text
stringlengths
0
61.5k
ಮಾತೆಯರೊಂದಿಗೆ: ಎಲ್ಲರೂ ಶಕ್ತಿಶಾಲಿಯಾದ ಮಾತೆಯರು ಆಗಿದ್ದೀರಲ್ಲವೇ? ಬಲಹೀನರಂತು ಅಲ್ಲ ತಾನೆ? ಬಾಪ್ದಾದಾರವರು ಮಾತೆಯರಿಂದ ಬಯಸುವುದೇನು? ಒಂದೊಂದು ಮಾತೆಯು “ಜಗನ್ಮಾತೆ” ಯಾಗಿದ್ದು ವಿಶ್ವದ ಕಲ್ಯಾಣವನ್ನು ಮಾಡಲಿ. ಆದರೆ ಮಾತೆಯರು ಚತುರತೆಯಿಂದ ಕಾರ್ಯವನ್ನು ಮಾಡುತ್ತಾರೆ. ಯಾವಾಗ ಲೌಕಿಕ ಕಾರ್ಯವಿರುತ್ತದೆ ಆಗ ಯಾರಾದರೊಬ್ಬರನ್ನು ನಿಮಿತ್ತರನ್ನಾಗಿ ಮಾಡಿ ಸ್ವಯಂ ಹೊರಟು ಹೋಗುತ್ತಾರೆ ಮತ್ತು ಯಾವಾಗ ಈಶ್ವರೀಯ ಕಾರ್ಯವಿರುತ್ತದೆಯೋ ಆಗ ಹೇಳುತ್ತಾರೆ - ಮಕ್ಕಳಿದ್ದಾರೆ, ಯಾರು ಸಂಭಾಲಿಸುತ್ತಾರೆ? ಪಾಂಡವರಿಗಂತು ಬಾಪ್ದಾದಾರವರು ಹೇಳುತ್ತಾರೆ - ಸಂಭಾಲಿಸಬೇಕು ಏಕೆಂದರೆ ರಚೈತನಾಗಿದ್ದಾರೆ, ಪಾಂಡವರು ಶಕ್ತಿಯರನ್ನೂ ಫ್ರೀ ಮಾಡಿರಿ. ಡ್ರಾಮಾನುಸಾರ ವರ್ತಮಾನ ಸಮಯದಲ್ಲಿ ಮಾತೆಯರಿಗೆ ಅವಕಾಶ ಸಿಕ್ಕಿದೆ ಆದ್ದರಿಂದ ಮಾತೆಯರನ್ನು ಮುಂದಿಡಬೇಕಾಗಿದೆ. ಈಗ ಬಹಳಷ್ಟು ಸೇವೆಯನ್ನು ಮಾಡಬೇಕಾಗಿದೆ. ಇಡೀ ವಿಶ್ವದ ಪರಿವರ್ತನೆ ಮಾಡಬೇಕಾಗಿದೆ ಅಂದಮೇಲೆ ಸೇವೆಯು ಹೇಗೆ ಸಂಪೂರ್ಣ ಮಾಡುವಿರಿ? ತೀವ್ರ ಗತಿಯಿರಬೇಕು ಅಲ್ಲವೆ. ಅದಕ್ಕಾಗಿ ಪಾಂಡವರು, ಶಕ್ತಿಯರನ್ನು ಫ್ರೀ ಮಾಡುತ್ತೀರೆಂದರೆ ಸೇವಾಕೇಂದ್ರಗಳು ತೆರೆಯುತ್ತವೆ ಮತ್ತು ಧ್ವನಿ ಮೊಳಗಿ ಬಿಡಲಿ. ಒಳ್ಳೆಯದು!
ಓಂ ಶಾಂತಿ. ನೀವು ಮಕ್ಕಳೂ ಸಹ ಮನುಷ್ಯರಾಗಿದ್ದೀರಿ, ಇದು ಮನುಷ್ಯರ ಸೃಷ್ಟಿಯಾಗಿದೆ. ಈ ಸಮಯದಲ್ಲಿ ನೀವು ಬ್ರಾಹ್ಮಣ ಧರ್ಮದ ಮನುಷ್ಯರಾಗಿದ್ದೀರಿ. ತಂದೆಯು ಆತ್ಮಗಳಿಗೆ ಶಿಕ್ಷಣ ಕೊಡುತ್ತಾರೆ. ಆತ್ಮಕ್ಕೆ ಈಗ ತನ್ನ ಸ್ವಧರ್ಮದ ತಿಳುವಳಿಕೆಯಿದೆ, ನಾನಾತ್ಮ ಈ ಶರೀರವನ್ನು ನಡೆಸುವವನಾಗಿದ್ದೇನೆ. ಇದು ಆತ್ಮದ ರಥವಾಗಿದೆ. ಹೇಗೆ ತಂದೆಯು ಬಂದು ಈ ರಥದಲ್ಲಿ ಸವಾರಿ ಮಾಡುತ್ತಾರೆ, ನೀವಾತ್ಮರೂ ಸಹ ಈ ರಥದಲ್ಲಿ ಸವಾರಿ ಮಾಡುತ್ತೀರಿ. ಕೇವಲ ಆತ್ಮವು ನಾನಾತ್ಮನು ಶಾಂತ ಸ್ವರೂಪನಾಗಿದ್ದೇನೆ ಎಂಬುದನ್ನು ಮರೆತು ಹೋಗಿದೆ. ನಾವಿರುವ ಸ್ಥಾನವು ಮೂಲವತನವಾಗಿದೆ, ಈ ಶರೀರವು ನಮಗೆ ಇಲ್ಲಿಯೇ ಸಿಗುತ್ತದೆ. ಈ ರೀತಿಯಾಗಿ ತಮ್ಮೊಂದಿಗೆ ತಾವು ಮಾತನಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ - ನೀವು ಶಾಂತ ಸ್ವರೂಪ ಆತ್ಮರಾಗಿದ್ದೀರಿ. ಒಂದುವೇಳೆ ನೀವು ಶಾಂತಿಯಲ್ಲಿ ಕುಳಿತುಕೊಳ್ಳಬೇಕೆಂದರೆ ನಿಮ್ಮನ್ನು ನೀವು ಆತ್ಮ, ಶಾಂತಿಧಾಮದ ನಿವಾಸಿ ಎಂದು ತಿಳಿದುಕೊಳ್ಳಿ, ಇದರಿಂದ ಸ್ವಲ್ಪ ಸಮಯ ಶಾಂತಿಯಲ್ಲಿ ಕುಳಿತುಕೊಳ್ಳಬಹುದು. ಮನುಷ್ಯರು ಶಾಂತಿಯನ್ನೇ ಬಯಸುತ್ತಾರೆ, ಮನಸ್ಸಿಗೆ ಶಾಂತಿ ಬೇಕು, ಇದನ್ನು ಆತ್ಮವು ಹೇಳಿತು ಆದರೆ ಮನುಷ್ಯರಿಗೆ ನಾನಾತ್ಮನಾಗಿದ್ದೇನೆ ಎಂದು ಗೊತ್ತಿಲ್ಲ, ಇದನ್ನು ಮರೆತು ಹೋಗಿದ್ದಾರೆ. ಒಂದು ಕಥೆಯೂ ಸಹ ಇದೆಯಲ್ಲವೆ - ರಾಣಿಯ ಕೊರಳಿನಲ್ಲಿ ಹಾರವಿತ್ತು, ಆದರೆ ಹಾರಕ್ಕಾಗಿ ಹೊರಗೆ ಹುಡುಕುತ್ತಿದ್ದಳು ಅಂದಮೇಲೆ ಶಾಂತಿ ನಿಮ್ಮ ಸ್ವಧರ್ಮವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ನಾವು ಶಾಂತ ಸ್ವರೂಪರೆಂದು ಈಗ ಮಕ್ಕಳು ತಿಳಿದುಕೊಂಡಿದ್ದೀರಿ, ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಈ ಕರ್ಮೇಂದ್ರಿಯಗಳಿಂದ ಭಿನ್ನವಾಯಿತೆಂದರೆ ಆತ್ಮವು ಶಾಂತವಾಗಿರುತ್ತದೆ, ಆತ್ಮವು ತನ್ನ ಸ್ವಧರ್ಮದಲ್ಲಿ ಎಷ್ಟು ಸಮಯ ಬೇಕಾದರೂ ಇರಬಹುದು. ಒಂದುವೇಳೆ ಈ ಶರೀರದ ಮೂಲಕ ಕೆಲಸ ಮಾಡಲು ಇಷ್ಟವಿಲ್ಲದಿದ್ದರೆ ಶಾಂತಿಯಲ್ಲಿ ಕುಳಿತುಕೊಳ್ಳಿ. ಇದು ಸತ್ಯವಾದ ಶಾಂತಿಯಾಗಿದೆ, ಇದನ್ನು ನೀವು ಹುಡುಕುವುದಿಲ್ಲ, ನಿಮ್ಮ ಸ್ವಧರ್ಮವೇ ಶಾಂತಿಯಾಗಿದೆ. ಈಗ ನೀವು ಪಾತ್ರವನ್ನಭಿನಯಿಸುತ್ತಿದ್ದೀರಿ. ತಂದೆಯ ಮೂಲಕ, 84 ಜನ್ಮಗಳ ಪಾತ್ರವನ್ನಭಿನಯಿಸಿದೆವು ಎಂಬುದು ತಿಳಿಯಿತು. ಈ 84 ಜನ್ಮಗಳ ಚಕ್ರದ ಬಗ್ಗೆ ಯಾರಿಗೂ ಗೊತ್ತಿಲ್ಲ, ನೀವು ಮಕ್ಕಳು ಮಾತ್ರವೇ ತಿಳಿದಿದ್ದೀರಿ. ಮೊದಲು ಸೂರ್ಯವಂಶಿ ರಾಜ, ಅಥವಾ ಪ್ರಜೆಗಳಾಗಿದ್ದೆವು ನಂತರ ಚಂದ್ರವಂಶಿ, ವೈಶ್ಯ ವಂಶಿಗಳಿಂದ ಶೂದ್ರವಂಶಗಳಾಗಿದೆವು ಈಗ ಸೂರ್ಯವಂಶಿಗಳಾಗಬೇಕಾಗಿದೆ. ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಂಡಿದ್ದೀರಿ, ನೀವು ಎಷ್ಟೊಂದು ಭಾಗ್ಯಶಾಲಿಗಳಾಗಿದ್ದೀರಿ. ತಂದೆಯಂತೂ ಯಥಾರ್ಥವಾಗಿರುವ ಮಾತನ್ನು ತಿಳಿಸುತ್ತಾರೆ, ಇದು ಸದ್ಗತಿಯ ಮಾರ್ಗವಾಗಿದೆ. ಸರ್ವರ ಸದ್ಗತಿದಾತನು ಒಬ್ಬರೇ ಆಗಿದ್ದಾರೆ ಎಂದು ತಿಳಿಸಬೇಕು. ಈಗ ತಿಳಿದಿದ್ದೇವೆ - ತಂದೆಯು ಬಂದು ನಮಗೆ 21 ಜನ್ಮಗಳ ಸದ್ಗತಿಯನ್ನು ಪ್ರಾಪ್ತಿ ಮಾಡಿಸುತ್ತಿದ್ದಾರೆ. ಹೊರಗಿನ ಮನುಷ್ಯರಿಗೆ ಈ ಮಾತುಗಳು ತಿಳಿದಿಲ್ಲ, ನೀವು ಬ್ರಹ್ಮಾಕುಮಾರ-ಕುಮಾರಿಯರೇ ತಿಳಿದಿದ್ದೀರಿ. ನೀವು ಬಿ.ಕೆ.ಗಳು ಏನು ತಿಳಿದಿದ್ದೀರಿ ಎಂದು ಕೆಲವರು ಕೇಳುತ್ತಾರೆ, ಇವರು ಬ್ರಾಹ್ಮಣ ಬ್ರಾಹ್ಮಣಿಯರೋ ಅಥವಾ ಅಲ್ಲವೋ ಎಂದು ಪರೀಕ್ಷೆಯಂತೂ ಆಗಲೇಬೇಕಲ್ಲವೆ. ಒಂದುವೇಳೆ ಬ್ರಹ್ಮನ ಮಕ್ಕಳಾಗಿದ್ದೀರಿ ಅಂದಮೇಲೆ ಸೃಷ್ಟಿಚಕ್ರವನ್ನು ಅವಶ್ಯವಾಗಿ ತಿಳಿದುಕೊಂಡಿರುತ್ತೀರಿ. ತಂದೆ ರಚಯಿತನನ್ನು ತಿಳಿದುಕೊಂಡಿದ್ದೀರ? ಋಷಿ ಮುನಿಗಳು ಮುಂತಾದವರು ರಚನೆ ಮತ್ತು ರಚಯಿತನನ್ನು ತಿಳಿದುಕೊಂಡಿರಲಿಲ್ಲ ಅಂದಮೇಲೆ ನಾಸ್ತಿಕರು. ನೀವೂ ನಾಸ್ತಿಕರಾಗಿದ್ದಿರಿ, ರಚಯಿತ ತಂದೆ ಮತ್ತು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿರಲಿಲ್ಲ. ಶಾಲೆಯಲ್ಲಿ ಮೊದಲು ಏನೂ ತಿಳಿದಿಲ್ಲದವರೇ ಬರುತ್ತಾರೆ ನಂತರ ಶಾಲೆಯಲ್ಲಿ ಇದೆಲ್ಲವನ್ನೂ ಓದಿದೆವು ಎಂದು ಹೇಳುತ್ತಾರೆ. ಈಗ ನೀವು ಈಶ್ವರೀಯ ವಿದ್ಯೆಯನ್ನು ಓದುತ್ತಿದ್ದೀರಿ. ಪರಮಪಿತ ಪರಮಾತ್ಮನು ನಿಮಗೆ ಓದಿಸುತ್ತಿದ್ದಾರೆ, ಇದು ಸದಾ ಬುದ್ಧಿಯಲ್ಲಿರಬೇಕು. ರಚಯಿತನಂತೂ ಒಬ್ಬ ಶಿವ ತಂದೆಯಾಗಿದ್ದಾರೆ, ರುದ್ರನೇ ಜ್ಞಾನ ಯಜ್ಞವನ್ನು ರಚಿಸಿದನೆಂದು ಶಾಸ್ತ್ರಗಳಲ್ಲಿದೆ. ಈಗ ರುದ್ರ ಮತ್ತು ಶಿವ ಪರಮಾತ್ಮನಲ್ಲಿ ಯಾವ ಅಂತರವೂ ಇಲ್ಲ. ರುದ್ರ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಕಟವಾಯಿತು ಎಂದೂ ಸಹ ಇದೆ. ಕೇವಲ ರುದ್ರ ಶಿವನ ಸ್ಥಾನದಲ್ಲಿ ಕೃಷ್ಣನ ಹೆಸರನ್ನು ಹಾಕಿದ್ದಾರೆ, ಇರುವುದು ಅದೇ ಗೀತೆಯೇ. ಈ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆ ಪ್ರಜ್ವಲಿತವಾಯಿತು ಎಂದು ಹೇಳುತ್ತಾರೆ ಅಂದಮೇಲೆ ಸ್ವರಾಜ್ಯಕ್ಕಾಗಿ ಈ ಜ್ಞಾನ ಯಜ್ಞವಾಗಿದೆ. ಇದರಲ್ಲಿ ಹಳೆಯ ಪ್ರಪಂಚವು ಸ್ವಾಹಾ ಆಗಲಿದೆ. ಯಜ್ಞದಲ್ಲಿ ಎಲ್ಲವನ್ನೂ ಆಹುತಿ ಮಾಡುತ್ತಾರೆ ಅರ್ಥಾತ್ ಸ್ವಾಹಾ ಆಗುತ್ತದೆ, ಎಲ್ಲವನ್ನೂ ಸ್ವಾಹಾ ಮಾಡುತ್ತಾರೆ ಅಂದಮೇಲೆ ಈ ರುದ್ರ ಜ್ಞಾನ ಯಜ್ಞದಲ್ಲಿ ಹಳೆಯ ಪ್ರಪಂಚ ಸ್ವಾಹಾ ಆಗುತ್ತದೆ. ನೀವೀಗ ರಾಜಯೋಗವನ್ನು ಕಲಿಯುತ್ತಿದ್ದೀರಿ. ಈ ಪತಿತ ಪ್ರಪಂಚದಲ್ಲಿ ಮತ್ತೆ ಬರುವುದಿಲ್ಲ. ಈ ಪ್ರಪಂಚವು ಮತ್ತೆ ವಿನಾಶವಾಗುವುದು. ಪ್ರಾಕೃತಿಕ ವಿಕೋಪಗಳೂ ಆಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಇದೆಲ್ಲಾ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಕುಳಿತುಕೊಳ್ಳಬೇಕು. ನನ್ನಲ್ಲಿ ಎಲ್ಲದರ ಜ್ಞಾನವಿದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯು ಸತ್ಯ, ಚೈತನ್ಯ ಹಾಗೂ ಜ್ಞಾನ ಸಾಗರನಾಗಿದ್ದಾರೆ, ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿದ್ದಾರೆ. ನಾವು ರಚಯಿತ ಮತ್ತು ರಚನೆಯನ್ನು ತಿಳಿದುಕೊಂಡಿಲ್ಲ ಎಂದು ಋಷಿ-ಮುನಿಗಳೂ ಹೇಳುತ್ತಾರೆ. ನಿಮಗೆ ಏನು ಸಿಕ್ಕಿದೆ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ - ಯಾವ ದೊಡ್ಡ-ದೊಡ್ಡ ಋಷಿ ಮುನಿಗಳು ರಚನೆಯ ಆದಿ-ಮಧ್ಯ-ಅಂತ್ಯವನ್ನು ತಿಳಿದಿಲ್ಲವೋ ಅದನ್ನು ನಾವು ತಿಳಿದಿದ್ದೇವೆ ಎಂದು ಹೇಳಿರಿ. ರಚಯಿತ ತಂದೆಯ ಹೊರತು ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಲು ಸಾಧ್ಯವಿಲ್ಲ, ರಚಯಿತನೇ ತಿಳಿಸಬೇಕು. ಜೇನು ನೊಣಗಳಲ್ಲಿ ಒಂದು ರಾಣಿ ನೊಣ ಇರುತ್ತದೆ, ರಾಣಿ ನೊಣದ ಜೊತೆ ಎಲ್ಲಾ ಜೇನು ನೊಣಗಳು ಹಿಂದೆ ಹೋಗುತ್ತವೆ. ರಾಣಿ ಅರ್ಥಾತ್ ತಾಯಿಯ ಜೊತೆ ಅವಕ್ಕೆ ಎಷ್ಟೊಂದು ಸಂಬಂಧವಿರುತ್ತದೆ! ಬೇಹದ್ದಿನ ತಂದೆಯೂ ಬರುತ್ತಾರೆ ಅಂದಮೇಲೆ ಮಕ್ಕಳನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ನಾವಾತ್ಮಗಳನ್ನು ಶಾಂತಿಧಾಮಕ್ಕೆ ಕರೆದುಕೊಂಡು ಹೋಗಲು ತಂದೆಯು ಬಂದಿದ್ದಾರೆ ಎಂದು ತಿಳಿದಿದ್ದೀರಿ. ನಂತರ ಸತ್ಯಯುಗದಲ್ಲಿ ನಮ್ಮ ಪಾತ್ರವು ಪ್ರಾರಂಭವಾಗುವುದು, ಯಾವ ಪಾತ್ರವನ್ನು ಮಾಡಲು ನೀವು ದೇವಿ-ದೇವತಾ ಪದವಿಯನ್ನು ಪಡೆಯುತ್ತಿದ್ದೀರಿ. ಇಲ್ಲಿ ನೀವು ದೇವಿ-ದೇವತಾ ಪದವಿಯನ್ನು ಪಡೆಯಲು ಬರುತ್ತೀರಿ, ಇಲ್ಲಿ ನೀವು ಬರುವುದೇ ಮನುಷ್ಯರಿಂದ ದೇವತಾ ಪದವಿಯನ್ನು ಪಡೆಯಲು. ಎಲ್ಲಾ ಗುಣಗಳನ್ನು ಇಲ್ಲಿಯೇ ನೀವು ಧಾರಣೆ ಮಾಡಬೇಕಾಗಿದೆ, ಲಕ್ಷ್ಮೀ-ನಾರಾಯಣರ ಸಮಾನ ಆಗಬೇಕಾಗಿದೆ. ಇವರನ್ನು ದಿವ್ಯ ದೃಷ್ಟಿಯ ಹೊರತು ಯಾರೂ ನೋಡಲು ಸಾಧ್ಯವಿಲ್ಲ. ನಾವು ಸೂರ್ಯವಂಶಿ ದೇವತೆಗಳಾಗುತ್ತೇವೆ, ಸ್ವರ್ಗದ ರಾಜಧಾನಿಯು ಹೇಗೆ ಸ್ಥಾಪನೆಯಾಗುತ್ತಿದೆ ಎಂದು ನಿಮ್ಮ ಬುದ್ಧಿಯಲ್ಲಿದೆ. ಸತ್ಯಯುಗದಲ್ಲಿ ದೇವತೆಗಳ ರಾಜ್ಯವಿತ್ತು ಆದರೆ ದೇವತೆಗಳ ರಾಜ್ಯದಲ್ಲಿ ರಾಕ್ಷಸ ಇತ್ಯಾದಿಗಳನ್ನು ತೋರಿಸುತ್ತಾರೆ. ಇದು ಯಾರಿಗೂ ಗೊತ್ತಿಲ್ಲ. ಭಾರತವು ಎಷ್ಟೊಂದು ಪವಿತ್ರವಾಗಿತ್ತು, ಮಹಿಮೆಯನ್ನೂ ಹಾಡುತ್ತಾರೆ- ಸರ್ವಗುಣ ಸಂಪನ್ನ...... ಅವರ ಮುಂದೆ ತಲೆಯನ್ನೂ ಭಾಗಿಸುತ್ತಾರೆ, ಮಂದಿರಗಳೂ ಅನೇಕ ಮಾಡಲ್ಪಟ್ಟಿವೆ. ಆದರೆ ಆದಿ ಸನಾತನ ದೇವಿ-ದೇವತಾ ಧರ್ಮವು ಯಾವಾಗ ಮತ್ತು ಹೇಗೆ ಸ್ಥಾಪನೆಯಾಯಿತೆಂದು ಯಾರಿಗೂ ತಿಳಿದಿಲ್ಲ. ಭಾರತವು ಎಷ್ಟೊಂದು ಉನ್ನತವಾಗಿತ್ತು, ಹೇಗೆ ಕನಿಷ್ಟ ಮಟ್ಟಕ್ಕೆ ಬಂದಿತು ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಇದು ಪೂರ್ವ ನಿಶ್ಚಿತವಾಗಿ ಮಾಡಲ್ಪಟ್ಟಿದೆ ಎಂದು ಹೇಳುತ್ತಾರೆ. ಯಾರ ಲೀಲೆಯಾಗಿದೆ ಎಂಬುದೂ ಸಹ ತಿಳಿದಿಲ್ಲ, ಡ್ರಾಮಾದ ಲೀಲೆ ಎಂದು ತಿಳಿದರೆ ತಿಳಿದು ಬರುತ್ತದೆ. ಡ್ರಾಮಾದ ರಚಯಿತ, ಕ್ರಿಯೇಟರ್, ಡೈರೆಕ್ಟರ್ ಯಾರಾಗಿದ್ದಾರೆ? ಕೇವಲ ಈಶ್ವರನದೇ ಲೀಲೆಯೆಂದು ಹೇಳಿ ಬಿಡುತ್ತಾರೆ. ಡ್ರಾಮಾ ಎಂದು ಹೇಳುವುದರಿಂದ ಡ್ರಾಮಾದ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳಬಹುದು. ಕೇವಲ ಪುಸ್ತಕವನ್ನು ಓದುವುದರಿಂದ ಡ್ರಾಮಾವನ್ನು ತಿಳಿಯಲು ಸಾಧ್ಯವಿಲ್ಲ, ಎಲ್ಲಿಯವರೆಗೂ ಡ್ರಾಮವನ್ನು ನೋಡುವುದಿಲ್ಲವೋ ಅಲ್ಲಿಯವರೆಗೆ ಅರ್ಥವಾಗುವುದಿಲ್ಲ. ಪತ್ರಿಕೆಗಳಲ್ಲಿ ಕೃಷ್ಣನ ಚರಿತ್ರೆಯ ಬಗ್ಗೆ ಒಂದು ಡ್ರಾಮಾ ಮಾಡಲ್ಪಟ್ಟಿತ್ತು, ಅದನ್ನು ಓದಿದ್ದೆನು ಆದರೆ ನೋಡದೇ ಇದ್ದರೆ ಅರ್ಥವಾಗಲು ಸಾಧ್ಯವೇ! ನೋಡಿದಾಗಲೇ ಡ್ರಾಮಾ ಎಲ್ಲವೂ ಅರ್ಥವಾಗುತ್ತದೆ. ನೀವು ಮಕ್ಕಳೂ ಸಹ ಡ್ರಾಮಾವನ್ನು ಈಗ ತಿಳಿದುಕೊಂಡಿದ್ದೀರಿ. ಮನುಷ್ಯರು ಪ್ರಪಂಚದ ಇತಿಹಾಸ-ಭೂಗೋಳವು ಪುನರಾವರ್ತನೆಯಾಗುವುದು ಎಂದು ಹೇಳುತ್ತಾರೆ, ಆದರೆ ಹೇಗೆ ಸುತ್ತುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ. ಹೆಸರನ್ನೂ ಸಹ ಸತ್ಯಯುಗ, ತ್ರೇತಾ, ದ್ವಾಪರ, ಕಲಿಯುಗ ನಂತರ ಸಂಗಮಯುಗ ಎಂದು ಬರೆಯುತ್ತಾರೆ ಆದರೆ ಭಗವಂತನು ಯುಗ-ಯುಗದಲ್ಲಿ ಬರುತ್ತಾರೆಂದು ಮನುಷ್ಯರು ತಿಳಿದಿದ್ದಾರೆ. ಸತ್ಯಯುಗ, ತ್ರೇತಾದಲ್ಲಿಯೂ ಸಹ ಸಂಗಮ ಇರುತ್ತದೆ ಆದರೆ ಆ ಸಂಗಮದ ಮಹತ್ವವೇನೂ ಇಲ್ಲ, ಅಲ್ಲಿ ಏನೂ ಆಗುವುದೂ ಇಲ್ಲ. ಈ ಮಾತುಗಳನ್ನು ನೀವು ತಿಳಿದುಕೊಂಡಿದ್ದೀರಿ. ಸತ್ಯಯುಗೀ ಸೂರ್ಯವಂಶಿಗಳು ನಂತರ ಚಂದ್ರವಂಶಿಯರಿಗೆ ರಾಜ್ಯವನ್ನು ಹೇಗೆ ಕೊಟ್ಟರು? ಚಂದ್ರವಂಶಿಗಳು ಸೂರ್ಯವಂಶಿಗಳ ಮೇಲೆ ಗೆದ್ದರು ಎಂದಲ್ಲ, ಇಲ್ಲಿ ಸೂರ್ಯವಂಶಿ ರಾಜ-ರಾಣಿಯರು ಚಂದ್ರವಂಶಿ ರಾಜನಿಗೆ ತಿಲಕವನ್ನಿಟ್ಟು ಸಿಂಹಾಸನದ ಮೇಲೆ ಕೂರಿಸುತ್ತಾರೆ. ರಾಜಾ ರಾಮ, ರಾಣಿ ಸೀತೆ ಎಂಬ ಬಿರುದು ಸಿಗುತ್ತದೆ. ಇದನ್ನು ಯಾರು ಕೊಟ್ಟರು? ಸೂರ್ಯವಂಶಿಗಳು ನೀವು ರಾಜ್ಯಭಾರ ಮಾಡಿ ಎಂದು ವರ್ಗಾವಣೆ ಮಾಡಿದರು ಎಂದು ಹೇಳುತ್ತಾರೆ. ಈ ದೃಶ್ಯವನ್ನು ನೀವು ಸಾಕ್ಷಾತ್ಕಾರದಲ್ಲಿ ನೋಡಿದ್ದೀರಿ. ಉಳಿದಂತೆ ಯಾವುದೇ ಯುದ್ಧ ಇತ್ಯಾದಿಗಳು ಆಗುವುದಿಲ್ಲ. ಹೇಗೆ ಯಾರಿಗೇ ರಾಜ್ಯಭಾಗ್ಯವನ್ನು ಕೊಡುತ್ತಾರೆಯೋ ಹಾಗೆಯೇ ಕೊಡುತ್ತಾರೆ. ಅವರ ಕಾಲುಗಳನ್ನು ತೊಳೆದು ಅವರಿಗೆ ರಾಜ್ಯ ತಿಲಕವನ್ನು ಕೊಡುತ್ತಾರೆ. ಅಲ್ಲಿ ಯಾವುದೇ ಗುರು ಗೋಸಾಯಿಗಳು ಇರುವುದಿಲ್ಲ. ಈಗ ನಾವು ದೈವೀ ಸ್ವಭಾವದವರಾಗುತ್ತಿದ್ದೇವೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯಲ್ಲಿ ಎಷ್ಟು ಸುಖಿಗಳಾಗಿರುತ್ತೇವೆ! ಬಾಬಾ, ನಮ್ಮನ್ನು ದುಃಖದಿಂದ ಹೊರ ತೆಗೆದು ಸುಖದಲ್ಲಿ ಕರೆದುಕೊಂಡು ಹೋಗುತ್ತಾರೆ. ಬೇರೆ ಯಾರೂ ಸುಖಿಗಳನ್ನಾಗಿ ಮಾಡಲು ಸಾಧ್ಯವಿಲ್ಲ. ಸಾಧುಗಳೂ ಸಹ ಶಾಂತಿಧಾಮಕ್ಕೆ ಹೋಗಲು ಇಚ್ಛಿಸುತ್ತಾರೆ, ನಾನು ಈ ಸಾಧುಗಳನ್ನೂ ಸಹ ಉದ್ಧಾರ ಮಾಡಿ ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಸನ್ಯಾಸಿಗಳು ದ್ವಾಪರಯುಗದಲ್ಲಿಯೇ ಬರುತ್ತಾರೆ, ಸ್ವರ್ಗದಲ್ಲಿ ದೇವತೆಗಳೇ ಇರುತ್ತಾರೆ. ನಿರಾಕಾರ ಪ್ರಪಂಚದಲ್ಲಿ ಭಿನ್ನ-ಭಿನ್ನ ವಿಭಾಗಗಳಿರುತ್ತವೆ. ಸೂರ್ಯವಂಶಿಯರದೇ ಬೇರೆ, ಚಂದ್ರವಂಶಿಯರದೇ ಬೇರೆ ನಂತರ ಇಸ್ಲಾಮಿ, ಬೌದ್ಧಿ, ಸನ್ಯಾಸಿ ಇತ್ಯಾದಿ ಯಾರೆಲ್ಲರೂ ಬರುತ್ತಾರೆಯೋ ಅವರೆಲ್ಲರ ಭಿನ್ನ-ಭಿನ್ನವಾದ ವಿಭಾಗಗಳು ಮಾಡಲ್ಪಟ್ಟಿವೆ. ನಾವು ರಾಜ್ಯ ಮಾಡುತ್ತಿದ್ದಾಗ ಬೇರೆ ಯಾರೂ ಇರಲಿಲ್ಲ, ಮೂಲವತನದಲ್ಲಿ ಈ ರೀತಿ ಮಾಲೆ ನಂಬರ್ವಾರ್ ಮಾಡಲ್ಪಟ್ಟಿದೆ. ಆದಿ ಸನಾತನ ದೇವಿ-ದೇವತಾ ಧರ್ಮದವರದು ಮೊದಲನೇ ವಂಶವಾಗಿದೆ ನಂತರ ಅನ್ಯ ವಂಶಗಳು ಬರುತ್ತವೆ. ಇದು ಎಲ್ಲಾ ವಂಶಗಳಿಗಿಂತ ಅತಿ ದೊಡ್ಡ ವಂಶವಾಗಿದೆ ಮತ್ತು ಅನ್ಯ ಧರ್ಮದ ಸ್ಥಾಪಕರು ಬರುತ್ತಾರೆ, ಅವರೆಲ್ಲರೂ ಇದರಿಂದಲೇ ಬರುತ್ತಾರೆ. ನೀವು ಹೇಳುತ್ತೀರಿ - ಇಸ್ಲಾಮಿಗಳು ಎರಡನೇ ವಂಶ ನಂತರ ಮೂರನೆಯವರು ಬೌದ್ಧಿಯರ ವಂಶವಾಗಿದೆ. ನಾವು ಮೊದಲಿನವರಾಗಿದ್ದೇವೆ ಬಾಕಿ ಇನ್ನೆಲ್ಲರೂ ಚಿಕ್ಕ-ಚಿಕ್ಕ ವಂಶದವರು ಲಕ್ಷ ಗಟ್ಟಲೇ ಇರುತ್ತಾರೆ, ಇಲ್ಲಂತೂ ಮುಖ್ಯವಾಗಿ ನಾಲ್ಕು ವಂಶಗಳಿವೆ. ಮೊಟ್ಟ ಮೊದಲು ನಾವು ಬರುತ್ತೇವೆ ನಂತರ ಇಸ್ಲಾಮಿ, ಬೌದ್ಧಿ, ಕ್ರಿಶ್ಚಿಯನ್ನರು ಬರುತ್ತಾರೆ. ಈಗ ನಾವು ಕೆಳಗೆ ಬಂದು ಬಿಟ್ಟಿದ್ದೇವೆ, ನಾವೇ 84 ಜನ್ಮಗಳ ಪಾತ್ರವನ್ನಭಿನಯಿಸಬೇಕಾಗಿದೆ. ಈಗ ಯಾರು ಅಂತ್ಯದಲ್ಲಿದ್ದಾರೆಯೋ ಅವರೇ ಪ್ರಾರಂಭದಲ್ಲಿ ಬರುತ್ತಾರೆ. ದೇವತೆಗಳು ಪತಿತರಾಗಿರುವ ಕಾರಣ ತಮ್ಮನ್ನು ದೇವಿ-ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ. ದೇವತೆಗಳನ್ನು ಪೂಜಿಸುತ್ತಾರೆ ಅಂದಮೇಲೆ ಅವರ ವಂಶದವರೇ ಆಗಿದ್ದಾರೆಂದು ಇದರಿಂದ ಸಿದ್ಧವಾಗುತ್ತದೆ. ಸಿಖ್ಖ್ಧರ್ಮದವರು ಗುರುನಾನಕನನ್ನು ಒಪ್ಪುತ್ತಾರೆ, ಅವರ ವಂಶದವರೇ ಆಗಿದ್ದಾರೆ. ಸತ್ಯಯುಗದಲ್ಲಿ ಮೊದಲನೇ ನಂಬರ್ ನಮ್ಮ ವಂಶವಾಗಿರುತ್ತದೆ, ಅದಕ್ಕಿಂತಲೂ ಶ್ರೇಷ್ಠವಾದ ವಂಶ ಮತ್ತ್ಯಾವುದೂ ಇರುವುದಿಲ್ಲ. ನಾವು ಶ್ರೇಷ್ಠಾತಿ ಶ್ರೇಷ್ಠ ವಂಶದವರಾಗಿದ್ದೇವೆ. ನಾವು ಎಲ್ಲರಿಗಿಂತ ಹೆಚ್ಚು ಸುಖವನ್ನು ಭೋಗಿಸುತ್ತೇವೆ, ನಂತರ ನಾವೇ ಕಂಗಾಲರಾಗುತ್ತೇವೆ. ಎಲ್ಲರಿಗಿಂತ ಹೆಚ್ಚು ದುಃಖವು ಇಲ್ಲಿಯೇ ಇದೆ, ಸಾಲವನ್ನು ಹೆಚ್ಚು ಇಲ್ಲಿಯೇ ಪಡೆಯುತ್ತಾರೆ. ಎಷ್ಟು ಸಾಹುಕಾರರಾಗಿದ್ದೆವು, ಈಗ ಎಷ್ಟೊಂದು ಬಡವರಾಗಿದ್ದೇವೆ, ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದೇವೆ, ಇದಂತೂ ದುಃಖಧಾಮವಾಗಿದೆ. ಈಗ ತಂದೆಯು ಪುನಃ ನಮ್ಮನ್ನು ಸುಖಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ಬಾಕಿ ಎಲ್ಲರೂ ಶಾಂತಿಧಾಮಕ್ಕೆ ಹೊರಟು ಹೋಗುತ್ತಾರೆ. ಅರ್ಧ ಕಲ್ಪ ನೀವು ಸುಖವನ್ನ ಅನುಭವಿಸುತ್ತೀರಿ ಬಾಕಿ ಎಲ್ಲರೂ ಶಾಂತಿಯಲ್ಲಿರುತ್ತಾರೆ. ನಾವು ಮುಕ್ತಿಗೆ ಹೋಗಬೇಕೆಂದು ಎಲ್ಲರೂ ಇಚ್ಛಿಸುತ್ತಾರೆ, ಸುಖ ಕಾಗವಿಷ್ಟ ಸಮಾನವೆಂದು ತಿಳಿಯುತ್ತಾರೆ. ಅವರಿಗೆ ಸುಖಧಾಮದ ಅನುಭವವೇ ಇಲ್ಲ, ನಿಮಗೆ ಅನುಭವವಿದೆ. ಮಹಿಮೆಯನ್ನೂ ಮಾಡುತ್ತಾರೆ ಆದರೆ ಪತಿತರಾಗಿರುವ ಕಾರಣ ಮರೆತು ಹೋಗಿದ್ದಾರೆ. ತಂದೆಯು ನೆನಪು ತರಿಸುತ್ತಾರೆ - ಹೇ ಭಾರತವಾಸಿಗಳೇ, ನೀವು ದೇವಿ-ದೇವತಾ ಧರ್ಮದವರಾಗಿದ್ದಿರಿ, ದ್ವಾಪರದಿಂದ ಹೆಸರು ಬದಲಾಯಿತು. ದೇವತಾಧರ್ಮದವರೇ ಪತಿತರಾಗಿದ್ದಾರೆ. ಪತಿತ-ಪಾವನ ಬನ್ನಿ ಎಂದು ಗಾಯನವನ್ನೂ ಮಾಡುತ್ತಾರೆ. ನೀವು ಎಷ್ಟು ಜನ್ಮಗಳು ಪಾವನ ಪ್ರಪಂಚದಲ್ಲಿ, ಎಷ್ಟು ಜನ್ಮಗಳು ಪತಿತ ಪ್ರಪಂಚದಲ್ಲಿದ್ದಿರಿ ಎಂದು ತಂದೆಯು ತಿಳಿಸಿದ್ದಾರೆ. ಈಗ ಪುನಃ ಪಾವನ ಪ್ರಪಂಚಕ್ಕೆ ಹೋಗಬೇಕಾಗಿದೆ. ಇದು ಪಾಠಶಾಲೆಯೂ ಆಗಿದೆ, ಯಜ್ಞಕ್ಕೆ ಯಜ್ಞವೂ ಆಗಿದೆ. ಇಡೀ ಹಳೆಯ ಪ್ರಪಂಚವು ಇದರಲ್ಲಿ ಸಮಾಪ್ತಿಯಾಗಲಿದೆ. ಹೋಲಿಕಾವನ್ನು ಸುಡುತ್ತಾರೆ, ಈ ಎಲ್ಲಾ ಹಬ್ಬಗಳು ಈಗಿನದ್ದಾಗಿವೆ. ಆತ್ಮವು ಹೊರಟು ಹೋಗುತ್ತದೆ, ಶರೀರವು ಸಮಾಪ್ತಿಯಾಗುವುದು. ಈ ಜ್ಞಾನವನ್ನು ಯಾವುದೇ ಸನ್ಯಾಸಿಗಳು ಕೊಡಲು ಸಾಧ್ಯವಿಲ್ಲ. ಗೀತೆಯಲ್ಲಿ ಸ್ವಲ್ಪ ಇದೆ, ಆದರೆ ಹಿಟ್ಟಿನಲ್ಲಿ ಉಪ್ಪು ಸೇರಿಕೊಂಡಂತೆ, ಜ್ಞಾನವು ಪ್ರಾಯಃಲೋಪವಾಗಿ ಬಿಡುತ್ತದೆ. ನಾನು ಈ ಯಜ್ಞವನ್ನು ರಚಿಸಿದ್ದೇನೆ, ಇದರಲ್ಲಿ ತನು-ಮನ-ಧನವೆಲ್ಲವನ್ನೂ ಸ್ವಾಹಾ ಮಾಡುತ್ತೀರಿ, ನೀವು ಬದುಕಿದ್ದರೂ ಸತ್ತಂತೆ ಇರುತ್ತೀರೆಂದು ಶಿವ ತಂದೆಯು ತಿಳಿಸುತ್ತಾರೆ. ಈ ಜ್ಞಾನವು ನಿಮಗೆ ಈಗ ದೊರೆಯುತ್ತಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸುಖಧಾಮಕ್ಕೆ ಹೋಗಲು ನಿಮ್ಮ ಸ್ವಭಾವವನ್ನು ದೈವೀ ಸ್ವಭಾವವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಡ್ರಾಮಾದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ಬುದ್ಧಿಯಲ್ಲಿಟ್ಟುಕೊಂಡು ಹರ್ಷಿತವಾಗಿರಬೇಕು, ಎಲ್ಲರಿಗೂ ಇದೇ ರಹಸ್ಯವನ್ನು ತಿಳಿಸಬೇಕು.
2. ಸ್ವ ರಾಜ್ಯದಲ್ಲಿ ಹೋಗಲು ಬೇಹದ್ದಿನ ಯಜ್ಞದಲ್ಲಿ ಬದುಕ್ಕಿದ್ದಂತೆಯೇ ಸತ್ತು ತಮ್ಮ ತನು-ಮನ-ಧನವನ್ನು ಸ್ವಾಹಾ ಮಾಡಬೇಕಾಗಿದೆ. ಎಲ್ಲವನ್ನೂ ಹೊಸ ಪ್ರಪಂಚಕ್ಕಾಗಿ ವರ್ಗಾವಣೆ ಮಾಡಬೇಕು.
ಓಂ ಶಾಂತಿ. ಮಕ್ಕಳೇ ಓಂ ಶಾಂತಿ ಎಂದು ಶಿವ ತಂದೆಯೂ ಹೇಳುತ್ತಾರೆ ಮತ್ತೇನು ಏಕೆ ಹೇಳುತ್ತಾರೆ? ಮಕ್ಕಳಿಗೆ ಹೇಳುತ್ತಾರೆ, ಮಕ್ಕಳೇ ಓಂ ಶಾಂತಿ, ತತ್ತ್ವಂ. ಹೇ ಮಕ್ಕಳೇ ನೀವು ಶಾಂತ ಸ್ವರೂಪರಾಗಿದ್ದೀರಿ. ನೀವು ಮಾಸ್ಟರ್ ಪತಿತ-ಪಾವನರಾಗಿದ್ದೀರಿ. ನಿಮ್ಮ ಹಾಗೆ ಯಾರೂ ಇರಲು ಸಾಧ್ಯವಿಲ್ಲ. ಎಂತಹ ಕಾಗೆಯೋ ಅಂತಹ ಮಕ್ಕಳೆಂದು ಹೇಳುತ್ತಾರೆ. ನೀವೂ ತಿಳಿದುಕೊಂಡಿದ್ದೀರಿ - ಹೇಗೆ ತಂದೆಯೋ ಹಾಗೆಯೇ ನಾವಾಗಿದ್ದೇವೆ. ನಾನು ಜ್ಞಾನ ಸಾಗರನಾಗಿದ್ದೇನೆ ಅಂದಾಗ ನೀವು ಮಾ|| ಜ್ಞಾನ ಸಾಗರರಾಗಿದ್ದೀರೆಂದು ನೀವು ತಿಳಿದುಕೊಂಡಿದ್ದೀರಿ ಅಂದಮೇಲೆ ನೀವೆಲ್ಲರೂ ನದಿಗಳಾಗಿದ್ದೀರಿ. ಸಾಗರನ ಮಕ್ಕಳು-ಮರಿಗಳು ಇರಬೇಕಲ್ಲವೆ. ದೊಡ್ಡ-ದೊಡ್ಡ ನದಿಗಳಿವೆ, ಕೊಳಗಳಿವೆ, ಸರೋವರಗಳೂ ಇವೆ. ಅವುಗಳೆಲ್ಲಾ ಜಡವಾಗಿವೆ, ನೀವು ಚೈತನ್ಯವಾಗಿದ್ದೀರಿ. ಸಾಗರದಿಂದಲೇ ಎಲ್ಲವೂ ಹುಟ್ಟಿಕೊಂಡಿದೆ. ಕೆಲವು ಮಕ್ಕಳಿಗೆ ಈ ಮಾತುಗಳು ತಿಳಿಯುವುದಿಲ್ಲ ಏಕೆಂದರೆ ಮಕ್ಕಳು ವಿದ್ಯಾವಂತರಾಗಿರುವುದಿಲ್ಲ. ತಂದೆಯ ಒಮ್ಮೆ ಒಂದು ಪ್ರಶ್ನೆಯನ್ನು ಕೇಳಿದರು - ಸಕ್ಕರೆಯನ್ನು ಯಾವುದರಿಂದ ಮಾಡುತ್ತಾರೆ? ಬೆಲ್ಲವನ್ನು ಯಾವುದರಿಂದ ಮಾಡುತ್ತಾರೆ? ಕೆಂಪು ಕಬ್ಬಿನಿಂದ ಬೆಲ್ಲವನ್ನು, ಬಿಳಿ ಕಬ್ಬಿನಿಂದ ಸಕ್ಕರೆಯನ್ನು ತಯಾರಿಸುತ್ತಾರೆ ಎಂದು ಹೇಳಿದರು ಏಕೆಂದರೆ ಅವರು ಓದಿರಲಿಲ್ಲ ಅಲ್ಲವೆ. ಈಗ ನಿಮಗೆ ಎಷ್ಟು ದೊಡ್ಡ ಮಾತುಗಳನ್ನು ತಿಳಿಸುತ್ತಾರೆ! ನೀರಿನ ಸಾಗರದಿಂದ ನದಿಗಳು ಹುಟ್ಟುತ್ತವೆ. ಮನುಷ್ಯರು ವೃದ್ಧಿಯಾದರೆ ನೀರು ಸಹ ಹೆಚ್ಚು ಬೇಕಾಗುತ್ತದೆ, ಎಷ್ಟೊಂದು ಕಣಿವೆಗಳನ್ನು ಮಾಡುತ್ತಿರುತ್ತಾರೆ. ನೀವು ಮಕ್ಕಳು ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ಇದೇ ವಿಚಾರ ಮಾಡಬೇಕು - ನಾವು ಈ ಪತಿತ ಪ್ರಪಂಚವನ್ನು ಪಾವನ ಮಾಡುತ್ತೇವೆ. ಗೀತೆಯಲ್ಲಿಯೂ ಸಹ ಹೇಳುತ್ತಾರೆ - ಬಾಬಾ, ನಾವು ನಿಮ್ಮಿಂದ ವಿಶ್ವದ ರಾಜ್ಯಭಾಗ್ಯವನ್ನು ಆಸ್ತಿಯಾಗಿ ಪಡೆಯುತ್ತೇವೆ. ಇದನ್ನು ನಮ್ಮಿಂದ ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. 21 ಜನ್ಮಗಳು ಅದು ಖಾಯಂ ಆಗಿ ಇರುವುದು. ಬೇಹದ್ದಿನ ತಂದೆಯು ಬೇಹದ್ದಿನ ರಾಜ್ಯಭಾಗ್ಯವನ್ನು ಕೊಡುತ್ತಾರೆ. ಯೋಗ್ಯರನ್ನಾಗಿ, ಪವಿತ್ರರನ್ನಾಗಿ ಮಾಡುತ್ತಾರೆ. ಹೇ ಪತಿತ-ಪಾವನ ಎಂದೂ ಸಹ ಕರೆಯುತ್ತಾರೆ, ಕೃಷ್ಣನನ್ನು ಕರೆಯುವುದಿಲ್ಲ ಆದರೆ ನಿರಾಕಾರ ಭಗವಂತನನ್ನೇ ಕರೆಯುತ್ತಾರೆ. ಹೇ ಪತಿತ-ಪಾವನ ಎಂದಾಗ ಕೃಷ್ಣನು ಬುದ್ಧಿಯಲ್ಲಿ ಬರುವುದಿಲ್ಲ, ಪರಮಾತ್ಮನೇ ಬರುತ್ತಾರೆ. ತಂದೆಯು ಪ್ರತಿಯೊಂದು ಮಾತನ್ನೂ ತಿಳಿಸುತ್ತಾರೆ. ನೀವು ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ಇವರು ಯಾವುದೇ ಸಾಧು-ಸಂತರಲ್ಲ. ನಿರಾಕಾರ ಶಿವ ತಂದೆಯು ಈ ಬ್ರಹ್ಮನ ಶರೀರದಲ್ಲಿ ಪ್ರವೇಶ ಮಾಡಿ ನಮಗೆ ಓದಿಸುತ್ತಾರೆಂದು ನೀವು ತಿಳಿದಿದ್ದೀರಿ. ಪರಮಪಿತ ಪರಮಾತ್ಮನು ಬ್ರಹ್ಮನ ತನುವಿನ ಮುಖಾಂತರ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಾರೆಂದು ಗಾಯನವಿದೆ. ವಿನಾಶವು ಸ್ಥಾಪನೆಯ ನಂತರ ಆಗುವುದು. ಪರಮಾತ್ಮನು ಹಳೆಯ ಪ್ರಪಂಚದಲ್ಲಿಯೇ ಬರುತ್ತಾರೆಂದು ಇದರಿಂದ ಸಿದ್ಧವಾಗುತ್ತದೆ. ಬ್ರಹ್ಮನ ಮುಖಾಂತರ ಹೊಸ ಪ್ರಪಂಚದ ಸ್ಥಾಪನೆ, ಶಂಕರನ ಮುಖಾಂತರ ಅನೇಕ ಧರ್ಮಗಳ ವಿನಾಶವನ್ನು ಮಾಡಿಸುತ್ತಾರೆ. ಸತ್ಯಯುಗದಲ್ಲಿ ಒಂದು ಧರ್ಮವಿತ್ತು, ಈಗಂತೂ ಅನೇಕ ಧರ್ಮಗಳಿವೆ. ಒಂದು ಧರ್ಮವರು ದೇವಿ-ದೇವತಾ ಧರ್ಮದ ಚಿಹ್ನೆಯಾಗಿ ಚಕ್ರ ಇತ್ಯಾದಿಗಳಿವೆ. ಈ ಲಕ್ಷ್ಮೀ-ನಾರಾಯಣರನ್ನು ವಿಶ್ವದ ಮಾಲೀಕರೆಂದು ಹೇಳಲಾಗುತ್ತದೆ. ಸ್ವರ್ಗದ ಮಾಲೀಕರು ಸೋ ವಿಶ್ವದ ಮಾಲೀಕರಾದರಲ್ಲವೆ. ಈ ಮಾತುಗಳು ನೀವು ಮಕ್ಕಳ ಬುದ್ಧಿಯಲ್ಲಿದೆ. ಮಕ್ಕಳೇ, ಮನ್ಮನಾಭವ ಎಂದು ತಂದೆಯು ಹೇಳುತ್ತಾರೆ. ಮಕ್ಕಳಿಗೆ ಇದು ಘಳಿಗೆ-ಘಳಿಗೆಗೂ ಸಾವಧಾನ ಸಿಗುತ್ತದೆ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಇದನ್ನು ಮರೆಯಬಾರದು, ನಂತರ ಅಂಶಗಳೆಲ್ಲವನ್ನೂ ಮರೆತು ಹೋಗುತ್ತಾರೆ. ಇದಂತೂ ಮುಖ್ಯವಾಗಿದೆ. ತಂದೆಯೇ ಪತಿತ-ಪಾವನನಾಗಿದ್ದಾರೆ. ಇವರು ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ನೀವು ಸತೋಪ್ರಧಾನರಾಗಿದ್ದಿರಿ, ಈಗ ತಮೋಪ್ರಧಾನ ಪತಿತರಾಗಿದ್ದೀರಿ, ಪೂರ್ಣ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ನೀವು ಸತೋಪ್ರಧಾನರಾದರೆ ಪವಿತ್ರ ಪ್ರಪಂಚದಲ್ಲಿ ಹೋಗಲು ಸಾಧ್ಯ. ನಿರಾಕಾರಿ ಪ್ರಪಂಚವು ಪವಿತ್ರವಾಗಿದೆ ಹಾಗೂ ಸಾಕಾರಿ ಪ್ರಪಂಚವೂ ಅಲ್ಲಿ ಪವಿತ್ರವಾಗಿರುತ್ತದೆ. ನಂತರ ಈಗ ಅಪವಿತ್ರ ಪತಿತ ಪ್ರಪಂಚವಾಗಿದೆ. ಆತ್ಮವು ತಮೋಪ್ರಧಾನ ಆಗಿದೆಯೆಂದಮೇಲೆ ಶರೀರವೂ ತಮೋಪ್ರಧಾನವಾಗಿರುತ್ತದೆ. ಇದಂತೂ ಸೃಷ್ಟಿ ನಾಟಕವಾಗಿದೆ, ಇದರಲ್ಲಿ ಬ್ರಹ್ಮಾಂಡ ಮತ್ತು ಸೂಕ್ಷ್ಮವತನವೂ ಬಂದು ಬಿಡುತ್ತದೆ. ಸೃಷ್ಟಿಯ ಚಕ್ರವು ಇಲ್ಲಿಯೇ ತಿರುಗುತ್ತದೆ, ಸತ್ಯ-ತ್ರೇತಾಯುಗ ಇಲ್ಲಿಯೇ ಇದೆ. ಇದ್ಯಾವುದೂ ಸೂಕ್ಷ್ಮವತನ, ಮೂಲವತನದಲ್ಲಿ ನಡೆಯುವುದಿಲ್ಲ, ಇದು ಇಲ್ಲಿಯದೇ ಆಗಿದೆ. ಇದಕ್ಕೇ ಮನುಷ್ಯ ಸೃಷ್ಟಿಯೆಂದು ಹೇಳಲಾಗುತ್ತದೆ. ಅದು ಆತ್ಮಗಳ ನಿರಾಕಾರಿ ಪ್ರಪಂಚವಾಗಿದೆ, ಅದು ಬ್ರಹ್ಮಾ-ವಿಷ್ಣು-ಶಂಕರರ ಆಕಾರಿ ಪ್ರಪಂಚವಾಗಿದೆ. ಇದು ಸಾಕಾರಿ ಸೃಷ್ಟಿಯು ಎಷ್ಟು ದೊಡ್ಡದಾಗಿದೆ! ಸತ್ಯಯುಗದಲ್ಲಿ ಎಷ್ಟು ಚಿಕ್ಕ ಸೃಷ್ಟಿಯಿರುತ್ತದೆ, ಅಲ್ಲಿ ಇರುವುದೇ ಒಂದು ಧರ್ಮವಾಗಿದೆ. ಆದರೆ ಮನುಷ್ಯರು ಅಲ್ಲಿಯೂ ಸಹ ದೈತ್ಯರು ಎಲ್ಲರೂ ಇದ್ದರು ಎಂದು ಹೇಳುತ್ತಾರೆ. ಇದೆಲ್ಲವೂ ಅಸತ್ಯವಾಗಿದೆ.
ಹೊಸ ಪ್ರಪಂಚದ ಸ್ಥಾಪನೆ, ಹಳೆಯ ಪ್ರಪಂಚದ ವಿನಾಶವೆಂದು ನೀವು ತಿಳಿದಿದ್ದೀರಿ. ಎಲ್ಲರ ವಿನಾಶವಾಗುತ್ತದೆ ಮತ್ತು ಸತ್ಯಯುಗ, ಸ್ವರ್ಗದ ಸ್ಥಾಪನೆಯಾಗುತ್ತದೆ. ನೀವು ತಂದೆಯ ಜೊತೆ ಸಹಯೋಗ ಕೊಡುತ್ತಿದ್ದೀರಿ. ತಂದೆಯು ಬರುವುದೇ ಮಕ್ಕಳ ಸೇವೆ ಮಾಡುವುದಕ್ಕಾಗಿ. ಇವರು ಬೇಹದ್ದಿನ ತಂದೆಯಾಗಿದ್ದಾರೆ. ತಂದೆಯು ನೋಡುತ್ತಾರೆ - ಮಕ್ಕಳು ಎಷ್ಟೊಂದು ದುಃಖಿಗಳಾಗಿದ್ದಾರೆ ಅಂದಮೇಲೆ ಅವಶ್ಯವಾಗಿ ದಯೆ ಬರುತ್ತದೆಯಲ್ಲವೆ. ಅವರೇ ದಯಾಹೃದಯಿ ತಂದೆಯಾಗಿದ್ದಾರೆ. ಈಗಂತೂ ಇಡೀ ಪ್ರಪಂಚವು ಅಶಾಂತವಾಗಿದೆ. ಒಬ್ಬ ತಂದೆಯ ವಿನಃ ಯಾರೂ ಸಹ ಶಾಂತಿಯನ್ನು ಕೊಡಲು ಸಾಧ್ಯವಿಲ್ಲ, ಹಠಯೋಗಿಗಳಂತೂ ಅನೇಕರಿದ್ದಾರೆ. ಆತ್ಮವು ನಿರ್ಲೇಪವೆಂದು ಹೇಳಿ ಬಿಡುತ್ತಾರೆ, ಮನುಷ್ಯರಿಗೆ ಉಲ್ಟಾಮಾತುಗಳನ್ನು ಹೇಳುತ್ತಿರುತ್ತಾರೆ. ವಾಸ್ತವದಲ್ಲಿ ಆತ್ಮದ ಸ್ವಚ್ಛತೆ ಬೇಕಾಗಿದೆ. ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ ಆದರೆ ಇದು ಯಾರಿಗೂ ತಿಳಿದಿಲ್ಲ. ಇವರು ಪಾಪಾತ್ಮನೆಂದು ಹೇಳುತ್ತಾರೆ, ಬಹಳ ಪಾಪಗಳನ್ನು ಮಾಡುತ್ತಾರೆ. ಇವರು ಮಹಾತ್ಮ, ಪುಣ್ಯಾತ್ಮ ಎಂದೂ ಹೇಳುತ್ತಾರೆ. ಮಹಾನ್ ಪರಮಾತ್ಮನೆಂದು ಹೇಳುವುದಿಲ್ಲ. ಸನ್ಯಾಸಿಗಳಿಗೆ ಪವಿತ್ರ ಆತ್ಮರೆಂದು ಹೇಳುತ್ತಾರೆ ಏಕೆಂದರೆ ಅವರು ಸನ್ಯಾಸವನ್ನು ಮಾಡಿರುತ್ತಾರೆ. ಆತ್ಮವನ್ನು ಪವಿತ್ರವನ್ನಾಗಿ ಮಾಡುವವರು ತಂದೆಯ ವಿನಃ ಬೇರೆ ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಪತಿತ ಪ್ರಪಂಚದಲ್ಲಿ ಪಾವನ ಆತ್ಮರಿರಲು ಸಾಧ್ಯವಿಲ್ಲ. ಈಗ ಸಸಿ ಮಾಡಲಾಗುತ್ತಿದೆ. ನಿಧಾನ-ನಿಧಾನವಾಗಿ ವೃದ್ಧಿಯಾಗುತ್ತಾ ಹೋಗುತ್ತದೆ. ಈಗಂತೂ ಚಿಕ್ಕ-ಚಿಕ್ಕ ಮಠಪಂಥಗಳು, ಇತ್ಯಾದಿಗಳ ರೆಂಬೆ-ಕೊಂಬೆಗಳಿವೆ. ಅದರಲ್ಲಿ ಯಾವುದೇ ಫಲವಿದೆಯೇ! ಅನೇಕ ಪ್ರಕಾರದ ಮಂತ್ರವನ್ನು ಕೊಡುತ್ತಾರೆ, ವಿಧ-ವಿಧವಾದ ಮಂತ್ರಗಳನ್ನೂ ಕೊಡುತ್ತಾರೆ. ತಂದೆಯು ಕೊಡುವುದೂ ಸಹ ವಶೀಕರಣ ಮಂತ್ರವಾಗಿದೆ ಯಾವುದರಿಂದ ನೀವು ಪಂಚ ವಿಕಾರಗಳ ಮೇಲೆ ಜಯ ಗಳಿಸುತ್ತೀರಿ. ರಾಮ-ರಾಮ ಎಂಬ ಮಂತ್ರವನ್ನು ಜಪಿಸುತ್ತಾರೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ನನ್ನನ್ನು ನೆನಪು ಮಾಡಿದರೆ ನಿಮ್ಮ ಪಾಪ ನಾಶವಾಗುವುದು, ನೀವು ಪವಿತ್ರರಾಗಿ ಬಿಡುತ್ತೀರಿ. ನೆನಪು ಮಾಡುವುದನ್ನೇ ಯೋಗವೆಂದು ಹೇಳಲಾಗುತ್ತದೆ. ಭಾರತದ ಪ್ರಾಚೀನ ಯೋಗವು ಬಹಳ ಪ್ರಸಿದ್ಧವಾಗಿದೆ, ಈ ಯೋಗದಿಂದಲೇ ನೀವು ವಿಶ್ವದ ಮೇಲೆ ಜಯ ಗಳಿಸುತ್ತೀರಿ. ಭಾರತದ ರಾಜಯೋಗವು ಬಹಳ ಹೆಸರುವಾಸಿಯಾಗಿದೆ. ತಂದೆಯ ಹೊರತು ಇದನ್ನು ಯಾರೂ ಕಲಿಸಲು ಸಾಧ್ಯವಿಲ್ಲ. ನೀವು ಬ್ರಹ್ಮಾಕುಮಾರ- ಕುಮಾರಿಯರಾಗಿದ್ದೀರಿ. ಬಿ.ಕೆ. ಅಂದಮೇಲೆ ಇಲ್ಲಿಯೇ ಇರಬೇಕಲ್ಲವೆ. ಪ್ರಜಾಪಿತ ಬ್ರಹ್ಮನ ಮಕ್ಕಳೆಂದರೆ ಬ್ರಹ್ಮನ ಜೊತೆಯಲ್ಲಿಯೇ ಇರಬೇಕಾಗಿದೆ, ಬ್ರಾಹ್ಮಣ ಕುಲವು ಅವಶ್ಯವಾಗಿ ಬೇಕು. ಇದಕ್ಕೇ ಸರ್ವೋತ್ತಮ ಶ್ರೇಷ್ಠಾತಿ ಶ್ರೇಷ್ಠ ಬ್ರಾಹ್ಮಣ ಕುಲವೆಂದು ಹೇಳುತ್ತಾರೆ. ನೀವು ಬ್ರಾಹ್ಮಣ ಕುಲದವರಾಗಿದ್ದೀರಿ, ನಂತರ ಅಲ್ಲೋಲ-ಕಲ್ಲೋಲವಾಗಿ ಬಿಡುವುದು, ಇದು ಬಾಜೋಲಿ ಆಟವಾಗಿದೆ. ಶೂದ್ರರಿಂದ ಬ್ರಾಹ್ಮಣರಾಗಿ ನಂತರ ದೇವತೆ, ಕ್ಷತ್ರಿಯ.... ಆಗುತ್ತೀರಿ ಅಂದಮೇಲೆ ಮಧುರಾತಿ ಮಧುರ ಮಕ್ಕಳಿಗೆ ತಂದೆಯನ್ನು ನೆನಪು ಮಾಡಿ ಎಂದು ಸ್ವಲ್ಪವೇ ತಿಳಿಸುತ್ತಾರೆ. ತಂದೆಯು ನಮಗೆ 84 ಜನ್ಮಗಳ ರಹಸ್ಯವನ್ನು ತಿಳಿಸುತ್ತಾರೆ ಎಂದು ನಮ್ಮ ಬುದ್ಧಿಯಲ್ಲಿದೆ. 84 ಲಕ್ಷ ಅಥವಾ 84 ಜನ್ಮಗಳ ಲೆಕ್ಕವಂತೂ ಬೇಕಲ್ಲವೆ, ಇದು ಯಾರಿಗೂ ತಿಳಿದಿಲ್ಲ. 84 ಲಕ್ಷದ ಲೆಕ್ಕವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯರು 84 ಜನ್ಮಗಳ ಚಕ್ರವನ್ನು ಸುತ್ತುತ್ತಾರೆ. ಆತ್ಮಗಳು ಮೇಲಿನಿಂದ ಪಾತ್ರವನ್ನಭಿನಯಿಸಲು ಬರುತ್ತಾರೆ. ಸತ್ಯಯುಗದಿಂದ ಹಿಡಿದು ಕಲಿಯುಗದ ಅಂತ್ಯದವರೆಗೂ ಬರುತ್ತಲೇ ಇರುತ್ತಾರೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಲೇ ಇರುತ್ತಾರೆ. ಈ ಮಾತುಗಳು ಯಾವುದೇ ಮನುಷ್ಯರಿಗೆ ಗೊತ್ತಿಲ್ಲ ಆದರೆ ಒಬ್ಬ ತಂದೆಗೇ ತಿಳಿದಿರುತ್ತದೆ. ಮನುಷ್ಯರಿಗೆಂದೂ ಪರಮಪಿತ, ಗಾಡ್ಫಾದರ್ ಎಂದು ಕರೆಯಲು ಸಾಧ್ಯವಿಲ್ಲ. ಗಾಡ್ಫಾದರ್ ಎಂದು ಕರೆಯುವುದರಿಂದ ಶಿವ ತಂದೆಯ ಕಡೆ ಬುದ್ಧಿಯು ಹೋಗುತ್ತದೆ. ಜೀವಾತ್ಮರ ತಂದೆಯೂ ಇರಬೇಕಲ್ಲವೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ, ನಿರಾಕಾರ ತಂದೆಯ ಹೆಸರಾಗಿದೆ - ಶಿವ. ನಿಮ್ಮದು ಒಂದೇ ಹೆಸರೂ ಆತ್ಮ ಎಂದಾಗಿದೆ ನಂತರ ಶರೀರದಿಂದ ಭಿನ್ನ-ಭಿನ್ನ ನಾಮಗಳಲ್ಲಿ ಬರುತ್ತೀರಿ. ಪರಮಪಿತ ಪರಮಾತ್ಮನು ಶರೀರದಲ್ಲಿ ಬಂದು ಜ್ಞಾನವನ್ನು ತಿಳಿಸುತ್ತಾರೆ. ಶರೀರವಿಲ್ಲದೆ ತಿಳಿಸಲು ಆಗುತ್ತದೆಯೇ? ಅಂದಮೇಲೆ ಇವರಿಗಂತೂ ತಮ್ಮದೇ ಆದ ಹೆಸರಿದೆ. ನನಗೆ ಶರೀರದ ಯಾವುದೇ ಹೆಸರಿಲ್ಲ, ನಾನು ಪುನರ್ಜನ್ಮದಲ್ಲಿ ಬರುವುದಿಲ್ಲವೆಂದು ತಂದೆಯು ತಿಳಿಸುತ್ತಾರೆ. ನಾನು ಇವರಲ್ಲಿ (ಬ್ರಹ್ಮಾ) ಪ್ರವೇಶ ಮಾಡುತ್ತೇನೆಂದು ಇವರಿಗೂ ತಿಳಿದಿರುವುದಿಲ್ಲ, ಯಾವುದೇ ತಿಥಿ-ತಾರೀಖು ಇರುವುದಿಲ್ಲ. ಕಲ್ಪದ ಅಂತ್ಯ ಅರ್ಥಾತ್ ಅಂಧಕಾರದಲ್ಲಿ ಬರುತ್ತೇನೆ ಅಂದರೆ ಈಗ ಅಂಧಕಾರವಾಗಿದೆ. ಇದಂತೂ ಪತಿತ ಪ್ರಪಂಚವಾಗಿದೆ, ನಾನು ಪಾವನ ಪ್ರಪಂಚವನ್ನು ಅರ್ಥಾತ್ ದಿನವನ್ನಾಗಿ ಮಾಡಲು ಬರುತ್ತೇನೆ. ತಂದೆಯು ಯಾವಾಗ ಪ್ರವೇಶ ಮಾಡುತ್ತಾರೆಂದು ಯಾರಿಗೂ ತಿಳಿದಿಲ್ಲ. ವಿನಾಶದ ಸಾಕ್ಷಾತ್ಕಾರವಾಯಿತು, ಬಹಳ ಮಂದಿ ಧ್ಯಾನದಲ್ಲಿ ಹೋಗುತ್ತಿದ್ದರು ಆದರೂ ಸಹ ಯಾರಿಗೂ ತಿಥಿ-ತಾರೀಖು, ವೇಳೆಯನ್ನು ಹೇಳಲು ಸಾಧ್ಯವಿಲ್ಲ. ಕೃಷ್ಣನನ್ನು ಪೂಜೆ ಮಾಡುತ್ತಾರೆ, ಅವನ ಜನ್ಮವನ್ನೂ ರಾತ್ರಿಯಲ್ಲಿಯೇ ತೋರಿಸುತ್ತಾರೆ. ಯಾವ ಸಮಯ, ತಿಥಿ-ತಾರೀಖು ಎಲ್ಲವನ್ನೂ ತೋರಿಸುತ್ತಾರೆ. ನಾನಂತೂ ನಿರಾಕಾರನಾಗಿದ್ದೇನೆ. ಮನುಷ್ಯರು ಹೇಗೆ ಜನ್ಮ ಪಡೆಯುವರೋ ಹಾಗೆಯೇ ನನ್ನ ಜನ್ಮವಾಗಲು ಸಾಧ್ಯವೇ! ನನ್ನ ಜನ್ಮವಂತೂ ದಿವ್ಯ-ಅಲೌಕಿಕ ಜನ್ಮವಾಗಿದೆ. ನಾನು ಇವರಲ್ಲಿ ಪ್ರವೇಶ ಮಾಡಿ ನಂತರ ಹೊರಟು ಹೋಗುತ್ತೇನೆ. ಎತ್ತಿನ ಮೇಲೆ ಇಡೀ ದಿನ ಸವಾರಿ ಮಾಡುತ್ತಾರೆಯೇ! ನನ್ನನ್ನು ಯಾವ ಸಮಯದಲ್ಲಿ ಯಾವುದೇ ಮಗು ನೆನಪು ಮಾಡಿದರೆ ನಾನು ಹಾಜರಾಗುತ್ತೇನೆ. ತಂದೆಯು ಬಂದು ಮಕ್ಕಳ ಮಿಲನ ಮಾಡುತ್ತಾರೆ ಮತ್ತು ಗುಡ್ ಮಾರ್ನಿಂಗ್ ಹೇಳುತ್ತಾರೆ. ಹೇಗೆ ಮನುಷ್ಯರು ಒಬ್ಬರನ್ನೊಬ್ಬರು ಮಿಲನ ಮಾಡುವಾಗ ರಾಂ-ರಾಂ ಅಥವಾ ನಮಸ್ತೆ ಹೇಳುತ್ತಾರೆ. ಇವರು ಆತ್ಮೀಯ ಬೇಹದ್ದಿನ ತಂದೆಯಾಗಿದ್ದಾರೆ. ನಾನು ನೀವೆಲ್ಲಾ ಮಕ್ಕಳ ತಂದೆಯಾಗಿದ್ದೇನೆ ಅಂದಮೇಲೆ ಶಿವ ತಂದೆಯ ಸಂತಾನರೆಲ್ಲರೂ ಸಹೋದರ-ಸಹೋದರರಾಗಿದ್ದೀರಿ ಎಂಬ ಖುಷಿಯ ನಶೆಯೇರಿರಬೇಕು. ಬೇಹದ್ದಿನ ತಂದೆಯು ಬೇಹದ್ದಿನ ಆಸ್ತಿಯನ್ನು ಕೊಡಲು ಬಂದಿದ್ದಾರೆ. ಮಕ್ಕಳನ್ನು ನೋಡಿ, ತಂದೆಗೆ ಎಷ್ಟೊಂದು ಮಕ್ಕಳಿದ್ದಾರೆಂದು ಖುಷಿಯಾಗುತ್ತದೆ. ಬಾಬಾ, ನಾವು ಮಕ್ಕಳನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ, ರಾಜ್ಯಭಾಗ್ಯವನ್ನು ಕೊಡುತ್ತಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ನಮ್ಮ ಭಾರತ ದೇಶವೆಂದು ಹೇಗೆ ಭಾರತವಾಸಿಗಳು ಹೇಳುತ್ತಾರೆಯೋ ಹಾಗೆಯೇ ಪ್ರಜೆಗಳೂ ಸಹ ನಮ್ಮ ರಾಜ್ಯವೆಂದು ಹೇಳುತ್ತಾರೆ. ರಾಜ-ಪ್ರಜೆ ಇಬ್ಬರೂ ಸಹ ನಮ್ಮ ದೇಶವೆಂದು ಹೇಳುತ್ತಾರೆ. ನೀವು ಮಕ್ಕಳು ನರಕವಾಸಿಗಳಾಗಿದ್ದೀರಿ ನಂತರ ಸ್ವರ್ಗವಾಸಿಗಳಾಗುತ್ತೀರಿ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ಮತ್ತ್ಯಾವುದೇ ತೊಂದರೆ ಕೊಡುವುದಿಲ್ಲ. ಗೃಹಸ್ಥ ವ್ಯವಹಾರದಲ್ಲಿಯೇ ಇರಬೇಕಾಗಿದೆ, ಇಲ್ಲಿ ಬಂದು ಇರಬೇಕಾಗಿಲ್ಲ. ಇಲ್ಲಿಗೆ ಎಲ್ಲರೂ ಓಡಿ ಬಂದರೆ ಎಲ್ಲರನ್ನೂ ತಂದೆಯು ಎಲ್ಲಿಡಲು ಸಾಧ್ಯ! ಇಷ್ಟೊಂದು ಮಂದಿ ಮಕ್ಕಳನ್ನು ಒಟ್ಟಿಗೆ ಹೇಗೆ ಇಡಲು ಸಾಧ್ಯ! ಎಲ್ಲಾ ಸೇವಾಕೇಂದ್ರದ ಮಕ್ಕಳು ಒಮ್ಮೆ ಒಟ್ಟಾಗಿ ಸೇರಲು ಹೇಗೆ ಸಾಧ್ಯ, ಉಳಿದುಕೊಳ್ಳಲು ಎಲ್ಲಿ ಸಾಧ್ಯ, ಕಷ್ಟವಿದೆಯಲ್ಲವೆ. ದಿನ-ಪ್ರತಿದಿನ ವೃದ್ಧಿಯಾಗುತ್ತಿರುತ್ತದೆ, ಇದಕ್ಕೂ ಸಹ ಯುಕ್ತಿಯನ್ನು ರಚಿಸಬೇಕಾಗಿದೆ. ಅಕ್ಕಪಕ್ಕದ ಮನೆಗಳನ್ನೂ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಎಷ್ಟಾಗುತ್ತದೆಯೆಂದು ಮನೆಯವರನ್ನು ಕೇಳಿರಿ. ಸಮಯದಲ್ಲಂತೂ ತೆಗೆದುಕೊಳ್ಳಲೇಬೇಕಾಗುತ್ತದೆ, ಹಣದ ಮಾತಂತೂ ಏನೂ ಇಲ್ಲ. ಸಮಯವು ಬಹಳ ನಾಜೂಕಾಗುತ್ತಾ ಇದೆ. ತಂದೆ ಮತ್ತು ಮಕ್ಕಳು ಇಬ್ಬರೂ ಅವಿನಾಶಿಯಾಗಿದ್ದಾರೆ, ಅವಿನಾಶಿ ಖಜಾನೆಯನ್ನು ಕೊಡುತ್ತಿದ್ದಾರೆ ಅಂದಾಗ ಬಹಳಷ್ಟು ಮಂದಿ ಮಕ್ಕಳು ಬರಬೇಕಾಗಿದೆ. ತಂದೆಯು ವಿಚಾರ ಮಾಡುತ್ತಾರೆ – ಇಷ್ಟೊಂದು ಮಂದಿ ಮಕ್ಕಳು ಬಂದರೆ ಎಲ್ಲಿ ಇರುವರು? ತಂದೆಯು ಹೇಳುತ್ತಾರೆ - “ಕಾದು ನೋಡು” ನೀನು ಮನ್ಮನಾಭವ ಆಗಿ ಓದುತ್ತಲೇ ಇರಬೇಕಾಗಿದೆ.
