್ಕಳು ನಡೆದಾಡುತ್ತಾ ತಿರುಗಾಡುತ್ತಾ ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಸೇವೆಯಲ್ಲಿ ದಧೀಚಿ ಋಷಿಯ ಸಮಾನ ಮೂಳೆ ಮೂಳೆಯನ್ನು ಸವೆಸಬೇಕು. ಇಲ್ಲಿ ಮೂಳೆಗಳನ್ನು ಸವೆಸುವುದೇನು, ಇನ್ನೂ ಅಪಾರ ಸುಖ-ವೈಭವ ಬೇಕು. ಈ ವಸ್ತು ವೈಭವಗಳಿಂದ ಆರೋಗ್ಯ ಸರಿಹೋಗುವುದಿಲ್ಲ. ಆರೋಗ್ಯಕ್ಕಾಗಿ ನೆನಪಿನ ಯಾತ್ರೆ ಬೇಕು. ಆ ಖುಷಿಯೂ ಇರಬೇಕು, ಅರೆ! ನಾವಂತೂ ಕಲ್ಪ-ಕಲ್ಪವೂ ಮಾಯೆಯಿಂದ ಸೋಲುತ್ತಾ ಬಂದೆವು, ಈಗ ಜಯಗಳಿಸುತ್ತೇವೆ. ತಂದೆ ಬಂದು ವಿಜಯವನ್ನು ಪ್ರಾಪ್ತಿ ಮಾಡಿಸುತ್ತಾರೆ. ಈಗ ಭಾರತದಲ್ಲಿ ಎಷ್ಟೊಂದು ದುಃಖವಿದೆ, ಹೆಚ್ಚಿನ ದುಃಖ ಕೊಡುವವನು ರಾವಣನಾಗಿದ್ದಾನೆ. ವಿಮಾನವಿದೆ, ಮಹಲುಗಳಿವೆ, ವಾಹನವಿದೆ ನಮಗೆ ಇದೇ ಸ್ವರ್ಗವೆಂದು ಮನುಷ್ಯರು ತಿಳಿಯುತ್ತಾರೆ. ಆದರೆ ಈಗ ಈ ಪ್ರಪಂಚವೇ ಸಮಾಪ್ತಿ ಆಗುತ್ತದೆ ಎಂದು ಅವರಿಗೆ ತಿಳಿದಿಲ್ಲ. ಲಕ್ಷಾಂತರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ಆಣೆಕಟ್ಟು ಮೊದಲಾದುದನ್ನು ಕಟ್ಟಿಸುತ್ತಾರೆ. ಎಷ್ಟೊಂದು ಯುದ್ಧದ ಸಾಮಾನುಗಳನ್ನು ಖರೀದಿಸುತ್ತಾರೆ, ಇವು ಪರಸ್ಪರ ಸಮಾಪ್ತಿ ಮಾಡುವಂತಹದಾಗಿದೆ. ಧಣಿಯಿಲ್ಲದವರಾಗಿದ್ದಾರೆ! ಎಷ್ಟು ಜಗಳ ಕಲಹ ಮಾಡುತ್ತಾರೆ, ಮಾತೇ ಕೇಳಬೇಡಿ! ಎಷ್ಟು ಕೊಳಕಾಗಿದೆ, ಇದಕ್ಕೆ ನರಕವೆಂದು ಹೇಳುತ್ತಾರೆ. ಸ್ವರ್ಗದ ಮಹಿಮೆ ಎಷ್ಟಿದೆ. ಬಡೋದಾ ಮಹಾರಾಣಿಯನ್ನು ಕೇಳಿ- ಮಹಾರಾಜ ಎಲ್ಲಿಗೆ ಹೋದರು? ಸ್ವರ್ಗವಾಸಿ ಆದರು ಎಂದು ಹೇಳುತ್ತಾರೆ. ಯಾವುದಕ್ಕೆ ಸ್ವರ್ಗ ಎಂದು ಹೇಳುತ್ತಾರೆ ಎನ್ನುವುದು ಗೊತ್ತಿಲ್ಲ. ಎಷ್ಟು ಘೋರ ಅಂಧಕಾರವಿದೆ, ನೀವೂ ಸಹ ಘೋರ ಅಂಧಕಾರದಲ್ಲಿದ್ದಿರಿ. ಈಗ ನಿಮಗೆ ಈಶ್ವರೀಯ ಬುದ್ಧಿಯನ್ನು ಕೊಡುತ್ತೇನೆ. ತಮ್ಮನ್ನು ಈಶ್ವರೀಯ ಸಂತಾನಮಾಲಿಕನ ಮಕ್ಕಳೆಂದು ತಿಳಿಯಿರಿ, ಸಾಹೇಬ ತಂದೆಯು ರಾಜಕುಮಾರ ರಾಜಕುಮಾರಿ ಮಾಡಲು ಓದಿಸುತ್ತಿದ್ದಾರೆ. ತಂದೆಯು ಗಾದೆ ಮಾತನ್ನು ತಿಳಿಸುತ್ತಾರೆ- ಕುರಿಗಳಿಗೇನು ತಿಳಿಯುತ್ತದೆ.. . . ಈಗ ನೀವು ತಿಳಿಯುತ್ತೀರಿ. ಮನುಷ್ಯರೆಲ್ಲರೂ ಕುರಿ ಮೇಕೆಗಳ ತರಹ ಇದ್ದಾರೆ. ಏನನ್ನೂ ತಿಳಿದುಕೊಂಡಿಲ್ಲ. ಕುಳಿತು ಏನೋ ಉಪಮೆ ಮಾಡುತ್ತಾರೆ. ನಿಮ್ಮ ಬುದ್ಧಿಯಲ್ಲಿ ಆದಿ-ಮಧ್ಯ-ಅಂತ್ಯದ ರಹಸ್ಯವಿದೆ. ನಾವು ವಿಶ್ವದಲ್ಲಿ ಸುಖ ಶಾಂತಿಯನ್ನು ಸ್ಥಾಪನೆ ಮಾಡುತ್ತಿದ್ದೇವೆಂದು ಬಹಳ ಚೆನ್ನಾಗಿ ನೆನಪು ಮಾಡಿ. ಇದರಲ್ಲಿ ಯಾರು ಸಹಯೋಗಿಗಳಾಗುವರೋ ಅವರೇ ಶ್ರೇಷ್ಠ ಪದವಿ ಪಡೆಯುತ್ತಾರೆ. ಯಾರ್ಯಾರು ಸಹಯೋಗಿಗಳಾಗುತ್ತಾರೆ ಎನ್ನುವುದನ್ನು ನೀವು ನೋಡುತ್ತೀರಿ. ಪ್ರತಿಯೊಬ್ಬರು ನಿಮ್ಮನ್ನು ನೀವು ಕೇಳಿಕೊಳ್ಳಿ - ನಾನೇನು ಮಾಡುತ್ತಿದ್ದೇನೆ? ನಾನು ಕುರಿ ಮೇಕೆ ಅಂತೂ ಅಲ್ಲ ತಾನೆ? ನೋಡಿ ಮನುಷ್ಯರಲ್ಲಿ ಎಷ್ಟು ಅಹಂಕಾರ ಇರುತ್ತದೆ. ಗುರ್ ಗುರ್ ಎನ್ನುತ್ತಾರೆ. ನಿಮಗೆ ತಂದೆಯ ನೆನಪು ಇರಬೇಕು. ಸೇವೆಯಲ್ಲಿ ಮೂಳೆಗಳನ್ನು ಸವೆಸಬೇಕು. ಯಾರನ್ನೂ ಬೇಸರಪಡಿಸಬಾರದು, ನೀವೂ ಆಗಬಾರದು. ಮತ್ತು ಅಹಂಕಾರವೂ ಬರಬಾರದು. ನಾವಿದನ್ನು ಮಾಡುತ್ತೇವೆ, ನಾವು ಬುದ್ಧಿವಂತರಾಗಿದ್ದೇವೆ, ಈ ಸಂಕಲ್ಪ ಬರುವುದೂ ದೇಹಾಭಿಮಾನವಾಗಿದೆ. ಅವರ ಚಲನೆಯೇ ಈ ರೀತಿ ಆಗಿಬಿಡುತ್ತದೆ, ನಾಚಿಕೆಯಾಗುತ್ತದೆ ಇಲ್ಲವಾದರೆ ನಿಮ್ಮಂತಹ ಸುಖ ಬೇರೆ ಯಾರಿಗೂ ಇರಲು ಸಾಧ್ಯವಿಲ್ಲ. ಬುದ್ಧಿಯಲ್ಲಿ ನೆನಪಿದ್ದರೆ ನೀವು ಬಹಳ ಹೊಳೆಯುತ್ತಿರುತ್ತೀರಿ. ಸೇವಾಕೇಂದ್ರಗಳಲ್ಲಿ ಕೆಲವರು ಒಳ್ಳೆಯ ಮಹಾರಥಿಗಳು,ಕೆಲವರು ಕುದುರೆ ಸವಾರರು ಹಾಗೂ ಕಾಲಾಳುಗಳೂ ಇದ್ದಾರೆ. ಇದರಲ್ಲಿ ಬಹಳ ವಿಶಾಲ ಬುದ್ಧಿ ಬೇಕು. ಎಂಥೆಂಥಹ ಬ್ರಾಹ್ಮಣಿಯರಿದ್ದಾರೆ ಕೆಲವು ಬ್ರಾಹ್ಮಣಿಯರು ಬಹಳ ಸಹಯೋಗಿಗಳಾಗಿದ್ದಾರೆ, ಸೇವೆಯಲ್ಲಿ ಎಷ್ಟು ಖುಷಿಯಿರುತ್ತದೆ. ನಿಮಗೆ ನಶೆಯಿರಬೇಕು - ಸೇವೆ ಮಾಡದಿದ್ದರೆ ಯಾವ ಪದವಿ ಪಡೆಯುತ್ತೀರಿ! ತಂದೆ ತಾಯಿಗೆ ಮಕ್ಕಳ ಪ್ರತಿ ಗೌರವವಿರುತ್ತದೆ ಆದರೆ ಅವರು (ಮಕ್ಕಳು) ತಮಗೆ ತಾವೇ ಗೌರವವನ್ನಿಟ್ಟುಕೊಳ್ಳುವುದಿಲ್ಲವಾದರೆ ಅದಕ್ಕೆ ತಂದೆ ಏನು ಹೇಳುತ್ತಾರೆ!
ನೀವು ಮಕ್ಕಳು ಬಹಳ ಸರಳವಾಗಿ ತಂದೆಯ ಸಂದೇಶ ಎಲ್ಲರಿಗೂ ಕೊಡಬೇಕು. ತಿಳಿಸಿ- ತಂದೆ ಹೇಳುತ್ತಾರೆ - ಮನ್ಮನಾಭವ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಕೆಲವು ಶಬ್ದಗಳು ಸತ್ಯವಾಗಿವೆ. ಈ ಪ್ರಪಂಚವು ಎಷ್ಟು ದೊಡ್ಡದಾಗಿದೆ. ಅನೇಕ ಮನುಷ್ಯರಿದ್ದಾರೆ ಆದರೆ ಕೊನೆಗೆ ಇವರ್ಯಾರೂ ಇರುವುದಿಲ್ಲ. ಯಾವುದೇ ಖಂಡದ ಹೆಸರು ಗುರುತು ಇರುವುದಿಲ್ಲ. ನಾವು ಸ್ವರ್ಗದ ಮಾಲೀಕರಾಗುತ್ತೇವೆ, ಹಗಲು-ರಾತ್ರಿ ಈ ಖುಷಿಯಿರಬೇಕು. ಜ್ಞಾನವಂತೂ ಬಹಳ ಸಹಜವಾಗಿದೆ, ಇದನ್ನು ತಿಳಿಸಿಕೊಡುವವರೂ ಸಶ ಬಹಳ ರಮಣೀಕರಾಗಿರಬೇಕು. ಅನೇಕ ಪ್ರಕಾರದ ಯುಕ್ತಿಗಳಿವೆ. ತಂದೆಯು ತಿಳಿಸುತ್ತಾರೆ - ನಾನು ನಿಮ್ಮನ್ನು ಬಹಳ ಕುಶಲತೆಯುಳ್ಳವರನ್ನಾಗಿ ಮಾಡುತ್ತೇನೆ. ಅಂದಾಗ ಮಕ್ಕಳ ಬುದ್ಧಿಯಲ್ಲಿ ನೆನಪಿರಬೇಕು - ಓಹೋ! ಬೇಹದ್ದಿನ ತಂದೆಯು ನಮಗೆ ಸಲಹೆ ನೀಡುತ್ತಾರೆ. ನೀವು ಧಾರಣೆ ಮಾಡಿ ಅನ್ಯರಿಗೂ ತಂದೆಯ ಪರಿಚಯ ಕೊಡತ್ತೀರಿ. ನಿಮ್ಮ ಹೊರತು ಇಡೀ ಪ್ರಪಂಚದವರೆಲ್ಲರೂ ನಾಸ್ತಿಕರಾಗಿದ್ದಾರೆ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಕೆಲವರು ನಾಸ್ತಿಕರೂ ಇದ್ದಾರಲ್ಲವೆ. ತಂದೆಯನ್ನು ನೆನಪೇ ಮಾಡುವುದಿಲ್ಲ. ಬಾಬಾ, ನಮಗೆ ನೆನಪು ಮರೆತುಹೋಗುತ್ತದೆ ಎಂದು ತಾವೇ ಹೇಳುತ್ತಾರೆ ಅಂದ ಮೇಲೆ ನಾಸ್ತಿಕರಾದರಲ್ಲವೆ! ಇಂತಹ ತಂದೆ ಯಾರು ಮಾಲೀಕರಮಕ್ಕಳನ್ನಾಗಿ ಮಾಡುತ್ತಾರೆ, ಅವರ ನೆನಪೇ ಬರುವುದಿಲ್ಲವೆ! ಇದನ್ನು ತಿಳಿದುಕೊಳ್ಳುವವರಲ್ಲಿಯೂ ಬಹಳ ವಿಶಾಲ ಬುದ್ಧಿಯು ಬೇಕು. ತಂದೆ ತಿಳಿಸುತ್ತಾರೆ - ನಾನು ಪ್ರತಿ 5ಂಂಂ ವರ್ಷಗಳ ನಂತರ ಬರುತ್ತೇನೆ. ನಿಮ್ಮ ಮೂಲಕವೇ ಕಾರ್ಯ ಮಾಡಿಸುತ್ತೇನೆ. ನೀವು ಎಷ್ಟು ಒಳ್ಳೆಯ ಹೋವಾಗಿದ್ದೀರಿ. ವಂದೇ ಮಾತರಂ ಎಂದು ನಿಮ್ಮ ಗಾಯನವಿದೆ. ನೀವೇ ಪೂಜ್ಯರಾಗಿದ್ದಿರಿ, ಈಗ ಪೂಜಾರಿಗಳಾಗಿರುವಿರಿ. ಈಗ ಶ್ರಿಮತದನುಸಾರ ಪುನಃ ಪೂಜ್ಯರಾಗುತ್ತೀರಿ. ಅಂದ ಮೇಲೆ ನೀವು ಮಕ್ಕಳು ಬಹಳ ಶಾಂತಿಯಿದ ಸೇವೆ ಮಾಡಬೇಕು. ನೀವು ಅಶಾಂತರಾಗಬಾರದು. ಯಾರಪ್ರತೀ ನರ ನಾಡಿಗಳಲ್ಲಿ ಭೂತ ತುಂಬಿದೆಯೋ ಅವರೇನು ಪದವಿ ಪಡೆಯುತ್ತಾರೆ? ಲೋಭವು ಬಹಳ ದೊಡ್ಡ ಭೂತವಾಗಿದೆ. ಪ್ರತಿಯೊಬ್ಬರ ನಡವಳಿಕೆ ಹೇಗಿದೆ ಎಂದು ತಂದೆಯು ನೋಡುತ್ತಿರುತ್ತಾರೆ. ತಂದೆಯು ಎಷ್ಟು ನಶೆ ಏರಿಸುತ್ತಾರೆ ಆದರೆ ಕೆಲವರು ಏನೂಸೇವೆ ಮಾಡುವುದಿಲ್ಲ, ಕೇವಲ ತಿನ್ನುತ್ತಾ ಕುಡಿಯುತ್ತಾ ಇದ್ದರೆ ನಂತರ ಅವರು 21 ಜನ್ಮಗಳ ಕಾಲ ಸೇವೆ ಮಾಡಬೇಕಾಗುತ್ತದೆ, ದಾಸ ದಾಸಿಯರಂತೂ ಆಗುತ್ತಾರಲ್ಲವೆ. ಅಂತ್ಯದಲ್ಲಿ ಎಲ್ಲರಿಗೂ ಸಾಕ್ಷಾತ್ಕಾರ ಆಗುವುದು. ಸೇವಾಧಾರಿ ಮಕ್ಕಳು ತಂದೆಯ ಹೃದಯದವನ್ನೇರುತ್ತಾರೆ. ಅನ್ಯ ಆತ್ಮಗಳನ್ನು ಅಮರಲೋಕವಾಸಿಗಳನ್ನಾಗಿ ಮಾಡುವುದೇ ನಿಮ್ಮ ಸೇವೆಯಾಗಿದೆ. ಧಾರಣೆ ಮಾಡಿ ಎಂದು ತಂದೆಯು ಎಷ್ಟು ಧೈರ್ಯ ಕೊಡುತ್ತಾರೆ. ದೇಹಾಭಿಮಾನಿಗಳಿಗೆ ಧಾರಣೆ ಆಗಲು ಸಾಧ್ಯವಿಲ್ಲ. ಮಕ್ಕಳಿಗೂ ಗೊತ್ತಿದೆ, ತಂದೆಯನ್ನು ನೆನಪು ಮಾಡಿ ನಾವು ವೇಶ್ಯಾಲಯದಿಂದ ಶಿವಾಲಯಕ್ಕೆ ಹೋಗುತ್ತೇವೆ ಅಂದ ಮೇಲೆ ಈ ರೀತಿ ಆಗಿ ತೋರಿಸಬೇಕು.
ತಂದೆ ಪತ್ರಗಳಲ್ಲಿ ಬರೆಯುತ್ತಾರೆ - ಮುದ್ದಾದ ಆತ್ಮೀಯ ಮಾಲೀಕನ ಮಕ್ಕಳೇ, ಈಗ ಶ್ರೀಮತದಂತೆ ನಡೆಯಿರಿ. ಶ್ರೀಮತದಂತೆ ನಡೆದು ಮಹಾರಥಿಗಳಾದರೆ ಅವಶ್ಯವಾಗಿ ರಾಜ ಕುಮಾರ ಕುಮಾರಿಯಾಗುತ್ತೀರಿ. ನಿಮ್ಮ ಗುರಿ ಉದ್ದೇಶವೂ ಇದೇ ಆಗಿದೆ. ಒಬ್ಬ ಸತ್ಯ ತಂದೆಯು ನಿಮಗೆ ಎಲ್ಲ ಮಾತುಗಳನ್ನು ಬಹಳ ಚೆನ್ನಾಗಿ ತಿಳಿಸುತ್ತಾರೆ. ಸೇವೆ ಮಾಡಿ ಅನ್ಯರ ಕಲ್ಯಾಣವನ್ನೂ ಮಾಡಿರಿ. ಯೋಗ ಬಲವಿಲ್ಲದಿದ್ದರೆ ಅದು ಬೇಕು ಇದು ಬೇಕು ಎಂಬ ಇಚ್ಛೆಗಳು ಉತ್ಪನ್ನವಾಗುತ್ತವೆ ಆ ಖುಷಿ ಇರುವುದಿಲ್ಲ. ಖುಷಿಯಂತಹ ಔಷಧಿಯಿಲ್ಲವೆಂದು ಹೇಳುತ್ತಾರೆ. ಮಾಲೀಕನ ಸಂತಾನರಿಗೆ ಬಹಳ ಖುಷಿಯಿರಬೇಕು, ಅದು ಇಲ್ಲದಿದ್ದರೆ ಅನೇಕ ಪ್ರಕಾರದ ಮಾತುಗಳು ಬರುತ್ತವೆ. ಅರೆ! ತಂದೆಯು ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆ ಅಂದ ಮೇಲೆ ಮತ್ತೇನು ಬೇಕು! ಪ್ರತಿಯೊಬ್ಬರೂ ತಮ್ಮ ಹೃದಯವನ್ನು ಕೇಳಿಕೊಳ್ಳಿ - ಇಷ್ಟೊಂದು ಮಧುರ ತಂದೆಗೆ ಯಾವ ಸೇವೆ ಮಾಡುತ್ತೇವೆ? ತಂದೆ ತಿಳಿಸುತ್ತಾರೆ ಮಕ್ಕಳೇ ಎಲ್ಲರಿಗೂ ಸಂದೇಶ ಕೊಡುತ್ತಾ ಹೋಗಿ - ಪರಮಾತ್ಮ ಬಂದಿದ್ದಾರೆ, ವಾಸ್ತವದಲ್ಲಿ ನೀವೆಲ್ಲರೂ ಸಹೋದರರಾಗಿದ್ದೀರಿ, ಭಲೇ ಹೇಳುತ್ತಾರೆ - ನಾವೆಲ್ಲರೂ ಸಹೋದರ ಸಹೋದರರಿಗೆ ಸಹಯೋಗ ಕೊಡಬೇಕು. ಈ ವಿಚಾರದಿಂದ ಸಹೋದರರು ಎಂದು ಹೇಳುತ್ತಾರೆ. ಇಲ್ಲಿ ನೀವು ಒಬ್ಬ ತಂದೆಯ ಮಕ್ಕಳು ಸಹೋದರ ಸಹೋದರಾಗಿದ್ದೀರಿ. ತಂದೆಯು ಸ್ವರ್ಗದ ಸ್ಥಾಪನೆ ಮಾಡುವವರಾಗಿದ್ದಾರೆ, ಮಕ್ಕಳ ಮೂಲಕ ಸ್ವರ್ಗವನ್ನಾಗಿ ಮಾಡುತ್ತಾರೆ ಸೇವೆಯ ಅನೇಕ ಯುಕ್ತಿಗಳನ್ನು ತಿಳಿಸುತ್ತಾರೆ ಮಿತ್ರ ಸಂಬಂಧಿಗಳಿಗೂ ಸಹ ತಿಳಿಸಬೇಕಾಗಿದೆ. ನೋಡಿ, ಮಕ್ಕಳು ವಿದೇಶದಲ್ಲಿಯೂ ಕೂಡ ಸೇವೆ ಮಾಡುತ್ತಿದ್ದಾರೆ, ದಿನ-ಪ್ರತಿದಿನ ಆಪತ್ತುಗಳನ್ನು ನೋಡಿ ಮನುಷ್ಯರು ತಿಳಿಯುತ್ತಾರೆ- ಸಾಯುವುದಕ್ಕೆ ಮೊದಲು ಆಸ್ತಿಯನ್ನಾದರೂ ಪಡೆಯೋಣ. ಮಕ್ಕಳು ತಮ್ಮ ಮಿತ್ರ ಸಂಬಂಧಿಗಳನ್ನೂ ಸಹ ಮೇಲೆತ್ತುತ್ತಿದ್ದಾರೆ. ಪವಿತ್ರರಾಗಿಯೂ ಇರುತ್ತಾರೆ ಬಾಕಿ ನಿರಂತರ ಸಹೋದರತ್ವದ ಸ್ಥಿತಿಯಿರುವುದರಲ್ಲಿ ಪರಿಶ್ರಮವಿದೆ ತಂದೆಯಂತೂ ಮಕ್ಕಳಿಗೆ ಮಾಲೀಕನ ಸಂತಾನರೆನ್ನುವ ಎಷ್ಟು ಒಳ್ಳೆಯ ಬಿರುದನ್ನು ಕೊಟ್ಟಿದ್ದಾರೆ. ತಮ್ಮನ್ನು ನೋಡಿಕೊಳ್ಳಬೇಕು- ಸೇವೆ ಮಾಡಲಿಲ್ಲವೆಂದರೆ ನಾವು ಏನಾಗುತ್ತೇವೆ? ಒಂದು ವೇಳೆ ಜಮಾ ಮಾಡಿಕೊಂಡುದ್ದು ತಿನ್ನುತಾ ತಿನ್ನುತಾ ಸಮಾಪ್ತಿ ಮಾಡಿದರೆ ಇನ್ನೂ ಅವರ ಲೆಕ್ಕದ ಖಾತೆ ಏರುತ್ತ ಹೋಗುತ್ತದೆ. ಸೇವೆ ಮಾಡುವವರಿಗೆ ನಾವು ಇಷ್ಟು ಕೊಟ್ಟೆವು ಎನ್ನುವ ಸಂಕಲ್ಪ ಎಂದೂ ಬರಬಾರದು ಏಕೆಂದರೆ ಅದರಿಂದ ಎಲ್ಲರ ಪಾಲನೆಯಾಗುತ್ತದೆ ಆದ್ದರಿಂದ ಸಹಯೋಗ ನೀಡುವವರ ಆತಿಥ್ಯವನ್ನೂ ಮಾಡಲಾಗುತ್ತದೆ. ಅವರು ತಿನ್ನಿಸುವವರಾಗಿದ್ದಾರೆಂದು ತಿಳಿಸಬೇಕು. ಆತ್ಮಿಕ ಮಕ್ಕಳು ನಿಮಗೆ ತಿನಿಸುತ್ತಾರೆ. ನೀವು ಅವರ ಸೇವೆ ಮಾಡಿದರೆ ಅದು ದೊಡ್ಡ ಪುಣ್ಯವಾಗುತ್ತದೆ. ಮನಸಾ-ವಾಚಾ-ಕರ್ಮಣಾ ಅವರ ಸೇವೆಯನ್ನೇ ಮಾಡುವುದಿಲ್ಲವೆಂದರೆ ಆ ಖುಷಿಯು ಹೇಗೆ ಇರಲು ಸಾಧ್ಯ! ಶಿವ ತಂದೆಯನ್ನು ನೆನಪು ಮಾಡಿ ಭೋಜನ ತಯಾರಿಸಿದರೆ ಅದರ ಶಕ್ತಿಯು ಸಿಗುತ್ತದೆ. ಹೃದಯವನ್ನು ಕೇಳಿಕೊಳ್ಳಬೇಕು - ನಾವು ಎಲ್ಲರನ್ನೂ ಖುಷಿ ಪಡಿಸುತ್ತಿದ್ದೇವೆಯೇ? ಮಹಾರಥಿ ಮಕ್ಕಳು ಎಷ್ಟೊಂದು ಸೇವೆ ಮಾಡುತ್ತಾರೆ. ತಂದೆಯು ರೆಗ್ಜಿನ್ ಮೇಲೆ ಚಿತ್ರ ಮಾಡಿಸುತ್ತಿದ್ದಾರೆ. ಈ ಚಿತ್ರಗಳು ಎಂದೂ ಹರಿಯುವುದಿಲ್ಲ. ಇದಕ್ಕಾಗಿ ಮಕ್ಕಳು ತಾವೇ ಸೇವೆಗಾಗಿ ಹಣ ಕಳುಹಿಸುತ್ತಾರೆ ಇಲ್ಲವಾದರೆ ಶಿವಬಾಬಾ ಎಲ್ಲಿಂದ ತರುವರು? ಈ ಎಲ್ಲ ಸೇವಾಕೇಂದ್ರಗಳು ಹೇಗೆ ನಡೆಯುತ್ತವೆ. ಮಕ್ಕಳೇ ನಡೆಸುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನನ್ನ ಬಳಿ ಒಂದು ಕವಡೆಯೂ ಇಲ್ಲ, ಮುಂದೆ ಹೋದಂತೆ ನಿಮ್ಮ ಬಳಿ ತಾವೇ ಬಂದು ಹೇಳುತ್ತಾರೆ - ನಮ್ಮ ಮನೆಯನ್ನು ನೀವು ಉಪಯೋಗ ಮಾಡಿರಿ. ಆಗ ಬಹಳ ತಡವಾಯಿತು ಎಂದು ನೀವು ಹೇಳುತ್ತೀರಿ. ತಂದೆಯು ಬಡವರ ಬಂಧುವಾಗಿದ್ದಾರೆ. ಬಡವರ ಬಳಿ ಎಲ್ಲಿಂದ ಬರುತ್ತದೆ! ಕೆಲವರಂತೂ ಕೊಟ್ಯಾಧಿಪತಿ ಪದಮಾಪತಿಗಳಿದ್ದಾರೆ. ಅವರಿಗೆ ಇಲ್ಲಿಯೇ ಸ್ವರ್ಗವಿದೆ. ಇದು ಮಾಯೆಯ ಆಡಂಭರವಾಗಿದೆ ಅದರ ಪತನವಾಗುತ್ತಿದೆ. ತಂದೆಯು ತಿಳಿಸುತ್ತಾರೆ - ನೀವು ಮೊದಲು ಮಾಲೀಕನ ಸಂತಾನರಾಗಿದ್ದಿರಿ ನಂತರ ನೀವೇ ಹೋಗಿ ರಾಜಕುಮಾರರಾಗುತ್ತಿರಿ ಆದರೆ ಇಷ್ಟೊಂದು ಸೇವೆ ಮಾಡಿ ತೋರಿಸಿ ಬಹಳ ಖುಷಿಯಲ್ಲಿರಬೇಕು. ನಾವು ಪ್ರಭುವಿನ ಸಂತಾನರಾಗಿದ್ದೇವೆ. ಪುನಃ ನಾವೇ ರಾಜಕುಮಾರರಾಗುತ್ತೇವೆ. ಯಾವಾಗ ಅನೇಕರ ಸೇವೆ ಮಾಡುತ್ತೀರೋ ಆಗ ರಾಜಕುಮಾರರಾಗುತ್ತೀರಿ. ಅಂದಾಗ ಎಷ್ಟು ಖುಷಿ ನಶೆಯಿರಬೇಕು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾ-ಪಿತ ಬಾಪ್ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ಮಕ್ಕಳಿಗೆ ಆತ್ಮೀಯ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಯಾರಿಗೂ ಬೇಸರ ಪಡಿಸಲೂಬಾರದು, ಬೇಸರವಾಗಲೂಬಾರದು. ತಮ್ಮ ಬುದ್ಧಿವಂತಿಕೆಯ ಅಥವಾ ಸೇವೆ ಮಾಡುವ ಅಹಂಕಾರ ತೋರಿಸಬಾರದು. ಹೇಗೆ ತಂದೆಯು ಮಕ್ಕಳಿಗೆ ಗೌರವ ಕೊಡುತ್ತಾರೆ ಹಾಗೆಯೇ ತಾವೇ ತಮ್ಮ ಗೌರವವನ್ನಿಟ್ಟುಕೊಳ್ಳಬೇಕು.
2. ಯೋಗ ಬಲದಿಂದ ತಮ್ಮ ಎಲ್ಲ ಇಚ್ಛೆಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಸದಾ ಇದೇ ಖುಷಿ ನಶೆಯಲ್ಲಿರಬೇಕು - ನಾವು ಮಾಲೀಕನ ಸಂತಾನರಿಂದ ರಾಜಕುಮಾರರಾಗುತ್ತೇವೆ. ಸದಾ ಶಾಂತಿಯಲ್ಲಿದ್ದು ಸೇವೆ ಮಾಡಬೇಕು. ನರ-ನಾಡಿಯಲ್ಲಿಯೂ ಯಾವ ಭೂತಗಳು ತುಂಬಿವೆಯೋ ಅವುಗಳನ್ನು ತೆಗೆಯಬೇಕು.
