text
stringlengths
0
61.5k
ಮೊಟ್ಟ ಮೊದಲ ಮುಖ್ಯ ಮಾತಾಗಿದೆ, ತಂದೆಯನ್ನು ನೆನಪು ಮಾಡುವುದು. ತಂದೆಯೇ ತಿಳಿಸುತ್ತಾರೆ - ಮನ್ಮನಾಭವ. ನನ್ನನ್ನು ನೆನಪು ಮಾಡಿರಿ ಆಗ ವಿಕರ್ಮ ವಿನಾಶವಾಗುತ್ತದೆ. ಈಗ ಮಾಡಿರಿ ಅಥವಾ ಮಾಡದೇ ಇರಿ ನಿಮ್ಮಿಷ್ಟ. ತಂದೆಯ ಆಜ್ಞೆಯಂತೂ ಸಿಕ್ಕಿದೆ, ಪಾವನ ಪ್ರಪಂಚದಲ್ಲಿ ಹೋಗಬೇಕೆಂದರೆ ಮತ್ತೆ ಪತಿತಪ್ರ ಪಂಚದಲ್ಲಿ ಬುದ್ಧಿಯು ಹೋಗಬಾರದು. ವಿಕಾರದಲ್ಲಿ ಹೋಗಬಾರದು. ತಿಳುವಳಿಕೆಯಂತೂ ಬಹಳ ಸಿಗುತ್ತಾ ಇರುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕು. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಬರೆದುಕೊಂಡು ರಿಪೀಟ್ ಮಾಡಬೇಕಾಗಿದೆ. ಅನ್ಯರಿಗೂ ತಿಳಿಸಬೇಕಾಗಿದೆ. ಎಲ್ಲರಿಗೆ ಮೊಟ್ಟ ಮೊದಲು ತಂದೆಯ ಪರಿಚಯವನ್ನೇ ಕೊಡಬೇಕಾಗಿದೆ.
2. ಪಾವನ ಪ್ರಪಂಚದಲ್ಲಿ ಹೋಗಲು ಈ ಪತಿತ ಪ್ರಪಂಚದಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ.
ಓಂ ಶಾಂತಿ. ಮಕ್ಕಳು ಕುಳಿತಿದ್ದೀರಿ - ನಮ್ಮ ಬಾಪ್ದಾದಾ ಬಂದಿದ್ದಾರೆಂದು ತಿಳಿದುಕೊಳ್ಳುತ್ತಿದ್ದೀರಿ. ತಂದೆಯಂತೂ ದಾದಾರವರ ಜೊತೆ ಕಂಬೈಂಡ್ ಆಗುತ್ತಾರೆ, ಆದ್ದರಿಂದ ಬಾಪ್ದಾದಾ ಬಂದಿದ್ದಾರೆಂದು ಹೇಳುತ್ತೀರಿ. ಅವರು ಶಿಕ್ಷಕನೂ ಆಗಿದ್ದಾರೆ. ತಂದೆಯು ದಾದಾರವರಿಲ್ಲದೆ ಏನನ್ನೂ ತಿಳಿಸಲು ಸಾಧ್ಯವಿಲ್ಲ. ಬುದ್ಧಿಯನ್ನು ಓಡಿಸಬೇಕು ಏಕೆಂದರೆ ಇದು ಹೊಸ ಮಾತಲ್ಲವೆ. ಅಜ್ಞಾನ ಕಾಲದಲ್ಲಿ ಒಬ್ಬರ ನೆನಪು ಮಾಡುತ್ತಾರೆ. ನಮ್ಮ ಗುರು ಇಂತಹ ಸ್ಥಳದಲ್ಲಿದ್ದಾರೆಂದು ಹೇಳುತ್ತಾರೆ, ಅವರ ಶರೀರದ ಹೆಸರನ್ನು ತಿಳಿದುಕೊಂಡಿರುತ್ತಾರೆ. ನಮ್ಮ ತಂದೆ, ನಮ್ಮ ತಾಯಿಯು ಇಂತಹ ಸ್ಥಳದಲ್ಲಿದ್ದಾರೆ, ಅವರಿಗೆ ನಾಮ-ರೂಪ ಎಲ್ಲವೂ ಇದೆ. ಮನುಷ್ಯರು ಮತ್ತೆ ಅದನ್ನು ಸಾರದಲ್ಲಿ ಬರೆದಿದ್ದಾರೆ, ಮನುಷ್ಯರು ಏನೆಲ್ಲವನ್ನೂ ಮಾಡಿದ್ದಾರೆಯೋ ಅದರಲ್ಲಿ ಒಂದಲ್ಲ ಒಂದು ತಪ್ಪುಗಳಿವೆ. ತ್ವಮೇವ ಮಾತಾಶ್ಚ ಪಿತಾ.... ಎಂದು ಭಲೆ ಗಾಯನವಿದೆ, ಇದನ್ನು ಒಬ್ಬರಿಗಾಗಿಯೇ ಹಾಡಲಾಗುತ್ತದೆ. ಬ್ರಹ್ಮಾರವರಿಗೂ ಈ ರೀತಿ ಹಾಡುವುದಿಲ್ಲ, ಇವರ ನಾಮ-ರೂಪವು ಬುದ್ಧಿಯಲ್ಲಿ ಬರುವುದಿಲ್ಲ. ವಿಷ್ಣುವಿನದಾಗಲಿ, ಶಂಕರನದಾಗಲಿ ಬರುವುದಿಲ್ಲ. ನೀವು ಮಾತಾಪಿತಾ, ನಾನು ನಿಮ್ಮ ಬಾಲಕ ಎಂದು ಹಾಡುತ್ತಾರೆ ಆಗಲೂ ಸಹ ಬುದ್ಧಿಯು ಮೇಲೆ ಹೋಗುತ್ತದೆ. ಕೃಷ್ಣನನ್ನು ಯಾರೂ ನೆನಪು ಮಾಡಲು ಸಾಧ್ಯವಿಲ್ಲ. ನೆನಪು ನಿರಾಕಾರನನ್ನೇ ಮಾಡುತ್ತಾರೆ. ಅವರಿಗೆ ಮಹಿಮೆಯಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ಇಲ್ಲಿ ಕುಳಿತುಕೊಳ್ಳುತ್ತೀರೆಂದರೆ ಲೌಕಿಕ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ಪಾರಲೌಕಿಕ ತಂದೆಯನ್ನು ನೆನಪು ಮಾಡಿ. ಈ ಸಮಯದಲ್ಲಿ ಅವರು ಸನ್ಮುಖದಲ್ಲಿದ್ದಾರೆ, ಭಕ್ತಿಮಾರ್ಗದಲ್ಲಿ ಹಾಡುವಾಗ ಮೇಲೆ ನೋಡುತ್ತಾ ನೀವು ಮಾತಾಪಿತಾ.... ಹೇ ಭಗವಂತ ಎಂದು ಹೇಳಿ ನೆನಪು ಮಾಡುತ್ತಾರೆ. ಭಗವಂತ ಎಂದು ಹೇಳಿದಾಗ ಶಿವ ಲಿಂಗವನ್ನೂ ನೆನಪು ಮಾಡುವುದಿಲ್ಲ. ಕೇವಲ ಗಿಳಿಯ ತರಹ ಹಾಡುತ್ತಾರೆ. ಲಕ್ಷ್ಮೀ-ನಾರಾಯಣರಿಗೂ ಈ ರೀತಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಇವರಂತೂ ಮಹಾರಾಜ-ಮಹಾರಾಣಿಯಾಗಿದ್ದಾರೆ. ಅವರ ಮಕ್ಕಳೇ ಅವರನ್ನು ಮಾತಾಪಿತಾ ಎಂದು ಹೇಳುತ್ತಾರೆ, ಬಂದು ಎಂದು ಹೇಳುವುದಿಲ್ಲ. ಭಕ್ತರು ಹೇ ಪತಿತ-ಪಾವನ ಎಂದು ಹಾಡುತ್ತಾರೆ ಆದರೆ ಇದು ಬುದ್ಧಿಯಲ್ಲಿ ಬರುವುದಿಲ್ಲ – ಶಿವ ಲಿಂಗವಿರಬೇಕು ಎಂದು. ಹಾಗೆಯೇ ಕೇವಲ ಹೇ ಭಗವಂತ ಎಂದು ಹೇಳಿ ಬಿಡುತ್ತಾರೆ. ಹೇ ಭಗವಂತ ಎಂದು ಯಾರು ಹೇಳಿದರು? ಯಾರಿಗೆ ಹೇಳಿದರು? ಏನನ್ನೂ ತಿಳಿದುಕೊಂಡಿಲ್ಲ. ಒಂದುವೇಳೆ ನಾನು ಆತ್ಮನಾಗಿದ್ದೇನೆ, ಅವರನ್ನು ಕರೆಯುತ್ತೇನೆ ಎಂಬ ಜ್ಞಾನವು ಇದ್ದಿದ್ದರೆ ಅವರು ನಿರಾಕಾರ ಪರಮಾತ್ಮನಾಗಿದ್ದಾರೆ, ಅವರ ರೂಪವೇ ಲಿಂಗ ರೂಪವಾಗಿದೆ ಎಂಬುದನ್ನೂ ಸಹ ತಿಳಿದುಕೊಳ್ಳುತ್ತಿದ್ದರು. ಯಥಾರ್ಥ ರೀತಿಯಿಂದ ಯಾರೂ ಸಹ ತಂದೆಯನ್ನು ನೆನಪು ಮಾಡುವುದಿಲ್ಲ, ಅವರಿಂದ ಏನು ಪ್ರಾಪ್ತಿಯಾಗುತ್ತದೆ, ಯಾವಾಗ ಆಗುತ್ತದೆ, ಏನನ್ನೂ ತಿಳಿದುಕೊಂಡಿಲ್ಲ. ನಿಮಗೂ ಗೊತ್ತಿರಲಿಲ್ಲ, ಈಗ ನೀವು ತಂದೆಯ ಮಕ್ಕಳಾಗಿದ್ದೀರಿ. ನಿಮಗೆ ಅರ್ಥವಾಗಿದೆ – ಶಿವ ತಂದೆಯು ಬ್ರಹ್ಮಾರವರ ಮೂಲಕ ನಮ್ಮನ್ನು ತಮ್ಮ ಮಕ್ಕಳನ್ನಾಗಿ ಮಾಡಿಕೊಂಡಿದ್ದಾರೆ. ಈ ಬ್ರಹ್ಮಾರವರು ತಾಯಿಯಾಗಿದ್ದಾರೆ. ಈ ಬ್ರಹ್ಮಾ ತಾಯಿಯ ಮೂಲಕ ಶಿವ ತಂದೆಯು ದತ್ತು ಮಾಡಿಕೊಂಡಿದ್ದಾರೆ. ಈ ಸಮಯದಲ್ಲಿ ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಿ - ನಾವು ಶಿವ ತಂದೆಯ ಮಕ್ಕಳಾಗಿದ್ದೇವೆ. ಸಾಕಾರದಲ್ಲಿ ಪ್ರಜಾಪಿತ ಬ್ರಹ್ಮಾರವರ ಮಕ್ಕಳಾಗಿದ್ದೇವೆ. ಪ್ರಜಾಪಿತ ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ. ಯಾವುದೇ ಹೊಸ ಸೃಷ್ಟಿಯನ್ನು ರಚಿಸುತ್ತಾರೆಂದಲ್ಲ. ಈ ಸಮಯದಲ್ಲಿಯೇ ಬಂದು ಮಡಿಲಿಗೆ ತೆಗೆದುಕೊಳ್ಳುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ಮಾತಾಪಿತಾ ಎಂದು ಹೇಳುತ್ತಾರೆ ಅಂದಮೇಲೆ ಶಿವನು ಪಿತನಾದರು ಮತ್ತು ಬ್ರಹ್ಮನು ಮಾತಾ ಆದರು. ಅವರಿಗೇ ಮಾತಾಪಿತಾ ಎಂದು ಹೇಳಲಾಗುತ್ತದೆ. ತಂದೆಯು ಬ್ರಹ್ಮಾರವರ ಮೂಲಕ ಹೇಳುತ್ತಾರೆ - ನೀವಾತ್ಮರು ನನ್ನ ಮಕ್ಕಳಾಗಿದ್ದೀರಿ. ತಂದೆಯು ಕುಳಿತು ಆತ್ಮನ ಪರಿಚಯವನ್ನೂ ಕೊಡುತ್ತಾರೆ - ಆತ್ಮವೆಂದರೇನು? ಭೃಕುಟಿಯ ಮಧ್ಯದಲ್ಲಿ ನಕ್ಷತ್ರದಂತೆ ಇರುತ್ತದೆ ಎಂದು ಹೇಳುತ್ತಾರೆ. ಮತ್ತೇನನ್ನೂ ತಿಳಿದುಕೊಂಡಿಲ್ಲ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ. ಈ ಶರೀರದ ಮೂಲಕ ಪಾತ್ರವನ್ನು ಅಭಿನಯಿಸುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಭಿನ್ನ-ಭಿನ್ನ ನಾಮ-ರೂಪ, ದೇಶ-ಕಾಲಗಳಿಂದ ಆತ್ಮವು ಒಂದು ಶರೀರವನ್ನು ಬಿಡುತ್ತದೆಯೆಂದರೆ ಇಡೀ ಪರಿವಾರವೇ ಬದಲಾಗುತ್ತದೆ. ಹೇಗೆ ಯಾರಾದರೂ ದತ್ತು ಮಾಡಿಕೊಂಡರೆ ಪರಿವಾರವೇ ಬದಲಾಗುತ್ತದೆ, ಯಾವ ಮಾತಾಪಿತರಿಂದ ಜನ್ಮ ಪಡೆದರೋ ಅವರನ್ನು ತಿಳಿದುಕೊಂಡಿರುತ್ತಾರೆ ಮತ್ತು ಯಾರು ದತ್ತು ಮಾಡಿಕೊಳ್ಳುತ್ತಾರೆಯೋ ಅವರ ಮನೆಯವರಾಗಿ ಬಿಡುತ್ತಾರೆ. ನೀವಿಲ್ಲಿ ಶೂದ್ರ ಮನೆತನದಿಂದ ಬ್ರಾಹ್ಮಣ ಮನೆತನದಲ್ಲಿ ಬಂದಿರಿ. ಬ್ರಹ್ಮಾರವರ ತನುವಿನಿಂದ ನಿಮ್ಮನ್ನು ದತ್ತು ಮಾಡಿಕೊಳ್ಳಲಾಯಿತು. ನೀವು ಬ್ರಾಹ್ಮಣ ಕುಲದಲ್ಲಿ ಬಂದು ಬಿಟ್ಟಿರಿ - ಈ ಮಾತುಗಳನ್ನು ಶಾಸ್ತ್ರಗಳಲ್ಲಿ ಬರೆಯಲು ಸಾಧ್ಯವಿಲ್ಲ, ಇದನ್ನು ತಿಳಿಸಲಾಗುತ್ತದೆ. ಬರೆಯುವುದರಿಂದ ಯಾರೂ ತಿಳಿದುಕೊಳ್ಳಲಾಗುವುದಿಲ್ಲ.
ನಾವು ಪರಮಪಿತ ಪರಮಾತ್ಮನ ಸಂತಾನರಾಗಿದ್ದೇವೆ, ಇವರು ತಾಯಿಯಾಗಿದ್ದಾರೆ ಎಂಬುದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಬ್ರಹ್ಮನಿಗೆ ಪ್ರಜಾಪಿತನೆಂದೇ ಹೇಳುತ್ತಾರೆ. ಇವರ ಮೂಲಕ ನೀವು ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತೇನೆ, ಇವು ಎಷ್ಟು ಗುಪ್ತ ಮಾತುಗಳಾಗಿವೆ! ಸನ್ಮುಖದಲ್ಲಿ ಬರದೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅದರಲ್ಲಿಯೂ ಯಾರು ಈ ಬ್ರಾಹ್ಮಣ ಕುಲದವರಾಗಿದ್ದಾರೆಯೋ ಅವರೇ ತಿಳಿದುಕೊಳ್ಳುತ್ತಾರೆ. ಅವರೇ ದೈವೀ ಕುಲದಲ್ಲಿ ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಹೊಸಬರ ಬುದ್ಧಿಯಲ್ಲಿ ಈ ಮಾತುಗಳು ಕುಳಿತುಕೊಳ್ಳುವುದಿಲ್ಲ. ಅವರು ಯಾರಿಗೂ ತಿಳಿಸುವುದಕ್ಕೂ ಸಾಧ್ಯವಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದ ಅನುಸಾರ ಬುದ್ಧಿಯಲ್ಲಿ ಕುಳಿತುಕೊಳ್ಳುತ್ತದೆ. ತ್ವಮೇವ ಮಾತಾಶ್ಚ ಪಿತಾ.... ಎಂದು ಗಾಯನ ಮಾಡಲಾಗುತ್ತದೆ. ಶಿವ ತಂದೆಯನ್ನು ನೆನಪು ಮಾಡುತ್ತಾರೆ, ಮತ್ತೆ ನೀವು ಮಾತಾಪಿತಾ ಎಂದು ಹೇಳುತ್ತಾರೆ. ಒಬ್ಬರೇ ತಂದೆ ಹೇಗೆ ಮಾತಾಪಿತನಾಗುವರು? ಈ ಮಾತುಗಳನ್ನು ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಹೇಗೆ ಶಾಸ್ತ್ರಗಳಲ್ಲಿ ವ್ಯಾಸರು ಬರೆದಿರುವುದನ್ನು ಮನುಷ್ಯರು ಕಂಠಪಾಠ ಮಾಡಿದ್ದಾರೆಯೋ ಹಾಗೆಯೇ ನಿಮಗೂ ಸಹ ಯಾರೋ ತಿಳಿಸಿದ್ದಾರೆ, ನೀವು ಕಂಠಪಾಠ ಮಾಡಿದ್ದೀರಿ ಎಂದು ಹೇಳುತ್ತಾರೆ. ಹೊಸ ಮನುಷ್ಯರು ತಿಳಿದುಕೊಳ್ಳುವುದು ಬಹಳ ಕಷ್ಟವಿದೆ, ಇಲ್ಲಿರುವವರೂ ಸಹ ಅನ್ಯರಿಗೆ ತಿಳಿಸಿಕೊಡಲು ಕೆಲವರಿಂದ ಆಗುವುದಿಲ್ಲ. ನೀವಾತ್ಮರಾಗಿದ್ದೀರಿ, ನಿಮ್ಮ ತಂದೆಯು ಪರಮಪಿತ ಪರಮಾತ್ಮನಾಗಿದ್ದಾರೆ. ಆ ಬೇಹದ್ದಿನ ತಂದೆಯೇ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ. ಆಸ್ತಿಯನ್ನು ಕೊಟ್ಟಿದ್ದರು ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಜನ್ಮಗಳು ಮುಕ್ತಾಯವಾಯಿತು. ಈಗ ತಂದೆಯು ಪುನಃ ಆಸ್ತಿಯನ್ನು ಕೊಡಲು ಬಂದ್ದಿದ್ದಾರೆ - ಇದನ್ನು ಯಾರಿಗಾದರೂ ತಿಳಿಸಲು ಎಷ್ಟು ಸಹಜವಾಗಿದೆ! ನೀವು ಮಾತಾಪಿತಾ ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದು ವಿಚಾರ ಮಾಡುವ ಮಾತಲ್ಲವೆ. ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಳ್ಳುತ್ತಾರೆ ಅಂದಮೇಲೆ ತಾಯಿಯು ಅವಶ್ಯವಾಗಿ ಬೇಕಲ್ಲವೆ ಆದ್ದರಿಂದ ಯಾರು ಅನನ್ಯ ಮಗುವಾಗಿರುವರೋ ಅವರಿಗೆ ಡ್ರಾಮಾ ಪ್ಲಾನ ಅನುಸಾರ ಜಗದಂಬಾ ಎಂಬ ಬಿರುದನ್ನು ಕೊಡಲಾಗುತ್ತದೆ. ಪುರುಷನಿಗೆ ಜಗದಂಬಾ ಎಂದು ಹೇಳಲು ಸಾಧ್ಯವಿಲ್ಲ ಆದ್ದರಿಂದ ಇವರಿಗೆ ಜಗತ್ಪಿತನೆಂದು ಹೇಳುತ್ತಾರೆ. ಇವರಿಗೆ ಪ್ರಜಾಪಿತ ಎಂಬ ಹೆಸರು ಪ್ರಸಿದ್ಧವಾಗಿದೆ. ಒಳ್ಳೆಯದು - ಪ್ರಜಾ ಮಾತೆಯಲ್ಲಿ? ಆದ್ದರಿಂದ ಮಾತೆಯನ್ನು ದತ್ತು ಮಾಡಿಕೊಳ್ಳಲಾಗುತ್ತದೆ. ಆದಿ ದೇವನಂತೂ ಇದ್ದಾರೆ ಮತ್ತೆ ಆದಿ ದೇವಿಯನ್ನೂ ಸಹ ನಿಮಿತ್ತ ಮಾಡುತ್ತೇನೆ. ಜಗದಂಬೆಯು ಒಬ್ಬರೇ ಆಗಿದ್ದಾರೆ, ಅವರಿಗೇ ಮಹಿಮೆಯಿದೆ. ಜಗದಂಬೆಯ ಎಷ್ಟೊಂದು ಮೇಳಗಳಾಗುತ್ತವೆ ಆದರೆ ಅವರ ಬಗ್ಗೆ ಯಾರೂ ತಿಳಿದುಕೊಂಡಿಲ್ಲ. ಕಲ್ಕತ್ತಾದಲ್ಲಿ ಕಾಳಿಯ ಮಂದಿರವಿದೆ. ಬಾಂಬೆಯಲ್ಲಿಯೂ ಜಗದಂಬೆಯ ಮಂದಿರವಿದೆ. ರೂಪವು ಬೇರೆ-ಬೇರೆಯಾಗಿದೆ. ಜಗದಂಬಾ ಯಾರು? ಇದನ್ನು ಯಾರೂ ತಿಳಿದುಕೊಂಡಿಲ್ಲ. ಅವರಿಗೂ ಭಗವತಿ ಎಂದು ಹೇಳುತ್ತಾರೆ ಆದರೆ ಜಗದಂಬೆಗೆ ಭಗವತಿ ಎಂದು ಹೇಳಲು ಸಾಧ್ಯವಿಲ್ಲ, ಅವರು ಬ್ರಾಹ್ಮಣಿಯಾಗಿದ್ದಾರೆ. ಜ್ಞಾನ ಜ್ಞಾನೇಶ್ವರಿ ಆಗಿದ್ದಾರೆ, ಅವರಿಗೆ ತಂದೆಯಿಂದ ಜ್ಞಾನ ಸಿಕ್ಕಿದೆ. ನೀವೆಲ್ಲರೂ ಜಗದಂಬೆಯ ಮಕ್ಕಳಾಗಿದ್ದೀರಿ. ಜ್ಞಾನವನ್ನು ಕೇಳಿ ಮತ್ತೆ ಹೇಳುತ್ತೀರಿ. ನಿಮ್ಮ ಉದ್ಯೋಗವೇ ಇದಾಗಿದೆ. ನಿಮಗೆ ಸ್ವಯಂ ಈಶ್ವರನು ಓದಿಸುತ್ತಾರೆ, ಯಾವುದೇ ಮನುಷ್ಯರು ಓದಿಸುತ್ತಿಲ್ಲ. ಈ ಬ್ರಹ್ಮಾರವರೂ ಸಹ ಮನುಷ್ಯನಾಗಿದ್ದಾರೆ. ಮನುಷ್ಯರು ಯಾರನ್ನೂ ಪಾವನರನ್ನಾಗಿ ಮಾಡಲು ಸಾಧ್ಯವಿಲ್ಲ. ಮನುಷ್ಯರಿಗೆ ಇಷ್ಟು ಮಂಧ ಬುದ್ಧಿಯಾಗಿ ಬಿಟ್ಟಿದೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ, ಅವರು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಬರುತ್ತಾರೆ. ಇಡೀ ಪ್ರಪಂಚವು ತಮೋಪ್ರಧಾನವಾಗಿದೆ, ಎಲ್ಲರೂ ಪತಿತರಾಗಿದ್ದಾರೆ, ಹೊಸ ಪ್ರಪಂಚವು ಪಾವನ, ಹಳೆಯ ಪ್ರಪಂಚವು ಪತಿತವಾಗಿದೆ. ಹಳೆಯ ಪ್ರಪಂಚದಲ್ಲಿ ನರಕವಾಸಿಗಳಿದ್ದಾರೆ, ಹೊಸ ಪ್ರಪಂಚದಲ್ಲಿ ಸ್ವರ್ಗವಾಸಿಗಳಿದ್ದಾರೆ. ಬುದ್ಧಿಯೂ ಹೇಳುತ್ತದೆ - ಸತ್ಯಯುಗದಲ್ಲಿ ಕೇವಲ ಭಾರತವಾಸಿ ದೇವಿ-ದೇವತೆಗಳೇ ಇರುತ್ತಾರೆ ಮತ್ತ್ಯಾರೂ ಇರಲಿಲ್ಲ. ಈಗ ನೀವು ಮಕ್ಕಳಿಗೆ ಈ ಜ್ಞಾನವು ಸಿಕ್ಕಿದೆ, ಹೊಸ ಪ್ರಪಂಚದಲ್ಲಿ ಮೊದಲು ಸೂರ್ಯವಂಶಿ ದೇವತೆಗಳಿದ್ದರು ನಂತರ ಚಂದ್ರವಂಶಿಯರಾದರು ಆಗ ಸೂರ್ಯವಂಶವು ಕಳೆದು ಹೋಯಿತು. ಚಂದ್ರವಂಶಿಯರ ನಂತರ ಮತ್ತೆ ವೈಶ್ಯ ವಂಶಿಯರು.....ಬರುತ್ತಾರೆ. ಅವಶ್ಯವಾಗಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರಿಗೆ ಮೊದಲು ಏನಿತ್ತು? ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ನೀವು ಮಕ್ಕಳಿಗೆ ತಂದೆಯು ಚಕ್ರದ ರಹಸ್ಯವನ್ನು ತಿಳಿಸಿದ್ದಾರೆ. ದ್ವಾಪರದಲ್ಲಿ ವೈಶ್ಯ ವಂಶಿಯರಿರುತ್ತಾರೆ, ಕಲಿಯುಗದಲ್ಲಿ ಶೂದ್ರ ವಂಶಿಯರಿದ್ದಾರೆ.
ನಾವೀಗ ಬ್ರಾಹ್ಮಣರಾಗಿದ್ದೇವೆ ಎಂದು ನೀವು ತಿಳಿದುಕೊಂಡಿದ್ದೀರಿ, ನಿಮ್ಮನ್ನು ತಂದೆಯು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ ಅರ್ಥಾತ್ ಶೂದ್ರ ಧರ್ಮದಿಂದ ದೇವತಾ ಧರ್ಮದಲ್ಲಿ ವರ್ಗಾವಣೆ ಮಾಡಿದ್ದಾರೆ. ಈಗ ಸೂರ್ಯವಂಶಿ, ಚಂದ್ರವಂಶಿಯರಂತೂ ಇಲ್ಲ. ಲಕ್ಷ್ಮೀ-ನಾರಾಯಣರ ರಾಜ್ಯವಾಗಲಿ, ರಾಮರಾಜ್ಯವಾಗಲಿ ಇಲ್ಲ. ಈಗ ಕಲಿಯುಗದ ಅಂತ್ಯವಾಗಿದೆ. ಕಲಿಯುಗದ ನಂತರ ಅವಶ್ಯವಾಗಿ ಸತ್ಯಯುಗವು ಬರುವುದು. ಕಲಿಯುಗದಲ್ಲಿ ಇದು ಹಳೆಯ, ಪತಿತ ಪ್ರಪಂಚವಾಗಿದೆ, ಮಹಾನ್ ದುಃಖಿಯಾಗಿದ್ದಾರೆ. ಆದ್ದರಿಂದ ಹೋಗಿ ದೇವತೆಗಳ ಮಹಿಮೆ ಮಾಡುತ್ತಾರೆ, ತಲೆ ಬಾಗುತ್ತಾರೆ. ಲಕ್ಷ್ಮೀ-ನಾರಾಯಣರಿಗೆ ಈ ರಾಜ್ಯವನ್ನು ಯಾರು ಕೊಟ್ಟರು, ಇದನ್ನು ಹೇಳುವವರು ಯಾರಾದರೂ ಇದ್ದಾರೆಯೇ? ಯಾರಿಗೂ ಇದು ಸಂಕಲ್ಪದಲ್ಲಿಯೂ ಇರುವುದಿಲ್ಲ, ಏಕೆಂದರೆ ಕಲಿಯುಗವು ಇನ್ನೂ ಮಗುವಾಗಿದೆ ಎಂಬುದೇ ಅವರ ಬುದ್ಧಿಯಲ್ಲಿದೆ. ಇನ್ನೂ 40 ಸಾವಿರ ವರ್ಷಗಳಿದೆ ಎಂದು ತಿಳಿಯುವ ಕಾರಣ ಈ ವಿಚಾರವೇ ಬರುವುದಿಲ್ಲ. ಈಗ ನಿಮಗೆ ಇದು ಗಮನಕ್ಕೆ ಬರುತ್ತದೆ. ಬಾಬಾ, ನಮಗೆ ನೆನಪೇ ಇರುವುದಿಲ್ಲವೆಂದು ಕೆಲವು ಮಕ್ಕಳು ಹೇಳುತ್ತಾರೆ. ಏಕೆ ಇರುವುದಿಲ್ಲ? ಏಕೆಂದರೆ ಬೆಳಗ್ಗೆ-ಬೆಳಗ್ಗೆ ಎದ್ದು ಕುಳಿತುಕೊಂಡು ಧಾರಣೆ ಮಾಡುವುದಿಲ್ಲ. ತಿಳಿದುಕೊಳ್ಳುತ್ತಾರೆ ಆದರೆ ಯಾರಿಗೂ ತಿಳಿಸುವುದಿಲ್ಲ ಆದ್ದರಿಂದ ಈ ರೀತಿಯಾಗುತ್ತದೆ, ಎಲ್ಲರೂ ಒಂದೇ ಸಮಾನ ಬುದ್ಧಿವಂತರಾಗಲು ಸಾಧ್ಯವಿಲ್ಲ. ಬುದ್ಧಿವಂತರೂ ಬೇಕು, ಮಂಧ ಬುದ್ಧಿಯವರೂ ಬೇಕು. ಬಹಳ ಬುದ್ಧಿವಂತರು ಹೋಗಿ ರಾಜ-ರಾಣಿಯಾಗುತ್ತಾರೆ. ಯಾರು ಎಷ್ಟೆಷ್ಟು ತಿಳಿದುಕೊಳ್ಳುವರೋ ಮತ್ತು ಅನ್ಯರಿಗೆ ತಿಳಿಸಿಕೊಡುವರೋ ಅವರ ಹೆಸರು ಪ್ರಸಿದ್ಧವಾಗುವುದು. ಪ್ರದರ್ಶನಿಗಳನ್ನು ಇಟ್ಟಾಗ ಬಾಬಾ ಇಂತಹವರನ್ನು ಕಳುಹಿಸಿಕೊಡಿ ಎಂದು ಪತ್ರ ಬರೆಯುತ್ತಾರೆ ಆದರೆ ನೀವೇ ಏಕೆ ತಿಳಿಸುವುದಿಲ್ಲ? ಅದಕ್ಕೆ ಬಾಬಾ ಅವರಿಗೆ ಚೆನ್ನಾಗಿ ಅಭ್ಯಾಸವಿದೆ, ನಾವಿನ್ನೂ ಕಚ್ಚಾ ಆಗಿದ್ದೇವೆಂದು ಹೇಳುತ್ತಾರೆ. ಸ್ವಯಂ ತಂದೆಯೇ ಹೇಳುತ್ತಾರೆ- ಎಲ್ಲಿಂದಲಾದರೂ ನಿಮಂತ್ರಣ ಸಿಕ್ಕಿದರೆ ಬರೆದು ಕಳುಹಿಸಿ, ಯಾರು-ಯಾರು ಇದ್ದಾರೆ ಎಂಬುದನ್ನು ನೋಡಿ, ಯಾರನ್ನು ಕಳುಹಿಸಬೇಕು ಎಂದು ತೀರ್ಮಾನಿಸುತ್ತೇವೆ. ಸನ್ಯಾಸಿಗಳೂ ಸಹ ಆ ನಿಮಂತ್ರಣದಲ್ಲಿ ಇದ್ದಾರೆಯೇ ಎಂಬುದನ್ನು ನೋಡಿ ಅವರಿಗೆ ತಿಳಿಸಲು ಅಂತಹ ಒಳ್ಳೆಯ ಬ್ರಹ್ಮಾಕುಮಾರಿಯನ್ನೇ ಕಳುಹಿಸಬೇಕಾಗುತ್ತದೆ. ಈ ಕುಮಾರಿಕಾ, ಮನೋಹರ್ ಇದ್ದಾರೆ, ಗಂಗೆ ಇದ್ದಾರೆ. ಇವರುಗಳಲ್ಲಿ ಯಾರನ್ನಾದರೂ ಕಳುಹಿಸಿ, ಮಕ್ಕಳಂತೂ ಅನೇಕರಿದ್ದಾರೆ. ಕುಮಾರ ಜಗದೀಶ್, ರಮೇಶರವರನ್ನು ಕಳುಹಿಸಿ ಎಂದು ಬರೆಯಿರಿ. ನೀವೂ ಸಹ ತಿಳಿದುಕೊಂಡಿದ್ದೀರಿ - ಒಬ್ಬರು ಇನ್ನೊಬ್ಬರಿಗಿಂತ ಬುದ್ಧಿವಂತರಿದ್ದಾರೆ, ಹೇಗೆ ಜಡ್ಜ್ ಮೆಜೆಸ್ಟ್ರೇಟ್ ಒಬ್ಬರು ಇನ್ನೊಬ್ಬರಿಗಿಂತ ಬುದ್ಧಿವಂತರಿರುತ್ತಾರೆ. ಸರ್ಕಾರಕ್ಕೂ ತಿಳಿದಿರುತ್ತದೆ ಆದ್ದರಿಂದಲೇ ಒಬ್ಬರು ಇನ್ನೊಬ್ಬರಿಗಿಂತ ಕೇಸ್ಗಳು ಮೇಲೆ ಹೋಗುತ್ತವೆ. ಮತ್ತೆ ಹೈಕೋರ್ಟ್ಗೆ ಹೋಗಿ ಮತ್ತೆ ಅವರಿಗಿಂತಲೂ ಮೇಲೆ ಹೋಗುತ್ತಾರೆ. ಅವರೂ ಸಹ ಸರಿಯಾಗಿ ತೀರ್ಮಾನ ಕೊಡಲಿಲ್ಲವೆಂದರೆ ಅವರಿಗಿಂತಲೂ ಮೇಲೆ ಹೋಗುತ್ತಾರೆ. ಇವರ ಮೇಲೆ ನೀವು ದಯೆ ತೋರಿಸಿ. ಈಗ ಇವೆಲ್ಲಾ ಮಾತುಗಳು ಇಲ್ಲಿಯೇ ಆಗುತ್ತವೆ, ಸತ್ಯ-ತ್ರೇತಾಯುಗದಲ್ಲಿ ಇರುವುದಿಲ್ಲ ಮತ್ತೆ ದ್ವಾಪರದಲ್ಲಿ ರಾಜ-ರಾಣಿಯರ ರಾಜ್ಯವಿರುತ್ತದೆ. ಅಲ್ಲಂತೂ ಮಹಾರಾಜ-ಮಹಾರಾಣಿಯೇ ಕೇಸ್ನ್ನು ಸಂಭಾಲನೆ ಮಾಡುತ್ತಾರೆ ಮತ್ತು ಅಲ್ಲಿ ಕೇಸ್ ಇರುವುದೂ ಬಹಳ ಕಡಿಮೆ. ಈಗಂತೂ ತಮೋಪ್ರಧಾನ, ಪತಿತರಲ್ಲವೆ ಆದ್ದರಿಂದ ರಾಜನ ಬಳಿ ಕೇಸ್ ಹೋದರೂ ಸಹ ಸ್ವಲ್ಪ ಶಿಕ್ಷೆ ಕೊಡುತ್ತಾರೆ. ಕಠಿಣ ತಪ್ಪಾದರೆ ಕಠಿಣ ಶಿಕ್ಷೆಯನ್ನು ವಿಧಿಸುತ್ತಾರೆ. ಇಲ್ಲಂತೂ ಎಷ್ಟೊಂದು ಮಂದಿ ಜಡ್ಜ್ ವಕೀಲರಿದ್ದಾರೆ. ಕಾರೋಬಾರ್ನಲ್ಲಿ ಎಷ್ಟೊಂದು ಅಂತರವಿದೆ, ಸತ್ಯಯುಗದಲ್ಲಿ ಹೇಗಿರುತ್ತದೆ ಎಂಬುದನ್ನು ಯಾರಿಗೂ ತಿಳಿದಿಲ್ಲ. ಈಗ ತಂದೆಯು ತಿಳಿಸಿದ್ದಾರೆ - ಈ ಲಕ್ಷ್ಮೀ-ನಾರಾಯಣರನ್ನು ತಿಳಿದುಕೊಂಡಿದ್ದೀರಾ ಎಂದು ಯಾರೊಂದಿಗಾದರೂ ಕೇಳಿರಿ, ಹೇಗೆ ಬಿರ್ಲಾದವರು ಇದ್ದಾರೆ, ಮಂದಿರಗಳನ್ನು ಕಟ್ಟಿಸುತ್ತಾ ಇರುತ್ತಾರೆ. ಅಂತಹವರಿಗೆ ನಿಮ್ಮಲ್ಲಿ ಯಾರಾದರೂ ಪತ್ರ ಬರೆಯಿರಿ - ನೀವು ಲಕ್ಷ್ಮೀ-ನಾರಾಯಣರ ಮಂದಿರಗಳನ್ನಂತೂ ಬಹಳ ಕಟ್ಟಿಸುತ್ತೀರಿ, ಆದರೆ ಯಾವಾಗ ಸತ್ಯಯುಗಕ್ಕೆ ಮೊದಲು ಕಲಿಯುಗವಿತ್ತು ಅಂದಮೇಲೆ ಇವರಿಗೆ ಈ ರಾಜಧಾನಿಯು ಹೇಗೆ ಸಿಕ್ಕಿತು? ಕಲಿಯುಗದಲ್ಲಂತೂ ಏನೂ ಇರಲಿಲ್ಲ, ದೇವತೆಗಳು ಯಾರೊಂದಿಗೂ ಯುದ್ಧ ಮಾಡುವುದಿಲ್ಲ, ಯುದ್ಧದಿಂದ ಯಾರೂ ವಿಶ್ವದ ಮಾಲೀಕರಾಗಲು ಸಾಧ್ಯವಿಲ್ಲ. ಯಾರು ವಿಶ್ವದ ಮಾಲೀಕರಾಗಿದ್ದರೋ ಆ ಲಕ್ಷ್ಮೀ-ನಾರಾಯಣರ ಚಿತ್ರಗಳನ್ನಿಟ್ಟಿದ್ದಾರೆ. ಈಗಂತೂ ಕಲಿಯುಗವಾಗಿದೆ, ಇಲ್ಲಿ ಆಯುಧಗಳಿಂದ ಯುದ್ಧ ನಡೆಯುತ್ತದೆ. ತಂದೆಯು ತಿಳಿಸಿದ್ದಾರೆ - ಕ್ರಿಶ್ಚಿಯನ್ ಧರ್ಮದವರೇ ಪರಸ್ಪರ ಸೇರಿ ಒಂದಾದರೆ, ಪರಸ್ಪರ ಪ್ರೀತಿಯನ್ನಿಟ್ಟಿದ್ದೇ ಆದರೆ ವಿಶ್ವದ ಮಾಲೀಕರಾಗಬಲ್ಲರು ಆದರೆ ಇದು ಸಾಧ್ಯವಿಲ್ಲ. ಲಕ್ಷ್ಮೀ-ನಾರಾಯಣರೇ ವಿಶ್ವದ ಮಾಲೀಕರಾಗುತ್ತಾರೆ. ಬುದ್ಧಿಯೂ ಹೇಳುತ್ತದೆ - ಇವರು ಪರಸ್ಪರ ಒಂದಾದರೆ ಮಾಲೀಕರಾಗಬಲ್ಲರು ಆದರೆ ಸತ್ಯಯುಗದಲ್ಲಿ ಯಾರೂ ರಾಜ-ರಾಣಿಯಂತೂ ಆಗಲು ಸಾಧ್ಯವಿಲ್ಲ. ಸೃಷ್ಟಿ ನಾಟಕವೇ ಹೀಗೆ ಮಾಡಲ್ಪಟ್ಟಿದೆ. ನಾವೀಗ ಪುನಃ ಯೋಗಬಲದಿಂದ ಸ್ವರ್ಗದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನೀವಿದನ್ನು ತಿಳಿಸಬಹುದು - ಕಲ್ಪದ ಮೊದಲೂ ಸಹ ಸಂಗಮದಲ್ಲಿ ತಂದೆಯಿಂದ ಪದವಿಯನ್ನು ಪಡೆದಿದ್ದೇವೆ, 84 ಜನ್ಮಗಳು ಪೂರ್ಣವಾಯಿತು, ಈಗ ಪುನಃ ಆಸ್ತಿಯನ್ನು ಪಡೆಯುತ್ತಿದ್ದೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂನಲ್ಲಿ ಧಾರಣೆ ಮಾಡಿಕೊಳ್ಳಲು ಹಾಗೂ ಅನ್ಯರಿಗೂ ಮಾಡಿಸುವುದಕ್ಕಾಗಿ ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯ ನೆನಪಿನಲ್ಲಿ ಕುಳಿತುಕೊಳ್ಳಬೇಕಾಗಿದೆ. ಏನನ್ನು ತಿಳಿದುಕೊಂಡಿದ್ದೀರೋ ಅದನ್ನು ಅನ್ಯರಿಗೂ ತಿಳಿಸುವ ಅಭ್ಯಾಸ ಮಾಡಬೇಕಾಗಿದೆ.
2. ಲೌಕಿಕ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆದು ಒಬ್ಬ ಪಾರಲೌಕಿಕ ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಯಿಂದ ಯಾವ ಜ್ಞಾನವು ಸಿಕ್ಕಿದೆಯೋ ಅದನ್ನು ಕೇಳಿ ಎಲ್ಲರಿಗೂ ತಿಳಿಸಬೇಕಾಗಿದೆ. ಇದೇ ನಿಮ್ಮ ಕರ್ತವ್ಯ (ಉದ್ಯೋಗ) ವಾಗಿದೆ.
ಓಂ ಶಾಂತಿ. ಮಕ್ಕಳಿಗೆ ಓಂ ಶಾಂತಿಯ ಅರ್ಥವನ್ನು ಬಹಳ ಬಾರಿ ತಿಳಿಸಿದ್ದೇವೆ. ಓಂ ಎಂದರೆ ನಾನು ಯಾರು? ನಾನು ಆತ್ಮ. ಈ ಶರೀರವು ನನ್ನ ಕರ್ಮೇಂದ್ರಿಯವಾಗಿದೆ, ನಾನಾತ್ಮ ಪರಮಧಾಮದ ನಿವಾಸಿಯಾಗಿದ್ದೇನೆ. ಹೇ ದೂರ ದೇಶದಲ್ಲಿರುವ ತಂದೆಯೇ ಬನ್ನಿ ಎಂದು ಭಾರತವಾಸಿಗಳು ಕರೆಯುತ್ತಾರೆ ಏಕೆಂದರೆ ಭಾರತದಲ್ಲಿ ಈಗ ಬಹಳ ಧರ್ಮಗ್ಲಾನಿ, ದುಃಖವಾಗಿ ಬಿಟ್ಟಿದೆ. ಈಗ ಪುನಃ ಬಂದು ಗೀತೋಪದೇಶವನ್ನು ತಿಳಿಸಿ, ಗೀತೆಗಾಗಿಯೇ ಶಿವ ಬಾಬಾ ಬನ್ನಿ ಎಂದು ಹೇಳುತ್ತಾರೆ. ಏಕೆಂದರೆ ಅವರು ಎಲ್ಲರ ತಂದೆಯಾಗಿದ್ದಾರೆ. ತಂದೆಯು ತಿಳಿಸುತ್ತಾರೆ - ಭಾರತವಾಸಿಗಳ ಮೇಲೆ ಮಾಯಾರೂಪಿ ರಾವಣನ ನೆರಳು ಬಿದ್ದಿದೆ ಆದ್ದರಿಂದ ಎಲ್ಲರೂ ದುಃಖಿ-ಪತಿತರಾಗಿದ್ದಾರೆ. ರೂಪವನ್ನು ಬದಲಾಯಿಸಿಕೊಂಡು ಬನ್ನಿ ಅರ್ಥಾತ್ ಮನುಷ್ಯನ ರೂಪದಲ್ಲಿ ಬನ್ನಿ ಎಂದು ಕರೆಯುತ್ತಾರೆ ಅಂದಾಗ ನಾನು ಮನುಷ್ಯನ ರೂಪದಲ್ಲಿ ಬರುತ್ತೇನೆ. ನನ್ನ ಬರುವಿಕೆಯು ದಿವ್ಯ-ಅಲೌಕಿಕವಾಗಿದೆ. ನಾನು ಗರ್ಭದಲ್ಲಿ ಬರುವುದಿಲ್ಲ, ಸಾಧಾರಣ ವೃದ್ಧನ ತನುವಿನಲ್ಲಿ ಬರುತ್ತೇನೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾನು ಕಲ್ಪ-ಕಲ್ಪವೂ ನನ್ನ ನಿರಾಕಾರಿ ರೂಪವನ್ನು ಬದಲಾಯಿಸಿಕೊಂಡು ಬರುತ್ತೇನೆ. ಜ್ಞಾನ ಸಾಗರನು ಪರಮಪಿತ ಪರಮಾತ್ಮನೇ ಆಗಿದ್ದಾರೆ, ಕೃಷ್ಣನಿಗೆಂದೂ ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಈ ಸಾಧಾರಣ ತನುವಿನಲ್ಲಿ ಬಂದು ನಿಮಗೆ ಪುನಃ ಸಹಜ ರಾಜಯೋಗವನ್ನು ಕಲಿಸುತ್ತಿದ್ದೇನೆ. ಯಾವಾಗ ಪ್ರಪಂಚವು ಪತಿತವಾಗಿ ಬಿಡುವುದೋ ಆಗ ನಾನು ಬರಬೇಕಾಗುತ್ತದೆ. ಕಲಿಯುಗದಿಂದ ಸತ್ಯಯುಗವನ್ನಾಗಿ ಮಾಡಲು ನಾನು ಬರುತ್ತೇನೆ. ಬ್ರಹ್ಮಾ, ವಿಷ್ಣು, ಶಂಕರರ ಚಿತ್ರವೂ ಇದೆ. ಬ್ರಹ್ಮನ ಮೂಲಕ ಸ್ಥಾಪನೆ, ಶಂಕರನ ಮೂಲಕ ವಿನಾಶ, ಮತ್ತೆ ವಿಷ್ಣುವಿನ ಮೂಲಕ ಪಾಲನೆ. ಈ ಲಕ್ಷ್ಮೀ-ನಾರಾಯಣರು ವಿಷ್ಣುವಿನ ಎರಡು ರೂಪಗಳಾಗಿದ್ದಾರೆ, ಇದನ್ನು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ತಂದೆಯು ಪುನಃ ರೂಪವನ್ನು ಬದಲಾಯಿಸಿಕೊಂಡು ಬಂದಿದ್ದಾರೆ, ಅವರು ನಮ್ಮ ಪರಮ ತಂದೆ, ಪರಮ ಶಿಕ್ಷಕ, ಪರಮ ಸದ್ಗುರುವೂ ಆಗಿದ್ದಾರೆ ಮತ್ತು ಗುರುಗಳಿಗೆ ಪರಮ ಎಂಬುದನ್ನು ಹೇಳಲಾಗುವುದಿಲ್ಲ. ಈ ತಂದೆಯಂತೂ ತಂದೆ, ಶಿಕ್ಷಕ, ಗುರು ಮೂವರೂ ಆಗಿದ್ದಾರೆ. ಲೌಕಿಕ ತಂದೆಯು ಮಕ್ಕಳ ಪಾಲನೆ ಮಾಡಿ ಅವರನ್ನು ಶಾಲೆಗೆ ಕಳುಹಿಸುತ್ತಾರೆ. ಆ ತಂದೆಯೇ ಶಿಕ್ಷಕನಾಗಿ ಓದಿಸುವವರು ಬಹಳ ವಿರಳ. ಎಲ್ಲಾ ಆತ್ಮರು ನನ್ನನ್ನು ಕರೆಯುತ್ತಾರೆ, ಗಾಡ್ಫಾದರ್ ಎಂದು ಹೇಳುತ್ತಾರೆ ಅಂದಮೇಲೆ ಅವರು ಆತ್ಮನ ತಂದೆಯಾದರು. ಈ ಗೀತೆಯು ಭಕ್ತಿಮಾರ್ಗದ್ದಾಗಿದೆ, ಸತ್ಯಯುಗದಲ್ಲಿ ಕೂಗಲು ಮಾಯೆಯೇ ಇರುವುದಿಲ್ಲ, ಅಲ್ಲಿ ಸುಖವೇ ಸುಖವಿರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇದು 5000 ವರ್ಷಗಳ ಚಕ್ರವಾಗಿದೆ, ಅರ್ಧಕಲ್ಪ ಸತ್ಯ-ತ್ರೇತಾಯುಗವು ದಿನ, ಅರ್ಧಕಲ್ಪ ದ್ವಾಪರ-ಕಲಿಯುಗವು ರಾತ್ರಿಯಾಗಿದೆ. ನೀವು ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಬ್ರಹ್ಮಾ ಅಥವಾ ನೀವು ಬ್ರಾಹ್ಮಣರದೇ ದಿನ-ರಾತ್ರಿಯೆಂದು ಗಾಯನವಿದೆ. ದಿನ ಮತ್ತು ರಾತ್ರಿಯ ಜ್ಞಾನವು ನೀವು ಮಕ್ಕಳಿಗೇ ಇದೆ. ಲಕ್ಷ್ಮೀ-ನಾರಾಯಣರಿಗೆ ಈ ಜ್ಞಾನವಿರುವುದಿಲ್ಲ. ನೀವೀಗ ಸಂಗಮದಲ್ಲಿದ್ದೀರಿ, ನಿಮಗೆ ತಿಳಿದಿದೆ - ಈಗ ಭಕ್ತಿಮಾರ್ಗವು ಪೂರ್ಣವಾಗಿ ದಿನವು ಉದಯವಾಗುತ್ತದೆ. ಈ ಜ್ಞಾನವು ನಿಮಗೆ ತಂದೆಯ ಮೂಲಕ ಸಿಕ್ಕಿದೆ. ಕಲಿಯುಗದಲ್ಲಾಗಲಿ ಅಥವಾ ಸತ್ಯಯುಗದಲ್ಲಾಗಲಿ ಈ ಜ್ಞಾನವು ಯಾರಿಗೂ ಇರುವುದಿಲ್ಲ. ಆದ್ದರಿಂದ ಬ್ರಹ್ಮನ ದಿನ-ಬ್ರಹ್ಮನ ರಾತ್ರಿಯೆಂದು ಗಾಯನವಿದೆ. ನೀವೀಗ ಸೂರ್ಯವಂಶಿ, ಚಂದ್ರವಂಶಿ ರಾಜ್ಯವನ್ನು ಪಡೆಯುವ ಪುರುಷಾರ್ಥ ಮಾಡುತ್ತಿದ್ದೀರಿ. ಮತ್ತೆ ಅರ್ಧಕಲ್ಪದ ನಂತರ ನೀವು ರಾಜ್ಯವನ್ನು ಕಲಿತುಕೊಳ್ಳುತ್ತೀರಿ. ಈ ಜ್ಞಾನವು ನೀವು ಬ್ರಾಹ್ಮಣರ ವಿನಃ ಮತ್ತ್ಯಾರಿಗೂ ಇಲ್ಲ. ನೀವು ದೇವತೆಗಳಾಗಿ ಬಿಟ್ಟರೆ ನಂತರ ಈ ಜ್ಞಾನವೇ ಇರುವುದಿಲ್ಲ. ಈಗ ರಾತ್ರಿಯಾಗಿದೆ, ಶಿವ ರಾತ್ರಿಯ ಗಾಯನವೂ ಇದೆ. ಕೃಷ್ಣನ ರಾತ್ರಿಯೆಂದು ಹೇಳುತ್ತಾರೆ ಆದರೆ ಅದರ ಅರ್ಥವನ್ನು ತಿಳಿದುಕೊಂಡಿಲ್ಲ. ಶಿವ ಜಯಂತಿ ಅರ್ಥಾತ್ ಶಿವನು ಪುನರವತರಣೆ ಆಗುತ್ತಾರೆ. ಇಂತಹ ತಂದೆಯ ದಿನವಂತೂ ಕೊನೆಪಕ್ಷ ಒಂದು ತಿಂಗಳಾದರೂ ಆಚರಿಸಬೇಕು. ಯಾರು ಇಡೀ ಸೃಷ್ಟಿಯನ್ನು ಪತಿತನಿಂದ ಪಾವನವನ್ನಾಗಿ ಮಾಡುವರೋ ಅವರಿಗೆ ರಜಾ ದಿನವನ್ನೂ ಘೋಷಿಸುವುದಿಲ್ಲ. ತಂದೆಯು ತಿಳಿಸುತ್ತಾರೆ - ನಾನು ಎಲ್ಲರ ಮುಕ್ತಿದಾತನಾಗಿದ್ದೇನೆ, ಮಾರ್ಗದರ್ಶಕನಾಗಿ ಎಲ್ಲರನ್ನೂ ಕರೆದುಕೊಂಡು ಹೋಗುತ್ತೇನೆ.
ನೀವೀಗ ರಾಜಯೋಗವನ್ನು ಕಲಿಯುವ ಪುರುಷಾರ್ಥ ಮಾಡುತ್ತೀರಿ. ತಂದೆಯು ನಿಮಗೆ ಜ್ಞಾನದ ಮೂರನೇ ನೇತ್ರವನ್ನು ಕೊಡುತ್ತಿದ್ದಾರೆ. ಆತ್ಮದ ರೂಪವೇನೆಂಬುದೂ ಸಹ ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸುತ್ತಾರೆ - ನೀವಾತ್ಮರು ಅಂಗುಷ್ಟಾಕಾರವಾಗಿಯೂ ಇಲ್ಲ, ಅಖಂಡ ಜ್ಯೋತಿಯಾಗಿಯೂ ಇಲ್ಲ. ನೀವು ಬಿಂದುವಾಗಿದ್ದೀರಿ, ನಾನಾತ್ಮನೂ ಬಿಂದುವಾಗಿದ್ದೇನೆ ಆದರೆ ನಾನು ಪುನರ್ಜನ್ಮದಲ್ಲಿ ಬರುವುದಿಲ್ಲ, ನನ್ನ ಮಹಿಮೆಯೇ ಬೇರೆಯಾಗಿದೆ. ನಾನು ಪರಮಾತ್ಮನಾಗಿರುವ ಕಾರಣ ಜನನ-ಮರಣದ ಚಕ್ರದಲ್ಲಿ ಬರುವುದಿಲ್ಲ, ನೀವಾತ್ಮರು ಶರೀರದಲ್ಲಿ ಬರುತ್ತೀರಿ ಆದ್ದರಿಂದ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ನಾನು ಈ ಶರೀರದಲ್ಲಿ ಪ್ರವೇಶ ಮಾಡುತ್ತೇನೆ, ನಾನು ಈ ಶರೀರವನ್ನು ಬಾಡಿಗೆಯಾಗಿ ತೆಗೆದುಕೊಂಡಿದ್ದೇನೆ. ನೀವೂ ಸಹ ಆತ್ಮವಾಗಿದ್ದೀರಿ ಆದರೆ ನೀವು ತಮ್ಮನ್ನು ನಾವಾತ್ಮರಾಗಿದ್ದೇವೆ ಎಂಬುದನ್ನು ಅನುಭೂತಿ ಮಾಡುವುದಿಲ್ಲ. ಆತ್ಮವೇ ತಂದೆಯನ್ನು ನೆನಪು ಮಾಡುತ್ತದೆ. ದುಃಖದಲ್ಲಿ ಯಾವಾಗಲೂ ಹೇ ಭಗವಂತ, ಹೇ ದಯಾಹೃದಯೀ ತಂದೆಯೇ, ದಯೆ ತೋರಿಸಿ ಎಂದು ನೆನಪು ಮಾಡುತ್ತಾರೆ. ನೀವು ದಯೆಯನ್ನು ಬೇಡುತ್ತೀರಿ ಏಕೆಂದರೆ ಆ ತಂದೆಯು ಜ್ಞಾನ ಸಾಗರ, ಆನಂದ ಸಾಗರ, ಪವಿತ್ರತೆಯ ಸಾಗರನಾಗಿದ್ದಾರೆ. ಜ್ಞಾನದಲ್ಲಿಯೂ ಪೂರ್ಣನಾಗಿದ್ದಾರೆ, ಜ್ಞಾನ ಸಾಗರನಾಗಿದ್ದಾರೆ. ಮನುಷ್ಯರಿಗೆ ಈ ಮಹಿಮೆ ಕೊಡಲು ಸಾಧ್ಯವಿಲ್ಲ. ಇಡೀ ಪ್ರಪಂಚದ ಮೇಲೆ ದಯೆ ತೋರಿಸುವುದು, ಇದು ತಂದೆಯದೇ ಕರ್ತವ್ಯವಾಗಿದೆ. ಅವರು ರಚಯಿತನಾಗಿದ್ದಾರೆ, ಉಳಿದೆಲ್ಲವೂ ರಚನೆಯಾಗಿದೆ. ರಚಯಿತನು ರಚನೆಯನ್ನು ರಚಿಸುತ್ತಾರೆ. ಮೊದಲು ಸ್ತ್ರೀಯನ್ನು ದತ್ತು ಮಾಡಿಕೊಳ್ಳುತ್ತಾರೆ ಮತ್ತೆ ಅವರ ಮೂಲಕ ರಚನೆಯನ್ನು ರಚಿಸಿ ಅವರ ಪಾಲನೆಯನ್ನೂ ಮಾಡುತ್ತಾರೆ, ವಿನಾಶ ಮಾಡುವುದಿಲ್ಲ. ಈ ಬೇಹದ್ದಿನ ತಂದೆಯು ಬಂದು ಸ್ಥಾಪನೆ, ಪಾಲನೆ, ವಿನಾಶವನ್ನು ಮಾಡಿಸುತ್ತಾರೆ. ಆದಿ ಸನಾತನ ದೇವಿ-ದೇವತಾ ಧರ್ಮದ ಪಾಲನೆ ಮಾಡಿಸುತ್ತಾರೆ. ಸತ್ಯಯುಗದ ಆದಿಯಲ್ಲಿ ಬಹು ಬೇಗನೆ ರಾಜಧಾನಿಯು ಸ್ಥಾಪನೆಯಾಗಿ ಬಿಡುತ್ತದೆ. ಅನ್ಯ ಧರ್ಮದವರು ಕೇವಲ ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ಯಾವಾಗ ಲಕ್ಷಾಂತರ ಅಂದಾಜಿನಲ್ಲಿ ಅವರ ಸಂಖ್ಯೆಯು ವೃದ್ಧಿಯಾಗುವುದೋ ಆಗ ರಾಜ್ಯವು ನಡೆಯುತ್ತದೆ. ನೀವೀಗ ಯೋಗಬಲದಿಂದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ನೀವು ಇಡೀ ವಿಶ್ವದ ಮಾಲೀಕರಾಗುತ್ತೀರಿ. ಬಾಹುಬಲದಿಂದ ಎಂದೂ ಯಾರೂ ವಿಶ್ವದ ಮೇಲೆ ರಾಜ್ಯ ಮಾಡಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ, ಕ್ರಿಶ್ಚಿಯನ್ನರಲ್ಲಿ ಇಷ್ಟೊಂದು ಶಕ್ತಿಯಿದೆ, ಅವರು ಪರಸ್ಪರ ಒಂದಾದರೆ ಇಡೀ ವಿಶ್ವದ ಮೇಲೆ ರಾಜ್ಯ ಮಾಡುವರು ಆದರೆ ಬಾಹು ಬಲದಿಂದ ವಿಶ್ವದ ಮೇಲೆ ರಾಜ್ಯ ಪಡೆಯುವುದು ಕಾಯಿದೆಯಿಲ್ಲ. ಡ್ರಾಮಾದಲ್ಲಿ ಬಾಹು ಬಲದವರು ವಿಶ್ವದ ಮಾಲೀಕರಾಗುವ ನಿಯಮವೇ ಇಲ್ಲ.