ನೀವು ಮಕ್ಕಳ ಬುದ್ಧಿಯಲ್ಲಿ ಈ ವಿಚಾರ ಬರಬೇಕು - ನಾವು ಕರ್ಮಾತೀತ ಸ್ಥಿತಿಯಲ್ಲಿ ಹೋಗಿ ಸತೋಪ್ರಧಾನರಾಗಬೇಕಾಗಿದೆ. ನೆನಪಿನಿಂದಲೇ ಪಾವನರಾಗುತ್ತೀರಿ. ತಂದೆಯಂತೂ ಸಹಜವಾದ ಮಾತುಗಳನ್ನು ತಿಳಿಸುತ್ತಾರೆ. ಅತಿ ಸಹಜವಾದ ಮಾತು, ಕೇವಲ ತಂದೆಯನ್ನು ನೆನಪು ಮಾಡುವುದಾಗಿದೆ. ನೋಡಿ, ಕರುವಿಗೆ ತನ್ನ ತಾಯಿಯ ನೆನಪು ಬಂದರೆ ಹೇಗೆ ಕೂಗುತ್ತದೆ! ಅದಂತೂ ಪ್ರಾಣಿಯಾಗಿದೆ, ನೀವು ಮಕ್ಕಳೂ ಸಹ ಬೇರಾಡಿದರಲ್ಲವೇ? ಮುಂದೆ ಬಹಳ ಕಿರುಚಾಡುತ್ತಾರೆ ಮತ್ತು ನೆನಪೂ ಮಾಡುತ್ತಾರೆ. ಈಗ ತಂದೆಯು ಬಂದಿದ್ದಾರೆ, ವಿನಾಶವಾಗಲೇಬೇಕೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಪ್ರಾಕೃತಿಕ ವಿಕೋಪಗಳಾಗುತ್ತವೆ, ತಮ್ಮ-ತಮ್ಮಲ್ಲಿಯೇ ಜಗಳವಾಡುತ್ತಾರೆ, ಎಷ್ಟೊಂದು ಹಣವನ್ನು ಖರ್ಚು ಮಾಡಿ ಬಾಂಬುಗಳನ್ನು ತಯಾರಿಸುತ್ತಾರೆ ಅಂದಾಗ ಎಷ್ಟೊಂದು ಹಣ ವ್ಯರ್ಥವಾಗುತ್ತದೆ! ಖರ್ಚಂತೂ ಆಗುತ್ತದೆಯಲ್ಲವೆ. ಇಷ್ಟೊಂದು ಖರ್ಚನ್ನು ಎಲ್ಲಿಂದ ತರುತ್ತಾರೆ? ಮೃತ್ಯುವಿಗೆ ಭಯ ಪಡುತ್ತಾರೆ ಆದರೆ ಬಾಂಬುಗಳು ತಯಾರಿಸುವುದನ್ನು ಬಿಡುವುದಿಲ್ಲ. ಬಾಂಬುಗಳಿಂದಲೇ ಯುದ್ಧಗಳು ನಡೆಯುತ್ತವೆ. ಈಗಂತೂ ಬಾಂಬುಗಳನ್ನು ಹೀಗೆ ಮಾಡುತ್ತಾರೆ, ಒಂದು ಬಾರಿ ಎಸೆದರೆ ಮನುಷ್ಯರೆಲ್ಲರೂ ಸಮಾಪ್ತಿಯಾಗುತ್ತಾರೆ. ಮೊದಲು ವಸ್ತು ತಯಾರು ಮಾಡುವುದರಲ್ಲಿ ಸಮಯ ಹಿಡಿಸುತ್ತದೆ ನಂತರ ನಿಮಿಷದಲ್ಲಿ ಮಾಡಿ ಬಿಡುತ್ತಾರೆ, ಬೇಗ-ಬೇಗನೆ ಮಾಡಿ ಬಿಡುತ್ತಾರೆ. ಕೆಲವು ಬಾಂಬುಗಳನ್ನಷ್ಟೇ ಮಾಡುತ್ತಾರೆಯೇ! ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ಹಳೆಯ ಪ್ರಪಂಚದ ವಿನಾಶವಾಗಲೇಬೇಕು. ಈಗ ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.
ಗೀತೆಯು ನೀವು ಭಾರತವಾಸಿಗಳ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಬಾಕಿ ಎಲ್ಲವೂ ಚಿಕ್ಕ-ಚಿಕ್ಕದಾಗಿದೆ, ಅವುಗಳ ಗಾಯನವಿಲ್ಲ. ಬ್ರಾಹ್ಮಣ ಧರ್ಮವು ಎಲ್ಲಾ ಧರ್ಮಕ್ಕಿಂತ ಶ್ರೇಷ್ಠವಾಗಿದೆ. ಕಥೆಗಳನ್ನು ಹೇಳುವುದೇ ಬ್ರಾಹ್ಮಣರ ಕೆಲಸವಾಗಿದೆ. ನಾವು ಬ್ರಹ್ಮಾಕುಮಾರ-ಕುಮಾರಿಯರು ಬ್ರಹ್ಮನ ಮಕ್ಕಳಾಗಿದ್ದೇವೆ, ನಮಗೆ ತಾತನಿಂದ ಆಸ್ತಿಯು ಸಿಗುತ್ತಿದೆ ಎಂದು ಹೇಳಬಹುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಡ್ರಾಮಾದ ಪ್ರತಿಯೊಂದು ರಹಸ್ಯವನ್ನು ತಿಳಿದು ಯಾವುದೇ ಮಾತಿನ ಚಿಂತೆ ಮಾಡಬಾರದು. ವಿದ್ಯೆಯನ್ನು ಓದುತ್ತಲೇ ಇರಬೇಕು. ಮನ್ಮನಾಭವ ಆಗಿ ಕರ್ಮಾತೀತರಾಗುವ ವಿಚಾರ ಮಾಡಬೇಕಾಗಿದೆ. ಸ್ವಯಂನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ.
2. ನಾವು ಆತ್ಮರು ಶಿವ ತಂದೆಯ ಸಂತಾನರಾಗಿದ್ದೇವೆ, ಪರಸ್ಪರ ಸಹೋದರ-ಸಹೋದರರಾಗಿದ್ದೇವೆ, ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತಿದ್ದೇವೆ ಎಂಬ ಖುಷಿಯಲ್ಲಿಯೇ ಇರಬೇಕಾಗಿದೆ.
ಓಂ ಶಾಂತಿ. ಇದು ಯಾರ ಮಹಿಮೆಯನ್ನು ಕೇಳಿದಿರಿ. ಶ್ರೇಷ್ಠಾತಿ ಶ್ರೇಷ್ಠ ಭಗವಂತನೇ ಆಗಿದ್ದಾರೆ, ಭಗವಂತನೇ ಎಲ್ಲರ ತಂದೆಯಾಗಿದ್ದಾರೆಂದು ಗಾಯನ ಮಾಡುತ್ತಾರೆ. ಹೇಗೆ ಲೌಕಿಕ ತಂದೆಯು ತನ್ನ ರಚನೆಯ ರಚಯಿತನಾಗುತ್ತಾರೆಯೋ ಹಾಗೆಯೇ ತಂದೆಯೇ ಈ ರಚನೆಯ ರಚಯಿತನಾಗಿದ್ದಾರೆ. ಮೊದಲು ಕನ್ಯೆಯನ್ನು ತನ್ನ ಸ್ತ್ರೀಯನ್ನಾಗಿ ಮಾಡಿಕೊಂಡು ಅವರಿಂದ ತನ್ನ ರಚನೆಯನ್ನು ರಚಿಸುತ್ತಾರೆ. 5-7 ಮಂದಿ ಮಕ್ಕಳಿಗೆ ಜನ್ಮ ಕೊಡುತ್ತಾರೆ. ಅವರನ್ನು ರಚನೆಯೆಂದು ಕರೆಯುತ್ತಾರೆ. ತಂದೆಯು ರಚಯಿತನಾಗಿದ್ದಾನೆ, ಅವರು ಹದ್ದಿನ ರಚಯಿತನಾಗಿದ್ದಾರೆ. ರಚನೆಗೆ ರಚಯಿತ ತಂದೆಯಿಂದ ಆಸ್ತಿಯು ಸಿಗುತ್ತದೆಯೆಂದು ನೀವು ತಿಳಿದುಕೊಂಡಿದ್ದೀರಿ. ಒಬ್ಬರು ಲೌಕಿಕತಂದೆ, ಇನ್ನೊಬ್ಬರು ಪಾರಲೌಕಿಕ ತಂದೆ. ಮನುಷ್ಯರಿಗೆ ಇಬ್ಬರು ತಂದೆಯರಿರುತ್ತಾರೆ. ಜ್ಞಾನ ಮತ್ತು ಭಕ್ತಿಯು ಭಿನ್ನ-ಭಿನ್ನವಾಗಿದೆ, ನಂತರ ವೈರಾಗ್ಯ ಎಂದು ಮಕ್ಕಳಿಗೆ ತಿಳಿಸಲಾಗುತ್ತದೆ. ಈ ಸಮಯದಲ್ಲಿ ನೀವು ಸಂಗಮದಲ್ಲಿ ಕುಳಿತಿದ್ದೀರಿ. ಬಾಕಿ ಎಲ್ಲರೂ ಕಲಿಯುಗದಲ್ಲಿ ಕುಳಿತಿದ್ದಾರೆ. ಎಲ್ಲಾ ಮಕ್ಕಳೇ ಆಗಿದ್ದಾರೆ ಆದರೆ ನೀವು ಎಲ್ಲಾ ರಚನೆಯ ರಚಯಿತನಾದ ಬೇಹದ್ದಿನ ತಂದೆಯನ್ನು ತಿಳಿದುಕೊಂಡಿದ್ದೀರಿ. ಲೌಕಿಕ ತಂದೆಯಿದ್ದರೂ ಸಹ ಆ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಲೌಕಿಕ ತಂದೆಯಿದ್ದರೂ ಪಾರಲೌಕಿಕ ತಂದೆಯನ್ನು ನೆನಪು ಮಾಡುವುದಿಲ್ಲ ಏಕೆಂದರೆ ಅದು ಸುಖಧಾಮವಾಗಿದೆ. ಆ ಪಾರಲೌಕಿಕ ತಂದೆಯನ್ನು ದುಃಖದಲ್ಲಿ ನೆನಪು ಮಾಡುತ್ತಾರೆ. ಇಲ್ಲಿ ಮನುಷ್ಯರಿಗೆ ಓದಿಸಿ ಬುದ್ಧಿವಂತರನ್ನಾಗಿ ಮಾಡಲಾಗುತ್ತದೆ. ಭಕ್ತಿಮಾರ್ಗದಲ್ಲಿ ಮನುಷ್ಯರು ತಂದೆಯನ್ನು ತಿಳಿದುಕೊಂಡಿಲ್ಲ. ಪರಮಪಿತ ಪರಮಾತ್ಮ, ಹೇ ಗಾಡ್ಫಾದರ್, ಹೇ ದುಃಖಹರ್ತ-ಸುಖಕರ್ತ ಎಂದು ಹೇಳುತ್ತಾರೆ. ನಂತರ ಸರ್ವವ್ಯಾಪಿ ಎಂದು ಹೇಳಿ ಬಿಡುತ್ತಾರೆ. ನಂತರ ಕಲ್ಲು, ಕಣ-ಕಣದಲ್ಲಿ, ನಾಯಿ, ಬೆಕ್ಕು ಎಲ್ಲದರಲ್ಲಿಯೂ ಇದ್ದಾರೆಂದು ಹೇಳುತ್ತಾರೆ. ಪರಮಾತ್ಮ ತಂದೆಯನ್ನೂ ಸಹ ನಿಂದನೆ ಮಾಡಲು ಆರಂಭಿಸುತ್ತಾರೆ. ನೀವು ತಂದೆಯ ಮಕ್ಕಳಾಗಿದ್ದೀರಿ, ಆದ್ದರಿಂದ ನೀವು ಆಸ್ತಿಕರಾಗಿದ್ದೀರಿ. ತಂದೆಯ ಜೊತೆ ನಿಮ್ಮದು ಪ್ರೀತಿ ಬುದ್ಧಿಯಿದೆ, ಬಾಕಿ ಎಲ್ಲರದೂ ವಿಪರೀತ ಬುದ್ಧಿಯಿದೆ. ಈಗ ನೀವು ತಿಳಿದುಕೊಂಡಿದ್ದೀರಿ - ಮಹಾಭಾರತ ಯುದ್ಧವು ಎದುರಿಗೆ ನಿಂತಿದೆ, ಹಳೆಯ ಪ್ರಪಂಚದ ವಿನಾಶ ಅರ್ಥಾತ್ ಪ್ರತೀ 5000 ವರ್ಷಗಳ ನಂತರ ಕಲಿಯುಗದ ಪತಿತಪ್ರಪಂಚವು ಸಂಪೂರ್ಣವಾಗಿ ನಂತರ ಸತ್ಯಯುಗ, ಪಾವನ ಪ್ರಪಂಚದ ಸ್ಥಾಪನೆಯು ತಂದೆಯ ಮೂಲಕ ಆಗುತ್ತದೆ. ಆದ್ದರಿಂದಲೇ ಅವರನ್ನು ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ - ಹೇ ಅಂಬಿಗ, ನಮ್ಮನ್ನು ಈ ವಿಷಯ ಸಾಗರದಿಂದ ತೆಗೆದು ಕ್ಷೀರ ಸಾಗರಕ್ಕೆ ಕರೆದುಕೊಂಡು ಹೋಗು. ಗಾಂಧೀಜಿಯೂ ಸಹ ಪತಿತ-ಪಾವನ ಸೀತಾರಾಂ.... ಎಂದು ಹಾಡುತ್ತಿದ್ದರು. ಹೇ ರಾಮ ಎಲ್ಲಾ ಸೀತೆಯರನ್ನು ಪಾವನ ಮಾಡು. ನೀವೆಲ್ಲರೂ ಸೀತೆಯರು, ಭಕ್ತಿನಿಯರಾಗಿದ್ದೀರಿ. ಅವರೇ ಭಗವಂತನಾಗಿದ್ದಾರೆ, ಅವರನ್ನೇ ಎಲ್ಲರೂ ಕರೆಯುತ್ತಾರೆ, ನಿಮ್ಮನ್ನು ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆ. ಅವರು ನಿಮಗೆ ಎಂದೂ ಸಹ ಮೋಸ ಮಾಡುವುದಿಲ್ಲ. ತೀರ್ಥ ಸ್ಥಾನಗಳಿಗೆ, ಕುಂಭ ಮೇಳಗಳಿಗೆ ಹೋಗಿ ಎಂದು ಹೇಳುವುದಿಲ್ಲ. ಈ ನದಿಗಳ್ಯಾವುದೂ ಪತಿತ-ಪಾವನಿ ಅಲ್ಲ. ಪತಿತ-ಪಾವನ ಒಬ್ಬ ತಂದೆಯೇ ಜ್ಞಾನ ಸಾಗರನಾಗಿದ್ದಾರೆ. ಸಾಗರ ಅಥವಾ ನದಿಗಳನ್ನು ಯಾರೂ ನೆನಪು ಮಾಡುವುದಿಲ್ಲ. ಹೇ ಪತಿತ-ಪಾವನ, ನಮ್ಮನ್ನು ಪಾವನ ಮಾಡು ಎಂದು ತಂದೆಯನ್ನೇ ಕರೆಯುತ್ತಾರೆ. ಉಳಿದಂತೆ ನೀರಿನ ನದಿಗಳಂತೂ ಪ್ರಪಂಚದಲ್ಲಿ ಅನೇಕ ಇವೆ, ಅವು ಪತಿತ-ಪಾವನಿ ಆಗಲು ಸಾಧ್ಯವೇ! ಪತಿತ-ಪಾವನ ಎಂದು ಒಬ್ಬ ತಂದೆಗೇ ಹೇಳಲಾಗುತ್ತದೆ, ಅವರು ಯಾವಾಗ ಬರುತ್ತಾರೆಯೋ ಆಗ ಪಾವನರನ್ನಾಗಿ ಮಾಡುತ್ತಾರೆ. ಭಾರತದ ಮಹಿಮೆಯು ಬಹಳ ಭಾರಿಯಾಗಿದೆ. ಭಾರತವು ಎಲ್ಲಾ ಧರ್ಮಗಳ ತೀರ್ಥ ಸ್ಥಾನವಾಗಿದೆ, ಶಿವ ಜಯಂತಿಯನ್ನೂ ಸಹ ಇಲ್ಲಿಯೇ ಗಾಯನ ಮಾಡಲಾಗುತ್ತದೆ. ಸತ್ಯಯುಗವಂತೂ ಪಾವನ ಪ್ರಪಂಚ, ಅಲ್ಲಿ ದೇವಿ-ದೇವತೆಗಳಿರುತ್ತಾರೆ. ದೇವತೆಗಳ ಮಹಿಮೆಯನ್ನು ಗಾಯನ ಮಾಡುತ್ತಾರೆ - ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ.... ಚಂದ್ರವಂಶಿಯರನ್ನು 14 ಕಲಾ ಸಂಪೂರ್ಣರೆಂದು ಹೇಳುತ್ತಾರೆ. ನಂತರ ಏಣಿಯಿಂದ ಇಳಿಯುತ್ತಾರೆ. ತಂದೆಯು ಬಂದು ಸೆಕೆಂಡಿನಲ್ಲಿ ಏಣಿಯನ್ನು ಹತ್ತಿಸಿ ಶಾಂತಿಧಾಮ, ಸುಖಧಾಮಕ್ಕೆ ಕರೆದೊಯ್ಯುತ್ತಾರೆ. ನಂತರ 84ರ ಚಕ್ರವನ್ನು ಸುತ್ತಿ ಏಣಿಯನ್ನಿಳಿಯುತ್ತಾರೆ. 84 ಜನ್ಮಗಳಲ್ಲಿ ಯಾರಾದರೂ ಅವಶ್ಯವಾಗಿ ತೆಗೆದುಕೊಂಡಿರಬೇಕಲ್ಲವೆ. ಮುಖ್ಯವಾದುದು ಸರ್ವಶಾಸ್ತ್ರಮಯಿ ಶಿರೋಮಣಿ ಗೀತೆ ಶ್ರೀಮತ್ಭಗವತ್ ಅರ್ಥಾತ್ ಭಗವಂತನು ಉಚ್ಛರಿಸಿರುವುದಾಗಿದೆ. ಆದರೆ ಭಗವಂತನು ಯಾರಿಗೆ ಹೇಳುತ್ತಾರೆಂದು ಈ ಪತಿತ ಮನುಷ್ಯರು ತಿಳಿದುಕೊಂಡಿಲ್ಲ. ಪತಿತ-ಪಾವನ ಎಲ್ಲರ ಸದ್ಗತಿದಾತ ಒಬ್ಬ ನಿರಾಕಾರ ಶಿವನಾಗಿದ್ದಾರೆ. ಆದರೆ ಅವರು ಯಾವಾಗ ಬಂದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಾವೇ ಬಂದು ತಮ್ಮ ಪರಿಚಯ ಕೊಡುತ್ತಾರೆ. ಈಗ ನೋಡಿ, ಈ ಗಂಡು ಮಕ್ಕಳು - ಹೆಣ್ಣು ಮಕ್ಕಳು ಇಬ್ಬರೂ ಬಾಬಾ ಎನ್ನುತ್ತಾರೆ. ಗಾಯನವೂ ಇದೆ - ನೀವೇ ತಂದೆ, ನೀವೇ ತಾಯಿ.... ನಿಮ್ಮ ಈ ರಾಜಯೋಗವನ್ನು ಕಲಿಯುವುದರಿಂದ ಅಪಾರವಾದ ಸುಖ ಸಿಗುತ್ತದೆ. ಬೇಹದ್ದಿನ ತಂದೆಯಿಂದ ಸ್ವರ್ಗದ 21 ಜನ್ಮಗಳ ಆಸ್ತಿಯನ್ನು ಪಡೆಯುವುದಕ್ಕೆ ನೀವು ಇಲ್ಲಿ ಬರುತ್ತೀರಿ. ಶಿವ ಜಯಂತಿಯನ್ನು ಭಾರತದಲ್ಲಿಯೇ ಆಚರಿಸುತ್ತಾರೆ. ರಾವಣನನ್ನೂ ಭಾರತದಲ್ಲಿಯೇ ತೋರಿಸುತ್ತಾರೆ ಆದರೆ ಅರ್ಥವನ್ನಂತೂ ಸ್ವಲ್ಪವೂ ತಿಳಿದಿಲ್ಲ. ಶಿವ ತಂದೆಯು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ, ಇದನ್ನು ಒಬ್ಬರೂ ತಿಳಿದಿಲ್ಲ ಕೇವಲ ಶಿವನ ಪೂಜೆಯನ್ನು ಮಾಡುತ್ತಾರೆ. ಯಾವಾಗ ಇಡೀ ವೃಕ್ಷವು ತಮೋಪ್ರಧಾನವಾಗುವುದೊ ಆಗ ತಂದೆಯು ಬರುತ್ತಾರೆ. ಹೊಸ ಪ್ರಪಂಚದಲ್ಲಿ ಭಾರತವು ಸ್ವರ್ಗವಾಗಿತ್ತು, ಭಾರತದಲ್ಲಿಯೇ ಸತ್ಯಯುಗವಿತ್ತು, ಭಾರತದಲ್ಲಿಯೇ ಈಗ ಕಲಿಯುಗವಿದೆ. ಮೊಟ್ಟ ಮೊದಲು ನೀವೇ ಸ್ವರ್ಗದ ಮಾಲೀಕರಾಗಿದ್ದಿರಿ ಎಂದು ತಂದೆಯು ತಿಳಿಸುತ್ತಾರೆ. ಈಗ ನೀವು 84 ಜನ್ಮಗಳನ್ನನುಭವಿಸಿ ನರಕವಾಸಿಗಳಾಗಿದ್ದೀರಿ. ಈಗ ನಿಮಗೆ ನಾನು ರಾಜಯೋಗವನ್ನು ಕಲಿಸಿ ಮನುಷ್ಯರಿಂದ ದೇವತೆ, ಪತಿತರಿಂದ ಪಾವನರನ್ನಾಗಿ ಮಾಡುತ್ತೇನೆ. ಭಕ್ತಿ ಅರ್ಥಾತ್ ಬ್ರಹ್ಮನ ರಾತ್ರಿಯಾಗಿದೆ, ಜ್ಞಾನ ಅರ್ಥಾತ್ ಬ್ರಹ್ಮನ ದಿನವಾಗಿದೆ. ನೀವು ಬ್ರಹ್ಮಾಕುಮಾರ-ಕುಮಾರಿಯರು ದಿನದಲ್ಲಿ ಹೋಗುತ್ತೀರಿ. ಈ ಹಳೆಯ ಪ್ರಪಂಚಕ್ಕೆ ಈಗ ಬೆಂಕಿ ಹತ್ತಿಕೊಳ್ಳಲಿದೆ, ಅವಶ್ಯವಾಗಿ ಮಹಾಭಾರತ ಯುದ್ಧ ನಡೆಯಲಿದೆ. ಅವಶ್ಯವಾಗಿ ಮಹಾಭಾರತ ಯುದ್ಧದ ನಂತರ ಭಾರತವು ಸ್ವರ್ಗವಾಗುವುದು. ಅನೇಕ ಧರ್ಮವು ವಿನಾಶವಾಗಿ ಒಂದು ಧರ್ಮ ಸ್ಥಾಪನೆಯಾಗುತ್ತದೆ. ನೀವು ಮಕ್ಕಳು ತಂದೆಗೆ ಸಹಯೋಗಿಗಳಾಗಿ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತಿದ್ದೀರಿ. ನೀವು ಸ್ವರ್ಗದ ಮಾಲೀಕರಾಗಲು ಯೋಗ್ಯರಾದ ನಂತರ ವಿನಾಶವು ಪ್ರಾರಂಭವಾಗುತ್ತದೆ. ಇದು ಶಿವ ತಂದೆಯ ಜ್ಞಾನಯ ಜ್ಞವಾಗಿದೆ. ನಂತರ ಇದನ್ನು ಶಿವನೆಂದಾದರೂ ಹೇಳಿ ಅಥವಾ ರುದ್ರನೆಂದಾದರೂ ಹೇಳಿ, ಕೃಷ್ಣ ಜ್ಞಾನ ಯಜ್ಞವೆಂದು ಎಂದೂ ಹೇಳಲಾಗುವುದಿಲ್ಲ. ಸತ್ಯಯುಗ-ತ್ರೇತಾದಲ್ಲಿ ಯಜ್ಞಗಳಿರುವುದಿಲ್ಲ. ಉಪದ್ರವಗಳು ಆರಂಭವಾದಾಗ ಯಜ್ಞಗಳನ್ನು ರಚಿಸುತ್ತಾರೆ. ಧಾನ್ಯಗಳು ಸಿಗದಿದ್ದಾಗ, ಯುದ್ಧ ಪ್ರಾರಂಭವಾಯಿತೆಂದರೆ ಯಜ್ಞಗಳನ್ನು ಶಾಂತಿಗಾಗಿ ರಚಿಸುತ್ತಾರೆ. ವಿನಾಶವಾಗದ ಹೊರತು ಭಾರತವು ಸ್ವರ್ಗವಾಗುವುದಿಲ್ಲವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಭಾರತ ಮಾತೆ ಶಿವಶಕ್ತಿ ಸೇನೆಯ ಗಾಯನವನ್ನು ಮಾಡಿದ್ದಾರೆ. ಪವಿತ್ರರಿಗೇ ವಂದನೆಯನ್ನು ಮಾಡಲಾಗುತ್ತದೆ. ನೀವು ಮಾತೆಯರಿಗೆ ವಂದೇ ಮಾತರಂ ಎಂದು ಹೇಳಲಾಗುತ್ತದೆ ಏಕೆಂದರೆ ಭಾರತವನ್ನು ಶ್ರೀಮತದಂತೆ ಸ್ವರ್ಗವನ್ನಾಗಿ ಮಾಡುತ್ತೀರಿ. ಮೃತ್ಯುವಂತೂ ಎಲ್ಲರ ತಲೆಯ ಮೇಲಿದೆ ಆದ್ದರಿಂದ ಇದೊಂದು ಜನ್ಮದಲ್ಲಿ ಪವಿತ್ರರಾಗಿ ತಂದೆಯನ್ನು ನೆನಪು ಮಾಡುವುದರಿಂದ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುವಿರಿ. ಈಗ ನೀವು ಶೂದ್ರರಿಂದ ಬ್ರಾಹ್ಮಣರಾಗಿ ನಂತರ ದೇವತೆಗಳಾಗುತ್ತೀರಿ, ಇದು ಹೊಸ ಮಾತೇನಲ್ಲ, ಕಲ್ಪ-ಕಲ್ಪ ಪ್ರತೀ 5000 ವರ್ಷದ ನಂತರ ಈ ಚಕ್ರವು ಸುತ್ತುತ್ತಿರುತ್ತದೆ. ನರಕದಿಂದ ಸ್ವರ್ಗವಾಗುತ್ತದೆ. ಪತಿತ ಪ್ರಪಂಚದಲ್ಲಿ ಮನುಷ್ಯರು ಯಾವುದೇ ಕರ್ಮವನ್ನು ಮಾಡುತ್ತಾರೆಂದರೆ ಅದು ವಿಕರ್ಮವೇ ಆಗುತ್ತದೆ. 5000 ವರ್ಷಗಳ ಮೊದಲು ಕರ್ಮ-ವಿಕರ್ಮ-ಅಕರ್ಮದ ಗತಿಯನ್ನು ತಿಳಿಸಲಾಗಿತ್ತು, ಈಗ ಪುನಃ ನಿಮಗೆ ತಿಳಿಸುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ನಾನು ಪರಮಪಿತ ಪರಮಾತ್ಮ ನಿರಾಕಾರ ನಿಮ್ಮ ತಂದೆಯಾಗಿದ್ದೇನೆ. ಈ ಶರೀರದ ಆಧಾರವನ್ನು ತೆಗೆದುಕೊಂಡಿದ್ದೇನೆ, ಆದರೆ ಇವರಂತೂ ಭಗವಂತನಲ್ಲ. ಮನುಷ್ಯರನ್ನು ದೇವತೆಯೆಂದೂ ಕರೆಯಲು ಸಾಧ್ಯವಿಲ್ಲ. ಅಂದಮೇಲೆ ಮನುಷ್ಯರನ್ನು ಭಗವಂತನೆಂದು ಕರೆಯಲು ಹೇಗೆ ಸಾಧ್ಯ. ನೀವು 84 ಜನ್ಮಗಳ ತೆಗೆದುಕೊಳ್ಳುತ್ತಾ, ಕೆಳಗಿಳಿಯುತ್ತಾ ಬಂದಿರಿ. ಮೇಲೆ ಹೋಗಲು ಯಾರೂ ಸಾಧ್ಯವಿಲ್ಲ ಎಂದು ತಿಳಿಸುತ್ತಾರೆ. ಎಲ್ಲರೂ ಪತಿತರಾಗುವ ದಾರಿಯನ್ನೇ ತೋರಿಸುತ್ತಾರೆ, ಸ್ವಯಂ ತಾವೂ ಸಹ ಪತಿತರಾಗುತ್ತಾರೆ ಆದ್ದರಿಂದಲೇ ಅವರ ಉದ್ಧಾರವನ್ನೂ ಸಹ ಮಾಡಲು ನಾನು ಬರಬೇಕಾಗುತ್ತದೆ. ಇದು ರಾವಣ ರಾಜ್ಯವಾಗಿದೆ, ನೀವೀಗ ರಾವಣ ರಾಜ್ಯದಿಂದ ಹೊರ ಬಂದಿದ್ದೀರಿ, ಇದು ನಿಧಾನ-ನಿಧಾನವಾಗಿ ಎಲ್ಲರಿಗೂ ತಿಳಿಯುತ್ತದೆ. ಬ್ರಾಹ್ಮಣರಾಗದ ಹೊರತು ಶಿವ ತಂದೆಯಿಂದ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಇಬ್ಬರು ತಂದೆಯರಿದ್ದಾರೆ, ಒಬ್ಬರು ನಿರಾಕಾರ ತಂದೆ, ಇನ್ನೊಬ್ಬರು ಸಾಕಾರ ತಂದೆ ಆಗಿದ್ದಾರೆ. ಸಾಕಾರಿ ತಂದೆಯಿಂದ ಸಾಕಾರಿ ಮಕ್ಕಳಿಗೆ ಆಸ್ತಿಯು ಸಿಗುತ್ತದೆ, ನಂತರ ನಿರಾಕಾರ ಬೇಹದ್ದಿನ ತಂದೆಯಿಂದ ನಿರಾಕಾರಿ ಆತ್ಮಗಳಿಗೆ ಆಸ್ತಿಯು ಸಿಗುತ್ತದೆ. ಮಧುರಾತಿ ಮಧುರ ತಂದೆಯಿಂದ ನೀವು 21 ಜನ್ಮಕ್ಕಾಗಿ ಸುಖಧಾಮದ ಆಸ್ತಿಯನ್ನು ಪಡೆಯಲು ಬಂದಿದ್ದೇವೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಯೋಗಬಲದಿಂದ ನೀವು ವಿಶ್ವದ ಮಾಲೀಕರಾಗಿದ್ದಿರಿ. ಯಾವುದೇ ಆಯುಧಗಳಿಂದಲ್ಲ. ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಿ ವಿಕರ್ಮವನ್ನು ವಿನಾಶ ಮಾಡಿಕೊಂಡು ವಿಷ್ಣು ಪುರಿಯ ಮಾಲೀಕರಾಗುತ್ತೀರಿ. ಈಗ ಅಮರಲೋಕಕ್ಕೆ ಹೋಗಲು ಅಮರಕಥೆಯನ್ನು ಕೇಳುತ್ತಿದ್ದೀರಿ. ಅಲ್ಲಿ ಅಕಾಲಮೃತ್ಯು ಎಂದೂ ಆಗುವುದಿಲ್ಲ. ದುಃಖದ ಹೆಸರು-ಗುರುತೂ ಇರುವುದಿಲ್ಲ. ನೀವು ಮಕ್ಕಳು ಈಗ ಬೇಹದ್ದಿನ ತಂದೆಯ ಶ್ರೀಮತಂತೆ ನಡೆದು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳಾಗುತ್ತಿದ್ದೀರಿ. ಇದು ಯಾವುದೇ ಶಾಸ್ತ್ರಗಳ ಜ್ಞಾನವಲ್ಲ. ವಿಷ್ಣುವಿನ ನಾಭಿಯಿಂದ ಬ್ರಹ್ಮನು ಬಂದನೆಂದು ತೋರಿಸುತ್ತಾರೆ, ಅವನ ಕೈಯಲ್ಲಿ ಶಾಸ್ತ್ರಗಳನ್ನು ತೋರಿಸುತ್ತಾರೆ. ಬ್ರಹ್ಮನ ಮುಖಾಂತರ ನಾನು ನಿಮಗೆ ಇಡೀ ಪ್ರಪಂಚದ ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತೇನೆಂದು ತಂದೆಯು ಹೇಳುತ್ತಾರೆ. ನಾನೇ ಜ್ಞಾನ ಸಾಗರನಾಗಿದ್ದೇನೆ. ಗಾಯನವೂ ಇದೆ – ಜ್ಞಾನ ಸೂರ್ಯ ಪ್ರಕಟ.... ಅಜ್ಞಾನ ಅಂಧಕಾರ ವಿನಾಶ...... ಸತ್ಯಯುಗದಲ್ಲಿ ಅಜ್ಞಾನವಿರುವುದಿಲ್ಲ. ಅದಂತೂ ಸತ್ಯ ಖಂಡವಾಗಿರುತ್ತದೆ ಅಂದಮೇಲೆ ಭಾರತವು ವಜ್ರ ಸಮಾನವಾಗಿತ್ತು, ವಜ್ರ ವೈಡೂರ್ಯಗಳ ಮಹಲುಗಳಿದ್ದವು. ಈಗಂತೂ ಮನುಷ್ಯರಿಗೆ ಸಂಪೂರ್ಣವಾಗಿ ತಿನ್ನಲೂ ಸಹ ಇಲ್ಲದಂತಾಗಿದೆ. ಕಂಗಾಲಾಗಿರುವ ವಿಶ್ವವನ್ನು ಮತ್ತೆ ಸಾಹುಕಾರನನ್ನಾಗಿ ಯಾರು ಮಾಡುತ್ತಾರೆ? ಇದು ತಂದೆಯದೇ ಕೆಲಸವಾಗಿದೆ. ತಂದೆಗೇ ದಯೆ ಬರುತ್ತದೆ. ನಿಮಗೆ ರಾಜಯೋಗವನ್ನು ತಿಳಿಸಿ ಕೊಡಲು, ನರನಿಂದ ನಾರಾಯಣನನ್ನಾಗಿ ನಾರಿಯನ್ನು ಲಕ್ಷ್ಮಿಯನ್ನಾಗಿ ಮಾಡಲು ಬರುತ್ತೇನೆ ಎಂದು ತಂದೆಯು ತಿಳಿಸುತ್ತಾರೆ. ಭಕ್ತರ ರಕ್ಷಕ ಒಬ್ಬರೇ ತಂದೆಯಾಗಿದ್ದಾರೆ, ರಾವಣ ಜೈಲಿನಿಂದ ಬಿಡಿಸಿ ನಿಮ್ಮನ್ನು ಸುಖಧಾಮಕ್ಕೆ ಕರೆದುಕೊಂಡು ಹೋಗುತ್ತೇನೆ. ಇಡೀ ಪ್ರಪಂಚದಲ್ಲಿ ಯಾರು ಬ್ರಾಹ್ಮಣರಾಗುತ್ತಾರೆಯೋ ಅವರೇ ದೇವತೆಗಳಾಗುವರು. ಬ್ರಹ್ಮನ ಹೆಸರೂ ಸಹ ಪ್ರಜಾಪಿತ ಬ್ರಹ್ಮನೆಂದು ಪ್ರಸಿದ್ಧವಾಗಿದೆ. ನೀವು ಬ್ರಾಹ್ಮಣರು ಎಲ್ಲರಿಗಿಂತ ಉತ್ತಮರಾಗಿದ್ದೀರಿ. ನೀವು ಭಾರತದ ಸತ್ಯ ಆತ್ಮಿಕ ಸೇವೆ ಮಾಡುತ್ತಿದ್ದೀರಿ. ತಂದೆಯ ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತದೆ, ಪತಿತರಿಂದ ಪಾವನವಾಗುವುದನ್ನು ಬಿಟ್ಟರೆ ಮತ್ತ್ಯಾವುದೇ ದಾರಿಯಿಲ್ಲ. ನೆನಪಿನಿಂದಲೇ ತುಕ್ಕು ಭಸ್ಮವಾಗುತ್ತದೆ. ಯಾವುದು ಅಪ್ಪಟ ಚಿನ್ನವಾಗಿದೆ, ಯಾವುದು ನಕಲಿ ಚಿನ್ನವಾಗುತ್ತದೆ ಎಂದು ಆಚಾರಿಗಳು ತಿಳಿದಿರುತ್ತಾರೆ. ಅದರಲ್ಲಿ ಬೆಳ್ಳಿ, ತಾಮ್ರ, ಲೋಹ ಹಾಕಿದಾಗ ಚಿನ್ನದ ಅಂಶವು ಕಡಿಮೆಯಾಗುತ್ತದೆ. ನೀವೂ ಸಹ ಸತೋಪ್ರಧಾನರಾಗಿದ್ದಿರಿ, ನಿಮ್ಮಲ್ಲಿಯೂ ತುಕ್ಕು ಬೀಳುತ್ತದೆ ಆದ್ದರಿಂದ ತಮೋಪ್ರಧಾನರಾಗುತ್ತೀರಿ. ಈಗ ಪುನಃ ಸತೋಪ್ರಧಾನರಾದಾಗಲೇ ಸತ್ಯಯುಗದಲ್ಲಿ ಹೋಗಲು ಸಾಧ್ಯ. ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಬ್ಬ ತಂದೆಯನ್ನು ಬಿಟ್ಟು ಯಾರನ್ನೂ ನೆನಪು ಮಾಡಬಾರದು ಅಂದಾಗ ನೀವು ಸ್ವರ್ಗ ಪುರಿಯ ಮಾಲೀಕರಾಗಿ ಬಿಡುತ್ತೀರಿ. ಸ್ವರ್ಗ ಅಥವಾ ವಿಷ್ಣು ಪುರಿಯಾಗಿತ್ತು, ಈಗ ರಾವಣ ಪುರಿಯಾಗಿದೆ, ಪುನಃ ಅವಶ್ಯವಾಗಿ ವಿಷ್ಣು ಪುರಿಯಾಗುತ್ತದೆ. ಸಾಧು-ಸಂತರೆಲ್ಲರನ್ನೂ ಉದ್ಧಾರ ಮಾಡಲು ಬರುತ್ತೇನೆ, ಅದಕ್ಕೆ ಯಧಾ ಯಧಾಹೀ ಧರ್ಮಸ್ಯ.... ಎಂದು ಹೇಳುತ್ತಾರೆ. ಇದು ಭಾರತದ ಮಾತಾಗಿದೆ. ಸರ್ವರ ಸದ್ಗತಿದಾತ ನಾನೊಬ್ಬನೇ ಶಿವ ತಂದೆಯಾಗಿದ್ದೇನೆ. ಶಿವ, ರುದ್ರ ಎಂಬುದೆಲ್ಲವೂ ಅವರದೇ ಹೆಸರುಗಳಾಗಿವೆ, ಅನೇಕ ಹೆಸರುಗಳನ್ನು ಇಟ್ಟು ಬಿಟ್ಟಿದ್ದಾರೆ. ನನ್ನ ಸತ್ಯವಾದ ಹೆಸರು ಶಿವ ಎಂದಾಗಿದೆ ಎಂದು ತಿಳಿಸುತ್ತಾರೆ. ನಾನು ಶಿವನಾಗಿದ್ದೇನೆ, ನೀವು ಮಕ್ಕಳು ಸಾಲಿಗ್ರಾಮಗಳಾಗಿದ್ದೀರಿ. ನೀವು ಅರ್ಧಕಲ್ಪ ದೇಹಾಭಿಮಾನದಲ್ಲಿರುತ್ತೀರಿ, ಈಗ ದೇಹೀ-ಅಭಿಮಾನಿಗಳಾಗಿ. ಒಬ್ಬ ತಂದೆಯನ್ನು ತಿಳಿಯುವುದರಿಂದ ಎಲ್ಲವನ್ನೂ ತಿಳಿದು ಬಿಡುತ್ತೀರಿ, ಮಾ|| ಜ್ಞಾನ ಸಾಗರರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶ್ರೀಮತದಂತೆ ನಡೆದು ಶ್ರೇಷ್ಠಾತಿ ಶ್ರೇಷ್ಠ ದೇವತೆಗಳಾಗಬೇಕಾಗಿದೆ. ಇಡೀ ವಿಶ್ವದಲ್ಲಿ ಸತ್ಯ-ಸತ್ಯವಾದ ಆತ್ಮಿಕ ಸೇವೆ ಮಾಡಬೇಕಾಗಿದೆ. ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆಗೆ ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕಾಗಿದೆ.
2. ಆತ್ಮವನ್ನು ಸತ್ಯ ಚಿನ್ನವನ್ನಾಗಿ ಮಾಡಲು ಒಬ್ಬ ತಂದೆಯ ವಿನಃ ಯಾವ ದೇಹಧಾರಿಯನ್ನೂ ನೆನಪು ಮಾಡಬಾರದು. ಪಾರಲೌಕಿಕ ತಂದೆಯ ಜೊತೆ ಸತ್ಯ-ಸತ್ಯವಾದ ಪ್ರೀತಿಯನ್ನಿಡಬೇಕು.
ಓಂ ಶಾಂತಿ. ಮಧುರಾತಿ ಮಧುರ ಅಗಲಿಮರಳಿ ಸಿಕ್ಕಿರುವ ಆತ್ಮಿಕ ಮಕ್ಕಳಿಗೆ ಇದು ತಿಳಿದಿದೆ- ನಾವು ನಮ್ಮ ದೈವೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೇವೆ, ಇದರಲ್ಲಿ ರಾಜರೂ ಇರುತ್ತಾರೆಂದಾಗ ಪ್ರಜೆಗಳೂ ಇರುತ್ತಾರೆ. ಪುರುಷಾರ್ಥವಂತೂ ಎಲ್ಲರೂ ಮಾಡಬೇಕಾಗಿದೆ, ಯಾರು ಹೆಚ್ಚು ಪುರುಷಾರ್ಥ ಮಾಡುತ್ತಾರೆಯೋ ಅವರು ಹೆಚ್ಚು ಬಹುಮಾನ ಪಡೆಯುತ್ತಾರೆ. ಇದಂತೂ ಸರ್ವ ಸಾಮಾನ್ಯವಾದ ಕಾಯಿದೆಯಾಗಿದೆ. ಇದು ಹೊಸ ಮಾತೇನಲ್ಲ. ಇದಕ್ಕೆ ದೈವೀ ಹೂದೋಟ ಎಂದು ಹೇಳಿ ಅಥವಾ ರಾಜಧಾನಿ ಎಂದಾದರೂ ಹೇಳಿ. ಈಗ ಇದು ಕಲಿಯುಗೀ ತೋಟ ಅಥವಾ ಮುಳ್ಳುಗಳ ಕಾಡು. ಅದರಲ್ಲಿಯೂ ಕೆಲವು ಬಹಳ ಫಲವನ್ನು ಕೊಡುವ ವೃಕ್ಷಗಳಿರುತ್ತವೆ, ಕೆಲವು ಕಡಿಮೆ ಫಲಕೊಡುವ ವೃಕ್ಷಗಳಿರುತ್ತವೆ. ಕೆಲವು ಕಡಿಮೆ ರಸವುಳ್ಳ ಮಾವಿನ ಹಣ್ಣುಗಳಿರುತ್ತವೆ ಹಾಗೆಯೇ ಮಕ್ಕಳಲ್ಲಿಯೂ ನಂಬರ್ವಾರ್ ಪುರುಷಾರ್ಥದನುಸಾರ ಇರುತ್ತಾರೆ. ಕೆಲವು ಒಳ್ಳೆಯ ಫಲವನ್ನು ಕೊಡುತ್ತದೆ, ಕೆಲವು ಹಗುರ ಫಲವನ್ನು ಕೊಡುತ್ತದೆ. ಇದು ಫಲ ಕೊಡುವ ತೋಟವಾಗಿದೆ. ಈ ದೈವೀವೃಕ್ಷದ ಸ್ಥಾಪನೆಯಾಗುತ್ತಿದೆ ಅಥವಾ ಕಲ್ಪದ ಹಿಂದಿನಂತೆ ಹೂದೋಟದ ಸ್ಥಾಪನೆಯಾಗುತ್ತಿದೆ. ನಿಧಾನ-ನಿಧಾನವಾಗಿ ನಂಬರ್ವಾರ್ ಪುರುಷಾರ್ಥದನುಸಾರ ಮಧುರ, ಸುವಾಸನಾಭರಿತವುಳ್ಳವರೂ ಆಗುತ್ತಿದ್ದಾರೆ. ಇಲ್ಲಿ ಭಿನ್ನತೆಯಿದೆಯಲ್ಲವೆ! ತಂದೆಯ ಮುಖವನ್ನು ನೋಡಲು ತಂದೆಯ ಬಳಿಗೆ ಬರುತ್ತಾರೆ. ತಂದೆಯು ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ಅವಶ್ಯವಾಗಿ ತಿಳಿದುಕೊಂಡಿದ್ದಾರೆ. ಇದು ಅಗತ್ಯವಾಗಿ ಮಕ್ಕಳಿಗೆ ನಿಶ್ಚಯವಿದೆ. ಬೇಹದ್ದಿನ ತಂದೆಯು ನಮ್ಮನ್ನು ಬೇಹದ್ದಿನ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಮಾಲೀಕರಾಗುವುದರಲ್ಲಿ ಬಹಳ ಖುಷಿಯಾಗುತ್ತದೆ. ಹದ್ದಿನ ಮಾಲೀಕತನದಲ್ಲಿ ದುಃಖವಿದೆ. ಭಾರತವಾಸಿಗಳಿಗಾಗಿ ಈ ಆಟವೇ ಸುಖ-ದುಃಖದಿಂದ ಮಾಡಲ್ಪಟ್ಟಿದೆ. ತಂದೆಯು ಮಕ್ಕಳಿಗೆ ಮೊದಲು ತಮ್ಮ ಮನೆಯನ್ನು ಸಂಭಾಲನೆ ಮಾಡಿ ಎಂದು ಹೇಳುತ್ತಾರೆ. ಮನೆಯ ಮೇಲೆ ಮಾಲೀಕನ ದೃಷ್ಟಿಯಿರುತ್ತದೆ. ತಂದೆಯು ಕುಳಿತು ಒಂದೊಂದು ಮಗುವನ್ನೂ ನೋಡುತ್ತಾರೆ - ಎಂಥಹ ಗುಣವಿದೆ, ಎಂಥಹ ಅವಗುಣವಿದೆ? ಮಕ್ಕಳೂ ಸಹ ಸ್ವಯಂ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ಕೊರತೆಗಳನ್ನು ನೀವೇ ಬರೆದು ತನ್ನಿ ಅಂದಾಗ ಬರೆಯಬಹುದು. ನಾವು ನಮ್ಮಲ್ಲಿರುವ ಅವಗುಣಗಳನ್ನು ತಿಳಿದುಕೊಳ್ಳುತ್ತೇವೆ. ಒಂದಲ್ಲ ಒಂದು ಕೊರತೆಯು ಅಗತ್ಯವಾಗಿ ಇದೆ, ಇನ್ನೂ ಸಂಪೂರ್ಣರಂತೂ ಯಾರೂ ಆಗಿಲ್ಲ. ಅವಶ್ಯವಾಗಿ ಆಗಬೇಕು. ಕಲ್ಪ-ಕಲ್ಪವೂ ಆಗಿದ್ದೇವೆ ಇದರಲ್ಲಿ ಯಾವುದೇ ಸಂಶಯವಿಲ್ಲ ಆದರೆ ಈ ಸಮಯದಲ್ಲಿ ಕೊರತೆಯಿದೆ ಅದನ್ನು ತಿಳಿಸುವುದರಿಂದ ತಂದೆಯು ಅದರ ಬಗ್ಗೆ ತಿಳುವಳಿಕೆ ಕೊಡುತ್ತಾರೆ. ಈ ಸಮಯದಲ್ಲಿ ಬಹಳ ಕೊರತೆಗಳಿವೆ, ಮುಖ್ಯಕೊರತೆಗಳಿಗೆ ದೇಹಾಭಿಮಾನವೇ ಕಾರಣವಾಗಿದೆ. ಅದೇ ನಂತರ ಬಹಳ ಕಷ್ಟಕ್ಕೆ ಬೀಳಿಸುತ್ತದೆ. ಸ್ಥಿತಿಯು ಮುಂದುವರೆಯಲು ಬಿಡುವುದಿಲ್ಲ ಆದ್ದರಿಂದ ಈಗ ಸಂಪೂರ್ಣ ಪುರುಷಾರ್ಥ ಮಾಡಬೇಕು. ಈ ಶರೀರವನ್ನು ಈಗ ಬಿಟ್ಟುಹೋಗಬೇಕು. ಇಲ್ಲಿಯೇ ದೈವೀಗುಣಗಳನ್ನು ಧಾರಣೆ ಮಾಡಿ ಹೋಗಬೇಕು. ಕರ್ಮಾತೀತ ಸ್ಥಿತಿಯಲ್ಲಿ ಹೋಗುವುದರ ಅರ್ಥವನ್ನು ತಂದೆಯು ತಿಳಿಸುತ್ತಿದ್ದಾರೆ. ಕರ್ಮಾತೀತರಾಗಿ ಹೋಗಬೇಕೆಂದರೆ ಯಾವುದೇ ಕೊರತೆಯಿರಬಾರದು ಏಕೆಂದರೆ ನೀವು ವಜ್ರವಾಗುತ್ತೀರಲ್ಲವೆ. ನಮ್ಮಲ್ಲಿ ಏನೇನು ಕೊರತೆಯಿದೆ, ಇದನ್ನು ಪ್ರತಿಯೊಬ್ಬರೂ ತಿಳಿದುಕೊಂಡಿದ್ದೀರಿ ಏಕೆಂದರೆ ನೀವು ಚೈತನ್ಯವಾಗಿದ್ದೀರಿ, ನೀವು ಈ ಕೊರತೆಗಳನ್ನು ತೆಗೆದುಹಾಕಬಹುದು. ನೀವು ಕವಡೆಯಿಂದ ವಜ್ರದಂತೆ ಆಗುತ್ತೀರಿ. ನೀವು ತಮ್ಮನ್ನು ಬಹಳ ಚೆನ್ನಾಗಿ ತಿಳಿದಿದ್ದೀರಿ, ಸರ್ಜನ್ ಸಹ ನಿಮ್ಮಲ್ಲಿ ಯಾವ ಕೊರತೆಯಿದೆ ಎಂದು ಕೇಳುತ್ತಾರೆ. ಯಾವುದು ನಿಮ್ಮನ್ನು ಮುಂದುವರೆಯದಂತೆ ಮಾಡುತ್ತಿದೆ? ಕಲೆರಹಿತರಾಗಿ ಕೊನೆಯಲ್ಲಿ ಆಗಬೇಕು. ಈಗ ಇವೆಲ್ಲವನ್ನೂ ತೆಗೆಯುತ್ತಾ ಹೋಗಬೇಕು. ಒಂದುವೇಳೆ ಬಲಹೀನತೆಯನ್ನು ತೆಗೆಯದೇ ಹೋದರೆ ವಜ್ರದ ಬೆಲೆಯು ಕಡಿಮೆಯಾಗಿಬಿಡುತ್ತದೆ. ಇವರೂ ಸಹ ಪಕ್ಕಾ ವಜ್ರದ ವ್ಯಾಪಾರಿಯಾಗಿದ್ದಾರಲ್ಲವೆ. ಇಡೀ ಆಯಸ್ಸು ಈ ಕಣ್ಣಿನಿಂದ ವಜ್ರಗಳನ್ನು ನೋಡಿದ್ದಾರೆ. ಇಷ್ಟೊಂದು ವಜ್ರಗಳನ್ನು ಪರೀಕ್ಷಿಸುವ ಆಸಕ್ತಿಯುಳ್ಳ ವಜ್ರದ ವ್ಯಾಪಾರಿಗಳು ಯಾರೂ ಇರಲಾರರು. ನೀವೂ ಸಹ ವಜ್ರವಾಗುತ್ತಿದ್ದೀರಿ. ಒಂದಲ್ಲಒಂದು ಕೊರತೆಗಳು ಅಗತ್ಯವಾಗಿ ಇದೆಯೆಂದು ತಿಳಿದಿದ್ದೀರಿ. ಸಂಪೂರ್ಣರಂತೂ ಇನ್ನೂ ಆಗಿಲ್ಲ. ಚೈತನ್ಯವಾಗಿರುವ ಕಾರಣ ನೀವು ಪುರುಷಾರ್ಥದಿಂದ ಬಲಹೀನತೆಯನ್ನು ತೆಗೆಯಬಹುದು. ಅವಶ್ಯವಾಗಿ ವಜ್ರದಂತೆ ಆಗಬೇಕಾಗಿದೆ. ಯಾವಾಗ ಪೂರ್ಣ ಪುರುಷಾರ್ಥ ಮಾಡುತ್ತೀರಿ ಆಗ ವಜ್ರ ಸಮಾನ ಆಗುತ್ತೀರಿ.
ತಂದೆಯು ತಿಳಿಸುತ್ತಾರೆ- ಈ ಶರೀರವನ್ನು ಬಿಡುವ ಸಮಯದ ಅಂತ್ಯದಲ್ಲಿ ಯಾರ ನೆನಪೂ ಬಾರದಂತಹ ಪಕ್ಕಾ ಸ್ಥಿತಿಯನ್ನು ಮಾಡಿಕೊಳ್ಳಬೇಕು. ಇದಂತೂ ಸ್ಪಷ್ಟವಾಗಿದೆ- ಮಿತ್ರಸಂಬಂಧಿ ಮೊದಲದವರನ್ನು ಮರೆಯಬೇಕು. ಒಬ್ಬ ತಂದೆಯೊಂದಿಗೇ ಸಂಬಂಧವನ್ನಿಟ್ಟುಕೊಳ್ಳಬೇಕು. ಈಗ ನೀವು ವಜ್ರಸಮಾನ ಆಗುತ್ತಿದ್ದೀರಿ, ಇದು ವಜ್ರದ ಅಂಗಡಿಯೂ ಆಗಿದೆ, ನೀವು ಪ್ರತಿಯೊಬ್ಬರೂ ವಜ್ರದ ವ್ಯಾಪಾರಿಗಳಾಗಿದ್ದೀರಿ. ಈ ಮಾತುಗಳನ್ನು ನೀವು ಮಕ್ಕಳು ಮಾತ್ರ ತಿಳಿದುಕೊಂಡಿದ್ದೀರಿ. ಪ್ರತಿಯೊಬ್ಬರ ಮನಸ್ಸಿನಲ್ಲಿ ನಾವು ಪುರುಷಾರ್ಥದನುಸಾರ ವಿಶ್ವದ ಮಾಲೀಕರಾಗುತ್ತಿದ್ದೇವೆ ಎಂದು ತಿಳಿದುಕೊಂಡಿದ್ದೀರಿ. ಯಾರಿಗೆ ಶ್ರೇಷ್ಠಪದವಿಯು ಸಿಕ್ಕಿದೆಯೋ ಅವರು ಅವಶ್ಯವಾಗಿ ಪುರುಷಾರ್ಥ ಮಾಡಿದ್ದಾರೆ. ಅವರು ನಿಮ್ಮಲ್ಲಿಯೇ ಯಾರಾದರೂ ಇರಬೇಕಲ್ಲವೆ. ನೀವು ಮಕ್ಕಳೇ ಇಷ್ಟೊಂದು ಪುರುಷಾರ್ಥ ಮಾಡಬೇಕು ಆದ್ದರಿಂದ ಒಂದೊಂದು ಮಗುವನ್ನೂ ನೋಡುತ್ತಿರುತ್ತಾರೆ. ಹೂಗಳನ್ನು ಇದು ಎಷ್ಟು ಸುಗಂಧಭರಿತವಾದ ಹೂ! ಇದರಲ್ಲಿ ಏನು ಕಡಿಮೆಯಿದೆ? ಎಂದು ನೋಡಲಾಗುತ್ತದೆ ಏಕೆಂದರೆ ನೀವು ಚೈತನ್ಯವಾಗಿದ್ದೀರಿ. ತಂದೆಯಿಂದ ಬುದ್ಧಿಯೋಗವನ್ನು ತೆಗೆದು ಅಲೆದಾಡಿಸುವಂತಹ ಬಲಹೀನತೆಗಳು ನಮ್ಮಲ್ಲಿ ಏನೇನಿವೆ ಎಂದು ಚೈತನ್ಯವಜ್ರಗಳು ತಿಳಿದುಕೊಳ್ಳಬಹುದಲ್ಲವೆ! ತಂದೆಯು ತಿಳಿಸುತ್ತಾರೆ- ಮಕ್ಕಳೇ, ನನ್ನೊಬ್ಬನನ್ನೇ ನೆನಪು ಮಾಡಿ, ಬೇರೆ ಯಾರೂ ನೆನಪಿಗೆ ಬರಬಾರದು. ಗೃಹಸ್ಥ ವ್ಯವಹಾರದಲ್ಲಿರುತ್ತಾ ಒಬ್ಬ ತಂದೆಯನ್ನು ನೆನಪು ಮಾಡಬೇಕು. ಇವರಿಗಾಗಿ ಭಟ್ಟಿಯಾಗಬೇಕಿತ್ತು, ಯಾರು ಸೇವೆಗಾಗಿ ಹೊರಟುಬಂದರು, ಯಾರು ಹಳೆಯ ಮಕ್ಕಳು ಬಹಳ ಚೆನ್ನಾಗಿ ಸೇವೆ ಮಾಡುತ್ತಿದ್ದಾರೆಯೋ ಅವರನ್ನು ನೋಡುತ್ತಾರೆ. ಸ್ವಲ್ಪ ಹೊಸಬರೊಂದಿಗೆ ಸೇರುತ್ತಾ ಹೋಗುತ್ತಾರೆ. ಹಳೆಯ ಮಕ್ಕಳಿಗೆ ಭಟ್ಟಿಯಾಗಬೇಕಿತ್ತು. ಭಲೆ ಹಳೆಯ ಮಕ್ಕಳಲ್ಲಿ ಬಲಹೀನತೆಗಳಿವೆ. ಪ್ರತಿಯೊಬ್ಬರೂ ತಮ್ಮ ಮನಸ್ಸಿನಲ್ಲಿ ತಿಳಿದುಕೊಳ್ಳುತ್ತೀರಿ- ತಂದೆಯು ಯಾವ ಸ್ಥಿತಿಯನ್ನು ಮಾಡಿಕೊಳ್ಳಿ ಎಂದು ಹೇಳುತ್ತಾರೆ ಅದು ಇನ್ನೂ ಆಗಿಲ್ಲ, ಗುರಿ-ಉದ್ದೇಶವಂತೂ ತಂದೆಯು ತಿಳಿಸುತ್ತಾರೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ದೇಹಾಭಿಮಾನವೇ ಕೊಳಕಾಗಿದೆ. ಆದ್ದರಿಂದ ದೇಹದ ಕಡೆ ಬುದ್ಧಿಯು ಹೊರಟುಹೋಗುತ್ತದೆ. ದೇಹದಲ್ಲಿರುತ್ತಾ ದೇಹೀ-ಅಭಿಮಾನಿಯಾಗಬೇಕು. ಈ ಕಣ್ಣುಗಳಿಂದ ನೋಡುವಂತಹ ವಸ್ತು ಮುಂದೆ ಸನ್ಮುಖದಲ್ಲಿ ಬಾರದಂತೆ ಸ್ಥಿತಿಯನ್ನು ಜಮಾ ಮಾಡಿಕೊಳ್ಳಬೇಕು. ನಮ್ಮ ಬುದ್ಧಿಯಲ್ಲಿ ತಂದೆ ಹಾಗೂ ಶಾಂತಿಧಾಮದ ವಿನಃ ಯಾವುದೇ ವಸ್ತು ಬರಬಾರದು, ಏನನ್ನೂ ಜೊತೆಯಲ್ಲಿ ತೆಗೆದುಕೊಂಡು ಹೋಗುವಂತಿಲ್ಲ. ಮೊಟ್ಟಮೊದಲು ನಾವು ಹೊಸಸಂಬಂಧದಲ್ಲಿ ಬರುತ್ತೇವೆ, ಈಗ ಹಳೆಯ ಸಂಬಂಧವಿದೆ. ಹಳೆಯ ಸಂಬಂಧವು ಸ್ವಲ್ಪವೂ ನೆನಪಿಗೆ ಬರಬಾರದು. ಅಂತ್ಯಕಾಲ....... ಎಂದು ಗಾಯನವಿದೆ ಅಂದಾಗ ಇದು ಈ ಸಮಯದ ಮಾತಾಗಿದೆ. ಈ ಹಾಡನ್ನು ಕಲಿಯುಗೀ ಮನುಷ್ಯರು ಮಾಡಿದ್ದಾರೆ ಆದರೆ ಅವರು ಏನೂ ತಿಳಿದುಕೊಂಡಿಲ್ಲ. ಮುಖ್ಯಮಾತನ್ನು ತಂದೆಯು ತಿಳಿಸುತ್ತಾರೆ- ಒಬ್ಬ ತಂದೆಯ ವಿನಃ ಬೇರೆ ಏನೂ ನೆನಪಿಗೆ ಬರಬಾರದು. ಒಬ್ಬ ತಂದೆಯ ನೆನಪಿನಿಂದ ಪಾಪವು ನಾಶವಾಗುತ್ತದೆ ಹಾಗೂ ಪವಿತ್ರ ವಜ್ರಗಳಾಗುತ್ತೀರಿ. ಕೆಲವು ಕಲ್ಲುಗಳು ಬೆಲೆಯುಳ್ಳದ್ದಾಗಿರುತ್ತದೆ, ಮಾಣಿಕ್ಯವೂ ಬೆಲೆಯುಳ್ಳದ್ದಾಗಿದೆ. ತಂದೆಯು ತನಗಿಂತಲೂ ಬೆಲೆಯುಳ್ಳಂತಹ ಶ್ರೇಷ್ಠರನ್ನಾಗಿ ಮಾಡುತ್ತಿದ್ದಾರೆ. ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು. ತಂದೆಯು ತಿಳಿಸುತ್ತಾರೆ- ಅಂತರ್ಮುಖಿಯಾಗಿ ತಮ್ಮನ್ನು ತಮ್ಮಲ್ಲಿ ಯಾವ ದೋಷವಿದೆ ಎಂದು ನೋಡಿಕೊಳ್ಳಿ. ಎಲ್ಲಿಯವರೆಗೆ ದೇಹಾಭಿಮಾನವಿದೆ? ಪುರುಷಾರ್ಥಕ್ಕಾಗಿ ತಂದೆಯು ಭಿನ್ನ-ಭಿನ್ನ ಯುಕ್ತಿಗಳನ್ನು ತಿಳಿಸುತ್ತಾರೆ. ಎಷ್ಟು ಸಾಧ್ಯವೋ ಅಷ್ಟು ತಂದೆಯ ನೆನಪಿರಲಿ. ಒಂದುವೇಳೆ ಎಷ್ಟೇ ಪ್ರಿಯರಾಗಿರಬಹುದು, ಸುಂದರವಾಗಿರುವ ಮಕ್ಕಳು ಬಹಳ ಪ್ರಿಯರಾಗಿರುತ್ತಾರೆ ಆದರೂ ಸಹ ಯಾರ ನೆನಪೂ ಬರಬಾರದು. ಇಲ್ಲಿನ ಯಾವುದೇ ವಸ್ತುಗಳು ನೆನಪಿಗೆ ಬರಬಾರದು. ಕೆಲವು ಮಕ್ಕಳಲ್ಲಿ ಬಹಳ ಮೋಹವಿರುತ್ತದೆ. ತಂದೆಯು ತಿಳಿಸುತ್ತಾರೆ- ಎಲ್ಲರಿಂದ ಮೋಹವನ್ನು ಅಳಿಸಿ ಒಬ್ಬರ ನೆನಪಿಟ್ಟುಕೊಳ್ಳಿ. ಒಬ್ಬ ಪ್ರೀತಿಯ ತಂದೆಯ ಜೊತೆ ಯೋಗವಿಡಬೇಕು, ಅವರಿಂದ ಎಲ್ಲವೂ ಪ್ರಾಪ್ತಿಯಾಗುತ್ತದೆ. ಯೋಗದಿಂದ ನೀವು ಪ್ರಿಯರಾಗುತ್ತೀರಿ, ಆತ್ಮವೇ ಪ್ರಿಯವಾಗುತ್ತದೆ. ತಂದೆಯು ಪ್ರಿಯ ಹಾಗೂ ಪವಿತ್ರವಾಗಿದ್ದಾರಲ್ಲವೆ! ಆತ್ಮನನ್ನು ಪ್ರಿಯ-ಪವಿತ್ರ ಮಾಡುವ ಸಲುವಾಗಿ ತಿಳಿಸುತ್ತಾರೆ- ಮಕ್ಕಳೇ, ನೀವು ಎಷ್ಟು ನನ್ನನ್ನು ನೆನಪು ಮಾಡುತ್ತೀರೋ ಅಷ್ಟು ನೀವು ಬಹಳ ಪ್ರಿಯರಾಗುತ್ತೀರಿ. ಇಷ್ಟೊಂದು ಪ್ರಿಯರಾಗುತ್ತೀರಿ ಅದರಿಂದ ನೀವು ದೇವಿ-ದೇವತೆಗಳಿಗೆ ಇದುವರೆಗೂ ಪೂಜೆ ನಡೆಯುತ್ತಿದೆ. ಬಹಳ ಪ್ರಿಯರಾಗುತ್ತೀರಲ್ಲವೆ! ಅರ್ಧಕಲ್ಪ ನೀವು ರಾಜ್ಯಭಾರ ಮಾಡುತ್ತೀರಿ. ಅರ್ಧಕಲ್ಪ ನೀವೇ ಪೂಜೆಗೆ ಯೋಗ್ಯರಾಗುತ್ತೀರಿ. ನೀವೇ ಸ್ವಯಂ ಪೂಜಾರಿಗಳಾಗಿ ನಿಮ್ಮ ಚಿತ್ರಕ್ಕೆ ಪೂಜೆ ಮಾಡುತ್ತೀರಿ. ನೀವು ಎಲ್ಲರಿಗಿಂತ ಪ್ರಿಯರಾಗುವವರಾಗಿದ್ದೀರಿ ಆದರೆ ಯಾವಾಗ ಪ್ರೀತಿಯ ತಂದೆಯನ್ನು ನೆನಪು ಮಾಡುತ್ತೀರಿ ಆಗ ಪ್ರಿಯರಾಗುತ್ತೀರಿ. ಒಬ್ಬ ತಂದೆಯ ವಿನಃ ಬೇರೆ ಯಾರೂ ನೆನಪಿಗೆ ಬರಬಾರದು. ನಮ್ಮನ್ನು ನಾವು ಪರಿಶೀಲನೆ ಮಾಡಿಕೊಳ್ಳಬೇಕು- ಬಹಳ ಪ್ರೀತಿಯಿಂದ ತಂದೆಯನ್ನು ನೆನಪು ಮಾಡುತ್ತೇವೆಯೇ? ತಂದೆಯ ಪ್ರೀತಿಯಲ್ಲಿ ಆನಂದಬಾಷ್ಫಗಳು ಬರಬೇಕು. ಹೇ ತಂದೆಯೇ, ನನಗೆ ನಿಮ್ಮ ವಿನಃ ಬೇರೆ ಯಾರೂ ಇಲ್ಲ. ಅನ್ಯರ್ಯಾರೂ ನೆನಪಿಗೆ ಬರಬಾರದು. ಮಾಯೆಯ ಬಿರುಗಾಳಿಯೂ ಬರಬಾರದು ಆದರೆ ಬಹಳ ಬರುತ್ತದೆ. ನಮ್ಮ ಮೇಲೆ ನಾವೇ ಬಹಳ ಗಮನ ಇಟ್ಟುಕೊಳ್ಳಬೇಕು. ನಮ್ಮ ಪ್ರೀತಿ ಒಬ್ಬ ತಂದೆಯ ವಿನಃ ಬೇರೆಕಡೆ ಹೋಗುವುದಿಲ್ಲವೆ! ಎಷ್ಟೇ ಪ್ರೀತಿಯ ವಸ್ತುವಾಗಿರಬಹುದು ಆದರೂ ಸಹ ಒಬ್ಬ ತಂದೆಯ ನೆನಪೇ ಬರಬೇಕು. ನೀವೆಲ್ಲರೂ ಒಬ್ಬ ಪ್ರಿಯತಮನಿಗೆ ಪ್ರಿಯತಮೆಯರಾಗಿದ್ದೀರಿ. ಪ್ರಿಯತಮೆಯರು ಒಮ್ಮೆ ಪರಸ್ಪರ ನೋಡಿದರೆ ಸಾಕು, ವಿವಾಹವು ಆಗದಿದ್ದರೂ ಬುದ್ಧಿಯಲ್ಲಿ ಅವರದೇ ನೆನಪಿರುತ್ತದೆ. ಈಗ ನೀವು ತಿಳಿದಿದ್ದೀರಿ- ನಾವೆಲ್ಲರೂ ಒಬ್ಬ ಪ್ರಿಯತಮನಿಗೆ ಪ್ರೇಮಿಕೆಯರಾಗಿದ್ದೇವೆ, ಆ ಪ್ರಿಯತಮನನ್ನು ಭಕ್ತಿಮಾರ್ಗದಲ್ಲಿ ಬಹಳ ನೆನಪು ಮಾಡುತ್ತಾ ಬಂದಿದ್ದೀರಿ. ಇಲ್ಲಿಯೂ ಸಹ ನೀವು ಸನ್ಮುಖದಲ್ಲಿರುವಾಗ ಬಹಳ ನೆನಪು ಮಾಡಬೇಕು. ತಂದೆಯು ತಿಳಿಸುತ್ತಾರೆ - ನನ್ನ ನೆನಪು ಮಾಡುತ್ತಿದ್ದರೆ ನಿಮ್ಮ ಹಡಗು ಪಾರಾಗುತ್ತದೆ, ಇದರಲ್ಲಿ ಸಂಶಯದ ಮಾತಿಲ್ಲ. ಭಗವಂತನ ಜೊತೆ ಮಿಲನ ಮಾಡಲು ಎಲ್ಲರೂ ಭಕ್ತಿ ಮಾಡುತ್ತಾರೆ.