ಓಂ ಶಾಂತಿ. ಸದ್ಗುರುವಾರವನ್ನು ವೃಕ್ಷಪತಿ ದಿನವೆಂದೂ ಸಹ ಹೇಳಲಾಗುತ್ತದೆ. ವೃಕ್ಷಪತಿ ದಿನ ಅರ್ಥಾತ್ ತಂದೆಯ ದಿನ. ಅಮಾವಾಸ್ಯೆಯ ದಿನದಂದು ಅಂಧಕಾರ ರಾತ್ರಿಯು ಮುಕ್ತಾಯವಾಗುತ್ತದೆ. ನಂತರ ದಿನವು ಆರಂಭವಾಗುತ್ತದೆ, ಚಂದ್ರಮನ ಉದಯವಾಗಲು ಪ್ರಾರಂಭವಾಗುತ್ತದೆ ಮತ್ತು ಇತ್ತೀಚೆಗೆ ಯಾರದೇ ಶ್ರಾದ್ಧ ಇರುತ್ತದೆಯೋ ಅವರಿಗೆ ತಿನ್ನಿಸಿ-ಕುಡಿಸಿ ಪೂರ್ಣ ಮಾಡುತ್ತಾರೆ ನಂತರ ಅವರು ಏನನ್ನೂ ಬಯಸುವುದಿಲ್ಲ, ಎಲ್ಲರನ್ನೂ ತೃಪ್ತಿ ಪಡಿಸಲಾಗುತ್ತದೆ. ದಿನದಲ್ಲಿ ಹೊರಟು ಹೋದರೆಂದರೆ ಮತ್ತೆ ರಾತ್ರಿಯ ಕಡೆ ಹಿಂತಿರುಗಿ ಬರುವ ಅವಶ್ಯಕತೆಯಾದರೂ ಏನಿದೆ? ಮೂಲಕಾಯಿದೆ ಏನೆಂದರೆ - 12 ತಿಂಗಳಿನ ಸಮಯವು ಯಾವಾಗ ಮುಗಿಯುತ್ತದೆಯೋ ಆಗ ಅವರಿಗೆ ತಿನ್ನಿಸಿ, ಎಲ್ಲವನ್ನೂ ಸಮಾಪ್ತಿ ಮಾಡಲಾಗುತ್ತದೆ ಅಂದಮೇಲೆ ಮತ್ತೆ ಅಂಧಕಾರ ರಾತ್ರಿಯಲ್ಲಿ ಕರೆಯುವುದೇಕೆ? ಆದರೆ ಬ್ರಾಹ್ಮಣರು ಈ ಪದ್ಧತಿಯನ್ನು ರೂಢಿಸಿ ಬಿಟ್ಟಿದ್ದಾರೆ, ಈಗಲೂ ಅದೇ ನಡೆದು ಬರುತ್ತಿದೆ. ಅವರಿಗೆ ದಕ್ಷಿಣೆ ಇತ್ಯಾದಿ ಸಿಗುತ್ತಾ ಇರುತ್ತದೆ, ಅದು ಹದ್ದಿನ ಅಮಾವಾಸ್ಯೆಯಾಗಿದೆ. ಈಗ ತಂದೆಯು ಬೇಹದ್ದಿನ ಅಮಾವಾಸ್ಯೆಯಲ್ಲಿ ಬಂದಿದ್ದಾರೆ. ತಂದೆಯು ಬರುತ್ತಾರೆಂದರೆ ಅರ್ಧಕಲ್ಪದ ಅಂಧಕಾರವು ಮುಕ್ತಾಯವಾಗುತ್ತದೆ. ನಂತರ ಸತ್ಯಯುಗದಲ್ಲಿ ಪ್ರಕಾಶವೇ ಪ್ರಕಾಶವಿರುತ್ತದೆ. ಅಲ್ಲಿ ಎಂದೂ ಪಿತೃಪಕ್ಷ ಇತ್ಯಾದಿಗಳನ್ನು ಮಾಡುವುದಿಲ್ಲ. ಇದು ಬೇಹದ್ದಿನ ಅಮಾವಾಸ್ಯೆಯಾಗಿದೆ. ಬ್ರಹ್ಮನ ರಾತ್ರಿ ಸೋ ಬ್ರಾಹ್ಮಣರ ರಾತ್ರಿಯು ಪೂರ್ಣವಾಗಿ ದಿನವು ಬಂದು ಬಿಡುತ್ತದೆ ನಂತರ ಯಾರೂ ಪಿತೃಗಳಿಗೆ ತಿನ್ನಿಸುವುದಿಲ್ಲ. ಅಲ್ಲಿ ಬ್ರಾಹ್ಮಣರೇ ಇರುವುದಿಲ್ಲ ಅಂದರೆ ಅಲ್ಲಿ ಯಾರೂ ಸಾಯುವುದಿಲ್ಲ ಎಂದಲ್ಲ. ಆದರೆ ಈ ಪದ್ಧತಿಯಿರುವುದಿಲ್ಲ. ಇಲ್ಲಂತೂ ಅನೇಕ ಪ್ರಕಾರದ ಬ್ರಾಹ್ಮಣರೂ ಇದ್ದಾರೆ, ಈಗ ಒಂದು ರಾಜ್ಯ, ಒಂದು ರಾಷ್ಟ್ರ್ರವಾಗಲಿ ಎಂದು ಬಯಸುತ್ತಾರೆ ಆದರೆ ಇಷ್ಟೆಲ್ಲಾ ಮನುಷ್ಯರದು ಒಂದು ರಾಷ್ಟ್ರ್ರವಾಗಲು ಸಾಧ್ಯವಿಲ್ಲ. ಹಾ! ಸತ್ಯಯುಗದಲ್ಲಿ ಒಂದು ರಾಜ್ಯ, ಒಂದೇ ರೀತಿ-ನೀತಿಯಿತ್ತು ಅದನ್ನು ತಂದೆಯೇ ಬಂದು ಸ್ಥಾಪನೆ ಮಾಡುತ್ತಾರೆ. ಅಲ್ಲಿ ಎಲ್ಲರೂ ಬಹಳ ಮಧುರರಾಗಿರುತ್ತಾರೆ, ದುಃಖದ ಮಾತು ಇರುವುದಿಲ್ಲ. ಎಂದೂ ಕಠಿಣವಾಗಿ ಮಾತನಾಡುವುದಿಲ್ಲ, ಪಾಪ ಮಾಡುವುದಿಲ್ಲ. ಈಗ ಯಾರೆಷ್ಟು ಪುರುಷಾರ್ಥ ಮಾಡುವರೋ ಅಷ್ಟು ನಂಬರ್ವಾರ್ ಪದವಿಯನ್ನು ಪಡೆಯುತ್ತಾರೆ. ಅಲ್ಲಿ ಯಾರೂ ಕಳ್ಳತನ ಇತ್ಯಾದಿಗಳನ್ನು ಮಾಡುವುದಿಲ್ಲ, ಒಳಗೂ-ಹೊರಗೂ ಸ್ವಚ್ಛತೆಯಿರುತ್ತದೆ. ಇಲ್ಲಿ ಒಳಗೊಂದು -ಹೊರಗೊಂದು ಇರುತ್ತಾರೆ, ಒಬ್ಬರು ಇನ್ನೊಬ್ಬರಿಗೆ ಎಷ್ಟೊಂದು ನಷ್ಟವನ್ನುಂಟು ಮಾಡುತ್ತಾರೆ. ಇದೆಲ್ಲವೂ ರಾವಣ ರಾಜ್ಯದ ಕೆಟ್ಟ ಚಂಚಲತೆಯಾಗಿದೆ. ತಂದೆಯು ಈಗ ಅದನ್ನು ಒಮ್ಮೆಲೆ ಸಮಾಪ್ತಿ ಮಾಡಿಸಿ ಬಿಡುತ್ತಾರೆ. ಯಾರದೂ ಕೆಟ್ಟ ಹವ್ಯಾಸಗಳು ಒಂದೇ ಸಲ ಸಮಾಪ್ತಿ ಆಗುವುದಿಲ್ಲ, ಸಮಯ ಹಿಡಿಸುತ್ತದೆ. ಎಷ್ಟೆಷ್ಟು ಯೋಗದಲ್ಲಿ ಇರುತ್ತೀರೋ ಅಷ್ಟು ಕಳೆಯುತ್ತದೆ. ಹೆಜ್ಜೆ-ಹೆಜ್ಜೆಯಲ್ಲಿ ನೋಡಿಕೊಳ್ಳುತ್ತಾ ಇರಿ - ನಾನು ಯೋಗದಲ್ಲಿ ಇರುತ್ತೇನೆಯೇ? ಯಾವುದೇ ಪಾಪಕರ್ಮ ಮಾಡುತ್ತಿಲ್ಲವೆ? ನಾನು ಮಧುರನಾಗಿ ಅನ್ಯರನ್ನೂ ಮಧುರರನ್ನಾಗಿ ಮಾಡುತ್ತೇನೆಯೇ? ಸ್ವಯಂ ಕಹಿಯಾಗಿದ್ದರೆ ಅನ್ಯರನ್ನು ಮಧುರರನ್ನಾಗಿ ಹೇಗೆ ಮಾಡುವರು? ಅಂತಹವರು ಇಲ್ಲಿ ಬಹು ಬೇಗನೆ ಪ್ರತ್ಯಕ್ಷವಾಗಿ ಬಿಡುತ್ತಾರೆ. ಮುಚ್ಚಿಡಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನನ್ನ ಮಕ್ಕಳಾಗಿ ಯಾವುದೇ ಉಲ್ಟಾ ಸುಲ್ಟಾ ಕೆಲಸ ಮಾಡುತ್ತೀರೆಂದರೆ ಬಹಳ ಕಠಿಣ ಶಿಕ್ಷೆಯನ್ನು ಅನುಭವಿಸುತ್ತೀರಿ. ಪದವಿಯೂ ಭ್ರಷ್ಟವಾಗುವುದು. ಸ್ವಯಂ ಭಗವಂತನೇ ದೇವತೆಗಳನ್ನಾಗಿ ಮಾಡಲು ಓದಿಸುತ್ತಾರೆ. ಸರ್ವಗುಣ ಸಂಪನ್ನರು, ಅಹಿಂಸಾ ಪರಮೋ ಧರ್ಮಿಗಳೆಂದು ದೇವತೆಗಳ ಮಹಿಮೆಯನ್ನು ಹಾಡುತ್ತಾರೆ. ಹಿಂಸೆಯು ಎರಡು ಪ್ರಕಾರವಾಗಿರುತ್ತದೆ. ಒಂದು ಕಾಮ ಕಟಾರಿಯ ಹಿಂಸೆಯಿಂದ ಮನುಷ್ಯರು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆಯುತ್ತಾರೆ. ಎರಡನೆಯದು - ಮತ್ತೆ ಕ್ರೋಧದಲ್ಲಿ ಬಂದು ಒಬ್ಬರು ಇನ್ನೊಬ್ಬರನ್ನು ಹೊಡೆಯುತ್ತಾರೆ. ದುಃಖವನ್ನು ಕೊಡುತ್ತಾರೆ, ದುಃಖಿಯಾಗುತ್ತಾರೆ. ಇಲ್ಲಂತೂ ಮಕ್ಕಳಿಗೇ ತಿಳಿಸುತ್ತಾರೆ - ಮಕ್ಕಳೇ, ಮನಸ್ಸಾ-ವಾಚಾ-ಕರ್ಮಣಾ ಇಂತಹ ಯಾವುದೇ ಕರ್ಮ ಮಾಡಬಾರದು, ಯಾರಿಗೂ ದುಃಖವನ್ನು ಕೊಡಬಾರದು. ನೀವು ದುಃಖಹರ್ತ-ಸುಖಕರ್ತನ ಮಕ್ಕಳಾಗಿದ್ದೀರಿ ಅಂದಮೇಲೆ ಹೇಗೆ ದುಃಖವನ್ನು ದೂರ ಮಾಡಿ ಸುಖ ಕೊಡುವುದು ಎಂದು ಎಲ್ಲರಿಗೆ ಇದೇ ಯುಕ್ತಿಯನ್ನು ತಿಳಿಸಬೇಕಾಗಿದೆ. ಮಾಡಿರುವ ಕರ್ಮಗಳ ಲೆಕ್ಕಾಚಾರವು ಮುಗಿಯುತ್ತದೆ. ಇಲ್ಲಿ ತಂದೆಯು ತಿಳಿಸುತ್ತಾರೆ, ಈ ಜನ್ಮದಲ್ಲಿ ಏನೆಲ್ಲಾ ಪಾಪಕರ್ಮಗಳನ್ನು ಮಾಡಿದ್ದೀರೋ ಅದನ್ನು ತಿಳಿಸುವುದರಿಂದ ಅರ್ಧ ಪಾಪವು ಕಳೆಯುತ್ತದೆ ಆದರೆ ಅನೇಕ ಜನ್ಮಗಳಿಂದ ಮಾಡಿರುವ ಪಾಪ ಕರ್ಮವು ತಲೆಯ ಮೇಲೆ ಬಹಳಷ್ಟಿದೆಯಲ್ಲವೆ. ಈ ಜನ್ಮದಲ್ಲಿಯೂ ಪಾಪವಾಗುವಂತಹ ಯಾವುದೇ ಕರ್ಮ ಮಾಡಬಾರದು ಮತ್ತು ಯೋಗಬಲದಿಂದ ಅನೇಕ ಜನ್ಮಗಳ ಪಾಪ ಕರ್ಮವನ್ನು ಭಸ್ಮ ಮಾಡಿಕೊಳ್ಳಬೇಕಾಗಿದೆ. ಈ ಜನ್ಮದಲ್ಲಿ ತಂದೆಯ ಮಕ್ಕಳಾಗಿ ಯಾವುದೇ ಪಾಪ ಕರ್ಮ ಮಾಡಬಾರದು. ಬ್ರಾಹ್ಮಣರಾಗದೇ ಆಸ್ತಿಯು ಸಿಗಲು ಸಾಧ್ಯವಿಲ್ಲ. ಇವರು ಬಾಪ್ದಾದಾ ಆಗಿದ್ದಾರಲ್ಲವೆ. ಆಸ್ತಿಯು ನಿಮಗೆ ಶಿವ ತಂದೆಯಿಂದ ಸಿಗುತ್ತದೆ, ಇವರಿಂದಲ್ಲ. ಇವರು ತಮ್ಮನ್ನು ಏನೂ ಕರೆಸಿಕೊಳ್ಳುವುದಿಲ್ಲ. ಇವರು ಕೇವಲ ರಥವಾಗಿದ್ದಾರೆ, ಇವರಿಂದ ನಿಮಗೆ ಏನೂ ಸಿಗುವುದಿಲ್ಲ ಆದರೆ ರಥಕ್ಕೂ ಗಾಯನವಾಗುತ್ತದೆ. ಹುಸೇನನ ರಥವನ್ನು ತೋರಿಸುತ್ತಾರಲ್ಲವೆ. ಕುದುರೆಯನ್ನು ಎಷ್ಟೊಂದು ಶೃಂಗರಿಸುತ್ತಾರೆ, ಇದಂತೂ ಪತಿತ ತನುವಾಗಿದೆಯಲ್ಲವೆ. ಇದೂ ಸಹ ಈಗ ಶೃಂಗರಿತವಾಗುತ್ತಿದೆ. ತನ್ನ ಪುರುಷಾರ್ಥದಿಂದಲೇ ಶೃಂಗರಿತರಾಗುತ್ತಾರೆ. ತಂದೆಯೇನು ಇವರಿಗೆ ದಯೆ ತೋರಿಸುವುದಿಲ್ಲ, ಕೆಲವೊಮ್ಮೆ ತಂದೆಯು ಹಾಸ್ಯ ಮಾಡುತ್ತಾರೆ- ಬಾಡಿಗೆಯಂತೂ ಸಿಗುತ್ತದೆಯಲ್ಲವೆ ಎಂದು. ಆದರೆ ನೀವು ಹೇಗೆ ಪುರುಷಾರ್ಥ ಮಾಡಬೇಕಾಗಿದೆಯೋ ಹಾಗೆಯೇ ಇವರೂ ಮಾಡಬೇಕಾಗುತ್ತದೆ. ನನಗೆ ತಂದೆಯು ಬಾಡಿಗೆ ಕೊಡುತ್ತಾರಲ್ಲವೆ ಎಂಬ ಲಾಲಸೆ ಇರುವುದಿಲ್ಲ. ಇದನ್ನು ಕೇವಲ ತಂದೆಯು ಹಾಸ್ಯ ಮಾಡುತ್ತಾರಷ್ಟೆ. ಆತ್ಮವು ಯೋಗಬಲದಿಂದಲೇ ಸತೋಪ್ರಧಾನವಾಗಬೇಕಾಗಿದೆ, ಎಷ್ಟು ಯೋಗವಿರುವುದೋ ಅಷ್ಟು ಪಾವನರಾಗುತ್ತೀರಿ ಮತ್ತೆ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳಬೇಕಾಗಿದೆ. ನೀವು ಮಕ್ಕಳಿಗೆ ತಿಳಿದಿದೆ - ಯಾರು ಒಳ್ಳೊಳ್ಳೆಯ ಸರ್ವೀಸ್ ಮಾಡುವವರಿದ್ದಾರೆಯೋ ಅವರು ಪ್ರಸಿದ್ಧರಾಗಿದ್ದಾರೆ, ತಂದೆಯು ಸೇವೆಗಾಗಿ ಕಳುಹಿಸುತ್ತಾರೆ ಅಂದಮೇಲೆ ಬಹಳ ಮಧುರವಾಗಿ ಮಾತನಾಡಬೇಕಾಗುತ್ತದೆ, ಯಾರೊಂದಿಗೂ ಜಗಳ-ಕಲಹ ಮಾಡಬಾರದು. ಒಂದುವೇಳೆ ಬ್ರಾಹ್ಮಣರು ಕಟುವಾಗಿ ಮಾತನಾಡುತ್ತಾರೆಂದರೆ ಅನ್ಯರು ಇವರಲ್ಲಿ ಕ್ರೋಧದ ಭೂತವಿದೆ ಎಂದು ಹೇಳುತ್ತಾರೆ. ಸ್ತುತಿ-ನಿಂದೆಯಲ್ಲಿ ಸಮಾನವಾಗಿರಬೇಕು, ಅನೇಕರಲ್ಲಿ ಕ್ರೋಧದ ಭೂತವಿದೆ ಅದರಿಂದ ಅನೇಕರು ಬೇಸರವಾಗುತ್ತಾರೆ. ಎಲ್ಲರ ಕ್ರೋಧವು ಹೊರಟು ಹೋಗಿದೆ ಎಂದಲ್ಲ, ಸಂಪೂರ್ಣರಾಗುವ ಸಮಯವು ಬರುವವರೆಗೂ ನಿಧಾನ-ನಿಧಾನವಾಗಿ ತುಕ್ಕು ಕಳೆಯುತ್ತಾ ಹೋಗುವುದು. ನನ್ನಲ್ಲಿ ಕ್ರೋಧವಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ, ಕೆಲವರಲ್ಲಿ ಹೆಚ್ಚು, ಕೆಲವರಲ್ಲಿ ಕಡಿಮೆಯಿರುತ್ತದೆ. ಕೆಲಕೆಲವರ ಮಾತೇ ಜಗಳವಾಡಿದಂತೆ ಇರುತ್ತದೆ. ಮಕ್ಕಳು ಬಹಳ-ಬಹಳ ಮಧುರರಾಗಬೇಕು, ಇಲ್ಲಿಯೇ ಸರ್ವಗುಣ ಸಂಪನ್ನರಾಗಬೇಕು, ವಿಕಾರವಂತೂ ಅನೇಕ ಪ್ರಕಾರದ್ದಿದೆಯಲ್ಲವೆ. ಕ್ರೋಧ ಮಾಡುವುದು, ಸುಳ್ಳು ಹೇಳುವುದು - ಇದೆಲ್ಲವೂ ವಿಕಾರವಾಗಿದೆ.
ತಂದೆಯು ತಿಳಿಸುತ್ತಾರೆ - ಮಕ್ಕಳೇ, ಈಗ ಯಾವುದೇ ವಿಕರ್ಮ ಮಾಡುತ್ತೀರೆಂದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು ಅಲ್ಲಂತೂ ನನ್ನ ಜೊತೆ ಶಿಕ್ಷೆಯನ್ನು ಕೊಡುವ ಧರ್ಮರಾಜನಿರುತ್ತಾನೆ. ಇಲ್ಲಿ ಪ್ರತ್ಯಕ್ಷವಾಗಿ ಶಿಕ್ಷೆ ಸಿಗುತ್ತದೆ, ಆದರೆ ಧರ್ಮರಾಜನ ಶಿಕ್ಷೆಯು ಗುಪ್ತವಾಗಿ ಸಿಗುತ್ತದೆ. ಗರ್ಭ ಜೈಲಿನಲ್ಲಿಯೂ ಶಿಕ್ಷೆಗಳನ್ನು ಅನುಭವಿಸುತ್ತಾರೆ. ಯಾರಿಗಾದರೂ ಕಾಯಿಲೆ ಇತ್ಯಾದಿಗಳಿದ್ದರೆ ಅದೂ ಸಹ ಕರ್ಮಭೋಗವಾಗಿದೆ. ಧರ್ಮರಾಜನ ಮೂಲಕ ಶಿಕ್ಷೆ ಸಿಗುತ್ತದೆ. ಮುಂದಿನದೂ ಸಹ ಈಗಲೇ ಸಿಗುತ್ತದೆ. ಈಗಿನದು ಈಗಲೂ ಸಿಗಬಹುದು ಮತ್ತೆ ಗರ್ಭ ಜೈಲಿನಲ್ಲಿಯೂ ಸಿಗುತ್ತದೆ. ಅದು ಗುಪ್ತವಾಗಿದೆ. ಧರ್ಮರಾಜನು ಅಲ್ಲಂತೂ ಶಿಕ್ಷೆ ಕೊಡುವುದಿಲ್ಲ ಅಲ್ಲವೇ. ಇಲ್ಲಿ ಶರೀರದಿಂದ ನೋವನ್ನು ಅನುಭವಿಸಬೇಕಾಗುತ್ತದೆ. ಈಗ ತಂದೆಯು ನಮ್ಮನ್ನು ಇದರಿಂದ ಬಿಡಿಸುತ್ತಾರೆ, ಪರಮಪಿತ ಪರಮಾತ್ಮ ಮತ್ತು ಧರ್ಮರಾಜ ಇಬ್ಬರೂ ಹಾಜರಿದ್ದಾರೆ. ಈಗ ಎಲ್ಲರ ಅಂತಿಮ ಸಮಯವಾಗಿದೆ, ಪ್ರತಿಯೊಬ್ಬರದೂ ತೀರ್ಮಾನವಾಗುತ್ತದೆ. ಇದೂ ಸಹ ಡ್ರಾಮಾದಲ್ಲಿ ನಿಗಧಿತವಾಗಿದೆ. ಈಗ ಸಂಪೂರ್ಣರಾಗಬೇಕೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಯಾವುದೇ ಪಾಪಕರ್ಮ ಮಾಡಬೇಡಿ. ತಮ್ಮ ಕಲ್ಯಾಣಕ್ಕಾಗಿ ಪೂರ್ಣ ಪುರುಷಾರ್ಥ ಮಾಡಬೇಕು, ಸಾಧ್ಯವಾದಷ್ಟೂ ಮಾಡಬೇಕಾಗಿದೆ. ಇದು ಕಲ್ಪ-ಕಲ್ಪಾಂತರದ ಮಾತಾಗಿದೆ. ಲೌಕಿಕ ವಿದ್ಯೆಯಾದರೆ ಒಂದು ಜನ್ಮಕ್ಕಾಗಿ ಇರುತ್ತದೆ, ಇನ್ನೊಂದು ಜನ್ಮದಲ್ಲಿ ಮತ್ತೆ ಇನ್ನೊಂದು ವಿದ್ಯೆಯನ್ನು ಓದಬೇಕಾಗುತ್ತದೆ ಆದರೆ ಇದು 21 ಜನ್ಮಗಳ ವಿದ್ಯೆಯಾಗಿದೆ. ಅವಿನಾಶಿ ತಂದೆಯು ಅವಿನಾಶಿ ವಿದ್ಯೆಯನ್ನು ಓದಿಸುತ್ತಾರೆ. ಯಾವುದರಿಂದ 21 ಜನ್ಮಗಳಿಗಾಗಿ ಅವಿನಾಶಿ ಪದವಿಯು ಸಿಗುತ್ತದೆ. ತಂದೆಯಿಂದ 21 ಜನ್ಮಗಳಿಗಾಗಿ ಆಸ್ತಿಯು ಸಿಗುತ್ತದೆ. ನೀವು ಮಕ್ಕಳಿಗೆ ತಿಳಿದಿದೆ - ಇದು ಹಳೆಯ ಪ್ರಪಂಚವಾಗಿದೆ, ಹೊಸ ಪ್ರಪಂಚದಲ್ಲಿ ಭಾರತವೊಂದೇ ಇತ್ತು, ಈಗ ಮತ್ತೆ ಈ ಚಕ್ರವು ಸುತ್ತುವುದು. ಹೊಸ ಸೃಷ್ಟಿಯು ಸ್ಥಾಪನೆಯಾಗಿ ಹಳೆಯದರ ವಿನಾಶವಾಗುವುದು. ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಬಂದು ಹೊಸ ಪ್ರಪಂಚವನ್ನು ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ, ಬ್ರಾಹ್ಮಣರಂತೂ ಅವಶ್ಯವಾಗಿ ಬೇಕು ಅಂದಮೇಲೆ ಅವಶ್ಯವಾಗಿ ಪವಿತ್ರರಾಗುತ್ತಾರೆ, ರಾಜಯೋಗವನ್ನೂ ಕಲಿಯುತ್ತಾರೆ. ನಾವು ಬ್ರಹ್ಮಾಕುಮಾರ -ಕುಮಾರಿಯರು ಪವಿತ್ರರಾಗುತ್ತಿದ್ದೆವು, ತಂದೆಯು ಮನೆ-ಮಠವನ್ನು ಬಿಡಿ ಎಂದು ಹೇಳುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲಪುಷ್ಪ ಸಮಾನ ಇರಿ. ಈ ಬಾಪ್ದಾದಾ ಎಂಬ ಹೆಸರು ಬಹಳ ಚೆನ್ನಾಗಿದೆ, ತಾತನಿಂದ ಆಸ್ತಿಯು ಸಿಗುತ್ತದೆ, ಅವರು ಸರ್ವಶ್ರೇಷ್ಠನಾಗಿದ್ದಾರೆ. ಬ್ರಹ್ಮನಂತೂ ಪತಿತನಾಗಿದ್ದರಲ್ಲವೇ. ಇವರು ಮೊಟ್ಟ ಮೊದಲು ಶ್ರೇಷ್ಠಾಚಾರಿ ಪೂಜ್ಯ ಮಹಾರಾಜ ಆಗಿದ್ದರು, ಈಗ ಅಂತ್ಯದಲ್ಲಿ ಬಂದು ಪತಿತನಾಗಿ ಬಿಟ್ಟರು. ಇದು ಇವರ ಅಂತಿಮ ಜನ್ಮವಾಗಿದೆ, ಈ ಪತಿತ ಪ್ರಪಂಚದಲ್ಲಿ ಪಾವನರಾದರೂ ಎಲ್ಲಿದ್ದಾರೆ! ಪಾವನ ಪ್ರಪಂಚದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಪರಮಾತ್ಮನಿಂದ ಆತ್ಮರು ಬಹುಕಾಲ ಅಗಲಿ ಹೋಗಿದ್ದರೆಂದು ಗಾಯನವಿದೆ, ಇದರ ಲೆಕ್ಕವನ್ನೂ ಸಹ ನೀವು ತಿಳಿದುಕೊಂಡಿರಿ, ಯಾರು ಸೂರ್ಯವಂಶಿಯರಿದ್ದಾರೆಯೋ ಅವರೇ ಮೊಟ್ಟ ಮೊದಲು ತಮ್ಮ ಆಸ್ತಿಯನ್ನು ತೆಗೆದುಕೊಳ್ಳಲು ಬರುತ್ತಾರೆ. ಈಗಂತೂ ಆತ್ಮವು ಶರೀರವನ್ನು ಬಿಟ್ಟು ಹೋಯಿತೆಂದರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಅಂದಮೇಲೆ ಅವರನ್ನು ಮತ್ತೆ ನರಕದಲ್ಲಿ ಕರೆಸುವ ಅವಶ್ಯಕತೆಯಾದರೂ ಏನಿದೆ!! ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಸಾಧು-ಸಂತ ಮೊದಲಾದವರು ಮರಣ ಹೊಂದುತ್ತಾರೆಂದರೆ ಅವರದೂ ಸಹ ತಿಥಿಯನ್ನು ಆಚರಿಸುತ್ತಾರೆ, ಭೋಗವನ್ನು ಇಡುತ್ತಾರೆ, ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಯಿತು ಎಂದು ಹೇಳುತ್ತಾರೆಂದರೆ ಮತ್ತೇಕೆ ಭೋಗವನ್ನು ಇಡುತ್ತಾರೆ. ತಿಥಿಯನ್ನು ಏಕೆ ಆಚರಿಸುತ್ತಾರೆ? ಶರೀರವಂತೂ ಸಮಾಪ್ತಿಯಾಯಿತು, ಆತ್ಮವು ಹೊರಟು ಹೋಯಿತು ಅಂದಮೇಲೆ ಮತ್ತೆ ಆತ್ಮವನ್ನು ಕರೆಸುವ ಅವಶ್ಯಕತೆಯೇನಿದೆ? ಜ್ಯೋತಿಯಲ್ಲಿ ಲೀನವಾಗಿ ಬಿಟ್ಟಿತು ಅಂದಮೇಲೆ ಮತ್ತೆ ಹೇಗೆ ಬರಲು ಸಾಧ್ಯ? ಅನೇಕಾನೇಕ ಮತಗಳಿವೆ. ಕೆಲವರು ಈ ರೀತಿಯೂ ಹೇಳುತ್ತಾರೆ - ಮನುಷ್ಯರು ಮೋಕ್ಷವನ್ನು ಪಡೆಯುತ್ತಾರೆ ಮತ್ತೆ ಬರುವುದಿಲ್ಲ ಎಂದು. ಮೋಕ್ಷವನ್ನು ಪಡೆದರು ಎನ್ನುವುದಾದರೆ ಇನ್ನೂ ಖುಷಿಯನ್ನು ಆಚರಿಸಬೇಕು ಏಕೆಂದರೆ ಪಾತ್ರ ಮಾಡುವುದರಿಂದ ಮುಕ್ತರಾದರು ಅಂದಮೇಲೆ ಮತ್ತೆ ಅವರನ್ನು ನೆನಪು ಮಾಡಿಕೊಳ್ಳಬಾರದು. ಇದನ್ನೂ ನೀವು ತಿಳಿದುಕೊಂಡಿದ್ದೀರಿ - ಎಲ್ಲಾ ಮನುಷ್ಯ ಮಾತ್ರರು ಒಬ್ಬ ತಂದೆಯನ್ನು ನೆನಪು ಮಾಡುತ್ತಾರೆ. ಎಲ್ಲರೂ ಸಹೋದರ-ಸಹೋದರರಾಗಿದ್ದಾರೆ ಎಂಬುದನ್ನು ಒಪ್ಪುತ್ತಾರೆ ಅಂದಮೇಲೆ ಸಹೋದರರಿಗೆ ತಂದೆಯಿಂದ ಆಸ್ತಿಯು ಅವಶ್ಯವಾಗಿ ಸಿಗಬೇಕು. ಸರ್ವಆತ್ಮರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ. ಎಲ್ಲಾ ಆತ್ಮರು ಹಿಂತಿರುಗಿ ಹೋಗಬೇಕಾಗಿದೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ಕೊಡಲು ಹೇಗೆ ಸಾಧ್ಯ? ಆದ್ದರಿಂದಲೇ ಒಬ್ಬರೇ ಸರ್ವರ ಸದ್ಗತಿದಾತನ ಹೆಸರು ಪ್ರಸಿದ್ಧವಾಗಿದೆ, ಅವರೇ ಜ್ಞಾನಸಾಗರ, ಪತಿತ-ಪಾವನನಾಗಿದ್ದಾರೆ, ಆ ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ, ಎಲ್ಲರನ್ನೂ ರಾವಣ ರಾಜ್ಯದಿಂದ ಬಿಡಿಸುತ್ತಾರೆ. ಇದಕ್ಕೆ ಬೇಹದ್ದಿನ ಅಮಾವಾಸ್ಯೆ ಎಂದು ಹೇಳುತ್ತಾರೆ, ಅರ್ಧಕಲ್ಪ ಬೇಹದ್ದಿನ ರಾತ್ರಿ, ಅರ್ಧಕಲ್ಪ ಬೇಹದ್ದಿನ ದಿನವಾಗಿದೆ, ಇದು ಆಟವಾಗಿದೆ. ಯಾವಾಗ ಧಾರ್ಮಿಕ ಸಮ್ಮೇಳನದಲ್ಲಿ ನಿಮಂತ್ರಣ ಕೊಡುತ್ತಾರೆ, ಶಾಂತಿಯು ಹೇಗೆ ಸ್ಥಾಪನೆಯಾಗುತ್ತದೆ ಎಂದು ಕೇಳಿದಾಗ ಅಲ್ಲಿ ತಿಳಿಸಬೇಕು - ಒಂದು ಧರ್ಮ, ಒಂದು ಮತವು ಸತ್ಯಯುಗದಲ್ಲಿಯೇ ಇರುತ್ತದೆ, ಅದಕ್ಕೆ 5000 ವರ್ಷಗಳಾಯಿತು, ಅಲ್ಲಿ ಸುಖ-ಶಾಂತಿ ಎಲ್ಲವೂ ಇತ್ತು. ಉಳಿದೆಲ್ಲಾ ಆತ್ಮರು ಶಾಂತಿಧಾಮದಲ್ಲಿದ್ದರು. ಹೊಸ ಪ್ರಪಂಚದಲ್ಲಿ ಒಂದೇ ಧರ್ಮವಿತ್ತು, ಹಳೆಯ ಪ್ರಪಂಚದಲ್ಲಿ ವೃಕ್ಷವು ದೊಡ್ಡದಾಗುತ್ತಾ ಹೋಗುತ್ತದೆ. ಅನೇಕ ಧರ್ಮಗಳಿವೆ, ಈಗ ಅನೇಕ ಧರ್ಮಗಳ ವಿನಾಶ ಒಂದು ಧರ್ಮದ ಸ್ಥಾಪನೆ ಮಾಡುವುದು ತಂದೆಯ ಕರ್ತವ್ಯವೇ ಆಗಿದೆ. ನಾನು ಕಲ್ಪ-ಕಲ್ಪವೂ ಬಂದು ನನ್ನ ಈ ಕರ್ತವ್ಯವನ್ನು ಮಾಡುತ್ತೇನೆಂದು ಶಿವ ತಂದೆಯು ತಿಳಿಸುತ್ತಾರೆ. ಸತ್ಯಯುಗೀ ರಾಜಧಾನಿಗಾಗಿ ರಾಜಯೋಗವನ್ನು ಅವಶ್ಯವಾಗಿ ಸಂಗಮದಲ್ಲಿಯೇ ಕಲಿಸುತ್ತಾರೆ. ಎಲ್ಲಾ ಪತಿತರನ್ನು ಪಾವನರನ್ನಾಗಿ ಮಾಡುತ್ತಾರೆ, ತಿಳಿಸುತ್ತಾರೆ- ನಾನು ಬಹಳ ಜನ್ಮಗಳ ಅಂತಿಮದಲ್ಲಿಯೂ ಅಂತ್ಯದಲ್ಲಿ ಬರುತ್ತೇನೆ, ಯಾರು ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರ ರಥದಲ್ಲಿಯೇ ಬಂದು ತಿಳಿಸುತ್ತೇನೆ. ಈಗ ಹೊಸ ಪ್ರಪಂಚವಂತೂ ಇಲ್ಲ. ಹಳೆಯ ಪ್ರಪಂಚದಲ್ಲಿಯೇ ಬಂದು ಹೊಸ ಪ್ರಪಂಚವನ್ನಾಗಿ ಮಾಡುತ್ತೇನೆ. ನನ್ನ ಹೆಸರೇ ಆಗಿದೆ- ದುಃಖಹರ್ತ ಸುಖಕರ್ತ. ಸುಖದಲ್ಲಿ ನನ್ನನ್ನು ಯಾರೂ ನೆನಪು ಮಾಡುವುದಿಲ್ಲ, ದುಃಖದಲ್ಲಿ ನೆನಪು ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಸುಖ ಸಿಕ್ಕಿತ್ತಲ್ಲವೆ. ನಾನು ಓದಿಸಲು ಬಂದಿದ್ದೇನೆ, ಈಗ ಓದುವುದು ನಿಮ್ಮ ಕರ್ತವ್ಯವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ, ನೀವು ಏನನ್ನೂ ತಿಳಿದುಕೊಂಡಿರಲಿಲ್ಲ. ಈ ಸಮಯದಲ್ಲಿ ಇಡೀ ಪ್ರಪಂಚದ ದೋಣಿಯು ಮುಳುಗಿದೆ, ಎಷ್ಟೊಂದು ದುಃಖಿಯಾಗಿದ್ದಾರೆ! ನೀವು ಎಲ್ಲರ ದೋಣಿಯನ್ನು ಪಾರು ಮಾಡುತ್ತೀರಿ. ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುವರು. ಈ ಮಾತುಗಳು ನಿಮ್ಮ ಬುದ್ಧಿಯಲ್ಲಿದೆ ಅದು ನಂಬರ್ವಾರ್. ಯಾರು ಲೈಟ್ಹೌಸ್ ಆಗಿರುವರೋ ಅವರು ಅನ್ಯರಿಗೂ ಮಾರ್ಗವನ್ನು ತಿಳಿಸುತ್ತಾ ಇರುತ್ತಾರೆ. ಮಾರ್ಗವನ್ನು ತಿಳಿಸುವುದೇ ಅವರ ಕರ್ತವ್ಯವಾಗಿದೆ. ಮಕ್ಕಳಿಗೆ ತಂದೆಯು ಹೇಗೆ ಓದಿಸುತ್ತಾರೆ, ಇದಂತೂ ಸ್ಥಿರವಾದ ಖುಷಿಯಿರಬೇಕು. ಇಲ್ಲಿಗೆ ಬಂದು ಬಹಳ ರಿಫ್ರೆಷ್ ಆಗುತ್ತೀರಿ, ಹೊರಗೆ ಹೋಗುತ್ತಿದ್ದಂತೆಯೇ ನಶೆಯೇ ಮಾಯವಾಗಿ ಬಿಡುತ್ತದೆ. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಇಟ್ಟುಕೊಳ್ಳಬೇಕು. ಹೆಜ್ಜೆ ಹೆಜ್ಜೆಯಲ್ಲಿ ತಂದೆಯಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಬೇಕಾಗಿದೆ. ಹಿಂದಿನ ಕಾಲದಲ್ಲಿ ತೀರ್ಥ ಸ್ಥಾನಗಳಿಗೆ ಕಾಲ್ನಡಿಗೆಯಲ್ಲಿಯೇ ಹೋಗುತ್ತಿದ್ದರು, ಬಹಳ ಶ್ರದ್ಧೆಯಿಂದ ಹೋಗುತ್ತಿದ್ದರು. ಈ ಸಮಯದಲ್ಲಿ ಬಸ್ಸು, ರೈಲಿನಲ್ಲಿ ಹೋಗುತ್ತಾರೆ. ಈ ಸಮಯದಲ್ಲಿ ಮಾಯೆಯ ಬಹಳ ಆಡಂಬರವಿದೆ. ಸತ್ಯಯುಗದಲ್ಲಿ ಆಡಂಬರವಿತ್ತು ನಂತರ ದ್ವಾಪರದಿಂದ ಇಳಿಯುತ್ತಾ ಹೋಯಿತು ಈಗ ಮತ್ತೆ ಅಂತಿಮದಲ್ಲಿ ಆರಂಭವಾಗಿದೆ, ಇದಕ್ಕೆ ಮಾಯೆಯ ಆಡಂಬರವೆಂದು ಹೇಳಲಾಗುತ್ತದೆ. ಸ್ವರ್ಗದಲ್ಲಿ ನಡೆಯಿರಿ ಎಂದು ಯಾರಿಗಾದರೂ ಹೇಳಿದರೆ ನಮಗೆ ಇಲ್ಲಿಯೇ ಎಲ್ಲಾ ಸುಖವಿದೆ, ಮೋಟಾರು ವಿಮಾನ ಎಲ್ಲವೂ ಇದೆ. ನಮಗಾಗಿ ಸ್ವರ್ಗವು ಇಲ್ಲಿಯೇ ಇದೆ. ಹಣ, ಅಂತಸ್ತು ಆಭರಣ ಎಲ್ಲವೂ ಇದೆ. ಲಕ್ಷ್ಮೀ-ನಾರಾಯಣರಿಗೂ ಆಭರಣಗಳಿದೆಯಲ್ಲವೆ. ನಾವು ಧರಿಸ ಬಲ್ಲೆವು ಎಂದು ಹೇಳುತ್ತಾರೆ. ಎಷ್ಟಾದರೂ ತಿಳಿಸಿ ಆದರೆ ವಿಷವೇ ನೆನಪಿರುತ್ತದೆ, ವಿಷವಿಲ್ಲದೆ (ವಿಕಾರ) ಇರಲು ಸಾಧ್ಯವಾಗುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ನನ್ನ ಮಾತನ್ನು ಪಾಲಿಸುವುದಿಲ್ಲ. ಪಾವನರಾಗುವುದಿಲ್ಲವೆಂದರೆ ಪತಿತ-ಪಾವನ ಬನ್ನಿ ಎಂದು ನನ್ನನು ಕರೆಯುವುದಾದರೂ ಏಕೆ? ನೆನಪಿಡಿ, ಈಗ ನನ್ನ ಮಾತನ್ನು ಪಾಲಿಸದಿದ್ದರೆ ಧರ್ಮರಾಜನ ಮೂಲಕ ಶಿಕ್ಷೆ ಕೊಡಿಸುವೆನು. ಹೀಗೆ ಹೆದರಿಸಿದರೂ ಸಹ ಅನೇಕ ಮಕ್ಕಳು ವಿಕಾರದಲ್ಲಿ ಹೋಗುತ್ತಲೇ ಇರುತ್ತಾರೆ, ಭಯವೇ ಇಲ್ಲ. ಅವರು ಎಷ್ಟೊಂದು ಪಶ್ಚಾತ್ತಾಪ ಪಡುವರು. ಅದರ ಮಾತೇ ಕೇಳಬೇಡಿ. ಪದವಿಯು ಭ್ರಷ್ಟವಾಗುವುದು, ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಲ್ಲವೆ. ಸಂಗ ದೋಷದಲ್ಲಿ ಬಂದು ಈ ರೀತಿ ಬೀಳುತ್ತಾರೆ ಒಮ್ಮೆಲೆ ತಮ್ಮ ಪದವಿಯನ್ನೇ ಕಳೆದುಕೊಳ್ಳುತ್ತಾರೆ. ನಿಮಗೆ ತಿಳಿದಿದೆ - ಈಗ ವಜ್ರ ರತ್ನಗಳ ಗಣಿಗಳು ಖಾಲಿಯಾಗುತ್ತಾ ಹೋಗುತ್ತಿವೆ. ಇವು ಮತ್ತೆ ಸಂಪನ್ನವಾಗುವವು. ಚಿನ್ನ, ವಜ್ರಗಳ ಪರ್ವತಗಳಿರುತ್ತವೆ. ಯಾವಾಗ ಅಗೆದು ವಜ್ರವನ್ನು ಶೋಧನೆ ಮಾಡಿ ತೆಗೆಯುತ್ತಾರೆಯೋ ಆಗ ಮೊದಲು ಕಲ್ಲುಗಳಾಗಿರುತ್ತವೆ ಮತ್ತೆ ಅದನ್ನು ಸ್ವಚ್ಛ ಮಾಡಿ ವಜ್ರವನ್ನಾಗಿ ಮಾಡುತ್ತಾರೆ, ನಿಮ್ಮನ್ನೂ ಸಹ ಜ್ಞಾನದ ಸಾಣೆಯ ಮೇಲೆ ಏರಿಸುತ್ತಾರೆ ನಂತರ ನೀವು ಎಷ್ಟು ಚೆನ್ನಾಗಿ ಆಗಿ ಬಿಡುತ್ತೀರಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈಗ ಅಂತಿಮ ಸಮಯವಾಗಿದೆ ಆದ್ದರಿಂದ ಯಾವುದೇ ಪಾಪಕರ್ಮ ಮಾಡಬಾರದು. ತಮ್ಮ ಕಲ್ಯಾಣದ ಪುರುಷಾರ್ಥವನ್ನು ಮಾಡಬೇಕು, ಬಹಳ ಮಧುರರಾಗಬೇಕು, ಕ್ರೋಧವನ್ನು ಬಿಟ್ಟು ಬಿಡಬೇಕಾಗಿದೆ.
2. ತಂದೆಯಿಂದ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುವ ಇಚ್ಛೆಯನ್ನು ಇಟ್ಟುಕೊಳ್ಳಬೇಕಾಗಿದೆ. ಹೆಜ್ಜೆ-ಹೆಜ್ಜೆಯಲ್ಲಿ ತಂದೆಯ ಸಲಹೆಯನ್ನು ತೆಗೆದುಕೊಳ್ಳಬೇಕು. ತಂದೆಯ ಸಮಾನ ದುಃಖಹರ್ತ-ಸುಖಕರ್ತರಾಗಬೇಕಾಗಿದೆ.
ಓಂ ಶಾಂತಿ. ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ - ಯಾವ ಮಕ್ಕಳು? ಬ್ರಾಹ್ಮಣರು. ನಾವು ಬ್ರಾಹ್ಮಣರಾಗಿದ್ದೇವೆ, ದೇವತೆಗಳಾಗುವವರಿದ್ದೇವೆ ಎಂಬುದನ್ನು ಎಂದೂ ಮರೆಯಬೇಡಿ. ವರ್ಣಗಳನ್ನೂ ಸಹ ನೆನಪು ಮಾಡಿಕೊಳ್ಳಬೇಕಾಗಿದೆ, ಇಲ್ಲಿ ನೀವು ಪರಸ್ಪರ ಬ್ರಾಹ್ಮಣರೇ ಇದ್ದೀರಿ. ಬ್ರಾಹ್ಮಣರಿಗೆ ಬೇಹದ್ದಿನ ತಂದೆಯು ಓದಿಸುತ್ತಾರೆ, ಈ ಬ್ರಹ್ಮಾ ತಂದೆಯು ಓದಿಸುವುದಿಲ್ಲ ಶಿವ ತಂದೆಯು ಓದಿಸುತ್ತಾರೆ. ಬ್ರಹ್ಮಾರವರ ಮೂಲಕ ಬ್ರಾಹ್ಮಣರಿಗೇ ಓದಿಸುತ್ತಾರೆ. ಶೂದ್ರರಿಂದ ಬ್ರಾಹ್ಮಣರಾಗದ ವಿನಃ ದೇವತೆಗಳಾಗಲು ಸಾಧ್ಯವಿಲ್ಲ. ಆಸ್ತಿಯಂತೂ ಶಿವ ತಂದೆಯಿಂದಲೂ ಸಿಗುತ್ತದೆ, ಶಿವ ತಂದೆಯು ಎಲ್ಲರ ತಂದೆಯಾಗಿದ್ದಾರೆ. ಈ ಬ್ರಹ್ಮಾರವರಿಗೆ ಗ್ರಾಂಡ್ಫಾದರ್ ಎಂದು ಹೇಳಲಾಗುತ್ತದೆ. ಲೌಕಿಕ ತಂದೆಯಂತೂ ಎಲ್ಲರಿಗೂ ಇದ್ದೇ ಇರುತ್ತಾರೆ, ಪಾರಲೌಕಿಕ ತಂದೆಯನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಇವರು ಅಲೌಕಿಕ ತಂದೆಯಾಗಿದ್ದಾರೆ, ಇವರನ್ನು ಯಾರೂ ತಿಳಿದುಕೊಂಡಿಲ್ಲ. ಭಲೆ ಬ್ರಹ್ಮನ ಮಂದಿರವೂ ಇದೆ, ಇಲ್ಲಿಯೂ ಸಹ ಪ್ರಜಾಪಿತ ಆದಿ ದೇವನ ಮಂದಿರವಿದೆ, ಅವರಿಗೆ ಮಹಾವೀರನೆಂತಲೂ ಹೇಳುತ್ತಾರೆ, ಕೆಲವರು ದಿಲ್ವಾಲಾ (ಹೃದಯವನ್ನು ಗೆಲ್ಲುವವರು) ಎಂತಲೂ ಹೇಳುತ್ತಾರೆ. ಆದರೆ ವಾಸ್ತವದಲ್ಲಿ ಹೃದಯವನ್ನು ಗೆಲ್ಲುವವರು ಶಿವ ತಂದೆಯಾಗಿದ್ದಾರೆ ಬ್ರಹ್ಮನಲ್ಲ. ಎಲ್ಲಾ ಆತ್ಮರನ್ನು ಸುಖಿಯನ್ನಾಗಿ ಮಾಡುವವರು, ಖುಷಿಯನ್ನು ನೀಡುವವರು ಒಬ್ಬ ತಂದೆಯೇ ಆಗಿದ್ದಾರೆ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ನೀವು ಬ್ರಾಹ್ಮಣರೇ ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ, ನೀವೂ ಸಹ ಪದೇ-ಪದೇ ಮರೆತು ಹೋಗುತ್ತೀರಿ. ನೆನಪು ಬಹಳ ಸಹಜವಾಗಿದೆ, ಯೋಗ ಶಬ್ಧವನ್ನು ಸನ್ಯಾಸಿಗಳು ಇಟ್ಟಿದ್ದಾರೆ. ನೀವಂತೂ ತಂದೆಯನ್ನು ನೆನಪು ಮಾಡುತ್ತೀರಿ, ಯೋಗ ಎಂಬುದು ಸಾಮಾನ್ಯ ಪದವಾಗಿದೆ. ಇದಕ್ಕೆ ಯೋಗಾಶ್ರಮವೆಂತಲೂ ಹೇಳುವುದಿಲ್ಲ ಏಕೆಂದರೆ ಇಲ್ಲಿ ತಂದೆ ಮತ್ತು ಮಕ್ಕಳು ಕುಳಿತಿದ್ದೀರಿ. ಮಕ್ಕಳ ಕರ್ತವ್ಯವಾಗಿದೆ - ಬೇಹದ್ದಿನ ತಂದೆಯನ್ನು ನೆನಪು ಮಾಡುವುದು. ನಾವು ಬ್ರಾಹ್ಮಣರಾಗಿದ್ದೇವೆ, ಬ್ರಹ್ಮಾರವರ ಮೂಲಕ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಆದ್ದರಿಂದ ಶಿವ ತಂದೆಯು ತಿಳಿಸುತ್ತಾರೆ - ಎಷ್ಟು ಸಾಧ್ಯವೋ ನೆನಪು ಮಾಡುತ್ತಾ ಇರಿ. ಚಿತ್ರವನ್ನೂ ಭಲೆ ನೆನಪಿಟ್ಟುಕೊಳ್ಳಿ ಆಗ ನಾವು ಬ್ರಾಹ್ಮಣರಾಗಿದ್ದೇವೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆಂದು ನೆನಪಂತೂ ಇರುವುದು. ಬ್ರಾಹ್ಮಣರು ಎಂದಾದರೂ ತಮ್ಮ ಜಾತಿಯನ್ನು ಮರೆಯುತ್ತಾರೆಯೇ? ನೀವು ಶೂದ್ರರ ಸಂಗದಲ್ಲಿ ಬರುತ್ತಿದ್ದಂತೆಯೇ ಬ್ರಾಹ್ಮಣತನವನ್ನೇ ಮರೆತು ಹೋಗುತ್ತೀರಿ. ಬ್ರಾಹ್ಮಣರು ದೇವತೆಗಳಿಗಿಂತಲೂ ಶ್ರೇಷ್ಠರಾಗಿದ್ದಾರೆ ಏಕೆಂದರೆ ನೀವು ಬ್ರಾಹ್ಮಣರು ಜ್ಞಾನಪೂರ್ಣರಾಗಿದ್ದೀರಿ, ಭಗವಂತನಿಗೆ ಎಲ್ಲರ ಹೃದಯವನ್ನು ಅರಿತವರು ಎಂದು ಹೇಳುತ್ತಾರಲ್ಲವೆ. ಅಂದರೆ ಇದರ ಅರ್ಥವು ಅವರು ಎಲ್ಲರ ಹೃದಯದಲ್ಲಿ ಏನಿದೆ ಎಂಬುದನ್ನು ಕುಳಿತು ನೋಡುತ್ತಾರೆಂದಲ್ಲ. ಅವರಿಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆ, ಅವರು ಬೀಜರೂಪನಾಗಿದ್ದಾರೆ. ಬೀಜಕ್ಕೆ ವೃಕ್ಷದ ಆದಿ-ಮಧ್ಯ-ಅಂತ್ಯವು ತಿಳಿದಿರುತ್ತದೆ ಅಂದಮೇಲೆ ಇಂತಹ ತಂದೆಯನ್ನು ಬಹಳ-ಬಹಳ ನೆನಪು ಮಾಡಬೇಕಾಗಿದೆ. ಇವರ (ಬ್ರಹ್ಮಾ) ಆತ್ಮವೂ ಸಹ ಆ ತಂದೆಯನ್ನೇ ನೆನಪು ಮಾಡುತ್ತದೆ. ತಂದೆಯು ತಿಳಿಸುತ್ತಾರೆ - ಇವರೂ ಸಹ (ಬ್ರಹ್ಮಾ) ನನ್ನನ್ನೇ ನೆನಪು ಮಾಡುತ್ತಾರೆ ಆದ್ದರಿಂದಲೇ ಈ ಪದವಿಯನ್ನು ಪಡೆಯುತ್ತಾರೆ, ನೀವೂ ಸಹ ನೆನಪು ಮಾಡಿದರೆ ಪದವಿಯನ್ನು ಪಡೆಯುವಿರಿ. ಮೊಟ್ಟ ಮೊದಲು ನೀವು ಅಶರೀರಿಯಾಗಿ ಬಂದಿದ್ದಿರಿ ಈಗ ಪುನಃ ಅಶರೀರಿಯಾಗಿ ಹಿಂತಿರುಗಿ ಹೋಗಬೇಕಾಗಿದೆ. ಮತ್ತೆಲ್ಲಾ ದೇಹದ ಸಂಬಂಧಿಗಳು ನಿಮಗೆ ದುಃಖ ಕೊಡುವವರಾಗಿದ್ದಾರೆ, ಅವರನ್ನು ಏಕೆ ನೆನಪು ಮಾಡುತ್ತೀರಿ! ನಾನು ನಿಮಗೆ ಸಿಕ್ಕಿದ್ದೇನೆ, ನಾನು ನಿಮ್ಮನ್ನು ಹೊಸ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ, ಅಲ್ಲಿ ಯಾವುದೇ ದುಃಖವಿಲ್ಲ, ಅದು ದೈವೀ ಸಂಬಂಧವಾಗಿದೆ. ಇಲ್ಲಿ ಮೊದಲು ಸ್ತ್ರೀ ಮತ್ತು ಪುರುಷನ ಸಂಬಂಧದಲ್ಲಿಯೇ ದುಃಖವು ಬರುತ್ತದೆ ಏಕೆಂದರೆ ವಿಕಾರಿಗಳಾಗುತ್ತಾರೆ. ನಾನೀಗ ನಿಮ್ಮನ್ನು ಎಲ್ಲಿ ವಿಕಾರದ ಮಾತೇ ಇರುವುದಿಲ್ಲವೋ ಅಂತಹ ಪ್ರಪಂಚಕ್ಕೆ ಯೋಗ್ಯರನ್ನಾಗಿ ಮಾಡುತ್ತೇನೆ, ಈ ಕಾಮವು ಮಹಾಶತ್ರುವೆಂದು ಗಾಯನವಿದೆ, ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ. ಕ್ರೋಧವು ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ ಎಂದು ಹೇಳುವುದಿಲ್ಲ, ಕಾಮ ವಿಕಾರವನ್ನು ಜಯಿಸಬೇಕಾಗಿದೆ, ಅದೇ ಆದಿ-ಮಧ್ಯ-ಅಂತ್ಯ ದುಃಖ ಕೊಡುತ್ತದೆ ಪತಿತರನ್ನಾಗಿ ಮಾಡುತ್ತದೆ. ವಿಕಾರಕ್ಕೆ ಪತಿತ ಎಂಬ ಅಕ್ಷರವು ಬರುತ್ತದೆ, ಈ ಶತ್ರುವಿನ ಮೇಲೆ ಜಯ ಗಳಿಸಬೇಕಾಗಿದೆ. ನಾವು ಸತ್ಯಯುಗದ ದೇವಿ-ದೇವತೆಗಳಾಗುತ್ತಿದ್ದೇವೆ ಎಂಬುದು ನಿಮಗೆ ತಿಳಿದಿದೆ, ಎಲ್ಲಿಯವರೆಗೆ ಈ ನಿಶ್ಚಯವಿರುವುದಿಲ್ಲವೋ ಅಲ್ಲಿಯವರೆಗೆ ಏನನ್ನೂ ಪಡೆಯಲು ಸಾಧ್ಯವಿಲ್ಲ.
ತಂದೆಯು ತಿಳಿಸುತ್ತಾರೆ - ಮಕ್ಕಳು ಮನಸ್ಸಾ-ವಾಚಾ-ಕರ್ಮಣಾ ಅಕ್ಯುರೇಟ್ ಆಗಬೇಕಾಗಿದೆ, ಪರಿಶ್ರಮವಿದೆ. ಪ್ರಪಂಚದಲ್ಲಿ ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಎಂಬುದು ಯಾರಿಗೂ ತಿಳಿದಿಲ್ಲ. ಮುಂದೆ ಹೋದಂತೆ ತಿಳಿದುಕೊಳ್ಳುವರು. ಒಂದು ದೇಶ, ಒಂದು ರಾಜ್ಯ, ಒಂದು ಧರ್ಮ, ಒಂದು ಭಾಷೆ ಇರಲಿ ಎಂದು ಬಯಸುತ್ತಾರೆ. ನೀವು ತಿಳಿಸಬಹುದು - ಇಂದಿಗೆ 5000 ವರ್ಷಗಳ ಮೊದಲೂ ಒಂದು ರಾಜ್ಯ, ಒಂದು ಧರ್ಮವಿತ್ತು ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ರಾಮ ರಾಜ್ಯ, ರಾವಣ ರಾಜ್ಯವನ್ನು ಯಾರೂ ತಿಳಿದುಕೊಂಡಿಲ್ಲ. ನೀವೂ ಸಹ ತಿಳಿದುಕೊಂಡಿರಲಿಲ್ಲ, ನೀವೀಗ ನಂಬರ್ವಾರ್ ಪುರುಷಾರ್ಥದನುಸಾರ ಸ್ವಚ್ಛ ಬುದ್ಧಿಯವರಾಗಿದ್ದೀರಿ. ತಂದೆಯು ಕುಳಿತು ನಿಮಗೆ ತಿಳಿಸುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯ ಮತದಂತೆ ನಡೆಯಿರಿ. ತಂದೆಯು ತಿಳಿಸುತ್ತಾರೆ - ಹಳೆಯ ಪ್ರಪಂಚದಲ್ಲಿದ್ದರೂ ಕಮಲಪುಷ್ಪ ಸಮಾನ ಪವಿತ್ರವಾಗಿರಿ, ನನ್ನನ್ನು ನೆನಪು ಮಾಡುತ್ತಾ ಇರಿ. ತಂದೆಯು ಆತ್ಮರಿಗೇ ತಿಳಿಸುತ್ತಾರೆ, ಆತ್ಮರಿಗೇ ಈ ಕರ್ಮೇಂದ್ರಿಯಗಳ ಮೂಲಕ ಓದಿಸಲು ಬಂದಿದ್ದೇನೆ. ಇದಂತೂ ಹಳೆಯ ಛೀ ಛೀ ಪ್ರಪಂಚ, ಛೀ ಛೀ ಶರೀರವಾಗಿದೆ. ನೀವು ಬ್ರಾಹ್ಮಣರು ಈಗ ಪೂಜೆಗೆ ಯೋಗ್ಯರಲ್ಲ, ಗಾಯನ ಯೋಗ್ಯರಾಗಿದ್ದೀರಿ. ಪೂಜೆಗೆ ಯೋಗ್ಯರು ದೇವತೆಗಳಾಗಿದ್ದಾರೆ, ನೀವು ಶ್ರೀಮತದಂತೆ ವಿಶ್ವವನ್ನು ಸ್ವರ್ಗವನ್ನಾಗಿ ಮಾಡುತ್ತೀರಿ ಆದ್ದರಿಂದ ನಿಮ್ಮದು ಗಾಯನವಿದೆ, ಪೂಜೆಯಾಗಲು ಸಾಧ್ಯವಿಲ್ಲ. ಗಾಯನವು ನೀವು ಬ್ರಾಹ್ಮಣರದಾಗಿದೆಯೇ ಹೊರತು ದೇವತೆಗಳದಲ್ಲ. ತಂದೆಯು ನಿಮ್ಮನ್ನೇ ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ, ದೇವತೆಗಳ ಆತ್ಮ ಮತ್ತು ಶರೀರ ಎರಡೂ ಪವಿತ್ರವಾಗಿರುತ್ತದೆ. ಈಗ ನಿಮ್ಮ ಆತ್ಮವು ಪವಿತ್ರವಾಗುತ್ತಾ ಹೋಗುತ್ತಿದೆ, ಶರೀರವೂ ಪವಿತ್ರವಿಲ್ಲ, ನೀವೀಗ ಈಶ್ವರನ ಮತದಂತೆ ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೀರಿ. ನೀವೂ ಸಹ ಸ್ವರ್ಗಕ್ಕೆ ಯೋಗ್ಯರಾಗುತ್ತಿದ್ದೀರಿ ಅಂದಮೇಲೆ ಅವಶ್ಯವಾಗಿ ಸತೋಪ್ರಧಾನರಾಗಬೇಕಾಗಿದೆ. ಕೇವಲ ನೀವು ಬ್ರಾಹ್ಮಣರಿಗೇ ಕುಳಿತು ತಂದೆಯು ಓದಿಸುತ್ತಾರೆ. ಬ್ರಾಹ್ಮಣರ ವೃಕ್ಷವು ವೃದ್ಧಿಯಾಗುತ್ತಾ ಇರುವುದು, ಬ್ರಾಹ್ಮಣರು ಯಾರು ಪಕ್ಕಾ ಆಗಿ ಬಿಡುವರೋ ಅವರೇ ಹೋಗಿ ದೇವತೆಗಳಾಗುತ್ತಾರೆ. ಇದು ಹೊಸ ವೃಕ್ಷವಾಗಿದೆ, ಮಾಯೆಯ ಬಿರುಗಾಳಿಗಳು ತಗಲುತ್ತವೆ. ಸತ್ಯಯುಗದ ಯಾವುದೇ ಬಿರುಗಾಳಿ ಬರುವುದಿಲ್ಲ, ಇಲ್ಲಿ ಮಾಯೆಯು ತಂದೆಯ ನೆನಪಿನಲ್ಲಿರಲು ಬಿಡುವುದಿಲ್ಲ. ನನಗೆ ಗೊತ್ತಿದೆ, ತಂದೆಯ ನೆನಪಿನಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಿದ್ದಾರೆ, ಎಲ್ಲವೂ ನೆನಪಿನ ಮೇಲೆ ಆಧಾರಿತವಾಗಿದೆ. ಭಾರತದ ಪ್ರಾಚೀನ ರಾಜಯೋಗವು ಪ್ರಸಿದ್ಧವಾಗಿದೆ, ಪ್ರಾಚೀನ ಯೋಗವನ್ನು ಯಾರಾದರೂ ಕಲಿಸಲಿ ಎಂದು ವಿದೇಶದವರು ಇಚ್ಛಿಸುತ್ತಾರೆ.