ತಂದೆಯು ತಿಳಿಸುತ್ತಾರೆ - ವಿಶ್ವದ ರಾಜ್ಯಭಾಗ್ಯವು ಯೋಗಬಲದಿಂದ ನನ್ನ ಮೂಲಕವೇ ಸಿಗುತ್ತದೆ. ಅಲ್ಲಿ ಯಾವುದೇ ವಿಭಾಗಗಳಿರುವುದಿಲ್ಲ. ಧರಣಿ, ಆಕಾಶ ಎಲ್ಲವೂ ನಿಮ್ಮದಾಗಿರುತ್ತದೆ, ನಿಮ್ಮನ್ನು ಯಾರೂ ಸ್ಪರ್ಶಿಸುವುದಕ್ಕೂ ಸಾಧ್ಯವಿಲ್ಲ. ಅದಕ್ಕೆ ಅದ್ವೈತ ರಾಜ್ಯವೆಂದು ಹೇಳಲಾಗುತ್ತದೆ. ಇಲ್ಲಿ ಅನೇಕ ರಾಜ್ಯಗಳಿವೆ, 5000 ವರ್ಷಗಳ ನಂತರ ನೀವು ಮಕ್ಕಳಿಗೆ ಪುನಃ ಈ ರಾಜಯೋಗವನ್ನು ಕಲಿಸುತ್ತೇನೆ, ಕೃಷ್ಣನ ಆತ್ಮವೂ ಈಗ ಕಲಿಯುತ್ತಿದೆ. ಕೃಷ್ಣನು ಮೊದಲ ನಂಬರಿನ ರಾಜಕುಮಾರನಾಗಿದ್ದನು. ಅವರೇ ಈ ಸಮಯದಲ್ಲಿ 84 ಜನ್ಮಗಳ ಅಂತಿಮದಲ್ಲಿ ಬಂದು ಬ್ರಹ್ಮನಾಗಿದ್ದಾರೆ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬುದನ್ನು ಮಕ್ಕಳಿಗೆ ತಿಳಿಸಿದ್ದಾರೆ. ತಂದೆಯು ಪುನಃ ಸ್ವರ್ಗದ ಸ್ಥಾಪನೆ ಮಾಡುತ್ತಿದ್ದಾರೆ. ಅವಶ್ಯವಾಗಿಯೂ ಅನೇಕ ಧರ್ಮಗಳ ವಿನಾಶವಾಗುವುದು, ಒಂದು ಧರ್ಮದ ಸ್ಥಾಪನೆಯಾಗುವುದು. ಭಾರತವೇ 100% ಸಾಹುಕಾರನಾಗಿತ್ತು, ಧರ್ಮ ಶ್ರೇಷ್ಠವಾಗಿತ್ತು, ದೇವತೆಗಳ ಕರ್ಮವೂ ಶ್ರೇಷ್ಠವಾಗಿತ್ತು. ಸರ್ವಗುಣ ಸಂಪನ್ನರು..... ಎಂದು ಅವರಿಗೇ ಮಹಿಮೆಯಿದೆ. ಮೊಟ್ಟ ಮೊದಲು ಪವಿತ್ರರಾಗಿದ್ದರು, ಈಗ ಪತಿತರಾಗಿದ್ದಾರೆ, ಪುನಃ ತಂದೆಯು ಬಂದು ಸ್ತ್ರೀ-ಪುರುಷ ಇಬ್ಬರನ್ನೂ ಪವಿತ್ರರನ್ನಾಗಿ ಮಾಡುತ್ತಾರೆ. ರಕ್ಷಾಬಂಧನದ ಉತ್ಸವವನ್ನು ಇಷ್ಟೊಂದು ವಿಜೃಂಭಣೆಯಿಂದ ಏಕೆ ಆಚರಿಸುತ್ತಾರೆ ಇದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯೇ ಬಂದು ಈ ಅಂತಿಮ ಜನ್ಮದಲ್ಲಿ ನೀವಿಬ್ಬರೂ ಪವಿತ್ರರಾಗಿರಿ ಎಂದು ಪ್ರತಿಜ್ಞೆ ಮಾಡಿಸಿದ್ದರು. ಸನ್ಯಾಸಿಗಳ ಧರ್ಮವೇ ಬೇರೆಯಾಗಿದೆ, ಜ್ಞಾನ, ಭಕ್ತಿ ಮತ್ತು ವೈರಾಗ್ಯ - ಇದು ನಿಮಗಾಗಿಯೇ ಇದೆ. ನೀವು ನೋಡಿರಬಹುದು - ಪಾದ್ರಿಗಳು ನಡೆದುಕೊಂಡು ಹೋಗುವಾಗ ಅವರ ದೃಷ್ಟಿಯು ಒಂದೇ ಕಡೆ ಇರುತ್ತದೆ, ಮತ್ತ್ಯಾವ ಕಡೆಯೂ ನೋಡುವುದಿಲ್ಲ. ನನ್ಸ್ ಇರುತ್ತಾರಲ್ಲವೆ. ಅವರಂತೂ ಕ್ರಿಸ್ತನನ್ನೇ ನೆನಪು ಮಾಡುತ್ತಾರೆ. ಕ್ರಿಸ್ತನು ಭಗವಂತನ ಮಗನಾಗಿದ್ದರೆಂದು ಹೇಳುತ್ತಾರೆ. ನಿಮಗೆ ಯಾವುದೇ ಬಿಳಿಯ ವಸ್ತ್ರಗಳೊಂದಿಗೆ ಸಂಬಂಧವಿಲ್ಲ, ನೀವಂತೂ ಆತ್ಮವಾಗಿದ್ದೀರಿ. ನನ್ ಬಟ್ ವನ್. ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ಸತ್ಯವಾದ ನನ್ಗಳು ನೀವಾಗಿದ್ದೀರಿ. ನಿಮಗೆ ಆಸ್ತಿಯು ಆ ತಂದೆಯಿಂದ ಸಿಗಬೇಕಾಗಿದೆ. ಅವರನ್ನು ನೆನಪು ಮಾಡಿದಾಗಲೇ ವಿಕರ್ಮಗಳು ವಿನಾಶವಾಗುತ್ತವೆ ಆದ್ದರಿಂದ ತಂದೆಯ ಆದೇಶವಾಗಿದೆ - ನನ್ನೊಬ್ಬನನ್ನೇ ನೆನಪು ಮಾಡಿ. ಆತ್ಮದ ನಿಶ್ಚಯವು ಆಗದೇ ಇರುವ ಕಾರಣ ಆ ನನ್ಸ್ಗಳು ಕ್ರಿಸ್ತನನ್ನೇ ನೆನಪು ಮಾಡುತ್ತಾರೆ. ಭಗವಂತನು ಯಾರೆಂಬುದನ್ನು ತಿಳಿದುಕೊಂಡಿಲ್ಲ. ಭಾರತವಾಸಿಗಳು ಯಾರು ಮೊಟ್ಟ ಮೊದಲು ಬರುತ್ತಾರೆಯೋ ಅವರೇ ತಿಳಿದುಕೊಂಡಿಲ್ಲ. ಲಕ್ಷ್ಮೀ-ನಾರಾಯಣರಿಗೆ ಈ ಸೃಷ್ಟಿಯ ಜ್ಞಾನವಿದೆಯೇ! ಅವರು ತ್ರಿಕಾಲದರ್ಶಿಗಳೂ ಅಲ್ಲ, ತ್ರಿಕಾಲದರ್ಶಿಗಳು ನೀವು ಬ್ರಾಹ್ಮಣರೇ ಆಗುತ್ತೀರಿ. ನಿಮ್ಮನ್ನು ತಂದೆಯು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಾರೆ. ನೀವೀಗ ಈಶ್ವರನ ಮಡಿಲಿನಲ್ಲಿದ್ದೀರಿ, ನಿಮ್ಮ ಈ ಅಂತಿಮ ಜನ್ಮವು ಬಹಳ ಅಮೂಲ್ಯವಾಗಿದೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಆತ್ಮಿಕ ಸೇವೆ ಮಾಡುತ್ತೀರಿ, ಅವರಂತೂ ದೈಹಿಕ ಸಮಾಜ ಸೇವಕರಾಗಿದ್ದಾರೆ, ನೀವು ಆತ್ಮೀಯ ಸಮಾಜ ಸೇವಕರಾಗಿದ್ದೀರಿ. ನಿಮಗೆ ಕಲಿಸುವವರು ಪರಮ ಆತ್ಮನಾಗಿದ್ದಾರೆ. ಪ್ರತಿಯೊಂದು ಆತ್ಮನಿಗೆ ತಿಳಿಸಿ - ತಂದೆಯನ್ನು ನೆನಪು ಮಾಡಿ, ತಂದೆಗೇ ಪತಿತ-ಪಾವನನೆಂದು ಗಾಯನ ಮಾಡಲಾಗುತ್ತದೆ. ನಿಮಗೆ ಇಳಿಯುವುದರಲ್ಲಿ 84 ಜನ್ಮಗಳು ಹಿಡಿಸುತ್ತವೆ ಮತ್ತೆ ಮೇಲೇರುವುದರಲ್ಲಿ ಒಂದು ಸೆಕೆಂಡ್ ಹಿಡಿಸುತ್ತದೆ. ನಿಮ್ಮದು ಇದು ಮೃತ್ಯುಲೋಕದ ಅಂತಿಮ ಜನ್ಮವಾಗಿದೆ. ಈಗ ಮೃತ್ಯುಲೋಕವು ವಿನಾಶವಾಗಿ ಅಮರಲೋಕಕ್ಕೆ ಜಯ ಜಯಕಾರವಾಗುವುದು. ಇದಕ್ಕೆ ಅಮರ ಕಥೆಯೆಂದು ಹೇಳಲಾಗುತ್ತದೆ. ಅಮರ ತಂದೆಯು ಬಂದು ನೀವು ಅಮರ ಆತ್ಮರನ್ನು ಅಮರ ಯುಗದಲ್ಲಿ ಕರೆದುಕೊಂಡು ಹೋಗಲು ಅಮರ ಕಥೆಯನ್ನು ತಿಳಿಸುತ್ತಾರೆ. ತಂದೆಯು ಹೇಳುತ್ತಾರೆ, ಯಾವುದೇ ಮಾತುಗಳನ್ನು ಮರೆತು ಹೋಗುತ್ತೀರೆಂದರೆ ಕೇವಲ ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯಾದ ನನ್ನೊಬ್ಬನನ್ನೇ ನೆನಪು ಮಾಡಿ, ಬುದ್ಧಿಯೋಗವನ್ನು ನನ್ನೊಂದಿಗೇ ಜೋಡಿಸಿ ಆಗ ನಿಮ್ಮ ಪಾಪಗಳು ಭಸ್ಮವಾಗುವುವು ಮತ್ತು ನೀವು ಪುಣ್ಯಾತ್ಮರಾಗಿ ಬಿಡುತ್ತೀರಿ. ನೀವು ಮನುಷ್ಯರಿಂದ ದೇವತೆಯಾಗುತ್ತೀರಿ, ಇದು ಹೊಸ ಮಾತಲ್ಲ. 5000 ವರ್ಷಗಳ ನಂತರ ತಂದೆಯು ಬಂದು ನಿಮಗೆ ಆಸ್ತಿಯನ್ನು ಕೊಡುತ್ತಾರೆ ಮತ್ತೆ ರಾವಣನು ಶಾಪ ಕೊಡುತ್ತಾನೆ. ಇದು ಆಟವಾಗಿದೆ, ಭಾರತದ್ದೇ ಕಥೆಯಾಗಿದೆ. ಈ ಮಾತುಗಳನ್ನು ತಂದೆಯೇ ತಿಳಿಸುತ್ತಾರೆ - ಯಾವುದೇ ವೇದ ಶಾಸ್ತ್ರಗಳಲ್ಲಿಲ್ಲ. ಆದ್ದರಿಂದ ಪರಮಾತ್ಮನಿಗೆ ಜ್ಞಾನ ಸಾಗರ, ಶಾಂತಿಯ ಸಾಗರ, ಆನಂದ ಸಾಗರನೆಂದೂ ಹೇಳಲಾಗುತ್ತದೆ. ನಿಮ್ಮನ್ನು ತನ್ನ ಸಮಾನರನ್ನಾಗಿ ಮಾಡಿಕೊಳ್ಳುತ್ತಾರೆ, ನೀವೂ ಸಹ ಪೂಜ್ಯರಾಗಿದ್ದಿರಿ ನಂತರ ಪೂಜಾರಿಗಳಾಗುತ್ತೀರಿ. ತಾವೇ ಪೂಜ್ಯ, ತಾವೇ ಪೂಜಾರಿ. ಇದು ಭಗವಂತನಿಗೆ ಅನ್ವಯಿಸುವುದಿಲ್ಲ. ಇದು ಭಾರತವಾಸಿಗಳ ಮಾತಾಗಿದೆ. ನೀವು ಮೊದಲು ಕೇವಲ ಒಬ್ಬ ಶಿವನ ಭಕ್ತಿ ಮಾಡುತ್ತಿದ್ದಿರಿ, ಅವ್ಯಭಿಚಾರಿ ಭಕ್ತಿ ಮಾಡಿದಿರಿ. ನಂತರ ದೇವತೆಗಳ ಭಕ್ತಿಯನ್ನು ಆರಂಭಿಸಿದಿರಿ, ಕೆಳಗಿಳಿಯುತ್ತಾ ಬಂದಿರಿ. ಈಗ ಪುನಃ ನೀವು ದೇವಿ-ದೇವತೆಗಳಾಗುತ್ತಿದ್ದೀರಿ. ಯಾರು ಸ್ವಲ್ಪ ಓದಿದರೂ ಸಹ ಅವರು ಪ್ರಜೆಗಳಲ್ಲಿ ಬರುತ್ತಾರೆ. ಯಾರು ಚೆನ್ನಾಗಿ ಓದಿ-ಓದಿಸುವರೋ ಅವರು ರಾಜಧಾನಿಯಲ್ಲಿ ಬರುತ್ತಾರೆ. ಪ್ರಜೆಗಳಂತೂ ಅನೇಕರಾಗುತ್ತಾರೆ. ಒಬ್ಬ ಮಹಾರಾಜನಿಗೆ ಲಕ್ಷಾಂತರ, ಕೋಟ್ಯಾಂತರ ಮಂದಿ ಪ್ರಜೆಗಳಿರುತ್ತಾರೆ. ನೀವು ಪುರುಷಾರ್ಥವು ಕಲ್ಪದ ಹಿಂದಿನ ತರಹ ಮಾಡುತ್ತೀರಿ. ಪುರುಷಾರ್ಥದಿಂದಲೇ ಯಾರು ಯಾರು ಮಾಲೆಯಲ್ಲಿ ಬರುತ್ತಾರೆಂಬುದು ಅರ್ಥವಾಗುತ್ತದೆ. ಪ್ರಜೆಗಳಲ್ಲಿಯೂ ಕೆಲವರು ಬಡವರು, ಕೆಲವರು ಸಾಹುಕಾರರಾಗುತ್ತಾರೆ. ಭಕ್ತಿಮಾರ್ಗದಲ್ಲಿ ಈಶ್ವರಾರ್ಥವಾಗಿ ದಾನ ಮಾಡುತ್ತಾರೆ. ಏಕೆ ಈಶ್ವರನ ಬಳಿ ಇಲ್ಲವೇನು? ಅಥವಾ ಕೃಷ್ಣಾರ್ಪಣಂ ಎಂದು ಹೇಳುತ್ತಾರೆ ಆದರೆ ವಾಸ್ತವದಲ್ಲಿ ಈಶ್ವರಾರ್ಪಣಂ ಆಗುತ್ತದೆ. ಮನುಷ್ಯರು ಏನೆಲ್ಲವನ್ನೂ ಮಾಡುವರೋ ಅದರ ಫಲವು ಇನ್ನೊಂದು ಜನ್ಮದಲ್ಲಿ ಸಿಗುತ್ತದೆ. ಒಂದು ಜನ್ಮಕ್ಕಾಗಿ ಫಲ ಸಿಗುತ್ತದೆ. ಈಗ ತಂದೆಯು ತಿಳಿಸುತ್ತಾರೆ - ನಾನು ನಿಮಗೆ 21 ಜನ್ಮಗಳ ಆಸ್ತಿಯನ್ನು ಕೊಡಲು ಬಂದಿದ್ದೇನೆ. ನೀವು ನನ್ನ ಅರ್ಥವಾಗಿ ಡೈರೆಕ್ಟ್ ಏನಾದರೂ ಮಾಡುತ್ತೀರೆಂದರೆ 21 ಜನ್ಮಗಳಿಗಾಗಿ ನಿಮಗೆ ಅದರ ಪ್ರಾಪ್ತಿಯಾಗುತ್ತದೆ. ಪರೋಕ್ಷವಾಗಿ ಮಾಡುತ್ತೀರೆಂದರೆ ಒಂದು ಜನ್ಮಕ್ಕಾಗಿ ಅಲ್ಪಕಾಲದ ಸುಖ ಸಿಗುತ್ತದೆ. ತಂದೆಯು ತಿಳಿಸುತ್ತಾರೆ- ನಿಮ್ಮದೆಲ್ಲವೂ ಮಣ್ಣು ಪಾಲಾಗಲಿದೆ, ಆದ್ದರಿಂದ ಇದನ್ನು ಸಫಲ ಮಾಡಿಕೊಳ್ಳಿ. ನೀವು ಈ ಆತ್ಮಿಕ ಆಸ್ಪತ್ರೆ ಹಾಗೂ ಯುನಿವರ್ಸಿಟಿಯನ್ನು ತೆರೆಯುತ್ತಾ ಹೋಗಿ. ಎಲ್ಲಿ ಎಲ್ಲರೂ ಸದಾ ಆರೋಗ್ಯವಂತರು, ಐಶ್ವರ್ಯವಂತರಾಗುತ್ತಾರೆ, ಇದರಿಂದ ಬಹಳ ಸಂಪಾದನೆಯಾಗುತ್ತದೆ. ಯೋಗದಿಂದ ಆರೋಗ್ಯ ಮತ್ತು ಚಕ್ರವನ್ನು ತಿಳಿದುಕೊಳ್ಳುವುದರಿಂದ ಭಾಗ್ಯ. ಆದ್ದರಿಂದ ಮನೆ-ಮನೆಯಲ್ಲಿ ಇಂತಹ ಯುನಿವರ್ಸಿಟಿ ಕಮ್ ಹಾಸ್ಪಿಟಲನ್ನು ತೆರೆಯಿರಿ. ದೊಡ್ಡ ವ್ಯಕ್ತಿಗಳಾದರೆ ದೊಡ್ಡದನ್ನು ತೆರೆಯಲಿ ಎಲ್ಲಿ ಅನೇಕರು ಬಂದು ತಿಳಿದುಕೊಳ್ಳಲಿ. ಬೋರ್ಡಿನ ಮೇಲೆ ಬರೆಯಿರಿ. ಹೇಗೆ ಪ್ರಾಕೃತಿಕ ಚಿಕಿತ್ಸೆಯವರು ಬರೆಯುತ್ತಾರೆ. ತಂದೆಯು ಇಡೀ ಪ್ರಪಂಚದ ಪ್ರಕೃತಿಯನ್ನೇ ಪವಿತ್ರವನ್ನಾಗಿ ಮಾಡಿಬಿಡುತ್ತಾರೆ. ಈ ಸಮಯದಲ್ಲಿ ಎಲ್ಲವೂ ಅಪವಿತ್ರವಾಗಿದೆ. ಇಡೀ ಪ್ರಪಂಚವನ್ನು ಸದಾ ಆರೋಗ್ಯವಂತ, ಐಶ್ವರ್ಯವಂತನನ್ನಾಗಿ ಮಾಡುವವರು ತಂದೆಯಾಗಿದ್ದಾರೆ. ಅವರೇ ನೀವು ಮಕ್ಕಳಿಗೆ ಓದಿಸುತ್ತಿದ್ದಾರೆ. ನೀವು ಅತಿ ಪ್ರಿಯ ಮಕ್ಕಳಾಗಿದ್ದೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಮ್ಮ ಈ ಅಮೂಲ್ಯ ಜೀವನವನ್ನು ಆತ್ಮಿಕ ಸೇವೆಯಲ್ಲಿ ತೊಡಗಿಸಬೇಕಾಗಿದೆ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚದ ಸೇವೆ ಮಾಡಬೇಕಾಗಿದೆ.
2. ತಮ್ಮ ಸರ್ವಸ್ವವನ್ನು ಸಫಲ ಮಾಡಲು ಡೈರೆಕ್ಟ್ ಈಶ್ವರಾರ್ಥವಾಗಿ ಅರ್ಪಣೆ ಮಾಡಬೇಕಾಗಿದೆ. ಆತ್ಮಿಕ ಆಸ್ಪತ್ರೆ ಹಾಗೂ ಯುನಿವರ್ಸಿಟಿಯನ್ನು ತೆರೆಯಬೇಕಾಗಿದೆ.
ಓಂ ಶಾಂತಿ. ಶಿವ ಭಗವಾನುವಾಚ. ಅವಶ್ಯವಾಗಿ ತನ್ನ ಮಕ್ಕಳ ಪ್ರತಿಯೇ ಜ್ಞಾನವನ್ನು ಕಲಿಸುತ್ತಾರೆ ಹಾಗೂ ಶ್ರೀಮತ ಕೊಡುತ್ತಾರೆ - ಹೇ ಮಕ್ಕಳೇ ಅಥವಾ ಹೇ ಪ್ರಾಣಿ, ಶರೀರದಿಂದ ಪ್ರಾಣವು ಹೊರಟು ಹೋಗುತ್ತದೆ ಅಥವಾ ಆತ್ಮವು ಹೊರಟು ಹೋಗುತ್ತದೆ ಎಂದರೆ ಇವೆರಡೂ ಒಂದೇ ಮಾತಾಗಿದೆ. ಹೇ ಪ್ರಾಣಿ ಅಥವಾ ಹೇ ಮಕ್ಕಳೇ ನೀವು ನೋಡಿಕೊಂಡಿರಾ - ನನ್ನ ಜೀವನದಲ್ಲಿ ಎಷ್ಟು ಪಾಪವಿತ್ತು ಮತ್ತು ಎಷ್ಟು ಪುಣ್ಯವಿತ್ತು! ಲೆಕ್ಕವನ್ನಂತೂ ತಿಳಿಸಿದ್ದೇವೆ - ನಿಮ್ಮ ಜೀವನದಲ್ಲಿ ಅರ್ಧಕಲ್ಪ ಪುಣ್ಯ, ಅರ್ಧಕಲ್ಪ ಪಾಪವಾಗುತ್ತದೆ. ಪುಣ್ಯದ ಆಸ್ತಿಯು ತಂದೆಯಿಂದಲೇ ಸಿಗುತ್ತದೆ ಯಾರಿಗೆ ರಾಮನೆಂದು ಹೇಳುತ್ತಾರೆ. ರಾಮನೆಂದು ನಿರಾಕಾರನಿಗೇ ಹೇಳಲಾಗುತ್ತದೆ, ಸೀತಾರಾಮನಿಗಲ್ಲ ಅಂದಾಗ ಈಗ ನೀವು ಮಕ್ಕಳು ಯಾರು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೀರೋ ನಿಮ್ಮ ಬುದ್ಧಿಯಲ್ಲಿ ಬಂದಿದೆ - ಅವಶ್ಯವಾಗಿ ಅರ್ಧಕಲ್ಪ ನಾವು ಪುಣ್ಯಾತ್ಮರಾಗಿದ್ದೆವು ನಂತರ ಅರ್ಧಕಲ್ಪ ಪಾಪಾತ್ಮರಾದೆವು, ಈಗ ಪುಣ್ಯಾತ್ಮರಾಗಬೇಕಾಗಿದೆ. ಎಷ್ಟು ಪುಣ್ಯಾತ್ಮರಾಗಿದ್ದೇವೆ ಎಂಬುದು ಪ್ರತಿಯೊಬ್ಬರೂ ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ. ಪಾಪಾತ್ಮರಿಂದ ಹೇಗೆ ಪುಣ್ಯಾತ್ಮರಾಗುತ್ತೀರಿ.... ಅದನ್ನೂ ಸಹ ತಂದೆಯು ತಿಳಿಸಿದ್ದಾರೆ. ಯಜ್ಞ, ತಪ ಇತ್ಯಾದಿಗಳಿಂದ ನೀವು ಪುಣ್ಯಾತ್ಮರಾಗುವುದಿಲ್ಲ, ಅದು ಭಕ್ತಿಮಾರ್ಗವಾಗಿದೆ, ಅದರಿಂದ ಯಾವುದೇ ಮನುಷ್ಯರು ಪುಣ್ಯಾತ್ಮರಾಗುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ನಾವು ಪುಣ್ಯಾತ್ಮರಾಗುತ್ತಿದ್ದೇವೆ ಎಂದು. ಆಸುರೀ ಮತದಿಂದ ಪಾಪಾತ್ಮರಾಗುತ್ತಾ-ಆಗುತ್ತಾ ಏಣಿಯನ್ನು ಇಳಿಯುತ್ತಲೇ ಬಂದಿದ್ದೀರಿ. ಎಷ್ಟು ಸಮಯ ನಾವು ಪುಣ್ಯಾತ್ಮರಾಗುತ್ತೇವೆ ಅಥವಾ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎಂಬುದು ಯಾರಿಗೂ ತಿಳಿದಿಲ್ಲ. ಆ ತಂದೆಯನ್ನು ಎಲ್ಲಾ ಮನುಷ್ಯರು ನೆನಪು ಮಾಡುತ್ತಾರೆ. ಅವರಿಗೇ ಪರಮಪಿತ ಪರಮಾತ್ಮನೆಂದು ಹೇಳುತ್ತಾರೆ. ಬ್ರಹ್ಮಾ-ವಿಷ್ಣು-ಶಂಕರನಿಗೆ ಪರಮಾತ್ಮನೆಂದು ಹೇಳುವುದಿಲ್ಲ ಹಾಗೂ ಮತ್ತ್ಯಾರಿಗೂ ಪರಮಾತ್ಮನೆಂದು ಹೇಳಲು ಸಾಧ್ಯವಿಲ್ಲ. ಭಲೆ ಈ ಸಮಯದಲ್ಲಿ ನೀವು ಪ್ರಜಾಪಿತ ಬ್ರಹ್ಮನೆಂದು ಹೇಳುತ್ತೀರಿ ಆದರೆ ಪ್ರಜಾಪಿತನನ್ನು ಎಂದೂ ಭಕ್ತಿಮಾರ್ಗದಲ್ಲಿ ನೆನಪು ಮಾಡುವುದಿಲ್ಲ. ಎಲ್ಲರೂ ನಿರಾಕಾರ ತಂದೆಯನ್ನೇ ಓ ಗಾಡ್ ಫಾದರ್ ಎಂದು ನೆನಪು ಮಾಡುತ್ತಾರೆ. ಓ ಭಗವಂತ ಎಂಬ ಶಬ್ಧವೇ ಹೊರ ಬರುತ್ತದೆ, ಒಬ್ಬರನ್ನೇ ನೆನಪು ಮಾಡುತ್ತಾರೆ. ಮನುಷ್ಯರು ತಮ್ಮನ್ನು ಗಾಡ್ಫಾದರ್ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ ಅಥವಾ ಬ್ರಹ್ಮಾ, ವಿಷ್ಣು, ಶಂಕರನೂ ಸಹ ತಮಗೆ ಗಾಡ್ ಫಾದರ್ ಎಂದು ಹೇಳಿಕೊಳ್ಳುವುದಿಲ್ಲ. ಅವರ ಶರೀರಕ್ಕೆ ಹೆಸರಂತೂ ಇದೆಯಲ್ಲವೆ. ಒಬ್ಬರೇ ಗಾಡ್ಫಾದರ್ ಆಗಿದ್ದಾರೆ, ಅವರಿಗೆ ತಮ್ಮ ಶರೀರವಿಲ್ಲ. ಭಕ್ತಿಮಾರ್ಗದಲ್ಲಿಯೂ ಶಿವನಿಗೆ ಬಹಳ ಪೂಜೆ ಮಾಡುತ್ತಾರೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಶಿವ ತಂದೆಯು ಈ ಶರೀರದ ಮೂಲಕ ನಮ್ಮೊಂದಿಗೆ ಮಾತನಾಡುತ್ತಾರೆ ಹೇ ಮಕ್ಕಳೇ ಎಂದು. ಎಷ್ಟು ಪ್ರೀತಿಯಿಂದ ಹೇಳುತ್ತಾರೆ. ನಾನು ಸರ್ವರ ಪತಿತ-ಪಾವನ, ಸದ್ಗತಿದಾತನಾಗಿದ್ದೇನೆಂದು ತಿಳಿದುಕೊಳ್ಳುತ್ತಾರೆ. ಮನುಷ್ಯರು ತಂದೆಯ ಮಹಿಮೆ ಮಾಡುತ್ತಾರಲ್ಲವೆ. ಆದರೆ 5000 ವರ್ಷಗಳನಂತರ ಬರುತ್ತಾರೆಂದು ಅವರಿಗೆ ಗೊತ್ತಿಲ್ಲ, ಅವಶ್ಯವಾಗಿ ಕಲಿಯುಗದ ಅಂತ್ಯವಾದಾಗಲೇ ಬರುತ್ತಾರೆ. ಈಗ ಕಲಿಯುಗದ ಅಂತ್ಯವಾಗಿದೆ ಆದ್ದರಿಂದ ಈಗ ತಂದೆಯು ಬಂದಿದ್ದಾರೆ, ನಿಮಗೆ ಕೃಷ್ಣನು ಓದಿಸುವುದಿಲ್ಲ. ಶ್ರೀಮತ ಸಿಗುತ್ತಿದೆ, ಇದು ಕೃಷ್ಣನದಲ್ಲ. ಕೃಷ್ಣನ ಆತ್ಮವೂ ಸಹ ಶ್ರೀಮತದಿಂದಲೇ ದೇವತೆಯಾಗಿದ್ದರು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ನೀವೀಗ ಆಸುರೀ ಮತದವರಾಗಿದ್ದೀರಿ. ತಂದೆಯು ತಿಳಿಸುತ್ತಾರೆ, ನಿಮ್ಮ ಚಕ್ರವು ಪೂರ್ಣವಾದಾಗಲೇ ನಾನು ಬರುತ್ತೇನೆ. ನೀವೇ ಆದಿಯಲ್ಲಿ ಬಂದಿದ್ದಿರಿ, ಈಗ ಜಡಜಡೀಭೂತ ಸ್ಥಿತಿಯಲ್ಲಿದ್ದೀರಿ. ಹಳೆಯ ವೃಕ್ಷವು ಜಡಜಡೀಭೂತವಾಗುತ್ತಿದೆಯೆಂದರೆ ಇಡೀ ವೃಕ್ಷವೇ ಹಳೆಯದಾಗಿ ಬಿಡುತ್ತದೆ. ತಂದೆಯು ತಿಳಿಸುತ್ತಾರೆ - ನೀವು ತಮೋಪ್ರಧಾನರಾಗಿದ್ದರಿಂದ ಎಲ್ಲರೂ ತಮೋಪ್ರಧಾನರಾಗಿ ಬಿಟ್ಟಿದ್ದಾರೆ. ಇದು ಮನುಷ್ಯ ಸೃಷ್ಟಿಯ ವಿಭಿನ್ನ ಧರ್ಮಗಳ ವೃಕ್ಷವಾಗಿದೆ, ಇದಕ್ಕೆ ತಲೆ ಕೆಳಕಾದ ವೃಕ್ಷವೆಂದು ಹೇಳುತ್ತಾರೆ ಏಕೆಂದರೆ ಇದರ ಬೀಜವು ಮೇಲಿದ್ದಾರೆ, ಆ ಬೀಜದಿಂದಲೇ ಇಡೀ ವೃಕ್ಷವು ಬರುತ್ತದೆ. ಮನುಷ್ಯರು “ಗಾಡ್ಫಾದರ್” ಎಂದು ಹೇಳುತ್ತಾರೆ. ಆತ್ಮವು ಹೇಳುತ್ತದೆ - ಆತ್ಮನ ಹೆಸರು ಆತ್ಮವೆಂದೇ ಆಗಿದೆ. ಆತ್ಮವು ಶರೀರದಲ್ಲಿ ಬಂದಾಗ ಶರೀರಕ್ಕೆ ಹೆಸರನ್ನಿಡಲಾಗುತ್ತದೆ, ಆಟವು ನಡೆಯುತ್ತದೆ. ಆತ್ಮಗಳ ಪ್ರಪಂಚದಲ್ಲಿ ಆಟವು ನಡೆಯುವುದಿಲ್ಲ. ಆಟದ ಮೈದಾನವು ಇದೇ ಆಗಿದೆ. ನಾಟಕದಲ್ಲಿ ಬೆಳಕು ಇತ್ಯಾದಿಗಳೆಲ್ಲವೂ ಇರುತ್ತದೆ. ಬಾಕಿ ಎಲ್ಲಿ ಆತ್ಮರ ನಿವಾಸ, ಸ್ಥಾನವಾಗಿದೆಯೋ ಅಲ್ಲಿ ಸೂರ್ಯ, ಚಂದ್ರರಿರುವುದಿಲ್ಲ. ಡ್ರಾಮಾದ ಆಟವು ನಡೆಯುವುದಿಲ್ಲ. ಇಲ್ಲಿಯೇ ಹಗಲು-ರಾತ್ರಿಗಳಾಗುತ್ತವೆ. ಸೂಕ್ಷ್ಮವತನ ಹಾಗೂ ಮೂಲವತನದಲ್ಲಿ ರಾತ್ರಿ-ಹಗಲು ಆಗುವುದಿಲ್ಲ. ಇದು ಕರ್ಮ ಕ್ಷೇತ್ರವಾಗಿದೆ, ಇದರಲ್ಲಿ ಮನುಷ್ಯರೇ ಒಳ್ಳೆಯ ಕರ್ಮವನ್ನೂ ಮಾಡುತ್ತಾರೆ, ಕೆಟ್ಟ ಕರ್ಮವನ್ನೂ ಮಾಡುತ್ತಾರೆ. ಸತ್ಯ-ತ್ರೇತಾಯುಗದಲ್ಲಿ ಒಳ್ಳೆಯ ಕರ್ಮಗಳಾಗುತ್ತವೆ ಏಕೆಂದರೆ ಅಲ್ಲಿ ಪಂಚ ವಿಕಾರ ರೂಪಿ ರಾವಣ ರಾಜ್ಯವೇ ಇರುವುದಿಲ್ಲ. ತಂದೆಯು ಕುಳಿತು ಕರ್ಮ, ಅಕರ್ಮ, ವಿಕರ್ಮದ ರಹಸ್ಯವನ್ನು ತಿಳಿಸುತ್ತಾರೆ. ಕರ್ಮವನ್ನಂತೂ ಮಾಡಲೇಬೇಕಾಗಿದೆ, ಇದು ಕರ್ಮ ಕ್ಷೇತ್ರವಾಗಿದೆ. ಸತ್ಯಯುಗದಲ್ಲಿ ಮನುಷ್ಯರು ಯಾವ ಕರ್ಮ ಮಾಡುವರೋ ಅದು ಅಕರ್ಮವಾಗುತ್ತದೆ. ಅಲ್ಲಿ ರಾವಣ ರಾಜ್ಯವೇ ಇರುವುದಿಲ್ಲ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಸ್ವರ್ಗವಿಲ್ಲ, ಸತ್ಯಯುಗದಲ್ಲಿ ಒಂದೇ ಭಾರತವಿತ್ತು ಮತ್ತ್ಯಾವುದೇ ಖಂಡವಿರಲಿಲ್ಲ. ಸ್ವರ್ಗದ ರಚಯಿತನೆಂದು ಹೇಳುತ್ತಾರೆ ಅಂದಮೇಲೆ ಅವಶ್ಯವಾಗಿ ತಂದೆಯು ಸ್ವರ್ಗವನ್ನೇ ರಚಿಸುತ್ತಾರೆ. ಇದನ್ನು ಎಲ್ಲಾ ದೇಶದವರು ತಿಳಿದುಕೊಂಡಿದ್ದಾರೆ - ಭಾರತವು ಪ್ರಾಚೀನ ದೇಶವಾಗಿದೆ, ಮೊಟ್ಟ ಮೊದಲಿಗೆ ಕೇವಲ ಭಾರತವೇ ಇತ್ತು, ಇದನ್ನು ಯಾರೂ ತಿಳಿದುಕೊಂಡಿಲ್ಲ. ಈಗಂತೂ ಇಲ್ಲ ಅಲ್ಲವೆ. ಇದು 5000 ವರ್ಷಗಳ ಮಾತಾಗಿದೆ. ಕ್ರಿಸ್ತನಿಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಎಂದು ಹೇಳುತ್ತಾರೆ. ರಚಯಿತನು ಅವಶ್ಯವಾಗಿ ರಚನೆಯನ್ನು ರಚಿಸುತ್ತಾರೆ. ತಮೋಪ್ರಧಾನ ಬುದ್ಧಿಯವರಾಗಿರುವ ಕಾರಣ ಇಷ್ಟನ್ನೂ ತಿಳಿದುಕೊಳ್ಳುವುದಿಲ್ಲ. ಭಾರತವು ಎಲ್ಲದಕ್ಕಿಂತ ಶ್ರೇಷ್ಠ ಖಂಡವಾಗಿದೆ. ಮನುಷ್ಯ ಸೃಷ್ಟಿಯು ಮೊದಲ ಶಾಖೆಯಾಗಿದೆ, ಇದೂ ಸಹ ನಾಟಕವು ಮಾಡಲ್ಪಟ್ಟಿದೆ. ಸಾಹುಕಾರರು ಬಡವರಿಗೆ ಸಹಯೋಗ ನೀಡುತ್ತಾರೆ, ಇದೂ ನಡೆದು ಬರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಾಹುಕಾರರು ಬಡವರಿಗೆ ದಾನ ಮಾಡುತ್ತಾರೆ ಆದರೆ ಇದು ಪತಿತ ಪ್ರಪಂಚವಾಗಿದೆ. ಆದ್ದರಿಂದ ಯಾರ್ಯಾರು ಏನೇನು ದಾನ-ಪುಣ್ಯ ಮಾಡುವರೋ ಪತಿತರೇ ಮಾಡುತ್ತಾರೆ. ಯಾರಿಗೆ ದಾನ ಮಾಡುವರೋ ಅವರೂ ಪತಿತರಾಗಿದ್ದಾರೆ. ಪತಿತರು ಪತಿತರಿಗೇ ದಾನ ಮಾಡುತ್ತಾರೆ ಅಂದಮೇಲೆ ಅದರ ಫಲವನ್ನೇನು ಪಡೆಯುವರು? ಭಲೆ ಎಷ್ಟಾದರೂ ದಾನ-ಪುಣ್ಯಗಳನ್ನು ಮಾಡುತ್ತಾ ಬಂದಿರಲಿ ಆದರೆ ಕೆಳಗಿಳಿಯುತ್ತಾ ಬಂದಿದ್ದಾರೆ. ಭಾರತದಂತಹ ದಾನಿ ಖಂಡವು ಮತ್ತ್ಯಾವುದೂ ಇಲ್ಲ. ಈ ಸಮಯದಲ್ಲಿ ನಿಮ್ಮದು ಏನೆಲ್ಲಾ ತನು-ಮನ-ಧನವಿದೆಯೋ ಎಲ್ಲವನ್ನೂ ಇದರಲ್ಲಿ ಸ್ವಾಹಾ ಮಾಡುತ್ತೀರಿ, ಇದಕ್ಕೆ ರಾಜಸ್ವ ಅಶ್ವಮೇಧ ಅವಿನಾಶಿ ಜ್ಞಾನ ಯಜ್ಞವೆಂದು ಹೇಳಲಾಗುತ್ತದೆ. ಆತ್ಮವು ಹೇಳುತ್ತದೆ - ಈ ಯಾವ ಹಳೆಯ ಶರೀರವಿದೆಯೋ ಇದನ್ನೂ ಸಹ ಇಲ್ಲಿ ಸ್ವಾಹಾ ಮಾಡಬೇಕಾಗಿದೆ ಏಕೆಂದರೆ ನೀವು ತಿಳಿದುಕೊಂಡಿದ್ದೀರಿ - ಇಡೀ ಪ್ರಪಂಚದ ಮನುಷ್ಯ ಮಾತ್ರರೂ ಇದರಲ್ಲಿ ಸ್ವಾಹಾ ಆಗುತ್ತಾರೆ. ಆದ್ದರಿಂದ ನಾವೇಕೆ ತಂದೆಗೆ ಖುಷಿ-ಖುಷಿಯಿಂದ ಬಲಿಹಾರಿಯಾಗಬಾರದು! ಆತ್ಮಕ್ಕೆ ತಿಳಿದಿದೆ - ನಾವು ತಂದೆಯನ್ನು ನೆನಪು ಮಾಡುತ್ತೇವೆ. ಬಾಬಾ, ತಾವು ಬಂದರೆ ನಾವು ಬಲಿಹಾರಿಯಾಗುತ್ತೇವೆ ಏಕೆಂದರೆ ಈಗ ನಾವು ಬಲಿಹಾರಿಯಾದರೆ ಮತ್ತೆ ತಾವು 21 ಜನ್ಮಗಳಿಗಾಗಿ ಬಲಿಹಾರಿಯಾಗುತ್ತೀರಿ. ಇದು ಒಂದು ವ್ಯಾಪಾರವಾಗಿದೆ, ನಾವು ನಿಮಗೆ ಬಲಿಹಾರಿಯಾದರೆ ನೀವೂ ಸಹ 21 ಬಾರಿ ಬಲಿಹಾರಿಯಾಗುತ್ತೀರಿ. ಅದಕ್ಕೆ ತಂದೆಯು ತಿಳಿಸುತ್ತಾರೆ - ಎಲ್ಲಿಯವರೆಗೆ ನಿಮ್ಮ ಆತ್ಮವು ಪವಿತ್ರವಾಗುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಬಲಿಹಾರಿವನ್ನು ಸ್ವೀಕಾರ ಮಾಡುವುದಿಲ್ಲ.
ತಂದೆಯು ತಿಳಿಸುತ್ತಾರೆ - ನನ್ನೊಬ್ಬನನ್ನೇ ನೆನಪು ಮಾಡಿರಿ ಆಗ ಆತ್ಮವು ಪವಿತ್ರವಾಗಿ ಬಿಡುವುದು. ತಂದೆಯನ್ನು ಮರೆಯುವುದರಿಂದ ನೀವು ಎಷ್ಟೊಂದು ಪತಿತ, ದುಃಖಿಯಾಗಿದ್ದೀರಿ. ಮನುಷ್ಯರು ದುಃಖಿಯಾದಾಗ ಶರಣಾಗತಿಯನ್ನು ತೆಗೆದುಕೊಳ್ಳುತ್ತಾರೆ. ನೀವೀಗ 63 ಜನ್ಮಗಳು ರಾವಣನಿಂದ ಬಹಳ ದುಃಖಿಯಾಗಿದ್ದೀರಿ. ಒಬ್ಬ ಸೀತೆಯ ಮಾತಲ್ಲ, ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರೂ ಸೀತೆಯರಾಗಿದ್ದಾರೆ. ರಾಮಾಯಣದಲ್ಲಂತೂ ಕಥೆಯನ್ನು ಬರೆದು ಬಿಟ್ಟಿದ್ದಾರೆ. ಸೀತೆಯನ್ನು ರಾವಣನು ಶೋಕವಾಟಿಕೆಯಲ್ಲಿ ಹಾಕಿದನು, ವಾಸ್ತವದಲ್ಲಿ ಮಾತುಗಳೆಲ್ಲವೂ ಈ ಸಮಯದ್ದಾಗಿದೆ, ಎಲ್ಲರೂ ರಾವಣ ಅರ್ಥಾತ್ ಪಂಚ ವಿಕಾರಗಳ ಬಂಧನದಲ್ಲಿದ್ದಾರೆ. ಆದ್ದರಿಂದ ನಮ್ಮನ್ನು ಇದರಿಂದ ಬಿಡಿಸಿ ಎಂದು ದುಃಖಿಯಾಗಿ ಕರೆಯುತ್ತಾರೆ. ಇದು ಒಬ್ಬರ ಮಾತಲ್ಲ, ಇಡೀ ಪ್ರಪಂಚವೇ ರಾವಣನ ಬಂಧನದಲ್ಲಿದೆ, ರಾವಣ ರಾಜ್ಯವಲ್ಲವೆ. ರಾಮ ರಾಜ್ಯವು ಬೇಕೆಂದು ಹೇಳುತ್ತಾರೆ, ಗಾಂಧೀಜಿಯೂ ಸಹ ಹೇಳಿದರು - ಸನ್ಯಾಸಿಗಳೆಂದೂ ರಾಮ ರಾಜ್ಯವು ಬೇಕೆಂದು ಹೇಳುವುದಿಲ್ಲ, ಇದನ್ನು ಭಾರತವಾಸಿಗಳೇ ಹೇಳುತ್ತಾರೆ. ಈ ಸಮಯದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿಲ್ಲ. ಮತ್ತೆಲ್ಲಾ ಶಾಖೆಗಳಿವೆ. ಸತ್ಯಯುಗವಿತ್ತು, ಒಂದೇ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ಈಗ ಆ ಹೆಸರೇ ಬದಲಾಗಿದೆ. ತಮ್ಮ ಧರ್ಮವನ್ನು ಮರೆತು ಬೇರೆ-ಬೇರೆ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ಮುಸಲ್ಮಾನರು ಬಂದು ಎಷ್ಟೊಂದು ಮಂದಿ ಹಿಂದೂಗಳನ್ನು ತಮ್ಮ ಧರ್ಮದಲ್ಲಿ ಸೇರಿಸಿಕೊಂಡರು, ಕ್ರಿಶ್ಚಿಯನ್ ಧರ್ಮದಲ್ಲಿಯೂ ಸಹ ಅನೇಕರು ಸೇರಿದ್ದಾರೆ. ಆದ್ದರಿಂದ ಭಾರತವಾಸಿಗಳ ಜನಸಂಖ್ಯೆಯು ಕಡಿಮೆಯಾಗಿ ಬಿಟ್ಟಿದೆ, ಇಲ್ಲದಿದ್ದರೆ ಭಾರತವಾಸಿಗಳ ಜನಸಂಖ್ಯೆಯು ಎಲ್ಲರಿಗಿಂತ ಹೆಚ್ಚಾಗಿರಬೇಕು. ಅನೇಕ ಧರ್ಮಗಳಲ್ಲಿ ಹೋಗಿ ಸೇರಿದ್ದಾರೆ. ತಂದೆಯು ತಿಳಿಸುತ್ತಾರೆ - ನಿಮ್ಮ ಆದಿ ಸನಾತನ ದೇವಿ-ದೇವತಾ ಧರ್ಮವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ, ಸತೋಪ್ರಧಾನನಾಗಿತ್ತು. ಅವರೇ ಬದಲಾಗಿ ಈಗ ತಮೋಪ್ರಧಾನರಾಗಿದ್ದಾರೆ. ಈಗ ನೀವು ಮಕ್ಕಳಿಗೆ ತಿಳಿದಿದೆ – ಜ್ಞಾನ ಸಾಗರ, ಪತಿತ-ಪಾವನನೆಂದು ಯಾರನ್ನು ಕರೆಯುವರೋ ಅವರೇ ಸನ್ಮುಖದಲ್ಲಿ ಓದಿಸುತ್ತಿದ್ದಾರೆ. ಅವರು ಜ್ಞಾನ ಸಾಗರ ಪ್ರೇಮ ಸಾಗರನಾಗಿದ್ದಾರೆ. ಕ್ರಿಸ್ತನಿಗೆ ಈ ರೀತಿ ಮಹಿಮೆ ಮಾಡುವುದಿಲ್ಲ. ಕೃಷ್ಣನಿಗೂ ಸಹ ಜ್ಞಾನಸಾಗರ, ಪತಿತ-ಪಾವನನೆಂದು ಹೇಳಲಾಗುವುದಿಲ್ಲ. ಸಾಗರವು ಒಂದೇ ಇರುತ್ತದೆ. ನಾಲ್ಕೂ ಕಡೆ ಸಾಗರವೇ ಸಾಗರವಿದೆ, ಎರಡು ಸಾಗರಗಳಿರುವುದಿಲ್ಲ. ಇದು ಮನುಷ್ಯ ಸೃಷ್ಟಿಯ ನಾಟಕವಾಗಿದೆ, ಇದರಲ್ಲಿ ಎಲ್ಲರದೂ ಬೇರೆ-ಬೇರೆ ಪಾತ್ರವಾಗಿದೆ, ತಂದೆಯು ತಿಳಿಸುತ್ತಾರೆ - ನನ್ನ ಕರ್ತವ್ಯವು ಎಲ್ಲರಿಗಿಂತ ಭಿನ್ನವಾಗಿದೆ, ನಾನು ಜ್ಞಾನಸಾಗರನಾಗಿದ್ದೇನೆ. ನನ್ನನ್ನೇ ನೀವು ಹೇ ಪತಿತ-ಪಾವನ ಎಂದು ಕೂಗುತ್ತೀರಿ ಮತ್ತು ಮುಕ್ತಿದಾತನೆಂದು ಹೇಳುತ್ತೀರಿ. ಯಾವುದರಿಂದ ಮುಕ್ತ ಮಾಡುತ್ತೇನೆ? ಇದನ್ನೂ ಯಾರೂ ತಿಳಿದುಕೊಂಡಿಲ್ಲ, ನೀವು ತಿಳಿದುಕೊಂಡಿದ್ದೀರಿ - ಸತ್ಯ-ತ್ರೇತಾಯುಗದಲ್ಲಿ ನೀವು ಬಹಳ ಸುಖಿಯಾಗಿದ್ದಿರಿ, ಅದಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ. ಈಗಂತೂ ನರಕವಾಗಿದೆ ಆದ್ದರಿಂದ ದುಃಖದಿಂದ ಬಿಡಿಸಿ ಸುಖಧಾಮಕ್ಕೆ ಕರೆದುಕೊಂಡು ಹೋಗಿ ಎಂದು ಕೂಗುತ್ತಾರೆ. ಇಂತಹವರು ಸ್ವರ್ಗವಾಸಿಯಾದರು ಎಂಬ ಮಾತನ್ನು ಸನ್ಯಾಸಿಗಳೆಂದೂ ಹೇಳುವುದಿಲ್ಲ. ನಿರ್ವಾಣಕ್ಕೆ ಹೋದರೆಂದು ಅವರು ಹೇಳುತ್ತಾರೆ. ವಿದೇಶದಲ್ಲಿಯೂ ಸಹ ಲೆಫ್ಟ್ ಫಾರ್ ಹೆವೆನ್ಲಿ ಅಬೋಡ್ ಎಂದು ಹೇಳುತ್ತಾರೆ. ಅವರು ಗಾಡ್ ಫಾದರ್ನ ಬಳಿ ಹೋದರೆಂದು ತಿಳಿಯುತ್ತಾರೆ. ಹೆವೆನ್ಲೀ ಗಾಡ್ಫಾದರ್ ಈಗ ತಿಳಿಸುತ್ತಾರೆ - ಮಕ್ಕಳೇ, ಖಂಡಿತವಾಗಿಯೂ ಸ್ವರ್ಗವಿತ್ತು, ಈಗ ಇಲ್ಲ. ನರಕದ ನಂತರ ಸ್ವರ್ಗವು ಬರಬೇಕು. ಪರಮಾತ್ಮನು ಬಂದು ಸ್ವರ್ಗವನ್ನು ಸ್ಥಾಪನೆ ಮಾಡಬೇಕಾಗಿದೆ. ಸೂಕ್ಷ್ಮವತನ ಮೂಲವತನದಲ್ಲಿ ಸ್ವರ್ಗವಿರುವುದಿಲ್ಲ, ಅವಶ್ಯವಾಗಿ ತಂದೆಯು ಬರಬೇಕಾಗುತ್ತದೆ.
ತಂದೆಯು ತಿಳಿಸುತ್ತಾರೆ - ನಾನು ಬಂದು ಪ್ರಕೃತಿಯ ಆಧಾರವನ್ನು ತೆಗೆದುಕೊಳ್ಳುತ್ತೇನೆ, ನನ್ನ ಜನ್ಮವು ಮನುಷ್ಯರ ತರಹ ಆಗುವುದಿಲ್ಲ, ನಾನು ಗರ್ಭದಲ್ಲಿ ಬರುವುದಿಲ್ಲ, ನೀವೆಲ್ಲರೂ ಗರ್ಭದಲ್ಲಿ ಬರುತ್ತೀರಿ. ಸ್ವರ್ಗದಲ್ಲಿ ಗರ್ಭ ಮಹಲಿರುತ್ತದೆ, ಏಕೆಂದರೆ ಶಿಕ್ಷೆಯನ್ನನುಭವಿಸಲು ಅಲ್ಲಿ ಯಾವುದೇ ವಿಕರ್ಮವಾಗುವುದಿಲ್ಲ. ಆದ್ದರಿಂದ ಅದಕ್ಕೆ ಗರ್ಭ ಮಹಲು ಎಂದು ಹೇಳಲಾಗುತ್ತದೆ. ಇಲ್ಲಿ ವಿಕರ್ಮ ಮಾಡುತ್ತಾರೆ, ಅದರ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ ಆದ್ದರಿಂದ ಗರ್ಭ ಜೈಲು ಎಂದು ಹೇಳಲಾಗುತ್ತದೆ. ಇಲ್ಲಿ ರಾವಣ ರಾಜ್ಯದಲ್ಲಿ ಮನುಷ್ಯರು ಪಾಪ ಮಾಡುತ್ತಿರುತ್ತಾರೆ. ಇದು ಪಾಪಾತ್ಮರ ಪ್ರಪಂಚವಾಗಿದೆ, ಅದು ಪುಣ್ಯಾತ್ಮರ ಪ್ರಪಂಚ ಸ್ವರ್ಗವಾಗಿದೆ. ಆದ್ದರಿಂದ ಆಲದ ಎಲೆಯ ಮೇಲೆ ಕೃಷ್ಣನು ತೇಲಿ ಬಂದನು ಎಂದು ಹೇಳುತ್ತಾರೆ. ಇದು ಕೃಷ್ಣನ ಮಹಿಮೆಯನ್ನು ತೋರಿಸುತ್ತಾರೆ. ಸತ್ಯಯುಗದಲ್ಲಿ ಗರ್ಭದಲ್ಲಿ ದುಃಖವಾಗುವುದಿಲ್ಲ. ತಂದೆಯು ಕರ್ಮ, ಅಕರ್ಮ, ವಿಕರ್ಮದ ಗತಿಯನ್ನು ತಿಳಿಸುತ್ತಾರೆ. ಇದನ್ನು ನಂತರ ಗೀತಾ ಶಾಸ್ತ್ರವನ್ನಾಗಿ ಬರೆದಿದ್ದಾರೆ ಆದರೆ ಅದರಲ್ಲಿ ಶಿವ ಭಗವಾನುವಾಚದ ಬದಲು ಕೃಷ್ಣನ ಹೆಸರನ್ನು ಹಾಕಿದ್ದಾರೆ. ಈಗ ನೀವು ತಿಳಿದುಕೊಳ್ಳುತ್ತೀರಿ - ಬೇಹದ್ದಿನ ತಂದೆಯಿಂದ ನಾವು ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಈಗ ಭಾರತವು ರಾವಣನಿಂದ ಶಾಪಗ್ರಸ್ತನಾಗಿದೆ ಆದ್ದರಿಂದ ದುರ್ಗತಿಯಾಗಿ ಬಿಟ್ಟಿದೆ. ಈ ದೊಡ್ಡ ಶಾಪವೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ತಂದೆಯು ಬಂದು ವರ ಕೊಡುತ್ತಾರೆ - ಆಯುಷ್ಯವಾನ್ಭವ, ಪುತ್ರವಾನ್, ಸಂಪತ್ತಿವಾನ್ ಭವ..... ಎಲ್ಲಾ ಸುಖದ ಆಸ್ತಿಯು ಕೊಡುತ್ತಾರೆ. ಬಂದು ನಿಮಗೆ ಓದಿಸುತ್ತಾರೆ ಯಾವ ವಿದ್ಯೆಯಿಂದ ನೀವು ದೇವತೆಗಳಾಗುತ್ತೀರಿ. ಇದು ಹೊಸ ರಚನೆಯಾಗುತ್ತಿದೆ, ಬ್ರಹ್ಮನ ಮೂಲಕ ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಳ್ಳುತ್ತಾರೆ. ಪ್ರಜಾಪಿತ ಬ್ರಹ್ಮನೆಂದು ಗಾಯನವಿದೆ, ನೀವು ಅವರ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೀರಿ. ತಾತನಿಂದ ತಂದೆಯ ಮೂಲಕ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಮೊದಲೂ ತೆಗೆದುಕೊಂಡಿದ್ದೀರಿ, ಈಗ ಪುನಃ ತಂದೆಯು ಬಂದಿದ್ದಾರೆ. ತಂದೆಯ ಮಕ್ಕಳಂತೂ ಮತ್ತೆ ತಂದೆಯ ಬಳಿಗೇ ಹೋಗಬೇಕು ಆದರೆ ಗಾಯನವಿದೆ, ಪ್ರಜಾಪಿತ ಬ್ರಹ್ಮನ ಮೂಲಕ ಮನುಷ್ಯ ಸೃಷ್ಟಿಯ ಸ್ಥಾಪನೆಯಾಗುತ್ತದೆ ಎಂದು. ಅದು ಇಲ್ಲಿಯೇ ಆಗುವುದಲ್ಲವೆ. ಆತ್ಮನ ಸಂಬಂಧದಿಂದ ನಾವು ಸಹೋದರ-ಸಹೋದರರಾಗಿದ್ದೇವೆಂದು ಹೇಳುತ್ತಾರೆ. ಪ್ರಜಾಪಿತ ಬ್ರಹ್ಮನ ಸಂತಾನರಾಗುವುದರಿಂದ ನೀವು ಸಹೋದರ-ಸಹೋದರಿಯರಾಗಿದ್ದೀರಿ. ಈ ಸಮಯದಲ್ಲಿ ನೀವೆಲ್ಲರೂ ಸಹೋದರ-ಸಹೋದರಿಯರಾಗಿದ್ದೀರಿ, ನೀವು ತಂದೆಯಿಂದ ಆಸ್ತಿಯನ್ನು ತೆಗೆದುಕೊಂಡಿದ್ದಿರಿ, ಈಗಲೂ ತಂದೆಯಿಂದ ತೆಗೆದುಕೊಳ್ಳುತ್ತಿದ್ದೀರಿ. ಶಿವ ತಂದೆಯು ತಿಳಿಸುತ್ತಾರೆ - ನನ್ನನ್ನು ನೆನಪು ಮಾಡಿ. ನೀವಾತ್ಮರು ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ, ನೆನಪು ಮಾಡುವುದರಿಂದಲೇ ನೀವು ಪಾವನರಾಗುತ್ತೀರಿ, ಮತ್ತ್ಯಾವುದೇ ಉಪಾಯವಿಲ್ಲ. ಪಾವನರಾಗದೇ ನೀವು ಮುಕ್ತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ಜೀವನ್ಮುಕ್ತಿಧಾಮದಲ್ಲಿ ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು, ನಂತರ ನಂಬರ್ವಾರ್ ಬೇರೆ-ಬೇರೆ ಧರ್ಮಗಳು ಬಂದವು. ತಂದೆಯು ಅಂತಿಮದಲ್ಲಿ ಬಂದು ಎಲ್ಲರನ್ನೂ ದುಃಖದಿಂದ ಮುಕ್ತರನ್ನಾಗಿ ಮಾಡುತ್ತಾರೆ, ಅವರಿಗೆ ಮುಕ್ತಿದಾತನೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ - ನೀವು ಕೇವಲ ನನ್ನನ್ನು ನೆನಪು ಮಾಡಿರಿ ಆಗ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಓ ತಂದೆಯೇ ಬನ್ನಿ, ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ಕರೆಯುತ್ತೀರಿ. ಶಿಕ್ಷಕರಂತೂ ಓದಿಸುತ್ತಾರೆ, ಇದರಲ್ಲಿ ಚರಿತ್ರೆ ಮಾಡುತ್ತಾರೆಯೇ? ಇದೂ ಸಹ ವಿದ್ಯೆಯಾಗಿದೆ, ಜ್ಞಾನಸಾಗರ ತಂದೆಯೇ ಬಂದು ಜ್ಞಾನವನ್ನು ಕೊಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಕರ್ಮ-ಅಕರ್ಮ-ವಿಕರ್ಮದ ಗತಿಯನ್ನು ಅರಿತುಕೊಂಡು ಈಗ ಯಾವುದೇ ವಿಕರ್ಮ ಮಾಡಬಾರದು, ಕರ್ಮ ಕ್ಷೇತ್ರದಲ್ಲಿ ಕರ್ಮ ಮಾಡುತ್ತಾ ವಿಕಾರಗಳ ದಾನ ಮಾಡುವುದೇ ವಿಕರ್ಮಗಳಿಂದ ಮುಕ್ತರಾಗುವುದಾಗಿದೆ.
2. ಈ ರೀತಿ ಪಾವನರಾಗಬೇಕಾಗಿದೆ ನಮ್ಮ ಬಲಿಹಾರಿಯನ್ನು ತಂದೆಯು ಸ್ವೀಕಾರ ಮಾಡುವಂತಿರಲಿ. ಪಾವನರಾಗಿ ಪಾವನ ಪ್ರಪಂಚದಲ್ಲಿ ಹೋಗಬೇಕಾಗಿದೆ, ತನು-ಮನ-ಧನವನ್ನು ಈ ಯಜ್ಞದಲ್ಲಿ ಸ್ವಾಹಾ ಮಾಡಿ ಸಫಲ ಮಾಡಿಕೊಳ್ಳಬೇಕಾಗಿದೆ.
ಓಂ ಶಾಂತಿ. ಈ ಗೀತೆಯನ್ನು ಯಾರು ಹಾಡಿದರು? ಮಕ್ಕಳು. ಏಕೆಂದರೆ ತಂದೆಯಂತೂ ಒಬ್ಬರೇ ಆಗಿದ್ದಾರೆ, ಅವರಿಗೇ ರಚಯಿತನೆಂದು ಹೇಳಲಾಗುತ್ತದೆ. ರಚನೆಯು ರಚಯಿತನನ್ನು ಕರೆಯುತ್ತದೆ. ತಂದೆಯು ತಿಳಿಸಿದ್ದಾರೆ - ಭಕ್ತಿಮಾರ್ಗದಲ್ಲಿ ನಿಮಗೆ ಇಬ್ಬರು ತಂದೆಯರಿರುತ್ತಾರೆ, ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ. ಎಲ್ಲಾ ಆತ್ಮರ ತಂದೆಯು ಒಬ್ಬರೇ ಆಗಿದ್ದಾರೆ. ಒಬ್ಬರೇ ತಂದೆಯಾಗುವ ಕಾರಣ ಎಲ್ಲಾ ಆತ್ಮರು ತಮ್ಮನ್ನು ಸಹೋದರರೆಂದು ಹೇಳುತ್ತಾರೆ, ಆ ತಂದೆಯನ್ನು ಓ ಗಾಡ್ ಫಾದರ್, ಓ ಪರಮಪಿತ ದಯೆ ತೋರಿಸಿ, ಕ್ಷಮಿಸಿ ಎಂದು ಕೂಗುತ್ತಾರೆ. ಭಕ್ತರ ರಕ್ಷಕ ಒಬ್ಬ ಭಗವಂತನೇ ಆಗಿದ್ದಾರೆ. ಮೊಟ್ಟ ಮೊದಲು ಇದನ್ನು ತಿಳಿಸಬೇಕಾಗಿದೆ - ನಮಗೆ ಇಬ್ಬರು ತಂದೆಯರಿದ್ದಾರೆ. ಪಾರಲೌಕಿಕ ತಂದೆಯಂತೂ ಎಲ್ಲರಿಗೂ ಒಬ್ಬರೇ ಆಗಿದ್ದಾರೆ, ಬಾಕಿ ಪ್ರತಿಯೊಬ್ಬರಿಗೂ ಲೌಕಿಕ ತಂದೆಯು ಬೇರೆ-ಬೇರೆಯಿರುತ್ತಾರೆ. ಈಗ ಲೌಕಿಕ ತಂದೆಯು ದೊಡ್ಡವರೋ ಅಥವಾ ಪಾರಲೌಕಿಕ ತಂದೆಯು ದೊಡ್ಡವರೋ? ಲೌಕಿಕ ತಂದೆಯನ್ನಂತೂ ಎಂದೂ ಭಗವಂತ ಎಂದು, ಪರಮಪಿತ ಎಂದೂ ಹೇಳುವುದಿಲ್ಲ. ಆತ್ಮದ ತಂದೆಯು ಅವರೊಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಆತ್ಮದ ಹೆಸರು ಎಂದೂ ಬದಲಾಗುವುದಿಲ್ಲ, ಶರೀರದ ಹೆಸರು ಬದಲಾಗುತ್ತದೆ. ಆತ್ಮವು ಭಿನ್ನ-ಭಿನ್ನ ಶರೀರವನ್ನು ತೆಗೆದುಕೊಂಡು ಪಾತ್ರವನ್ನು ಅಭಿನಯಿಸುತ್ತದೆ ಅರ್ಥಾತ್ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತದೆ. ಕೊನೆಗೂ ಎಷ್ಟು ಜನ್ಮಗಳು ಸಿಗುತ್ತವೆಯೆಂದು ತಂದೆಯು ಬಂದು ತಿಳಿಸುತ್ತಾರೆ. ನೀವು ಮಕ್ಕಳು ತಮ್ಮ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ. ತಂದೆಯು ಭಾರತದಲ್ಲಿಯೇ ಬರುತ್ತಾರೆ, ಅವರ ಹೆಸರಾಗಿದೆ - ಶಿವ. ಶಿವನು ಪರಮಾತ್ಮನಾಗಿದ್ದಾರೆ ಎಂಬುದನ್ನೂ ತಿಳಿದುಕೊಳ್ಳುತ್ತಾರೆ. ಶಿವ ಜಯಂತಿ ಅಥವಾ ಶಿವರಾತ್ರಿಯನ್ನೂ ಆಚರಣೆ ಮಾಡುತ್ತಾರೆ. ಅವರು ನಿರಾಕಾರನಾಗಿದ್ದಾರೆ. ಹೇಗೆ ಆತ್ಮವೂ ನಿರಾಕಾರಿಯಾಗಿದೆ. ನಿರಾಕಾರಿಯಿಂದ ಪಾತ್ರವನ್ನು ಅಭಿನಯಿಸಲು ಸಾಕಾರದಲ್ಲಿ ಬರುತ್ತದೆ. ಈಗ ನಿರಾಕಾರ ಶಿವನಂತೂ ಶರೀರವಿಲ್ಲದೆ ಪಾತ್ರವನ್ನು ಅಭಿನಯಿಸಲು ಸಾಧ್ಯವಿಲ್ಲ. ಮನುಷ್ಯರು ಈ ಮಾತುಗಳನ್ನು ಏನೂ ತಿಳಿದುಕೊಳ್ಳುವುದಿಲ್ಲ, ನಯನಹೀನರಾಗಿದ್ದಾರೆ. ಈ ಶರೀರದ ಎರಡು ಕಣ್ಣುಗಳಂತೂ ಎಲ್ಲರಿಗೂ ಇದೆ. ಆತ್ಮಕ್ಕೆ ಜ್ಞಾನದ ಮೂರನೇ ನೇತ್ರವಿಲ್ಲ, ಇದಕ್ಕೆ ದಿವ್ಯ ಚಕ್ಷುವೆಂದೂ ಹೇಳುತ್ತಾರೆ. ಆತ್ಮವು ತನ್ನ ತಂದೆಯನ್ನು ಮರೆತು ಬಿಟ್ಟಿದೆ. ಆದ್ದರಿಂದ ನಯನಹೀನರಿಗೆ ದಾರಿ ತೋರಿಸಿ ಎಂದು ಕೂಗುತ್ತಾರೆ. ಎಲ್ಲಿಯ ದಾರಿ? ಶಾಂತಿಧಾಮ ಮತ್ತು ಸುಖಧಾಮದ ದಾರಿ. ಸರ್ವರ ಸದ್ಗತಿದಾತ ಸದ್ಗುರು ಒಬ್ಬರೇ ಆಗಿದ್ದಾರೆ. ಮನುಷ್ಯರು ಮನುಷ್ಯರಿಗೆ ಗುರುಗಳಾಗಿ ಸದ್ಗತಿ ನೀಡಲು ಸಾಧ್ಯವಿಲ್ಲ. ತಾನೂ ಸದ್ಗತಿ ಪಡೆಯುವುದಿಲ್ಲ, ಅನ್ಯರಿಗೂ ನೀಡುವುದಿಲ್ಲ. ಒಬ್ಬ ತಂದೆಯೇ ಸರ್ವರಿಗೆ ಸದ್ಗತಿ ಕೊಡುತ್ತಾರೆ. ಆ ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ - ಯಾವುದೇ ಮನುಷ್ಯ ಮಾತ್ರರು ಮುಕ್ತಿ-ಜೀವನ್ಮುಕ್ತಿ, ಶಾಂತಿ ಮತ್ತು ಸುಖವನ್ನು ಸದಾಕಾಲಕ್ಕಾಗಿ ಕೊಡಲು ಸಾಧ್ಯವಿಲ್ಲ. ಸುಖ-ಶಾಂತಿಯ ವರದಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ, ಮನುಷ್ಯರು ಮನುಷ್ಯರಿಗೆ ಕೊಡಲು ಸಾಧ್ಯವಿಲ್ಲ. ಭಾರತವಾಸಿಗಳು ಸತೋಪ್ರಧಾನರಾಗಿದ್ದಾರೆ, ಸತ್ಯಯುಗೀ ಸ್ವರ್ಗವಾಸಿಗಳಾಗಿದ್ದರು, ಆತ್ಮವು ಪವಿತ್ರವಾಗಿತ್ತು. ಭಾರತಕ್ಕೆ ಸ್ವರ್ಗವೆಂದು ಹೇಳಲಾಗುತ್ತದೆ ಯಾವಾಗ ಆತ್ಮರು ಪವಿತ್ರ, ಸತೋಪ್ರಧಾನರಾಗಿದ್ದರು.