ಇಲ್ಲಿ ಕೆಲವು ಮಕ್ಕಳು ಬಹಳ ಸೇವೆಯಲ್ಲಿ ವ್ಯಸ್ತರಾಗಿರುತ್ತಾರೆ. ಸೇವೆಗಾಗಿಯೇ ಸಂಪೂರ್ಣ ಚಡಪಡಿಸುತ್ತಾರೆ, ತುಂಬಾ ಪರಿಶ್ರಮಪಡುತ್ತಾರೆ. ಇದನ್ನು ನೀವು ಮಾತ್ರ ತಿಳಿದಿದ್ದೀರಿ, ಗಣ್ಯವ್ಯಕ್ತಿಗಳು ಅಷ್ಟೊಂದು ತಿಳಿದುಕೊಳ್ಳುವುದಿಲ್ಲ. ಆದರೆ ನೀವು ಶ್ರಮಪಡುವುದು ವ್ಯರ್ಥವಾಗುವುದಿಲ್ಲ. ಕೆಲವರು ತಿಳಿದುಕೊಂಡು ಯೋಗ್ಯರಾಗುತ್ತಾರೆ ನಂತರ ತಂದೆಯ ಮುಂದೆ ಬರುತ್ತಾರೆ. ನೀವು ತಿಳಿದುಕೊಳ್ಳಬಲ್ಲಿರಿ - ಅವರು ಯೋಗ್ಯರಾಗಿದ್ದಾರೆಯೇ ಅಥವಾ ಇಲ್ಲವೇ? ನೀವು ಮಕ್ಕಳೊಂದಿಗೆ ತಂದೆಯ ದೃಷ್ಟಿಯ ಮಿಲನವಾಗುತ್ತದೆ. ಶೃಂಗಾರ ಮಾಡುವವರೂ ನೀವು ಮಕ್ಕಳೇ ಆಗಿದ್ದೀರಿ. ಇಲ್ಲಿಗೆ ಬಂದಿರುವವರಿಗೆಲ್ಲಾ ನೀವು ಮಕ್ಕಳು ಶೃಂಗರಿಸಿದ್ದೀರಿ. ತಂದೆಯು ನಿಮಗೆ ಶೃಂಗರಿಸಿದ್ದಾರೆ, ನೀವು ಅನ್ಯರಿಗೆ ಶೃಂಗಾರ ಮಾಡಿ ಕರೆದುಕೊಂಡು ಬರುತ್ತೀರಿ. ತಂದೆಯು ಮಕ್ಕಳಿಗೆ ಅವಕಾಶ ಕೊಡುತ್ತಾರೆ. ಹೇಗೆ ನಿಮಗೆ ಶೃಂಗಾರ ಮಾಡಿದ್ದಾರೆ ಅನ್ಯರಿಗೂ ಮಾಡಿಸುತ್ತಾರೆ. ತಮಗಿಂತಲೂ ಅನ್ಯರಿಗೆ ಬಹಳ ಚೆನ್ನಾಗಿ ಶೃಂಗಾರ ಮಾಡಿಸಬಹುದು. ಎಲ್ಲರಿಗೂ ತಮ್ಮ-ತಮ್ಮ ಅದೃಷ್ಟವಿದೆಯಲ್ಲವೆ. ಕೆಲವರು ತಿಳಿಸುವವರಿಗಿಂತಲೂ ಮುಂದೆ ಹೊರಟುಹೋಗುತ್ತಾರೆ. ನಾವು ಇವರಿಗಿಂತ ಚೆನ್ನಾಗಿ ತಿಳಿಸುತ್ತೇವೆಂದು ತಿಳಿದುಕೊಳ್ಳುತ್ತಾರೆ. ತಿಳಿಸುವ ನಶೆಯೇರಿದಾಗ ಸೇವೆಯಲ್ಲಿ ತೊಡಗುತ್ತಾರೆ. ಅವರು ಬಾಪ್ದಾದಾರವರ ಮನಸ್ಸನ್ನೇರುತ್ತಾರೆ. ಬಹಳಷ್ಟು ಹೊಸ-ಹೊಸ ಮಕ್ಕಳು ಹಳಬರಿಗಿಂತ ಮುಂದಿದ್ದಾರೆ. ಮುಳ್ಳುಗಳಿಂದ ಒಳ್ಳೆಯ ಹೂಗಳಾಗಿದ್ದಾರೆ ಆದ್ದರಿಂದ ತಂದೆಯು ಒಂದೊಂದು ಹೂವನ್ನು ನೋಡುತ್ತಾರೆ - ಇವರಲ್ಲಿ ಏನು ಕೊರತೆಗಳಿವೆ? ಈ ಕೊರತೆಯು ಇವರಿಂದ ಹೊರಟುಹೋದರೆ ಬಹಳ ಸೇವೆ ಮಾಡಬಲ್ಲರು. ತಂದೆಯು ತೋಟದ ಮಾಲೀಕರಾಗಿದ್ದಾರಲ್ಲವೆ ಸಭೆಗೆ ಬಂದು ಹಿಂದೆ ಇರುವಂತಹ ಒಂದೊಂದು ಹೂವನ್ನು ನೋಡಬೇಕೆಂದು ಮನಸ್ಸಾಗುತ್ತದೆ ಏಕೆಂದರೆ ಒಳ್ಳೊಳ್ಳೆಯ ಮಕ್ಕಳು ಹಿಂದೆ ಕುಳಿತಿರುತ್ತಾರೆ. ಒಳ್ಳೊಳ್ಳೆಯ ಮಹಾರಥಿ ಮಕ್ಕಳು ಮುಂದೆ ಕುಳಿತುಕೊಳ್ಳಬೇಕಾಗಿದೆ, ಇದರಲ್ಲಿ ಯಾರಿಗೂ ಸಹ ಕಷ್ಟವೆನಿಸುವ ಮಾತಿಲ್ಲ. ಒಂದುವೇಳೆ ಬೇಸರವಾಗಿ ಮುನಿಸಿಕೊಂಡರೆ ತಮ್ಮ ಅದೃಷ್ಟದೊಂದಿಗೆ ಮುನಿಸಿಕೊಳ್ಳುತ್ತಾರೆ. ಮುಂದಿರುವಂತಹ ಮಕ್ಕಳನ್ನು ನೋಡಿ-ನೋಡಿ ಅಪಾರ ಖುಷಿಯಾಗುತ್ತದೆ. ಇವರು ಬಹಳ ಚೆನ್ನಾಗಿದ್ದಾರೆ, ಇವರಲ್ಲಿ ಸ್ವಲ್ಪ ಬಲಹೀನತೆಯಿದೆ, ಇವರು ಬಹಳ ಸ್ವಚ್ಛವಾಗಿದ್ದಾರೆ. ಇವರಲ್ಲಿ ಸ್ವಲ್ಪ ತುಕ್ಕಿದೆ - ಈ ಎಲ್ಲಾ ಅಪವಿತ್ರತೆಯನ್ನು ತೆಗೆಯಬೇಕು. ತಂದೆಯಂತೆ ಪ್ರೀತಿ ಮಾಡುವವರು ಯಾರೂ ಇಲ್ಲ! ಸ್ತ್ರೀಗೆ ತನ್ನ ಪತಿಯೊಂದಿಗೆ ಪ್ರೀತಿಯಿರುತ್ತದೆ ಆದರೆ ಪತಿಗೆ ಅಷ್ಟೊಂದು ಪ್ರೀತಿಯಿರುವುದಿಲ್ಲ. ಅವರು ಎರಡನೆ, ಮೂರನೇ ಪತ್ನಿಯನ್ನು ಮಾಡಿಕೊಳ್ಳುತ್ತಾರೆ. ಪತ್ನಿಗೆ ತನ್ನ ಪತಿ ದೇಹಬಿಟ್ಟರೆ ಸಾಕು ಬಹಳ ದುಃಖಿಯಾಗಿಬಿಡುತ್ತಾಳೆ ಆದರೆ ಪುರುಷರು ಒಂದು ಚಪ್ಪಲಿ ಹೋದರೆ ಮತ್ತೊಂದನ್ನು ಮಾಡಿಕೊಂಡುಬಿಡುತ್ತಾರೆ. ಶರೀರಕ್ಕೆ ಚಪ್ಪಲಿ ಎಂದು ಹೇಳಲಾಗುತ್ತದೆ. ಶಿವತಂದೆಗೂ ಲಾಂಗ್ಬೂಟ್ (ಬ್ರಹ್ಮಾ) ಇದೆಯಲ್ಲವೆ! ನಾವು ನೆನಪು ಮಾಡುತ್ತೇವೆ, ಫಸ್ಟ್ಕ್ಲಾಸ್ ಆಗುತ್ತೇವೆ ಎಂದು ಈಗ ನೀವು ತಿಳಿದಿದ್ದೀರಿ - ಕೆಲಕೆಲವರು ಫ್ಯಾಷನ್ ಮಾಡುವವರಾಗಿರುತ್ತಾರೆ ಆದ್ದರಿಂದ 4-5 ಜೊತೆ ಚಪ್ಪಲಿಯನ್ನಿಟ್ಟುಕೊಂಡಿರುತ್ತಾರೆ. ಆದರೆ ಆತ್ಮನಿಗೆ ಒಂದೇ ಚಪ್ಪಲಿಯಾಗಿದೆ ಹಾಗೆಯೇ ಕಾಲಿನ ಚಪ್ಪಲಿಯೂ ಒಂದೇ ಇರಬೇಕು ಆದರೆ ಇದು ಫ್ಯಾಷನ್ ಆಗಿಬಿಟ್ಟಿದೆ.
ತಂದೆಯಿಂದ ಯಾವ ಆಸ್ತಿಯನ್ನು ಪಡೆಯುತ್ತೇವೆಂದು ಈಗ ನೀವು ತಿಳಿದಿದ್ದೀರಿ. ನಾವು ಆ ಸ್ವರ್ಗಕ್ಕೆ ಮಾಲೀಕರಾಗುತ್ತಿದ್ದೇವೆ, ಸ್ವರ್ಗಕ್ಕೆ ವಂಡರ್ ಆಫ್ ದಿ ವರ್ಲ್ಡ್ ಎಂದು ಹೇಳುತ್ತಾರೆ. ಅವಶ್ಯವಾಗಿ ಸ್ವರ್ಗಸ್ಥಾಪಕ ತಂದೆಯೇ ಸ್ವರ್ಗಸ್ಥಾಪನೆಯನ್ನು ಮಾಡುತ್ತಾರೆ. ಈಗ ನೀವು ಪ್ರತ್ಯಕ್ಷವಾಗಿ ಶ್ರೀಮತದಂತೆ ನಡೆದು ತಮಗಾಗಿ ಸ್ವರ್ಗ ಸ್ಥಾಪನೆ ಮಾಡುತ್ತಿದ್ದೀರಿ. ಇಲ್ಲಿ ಎಷ್ಟೊಂದು ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟುತ್ತಾರೆ ಆದರೆ ಇದೆಲ್ಲವೂ ವಿನಾಶವಾಗುತ್ತದೆ. ನೀವು ಅಲ್ಲಿ ಏನು ಮಾಡುತ್ತೀರಿ! ಇಲ್ಲಿ ನಮ್ಮ ಬಳಿ ಏನೂ ಇಲ್ಲವೆಂದು ಮನಸ್ಸಿನಲ್ಲಿ ಬರಬೇಕಾಗಿದೆ ಹಾಗೆಯೇ ಹೊರಗೆ ಗೃಹಸ್ಥದಲ್ಲಿರುತ್ತಾ ಎಲ್ಲವೂ ತಂದೆಯದ್ದಾಗಿದೆ, ನಮ್ಮದೇನೂ ಇಲ್ಲ, ನಾವು ನಿಮಿತ್ತರಾಗಿದ್ದೇವೆಂದು ಅವರೂ ತಿಳಿದುಕೊಳ್ಳುತ್ತಾರೆ, ನಿಮಿತ್ತರು ಏನೂ ಇಟ್ಟುಕೊಳ್ಳುವುದಿಲ್ಲ. ತಂದೆಯು ಮಾಲೀಕರಾಗಿದ್ದಾರೆ, ಇದೆಲ್ಲವೂ ತಂದೆಯದಾಗಿದೆ. ಮನೆಯಲ್ಲಿದ್ದೂ ಸಹ ಈ ರೀತಿ ತಿಳಿದುಕೊಳ್ಳಿ- ಶ್ರೀಮಂತರ ಬುದ್ಧಿಯಲ್ಲಿ ಈ ಮಾತುಗಳು ಬರುವುದಿಲ್ಲ. ತಂದೆಯು ತಿಳಿಸುತ್ತಾರೆ - ಟ್ರಸ್ಟಿಯಾಗಿರಿ. ಏನೇ ಮಾಡುತ್ತಿದ್ದರೂ ತಂದೆಗೆ ತಿಳಿಸಿ. ಬಾಬಾ, ಮನೆಯನ್ನು ಕಟ್ಟಲೇ ಎಂದು ಬರೆಯುತ್ತಾರೆ? ತಂದೆಯು ತಿಳಿಸುತ್ತಾರೆ - ಹಾ! ಭಲೆ ಕಟ್ಟಿ ಆದರೆ ಟ್ರಸ್ಟಿಯಾಗಿರಿ. ತಂದೆಯು ಕುಳಿತಿದ್ದಾರಲ್ಲವೆ. ತಂದೆಯು ಹಿಂತಿರುವಾಗ ಎಲ್ಲರೂ ಒಟ್ಟಿಗೆ ಹಿಂತಿರುಗುತ್ತಾರೆ. ತಮ್ಮ ಮನೆಗೆ ಹಿಂತಿರುಗುತ್ತೀರಿ. ನಂತರ ನೀವು ನಿಮ್ಮ ರಾಜಧಾನಿಯಲ್ಲಿ ಹೊರಟುಹೋಗುತ್ತೀರಿ. ತಂದೆಯು ಕಲ್ಪ-ಕಲ್ಪ ನಮ್ಮನ್ನು ಪಾವನರನ್ನಾಗಿ ಮಾಡಲು ಬರಬೇಕು. ನಾನು ನನ್ನ ಸಮಯದಲ್ಲಿ ಬರುತ್ತೇನೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಲ್ಲದರಿಂದ ಮಮತ್ವವನ್ನು ತೆಗೆದು ಒಬ್ಬ ಪ್ರಿಯತಂದೆಯನ್ನು ನೆನಪು ಮಾಡಬೇಕಾಗಿದೆ. ಅಂತರ್ಮುಖಿಯಾಗಿ ತಮ್ಮ ಕೊರತೆಗಳನ್ನು ಪರಿಶೀಲನೆ ಮಾಡಿ ತೆಗೆಯಬೇಕಾಗಿದೆ. ಬೆಲೆಯುಳ್ಳಂತಹ ವಜ್ರವಾಗಬೇಕಾಗಿದೆ.
2. ಹೇಗೆ ತಂದೆಯು ನಾವು ಮಕ್ಕಳಿಗೆ ಶೃಂಗರಿಸಿದ್ದಾರೆ ಹಾಗೆಯೇ ನಾವು ಸರ್ವರ ಶೃಂಗಾರ ಮಾಡಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆಯಲ್ಲಿ ತೊಡಗಬೇಕು. ಟ್ರಸ್ಟಿಯಾಗಿರಬೇಕಾಗಿದೆ.
ಓಂ ಶಾಂತಿ. ಬಾಪ್ದಾದಾ ಮಕ್ಕಳೊಂದಿಗೆ ಕೇಳುತ್ತಾರೆ - ಯಾರ ನೆನಪಿನಲ್ಲಿ ಕುಳಿತಿದ್ದೀರಿ? (ಶಿವ ತಂದೆಯ ನೆನಪಿನಲ್ಲಿ) ಮೇರು ಧ್ವನಿಯಲ್ಲಿ ಹೇಳಬೇಕು – ಶಿವ ತಂದೆಯ ನೆನಪಿನಲ್ಲಿ ಕುಳಿತಿದ್ದೇವೆ ಎಂದು. ನೀವು ಮಕ್ಕಳು ಅರ್ಥಾತ್ ಆತ್ಮರ ಸಂಬಂಧವು ಶಿವ ತಂದೆಯೊಂದಿಗೆ ಇದೆ. ನೀವು ಇವರ ಮೂಲಕ ಶಿವ ತಂದೆಯ ಮಕ್ಕಳಾಗುತ್ತೀರಿ ಏಕೆಂದರೆ ಶಿವ ತಂದೆಯು ಇವರ (ಬ್ರಹ್ಮಾ) ಮುಖಾಂತರವೇ ಮಿಲನ ಮಾಡುತ್ತಾರೆ. ಇವರನ್ನು ಮಧ್ಯದಲ್ಲಿ ದಲ್ಲಾಳಿಯೆಂದು ಹೇಳಲಾಗುತ್ತದೆ. ದಲ್ಲಾಳಿಯೊಂದಿಗೆ ನಿಮ್ಮದು ಯಾವುದೇ ಸಂಬಂಧವಿಲ್ಲ. ಇವರು ಕೇವಲ ಮಧ್ಯವರ್ತಿಯಾಗಿದ್ದಾರೆ ಅಂದಮೇಲೆ ನಿಮ್ಮ ಲೇವಾದೇವಿಯ ಲೆಕ್ಕಾಚಾರವು ತಂದೆಯೊಂದಿಗಿರಬೇಕು, ಇವರೊಂದಿಗಲ್ಲ. ಇವರ ಲೇವಾದೇವಿಯೂ ತಂದೆಯೊಂದಿಗೆ ಇದೆ. ಇವರೂ ಸಹ ಆ ತಂದೆಗೇ ಹೇಳುತ್ತಾರೆ - ಬಾಬಾ, ನನ್ನದೆಲ್ಲವೂ ನಿಮ್ಮದೇ ಎಂದು. ನಿಮಗೂ ಸಹ ಒಂದಂತೂ ನಿಶ್ಚಯವಿದೆ - ನಾವಾತ್ಮರಾಗಿದ್ದೇವೆ ಮತ್ತು ಎರಡನೇ ನಿಶ್ಚಯವಾಗಿದೆ - ನಾವಾತ್ಮರು ಈಗ ಪರಮಪಿತ ಪರಮಾತ್ಮನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಮನಸ್ಸಾ-ವಾಚಾ-ಕರ್ಮಣಾ, ತನು-ಮನ-ಧನದಿಂದ ನಾವು ಶಿವ ತಂದೆಗೆ ಸಹಯೋಗಿಗಳಾಗುತ್ತೇವೆ. ಇವೆಲ್ಲವನ್ನೂ ಶಿವ ತಂದೆಗೆ ಅರ್ಪಣೆ ಮಾಡಲಾಗಿದೆ ನಂತರ ಶಿವ ತಂದೆಯು ಹೀಗೆ ಇದನ್ನು ಉಪಯೋಗಿಸಿ ಎಂದು ಸಲಹೆ ನೀಡುತ್ತಾರೆ, ಇದಕ್ಕೆ ಶ್ರೀಮತವೆಂದು ಹೇಳಲಾಗುತ್ತದೆ, ಸ್ವಯಂ ತಂದೆಯೇ ಹೇಳುತ್ತಾರೆ - ನಾನು ಈ ಹಳೆಯ ತನುವಿನಲ್ಲಿ ಪ್ರವೇಶ ಮಾಡುತ್ತೇನೆ, ಇವರೂ ಸಹ ಪತಿತನಿಂದ ಪಾವನನಾಗುತ್ತಿದ್ದಾರೆ. ಇದನ್ನು ಯಾರು ಹೇಳಿದರು? ಶಿವ ತಂದೆ. ಈ ಬ್ರಹ್ಮನೂ ಸಹ ಪಾವನನಾಗುತ್ತಿದ್ದಾರೆ, ಇವರದೂ ನನ್ನ ಜೊತೆ ಲೆಕ್ಕಾಚಾರವಿದೆ, ಇವರ ಜೊತೆ ಯಾರದೇ ಲೆಕ್ಕಾಚಾರವಿಲ್ಲ. ನೀವು ಶಿವಬಾಬಾ ಛಿ/o ಬ್ರಹ್ಮಾ ಎಂದು ಪತ್ರ ಬರೆಯುತ್ತೀರಿ ಆದರೆ ಮಾಯೆಯು ಇಷ್ಟು ಪ್ರಬಲವಾಗಿದೆ ನಿರಂತರ ನೆನಪು ಮಾಡಲು ಬಿಡುವುದಿಲ್ಲ. ಬುದ್ಧಿಯೋಗವನ್ನು ಪದೇ-ಪದೇ ವಿಚಲಿತ ಮಾಡುತ್ತದೆ. ಒಂದುವೇಳೆ ಇದೇ ಪಕ್ಕಾ ಪುರುಷಾರ್ಥ ಮಾಡಿದ್ದೇ ಆದರೆ ಬೇರೆಲ್ಲವೂ ಮರೆತು ಹೋಗುವುದು, ಶರೀರವೂ ಮರೆತು ಹೋಗುವುದು. ಈ ಶರೀರವಿರುತ್ತದೆ ಆದರೆ ಆತ್ಮಕ್ಕೆ ಇವೆಲ್ಲಾ ವಸ್ತುಗಳಿಂದ ತಿರಸ್ಕಾರವುಂಟಾಗುತ್ತದೆ. ಈ ಸ್ಥಿತಿಯನ್ನು ಹೊಂದುವ ಅಭ್ಯಾಸ ಮಾಡಬೇಕಾಗಿದೆ. ಅಂತ್ಯದಲ್ಲಿ ನಿಮಗೆ ತನ್ನ ಶರೀರವೂ ನೆನಪಿಗೆ ಬರಬಾರದು. ತಂದೆಯು ಹೇಳುತ್ತಾರೆ - ತಮ್ಮನ್ನು ಅಶರೀರಿ ಎಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿ. ನಾನು ಸದಾ ಅಶರೀರಿಯಾಗಿದ್ದೇನೆ, ನೀವೂ ಅಶರೀರಿಯಾಗಿದ್ದೀರಿ ನಂತರ ನೀವು ಪಾತ್ರವನ್ನಭಿನಯಿಸಿದಿರಿ. ಈಗ ಮತ್ತೆ ನೀವು ಪಾತ್ರವನ್ನಭಿನಯಿಸಬೇಕಾಗಿದೆ. ಇದೇ ಪರಿಶ್ರಮವಿದೆ. ವಿಶ್ವದ ಮಾಲೀಕರಾಗುವುದು ಕಡಿಮೆ ಮಾತೇನು! ಮನುಷ್ಯರೇ ವಿಶ್ವದ ಮಾಲೀಕರಾಗುತ್ತಾರೆ, ಈ ದೇವತೆಗಳೂ ಸಹ ಮನುಷ್ಯರೇ ಆಗಿದ್ದಾರೆ ಆದರೆ ಇವರಿಗೆ ದೈವೀ ಗುಣವುಳ್ಳ ದೇವತೆಗಳೆಂದು ಹೇಳಲಾಗುತ್ತದೆ. ಲಕ್ಷ್ಮೀ-ನಾರಾಯಣರು ವಿಶ್ವದ ಮಾಲೀಕರಾಗಿದ್ದರು, ಇವರಿಗೆ ತಮ್ಮ ಮಕ್ಕಳೂ ಇರುತ್ತಾರೆ, ಅವರೇ ಇವರನ್ನು ತಂದೆ-ತಾಯಿಯೆಂದು ಒಪ್ಪುತ್ತಾರೆ ಆದರೆ ಈಗಿನ ಮನುಷ್ಯರು ಅಂಧಶ್ರದ್ಧೆಯಿಂದ ಈ ಲಕ್ಷ್ಮೀ-ನಾರಾಯಣರಿಗೂ ತ್ವಮೇವ ಮಾತಾಶ್ಚ ಪಿತಾ.... ಎಂದು ಹೇಳುತ್ತಾರೆ. ವಾಸ್ತವದಲ್ಲಿ ಇದು ಶಿವ ತಂದೆಯ ಮಹಿಮೆಯಾಗಿದೆ. ತಾವು ಸರ್ವ ಗುಣ ಸಂಪನ್ನರು ಎಂದು ದೇವತೆಗಳ ಮಹಿಮೆಯನ್ನು ಹಾಡುತ್ತಾರೆ ಆದರೆ ಅವರಿಗೆ ಏಕೆ ಪೂಜೆ ಮಾಡುತ್ತೇವೆ ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಾತಾಪಿತಾ.... ಎಂದು ಈ ರೀತಿಯ ಮಹಿಮೆಯನ್ನು ನೀವೀಗ ಹಾಡುವುದಿಲ್ಲ. ನಿಮಗೆ ತಿಳಿದಿದೆ, ಶಿವ ತಂದೆಯು ನಿರಾಕಾರ ಪರಮಪಿತ ಪರಮಾತ್ಮನಾಗಿದ್ದಾರೆ. ಅವರಿಂದಲೇ ಅಪಾರ ಸುಖ ಸಿಗುತ್ತದೆ ಬಾಕಿ ಯಾರೆಲ್ಲಾ ಸಂಬಂಧಿ ಮೊದಲಾದವರಿದ್ದಾರೆಯೋ ಅವರಿಂದ ದುಃಖವೇ ಸಿಗುತ್ತದೆ. ಇವರಂತೂ ಸ್ಯಾಕ್ರೀನ್ ಆಗಿದ್ದಾರೆ ಯಾರಿಂದ ಸರ್ವ ಸಂಬಂಧಗಳ ರಸದ ಅನುಭೂತಿಯಾಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ - ಚಿಕ್ಕಪ್ಪ, ದೊಡ್ಡಪ್ಪ, ಮಾವ ಮೊದಲಾದವರೆಲ್ಲರಿಂದ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿರಿ. ನೀವೇ ಹಾಡುತ್ತೀರಿ - ದುಃಖಹರ್ತ-ಸುಖಕರ್ತ.... ಎಂದು. ಸರ್ವರ ಸದ್ಗತಿದಾತನೂ ಒಬ್ಬರೇ ಆಗಿದ್ದಾರೆ, ಅವರೇ ನಮ್ಮ ಸರ್ವಸ್ವವಾಗಿದ್ದಾರೆ. ಲೌಕಿಕ ತಂದೆಯಿಂದಲೂ ದುಃಖ ಸಿಗುತ್ತದೆ ಬಾಕಿ ಶಿಕ್ಷಕರಿಂದ ಯಾರಿಗೂ ದುಃಖ ಸಿಗುವುದಿಲ್ಲ. ಶಿಕ್ಷಕರ ಬಳಿ ಹೋಗಿ ಓದುವುದರಿಂದ ಶರೀರ ನಿರ್ವಹಣೆ ಮಾಡಿಕೊಳ್ಳುತ್ತೀರಿ. ಕಲೆಯನ್ನು ಕಲಿಸುವವರೂ ಇರುತ್ತಾರೆ, ಅವರೆಲ್ಲರೂ ಅಲ್ಪಕಾಲಕ್ಕಾಗಿ ಶಿಕ್ಷಣ ನೀಡುತ್ತಾರೆ. ಭಕ್ತಿಯಲ್ಲಿಯೂ ಮಹಿಮೆಯನ್ನು ಒಬ್ಬ ರಾಮ ಅಥವಾ ಪರಮಪಿತ ಪರಮಾತ್ಮನಿಗೇ ಮಾಡುತ್ತಾರೆ, ಅವರನ್ನೇ ನೆನಪು ಮಾಡುತ್ತಾರೆ. ವಾಸ್ತವದಲ್ಲಿ ಭಕ್ತಿಯನ್ನೂ ಒಬ್ಬರಿಗೇ ಮಾಡಬೇಕಾಗಿದೆ, ಅವರೊಬ್ಬರೇ ನಿಮ್ಮನ್ನು ಪೂಜ್ಯರನ್ನಾಗಿ ಮಾಡುತ್ತಾರೆ. ನೀವು ಮೊಟ್ಟ ಮೊದಲು ಒಬ್ಬ ಶಿವ ತಂದೆಯ ಪೂಜೆ ಮಾಡುತ್ತೀರಿ ಅದಕ್ಕೆ ಸತೋಪ್ರಧಾನ ಭಕ್ತಿಯೆಂದು ಹೇಳಲಾಗುತ್ತದೆ. ನಂತರ ಆತ್ಮವೂ ಸಹ ಸತೋಪ್ರಧಾನದಿಂದ ಸತೋ, ರಜೋ, ತಮೋ ಆಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವೇ ಪೂಜಾರಿಗಳಾಗಿದ್ದೇವೆ, ಮೊದಲು ಒಬ್ಬ ಶಿವನಿಗೆ ಪೂಜೆ ಮಾಡುತ್ತೇವೆ ನಂತರ ಕಲೆಗಳು ಕಡಿಮೆಯಾಗತೊಡಗುತ್ತದೆ. ಭಕ್ತಿಯೂ ಸಹ ಸತೋಪ್ರಧಾನದಿಂದ ಸತೋ, ರಜೋ, ತಮೋ ಆಗಿ ಬಿಡುತ್ತದೆ. ಇಡೀ ನಾಟಕವು ನಿಮ್ಮ ಮೇಲೆ ಮಾಡಲ್ಪಟ್ಟಿದೆ. ತಾನೇ ಪೂಜ್ಯ, ತಾನೇ ಪೂಜಾರಿ, ಯಾರು 84 ಜನ್ಮಗಳನ್ನು ಪೂರ್ಣ ತೆಗೆದುಕೊಳ್ಳುವರೋ ಅವರದೇ ಕಥೆಯಿದೆ. ಅವರಿಗೇ ತಂದೆಯು ಕುಳಿತು ನೀವು 84 ಜನ್ಮಗಳನ್ನು ಹೇಗೆ ತೆಗೆದುಕೊಂಡಿದ್ದೀರಿ ಎಂಬುದನ್ನು ತಿಳಿಸುತ್ತಾರೆ. ಅವರದೇ ಲೆಕ್ಕವಿದೆ. ಯಾರು ಮೊಟ್ಟ ಮೊದಲು ಪೂಜ್ಯ ದೇವಿ-ದೇವತೆಗಳಾಗುವರೋ ಅವರೇ ಪೂಜಾರಿಗಳಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಕಲ್ಪ-ಕಲ್ಪವೂ ಬಂದು ನಿಮಗೆ ಓದಿಸುತ್ತೇನೆ ಮತ್ತು ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುತ್ತೇನೆ, ರಾಜಯೋಗವನ್ನು ಕಲಿಸುತ್ತೇನೆ. ಗೀತೆಯಲ್ಲಿ ತಪ್ಪಾಗಿ ಕೃಷ್ಣ ಭಗವಾನುವಾಚ ಎಂದು ಬರೆದು ಬಿಟ್ಟಿದ್ದಾರೆ. ಭಗವಂತನು ಒಬ್ಬರೇ ಆಗಿರುವರು, ಮನುಷ್ಯರಂತೂ ಕಲ್ಲು, ಮುಳ್ಳು, ಕಣ ಕಣದಲ್ಲಿಯೂ ಪರಮಾತ್ಮನಿದ್ದಾರೆಂದು ಹೇಳುತ್ತಾರೆ ಆದರೆ ಇದು ಸಾಧ್ಯವಿಲ್ಲ. ಭಗವಂತನ ಮಹಿಮೆಯು ಅಪರಮಪಾರವಾಗಿದೆ. ಹೇಳುತ್ತಾರೆ - ಹೇ ತಂದೆಯೇ, ನಿಮ್ಮ ಗತಿಮತವು ಭಿನ್ನವಾಗಿದೆ ಅರ್ಥಾತ್ ನಿಮ್ಮ ಶ್ರೀಮತವು ಎಲ್ಲದಕ್ಕಿಂತ ಭಿನ್ನವಾಗಿದೆ. ತಂದೆಗೆ ಗತಿ-ಸದ್ಗತಿದಾತ, ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಆಗ ಬುದ್ಧಿಯು ಮೇಲೆ ಹೋಗುತ್ತದೆ. ದುಃಖದ ಸಮಯದಲ್ಲಿ ಅವರ ನೆನಪೇ ಬರುತ್ತದೆ. ಒಂದುವೇಳೆ ರಾಮ-ಸೀತೆಯು ಬುದ್ಧಿಯಲ್ಲಿದ್ದರೆ ಮತ್ತೆ ಇಡೀ ರಾಮಾಯಣವೇ ಬುದ್ಧಿಯಲ್ಲಿ ಬಂದು ಬಿಡುವುದು. ನೀವಂತೂ ಆ ಒಬ್ಬ ತಂದೆಯನ್ನೇ ಕರೆಯುತ್ತೀರಿ. ಆ ತಂದೆಯ ವಿನಃ ಯಾವುದೇ ಸಾಕಾರಿ ಮನುಷ್ಯ ಅಥವಾ ಆಕಾರಿ ದೇವತೆಯೊಂದಿಗೆ ಬುದ್ಧಿಯನ್ನಿಡಬಾರದು. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಯಾವುದೇ ಸತ್ಸಂಗದಲ್ಲಿ ಹೋಗಿ ಇದನ್ನೇ ಹಾಡುತ್ತಾರೆ - ಪತಿತ-ಪಾವನ ಸೀತಾರಾಂ, ಆದರೆ ಅರ್ಥವೇನೂ ಇಲ್ಲ. ಇದೆಲ್ಲವೂ ಭಕ್ತಿಮಾರ್ಗದ ಗಾಯನವಾಗಿದೆ. ಎಲ್ಲರೂ ರಾವಣನ ಬಂಧನದಲ್ಲಿದ್ದಾರೆ. ಭಕ್ತಿಮಾರ್ಗದಲ್ಲಿ ಬಹಳ ಅಲೆಯುತ್ತಾರೆ. ಇಲ್ಲಿ ಅಲೆದಾಡುವ ಮಾತಿಲ್ಲ. ತಂದೆಯು ತಿಳಿಸುತ್ತಾರೆ, ಮಕ್ಕಳಿಗೆ ಎಲ್ಲಾ ಅಂಶಗಳೂ ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನಿಯಮಿತವಾಗಿ ವಿದ್ಯಾಭ್ಯಾಸ ಮಾಡಬೇಕಾಗಿದೆ. ಒಂದುವೇಳೆ ಯಾವುದೇ ಕಾರಣದಿಂದ ಮುಂಜಾನೆ ಬರಲು ಸಾಧ್ಯವಾಗಲಿಲ್ಲವೆಂದರೆ ಮಧ್ಯಾಹ್ನದ ಸಮಯದಲ್ಲಾದರೂ ಬರಬೇಕಾಗಿದೆ. ಯಾರಿಗೂ ತೊಂದರೆ ಕೊಡಬಾರದು. ಇಡೀದಿನ ಸಮಯವಿರುತ್ತದೆ, ಯಾವುದೇ ಸಮಯದಲ್ಲಿ ಹೋಗಿ ಓದಬೇಕಾಗಿದೆ. ಈ ಕನ್ಯೆಯರು ಬೆಳಗ್ಗೆಯಿಂದ ಹಿಡಿದು ರಾತ್ರಿಯವರೆಗೆ ಸೇವೆಯಲ್ಲಿರುತ್ತಾರೆ, ಇಡೀ ದಿನ ಸೇವಾಕೇಂದ್ರಗಳು ತೆರೆದಿರುತ್ತದೆ. ಯಾರಾದರೂ ಬರಲಿ ಅವರಿಗೆ ಮಾರ್ಗ ತಿಳಿಸಬೇಕಾಗಿದೆ. ಮೊಟ್ಟ ಮೊದಲಿಗೆ ತಿಳಿಸಬೇಕು - ವಿಚಾರ ಮಾಡಿ, ನಿಮಗೆ ಇಬ್ಬರು ತಂದೆಯರಿದ್ದಾರೆ. ದುಃಖದಲ್ಲಿ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರಲ್ಲವೆ. ಈಗ ಶಿವ ತಂದೆಯು ತಿಳಿಸುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ಇದು ಅದೇ ಮಹಾಭಾರತ ಯುದ್ಧವಾಗಿದೆ, ಭಲೆ ದೊಡ್ಡ-ದೊಡ್ಡ ಪದಮಾಪತಿ, ಕೋಟ್ಯಾಧಿಪತಿಗಳಿದ್ದಾರೆ. ದೊಡ್ಡ-ದೊಡ್ಡ ಬಂಗಲೆಗಳನ್ನು ಕಟ್ಟಿಸುತ್ತಾರೆ ಆದರೆ ಅದರಲ್ಲಿ ಅವರು ಇರುತ್ತಾರೆಯೇ? ಇವೆಲ್ಲವೂ ಮಣ್ಣು ಪಾಲಾಗಲಿವೆ. ಕಲಿಯುಗದ ಆಯಸ್ಸು ಲಕ್ಷಾಂತರ ವರ್ಷಗಳಿದೆ ಎಂದು ಅವರು ತಿಳಿದುಕೊಳ್ಳುತ್ತಾರೆ, ಇದಕ್ಕೆ ಘೋರ ಅಂಧಕಾರವೆಂದು ಹೇಳಲಾಗುತ್ತದೆ. ಯಾರ ಬಳಿಯಾದರೂ ಹಣವಿದ್ದರೆ ಬಾಬಾ, ಮನೆ ಕಟ್ಟಿಸುವುದೇ ಎಂದು ಕೇಳುತ್ತಾರೆ. ತಂದೆಯು ಹೇಳುತ್ತಾರೆ - ಹಣವಿದ್ದರೆ ಭಲೆ ಕಟ್ಟಿಸಿ, ಹಣವಂತೂ ಮಣ್ಣು ಪಾಲಾಗುತ್ತದೆಯಲ್ಲವೆ. ಇದಂತೂ ಅಶಾಶ್ವತವಾಗಿದೆ. ಇಲ್ಲದಿದ್ದರೆ ಇದೆಲ್ಲಾ ಹಣವು ಹೊರಟು ಹೋಗುತ್ತದೆ, ಏನೂ ಇರುವುದಿಲ್ಲ. ಭಲೆ ಕಟ್ಟಿಸಿ ಮತ್ತೆ ಅದರಲ್ಲಿ ಗೀತಾ ಪಾಠಶಾಲೆಯ ಪ್ರಬಂಧ ಮಾಡಿ. ಯಾರೇ ನಿಮ್ಮ ಬಾಗಿಲಿಗೆ ಬಂದರೂ ಸಹ ಅವರಿಗೆ ಜ್ಞಾನದ ಭಿಕ್ಷೆ ನೀಡಿ. ಅದರಿಂದ ಅವರನ್ನು ವಿಶ್ವದ ಮಾಲೀಕರನ್ನಾಗಿ ಮಾಡಿರಿ. ನಿಮ್ಮ ಬಳಿ ಅಪಾರ ಜ್ಞಾನ ಧನವಿದೆ, ಇಷ್ಟೊಂದು ಯಾರ ಬಳಿಯೂ ಇರುವುದಿಲ್ಲ. ನಿಮ್ಮಲ್ಲಿಯೂ ಜ್ಞಾನರತ್ನಗಳು ಯಾರಲ್ಲಿ ತುಂಬಿಕೊಂಡಿರುತ್ತದೆಯೋ ಅಂತಹವರೇ ಎಲ್ಲರಿಗಿಂತ ಸಾಹುಕಾರರಾಗಿದ್ದರೆ. ಯಾರೇ ಬಂದರೂ ಅವರ ಜೋಳಿಗೆಯನ್ನು ತುಂಬಿಸಿ. ನಿಮ್ಮ ಬಳಿ ಅಪಾರವಾದ ಖಜಾನೆಯಿದೆ. ಕೇವಲ ಈ ಬೋರ್ಡನ್ನು ಹಾಕಿರಿ, ನಿಮಗೆ ಸ್ವರ್ಗದ ಸದಾ ಸುಖದ ಆಸ್ತಿಯನ್ನು ಪಡೆಯಲು ಮಾರ್ಗವನ್ನು ತೋರಿಸುತ್ತೇವೆ ಆದರೆ ಮಕ್ಕಳಿಗೆ ಈ ನಶೆಯಿರುವುದಿಲ್ಲ. ಇಲ್ಲಿರುವಾಗ ನಶೆಯೇರುತ್ತದೆ, ಹೊರಗೆ ಹೋದ ನಂತರ ನಶೆಯು ಮರೆತು ಹೋಗುತ್ತಾರೆ. ಆಸಕ್ತಿಯಿರಬೇಕಾಗಿದೆ. ಯಾರೇ ಬಂದರೂ ಅವರಿಗೆ ದಾರಿಯನ್ನು ತೋರಿಸಿದಾಗ ದೋಣಿಯು ಪಾರಾಗಿ ಬಿಡುವುದು. ನಿಮ್ಮಬಳಿ ಬಹಳ ಭಾರಿ ಹಣವಿದೆ, ಯಾವುದೇ ವಿಕಾರಿ ಅಥವಾ ಲಕ್ಷಾಧೀಪತಿ ಬಂದರೂ ಬಹಳ ರತ್ನಗಳನ್ನು ಕೊಡಬಹುದು. ಬಾಬಾ, ಇಲ್ಲಿ ನಶೆಯೇರುತ್ತದೆ ನಂತರ ಸೋಡಾ ನೀರಾಗಿ ಬಿಡುತ್ತದೆ, ತಂದೆಯು ನಿಮ್ಮನ್ನು ಅವಿನಾಶಿ ಜ್ಞಾನರತ್ನಗಳನ್ನು ನಂಬರ್ವಾರ್ ಆಗಿ ಜೋಳಿಗೆಯನ್ನು ತುಂಬಿಸುತ್ತಾರೆ. ಯಾರ ಅದೃಷ್ಟದಲ್ಲಿರುತ್ತದೆಯೋ ಅವರು ಸಂಪೂರ್ಣ ಧಾರಣೆ ಮಾಡುತ್ತಾರೆ. ಪ್ರಯತ್ನ ಪಟ್ಟು ನಿರಂತರ ನೆನಪಿನಲ್ಲಿರಬೇಕಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಸೇವಾಕೇಂದ್ರದಲ್ಲಿ ಒಂದು ಕಡೆ ಕುಳಿತು ಬಿಡುವುದು ಎಂದಲ್ಲ. ಇಲ್ಲ. ನಡೆದಾಡುತ್ತಾ-ತಿರುಗಾಡುತ್ತಾ ಸಮಯ ಸಿಕ್ಕಿದಾಗಲೆಲ್ಲಾ ತಂದೆಯನ್ನು ನೆನಪು ಮಾಡಬೇಕು. ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ತಂದೆಯ ಜೊತೆ ಜೋಡಣೆಯಾಗಿರಲಿ. ತಂದೆಯ ನೆನಪಿನಿಂದ ನಿಮ್ಮದು ಬಹಳ ಕಲ್ಯಾಣವಾಗುವುದು. 21 ಜನ್ಮಗಳಿಗೆ ನೀವು ಸಾಹುಕಾರರಾಗಿ ಬಿಡುತ್ತೀರಿ. ಬೇಹದ್ದಿನ ತಂದೆ, ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಭಾರತ ಸ್ವರ್ಗವಾಗಿತ್ತು, ಈಗ ನರಕವಾಗಿದೆ.
ನನ್ನನ್ನು ನೆನಪು ಮಾಡಿ ನಿಮ್ಮ ಆತ್ಮವು ಸತೋಪ್ರಧಾನರಾಗಿ ಬಿಡುತ್ತದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡುತ್ತೀರಿ ಅಂದಮೇಲೆ ನಶೆಯೇರುತ್ತದೆ. ಸ್ವರ್ಗದಲ್ಲಂತೂ ನೀವು ಮಕ್ಕಳಿಗೆ ಅಪಾರ ಸುಖ ಸಿಗುತ್ತದೆ. ಶಾಸ್ತ್ರಗಳಲ್ಲಂತೂ ಎಷ್ಟೊಂದು ದಂತ ಕಥೆಗಳನ್ನು ಬರೆದಿದ್ದಾರೆ. ಗಾಯನವಿದೆ – ರಾಮ ರಾಜ, ರಾಮ ಪ್ರಜಾ.... ಧರ್ಮದ ಉಪಕಾರವಿದೆ. ನಂತರ ರಾಮನ ಸೀತೆಯನ್ನು ಕದ್ದಕೊಂಡು ಹೋದನು, ವಾನರ ಸೈನ್ಯವನ್ನು ತೆಗೆದುಕೊಂಡನು... ಎಂದು ಹೇಳುತ್ತಾರೆ. ಮುಂಚೆ ನೀವೂ ಓದುತ್ತಿದ್ದಿರಿ ಆದರೆ ಏನೂ ತಿಳಿದಿರಲಿಲ್ಲ, ಈಗ ಎಷ್ಟೊಂದು ತಿಳುವಳಿಕೆ ಬಂದಿದೆ. ಎಷ್ಟೊಂದು ಆಶ್ಚರ್ಯಕರ ಮಾತನ್ನು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ನಾನೂ ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ತ್ರಿಮೂರ್ತಿಗಳಲ್ಲಿ ಬ್ರಹ್ಮಾ-ವಿಷ್ಣು-ಶಂಕರರನ್ನು ತೋರಿಸುತ್ತಾರೆ. ಆದರೆ ವಿಷ್ಣು ಯಾರು, ಎಲ್ಲಿ ವಾಸ ಮಾಡುತ್ತಾನೆ ಎಂಬುದು ಯಾರಿಗೂ ತಿಳಿದಿಲ್ಲ. ವಿಷ್ಣುವಿನ ಮಂದಿರವನ್ನು ನರ-ನಾರಾಯಣರ ಮಂದಿರವೆಂದು ಕರೆಯುತ್ತಾರೆ ಆದರೆ ಅದರ ಅರ್ಥವನ್ನು ಒಂದುಸ್ವಲ್ಪವೂ ತಿಳಿದಿಲ್ಲ. ವಿಷ್ಣುವಿನ ಎರಡು ರೂಪಗಳು ಲಕ್ಷ್ಮೀ-ನಾರಾಯಣರಾಗಿದ್ದಾರೆ ಯಾರು ಸತ್ಯಯುಗದಲ್ಲಿ ರಾಜ್ಯವನ್ನು ಮಾಡುತ್ತಿದ್ದರು. ಈಗ ನೀವು ಮನುಷ್ಯರಿಂದ ದೇವತೆಗಳಾಗುತ್ತಿದ್ದೀರಿ. ಯಾರೇ ಬಂದರೂ ಸಹ ಹೇಳಿ, ಇವರು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದಾರೆ. ಅಂದಮೇಲೆ ಪ್ರಜಾಪಿತ ಬ್ರಹ್ಮನು ಎಲ್ಲರ ತಂದೆಯಾದರಲ್ಲವೆ. ಬಹಳಷ್ಟು ಜನ ಪ್ರಜೆಗಳಿದ್ದಾರೆ, ಹೆಸರಂತೂ ಕೇಳಿದ್ದೀರಲ್ಲವೆ. ಭಗವಂತನು ಬ್ರಹ್ಮನ ಮೂಲಕ ಬ್ರಾಹ್ಮಣರನ್ನು ರಚಿಸಿದರು, ತಂದೆಯು ಅವಶ್ಯವಾಗಿ ಮಕ್ಕಳಿಗೆ ಆಸ್ತಿಯನ್ನು ಕೊಟ್ಟಿರಬೇಕಲ್ಲವೆ. ನೀವು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ನೀವು ಶಿವ ತಂದೆಯಿಂದ ಆಸ್ತಿಯನ್ನು ಪಡೆಯುತ್ತೀರಿ. ಒಬ್ಬರು ಲೌಕಿಕ ತಂದೆ, ಇನ್ನೊಬ್ಬರು ಪಾರಲೌಕಿಕ ತಂದೆಯಾಗಿದ್ದಾರೆ. ಈಗ ನಿಮಗೆ ಅಲೌಕಿಕ ತಂದೆಯು ಸಿಕ್ಕಿದ್ದಾರೆ, ಇವರು ವಜ್ರ ವ್ಯಾಪಾರಿಯಾಗಿದ್ದರು. ಇವರಿಗೇನಾದರೂ ಮೊದಲು ತಿಳಿದಿತ್ತೆ! ಇವರಿಗೇ ಹೇಳುತ್ತಾರೆ - ಇವರ ಬಹಳ ಜನ್ಮಗಳ ಅಂತಿಮ ಜನ್ಮದಲ್ಲಿ ಬಂದು ನಾನು ಪ್ರವೇಶ ಮಾಡುತ್ತೇನೆ. ವಾನಪ್ರಸ್ಥಿಯಾಗುವ ಪದ್ಧತಿಯು ಭಾರತದಲ್ಲಿಯೇ ಇದೆ, 60 ವರ್ಷಗಳ ನಂತರ ಗುರುಗಳ ಬಳಿ ಹೋಗುತ್ತಾರೆ, ತಂದೆಯು ಇವರಲ್ಲಿ ಪ್ರವೇಶ ಮಾಡಿ, ಮನೆಗೆ ಮನೆಗೆ ಹೋಗಬೇಕೆಂದು ಹೇಳುತ್ತಾರೆ. ಮುಕ್ತಿಯನ್ನಂತೂ ಎಲ್ಲರೂ ಬಯಸುತ್ತಾರೆ ಆದರೆ ಹೋಗುವುದು ಯಾರಿಗೂ ಗೊತ್ತಿಲ್ಲ. ಬ್ರಹ್ಮ್ದಲ್ಲಿ ಯಾರೂ ಲೀನವಾಗಲು ಸಾಧ್ಯವಿಲ್ಲ. ಈ ಸೃಷ್ಟಿಯ ಚಕ್ರವಂತೂ ಸುತ್ತುತ್ತಲೇ ಇರುತ್ತದೆ, ಎಲ್ಲರೂ ಪಾತ್ರವನ್ನಭಿನಯಿಸಲೇಬೇಕು. ಪ್ರಪಂಚದ ಭೂಗೋಳ-ಇತಿಹಾಸವು ಪುನರಾವರ್ತನೆಯಾಗುತ್ತದೆ ಎಂದು ಹೇಳುತ್ತಾರೆ. ಇದು ಅನಾದಿಯ ನಾಟಕವು ಮಾಡಲ್ಪಟ್ಟಿದೆ. 84 ಜನ್ಮಗಳ ಪಾತ್ರವನ್ನು ನೀವೇ ಅಭಿನಯಿಸುತ್ತೀರಿ. ಇದು ಜ್ಞಾನದ ನೃತ್ಯವಾಗುವುದು. ಅವರು ನಂತರ ಡಮರುಗವನ್ನು ತೋರಿಸುತ್ತಾರೆ. ಸೂಕ್ಷ್ಮವತನವಾಸಿ ಶಂಕರನು ಡಮರುಗವನ್ನು ಹೇಗೆ ಬಾರಿಸಲು ಸಾಧ್ಯ!
ನೀವು ವಾನರ ಸಮಾನ ಇದ್ದಿರಿ ಎಂದು ತಂದೆಯು ತಿಳಿಸುತ್ತಾರೆ. ಅಂದಮೇಲೆ ನೀವು ವಾನರರ ಸೇನೆಯನ್ನೇ ತೆಗೆದುಕೊಂಡರು. ನಿಮ್ಮ ಮುಂದೆ ಬಾಬಾ ಜ್ಞಾನದ ಡಮರುಗವನ್ನು ಬಾರಿಸುತ್ತಾರೆ, ನಿಮಗೇ ಜ್ಞಾನವನ್ನು ಕೊಡುತ್ತಾರೆ. ಈಗ ಮುಖ ಲಕ್ಷಣ ಬದಲಾಗುತ್ತಿದೆ. ಕಾಮ ಚಿತೆಯ ಮೇಲೆ ಕುಳಿತು ನೀವು ಕಪ್ಪಗಾಗಿ ಬಿಟ್ಟಿದ್ದೀರಿ. ನಿಮ್ಮನ್ನು ಪುನಃ ಜ್ಞಾನ ಚಿತೆಯ ಮೇಲೆ ಕೂರಿಸಿ, ಕಪ್ಪಾಗಿರುವವರಿಂದ ಸುಂದರರನ್ನಾಗಿ ತಂದೆಯು ಮಾಡಿ ಬಿಡುತ್ತಾರೆ. ಈ ತಂದೆಯು ಎಷ್ಟೊಂದು ನಶೆಯೇರಿಸಿ ಬಿಡುತ್ತಾರೆ ಅಂದಮೇಲೆ ನಂತರ ಅದನ್ನು ಏಕೆ ಕಳೆದುಕೊಳ್ಳುತ್ತೀರಿ! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯು ಯಾವ ಅಪಾರ ಜ್ಞಾನ ಧನವನ್ನು ಕೊಟ್ಟಿದ್ದಾರೆ ಅದನ್ನು ಸ್ವಯಂನಲ್ಲಿ ಧಾರಣೆ ಮಾಡಿ ಸಾಹುಕಾರರಾಗಬೇಕಾಗಿದೆ ಮತ್ತು ಎಲ್ಲರಿಗೂ ದಾನ ಮಾಡಬೇಕಾಗಿದೆ. ಯಾರೇ ಬಂದರೂ ಅವರ ಜೋಳಿಗೆಯನ್ನು ತುಂಬಬೇಕಾಗಿದೆ.
2. ತಂದೆಯ ನೆನಪಿನಿಂದಲೇ ಕಲ್ಯಾಣವಾಗಬೇಕಾಗಿದೆ ಆದ್ದರಿಂದ ನಡೆದಾಡುತ್ತಾ ಎಷ್ಟು ಸಾಧ್ಯವೋ ಅಷ್ಟು ತಂದೆಯ ನೆನಪಿನಲ್ಲಿರಬೇಕು. ಎಲ್ಲಾ ಸಂಬಂಧಗಳ ರಸವನ್ನು ತಂದೆಯಿಂದಲೇ ತೆಗೆದುಕೊಳ್ಳಬೇಕಾಗಿದೆ.
ಓಂ ಶಾಂತಿ. ತಂದೆಯು ಹೇಳುತ್ತಾರೆ - ಮಧುರ ಮಕ್ಕಳೇ, ನಾವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೇವೆ ಎಂಬುದನ್ನು ಮರೆಯಬೇಡಿ, ಇದನ್ನು ಮರೆತರೆ ತಮ್ಮನ್ನು ಅಳುವಂತೆ ಮಾಡಿಕೊಳ್ಳುತ್ತೀರಿ. ಛೀ ಛೀ ಪ್ರಪಂಚದ ಕಡೆ ಬುದ್ಧಿಯು ಹೊರಟು ಹೋಗುವುದು. ತಂದೆಯ ನೆನಪಿನಲ್ಲಿರುವುದರಿಂದ ಅತೀಂದ್ರಿಯ ಸುಖವು ಭಾಸವಾಗುತ್ತದೆ, ತಂದೆಯನ್ನು ಮರೆತರೆ ಆ ಸುಖವೂ ಮಾಯವಾಗುವುದು. ಪ್ರತೀ ಘಳಿಗೆ ನೆನಪಿರಬೇಕು, ನಾವು ತಂದೆಯ ಮಕ್ಕಳಾಗಿದ್ದೇವೆ ಎಂದು. ಇಲ್ಲದಿದ್ದರೆ ತಮ್ಮನ್ನು ಅಳುವಂತೆ ಮಾಡಿಕೊಳ್ಳುತ್ತೀರಿ. ಎಲ್ಲರೂ ಭಗವಂತನ ಮಕ್ಕಳಾಗಿದ್ದಾರೆ. ಎಲ್ಲರೂ ಸಹ ಹೇ ತಂದೆಯೇ, ಹೇ ಪರಮಪಿತ ಪರಮಾತ್ಮ, ರಕ್ಷಣೆ ಮಾಡಿ ಎಂದು ಹೇಳುತ್ತಾರೆ ಆದರೆ ತಂದೆಯ ರಕ್ಷಣೆ ಯಾವಾಗ ಸಿಗುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ತಂದೆಯಿಂದ ನಮಗೆ ಮುಕ್ತಿ-ಜೀವನ್ಮುಕ್ತಿಯು ಯಾವಾಗ ಸಿಗುವುದು ಎಂಬುದನ್ನು ಸಾಧು-ಸಂತ ಮೊದಲಾದವರೂ ಸಹ ತಿಳಿದುಕೊಂಡಿಲ್ಲ ಏಕೆಂದರೆ ಭಗವಂತನನ್ನು ಕಣ-ಕಣದಲ್ಲಿದ್ದಾರೆಂದು ಹೇಳಿ ಬಿಟ್ಟಿದ್ದಾರೆ. ಈಗ ನೀವು ಮಕ್ಕಳು ಬೇಹದ್ದಿನ ತಂದೆಯನ್ನು ಅರಿತುಕೊಂಡಿದ್ದೀರಿ. ಅವರು ಪ್ರಿಯಾತಿ ಪ್ರಿಯ ತಂದೆಯಾಗಿದ್ದಾರೆ, ಅವರಿಗಿಂತ ಪ್ರಿಯ ವಸ್ತು ಇನ್ನ್ಯಾವುದೂ ಇಲ್ಲ. ಇಂತಹ ತಂದೆಯನ್ನು ಅರಿತುಕೊಳ್ಳದೇ ಇರುವುದು ಬಹಳ ದೊಡ್ಡ ತಪ್ಪಾಗಿದೆ. ಶಿವ ಜಯಂತಿಯನ್ನು ಏಕೆ ಆಚರಿಸುತ್ತಾರೆ? ಅವರು ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ - ನೀವು ಎಷ್ಟು ಬುದ್ಧಿಹೀನರಾಗಿ ಬಿಟ್ಟಿದ್ದೀರಿ, ಮಾಯಾ ರಾವಣನು ನಿಮ್ಮನ್ನು ಹೇಗೆ ಮಾಡಿ ಬಿಟ್ಟಿದ್ದಾನೆ! ಈಗ ನೀವು ಮಕ್ಕಳಿಗೆ ತಿಳಿದಿದೆ - ಇದು ನಮ್ಮ ಜನ್ಮ ಭೂಮಿಯಾಗಿದೆ. ನಾನು ಪ್ರತೀ 5000 ವರ್ಷಗಳ ನಂತರ ಬರುತ್ತೇನೆ. ಮನುಷ್ಯರು 40 ಸಾವಿರ ವರ್ಷಗಳ ನಂತರ ಯಾವಾಗ ಈ ಕಲಿಯುಗವು ಮುಗಿಯುವುದೋ ಆಗ ಬರುತ್ತಾರೆಂದು ಹೇಳುತ್ತಾರೆ. ತ್ರಿಮೂರ್ತಿಯ ಚಿತ್ರವನ್ನೂ ತೋರಿಸಲಾಗುತ್ತದೆ. ತ್ರಿಮೂರ್ತಿ ಮಾರ್ಗ ಎಂಬ ಹೆಸರನ್ನೂ ಇಟ್ಟಿದ್ದಾರೆ ಆದರೆ ತ್ರಿ-ಮೂರ್ತಿ ಬ್ರಹ್ಮಾ-ವಿಷ್ಣು-ಶಂಕರನನ್ನು ಯಾರೂ ತಿಳಿದುಕೊಂಡಿಲ್ಲ. ಬ್ರಹ್ಮನು ಏನು ಮಾಡಿ ಹೋದರು? ವಿಷ್ಣು ಮತ್ತು ಶಂಕರರು ಏನು ಮಾಡುತ್ತಾರೆ? ಎಲ್ಲಿರುತ್ತಾರೆ? ಏನನ್ನೂ ಅರಿತುಕೊಂಡಿಲ್ಲ, ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ತಂದೆಯು ರಚಯಿತನಾಗಿದ್ದಾರೆ, ಅವರದು ಇದು ಎಷ್ಟು ದೊಡ್ಡ ರಚನೆಯಾಗಿದೆ! ಎಷ್ಟು ಬೇಹದ್ದಿನ ನಾಟಕವಾಗಿದೆ! ಇದರಲ್ಲಿ ಬೇಹದ್ದಿನ ಮನುಷ್ಯರಿರುತ್ತಾರೆ. ಇಂದಿಗೆ 5000 ವರ್ಷಗಳ ಮೊದಲು ಯಾವಾಗ ಸತ್ಯಯುಗವಿತ್ತೋ, ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತೋ ಆಗ ಮತ್ತ್ಯಾವುದೇ ರಾಜ್ಯವಿರಲಿಲ್ಲ. ಭಗವತಿ ಶ್ರೀಲಕ್ಷ್ಮೀ, ಭಗವಾನ್ ಎಂದು ಶ್ರೀನಾರಾಯಣನಿಗೆ ಹೇಳಲಾಗುತ್ತದೆ. ರಾಮ-ಸೀತೆಗೂ ಸಹ ಭಗವಾನ್ ರಾಮ, ಭಗವತಿ ಸೀತೆಯೆಂದು ಹೇಳುತ್ತಾರೆ. ಈ ಭಗವಾನ್ ನಾರಾಯಣ, ಭಗವತಿ ಲಕ್ಷ್ಮಿ ಎಲ್ಲಿಂದ ಬಂದರು? ರಾಜ್ಯ ಮಾಡಿ ಹೋಗಿದ್ದಾರೆ ಆದರೆ ಅವರ ಜೀವನ ಚರಿತ್ರೆಯನ್ನು ಒಬ್ಬರೂ ತಿಳಿದುಕೊಂಡಿಲ್ಲ. ಕೇವಲ ಹೇ ಭಗವಂತ, ದುಃಖಹರ್ತ-ಸುಖಕರ್ತ ಎಂದು ಹಾಡುತ್ತಿರುತ್ತಾರೆ ಆದರೆ ಅವರು ಹೇಗೆ ದುಃಖಹರ್ತ-ಸುಖಕರ್ತನಾಗಿದ್ದಾರೆ ಎಂಬುದು ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಅವರು ಎಲ್ಲರಿಗೂ ಯಾವ ಸುಖವನ್ನು ಕೊಟ್ಟರು? ಯಾವಾಗ ಎಲ್ಲರ ದುಃಖವನ್ನು ದೂರ ಮಾಡಿದರು? ಏನನ್ನೂ ತಿಳಿದುಕೊಂಡಿಲ್ಲ.