ಈಗ ಯೋಗವು ಎರಡು ಪ್ರಕಾರವಾಗಿದೆ - ಒಬ್ಬರು ಹಠಯೋಗಿಗಳಾಗಿದ್ದಾರೆ, ಇನ್ನೊಬ್ಬರು ರಾಜಯೋಗಿಗಳಾಗಿದ್ದಾರೆ. ನೀವು ರಾಜಯೋಗಿಗಳಾಗಿದ್ದೀರಿ, ಹಠಯೋಗವು ಬಹಳ ದಿನಗಳಿಂದ ನಡೆಯುತ್ತಾ ಬಂದಿದೆ, ರಾಜಯೋಗದ ಬಗ್ಗೆ ಈಗ ನಿಮಗೆ ಅರ್ಥವಾಗಿದೆ. ರಾಜಯೋಗವು ಆ ಸನ್ಯಾಸಿಗಳಿಗೇನು ಗೊತ್ತು! ತಂದೆಯು ಬಂದು ತಿಳಿಸಿದ್ದಾರೆ, ರಾಜಯೋಗವನ್ನು ನಾನೇ ಬಂದು ಕಲಿಸುತ್ತೇನೆ. ಕೃಷ್ಣನಂತೂ ಕಲಿಸಲು ಸಾಧ್ಯವಿಲ್ಲ. ಇದು ಭಾರತದ್ದೇ ಪ್ರಾಚೀನ ರಾಜಯೋಗವಾಗಿದೆ, ಕೇವಲ ಗೀತೆಯಲ್ಲಿ ನನ್ನ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಆದ್ದರಿಂದ ಎಷ್ಟೊಂದು ಅಂತರವಾಗಿ ಬಿಟ್ಟಿದೆ! ಶಿವ ಜಯಂತಿಯಾಗುತ್ತದೆ ಅಂದರೆ ನಿಮ್ಮ ವೈಕುಂಠದ ಜಯಂತಿಯೂ ಆಗುತ್ತದೆ ಯಾವುದರಲ್ಲಿ ಕೃಷ್ಣನ ರಾಜ್ಯವಿರುತ್ತದೆ. ನೀವು ತಿಳಿದುಕೊಂಡಿದ್ದೀರಿ – ಶಿವ ತಂದೆಯ ಜಯಂತಿಯಾಗುತ್ತದೆ ಎಂದರೆ ಗೀತಾ ಜಯಂತಿಯೂ ಆಗುತ್ತದೆ, ವೈಕುಂಠದ ಜಯಂತಿಯೂ ಆಗುತ್ತಿದೆ. ನೀವು ಪವಿತ್ರರಾಗಿ ಬಿಡುತ್ತೀರಿ, ಕಲ್ಪದ ಹಿಂದಿನ ತರಹ ಸ್ಥಾಪನೆಯಾಗುತ್ತಿದೆ ಅಂದಮೇಲೆ ಶಿವ ತಂದೆಯ ಜಯಂತಿ ಸೋ ಸ್ವರ್ಗದ ಜಯಂತಿ ಅಂದರೆ ತಂದೆಯೇ ಬಂದು ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ನನ್ನನ್ನು ನೆನಪು ಮಾಡಿರಿ ಎಂದು ಈಗ ತಂದೆಯು ತಿಳಿಸುತ್ತಾರೆ. ನೆನಪು ಮಾಡದಿದ್ದರೆ ಮಾಯೆಯು ಒಂದಲ್ಲ ಒಂದು ವಿಕರ್ಮ ಮಾಡಿಸಿ ಬಿಡುತ್ತದೆ. ನೆನಪು ಮಾಡದಿದ್ದರೆ ಪೆಟ್ಟು ಬಿದ್ದಿತು ಎಂದರ್ಥ. ನೆನಪಿನಲ್ಲಿದ್ದಾಗ ಪೆಟ್ಟು ತಿನ್ನುವುದಿಲ್ಲ, ಇದು ಮಲ್ಲ ಯುದ್ಧವಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಶತ್ರುವು ಯಾವುದೇ ಮನುಷ್ಯನಲ್ಲ, ರಾವಣ ಶತ್ರುವಾಗಿದ್ದಾನೆ. ವಿವಾಹವಾದ ನಂತರ ಕುಮಾರ-ಕುಮಾರಿಯೂ ಸಹ ಪತಿತರಾಗುವ ಕಾರಣ ಒಬ್ಬರು ಇನ್ನೊಬ್ಬರಿಗೆ ಶತ್ರುವಾಗಿ ಬಿಡುತ್ತಾರೆ. ವಿವಾಹದಲ್ಲಿ ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡುತ್ತಾರೆ, ವಿವಾಹವನ್ನು ವ್ಯರ್ಥವೆಂದು ತಂದೆಯು ಹೇಳುತ್ತಾರೆ. ಈಗ ಪಾರಲೌಕಿಕ ತಂದೆಯು ಆದೇಶ ಹೊರಡಿಸಿದ್ದಾರೆ - ಮಕ್ಕಳೇ, ಕಾಮ ಮಹಾಶತ್ರುವಾಗಿದೆ, ಇದರ ಮೇಲೆ ಜಯ ಗಳಿಸಿರಿ ಮತ್ತು ಪವಿತ್ರತೆಯ ಪ್ರತಿಜ್ಞೆ ಮಾಡಿರಿ. ಯಾರೂ ಸಹ ಪತಿತರಾಗಬೇಡಿ. ಈ ವಿಕಾರದ ಕಾರಣ ನೀವು ಜನ್ಮ-ಜನ್ಮಾಂತರದಿಂದ ನೀವು ಪತಿತರಾಗಿದ್ದೀರಿ, ಆದ್ದರಿಂದ ಕಾಮ ಮಹಾಶತ್ರುವೆಂದು ಹೇಳಲಾಗುತ್ತದೆ. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ - ನೀವು ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಈಗ ಹಿಂತಿರುಗಿ ಹೋಗಬೇಕಾಗಿದೆ. ನಿಮಗೆ ಬಹಳ ಶುದ್ಧ ಅಹಂಕಾರವಿರಬೇಕು - ನಾವಾತ್ಮರು ತಂದೆಯ ಮತದಂತೆ ನಡೆದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಿದ್ದೇವೆ, ನಾವೇ ಮತ್ತೆ ಸ್ವರ್ಗದಲ್ಲಿ ರಾಜ್ಯ ಮಾಡುತ್ತೇವೆ. ಎಷ್ಟು ಪರಿಶ್ರಮ ಪಡುತ್ತೀರೋ ಅಷ್ಟು ಪದವಿಯನ್ನು ಪಡೆಯುತ್ತೀರಿ. ರಾಜ-ರಾಣಿಯಾದರೂ ಆಗಿರಿ ಪ್ರಜೆಯಾದರೂ ಆಗಿರಿ. ರಾಜ-ರಾಣಿಯು ಹೇಗಾಗುತ್ತಾರೆ ಎಂಬುದನ್ನೂ ನೋಡುತ್ತಿದ್ದೀರಿ. ಫಾಲೋ ಫಾದರ್ ಎಂದು ಗಾಯನವಿದೆ, ಅದು ಈಗಿನ ಮಾತಾಗಿದೆ. ಇದನ್ನು ಲೌಕಿಕ ಸಂಬಂಧಕ್ಕಾಗಿ ಹೇಳುವುದಿಲ್ಲ, ಈ ತಂದೆಯು ಮತ ಕೊಡುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿದರೆ ವಿಕರ್ಮಗಳು ವಿನಾಶವಾಗುತ್ತವೆ. ನೀವು ತಿಳಿದುಕೊಂಡಿದ್ದೀರಿ - ನಾವು ಒಳ್ಳೆಯ ಮತದಂತೆ ನಡೆಯುತ್ತೇವೆ, ಅನೇಕರ ಸೇವೆ ಮಾಡುತ್ತೇವೆ. ಮಕ್ಕಳು ತಂದೆಯ ಬಳಿ ಬರುತ್ತೀರೆಂದರೆ ಶಿವ ತಂದೆಯೂ ರಿಫ್ರೆಷ್ ಮಾಡುತ್ತಾರೆ, ಇವರೂ ರಿಫ್ರೆಷ್ ಮಾಡುತ್ತಾರೆ. ಇವರೂ ಸಹ ಕಲಿಯುತ್ತಾರಲ್ಲವೆ. ಶಿವ ತಂದೆಯು ತಿಳಿಸುತ್ತಾರೆ - ನಾನು ಬೆಳಗ್ಗೆ-ಬೆಳಗ್ಗೆ ಬರುತ್ತೇನೆ. ಒಳ್ಳೆಯದು - ನಂತರ ಯಾರಾದರೂ ಮಿಲನ ಮಾಡಲು ಬರುತ್ತಾರೆಂದರೆ ಈ ಬ್ರಹ್ಮಾರವರು ತಿಳಿಸಲು ಸಾಧ್ಯವಿಲ್ಲವೆ! ಬಾಬಾ ತಾವು ಬಂದು ತಿಳಿಸಿ ನಾನು ತಿಳಿಸುವುದಿಲ್ಲ ಎಂದು ಹೇಳುತ್ತಾರೆಯೇ! ಇವು ಬಹಳ ಗುಹ್ಯ ಮಾತುಗಳಾಗಿದೆ ಅಲ್ಲವೆ. ನಾನೂ ಸಹ ಎಲ್ಲರಿಗಿಂತ ಚೆನ್ನಾಗಿ ತಿಳಿಸುತ್ತೇನೆ, ಅಂದಮೇಲೆ ಶಿವ ತಂದೆಯೇ ತಿಳಿಸುತ್ತಾರೆ, ಇವರು ತಿಳಿಸುವುದಕ್ಕೆ ಆಗುವುದಿಲ್ಲವೆಂದು ನೀವು ಏಕೆ ತಿಳಿದುಕೊಳ್ಳುತ್ತೀರಿ! ಇದೂ ಸಹ ನಿಮಗೆ ತಿಳಿದಿದೆ - ಕಲ್ಪದ ಮೊದಲು ಇವರು ತಿಳಿಸಿದ್ದಾರೆ ಆದ್ದರಿಂದಲೇ ಈ ಪದವಿಯನ್ನು ಪಡೆದಿದ್ದಾರೆ ಮಮ್ಮಾರವರೂ ಸಹ ತಿಳಿಸುತ್ತಿದ್ದರಲ್ಲವೆ. ಅವರೂ ಸಹ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ತಂದೆಯನ್ನು ಸೂಕ್ಷ್ಮವತನದಲ್ಲಿ ನೋಡುತ್ತೀರಿ ಅಂದಮೇಲೆ ಮಕ್ಕಳು ಫಾಲೋ ಮಾಡಬೇಕಾಗಿದೆ, ಸಮರ್ಪಣೆಯಾಗುವುದೂ ಸಹ ಬಡವರೇ ಆಗುತ್ತಾರೆ, ಸಾಹುಕಾರರಂತೂ ಸಮರ್ಪಣೆಯಾಗುವುದಿಲ್ಲ. ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು ಬಡವರೇ ಹೇಳುತ್ತಾರೆ, ಶಿವ ತಂದೆಯಂತೂ ದಾತನಾಗಿದ್ದಾರೆ, ಅವರೆಂದೂ ಪಡೆಯುವುದಿಲ್ಲ. ಮಕ್ಕಳಿಗೆ ಹೇಳುತ್ತಾರೆ - ಇದೆಲ್ಲವೂ ನಿಮ್ಮದಾಗಿದೆ, ನಾನು ನನಗಾಗಿ ಮಹಲುಗಳನ್ನು ಇಲ್ಲಿಯಾಗಲಿ, ಅಲ್ಲಾಗಲಿ ಕಟ್ಟಿಸುವುದಿಲ್ಲ, ನಿಮ್ಮನ್ನೇ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ಈಗ ಈ ಜ್ಞಾನ ರತ್ನಗಳಿಂದ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಮಂದಿರಗಳಲ್ಲಿ ಹೋಗಿ ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ ಆದರೆ ಯಾವ ಪ್ರಕಾರದ ಜೋಳಿಗೆ? ಅಥವಾ ಯಾವ ವಸ್ತುವಿನಿಂದ ಜೋಳಿಗೆಯನ್ನು ತುಂಬಿಸಬೇಕು? ಈಗ ಜೋಳಿಗೆಯನ್ನು ತುಂಬುವವರು ಲಕ್ಷ್ಮಿಯಾಗಿದ್ದಾರೆ, ಜೋಳಿಗೆಯನ್ನು ತುಂಬುತ್ತಾರೆ, ಹಣ ಕೊಡುತ್ತಾರೆ. ಶಿವನ ಬಳಿಯಂತೂ ಹೋಗುವುದಿಲ್ಲ, ಕೃಷ್ಣನನ್ನು ಗೀತೆಯನ್ನು ತಿಳಿಸಿದನೆಂದು ಹೇಳುತ್ತಾರೆ ಆದರೆ ಕೃಷ್ಣನ ಬಳಿ ಜೋಳಿಗೆಯನ್ನು ತುಂಬಿಸು ಎಂದು ಹೇಳುವುದಿಲ್ಲ, ಶಂಕರನ ಬಳಿ ಹೋಗಿ ಹೇಳುತ್ತಾರೆ - ಶಿವ-ಶಂಕರ ಒಂದೇ ಎಂದು ತಿಳಿದುಕೊಳ್ಳುತ್ತಾರೆ. ಶಂಕರನು ಜೋಳಿಗೆಯನ್ನು ಖಾಲಿ ಮಾಡುವವರಾಗಿದ್ದಾರೆ, ನಮ್ಮ ಜೋಳಿಗೆಯನ್ನು ಯಾರೂ ಖಾಲಿ ಮಾಡಲು ಸಾಧ್ಯವಿಲ್ಲ. ವಿನಾಶವಂತೂ ಆಗಲೇಬೇಕಾಗಿದೆ. ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆ ಪ್ರಜ್ವಲಿತವಾಯಿತೆಂದು ಹೇಳುತ್ತಾರೆ ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ.
ನೀವು ಮಕ್ಕಳು ಗೃಹಸ್ಥ ವ್ಯವಹಾರದಲ್ಲಿಯೂ ಇರಬೇಕಾಗಿದೆ, ಉದ್ಯೋಗ-ವ್ಯವಹಾರವನ್ನೂ ಮಾಡಬೇಕಾಗಿದೆ. ತಂದೆಯು ಪ್ರತಿಯೊಬ್ಬರ ನಾಡಿಯನ್ನು ನೋಡಿ ಸಲಹೆಯನ್ನು ಕೊಡುತ್ತಾರೆ ಏಕೆಂದರೆ ತಂದೆಯು ತಿಳಿಸುತ್ತಾರೆ - ನಾನು ಹೇಳಿ ಮತ್ತೆ ಮಾಡಲು ಸಾಧ್ಯವಾಗದಿದ್ದರೆ ಇಂತಹ ಸಲಹೆಯನ್ನು ನಾನೇಕೆ ಕೊಡಲಿ! ನಾಡಿಯನ್ನು ನೋಡಿಯೇ ಸಲಹೆ ಕೊಡುತ್ತಾರೆ, ಇವರ ಬಳಿಯಂತೂ ಬರಲೇಬೇಕಾಗುತ್ತದೆ, ಅವರು ಪೂರ್ಣ ಸಲಹೆಯನ್ನು ಕೊಡುತ್ತಾರೆ. ಎಲ್ಲರೂ ಕೇಳಬೇಕಾಗಿದೆ - ಬಾಬಾ, ಇಂತಹ ಪರಿಸ್ಥಿತಿಯಲ್ಲಿ ನಾವು ಏನು ಮಾಡಬೇಕು? ಈಗ ಏನು ಮಾಡುವುದು? ತಂದೆಯು ಸ್ವರ್ಗದಲ್ಲಂತೂ ಕರೆದುಕೊಂಡು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವಂತೂ ಸ್ವರ್ಗವಾಸಿಗಳಾಗುವವರಾಗಿದ್ದೇವೆ, ಈಗ ನಾವು ನರಕವಾಸಿಗಳಾಗಿದ್ದೇವೆ. ಈಗ ನೀವು ನರಕದಲ್ಲಿಯೂ ಇಲ್ಲ, ಸ್ವರ್ಗದಲ್ಲಿಯೂ ಇಲ್ಲ. ಯಾರು-ಯಾರು ಬ್ರಾಹ್ಮಣರಾಗುತ್ತಾರೆ ಅವರ ಬುದ್ಧಿರೂಪಿ ಹಗ್ಗವು ಈ ಛೀ ಛೀ ಪ್ರಪಂಚದ ತೀರದಿಂದ ಬಿಚ್ಚಲ್ಪಟ್ಟಿದೆ. ನೀವು ಕಲಿಯುಗೀ ಪ್ರಪಂಚದ ತೀರವನ್ನು ಬಿಟ್ಟಿದ್ದೀರಿ. ಕೆಲವು ಬ್ರಾಹ್ಮಣರು ತೀವ್ರವಾಗಿ ಮುಂದೆ ಹೋಗುತ್ತಿದ್ದಾರೆ, ಕೆಲವರು ನೆನಪಿನ ಯಾತ್ರೆಯಲ್ಲಿ ಕಡಿಮೆಯಿದ್ದಾರೆ. ಕೆಲವರು ಕೈಯನ್ನೇ ಬಿಟ್ಟು ಬಿಡುತ್ತಾರೆಂದರೆ ಗುಟುಕರಿಸುತ್ತಾ ಅದರಲ್ಲಿಯೇ ಮುಳುಗಿ ಸಾಯುತ್ತಾರೆ ಅರ್ಥಾತ್ ಮತ್ತೆ ಕಲಿಯುಗದಲ್ಲಿಯೇ ಹೊರಟು ಹೋಗುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಅಂಬಿಗನು ಈಗ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದಾರೆ. ಆ ಯಾತ್ರೆಯಂತು ಅನೇಕ ಪ್ರಕಾರದ್ದಿದೆ, ನಿಮ್ಮ ಯಾತ್ರೆಯು ಒಂದೇ ಆಗಿದೆ, ಇದು ಸಂಪೂರ್ಣ ಭಿನ್ನವಾದ ಯಾತ್ರೆಯಾಗಿದೆ. ಹಾ! ಬಿರುಗಾಳಿಗಳು ನೆನಪನ್ನು ತುಂಡರಿಸುತ್ತವೆ. ಈ ನೆನಪಿನ ಯಾತ್ರೆಯನ್ನು ಚೆನ್ನಾಗಿ ಪಕ್ಕಾ ಮಾಡಿಕೊಳ್ಳಿ, ಪರಿಶ್ರಮ ಪಡಬೇಕು. ನೀವು ಕರ್ಮಯೋಗಿಯಾಗಿದ್ದೀರಿ. ಎಷ್ಟು ಸಾಧ್ಯವೋ ಅಷ್ಟು ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯನ್ನು ಮಾಡುತ್ತಿರಲಿ. ಅರ್ಧಕಲ್ಪದಿಂದ ನೀವು ಪ್ರಿಯತಮೆಯರಾಗಿ ಪ್ರಿಯತಮನನ್ನು ನೆನಪು ಮಾಡುತ್ತಾ ಬಂದಿದ್ದೀರಿ - ಬಾಬಾ ನಮಗೆ ಇಲ್ಲಿ ಬಹಳ ದುಃಖವಿದೆ, ಈಗ ನಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡಿ. ನೆನಪಿನ ಯಾತ್ರೆಯಲ್ಲಿ ಇರುತ್ತೀರೆಂದರೆ ನಿಮ್ಮ ಪಾಪವು ಸಮಾಪ್ತಿಯಾಗಿ ಬಿಡುತ್ತದೆ. ನೀವೇ ಸ್ವರ್ಗದ ಆಸ್ತಿಯನ್ನು ಪಡೆದಿದ್ದೀರಿ, ಈಗ ಕಳೆದುಕೊಂಡಿದ್ದೀರಿ. ಭಾರತವು ಸ್ವರ್ಗವಾಗಿತ್ತು ಆದ್ದರಿಂದ ಪ್ರಾಚೀನ ಭಾರತವೆಂದು ಹೇಳಲಾಗುತ್ತದೆ, ಭಾರತಕ್ಕೆ ಬಹಳ ಮಾನ್ಯತೆ ನೀಡುತ್ತಾರೆ. ಎಲ್ಲದಕ್ಕಿಂತ ದೊಡ್ಡದೂ ಆಗಿದೆ, ಎಲ್ಲದಕ್ಕಿಂತ ಹಳೆಯದೂ ಆಗಿದೆ. ಇದನ್ನಂತೂ ತಿಳಿದುಕೊಂಡಿದ್ದೀರಿ - ವಿನಾಶವು ಸನ್ಮುಖದಲ್ಲಿ ನಿಂತಿದೆ. ಯಾರು ಚೆನ್ನಾಗಿ ತಿಳಿದುಕೊಳ್ಳುವರೋ ಅವರಲ್ಲಿ ಬಹಳ ಖುಷಿಯಿರುತ್ತದೆ. ಪ್ರದರ್ಶನಿಯಲ್ಲಿ ಎಷ್ಟೊಂದು ಮಂದಿ ಬರುತ್ತಾರೆ.
ಅಹಮದಾಬಾದ್ನಲ್ಲಿ ನೋಡಿರಿ, ಎಷ್ಟೊಂದು ಸಾಧು-ಸಂತ ಮೊದಲಾದ ಪ್ರತಿಯೊಂದು ಪ್ರಕಾರದವರೂ ಬಂದಿದ್ದರು. ನೀವಂತೂ ಸತ್ಯವನ್ನೂ ಹೇಳುತ್ತೀರಿ ಎಂದು ಹೇಳುತ್ತಾರೆ ಆದರೆ ನಾವೂ ಸಹ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕೆಂಬುದು ಬುದ್ಧಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಇಲ್ಲಿಂದ ಹೊರಗೆ ಹೋಗುತ್ತಿದ್ದಂತೆಯೇ ಸಮಾಪ್ತಿ. ಈಗ ನೀವು ತಿಳಿದುಕೊಂಡಿದ್ದೀರಿ, ತಂದೆಯು ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾರೆ, ಅಲ್ಲಿ ಗರ್ಭ ಜೈಲಾಗಲಿ, ಸ್ಥೂಲವಾದ ಜೈಲಾಗಲಿ ಇರುವುದಿಲ್ಲ, ಮತ್ತೆಂದೂ ಜೈಲಿನ ಮುಖವು ನೋಡುವುದಕ್ಕೂ ಸಿಗುವುದಿಲ್ಲ. ಎರಡೂ ಜೈಲುಗಳಿರುವುದಿಲ್ಲ. ಇಲ್ಲಿ ಇದೆಲ್ಲವೂ ಮಾಯೆಯ ಶೋ ಆಗಿದೆ. ಇತ್ತೀಚೆಗೆ ಪ್ರತಿಯೊಂದು ಮಾತು ಆಕಸ್ಮಿಕವಾಗಿ ಆಗುತ್ತದೆ, ಮೃತ್ಯುವೂ ಸಹ ಆಕಸ್ಮಿಕವಾಗಿ ಆಗುತ್ತದೆ. ಸತ್ಯಯುಗದಲ್ಲಿ ಇಂತಹ ಯಾವುದೇ ಉಪದ್ರವಗಳಾಗುವುದಿಲ್ಲ, ಇಲ್ಲಿ ಮೃತ್ಯುವೂ ಬೇಗನೆ ಆಗುತ್ತದೆ ಆದ್ದರಿಂದ ಬಹಳ ದುಃಖವೂ ಆಗುತ್ತದೆ ಎಲ್ಲರೂ ಸಮಾಪ್ತಿಯಾಗುತ್ತಾರೆ. ಇಡೀ ಧರಣಿಯೇ ಹೊಸದಾಗಿ ಬಿಡುತ್ತದೆ. ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜಧಾನಿಯಿರುತ್ತದೆ, ಅದು ಅವಶ್ಯವಾಗಿ ಪುನಃ ಬರುವುದು. ಮುಂದೆ ಹೋದಂತೆ ನೋಡುವಿರಿ ಏನಾಗುವುದು ಎಂದು. ಬಹಳ ಭಯಂಕರ ದೃಶ್ಯವಿರುವುದು. ನೀವು ಮಕ್ಕಳು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ ಆದ್ದರಿಂದ ಮಕ್ಕಳಿಗಾಗಿ ಮುಖ್ಯವಾದುದು ನೆನಪಿನ ಯಾತ್ರೆಯಾಗಿದೆ. ಇದು ಏರುವ ಕಲೆಯ ಯಾತ್ರೆಯಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸದಾ ಇದೇ ಸ್ಮೃತಿಯಲ್ಲಿರಿ - ನಾವು ಬ್ರಾಹ್ಮಣರಾಗಿದ್ದೇವೆ, ನಾವು ಬ್ರಾಹ್ಮಣರಿಗೇ ಭಗವಂತನು ಓದಿಸುತ್ತಾರೆ. ನಾವೀಗ ಬ್ರಾಹ್ಮಣರಿಂದ ದೇವತೆಗಳಾಗುತ್ತಿದ್ದೇವೆ.
2. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ದಾನ ಮಾಡಬೇಕಾಗಿದೆ. ಈ ಕಲಿಯುಗೀ ಪತಿತ ಪ್ರಪಂಚದ ತೀರವನ್ನು ಬಿಡಬೇಕಾಗಿದೆ. ಮಾಯೆಯ ಬಿರುಗಾಳಿಗಳಿಗೆ ಹೆದರಬಾರದು.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ ಗೀತೆಯನ್ನು ಕೇಳಿದಿರಿ, ಇದರ ಅರ್ಥವನ್ನು ಅವಶ್ಯವಾಗಿ ಮಕ್ಕಳು ತಿಳಿದುಕೊಂಡು ಬಿಟ್ಟಿರಿ. ತಂದೆಯು ಬಂದು ಹೊಸ ಹೊಸ ಮಾತುಗಳನ್ನು ತಿಳಿಸುತ್ತಾರೆ. ಹೊಸ ಪ್ರಪಂಚದ ಹೊಸ ಯುಗಕ್ಕಾಗಿ ಈ ಮಾತುಗಳನ್ನು ಮಕ್ಕಳು 5000 ವರ್ಷಗಳ ಮೊದಲೂ ಕೇಳಿದ್ದಿರಿ, ಈಗ ಪುನಃ ಕೇಳುತ್ತಿದ್ದೀರಿ. ಬಾಕಿ ಮಧ್ಯದಲ್ಲಿ ಕೇವಲ ಭಕ್ತಿಮಾರ್ಗದ ಮಾತುಗಳನ್ನೇ ಕೇಳಿದಿರಿ. ಸತ್ಯಯುಗದಲ್ಲಿ ಈ ಮಾತುಗಳಿರುವುದಿಲ್ಲ, ಅಲ್ಲಿ ಜ್ಞಾನಮಾರ್ಗದ ಪ್ರಾಲಬ್ಧವಿರುತ್ತದೆ. ಈಗ ನೀವು ಮಕ್ಕಳು ಹೊಸ ಪ್ರಪಂಚಕ್ಕಾಗಿ ಸತ್ಯ ಸಂಪಾದನೆ ಮಾಡಿಕೊಳ್ಳುತ್ತಿದ್ದೀರಿ. ಜ್ಞಾನಕ್ಕೆ ಆದಾಯದ ಮೂಲವೆಂದು ಹೇಳಲಾಗುತ್ತದೆ. ವಿದ್ಯೆಯ ಮೂಲಕವೇ ಬ್ಯಾರಿಸ್ಟರ್, ಇಂಜಿನಿಯರ್ ಇತ್ಯಾದಿ ಆಗುತ್ತಾರೆ, ಸಂಪಾದನೆಯೂ ಆಗುತ್ತದೆ. ನೀವು ಈ ವಿದ್ಯೆಯಿಂದ ರಾಜಾಧಿರಾಜರಾಗುತ್ತೀರಿ. ಇದು ಎಷ್ಟು ದೊಡ್ಡ ಸಂಪಾದನೆಯಾಗಿದೆ! ಈಗ ನೀವು ಮಕ್ಕಳಿಗೆ ಈ ನಿಶ್ಚಯವಿದೆ, ಒಂದುವೇಳೆ ಸ್ವಲ್ಪ ಸಂಶಯವಿದ್ದರೂ ಸಹ ಮುಂದೆ ನಡೆಯುತ್ತಾ-ನಡೆಯುತ್ತಾ ನಿಶ್ಚಯವಾಗುತ್ತಾ ಹೋಗುವುದು, ಸೆಕೆಂಡಿನಲ್ಲಿ ಜೀವನ್ಮುಕ್ತಿಯೆಂದು ಗಾಯನವಿದೆ. ತಂದೆಯ ಮಕ್ಕಳಾದರು ಎಂದರೆ ಆಸ್ತಿಗೆ ಮಾಲೀಕನಾದರು. ಯಾವ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆಯೋ ಅವರೇ ನಮ್ಮನ್ನು ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆ. ಇದಂತೂ ಮಕ್ಕಳಿಗೆ ನಿಶ್ಚಯವಿರಬೇಕು. ಇದನ್ನೂ ತಿಳಿದುಕೊಂಡಿದ್ದೀರಿ - ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ. ಅವರಿಗೆ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಲೌಕಿಕ ತಂದೆಗೆ ಎಂದೂ ಪರಮಪಿತನೆಂದು ಹೇಳುವುದಿಲ್ಲ. ಎಲ್ಲರ ಸುಖದಾತ, ಶಾಂತಿದಾತ, ಅವರೊಬ್ಬರೇ ಪಾರಲೌಕಿಕ ತಂದೆಯಾಗಿದ್ದಾರೆ. ಸತ್ಯಯುಗದಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ. ಉಳಿದ ಆತ್ಮರು ಶಾಂತಿಧಾಮದಲ್ಲಿ ಇರುತ್ತಾರೆ. ಸತ್ಯಯುಗದಲ್ಲಿ ನಿಮಗೆ ಸುಖ, ಶಾಂತಿ, ಹಣ-ಅಂತಸ್ತು, ನಿರೋಗಿಕಾಯ ಎಲ್ಲವೂ ಇತ್ತು. ಆದ್ದರಿಂದ ಅಂತಹ ಪ್ರಿಯಾತಿ ಪ್ರಿಯ ತಂದೆಯನ್ನು ಎಲ್ಲರೂ ಕರೆಯುತ್ತಾರೆ. ಸಾಧು-ಸಂತರೂ ಸಹ ಸಾಧನೆ ಮಾಡುತ್ತಾರೆ ಆದರೆ ಯಾವುದರ ಸಾಧನೆ ಮಾಡುತ್ತಾರೆಂದು ತಿಳಿದುಕೊಂಡಿಲ್ಲ. ಅವರು ಬ್ರಹ್ಮತತ್ವದ ಸಾಧನೆ ಮಾಡುತ್ತಾರೆ. ನಾವು ಬ್ರಹ್ಮತತ್ವದಲ್ಲಿ ಲೀನವಾಗಿ ಬಿಡಬೇಕೆಂದು ಹೇಳುತ್ತಾರೆ, ಆದರೆ ಲೀನವಾಗಲು ಸಾಧ್ಯವಿಲ್ಲ. ಬ್ರಹ್ಮತತ್ವವನ್ನು ನೆನಪು ಮಾಡುವುದರಿಂದ ಪಾಪವು ಕಳೆಯುತ್ತದೆಯೇ? ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ. ಸರ್ವಶಕ್ತಿವಂತನು ನಾನಾಗಿದ್ದೇನೆಯೋ ಅಥವಾ ಇರುವಂತಹ ಸ್ಥಾನವಾದ ಬ್ರಹ್ಮತತ್ವವೋ? ಬ್ರಹ್ಮಮಹಾತತ್ವದಲ್ಲಿ ಎಲ್ಲಾ ಆತ್ಮರು ನಿವಾಸ ಮಾಡುತ್ತಾರೆ, ಆ ಬ್ರಹ್ಮತತ್ವವನ್ನೇ ಅವರು ಭಗವಂತನೆಂದು ತಿಳಿದುಕೊಂಡಿದ್ದಾರೆ. ಹೇಗೆ ಭಾರತವಾಸಿಗಳು ಹಿಂದೂಸ್ಥಾನದಲ್ಲಿರುವ ಕಾರಣ ತಮ್ಮ ಧರ್ಮವನ್ನು ಹಿಂದೂ ಎಂದು ತಿಳಿದುಕೊಂಡಿದ್ದಾರೆಯೋ ಹಾಗೆಯೇ ಬ್ರಹ್ಮತತ್ವ ಇರುವ ಸ್ಥಾನವನ್ನೇ ಪರಮಾತ್ಮನೆಂದು ತಿಳಿದುಕೊಂಡಿದ್ದಾರೆ. ಅದು ಬ್ರಹ್ಮಾಂಡವಾಗಿದೆ. ಅಲ್ಲಿ ಆತ್ಮರು ಜ್ಯೋತಿರ್ಬಿಂದು ಅಂಡಾಕಾರದಲ್ಲಿರುತ್ತಾರೆ, ಆದ್ದರಿಂದ ಅದಕ್ಕೆ ಬ್ರಹ್ಮಾಂಡವೆಂದು ಹೇಳುತ್ತಾರೆ. ಇದು ಮನುಷ್ಯ ಸೃಷ್ಟಿಯಾಗಿದೆ, ಬ್ರಹ್ಮಾಂಡವೇ ಬೇರೆ ಮನುಷ್ಯ ಸೃಷ್ಟಿಯೇ ಬೇರೆಯಾಗಿದೆ. ಆತ್ಮವೆಂದರೇನು, ಇದು ಯಾರಿಗೂ ತಿಳಿದಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ ಮತ್ತೆ ಹೇಳುತ್ತಾರೆ - ಆತ್ಮವು ಅಂಗುಷ್ಟಾಕಾರವಾಗಿದೆ ಎಂದು. ಆದರೆ ತಂದೆಯು ತಿಳಿಸುತ್ತಾರೆ - ಆತ್ಮವು ಬಹಳ ಸೂಕ್ಷ್ಮ ಬಿಂದುವಾಗಿದೆ, ಅದನ್ನು ಈ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ, ಇದನ್ನು ಸೆರೆ ಹಿಡಿಯಲು ಅಥವಾ ನೋಡಲು ಬಹಳ ಪ್ರಯತ್ನ ಪಡುತ್ತಾರೆ ಆದರೆ ಯಾರಿಗೂ ಅರ್ಥವಾಗುವುದಿಲ್ಲ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಅಂದಮೇಲೆ ಈಗ ನೀವು ಭಾರತವನ್ನು ಸ್ವರ್ಗವನ್ನಾಗಿ ಮಾಡುವುದರಲ್ಲಿ ತಂದೆಗೆ ಸಹಯೋಗಿಗಳಾಗಬೇಕಾಗಿದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿಯನ್ನೂ ಭಾರತದಲ್ಲಿಯೇ ಆಚರಿಸುತ್ತಾರೆ, ಹೇಗೆ ಕ್ರೈಸ್ಟ್ ಇದ್ದು ಹೋದರು. ಕ್ರಿಶ್ಚಿಯನ್ನರು ಕ್ರಿಸ್ಮಸ್ನ್ನು ಆಚರಿಸುತ್ತಲೇ ಇರುತ್ತಾರೆ. ಕ್ರೈಸ್ಟ್ ಯಾವಾಗ ಬಂದರು ಎಂಬುದನ್ನೂ ತಿಳಿದುಕೊಂಡಿರುತ್ತಾರೆ ಆದರೆ ಭಾರತವಾಸಿಗಳಿಗೆ ಮಾತ್ರ ತಂದೆಯು ಯಾವಾಗ ಬಂದಿದ್ದರು ಎಂಬುದು ಗೊತ್ತಿಲ್ಲ. ಕೃಷ್ಣನು ಯಾವಾಗ ಬಂದಿದ್ದನೆಂದು ಯಾರ ಬಗ್ಗೆಯೂ ಅವರಿಗೆ ತಿಳಿದಿಲ್ಲ. ಮಹಿಮೆಯೆಲ್ಲವೂ ಕೃಷ್ಣನಿಗೆ ಹಾಡುತ್ತಾರೆ, ಉಯ್ಯಾಲೆಯಲ್ಲಿ ತೂಗುತ್ತಾರೆ, ಪ್ರೀತಿ ಮಾಡುತ್ತಾರೆ ಆದರೆ ಕೃಷ್ಣನ ಜನ್ಮವು ಯಾವಾಗ ಆಯಿತೆಂದು ತಿಳಿದಿಲ್ಲ. ದ್ವಾಪರದಲ್ಲಿ ಗೀತೆಯನ್ನು ತಿಳಿಸಿದನೆಂದು ಹೇಳುತ್ತಾರೆ ಆದರೆ ಕೃಷ್ಣನು ದ್ವಾಪರದಲ್ಲಿ ಬರುವುದೇ ಇಲ್ಲ. ಲೀಲೆಯು ಒಬ್ಬ ತಂದೆಯದಾಗಿದೆ ಆದ್ದರಿಂದ ನಿಮ್ಮ ಗತಿಮತವು ನಿಮಗೇ ಗೊತ್ತು ಎಂದು ತಂದೆಗೆ ಹೇಳುತ್ತಾರೆ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ, ಮೊದಲೇ ತಾಯಿಗೆ ಈಗ ಯೋಗಬಲದಿಂದ ಮಗು ಜನಿಸಲಿದೆ ಎಂದು ಸಾಕ್ಷಾತ್ಕಾರವಾಗುತ್ತದೆ, ಅಲ್ಲಿ ಶರೀರವನ್ನೂ ಸಹ ಅದೇರೀತಿ ಬಿಡುತ್ತಾರೆ. ಸರ್ಪದಂತೆ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ವಾಸ್ತವದಲ್ಲಿ ಈ ಉದಾಹರಣೆ ಕೊಡಲು ಸಾಧ್ಯವಿಲ್ಲ. ನೀವು ವಿಕಾರಿ ಮನುಷ್ಯರಿಗೆ ಜ್ಞಾನದ ಭೂ ಭೂ ಮಾಡಿ ತಮೋಪ್ರಧಾನದಿಂದ ಸತೋಪ್ರಧಾನರನ್ನಾಗಿ ಮಾಡಿ ಬಿಡುತ್ತೀರಿ. ಇದು ನಿಮ್ಮ ಕರ್ತವ್ಯವಾಗಿದೆ, ಜ್ಞಾನದ ಭೂ ಭೂ ಮಾಡಿ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಿ ಬಿಡುತ್ತೀರಿ. ಆಮೆಯ ಉದಾಹರಣೆಯೂ ಸಹ ಈ ಸಮಯದ್ದಾಗಿದೆ, ಕರ್ಮ ಮಾಡಿದ ನಂತರ ಎಷ್ಟು ಸಮಯ ಸಿಗುವುದೋ ತಂದೆಯನ್ನು ನೆನಪು ಮಾಡಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ, ನಮ್ಮದು ಇದು ಅಂತಿಮ ಜನ್ಮವಾಗಿದೆ, ಈಗ ನಾಟಕವು ಮುಕ್ತಾಯವಾಗಲಿದೆ. ಹಳೆಯ ಶರೀರವಾಗಿದೆ, ಇದರ ಕರ್ಮಭೋಗವನ್ನೂ ಮುಗಿಸಬೇಕಾಗಿದೆ. ಯಾವಾಗ ಸತೋಪ್ರಧಾನರಾಗಿ ಬಿಡುತ್ತೀರೋ ಆಗ ಕರ್ಮಾತೀತ ಸ್ಥಿತಿಯಾಗುವುದು. ನಂತರ ನಾವು ಈ ಶರೀರದಲ್ಲಿರಲು ಸಾಧ್ಯವಿಲ್ಲ. ಕರ್ಮಾತೀತ ಸ್ಥಿತಿಯಾಯಿತೆಂದರೆ ಶರೀರವನ್ನು ಬಿಟ್ಟು ಬಿಡುತ್ತೇವೆ, ನಂತರ ಯುದ್ಧವು ಆರಂಭವಾಗುತ್ತದೆ. ಸೊಳ್ಳೆಗಳ ರೀತಿ ಎಲ್ಲಾ ಶರೀರಗಳು ಸಮಾಪ್ತಿಯಾಗಿ ಆತ್ಮರು ಹೊರಟು ಹೋಗುವರು. ಪವಿತ್ರರಾಗದೇ ಯಾರೂ ಹೋಗಲು ಸಾಧ್ಯವಿಲ್ಲ. ಇದು ರಾವಣನು ಸ್ಥಾಪನೆ ಮಾಡಿರುವ ದುಃಖಧಾಮವಾಗಿದೆ ಮತ್ತು ಸತ್ಯಯುಗವು ರಾಮನು ಸ್ಥಾಪನೆ ಮಾಡಿರುವ ಶಿವಾಲಯವಾಗಿದೆ. ವಾಸ್ತವದಲ್ಲಿ ಪರಮಾತ್ಮನ ಹೆಸರು ಶಿವನೆಂದಾಗಿದೆ, ರಾಮನೆಂದಲ್ಲ. ಸತ್ಯಯುಗ ಶಿವಾಲಯದಲ್ಲಿ ಎಲ್ಲರೂ ದೇವತೆಗಳಿರುತ್ತಾರೆ ಮತ್ತೆ ಭಕ್ತಿಮಾರ್ಗದಲ್ಲಿ ಶಿವನ ಪ್ರತಿಮೆಗಾಗಿ ಮಂದಿರ, ಶಿವಾಲಯ, ಇತ್ಯಾದಿಗಳನ್ನು ಕಟ್ಟಿಸುತ್ತಾರೆ. ಈಗ ಇದು ಶಿವ ತಂದೆಯ ಸಿಂಹಾಸನವಾಗಿದೆ. ಆತ್ಮವು ಈ ಸಿಂಹಾಸನದ ಮೇಲೆ ವಿರಾಜಮಾನವಾಗಿದೆ. ತಂದೆಯು ಇವರ (ಬ್ರಹ್ಮಾ) ಆತ್ಮದ ಪಕ್ಕದಲ್ಲಿಯೇ ಬಂದು ವಿರಾಜಮಾನವಾಗುತ್ತಾರೆ, ಓದಿಸುತ್ತಾರೆ. ಸದಾ ಇರುವುದಿಲ್ಲ. ನೆನಪು ಮಾಡಿದಾಗ ಬರುವರು, ತಂದೆಯು ತಿಳಿಸುತ್ತಾರೆ - ನಾನು ನಿಮ್ಮ ಬೇಹದ್ದಿನ ತಂದೆಯಾಗಿದ್ದೇನೆ, ಆಸ್ತಿಯು ನನ್ನಿಂದಲೇ ನಿಮಗೆ ಸಿಗಬೇಕಾಗಿದೆ. ಬ್ರಹ್ಮನು ಬೇಹದ್ದಿನ ತಂದೆಯಲ್ಲ ಆದ್ದರಿಂದ ನೀವು ನನ್ನನ್ನು ನೆನಪು ಮಾಡಿ. ಮಧುರ ಮಕ್ಕಳಿಗೆ ತಿಳಿದಿದೆ- ತಂದೆಯು ಜ್ಞಾನಸಾಗರನಾಗಿದ್ದಾರೆ, ಪ್ರೀತಿಯ ಸಾಗರನಾಗಿದ್ದಾರೆ ಅಂದಮೇಲೆ ನೀವು ಮಕ್ಕಳೂ ಸಹ ಪ್ರೀತಿಯ ಸಾಗರರಾಗಬೇಕಾಗಿದೆ. ಸ್ತ್ರೀ-ಪುರುಷರು ಒಬ್ಬರು ಇನ್ನೊಬ್ಬರಿಗೆ ಸತ್ಯಪ್ರೀತಿಯನ್ನು ಕೊಡುವುದಿಲ್ಲ, ಅವರಂತೂ ಕಾಮ ವಿಕಾರವನ್ನೇ ಪ್ರೀತಿಯೆಂದು ತಿಳಿಯುತ್ತಾರೆ. ಆದರೆ ತಂದೆಯು ಹೇಳಿದ್ದಾರೆ- ಕಾಮ ಮಹಾಶತ್ರುವಾಗಿದೆ. ಇದು ಆದಿ-ಮಧ್ಯ-ಅಂತ್ಯ ದುಃಖ ಕೊಡುವುದಾಗಿದೆ. ದೇವತೆಗಳು ನಿರ್ವಿಕಾರಿಯಾಗಿದ್ದರು ಆದ್ದರಿಂದಲೇ ಕೃಷ್ಣನಂತಹ ಮಗುವಾಗಲಿ ಕೃಷ್ಣ್ಣನಂತಹ ಪತಿ ಸಿಗಲಿ ಎಂದು ಹೇಳುತ್ತಾರೆ. ಕೃಷ್ಣ ಪುರಿಯನ್ನು ನೆನಪು ಮಾಡುತ್ತಾರಲ್ಲವೆ. ಈಗ ತಂದೆಯು ಕೃಷ್ಣ ಪುರಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ. ನೀವು ಸ್ವಯಂ ಶ್ರೀಕೃಷ್ಣನಂತೆ ಅಥವಾ ಮೋಹನನಂತೆ ಆಗುತ್ತೀರಿ. ಅನ್ಯ ರಾಜಕುಮಾರ-ಕುಮಾರಿಯರೂ ಇರುತ್ತಾರಲ್ಲವೆ ಅಂದಮೇಲೆ ಎಲ್ಲರೂ ಇಲ್ಲಿಯೇ ತಯಾರಾಗುತ್ತಿದ್ದಾರೆ. ಅವರದೂ ಪಟ್ಟಿಯಿರುತ್ತದೆ. 8 ಮಣಿಗಳ ಮಾಲೆಯೂ ಇದೆ, 108 ಮಣಿಗಳೂ ಇದೆ. ಮನುಷ್ಯರು ನವರತ್ನಗಳ ಉಂಗುರವನ್ನು ಧರಿಸುತ್ತಾರೆ. ಈಗ ಈ 8 ರತ್ನಗಳು ಯಾರು? ಮಧ್ಯದಲ್ಲಿ ಯಾರಿದ್ದಾರೆ? ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಮಧುರಾತಿ ಮಧುರ ತಂದೆಯ ಮೂಲಕ ನಾವು ರತ್ನಗಳಾಗುತ್ತಿದ್ದೇವೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಪರಸ್ಪರ ಬಹಳ ಪ್ರೀತಿಯಿಂದ ನಡೆಯಬೇಕಾಗಿದೆ, ಇಲ್ಲದಿದ್ದರೆ ತಂದೆಯ ಹೆಸರನ್ನು ಕೆಡಿಸುತ್ತೀರಿ ಮತ್ತೆ ಸದ್ಗುರುವಿನ ನಿಂದನೆ ಮಾಡಿಸುವವರು ಪದವಿ ಪಡೆಯಲು ಸಾಧ್ಯವಿಲ್ಲ, ಎಲ್ಲರಿಗೆ ಮಂತ್ರವನ್ನು ತಿಳಿಸಿ - ಒಬ್ಬ ತಂದೆಯನ್ನು ನೆನಪು ಮಾಡಿದರೆ ತುಕ್ಕು ಬಿಟ್ಟು ಹೋಗುವುದು. ಮನೆಯಲ್ಲಿಯೂ ಸಹ ಇಷ್ಟು ಪ್ರೀತಿಯಿಂದ ನಡೆದುಕೊಳ್ಳಬೇಕು ನಿಮ್ಮನ್ನು ನೋಡಿ, ಇವರಲ್ಲಿ ಕ್ರೋಧವಿಲ್ಲ, ಬಹಳ ಪ್ರೀತಿ ಬಂದು ಬಿಟ್ಟಿದೆ ಎಂದು ಹೇಳುವಂತಿರಬೇಕು. ಸಿಗರೇಟ್ ಸೇದುವುದು ಕೆಟ್ಟ ಹವ್ಯಾಸವಾಗಿದೆ. ಈಗ ಇಂತಹ ಎಲ್ಲಾ ಹವ್ಯಾಸಗಳನ್ನು ಬಿಟ್ಟು ಬಿಡಬೇಕಾಗಿದೆ. ದೈವೀ ಗುಣಗಳನ್ನು ಇಲ್ಲಿಯೇ ಧಾರಣೆ ಮಾಡಿಕೊಳ್ಳಬೇಕು. ರಾಜಧಾನಿಯು ಸ್ಥಾಪನೆ ಮಾಡುವುದರಲ್ಲಿ ಅನ್ಯ ಧರ್ಮದವರು ರಾಜಧಾನಿಯನ್ನು ಸ್ಥಾಪನೆ ಮಾಡುವುದಿಲ್ಲ. ಅವರು ಅಂತಿಮದಲ್ಲಿ ಪರಮಧಾಮದಿಂದ ಬರುತ್ತಾ ಇರುತ್ತಾರೆ. ನೀವು 21 ಜನ್ಮಗಳ ಪ್ರಾಲಬ್ಧವನ್ನು ರೂಪಿಸಿಕೊಳ್ಳುತ್ತಿದ್ದೀರಿ, ಇದರಲ್ಲಿ ಮಾಯೆಯ ಬಿರುಗಾಳಿಗಳು ಬಹಳ ಬರುತ್ತವೆ, ಆದರೂ ಸಹ ಪುರುಷಾರ್ಥ ಮಾಡಿ ದೈವೀಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಂದುವೇಳೆ ಕ್ರೋಧದಿಂದ ಮಾತನಾಡುತ್ತೀರೆಂದರೆ ಇವರಲ್ಲಿ ಭೂತವಿದೆಯೆಂದು ಎಲ್ಲರೂ ಹೇಳತೊಡಗುತ್ತಾರೆ ಅಂದರೆ ಬೇಹದ್ದಿನ ತಂದೆಯ ಗೌರವವನ್ನು ಕಳೆದಿರಿ. ಇಂತಹವರು ಶ್ರೇಷ್ಠ ಪದವಿಯನ್ನು ಹೇಗೆ ಪಡೆಯುವರು? ಬಹಳ ಮಧುರ ಅನಾಸಕ್ತರಾಗಬೇಕಾಗಿದೆ. ಇಲ್ಲಿರುತ್ತಾ ಎಲ್ಲವನ್ನೂ ಮಾಡುತ್ತಾ ಯೋಗವು ಪ್ರಿಯತಮನ ಜೊತೆಯಿರಲಿ. ತಂದೆಯು ತಿಳಿಸಿದ್ದಾರೆ - ನನ್ನನ್ನು ನೆನಪು ಮಾಡಿದರೆ ಪಾಪಗಳು ಭಸ್ಮವಾಗುತ್ತವೆ, ಇದಕ್ಕೆ ಯೋಗಾಗ್ನಿಯೆಂದು ಹೇಳಲಾಗುತ್ತದೆ, ಇಲ್ಲಿ ಹಠಯೋಗದ ಅವಶ್ಯಕತೆಯಿಲ್ಲ. ತಮ್ಮ ಶರೀರವನ್ನು ಸ್ವಾಸ್ಥ್ಯವಾಗಿ ಇಟ್ಟುಕೊಳ್ಳಬೇಕು. ಇದು ಅತ್ಯಮೂಲ್ಯ ಶರೀರವಾಗಿದೆ, ಶುದ್ಧ ಭೋಜನವನ್ನೇ ಸ್ವೀಕರಿಸಬೇಕಾಗಿದೆ. ದೇವತೆಗಳಿಗೆ ಎಂತಹ ಭೋಗವನ್ನು ಇಡುತ್ತಾರೆ, ಶ್ರೀನಾಥ ದ್ವಾರದಲ್ಲಿ ಹೋಗಿ ನೋಡಿರಿ. ಬಂಗಾಳದಲ್ಲಂತೂ ಕಾಳಿಗೆ ಕುರಿಯ ಮಾಂಸದ ನೈವೇದ್ಯವನ್ನು ಇಡುತ್ತಾರೆ. ವಿವೇಕಾನಂದರು ಮೀನು ಇತ್ಯಾದಿಯೆಲ್ಲವನ್ನೂ ತಿನ್ನುತ್ತಿದ್ದರು, ಪಿತೃಪಕ್ಷದವರಿಗೂ ಸಹ ಮೀನನ್ನು ತಿನ್ನಿಸುತ್ತಾರೆ ಇಲ್ಲದಿದ್ದರೆ ಅವರು ಮುನಿಸಿಕೊಳ್ಳುವರೆಂದು ತಿಳಿಯುತ್ತಾರೆ. ಯಾರು ಈ ಪದ್ಧತಿಯನ್ನು ಮಾಡಿದರೋ ಅದೇ ಪದ್ಧತಿಯು ನಡೆದುಬರುತ್ತಿದೆ. ದೇವಿ-ದೇವತೆಗಳ ರಾಜ್ಯದಲ್ಲಿ ಯಾವುದೇ ಪಾಪವಾಗುವುದಿಲ್ಲ ಅದು ರಾಮರಾಜ್ಯವಾಗಿದೆ. ಅಲ್ಲಿ ಕರ್ಮವು ಅಕರ್ಮವಾಗುತ್ತದೆ, ಇಲ್ಲಿನ ಕರ್ಮವು ವಿಕರ್ಮವಾಗುತ್ತದೆ. ಮನುಷ್ಯರು ಹರಿದ್ವಾರದಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ, ಕೃಷ್ಣನಿಗೆ ಹರಿಯೆಂದು ಹೇಳುತ್ತಾರೆ. ಕೃಷ್ಣನು ಸತ್ಯಯುಗದಲ್ಲಿರುತ್ತಾನೆ, ವಾಸ್ತವದಲ್ಲಿ ಹರಿ ಎಂಬ ಹೆಸರು ಶಿವನಿಗಿದೆ. ಹರಿ ಎಂದರೆ ದುಃಖವನ್ನು ಹರಿಸುವವರು ಎಂದರ್ಥ ಆದರೆ ಗೀತೆಯಲ್ಲಿ ಕೃಷ್ಣನ ಹೆಸರನ್ನು ಹಾಕಿ ಕೃಷ್ಣನನ್ನು ಹರಿಯೆಂದು ತಿಳಿದುಕೊಂಡಿದ್ದಾರೆ. ವಾಸ್ತವದಲ್ಲಿ ದುಃಖವನ್ನು ಹರಿಸುವವರು ಶಿವ ತಂದೆಯಾಗಿದ್ದಾರೆ. ಸತ್ಯಯುಗಕ್ಕೆ ಹರಿದ್ವಾರವೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿ ಏನು ಬಂದರೆ ಅದನ್ನು ಹೇಳುತ್ತಿರುತ್ತಾರೆ.
ತಂದೆಯು ತಿಳಿಸುತ್ತಾರೆ - ನಾನು ಸಂಗಮಯುಗದಲ್ಲಿಯೇ ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು ಬರುತ್ತೇನೆ, ರಾವಣನು ಹಳೆಯ ಶತ್ರುವಾಗಿದ್ದಾನೆ. ರಾವಣನನ್ನು ಪ್ರತೀ ವರ್ಷವೂ ಸುಡುತ್ತಾರೆ, ಎಷ್ಟೊಂದು ಹಣವನ್ನು ಖರ್ಚು ಮಾಡುತ್ತಾರೆ. ಸಮಯವೂ ವ್ಯರ್ಥ, ಹಣವೂ ವ್ಯರ್ಥವಾಗುತ್ತದೆ. ಬಂಗಾಳದಲ್ಲಿ ಎಷ್ಟೊಂದು ದೇವಿಯರನ್ನು ಮಾಡಿಸುತ್ತಾರೆ ಅವರಿಗೆ ತಿನ್ನಿಸಿ, ಕುಡಿಸಿ ಪೂಜೆ ಮಾಡಿ ನಂತರ ತೆಗೆದುಕೊಂಡು ಹೋಗಿ ಮುಳುಗಿಸುತ್ತಾರೆ. ಇದರ ಮೇಲೆ ಒಂದು ಗೀತೆಯೂ ಇದೆ. ಮಕ್ಕಳು ಬಹಳ ಮಧುರರಾಗಬೇಕಾಗಿದೆ, ಎಂದೂ ಸಹ ಕ್ರೋಧದಿಂದ ಮಾತನಾಡಬಾರದು. ತಂದೆಯೊಂದಿಗೆ ಎಂದೂ ಮುನಿಸಿಕೊಳ್ಳಬಾರದು. ಮುನಿಸಿಕೊಂಡು ಒಂದುವೇಳೆ ವಿದ್ಯಾಭ್ಯಾಸವನ್ನು ಬಿಟ್ಟರೆ ತನ್ನ ಕಾಲಿನ ಮೇಲೆ ಕೊಡಲಿ ಹಾಕಿಕೊಂಡಂತೆ. ನೀವಿಲ್ಲಿ ವಿಶ್ವದ ಮಾಲೀಕರಾಗಲು ಬಂದಿದ್ದೀರಿ. ಮಹಾರಾಜ ಶ್ರೀ ನಾರಾಯಣ, ಮಹಾರಾಣಿ ಎಂದು ಶ್ರೀ ಲಕ್ಷ್ಮಿಗೆ ಹೇಳಲಾಗುತ್ತದೆ. ಬಾಕಿ ಶ್ರೀ ಶ್ರೀ ಎಂಬುದು ಶಿವ ತಂದೆಯ ಬಿರುದಾಗಿದೆ. ಶ್ರೀ ಎಂದು ದೇವತೆಗಳಿಗೆ ಹೇಳಲಾಗುತ್ತದೆ. ಶ್ರೀ ಎಂದರೆ ಶ್ರೇಷ್ಠರು.
ನೀವೀಗ ವಿಚಾರ ಮಾಡಿರಿ – ಮಾಯೆಯು ನಮ್ಮ ತಲೆಯನ್ನು ತಿರುಗಿಸಿ ನಮ್ಮನ್ನು ಹೇಗೆ ಮಾಡಿ ಬಿಟ್ಟಿದೆ. ಭಾರತವು ಎಷ್ಟು ಸಾಹುಕಾರನಾಗಿತ್ತು! ನಂತರ ಹೇಗೆ ಕಂಗಾಲಾಯಿತು? ಏನಾಯಿತು? ಏನನ್ನೂ ತಿಳಿದುಕೊಂಡಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ನಾವೇ ದೇವತೆಗಳಾಗಿದ್ದೆವು ನಂತರ ಕ್ಷತ್ರಿಯರಾದೆವು. ಅವರು ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ, ಆದರೆ ಹಮ್ ಸೋ ಸೋ ಹಮ್ನ ಅರ್ಥವು ಎಷ್ಟು ಸಹಜವಾಗಿದೆ! ಮನುಷ್ಯನದು ಒಂದೇ ಜನ್ಮವೆಂದು ಅವರು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಮನುಷ್ಯರದು 84 ಜನ್ಮಗಳಿರುತ್ತವೆ, ಆ 84 ಜನ್ಮಗಳಲ್ಲಿ ನಿಮ್ಮದು ಈ ಸಂಗಮದ ಒಂದು ಜನ್ಮವು ದುರ್ಲಭವಾಗಿದೆ. ನೀವೀಗ ಬೇಹದ್ದಿನ ತಂದೆಯಿಂದ ಸ್ವರ್ಗದ ಆಸ್ತಿಯನ್ನು ಪಡೆಯುತ್ತೀರಿ, ನೀವು ಬಹಳ ರಾಯಲ್ ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ನಿಮ್ಮಲ್ಲಿ ಎಷ್ಟೊಂದು ರಾಯಲ್ಟಿ ಇರಬೇಕು! ರಾಯಲ್ ಮನುಷ್ಯರು ಎಂದೂ ಜೋರಾಗಿ ಮಾತನಾಡುವುದಿಲ್ಲ. ಪ್ರಪಂಚದಲ್ಲಿ ಮನೆ-ಮನೆಯಲ್ಲಿ ಎಷ್ಟೊಂದು ಹೊಡೆದಾಟವಿದೆ! ಸ್ವರ್ಗದಲ್ಲಿ ಇಂತಹ ಯಾವುದೇ ಮಾತಿಲ್ಲ. ಈ ತಂದೆಯೂ ಸಹ (ಬ್ರಹ್ಮಾ) ವಲ್ಲಭಾಚಾರಿ ಕುಲದವರಾಗಿದ್ದರು ಆದರೂ ಆ ಸತ್ಯಯುಗದ ದೇವತೆಗಳೆಲ್ಲಿ, ಈಗಿನ ಪತಿತ ವೈಷ್ಣವರೆಲ್ಲಿ! ವೈಷ್ಣವರಾಗಿದ್ದರೆ ಅವರು ವಿಕಾರದಲ್ಲಿ ಹೋಗುವುದಿಲ್ಲವೆಂದಲ್ಲ, ರಾವಣ ರಾಜ್ಯದಲ್ಲಿ ಎಲ್ಲರೂ ವಿಕಾರದಿಂದ ಜನ್ಮ ಪಡೆಯುತ್ತಾರೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ, ನೀವೀಗ ಸಂಪೂರ್ಣ ನಿರ್ವಿಕಾರಿಗಳಾಗುತ್ತಿದ್ದೀರಿ ಮತ್ತು ಯೋಗಬಲದ ಮೂಲಕ ವಿಶ್ವದ ಮಾಲೀಕರಾಗುತ್ತೀರಿ, ನಿಮ್ಮ ಚಲನೆಯು ಬಹಳ ಮಧುರ ರಾಯಲ್ ಆಗಿರಲಿ. ಯಾರೊಂದಿಗೂ ವಾದ ಅಥವಾ ಶಾಸ್ತ್ರವಾದ ಮಾಡಬಾರದು. ಅವರಂತೂ ಯಾವಾಗ ಶಾಸ್ತ್ರವಾದ ಮಾಡಲು ಕುಳಿತುಕೊಳ್ಳುತ್ತಾರೆಯೋ ಆಗ ಒಬ್ಬರು ಇನ್ನೊಬ್ಬರಿಗೆ ಕೋಲಿನಿಂದಲೂ ಹೊಡೆದು ಬಿಡುತ್ತಾರೆ. ಪಾಪ! ಅವರದೇನೂ ದೋಷವಿಲ್ಲ, ಪಾಪ ಅವರು ಈ ಜ್ಞಾನವನ್ನೇ ತಿಳಿದುಕೊಂಡಿಲ್ಲ. ಇದು ಆತ್ಮಿಕ ಜ್ಞಾನವಾಗಿದೆ, ಆತ್ಮಿಕ ತಂದೆಯಿಂದಲೇ ಸಿಗುತ್ತದೆ. ಅವರು ಜ್ಞಾನಸಾಗರನಾಗಿದ್ದಾರೆ, ಅವರ ಶರೀರದ ಹೆಸರಿಲ್ಲ. ಅವರು ಅವ್ಯಕ್ತ ಮೂರ್ತಿಯಾಗಿದ್ದಾರೆ. ತಿಳಿಸುತ್ತಾರೆ, ನನ್ನ ಹೆಸರಾಗಿದೆ ಶಿವ, ನಾನು ಸ್ಥೂಲ ಅಥವಾ ಸೂಕ್ಷ್ಮ ಶರೀರವನ್ನು ತೆಗೆದುಕೊಳ್ಳುವುದಿಲ್ಲ. ಜ್ಞಾನಸಾಗರ ಆನಂದ ಸಾಗರನೆಂದು ನನಗೇ ಹೇಳುತ್ತಾರೆ. ಶಾಸ್ತ್ರಗಳಲ್ಲಿ ಏನೇನನ್ನು ಬರೆದು ಬಿಟ್ಟಿದ್ದಾರೆ. ಹನುಮಂತನು ಪವನ ಪುತ್ರನಾಗಿದ್ದನು ಎಂದು ಹೇಳುತ್ತಾರೆ ಆದರೆ ಗಾಳಿಯಿಂದ ಮಗುವು ಜನಿಸಲು ಹೇಗೆ ಸಾಧ್ಯ! ಪರಮಾತ್ಮನನ್ನೂ ಮೀನು-ಮೊಸಳೆ ಅವತಾರವೆಂದು ಹೇಳುತ್ತಾ ಎಷ್ಟೊಂದು ನಿಂದನೆ ಮಾಡಿದ್ದಾರೆ. ತಂದೆಯು ಬಂದು ದೂರು ಕೊಡುತ್ತಾರೆ - ನೀವು ಆಸುರೀ ಮತದಂತೆ ನನಗೆ ಎಷ್ಟೊಂದು ನಿಂದನೆ ಮಾಡಿದಿರಿ. 24 ಅವತಾರವೆಂದು ಹೇಳಿದರೂ ಸಹ ಹೊಟ್ಟೆ ತುಂಬಲಿಲ್ಲ ಮತ್ತೆ ಕಣಕಣದಲ್ಲಿಯೂ ಕಲ್ಲು-ಮುಳ್ಳಿನಲ್ಲಿಯೂ ಪರಮಾತ್ಮನಿದ್ದಾನೆಂದು ನನ್ನನ್ನು ಎಲ್ಲದರಲ್ಲಿಯೂ ಹಾಕಿದಿರಿ. ಇವೆಲ್ಲಾ ಶಾಸ್ತ್ರಗಳು ದ್ವಾಪರದಿಂದ ರಚಿಸಲ್ಪಟ್ಟಿವೆ. ಮೊಟ್ಟ ಮೊದಲು ಕೇವಲ ಶಿವನ ಪೂಜೆಯಾಗುತ್ತಿತ್ತು. ಗೀತೆಯನ್ನೂ ಸಹ ನಂತರದಲ್ಲಿ ರಚಿಸಿದ್ದಾರೆ. ಈಗ ತಂದೆಯು ತಿಳಿಸುತ್ತಿದ್ದಾರೆ - ಇದೆಲ್ಲವೂ ಅನಾದಿ ಆಟವಾಗಿದೆ, ನಾನೀಗ ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ ಅಂದಮೇಲೆ ತಂದೆಯನ್ನು ಪೂರ್ಣ ಅನುಸರಿಸಬೇಕು. ಲಕ್ಷಣಗಳೂ ಸಹ ಬಹಳ ಚೆನ್ನಾಗಿರಲಿ. ಇದು ಆಶ್ಚರ್ಯವಲ್ಲವೆ. ಕಲಿಯುಗದ ಅಂತ್ಯದಲ್ಲಿ ಏನಿದೆ? ಮತ್ತು ಸತ್ಯಯುಗದಲ್ಲಿ ಏನು ನೋಡುತ್ತೀರಿ! ಕಲಿಯುಗದಲ್ಲಿ ಭಾರತವು ಬಡ ದೇಶವಾಗಿದೆ, ಸತ್ಯಯುಗದಲ್ಲಿ ಭಾರತವು ಸಾಹುಕಾರನಾಗಿರುತ್ತದೆ. ಆ ಸಮಯದಲ್ಲಿ ಮತ್ತ್ಯಾವುದೇ ಖಂಡವಿರುವುದಿಲ್ಲ, ಈ ಗೀತಾಭಾಗವು ಪುನರಾವರ್ತನೆಯಾಗುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ನಾವು ರಾಯಲ್ ತಂದೆಯ ಮಕ್ಕಳಾಗಿದ್ದೇವೆ, ಆದ್ದರಿಂದ ತಮ್ಮ ಚಲನೆಯನ್ನು ಬಹಳ ರಾಯಲ್ ಆಗಿಟ್ಟುಕೊಳ್ಳಬೇಕು. ಜೋರಾಗಿ ಮಾತನಾಡಬಾರದು, ಬಹಳ ಮಧುರರಾಗಬೇಕಾಗಿದೆ.