ನೀವು ತಿಳಿದುಕೊಂಡಿದ್ದೀರಿ - ಅವಶ್ಯವಾಗಿ ಇಂದಿಗೆ 5000 ವರ್ಷಗಳ ಮೊದಲು ಭಾರತವು ಸ್ವರ್ಗ, ಸತೋಪ್ರಧಾನವಾಗಿತ್ತು. ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ಕಲಿಯುಗದ ಅಂತ್ಯವಾಗಿದೆ, ಇದಕ್ಕೆ ನರಕವೆಂದು ಹೇಳಲಾಗುತ್ತದೆ. ಇದೇ ಭಾರತವು ಸ್ವರ್ಗವಾಗಿದ್ದಾಗ ಬಹಳ ಧನವಂತನಾಗಿತ್ತು, ವಜ್ರ-ವೈಡೂರ್ಯಗಳ ಮಹಲು ಇತ್ತು. ತಂದೆಯು ಮಕ್ಕಳಿಗೆ ನೆನಪು ತರಿಸುತ್ತಾರೆ - ಸತ್ಯಯುಗದ ಆದಿಯಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜಧಾನಿಯಿತ್ತು, ಅದಕ್ಕೆ ಸ್ವರ್ಗ, ವೈಕುಂಠವೆಂದು ಹೇಳಲಾಗುತ್ತಿತ್ತು. ಈಗಂತೂ ಸ್ವರ್ಗವು ಇಲ್ಲ, ಇದನ್ನು ತಂದೆಯು ತಿಳಿಸುತ್ತಾರೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ನಿರಾಕಾರ ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಅವರು ಏನು ಮಾಡುತ್ತಾರೆ ಎಂಬುದನ್ನಂತೂ ತಿಳಿದುಕೊಂಡಿಲ್ಲ. ನಾವಾತ್ಮರ ತಂದೆಯು ಶಿವನಾಗಿದ್ದಾರೆ, ನಾವು ಅವರ ಜಯಂತಿಯನ್ನು ಆಚರಿಸುತ್ತೇವೆ. ಮನುಷ್ಯರು ತಂದೆಯ ಚರಿತ್ರೆಯನ್ನೇ ತಿಳಿದುಕೊಂಡಿಲ್ಲ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು ಎಂದು ಗಾಯನವಿದೆ. ಓ ಗಾಡ್ಫಾದರ್ ದಯೆ ತೋರಿಸಿ, ನಾವು ಬಹಳ ದುಃಖಿಯಾಗಿದ್ದೇವೆ ಎಂದು ಕರೆಯುತ್ತಾರೆ, ಏಕೆಂದರೆ ಇದು ರಾವಣ ರಾಜ್ಯವಾಗಿದೆ. ವರ್ಷ-ವರ್ಷವೂ ರಾವಣನನ್ನು ಸುಡುತ್ತಾರಲ್ಲವೆ, ಆದರೆ ಈ ಹತ್ತು ತಲೆಯ ರಾವಣನು ಯಾರು? ನಾವು ಅವನನ್ನು ಏಕೆ ಸುಡುತ್ತೇವೆ? ಇವನು ಎಂತಹ ಶತ್ರುವಾಗಿದ್ದಾನೆ, ಯಾವ ಕಾರಣ ಅವನ ಪ್ರತಿಮೆ ಮಾಡಿ ಸುಡುತ್ತೇವೆ ಎಂಬುದನ್ನು ಭಾರತವಾಸಿಗಳು ಸ್ವಲ್ಪವೂ ತಿಳಿದುಕೊಂಡಿಲ್ಲ, ಏಕೆಂದರೆ ಜ್ಞಾನದ ಮೂರನೇ ನೇತ್ರವಿಲ್ಲ. ಆದ್ದರಿಂದಲೇ ರಾಮ ರಾಜ್ಯ ಬೇಕೆಂದು ಬಯಸುತ್ತಾರೆ. 5 ವಿಕಾರಗಳು ಸ್ತ್ರೀಯಲ್ಲಿ, 5 ವಿಕಾರಗಳು ಪುರುಷನಲ್ಲಿಯೂ ಇವೆ ಆದ್ದರಿಂದ ಇದಕ್ಕೆ ರಾವಣ ಸಂಪ್ರದಾಯವೆಂದು ಹೇಳಲಾಗುತ್ತದೆ. ಈ ಪಂಚ ವಿಕಾರಗಳ ರಾವಣನೇ ಅತಿ ದೊಡ್ಡ ಶತ್ರುವಾಗಿದ್ದಾನೆ. ಇವನ ಪ್ರತಿಮೆ ಮಾಡಿ ಸುಡುತ್ತಾರೆ ಆದರೆ ರಾವಣನು ಯಾರು? ಯಾರನ್ನು ಸುಡುತ್ತೇವೆ? ರಾವಣ ರಾಜ್ಯ, ಪಂಚ ವಿಕಾರಗಳು ಎಂದಿನಿಂದ ಆರಂಭವಾಯಿತು ಎಂಬುದು ಭಾರತವಾಸಿಗಳಿಗೆ ಅರ್ಥವೇ ಆಗುವುದಿಲ್ಲ. ತಂದೆಯು ತಿಳಿಸುತ್ತಾರೆ - ಸತ್ಯ, ತ್ರೇತಾಯುಗವು ರಾಮ ರಾಜ್ಯವಾಗಿದೆ, ದ್ವಾಪರ-ಕಲಿಯುಗವು ರಾವಣ ರಾಜ್ಯವಾಗಿದೆ. ಸತ್ಯಯುಗದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಇವರಿಗೆ ಈ ರಾಜ್ಯವು ಎಲ್ಲಿಂದ, ಹೇಗೆ ಸಿಕ್ಕಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಇವು ತಿಳಿದುಕೊಳ್ಳುವ ಮಾತುಗಳಾಗಿವೆ. ಇದರಲ್ಲಿ ಗಮನ ಕೊಡಬೇಕಾಗಿದೆ. ಅತೀ ಪ್ರಿಯ ತಂದೆಯಾಗಿದ್ದಾರೆ ಆದ್ದರಿಂದಲೇ ಅವರನ್ನು ಭಕ್ತಿಮಾರ್ಗದಲ್ಲಿಯೂ ಕರೆಯುತ್ತಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ದುಃಖದ ಹೆಸರೂ ಇರಲಿಲ್ಲ, ಈಗ ದುಃಖಧಾಮವಾಗಿದೆ. ಎಷ್ಟೊಂದು ಧರ್ಮಗಳಿವೆ, ಸತ್ಯಯುಗದಲ್ಲಿ ಒಂದು ಧರ್ಮವಿತ್ತು, ಇಷ್ಟೆಲ್ಲಾ ಆತ್ಮರು ಎಲ್ಲಿ ಹೊರಟು ಹೋದರು? ಇದು ಯಾರಿಗೂ ತಿಳಿದಿಲ್ಲ ಏಕೆಂದರೆ ನಯನಹೀನರಾಗುತ್ತಾರೆ. ಶಾಸ್ತ್ರಗಳಿಂದ ಯಾರಿಗೂ ಜ್ಞಾನದ ಮೂರನೇ ನೇತ್ರವು ಸಿಗುವುದಿಲ್ಲ, ಜ್ಞಾನ ನೇತ್ರವನ್ನು ಜ್ಞಾನ ಸಾಗರ, ಪರಮಪಿತ ಪರಮಾತ್ಮನೇ ಕೊಡುತ್ತಾರೆ. ಆತ್ಮಕ್ಕೆ ಮೂರನೇ ನೇತ್ರವು ಸಿಗುತ್ತದೆ. ನಾವೆಷ್ಟು ಜನ್ಮಗಳನ್ನು ತೆಗೆದುಕೊಳ್ಳುವೆವೋ ಸತ್ಯಯುಗದಲ್ಲಿ ಯಾವ ದೇವತೆಗಳ ರಾಜ್ಯವಿತ್ತೋ ಅದು ಎಲ್ಲಿ ಹೋಯಿತೆಂದು ಆತ್ಮವು ಮರೆತು ಹೋಯಿತು. ಮನುಷ್ಯರು 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. 84 ಜನ್ಮಗಳ ಚಕ್ರ ಎಂದು ಹೇಳುತ್ತಾರೆ ಆದರೆ ಯಾವ ಆತ್ಮವು 84 ಜನ್ಮಗಳನ್ನು ತೆಗೆದುಕೊಳ್ಳುತ್ತದೆ? ಯಾರು ಮೊದಲು ಭಾರತದಲ್ಲಿ ಬರುವರೋ ಅವರು ದೇವಿ-ದೇವತೆಗಳಾಗಿದ್ದರು ನಂತರ 84 ಜನ್ಮಗಳನ್ನು ಭೋಗಿಸಿ ಅಂತ್ಯದಲ್ಲಿ ಪತಿತರಾಗಿ ಬಿಡುತ್ತಾರೆ. ಹೇ ಪತಿತ-ಪಾವನ ಎಂದು ಹಾಡುತ್ತಾರೆ, ಇದರಿಂದ ನಾವು ಪತಿತರಾಗಿದ್ದೇವೆ ಎಂಬುದನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಆದ್ದರಿಂದ ಹೇ ಪತಿತ-ಪಾವನ, ನಮ್ಮನ್ನು ಪಾವನ ಮಾಡಲು ಬನ್ನಿ ಎಂದು ಕರೆಯುತ್ತಾರೆ. ಯಾರು ಸ್ವಯಂ ಪತಿತರಾಗಿದ್ದಾರೆಯೋ ಅವರು ಅನ್ಯರನ್ನು ಹೇಗೆ ಪಾವನ ಮಾಡುವರು? ತಂದೆಯು ತಿಳಿಸುತ್ತಾರೆ, ಅರ್ಧ ಕಲ್ಪ ರಾವಣ ರಾಜ್ಯ, ಪಂಚ ವಿಕಾರಗಳಿರುವ ಕಾರಣ ಭಾರತವು ಇಷ್ಟು ದುಃಖಿಯಾಗಿದೆ, 84 ಜನ್ಮಗಳನ್ನಂತೂ ತೆಗೆದುಕೊಳ್ಳಬೇಕಾಗಿದೆ,ಇದರ ಲೆಕ್ಕವನ್ನೂ ತಿಳಿಸಬೇಕು. ಮೊಟ್ಟ ಮೊದಲು ಸತ್ಯಯುಗದಲ್ಲಿ ಸತೋಪ್ರಧಾನರು ನಂತರ ತ್ರೇತಾದಲ್ಲಿ ಸತೋ..... ಹೀಗೆ ಆತ್ಮದಲ್ಲಿ ತುಕ್ಕು ಬೀಳುತ್ತದೆ. ತಂದೆಯು ಭಾರತದಲ್ಲಿಯೇ ಬರುತ್ತಾರೆ. ಶಿವ ಜಯಂತಿ ಇದೆಯಲ್ಲವೆ. ಮತ್ತೆಲ್ಲಾ ಆತ್ಮರು ಗರ್ಭದಲ್ಲಿ ಜನ್ಮ ಪಡೆಯುತ್ತಾರೆ. ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ವೃದ್ಧನ ಶರೀರದಲ್ಲಿ ಪ್ರವೇಶ ಮಾಡುತ್ತೇನೆ. ಇವರದು ಬಹಳ ಜನ್ಮಗಳ ಅಂತಿಮ ಜನ್ಮವಾಗಿದೆ. ಈ ತಿಳುವಳಿಕೆಯನ್ನು ಕೇವಲ ಒಬ್ಬರಿಗೇ ನೀಡಲಾಗುವುದಿಲ್ಲ. ಇದು ಗೀತಾ ಪಾಠಶಾಲೆಯಾಗಿದೆ. ಮನುಷ್ಯರನ್ನು ದೇವತೆಗಳನ್ನಾಗಿ ಮಾಡಲು ಈ ರಾಜಯೋಗವನ್ನು ಕಲಿಸಲಾಗುತ್ತದೆ. ನೀವಿಲ್ಲಿ ಸ್ವರ್ಗದ ರಾಜ್ಯಭಾಗ್ಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಬಂದಿದ್ದೀರಿ ಯಾವುದನ್ನು ತಂದೆಯೇ ಕೊಡಲು ಸಾಧ್ಯ. ಗೀತೆಯನ್ನು ಓದುವುದರಿಂದ ಯಾರೂ ರಾಜರಾಗುವುದಿಲ್ಲ. ಇನ್ನೂ ಇಳಿಯುತ್ತಲೇ ಹೋಗುತ್ತಾರೆ. ತಂದೆಯು ಗೀತಾ ಜ್ಞಾನವನ್ನು ತಿಳಿಸಿ ರಾಜರನ್ನಾಗಿ ಮಾಡುತ್ತಾರೆ, ಅನ್ಯರ ಮೂಲಕ ಗೀತೆಯನ್ನು ಕೇಳುವುದರಿಂದ ಎಲ್ಲಾ ಬಡವರಾಗಿ ಬಿಟ್ಟಿದ್ದಾರೆ. ಭಾರತದಲ್ಲಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿದ್ದಾಗ ಸುಖ, ಶಾಂತಿ, ಪವಿತ್ರತೆಯಿತ್ತು. ಪವಿತ್ರ ಗೃಹಸ್ಥ ಆಶ್ರಮವಿತ್ತು, ಅಲ್ಲಿ ಹಿಂಸೆಯ ಹೆಸರಿಲಿಲ್ಲ, ಮತ್ತೆ ದ್ವಾಪರದಿಂದ ಹಿಡಿದು ಹಿಂಸೆಯು ಆರಂಭವಾಗಿದೆ. ಕಾಮ ಕಟಾರಿಯನ್ನು ನಡೆಸುತ್ತಾ-ನಡೆಸುತ್ತಾ ನಿಮ್ಮದು ಈ ಸ್ಥಿತಿಯುಂಟಾಗಿದೆ. ಸತ್ಯಯುಗದಲ್ಲಿ 100% ಸಾಹುಕಾರರು, ಸತೋಪ್ರಧಾನರಾಗಿದ್ದಿರಿ. ಈ ರಹಸ್ಯವನ್ನು ಯಾವುದೇ ಮನುಷ್ಯರಾಗಲಿ, ಸಾಧು-ಸಂತರಾಗಲಿ ತಿಳಿದುಕೊಂಡಿಲ್ಲ. ಯಾವ ತಂದೆಯು ಜ್ಞಾನ ಸಾಗರ, ಪತಿತ-ಪಾವನನಾಗಿದ್ದಾರೆಯೋ ಅವರೇ ಬಂದು ಸತೋಪ್ರಧಾನರಾಗುವ ಯುಕ್ತಿಯನ್ನು ತಿಳಿಸುತ್ತಾರೆ. ರಾವಣನ ಮತದಂತೆ ನೀವು ಮನುಷ್ಯರ ಗತಿ ಏನಾಗಿ ಬಿಟ್ಟಿದೆ! ರಾಜರೂ ಸಹ ಯಾವ ಪವಿತ್ರ ರಾಜರು ಬಂದು ಹೋಗಿದ್ದಾರೆಯೋ ಅವರ ಚರಣಗಳಿಗೆ ಬೀಳುತ್ತಾರೆ ಮತ್ತು ತಾವು ಸರ್ವಗುಣ ಸಂಪನ್ನರು, ನಾವು ನೀಚರು, ಪಾಪಿಗಳು ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಹಾಡುತ್ತಾರೆ. ತಾವೇ ಬಂದು ನಮ್ಮನ್ನು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡಿ, ತಾವೇ ದಯೆ ತೋರಿಸಿ ಎಂದು ಹೇಳುತ್ತಾರೆ ಆದರೆ ತಂದೆಯು ಹೇಗೆ ಬಂದು ಪುನಃ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಸುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ - ನಾವೇ ದೇವಿ-ದೇವತಾ ಧರ್ಮದವರಾಗಿದ್ದೆವು, ಮತ್ತೆ ನಾವೇ ಕ್ಷತ್ರಿಯ, ವೈಶ್ಯ, ಶೂದ್ರರಾದೆವು. ಈಗ 84 ಜನ್ಮಗಳು ಮುಗಿಯಿತು. ಮತ್ತೆ ಪ್ರಪಂಚದ ಚಕ್ರವು ಸುತ್ತಬೇಕಾಗಿದೆ. ಆದ್ದರಿಂದ ಪುನಃ ನೀವು ಇಲ್ಲಿ ಪಾವನರಾಗಬೇಕಾಗಿದೆ. ಪತಿತರಂತೂ ಸುಖಧಾಮ, ಶಾಂತಿಧಾಮದಲ್ಲಿ ಹೋಗಲು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಸತೋಪ್ರಧಾನರಾಗಿದ್ದವರೇ ತಮೋಪ್ರಧಾನರಾಗಿದ್ದೀರಿ. ಸತೊಪ್ರಧಾನರಿಂದ ತಮೋಪ್ರಧಾನರಾದಿರಿ ಮತ್ತೆ ಸತೋಪ್ರಧಾನರಾಗಬೇಕಾಗಿದೆ ಆಗಲೇ ಮುಕ್ತಿಧಾಮ, ಸುಖಧಾಮಕ್ಕೆ ಹೋಗುವಿರಿ. ಭಾರತವು ಸುಖಧಾಮವಾಗಿತ್ತು, ಈಗ ದುಃಖಧಾಮವಾಗಿದೆ. ನಯನಹೀನನಿಗೆ ದಾರಿ ತೋರಿಸು ಪ್ರಭು ಎಂದು ಗೀತೆಯಲ್ಲಿಯೂ ಕೇಳಿದಿರಿ. ಮನುಷ್ಯರಂತೂ ಪರಮಾತ್ಮನು ಸರ್ವವ್ಯಾಪಿಯಾಗಿದ್ದಾರೆ, ಇಂತಹ ಅವತಾರವಾಗಿದ್ದಾರೆ, ಪರಶುರಾಮನ ಅವತಾರವಾಗಿದ್ದಾರೆಂದು ಹೇಳುತ್ತಾರೆ ಆದರೆ ತಂದೆಯು ಪರಶುರಾಮನಾಗಿ ಯಾರನ್ನಾದರೂ ಸಾಯಿಸುವರೇ? ಇದು ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ನೀವು ಈ ಚಕ್ರದಲ್ಲಿ ಹೇಗೆ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ, ಈಗ ತಂದೆಯಾದ ನನ್ನನ್ನು ನೆನಪು ಮಾಡಿ. ಹೇ ಆತ್ಮರೇ, ದೇಹೀ-ಅಭಿಮಾನಿಗಳಾಗಿ. ದೇಹಾಭಿಮಾನಿಗಳಾಗಿ ನೀವು ಸಂಪೂರ್ಣ ದುಃಖಿ, ಕಂಗಾಲ, ನರಕವಾಸಿಗಳಾಗಿ ಬಿಟ್ಟಿದ್ದೀರಿ. ಒಂದುವೇಳೆ ಸ್ವರ್ಗವಾಸಿಗಳಾಗಬೇಕೆಂದರೆ ಖಂಡಿತವಾಗಿಯೂ ಆತ್ಮಾಭಿಮಾನಿಗಳಾಗಬೇಕಾಗಿದೆ. ಆತ್ಮವೇ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಈಗ 84 ಜನ್ಮಗಳು ಪೂರ್ಣವಾಯಿತು, ಮತ್ತೆ ಸತ್ಯಯುಗದ ಆದಿಯಲ್ಲಿ ಹೋಗಬೇಕಾಗಿದೆ ಆದ್ದರಿಂದ ಈಗ ನನ್ನನ್ನು ನೆನಪು ಮಾಡಿ ಮತ್ತೆಲ್ಲಾ ಸಂಗಗಳಿಂದ ಬುದ್ಧಿಯೋಗವನ್ನು ತೆಗೆಯಿರಿ. ಭಲೆ ಗೃಹಸ್ಥ ವ್ಯವಹಾರದಲ್ಲಿಯೇ ಇರಿ, ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತದೆ. ಈಗ ದೇಹೀ-ಅಭಿಮಾನಿಗಳಾಗಬೇಕಾಗಿದೆ. ನನ್ನನ್ನು ನೆನಪು ಮಾಡಿದರೆ ಇರುವ ತುಕ್ಕೆಲ್ಲವೂ ಭಸ್ಮವಾಗುತ್ತದೆ. ನೀವು ಪವಿತ್ರರಾಗಿ ಬಿಡುತ್ತೀರಿ, ಆಗ ನಾನು ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗುವೆನು. ಒಂದುವೇಳೆ ನನ್ನ ಮತದಂತೆ ನಡೆಯದಿದ್ದರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ಈ ಲಕ್ಷ್ಮೀ-ನಾರಾಯಣರದು ಶ್ರೇಷ್ಠ ಪದವಿಯಾಗಿದೆ. ಇವರ ರಾಜ್ಯವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ. ದ್ವಾಪರದಿಂದ ಹಿಡಿದು ಅನ್ಯ ಧರ್ಮಗಳು ಬರುತ್ತವೆ. ಸತ್ಯಯುಗದಲ್ಲಿ ಕೆಲವರೇ ಮನುಷ್ಯರಿರುತ್ತಾರೆ, ಈಗಂತೂ ಬಹಳ ಧರ್ಮಗಳಿರುವ ಕಾರಣ ಎಷ್ಟೊಂದು ದುಃಖಿಯಾಗಿ ಬಿಟ್ಟಿದ್ದಾರೆ. ಆ ದೇವತಾ ಧರ್ಮದವರೇ ಈಗ ಪತಿತರಾಗಿರುವುದರಿಂದ ತಮ್ಮನ್ನು ದೇವತೆಗಳೆಂದು ಹೇಳಿಕೊಳ್ಳುವುದಿಲ್ಲ, ಹಿಂದೂಗಳೆಂದು ಹೆಸರನ್ನು ಇಟ್ಟು ಬಿಟ್ಟಿದ್ದಾರೆ. ಹಿಂದೂ ಎಂಬ ಧರ್ಮವು ಯಾವುದೂ ಇಲ್ಲ. ರಾವಣನೇ ನಿಮ್ಮನ್ನು ಈ ರೀತಿ ಮಾಡಿ ಬಿಟ್ಟಿದ್ದಾನೆ. ನೀವು ಯಾವಾಗ ಯೋಗ್ಯ ದೇವಿ-ದೇವತೆಗಳಾಗಿದ್ದಿರೋ ಆಗ ಇಡೀ ವಿಶ್ವದ ಮೇಲೆ ರಾಜ್ಯವಿತ್ತು, ಎಲ್ಲರೂ ಸುಖಿಯಾಗಿದ್ದರು, ಈಗ ದುಃಖಿಯಾಗಿ ಬಿಟ್ಟಿದ್ದಾರೆ. ಭಾರತವೇ ಸ್ವರ್ಗವಾಗಿತ್ತು, ಈಗ ನರಕವಾಗಿ ಬಿಟ್ಟಿದೆ. ಮತ್ತೆ ನರಕವನ್ನು ಸ್ವರ್ಗವನ್ನಾಗಿ ತಂದೆಯ ವಿನಃ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ದೇವತೆಗಳಿಗೆ ಸಂಪೂರ್ಣ ನಿರ್ವಿಕಾರಿಗಳೆಂದು ಹೇಳಲಾಗುತ್ತದೆ. ಇಲ್ಲಿಯ ಮನುಷ್ಯರಂತೂ ಸಂಪೂರ್ಣ ವಿಕಾರಿಗಳಾಗಿದ್ದಾರೆ, ಇವರಿಗೆ ಪತಿತರೆಂದು ಹೇಳಲಾಗುತ್ತದೆ. ಭಾರತವು ಶಿವಾಲಯವಾಗಿತ್ತು, ಶಿವ ತಂದೆಯಿಂದ ಸ್ಥಾಪನೆ ಮಾಡಲ್ಪಟ್ಟಿತ್ತು. ತಂದೆಯು ಸ್ವರ್ಗವನ್ನಾಗಿ ಮಾಡುತ್ತಾರೆ ಮತ್ತೆ ರಾವಣನು ನರಕವನ್ನಾಗಿ ಮಾಡುತ್ತಾನೆ. ರಾವಣನು ಶಾಪ ಕೊಡುತ್ತಾನೆ, ತಂದೆಯು 21 ಜನ್ಮಗಳಿಗಾಗಿ ಆಸ್ತಿ ಕೊಡುತ್ತಾರೆ. ನೀವೀಗ ಪ್ರತಿಯೊಬ್ಬರೂ ತಂದೆಯನ್ನೇ ನೆನಪು ಮಾಡಿ, ಯಾವುದೇ ದೇಹಧಾರಿಗಳನ್ನಲ್ಲ. ಯಾವುದೇ ದೇಹಧಾರಿಗಳಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಭಗವಂತನು ಒಬ್ಬರೇ ಆಗಿದ್ದಾರೆ, ತಂದೆಯಂತೂ ಬೇಹದ್ದಿನ ಆಸ್ತಿಯನ್ನು ಕೊಡುತ್ತಾರೆ ನಂತರ ರಾವಣನು ಶ್ರಾಪಗ್ರಸ್ಥರನ್ನಾಗಿ ಮಾಡಿ ಬಿಡುತ್ತಾನೆ. ಈ ಸಮಯದಲ್ಲಿ ಭಾರತವು ಶಾಪಗ್ರಸ್ಥನಾಗಿದೆ, ಬಹಳ ದುಃಖಿಯಾಗಿದ್ದಾರೆ. ಈಗ ಈ ರಾವಣನ ಮೇಲೆ ಜಯ ಗಳಿಸಬೇಕಾಗಿದೆ. ದಾನ ಕೊಟ್ಟರೆ ಗ್ರಹಣ ಬಿಟ್ಟು ಹೋಗುವುದೆಂದು ಗಾಯನವಿದೆ. ಆ ಗ್ರಹಣವಂತೂ ಪೃಥ್ವಿಯ ಛಾಯೆಯಾಗಿದೆ. ಈಗ ತಂದೆಯು ತಿಳಿಸುತ್ತಾರೆ, ನಿಮ್ಮ ಮೇಲೆ ಪಂಚ ವಿಕಾರರೂಪಿ ರಾವಣನ ಗ್ರಹಣವಿದೆ. ಈ ಐದು ವಿಕಾರಗಳನ್ನು ದಾನದಲ್ಲಿ ಕೊಟ್ಟು ಬಿಡಿ. ಮೊದಲಿಗೆ ಈ ದಾನ ಕೊಡಿ - ನಾವು ಎಂದೂ ವಿಕಾರದಲ್ಲಿ ಹೋಗುವುದಿಲ್ಲ, ಈ ಕಾಮ ಕಟಾರಿಯು ಮನುಷ್ಯರನ್ನು ಪತಿತರನ್ನಾಗಿ ಮಾಡಿ ಬಿಡುತ್ತದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ತಂದೆಯು ಯಾವ ಜ್ಞಾನ ಕೊಡುತ್ತಾರೆಯೋ ಅದರ ಮೇಲೆ ಪೂರ್ಣ ಗಮನಕೊಟ್ಟು ಓದಬೇಕಾಗಿದೆ. ಜ್ಞಾನದ ಮೂರನೇ ನೇತ್ರದಿಂದ ತಮ್ಮ 84 ಜನ್ಮಗಳನ್ನು ಅರಿತುಕೊಂಡು ಈಗ ಅಂತಿಮ ಜನ್ಮದಲ್ಲಿ ಪಾವನರಾಗಬೇಕಾಗಿದೆ.
2. ರಾವಣನ ಶಾಪದಿಂದ ಮುಕ್ತರಾಗಲು ಒಬ್ಬ ತಂದೆಯ ನೆನಪಿನಲ್ಲಿರಬೇಕಾಗಿದೆ. ಪಂಚ ವಿಕಾರಗಳ ದಾನ ಕೊಡಬೇಕಾಗಿದೆ. ಒಬ್ಬ ತಂದೆಯ ಮತದಂತೆ ನಡೆಯಬೇಕಾಗಿದೆ.
ಓಂ ಶಾಂತಿ. ಮಕ್ಕಳು ಎಲ್ಲಿ ಕುಳಿತಿದ್ದೀರಿ? ಬೇಹದ್ದಿನ ತಂದೆಯ ಶಾಲೆಯಲ್ಲಿ. ಮಕ್ಕಳಿಗೆ ಬಹಳ ಶ್ರೇಷ್ಠ ನಶೆಯಿರಬೇಕು. ಯಾವ ಮಕ್ಕಳಿಗೆ? ಬೇಹದ್ದಿನ ತಂದೆಯ ಮಕ್ಕಳಿಗೆ ಅಥವಾ ಆತ್ಮಿಕ ಮಕ್ಕಳಿಗೆ. ತಂದೆಯು ಆತ್ಮರಿಗೇ ಓದಿಸುತ್ತಾರೆ. ಗುಜರಾತಿ ಅಥವಾ ಮರಾಠಿಯರಿಗೆ ಓದಿಸುವುದಿಲ್ಲ, ಅದಂತೂ ನಾಮ-ರೂಪವಾಯಿತು. ತಂದೆಯು ಆತ್ಮರಿಗೆ ಓದಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ನಮ್ಮ ಬೇಹದ್ದಿನ ತಂದೆಯು ಅವರೇ ಆಗಿದ್ದಾರೆ, ಯಾರಿಗೆ ಭಗವಂತನೆಂದು ಹೇಳಲಾಗುತ್ತದೆ. ಭಗವಾನುವಾಚವೂ ಇದೆ ಆದರೆ ಯಾರಿಗೆ ಭಗವಂತನೆಂದು ಹೇಳಲಾಗುತ್ತದೆ ಎಂಬುದನ್ನು ತಿಳಿದುಕೊಂಡಿಲ್ಲ. ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ, ಪರಮಾತ್ಮನಂತೂ ಒಬ್ಬರೇ ಆಗಿದ್ದಾರೆ, ಅವರು ಸರ್ವಶ್ರೇಷ್ಠ ನಿರಾಕಾರನಾಗಿದ್ದಾರೆ, ನಿಮಗೆ ಕೃಷ್ಣ ಭಗವಂತನು ಓದಿಸುವುದಿಲ್ಲ. ಮೊದಲೂ ಓದಿಸಿಲ್ಲ. ನೀವು ತಿಳಿದುಕೊಂಡಿದ್ದೀರಿ - ನಾವಾತ್ಮರ ತಂದೆಯು ನಮಗೆ ಓದಿಸುತ್ತಿದ್ದಾರೆ, ಭಗವಂತನು ನಿರಾಕಾರನಾದರು. ಶಿವನ ಮಂದಿರಕ್ಕೆ ಹೋಗುತ್ತಾರೆ, ಅವರ ಪೂಜೆ ಮಾಡುತ್ತಾರೆ ಅಂದಮೇಲೆ ಅವರು ಇರಬೇಕಲ್ಲವೆ. ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಇದನ್ನೂ ನೀವೀಗ ತಿಳಿದುಕೊಂಡಿದ್ದೀರಿ. ಇಡೀ ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ, ನೀವೀಗ ತಿಳಿದುಕೊಳ್ಳಲು ತೊಡಗಿದ್ದೀರಿ, ಬಹಳ ಸಮಯದಿಂದ ತಿಳಿದುಕೊಳ್ಳುತ್ತಾ ಬಂದಿದ್ದೀರಿ. ಬಹಳ ಸಮಯದಿಂದ ಬರುವವರಿಗಿಂತಲೂ ಹೊಸಬರು ಮುಂದೆ ಹೋಗಲು ಸಾಧ್ಯವಿಲ್ಲ ಎಂದಲ್ಲ, ಇದೂ ಸಹ ವಿಶೇಷತೆಯಾಗಿದೆ, ಮೂರು ತಿಂಗಳಿನ ಹೊಸ ಮಕ್ಕಳೂ ಸಹ ಬಹಳ ಮುಂದೆ ಹೋಗಬಲ್ಲರು. ಆದ್ದರಿಂದಲೇ ಬಾಬಾ, ಈ ಆತ್ಮನ ಬುದ್ಧಿಯು ಬಹಳ ತೀಕ್ಷ್ಣವಾಗಿದೆ ಎಂದು ಹೇಳುತ್ತಾರೆ. ಹೊಸಬರು ಕೇಳುವಾಗ ಬಹಳ ಗದ್ಗಗಿತರಾಗುತ್ತಾರೆ, ಎಲ್ಲರೂ ಈಶ್ವರೀಯ ವಿದ್ಯಾರ್ಥಿಗಳೇ ಆಗಿದ್ದಾರೆ, ನಿರಾಕಾರ ತಂದೆ ಜ್ಞಾನ ಸಾಗರನು ಓದಿಸುತ್ತಿದ್ದಾರೆ, ಭಗವಾನುವಾಚವು ಗಾಯನವಿದೆ ಆದರೆ ಯಾವಾಗ ಎಂಬುದು ಮರೆತು ಹೋಗಿದ್ದಾರೆ.
ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇಂತಹವರೂ ಕೆಲವರಿರುತ್ತಾರೆ, ಅವರ ತಂದೆಯು ಶಿಕ್ಷಕನಾಗಿರುತ್ತಾರೆ ಆದರೆ ಅವರು ಕೇವಲ ಒಂದೇ ವಿಷಯದ ಬಗ್ಗೆ ಓದಿಸುತ್ತಾರೆ, ಇನ್ನೊಂದು ವಿಷಯಕ್ಕಾಗಿ ಮತ್ತೊಬ್ಬ ಶಿಕ್ಷಕರು ಓದಿಸುತ್ತಾರೆ. ಇಲ್ಲಂತೂ ತಂದೆಯು ಎಲ್ಲಾ ಮಕ್ಕಳಿಗೆ ಶಿಕ್ಷಕನಾಗುತ್ತಾರೆ, ಇದು ವಿಚಿತ್ರವಾದ ಮಾತಾಗಿದೆ. ಅನೇಕ ಮಕ್ಕಳಿದ್ದಾರೆ, ನಮಗೆ ಶಿವ ತಂದೆಯು ಓದಿಸುತ್ತಾರೆಂದು ನಿಶ್ಚಯವಿದೆ. ಶ್ರೀಕೃಷ್ಣನಿಗೆ ಬಾಬಾ ಎಂದು ಹೇಳಲು ಸಾಧ್ಯವಿಲ್ಲ. ಕೃಷ್ಣನಿಗೆ ಹೀಗೆ ಶಿಕ್ಷಕ, ಗುರುವೆಂದೂ ತಿಳಿಯುವುದಿಲ್ಲ. ಇಲ್ಲಿ ತಂದೆಯಂತೂ ಸನ್ಮುಖದಲ್ಲಿ ಓದಿಸುತ್ತಿದ್ದಾರೆ, ನೀವು ಭಿನ್ನ-ಭಿನ್ನ ಪ್ರಕಾರದ ವಿದ್ಯಾರ್ಥಿಗಳು ಕುಳಿತಿದ್ದೀರಿ, ನೀವು ತೇರ್ಗಡೆಯಾಗುವವರೆಗೂ ತಂದೆಯು ಶಿಕ್ಷಕನಾಗಿ ಓದಿಸುತ್ತಾರೆ. ಕರ್ಮಾತೀತ ಸ್ಥಿತಿಯನ್ನು ಪಡೆಯುವವರೆಗೂ ಪುರುಷಾರ್ಥ ಮಾಡಬೇಕಾಗಿದೆ. ಕರ್ಮಗಳ ಲೆಕ್ಕಾಚಾರದಿಂದ ಮುಕ್ತರಾಗಬೇಕಾಗಿದೆ, ನಿಮಗೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು - ತಂದೆಯು ನಮ್ಮನ್ನು ಇಂತಹ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತು ಈ ರೀತಿ ಮಕ್ಕಳು ಕುಳಿತಿರುವ ಹಾಗೂ ಪರಂಧಾಮ ನಿವಾಸಿ ತಂದೆಯು ಬಂದು ಓದಿಸುತ್ತಾರೆಂದು ತಿಳಿದುಕೊಳ್ಳುವ ಶಾಲೆಯು ಮತ್ತ್ಯಾವುದೂ ಇಲ್ಲ. ಈಗ ನೀವಿಲ್ಲಿ ಕುಳಿತಿದ್ದೀರಿ ಅಂದಾಗ ತಿಳಿದುಕೊಳ್ಳುತ್ತೀರಿ - ನಮ್ಮ ಬೇಹದ್ದಿನ ತಂದೆಯು ನಮಗೆ ಓದಿಸುವುದಕ್ಕಾಗಿ ಬರುತ್ತಾರೆ ಅಂದಮೇಲೆ ಆಂತರ್ಯದಲ್ಲಿ ಬಹಳ ಖುಷಿಯಿರಬೇಕು. ತಂದೆಯು ನಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ಇದು ಪ್ರಜಾ ಯೋಗವಲ್ಲ, ರಾಜ ಯೋಗವಾಗಿದೆ. ಈ ನೆನಪಿನಿಂದಲೇ ಮಕ್ಕಳಿಗೆ ಖುಷಿಯ ನಶೆಯೇರಬೇಕು. ಎಷ್ಟು ದೊಡ್ಡ ಪರೀಕ್ಷೆಯಾಗಿದೆ ಮತ್ತು ನೀವು ಎಷ್ಟು ಸಾಧಾರಣವಾಗಿ ಕುಳಿತಿದ್ದೀರಿ. ಹೇಗೆ ಮುಸಲ್ಮಾನರು ಮಕ್ಕಳನ್ನು ನೆಲದ ಮೇಲೆ ಕೂರಿಸಿ ಓದಿಸುತ್ತಾರೆ. ನೀವು ಈ ನಿಶ್ಚಯದಿಂದ ಇಲ್ಲಿಗೆ ಬರುತ್ತೀರಿ, ಈಗ ತಂದೆಯ ಸನ್ಮುಖದಲ್ಲಿ ಕುಳಿತಿದ್ದೀರಿ. ತಂದೆಯೂ ಸಹ ಹೇಳುತ್ತಾರೆ - ನಾನು ಜ್ಞಾನ ಸಾಗರನಾಗಿದ್ದೇನೆ, ಕಲ್ಪ-ಕಲ್ಪವೂ ಬಂದು ರಾಜಯೋಗವನ್ನು ಕಲಿಸುತ್ತೇನೆ. ಕೃಷ್ಣನ 84 ಜನ್ಮಗಳೆಂದಾದರೂ ಹೇಳಿ ಅಥವಾ ಬ್ರಹ್ಮನ 84 ಜನ್ಮಗಳೆಂದಾದರೂ ಹೇಳಿ ಒಂದೇ ಮಾತಾಗಿದೆ. ಬ್ರಹ್ಮನೇ ಶ್ರೀಕೃಷ್ಣನಾಗುತ್ತಾರೆ, ಇದನ್ನು ಬುದ್ಧಿಯಲ್ಲಿ ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ನಾವಾತ್ಮರು ತಂದೆಯ ಮಕ್ಕಳಾಗಿದ್ದೇವೆ. ಪರಮಪಿತ ಪರಮಾತ್ಮನು ಬಂದು ನಮಗೆ ಓದಿಸುತ್ತಾರೆ. ಕೃಷ್ಣನಂತೂ ಓದಿಸಲು ಸಾಧ್ಯವಿಲ್ಲ. ಕೃಷ್ಣನೇ ಈ ರೀತಿ ಓದಿಸಲು ಸಾಧ್ಯವೇ? ಕಿರೀಟ ಇತ್ಯಾದಿಗಳನ್ನು ತೆಗೆದಿಟ್ಟು ಬಂದಿರುವನೇ? ಈಗ ಓದಿಸುವವರಂತೂ ಅನುಭವಿಗಳು ಬೇಕು ಆದ್ದರಿಂದ ತಂದೆಯು ತಿಳಿಸುತ್ತಾರೆ - ನಾನು ವೃದ್ಧನ ತನುವನ್ನು ತೆಗೆದುಕೊಂಡಿದ್ದೇನೆ, ಇದು ನಿಶ್ಚಿತವಾಗಿದೆ. ಶಿವ ತಂದೆಯು ಬ್ರಹ್ಮಾರವರ ಮೂಲಕವೇ ಓದಿಸುತ್ತಾರೆ. ಆದ್ದರಿಂದಲೇ ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆಂದು ಹೇಳುತ್ತಾರೆ ಆದರೆ ಬ್ರಹ್ಮನು ಎಲ್ಲಿಂದ ಬಂದರೆಂದು ತಿಳಿದುಕೊಳ್ಳುವುದಿಲ್ಲ. ತಂದೆಯು ಕುಳಿತು ಮತ್ತೆ-ಮತ್ತೆ ಮಕ್ಕಳನ್ನು ಜಾಗೃತಗೊಳಿಸುತ್ತಾರೆ. ಮಾಯೆಯು ಮತ್ತೆ ಮಲಗಿಸಿ ಬಿಡುತ್ತದೆ. ಈಗ ನೀವು ಸನ್ಮುಖದಲ್ಲಿ ಕುಳಿತಿದ್ದೀರಿ. ನಿಮಗೆ ತಿಳಿದಿದೆ - ನಾನು ನಿಮ್ಮ ಆತ್ಮಿಕ ತಂದೆಯಾಗಿದ್ದೇನೆ, ನನ್ನನ್ನು ಅರಿತುಕೊಂಡಿದ್ದೀರಲ್ಲವೆ. ಪರಮಪಿತ ಪರಮಾತ್ಮನು ಜ್ಞಾನ ಸಾಗರನಾಗಿದ್ದಾರೆ, ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹಾಡುತ್ತಾರೆ. ಕೃಷ್ಣನಿಗೆ ಈ ರೀತಿ ಎಂದೂ ಹೇಳುವುದಿಲ್ಲ. ಎಲ್ಲರಿಗೂ ಒಟ್ಟಿಗೆ ಓದಿಸಲು ಸಾಧ್ಯವಿಲ್ಲ. ಮಧುಬನದಲ್ಲಿ ಮುರುಳಿಯು ನಡೆಯುತ್ತದೆ, ಅದು ಮತ್ತೆ ಎಲ್ಲಾ ಸೇವಾಕೇಂದ್ರಗಳಿಗೆ ಹೋಗುತ್ತದೆ. ನೀವೀಗ ಸನ್ಮುಖದಲ್ಲಿದ್ದೀರಿ, ನಿಮಗೆ ತಿಳಿದಿದೆ - ಕಲ್ಪದ ಮೊದಲೂ ಸಹ ತಂದೆಯು ಈ ರೀತಿ ಓದಿಸಿದ್ದರು, ಇದೇ ಸಮಯವಾಗಿತ್ತು ಯಾವುದು ಕಳೆದು ಹೋಯಿತು. ಅದು ಪುನಃ ವರ್ತಮಾನವಾಗುವುದಿದೆ. ಈಗ ಭಕ್ತಿಮಾರ್ಗದ ಮಾತುಗಳನ್ನಂತೂ ಬಿಡಬೇಕಾಗಿದೆ. ಈಗ ನಿಮಗೆ ಜ್ಞಾನದೊಂದಿಗೆ ಮತ್ತು ಓದಿಸುವವರೊಂದಿಗೆ ಪ್ರೀತಿಯಿದೆ. ಕೆಲಕೆಲವರು ಶಿಕ್ಷಕರಿಂದ ಓದಿದಮೇಲೆ ಅವರಿಗೆ ಉಡುಗೊರೆಯನ್ನು ಕೊಡುತ್ತಾರೆ. ಈ ತಂದೆಯಂತೂ ತಾವೇ ಮಕ್ಕಳಿಗೆ ಉಡುಗೊರೆಯನ್ನು ಕೊಡುತ್ತಾರೆ. ಇಲ್ಲಿ ಬಂದು ಸಾಕಾರದಲ್ಲಿ ಇವರು ನನ್ನ ಮಕ್ಕಳಾಗಿದ್ದಾರೆ ಎಂದು ನೋಡುತ್ತಾರೆ. ಇದೂ ಸಹ ಮಕ್ಕಳಿಗೆ ಜ್ಞಾನವಿದೆ, ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಕೆಲವರದು ಒಂದು ಜನ್ಮವಿದ್ದರೂ ಸಹ ಅದರಲ್ಲಿಯೇ ಸುಖ-ದುಃಖವನ್ನು ಕಳೆಯುತ್ತಾರೆ. ನೀವೀಗ ಇವೆಲ್ಲಾ ಮಾತುಗಳನ್ನು ತಿಳಿದಿದ್ದೀರಿ. ಇದು ಮನುಷ್ಯ ಸೃಷ್ಟಿಯ ವಂಶಾವಳಿಯಾಗಿದೆ, ಮೊದಲ ನಂಬರಿನಲ್ಲಿ ಬ್ರಹ್ಮಾ-ಸರಸ್ವತಿ, ಆದಿ ದೇವ-ಆದಿ ದೇವಿಯಿದ್ದಾರೆ ನಂತರ ಅನೇಕ ಧರ್ಮಗಳಾಗುತ್ತಾ ಹೋಗುತ್ತವೆ. ಅವರು ಸರ್ವ ಆತ್ಮರ ಬೀಜವಾಗಿದ್ದಾರೆ. ಉಳಿದೆಲ್ಲರೂ ಎಲೆಗಳಾಗಿದ್ದಾರೆ. ಪ್ರಜಾಪಿತ ಬ್ರಹ್ಮನು ಎಲ್ಲರ ತಂದೆಯಾಗಿದ್ದಾರೆ, ಈ ಸಮಯದಲ್ಲಿ ಪ್ರಜಾಪಿತನು ಹಾಜರಿದ್ದಾರೆ. ಇವರು ಕುಳಿತು ಶೂದ್ರರಿಂದ ಬದಲಾಯಿಸಿ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಈ ರೀತಿ ಮತ್ತ್ಯಾರೂ ಮಾಡಲು ಸಾಧ್ಯವಿಲ್ಲ. ತಂದೆಯೇ ನಿಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿ ಮತ್ತೆ ದೇವತೆಗಳನ್ನಾಗಿ ಮಾಡಲು ಓದಿಸುತ್ತಿದ್ದಾರೆ. ಇದು ಸಹಜ ರಾಜಯೋಗದ ವಿದ್ಯೆಯಾಗಿದೆ, ಜನಕ ರಾಜನೂ ಸಹ ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪಡೆದರು ಅರ್ಥಾತ್ ಸ್ವರ್ಗವಾಸಿಯಾಗಿ ಬಿಟ್ಟರು. ಮನುಷ್ಯರು ಹಾಡುತ್ತಾ ಇರುತ್ತಾರೆ ಆದರೆ ಯಾರಿಗೂ ತಿಳಿಸಲು ಸಾಧ್ಯವಿಲ್ಲ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಗಳಾಗಿ. ನೀವು ಅಶರೀರಿಯಾಗಿ ಬಂದಿದ್ದಿರಿ ಮತ್ತೆ ಶರೀರವನ್ನು ತೆಗೆದುಕೊಂಡು ಪಾತ್ರವನ್ನಭಿನಯಿಸಿದಿರಿ. ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ತಂದೆಯು ಸತ್ಯವಾಗಿದ್ದಾರೆ, ಅವರು ಸತ್ಯವನ್ನೇ ತಿಳಿಸುತ್ತಾರೆ. ರಾಜಧಾನಿಯು ತಯಾರಾಗುತ್ತದೆಯಲ್ಲವೆ. ರಾಜಯೋಗವನ್ನು ಒಬ್ಬರೇ ಕಲಿಯುವರೆ? ನೀವೆಲ್ಲರೂ ಈಗ ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ಮುಳ್ಳು ಮತ್ತು ಹೂ ಎಂದು ಯಾರಿಗೆ ಹೇಳಲಾಗುತ್ತದೆ ಎಂಬುದನ್ನೂ ಸಹ ನೀವೀಗ ತಿಳಿದುಕೊಳ್ಳುತ್ತಿದ್ದೀರಿ. ಇದು ಛೀ ಛೀ ಮುಳ್ಳುಗಳ ಪ್ರಪಂಚವಾಗಿದೆ, ನಾವು 84 ಜನ್ಮಗಳ ಚಕ್ರವನ್ನು ಸುತ್ತಿ ನರಕವಾಸಿಗಳಾಗಿದ್ದೇವೆ. ಪುನಃ ವಿಶ್ವದ ಇತಿಹಾಸ-ಭೂಗೋಳವನ್ನು ಪುನರಾವರ್ತಿಸುತ್ತೇವೆ. ಅವಶ್ಯವಾಗಿ ಸ್ವರ್ಗವಾಸಿಗಳಾಗುತ್ತೇವೆ, ಕಲ್ಪ-ಕಲ್ಪವೂ ನಾವೇ ಆಗುತ್ತೇವೆ. ಪದೇ-ಪದೇ ಇದನ್ನು ನೆನಪು ಮಾಡಿಕೊಳ್ಳಬೇಕು ಮತ್ತು ಜ್ಞಾನವನ್ನು ತಿಳಿಸಬೇಕಾಗಿದೆ. ಈ ಲಕ್ಷ್ಮೀ-ನಾರಾಯಣರು ಸೂರ್ಯವಂಶಿಯರಾಗಿದ್ದಾರೆ, ಕ್ರಿಸ್ತನು ಬರುವುದಕ್ಕೆ ಮೊದಲು ಬಹಳ ಕೆಲವರೇ ಇದ್ದರು, ರಾಜಧಾನಿಯಿರಲಿಲ್ಲ. ಈಗ ತಂದೆಯು ಬಂದು ಸತ್ಯಯುಗೀ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಾರೆ. ಸ್ಥಾಪನೆಯಾಗುವುದೇ ಸಂಗಮದಲ್ಲಿ. ಈಗ ನಿಮ್ಮ ಬುದ್ಧಿಯಲ್ಲಿದೆ - ಇದು ಸತ್ಯ-ಸತ್ಯವಾದ ಕುಂಭ ಮೇಳವಾಗಿದೆ, ಆತ್ಮಗಳು ಅನೇಕರಿದ್ದಾರೆ, ಪರಮಾತ್ಮನು ಒಬ್ಬರೇ ಆಗಿದ್ದಾರೆ. ಪರಮಾತ್ಮ ತಂದೆಯು ಪಾವನರನ್ನಾಗಿ ಮಾಡಲು ಮಕ್ಕಳ ಬಳಿ ಬರುತ್ತಾರೆ. ಇದಕ್ಕೇ ಸಂಗಮಯುಗದ ಕುಂಭಮೇಳವೆಂದು ಹೇಳಲಾಗುತ್ತದೆ. ಈಗ ನಿಮಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ತಂದೆಯು ಬಂದು ಸ್ವರ್ಗವಾಸಿಗಳನ್ನಾಗಿ ಮಾಡುತ್ತಾರೆ. ಮತ್ತೆ ನರಕ, ಹಳೆಯ ಪ್ರಪಂಚದ ವಿನಾಶವು ಖಂಡಿತ ಆಗಬೇಕು. ಕಲ್ಪ-ಕಲ್ಪವೂ ವಿನಾಶವು ಆಗಿಯೇ ಆಗುತ್ತದೆ. ಹೊಸದರಿಂದ ಹಳೆಯದು, ಹಳೆಯದರಿಂದ ಹೊಸದು ಖಂಡಿತ ಆಗುವುದು. ಹೊಸ ಪ್ರಪಂಚಕ್ಕೆ ಸ್ವರ್ಗ, ಹಳೆಯದಕ್ಕೆ ನರಕವೆಂದು ಹೇಳಲಾಗುತ್ತದೆ. ಈಗಂತೂ ಎಷ್ಟೊಂದು ಮನುಷ್ಯರು ವೃದ್ಧಿಯಾಗುತ್ತಾ ಹೋಗುತ್ತದೆ. ಧಾನ್ಯಗಳು ಸಿಗಲಿಲ್ಲವೆಂದರೆ ನಾವು ಬಹಳಷ್ಟು ದವಸ-ಧಾನ್ಯಗಳನ್ನು ಉತ್ಪಾದನೆ ಮಾಡುತ್ತೇವೆಂದು ತಿಳಿಯುತ್ತಾರೆ ಆದರೆ ಎಷ್ಟೊಂದು ಜನಸಂಖ್ಯೆಯು ವೃದ್ಧಿಯಾಗುತ್ತಾ ಇರುತ್ತದೆ. ಆದ್ದರಿಂದ ದವಸ-ಧಾನ್ಯಗಳನ್ನು ಎಲ್ಲಿಂದ ತರುತ್ತಾರೆ?
ಈಗ ನೀವು ಮಕ್ಕಳಿಗೆ ಇದು ಖಾತರಿಯಾಗಿದೆ - ಈ ಇಡೀ ಹಳೆಯ ಪ್ರಪಂಚವು ಸಮಾಪ್ತಿಯಾಗಲಿದೆ. ಮನುಷ್ಯರಿಗೆ ಈ ಜ್ಞಾನವು ಇಷ್ಟವೂ ಆಗುತ್ತದೆ ಆದರೆ ಬುದ್ಧಿಯಲ್ಲಿ ಏನೂ ಕುಳಿತುಕೊಳ್ಳುವುದಿಲ್ಲ. ನಿಮ್ಮ ಬುದ್ಧಿಯಲ್ಲಿದೆ - ನರಕದ ನಂತರ ಸ್ವರ್ಗವು ಬರುವುದು. ಸತ್ಯಯುಗದ ದೇವಿ-ದೇವತೆಗಳು ಇದ್ದು ಹೋಗಿದ್ದಾರೆ, ಈ ಲಕ್ಷ್ಮೀ-ನಾರಾಯಣರು ಭಾರತದ ಮಾಲೀಕರಾಗಿದ್ದರು, ಚಿತ್ರಗಳೂ ಇವೆ. ಚಿತ್ರಗಳಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿರುತ್ತದೆ, ಈಗ ತಮ್ಮನ್ನು ದೇವತಾ ಧರ್ಮದವರೆಂದು ಕರೆಸಿಕೊಳ್ಳುವುದಿಲ್ಲ. ಅದಕ್ಕೆ ಬದಲು ಹಿಂದೂಗಳೆಂದು ಹೇಳಿಕೊಳ್ಳುತ್ತಾರೆ. ಮಕ್ಕಳು ಚೆನ್ನಾಗಿ ತಿಳಿದುಕೊಂಡಿದ್ದೀರಿ - ನಾವು ಈ ದೇವಿ-ದೇವತೆಗಳಾಗುತ್ತಿದ್ದೇವೆ. ತಂದೆಯು ಈ ಕರ್ಮೇಂದ್ರಿಯಗಳ ಮೂಲಕ ನಮಗೆ ಓದಿಸುತ್ತಿದ್ದಾರೆ. ಇಲ್ಲವಾದರೆ ನಾನು ನಿಮಗೆ ಹೇಗೆ ಓದಿಸಲಿ ಎಂದು ತಂದೆಯು ಹೇಳುತ್ತಾರೆ. ಆತ್ಮಗಳಿಗೇ ಓದಿಸುತ್ತಾರೆ ಏಕೆಂದರೆ ಆತ್ಮದಲ್ಲಿಯೇ ತುಕ್ಕು ಬೀಳುತ್ತದೆ. ನೀವೀಗ ಸತ್ಯ ಚಿನ್ನವಾಗಬೇಕಾಗಿದೆ. ಚಿನ್ನದ ಸಮಾನ ಇದ್ದವರು ಬೆಳ್ಳಿಯ ಯುಗದಲ್ಲಿ ಬಂದಿರಿ ನಂತರ ಇನ್ನೂ ಕೆಳಗಿಳಿಯುತ್ತೀರಿ. ಮತ್ತೆ ವೃದ್ಧಿಯೂ ಆಗುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿದೆ - ನಾವು ಸತ್ಯ, ತ್ರೇತಾ, ದ್ವಾಪರ, ಕಲಿಯುಗದಲ್ಲಿ 84 ಜನ್ಮಗಳ ಚಕ್ರವನ್ನು ಸುತ್ತುತ್ತಾ ಬಂದಿದ್ದೇವೆ. ಅನೇಕ ಬಾರಿ ಈ ಪಾತ್ರವನ್ನಭಿನಯಿಸಿದ್ದೇವೆ, ಈ ಪಾತ್ರದಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ನಮಗೆ ಮೋಕ್ಷ ಬೇಕೆಂದು ಅವರು ಹೇಳುತ್ತಾರೆ ಆದರೆ ವಾಸ್ತವದಲ್ಲಿ ನಿಮಗೇ 84 ಜನ್ಮಗಳ ಚಕ್ರವನ್ನು ಸುತ್ತಿ ಬೇಸರವಾಗಬೇಕು. ಮನುಷ್ಯರಂತೂ ತಿಳಿದುಕೊಳ್ಳುತ್ತಾರೆ, ಬರುವುದು-ಹೋಗುವುದು ಇದ್ದೇ ಇರುತ್ತದೆ, ಇದರಿಂದ ನಾವೇಕೆ ಮುಕ್ತರಾಗಬಾರದು ಎಂದು. ಆದರೆ ಇದು ಸಾಧ್ಯವಿಲ್ಲ. ಗುರುಗಳೂ ಸಹ ಹೇಳುತ್ತಾರೆ - ನೀವು ಮೋಕ್ಷವನ್ನು ಪಡೆಯುತ್ತೀರಿ, ಬ್ರಹ್ಮ ತತ್ವವನ್ನು ನೆನಪು ಮಾಡಿದರೆ ಅದರಲ್ಲಿ ಲೀನವಾಗಿ ಬಿಡುತ್ತೀರೆಂದು. ಭಾರತದಲ್ಲಿಯೇ ಅನೇಕ ಮತ-ಮತಾಂತರಗಳಿವೆ, ಮತ್ತ್ಯಾವುದೇ ಖಂಡದಲ್ಲಿ ಇಷ್ಟೊಂದಿಲ್ಲ. ಅನೇಕಾನೇಕ ಮತಗಳಿವೆ. ಒಂದು ಇನ್ನೊಂದಕ್ಕೆ ಹೋಲುವುದಿಲ್ಲ, ರಿದ್ಧಿ-ಸಿದ್ಧಿಯನ್ನು ಬಹಳ ಕಲಿಯುತ್ತಾರೆ. ರಿದ್ಧಿ-ಸಿದ್ಧಿಯಿಂದ ಕೆಲವರು ಕುಂಕುಮವನ್ನು ತೆಗೆಯುತ್ತಾರೆ, ಇನ್ನೂ ಕೆಲವರು... ಇದರಲ್ಲಿ ಮನುಷ್ಯರು ಬಹಳ ಖುಷಿಯಾಗುತ್ತಾರೆ. ಇದಂತೂ ಆಧ್ಯಾತ್ಮಿಕ ಜ್ಞಾನವಾಗಿದೆ. ನೀವು ತಿಳಿದುಕೊಂಡಿದ್ದೀರಿ - ಇವರು ಆತ್ಮಿಕ ತಂದೆಯಾಗಿದ್ದಾರೆ. ಆತ್ಮಿಕ ತಂದೆಯೇ ಆತ್ಮಗಳೊಂದಿಗೆ ಮಾತನಾಡುತ್ತಾರೆ. ಸತ್ಯ ನಾರಾಯಣನ ಕಥೆಯನ್ನು ತಿಳಿಸುತ್ತಾರೆ ಮತ್ತು ಅಮರ ಕಥೆಯನ್ನೂ ತಿಳಿಸುತ್ತಾರೆ. ಇದರಿಂದ ನಮ್ಮನ್ನು ಅಮರಲೋಕದ ಮಾಲೀಕರನ್ನಾಗಿ, ನರನಿಂದ ನಾರಾಯಣನನ್ನಾಗಿ ಮಾಡುತ್ತಾರೆ. ನಂತರ ನಾವು ಕವಡೆಯಂತೆ ಆಗಿ ಬಿಡುತ್ತೇವೆ. ಈಗ ನಿಮಗೆ ವಜ್ರ ಸಮಾನ ಅಮೂಲ್ಯ ಜನ್ಮವು ಸಿಕ್ಕಿದೆ. ಅಂದಮೇಲೆ ಕವಡೆಗಳ ಹಿಂದೆ ಏಕೆ ಕಳೆದುಕೊಳ್ಳುತ್ತೀರಿ! ಈ ಪ್ರಪಂಚವು ಇನ್ನೆಷ್ಟು ವರ್ಷಗಳಿರಬಹುದು! ಎಷ್ಟೊಂದು ಜಗಳವಾಡುತ್ತಾ ಇರುತ್ತಾರೆ, ಎಲ್ಲರೂ ಸಮಾಪ್ತಿಯಾಗಿ ಬಿಡುತ್ತಾರೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ, ಮತ್ತೆ ಇಷ್ಟೊಂದು ಲಕ್ಷ-ಕೋಟಿಗಳನ್ನು ಯಾರು ತಿನ್ನುತ್ತಾರೆ? ಅಂದಮೇಲೆ ಇದನ್ನು ಏಕೆ ಸಫಲ ಮಾಡಿಕೊಳ್ಳಬಾರದು? ಈ ಆತ್ಮಿಕ ಕಾಲೇಜನ್ನು ತೆರೆಯುವುದರಿಂದ ಮನುಷ್ಯರು ಸದಾ ಆರೋಗ್ಯವಂತರು, ಐಶ್ವರ್ಯವಂತರಾಗಿ ಬಿಡುತ್ತಾರೆ. ಅದರಲ್ಲಿಯೂ ಇದು ಆಸ್ಪತ್ರೆ ಮತ್ತು ವಿಶ್ವವಿದ್ಯಾಲಯ ಕಂಬೈಂಡ್ ಆಗಿದೆ. ಇದರಿಂದ ಆರೋಗ್ಯ, ಭಾಗ್ಯ, ಸಂತೋಷ ಎಲ್ಲವೂ ಸಿಗುತ್ತದೆ. ಅವಶ್ಯವಾಗಿ ಯೋಗದಿಂದ ಧೀರ್ಘಾಯಸ್ಸು ಸಿಗುತ್ತದೆ. ನೀವು ಎಷ್ಟೊಂದು ಆರೋಗ್ಯವಂತರಾಗುತ್ತೀರಿ! ಕುಬೇರನ ಖಜಾನೆಯು ಸಿಗುತ್ತದೆ. ಅಲ್ಲಾ ಅವಲುದ್ಧೀನನ ನಾಟಕವನ್ನೂ ತೋರಿಸುತ್ತಾರೆ. ನೀವು ತಿಳಿದುಕೊಂಡಿದ್ದೀರಿ - ಅಲ್ಲಾನು ಯಾವ ಆದಿ ಸನಾತನ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡುವರೋ ಅದರಲ್ಲಿ ಬಹಳ ಸುಖವಿದೆ, ಹೆಸರೇ ಆಗಿದೆ - ಸ್ವರ್ಗ. ನೀವು ಶಾಂತಿಧಾಮದ ನಿವಾಸಿಗಳಾಗಿದ್ದಿರಿ, ನಂತರ ಮೊಟ್ಟ ಮೊದಲು ಸುಖಧಾಮದಲ್ಲಿ ಬಂದಿರಿ. ಮತ್ತೆ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬಂದಿದ್ದೀರಿ. ಕಲ್ಪ-ಕಲ್ಪವೂ ನಾನು ನೀವು ಮಕ್ಕಳಿಗೆ ಈ ರೀತಿ ತಿಳಿಸಿಕೊಡುತ್ತೇನೆ, ನೀವು ತಮ್ಮ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ, ನಾನು ನಿಮಗೆ ತಿಳಿಸುತ್ತೇನೆ. ನೀವೇ 84 ಜನ್ಮಗಳನ್ನು ತೆಗೆದುಕೊಂಡಿದ್ದೀರಿ. ಈ ವಸ್ತ್ರವು ಹಳೆಯದಾಗಿದೆ. ಆತ್ಮವು ತಮೋಪ್ರಧಾನವಾಗಿ ಬಿಟ್ಟಿದೆ. ತಂದೆಯು ಸತ್ಯವನ್ನೇ ಹೇಳುತ್ತಾರೆ, ಅವರೆಂದೂ ಸುಳ್ಳು ಹೇಳುವುದಿಲ್ಲ. ಅವರು ಸತ್ಯವಾಗಿದ್ದಾರೆ. ಸತ್ಯಯುಗವು ನಿರ್ವಿಕಾರಿ ಪ್ರಪಂಚ, ಸತ್ಯಖಂಡವಾಗಿದೆ. ನಂತರ ರಾವಣನು ಅಸತ್ಯ ಖಂಡವನ್ನಾಗಿ ಮಾಡುತ್ತಾರೆ. ಇದು ಅಸತ್ಯ ಖಂಡವಾಗಿದೆ. ಸುಳ್ಳು ಮಾಯೆ, ಸುಳ್ಳು ಸಂಸಾರ.... ಎಂದು ಹಾಡುತ್ತಾರೆ. ಯಾವ ಸಂಸಾರ? ಇದೆಲ್ಲವೂ ಹಳೆಯ ಸುಳ್ಳು ಸಂಸಾರವಾಗಿದೆ. ಸತ್ಯಯುಗದಲ್ಲಿ ಸತ್ಯವಾದ ಸಂಸಾರವಿತ್ತು, ಪ್ರಪಂಚವು ಒಂದೇ ಆಗಿದೆ, ಎರಡು ಪ್ರಪಂಚಗಳಿಲ್ಲ. ಹೊಸ ಪ್ರಪಂಚದಿಂದ ಮತ್ತೆ ಹಳೆಯದಾಗುತ್ತದೆ, ಹೊಸ ಮನೆ ಹಾಗೂ ಹಳೆಯ ಮನೆಯಲ್ಲಿ ಅಂತರವಂತೂ ಇರುತ್ತದೆ. ಹೊಸದು ತಯಾರಾಗುತ್ತದೆ ಎಂದರೆ ನಾವು ಹೋಗಿ ಹೊಸ ಮನೆಯಲ್ಲಿ ಕುಳಿತುಕೊಳ್ಳುತ್ತೇವೆಂದು ತಿಳಿದುಕೊಳ್ಳುತ್ತಾರೆ. ಇಲ್ಲಿಯೂ ಸಹ ಮಕ್ಕಳಿಗಾಗಿ ಹೊಸ ಮನೆಯನ್ನು ಕಟ್ಟಿಸುತ್ತೇನೆ. ಅನೇಕ ಮಕ್ಕಳು ವೃದ್ಧಿಯಾಗತೊಡಗುತ್ತಾರೆ. ನೀವು ಮಕ್ಕಳಿಗಂತೂ ಬಹಳ ಖುಷಿಯಿರಬೇಕು. ತಂದೆಯು ತಿಳಿಸುತ್ತಾರೆ - ನಾನು ಜ್ಞಾನ ಸಾಗರನು ಮಕ್ಕಳೆಲ್ಲರೂ ಕಾಮ ಚಿತೆಯ ಮೇಲೆ ಕುಳಿತು ಸುಟ್ಟು ಕಪ್ಪಾಗಿ ಬಿಟ್ಟಿದ್ದೀರಿ, ಈಗ ಅವರನ್ನೇ ಜ್ಞಾನ ಚಿತೆಯ ಮೇಲೆ ಕೂರಿಸುತ್ತೇನೆ. ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ. ಕಾಮ ಚಿತೆಯ ಮೇಲೆ ಕುಳಿತುಕೊಳ್ಳುವುದರಿಂದ ಸಂಪೂರ್ಣ ಕಪ್ಪಾಗಿ ಬಿಟ್ಟಿದ್ದೀರಿ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೆಸರನ್ನೂ ಕೊಟ್ಟಿದ್ದಾರೆ ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ನೀವೀಗ ಹೇಗಿದ್ದವರು ಏನಾಗುತ್ತೀರಿ! ತಂದೆಯು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುತ್ತಾರೆ ಅಂದಮೇಲೆ ಅಷ್ಟೊಂದು ಗಮನ ಕೊಡಬೇಕಾಗಿದೆ. ತಂದೆಯನ್ನು ನೆನಪು ಮಾಡಬೇಕಾಗಿದೆ, ನೆನಪಿನಿಂದಲೇ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಈ ವಜ್ರ ಸಮಾನ ಅಮೂಲ್ಯ ಜೀವನವನ್ನು ಕವಡೆಗಳ ಹಿಂದೆ ಕಳೆದುಕೊಳ್ಳಬಾರದು. ಮೃತ್ಯುವು ಸನ್ಮುಖದಲ್ಲಿ ನಿಂತಿದೆ ಆದ್ದರಿಂದ ತಮ್ಮದೆಲ್ಲವನ್ನೂ ಆತ್ಮಿಕ ಸೇವೆಯಲ್ಲಿ ಸಫಲ ಮಾಡಿಕೊಳ್ಳಬೇಕಾಗಿದೆ.
2. ವಿದ್ಯೆ ಮತ್ತು ಓದಿಸುವರೊಂದಿಗೆ ಸತ್ಯ ಪ್ರೀತಿಯನ್ನಿಡಬೇಕಾಗಿದೆ. ಭಗವಂತನೇ ನಮಗೆ ಓದಿಸಲು ಬರುತ್ತಾರೆ - ಈ ಖುಷಿಯಲ್ಲಿರಬೇಕಾಗಿದೆ.