ನೀವು ಮಕ್ಕಳು ಈಗ ಭಗವತಿ ಲಕ್ಷ್ಮಿ, ಭಗವಾನ್ ನಾರಾಯಣರಾಗಲು ಇಲ್ಲಿ ರಾಜಯೋಗವನ್ನು ಕಲಿಯುತ್ತಿದ್ದೀರಿ. ನಿಮಗೆ ತಿಳಿದಿದೆ, ಭಗವತಿ ಸೀತೆ ಭಗವಾನ್ ರಾಮನು ಆಗಬೇಕಾಗಿದೆ. ಸತ್ಯಯುಗದಲ್ಲಿ 8 ಜನ್ಮಗಳನ್ನು ಪೂರ್ಣ ಮಾಡಿ ನಂತರ ರಾಮ-ಸೀತೆಯ ರಾಜ್ಯದಲ್ಲಿ ಬರುವವರಿದ್ದೀರಿ. ನೀವಿಲ್ಲಿ 21 ಜನ್ಮಗಳಿಗಾಗಿ ಬೇಹದ್ದಿನ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದೀರಿ. ನೀವು ಭಗವತಿ-ಭಗವಾನ್ ಸ್ವರ್ಗದ ಮಾಲೀಕರಾಗುತ್ತಿದ್ದೀರಿ. ಸ್ವರ್ಗವೆಂದರೆ ಯಾವುದೇ ಆಕಾಶದಲ್ಲಿಲ್ಲ, ಇದೂ ಸಹ ಯಾರಿಗೂ ತಿಳಿದಿಲ್ಲ, ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಾರೆ. ಇಂತಹವರು ಸ್ವರ್ಗಕ್ಕೆ ಹೋದರೆಂದು ಹೇಳುತ್ತಾರೆ ಆದರೆ ತಿಳಿದುಕೊಳ್ಳುವುದೇನೂ ಇಲ್ಲ. ಒಳ್ಳೆಯದು - ಕ್ರಿಶ್ಚಿಯನ್ನರು, ಬೌದ್ಧರೆಲ್ಲರೂ ಸ್ವರ್ಗಕ್ಕೆ ಹೋಗುವರೇ? ಅವರು ಕೊನೆಯಲ್ಲಿ ಬಂದು ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ಅಂದಮೇಲೆ ಅವರು ಸ್ವರ್ಗದಲ್ಲಿ ಬರಲು ಹೇಗೆ ಸಾಧ್ಯ? ಯಾವುದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಎಂಬುದೂ ಸಹ ಅವರಿಗೆ ತಿಳಿದಿಲ್ಲ. ಸನ್ಯಾಸಿಗಳು ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಯಿತು ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿರ್ವಾಣ ಧಾಮಕ್ಕೆ ಹೋದರೆಂದು ಹೇಳುತ್ತಾರೆ. ನಿರ್ವಾಣದಲ್ಲಿಯೂ ಲೋಕವಿದೆಯಲ್ಲವೆ, ಅದಂತೂ ನಿವಾಸ ಸ್ಥಾನವಾಗಿದೆ. ಜ್ಯೋತಿಯು ಜ್ಯೋತಿಯಲ್ಲಿ ಲೀನವಾಗುವ ಮಾತಿಲ್ಲ. ಜ್ಯೋತಿಯಲ್ಲಿ ಸೇರಿ ಹೋಗುವಂತಿದ್ದರೆ ಮತ್ತೆ ಆತ್ಮವೇ ಸಮಾಪ್ತಿಯಾಗಿ ಬಿಡುವುದು ಮತ್ತು ಆಟವೇ ಮುಕ್ತಾಯವಾಗುತ್ತದೆ. ಈ ಡ್ರಾಮಾದಿಂದ ಯಾವುದೇ ಆತ್ಮನು ಮುಕ್ತನಾಗಲು ಸಾಧ್ಯವಿಲ್ಲ. ಯಾರೂ ಸಹ ಮೋಕ್ಷವನ್ನು ಪಡೆಯಲು ಸಾಧ್ಯವಿಲ್ಲ. ಗೀತೆಯ ಅರ್ಥವನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ಜೀವನ್ಮುಕ್ತಿಯ ಅರ್ಥವಾಗಲಿ, ಆತ್ಮ-ಪರಮಾತ್ಮನ ಅರ್ಥವಾಗಲಿ ತಿಳಿದುಕೊಂಡಿಲ್ಲ. ತಂದೆಯು ಹೇಳುತ್ತಾರೆ - ನಿಮ್ಮ ಚಹರೆಯಂತೂ ಮನುಷ್ಯರದಾಗಿದೆ, ಈ ದೇವತೆಗಳದೂ ಆಗಿತ್ತು, ಸತ್ಯಯುಗದ ಆದಿಯಲ್ಲಿ ದೇವತೆಗಳಿದ್ದರು. ಅವರ ರಾಜ್ಯವು 2500 ವರ್ಷಗಳು ನಡೆಯಿತು, ಉಳಿದ 2500 ವರ್ಷಗಳಲ್ಲಿ ಮತ್ತೆಲ್ಲಾ ಧರ್ಮದವರು ಬರುತ್ತಾರೆ. ಮನುಷ್ಯರು 5000 ವರ್ಷಗಳ ಬದಲು ಕಲ್ಪವೃಕ್ಷದ ಆಯಸ್ಸು ಲಕ್ಷಾಂತರ ವರ್ಷಗಳೆಂದು ಹೇಳುತ್ತಾರೆ ಆದರೆ ನಿಮ್ಮ ಮಾತನ್ನು ತಿಳಿದುಕೊಳ್ಳುವುದಕ್ಕಾದರೂ ಬರುವುದಿಲ್ಲ. ಹಾ! ಯಾರು ಕಲ್ಪದ ಮೊದಲು ಬಂದು ತಿಳಿದುಕೊಂಡಿದ್ದರೋ ಅವರೇ ಬರುತ್ತಾರೆ. ಮೊದಲು ತಿಳಿಸಬೇಕಾಗಿದೆ - ಒಂದು ಹದ್ದಿನ ಸನ್ಯಾಸವಾಗಿದೆ, ಸನ್ಯಾಸಿಗಳು ಮನೆ-ಮಠವನ್ನು ಬಿಟ್ಟು ಹೋಗಿ ಕಾಡಿನಲ್ಲಿರುತ್ತಾರೆ. ಮೊದಲಿಗೆ ಅವರು ಸತೋಪ್ರಧಾನರಾಗಿದ್ದರು, ಈಗ ತಮೋಪ್ರಧಾನರಾಗಿದ್ದಾರೆ ಆದ್ದರಿಂದ ಕಾಡಿನಿಂದ ಮರಳಿಬಂದು ದೊಡ್ಡ-ದೊಡ್ಡ ಮಹಲುಗಳನ್ನು ಕಟ್ಟಿಸಿದ್ದಾರೆ. ಈ ಸನ್ಯಾಸಿಗಳೂ ಸಹ ಪವಿತ್ರತೆಯ ಆಧಾರದ ಮೇಲೆ ಭಾರತವನ್ನು ಸ್ವಲ್ಪ ಶೀತಲ ಮಾಡಿದ್ದಾರೆ, ಭಾರತದ ಸೇವೆ ಮಾಡಿದ್ದಾರೆ. ಆ ಸನ್ಯಾಸ ಧರ್ಮವೇ ಇರದಿದ್ದರೆ ಭಾರತವು ಒಮ್ಮೆಲೆ ವಿಕಾರಗಳಲ್ಲಿ ಸುಟ್ಟು ಹೋಗುತ್ತಿತ್ತು, ಪತಿತವಾಗಿ ಬಿಡುತ್ತಿತ್ತು. ಇದೂ ಸಹ ಡ್ರಾಮಾದಲ್ಲಿ ಮಾಡಲ್ಪಟ್ಟಿದೆ. ಅವರಲ್ಲಿ ಮೊದಲು ಪವಿತ್ರತೆಯ ಶಕ್ತಿಯಿತ್ತು, ಅದರಿಂದ ಭಾರತವನ್ನು ಸ್ವಲ್ಪ ಶೀತಲಗೊಳಿಸಿದ್ದಾರೆ. ಈ ದೇವತೆಗಳ ರಾಜ್ಯವಿದ್ದಾಗ ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಇವರ ಎಷ್ಟು ದೊಡ್ಡ-ದೊಡ್ಡ ವಜ್ರ ವೈಡೂರ್ಯಗಳ ಮಹಲುಗಳಿತ್ತು, ಅವೆಲ್ಲವೂ ಎಲ್ಲಿ ಹೋದವು? ಎಲ್ಲವೂ ಕೆಳಗಡೆ ಹೊರಟು ಹೋಯಿತು. ಲಂಕೆ ಮತ್ತು ದ್ವಾರಿಕೆಯು ಸಮುದ್ರದ ಕೆಳಗಡೆ ಹೊರಟು ಹೋಯಿತೆಂದು ಹೇಳುತ್ತಾರೆ, ಈಗಂತೂ ಇಲ್ಲ. ಚಿನ್ನದ ಮಹಲು ಇತ್ಯಾದಿ ಇತ್ತಲ್ಲವೆ. ಯಾವಾಗ ಮಂದಿರಗಳಲ್ಲಿಯೇ ವಜ್ರ ವೈಡೂರ್ಯಗಳನ್ನು ಅಲಂಕರಿಸುತ್ತಾರೆ ಅಂದಮೇಲೆ ಅಲ್ಲಿ ಏನು ತಾನೆ ಇರುವುದಿಲ್ಲ? ನೀವು ಮಕ್ಕಳಿಗೆ ಎಷ್ಟೊಂದು ಖುಷಿಯಿರಬೇಕು, ತಂದೆಯು ಪುನಃ ಬಂದಿದ್ದಾರೆ, ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ಒಬ್ಬರನ್ನೇ ನೆನಪು ಮಾಡಬೇಕಾಗಿದೆ ಅದರಿಂದ ವಿಕರ್ಮಗಳು ವಿನಾಶವಾಗುತ್ತವೆ ಆದರೆ ಅವರನ್ನು ಮರೆತು ಹೋಗುತ್ತೀರಿ ಮತ್ತು ದೇಹಧಾರಿಯ ನೆನಪು ಬಂದು ಬಿಡುತ್ತದೆ. ದೇಹಧಾರಿಗಳ ನೆನಪಿನಿಂದ ಏನೂ ಲಾಭವಿಲ್ಲ. ತಂದೆಯು ಹೇಳುತ್ತಾರೆ, ನನ್ನೊಬ್ಬನನ್ನೇ ನೆನಪು ಮಾಡಿರಿ, ಯಾವುದೇ ದೇಹಧಾರಿಯನ್ನು ನೆನಪು ಮಾಡಬೇಡಿ, ತಾಯಿ ಸತ್ತರೂ ಸಹ ಹಲ್ವ ತಿನ್ನಿರಿ... ಒಬ್ಬ ತಂದೆಯ ನೆನಪಿನಿಂದಲೇ ಸಂಪಾದನೆಯಾಗುವುದು. ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಈ ಸಮಯದಲ್ಲಿ ತಂದೆಯನ್ನು ನೆನಪು ಮಾಡದಿದ್ದರೆ ನಂತರ ಬಹಳ ಪಶ್ಚಾತ್ತಾಪ ಪಡಬೇಕಾಗುವುದು, ಅಳಬೇಕಾಗುವುದು. ವಿಶ್ವದ ಮಾಲೀಕರಾಗುವವರಿಗೆ ಅಳುವ ಅವಶ್ಯಕತೆಯಾದರೂ ಏನಿದೆ! ನೀವು ತಂದೆಯನ್ನು ಮರೆತು ಹೋಗುತ್ತೀರಿ, ಆಗಲೇ ಮಾಯೆಯು ಪೆಟ್ಟು ಕೊಡುತ್ತದೆ. ಆದ್ದರಿಂದ ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ - ಮಕ್ಕಳೇ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ. ಅಮರನಾಥನು ಅಮರಪುರಿಯಲ್ಲಿ ಕೇವಲ ಒಬ್ಬ ಪಾರ್ವತಿಗೆ ಅಮರ ಕಥೆಯನ್ನು ತಿಳಿಸಿರುವುದಿಲ್ಲ. ಅವಶ್ಯವಾಗಿ ಅನೇಕರಿರುತ್ತಾರೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರಿಗೂ ತಂದೆಯು ತಿಳಿಸುತ್ತಾರೆ - ಈಗ ಪತಿತರಾಗಬೇಡಿ, ಈ ಅಂತಿಮ ಜನ್ಮ ಪವಿತ್ರರಾಗಿರಿ. ಅಲ್ಲಿ ಸ್ವರ್ಗದಲ್ಲಿ ಯಾವುದೇ ವಿಕಾರವಿರುವುದಿಲ್ಲ, ಒಂದುವೇಳೆ ಅಲ್ಲಿಯೂ ವಿಕಾರವಿರುವುದಾದರೆ ಸ್ವರ್ಗ ಮತ್ತು ನರಕದಲ್ಲಿ ಅಂತರವಾದರೂ ಏನು ಉಳಿಯಿತು? ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣರು..... ಎಂದು ದೇವಿ-ದೇವತೆಗಳ ಮಹಿಮೆ ಹಾಡುತ್ತಾರೆ. ಭಗವಂತನು ಬಂದು ಭಗವಾನ್-ಭಗವತಿಯರನ್ನಾಗಿಯೇ ಮಾಡುತ್ತಾರೆ, ಭಗವಂತನ ಹೊರತು ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ಭಗವಂತ ಒಬ್ಬರೇ ಆಗಿದ್ದಾರೆ, ಭಗವಾನ್-ಭಗವತಿಯ ರಾಜಧಾನಿಯೆಂದು ಗಾಯನವಿದೆ, ಯಥಾರಾಜ-ರಾಣಿ ತಥಾ ಪ್ರಜೆಗಳು, ಅವರೇ ಆಗಿರುವರು. ಆದರೆ ಅವರಿಗೆ ಭಗವಾನ್-ಭಗವತಿಯೆಂದು ಹೇಳಲಾಗುವುದಿಲ್ಲ ಆದ್ದರಿಂದ ಆದಿ ಸನಾತನ ದೇವಿ-ದೇವತಾ ಧರ್ಮವೆಂದು ಹೇಳಲಾಗುತ್ತದೆ. ಇದು ಯಾರಿಗೂ ತಿಳಿದಿಲ್ಲ. ಇವರ (ಬ್ರಹ್ಮಾ) ಆತ್ಮಕ್ಕೂ ತಂದೆಯೇ ತಿಳಿಸುತ್ತಾರೆ. ಒಂದು ತಂದೆಯ ಆತ್ಮ, ಇನ್ನೊಂದು ದಾದಾರವರ ಆತ್ಮ. ಇಬ್ಬರಿದ್ದಾರಲ್ಲವೆ. ಒಂದು ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಇನ್ನೊಂದು ಆತ್ಮವು ಪುನರ್ಜನ್ಮ ರಹಿತ ಆಗಿದ್ದಾರೆ. ತಂದೆ ಎಂದೂ ಪುನರ್ಜನ್ಮವನ್ನು ತೆಗೆದುಕೊಳ್ಳುವುದಿಲ್ಲ, ಒಂದೇ ಬಾರಿ ಬಂದು ಇಡೀ ವಿಶ್ವವನ್ನು ಪವಿತ್ರವನ್ನಾಗಿ ಮಾಡಲು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ತಂದೆಯು ನಿಮಗೆ ತಿಳಿಸುತ್ತಾರೆ - ನಾನು ಇವರಲ್ಲಿ ಪ್ರವೇಶ ಮಾಡಿದ್ದೇನೆ, ಇವರು 84 ಜನ್ಮಗಳನ್ನು ಭೋಗಿಸಿ ಬಂದಿದ್ದಾರೆ. ಈಗ ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ನಾನು ನಿರಾಕಾರನಾಗಿದ್ದೇನೆ ಅಂದಮೇಲೆ ಮಕ್ಕಳಿಗೆ ಹೇಗೆ ಬಂದು ರಾಜಯೋಗವನ್ನು ಕಲಿಸಲಿ? ಪ್ರೇರಣೆಯಿಂದ ಏನೂ ನಡೆಯುವುದಿಲ್ಲ, ಕೃಷ್ಣ ಭಗವಾನುವಾಚ ಅಂತೂ ಇರಲು ಸಾಧ್ಯವಿಲ್ಲ. ಅವರು ಹೇಗೆ ಬರಲು ಸಾಧ್ಯ? ಕೃಷ್ಣನು ಸತ್ಯಯುಗದ ಮೊದಲ ರಾಜ ಕುಮಾರ, 16 ಕಲಾ ಸಂಪೂರ್ಣ... ನಂತರ ತ್ರೇತಾದಲ್ಲಿ 14 ಕಲಾ ಸಂಪೂರ್ಣರಿರುತ್ತಾರೆ ಅಂದಮೇಲೆ ಕೃಷ್ಣನನ್ನು ದ್ವಾಪರದಲ್ಲಿ ಏಕೆ ತೆಗೆದುಕೊಂಡು ಹೋಗಿದ್ದಾರೆ? ಕೃಷ್ಣನಂತೂ ಮೊದಲು ಬರಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ಮೊದಲು ತಂದೆಯನ್ನು ನೆನಪು ಮಾಡಿ, ಇಲ್ಲದಿದ್ದರೆ ಮಾಯೆಯು ಒಮ್ಮೆಲೆ ಪೆಟ್ಟು ಕೊಡುವುದು. ಒಂದು ಮುಟ್ಟಿದರೆ ಮುನಿ ಎಂಬ ಗಿಡವು ಇರುತ್ತದೆ, ಕೈ ಹಾಕಿದರೆ ಸಾಕು ಅದು ಮುದುಡಿಕೊಳ್ಳುತ್ತದೆ. ತಂದೆಯನ್ನು ನೆನಪು ಮಾಡದಿದ್ದರೆ ನಿಮ್ಮದೂ ಸಹ ಇದೇ ಸ್ಥಿತಿಯಾಗುತ್ತದೆ ಮತ್ತು ಸಮಾಪ್ತಿಯಾಗುವಿರಿ. ಗೀತೆಯಲ್ಲಿಯೂ ಕೇಳಿದಿರಿ, ಬಾಲ್ಯದ ದಿನಗಳನ್ನು ಮರೆಯಬಾರದು. ತಂದೆಯನ್ನು ಮರೆತರೆ ಎಲ್ಲಾದರೂ ಒಂದು ಕಡೆ ಪೆಟ್ಟು ಬೀಳುತ್ತದೆ. ತಂದೆಯು ಹೇಳುತ್ತಾರೆ, ನೀವು ನನ್ನ ಮಕ್ಕಳಲ್ಲವೆ. ಈ ಶರೀರವಂತೂ ವಿಕಾರದಿಂದ ಜನಿಸಿದೆ. ಅವರು ಇವರ ಲೌಕಿಕ ತಂದೆ-ತಾಯಿಯಾಗಿದ್ದಾರೆ. ಇಲ್ಲಿ ಪಾರಲೌಕಿಕ ತಂದೆಯಿದ್ದಾರೆ ಮತ್ತು ಬ್ರಹ್ಮನಿಗೆ ಆಲೌಕಿಕ ತಂದೆಯೆಂದು ಹೇಳಲಾಗುತ್ತದೆ. ಇವರು ಹದ್ದಿನ ತಂದೆಯಾಗಿದ್ದರು, ನಂತರ ಬೇಹದ್ದಿನವರಾಗಿ ಬಿಟ್ಟರು. ಈಗ ನೋಡಿ, ಈ ಲೌಕಿಕ ಮಗಳೂ (ನಿರ್ಮಲ ಶಾಂತ ದಾದಿ) ಕುಳಿತಿದ್ದಾರೆ. ಇವರಿಗೆ ಲೌಕಿಕ ತಂದೆಯೂ ಆಗಿದ್ದಾರೆ, ಅಲೌಕಿಕ ತಂದೆಯೂ ಆಗಿದ್ದಾರೆ, ಪಾರಲೌಕಿಕ ತಂದೆಯೂ ಇದ್ದಾರೆ. ಬಾಕಿ ಶಿವ ತಂದೆಗೆ ಸಹೋದರ-ಸಹೋದರಿಯರಿಲ್ಲ. ಲೌಕಿಕ ಸಹೋದರ-ಸಹೋದರಿಯರಾಗಲಿ, ಅಲೌಕಿಕ ಮತ್ತು ಪಾರಲೌಕಿಕವಾಗಲಿ ಇಲ್ಲ. ಎಷ್ಟು ಅಂತರವಿದೆ! ಒಬ್ಬ ತಂದೆಯ ಮಕ್ಕಳಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಇಂತಹ ತಂದೆಯೊಂದಿಗೆ ಸಂಬಂಧವನ್ನು ಜೋಡಿಸಬೇಕಾಗಿದೆ, ಸಮಯ ಹಿಡಿಸುತ್ತದೆ. ಶಿವ ತಂದೆಯ ನೆನಪಿನಲ್ಲಿರುವುದು ದೊಡ್ಡ ಪರಿಶ್ರಮವಾಗಿದೆ. ಕೆಲವರು 50 ವರ್ಷಗಳಿಂದ ಇರುವವರೂ ಸಹ ಇಡೀ ದಿನ ಶಿವ ತಂದೆಯನ್ನು ನೆನಪೂ ಮಾಡುವುದಿಲ್ಲ, ಇಂತಹವರೂ ಇದ್ದಾರೆ. ಮತ್ತೆಲ್ಲರನ್ನೂ ಮರೆತು ಒಬ್ಬ ತಂದೆಯನ್ನು ನೆನಪು ಮಾಡುವುದು ಬಹಳ-ಬಹಳ ಪರಿಶ್ರಮವಾಗಿದೆ. ಕೆಲವರು 1% ನೆನಪು ಮಾಡುತ್ತಾರೆ. ಕೆಲವರು 2%, ಕೆಲವರು 1/2% ನೆನಪು ಮಾಡುವುದೂ ವಿರಳ. ಇದು ಬಹಳ ದೊಡ್ಡ ಗುರಿಯಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಬಾಲ್ಯವನ್ನು ಮರೆಯಬೇಡಿ. ತಂದೆಯಿಂದ ಸ್ವರ್ಗದ ಆಸ್ತಿ ಸಿಗುತ್ತದೆ, ನೀವು ತಿಳಿದುಕೊಂಡಿದ್ದೀರಿ - ನಾವು ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ಜೀವಿಸಿದ್ದಂತೆಯೇ ಸತ್ತು ತಂದೆಯ ಮಕ್ಕಳಾಗಿದ್ದೇವೆ. ಅಂದಮೇಲೆ ನಿಮಗೆ ಸ್ಥಿರವಾದ ಖುಷಿಯಿರಬೇಕು - ಓಹೋ! ನಾವು ಡಬಲ್ ಕಿರೀಟಧಾರಿಗಳಾಗುತ್ತೇವೆ! ಸತ್ಯಯುಗದಲ್ಲಿ ಈ ದೇವತೆಗಳಿಗೆ 16 ಕಲಾ ಸಂಪೂರ್ಣರು ಮತ್ತು 14 ಕಲಾ ಸಂಪೂರ್ಣರೆಂದು ಏಕೆ ಹೇಳುತ್ತಾರೆ ಎಂಬುದನ್ನು ಮನುಷ್ಯರು ತಿಳಿದುಕೊಂಡಿದ್ದಾರೆಯೇ? ಅವರಿಗೆ ಏನೂ ಗೊತ್ತಿಲ್ಲ. ಈ ಭಕ್ತಿಮಾರ್ಗದ ಶಾಸ್ತ್ರಗಳು ಮುಂದಿನ ಕಲ್ಪದಲ್ಲಿಯೂ ಆಗುತ್ತವೆ. ಈ ಹಠಯೋಗ, ತೀರ್ಥ ಯಾತ್ರೆಗಳೆಲ್ಲವೂ ಕಲ್ಪದ ನಂತರವೂ ಇದೇ ರೀತಿ ಆಗುತ್ತವೆ ಆದರೆ ಇದರಿಂದೇನಾಗುವುದು? ಸ್ವರ್ಗದಲ್ಲಿ ಹೋಗುವರೇ? ಇಲ್ಲ. ಅನೇಕರು ರಿದ್ಧಿ ಸಿದ್ಧಿಯಿಂದ ಬಹಳ ಕೆಲಸ ಮಾಡುತ್ತಾರೆ. ಇಂತಹವರು ಅನೇಕರಿದ್ದಾರೆ. ಸಾವಿರಾರು ಮಂದಿ ಮನುಷ್ಯರು ಅವರ ಹಿಂದೆ ಬಿದ್ದಿರುತ್ತಾರೆ, ರಿದ್ಧಿ ಸಿದ್ಧಿಯಿಂದ ಗಡಿಯಾರ ಮೊದಲಾದ ವಸ್ತುವನ್ನು ತೆಗೆಯುತ್ತಾರೆ ಆದರೆ ಇದೆಲ್ಲವೂ ಅಲ್ಪಕಾಲಕ್ಕಾಗಿ ಎಂದು ತಿಳಿದುಕೊಂಡಿದ್ದಾರೆಯೇ! ಇದರಲ್ಲಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಈ ರಿದ್ಧಿಸಿದ್ಧಿಯನ್ನು ಕಲಿಯುವುದಕ್ಕೂ ಒಂದು ಪುಸ್ತಕವಿರುತ್ತದೆ. ಲಕ್ಷಾಂತರ ಮಂದಿ ಅವರ ಹಿಂದೆ ಬಿದ್ದಿರುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ತಂದೆಯಿಂದ ಸ್ವರ್ಗದ ಆಸ್ತಿಯು ಸಿಗುತ್ತದೆ. ಈ ಕಣ್ಣುಗಳಿಂದ ಏನೆಲ್ಲವನ್ನೂ ನೋಡುತ್ತೀರೋ ಇದೇನೂ ಉಳಿಯುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಅಶರೀರಿಯಾಗಿ ಬಂದಿದ್ದಿರಿ, ಮತ್ತೆ ಶರೀರದ ಜೊತೆ ಪಾತ್ರವನ್ನಭಿನಯಿಸಿದಿರಿ. ಒಂದುವೇಳೆ 84 ಲಕ್ಷದ ಲೆಕ್ಕಾಚಾರವನ್ನು ತಿಳಿಸಿದ್ದೇ ಆದರೆ 12 ತಿಂಗಳು ಹಿಡಿಸುವುದು. ಆದರೆ ಇದು ಸಾಧ್ಯವಿಲ್ಲ, 84 ಜನ್ಮಗಳ ಲೆಕ್ಕವನ್ನು ತಿಳಿಸುವುದು ಬಹಳ ಸಹಜವಾಗಿದೆ. ನೀವೇ 84ರ ಚಕ್ರವನ್ನು ಸುತ್ತುತ್ತಾ ಇರುತ್ತೀರಿ. ಸೂರ್ಯವಂಶಿಯರಿದ್ದಾಗ ಚಂದ್ರವಂಶಿಯರಿರುವುದಿಲ್ಲ, ಸೂರ್ಯವಂಶಿ ಮನೆತನವು ಪೂರ್ಣವಾಯಿತು, ನಂತರ ಚಂದ್ರವಂಶಿಯರಾದರು.
ನೀವೀಗ ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣ ವಂಶಿಯರೇ ನಂತರ ದೇವತಾ ವಂಶಿಯರಾಗಬೇಕಾಗಿದೆ. ಆದ್ದರಿಂದ ನಾವು ವಿದ್ಯೆಯನ್ನು ಓದುತ್ತಿದ್ದೇವೆ. ಏಣಿಯನ್ನು ಕೆಳಗಿಳಿಯುತ್ತಾ-ಇಳಿಯುತ್ತಾ ವೈಶ್ಯ, ಶೂದ್ರ ವಂಶಿಯರಾಗುತ್ತೇವೆ. ಈಗ ತಮ್ಮ 84 ಜನ್ಮಗಳ ಸ್ಮೃತಿ ಬಂದಿದೆ, ಈ ಚಕ್ರವನ್ನೂ ಸಹ ನೆನಪು ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡುವುದರಿಂದ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತೀರಿ, ಪಾಪಗಳು ಕಳೆಯುತ್ತವೆ. ಚಕ್ರವನ್ನು ಅರಿತುಕೊಳ್ಳುವುದರಿಂದ ಚಕ್ರವರ್ತಿಗಳಾಗಿ ಬಿಡುತ್ತೀರಿ. ನಿಮಗೆ ತಿಳಿದಿದೆ, ಈ ಹಳೆಯ ಪ್ರಪಂಚವು ಸ್ಮಶಾನವಾಗುವುದಿದೆ, ಏನೂ ಉಳಿಯುವುದಿಲ್ಲ. ಎಲ್ಲವೂ ಸಮಾಪ್ತಿಯಾಗಿ ಬಿಡುವುದು, ರಾಮನೂ ಹೋದ ರಾವಣನೂ ಹೋದ.... ಸತ್ಯಯುಗದಲ್ಲಿ ರಾಮನ ಎಷ್ಟು ಚಿಕ್ಕ ಪರಿವಾರವಿರುತ್ತದೆ. ಈಗ ರಾವಣನ ಎಷ್ಟು ದೊಡ್ಡ ಪರಿವಾರವಿದೆ, ಮಕ್ಕಳಿಗೆ ತಿಳಿದಿದೆ - ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಪ್ರತೀ ಮಾತಿನಲ್ಲಿ ಪುರುಷಾರ್ಥ ಮೊದಲು. ತಂದೆಯು ಪುರುಷಾರ್ಥ ಮಾಡಿಸುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿರಿ. ಯಾವ ತಂದೆಯಿಂದ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತದೆಯೋ ಅವರನ್ನೇ ನೀವು ನೆನಪು ಮಾಡುವುದಿಲ್ಲವೆ? ತಂದೆಯು ಸ್ಮೃತಿ ತರಿಸುತ್ತಾರೆ - ನೀವು ಸ್ವರ್ಗದ ಮಾಲೀಕರಾಗಿದ್ದಿರಿ, ಈಗ ಪುನಃ ಪುರುಷಾರ್ಥ ಮಾಡಿ ಸ್ವರ್ಗದ ಮಾಲೀಕರಾಗಿರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಎಂದೂ ಯಾವುದೇ ಮಾತಿನಲ್ಲಿ ಮುಟ್ಟಿದರೆ ಮುನಿ ಆಗಬಾರದು. ಈಶ್ವರೀಯ ಬಾಲ್ಯವನ್ನು ಮರೆತು ಬಾಡಿ ಹೋಗಬಾರದು. ಈ ಕಣ್ಣುಗಳಿಂದ ಏನೆಲ್ಲವೂ ಕಾಣುತ್ತಿದೆಯೋ ಅದನ್ನು ನೋಡಿದರೂ ನೋಡದಂತಿರಬೇಕಾಗಿದೆ.
2. ಒಬ್ಬ ತಂದೆಯ ನೆನಪಿನಲ್ಲಿಯೇ ಸಂಪಾದನೆಯಿದೆ, ಆದ್ದರಿಂದ ದೇಹಧಾರಿಗಳನ್ನು ನೆನಪು ಮಾಡಿ ಅಳಬಾರದು. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ವಿಶ್ವದ ರಾಜ್ಯವನ್ನು ಪಡೆದುಕೊಳ್ಳಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಸಾಲನ್ನು ಕೇಳಿದಿರಿ. ಹೇಗೆ ವೇದ ಶಾಸ್ತ್ರಗಳು ಭಕ್ತಿಮಾರ್ಗದ ದಾರಿಯನ್ನು ತಿಳಿಸುತ್ತದೆ ಹಾಗೆಯೇ ಹಾಡುಗಳೂ ಸಹ ಸ್ವಲ್ಪ ಮಾರ್ಗವನ್ನು ತಿಳಿಸುತ್ತದೆ. ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ, ಶಾಸ್ತ್ರಗಳ ಕಥೆಗಳನ್ನು ಕೇಳುವುದು ಹಾಗೆ ಕನರಸವಾಗಿದೆ. ದೂರ ದೇಶದ ಯಾತ್ರಿಕನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಆತ್ಮಕ್ಕೆ ಗೊತ್ತಿದೆ - ನಾವೂ ಸಹ ದೂರದ ಯಾತ್ರಿಕರಾಗಿದ್ದೇವೆ, ನಮ್ಮ ಮನೆಯು ಶಾಂತಿಧಾಮವಾಗಿದೆ. ಮನುಷ್ಯರು ಈ ಮಾತುಗಳನ್ನು ತಿಳಿದುಕೊಳ್ಳಲಿಲ್ಲವೆಂದರೆ ಅವರು ಏನನ್ನೂ ತಿಳಿದುಕೊಂಡಿಲ್ಲವೆಂದರ್ಥ. ತಂದೆಯನ್ನು ತಿಳಿಯದೇ ಇರುವ ಕಾರಣ ಸೃಷ್ಟಿಚಕ್ರವನ್ನೂ ಸಹ ಯಾರೂ ತಿಳಿದುಕೊಳ್ಳುವುದಿಲ್ಲ. ಇದನ್ನು ಆತ್ಮವು ತಿಳಿದುಕೊಳ್ಳುತ್ತದೆ, ಶಿವ ತಂದೆಯು ಹೇಳುತ್ತಾರೆ - ನಾನು ತತ್ಕಾಲಕ್ಕಾಗಿ ಜೀವಾತ್ಮನಾಗುತ್ತೇನೆ. ನೀವು ಸ್ಥಿರವಾಗಿ ಜೀವಾತ್ಮರಾಗುತ್ತೀರಿ, ನಾನು ಕೇವಲ ಸಂಗಮದಲ್ಲಿಯೇ ಸ್ವಲ್ಪ ಸಮಯಕ್ಕಾಗಿ ಜೀವಾತ್ಮನಾಗಿದ್ದೇನೆ, ನಾನು ನಿಮ್ಮ ತರಹ ಆಗುವುದಿಲ್ಲ. ನಾನು ನನ್ನ ಪರಿಚಯ ಕೊಡಲು ಈ ಜೀವದಲ್ಲಿ ಪ್ರವೇಶ ಮಾಡುತ್ತೇನೆ. ಇಲ್ಲವಾದರೆ ನಿಮಗೆ ಹೇಗೆ ಪರಿಚಯ ಕೊಡಲಿ? ತಂದೆಯು ತಿಳಿಸುತ್ತಾರೆ – ಆತ್ಮಿಕ ತಂದೆಯು ಒಬ್ಬರೇ ಆಗಿದ್ದಾರೆ, ಅವರಿಗೆ ಶಿವ ತಂದೆ ಅಥವಾ ಭಗವಂತನೆಂದು ಹೇಳುತ್ತಾರೆ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಇದರಲ್ಲಿ ಪವಿತ್ರತೆಯದೂ ಬಂಧನವಿದೆ. ಮನುಷ್ಯರ ಲೆಕ್ಕದಲ್ಲಿ ತಮ್ಮನ್ನು ಆತ್ಮನೆಂದು ತಿಳಿಯುವುದೇ ಅತಿ ದೊಡ್ಡ ಬಂಧನವಾಗಿದೆ. ಯಾವ ದೂರದ ಯಾತ್ರಿಕ, ಪತಿತ-ಪಾವನನ್ನು ಭಕ್ತಿಮಾರ್ಗದಲ್ಲಿ ನೆನಪು ಮಾಡುತ್ತಾರೆ. ಆ ಆತ್ಮಿಕ ತಂದೆಯು ತಿಳಿಸುತ್ತಾರೆ - ನಾನು ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ. ಯಾರನ್ನೂ ಬಿಟ್ಟು ಹೋಗುವುದಿಲ್ಲ, ಎಲ್ಲರೂ ಹಿಂತಿರುಗಿ ಹೋಗಲೇಬೇಕಾಗಿದೆ. ಪ್ರಳಯವಾಗುವುದಿಲ್ಲ, ಭಾರತ ಖಂಡವಂತೂ ಇದ್ದೇ ಇದೆ. ಭಾರತ ಖಂಡವು ಎಂದೂ ವಿನಾಶವಾಗುವುದಿಲ್ಲ. ಸತ್ಯಯುಗದ ಆದಿಯಲ್ಲಿ ಕೇವಲ ಭಾರತ ಖಂಡವೇ ಇರುತ್ತದೆ, ಕಲ್ಪದ ಸಂಗಮದಲ್ಲಿ ತಂದೆಯು ಬಂದಾಗ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಲಾಗುತ್ತದೆ. ಉಳಿದೆಲ್ಲಾ ಧರ್ಮಗಳು ವಿನಾಶವಾಗುವವು. ನೀವೂ ಸಹ ಆದಿ ಸನಾತನ ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡುವುದರಲ್ಲಿ ಸಹಯೋಗ ನೀಡುತ್ತಿದ್ದೀರಿ. ಗೀತೆಯನ್ನು ಕೇಳಿದಿರಿ - ಬಾಬಾ, ನಮ್ಮನ್ನೂ ಸಹ ಜೊತೆ ಕರೆದುಕೊಂಡು ಹೋಗಿ ಎಂದು ಹೇಳುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ, ಎಲ್ಲಿಯವರೆಗೂ ಹಳೆಯ ಪ್ರಪಂಚದೊಂದಿಗೆ ವೈರಾಗ್ಯ ಬರುವುದಿಲ್ಲವೋ ಅಲ್ಲಿಯವರೆಗೆ ಯಾರನ್ನೂ ಜೊತೆ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಹೊಸ ಮನೆಯು ತಯಾರಾದಾಗ ಹಳೆಯದರೊಂದಿಗೆ ಪ್ರೀತಿಯು ಹೊರಟು ಹೋಗುತ್ತದೆ. ನೀವೂ ಸಹ ತಿಳಿದುಕೊಂಡಿದ್ದೀರಿ, ಈ ಹಳೆಯ ಪ್ರಪಂಚವು ಸಮಾಪ್ತಿಯಾಗುವುದು, ಈಗ ಹೊಸ ಪ್ರಪಂಚದಲ್ಲಿ ಹೋಗಬೇಕಾಗಿದೆ. ಎಲ್ಲಿಯವರೆಗೆ ಸತೋಪ್ರಧಾನರಾಗುವುದಿಲ್ಲವೋ ಅಲ್ಲಿಯವರೆಗೆ ಸತೋಪ್ರಧಾನ ದೇವಿ-ದೇವತೆಗಳಾಗಲು ಸಾಧ್ಯವಿಲ್ಲ. ಆದ್ದರಿಂದ ತಂದೆಯು ಪದೇ-ಪದೇ ತಿಳಿಸುತ್ತಾರೆ - ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡುತ್ತಾ ಇರಿ. ಸದ್ಗತಿ ಕೊಡುವಂತಹ ದೂರದ ಯಾತ್ರಿಕನು ಬಂದಿದ್ದಾರೆ, ಅವರನ್ನು ಪ್ರಪಂಚದವರು ತಿಳಿದುಕೊಂಡಿಲ್ಲ, ಅವರಿಗೆ ಸರ್ವವ್ಯಾಪಿ ಎಂದು ಹೇಳಿ ಬಿಟ್ಟಿದ್ದಾರೆ. ಈಗ ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ, ನಾವು ಶಿವ ತಂದೆಯ ಸಂತಾನರಾಗಿದ್ದೇವೆ. ಮಧುಬನಕ್ಕೆ ಬಂದಾಗಲೂ ಸಹ ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆಂದು ತಿಳಿಯುತ್ತಾರೆ ಅಂದಮೇಲೆ ಇದು ಪರಿವಾರವಾಯಿತು. ಇದು ಈಶ್ವರೀಯ ಪರಿವಾರವಾಗಿದೆ. ಯಾರಿಗೆ ಬಹಳ ಮಂದಿ ಮಕ್ಕಳಿರುವರೋ ಅವರದು ಬಹಳ ದೊಡ್ಡ ಪರಿವರ್ತನೆಯಾಗಿ ಬಿಡುತ್ತದೆ. ಶಿವ ತಂದೆಗೂ ಸಹ ಯಾವ ಬಿ.ಕೆ. ಸಹೋದರ-ಸಹೋದರಿಯರಿದ್ದಾರೆಯೋ ಇವರದೂ ಸಹ ಬಹಳ ದೊಡ್ಡ ಪರಿವರ್ತನೆಯಾಗುತ್ತದೆ. ಬ್ರಹ್ಮಾಕುಮಾರ-ಕುಮಾರಿಯರೆಲ್ಲರೂ ತಿಳಿದುಕೊಂಡಿದ್ದೀರಿ - ನಾವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಶಾಸ್ತ್ರಗಳಲ್ಲಿ ಪಾಂಡವರು ಮತ್ತು ಕೌರವರು ಜೂಜಾಟವನ್ನು ಆಡಿದರು, ಅದರ ರಾಜ್ಯವನ್ನೇ ಪಣವಾಗಿ ಇಟ್ಟರು ಎಂದು ತೋರಿಸುತ್ತಾರೆ. ಈಗ ರಾಜ್ಯವು ಕೌರವರಿಗೂ ಇಲ್ಲ, ಪಾಂಡವರಿಗೂ ಇಲ್ಲ, ಕಿರೀಟ ಇತ್ಯಾದಿಗಳೂ ಇಲ್ಲ. ಅವರನ್ನು ನಗರದಿಂದಲೇ ಹೊರಗೆ ಕಳುಹಿಸಲಾಯಿತು, ಆಯುಧಗಳನ್ನು ತೆಗೆದುಕೊಂಡು ಹೋಗಿ ಒಂದು ಕಡೆ ಬಚ್ಚಿಟ್ಟರು ಎಂದು ತೋರಿಸುತ್ತಾರೆ. ಇವೆಲ್ಲವೂ ದಂತ ಕಥೆಗಳಾಗಿವೆ. ಪಾಂಡವರ ರಾಜ್ಯವಾಗಲಿ, ಕೌರವರ ರಾಜ್ಯವಾಗಲಿ ಇಲ್ಲ. ಅವರ ಪರಸ್ಪರ ಯುದ್ಧವೂ ನಡೆಯಲಿಲ್ಲ. ರಾಜರ ನಡುವೆ ಯುದ್ಧವಾಗುತ್ತದೆ. ಇವರಂತೂ ಸಹೋದರ-ಸಹೋದರರಾಗಿದ್ದಾರೆ. ಕೌರವರು ಮತ್ತು ಯಾದವರ ಯುದ್ಧವಾಯಿತು. ಬಾಕಿ ಸಹೋದರರು ಒಬ್ಬರು ಇನ್ನೊಬ್ಬರನ್ನು ಹೇಗೆ ಸಮಾಪ್ತಿ ಮಾಡುವರು! ಪಾಂಡವರು, ಕೌರವರು ಹೊಡೆದಾಡಿದರು, ಕೊನೆಗೆ ಐದು ಜನ ಪಾಂಡವರು ಉಳಿದುಕೊಂಡರು. ಜೊತೆಗೆ ಒಂದು ನಾಯಿಯೂ ಉಳಿದುಕೊಂಡಿತು. ಅವರೂ ಸಹ ಪರ್ವತಗಳ ಮೇಲೆ ಹೋಗಿ ಕರಗಿ ಹೋದರೆಂದು ತೋರಿಸುತ್ತಾರೆ. ಆಟವೇ ಸಮಾಪ್ತಿ, ಇದರಿಂದ ರಾಜಯೋಗಕ್ಕೆ ಅರ್ಥವೇ ಬರುವುದಿಲ್ಲ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ತಂದೆಯು ಕಲ್ಪ-ಕಲ್ಪವೂ ಬಂದು ಒಂದು ಧರ್ಮದ ಸ್ಥಾಪನೆ ಮಾಡುತ್ತಾರೆ. ಹೇ ಪತಿತ-ಪಾವನ ತಂದೆಯೇ ಬನ್ನಿ, ಬಂದು ಪತಿತರಿಂದ ಪಾವನರನ್ನಾಗಿ ಮಾಡಿ ಎಂದು ಅವರನ್ನೇ ಕರೆಯುತ್ತಾರೆ. ಸತ್ಯಯುಗದಲ್ಲಿ ಸೂರ್ಯವಂಶಿ ರಾಜಧಾನಿಯೇ ಇರುತ್ತದೆ. ಬ್ರಹ್ಮಾರವರ ಮೂಲಕ ವಿಷ್ಣು ಪುರಿಯ ಸ್ಥಾಪನೆಯಾಗುತ್ತಿದೆ. ಈಗ ತಂದೆಯು ಬಂದಿದ್ದಾರೆ ಅಂದಮೇಲೆ ಅವರ ಆದೇಶದಂತೆ ನಡೆಯಬೇಕಾಗಿದೆ, ಕಮಲ ಪುಷ್ಫ ಸಮಾನ ಪವಿತ್ರರಾಗಿರಬೇಕಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಿರಿ ಎಂದು ಕನ್ಯೆಯರಿಗೆ ಹೇಳಲಾಗುವುದಿಲ್ಲ. ಅವರಂತೂ ಪವಿತ್ರರಾಗಿಯೇ ಇದ್ದಾರೆ, ಇದನ್ನು ಗೃಹಸ್ಥಿಗಳಿಗಾಗಿ ಹೇಳಲಾಗುತ್ತದೆ. ಕುಮಾರ-ಕುಮಾರಿಯರಂತೂ ವಿವಾಹ ಮಾಡಿಕೊಳ್ಳಲೇಬಾರದು. ಇಲ್ಲದಿದ್ದರೆ ಅವರೂ ಸಹ ಗೃಹಸ್ಥಿಯಾಗಿ ಬಿಡುವರು. ಕೆಲವು ಗಂಧರ್ವ ವಿವಾಹಗಳ ಹೆಸರೂ ಇದೆ. ಕನ್ಯೆಯರ ಮೇಲೆ ಬಹಳ ಪೆಟ್ಟು ಬಿದ್ದಾಗ ಅಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ಗಂಧರ್ವ ವಿವಾಹ ಮಾಡಿಸಲಾಗುತ್ತದೆ. ವಾಸ್ತವದಲ್ಲಿ ಪೆಟ್ಟುಗಳನ್ನು ಸಹನೆ ಮಾಡಿದರೂ ಪರವಾಗಿಲ್ಲ ಆದರೆ ಅಧರ್ ಕುಮಾರಿಯಾಗಬಾರದು. ಬಾಲ ಬ್ರಹ್ಮಾಚಾರಿಯ ಹೆಸರು ಬಹಳ ಪ್ರಸಿದ್ಧವಾಗುತ್ತದೆ. ವಿವಾಹ ಮಾಡಿಕೊಂಡರೆ ಅರ್ಧಾಂಗಿಯಾಗಿ ಬಿಡುವರು. ಕುಮಾರರಿಗೆ ಹೇಳಲಾಗುತ್ತದೆ, ನೀವಂತೂ ಪವಿತ್ರರಾಗಿರಿ, ಗೃಹಸ್ಥ ವ್ಯವಹಾರದಲ್ಲಿರುವವರಿಗೆ ಹೇಳಲಾಗುತ್ತದೆ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನವಾಗಿರಿ. ಅವರಿಗೇ ಪರಿಶ್ರಮವಾಗುತ್ತದೆ. ವಿವಾಹ ಮಾಡಿಕೊಳ್ಳದಿದ್ದರೆ ಬಂಧನವಿರುವುದಿಲ್ಲ, ಕನ್ಯೆಯರಂತೂ ಓದಬೇಕಾಗಿದೆ ಮತ್ತು ಜ್ಞಾನದಲ್ಲಿ ಬಹಳ ಧೃಡವಾಗಿರಬೇಕಾಗಿದೆ. ಚಿಕ್ಕ ಕುಮಾರಿಯರು ಅಪ್ರಾಪ್ತ ವಯಸ್ಕವರಿದ್ದಾರೆಯೋ ಅವರನ್ನು ನಾವು ಇಟ್ಟುಕೊಳ್ಳಲು ಸಾಧ್ಯವಿಲ್ಲ, ಅವರು ತಮ್ಮ ಮನೆಯಲ್ಲಿದ್ದೇ ಓದಬಹುದು. ಒಂದುವೇಳೆ ಅವರ ಮಾತಾಪಿತರು ಜ್ಞಾನದಲ್ಲಿ ಬಂದರೆ ಅವರನ್ನು ಇಟ್ಟುಕೊಳ್ಳಬಹುದು. ಇದು ಶಾಲೆಗೆ ಶಾಲೆಯೂ ಆಗಿದೆ, ಮನೆಗೆ ಮನೆಯೂ ಆಗಿದೆ ಮತ್ತು ಸತ್ಸಂಗವೂ ಆಗಿದೆ. ಸತ್ಯವೆಂದರೆ ಒಬ್ಬ ತಂದೆಯಾಗಿದ್ದಾರೆ, ಓ ದೂರದ ಯಾತ್ರಿಕನೇ ಎಂದು ಅವರಿಗೇ ಹೇಳುತ್ತಾರೆ. ಆತ್ಮವು ಪವಿತ್ರವಾಗುತ್ತದೆ, ತಂದೆಯು ಹೇಳುತ್ತಾರೆ - ನಾನು ಯಾತ್ರಿಕನು ಸದಾ ಪವಿತ್ರನಾಗಿರುತ್ತೇನೆ. ನಾನು ಬಂದು ಎಲ್ಲಾ ಆತ್ಮರನ್ನು ಪವಿತ್ರ, ಸುಂದರರನ್ನಾಗಿ ಮಾಡುತ್ತೇನೆ, ಮತ್ತ್ಯಾವುದೇ ಯಾತ್ರಿಕರು ಈ ರೀತಿಯಿರುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ರಾವಣ ರಾಜ್ಯದಲ್ಲಿ ಬಂದಿದ್ದೇನೆ, ಈ ಶರೀರವು ಪರ ಆಗಿದೆ. ಇದು ನನ್ನ ಶರೀರವಾಗಿದೆ ಎಂದು ನೀವಾತ್ಮರು ಹೇಳುತ್ತೀರಿ. ತಂದೆಯು ಹೇಳುತ್ತಾರೆ - ಇದು ನನ್ನ ಶರೀರವಲ್ಲ, ಇದು ಇವರ ಶರೀರವಾಗಿದೆ. ಈ ಪತಿತ ಶರೀರವು ನನ್ನದಲ್ಲ, ಇವರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಬರುತ್ತೇನೆ. ಯಾರು ನಂಬರ್ವನ್ ಪಾವನರಾಗಿದ್ದರೋ ಅವರೇ ಕೊನೆಯಲ್ಲಿ ವಿಕಾರಿಯಾಗುತ್ತಾರೆ, ಮೊಟ್ಟ ಮೊದಲಿಗೆ 16 ಕಲಾ ಸಂಪೂರ್ಣನಾಗಿದ್ದರು, ಈಗ ಯಾವುದೇ ಕಲೆಯಿಲ್ಲ. ವಾಸ್ತವದಲ್ಲಿ ಎಲ್ಲರೂ ಪತಿತರಾಗಿದ್ದಾರೆ ಅಂದಾಗ ತಂದೆಯು ದೂರದೇಶದ ಯಾತ್ರಿಕನಾದರಲ್ಲವೆ. ನೀವಾತ್ಮರೂ ಸಹ ಯಾತ್ರಿಕರಾಗಿದ್ದೀರಿ, ಇಲ್ಲಿ ಬಂದು ಪಾತ್ರವನ್ನಭಿನಯಿಸುತ್ತೀರಿ. ಈ ಸೃಷ್ಟಿಚಕ್ರವನ್ನು ಯಾರೂ ಅರಿತುಕೊಂಡಿಲ್ಲ, ಭಲೆ ಯಾರೆಷ್ಟಾದರೂ ಶಾಸ್ತ್ರಗಳನ್ನು ಓದಿರಬಹುದು ಆದರೆ ಈ ಜ್ಞಾನವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ನಾನು ಇವರ ತನುವಿನಲ್ಲಿ ಪ್ರವೇಶ ಮಾಡಿ ಆತ್ಮರಿಗೆ ಜ್ಞಾನ ಕೊಡುತ್ತೇನೆ. ಅಲ್ಲಿ ಮನುಷ್ಯರು ಮನುಷ್ಯರಿಗೆ ಶಾಸ್ತ್ರಗಳ ಜ್ಞಾನವನ್ನು ತಿಳಿಸುತ್ತಾರೆ, ಅವರು ಭಕ್ತರಾದರು. ಸದ್ಗತಿದಾತನೂ ಒಬ್ಬರೇ ಆಗಿದ್ದಾರೆ, ಅವರೇ ಜ್ಞಾನ ಸಾಗರನಾಗಿದ್ದಾರೆ, ಅವರನ್ನು ಅರಿತುಕೊಳ್ಳದ ಕಾರಣ ದೇಹಾಭಿಮಾನವು ಬಂದು ಬಿಡುತ್ತದೆ. ಅವರ್ಯಾರೂ ಸಹ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಎಂದು ಹೇಳುವುದಿಲ್ಲ, ಆತ್ಮವೇ ಓದುತ್ತದೆ ಎಂಬುದನ್ನು ಯಾರೂ ತಿಳಿಸುವುದಿಲ್ಲ ಏಕೆಂದರೆ ದೇಹಾಭಿಮಾನವಿದೆ, ಈಗ ದೂರದ ಯಾತ್ರಿಕನೆಂದು ಶಿವ ತಂದೆಗೇ ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಾವು 84 ಜನ್ಮಗಳ ಚಕ್ರವನ್ನು ಸುತ್ತಿದ್ದೇವೆ.
ತಂದೆಯು ಹೇಳುತ್ತಾರೆ - 5000 ವರ್ಷಗಳ ಮೊದಲೂ ಸಹ ತಿಳಿಸಿದ್ದೆವು, ಮಕ್ಕಳೇ ನೀವು ತಮ್ಮ ಜನ್ಮಗಳನ್ನು ಅರಿತುಕೊಂಡಿಲ್ಲ, ನಾನು ಅರಿತಿದ್ದೇನೆ. ಗೀತೆಯಲ್ಲಿ ಹಿಟ್ಟಿನಲ್ಲಿ ಉಪ್ಪಿನಷ್ಟು ಕೆಲವೊಂದು ಮಾತುಗಳು ಸರಿಯಾಗಿದೆ, ಅದೇ ಗೀತಾ ಭಾಗ, ಅದೇ ಮಹಾ ಭಾರತ ಯುದ್ಧ, ಅದೇ ಮನ್ಮನಾಭವ-ಮಧ್ಯಾಜೀ ಭವದ ಜ್ಞಾನವಾಗಿದೆ. ನನ್ನೊಬ್ಬನನ್ನೇ ನೆನಪು ಮಾಡಿ, ಯುದ್ಧವೂ ಸಹ ಅವಶ್ಯವಾಗಿ ಆಯಿತು. ಪಾಂಡವರ ವಿಜಯವಾಯಿತು, ವಿಷ್ಣುವಿನ ವಿಜಯ ಮಾಲೆಯ ಗಾಯನವೂ ಇದೆ. ಪಾಂಡವರು ಪರ್ವತಗಳ ಮೇಲೆ ಕರಗಿ ಹೋದರೆಂದು ಶಾಸ್ತ್ರಗಳಲ್ಲಿ ತೋರಿಸಿದ್ದಾರೆ ಅಂದಮೇಲೆ ಮಾಲೆಯು ಎಲ್ಲಿ ಆಯಿತು? ಈಗ ನೀವು ತಿಳಿದುಕೊಂಡಿದ್ದೀರಿ - ವಿಷ್ಣುವಿನ ಮಾಲೆಯಾಗಲು ನಾವಿಲ್ಲಿ ಬಂದಿದ್ದೇವೆ. ಪತಿತ-ಪಾವನ ತಂದೆಯು ಮೇಲಿದ್ದಾರೆ, ಅವರ ನೆನಪಾರ್ಥವು ಬೇಕಲ್ಲವೆ. ಭಕ್ತಿಮಾರ್ಗದಲ್ಲಿ ನೆನಪಾರ್ಥದ ಗಾಯನವಾಗುತ್ತದೆ. ಕೆಲವರದು 8ರ ಮಾಲೆ, ಕೆಲವರದು 108ರ ಮಾಲೆ ಮತ್ತು 16,108ರ ಮಾಲೆಯನ್ನು ಮಾಡಿದ್ದಾರೆ. ನಿಮ್ಮ ಏರುವ ಕಲೆಯಿಂದ ಸರ್ವರ ಉನ್ನತಿಯಾಗುವುದೆಂದು ಹಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಮ್ಮದು ಏರುವ ಕಲೆಯಾಗಿದೆ, ನಾವು ನಮ್ಮ ಸುಖಧಾಮಕ್ಕೆ ಹೋಗುತ್ತೇವೆ. ಅಲ್ಲಿಂದ ಮತ್ತೆ ಕೆಳಗಡೆ ಹೇಗೆ ಇಳಿಯುತ್ತೇವೆ, 84 ಜನ್ಮಗಳನ್ನು ಹೇಗೆ ತೆಗೆದುಕೊಳ್ಳುತ್ತೇವೆ - ಇದೆಲ್ಲಾ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಈ ಜ್ಞಾನವನ್ನು ಮರೆಯಬಾರದು. ನಮ್ಮೆಲ್ಲಾ ದುಃಖವನ್ನು ದೂರಮಾಡಲು, ಶಾಪವನ್ನು ಕಳೆದು ಸುಖದ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆ. ರಾವಣನ ಶಾಪದಿಂದ ಎಲ್ಲರಿಗೆ ದುಃಖವಾಗುತ್ತದೆ. ಆದ್ದರಿಂದ ಈಗ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ - ಸೂರ್ಯವಂಶಿಯರೇ ಭಾರತದಲ್ಲಿ ರಾಜ್ಯ ಮಾಡಿದೆವು. ಶಿವ ತಂದೆಯು ಭಾರತದಲ್ಲಿಯೇ ಬರುತ್ತಾರೆ, ಭಾರತವೇ ಸ್ವರ್ಗವಾಗಿತ್ತು. ಇದನ್ನು ಪದೇ-ಪದೇ ಬುದ್ಧಿಯಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ. ಯಾರು 84 ಜನ್ಮಗಳ ಚಕ್ರವನ್ನು ಸುತ್ತಿರುವುದಿಲ್ಲವೋ ಅವರು ಧಾರಣೆ ಮಾಡುವುದಿಲ್ಲ, ಅನ್ಯರಿಗೂ ಮಾಡಿಸುವುದಿಲ್ಲ, ಅಂತಹವರು 84 ಜನ್ಮಗಳನ್ನು ತೆಗೆದುಕೊಂಡಿಲ್ಲವೆಂದು ತಿಳಿಯಲಾಗುವುದು. ಅವರು ತಡವಾಗಿ ಬರುತ್ತಾರೆ. ಸ್ವರ್ಗದಲ್ಲಿ ಬರುವುದಿಲ್ಲ, ಮೊಟ್ಟ ಮೊದಲಿಗೇ ಹೋಗುವುದು ಒಳ್ಳೆಯದಲ್ಲವೆ. ಹೊಸ ಮನೆಯನ್ನು ಕಟ್ಟಿಸಿದಾಗ ಮೊದಲು ತಾವಿರುತ್ತಾರೆ ನಂತರ ಬಾಡಿಗೆಗೆ ಕೊಡುತ್ತಾರೆ ಅಂದಮೇಲೆ ಅದೂ ಸಹ ಮಧ್ಯಮ ದರ್ಜೆಯದಾಯಿತಲ್ಲವೆ. ಸತ್ಯಯುಗವು ಹೊಸ ಪ್ರಪಂಚವಾಗಿದೆ, ತ್ರೇತಾಯುಗಕ್ಕೆ ಮಧ್ಯಮ ದರ್ಜೆಯದು ಎಂದು ಹೇಳಲಾಗುತ್ತದೆ. ಆದ್ದರಿಂದ ಈಗ ಬುದ್ಧಿಯಲ್ಲಿ ಬರುತ್ತದೆ - ನಾವು ಸ್ವರ್ಗ, ಹೊಸ ಪ್ರಪಂಚದಲ್ಲಿ ಹೋಗಬೇಕು, ಪುರುಷಾರ್ಥ ಮಾಡಬೇಕಾಗಿದೆ. ಪ್ರಜೆಗಳೂ ಸಹ ತಯಾರಾಗುತ್ತಾ ಹೋಗುವರು. ಮಾಲೆಯಲ್ಲಿ ಯಾರು-ಯಾರು ಪೋಣಿಸಲ್ಪಡುತ್ತಾರೆಂದು ನಿಮಗೆ ಅರ್ಥವಾಗುತ್ತಾ ಹೋಗುವುದು. ಒಂದುವೇಳೆ ಯಾರಿಗಾದರೂ ನೀವು ಮಾಲೆಯಲ್ಲಿ ಬರುವುದಿಲ್ಲವೆಂದು ಹೇಳಿ ಬಿಟ್ಟರೆ ಅವರಿಗೆ ಹೃದಯಾಘಾತವಾಗಿ ಬಿಡುವುದು ಆದ್ದರಿಂದ ಪುರುಷಾರ್ಥ ಮಾಡಿ ಎಂದು ಹೇಳಲಾಗುತ್ತದೆ. ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ - ನಮ್ಮ ಬುದ್ಧಿಯೋಗವು ಅಲೆಯುತ್ತಿಲ್ಲವೆ! ಶಿವ ತಂದೆಯೊಂದಿಗೆ ನಿಮ್ಮದು ಎಷ್ಟೊಂದು ಪ್ರೀತಿಯುಂಟಾಗುತ್ತಾ ಹೋಗುತ್ತದೆ! ನಾವು ಬಾಪ್ದಾದಾರವರ ಬಳಿ ಹೋಗುತ್ತೇವೆಂದು ಹೇಳುತ್ತಾರೆ. ಶಿವ ತಂದೆಯಿಂದ ದಾದಾರವರ ಮೂಲಕ ಆಸ್ತಿಯನ್ನು ತೆಗೆದುಕೊಳ್ಳಲು ಹೋಗುತ್ತೀರಿ, ಇಂತಹ ತಂದೆಯ ಬಳಿಗಂತೂ ಬಹಳಷ್ಟುಬಾರಿ ಹೋಗಬೇಕು ಆದರೆ ಗೃಹಸ್ಥ ವ್ಯವಹಾರವನ್ನೂ ಸಂಭಾಲನೆ ಮಾಡಬೇಕಾಗಿದೆ. ಭಲೆ ಬಹಳ ಧನವಂತರಿದ್ದಾರೆ ಆದರೆ ಅವರಿಗೆ ಬಿಡುವಿಲ್ಲ, ಪೂರ್ಣ ನಿಶ್ಚಯವಿಲ್ಲ. ಇಲ್ಲವಾದರೆ ತಿಂಗಳು, ಎರಡು ತಿಂಗಳಿನ ನಂತರವಾಗಲಿ ಬಂದು ರಿಫ್ರೆಷ್ ಆಗುವರು. ಅವರಿಗೆ ಪದೇ-ಪದೇ ತಂದೆಯ ಕಡೆ ಸೆಳೆತವಾಗುವುದು. ಸೂಜಿಯ ಮೇಲೆ ತುಕ್ಕು ಹಿಡಿದಿದ್ದರೆ ಅಯಸ್ಕಾಂತವು ಅದನ್ನು ಸೆಳೆಯುವುದಿಲ್ಲ. ಯಾರಿಗೆ ತಂದೆಯ ಜೊತೆ ಸಂಪೂರ್ಣ ಯೋಗವಿರುವುದೋ ಅವರಿಗೆ ಕೂಡಲೇ ಆಕರ್ಷಣೆಯಾಗುತ್ತದೆ, ಓಡೋಡಿ ಬರುತ್ತಾರೆ. ಎಷ್ಟು ತುಕ್ಕು ಕಳೆಯುತ್ತಾ ಹೋಗುವುದೋ ಅಷ್ಟು ಆಕರ್ಷಣೆಯಾಗುವುದು - ನಾವು ಅಯಸ್ಕಾಂತದೊಂದಿಗೆ ಮಿಲನ ಮಾಡಬೇಕು ಎಂದು. ನೀವು ಪ್ರೀತಿಯನ್ನಾದರೂ ಮಾಡಿ, ತಿರಸ್ಕಾರವನ್ನಾದರೂ ಮಾಡಿ..... ನಾವು ನಿಮ್ಮ ದ್ವಾರವನ್ನು ಬಿಟ್ಟು ಹೋಗುವುದಿಲ್ಲವೆಂದು ಗೀತೆಯಿದೆ ಆದರೆ ಆ ಸ್ಥಿತಿಯು ಕೊನೆಯಲ್ಲಿಯೇ ಇರುವುದು. ಪೂರ್ಣ ತುಕ್ಕು ಇಳಿದಿದ್ದಾಗ ಆ ಸ್ಥಿತಿಯು ಬರುವುದು. ತಂದೆಯು ತಿಳಿಸುತ್ತಾರೆ - ಹೇ ಆತ್ಮಗಳೇ, ಮನ್ಮನಾಭವ. ಭಲೆ ಗೃಹಸ್ಥ ವ್ಯವಹಾರದಲ್ಲಿರಿ, ಇಲ್ಲಿಗೆ ಓಡಿ ಬಂದು ಕುಳಿತು ಬಿಡುವಂತಿಲ್ಲ. ಸಾಗರನ ಬಳಿ ಮೋಡಗಳು ರಿಫ್ರೆಷ್ ಆಗಲು ಬರಬೇಕಾಗಿದೆ ಮತ್ತೆ ಸೇವಾರ್ಥವಾಗಿ ಹೋಗಬೇಕಾಗಿದೆ. ಯಾವಾಗ ಬಂಧನವು ಕಳೆಯುವುದೋ ಆಗ ಸೇವೆಗೆ ಹೋಗಬಹುದು. ತಂದೆ-ತಾಯಿಗಳು ತಮ್ಮ ಮಕ್ಕಳನ್ನು ಸಂಭಾಲನೆ ಮಾಡಲೇಬೇಕಾಗಿದೆ. ತಂದೆಯ ನೆನಪಿನಲ್ಲಿರಬೇಕು, ಪವಿತ್ರರಾಗಬೇಕಾಗಿದೆ.
ತಂದೆಯು ತಿಳಿಸುತ್ತಾರೆ - ಯಜ್ಞದಲ್ಲಿ ಅನೇಕ ಪ್ರಕಾರದ ವಿಘ್ನಗಳು ಬರುತ್ತವೆ, ಈಶ್ವರನು ಸಮರ್ಥನಾಗಿದ್ದಾರೆ, ಆದರೂ ವಿಘ್ನಗಳೇಕೆ ಎಂದು ಕೇಳುತ್ತಾರೆ. ರಾವಣನು ಭಗವಂತನಿಗಿಂತಲೂ ತೀಕ್ಷ್ಣವಾಗಿದ್ದಾನೆ ಎಂಬುದು ಮನುಷ್ಯರಿಗೆ ತಿಳಿದಿಲ್ಲ. ಈಗ ಅವನಿಂದ ರಾಜ್ಯವನ್ನು ಹಿಂತೆಗೆದುಕೊಳ್ಳಲಾಗುತ್ತದೆ ಆದ್ದರಿಂದ ಅನೇಕ ಪ್ರಕಾರದ ವಿಘ್ನಗಳು ಬೀಳುತ್ತಿರುತ್ತವೆ. ಡ್ರಾಮಾ ಪ್ಲಾನನುಸಾರ ಕಲ್ಪದ ನಂತರವೂ ಈ ವಿಘ್ನಗಳು ಬರುತ್ತವೆ. ಆರಂಭದಿಂದಲೂ ಪತಿತರ ವಿಘ್ನಗಳು ಬೀಳುತ್ತಿವೆ, ಶಾಸ್ತ್ರಗಳಲ್ಲಿಯೂ ಬರೆದಿದ್ದಾರೆ - ಕೃಷ್ಣನಿಗೆ 16,108 ಮಂದಿ ಪಟ್ಟದರಾಣಿಯರಿದ್ದರು. ಸರ್ಪವು ಕಚ್ಚಿತು, ರಾಮನ ಸೀತೆಯ ಅಪಹರಣವಾಯಿತು, ಆದರೆ ಸ್ವರ್ಗದಲ್ಲಿ ರಾವಣನೆಲ್ಲಿಂದ ಬಂದನು! ಬಹಳಷ್ಟು ಅಸತ್ಯವಿದೆ. ವಿಕಾರವಿಲ್ಲದೆ ಹೇಗೆ ಮಕ್ಕಳಾಗುವರು ಎಂದು ಕೇಳುತ್ತಾರೆ. ಅವರಿಗೆ ತಿಳಿದೇ ಇಲ್ಲ. ಯಾರು ಆಸ್ತಿಯನ್ನು ಪಡೆಯುವವರಿದ್ದಾರೆಯೋ ಅವರೇ ಬಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಈ ಜ್ಞಾನ ಯಜ್ಞದಲ್ಲಿ ಅಸುರರ ವಿಘ್ನಗಳು ಬೀಳುತ್ತವೆ. ಪತಿತರಿಗೆ ಅಸುರರೆಂದು ಹೇಳಲಾಗುತ್ತದೆ. ರಾವಣ ಸಂಪ್ರದಾಯವಾಗಿದೆ. ನೀವೀಗ ಸಂಗಮದಲ್ಲಿದ್ದೀರಿ, ರಾವಣ ರಾಜ್ಯದಿಂದ ದೂರ ಸರಿದಿದ್ದೀರಿ ಆದರೂ ಸಹ ಅದರ ಸ್ವಲ್ಪ ಪ್ರಭಾವವಾದರೂ ಬೀರುತ್ತದೆ. ನಾವೀಗ ಹೋಗುತ್ತಿದ್ದೇವೆಂದು ಬುದ್ಧಿಯಲ್ಲಿ ಜ್ಞಾನವಿದೆ, ಇಲ್ಲಿಯೇ ಕುಳಿತಿದ್ದೀರಿ ಆದರೆ ಬುದ್ಧಿಯಲ್ಲಿ ಹೋಗಬೇಕೆಂಬ ಸ್ಮೃತಿಯಿದೆ. ಇಲ್ಲಿಯೇ ಕುಳಿತಿದ್ದರೂ ಸಹ ಇದರಿಂದ ನಿಮಗೆ ವೈರಾಗ್ಯವಿದೆ. ಇದು ಛೀ ಛೀ ಪ್ರಪಂಚ, ಸ್ಮಶಾನವಾಗಲಿದೆ. ಭಿನ್ನ-ಭಿನ್ನ ಮಾತುಗಳಿಂದ ತಿಳಿಸಲಾಗುತ್ತದೆ. ವಾಸ್ತವದಲ್ಲಿ ಒಂದೆ ಮಾತಾಗಿದೆ - ಮನ್ಮನಾಭವ. ಬಾಬಾ, ನಾವು ಬಂಧನದಲ್ಲಿದ್ದೇವೆಂದು ಎಷ್ಟೊಂದು ಮಂದಿಯ ಪತ್ರಗಳು ಬರುತ್ತವೆ. ಒಬ್ಬ ದ್ರೌಪದಿಯಿರಲಿಲ್ಲ, ಸಾವಿರಾರು ಮಂದಿ ಇದ್ದಾರೆ. ನೀವೀಗ ಪತಿತ ಪ್ರಪಂಚದಿಂದ ಪಾವನ ಪ್ರಪಂಚಕ್ಕೆ ಹೋಗುತ್ತಿದ್ದೀರಿ. ಯಾರು ಕಲ್ಪದ ಹಿಂದೆ ಹೂವಾಗಿದ್ದರೋ ಅವರೇ ಬರುತ್ತಾರೆ. ಭಗವಂತನ ಹೂದೋಟವು ಇಲ್ಲಿಯೇ ಸ್ಥಾಪನೆಯಾಗುವುದು. ಕೆಲವರು ಇಂತಿಂತಹ ಒಳ್ಳೊಳ್ಳೆಯ ಹೂಗಳಾಗಿದ್ದಾರೆ, ಅವರನ್ನು ನೋಡುತ್ತಿದ್ದಂತೆಯೇ ಬಹಳ ತೃಪ್ತಿಯಾಗುತ್ತದೆ. ಹೆಸರೇ ಇದೆ, ಹೂವುಗಳ ರಾಜ ಎಂದು. 5 ದಿನಗಳವರೆಗೆ ಇಟ್ಟಿದ್ದರೂ ಸಹ ಅರಳಿರುತ್ತದೆ, ಸುಗಂಧ ಬೀರುತ್ತಾ ಇರುತ್ತದೆ. ಇಲ್ಲಿಯೂ ಸಹ ಯಾರು ತಂದೆಯನ್ನು ನೆನಪು ಮಾಡುತ್ತಾರೆ ಮತ್ತು ನೆನಪು ತರಿಸುತ್ತಾರೆಯೋ ಅವರ ಸುಗಂಧ ಹರಡುತ್ತದೆ, ಸದಾ ಖುಷಿಯಾಗಿರುತ್ತಾರೆ, ಇಂತಹ ಮಧುರಾತಿ ಮಧುರ ಮಕ್ಕಳನ್ನು ನೋಡಿ ತಂದೆಯು ಹರ್ಷಿತರಾಗುತ್ತಾರೆ. ಅವರ ಮುಂದೆ ತಂದೆಯ ಜ್ಞಾನದ ನೃತ್ಯವು ಬಹಳ ಚೆನ್ನಾಗಿ ನಡೆಯುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಜ್ಞಾನ ಮತ್ತು ಯೋಗದಲ್ಲಿ ಶಕ್ತಿಶಾಲಿಯಾಗಬೇಕಾಗಿದೆ. ಒಂದುವೇಳೆ ಯಾವುದೇ ಬಂಧನವಿಲ್ಲದಿದ್ದರೆ ಮತ್ತೆಂದೂ ಬಂಧನಗಳಲ್ಲಿ ಮರೆತೂ ಕೂಡ ಹೋಗಿ ಸಿಲುಕಬಾರದು. ಬಾಲ ಬ್ರಹ್ಮ್ಚಾರಿಯಾಗಿರಬೇಕಾಗಿದೆ.
2. ಈಗ ನಮ್ಮದು ಏರುವ ಕಲೆಯಾಗಿದೆ, ತಂದೆಯು ನಮ್ಮ ಎಲ್ಲಾ ದುಃಖವನ್ನು ದೂರ ಮಾಡಲು ಶಾಪವನ್ನು ಕಳೆದು ಆಸ್ತಿಯನ್ನು ಕೊಡಲು ಬಂದಿದ್ದಾರೆ. ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ ಅಪಾರ ಖುಷಿಯಲ್ಲಿರಬೇಕಾಗಿದೆ. ಪರಿಶೀಲನೆ ಮಾಡಿಕೊಳ್ಳಿ - ನಮ್ಮ ಬುದ್ಧಿಯೋಗವು ಎಲ್ಲಿಯೂ ಅಲೆದಾಡುತ್ತಿಲ್ಲವೆ?
ಸ್ನೇಹ ಮತ್ತು ಶಕ್ತಿಯ ಸಮಾನತೆ
ಇಂದು ಸ್ಮೃತಿ ಸ್ವರೂಪರನ್ನಾಗಿ ಮಾಡುವ ಸಮರ್ಥ ತಂದೆಯು ನಾಲ್ಕಾರು ಕಡೆಯ ಸ್ಮೃತಿ ಸ್ವರೂಪ ಸಮರ್ಥ ಮಕ್ಕಳನ್ನು ನೋಡುತ್ತಿದ್ದೇವೆ. ಇಂದಿನ ದಿನವು ಬಾಪ್ದಾದಾರವರ ಸ್ನೇಹದಲ್ಲಿ ಸಮಾವೇಶವಾಗುವ ಜೊತೆ ಜೊತೆಗೆ ಸ್ನೇಹ ಮತ್ತು ಸಮರ್ಥ - ಎರಡರ ಬ್ಯಾಲೆನ್ಸ್ ಸ್ಥಿತಿಯ ಅನುಭವದ ದಿನವಾಗಿದೆ. ಸ್ಮೃತಿ ದಿವಸ ಅರ್ಥಾತ್ ಸ್ನೇಹ ಮತ್ತು ಸಮರ್ಥ - ಎರಡರ ಸಮಾನತೆಯ ವರದಾನದ ದಿವಸವಾಗಿದೆ ಏಕೆಂದರೆ ಯಾವ ತಂದೆಯ ಸ್ಮೃತಿಯ ಸ್ನೇಹದಲ್ಲಿ ಲವಲೀನರಾಗುತ್ತೀರಿ, ಆ ಬ್ರಹ್ಮಾ ತಂದೆಯು ಸ್ನೇಹ ಮತ್ತು ಶಕ್ತಿಯ ಸಮಾನತೆಯ ಶ್ರೇಷ್ಠ ಸಂಕೇತವಾಗಿದ್ದಾರೆ. ಈಗೀಗ ಅತಿ ಸ್ನೇಹಿ, ಈಗೀಗ ಶ್ರೇಷ್ಠ ಶಕ್ತಿಶಾಲಿ. ಸ್ನೇಹದಲ್ಲಿಯೂ ಸ್ನೇಹದ ಮೂಲಕ ಪ್ರತಿಯೊಬ್ಬ ಮಗುವನ್ನು ಸದಾ ಶಕ್ತಿಶಾಲಿಯನ್ನಾಗಿ ಮಾಡಿದರು. ಕೇವಲ ಸ್ನೇಹದಲ್ಲಿ ತನ್ನ ಕಡೆ ಆಕರ್ಷಿತರನ್ನಾಗಿ ಮಾಡಲಿಲ್ಲ. ಬದಲಾಗಿ ಸ್ನೇಹದ ಮೂಲಕ ಶಕ್ತಿಸೇನೆಯನ್ನಾಗಿ ಮಾಡಿ ವಿಶ್ವದ ಮುಂದೆ ಸೇವಾರ್ಥವಾಗಿ ನಿಮಿತ್ತ ಮಾಡಿದರು. ಸದಾ ‘ಸ್ನೇಹಿ ಭವ’ದ ಜೊತೆಗೆ ‘ನಷ್ಟ ಮೋಹ ಕರ್ಮಾತೀತ ಭವ’ದ ಪಾಠವನ್ನು ಓದಿಸಿದರು. ಅಂತ್ಯದವರೆಗೆ ಮಕ್ಕಳಿಗೆ ಸದಾ ಭಿನ್ನ ಮತ್ತು ಸದಾ ಪ್ರಿಯ - ಇದೇ ನಯನಗಳ ದೃಷ್ಟಿಯ ಮೂಲಕ ವರದಾನ ನೀಡಿದರು.