2. ಎಂದೂ ಸಹ ತಂದೆಯೊಂದಿಗೆ ಅಥವಾ ಪರಸ್ಪರ ಮುನಿಸಿಕೊಳ್ಳಬಾರದು. ಮುನಿಸಿಕೊಂಡು ವಿದ್ಯೆಯನ್ನೆಂದೂ ಬಿಡಬಾರದು. ಏನೆಲ್ಲಾ ಕೆಟ್ಟ ಹವ್ಯಾಸಗಳಿದೆಯೋ ಅದನ್ನು ಬಿಡಬೇಕಾಗಿದೆ.
ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನವಾಗುವರು
ಇಂದು ವಿಶ್ವದ ಸರ್ವ ಆತ್ಮರ ಉಪಕಾರಿ ಬಾಪ್ದಾದಾ ತನ್ನ ಶ್ರೇಷ್ಠ ಪರೋಪಕಾರಿ ಮಕ್ಕಳನ್ನು ನೋಡುತ್ತಿದ್ದಾರೆ. ವರ್ತಮಾನ ಸಮಯದಲ್ಲಿ ಅನೇಕ ಆತ್ಮರು ಉಪಕಾರಕ್ಕಾಗಿ ಇಚ್ಛುಕರಾಗಿದ್ದಾರೆ. ಸ್ವ-ಉಪಕಾರ ಮಾಡಿಕೊಳ್ಳುವ ಇಚ್ಛೆಯಿದೆ ಆದರೆ ಧೈರ್ಯ ಮತ್ತು ಶಕ್ತಿಯಿಲ್ಲ. ಇಂತಹ ನಿರ್ಬಲ ಆತ್ಮರಿಗೆ ಉಪಕಾರ ಮಾಡುವವರು ತಾವು ಪರೋಪಕಾರಿ ಮಕ್ಕಳು ನಿಮಿತ್ತರಾಗಿದ್ದೀರಿ. ತಾವು ಪರೋಪಕಾರಿ ಮಕ್ಕಳಿಗೆ ಆತ್ಮಗಳ ಕೂಗು ಕೇಳಿ ಬರುತ್ತದೆಯೇ ಅಥವಾ ಸ್ವ-ಉಪಕಾರದಲ್ಲಿಯೇ ವ್ಯಸ್ತರಾಗಿದ್ದೀರೋ? ವಿಶ್ವದ ರಾಜ್ಯಾಧಿಕಾರಿಗಳು ಅಥವಾ ಸ್ವ-ಉಪಕಾರಿ ಆಗುವುದಿಲ್ಲ, ಪರೋಪಕಾರಿ ಆತ್ಮನೇ ರಾಜ್ಯಾಧಿಕಾರಿಯಾಗಲು ಸಾಧ್ಯ. ಉಪಕಾರವು ಸತ್ಯ ಹೃದಯದಿಂದ ಮಾಡಲಾಗುತ್ತದೆ, ಜ್ಞಾನವನ್ನು ತಿಳಿಸುವುದು, ಇದು ಕೇವಲ ಬಾಯಿಂದಲೂ (ಮನಸ್ಸಿಲ್ಲದೆ) ಹೇಳಬಹುದಾಗಿದೆ. ಜ್ಞಾನವನ್ನು ತಿಳಿಸುವುದು, ಇದು ವಿಶಾಲ ಬುದ್ಧಿಯ ಮಾತಾಗಿದೆ ಹಾಗೂ ವರ್ಣನೆಯ ಅಭ್ಯಾಸದ ಮಾತಾಗಿದೆ ಆದ್ದರಿಂದ ಹೃದಯ ಮತ್ತು ಬುದ್ಧಿ ಎರಡರಲ್ಲಿ ಅಂತರವಿದೆ. ಯಾರಾದರೂ ಯಾರೊಂದಿಗಾದರೂ ಸ್ನೇಹವನ್ನು ಬಯಸುವುದಾದರೆ ಅವರು ಹೃದಯಪೂರ್ವಕ ಸ್ನೇಹವನ್ನು ಬಯಸುತ್ತಾರೆ. ಬಾಪ್ದಾದಾರವರ ಬಿರುದಾಗಿದೆ - ಹೃದಯ ಗೆಲ್ಲುವವರಾಗಿದ್ದಾರೆ, ಹೃದಯ ರಾಮನಾಗಿದ್ದಾರೆ. ಬುದ್ಧಿಯು ಸ್ಥೂಲವಾಗಿದೆ, ಹೃದಯವು ಸೂಕ್ಷ್ಮವಾಗಿದೆ. ಮಾತಿನಲ್ಲಿಯೂ ಸಹ ಸದಾ ಇದನ್ನೇ ಹೇಳುತ್ತೀರಿ, ಸತ್ಯ ಹೃದಯದಿಂದ ಹೇಳುತ್ತೇವೆ – ಸತ್ಯ ಹೃದಯದಿಂದ ತಂದೆಯನ್ನು ನೆನಪು ಮಾಡಿ, ಸತ್ಯ ಬುದ್ಧಿಯಿಂದ ನೆನಪು ಮಾಡಿ ಎಂದು ಹೇಳುವುದಿಲ್ಲ. ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನರಾಗುವರು ಎಂದು ಹೇಳಲಾಗುತ್ತದೆ, ವಿಶಾಲ ಬುದ್ಧಿಯವರ ಮೇಲೆ ಪ್ರಸನ್ನರಾಗುವರು ಎಂದು ಹೇಳುವುದಿಲ್ಲ. ವಿಶಾಲ ಬುದ್ಧಿಯ ವಿಶೇಷತೆಯು ಅವಶ್ಯಕವಾಗಿದೆ. ಈ ವಿಶೇಷತೆಯಿಂದ ಜ್ಞಾನದ ಅಂಶಗಳನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬಹುದು. ಆದರೆ ಹೃದಯದಿಂದ ನೆನಪು ಮಾಡುವವರು ಬಿಂದು ರೂಪರಾಗುತ್ತಾರೆ. ಬುದ್ಧಿಯಿಂದ ನೆನಪು ಮಾಡುವವರು ಕೇವಲ ಪಾಯಿಂಟ್ನ್ನು ರಿಪೀಟ್ ಮಾಡುತ್ತಾರೆ ಆದರೆ ಪಾಯಿಂಟ್ ರೂಪದಲ್ಲಿ ಹಿಂದುಳಿಯುತ್ತಾರೆ. ಕೆಲವೊಮ್ಮೆ ಸಹಜ, ಕೆಲವೊಮ್ಮೆ ಪರಿಶ್ರಮದಿಂದ ಬಿಂದು ರೂಪದಲ್ಲಿ ಸ್ಥಿತರಾಗುತ್ತಾರೆ ಆದರೆ ಸತ್ಯ ಹೃದಯದವರು ಸೆಕೆಂಡಿನಲ್ಲಿ ಬಿಂದುವಾಗಿ ಬಿಂದು ಸ್ವರೂಪ ತಂದೆಯನ್ನು ನೆನಪು ಮಾಡುತ್ತಾರೆ. ಸತ್ಯ ಹೃದಯದವರು ಸತ್ಯ ಸಾಹೇಬನನ್ನು ಖುಷಿ ಪಡಿಸುವ ಕಾರಣ ತಂದೆಯ ವಿಶೇಷ ಆಶೀರ್ವಾದಗಳ ಪ್ರಾಪ್ತಿಯ ಕಾರಣ ಸ್ಥೂಲ ರೂಪದಲ್ಲಿ ಭಲೆ ಬುದ್ಧಿಯು ಕೆಲವರ ಅಂತರದಲ್ಲಿ ಇಷ್ಟು ವಿಶಾಲವಾಗಿ ಇರದೇ ಇರಬಹುದು ಆದರೆ ಸತ್ಯತೆಯ ಶಕ್ತಿಯಿಂದ ಸಮಯ ಪ್ರಮಾಣ ಅವರ ಬುದ್ಧಿಯು ಯುಕ್ತಿ-ಯುಕ್ತ, ಯಥಾರ್ಥ ಕಾರ್ಯವನ್ನು ಸ್ವತಹ ಮಾಡುವುದು ಏಕೆಂದರೆ ಯಾವುದು ಯಥಾರ್ಥ ಕರ್ಮ, ಮಾತು ಮತ್ತು ಸಂಕಲ್ಪವಿದೆಯೋ ಅದು ಆಶೀರ್ವಾದಗಳ ಕಾರಣ ಡ್ರಾಮಾನುಸಾರ ಸಮಯ ಪ್ರಮಾಣ ಅದೇ ಪ್ರೇರಣೆಯು ಅವರ ಬುದ್ಧಿಯಲ್ಲಿ ಬರುವುದು ಏಕೆಂದರೆ ಬುದ್ಧಿವಂತರಿಗೂ ಬುದ್ಧಿವಂತನಾದ ತಂದೆಯನ್ನು ರಾಜಿ ಮಾಡಿಕೊಂಡಿರುತ್ತಾರೆ. ಯಾರು ಭಗವಂತನನ್ನೇ ರಾಜಿ ಮಾಡಿಕೊಂಡರೋ ಅವರು ಸ್ವತಹ ರಹಸ್ಯಯುಕ್ತ, ಯುಕ್ತಿ-ಯುಕ್ತರಾಗಿರುತ್ತಾರೆ.
ಅಂದಾಗ ಇದನ್ನು ಪರಿಶೀಲನೆ ಮಾಡಿಕೊಳ್ಳಿ - ನಾನು ವಿಶಾಲ ಬುದ್ಧಿಯ ಕಾರಣ ನೆನಪು ಮತ್ತು ಸೇವೆಯಲ್ಲಿ ಮುಂದುವರೆಯುತ್ತಿದ್ದೇನೆಯೇ ಅಥವಾ ಸತ್ಯ ಹೃದಯ ಮತ್ತು ಯಥಾರ್ಥ ಬುದ್ಧಿಯಿಂದ ಮುಂದುವರೆಯುತ್ತಿದ್ದೇನೆಯೇ? ಮೊದಲೂ ಸಹ ತಿಳಿಸಿದ್ದೆವು - ಬುದ್ಧಿಯಿಂದ ಸೇವೆ ಮಾಡುವವರ ಬಾಣವು ಅನ್ಯರ ಬುದ್ಧಿಯವರೆಗೆ ನಾಟುತ್ತದೆ. ಹೃದಯದಿಂದ ಸೇವೆ ಮಾಡುವವರ ಬಾಣವು ಹೃದಯಕ್ಕೆ ನಾಟುತ್ತದೆ. ಹೇಗೆ ಸ್ಥಾಪನೆಯ, ಸೇವೆಯ ಆದಿಯಲ್ಲಿ ನೋಡಿದಿರಿ, ಮೊದಲ ಸೇವೆಯ ಸಮೂಹದ ವಿಶೇಷತೆಯೇನಿತ್ತು? ಯಾವುದೇ ಭಾಷೆ ಅಥವಾ ಭಾಷಣದ ವಿಶೇಷತೆಯಿರಲಿಲ್ಲ. ಹೇಗೆ ಈಗಿನ ಕಾಲದಲ್ಲಿ ಬಹಳ ಚೆನ್ನಾಗಿ ಭಾಷಣ ಮಾಡುತ್ತೀರಿ, ಕಥೆಗಳು ಮತ್ತು ಕಾದಂಬರಿಗಳನ್ನೂ ಬಹಳ ಚೆನ್ನಾಗಿ ತಿಳಿಸುತ್ತೀರಿ ಆದರೆ ಆದಿಯಲ್ಲಿ ಇದ್ದವರಿಗೆ ಇಷ್ಟು ಬುದ್ಧಿಯಿರಲಿಲ್ಲ ಆದರೆ ಏನಿತ್ತು? ಸತ್ಯ ಹೃದಯದ ಧ್ವನಿಯಿತ್ತು. ಆದ್ದರಿಂದ ಹೃದಯದ ಕೂಗು ಅನೇಕರನ್ನು ಹೃದಯರಾಮನ ಮಕ್ಕಳನ್ನಾಗಿ ಮಾಡುವುದರಲ್ಲಿ ನಿಮಿತ್ತವಾಯಿತು. ಭಾಷೆಯು ಬೆರಕೆಯಾಗಿತ್ತು ಆದರೆ ನಯನಗಳ ಭಾಷೆಯು ಆತ್ಮೀಯವಾಗಿತ್ತು ಆದ್ದರಿಂದ ಭಲೆ ಭಾಷೆಯು ಹೇಗಿದ್ದರೂ ಸಹ ಮುಳ್ಳುಗಳಿಂದ ಗುಲಾಬಿಗಳಂತೂ ಆಗಿಯೇ ಬಿಟ್ಟರು. ಆ ಮೊದಲ ಗುಂಪಿನವರ ಸೇವೆಯ ಸಫಲತೆ ಮತ್ತು ವರ್ತಮಾನ ಸಮಯದ ವೃದ್ಧಿ ಎರಡನ್ನೂ ಪರಿಶೀಲನೆ ಮಾಡಿದಾಗ ಈಗ ಅಂತರವು ಕಂಡು ಬರುತ್ತದೆಯಲ್ಲವೆ. ಎರಡನೇ, ಮೂರನೇ ಗುಂಪಿನವರಲ್ಲಿಯೂ ಕೆಲಕೆಲವರು ಹೃದಯದವರಿದ್ದಾರೆ ಆದರೆ ಬಹಳ ಕಡಿಮೆ. ಆದಿಯ ಒಗಟು ಇಲ್ಲಿಯವರೆಗೂ ನಡೆಯುತ್ತಿದೆ, ಅದು ಯಾವ ಒಗಟು? ನಾನು ಯಾರು? ಈಗಲೂ ಸಹ ಬಾಪ್ದಾದಾ ಹೇಳುತ್ತಾರೆ - ತನ್ನೊಂದಿಗೆ ತಾನು ಕೇಳಿಕೊಳ್ಳಿ - ನಾನು ಯಾರು? ಈ ಒಗಟನ್ನು ಬಿಡಿಸುವುದು ಬರುತ್ತದೆಯಲ್ಲವೆ ಅಥವಾ ಅನ್ಯರು ತಿಳಿಸಿದಾಗ ಅದನ್ನು ಬಿಡಿಸಿತ್ತೀರೋ! ಅನ್ಯರು ತಿಳಿಸಿದಾಗಲೂ ಸಹ ಅವರ ಮಾತನ್ನು ಚಲಾಯಿಸುವ ಪ್ರಯತ್ನ ಪಡುತ್ತೀರಾ - ಹೀಗಲ್ಲ, ಹಾಗೆ ಎಂದು. ಆದ್ದರಿಂದ ತಮ್ಮನ್ನು ತಾವೇ ನೋಡಿಕೊಳ್ಳಿ.
ಕೆಲವು ಮಕ್ಕಳು ತಮ್ಮನ್ನು ತಾವು ಪರಿಶೀಲನೆ ಮಾಡಿಕೊಳ್ಳುತ್ತಾರೆ ಆದರೆ ನೋಡಿಕೊಳ್ಳುವ ದೃಷ್ಟಿಯು ಎರಡು ಪ್ರಕಾರದ್ದಾಗಿದೆ. ಅದರಲ್ಲಿ ಕೆಲವರು ಕೇವಲ ವಿಶಾಲ ಬುದ್ಧಿಯ ದೃಷ್ಟಿಯಿಂದ ಪರಿಶೀಲನೆ ಮಾಡಿಕೊಳ್ಳುತ್ತಾರೆ, ಅವರದು ಹುಡುಗಾಟಿಕೆಯ ಕನ್ನಡಕವಾಗಿರುತ್ತದೆ. ಪ್ರತೀ ಮಾತಿನಲ್ಲಿ ಇದೇ ಕಂಡು ಬರುತ್ತದೆ- ತ್ಯಾಗ ಮಾಡಿದೆವು, ಸೇವೆ ಮಾಡಿದೆವು, ಪರಿವರ್ತನೆ ಮಾಡಿಕೊಂಡೆವು, ಎಷ್ಟು ಮಾಡಿದೆವೋ ಅಷ್ಟೇ ಬಹಳವಾಗಿದೆ. ಇಂತಿಂತಹ ಆತ್ಮಗಳಿಗಿಂತ ನಾನು ಬಹಳ ಚೆನ್ನಾಗಿದ್ದೇನೆ. ಇಷ್ಟು ಮಾಡುವುದೇನೂ ಸಹಜವಲ್ಲ. ಅಲ್ಪಸ್ವಲ್ಪ ನಿರ್ಬಲತೆಗಳಂತೂ ಪ್ರಖ್ಯಾತ ಆದವರಲ್ಲಿಯೂ ಇರುತ್ತವೆ. ಆ ಲೆಕ್ಕದಿಂದ ನಾನಂತೂ ಸರಿಯಾಗಿದ್ದೇನೆ, ಇದು ಹುಡುಗಾಟಿಕೆಯ ಕನ್ನಡಕವಾಗಿದೆ. ಇನ್ನೊಂದು ಸ್ವ-ಉನ್ನತಿಯ ಯಥಾರ್ಥ ಕನ್ನಡಕವಾಗಿದೆ, ಅದು ಸತ್ಯ ಹೃದಯದವರದಾಗಿದೆ. ಅವರು ಏನನ್ನು ನೋಡುತ್ತಾರೆ? ಹೃದಯರಾಮ ತಂದೆಗೆ ಸದ ಯಾವುದು ಇಷ್ಟವೋ ಅದೇ ಸಂಕಲ್ಪ, ಮಾತು ಮತ್ತು ಕರ್ಮವನ್ನು ನಾವು ಮಾಡಬೇಕಾಗಿದೆ. ಯಥಾರ್ಥ ಕನ್ನಡಕವನ್ನು ಧರಿಸಿರುವವರು ಕೇವಲ ತಂದೆ ಮತ್ತು ತಮ್ಮನ್ನು ನೋಡಿಕೊಳ್ಳುತ್ತಾರೆ. ಎರಡನೆಯವರು, ಮೂರನೆಯವರು ಏನು ಮಾಡುತ್ತಾರೆಂದು ನೋಡುವುದಿಲ್ಲ. ನಾನೇ ಮೊದಲಾಗಬೇಕೆಂಬ ಗುಂಗಿನಲ್ಲಿ ಸದಾ ಇರುತ್ತಾರೆ. ಅನ್ಯರು ಬದಲಾದರೆ ನಾನು ಬದಲಾಗುವೆನು ಅಥವಾ ನಾನು 80% ಬದಲಾದರೆ ಅವರು 20% ಆದರೂ ಬದಲಾಗಲಿ ಎಂಬುದನ್ನೂ ಸಹ ಅವರು ನೋಡುವುದಿಲ್ಲ. ನಾನು ಬದಲಾಗಿ ಅನ್ಯರಿಗೂ ಸಹಜ ಮಾಡುವುದಕ್ಕಾಗಿ ನಾನು ಮಾದರಿಯಾಗಬೇಕೆಂದು ಅವರಿಗೆ ಸಂಕಲ್ಪವಿರುತ್ತದೆ. ಆದ್ದರಿಂದ ಗಾದೆಯಿದೆ - ‘ಮೊದಲು ಮಾಡುವವರೇ ಅರ್ಜುನರು’. ಅರ್ಜುನ ಅರ್ಥಾತ್ ಅಲೌಕಿಕ ಜನ. ಇದಕ್ಕೆ ಯಥಾರ್ಥ ಕನ್ನಡಕ ಹಾಗೂ ಯಥಾರ್ಥ ದೃಷ್ಟಿಯೆಂದು ಹೇಳಲಾಗುತ್ತದೆ. ಹಾಗೆ ನೋಡಿದಾಗಲೂ ಪ್ರಪಂಚದಲ್ಲಿ ಮಾನವನ ಜೀವನಕ್ಕಾಗಿ ಮುಖ್ಯವಾಗಿ ಎರಡು ಮಾತುಗಳಿವೆ - ಹೃದಯ ಮತ್ತು ಬುದ್ಧಿ. ಎರಡೂ ಸರಿಯಿರಬೇಕು. ಅದೇರೀತಿ ಬ್ರಾಹ್ಮಣ ಜೀವನದಲ್ಲಿ ವಿಶಾಲ ಬುದ್ಧಿಯೂ ಬೇಕು, ಸತ್ಯ ಹೃದಯವೂ ಬೇಕು. ಸತ್ಯ ಹೃದಯದವರಿಗೆ ಬುದ್ಧಿಯ ಲಿಫ್ಟ್ ಸಿಕ್ಕಿ ಬಿಡುತ್ತದೆ ಆದ್ದರಿಂದ ಸದಾ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ಸತ್ಯ ಹೃದಯದಿಂದ ಸಾಹೇಬನನ್ನು ಖುಷಿ ಪಡಿಸಿದ್ದೇವೆಯೇ? ಕೇವಲ ತನ್ನ ಮನಸ್ಸು ಅಥವಾ ಕೇವಲ ಕೆಲವೊಂದು ಆತ್ಮಗಳನ್ನು ಮಾತ್ರವೇ ಖುಷಿ ಪಡಿಸಿಲ್ಲ ತಾನೆ. ಸತ್ಯ ಸಾಹೇಬನನ್ನು ಪ್ರಸನ್ನ ಮಾಡುವುದಕ್ಕೆ ಬಹಳ ಚಿಹ್ನೆಗಳಿವೆ, ಇದರ ಮೇಲೆ ಮನನ ಮಾಡಿ, ವಾರ್ತಾಲಾಪ ಮಾಡಿರಿ ಮತ್ತೆ ಬಾಪ್ದಾದಾರವರೂ ಸಹ ತಿಳಿಸುತ್ತೇವೆ. ಒಳ್ಳೆಯದು.
ಇಂದು ಟೀಚರ್ಸ್ ಕುಳಿತಿದ್ದಾರೆ, ಟೀಚರ್ಸ್ ಗುತ್ತಿಗೆದಾರರಾಗಿದ್ದಾರೆ. ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಲ್ಲವೆ. ಸ್ವ-ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಮಾಡಲೇಬೇಕಾಗಿದೆ. ಹೀಗೆ ಅತಿ ದೊಡ್ಡ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಲ್ಲವೆ. ಹೇಗೆ ಪ್ರಪಂಚದವರು ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ. ತಾನು ಸಾಯದಿದ್ದರೆ ಪ್ರಪಂಚವು ಸಾಯುವುದಿಲ್ಲವೆಂದು ಹೇಳುತ್ತಾರೆ. ಹಾಗೆಯೇ ಸ್ವ ಪರಿವರ್ತನೆಯೇ ವಿಶ್ವ ಪರಿವರ್ತನೆಯಾಗಿದೆ. ಸ್ವ ಪರಿವರ್ತನೆಯಿಲ್ಲದೆ ಯಾವುದೇ ಆತ್ಮನ ಪ್ರತಿ ಎಷ್ಟಾದರೂ ಪರಿಶ್ರಮ ಪಡಿ, ಅವರು ಪರಿವರ್ತನೆಯಾಗಲು ಸಾಧ್ಯವಿಲ್ಲ. ಈಗಿನ ಸಮಯದಲ್ಲಿ ಕೇವಲ ಕೇಳುವುದರಿಂದ ಬದಲಾಗುವುದಿಲ್ಲ ಆದರೆ ನೋಡುವುದರಿಂದ ಬದಲಾಗುತ್ತಾರೆ. ಮಧುಬನ ಭೂಮಿಯಲ್ಲಿ ಎಂತಹದ್ದೇ ಆತ್ಮವೂ ಏಕೆ ಪರಿವರ್ತನೆ ಆಗುತ್ತಾರೆ! ಹಾಗೆ ನೋಡಿದರೆ ನೀವು ಸೇವಾಕೇಂದ್ರದಲ್ಲಿಯೂ ತಿಳಿಸುತ್ತೀರಿ. ಆದರೆ ಇಲ್ಲಿ ಬಂದಾಗ ಸ್ವಯಂನ್ನು ನೋಡಿಕೊಳ್ಳುತ್ತಾರೆ, ಸ್ವಯಂನ್ನು ನೋಡಿಕೊಳ್ಳುವ ಕಾರಣ ಪರಿವರ್ತನೆ ಆಗಿ ಬಿಡುತ್ತಾರೆ. ಕೆಲವು ಬಂಧನದಲ್ಲಿರುವ ಮಾತೆಯರನ್ನೂ ಸಹ ಅವರ ಪತಿಯು ಅವರ ಜೀವನದಲ್ಲಿ ಪರಿವರ್ತನೆಯನ್ನು ನೋಡಿ ಬದಲಾಗಿ ಬಿಡುತ್ತಾರೆ. ಜ್ಞಾನವನ್ನು ತಿಳಿಸುವ ಪ್ರಯತ್ನ ಪಟ್ಟರೆ ಅವರು ಕೇಳುವುದಿಲ್ಲ ಆದರೆ ನೋಡುವುದರಿಂದ ಆ ಪ್ರಭಾವವು ಅವರನ್ನೂ ಸಹ ಪರಿವರ್ತನೆ ಮಾಡಿ ಬಿಡುತ್ತದೆ. ಆದ್ದರಿಂದಲೇ ಹೇಳಿದ್ದೆವು - ಈಗಿನ ಪ್ರಪಂಚವು ನೋಡಲು ಇಚ್ಛಿಸುತ್ತದೆ ಆದ್ದರಿಂದ ಟೀಚರ್ಸ್ನ ವಿಶೇಷ ಕರ್ತವ್ಯವು ಇದೇ ಆಗಿದೆ - ಮಾಡಿ ತೋರಿಸುವುದು ಅರ್ಥಾತ್ ಬದಲಾಗಿ ತೋರಿಸುವುದು. ತಿಳಿಯಿತೆ.