ನಿಶ್ಚಯಬುದ್ಧಿ ವಿಜಯಿರತ್ನಗಳ ಚಿಹ್ನೆಗಳು
ಇಂದು ಬಾಪ್ದಾದಾ ನಾಲ್ಕಾರೂ ಕಡೆಯ ನಿಶ್ಚಯಬುದ್ಧಿ ವಿಜಯಿ ಮಕ್ಕಳನ್ನು ನೋಡುತ್ತಿದ್ದಾರೆ. ಪ್ರತಿಯೊಬ್ಬ ಮಗುವಿನ ನಿಶ್ಚಯದ ಚಿಹ್ನೆಗಳನ್ನು ನೋಡುತ್ತಿದ್ದಾರೆ. ನಿಶ್ಚಯದ ವಿಶೇಷ ಚಿಹ್ನೆಗಳಾಗಿವೆ - 1. ಎಂತಹ ನಿಶ್ಚಯವೋ ಹಾಗೆಯೇ ಕರ್ಮ ಮತ್ತು ವಾಣಿಯಲ್ಲಿ ಸದಾ ಚಹರೆಯಲ್ಲಿ ಆತ್ಮಿಕ ನಶೆಯು ಕಂಡುಬರುವುದು. 2. ಪ್ರತೀ ಕರ್ಮ, ಸಂಕಲ್ಪದಲ್ಲಿ ವಿಜಯವು ಸಹಜ ಪ್ರತ್ಯಕ್ಷ ಫಲದ ರೂಪದಲ್ಲಿ ಅನುಭವವಾಗುವುದು. ಪರಿಶ್ರಮದ ರೂಪದಲ್ಲಲ್ಲ ಆದರೆ ಪ್ರತ್ಯಕ್ಷ ಫಲ ಅಥವಾ ಅಧಿಕಾರದ ರೂಪದಲ್ಲಿ ವಿಜಯವು ಅನುಭವವಾಗುವುದು. 3. ತಮ್ಮ ಶ್ರೇಷ್ಠ ಭಾಗ್ಯ, ಶ್ರೇಷ್ಠ ಜೀವನ ಹಾಗೂ ತಂದೆ ಮತ್ತು ಪರಿವಾರದ ಸಂಬಂಧ-ಸಂಪರ್ಕದ ಮೂಲಕ ಒಂದು ಪರ್ಸೆಂಟ್ ಸಹ ಸಂಶಯವು ಸಂಕಲ್ಪ ಮಾತ್ರದಲ್ಲಿಯೂ ಇರುವುದಿಲ್ಲ. 4. ಪ್ರಶ್ನಾರ್ಥಕ ಚಿಹ್ನೆಯು ಸಮಾಪ್ತಿ, ಪ್ರತೀ ಮಾತಿನಲ್ಲಿ ಬಿಂದುವಾಗಿ ಬಿಂದುವನ್ನು ಇಡುವವರಾಗಿದ್ದಾರೆ. 5. ನಿಶ್ಚಯ ಬುದ್ಧಿಯವರು ಪ್ರತೀ ಸಮಯ ತಮ್ಮನ್ನು ನಿಶ್ಚಿಂತ ಚಕ್ರವರ್ತಿಗಳೆಂದು ಸಹಜ, ಸ್ವತಹ ಅನುಭವ ಮಾಡುತ್ತಾರೆ, ಅರ್ಥಾತ್ ಪದೇ-ಪದೇ ಸ್ಮೃತಿಯಲ್ಲಿ ತಂದುಕೊಳ್ಳುವ ಪರಿಶ್ರಮ ಪಡಬೇಕಾಗುವುದಿಲ್ಲ. ನಾನು ಚಕ್ರವರ್ತಿಯಾಗಿದ್ದೇನೆ ಎಂದು ಹೇಳುವ ಪರಿಶ್ರಮವನ್ನೂ ಪಡಬೇಕಾಗುವುದಿಲ್ಲ. ಆದರೆ ಸದಾ ಸ್ಥಿತಿಯ ಶ್ರೇಷ್ಠ ಸಿಂಹಾಸನದಲ್ಲಿ ಸ್ಥಿತರಾಗಿಯೇ ಇರುತ್ತಾರೆ. ಹೇಗೆ ಲೌಕಿಕ ಜೀವನದಲ್ಲಿ ಯಾವುದೇ ಪರಿಸ್ಥಿತಿಯ ಪ್ರಮಾಣ ಸ್ಥಿತಿಯಾಗುತ್ತದೆ, ದುಃಖವಿರಬಹುದು ಅಥವಾ ಸುಖವಿರಬಹುದು, ಆ ಸ್ಥಿತಿಯ ಅನುಭೂತಿಯಲ್ಲಿ ಸ್ವತಹ ಇರುತ್ತಾರೆ. ನಾನು ಸುಖಿಯಾಗಿದ್ದೇನೆ ಅಥವಾ ನಾನು ದುಃಖಿಯಾಗಿದ್ದೇನೆ ಎಂದು ತೋರಿಸಿಕೊಳ್ಳುವ ಪರಿಶ್ರಮವನ್ನೂ ಪದೇ-ಪದೇ ಮಾಡುವುದಿಲ್ಲ. ನಿಶ್ಚಿಂತ ಚಕ್ರವರ್ತಿ ಸ್ಥಿತಿಯ ಅನುಭವವು ಸ್ವತಹ, ಸಹಜವಾಗಿ ಆಗುತ್ತದೆ. ಅಜ್ಞಾನಿ ಜೀವನದಲ್ಲಿ ಪರಿಸ್ಥಿತಿಗಳ ಪ್ರಮಾಣ ಸ್ಥಿತಿಯಾಗುತ್ತದೆ ಆದರೆ ಶಕ್ತಿಶಾಲಿ ಅಲೌಕಿಕ ಬ್ರಾಹ್ಮಣ ಜೀವನದಲ್ಲಿ ಪರಿಸ್ಥಿತಿಗಳ ಪ್ರಮಾಣ ಸ್ಥಿತಿಯಾಗುವುದಿಲ್ಲ. ಆದರೆ ನಿಶ್ಚಿಂತ ಚಕ್ರವರ್ತಿ ಸ್ಥಿತಿ ಹಾಗೂ ಶ್ರೇಷ್ಠ ಸ್ಥಿತಿಯು ಬಾಪ್ದಾದಾರವರ ಮೂಲಕ ಪ್ರಾಪ್ತವಾಗಿರುವ ಜ್ಞಾನದ ಶಕ್ತಿ ಮತ್ತು ಪ್ರಕಾಶದ ಮೂಲಕ, ನೆನಪಿನ ಶಕ್ತಿಯ ಮೂಲಕ ಯಾವುದಕ್ಕೆ ಜ್ಞಾನ ಮತ್ತು ಯೋಗದ ಶಕ್ತಿಯ ಆಸ್ತಿಗಳೆಂದು ಹೇಳುತ್ತೀರಿ - ಇದು ತಂದೆಯ ಮೂಲಕ ಸಿಗುತ್ತದೆ. ಅಂದಾಗ ಬ್ರಾಹ್ಮಣ ಜೀವನದಲ್ಲಿ ತಂದೆಯ ಆಸ್ತಿಯ ಮೂಲಕ ಅಥವಾ ಸದ್ಗುರುವಿನ ವರದಾನಗಳ ಮೂಲಕ ಹಾಗೂ ಭಾಗ್ಯವಿದಾತನ ಮೂಲಕ ಪ್ರಾಪ್ತಿಯಾಗಿರುವ ಶ್ರೇಷ್ಠ ಭಾಗ್ಯದ ಮೂಲಕ ಸ್ಥಿತಿಯು ಪ್ರಾಪ್ತವಾಗುತ್ತದೆ. ಒಂದುವೇಳೆ ಪರಿಸ್ಥಿತಿಯ ಆಧಾರದ ಮೇಲೆ ನಿಮ್ಮ ಸ್ಥಿತಿಯಿದೆಯೆಂದರೆ ಶಕ್ತಿಶಾಲಿ ಯಾರಾದರು? ಪರಿಸ್ಥಿತಿಯೇ ಶಕ್ತಿಶಾಲಿಯಾಗಿ ಬಿಡುವುದಲ್ಲವೆ ಮತ್ತು ಪರಿಸ್ಥಿತಿಯ ಆಧಾರದ ಮೇಲೆ ಸ್ಥಿತಿಯನ್ನು ಮಾಡಿಕೊಳ್ಳುವವರು ಎಂದೂ ಅಚಲ, ಅಡೋಲರಾಗಿರಲು ಸಾಧ್ಯವಿಲ್ಲ. ಹೇಗೆ ಅಜ್ಞಾನೀ ಜೀವನದಲ್ಲಿ ಈಗೀಗ ನೋಡಿದರೆ ಬಹಳ ಖುಷಿಯಲ್ಲಿ ನರ್ತಿಸುತ್ತಿರುತ್ತಾರೆ ಮತ್ತು ಈಗೀಗ ತಲೆ ಕೆಳಕಾಗಿ ಮಲಗಿರುತ್ತಾರೆ ಆದರೆ ಅಲೌಕಿಕ ಜೀವನದಲ್ಲಿ ಇಂತಹ ಚಂಚಲತೆಯ ಸ್ಥಿತಿಯಿರುವುದಿಲ್ಲ. ಪರಿಸ್ಥಿತಿಯ ಆಧಾರದ ಮೇಲೆ ಸ್ಥಿತಿಯಿರುವುದಿಲ್ಲ. ಆದರೆ ತಮ್ಮ ಆಸ್ತಿ ಮತ್ತು ವರದಾನದ ಆಧಾರದ ಮೇಲೆ ಹಾಗೂ ತಮ್ಮ ಶ್ರೇಷ್ಠ ಸ್ಥಿತಿಯ ಆಧಾರದ ಮೇಲೆ ಪರಿಸ್ಥಿತಿಯನ್ನು ಪರಿವರ್ತನೆ ಮಾಡುವವರಾಗಿರುತ್ತಾರೆ. ಆದ್ದರಿಂದ ನಿಶ್ಚಯ ಬುದ್ಧಿಯವರು ಈ ಕಾರಣ ಸದಾ ನಿಶ್ಚಿಂತ ಚಕ್ರವರ್ತಿಗಳಾಗಿರುತ್ತಾರೆ ಏಕೆಂದರೆ ಯಾವುದೇ ಅಪ್ರಾಪ್ತಿ ಅಥವಾ ಕೊರತೆಯಿರುವ ಕಾರಣವೇ ಚಿಂತೆಯಾಗುತ್ತದೆ. ಒಂದುವೇಳೆ ಸರ್ವಪ್ರಾಪ್ತಿ ಸ್ವರೂಪರು, ಮಾll ಸರ್ವಶಕ್ತಿವಂತರಾಗಿದ್ದರೆ ಮತ್ತ್ಯಾವ ಮಾತಿನ ಚಿಂತೆಯಿರುವುದು?
6. ನಿಶ್ಚಯಬುದ್ಧಿ ಅರ್ಥಾತ್ ಸದಾ ತಂದೆಯ ಮೇಲೆ ಬಲಿಹಾರಿಯಾಗುವವರು. ಬಲಿಹಾರಿ ಅರ್ಥಾತ್ ಸರ್ವಾಂಶ ಸಮರ್ಪಿತ, ಸರ್ವಾಂಶ ಸಹಿತ ಸಮರ್ಪಿತ. ದೇಹಭಾನದಲ್ಲಿ ತರುವ ವಿಕಾರಗಳ ವಂಶವಿರಬಹುದು, ದೇಹದ ಸಂಬಂಧದ ವಂಶವಿರಬಹುದು, ದೇಹದ ವಿನಾಶೀ ಪದಾರ್ಥಗಳ ಇಚ್ಛೆಗಳ ವಂಶವಿರಬಹುದು, ಸರ್ವ ವಂಶದಲ್ಲಿ ಇದೆಲ್ಲವೂ ಬಂದು ಬಿಡುತ್ತದೆ. ಸರ್ವಾಂಶ ಸಮರ್ಪಿತ ಹಾಗೂ ಸರ್ವಾಂಶ ತ್ಯಾಗಿ ಎರಡೂ ಒಂದೇ ಆಗಿದೆ. ಕೇವಲ ಮಧುಬನದಲ್ಲಿ ಇರುವುದಕ್ಕೆ ಅಥವಾ ಸೇವಾಕೇಂದ್ರಗಳಲ್ಲಿ ಇರುವುದಕ್ಕೆ ಸಮರ್ಪಿತರಾಗುವುದೆಂದು ಹೇಳುವುದಿಲ್ಲ. ಸೇವಾರ್ಥವಾಗಿ ತಮ್ಮನ್ನು ಅರ್ಪಣೆ ಮಾಡಿಕೊಳ್ಳುವುದು. ಇದು ಒಂದು ಮೊದಲನೆಯ ಮೆಟ್ಟಿಲಾಗಿದೆ. ಆದರೆ “ಸರ್ವಾಂಶ ಅರ್ಪಿತ” - ಇದು ಈ ಮೆಟ್ಟಿಲಿನ ಗುರಿಯಾಗಿದೆ. ಈ ಮೆಟ್ಟಿಲ್ಲನ್ನಂತೂ ಏರಿದಿರಿ ಆದರೆ ಗುರಿಯನ್ನೂ ತಲುಪುವ ನಿಶ್ಚಯ ಬುದ್ಧಿಯವರ ಚಿಹ್ನೆಯಾಗಿದೆ - ಮೂರೂ ವಂಶ ಸಹಿತ ಅರ್ಪಿತ. ಮೂರೂ ಮಾತುಗಳನ್ನು ಸ್ಪಷ್ಟವಾಗಿ ಅರಿತುಕೊಂಡಿದ್ದೀರಲ್ಲವೆ. ಯಾವಾಗ ಸ್ವಪ್ನ, ಸಂಕಲ್ಪದಲ್ಲಿಯೂ ಅಂಶ ಮಾತ್ರವೂ ಇರುವುದಿಲ್ಲವೋ ಆಗ ವಂಶವು ಸಮಾಪ್ತಿಯಾಗುತ್ತದೆ. ಒಂದುವೇಳೆ ಅಂಶವಿದ್ದರೆ ಅದರಿಂದ ವಂಶವೂ ಬೆಳವಣಿಗೆ ಆಗಿಬಿಡುತ್ತದೆ. ಆದ್ದರಿಂದ ಸರ್ವಾಂಶ ತ್ಯಾಗಿಯ ಪರಿಭಾಷೆಯು ಅತೀ ಗುಹ್ಯವಾಗಿದೆ. ಇದನ್ನು ಮತ್ತೆಂದಾದರೂ ತಿಳಿಸುತ್ತೇವೆ.
7. ನಿಶ್ಚಯ ಬುದ್ಧಿಯವರು ಸದಾ ನಿಶ್ಚಿಂತರಾಗಿರುವರು. ಪ್ರತೀ ಮಾತಿನಲ್ಲಿ ವಿಜಯವು ಪ್ರಾಪ್ತಿಯಾಗುವ ನಶೆಯಲ್ಲಿ ನಿಶ್ಚಿತ ಅನುಭವ ಮಾಡುವರು ಅಂದಾಗ ನಿಶ್ಚಯ, ನಿಶ್ಚಿಂತ ಮತು ನಿಶ್ಚಿತ. ಇದು ಪ್ರತೀ ಸಮಯ ಅನುಭವ ಮಾಡಿಸುವುದು.
8. ನಿಶ್ಚಯಬುದ್ಧಿಯವರು ಸದಾ ಸ್ವಯಂ ನಶೆಯಲ್ಲಿರುತ್ತಾರೆ ಮತ್ತು ಅವರ ನಶೆಯನ್ನು ನೋಡಿ ಅನ್ಯರಿಗೂ ಈ ಆತ್ಮಿಕ ನಶೆಯು ಅನುಭವವಾಗುವುದು. ಅನ್ಯರಿಗೂ ಸಹ ಆತ್ಮಿಕ ನಶೆಯಲ್ಲಿ ತಂದೆಯ ಸಹಯೋಗದಿಂದ ಸ್ವಯಂನ ಸ್ಥಿತಿಯಿಂದ ಅನುಭವ ಮಾಡಿಸುವರು.
9. ನಿಶ್ಚಯಬುದ್ಧಿಯವರ ಅಥವಾ ಆತ್ಮಿಕ ನಶೆಯಲ್ಲಿ ಇರುವವರ ಜೀವನದ ವಿಶೇಷತೆಗಳು ಏನಿರುತ್ತವೆ? ಮೊದಲ ಮಾತು – ಎಷ್ಟು ಶ್ರೇಷ್ಠ ನಶೆಯೋ ಅಷ್ಟೇ ನಿಮಿತ್ತ ಭಾವವು ಪ್ರತೀ ಜೀವನದ ಚರಿತ್ರೆಯಲ್ಲಿರುವುದು. ನಿಮಿತ್ತ ಭಾವದ ವಿಶೇಷತೆಯ ಕಾರಣ ನಿರ್ಮಾಣ ಬುದ್ಧಿಯವರಾಗಿರುತ್ತಾರೆ. ಬುದ್ಧಿಯ ಮೇಲೆ ಗಮನ ಕೊಡಬೇಕು – ಎಷ್ಟು ನಿರ್ಮಾಣ ಬುದ್ಧಿಯಿರುವುದೋ ಅಷ್ಟು ನಿರ್ಮಾಣ, ನವ ನಿರ್ಮಾಣವೆಂದು ಹೇಳುತ್ತೀರಲ್ಲವೆ ಅಂದಾಗ ನವ ನಿರ್ಮಾಣ ಮಾಡುವಂತಹ ಬುದ್ಧಿಯಿರುತ್ತದೆ ಆದ್ದರಿಂದ ನಿರ್ಮಾಣರೂ ಆಗಿರುತ್ತಾರೆ, ನಿರ್ಮಾನರೂ ಆಗಿರುತ್ತಾರೆ. ಯಾರಲ್ಲಿ ಈ ವಿಶೇಷತೆಗಳಿರುವುದೋ ಅವರಿಗೆ ನಿಶ್ಚಿತ ಬುದ್ಧಿ ವಿಜಯಿಗಳೆಂದು ಕರೆಯಲಾಗುತ್ತದೆ. ನಿಮಿತ್ತ, ನಿರ್ಮಾಣ ಮತ್ತು ನಿರ್ಮಾನ. ನಿಶ್ಚಯ ಬುದ್ಧಿಯವರ ಭಾಷೆಯು ಯಾವುದಾಗಿರುತ್ತದೆ? ನಿಶ್ಚಯ ಬುದ್ಧಿಯವರ ಭಾಷೆಯಲ್ಲಿ ಸದಾ ಮಧುರತೆಯಂತೂ ಸಾಮಾನ್ಯ ಮಾತಾಗಿರುತ್ತದೆ. ಆದರೆ ಅವರಲ್ಲಿ ಉದಾರತೆಯಿರುತ್ತದೆ. ಉದಾರತೆಯ ಅರ್ಥವಾಗಿದೆ – ಸರ್ವ ಆತ್ಮಗಳ ಪ್ರತಿ ಮುಂದುವರೆಸುವ ಉದಾರತೆಯಿರುವುದು. ‘ಮೊದಲು ತಾವು’, ‘ನಾನು-ನಾನು’ ಅಲ್ಲ, ಉದಾರತೆ ಅರ್ಥಾತ್ ಅನ್ಯರನ್ನು ಮುಂದಿಡುವುದಾಗಿದೆ. ಹೇಗೆ ಬ್ರಹ್ಮಾ ತಂದೆಯು ಸದಾ ಮೊದಲು ಜಗದಂಬೆಯನ್ನು ಹಾಗೂ ಮಕ್ಕಳನ್ನು ಮುಂದಿಟ್ಟರು - ನನಗಿಂತಲೂ ಈ ಜಗದಂಬೆ ತೀಕ್ಷ್ಣವಾಗಿದ್ದಾರೆ, ನನಗಿಂತಲೂ ಮಕ್ಕಳು ತೀಕ್ಷ್ಣರಾಗಿದ್ದಾರೆಂದು. ಇದು ಉದಾರತೆಯ ಭಾಷೆಯಾಗಿದೆ. ಎಲ್ಲಿ ಉದಾರತೆ ಇರುವುದೋ ಅಲ್ಲಿ ಸ್ವಯಂನ ಪ್ರತಿ ತಾನು ಮುಂದಿರುವ ಇಚ್ಛೆಯಿರುವುದಿಲ್ಲ. ಅಲ್ಲಿ ಡ್ರಾಮಾನುಸಾರ ಸ್ವತಹ ಮನ ಇಚ್ಛಿತ ಫಲವು ಪ್ರಾಪ್ತಿಯಾಗಿಯೇ ಆಗುತ್ತದೆ. ಸ್ವಯಂ ಎಷ್ಟು ಇಚ್ಛಾ ಮಾತ್ರಂ ಅವಿದ್ಯಾ ಸ್ಥಿತಿಯಲ್ಲಿ ಇರುತ್ತೀರೋ ಅಷ್ಟು ತಂದೆ ಮತ್ತು ಪರಿವಾರವು ಒಳ್ಳೆಯವರು, ಯೋಗ್ಯರೆಂದು ತಿಳಿದು ಅವರನ್ನೇ ಮುಂದಿಡುತ್ತಾರೆ. ಆದ್ದರಿಂದ ‘ಮೊದಲು ತಾವು’ ಎಂದು ಮನಸ್ಸಿನಿಂದ ಹೇಳುವವರು ಎಂದಿಗೂ ಹಿಂದುಳಿಯುವುದಿಲ್ಲ. ಅವರು ಮನಸ್ಸಿನಿಂದ ಮೊದಲು ತಾವು ಎಂದು ಹೇಳುವ ಕಾರಣ ಸರ್ವರ ಮೂಲಕ ಸಹಜವಾಗಿ ಮೊದಲು ತಾವಾಗಿ ಬಿಡುತ್ತಾರೆ ಆದರೆ ಇಚ್ಛೆಯವರಲ್ಲ ಅಂದಾಗ ನಿಶ್ಚಯ ಬುದ್ಧಿಯವರ ಭಾಷೆಯು ಸದಾ ಉದಾರತೆಯ ಭಾಷೆ, ಸಂತುಷ್ಟತೆಯ ಭಾಷೆ, ಸರ್ವರ ಕಲ್ಯಾಣದ ಭಾಷೆಯಾಗಿರುತ್ತದೆ. ಎಂತಹ ಭಾಷೆಯವರಿಗೆ ನಿಶ್ಚಯಬುದ್ಧಿ ವಿಜಯಿಗಳೆಂದು ಹೇಳಲಾಗುವುದು? ಎಲ್ಲರೂ ನಿಶ್ಚಯಬುದ್ಧಿಯವರು ಆಗಿದ್ದೀರಲ್ಲವೆ? ಏಕೆಂದರೆ ನಿಶ್ಚಯವೇ ತಳಪಾಯವಾಗಿದೆ.
ಆದರೆ ಯಾವಾಗ ಪರಿಸ್ಥಿತಿಗಳ, ಮಾಯೆಯ, ಸಂಸ್ಕಾರಗಳ, ಭಿನ್ನ-ಭಿನ್ನ ಸ್ವಭಾವಗಳ ಬಿರುಗಾಳಿಯು ಬರುವುದೋ ಆಗಲೇ ನಿಶ್ಚಯದ ತಳಪಾಯವು ಎಷ್ಟು ಶಕ್ತಿಶಾಲಿ (ಧೃಡ) ಯಾಗಿದೆ ಎಂಬುದು ಅರ್ಥವಾಗುತ್ತದೆ. ಹೇಗೆ ಈ ಹಳೆಯ ಪ್ರಪಂಚದಲ್ಲಿ ಭಿನ್ನ-ಭಿನ್ನ ಪ್ರಕಾರದ ಬಿರುಗಾಳಿಗಳು ಬರುತ್ತವೆಯಲ್ಲವೆ. ಕೆಲವೊಮ್ಮೆ ಚಂಡ ಮಾರುತದ, ಕೆಲವೊಮ್ಮೆ ಸಮುದ್ರದ........ ಹೀಗೆ ಇಲ್ಲಿಯೂ ಸಹ ಭಿನ್ನ-ಭಿನ್ನ ಪ್ರಕಾರದ ಬಿರುಗಾಳಿಗಳು ಬರುತ್ತವೆ. ಬಿರುಗಾಳಿಯು ಏನು ಮಾಡುತ್ತದೆ? ಮೊದಲು ಹಾರಿಸುತ್ತದೆ ನಂತರ ಎಸೆಯುತ್ತದೆ ಅಂದಾಗ ಈ ಬಿರುಗಾಳಿಯೂ ಸಹ ಮೊದಲು ತನ್ನಕಡೆ ಖುಷಿಯಲ್ಲಿ ಹಾರಿಸುತ್ತದೆ, ಅಲ್ಪಕಾಲದ ನಶೆಯಲ್ಲಿ ಮೇಲೆ ತೆಗೆದುಕೊಂಡು ಹೋಗುತ್ತದೆ ಏಕೆಂದರೆ ಮಾಯೆಯೂ ಸಹ ಇವರು ಯಾವುದೇ ಪ್ರಾಪ್ತಿಯನ್ನು ತೋರಿಸದೆ ನನ್ನಕಡೆ ಬರುವವರಲ್ಲವೆಂದು ತಿಳಿದುಕೊಂಡು ಬಿಟ್ಟಿದೆ. ಆದ್ದರಿಂದ ಮೊದಲು ಅಲ್ಪಕಾಲದ ಪ್ರಾಪ್ತಿಯಲ್ಲಿ ಮೇಲೆ ಹಾರಿಸುತ್ತದೆ. ನಂತರ ಇಳಿಯುವ ಕಲೆಯಲ್ಲಿ ತೆಗೆದುಕೊಂಡು ಬರುತ್ತದೆ. ಮಾಯೆಯು ಚತುರನಾಗಿದೆ ಆದರೆ ನಿಶ್ಚಯ ಬುದ್ಧಿಯವರ ದೃಷ್ಟಿಯು ತ್ರಿನೇತ್ರಿಯಾಗಿರುತ್ತದೆ. ಮೂರನೆಯ ನೇತ್ರದಿಂದ ಮೂರೂ ಕಾಲಗಳನ್ನು ನೋಡುತ್ತಾರೆ. ಆದ್ದರಿಂದ ಎಂದೂ ಅವರು ಮೋಸ ಹೋಗುವುದಿಲ್ಲ ಅಂದಾಗ ನಿಶ್ಚಯ ಎಷ್ಟಿದೆಯೆಂಬುದನ್ನು ಬಿರುಗಾಳಿಯ ಸಮಯದಲ್ಲಿ ಗುರುತಿಸಬಹುದಾಗಿದೆ. ಹೇಗೆ ಬಿರುಗಾಳಿಗಳು ದೊಡ್ಡ-ದೊಡ್ಡ ಹಳೆಯ ವೃಕ್ಷದ ಬುನಾದಿಯನ್ನು ಸಡಿಲ ಮಾಡಿಬಿಡುತ್ತದೆಯೋ ಹಾಗೆಯೇ ಈ ಮಾಯೆಯ ಬಿರುಗಾಳಿಯೂ ಸಹ ಮೊದಲು ನಿಶ್ಚಯದ ತಳಪಾಯವನ್ನು ಸಡಿಲಿಸುವ ಪ್ರಯತ್ನ ಪಡುತ್ತದೆ. ಆದರೆ ಫಲಿತಾಂಶದಲ್ಲಿ ಸಡಿಲವಾಗುವುದು ಕಡಿಮೆ, ಹೆಚ್ಚು ಅಲುಗಾಡಿಬಿಡುತ್ತಾರೆ. ಅಲುಗಾಡುವುದರಿಂದಲೂ ಸಹ ತಳಪಾಯವೂ ಕಚ್ಚಾ ಆಗಿಬಿಡುತ್ತದೆ ಅಂದಾಗ ಇಂತಹ ಸಮಯದಲ್ಲಿ ತಮ್ಮ ನಿಶ್ಚಯದ ಪರಿಶೀಲನೆ ಮಾಡಿಕೊಳ್ಳಿ. ಹಾಗೆ ನೋಡಿದರೆ ನಿಶ್ಚಯವು ಪಕ್ಕಾ ಆಗಿದೆಯೇ ಎಂದು ಯಾರನ್ನಾದರೂ ಪ್ರಶ್ನಿಸಿದರೆ ಏನು ಹೇಳುತ್ತಾರೆ? ಬಹಳ ಚೆನ್ನಾಗಿ ಭಾಷಣ ಮಾಡುತ್ತಾರೆ. ನಿಶ್ಚಯದಲ್ಲಿ ಇರುವುದು ಒಳ್ಳೆಯದೇ ಆಗಿದೆ ಆದರೆ ಸಮಯದಲ್ಲಿ ಒಂದುವೇಳೆ ನಿಶ್ಚಯವು ಅಲುಗಾಡುತ್ತದೆ ಎಂದರೆ ನಿಶ್ಚಯವು ಅಲುಗಾಡುವುದು ಅರ್ಥಾತ್ ಜನ್ಮ-ಜನ್ಮದ ಪ್ರಾಲಬ್ಧದಿಂದ ಅಲುಗಾಡುವುದಾಗಿದೆ. ಆದ್ದರಿಂದ ಬಿರುಗಾಳಿಗಳು ಬರುವ ಸಮಯದಲ್ಲಿ ಪರಿಶೀಲನೆ ಮಾಡಿಕೊಳ್ಳಿ - ಯಾರಾದರೂ ಹದ್ದಿನ ಸ್ಥಾನಮಾನವನ್ನು ಕೊಡದೇ ಇರಬಹುದು ಅಥವಾ ವ್ಯರ್ಥ ಸಂಕಲ್ಪಗಳ ರೂಪದಲ್ಲಿ ಮಾಯೆಯ ಬಿರುಗಾಳಿಗಳು ಬರಬಹುದು. ಯಾವ ಬಯಕೆಯನ್ನು ಇಟ್ಟುಕೊಳ್ಳುತ್ತೀರೋ ಆ ಬಯಕೆಯು ಅರ್ಥಾತ್ ಇಚ್ಛೆಯು ಪೂರ್ಣವಾಗದಿರಬಹುದು. ಇಂತಹ ಸಮಯದಲ್ಲಿ ನಾನು ಸಮರ್ಥ ತಂದೆಯ ಸಮರ್ಥ ಆತ್ಮನಾಗಿದ್ದೇನೆಂಬ ನಿಶ್ಚಯವು ನೆನಪಿರುತ್ತದೆಯೇ ಅಥವಾ ವ್ಯರ್ಥವು ಸಮರ್ಥದ ಮೇಲೆ ವಿಜಯಿ ಆಗಿಬಿಡುತ್ತದೆಯೇ? ಒಂದುವೇಳೆ ವ್ಯರ್ಥವೇ ವಿಜಯಿ ಆಗುತ್ತದೆಯೆಂದರೆ ನಿಶ್ಚಯದ ತಳಪಾಯವು ಅಲುಗಾಡುತ್ತದೆಯಲ್ಲವೆ ಆಗ ಸಮರ್ಥ ಆತ್ಮನ ಬದಲು ನಿರ್ಬಲ ಆತ್ಮನೆಂದು ಅನುಭವ ಮಾಡುತ್ತೀರಿ. ಹೃದಯ ವಿಧೀರ್ಣರಾಗಿ ಬಿಡುತ್ತೀರಿ ಆದ್ದರಿಂದ ಬಿರುಗಾಳಿಯ ಸಮಯದಲ್ಲಿ ಪರಿಶೀಲನೆ ಮಾಡಿಕೊಳ್ಳಿ ಎಂದು ಬಾಪ್ದಾದಾ ಹೇಳುತ್ತೇವೆ. ಹದ್ದಿನ ಸ್ಥಾನಮಾನ, ನಾನು ಎಂಬುದು ಆತ್ಮಿಕ ಗೌರವದಿಂದ ಕೆಳಗೆ ತೆಗೆದುಕೊಂಡು ಬರುತ್ತದೆ. ಹದ್ದಿನ ಯಾವುದೇ ಇಚ್ಛೆಯು ಇಚ್ಛಾಮಾತ್ರಂ ಅವಿದ್ಯೆಯ ನಿಶ್ಚಯದಿಂದ ಕೆಳಗೆ ತರುತ್ತದೆ ಅಂದರೆ ನಿಶ್ಚಯದ ಅರ್ಥವು ನಾನು ಶರೀರವಲ್ಲ, ಆತ್ಮನಾಗಿದ್ದೇನೆಂಬುದಲ್ಲ ಆದರೆ ನಾನು ಎಂತಹ ಆತ್ಮನಾಗಿದ್ದೇನೆ! ಆ ನಶೆ, ಆ ಸ್ವಮಾನವು ಸಮಯದಲ್ಲಿ ಅನುಭವವಾಗಲಿ, ಅಂತಹವರಿಗೆ ನಿಶ್ಚಯಬುದ್ಧಿ ವಿಜಯಿಗಳೆಂದು ಹೇಳಲಾಗುತ್ತದೆ. ಯಾವುದೇ ಪರೀಕ್ಷೆಯೇ ಇಲ್ಲ ಮತ್ತು ನಾನಂತೂ ಪಾಸ್-ವಿತ್-ಆನರ್ ಆಗಿ ಬಿಟ್ಟೆನೆಂದು ಹೇಳುವುದಲ್ಲ. ಅಂತಹವರನ್ನು ಯಾರಾದರೂ ಒಪ್ಪುವರೇ? ಸರ್ಟಿಫಿಕೇಟ್ ಬೇಕಲ್ಲವೆ. ಯಾರು ಎಷ್ಟೇ ತೇರ್ಗಡೆಯಾಗಬಹುದು, ಡಿಗ್ರಿ ತೆಗೆದುಕೊಳ್ಳಬಹುದು, ಎಲ್ಲಿಯವರೆಗೆ ಸರ್ಟಿಫಿಕೇಟ್ ಸಿಗುವುದಿಲ್ಲವೋ ಅಲ್ಲಿಯವರೆಗೆ ಬೆಲೆಯಿರುವುದಿಲ್ಲ. ಪರೀಕ್ಷೆಯ ಸಮಯದಲ್ಲಿ ತೇರ್ಗಡೆಯಾಗಿ ತಂದೆಯಿಂದ, ಪರಿವಾರದಿಂದ ಸರ್ಟಿಫಿಕೇಟನ್ನು ತೆಗೆದುಕೊಂಡಾಗಲೇ ಅವರಿಗೆ ನಿಶ್ಚಯಬುದ್ಧಿ ವಿಜಯಿಗಳೆಂದು ಹೇಳಲಾಗುತ್ತದೆ. ತಿಳಿಯಿತೆ? ಆದ್ದರಿಂದ ತಳಪಾಯವನ್ನು ಪರಿಶೀಲನೆ ಮಾಡಿಕೊಳ್ಳುತ್ತಾ ಇರಿ, ನಿಶ್ಚಯಬುದ್ಧಿಯ ವಿಶೇಷತೆಯನ್ನು ಕೇಳಿದಿರಲ್ಲವೆ. ಎಂತಹ ಸಮಯವೋ ಅಂತಹ ಆತ್ಮಿಕ ನಶೆಯು ಜೀವನದಲ್ಲಿ ಕಂಡುಬರಲಿ. ಕೇವಲ ತಮ್ಮ ಮನಸ್ಸು ಖುಷಿಯಾಗಿ ಬಿಡುವುದಲ್ಲ ಆದರೆ ಅನ್ಯರೂ ಖುಷಿ ಪಡಲಿ. ಹೌದು! ಇವರು ನಶೆಯಲ್ಲಿರುವ ಆತ್ಮನಾಗಿದ್ದಾರೆ ಎಂದು ಎಲ್ಲರೂ ಅನುಭವ ಮಾಡಲಿ. ಕೇವಲ ಮನಪ್ರಿಯರಲ್ಲ, ಆದರೆ ಲೋಕ ಪ್ರಿಯರು, ತಂದೆಗೆ ಪ್ರಿಯರು. ಅಂತಹವರಿಗೆ ವಿಜಯಿಗಳೆಂದು ಹೇಳುತ್ತಾರೆ. ಒಳ್ಳೆಯದು.
ಸರ್ವ ನಿಶ್ಚಯಬುದ್ಧಿ ವಿಜಯಿರತ್ನಗಳಿಗೆ, ಸರ್ವ ನಿಶ್ಚಿಂತ ಮಕ್ಕಳಿಗೆ, ಸರ್ವ ನಿಶ್ಚಿತ ವಿಜಯದ ನಶೆಯಲ್ಲಿರುವ ಆತ್ಮಿಕ ಮಕ್ಕಳಿಗೆ, ಎಲ್ಲಾ ಬಿರುಗಾಳಿಗಳನ್ನು ಪಾರು ಮಾಡಿ ಅದನ್ನು ಉಡುಗೊರೆಯೆಂಬ ಅನುಭವ ಮಾಡುವಂತಹ ವಿಶೇಷ ಆತ್ಮಗಳಿಗೆ, ಸದಾ ಅಚಲ-ಅಡೋಲ, ಏಕರಸ ಸ್ಥಿತಿಯಲ್ಲಿ ಸ್ಥಿತರಾಗಿರುವ ನಿಶ್ಚಯಬುದ್ಧಿ ಮಕ್ಕಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.
ತಮ್ಮನ್ನು ಸಮೀಪ ರತ್ನಗಳೆಂದು ಅನುಭವ ಮಾಡುತ್ತೀರಾ? ಸಮೀಪ ರತ್ನಗಳ ಲಕ್ಷಣಗಳೇನಾಗಿವೆ? ಅಂತಹವರು ಸದಾ, ಸಹಜ ಮತ್ತು ಸ್ವತಹವಾಗಿ ಜ್ಞಾನಿ ಆತ್ಮ, ಯೋಗಿ ಆತ್ಮ, ಗುಣಮೂರ್ತಿ ಸೇವಾಧಾರಿ ಎಂಬ ಅನುಭವ ಮಾಡುತ್ತಾರೆ. ಈ ನಾಲ್ಕೂ ವಿಶೇಷತೆಗಳು ಸಮೀಪ ರತ್ನಗಳ ಪ್ರತೀ ಹೆಜ್ಜೆಯಲ್ಲಿ ಸಹಜವಾಗಿ ಅನುಭವವಾಗುತ್ತದೆ, ಒಂದರಲ್ಲಿಯೂ ಕಡಿಮೆಯಾಗುವುದಿಲ್ಲ. ಜ್ಞಾನದಲ್ಲಿ ಕೊರತೆಯಿದೆಯೇ, ಯೋಗದಲ್ಲಿ ತೀವ್ರತೆಯಿದೆಯೇ ಅಥವಾ ದಿವ್ಯ ಗುಣಗಳ ಧಾರಣೆಯಲ್ಲಿ ಬಲಹೀನತೆಯಿದೆಯೇ, ಎಲ್ಲದರಲ್ಲಿ ಸಹಜವಾಗಿಯೇ ಅನುಭವ ಮಾಡುವರು. ಸಮೀಪ ರತ್ನಗಳು ಯಾವುದೇ ಮಾತಿನಲ್ಲಿ ಪರಿಶ್ರಮದ ಅನುಭವ ಮಾಡುವುದಿಲ್ಲ ಆದರೆ ಸಹಜ ಸಫಲತೆಯ ಅನುಭವ ಮಾಡುತ್ತಾರೆ ಏಕೆಂದರೆ ಬಾಪ್ದಾದಾರವರು ಮಕ್ಕಳನ್ನು ಸಂಗಮಯುಗದಲ್ಲಿ ಪರಿಶ್ರಮದಿಂದ ಮುಕ್ತಗೊಳಿಸುತ್ತಾರೆ. 63 ಜನ್ಮಗಳಲ್ಲಿ ಪರಿಶ್ರಮ ಪಟ್ಟಿದ್ದೀರಲ್ಲವೆ. ಅದು ಶರೀರದ ಪರಿಶ್ರಮವಿರಬಹುದು, ಮನಸ್ಸಿನ ಪರಿಶ್ರಮವಿರಬಹುದು. ತಂದೆಯನ್ನು ಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಭಿನ್ನ-ಭಿನ್ನ ಸಾಧನಗಳನ್ನು ಉಪಯೋಗ ಮಾಡಿದ್ದೀರೆಂದರೆ ಇದು ಮನಸ್ಸಿನ ಪರಿಶ್ರಮವಾಯಿತು. ಹಾಗೆಯೇ ಧನವನ್ನೂ ನೋಡಿ, ಯಾರು ಸೇವೆಯನ್ನು ಮಾಡುತ್ತೀರಿ, ಅದನ್ನು ಬಾಪ್ದಾದಾರವರು ನೌಕರಿ ಎಂದು ಹೇಳುತ್ತಾರೆ. ಅದರಲ್ಲಿಯೂ ಎಷ್ಟೊಂದು ಪರಿಶ್ರಮ ಪಡುತ್ತೀರಿ! ಮತ್ತು ಈಗ ಅರ್ಧಕಲ್ಪಕ್ಕಾಗಿ ಈ ನೌಕರಿ ಮಾಡುವುದಿಲ್ಲ, ಇದರಿಂದಲೂ ಮುಕ್ತರಾಗುವಿರಿ. ಲೌಕಿಕ ನೌಕರಿಯನ್ನೂ ಮಾಡುವುದಿಲ್ಲ, ಭಕ್ತಿಯನ್ನೂ ಮಾಡುವುದಿಲ್ಲ, ಎರಡರಿಂದ ಮುಕ್ತಿ ಸಿಗುತ್ತದೆ. ಈಗಲೂ ಭಲೆ ಲೌಕಿಕ ಕಾರ್ಯವನ್ನೂ ಮಾಡುತ್ತೀರಿ ಆದರೆ ಬ್ರಾಹ್ಮಣ ಜೀವನದಲ್ಲಿ ಬರುವುದರಿಂದ, ಲೌಕಿಕ ಕಾರ್ಯವನ್ನು ಮಾಡುತ್ತಿದ್ದರೂ ಅಂತರವಾಗುತ್ತದೆ ಅಲ್ಲವೆ. ಈಗ ಈ ಲೌಕಿಕ ಕಾರ್ಯವನ್ನು ಮಾಡುತ್ತಿದ್ದರೂ ಡಬಲ್ಲೈಟ್ ಆಗಿರುತ್ತೀರಾ, ಏಕೆ? ಏಕೆಂದರೆ ಲೌಕಿಕ ಕಾರ್ಯವನ್ನು ಮಾಡುತ್ತಿದ್ದರೂ ಈ ಖುಷಿಯಿರುತ್ತದೆ - ಈ ಕಾರ್ಯವನ್ನು ಅಲೌಕಿಕ ಸೇವೆಗಾಗಿ ಮಾಡುತ್ತಿದ್ದೀರಿ. ತಮ್ಮ ಮನಸ್ಸಿನ ಇಚ್ಛೆಗಳೇ ಇಲ್ಲತಾನೆ. ಅಂದಮೇಲೆ ಎಲ್ಲಿ ಇಚ್ಛೆಗಳಿರುತ್ತವೆ ಅಲ್ಲಿ ಪರಿಶ್ರಮವೆನಿಸುತ್ತದೆ. ಈಗ ನಿಮಿತ್ತವಷ್ಟೇ ಮಾಡುತ್ತೀರಿ ಏಕೆಂದರೆ ಈ ಅವಿನಾಶಿ ಬ್ಯಾಂಕಿನಲ್ಲಿ ತನು-ಮನ-ಧನ- ಮೂರನ್ನೂ ಉಪಯೋಗ ಮಾಡುವುದರಿಂದ ಒಂದಕ್ಕೆ ಪದಮದಷ್ಟು ಜಮಾ ಆಗಿ ಬಿಡುತ್ತದೆ ಎಂದು ತಿಳಿದಿದೆ. ನಂತರದಲ್ಲಿ ಈ ಜಮಾ ಆಗಿರುವುದನ್ನು ಅನುಭವಿಸುತ್ತೀರಿ. ಪುರುಷಾರ್ಥದಿಂದ - ಯೋಗ ಮಾಡುವ, ಜ್ಞಾನ ಕೇಳಿ-ತಿಳಿಸುವ ಪರಿಶ್ರಮದಿಂದ ಮುಕ್ತರಾಗುತ್ತೀರಿ. ಕೆಲವೊಮ್ಮೆ ತರಗತಿಗಳನ್ನು ಕೇಳಿ ಸುಸ್ತಾಗುತ್ತೀರಲ್ಲವೆ. ಅಲ್ಲಂತು ಲೌಕಿಕ ರಾಜ ನೀತಿಯ(ಚರಿತ್ರೆ) ತರಗತಿಯೂ ಸಹ ಆಟ-ಆಟದಲ್ಲಿ ಮಾಡುತ್ತಾರೆ, ಇಷ್ಟೆಲ್ಲಾ ಪುಸ್ತಕಗಳನ್ನು ನೆನಪಿಟ್ಟುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಸರ್ವ ಪರಿಶ್ರಮಗಳಿಂದ ಮುಕ್ತರಾಗಿ ಬಿಡುತ್ತೀರಿ. ಕೆಲವರಲ್ಲಿ ವಿದ್ಯಾಭ್ಯಾಸದ ಹೊರೆಯಿರುತ್ತದೆ, ಸಂಗಮಯುಗದಲ್ಲಿ ಪರಿಶ್ರಮಗಳಿಂದ ಮುಕ್ತರಾಗುವ ಸಂಸ್ಕಾರವನ್ನು ತುಂಬಿಕೊಳ್ಳುವಿರಿ. ಭಲೆ ಮಾಯೆಯ ಬಿರುಗಾಳಿ(ವಿಘ್ನ)ಗಳು ಬರುತ್ತವೆ ಆದರೆ ಈ ಮಾಯೆಯಿಂದ ವಿಜಯದ ಪ್ರಾಪ್ತಿ ಮಾಡಿಕೊಳ್ಳುವುದೂ ಸಹ ಆಟವೆಂದು ತಿಳಿಯುತ್ತೀರಿ, ಪರಿಶ್ರಮವಾಗುವುದಿಲ್ಲ. ಆಟದಲ್ಲಿಯೂ ಏನಾಗುತ್ತದೆ? ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಲಾಗುತ್ತದೆ. ಅಂದಮೇಲೆ ಮಾಯೆಯಿಂದಲೂ ವಿಜಯದ ಪ್ರಾಪ್ತಿ ಮಾಡಿಕೊಳ್ಳುವ ಆಟವಾಡುತ್ತೀರಿ. ಆಟವೆನಿಸುತ್ತದೆಯೇ ಅಥವಾ ದೊಡ್ಡ ಮಾತೆನಿಸುತ್ತದೆಯೇ? ಯಾವಾಗ ಮಾಸ್ಟರ್ ಸರ್ವಶಕ್ತಿವಂತನ ಸ್ಥಿತಿಯಲ್ಲಿ ಸ್ಥಿತರಾಗುತ್ತೀರೆಂದರೆ ಆಟವೆನಿಸುತ್ತದೆ, ಚಾಲೆಂಜ್ ಸಹ ಮಾಡುತ್ತೀರಿ - ಅರ್ಧಕಲ್ಪಕ್ಕಾಗಿ ವಿದಾಯಿ ತೆಗೆದುಕೊಂಡು ಹೋಗು ಎಂದು. ಅಂದಮೇಲೆ ಬೀಳ್ಕೊಡುಗೆಯ ಸಮಾರೋಹವನ್ನು ಮಾಡಲು ಬಂದಿದ್ದೀರಿ, ಯುದ್ಧ ಮಾಡುವುದಕ್ಕಲ್ಲ. ವಿಜಯಿ ರತ್ನಗಳು ಪ್ರತೀ ಸಮಯ, ಪ್ರತಿಯೊಂದು ಕಾರ್ಯದಲ್ಲಿ ವಿಜಯಿಯಾಗಿದ್ದಾರೆ. ಆಗಿದ್ದೀರಲ್ಲವೇ? (ಹಾಂ ಜಿ) ಅಂದಮೇಲೆ ಅಲ್ಲಿಗೆ ಹೋದ ನಂತರವೂ ‘ಹಾಂ ಜಿ’ ಮಾಡಬೇಕು. ಆದರೂ ಬಹಳ ಬಹದ್ದೂರ್(ಶಕ್ತಿಶಾಲಿ) ಆಗಿದ್ದೀರಿ. ಮುಂಚೆ ಸ್ವಲ್ಪ ಬೇಗನೆ ಗಾಬರಿ ಆಗುತ್ತಿದ್ದಿರಿ, ಈಗ ಧೈರ್ಯಶಾಲಿ ಅನುಭವಿ ಆಗಿ ಬಿಟ್ಟಿದ್ದೀರಿ. ಅನುಭವದ ಅಧಿಕಾರಿಯೂ ಆಗಿದ್ದೀರಿ, ಪರಿಶೀಲಿಸುವ ಶಕ್ತಿಯೂ ಬಂದಿದೆ ಆದ್ದರಿಂದ ಗಾಬರಿಯಾಗುವುದಿಲ್ಲ. ಅನೇಕ ಬಾರಿ ವಿಜಯಿಗಳಾಗಿದ್ದೆವು, ಆಗಿದ್ದೇವೆ ಮತ್ತು ವಿಜಯಿ ಆಗಿರುತ್ತೇವೆ - ಇದನ್ನೇ ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳಬೇಕು. ಒಳ್ಳೆಯದು.
ವಿದಾಯಿ ಸಮಯದಲ್ಲಿ ದಾದಿಯವರೊಂದಿಗೆ:
(ದಾದಿ ಜಾನಕಿಯವರು ಬಾಂಬೆಯಿಂದ 3-4 ದಿನಗಳು ಪರಿಕ್ರಮಣ ಮಾಡಿಬಂದಿದ್ದಾರೆ) ಈಗಿನಿಂದಲೇ ಚಕ್ರವರ್ತಿ ಆಗಿದ್ದೀರಿ. ಇಲ್ಲಿಯೂ ಸೇವೆಯಿದೆ, ಅಲ್ಲಿಯೂ ಸೇವೆಯಿದೆ ಒಳ್ಳೆಯದು. ಸೇವೆಯ ಬಹಳ ದೊಡ್ಡ ಕಾಂಟ್ರಾಕ್ಟ್ ತೆಗೆದುಕೊಂಡಿದ್ದೀರಿ, ದೊಡ್ಡ ಕಾಂಟ್ರಾಕ್ಟರ್ ಆಗಿದ್ದೀರಲ್ಲವೆ. ಚಿಕ್ಕ-ಚಿಕ್ಕ ಕಾಂಟ್ರಾಕ್ಟರುಗಳಂತು ಬಹಳಷ್ಟಿದ್ದಾರೆ. ಆದರೆ ದೊಡ್ಡ(ಶ್ರೇಷ್ಠ) ಕಾಂಟ್ರಾಕ್ಟರ್ಗಳಿಗೆ ದೊಡ್ಡ ಕಾರ್ಯವನ್ನು ಕೊಡಬೇಕಾಗುತ್ತದೆ. (ಬಾಬಾ, ಇಂದು ಮುರುಳಿಯನ್ನು ಕೇಳುತ್ತಾ ಬಹಳ ಸ್ವಾರಸ್ಯ ಉಂಟಾಯಿತು) ಇಲ್ಲಿ ಸ್ವಾರಸ್ಯವೇ ಇರುವುದು. ತಾವು ಅದನ್ನು ಕ್ಯಾಚ್ ಮಾಡುತ್ತಾ, ಅನ್ಯರಿಗೂ ಸ್ಪಷ್ಟ ಮಾಡಬಹುದು. ಎಲ್ಲರೂ ಒಂದೇ ರೀತಿಯಾಗಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ. ಜಗದಂಬಾರವರು ಹೇಗೆ ಎಲ್ಲರಿಗೂ ಮುರುಳಿಯನ್ನು ತಿಳಿಸುವಾಗ ಸ್ಪಷ್ಟ ಮಾಡಿ, ಸಹಜಗೊಳಿಸಿ ಧಾರಣೆ ಮಾಡಿಸುತ್ತಿದ್ದರು, ಹಾಗೆಯೇ ತಾವೀಗ ನಿಮಿತ್ತರಾಗಿದ್ದೀರಿ. ಕೆಲವು ಹೊಸ-ಹೊಸ ಮಕ್ಕಳಂತು ತಿಳಿದುಕೊಳ್ಳುವುದಕ್ಕೂ ಸಾಧ್ಯವಿಲ್ಲ ಆದರೆ ಬಾಪ್ದಾದಾರವರು ಕೇವಲ ಸನ್ಮುಖದಲ್ಲಿ ಇರುವವರನ್ನೇ ನೋಡುವುದಿಲ್ಲ, ಸಭೆಯಲ್ಲಿ ಕುಳಿತಿರುವವರನ್ನಷ್ಟೇ ನೋಡುವುದಿಲ್ಲ, ಸರ್ವರನ್ನೂ ಸನ್ಮುಖದಲ್ಲಿ ಇಟ್ಟುಕೊಳ್ಳುತ್ತಾರೆ. ಆದರೂ ಸನ್ಮುಖದಲ್ಲಿ ಯಾರು ಅನನ್ಯ ಮಕ್ಕಳಿರುತ್ತಾರೆ ಅವರಿಗಾಗಿ ನುಡಿಸಲಾಗುತ್ತದೆ. ತಾವಂತು ಇದನ್ನು ಓದುತ್ತಿದ್ದರೂ ಅಳವಡಿಸಿಕೊಳ್ಳಬಹುದು. ಒಳ್ಳೆಯದು.
ಓಂ ಶಾಂತಿ. ಮಕ್ಕಳು ಆತ್ಮಾಭಿಮಾನಿಯಾಗಿ ಕುಳಿತಿದ್ದೀರಾ? ತನ್ನೊಂದಿಗೆ ತಾನು ಕೇಳಿಕೊಳ್ಳಿ, ಪ್ರತಿಯೊಂದು ಮಾತನ್ನು ತಮ್ಮೊಂದಿಗೆ ಕೇಳಿಕೊಳ್ಳಬೇಕಾಗುತ್ತದೆ. ತಂದೆಯು ಯುಕ್ತಿಯನ್ನು ತಿಳಿಸುತ್ತಾರೆ, ಮಕ್ಕಳೇ ತನ್ನೊಂದಿಗೆ ಕೇಳಿಕೊಳ್ಳಿ - ಆತ್ಮಾಭಿಮಾನಿಯಾಗಿ ಕುಳಿತಿದ್ದೇನೆಯೇ? ತಂದೆಯನ್ನು ನೆನಪು ಮಾಡುತ್ತೇನೆಯೇ? ಏಕೆಂದರೆ ನಿಮ್ಮದು ಇದು ಆತ್ಮಿಕ ಸೇನೆಯಾಗಿದೆ. ಆ ಸೈನ್ಯದಲ್ಲಂತೂ ಯಾವಾಗಲೂ ಯುವಕರೇ ಹೋಗಿ ಸೇರುತ್ತಾರೆ, ಈ ಸೇನೆಯಲ್ಲಿ 14-15 ವರ್ಷದ ಯುವಕರೂ ಇದ್ದಾರೆ, 90 ವರ್ಷದ ವೃದ್ಧರೂ ಇದ್ದಾರೆ ಮತ್ತು ಚಿಕ್ಕ ಮಕ್ಕಳೂ ಇದ್ದಾರೆ. ಈ ಸೇನೆಯು ಮಾಯೆಯ ಮೇಲೆ ಜಯ ಗಳಿಸುವುದಕ್ಕಾಗಿ ಇದೆ. ಪ್ರತಿಯೊಬ್ಬರೂ ಮಾಯೆಯ ಮೇಲೆ ಜಯ ಗಳಿಸಿ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ಪಡೆಯಬೇಕಾಗಿದೆ ಏಕೆಂದರೆ ಮಾಯೆಯು ಬಹಳ ಪ್ರಬಲವಾಗಿದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ - ಮಾಯೆಯು ಬಹಳ ಪ್ರಬಲವಾಗಿದೆ, ಪ್ರತಿಯೊಂದು ಕರ್ಮೇಂದ್ರಿಯವು ಬಹಳ ಮೋಸ ಮಾಡುತ್ತದೆ. ಎಲ್ಲದಕ್ಕಿಂತ ಮೊದಲು ಹೆಚ್ಚು ಮೋಸ ಮಾಡುವ ಕರ್ಮೇಂದ್ರಿಯ ಯಾವುದು? ಕಣ್ಣುಗಳೇ ಎಲ್ಲದಕ್ಕಿಂತ ಹೆಚ್ಚು ಮೋಸ ಮಾಡುತ್ತವೆ. ತನ್ನ ಸ್ತ್ರೀ ಇದ್ದರೂ ಸಹ ಅನ್ಯ ಯಾರಾದರೂ ಸುಂದರ ಸ್ತ್ರೀಯನ್ನು ನೋಡಿದರೆ ಕೂಡಲೇ ಆಕರ್ಷಣೆಯಾಗುವುದು. ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಕೈ ಹಾಕೋಣವೆಂದು ಮನಸ್ಸಾಗುತ್ತದೆ. ಮಕ್ಕಳಿಗೆ ತಿಳಿಸಲಾಗುತ್ತದೆ - ಮಕ್ಕಳೇ, ಸದಾ ಬುದ್ಧಿಯಿಂದ ಇದನ್ನು ತಿಳಿದುಕೊಳ್ಳಿ - ನಾವು ಬ್ರಹ್ಮಾಕುಮಾರ-ಕುಮಾರಿಯರು ಸಹೋದರ-ಸಹೋದರಿಯರಾಗಿದ್ದೇವೆ. ಇದರಲ್ಲಿ ಮಾಯೆಯು ಬಹಳ ಗುಪ್ತವಾಗಿ ಮೋಸ ಮಾಡುತ್ತದೆ. ಆದ್ದರಿಂದ ಇದನ್ನು ಚಾರ್ಟ್ನಲ್ಲಿ ಬರೆಯಬೇಕು - ಇಂದು ಇಡೀ ದಿನದಲ್ಲಿ ಯಾವ-ಯಾವ ಕರ್ಮೇಂದ್ರಿಯವು ನನ್ನನ್ನು ಮೋಸ ಮಾಡಿತು? ಎಲ್ಲದಕ್ಕಿಂತ ದೊಡ್ಡ ಶತ್ರು ಈ ಕಣ್ಣುಗಳಾಗಿವೆ ಆದ್ದರಿಂದ ಇದನ್ನೂ ಬರೆಯಬೇಕು - ಇಂತಹವರನ್ನು ನೋಡಿದೆನು, ನನ್ನ ದೃಷ್ಟಿಯು ಹೋಯಿತು..... ಸೂರದಾಸನ ಉದಾಹರಣೆಯಿದೆಯಲ್ಲವೆ. ಅವರು ತನ್ನ ಕಣ್ಣುಗಳನ್ನೇ ತೆಗೆದು ಹಾಕಿದರು. ತನ್ನನ್ನು ಪರಿಶೀಲನೆ ಮಾಡಿಕೊಂಡಾಗ ತಿಳಿಯುತ್ತದೆ - ಕಣ್ಣುಗಳೇ ಹೆಚ್ಚು ಮೋಸ ಮಾಡುತ್ತವೆ. ತನ್ನ ಸ್ತ್ರೀಯನ್ನೂ ಬಿಟ್ಟು ಯಾರಾದರೂ ಚೆನ್ನಾಗಿರುವವರನ್ನು ನೋಡಿದರೆ ಅವರಿಗೇ ಆಕರ್ಷಿತರಾಗಿ ಬಿಡುತ್ತಾರೆ. ಯಾರಾದರೂ ಹಾಡುವುದರಲ್ಲಿ ಬುದ್ಧಿವಂತರಾಗಿರುತ್ತಾರೆ, ಒಳ್ಳೆಯ ಶೃಂಗಾರವಿರುತ್ತದೆ ಎಂದರೆ ಕಣ್ಣುಗಳು ಕೂಡಲೇ ಚಂಚಲವಾಗುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಈ ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಭಲೆ ಸೇವೆಯನ್ನೂ ಮಾಡುತ್ತಾರೆ ಆದರೆ ಕಣ್ಣುಗಳು ಬಹಳ ಮೋಸ ಮಾಡುತ್ತವೆ. ಈ ಶತ್ರುವಿನ ಮೇಲೆ ಬಹಳ ಗಮನವಿರಲಿ, ಇಲ್ಲದಿದ್ದರೆ ತಿಳಿದುಕೊಳ್ಳಿ - ನಮ್ಮ ಪದವಿಯನ್ನು ನಾವು ಭ್ರಷ್ಟ ಮಾಡಿಕೊಳ್ಳುತ್ತೇವೆ. ಬುದ್ಧಿವಂತ ಮಕ್ಕಳು ತಮ್ಮ ಡೈರಿಯಲ್ಲಿ ಬರೆದುಕೊಳ್ಳಿ - ಇಂತಹವರನ್ನು ನೋಡಿದೆನು, ನನ್ನ ದೃಷ್ಟಿಯು ಹೋಯಿತು. ಆಗ ಮತ್ತೆ ತನಗೆ ತಾನೇ ಶಿಕ್ಷೆ ಕೊಟ್ಟುಕೊಳ್ಳಿ. ಭಕ್ತಿಮಾರ್ಗದಲ್ಲಿಯೂ ಪೂಜೆಯ ಸಮಯದಲ್ಲಿ ಬುದ್ಧಿಯು ಅಲ್ಲಿ-ಇಲ್ಲಿ ಹೋಗುತ್ತದೆಯೆಂದರೆ ತಮ್ಮನ್ನು ಜಿಗುಟಿಕೊಳ್ಳುತ್ತಾರೆ. ಆದ್ದರಿಂದ ಯಾವಾಗ ಅಂತಹ ಒಳ್ಳೆಯ ಸ್ತ್ರೀ ಮುಂದೆ ಬರುವರೋ ಅವರಿಂದ ದೂರ ಸರಿಯಬೇಕು, ನಿಂತು ನೋಡಬಾರದು. ಕಣ್ಣುಗಳು ಬಹಳ ಮೋಸ ಮಾಡುತ್ತವೆ ಆದ್ದರಿಂದಲೇ ಸನ್ಯಾಸಿಗಳು ಕಣ್ಣು ಮುಚ್ಚಿ ಕುಳಿತುಕೊಳ್ಳುತ್ತಾರೆ. ಪುರುಷನನ್ನು ಮುಂದೆ, ಸ್ತ್ರೀಯನ್ನು ಹಿಂದೆ ಕೂರಿಸುತ್ತಾರೆ. ಕೆಲವರು ಇಂತಹವರೂ ಇರುತ್ತಾರೆ, ಅವರು ಸ್ತ್ರೀಯನ್ನು ನೋಡುವುದೇ ಇಲ್ಲ. ನೀವು ಮಕ್ಕಳಂತೂ ಬಹಳ ಪರಿಶ್ರಮ ಪಡಬೇಕಾಗಿದೆ. ವಿಶ್ವದ ರಾಜ್ಯಭಾಗ್ಯವನ್ನು ಪಡೆಯುವುದು ಕಡಿಮೆ ಮಾತಲ್ಲ. ಅವರಂತೂ 10-12, 20 ಸಾವಿರ ಅಥವಾ 1-2 ಲಕ್ಷ ಕೋಟಿಗಳನ್ನು ಸಂಪಾದಿಸಿ ಹೊರಟು ಹೋಗುತ್ತಾರೆ. ನೀವು ಮಕ್ಕಳಿಗೆ ಅವಿನಾಶಿ ಆಸ್ತಿಯು ಸಿಗುತ್ತದೆ. ಎಲ್ಲವೂ ಪ್ರಾಪ್ತಿಯಾಗಿ ಬಿಡುತ್ತದೆ. ಯಾವುದೇ ಪ್ರಾಪ್ತಿಗಾಗಿ ತಲೆ ಕೆಡಿಸಿಕೊಳ್ಳಲು ಅಂತಹ ಯಾವುದೇ ಅಪ್ರಾಪ್ತ ವಸ್ತುವಿರುವುದಿಲ್ಲ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆದಿಯಲ್ಲಿ ರಾತ್ರಿ-ಹಗಲಿನ ಅಂತರವಿದೆ, ಇಲ್ಲಂತೂ ಏನೂ ಇಲ್ಲ.