ಇಂದಿನ ದಿನವು ನಾಲ್ಕಾರು ಕಡೆಯ ಮಕ್ಕಳು ಭಿನ್ನ-ಭಿನ್ನ ಸ್ವರೂಪದಿಂದ ಭಿನ್ನ-ಭಿನ್ನ ಸಂಬಂಧದಿಂದ, ಸ್ನೇಹದಿಂದ ಮತ್ತು ತಂದೆಯ ಸಮಾನರಾಗುವ ಸ್ಥಿತಿಯ ಅನುಭೂತಿಯಿಂದ ಮಿಲನ ಮಾಡಲು ಬಾಪ್ದಾದಾರವರ ವತನಕ್ಕೆ ತಲುಪಿದರು. ಕೆಲವರು ಬುದ್ಧಿಯ ಮೂಲಕ, ಇನ್ನೂ ಕೆಲವರು ದಿವ್ಯ ದೃಷ್ಟಿಯ ಮೂಲಕ ತಲುಪಿದರು. ಬಾಪ್ದಾದಾ ಎಲ್ಲಾ ಮಕ್ಕಳ ಸ್ನೇಹದ ಮತ್ತು ಸಮಾನ ಸ್ಥಿತಿಯ ನೆನಪು-ಪ್ರೀತಿಯನ್ನು ಹೃದಯದಿಂದ ಸ್ವೀಕಾರ ಮಾಡಿದರು ಮತ್ತು ಅದಕ್ಕೆ ಪ್ರತಿಯಾಗಿ ಎಲ್ಲಾ ಮಕ್ಕಳಿಗೆ ‘ಬಾಪ್ದಾದಾರವರ ಸಮಾನಭವ’ದ ವರದಾನವನ್ನು ಕೊಟ್ಟರು ಮತ್ತು ಕೊಡುತ್ತಿದ್ದಾರೆ. ಬಾಪ್ದಾದಾರವರಿಗೆ ತಿಳಿದಿದೆ, ಮಕ್ಕಳಿಗೆ ಬ್ರಹ್ಮಾ ತಂದೆಯ ಜೊತೆ ಅತಿಸ್ನೇಹವಿದೆ, ಸಾಕಾರದಲ್ಲಿ ಪಾಲನೆ ತೆಗೆದುಕೊಂಡಿರಬಹುದು ಅಥವಾ ಈಗ ಅವ್ಯಕ್ತ ರೂಪದಿಂದ ಪಾಲನೆ ಪಡೆಯುತ್ತಿರಬಹುದು ಆದರೆ ದೊಡ್ಡ ತಾಯಿಯಾಗಿರುವ ಕಾರಣ ತಾಯಿಯೊಂದಿಗೆ ಮಕ್ಕಳ ಪ್ರೀತಿಯು ಸ್ವತಹ ಇದ್ದೇ ಇರುತ್ತದೆ. ಈ ಕಾರಣದಿಂದ ತಂದೆಗೆ ಗೊತ್ತಿದೆ, ಬ್ರಹ್ಮಾ ತಾಯಿಯನ್ನು ಎಲ್ಲರೂ ನೆನಪು ಮಾಡುತ್ತೀರಿ ಆದರೆ ಸ್ನೇಹದ ಪ್ರತ್ಯಕ್ಷ ಸ್ವರೂಪವು ಸಮಾನರಾಗುವುದಾಗಿದೆ. ಎಷ್ಟೆಷ್ಟು ಹೃದಯದ ಸತ್ಯ ಪ್ರೀತಿಯಿದೆಯೋ ಅಷ್ಟೇ ಮಕ್ಕಳ ಮನಸ್ಸಿನಲ್ಲಿ ತಂದೆಯನ್ನು ಫಾಲೋ ಮಾಡುವ ಉಲ್ಲಾಸ-ಉತ್ಸಾಹವು ಕಾಣುತ್ತದೆ. ಈ ಅಲೌಕಿಕ ತಾಯಿಯ ಅಲೌಕಿಕ ಪ್ರೀತಿಯು ವಿಯೋಗಿಗಳನ್ನಾಗಿ ಮಾಡುವಂತದ್ದಲ್ಲ, ಸಹಜಯೋಗಿ-ರಾಜಯೋಗಿ ಅರ್ಥಾತ್ ರಾಜರನ್ನಾಗಿ ಮಾಡುವಂತದ್ದಾಗಿದೆ. ಅಲೌಕಿಕ ತಾಯಿಗೆ ಮಕ್ಕಳ ಪ್ರತಿ ಇದೇ ಅಲೌಕಿಕ ಮಮತೆಯಿದೆ - ನನ್ನ ಪ್ರತಿಯೊಬ್ಬ ಮಗುವು ರಾಜನಾಗಲಿ. ಎಲ್ಲರೂ ರಾಜಾ ಮಕ್ಕಳಾಗಲಿ, ಪ್ರಜೆಗಳಲ್ಲ. ಪ್ರಜೆಗಳನ್ನು ಮಾಡಿಕೊಳ್ಳುವವರಾಗಿದ್ದೀರಿ ಆದರೆ ಪ್ರಜೆಗಳಾಗುವವರಲ್ಲ.
ಇಂದು ವತನದಲ್ಲಿ ಮಾತಾಪಿತರ ವಾರ್ತಾಲಾಪವು ನಡೆಯುತ್ತಿತ್ತು. ತಂದೆಯು ಬ್ರಹ್ಮಾ ತಾಯಿಯೊಂದಿಗೆ ಕೇಳಿದರು - ಮಕ್ಕಳಿಗೆ ವಿಶೇಷ ಸ್ನೇಹದ ದಿನದಂದು ಏನು ನೆನಪಿಗೆ ಬರುತ್ತದೆ? ತಮ್ಮೆಲ್ಲರಿಗೂ ವಿಶೇಷ ನೆನಪು ಬರುತ್ತದೆಯಲ್ಲವೆ. ಪ್ರತಿಯೊಬ್ಬರಿಗೂ ತಮ್ಮ ನೆನಪು ಬರುತ್ತದೆ ಮತ್ತು ಆ ನೆನಪಿನಲ್ಲಿ ಸಮಾವೇಶವಾಗುತ್ತೀರಿ. ಇಂದಿನ ದಿನವು ವಿಶೇಷ ಅಲೌಕಿಕ ನೆನಪಿನ ಸಂಸಾರವಾಗುತ್ತದೆ. ಪ್ರತೀ ಹೆಜ್ಜೆಯಲ್ಲಿ ವಿಶೇಷ ಸಾಕಾರ ಸ್ವರೂಪದ ಚರಿತ್ರೆಗಳ ನೆನಪು ಸ್ವತಹವಾಗಿ ಬರುತ್ತದೆ. ಪಾಲನೆಯ ನೆನಪು, ಪ್ರಾಪ್ತಿಗಳ ನೆನಪು, ವರದಾನಗಳ ನೆನಪು ಸ್ವತಹವಾಗಿಯೇ ಬರುತ್ತದೆ ಅಂದಾಗ ತಂದೆಯೂ ಸಹ ಬ್ರಹ್ಮಾ ತಾಯಿಯೊಂದಿಗೆ ಇದನ್ನೇ ಕೇಳಿದರು. ಇದಕ್ಕೆ ಬ್ರಹ್ಮಾ ತಂದೆಯು ಏನು ಹೇಳಿರಬಹುದು, ಗೊತ್ತಿದೆಯೇ? ಸಂಸಾರವಂತೂ ಮಕ್ಕಳದೇ ಆಗಿದೆ, ಬ್ರಹ್ಮಾರವರು ತಿಳಿಸಿದರು - ಅಮೃತವೇಳೆ ಮೊಟ್ಟ ಮೊದಲಿಗೆ ‘ಸಮಾನ ಮಕ್ಕಳು’ ನೆನಪಿಗೆ ಬಂದರು. ಸ್ನೇಹಿ ಮಕ್ಕಳು ಮತ್ತು ಸಮಾನ ಮಕ್ಕಳು. ಸ್ನೇಹಿ ಮಕ್ಕಳಿಗೆ ಸಮಾನರಾಗುವ ಇಚ್ಛೆ ಅಥವಾ ಸಂಕಲ್ಪವಿದೆ ಆದರೆ ಇಚ್ಛೆಯ ಜೊತೆಗೆ, ಸಂಕಲ್ಪದ ಜೊತೆಗೆ ಸದಾ ಸಮರ್ಥರಾಗಿರುವುದಿಲ್ಲ ಆದ್ದರಿಂದ ಸಮಾನರಾಗುವುದರಲ್ಲಿ ಮೊದಲ ನಂಬರಿನ ಬದಲಾಗಿ ಹಿಂದುಳಿದು ಬಿಡುತ್ತಾರೆ. ಸ್ನೇಹವು ಉಲ್ಲಾಸ-ಉತ್ಸಾಹದಲ್ಲಿ ತರುತ್ತದೆ ಆದರೆ ಸಮಸ್ಯೆಗಳು ಸ್ನೇಹ ಮತ್ತು ಶಕ್ತಿಯ ರೂಪದ ಸಮಾನ ಸ್ಥಿತಿಯಾಗುವುದರಲ್ಲಿ ಕೆಲವೊಂದೆಡೆ ನಿರ್ಬಲರನ್ನಾಗಿ ಮಾಡಿ ಬಿಡುತ್ತದೆ. ಸಮಸ್ಯೆಗಳು ಸದಾ ಸಮಾನರಾಗುವ ಸ್ಥಿತಿಯಿಂದ ದೂರ ಮಾಡಿಬಿಡುತ್ತವೆ. ಸ್ನೇಹದ ಕಾರಣ ತಂದೆಯನ್ನು ಮರೆಯುವುದಕ್ಕೇ ಸಾಧ್ಯವಿಲ್ಲ ಏಕೆಂದರೆ ಪಕ್ಕಾ ಬ್ರಾಹ್ಮಣರಾಗಿದ್ದೀರಿ. ಹಿಂದೆ ಸರಿಯುವವರೂ ಅಲ್ಲ, ಅಮರರಾಗಿದ್ದೀರಿ ಆದರೆ ಸಮಸ್ಯೆಯನ್ನು ನೋಡಿ ಕೇವಲ ಸ್ವಲ್ಪ ಸಮಯಕ್ಕಾಗಿ ಗಾಬರಿಯಾಗಿ ಬಿಡುತ್ತೀರಿ ಆದ್ದರಿಂದ ನಿರಂತರ ಸ್ನೇಹ ಮತ್ತು ಶಕ್ತಿಯ ಸಮಾನ ಸ್ಥಿತಿಯ ಅನುಭವ ಮಾಡಲು ಸಾಧ್ಯವಾಗುವುದಿಲ್ಲ.
ಈ ಸಮಯದ ಪ್ರಮಾಣ ಜ್ಞಾನಪೂರ್ಣ, ಶಕ್ತಿಪೂರ್ಣ, ಯಶಸ್ವೀಪೂರ್ಣ ಸ್ಥಿತಿಯ ಬಹಳ ಕಾಲದ ಅನುಭವಿಗಳಾಗಿ ಬಿಟ್ಟಿದ್ದೀರಿ. ಮಾಯೆ, ಪ್ರಕೃತಿ ಹಾಗೂ ಆತ್ಮಗಳ ಮೂಲಕ ನಿಮಿತ್ತವಾಗಿರುವ ಸಮಸ್ಯೆಗಳಿಗೂ ಸಹ ಅನೇಕ ಬಾರಿ ಅನುಭವಿ ಆತ್ಮಗಳಾಗಿದ್ದೀರಿ. ಇದೇನು ಹೊಸ ಮಾತಲ್ಲ. ತ್ರಿಕಾಲದರ್ಶಿಗಳಾಗಿದ್ದೀರಿ, ಸಮಸ್ಯೆಗಳ ಆದಿ-ಮಧ್ಯ-ಅಂತ್ಯ ಮೂರನ್ನೂ ತಿಳಿದುಕೊಂಡಿದ್ದೀರಿ. ಅನೇಕ ಕಲ್ಪಗಳ ಮಾತನ್ನು ಬಿಡಿ ಆದರೆ ಈ ಕಲ್ಪದ ಬ್ರಾಹ್ಮಣ ಜೀವನದಲ್ಲಿಯೂ ಬುದ್ಧಿಯ ಮೂಲಕ ಅರಿತು ವಿಜಯಿಗಳಾಗುವುದರಲ್ಲಿ ಹಾಗೂ ಸಮಸ್ಯೆಯನ್ನು ಪಾರು ಮಾಡಿ ಅನುಭವಿಗಳಾಗುವುದರಲ್ಲಿ ನೀವೇನೂ ಹೊಸಬರಲ್ಲ, ಹಳಬರಾಗಿ ಬಿಟ್ಟಿದ್ದೀರಿ. ಭಲೆ ಒಂದು ವರ್ಷದವರಿರಬಹುದು ಆದರೆ ಈ ಅನುಭದಲ್ಲಿ ಹಳಬರಾಗಿದ್ದೀರಿ. ‘ನತಿಂಗ್ ನ್ಯೂ’ (ಹೊಸದೇನಿಲ್ಲ) ಈ ಪಾಠವನ್ನೂ ಓದಿಸಿದ್ದೇವೆ ಆದ್ದರಿಂದ ವರ್ತಮಾನ ಸಮಯದಪ್ರಮಾಣ ಈಗ ಸಮಸ್ಯೆಗಳಿಗೆ ಗಾಬರಿಯಾಗುವುದರಲ್ಲಿ ಸಮಯವನ್ನು ಕಳೆಯಬೇಡಿ. ಸಮಯವನ್ನು ಕಳೆಯುವುದರಿಂದ ಕೊನೆಯವರಾಗಿ ಬಿಡುತ್ತೀರಿ.
ಅಂದಾಗ ಬ್ರಹ್ಮಾ ತಾಯಿಯೂ ಹೇಳಿದರು - ಒಂದನೆಯವರು ವಿಶೇಷ ಸ್ನೇಹೀ ಮಕ್ಕಳು ಮತ್ತು ಎರಡನೆಯದಾಗಿ ಸಮಾನರಾಗುವ ಮಕ್ಕಳು. ಈ ಎರಡೂ ಪ್ರಕಾರದ ಮಕ್ಕಳನ್ನು ನೋಡಿ ಇದೇ ಸಂಕಲ್ಪ ಬಂದಿತು - ವರ್ತಮಾನ ಸಮಯದ ಪ್ರಮಾಣ ಮೆಜಾರಿಟಿ ಮಕ್ಕಳನ್ನು ಈಗ ಸಮಾನ ಸ್ಥಿತಿಯ ಸಮೀಪತೆಯನ್ನು ನೋಡಲು ಬಯಸುತ್ತೇವೆ. ಸಮಾನ ಸ್ಥಿತಿಯವರೂ ಇದ್ದಾರೆ ಆದರೆ ಮೆಜಾರಿಟಿ ಸಮಾನತೆಯ ಸಮೀಪ ತಲುಪಬೇಕು. ಅಮೃತವೇಳೆಯಲ್ಲಿ ಮಕ್ಕಳಲ್ಲಿ ಇದನ್ನೇ ನೋಡಿ-ನೋಡಿ ಸಮಾನರಾಗುವ ದಿನವು ನೆನಪಿಗೆ ಬರುತ್ತಿತ್ತು. ತಾವು ‘ಸ್ಮೃತಿ ದಿನ’ವನ್ನು ನೆನಪು ಮಾಡುತ್ತಿದ್ದಿರಿ ಮತ್ತು ಬ್ರಹ್ಮಾ ತಾಯಿಯು ‘ಸಮಾನರಾಗುವ ದಿನ’ವನ್ನು ನೆನಪು ಮಾಡುತ್ತಿದ್ದೆವು. ಇದೇ ಶ್ರೇಷ್ಠ ಸಂಕಲ್ಪವನ್ನು ಪೂರ್ಣ ಮಾಡುವುದು ಅರ್ಥಾತ್ ಸ್ಮೃತಿ ದಿವಸವನ್ನು ಸಮರ್ಥ ದಿವಸವನ್ನಾಗಿ ಮಾಡಿಕೊಳ್ಳಬೇಕಾಗಿದೆ. ಮಾತಾಪಿತರು ಇದೇ ಸ್ನೇಹದ ಪ್ರತ್ಯಕ್ಷ ಫಲವನ್ನು ನೋಡಲು ಬಯಸುತ್ತೇವೆ. ಪಾಲನೆಯ ಹಾಗೂ ತಂದೆಯ ವರದಾನಗಳಿಗೆ ಇದೇ ಶ್ರೇಷ್ಠ ಫಲವಾಗಿದೆ - ಮಾತಾಪಿತರಿಗೆ ಪ್ರತ್ಯಕ್ಷ ಫಲವನ್ನು ತೋರಿಸುವಂತಹ ಶ್ರೇಷ್ಠ ಮಕ್ಕಳಾಗಿದ್ದೀರಿ. ಮೊದಲೂ ಸಹ ತಿಳಿಸಿದ್ದೆವು, ಅತೀ ಸ್ನೇಹವಿರುವ ಚಿಹ್ನೆಯೇನೆಂದರೆ ಅವರು ಸ್ನೇಹಿಯ ಕೊರತೆಗಳನ್ನು ನೋಡಲು ಅವರಿಂದ ಸಾಧ್ಯವಾಗುವುದಿಲ್ಲ ಆದ್ದರಿಂದ ಈಗ ತೀವ್ರ ಗತಿಯಲ್ಲಿ ಸಮಾನ ಸ್ಥಿತಿಯ ಸಮೀಪ ಬನ್ನಿ. ಇದೇ ತಾಯಿಯ ಸ್ನೇಹವಾಗಿದೆ. ಪ್ರತೀ ಹೆಜ್ಜೆಯಲ್ಲಿ ಫಾಲೋ ಫಾದರ್ ಮಾಡುತ್ತಾ ಹೋಗಿ. ಬ್ರಹ್ಮಾರವರೊಬ್ಬರೇ ವಿಶೇಷ ಆತ್ಮನಾಗಿದ್ದಾರೆ. ಇವರದು ಮಾತಾಪಿತಾ ಇಬ್ಬರ ಪಾತ್ರವು ಸಾಕಾರ ರೂಪದಲ್ಲಿ ನಿಗಧಿಯಾಗಿದೆ ಆದ್ದರಿಂದ ವಿಚಿತ್ರ ಪಾತ್ರಧಾರಿ ಮಹಾನ್ ಆತ್ಮನ ಡಬಲ್ ಸ್ವರೂಪದ ಮಕ್ಕಳಿಗೆ ಅವಶ್ಯವಾಗಿ ನೆನಪಿಗೆ ಬರುತ್ತದೆ ಆದರೆ ಮಾತಾಪಿತಾ ಬ್ರಹ್ಮನ ಹೃದಯದ ಶೇಷ್ಠ ಆಸೆಯೇನೆಂದರೆ ಸರ್ವರೂ ಸಮಾನರಾಗಲಿ ಎಂಬುದಾಗಿದೆ ಅಂದಮೇಲೆ ಅದನ್ನೂ ನೆನಪು ಮಾಡಿಕೊಳ್ಳಿ. ತಿಳಿಯಿತೆ - ಇಂದಿನ ಸ್ಮೃತಿ ದಿವಸದ ಶ್ರೇಷ್ಠ ಸಂಕಲ್ಪವು “ಸಮಾನರಾಗಲೇಬೇಕಾಗಿದೆ” ಎಂಬುದಾಗಿದೆ. ಸಂಕಲ್ಪದಲ್ಲಿ, ಮಾತಿನಲ್ಲಿ, ಸಂಬಂಧ-ಸಂಪರ್ಕದಲ್ಲಿ ಸಮಾನ ಅರ್ಥಾತ್ ಸಮರ್ಥರಾಗಬೇಕಾಗಿದೆ. ಎಷ್ಟು ದೊಡ್ಡ ಸಮಸ್ಯೆಯೇ ಇರಲಿ ಆದರೆ ‘ನತಿಂಗ್ ನ್ಯೂ’ ಎನ್ನುವ ಸ್ಮೃತಿಯಿಂದ ಸಮರ್ಥರಾಗಿ ಬಿಡುತ್ತೀರಿ. ಇದರಲ್ಲಿ ಆಲಸಿಗಳಾಗಬೇಡಿ. ಆಲಸ್ಯದಲ್ಲಿಯೂ ಕೆಲವೊಮ್ಮೆ ನತಿಂಗ್ ನ್ಯೂ ಎಂಬ ಶಬ್ಧವನ್ನು ಉಪಯೋಗಿಸುತ್ತಾರೆ ಆದರೆ ಅನೇಕ ಬಾರಿ ವಿಜಯಿಗಳಾಗುವುದರಲ್ಲಿ ನತಿಂಗ್ ನ್ಯೂ ಎಂದು ಹೇಳಿ. ಈ ವಿಧಿಯಿಂದ ಸದಾ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತಾ ಹೋಗಿರಿ. ಒಳ್ಳೆಯದು.
ಎಲ್ಲರೂ ಬಹಳ ಉಲ್ಲಾಸದಿಂದ ಸ್ಮೃತಿದಿವಸವನ್ನು ಆಚರಿಸಲು ಬಂದಿದ್ದೀರಿ. ಮೂರು ಹೆಜ್ಜೆಗಳಷ್ಟು ಪೃಥ್ವಿಯನ್ನು ಕೊಡುವವರೂ ಬಂದಿದ್ದಾರೆ, ಮೂರು ಹೆಜ್ಜೆಗಳಷ್ಟು ಭೂಮಿಯನ್ನು ಕೊಟ್ಟು ಮೂರು ಲೋಕಗಳಿಗೆ ಮಾಲೀಕರಾಗಿ ಬಿಡುವುದು ಅಂದಮೇಲೆ ಇದು ಕೊಟ್ಟಂತಾಯಿತೇ, ಆದರೂ ಸಹ ಸೇವೆಯ ಪುಣ್ಯವನ್ನು ಜಮಾ ಮಾಡಿಕೊಳ್ಳುವುದರಲ್ಲಿ ಬುದ್ಧಿವಂತರಾದಿರಿ ಆದ್ದರಿಂದ ನಿಮ್ಮ ಬುದ್ಧಿವಂತಿಕೆಗೆ ಶುಭಾಷಯಗಳು. ಒಂದನ್ನು ಕೊಟ್ಟು ಲಕ್ಷವನ್ನು ಪಡೆಯುವ ವಿಧಿಯನ್ನು ತಮ್ಮದನ್ನಾಗಿ ಮಾಡಿಕೊಳ್ಳುವುದರಲ್ಲಿ ಸಾಮರ್ಥ್ಯವನ್ನಿಟ್ಟಿರಿ ಆದ್ದರಿಂದಲೆ ವಿಶೇಷ ಸ್ಮೃತಿ ದಿವಸದಂದು ಇಂತಹ ಸಮರ್ಥ ಆತ್ಮಗಳನ್ನು ಕರೆಸಲಾಗಿದೆ.
ತಂದೆಯು ರಮಣೀಕವಾಗಿ ಸಂಭಾಷಣೆ ಮಾಡುತ್ತಿದ್ದರು. ವಿಶೇಷವಾಗಿ ಸ್ಥಾನ ಕೊಡುವವರನ್ನು ಕರೆಸಲಾಗಿದೆ. ತಂದೆಯೂ ಸ್ಥಾನವನ್ನು ಕೊಟ್ಟಿದ್ದಾರಲ್ಲವೆ ಅಂದರೆ ತಂದೆಯ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಲ್ಲವೆ. ಯಾವ ಸ್ಥಾನವನ್ನು ಕೊಟ್ಟಿದ್ದಾರೆ? ಇಂತಹ ಸ್ಥಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ‘ಹೃದಯ ಸಿಂಹಾಸನ’ ವನ್ನು ಕೊಟ್ಟರು ಅಂದಮೇಲೆ ಎಷ್ಟು ದೊಡ್ಡ ಸ್ಥಾನವಾಗಿದೆ! ಇವೆಲ್ಲಾ ಸ್ಥಾನಗಳು ಅದರಲ್ಲಿ ಬಂದು ಬಿಡುತ್ತದೆಯಲ್ಲವೆ. ದೇಶ-ವಿದೇಶದ ಎಲ್ಲಾ ಸೇವಾಸ್ಥಾನಗಳನ್ನು ಒಟ್ಟು ಗೂಡಿಸಿದರೂ ಸಹ ಅದೆಲ್ಲದಕ್ಕಿಂತ ದೊಡ್ಡ ಸ್ಥಾನವು ಯಾವುದಾಗಿದೆ? ಹಳೆಯ ಪ್ರಪಂಚದಲ್ಲಿರುವ ಕಾರಣ ತಾವಂತೂ ಇಟ್ಟಿಗೆಗಳ ಮನೆಯನ್ನು ಕೊಟ್ಟಿರಿ ಆದರೆ ತಂದೆಯು ಸಿಂಹಾಸನವನ್ನೇ ಕೊಟ್ಟೆವು. ಅದರಲ್ಲಿ ನೀವು ಸದಾ ನಿಶ್ಚಿಂತ ಚಕ್ರವರ್ತಿಗಳಾಗಿ ಕುಳಿತು ಬಿಡುತ್ತೀರಿ ಆದರೂ ನೋಡಿ ಯಾವುದೇ ಪ್ರಕಾರದ ಭಲೆ ಸ್ಥಾನದ ಮೂಲಕ ಸೇವೆ ಮಾಡಬಹುದು, ಸ್ಥಿತಿಯ ಮೂಲಕ ಮಾಡಬಹುದು, ಸೇವೆಗೆ ಮಹತ್ವಿಕೆಯಂತೂ ಸ್ವತಹ ಇರುತ್ತದೆ ಅಂದಾಗ ಸ್ಥಾನದ ಸೇವೆಗೂ ಬಹಳ ಮಹತ್ವಿಕೆಯಿದೆ. ಅನ್ಯರಿಗೆ ‘ಹಾಂಜಿ’ (ಆಯಿತು) ಎಂದು ಹೇಳುತ್ತಾ ಅನ್ಯರನ್ನು ‘ಮೊದಲು ತಾವು’ ಎಂದು ಹೇಳುತ್ತಾ ಸೇವೆ ಮಾಡುವುದಕ್ಕೂ ಬಹಳ ಮಹತ್ವಿಕೆಯಿದೆ. ಕೇವಲ ಭಾಷಣ ಮಾಡುವುದು ಸೇವೆಯಲ್ಲ ಆದರೆ ಯಾವುದೇ ಸೇವೆಯ ವಿಧಿಯಿಂದ ಮನಸ್ಸಾ, ವಾಚಾ, ಕರ್ಮಣಾ ಪಾತ್ರೆ ತೊಳೆಯುವ ಸೇವೆಗೂ ಬಹಳ ಮಹತ್ವಿಕೆಯಿದೆ. ಭಾಷಣ ಮಾಡುವವರು ಎಷ್ಟು ಪದವಿಯನ್ನು ಪಡೆಯುತ್ತಾರೋ ಅಷ್ಟೇ ಯೋಗಯುಕ್ತ, ಯುಕ್ತಿಯುಕ್ತ ಸ್ಥಿತಿಯಲ್ಲಿ ಸ್ಥಿತರಾಗಿ ‘ಪಾತ್ರೆ ತೊಳೆಯುವ’ವರೂ ಸಹ ಶ್ರೇಷ್ಠ ಪದವಿಯನ್ನು ಪಡೆಯಬಲ್ಲರು. ಅವರು ಬಾಯಿಂದ ಮಾಡುತ್ತಾರೆ, ಇವರು ಸ್ಥಿತಿಯಿಂದ ಮಾಡುತ್ತಾರೆ ಆದ್ದರಿಂದ ಸದಾ ಪ್ರತೀ ಸಮಯ ಸೇವೆಯ ವಿಧಿಯ ಮಹತ್ವಿಕೆಯನ್ನರಿತು ಮಹಾನರಾಗಿ. ಯಾವುದೇ ಸೇವೆಗೆ ಫಲ ಸಿಗಲಿಲ್ಲವೆಂದು ಹೇಳಲು ಸಾಧ್ಯವಿಲ್ಲ, ಸತ್ಯಹೃದಯದವರ ಮೇಲೆ ಪ್ರಭು ರಾಜಿಯಾಗುತ್ತಾರೆ. ಯಾವಾಗ ದಾತ, ವರದಾತನು ರಾಜಿಯಾಗಿ ಬಿಟ್ಟರು ಅಂದಮೇಲೆ ಇನ್ನೇನು ಕೊರತೆಯಿದೆ! ವರದಾತ ಹಾಗೂ ಭಾಗ್ಯ ವಿದಾತ, ಜ್ಞಾನ ದಾತ, ಭೋಲಾ ತಂದೆಯನ್ನು ರಾಜಿ ಮಾಡಿಕೊಳ್ಳುವುದು ಬಹಳ ಸಹಜವಾಗಿದೆ. ಭಗವಂತನ ರಾಜಿಯಾಗಿ ಬಿಟ್ಟರೆ ಧರ್ಮ ರಾಜ ಕಾಜಿ (ನ್ಯಾಯಾಧೀಶ) ಯಿಂದಲೂ ಪಾರಾಗುವಿರಿ, ಮಾಯೆಯಿಂದಲೂ ಪಾರಾಗುತ್ತೀರಿ. ಒಳ್ಳೆಯದು.
ನಾಲ್ಕಾರು ಕಡೆಯ ಸರ್ವ ಸ್ನೇಹ ಮತ್ತು ಶಕ್ತಿಯ ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿರುವಂತಹ ಸದಾ ಮಾತಾಪಿತರ ಶ್ರೇಷ್ಠ ಆಸೆಯನ್ನು ಪೂರ್ಣಮಾಡುವಂತಹ ಆಶಾ ದೀಪಗಳಿಗೆ, ಸದಾ ಪ್ರತೀ ವಿಧಿಯಿಂದ ಸೇವೆಯ ಮಹತ್ವಿಕೆಯನ್ನು ಅರಿತುಕೊಳ್ಳುವಂತಹ, ಸದಾ ಪ್ರತೀ ಹೆಜ್ಜೆಯಲ್ಲಿ ಫಾಲೋ ಫಾದರ್ ಮಾಡುವಂತಹ, ಮಾತಾಪಿತರಿಗೆ ಸದಾ ಸ್ನೇಹ ಮತ್ತು ಶಕ್ತಿಯ ಮೂಲಕ ಸಮಾನರಾಗುವ ಫಲವನ್ನು ತೋರಿಸುವಂತಹ ಸ್ಮೃತಿ ಸ್ವರೂಪ ಸರ್ವ ಸಮರ್ಥ ಮಕ್ಕಳಿಗೆ ಸಮರ್ಥ ತಂದೆಯ, ಸಮರ್ಥ ದಿವಸದ ನೆನಪು, ಪ್ರೀತಿ ಹಾಗೂ ನಮಸ್ತೆ.
ಸೇವಾಕೇಂದ್ರಕ್ಕಾಗಿ ಮೂರು ಹೆಜ್ಜೆಯಷ್ಟು ಭೂಮಿಯನ್ನು ಕೊಡುವವರ ಪ್ರತಿ ಸಹೋದರ-ಸಹೋದರಿಯರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:
ವಿಶೇಷ ಸೇವೆಯ ಪ್ರತ್ಯಕ್ಷ ಫಲದ ಪ್ರಾಪ್ತಿಯನ್ನು ನೋಡುತ್ತಾ ಖುಷಿಯಾಗುತ್ತಿದೆ ಅಲ್ಲವೆ. ಭವಿಷ್ಯವಂತು ಅವಶ್ಯವಾಗಿ ಜಮಾ ಆಯಿತು ಆದರೆ ವರ್ತಮಾನವೂ ಶ್ರೇಷ್ಠವಾಗಿ ಬಿಟ್ಟಿತು. ವರ್ತಮಾನ ಸಮಯದ ಪ್ರಾಪ್ತಿಯು ಭವಿಷ್ಯಕ್ಕಿಂತಲೂ ಶ್ರೇಷ್ಠವಾದುದು! ಏಕೆಂದರೆ ಅಪ್ರಾಪ್ತಿ ಮತ್ತು ಪ್ರಾಪ್ತಿಯ ಅನುಭವದ ಜ್ಞಾನವು ವರ್ತಮಾನ ಸಮಯದಲ್ಲಿರುತ್ತದೆ. ಅಲ್ಲಂತು ಅಪ್ರಾಪ್ತಿ ಎಂದರೇನು ಎಂಬುದರ ಅರಿವು ಇರುವುದೇ ಇಲ್ಲ. ಅಂದಮೇಲೆ ಅಲ್ಲಿ ಅಂತರವಂತು ತಿಳಿಯುವುದಿಲ್ಲ ಮತ್ತು ಇಲ್ಲಂತು ಅಂತರದ ಅನುಭವವಿದೆ ಆದ್ದರಿಂದ ಈ ಸಮಯದ ಪ್ರಾಪ್ತಿಯ ಅನುಭವದ ಮಹತ್ವವಿದೆ. ಯಾರೆಲ್ಲರೂ ಸೇವೆಗೆ ನಿಮಿತ್ತರಾಗುತ್ತಾರೆಂದರೆ ಕ್ಷಣದಲ್ಲಿಯೇ ದಾನ ಮಾಡುವುದು ಮಹಾಪುಣ್ಯವೆಂದು ಗಾಯನವಿದೆ. ಯಾವುದೇ ಮಾತಿನಲ್ಲಿ ಒಂದುವೇಳೆ ಯಾರೇ ನಿಮಿತ್ತರಾಗುತ್ತಾರೆ ಅಂದರೆ ಕ್ಷಣದಲ್ಲಿಯೇ ದಾನ ಮಾಡುತ್ತಾರೆಂದರೆ, ಅದರ ರಿಟರ್ನ್ನಲ್ಲಿ ಮಹಾಪುಣ್ಯದ ಅನುಭೂತಿಯು ಆಗುವುದು. ಅದು ಹೇಗಾಗುತ್ತದೆ? ಯಾವುದೇ ಸೇವೆಯ ಪುಣ್ಯವು ವಿಶೇಷ ‘ಖುಷಿ’, ಶಕ್ತಿಯ ಅನುಭೂತಿಯು ಆಗುವುದು. ಯಾರು ಯಾವಾಗ ಸಫಲತಾ ಸ್ವರೂಪರಾಗಿದ್ದು ಸೇವೆಯನ್ನು ಮಾಡುತ್ತೀರೆಂದರೆ, ಆ ಸಮಯದ ವಿಶೇಷ ಖುಷಿಯ ಅನುಭೂತಿಯನ್ನು ಮಾಡುತ್ತೀರಲ್ಲವೆ. ಹಾಗೂ ವರ್ಣನೆಯನ್ನೂ ಮಾಡುತ್ತೀರಿ - ಇಂದು ಬಹಳ ಒಳ್ಳೆಯ ಅನುಭವವಾಯಿತು! ಏಕಾಯಿತು? ತಂದೆಯ ಪರಿಚಯವನ್ನು ತಿಳಿಸುತ್ತಾ ಸಫಲತೆಯ ಅನುಭವವಾಯಿತು. ಪರಿಚಯವನ್ನು ಕೇಳಿಸಿಕೊಂಡು ಯಾರೇ ಜಾಗೃತವಾಗುತ್ತಾರೆ ಅಥವಾ ಪರಿಚಯ ಸಿಗುತ್ತಿದ್ದಂತೆಯೇ ಪರಿವರ್ತನೆ ಆಗಿ ಬಿಡುತ್ತಾರೆಂದರೆ, ಅವರಿಗಾಗುವ ಪ್ರಾಪ್ತಿಯ ಪ್ರಭಾವವು ತಮ್ಮ ಮೇಲೂ ಬೀರುತ್ತದೆ. ಹೃದಯದಲ್ಲಿ ಖುಷಿಯ ಹಾಡು ಮೊಳಗುವುದು ಆರಂಭವಾಗುತ್ತದೆ - ಇದಾಯಿತು ಪ್ರತ್ಯಕ್ಷ ಫಲದ ಪ್ರಾಪ್ತಿ. ಅಂದಮೇಲೆ ಸೇವೆ ಮಾಡುವವರು ಅರ್ಥಾತ್ ಸದಾ ಪ್ರಾಪ್ತಿಯ ಫಲವನ್ನು ಅನುಭವಿಸುವವರು. ಹಾಗಾದರೆ ಯಾರು ಫಲವನ್ನು ಅನುಭವಿಸುತ್ತಾರೆಯೋ, ಅವರೇನಾಗುವರು? ಆರೋಗ್ಯವಂತರು ಆಗುವರಲ್ಲವೆ! ವೈದ್ಯರೇನಾದರೂ ಬಲಹೀನವಾಗಿ ಇರುವವರನ್ನು ನೋಡುತ್ತಾರೆಂದರೆ ಏನು ಹೇಳುತ್ತಾರೆ? ಹಣ್ಣನ್ನು ಸೇವಿಸಿರಿ. ಏಕೆಂದರೆ ವರ್ತಮಾನದಲ್ಲಿ ಹೆಚ್ಚು ಶಕ್ತಿ ಕೊಡುವ ವಸ್ತುವಾಗಿ ಬೆಣ್ಣೆ-ತುಪ್ಪ ಸೇವಿಸಬಹುದು, ಆದರೆ ಅದಂತು ಜೀರ್ಣವಾಗಲು ಸಾಧ್ಯವಿಲ್ಲ. ವರ್ತಮಾನದಲ್ಲಿ ಶಕ್ತಿ ಬರಲು ಹಣ್ಣನ್ನು ಕೊಡುವರು ಅಂದಮೇಲೆ ಸೇವೆಯ ಪ್ರತ್ಯಕ್ಷ ಫಲವೂ ಸಿಗುತ್ತದೆ. ಭಲೆ ಕರ್ಮಣಾ ಸೇವೆಯನ್ನಾದರೂ ಮಾಡಿ, ಅದರಿಂದ ಖುಷಿಯಾಗುತ್ತದೆ. ಭಲೆ ಸ್ವಚ್ಛತೆ ಮಾಡಬಹುದು ಆದರೆ ಯಾವಾಗ ಸ್ಥಾನವು ಸ್ವಚ್ಛತೆಯಿಂದ ಶೋಭಿಸುತ್ತದೆಯೋ, ಆಗ ಸತ್ಯ ಹೃದಯದಿಂದ ಮಾಡುವ ಕಾರಣ ಸ್ಥಾನವು ಶೋಭಿಸುವುದನ್ನು ನೋಡಿ ಖುಷಿಯಾಗುತ್ತದೆ ಅಲ್ಲವೆ.
ಯಾವುದೇ ಸೇವೆಯ ಪುಣ್ಯದ ಫಲವು ಸ್ವತಹವಾಗಿಯೇ ಪ್ರಾಪ್ತಿಯಾಗುವುದು. ಪುಣ್ಯದ ಫಲವು ಜಮಾ ಸಹ ಆಗುತ್ತದೆ ಹಾಗೂ ಅದು ಈಗಲೂ ಸಿಗುತ್ತದೆ. ಒಂದುವೇಳೆ ತಾವು ಯಾವುದೇ ಕಾರ್ಯವನ್ನು ಮಾಡುತ್ತೀರಿ, ಸೇವೆಯನ್ನೇ ಮಾಡುತ್ತೀರೆಂದರೆ ತಮಗೆ ಯಾರಾದರೂ ಹೇಳುತ್ತಾರೆ - ಬಹಳ ಒಳ್ಳೆಯ ಸೇವೆಯನ್ನು ಮಾಡಿದರು, ಬಹಳ ಚೆನ್ನಾಗಿ ಅವಿಶ್ರಾಂತರಾಗಿ ಮಾಡಿದರು. ಇದನ್ನು ಕೇಳಿಸಿಕೊಂಡು ಖುಷಿಯಾಗುತ್ತದೆ ಅಲ್ಲವೆ. ಅಂದಮೇಲೆ ಫಲವು ಸಿಕ್ಕಿತಲ್ಲವೆ. ಭಲೆ ಮುಖದಿಂದ ಸೇವೆ ಮಾಡಿರಿ ಅಥವಾ ಕೈಗಳಿಂದ ಮಾಡಿರಿ ಆದರೆ ಸೇವೆಯೆಂದರೆ ಸೇವೆಯಾಗಿದೆ. ಇದೇ ಸೇವೆಯಲ್ಲಿ ನಿಮಿತ್ತರಾಗಿದ್ದೀರಲ್ಲವೆ. ಸೇವೆಯ ಮಹತ್ವವನ್ನಿಡುವ ಕಾರಣ ಮಹಾನತೆಯ ಪ್ರಾಪ್ತಿಯಾಯಿತು. ಹಾಗಾದರೆ ಇದೇ ರೀತಿಯಲ್ಲಿ ಸೇವೆಯ ಮಹತ್ವಿಕೆಯನ್ನು ತಿಳಿದುಕೊಂಡು, ಮುಂದೆಯೇ ಯಾವುದಾದರೊಂದು ಸೇವೆಯಲ್ಲಿ ಸದಾ ಬ್ಯುಸಿಯಾಗಿರಿ. ಯಾವುದೇ ಜಿಜ್ಞಾಸು ಸಿಗದಿದ್ದರೆ ಸೇವೆಯೇನು ಮಾಡಲಿ? ಯಾವುದೇ ಪ್ರದರ್ಶನಿ ಇಡಲಿಲ್ಲ, ಭಾಷಣ ಮಾಡದಿದ್ದರೆ ಏನು ಸೇವೆ ಮಾಡಲಿ? ಹೀಗೆ ಹೇಳಬಾರದು. ಸೇವೆಯ ಮೈದಾನವಂತು ವಿಶಾಲವಾಗಿದೆ! ನಮಗೆ ಸೇವೆಯೇ ಸಿಗುತ್ತಿಲ್ಲ ಎಂದು ಯಾರಾದರೂ ಹೇಳುತ್ತೀರಾ! ಹೇಳಲು ಸಾಧ್ಯವೇ ಇಲ್ಲ. ವಾಯುಮಂಡಲವನ್ನು ತಯಾರು ಮಾಡುವ ಸೇವೆಯನ್ನು ಎಷ್ಟೊಂದು ಉಳಿದುಕೊಂಡಿದೆ! ಪ್ರಕೃತಿಯನ್ನೂ ಪರಿವರ್ತನೆ ಮಾಡುವವರು ಆಗಿದ್ದೀರಿ ಅಂದಮೇಲೆ ಪ್ರಕೃತಿಯನ್ನು ಪರಿವರ್ತನೆ ಹೇಗಾಗುತ್ತದೆ? ಭಾಷಣ ಮಾಡುವಿರಾ? ವೃತ್ತಿಯಿಂದ ವಾಯುಮಂಡಲವು ತಯಾರಾಗುತ್ತದೆ. ವಾಯುಮಂಡಲವನ್ನು ತಯಾರು ಮಾಡುವುದು ಅರ್ಥಾತ್ ಪ್ರಕೃತಿಯ ಪರಿವರ್ತನೆ ಆಗುವುದಾಗಿದೆ. ಅಂದಮೇಲೆ ಎಷ್ಟೊಂದು ಸೇವೆಯಿದೆ! ಈಗ ಇಷ್ಟೆಲ್ಲಾ ಆಗಿದೆಯೇ? ಈಗಂತು ಪ್ರಕೃತಿಯು ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿದೆ ಅಂದಾಗ ಪ್ರತೀ ಸೆಕೆಂಡಿನಲ್ಲಿಯೂ ಸೇವೆಯ ಬಹಳ ವಿಶಾಲವಾದ ಮೈದಾನವೇ ಉಳಿದುಕೊಂಡಿದೆ. ನಮಗೆ ಸೇವೆಯ ಅವಕಾಶವೇ ಸಿಗುತ್ತಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ರೋಗಿಯಾಗಿದ್ದರೂ ಸೇವೆಯ ಅವಕಾಶವಿದೆ. ಯಾರೇ ಅವಿದ್ಯಾವಂತರು ಆಗಿರಬಹುದು, ವಿದ್ಯಾವಂತರೇ ಆಗಿರಬಹುದು, ಯಾವುದೇ ಪ್ರಕಾರದ ಆತ್ಮನಾಗಿರಬಹುದು, ಎಲ್ಲರಿಗಾಗಿಯೂ ಸೇವೆಯ ಬಹಳ ದೊಡ್ಡ ಸಾಧನಗಳಿವೆ. ಸೇವೆಯ ಅವಕಾಶ ಸಿಗಲಿ ಎನ್ನುವುದಲ್ಲ, ಸಿಕ್ಕಿದೆ.
ಆಲ್ರೌಂಡ್ ಸೇವಾಧಾರಿ ಆಗಬೇಕಾಗಿದೆ. ಕರ್ಮಣಾ ಸೇವೆಯಲ್ಲಿಯೂ 100 ಅಂಕಗಳಿವೆ. ಒಂದುವೇಳೆ ವಾಚಾ ಮತ್ತು ಮನಸಾ ಸೇವೆಯು ಸರಿಯಿದೆ ಆದರೆ ಕರ್ಮಣಾದಲ್ಲಿ ಆಸಕ್ತಿಯಿಲ್ಲದಿದ್ದರೆ 100 ಅಂಕಗಳು ಕಳೆದು ಹೋಯಿತು. ಆಲ್ರೌಂಡ್ ಸೇವಾಧಾರಿ ಅರ್ಥಾತ್ ಸರ್ವ ಪ್ರಕಾರದ ಸೇವೆಯ ಮೂಲಕ ಪೂರ್ಣಾಂಕಗಳನ್ನು ಪಡೆಯುವವರು. ಅಂದಮೇಲೆ ಹೀಗಿದ್ದೀರಾ? ಯಜ್ಞದ ಆರಂಭದಲ್ಲಿ ಯಾವಾಗ ಮಕ್ಕಳ ಭಟ್ಟಿಯಾಯಿತು, ಆಗ ಕರ್ಮಣಾದ ಪಾಠವನ್ನು ಎಷ್ಟೊಂದು ಪರಿಪಕ್ವ ಮಾಡಿಸಲಾಯಿತು! ಮಾಲಿಯನ್ನಾಗಿಯೂ ಮಾಡಲಾಯಿತು, ಚಪ್ಪಲಿ ತಯಾರು ಮಾಡುವವರನ್ನಾಗಿಯೂ ಮಾಡಲಾಯಿತು, ಪಾತ್ರೆಯನ್ನು ಶುದ್ಧಗೊಳಿಸುವವರನ್ನಾಗಿಯೂ ಮಾಡಲಾಯಿತು, ಭಾಷಣ ಮಾಡುವವರನ್ನಾಗಿಯೂ ಮಾಡಲಾಯಿತು ಏಕೆಂದರೆ ಇದರ ಅಂಕಗಳನ್ನೂ ಕಳೆದುಕೊಳ್ಳಬಾರದು. ಅಲ್ಲಿಯೂ ಲೌಕಿಕ ವಿದ್ಯಾಭ್ಯಾಸದಲ್ಲಿಯೂ ಯಾವುದೇ ಚಿಕ್ಕ ವಿಷಯದಲ್ಲಾದರೂ ಅನುತ್ತೀರ್ಣರಾಗುತ್ತೀರಿ, ಭಲೆ ಮೂರು ಅಥವಾ ನಾಲ್ಕನೆ ನಂಬರಿನ ವಿಷಯವೇ ಆಗಿರಬಹುದು ಆದರೆ ಅದರಲ್ಲೇನಾದರೂ ಅನುತ್ತೀರ್ಣರು ಆಗುತ್ತೀರೆಂದರೆ ಪಾಸ್-ವಿತ್-ಆನರ್ ಆಗುವುದಿಲ್ಲ. ಒಟ್ಟು ಅಂಕಗಳಲ್ಲಂತು ಕಡಿಮೆ ಆಯಿತಲ್ಲವೆ. ಇದೇರೀತಿ ಎಲ್ಲಾ ವಿಷಯಗಳಲ್ಲಿಯೂ ಪರಿಶೀಲನೆ ಮಾಡಿರಿ - ಎಲ್ಲಾ ವಿಷಯಗಳಲ್ಲಿಯೂ ಅಂಕಗಳನ್ನು ಪಡೆದಿದ್ದೇನೆಯೇ? ಹೇಗೆ ಇವರು (ಮನೆ ಕೊಡುವುದಕ್ಕಾಗಿ) ನಿಮಿತ್ತರಾದರು, ಇವರು ಸೇವೆಯನ್ನು ಮಾಡಿದರು, ಅದರ ಪುಣ್ಯವು ಸಿಕ್ಕಿತು ಹಾಗೂ ಅಂಕಗಳು ಸಿಕ್ಕಿದವು. ಆದರೆ ಪೂರ್ಣಾಂಕಗಳನ್ನು ಪಡೆಯಲಾಯಿತೇ ಅಥವಾ ಇಲ್ಲವೆ ಎನ್ನುವುದನ್ನು ಪರಿಶೀಲನೆ ಮಾಡಿಕೊಳ್ಳಿರಿ. ಯಾವುದಾದರೊಂದು ಕರ್ಮಣಾ ಸೇವೆಯೂ ಸಹ ಅವಶ್ಯಕವಿರುತ್ತದೆ ಏಕೆಂದರೆ ಕರ್ಮಣಾ ಸೇವೆಯಲ್ಲಿಯೂ 100 ಅಂಕಗಳಿವೆ, ಕಡಿಮೆಯೇನಿಲ್ಲ. ಇಲ್ಲಿ ಎಲ್ಲಾ ವಿಷಯದಲ್ಲಿ 100 ಅಂಕಗಳಿವೆ, ಅಲ್ಲಂತು ಡ್ರಾಯಿಂಗ್ನಲ್ಲಿ ಸ್ವಲ್ಪ ಅಂಕಗಳಿರುತ್ತವೆ, ಲೆಕ್ಕದಲ್ಲಿ ಹೆಚ್ಚು ಅಂಕಗಳಿರುತ್ತವೆ. ಇಲ್ಲಂತು ಎಲ್ಲಾ ವಿಷಯಗಳೂ ಮಹತ್ವವಾಗಿರುತ್ತದೆ. ಅಂದಮೇಲೆ ಮನಸಾ, ವಾಚಾದಲ್ಲಂತು ಅಂಕಗಳನ್ನು ಪಡೆದಿರಿ ಮತ್ತು ಕರ್ಮಣಾದಲ್ಲಿ ಉಳಿದುಕೊಳ್ಳುತ್ತದೆ ಮತ್ತು ತಾವು ತಿಳಿಯುತ್ತೀರಿ - ನಾನಂತು ಬಹಳ ಮಹಾವೀರನಾಗಿದ್ದೇನೆ ಎಂದು ತಿಳಿಯುವವರು ಆಗಬಾರದು. ಎಲ್ಲದರಲ್ಲಿಯೂ ಅಂಕಗಳನ್ನು ಪಡೆಯಬೇಕಾಗಿದೆ - ಇಂತಹವರಿಗೆ ಸೇವಾಧಾರಿ ಎಂದು ಹೇಳಲಾಗುತ್ತದೆ. ಅಂದಮೇಲೆ ಇದು ಎಂತಹ ಗ್ರೂಪ್ ಆಗಿದೆ? ಆಲ್ರೌಂಡ್ ಸೇವಾಧಾರಿಯೇ ಅಥವಾ ಸ್ಥಾನವನ್ನು ಕೊಡುವ ಸೇವಾಧಾರಿಯೇ? ಯಾವುದನ್ನು ಸಫಲ ಮಾಡಿದಿರಿ ಅದು ಬಹಳ ಒಳ್ಳೆಯದನ್ನೇ ಮಾಡಿದಿರಿ. ಯಾರೆಷ್ಟು ಸಫಲ ಮಾಡುವರು, ಅಷ್ಟು ಮಾಲೀಕರಾಗುವರು. ಸಮಯಕ್ಕೆ ಮೊದಲೇ ಸಫಲ ಮಾಡಿ ಬಿಡುವುದು ಬುದ್ಧಿವಂತಿಕೆಯ ಸಂಕೇತವಾಗಿದೆ. ಅಂದಮೇಲೆ ಬುದ್ಧಿವಂತಿಕೆಯ ಕೆಲಸ ಮಾಡಲಾಗಿದೆ. ಇದರಿಂದ ಬಾಪ್ದಾದಾರವರು ಸಾಹಸವನ್ನಿಡುವ ಮಕ್ಕಳಾಗಿದ್ದಾರೆಂದು ಖುಷಿಯಾಗುತ್ತಾರೆ. ಒಳ್ಳೆಯದು.
ಓಂ ಶಾಂತಿ. ಬ್ರಾಹ್ಮಣ ಕುಲ ಭೂಷಣ ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಬ್ರಾಹ್ಮಣ ಸಂಪ್ರದಾಯದವರಾಗಿದ್ದೇವೆ ನಂತರ ದೈವೀ ಸಂಪ್ರದಾಯದವರಾಗುತ್ತೇವೆ. ಮಕ್ಕಳಿಗೆ ತಂದೆಯು ಕುಳಿತು ತಿಳಿಸುತ್ತಾರೆ - ಈಗ ಬೇಹದ್ದಿನ ತಂದೆಯು ಸನ್ಮುಖದಲ್ಲಿದ್ದಾರೆ ಮತ್ತು ಅವರಿಂದ ಬೇಹದ್ದಿನ ಆಸ್ತಿಯು ಸಿಗುತ್ತಿದೆ. ಅಂದಮೇಲೆ ಇನ್ನೇನು ಬೇಕು! ಭಕ್ತಿಮಾರ್ಗವು ಯಾವಾಗಿನಿಂದ ನಡೆಯುತ್ತದೆ ಎಂಬುದು ಯಾರಿಗೂ ತಿಳಿದಿಲ್ಲ. ಭಕ್ತಿಮಾರ್ಗದ ಭಕ್ತರು ಭಗವಂತನನ್ನು ಅಥವಾ ವಧುಗಳು ವರನನ್ನು ನೆನಪು ಮಾಡುತ್ತಾರೆ ಆದರೆ ಆಶ್ಚರ್ಯವೇನೆಂದರೆ ಯಾರನ್ನು ನೆನಪು ಮಾಡುವರೋ ಅವರನ್ನೇ ಅರಿತುಕೊಂಡಿಲ್ಲ. ಪ್ರಿಯತಮೆಯು ಪ್ರಿಯತಮನನ್ನು ತಿಳಿದುಕೊಂಡಿಲ್ಲದೇ ಇರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಅವರ ಬಗ್ಗೆ ತಿಳಿದೇ ಇಲ್ಲವೆಂದರೆ ನೆನಪು ಮಾಡಲು ಹೇಗೆ ಸಾಧ್ಯ? ಭಗವಂತನು ಎಲ್ಲರ ತಂದೆಯಾಗಿದ್ದಾರೆ, ಮಕ್ಕಳು ತಂದೆಯನ್ನು ನೆನಪು ಮಾಡುತ್ತಾರೆ ಆದರೆ ಪರಿಚಯವಿಲ್ಲದೆ ನೆನಪು ಮಾಡುವುದೆಲ್ಲವೂ ವ್ಯರ್ಥವಾಗುತ್ತದೆ ಆದ್ದರಿಂದ ನೆನಪು ಮಾಡಿದರೂ ಸಹ ಯಾವುದೇ ಲಾಭವಾಗುವುದಿಲ್ಲ. ನೆನಪು ಮಾಡುತ್ತಾ ಯಾರೂ ಸಹ ಆ ಲಕ್ಷ್ಯವನ್ನು ತಲುಪುವುದಿಲ್ಲ. ಭಗವಂತ ಯಾರು? ಅವರಿಂದ ಏನು ಸಿಗುತ್ತದೆ? ಏನನ್ನೂ ತಿಳಿದುಕೊಂಡಿಲ್ಲ. ಇಷ್ಟೆಲ್ಲಾ ಧರ್ಮಗಳು ಕ್ರೈಸ್ಟ್, ಬುದ್ಧ ಮುಂತಾದ ಧರ್ಮ ಗುರುಗಳು ಅಥವಾ ಧರ್ಮ ಸ್ಥಾಪನೆ ಮಾಡುವವರನ್ನು ಅವರ ಅನುಯಾಯಿಗಳು ನೆನಪು ಮಾಡುತ್ತಾರೆ ಆದರೆ ಅವರನ್ನು ನೆನಪು ಮಾಡುವುದರಿಂದ ನಮಗೆ ಏನು ಸಿಗುವುದು ಎಂಬುದೇನನ್ನೂ ತಿಳಿದುಕೊಂಡಿಲ್ಲ. ಇದಕ್ಕಿಂತಲೂ ಆ ಲೌಕಿಕ ವಿದ್ಯೆಯೇ ಒಳ್ಳೆಯದಾಗಿದೆ ಏಕೆಂದರೆ ಅಲ್ಲಾದರೂ ಗುರಿ-ಧ್ಯೇಯವು ಬುದ್ಧಿಯಲ್ಲಿರುತ್ತದೆಯಲ್ಲವೆ. ತಂದೆಯಿಂದ ಏನು ಸಿಗುತ್ತದೆ? ಶಿಕ್ಷಕನಿಂದ ಏನು ಸಿಗುತ್ತದೆ? ಮತ್ತು ಗುರುಗಳಿಂದ ಏನು ಸಿಗುತ್ತದೆ? ಎಂಬುದನ್ನು ಮತ್ತ್ಯಾರೂ ತಿಳಿದುಕೊಳ್ಳುವುದಿಲ್ಲ. ನೀವಿಲ್ಲಿ ತಂದೆಯ ಮಕ್ಕಳಾಗಿ ನಂತರ ಶಿಕ್ಷಕ ಮತ್ತು ಸದ್ಗುರುವಿನವರಾಗುತ್ತೀರಿ. ತಂದೆ ಮತ್ತು ಶಿಕ್ಷಕರಿಗಿಂತಲೂ ಗುರು ಶ್ರೇಷ್ಠವಾಗಿರುತ್ತಾರೆ. ಈಗ ನೀವು ಮಕ್ಕಳಿಗೆ ನಾವು ತಂದೆಯ ಮಕ್ಕಳಾಗಿದ್ದೇವೆ ಎಂದು ನಿಶ್ಚಯವಾಯಿತು. ತಂದೆಯು ನಮ್ಮನ್ನು 5000 ವರ್ಷಗಳ ಮೊದಲಿನ ತರಹ ಬಂದು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ ಅಥವಾ ಶಾಂತಿಧಾಮದ ಮಾಲೀಕರನ್ನಾಗಿ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಮುದ್ದು ಮಕ್ಕಳೇ, ನೀವು ನನ್ನಿಂದ ತಮ್ಮ ಆಸ್ತಿಯನ್ನು ಪಡೆಯುತ್ತೀರಲ್ಲವೆ! ಹೌದು ಬಾಬಾ, ಏಕೆ ಪಡೆಯುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಒಳ್ಳೆಯದು, ಚಂದ್ರವಂಶಿ ರಾಮ ಪದವಿಯನ್ನು ಪಡೆಯುವುದರಲ್ಲಿ ರಾಜಿಯಾಗುವಿರಾ? ನಿಮಗೆ ಏನು ಬೇಕು? ತಂದೆಯು ಉಡುಗೊರೆಯನ್ನು ತೆಗೆದುಕೊಂಡು ಬಂದಿದ್ದಾರೆ, ನೀವು ಸೂರ್ಯವಂಶಿ ಲಕ್ಷ್ಮಿಯನ್ನು ವರಿಸುತ್ತೀರೋ ಅಥವಾ ಚಂದ್ರವಂಶಿ ಸೀತೆಯನ್ನೋ? ನೀವು ತಮ್ಮ ಮುಖವನ್ನಾದರೂ ನೋಡಿಕೊಳ್ಳಿ. ಶ್ರೀ ನಾರಾಯಣನನ್ನೊ ಅಥವಾ ಶ್ರೀ ಲಕ್ಷ್ಮಿಯನ್ನು ವರಿಸಲು ಯೋಗ್ಯರಾಗಿದ್ದೀರಾ? ಯೋಗ್ಯರಾಗದೆ ವರಿಸಲು ಹೇಗೆ ಸಾಧ್ಯ? ತಂದೆಯು ತಿಳಿಸುತ್ತಾರೆ - ಹೇಗೆ ಕಲ್ಪದ ಮೊದಲು ತಿಳಿಸಿದ್ದೆನೋ ಅದೇರೀತಿ ಈಗಲೂ ತಿಳಿಸುತ್ತಿದ್ದೇನೆ. ನೀವು ಪುನಃ ಬಂದು ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯುವುದೇ ನಿಮ್ಮ ಗುರಿ-ಧ್ಯೇಯವಾಗಿದೆ. ಮೊದಲನೆಯದು ಸೂರ್ಯವಂಶಿ ರಾಜ್ಯ ಪದವಿಯಾಗಿದೆ. ಎರಡನೆಯ ದರ್ಜೆಯು ಚಂದ್ರವಂಶವಾಗಿದೆ. ಹೇಗೆ ಏರ್ಕಂಡೀಷನ್, ಫಸ್ಟ್ಕ್ಲಾಸ್, ಸೆಕೆಂಡ್ ಕ್ಲಾಸ್ ಟಿಕೇಟ್ ಇರುತ್ತದೆಯಲ್ಲವೆ ಅದೇರೀತಿ ಸತ್ಯಯುಗದ ಪೂರ್ಣ ರಾಜಧಾನಿಯು ಏರ್ಕಂಡೀಷನ್ ಎಂದೇ ತಿಳಿಯಿರಿ. ಏರ್ಕಂಡೀಷನ್ಗಿಂತಲೂ ಮೇಲೆ ಮತ್ತ್ಯಾವುದೂ ಇರುವುದಿಲ್ಲ. ಅದರ ನಂತರ ಫಸ್ಟ್ಕ್ಲಾಸ್ ಟಿಕೇಟ್. ಅಂದಾಗ ಈಗ ತಂದೆಯು ತಿಳಿಸುತ್ತಾರೆ - ನೀವು ಏರ್ಕಂಡೀಷನ್ನ ಸೂರ್ಯವಂಶಿ ರಾಜ್ಯವನ್ನು ಪಡೆಯುತ್ತೀರೋ ಅಥವಾ ಚಂದ್ರವಂಶಿ, ಫಸ್ಟ್ಕ್ಲಾಸ್ ಟಿಕೇಟ್ನ್ನೋ? ಅದಕ್ಕಿಂತಲೂ ಕಡಿಮೆಯೆಂದರೆ ಸೆಕೆಂಡ್ಕ್ಲಾಸ್ನಲ್ಲಿ ನಂಬರ್ವಾರ್ ವಾರಸುಧಾರರಾಗುವುದು. ಹಾಗಿದ್ದರೆ ನೀವು ಕೊನೆ-ಕೊನೆಯಲ್ಲಿ ಬಂದು ರಾಜ್ಯಭಾಗ್ಯವನ್ನು ಪಡೆಯುತ್ತೀರಿ. ಅದೂ ಇಲ್ಲವೆಂದರೆ ಥರ್ಡ್ಕ್ಲಾಸ್ ಪ್ರಜೆಗಳು. ಮತ್ತೆ ಅದರಲ್ಲಿಯೂ ಟಿಕೇಟ್ ರಿಸರ್ವ್ ಆಗಿರುತ್ತದೆ. ಫಸ್ಟ್ಕ್ಲಾಸ್ ರಿಸರ್ವ್, ಸೆಕೆಂಡ್ಕ್ಲಾಸ್ ರಿಸರ್ವ್. ನಂಬರ್ವಾರ್ ದರ್ಜೆಗಳಂತೂ ಇರುತ್ತವೆಯಲ್ಲವೆ. ಬಾಕಿ ಸುಖವಂತೂ ಅಲ್ಲಿ ಇದ್ದೇ ಇರುತ್ತದೆ. ಬೇರೆ-ಬೇರೆ ಕಂಪಾರ್ಟ್ಮೆಂಟ್ಗಳಂತು ಇರುತ್ತದೆಯಲ್ಲವೆ. ಸಾಹುಕಾರ ವ್ಯಕ್ತಿಗಳು ಏರ್ಕಂಡೀಷನ್ ಟಿಕೇಟನ್ನು ಖರೀದಿಸುತ್ತಾರೆ. ನಿಮ್ಮಲ್ಲಿ ಯಾರು ಸಾಹುಕಾರರಾಗುತ್ತಾರೆ? ಯಾರು ಸರ್ವಸ್ವವನ್ನು ತಂದೆಗೆ ಕೊಡುತ್ತಾರೆ, ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು. ಸೌಧಾಗಾರ, ರತ್ನಾಗಾರ, ಜಾದೂಗಾರನೆಂದು ಭಾರತದಲ್ಲಿಯೇ ಮಹಿಮೆಯ ಗಾಯನವಿದೆ. ಈ ಮಹಿಮೆಯು ತಂದೆಯದಾಗಿದೆ, ಕೃಷ್ಣನದಲ್ಲ. ಕೃಷ್ಣನಂತೂ ಆಸ್ತಿಯನ್ನು ತೆಗೆದುಕೊಂಡನು, ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಪಡೆದನು, ಅವನೂ ಸಹ ತಂದೆಯ ಮಗುವಾದನು. ಎಲ್ಲಿಂದಲೋ ಪ್ರಾಲಬ್ಧವನ್ನು ಪಡೆದಿರಬೇಕಲ್ಲವೆ! ಲಕ್ಷ್ಮೀ-ನಾರಾಯಣರು ಸತ್ಯಯುಗದಲ್ಲಿ ಪ್ರಾಲಬ್ಧವನ್ನು ಭೋಗಿಸುತ್ತಾರೆ, ಈಗ ನೀವು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಇವರು ಹಿಂದೆ ಪ್ರಾಲಬ್ಧವನ್ನು ರೂಪಿಸಿಕೊಂಡಿರಬೇಕಲ್ಲವೆ. ನೆಹರುನ ಪ್ರಾಲಬ್ಧವು ಎಷ್ಟು ಚೆನ್ನಾಗಿತ್ತು! ಅವಶ್ಯವಾಗಿ ಅವರು ಒಳ್ಳೆಯ ಕರ್ಮ ಮಾಡಿದ್ದರು, ಕಿರೀಟವಿಲ್ಲದೆ ಭಾರತದ ರಾಜನಾಗಿದ್ದರು. ಭಾರತದ ಮಹಿಮೆಯು ಬಹಳಷ್ಟಿದೆ. ಭಾರತದಂತಹ ಶ್ರೇಷ್ಠ ದೇಶವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಭಾರತವು ಪರಮಪಿತ ಪರಮಾತ್ಮನ ಜನ್ಮ ಸ್ಥಳವಾಗಿದೆ. ಈ ರಹಸ್ಯವು ಯಾರ ಬುದ್ಧಿಯಲ್ಲಿಯೂ ಕುಳಿತುಕೊಳ್ಳುವುದಿಲ್ಲ. ಪರಮಾತ್ಮನೇ ಅರ್ಧಕಲ್ಪಕ್ಕಾಗಿ ಎಲ್ಲರಿಗೆ ಸುಖ-ಶಾಂತಿಯನ್ನು ಕೊಡುತ್ತಾರೆ. ಭಾರತವೇ ನಂಬರ್ವನ್ ತೀರ್ಥ ಸ್ಥಾನವಾಗಿದೆ ಆದರೆ ಡ್ರಾಮಾನುಸಾರ ಒಬ್ಬ ತಂದೆಯನ್ನು ಮರೆಯುವ ಕಾರಣ ಸೃಷ್ಟಿಯ ಗತಿಯು ಈ ರೀತಿಯಾಗಿ ಬಿಟ್ಟಿದೆ. ಆದ್ದರಿಂದ ಶಿವ ತಂದೆಯು ಪುನಃ ಬರುತ್ತಾರೆ. ನಿಮಿತ್ತರಂತೂ ಯಾರಾದರೂ ಆಗಲೇಬೇಕಲ್ಲವೆ.