ಸದಾ ಸರ್ವ ಆತ್ಮರ ಪ್ರತಿ ಪರೋಪಕಾರಿ, ಸದಾ ಸತ್ಯ ಹೃದಯದಿಂದ ಸತ್ಯ ಸಾಹೇಬನನ್ನು ಖುಷಿ ಪಡಿಸುವವರು, ವಿಶಾಲ ಬುದ್ಧಿ ಮತ್ತು ಸತ್ಯ ಹೃದಯದ ಬ್ಯಾಲೆನ್ಸ್ ಇಟ್ಟುಕೊಳ್ಳುವವರು, ಸದಾ ಸ್ವಯಂನ್ನು ವಿಶ್ವ ಪರಿವರ್ತನೆಗೆ ನಿಮಿತ್ತನನ್ನಾಗಿ ಮಾಡಿಕೊಳ್ಳುವವರು ಸ್ವ-ಪರಿವರ್ತನೆ ಮಾಡಿಕೊಳ್ಳುವಂತಹ ಶ್ರೇಷ್ಠಾತ್ಮ, ಶ್ರೇಷ್ಠ ಸೇವಾಧಾರಿ ಆತ್ಮನೆಂದು ತಿಳಿದು ಮುಂದುವರೆಯುವವರು, ಇಂತಹ ನಾಲ್ಕಾರು ಕಡೆಯ ವಿಶೇಷ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ದೆಹಲಿ ಗ್ರೂಪ್:
ಎಲ್ಲರ ಹೃದಯದಲ್ಲಿ ತಂದೆಯ ಸ್ನೇಹವು ಅಡಗಿದೆ. ಸ್ನೇಹವೇ ಇಲ್ಲಿಯವರೆಗೂ ಕರೆತಂದಿದೆ. ಹೃದಯದ ಸ್ನೇಹವು ಹೃದಯರಾಮನ...ವರೆಗೂ ಕರೆ ತಂದಿದೆ. ಹೃದಯದಲ್ಲಿ ತಂದೆಯಲ್ಲದೆ ಮತ್ತೇನೂ ಇರಲು ಸಾಧ್ಯವಿಲ್ಲ, ಯಾವಾಗ ತಂದೆಯವರೇ ತಮ್ಮ ಪ್ರಪಂಚವೆಂದಾಗ, ತಂದೆಯ ಹೃದಯದಲ್ಲಿರುವುದು ಎಂದರೆ ತಂದೆಯಲ್ಲಿಯೇ ಪ್ರಪಂಚವು ಅಡಗಿದೆ. ಆದ್ದರಿಂದ ಒಂದು ಮತ, ಒಂದು ಬಲ, ಒಂದು ಭರವಸೆಯಿದೆ. ಎಲ್ಲಿ ಒಂದಿದೆಯೋ (ಏಕತೆ) ಅಲ್ಲಿ ಪ್ರತಿಯೊಂದು ಕಾರ್ಯದಲ್ಲಿಯೂ ಸಫಲತೆಯಿದೆ. ಯಾವುದೇ ಪರಿಸ್ಥಿತಿಯನ್ನು ಪಾರು ಮಾಡುವುದು ಸಹಜವೆನಿಸುವುದೇ ಅಥವಾ ಕಷ್ಟವಾಗುವುದೇ? ಒಂದುವೇಳೆ ಅನ್ಯರನ್ನು ನೋಡಿದಿರಿ ಅಥವಾ ಅನ್ಯರನ್ನು ನೆನಪು ಮಾಡಿದಿರೆಂದರೆ ಎರಡರಲ್ಲಿ ಒಂದೂ ಸಹ ಸಿಗುವುದಿಲ್ಲ ಆದ್ದರಿಂದ ಕಷ್ಟವಾಗಿ ಬಿಡುತ್ತದೆ. ತಂದೆಯವರ ಆಜ್ಞೆಯಿದೆ - ‘ನನ್ನೊಬ್ಬನನ್ನೇ ನೆನಪು ಮಾಡಿರಿ’, ಒಂದುವೇಳೆ ಈ ಆಜ್ಞೆಯನ್ನು ಪಾಲಿಸುತ್ತೀರೆಂದರೆ, ಆಜ್ಞಾಕಾರಿ ಮಕ್ಕಳಿಗೆ ತಂದೆಯವರ ಆಶೀರ್ವಾದಗಳು ಸಿಗುತ್ತವೆ ಹಾಗೂ ಎಲ್ಲವೂ ಸಹಜವಾಗುತ್ತದೆ. ಒಂದುವೇಳೆ ಆಜ್ಞೆಯನ್ನು ಪಾಲಿಸದಿದ್ದರೆ ತಂದೆಯವರ ಸಹಯೋಗ ಅಥವಾ ಆಶೀರ್ವಾದಗಳು ಸಿಗುವುದಿಲ್ಲ. ಆದ್ದರಿಂದ ಕಷ್ಟವಾಗಿ ಬಿಡುತ್ತದೆ. ಹಾಗಾದರೆ ಸದಾಕಾಲ ಆಜ್ಞಾಕಾರಿ ಆಗಿದ್ದೀರಲ್ಲವೆ? ಲೌಕಿಕ ಸಂಬಂಧದಲ್ಲಿಯೂ ಸಹ ಆಜ್ಞಾಕಾರಿ ಮಕ್ಕಳ ಪ್ರತಿ ಎಷ್ಟೊಂದು ಸ್ನೇಹವಿರುತ್ತದೆ! ಅದಂತು ಅಲ್ಪಕಾಲದ ಸ್ನೇಹವಾಗಿದೆ ಮತ್ತು ಇದು ಅವಿನಾಶಿ ಸ್ನೇಹವಾಗಿದೆ, ಇದೊಂದು ಜನ್ಮದ ಆಶೀರ್ವಾದಗಳು ಅನೇಕ ಜನ್ಮಗಳವರೆಗೂ ಜೊತೆಯಿರುತ್ತದೆ ಅಂದಮೇಲೆ ಅವಿನಾಶಿ ಆಶೀರ್ವಾದಗಳಿಗೆ ಪಾತ್ರರಾಗಿ ಬಿಟ್ಟಿರಿ. ತಮ್ಮ ಈ ಜೀವನವು ಮಧುರ(ಪ್ರಿಯ)ವೆನಿಸುತ್ತದೆ ಅಲ್ಲವೆ! ಇದೆಷ್ಟು ಶ್ರೇಷ್ಠ ಹಾಗೂ ಎಷ್ಟೊಂದು ಪ್ರಿಯವಾದ ಜೀವನವಾಗಿದೆ! ಬ್ರಾಹ್ಮಣ ಜೀವನವಂತು ಪ್ರಿಯವಾದುದು, ಬ್ರಾಹ್ಮಣ ಜೀವನವಿಲದಿದ್ದರೆ ಪ್ರಿಯವೆನಿಸುವುದಿಲ್ಲ ಆದರೆ ಬೇಸರದ ಜೀವನವೆನಿಸುತ್ತದೆ. ಅಂದಾಗ ಇದು ಪ್ರಿಯವಾದ ಜೀವನವೇ ಅಥವಾ ಸುಸ್ತಾಗಿದ್ದೀರಾ? ಸಂಗಮವು ಎಲ್ಲಿಯವರೆಗೆ ನಡೆಯುತ್ತದೆಯೋ ಎಂದು ಯೋಚಿಸುತ್ತೀರಾ? ಶರೀರ ನಡೆಯುವುದಿಲ್ಲ, ಸೇವೆ ಮಾಡುವುದಿಲ್ಲ...... ಇದರಿಂದಂತು ಬೇಸರವಾಗುವುದಿಲ್ಲವೇ? ಸಂಗಮದ ಈ ಜೀವನವು ಸರ್ವ ಜನ್ಮಗಳಿಗಿಂತಲೂ ಶ್ರೇಷ್ಠವಾದುದು, ಇದು ಪ್ರಾಪ್ತಿಗಳ ಜೀವನವಾಗಿದೆ. ಆನಂತರವಂತು ಪ್ರಾಲಬ್ಧವನ್ನು ಅನುಭವಿಸುವ ಜೀವನವಾಗಿದೆ, ಕಡಿಮೆಯಾಗುವ ಜೀವನವಿದೆ, ಈಗ ಸಂಪನ್ನರಾಗುವ ಜೀವನವಾಗಿದೆ ಮತ್ತು ಈಗಲೇ 16 ಕಲಾ ಸಂಪನ್ನರೂ ಆಗುವಿರಿ. 16 ಕಲೆಗಳೆಂದು ಸಂಪೂರ್ಣರು! ಈ ಜೀವನವು ಬಹಳ ಪ್ರಿಯವಾದುದು ಎಂದು ಅನುಭವ ಆಗುತ್ತದೆ ಅಲ್ಲವೆ ಅಥವಾ ಕೆಲವೊಮ್ಮೆ ಜೀವನದಿಂದ ಬೇಸರವಾಗುತ್ತೀರಾ? ಬೇಸರವಾಗಿ ಈ ರೀತಿಯಾಗಿ ಯೋಚಿಸುವುದಿಲ್ಲವೇ - ಈಗಂತು ಹೊರಡೋಣ. ತಂದೆಯವರು ಒಂದುವೇಳೆ ಸೇವೆಗಾಗಿ ಕರೆದುಕೊಂಡು ಹೋಗುತ್ತಾರೆಂದರೆ ಬೇರೆ ಮಾತಾಗಿದೆ, ಆದರೆ ಬೇಸರವಾಗಿ ಹೋಗಬಾರದು. ಅಡ್ವಾನ್ಸ್ ಪಾರ್ಟಿಯಲ್ಲಿ ಸೇವೆಯ ಪಾತ್ರವಿದೆ ಮತ್ತು ಡ್ರಾಮಾನುಸಾರ ಹೋದರೆಂದರೆ ಬೇಸರವಾಗಿ ಹೋಗುವುದಿಲ್ಲ, ಹೆಮ್ಮೆಯಿಂದ ಹೋಗುವರು. ಸೇವಾರ್ಥವಾಗಿ ಹೋಗುತ್ತಿದ್ದಾರೆ ಅಂದಾಗ ಎಂದಿಗೂ ಮಕ್ಕಳಿಂದ ಅಥವಾ ತಮ್ಮಿಂದ ತಾವು ಬೇಸರವಾಗಬಾರದು. ಮಾತೆಯರು ಎಂದಿಗಾದರೂ ಮಕ್ಕಳಿಂದ ಬೇಸರಾಗುವುದಿಲ್ಲವೇ? ತಮೋಗುಣಿ ತತ್ವಗಳಿಂದಲೇ ಜನ್ಮವಾಗಿದೆಯೆಂದರೆ, ಅವರನೇದಾರೂ ಸತೋಪ್ರಧಾನತೆಯನ್ನು ತೋರಿಸುವರೇ! ಅವರೂ ಸಹ ಪರವಶರಾಗಿದ್ದಾರೆ. ತಾವೂ ಸಹ ತಂದೆಯವರ ಆಜ್ಞೆಗಳನ್ನು ಕೆಲಕೆಲವೊಮ್ಮೆ ಮರೆಯುತ್ತೀರಲ್ಲವೆ! ಹಾಗಾದರೆ ಯಾವಾಗ ತಾವು ಮರೆಯಲು ಸಾಧ್ಯವಿದೆಯೆಂದರೆ, ಮಕ್ಕಳು ತಪ್ಪು ಮಾಡಿದರೆಂದರೆ ಏನಾಯಿತು! ಯಾವಾಗ ಹೆಸರಿನಲ್ಲಿಯೇ ಮಕ್ಕಳೆಂದು ಹೇಳುತ್ತೀರೆಂದರೆ, ಮಕ್ಕಳೆಂದರೆ ಏನು? ಭಲೆ ದೊಡ್ಡವರೇ ಆಗಿರಬಹುದು ಆದರೆ ಆ ಸಮಯದಲ್ಲಿ ಅವರೂ ಸಹ ಮಕ್ಕಳಾಗಿ ಬಿಡುತ್ತಾರೆ ಅರ್ಥಾತ್ ಬುದ್ಧಿಹೀನರು ಆಗಿ ಬಿಡುತ್ತಾರೆ. ಆದ್ದರಿಂದ ಎಂದಿಗೂ ಸಹ ಅನ್ಯರ ಬೇಸರವನ್ನು ನೋಡುತ್ತಾ, ಸ್ವಯಂ ತಾವು ಬೇಸರವಾಗಬಾರದು. ಅವರೆಷ್ಟಾದರೂ ಬೇಸರ ಪಡಿಸಲಿ ಆದರೆ ತಾವೇಕೆ ತಮ್ಮ ಸ್ಥಾನದಿಂದ ಇಳಿಯುತ್ತೀರಿ! ಬಲಹೀನತೆ ತಮ್ಮದೇ ಅಥವಾ ಮಕ್ಕಳದೇ? ಅವರಂತು ಬಹದ್ದೂರರಾದರು, ಅದರಿಂದ ತಮ್ಮ ಸ್ಥಾನದಿಂದ ಇಳಿಸಿ ಬಿಟ್ಟರು ಮತ್ತು ಬೇಸರ ಪಡಿಸುತ್ತಾರೆ. ಅಂದಮೇಲೆ ಸ್ವಪ್ನದಲ್ಲಿಯೂ ಸಹ ಎಂದಿಗೂ ಬೇಸರವಾಗಬಾರದು ಅರ್ಥಾತ್ ಶ್ರೇಷ್ಠ ಸ್ಥಿತಿಯಿಂದ ದೂರವಾಗಬಾರದು. ತಮ್ಮ ಸ್ಥಿತಿಯ ಸ್ಥಾನದಲ್ಲಿ ಕುಳಿತುಕೊಳ್ಳಲು ಬರುವುದಿಲ್ಲವೇ! ಅಂದಾಗ ಈ ದಿನದಿಂದ ಬೇಸರವಾಗಬಾರದು. ಭಲೆ ರೋಗದಿಂದ ಅಥವಾ ಮಕ್ಕಳಿಂದ, ಅಥವಾ ತಮ್ಮದೇ ಸಂಸ್ಕಾರಗಳಿಂದ ಆಗಿರಬಹುದು ಅಥವಾ ಅನ್ಯರಿಂದಲೂ ಬೇಸರವಾಗಬಾರದು. ಅನ್ಯರಿಂದಲೂ ಬೇಸರವಾಗಿ ಬಿಡುತ್ತೀರಿ ಅಲ್ಲವೆ! ಕೆಲವರು ಹೇಳುತ್ತಾರೆ - ಬೇರೆಲ್ಲವೂ ಸರಿಯಿದೆ, ಇದೊಂದು ಹೀಗಿದೆ ಅದರಿಂದ ಬೇಸರವಾಗಿ ಬಿಡುತ್ತೇವೆ. ಹಾಗಾದರೆ ಬೇಸರ ಪಡಿಸುವವರು ಬಹುದ್ದೂರ್ ಆಗಬಾರದು, ತಾವು ಬಹದ್ದೂರ್ ಆಗಿರಿ. ಭಲೆ ಒಬ್ಬರಿರಲಿ ಅಥವಾ 10 ಮಂದಿಯಿರಲಿ ಆದರೆ ನಾನು ಮಾಸ್ಟರ್ ಸರ್ವಶಕ್ತಿವಂತ, ಬಲಹೀನನಲ್ಲ - ಇದೇ ವರದಾನವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಿರಿ - “ನಾವು ಸದಾ ನಮ್ಮ ಶ್ರೇಷ್ಠ ಸ್ಥಿತಿಯಲ್ಲಿ ಇರುವವರು, ಬೇಸರವಾಗುವವರಲ್ಲ”. ಅನ್ಯರ ಬೇಸರವನ್ನು ಸಮಾಪ್ತಿ ಮಾಡುವವರಾಗಿದ್ದೇವೆ, ಸದಾ ಶ್ರೇಷ್ಠ ಸ್ಥಿತಿಯ ಸಿಂಹಾಸನಾಧಿಕಾರಿ ಆಗಿದ್ದೇವೆ. ಇತ್ತೀಚಿನ ದಿನಗಳಲ್ಲಿ ಕುರ್ಚಿಯಿದೆ (ಸ್ಥಾನದ), ತಮಗಂತು ಸಿಂಹಾಸನವಿದೆ. ಅವರು ಕುರ್ಚಿಯ ಹಿಂದೆ ಸಾಯುತ್ತಾರೆ, ತಮಗಂತು ಸಿಂಹಾಸನವೇ ಸಿಕ್ಕಿದೆ ಅಂದಮೇಲೆ ಅಕಾಲ ಸಿಂಹಾಸನಾಧಿಕಾರಿ ಶ್ರೇಷ್ಠ ಸ್ಥಿತಿಯಲ್ಲಿ ಇರುವವರು, ತಂದೆಯ ಹೃದಯ ಸಿಂಹಾಸನಾಧಿಕಾರಿ ಆತ್ಮನಾಗಿದ್ದೇನೆ - ಇದೇ ಸ್ಥಿತಿಯಲ್ಲಿ ಇರಬೇಕು. ಇದರಿಂದ ಸದಾ ಖುಷಿಯಾಗಿರಿ ಮತ್ತು ಖುಷಿಯನ್ನು ಹಂಚಬೇಕು. ಒಳ್ಳೆಯದು - ದೆಹಲಿಯು ಸೇವೆಯ ಆಧಾರವಾಗಿದೆ, ಆಧಾರವು ಕಚ್ಚಾ ಆಗಿದ್ದರೆ ಎಲ್ಲರೂ ಕಚ್ಚಾ ಆಗಿ ಬಿಡುತ್ತಾರೆ. ಆದ್ದರಿಂದ ಸದಾ ಪರಿಪಕ್ವವಾಗಿ ಇರಬೇಕು.
ವರಂಗಲ್ ಗ್ರೂಪ್:
ತಮ್ಮನ್ನು ಸದಾ ಡಬಲ್ ಲೈಟ್ ಎಂದು ಅನುಭವ ಮಾಡುವಿರಾ? ಯಾರು ಡಬಲ್ ಲೈಟ್ ಆಗಿದ್ದಾರೆಯೋ, ಆ ಆತ್ಮರಲ್ಲಿ ಮೈಟ್ ಅಂದರೆ ತಂದೆಯ ಶಕ್ತಿಗಳೆಲ್ಲವೂ ಜೊತೆಯಿರುತ್ತವೆ. ಅಂದಾಗ ಡಬಲ್ ಲೈಟ್ ಸಹ ಆಗಿದ್ದೀರಿ ಹಾಗೂ ಶಕ್ತಿಯೂ ಇವೆ. ಸಮಯದಲ್ಲಿ ಆ ಶಕ್ತಿಗಳನ್ನು ಉಪಯೋಗಿಸಬಲ್ಲಿರಾ ಅಥವಾ ಸಮಯದಲ್ಲಿ ಕಳೆದು ಹೋದ ನಂತರದಲ್ಲಿ ನೆನಪಿಗೆ ಬರುತ್ತದೆಯೇ? ಏಕೆಂದರೆ ತಮ್ಮ ಬಳಿ ಎಷ್ಟಾದರೂ ಶಕ್ತಿಯಿರಬಹುದು, ಅದೇನಾದರೂ ಸಮಯದಲ್ಲಿ ಉಪಯೋಗ ಮಾಡಲಿಲ್ಲವೆಂದರೆ ಏನು ಹೇಳುವುದು? ಯಾವ ಸಮಯದಲ್ಲಿ, ಯಾವ ಶಕ್ತಿಯ ಅವಶ್ಯಕತೆಯಿದೆಯೋ ಆ ಶಕ್ತಿಯನ್ನು ಅದೇ ಸಮಯದಲ್ಲಿ ಉಪಯೋಗಿಸಲು ಸಾಧ್ಯವಾಗಬೇಕು - ಇದರಲ್ಲಿಯೇ ಅಭ್ಯಾಸವಿರುವ ಅಗತ್ಯವಿದೆ. ಕೆಲ ಮಕ್ಕಳು ಹೇಳುತ್ತಾರೆ - ಮಾಯೆಯು ಬಂದು ಬಿಟ್ಟಿತು. ಏಕೆ ಬಂದಿತು? ಪರಿಶೀಲಿಸುವ ಶಕ್ತಿಯನ್ನು ಉಪಯೋಗಿಸಲಿಲ್ಲ. ಆದ್ದರಿಂದ ಬಂದಿತಲ್ಲವೆ! ಒಂದುವೇಳೆ ಮಾಯೆಯು ದೂರವಿರುವಾಗಲೇ ಪರಿಶೀಲಿಸಿದ್ದರೆ, ಅದನ್ನು ದೂರದಿಂದಲೇ ಓಡಿಸಿ ಬಿಡುತ್ತಿದ್ದಿರಲ್ಲವೆ! ಮಾಯೆಯು ಬಂದು ಬಿಟ್ಟಿತೆಂದರೆ, ಬರಲು ಅವಕಾಶ ಕೊಟ್ಟಿದ್ದಿರಿ ಆದ್ದರಿಂದ ಬಂದಿತು. ದೂರದಿಂದಲೇ ಓಡಿಸಿದ್ದರೆ ಬರುತ್ತಿರಲೇ ಇಲ್ಲ. ಮಾಯೆಯು ಒಂದುವೇಳೆ ಮತ್ತೆ-ಮತ್ತೆ ಬರುತ್ತಿದೆ, ಮತ್ತೆ ಯುದ್ಧ ಮಾಡಿ ಓಡಿಸುತ್ತೀರೆಂದರೆ ಯುದ್ಧದ ಸಂಸ್ಕಾರವಾಗುತ್ತದೆ. ಒಂದುವೇಳೆ ಬಹಳ ಕಾಲದ ಯುದ್ಧದ ಸಂಸ್ಕಾರವೇ ಇರುತ್ತದೆಯೆಂದರೆ ಚಂದ್ರವಂಶಿ ಆಗಬೇಕಾಗುವುದು. ಸೂರ್ಯವಂಶಿಯು ಬಹಳ ಕಾಲದ ವಿಜಯಿ ಮತ್ತು ಚಂದ್ರವಂಶಿ ಎಂದರೆ ಯುದ್ಧ ಮಾಡುತ್ತಾ-ಮಾಡುತ್ತಾ ಕೆಲವೊಮ್ಮೆ ವಿಜಯಿ, ಕೆಲವೊಮ್ಮೆ ಯುದ್ಧದಲ್ಲಿಯೇ ಪರಿಶ್ರಮ ಪಡುವವರು. ಹಾಗಾದರೆ ಎಲ್ಲರೂ ಸೂರ್ಯವಂಶಿ ಆಗುವಿರಲ್ಲವೆ! ಚಂದ್ರಮನಿಗೂ ಬೆಳಕನ್ನು ಕೊಡುವವನು ಸೂರ್ಯನಾಗಿದ್ದಾನೆ ಅಂದಮೇಲೆ ನಂಬರ್ವನ್ ಎಂದು ಸೂರ್ಯನಿಗೆ ಹೇಳುವರಲ್ಲವೆ! ಚಂದ್ರವಂಶಿಗಳಲ್ಲಿ ಎರಡು ಕಲೆ ಕಡಿಮೆಯಿದೆ, 16 ಕಲೆ ಅರ್ಥಾತ್ ಫುಲ್ ಪಾಸ್. ಕೆಲವೊಮ್ಮೆ ಮನಸ್ಸಿನಿಲ್ಲಿ, ವಾಣಿಯಲ್ಲಿ ಅಥವಾ ಸಂಬಂಧ-ಸಂಪರ್ಕದಲ್ಲಿ ಅಥವಾ ಸಂಸ್ಕಾರಗಳಲ್ಲಿಯೂ ಅನುತ್ತೀರ್ಣರು ಆಗುವವರಲ್ಲ, ಇವರಿಗೇ ಸೂರ್ಯವಂಶಿಗಳೆಂದು ಹೇಳಲಾಗುತ್ತದೆ. ಇಂತಹ ಸೂರ್ಯವಂಶಿಗಳು ಆಗಿದ್ದೀರಾ? ಒಳ್ಳೆಯದು - ಎಲ್ಲರೂ ತಮ್ಮ ಪುರುಷಾರ್ಥದಿಂದ ಸಂತುಷ್ಟವಾಗಿದ್ದೀರಾ? ಎಲ್ಲಾ ವಿಷಯಗಳಲ್ಲಿ ಫುಲ್ ಪಾಸ್ ಆಗುವುದಕ್ಕೆ ಹೇಳಲಾಗುತ್ತದೆ - ತನ್ನ ಪುರುಷಾರ್ಥದಿಂದ ಸಂತುಷ್ಟವಾಗಿರುವುದು. ಈ ವಿಧಿಯಿಂದ ತಮ್ಮನ್ನು ತಾವೇ ಪರಿಶೀಲನೆ ಮಾಡಿಕೊಳ್ಳಿರಿ ಹಾಗೂ ಇದನ್ನೇ ನೆನಪಿಟ್ಟುಕೊಳ್ಳಿರಿ - ನಾನು ಹಾರುವ ಕಲೆಯಲ್ಲಿ ಹೋಗುವಂತಹ ಹಾರುವ ಪಕ್ಷಿಯಾಗಿದ್ದೇನೆ. ಕೆಳಗೆ ಸಿಲುಕುವವನಲ್ಲ. ಒಳ್ಳೆಯದು.
ಓಂ ಶಾಂತಿ. ತಂದೆಯು ಎಲ್ಲಾ ಆತ್ಮಿಕ ಮಕ್ಕಳನ್ನು ಜೊತೆ ಜೊತೆಗೆ ಸೃಷ್ಟಿಯಲ್ಲಿ ಯಾರೆಲ್ಲಾ ಜೀವಾತ್ಮರಿದ್ದಾರೆಯೋ ಅವರೆಲ್ಲರನ್ನೂ ಮರಳಿ ಕರೆದುಕೊಂಡು ಹೋಗಲೇಬೇಕಾಗಿದೆ ಏಕೆಂದರೆ ಈಗ ಅಂಧಕಾರ ರಾತ್ರಿಯು ಪೂರ್ಣವಾಗುತ್ತದೆ. ಹಳೆಯ ಪ್ರಪಂಚವು ಮುಕ್ತಾಯವಾಗಿದೆ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಪ್ರಪಂಚವು ಅದೇ ಆಗಿದೆ, ಆದರೆ ಹಳೆಯದರಿಂದ ಹೊಸದಾಗುತ್ತದೆ. ಸತ್ಯಯುಗದ ಆದಿಯಲ್ಲಿ ಅವಶ್ಯವಾಗಿ ಆದಿ ಸನಾತನ ದೇವಿ-ದೇವತಾ ಧರ್ಮವೇ ಇತ್ತು. ಈಗ ಆ ಸೂರ್ಯವಂಶಿ-ಚಂದ್ರವಂಶಿಯರಿಲ್ಲ. ತಂದೆಯು ತಿಳಿಸುತ್ತಾರೆ - ಅವರು ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಈಗ 84 ಜನ್ಮಗಳನ್ನು ಪೂರ್ಣಗೊಳಿಸಿದ್ದಾರೆ. ಈ ಸಮಯದಲ್ಲಿ ಎಲ್ಲಾ ಪಾತ್ರಧಾರಿಗಳು ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ರಾಮ ರಾಜ್ಯ, ಹೊಸ ಪ್ರಪಂಚ, ಹೊಸ ದೆಹಲಿ ಬೇಕೆಂದು ಬಯಸುತ್ತಾರೆ. ಹೇಗೆ ಮಕ್ಕಳು ನಮಗೆ ಇಂತಹ ಹೊಸ ವಸ್ತು ಬೇಕು ಎಂದು ಹೇಳುತ್ತಾರಲ್ಲವೆ. ಹಾಗೆಯೇ ಹೊಸ ಪ್ರಪಂಚಕ್ಕಾಗಿ ನಮಗೆ ಹೊಸ ವಸ್ತ್ರ ಬೇಕೆಂದು ಇಲ್ಲಿಯೂ ಹೇಳುತ್ತಾರೆ. ದೀಪಾವಳಿಯಂದು ಮನುಷ್ಯರು ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಕೃಷ್ಣ ಜಯಂತಿಯನ್ನು ಹೊಸ ವಸ್ತ್ರಗಳನ್ನು ಧರಿಸುವ ಮಾತಿರುವುದಿಲ್ಲ. ವಿಶೇಷವಾಗಿ ದೀಪಾವಳಿಯಂದು ಹೊಸ ವಸ್ತ್ರಗಳನ್ನು ಧರಿಸುವುದಕ್ಕಾಗಿ ಬಹಳಷ್ಟು ಮಂದಿ ಖರೀದಿಸುತ್ತಾರೆ. ದೀಪಾವಳಿಯಂದು ಜ್ಯೋತಿಯನ್ನು ಬೆಳಗಿಸುತ್ತಾರೆ. ಈಗ ನಿಮ್ಮ ಜ್ಯೋತಿಯು ಬೆಳಗಿದೆ ಅಂದಮೇಲೆ ನೀವು ಅನ್ಯರ ಜ್ಯೋತಿಯನ್ನೂ ಬೆಳಗಿಸಬೇಕಾಗಿದೆ. ಅವರದು ಭಕ್ತಿಮಾರ್ಗದ ದೀಪಾವಳಿಯಾಗಿದೆ, ನಿಮ್ಮದು ಜ್ಞಾನದ ದೀಪಾವಳಿಯಾಗಿದೆ. ನೀವು ಹೊಸ ವಸ್ತ್ರಗಳನ್ನು ಬದಲಾಯಿಸಬೇಕಿಲ್ಲ. ಯಾವಾಗ ನಿಮ್ಮ ಜ್ಯೋತಿಯು ಪೂರ್ಣ ಜಾಗೃತವಾಗುವುದೋ ಅನಂತರ ಹೊಸ ಪ್ರಪಂಚದಲ್ಲಿ ಹೊಸ ವಸ್ತ್ರಗಳು ಸಿಗುತ್ತವೆ. ತಂದೆಯು ತಿಳಿಸುತ್ತಾರೆ - ಯಾರು ಇಚ್ಛಿಸಲಿ, ಇಚ್ಛಿಸದಿರಲಿ ನಾನು ಎಲ್ಲರನ್ನು ಕರೆದುಕೊಂಡೇ ಹೋಗುವೆನು. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ. ಇನ್ನೂ ಕೆಲವರು ಲಿಬರೇಟರ್ ಬನ್ನಿ ಎಂದು ಹೇಳುತ್ತಾರೆ. ಒಬ್ಬೊಬ್ಬರು ಒಂದೊಂದು ಭಾಷೆಯಲ್ಲಿ ಹೇಳುತ್ತಾರೆ. ನಾನು ಕಲ್ಪ-ಕಲ್ಪವೂ ಬಂದು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಸತ್ಯಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿರುತ್ತದೆ. ಈಗ ಎಷ್ಟೊಂದು ಮಂದಿ ಪಾತ್ರಧಾರಿಗಳಿದ್ದಾರೆ. ಇವರು ಜೀವಾತ್ಮರಾಗಿದ್ದಾರೆ, ಶರೀರಕ್ಕೆ ಜೀವವೆಂದು ಹೇಳಲಾಗುತ್ತದೆ. ನಾನು ಒಂದು ಆತ್ಮವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ ಎಂದು ಜೀವವು ಹೇಳುವುದಿಲ್ಲ. ನಾನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆಂದು ಆತ್ಮವೇ ಹೇಳುತ್ತದೆ ಆದರೆ ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆಂದು ಯಾರಿಗೂ ತಿಳಿದಿಲ್ಲ. ಎಲ್ಲರಿಗೂ 84 ಜನ್ಮಗಳು ಸಿಗುವುದಿಲ್ಲ. ಎಲ್ಲರದು ತಮ್ಮ ತಮ್ಮದೇ ಆದ ಲೆಕ್ಕವಿದೆ, ಯಾರು ಮೊಟ್ಟ ಮೊದಲು ಬರುತ್ತಾರೆಯೋ ಅವರು ಅವಶ್ಯವಾಗಿ ಹೆಚ್ಚು ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಗರಿಷ್ಟ 84 ಜನ್ಮಗಳಿವೆ, ಕನಿಷ್ಠ ಒಂದು ಜನ್ಮವಿರಬಹುದು. ಇದನ್ನು ತಂದೆಯು ತಿಳಿಸುತ್ತಾರೆ, ನಾನು ಎಲ್ಲರಿಗೆ ಓದಿಸುವುದಿಲ್ಲ ಆದರೆ ಎಲ್ಲರನ್ನೂ ಜೊತೆಯಲ್ಲಿ ಖಂಡಿತವಾಗಿಯೂ ಕರೆದುಕೊಂಡು ಹೋಗುತ್ತೇನೆ. ಡ್ರಾಮಾನುಸಾರ ಎಲ್ಲರನ್ನು ಕರೆದುಕೊಂಡು ಹೋಗಲು ನಾನು ಬಂಧಿತನಾಗಿದ್ದೇನೆ. ಈ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ತಂದೆಯು ಬಂದು ಅವಶ್ಯವಾಗಿ ಹೊಸ ಪ್ರಪಂಚದ ಸ್ಥಾಪನೆ ಮಾಡುತ್ತಾರೆಂಬುದು ಪ್ರಪಂಚದವರಿಗೆ ತಿಳಿದಿಲ್ಲ. ಮನುಷ್ಯರಿಗೆ ರಚಯಿತ ಮತ್ತು ರಚನೆಯ, ಆದಿ-ಮಧ್ಯ-ಅಂತ್ಯದ ಜ್ಞಾನವು ಅಂಶ ಮಾತ್ರವೂ ಗೊತ್ತಿಲ್ಲ. ಹಾ! ಭಕ್ತಿಮಾರ್ಗದ ಬಗ್ಗೆ ತಿಳಿದಿದೆ, ಭಕ್ತಿಮಾರ್ಗದ ರೀತಿ-ನೀತಿಯೇ ಬೇರೆ, ಜ್ಞಾನ ಮಾರ್ಗದ ರೀತಿ-ನೀತಿಗಳೇ ಬೇರೆಯಾಗಿದೆ. ಸತ್ಯಯುಗದಿಂದ ಕಲಿಯುಗದವರೆಗೆ ಭಕ್ತಿಯೇ ನಡೆದು ಬರಲು ಸಾಧ್ಯವಿಲ್ಲ. ಜ್ಞಾನ ದಿನ, ಭಕ್ತಿಯು ರಾತ್ರಿಯೆಂದು ಗಾಯನವಿದೆ. ಅಂಧಕಾರ ರಾತ್ರಿಯಲ್ಲಿ ಮನುಷ್ಯರು ಹುಡುಕಾಡುತ್ತಾರೆ. ತಂದೆಯು ತಿಳಿಸುತ್ತಾರೆ- ಕಲ್ಲು ಮುಳ್ಳುಗಳಲ್ಲಿಯೂ ಹೋಗಿ ನನ್ನನ್ನು ಹುಡುಕುತ್ತಾರೆ. ಕೆಲವರು ಹನುಮಂತನ ಸಾಕ್ಷಾತ್ಕಾರ ಮಾಡುತ್ತಾರೆ, ಇನ್ನೂ ಕೆಲವರು ಗಣೇಶನ ಸಾಕ್ಷಾತ್ಕಾರ ಮಾಡುತ್ತಾರೆ ಆದರೆ ಅವರೆಲ್ಲರೂ ಭಗವಂತರಲ್ಲ, ನನಗೆ ನನ್ನದೇ ಆದ ಶರೀರವಿಲ್ಲ. ಮಾಯಾ ರಾವಣನು ಎಲ್ಲರನ್ನೂ ಮಂಧ ಬುದ್ಧಿಯವರನ್ನಾಗಿ ಮಾಡಿ ಬಿಟ್ಟಿದ್ದಾನೆ. ಯಾವುದಕ್ಕೆ ರಾಮ ರಾಜ್ಯವೆಂದು ಹೇಳಲಾಗುತ್ತದೆ ಎಂಬುದೂ ಸಹ ಭಾರತವಾಸಿಗಳಿಗೆ ಗೊತ್ತಿಲ್ಲ. ಇದು ಗಮನಕ್ಕೂ ಬರುತ್ತದೆ, ಲಕ್ಷ್ಮೀ-ನಾರಾಯಣ ರಾಜ್ಯವು ಇದೇ ಪ್ರಪಂಚದಲ್ಲಿತ್ತು, ಕೇವಲ ರಾಮ ರಾಜ್ಯ ಬೇಕೆಂದು ಹೇಳಿ ಬಿಡುತ್ತಾರೆ. ರಾಮನೆಂದರೆ ಯಾವುದೇ ರಘುಪತಿ ರಾಮನಲ್ಲ, ರಾಮನ ಬಗ್ಗೆ ಶಾಸ್ತ್ರಗಳಲ್ಲಿ ಬಹಳ ಉಲ್ಟಾ ಮಾತುಗಳನ್ನು ಬರೆದಿದ್ದಾರೆ. ಮನುಷ್ಯರು ಮೃತ್ಯುವಿಗೆ ಎಷ್ಟೊಂದು ಹೆದರುತ್ತಾರೆ. ಜೀವನವನ್ನು ರಕ್ಷಿಸಿಕೊಳ್ಳಲು ಆಶೀರ್ವಾದಗಳನ್ನು ಬೇಡುತ್ತಿರುತ್ತಾರೆ. ಈಗಂತೂ ಅನೇಕರು ಮರಣ ಹೊಂದಿದರು, ಅವರಿಗಾಗಿ ಏನು ಹೇಳುವುದು! ತಂದೆಯನ್ನು ಕರೆಯುವುದೇ ಬಾಬಾ, ನಮ್ಮನ್ನು ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಿರಿ ಎಂದು. ಶಾಂತಿಧಾಮಕ್ಕೆ ಶರೀರಗಳನ್ನಂತೂ ಕರೆದುಕೊಂಡು ಹೋಗುವುದಿಲ್ಲ, ಅಲ್ಲಿಗೆ ಆತ್ಮಗಳೇ ಹೋಗುವರು. ಇದಂತೂ ಹಳೆಯ ಛೀ ಛೀ ಶರೀರವಾಗಿದೆ. ಈ ಬಿದುರಿನ ಕಾಡಿಗೆ ಬೆಂಕಿ ಬೀಳಲಿದೆ ಆದ್ದರಿಂದ ಬೆಂಕಿಯ ಉಂಡೆ (ಬಾಂಬು) ತಯಾರಿಸುತ್ತಿದ್ದಾರೆ. ಈಗ ಬಾಂಬುಗಳನ್ನು ಅವರು ತಯಾರಿಸದಿರಲಿ ಎಂದು ಹೇಳುತ್ತಾರೆ ಆದರೆ ಯಾರ ಬಳಿ ಹೆಚ್ಚು ಬಾಂಬುಗಳಿರುವುದೋ ಅವರು ಅವಶ್ಯವಾಗಿ ಶಕ್ತಿಶಾಲಿಗಳಾಗಿ ಬಿಡುತ್ತಾರೆ ಎಂಬ ತಿಳುವಳಿಕೆಯೂ ಮನುಷ್ಯರಿಗೆ ಇಲ್ಲ ಅಂದಮೇಲೆ ಒಂದುವೇಳೆ ಬಾಂಬುಗಳನ್ನು ತಯಾರು ಮಾಡದಿದ್ದರೆ ಅನ್ಯರು ತಮ್ಮನ್ನು ಹೇಗೆ ರಕ್ಷಿಸಿಕೊಳ್ಳಲು ಸಾಧ್ಯ! ಅವರು ಯಾವಾಗ ಎಲ್ಲವನ್ನೂ ಸಮುದ್ರದಲ್ಲಿ ಹಾಕಿ ಬಿಡುವರೋ ಆಗ ಇವರೂ ಸಹ ಅದನ್ನು ತಯಾರಿಸುವುದನ್ನು ನಿಲ್ಲಿಸುವರು ಆದರೆ ಸಮುದ್ರದಿಂದಲೂ ಮೋಡಗಳು ನೀರನ್ನು ಸೆಳೆಯುತ್ತದೆ. ಅದು ಮಳೆಯಾಗಿ ಬಿದ್ದರೆ ಎಲ್ಲವೂ ನಷ್ಟವಾಗಿ ಬಿಡುವುದು. ಹೊಲ-ಗದ್ದೆಗಳು ಸುಟ್ಟು ಹೋಗುವವು ಆದ್ದರಿಂದ ಡ್ರಾಮಾದಲ್ಲಿ ಈ ಯುಕ್ತಿಯು ರಚಿಸಲ್ಪಟ್ಟಿದೆ. ಮೊದಲು ಈ ಬಾಂಬುಗಳಿರಲಿಲ್ಲ, ಈಗ ಹೊರ ಬಂದಿವೆ ಆದ್ದರಿಂದ ಇದೆಲ್ಲವೂ ಬಹಳ ಝೇಂಕರಿಸುತ್ತಿದೆ. ಈಗ ನೀವು ತಿಳಿದುಕೊಂಡಿದ್ದೀರಿ - ಇದೆಲ್ಲವೂ ಪೂರ್ವ ನಿಶ್ಚಿತವಾಗಿದೆ. ನಿಮ್ಮಲ್ಲಿಯೂ ಕೆಲವರಿಗೆ ವಿನಾಶದ ಪೂರ್ವ ನಿಶ್ಚಿತದ ಮೇಲೆ ನಿಶ್ಚಯವಿಲ್ಲ. ಒಂದುವೇಳೆ ಇದ್ದಿದ್ದರೆ ಬಹಳ ಚೆನ್ನಾಗಿ ಯೋಗದಲ್ಲಿರುತ್ತಿದ್ದರು. ಯೋಗಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕಾಗಿದೆ. ನಿಮ್ಮದೆಲ್ಲವೂ ಗುಪ್ತವಾಗಿದೆ, ಕಲಿಸುವವರೂ ಗುಪ್ತವಾಗಿದ್ದಾರೆ. ಈ ಕಣ್ಣುಗಳಿಗೆ ಕಂಡು ಬರುವುದಿಲ್ಲ. ನೀವೀಗ ಆತ್ಮಾನುಭೂತಿ ಮಾಡಿದ್ದೀರಿ, ನಾನಾತ್ಮನಲ್ಲಿ 84 ಜನ್ಮಗಳ ಪಾತ್ರವು ಅಡಕವಾಗಿದೆ. ನಾನಾತ್ಮನು ಅವಿನಾಶಿಯಾಗಿದ್ದೇನೆ. ಇದು ಅತಿ ಗುಹ್ಯ ಮಾತಾಗಿದೆ. ಪತ್ರಿಕೆಯಲ್ಲಿಯೂ ಬರೆದಿದ್ದಾರೆ - ಆತ್ಮವೆಂದರೇನು ಯಾವುದು ಶರೀರದಲ್ಲಿರುತ್ತದೆ? ಇದನ್ನು ಯಾರಾದರೂ ತಿಳಿಸಿದರೆ ಅವರಿಗೆ ಲಕ್ಷಾಂತರ ರೂಪಾಯಿಗಳು ಸಿಗುತ್ತದೆ. ಆತ್ಮವೆಂದರೇನು, ಎಲ್ಲಿಂದ ಬರುತ್ತದೆ? ಹೇಗೆ ಪಾತ್ರವನ್ನು ಅಭಿನಯಿಸುತ್ತದೆ? ಇದನ್ನು ಯಾರೂ ತಿಳಿದುಕೊಂಡಿಲ್ಲ. ಅದು ನೀರಿನ ಗುಳ್ಳೆಯಾಗಿದೆ ಎಂದು ಕೆಲವರು ಹೇಳುತ್ತಾರೆ, ಇನ್ನೂ ಕೆಲವರು ಬ್ರಹ್ಮತತ್ವವು ದೊಡ್ಡ ಜ್ಯೋತಿಯಾಗಿದೆ. ಅದರಲ್ಲಿ ಆತ್ಮಗಳೆಲ್ಲರೂ ಲೀನವಾಗಿ ಬಿಡುತ್ತಾರೆಂದು ಹೇಳುತ್ತಾರೆ. ಅನೇಕ ಪ್ರಕಾರದ ಮಾತುಗಳನ್ನು ಆಡುತ್ತಿರುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಆತ್ಮವು ಬಿಂದು ಸಮಾನವಾಗಿದೆ, ಅದರಲ್ಲಿ ಪಾತ್ರವನ್ನು ಅಭಿನಯಿಸುವುದು ನಿಗಧಿತವಾಗಿದೆ. ಈ ನಾಟಕವು ಅನಾದಿ, ಮಾಡಿ-ಮಾಡಲ್ಪಟ್ಟಿದೆ, ಅದೆಂದೂ ವಿನಾಶವಾಗುವುದಿಲ್ಲ. ಆತ್ಮವೂ ಅವಿನಾಶಿಯಾಗಿದೆ, ಅದು ಅದೇ ಪಾತ್ರವನ್ನು ಅಭಿನಯಿಸಬೇಕಾಗಿದೆ, ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಕಲ್ಪದ ಮೊದಲು ಯಾರ ಬುದ್ಧಿಯಲ್ಲಿ ಕುಳಿತುಕೊಂಡಿತ್ತೋ ಅವರ ಬುದ್ಧಿಯಲ್ಲಿಯೇ ಇವೆಲ್ಲಾ ಮಾತುಗಳು ಪುನಃ ಕುಳಿತುಕೊಳ್ಳುವವು.
ತಂದೆಯು ತಿಳಿಸುತ್ತಾರೆ - ಇಷ್ಟೆಲ್ಲಾ ಮನುಷ್ಯರಿಗೆ ನಾನು ಹೇಗೆ ಓದಿಸಲಿ? ಹಾ! ಇಷ್ಟು ಮಾತ್ರ ತಿಳಿದುಕೊಳ್ಳುತ್ತಾರೆ - ನನ್ನನ್ನು ನೆನಪು ಮಾಡಿದರೆ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಎಲ್ಲರಿಗೆ ಸಂದೇಶ ಸಿಗುವುದು, ತಂದೆಯು ಎಲ್ಲರಿಗೆ ಈ ಮಂತ್ರವನ್ನು ಕೊಡುತ್ತಾರೆ. ತಂದೆಯು ತಿಳಿಸುತ್ತಾರೆ - ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಿಕೊಳ್ಳಬೇಕು, ಅವಗುಣಗಳನ್ನು ಬಿಡಬೇಕಾಗಿದೆ. ದೇಹಾಭಿಮಾನವನ್ನು ಬಿಡಿ ಎಂದು ಹೇಳುತ್ತಾರೆ ಆದರೂ ಸಹ ಬಿಡುವುದಿಲ್ಲ. ಪಾಪ! ಅವರಿಗೇನು ಸಿಗುತ್ತದೆ? ಒಬ್ಬರು ಇನ್ನೊಬ್ಬರೊಂದಿಗೆ ಪ್ರೀತಿಯಿಂದ ನಡೆಯುವುದಿಲ್ಲ. ನೀವಂತೂ ಬಹಳ ಮಧುರರಾಗಬೇಕಾಗಿದೆ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ, ನೀವು ಅವರ ಮಕ್ಕಳಾಗಿದ್ದೀರಿ ಅಂದಮೇಲೆ ನೀವು ಬಹಳ ಪ್ರಿಯರಾಗಬೇಕಾಗಿದೆ. ಎಂದಾದರೂ ಯಾರು ಎಷ್ಟಾದರೂ ಕ್ರೋಧ ಮಾಡಲಿ ಸ್ತುತಿ-ನಿಂದೆ ಎಲ್ಲವನ್ನೂ ಸಹನೆ ಮಾಡಿಕೊಳ್ಳಬೇಕಾಗಿದೆ. ಯಾರಾದರೂ ದಿವಾಳಿಯಾದರೆ ಬಾಬಾ ಈಗ ಸಹಾಯ ಮಾಡಲಿ ಎಂದು ತಿಳಿದುಕೊಳ್ಳುತ್ತಾರೆ. ಇದಂತೂ ನಿಮ್ಮ ಕರ್ಮಭೋಗವಾಗಿದೆ ಅಂದಮೇಲೆ ನೀವು ಸಹನೆ ಮಾಡಲೇಬೇಕಾಗಿದೆ. ಇದರಲ್ಲಿ ತಂದೆ ಏನು ಮಾಡುವರು? ತಂದೆಯು ಬಂದಿರುವುದೇ ಎಲ್ಲಾ ಆತ್ಮರನ್ನೂ ಕರೆದುಕೊಂಡು ಹೋಗಲು. ಇದನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಪ್ರಪಂಚದಲ್ಲಿ ಎಲ್ಲರೂ ಘೋರ ಅಂಧಕಾರದಲ್ಲಿದ್ದಾರೆ. ಭಕ್ತಿಮಾರ್ಗದಲ್ಲಿ ಅವಶ್ಯವಾಗಿ ಭಕ್ತರಿಗೇ ಮಾನ್ಯತೆಯಿರಬೇಕು. ಶಂಕರಾಚಾರ್ಯ ಮೊದಲಾದವರು ಭಕ್ತರಾಗಿದ್ದಾರೆ, ಅವರಿಗೆ ಪವಿತ್ರ ಭಕ್ತರೆಂದು ಹೇಳಲಾಗುತ್ತದೆ. ಭಕ್ತಿಕಾಂಡವಿದೆಯಲ್ಲವೆ. ಯಾರು ಪವಿತ್ರರಾಗಿರುವರೋ ಅವರದು ಎಷ್ಟು ದೊಡ್ಡ-ದೊಡ್ಡ ಪೀಠಗಳಿವೆ, ಅವರದು ಎಷ್ಟೊಂದು ಮಾನ್ಯತೆಯಿದೆ. ಧರ್ಮ ಗ್ರಂಥಗಳಿಗೂ ಬಹಳ ಮಾನ್ಯತೆಯಿದೆ. ಭಕ್ತಿಗೂ ಸಹ ಬಹಳ ಮಾನ್ಯತೆಯಿದೆ. ಜ್ಞಾನದ ಬಗ್ಗೆ ಯಾರಿಗೂ ತಿಳಿದಿಲ್ಲ. ನೀವು ಯಾವಾಗ ದೇವತೆಗಳಾಗುತ್ತೀರೋ ಆಗ ನಿಮ್ಮದು ಎಷ್ಟೊಂದು ಮಹಿಮೆಯಾಗುತ್ತದೆ! ಯಾರ ತಂದೆ-ತಾಯಿಯು ಯಾವುದೇ ಮಂದಿರಗಳಿಗೆ ಹೋಗದೇ ಇರುವವರು ಯಾರೂ ಇಲ್ಲ. ಭಕ್ತಿಯ ಒಂದಲ್ಲ ಒಂದು ಚಿಹ್ನೆಗಳು ಮನೆಯಲ್ಲಿ ಅವಶ್ಯವಾಗಿ ಇರುತ್ತವೆ, ಹೇ ಭಗವಂತ ಎಂದು ಹೇಳುವುದೂ ಸಹ ಭಕ್ತಿಮಾರ್ಗವಾಗಿದೆ. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಿ. ಇವರು ತಂದೆ, ಅವರು ದಾದಾ ಆಗಿದ್ದಾರೆ ಆದ್ದರಿಂದ ತ್ರಿಮೂರ್ತಿಯ ಚಿತ್ರದಲ್ಲಿ ಬಹಳ ಚೆನ್ನಾಗಿ ತಿಳಿಸಬೇಕಾಗಿದೆ. ಈ ದಾದಾರವರನ್ನು ಏಕೆ ಇಟ್ಟಿದ್ದೀರಿ ಎಂದು ಕೆಲವರು ಕೇಳುತ್ತಾರೆ. ಅರೆ! ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಬೇಕಲ್ಲವೆ. ಇವರಂತೂ ವೃಕ್ಷದಲ್ಲಿ ಕೆಳಗಡೆ ತಪಸ್ಸಿನಲ್ಲಿ ಕುಳಿತಿದ್ದಾರೆ ಆದರೆ ಅವರು ಬದಲಾಗುತ್ತಿರುತ್ತಾರೆ. ಇಲ್ಲಿ ಯಾರು ಮುಖ್ಯವಾದವರನ್ನು ತೋರಿಸಿದ್ದಾರೆಯೋ ಅವರು ಸದಾ ಸ್ಥಿರವಾಗಿರುತ್ತಾರೆ. ಮಕ್ಕಳು ಇಲ್ಲಿ ಬಹಳ ಮಧುರರಾಗಬೇಕು. ಚಲನೆಯು ಬಹಳ ಘನತೆಯಿಂದ ಕೂಡಿರಲಿ, ಕಡಿಮೆ ಮಾತನಾಡಬೇಕು. ಮೊಟ್ಟ ಮೊದಲು ತಂದೆಯ ಪರಿಚಯವನ್ನು ಕೊಡಬೇಕು. ಹೆಚ್ಚು ವಾದ-ವಿವಾದ ಮಾಡುವುದು ವ್ಯರ್ಥವಾಗಿದೆ, ಬಹಳ ಕಡಿಮೆ ಹೇಳಿರಿ. ನೀವೂ ಸಹ ಭಕ್ತಿಮಾರ್ಗದಲ್ಲಿ ಬಹಳ ಮಾತನಾಡಿದ್ದೀರಿ, ಕೂಗಿದ್ದೀರಿ, ಎಷ್ಟೊಂದು ಅಲೆದಾಡಿದ್ದೀರಿ. ಈಗ ತಂದೆಯು ನಿಮಗೆ ಸರಳವಾಗಿ ತಿಳಿಸುತ್ತಾರೆ - ಕೇವಲ ತಂದೆಯನ್ನು ನೆನಪು ಮಾಡಿದರೆ ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೀರಿ. ಮುಂದೆ ಹೋದಂತೆ ನಂಬರ್ವಾರ್ ಯಾರು-ಯಾರು ಏನಾಗುತ್ತಾರೆಂಬುದು ಅರ್ಥವಾಗುತ್ತದೆ. ಪ್ರಜೆಗಳ ಲೆಕ್ಕವನ್ನು ತೆಗೆಯಲು ಸಾಧ್ಯವಿಲ್ಲ. ಲಕ್ಷಾಂತರ, ಕೋಟ್ಯಾಂತರ ಅಂದಾಜಿನಲ್ಲಿ ಪ್ರಜೆಗಳು ತಯಾರಾಗುತ್ತಾರೆ. ಯಾರು ಬ್ರಾಹ್ಮಣರಾಗುವರೋ ಅವರೇ ಸೂರ್ಯವಂಶಿ, ಚಂದ್ರವಂಶಿಯರಾಗುತ್ತಾರೆ. ಮುಂದೆ ಹೋದಂತೆ ಬಹಳ ನೆನಪು ಮಾಡತೊಡಗುವರು. ಯಾವಾಗ ಮೃತ್ಯು ಸನ್ಮುಖದಲ್ಲಿ ಬರುವುದೋ ಆಗ ವೈರಾಗ್ಯ ಬರುವುದು. ಇದು ಅದೇ ಮಹಾಭಾರತ ಯುದ್ಧವಾಗಿದೆ. ಎಲ್ಲಾ ಆತ್ಮರು ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿಕೊಂಡು ಹೋಗುವರು. ಇದಕ್ಕೆ ಅಂತಿಮಸಮಯ ಎಂದು ಹೇಳಲಾಗುತ್ತದೆ. ಇಷ್ಟು ಶರೀರಗಳೆಲ್ಲವೂ ಸಮಾಪ್ತಿಯಾಗುತ್ತದೆ. ಪ್ರಾಕೃತಿಕ ವಿಕೋಪಗಳಾಗುತ್ತವೆ. ಇವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಹೊಸ ಮಾತಿಲ್ಲ. ಬರಗಾಲದ ಕಾರಣ ಮನುಷ್ಯರು ಹಸಿವಿನಿಂದ ನರಳುತ್ತಾರೆ.
ತಂದೆಗೆ ಗೊತ್ತಿದೆ - ನನ್ನ ಮಕ್ಕಳು ಬಹಳ ದುಃಖಿಯಾಗಿದ್ದಾರೆ, ಎಲ್ಲರನ್ನೂ ದುಃಖಗಳಿಂದ ಬಿಡಿಸಿ ಮರಳಿ ಕರೆದುಕೊಂಡು ಹೋಗುವೆನು. ಇವರೆಲ್ಲರೂ ಪರಸ್ಪರ ಹೊಡೆದಾಡುತ್ತಾರೆ. ಬೆಣ್ಣೆಯು ನಿಮಗೇ ಸಿಗುವುದು. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಬಾಯಲ್ಲಿ ಚಂದ್ರಮನ ಸಾಕ್ಷಾತ್ಕಾರ ಮಾಡುತ್ತಿದ್ದರಲ್ಲವೆ ಅಂದರೆ ಬಾಯಲ್ಲಿ ಇಡೀ ವಿಶ್ವದ ಗೋಲವು ಬಂದು ಬಿಡುತ್ತದೆ. ನೀವು ರಾಜಕುಮಾರ-ಕುಮಾರಿಯರಾಗುತ್ತೀರಿ. ಇಡೀ ಸೃಷ್ಟಿಯೇ ನಿಮ್ಮ ಮುಷ್ಟಿಯಲ್ಲಿದೆ. ಮುಷ್ಟಿಯಲ್ಲಿಯೂ ತೋರಿಸುತ್ತಾರೆ ಮತ್ತು ಬಾಯಲ್ಲಿಯೂ ಸೃಷ್ಟಿಯನ್ನು ತೋರಿಸುತ್ತಾರೆ. ಈಗ ಸ್ವರ್ಗದ ಗೋಲವು ನಿಮ್ಮ ಬಾಯಲ್ಲಿದೆ. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ. ಯೋಗದಿಂದ ಆರೋಗ್ಯ, ಜ್ಞಾನದಿಂದ ಐಶ್ವರ್ಯ ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ನೀವು ಚಕ್ರವರ್ತಿ ರಾಜರಾಗುತ್ತೀರಿ ಆದರೆ ಮಕ್ಕಳಿಗೆ ವಿದ್ಯೆಯಪ್ರತಿ ಅಷ್ಟೊಂದು ಗಮನವಿಲ್ಲ. ಭಲೆ ಸ್ಥಳ ಬದಲಾವಣೆಯಾಗಬಹುದು ಆದರೆ ತಂದೆಯು ತಿಳಿಸುತ್ತಾರೆ - ಎಲ್ಲಿಯೇ ಇರಿ ವಿದ್ಯೆಯನ್ನು ಅವಶ್ಯವಾಗಿ ಓದಿರಿ, ಪವಿತ್ರರಾಗಿರಿ. ಆಹಾರ-ಪಾನೀಯಗಳನ್ನು ಶುದ್ಧವಾಗಿಟ್ಟುಕೊಳ್ಳಿ. ಎಲ್ಲರೊಂದಿಗೆ ಸಂಬಂಧವನ್ನೂ ನಿಭಾಯಿಸಬೇಕಾಗಿದೆ. ಪ್ರಪಂಚವು ದುಃಖ ಕೊಡುವಂತದ್ದಾಗಿದೆ, ಮುಖ್ಯವಾದುದು ಕಾಮ ಕಟಾರಿಯನ್ನು ನಡೆಸುವುದಾಗಿದೆ. ಅದನ್ನೂ ಸಹ ಕಷ್ಟದಿಂದ ಬಿಡುತ್ತಾರೆ. ಏನಾದರೂ ಹೇಳಿದರೆ ವಿರೋಧಿಗಳಾಗಿ ಬಿಡುತ್ತಾರೆ ಮತ್ತೆ ಅಬಲೆಯರ ಮೇಲೆ ಎಷ್ಟೊಂದು ವಿಘ್ನಗಳು ಬರುತ್ತವೆ. ಈ ಆರ್ಯ ಸಮಾಜಿಗಳು ಎಲ್ಲಿದ್ದಾರೆ, ಇದು ಅಂತಿಮ ರೆಂಬೆಯಾಗಿದೆ. ದೇವತೆಗಳನ್ನು ಒಪ್ಪುವವರಲ್ಲ. ಮಹಾವೀರ, ಹನುಮಂತನ ಹೆಸರಿದೆ. ವೀರತ್ವವನ್ನು ತೋರಿಸಿದ್ದಾರೆ. ಜೈನರಲ್ಲಿಯೂ ಮಹಾವೀರ ಎಂಬ ಹೆಸರನ್ನಿಟ್ಟಿದ್ದಾರೆ, ಅದರ ಅರ್ಥವನ್ನು ಈಗ ನೀವು ತಿಳಿದುಕೊಂಡಿದ್ದೀರಿ. ನೀವು ಮಕ್ಕಳೂ ಸಹ ಮಹಾವೀರರಾಗಿದ್ದೀರಿ, ರಾವಣನ ಮೇಲೆ ಜಯ ಗಳಿಸುತ್ತೀರಿ. ಇದು ಯೋಗಬಲದ ಮಾತಾಗಿದೆ. ನೀವು ತಂದೆಯನ್ನು ನೆನಪು ಮಾಡುತ್ತೀರಿ ಅದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತವೆ ನಂತರ ಸುಖ-ಶಾಂತಿಯಲ್ಲಿ ಹೋಗುತ್ತೀರಿ. ಈ ಸಂದೇಶವನ್ನು ಎಲ್ಲರಿಗೆ ಕೊಡಬೇಕಾಗಿದೆ. ಈ ಸ್ಥಾಪನೆಯೇ ಬಹಳ ಅದ್ಭುತವಾಗಿದೆ, ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಇದ್ದಾರೆ. ಒಳಗೆ ಯಾವುದೇ ವಿಕಾರವಿರಬಾರದು, ತಂದೆಯು ಆತ್ಮಕ್ಕೆ ಜ್ಞಾನವನ್ನು ಕೊಡುತ್ತಿದ್ದಾರೆ. ಆತ್ಮವು ವಿಕಾರಿಯಾಗುತ್ತದೆ, ಎಲ್ಲವನ್ನು ಆತ್ಮವೇ ಮಾಡುತ್ತದೆ ಅಂದಮೇಲೆ ಈಗ ತಂದೆಯ ಶ್ರೀಮತದಂತೆ ಸಂಪೂರ್ಣ ನಡೆಯಬೇಕಾಗಿದೆ. ಸದ್ಗುರುವಿನ ಸನ್ಮುಖದಲ್ಲಿದ್ದು ನಿಂದನೆ ಮಾಡಿಸಿದರೆ ಪದವಿ ಪಡೆಯಲು ಸಾಧ್ಯವಿಲ್ಲ. ಯಾವುದೇ ಪಾಪ ಮಾಡುವುದು, ನಿಂದನೆಯಾಯಿತು. ಶಿಕ್ಷಕರ ಮತದಂತೆ ನಡೆಯದಿದ್ದರೆ ಪದವಿಯಲ್ಲಿ ಅನುತ್ತೀರ್ಣರಾಗಿ ಬಿಡುವರು. ಶಿಕ್ಷಕನ ಶಿಕ್ಷಣವನ್ನು ತೆಗೆದುಕೊಳ್ಳುತ್ತಾ ಇದ್ದರೆ ಪಾಸ್-ವಿತ್-ಆನರ್ ಆಗುತ್ತಾರೆ. ಅವು ಹದ್ದಿನ ಮಾತುಗಳು, ಇವು ಬೇಹದ್ದಿನ ಮಾತುಗಳಾಗಿವೆ. ಭಗವಂತ ಯಾರು ಎಂಬುದು ಪ್ರಪಂಚದಲ್ಲಿ ಯಾರಿಗೂ ತಿಳಿದಿಲ್ಲ. ಮಾಯೆಯೂ ಸಹ ಸತೋ, ರಜೋ, ತಮೋ ಆಗುತ್ತದೆ. ಈಗ ಮಾಯೆಯೂ ಸಹ ತಮೋಪ್ರಧಾನವಾಗಿದೆ, ನೋಡಿ ಏನೇನು ಮಾಡುತ್ತಿರುತ್ತಾರೆ! ನಾವು ಯಾವುದಕ್ಕೆ ಬೆಂಕಿಯನ್ನು ಇಡುತ್ತಿದ್ದೇವೆ ಎಂಬುದು ಯಾರಲ್ಲಿಯೂ ಬುದ್ಧಿಯಿಲ್ಲ. ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಏನೆಲ್ಲವೂ ಆಗುತ್ತದೆಯೋ ಅದು ಡ್ರಾಮಾನುಸಾರ ಆಗುತ್ತದೆ. ಕೌರವರ ಯೋಜನೆ, ಯಾದವರ ಯೋಜನೆ ಮತ್ತು ಪಾಂಡವರ ಯೋಜನೆ, ಏನೇನು ಮಾಡಿ ಹೋಯಿತು? ಪಾಂಡವರಿಗೆ ಸರ್ವ ಶ್ರೇಷ್ಠ ಉಪಾಯವನ್ನು ತಿಳಿಸುವವರು ತಂದೆಯಾಗಿದ್ದಾರೆ. ಹೊಸ ಪ್ರಪಂಚದಲ್ಲಿ ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು. ಈಗ ಹಳೆಯ ಪ್ರಪಂಚದ ವಿನಾಶವಾಗಲಿದೆ. ನೀವು ಅತೀ ಪ್ರಿಯ ತಂದೆಯಿಂದ ಅತಿಪ್ರಿಯ ಮಕ್ಕಳು ಆಸ್ತಿಯನ್ನು ಪಡೆಯುತ್ತಿದ್ದೀರಿ. ತಂದೆಯ ವಿನಃ ನಾನು ನಿಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಹೇಳುವವರು ಮತ್ತ್ಯಾರೂ ಇಲ್ಲ. ಎಲ್ಲರೂ ಪರಮಾತ್ಮನೇ ಎಂದು ಅವರು ಹೇಳಿ ಬಿಡುತ್ತಾರೆ. ಆದರೆ ಇದು ಹೇಳುವುದಕ್ಕಾದರೂ ಹೇಗೆ ಬರುತ್ತದೆ! ಇವೆಲ್ಲಾ ಮಾತುಗಳನ್ನು ನೀವೇ ತಿಳಿದುಕೊಂಡಿದ್ದೀರಿ, ಮತ್ತ್ಯಾರಿಗೂ ಗೊತ್ತಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ವಿನಾಶದ ಪೂರ್ವ ನಿಶ್ಚಿತವನ್ನರಿತು ಸಂಪೂರ್ಣ ಶ್ರೀಮತದಂತೆ ನಡೆಯಬೇಕಾಗಿದೆ. ನೆನಪಿನ ಬಲದಿಂದ ವಿಶ್ವದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳುವ ಪುರುಷಾರ್ಥ ಮಾಡಬೇಕಾಗಿದೆ. ತಮ್ಮ ಬೆಳಗಿರುವ ಜ್ಯೋತಿಯಿಂದ ಎಲ್ಲರ ಜ್ಯೋತಿಗಳನ್ನು ಬೆಳಗಿಸಿ ಸತ್ಯ ದೀಪಾವಳಿಯನ್ನು ಆಚರಿಸಬೇಕಾಗಿದೆ.