ಈಗ ನಿಮ್ಮದು ಇದು ಪುರುಷೋತ್ತಮ ಸಂಗಮಯುಗವಾಗಿದೆ. ಪುರುಷೋತ್ತಮ ಶಬ್ಧವನ್ನು ಅವಶ್ಯವಾಗಿ ಬರೆಯಬೇಕಾಗಿದೆ. ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಸದ್ಗುರು..... ನೀವೀಗ ಬ್ರಾಹ್ಮಣರಾಗಿದ್ದೀರಿ. ಮನುಷ್ಯರಾದರೆ ಸಂಪೂರ್ಣ ಅಂಧಕಾರದಲ್ಲಿದ್ದಾರೆ, ಅನೇಕರಿದ್ದಾರೆ ಯಾರು ಸ್ವರ್ಗವನ್ನು ನೋಡುವುದಕ್ಕೇ ಸಾಧ್ಯವಿಲ್ಲ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ನಿಮ್ಮ ಧರ್ಮವು ಬಹಳ ಸುಖ ಕೊಡುವಂತದ್ದಾಗಿದೆ. ಮನುಷ್ಯರಿಗೆ ಏನೂ ತಿಳಿದಿಲ್ಲ, ಸ್ವರ್ಗವೆಂದರೇನು ಎಂಬುದನ್ನು ಭಾರತವಾಸಿಗಳೇ ಮರೆತು ಹೋಗಿದ್ದಾರೆ. ಕ್ರಿಶ್ಚಿಯನ್ನರೂ ಸಹ ಹೆವೆನ್ ಇತ್ತು ಎಂಬುದನ್ನು ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿ ಎಂದು ಹೇಳುತ್ತಾರಲ್ಲವೆ ಅಂದಮೇಲೆ ಅವಶ್ಯವಾಗಿ ಭಗವಂತನೇ ಈ ರೀತಿ ಮಾಡುತ್ತಾರೆ. ಆದ್ದರಿಂದ ತಂದೆಯು ತಿಳಿಸುತ್ತಾರೆ - ಮಕ್ಕಳು ಬಹಳ ಪರಿಶ್ರಮ ಪಡಬೇಕಾಗಿದೆ. ನಿತ್ಯವೂ ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಿ - ಯಾವ ಕರ್ಮೇಂದ್ರಿಯವು ನನಗೆ ಮೋಸ ಮಾಡಿತು? ಬಾಯಿ ಸಹ ಬಹಳ ಮೋಸ ಮಾಡುತ್ತದೆ. ಮೊದಲು ಕಛೇರಿ ಇರುತ್ತಿತ್ತು, ಎಲ್ಲರೂ ತಮ್ಮ ತಪ್ಪುಗಳನ್ನು ತಿಳಿಸುತ್ತಿದ್ದರು. ನಾನು ಇಂದು ಇಂತಹ ಪದಾರ್ಥವನ್ನು ಬಚ್ಚಿಟ್ಟುಕೊಂಡು ತಿಂದೆನು ಎಂದು. ಒಳ್ಳೊಳ್ಳೆಯ ದೊಡ್ಡ ಮನೆಯ ಮಕ್ಕಳು ತಿಳಿಸಿ ಬಿಡುತ್ತಾರೆ. ಮಾಯೆಯು ಹೀಗೆ ಯುದ್ಧ ಮಾಡುತ್ತದೆ. ಬಚ್ಚಿಟ್ಟುಕೊಂಡು ತಿನ್ನುವುದೂ ಸಹ ಕಳ್ಳತನವಾಗಿದೆ, ಅದರಲ್ಲಿಯೂ ಶಿವ ತಂದೆಯ ಯಜ್ಞದಿಂದ ಕಳ್ಳತನ ಮಾಡುವುದಂತೂ ಬಹಳ ಕೆಟ್ಟದ್ದಾಗಿದೆ. ಅಡಿಕೆ ಕದ್ದರೂ ಕಳ್ಳ, ಆನೆ ಕದ್ದರೂ ಕಳ್ಳ, ಮಾಯೆಯು ಒಮ್ಮೆಲೆ ಮೂಗು ಹಿಡಿಯುತ್ತದೆ. ಈ ಹವ್ಯಾಸವು ಬಹಳ ಕೆಟ್ಟದ್ದಾಗಿದೆ. ಕೆಟ್ಟ ಹವ್ಯಾಸವಿದ್ದರೆ ನಾವು ಏನಾಗಬಹುದು! ಸ್ವರ್ಗದಲ್ಲಿ ಹೋಗುವುದೇನೂ ದೊಡ್ಡ ಮಾತಲ್ಲ ಆದರೆ ಅದರಲ್ಲಿ ಪದವಿಗಳೂ ಇವೆಯಲ್ಲವೆ. ರಾಜರೆಲ್ಲಿ, ಪ್ರಜೆಗಳೆಲ್ಲಿ! ಎಷ್ಟೊಂದು ಅಂತರವಿದೆ ಅಂದಾಗ ಕರ್ಮೇಂದ್ರಿಯಗಳು ಬಹಳ ಮೋಸಗಾರನಾಗಿವೆ. ಅವುಗಳ ಸಂಭಾಲನೆಯನ್ನೂ ಮಾಡಬೇಕು. ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದರೆ ತಂದೆಯ ಆದೇಶದಂತೆ ಪೂರ್ಣ ನಡೆಯಬೇಕಾಗಿದೆ. ತಂದೆಯು ಆದೇಶ ನೀಡುತ್ತಾರೆ ಮತ್ತೆ ಮಧ್ಯದಲ್ಲಿ ಮಾಯೆಯು ಬಂದು ವಿಘ್ನ ಹಾಕುತ್ತದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಮರೆಯಬೇಡಿ, ಇಲ್ಲವಾದರೆ ಅಂತಿಮದಲ್ಲಿ ಬಹಳ ಪಶ್ಚಾತ್ತಾಪ ಪಡುವಿರಿ. ಅನುತ್ತೀರ್ಣರಾಗುವ ಸಾಕ್ಷಾತ್ಕಾರವೂ ಆಗುವುದು. ನೀವೀಗ ಹೇಳುತ್ತೀರಿ - ನಾವು ನರನಿಂದ ನಾರಾಯಣನಾಗುತ್ತೇವೆ ಎಂದು. ಆದರೆ ತಮ್ಮೊಂದಿಗೆ ಕೇಳಿಕೊಳ್ಳಿ, ತಮ್ಮ ಲೆಕ್ಕವನ್ನು ತೆಗೆಯಿರಿ. ಅನೇಕ ಮಂದಿ ಬಹಳ ಕಷ್ಟವೆಂದು ತಿಳಿದು ಕಾರ್ಯದಲ್ಲಿ ತರುತ್ತಾರೆ ಆದರೆ ತಂದೆಯು ತಿಳಿಸುತ್ತಾರೆ - ಮಕ್ಕಳೇ, ಇದರಿಂದಲೇ ತಮ್ಮ ಉನ್ನತಿಯಾಗುವುದು, ಇಡೀ ದಿನದ ಲೆಕ್ಕವನ್ನು ತೆಗೆಯಬೇಕು. ಈ ಕಣ್ಣುಗಳು ಬಹಳ ಮೋಸ ಮಾಡುತ್ತದೆ. ಯಾರನ್ನಾದರೂ ನೋಡಿದರೆ ಇವರಂತೂ ಬಹಳ ಚೆನ್ನಾಗಿದ್ದಾರೆ ಎಂದು ಸಂಕಲ್ಪ ಬರುತ್ತದೆ ಮತ್ತೆ ಮಾತನಾಡುತ್ತಾರೆ, ಅವರಿಗೆ ಏನಾದರೂ ಉಡುಗೊರೆ ಕೊಡುವುದೇ, ಇದನ್ನು ತಿನ್ನಿಸುವುದೇ ಎಂದು ಮನಸ್ಸಾಗುತ್ತದೆ. ಅದೇ ಚಿಂತನೆ ನಡೆಯುತ್ತಿರುತ್ತದೆ. ಮಕ್ಕಳು ತಿಳಿದುಕೊಳ್ಳುತ್ತೀರಿ, ಇದರಲ್ಲಿ ಬಹಳ ಪರಿಶ್ರಮವಿದೆ, ಕರ್ಮೇಂದ್ರಿಯಗಳು ಬಹಳ ಮೋಸ ಮಾಡುತ್ತವೆ. ರಾವಣ ರಾಜ್ಯವಲ್ಲವೆ. ಸತ್ಯಯುಗದಲ್ಲಿ ಯಾವುದೂ ಚಿಂತೆಯ ಮಾತಿರುವುದಿಲ್ಲ ಏಕೆಂದರೆ ರಾವಣ ರಾಜ್ಯವೇ ಇರುವುದಿಲ್ಲ, ಚಿಂತೆಯ ಮಾತೇ ಇರುವುದಿಲ್ಲ. ಒಂದುವೇಳೆ ಅಲ್ಲಿಯೂ ಚಿಂತೆಯಿದ್ದರೆ ಮತ್ತೆ ಸ್ವರ್ಗ ಮತ್ತು ನರಕದಲ್ಲಿ ಅಂತರವಾದರೂ ಏನು ಉಳಿಯಿತು? ನೀವು ಮಕ್ಕಳು ಬಹಳ-ಬಹಳ ಶ್ರೇಷ್ಠ ಪದವಿಯನ್ನು ಪಡೆಯಲು ಭಗವಂತನಿಂದ ಓದುತ್ತೀರಿ. ತಂದೆಯು ತಿಳಿಸುತ್ತಾರೆ - ಮಾಯೆಯು ನಿಂದನೆ ಮಾಡಿಸುತ್ತದೆ. ನೀವು ಅಪಕಾರ ಮಾಡಿದಿರಿ, ನಾನು ಉಪಕಾರ ಮಾಡುತ್ತೇನೆ. ಮಕ್ಕಳೇ, ನೀವು ಒಂದುವೇಳೆ ಕುದೃಷ್ಟಿಯಿದ್ದರೆ ತಮಗೇ ನಷ್ಟ ಮಾಡಿಕೊಳ್ಳುತ್ತೀರಿ. ಬಹಳ ದೊಡ್ಡ ಗುರಿಯಾಗಿದೆ ಆದ್ದರಿಂದ ತಂದೆಯು ತಿಳಿಸುತ್ತಾರೆ - ತಮ್ಮ ಲೆಕ್ಕ ಪತ್ರವನ್ನು ನೋಡಿಕೊಳ್ಳಿ, ಯಾವುದೇ ವಿಕರ್ಮವನ್ನಂತು ಮಾಡಲಿಲ್ಲವೆ? ಯಾರಿಗೂ ಮೋಸ ಮಾಡಲಿಲ್ಲವೆ? ಈಗ ವಿಕರ್ಮಾಜೀತರಾಗಬೇಕಾಗಿದೆ. ವಿಕರ್ಮಾಜೀತ ಸಂವತ್ಸರದ ಬಗ್ಗೆ ನೀವು ಮಕ್ಕಳ ವಿನಃ ಯಾರಿಗೂ ತಿಳಿದಿಲ್ಲ. ತಂದೆಯು ತಿಳಿಸಿದ್ದಾರೆ - ವಿಕರ್ಮಾಜೀತ ಸಂವತ್ಸರಕ್ಕೆ 5000 ವರ್ಷಗಳಾಯಿತು. ನಂತರ ವಿಕರ್ಮ ಮಾಡುವ ಕಾರಣ ವಾಮ ಮಾರ್ಗದಲ್ಲಿ ಹೋಗುತ್ತಾರೆ. ಕರ್ಮ, ಅಕರ್ಮ, ವಿಕರ್ಮದ ಶಬ್ಧಗಳಂತೂ ಇವೆಯಲ್ಲವೆ. ಮಾಯೆಯ ರಾಜ್ಯದಲ್ಲಿ ಮನುಷ್ಯರು ಏನೆಲ್ಲಾ ಕರ್ಮವನ್ನು ಮಾಡುವರೋ ಅದು ವಿಕರ್ಮವೇ ಆಗುತ್ತದೆ. ಸತ್ಯಯುಗದಲ್ಲಿ ವಿಕಾರವಿರುವುದಿಲ್ಲ ಆದ್ದರಿಂದ ಯಾವುದೇ ವಿಕರ್ಮವೂ ಆಗುವುದಿಲ್ಲ. ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ ಏಕೆಂದರೆ ನಿಮಗೆ ಜ್ಞಾನದ ಮೂರನೆಯ ನೇತ್ರವು ಸಿಕ್ಕಿದೆ, ನೀವು ತ್ರಿನೇತ್ರಿಯಾಗಿದ್ದೀರಿ ಅಂದಾಗ ತ್ರಿನೇತ್ರಿ, ತ್ರಿಕಾಲದರ್ಶಿಗಳನ್ನಾಗಿ ಮಾಡುವವರು ತಂದೆಯಾಗಿದ್ದಾರೆ, ನೀವು ಆಸ್ತಿಕರಾಗಿದ್ದೀರಿ ಆದ್ದರಿಂದ ತ್ರಿಕಾಲದರ್ಶಿಗಳಾಗಿದ್ದೀರಿ. ಇಡೀ ಡ್ರಾಮಾದ ರಹಸ್ಯವು ಬುದ್ಧಿಯಲ್ಲಿದೆ. ಮೂಲವತನ, ಸೂಕ್ಷ್ಮವತನ, ಸ್ಥೂಲವತನ, 84 ಜನ್ಮಗಳ ಚಕ್ರ ನಂತರ ಅನ್ಯ ಧರ್ಮಗಳು ವೃದ್ಧಿ ಹೊಂದುತ್ತವೆ. ಅವರ್ಯಾರೂ ಸದ್ಗತಿ ನೀಡಲು ಸಾಧ್ಯವಿಲ್ಲ. ಅವರಿಗೆ ಗುರುಗಳೆಂದೂ ಹೇಳಲು ಸಾಧ್ಯವಿಲ್ಲ. ಸರ್ವರ ಸದ್ಗತಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ, ಈಗ ಎಲ್ಲರ ಸದ್ಗತಿಯಾಗಲಿದೆ. ಅವರು ಧರ್ಮ ಸ್ಥಾಪಕರೆಂದು ಕರೆಸಿಕೊಳ್ಳುವರೇ ಹೊರತು ಗುರುಗಳೆಂದಲ್ಲ. ಧರ್ಮ ಸ್ಥಾಪಕರು ಧರ್ಮ ಸ್ಥಾಪನೆ ಮಾಡಲು ನಿಮಿತ್ತರಾಗಿದ್ದಾರೆ ಆದರೆ ಸದ್ಗತಿ ಮಾಡುವುದಿಲ್ಲ. ಅವರನ್ನು ನೆನಪು ಮಾಡುವುದರಿಂದ ಯಾರದೇ ಸದ್ಗತಿಯಾಗುವುದಿಲ್ಲ. ವಿಕರ್ಮಗಳು ವಿನಾಶವಾಗುವುದಿಲ್ಲ, ಅದೆಲ್ಲವೂ ಭಕ್ತಿಯಾಗಿದೆ. ಅಂದಾಗ ತಂದೆಯು ತಿಳಿಸುತ್ತಾರೆ - ಮಾಯೆಯು ಬಹಳ ಪ್ರಬಲವಾಗಿದೆ. ಇದರ ಮೇಲೆ ಯುದ್ಧವಾಗುತ್ತದೆ, ನೀವು ಶಿವಶಕ್ತಿ ಪಾಂಡವ ಸೇನೆಯಾಗಿದ್ದೀರಿ. ನೀವೆಲ್ಲರೂ ಮಾರ್ಗದರ್ಶಕರಾಗಿದ್ದೀರಿ, ಶಾಂತಿಧಾಮ-ಸುಖಧಾಮದ ಮಾರ್ಗವನ್ನು ತಿಳಿಸುತ್ತೀರಿ. ತಂದೆಯನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುತ್ತದೆ ಎಂದು ಹೇಳುತ್ತೀರಿ. ಮತ್ತೆ ಇನ್ನೊಂದು ಕಡೆ ಯಾವುದೆ ಪಾಪಕರ್ಮ ಮಾಡಿದರೆ ನೂರರಷ್ಟು ಪಾಪವಾಗುವುದು. ಎಷ್ಟು ಸಾಧ್ಯವೋ ಅಷ್ಟು ಯಾವುದೇ ವಿಕರ್ಮ ಮಾಡಬಾರದು. ಕರ್ಮೇಂದ್ರಿಯಗಳು ಬಹಳ ಮೋಸ ಮಾಡುತ್ತವೆ, ತಂದೆಯು ಪ್ರತಿಯೊಬ್ಬರ ಚಲನೆಯಿಂದಲೇ ತಿಳಿದುಕೊಳ್ಳುತ್ತಾರೆ. ಮಕ್ಕಳಿಗೆ ಮಾಯೆಯ ಬಿರುಗಾಳಿಗಳು ಬರುತ್ತವೆ. ಸ್ತ್ರೀ-ಪುರುಷರೆಂದು ತಿಳಿದುಕೊಂಡಾಗಲೇ ಬಿರುಗಾಳಿಯು ಬರುತ್ತದೆ ಅಂದಮೇಲೆ ಈ ಕಣ್ಣುಗಳ ಮೇಲೆ ಎಷ್ಟೊಂದು ಅಧಿಕಾರವಿರಬೇಕು! ನಾವಂತೂ ಶಿವ ತಂದೆಯ ಮಕ್ಕಳಾಗಿದ್ದೇವೆ. ತಂದೆಯೊಂದಿಗೆ ಪ್ರತಿಜ್ಞೆ ಮಾಡಿ ಶ್ರೀರಕ್ಷೆಯನ್ನೂ ಕಟ್ಟಿಸಿಕೊಳ್ಳುತ್ತಾರೆ ಆದರೂ ಸಹ ಮಾಯೆಯು ಮೋಸ ಮಾಡುತ್ತದೆ. ಮತ್ತೆ ಅದರಿಂದ ಬಿಡಿಸಿಕೊಳ್ಳಲು ಸಾಧ್ಯವಿಲ್ಲ. ಕರ್ಮೇಂದ್ರಿಯಗಳು ವಶವಾದಾಗಲೇ ಕರ್ಮಾತೀತ ಸ್ಥಿತಿಯಾಗುವುದು. ನಾವು ಲಕ್ಷ್ಮೀ-ನಾರಾಯಣರಾಗುತ್ತೇವೆಂದು ಹೇಳುವುದಂತೂ ಸಹಜವಾಗಿದೆ ಆದರೆ ತಿಳುವಳಿಕೆಯು ಬೇಕಲ್ಲವೆ. ತಂದೆಯು ತಿಳಿಸುತ್ತಾರೆ - ಆಜ್ಞೆಯಂತೆ ಕಾರ್ಯದಲ್ಲಿ ತರುತ್ತಾ ಇರಿ, ಬಾಬಾ, ಬಾಬಾ ಎನ್ನುತ್ತಾ ಇರಿ. ತಂದೆಯಿಂದ ನಾವು ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಇಂತಹ ಶಿಕ್ಷಕರು ಎಂದೂ ಎಲ್ಲಿಯೂ ಸಿಗುವುದಿಲ್ಲ. ಇವೆಲ್ಲಾ ಮಾತುಗಳನ್ನು ದೇವತೆಗಳೂ ಸಹ ತಿಳಿದುಕೊಂಡಿಲ್ಲ ಅಂದಮೇಲೆ ಅವರ ನಂತರದಲ್ಲಿ ಬಂದ ಧರ್ಮದವರು ಹೇಗೆ ತಿಳಿದುಕೊಳ್ಳಲು ಸಾಧ್ಯ! ತಂದೆಯು ತಿಳಿಸುತ್ತಾರೆ - ನಾನು ಏನನ್ನೇ ಹೇಳಿದರೂ ಸಹ ಇದನ್ನು ಶಿವ ತಂದೆಯು ಹೇಳುತ್ತಾರೆಂದು ತಿಳಿಯಿರಿ, ಈ ದಾದಾರವರೂ ಹೇಳುತ್ತಾರೆಂದು ತಿಳಿಯಬೇಡಿ. ಇವರು ನನ್ನ ರಥವಾಗಿದ್ದಾರೆ, ಇವರೇನು ಮಾಡುತ್ತಾರೆ, ನೀವು ಮಕ್ಕಳಿಗೆ ರಾಜ್ಯವನ್ನು ನಾನು ಕೊಡುತ್ತೇನೆ. ಈ ರಥವು ಕೊಡುತ್ತವೆಯೇ? ಇವರಂತೂ ಸಂಪೂರ್ಣ ಭಿಕಾರಿಯಾಗಿದ್ದಾರೆ. ಇವರೂ ಸಹ ನನ್ನಿಂದಲೇ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ. ಹೇಗೆ ನೀವು ಪುರುಷಾರ್ಥ ಮಾಡುತ್ತೀರೋ ಹಾಗೆಯೇ ಇವರೂ ಮಾಡುತ್ತಾರೆ. ಇವರೂ ಸಹ ವಿದ್ಯಾರ್ಥಿ ಜೀವನದಲ್ಲಿದ್ದಾರೆ, ಈ ರಥವನ್ನು ನಾನು ಬಾಡಿಗೆಯಾಗಿ ಪಡೆದಿದ್ದೇನೆ, ಇದು ತಮೋಪ್ರಧಾನವಾಗಿದೆ. ನೀವು ಪೂಜ್ಯ ದೇವತೆಗಳಾಗಲು, ಮನುಷ್ಯರಿಂದ ದೇವತೆಗಳಾಗಲು ಓದುತ್ತೀರಿ. ಯಾರ ಅದೃಷ್ಟದಲ್ಲಿಲ್ಲವೋ ಅವರು ಹೇಳುತ್ತಾರೆ - ನನಗಂತೂ ಸಂಶಯವಿದೆ, ಶಿವ ತಂದೆಯು ಹೇಗೆ ಬಂದು ಓದಿಸುತ್ತಾರೆ, ನನಗಂತೂ ಅರ್ಥವಾಗುವುದಿಲ್ಲ ಎನ್ನುತ್ತಾರೆ. ತಂದೆಯ ನೆನಪಿಲ್ಲದೆ ವಿಕರ್ಮಗಳು ವಿನಾಶವಾಗಲು ಸಾಧ್ಯವಿಲ್ಲ. ಪೂರ್ಣ ಶಿಕ್ಷೆಯನ್ನು ಅನುಭವಿಸ ಬೇಕಾಗುವುದು. ಈ ರಾಜಧಾನಿಯು ಸ್ಥಾಪನೆಯಾಗುತ್ತಿದೆ. ರಾಜರಿಗೂ ಎಷ್ಟೊಂದು ಮಂದಿ ದಾಸಿಯರಿರುತ್ತಾರೆ. ಈ ಬಾಬಾರವರಂತೂ ರಾಜ-ಮಹಾರಾಜರ ಸಂಬಂಧದಲ್ಲಿ ಬಂದಿದ್ದಾರೆ. ದಾಸಿಯರನ್ನು ವರದಕ್ಷಿಣೆಯಾಗಿ ಕೊಡುತ್ತಾರೆ. ಇಲ್ಲಿಯೇ ಇಷ್ಟೊಂದು ಮಂದಿ ದಾಸಿಯರಿದ್ದರೆ ಸತ್ಯಯುಗದಲ್ಲಿ ಇನ್ನೆಷ್ಟು ಮಂದಿ ಇರುವರು! ಈಗ ರಾಜಧಾನಿಯು ಸ್ಥಾಪನೆಯಾಗುತ್ತದೆ, ಯಾರು-ಯಾರು ಏನೇನು ಮಾಡುತ್ತಿದ್ದಾರೆಂದು ತಂದೆಗೆ ತಿಳಿದಿದೆ. ಪ್ರತಿಯೊಬ್ಬರ ಚಾರ್ಟಿನಿಂದಲೇ ತಂದೆಯು ತಿಳಿಸಬಲ್ಲರು - ಈ ಸಮಯದಲ್ಲಿ ಇವರು ಶರೀರ ಬಿಟ್ಟರೆ ಏನಾಗುವರು ಎಂದು. ಕರ್ಮಾತೀತ ಸ್ಥಿತಿಯನ್ನು ಅಂತಿಮದಲ್ಲಿ ಎಲ್ಲರೂ ನಂಬರ್ವಾರ್ ಪಡೆಯುತ್ತಾರೆ ಅಂದಾಗ ಇದು ಸಂಪಾದನೆಯಾಗಿದೆ. ಸಂಪಾದನೆಯಲ್ಲಿ ಮನುಷ್ಯರು ಎಷ್ಟೊಂದು ಬ್ಯುಜಿಯಾಗಿರುತ್ತಾರೆ. ಒಂದು ಕಡೆ ಊಟ ಮಾಡುತ್ತಿರುತ್ತಾರೆ, ಇನ್ನೊಂದು ಕಡೆ ಕಿವಿಯಲ್ಲಿ ದೂರವಾಣಿ ಇರುವುದು. ಇಂತಹ ವ್ಯಕ್ತಿಗಳು ಜ್ಞಾನವನ್ನು ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಬಡವರು, ಸಾಧಾರಣರೇ ಬರುತ್ತಾರೆ. ಸಾಹುಕಾರರಂತೂ ನಮಗೆ ಬಿಡುವಿಲ್ಲವೆಂದು ಹೇಳುತ್ತಾರೆ. ಅರೆ! ಕೇವಲ ತಂದೆಯನ್ನು ನೆನಪು ಮಾಡಿರಿ ಆಗ ನಿಮ್ಮ ವಿಕರ್ಮಗಳು ವಿನಾಶವಾಗುವವು ಆದ್ದರಿಂದ ತಂದೆಯು ಮಧುರಾತಿ ಮಧುರ ಮಕ್ಕಳಿಗೆ ಪದೇ-ಪದೇ ತಿಳಿಸುತ್ತಾರೆ. ಪ್ರತಿಯೊಬ್ಬರಿಗೂ ಈ ಸಂದೇಶ ಕೊಡಬೇಕಾಗಿದೆ ಏಕೆಂದರೆ ಕೊನೆಯಲ್ಲಿ ನಮಗೆ ಶಿವ ತಂದೆಯು ಬಂದಿದ್ದಾರೆಂದು ಏನು ಗೊತ್ತು? ಎಂದು ಯಾರೂ ಹೇಳಬಾರದು. ಇಡೀ ದಿನ ಬಾಬಾ, ಬಾಬಾ ಎನ್ನುತ್ತಾ ಇರಿ. ಕೆಲವು ಮಕ್ಕಳು ಬಹಳ ನೆನಪು ಮಾಡುತ್ತಾರೆ. ಶಿವ ತಂದೆಯೆಂದು ಹೇಳುತ್ತಿದ್ದಂತೆಯೇ ಕೆಲವು ಮಕ್ಕಳಿಗೆ ಪ್ರೇಮದ ಕಣ್ಣೀರು ಬಂದು ಬಿಡುತ್ತದೆ ಯಾವಾಗ ಹೋಗಿ ಮಿಲನ ಮಾಡುತ್ತೇವೆ ಎಂದು. ನೋಡಿಯೇ ಇಲ್ಲ ಆದರೂ ಸಹ ಚಡಪಡಿಸುತ್ತಾ ಇರುತ್ತಾರೆ ಮತ್ತು ನೋಡಿರುವವರು ತಂದೆಯನ್ನು ಒಪ್ಪುವುದಿಲ್ಲ. ಬಂಧನದಲ್ಲಿ ಇರುವವರು ದೂರ ಕುಳಿತುಕೊಂಡೇ ಕಣ್ಣೀರು ಸುರಿಸುತ್ತಿರುತ್ತಾರೆ. ಆಶ್ಚರ್ಯವಲ್ಲವೆ. ಅನೇಕರಿಗೆ ಬ್ರಹ್ಮಾರವರ ಸಾಕ್ಷಾತ್ಕಾರವೂ ಆಗುತ್ತದೆ, ಮುಂದೆ ಹೋದಂತೆ ಅನೇಕರಿಗೆ ಸಾಕ್ಷಾತ್ಕಾರವಾಗುವುದು. ಮನುಷ್ಯರಿಗೆ ಸಾಯುವ ಸಮಯದಲ್ಲಿ ಎಲ್ಲರೂ ಬಂದು ಹೇಳುತ್ತಾರೆ - ಭಗವಂತನನ್ನು ನೆನಪು ಮಾಡಿ. ನೀವೂ ಸಹ ಶಿವ ತಂದೆಯನ್ನು ನೆನಪು ಮಾಡಿ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಪುರುಷಾರ್ಥದಲ್ಲಿ ಮೇಕಪ್ ಮಾಡುತ್ತಾ ಇರಿ. ಸಮಯ ಸಿಕ್ಕಿದರೆ ಸಾಕು, ಪುರುಷಾರ್ಥ ಮಾಡಿ. ಎಷ್ಟು ದೊಡ್ಡ ಸಂಪಾದನೆಯಿದೆ! ಕೆಲಕೆಲವರಂತೂ ಎಷ್ಟಾದರೂ ತಿಳಿಸಲಿ ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುವುದಿಲ್ಲ. ಈ ರೀತಿಯಾಗಬಾರದು, ತಮ್ಮ ಕಲ್ಯಾಣ ಮಾಡಿಕೊಳ್ಳಿ, ತಂದೆಯ ಶ್ರೀಮತದಂತೆ ನಡೆಯಿರಿ. ನಿಮ್ಮನ್ನು ತಂದೆಯು ಪುರುಷರಲ್ಲಿ ಉತ್ತಮರನ್ನಾಗಿ ಮಾಡುತ್ತಾರೆ, ಇದು ಗುರಿ-ಧ್ಯೇಯವಾಗಿದೆ. ತಂದೆಯು ಸರ್ವೀಸ್ಗಾಗಿ ಎಷ್ಟೊಂದು ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ, ಎಲ್ಲರಿಗೂ ಸಂದೇಶ ಕೊಡಬೇಕಾಗಿದೆ. ಅವರಿಗೆ ಇದು ಅರ್ಥವಾಗಲಿ - ಅವಶ್ಯವಾಗಿ ಇವರು ಸತ್ಯವನ್ನು ಹೇಳುತ್ತಾರೆ. ಈ ಯುದ್ಧದಿಂದಲೇ ಭಾರತ ಹಾಗೂ ಇಡೀ ವಿಶ್ವದಲ್ಲಿ ಸುಖ-ಶಾಂತಿಯು ನೆಲೆಸುತ್ತದೆ. ಎಲ್ಲಾ ಭಾಷೆಗಳಲ್ಲಿ ಈ ರೀತಿ ಭಿತ್ತಿ ಪತ್ರಗಳನ್ನು ಮುದ್ರಿಸಬೇಕಾಗಿದೆ. ಭಾರತವು ಎಷ್ಟು ದೊಡ್ಡದಾಗಿದೆ! ಪ್ರತಿಯೊಬ್ಬರಿಗೂ ಅರ್ಥವಾಗಬೇಕು - ನಮಗೆ ತಿಳಿದಿರಲೇ ಇಲ್ಲವೆಂದು ಯಾರೂ ಹೇಳುವಂತಾಗಬಾರದು. ನೀವು ಹೇಳಬಹುದು - ವಿಮಾನದಿಂದ ಭಿತ್ತಿ ಪತ್ರಗಳನ್ನು ಹಾಕಿದೆವು, ಪತ್ರಿಕೆಗಳಲ್ಲಿ ಹಾಕಿಸಿದೆವು, ಆದರೂ ನೀವು ಜಾಗೃತವಾಗಲಿಲ್ಲ. ಇದನ್ನು ತೋರಿಸಲಾಗಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಸ್ವಯಂನಲ್ಲಿ ಏನೆಲ್ಲಾ ಕೆಟ್ಟ ಹವ್ಯಾಸಗಳಿವೆಯೋ ಅದರ ಪರಿಶೀಲನೆ ಮಾಡಿ, ಅವನ್ನು ತೆಗೆಯಲು ಪರಿಶ್ರಮ ಪಡಬೇಕಾಗಿದೆ. ತಮ್ಮ ಸತ್ಯ-ಸತ್ಯವಾದ ಲೆಕ್ಕ ಪತ್ರವನ್ನು ಇಡಬೇಕಾಗಿದೆ. ತಂದೆಯ ಆದೇಶದಂತೆ ನಡೆಯಬೇಕಾಗಿದೆ.
2. ತಂದೆಯ ಹೆಸರು ಕೆಡುವಂತಹ ಯಾವುದೇ ಕರ್ಮ ಮಾಡಬಾರದು, ತನ್ನ ಉನ್ನತಿಯ ಚಿಂತನೆ ಮಾಡಬೇಕಾಗಿದೆ. ಸ್ವಲ್ಪವೂ ಕುದೃಷ್ಟಿಯಿರಬಾರದು.
ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ತಂದೆಯು ಕುಳಿತು ತಿಳಿಸುತ್ತಾರೆ ಏಕೆಂದರೆ ಇಲ್ಲಿ ಸನ್ಮುಖದಲ್ಲಿದ್ದಾರೆ. ಎಲ್ಲಾ ಮಕ್ಕಳು ತಮ್ಮ ಸ್ವಧರ್ಮದಲ್ಲಿದ್ದು ತಂದೆಯನ್ನು ನೆನಪು ಮಾಡುತ್ತಾರೆಂದು ಹೇಳಲಾಗುವುದಿಲ್ಲ. ಬುದ್ಧಿಯು ಎಲ್ಲಿಯಾದರೂ ಅಗತ್ಯವಾಗಿ ಹೋಗುತ್ತಿರುತ್ತದೆ. ಇದನ್ನು ಪ್ರತಿಯೊಬ್ಬರೂ ತಮಗೆ ತಾವೇ ತಿಳಿದುಕೊಳ್ಳಬಹುದು. ಮುಖ್ಯಮಾತು ಸತೋಪ್ರಧಾನ ಆಗುವುದಾಗಿದೆ. ಅದೂ ಸಹ ನೆನಪಿನ ಯಾತ್ರೆಯ ವಿನಃ ಆಗಲು ಸಾಧ್ಯವಿಲ್ಲ. ಭಲೆ ತಂದೆಯು ಅಮೃತವೇಳೆಯ ಸಮಯದಲ್ಲಿ ಮಕ್ಕಳನ್ನು ಸೆಳೆಯುತ್ತಾರೆ ಆಕರ್ಷಿಸುತ್ತಾರೆ, ಆದರೆ ನಂಬರ್ವಾರ್ ಆಕರ್ಷಿಸಲ್ಪಡುತ್ತಾರೆ. ನೆನಪಿನಲ್ಲಿ ಶಾಂತಿಯಲ್ಲಿರುತ್ತಾರೆ. ಪ್ರಪಂಚವೇ ಮರೆಯುತ್ತಾರೆ, ಆದರೆ ಇಡೀ ದಿನ ಏನು ಮಾಡುತ್ತಾರೆಂಬ ಸವಾಲು ಉಳಿಯುತ್ತದೆ.ಅದಾಯಿತು ಬೆಳಿಗ್ಗೆ 1/2 ಘಂಟೆ ನೆನಪಿನ ಯಾತ್ರೆ,ಇದರಿಂದ ಆತ್ಮ ಪವಿತ್ರ ವಾಗುತ್ತದೆ, ಆಯಸ್ಸು ಹೆಚ್ಚುತ್ತದೆ. ಆದರೆ ಇಡೀ ದಿನ ಎಷ್ಟು ನೆನಪು ಮಾಡುತ್ತಾರೆ,ಎಷ್ಟು ಸ್ವದರ್ಶನ ಚಕ್ರಧಾರಿ ಯಾಗುತ್ತಾರೆ. ತಂದೆಯು ಎಲ್ಲವನ್ನೂ ತಿಳಿದುಕೊಂಡಿರುತ್ತಾರೆಂದು ತಿಳಿಯಬಾರದು ಆದ್ದರಿಂದ ಇಡೀ ದಿನ ನಾವು ಏನು ಮಾಡಿದೆವೆಂದು ನಮ್ಮ ಮನಸ್ಸನ್ನು ನಾವು ಕೇಳಿಕೊಳ್ಳಬೇಕು. ಈಗ ನೀವು ಮಕ್ಕಳು ಚಾರ್ಟ್ ಬರೆಯುತ್ತೀರಿ- ಕೆಲವರು ಸತ್ಯವಾಗಿ ಬರೆಯುತ್ತಾರೆ, ಇನ್ನೂ ಕೆಲವರು ಅಸತ್ಯವನ್ನು ಬರೆಯುತ್ತಾರೆ. ನಾವು ಶಿವತಂದೆಯ ಜೊತೆಯಲ್ಲಿಯೇ ಇದ್ದೆವೆಂದು ತಿಳಿದುಕೊಂಡಿರುತ್ತಾರೆ. ಶಿವತಂದೆಯನ್ನು ನೆನಪು ಮಾಡುತ್ತಿದ್ದೆವು ಆದರೆ ಸತ್ಯವಾಗಿಯೂ ನೆನಪಿನಲ್ಲಿದ್ದೇವೆಯೇ? ಸಂಪೂರ್ಣ ಶಾಂತಿಯಲ್ಲಿದ್ದಾಗ ಪ್ರಪಂಚವೇ ಮರೆತುಹೋಗುತ್ತದೆ. ನಾವು ಶಿವತಂದೆಯ ನೆನಪಿನಲ್ಲಿಯೇ ಇದ್ದೆವೆಂದು ತಮಗೆ ತಾವು ಮೋಸಮಾಡಿಕೊಳ್ಳಬಾರದು, ದೇಹದ ಎಲ್ಲಾ ಧರ್ಮಗಳನ್ನು ಮರೆಯಬೇಕು. ನಮ್ಮನ್ನು ಶಿವತಂದೆಯು ಆಕರ್ಷಣೆ ಮಾಡಿ ಪ್ರಪಂಚವನ್ನೇ ಮರೆಸುತ್ತಾರೆ. ತಂದೆಯು ತಿಳಿಸುತ್ತಾರೆ- ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿ. ಎಲ್ಲಾ ಆತ್ಮಗಳು ಬೇರೆ ಯಾರನ್ನೂ ನೆನಪು ಮಾಡದೇ ತಂದೆಯನ್ನೇ ನೆನಪು ಮಾಡಲಿ ಎಂದು ತಂದೆಯು ಆಕರ್ಷಣೆ ಮಾಡುತ್ತಾರೆ ಆದರೆ ನಿಜವಾಗಿಯೂ ತಂದೆಯ ನೆನಪು ಬರುತ್ತದೆಯೋ ಅಥವಾ ಇಲ್ಲವೆ ತಮ್ಮ ದಿನಚರಿಯನ್ನು ತೆಗೆಯಬೇಕು. ತಂದೆಯನ್ನು ಎಷ್ಟು ನಾವು ನೆನಪು ಮಾಡುತ್ತೇವೆ? ಹೇಗೆ ಪ್ರಿಯತಮ ಹಾಗೂ ಪ್ರಿಯತಮೆಯ ಉದಾಹರಣೆಯಿದೆ, ನಾವು ಆತ್ಮಿಕ ಪ್ರಿಯತಮ-ಪ್ರಿಯತಮೆಯರಾಗಿದ್ದೇವೆ. ಈ ಮಾತುಗಳು ಬಹಳ ಭಿನ್ನವಾಗಿದೆ, ಅದು ಶಾರೀರಿಕವಾಗಿದೆ, ಇದು ಆತ್ಮಿಕವಾಗಿದೆ. ನಮ್ಮನ್ನು ನಾವು ಎಷ್ಟು ಸಮಯ ದೈವೀಗುಣಗಳನ್ನು ಧಾರಣೆ ಮಾಡಿದ್ದೇವೆಂದು ನೋಡಿಕೊಳ್ಳಬೇಕು. ಎಷ್ಟು ಸಮಯ ತಂದೆಯ ಸೇವೆಯಲ್ಲಿದ್ದೆವು? ಹಾಗೂ ಅನ್ಯರಿಗೂ ನೆನಪು ತರಿಸಬೇಕು. ಹಾಗೂ ಆತ್ಮದಲ್ಲಿರುವ ಪಾಪವು ನೆನಪಿನ ವಿನಃ ನಾಶವಾಗುವುದಿಲ್ಲ. ಭಕ್ತಿಯಲ್ಲಿ ಅನೇಕರನ್ನು ನೆನಪು ಮಾಡುತ್ತಿದ್ದೆವು, ಇಲ್ಲಿ ಒಬ್ಬರನ್ನೇ ನೆನಪು ಮಾಡಬೇಕು. ಆತ್ಮ ಅತಿಸೂಕ್ಷ್ಮ ಬಿಂದುವಾಗಿದೆ, ಈ ಜ್ಞಾನವು ಬಹಳ ವಿಸ್ತಾರವಾಗಿದೆ. ಲಕ್ಷ್ಮೀ-ನಾರಾಯಣರಾಗಬೇಕು. ಇದೇನೂ ಚಿಕ್ಕಮ್ಮನ ಮನೆಯಂತಲ್ಲ. ತಂದೆಯು ತಿಳಿಸುತ್ತಾರೆ- ತಮ್ಮನ್ನು ತಾವು ಬುದ್ಧಿವಂತನೆಂದು ತಿಳಿದು ತಮ್ಮನ್ನು ಮೋಸಮಾಡಿಕೊಳ್ಳಬಾರದು. ಪಾಪ ನಾಶವಾಗುವಂತೆ ಇಡೀ ದಿನ ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ಎಷ್ಟು ಸಮಯ ನೆನಪು ಮಾಡಿದೆವು? ಎಷ್ಟು ಜನರನ್ನು ನನ್ನ ಸಮಾನ ಮಾಡಿದೆನು? ಈ ದಿನಚರಿಯನ್ನು ಪ್ರತಿಯೊಬ್ಬರೂ ಇಡಬೇಕು. ಯಾರು ಮಾಡುತ್ತಾರೆ ಅವರು ಪಡೆದುಕೊಳ್ಳುತ್ತಾರೆ, ಮಾಡದವರು ಪಶ್ಚಾತ್ತಾಪ ಪಡುತ್ತಾರೆ. ಇಡೀ ದಿನ ನಮ್ಮ ನಡತೆ ಹೇಗಿತ್ತು? ಯಾರಿಗೂ ದುಃಖ ಕೊಡಲಿಲ್ಲವೆ ಅಥವಾ ವ್ಯರ್ಥಮಾತುಗಳನ್ನು ಮಾತನಾಡಲಿಲ್ಲವೆ? ಚಾರ್ಟ್ ಇಡುವುದರಿಂದ ನಡತೆಯು ಸುಧಾರಣೆಯಾಗುತ್ತದೆ. ತಂದೆಯಂತೂ ಮಾರ್ಗವನ್ನು ತೋರಿಸಿದ್ದಾರೆ.
ಪ್ರಿಯತಮ-ಪ್ರಿಯತಮೆಯು ಪರಸ್ಪರ ನೆನಪು ಮಾಡುತ್ತಾರೆ. ನೆನಪು ಮಾಡುತ್ತಲೇ ಅವರೇ ಬಂದು ನಿಂತುಬಿಡುತ್ತಾರೆ. ಇಬ್ಬರು ಸ್ತ್ರೀಯರಿದ್ದಾಗಲೂ ಸಾಕ್ಷಾತ್ಕಾರವಾಗುತ್ತದೆ. ಇಬ್ಬರೂ ಪುರುಷರಿದ್ದಾಗಲೂ ಸಾಕ್ಷಾತ್ಕಾರವಾಗುತ್ತದೆ. ಕೆಲವು ಮಿತ್ರರು ಒಡಹುಟ್ಟಿದ ಸಹೋದರರಿಗಿಂತಲೂ ಬಹಳ ಸ್ನೇಹದಿಂದಿರುತ್ತಾರೆ. ಮಿತ್ರರಲ್ಲಿ ಪರಸ್ಪರ ಇಷ್ಟೊಂದು ಪ್ರೀತಿಯಿರುತ್ತದೆ, ಅದು ತನ್ನ ಸಹೋದರನೊಂದಿಗೂ ಇರುವುದಿಲ್ಲ. ಪರಸ್ಪರ ಬಹಳ ಪ್ರೀತಿಯನ್ನು ಕೊಟ್ಟು ಮೇಲೆತ್ತುತ್ತಾರೆ. ತಂದೆಯು ಅನುಭವಿಯಾಗಿದ್ದಾರಲ್ಲವೆ ಆದ್ದರಿಂದ ತಂದೆಯು ಅಮೃತವೇಳೆ ಬಹಳ ಆಕರ್ಷಣೆ ಮಾಡುತ್ತಾರೆ. ಅಯಸ್ಕಾಂತವಾಗಿದ್ದಾರೆ ಸದಾ ಪವಿತ್ರವಾಗಿದ್ದಾರೆಆದುದರಿಂದ ಅವರು ಆಕರ್ಷಿಸುತ್ತಾರೆ. ತಂದೆಯು ಬೇಹದ್ದಿನವರಾಗಿದ್ದಾರಲ್ಲವೆ. ಇವರು ಬಹಳ ಪ್ರೀತಿಯ ಮಕ್ಕಳೆಂದು ತಿಳಿದುಕೊಳ್ಳುತ್ತಾರೆ. ಬಹಳಷ್ಟು ಆಕರ್ಷಣೆ ಮಾಡುತ್ತಾರೆ ಆದರೆ ನೆನಪಿನ ಯಾತ್ರೆಯು ಬಹಳ ಬೇಕಾಗಿದೆ. ಎಲ್ಲಿಗಾದರೂ ಹೋಗಬಹುದು, ಪ್ರಯಾಣವನ್ನೂ ಮಾಡುತ್ತಿರಿ, ನಡೆಯುತ್ತಾ-ತಿರುಗಾಡುತ್ತಾ ನೆನಪು ಮಾಡುತ್ತಿರಬಹುದು. ಪ್ರಿಯತಮ-ಪ್ರಿಯತಮೆಯರು ಎಲ್ಲಿ ಬೇಕಾದರೂ ನೆನಪು ಮಾಡುತ್ತಾರಲ್ಲವೆ. ಇದೂ ಸಹ ಅದೇ ರೀತಿಯಾಗಿಯೇ ಇದೆ. ತಂದೆಯನ್ನಂತೂ ನೆನಪು ಮಾಡಬೇಕು. ಇಲ್ಲವೆಂದರೆ ವಿಕರ್ಮ ಹೇಗೆ ವಿನಾಶವಾಗುತ್ತದೆ! ಬೇರೆ ಉಪಾಯವೇ ಇಲ್ಲ. ಇದು ಬಹಳ ಸೂಕ್ಷ್ಮವೇ ಆಗಿದೆ. ಖಡ್ಗದ ಹರಿತದ ಮೇಲೆ ನಡೆಯಬೇಕಾಗುತ್ತದೆ. ನನಪೇ ಖಡ್ಗದ ಹರಿತವಾಗಿದೆ. ಪದೇ-ಪದೇ ನೆನಪು ಮರೆತುಹೋಗುತ್ತದೆ ಎಂದು ಹೇಳುತ್ತಾರೆ. ಖಡ್ಗವೆಂದು ಏಕೆ ಹೇಳುತ್ತಾರೆ? ಏಕೆಂದರೆ ಇದರಿಂದ ಪಾಪ ಕತ್ತರಿಸುತ್ತ್ತದೆ, ನೀವು ಪಾವನರಾಗುತ್ತೀರಿ. ಇದು ಬಹಳ ಸೂಕ್ಷ್ಮವಾಗಿದೆ. ಹೇಗೆ ಜನರು ಅಗ್ನಿಯಿಂದ ಪಾರಾಗುತ್ತಾರೆ, ನಿಮ್ಮ ಬುದ್ಧಿಯೋಗ ತಂದೆಯ ಬಳಿ ಹೊರಟುಹೋಗುತ್ತದೆ. ತಂದೆಯು ಇಲ್ಲಿ ಬಂದಿದ್ದಾರೆ ಅಂದಾಗ ಆಸ್ತಿಯನ್ನು ಕೊಡುತ್ತಾರೆ. ತಂದೆಯು ಮೇಲಿಲ್ಲ ಇಲ್ಲಿಗೆ ಬಂದಿದ್ದಾರೆ. ನಾನು ಸಾಧಾರಣ ತನುವಿನಲ್ಲಿ ಬರುತ್ತೇನೆಂದು ತಿಳಿಸುತ್ತಾರೆ. ನಿಮಗೂ ಸಹ ಗೊತ್ತಿದೆ- ಮೇಲಿಂದ ಕೆಳಗೆ ಬಂದಿದ್ದಾರೆ. ಚೈತನ್ಯ ವಜ್ರವು ಈ ಡಬ್ಬ (ಶರೀರ) ದಲ್ಲಿ ಕುಳಿತಿದ್ದಾರೆ. ಕೇವಲ ತಂದೆಯ ಜೊತೆ ಕುಳಿತಿದ್ದೇವೆಂದು ಇಷ್ಟಕ್ಕೆ ಖುಷಿಯಾಗಬಾರದು. ಇದನ್ನು ತಂದೆಯೂ ತಿಳಿದುಕೊಂಡಿರುತ್ತಾರೆ, ಬಹಳ ಆಕರ್ಷಣೆ ಮಾಡುತ್ತಾರೆ ಆದರೆ ಇದು ಕೇವಲ ಅರ್ಧ-ಮುಕ್ಕಾಲುಗಂಟೆ ಮಾತ್ರ ಇರುತ್ತದೆ, ದಿನದಲ್ಲಿ ಉಳಿದ ಸಮಯ ವ್ಯರ್ಥವಾಯಿತೆಂದರೆ ಲಾಭವೇನು! ಮಕ್ಕಳಿಗೆ ತಮ್ಮ ಚಾರ್ಟಿನ ಚಿಂತೆಯಿರಬೇಕು. ನಾವು ಭಾಷಣ ಮಾಡುತ್ತೇವೆ, ಚಾರ್ಟ್ ಇಡುವ ಅವಶ್ಯಕತೆಯಿಲ್ಲವೆಂದು ತಿಳಿದು ತಪ್ಪನ್ನು ಮಾಡುತ್ತಾರೆ. ಮಹಾರಥಿಗಳೂ ಸಹ ಚಾರ್ಟ್ ಇಡಬೇಕು. ಮಹಾರಥಿಗಳು ಬಹಳಷ್ಟು ಇಲ್ಲ. ಲೆಕ್ಕವಿಡುವಷ್ಟು ಮಾತ್ರವೇ ಇದ್ದಾರೆ. ಬಹಳ ಮಕ್ಕಳು ನಾಮ-ರೂಪದಲ್ಲಿ ಸಮಯ ವ್ಯರ್ಥಮಾಡುತ್ತಾರೆ. ಗುರಿ ತುಂಬಾ ಶ್ರೇಷ್ಠವಾಗಿದೆ. ತಂದೆಯು ಎಲ್ಲವನ್ನೂ ತಿಳಿಸಿಬಿಡುತ್ತಾರೆ. ವಿದ್ಯಾರ್ಥಿಗಳು ಎಂದಿಗೂ ತಂದೆಯು ಇಂತಹ ಮಾತನ್ನು ತಿಳಿಸಿಲ್ಲವೆಂದು ತಿಳಿದುಕೊಳ್ಳಬಾರದು. ನೆನಪು ಹಾಗೂ ಸೃಷ್ಟಿಚಕ್ರದ ಜ್ಞಾನವು ಅತಿಮುಖ್ಯವಾಗಿದೆ. ಈ ಸೃಷ್ಟಿಚಕ್ರದಲ್ಲಿ 84 ಜನ್ಮಗಳನ್ನು ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ವೈರಾಗ್ಯವೂ ನಿಮಗೆ ಮಾತ್ರವೇ ಬರುತ್ತದೆ. ಈ ಮೃತ್ಯುಲೋಕದಲ್ಲಿ ನಾವು ಇರಲು ಸಾಧ್ಯವಿಲ್ಲವೆಂದು ನೀವು ತಿಳಿದಿದ್ದೀರಿ. ಈ ಪ್ರಪಂಚದಿಂದ ಹೋಗಲು ಮೊದಲು ಪವಿತ್ರರಾಗಬೇಕು, ಅಗತ್ಯವಾಗಿ ದೈವೀಗುಣಗಳನ್ನು ಧಾರಣೆ ಮಾಡಬೇಕು. ನಂಬರ್ವಾರ್ ಮಾಲೆಯಲ್ಲಿ ಬರುತ್ತೇವೆ ನಂತರ ನಂಬರ್ವಾರ್ ರಾಜಧಾನಿಯಲ್ಲಿ ಬರಬೇಕಾಗುತ್ತದೆ. ಹಾಗೂ ನಂಬರ್ವಾರ್ ಆಗಿ ನಿಮ್ಮ ಪೂಜೆಯೂ ನಡೆಯುತ್ತದೆ. ಅನೇಕ ದೇವತೆಗಳ ಪೂಜೆಯೂ ನಡೆಯುತ್ತದೆ, ದೇವತೆಗಳಿಗೂ ಎಂತೆಂತಹ ಹೆಸರುಗಳನ್ನಿಟ್ಟಿದ್ದಾರೆ, ಚಂಡಿಕಾದೇವಿಯ ಜಾತ್ರೆಯಾಗುತ್ತದೆ. ಯಾರು ದಿನಚರಿಯನ್ನಿಡದೆ ಸುಧಾರಣೆಯಾಗುವುದಿಲ್ಲ ಅವರನ್ನು ಚಂಡಿಕಾ ಎಂದು ಹೇಳಲಾಗುತ್ತದೆ. ಇದು ಬೇಹದ್ದಿನ ಮಾತಾಗಿದೆ. ಪುರುಷಾರ್ಥ ಮಾಡಿಲ್ಲವೆಂದರೆ ಇವರು ತಂದೆಗೂ ಸಹ ಮಾನ್ಯತೆ ಕೊಡುವವರಲ್ಲ ಎಂದು ತಂದೆ ಹೇಳುತ್ತಾರೆ, ಇವರ ಪದವಿಯು ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ ಆದುದರಿಂದ ತಂದೆಯು ತಮ್ಮ ಮೇಲೆ ತಾವೇ ಬಹಳ ಗಮನ ಇಟ್ಟುಕೊಳ್ಳುಬೇಕು ಎಂದು ತಿಳಿಸುತ್ತಾರೆ. ತಂದೆಯು ಅಮೃತವೇಳೆ ನೆನಪಿನ ಯಾತ್ರೆಯಲ್ಲಿರಲು ಎಷ್ಟೊಂದು ಪುರುಷಾರ್ಥ ಮಾಡಿಸುತ್ತಾರೆ. ಜ್ಞಾನವಂತೂ ಸಹಜವಾದ ಸಬ್ಜೆಕ್ಟ್ ಎಂದು ಹೇಳಬಹುದು. 84 ಜನ್ಮಗಳ ಚಕ್ರವನ್ನು ನೆನಪು ಮಾಡುವುದು ದೊಡ್ಡಮಾತೇನಲ್ಲ ಆದರೆ ಬೆಲೆಯುಳ್ಳ ವಸ್ತು ನೆನಪಿನ ಯಾತ್ರೆಯಾಗಿದೆ. ಇದರಲ್ಲಿಯೇ ಬಹಳಷ್ಟು ಅನುತ್ತೀರ್ಣರಾಗುತ್ತಾರೆ. ಇದರಲ್ಲಿಯೇ ನಿಮ್ಮ ಯುದ್ಧವೂ ನಡೆಯುತ್ತದೆ. ನೀವು ನೆನಪು ಮಾಡುತ್ತೀರಿ, ಮಾಯೆಯು ಹಿಂದೆ ಬೀಳುತ್ತದೆ. ಜ್ಞಾನದಲ್ಲಿ ಯುದ್ಧದ ಮಾತಿಲ್ಲ ಅದು ಸಂಪಾದನೆಗೆ ಮೂಲಾಧಾರವಾಗಿದೆ. ಇಲ್ಲಿ ನೀವು ಪವಿತ್ರರಾಗಬೇಕು ಆದ್ದರಿಂದ ತಂದೆಯೇ ಬಂದು ನಮ್ಮನ್ನು ಪಾವನ ಮಾಡು ಎಂದು ಕರೆಯುತ್ತೀರಿ. ಬಂದು ಓದಿಸಿ ಎಂದು ಕರೆಯುವುದಿಲ್ಲ, ಬಂದು ಪಾವನ ಮಾಡಿ ಎಂದು ಕರೆಯುತ್ತೇವೆ. ಈ ಎಲ್ಲಾ ಮಾತುಗಳನ್ನು ಬುದ್ಧಿಯಲ್ಲಿಟ್ಟುಕೊಳ್ಳಬೇಕು, ಸಂಪೂರ್ಣ ರಾಜಯೋಗಿಯಾಗಬೇಕು.
ಜ್ಞಾನವು ಬಹಳ ಸರಳವಾಗಿದೆ, ಕೇವಲ ಯುಕ್ತಿಯಿಂದ ತಿಳಿಸಬೇಕು. ಮಾತು ಬಹಳ ಮಧುರವಾಗಿರಬೇಕು. ನಿಮಗೆ ಈ ಜ್ಞಾನ ಸಿಗುವುದೂ ಸಹ ಕರ್ಮಕ್ಕನುಗುಣವಾಗಿಯೇ ಎಂದು ಹೇಳಬಹುದು. ಆರಂಭದಿಂದ ಭಕ್ತಿ ಮಾಡಿದವರಿಗೆ ಒಳ್ಳೆಯ ಕರ್ಮವನ್ನು ಮಾಡಿದ್ದಾರೆಂದು ಹೇಳಬಹುದು ಆದ್ದರಿಂದ ಶಿವತಂದೆಯು ಕುಳಿತು ಚೆನ್ನಾಗಿ ತಿಳಿಸಿಕೊಡುತ್ತಿದ್ದಾರೆ. ಎಷ್ಟು ಭಕ್ತಿ ಮಾಡಿರುತ್ತಾರೆ, ಶಿವತಂದೆಯನ್ನು ತೃಪ್ತಿಪಡಿಸಿರುತ್ತಾರೆಯೋ ಅಂತಹವರು ಬೇಗನೆ ಜ್ಞಾನವನ್ನು ಪಡೆಯುತ್ತಾರೆ. ಮಹಾರಥಿಗಳ ಬುದ್ಧಿಯಲ್ಲಿ ಇವೆಲ್ಲಾ ಮಾತುಗಳಿರುತ್ತವೆ. ಬರೆಯುತ್ತಿದ್ದು ಒಳ್ಳೊಳ್ಳೆಯ ಅಂಶಗಳನ್ನು ಪಟ್ಟಿ ಮಾಡುತ್ತಿರಬೇಕು ನಂತರ ಆ ಜ್ಞಾನದ ಮಾತುಗಳಿಗೆ ಗೌರವಿಸಬೇಕು ಆದರೆ ಈ ರೀತಿಯ ಶ್ರಮವನ್ನು ಯಾರೂ ಮಾಡುವುದಿಲ್ಲ. ಕೆಲವರು ಬಹಳ ಶ್ರಮದಿಂದ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ ಹಾಗೂ ಒಳ್ಳೊಳ್ಳೆಯ ಅಂಶಗಳನ್ನು ತೆಗೆದು ಬೇರೆಯಾಗಿ ಬರೆದಿಡುತ್ತಾರೆ. ತಂದೆಯು ಭಾಷಣ ಮಾಡುವವರಿಗೆ ಮೊದಲು ಬರೆದು ನಂತರ ಅದನ್ನು ಪರಿಶೀಲನೆ ಮಾಡಿ ಎಂದು ಸದಾ ಹೇಳುತ್ತಿರುತ್ತಾರೆ ಆದರೆ ಈ ರೀತಿ ಶ್ರಮಪಡುವುದಿಲ್ಲ. ಎಲ್ಲಾ ಜ್ಞಾನದ ಪಾಯಿಂಟ್ಸ್ ಗಳು ಯಾರಿಗೂ ಬ್ಯಾರಿಸ್ಟರ್ ಗಳೂ ಮುಖ್ಯ ಪಾಯಿಂಟ್ಸ್ ಗಳನ್ನು ಡೈರಿಯಲ್ಲಿ ನೋಟ್ ಮಾಡಿಕೊಳ್ಳುತ್ತಾರೆ ನಿಮಗಂತೂ ಇದು ಬಹಳ ಅವಶ್ಯಕತೆಯಿದೆ. ವಿಷಯಗಳನ್ನು ಬರೆದು ಓದಿ ತಿದ್ದುಕೊಳ್ಳಬೇಕು. ಇಷ್ಟೊಂದು ಶ್ರಮಪಡದಿದ್ದರೆ ಉಮ್ಮಂಗವಿರುವುದಿಲ್ಲ ಏಕೆಂದರೆ ನಿಮ್ಮ ಬುದ್ಧಿಯೋಗವು ಬೇರೆ-ಬೇರೆಕಡೆ ಅಲೆದಾಡುತ್ತಿರುತ್ತದೆ. ಬಹಳಷ್ಟು ಕಡಿಮೆ ಮಕ್ಕಳು ಸರಳತೆಯಿಂದ ನಡೆಯುತ್ತಿರುತ್ತಾರೆ, ಅವರಿಗೆ ಸೇವೆಯ ವಿನಃ ಏನೂ ತೋಚುವುದಿಲ್ಲ. ಮಾಲೆಯಲ್ಲಿ ಬರಬೇಕಾದರೆ ಶ್ರಮಪಡಬೇಕು. ತಂದೆಯಂತೂ ಮತ ಕೊಡುತ್ತಾರೆ ಅದು ಮನಸ್ಸಿಗೆ ನಾಟುತ್ತದೆಯೇ? ನೆನಪು ಇಲ್ಲವೆಂದರೆ ಅದು ಸ್ವಯಂಗೆ ಗೊತ್ತಾಗುತ್ತದೆ. ಭಲೆ ವ್ಯಾಪಾರ-ವ್ಯವಹಾರ ಮಾಡಿ ಆದರೆ ಜೇಬಿನಲ್ಲಿ ನೋಟ್ ಮಾಡಿಕೊಳ್ಳಲು ಒಂದು ಚಿಕ್ಕಪುಸ್ತಕವನ್ನಂತೂ (ಡೈರಿ) ಸದಾ ಇಟ್ಟುಕೊಳ್ಳಬೇಕು. ಹುಡುಗಾಟಿಕೆಯಲ್ಲಿದ್ದು ತಮ್ಮನ್ನು ತಾವು ಬುದ್ಧಿವಂತನೆಂದು ತಿಳಿದುಕೊಂಡರೆ ಮಾಯೆಯೇನೂ ಕಡಿಮೆಯಿಲ್ಲ, ಪೆಟ್ಟುಕೊಡುತ್ತಿರುತ್ತದೆ. ಲಕ್ಷ್ಮೀ-ನಾರಾಯಣರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ದೊಡ್ಡ ರಾಜಧಾನಿಯು ಸ್ಥಾಪನೆಯಾಗುತ್ತಾ ಇದೆ. ಕೋಟಿಯಲ್ಲಿ ಕೆಲವರು ಮಾತ್ರವೇ ಬರುತ್ತಾರೆ. ಬಾಬಾ (ಬ್ರಹ್ಮಾ) ರವರೂ ಸಹ 2 ಗಂಟೆಗೆ ಎದ್ದು ಬರೆಯುತ್ತಿದ್ದರು ನಂತರ ಓದುತ್ತಿದ್ದರು. ಜ್ಞಾನದ ಅಂಶಗಳನ್ನು ಮರೆತುಹೋದರೆ ನಿಮಗೆ ತಿಳಿಸುವ ಸಲುವಾಗಿ ಮತ್ತೆ ಎಚ್ಚರವಹಿಸಿ ನೋಡುತ್ತಿದ್ದರು, ನೆನಪಿನ ಯಾತ್ರೆ ಎಷ್ಟರಮಟ್ಟಿಗೆ ಇದೆ, ಕರ್ಮಾತೀತ ಸ್ಥಿತಿ ಎಷ್ಟಿದೆ ಎಂದು ತಿಳಿಯಲಾಗುತ್ತಿದೆ ಆದುದರಿಂದ ಸುಮ್ಮನೆ ಯಾರ ಮಹಿಮೆಯನ್ನೂ ಮಾಡುವುದಿಲ್ಲ. ಬಹಳ ಶ್ರಮವಿದೆ, ಕರ್ಮಭೋಗವೂ ಇರುತ್ತದೆ ಆದರೂ ನೆನಪು ಮಾಡಬೇಕಾಗುತ್ತದೆ. ಒಳ್ಳೆಯದು. ತಿಳಿಯಿರಿ ಮುರುಳಿಯನ್ನು ಬ್ರಹ್ಮಾತಂದೆಯು ನುಡಿಸುವುದಿಲ್ಲ ಶಿವತಂದೆಯು ನುಡಿಸುತ್ತಾರೆ. ಬ್ರಹ್ಮಾತಂದೆಯೂ ಸಹ ಮಕ್ಕಳಿಗೆ ಸದಾ ಶಿವತಂದೆಯೇ ತಿಳಿಸುತ್ತಾರೆಂದು ಹೇಳುತ್ತಾರೆ. ಒಮ್ಮೊಮ್ಮೆ ಮಧ್ಯದಲ್ಲಿ ಈ ಮಗನೂ ಮಾತನಾಡುತ್ತಾರೆ. ತಂದೆಯಂತೂ ಸಂಪೂರ್ಣ ಸರಿಯಾದದ್ದನ್ನೇ ತಿಳಿಸುತ್ತಾರೆ. ಇವರಂತೂ (ಬ್ರಹ್ಮಾತಂದೆ) ಇಡೀ ದಿನ ಚಿಂತನೆ ಮಾಡಬೇಕಾಗುತ್ತದೆ, ಅನೇಕ ಮಕ್ಕಳ ಜವಾಬ್ದಾರಿಯು ಅವರಿಗಿರುತ್ತದೆ. ಮಕ್ಕಳು ನಾಮ-ರೂಪದಲ್ಲಿ ಸಿಕ್ಕಿಕೊಂಡು ಹೊರಟುಹೋಗುತ್ತಾರೆ. ಬಹಳ ಮಕ್ಕಳ ಬಗ್ಗೆ ಚಿಂತೆ ಮಾಡುತ್ತಾರೆ- ಮಕ್ಕಳಿಗಾಗಿ ಮನೆ ಮಾಡುತ್ತಾರೆ. ಇನ್ನೂ ಬಹಳ ಪ್ರಬಂಧಗಳನ್ನು ಮಾಡಬೇಕಾಗುತ್ತದೆ ಎಂಬ ಚಿಂತೆಯು ತಂದೆಗೆ ನಾಟಕದನುಸಾರವಾಗಿ ನಡೆಯುತ್ತಿರುತ್ತದೆ. ಶಿವತಂದೆಯೂ ಸಹ ನಾಟಕದಲ್ಲಿ ಪಾತ್ರವನ್ನು ಅಭಿನಯಿಸಬೇಕು, ಬ್ರಹ್ಮಾತಂದೆಯೂ ಸಹ ಪಾತ್ರ ಮಾಡಬೇಕು, ನೀವೂ ಸಹ ಮಾಡಬೇಕು. ನಾಟಕದ ವಿನಃ ಯಾವುದೇ ವಸ್ತುವು ಇರಲು ಸಾಧ್ಯವಿಲ್ಲ. ಒಂದೊಂದು ಸೆಕೆಂಡ್ ನಾಟಕ ನಡೆಯುತ್ತಿರುತ್ತದೆ. ನಾಟಕವನ್ನು ನೆನಪು ಮಾಡುವುದರಿಂದ ಅಲುಗಾಡುವುದಿಲ್ಲ. ಅಚಲ, ಅಡೋಲ ಸ್ಥಿರವಾಗಿರುತ್ತೀರಿ. ಕೆಲವು ಮಕ್ಕಳು ಸತ್ಯವನ್ನು ಹೇಳುವುದಿಲ್ಲ, ಸ್ವಪ್ನದಲ್ಲಿಯೂ ಮಾಯೆಯ ಬಿರುಗಾಳಿಗಳು ಬಹಳ ಬರುತ್ತಿರುತ್ತವೆ. ಮಾಯೆಯಲ್ಲವೆ! ಯಾರಿಗೆ ಮೊದಲೆಲ್ಲಾ ಬರುತ್ತಿರಲಿಲ್ಲವೋ ಅವರಿಗೂ ಬರುತ್ತದೆ. ತಂದೆಯೂ ತಿಳಿದುಕೊಳ್ಳುತ್ತಾರೆ-ಮಕ್ಕಳು ಆಸ್ತಿಯನ್ನು ಪಡೆಯಲು ನೆನಪಿನಲ್ಲಿರುವ ಶ್ರಮಪಡಬೇಕಾಗುತ್ತದೆ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ ಆದ್ದರಿಂದ ಪರಿಶ್ರಮವನ್ನೂ ಪಡಬೇಕಾಗುತ್ತದೆ.ಕೆಲಕೆಲವರು ಪರಿಶ್ರಮ ಪಡುತ್ತಾಪಡುತ್ತಾ ಸುಸ್ತಾಗಿ ಬಿಡುತ್ತಾರೆ ಗುರಿ ಬಹಳ ದೊಡ್ಡದಾಗಿದೆ 21 ಪೀಳಿಗೆಗೆ ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆಂದಾಗ ಪರಿಶ್ರಮವೂ ಪಡಬೇಕಾಗುತ್ತದೆ ಅತಿಪ್ರಿಯ ತಂದೆಯನ್ನು ನೆನಪು ಮಾಡಬೇಕಾಗುತ್ತದೆ. ತಂದೆಯು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಿದ್ದಾರೆಂದು ಹೃದಯದಲ್ಲಿರುತ್ತದೆ ಅಂಥಹ ತಂದೆಯನ್ನು ಕ್ಷಣ-ಕ್ಷಣ ನೆನಪು ಮಾಡಬೇಕಾಗಿದೆ ಎಲ್ಲರಿಗಿಂತ ಅತಿಪ್ರಿಯ ತಂದೆಯಾಗಿದ್ದಾರೆ. ತಂದೆಯಂತೂ ಚಮತ್ಕಾರ ಮಾಡುತ್ತಾರೆ, ವಿಶ್ವದ ಜ್ಞಾನವನ್ನು ಕೊಡುತ್ತಾರೆ. ಬಾಬಾ, ಬಾಬಾ, ಬಾಬಾ...... ಎಂದು ಹೇಳುತ್ತಾ ಆಂತರ್ಯದಲ್ಲಿ ಮಹಿಮೆ ಮಾಡುತ್ತಿರಬೇಕು. ಯಾರು ಹೀಗೆ ನೆನಪು ಮಾಡುತ್ತಿರುತ್ತಾರೆ ಅವರಿಗೆ ತಂದೆಯ ಆಕರ್ಷಣೆಯಾಗುತ್ತಿರುತ್ತದೆ. ಇಲ್ಲಿಗೆ ತಂದೆಯಿಂದ ರಿಫ್ರೆಷ್ ಆಗಲು ಬರುತ್ತಾರೆ ಆದ್ದರಿಂದ ತಂದೆಯು ತಿಳಿಸುತ್ತಾರೆ- ಮಧುರ ಮಕ್ಕಳೇ, ಉದಾಸೀನ ಮಾಡಬಾರದು. ಎಲ್ಲಾ ಸೇವಾಕೇಂದ್ರಗಳಿಂದ ಬರುವ ಮಕ್ಕಳನ್ನು ತಂದೆಯು ನೋಡುತ್ತಾರೆ, ವಿಚಾರಿಸುತ್ತಾರೆ. ನಿಮಗೆ ಯಾವ ರೀತಿಯ ಖುಷಿಯಿದೆ ಎಂದು ತಂದೆಯು ಪರಿಶೀಲಿಸುತ್ತಾರಲ್ಲವೆ! ಚಹರೆಯಿಂದಲೂ ನೋಡುತ್ತಾರೆ - ಇವರಿಗೆ ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ? ತಂದೆಯ ಸನ್ಮುಖದಲ್ಲಿ ಬಂದಾಗ ತಂದೆಯೂ ಆಕರ್ಷಣೆ ಮಾಡುತ್ತಾರೆ. ಇಲ್ಲಿ ಕುಳಿತು-ಕುಳಿತಿದ್ದಂತೆಯೇ ಎಲ್ಲವೂ ಮರೆತುಹೋಗುತ್ತದೆ. ತಂದೆಯನ್ನು ಬಿಟ್ಟರೆ ಬೇರೆನೂ ಇಲ್ಲ, ಇಡೀ ಪ್ರಪಂಚವನ್ನೇ ಮರೆಯಬೇಕಾಗಿದೆ. ಈ ಸ್ಥಿತಿಯು ಬಹಳ ಮಧುರ, ಅಲೌಕಿಕವಾಗಿರುತ್ತದೆ. ತಂದೆಯ ನೆನಪಿನಲ್ಲಿ ಬಂದು ಕುಳಿತುಕೊಂಡರೆ ಆ ಪ್ರೀತಿಯ ಭಾಷ್ಪಗಳು ಬರುತ್ತವೆ ಭಕ್ತಿ ಮಾರ್ಗದಲ್ಲು ಕಣ್ಣೀರು ಬರುತ್ತದೆ ಅದರೆ ಭಕ್ತಿಮಾರ್ಗ ಬೇರೆಯಾಗಿದೆ, ಜ್ಞಾನಮಾರ್ಗವೇ ಬೇರೆಯಿದೆ. ಇದು ಸತ್ಯತಂದೆಯ ಜೊತೆ ಸತ್ಯಜ್ಞಾನವಾಗಿದೆ. ಇಲ್ಲಿಯ ಮಾತೇ ಭಿನ್ನವಾಗಿದೆ. ಇಲ್ಲಿ ನೀವು ಶಿವತಂದೆಯ ಬಳಿ ಬರುತ್ತೀರಿ ಅವರು ಅಗತ್ಯವಾಗಿ ಇವರ ರಥದಲ್ಲಿರಬೇಕು. ಶರೀರವಿಲ್ಲದೆ ಆತ್ಮ ಅಲ್ಲಿ ಮಾತ್ರ ಮಿಲನ ಮಾಡಬಹುದು, ಇಲ್ಲಿ ಎಲ್ಲರೂ ಶರೀರಧಾರಿಗಳೇ ಇದ್ದಾರೆ. ಇವರು ಬಾಪ್ದಾದಾ ಆಗಿದ್ದಾರೆಂದು ತಿಳಿದಿದ್ದೇವೆ ಆದ್ದರಿಂದ ತಂದೆಯನ್ನು ನೆನಪು ಮಾಡಬೇಕು, ಬಹಳ ಪ್ರೀತಿಯಿಂದ ನೆನಪು ಮಾಡಬೇಕು. ತಂದೆಯು ನಮಗೆ ಏನು ಕೊಡುತ್ತಾರೆ!
ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ತಂದೆಯು ಈ ಕಾಡಿನಿಂದ ನಿಮ್ಮನ್ನು ಕರೆದೊಯ್ಯಲು ಬಂದಿದ್ದಾರೆ. ಮಂಗಳಂ ಭಗವಾನ್ ವಿಷ್ಣು ಎಂದು ಹೇಳಲಾಗುತ್ತದೆ. ಅವರು ಸರ್ವರ ಮಂಗಳ ಮಾಡುವವರು, ಸರ್ವರ ಕಲ್ಯಾಣ ಆಗುತ್ತದೆ. ತಂದೆಯೊಬ್ಬರೇ ಆಗಿರುವುದರಿಂದ ಅವರನ್ನು ನೆನಪು ಮಾಡಬೇಕು. ನಾವು ಏಕೆ ಯಾರ ಕಲ್ಯಾಣವನ್ನಾದರೂ ಮಾಡಬಾರದು! ಅಗತ್ಯವಾಗಿ ಏನಾದರೂ ಬಲಹೀನತೆಯಿರುತ್ತದೆ. ತಂದೆಯು ತಿಳಿಸುತ್ತಾರೆ- ನೆನಪಿನ ಶಕ್ತಿಯಿಲ್ಲದಿರುವ ಕಾರಣ ವಾಣಿಯಲ್ಲಿ ಆಕರ್ಷಣೆಯಿರುವುದಿಲ್ಲ. ಇದೂ ಸಹ ನಾಟಕವಾಗಿದೆ. ಈಗ ಮತ್ತೆ ಉತ್ತಮ ಯೋಗದ ಹರಿತವನ್ನು ಧಾರಣೆ ಮಾಡಬೇಕು. ನೆನಪಿನ ಯಾತ್ರೆಯಲ್ಲಿ ಶ್ರಮವಿದೆ. ನಾವು ಸಹೋದರನಿಗೆ ಜ್ಞಾನವನ್ನು ಕೊಡುತ್ತೇವೆ, ತಂದೆಯ ಪರಿಚಯ ಕೊಡುತ್ತೇವೆ, ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕು. ತಂದೆಗೂ ಅನಿಸುತ್ತದೆ (ಬ್ರಹ್ಮಾರವರೂ) ಪದೇ-ಪದೇ ನೆನಪು ಮರೆತುಹೋಗುತ್ತಿರಬಹುದು. ತಂದೆಯಂತೂ ಎಲ್ಲರೂ ಮಕ್ಕಳೆಂದೇ ತಿಳಿದಿದ್ದಾರೆ ಆದ್ದರಿಂದ ಮಕ್ಕಳೇ, ಮಕ್ಕಳೇ ಎಂದು ಕರೆಯುತ್ತಾರೆ. ಇವರು ಎಲ್ಲರಿಗೂ ತಂದೆಯಾಗಿದ್ದಾರೆ, ಅದ್ಭುತವಾದ ಪಾತ್ರವು ಇವರದಾಗಿದೆ. ಕೆಲವು ಮಕ್ಕಳ ಮಾತ್ರ ಇದನ್ನು ಯಾರು ಹೇಳುತ್ತಿದ್ದಾರೆಂದು ತಿಳಿದುಕೊಳ್ಳುತ್ತಾರೆ. ತಂದೆಯಂತೂ ಮಕ್ಕಳೇ, ಮಕ್ಕಳೇ ಎಂದು ಹೇಳುತ್ತಿರುತ್ತಾರೆ. ತಂದೆಯು ಮಕ್ಕಳಿಗೆ ಆಸ್ತಿಯನ್ನು ಕೊಡುವ ಸಲುವಾಗಿ ಬಂದಿದ್ದಾರೆ. ತಂದೆಯು ಎಲ್ಲವನ್ನೂ ಹೇಳಿಬಿಡುತ್ತಾರೆ. ನಾನು ಮಕ್ಕಳಿಂದ ಎಲ್ಲಾ ಕೆಲಸವನ್ನು ಮಾಡಿಸುತ್ತೇನೆ, ಇದು ಬಹಳ ವಂಡರ್ಫುಲ್ ಶ್ರೇಷ್ಠ ಜ್ಞಾನವಾಗಿದೆ. ಈ ಜ್ಞಾನವು ಚಡಪಡಿಸುವಂತಹ ಹಾಗೂ ಪೇಚಾಟದ ಜ್ಞಾನವೂ ಆಗಿದೆ. ವೈಕುಂಠದ ಮಾಲೀಕರಾಗಲು ಇಂತಹ ಜ್ಞಾನವೇ ಬೇಕಾಗಿದೆ. ಒಳ್ಳೆಯದು.