ಈಗ ತಂದೆಯು ತಿಳಿಸುತ್ತಾರೆ – ಅಶರೀರಿ ಭವ, ತಮ್ಮನ್ನು ಆತ್ಮನಿಶ್ಚಯ ಮಾಡಿಕೊಳ್ಳಿ - ನಾನಾತ್ಮನು ಯಾರ ಸಂತಾನನಾಗಿದ್ದೇನೆ? ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಆಶ್ಚರ್ಯವಲ್ಲವೆ. ಓ ಗಾಡ್ಫಾದರ್ ದಯೆ ತೋರಿಸಿ ಎಂದು ಹೇಳುತ್ತಾರೆ, ಶಿವ ಜಯಂತಿಯನ್ನೂ ಆಚರಿಸುತ್ತಾರೆ ಆದರೆ ಅವರು ಯಾವಾಗ ಬಂದಿದ್ದರು ಎಂಬುದು ಯಾರಿಗೂ ತಿಳಿದಿಲ್ಲ. ಇದು 5000 ವರ್ಷಗಳ ಮಾತಾಗಿದೆ. ತಂದೆಯೇ ಬಂದು ಹೊಸ ಪ್ರಪಂಚ, ಸತ್ಯಯುಗವನ್ನು ಸ್ಥಾಪನೆ ಮಾಡುತ್ತಾರೆ. ಸತ್ಯಯುಗದ ಆಯಸ್ಸು ಲಕ್ಷಾಂತರ ವರ್ಷಗಳಂತೂ ಇಲ್ಲ ಅಂದಮೇಲೆ ಘೋರ ಅಂಧಕಾರವಲ್ಲವೆ. ಗೀತೋಪದೇಶವನ್ನು ಎಷ್ಟೊಂದು ಮಂದಿ ಬಂದು ಕೇಳುತ್ತಾರೆ ಆದರೆ ಓದುವವರಾಗಲಿ, ಓದಿಸುವವರಾಗಲಿ ಏನನ್ನೂ ತಿಳಿದುಕೊಂಡಿಲ್ಲ. ತಂದೆಯು ಎಷ್ಟು ಸಹಜ ಮಾಡಿ ತಿಳಿಸುತ್ತಾರೆ - ಕೇವಲ ನನ್ನನ್ನು ನೆನಪು ಮಾಡಿರಿ, ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನರಾಗಿರಿ. ವಿಷ್ಣುವಿಗೆ ಎಲ್ಲಾ ಅಲಂಕಾರಗಳನ್ನು ತೋರಿಸಿದ್ದಾರೆ. ಶಂಖುವನ್ನೂ ತೋರಿಸಿದ್ದಾರೆ, ಹೂವನ್ನೂ ತೋರಿಸಿದ್ದಾರೆ. ವಾಸ್ತವದಲ್ಲಿ ದೇವತೆಗಳಿಗೆ ಇವನ್ನು ತೋರಿಸಲಾಗುವುದಿಲ್ಲ. ಇವು ಎಷ್ಟು ಗುಹ್ಯ ಗಂಭೀರ ಮಾತುಗಳಾಗಿವೆ. ವಾಸ್ತವದಲ್ಲಿ ಇದು ಬ್ರಾಹ್ಮಣರ ಅಲಂಕಾರವಾಗಿದೆ, ಆದರೆ ಇಂದು ಬ್ರಾಹ್ಮಣರಾಗಿರುತ್ತಾರೆ, ನಾಳೆ ಶೂದ್ರರಾಗುತ್ತಾರೆ ಅಂದಮೇಲೆ ಬ್ರಾಹ್ಮಣರಿಗೆ ಹೇಗೆ ತೋರಿಸುವುದು? ಬ್ರಹ್ಮಾಕುಮಾರರೇ ಶೂದ್ರ ಕುಮಾರರಾಗುತ್ತಾರೆ. ಇದರಲ್ಲಿ ಮಾಯೆಯು ತಡ ಮಾಡುವುದಿಲ್ಲ. ಒಂದುವೇಳೆ ಯಾವುದೇ ತಪ್ಪು ಮಾಡಿದಿರಿ, ಶ್ರೀಮತದಂತೆ ನಡೆಯಲಿಲ್ಲ, ಬುದ್ಧಿಯು ಕೆಟ್ಟು ಹೋಯಿತೆಂದರೆ ಮಾಯೆಯು ಚೆನ್ನಾಗಿ ಪೆಟ್ಟು ಕೊಟ್ಟು ಮುಖವನ್ನು ತಿರುಗಿಸಿ ಬಿಡುತ್ತದೆ. ಮನುಷ್ಯರು ಕೋಪದಲ್ಲಿ ಬಂದು ನಿಮ್ಮ ಮುಖವನ್ನು ತಿರುಗಿಸಿ ಬಿಡುವೆನು ಎಂದು ಹೇಳಿ ಬಿಡುತ್ತಾರಲ್ಲವೆ. ಅಂದಾಗ ಮಾಯೆಯೂ ಹಾಗೆಯೇ. ತಂದೆಯನ್ನು ಮರೆತರೆ ಸಾಕು ಮಾಯೆಯು ಒಂದು ಸೆಕೆಂಡಿನಲ್ಲಿ ಪೆಟ್ಟು ಕೊಟ್ಟು ಮುಖವನ್ನು ತಿರುಗಿಸಿ ಬಿಡುತ್ತದೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪಡೆಯುತ್ತಾರೆ. ಹಾಗೆಯೇ ಮಾಯೆಯು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಎಷ್ಟು ಒಳ್ಳೊಳ್ಳೆಯ ಮಕ್ಕಳನ್ನು ಮಾಯೆಯು ಹಿಡಿದುಕೊಳ್ಳುತ್ತದೆ, ಎಲ್ಲಿಯಾದರೂ ಸ್ವಲ್ಪ ಹುಡುಗಾಟಿಕೆ ಇದ್ದರೆ ಸಾಕು ಅದನ್ನು ನೋಡಿ ಮಾಯೆಯು ಪೆಟ್ಟು ಕೊಡುತ್ತದೆ. ತಂದೆಯು ಬಂದು ಹಳೆಯ ಪ್ರಪಂಚದಿಂದ ಮುಖವನ್ನು ತಿರುಗಿಸುತ್ತಾರೆ. ಲೌಕಿಕ ತಂದೆಯು ಬಡವರಾಗಿರುತ್ತಾರೆ, ಹಳೆಯ ಗುಡಿಸಲಿನಲ್ಲಿರುತ್ತಾರೆ ನಂತರ ಹೊಸ ಮನೆಯನ್ನು ಕಟ್ಟಿಸಿದರೆ ಮಕ್ಕಳ ಬುದ್ಧಿಯಲ್ಲಿ ನಾವೀಗ ಹೊ ಸಮನೆಯು ತಯಾರಾಗಿ ಬಿಟ್ಟರೆ ನಾವು ಹೋಗಿ ಅದರಲ್ಲಿ ಕುಳಿತುಕೊಳ್ಳುತ್ತೇವೆ, ಈ ಹಳೆಯದನ್ನು ಬಿಟ್ಟು ಬಿಡುತ್ತೇವೆ ಎಂದು ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ಹಾಗೆಯೇ ತಂದೆಯು ನಿಮಗಾಗಿ ಈಗ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದಾರೆ. ಹೇಳುತ್ತಾರೆ, ಮುದ್ದಾದ ಮಕ್ಕಳೇ ಎಂದು. ಆತ್ಮಗಳೊಂದಿಗೆ ಮಾತನಾಡುತ್ತಾರೆ, ಈ ಕಣ್ಣುಗಳ ಮೂಲಕ ನೀವು ಮಕ್ಕಳನ್ನು ನೋಡುತ್ತಾರೆ, ತಂದೆಯು ತಿಳಿಸುತ್ತಾರೆ - ನಾನೂ ಸಹ ಡ್ರಾಮಾದ ವಶವಾಗಿದ್ದೇನೆ. ಡ್ರಾಮಾ ಇಲ್ಲದೆ ನಾನೂ ಸಹ ಏನೂ ಮಾಡಲು ಸಾಧ್ಯವಿಲ್ಲ. ಮಕ್ಕಳು ರೋಗಿಯಾದರೆ ನಾನು ಸರಿಪಡಿಸಿ ಬಿಡುತ್ತೇನೆ ಎಂದಲ್ಲ. ಆಪರೇಷನ್ ಮಾಡುವುದರಿಂದ ಬಿಡಿಸುತ್ತೇನೆ ಎಂದಲ್ಲ, ಕರ್ಮ ಭೋಗವನ್ನಂತೂ ಎಲ್ಲರೂ ಭೋಗಿಸಲೇಬೇಕಾಗಿದೆ. ನಿಮ್ಮ ಮೇಲಂತೂ ಬಹಳ ಹೊರೆಯಿದೆ ಏಕೆಂದರೆ ನೀವು ಎಲ್ಲರಿಗಿಂತ ಹಳಬರಾಗಿದ್ದೀರಿ, ಸತೋಪ್ರಧಾನರಿಂದ ತಮೋಪ್ರಧಾನರಾಗಿದ್ದೀರಿ. ಈಗ ನೀವು ಮಕ್ಕಳಿಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು - ನೀವು ತಿಳಿದುಕೊಂಡಿದ್ದೀರಿ - ಕಲ್ಪ-ಕಲ್ಪವೂ ಡ್ರಾಮಾನುಸಾರ ನಾವು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಯಾರು ಸೂರ್ಯವಂಶಿ, ಚಂದ್ರವಂಶಿ ಮನೆತನದವರಾಗಿರುವರೋ ಅವರು ಅವಶ್ಯವಾಗಿ ಬರುತ್ತಾರೆ. ಯಾರು ದೇವತೆಗಳಾಗಿದ್ದರು ನಂತರ ಶೂದ್ರರಾಗಿದ್ದಾರೆಯೋ ಮತ್ತೆ ಅವರೇ ಬ್ರಾಹ್ಮಣರಾಗಿ ದೈವೀ ಸಂಪ್ರದಾಯದವರಾಗುತ್ತಾರೆ. ಈ ಮಾತುಗಳನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ.
ತಂದೆಗೆ ನೀವು ಮಕ್ಕಳು ಎಷ್ಟು ಪ್ರಿಯರಾಗುತ್ತೀರಿ. ತಂದೆಯು ಹೇಳುತ್ತಾರೆ, ನೀವು ನನ್ನ ಕಲ್ಪದ ಹಿಂದಿನ ಮಕ್ಕಳಾಗಿದ್ದೀರಿ. ನಾನು ಕಲ್ಪ-ಕಲ್ಪವೂ ಬಂದು ನಿಮಗೆ ಓದಿಸುತ್ತೇನೆ. ಎಷ್ಟು ವಿಚಿತ್ರಮಾತುಗಳಾಗಿವೆ. ನಿರಾಕಾರ ಭಗವಾನುವಾಚ, ಶರೀರದಿಂದಲೇ ಮಾತನಾಡುತ್ತಾರಲ್ಲವೆ. ಶರೀರವು ಬೇರೆಯಾಗಿ ಬಿಟ್ಟರೆ ಆತ್ಮವು ಮಾತನಾಡಲು ಸಾಧ್ಯವಿಲ್ಲ. ಆತ್ಮವು ಭಿನ್ನವಾಗಿ ಬಿಡುತ್ತದೆ. ಈಗ ತಂದೆಯು ಹೇಳುತ್ತಾರೆ – ಅಶರೀರಿ ಭವ. ಪ್ರಾಣಾಯಾಮ ಇತ್ಯಾದಿಗಳನ್ನು ಮಾಡಬೇಕೆಂದಲ್ಲ, ತಿಳಿದುಕೊಳ್ಳಿ - ನಾನಾತ್ಮ ಅವಿನಾಶಿಯಾಗಿದ್ದೇನೆ. ನಾನಾತ್ಮನಲ್ಲಿ 84 ಜನ್ಮಗಳ ಪಾತ್ರವು ತುಂಬಿದೆ. ತಂದೆಯೂ ಹೇಳುತ್ತಾರೆ - ನಾನಾತ್ಮನು ಯಾವ ಪಾತ್ರ ಮಾಡುತ್ತೇನೆಯೋ ಅದೆಲ್ಲಾ ಪಾತ್ರವು ತುಂಬಲ್ಪಟ್ಟಿದೆ. ಭಕ್ತಿಮಾರ್ಗದಲ್ಲಿ ಅಲ್ಲಿ ಪಾತ್ರ ನಡೆಯುತ್ತದೆ, ಮತ್ತೆ ಜ್ಞಾನ ಮಾರ್ಗದಲ್ಲಿ ಇಲ್ಲಿ ಬಂದು ಜ್ಞಾನವನ್ನು ಕೊಡುತ್ತೇನೆ. ಭಕ್ತಿಮಾರ್ಗದವರಿಗೆ ಜ್ಞಾನದ ಬಗ್ಗೆ ತಿಳಿದಿರುವುದಿಲ್ಲ. ಯಾರಾದರೂ ಸಾರಾಯಿಯನ್ನೇ ಕುಡಿದಿಲ್ಲವೆಂದರೆ ಅದರ ರುಚಿಯು ಹೇಗೆ ತಿಳಿಯುತ್ತದೆ? ಜ್ಞಾನವನ್ನೂ ಸಹ ತಿಳಿದುಕೊಂಡಾಗಲೇ ಅದು ಅರ್ಥವಾಗುತ್ತದೆ. ಜ್ಞಾನದಿಂದ ಸದ್ಗತಿಯಾಗುತ್ತದೆ ಅಂದಮೇಲೆ ಅವಶ್ಯವಾಗಿ ಜ್ಞಾನ ಸಾಗರನೇ ಸದ್ಗತಿ ಮಾಡುತ್ತಾರೆ. ನಾನು ಸರ್ವರ ಸದ್ಗತಿದಾತನಾಗಿದ್ದೇನೆಂದು ತಂದೆಯು ಹೇಳುತ್ತಾರೆ, ಸರ್ವೋದಯ ಲೀಡರ್ ಆಗಿದ್ದಾರಲ್ಲವೆ. ಎಷ್ಟೊಂದು ಭಿನ್ನ-ಭಿನ್ನ ಪ್ರಕಾರದವರಿದ್ದಾರೆ. ವಾಸ್ತವದಲ್ಲಿ ಸರ್ವರ ಮೇಲೆ ದಯೆ ತೋರುವವರು ತಂದೆಯಾಗಿದ್ದಾರೆ. ಹೇ ಭಗವಂತ ದಯೆ ತೋರಿಸಿ ಎಂದು ತಂದೆಯೊಂದಿಗೆ ಹೇಳುತ್ತಾರೆ ಅಂದಮೇಲೆ ಎಲ್ಲರ ಮೇಲೆ ದಯೆ ತೋರಿಸುವವರು ಆ ತಂದೆಯೇ ಆಗಿದ್ದಾರೆ. ಉಳಿದೆಲ್ಲರೂ ಒಂದು ಮಿತವಾದ ದಯೆ ತೋರಿಸುವವರಾಗಿದ್ದಾರೆ. ತಂದೆಯಂತೂ ಇಡೀ ಪ್ರಪಂಚವನ್ನು ಸತೋಪ್ರಧಾನವನ್ನಾಗಿ ಮಾಡುತ್ತಾರೆ. ಅದರಲ್ಲಿ ತತ್ವಗಳೂ ಸಹ ಸತೋಪ್ರಧಾನವಾಗಿ ಬಿಡುತ್ತವೆ. ಇದು ಪರಮಾತ್ಮನ ಕಾರ್ಯವೇ ಆಗಿದೆ. ಅಂದಾಗ ಸರ್ವೋದಯ ಎಂಬುದಕ್ಕೆ ಎಷ್ಟು ದೊಡ್ಡ ಅರ್ಥವಿದೆ, ಅವರು ಎಲ್ಲರಮೇಲೆ ದಯೆ ತೋರಿಸಿ ಬಿಡುತ್ತಾರೆ. ಸ್ವರ್ಗದ ಸ್ಥಾಪನೆಯಲ್ಲಿ ಯಾರೂ ದುಃಖಿಯಾಗುವುದಿಲ್ಲ. ಅಲ್ಲಿ ನಂಬರ್ವನ್ ಪೀಠೋಪಕರಣಗಳು, ವೈಭವ ಎಲ್ಲವೂ ಸಿಗುತ್ತವೆ. ದುಃಖ ಕೊಡುವಂತಹ ಪ್ರಾಣಿಗಳಾಗಲಿ, ನೊಣಗಳಾಗಲಿ ಯಾವುದೂ ಇರುವುದಿಲ್ಲ. ಅಲ್ಲಿಯೂ ಹಿರಿಯ ವ್ಯಕ್ತಿಗಳ ಮನೆಯಲ್ಲಿ ಎಷ್ಟೊಂದು ಸ್ವಚ್ಛತೆಯಿರುತ್ತದೆ. ನೀವೆಂದೂ ನೊಣಗಳನ್ನು ನೋಡುವುದಿಲ್ಲ, ಯಾವುದೇ ಸೊಳ್ಳೆ ಇತ್ಯಾದಿಗಳು ಒಳಗೆ ನುಗ್ಗಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಒಳ ಪ್ರವೇಶಿಸಲು ಯಾವುದಕ್ಕೂ ಶಕ್ತಿಯಿರುವುದಿಲ್ಲ. ಕೊಳಕು ಮಾಡುವಂತಹ ಪ್ರಾಣಿ-ಪಕ್ಷಿಗಳು ಅಲ್ಲಿ ಇರುವುದೇ ಇಲ್ಲ. ಸ್ವಾಭಾವಿಕ ಹೂಗಳ ಸುಗಂಧವಿರುತ್ತದೆ. ನಿಮಗೆ ಸೂಕ್ಷ್ಮವತನದಲ್ಲಿ ತಂದೆಯು ಶೂಬೀ ರಸವನ್ನು ಕುಡಿಸುತ್ತಿದ್ದರು. ಈಗ ಸೂಕ್ಷ್ಮವತನದಲ್ಲಿ ಏನೂ ಇಲ್ಲ, ಇದೆಲ್ಲವೂ ಕೇವಲ ಸಾಕ್ಷಾತ್ಕಾರವಾಗಿದೆ. ವೈಕುಂಠದಲ್ಲಿ ಎಷ್ಟು ಒಳ್ಳೊಳ್ಳೆಯ ಹೂಗಳು, ಉದ್ಯಾನವನ ಇತ್ಯಾದಿಗಳಿರುತ್ತವೆ. ಸೂಕ್ಷ್ಮವತನದಲ್ಲಿ ಇದೇನೂ ಇಲ್ಲ. ಇದೆಲ್ಲವೂ ಸಾಕ್ಷಾತ್ಕಾರವಾಗಿದೆ. ಇಲ್ಲಿ ಕುಳಿತಿದ್ದರೂ ಸಹ ನೀವು ಸಾಕ್ಷಾತ್ಕಾರ ಮಾಡುತ್ತೀರಿ.
ಗೀತೆಯು ಬಹಳ ಸುಂದರವಾಗಿದೆ, ನೀವು ತಿಳಿದುಕೊಂಡಿದ್ದೀರಿ - ನಮಗೆ ತಂದೆಯು ಸಿಕ್ಕಿದ್ದಾರೆ ಅಂದಮೇಲೆ ನಮಗೆ ಇನ್ನೇನು ಬೇಕು! ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಅಂದಮೇಲೆ ತಂದೆಯನ್ನು ನೆನಪು ಮಾಡಬೇಕಲ್ಲವೆ. ತಂದೆಯ ಮತವು ಪ್ರಸಿದ್ಧವಾಗಿದೆ, ಶ್ರೀಮತದಿಂದಲೇ ನಾವು ಶ್ರೇಷ್ಠಾತಿ ಶ್ರೇಷ್ಠರಾಗುತ್ತೇವೆ. ಉಳಿದೆಲ್ಲರದೂ ಆಸುರೀ ಮತವಾಗಿದೆ ಆದ್ದರಿಂದ ಸತ್ಯಯುಗದಲ್ಲಿ ಸದಾ ಸುಖವಿತ್ತು, ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು ಎಂಬುದನ್ನು ಅವರು ತಿಳಿದುಕೊಳ್ಳುವುದೇ ಇಲ್ಲ. ಬಾಲ್ಯದಲ್ಲಿ ಅವರೇ ರಾಧಾಕೃಷ್ಣರಾಗಿದ್ದರು ಆದರೆ ಅವರ ಚರಿತ್ರೆಯೇನೂ ಇಲ್ಲ. ಸ್ವರ್ಗದಲ್ಲಂತೂ ಎಲ್ಲಾ ಮಕ್ಕಳು ಬಹಳ ಸುಂದರರಾಗಿರುತ್ತಾರೆ. ಚಂಚಲತೆಯ ಯಾವುದೇ ಮಾತಿರುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ಹಳೆಯ ಪ್ರಪಂಚದಿಂದ ಮುಖವನ್ನು ತಿರುಗಿಸಿಕೊಂಡಿದ್ದೀರಿ ಅಂದಮೇಲೆ ಪುನಃ ಮಾಯೆಯು ತನ್ನ ಕಡೆ ತಿರುಗಿಸುವಂತಹ ಯಾವುದೇ ತಪ್ಪನ್ನು ಮಾಡಬಾರದು. ಶ್ರೀಮತದ ಉಲ್ಲಂಘನೆ ಮಾಡಬಾರದು. ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ.
2. ತಂದೆಗೆ ತಮ್ಮದೆಲ್ಲವನ್ನೂ ಸ್ವಾಹಾ ಮಾಡಿ ಪಕ್ಕಾ ವಾರಸುಧಾರರಾಗಿ ಸತ್ಯಯುಗೀ ಏರ್ಕಂಡೀಷನ್ ಟಿಕೇಟನ್ನು ತೆಗೆದುಕೊಳ್ಳಬೇಕಾಗಿದೆ. ಗುರಿ-ಧ್ಯೇಯವನ್ನು ಬುದ್ಧಿಯಲ್ಲಿಟ್ಟುಕೊಂಡು ಪುರುಷಾರ್ಥ ಮಾಡಬೇಕಾಗಿದೆ.
ಓಂ ಶಾಂತಿ. ಕೆಲವೊಮ್ಮೆ ಯಾವುದಾದರೂ ಗೀತೆಯನ್ನು ಹಾಕಿದಾಗ ಮಕ್ಕಳಿಂದ ಗೀತೆಯ ಅರ್ಥವನ್ನೂ ಕೇಳುತ್ತಿದ್ದೆವು. ಈಗ ತಿಳಿಸಿ, ನೀವು ಯಾವಾಗಿನಿಂದ ಮಾರ್ಗವನ್ನು ಮರೆತಿದ್ದೀರಿ? (ಕೆಲವರು ದ್ವಾಪರದಿಂದ ಎಂದು ಹೇಳಿದರು, ಇನ್ನೂ ಕೆಲವರು ಸತ್ಯಯುಗದಿಂದ ಎಂದು ಹೇಳಿದರು) ಯಾರು ದ್ವಾಪರದಿಂದ ಮರೆತಿದ್ದೇವೆ ಎಂದು ಹೇಳಿದರೋ ಅವರದು ತಪ್ಪಾಗಿದೆ, ಸತ್ಯಯುಗದಿಂದ ಮಾರ್ಗವನ್ನು ಮರೆತಿದ್ದೀರಿ. ಮಾರ್ಗವನ್ನು ತಿಳಿಸುವವರು, ಈಗ ನಿಮಗೆ ಸಿಕ್ಕಿದ್ದಾರೆ. ಸತ್ಯಯುಗದಲ್ಲಿ ಮಾರ್ಗ ತಿಳಿಸುವವರನ್ನು ಅರಿತುಕೊಂಡಿರುವುದೇ ಇಲ್ಲ, ಅಲ್ಲಿ ಯಾರೂ ಸಹ ತಂದೆಯನ್ನೇ ತಿಳಿದುಕೊಂಡಿರುವುದಿಲ್ಲ ಅಂದರೆ ಮರೆತು ಹೋಗಿರುತ್ತಾರೆ. ಮರೆಯುವುದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ, ಪುನಃ ಈಗ ಮಾರ್ಗವನ್ನು ತಿಳಿಸಲು ಬಂದಿದ್ದಾರೆ. ಪ್ರಭು ಮಾರ್ಗವನ್ನು ತಿಳಿಸಿ, ನಾವು ಸತ್ಯಯುಗದಿಂದ ಹಿಡಿದು ತಂದೆಯನ್ನು ಮರೆತಿದ್ದೇವೆ ಎಂದು ಹೇಳುತ್ತಾರೆ. ಬುದ್ಧಿಯನ್ನು ಓಡಿಸುವುದಕ್ಕಾಗಿ ತಂದೆಯು ಪ್ರಶ್ನೆಯನ್ನು ಕೇಳುತ್ತಾರೆ. ಈ ಜ್ಞಾನವೇ ಭಿನ್ನವಾಗಿದೆಯಲ್ಲವೆ. ಜ್ಞಾನ ಸಾಗರನು ತಂದೆಯೇ ಆಗಿದ್ದಾರೆ, ತಂದೆಯು ಸನ್ಮುಖದಲ್ಲಿ ತಿಳಿಸುತ್ತಾರೆ – ಜ್ಞಾನ ಸಾಗರ, ಸುಖದ ಸಾಗರನು ನಾನೇ ಆಗಿದ್ದೇನೆ. ಖಂಡಿತವಾಗಿಯೂ ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ ಎಂಬುದನ್ನು ನೀವೂ ತಿಳಿದುಕೊಂಡಿದ್ದೀರಿ. ಇದನ್ನು ಭಕ್ತಿಮಾರ್ಗದವರೂ ಒಪ್ಪುತ್ತಾರೆ. ಪಾವನ ಪ್ರಪಂಚವು ಶಾಂತಿಧಾಮ ಮತ್ತು ಸುಖಧಾಮವಾಗಿದೆ. ಈಗ ಸುಖಧಾಮ ಮತ್ತು ದುಃಖಧಾಮವು ಅರ್ಧ-ಅರ್ಧಭಾಗವಾಗಿದೆ. ಇದನ್ನು ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ. ತಂದೆಯು ಪ್ರೀತಿಯ ಸಾಗರನಾಗಿದ್ದಾರೆ ಆದ್ದರಿಂದಲೇ ಎಲ್ಲರೂ ಅವರನ್ನು ತಂದೆ ಎಂದು ಹೇಳಿ ಕೂಗುತ್ತಾರೆ. ಆದರೆ ಅವರು ಯಾರು, ಹೇಗೆ ಬರುತ್ತಾರೆ ಎಂಬುದನ್ನು ಮರೆತು ಹೋಗುತ್ತಾರೆ. ಇದು 5000 ವರ್ಷಗಳ ಮಾತಾಗಿದೆ, ಖಂಡಿತವಾಗಿಯೂ ಈ ದೇವಿ-ದೇವತೆಗಳ ರಾಜ್ಯವಿತ್ತು, ಸತ್ಯಯುಗದಲ್ಲಿ ಸದ್ಗತಿಯಿರುತ್ತದೆ ಮತ್ತೆ ಹೇಗೆ ದುರ್ಗತಿಯಾಗುತ್ತದೆ ಎಂಬುದನ್ನು ಯಾರು ತಿಳಿಸುವರು? ತಂದೆಯೇ ಬಂದು ತಿಳಿಸುತ್ತಾರೆ, ದ್ವಾಪರದಿಂದ ನಿಮ್ಮದು ದುರ್ಗತಿಯಾಗಿದೆ ಆದ್ದರಿಂದಲೇ ಕರೆಯುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಇದೇನೂ ಹೊಸ ಮಾತಲ್ಲ, ತಂದೆಯು ಕಲ್ಪ-ಕಲ್ಪವೂ ಬರುತ್ತಾರೆ. ಈಗ ನಿರಾಕಾರ ತಂದೆಯು ಆತ್ಮರಿಗೆ ತಿಳಿಸುತ್ತಾರೆ, ಯಾರೂ ಸಹ ತಮ್ಮ ಆತ್ಮನನ್ನು ತಿಳಿದುಕೊಂಡಿಲ್ಲ. ನಾನಾತ್ಮನಲ್ಲಿ ಇಡೀ ಪಾತ್ರವು ಅಡಕವಾಗಿದೆ ಎಂಬ ಮಾತನ್ನು ಎಂದೂ ಯಾರೂ ಹೇಳುವುದಿಲ್ಲ. ನಾನು ಅನೇಕ ಬಾರಿ ಈ ಪಾತ್ರಧಾರಿಯಾಗಿದ್ದೇನೆ, ಪಾತ್ರವನ್ನು ಅಭಿನಯಿಸಿದ್ದೇನೆ ಎಂಬುದನ್ನೂ ಕೂಡ ಹೇಳುವುದಿಲ್ಲ ಏಕೆಂದರೆ ಅವರು ನಾಟಕವನ್ನೇ ಅರಿತುಕೊಂಡಿಲ್ಲ. ಭಲೆ ಲಕ್ಷಾಂತರ ವರ್ಷಗಳೆಂದು ಹೇಳಬಹುದು, ಆದರೆ ಅದೂ ಸಹ ನಾಟಕವೇ ಅಲ್ಲವೆ. ನಾಟಕವು ಪುನರಾವರ್ತನೆಯಾಗುತ್ತದೆ, ಇದನ್ನಂತೂ ಹೇಳುತ್ತಾರಲ್ಲವೆ. ಈ ಜ್ಞಾನವನ್ನು ತಂದೆಯೇ ಸನ್ಮುಖದಲ್ಲಿ ಮಕ್ಕಳಿಗೆ ಕೊಡುತ್ತಾರೆ, ಮುಖದಿಂದ ಮಾತನಾಡುತ್ತಿದ್ದಾರೆ. ನೀವೂ ತಿಳಿದುಕೊಂಡಿದ್ದೀರಿ, ಶಿವ ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ತನ್ನವರನ್ನಾಗಿ ಮಾಡಿಕೊಂಡು ಬ್ರಾಹ್ಮಣರನ್ನಾಗಿ ಮಾಡಿದ್ದಾರೆ. ಶಿವ ತಂದೆಗೆ ಇವರು (ಬ್ರಹ್ಮಾ) ಮಗನೂ ಆಗಿದ್ದಾರೆ, ಪತ್ನಿಯೂ ಆಗಿದ್ದಾರೆ. ನೋಡಿ, ಎಷ್ಟೊಂದು ಮಂದಿ ಮಕ್ಕಳ ಸಂಭಾಲನೆ ಮಾಡಬೇಕಾಗುತ್ತದೆ. ಒಂಟಿಯಾಗಿರುವ ಕಾರಣ ಮಕ್ಕಳನ್ನು ಸಂಭಾಲನೆ ಮಾಡಲು ಸರಸ್ವತಿಯನ್ನು ಸಹಯೋಗಿಯನ್ನಾಗಿ ಮಾಡಿಕೊಂಡಿದ್ದಾರೆ. ಈ ಮಾತುಗಳು ಶಾಸ್ತ್ರಗಳಲ್ಲಿಲ್ಲ. ಇದು ವಾಸ್ತವಿಕವಾಗಿದೆ. ತಂದೆಯೇ ರಾಜಯೋಗವನ್ನು ಕಲಿಸುತ್ತಾರೆ, ಯಾರಿಗೆ ರಾಜಯೋಗವನ್ನು ಕಲಿಸಿದರೋ ಅವರು ರಾಜರಾದರು, 84 ಜನ್ಮಗಳಲ್ಲಿ ಬಂದರು. ಬೈಬಲ್, ಖುರಾನ್, ವೇದ-ಶಾಸ್ತ್ರ ಇತ್ಯಾದಿಗಳನ್ನು ಬಹಳಷ್ಟು ಓದುತ್ತಾರೆ ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವೀಗ ತತ್ವಯೋಗಿಗಳಲ್ಲ, ನಿಮ್ಮದು ತಂದೆಯೊಂದಿಗೆ ಯೋಗವಿದೆ ಅರ್ಥಾತ್ ತಂದೆಯ ನೆನಪಿದೆ. ನೀವೀಗ ರಾಜಯೋಗಿ, ರಾಜಋಷಿಗಳಾಗಿದ್ದೀರಿ ಅರ್ಥಾತ್ ಯೋಗಿರಾಜರಾಗಿದ್ದೀರಿ. ಪವಿತ್ರರಿಗೆ ಯೋಗಿಗಳೆಂದು ಹೇಳಲಾಗುತ್ತದೆ. ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಲು ನೀವು ಯೋಗಿಗಳಾಗಿದ್ದೀರಿ. ತಂದೆಯು ಮೊಟ್ಟ ಮೊದಲು ತಿಳಿಸುತ್ತಾರೆ - ಮಕ್ಕಳೇ, ಪವಿತ್ರರಾಗಿರಿ. ಯೋಗಿ ಹೆಸರೇ ಅವರದಾಗಿದೆ. ನೀವೆಲ್ಲರೂ ರಾಜಯೋಗಿಗಳಾಗಿದ್ದೀರಿ. ಇದು ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರ ಮಾತಾಗಿದೆ. ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ ಅಂದಮೇಲೆ ನೀವು ವಿದ್ಯಾರ್ಥಿಗಳಾದಿರಲ್ಲವೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರನ್ನು ಎಂದಾದರೂ ಮರೆತು ಹೋಗುವರೇ? ನಿಮಗೆ ತಿಳಿದಿದೆ – ಶಿವ ತಂದೆಯು ನಮಗೆ ಓದಿಸುತ್ತಿದ್ದಾರೆ, ಆದರೂ ಸಹ ಮಾಯೆಯು ಮರೆಸಿ ಬಿಡುತ್ತದೆ. ನೀವು ತಮ್ಮ ಓದಿಸುವಂತಹ ಶಿಕ್ಷಕರನ್ನೇ ಮರೆತು ಹೋಗುತ್ತೀರಿ. ಭಗವಂತನು ಓದಿಸುತ್ತಾರೆ ಎಂದು ತಿಳಿದಾಗಲೇ ನಶೆಯೇರುವುದು. ಶಾಲೆಯಲ್ಲಿ ಐ.ಸಿ.ಎಸ್., ಓದುತ್ತಾರೆಂದರೆ ಎಷ್ಟೊಂದು ನಶೆಯಿರುತ್ತದೆ. ನೀವು ಮಕ್ಕಳಂತೂ 21 ಜನ್ಮಗಳಿಗಾಗಿ ರಾಜಯೋಗದ ವಿದ್ಯೆಯನ್ನು ಓದುತ್ತಿದ್ದೀರಿ. ಮತ್ತೆ ಓದಲೇಬೇಕಾಗುತ್ತದೆ. ರಾಜ ವಿದ್ಯೆಯನ್ನೂ ಓದಬೇಕಾಗಿದೆ, ಭಾಷೆ ಇತ್ಯಾದಿಗಳನ್ನೂ ಕಲಿಯಬೇಕಾಗಿದೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಸತ್ಯಯುಗದಿಂದ ನಾವು ಈ ಮಾರ್ಗವನ್ನು ಮರೆಯುವುದನ್ನು ಆರಂಭಿಸುತ್ತೇವೆ. ನಂತರ ಒಂದೊಂದು ಜನ್ಮದಲ್ಲಿ ಕೆಳಗಿಳಿಯುತ್ತೇವೆ. ಈಗ ನಿಮಗೆ ಎಲ್ಲವೂ ನೆನಪಿದೆ, ನಾವು ಹೇಗೆ ವರುತ್ತೇವೆ, ಹೇಗೆ ಕೆಳಗಿಳಿಯುತ್ತೇವೆ ಎಂದು. ಈ ಏಣಿಯಲ್ಲಿ ಚೆನ್ನಾಗಿ ನೆನಪು ಮಾಡಿಕೊಳ್ಳಿ, 84 ಜನ್ಮಗಳು ಮುಕ್ತಾಯವಾಯಿತು, ನಾವೀಗ ಹೋಗಬೇಕಾಗಿದೆ ಆದ್ದರಿಂದ ಖುಷಿಯಾಗುತ್ತದೆ, ಇದು ಬೇಹದ್ದಿನ ನಾಟಕವಾಗಿದೆ. ಆತ್ಮವು ಎಷ್ಟು ಚಿಕ್ಕದಾಗಿದೆ, ಪಾತ್ರವನ್ನು ಅಭಿನಯಿಸುತ್ತಾ-ಅಭಿನಯಿಸುತ್ತಾ ಆತ್ಮವು ಸುಸ್ತಾಗಿ ಬಿಟ್ಟರೆ ಆಗ ಬಾಬಾ, ಮಾರ್ಗವನ್ನು ತಿಳಿಸಿ ಅದರಿಂದ ನಾವು ವಿಶ್ರಾಂತಿ ಪಡೆಯುವೆವು, ಸುಖ-ಶಾಂತಿಯನ್ನು ಪಡೆಯುವೆವು ಎಂದು ಹೇಳುತ್ತದೆ. ನೀವು ಸುಖಧಾಮದಲ್ಲಿದ್ದಾಗ ನಿಮಗಾಗಿ ಅಲ್ಲಿ ಸುಖವೂ ಇರುತ್ತದೆ, ಶಾಂತಿಯೂ ಇರುತ್ತದೆ. ಯಾವುದೇ ಏರುಪೇರುಗಳಿರುವುದಿಲ್ಲ, ಆತ್ಮಕ್ಕೆ ಶಾಂತಿಯಿರುತ್ತದೆ. ಶಾಂತಿಗೆ ಎರಡು ಸ್ಥಾನಗಳಿವೆ - ಶಾಂತಿಧಾಮ ಮತ್ತು ಸುಖಧಾಮ. ದುಃಖಧಾಮದಲ್ಲಿ ಅಶಾಂತಿಯಿದೆ, ಇದು ವಿದ್ಯೆಯಾಗಿದೆ. ನೀವು ತಿಳಿದುಕೊಂಡಿದ್ದೀರಿ - ತಂದೆಯು ನಮ್ಮನ್ನು ಶಾಂತಿಧಾಮದ ಮೂಲಕ ಸುಖಧಾಮದಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ನಿಮಗೆ ಹೇಳುವ ಅವಶ್ಯಕತೆಯಿಲ್ಲ, ನಾವಿಲ್ಲಿ ಪಾತ್ರವನ್ನು ಅಭಿನಯಿಸಲು ಬಂದಿದ್ದೇವೆ ಮತ್ತೆ ಹೋಗಬೇಕಾಗಿದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ- ನಿಮಗೆ ಈ ಖುಷಿಯಿದೆ. ಶಾಂತಿಯ ಖುಷಿಯಿಲ್ಲ, ನಮಗೆ ಆನಂದವಾಗುತ್ತದೆ, ಖುಷಿಯಾಗುತ್ತದೆ ಏಕೆಂದರೆ ತಿಳಿದಿದೆ, ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮಗಳು ವಿನಾಶವಾಗುತ್ತವೆ. ಕೆಲವರು ನಮಗೆ ಮನಃಶ್ಯಾಂತಿ ಬೇಕೆಂದು ಬಯಸುತ್ತಾರೆ. ಈ ಅಕ್ಷರವೂ ತಪ್ಪಾಗಿದೆ. ನಾವು ತಂದೆಯನ್ನು ನೆನಪು ಮಾಡುವುದೇ ವಿಕರ್ಮಗಳು ವಿನಾಶವಾಗಲಿ ಎಂದು. ಮನಸ್ಸಂತೂ ಇಲ್ಲಿ ಶಾಂತವಾಗಿರಲು ಸಾಧ್ಯವಿಲ್ಲ, ಕರ್ಮ ಮಾಡದೇ ಇರಲು ಸಾಧ್ಯವಿಲ್ಲ. ಆದರೆ ಅನುಭೂತಿಯಾಗುತ್ತದೆ. ನಾವು ತಂದೆಯಿಂದ ಸುಖ, ಶಾಂತಿ, ಪವಿತ್ರತೆಯ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಅಂದಮೇಲೆ ಖುಷಿಯಿರಬೇಕು. ಇದಂತೂ ದುಃಖಧಾಮವಾಗಿದೆ, ಇದರಲ್ಲಿ ಸುಖವಿಲ್ಲ. ಮನುಷ್ಯರು ಶಾಂತಿಧಾಮ, ಸುಖಧಾಮವನ್ನು ಮರೆತು ಹೋಗಿದ್ದಾರೆ. ಆದ್ದರಿಂದ ಯಾರಿಗೆ ಬಹಳಷ್ಟು ಹಣವಿದೆಯೋ ಅವರು ನಾವು ಇಲ್ಲಿಯೇ ಸುಖದಲ್ಲಿದ್ದೇವೆಂದು ತಿಳಿದುಕೊಳ್ಳುತ್ತಾರೆ. ಸನ್ಯಾಸಿಗಳು ಮನೆ ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ಯಾವುದೇ ಹೊಡೆದಾಟವಿರುವುದಿಲ್ಲ ಆದ್ದರಿಂದ ಶಾಂತವಾಗಿ ಬಿಡುತ್ತಾರೆ ಆದರೆ ಅದು ಅಲ್ಪಕಾಲಕ್ಕಾಗಿ. ಆತ್ಮದ ಸ್ವಧರ್ಮವು ಶಾಂತಿಯಾಗಿದೆ. ನೀವು ಆ ಶಾಂತಿಯಲ್ಲಿರುತ್ತೀರಿ, ಇಲ್ಲಂತೂ ಪ್ರವೃತ್ತಿಯಲ್ಲಿ ಬರಲೇಬೇಕಾಗಿದೆ, ಪಾತ್ರವನ್ನು ಅಭಿನಯಿಸಲೇ ಬೇಕಾಗಿದೆ. ಇಲ್ಲಿ ಬರುವುದೇ ಕರ್ಮ ಮಾಡುವುದಕ್ಕಾಗಿ. ಆತ್ಮವು ಅವಶ್ಯವಾಗಿ ಕರ್ಮದಲ್ಲಿ ಬರಲೇಬೇಕಾಗಿದೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಈ ತಿಳುವಳಿಕೆಯನ್ನು ಬೇಹದ್ದಿನ ತಂದೆಯು ಕೊಡುತ್ತಿದ್ದಾರೆ. ನಿರಾಕಾರ ಭಗವಾನುವಾಚ - ನೀವೀಗ ತಿಳಿದುಕೊಂಡಿದ್ದೀರಿ, ನಾವಾತ್ಮರಾಗಿದ್ದೇವೆ ನಮ್ಮ ತಂದೆಯು ಪರಮ ಆತ್ಮನಾಗಿದ್ದಾರೆ. ಪರಮ ಆತ್ಮ ಎಂದರೆ ಪರಮಾತ್ಮ. ಅವರನ್ನು ಈ ಆತ್ಮವು ಕರೆಯುತ್ತದೆ. ಆ ತಂದೆಯೇ ಸರ್ವರ ಸದ್ಗತಿದಾತನಾಗಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಆತ್ಮಾಭಿಮಾನಿಯಾಗಿರಿ. ಇದೇ ಪರಿಶ್ರಮವಿದೆ. ಅರ್ಧಕಲ್ಪದಿಂದ ಯಾವ ತುಕ್ಕು ಹಿಡಿದಿದೆಯೋ ಅದು ಈ ನೆನಪಿನಿಂದಲೇ ಬಿಟ್ಟು ಹೋಗುವುದು. ನೀವು ಸತ್ಯ ಚಿನ್ನವಾಗಬೇಕಾಗಿದೆ. ಹೇಗೆ ಸತ್ಯ ಚಿನ್ನದಲ್ಲಿ ಮಿಶ್ರ ಮಾಡಿ ಆಭರಣಗಳನ್ನು ತಯಾರಿಸುತ್ತಾರೆ, ನೀವು ಮೂಲತಃ ಸತ್ಯ ಚಿನ್ನವಾಗಿದ್ದಿರಿ, ನಂತರ ನಿಮ್ಮಲ್ಲಿ ತುಕ್ಕು ಹಿಡಿಯಿತು. ಈಗ ನಿಮ್ಮ ಬುದ್ಧಿಯಲ್ಲಿದೆ, ನಾವು ಪಾತ್ರವನ್ನು ಅಭಿನಯಿಸಿದ್ದೇವೆ, ನಾವೀಗ ತಂದೆಯ ಮನೆಗೆ ಹೋಗುತ್ತೇವೆ. ಹೇಗೆ ವಿದೇಶದಿಂದ ತನ್ನ ಮನೆಗೆ ಹಿಂತಿರುಗುವಾಗ ಖುಷಿಯಾಗುತ್ತದೆ, ನಿಮಗೂ ಖುಷಿಯಿದೆ. ನಿಮಗೆ ತಿಳಿದಿದೆ, ತಂದೆಯು ನಮಗಾಗಿ ಸ್ವರ್ಗವನ್ನು ತಂದಿದ್ದಾರೆ. ಬೇಹದ್ದಿನ ರಾಜ್ಯಭಾಗ್ಯ ಅರ್ಥಾತ್ ಸದ್ಗತಿ ಬೇಹದ್ದಿನ ತಂದೆಯ ಉಡುಗೊರೆಯಾಗಿದೆ. ಸನ್ಯಾಸಿಗಳು ಮುಕ್ತಿಯ ಉಡುಗೊರೆಯನ್ನು ಇಷ್ಟ ಪಡುತ್ತಾರೆ. ಯಾರಾದರೂ ಶರೀರ ಬಿಟ್ಟರೂ ಸಹ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಜ್ಯೋತಿಯು ಜ್ಯೋತಿಯಲ್ಲಿ ಸಮಾವೇಶವಾಯಿತು, ಅದರಲ್ಲಿ ಎಲ್ಲರೂ ಸಮಾವೇಶವಾಗಿ ಬಿಡುವರು ಎಂದು ಸನ್ಯಾಸಿಗಳು ಹೇಳುತ್ತಾರೆ. ಅದಂತೂ ಇರುವ ಸ್ಥಾನವಾಗಿದೆ ಎಲ್ಲಿ ನಾವಾತ್ಮರಿರುತ್ತೇವೆ. ಬಾಕಿ ಎಲ್ಲರೂ ಸೇರಿ ಹೋಗಲು ಯಾವುದೇ ಜ್ಯೋತಿ ಅಥವಾ ಬೆಂಕಿಯಿಲ್ಲ, ಬ್ರಹ್ಮ್ ಮಹಾತತ್ವವಾಗಿದೆ. ಅದರಲ್ಲಿ ಆತ್ಮರಿರುತ್ತಾರೆ, ತಂದೆಯು ಅಲ್ಲಿರುತ್ತಾರೆ, ಅವರೂ ಸಹ ಬಿಂದುವಾಗಿದ್ದಾರೆ. ಯಾರಿಗಾದರೂ ಬಿಂದುವಿನ ಸಾಕ್ಷಾತ್ಕಾರವಾದರೆ ಅವರಿಗೆ ಅರ್ಥವಾಗುವುದಿಲ್ಲ. ಬಾಬಾ, ನೆನಪು ಮಾಡುವುದರಲ್ಲಿ ಕಷ್ಟವಾಗುತ್ತದೆ, ಬಿಂದು ರೂಪವನ್ನು ಹೇಗೆ ನೆನಪು ಮಾಡುವುದು? ಅರ್ಧ ಕಲ್ಪ ದೊಡ್ಡ ಲಿಂಗರೂಪವನ್ನು ನೆನಪು ಮಾಡಿದೆವು ಎಂದು ಅನೇಕ ಮಕ್ಕಳು ಹೇಳುತ್ತಾರೆ. ಅದನ್ನೂ ತಂದೆಯು ತಿಳಿಸುತ್ತಾರೆ. ಬಿಂದುವಿಗೆ ಪೂಜೆಯಂತೂ ಮಾಡಲು ಸಾಧ್ಯವಿಲ್ಲ. ಇವರ ಮಂದಿರವನ್ನು ಹೇಗೆ ಕಟ್ಟಿಸುತ್ತೀರಿ? ಬಿಂದುವಂತೂ ಕಣ್ಣಿಗೂ ಕಾಣಿಸುವುದಿಲ್ಲ. ಆದ್ದರಿಂದ ಶಿವ ಲಿಂಗವನ್ನು ದೊಡ್ಡದಾಗಿ ಮಾಡಿಸುತ್ತಾರೆ. ಬಾಕಿ ಸಾಲಿಗ್ರಾಮಗಳನ್ನು ಬಹಳ ಚಿಕ್ಕ-ಚಿಕ್ಕ ಗಾತ್ರದಲ್ಲಿ ಮಾಡಿಸುತ್ತಾರೆ, ಅಂಡಾಕಾರವಾಗಿ ಮಾಡುತ್ತಾರೆ. ಪರಮಾತ್ಮನು ಬಿಂದು ರೂಪನೆಂದು ಮೊದಲೇ ಏಕೆ ತಿಳಿಸಲಿಲ್ಲ ಎಂದು ಕೆಲವರು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ, ಆ ಸಮಯದಲ್ಲಿ ಇದನ್ನು ತಿಳಿಸುವ ಪಾತ್ರವೇ ಇರಲಿಲ್ಲ. ಅರೆ! ನೀವು ಐ.ಸಿ.ಎಸ್., ವಿದ್ಯೆಯನ್ನು ಆರಂಭದಿಂದಲೇ ಏಕೆ ಓದುವುದಿಲ್ಲ? ವಿದ್ಯಾಭ್ಯಾಸಕ್ಕೂ ನಿಯಮವಿದೆಯಲ್ಲವೆ. ಯಾರಾದರೂ ಇಂತಹ ಮಾತನ್ನು ಕೇಳಿದರೆ ನೀವು ಹೇಳಿರಿ - ಒಳ್ಳೆಯದು, ನಾವು ತಂದೆಯೊಂದಿಗೆ ಕೇಳುತ್ತೇವೆ ಅಥವಾ ನಮ್ಮ ಹಿರಿಯ ಸಹೋದರಿಯರಿಂದ ಕೇಳಿ ತಿಳಿಸುತ್ತೇವೆ. ತಂದೆಗೆ ತಿಳಿಸುವುದಿದ್ದರೆ ತಿಳಿಸಿ, ಇಲ್ಲದಿದ್ದರೆ ಮುಂದೆ ಹೋದಂತೆ ತಿಳಿದುಕೊಳ್ಳುತ್ತೀರಿ ಎಂದು ಹೇಳಿರಿ. ಒಂದೇ ಸಲ ತಿಳಿಸಿ ಬಿಡುವುದಿಲ್ಲ, ಇವೆಲ್ಲವೂ ಹೊಸ ಮಾತುಗಳಾಗಿವೆ. ನಿಮ್ಮ ವೇದ-ಶಾಸ್ತ್ರಗಳಲ್ಲಿರುವುದನ್ನು ತಂದೆಯು ಸಾರ ರೂಪದಲ್ಲಿ ತಿಳಿಸಿದ್ದಾರೆ. ಈ ಭಕ್ತಿಮಾರ್ಗವೂ ಸಹ ನಿಗಧಿಯಾಗಿದೆ, ನೀವು ಪುನಃ ಓದಲೇಬೇಕಾಗುವುದು. ಈ ಭಕ್ತಿಯ ಪಾತ್ರವನ್ನು ಅಭಿನಯಿಸಲೇ ಬೇಕಾಗುವುದು. ಮತ್ತೆ ದ್ವಾಪರದಿಂದ ಪತಿತರಾಗುವ ಪಾತ್ರವನ್ನೂ ಅಭಿನಯಿಸಬೇಕಾಗಿದೆ. ಈಗ ಪುನಃ ಪಾವನರಾಗಬೇಕಾಗಿದೆ. ಭಕ್ತಿಯ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದೇವೆ ಎಂದು ಭಕ್ತರು ಹೇಳುತ್ತಾರೆ. ಭಕ್ತಿಯು ಬಾಹ್ಯವಾಗಿ ಬಹಳ ಸುಂದರವಾಗಿ ಕಾಣುತ್ತದೆ, ಹೇಗೆ ಬಿಸಿಲ್ಗುದುರೆಯ ಉದಾಹರಣೆಯನ್ನು ಕೊಡುತ್ತಾರೆ. ಭಕ್ತಿಯೂ ಸಹ ಬಹಳ ಆಕರ್ಷಕವಾಗಿದೆ. ತಂದೆಯು ತಿಳಿಸುತ್ತಾರೆ - ಇದು ಬಿಸಿಲ್ಗುದುರೆಯ ಸಮಾನವಾಗಿದೆ (ಮೃಗ ತೃಷ್ಣ ಸಮಾನ) ಇದರಲ್ಲಿ ಎಲ್ಲರೂ ಸಿಕ್ಕಿ ಹಾಕಿಕೊಳ್ಳುತ್ತಾರೆ. ಮತ್ತೆ ಅದರಿಂದ ಹೊರ ಬರುವುದು ಕಷ್ಟವಾಗಿ ಬಿಡುತ್ತದೆ. ಅನ್ಯರನ್ನು ಹೊರ ತೆಗೆಯಲು ಹೋಗಿ ತಾವೇ ಸಿಲುಕುತ್ತಾರೆ. ಹೀಗೆ ಅನೇಕರು ಸಿಕ್ಕಿ ಹಾಕಿಕೊಂಡರು. ಆಶ್ಚರ್ಯವೆನಿಸುವಂತೆ ಕೇಳುತ್ತಾ, ನಡೆಯುತ್ತಾ, ಅನ್ಯರನ್ನೂ ಹೊರ ತೆಗೆಯುತ್ತಾ ಮತ್ತೆ ತಾವೇ ಹೋಗಿ ಸಿಲುಕುತ್ತಾರೆ. ಎಷ್ಟು ಒಳ್ಳೊಳ್ಳೆಯ ಮಕ್ಕಳಿದ್ದರು, ಮತ್ತೆ ಅವರನ್ನು ಅಲ್ಲಿಂದ ಹೊರ ತೆಗೆಯುವುದೇ ಕಷ್ಟವಾಗಿ ಬಿಡುತ್ತದೆ. ತಂದೆಯನ್ನೇ ಮರೆತು ಹೋಗುತ್ತಾರೆ ಆದ್ದರಿಂದ ಕೆಸರಿನಿಂದ ಹೊರ ತೆಗೆಯುವುದರಲ್ಲಿ ಎಷ್ಟೊಂದು ಪರಿಶ್ರಮವಾಗುತ್ತದೆ! ಮತ್ತೆ ಎಷ್ಟಾದರೂ ತಿಳಿಸಿ, ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ನೀವೀಗ ತಿಳಿದುಕೊಳ್ಳಬಹುದು - ನಾವು ಮಾಯಾರೂಪಿ ರಾವಣನ ಕೆಸರಿನಿಂದ ಎಷ್ಟು ಹೊರ ಬಂದಿದ್ದೇವೆ ಎಂದು. ಎಷ್ಟೆಷ್ಟು ಹೊರ ಬರುತ್ತೀರೋ ಅಷ್ಟು ಖುಷಿಯಿರುತ್ತದೆ, ಯಾರು ಸ್ವಯಂ ಹೊರ ಬಂದಿರುವರೋ ಅವರ ಬಳಿ ಇನ್ನೊಬ್ಬರನ್ನೂ ಹೊರ ತೆಗೆಯುವ ಶಕ್ತಿಯಿರುತ್ತದೆ. ಬಾಣ ಹೊಡೆಯುವವರು ಕೆಲವರು ತೀಕ್ಷ್ಣವಾಗಿರುತ್ತಾರೆ, ಕೆಲವರು ನಿರ್ಬಲರಾಗಿರುತ್ತಾರೆ. ಏಕಲವ್ಯ ಮತ್ತು ಅರ್ಜುನನ ಉದಾಹರಣೆಯಿದೆಯಲ್ಲವೆ. ಅರ್ಜುನನು ದ್ರೋಣಾಚಾರ್ಯರ ಜೊತೆಯಿರುತ್ತಿದ್ದನು, ವಾಸ್ತವದಲ್ಲಿ ಅರ್ಜುನನೆಂದು ಒಬ್ಬರಿಗಷ್ಟೇ ಹೇಳುವುದಿಲ್ಲ, ಯಾರು ತಂದೆಯವರಾಗಿ ತಂದೆಯ ಜೊತೆ ಇರುತ್ತಾರೆಯೋ ಅವರಿಗೆ ಅರ್ಜುನರೆಂದು ಹೇಳಲಾಗುತ್ತದೆ. ಜೊತೆಯಲ್ಲಿರುವವರು ಮತ್ತು ಹೊರಗಡೆಯಿರುವವರ ಸ್ಪರ್ಧೆ ಮಾಡಿಸಲಾಗುತ್ತದೆ. ಏಕಲವ್ಯ ಅರ್ಥಾತ್ ಹೊರಗಡೆ ಇರುವವರು ತೀಕ್ಷ್ಣವಾಗಿ ಮುಂದೆ ಹೋದರು, ಕೇವಲ ಒಬ್ಬರ ಉದಾಹರಣೆಯನ್ನು ಕೊಡಲಾಗುತ್ತದೆ. ಹೀಗೆ ಅನೇಕರ ಉದಾಹರಣೆಯಿದೆ. ಬಾಣವೂ ಸಹ ಈ ಜ್ಞಾನದ್ದಾಗಿದೆ. ಪ್ರತಿಯೊಬ್ಬರೂ ತಮ್ಮನ್ನು ತಿಳಿದುಕೊಳ್ಳಬಹುದು - ನಾವು ತಂದೆಯನ್ನು ಎಷ್ಟು ನೆನಪು ಮಾಡುತ್ತೇವೆ, ಮತ್ತ್ಯಾರ ನೆನಪೂ ಬರುವುದಿಲ್ಲವೆ! ಒಳ್ಳೆಯ ವಸ್ತುವನ್ನು ಧರಿಸುವ ಅಥವಾ ತಿನ್ನುವ ಲಾಲಸೆಯಂತೂ ಇಲ್ಲವೆ? ಒಂದುವೇಳೆ ಇಲ್ಲಿಯೇ ಒಳ್ಳೊಳ್ಳೆಯದನ್ನು ಧರಿಸಿ ಬಿಟ್ಟರೆ ಸತ್ಯಯುಗದಲ್ಲಿ ಕಡಿಮೆಯಾಗುವುದು. ನಾವಿಲ್ಲಿ ವನವಾಸದಲ್ಲಿರಬೇಕಾಗಿದೆ. ತಂದೆಯು ತಿಳಿಸುತ್ತಾರೆ - ನೀವು ತಮ್ಮ ಈ ಶರೀರವನ್ನೂ ಮರೆತು ಹೋಗಿ. ಇದು ಹಳೆಯ, ತಮೋಪ್ರಧಾನ ಶರೀರವಾಗಿದೆ. ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಇಚ್ಛಾ ಮಾತ್ರಂ ಅವಿದ್ಯಾ.
ನೀವಿಲ್ಲಿ ಆಭರಣ ಇತ್ಯಾದಿಗಳನ್ನೂ ಧರಿಸಬೇಡಿ ಎಂದು ತಂದೆಯು ಹೇಳುತ್ತಾರೆ, ಹೀಗೇಕೆ ಹೇಳುತ್ತಾರೆ? ಇದಕ್ಕೂ ಅನೇಕ ಕಾರಣಗಳಿವೆ. ಯಾರ ಆಭರಣಗಳಾದರೂ ಕಳವಾಗಿ ಬಿಟ್ಟರೆ ಅಲ್ಲಿ ಬ್ರಹ್ಮಾಕುಮಾರ-ಕುಮಾರಿಯರಿಗೆ ಕೊಟ್ಟು ಬಂದಿದ್ದಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವೊಮ್ಮೆ ಮಾರ್ಗ ಮಧ್ಯದಲ್ಲಿ ಕಳ್ಳ ಕಾಕರು ಕಸಿದುಕೊಳ್ಳುತ್ತಾರೆ. ಇತ್ತೀಚೆಗೆ ಕಳ್ಳರು ಬಹಳ ಮಂದಿ ಇದ್ದಾರೆ, ಸ್ತ್ರೀಯರೂ ಕಳ್ಳತನ ಮಾಡುತ್ತಾರೆ. ಪ್ರಪಂಚದ ಸ್ಥಿತಿ ನೋಡಿ, ಏನಾಗಿದೆ? ನೀವು ತಿಳಿದುಕೊಳ್ಳುತ್ತೀರಿ - ಪ್ರಪಂಚವು ಸಂಪೂರ್ಣ ವೇಶ್ಯಾಲಯವಾಗಿದೆ, ನಾವಿಲ್ಲಿ ಶಿವ ತಂದೆಯ ಜೊತೆ ಶಿವಾಲಯದಲ್ಲಿ ಕುಳಿತಿದ್ದೇವೆ, ಅವರು ಸತ್ಯ-ಚೈತನ್ಯನಾಗಿದ್ದಾರೆ, ಆನಂದ ಸ್ವರೂಪನಾಗಿದ್ದಾರೆ. ಆತ್ಮಕ್ಕೇ ಮಹಿಮೆಯಿದೆ. ನಾನು ರಾಷ್ಟ್ರಪತಿಯಾಗಿದ್ದೇನೆ, ನಾನು ಇದಾಗಿದ್ದೇನೆ... ಎಂದು ಆತ್ಮವೇ ಹೇಳುತ್ತದೆ ಮತ್ತು ನೀವಾತ್ಮರು ಹೇಳುತ್ತೀರಿ - ನಾವು ಬ್ರಾಹ್ಮಣರಾಗಿದ್ದೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ಆತ್ಮಾಭಿಮಾನದಲ್ಲಿ ಇರಬೇಕಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ಇದು ನನ್ನದಾಗಿದೆ, ಇದು ನನ್ನದಾಗಿದೆ.... ಎಂಬುದು ನೆನಪಿರುತ್ತದೆ, ನಾವಾತ್ಮರು ಸಹೋದರರಾಗಿದ್ದೇವೆ ಎಂಬುದನ್ನು ಮರೆತು ಹೋಗುತ್ತಾರೆ. ಆದ್ದರಿಂದ ಇಲ್ಲಿ ನನ್ನದು-ನನ್ನದು ಎಂಬುದನ್ನು ಬಿಡಬೇಕಾಗುತ್ತದೆ. ನಾನಾತ್ಮನಾಗಿದ್ದೇನೆ, ಇವರ (ಬ್ರಹ್ಮಾ) ಆತ್ಮವೂ ಸಹ ತಿಳಿದುಕೊಳ್ಳುತ್ತದೆ. ತಂದೆಯು ತಿಳಿಸುತ್ತಿದ್ದಾರೆ - ನಾನೂ ಸಹ ಕೇಳುತ್ತಾ ಇರುತ್ತೇನೆ, ಮೊದಲು ನಾನು ಕೇಳುತ್ತೇನೆ. ಭಲೆ ನಾನೂ ಸಹ ತಿಳಿಸಬಲ್ಲೆನು ಆದರೆ ಮಕ್ಕಳ ಕಲ್ಯಾಣಾರ್ಥವಾಗಿ ತಿಳಿಸುತ್ತೇನೆ - ನೀವು ಸದಾ ತಿಳಿದುಕೊಳ್ಳಿ, ನಮಗೆ ಶಿವ ತಂದೆಯೇ ತಿಳಿಸುತ್ತಾರೆ. ವಿಚಾರ ಸಾಗರ ಮಂಥನ ಮಾಡುವುದು ಮಕ್ಕಳ ಕೆಲಸವಾಗಿದೆ. ಹೇಗೆ ನೀವು ಪುರುಷಾರ್ಥ ಮಾಡುತ್ತೀರೋ ಹಾಗೆಯೇ ನಾನೂ ಮಾಡುತ್ತೇನೆ. ಇಲ್ಲದಿದ್ದರೆ ಮೊದಲ ನಂಬರಿನಲ್ಲಿ ಹೇಗೆ ಬರುವೆನು? ಆದರೆ ತನ್ನನ್ನು ಗುಪ್ತವಾಗಿಟ್ಟುಕೊಳ್ಳುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ನನ್ನದು, ನನ್ನದು ಎಂಬುದೆಲ್ಲವನ್ನೂ ಬಿಟ್ಟು ತನ್ನನ್ನು ಆತ್ಮನೆಂದು ತಿಳಿಯಬೇಕಾಗಿದೆ, ಆತ್ಮಾಭಿಮಾನಿಯಾಗಿರುವ ಪರಿಶ್ರಮ ಪಡಬೇಕಾಗಿದೆ. ಇಲ್ಲಿ ಸಂಪೂರ್ಣ ವನವಾಸದಲ್ಲಿರಬೇಕಾಗಿದೆ. ಯಾವುದೇ ಧರಿಸುವ-ತಿನ್ನುವ ಇಚ್ಛೆಯಿಂದ ಇಚ್ಛಾ ಮಾತ್ರಂ ಅವಿದ್ಯಾ ಆಗಬೇಕಾಗಿದೆ.
2. ಪಾತ್ರವನ್ನಭಿನಯಿಸುತ್ತಾ, ಕರ್ಮ ಮಾಡುತ್ತಾ ತಮ್ಮ ಶಾಂತಿ ಸ್ವ ಧರ್ಮದಲ್ಲಿ ಸ್ಥಿತರಾಗಿರಬೇಕಾಗಿದೆ. ಶಾಂತಿಧಾಮ ಮತ್ತು ಸುಖಧಾಮವನ್ನು ನೆನಪು ಮಾಡಬೇಕಾಗಿದೆ. ಈ ದುಃಖಧಾಮವನ್ನು ಮರೆಯಬೇಕಾಗಿದೆ.
ಓಂ ಶಾಂತಿ. ಆತ್ಮಿಕ ಮಕ್ಕಳೇ ಈ ಮೃತ್ಯು ಲೋಕದಿಂದ ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಆತ್ಮಿಕ ತಂದೆಯಿಂದ ಅಮರ ಕಥೆಯನ್ನು ಕೇಳುತ್ತಿದ್ದೀರಿ. ನಿರ್ವಾಣಧಾಮಕ್ಕೆ ಅಮರ ಲೋಕವೆಂದು ಹೇಳಲಾಗುವುದಿಲ್ಲ. ಅಮರ ಲೋಕವೆಂದರೆ ಎಲ್ಲಿ ನೀವು ಅಕಾಲ ಮೃತ್ಯುವನ್ನೇ ಪಡೆಯುವುದಿಲ್ಲ. ಆದ್ದರಿಂದ ಅದಕ್ಕೆ ಅಮರ ಲೋಕವೆಂದು ಹೇಳಲಾಗುತ್ತದೆ. ಆತ್ಮಿಕ ತಂದೆ ಯಾರಿಗೆ ಅಮರನಾಥನೆಂದು ಹೇಳಲಾಗುತ್ತದೆಯೋ ಅವರು ಅವಶ್ಯವಾಗಿ ಅಮರಲೋಕದಲ್ಲಿ ಕರೆದುಕೊಂಡು ಹೋಗಲು ಮೃತ್ಯು ಲೋಕದಲ್ಲಿ ಕಥೆಯನ್ನು ತಿಳಿಸುತ್ತಾರೆ. ಮೂರು ಕಥೆಗಳು ಭಾರತದಲ್ಲಿಯೇ ಪ್ರಸಿದ್ಧವಾಗಿವೆ. ಅಮರ ಕಥೆ, ಸತ್ಯ ನಾರಾಯಣನ ಕಥೆ, ಮೂರನೇ ನೇತ್ರದ ಕಥೆ. ಭಕ್ತಿಮಾರ್ಗದಲ್ಲಿ ಮೂರನೇ ನೇತ್ರದ ಕಥೆಯನ್ನು ಯಾರೂ ತಿಳಿದುಕೊಂಡಿಲ್ಲ. ಜ್ಞಾನದ ಮೂರನೇ ನೇತ್ರವನ್ನು ಜ್ಞಾನ ಸಾಗರ ಅಮರ ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಉಳಿದಂತೆ ಎಲ್ಲವೂ ಸುಳ್ಳು ಕಥೆಗಳನ್ನು ತಿಳಿಸುತ್ತಾರೆ. ಮಧುರಾತಿ ಮಧುರ ಆತ್ಮಿಕ ಮಕ್ಕಳೇ, ಈಗ ಅರಿತುಕೊಂಡಿದ್ದೀರಿ - ಈಗ ನಮಗೆ ಜ್ಞಾನದ ಮೂರನೇ ನೇತ್ರವು ಸಿಗುತ್ತಿದೆ. ಯಾವ ಮೂರನೇ ನೇತ್ರದಿಂದ ಮೂರೂ ಕಾಲಗಳು, ಮೂರು ಲೋಕಗಳನ್ನು ನೀವು ಅರಿತುಕೊಂಡಿದ್ದೀರಿ. ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಆದಿ-ಮಧ್ಯ-ಅಂತ್ಯವನ್ನೂ ತಿಳಿದುಕೊಂಡಿದ್ದೀರಿ ಆದ್ದರಿಂದ ಮಕ್ಕಳು ತಮ್ಮನ್ನು ತ್ರಿಕಾಲದರ್ಶಿಗಳೆಂದೂ ತಿಳಿದುಕೊಳ್ಳುತ್ತೀರಿ. ನೀವು ಮಧುರಾತಿ ಮಧುರ ಮಕ್ಕಳ ವಿನಃ ಸೃಷ್ಟಿಯಲ್ಲಿ ಮತ್ತ್ಯಾರೂ ತ್ರಿಕಾಲದರ್ಶಿಗಳಾಗುವುದಿಲ್ಲ. ಭಲೆ ಮೂಲವತನ, ಸೂಕ್ಷ್ಮವತನ, ಸ್ಥೂಲವತನದ ಬಗ್ಗೆ ತಿಳಿದುಕೊಂಡಿರಬಹುದು ಆದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ಅರ್ಥಾತ್ ಮೂರೂ ಲೋಕಗಳನ್ನು ಯಾರೂ ಅರಿತುಕೊಂಡಿರುವುದಿಲ್ಲ. ಈಗ ಮಧುರಾತಿ ಮಧುರ ಆತ್ಮಿಕ ಮಕ್ಕಳು ಆತ್ಮಿಕ ತಂದೆಯಿಂದ ಕೇಳುತ್ತಿದ್ದೀರಿ. ನೀವು ಅವರ ಮಕ್ಕಳಾಗಿದ್ದೀರಿ, ಒಂದೇ ಬಾರಿ ನೀವು ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಸಿಕ್ಕಿದ್ದಾರೆ. ತಂದೆಯು ನೀವಾತ್ಮರಿಗೆ ಓದಿಸುತ್ತಾರೆ, ಮತ್ತೆಲ್ಲರೂ ದೇಹಾಭಿಮಾನಿಗಳಾಗಿರುವ ಕಾರಣ ನಾನು ಇದನ್ನು ಓದುತ್ತೇನೆ, ನಾನು ಇದನ್ನು ಮಾಡುತ್ತೇನೆಂದು ಹೇಳುತ್ತಾರೆ. ದೇಹಾಭಿಮಾನವು ಬಂದು ಬಿಡುತ್ತದೆ. ಈಗ ಈ ಸಂಗಮದಲ್ಲಿ ಆತ್ಮಿಕ ತಂದೆಯು ಆತ್ಮಿಕ ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ, ನೀವು ಚೆನ್ನಾಗಿ ಓದಿರಿ. ತಂದೆಯಿಂದ ಆಸ್ತಿಯನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ಮಗುವಿಗೂ ಅಧಿಕಾರವಿದೆ ಏಕೆಂದರೆ ಎಲ್ಲರೂ ಆತ್ಮಿಕ ಮಕ್ಕಳಲ್ಲವೆ. ಲೌಕಿಕ ಸಂಬಂಧದಲ್ಲಿ ಕೇವಲ ಮಗನು ಆಸ್ತಿಗೆ ಹಕ್ಕುದಾರನಾಗುತ್ತಾನೆ. ಈ ಪಾರಲೌಕಿಕ ಸಂಬಂಧದಲ್ಲಿ ಎಲ್ಲಾ ಮಕ್ಕಳು ಅರ್ಥಾತ್ ಆತ್ಮರಿಗೆ ಆಸ್ತಿಯು ಸಿಗುತ್ತದೆ. ಅಮರನಾಥನ ಕಥೆಯನ್ನೂ ಹೇಳುತ್ತಾರೆ, ಪಾರ್ವತಿಗೆ ಪರ್ವತಗಳ ಮೇಲೆ ಹೋಗಿ ಕಥೆಯನ್ನು ತಿಳಿಸಿದರೆಂದು ಹೇಳುತ್ತಾರೆ, ಇದು ತಪ್ಪಲ್ಲವೆ! ಯಾವುದು ಸತ್ಯ, ಯಾವುದು ಅಸತ್ಯ ಎಂಬುದನ್ನು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಸತ್ಯವನ್ನು ಅವಶ್ಯವಾಗಿ ಸತ್ಯ ತಂದೆಯೇ ತಿಳಿಸುತ್ತಾರೆ, ತಂದೆಯು ಒಂದೇ ಬಾರಿ ಸತ್ಯವನ್ನು ತಿಳಿಸಿ ಸತ್ಯ ಖಂಡದ ಮಾಲೀಕರನ್ನಾಗಿ ಮಾಡುತ್ತಾರೆ. ನಿಮಗೂ ತಿಳಿದಿದೆ - ಈ ಅಸತ್ಯ ಖಂಡಕ್ಕೆ ಬೆಂಕಿ ಬೀಳುವುದು, ಇಲ್ಲಿ ಏನೆಲ್ಲವೂ ಕಾಣುತ್ತಿದೆಯೋ ಇದೇನೂ ಉಳಿಯುವುದಿಲ್ಲ. ಇನ್ನು ಸ್ವಲ್ಪವೇ ಸಮಯವಿದೆ, ಇದು ಶಿವ ತಂದೆಯ ಜ್ಞಾನ ಯಜ್ಞವಾಗಿದೆ. ಹೇಗೆ ಲೌಕಿಕದಲ್ಲಿಯೂ ಕೆಲವರು ರುದ್ರ ಯಜ್ಞವನ್ನು ರಚಿಸುತ್ತಾರೆ, ಕೆಲವರು ಗೀತಾ ಯಜ್ಞ, ಕೆಲವರು ರಾಮಾಯಣ ಯಜ್ಞವನ್ನು ರಚಿಸುತ್ತಾರೆ. ಇದು ಶಿವ ತಂದೆಯ ಅಥವಾ ರುದ್ರನ ಜ್ಞಾನ ಯಜ್ಞವಾಗಿದೆ, ಇದು ಅಂತಿಮ ಯಜ್ಞವಾಗಿದೆ.
ನಾವೀಗ ಅಮರ ಪುರಿಗೆ ಹೋಗುತ್ತಿದ್ದೇವೆ, ಇನ್ನು ಕೆಲವೇ ನಿಮಿಷಗಳ ಮಾರ್ಗವಿದೆ ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಿ. ಇದು ಯಾವುದೇ ಮನುಷ್ಯನಿಗೆ ತಿಳಿದಿಲ್ಲ. ಮೃತ್ಯು ಲೋಕದಿಂದ ಅಮರಲೋಕದಲ್ಲಿ ಹೋಗಲು ಇನ್ನೂ 40 ಸಾವಿರ ವರ್ಷಗಳಿದೆ ಎಂದು ಮನುಷ್ಯರು ಹೇಳಿ ಬಿಡುತ್ತಾರೆ. ಸತ್ಯಯುಗಕ್ಕೆ ಅಮರಲೋಕವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ತಂದೆಯು ಈಗ ಸನ್ಮುಖದಲ್ಲಿ ಕುಳಿತು ಅಮರಕಥೆ, ಮೂರನೇ ನೇತ್ರದ ಕಥೆ, ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಿದ್ದಾರೆ. ಭಕ್ತಿಮಾರ್ಗದಲ್ಲಿ ಏನೇನಿರುತ್ತದೆ ಅದನ್ನಂತೂ ನೋಡಿದಿರಿ. ಭಕ್ತಿಮಾರ್ಗದ್ದು ಎಷ್ಟೊಂದು ವಿಸ್ತಾರವಿದೆ. ಹೇಗೆ ವೃಕ್ಷವು ಬಹಳ ವಿಸ್ತಾರವಾಗಿ ಬೆಳೆಯುತ್ತದೆ ಹಾಗೆಯೇ ಭಕ್ತಿಯದೂ ಸಹ ಬಹಳ ದೊಡ್ಡ ಕರ್ಮ ಕಾಂಡದ ವೃಕ್ಷವಾಗಿದೆ. ಯಜ್ಞ, ವ್ರತ-ನಿಯಮ, ಜಪ-ತಪ ಇತ್ಯಾದಿ ಎಷ್ಟೊಂದು ಮಾಡುತ್ತಾರೆ. ಈ ಜನ್ಮದ ಭಕ್ತರಂತೂ ಬಹಳಷ್ಟು ಮಂದಿ ಇದ್ದಾರೆ. ಮನುಷ್ಯರ ವೃದ್ಧಿಯಾಗುತ್ತಾ ಇರುತ್ತದೆ. ನೀವು ಭಕ್ತಿಮಾರ್ಗದಲ್ಲಿ ಬಂದಿದ್ದೀರಿ, ಆಗಿನಿಂದ ಅನ್ಯ ಧರ್ಮಗಳು ಸ್ಥಾಪನೆಯಾಗಿದೆ. ಅದರೊಂದಿಗೆ ನಮ್ಮ ಸಂಬಂಧವಿಲ್ಲ, ಪ್ರತಿಯೊಬ್ಬರಿಗೆ ತಮ್ಮ ಧರ್ಮದೊಂದಿಗೆ ಸಂಬಂಧವಿರುತ್ತದೆ. ಪ್ರತಿಯೊಬ್ಬರ ರೀತಿ-ನೀತಿಗಳೇ ಬೇರೆಯಾಗಿರುತ್ತವೆ. ಭಾರತವು ಅಮರ ಪುರಿಯಾಗಿತ್ತು, ಅದೇ ಈಗ ಮೃತ್ಯುಲೋಕವಾಗಿದೆ. ನೀವು ಆದಿ ಸನಾತನ ದೇವಿ -ದೇವತಾ ಧರ್ಮದವರಾಗಿದ್ದಿರಿ ಆದರೆ ಈಗ ಪತಿತರಾಗಿರುವ ಕಾರಣ ನೀವು ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವೇ ದೇವತೆಗಳಾಗಿದ್ದೆವು ಎಂಬುದು ನಿಮಗೆ ಮರೆತು ಹೋಗಿದೆ. ಹೇಗೆ ಪ್ರಾಕ್ಟಿಕಲ್ನಲ್ಲಿ ಹೇಳುತ್ತಾರೆ - ಕ್ರಿಸ್ತನು ನಮ್ಮ ಧರ್ಮ ಸ್ಥಾಪನೆ ಮಾಡಿದರು ಆಗಿನಿಂದ ನಮ್ಮ ಕ್ರಿಶ್ಚಿಯನ್ನರು ನಡೆದು ಬಂದಿದ್ದಾರೆ. ಅವರು ಯುರೋಪಿಯನ್ ಧರ್ಮದವರೆಂದಲ್ಲ. ಹೇಗೆ ನೀವು ಹಿಂದೂ ಸ್ತಾನದಲ್ಲಿರುವವರು ಅಥವಾ ಭಾರತದಲ್ಲಿರುವವರು ದೇವಿ-ದೇವತಾ ಧರ್ಮದವರಾಗಿದ್ದೀರಿ, ಆದರೆ ತಮ್ಮನ್ನು ದೇವತೆಗಳೆಂದು ಕರೆಸಿಕೊಳ್ಳಲು ಸಾಧ್ಯವಿಲ್ಲ. ನಾವು ನೀಚರು, ಪಾಪಿಗಳು, ಕಂಗಾಲ ವಿಕಾರಿಗಳಾಗಿದ್ದೇವೆ ಎಂದು ನೀವು ತಿಳಿದುಕೊಳ್ಳುತ್ತೀರಿ. ಭಕ್ತಿಮಾರ್ಗದಲ್ಲಿ ಮನುಷ್ಯರು ದುಃಖಿಯಾದಾಗ ತಂದೆಯನ್ನೇ ಕರೆಯುತ್ತಾರೆ. ಇದನ್ನು ಕೇವಲ ನೀವು ಬ್ರಾಹ್ಮಣ ಮಕ್ಕಳೇ ತಿಳಿದುಕೊಂಡಿದ್ದೀರಿ - ಯಾವ ತಂದೆಯನ್ನು ಕರೆಯುತ್ತಾ ಬಂದೆವೋ ಅವರೇ ನಮಗೆ ಬೇಹದ್ದಿನ ಆಸ್ತಿಯನ್ನು ಕೊಡುವುದಕ್ಕಾಗಿ ಅಮರಕಥೆಯನ್ನು ತಿಳಿಸುತ್ತಿದ್ದಾರೆ. ನಾವು ಅಮರಪುರಿಯ ಮಾಲೀಕರಾಗುವವರಿದ್ದೇವೆ. ಅಮರಪುರಿಗೆ ಸ್ವರ್ಗವೆಂದು ಹೇಳಲಾಗುತ್ತದೆ, ನಾವು ಸ್ವರ್ಗವಾಸಿಗಳಾಗಲು ಪುರುಷಾರ್ಥ ಮಾಡುತ್ತಿದ್ದೇವೆಂದು ನೀವು ಹೇಳುತ್ತೀರಿ. ಕಲಿಯುಗದಲ್ಲಿ ಮನುಷ್ಯರು ಸಾವನ್ನಪ್ಪಿದರೆ ಸ್ವರ್ಗವಾಸಿಗಳಾದರೆಂದು ಹೇಳುತ್ತಾರೆ. ಅಂದಮೇಲೆ ಅವರು ಸ್ವರ್ಗದಲ್ಲಿ ಹೋಗಲು ಏನಾದರೂ ಸಾಧನೆ ಮಾಡಿದರೆ? ನೀವಂತೂ ಅಮರಪುರಿ, ವೈಕುಂಠದಲ್ಲಿ ಹೋಗಲು ಪುರುಷಾರ್ಥ ಮಾಡುತ್ತಿದ್ದೀರಿ. ಪುರುಷಾರ್ಥ ಮಾಡಿಸುವವರು ಯಾರು? ಅಮರತಂದೆ. ಅವರಿಗೆ ಅಮರನಾಥನೆಂದೂ ಹೇಳಲಾಗುತ್ತದೆ. ಈ ಯಜ್ಞಕ್ಕೆ ಪಾಠಶಾಲೆಯೆಂದೂ ಹೇಳಲಾಗುತ್ತದೆ. ಅನ್ಯಯಾವುದೇ ಪಾಠಶಾಲೆಗೆ ಯಜ್ಞವೆಂದು ಹೇಳುವುದಿಲ್ಲ. ಯಜ್ಞಗಳನ್ನು ಪ್ರತ್ಯೇಕವಾಗಿ ರಚಿಸಲಾಗುತ್ತದೆ ಯಾವುದರಲ್ಲಿ ಬ್ರಾಹ್ಮಣರು ಕುಳಿತು ಮಂತ್ರಗಳನ್ನು ಓದುತ್ತಾರೆ. ತಂದೆಯು ಹೇಳುತ್ತಾರೆ - ನಿಮ್ಮದು ಇದು ಕಾಲೇಜು ಆಗಿದೆ, ಯಜ್ಞವೂ ಆಗಿದೆ. ಎರಡೂ ಒಟ್ಟಿಗೆ ಇದೆ. ನೀವು ತಿಳಿದುಕೊಂಡಿದ್ದೀರಿ - ಈ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತು. ಇದರಲ್ಲಿ ಇಡೀ ಪ್ರಪಂಚವೇ ಸ್ವಾಹಾ ಆಗುವುದು ಮತ್ತೆ ಹೊಸ ಪ್ರಪಂಚವು ಸ್ಥಾಪನೆಯಾಗುವುದು. ಇದರ ಹೆಸರೇ ಆಗಿದೆ - ಮಹಾಭಾರಿ ಮಹಾಭಾರತ ಯುದ್ಧ. ಇದರಂತಹ ಯುದ್ಧವು ಬೇರೆ ಯಾವುದೂ ಆಗುವುದಿಲ್ಲ. ಯುದ್ಧದಲ್ಲಿ ಅಣ್ವಸ್ತ್ರಗಳಿಂದ ಯುದ್ಧವಾಯಿತು ಎಂದು ಹೇಳುತ್ತಾರೆ. ನಿಮ್ಮ ಜೊತೆ ಯುದ್ಧವಂತೂ ಇಲ್ಲ ಆದರೆ ಇದಕ್ಕೆ ಮಹಾಭಾರತ ಯುದ್ಧವೆಂದು ಏಕೆ ಹೇಳುತ್ತಾರೆ? ಭಾರತದಲ್ಲಿ ಒಂದೇ ಧರ್ಮವಿರುತ್ತದೆಯಲ್ಲವೆ. ಮೃತ್ಯುವಂತೂ ಹೊರ ದೇಶದಲ್ಲಿ ಆಗುತ್ತಿದೆ. ಇಲ್ಲಿ ಯುದ್ಧದ ಮಾತಿಲ್ಲ. ತಂದೆಯು ತಿಳಿಸುತ್ತಾರೆ - ನಿಮಗಾಗಿ ಹೊಸ ಪ್ರಪಂಚವು ಬೇಕು, ಆದ್ದರಿಂದ ಅವಶ್ಯವಾಗಿ ಹಳೆಯ ಪ್ರಪಂಚದ ವಿನಾಶವಾಗುವುದು. ನೀವು ಮಕ್ಕಳ ಬುದ್ಧಿಯಲ್ಲಿ ವಿರಾಟರೂಪದ ಸಂಪೂರ್ಣ ಜ್ಞಾನವಿದೆ. ಇದನ್ನೂ ಸಹ ತಿಳಿದುಕೊಂಡಿದ್ದೀರಿ, ಯಾರು ಕಲ್ಪದ ಮೊದಲು ಬಂದಿದ್ದರೋ ದೇವತೆಗಳಾಗಲು ಅವರೇ ಬರುವರು. ಇದು ಬುದ್ಧಿಯ ಕೆಲಸವಾಗಿದೆ. ನಾವು ಎಷ್ಟು ಮಂದಿ ಬ್ರಾಹ್ಮಣರಾಗಿದ್ದೇವೆಯೋ ಅಷ್ಟೇ ಮಂದಿ ದೇವತೆಗಳಾಗುತ್ತೇವೆ. ಪ್ರಜಾಪಿತ ಬ್ರಹ್ಮನ ಗಾಯನವಿದೆ. ಪ್ರಜಾಪಿತ ಬ್ರಹ್ಮನ ಮೂಲಕ ಪರಮಪಿತ ಪರಮಾತ್ಮನು ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ ಆದ್ದರಿಂದ ಬ್ರಹ್ಮನಿಗೆ ಪ್ರಜಾಪಿತನೆಂದು ಹೇಳುತ್ತಾರೆ ಆದರೆ ಯಾವಾಗ ಹೇಗೆ ರಚಿಸುತ್ತಾರೆಂಬುದು ಯಾರೂ ತಿಳಿದುಕೊಂಡಿಲ್ಲ. ಆರಂಭದಲ್ಲಿ ರಚಿಸಲು ಮನುಷ್ಯರಿರಲಿಲ್ಲವೆ! ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಯಾವಾಗ ಮನುಷ್ಯರು ಪತಿತರಾಗುವರೋ ಆಗಲೇ ತಂದೆಯೂ ಬರುತ್ತಾರೆ. ಪ್ರಪಂಚವು ಪರಿವರ್ತನೆಯಾಗಬೇಕಾಗಿದೆ. ನಿಮ್ಮನ್ನು ತಂದೆಯು ಹೊಸ ಪ್ರಪಂಚಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ, ಈಗ ಎಲ್ಲರೂ ತಮೋಪ್ರಧಾನ ಹಳೆಯ ಪ್ರಪಂಚದಲ್ಲಿದ್ದೀರಿ. ಈಗ ಮತ್ತೆ ಸತೋಪ್ರಧಾನರಾಗಬೇಕಾಗಿದೆ. ತಂದೆಯು ತಿಳಿಸಿದ್ದಾರೆ - ಪ್ರತಿಯೊಬ್ಬ ಮನುಷ್ಯ ಮಾತ್ರನೂ, ಪ್ರತಿಯೊಂದು ವಸ್ತು ಸತೋ, ರಜೋ, ತಮೋದಲ್ಲಿ ಬರಬೇಕಾಗುತ್ತದೆ. ಪ್ರಪಂಚವು ಅವಶ್ಯವಾಗಿ ಹೊಸದರಿಂದ ಹಳೆಯದಾಗುತ್ತದೆ. ವಸ್ತ್ರಗಳನ್ನೂ ಸಹ ಹೊಸದಾಗಿ ಧರಿಸಿ ಸ್ವಲ್ಪ ದಿನಗಳು ಕಳೆದರೆ ಹಳೆಯದಾಗುತ್ತದೆ. ಈಗ ನಿಮಗೆ ಜ್ಞಾನ ಸಿಕ್ಕಿದೆ. ಸತ್ಯ ನಾರಾಯಣನ ಕಥೆಯನ್ನು ನೀವೀಗ ಕೇಳುತ್ತಿದ್ದೀರಿ. ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ. ಉಳಿದೆಲ್ಲವೂ ಅದರ ಮಕ್ಕಳಾಗಿವೆ. ಹೇಗೆ ಬ್ರಹ್ಮನ ವಂಶಾವಳಿಯಿದೆಯೋ ಹಾಗೆಯೇ ಗೀತೆಯೂ ಮುಖ್ಯವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಮಾತಾಪಿತರಾಗಿದ್ದಾರೆ. ಉಳಿದೆಲ್ಲರೂ ಮಕ್ಕಳಾಗಿದ್ದಾರೆ. ಈಗ ಮಾತಾಪಿತರಿಂದ ಆಸ್ತಿಯು ಸಿಗುತ್ತದೆ, ಉಳಿದಂತೆ ಎಷ್ಟಾದರೂ ಶಾಸ್ತ್ರಗಳನ್ನು ಓದಲಿ, ಏನಾದರೂ ಮಾಡಲಿ, ಆಸ್ತಿಯು ಸಿಗಲು ಸಾಧ್ಯವಿಲ್ಲ. ಭಲೆ ಶಾಸ್ತ್ರಗಳನ್ನು ಓದುವವರಿಗೆ ಬಹಳ ಸಂಪಾದನೆಯಾಗಬಹುದು ಆದರೆ ಅದೂ ಸಹ ಅಲ್ಪಕಾಲಕ್ಕಾಗಿ. ಇಲ್ಲಿ ನೀವು ಮಕ್ಕಳು ಕೇಳಿಸಿಕೊಳ್ಳುತ್ತೀರಿ, ಇದರಿಂದ 21 ಜನ್ಮಗಳಿಗಾಗಿ ಸಂಪಾದನೆ ಮಾಡಿಕೊಳ್ಳುತ್ತೀರಿ. ವಿಚಾರ ಮಾಡಿ, ಅವರಾದರೆ ಒಬ್ಬರು ತಿಳಿಸುತ್ತಾರೆ, ಎಲ್ಲರೂ ಅವರಿಗೆ ಹಣ ಕೊಡುತ್ತಾರೆ. ಇಲ್ಲಿ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ ಯಾವುದರಿಂದ ನೀವು 21 ಜನ್ಮಗಳಿಗಾಗಿ ಎಷ್ಟೊಂದು ಸಾಹುಕಾರರಾಗುತ್ತೀರಿ. ಅಲ್ಲಿ ಯಾರು ಓದಿ ತಿಳಿಸುವರೋ ಅವರ ಜೇಬು ತುಂಬುತ್ತದೆ. ಭಕ್ತಿ ಇತ್ಯಾದಿಗಳನ್ನು ಮಾಡುವುದು ಪ್ರವೃತ್ತಿ ಮಾರ್ಗದವರ ಕೆಲಸವಾಗಿದೆ. ನೀವು ಪ್ರವೃತ್ತಿ ಮಾರ್ಗದವರಾಗಿದ್ದೀರಿ, ನಿಮಗೆ ತಿಳಿದಿದೆ - ಸ್ವರ್ಗ ಲೋಕದಲ್ಲಿ ನಾವು ಪೂಜ್ಯರಾಗಿದ್ದೆವು, ಇಲ್ಲವೆಂದರೆ 84 ಜನ್ಮಗಳ ಲೆಕ್ಕವು ಎಲ್ಲಿಂದ ಬರುವುದು? ಇದು ಆತ್ಮಿಕ ಜ್ಞಾನವಾಗಿದೆ. ಪರಮಾತ್ಮ ಜ್ಞಾನ ಸಾಗರನಿಂದಲೇ ಇದು ಸಿಗುತ್ತದೆ. ಪತಿತ-ಪಾವನ ತಂದೆಯು ಎಲ್ಲರ ಸದ್ಗತಿದಾತನಾಗಿದ್ದಾರೆ. ನಾವು ಮಕ್ಕಳಿಗೆ ಅಮರಕಥೆಯನ್ನು ತಿಳಿಸುತ್ತಿದ್ದಾರೆ. ಜನ್ಮ-ಜನ್ಮಾಂತರದಿಂದ ಅಸತ್ಯ ಕಥೆಗಳನ್ನು ಕೇಳುತ್ತಾ ಬಂದಿದ್ದೀರಿ, ಈಗ ಸತ್ಯ ಕಥೆಯನ್ನು ಕೇಳಿ ನೀವು 16 ಕಲಾ ಸಂಪೂರ್ಣರಾಗುತ್ತೀರಿ. ಚಂದ್ರನಿಗೆ 14 ಕಲಾ ಸಂಪೂರ್ಣನೆಂದು ಹೇಳಲಾಗುತ್ತದೆ, ಸೂರ್ಯನಿಗೆ ಈ ರೀತಿ ಹೇಳುವುದಿಲ್ಲ.
ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರು ಭವಿಷ್ಯದಲ್ಲಿ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗುತ್ತೇವೆ. ಮತ್ತೆ ಅರ್ಧ ಕಲ್ಪದ ನಂತರ ಆತ್ಮದಲ್ಲಿ ತುಕ್ಕು ಬೀಳುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ, ಈಗ ಪುನಃ ಸರ್ವಗುಣ ಸಂಪನ್ನರು, 16 ಕಲಾಸಂಪೂರ್ಣರು.... ಪುನಃ ದೇವತೆಗಳಾಗುತ್ತಿದ್ದೀರಿ. ನಾವಾತ್ಮರು ಮೊದಲು ನಮ್ಮ ಮನೆಗೆ ಹೋಗಿ ನಂತರ ಬಂದು ಶರೀರ ಧಾರಣೆ ಮಾಡಿ ದೇವತೆಗಳಾಗುತ್ತೇವೆ. ಅನಂತರ ಚಂದ್ರವಂಶಿ ಮನೆತನದಲ್ಲಿ ಬರುತ್ತೇವೆ, 84 ಜನ್ಮಗಳ ಲೆಕ್ಕವೂ ಬೇಕಲ್ಲವೆ. ಯಾವ ಯುಗದಲ್ಲಿ ಎಷ್ಟು ಜನ್ಮಗಳನ್ನು ತೆಗೆದುಕೊಂಡಿರಿ ಎಂದು ತಂದೆಯು 84 ಜನ್ಮಗಳ ಸತ್ಯ-ಸತ್ಯವಾದ ಕಥೆಯನ್ನೂ ಈಗ ತಿಳಿಸಿದ್ದಾರೆ. ನೀವು ಮಕ್ಕಳಿಗೇ ಹೇಳುತ್ತಾರೆ - ನೀವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ತಮ್ಮನ್ನು ಮೊದಲನೆಯದಾಗಿ ಬ್ರಾಹ್ಮಣರೆಂದು ತಿಳಿದುಕೊಳ್ಳಬೇಕಾಗಿದೆ. ಮಮ್ಮಾ-ಬಾಬಾ ಎಂದು ಹೇಳುತ್ತೀರಲ್ಲವೆ. ಆಸ್ತಿಯನ್ನು ಶಿವ ತಂದೆಯಿಂದ ಬ್ರಹ್ಮಾರವರ ಮೂಲಕ ತೆಗೆದುಕೊಳ್ಳುತ್ತೀರಿ. ಬ್ರಹ್ಮನೂ ಸಹ ತಂದೆಯವರಾದರು. ಬ್ರಹ್ಮನಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ ಏಕೆಂದರೆ ಅವರೂ ಸಹೋದರನಾಗಿದ್ದಾರೆ, ಶರೀರಧಾರಿಯಲ್ಲವೆ. ನೀವು ಎಲ್ಲಾ ಮಕ್ಕಳು ಆಸ್ತಿಯನ್ನು ಅವರಿಂದ ತೆಗೆದುಕೊಳ್ಳುತ್ತೀರಿ, ಈ ಬ್ರಹ್ಮನಿಂದಲ್ಲ. ಯಾರಿಂದ ಆಸ್ತಿಯನ್ನು ಪಡೆಯುವುದಿಲ್ಲವೋ ಅವರನ್ನು ನೆನಪು ಮಾಡಬಾರದು, ಒಬ್ಬ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಅವರಿಗೇ ನೀವು ಮಾತಾಪಿತಾ ನಾವು ನಿಮ್ಮ ಬಾಲಕರೆಂದು ಹೇಳುತ್ತಾರೆ. ನೀವು ಅವರ ಬಳಿ ಬರುತ್ತೀರಿ ಅಂದಾಗ ನಿಮ್ಮ ಬುದ್ಧಿಯಲ್ಲಿದೆ - ನಾವು ಶಿವ ತಂದೆಯ ಬಳಿ ಹೋಗುತ್ತೇವೆ. ಈಗ ಶಿವ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಆತ್ಮವು ಬಿಂದುವಾಗಿದೆ, ಅದರಲ್ಲಿ 84 ಜನ್ಮಗಳ ಪಾತ್ರವು ನಿಗಧಿಯಾಗಿದೆ. ಆತ್ಮವು ಭೃಕುಟಿಯ ಮಧ್ಯದಲ್ಲಿರುತ್ತದೆ. ಆತ್ಮವು ಒಂದು ಸೆಕೆಂಡಿನಲ್ಲಿ ಹಾರುತ್ತದೆ. ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಹೋಗಿ ಭೃಕುಟಿಯ ಮಧ್ಯ ಭಾಗದಲ್ಲಿ ವಿರಾಜಮಾನನಾಗುತ್ತೇನೆ. ನಾನಾತ್ಮನು ಹೀಗಿದ್ದೇನೆಂದು ಬುದ್ಧಿಯಲ್ಲಿ ತಿಳುವಳಿಕೆ ಇದೆ. ಸತ್ಯಯುಗದಲ್ಲಿ ಯಾವುದೇ ಇಂತಹ ವಸ್ತುವನ್ನು ನೋಡುವ ಆಸೆಯಿರುವುದಿಲ್ಲ. ಆತ್ಮವನ್ನು ನೋಡಬಹುದಾಗಿದೆ ಆದರೆ ದಿವ್ಯದೃಷ್ಟಿಯಿಂದ. ಯಾರೂ ಈ ಕಣ್ಣುಗಳಿಂದ ನೋಡುವ ಮಾತಿಲ್ಲ. ಭಕ್ತಿಮಾರ್ಗದಲ್ಲಿಯೇ ಸಾಕ್ಷಾತ್ಕಾರ ಮಾಡುತ್ತಾರೆ. ಹೇಗೆ ರಾಮಕೃಷ್ಣರ ಶಿಷ್ಯ ವಿವೇಕಾನಂದನಾಗಿದ್ದರು, ಅವರು ತಿಳಿಸಿದ್ದಾರೆ - ನಾನು ಸನ್ಮುಖದಲ್ಲಿ ಕುಳಿತುಕೊಂಡಾಗ ಅವರ ಆತ್ಮವು ಬಂದು ನನ್ನಲ್ಲಿ ಪ್ರವೇಶವಾಯಿತು. ವಾಸ್ತವದಲ್ಲಿ ಈ ಮಾತು ಸಾಧ್ಯವಿಲ್ಲ, ಈ ರೀತಿ ಏನೂ ಆಗುವುದಿಲ್ಲ. ಆತ್ಮವು ಹೇಗೆ ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಪ್ರವೇಶ ಮಾಡುತ್ತದೆ. ಇವೆಲ್ಲಾ ಮಾತುಗಳನ್ನು ನೀವು ಮಕ್ಕಳಿಗೆ ತಿಳಿಸಲಾಗುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಅಮರ ಲೋಕದಲ್ಲಿ ಹೋಗುವುದಕ್ಕಾಗಿ ಪುರುಷಾರ್ಥ ಮಾಡುತ್ತಿದ್ದೇವೆ, ನಾವು ಅಮರ ಲೋಕದಲ್ಲಿ ಜನ್ಮ ಪಡೆಯುತ್ತೇವೆ, ಅಲ್ಲಿ ನಾವು ಗರ್ಭ ಮಹಲಿನಲ್ಲಿರುತ್ತೇವೆ. ಇಲ್ಲಂತೂ ಗರ್ಭ ಜೈಲಿನಲ್ಲಿ ಬಹಳ ಅಯ್ಯೊ ಅಯ್ಯೊ ಎನ್ನುತ್ತಾರೆ. ಈಗ ಅರ್ಧಕಲ್ಪಕ್ಕಾಗಿ ತಂದೆಯು ನಿಮ್ಮನ್ನು ಎಲ್ಲಾ ದುಃಖಗಳಿಂದ ಬಿಡಿಸುತ್ತಾರೆ ಅಂದಮೇಲೆ ಎಷ್ಟು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು! ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂನ್ನು ಆತ್ಮವೆಂದು ತಿಳಿದು ಆತ್ಮಿಕ ತಂದೆಯಿಂದ ವಿದ್ಯೆಯನ್ನು ಓದಿ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ಸತ್ಯ ಖಂಡದ ಮಾಲೀಕರಾಗುವ ಸತ್ಯ ಕಥೆಯನ್ನು ಕೇಳಬೇಕು ಹಾಗೂ ಅನ್ಯರಿಗೂ ಹೇಳಬೇಕಾಗಿದೆ.
2. ಯಾವ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆಯೋ ಅವರನ್ನೇ ನೆನಪು ಮಾಡಬೇಕಾಗಿದೆ. ಯಾವುದೇ ದೇಹಧಾರಿಯನ್ನಲ್ಲ. ಈ ಹಳೆಯ ಪ್ರಪಂಚಕ್ಕೆ ಬೆಂಕಿ ಬೀಳಲಿದೆ ಆದ್ದರಿಂದ ಇದನ್ನು ನೋಡಿಯೂ ನೋಡದಂತಿರಬೇಕಾಗಿದೆ.
ಓಂ ಶಾಂತಿ. ಆತ್ಮಿಕ ಮಕ್ಕಳು ಯಾರ ನೆನಪಿನಲ್ಲಿ ಕುಳಿತಿದ್ದೀರಿ? ಅವಶ್ಯವಾಗಿ ತಮ್ಮ ಆತ್ಮಿಕ ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ. ನಮಗೆ ಆತ್ಮಿಕ ತಂದೆಯು ಬಂದು ರಿಫ್ರೆಷ್ ಮಾಡಿ ಶೀತಲರನ್ನಾಗಿ ಮಾಡಲಿ ಎಂದು ಆತ್ಮವು ತನ್ನ ಪರಮಪಿತ ಪರಮಾತ್ಮನ ನೆನಪಿನಲ್ಲಿ ಕುಳಿತಿದೆ ಏಕೆಂದರೆ ಭಾರತವು ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಹೋಗಿದೆ. ತಾಪವನ್ನು ನೀಗಿಸಿದರೆಂದು ಹಾಡುತ್ತಾರೆ. ಯಾವ ತಾಪ? ಕಾಮ ಚಿತೆಯ ತಾಪ. ತಾಪವು ಹೆಚ್ಚಾಗಿ ಬಿಟ್ಟರೆ ಮನುಷ್ಯರು ಸತ್ತು ಹೋಗುತ್ತಾರೆ. ಈ ಕಾಮ ಚಿತೆಯ ತಾಪದಲ್ಲಿ ಭಾರತವು ಸಂಪೂರ್ಣ ಸುಟ್ಟು ಹೋಗಿದೆ ಆದ್ದರಿಂದ ಬಂದು ಶೀತಲರನ್ನಾಗಿ ಮಾಡಿ ಎಂದು ತಂದೆಯನ್ನು ನೆನಪು ಮಾಡುತ್ತಾರೆ. ಮಳೆ ಬಿದ್ದರೆ ಶೀತಲತೆಯಾಗಿ ಬಿಡುತ್ತದೆ, ಧರಣಿಯು ಶೀತಲವಾಗಿ ಬಿಡುತ್ತದೆ. ಇದಂತೂ ಜ್ಞಾನದ ಮಾತಾಗಿದೆ. ತಂದೆಯು ಒಂದೇ ಬಾರಿ ಬಂದು ಇಷ್ಟು ಶೀತಲರನ್ನಾಗಿ ಮಾಡುತ್ತಾರೆ. ಇಷ್ಟೆಲ್ಲವನ್ನೂ ಕೊಟ್ಟು ಬಿಡುತ್ತಾರೆ ಸತ್ಯಯುಗದಲ್ಲಿ ಯಾವುದೇ ವಸ್ತುವಿನ ಬಯಕೆಯಿರುವುದಿಲ್ಲ. ಅರ್ಧಕಲ್ಪ ಉತ್ಕಂಠದಲ್ಲಿಯೇ ಇರುತ್ತಾ ಬಂದಿದ್ದೀರಿ - ಬಾಬಾ, ಬಂದು ಶೀತಲರನ್ನಾಗಿ ಮಾಡಿ. ಪತಿತ-ಪಾವನ ತಂದೆಯು ಬಂದು ನಮ್ಮನ್ನು ಶೀತಲರನ್ನಾಗಿ ಮಾಡಲಿ ಎಂದು. ಈಗ ಈ ಜ್ಞಾನದ ಮಳೆಯಿಂದ ಭಾರತ ಅಥವಾ ಇಡೀ ಪ್ರಪಂಚವೇ ಶೀತಲವಾಗಿ ಬಿಡುತ್ತದೆ, ನೀವು ಸ್ವರ್ಗದ ಮಾಲೀಕರಾಗಿ ಬಿಡುತ್ತೀರಿ. ಮನುಷ್ಯರು ಮರಣ ಹೊಂದಿದಾಗ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ. ಅವರಂತೂ ಕೇವಲ ಹೀಗೆ ಹೇಳಿ ಬಾಯಿ ಸಿಹಿ ಮಾಡಿಕೊಳ್ಳುತ್ತಾರೆ. ನಿಮಗೆ ತಿಳಿದಿದೆ, ಈಗ ಸ್ವರ್ಗದ ಸ್ಥಾಪನೆಯಾಗುತ್ತಿದೆ, ತಂದೆಯು ಬಂದಿದ್ದಾರೆ, ಈ ಜ್ಞಾನದ ಮಳೆಯನ್ನು ಸುರಿಸುತ್ತಿದ್ದಾರೆ. 21 ಜನ್ಮಗಳವರೆಗೆ ಈ ಶೀತಲತೆಯ ಪ್ರಭಾವವಿರುತ್ತದೆ. ಅಲ್ಲಿ ಮಳೆಯದಾಗಲಿ, ಯಾವುದೇ ವಸ್ತುವಿನ ಇಚ್ಛೆಯಾಗಲಿ ಇರುವುದಿಲ್ಲ. ಸದಾ ಹಸಿರೇ ಹಸಿರಾಗಿರುತ್ತದೆ. ಅಲ್ಲಿ ಯಾವುದೇ ಪ್ರಕಾರದ ದುಃಖವಿರುವುದಿಲ್ಲ, ಸೂರ್ಯನೂ ಸಹ ಸತೋಪ್ರಧಾನವಾಗಿ ಬಿಡುತ್ತಾನೆ. ಎಂದೂ ತಾಪವನ್ನು ತೋರಿಸುವುದಿಲ್ಲ. ನೀವು ಇಡೀ ವಿಶ್ವದ ಮಾಲೀಕರಾಗಿ ಬಿಡುತ್ತೀರಿ, ಈಗಂತೂ ಗುಲಾಮರಾಗಿದ್ದೀರಲ್ಲವೆ. ಆದ್ದರಿಂದಲೇ ನಾನು ನಿಮ್ಮ ಗುಲಾಮನಾಗಿದ್ದೇನೆ.... ಎಂದು ಹಾಡುತ್ತಾರೆ, ತಂದೆಯನ್ನು ನೆನಪು ಮಾಡುತ್ತಾರೆ. ತಂದೆಯು ಹೇಳುತ್ತಾರೆ - ನಿಮ್ಮ ಸೇವೆಯಲ್ಲಿ ನಾನು ಗುಲಾಮನಾಗಿ ಬಂದಿದ್ದೇನೆ. ನಾನು ನೀವು ಮಕ್ಕಳ ಸೇವೆ ಮಾಡುತ್ತೇನೆ, ಪರ ಪತಿತದೇಶ, ಪತಿತ ಶರೀರದಲ್ಲಿ ನಾನು ಬರುತ್ತೇನೆ. ಈ ಪತಿತ ಪ್ರಪಂಚದಲ್ಲಿ ಯಾರೊಬ್ಬರೂ ಪಾವನರಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಪಾವನ, ಕಲಿಯುಗಕ್ಕೆ ಪತಿತವೆಂದು ಹೇಳಲಾಗುತ್ತದೆ ಏಕೆಂದರೆ ಎಲ್ಲರೂ ವಿಕಾರಿಗಳಾಗಿದ್ದಾರೆ. ಭಾರತವಾಸಿಗಳೇ ಈ ಜ್ಞಾನವನ್ನು ತಿಳಿದುಕೊಳ್ಳುವರು. ಯಾರು 84 ಜನ್ಮಗಳನ್ನು ತೆಗೆದುಕೊಂಡಿದ್ದಾರೆಯೋ ಅವರೇ ಈ ಜ್ಞಾನವನ್ನು ಕೇಳುತ್ತಾರೆ ಅಥವಾ ಯಾರು ಸತ್ಯ-ತ್ರೇತಾಯುಗದಲ್ಲಿ ಬರುವವರಿದ್ದಾರೆಯೋ ಅವರೇ ಬಂದು ನಂಬರ್ವಾರ್ ಪುರುಷಾರ್ಥದ ಅನುಸಾರ ಬ್ರಾಹ್ಮಣರಾಗುತ್ತಾರೆ. ತಂದೆಯು ತಿಳಿಸುತ್ತಾರೆ - ನೀವೀಗ ಬ್ರಾಹ್ಮಣ ವರ್ಣದಲ್ಲಿದ್ದೀರಿ ಮತ್ತೆ ನೀವೇ ದೇವತಾ ವರ್ಣದಲ್ಲಿ ಬಂದಿದ್ದೀರಿ. ತಂದೆಯು ಬ್ರಾಹ್ಮಣ ವರ್ಣ ಅಂದರೆ ಬ್ರಾಹ್ಮಣ ಧರ್ಮ ಸ್ಥಾಪನೆ ಮಾಡಲು ಬರುತ್ತಾರೆ. ಬ್ರಹ್ಮನು ಬ್ರಾಹ್ಮಣ ಧರ್ಮ ಸ್ಥಾಪನೆ ಮಾಡುತ್ತಾರೆ. ಪರಮಪಿತ ಪರಮಾತ್ಮನು ಬಂದು ಶೂದ್ರರನ್ನು ಬ್ರಾಹ್ಮಣರನ್ನಾಗಿ ಮಾಡುತ್ತಾರೆಂದು ಹೇಳುವುದಿಲ್ಲ. ಇದು ನಿಮ್ಮ ಬಾಜೋಲಿ ಆಟವು ನಡೆಯುತ್ತದೆ. ಇದು ಬಹಳ ಸಹಜವಾಗಿದೆ. ಈ ಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ವಿರಾಟ ರೂಪದಲ್ಲಿ ಬ್ರಾಹ್ಮಣರ ಶಿಖೆ ಮತ್ತು ಶಿವ ತಂದೆಯನ್ನೇ ಮರೆತು ಹೋಗಿದ್ದಾರೆ. ದೇವತಾ, ಕ್ಷತ್ರಿಯ, ವೈಶ್ಯ, ಶೂದ್ರ...... ಮತ್ತೆ ಶೂದ್ರನಿಂದ ದೇವತೆ ಎಂದು ಹೇಳುತ್ತಾರೆ. ಅಂದಾಗ ಬ್ರಾಹ್ಮಣರು ಎಲ್ಲಿ ಹೋದರು? ಬ್ರಾಹ್ಮಣರೂ ಸಹ ಬ್ರಾಹ್ಮಣ ದೇವತಾಯ ನಮಃ ಎಂದು ಹೇಳುತ್ತಾರೆ ಅಂದಮೇಲೆ ಪ್ರಜಾಪಿತ ಬ್ರಹ್ಮನ ವಂಶಾವಳಿ ಎಲ್ಲಿ ಹೋಯಿತು? ಪ್ರಜಾಪಿತ ಬ್ರಹ್ಮನ ಹೆಸರು ಎಷ್ಟು ಪ್ರಸಿದ್ಧವಾಗಿದೆ! ಚಿತ್ರಗಳಲ್ಲಿಯೂ ಎಷ್ಟೊಂದು ತಪ್ಪು ಮಾಡಿ ಬಿಟ್ಟಿದ್ದಾರೆ. ಪ್ರಜಾಪಿತ ಬ್ರಹ್ಮನ ಸಂತಾನರ ಯಾವುದೇ ಹೆಸರು, ಗುರುತೇ ಇಲ್ಲ. ಶಾಲೆಯಲ್ಲಿ ಶಿಕ್ಷಕರು ಓದಿಸುತ್ತಾರೆ. ಅದೂ ಸಹ ಆದಾಯದ ಮೂಲವಾಗುತ್ತದೆ ಅಂದಾಗ ಗುರಿ-ಧ್ಯೇಯವಂತೂ ಅವಶ್ಯವಾಗಿ ಬೇಕು. ಆ ವಿದ್ಯೆಯಿಂದಲೇ ಪದವಿ ಸಿಗುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಭಗವಂತನು ಪತಿತ ಪ್ರಪಂಚದಲ್ಲಿಯೇ ಬಂದು ಪತಿತರಿಗೆ ಓದಿಸುತ್ತಾರೆ. ತಂದೆ ತಿಳಿಸುತ್ತಾರೆ ನಾನು ನೀವು ಮಕ್ಕಳಿಗೆ ಓದಿಸಿ ನಾನು ಪಾವನರನ್ನಾಗಿ ಮಾಡುತ್ತೇನೆಂದು ಹೇಳುತ್ತಾರೆ. ನೋಡಿ, ಈ ವಿದ್ಯೆಯಿಂದ ಎಷ್ಟೊಂದು ಆದಾಯವಿದೆ! ಅರ್ಧ ಕಲ್ಪಕ್ಕಾಗಿ ನೀವು ಅದೃಷ್ಟವನ್ನು ಬೆಳಗಿಸಿಕೊಳ್ಳುತ್ತೀರಿ. 21 ಪೀಳಿಗೆಯೆಂದು ಭಾರತದಲ್ಲಿ ಗಾಯನವಿದೆ. ನೀವೀಗ ಬೇಹದ್ದಿನ ತಂದೆಯಿಂದ 21 ಪೀಳಿಗೆಗಳ ಬೇಹದ್ದಿನ ಆಸ್ತಿಯನ್ನು ಪಡೆಯುತ್ತೀರಿ. ಲೌಕಿಕ ತಂದೆಯದು ಅಲ್ಪಕಾಲದ ಕ್ಷಣ ಭಂಗುರ ಆಸ್ತಿಯಾಗಿದೆ, ಆದರೆ ಈ ತಂದೆಯಿಂದ ನೀವು ಇಂತಹ ಆಸ್ತಿಯನ್ನು ಪಡೆಯುತ್ತೀರಿ ಯಾವುದರಿಂದ ಜನ್ಮ-ಪ್ರತಿ ಜನ್ಮ ನಿಮಗೆ ಯಾವುದೇ ದುಃಖವಿರುವುದಿಲ್ಲ. ಭಾರತದಲ್ಲಿಯೇ ಬೇಹದ್ದಿನ ಸುಖವಿತ್ತು, ಈ ಜ್ಞಾನವು ಮತ್ತ್ಯಾರ ಬುದ್ಧಿಯಲ್ಲಿಯೂ ಇರುವುದಿಲ್ಲ. ಈ ಜ್ಞಾನವನ್ನು ಕೊಡುವಂತಹ ತಂದೆಗೇ ಗೊತ್ತು ಮತ್ತು ಯಾರಿಗೆ ಕೊಡುವರೋ ಅವರಿಗೇ ಗೊತ್ತು, ಮತ್ತ್ಯಾರಿಗೂ ಗೊತ್ತಿಲ್ಲ. ಗ್ರಂಥದಲ್ಲಿಯೂ ಅವರ ಮಹಿಮೆಯ ಗಾಯನವಿದೆ, ಏಕ್ ಓಂಕಾರ್... ನಿರಾಕಾರ್, ನಿರ್-ಅಹಂಕಾರ್, ಇದರ ಅರ್ಥವನ್ನು ಈಗ ನೀವು ತಿಳಿದುಕೊಂಡಿದ್ದೀರಿ. ಅವರಂತೂ ಕೇವಲ ನಿರಹಂಕಾರಿ ಎಂದು ಹಾಡುತ್ತಾರೆ. ಇಷ್ಟು ದೊಡ್ಡ ಅಥಾರಿಟಿಯಾಗಿದ್ದರೂ ಸಹ ತಂದೆಗೆ ಯಾವುದೇ ಅಹಂಕಾರವಿಲ್ಲ. ಇಲ್ಲಿ ಒಂದು ಚಿಕ್ಕ ಪದವಿಯಲ್ಲಿದ್ದರೂ ಸಹ ಅವರಿಗೆ ಎಷ್ಟೊಂದು ನಶೆಯಿರುತ್ತದೆ. ನಾನು ಇಂತಹ ಪದವೀಧರನಾಗಿದ್ದೇನೆ..... ಎಂದು ಅದು ಅಲ್ಪಕಾಲದ ಪದವಿಯ ನಶೆಯಿರುತ್ತದೆ. ಈಗ ನಿಮಗೆ ಈ ಆತ್ಮಿಕ ವಿದ್ಯೆಯ ನಶೆಯಿದೆ. ಈಗ ನಿಮಗೆ ತಿಳಿದಿದೆ - ಆತ್ಮಾಭಿಮಾನಿಯಾಗಬೇಕಾಗಿದೆ, ಆಗಲೇ ತಂದೆಯನ್ನು ನೆನಪು ಮಾಡಲು ಸಾಧ್ಯ. ತಂದೆಯ ಜೊತೆ ಯೋಗವು ತುಂಡಾದರೆ ಮಾಯೆಯ ಮುತ್ತಿಗೆ ಬೀಳುತ್ತದೆ, ಬಾಡಿ ಹೋಗುತ್ತಾರೆ. ನೆನಪು ಮಾಡುತ್ತಾ ಇದ್ದಾಗಲೇ ಖುಷಿಯ ನಶೆಯೇರಿರುವುದು. ಯಾರಾದರೂ ದೊಡ್ಡ ಪರೀಕ್ಷೆಯನ್ನು ತೇರ್ಗಡೆ ಮಾಡಿದರೆ ಅವರಿಗೆ ಖುಷಿಯಾಗುತ್ತದೆ. ಇದಕ್ಕಿಂತಲೂ ಮೇಲೆ ಮತ್ತ್ಯಾವುದೂ ಪರೀಕ್ಷೆಯಿಲ್ಲವೆಂದು ತಿಳಿದುಕೊಳ್ಳುತ್ತಾರೆ ಹಾಗೆಯೇ ನೀವೂ ಸಹ ತಿಳಿದುಕೊಂಡಿದ್ದೀರಿ - ನಮ್ಮ ಈ ವಿದ್ಯೆಗಿಂತಲೂ ಶ್ರೇಷ್ಠ ವಿದ್ಯೆಯು ಮತ್ತ್ಯಾವುದೂ ಇಲ್ಲ. ಈ ಲಕ್ಷ್ಮೀ-ನಾರಾಯಣರು ಅವರ ಹಿಂದಿನ ಜನ್ಮದಲ್ಲಿ ಅವಶ್ಯವಾಗಿ ಅಂತಹ ವಿದ್ಯೆಯನ್ನು ಓದಿದ್ದಾರೆ, ರಾಜಯೋಗವನ್ನು ಕಲಿತಿದ್ದಾರೆ ಆದ್ದರಿಂದಲೇ ಮಹಾರಾಜ-ಮಹಾರಾಣಿಯಾಗಿದ್ದಾರೆ. ರಾಜಯೋಗವು ಪ್ರಸಿದ್ಧವಾಗಿದೆ, ಪರಮಪಿತ ಪರಮಾತ್ಮನು ಬಂದು ಸ್ವರ್ಗಕ್ಕಾಗಿ ರಾಜಯೋಗವನ್ನು ಕಲಿಸುತ್ತಾರೆ. ಹಿಂದೆ ಇಂತಹ ಕರ್ಮ ಮಾಡಿರುವ ಕಾರಣ ಈ ರೀತಿಯಾಗಿದ್ದಾರೆ ಎಂದು ಹೇಳುತ್ತಾರೆ.
ನೀವು ತಿಳಿದುಕೊಂಡಿದ್ದೀರಿ - ಈ ಜನ್ಮದಲ್ಲಿ ನಾವು ಇಂತಹ ಕರ್ಮವನ್ನು ಕಲಿಯುತ್ತೇವೆ ಯಾವುದರಿಂದ ಭವಿಷ್ಯ 21 ಜನ್ಮಗಳಿಗಾಗಿ ರಾಜ್ಯಭಾರ ಮಾಡುತ್ತೇವೆ ಅಥವಾ ಸ್ವರ್ಗದಲ್ಲಿ ವಿರಾಜಮಾನರಾಗುತ್ತೇವೆ. ಯಥಾ ರಾಜ-ರಾಣಿ ತಥಾ ಪ್ರಜೆಗಳೂ ಇರುತ್ತಾರಲ್ಲವೆ. ರಾಜಧಾನಿಯಿರುತ್ತದೆ. ರಾಜಧಾನಿಯನ್ನು ಸ್ಥಾಪನೆ ಮಾಡಲು ತಂದೆಯು ಬಂದಿದ್ದಾರೆ ನಂತರ ನೀವು ಹೋಗಿ 21 ಜನ್ಮಗಳ ಕಾಲ ರಾಜ್ಯ ಪರಿಪಾಲನೆ ಮಾಡುತ್ತೀರಿ. 63 ಜನ್ಮಗಳಿಂದಲೂ ನೀವು ದುಃಖವನ್ನು ಅನುಭವಿಸಿದ್ದೀರಿ. ಈಗ ಅದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ. ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತಿತ್ತು, ಈಗಂತೂ ನರಕವಾಗಿದೆ. ಸೃಷ್ಟಿಯು ಎಷ್ಟೊಂದು ಬದಲಾಗಿ ಬಿಟ್ಟಿದೆ! ಆ ರಾಜಧಾನಿಯು ಎಲ್ಲಿಗೆ ಹೋಯಿತು. ರಾವಣ ರಾಜ್ಯವು ಆರಂಭವಾಗುವುದರಿಂದ ನೀವು ಪತಿತರಾಗಿ ಬಿಡುತ್ತೀರಿ. ತಂದೆಯು ಹೇಳುತ್ತಾರೆ - ನೀವು ತಮ್ಮ 84 ಜನ್ಮಗಳ ಚಕ್ರವನ್ನು ಅರಿತುಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಪದೇ-ಪದೇ ತಿಳಿಸಲಾಗುತ್ತದೆ. ನೀವು 84 ಜನ್ಮಗಳ ಚಕ್ರವನ್ನು ಪೂರ್ಣ ಮಾಡಿದ್ದೀರಿ, ಈಗ ನಿಮ್ಮದು ಇದು ಅಂತಿಮ ಜನ್ಮವಾಗಿದೆ, ಈಗ ಪುನಃ ತಮ್ಮ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೀವು ಹೋಗಿ ಮುಕ್ತಿಧಾಮದಲ್ಲಿ ಕುಳಿತು ಬಿಡುವುದಲ್ಲ. ನಿಮ್ಮದು ಸರ್ವತೋಮುಖ ಪಾತ್ರವಿದೆ. ಇಂತಹವರೂ ಅನೇಕರಿದ್ದಾರೆ ಸತ್ಯಯುಗದಿಂದ ಹಿಡಿದು ದ್ವಾಪರ-ಕಲಿಯುಗದವರೆಗೂ ಮುಕ್ತಿಧಾಮದಲ್ಲಿಯೇ ಇರುತ್ತಾರೆ. ಇಲ್ಲಿ ಬರುವುದಕ್ಕಿಂತ ಮುಕ್ತಿಧಾಮವೇ ಒಳ್ಳೆಯದು ಎಂದು ಹೇಳುವಂತಿಲ್ಲ. ಅವರ ಜನ್ಮವಂತೂ ಸೊಳ್ಳೆಗಳ ಸಮಾನವಾಯಿತು ಏಕೆಂದರೆ ಬಂದರು ಹೊರಟು ಹೋದರು. ಮನುಷ್ಯರ ಮಹಿಮೆಯನ್ನು ಹಾಡಲಾಗುತ್ತದೆ. ಈ ಮಂದಿರಗಳು ಯಾರದಾಗಿದೆ? ಯಾರು ಆರಂಭದಿಂದ ಹಿಡಿದು ಪಾತ್ರವನ್ನು ಅಭಿನಯಿಸುತ್ತಾ ಬಂದಿದ್ದಾರೆಯೋ ಅವರದೇ ನೆನಪಾರ್ಥವಾಗುತ್ತಾ ಬಂದಿದೆ. ಯಾರು ಕೊನೆಯಲ್ಲಿ ಬರುವರೋ ಅವರದು ನೆನಪಾರ್ಥವಾಗುವುದೇ? ಏನೂ ಇಲ್ಲ. ನಿಮ್ಮದು ಎಷ್ಟು ದೊಡ್ಡ ನೆನಪಾರ್ಥವಾಗಿದೆ! ನೀವೇ ಎಲ್ಲರಿಗಿಂತ ಹೆಚ್ಚು ಪಾತ್ರವನ್ನು ಅಭಿನಯಿಸುತ್ತೀರಿ. ನೀವು ತಮ್ಮ ಪ್ರಾಲಬ್ಧದ ಸಮಯವನ್ನು ಮುಗಿಸಿ ಯಾವಾಗ ಭಕ್ತಿಮಾರ್ಗದಲ್ಲಿ ಬರುತ್ತೀರೋ ಆಗ ನಿಮ್ಮ ನೆನಪಾರ್ಥ ಹಾಗೂ ಶಿವ ತಂದೆಯ ಮಂದಿರಗಳನ್ನೂ ಕಟ್ಟಲಾರಂಭಿಸುತ್ತಾರೆ, ಮತ್ತೆ ಅನ್ಯ ಧರ್ಮದವರು ಬರುತ್ತಾರೆ. ಅವರ ಧರ್ಮ ಸ್ಥಾಪನೆಯಾಗುತ್ತದೆ. ನೀವು ನಿಮ್ಮ ಚರಿತ್ರೆ-ಭೂಗೋಳವನ್ನು ತಿಳಿದುಕೊಂಡಿದ್ದೀರಿ. ಮತ್ತೆಲ್ಲಾ ಧರ್ಮದವರನ್ನೂ ತಿಳಿದುಕೊಂಡಿದ್ದೀರಿ. 84 ಜನ್ಮಗಳ ಏಣಿಯಾಗಿದೆ, ಮೊದಲು ನಾವು ಸ್ವರ್ಗದಲ್ಲಿ ಬರುತ್ತೇವೆ. ನಂತರ ಹೇಗೆ ಇಳಿಯುತ್ತೇವೆ ಎಂಬುದು ನಿಮ್ಮ ಬುದ್ಧಿಯಲ್ಲಿದೆ. ಪ್ರತಿಯೊಂದು ಜನ್ಮದಲ್ಲಿ ಭಿನ್ನ ನಾಮ-ರೂಪದ ಮಿತ್ರ ಸಂಬಂಧಿಗಳು ಸಿಕ್ಕಿದ್ದಾರೆ. ಇದೆಲ್ಲಾ ಪಾತ್ರವು ಡ್ರಾಮಾದಲ್ಲಿ ಮೊದಲಿನಿಂದಲೇ ನಿಶ್ಚಿತವಾಗಿದೆ. ಈ ಬೇಹದ್ದಿನ ನಾಟಕವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ. ನೀವು ತಿಳಿದುಕೊಂಡಿದ್ದೀರಿ - ನಾವೇ ದೇವಿ-ದೇವತೆಗಳಾಗಿದ್ದೆವು, 84 ಜನ್ಮಗಳನ್ನು ತಿಳಿದುಕೊಂಡು ಶೂದ್ರರಾದೆವು. ಈಗ ಪುನಃ ನಾವು ದೇವಿ-ದೇವತೆಗಳಾಗುತ್ತೇವೆ. ಮನುಷ್ಯರಂತೂ ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ಹಮ್ ಸೋ, ಸೋ ಹಮ್ನ ಅರ್ಥವೇ ಬೇರೆಯಾಗಿದೆ. ಆದರೆ ಮನುಷ್ಯರು ಆತ್ಮವೇ ಪರಮಾತ್ಮ, ಪರಮಾತ್ಮನೇ ಆತ್ಮವೆಂದು ಹೇಳಿ ಬಿಡುತ್ತಾರೆ. ರಾತ್ರಿ-ಹಗಲಿನ ಅಂತರವಾಯಿತಲ್ಲವೆ. ನೀವೀಗ ಇದೆಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ನೀವೀಗ ಪಾಂಡವರಾಗಿದ್ದೀರಿ, ಕೌರವ-ಪಾಂಡವರು ಸಹೋದರರಾಗಿದ್ದರಲ್ಲವೆ. ಈಗ ತಂದೆಯು ಸಿಕ್ಕಿದ್ದಾರೆ ಆದ್ದರಿಂದ ನೀವು ಪಾಂಡವರಾಗಿದ್ದೀರಿ. ತಂದೆಯು ನಿಮ್ಮನ್ನು ದುಃಖದಿಂದ ಬಿಡಿಸಿ ಮಾರ್ಗದರ್ಶಕನಾಗಿ ಕರೆದುಕೊಂಡು ಹೋಗುತ್ತಾರೆ. ಮನೆಯ ಪರಿಚಯ ಯಾರಿಗೂ ತಿಳಿದಿಲ್ಲ. ಆತ್ಮವು ಬ್ರಹ್ಮ್ತತ್ವದಲ್ಲಿ ಲೀನವಾಗಿ ಬಿಡುತ್ತದೆಯೆಂದು ಅವರು ಹೇಳಿ ಬಿಡುತ್ತಾರೆ ಅಂದಮೇಲೆ ಅದು ಮನೆಯಾಯಿತೇ? ವಾಸ್ತವದಲ್ಲಿ ನಿವಾಸ ಸ್ಥಾನಕ್ಕೆ ಮನೆಯೆಂದು ಹೇಳಲಾಗುತ್ತದೆ. ಅದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ನಿರಾಕಾರಿ ಆತ್ಮರು ನಿರಾಕಾರಿ ಪ್ರಪಂದದಲ್ಲಿ ಬಿಂದುವಿನ ಮಾದರಿಯಾಗಿ ನಿವಾಸ ಮಾಡುತ್ತೇವೆ. ಅಲ್ಲಿಯೂ ಆತ್ಮಗಳ ನಿರಾಕಾರಿ ವೃಕ್ಷವಿದೆ. ಈ ನಾಟಕವು ಮಾಡಲ್ಪಟ್ಟಿದೆ. ಬೀಜ ಮತ್ತು ವೃಕ್ಷವನ್ನು ಅರಿತುಕೊಳ್ಳಬೇಕಾಗಿದೆ. ಇದರ ಹೆಸರೇ ಆಗಿದೆ - ವಿಭಿನ್ನ ಧರ್ಮಗಳ ವೃಕ್ಷ. ಇದು ಮನುಷ್ಯ ಸೃಷ್ಟಿಯಾಗಿದೆ. ಇದರ ಬೀಜ ರೂಪ ತಂದೆಯಾಗಿದ್ದಾರೆ. ಎಷ್ಟೊಂದು ವಿಭಿನ್ನತೆಯಿದೆ. ಪ್ರತಿಯೊಂದು ಧರ್ಮದವರ ರೂಪವೇ ಭಿನ್ನವಾಗಿದೆ, ಇಲ್ಲಿಯೂ ಸಹ ಒಬ್ಬರ ಚಹರೆಯು ಇನ್ನೊಬ್ಬರಿಗೆ ಹೋಲುವುದಿಲ್ಲ. ಇದೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಕಲ್ಪವೃಕ್ಷದ ಆಯಸ್ಸು 5000 ವರ್ಷಗಳಾಗಿದೆ, ಇದನ್ನು ತಂದೆಯೂ ತಿಳಿಸುತ್ತಾರೆ. ಮನುಷ್ಯರು ಪಾತ್ರಧಾರಿಗಳಾಗಿದ್ದಾರೆ, ಇಲ್ಲಿ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಇದು ರಂಗ ಮಂಟಪವಾಗಿದೆ ಬೆಳಕು ಕೊಡುವುದಕ್ಕಾಗಿ ಸೂರ್ಯ, ಚಂದ್ರರಿದ್ದಾರೆ. ಸೂರ್ಯ-ಚಂದ್ರರು ದೇವತೆಗಳಲ್ಲ, ಇವು ದೀಪಗಳಾಗಿವೆ ಆದರೆ ಜಗತ್ತಿನ ಸೇವೆ ಮಾಡುವ ಕಾರಣ ದೇವತೆಗಳೆಂದು ಹೇಳಿ ಬಿಡುತ್ತಾರೆ. ವಾಸ್ತವದಲ್ಲಿ ದೇವತೆಗಳು ಯಾವುದೇ ಸೇವೆ ಮಾಡುವುದಿಲ್ಲ. ಸೇವೆಯನ್ನು ಈಗ ನೀವು ಮಕ್ಕಳೇ ಮಾಡುತ್ತೀರಿ. ತಂದೆಯೇ ವಿಧೇಯ ಸೇವಕನಾಗಿದ್ದಾರೆ. ಮಕ್ಕಳು ಭೇಟಿಯಾದಾಗ ತಂದೆಗೆ ದಯೆ ಬರುತ್ತದೆ. ಆದ್ದರಿಂದ ತಂದೆಯು ತಿಳಿಸಿ ಕೊಡಲು ಬಂದಿದ್ದಾರೆ. ನೀವು ಮಕ್ಕಳಿಗೇ ಪುನಃ ದೇವಿ-ದೇವತಾ ಪದವಿಯನ್ನು ಪ್ರಾಪ್ತಿ ಮಾಡಿಸಲು ಬರುತ್ತೇನೆ. ಪ್ರತಿಯೊಂದು ವಸ್ತುವಿನದು ಏರುವ ಕಲೆ ಮತ್ತು ಇಳಿಯುವ ಕಲೆಯಾಗುತ್ತದೆ. ಹಳೆಯ ಪ್ರಪಂಚಕ್ಕೆ ತಮೋಪ್ರಧಾನ ಎಂತಲೂ ಹೊಸ ಪ್ರಪಂಚಕ್ಕೆ ಸತೋಪ್ರಧಾನವೆಂತಲೂ ಹೇಳಲಾಗುತ್ತದೆ. ಪ್ರತಿಯೊಂದು ವಸ್ತು ಹೊಸದರಿಂದ ಹಳೆಯದಾಗುತ್ತದೆ. ಆತ್ಮವು ಹೇಳುತ್ತದೆ - ಈ ಶರೀರವೂ ಸಹ ತಮೋಪ್ರಧಾನ, ಪತಿತವಾಗಿದೆ. ಸತ್ಯಯುಗದಲ್ಲಿ ಆತ್ಮ ಮತ್ತು ಶರೀರವೆರಡು ಸತೋಪ್ರಧಾನವಾಗಿತ್ತು, ಆತ್ಮಕ್ಕೆ ಈಗ ಜ್ಞಾನ ಸಿಕ್ಕಿದೆ. ನಾವು 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಸ್ಮೃತಿ ಬಂದಿದೆ. ಈ ರಹಸ್ಯವನ್ನು ಬೇಹದ್ದಿನ ತಂದೆಯು ತಿಳಿಸುತ್ತಾರೆ. ದುಃಖದಲ್ಲಿ ಎಲ್ಲರೂ ತಂದೆಯನ್ನೇ ಕರೆಯುತ್ತಿರುತ್ತಾರೆ - ಹೇ ದುಃಖಹರ್ತ-ಸುಖಕರ್ತ ದಯೆ ತೋರಿಸಿ, ಭಾರತವೇ ಎಲ್ಲದಕ್ಕಿಂತ ಸುಖಿಯಾಗಿತ್ತಲ್ಲವೆ. ಭಾರತದಂತಹ ಪವಿತ್ರ ಖಂಡವು ಮತ್ತ್ಯಾವುದೂ ಇರಲು ಸಾಧ್ಯವಿಲ್ಲ. ಈಗ ತಂದೆಯು ನೀವು ಮಕ್ಕಳ ಜೋಳಿಗೆಯನ್ನು ಅವಿನಾಶಿ ಜ್ಞಾನ ರತ್ನಗಳಿಂದ ತುಂಬುತ್ತಾರೆ. ಇಂತಹ ತಂದೆಯನ್ನು ಎಂದಾದರೂ ನೋಡಿದ್ದೀರಾ? ತಿಳಿಸುತ್ತಾರೆ - ಮಕ್ಕಳೇ, ನಾನು ನಿಮಗಾಗಿ ವೈಕುಂಠದ ಉಡುಗೊರೆಯನ್ನು ತಂದಿದ್ದೇನೆ, ನೀವು ಸ್ವರ್ಗವಾಸಿಗಳಾಗಿದ್ದಿರಿ, ಈಗ ಪತಿತ-ನರಕವಾಸಿಗಳಾಗಿ ಬಿಟ್ಟಿದ್ದೀರಿ. ಯಾರು ವಿಕಾರದಲ್ಲಿ ಹೋಗುವುದಿಲ್ಲವೋ ಅವರಿಗೆ ಪಾವನರೆಂದು ಹೇಳಲಾಗುತ್ತದೆ. ಸತ್ಯಯುಗದಲ್ಲಿ ಸಂಪೂರ್ಣ ನಿರ್ವಿಕಾರಿಗಳಿರುತ್ತಾರೆ. ಈ ಸಮಯದಲ್ಲಿ ಸಂಪೂರ್ಣ ವಿಕಾರಿಗಳಾಗಿದ್ದಾರೆ, ತಂದೆಯು ತಿಳಿಸುತ್ತಾರೆ - ನೀವೂ ಸಹ ಸಂಪೂರ್ಣ ನಿರ್ವಿಕಾರಿಗಳಾಗಿದ್ದಿರಿ, ಈಗ ಸಂಪೂರ್ಣ ವಿಕಾರಿಗಳಾಗಿದ್ದೀರಿ. ಪುನಃ ತಂದೆಯನ್ನು ನೆನಪು ಮಾಡಿ ಸಂಪೂರ್ಣ ನಿರ್ವಿಕಾರಿ ದೇವತಾ ಪದವಿಯನ್ನು ಪಡೆಯಬೇಕಾಗಿದೆ. ಅಕ್ಷರವು ನೋಡಿ ಎಷ್ಟು ಚೆನ್ನಾಗಿದೆ! ಮನ್ಮನಾಭವ. ತಂದೆಯಾದ ನನ್ನನ್ನು ನೆನಪು ಮಾಡಿದರೆ ನೀವು ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೀರಿ. ನಾನು ಸರ್ವಶಕ್ತಿವಂತ ಆಗಿದ್ದೇನಲ್ಲವೆ. ನನ್ನನ್ನು ನೆನಪು ಮಾಡಿರಿ, ನೆನಪಿಗೇ ಯೋಗಾಗ್ನಿಯೆಂದು ಹೇಳಲಾಗುತ್ತದೆ ಯಾವುದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ, ನೀವು ಪವಿತ್ರರಾಗಿ ಬಿಡುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಆತ್ಮಿಕ ವಿದ್ಯೆಯ ನಶೆಯಲ್ಲಿರಬೇಕಾಗಿದೆ. ತಂದೆಯ ಸಮಾನ ನಿರಹಂಕಾರಿಗಳಾಗಬೇಕಾಗಿದೆ. ತನ್ನ ಪದವಿ ಇತ್ಯಾದಿಗಳ ಅಹಂಕಾರವನ್ನು ಇಟ್ಟುಕೊಳ್ಳಬಾರದು.
2. ಜ್ಞಾನ ರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಳ್ಳಬೇಕಾಗಿದೆ. ಸಂಪೂರ್ಣ ನಿರ್ವಿಕಾರಿಗಳಾಗಿ ದೇವತಾ ಪದವಿಯನ್ನು ಪಡೆಯಬೇಕಾಗಿದೆ. ಎಂದೂ ಬಾಡಿ ಹೋಗಬಾರದು.
ಓಂ ಶಾಂತಿ. ಇದನ್ನು ಯಾರು ಹೇಳಿದರು? ಓಂ ಶಾಂತಿ ಓಂ ಶಾಂತಿ ಎಂದು ಎರಡು ಬಾರಿ ಹೇಳುತ್ತಾರೆ. ಒಂದನ್ನು ಶಿವ ತಂದೆಯು ಹೇಳಿದರು, ಇನ್ನೊಂದು ಬ್ರಹ್ಮಾ ತಂದೆಯೂ ಹೇಳಿದರು. ಬಾಪ್ದಾದಾ ಇಬ್ಬರೂ ಒಟ್ಟಿಗೆ ಇದ್ದಾರೆ, ಇವರಿಬ್ಬರೂ ಓಂ ಶಾಂತಿ ಓಂ ಶಾಂತಿ ಎಂದು ಹೇಳಬೇಕಾಗುತ್ತದೆ. ಈಗ ಮೊದಲು ಯಾರು ಹೇಳಿದರು? ನಂತರ ಯಾರು ಹೇಳಿದರು? ಮೊದಲು ಶಿವ ತಂದೆಯು ಹೇಳಿದರು ಓಂ ಶಾಂತಿ. ನಾನು ಶಾಂತಿಯ ಸಾಗರನಾಗಿದ್ದೇನೆ, ನಂತರ ಯಾರು ಹೇಳಿದರು? ದಾದಾರವರ ಆತ್ಮವು ಹೇಳಿತು. ಮಕ್ಕಳಿಗೆ ನೆನಪು ತರಿಸುತ್ತಾರೆ – ಓಂ ಶಾಂತಿ, ನಾನು ಸದಾ ದೇಹೀ-ಅಭಿಮಾನಿಯಾಗಿದ್ದೇನೆ. ಎಂದೂ ದೇಹಾಭಿಮಾನದಲ್ಲಿ ಬರುವುದಿಲ್ಲ. ಒಬ್ಬ ತಂದೆಯೇ ಸದಾ ದೇಹೀ-ಅಭಿಮಾನಿಯಾಗಿರುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರರೂ ಹೀಗೆ ಹೇಳುವುದಿಲ್ಲ. ನೀವು ತಿಳಿದುಕೊಂಡಿದ್ದೀರಿ - ತ್ರಿಮೂರ್ತಿಗಳಿಗೂ ಸೂಕ್ಷ್ಮ ರೂಪವಿದೆ ಅಂದಾಗ ಓಂ ಶಾಂತಿ ಎಂದು ಹೇಳುವವರು ಒಬ್ಬ ಶಿವ ತಂದೆಯಾಗಿದ್ದಾರೆ, ಅವರಿಗೆ ಯಾವುದೇ ಶರೀರವಿಲ್ಲ. ತಂದೆಯು ನಿಮಗೆ ಬಹಳ ಚೆನ್ನಾಗಿ ತಿಳಿಸುತ್ತಾರೆ - ನಾನು ಒಂದೇ ಬಾರಿ ಬರುತ್ತೇನೆ. ನಾನು ಸದಾ ದೇಹೀ-ಅಭಿಮಾನಿಯಾಗಿದ್ದೇನೆ, ಪುನರ್ಜನ್ಮದಲ್ಲಿ ಬರುವುದಿಲ್ಲ. ಆದ್ದರಿಂದ ನನ್ನ ಮಹಿಮೆಯೇ ಭಿನ್ನವಾಗಿದೆ. ನಿರಾಕಾರ ಪರಮಪಿತ ಪರಮಾತ್ಮನೆಂದು ನನಗೆ ಹೇಳುತ್ತಾರೆ. ಭಕ್ತಿಮಾರ್ಗದಲ್ಲಿಯೂ ಶಿವನಿಗೆ ನಿರಾಕಾರ ಪರಮಪಿತ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ, ನಿರಾಕಾರನ ಪೂಜೆ ನಡೆಯುತ್ತದೆ, ಅವರೆಂದೂ ದೇಹದಲ್ಲಿ ಬರುವುದಿಲ್ಲ ಅರ್ಥಾತ್ ದೇಹಾಭಿಮಾನಿಯಾಗುವುದಿಲ್ಲ. ಅವರಿಗಿಂತ ಕೆಳಗಡೆ ಬಂದಾಗ ಸೂಕ್ಷ್ಮವತನದಲ್ಲಿ ಬ್ರಹ್ಮಾ-ವಿಷ್ಣು-ಶಂಕರರಿರುತ್ತಾರೆ. ಶಿವನ ನಾಮ-ರೂಪವಂತೂ ಕಣ್ಣಿಗೆ ಕಾಣುವುದಿಲ್ಲ. ಚಿತ್ರವನ್ನು ಮಾಡಿಸುತ್ತಾರೆ ಆದರೆ ಅವರು ನಿರಾಕಾರನಾಗಿದ್ದಾರೆ, ಅವರೆಂದೂ ಸಾಕಾರಿಯಾಗುದಿಲ್ಲ. ಪೂಜೆಯೂ ನಿರಾಕಾರನಿಗೇ ಆಗುತ್ತದೆ. ಮಕ್ಕಳ ಬುದ್ಧಿಯಲ್ಲಿ ಇಡೀ ಜ್ಞಾನವಿರುತ್ತದೆ, ಭಕ್ತಿಯನ್ನಂತೂ ಮಾಡಿದ್ದೀರಲ್ಲವೆ. ಚಿತ್ರಗಳನ್ನು ಮಕ್ಕಳು ನೋಡಿದ್ದೀರಿ, ನಿಮಗೇ ತಿಳಿದಿದೆ - ಸತ್ಯ-ತ್ರೇತಾಯುಗದಲ್ಲಿ ಚಿತ್ರಗಳ ಭಕ್ತಿಯಾಗಲಿ, ವಿಚಿತ್ರ ತಂದೆಯ ಭಕ್ತಿಯಾಗಲಿ ಇರುವುದಿಲ್ಲ. ಬುದ್ಧಿಯಲ್ಲಿ ಬರುತ್ತದೆ, ಪರಮಪಿತ ಪರಮಾತ್ಮನು ವಿಚಿತ್ರನಾಗಿದ್ದಾರೆ, ಅವರಿಗೆ ಸೂಕ್ಷ್ಮ ಚಿತ್ರವಾಗಲಿ, ಸ್ಥೂಲ ಚಿತ್ರವಾಗಲಿ ಇಲ್ಲ. ದುಃಖಹರ್ತ-ಸುಖಕರ್ತ, ಪತಿತ-ಪಾವನ ಎಂದು ಅವರ ಮಹಿಮೆಯನ್ನೇ ಮಾಡಲಾಗುತ್ತದೆ. ನೀವು ಮತ್ತ್ಯಾರದೇ ಚಿತ್ರಕ್ಕೆ ಪತಿತ-ಪಾವನಿ ಎಂದು ಹೇಳುವುದಿಲ್ಲ. ಮತ್ತ್ಯಾವ ಮನುಷ್ಯರ ಬುದ್ಧಿಯಲ್ಲಿಯೂ ಈ ಮಾತುಗಳಿರುವುದಿಲ್ಲ. ಬ್ರಹ್ಮಾ, ವಿಷ್ಣು, ಶಂಕರನು ಸೂಕ್ಷ್ಮವತನವಾಸಿಗಳಾಗಿದ್ದಾರೆ, ಮೊದಲನೇ ಅಂತಸ್ತು ಸೂಕ್ಷ್ಮವತನವಾಗಿದೆ, ಅದರ ನಂತರ ಎರಡನೇ ಅಂತಸ್ತು, ಅದು ಶ್ರೇಷ್ಠಾತಿ ಶ್ರೇಷ್ಠವಾದ ಮೂಲವತನವಾಗಿದೆ. ಪರಮಪಿತ ಪರಮಾತ್ಮನು ಆ ಅಂತಸ್ತಿನ ನಿವಾಸಿಯಾಗಿದ್ದಾರೆ. ಅದರ ಕೆಳಗಿನ ಅಂತಸ್ತಿನಲ್ಲಿ ಸೂಕ್ಷ್ಮ ಶರೀರಧಾರಿಗಳಿದ್ದಾರೆ. ಇಲ್ಲಿನ ಕೆಳ ಅಂತಸ್ತಿನಲ್ಲಿ ಸ್ಥೂಲ ಶರೀರಧಾರಿಗಳಿದ್ದಾರೆ, ಇದರಲ್ಲಿ ತಬ್ಬಿಬ್ಬಾಗಬೇಡಿ. ಈ ಮಾತುಗಳನ್ನು ಪರಮಪಿತ ಪರಮಾತ್ಮನ ವಿನಃ ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮೇಲಿರುವುದು ಆತ್ಮಗಳ ಸೃಷ್ಟಿಯಾಗಿದೆ ಅದಕ್ಕೆ ನಿರಾಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ನಾವೆಲ್ಲಾ ಆತ್ಮರ ಪ್ರಪಂಚವಾಗಿದೆ. ಮತ್ತೆ ನಾವಾತ್ಮರು ಈ ಸಾಕಾರಿ ಪ್ರಪಂಚದಲ್ಲಿ ಬರುತ್ತೇವೆ. ಪರಮಧಾಮದಲ್ಲಿ ಆತ್ಮರಿರುತ್ತಾರೆ, ಇಲ್ಲಿ ಜೀವಾತ್ಮರಿದ್ದಾರೆ. ಇದು ಬುದ್ಧಿಯಲ್ಲಿರಬೇಕು - ಅವಶ್ಯವಾಗಿ ನಾವು ನಿರಾಕಾರಿ ತಂದೆಯ ಮಕ್ಕಳಾಗಿದ್ದೇವೆ, ನಾವೂ ಸಹ ಮೊದಲು ನಿರಾಕಾರ ತಂದೆಯ ಬಳಿ ಇರುತ್ತಿದ್ದೆವು, ನಿರಾಕಾರಿ ಪ್ರಪಂಚದಲ್ಲಿಯೂ ಆತ್ಮರಿರುತ್ತಾರೆ. ಆ ಆತ್ಮರು ಇಲ್ಲಿಯ ತನಕ ಪಾತ್ರವನ್ನು ಅಭಿನಯಿಸಲು ಸಾಕಾರದಲ್ಲಿ ಬರುತ್ತಿದ್ದಾರೆ. ಪರಮಧಾಮವು ನಿರಾಕಾರಿ ತಂದೆಯ ವತನವಾಗಿದೆ, ನಾವಾತ್ಮರಾಗಿದ್ದೇವೆ ಎಂಬ ನಶೆಯಿರಬೇಕು. ಅವಿನಾಶಿ ವಸ್ತುವಿನ ನಶೆಯಿರಬೇಕೇ ಹೊರತು ವಿನಾಶಿ ವಸ್ತುವಿನದಲ್ಲ. ದೇಹದ ನಶೆಯಿರುವವರಿಗೆ ದೇಹಾಭಿಮಾನಿಗಳೆಂದು ಹೇಳಲಾಗುತ್ತದೆ. ದೇಹಾಭಿಮಾನಿಗಳು ಒಳ್ಳೆಯವರೋ ಅಥವಾ ಆತ್ಮಾಭಿಮಾನಿಗಳು ಒಳ್ಳೆಯವರೋ? ಯಾರು ಬುದ್ಧಿವಂತರು? ಆತ್ಮಾಭಿಮಾನಿಗಳು. ಆತ್ಮವೇ ಅವಿನಾಶಿಯಾಗಿದೆ, ದೇಹವು ವಿನಾಶಿಯಾಗಿದೆ. ನಾನು 84 ದೇಹಗಳನ್ನು ತೆಗೆದುಕೊಳ್ಳುತ್ತೇನೆ, ನಾನಾತ್ಮನು ಪರಮಧಾಮದಲ್ಲಿ ತಂದೆಯ ಜೊತೆ ಇದ್ದೆನು, ಅಲ್ಲಿಂದ ಪಾತ್ರವನ್ನು ಅಭಿನಯಿಸಲು ಬರುತ್ತೇನೆಂದು ಆತ್ಮವೇ ಹೇಳುತ್ತದೆ, ಓ ಬಾಬಾ ಎಂದು ಆತ್ಮವೇ ಹೇಳುತ್ತದೆ. ಸಾಕಾರಿ ಸೃಷ್ಟಿಯಲ್ಲಿ ಸಾಕಾರಿ ತಂದೆಯಿದ್ದಾರೆ. ನಿರಾಕಾರಿ ಸೃಷ್ಟಿಯಲ್ಲಿ ನಿರಾಕಾರಿ ತಂದೆಯಿದ್ದಾರೆ. ಇದು ಸಂಪೂರ್ಣ ಸಹಜ ಮಾತಾಗಿದೆ. ಬ್ರಹ್ಮನಿಗೆ ಪ್ರಜಾಪಿತ ಬ್ರಹ್ಮನೆಂದು ಹೇಳುತ್ತಾರೆ ಅಂದಮೇಲೆ ಅವರು ಇಲ್ಲಿಯವರೇ ಅಲ್ಲವೆ. ಅಲ್ಲಿ ನಾವಾತ್ಮರೆಲ್ಲರೂ ಒಬ್ಬ ತಂದೆಯ ಮಕ್ಕಳು ಸಹೋದರರಾಗಿರುತ್ತೇವೆ, ತಂದೆಯು ಶಿವನ ಜೊತೆ ಇರುವವರಾಗಿದ್ದೇವೆ. ಪರಮಾತ್ಮನ ಹೆಸರಾಗಿದೆ - ಶಿವ, ಆತ್ಮನ ಹೆಸರಾಗಿದೆ - ಸಾಲಿಗ್ರಾಮ. ಆತ್ಮಕ್ಕೂ ರಚಯಿತನು ಬೇಕಲ್ಲವೆ. ತನ್ನೊಂದಿಗೆ ತಾನು ಯಾವಾಗಲೂ ಹೀಗೆ ಮಾತನಾಡಿಕೊಳ್ಳುತ್ತಾ ಇರಿ. ಯಾವ ಜ್ಞಾನವು ಸಿಗುತ್ತದೆಯೋ ಅದು ತನ್ನ ಹೃದಯಕ್ಕೆ ನಾಟಬೇಕೆಂದರೆ ಪರಿಶ್ರಮ ಪಡಬೇಕಾಗುತ್ತದೆ. ಆತ್ಮವೇ ವಿಚಾರ ಮಾಡಬೇಕಾಗುತ್ತದೆ – ಮೊಟ್ಟ ಮೊದಲು ಈ ನಿಶ್ಚಯ ಮಾಡಿಕೊಳ್ಳಿ, ನಾವಾತ್ಮರು ತಂದೆಯ ಜೊತೆಯಿರುವವರಾಗಿದ್ದೇವೆ. ನಾವು ಅವರ ಮಕ್ಕಳಾಗಿದ್ದೇವೆ ಅಂದಮೇಲೆ ಅವಶ್ಯವಾಗಿ ಆಸ್ತಿಯು ಸಿಗಬೇಕು. ಇದನ್ನೂ ಸಹ ತಿಳಿದುಕೊಂಡಿದ್ದೀರಿ - ಇದು ಆತ್ಮಗಳ ವೃಕ್ಷವಾಗಿದೆ, ಅಂದಮೇಲೆ ಅದಕ್ಕೆ ಮೊದಲೇ ಅವಶ್ಯವಾಗಿ ಬೀಜವಿರುತ್ತದೆ. ಹೇಗೆ ಮನೆತನವನ್ನು ಮಾಡುತ್ತಾರಲ್ಲವೆ. ದೊಡ್ಡವರು ತಂದೆ, ಮತ್ತೆ ಅವರಿಂದ 2-4 ಮಂದಿ ಮಕ್ಕಳು, ಮತ್ತೆ ಅವರಿಗೆ ಮಕ್ಕಳು, ಮೊಮ್ಮಕ್ಕಳು.... ಹೀಗೆ ಒಬ್ಬರಿಂದ ವೃದ್ಧಿಯಾಗುತ್ತಾ-ಆಗುತ್ತಾ ವೃಕ್ಷವೇ ದೊಡ್ಡದಾಗಿ ಬಿಡುತ್ತದೆ. ಇಂತಹವರಿಂದ ಇಂತಹವರು, ಅವರ ನಂತರ ಇವರು..... ಎಂದು. ತಲೆಮಾರಿನ ನಕ್ಷೆಯಿರುತ್ತದೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಮೂಲವತನದಲ್ಲಿ ಎಲ್ಲಾ ಆತ್ಮರಿರುತ್ತಾರೆ, ಅದೂ ಚಿತ್ರವಿದೆ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ, ಆ ತಂದೆಯು ಈ ಶರೀರದಲ್ಲಿ ಬಂದಿದ್ದಾರೆಂದು ನೀವು ಮಕ್ಕಳ ಬುದ್ಧಿಯಲ್ಲಿದೆ. ಆತ್ಮಿಕ ತಂದೆಯು ಬಂದು ಆತ್ಮಗಳಿಗೆ ಓದಿಸುತ್ತಾರೆ. ಸೂಕ್ಷ್ಮವತನದಲ್ಲಂತೂ ಓದಿಸುವುದಿಲ್ಲ, ಮತ್ತು ಸತ್ಯಯುಗದಲ್ಲಿಯೂ ಸಹ ಈ ಜ್ಞಾನವು ಯಾರಿಗೂ ಇರುವುದಿಲ್ಲ. ತಂದೆಯೇ ಈ ಸಂಗಮಯುಗದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ. ಈ ಮನುಷ್ಯ ಸೃಷ್ಟಿರೂಪಿ ವೃಕ್ಷದ ಜ್ಞಾನವು ಯಾರಿಗೂ ಇಲ್ಲ. ಕಲ್ಪದ ಆಯಸ್ಸನ್ನು ಬಹಳ ಸುದೀರ್ಘವಾಗಿ ಬರೆದು ಬಿಟ್ಟಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವೀಗ ಪುನಃ ಮನೆಗೆ ನಡೆಯಬೇಕಾಗಿದೆ, ಅದು ಆತ್ಮಗಳ ಮನೆಯಾಗಿದೆ. ತಂದೆ ಮತ್ತು ಮಕ್ಕಳಿರುತ್ತಾರೆ. ಎಲ್ಲರೂ ಸಹೋದರರಾಗಿದ್ದಾರೆ. ಇಲ್ಲಿ ಬಂದು ಶರೀರ ಧಾರಣೆ ಮಾಡಿದಾಗ ಸಹೋದರ-ಸಹೋದರಿಯರಾಗುತ್ತೇವೆ. ನಾವಾತ್ಮರೆಲ್ಲರೂ ವಾಸ್ತವದಲ್ಲಿ ಸಹೋದರರಾಗಿದ್ದೇವೆ. ಸಹೋದರರಿಗೆ ಅವಶ್ಯವಾಗಿ ತಂದೆಯೂ ಇರಬೇಕಲ್ಲವೆ. ಅವರು ಪರಮಪಿತ ಪರಮಾತ್ಮನಾಗಿದ್ದಾರೆ. ಎಲ್ಲಾ ಆತ್ಮರು ಶರೀರದಲ್ಲಿದ್ದರೂ ಸಹ ಅವರನ್ನು ನೆನಪು ಮಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ಪತಿತ ಪ್ರಪಂಚದಲ್ಲಿ ಎಲ್ಲರೂ ಅವರನ್ನು ನೆನಪು ಮಾಡುತ್ತಾರೆ ಏಕೆಂದರೆ ಎಲ್ಲರೂ ರಾವಣನ ಬಂಧನದಲ್ಲಿದ್ದಾರೆ. ಹೇ ರಾಮ ಎಂದು ಸೀತೆಯೂ ಕರೆಯುತ್ತಿದ್ದಳು, ತಂದೆಯು ತಿಳಿಸುತ್ತಾರೆ - ರಾಮನೆಂದಾಗ ತ್ರೇತಾಯುಗದ ರಾಮನು ನೆನಪು ಬರುವುದಿಲ್ಲ. ಪರಮಪಿತ ಪರಮಾತ್ಮನನ್ನೇ ನೆನಪು ಮಾಡುತ್ತಿರುತ್ತಾರೆ, ಆತ್ಮವೇ ಕರೆಯುತ್ತದೆ. ನೀವೀಗ ತಿಳಿದುಕೊಂಡಿದ್ದೀರಿ – ಇನ್ನರ್ಧ ಕಲ್ಪದವರೆಗೂ ಯಾರನ್ನೂ ಕರೆಯುವುದಿಲ್ಲ, ಏಕೆಂದರೆ ಸುಖಧಾಮದಲ್ಲಿರುತ್ತೀರಿ. ಈ ಸಮಯದಲ್ಲಿ ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿದುಕೊಂಡಿಲ್ಲ. ಅವರಂತೂ ಆತ್ಮವೇ ಪರಮಾತ್ಮ, ಆತ್ಮವೇ ಪರಮಾತ್ಮನಲ್ಲಿ ಲೀನವಾಗುತ್ತದೆ ಎಂದು ಹೇಳುತ್ತಾರೆ. ತಂದೆ ತಿಳಿಸುತ್ತಾರೆ - ಆತ್ಮ ಅವಿನಾಶಿಯಾಗಿದೆ. ಯಾವ ಆತ್ಮವೂ ಸಹ ವಿನಾಶವಾಗಲು ಸಾಧ್ಯವಿಲ್ಲ. ಹೇಗೆ ತಂದೆಯು ಅವಿನಾಶಿಯಾಗಿದ್ದಾರೆಯೋ ಹಾಗೆಯೇ ಆತ್ಮವೂ ಅವಿನಾಶಿಯಾಗಿದೆ. ಇಲ್ಲಿ ಆತ್ಮವು ಪತಿತ, ತಮೋಪ್ರಧಾನವಾಗುತ್ತದೆ ಮತ್ತೆ ತಂದೆಯು ಬಂದು ಪವಿತ್ರ, ಸತೋಪ್ರಧಾನರನ್ನಾಗಿ ಮಾಡುತ್ತದೆ. ಇಡೀ ಪ್ರಪಂಚವು ತಮೋಪ್ರಧಾನವಾಗಲೇಬೇಕು ನಂತರ ಪುನಃ ಸತೋಪ್ರಧಾನವಾಗುವುದು. ಪತಿತ ಪ್ರಪಂಚವನ್ನು ಪಾವನ ಮಾಡಲು ತಂದೆಯೇ ಬರಬೇಕಾಗುತ್ತದೆ, ಅವರಿಗೇ ಪರಮಾತ್ಮನೆಂದು ಹೇಳುತ್ತಾರೆ. ತಂದೆಯೂ ಅವಿನಾಶಿ, ನಾವಾತ್ಮರೂ ಅವಿನಾಶಿಯಾಗಿದ್ದೇವೆ. ಈ ನಾಟಕವು ಅವಿನಾಶಿಯಾಗಿದೆ. ಈ ವಿಶ್ವದ ಚರಿತ್ರೆ-ಭೂಗೋಳವು ಹೇಗೆ ಪುನರಾವರ್ತನೆಯಾಗುತ್ತದೆ ಎಂಬುದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಈ ನಾಲ್ಕು ಯುಗಗಳಲ್ಲಿ ನಮ್ಮ ಪಾತ್ರವು ನಡೆಯುತ್ತದೆ. ನಾವು ಸೂರ್ಯವಂಶಿಯರೇ ನಂತರ ಚಂದ್ರವಂಶಿಯರಾಗುತ್ತೇವೆ. ಚಂದ್ರವಂಶಿಯರೆಂದರೆ ಹೇಗೆ ಎರಡನೇ ದರ್ಜೆಯಲ್ಲಿ ಬರುತ್ತೇವೆ. 14 ಕಲೆಗಳುಳ್ಳವರಿಗೆ ಸೂರ್ಯವಂಶಿಯರೆಂದು ಹೇಳಲು ಸಾಧ್ಯವಿಲ್ಲ. ವಾಸ್ತವದಲ್ಲಿ ಅವರಿಗೆ ದೇವಿ-ದೇವತೆಗಳೆಂತಲೂ ಹೇಳುವಂತಿಲ್ಲ. 16 ಕಲಾ ಸಂಪೂರ್ಣರು, ಸಂಪೂರ್ಣ ನಿರ್ವಿಕಾರಿಗಳಿಗೆ ದೇವಿ-ದೇವತೆಗಳೆಂದು ಹೇಳಲಾಗುತ್ತದೆ. ರಾಮನಿಗೆ 14 ಕಲೆಗಳಲ್ಲಿ ಸಂಪನ್ನನೆಂದು ಹೇಳುತ್ತಾರೆ. ನಿಮ್ಮದೇ 84 ಜನ್ಮಗಳ ಲೆಕ್ಕವನ್ನು ತಿಳಿಸಲಾಗುತ್ತದೆ. ಹೊಸ ವಸ್ತುವು ನಂತರ ಹಳೆಯದಾಗುತ್ತದೆ ಆಗ ಅಷ್ಟು ಮಜಾ ಇರುವುದಿಲ್ಲ. ಮೊದಲು ಸಂಪೂರ್ಣ ಪವಿತ್ರವಾಗಿರುತ್ತದೆ ನಂತರ ಕೆಲವೊಂದು ವರ್ಷಗಳು ಕಳೆದರೆ ಅದಕ್ಕೆ ಸ್ವಲ್ಪ ಹಳೆಯದೆಂದು ಹೇಳಲಾಗುತ್ತದೆ. ಹೇಗೆ ಮನೆಯ ಉದಾಹರಣೆಯನ್ನು ಕೊಡಲಾಗುತ್ತದೆ, ಇದೇರೀತಿ ಪ್ರತಿಯೊಂದು ವಸ್ತುವು ಪರಿವರ್ತನೆಯಾಗುತ್ತದೆ. ಈ ಪ್ರಪಂಚವೂ ಸಹ ಒಂದು ದೊಡ್ಡ ಮಂಟಪವಾಗಿದೆ. ಈ ಆಕಾಶ ತತ್ವವು ಬಹಳ ದೊಡ್ಡದಾಗಿದೆ, ಇದಕ್ಕೆ ಯಾವುದೇ ಅಂತ್ಯವಿಲ್ಲ. ಇದರ ಅಂತ್ಯವೆಲ್ಲಿದೆ ಎಂದು ಯಾರೂ ಹುಡುಕಲು ಸಾಧ್ಯವಿಲ್ಲ. ಎಷ್ಟೇ ನಡೆಯುತ್ತಾ ಹೋಗಿ ಅದು ಮುಗಿಯುವುದಿಲ್ಲ. ಹಾಗೆಯೇ ಬ್ರಹ್ಮ ಮಹಾತತ್ವದ ಅಂತ್ಯವನ್ನು ಹುಡುಕಲು ಸಾಧ್ಯವಿಲ್ಲ. ವಾಸ್ತವದಲ್ಲಿ ವಿಜ್ಞಾನಿಗಳು ಇದರ ಅಂತ್ಯವನ್ನು ಕಾಣಲು ಎಷ್ಟೊಂದು ಪ್ರಯತ್ನ ಪಡುತ್ತಾರೆ ಆದರೆ ಹೋಗಲು ಸಾಧ್ಯವಾಗುವುದಿಲ್ಲ. ಬ್ರಹ್ಮ ಮಹಾತತ್ವವು ಬಹಳ ದೊಡ್ಡದಾಗಿದೆ, ಬೇಅಂತ್ ಆಗಿದೆ. ನಾವಾತ್ಮರು ಬಹಳ ಚಿಕ್ಕ ಜಾಗದಲ್ಲಿರುತ್ತೇವೆ. ಇಲ್ಲಿ ಕಟ್ಟಡಗಳನ್ನು ಎಷ್ಟು ದೊಡ್ಡ-ದೊಡ್ಡದಾಗಿ ಕಟ್ಟಿಸುತ್ತಾರೆ, ಧರಣಿಯ ಭಾಗವು ಬಹಳ ದೊಡ್ಡದಾಗಿದೆ. ಹೊಲಗದ್ದೆಗಳೂ ಬೇಕಲ್ಲವೆ. ಪರಮಧಾಮದಲ್ಲಂತೂ ಕೇವಲ ಆತ್ಮರಿರುತ್ತಾರೆ. ಆತ್ಮವು ಶರೀರವಿಲ್ಲದೆ ಹೇಗೆ ತಿನ್ನುವುದು? ಅಲ್ಲಂತೂ ಅಭೋಕ್ತರಾಗಿರುತ್ತೀರಿ, ತಿನ್ನುವ-ಕುಡಿಯುವ ಮಾತೇ ಇರುವುದಿಲ್ಲ. ತಂದೆಯು ತಿಳಿಸುತ್ತಾರೆ - ಈ ಜ್ಞಾನವು ನೀವು ಮಕ್ಕಳಿಗೆ ಇದೆ. ಒಂದೇ ಬಾರಿ ಸಿಗುತ್ತದೆ ಮತ್ತೆ ಕಲ್ಪದ ನಂತರ ನೀವು ಮಕ್ಕಳಿಗೆ ಪುನಃ ತಿಳಿಸಲಾಗುತ್ತದೆ ಅಂದಮೇಲೆ ನಾವೇ ದೇವತಾ ಧರ್ಮದವರಾಗಿದ್ದೆವು ಎಂಬ ನಶೆಯಿರಬೇಕು. ಬಾಬಾ, ಇಂದಿಗೆ 5000 ವರ್ಷಗಳ ಮೊದಲು ನಾವು ಶೂದ್ರರಿಂದ ಬ್ರಾಹ್ಮಣರಾಗಲು ತಮ್ಮ ಬಳಿ ಬಂದಿದ್ದೆವು, ಈಗ ಪುನಃ ನಾವು ತಮ್ಮ ಬಳಿ ಬಂದಿದ್ದೇವೆ ಎಂದು ನೀವು ಹೇಳುತ್ತೀರಿ. ತಂದೆಯು ನಿರಾಕಾರನಾಗಿರುವ ಕಾರಣ ದಾದಾರವರ ಬಳಿ ಬಂದಿದ್ದೇವೆ, ತಂದೆಯು ಇವರಲ್ಲಿ ಪ್ರವೇಶ ಮಾಡಿದ್ದಾರೆಂದು ಹೇಳುತ್ತೀರಿ. ತಂದೆಯು ತಿಳಿಸುತ್ತಾರೆ - ಹೇಗೆ ನೀವು ಕರ್ಮೇಂದ್ರಿಯಗಳನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸುತ್ತೀರೋ ಹಾಗೆಯೇ ನಾವೂ ಸಹ ಕರ್ಮೇಂದ್ರಿಯಗಳ ಆಧಾರವನ್ನು ತೆಗೆದುಕೊಳ್ಳುತ್ತೇನೆ, ಇಲ್ಲವೆಂದರೆ ಹೇಗೆ ನಾನು ಪಾತ್ರವನ್ನಭಿನಯಿಸಲಿ? ಶಿವ ಜಯಂತಿಯನ್ನೂ ಆಚರಿಸುತ್ತಾರೆ. ಶಿವನು ನಿರಾಕಾರನಾಗಿದ್ದಾರೆ ಅಂದಮೇಲೆ ಅವರ ಜಯಂತಿ ಹೇಗಾಯಿತು? ಮನುಷ್ಯರು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ, ನಾನು ಹೇಗೆ ಬಂದು ನೀವು ಮಕ್ಕಳಿಗೆ ರಾಜಯೋಗವನ್ನು ಕಲಿಸಲಿ ಎಂದು ತಂದೆಯು ಹೇಳುತ್ತಾರೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಲು ತಂದೆಯೇ ಬಂದು ರಾಜಯೋಗವನ್ನು ಕಲಿಸುತ್ತಾರೆ ನನಗೇ ಪತಿತ-ಪಾವನ, ಜ್ಞಾನ ಸಾಗರನೆಂದು ಹೇಳುತ್ತಾರೆ. ನನಗೆ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವಿದೆಯೆಂದು ತಂದೆಯು ಹೇಳುತ್ತಾರೆ.
ತಂದೆಯು ಇವರಲ್ಲಿ ಪ್ರವೇಶ ಮಾಡಿ ನಮಗೆ ಎಲ್ಲಾ ಜ್ಞಾನವನ್ನು ತಿಳಿಸುತ್ತಾರೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಬ್ರಹ್ಮಾ, ವಿಷ್ಣು, ಶಂಕರರ ಪಾತ್ರವನ್ನೂ ತಿಳಿದುಕೊಳ್ಳಬೇಕು. ತಂದೆಯು ಪತಿತ-ಪಾವನನೆಂಬುದನ್ನು ತಿಳಿದುಕೊಂಡಿದ್ದೀರಿ, ಪ್ರತಿಯೊಬ್ಬರ ಮಹಿಮೆಯು ಬೇರೆ-ಬೇರೆ, ಕರ್ತವ್ಯವು ಬೇರೆ-ಬೇರೆಯಾಗಿರುತ್ತದೆ. ರಾಷ್ಟ್ರಪತಿ, ಪ್ರಧಾನ ಮಂತ್ರಿ ಇತ್ಯಾದಿಯಾಗುತ್ತಾರೆ. ಇದು ನನ್ನ ಶರೀರವಾಗಿದೆ, ನಾನು ಪ್ರಧಾನ ಮಂತ್ರಿಯಾಗಿದ್ದೇನೆಂದು ಆತ್ಮವೇ ಹೇಳುತ್ತದೆ. ಆತ್ಮವು ಶರೀರದ ಜೊತೆ ಇಲ್ಲವೆಂದರೆ ಮಾತನಾಡಲು ಸಾಧ್ಯವಿಲ್ಲ. ಶಿವ ತಂದೆಯೂ ನಿರಾಕಾರನಾಗಿದ್ದಾರೆ, ಅವರೂ ಸಹ ಮಾತನಾಡುವುದಕ್ಕಾಗಿ ಕರ್ಮೇಂದ್ರಿಯಗಳ ಆಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದ್ದರಿಂದ ಬಾಯಿಂದ ಗಂಗೆಯು ಬಂದಿತೆಂದು ತೋರಿಸುತ್ತಾರೆ. ಶಿವನಂತೂ ಬಿಂದುವಾಗಿದ್ದಾರೆ ಅಂದಮೇಲೆ ಅವರಿಗೆ ಬಾಯಿ ಎಲ್ಲಿಂದ ಬಂದಿತು? ಆದ್ದರಿಂದ ಇವರಲ್ಲಿ (ಬ್ರಹ್ಮಾ) ಬಂದು ಕುಳಿತುಕೊಂಡು ಜ್ಞಾನ ಗಂಗೆಯನ್ನು ಹೊರ ಹಾಕುತ್ತಾರೆ. ತಂದೆಯೇ ಹೇ ಪತಿತ-ಪಾವನ ಬನ್ನಿ, ಈ ದುಃಖದಿಂದ ಬಿಡಿಸಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಅವರೇ ಅತಿ ದೊಡ್ಡ ಸರ್ಜನ್ ಆಗಿದ್ದಾರೆ. ಅವರಲ್ಲಿಯೇ ಪತಿತರನ್ನು ಪಾವನ ಮಾಡುವ ಜ್ಞಾನವಿದೆ. ಎಲ್ಲಾ ಪತಿತರನ್ನು ಪಾವನ ಮಾಡುವ ಸರ್ಜನ್ ಒಬ್ಬರೇ ಆಗಿದ್ದಾರೆ, ಸತ್ಯಯುಗದಲ್ಲಿ ಎಲ್ಲರೂ ನಿರೋಗಿಗಳಿರುತ್ತಾರೆ. ಈ ಲಕ್ಷ್ಮೀ-ನಾರಾಯಣರು ಸತ್ಯಯುಗದ ಮಾಲೀಕರಾಗಿದ್ದಾರೆ. ಇವರಿಗೆ ಇಂತಹ ಕರ್ಮವನ್ನು ಯಾರು ಕಲಿಸಿದರು? ಯಾವುದರಿಂದ ಇಷ್ಟು ನಿರೋಗಿಗಳಾದರು! ತಂದೆಯೇ ಬಂದು ಶ್ರೇಷ್ಠ ಕರ್ಮವನ್ನು ಕಲಿಸುತ್ತಾರೆ. ಇಲ್ಲಂತೂ ಕರ್ಮವೇ ಕುಟುಕುತ್ತಿರುತ್ತದೆ. ಸತ್ಯಯುಗದಲ್ಲಿ ಕರ್ಮವು ಹೀಗಿದೆ ಎಂಬ ಮಾತನ್ನು ಹೇಳುವುದಿಲ್ಲ. ಅಲ್ಲಿ ಯಾವುದೇ ದುಃಖ ರೋಗವಿರುವುದಿಲ್ಲ. ಇಲ್ಲಂತೂ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ಇದು ಕರ್ಮ ಭೋಗವೆಂದು ಹೇಳಲು ಸತ್ಯ-ತ್ರೇತಾಯುಗದಲ್ಲಿ ದುಃಖದ ಮಾತೇ ಇರುವುದಿಲ್ಲ. ಕರ್ಮ, ಅಕರ್ಮ, ವಿಕರ್ಮದ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಕ್ಕೇ ಸಾಧ್ಯವಿಲ್ಲ. ನಿಮಗೆ ತಿಳಿದಿದೆ - ಪ್ರತಿಯೊಂದು ವಸ್ತು ಮೊದಲು ಸತೋಪ್ರಧಾನ, ನಂತರ ಸತೋ, ರಜೋ, ತಮೋ ಆಗುತ್ತದೆ. ಸತ್ಯಯುಗದಲ್ಲಿ ಪಂಚ ತತ್ವಗಳೂ ಸಹ ಸತೋಪ್ರಧಾನವಾಗಿರುತ್ತದೆ. ನಮ್ಮ ಶರೀರವೂ ಸಹ ಸತೋಪ್ರಧಾನ ಪ್ರಕೃತಿಯದಾಗಿರುತ್ತದೆ, ನಂತರ ಆತ್ಮನಲ್ಲಿ ಎರಡು ಕಲೆಗಳು ಕಡಿಮೆಯಾಗುವ ಕಾರಣ ಶರೀರವೂ ಅದೇ ರೀತಿಯಾಗುತ್ತದೆ. ಸೃಷ್ಟಿಗೂ ಎರಡು ಕಲೆಗಳು ಕಡಿಮೆಯಾಗುತ್ತದೆ. ಇದೆಲ್ಲವನ್ನೂ ತಂದೆಯೇ ತಿಳಿಸುತ್ತಾರೆ, ಮತ್ತ್ಯಾರೂ ತಿಳಿಸುವುದಿಲ್ಲ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈಗಿನಿಂದಲೇ ತಂದೆಯ ಶ್ರೀಮತದಂತೆ ಇಂತಹ ಶ್ರೇಷ್ಠ ಕರ್ಮಗಳನ್ನು ಮಾಡಬೇಕಾಗಿದೆ ಯಾವುದರಿಂದ ಮತ್ತೆಂದೂ ಕರ್ಮವು ಹಳಿಯುವಂತಾಗಬಾರದು ಅರ್ಥಾತ್ ಕರ್ಮಗಳ ಶಿಕ್ಷೆಯನ್ನು ಅನುಭವಿಸುವಂತಾಗದಿರಲಿ.
2. ಯಾವುದೇ ವಿನಾಶಿ ವಸ್ತುವಿನ ನಶೆಯಿಟ್ಟುಕೊಳ್ಳಬಾರದು. ಈ ದೇಹವೂ ಸಹ ವಿನಾಶಿಯಾಗಿದೆ, ಇದರ ನಶೆಯನ್ನೂ ಇಟ್ಟುಕೊಳ್ಳಬಾರದು, ಸೂಕ್ಷ್ಮ ಬುದ್ಧಿಯವರಾಗಬೇಕಾಗಿದೆ.
ಓಂ ಶಾಂತಿ. ಮಕ್ಕಳು ಈಗ ಬಹಳ ಚೆನ್ನಾಗಿ ತಿಳಿದುಕೊಳ್ಳುತ್ತೀರಿ - ಈಗ ಪತಿತ ಪ್ರಪಂಚದ ಅಂತ್ಯವಾಗುತ್ತಿದೆ, ಪಾವನ ಪ್ರಪಂಚದ ಆದಿಯಾಗುತ್ತಿದೆ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಮಕ್ಕಳಿಗೇ ಈ ಆದೇಶ ಅಥವಾ ಶ್ರೀಮತ ಸಿಗುತ್ತದೆ. ಯಾರು ಕೊಡುತ್ತಾರೆ? ಶ್ರೇಷ್ಠಾತಿ ಶ್ರೇಷ್ಠ ಭಗವಂತ. ಅವರು ಪತಿತರಿಂದ ಪಾವನರಾಗಬೇಕೆಂದು ತಿಳಿಸುತ್ತಾ ಇರುತ್ತಾರೆ. ಈ ಜ್ಞಾನವು ನಿಮಗಾಗಿ ಇದೆ ಮತ್ತೆಲ್ಲರೂ ಪತಿತರಾಗಿದ್ದಾರೆ. ಈ ಪತಿತ ಪ್ರಪಂಚದ ವಿನಾಶವು ಖಂಡಿತ ಆಗುವುದು. ವಿಕಾರಿಗೇ ಪತಿತರೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಜನ್ಮ ಜನ್ಮಾಂತರದಿಂದ ನೀವು ಒಬ್ಬರು ಇನ್ನೊಬ್ಬರಿಗೆ ದುಃಖ ಕೊಡುತ್ತಾ ಬಂದಿದ್ದೀರಿ. ಆದ್ದರಿಂದ ನೀವು ಆದಿ-ಮಧ್ಯ-ಅಂತ್ಯ ದುಃಖವನ್ನು ಪಡೆಯುತ್ತೀರಿ. ಒಬ್ಬರು ಇನ್ನೊಬ್ಬರನ್ನು ಪತಿತರನ್ನಾಗಿ ಮಾಡುತ್ತೀರಿ. ನಾವು ಪತಿತರಾಗಿದ್ದೇವೆಂದು ಕರೆಯುತ್ತಾರೆ ಆದರೆ ಬುದ್ಧಿಯಲ್ಲಿ ಪೂರ್ಣ ರೀತಿಯಲ್ಲಿ ಕುಳಿತುಕೊಳ್ಳುವುದಿಲ್ಲ. ಪತಿತ-ಪಾವನ ಬನ್ನಿ ಎಂದು ಹೇಳುತ್ತಾರೆ ಆದರೂ ಪತಿತತನವನ್ನು ಬಿಡುವುದೇ ಇಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಇದೆಲ್ಲವೂ ಪಾವನರಾಗುವ ಮಾತಾಗಿದೆ, ಇದನ್ನು ತಿಳಿಸುವವರೂ ಸಹ ಯಾರಾದರೂ ಬೇಕಲ್ಲವೆ ಅಂದಾಗ ಒಬ್ಬ ತಂದೆಯೇ ತಿಳಿಸುವವರಾಗಿದ್ದಾರೆ. ಬಾಕಿ ಈ ಗುರುಗಳೂ ಯಾರೂ ಸಹ ಯಾರನ್ನೂ ಪಾವನ ಮಾಡಲು ಸಾಧ್ಯವಿಲ್ಲ. ಪಾವನರೂ ಸಹ ಕೇವಲ ಒಂದು ಜನ್ಮಕ್ಕಾಗಿ ಅಲ್ಲ ಜನ್ಮ ಜನ್ಮಾಂತರಕ್ಕಾಗಿ ಆಗಬೇಕಾಗಿದೆ. ನಿಮ್ಮಲ್ಲಿಯೂ ಯಾರು ಜ್ಞಾನವಂತರಿದ್ದಾರೆಯೋ ಅವರು ತೀಕ್ಷ್ಣವಾಗಿರುತ್ತಾರೆ, ಡ್ರಾಮಾನುಸಾರ ಅದು ನಿಗಧಿಯಾಗಿದೆ. ನಿಮ್ಮಲ್ಲಿಯೂ ಮಹಾವೀರತನವಿರಬೇಕು. ತಂದೆಯ ನೆನಪಿನಲ್ಲಿದ್ದಾಗಲೇ ಅದು ಬರುವುದು. ತಂದೆಯು ಬಹಳ ಚೆನ್ನಾಗಿ ತಿಳಿಸುತ್ತಾರೆ. ಹೇಗೆ ತಂದೆಯು ಹೇಳುತ್ತಾರೆ, ಮುಂಜಾನೆ ಎದ್ದು ನೆನಪು ಮಾಡಿ, ನೆನಪು ಮಾಡಲು ಆ ಸಮಯವು ಬಹಳ ಸುಂದರವಾಗಿದೆ ಅದಕ್ಕೆ ಪ್ರಭಾತವೆಂದು ಹೇಳಲಾಗುತ್ತದೆ. ಭಕ್ತಿಮಾರ್ಗದಲ್ಲಿಯೂ ಹೇ ನನ್ನ ಮನವೇ ಮುಂಜಾನೆ ರಾಮ ಸ್ಮರಣೆ ಮಾಡು ಎಂದು ಹೇಳುತ್ತಾರೆ, ತಂದೆಯೂ ಸಹ ಹೇಳುತ್ತಾರೆ - ಮುಂಜಾನೆ ಎದ್ದು ತಂದೆಯಾದ ನನ್ನನ್ನು ನೆನಪು ಮಾಡಿರಿ ಆಗ ಬಹಳ ಮಜಾ ಬರುವುದು. ತಂದೆಯ ನೆನಪಿನಲ್ಲಿ ಕುಳಿತು ಇದೇ ಚಿಂತನೆ ಮಾಡಬೇಕು - ಯಾರಿಗೆ ಹೇಗೆ ತಿಳಿಸಿಕೊಡುವುದು? ಅಮೃತವೇಳೆ ವಾಯುಮಂಡಲವು ಬಹಳ ಶುದ್ಧವಾಗಿರುತ್ತದೆ, ದಿನದಲ್ಲಂತೂ ಉದ್ಯೋಗ-ವ್ಯವಹಾರಗಳ ಜಂಜಾಟವಿರುತ್ತದೆ. ರಾತ್ರಿ 12 ಗಂಟೆಯವರೆಗೆ ವಿಕಾರಿ ವಾಯುಮಂಡಲವಿರುತ್ತದೆ. ಸಾಧು-ಸಂತ ಭಕ್ತರೆಲ್ಲರೂ ಮುಂಜಾನೆಯ ಸಮಯದಲ್ಲಿ ಭಕ್ತಿಮಾಡುತ್ತಾರೆ. ಹಾಗೆ ನೋಡಿದರೆ ದಿನದಲ್ಲಿ ನೆನಪು ಮಾಡಬಹುದು, ಭಲೆ ಉದ್ಯೋಗ-ವ್ಯವಹಾರಗಳಲ್ಲಿರಬಹುದು ಬುದ್ಧಿಯೋಗವು ಯಾವ ದೇವತೆಯ ಪೂಜಾರಿಯಾಗಿರುವರೋ ಅವರ ಬಳಿಯೇ ಇರುವುದು ಆದರೆ ಈ ರೀತಿ ಯಾರಿಗೂ ಇರುವುದಿಲ್ಲ. ಭಕ್ತಿ ಮಾರ್ಗದಲ್ಲಿ ಕೇವಲ ದರ್ಶನಕ್ಕಾಗಿ ಪರಿಶ್ರಮ ಪಡುತ್ತಾರೆ, ಸಿಗುವುದೇನೂ ಇಲ್ಲ. ಅವರೂ ಸಹ ಭಕ್ತಿ ಮಾಡುತ್ತಾ-ಮಾಡುತ್ತಾ ತಮೋಪ್ರಧಾನವಾಗಲೇಬೇಕು. ಭಕ್ತಿಮಾರ್ಗದಲ್ಲಿಯೂ ಶಿವನಿಗೆ ಬಲಿ ಕೊಡುತ್ತಾರೆ, ಅದಕ್ಕೆ ಕಾಶಿ ಕಲ್ವಟ್ ಎಂದು ಹೇಳುತ್ತಾರೆ. ಶಿವನನ್ನು ನೆನಪು ಮಾಡುತ್ತಾ-ಮಾಡುತ್ತಾ ಬಾವಿಯಲ್ಲಿ ಹೋಗಿ ಬೀಳುತ್ತಾರೆ, ಶಿವನಿಗೆ ಬಲಿಯಾಗುತ್ತಾರೆ. ಅದು ಭಕ್ತಿ ಮಾರ್ಗದ ಬಲಿಯಾಗಿದೆ, ಇದು ಜ್ಞಾನ ಮಾರ್ಗದ ಬಲಿಯಾಗಿದೆ. ಅದೂ ಪರಿಶ್ರಮ, ಇದೂ ಪರಿಶ್ರಮವಾಗಿದೆ, ಭಕ್ತಿ ಮಾರ್ಗದಲ್ಲಿ ಇದರಿಂದೇನೂ ಲಾಭವಿಲ್ಲ. ಇದು ಹೇಗೆ ಆತ್ಮವು ತನ್ನ ಶರೀರವನ್ನು ಘಾತ ಮಾಡಿಕೊಂಡಂತೆ. ಇದು ಜ್ಞಾನವಲ್ಲ, ಆತ್ಮವೇ ಪರಮಾತ್ಮನೆಂದು ಅವರು ಹೇಳಿ ಬಿಡುತ್ತಾರೆ, ಆತ್ಮಾಭಿಮಾನಿಯಂತೂ ಒಬ್ಬರೇ ತಂದೆಯಾಗಿದ್ದಾರೆ. ಅವರು ಮಕ್ಕಳಿಗೆ ತಿಳಿಸುತ್ತಾರೆ - ಪರಮಾತ್ಮನು ನಾನೊಬ್ಬನೇ ಆಗಿದ್ದೇನೆ, ಆತ್ಮನೇ ಪರಮಾತ್ಮನೆಂದು ಹೇಳುವುದು ಅತಿ ದೊಡ್ಡ ಸುಳ್ಳಾಗಿದೆ. ಆತ್ಮವೇ ಪರಮಾತ್ಮನಾಗಲು ಸಾಧ್ಯವಿಲ್ಲ.
ತಂದೆಯು ತಿಳಿಸುತ್ತಾರೆ - ನಾನು ಪತಿತರನ್ನು ಪಾವನರನ್ನಾಗಿ ಮಾಡುವುದಕ್ಕಾಗಿಯೇ ಬರುತ್ತೇನೆ ಅಂದಾಗ ಪಾವನರನ್ನಾಗಿ ಮಾಡುತ್ತಿದ್ದೇನೆ. ಉಳಿದಂತೆ ಡ್ರಾಮಾದಲ್ಲಿ ಏನಾಗುವುದಿದೆಯೋ ಅದೇ ಆಗುವುದು. ತಿಳಿದುಕೊಳ್ಳಿ, ಭೂಕಂಪವಾಗುತ್ತದೆ ಮನೆ ಬೀಳುತ್ತದೆ ಎಂದರೆ ಡ್ರಾಮಾದಲ್ಲಿ ಇದೇ ರೀತಿಯಿತ್ತು, ಕಲ್ಪದ ಹಿಂದೆಯೂ ಇದೇ ರೀತಿ ಆಗಿತ್ತು, ಇದರಲ್ಲಿ ಸ್ಥಿತಿಯು ಸ್ವಲ್ಪವೂ ಅಲುಗಾಡುವ ಅವಶ್ಯಕತೆಯಿಲ್ಲ. ಡ್ರಾಮಾದ ಮೇಲೆ ಧೃಡವಾಗಿ ನಿಂತಿರಬೇಕಾಗಿದೆ, ಅಂತಹವರಿಗೇ ಮಹಾವೀರರೆಂದು ಹೇಳಲಾಗುತ್ತದೆ. ಅಪಘಾತಗಳಂತೂ ಬಹಳಷ್ಟು ಆಗುತ್ತಲೇ ಇರುತ್ತವೆ. ಯಾರದೇ ರಕ್ಷಣೆ ಮಾಡಲು ಸಾಧ್ಯವೇ? ಇದಂತೂ ಡ್ರಾಮಾದಲ್ಲಿ ನಿಗಧಿಯಾಗಿದೆ, ಡ್ರಾಮಾದಲ್ಲಿ ಇದೇರೀತಿ ಪಾತ್ರವಿದೆ. ಯಾರು ಡ್ರಾಮಾವನ್ನು ತಿಳಿದುಕೊಂಡಿಲ್ಲವೋ ಅವರು ದೇಹವನ್ನು ನೆನಪು ಮಾಡಿಕೊಂಡು ಕಣ್ಣೀರನ್ನು ಸುರಿಸುತ್ತಾರೆ. ಅವರೆಂದೂ ಶಿವ ತಂದೆಯನ್ನು ನೆನಪು ಮಾಡಲು ಸಾಧ್ಯವಿಲ್ಲ ಏಕೆಂದರೆ ಶಿವ ತಂದೆಯೊಂದಿಗೆ ಪ್ರೀತಿಯಿಲ್ಲ, ಸತ್ಯವಾದ ಪ್ರೀತಿಯಿಲ್ಲ. ಇಂತಹ ತಂದೆಯ ಜೊತೆಯಂತೂ ಸಂಪೂರ್ಣ ಪ್ರೀತಿಯನ್ನಿಡಬೇಕು. ನೀವು ಕಲ್ಪ-ಕಲ್ಪವೂ ಶಿವ ತಂದೆಯ ಜೊತೆ ಪ್ರೀತಿ ಬುದ್ಧಿಯವರಾಗುತ್ತೀರಿ, ದೇವತೆಗಳಿಗೆ ತಂದೆಯ ಜೊತೆ ಪ್ರೀತಿ ಬುದ್ಧಿಯಿತ್ತು, ಆ ಪ್ರೀತಿಯಿಂದ ಅವರು ಆ ಪದವಿಯನ್ನು ಪಡೆದಿದ್ದಾರೆಂದು ಹೇಳುವುದಿಲ್ಲ. ಅವರಿಗೆ ಅಲ್ಲಿ ಏನೂ ತಿಳಿದಿರುವುದಿಲ್ಲ. ಇಡೀ ಕಲ್ಪದಲ್ಲಿ ತಂದೆಯ ಜೊತೆ ಪ್ರೀತಿಯನ್ನಿಡಲು ನಿಮಗೆ ಅವರ ಬಗ್ಗೆ ತಿಳಿದಿರುವುದೇ ಇಲ್ಲ. ಈಗ ತಂದೆಯು ತಮ್ಮ ಪರಿಚಯ ನೀಡಿದ್ದಾರೆ, ತಂದೆಯು ತಿಳಿಸುತ್ತಾರೆ - ಮತ್ತೆಲ್ಲಾ ಸಂಗಗಳನ್ನು ಬಿಟ್ಟು ನನ್ನೊಬ್ಬನ ಸಂಗ ಮಾಡಿ. ಇದು ಖಂಡಿತವಾಗಿಯೂ ವಿನಾಶಕಾಲವಾಗಿದೆ, ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಮನುಷ್ಯರು ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ನೀವೀಗ ತಿಳಿದುಕೊಳ್ಳುತ್ತೀರಿ - ನಾವು ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೆನಪು ಮಾಡದ ಹೊರತು ಸತೋಪ್ರಧಾನರಾಗಲು ಸಾಧ್ಯವಿಲ್ಲ. ಸರ್ಜನ್ ಆಗಿ ತಮ್ಮ ರೋಗವನ್ನು ನೋಡಿಕೊಳ್ಳಬೇಕಾಗಿದೆ. ಶ್ರೀಮತದಂತೆ ನೋಡಿಕೊಳ್ಳಿ - ತಂದೆಯ ಜೊತೆ ನನಗೆ ಎಷ್ಟು ಪ್ರೀತಿಯಿದೆ? ಅಮೃತವೇಳೆ ತಂದೆಯನ್ನು ನೆನಪು ಮಾಡುವುದು ಒಳ್ಳೆಯದಾಗಿದೆ. ಮುಂಜಾನೆಯ ಸಮಯವು ಬಹಳ ಚೆನ್ನಾಗಿರುತ್ತದೆ, ಆ ಸಮಯದಲ್ಲಿ ಮಾಯೆಯ ಬಿರುಗಾಳಿಗಳು ಬರುವುದಿಲ್ಲ. ರಾತ್ರಿ 12 ಗಂಟೆಯವರೆಗೆ ತಪಸ್ಸು ಮಾಡುವುದರಿಂದ ಯಾವುದೇ ಲಾಭವಿರುವುದಿಲ್ಲ ಏಕೆಂದರೆ ಆ ಸಮಯವೇ ಕೊಳಕಾಗಿರುತ್ತದೆ. ವಾಯುಮಂಡಲವು ಅಶುದ್ಧವಾಗಿರುತ್ತದೆ, ಆದ್ದರಿಂದ ಒಂದು ಗಂಟೆಯವರೆಗೆ ಬಿಟ್ಟು ಬಿಡಬೇಕು. ಒಂದು ಗಂಟೆಯ ನಂತರ ವಾಯುಮಂಡಲವು ಬಹಳ ಚೆನ್ನಾಗಿರುತ್ತದೆ. ತಂದೆಯು ತಿಳಿಸುತ್ತಾರೆ - ನಿಮ್ಮದು ಸಹಜ ರಾಜಯೋಗವಾಗಿದೆ, ಭಲೆ ಆರಾಮವಾಗಿ ಕುಳಿತುಕೊಳ್ಳಿ. ಬ್ರಹ್ಮಾ ತಂದೆಯು ತಮ್ಮ ಅನುಭವವನ್ನು ತಿಳಿಸುತ್ತಾರೆ - ಹೇಗೆ ತಂದೆಯೊಂದಿಗೆ ಮಾತನಾಡುತ್ತೇನೆ ಎಂದು - ಬಾಬಾ, ಇದು ಎಂತಹ ವಿಚಿತ್ರ ನಾಟಕವಾಗಿದೆ! ತಾವು ಹೇಗೆ ಬಂದು ಪತಿತರಿಂದ ಪಾವನರನ್ನಾಗಿ ಮಾಡುತ್ತೀರಿ! ಇಡೀ ಪ್ರಪಂಚವನ್ನು ಹೇಗೆ ಪರಿವರ್ತನೆ ಮಾಡುತ್ತೀರಿ! ಬಹಳ ಅದ್ಭುತವಾಗಿದೆ! ಹೇಗೆ ತಂದೆಗೆ ವಿಚಾರಗಳು ಬರುತ್ತವೆಯೋ ಹಾಗೆಯೇ ಮಕ್ಕಳಿಗೂ ಬರಬೇಕು - ಹೇಗೆ ಮನುಷ್ಯರ ಜೀವನದ ದೋಣಿಯನ್ನು ಪಾರು ಮಾಡುವುದು? ತಂದೆಯು ಹೇಳುತ್ತಾರೆ - ಹೇ ಪತಿತ-ಪಾವನ ಬನ್ನಿ ಎಂದು ನೀವು ಕೂಗುತ್ತಿರುತ್ತೀರಿ. ನಾನೀಗ ಬಂದಿದ್ದೇನೆ, ನೀವು ಪತಿತರಾಗಬೇಡಿ. ಪತಿತರಾಗಿ ಸಭೆಯಲ್ಲಿ ಬಂದು ಕುಳಿತುಕೊಳ್ಳಬೇಡಿ. ಹಾಗಿದ್ದರೆ ವಾಯುಮಂಡಲವನ್ನು ಅಶುದ್ಧ ಮಾಡಿಬಿಡುತ್ತೀರಿ. ತಂದೆಗಂತೂ ಅರ್ಥವಾಗುತ್ತದೆ, ದೆಹಲಿಯಲ್ಲಿ ಬಾಂಬೆಯಲ್ಲಿ ಹೀಗೆ ವಿಕಾರದಲ್ಲಿ ಹೋಗುವವರು ಬಂದು ಕುಳಿತು ಬಿಡುತ್ತಿದ್ದರು, ಅಸುರರು ಬಂದು ವಿಘ್ನ ಹಾಕಲು ಕುಳಿತುಕೊಳ್ಳುತ್ತಿದ್ದರೆಂದು ಗಾಯನವಿದೆ. ವಿಕಾರದಲ್ಲಿ ಹೋಗುವವರಿಗೆ ಅಸುರರೆಂದು ಹೇಳಲಾಗುತ್ತದೆ. ವಾಯುಮಂಡಲವನ್ನು ಹಾಳು ಮಾಡುತ್ತಾರೆ, ಅವರಿಗೆ ಬಹಳ ಕಠಿಣ ಶಿಕ್ಷೆಯಾಗುತ್ತದೆ. ತಂದೆಯು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ ಆದರೂ ಸಹ ತಮಗೆ ನಷ್ಟ ಮಾಡಿಕೊಳ್ಳದೆ ಇರುವುದೇ ಇಲ್ಲ. ಸುಳ್ಳನ್ನೂ ಹೇಳುತ್ತಾರೆ, ಇಲ್ಲವಾದರೆ ಕೂಡಲೇ ಬರೆದು ಬಿಡಬೇಕು - ಬಾಬಾ, ನನ್ನಿಂದ ಈ ತಪ್ಪಾಯಿತು ಕ್ಷಮಿಸಿ ಎಂದು ತಮ್ಮ ಪಾಪವನ್ನು ಬರೆಯಿರಿ, ಇಲ್ಲದಿದ್ದರೆ ಅದು ವೃದ್ಧಿ ಹೊಂದುತ್ತಾ ಇರುತ್ತದೆ ಮತ್ತು ರಸಾತಳಕ್ಕೆ ಹೊರಟು ಹೋಗುತ್ತದೆ. ಬಹಳಷ್ಟು ಕಡೆ ಬರುತ್ತಾರೆ, ಬಂದು ಇನ್ನೂ ಕಿವಿಗಳನ್ನು ಕತ್ತರಿಸಿಕೊಳ್ಳುತ್ತಾರೆ, ಇದೂ ಸಹ ಡ್ರಾಮಾದಲ್ಲಿ ಪಾತ್ರವಿದೆ. ಇಂತಹ ಅಸುರರು ಕಲ್ಪದ ಮೊದಲೂ ಇದ್ದರು, ಈಗಲೂ ಇದ್ದಾರೆ. ಅಮೃತವನ್ನು ಬಿಟ್ಟು ವಿಷವನ್ನು ಕುಡಿಯುತ್ತಾರೆ, ತಮಗೆ ಘಾತ ಮಾಡಿಕೊಳ್ಳುತ್ತಾರೆ ಮತ್ತು ಅನ್ಯರಿಗೂ ನಷ್ಟವನ್ನುಂಟು ಮಾಡುತ್ತಾರೆ, ವಾಯುಮಂಡಲವನ್ನು ಕೆಡಿಸಿ ಬಿಡುತ್ತಾರೆ. ಬ್ರಾಹ್ಮಿಣಿಯರೂ ಸಹ ಎಲ್ಲರೂ ಒಂದೇ ಸಮಾನರಾಗಿಲ್ಲ, ಮಹಾರಥಿಗಳು, ಕುದುರೆ ಸವಾರರು ಕಾಲಾಳುಗಳು ಎಲ್ಲರೂ ಇದ್ದಾರೆ.
ನೀವು ಮಕ್ಕಳಿಗೆ ಅಪಾರ ಖುಷಿಯಿರಬೇಕು - ಬಾಬಾ ಸಿಕ್ಕಿದರು ಅಂದಮೇಲೆ ಮತ್ತೇನು ಬೇಕು! ತಮ್ಮ ಮಕ್ಕಳನ್ನೂ ಸಹ ಸಂಭಾಲನೆ ಮಾಡಬೇಕಾಗಿದೆ, ಬಾಬಾ ಇವರೆಲ್ಲರೂ ತಮ್ಮ ಮಕ್ಕಳಾಗಿದ್ದಾರೆ, ನೀವೇ ಸಂಭಾಲನೆ ಮಾಡಿ ನಾವಂತೂ ನಿಮ್ಮವರಾಗಿ ಬಿಟ್ಟೆವು ಎಂದಲ್ಲ. ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಫ ಸಮಾನ ಪವಿತ್ರರಾಗಿರಿ, ಯಾವುದೇ ಪತಿತ ಕರ್ಮವನ್ನು ಮಾಡಬೇಡಿ. ಮೊದಲ ಮಾತು - ಕಾಮದ್ದಾಗಿದೆ. ದ್ರೌಪದಿಯೂ ಸಹ ಇದಕ್ಕಾಗಿಯೇ ಕರೆದಳು, ನನ್ನನ್ನು ಇವರು ಅಪಮಾನ ಮಾಡುತ್ತಾರೆ ಎಂದು. ಯಾವಾಗ ಕೇಳುವಂತಹ ತಂದೆಯು ಬಂದಿದ್ದರೋ ಆಗಲೇ ಕರೆದಳು. ತಂದೆಯು ಬರುವುದಕ್ಕೆ ಮೊದಲು ಯಾರೂ ಕರೆಯುವುದಿಲ್ಲ. ಯಾರನ್ನು ಕರೆಯುತ್ತಾರೆ? ತಂದೆಯು ಬಂದಿದ್ದಾರೆ ಆದ್ದರಿಂದಲೇ ಕರೆಯುತ್ತಾರೆ. ಪತಿತರಿಂದ ಪಾವನರಾಗಿ ಮತ್ತೆ ಎಲ್ಲಿ ಹೋಗುವರು? ಹಿಂತಿರುಗಿ ಹೋಗಬೇಕಾಗಿದೆ. ಅದಂತೂ ಇದೇ ಸಮಯವಾಗಿದೆ. ಎಲ್ಲರ ಸದ್ಗತಿದಾತ, ಮುಕ್ತಿದಾತನು ಒಬ್ಬರೇ ಆಗಿದ್ದಾರೆ. ಇಲ್ಲಂತೂ ದುಃಖವಿದೆ, ಸಾಧು-ಸಂತ ಮೊದಲಾದವರು ಯಾರೂ ಸಹ ಸುಖಿಯಾಗಿರಲು ಸಾಧ್ಯವಿಲ್ಲ. ಎಲ್ಲರಿಗೂ ಯಾವುದಾದರೊಂದು ದುಃಖ, ರೋಗ ಇತ್ಯಾದಿ ಇದ್ದೇ ಇರುತ್ತದೆ. ಕೆಲವರು ಗುರುಗಳು ಕುರುಡರು, ಕುಂಟರೂ ಇರುತ್ತಾರೆ ಅಂದಮೇಲೆ ಅವರು ಅವಶ್ಯವಾಗಿ ಅಂತಹ ಯಾವುದೋ ಕೆಲಸ ಮಾಡಿದ್ದಾರೆ. ಆದ್ದರಿಂದಲೇ ಕುರುಡರು ಕುಂಟರಾಗುತ್ತಾರೆ. ಸತ್ಯಯುಗದಲ್ಲಿ ಯಾರೂ ಕುರುಡ, ಕುಂಟರಿರುವುದಿಲ್ಲ, ಮನುಷ್ಯರಿಗೆ ಇದು ತಿಳಿದಿದೆಯೇ! ತಂದೆಯೇ ಬಂದು ತಿಳಿಸುತ್ತಾರೆ. ತಂದೆಯೇ ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆ. ಉಳಿದೆಲ್ಲವೂ ಭಕ್ತಿಯಾಗಿದೆ. ಭಕ್ತಿಮಾರ್ಗವೇ ಬೇರೆಯಾಗಿದೆ, ಅದು ಏಣಿಯನ್ನು ಇಳಿಯುವ ಮಾರ್ಗವಾಗಿದೆ. ಇಳಿಯುತ್ತಾ ಜೀವನ ಬಂಧನದಲ್ಲಿ ಬರಲು 84 ಜನ್ಮಗಳು ಹಿಡಿಸುತ್ತವೆ, ಜೀವನ್ಮುಕ್ತರಾಗಲು ಕೇವಲ ಒಂದು ಸೆಕೆಂಡ್ ಹಿಡಿಸುತ್ತದೆ. ಆದರೆ ತಂದೆಯ ಮತದಂತೆ ನಡೆದು ಅವರನ್ನು ನೆನಪು ಮಾಡಿದಾಗ ಮಾತ್ರ. ನಂಬರ್ವಾರಂತೂ ಇರುತ್ತಾರಲ್ಲವೆ. ಬಾಬಾ, ನಮಗೆ ಇಂತಹ ಶಿಕ್ಷಕಿಯರು ಸಿಕ್ಕಿದರೆ ಒಳ್ಳೆಯದು ಎಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ತಾನೂ ನಿರ್ಬಲರಾಗಿದ್ದಾರೆ, ಆದ್ದರಿಂದಲೇ ಇಂತಹವರನ್ನು 2-4 ತಿಂಗಳಿಗಾಗಿ ಕಳುಹಿಸಿ ಎಂದು ಹೇಳುತ್ತಾರೆ. ತಂದೆಯು ಹೇಳುತ್ತಾರೆ - ಇದೂ ಸಹ ತಪ್ಪಾಗಿದೆ, ಯಾವಾಗ ತಂದೆಯು ಕೇವಲ ನನ್ನೊಬ್ಬನನ್ನು ನೆನಪು ಮಾಡಿ ಮತ್ತು ಸ್ವದರ್ಶನ ಚಕ್ರವನ್ನು ತಿರುಗಿಸಿ, ಅನ್ಯರಿಗೂ ತಿಳಿಸಿಕೊಡಿ ಎಂದು ಸಹಜ ಮಾತನ್ನು ತಿಳಿಸುತ್ತಾರೆ ಅಂದಮೇಲೆ ನೀವು ಬ್ರಾಹ್ಮಣಿಯರನ್ನು ಏಕೆ ನೆನಪು ಮಾಡುತ್ತೀರಿ! ಇದರಲ್ಲಿ ಬ್ರಾಹ್ಮಣಿಯರು ಏನು ಮಾಡುತ್ತಾರೆ? ಇದಂತೂ ಸೆಕೆಂಡಿನ ಮಾತಾಗಿದೆ. ನೀವು ಉದ್ಯೋಗ-ವ್ಯವಹಾರಗಳಲ್ಲಿ ಇದನ್ನು ಮರೆತು ಹೋಗುತ್ತೀರಿ, ಆಗಲೂ ಸಹ ಬ್ರಾಹ್ಮಿಣಿಯು ಇದನ್ನೇ ಹೇಳುವರು - ಮನ್ಮಾನಭವ. ಕೆಲವರು ಮಂಧ ಬುದ್ಧಿಯವರು ತಿಳಿದುಕೊಳ್ಳುವುದೇ ಇಲ್ಲ. ಕೇವಲ ಒಳ್ಳೆಯ ಬ್ರಾಹ್ಮಿಣಿ ಬೇಕೆಂದು ಹೇಳುತ್ತಾರೆ. ನಿಮಗೆ ಜ್ಞಾನವಂತೂ ಸಿಕ್ಕಿದೆಯಲ್ಲವೆ ಅಂದಮೇಲೆ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿ, ದೇಹದ ಅಭಿಮಾನವನ್ನು ಬಿಡಿ. ಇದು ನಮ್ಮ ಸೇವಾಕೇಂದ್ರವಾಗಿದೆ, ಇದು ಇವರ ಸೇವಾಕೇಂದ್ರವಾಗಿದೆ, ಈ ವಿದ್ಯಾರ್ಥಿಗಳು ಇಲ್ಲಿಗೇಕೆ ಹೋಗುತ್ತಾರೆ.... ಇದೆಲ್ಲವೂ ದೇಹಾಭಿಮಾನವಾಗಿದೆ. ಎಲ್ಲವೂ ಶಿವ ತಂದೆಯ ಸೇವಾಕೇಂದ್ರಗಳಾಗಿವೆ, ನಮ್ಮ ಸೇವಾಕೇಂದ್ರಗಳೇನು! ಇಂತಹವರು ನಮ್ಮ ಸೇವಾಕೇಂದ್ರಕ್ಕೆ ಏಕೆ ಬರುವುದಿಲ್ಲವೆಂದು ನಿಮಗೇಕೆ ಸಂಕಲ್ಪ ಬರುತ್ತದೆ! ಎಲ್ಲಿಯಾದರೂ ಹೋಗಲಿ. ತಂದೆಯು ಯಾವಾಗಲೂ ಹೇಳುತ್ತಾರೆ - ಯಾರೊಂದಿಗೂ ಬೇಡಬೇಡಿ, ಇದನ್ನಂತೂ ತಿಳಿದುಕೊಳ್ಳಬಹುದು - ಬೀಜ ಬಿತ್ತಲಿಲ್ಲವೆಂದರೆ ಸಿಗುವುದೇನು? ಭಕ್ತಿಮಾರ್ಗದಲ್ಲಿಯೂ ದಾನ-ಪುಣ್ಯ ಮಾಡಲಾಗುತ್ತದೆ, ನೀವೆಲ್ಲರೂ ಭಕ್ತಿಮಾರ್ಗದಲ್ಲಿ ಈಶ್ವರಾರ್ಥವಾಗಿ ಪರೋಕ್ಷವಾಗಿ ಮಾಡುತ್ತಿದ್ದಿರಿ, ಸನ್ಯಾಸಿಗಳಿಗೂ ಬಹಳ ಕೊಡುತ್ತಾರೆ. ವಾಸ್ತವದಲ್ಲಿ ಬಡವರಿಗೇ ದಾನ ಮಾಡಲಾಗುತ್ತದೆ, ಸಾಹುಕಾರರಿಗಲ್ಲ. ಇದರಲ್ಲಿ ಧಾನ್ಯಗಳ ದಾನವು ಎಲ್ಲದಕ್ಕಿಂತ ಒಳ್ಳೆಯದಾಗಿದೆ. ಅದನ್ನೂ ತಂದೆಯು ತಿಳಿಸುತ್ತಾರೆ, ದಾನ ಮಾಡಿದರೆ ಇನ್ನೊಂದು ಜನ್ಮದಲ್ಲಿ ಅದರ ಫಲವು ಸಿಗುತ್ತದೆ, ಈಶ್ವರನೇ ಎಲ್ಲರಿಗೆ ಫಲ ಕೊಡುತ್ತಾರೆ. ಸಾಧು-ಸಂತ ಮೊದಲಾದ ಯಾರೂ ಸಹ ಪ್ರತೀ ಫಲವನ್ನು ಕೊಡಲು ಸಾಧ್ಯವಿಲ್ಲ, ಕೊಡುವವರು ಒಬ್ಬರೇ ಆಗಿದ್ದಾರೆ. ಅವರು ಯಾರ ಮೂಲಕವಾದರೂ ಕೊಡಬಹುದು. ತಂದೆಯು ತಿಳಿಸುತ್ತಾರೆ - ನೀವು ಈಶ್ವರಾರ್ಥವಾಗಿ ಕೊಡುತ್ತಿದ್ದಿರಿ, ಆಗಲೂ ಸಹ (ಭಕ್ತಿ ಮಾರ್ಗದಲ್ಲಿ) ಇನ್ನೊಂದು ಜನ್ಮದಲ್ಲಿ ನಿಮಗೆ ಅದರ ಫಲವನ್ನು ಕೊಡಿಸುತ್ತಿದ್ದೆನು, ಈಗಂತೂ ನಾನು ಡೈರೆಕ್ಟ್ ಬಂದಿದ್ದೇನೆ. ಈಗ ನಿಮಗೆ 21 ಜನ್ಮಗಳಿಗಾಗಿ ಫಲ ಸಿಗುತ್ತದೆ, ಮೃತ್ಯು ಸನ್ಮುಖದಲ್ಲಿ ನಿಂತಿದೆ. ಭಕ್ತಿಮಾರ್ಗದಲ್ಲಿ ನಿಮಗೆ ಮೃತ್ಯು ಸನ್ಮುಖದಲ್ಲಿ ನಿಂತಿದೆ ಆದ್ದರಿಂದ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಿ ಎಂದು ಹೇಳುತ್ತಿರಲಿಲ್ಲ. ಈಗ ತಂದೆಯು ತಿಳಿಸುತ್ತಾರೆ - ಯಾರು ಬೇಕಾದರೂ ಈ ಆತ್ಮಿಕ ಆಸ್ಪತ್ರೆಯನ್ನು ತೆರೆಯಿರಿ. ಮನೆ ಕಟ್ಟಿಸಿ ಅದರಲ್ಲಿ ಈ ಆಸ್ಪತ್ರೆಯನ್ನು ತೆರೆಯುವುದೇ? ಎಂದು ಕೆಲವರು ಕೇಳುತ್ತಾರೆ ಅದಕ್ಕೆ ತಂದೆಯು ತಿಳಿಸುತ್ತಾರೆ - ಇಂದು ಮನೆ ಕಟ್ಟಿಸಿ ನಾಳೆ ಶರೀರ ಬಿಟ್ಟರೆ ಇದೆಲ್ಲವೂ ಸಮಾಪ್ತಿಯಾಗುವುದು. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ. ಈಗ ಏನಿದೆಯೋ ಅದರಲ್ಲಿಯೇ ಒಂದು ಕೋಣೆಯಲ್ಲಿ ಆತ್ಮಿಕ ಆಸ್ಪತ್ರೆ ಹಾಗೂ ಆತ್ಮಿಕ ಕಾಲೇಜನ್ನು ತೆರೆಯಿರಿ, ಅನೇಕರ ಕಲ್ಯಾಣ ಮಾಡುತ್ತೀರೆಂದರೆ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಒಳ್ಳೆಯದು.