ಪ್ರತಿಯೊಬ್ಬರೂ ತಂದೆಯನ್ನು ನೆನಪು ಮಾಡಬೇಕು, ದೈವೀಗುಣಗಳನ್ನು ಧಾರಣೆ ಮಾಡಬೇಕು. ಮುಖದಿಂದ ಎಂದಿಗೂ ಉಲ್ಟಾ-ಸುಲ್ಟಾ ಮಾತನಾಡಬಾರದು, ಮಧುರ ಮಾತುಗಳನ್ನೇ ಮಾತನಾಡಬೇಕು. ಒಳ್ಳೆಯದು.‘’
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಬೆಳಗ್ಗೆ-ಬೆಳಗ್ಗೆ ಕುಳಿತು ಪ್ರೀತಿಯಿಂದ ತಂದೆಯನ್ನು ನೆನಪು ಮಾಡಬೇಕು. ಇಡೀ ಪ್ರಪಂಚವನ್ನೇ ಮರೆತುಬಿಡಬೇಕು.
2. ತಂದೆಯ ಸಮಾನ ಸರ್ವರ ಕಲ್ಯಾಣಕಾರಿಯಾಗಬೇಕು. ಬಲಹೀನತೆಗಳನ್ನು ತೆಗೆಯಬೇಕು, ತಮ್ಮ ಮೇಲೆ ತಾವೇ ಗಮನವನ್ನಿಟ್ಟುಕೊಳ್ಳಬೇಕು. ತಮ್ಮ ರಿಜಿಸ್ಟರ್ನ್ನು ತಾವೇ ನೋಡಿಕೊಳ್ಳಬೇಕು.
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ಈ ಭಕ್ತಿಮಾರ್ಗದ ಗೀತೆಯನ್ನು ಕೇಳಿದಿರಿ. ಭಕ್ತರು ಈ ಗೀತೆಯ ಅರ್ಥವನ್ನು ತಿಳಿದುಕೊಂಡಿಲ್ಲ, ನೀವು ಭಗವಂತನ ಮಕ್ಕಳಾಗಿದ್ದೀರಿ. ಭಗವಂತನು ಭಕ್ತರ ರಕ್ಷಕನಾಗಿದ್ದಾರೆ. ನೀವೂ ಸಹ ಭಕ್ತರ ರಕ್ಷಕರಾಗಿದ್ದೀರಿ, ಭಕ್ತರ ರಕ್ಷಣೆ ಮಾಡುತ್ತೀರಿ. ಯಾವ ಆಪತ್ತಿನ ಕಾರಣ ಭಕ್ತರು ರಕ್ಷಣೆಗಾಗಿ ಭಗವಂತನನ್ನು ಕರೆಯುತ್ತಾರೆ? ಭಕ್ತರಿಗೆ ರಾವಣನ ಬಹಳ ದುಃಖವಿದೆ, ರಾವಣ ಸಂಪ್ರದಾಯವು ದುಃಖದಿಂದ ಪೀಡಿತರಾಗಿದ್ದಾರೆ. ಆದ್ದರಿಂದ ಭೋಲಾನಾಥನನ್ನು ನೆನಪು ಮಾಡುತ್ತಾರೆ. ಅವರು ರಾವಣ ಸಂಪ್ರದಾಯದವರು, ಇವರು ರಾಮ ಸಂಪ್ರದಾಯದವರಾಗಿದ್ದಾರೆ. ನಮ್ಮ ರಕ್ಷಕ ಯಾರೆಂಬುದು ಭಕ್ತರಿಗೇ ಗೊತ್ತಿಲ್ಲ. ಭೋಲಾನಾಥ ರಕ್ಷಕನಾಗಿದ್ದಾರೆ ಎಂದು ಭಲೆ ಹಾಡುತ್ತಾರೆ ಆದರೆ ಏನು ರಕ್ಷಣೆ ಮಾಡುತ್ತಾರೆಂದು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಿಳಿದುಕೊಂಡಿದ್ದೀರಿ - ಭೋಲಾನಾಥ ಶಿವ ತಂದೆಯು ಹಾಳಾಗಿರುವುದನ್ನು ಸುಧಾರಣೆ ಮಾಡುವವರಾಗಿದ್ದಾರೆ. ಭಗವಂತನೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಪ್ರಪಂಚದವರಿಗೇ ತಿಳಿದಿಲ್ಲ. ಭಗವಂತನ ಬಗ್ಗೆ ತಿಳಿದಿದ್ದರೆ ಭಗವಂತನ ರಚನೆಯ ಆದಿ-ಮಧ್ಯ-ಅಂತ್ಯವೂ ತಿಳಿಯುತ್ತಿತ್ತು. ಆದರೆ ಭಗವಂತನನ್ನಾಗಲಿ, ಅವರ ರಚನೆಯನ್ನಾಗಲಿ ತಿಳಿದುಕೊಂಡಿಲ್ಲ. ಆದ್ದರಿಂದ ಇಂತಹ ಮನುಷ್ಯ ಸಂಪ್ರದಾಯಕ್ಕೆ ಅಂಧರೆಂದು ಹೇಳಲಾಗುತ್ತದೆ. ಇನ್ನೊಂದು ಕಡೆ ನೀವು ಇದ್ದೀರಿ. ನಿಮಗೆ ದಿವ್ಯ ದೃಷ್ಟಿ ಸಿಕ್ಕಿದೆ. ಈಗ ನಿಮ್ಮ ಹೆಸರೇ ಆಗಿದೆ - ಬ್ರಹ್ಮಾಕುಮಾರ-ಕುಮಾರಿಯರು. ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯವೆಂದು ಬೋರ್ಡಿನ ಮೇಲೆ ಹೆಸರಿದೆ. ಕೇವಲ ಬ್ರಹ್ಮಾಕುಮಾರ-ಕುಮಾರಿಯರೇ ಇರಲು ಸಾಧ್ಯವಿಲ್ಲ. ಪ್ರಜಾಪಿತ ಬ್ರಹ್ಮನೂ ಇದ್ದಾರಲ್ಲವೆ. ತಂದೆಯ ಬಳಿ ಕನ್ಯೆಯರು ಮತ್ತು ಕುಮಾರರು ಇಬ್ಬರೂ ಇರುತ್ತಾರೆ. ಪ್ರಜಾಪಿತ ಬ್ರಹ್ಮನಿಗೇ ಇಷ್ಟೊಂದು ಮಂದಿ ಮಕ್ಕಳಿರಲು ಸಾಧ್ಯ. ಅಂದಾಗ ಇವರು ಬೇಹದ್ದಿನ ಪಿತನಾಗಿದ್ದಾರೆಂದು ತಿಳಿದುಕೊಳ್ಳಬೇಕು. ಇದನ್ನೂ ತಿಳಿದುಕೊಂಡಿದ್ದೀರಿ - ಬ್ರಹ್ಮಾ, ವಿಷ್ಣು, ಶಂಕರನನ್ನು ರಚಿಸುವವರು ತಂದೆಯೇ ಆಗಿದ್ದಾರೆ, ಅವರಿಗೆ ನಿರಾಕಾರನೆಂದು ಹೇಳಲಾಗುತ್ತದೆ. ಇವರು ಬೇಹದ್ದಿನ ತಂದೆಯಾದರು, ಪರಮಪಿತ ಪರಮಾತ್ಮನು ಬ್ರಹ್ಮಾರವರ ಮೂಲಕ ರಚನೆಯನ್ನು ರಚಿಸುತ್ತಾರೆ. ಎಲ್ಲವೂ ಇವರ ರಚನೆಯಾಗಿದೆ. ಎಲ್ಲಾ ಮನುಷ್ಯ ಮಾತ್ರರು ವಾಸ್ತವದಲ್ಲಿ ಶಿವವಂಶಿಯರಾಗಿದ್ದಾರೆ, ನೀವೀಗ ಬಂದು ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೀರಿ, ಇದು ಹೊಸ ರಚನೆಯಾಗಿದೆ. ಪರಮಪಿತ ಪರಮಾತ್ಮನು ಬ್ರಹ್ಮಾನ ಮೂಲಕ ರಚನೆಯನ್ನು ರಚಿಸುತ್ತಾರೆ ಆದ್ದರಿಂದ ನಿಮಗೆ ಬ್ರಹ್ಮಾಕುಮಾರ-ಕುಮಾರಿಯರೆಂದು ಹೇಳಲಾಗುತ್ತದೆ. ಇಷ್ಟೊಂದು ಮಂದಿ ಬೇಹದ್ದಿನ ಮಕ್ಕಳಿದ್ದಾರೆ ಅಂದಮೇಲೆ ಅವಶ್ಯವಾಗಿ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುವರು. ಮಕ್ಕಳಿಗೆ ತಿಳಿದಿದೆ, ನಾವು ಬ್ರಹ್ಮಾಕುಮಾರ-ಕುಮಾರಿಯರನ್ನು ಶಿವ ತಂದೆಯು ದತ್ತು ಮಾಡಿಕೊಂಡಿದ್ದಾರೆ. ಶಿವ ತಂದೆಯು ತಿಳಿಸುತ್ತಾರೆ - ನೀವು ನನ್ನ ಮಕ್ಕಳಾಗಿದ್ದೀರಿ, ನೀವಾತ್ಮರೂ ನಿರಾಕಾರಿಯಾಗಿದ್ದಿರಿ, ಆದರೆ ಜ್ಞಾನವಂತೂ ಸಾಕಾರದಲ್ಲಿ ಬೇಕಲ್ಲವೆ. ನೀವು ತಿಳಿದುಕೊಂಡಿದ್ದೀರಿ- ನಾವು ಆದಿ ಸನಾತನ ದೇವಿ-ದೇವತಾ ಧರ್ಮದವರಾಗಿದ್ದೆವು, ಬ್ರಹ್ಮಾರವರ ಮೂಲಕ ರಚನೆಯು ಇಲ್ಲಿಯೇ ಆಗುತ್ತದೆ. ಇಲ್ಲಿಯೇ ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ, ಇಲ್ಲಿ ಮಗಧ ದೇಶದಲ್ಲಿಯೇ ಜನ್ಮ ತೆಗೆದುಕೊಂಡಿದ್ದಾರೆ. ತಂದೆಯು ತಿಳಿಸುತ್ತಾರೆ - ಈ ದೇಶವು ಬಹಳ ಪವಿತ್ರ ಸ್ವರ್ಗವಾಗಿತ್ತು, ಈಗ ಇದಕ್ಕೆ ನರಕ, ಮಗಧ ದೇಶವೆಂದು ಹೇಳಲಾಗುತ್ತದೆ ನಂತರ ಸ್ವರ್ಗವಾಗುವುದು. ನೀವು ಮಕ್ಕಳ ಬುದ್ಧಿಯಲ್ಲಿದೆ, ಶಿವ ತಂದೆಯು ನಮಗೆ ರಾಜಯೋಗವನ್ನು ಕಲಿಸಿ, ಪವಿತ್ರರನ್ನಾಗಿ ಮಾಡುತ್ತಾರೆ. ಪತಿತ-ಪಾವನ ಭಕ್ತರ ರಕ್ಷಕ ಭಗವಂತನೆಂದು ಹಾಡುತ್ತಾರೆ. ಭಕ್ತರೇ ಕೂಗುತ್ತಾರೆ. ಪತಿತರಾಗಿದ್ದರೂ ಸಹ ತಮ್ಮನ್ನು ಪತಿತರೆಂದು ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ - ನೀವೆಲ್ಲರೂ ಪತಿತರಾಗಿದ್ದೀರಿ, ಸತ್ಯಯುಗಕ್ಕೆ ಪಾವನ ಪ್ರಪಂಚವೆಂದೂ, ಕಲಿಯುಗಕ್ಕೆ ಪತಿತ ಪ್ರಪಂಚವೆಂದೂ ಹೇಳಲಾಗುತ್ತದೆ. ತಂದೆಯು ನಿಮಗೆ ಎಲ್ಲಾ ಸತ್ಯ ಮಾತುಗಳನ್ನು ತಿಳಿಸುತ್ತಾರೆ. ಲಕ್ಷಾಂತರ ವರ್ಷಗಳ ವಸ್ತು ಯಾವುದೂ ಇರುವುದಿಲ್ಲ. ಮನುಷ್ಯರು ಘೋರ ಅಂಧಕಾರದಲ್ಲಿದ್ದಾರೆ, ಕಲಿಯುಗವು ಇನ್ನೂ ಚಿಕ್ಕ ಮಗುವಾಗಿದೆ ಎಂದು ತಿಳಿಯುತ್ತಾರೆ ಮತ್ತು ನೀವು ತಿಳಿದುಕೊಂಡಿದ್ದೀರಿ, ಮೃತ್ಯುವು ಸನ್ಮುಖದಲ್ಲಿ ನಿಂತಿದೆ. ಅಂಧಕಾರ ಮತ್ತು ಪ್ರಕಾಶತೆಯ ವರ್ಣನೆಯನ್ನು ಸಂಗಮದಲ್ಲಿಯೇ ಮಾಡಲಾಗುತ್ತದೆ. ನೀವೀಗ ಘೋರ ಪ್ರಕಾಶದಲ್ಲಿ ಬಂದಿದ್ದೀರಿ, ಸತ್ಯಯುಗದಲ್ಲಿ ನೀವು ಈ ವರ್ಣನೆ ಮಾಡಲು ಸಾಧ್ಯವಿಲ್ಲ. ಅಲ್ಲಿ ಈ ಜ್ಞಾನವೇ ಇರುವುದಿಲ್ಲ. ಈ ಸಮಯದಲ್ಲಿ ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ನೀವು ಸತ್ಯಯುಗದಲ್ಲಿ ಸೂರ್ಯವಂಶಿ ಮನೆತನದವರಾಗಿದ್ದಿರಿ ಮತ್ತೆ ಅಂತ್ಯದಲ್ಲಿ ಬಂದು ಶೂದ್ರವಂಶಿಯರಾಗಿದ್ದೀರಿ, ಈಗ ಮತ್ತೆ ಬ್ರಾಹ್ಮಣವಂಶಿಗಳಾಗಿದ್ದೀರಿ. ನೀವೀಗ ಸರ್ವೋತ್ತಮ ಬ್ರಾಹ್ಮಣ ಕುಲದವರಾಗಿದ್ದೀರಿ, ಅತ್ಯುತ್ತಮರಾಗಿದ್ದೀರಿ. ಇದು ಈಶ್ವರೀಯ ಕುಲವಲ್ಲವೆ. ತಂದೆಯ ಬಳಿ ಬರುತ್ತಾರೆ, ಆಗ ತಂದೆಯು ಯಾರ ಬಳಿ ಬಂದಿದ್ದೀರಿ ಎಂದು ಕೇಳಿದಾಗ ತಂದೆಯ ಬಳಿ ಎಂದು ಹೇಳುತ್ತಾರೆ. ಇಬ್ಬರು ತಂದೆಯರಿದ್ದಾರೆ, ಒಬ್ಬರು ಲೌಕಿಕ ಇನ್ನೊಬ್ಬರು ಪಾರಲೌಕಿಕ. ಎಲ್ಲಾ ಸಾಲಿಗ್ರಾಮಗಳ ತಂದೆ ಒಬ್ಬರೇ ಶಿವನಾಗಿದ್ದಾರೆ, ನಿಮ್ಮ ಬುದ್ಧಿಯಲ್ಲಿ ಈ ಜ್ಞಾನವು ಹನಿಯುತ್ತಿರುತ್ತದೆ. ನಾವು ಒಬ್ಬ ತಂದೆಯ ಮಕ್ಕಳಾಗಿದ್ದೇವೆ, ಅವರಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ನಿರಾಕಾರ ತಂದೆಯು ಆಸ್ತಿಯನ್ನು ಸಾಕಾರದ ಮೂಲಕವೇ ಕೊಡುವರಲ್ಲವೆ. ತಂದೆಯು ತಿಳಿಸುತ್ತಾರೆ - ನಾನು ಸಾಧಾರಣ ತನುವಿನಲ್ಲಿ ಬಂದು ಪ್ರವೇಶ ಮಾಡುತ್ತೇನೆ. ಈಗ ತಂದೆಯು ಮಕ್ಕಳಿಗೆ ಹೇಳುತ್ತಾರೆ - ಮಕ್ಕಳೇ, ದೇಹೀ-ಅಭಿಮಾನಿಭವ, ತಮ್ಮನ್ನು ಆತ್ಮನೆಂದು ತಿಳಿಯಿರಿ. ಈ ದೇಹವು ವಿನಾಶಿ, ಆತ್ಮವು ಅವಿನಾಶಿಯಾಗಿದೆ. ಆತ್ಮವೇ 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ, ದೇಹವಲ್ಲ. ದೇಹವಂತೂ ಬದಲಾಗುತ್ತಿರುತ್ತದೆ ಮತ್ತೆ ಅನ್ಯ ಮಿತ್ರ ಸಂಬಂಧಿಗಳು ಸಿಗುತ್ತಾರೆ. ಪರಮಪಿತ ಪರಮಾತ್ಮನ ಮೂಲಕ ಈಗ ಆತ್ಮವು ಬೇಹದ್ದಿನ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ. ನೀವೇ ಕೇಳಿದನಂತರ ಧಾರಣೆ ಮಾಡಿಕೊಳ್ಳುತ್ತೀರಿ. ನಿಮ್ಮ ಆತ್ಮದಲ್ಲಿ ಸಂಸ್ಕಾರವಿದೆ. ಶರೀರದ ಸಂಸ್ಕಾರವೆಂದು ಹೇಳುವುದಿಲ್ಲ. ಸಂಸ್ಕಾರವು ಆತ್ಮದಲ್ಲಿಯೇ ಇರುತ್ತದೆ. ನಿಮ್ಮ ಆತ್ಮನ ಸಂಸ್ಕಾರವು ತಮೋಪ್ರಧಾನವಾಗಿದೆ, ಅದನ್ನು ಈಗ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ, ಕಾಯ ಕಲ್ಪತರು ಎಂದು ಹೇಳಲಾಗುತ್ತದೆ. ಕಾಯವು ಕಲ್ಪವೃಕ್ಷದ ಸಮಾನ ಆಗುತ್ತದೆ, ಧೀರ್ಘಾಯಸ್ಸು ಇರುತ್ತದೆ. ನೀವು ತಿಳಿದುಕೊಂಡಿದ್ದೀರಿ - ಇಲ್ಲಂತೂ ಆಯಸ್ಸು ಬಹಳ ಕಡಿಮೆಯಿದೆ. ಚಿಕ್ಕ ವಯಸ್ಸಿನಲ್ಲಿಯೇ ಕುಳಿತು-ಕುಳಿತಿದ್ದಂತೆಯೇ ಅಕಾಲ ಮೃತ್ಯುವಾಗಿಬಿಡುತ್ತದೆ. ನೀವೀಗ ಕಾಲದ ಮೇಲೆ ಜಯ ಗಳಿಸುತ್ತೀರಿ, ಅಲ್ಲಿ ಕಾಲವೆಂದೂ ಕಬಳಿಸುವುದಿಲ್ಲ, ಅಕಾಲದಲ್ಲಿ ಶರೀರ ಬಿಡುವುದಿಲ್ಲ. ಈಗ ಈ ಶರೀರಕ್ಕೆ ವಯಸ್ಸಾಯಿತು, ಇದನ್ನು ಬಿಟ್ಟು ಹೊಸದನ್ನು ತೆಗೆದುಕೊಳ್ಳಬೇಕೆಂದು ತಿಳಿದುಕೊಂಡಿರುತ್ತೀರಿ. ಶರೀರ ಬಿಡುವ ಸಮಯದಲ್ಲಿಯೂ ಅಲ್ಲಿ ವಾದ್ಯಗಳು ಮೊಳಗುತ್ತವೆ, ಜನ್ಮ ಪಡೆಯುವ ಸಮಯದಲ್ಲಿಯೂ ಮೊಳಗುತ್ತವೆ, ಅಲ್ಲಿ ಅಳುವ ಮಾತೇ ಇರುವುದಿಲ್ಲ. ನಿಮಗೆ ಭ್ರಮರಿಯ ಉದಾಹರಣೆಯನ್ನೂ ತಿಳಿಸಲಾಗುತ್ತದೆ. ನೀವು ಬ್ರಾಹ್ಮಣ-ಬ್ರಾಹ್ಮಣಿಯರಾಗಿದ್ದೀರಿ. ಬ್ರಾಹ್ಮಣಿ ಮತ್ತು ಭ್ರಮರಿಯ ರಾಶಿಯು ಹೋಲುತ್ತದೆ. ಯಾವ ಕೆಲಸವನ್ನು ಭ್ರಮರಿ ಮಾಡುತ್ತದೆಯೋ ಅದನ್ನೇ ನೀವೂ ಮಾಡುತ್ತೀರಿ. ಅದ್ಭುತವಲ್ಲವೆ. ಭ್ರಮರಿಯ ಉದಾಹರಣ, ಸರ್ಪದ ಉದಾಹರಣ, ಆಮೆಯ ಉದಾಹರಣೆ ಎಲ್ಲವೂ ಶಾಸ್ತ್ರಗಳಲ್ಲಿವೆ. ಸನ್ಯಾಸಿಗಳೂ ಸಹ ಈ ಉದಾಹರಣೆ ತಿಳಿಸುತ್ತಾರೆ - ಈಗ ನೀವು ಮಕ್ಕಳು ತಂದೆಯ ಮೂಲಕ ಇದೆಲ್ಲವನ್ನೂ ತಿಳಿದುಕೊಳ್ಳುತ್ತಿದ್ದೀರಿ. ಅದಂತೂ ಭಕ್ತಿಮಾರ್ಗವಾಯಿತು, ಕಳೆದು ಹೋದುದರ ಗಾಯನ ಮಾಡುವುದು. ಇದು ಮತ್ತೆ ನಂತರದಲ್ಲಿ ಗಾಯನವಾಗುತ್ತದೆ. ಈ ಸಮಯದಲ್ಲಿಯೇ ತಂದೆಯು ಈ ತನುವಿನಲ್ಲಿ ಬರುತ್ತಾರೆ. ಈ ಬ್ರಹ್ಮಾರವರಿಗೆ ಭಗವಂತನೆಂದು ಹೇಳಲಾಗುವುದಿಲ್ಲ. ಅದಂತೂ ಅಂಧಶ್ರದ್ಧೆಯಾಗುತ್ತದೆ, ಇಂತಹ ಮನುಷ್ಯರೂ ಇದ್ದಾರೆ, ರಾಮನನ್ನು, ಕೃಷ್ಣನನ್ನು ಭಗವಂತನೆಂದು ತಿಳಿಯುತ್ತಾರೆ. ಕೃಷ್ಣನಿಗೂ, ರಾಮನಿಗೂ ಸರ್ವವ್ಯಾಪಿಯೆಂದು ಹೇಳಿ ಬಿಡುತ್ತಾರೆ. ಕೆಲವರು ಕೃಷ್ಣ ಪಂಥದವರು, ಕೆಲವರು ರಾಧೆಯ ಪಂಥದವರಿರುತ್ತಾರೆ. ರಾಧೆಯ ಪಂಥದವರು ಎಲ್ಲಿ ನೋಡಿದರಲ್ಲಿ ರಾಧೆಯೇ ರಾಧೆ ಎಂದು ಹೇಳುತ್ತಾರೆ. ಕೃಷ್ಣ ಪಂಥದವರು ಎಲ್ಲಾ ಕಡೆಯೂ ಕೃಷ್ಣನೇ ಕೃಷ್ಣನಿದ್ದಾನೆಂದು, ರಾಮ ಪಂಥದವರು ರಾಮನೇ ರಾಮನೆಂದು ಹೇಳುತ್ತಾರೆ. ರಾಮನು ಕೃಷ್ಣನಿಗಿಂತ ದೊಡ್ಡವನೆಂದು ತಿಳಿಯುತ್ತಾರೆ ಏಕೆಂದರೆ ರಾಮನನ್ನು ತ್ರೇತಾಯುಗದಲ್ಲಿಯೂ, ಕೃಷ್ಣನನ್ನು ದ್ವಾಪರ ಯುಗಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಎಷ್ಟೊಂದು ಅಜ್ಞಾನವಿದೆ, ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಿದ್ದಾರೆ, ಎಷ್ಟೊಂದು ಮಂದಿ ಬ್ರಹ್ಮಾಕುಮಾರ-ಕುಮಾರಿಯರಿದ್ದಾರೆಂದರೆ ಅವಶ್ಯವಾಗಿ ಬೇಹದ್ದಿನ ತಂದೆಯೂ ಇರುವರು. ನೀವು ಯಾರೊಂದಿಗಾದರೂ ಕೇಳಿರಿ, ಪ್ರಜಾಪಿತ ಬ್ರಹ್ಮನ ಹೆಸರನ್ನು ಎಂದಾದರೂ ಕೇಳಿದ್ದೀರಾ? ತಂದೆಯು ಸ್ವರ್ಗದ ಹೊಸ ರಚನೆಯನ್ನು ರಚಿಸಿದ್ದಾರೆ, ಬ್ರಹ್ಮಾರವರ ಮೂಲಕ ಬ್ರಾಹ್ಮಣರೆಂದು ಗಾಯನವಿದೆ, ಎಲ್ಲಿಯವರೆಗೆ ನೀವೆಲ್ಲಾ ಬ್ರಾಹ್ಮಣರು ಬ್ರಹ್ಮ ಮುಖವಂಶಾವಳಿ ಆಗುವುದಿಲ್ಲವೋ ಅಲ್ಲಿಯವರೆಗೆ ತಾತನಿಂದ ಆಸ್ತಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಬೇಹದ್ದಿನ ಮಕ್ಕಳು ಬೇಹದ್ದಿನ ಆಸ್ತಿಯನ್ನು ತಂದೆಯಿಂದಲೇ ತೆಗೆದುಕೊಳ್ಳುತ್ತೀರಿ, ಅವಶ್ಯವಾಗಿ ತೆಗೆದುಕೊಂಡಿದ್ದಿರಿ ಸ್ವರ್ಗವಾಸಿಗಳಾಗಿದ್ದಿರಿ, ಈಗ ನರಕವಾಸಿಗಳಾಗಿ ಬಿಟ್ಟಿದ್ದೀರಿ. ಈಗ ಪುನಃ ಪ್ರಜಾಪಿತ ಬ್ರಹ್ಮಾರವರ ಮೂಲಕ ಪರಮಪಿತ ಪರಮಾತ್ಮನು ವಿಷ್ಣುಪುರಿ, ಸ್ವರ್ಗವನ್ನು ರಚಿಸುತ್ತಿದ್ದಾರೆ. ಎಷ್ಟೊಂದು ಸಹಜವಾಗಿದೆ! ಶಿವ ತಂದೆಯು ಕೇಳುತ್ತಾರೆ - ಮೊದಲು ನಿಮಗೆ ಈ ಜ್ಞಾನವಿತ್ತೆ? ಇವರ (ಬ್ರಹ್ಮಾ) ಆತ್ಮವು ಹೇಳುತ್ತದೆ, ನನ್ನಲ್ಲಿಯೂ ಈ ಜ್ಞಾನವಿರಲಿಲ್ಲ, ನಾನೂ ಸಹ ವಿಷ್ಣುವಿನ ಪೂಜಾರಿಯಾಗಿದ್ದೆನು. ನಾನು ಪೂಜ್ಯನಾಗಿದ್ದೆನು, ಈಗ ಬಂದು ಪೂಜಾರಿಯಾಗಿದ್ದೇನೆ, ಈಗ ಪುನಃ ತಂದೆಯು ಬಂದು ಪೂಜಾರಿಯಿಂದ ಪೂಜ್ಯ ದೇವತೆಯನ್ನಾಗಿ ಮಾಡುತ್ತಿದ್ದಾರೆ. ನೀವು ಮಕ್ಕಳಿಗೆ ಆಂತರ್ಯದಲ್ಲಿ ಖುಷಿಯಿರಬೇಕು. ಪರಮಪಿತ ಪರಮಾತ್ಮನು ಬಂದು ನಮ್ಮನ್ನು ದತ್ತು ಮಾಡಿಕೊಂಡಿದ್ದಾರೆ. ಮನುಷ್ಯರು ಮನುಷ್ಯರನ್ನು ದತ್ತುಮಾಡಿಕೊಳ್ಳುತ್ತಾರಲ್ಲವೆ. ಯಾರಿಗೆ ತಮ್ಮ ಮಕ್ಕಳಿರುವುದಿಲ್ಲವೋ ಅವರು ದತ್ತು ಮಾಡಿಕೊಳ್ಳುತ್ತಾರಲ್ಲವೆ. ಇಂತಹವರೂ ಅನೇಕರಿದ್ದಾರೆ. ಈಗ ತಂದೆಗೆ ತಿಳಿದಿದೆ - ನನ್ನ ಮಕ್ಕಳೆಲ್ಲರೂ ರಾವಣನಿಗೆ ವಶವಾಗಿ ಬಿಟ್ಟಿದ್ದಾರೆ. ಆದ್ದರಿಂದ ನಾನು ಬಂದು ಪುನಃ ದತ್ತು ತೆಗೆದುಕೊಳ್ಳಬೇಕಾಗುತ್ತದೆ. ಬ್ರಹ್ಮಾರವರ ಮೂಲಕ ತನ್ನ ಮಕ್ಕಳನ್ನು ದತ್ತು ಮಾಡಿಕೊಳ್ಳುತ್ತಾರೆ. ಇದು ಎಷ್ಟು ಅದ್ಭುತವಾಗಿದೆ! ಶಿವ ತಂದೆಯು ನಮ್ಮನ್ನು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆಂದು ನೀವೇ ತಿಳಿದುಕೊಂಡಿದ್ದೀರಿ. ತಂದೆಯು ತಿಳಿಸುತ್ತಾರೆ - ನಾನು ನಿಮಗೆ ಬೇಹದ್ದಿನ ಸುಖದ ಆಸ್ತಿಯನ್ನು ಕೊಡುವುದಕ್ಕಾಗಿ ನೀವು ಮಕ್ಕಳನ್ನು ದತ್ತು ಮಾಡಿಕೊಂಡಿದ್ದೇನೆ. ಈ ಬ್ರಹ್ಮಾರವರಂತೂ ಆಸ್ತಿಯನ್ನು ಕೊಡಲು ಸಾಧ್ಯವಿಲ್ಲ. ಈ ಪ್ರಜಾಪಿತ ಬ್ರಹ್ಮನೂ ಮನುಷ್ಯನಲ್ಲವೆ, ಮನುಷ್ಯರು ಈ ಜ್ಞಾನವನ್ನು ಕೊಡುವುದಿಲ್ಲ. ಜ್ಞಾನ ಸಾಗರ, ನಿರಾಕಾರ, ಪರಮಪಿತ ಪರಮಾತ್ಮನೇ ಕುಳಿತು ಈ ಜ್ಞಾನವನ್ನು ಕೊಡುತ್ತಾರೆ. ಬ್ರಹ್ಮನಿಗಾಗಲಿ, ವಿಷ್ಣುವಿಗಾಗಲಿ ಜ್ಞಾನ ಸಾಗರನೆಂದು ಹೇಳಲಾಗುವುದಿಲ್ಲ. ಈ ಮೂವರ ಮಹಿಮೆಯು ಭಿನ್ನವಾಗಿದೆ, ಜ್ಞಾನ ಸಾಗರ, ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಇಡೀ ಪ್ರಪಂಚದ ಮನುಷ್ಯ ಮಾತ್ರರು ಅವರನ್ನು ಕರೆಯುತ್ತಾರೆ. ಇಂಗ್ಲೀಷಿನಲ್ಲಿಯೂ ಅವರು ಲಿಬರೇಟರ್ ಆಗಿದ್ದಾರೆಂದು ಹೇಳುತ್ತಾರೆ. ಯಾರಿಂದ ದುಃಖವು ಸಿಗುತ್ತದೆಯೋ ಅವರಿಂದ ಲಿಬರೇಟ್ ಮಾಡಲಾಗುತ್ತದೆ, ತಂದೆಯೂ ಸಹ ಇಲ್ಲಿ ಬಂದು ರಾವಣನಿಂದ ಲಿಬರೇಟ್ ಮಾಡುತ್ತಾರೆ. ರಾವಣ ರಾಜ್ಯವು ಇಲ್ಲಿಯೇ ಆಗಿದೆ, ಇಲ್ಲಿಯೇ ರಾವಣನನ್ನು ಸುಡುತ್ತಾರೆ, ಸುಟ್ಟು ಮತ್ತೆ ಹೇಳುತ್ತಾರೆ - ಚಿನ್ನದ ಲಂಕೆಯನ್ನು ಲೂಟಿ ಮಾಡಲು ಹೋಗುತ್ತೇವೆ. ಅವರಿಗೆ ಏನೂ ತಿಳಿದಿಲ್ಲ, ರಾವಣನೆಂದರೆ ಏನು? ಯಾವಾಗಿನಿಂದ ಶತ್ರುವಾಗಿದ್ದಾನೆ ಎಂಬುದನ್ನು ತಿಳಿದುಕೊಂಡಿಲ್ಲ. ರಾಮನ ಸೀತೆಯ ಅಪಹರಣವಾಯಿತು ಎಂದು ತಿಳಿಯುತ್ತಾರೆ ಆದರೆ ನಾವೆಲ್ಲರೂ ಸೀತೆಯರಾಗಿದ್ದೇವೆ. ನಾವು ರಾವಣನ ಬಂಧನದಲ್ಲಿ ಸಿಲುಕಿದ್ದೇವೆಂದು ತಿಳಿದುಕೊಳ್ಳುವುದಿಲ್ಲ. ಈ ಜ್ಞಾನವು ಯಾರಲ್ಲಿಯೂ ಇಲ್ಲ. ಕುಳಿತು ಕಥೆಗಳನ್ನು ತಿಳಿಸುತ್ತಾರೆ. ಶಿವ ತಂದೆಯು ಹೇಳುತ್ತಾರೆ, ನಾನು ದೂರದೇಶದ ನಿವಾಸಿ ಈ ಪರದೇಶದಲ್ಲಿ ಬಂದಿದ್ದೇನೆ. ಇದು ಪತಿತ, ಹಳೆಯ ಪ್ರಪಂಚವಲ್ಲವೆ. ಇದು ರಾವಣನ ಪ್ರಪಂಚವಾಗಿದೆ. ಹೇ ತಂದೆಯೇ ಬಂದು ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು ಕರೆಯುತ್ತಾರೆ, ತಂದೆಯು ತಿಳಿಸುತ್ತಾರೆ - ನಾನು ಪಾವನರನ್ನಾಗಿ ಮಾಡಲು ಈ ಪತಿತ ಪ್ರಪಂಚದಲ್ಲಿ ಬರಬೇಕಾಗುತ್ತದೆ ಮತ್ತು ಯಾರು ಮೊಟ್ಟ ಮೊದಲ ನಂಬರಿನಲ್ಲಿ ಪಾವನರಾಗಿದ್ದರೋ, ಯಾರು ಸುಂದರನಾಗಿದ್ದರೋ ಅವರೇ ಶ್ಯಾಮನಾಗಿದ್ದಾರೆ. ಅವರ ತನುವಿನಲ್ಲಿಯೇ ಬರುತ್ತೇನೆ. ಎಷ್ಟು ಅದ್ಭುತ ಮಾತುಗಳಾಗಿವೆ. ಕೃಷ್ಣನಿಗೆ ಶ್ಯಾಮ ಸುಂದರನೆಂದು ಹೇಳುತ್ತಾರೆ, ಇದು ಯಾರಿಗೂ ತಿಳಿದಿಲ್ಲ. ಒಬ್ಬ ಕೃಷ್ಣನಿಗೇ ಸರ್ಪವು ಕಚ್ಚಿತ್ತೆ? ಸತ್ಯಯುಗದಲ್ಲಿ ಸರ್ಪ ಇತ್ಯಾದಿಗಳಿರುತ್ತವೆಯೇ? ತಂದೆಯು ತಿಳಿಸುತ್ತಾರೆ - ಈ ಅಂತಿಮ ಜನ್ಮದಲ್ಲಿ ನನ್ನ ಕಾರಣ ಪವಿತ್ರರಾಗಿ, ಆಗ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಕೇವಲ ನನ್ನನ್ನು ನೆನಪು ಮಾಡಿ ಮತ್ತು ಪವಿತ್ರರಾಗಿರಿ. ಅಲೀಫನನ್ನು ನೆನಪು ಮಾಡಿದರೆ ಬಾದಶಾಹಿಯಾಗಿ ನಿಮ್ಮದಾಗುವುದು. ಇದು ಸಹಜ ರಾಜಯೋಗ, ಸಹಜ ರಾಜ್ಯಭಾಗ್ಯವಾಗಿದೆ. ಮಗು ಜನ್ಮ ಪಡೆದನೆಂದರೆ ಆಸ್ತಿಗೆ ಹಕ್ಕುದಾರನಾಗಲು ಇಲ್ಲಿಯೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ - ನಾವು ತಂದೆಯ ಮಕ್ಕಳಾಗಿದ್ದೇವೆ ಅಂದಮೇಲೆ ಸ್ವರ್ಗದ ರಾಜ್ಯಭಾಗ್ಯಕ್ಕೆ ನಾವು ಹಕ್ಕುದಾರರಾಗಿದ್ದೇವೆ. ಈಗ ತಂದೆಯು ತಿಳಿಸುತ್ತಾರೆ - ಮಕ್ಕಳೇ, ನೀವು ಸತೋಪ್ರಧಾನರಿಂದ ತಮೋಪ್ರಧಾನರಾಗಿ ಬಿಟ್ಟಿದ್ದೀರಿ. ಈಗ ಪುನಃ ಸತೋಪ್ರಧಾನರಾಗಬೇಕಾಗಿದೆ. ಯೋಗ ಮತ್ತು ಜ್ಞಾನವನ್ನು ಕಲಿಸುವುದರಲ್ಲಿ ಒಂದು ಸೆಕೆಂಡ್ ಹಿಡಿಸುತ್ತದೆ, ಮಗುವಿನ ಜನ್ಮವಾಯಿತು ಎಂದರೆ ವಾರಸುಧಾರನೆಂಬ ನಿಶ್ಚಯ ಮಾಡಿಕೊಳ್ಳುವರು. ನೀವು ತಂದೆಯವರಾಗಿದ್ದೀರಿ ಎಂದಮೇಲೆ ರಾಜಧಾನಿಯು ಆಸ್ತಿಯು ನಿಮ್ಮದಾಗಿದೆ. ಆದರೆ ಎಲ್ಲರೂ ರಾಜ-ರಾಣಿಯಾಗುವುದಿಲ್ಲ, ಇದು ರಾಜಯೋಗವಾಗಿದೆ. ರಾಜ-ರಾಣಿ, ಪ್ರಜೆ, ಸಹಕಾರರು, ಬಡವರು ಎಲ್ಲರೂ ಬೇಕು ಆದ್ದರಿಂದ ರುದ್ರ ಮಾಲೆಯು ಮಾಡಲ್ಪಟ್ಟಿದೆ ಯಾವುದನ್ನು ಭಕ್ತಿಮಾರ್ಗದಲ್ಲಿ ಜಪಿಸುತ್ತಾರೆ. ನಾವು ರಾಜಯೋಗವನ್ನು ಕಲಿಯಲು ಬಂದಿದ್ದೇವೆ, ಮಾತಾಪಿತರನ್ನು ಫಾಲೋ ಮಾಡಿ ಮೊಟ್ಟ ಮೊದಲು ಸೂರ್ಯವಂಶಿ ನಂತರ ಚಂದ್ರವಂಶಿಯರಾಗುತ್ತೇವೆ ಎಂದು ತಿಳಿದುಕೊಂಡಿದ್ದೀರಿ. ಯಾರು ಮಾತಾಪಿತರನ್ನು ಫಾಲೋ ಮಾಡಿ ಸಿಂಹಾಸನಾಧೀಶರಾಗುವರೋ ಅವರೇ ಸುಪುತ್ರರು. ತೀವ್ರ ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ, ನನ್ನನ್ನು ನೆನಪು ಮಾಡಿರಿ ಎಂದು. ಆದರೆ ಮಾಡುವುದೇ ಇಲ್ಲ. ಶ್ರೀಮತದಂತೆ ನಡೆಯುವುದಿಲ್ಲ. ಒಳಗೆ ಸತ್ಯತೆಯಿಲ್ಲ. ಹೃದಯವು ಸತ್ಯವಾಗಿದ್ದರೆ ಶ್ರೀಮತದಂತೆ ನಡೆಯುತ್ತಾರೆ. ತಂದೆಯನ್ನು ನೆನಪು ಮಾಡುತ್ತಾ ಇರುತ್ತಾರೆ. ಶ್ರೀಮತದ ಅನುಸಾರವೇ ನಿಮಗೆ ತಾತನಿಂದ ಆಸ್ತಿಯು ಸಿಗುತ್ತದೆ. ಬ್ರಹ್ಮನು ಸ್ವರ್ಗದ ಆಸ್ತಿಯನ್ನು ಕೊಡಲು ಸಾಧ್ಯವಿಲ್ಲ. ತಾತನ ಸಂಪಾದನೆಯ ಮೇಲೆ ಮೊಮ್ಮಕ್ಕಳ ಅಧಿಕಾರವಿರುತ್ತದೆ. ತಂದೆಯ ಸಂಪಾದನೆ ಮಕ್ಕಳು ಭಾಗೀಧಾರರಾಗುತ್ತಾರೆ. ಅಂದಾಗ ಹಕ್ಕುದಾರರಾಗಿದ್ದಾರೆ. ಇಲ್ಲಿ ನಿಮಗೆ ಶಿವ ತಂದೆಯಿಂದ ಆಸ್ತಿಯು ಸಿಗುತ್ತದೆ. ತಂದೆಯಿಂದಲೇ ಜ್ಞಾನರತ್ನಗಳು ಸಿಗುತ್ತವೆ.
ನೀವು ತಿಳಿದುಕೊಂಡಿದ್ದೀರಿ - ನಾವು ಬ್ರಾಹ್ಮಣರೇ ಮತ್ತೆ ದೇವಿ-ದೇವತೆಗಳಾಗುತ್ತೇವೆ. ಜಗದಂಬೆ ಯಾರಾಗಿದ್ದಾರೆ? ತಂದೆಯು ತಿಳಿಸುತ್ತಾರೆ - ಇವರು ಬ್ರಾಹ್ಮಣಿಯಾಗಿದ್ದರು, ಜ್ಞಾನ ಜ್ಞಾನೇಶ್ವರಿಯಾಗಿದ್ದರು, ಇವರೇ ನಂತರ ರಾಜ ರಾಜೇಶ್ವರಿ ಯಾಗುತ್ತಾರೆ. ನೀವೂ ಸಹ ಆ ರೀತಿ ಆಗುತ್ತೀರಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಆತ್ಮದಲ್ಲಿರುವ ತಮೋಪ್ರಧಾನತೆಯ ಸಂಸ್ಕಾರವನ್ನು ನೆನಪಿನ ಬಲದಿಂದ ಪರಿವರ್ತನೆ ಮಾಡಿಕೊಳ್ಳಬೇಕಾಗಿದೆ, ಸತೋಪ್ರಧಾನರಾಗಬೇಕಾಗಿದೆ.
2. ತಂದೆಯಿಂದ ರಾಜಧಾನಿಯ ಆಸ್ತಿಯನ್ನು ತೆಗೆದುಕೊಳ್ಳಲು ತೆಗೆದುಕೊಳ್ಳಲು ಸದಾ ಸುಪುತ್ರರಾಗಿ ಶ್ರೀಮತದಂತೆ ನಡೆಯಬೇಕಾಗಿದೆ. ಸತ್ಯತಂದೆಯೊಂದಿಗೆ ಸತ್ಯವಾಗಿರಬೇಕಾಗಿದೆ, ಮಾತಾಪಿತರನ್ನು ಪೂರ್ಣ ಫಾಲೋ ಮಾಡಬೇಕಾಗಿದೆ. ಜ್ಞಾನರತ್ನಗಳ ದಾನವನ್ನು ಮಾಡುತ್ತಿರಬೇಕಾಗಿದೆ.
ಓಂ ಶಾಂತಿ. ಓಂ ಶಾಂತಿಯ ಅರ್ಥ ಘಳಿಗೆ-ಘಳಿಗೆಗೆ ಹೇಳಬೇಕಾಗುತ್ತದೆ, ಓಂ ಶಾಂತಿಯ ಅರ್ಥ ಯಾರಿಗೂ ಗೊತ್ತಿಲ್ಲ. ಮನ್ಮಮನಾಭವದ ಅರ್ಥ ಬೇಹದ್ದಿನ ತಂದೆಯನ್ನು ನೆನಪು ಮಾಡಿ ಎಂದು ಘಳಿಗೆ-ಘಳಿಗೆಗೆ ಹೇಳಬೇಕಾಗುತ್ತದೆ. ಓಂ ಶಾಂತಿಯ ಅರ್ಥ ಭಗವಂತ ಎಂದು ಹೇಳಿ ಬಿಡುತ್ತಾರೆ. ಓಂ ಅರ್ಥಾತ್ ನಾನು ಆತ್ಮ ಇದು ನನ್ನ ಶರೀರ ಎಂದು ತಂದೆ ತಿಳಿಸುತ್ತಾರೆ. ಪರಮಪಿತ ಪರಮಾತ್ಮನೂ ಸಹ ಓಂ ಎಂದು ಹೇಳುತ್ತಾರೆ, ನಾನು ಆತ್ಮನಾಗಿದ್ದೇನೆ ಪರಮಧಾಮದಲ್ಲಿ ಇರುತ್ತೇನೆ. ನೀವು ಆತ್ಮಗಳು ಜನನ-ಮರಣ ಚಕ್ರದಲ್ಲಿ ಬರುತ್ತೀರಿ. ನಾನು ಬರುವುದಿಲ್ಲ, ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ನೀವು ಮಕ್ಕಳಿಗೆ ಕೊಡಲು ಸಾಕಾರದಲ್ಲಿ ಬರುತ್ತೇನೆ. ಇದನ್ನು ಯಾರು ತಿಳಿಸಲು ಸಾಧ್ಯವಿಲ್ಲ. ಒಂದುವೇಳೆ ನಿಶ್ಚಯವಿಲ್ಲ ಎಂದರೆ ಜಗತ್ತನ್ನು ಸುತ್ತಿ ಬನ್ನಿ ಹುಡುಕಿದರೂ ಯಾರಾದರೂ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ಕೊಡುತ್ತಾರೆಯೇ? ಎಂದು.
ಪರಮಪಿತ ಪರಮಾತ್ಮನ ಹೊರತು ಸೃಷ್ಟಿಚಕ್ರದ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸಲು ಸಾಧ್ಯವಿಲ್ಲ, ಯಾರು ರಾಜಯೋಗವನ್ನು ಕಲಿಸಿ ಕೊಡಲು ಸಾಧ್ಯವಿಲ್ಲ. ಪತಿತರನ್ನು ಪಾವನ ಮಾಡಲು ಸಾಧ್ಯವಿಲ್ಲ. ಮೊಟ್ಟ ಮೊದಲು ದೇವಿ-ದೇವತೆಗಳ ಪೂಜಾರಿಗಳಿಗೆ ಹೇಳುವ ಪುರುಷಾರ್ಥ ಮಾಡಬೇಕು. ಆದಿ ಸನಾತನ ದೇವಿ-ದೇವತಾ ಧರ್ಮದವರೇ ಪೂರಾ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ, ಅವರೇ ಈ ಜ್ಞಾನವನ್ನು ಕೇಳುತ್ತಾರೆ ನಂತರ ಬರುವವರು 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ಯಾರು ದೇವತೆಗಳ ಪೂಜಾರಿಗಳಿದ್ದಾರೆಯೋ ಮತ್ತು ಗೀತೆಯನ್ನು ಓದುವವರಿದ್ದಾರೆಯೋ ಅವರೇ ಇದನ್ನು ಕೇಳುತ್ತಾರೆ. ಗೀತೆಯಲ್ಲಿ ಕೇವಲ ಒಂದು ತಪ್ಪು ಮಾಡಿದ್ದಾರೆ - ಭಗವಂತನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿದ್ದಾರೆ. ಗೀತೆಯನ್ನು ಓದುವವರಿಗೆ ತಿಳಿಸಿ ಹೇಳಬೇಕು. ಪರಮಪಿತ ಪರಮಾತ್ಮನ ಶಿವನ ಜೊತೆ ನಿಮಗೆ ಸಂಬಂಧವೇನು ಎಂದು ಕೇಳಬೇಕು, ಅವರಿಗೆ ಭಗವಂತನೆಂದು ಹೇಳಲಾಗುತ್ತದೆ. ಶ್ರೀಕೃಷ್ಣನಂತೂ ದೈವೀ ಗುಣವುಳ್ಳವನಾಗಿದ್ದಾನೆ, ಅವನಿಗೆ ದೈವೀ ರಾಜಧಾನಿಯಿತ್ತು. ಅದರಲ್ಲಿ ದೈವೀ ಗುಣವುಳ್ಳವರಾಗಿದ್ದರು. ಈಗ ಅವರೇ ಪೂಜ್ಯರಿಂದ ಪೂಜಾರಿಗಳಾಗಿದ್ದಾರೆ. ಅಂದಮೇಲೆ ಪ್ರಯತ್ನಪಟ್ಟು ಮೊಟ್ಟ ಮೊದಲು ಆದಿ ಸನಾತನ ದೇವಿ-ದೇವತಾ ಧರ್ಮದವರನ್ನು ಮೇಲೆತ್ತಬೇಕಾಗಿದೆ. ಚಾರಿಟಿ ಬಿಗಿನ್ಸ್ ಅಟ್ ಹೋಮ್, ಯಾರು ಶಿವನ ಪೂಜಾರಿಗಳಿದ್ದಾರೆಯೋ ಅವರಿಗೂ ಸಹ ತಿಳಿಸಬೇಕು ಅಂದಮೇಲೆ ಶಿವನು ಅವಶ್ಯವಾಗಿ ಬಂದಿರಬೇಕು. ಆದ್ದರಿಂದಲೇ ಶಿವ ಜಯಂತಿಯನ್ನೂ ಆಚರಿಸುತ್ತಾರೆ, ಅವರು ಪರಮಪಿತ ಪರಮಾತ್ಮನಾಗಿದ್ದಾರೆ. ಅವಶ್ಯವಾಗಿ ಬಂದು ರಾಜಯೋಗವನ್ನೂ ಕಲಿಸಿರಬೇಕು ಮತ್ತ್ಯಾವ ಮನುಷ್ಯರೂ ಇದನ್ನು ಕಲಿಸಲು ಸಾಧ್ಯವಿಲ್ಲ. ಕೃಷ್ಣನಿಗಾಗಲಿ ಅಥವಾ ಬ್ರಹ್ಮನಿಗಾಗಲಿ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಎಲ್ಲರ ಸದ್ಗತಿದಾತ ಒಬ್ಬ ತಂದೆಯೇ ಆಗಿದ್ದಾರೆ, ಅವರು ಜ್ಞಾನದ ಸಾಗರನಾಗಿರುವ ಕಾರಣ ಎಲ್ಲರ ಶಿಕ್ಷಕನಾಗಿದ್ದಾರೆ. ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಇತಿಹಾಸ-ಭೂಗೋಳವು ಬೇರೆ ಯಾರಿಗೂ ಗೊತ್ತಿಲ್ಲ. ನನ್ನನ್ನು ಜ್ಞಾನಸಾಗರ, ಚೈತನ್ಯ ಬೀಜರೂಪನೆಂದೂ ಕರೆಯುತ್ತಾರೆ, ಇದಂತೂ ಉಲ್ಟಾ ವೃಕ್ಷವಾಗಿದೆ. ಆ ಬೀಜದಲ್ಲಿಯೇ ಆದಿ-ಮಧ್ಯ-ಅಂತ್ಯದ ಜ್ಞಾನವು ಇದೆ. ಇದರಿಂದಲೇ ನನ್ನನ್ನು ಜ್ಞಾನ ಸಾಗರ, ಆಲ್ಮೈಟಿ ಅಥಾರಿಟಿ ಎಂದು ಕರೆಯುತ್ತಾರೆ. ಯಾವುದರ ಅಥಾರಿಟಿ? ಎಲ್ಲಾ ವೇದಗಳು, ಶಾಸ್ತ್ರಗಳು, ಗ್ರಂಥಗಳನ್ನೂ ತಿಳಿದಿದ್ದಾರೆ. ಅದನ್ನು ನೀವು ಮಕ್ಕಳಿಗೆ ತಿಳಿಸುತ್ತಿದ್ದಾರೆ. ಆ ಶಾಸ್ತ್ರಗಳನ್ನು ಹೇಳುವವರು ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಾಗಿದೆ ಎಂದು ತಿಳಿಸುತ್ತಾರೆ. ಆದರೆ ಅದಂತೂ ಆಗಲು ಸಾಧ್ಯವಿಲ್ಲ. ಇದು ವೆರೈಟಿ ಮನುಷ್ಯ ಸೃಷ್ಟಿ ವೃಕ್ಷ, ಇದರ ಆಯಸ್ಸನ್ನು ಭಾಗವತದಲ್ಲಿ ಉದ್ದಗಲವನ್ನಾಗಿ ಮಾಡಿ ಬರೆದು ಬಿಟ್ಟಿದ್ದಾರೆ. ಭಾಗವತವು ಯಾವುದೇ ಧರ್ಮ ಶಾಸ್ತ್ರವಲ್ಲ. ಗೀತೆಯು ಧರ್ಮ ಶಾಸ್ತ್ರವಾಗಿದೆ, ಇದರಿಂದ ದೇವಿ-ದೇವತಾ ಧರ್ಮವು ಸ್ಥಾಪನೆಯಾಯಿತು, ಬಾಕಿ ಭಾಗವತ, ಮಹಾಭಾರತ ಇತ್ಯಾದಿಗಳಿಂದ ಯಾವುದೇ ಧರ್ಮವು ಸ್ಥಾಪನೆ ಆಗುವುದಿಲ್ಲ. ಅವರಂತೂ ಶ್ರೀಕೃಷ್ಣನ ಇತಿಹಾಸವನ್ನು ಬರೆದಿದ್ದಾರೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, 84 ಜನ್ಮಗಳನ್ನು ನೀವೇ ತೆಗೆದುಕೊಂಡಿದ್ದೀರಿ ಎಂದು ದೇವಿ-ದೇವತಾ ಧರ್ಮದವರಿಗೆ ತಿಳಿಸಿ. ಸತ್ಯಯುಗದಲ್ಲಿ ಕೇವಲ ಭಾರತವು ಮಾತ್ರವೇ ಇತ್ತು, ಮತ್ತ್ಯಾವ ಧರ್ಮವೂ ಇರಲಿಲ್ಲ. ಭಾರತವೇ ಸ್ವರ್ಗವಾಗಿತ್ತು. ಭಾರತವನ್ನೇ ಶ್ರೇಷ್ಠಾತಿ ಶ್ರೇಷ್ಠವಾದುದು ಎಂದು ಹಾಡುತ್ತಾರೆ ಮತ್ತು ಪರಮಪಿತ ಪರಮಾತ್ಮ ಶಿವನ ಜನ್ಮಸ್ಥಾನವಾಗಿದೆ ಯಾರು ಬಂದು ಪತಿತರನ್ನು ಪಾವನ ಮಾಡುತ್ತಾರೆ. ಶಿವನ ಪೂಜೆಯೂ ಸಹ ಇಲ್ಲಿಯೇ ಆಗುತ್ತದೆ, ಜಯಂತಿಯನ್ನೂ ಸಹ ಇಲ್ಲಿಯೇ ಆಚರಿಸುತ್ತಾರೆ. ಅವಶ್ಯವಾಗಿ ಪತಿತ ಪ್ರಪಂಚದಲ್ಲಿಯೇ ಬಂದಿರಬೇಕಲ್ಲವೆ. ಪತಿತ-ಪಾವನ ಬನ್ನಿ ಎಂದು ಎಲ್ಲರೂ ಕರೆಯುತ್ತಾರೆ. ಭಾರತವು ಪಾವನವಾಗಿತ್ತು, ನಂತರ 84 ಜನ್ಮಗಳ ಚಕ್ರವನ್ನು ಸುತ್ತಿದೆವು. ಸ್ವರ್ಗವಾಸಿಗಳು ಯಾರು ಪಾವನರಾಗಿದ್ದರೋ ಅವರೇ ಈಗ ನರಕವಾಸಿ ಪತಿತರಾಗಿದ್ದಾರೆ. ಶಿವತಂದೆಯು ಪಾವನರನ್ನಾಗಿ ಮಾಡಿದರು, ರಾವಣನು ಪತಿತರನ್ನಾಗಿ ಮಾಡಿದನು. ಈ ಸಮಯದಲ್ಲಿ ರಾವಣನ ರಾಜ್ಯವಿದೆ. ಪ್ರತಿಯೊಬ್ಬ ನರ-ನಾರಿಯಲ್ಲಿಯೂ ಸಹ ಪಂಚ ವಿಕಾರಗಳಿವೆ. ಸತ್ಯಯುಗದಲ್ಲಿ ವಿಕಾರಗಳಿರುವುದಿಲ್ಲ, ನಿರ್ವಿಕಾರಿಗಳಾಗಿದ್ದರು, ಈಗ ಎಲ್ಲರೂ ಪತಿತರಾಗಿರುವುದರಿಂದ ಬನ್ನಿ, ನಮ್ಮನ್ನು ಮತ್ತೆ ಪಾವನವನ್ನಾಗಿ ಮಾಡಿ ಎಂದು ಕರೆಯುತ್ತಾರೆ. ಸತ್ಯಯುಗದಲ್ಲಿ ನಾವೇ ಪಾವನರಾಗಿದ್ದೆವು, 21 ಜನ್ಮಗಳು ರಾಮ ರಾಜ್ಯದಲ್ಲಿದ್ದೆವು. ಈಗಂತೂ ರಾವಣ ರಾಜ್ಯವಾಗಿದೆ, ಎಲ್ಲರೂ ವಿಕಾರಿಗಳಾಗಿದ್ದಾರೆ. ಕಾಮ ಮಹಾಶತ್ರುವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ಇದು ಆದಿ-ಮಧ್ಯ-ಅಂತ್ಯ ದುಃಖವನ್ನು ಕೊಡುತ್ತದೆ. ಇದರ ಮೇಲೆಯೇ ಜಯ ಗಳಿಸಿ ಪಾವನರಾಗಿ. ನೀವು ಜನ್ಮ-ಜನ್ಮಾಂತರದಿಂದ ಪಾಪ ಮಾಡಿದ್ದೀರಿ. ಎಲ್ಲರಿಗಿಂತ ತಮೋಪ್ರಧಾನರಾಗಿದ್ದೀರಿ, ಆತ್ಮದಲ್ಲಿಯೇ ತುಕ್ಕು ಹಿಡಿದಿದೆ. ಮೊದಲು ಚಿನ್ನದ ಯುಗವಿತ್ತು ನಂತರ ಬೆಳ್ಳಿಯ ಯುಗ, ನಂತರ ತಾಮ್ರದ ಯುಗ.... ತುಕ್ಕು ಹಿಡಿಯುತ್ತಾ-ಹಿಡಿಯುತ್ತಾ ಏಣಿಯನ್ನು ಇಳಿಯುತ್ತಲೇ ಬಂದಿರಿ. ಇದು ಭಾರತದ್ದೇ ಮಾತಾಗಿದೆ. ಸತ್ಯಯುಗದಲ್ಲಿ 8 ಜನ್ಮಗಳು ನಂತರ ತ್ರೇತಾದಲ್ಲಿ 12 ಜನ್ಮ, ನಂತರ ಅವರೇ ಭಾರತವಾಸಿ ಚಂದ್ರವಂಶಿ, ವೈಶ್ಯವಂಶಿ.... ಆಗುತ್ತಾರೆ. ಆತ್ಮವು ಅಪವಿತ್ರವಾಗಿ ಬಿಡುತ್ತದೆ. ಕಲ್ಪ-ಕಲ್ಪವು ಭಾರತವನ್ನು ನಾನು ಸ್ವರ್ಗವನ್ನಾಗಿ ಮಾಡುತ್ತೇನೆ, ನಂತರ ರಾವಣನು ನರಕವನ್ನಾಗಿ ಮಾಡುತ್ತಾನೆ, ಈ ಡ್ರಾಮಾ ಮಾಡಲ್ಪಟಿದೆ ಎಂದು ತಂದೆಯು ತಿಳಿಸುತ್ತಾರೆ. ಜ್ಞಾನ ಸಾಗರನಂತೂ ಶಿವ ತಂದೆಯೇ ಆಗಿದ್ದಾರೆ. ಎಲ್ಲರಿಗಿಂತ ಶ್ರೇಷ್ಠಾತಿ ಶ್ರೇಷ್ಠ ಶಿವ ಆಗಿದ್ದಾರೆ. ಮೊಟ್ಟ ಮೊದಲು ಅವರದೇ ಪೂಜೆಯಾಗುತ್ತದೆ. ಅವರು ಬೇಹದ್ದಿನ ತಂದೆಯಾಗಿದ್ದಾರೆ. ಅವಶ್ಯವಾಗಿ ಅವರಿಂದ ಬೇಹದ್ದಿನ ಆಸ್ತಿಯು ದೊರಕುತ್ತದೆ. ಭಾರತವಾಸಿಗಳು ಮರೆತು ಹೋಗಿದ್ದಾರೆ. ಭಗವಂತನೆಂದು ಒಬ್ಬ ನಿರಾಕಾರನಿಗೇ ಹೇಳಲಾಗುತ್ತದೆ. ಮನುಷ್ಯರು ಅವರನ್ನೇ ನೆನಪು ಮಾಡುತ್ತಾರೆ, ಎಲ್ಲರೂ ಭಗವಂತನೇ ಭಗವಂತ ಎಂದಲ್ಲ. ಒಂದು ಕಡೆ ಭಗವಂತನನ್ನು ನೆನಪು ಮಾಡುತ್ತಾರೆ ಮತ್ತು ಇನ್ನೊಂದು ಕಡೆ ಗ್ಲಾನಿಯೂ ಮಾಡುತ್ತಾರೆ. ಒಂದು ಕಡೆ ಸರ್ವವ್ಯಾಪಿ ಎಂದು ಹೇಳುತ್ತಾರೆ, ಮತ್ತೆ ಪತಿತ-ಪಾವನ ಬಾ ಎಂದು ಕರೆಯುತ್ತಾರೆ. ತಂದೆಯು ಬಂದು ಬ್ರಹ್ಮನ ಶರೀರದಲ್ಲಿ, ಬ್ರಹ್ಮ ಮುಖವಂಶಾವಳಿ ಬ್ರಾಹ್ಮಣರಿಗೇ ತಿಳಿಸುತ್ತಾರೆ. ಈಗ ನೀವು ಜುಟ್ಟಿಗೆ ಸಮಾನರಾಗಿದ್ದೀರಿ. ಬ್ರಾಹ್ಮಣರಿಗಿಂತ ಶಿವ ತಂದೆಯು ಶ್ರೇಷ್ಠರಾಗಿರುವವರು. ವಿರಾಟ ರೂಪದಲ್ಲಿ ದೇವತೆ, ಕ್ಷತ್ರಿಯರು, ವೈಶ್ಯರು, ಶೂದ್ರರನ್ನು ತೋರಿಸುತ್ತಾರೆ. ಬ್ರಾಹ್ಮಣರ ಹೆಸರು ಇಲ್ಲ ಏಕೆಂದರೆ ಬ್ರಾಹ್ಮಣರು ವಿಕಾರಿಗಳಾಗಿದ್ದಾರೆ ಅಂದಮೇಲೆ ದೇವತೆಗಳಿಗಿಂತಲೂ ಉತ್ತಮರೆಂದು ಹೇಗೆ ಹೇಳಲು ಸಾಧ್ಯ. ಅವರು ಬ್ರಾಹ್ಮಣ ದೇವತಾಯ ನಮಃ ಎಂದು ಹಾಡುತ್ತಾರೆ. ಇವರು ಯಾವಾಗ ರಾಜ್ಯಭಾರ ಮಾಡಿದರು, ಸ್ವರ್ಗವು ಯಾವಾಗ ಇತ್ತು ಎಂದು ನಿಖರವಾಗಿ ಯಾರಿಗೂ ಗೊತ್ತಿಲ್ಲ, ಈಗ ನೀವು ತಿಳಿದುಕೊಂಡಿದ್ದೀರಿ - ತಂದೆಯು ಬಂದು ಬ್ರಹ್ಮನ ಮುಖಾಂತರ ಸ್ವರ್ಗದ ಸ್ಥಾಪನೆ, ಶಂಕರನ ಮುಖಾಂತರ ವಿನಾಶವನ್ನು ಮಾಡುತ್ತಾರೆ. ಮಹಾಭಾರತ ಯುದ್ಧವು ನಡೆದಿತ್ತು ಯಾವುದರಿಂದ ಸ್ವರ್ಗದ ದ್ವಾರ ತೆರೆಯಿತು. ಗಾಯನ ಮಾಡುತ್ತಾರೆ ಆದರೆ ಏನೂ ತಿಳಿದಿಲ್ಲ. ರುದ್ರ ಜ್ಞಾನ ಯಜ್ಞದಿಂದ ವಿನಾಶದ ಜ್ವಾಲೆಯು ಪ್ರಜ್ವಲಿತವಾಯಿತೆಂದು ತೋರಿಸುತ್ತಾರೆ. ಅವಶ್ಯವಾಗಿ ಈಗ ಆ ಪಾತ್ರವು ನಡೆಯುತ್ತಿದೆ. 5000 ವರ್ಷಗಳ ಮೊದಲೂ ಸಹ ಯುದ್ಧ ನಡೆದಿತ್ತು, ಯಾವಾಗ ಪತಿತ ಪ್ರಪಂಚದ ವಿನಾಶವಾಗಿತ್ತು. ಗೀತಾ ಜ್ಞಾನವನ್ನು ತಿಳಿಸುವಾಗ ಹೇಳುತ್ತಾರೆ - ಮೂರು ಸೈನ್ಯಗಳಿದ್ದವು, ಯುರೋಪಿಯನ್ನರ ಯಾದವ ಸೇನೆ, ಯಾವುದರಿಂದ ವಿಜ್ಞಾನದ ಅಣ್ವಸ್ತ್ರಗಳನ್ನು ಕಂಡುಹಿಡಿದರು. ಗೀತೆಯು ಪೂರ್ಣವಾಗಿ 5000 ವರ್ಷಗಳಾಯಿತು, ಮೂರು ಸೇನೆಗಳು ಈಗ ಇವೆ ಎಂದು ತಂದೆಯು ತಿಳಿಸುತ್ತಾರೆ. ವಿನಾಶಕಾಲೇ ವಿಪರೀತ ಬುದ್ಧಿ ಅರ್ಥಾತ್ ಪರಮಪಿತ ಪರಮಾತ್ಮನ ಜೊತೆ ವಿಪರೀತ ಬುದ್ಧಿ ಎಂದು ಗಾಯನವಿದೆ. ನಿಮ್ಮ ವಿನಃ ಯಾರದೂ ಸಹ ಪ್ರೀತಿ ಬುದ್ಧಿಯಿಲ್ಲ, ಯಾರೂ ತಿಳಿದುಕೊಂಡಿಲ್ಲ. ಎಲ್ಲರದೂ ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಕೇವಲ ನೀವು ಪಾಂಡವರದು ಪ್ರೀತಿ ಬುದ್ಧಿಯಾಗಿದೆ. ನೀವು ಶಿವ ತಂದೆಯನ್ನು ನೆನಪು ಮಾಡುತ್ತೀರಿ, 21 ಜನ್ಮಗಳಿಗೆ ಆಸ್ತಿಯನ್ನು ಕೊಡಲು ತಂದೆಯು ಬಂದಿದ್ದಾರೆಂದು ತಿಳಿದುಕೊಂಡಿದ್ದೀರಿ. ನಿಮ್ಮದು ಶಿವ ತಂದೆಯೊಂದಿಗೆ ಪ್ರೀತಿ ಬುದ್ಧಿಯಾಗಿದೆ. ಬಾಕಿ ತಂದೆಯನ್ನು ತಿಳಿದುಕೊಂಡಿಲ್ಲವೆಂದರೆ ಮೂರು ಸೇನೆಗಳಾಯಿತಲ್ಲವೆ. ನೀವು ಪಾಂಡವ ಸೇನೆಯವರಾಗಿದ್ದೀರಿ. ವಿನಾಶಕಾಲವಂತೂ ಇದ್ದೇ ಇದೆ. ಸಾವು ಸನ್ಮುಖದಲ್ಲಿ ನಿಂತಿದೆ, ನೀವು ಪವಿತ್ರರಾಗುತ್ತೀರೆಂದರೆ ಹೊಸ ಪ್ರಪಂಚದ ಮಾಲೀಕರಾಗುತ್ತೀರಿ ಎಂದು ತಂದೆಯು ತಿಳಿಸುತ್ತಾರೆ. ಸತ್ಯಯುಗದಲ್ಲಿ ಒಂದೇ ದೇವಿ-ದೇವತಾ ಧರ್ಮವಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಈಗ ಬೇರೆಲ್ಲಾ ಧರ್ಮಗಳಿವೆ, ಆದಿ ಸನಾತನ ದೇವಿ-ದೇವತಾ ಧರ್ಮವೇ ಇಲ್ಲ. ತಮ್ಮನ್ನು ದೇವಿ-ದೇವತೆಗಳೆಂದು ತಿಳಿದುಕೊಂಡಿಲ್ಲ. ನಾವು ಪತಿತರಾಗಿದ್ದೇವೆಂದು ಹೇಳಿಕೊಳ್ಳುತ್ತಾರೆ. ದೇವತೆಗಳ ಮುಂದೆ ಹೋಗಿ ಮಹಿಮೆಯನ್ನೂ ಮಾಡುತ್ತಾರೆ - ನೀವು ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರು.... ನಾವು ವಿಕಾರಿಗಳಾಗಿದ್ದೇವೆ. ನಿರ್ಗುಣನಲ್ಲಿ ಯಾವುದೇ ಗುಣವಿಲ್ಲವೆಂದು ಹೇಳುತ್ತಾರೆ. ತಂದೆಯನ್ನು ನೆನಪು ಮಾಡುತ್ತಾರೆ. ನೀವೂ ಸಹ ಒಬ್ಬ ತಂದೆಯನ್ನೇ ನೆನಪು ಮಾಡದವಿನಃ ಪಾವನರಾಗಲು ಸಾಧ್ಯವಿಲ್ಲ, ಶ್ರೇಷ್ಠ ಪದವಿಯನ್ನೂ ಪಡೆಯಲು ಸಾಧ್ಯವಿಲ್ಲ. ಅಪವಿತ್ರ ಪ್ರಪಂಚದ ವಿನಾಶವು ಯಾವಾಗ ಆಗುತ್ತದೆಯೋ ಆಗಲೇ ಪ್ರಪಂಚದಲ್ಲಿ ಶಾಂತಿಯಿರುತ್ತದೆ. ಭಾರತ ಮತ್ತು ಪ್ರಪಂಚದ ಶಾಂತಿಗಾಗಿ ಮನುಷ್ಯರು ಪ್ರಯತ್ನ ಪಡುತ್ತಾರೆ ಆದರೆ ಇದು ಒಬ್ಬ ತಂದೆಯ ಕೆಲಸವೇ ಆಗಿದೆ. ಮನುಷ್ಯರಂತೂ ವಿಕಾರಿಗಳಾಗಿದ್ದಾರೆ, ಅವರು ಶಾಂತಿಯನ್ನು ಹೇಗೆ ಸ್ಥಾಪನೆ ಮಾಡುತ್ತಾರೆ! ಮನೆ-ಮನೆಯಲ್ಲಿಯೂ ಜಗಳವಿದೆ, ತಂದೆಯನ್ನು ತಿಳಿಯದ ಕಾರಣ ನಿರ್ಧನಿಕರಾಗಿದ್ದಾರೆ. ಸತ್ಯಯುಗದಲ್ಲಿ ಅವಶ್ಯವಾಗಿ ಪವಿತ್ರತೆ, ಸುಖ, ಶಾಂತಿ ಇತ್ತು. ಈಗ ಪುನಃ ತಂದೆಯು ಆ ಪವಿತ್ರತೆ, ಸುಖ, ಶಾಂತಿಯನ್ನು ಸ್ಥಾಪನೆ ಮಾಡುತ್ತಿದ್ದಾರೆ, ಇದನ್ನು ಯಾರೂ ಮಾಡುವುದಿಲ್ಲ. ಭಾರತವಾಸಿಗಳು ಈಗ ನರಕವಾಸಿಗಳಾಗಿದ್ದಾರೆ. ಸ್ವರ್ಗದಲ್ಲಿದ್ದರು ಅಂದಮೇಲೆ ಪುನರ್ಜನ್ಮವನ್ನೂ ಸ್ವರ್ಗದಲ್ಲಿಯೇ ತೆಗೆದುಕೊಳ್ಳಬೇಕಾಗಿದೆ. ಈಗ ಪತಿತರಾಗಿದ್ದಾರೆ ಆದ್ದರಿಂದಲೇ ಪತಿತ-ಪಾವನ ತಂದೆಯನ್ನು ನೆನಪು ಮಾಡುತ್ತಾರೆ. ಪಾರಲೌಕಿಕ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ ಎಂದು ಈಗ ಮಕ್ಕಳು ತಿಳಿದುಕೊಂಡಿದ್ದೀರಿ. ಲೌಕಿಕ ತಂದೆಯಿಂದ ಹದ್ದಿನ ಆಸ್ತಿಯು ಸಿಗುತ್ತದೆ, ಪಾರಲೌಕಿಕ ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯು ಸಿಗುತ್ತದೆ. ಇದು ತಿಳಿದುಕೊಳ್ಳುವ ಮಾತುಗಳಾಗಿವೆ. ಇದು ಯಾವುದೇ ಸತ್ಸಂಗವಲ್ಲ. ಅದು ಭಕ್ತಿಮಾರ್ಗವಾಗಿದೆ, ಇದು ಜ್ಞಾನ ಮಾರ್ಗವಾಗಿದೆ.
ತಂದೆಯು ನಮ್ಮನ್ನು ಸ್ವರ್ಗವಾಸಿಯನ್ನಾಗಿ ಮಾಡುತ್ತಿದ್ದಾರೆಂದು ನಿಮಗೆ ಖುಷಿಯಾಗುವುದು. ಯಾರು ಕಲ್ಪದ ಹಿಂದೆ ಸ್ವರ್ಗವಾಸಿಗಳಾಗಿದ್ದರೋ ಅವರೇ ಆಗುತ್ತಾರೆ. ಬ್ರಾಹ್ಮಣರಾಗದ ಹೊರತು ದೇವತೆಗಳಾಗಲು ಸಾಧ್ಯವಿಲ್ಲ. ಇದು ತಿಳಿದುಕೊಳ್ಳುವ ಮಾತಾಗಿದೆಯಲ್ಲವೆ. ಈಗಂತೂ ಭಾರತದಲ್ಲಿ ಯಾರಲ್ಲಿಯೂ ಕಲೆಗಳೇ ಇಲ್ಲದಂತಾಗಿದೆ, ಇದು ಯಾರಿಗೂ ಗೊತ್ತಾಗುವುದೇ ಇಲ್ಲ. ಕುಂಭಕರ್ಣನ ನಿದ್ರೆಯಲ್ಲಿ ಮಲಗಿದ್ದಾರೆ, ಈಗ ನಿಮ್ಮನ್ನು ತಂದೆಯು ಜಾಗೃತ ಮಾಡಿದ್ದಾರೆ. ಇಲ್ಲಿಗೆ ನೀವು ಸ್ವರ್ಗವಾಸಿಗಳಾಗಲು ಬಂದಿದ್ದೀರಿ. ತಂದೆಯ ವಿನಃ ಯಾರೂ ಸಹ ಮಾಡಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಸ್ವರ್ಗವೆಂದು, ಕಲಿಯುಗಕ್ಕೆ ನರಕವೆಂದು ಹೇಳಲಾಗುತ್ತದೆ. ಈಗ ಎಲ್ಲರೂ ವಿಕಾರದಿಂದಲೇ ಜನ್ಮ ಪಡೆಯುತ್ತಾರೆ, ದೇವತೆಗಳು ಎಂದೂ ಸಹ ವಿಕಾರದಿಂದ ಜನ್ಮ ಪಡೆಯುವುದಿಲ್ಲ. ಮಕ್ಕಳೇ, ನೀವೀಗ ತಂದೆಯ ಬಳಿ ಪವಿತ್ರರಾಗುವ ಪ್ರತಿಜ್ಞೆ ಮಾಡುತ್ತೀರಿ ಆದರೆ ನಡೆಯುತ್ತಾ-ನಡೆಯುತ್ತಾ ಸೋಲನ್ನು ಅನುಭವಿಸಿದರೆ ನಂತರ ಮಾಡಿಕೊಂಡಿರುವ ಸಂಪಾದನೆಯಲ್ಲವೂ ಹಾಳಾಗಿ ಬಿಡುತ್ತದೆ. ಬಹಳ ದೊಡ್ಡದಾಗಿ ಪೆಟ್ಟು ಬೀಳುವುದು. ಆಶ್ಚರ್ಯವಾಗಿ ಕೇಳಿ, ಹೇಳಿ ನಂತರ ಓಡಿ ಹೋಗುತ್ತಾರೆ. ಭಲೆ ಸಾಕ್ಷಾತ್ಕಾರಗಳಾಗುತ್ತವೆ ಆದರೆ ಸಾಕ್ಷಾತ್ಕಾರದಲ್ಲಿಯೇ ಮಾಯೆಯು ಪ್ರವೇಶವಾಗುವುದು. ಹೇಗೆ ರೇಡಿಯೋದಲ್ಲಿ ಒಬ್ಬರ ಮಾತು ಇನ್ನೊಬ್ಬರಿಗೆ ಕೇಳಿಸದಂತೆ ಮಧ್ಯದಲ್ಲಿ ಗಡಿಬಿಡಿ ಮಾಡಿ ಬಿಡುತ್ತಾರೆ. ಇದೂ ಸಹ ಹಾಗೆಯೇ. ಯೋಗದಲ್ಲಿ ಮಾಯೆಯು ವಿಘ್ನವನ್ನು ಹಾಕುತ್ತದೆ. ಪರಿಶ್ರಮವೂ ಸಹ ಯೋಗದಲ್ಲಿಯೇ ಇದೆ. ಭಾರತದ ಪ್ರಾಚೀನ ಯೋಗವೆಂದು ಗಾಯನವಿದೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನು ಇಟ್ಟು ಸತ್ಯ-ಸತ್ಯವಾದ ಪಾಂಡವರಾಗಬೇಕಾಗಿದೆ. ಮೃತ್ಯು ಸನ್ಮುಖದಲ್ಲಿ ನಿಂತಿದೆ ಆದ್ದರಿಂದ ಪವಿತ್ರರಾಗಿ ಪವಿತ್ರ ಪ್ರಪಂಚದ ಮಾಲೀಕರಾಗಬೇಕಾಗಿದೆ.
2. ಕಾಮ ಮಹಾಶತ್ರುವಾಗಿದೆ ಯಾವುದು ಆದಿ-ಮಧ್ಯ-ಅಂತ್ಯ ದುಃಖ ಕೊಟ್ಟಿದೆ, ಅದರ ಮೇಲೆ ಜಯ ಗಳಿಸಿ ಪಾವನರಾಗಬೇಕು, ನೆನಪಿನಿಂದಲೇ ವಿಕಾರಗಳ ತುಕ್ಕು ಬಿಟ್ಟು ಹೋಗಿ ಆತ್ಮವು ಚಿನ್ನದಂತೆ ಆಗಿ ಬಿಡುತ್ತದೆ.
ಓಂ ಶಾಂತಿ. ಮಧುರಾತಿ ಮಧುರ ಮಕ್ಕಳು ಅರ್ಥವನ್ನು ತಿಳಿದುಕೊಂಡಿರಿ. ಇಲ್ಲಿ ಯಾವುದೇ ಪ್ರತಿಜ್ಞೆಯನ್ನು ಮಾಡುವ ಅವಶ್ಯಕತೆಯಿಲ್ಲ. ಇದು ಕೇವಲ ಆತ್ಮದಲ್ಲಿ ತಿಳುವಳಿಕೆ ಬೇಕಾಗಿದೆ. ಆತ್ಮವು ತಮೋಪ್ರಧಾನವಾಗಿರುವ ಕಾರಣ ಸಂಪೂರ್ಣ ಬುದ್ಧಿಹೀನನಾಗಿ ಬಿಟ್ಟಿದೆ. ಮಕ್ಕಳಿಗೆ ತಿಳಿದಿದೆ - ನಾವು ಎಷ್ಟು ಬುದ್ಧಿಹೀನರಾಗಿದ್ದೆವು, ಈಗ ಎಷ್ಟೊಂದು ಬುದ್ಧಿವಂತರಾಗಿದ್ದೇವೆ. ಅನ್ಯ ಸತ್ಸಂಗಗಳಲ್ಲಿ ಈ ಮಾತುಗಳು ಇರುವುದಿಲ್ಲ. ಅವರು ಶಾಸ್ತ್ರ, ರಾಮಾಯಣ ಇತ್ಯಾದಿಗಳನ್ನು ಓದುತ್ತಾರೆ. ಒಂದು ಕಿವಿಯಿಂದ ಕೇಳಿದರೆ ಇನ್ನೊಂದು ಕಿವಿಯಿಂದ ಹೊರಟು ಹೋಗುತ್ತದೆ. ಯಾವುದೇ ಪ್ರಾಪ್ತಿಯಿಲ್ಲ. ಯಜ್ಞ, ತಪ, ದಾನ-ಪುಣ್ಯ ಇತ್ಯಾದಿಗಳನ್ನು ಬಹಳಷ್ಟು ಮಾಡುತ್ತಾರೆ, ಹುಡುಕಾಡುತ್ತಿರುತ್ತಾರೆ, ಪ್ರಾಪ್ತಿಯೇನೂ ಇಲ್ಲ. ಈ ಪ್ರಪಂಚದಲ್ಲಿ ಯಾರಿಗೂ ಸುಖವಿಲ್ಲ. ಈಗ ತಂದೆಯು ಸಂಪೂರ್ಣ ತಿಳುವಳಿಕೆ ನೀಡುತ್ತಾರೆ. ಎಲ್ಲರಿಗೆ ಸುಖ-ಶಾಂತಿ ನೀಡುವವರು ಒಬ್ಬರೇ ತಂದೆಯಾಗಿದ್ದಾರೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿದ್ದಾರೆ, ಭಕ್ತಿಮಾರ್ಗದವರೂ ಸಹ ಹೇ ದುಃಖಹರ್ತ-ಸುಖಕರ್ತ, ಸದ್ಗತಿದಾತ ಎಂದು ನೆನಪು ಮಾಡುತ್ತಿರುತ್ತಾರೆ. ನೋಡಿ, ಪ್ರಪಂಚದಲ್ಲಿ ಏನಾಗಿಬಿಟ್ಟಿದೆ! ಎಲ್ಲರಿಗೆ ದುಃಖವೇ ದುಃಖವಿರುತ್ತದೆ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆಯೋ ಎಲ್ಲರಿಗೂ ಸಹ ತಂದೆಯು ಯಾರು? ತಂದೆಯಿಂದ ಯಾವ ಆಸ್ತಿಯು ಸಿಗುತ್ತದೆ? ಎಂಬುದು ಏನೂ ತಿಳಿದಿಲ್ಲ. ಬೇಹದ್ದಿನ ತಂದೆಯನ್ನೇ ತಿಳಿದುಕೊಂಡಿಲ್ಲ, ಶಾಂತಿಗಾಗಿ ಅಲೆದಾಡುತ್ತಿರುತ್ತಾರೆ. ಮನಸ್ಸಿಗೆ ಶಾಂತಿ ಬೇಕು ಎಂದು ಯಾರು ಹೇಳಿದರು? ಆತ್ಮವೇ ಹೇಳುತ್ತದೆ. ಇದನ್ನೂ ಸಹ ಮನುಷ್ಯರು ತಿಳಿದುಕೊಂಡಿಲ್ಲ. ದೇಹಾಭಿಮಾನವಿದೆಯಲ್ಲವೆ. ಸಾಧು-ಸಂತ ಮೊದಲಾದವರೆಲ್ಲರೂ ದುಃಖಿಗಳಾಗಿದ್ದಾರೆ, ಎಲ್ಲರೂ ಶಾಂತಿಯನ್ನು ಬಯಸುತ್ತಾರೆ. ಸಾಧು-ಸಂತರಿಗೂ ಸಹ ಖಾಯಿಲೆ ಬರುತ್ತದೆ, ಅಪಘಾತಗಳಾಗುತ್ತವೆ, ಪ್ರಪಂಚದಲ್ಲಿ ದುಃಖವನ್ನು ಬಿಟ್ಟರೆ ಬೇರೇನೂ ಇಲ್ಲ. ನೀವೀಗ ಬುದ್ಧಿವಂತರಾಗಿದ್ದೀರಿ, ತಂದೆಯು ತಿಳಿಸುತ್ತಾರೆ - ಡ್ರಾಮಾದಲ್ಲಿ ಹೊಸ ಪ್ರಪಂಚ ಮತ್ತು ಹಳೆಯ ಪ್ರಪಂಚ, ಸುಖ ಮತ್ತು ದುಃಖದ ಆಟವು ಮಾಡಲ್ಪಟ್ಟಿದೆ. ತಂದೆಯು ನಿಮ್ಮ ಬುದ್ಧಿಯ ಬೀಗವನ್ನು ತೆರೆದಿದ್ದಾರೆ, ಮತ್ತೆಲ್ಲಾ ಮನುಷ್ಯ ಮಾತ್ರರ ಬುದ್ಧಿಗೆ ಗಾಡ್ರೇಜ್ನ ಬೀಗವು ಹಾಕಲ್ಪಟ್ಟಿದೆ, ಸಂಪೂರ್ಣ ತಮೋಪ್ರಧಾನ ಬುದ್ಧಿಯವರಾಗಿದ್ದಾರೆ. ನೀವು ಮಕ್ಕಳು ನಂಬರ್ವಾರ್ ಪುರುಷಾರ್ಥದ ಅನುಸಾರ ತಿಳಿದುಕೊಂಡಿದ್ದೀರಿ, ಅವಶ್ಯವಾಗಿ ಬೇಹದ್ದಿನ ತಂದೆಯು ಸಿಕ್ಕಿದ್ದಾರೆ, ಅವರು ನಮಗೆ ಈ ಆಟವು ಹೇಗೆ ಮಾಡಲ್ಪಟ್ಟಿದೆ ಎಂದು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಸುಖವಿದ್ದಾಗ ದುಃಖದ ಹೆಸರೂ ಇರುವುದಿಲ್ಲ. ನೀವು ಮಕ್ಕಳ ಬುದ್ಧಿಯಲ್ಲಿದೆ - ನಾವು ತಂದೆಯಿಂದ ಸುಖ-ಶಾಂತಿ, ಸಂಪತ್ತಿನ ಆಸ್ತಿಯನ್ನು ಪಡೆಯುತ್ತಿದ್ದೇವೆ. ಸತ್ಯಯುಗದಿಂದ ಹಿಡಿದು ತ್ರೇತಾದ ಅಂತ್ಯದವರೆಗೆ ಯಾವುದೇ ದುಃಖವಿರುವುದಿಲ್ಲ. ನೀವೀಗ ಬೆಳಕಿನಲ್ಲಿದ್ದೀರಿ. ನಮ್ಮ ರಾಜಧಾನಿಯಲ್ಲಿ ಶ್ರೇಷ್ಠ ಪದವಿಯನ್ನು ಪಡೆಯಬೇಕೆಂದು ನೀವು ಪುರುಷಾರ್ಥ ಮಾಡುತ್ತಿದ್ದೀರಿ. ಇದು ಬೇಹದ್ದಿನ ಶಾಲೆಯಾಗಿದೆ, ಬೇಹದ್ದಿನ ತಂದೆಯು ಓದಿಸುತ್ತಾರೆ. ಅವರು ನಮ್ಮ ಅತಿಪ್ರಿಯ ತಂದೆಯಾಗಿದ್ದಾರೆ, ಅವರದೇ ಅಪರಂಪಾರ ಮಹಿಮೆಯಿದೆ, ಆ ಸರ್ವಶ್ರೇಷ್ಠ ತಂದೆಯು ಶ್ರೀಮತ ಕೊಡುತ್ತಾರೆ. ಉಳಿದೆಲ್ಲಾ ಮನುಷ್ಯ ಮಾತ್ರರು ಆಸುರೀ ಮತದಂತೆ ಒಬ್ಬರು ಇನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಾರೆ. ನೀವು ಶ್ರೀಮತದಂತೆ ಎಲ್ಲರಿಗೆ ಸುಖವನ್ನೇ ಕೊಡಬೇಕಾಗಿದೆ. ಈ ಡ್ರಾಮಾದಲ್ಲಿ ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳು ಈಗ ತಿಳಿದುಕೊಳ್ಳುತ್ತೀರಿ - ಈ ಡ್ರಾಮಾದಲ್ಲಿ ಭಾರತವಾಸಿಗಳದೇ ಸರ್ವತೋಮುಖ ಪಾತ್ರವಿದೆ. ಮೊದಲು ನೀವು ಏನನ್ನೂ ತಿಳಿದುಕೊಂಡಿರಲಿಲ್ಲ, ಈಗಂತೂ ಮೂಲವತನದಿಂದ ಹಿಡಿದು ಸೂಕ್ಷ್ಮವತನ, ಸ್ಥೂಲವತನ ಎಲ್ಲವನ್ನೂ ನೀವು ಅರಿತುಕೊಂಡಿದ್ದೀರಿ. ನಿಮಗೆ ಸತ್ಯ ಜ್ಞಾನವಿದೆ. ಪರಮಪಿತ ಪರಮಾತ್ಮನು ನಮಗೆ ಇವರ ಮೂಲಕ ಓದಿಸುತ್ತಿದ್ದಾರೆ. ತಂದೆಯು ನಮಗೆ ತ್ರಿಲೋಕದ ಜ್ಞಾನವನ್ನು ಕೊಡುತ್ತಿದ್ದಾರೆ. ಇದು ಮುಳ್ಳುಗಳ ಕಾಡಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಮುಳ್ಳುಗಳಿಂದ ಹೂ ಅರ್ಥಾತ್ ಮನುಷ್ಯರಿಂದ ದೇವತೆಗಳಾಗುತ್ತೇವೆ. ಇಲ್ಲಂತೂ ಚಿಕ್ಕವರು, ದೊಡ್ಡವರು ಎಲ್ಲರೂ ದುಃಖ ಕೊಡುತ್ತಾರೆ. ತಾಯಿಗೆ ಗರ್ಭದಲ್ಲಿಯೇ ಮಕ್ಕಳು ದುಃಖ ಕೊಡುತ್ತಾರೆ. ಇದು ಬಹಳ ಛೀ ಛೀ ಹಳೆಯ ಪ್ರಪಂಚವಾಗಿದೆ. ಈ ಸೃಷ್ಟಿಚಕ್ರವನ್ನು ಯಾರೂ ತಿಳಿದುಕೊಂಡಿಲ್ಲ. ನಾವು ಎಲ್ಲಿಂದ ಬಂದೆವು, ಎಷ್ಟು ಜನ್ಮಗಳನ್ನು ತೆಗೆದುಕೊಂಡೆವು ಮತ್ತೆ ಎಲ್ಲಿಗೆ ಹೋಗಬೇಕಾಗಿದೆ?.... ಏನೂ ಗೊತ್ತಿಲ್ಲ. ಬೇಹದ್ದಿನ ತಂದೆ ಅರ್ಥಾತ್ ಎಲ್ಲಾ ಸೀತೆಯರಿಗೆ ರಾಮನು ಒಬ್ಬರೇ ನಿರಾಕಾರನಾಗಿದ್ದಾರೆ, ನೀವೆಲ್ಲರೂ ಸೀತೆಯರಾಗಿದ್ದೀರಿ. ತಂದೆಯು ವರನಾಗಿದ್ದಾರೆ, ಒಬ್ಬ ಪ್ರಿಯತಮನಿಗೆ ಎಲ್ಲರೂ ಪ್ರಿಯತಮೆಯರು, ಭಕ್ತಿನಿಯರಾಗಿದ್ದಾರೆ. ಯಾರೆಲ್ಲಾ ಸೀತೆಯರಿದ್ದಾರೆಯೋ ಎಲ್ಲರೂ ರಾವಣನ ಬಂಧನದಲ್ಲಿ ಸಿಲುಕಿ ಶೋಕವಾಟಿಕೆಯಲ್ಲಿ ಬಂದು ಬಿಟ್ಟಿದ್ದಾರೆ. ಇಡೀ ಪ್ರಪಂಚದ ಎಲ್ಲಾ ಮನುಷ್ಯ ಮಾತ್ರರು ಒಬ್ಬ ಭಗವಂತನನ್ನು ನೆನಪು ಮಾಡುತ್ತಾರೆ. ಭಗವಂತನಿಗೆ ಭಕ್ತರ ರಕ್ಷಕನೆಂದು ಹೇಳುತ್ತಾರೆ. ನೀವೆಲ್ಲರೂ ಈಗ ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾಗಿದ್ದೀರಿ. ಬ್ರಾಹ್ಮಣರಿಗೆ ತಿಳಿದಿದೆ - ನಮಗೆ ಶಿವ ತಂದೆಯು ಓದಿಸುತ್ತಿದ್ದಾರೆ, ತಂದೆಯಿಂದ ಆಸ್ತಿಯು ಅವಶ್ಯವಾಗಿ ಸಿಗುತ್ತದೆ. ಶಿವ ತಂದೆಯು ಸ್ವರ್ಗದ ರಚಯಿತನಾಗಿದ್ದಾರೆ. ಸ್ವರ್ಗವೆಂದಾದರೂ ಹೇಳಿ ಅಥವಾ ದೈವೀ ರಾಜಧಾನಿ ಎಂದಾದರೂ ಹೇಳಿ - ಇದು ಸ್ವರ್ಗದ ರಾಜಧಾನಿಯಲ್ಲವೆ. ಲಕ್ಷ್ಮೀ-ನಾರಾಯಣರು ಸ್ವರ್ಗದ ಮಾಲೀಕರಾಗಿದ್ದಾರೆ, ಇಲ್ಲಿ ಸತ್ಯಯುಗವಿದ್ದಾಗ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಈಗ ಕಲಿಯುಗವಾಗಿದೆ. ಮನುಷ್ಯರಂತೂ ಘೋರ ಅಂಧಕಾರದಲ್ಲಿರುವ ಕಾರಣ ಈಗ ಕಲಿಯುಗದ ಅಂತ್ಯವಾಗಿದೆ, ವಿನಾಶವು ಸನ್ಮುಖದಲ್ಲಿ ನಿಂತಿದೆ ಎಂಬುದನ್ನೂ ಸಹ ತಿಳಿದುಕೊಂಡಿಲ್ಲ. ನೀವೆಲ್ಲಾ ಸೀತೆಯರ ರಾಮ ಒಬ್ಬರಾಗಿದ್ದಾರೆ. ಸೀತೆಯರೆಲ್ಲರೂ ದುರ್ಗತಿಯಲ್ಲಿದ್ದಾರೆ ಆದರೆ ನಾವು ದುರ್ಗತಿಯಲ್ಲಿದ್ದೇವೆ ಎಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಮ್ಮ ಸಾಹುಕಾರಿತನದ ನಶೆಯಿದೆ - ನಮಗೆ ಇಷ್ಟು ಮನೆಗಳಿವೆ, ಇಷ್ಟು ಹಣವಿದೆ, ಇಷ್ಟು ಮಹಲುಗಳಿವೆ ಎಂದು. ಈ ದುಃಖದ ಪ್ರಪಂಚವು ಬದಲಾಗಲಿದೆ, ಮೃತ್ಯು ಸಮ್ಮುಖದಲ್ಲಿ ನಿಂತಿದೆ, ಎಲ್ಲವೂ ಮಣ್ಣು ಪಾಲಾಗುವುದೆಂದು ಯಾರಿಗೂ ಗೊತ್ತಿಲ್ಲ. ಈ ಹಳೆಯ ಪ್ರಪಂಚದಲ್ಲಿ ಏನೆಲ್ಲವನ್ನೂ ನೋಡುತ್ತೀರೋ ಎಲ್ಲವೂ ವಿನಾಶವಾಗಿ ಬಿಡುವುದು, ವಿನಾಶಕ್ಕಾಗಿ ಪೂರ್ಣ ತಯಾರಿಯಾಗುತ್ತಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ. ಅದೇ ಗೀತೆಯ ಭಗವಂತನಾಗಿದ್ದಾರೆ ಆದರೆ ತಂದೆಯ ಚರಿತ್ರೆಯಲ್ಲಿ ಮಗನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಈಗ ಶಿವ ತಂದೆಯು ನಿಮಗೆ ರಾಜಯೋಗವನ್ನು ಕಲಿಸುತ್ತಿದ್ದಾರೆ. ದೊಡ್ಡದಕ್ಕಿಂತ ದೊಡ್ಡ ತಪ್ಪು ಏನೆಂದರೆ - ಭಗವಂತನ ಹೆಸರನ್ನೇ ಮರೆ ಮಾಡಿ ಬಿಟ್ಟಿದ್ದಾರೆ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಮಗೆ ಯಾವುದೇ ಮನುಷ್ಯರು ಸಾಧು-ಸಂತರು ಓದಿಸುವುದಿಲ್ಲ, ಶಿವ ತಂದೆಯು ನಮಗೆ ಓದಿಸುತ್ತಿದ್ದಾರೆ. ಅವರು ತಂದೆಯೂ ಆಗಿದ್ದಾರೆ, ಶಿಕ್ಷಕನೂ ಆಗಿದ್ದಾರೆ, ಸದ್ಗುರುವೂ ಆಗಿದ್ದಾರೆ, ಸರ್ವಸ್ವವೂ ಆಗಿದ್ದಾರೆ. ಇದನ್ನು ಮರೆಯಬಾರದಲ್ಲವೆ. ತಂದೆಯು ತಿಳಿಸುತ್ತಾರೆ - ಎಲ್ಲರೂ ನನ್ನ ಮಕ್ಕಳಾಗಿದ್ದಾರೆ ಆದರೆ ಎಲ್ಲರಿಗೂ ಓದಿಸುವುದಿಲ್ಲ. ನಾನು ಭಾರತವಾಸಿಗಳಿಗೇ ಪುನಃ ರಾಜಯೋಗವನ್ನು ಕಲಿಸಲು ಬಂದಿದ್ದೇನೆ. ಭಾರತವಾಸಿಗಳು ಸ್ವರ್ಗವಾಸಿಗಳಾಗಿದ್ದರು, ವಜ್ರ ಸಮಾನರಾಗಿದ್ದರು, ಈಗ ಕವಡೆಯಂತಾಗಿ ಬಿಟ್ಟಿದ್ದಾರೆ. ಮನೆ-ಮನೆಯಲ್ಲಿ ಎಷ್ಟೊಂದು ಅಶಾಂತಿಯಿದೆ. ಬಾಬಾ ನಮಗೆ ಕ್ರೋಧ ಬರುತ್ತದೆ, ಮಕ್ಕಳನ್ನು ಹೊಡೆಯಬೇಕಾಗುತ್ತದೆ ಆದರೆ ನಾವು ಪಂಚ ವಿಕಾರಗಳನ್ನು ಶಿವ ತಂದೆಗೆ ದಾನವಾಗಿ ಕೊಟ್ಟಿದ್ದೇವೆ ಆದರೂ ಸಹ ನಾವು ಹೀಗೇಕೆ ಮಾಡುತ್ತೇವೆಂದು ಭಯವಾಗುತ್ತದೆ ಎಂದು ಕೆಲವರು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ - ಈ ಸಮಯದಲ್ಲಿ ಎಲ್ಲರಮೇಲೆ ಪಂಚ ವಿಕಾರಗಳ ಗ್ರಹಣವು ಹಿಡಿದಿದೆ. ದೇಹಾಭಿಮಾನದ ಭೂತವು ಬರುವುದರಿಂದ ಮತ್ತೆಲ್ಲಾ ಭೂತಗಳು ಹಿಡಿದುಕೊಳ್ಳುತ್ತವೆ. ಈಗ ತಂದೆಯು ತಿಳಿಸುತ್ತಾರೆ - ಆತ್ಮಾಭಿಮಾನಿಯಾಗಿರಿ. ಈಗ ನಿಮಗೆ ತಿಳುವಳಿಕೆ ಸಿಕ್ಕಿದೆ. ಸತ್ಯಯುಗದಲ್ಲಿಯೂ ನಾವು ಆತ್ಮಾಭಿಮಾನಿಗಳಾಗಿದ್ದೇವೆ. ಆತ್ಮನ ಈ ಶರೀರವು ಈಗ ಹಳೆಯದಾಯಿತು, ಆಯಸ್ಸು ಪೂರ್ಣವಾಯಿತು ಆದ್ದರಿಂದ ಈ ಶರೀರವನ್ನು ಬಿಟ್ಟು ಈಗ ಹೊಸದನ್ನು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ (ಸರ್ಪದ ಉದಾಹರಣೆ). ಸರ್ಪದ ಒಂದು ಪೋರೆಯ ಹಳೆಯದಾದರೆ ಮತ್ತೆ ಇನ್ನೊಂದು ಹೊಸದನ್ನು ತೆಗೆದುಕೊಳ್ಳುತ್ತದೆ. ಸತ್ಯಯುಗಕ್ಕಾಗಿ ಈ ದೃಷ್ಟಾಂತವಿದೆ, ಅಲ್ಲಿ ನೀವು ಈ ರೀತಿ ಶರೀರ ಬಿಡುತ್ತೀರಿ, ದುಃಖದ ಯಾವುದೇ ಮಾತಿರುವುದಿಲ್ಲ. ಇಲ್ಲಿ ಎಷ್ಟೊಂದು ದುಃಖವಾಗುತ್ತದೆ. ಅಳುವುದು, ಚೀರಾಡುವುದು ಎಲ್ಲವೂ ಇರುತ್ತದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ಇದು ಹಳೆಯ ಪೋರೆಯಾಗಿದೆ, ಇಲ್ಲಿ ಹೊಸ ಪೋರೆಯು ಸಿಗುವುದಿಲ್ಲ. ಇದು ಅಂತಿಮ ಹಳೆಯ ಪಾದರಕ್ಷೆಯಾಗಿದೆ. ನೀವೀಗ ಇದರಿಂದ ಬೇಸತ್ತು ಹೋಗಿದ್ದೀರಿ. ಸತ್ಯಯುಗದಲ್ಲಂತೂ ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತಾರೆ. ಈ ಮಾತುಗಳನ್ನೂ ಸಹ ನೀವು ತಿಳಿದುಕೊಳ್ಳುತ್ತೀರಿ. ಇಲ್ಲಿ ಎಷ್ಟೊಂದು ಮಂದಿ ಹೊಸಬರು ಬರುತ್ತಾರೆ ಆದರೆ ಎಲ್ಲರೂ ತಿಳಿದುಕೊಳ್ಳುತ್ತಾರೆಯೇ! ಎರಡು, ಮೂರು ದಿನಗಳು ಇಲ್ಲಿ ತಿಳಿದುಕೊಂಡು ಹೋಗುತ್ತಾರೆ ಮತ್ತೆ ಮರೆತು ಹೋಗುತ್ತಾರೆ. ಯಾರಾದರೂ ಚೆನ್ನಾಗಿ ಕೇಳಿ ಖುಷಿಯಾದರೆ ಅವರು ಪ್ರಜೆಗಳಲ್ಲಿ ಬರುತ್ತಾರೆ. ಪ್ರಜೆಗಳೂ ಸಹ ಬಹಳ ಮಂದಿ ಆಗಬೇಕಲ್ಲವೆ. ಇದು ಈಶ್ವರನ ಧರೆ ಅಥವಾ ಮನೆಯಾಗಿದೆ. ನೀವು ಈಶ್ವರನ ಮನೆಯಲ್ಲಿ ಕುಳಿತಿದ್ದೀರಿ. ಪರಮಪಿತನು ತನ್ನ ಪರಮಧಾಮವನ್ನು ಬಿಟ್ಟು ಇಲ್ಲಿ ಸಾಧಾರಣ ತನುವಿನಲ್ಲಿ ಕುಳಿತಿದ್ದಾರೆ. ಅಲ್ಲಂತೂ ತಂದೆಯ ಬಳಿ ಆತ್ಮಗಳಿರುತ್ತೀರಿ, ಇಲ್ಲಿ ಸಂಗಮದಲ್ಲಿ ಸ್ವಯಂ ತಂದೆಯೇ ಪಾವನರನ್ನಾಗಿ ಮಾಡಲು ಬಂದಿದ್ದಾರೆ, ಅವರಿಗೆ ಶಿವ ನಿರಾಕಾರನೆಂದು ಹೇಳುತ್ತಾರೆ. ನಿರಾಕಾರ ತಂದೆಯನ್ನು ಆತ್ಮರು ಓ ಗಾಡ್ ಫಾದರ್ ಎಂದು ಹೇಳಿ ಕರೆಯುತ್ತಾರೆ. ಮನುಷ್ಯರು ತಿಳುವಳಿಕೆಯಿಲ್ಲದೆ ಓ ಗಾಡ್ ಫಾದರ್ ಎಂದು ಹೇಳುತ್ತಾರೆ. ಈ ಲಕ್ಷ್ಮೀ-ನಾರಾಯಣರನ್ನೂ ಯುರೋಪಿಯನ್ನರು ಭಗವಾನ್-ಭಗವತಿಯೆಂದು ಹೇಳುತ್ತಾರೆ. ಇವರನ್ನು ಹೀಗೆ ಮಾಡಿದವರು ಯಾರು? ಈ ದೇವತೆಗಳಿಗೆ ಸರ್ವಗುಣ ಸಂಪನ್ನರು, 16 ಕಲಾ ಸಂಪೂರ್ಣರಾಗಿದ್ದೀರಿ ಎಂದು ಹೇಳುತ್ತಾರೆ ಮತ್ತು ತಮಗೆ ಏನು ಹೇಳಿಕೊಳ್ಳುತ್ತಾರೆ? ಇವರೂ ಸಹ ಮನುಷ್ಯರೇ ಆಗಿದ್ದಾರೆ, ಭಾರತದಲ್ಲಿಯೇ ರಾಜ್ಯ ಮಾಡಿ ಹೋಗಿದ್ದಾರೆ ಎಂಬುದು ಗೊತ್ತಿಲ್ಲ. ಅವರಮುಂದೆ ಹೋಗಿ ಮಹಿಮೆ ಮಾಡುತ್ತಾರೆ. ತಮ್ಮನ್ನು ನೀಚ, ಪಾಪಿ ಎಂದು ಹೇಳಿಕೊಳ್ಳುತ್ತಾರೆ. ಕೃಷ್ಣನ ಮಂದಿರದಲ್ಲಿಯೂ ಹೋಗಿ ಮಹಿಮೆ ಮಾಡುತ್ತಾರೆ. ಶಿವನಿಗೆ ಈ ಮಹಿಮೆ ಮಾಡುವುದಿಲ್ಲ, ಅವರ ಮಹಿಮೆಯೇ ಬೇರೆಯಾಗಿದೆ. ಬಹುತೇಕವಾಗಿ ಶಿವನ ಬಳಿ ಹೋಗುತ್ತಾರೆ. ಜೋಳಿಗೆಯನ್ನು ತುಂಬಿಸು ಎಂದು ಹೇಳುತ್ತಾರೆ ಮತ್ತೆ ಶಿವನನ್ನು ಭಂಗಿ ಸೇದುವವರು, ದತ್ತೂರಿಯನ್ನು ತಿನ್ನುವವರೆಂದು ಹೇಳಿ ಬಿಡುತ್ತಾರೆ. ಅರೆ! ಅಲ್ಲಿ ಭಂಗಿ, ದತ್ತೂರಿಯು ಎಲ್ಲಿಂದ ಬಂದಿತು? ಏನನ್ನೂ ತಿಳಿದುಕೊಂಡಿಲ್ಲ. ಪತಿ ಬೇಕು, ಇದು ಬೇಕು, ಅದು ಬೇಕು... ಎಂದು ಬೇಡುತ್ತಿರುತ್ತಾರೆ. ದೀಪಾವಳಿಯಂದು ಲಕ್ಷ್ಮಿಯ ಆಹ್ವಾನವನ್ನೂ ಮಾಡುತ್ತಾರೆ. ಅವರು ಯಾರೆಂಬುದು ಯಾರಿಗೂ ತಿಳಿದಿಲ್ಲ. ಎಂದಾದರೂ 8-10 ಭುಜಗಳಿರುತ್ತವೆಯೇ? ಪ್ರವೃತ್ತಿ ಮಾರ್ಗವೆಂದು ಹೀಗೆ ಚತುರ್ಭುಜವನ್ನು ರೂಪವನ್ನು ತೋರಿಸುತ್ತಾರೆ, ಅವರಿಗೆ ವಿಷ್ಣುವೆಂದು ಹೆಸರನ್ನು ಇಟ್ಟಿದ್ದಾರೆ. ಲಕ್ಷ್ಮೀ-ನಾರಾಯಣರಂತೂ ಸತ್ಯಯುಗದಲ್ಲಿ ಇರುತ್ತಾರೆ, ವಿಷ್ಣುವಿನ ಎರಡು ರೂಪಗಳಾದ ಲಕ್ಷ್ಮೀ-ನಾರಾಯಣರ ಮೂಲಕ ಪಾಲನೆಯಾಗುತ್ತದೆ ಎಂದು ಮನುಷ್ಯರಿಗೆ ತಿಳಿದೇ ಇಲ್ಲ. ಚಿತ್ರಗಳಲ್ಲಿ ಲಕ್ಷ್ಮಿಗೂ 4 ಭುಜಗಳನ್ನು ತೋರಿಸುತ್ತಾರೆ, ನಾಲ್ಕು ಭುಜದವರಿಗೆ ಮಕ್ಕಳಾದರೆ ಅವರಿಗೂ ನಾಲ್ಕು ಭುಜಗಳಿರಬೇಕು. ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವೀಗ ತಿಳಿದುಕೊಳ್ಳುತ್ತೀರಿ - ತಂದೆಯು ಬರುವವರೆಗೆ ನಾವೂ ಸಹ ತಿಳಿದುಕೊಂಡಿರಲಿಲ್ಲ. ಈಗ ಇಡೀ ವಿಶ್ವದ ಆದಿ-ಮಧ್ಯ-ಅಂತ್ಯವನ್ನು ಅರಿತುಕೊಂಡಿದ್ದೇವೆ. ತಂದೆಯು ಬಂದು ಪತಿತ ಪ್ರಪಂಚವನ್ನು ಪಾವನವನ್ನಾಗಿ ಮಾಡುತ್ತಾರೆ. ಹೇ ಪತಿತ-ಪಾವನ ಬನ್ನಿ ಎಂದು ಮನುಷ್ಯರು ಕರೆಯುತ್ತಾರೆ, ಪರಮಾತ್ಮನು ಹೇಗೆ ಬರುವರು? ಹೇಗೆ ಬಂದು ಪತಿತರನ್ನು ಪಾವನ ಮಾಡುವುದು? ತಂದೆಯು ತಿಳಿಸುತ್ತಾರೆ - 5000 ವರ್ಷಗಳ ಮೊದಲೂ ಸಹ ನಾನು ದೈವೀ ಸ್ವರಾಜ್ಯವನ್ನು ಸ್ಥಾಪನೆ ಮಾಡಿದ್ದೆನು, ನಂತರ ನೀವು 84 ಜನ್ಮಗಳನ್ನು ಹೇಗೆ ತಿಳಿದುಕೊಂಡಿರಿ? ಈ ತಿಳುವಳಿಕೆಯು ಮೊದಲು ನಿಮ್ಮ ಬುದ್ಧಿಯಲ್ಲಿ ಇರಲೇ ಇಲ್ಲ. ಈ ಬ್ರಹ್ಮಾರವರಿಗೂ ಸಹ ತಿಳಿದಿರಲಿಲ್ಲ, ರಾಧೆ-ಕೃಷ್ಣ, ಲಕ್ಷ್ಮೀ-ನಾರಾಯಣರ ಪೂಜೆ ಮಾಡುತ್ತಿರುತ್ತಾರೆ ಆದರೆ ರಾಧೆ-ಕೃಷ್ಣರೇ ಸ್ವಯಂವರದ ನಂತರ ಲಕ್ಷ್ಮೀ-ನಾರಾಯಣರಾಗಿದ್ದಾರೆ ಆದ್ದರಿಂದ ರಾಜಕುಮಾರಿ ರಾಧೆ, ರಾಜಕುಮಾರ ಕೃಷ್ಣನೆಂದು ಹೇಳಲಾಗುತ್ತದೆ ಎಂಬುದು ಅವರಿಗೆ ತಿಳಿದಿರಲಿಲ್ಲ. ಸ್ವಯಂವರದ ನಂತರ ಮಹಾರಾಜ-ಮಹಾರಾಣಿಯಾಗುತ್ತಾರೆ, ಇವರೇ ಆ ರೀತಿ ಆಗುತ್ತಿದ್ದಾರೆ ಆದರೆ ಇವರಿಗೂ ಸಹ ಅದು ತಿಳಿದಿರಲಿಲ್ಲ. ಭಲೆ ಯಾರಿಗಾದರೂ ಸಾಕ್ಷಾತ್ಕಾರವಾಗಬಹುದು ಆದರೆ ಏನನ್ನೂ ತಿಳಿದುಕೊಳ್ಳುವುದಿಲ್ಲ. ಆದರೂ ಸಹ ಭಕ್ತರ ಭಾವನೆಯನ್ನು ಅಲ್ಪಕಾಲಕ್ಕಾಗಿ ಪೂರ್ಣ ಮಾಡಲು ನಾನು ಸಾಕ್ಷಾತ್ಕಾರ ಮಾಡಿಸುತ್ತೇನೆ. ಇಲ್ಲಂತೂ ಸಾಕ್ಷಾತ್ಕಾರದ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ - ಸಾಕ್ಷಾತ್ಕಾರದಲ್ಲಿ ಮಾಯೆಯು ಪ್ರವೇಶ ಮಾಡಿ ಬಿಟ್ಟರೆ ನೀವು ಪದವಿ ಭ್ರಷ್ಟರಾಗಿ ಬಿಡುತ್ತೀರಿ. ನಮಗೆ ಶಿವ ತಂದೆಯ ಸಾಕ್ಷಾತ್ಕಾರವಾಗಲಿ ಎಂದು ಅನೇಕರು ಹೇಳುತ್ತಾರೆ. ಅರೆ! ನಿಮಗೆ ತಿಳಿಸಲಾಗಿದೆ – ಮಿಂಚು ಹುಳು ಎಷ್ಟು ಚಿಕ್ಕದಿರುತ್ತದೆ, ಅದನ್ನು ಕಣ್ಣುಗಳಿಂದ ನೋಡಬಹುದಾಗಿದೆ. ಆತ್ಮವಂತೂ ಅದಕ್ಕಿಂತಲೂ ಚಿಕ್ಕ ಬಿಂದುವಾಗಿದೆ. ಹೇಗೆ ಆತ್ಮವಿದೆಯೋ ಹಾಗೆಯೇ ಪರಮಾತ್ಮನ ರೂಪವಿದೆ. ಸಾಕ್ಷಾತ್ಕಾರವಾದರೂ ಸಹ ಅದೇ ಚಿಕ್ಕ ಬಿಂದುವಿನದಾಗುತ್ತದೆ. ಆತ್ಮವಂತೂ ಚಿಕ್ಕ ಬಿಂದುವಾಗಿದೆ, ಅದು ಭೃಕುಟಿಯ ಮಧ್ಯದಲ್ಲಿರುತ್ತದೆ. ಆತ್ಮದ ಸಾಕ್ಷಾತ್ಕಾರವಾದರೂ ಸಹ ಏನನ್ನೂ ತಿಳಿದುಕೊಳ್ಳುವುದಿಲ್ಲ.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ - ನಾವೀಗ ಶಿವ ತಂದೆಯ ಸಂತಾನರಾಗಿದ್ದೇವೆ. ಎಲ್ಲಾ ಬ್ರಹ್ಮಾಕುಮಾರ-ಕುಮಾರಿಯರು ಶಿವ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಗುರಿ-ಧ್ಯೇಯವೇ ಇದಾಗಿದೆ. ನಾವು ವಿದ್ಯಾರ್ಥಿಗಳಲ್ಲವೆ. ತಂದೆಯಿಂದ ಸಹಜ ರಾಜಯೋಗವನ್ನು ಕಲಿಯಲು ಬಂದಿದ್ದೇವೆಂದು ನೀವು ಹೇಳುತ್ತೀರಿ. ಇದು ಗುರಿ-ಧ್ಯೇಯವಾಗಿದೆ. ಮಕ್ಕಳು ಇದನ್ನು ಮರೆಯಬಾರದು. ಭಕ್ತಿಮಾರ್ಗದಲ್ಲಿ ಮಕ್ಕಳು ದೇವತೆಗಳ ಚಿತ್ರಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುತ್ತಾರೆ ಹಾಗೆಯೇ ನೀವೂ ಸಹ ಈ ತ್ರಿಮೂರ್ತಿಯ ಚಿತ್ರವನ್ನು ಜೇಬಿನಲ್ಲಿ ಇಟ್ಟುಕೊಳ್ಳಬೇಕು, ಈ ಶಿವ ತಂದೆಯ ಮೂಲಕ ನಾವು ಈ ಲಕ್ಷ್ಮೀ-ನಾರಾಯಣರಾಗುತ್ತಿದ್ದೇವೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:
1. ಶಿವ ತಂದೆಗೆ ವಿಕಾರಗಳ ದಾನವನ್ನು ಕೊಟ್ಟ ಮೇಲೆ ಮತ್ತೆಂದೂ ಹಿಂತೆಗೆದುಕೊಳ್ಳಬಾರದು. ದೇಹಾಭಿಮಾನದ ಭೂತದಿಂದ ಪಾರಾಗಬೇಕು. ಈ ಭೂತದಿಂದ ಮತ್ತೆಲ್ಲಾ ಭೂತಗಳು ಬಂದು ಬಿಡುತ್ತವೆ, ಆದ್ದರಿಂದ ಆತ್ಮಾಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ.
2. ಧ್ಯಾನ-ಸಾಕ್ಷಾತ್ಕಾರದ ಆಸೆಯನ್ನು ಇಟ್ಟುಕೊಳ್ಳಬಾರದು. ಗುರಿ-ಧ್ಯೇಯವನ್ನು ಸನ್ಮುಖದಲ್ಲಿ ಇಟ್ಟುಕೊಂಡು ಪುರುಷಾರ್ಥ ಮಾಡಬೇಕಾಗಿದೆ. ಶ್ರೀಮತದಂತೆ ಎಲ್ಲರಿಗೆ ಸುಖ ಕೊಡಬೇಕಾಗಿದೆ.
ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳು ಅರ್ಥಾತ್ ಜೀವಾತ್ಮರು ಹೇಳಿದರು - ನಾವು ಹೊಸ ಪ್ರಪಂಚದ ಅದೃಷ್ಠವನ್ನು ಅಂದರೆ ಸ್ವರ್ಗದ ಅದೃಷ್ಟವನ್ನು ಬೆಳಗಿಸಿಕೊಂಡು ಆತ್ಮಿಕ ತಂದೆಯ ಬಳಿ ಕುಳಿತಿದ್ದೇವೆ. ಈಗ ಮಕ್ಕಳು ಆತ್ಮಾಭಿಮಾನಿಯಾಗಬೇಕಾಗಿದೆ, ಇದೇ ಅತಿ ದೊಡ್ಡ ಪರಿಶ್ರಮವಾಗಿದೆ. ತಮ್ಮನ್ನು ಆತ್ಮನೆಂದು ತಿಳಿಯಿರಿ ಮತ್ತು ನಾನಾತ್ಮನು 84 ಜನ್ಮಗಳನ್ನು ತೆಗೆದುಕೊಂಡಿದ್ದೇನೆ, ಕೆಲವೊಮ್ಮೆ ವಕೀಲ, ಕೆಲವೊಮ್ಮೆ ವೈದ್ಯ..... ಆಗಿದ್ದೇನೆ ಎಂದು ತಿಳಿದುಕೊಳ್ಳಿ. ಆತ್ಮವು ಪುರುಷನಾಗಿದೆ. ಎಲ್ಲರೂ ಸಹೋದರರೇ ಹೊರತು ಸಹೋದರಿಯರಲ್ಲ. ಇದು ನನ್ನ ಶರೀರವಾಗಿದೆ ಎಂದು ಆತ್ಮವು ಹೇಳುತ್ತದೆ, ಆ ಲೆಕ್ಕದಿಂದ ಆತ್ಮವು ಪುರುಷನಾಯಿತು. ಈ ಶರೀರವು ಸ್ತ್ರೀಯಾಯಿತು. ಪ್ರತಿಯೊಂದು ಮಾತನ್ನು ಚೆನ್ನಾಗಿ ತಿಳಿದುಕೊಳ್ಳಬೇಕಾಗಿದೆ. ತಂದೆಯು ಬಹಳ ವಿಶಾಲ, ಸೂಕ್ಷ್ಮ ಬುದ್ಧಿಯವರನ್ನಾಗಿ ಮಾಡುತ್ತಾರೆ. ನೀವೀಗ ತಿಳಿದುಕೊಂಡಿದ್ದೀರಿ - ನಾನಾತ್ಮನು 84 ಜನ್ಮಗಳನ್ನು ತೆಗೆದುಕೊಂಡಿದ್ದೇನೆ. ಆತ್ಮದಲ್ಲಿಯೇ ಒಳ್ಳೆಯ ಹಾಗೂ ಕೆಟ್ಟ ಸಂಸ್ಕಾರವಿರುತ್ತದೆ. ಆ ಸಂಸ್ಕಾರಗಳ ಅ ಅನುಸಾರ ಶರೀರವೂ ಅದೇರೀತಿ ಸಿಗುತ್ತದೆ. ಎಲ್ಲವೂ ಆತ್ಮದ ಮೇಲೆ ಆಧಾರಿತವಾಗಿದೆ. ಇದು ಬಹಳ ದೊಡ್ಡ ಪರಿಶ್ರಮವಾಗಿದೆ. ಜನ್ಮ-ಜನ್ಮಾಂತರ ಲೌಕಿಕ ತಂದೆಯನ್ನು ನೆನಪು ಮಾಡಿದಿರಿ. ಈಗ ಪಾರಲೌಕಿಕ ತಂದೆಯನ್ನು ನೆನಪು ಮಾಡಬೇಕಾಗಿದೆ. ತಮ್ಮನ್ನು ಪದೇ-ಪದೇ ಆತ್ಮನೆಂದು ತಿಳಿಯಬೇಕಾಗಿದೆ. ನಾವಾತ್ಮರು ಈ ಶರೀರವನ್ನು ತೆಗೆದುಕೊಳ್ಳುತ್ತೇವೆ. ಈಗ ನಾವಾತ್ಮರಿಗೆ ತಂದೆಯು ಓದಿಸುತ್ತಾರೆ. ಇದು ಆತ್ಮಿಕ ಜ್ಞಾನವಾಗಿದೆ ಯಾವುದನ್ನು ಆತ್ಮಿಕ ತಂದೆಯೇ ಕೊಡುತ್ತಾರೆ. ಮೊಟ್ಟ ಮೊದಲ ಮುಖ್ಯ ಮಾತೇನೆಂದರೆ ಮಕ್ಕಳು ಆತ್ಮಾಭಿಮಾನಿಯಾಗಿರಬೇಕಾಗಿದೆ. ಆತ್ಮಾಭಿಮಾನಿಯಾಗಿ ಇರುವುದು ಅತಿ ದೊಡ್ಡ ಉನ್ನತ ಗುರಿಯಾಗಿದೆ. ಜ್ಞಾನವೇನೂ ಕಷ್ಟವಲ್ಲ, ಜ್ಞಾನದಲ್ಲಿ ಪರಿಶ್ರಮವಿಲ್ಲ. ಸೃಷ್ಟಿಚಕ್ರವನ್ನು ತಿಳಿದುಕೊಳ್ಳುವುದು ಚರಿತ್ರೆ-ಭೂಗೋಳವಾಗಿದೆ. ಶ್ರೇಷ್ಠಾತಿ ಶ್ರೇಷ್ಠನು ತಂದೆಯಾಗಿದ್ದಾರೆ. ನಂತರ ಸೂಕ್ಷ್ಮವತನದ ದೇವತೆಗಳಾಗಿದ್ದಾರೆ. ವಿಶ್ವದ ಚರಿತ್ರೆ-ಭೂಗೋಳವು ಮನುಷ್ಯ ಸೃಷ್ಟಿಯಲ್ಲಿಯೇ ಇರುತ್ತದೆ. ಯಾವುದೇ ಸೂಕ್ಷ್ಮವತನ, ಮೂಲವತನದಲ್ಲಿ ಚರಿತ್ರೆ-ಭೂಗೋಳವಿರುವುದಿಲ್ಲ, ಅದು ಶಾಂತಿಧಾಮವಾಗಿದೆ. ಸತ್ಯಯುಗವು ಸುಖಧಾಮ, ಕಲಿಯುಗವು ದುಃಖಧಾಮವಾಗಿದೆ. ಇಲ್ಲಿ ರಾವಣ ರಾಜ್ಯದಲ್ಲಿ ಯಾರಿಗೂ ಶಾಂತಿಸಿಗಲು ಸಾಧ್ಯವಿಲ್ಲ. ಈಗ ನೀವು ಮಕ್ಕಳಿಗೆ ಜ್ಞಾನ ಸಿಕ್ಕಿದೆ. ನಾವಾತ್ಮರು ಶಾಂತಿಧಾಮದ ನಿವಾಸಿಗಳಾಗಿದ್ದೇವೆ, ಕರ್ಮ ಮಾಡುವುದಕ್ಕಾಗಿ ಈ ಕರ್ಮೇಂದ್ರಿಯಗಳು ಸಿಕ್ಕಿವೆ. ಕರ್ಮ ಮಾಡಲಿ, ಮಾಡದಿರಲಿ, ನಾವಂತೂ ಆತ್ಮರಾಗಿದ್ದೇವೆ, ನಮ್ಮ ಸ್ವಧರ್ಮವು ಶಾಂತಿಯಾಗಿದೆ. ಕರ್ಮ ಯೋಗಿಗಳಲ್ಲವೆ. ಕರ್ಮವನ್ನೂ ಅವಶ್ಯವಾಗಿ ಮಾಡಬೇಕಾಗಿದೆ. ಎಂದೂ ಕರ್ಮ ಸನ್ಯಾಸಿಗಳಾಗಲು ಸಾಧ್ಯವಿಲ್ಲ. ಇದೂ ಸಹ ಈ ಸನ್ಯಾಸಿಗಳ ಪಾತ್ರವಾಗಿದೆ. ಮನೆ-ಮಠವನ್ನು ಬಿಟ್ಟು ಹೋಗುತ್ತಾರೆ. ಭೋಜನವನ್ನು ತಯಾರಿಸುವುದಿಲ್ಲ, ಗೃಹಸ್ಥಿಗಳಿಂದ ಭಿಕ್ಷೆ ಬೇಡುತ್ತಾರೆ ಮತ್ತೆ ಆ ಗೃಹಸ್ಥಿಗಳ ಬಳಿಯೇ ತಿನ್ನುತ್ತಾರಲ್ಲವೆ. ಮನೆ-ಮಠವನ್ನು ಬಿಟ್ಟು ಪುನಃ ಕರ್ಮವನ್ನಂತೂ ಮಾಡುತ್ತಾರೆ. ಕರ್ಮ ಸನ್ಯಾಸವಂತೂ ಆಗಲು ಸಾಧ್ಯವಿಲ್ಲ. ಯಾವಾಗ ಆತ್ಮವು ಶಾಂತಿಧಾಮದಲ್ಲಿ ಇರುವುದು ಆಗ ಕರ್ಮ ಸನ್ಯಾಸವಾಗುತ್ತದೆ. ಅಲ್ಲಿ ಕರ್ಮೇಂದ್ರಿಯಗಳೇ ಇಲ್ಲವೆಂದಮೇಲೆ ಕರ್ಮವನ್ನು ಹೇಗೆ ಮಾಡುತ್ತಾರೆ? ಇದಕ್ಕೆ ಕರ್ಮ ಕ್ಷೇತ್ರವೆಂದು ಹೇಳುತ್ತಾರೆ. ಕರ್ಮ ಕ್ಷೇತ್ರದಲ್ಲಿ ಎಲ್ಲರೂ ಬರಬೇಕಾಗುತ್ತದೆ. ಅದು ಶಾಂತಿಧಾಮ ಅಥವಾ ಮೂಲವತನವಾಗಿದೆ. ನಾವಾತ್ಮರು ಬ್ರಹ್ಮತತ್ವದಲ್ಲಿ ಲೀನವಾಗುತ್ತೇವೆ ಎಂದಲ್ಲ. ನಾವು ಶಾಂತಿಧಾಮದ ನಿವಾಸಿಗಳಾಗಿದ್ದೇವೆ. ಇಲ್ಲಿ ಕರ್ಮಕ್ಷೇತ್ರಕ್ಕೆ ಪಾತ್ರವನ್ನಭಿನಯಿಸಲು ಬರುತ್ತೇವೆ, ಇವು ವಿಸ್ತಾರದ ಮಾತುಗಳಾಗಿವೆ. ಸಾರ ರೂಪದಲ್ಲಂತೂ ಹೇಳುತ್ತಾರೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಿ ಮತ್ತು ತಂದೆಯನ್ನು ನೆನಪು ಮಾಡಿರಿ ಆಗ ವಿಕರ್ಮಗಳು ವಿನಾಶವಾಗುವುದು. ಇದಕ್ಕೇ ಭಾರತದ ಪ್ರಾಚೀನ ಯೋಗವೆಂದು ಹೇಳಲಾಗುತ್ತದೆ. ವಾಸ್ತವದಲ್ಲಿ ಇದಕ್ಕೆ ಯೋಗವಲ್ಲ, ನೆನಪು ಎಂದು ಹೇಳಬೇಕು. ಇದರಲ್ಲಿ ಪರಿಶ್ರಮವಿದೆ. ಬಹಳ ಕೆಲವರೇ ಯೋಗಿಗಳಾಗುತ್ತಾರೆ. ಯೋಗದ ಶಿಕ್ಷಣವು ಮೊದಲು ಬೇಕು ನಂತರ ಜ್ಞಾನ. ಮೊಟ್ಟ ಮೊದಲು ತಂದೆಯ ನೆನಪಾಗಿದೆ.
ತಂದೆಯು ತಿಳಿಸುತ್ತಾರೆ – ದೇಹಿ ಅಭಿಮಾನಿಯಾಗಿ. ಇದು ಆತ್ಮಿಕ ನೆನಪಿನ ಯಾತ್ರೆಯಾಗಿದೆ. ಜ್ಞಾನದ ಯಾತ್ರೆಯಲ್ಲ. ಇದರಲ್ಲಿ ಬಹಳ ಪರಿಶ್ರಮ ಪಡಬೇಕಾಗುತ್ತದೆ. ಯಾರಾದರೂ ಭಲೆ ಬಿ.ಕೆ. ಎಂದು ಕರೆಸಿಕೊಳ್ಳಬಹುದು ಆದರೆ ತಂದೆಯನ್ನು ನೆನಪು ಮಾಡುವುದಿಲ್ಲ. ತಂದೆಯು ಬಂದು ಬ್ರಹ್ಮಾರವರ ಮೂಲಕ ನೀವು ಮಕ್ಕಳನ್ನು ದೇಹೀ-ಅಭಿಮಾನಿಯನ್ನಾಗಿ ಮಾಡುತ್ತಾರೆ. ಇವರು ದೇಹಾಭಿಮಾನಿಯಾಗಿದ್ದರು, ಈಗ ದೇಹೀ-ಅಭಿಮಾನಿಯಾಗುವ ಪುರುಷಾರ್ಥವು ನಡೆಯುತ್ತಿದೆ. ಬ್ರಹ್ಮನು ಭಗವಂತನಲ್ಲ. ಇಲ್ಲಂತೂ ಎಲ್ಲಾ ಮನುಷ್ಯ ಮಾತ್ರರೂ ಪತಿತರಾಗಿದ್ದಾರೆ, ಪಾವನ ಶ್ರೇಷ್ಠಾಚಾರಿಗಳು ಒಬ್ಬರೂ ಇಲ್ಲ. ಆತ್ಮನಿಗಾಗಿಯೇ ಪುಣ್ಯಾತ್ಮ, ಪಾಪಾತ್ಮನೆಂದು ಹೇಳಲಾಗುತ್ತದೆ. ನಾನಾತ್ಮನಿಗೆ ತೊಂದರೆ ಕೊಡಬೇಡಿ ಎಂದು ಮನುಷ್ಯರೂ ಹೇಳುತ್ತಾರೆ ಆದರೆ ನಾನು ಯಾರು? ಎಂಬುದನ್ನು ತಿಳಿದುಕೊಳ್ಳುವುದಿಲ್ಲ. ಕೇಳಲಾಗುತ್ತದೆ - ಹೇ ಜೀವಾತ್ಮ, ನೀವೇನು ಉದ್ಯೋಗ ಮಾಡುತ್ತೀರಿ? ಆಗ ಹೇಳುತ್ತಾರೆ - ನಾನಾತ್ಮನು ಈ ಶರೀರದ ಮೂಲಕ ಇಂತಹ ಉದ್ಯೋಗ ಮಾಡುತ್ತೇನೆ ಅಂದಾಗ ಮೊಟ್ಟ ಮೊದಲು ಈ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿ. ಈ ಆತ್ಮಿಕ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯು ಬಂದು ದೇಹೀ ಅಭಿಮಾನಿಗಳನ್ನಾಗಿ ಮಾಡುತ್ತಾರೆ. ಯಾರಾದರೂ ಜ್ಞಾನದಲ್ಲಿ ತೀಕ್ಷ್ಣವಾಗಿ ಮುಂದೆ ಹೋದರೆ ಅವರು ಪಕ್ಕಾ ಆತ್ಮಾಭಿಮಾನಿಯಾಗಿದ್ದಾರೆ ಎಂದಲ್ಲ. ಆತ್ಮಾಭಿಮಾನಿಗಳು ಜ್ಞಾನವನ್ನು ಚೆನ್ನಾಗಿ ಧಾರಣೆ ಮಾಡುತ್ತಾರೆ, ಉಳಿದಂತೆ ಅನೇಕರಿದ್ದಾರೆ ಯಾರು ಜ್ಞಾನವನ್ನು ಚೆನ್ನಾಗಿ ತಿಳಿದುಕೊಳ್ಳುತ್ತಾರೆ ಆದರೆ ಶಿವ ತಂದೆಯ ನೆನಪನ್ನು ಮರೆತು ಹೋಗುತ್ತಾರೆ. ಪದೇ-ಪದೇ ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಬೇಕಾಗಿದೆ. ಇದರಲ್ಲಿ ಜಿನ್ಹನ ತರಹ ಆಗಬೇಕಾಗಿದೆ. ಜಿನ್ಹನ ಕಥೆಯಿದೆ, ತಂದೆಯು ಈ ಕೆಲಸವನ್ನು ಕೊಡುತ್ತಾರೆ - ಮಕ್ಕಳೇ, ನನ್ನನ್ನು ನೆನಪು ಮಾಡಿ, ಇಲ್ಲದಿದ್ದರೆ ಮಾಯೆಯು ನಿಮ್ಮನ್ನು ತಿಂದು ಬಿಡುವುದು. ಮಾಯೆಯು ಜಿನ್ಹ್ ಆಗಿದೆ, ಎಷ್ಟು ತಂದೆಯನ್ನು ನೆನಪು ಮಾಡುತ್ತೀರೋ ಅಷ್ಟು ವಿಕರ್ಮಗಳು ವಿನಾಶವಾಗುತ್ತವೆ ಮತ್ತು ನಿಮಗೆ ತಂದೆಯ ಆಕರ್ಷಣೆಯಾಗುತ್ತದೆ. ಮಾಯೆಯು ಉಲ್ಟಾ ಮಾಡಿ ನಿಮ್ಮನ್ನು ಬಹಳ ಬಿರುಗಾಳಿಗಳಲ್ಲಿ ತರುತ್ತದೆ. ಬುದ್ಧಿಯಲ್ಲಿ ಇದೇ ನೆನಪಿರಲಿ - ನಾವಾತ್ಮರು ತಂದೆಯ ಮಕ್ಕಳಾಗಿದ್ದೇವೆ - ಇದೇ ಖುಷಿಯಲ್ಲಿ ಇರಬೇಕಾಗಿದೆ.
ದೇಹಾಭಿಮಾನದಲ್ಲಿ ಬರುವುದರಿಂದ ಮಾಯೆಯು ಪೆಟ್ಟು ಕೊಡುತ್ತದೆ. ಹಾತಂತಾಯಿಯ ಆಟವನ್ನೂ ತೋರಿಸುತ್ತಾರೆ. ಬಾಯಲ್ಲಿ ಉಂಗುರವನ್ನು ಹಾಕಿಕೊಳ್ಳುತ್ತಿದ್ದಂತೆಯೇ ಮಾಯವಾಗಿ ಬಿಡುತ್ತಾರೆ. ನಿಮಗೂ ಸಹ ಒಂದುವೇಳೆ ತಂದೆಯ ನೆನಪಿನಲ್ಲಿ ಇದ್ದಿದ್ದೇ ಆದರೆ ಮಾಯೆಯು ತೊಂದರೆ ಕೊಡುವುದಿಲ್ಲ, ಇದರಲ್ಲಿಯೇ ಯುದ್ಧವು ನಡೆಯುತ್ತದೆ. ನೀವು ನೆನಪು ಮಾಡುವ ಪುರುಷಾರ್ಥ ಮಾಡುತ್ತೀರಿ ಆದರೆ ಮಾಯೆಯು ಈ ರೀತಿ ಉಸಿರು ಕಟ್ಟಿಸುತ್ತದೆ ನೆನಪು ಮಾಡುವುದಕ್ಕೇ ಬಿಡುವುದಿಲ್ಲ. ನೀವು ಬೇಸರವಾಗಿ ಮಲಗಿ ಬಿಡುತ್ತೀರಿ. ಮಾಯೆಯೊಂದಿಗೆ ಇಷ್ಟು ಯುದ್ಧವು ನಡೆಯುತ್ತದೆ ಬಾಕಿ ವಿಶ್ವದ ಚರಿತ್ರೆ, ಭೂಗೋಳವನ್ನು ತಿಳಿದುಕೊಳ್ಳುವುದು ಕಷ್ಟವೇನೂ ಇಲ್ಲ. ನಾವಂತೂ ಬಹಳ ಚೆನ್ನಾಗಿ ತಿಳಿಸಿಕೊಡುತ್ತೇವೆ ಎಂದಲ್ಲ. ನೆನಪಿನದೇ ಮೊಟ್ಟ ಮೊದಲ ಮಾತಾಗಿದೆ. ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಮೊಟ್ಟ ಮೊದಲು ಈ ಪಾಠವನ್ನು ಕಲಿಸಬೇಕಾಗಿದೆ - ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಂಡು ತಂದೆಯನ್ನು ನೆನಪು ಮಾಡಿದರೆ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಮೊದಲು ಇದೇ ಪಾಠವನ್ನು ತಿಳಿಸಬೇಕಾಗಿದೆ. ಭಾರತದ ಪ್ರಾಚೀನ ಯೋಗವನ್ನು ಯಾರೂ ಕಲಿಸಲು ಸಾಧ್ಯವಿಲ್ಲ, ತಂದೆಯು ಬಂದು ಕಲಿಸಿದಾಗಲೇ ಕಲಿಯುವರು. ಮನುಷ್ಯರು ಮನುಷ್ಯರಿಗೆ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಇದು ಅಸಾಧ್ಯವಾಗಿದೆ. ಸತ್ಯಯುಗದಲ್ಲಂತೂ ಪಾವನರೇ ಇರುತ್ತಾರೆ, ಅಲ್ಲಂತೂ ಪ್ರಾಲಬ್ಧವನ್ನು ಭೋಗಿಸುತ್ತಾರೆ. ಜ್ಞಾನ-ಅಜ್ಞಾನದ ಮಾತಿರುವುದಿಲ್ಲ. ಭಕ್ತಿಮಾರ್ಗದಲ್ಲಿಯೇ ತಂದೆಯನ್ನು ಕರೆಯುತ್ತಾರೆ - ಬಂದು ದುಃಖವನ್ನು ಹರಿಸಿ ಸುಖ ಕೊಡಿ ಎಂದು. ಸತ್ಯ-ತ್ರೇತಾಯುಗದಲ್ಲಿ ಯಾವುದೇ ಗುರು-ಗೋಸಾಯಿಗಳು ಇರುವುದಿಲ್ಲ, ಅಲ್ಲಂತೂ ಸದ್ಗತಿ ಪಡೆದಿರುತ್ತಾರೆ. ನೀವು 21 ಜನ್ಮಗಳಿಗಾಗಿ ಸದ್ಗತಿಯನ್ನು ಪಡೆಯುತ್ತೀರಿ 21 ಪೀಳಿಗೆಗಳು. 21 ಜನ್ಮಗಳ ಉದ್ಧಾರ ಮಾಡುವವರೇ ಬ್ರಹ್ಮಾಕುಮಾರಿ ಎಂದು ಹೇಳುತ್ತಾರೆ, ಇದು ಭಾರತದಲ್ಲಿಯೇ ಗಾಯನವಿದೆ. ಭಾರತದಲ್ಲಿಯೇ ನಿಮಗೆ 21 ಜನ್ಮಗಳ ಆಸ್ತಿಯು ಸಿಗುತ್ತದೆ, ಅಲ್ಲಿ ನೀವು ಒಂದೇ ದೇವಿ-ದೇವತಾ ಧರ್ಮದವರು ಇರುತ್ತೀರಿ, ಮತ್ತ್ಯಾವುದೇ ಧರ್ಮವು ಇರುವುದಿಲ್ಲ. ತಂದೆಯು ಬಂದು ನಿಮ್ಮನ್ನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಪವಿತ್ರರಾಗದ ವಿನಃ ನಾವು ಹಿಂತಿರುಗಿ ಹೋಗಲು ಹೇಗೆ ಸಾಧ್ಯ? ಇಲ್ಲಂತೂ ಎಲ್ಲರೂ ವಿಕಾರಿ, ಪತಿತರಾಗಿದ್ದಾರೆ. ಯಾರು-ಯಾರು ಧರ್ಮ ಸ್ಥಾಪಕರಿದ್ದಾರೆಯೋ ಅವರು ಮತ್ತೆ ಪಾಲನೆ ಮಾಡುತ್ತಾರೆ. ಅವರ ಧರ್ಮವು ವೃದ್ಧಿಯಾಗುತ್ತಾ ಹೋಗುತ್ತದೆ. ಯಾರೂ ಹಿಂತಿರುಗಿ ಹೋಗಲು ಸಾಧ್ಯವಿಲ್ಲ. ಒಬ್ಬ ಪಾತ್ರಧಾರಿಯೂ ಹೋಗಲು ಸಾಧ್ಯವಿಲ್ಲ. ಎಲ್ಲರೂ ಸತೋಪ್ರಧಾನರಿಂದ ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಬ್ರಹ್ಮನಿಗಾಗಿಯೂ ಬ್ರಹ್ಮನದಿನ, ಬ್ರಹ್ಮನ ರಾತ್ರಿಯೆಂದು ಹೇಳುತ್ತಾರೆ ಅಂದಾಗ ಸೃಷ್ಟಿಯಲ್ಲಿ ಕೇವಲ ಬ್ರಹ್ಮನೊಬ್ಬರೇ ಇರುವರೇ? ಈಗ ನೀವು ಬ್ರಾಹ್ಮಣ ಕುಲದವರಾಗುತ್ತಿದ್ದೀರಿ, ನೀವು ರಾತ್ರಿಯಲ್ಲಿದ್ದಿರಿ, ಈಗ ದಿನದಲ್ಲಿ ಹೋಗುತ್ತಿದ್ದೀರಿ.
ನಿಮಗೆ ತಿಳಿಸಿದ್ದಾರೆ - ಎಷ್ಟು ಸಮಯ ಪೂಜ್ಯತನದಲ್ಲಿ, ಎಷ್ಟು ಜನ್ಮಗಳು ಪೂಜಾರಿಗಳಾಗುತ್ತೀರಿ? ಎಲ್ಲಿಯವರೆಗೆ ತಂದೆಯು ಬರುವುದಿಲ್ಲವೋ ಅಲ್ಲಿಯವರೆಗೆ ಯಾರೂ ಭ್ರಷ್ಟಾಚಾರಿಗಳಿಂದ ಶ್ರೇಷ್ಠಾಚಾರಿಗಳಾಗಲು ಸಾಧ್ಯವಿಲ್ಲ. ಯಾರು ವಿಕಾರದಿಂದ ಜನ್ಮ ಪಡೆಯುವರೋ ಅವರಿಗೆ ಭ್ರಷ್ಟಾಚಾರಿಗಳೆಂದು ಹೇಳಲಾಗುತ್ತದೆ ಆದ್ದರಿಂದ ಇದಕ್ಕೆ ನರಕವೆಂದು ಹೇಳುವರು. ಸ್ವರ್ಗ ಮತ್ತು ನರಕ ಎರಡರಲ್ಲಿಯೂ ಒಂದುವೇಳೆ ದುಃಖವಿದ್ದರೆ ಅದಕ್ಕೆ ಸ್ವರ್ಗವೆಂದು ಹೇಳಲಾಗುವುದಿಲ್ಲ. ಎಲ್ಲಿಯವರೆಗೆ ಪೂರ್ಣ ತಿಳಿದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಉಲ್ಟಾ-ಸುಲ್ಟಾ ಪ್ರಶ್ನೆ ಮಾಡುತ್ತಾರೆ. ನೀವು ತಿಳಿಸಬೇಕಾಗಿದೆ - ಭಾರತವು ಬಹಳ ಶ್ರೇಷ್ಠವಾಗಿತ್ತು, ಹೇಗೆ ಈಶ್ವರನ ಮಹಿಮೆಯು ಅಪರಂಪಾರವಾಗಿದೆಯೋ ಹಾಗೆಯೇ ಭಾರತದ ಮಹಿಮೆಯೂ ಅಪರಂಪಾರವಾಗಿದೆ. ಭಾರತವು ಹೇಗಿತ್ತು? ಆ ರೀತಿ ಯಾರು ಮಾಡಿದರು? ತಂದೆ. ಅವರದೇ ಮಹಿಮೆಯನ್ನು ಹಾಡುತ್ತಾರೆ. ತಂದೆಯೇ ಬಂದು ಮಕ್ಕಳನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಮನುಷ್ಯ ಮಾತ್ರರನ್ನು ದುರ್ಗತಿಯಿಂದ ಸದ್ಗತಿಯಲ್ಲಿ ಕರೆದುಕೊಂಡು ಹೋಗುತ್ತಾರೆ, ಶಾಂತಿಧಾಮಕ್ಕೆ ಕರೆದುಕೊಂಡು ಹೋಗುತ್ತಾರೆ. ಅದಕ್ಕಾಗಿಯೇ ಮನುಷ್ಯರು ಪುರುಷಾರ್ಥ ಮಾಡುತ್ತಾರೆ. ಅದಕ್ಕೆ ಅಟಲ ಸುಖ, ಅಟಲ ಶಾಂತಿ, ಅಟಲ ಪವಿತ್ರತೆಯೆಂದು ಹೇಳಲಾಗುತ್ತದೆ. ಅಲ್ಲಿ ನೀವು ಸುಖದಲ್ಲಿಯೂ ಇರುತ್ತೀರಿ, ಶಾಂತಿಯಲ್ಲಿಯೂ ಇರುತ್ತೀರಿ, ಇನ್ನುಳಿದ ಆತ್ಮರು ಶಾಂತಿಯಲಿ ಇ್ಲರುತ್ತಾರೆ. ಹೆಚ್ಚು ಜನ್ಮಗಳನ್ನು ನೀವೇ ತೆಗೆದುಕೊಳ್ಳುತ್ತೀರಿ. ಕಡಿಮೆ ಜನ್ಮಗಳನ್ನು ತೆಗೆದುಕೊಳ್ಳುವವರು ಅಟಲ ಶಾಂತಿಯಲ್ಲಿರುತ್ತಾರೆ. ಅವರು ಹೇಗೆ ಸೊಳ್ಳೆಗಳಂತೆ ಬಂದರು, ಒಂದು ಅಥವಾ ಅರ್ಧ ಜನ್ಮ ಪಾತ್ರವನ್ನು ಅಭಿನಯಿಸಿದರು, ಅಂತಹವರಿಗೆ ಯಾವುದೇ ಬೆಲೆಯಿಲ್ಲ, ಸೊಳ್ಳೆಗಳಿಗೆ ಏನು ಬೆಲೆಯಿದೆ, ರಾತ್ರಿಯಲ್ಲಿ ಹುಟ್ಟುತ್ತವೆ, ರಾತ್ರಿಯಲ್ಲಿಯೇ ಸತ್ತು ಹೋಗುತ್ತವೆ. ಈ ಸಮಯದಲ್ಲಿ ಬಹಳ ಮಂದಿ ಶಾಂತಿಯನ್ನೇ ಬಯಸುತ್ತಾರೆ ಏಕೆಂದರೆ ಈ ಸಮಯದ ಗುರುಗಳು ಶಾಂತಿಯಲ್ಲಿ ಹೋಗುವವರಾಗಿದ್ದಾರೆ.
ನೀವಿಲ್ಲಿ ಸ್ವರ್ಗವಾಸಿಗಳಾಗಲು ಬಂದಿದ್ದೀರಿ. ಸ್ವರ್ಗವಾಸಿಗಳಿಗೆ ಶಾಂತಿವಾಸಿಗಳು ಎಂದು ಹೇಳುವುದಿಲ್ಲ. ಶಾಂತಿವಾಸಿ ಎಂದು ನಿರಾಕಾರಿ ಪ್ರಪಂಚಕ್ಕೆ ಹೇಳಲಾಗುತ್ತದೆ. ಮುಕ್ತಿ ಶಬ್ಧವನ್ನು ಗುರುಗಳಿಂದ ಕಲಿಯುತ್ತಾರೆ. ಮಾತೆಯರು ವೈಕುಂಠಪುರಿಯಲ್ಲಿ ಹೋಗುವುದಕ್ಕಾಗಿ ವ್ರತ-ನಿಯಮಗಳನ್ನು ಇಟ್ಟುಕೊಳ್ಳುತ್ತಾರೆ. ಯಾರಾದರೂ ಮರಣ ಹೊಂದಿದಾಗಲೂ ಸ್ವರ್ಗವಾಸಿಯಾದರೆಂದು ಹೇಳುತ್ತಾರೆ, ಯಾರೂ ಆಗುವುದಿಲ್ಲ ಆದರೆ ಭಾರತವಾಸಿಗಳು ಸ್ವರ್ಗವನ್ನೇ ಒಪ್ಪುತ್ತಾರೆ. ಭಾರತವು ಸ್ವರ್ಗವಾಗಿತ್ತು ಎಂದು ತಿಳಿಯುತ್ತಾರೆ. ಶಿವ ತಂದೆಯು ಭಾರತದಲ್ಲಿಯೇ ಬಂದು ಸ್ವರ್ಗದ ರಚನೆ ಮಾಡುತ್ತಾರೆ ಅಂದಮೇಲೆ ಅವಶ್ಯವಾಗಿ ಇಲ್ಲಿಯೇ ರಚಿಸುತ್ತಾರೆ. ಅವರು ಸ್ವರ್ಗದಲ್ಲಂತೂ ಬರುವುದಿಲ್ಲ. ನಾನು ಬರುವುದೇ ಸ್ವರ್ಗ ಮತ್ತು ನರಕದ ಸಂಗಮದಲ್ಲಿ ಎಂದು ತಂದೆಯು ಹೇಳುತ್ತಾರೆ. ಕಲ್ಪ-ಕಲ್ಪದ ಸಂಗಮದಲ್ಲಿ ಬರುತ್ತಾರೆ. ಇದಕ್ಕೆ ಅವರು ಯುಗೇ ಯುಗೇ ಎಂದು ಬರೆದು ಬಿಟ್ಟಿದ್ದಾರೆ. ಕಲ್ಪದ ಅಕ್ಷರವನ್ನು ಮರೆತು ಹೋಗಿದ್ದಾರೆ. ಇದೂ ಸಹ ಆಟವು ಮಾಡಲ್ಪಟ್ಟಿದೆ, ಮತ್ತೆ ಇದೇ ಪುನರಾವರ್ತನೆ ಆಗುವುದು. ಈ ಅಂತಿಮ ಜನ್ಮದಲ್ಲಿ ನೀವು ತಂದೆಯನ್ನು ಮತ್ತು ಸೃಷ್ಟಿಚಕ್ರವನ್ನು ತಿಳಿದುಕೊಂಡಿದ್ದೀರಿ, ನಂಬರ್ವಾರ್ ಹೇಗೆ ಸ್ಥಾಪನೆಯಾಗುತ್ತದೆ ಎಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಭಾರತವಾಸಿಗಳ ಮೇಲೆ ಇಡೀ ಆಟವು ಮಾಡಲ್ಪಟ್ಟಿದೆ. ನೀವೀಗ ತಂದೆಯ ಮೂಲಕ ರಾಜಯೋಗವನ್ನು ಕಲಿಯುತ್ತೀರಿ. ತಂದೆಯ ನೆನಪಿನಿಂದಲೇ ರಾಜ್ಯವನ್ನು ಪಡೆಯುತ್ತೀರಿ. ಚಿತ್ರಗಳೂ ಇವೆಯಲ್ಲವೆ. ಇವೆಲ್ಲಾ ಚಿತ್ರಗಳನ್ನು ಯಾರು ಮಾಡಿದರು! ಇವರಿಗೆ ಯಾರೂ ಗುರು-ಗೋಸಾಯಿಗಳಂತೂ ಇಲ್ಲ. ಒಂದುವೇಳೆ ಗುರುವಿದ್ದಿದ್ದರೂ ಸಹ ಗುರುವಿಗೆ ಕೇವಲ ಒಬ್ಬ ಶಿಷ್ಯನೇ ಇರುವರೇ? ಅನೇಕರು ಇರುವರಲ್ಲವೆ. ಈ ಜ್ಞಾನವನ್ನು ತಂದೆಯ ವಿನಃ ಮತ್ತ್ಯಾರೂ ತಿಳಿಸಿಕೊಳ್ಳಲು ಸಾಧ್ಯವಿಲ್ಲ. ಈ ನಿಮ್ಮ ಚಿತ್ರಗಳನ್ನು ದಾದಾರವರು ಮಾಡಿಸಿದ್ದಾರೆಯೇ ಎಂದು ಅನೇಕರು ಕೇಳುತ್ತಾರೆ. ಇವನ್ನು ತಂದೆಯೇ ದಿವ್ಯದೃಷ್ಟಿಯಿಂದ ಸಾಕ್ಷಾತ್ಕಾರ ಮಾಡಿಸಿದ್ದಾರೆ, ವೈಕುಂಠದ ಸಾಕ್ಷಾತ್ಕಾರವನ್ನೂ ಮಾಡಿಸಿದ್ದಾರೆ. ಅಲ್ಲಿ ಹೇಗೆ ಶಾಲೆಯು ನಡೆಯುತ್ತದೆ. ಯಾವ ಭಾಷೆಯಿರುತ್ತದೆ, ಎಲ್ಲವೂ ಸಾಕ್ಷಾತ್ಕಾರ ಮಾಡಿದ್ದಾರೆ. ಮಕ್ಕಳು ಭಟ್ಟಿಯಲ್ಲಿದ್ದಾಗ ತಂದೆಯು ಬಹಳ ಖುಷಿ ಪಡಿಸುತ್ತಿದ್ದರು. ಕರಾಚಿಯಲ್ಲಿ ಕೇವಲ ನೀವೇ ಪ್ರತ್ಯೇಕವಾಗಿ ಇದ್ದಿರಿ, ಹೇಗೆ ಅಲ್ಲಿ ತಮ್ಮದೇ ರಾಜ್ಯವಾಗಿತ್ತು, ತಮ್ಮದೇ ಮಾತು ತಮ್ಮದೇ ರಾಜ್ಯ..... ಅನ್ಯರ್ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇವರು ಖುದಾಪ್ರಸ್ಥರೆಂದು ತಿಳಿಯುತ್ತಿದ್ದರು. ತಂದೆಯು ತಿಳಿಸಿದ್ದಾರೆ - ನೀವು ಒಬ್ಬ ತಂದೆಯವರಾಗಿದ್ದೀರಿ, ನನ್ ಬಟ್ ಒನ್ (ಒಬ್ಬ ತಂದೆಯ ವಿನಃ ಮತ್ತ್ಯಾರನ್ನೂ ನೆನಪು ಮಾಡಬಾರದು) ಆ ನನ್ಗಳು ಕ್ರಿಸ್ತನನ್ನೇ ತಿಳಿದುಕೊಂಡಿರುತ್ತಾರೆ, ಅವರ ವಿನಃ ಮತ್ತ್ಯಾರನ್ನೂ ಅಲ್ಲ.
ನೀವು ತಿಳಿದುಕೊಂಡಿದ್ದೀರಿ - ಆಸ್ತಿಯು ಒಬ್ಬ ಶಿವ ತಂದೆಯಿಂದಲೇ ಸಿಗುತ್ತದೆ, ಶಿವ ತಂದೆಯು ಬಿಂದುವಾಗಿದ್ದಾರೆ, ಅವರೂ ಸಹ ಯಾರ ಮೂಲಕವಾದರೂ ತಿಳಿಸುವರಲ್ಲವೆ. ಪ್ರಜಾಪಿತ ಬ್ರಹ್ಮನು ಅವಶ್ಯವಾಗಿ ಇಲ್ಲಿಯೇ ಇರುವರು. ಇವರ ಅನೇಕ ಜನ್ಮಗಳ ಅಂತಿಮ ಜನ್ಮದಲ್ಲಿ ಪತಿತ ಶರೀರದಲ್ಲಿ ಪ್ರವೇಶ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ. ಒಳ್ಳೆಯದು.
ಧಾರಣೆಗಾಗಿ ಮುಖ್ಯಸಾರ:
1. ಜ್ಞಾನವನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ಆತ್ಮಾಭಿಮಾನಿಗಳಾಗಬೇಕಾಗಿದೆ. ಇದೇ ಪರಿಶ್ರಮವಿದೆ. ಇದೇ ಉನ್ನತ ಗುರಿಯಾಗಿದೆ. ಈ ಪರಿಶ್ರಮದಿಂದ ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕಾಗಿದೆ.
2. ಜಿನ್ಹ್ ಆಗಿ ನೆನಪಿನ ಯಾತ್ರೆ ಮಾಡಬೇಕಾಗಿದೆ. ಮಾಯೆಯು ಎಷ್ಟಾದರೂ ವಿಘ್ನಗಳನ್ನು ಹಾಕಲಿ ಆದರೆ ಬಾಯಲ್ಲಿ ಜ್ಞಾನದ ಉಂಗುರವನ್ನು ಹಾಕಿಕೊಳ್ಳಬೇಕಾಗಿದೆ. ಮಾಯೆಯಿಂದ ಬೇಸರವಾಗಬಾರದು. ಒಬ್ಬ ತಂದೆಯ ನೆನಪಿನಲ್ಲಿದ್ದು ಬಿರುಗಾಳಿಗಳನ್ನು ದೂರ ಸರಿಸಬೇಕಾಗಿದೆ.
ಓಂ ಶಾಂತಿ. ಎಲ್ಲಾ ಮಕ್ಕಳು ನೆನಪಿನಲ್ಲಿ ಕುಳಿತಿದ್ದೀರಿ - ಮನ್ಮನಾಭವ. ಈ ಸಂಸ್ಕೃತ ಅಕ್ಷರವು ವಾಸ್ತವದಲ್ಲಿ ಇಲ್ಲ. ತಂದೆಯು ಯಾವಾಗ ಸಹಜ ರಾಜಯೋಗವನ್ನು ಕಲಿಸಿದರೋ ಆಗ ಸಂಸ್ಕೃತ ಶಬ್ಧಗಳನ್ನು ಹೇಳಲಿಲ್ಲ. ಇವರಿಗೆ ಸಂಸ್ಕೃತವು ಗೊತ್ತೇ ಇಲ್ಲ. ತಂದೆಯಂತೂ ಹಿಂದಿ ಭಾಷೆಯಲ್ಲಿಯೇ ತಿಳಿಸುತ್ತಾರೆ. ಭಲೆ ಈ ರಥ (ಬ್ರಹ್ಮಾ) ವು ಹಿಂದಿ, ಸಿಂಧಿ ಹಾಗೂ ಆಂಗ್ಲಭಾಷೆಯನ್ನು ತಿಳಿದುಕೊಂಡಿದ್ದಾರೆ. ಆದರೆ ತಂದೆಯು ತಿಳಿಸುವುದೇ ಹಿಂದಿ ಭಾಷೆಯಲ್ಲಿ. ಯಾರು ಯಾವ ಧರ್ಮದವರೋ ಅವರದು ತಮ್ಮದೇ ಆದ ಭಾಷೆಯಿರುತ್ತದೆ. ಇಲ್ಲಿ ಹಿಂದಿಭಾಷೆಯೇ ನಡೆಯುತ್ತದೆ. ಈ ಭಾಷೆಯನ್ನು ತಿಳಿದುಕೊಳ್ಳುವುದು ಬಹಳ ಸಹಜವಾಗಿದೆ ಮತ್ತು ಈ ಶಾಲೆಯೂ ವಿಚಿತ್ರವಾಗಿದೆ, ಇದರಲ್ಲಿ ಯಾವುದೇ ಕಾಗದ, ಪೆನ್ಸಿಲ್, ಪೆನ್ ಇತ್ಯಾದಿಗಳ ಅವಶ್ಯಕತೆಯಿಲ್ಲ. ಇಲ್ಲಂತೂ ಕೇವಲ ಒಂದು ಶಬ್ಧವನ್ನು ನೆನಪು ಮಾಡಬೇಕಾಗಿದೆ ಅರ್ಥಾತ್ ತಂದೆಯನ್ನು ನೆನಪು ಮಾಡಿ. ಗಾಡ್ಅನ್ನು ಅಥವಾ ಈಶ್ವರ ಅಥವಾ ಪರಮಪಿತ ಪರಮಾತ್ಮನನ್ನು ಯಾರಾದರೂ ನೆನಪು ಮಾಡದೇ ಇರುವುದು, ಇದು ವಿರಳವಾಗಿದೆ. ನೆನಪಂತೂ ಎಲ್ಲರೂ ಮಾಡುತ್ತಾರೆ ಆದರೆ ಅವರ ಪರಿಚಯವಿಲ್ಲ. ತಂದೆಯೇ ಬಂದು ತಮ್ಮ ಪರಿಚಯವನ್ನು ಕೊಡುತ್ತಾರೆ. ಶಾಸ್ತ್ರಗಳಲ್ಲಿ ಕಲ್ಪದ ಆಯಸ್ಸನ್ನು ಎಷ್ಟು ಸುದೀರ್ಘವಾಗಿ ಬರೆದಿದ್ದಾರೆ, ಅದನ್ನು ತಂದೆಯೇ ಬಂದು ಸರಿಪಡಿಸುತ್ತಾರೆ. ಇದು ದೊಡ್ಡ ಮಾತೇನೂ ಅಲ್ಲ. ಇಲ್ಲದಿದ್ದರೆ ಅಹಲ್ಯೆಯರು, ವೃದ್ಧ ಮಾತೆಯರು ಏನು ತಿಳಿದುಕೊಳ್ಳುವರು! ಇದಂತೂ ಬಹಳ ಸಹಜವಾಗಿದೆ. ಚಿಕ್ಕ ಮಕ್ಕಳೂ ಸಹ ತಿಳಿದುಕೊಳ್ಳಬಹುದಾಗಿದೆ. ಬಾಬಾ ಎಂಬ ಶಬ್ಧವು ಹೊಸದೇನಲ್ಲ, ಶಿವನ ಮಂದಿರದಲ್ಲಿ ಹೋದಾಗ ಇವರು ಶಿವ ತಂದೆಯಾಗಿದ್ದಾರೆ, ನಿರಾಕಾರನಾಗಿದ್ದಾರೆ ಎಂಬುದು ಬುದ್ಧಿಯಲ್ಲಿ ಬರುತ್ತದೆ. ಎಲ್ಲಾ ಮನುಷ್ಯ ಮಾತ್ರರು ಬಾಬಾ ಎಂದು ಹೇಳುತ್ತಾರೆ. ನಾವು ಸರ್ವ ಆತ್ಮರ ತಂದೆಯು ಒಬ್ಬರೇ ಆಗಿದ್ದಾರೆ. ಎಲ್ಲಾ ಜೀವಾತ್ಮರು ಯಾರು ಶರೀರದಲ್ಲಿ ನಿವಾಸ ಮಾಡುವರೋ ಎಲ್ಲರೂ ತಂದೆಯನ್ನು ನೆನಪು ಮಾಡುತ್ತಾರೆ. ಯಾವುದೆಲ್ಲಾ ಧರ್ಮದವರಿದ್ದಾರೆಯೋ ಎಲ್ಲರೂ ಪರಮಪಿತ ಪರಮಾತ್ಮನನ್ನು ಖಂಡಿತ ನೆನಪು ಮಾಡುತ್ತಾರೆ. ಅವರು ಪರಮಧಾಮದಲ್ಲಿರುವ ತಂದೆಯಾಗಿದ್ದಾರೆ, ನಾವೂ ಸಹ ಅಲ್ಲಿನ ನಿವಾಸಿಗಳಾಗಿದ್ದೇವೆ ಅಂದಾಗ ಕೇವಲ ಈಗ ತಂದೆಯನ್ನು ನೆನಪು ಮಾಡಬೇಕಾಗಿದೆ, ನಾವು ಪಾವನರಾಗಬೇಕೆಂಬುದು ಎಲ್ಲರಿಗೂ ಇಷ್ಟವಿದೆ, ಹೇ ಪತಿತರನ್ನು ಪಾವನ ಮಾಡುವವರೇ ಬನ್ನಿ ಎಂದು ಕರೆಯುತ್ತಾರೆ. ಹೊಸ ಪ್ರಪಂಚವು ಪಾವನವಾಗಿತ್ತು, ಈಗ ಹಳೆಯದಾಗಿ ಬಿಟ್ಟಿದೆ. ಇದಕ್ಕೆ ಯಾರೂ ಹೊಸದೆಂದು ಹೇಳುವುದಿಲ್ಲ. ಭಾರತವಾಸಿಗಳಿಗೆ ತಿಳಿದಿದೆ - ಹೊಸ ಭಾರತದಲ್ಲಿ ದೇವಿ-ದೇವತೆಗಳು ರಾಜ್ಯ ಮಾಡುತ್ತಿದ್ದರು. ಹೊಸ ಭಾರತಕ್ಕೆ ಮೊದಲು ಏನಿತ್ತು? ಸಂಗಮ. ಇದಕ್ಕಿಂತಲೂ ಸಹಜವಾಗಿ ಹೇಳಬೇಕು. ಹೊಸದಕ್ಕೆ ಮೊದಲೇ ಹಳೆಯದಿತ್ತು, ಸಂಗಮವನ್ನು ಮನುಷ್ಯರು ಅಷ್ಟು ಸಹಜವಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಹೊಸ ಪ್ರಪಂಚ, ಹಳೆಯ ಪ್ರಪಂಚದ ಇದರ ಮಧ್ಯದ ಸಮಯಕ್ಕೆ ಸಂಗಮವೆಂದು ಹೇಳುತ್ತಾರೆ. ತಂದೆಗಾಗಿಯೇ ಹೇಳುತ್ತಾರೆ - ಹೇ ಪತಿತ ಪಾವನ ಬನ್ನಿ, ಬಂದು ನಮ್ಮನ್ನು ಪಾವನ ಮಾಡಿ, ನಾವು ಪತಿತರಾಗಿ ಬಿಟ್ಟಿದ್ದೇವೆ ಎಂದು. ಹೊಸ ಪ್ರಪಂಚದಲ್ಲಿ ಯಾರೂ ಕರೆಯುವುದಿಲ್ಲ, ಈಗ ನಿಮಗೆ ಅರ್ಥವಾಗಿದೆ - ಈ ಭಾರತವೇ ಪಾವನವಾಗಿತ್ತು, ಹೇ ಪತಿತ-ಪಾವನ ಬನ್ನಿ ಎಂದು ಬಹಳ ಸಮಯದಿಂದಲೂ ಕರೆಯುತ್ತಾ ಬಂದಿದ್ದಾರೆ ಆದರೆ ಪತಿತ ಪ್ರಪಂಚವು ಯಾವಾಗ ಕೊನೆಯಾಗುವುದು ಎಂಬುದು ಅವರಿಗೆ ತಿಳಿದಿಲ್ಲ. ಶಾಸ್ತ್ರಗಳಲ್ಲಿ ಇನ್ನೂ 40 ಸಾವಿರ ವರ್ಷಗಳು ಪತಿತರಾಗಿಯೇ ಇರುತ್ತೇವೆ ಎಂದು ಬರೆದಿದ್ದಾರೆ ಎಂದು ಹೇಳುತ್ತಾರೆ. ಸಂಪೂರ್ಣ ಘೋರ ಅಂಧಕಾರದಲ್ಲಿದ್ದಾರೆ. ನೀವೀಗ ಬೆಳಕಿನಲ್ಲಿದ್ದೀರಿ. ತಂದೆಯು ನಿಮ್ಮನ್ನು ಪ್ರಕಾಶತೆಯಲ್ಲಿ ತಂದಿದ್ದಾರೆ, ಈ 5000 ವರ್ಷಗಳಲ್ಲಿ ಸೃಷ್ಟಿಚಕ್ರವು ಪೂರ್ಣವಾಗುತ್ತದೆ, ನೆನ್ನೆಯ ಮಾತಾಗಿದೆ. ನೀವು ರಾಜ್ಯ ಮಾಡುತ್ತಿದ್ದಿರಿ, ಅವಶ್ಯವಾಗಿ ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಸ್ವರ್ಗವಿತ್ತು, ಪಾವನ ಪ್ರಪಂಚದಲ್ಲಿ ಯಾವುದೇ ಉಪದ್ರವಗಳಾಗಲು ಸಾಧ್ಯವಿಲ್ಲ. ಉಪದ್ರವಗಳಾಗುವುದೇ ರಾವಣ ರಾಜ್ಯದಲ್ಲಿ. ಇಲ್ಲಿ ನಿಮಗೆ ತಂದೆಯು ತಿಳಿಸುತ್ತಾರೆ - ನೀವು ಸನ್ಮುಖದಲ್ಲಿ ಕಿವಿಗಳಿಂದ ಕೇಳುತ್ತೀರಿ, ಕೇಳುವವರು ಯಾರು? ಆತ್ಮ. ಆತ್ಮಕ್ಕೆ ಬಹಳ ಖುಷಿಯಾಗುತ್ತದೆ, ತಂದೆಯು ಪುನಃ ಬಂದು ನಮ್ಮನ್ನು ಮಿಲನ ಮಾಡಿದ್ದಾರೆ. ತಂದೆಯಿಂದ ಆಸ್ತಿಯು ಸಿಕ್ಕಿತ್ತು, ಈಗ ತಂದೆಯು ಹೇಳುತ್ತಾರೆ - ನನ್ನನ್ನು ನೆನಪು ಮಾಡಿ, ಇದರಲ್ಲಿ ಓದುವ-ಬರೆಯುವ ಮಾತಿಲ್ಲ. ಯಾರಾದರೂ ಬಂದಾಗ ಕೇಳಲಾಗುತ್ತದೆ - ತಾವು ಹೇಗೆ ಬಂದಿರಿ ಎಂದು. ಆಗ ಇಲ್ಲಿನ ಮಹಾತ್ಮರೊಂದಿಗೆ ಮಿಲನ ಮಾಡಲು ಬಂದೆವೆಂದು ಹೇಳುತ್ತಾರೆ. ಏಕೆ ನಿಮಗೆ ಏನು ಬೇಕು? ಯಾವುದೇ ಭಿಕ್ಷೆಯು ಬೇಕೆ? ಸನ್ಯಾಸಿಗಳಾಗಿದ್ದರೆ ರೊಟ್ಟಿ ತುಂಡು ಬೇಕು, ಸನ್ಯಾಸಿಗಳು ಯಾರ ಬಳಿಯಾದರೂ ಹೋಗುತ್ತಾರೆ ಅಥವಾ ಮಾರ್ಗ ಮಧ್ಯದಲ್ಲಿ ಸಿಗುತ್ತಾರೆಂದರೆ ಧಾರ್ಮಿಕ ವ್ಯಕ್ತಿಗಳು ಇವರು ಪವಿತ್ರ ಮನುಷ್ಯರಾಗಿದ್ದಾರೆ, ಇವರಿಗೆ ಭೋಜನವನ್ನು ಕೊಡುವುದು ಬಹಳ ಒಳ್ಳೆಯದು ಎಂದು ತಿಳಿಯುತ್ತಾರೆ. ಈಗಂತೂ ಸನ್ಯಾಸಿಗಳಲ್ಲಿಯೂ ಪವಿತ್ರತೆಯಿಲ್ಲ, ತಮೋಪ್ರಧಾನ ಪ್ರಪಂಚವಾಗಿದೆ. ಇದರಲ್ಲಿ ಬಹಳ ಕೊಳಕಿದೆ. ಮನುಷ್ಯರು ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾರೆ. ಇಲ್ಲಂತೂ ಆ ಮಾತೇ ಇಲ್ಲ. ತಂದೆಯು ತಿಳಿಸುತ್ತಾರೆ - ಇಲ್ಲಿ ಬರೆಯುವ ಮಾತೂ ಇಲ್ಲ, ಈ ಜ್ಞಾನ ಬಿಂದುಗಳನ್ನು ಧಾರಣೆ ಮಾಡಿಕೊಳ್ಳುವುದಕ್ಕಾಗಿ ಬರೆಯಬೇಕಾಗುತ್ತದೆ. ಹೇಗೆ ವೈದ್ಯರ ಬಳಿ ಎಷ್ಟೊಂದು ಔಷಧಿಗಳು ಇರುತ್ತವೆಯೋ ಅಷ್ಟೆಲ್ಲಾ ಔಷಧಿಗಳು ನೆನಪಿರುತ್ತವೆ. ವಕೀಲರ ಬುದ್ಧಿಯಲ್ಲಿ ಎಷ್ಟೊಂದು ಕಾನೂನಿನ ಮಾತುಗಳು ನೆನಪಿರುತ್ತವೆ. ನೀವು ಏನನ್ನು ನೆನಪು ಮಾಡಿಕೊಳ್ಳಬೇಕು. ಕೇವಲ ಒಂದು ಮಾತು, ಅದೂ ಸಹ ಬಹಳ ಸಹಜವಾಗಿದೆ. ನೀವು ಹೇಳುತ್ತೀರಿ - ಒಬ್ಬ ಶಿವ ತಂದೆಯನ್ನು ನೆನಪು ಮಾಡಿರಿ. ಶಿವ ತಂದೆಯು ಹೇಗೆ ಬರುತ್ತಾರೆಂದು ಅವರು ಕೇಳುತ್ತಾರೆ. ಇದನ್ನೂ ಸಹ ನಿಮ್ಮ ವಿನಃ ಮತ್ತ್ಯಾರೂ ತಿಳಿದುಕೊಂಡಿಲ್ಲ. ಈಶ್ವರ ಎಲ್ಲಿದ್ದಾರೆಂದು ಕೇಳಿದರೆ ಅವರು ನಾಮ-ರೂಪದಿಂದ ಭಿನ್ನವಾಗಿದ್ದಾರೆಂದು ಹೇಳುತ್ತಾರೆ ಮತ್ತು ಸರ್ವವ್ಯಾಪಿಯೆಂದೂ ಹೇಳಿ ಬಿಡುತ್ತಾರೆ. ಎರಡು ಶಬ್ಧಗಳಲ್ಲಿ ರಾತ್ರಿ-ಹಗಲಿನ ವ್ಯತ್ಯಾಸ ಆಗಿಬಿಡುತ್ತದೆ. ನಾಮ-ರೂಪದಿಂದ ಭಿನ್ನವಾದ ವಸ್ತು ಯಾವುದೂ ಇರುವುದಿಲ್ಲ. ಪರಮಾತ್ಮನು ನಾಯಿ, ಬೆಕ್ಕು ಎಲ್ಲದರಲ್ಲಿಯೂ ಇದ್ದಾರೆಂದು ಹೇಳಿಬಿಡುತ್ತಾರೆ. ಎರಡೂ ಒಂದಕ್ಕೆ ಇನ್ನೊಂದು ವಿರುದ್ಧವಾದ ಮಾತುಗಳಾಯಿತು. ಆದ್ದರಿಂದ ತಂದೆಯು ತಮ್ಮ ಪರಿಚಯ ನೀಡಿ ಹೇಳುತ್ತಾರೆ - ತಂದೆಯಾದ ನನ್ನನ್ನು ನೆನಪು ಮಾಡಿ, ಸಹಜ ರಾಜಯೋಗ ಎಂದು ಗಾಯನವಿದೆ. ತಂದೆಯು ತಿಳಿಸುತ್ತಾರೆ - ಮಕ್ಕಳೇ, ಯೋಗ ಎಂಬ ಶಬ್ಧವನ್ನೂ ತೆಗೆದುಹಾಕಿ. ನೆನಪು ಮಾಡಿ. ಹೇಗೆ ಚಿಕ್ಕ ಮಕ್ಕಳು ತಂದೆ-ತಾಯಿಯನ್ನು ನೋಡುತ್ತಿದ್ದಂತೆಯೇ ಕೂಡಲೇ ಅವರನ್ನು ಅಪ್ಪಿಕೊಳ್ಳುತ್ತಾರೆ. ಇವರು ನಮ್ಮ ತಂದೆ-ತಾಯಿಯೋ ಅಥವಾ ಅಲ್ಲವೋ ಎಂದು ಆಲೋಚಿಸುತ್ತಾರೆಯೇ? ಹಾಗೆಯೇ ಇದರಲ್ಲಿಯೂ ಆಲೋಚಿಸುವ ಮಾತಿಲ್ಲ. ನೀವೂ ಸಹ ಕೇವಲ ಶಿವ ತಂದೆಯನ್ನು ನೆನಪು ಮಾಡಬೇಕಾಗಿದೆ. ಭಕ್ತಿಮಾರ್ಗದಲ್ಲಿಯೂ ನೀವು ಶಿವನ ಮೇಲೆ ಹೂಗಳನ್ನು ಹಾಕುತ್ತಾ ಬಂದಿದ್ದೀರಿ. ಸೋಮನಾಥ ಮಂದಿರವನ್ನು ಎಷ್ಟು ಬೃಹದಾಕಾರವಾಗಿ ಕಟ್ಟಿಸಿದ್ದಾರೆ, ಅದನ್ನು ನಂತರದಲ್ಲಿ ಮಹಮ್ಮದ್ ಘಜಿನಿಯು ಬಂದು ಲೂಟಿ ಮಾಡಿದನು. ಭಾರತದಲ್ಲಿ ಸೋಮನಾಥ ಮಂದಿರವು ಸುಪ್ರಸಿದ್ಧವಾಗಿದೆ. ಎಲ್ಲದಕ್ಕಿಂತ ಮೊದಲು ಶಿವನ ಪೂಜೆಯಾಗಬೇಕು. ಮಕ್ಕಳಿಗೆ ಇದೆಲ್ಲಾ ಜ್ಞಾನದ ಮಾತುಗಳು ಈಗ ಬುದ್ಧಿಯಲ್ಲಿ ಬಂದಿದೆ. ಭಲೆ ಪೂಜೆ ಇತ್ಯಾದಿಗಳನ್ನು ಮಾಡುತ್ತಾ ಬಂದಿದ್ದೀರಿ ಆದರೆ ಇವು ಜಡಚಿತ್ರಗಳೆಂಬುದು ನಿಮಗೆ ತಿಳಿದಿರಲೇ ಇಲ್ಲ. ಅವಶ್ಯವಾಗಿ ಚೈತನ್ಯದಲ್ಲಿ ಬಂದಿರಬೇಕು ಆದ್ದರಿಂದಲೇ ವರ್ಷ-ವರ್ಷವೂ ಶಿವ ಜಯಂತಿಯನ್ನು ಆಚರಿಸುತ್ತಾರೆ. ಇದನ್ನೂ ಹೇಳುತ್ತಾರೆ – ಶಿವ ಪರಮಾತ್ಮನು ನಿರಾಕಾರನಾಗಿದ್ದಾರೆ, ನಾವೂ ಸಹ ನಿರಾಕಾರಿಯಾಗಿದ್ದೇವೆಂದು ಆತ್ಮಕ್ಕೆ ತಿಳಿದಿದೆ. ನೀವೀಗ ಆತ್ಮಾಭಿಮಾನಿಯಾಗುತ್ತೀರಿ. ಬಹಳ ಸಹಜವಾಗಿದೆ. ಅವರಂತೂ ನಮ್ಮ ತಂದೆಯಾಗಿದ್ದಾರೆ, ಜ್ಞಾನ ಸಾಗರ, ಸುಖದ ಸಾಗರ, ಪತಿತ-ಪಾವನನಾಗಿದ್ದಾರೆ. ಅವರಿಗೆ ಬಹಳ ಮಹಿಮೆಯಿದೆ. ಬ್ರಹ್ಮಾ-ವಿಷ್ಣು-ಶಂಕರರಿಗೆ ಇಷ್ಟೊಂದು ಮಹಿಮೆಯಿಲ್ಲ. ಒಬ್ಬರರ ಮಹಿಮೆಯನ್ನು ಹಾಡುತ್ತಾರೆ, ಆ ತಂದೆಯೇ ಬಂದು ಆಸ್ತಿಯನ್ನು ಕೊಡುತ್ತಿದ್ದಾರೆಂದು ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಹೇಗೆ ಲೌಕಿಕ ತಂದೆಯು ಮಕ್ಕಳ ಲಾಲನೆ-ಪಾಲನೆ ಮಾಡುತ್ತಾರೆ ಆದರೆ ಓದಿಸುವುದಿಲ್ಲ. ವಿದ್ಯಾಭ್ಯಾಸಕ್ಕಾಗಿ ಶಾಲೆಗೆ ಹೋಗುತ್ತಾರೆ ಮತ್ತೆ ವಾನಪ್ರಸ್ಥದಲ್ಲಿ ಗುರುಗಳನ್ನು ಮಾಡಿಕೊಳ್ಳುತ್ತಾರೆ ಇತ್ತೀಚೆಗಂತೂ ಹಿರಿಯರು-ಕಿರಿಯರು ಎಲ್ಲರಿಗೂ ಧೀಕ್ಷೆ ಕೊಡಿಸಿ ಬಿಡುತ್ತಾರೆ. ಇಲ್ಲಂತೂ ನೀವು ಮಕ್ಕಳಿಗೆ ಶಿವ ತಂದೆಯನ್ನು ನೆನಪು ಮಾಡಿ ಎಂದು ಹೇಳಲಾಗುತ್ತದೆ. ಎಲ್ಲರಿಗೂ ಹಕ್ಕಿದೆ, ಎಲ್ಲರೂ ನನ್ನ ಮಕ್ಕಳಾಗಿದ್ದಾರೆ. ನಿಮ್ಮಲ್ಲಿಯೂ ಕೆಲವರೇ ಬಹಳ ಚೆನ್ನಾಗಿ ನೆನಪು ಮಾಡುತ್ತಾರೆ. ಇನ್ನೂ ಕೆಲವರಂತೂ ಬಾಬಾ, ಯಾರನ್ನು ನೆನಪು ಮಾಡುವುದು? ಬಿಂದುವನ್ನು ಹೇಗೆ ನೆನಪು ಮಾಡುವುದು ಎಂದು ಹೇಳುತ್ತಾರೆ. ದೊಡ್ಡ ವಸ್ತುವನ್ನು ನೆನಪು ಮಾಡಲಾಗುತ್ತದೆ. ಪರಮಾತ್ಮ, ಯಾರನ್ನು ನೀವು ನೆನಪು ಮಾಡುತ್ತೀರೋ ಅವರು ಹೇಗಿದ್ದಾರೆ? ಮನುಷ್ಯರು ಅವರಿಗೆ ಅಖಂಡ ಜ್ಯೋತಿ ಸ್ವರೂಪ ಎಂದು ಹೇಳಿಬಿಡುತ್ತಾರೆ ಆದರೆ ಆ ರೀತಿಯಿಲ್ಲ. ಅಖಂಡ ಜ್ಯೋತಿಯನ್ನು ನೆನಪು ಮಾಡುವುದು ತಪ್ಪಾಗಿ ಬಿಡುತ್ತದೆ. ನೆನಪಂತೂ ಆಕ್ಯುರೇಟ್ ಆಗಿರಬೇಕು. ತಂದೆಯೇ ಬಂದು ತಮ್ಮ ಪರಿಚಯ ಕೊಡುತ್ತಾರೆ ಮತ್ತೆ ಮಕ್ಕಳಿಗೆ ಇಡೀ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಸಮಾಚಾರವನ್ನೂ ತಿಳಿಸುತ್ತಾರೆ. ಸಾರ ರೂಪದಲ್ಲಿಯೂ ಮತ್ತು ವಿವರವಾಗಿಯೂ ತಿಳಿಸುತ್ತಾರೆ. ಈಗ ತಂದೆಯು ಹೇಳುತ್ತಾರೆ - ಮಕ್ಕಳೇ, ನೀವು ಪಾವನರಾಗಬೇಕೆಂದರೆ ಅದಕ್ಕಾಗಿ ಒಂದೇ ಉಪಾಯವಿದೆ - ನನ್ನನ್ನು ನೆನಪು ಮಾಡಿ, ಪತಿತ-ಪಾವನ ಎಂದು ನನಗೇ ಹೇಳುತ್ತೀರಿ, ಆತ್ಮವನ್ನು ಈಗ ಪಾವನ ಮಾಡಿಕೊಳ್ಳಬೇಕಾಗಿದೆ. ನಾವು ಪತಿತರಾಗಿ ಬಿಟ್ಟಿದ್ದೇವೆ. ಪಾವನರಾಗಿದ್ದೆವು, ಈಗ ಪಾವನರಾಗಿದ್ದೇವೆ ಎಂದು ಆತ್ಮವೇ ಹೇಳುತ್ತದೆ. ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಪ್ರತಿಯೊಂದು ವಸ್ತುವು ಮೊದಲು ಸತೋಪ್ರಧಾನ ನಂತರ ತಮೋಪ್ರಧಾನವಾಗುತ್ತದೆ. ಆತ್ಮವೇ ಹೇಳುತ್ತದೆ - ನಾನು ಪತಿತನಾಗಿದ್ದೇನೆ, ನನ್ನನ್ನು ಪಾವನ ಮಾಡಿರಿ. ಶಾಂತಿಧಾಮದಲ್ಲಿ ಪತಿತರಿರುವುದಿಲ್ಲ. ಇಲ್ಲಿ ಪತಿತರಾಗಿದ್ದಾರೆ ಆದ್ದರಿಂದ ದುಃಖಿಯಾಗಿದ್ದಾರೆ, ಪಾವನರಾಗಿದ್ದಾಗ ಸುಖಿಯಾಗಿದ್ದಿರಿ ಆದ್ದರಿಂದ ಆತ್ಮವೇ ಹೇಳುತ್ತದೆ - ನಮ್ಮನ್ನು ಪಾವನ ಮಾಡಿರಿ, ಅದರಿಂದ ನಾವು ಮುಕ್ತರಾಗಬೇಕು ಎಂದು. ನೀವು ತಿಳಿದುಕೊಂಡಿದ್ದೀರಿ - ಆತ್ಮವೇ ಎಲ್ಲವನ್ನೂ ಮಾಡುತ್ತದೆ. ಜಡ್ಜ್, ವಕೀಲ ಇತ್ಯಾದಿ ಆತ್ಮವೇ ಆಗುತ್ತದೆ. ನಾನು ರಾಜನಾಗಿದ್ದೇನೆ, ಇಂತಹವನಾಗಿದ್ದೇನೆ, ಈಗ ಈ ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕು ಎಂದು ಆತ್ಮವೇ ಹೇಳುತ್ತದೆ. ಇದಕ್ಕೇ ಆತ್ಮಾಭಿಮಾನಿ ಸ್ಥಿತಿಯೆಂದು ಹೇಳಲಾಗುತ್ತದೆ. ದೇಹದಲ್ಲಿದ್ದರೂ ಆತ್ಮ ಅಭಿಮಾನಿ. ರಾವಣ ರಾಜ್ಯದಲ್ಲಿ ದೇಹಾಭಿಮಾನಿಗಳಿರುತ್ತಾರೆ. ಆತ್ಮಾಭಿಮಾನಿಗಳನ್ನಾಗಿ ತಂದೆಯು ಈಗಲೇ ಮಾಡುತ್ತಾರೆ. ಈ ಸಮಯದಲ್ಲಿ ಆತ್ಮವು ಪತಿತ, ದುಃಖಿ ಆಗಿರುವುದರಿಂದ ಹೇ ತಂದೆಯೇ ಬನ್ನಿ ಎಂದು ಕರೆಯುತ್ತದೆ, ಇದನ್ನೂ ಸಹ ನೀವು ತಿಳಿದುಕೊಂಡಿದ್ದೀರಿ - ಡ್ರಾಮಾ ಪ್ಲಾನ ಅನುಸಾರ ಪತಿತರಿಂದ ಪಾವನ, ಪಾವನರಿಂದ ಪತಿತರಾಗುತ್ತಾ ಬಂದಿದ್ದೀರಿ. ಚಕ್ರವು ಸುತ್ತುತ್ತಲೇ ಇರುತ್ತದೆ. ನಮ್ಮದು 84 ಜನ್ಮಗಳು ಹೇಗಾಯಿತು ಎಂಬುದು ಈಗ ನಿಮ್ಮ ಬುದ್ಧಿಯಲ್ಲಿ ಕುಳಿತಿದೆ. ಈ ಮಾತನ್ನು ಮರೆಯಬೇಡಿ. ಸ್ವದರ್ಶನ ಚಕ್ರಧಾರಿಗಳಾಗಿ ಇರಿ. ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ನಮಗೆ ಸಂಪೂರ್ಣ ಜ್ಞಾನವಿದೆ, ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ. ತಂದೆಯು ಮಕ್ಕಳಿಗೆ ತಿಳಿಸುತ್ತಾರೆ - ಮಕ್ಕಳೇ, ನೀವು ಒಬ್ಬ ತಂದೆಯನ್ನೇ ನೆನಪು ಮಾಡಬೇಕಾಗಿದೆ. ತಂದೆಯನ್ನು ನೆನಪು ಮಾಡಿ, ತುಂಡು ರೊಟ್ಟಿಯನ್ನು ತಿನ್ನಿರಿ ಸಾಕು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳಿಗೆ ತಂದೆಯು ಮತ್ತೆ-ಮತ್ತೆ ಹೇಳುತ್ತಾರೆ - ಮಕ್ಕಳೇ, ಹೊಟ್ಟೆಗಾಗಿ ಕೇವಲ ತುಂಡು ರೊಟ್ಟಿಯನ್ನು ತಿಂದರೆ ಸಾಕು, ಹೊಟ್ಟೆಯು ಜಾಸ್ತಿ ಕೇಳುವುದಿಲ್ಲ. ಕೇವಲ ಒಂದು ಪಾವು ಹಿಟ್ಟು ಸಾಕು. ರೊಟ್ಟಿ-ಪಲ್ಯ ಸಾಕು. 10 ರೂಪಾಯಿಗಳಲ್ಲಿಯೂ ಮನುಷ್ಯರು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ, ಇನ್ನೂ ಕೆಲವರು 10 ಸಾವಿರ ರೂಪಾಯಿಗಳಲ್ಲಿಯೂ ಹೊಟ್ಟೆಯನ್ನು ತುಂಬಿಸಿಕೊಳ್ಳುತ್ತಾರೆ. ಬಡವರು ತಿನ್ನುವುದಾದರೂ ಏನು! ಆದರೂ ಸಹ ಗಟ್ಟಿ ಮುಟ್ಟಾಗಿ ಇರುತ್ತಾರೆ. ಭಿನ್ನ-ಭಿನ್ನ ಪದಾರ್ಥಗಳನ್ನು ಮನುಷ್ಯರು ತಿನ್ನುವುದರಿಂದ ಇನ್ನೂ ರೋಗಿಯಾಗಿ ಬಿಡುತ್ತಾರೆ. ವೈದ್ಯರೂ ಸಹ ಇದನ್ನೇ ಹೇಳುತ್ತಾರೆ – ಒಂದು ಪ್ರಕಾರದ ಆಹಾರವನ್ನು ಸೇವಿಸಿ ಆಗ ರೋಗಿಯಾಗುವುದಿಲ್ಲ. ಇಲ್ಲಿ ತಂದೆಯೂ ಸಹ ತಿಳಿಸುತ್ತಾರೆ - ಮಕ್ಕಳೇ ತುಂಡು ರೊಟ್ಟಿಯನ್ನು ತಿನ್ನಿರಿ, ಏನು ಸಿಕ್ಕಿದರೆ ಅದರಲ್ಲಿ ಖುಷಿಯಾಗಿ ಇರಿ. ರೊಟ್ಟಿ-ಪಲ್ಯದಷ್ಟು ಒಳ್ಳೆಯದು ಮತ್ತ್ಯಾವುದೂ ಇಲ್ಲ, ಹೆಚ್ಚು ಲೋಭವೂ ಇರಬಾರದು. ಸನ್ಯಾಸಿಗಳು ಏನು ಮಾಡುತ್ತಾರೆ? ಮನೆ-ಮಠವನ್ನು ಬಿಟ್ಟು ಕಾಡಿಗೆ ಹೋಗುತ್ತಾರೆ. ತತ್ವವನ್ನೇ ಪರಮಾತ್ಮನೆಂದು ತಿಳಿದು ನೆನಪು ಮಾಡುತ್ತಾರೆ. ಬ್ರಹ್ಮತತ್ವದಲ್ಲಿ ಲೀನವಾಗಿ ಬಿಡುತ್ತೇವೆಂದು ತಿಳಿಯುತ್ತಾರೆ ಆದರೆ ಈ ರೀತಿಯಂತೂ ಇಲ್ಲ. ಆತ್ಮವು ಅಮರನಾಗಿದೆ, ಲೀನವಾಗುವ ಮಾತೇ ಇಲ್ಲ ಬಾಕಿ ಆತ್ಮವೇ ಪವಿತ್ರ, ಅಪವಿತ್ರನಾಗುತ್ತದೆ, ನಿಮಗೆ ಎಷ್ಟು ಒಳ್ಳೆಯ ಜ್ಞಾನ ಸಿಕ್ಕಿದೆ. ನೀವೇ ಪ್ರಾಲಬ್ಧವನ್ನು ಭೋಗಿಸುತ್ತೀರಿ ನಂತರ ಈ ಜ್ಞಾನವು ಮರೆತು ಹೋಗುತ್ತದೆ ಮತ್ತೆ ಏಣಿಯನ್ನು ಕೆಳಗಿಳಿಯಲಾಗುತ್ತದೆ. ಈಗ ನಿಮ್ಮ ಬುದ್ಧಿಯಲ್ಲಿ ಸಂಪೂರ್ಣ ಜ್ಞಾನವಿದೆ - ನಾವು ಹೇಗೆ 84 ಜನ್ಮಗಳನ್ನು ಭೋಗಿಸುತ್ತೇವೆ ಎಂದು. ಈ ಪಾತ್ರವು ಎಂದೂ ಯಾರದೂ ನಿಂತು ಹೋಗುವುದಿಲ್ಲ. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಸುತ್ತುತ್ತಲೇ ಇರುತ್ತದೆ. ಇದನ್ನು ಭಗವಂತನು ಯಾವಾಗ ಹೇಗೆ, ಎಲ್ಲಿ ಕುಳಿತು ಮಾಡಿದರೋ ಎಂದು ಹೇಳುವಂತಿಲ್ಲ. ಇದಂತೂ ನಡೆಯುತ್ತಲೇ ಬರುತ್ತದೆ. ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆ ಆಗುತ್ತಲೇ ಇರುತ್ತದೆ. ಈ ಮಾತುಗಳನ್ನು ಯಾರೂ ತಿಳಿದುಕೊಳ್ಳುವುದಿಲ್ಲ, ನೀವು ತಿಳಿದುಕೊಂಡಿದ್ದೀರಿ - ನಾವು ಡ್ರಾಮಾ ಪ್ಲಾನ ಅನುಸಾರ ಬಂದಿದ್ದೇವೆ, ಈಗ ಪುನಃ ಡ್ರಾಮಾ ಅನುಸಾರ ರಾಜ್ಯವನ್ನೂ ಪಡೆಯುತ್ತಿದ್ದೇವೆ, ಈ ಮಾತುಗಳು ಮತ್ತ್ಯಾರಿಗೂ ಅರ್ಥವಾಗುವುದಿಲ್ಲ. ತಂದೆಯು ಕೇಳುತ್ತಾರೆ - ಡ್ರಾಮಾ ಸರ್ವಶಕ್ತಿವಂತನೋ ಅಥವಾ ಈಶ್ವರನು ಸರ್ವಶಕ್ತಿವಂತನೋ? ಆಗ ಈಶ್ವರನೇ ಸರ್ವಶಕ್ತಿವಂತನೆಂದು ಹೇಳುತ್ತಾರೆ. ಅವರು ಏನು ಬೇಕಾದರೂ ಮಾಡಬಲ್ಲರು ಎಂದು ತಿಳಿಯುತ್ತಾರೆ ಆದರೆ ತಂದೆಯು ಹೇಳುತ್ತಾರೆ - ನಾನೂ ಸಹ ಡ್ರಾಮಾದ ಬಂಧನದಲ್ಲಿ ಬಂಧಿತನಾಗಿದ್ದೇನೆ. ಪತಿತರನ್ನು ಪಾವನ ಮಾಡಲು ನಾನು ಬರಬೇಕಾಗುತ್ತದೆ. ಸತ್ಯಯುಗದಲ್ಲಿ ನೀವು ಸುಖಿಯಾಗಿ ಬಿಡುತ್ತೀರಿ. ಆಗ ನಾನೂ ಸಹ ಹೋಗಿ ಪರಮಧಾಮದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತೇನೆ. ನೀವು ತುತ್ತ ತುದಿಯನ್ನು ಏರುತ್ತೀರಿ, ನಿಮ್ಮದು ಸಿಂಹದ ಮೇಲೆ ಸವಾರಿಯಿದೆ.
ನಿಮಗೆ ತಿಳಿದಿದೆ - ಕ್ಷಣ-ಪ್ರತಿಕ್ಷಣ ಏನೆಲ್ಲವೂ ನಡೆಯುತ್ತದೆಯೋ ಅದು ಡ್ರಾಮಾದಲ್ಲಿ ನಿಗಧಿಯಾಗಿದೆ. ನೀವು ಮಕ್ಕಳಿಗೆ ಎಷ್ಟು ಒಳ್ಳೆಯ ಜ್ಞಾನವಿದೆ. ಕೇವಲ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಿದರೆ ಸಾಕು. ಕಾಗದ, ಪೆನ್ಸಿಲ್ ಇತ್ಯಾದಿ ಯಾವುದರ ಅವಶ್ಯಕತೆಯೂ ಇಲ್ಲ. ಬ್ರಹ್ಮಾ ತಂದೆಯೂ ಓದುತ್ತಾರೆ, ಇವರು ಏನನ್ನೂ ಇಟ್ಟುಕೊಳ್ಳುವುದಿಲ್ಲ, ಕೇವಲ ತಂದೆಯನ್ನು ನೆನಪು ಮಾಡಿದರೆ ಆಸ್ತಿಯು ಸಿಗುವುದು, ಎಷ್ಟು ಸಹಜವಾಗಿದೆ! ನೆನಪಿನಿಂದ ನೀವು ಸದಾ ಆರೋಗ್ಯವಂತರಾಗುವಿರಿ. ಇದು ಧಾರಣೆಯ ಮಾತಾಗಿದೆ. ಕೇವಲ ಬರೆದುಕೊಳ್ಳುವುದರಿಂದ ಏನು ಲಾಭ! ಈ ಬರೆದಿರುವುದೆಲ್ಲವೂ ವಿನಾಶವಾಗಿ ಬಿಡುವುದು. ಆದರೆ ಕೆಲವರು ನೆನಪಿರಲಿ ಎಂದು ಬರೆದಿಟ್ಟುಕೊಳ್ಳುತ್ತಾರೆ. ಹೇಗೆ ಯಾವುದೇ ಮಾತನ್ನು ನೆನಪಿಟ್ಟುಕೊಳ್ಳಬೇಕೆಂದರೆ ಒಂದು ಕಡೆ ಗಂಟು ಹಾಕಿಕೊಳ್ಳುತ್ತಾರೆ. ನೀವೂ ಸಹ ಗಂಟು ಹಾಕಿಕೊಳ್ಳಿ, ಶಿವ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಇದಂತೂ ಬಹಳ ಸಹಜವಾಗಿದೆ - ಯೋಗ ಅರ್ಥಾತ್ ನೆನಪು. ಬಾಬಾ, ನೆನಪು ನಿಲ್ಲುವುದಿಲ್ಲ, ಯೋಗದಲ್ಲಿ ಹೇಗೆ ಕುಳಿತುಕೊಳ್ಳುವುದು ಎಂದು ಕೆಲವರು ಹೇಳುತ್ತಾರೆ. ಅರೆ! ಲೌಕಿಕ ತಂದೆಯ ನೆನಪು ಏಳುತ್ತಾ-ಕುಳಿತುಕೊಳ್ಳುತ್ತಾ, ನಡೆಯುತ್ತಾ-ತಿರುಗಾಡುತ್ತಲೂ ಸಹಜವಾಗಿ ಇರುತ್ತದೆ. ನೀವೂ ಸಹ ಕೇವಲ ನೆನಪು ಮಾಡಿರಿ. ದೋಣಿಯು ಪಾರಾಗುವುದು. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ: