CoolCoder44 commited on
Commit
bc103a4
·
verified ·
1 Parent(s): 327c3a1

940318ad65cb3c26910844af59f520567ffd2040c32b809673e1a73100d415ee

Browse files
Files changed (50) hide show
  1. eesanje/url_47_160_11.txt +4 -0
  2. eesanje/url_47_160_12.txt +6 -0
  3. eesanje/url_47_160_2.txt +5 -0
  4. eesanje/url_47_160_3.txt +6 -0
  5. eesanje/url_47_160_4.txt +4 -0
  6. eesanje/url_47_160_5.txt +7 -0
  7. eesanje/url_47_160_6.txt +6 -0
  8. eesanje/url_47_160_7.txt +6 -0
  9. eesanje/url_47_160_8.txt +6 -0
  10. eesanje/url_47_160_9.txt +8 -0
  11. eesanje/url_47_161_1.txt +9 -0
  12. eesanje/url_47_161_10.txt +9 -0
  13. eesanje/url_47_161_11.txt +4 -0
  14. eesanje/url_47_161_12.txt +5 -0
  15. eesanje/url_47_161_2.txt +6 -0
  16. eesanje/url_47_161_3.txt +8 -0
  17. eesanje/url_47_161_4.txt +7 -0
  18. eesanje/url_47_161_5.txt +11 -0
  19. eesanje/url_47_161_6.txt +7 -0
  20. eesanje/url_47_161_7.txt +8 -0
  21. eesanje/url_47_161_8.txt +6 -0
  22. eesanje/url_47_161_9.txt +6 -0
  23. eesanje/url_47_162_1.txt +6 -0
  24. eesanje/url_47_162_10.txt +5 -0
  25. eesanje/url_47_162_11.txt +6 -0
  26. eesanje/url_47_162_12.txt +5 -0
  27. eesanje/url_47_162_2.txt +9 -0
  28. eesanje/url_47_162_3.txt +7 -0
  29. eesanje/url_47_162_4.txt +6 -0
  30. eesanje/url_47_162_5.txt +8 -0
  31. eesanje/url_47_162_6.txt +9 -0
  32. eesanje/url_47_162_7.txt +9 -0
  33. eesanje/url_47_162_8.txt +6 -0
  34. eesanje/url_47_162_9.txt +7 -0
  35. eesanje/url_47_163_1.txt +8 -0
  36. eesanje/url_47_163_10.txt +5 -0
  37. eesanje/url_47_163_11.txt +9 -0
  38. eesanje/url_47_163_12.txt +6 -0
  39. eesanje/url_47_163_2.txt +5 -0
  40. eesanje/url_47_163_3.txt +5 -0
  41. eesanje/url_47_163_4.txt +5 -0
  42. eesanje/url_47_163_5.txt +5 -0
  43. eesanje/url_47_163_6.txt +5 -0
  44. eesanje/url_47_163_7.txt +6 -0
  45. eesanje/url_47_163_8.txt +8 -0
  46. eesanje/url_47_163_9.txt +5 -0
  47. eesanje/url_47_164_1.txt +5 -0
  48. eesanje/url_47_164_10.txt +6 -0
  49. eesanje/url_47_164_11.txt +9 -0
  50. eesanje/url_47_164_12.txt +8 -0
eesanje/url_47_160_11.txt ADDED
@@ -0,0 +1,4 @@
 
 
 
 
 
1
+ ವಿದೇಶಿ ಪ್ರಜೆ ಬಂಧನ : 3.37 ಕೋಟಿ ಮೌಲ್ಯದ ಡ್ರಗ್ಸ್ ವಶ
2
+ ಮುಂಬೈ,ಫೆ.17- ಇಲ್ಲಿನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಅಧಿಕಾರಿಗಳು ಮುಂಬೈನ ಜುಹು ಪ್ರದೇಶದಲ್ಲಿ 3.37 ಕೋಟಿ ಮೌಲ್ಯದ ಎಂಡಿಎಂಎ (ಮೀಥೈಲ್ ಎಡಿಯಾಕ್ಸಿ ಮೆಥಾಂಫೆಟಮೈನ) ಹೊಂದಿರುವ ವಿದೇಶಿ ಪ್ರಜೆಯನ್ನು ಬಂಧಿಸಿದ್ದಾರೆ. ಜುಹು ತಾರಾ ರಸ್ತೆಯಲ್ಲಿರುವ ಪಂಚತಾರಾ ಹೋಟೆಲ್ ಬಳಿ ವಿದೇಶಿ ಪ್ರಜೆ ಎಗ್ವೆ ಜಾನ್‍ನನ್ನು ಬಂಧಿಸಲಾಗಿದೆ ಎಂದು ಎಟಿಎಸ್ ಅಧಿಕಾರಿಗಳು ತಿಳಿಸಿದ್ದಾರೆ.
3
+ ಎಗ್ವೆ ಜಾನ್‍ನನ್ನು 3.37 ಕೋಟಿ ಮೌಲ್ಯದ ಎಂಡಿಎಂಎಯೊಂದಿಗೆ ಬಂಧಿಸಲಾಗಿದ್ದು, ಆತನ ಸಹಚರ ಪರಾರಿಯಾಗಿದ್ದಾನೆ. ಬಂಧನದ ವೇಳೆ ಆತನ ಬಳಿ ಎರಡು ಕಿಲೋಗ್ರಾಂಗಳಷ್ಟು ಮಾದಕ ದ್ರವ್ಯ ಪತ್ತೆಯಾಗಿದ್ದು, ಪಕ್ಕದ ಪಾಲ್ಘರ್‍ನ ನಲಸೋಪಾರಾದಲ್ಲಿರುವ ಆತನ ಸಹಚರನ ಮನೆಯಿಂದ 250 ಗ್ರಾಂ ವಶಪಡಿಸಿಕೊಳ್ಳಲಾಗಿದೆ.
4
+ ನಾರ್ಕೋಟಿಕ್ ಡ್ರಗ್ಸ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ಎನ್ಡಿಪಿಎಸ್) ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ನಡೆಯುತ್ತಿದೆ.
eesanje/url_47_160_12.txt ADDED
@@ -0,0 +1,6 @@
 
 
 
 
 
 
 
1
+ ರಾಹುಲ್ ನ್ಯಾಯಯಾತ್ರೆಯಲ್ಲಿ ತೇಜಸ್ವಿಯಾದವ್
2
+ ಸಸಾರಾಮ್, ಫೆ 16 (ಪಿಟಿಐ) ಇಂದಿನಿಂದ ಬಿಹಾರದ ಸಸಾರಾಮ್ ಜಿಲ್ಲೆಯಿಂದ ಪುನರಾರಂಭಗೊಂಡಿರುವ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಗೆ ಆರ್‍ಜೆಡಿ ನಾಯಕ ತೇಜಸ್ವಿ ಯಾದವ್ ಸೇರ್ಪಡೆಗೊಂಡಿದ್ದಾರೆ. ಕಾಂಗ್ರೆಸ್ ಸಂಸದರಾಗಿರುವ ಗಾಂಧಿ ಅವರು ಇಂದು ಬೆಳಗ್ಗೆ ಪಕ್ಷದ ಜಿಲ್ಲೆ ಕಚೇರಿಯಿಂದ ತಮ್ಮ ಯಾತ್ರೆಯನ್ನು ಆರಂಭಿಸಿದ್ದು, ಸಂಜೆ ಕೈಮೂರ್ ಜಿಲ್ಲೆಯ ಮೊಹಾನಿಯಾ ಮೂಲಕ ಉತ್ತರ ಪ್ರದೇಶವನ್ನು ಪ್ರವೇಶಿಸುವ ನಿರೀಕ್ಷೆಯಿದೆ.
3
+ ನಿಧಾನವಾಗಿ ಚಲಿಸುತ್ತಿದ್ದ ಸ್ಪೋಟ್ರ್ಸ್ ಯುಟಿಲಿಟಿ ವಾಹನದ ಛಾವಣಿಯ ಮೇಲೆ ಯಾದವ್ ಮತ್ತು ಗಾಂಧಿ ಕುಳಿತಿರುವುದು ಕಂಡುಬಂದಿತು ಮತ್ತು ಅವರು ಪಟ್ಟಣದ ಮುಖ್ಯ ರಸ್ತೆಯ ಉದ್ದಕ್ಕೂ ನೆರೆದಿದ್ದ ಉತ್ಸಾಹಭರಿತ ಜನರತ್ತ ಕೈ ಬೀಸಿದರು. ಸ್ಥಳೀಯರು ರಸ್ತೆಯ ಇಕ್ಕೆಲಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಮೆರವಣಿಗೆ ವೀಕ್ಷಿಸಿದರು.
4
+ ಬಿಹಾರದ ಔರಂಗಾಬಾದ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಪ್ರತಿಭಟನಾನಿರತ ರೈತರ ಬೆಂಬಲಕ್ಕೆ ನಿಂತ ಗಾಂಧಿ, ಸಾಗುವಳಿದಾರರನ್ನು ದೇಶದ ಗಡಿಯಲ್ಲಿ ಹೋರಾಡುವ ಸೈನಿಕರಿಗೆ ಹೋಲಿಸಿದರು.ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯನ್ನು ಕಾಂಗ್ರೆಸ್ ನಾಯಕರು ಉಲ್ಲೇಖಿಸಿದರು.
5
+ ಪಾಕಿಸ್ತಾನಿ ಕ್ವಾಡ್‌ಕಾಪ್ಟರ್‌ಗಳ ಮೇಲೆ ಬಿಎಸ್ಎಫ್ ಗುಂಡಿನ ದಾಳಿ
6
+ ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ್ ಯಾತ್ರೆಯು 67 ದಿನಗಳಲ್ಲಿ 6,713 ಕಿಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೇಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.
eesanje/url_47_160_2.txt ADDED
@@ -0,0 +1,5 @@
 
 
 
 
 
 
1
+ ಯಾವುದೇ ಕಂಪನಿಯಾದರೂ ದೇಶದ ಕಾನೂನಿಗೆ ಬದ್ಧವಾಗಿರಬೇಕು : ರಾಜೀವ್ ಚಂದ್ರಶೇಖರ್
2
+ ದೆಹಲಿ, ಫೆ.18- ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮೇಲಿನ ರಿಸರ್ವ್ ಬ್ಯಾಂಕಿನ ನಿಯಂತ್ರಣ ಕ್ರಮವು ಫಿನ್‍ಟೆಕ್ ಸಂಸ್ಥೆಗಳು ಕಾನೂನುಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಪ್ರತಿಪಾದಿಸಿದೆ ಎಂದು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವರಾಗಿರುವ ಚಂದ್ರಶೇಖರ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸಮಸ್ಯೆಯು ಎಚ್ಚರಿಕೆಯ ಗಂಟೆಯಾಗಿದೆ.
3
+ ಕಾನೂನು ಮೀರಿದ ಕ್ರಮಗಳಿಂದ ಯಾವುದೇ ಕಂಪನಿಯಾದರೂ ಅಂತರ ಕಾಯ್ದುಕೊಳ್ಳಬೇಕು. ಅದು ಭಾರತ ಅಥವಾ ವಿದೇಶದ ಕಂಪೆನಿಯಾದರೂ ಸರಿ, ದೊಡ್ಡದಾಗಿರಲಿ ಅಥವಾ ಚಿಕ್ಕದಾಗಿರಲಿ, ದೇಶದ ಕಾನೂನಿಗೆ ಬದ್ಧವಾಗಿರಬೇಕು ಎಂದು ಪ್ರತಿಪಾದಿಸಿದರು.
4
+ ಭಾರತೀಯ ರಿಸರ್ವ್ ಬ್ಯಾಂಕ್ ಮಾರ್ಚ್ 15 ರಿಂದ ಪೇ ಟಿಎಂ ಹೊಸ ಠೇವಣಿಗಳನ್ನು ಸ್ವೀಕರಿಸುವುದನ್ನು ನಿರ್ಬಂಸಿದೆ. ಪಿಪಿಬಿಎಲ್ ಮೇಲಿನ ಆರ್‍ಬಿಐ ಕ್ರಮವು ಫಿನ್‍ಟೆಕ್ ಸಂಸ್ಥೆಗಳನ್ನು ಕೆರಳಿಸಿದೆ ಎಂಬ ಭಾವನೆ ಸರಿಯಲ್ಲ. ಫಿನ್‍ಟೆಕ್ ಉದ್ಯಮಕ್ಕೆ ಹಾನಿಕಾರಕ ಪರಿಣಾಮಗಳಾಗಿವೆ ಎಂಬ ಆತಂ ಒಪ್ಪಲು ಸಾಧ್ಯವಿಲ್ಲ ಎಂದರು.
5
+ ಕೇಂದ್ರ ಸರ್ಕಾರದ ಕ್ರಮ ಫಿನ್‍ಟೆಕ್ ಉದ್ಯಮಿಗಳ ಗಮನವನ್ನು ಸೆಳೆದಿದೆ. ಕಾನೂನನ್ನು ಹೇಗೆ ಅನುಸರಿಸಬೇಕು ಎಂಬುದನ್ನು ಸಹ ತಿಳಿದಿರಬೇಕು. ನಿಯಂತ್ರಕ ಅನುಸರಣೆ ವಿಶ್ವದ ಯಾವುದೇ ದೇಶಕ್ಕೆ ಐಚ್ಛಿಕ ವಿಷಯವಲ್ಲ, ಕಾನೂನುಗಳನ್ನು ನಿರ್ಲಕ್ಷ್ಯಿಸುವುದು ಸರಿಯಲ್ಲ. ಸರ್ಕಾರ ನಿಗದಿಪಡಿಸಿದ ನಿಯಮಗಳನ್ನು ಕಡೆಗಣಿಸಬಾರದು ಎಂದು ಹೇಳಿದರು.
eesanje/url_47_160_3.txt ADDED
@@ -0,0 +1,6 @@
 
 
 
 
 
 
 
1
+ ಆನೆ ದಾಳಿಗೆ ಬಲಿಯಾದ ಕುಟುಂಬದವರಿಗೆ ರಾಹುಲ್ ಸಾಂತ್ವನ
2
+ ವಯನಾಡ್ (ಕೇರಳ), ಫೆ 18 (ಪಿಟಿಐ) : ಕಾಂಗ್ರೆಸ್ ರಾಷ್ಟ್ರೀಯ ನಾಯಕ ಮತ್ತು ವಯನಾಡ್ ಸಂಸದ ರಾಹುಲ್ ಗಾಂಧಿ ಅವರು ಈ ಹೈರೇಂಜ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕಾಡಾನೆ ದಾಳಿಗೆ ಬಲಿಯಾಗಿದ್ದ ಇಬ್ಬರ ಮನೆಗಳಿಗೆ ಇಂದು ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
3
+ ತಮ್ಮ ಲೋಕಸಭಾ ಕ್ಷೇತ್ರದಲ್ಲಿನ ಮಾನವ-ಪ್ರಾಣಿ ಸಂಘರ್ಷಗಳಿಗೆ ಪರಿಹಾರಕ್ಕೆ ಆಗ್ರಹಿಸಿ ಸ್ಥಳೀಯರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿಯವರು ನಿನ್ನೆ ರಾತ್ರಿ ತಮ್ಮ ಭಾರತ್ ಜೋಡೋ ನ್ಯಾಯಯಾತ್ರೆಯನ್ನು ವಾರಣಾಸಿಯಲ್ಲಿ ಹಠಾತ್ತನೆ ಸ್ಥಗಿತಗೊಳಿಸಿ ನೆರೆಯ ಕಣ್ಣೂರು ಜಿಲ್ಲೆಗೆ ಆಗಮಿಸಿದರು.
4
+ ಕಣ್ಣೂರಿನಿಂದ ರಸ್ತೆ ಮಾರ್ಗವಾಗಿ ವಯನಾಡಿಗೆ ತೆರಳಿದ ಅವರ ಜೊತೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಮತ್ತು ಇತರ ಸ್ಥಳೀಯ ಮುಖಂಡರಿದ್ದರು. ಕಳೆದ ವಾರ ವಯನಾಡ್ ಜಿಲ್ಲೆಯ ಮನಂತವಾಡಿ ಪ್ರದೇಶದಲ್ಲಿ ರೇಡಿಯೋ ಕಾಲರ್ ಆನೆ ತುಳಿದು ಸಾವನ್ನಪ್ಪಿದ ಅಜಿ (42) ಅವರ ಮನೆಯಲ್ಲಿ ರಾಹುಲ್ ಗಾಂಧಿ 20 ನಿಮಿಷವಿದ್ದು, ಕುಟುಂಬದ ಸದಸ್ಯರ ನೋವನ್ನು ಆಲಿಸಿ ಸಾಂತ್ವನ ಹೇಳಿದರು.
5
+ ಬಳಿಕ ಶುಕ್ರವಾರ ಕುರುವ ದ್ವೀಪದ ಬಳಿ ಕಾಡಾನೆ ದಾಳಿಗೆ ಬಲಿಯಾದ ಅರಣ್ಯ ಇಲಾಖೆಯ ಪರಿಸರ ಪ್ರವಾಸೋದ್ಯಮ ಮಾರ್ಗದರ್ಶಕ ಪಾಲ್ ಅವರ ನಿವಾಸಕ್ಕೆ ಭೇಟಿ ನೀಡಿದ ಅವರು ಕುಟುಂಬದವರ ಸಂಕಷ್ಟವನ್ನು ಆಲಿಸಿ ಸಾಂತ್ವನ ಹೇಳಿ ತೆರಳಿದರು.
6
+ ಮಧ್ಯಾಹ್ನ ಅಲಹಾಬಾದ್‍ಗೆ ತೆರಳುವ ಮೊದಲು ಕಲ್ಪೆಟ್ಟಾದಲ್ಲಿರುವ ಪಿಡಬ್ಲ್ಯುಡಿ ವಿಶ್ರಾಂತಿ ಗೃಹದಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜಾ ನುವಾರು ಮತ್ತು ಮನುಷ್ಯರ ಮೇಲೆ ವನ್ಯ ಜೀವಿಗಳ ದಾಳಿಗಳು ಇತ್ತೀಚೆಗೆ ವಯನಾಡಿನಿಂದ ಆಗಾಗ್ಗೆ ವರದಿಯಾಗುತ್ತಿವೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕಾಡು ಪ್ರಾಣಿಗಳ ದಾಳಿಯನ್ನು ವಿರೋಸಿ ವಿವಿಧ ರಾಜಕೀಯ ಪಕ್ಷಗಳು ಕರೆ ನೀಡಿದ್ದ ಪ್ರತಿಭಟನೆ ಶನಿವಾರ ಇಲ್ಲಿ ಹಿಂಸಾಚಾರಕ್ಕೆ ತಿರುಗಿತು.
eesanje/url_47_160_4.txt ADDED
@@ -0,0 +1,4 @@
 
 
 
 
 
1
+ ಭಾರತ-ಬಾಂಗ್ಲಾ ಗಡಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2.25 ಕೋಟಿ ಮೌಲ್ಯದ ಚಿನ್ನ ವಶ
2
+ ಬರಾಸತ್, ಫೆ 18: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪೆಟ್ರಾಪೋಲ್‍ನಲ್ಲಿರುವ ಭಾರತ-ಬಾಂಗ್ಲಾದೇಶ ಅಂತಾರಾಷ್ಟ್ರೀಯ ಗಡಿಯ ಮೂಲಕ 2.25 ಕೋಟಿ ರೂಪಾಯಿ ಮೌಲ್ಯದ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಮೂವರನ್ನು ಬಂಸಲಾಗಿದೆ ಎಂದು ಬಿಎಸ್‍ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
3
+ ಖಚಿತ ಸುಳಿವಿನ ಮೇರೆಗೆ ಪ್ರತ್ಯೇಕ 2 ಘಟನೆಗಳಲ್ಲಿ ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿದ ಬಿಎಸ್‍ಎಫ್ ಸಿಬ್ಬಂದಿ ಈ ಭಾರಿ ಮೊತ್ತದ ಚಿನ್ನ ಜಪ್ತಿ ಮಾಡಲಾಗಿದೆ.ಮೊದಲ ಘಟನೆಯಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಪ್ರವೇಶಿಸುತ್ತಿದ್ದ ಟ್ರಕ್‍ಗಳ ತಪಾಸಣೆ ನಡೆಸುತ್ತಿದ್ದಾಗ ವಾಹನವೊಂದರಲ್ಲಿ 1.58 ಕೋಟಿ ಮೌಲ್ಯದ 2.5 ಕೆಜಿ ಚಿನ್ನದ ಬಿಸ್ಕತ್‍ಗಳನ್ನು ವಶಪಡಿಸಿಕೊಂಡು ಇಬ್ಬರನ್ನು ಬಂಸಿದ್ದಾರೆ.
4
+ ಮತ್ತೊಂದು ಘಟನೆಯಲ್ಲಿ, 1 ಕೆಜಿಗಿಂತ ಹೆಚ್ಚು ತೂಕದ ಚಿನ್ನದ ಪೇಸ್ಟ್‍ಅನ್ನುಸಗಿಸುತ್ತಿದ್ದ ವ್ಯಕ್ತಿಯನ್ನು ಬಂಸಲಾಗಿದೆ.ಇದರ ಹಿಂದೆ ಯಾರಿದ್ದಾರೆ ಮತ್ತಿತರ ವಿಷಯದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ವಶಪಡಿಸಿಕೊಂಡ ಚಿನ್ನ ಮತ್ತು ಬಂತ ವ್ಯಕ್ತಿಗಳನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದಾರೆ.
eesanje/url_47_160_5.txt ADDED
@@ -0,0 +1,7 @@
 
 
 
 
 
 
 
 
1
+ ಲೋಕಸಭಾ ಚುನಾವಣೆಗೆ ಕಮಲ ಕಹಳೆ, ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶ
2
+ ಬೆಂಗಳೂರು,ಫೆ.17- ಲೋಕಸಭೆ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಬಿಜೆಪಿ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಇಂದಿನಿಂದ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಮಾವೇಶ ಆಯೋಜನೆಗೊಂಡಿದ್ದು, ಎರಡು ದಿನಗಳ ಕಾಲ ನಡೆಯುವ ಈ ಸಮಾವೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಲು ರಣತಂತ್ರ ರೂಪಿಸಲಾಗಿದೆ.
3
+ ಸಮೀಕ್ಷೆಗಳ ಪ್ರಕಾರ ನರೇಂದ್ರಮೋದಿ ಅವರು 3ನೇ ಬಾರಿ ಪ್ರಧಾನಿಯಾಗಲಿದ್ದಾರೆ ಎಂಬ ಹಿನ್ನಲೆಯಲ್ಲಿ ಎರಡು ದಿನಗಳ ಕಾರ್ಯಕಾರಿಣಿ ಸಭೆ ಮಹತ್ವ ಪಡೆದುಕೊಂಡಿದೆ. ಕರ್ನಾಟಕ ರಾಜ್ಯದಿಂದ 500ಕ್ಕೂ ಹೆಚ್ಚು ರಾಜ್ಯ ನಾಯಕರಿಗೆ ಈ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಹ್ವಾನ ನೀಡಲಾಗಿದೆ. ಮಾಜಿ ಮುಖ್ಯಮಂತ್ರಿ ಸಂಸದೀಯ ಮಂಡಳಿಯ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸೇರಿದಂತೆ ಹಲವು ನಾಯಕರು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದಾರೆ.
4
+ ಮೋದಿ ಸರ್ಕಾರ ದೇಶದ ರೈತರಿಗೆ ಶಾಪವಾಗಿದೆ : ಖರ್ಗೆ
5
+ ದೆಹಲಿಯ ಪ್ರಗತಿ ಮೈದಾನದಲ್ಲಿ ಆರಂಭವಾಗಿರುವ ಸಮಾವೇಶದಲ್ಲಿ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಷಾ, ರಾಜನಾಥ್ ಸಿಂಗ್, ಬಿಜೆಪಿ ಆಡಳಿತವಿರುವ ಉಖ್ಯಮಂತ್ರಿಗಳು, ಸಚಿವರು, ಸುಮಾರು 11 ಸಾವಿರಕ್ಕೂ ಹೆಚ್ಚು ಪದಾಧಿಕಾರಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ.
6
+ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ, ಮಹಿಳಾ ಮೀಸಲಾತಿ, ಕೇಂದ್ರ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. ಇಂತಹ ಪ್ರಮುಖ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸುವ ಬಗ್ಗೆ ಮನವರಿಕೆ ಮಾಡಿಕೊಡುವ ಚರ್ಚೆ ನಡೆಯುತ್ತಿದೆ.ಬಿಜೆಪಿ-ಜೆಡಿಎಸ್ ಮೈತ್ರಿಯೊಂದಿಗೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ 28 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಬಗ್ಗೆಯೂ ಕೂಡ ಮಹತ್ವದ ಚರ್ಚಿಸಲಾಗುತ್ತಿದೆ.
7
+ ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ವಿಕಸಿತ ಭಾರತ ಅಭಿಯಾನಕ್ಕೆ ಚಾಲನೆ ನೀಡಿದರು. ವಸ್ತುಪ್ರದರ್ಶನ ಆಯೋಜಿಸಿದ್ದು, ಇದರಲ್ಲಿ ಎನ್‍ಡಿಎ ಸರ್ಕಾರದ ಸಾಧನೆಗಳು ಅನಾವರಣಗೊಳಿಸಲಾಗಿದೆ.
eesanje/url_47_160_6.txt ADDED
@@ -0,0 +1,6 @@
 
 
 
 
 
 
 
1
+ ಮೋದಿ ಸರ್ಕಾರ ದೇಶದ ರೈತರಿಗೆ ಶಾಪವಾಗಿದೆ : ಖರ್ಗೆ
2
+ ನವದೆಹಲಿ,ಫೆ.17- ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ದೇಶದ ರೈತರಿಗೆ ಶಾಪವಾಗಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿರುವ ಅವರು, ನಿರಂತರ ಸುಳ್ಳು ಮೋದಿ ಗ್ಯಾರಂಟಿಯಿಂದ ಈ ಮೊದಲು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ 750 ರೈತರು ಪ್ರಾಣ ಕಳೆದುಕೊಂಡಿದ್ದರು. ಎರಡನೇ ಹಂತದ ಪ್ರತಿಭಟನೆ ನಡೆಯುತ್ತಿದ್ದು, ಪೊಲೀಸರು ಬಳಸಿದ ರಬ್ಬರ್ ಬುಲೆಟ್‍ಗಳಿಂದ ನಿನ್ನೆ ರೈತರೊಬ್ಬರು ಹುತಾತ್ಮರಾಗಿದ್ದಾರೆ. ಮೂರು ಜನ ಕಣ್ಣು ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
3
+ ನರೇಂದ್ರ ಮೋದಿಯವರ ಸರ್ಕಾರ ರೈತರನ್ನು ಶತ್ರುಗಳಂತೆ ನಡೆಸಿಕೊಳ್ಳುತ್ತಿದೆ. ಕಾಂಗ್ರೆಸ್ ಮಾತ್ರ ರೈತರಿಗೆ ಕಾನೂನುಬದ್ಧವಾದ ಕನಿಷ್ಠ ಬೆಂಬಲ ಬೆಲೆ ಹಕ್ಕನ್ನು ನೀಡಲು ಸಾಧ್ಯ ಎಂದು ಖರ್ಗೆ ಸ್ಪಷ್ಟಪಡಿಸಿದ್ದಾರೆ. ತಮ್ಮ ಪೋಸ್ಟ್‍ನಲ್ಲಿ 2014 ರಲ್ಲಿ ನರೇಂದ್ರ ಮೋದಿಯವರು ರೈತರ ಕೃಷಿ ಉತ್ಪಾದನಾ ವೆಚ್ಚಕ್ಕೆ ಹೆಚ್ಚುವರಿಯಾಗಿ ಶೇ.50 ರಷ್ಟನ್ನು ಸೇರ್ಪಡೆಗೊಳಿಸಿ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವುದಾಗಿ ನೀಡಿದ್ದ ಭರವಸೆಯನ್ನು ಖರ್ಗೆ ನೆನಪಿಸಿದ್ದಾರೆ.
4
+ ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ದಾಖಲೆಯ ಮತದಾನ
5
+ 2014 ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿಯವರು ಬಹಿರಂಗ ಸಭೆಯಲ್ಲಿ ಹೇಳಿಕೆ ನೀಡಿ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಭರವಸೆ ನೀಡಿದ್ದರು. ಆದರೆ 2020-21 ರಲ್ಲಿ ಕನಿಷ್ಠ ಬೆಂಬಲ ಬೆಲೆಗಾಗಿ ಮತ್ತು ವಿವಾದಿತ ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರ ಮೇಲೆ ಲಾಠಿ ಪ್ರಹಾರ ನಡೆಸಿ, ಅಶ್ರವಾಯು ಸಿಡಿಸಿದ್ದನ್ನು ಖರ್ಗೆ ಪ್ರಸ್ತಾಪಿಸಿದ್ದಾರೆ. ಆ ಪ್ರತಿಭಟನೆ ವೇಳೆ 750 ರೈತರು ಬಲಿದಾನವಾಗಿದ್ದನ್ನು ಉಲ್ಲೇಖಿಸಿದ್ದಾರೆ.
6
+ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರು ಪ್ರತಿಭಟನಾ ನಿರತ ರೈತರನ್ನು ಅವಹೇಳಕಾರಿಯಾಗಿ ಬಿಂಬಿಸಿದ್ದನ್ನು ಕಾಂಗ್ರೆಸ್ ಅಧಿನಾಯಕ ಆಕ್ಷೇಪಿಸಿದ್ದಾರೆ. ಕಳೆದ ವಾರದಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ನಿರ್ಬಂಧಿಸಲು ಮುಳ್ಳು ತಂತಿಬೇಲಿ ನಿರ್ಮಿಸಿರುವುದು, ಬ್ಯಾರಿಕೇಡ್ ಹಾಕಿರುವುದು, ಡ್ರೋನ್ ಬಳಸಿ ಅಶ್ರವಾಯು ಸ್ಪೋಟಿಸುತ್ತಿರುವುದು ಸೇರಿದಂತೆ ಹಲವು ಆಕ್ಷೇಪಾರ್ಹ ಕ್ರಮಗಳನ್ನು ಖರ್ಗೆ ಖಂಡಿಸಿದ್ದಾರೆ.
eesanje/url_47_160_7.txt ADDED
@@ -0,0 +1,6 @@
 
 
 
 
 
 
 
1
+ ಇನ್ಸಾಟ್ -3ಡಿಎಸ್ ಉಪಗ್ರಹ ಉಡಾವಣೆಗೆ ಕ್ಷಣಗಣನೆ
2
+ ಶ್ರೀಹರಿಕೋಟಾ, ಫೆ 17 (ಪಿಟಿಐ) ಜಿಯೋಸಿಂಕ್ರೊನಸ್ ಲಾಂಚ್ ವೆಹಿಕಲ್ (ಜಿಎಸ್‍ಎಲ್‍ವಿ) ರಾಕೆಟ್‍ನಲ್ಲಿ ಇನ್ಸಾಟ್-3ಡಿಎಸ್ ಹವಾಮಾನ ಉಪಗ್ರಹ ಉಡಾವಣೆ ಸಿದ್ದತೆ ಸುಗಮವಾಗಿ ಸಾಗುತ್ತಿದೆ ಎಂದು ಇಸ್ರೋ ತಿಳಿಸಿದೆ.ರ್ವತ ಹವಾಮಾನ ವೀಕ್ಷಣೆಗಳು, ಹವಾಮಾನ ಮುನ್ಸೂಚನೆ ಮತ್ತು ವಿಪತ್ತು ಎಚ್ಚರಿಕೆಗಾಗಿ ಭೂಮಿ ಮತ್ತು ಸಾಗರ ಮೇಲ್ಮೈಗಳ ಮೇಲ್ವಿಚಾರಣೆ ಮತ್ತು ಉಪಗ್ರಹ ನೆರವಿನ ಸಂಶೋಧನೆ ಮತ್ತು ಪಾರುಗಾಣಿಕಾ ಸೇವೆಗಳನ್ನು ಒದಗಿಸಲು ಅಸ್ತಿತ್ವದಲ್ಲಿರುವ ಕಾರ್ಯಾಚರಣೆಯ ಇನ್ಸಾಟ್ -3ಡಿ ಮತ್ತು ಇನ್ಸಾಟ್ -3ಡಿಆರ್ ಗೆ ಸೇವೆಗಳ ನಿರಂತರತೆಯನ್ನು ಒದಗಿಸುವುದು ಈ ಮಿಷನ್ ಉದ್ದೇಶವಾಗಿದೆ.
3
+ ನಿನ್ನೆ ಮಧ್ಯಾಹ್ನ 2.30 ಕ್ಕೆ ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಎರಡನೇ ಉಡಾವಣಾ ಪ್ಯಾಡ್‍ನಿಂದ ಪೂರ್ವ ನಿಗದಿತ ಸಮಯ ಇಂದು ಸಂಜೆ 5.35ಕ್ಕೆ ನಿಗದಿಪಡಿಸಲಾಗಿದೆ. ಮೂರು ಹಂತದ ರಾಕೆಟ್, ಕ್ರಯೋಜೆನಿಕ್ ಮೇಲಿನ ಹಂತದೊಂದಿಗೆ, ಸುಮಾರು 20 ನಿಮಿಷಗಳ ಹಾರಾಟದ ನಂತರ, ಜಿಎಸ್‍ಎಲ್‍ವಿ ರಾಕೆಟ್‍ನಿಂದ 2,274 ಕೆಜಿ ತೂಕದ ಉಪಗ್ರಹ ಭಾರತೀಯ ರಾಷ್ಟ್ರೀಯ ಉಪಗ್ರಹ ವ್ಯವಸ್ಥೆ ಯನ್ನು ಜಿಯೋಸಿಂಕ್ರೋನಸ್ ಟ್ರಾನ್ಸ್‍ಫರ್ ಆರ್ಬಿಟ್‍ಗೆ ಸೇರಿಸುವ ನಿರೀಕ್ಷೆಯಿದೆ. ನಂತರ, ವಿಜ್ಞಾನಿಗಳು ಮುಂಬರುವ ದಿನಗಳಲ್ಲಿ ನಡೆಯಲಿರುವ ಭೂ-ಸ್ಥಾಯಿ ಕಕ್ಷೆಯಲ್ಲಿ ಇರಿಸಲು ಕುಶಲ ಸರಣಿಗಳನ್ನು ಆರಂಭಿಸಲಿದ್ದಾರೆ.
4
+ ಕೇಜ್ರಿವಾಲ್ ಖುದ್ದು ಹಾಜರಿಗೆ ವಿನಾಯ್ತಿ ನೀಡಿದ ನ್ಯಾಯಾಲಯ
5
+ 51.7 ಮೀಟರ್ ಎತ್ತರದ ರಾಕೆಟ್ ಮೋಡದ ಗುಣಲಕ್ಷಣಗಳು, ಮಂಜು, ಮಳೆ, ಹಿಮದ ಹೊದಿಕೆ, ಹಿಮದ ಆಳ, ಬೆಂಕಿ, ಹೊಗೆ, ಭೂಮಿ ಮತ್ತು ಸಾಗರ, ಬಾಹ್ಯಾಕಾಶವನ್ನು ಅಧ್ಯಯನ ಮಾಡಲು ಇಮೇಜರ್ ಪೇಲೋಡ್‍ಗಳು, ಸೌಂಡರ್ ಪೇಲೋಡ್‍ಗಳು, ಡೇಟಾ ರಿಲೇ ಟ್ರಾನ್ಸ್‍ಪಾಂಡರ್‍ಗಳು, ಉಪಗ್ರಹ ನೆರವಿನ ಹುಡುಕಾಟ ಮತ್ತು ಪಾರುಗಾಣಿಕಾ ಟ್ರಾನ್ಸ್‍ಪಾಂಡರ್‍ಗಳನ್ನು ಒಯ್ಯುತ್ತದೆ ಎಂದು ಸಂಸ್ಥೆ ಹೇಳಿದೆ.
6
+ ಭೂ ವಿಜ್ಞಾನ ಸಚಿವಾಲಯದ ವಿವಿಧ ಇಲಾಖೆಗಳಾದ ಭಾರತ ಹವಾಮಾನ ಇಲಾಖೆ, ಮಧ್ಯಮ ಶ್ರೇಣಿಯ ಹವಾಮಾನ ಮುನ್ಸೂಚನೆಯ ರಾಷ್ಟ್ರೀಯ ಕೇಂದ್ರ, ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ, ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ, ಭಾರತೀಯ ರಾಷ್ಟ್ರೀಯ ಸಾಗರ ಮಾಹಿತಿ ಸೇವೆಗಳ ಕೇಂದ್ರ ಮತ್ತು ವಿವಿಧ ಏಜೆನ್ಸಿಗಳು ಮತ್ತು ಸಂಸ್ಥೆಗಳು ಡೇಟಾದಿಂದ ಪ್ರಯೋಜನ ಪಡೆಯುತ್ತವೆ. ಸುಧಾರಿತ ಹವಾಮಾನ ಮುನ್ಸೂಚನೆಗಳು ಮತ್ತು ಹವಾಮಾನ ಸೇವೆಗಳನ್ನು ಒದಗಿಸಲು ಇನ್ಸಾಟ್-3ಡಿಎಸ್‍ನಿಂದ ಒದಗಿಸಲಾಗಿದೆ. ಈ ರಾಕೇಟ್‍ನ ಜೀವಿತಾವಧಿ ಸುಮಾರು 10 ವರ್ಷಗಳು ಎಂದು ಮೂಲಗಳು ತಿಳಿಸಿವೆ. ಜನವರಿ 1 ರಂದು ಪಿಎಸ್‍ಎಲ್‍ವಿ-ಸಿ 58/ಎಕ್ಸ್‍ಪೋಸ್ಯಾಟ್ ಯಶಸ್ವಿ ಉಡಾವಣೆ ನಂತರ 2024 ರಲ್ಲಿ ಇಸ್ರೋಗೆ ಶನಿವಾರದ ಮಿಷನ್ ಎರಡನೆಯದಾಗಿದೆ.
eesanje/url_47_160_8.txt ADDED
@@ -0,0 +1,6 @@
 
 
 
 
 
 
 
1
+ ಹೂಡಿಕೆದಾರರ ದಾರಿದೀಪವಾಗುತ್ತಿದೆ ಭಾರತ
2
+ ನವದೆಹಲಿ,ಫೆ.17- ಕೊರೊನಾ ಸೋಂಕಿನ ನಂತರ ಭಾರತ ಹೂಡಿಕೆದಾರರ ಅವಕಾಶದ ದಾರಿದೀಪವಾಗಿ ಹೊರ ಹೊಮ್ಮಿದೆ. ಹೂಡಿಕೆದಾರರಿಗೆ ಅವಕಾಶದ ದಾರಿದೀಪವಾಗಿ ಹೊರಹೊಮ್ಮಿರುವ ಭಾರತದ ಮೇಲೆ ಈಗ ಗಮನಸೆಳೆದಿದೆ. ಅಂತರಾಷ್ಟ್ರೀಯ ಹಣಕಾಸು ನಿಧಿಯ ಪ್ರಕ್ಷೇಪಗಳು ಭಾರತವು ಆರ್ಥಿಕ ಉತ್ಪಾದನೆಯ ವಿಷಯದಲ್ಲಿ ಜಪಾನ್ ಮತ್ತು ಜರ್ಮನಿ ಎರಡನ್ನೂ ಹಿಂದಿಕ್ಕಲು ಸಜ್ಜಾಗಿದೆ ಎಂದು ತಿಳಿಸಿದೆ.
3
+ ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು ಭವಿಷ್ಯ 2024 ರ ವರದಿಯ ಪ್ರಕಾರ ಭಾರತವು ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯಾಗಿ ಉಳಿದಿದೆ ಮತ್ತು ಅದರ ಬೆಳವಣಿಗೆಯು 2024 ರಲ್ಲಿ ಶೇ.6.2ನ್ನು ತಲುಪುತ್ತದೆ ಎಂದು ಅಂದಾಜಿಸಲಾಗಿದೆ. ಭಾರತವು ಪ್ರಸ್ತುತ ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿದ್ದು, ಯುಎಸ್, ಚೀನಾ, ಜಪಾನ್ ಮತ್ತು ಜರ್ಮನಿಯ ಹಿಂದೆ ಇದೆ.
4
+ 2023 ರಲ್ಲಿ ಅಮೆರಿಕದ ಒಟ್ಟು ದೇಶೀಯ ಉತ್ಪನ್ನ 27.94 ಟ್ರಿಲಿಯನ್ ಆಗಿದ್ದರೆ, ಚೀನಾದ್ದು 17.5 ಟ್ರಿಲಿಯನ್ ಆಗಿತ್ತು. ಭಾರತದ ಜಿಡಿಪಿಯು ಸುಮಾರು 3.7 ಟ್ರಿಲಿಯನ್ ಆಗಿದೆ ಆದರೆ ಸುಮಾರು ಶೇ,7ರ ಸಿಜ್ಲಿಂಗ್ ದರದಲ್ಲಿ ಬೆಳೆಯುತ್ತಿದೆ. ಅಭಿವೃದ್ಧಿ ಹೊಂದಿದ ಆರ್ಥಿಕತೆಗಳ ಪೂರೈಕೆ ಸರಪಳಿ ವೈವ್ಯೀಕರಣ ತಂತ್ರಗಳ ಸಂದರ್ಭದಲ್ಲಿ ದೇಶವನ್ನು ಪ್ರಮುಖ ಪರ್ಯಾಯ ಉತ್ಪಾದನಾ ನೆಲೆಯಾಗಿ ನೋಡುವ ಬಹುರಾಷ್ಟ್ರೀಯ ಸಂಸ್ಥೆಗಳಿಂದ ಹೆಚ್ಚುತ್ತಿರುವ ಆಸಕ್ತಿಯಿಂದ ಭಾರತವು ಈ ಪ್ರಯೋಜನ ಪಡೆಯುತ್ತಿದೆ.
5
+ ವಿದೇಶಿ ಪ್ರಜೆ ಬಂಧನ : 3.37 ಕೋಟಿ ಮೌಲ್ಯದ ಡ್ರಗ್ಸ್ ವಶ
6
+ ಅಭಿವೃದ್ಧಿ ಹೊಂದಿದ ದೇಶಗಳು ಮತ್ತು ಉದಯೋನ್ಮುಖ ರಾಷ್ಟ್ರಗಳ ನಡುವಿನ ಅಂತರವು ಕುಗ್ಗುತ್ತಿದೆ, ಭಾರತವು ಈಗ ಜಾಗತಿಕ ಆರ್ಥಿಕ ಭೂದೃಶ್ಯದಲ್ಲಿ ಮಹತ್ವದ ಆಟಗಾರನಾಗುವ ಅವಕಾಶವನ್ನು ಬಳಸಿಕೊಳ್ಳಲು ಸಿದ್ಧವಾಗಿದೆ. ಬದಲಾಗುತ್ತಿರುವ ಡೈನಾಮಿಕ್ಸ್ ಭಾರತಕ್ಕೆ ತನ್ನ ಪ್ರಭಾವವನ್ನು ಪ್ರತಿಪಾದಿಸಲು ಮತ್ತು ಮುಂಬರುವ ವರ್ಷಗಳಲ್ಲಿ ಜಾಗತಿಕ ಬೆಳವಣಿಗೆಗೆ ಗಣನೀಯವಾಗಿ ಕೊಡುಗೆ ನೀಡಲು ಒಂದು ಕ್ಷಣವನ್ನು ಪ್ರಸ್ತುತಪಡಿಸುತ್ತದೆ
eesanje/url_47_160_9.txt ADDED
@@ -0,0 +1,8 @@
 
 
 
 
 
 
 
 
 
1
+ ಕೇಜ್ರಿವಾಲ್ ಖುದ್ದು ಹಾಜರಿಗೆ ವಿನಾಯ್ತಿ ನೀಡಿದ ನ್ಯಾಯಾಲಯ
2
+ ನವದೆಹಲಿ, ಫೆ 17 (ಪಿಟಿಐ) : ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಮನ್ಸ್‍ಗಳನ್ನು ಪಾಲಿಸದ ಹಿನ್ನೆಲೆಯಲ್ಲಿ ಇಡಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‍ಗೆ ದಿಲ್ಲಿ ನ್ಯಾಯಾಲಯ ಇಂದು ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ. ಎಎಪಿ ನಾಯಕ ವಿಡಿಯೋ ಕಾನರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರಾಗಿ ದಿನದ ದೈಹಿಕ ಹಾಜರಾತಿಯಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿದ ನಂತರ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಅವರು ಕೇಜ್ರಿವಾಲ್‍ಗೆ ಈ ಪರಿಹಾರ ನೀಡಿದರು.
3
+ ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ನ್ಯಾಯಾಲಯದ ಮುಂದೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಕೇಜ್ರಿವಾಲ್ ನ್ಯಾಯಾಲಯಕ್ಕೆ ತಿಳಿಸಿದರು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಮೇಶ್ ಗುಪ್ತಾ, ಮುಂದಿನ ವಿಚಾರಣೆಯ ದಿನಾಂಕದಂದು ದೆಹಲಿ ಮುಖ್ಯಮಂತ್ರಿ ಖುದ್ದು ಹಾಜರಾಗಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
4
+ ಕೋಟಿ ಹಣಕ್ಕೆ ಅಪಹರಣ ನಾಟಕ : ಕಾರು ಚಾಲಕ, ರೌಡಿಗಳು ಸೇರಿ ಐವರ ಸೆರೆ
5
+ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ. ದೆಹಲಿ ಮುಖ್ಯಮಂತ್ರಿ ಉದ್ದೇಶಪೂರ್ವಕವಾಗಿ ಸಮನ್ಸ್‍ಗಳನ್ನು ಪಾಲಿಸಲು ಬಯಸುವುದಿಲ್ಲ ಮತ್ತು ಕುಂಟು ನೆಪಗಳನ್ನು ನೀಡುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ತನ್ನ ದೂರಿನಲ್ಲಿ ಆರೋಪಿಸಿದೆ. ಅವರಂತಹ ಉನ್ನತ ಶ್ರೇಣಿಯ ಸಾರ್ವಜನಿಕ ಕಾರ್ಯನಿರ್ವಾಹಕರು ಕಾನೂನಿಗೆ ಅವಿಧೇಯರಾದರೆ, ಅದು ಸಾಮಾನ್ಯ ಜನರಿಗೆ ಅಂದರೆ ಆಮ್ ಆದ್ಮಿ ಗೆ ತಪ್ಪು ಉದಾಹರಣೆಯಾಗಿದೆ ಎಂದು ಸಂಸ್ಥೆ ಹೇಳಿದೆ.
6
+ ದೂರಿನ ವಿಷಯಗಳು ಮತ್ತು ದಾಖಲಾದ ವಸ್ತುಗಳಿಂದ, ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 174 ರ ಅಡಿಯಲ್ಲಿ ಪ್ರಾಥಮಿಕ ಅಪರಾಧವನ್ನು ಮಾಡಲಾಗಿದೆ ಮತ್ತು ಆರೋಪಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಮುಂದುವರಿಯಲು ಸಾಕಷ್ಟು ಆಧಾರಗಳಿವೆ ಎಂದು ನ್ಯಾಯಾೀಧಿಶರು ಈ ಹಿಂದೆ ಹೇಳಿದ್ದರು. ಅದರ ಪ್ರಕಾರ, ಫೆಬ್ರವರಿ 17, 2024 ಕ್ಕೆ ಐಪಿಸಿಯ ಸೆಕ್ಷನ್ 174 ರ ಅಡಿಯಲ್ಲಿ ಅಪರಾಧಕ್ಕಾಗಿ ಆರೋಪಿ ಅರವಿಂದ್ ಕೇಜ್ರಿವಾಲ್‍ಗೆ ಸಮನ್ಸ್ ನೀಡಿ ಎಂದು ನ್ಯಾಯಾೀಧಿಶರು ಸೇರಿಸಿದ್ದಾರೆ.
7
+ ತೆರಿಗೆ ಸೋರಿಕೆ ತಡೆಗಟ್ಟಲು 3ಡಿ ಡ್ರೋನ್
8
+ ಐಪಿಸಿ ಸೆಕ್ಷನ್ 174 ಸಾರ್ವಜನಿಕ ಸೇವಕನ ಆದೇಶಕ್ಕೆ ವಿಧೇಯರಾಗಿ ಹಾಜರಾಗದಿರುವಿಕೆಗೆ ಸಂಬಂಧಿಸಿದೆ. ಫೆಬ್ರವರಿ 3 ರಂದು ಇಡಿ ತನ್ನ ಸಮನ್ಸ್‍ಗಳನ್ನು ಪಾಲಿಸದ ಕಾರಣ ಕೇಜ್ರಿವಾಲ್ ವಿರುದ್ಧ ಹೊಸ ದೂರು ದಾಖಲಿಸಿದೆ. ಎಎಪಿ ಸಂಚಾಲಕರು ಈ ಹಿಂದೆ ಇಡಿಗೆ ಪತ್ರ ಬರೆದಿದ್ದು, ಅವರಿಗೆ ನೀಡಲಾದ ಸಮನ್ಸ್‍ಗಳನ್ನು ಕಾನೂನುಬಾಹಿರ ಮತ್ತು ರಾಜಕೀಯ ��್ರೇರಿತ ಎಂದು ವಿವರಿಸಿದ್ದಾರೆ. ಚುನಾವಣಾ ಪ್ರಚಾರಕ್ಕೆ ಬರದಂತೆ ತಡೆಯುವ ಉದ್ದೇಶದಿಂದ ಸಮನ್ಸ್ ನೀಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
eesanje/url_47_161_1.txt ADDED
@@ -0,0 +1,9 @@
 
 
 
 
 
 
 
 
 
 
1
+ ಜೆಟ್ ಏರ್‌ವೇಶ್‌ ಸಂಸ್ಥಾಪಕನಿಗೆ ಕ್ಯಾನ್ಸರ್, ಮಧ್ಯಂತರ ಜಾಮೀನಿಗೆ ಅರ್ಜಿ
2
+ ಮುಂಬೈ, ಫೆ 16 (ಪಿಟಿಐ) ಖಾಸಗಿ ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಬಹಿರಂಗಗೊಂಡಿರುವ ಮಾರಣಾಂತಿಕ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಕೋರಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿ ಜೆಟ್ ಏರ್‌ವೇಶ್‌ ಸಂಸ್ಥಾಪಕ ನರೇಶ್ ಗೋಯಲ್ ಇಲ್ಲಿನ ವಿಶೇಷ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಗೋಯಲ್ ಅವರ ಮಧ್ಯಂತರ ಜಾಮೀನು ಅರ್ಜಿಗೆ ಪ್ರತಿಕ್ರಿಯಿಸಲು ಇಡಿ ಸಮಯ ಕೋರಿದ್ದರಿಂದ ಅವರ ವೈದ್ಯಕೀಯ ವರದಿಗಳನ್ನು ಪರಿಶೀಲಿಸಲು ವೈದ್ಯಕೀಯ ಮಂಡಳಿಯನ್ನು ಸ್ಥಾಪಿಸಲು ನ್ಯಾಯಾಲಯವು ಆರಂಭಿಕ ಆದೇಶವನ್ನು ನೀಡಿದೆ.
3
+ ಕಳೆದ ತಿಂಗಳು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿ ಪ್ರಕರಣಗಳ ವಿಶೇಷ ನ್ಯಾಯಾೀಧಿಶ ಎಂ ಜಿ ದೇಶಪಾಂಡೆ ಅವರು ಖಾಸಗಿ ವೈದ್ಯರಿಂದ ವೈದ್ಯಕೀಯ ಪರೀಕ್ಷೆಗೆ ಒಳಗಾಗಲು ಗೋಯಲ್ (74) ಅವರಿಗೆ ಅನುಮತಿ ನೀಡಿದ್ದರು. ಮಧ್ಯಂತರ ಜಾಮೀನಿಗಾಗಿ ಗುರುವಾರ ಸಲ್ಲಿಸಿದ ಮನವಿಯಲ್ಲಿ, ಜೆಟ್ ಏರ್‍ವೇಸ್ ಸಂಸ್ಥಾಪಕ ಗೋಯಲ, ಖಾಸಗಿ ವೈದ್ಯರು ಕೈಗೊಂಡ ಪರೀಕ್ಷೆಗಳಲ್ಲಿ ಮಾರಣಾಂತಿಕತೆ ಬಹಿರಂಗವಾಗಿದೆ ಎಂದು ಹೇಳಿದರು.
4
+ ಅಮೇರಿಕಾದಲ್ಲಿ ಭಾರತೀಯ ಮೂಲದ ಮೋಟೆಲ್ ಮಾಲೀಕನ ಗುಂಡಿಕ್ಕಿ ಹತ್ಯೆ
5
+ ಅವರ ವೈದ್ಯಕೀಯ ದಾಖಲೆಗಳ ಪ್ರಕಾರ, ಗೋಯಲ್ ಅವರ ಕರುಳಿನಲ್ಲಿ ಸಣ್ಣ ಗೆಡ್ಡೆಗಳನ್ನು ಹೊಂದಿದ್ದಾರೆ ಇದು ನ್ಯೂರೋ ಎಂಡೋಕ್ರೈನ್ ಟ್ಯೂಮರ್ಸ್ ಆಗಿರುವುದು ಖಚಿತಪಟ್ಟಿದೆ. ದೀರ್ಘಾವಯ ಔಷಧಿ ಅಥವಾ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯನ್ನು ಕೆಳಕ್ಕೆ ಇಳಿಸಬೇಕು ಮತ್ತು ಆಸಿಡ್ ರಿಫ್ಲಕ್ಸ್ ಅನ್ನು ತಡೆಯಬೇಕು ಎಂದು ಸೂಚಿಸಲಾಗಿದೆ. ಅವರ ವರದಿಯು ಮಧ್ಯ ಮತ್ತು ಕೆಳಗಿನ ಅನ್ನನಾಳದ ಸಂಯಲ್ಲಿ ಕಿರಿದಾಗುವಿಕೆಯ ಒಂದು ಸಣ್ಣ ಭಾಗವನ್ನು ಬಹಿರಂಗಪಡಿಸಿತು, ಇದು ಬ್ಯಾರೆಟ್‍ನ ಅನ್ನನಾಳವನ್ನು ಸೂಚಿಸುತ್ತದೆ, ಇದು ಕ್ಯಾನ್ಸರ್ ಪೂರ್ವ ಸ್ಥಿತಿಯಾಗಿದೆ.
6
+ ಗೋಯಲ್ ಅವರ ಬಯಾಪ್ಸಿಯನ್ನು ಹಿಸ್ಟೋಲಾಜಿಕಲ್ ವಿಶ್ಲೇಷಣೆ ಮತ್ತು ಇಮ್ಯುನೊಹಿಸ್ಟೋಕೆಮಿಸ್ಟ್ರಿಗಾಗಿ ಕಳುಹಿಸಲಾಗಿದೆ ಎಂದು ಹೇಳಿದರು. ಸಂಶೋಧನೆಗಳ ಆಧಾರದ ಮೇಲೆ ಮಾರಣಾಂತಿಕತೆಯ ಹಂತವನ್ನು ನಿರ್ಧರಿಸಲು ಗೋಯಲ್ ಪಿಇಟಿ ಸ್ಕ್ಯಾನ್‍ಗೆ ಒಳಗಾಗುವುದು ಕಡ್ಡಾಯವಾಗಿದೆ, ಅದರ ಆಧಾರದ ಮೇಲೆ ವೈದ್ಯರು ಶಸ್ತ್ರಚಿಕಿತ್ಸೆ ಮತ್ತು ಕೀಮೋಥೆರಪಿ ಸೇರಿದಂತೆ ಚಿಕಿತ್ಸೆಯ ಮಾರ್ಗವನ್ನು ನಿರ್ಧರಿಸಲು ಸಾಧ್ಯವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
7
+ ಅರ್ಜಿದಾರರ ಪ್ರಕರಣದಲ್ಲಿ ಉದ್ಭವಿಸಬಹುದಾದ ಯಾವುದೇ ಮಾರಣಾಂತಿಕ ಸಮಸ್ಯೆಗಳನ್ನು ತಡೆಗಟ್ಟಲು ವೈದ್ಯರು ಆಕ್ರಮಣಕಾರಿ ಮತ್ತು ತಕ್ಷಣದ ಚಿಕಿತ್ಸೆಯನ್ನು ಸೂಚಿಸಿದ್ದಾರೆ ಎಂದು ಮನವಿಯಲ್ಲಿ ಸೇರಿಸಲಾಗಿದೆ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸುನಿಲ್ ಗೊನ್ಸಾಲ್ವಿಸ್ ಅವರು ಇಡಿ ಸೂಚನೆಯಂತೆ ಜೆಜೆ ಆ��್ಪತ್ರೆಯ ವೈದ್ಯಕೀಯ ಮಂಡಳಿಯನ್ನು ರಚಿಸಬೇಕು ಮತ್ತು ಗೋಯಲ್ ಅವರ ವೈದ್ಯಕೀಯ ದಾಖಲೆಗಳನ್ನು ಅಭಿಪ್ರಾಯಕ್ಕಾಗಿ ಉಲ್ಲೇಖಿಸಲಾಗುತ್ತದೆ, ನಂತರ ಇಡಿ ತಮ್ಮ ಉತ್ತರವನ್ನು ಹೆಚ್ಚು ಸ್ಪಷ್ಟತೆಯೊಂದಿಗೆ ಸಲ್ಲಿಸುತ್ತದೆ.
8
+ ವಿಮಾನ ನಿಲ್ದಾಣದಲ್ಲಿ ಮಹಿಳೆಯರ ಬೂತ್‍ಗೆ ಪ್ರವೇಶಿಸಿದ ಜಿಂಬಾಬ್ವೆ ಪ್ರಜೆ
9
+ ಎರಡೂ ಕಡೆಯ ವಾದವನ್ನು ಆಲಿಸಿದ ನಂತರ, ಇಡಿ ವಿನಂತಿಸಿದಂತೆ ವೈದ್ಯಕೀಯ ಮಂಡಳಿಯನ್ನು ರಚಿಸುವಂತೆ ಮತ್ತು ಗೋಯಲ್ ಅವರನ್ನು ಕೂಲಂಕಷವಾಗಿ ಪರೀಕ್ಷಿಸಲು ಜೆಜೆ ಆಸ್ಪತ್ರೆಯ ಡೀನ್ ಅವರನ್ನು ಕೋರಲಾಗಿದೆ ಎಂದು ನ್ಯಾಯಾಲಯ ಹೇಳಿದೆ.
eesanje/url_47_161_10.txt ADDED
@@ -0,0 +1,9 @@
 
 
 
 
 
 
 
 
 
 
1
+ ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಸ್ಪರ್ಧೆ, ನಾಮಪತ್ರ ಸಲ್ಲಿಕೆ
2
+ ನವದೆಹಲಿ/ಜೈಪುರ, ಫೆ.14 : ಮುಂಬರುವ ರಾಜ್ಯಸಭಾ ಚುನಾವಣೆಗೆ ರಾಜಸ್ಥಾನದಿಂದ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಣಕ್ಕಿಳಿದಿದ್ದಾರೆ. ಐದು ಭಾರಿ ಲೋಕಸಭೆ ಸಂಸದರಾಗಿ ಸೇವೆ ಸಲ್ಲಿಸಿರುವ 77 ವರ್ಷದ ಕಾಂಗ್ರೆಸ್ ನಾಯಕಿ ಮೊದಲ ಬಾರಿಗೆ ಮೇಲ್ಮನೆ ಪ್ರವೇಶಿಸಲಿದ್ದು ಇಂದು ನಾಮಪತ್ರ ಸಲ್ಲಿಸಲಿದ್ದಾರೆ.
3
+ ಕಳೆದ ಕೆಲವು ದಿನಗಳಿಂದ ಸೋನಿಯಾ ಗಾಂಧಿ ಅವರು ಕರ್ನಾಟಕ,ತೆಲಂಗಾಣ ,ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳಿಂದ ರಾಜ್ಯಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿಬಂದಿತ್ತು,ಈಗ ಇದೆಲ್ಲದಕ್ಕೂ ತೆರೆ ಬೀಳಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರೊಂದಿಗೆ ಇಂದು ಸೋನಿಯಾಗಾಂಧಿ ಹಾಗೂ ರಾಜ್ಯ ಕಾಂಗ್ರೆಸ್ ಮುಖಂಡರ ಜೊತೆಗೂಡಿ ಜೈಪುರಕ್ಕೆ ಆಗಮಿಸಿ ವಿಧಾನಸಭೆ ಸಚಿವಾಲಯದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ.
4
+ ಒಮ್ಮ ಕರ್ನಾಟಕದ ಬಳ್ಳಾರಿ ನಂತರ ಉತ್ತರ ಪ್ರದೇಶದ ರಾಯ್ ಬರೇಲಿಯನ್ನು ಪ್ರತಿನಿಧಿಸಿ 5 ಬಾರಿ ಸದಸ್ಯರಾಗಿದ್ದಾರೆ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಈ ಮೊದಲೇ ಹೇಳಿದ್ದರು. ಪ್ರಸ್ತುತ 15 ರಾಜ್ಯಗಳ ಒಟ್ಟು 56 ರಾಜ್ಯಸಭಾ ಸದಸ್ಯರು ಏಪ್ರಿಲ್‍ನಲ್ಲಿ ನಿವೃತ್ತರಾಗುತ್ತಿದ್ದು, ಫೆಬ್ರವರಿ 27 ರಂದು ಆ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.
5
+ ತೆರಿಗೆ ಅನ್ಯಾಯದ ವಿರುದ್ಧ ಮುಂದುವರೆದ ಕಾಂಗ್ರೆಸ್ ಅಭಿಯಾನ
6
+ ಪ್ರಸ್ತುತ 4 ರಾಜ್ಯಗಳಿಗೆ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಾಂಗ್ರೆಸ್ ಘೋಷಿಸಿದೆ. ಅದರಂತೆ ರಾಜಸ್ಥಾನದಿಂದ ಸೋನಿಯಾಗಾಂಧಿ, ಬಿಹಾರದಿಂದ ಡಾ.ಅಖಿಲೇಶ್ ಪ್ರಸಾದ್ ಸಿಂಗ್, ಹಿಮಾಚಲ ಪ್ರದೇಶದಿಂದ ಅಭಿಷೇಕ್ ಮನು ಸಿಂಗ್ವಿ ಹಾಗೂ ಮಹಾರಾಷ್ಟ್ರದಿಂದ ಚಂದ್ರಕಾಂತ್ ಹಂದೋರಿ ಅವರು ಸ್ಪರ್ಧಿಸಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಉಳಿದ ರಾಜ್ಯಗಳಿಗೆ ಇಂದು ರಾತ್ರಿಯೊಳಗೆ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ.
7
+ ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅತೀ ಹೆಚ್ಚು ಸ್ಥಾನ ಗಳಿಸುವ ಲೆಕ್ಕಾಚಾರದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ ನಾನಾ ಕಸರತ್ತು ನಡೆಸಿದೆ. ರಾಜಸ್ಥಾನ ರಾಜ್ಯದಿಂದ 3 ಸ್ಥಾನಗಳು ತೆರವಾಗಲಿದ್ದು, ಅದರಲ್ಲಿ ಒಂದು ಸ್ಥಾನವನ್ನು ಗೆಲ್ಲಲು ಕಾಂಗ್ರೆಸ್‍ಗೆ ಸುಲಭವಾಗಿದೆ. ಉಳಿದೆರಡು ಸ್ಥಾನಗಳು ಬಿಜೆಪಿ ಪಾಲಾಗಲಿದೆ. ಈಗಾಗಲೆ ಇದೇ ರಾಜ್ಯದಿಂದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕೂಡ ರಾಜ್ಯ ಸಭೆ ಸದಸ್ಯರಾಗಿದ್ದರು. ಆರು ವರ್ಷಗಳ ಅಧಿಕಾರಾವಧಿಯನ್ನು ಏಪ್ರಿಲ್‍ನಲ್ಲಿ ಪೂರ್ಣಗೊಳಿಸಿದ ನಂತರ ಸ್ಥಾನ ತೆರವಾಗಲಿದೆ.
8
+ ಅವರು ಆಗಸ್ಟ್ 1964 ರಿಂದ ಫೆಬ್ರವರಿ 1967 ರವರೆಗೆ ಮೇಲ್ಮನೆ ಸದಸ್ಯರ��ಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ನಂತರ ರಾಜ್ಯಸಭೆಗೆ ಪ್ರವೇಶಿಸಿದ ಗಾಂಧಿ ಕುಟುಂಬದ ಎರಡನೇ ಸದಸ್ಯರಾಗಿದ್ದಾರೆ.ಈ ಬಾರಿ ಸೋನಿಯಾ ಗಾಂಧಿ ಅವರು ರಾಯ್ ಬರೇಲಿ ಲೋಕಸಭಾ ಕ್ಷೇತ್ರದಿಂದ ಹೊರಗುಳಿದ ನಂತರ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸ್ಪರ್ಧಿಸಬಹುದು ಎಂಬ ಮಾತುಗಳು ಕೇಳಿಬರುತ್ತಿದೆ.
9
+ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ಕಾನೂನು ಸುವ್ಯವಸ್ಥೆ ವಿಚಾರ
eesanje/url_47_161_11.txt ADDED
@@ -0,0 +1,4 @@
 
 
 
 
 
1
+ ಅಕ್ರಮ ಗಣಿಗಾರಿಕೆ : ರಾಜಸ್ಥಾನದ ಹಲವು ಸ್ಥಳಗಳಲ್ಲಿ ಶೋಧ
2
+ ಜೈಪುರ,ಫೆ.14-ಅಕ್ರಮ ಗಣಿಗಾರಿಕೆ ಸಂಬಂಧದ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ರಾಜಸ್ಥಾನ ರಾಜ್ಯದ ಹಲವು ಸ್ಥಳಗಳಲ್ಲಿ ಶೋಧ ನಡೆಸುತ್ತದೆ.ಗಣಿಗಾರಿಕೆ ವಲಯದಲ್ಲಿ ಅಕ್ರಮ ಹಣ ವರ್ಗಾವಣೆ ಕುರಿತ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ರಾಜಕೀಯ ವ್ಯಕ್ತಿಗಳು ,ಉದ್ಯಮಿಗಳ ಮನೆ ಕಚೇರಿ ಮೇಲೆ ದಾಳಿ ನಡೆದಿದೆ ಎಂದು ಅ„ಕೃತ ಮೂಲಗಳು ತಿಳಿಸಿವೆ.
3
+ ಗಣಿಗಾರಿಕೆ ವಲಯ ಮತ್ತು ಅಂಗಸಂಸ್ಥೆಗಳು ,ಹಲವು ಅದಿಕಾರಿಗಳು ಇದರಲ್ಲಿ ಆಪಾದಿತರಾಗಿದ್ದು ದಾಳಿ ವೇಳೆ ಹಲವು ದಾಖಲೆ ,ನಗದು ಹಣ ಜಪ್ತಿ ಮಾಡಲಾಗಿದೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.
4
+ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ ಕಾನೂನು ಸುವ್ಯವಸ್ಥೆ ವಿಚಾರ
eesanje/url_47_161_12.txt ADDED
@@ -0,0 +1,5 @@
 
 
 
 
 
 
1
+ ತೆರಿಗೆ ಪಾವತಿಸದ ರಾಕ್‍ಲೈನ್ ಮಾಲ್‍ಗೆ ಬೀಗ
2
+ ಬೆಂಗಳೂರು,ಫೆ.ಐ14-ಕೋಟ್ಯಂತರ ರೂ. ತೆರಿಗೆ ಬಾಕಿ ಉಳಿಸಿಕೊಂಡಿರುವ ನಗರದ ರಾಕ್‍ಲೈನ್ ಮಾಲ್‍ಗೆ ಬಿಬಿಎಂಪಿ ಅಧಿಕಾರಿಗಳು ಬೀಗ ಜಡಿದಿದ್ದಾರೆ. ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ಬರುವ ರಾಕ್‍ಲೈನ್ ಮಾಲ್ ಬಾಕಿ ತೆರಿಗೆ ಪಾವತಿಸದ ಕಾರಣ ಇಂದು ಪಾಲಿಕೆ ಕಂದಾಯ ಅಧಿಕಾರಿಗಳು ಇಂದು ತುಮಕೂರು ರಸ್ತೆಯ ಪ್ರಶಾಂತ್ ನಗರದಲ್ಲಿರುವ ರಾಕ್ ಲೈನ್ ಮಾಲ್ ಅನ್ನು ಸೀಜ್ ಮಾಡಿದ್ದಾರೆ.
3
+ ರಾಕ್ ಲೈನ್ ಮಾಲ್ ನಿಂದ 2011 ರಿಂದ 2022-23 ರವರೆಗೆ ಬಾಕಿ ಉಳಿಸಿಕೊಂಡಿರುವ 11.51 ಕೋಟಿ ರೂ. ಆಸ್ತಿ ತೆರಿಗೆಯನ್ನು ಪಾಲಿಕೆಗೆ ಪಾವತಿಸಬೇಕಿದೆ. 2011 ರಿಂದ 2023ರವರೆಗೆ ಸರಿ ಸುಮಾರು 11.51 ಕೋಟಿ ರೂ.ಗಳ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದ್ದರು. ಬಾಕಿ ತೆರಿಗೆ ಪಾವತಿಸಲು ಡಿಮ್ಯಾಂಡ್ ನೋಟೀಸ್ ಜಾರಿ ಮಾಡಿದ್ದರು ಮಾಲ್ ಮಾಲೀಕರು ತಲೆ ಕೆಡಿಸಿಕೊಂಡಿರಲಿಲ್ಲ.
4
+ ಮಾಜಿ ಸಚಿವ ಕೆ.ಗೋಪಾಲಯ್ಯಗೆ ಕೊಲೆ ಬೆದರಿಕೆ
5
+ ಹೀಗಾಗಿ ವಲಯ ಆಯುಕ್ತೆ ಪ್ರೀತಿ ಗೆಹ್ಲೋಟ್, ವಲಯ ಜಂಟಿ ಆಯುಕ್ತ ಬಾಲಶೇಖರ್ ಮತ್ತಿತರ ಅಧಿಕಾರಿಗಳು ಮಾರ್ಷಲ್‍ಗಳು ಹಾಗೂ ಪೊಲೀಸ್ ಭದ್ರತೆಯೊಂದಿಗೆ ಇಂದು ಮಾಲ್‍ಗೆ ತೆರಳಿ ಬೀಗ ಜಡಿದಿದ್ದಾರೆ.
eesanje/url_47_161_2.txt ADDED
@@ -0,0 +1,6 @@
 
 
 
 
 
 
 
1
+ ಪಾಕಿಸ್ತಾನಿ ಕ್ವಾಡ್‌ಕಾಪ್ಟರ್‌ಗಳ ಮೇಲೆ ಬಿಎಸ್ಎಫ್ ಗುಂಡಿನ ದಾಳಿ
2
+ ಜಮ್ಮು, ಫೆ.16:ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಎರಡು ವಿಭಿನ್ನ ಸ್ಥಳಗಳಲ್ಲಿ ಪಾಕಿಸ್ತಾನದ ಕ್ವಾಡ್‍ಕಾಪ್ಟರ್ ಹರುಬರುತ್ತಿದ್ದನ್ನು ಪತ್ತೆ ಮಡಿದ ಬಿಎಸ್ಎಫ್ ಸೇನಾ ಪಡೆಗಳು ಗುಂಡಿನ ದಾಳಿ ನಡೆಸಿದೆ. ಬಾಲ್ನೋಯ್-ಮೆಂಧರ್ ಮತ್ತು ಗುಲ್ಪುರ್ ಸೆಕ್ಟರ್‍ಗಳಲ್ಲಿನ ಭಾರತದ ಭೂಪ್ರದೇಶದ ಮೇಲೆ ಸಂಕ್ಷಿಪ್ತವಾಗಿ ಸುಳಿದಾಡಿದ ನಂತರ ಪಾಕಿಸ್ತಾನದ ಕಡೆಗೆ ಮರಳಿದವು ಎಂದು ಅವರು ಅಧಿಕಾರಿಗಳು ಹೇಳಿದರು.
3
+ ಕ್ವಾಡ್‍ಕಾಪ್ಟರ್‍ಗಳಿಂದ ಶಸ್ತ್ರಾಸ್ತ್ರಗಳು ಅಥವಾ ಮಾದಕ ದ್ರವ್ಯಗಳನ್ನು ತಂದಿದೆಯ ಎಂದು ಖಚಿತಪಡಿಸಿಕೊಳ್ಳಲು ಎರಡೂ ವಲಯಗಳಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಸಿದ್ದಾರೆ.
4
+ ಇಂದು ಬೆಳಗ್ಗೆ 6.30ರ ಸುಮಾರಿಗೆ ಮೆಂಧರ್‍ನ ಬಲ್ನೋಯಿ ಪ್ರದೇಶಕ್ಕೆ ಎರಡು ಕ್ವಾಡ್‍ಕಾಪ್ಟರ್‍ಗಳು ಪ್ರವೇಶಿಸುತ್ತಿರುವುದನ್ನು ಗಮನಿಸಿದ ನಮ್ಮ ಪಡೆಗಳು ಗುಂಡು ಹಾರಿಸಿದವು ಆದರೆ ರಿಮೋಟ್‍ನಿಂದ ನಿಯಂತ್ರಿತ ಯಂತ್ರಗಳು ಹಿಂತಿರುಗಿದವು ಅಂತೆಯೇ, ಅದೇ ಸಮಯದಲ್ಲಿ ಗುಲ್ಪುರ್ ಸೆಕ್ಟರ್ ಮೇಲೆ ತೂಗಾಡುತ್ತಿದ್ದ ಒಂದೆರಡು ಕ್ವಾಡ್ಕಾಪ್ಟಗಳು ಭಾರತೀಯ ಸೈನಿಕರ ಗುಂಡಿನ ದಾಳಿ ನಂತರ ಹಿಂತಿರುಗಿವೆ.
5
+ ಅಮೇರಿಕಾದಲ್ಲಿ ಭಾರತೀಯ ಮೂಲದ ಮೋಟೆಲ್ ಮಾಲೀಕನ ಗುಂಡಿಕ್ಕಿ ಹತ್ಯೆ
6
+ ಜಮ್ಮು ಮತ್ತು ಕಾಶ್ಮೀರದಲ್ಲಿ ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳನ್ನು ಬಿಡಲು ಪಾಕಿಸ್ತಾನವು ಡ್ರೋನ್‍ಗಳನ್ನು ಬಳಸುತ್ತಿದೆ.ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಶಸ್ತ್ರಾಸ್ತ್ರಗಳು ಮತ್ತು ಮಾದಕವಸ್ತುಗಳನ್ನು ಬೀಳಿಸುವ ಉದ್ದೇಶದಿಂದ ಗಡಿಯಾಚೆಯಿಂದ ಹಾರಿಸಲಾದ ಡ್ರೋನ್‍ಗಳ ಬಗ್ಗೆ ಮಾಹಿತಿ ನೀಡುವವರಿಗೆ ಮೂರು ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದ್ದಾರೆ.
eesanje/url_47_161_3.txt ADDED
@@ -0,0 +1,8 @@
 
 
 
 
 
 
 
 
 
1
+ ರಾಮ ಮಂದಿರಕ್ಕೆ 11ಕೋಟಿ ರೂ. ದೇಣಿಗೆ ನೀಡಿದ್ದ ಉದ್ಯಮಿಗೆ ರಾಜ್ಯಸಭಾ ಟಿಕೆಟ್
2
+ ಅಹಮದಾಬಾದ್,ಫೆ.15-ರಾಮ ಮಂದಿರಕ್ಕೆ ಒಮ್ಮೆ 11 ಕೋಟಿ ದೇಣಿಗೆ ನೀಡಿ ಭಕ್ತಿ ಬಾವ ಮೆರದಿದ್ದ ಉದ್ಯಮಿ ಗೋವಿಂದ್ ಧೋಲಾಕಿಯಾ ಅವರು ಗುಜರಾತ್‍ನಿಂದ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಕಡುಬಡತನದಿಂದ ಸಿರವಂತರಾದ ವಜ್ರದ ಉದ್ಯಮಿ ರಾಜಕೀಯಕ್ಕೆ ಕಾಲಿಡುತ್ತಿರುವುದು ಹಲವರನ್ನು ಹುಬ್ಬೇರುವಂತೆ ಮಾಡಿದೆ.
3
+ ಈ ಬಗ್ಗೆ ಮಾತನಾಡಿರುವ ಗೋವಿಂದ್ ಧೋಲಾಕಿಯಾ ರೈತ ಕುಟುಂಬದಿಂದ ಬಂದು , ಉದ್ಯಮಿಯಾಗುವತ್ತ ನನ್ನ ಪ್ರಯಾಣವು ತುಂಬಾ ಸಂತೋಷವಾಗಿದೆ… ನಾಲ್ಕು ಗಂಟೆಗಳ ಹಿಂದೆಯಷ್ಟೇ ನನಗೆ ಬಿಜೆಪಿ ಟಿಕೆಟ್ ನೀಡಿರುವುದು ನನಗೆ ತಿಳಿಯಿತು ಆದರೆ ನನ್ನ ಹೆಸರನ್ನು ಅಂತಿಮಗೊಳಿಸುವ ಮೊದಲು ಬಿಜೆಪಿ ನಾಯಕರು ಖಂಡಿತವಾಗಿಯೂ ಈ ಬಗ್ಗೆ ಚಿಂತನೆ ನಡೆಸಿರಬಹುದು ಎಂದು ಅವರು ತಿಳಿಸಿದರು.
4
+ ಗೋವಿಂದ್ ಧೋಲಾಕಿಯಾ ಅವರು ಸೂರತ್ ಮೂಲದ ವಜ್ರ ಉತ್ಪಾದನೆ ಮತ್ತು ರಫ್ತು ಮಾಡುವ ಕಂಪನಿ ಶ್ರೀರಾಮಕೃಷ್ಣ ಎಕ್ಸ್‍ಪೋಟ್ರ್ಸ್ ಪ್ರೈವೇಟ್ ಲಿಮಿಟೆಡ್‍ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ. ಇದು ಈ ವಲಯದ ವಿಶ್ವದ ಅತಿದೊಡ್ಡ ಕಂಪನಿಗಳಲ್ಲಿ ಒಂದಾಗಿದೆ. ಕಳೆದ 1970 ರಲ್ಲಿ ಕಂಪನಿಯನ್ನು ಪ್ರಾರಂಭಿಸಿ ಇಂದು ಲಿಂಕ್ಡ್‍ಇನ್ ಪೆಪೋಲ್ ಪ್ರಕಾರ, ಕಂಪನಿಯು 5000 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಕಂಪನಿಯ ಒಟ್ಟು ಆದಾಯವು ಈಗ 1.8 ಬಿಲಿಯನ್ ಡಾಲರ್‍ಗಳನ್ನು ಮೀರಿದೆ.
5
+ ರಾಜ್ಯಸಭೆಗೆ ಜೆಡಿಎಸ್ ಅಭ್ಯರ್ಥಿ ಕಣಕ್ಕೆ : ಅಡ್ಡ ಮತದಾನ ಭೀತಿ
6
+ ಗೋವಿಂದಕಾಕ ಅವರು ವಜ್ರ ಉದ್ಯಮ ಮತ್ತು ಯುವಜನತೆಗೆ ಚಿಂತನಶೀಲ ನಾಯಕರಾಗಿದ್ದಾರೆ. ಅವರ ಅಪಾರ ಅನುಭವದಿಂದ ಪ್ರೇರಿತರಾದ ಅವರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್- ಅಹಮದಾಬಾದ್, ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಅವರನ್ನು ಆಗಾಗ್ಗೆ ಆಹ್ವಾನಿಸುತ್ತಾರೆ. (ದೆಹಲಿ, ನ್ಯಾಷನಲ್ ಅಕಾಡೆಮಿ ಆಫ್ ಇಂಡಿಯನ್ ರೈಲ್ವೇಸ್, ವಡೋದರಾದ ಸಿಂಬಯೋಸಿಸ್ ಇನ್‍ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್‍ಮೆಂಟ್,ಬೆಂಗಳೂರಿನ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ-ಹಲವಾರು ಇತರ ವಿಶ್ವವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ.
7
+ ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಏನನ್ನು ನಿರೀಕ್ಷಿಸಬಹುದು..?
8
+ ಲೋಕೋಪಕಾರಕ್ಕಾಗಿ 2014 ರಲ್ಲಿ ನಾಲೆಡ್ಜ್ ಡೇಶನ್ ಅನ್ನು ಸ್ಥಾಪಿಸಿದರು.ಅವರು ದೀಪಾವಳಿ ಸಮಯದಲ್ಲಿ ತಮ್ಮ ಉದ್ಯೋಗಿಗಳಿಗೆ ಉದಾರ ಉಡುಗೊರೆಗಳನ್ನು ನೀಡಲು ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ ರಾಜ್ಯಸಭೆ ಸದಸ್ಯರಾಗುವುದು ನಿಶ್ಚಿತವಾಗಿದ್ದು ಹೊಸ ರಂಗ ಪ್ರವೇಶಿಸಲಿದ್ದಾರೆ.
eesanje/url_47_161_4.txt ADDED
@@ -0,0 +1,7 @@
 
 
 
 
 
 
 
 
1
+ ಕೆಲವರ ದುರಹಂಕಾರದಿಂದ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ : ಅಜಾದ್
2
+ ಪೂಂಚ್,ಫೆ.15- ದೌರ್ಬಲ್ಯ ಹಾಗೂ ದುರಹಂಕಾರದಿಂದಾಗಿ ಕಾಂಗ್ರೆಸ್ ಪಕ್ಷ ಅವನತಿಯತ್ತ ಸಾಗುತ್ತಿದೆ ಎಂದು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ ಅಧ್ಯಕ್ಷ ಗುಲಾಂ ನಬಿ ಅಜಾದ್ ಅಭಿಪ್ರಾಯಪಟ್ಟಿದ್ದಾರೆ. ಕಾಂಗ್ರೆಸ್‍ನೊಳಗಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ನಡುವೆ, ಕಾಂಗ್ರೆಸ್ ಪಕ್ಷದ ಮಾಜಿ ನಾಯಕರಾಗಿದ್ದ ಅಜಾದ್ ಅವರು, ಮಹಾರಾಷ್ಟ್ರದ ಮಾಜಿ ಸಿಎಂ ಅಶೋಕ್ ಚವಾಣ್ ಅವರು ಪಕ್ಷದಿಂದ ನಿರ್ಗಮಿಸಿರುವುದು ಕಾಂಗ್ರೆಸ್‍ಗೆ ದೊಡ್ಡ ಹೊಡೆತವಾಗಿದೆ ಎಂದು ತಿಳಿಸಿದ್ದಾರೆ.
3
+ ಈಗ ನಾನು ಈ ಬಗ್ಗೆ ಹೆಚ್ಚು ಹೇಳಲು ಬಯಸುವುದಿಲ್ಲ ಏಕೆಂದರೆ ನಾನು ಪಕ್ಷವನ್ನು ತೊರೆದಿದ್ದೇನೆ. ಅಬ್ ವೋ ಜಾನೇ ಉಂಕ ಕಾಮ್ ಜಾನೆ. ಅಶೋಕ್ ಚವ್ಹಾಣ್ ಕಾಂಗ್ರೆಸ್ ಗೆ ಮಹತ್ವದ ಕೊಡುಗೆ ನೀಡಿದ್ದಾರೆ.ಅವರ ತಂದೆ ಕೂಡ ಕಾಂಗ್ರೆಸ್ ನ ದೊಡ್ಡ ನಾಯಕರಾಗಿದ್ದು, ಕೇಂದ್ರ ಸಚಿವರೂ ಆಗಿದ್ದರು. ಮುಂಬರುವ ದಿನಗಳಲ್ಲಿ ಇನ್ನಷ್ಟು ಮಂದಿ ಪಕ್ಷ ತೊರೆಯಲಿದ್ದಾರೆ ಎಂಬುದು ನನ್ನ ಬಳಿ ಇರುವ ಮಾಹಿತಿ ಇದು ಅವರಿಗೆ ದೊಡ್ಡ ಹೊಡೆತ ಎಂದು ಅವರು ಹೇಳಿದರು.
4
+ ರೈತ ಮುಖಂಡರೊಂದಿಗೆ ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ
5
+ ನನ್ನ ಶಾಸಕಾಂಗ ವೃತ್ತಿಯು ಮಹಾರಾಷ್ಟ್ರದಲ್ಲಿ ಪ್ರಾರಂಭವಾಯಿತು. ನಾನು ಅಲ್ಲಿಂದಲೇ ಲೋಕಸಭಾ ಸದಸ್ಯನಾಗಿದ್ದೆ. ನಾನು ಸಹ ಮೊದಲ ಬಾರಿಗೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಹೋಗಿದ್ದೆ. ಭಾರತದಲ್ಲಿ ಕಾಂಗ್ರೆಸ್ ಪುನಶ್ಚೇತನಗೊಳ್ಳಲು ಒಂದೇ ಒಂದು ರಾಜ್ಯ ಅಂದರೆ ಮಹಾರಾಷ್ಟ್ರವಿದೆ. ಇನ್ನೊಂದರಲ್ಲಿ ಯುಪಿ ಮತ್ತು ಬಂಗಾಳದಂತಹ ದೊಡ್ಡ ರಾಜ್ಯಗಳು ಕೊನೆಗೊಂಡಿವೆ, ಕೆಲವೇ ಜನರ ದೌರ್ಬಲ್ಯ ಮತ್ತು ದುರಹಂಕಾರದಿಂದ ಈ ಪಕ್ಷವು ಅಂತ್ಯಗೊಳ್ಳುತ್ತಿರುವುದು ದುರದೃಷ್ಟಕರವಾಗಿದೆ ಎಂದು ಅವರು ಹೇಳಿದರು.
6
+ ಅಶೋಕ್ ಚವಾಣ್ ಮಂಗಳವಾರ ಕಾಂಗ್ರೆಸ್ ತೊರೆದು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ರಾಷ್ಟ್ರದ ಮನಸ್ಥಿತಿಯನ್ನು ಗಮನಿಸಿ ಕಾಂಗ್ರೆಸ್ ತೊರೆದಿದ್ದೇನೆ ಎಂದು ಚವಾಣ್ ಹೇಳಿದ್ದರು.
7
+ ರಾಜಕೀಯದಲ್ಲಿ, ನೀವು ರಾಷ್ಟ್ರದ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು, ಜನರ ಮನಸ್ಥಿತಿಯನ್ನು ಪರಿಗಣಿಸಿ ನಾನು ಬಿಜೆಪಿಗೆ ಸೇರಲು ನಿರ್ಧರಿಸಿದ್ದೇನೆ, ನಾನು ಕಾಂಗ್ರೆಸ್ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ, ಕಾಂಗ್ರೆಸ್‍ನಲ್ಲಿ ಏನು ನಡೆದರೂ ಅದು ಅವರ ಕರ್ಮ, ನಾನು ಸೋನಿಯಾ ಗಾಂಯನ್ನು ಗೌರವಿಸುತ್ತೇನೆ. . ನಾನು ಈಗಷ್ಟೇ ಪಕ್ಷವನ್ನು ತೊರೆದಿದ್ದೇನೆ ಮತ್ತು ಆಕೆಯ ಬಗ್ಗೆ ಪ್ರತಿಕ್ರಿಯಿಸಲು ನಾನು ಅಷ್ಟು ದೊಡ್ಡವನಲ್ಲ ಎಂದು ಚವಾಣ್ ಹೇಳಿದ್ದರು.
eesanje/url_47_161_5.txt ADDED
@@ -0,0 +1,11 @@
 
 
 
 
 
 
 
 
 
 
 
 
1
+ : ಚುನಾವಣಾ ಬಾಂಡ್ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ,. ಸುಪ್ರೀಂ ಮಹತ್ವದ ತೀರ್ಪು
2
+ ನವದೆಹಲಿ,ಫೆ.15- ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠ ಚುನಾವಣಾ ಬಾಂಡ್‍ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಅಭಿಪ್ರಾಯಪಟ್ಟಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿಆರ್ ಗವಾಯಿ, ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠವು ಚುನಾವಣಾ ಬಾಂಡ್‍ಗಳ ಯೋಜನೆಯನ್ನು ಅಸಂವಿಧಾನಿಕ ಎಂದು ಮಹತ್ವದ ತೀರ್ಪ ನೀಡಿದೆ.
3
+ ರಾಜಕೀಯ ಪಕ್ಷಗಳಿಗೆ ಅನಾಮಧೇಯ ನಿಧಿಗೆ ಅವಕಾಶ ನೀಡುವ ಕೇಂದ್ರ ಸರ್ಕಾರದ ಚುನಾವಣಾ ಬಾಂಡ್‍ಗಳ ಯೋಜನೆಯ ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲೆ ಪೀಠವು ಈ ತೀರ್ಪು ನೀಡಿದೆ.ತೀರ್ಪಿನ ಪ್ರಾರಂಭದಲ್ಲಿ, ಸಿಜೆಐ ಚಂದ್ರಚೂಡ್ ಅವರು ಎರಡು ಅಭಿಪ್ರಾಯಗಳನ್ನು ಹೊಂದಿದ್ದರೆ, ಒಬ್ಬರು ಸ್ವತಃ ಮತ್ತು ಇನ್ನೊಬ್ಬ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ಇಬ್ಬರೂ ಒಂದೇ ತೀರ್ಮಾನಕ್ಕೆ ಬಂದಿದ್ದಾರೆ.
4
+ ಪೀಠವು ಅರ್ಜಿಗಳು ಎರಡು ಪ್ರಮುಖ ಸಮಸ್ಯೆಗಳನ್ನು ಎತ್ತಿವೆ ಎಂದು ಹೇಳಿದರು; ತಿದ್ದುಪಡಿಗಳು ಆರ್ಟಿಕಲ್ 19(1)(ಎ) ಅಡಿಯಲ್ಲಿ ಮಾಹಿತಿಯ ಹಕ್ಕನ್ನು ಉಲ್ಲಂಘಿಸುತ್ತದೆಯೇ ಮತ್ತು ಅನಿಯಮಿತ ಕಾಪೆರ್ರೇಟ್ ನಿಧಿಯು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ಉಲ್ಲಂಘಿಸಿದೆಯೇ.
5
+ ಅನಾಮಧೇಯ ಚುನಾವಣಾ ಬಾಂಡ್‍ಗಳು ಮಾಹಿತಿ ಹಕ್ಕು ಮತ್ತು ಕಲಂ 19(1)(ಎ) ಅನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳುತ್ತದೆ ಎಂದು ಸಿಜೆಐ ತಮ್ಮ ತೀರ್ಪನ್ನು ಓದುತ್ತಾ ಹೇಳಿದರು.ಚುನಾವಣಾ ಬಾಂಡ್‍ಗಳ ಮೂಲಕ ಕಾಪೆರ್ರೇಟ್ ಕೊಡುಗೆದಾರರ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಏಕೆಂದರೆ ಕಂಪನಿಗಳು ನೀಡುವ ದೇಣಿಗೆಗಳು ಸಂಪೂರ್ಣವಾಗಿ ಕ್ವಿಡ್ ಪ್ರೊ ಕೋ ಉದ್ದೇಶಗಳನ್ನು ಹೊಂದಿರುತ್ತದೆ ಎಂದು ಅವರು ಗಮನಿಸಿದ್ದಾರೆ.
6
+ ರೈತ ಮುಖಂಡರೊಂದಿಗೆ ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ
7
+ ಕಂಪನಿಗಳ ಅಧಿನಿಯಮಿತ ರಾಜಕೀಯ ಕೊಡುಗೆಗಳನ್ನು ಅನುಮತಿಸುವ ಕಂಪನಿಗಳ ಕಾಯಿದೆಯಲ್ಲಿನ ತಿದ್ದುಪಡಿಗಳು ನಿರಂಕುಶ ಮತ್ತು ಅಸಂವಿಧಾನಿಕ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿದೆ. ಕಪ್ಪುಹಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮಾಹಿತಿ ಹಕ್ಕು ಉಲ್ಲಂಘನೆ ಸಮರ್ಥನೀಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
8
+ ಚುನಾವಣಾ ಬಾಂಡ್‍ಗಳನ್ನು ನೀಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‍ಬಿಐ) ರಾಜಕೀಯ ಪಕ್ಷಗಳು ಎನ್‍ಕ್ಯಾಶ್ ಮಾಡಿದ ಎಲೆಕ್ಟೋರಲ್ ಬಾಂಡ್‍ಗಳ ವಿವರಗಳನ್ನು ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಬ್ಯಾಂಕ್‍ಗಳಿಗೆ ಆದೇಶಿಸಿದೆ. ಎಸ್‍ಬಿಐ ಭಾರತೀಯ ಚುನಾವಣಾ ಆಯೋಗಕ್ಕೆ ವಿವರಗಳನ್ನು ಸಲ್ಲಿಸಬೇಕು ಮತ್ತು ಇಸಿಐ ಈ ವಿವರಗಳನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸಬೇಕು ಎಂದು ನ್ಯಾಯಾಲಯ ಹೇಳಿದೆ.
9
+ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠವು ಕಳೆದ ವರ್ಷ ನವೆಂಬರ್ 2 ರಂದು ಈ ವಿಷಯದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಎಲೆಕ್ಟೋರಲ್ ಬಾಂಡ್ ಎನ್ನುವುದು ಪ್ರಾಮಿಸರಿ ನೋಟ್ ಅಥವಾ ಬೇರರ್ ಬಾಂಡ್‍ನ ಸ್ವರೂಪದಲ್ಲಿರುವ ಒಂದು ಸಾಧನವಾಗಿದ್ದು, ವ್ಯಕ್ತಿ ಅಥವಾ ದೇಹವು ಭಾರತದ ಪ್ರಜೆಯಾಗಿದ್ದರೆ ಅಥವಾ ಭಾರತದಲ್ಲಿ ಸಂಘಟಿತ ಅಥವಾ ಸ್ಥಾಪಿಸಲ್ಪಟ್ಟಿದ್ದರೆ ಅದನ್ನು ಯಾವುದೇ ವ್ಯಕ್ತಿ, ಕಂಪನಿ, ಸಂಸ್ಥೆ ಅಥವಾ ವ್ಯಕ್ತಿಗಳ ಸಂಘದಿಂದ ಖರೀದಿಸಬಹುದು.
10
+ ಬಾಂಡ್‍ಗಳನ್ನು ನಿರ್ದಿಷ್ಟವಾಗಿ ರಾಜಕೀಯ ಪಕ್ಷಗಳಿಗೆ ನಿಯ ಕೊಡುಗೆಯ ಉದ್ದೇಶಕ್ಕಾಗಿ ನೀಡಲಾಗುತ್ತದೆ. ಚುನಾವಣಾ ಬಾಂಡ್‍ಗಳ ಯೋಜನೆಯು ರಾಜಕೀಯ ನಿಧಿಯ ಸಂಪೂರ್ಣ ಪಾರದರ್ಶಕ ವಿಧಾನವಾಗಿದೆ ಮತ್ತು ಕಪ್ಪು ಹಣ ಅಥವಾ ಲೆಕ್ಕವಿಲ್ಲದ ಹಣವನ್ನು ಪಡೆಯುವುದು ಅಸಾಧ್ಯ ಎಂದು ಕೇಂದ್ರವು ಅಫಿಡವಿಟ್‍ನಲ್ಲಿ ಹೇಳಿತ್ತು.
11
+ ಹಣಕಾಸು ಕಾಯಿದೆ 2017 ಮತ್ತು ಹಣಕಾಸು ಕಾಯಿದೆ 2016 ರ ಮೂಲಕ ರಾಜಕೀಯ ಪಕ್ಷಗಳ ಅಧಿನಿಯಮಿತ, ಅಧಿನಿಯಂತ್ರಿತ ನಿಧಿಗೆ ಬಾಗಿಲು ತೆರೆದಿದೆ ಎಂಬ ಕಾರಣಕ್ಕಾಗಿ ವಿವಿಧ ಕಾನೂನುಗಳಿಗೆ ಮಾಡಿದ ತಿದ್ದುಪಡಿಗಳನ್ನು ಪ್ರಶ್ನಿಸಿ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಉಳಿದಿವೆ.
eesanje/url_47_161_6.txt ADDED
@@ -0,0 +1,7 @@
 
 
 
 
 
 
 
 
1
+ ಪಟಾಕಿ ಸ್ಪೋಟಕ್ಕೆ ನಾಲ್ವರು ಬಲಿ
2
+ ಚಿತ್ರಕೂಟ,ಫೆ.15- ಉತ್ತರ ಪ್ರದೇಶದ ಚಿತ್ರಕೂಟದ ಬುಂದೇಲ್‍ಖಂಡ ಗೌರವ ಮಹೋತ್ಸವದಲ್ಲಿ ಸಂಭವಿಸಿದ ಪಟಾಕಿ ಸ್ಪೋಟದಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ. ಪೊಲೀಸರ ಪ್ರಕಾರ, ಉತ್ಸವದಲ್ಲಿ ಪಟಾಕಿ ಸಿಡಿಸುವ ವೇಳೆ ಈ ಸ್ಪೋಟ ಸಂಭವಿಸಿದೆ.
3
+ ಇದರಲ್ಲಿ ನಮ್ಮ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ. ಚಿತ್ರಕೂಟದ ಡಿಐಜಿ, ಜಿಲ್ಲಾ ಅಧಿಕಾರಿ ಚಿತ್ರಕೂಟ, ಮತ್ತು ಎಸ್ಪಿ, ಹೆಚ್ಚುವರಿ ಎಸ್ಪಿ, ಇತರ ಅಕಾರಿಗಳು ಸ್ಥಳದಲ್ಲಿದ್ದಾರೆ, ನಮ್ಮ ವಿಧಿವಿಜ್ಞಾನ ತಂಡ, ಬಾಂಬ್ ನಿಷ್ಕ್ರಿಯ ದಳದ (ಬಿಡಿಎಸ್) ತಂಡವೂ ಆಗಮಿಸುತ್ತಿದೆ ಎಂದು ಎಡಿಜಿ ಭಾನು ಭಾಸ್ಕರ್ ತಿಳಿಸಿದ್ದಾರೆ.ಈ ಘಟನೆಗೆ ಸಂಬಂಧಿಸಿದಂತೆ ಮೂವರ ವಿರುದ್ಧ ಎಫ್‍ಐಆರ್ ದಾಖಲಾಗಿದ್ದು, ಎಫ್‍ಐಆರ್‍ನಲ್ಲಿ ಇನ್ನೂ ಹೆಚ್ಚಿನವರ ಹೆಸರು ಇರುವ ಸಾಧ್ಯತೆ ಇದ್ದು, ಘಟನೆಯ ಕುರಿತು ತನಿಖೆ ಆರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
4
+ ದಕ್ಷಿಣ ಏಷ್ಯಾದಲ್ಲಿ ಭಾರತ ದೊಡ್ಡ ಪಾಲುದಾರ ದೇಶ ; ಅಮೆರಿಕ
5
+ ಈಗ ಸುಮಾರು ಮೂವರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಮತ್ತು ಅದರಲ್ಲಿ ಹೆಚ್ಚಿನ ಜನರನ್ನು ಸೇರಿಸಲಾಗುವುದು. ತನಿಖೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಭಾಸ್ಕರ್ ಹೇಳಿದ್ದಾರೆ. ತನಿಖೆಗೆ ಸಂಬಂಧಿಸಿದಂತೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದು ಸೂಕ್ತವಲ್ಲ ಏಕೆಂದರೆ ಎಲ್ಲಾ ಸಂಗತಿಗಳನ್ನು ಪರಿಶೀಲಿಸಲಾಗುತ್ತಿದೆ. ಮಕ್ಕಳ ಮರಣೋತ್ತರ ಪರೀಕ್ಷೆ ಪೂರ್ಣಗೊಂಡಿಲ್ಲ. ಹೆಚ್ಚಿನ ಜನರನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಅವರು ನೀಡಿದ ಸುಳಿವುಗಳೊಂದಿಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಅವರು ಹೇಳಿದರು.
6
+ ಶಸ್ತ್ರಾಸ್ತ್ರ ಲೂಟಿ ಮಾಡಿದ್ದವರ ಬಂಧನ
7
+ ಘಟನೆಯ ತನಿಖೆಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹೆಚ್ಚುವರಿ ಮಹಾನಿರ್ದೇಶಕ (ಎಡಿಜಿ) ಶ್ರೇಣಿಯ ಅಧಿಕಾರಿಯ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖಾ ಸಮಿತಿಗೆ ಆದೇಶ ನೀಡಿದ್ದಾರೆ. ಸಂತ್ರಸ್ತರ ಕುಟುಂಬಗಳಿಗೆ 5 ಲಕ್ಷ ಹಾಗೂ ಗಾಯಗೊಂಡವರಿಗೆ 50 ಸಾವಿರ ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈಗ ನಾವು ಎಲ್ಲರೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ, ಕುಟುಂಬ ಸದಸ್ಯರನ್ನು ಭೇಟಿ ಮಾಡುವುದು ನಮ್ಮ ಮೊದಲ ಕೆಲಸವಾಗಿತ್ತು, ಆದ್ದರಿಂದ ನಾವು ಇಲ್ಲಿಯವರೆಗೆ ನಾವು ಇಬ್ಬರನ್ನು ಭೇಟಿ ಮಾಡಿದ್ದೇವೆ, ನಾವು ಅಲಹಾಬಾದ್ ಮತ್ತು ಪ್ರಯಾಗ್ರಾಜ್ನಲ್ಲಿ ಕುಟುಂಬವನ್ನು ಭೇಟಿ ಮಾಡಿದ್ದೇವೆ ಮತ್ತು ಅದರ ನಂತರ ನಾವು ಉಳಿದವರನ್ನು ಭೇಟಿ ಮಾಡಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
eesanje/url_47_161_7.txt ADDED
@@ -0,0 +1,8 @@
 
 
 
 
 
 
 
 
 
1
+ ರೈತ ಮುಖಂಡರೊಂದಿಗೆ ಮತ್ತೊಂದು ಮಾತುಕತೆಗೆ ಮುಂದಾದ ಕೇಂದ್ರ
2
+ ನವದೆಹಲಿ,ಫೆ.15-ಪಂಜಾಬ್- ಹರಿಯಾಣ ಗಡಿಯಲ್ಲಿ ಪ್ರತಿಭಟನಾ ನಿರತ ರೈತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆಯೇ ಮೂವರು ಕೇಂದ್ರ ಸಚಿವರ ಸಮಿತಿ ಇಂದು ಚಂಡೀಗಢದಲ್ಲಿ ರೈತ ಮುಖಂಡರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದೆ. ಕೃಷಿ ಸಚಿವ ಅರ್ಜುನ್ ಮುಂಡಾ, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಮತ್ತು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಅವರು ರೈತರ ವಿವಿಧ ಬೇಡಿಕೆಗಳನ್ನು ಪರಿಹರಿಸಲು ಇಂದು ಸಂಜೆ 5 ಗಂಟೆಗೆ ಸಭೆ ನಡೆಸಲಿದ್ದಾರೆ, ಪ್ರಮುಖವಾಗಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಖಾತರಿಪಡಿಸುವ ಕಾನೂನು ಜಾರಿ ಕುರಿತಂತೆ ಮಹತ್ವದ ಮಾತುಕತೆ ನಡೆಯಲಿದೆ.
3
+ ಫೆಬ್ರವರಿ 8 ಮತ್ತು 12 ರಂದು ನಡೆದ ಹಿಂದಿನ ಸುತ್ತಿನ ಮಾತುಕತೆಗಳು ಅನಿರ್ದಿಷ್ಟವಾಗಿ ಉಳಿದಿರುವ ಕಾರಣ ಇದು ಉಭಯ ಪಕ್ಷಗಳ ನಡುವಿನ ಮಾತುಕತೆಯ ಮೂರನೇ ಪ್ರಯತ್ನವನ್ನು ಸೂಚಿಸುತ್ತದೆ. ಪಂಜಾಬ್ ಮತ್ತು ಹರಿಯಾಣದ ಶಂಭು ಮತ್ತು ಖಾನೌರಿ ಗಡಿಯಲ್ಲಿ ಮೊಕ್ಕಾಂ ಹೂಡಿರುವ ಪಂಜಾಬ್‍ನ ರೈತರು ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಕೇಂದ್ರಕ್ಕೆ ಮನವರಿಕೆ ಮಾಡಲು ದೆಹಲಿಯತ್ತ ಪಾದಯಾತ್ರೆ ನಡೆಸಲು ಪ್ರಯತ್ನಿಸುತ್ತಿದ್ದಾರೆ. ಹರಿಯಾಣದ ಜಿಂದ್ ಜಿಲ್ಲೆಯ ಸಮೀಪವಿರುವ ಡಾಟಾ ಸಿಂಘ್ವಾಲಾ-ಖನೌರಿ ಗಡಿಯಲ್ಲಿ ಇದೇ ರೀತಿಯ ಬಿಕ್ಕಟ್ಟು ಮುಂದುವರಿದಿದೆ.
4
+ ಶಸ್ತ್ರಾಸ್ತ್ರ ಲೂಟಿ ಮಾಡಿದ್ದವರ ಬಂಧನ
5
+ ಪಂಜಾಬ್‍ನಾದ್ಯಂತ ರೈಲ್ ರೋಕೋ ಸಭೆ ನಡೆಯುವವರೆಗೆ ರಾಷ್ಟ್ರ ರಾಜಧಾನಿ ಕಡೆಗೆ ತೆರಳುವ ಯಾವುದೇ ಹೊಸ ಪ್ರಯತ್ನಗಳನ್ನು ಮಾಡದಂತೆ ರೈತ ಮುಖಂಡರನ್ನು ಒತ್ತಾಯಿಸಲಾಗಿದೆ. ಆರೆ, ಕೇಂದ್ರದ ಪ್ರಸ್ತಾವನೆಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದಾಗ್ಯೂ, ಭಾರತಿ ಕಿಸಾನ್ ಯೂನಿಯನ್ (ಏಕ್ತಾ ಉಗ್ರನ್) ಮತ್ತು ಬಿಕೆಯು ದಕೌಂಡಾ (ಧನೇರ್) ಇಂದು ಪಂಜಾಬ್‍ನಲ್ಲಿ ರೈಲ್ ರೋಕೋ (ರೈಲು ದಿಗ್ಬಂಧನ) ಘೋಷಿಸಿದ್ದಾರೆ. ಶಂಭು ಮತ್ತು ಖಾನೌರಿ ಗಡಿಯಲ್ಲಿ ಹರಿಯಾಣ ಭದ್ರತಾ ಸಿಬ್ಬಂದಿ ಅಶ್ರುವಾಯು ಶೆಲ್‍ಗಳು ಮತ್ತು ನೀರಿನ ಫಿರಂಗಿಗಳನ್ನು ಬಳಸುವುದನ್ನು ವಿರೋಧಿಸಿ ರೈತರು ರೈಲ್ ರೋಖೋ ನಡೆಸುತ್ತಿದ್ದಾರೆ.
6
+ ಕಳೆದ ಎರಡು ದಿನಗಳ ಹಿಂದೆ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್‍ಗಳನ್ನು ನಿಯೋಜಿಸಿದ್ದು, ರೈತರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ. ಅಶ್ರುವಾಯು ಪ್ರಭಾವವನ್ನು ಕಡಿಮೆ ಮಾಡಲು ರೈತರು ನೀರಿನ ಬಾಟಲಿಗಳು, ಒದ್ದೆಯಾದ ಬಟ್ಟೆಗಳು ಮತ್ತು ರಕ್ಷಣಾತ್ಮಕ ಸಾಧನಗಳೊಂದಿಗೆ ತಮ್ಮ ಬಳಿ ಇಟ್ಟುಕೊಂಡಿದ್ದಾರೆ. ರೈತರು ತಮ್ಮ ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ದೆಹಲಿಗೆ ಪ್ರಯಾಣಿಸುವುದನ್ನು ತಡೆಯುವ ಮೂಲಕ ಪೊಲೀಸರು ಗಡಿಯನ್ನು ಬ್ಯಾರಿಕೇ���್‍ಗಳಿಂದ ಮುಚ್ಚಿದ್ದಾರೆ.
7
+ ದಕ್ಷಿಣ ಏಷ್ಯಾದಲ್ಲಿ ಭಾರತ ದೊಡ್ಡ ಪಾಲುದಾರ ದೇಶ ; ಅಮೆರಿಕ
8
+ ನವದೆಹಲಿಯಲ್ಲಿ ಟ್ರಾಫಿಕ್ ಮೇಲೆ ಪರಿಣಾಮ ಬೀರುವ ಪ್ರತಿಭಟನೆಗಳೊಂದಿಗೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‍ಇ) ಕಳೆದ ರಾತ್ರಿ ವಿದ್ಯಾರ್ಥಿಗಳಿಗೆ ತಮ್ಮ ಪ್ರಯಾಣವನ್ನು ಮೊದಲೇ ಯೋಜಿಸುವಂತೆ ಒತ್ತಾಯಿಸಿ ಸಲಹೆಯನ್ನು ನೀಡಿತು. ಮಂಡಳಿಯು ಮೆಟ್ರೋ ಬಳಸಲು ಶಿಫಾರಸು ಮಾಡಿದೆ.
eesanje/url_47_161_8.txt ADDED
@@ -0,0 +1,6 @@
 
 
 
 
 
 
 
1
+ ಶಸ್ತ್ರಾಸ್ತ್ರ ಲೂಟಿ ಮಾಡಿದ್ದವರ ಬಂಧನ
2
+ ಇಂಫಾಲ್, ಫೆ.15 (ಪಿಟಿಐ) ಇಂಫಾಲ್ ಪೂರ್ವ ಜಿಲ್ಲೆಯ ಚಿಂಗಾರೆಲ್‍ನಲ್ಲಿರುವ ಇಂಡಿಯಾ ರಿಸರ್ವ್ ಬೆಟಾಲಿಯನ್ ಶಿಬಿರದಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡುತ್ತಿದ್ದ ಆರು ಜನರನ್ನು ಮಣಿಪುರ ಪೊಲೀಸರು ಬಂಧಿಸಿದ್ದಾರೆ. ನಾಲ್ಕು ಇನ್ಸಾಸ್ ರೈಫಲ್‍ಗಳು, ಒಂದು ಎಕೆ ಘಟಕ್, ಎಸ್‍ಎಲ್‍ಆರ್‍ನ ಎರಡು ಮ್ಯಾಗಜೀನ್‍ಗಳು ಮತ್ತು ಐಆರ್‍ಬಿ ಕ್ಯಾಂಪ್‍ನಿಂದ ಲೂಟಿ ಮಾಡಿದ 9 ಎಂಎಂ ಮದ್ದುಗುಂಡುಗಳ 16 ಸಣ್ಣ ಪೆಟ್ಟಿಗೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ಮೊನ್ನೆ ರಾತ್ರಿ ಅಶಿಸ್ತಿನ ಜನಸಮೂಹದಿಂದ 5 ನೇ ಐಆರ್‍ಬಿ, ಚಿಂಗಾರೆಲ್, ಇಂಫಾಲ್ ಪೂರ್ವದ ಶಸ್ತ್ರಾಸ್ತ್ರ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಣಿಪುರ ಪೊಲೀಸರು ಆರು ಜನರನ್ನು ಬಂಧಿಸಿ ಪೊಲೀಸ್ ಕಸ್ಟಡಿಗ ಕಳುಹಿಸಲಾಗಿದೆ. ಆದಾಗ್ಯೂ, ಶಸ್ತ್ರಾಸ್ತ್ರಗಳನ್ನು ಎಲ್ಲಿಂದ ವಶಪಡಿಸಿಕೊಳ್ಳಲಾಗಿದೆ ಅಥವಾ ವ್ಯಕ್ತಿಗಳನ್ನು ಎಲ್ಲಿಂದ ಬಂಧಿಸಲಾಗಿದೆ ಎಂಬುದನ್ನು ಪೊಲೀಸರು ತಿಳಿಸಿಲ್ಲ. ಅಶಿಸ್ತಿನ ಗುಂಪೊಂದು ಚಿಂಗಾರೆಲ್‍ನಲ್ಲಿರುವ 5 ನೇ ಐಆರ್‍ಬಿಯ ಕ್ಯಾಂಪ್‍ಗೆ ನುಗ್ಗಿತು ಮತ್ತು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ಓಡಿಹೋಯಿತು.
4
+ ಬೆಂಗಳೂರು : ಆತಂಕ ಸೃಷ್ಟಿಸಿದ್ದ ಸ್ಕ್ರಾಪ್ ಎಟಿಎಂ ಬಾಕ್ಸ್
5
+ ಘಟನೆಯ ನಂತರ, ಚಿಂಗಾರೆಲ್‍ನಿಂದ ಸುಮಾರು 5 ಕಿಮೀ ದೂರದಲ್ಲಿರುವ ಇಂಫಾಲ್ ಪೂರ್ವ ಜಿಲ್ಲೆಯ ಪಂಗೇಯಲ್ಲಿರುವ ಮಣಿಪುರ ಪೊಲೀಸ್ ತರಬೇತಿ ಕಾಲೇಜಿನಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಮ ಸ್ವಯಂಸೇವಕರು ನುಗ್ಗಲು ಪ್ರಯತ್ನಿಸಿದರು.
6
+ ತರಬೇತಿ ಕಾಲೇಜಿಗೆ ನುಗ್ಗಲು ಪ್ರಯತ್ನಿಸುತ್ತಿರುವ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಸೇರಿದಂತೆ ಹಿಂಸಾತ್ಮಕ ಗುಂಪುಗಳನ್ನು ಹಿಮ್ಮೆಟ್ಟಿಸಲು, ಭದ್ರತಾ ಪಡೆಗಳು ಕಾನೂನು ಬಲವನ್ನು ಬಳಸಿದವು. ಘಟನೆಯ ಸಂದರ್ಭದಲ್ಲಿ, ಒಬ್ಬ ವ್ಯಕ್ತಿ ಗಾಯಗೊಂಡರು ಮತ್ತು ಮೂವರು ವ್ಯಕ್ತಿಗಳು ಗಾಯಗೊಂಡಿದ್ದರು.
eesanje/url_47_161_9.txt ADDED
@@ -0,0 +1,6 @@
 
 
 
 
 
 
 
1
+ ಬಿಜೆಪಿಗೆ ಸೇರ್ಪಡೆಗೊಂಡ ಪಿಡಿಪಿ ನಾಯಕ
2
+ ಜಮ್ಮು, ಫೆ 14:ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ (ಪಿಡಿಪಿ)ನಾಯಕ ಅರ್ಷಿದ್ ಮೆಹಮೂದ್ ಖಾನ್ ಅವರು ಇಂದು ಇಲ್ಲಿ ತಮ್ಮ ಹಲವಾರು ಬೆಂಬಲಿಗರೊಂದಿಗೆ ಬಿಜೆಪಿ ಸೇರಿದರು. ನೌಶೇರಾದ ದಂಡೇಸರ್ ಗ್ರಾಮದಿಂದ ಮೂರು ಬಾರಿ ಸರಪಂಚ್ ಆಗಿರುವ ಖಾನ್ ಮತ್ತು ಅವರ ಬೆಂಬಲಿಗರನ್ನು ಪಕ್ಷದ ಜೆ ಕೆ ಅಧ್ಯಕ್ಷ ರವೀಂದರ್ ರೈನಾ ಮತ್ತು ಮಾಜಿ ಉಪ ಮುಖ್ಯಮಂತ್ರಿ ಕವೀಂದರ್ ಗುಪ್ತಾ ಮತ್ತು ಸಂಸದ ಜುಗಲ್ ಕಿಶೋರ್ ಸೇರಿದಂತೆ ಇತರ ಹಿರಿಯ ನಾಯಕರು ಬಿಜೆಪಿಗೆ ಸ್ವಾಗತಿಸಿದರು.
3
+ ಸೇರ್ಪಡೆಯ ನಂತರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರೈನಾ, ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಚುನಾವಣೆಗೆ ಸಿದ್ಧವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಯನ್ನು ಘೋಷಿಸುವುದು ಚುನಾವಣಾ ಆಯೋಗದ ಅ„ಕಾರವಾಗಿದೆ ಆದರೆ ನಾವು ಯಾವುದೇ ಚುನಾವಣೆಗೆ ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
4
+ ಕ್ರೈಂ ರಾಜಧಾನಿಯಾಗುತ್ತಿದೆ ಬೆಂಗಳೂರು : ಆರ್.ಅಶೋಕ್
5
+ ಫೆಬ್ರವರಿ 20 ರಂದು ಕೇಂದ್ರಾಡಳಿತ ಪ್ರದೇಶಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮುವಿನಲ್ಲಿ ಬೃಹತ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ರೈನಾ ಹೇಳಿದರು.ಮೋದಿ ಅವರು ಜೆ ಕೆ ಅಭಿವೃದ್ಧಿಗಾಗಿ ಬೊಕ್ಕಸವನ್ನು ತೆರೆದರು. ಶಾಂತಿ ಮತ್ತು ಸಹೋದರತ್ವದ ಮರುಸ್ಥಾಪನೆಯು ಜನರಿಗೆ ಅವರ ದೊಡ್ಡ ಕೊಡುಗೆಯಾಗಿದೆ. ಅವರು ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸವನ್ನು ಖಾತ್ರಿಪಡಿಸಿದ್ದಾರೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ ಎಂದು ಅವರು ಹೇಳಿದರು.
6
+ ಪ್ರಧಾನಿ ಸಮ್ಮುಖದಲ್ಲಿ ಕೆಲವು ಹಿರಿಯ ರಾಜಕೀಯ ನಾಯಕರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ ಎಂಬ ಊಹಾಪೋಹಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಯಾರೇ ಬಂದರೂ ನಾವು ಪೂರ್ಣ ಹೃದಯದಿಂದ ಸ್ವಾಗತಿಸುತ್ತೇವೆ ಎಂದು ರೈನ್ ಹೇಳಿದರು.
eesanje/url_47_162_1.txt ADDED
@@ -0,0 +1,6 @@
 
 
 
 
 
 
 
1
+ ಗಂಗಾ ಸ್ನಾನ ಮಾಡಿದ 15 ಲಕ್ಷ ಭಕ್ತರು
2
+ ಪ್ರಯಾಗರಾಜ್, ಫೆ 14 (ಪಿಟಿಐ) ಬಸಂತ್ ಪಂಚಮಿಯ ಪವಿತ್ರ ದಿನವಾದ ಇಂದು ಸುಮಾರು 15ಲಕ್ಷ ಜನರು ಗಂಗಾ ನದಿ ಮತ್ತು ಪವಿತ್ರ ಸಂಗಮದಲ್ಲಿ ಸ್ನಾನ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಘಮೇಳ ಕ್ಷೇತ್ರಕ್ಕೆ ಮುಂಜಾನೆಯಿಂದಲೇ ಮಹಿಳೆಯರು, ಮಕ್ಕಳು, ವೃದ್ಧರು ಸೇರಿದಂತೆ ಭಕ್ತರು ಆಗಮಿಸುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
3
+ ಮಂಗಳವಾರದ ಮಳೆ ಮತ್ತು ಇಂದು ಬೆಳಿಗ್ಗೆ ಮೋಡ ಕವಿದ ವಾತಾವರಣ ಮತ್ತು ತಂಪಾದ ವಾತಾವರಣದ ಹೊರತಾಗಿಯೂ, ಸುಮಾರು 15 ಲಕ್ಷ ಜನರು ಸಂಗಮ್ ನಗರದಲ್ಲಿ ಮಾಘ ಮೇಳದ ನಾಲ್ಕನೇ ಸ್ನಾನದ ಹಬ್ಬವಾದ ಬಸಂತ್ ಪಂಚಮಿಯನ್ನು ಆಚರಿಸಲು ಪವಿತ್ರ ಸ್ನಾನ ಮಾಡಿದರು. ಘಾಟ್‍ಗಳ ಉದ್ದವನ್ನು 6,800 ಅಡಿಗಳಿಂದ 8,000 ಅಡಿಗಳಿಗೆ ಹೆಚ್ಚಿಸಲಾಗಿದೆ ಎಂದು ಅವರು ಹೇಳಿದರು. ಈ ಬಾರಿ ಜನರ ಅನುಕೂಲಕ್ಕಾಗಿ ಮತ್ತು ಒಟ್ಟು 12 ಘಾಟ್‍ಗಳನ್ನು ಸಾಕಷ್ಟು ಬದಲಾವಣೆ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ.
4
+ ಇಂದಿನಿಂದ ಆರಂಭವಾಗಬೇಕಿದ್ದ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ರದ್ದು
5
+ ಮೇಳ ಪ್ರದೇಶದಲ್ಲಿ 300 ಸಿಸಿಟಿವಿ ಕ್ಯಾಮೆರಾಗಳು ಮತ್ತು ಹಲವು ಎಐ ಆಧಾರಿತ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ ಫೀಡ್‍ಗಳನ್ನು ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್‍ಗೆ ಕಳುಹಿಸುವ ಮೂಲಕ ಮೇಳ ಪ್ರದೇಶದಲ್ಲಿ ವಿಸ್ತಾರವಾದ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಪೊಲೀಸ್ ಉಪ ಮಹಾನಿರೀಕ್ಷಕ (ಮಾಘ ಮೇಳ) ರಾಜೀವ್ ನಾರಾಯಣ ಮಿಶ್ರಾ ತಿಳಿಸಿದ್ದಾರೆ.
6
+ ಅನುಮಾನಾಸ್ಪದ ವಸ್ತು ಅಥವಾ ವ್ಯಕ್ತಿ ಕಂಡರೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದರು. ಮಾಘಮೇಳ ಕ್ಷೇತ್ರದಲ್ಲಿರುವ ಸಂತರ, ಮುನಿಗಳ ಶಿಬಿರಗಳಲ್ಲಿ ದೊಡ್ಡ ಮಟ್ಟದಲ್ಲಿ ಭಂಡಾರವನ್ನು ಆಯೋಜಿಸಲಾಗುತ್ತಿದೆ.
eesanje/url_47_162_10.txt ADDED
@@ -0,0 +1,5 @@
 
 
 
 
 
 
1
+ ಎನ್‍ಸಿಪಿ ಹೆಸರು, ಚಿಹ್ನೆಗಾಗಿ ಸುಪ್ರೀಂ ಮೊರೆ ಹೋದ ಶರದ್‍ಪವಾರ್
2
+ ನವದೆಹಲಿ, ಫೆ.13 (ಪಿಟಿಐ) – ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಪಕ್ಷವನ್ನು ನಿಜವಾದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಎಂದು ಗುರುತಿಸಿರುವ ಚುನಾವಣಾ ಆಯೋಗದ ಆದೇಶವನ್ನು ಪ್ರಶ್ನಿಸಿ ಹಿರಿಯ ನಾಯಕ ಶರದ್ ಪವಾರ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ನಿನ್ನೆ ಸಂಜೆ ವಕೀಲ ಅಭಿಷೇಕ್ ಜೆಬರಾಜ್ ಮೂಲಕ ಪವಾರ್ ಅವರು ತಮ್ಮ ವೈಯಕ್ತಿಕ ಸಾಮಥ್ರ್ಯದ ಮೇಲೆ ಸುಪ್ರೀಂ ಕೋರ್ಟ್‍ಗೆ ಮನವಿ ಸಲ್ಲಿಸಿದ್ದಾರೆ.
3
+ ಅವರಿಗಿಂತ ಮೊದಲು, ಅಜಿತ್ ಪವಾರ್ ಬಣವು ವಕೀಲ ಅಭಿಕಲ್ಪ ಪ್ರತಾಪ್ ಸಿಂಗ್ ಮೂಲಕ ಈಗಾಗಲೇ ಸುಪ್ರೀಂ ಕೋರ್ಟ್‍ಗೆ ಕೇವಿಯಟ್ ಸಲ್ಲಿಸಿದೆ. ಫೆಬ್ರವರಿ 6 ರಂದು, ಚುನಾವಣಾ ಆಯೋಗವು ಅಜಿತ್ ಪವಾರ್ ಬಣ ನಿಜವಾದ ಎನ್‍ಸಿಪಿ ಎಂದು ಘೋಷಿಸಿತು, ಈ ನಿರ್ಧಾರ ಪಕ್ಷದ ಸಂಸ್ಥಾಪಕ ಶರದ್ ಪವಾರ್‍ಗೆ ದೊಡ್ಡ ಹಿನ್ನಡೆ ಎಂದು ಭಾವಿಸಲಾಗಿತ್ತು.
4
+ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲು ಮುಂದಾದ ಟಾಟಾ ಸಂಸ್ಥೆ
5
+ ಚುನಾವಣಾ ಸಮಿತಿಯು ಅಜಿತ್ ಪವಾರ್ ನೇತೃತ್ವದ ಗುಂಪಿಗೆ ಎನ್‍ಸಿಪಿ ಚಿಹ್ನೆ ಗಡಿಯಾರವನ್ನು ಸಹ ನೀಡಿದೆ. ಈ ನಿರ್ಧಾರವು ಪಕ್ಷದ ಸಂವಿಧಾನದ ಗುರಿಗಳು ಮತ್ತು ಉದ್ದೇಶಗಳ ಪರೀಕ್ಷೆಗಳು, ಪಕ್ಷದ ಸಂವಿಧಾನದ ಪರೀಕ್ಷೆ ಮತ್ತು ಸಾಂಸ್ಥಿಕ ಮತ್ತು ಶಾಸಕಾಂಗದ ಬಹುಮತದ ಪರೀಕ್ಷೆಗಳನ್ನು ಒಳಗೊಂಡಿರುವ ಅಂತಹ ಅರ್ಜಿಯ ನಿರ್ವಹಣೆಯ ಪರೀಕ್ಷೆಗಳನ್ನು ಅನುಸರಿಸಿದೆ ಎಂದು ಇಸಿ ಹೇಳಿತ್ತು. ಚುನಾವಣಾ ಆಯೋಗದ ಈ ನಿರ್ಧಾರವನ್ನು ಪ್ರಶ್ನಿಸಿ ಶರದ್ ಪವಾರ್ ಅವರು ಇದೀಗ ಸುಪ್ರೀಂ ಕೊರ್ಟ್ ಮೆಟ್ಟಿಲೇರಿದ್ದಾರೆ.
eesanje/url_47_162_11.txt ADDED
@@ -0,0 +1,6 @@
 
 
 
 
 
 
 
1
+ ಬಂಧಿತ ತಮಿಳುನಾಡು ಸಚಿವ ಬಾಲಾಜಿ ರಾಜೀನಾಮೆ
2
+ ಚೆನ್ನೈ,ಫೆ.13- ಉದ್ಯೋಗಕ್ಕಾಗಿ ನಗದು ಪ್ರಕರಣದಲ್ಲಿ ಬಂಧಿತರಾಗಿರುವ ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರು ಮದ್ರಾಸ್ ಹೈಕೋರ್ಟ್‍ನಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬರುವ ಮುಂಚಿತವಾಗಿ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಬಾಲಾಜಿ ಅವರು ಈ ಹಿಂದೆ ಸಾರಿಗೆ ಸಚಿವರಾಗಿದ್ದಾಗ ಚೆನ್ನೈನ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು ದಾಖಲಿಸಿದ ಉದ್ಯೋಗಕ್ಕಾಗಿ ನಗದು ಪ್ರಕರಣದ ಆಧಾರದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ಆರಂಭಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕಳೆದ ವರ್ಷ ಜೂನ್ 14 ರಂದು ಬಂಧಿಸಿತ್ತು.
3
+ ಆಡಳಿತಾರೂಢ ಡಿಎಂಕೆ ಪಕ್ಷದ ಮೂಲಗಳು ಬಾಲಾಜಿ ಅವರ ಅಧಿಕಾರಾವಧಿಯ ಸುತ್ತ ನಡೆಯುತ್ತಿರುವ ಕಾನೂನು ತೊಡಕುಗಳನ್ನು ಉಲ್ಲೇಖಿಸಿ ಅವರ ರಾಜೀನಾಮೆಯನ್ನು ದೃಢಪಡಿಸಿವೆ. ರಾಜ್ಯಪಾಲ ಟಿ.ಎನ್.ರವಿ ಅವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಒತ್ತಾಯಿಸಿದ್ದರು. ಸ್ಟಾಲಿನ್ ಅವರು ಬೆಂಬಲದ ಪ್ರದರ್ಶನವಾಗಿ ಬಾಲಾಜಿ ಅವರನ್ನು ತಮಿಳುನಾಡು ಸಂಪುಟದಲ್ಲಿ ಉಳಿಸಿಕೊಂಡರು. ಆದರೆ, ಮದ್ರಾಸ್ ಹೈಕೋರ್ಟ್ ಈ ಕ್ರಮವನ್ನು ಗಂಭೀರವಾಗಿ ಪರಿಗಣಿಸಿ ಸ್ಟಾಲಿನ್ ಅವರ ಸ್ಥಾನವನ್ನು ಮರುಚಿಂತನೆ ಮಾಡುವುದು ಉತ್ತಮ ಎಂದು ಹೈಕೋರ್ಟ್ ಇತ್ತೀಚೆಗೆ ಸಲಹೆ ನೀಡಿತ್ತು.
4
+ ಚವಾಣ್‍ರನ್ನು ರಾಜ್ಯಸಭೆಗೆ ಕಳುಹಿಸುವುದು ಹುತಾತ್ಮರಿಗೆ ಅಗೌರವ ತೋರಿದಂತೆ : ಠಾಕ್ರೆ
5
+ ರಾಜಕೀಯ ಬಲವಂತವು ಸಾರ್ವಜನಿಕ ನೈತಿಕತೆ, ಉತ್ತಮ ಮತ್ತು ಸ್ವಚ್ಛ ಆಡಳಿತದ ಅವಶ್ಯಕತೆಗಳು ಮತ್ತು ಸಾಂವಿಧಾನಿಕ ನೈತಿಕತೆಯನ್ನು ಮೀರಿಸಲು ಸಾಧ್ಯವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಎಸ್‍ವಿ ಗಂಗಾಪುರವಾಲಾ ನೇತೃತ್ವದ ಪೀಠ ಹೇಳಿದೆ.
6
+ ಪದೇ ಪದೇ ಮನವಿ ಮಾಡಿದರೂ ಕೆಳ ನ್ಯಾಯಾಲಯಗಳು ಬಾಲಾಜಿಗೆ ಜಾಮೀನು ನಿರಾಕರಿಸಿವೆ. ಅವರ ಜಾಮೀನು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಎರಡು ದಿನಗಳಲ್ಲಿ ಎರಡನೇ ಬಾರಿಗೆ ವಿಚಾರಣೆ ನಡೆಸಲಿದೆ. ಇದಕ್ಕೂ ಮುನ್ನವೇ ಬಾಲಾಜಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ವರದಿಯಾಗಿದೆ.
eesanje/url_47_162_12.txt ADDED
@@ -0,0 +1,5 @@
 
 
 
 
 
 
1
+ ಆರಂಭಿಕ ಉದ್ಯೋಗಿಗಳನ್ನು ಪುರಸ್ಕರಿಸದಿರುವುದಕ್ಕೆ ಇನ್ಫಿ ಮೂರ್ತಿ ವಿಷಾದ
2
+ ನವದೆಹಲಿ,ಫೆ.13- ಇನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರು ಕಂಪನಿಯ ಆರಂಭಿಕ ಉದ್ಯೋಗಿಗಳಿಗೆ ಪುರಸ್ಕಾರ ನೀಡದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ಯಶಸ್ಸನ್ನು ನಿರ್ಮಿಸುವಲ್ಲಿ ಕಂಪನಿಯ ಆರಂಭಿಕ ಉದ್ಯೋಗಿಗಳ ಕೊಡುಗೆಗಳನ್ನು ಅವರು ಸ್ಮರಿಸಿಕೊಂಡಿದ್ದಾರೆ. ಇನ್ಫೋಸಿಸ್ ನ ಆರಂಭಿಕ ಅಳವಡಿಕೆದಾರರು ಹಲವಾರು ಮಂದಿ ಇದ್ದರು, ನನ್ನ ಸಹ-ಸಂಸ್ಥಾಪಕರಿಗೆ ನಾನು ನೀಡಿದ ಷೇರುಗಳನ್ನು ನಾನು ನೀಡಲು ಸಾಧ್ಯವಾಗಲಿಲ್ಲ. ಅವರ ಕೊಡುಗೆ ಹೆಚ್ಚು ಅಥವಾ ನನ್ನಂತೆಯೇ ಇತ್ತು ಎಂದು ಮೂರ್ತಿ ಅವರು ತಮ್ಮ ಪುಸ್ತಕ ಬಿಡುಗಡೆಯ ನಂತರ ಪ್ರಶ್ನೆಗಳಿಗೆ ಉತ್ತರಿಸಿದರು.
3
+ ಇನ್ಫೋಸಿಸ್ ಅನ್ನು ಜುಲೈ 1981 ರಲ್ಲಿ ಪುಣೆಯಲ್ಲಿ ಸ್ಥಾಪಿಸಲಾಯಿತು ಆದರೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಗೊಂಡಿದೆ, ಇದನ್ನು ಮೂರ್ತಿ ಸೇರಿದಂತೆ ಏಳು ಎಂಜಿನಿಯರ್‍ಗಳು ಸಹ-ಸಂಸ್ಥಾಪಕರಿದ್ದರು. ಇತರ ಸಹ-ಸಂಸ್ಥಾಪಕರೆಂದರೆ ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್, ಎಸ್‍ಡಿ ಶಿಬುಲಾಲ, ಕೆ ದಿನೇಶ್, ಎನ್‍ಎಸ್ ರಾಘವನ್ ಮತ್ತು ಅಶೋಕ್ ಅರೋರಾ ಆಗಿದ್ದರು.
4
+ ಚವಾಣ್‍ರನ್ನು ರಾಜ್ಯಸಭೆಗೆ ಕಳುಹಿಸುವುದು ಹುತಾತ್ಮರಿಗೆ ಅಗೌರವ ತೋರಿದಂತೆ : ಠಾಕ್ರೆ
5
+ ಕಳೆದ ತಿಂಗಳು, ಮೂರ್ತಿ ಅವರು ತಮ್ಮ ಪತ್ನಿ ಸುಧಾ ಮೂರ್ತಿಗೆ ಈಗ ಟೆಕ್ ದೈತ್ಯ ಇನೋಸಿಸ್‍ಗೆ ಸೇರಲು ಅವಕಾಶ ನೀಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದರು. ಇನೋಸಿಸ್ ಅನ್ನು ಸ್ಥಾಪಿಸಲು ಸುಧಾ ಮೂರ್ತಿ ತನ್ನ ಪತಿಗೆ 10,000 ರೂ.ಗಳ ಆರಂಭಿಕ ಮೂಲ ಬಂಡವಾಳವನ್ನು ಒದಗಿಸಿದವರು. ಮೂರ್ತಿ ಅವರು ಟೆಕ್ ದೈತ್ಯರಾಗಿದ್ದ ಸಮಯದಲ್ಲಿ, ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರತಿಯೊಬ್ಬರ ಅಭಿಪ್ರಾಯಗಳನ್ನು ಪರಿಗಣಿಸಬೇಕು ಇಲ್ಲದಿದ್ದರೆ ಪ್ರಜಾಪ್ರಭುತ್ವದಲ್ಲಿ ನೀವು ಯಾವಾಗಲೂ ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ ಎಂದು ಮೂರ್ತಿ ಹೇಳಿದ್ದಾರೆ. ನಾವು ಪ್ರಬುದ್ಧ ಪ್ರಜಾಪ್ರಭುತ್ವವನ್ನು ರಚಿಸಿದ್ದರಿಂದ ಇನ್ಫೋಸಿಸ್ ನಮಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಅವರು ಹೇಳಿದರು.
eesanje/url_47_162_2.txt ADDED
@@ -0,0 +1,9 @@
 
 
 
 
 
 
 
 
 
 
1
+ ‘ದೆಹಲಿ ಚಲೋ’ ಪ್ರತಿಭಟನೆ : ಮತ್ತೆ ರೈತರ ಮೇಲೆ ಆಶ್ರುವಾಯು ಪ್ರಯೋಗ
2
+ ಚಂಡೀಗಢ, ಫೆ 14 (ಪಿಟಿಐ) ಅಂಬಾಲ ಬಳಿಯ ಶಂಭು ಗಡಿಯಲ್ಲಿ ಇಂದು ರೈತರು ತಮ್ಮ ದೆಹಲಿ ಚಲೋ ಪ್ರತಿಭಟನೆಯನ್ನು ಪುನರಾರಂಭಿಸಲು ಮುಂದಾದಾಗ ರೈತರ ಮೇಲೆ ಕೆಲವು ಅಶ್ರುವಾಯು ಶೆಲ್‍ಗಳನ್ನು ಹಾರಿಸಲಾಗಿದೆ. ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಕೆಲವು ರೈತರು ಶಂಭು ಗಡಿಯಲ್ಲಿನ ಬ್ಯಾರಿಕೇಡ್‍ಗಳ ಬಳಿ ಜಮಾಯಿಸಿದಾಗ ಹರಿಯಾಣ ಭದ್ರತಾ ಸಿಬ್ಬಂದಿಗಳು ಅಶ್ರುವಾಯು ಶೆಲ್‍ಗಳನ್ನು ಎಸೆದರು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
3
+ ನಿನ್ನೆ ರಾಷ್ಟ್ರ ರಾಜಧಾನಿಗೆ ತಮ್ಮ ಪ್ರತಿಭಟನಾ ಮೆರವಣಿಗೆಯನ್ನು ತಡೆಯುವ ಬ್ಯಾರಿಕೇಡ್‍ಗಳನ್ನು ಮುರಿಯಲು ಪ್ರಯತ್ನಿಸಿದಾಗ ರೈತರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಎದುರಿಸಿ, ರಾಜ್ಯಗಳ ನಡುವಿನ ಎರಡು ಗಡಿ ಬಿಂದುಗಳಲ್ಲಿ ಹರಿಯಾಣ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು. ಹಲವು ಗಂಟೆಗಳ ಕಾಲ ಪೊಲೀಸರೊಂದಿಗೆ ಮುಖಾಮುಖಿಯಾದ ನಂತರ, ರೈತ ಮುಖಂಡರು ದಿನದ ಪ್ರತಿಭಟನೆಯನ್ನು ಹಿಂಪಡೆದು ಇಂದು ಶಂಭುದಿಂದ ಮೆರವಣಿಗೆಯನ್ನು ಪುನರಾರಂಭಿಸಲು ಮುಂದಾಗಿದ್ದರು.
4
+ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾಲ ಮನ್ನಾ ಸೇರಿದಂತೆ ತಮ್ಮ ಬೇಡಿಕೆಗಳಿಗಾಗಿ ಕೇಂದ್ರದ ಮೇಲೆ ಒತ್ತಡ ಹೇರಲು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ದೆಹಲಿ ಚಲೋ ಆಂದೋಲನವನ್ನು ಮುನ್ನಡೆಸುತ್ತಿವೆ. ಫೆಬ್ರವರಿ 13 ರಂದು ಶಂಭು ಗಡಿಯಲ್ಲಿ ತಮ್ಮ ಪ್ರತಿಭಟನೆಯ ಸಂದರ್ಭದಲ್ಲಿ, ರೈತರು, ಟ್ರಾಕ್ಟರ್‍ಗಳ ಸಹಾಯದಿಂದ, ಪ್ರತಿಭಟನಾಕಾರರು ದೆಹಲಿಗೆ ಹೋಗುವುದನ್ನು ತಡೆಯಲು ಹರಿಯಾಣ ಅಧಿಕಾರಿಗಳು ಮಾಡಿದ ವಿಸ್ತಾರವಾದ ವ್ಯವಸ್ಥೆಗಳ ಭಾಗವಾಗಿದ್ದ ಕೆಲವು ಸಿಮೆಂಟ್ ಬ್ಯಾರಿಕೇಡ್‍ಗಳು ಮತ್ತು ಕಬ್ಬಿಣದ ಮೊಳೆಗಳನ್ನು ತೆಗೆದುಹಾಕುವಲ್ಲಿ ಯಶಸ್ವಿಯಾದರು.
5
+ ವಿಶ್ವದಲ್ಲಿ ಭಾರತದ ಶಕ್ತಿ ಹೆಚ್ಚಿದೆ : ರವಿಶಂಕರ್ ಪ್ರಸಾದ್
6
+ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದರಿಂದ ಉಪ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ 24 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದ ಜಿಂದ್ ಜಿಲ್ಲೆಯ ಗಡಿಯಲ್ಲಿಯೂ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಅಶ್ರುವಾಯು ಮತ್ತು ಜಲಫಿರಂಗಿಗಳನ್ನು ಬಳಸಿದರು. ಪೊಲೀಸರ ಪ್ರಕಾರ, ಡಾಟಾ ಸಿಂಘ್ವಾಲಾ-ಖನೌರಿ ಗಡಿಯಲ್ಲಿ ನಡೆದ ಈ ಘರ್ಷಣೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದಾರೆ.
7
+ ಮಂಗಳವಾರ ದಿಲ್ಲಿಯತ್ತ ಸಾಗುತ್ತಿದ್ದ ಪ್ರತಿಭಟನಾಕಾರರ ಮೇಲೆ ನಡೆದ ದಾಳಿಗೆ ಕೇಂದ್ರವನ್ನು ದೂಷಿಸಿದ ರೈತ ಮುಖಂಡರು, ಪಂಜಾಬ-ಹರಿಯಾಣ ಗಡಿ ಬಿಂದುಗಳಲ್ಲಿ ಪೊಲೀಸರು ಅಶ್ರುವಾಯು ಶೆಲ್‍ಗಳನ್ನು ಬಳಸಿದ್ದರಿಂದ ಅವರಲ್ಲಿ 60 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಹರಿಯಾಣ ಸರ್ಕಾರವು ಮಂಗಳವಾರ ಅಂಬಾಲಾ, ಕುರುಕ್ಷೇತ��ರ, ಕೈತಾಲ, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಎಂಬ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳು, ಬೃಹತ್ ಎಸ್‍ಎಂಎಸ್ ಮತ್ತು ಡಾಂಗಲ್ ಸೇವೆಗಳ ಸ್ಥಗಿತವನ್ನು ಫೆಬ್ರವರಿ 15 ರವರೆಗೆ ವಿಸ್ತರಿಸಲಾಗಿದೆ.
8
+ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ
9
+ ಶಂಭು ಮತ್ತು ಖಾನೌರಿ ಗಡಿಯಲ್ಲಿ ಪೊಲೀಸರೊಂದಿಗೆ ಘರ್ಷಣೆಯ ನಂತರ ಹಲವು ರೈತರು ಗಾಯಗೊಂಡಿರುವ ಹಿನ್ನೆಲೆಯಲ್ಲಿ ಪಂಜಾಬ್ ಸರ್ಕಾರವು ಹರಿಯಾಣದ ಗಡಿಯ ಸಮೀಪದಲ್ಲಿರುವ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ಸೇರಿಸಿದೆ.
eesanje/url_47_162_3.txt ADDED
@@ -0,0 +1,7 @@
 
 
 
 
 
 
 
 
1
+ ಇಂದಿನಿಂದ ಆರಂಭವಾಗಬೇಕಿದ್ದ 2ನೇ ಹಂತದ ಭಾರತ್ ಜೋಡೋ ನ್ಯಾಯ ಯಾತ್ರೆ ರದ್ದು
2
+ ರಾಂಚಿ, ಫೆ.14 (ಪಿಟಿಐ) – ಜಾರ್ಖಂಡ್‍ನಲ್ಲಿ ಇಂದಿನಿಂದ ಆರಂಭವಾಗಬೇಕಿದ್ದ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎರಡನೇ ಹಂತವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರ ರಾಜಧಾನಿಯಲ್ಲಿ ರೈತರ ಆಂದೋಲನದಲ್ಲಿ ಭಾಗವಹಿಸಲು ಹಿರಿಯ ಕಾಂಗ್ರೆಸ್ ನಾಯಕ ದೆಹಲಿಗೆ ಧಾವಿಸಿದ್ದರಿಂದ ಯಾತ್ರೆ ರದ್ದುಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
3
+ ಗರ್ವಾ ಜಿಲ್ಲೆಯ ರಂಕಾದಲ್ಲಿ ಎಂಜಿಎನ್‍ಆರ್‍ಇಜಿಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದವನ್ನು ಈಗ ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಮತ್ತು ಇತರ ಪಕ್ಷದ ನಾಯಕರು ನಡೆಸಲಿದ್ದಾರೆ. ಛತ್ತೀಸ್‍ಗಢದಿಂದ ಗಾಂಧಿ ಅವರು ಜಾರ್ಖಂಡ್‍ಗೆ ಎರಡನೇ ಹಂತದ ಯಾತ್ರೆಗಾಗಿ ಬುಧವಾರ ಗಹ್ವಾರ್ ಜಿಲ್ಲೆಯ ಮೂಲಕ ಮರುಪ್ರವೇಶ ಮಾಡಬೇಕಿತ್ತು. ತಡರಾತ್ರಿ ತೆಗೆದುಕೊಂಡ ನಿರ್ಧಾರದ ಪ್ರಕಾರ, ಜಾರ್ಖಂಡ್‍ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ಕಾಂಗ್ರೆಸ್ ವಕ್ತಾರ ಸೋನಾಲ್ ಶಾಂತಿ ಪಿಟಿಐಗೆ ತಿಳಿಸಿದ್ದಾರೆ.
4
+ ಇಂದು ಕಾಂಗ್ರೆಸ್ ಶಾಸಕಾಂಗ ಸಭೆ
5
+ ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್, ಜಾರ್ಖಂಡ್ ಉಸ್ತುವಾರಿ ಗುಲಾಂ ಅಹ್ಮದ್ ಮಿರ್, ಎನಎಸ್‍ಯುಐ ಉಸ್ತುವಾರಿ ಕನ್ನಯಾ ಕುಮಾರ್ ಮತ್ತು ಇತರ ಕಾಂಗ್ರೆಸ್ ಮುಖಂಡರು ರಂಕಾದಲ್ಲಿ ಎಂಜಿಎನ್‍ಆರ್‍ಇಜಿಎ ಕಾರ್ಯಕರ್ತರೊಂದಿಗೆ ನಿಗದಿತ ಸಂವಾದದಲ್ಲಿ ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.
6
+ ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ಠಾಕೂರ್ ಅವರು ಈ ಹಿಂದೆ ವಿಶೇಷ ಉದ್ದೇಶಕ್ಕಾಗಿ ಗಾಂಧಿ ದೆಹಲಿಗೆ ತೆರಳಬೇಕಾಯಿತು ಎಂದು ಹೇಳಿದ್ದಾರೆ. ಜಾರ್ಖಂಡ್‍ನಲ್ಲಿ ಗಾಂಧಿಯವರ ಮೊದಲ ಯಾತ್ರೆ ಫೆಬ್ರವರಿ ಮೊದಲ ವಾರದಲ್ಲಿ ನಡೆಯಿತು. ಫೆಬ್ರವರಿ 2 ರಂದು ಪಶ್ಚಿಮ ಬಂಗಾಳದಿಂದ ಜಾರ್ಖಂಡ್ ಪ್ರವೇಶಿಸಿ ಫೆಬ್ರವರಿ 6 ರಂದು ಒಡಿಶಾ ಪ್ರವೇಶಿಸಿತ್ತು. ಫೆಬ್ರವರಿ 15 ರಂದು ಬಿಹಾರಕ್ಕೆ ಪ್ರವೇಶಿಸುವ ಮೊದಲು ಗಾಂಧಿ ಅವರು ಎರಡನೇ ಹಂತದಲ್ಲಿ ಜಾರ್ಖಂಡ್‍ನಲ್ಲಿ ಎರಡು ದಿನಗಳ ಕಾಲ ಇರಬೇಕಿತ್ತು.
7
+ ಜನವರಿ 14 ರಂದು ಮಣಿಪುರದಲ್ಲಿ ಆರಂಭವಾದ ಭಾರತ್ ಜೋಡೋ ನ್ಯಾಯ್ ಯಾತ್ರೆ 67 ದಿನಗಳಲ್ಲಿ 6,713 ಕಿ.ಮೀ ಕ್ರಮಿಸಲಿದ್ದು, 15 ರಾಜ್ಯಗಳ 110 ಜಿಲ್ಲೆಗಳ ಮೂಲಕ ಮಾರ್ಚ್ 20 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ.
eesanje/url_47_162_4.txt ADDED
@@ -0,0 +1,6 @@
 
 
 
 
 
 
 
1
+ ಪ್ರಧಾನಿ ಮೋದಿ ಇಲ್ಲದಿದ್ದರೆ ನಾನು ನನ್ನ ಕುಟುಂಬ ಸೇರುತ್ತಿರಲಿಲ್ಲ ; ವರ್ಮಾ
2
+ ಇಂದೋರ್, ಫೆ 14 (ಪಿಟಿಐ) : ನಾನು ನನ್ನ ಮಗಳ ಮದುವೆ ನೋಡಲಾಗಲಿಲ್ಲ. ಆದರೂ ಪರ್ವಾಗಿಲ್ಲ ಪ್ರಧಾನಿ ಮೋದಿ ಅವರ ಕೃಪೆಯಿಂದ ನಾನು ಕತಾರ್‌ನಿಂದ ಜೀವಂತವಾಗಿ ಹಿಂತಿರುಗಿ ನನ್ನ ಸೋದರಳಿಯನ ಮದುವೆ ಸಂಭ್ರಮದಲ್ಲಿ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡಿದ್ದೇನೆ ಇದು ನನ್ನ ಜೀವನದಲ್ಲಿ ಸಂಭವಿಸುತ್ತದೆ ಎಂದು ನಾನು ನಂಬಿರಲಿಲ್ಲ ಎಂದು ಕತಾರ್‌ನಿಂದ ಹಿಂದಿರುಗಿದ ಭಾರತೀಯ ನೌಕಾಪಡೆಯ ನಿವೃತ್ತ ಕಮಾಂಡರ್ ಬಿ ಕೆ ವರ್ಮಾ ತಿಳಿಸಿದ್ದಾರೆ.
3
+ ಕತಾರ್‍ನ ಜೈಲಿನಿಂದ ಬಿಡುಗಡೆಯಾದ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಗಳಲ್ಲಿ ವರ್ಮಾ (58) ಸೇರಿದ್ದಾರೆ. ಇವರಲ್ಲಿ ಏಳು ಮಂದಿ ಭಾರತಕ್ಕೆ ಮರಳಿದ್ದಾರೆ. ಗೂಢಚರ್ಯೆ ಆರೋಪದ ಮೇಲೆ ಕಳೆದ ವರ್ಷ ಅಕ್ಟೋಬರ್‍ನಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ವರ್ಚಸ್ಸು ಇಲ್ಲದಿದ್ದರೆ ನಾವು ಜೈಲಿನಿಂದ ಬಿಡುಗಡೆ ಸಾಧ್ಯವಾಗುತ್ತಿರಲಿಲ್ಲ ಎಂದು ವರ್ಮಾ ಪಿಟಿಐಗೆ ತಿಳಿಸಿದರು. ಮಧ್ಯಪ್ರದೇಶದ ಇಂದೋರ್ ನಗರದಲ್ಲಿ ನವಿ ಮುಂಬೈ ನಿವಾಸಿ ಕುಟುಂಬದಲ್ಲಿ ಮದುವೆಯಲ್ಲಿ ಭಾಗವಹಿಸಲು ಬಂದಿದ್ದರು.
4
+ ವಿಶ್ವದಲ್ಲಿ ಭಾರತದ ಶಕ್ತಿ ಹೆಚ್ಚಿದೆ : ರವಿಶಂಕರ್ ಪ್ರಸಾದ್
5
+ ನಾನು ನನ್ನ ಕುಟುಂಬ ಸದಸ್ಯರ ನಡುವೆ ಮರಳಲು ನನಗೆ ತುಂಬಾ ಸಂತೋಷವಾಗಿದೆ. ಇದು ನನ್ನ ಕುಟುಂಬಕ್ಕೂ ದೊಡ್ಡ ಪರಿಹಾರವಾಗಿದೆ. ಇಂದು ನನ್ನ ಸೋದರಳಿಯನ ಮದುವೆ ಇರುವುದರಿಂದ ನನ್ನ ಸಂತೋಷವೂ ಹೆಚ್ಚಾಗಿದೆ ಎಂದು ವರ್ಮಾ ಹೇಳಿದರು. ಪ್ರಧಾನಿ ಮೋದಿಯವರ ವೈಯಕ್ತಿಕ ಹಸ್ತಕ್ಷೇಪದಿಂದಾಗಿ ನಾನು ಇಂದು ಇಲ್ಲಿ ಕುಳಿತಿದ್ದೇನೆ. ನನ್ನ ಮತ್ತು ನನ್ನ ಸಹೋದ್ಯೋಗಿಗಳ ಪರವಾಗಿ ನಾನು ಅವರಿಗೆ ನನ್ನ ಹೃದಯದಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ. ನನ್ನ ಪ್ರಕರಣವನ್ನು ಅವರು ಉದಾರವಾಗಿ ಪರಿಗಣಿಸಿದ್ದಕ್ಕಾಗಿ ಕತಾರ್ ಎಮಿರ್ ಅವರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದಿದ್ದಾರೆ. ವರ್ಮಾ ಅವರು ನವೆಂಬರ್ 27, 2022 ರಂದು ತಮ್ಮ ಮಗಳ ಮದುವೆಗೆ ಹಾಜರಾಗಲು ಸಾಧ್ಯವಾಗಿರಲಿಲ್ಲ.
6
+ ನಾನು ಈಗ ತನ್ನ ಹೆಂಡತಿ ಮತ್ತು ಮಕ್ಕಳೊಂದಿಗೆ ಇರಲು ಬಯಸುತ್ತೇನೆ ಮತ್ತು ಕಷ್ಟದ ಸಮಯದಲ್ಲಿ ಕುಟುಂಬಕ್ಕೆ ಬೆಂಬಲವಾಗಿ ನಿಂತ ತನ್ನ ಎಲ್ಲ ಸ್ನೇಹಿತರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ವರ್ಮಾ ಹೇಳಿದರು. ಅವರ ಪತ್ನಿ ಸುಮನ್ ಅವರ ಬಿಡುಗಡೆಗಾಗಿ ದೇವರಿಗೆ ಧನ್ಯವಾದ ಹೇಳಿದರು ಮತ್ತು ಅವರೊಂದಿಗೆ ಮತ್ತೆ ಒಂದಾಗುವುದು ಅವರು ಶಾಶ್ವತವಾಗಿ ಕಾಯುತ್ತಿರುವ ಕ್ಷಣವಾಗಿದೆ ಎಂದು ಹೇಳಿದರು.
eesanje/url_47_162_5.txt ADDED
@@ -0,0 +1,8 @@
 
 
 
 
 
 
 
 
 
1
+ ವಿಶ್ವದಲ್ಲಿ ಭಾರತದ ಶಕ್ತಿ ಹೆಚ್ಚಿದೆ : ರವಿಶಂಕರ್ ಪ್ರಸಾದ್
2
+ ಪಾಟ್ನಾ, ಫೆ.14 (ಪಿಟಿಐ) – ಕತಾರ್‍ನಲ್ಲಿ ಜೈಲಿನಲ್ಲಿರುವ ನೌಕಾಪಡೆಯ ಮಾಜಿ ಸಿಬ್ಬಂದಿಯ ಬಿಡುಗಡೆಯು ವಿಶ್ವದಲ್ಲಿ ಭಾರತದ ಶಕ್ತಿ ಹೆಚ್ಚಿದೆ ಎಂಬುದನ್ನು ತೋರಿಸುತ್ತದೆ ಎಂದು ಬಿಜೆಪಿಯ ಹಿರಿಯ ನಾಯಕ ರವಿಶಂಕರ್ ಪ್ರಸಾದ್ ಪ್ರತಿಪಾದಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ವಿದೇಶಾಂಗ ನೀತಿ ದೇಶದ ಶಕ್ತಿಯನ್ನು ಹೆಚ್ಚಿಸಿದೆ ಎಂದು ಕೇಂದ್ರದ ಮಾಜಿ ಸಚಿವ ಪ್ರಸಾದ್ ಹೇಳಿದರು.
3
+ ಇಲ್ಲಿಗೆ ಆಗಮಿಸಿದ ನಂತರ ಸ್ವದೇಶಕ್ಕೆ ಮರಳಿದ ಮಾಜಿ ಸೈನಿಕರು ಪ್ರಧಾನಿಯನ್ನು ಅಭಿನಂದಿಸಿದರು. ಅವರ ವೈಯಕ್ತಿಕ ಉಪಕ್ರಮದಿಂದ ಇದು ಸಾಧ್ಯವಾಯಿತು ಎಂದು ಹೇಳಿದರು. ಇದು ವಿಶ್ವದಲ್ಲಿ ಭಾರತದ ಶಕ್ತಿ ಹೆಚ್ಚಿದೆ ಎಂಬುದನ್ನು ತೋರಿಸುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
4
+ ಕತಾರ್ ಜೈಲಿನಲ್ಲಿರುವ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಬಿಡುಗಡೆ ಮಾಡಿದೆ ಮತ್ತು ಅವರಲ್ಲಿ ಏಳು ಮಂದಿ ಮನೆಗೆ ಮರಳಿದರು, ಕಳೆದ ಅಕ್ಟೋಬರ್‍ನಲ್ಲಿ ಅವರ ಮರಣದಂಡನೆಯನ್ನು 46 ದಿನಗಳ ನಂತರ ವಿವಿಧ ಅವಯ ಜೈಲು ಪದಗಳಾಗಿ ಪರಿವರ್ತಿಸಲಾಯಿತು.
5
+ ಈ ಎಂಟು ಮಂದಿ ಗೂಢಚರ್ಯೆಯ ಆರೋಪಗಳನ್ನು ಎದುರಿಸುತ್ತಿದ್ದರು ಆದರೆ ಕತಾರಿ ಅಕಾರಿಗಳು ಅಥವಾ ನವದೆಹಲಿ ಅವರ ವಿರುದ್ಧದ ಆರೋಪಗಳನ್ನು ಬಹಿರಂಗಗೊಳಿಸಲಿಲ್ಲ. ಭಾರತೀಯರು ಎಲ್ಲಿ ಸಿಕ್ಕಿಹಾಕಿಕೊಂಡಿದ್ದರೂ, ಅವರ ಕಣ್ಣೀರು ಒರೆಸಲು ಭಾರತ ಸರ್ಕಾರ ಕೆಲಸ ಮಾಡುತ್ತದೆ ಎಂದು ಪ್ರಸಾದ್ ಹೇಳಿದರು.
6
+ ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (14-02-2024)
7
+ ಮೋದಿ ಸರ್ಕಾರ ಉಕ್ರೇನ್‍ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳು, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಹಿಂದೂಗಳು ಮತ್ತು ಪಾಕಿಸ್ತಾನದಿಂದ ಐಎಎಫ್ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಮರಳಿ ಕರೆತಂದಿದೆ ಎಂದು ಅವರು ಹೇಳಿದರು.
8
+ ಪ್ರಧಾನಿ ಏನು ಹೇಳಿದರೂ ಜಗತ್ತು ಕೇಳುತ್ತದೆ. ಇದಷ್ಟೇ ಅಲ್ಲ, ಆರಕ್ಕೂ ಹೆಚ್ಚು ಇಸ್ಲಾಮಿಕ್ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ಪ್ರಧಾನಿಗೆ ನೀಡಿವೆ ಎಂದು ಪ್ರಸಾದ್ ಹೇಳಿದರು.ಕಾಂಗ್ರೆಸ್ ಪಕ್ಷವನ್ನು ತೊರೆಯುತ್ತಿರುವ ನಾಯಕರು ಭಾರತೀಯ ರಾಜಕೀಯದಲ್ಲಿ ಗಂಭೀರ ಆಟಗಾರನಾಗುವುದನ್ನು ನಿಲ್ಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.ಜನರು ಅವರಿಂದ ಓಡಿಹೋಗುತ್ತಿದ್ದಾರೆ. ಕಾಂಗ್ರೆಸ್ ಪಕ್ಷದ ಉಳಿದ ಇಟ್ಟಿಗೆಗಳು ಸಹ ಬಿರುಕು ಬಿಡುತ್ತಿವೆ ಎಂದು ಬಿಜೆಪಿ ನಾಯಕ ಹೇಳಿದರು.
eesanje/url_47_162_6.txt ADDED
@@ -0,0 +1,9 @@
 
 
 
 
 
 
 
 
 
 
1
+ ದೆಹಲಿಯಲ್ಲಿ ಮೊಳಗಿದ ರೈತ ಕಹಳೆ : ಅಶ್ರುವಾಯು ಪ್ರಯೋಗ, ಹಲವರ ಬಂಧನ
2
+ ನವದೆಹಲಿ, ಫೆ.13-ರಾಷ್ಟ್ರ ರಾಜಧಾನಿಗೆ ಆಗಮಿಸುವ ರೈತರ ದೆಹಲಿ ಚಲೋ ಮೆರವಣಿಗೆ ಹಿಂಸಾರೂಪ ಪಡೆದಿದ್ದು ಪೊಲೀಸರು ಜಲಪಿರಂಗಿ ಪ್ರಯೋಗಿಸಿ ಅಶ್ರುವಾಯು ಸಿಡಿಸಿದ್ದಾರೆ. ದೆಹಲಿ ಪ್ರವೇಶವನ್ನು ತಡೆಯಲು ಗಡಿಭಾಗಗಳಲ್ಲಿ ಬಹು ಪದರದ ಬ್ಯಾರಿಕೇಡ್‍ಗಳು, ಕಾಂಕ್ರೀಟ್ ಬ್ಲಾಕ್‍ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‍ಗಳ ಗೋಡೆಗಳನ್ನು ನಿರ್ಮಿಸಿದರೂ ಅದನ್ನು ನುಗ್ಗಲು ಪ್ರಯತ್ನಿಸಿದ್ದಾಗ ಪೊಲೀಸರು ಬಲ ಪ್ರಯೋಗ ನಡೆಸಿದ್ದಾರೆ.
3
+ ರೈತರ ಪ್ರತಿಭಟನೆಯಿಂದಾಗಿ ರಾಷ್ಟ್ರ ರಾಜಧಾನಿ ಸಮೀಪ ಟ್ರಾಫಿಕ್ ಜಾಮ್ ಉಂಟಾಗಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‍ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಇಂದು ದೆಹಲಿಗೆ ತೆರಳಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿವೆ.
4
+ ಬಹುತೇಕ ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಫಿಕ್ಸ್..?
5
+ ರೈತರು ಇಂದು ಮುಂಜಾನೆ ತಮ್ಮ ಮೆರವಣಿಗೆಯನ್ನು ಆರಂಭಿಸಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಇಬ್ಬರು ಕೇಂದ್ರ ಸಚಿವರೊಂದಿಗೆ ಚಂಡೀಗಢದಲ್ಲಿ ಐದು ಗಂಟೆಗಳ ಕಾಲ ನಡೆದ ಸಭೆಯ ನಂತರ ಕೃಷಿ ನಾಯಕರೊಬ್ಬರು ಪ್ರತಿಭಟನೆ ಅನಿವಾರ್ಯ ಎಂದಿದ್ದಾರೆ. ನಮ್ಮ ಯಾವುದೇ ಬೇಡಿಕೆಗಳ ಬಗ್ಗೆ ಸರ್ಕಾರವು ಗಂಭೀರವಾಗಿದೆ ಎಂದು ನಾವು ಭಾವಿಸುವುದಿಲ್ಲ. ಅವರು ಇಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಬಯಸುವುದಿಲ್ಲ ಎಂದು ನಾವು ಭಾವಿಸುತ್ತೇವೆ, ನಾವು ದೆಹಲಿಯತ್ತ ಮೆರವಣಿಗೆ ಮಾಡುತ್ತೇವೆ ಎಂದು ಸಭೆಯ ನಂತರ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
6
+ ಪಂಜಾಬ್ ಮತ್ತು ಹರಿಯಾಣದಿಂದಲೇ ಹೆಚ್ಚು ರೈತರು ಇಲ್ಲಿ ಭಾಗಿಯಾಗಿದ್ದು, ಉತ್ತರ ಪ್ರದೇಶ ಸೇರಿದಂತೆ ದೆಹಲಿ ಸಂಪರ್ಕ ಇರುವ ರಸ್ತೆಗಳಲ್ಲಿ ಈಗ ರೈತರ ಪ್ರತಿಭಟನೆಯಿಂದ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಪೊಲೀಸರ ಜೊತೆ ಮಾತಿನ ಚಕಾಮಕಿ ನಡೆದಿದ್ದು, ರೈತರನ್ನು ಸಮಾಧಾನ ಪಡಿಸಲು ಸಾಕಷ್ಟುಹರಸಾಹಸ ಮಾಡಲಾಗುತ್ತಿದೆ. ಹಲವರನ್ನು ವಶಕ್ಕೆ ಪಡೆಯಲಾಗಿದ್ದು, ಪರಿಸ್ಥಿತಿ ಈಗ ಉದ್ವಿಗ್ನವಾಗಿದೆ.ಕೇಂದ್ರ ಸಚಿವರು ಹಾಗೂ ರೈತರ ನಿಯೋಗದೊಂದಿಗೆ ಸಭೆಯೂ ಕೂಡ ನಡೆಯುತ್ತಿದ್ದು, ಪ್ರಸ್ತುತ ಇದು ಯಾವ ನಿಲುವು ತಳೆಯುತ್ತದೆ ಎಂದು ತೀವ್ರ ಕೂತುಹಲ ಕೆರಳಿಸಿದೆ. ಯಾವುದೇ ಕಾರಣಕ್ಕೂ ರೈತರು ದೆಹಲಿ ತಲುಪದಂತೆ ಪೊಲೀಸರು ಹಾಗೂ ಅರೆಸೇನಾ ಪಡೆಗಳು ಇದೆಂದೂ ಕಾಣದಂತಹ ತಡೆಗೋಡೆಯನ್ನು ನಿರ್ಮಿಸಿದೆ.
7
+ ಹದಗೆಟ್ಟ ಕಾನೂನು ಸುವ್ಯವಸ್ಥೆ : ವಿಧಾನಸಭೆಯಲ್ಲಿ ಕೋಲಾಹ
8
+ ಉದ್ದೇಶಿತ ವ್ಯಾಪಕ ಉದ್ವಿಗ್ನ��ೆ ಮತ್ತು ಸಾಮಾಜಿಕ ಅಶಾಂತಿ ಯ ದೃಷ್ಟಿಯಿಂದ ನಗರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ, ಮೆರವಣಿಗೆಗಳು ಅಥವಾ ರ್ಯಾಲಿಗಳು ಮತ್ತು ಜನರನ್ನು ಸಾಗಿಸುವ ಟ್ರ್ಯಾಕ್ಟರ್ ಟ್ರಾಲಿಗಳ ಪ್ರವೇಶವನ್ನು ನಿಷೇಸುವ ಸೆಕ್ಷನ್ 144 ಅನ್ನು ದೆಹಲಿ ಪೊಲೀಸರು ಒಂದು ತಿಂಗಳ ಕಾಲ ವಿಧಿಸಿದ್ದಾರೆ.
9
+ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಹೊರಡಿಸಿದ ಆದೇಶಗಳ ಪ್ರಕಾರ, ಮದುವೆಗಳು, ಅಂತ್ಯಕ್ರಿಯೆಗಳು ಮತ್ತು ಇತರ ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ಸಭೆಗಳು ಮತ್ತು ಮೆರವಣಿಗೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪೂರ್ವಾನುಮತಿ ಅಗತ್ಯವಿದೆ.
eesanje/url_47_162_7.txt ADDED
@@ -0,0 +1,9 @@
 
 
 
 
 
 
 
 
 
 
1
+ ಹಿಂದೂ ಮಂದಿರ ಶಾಂತಿ ಸಹಿಷ್ಣುತೆಯ ಸಂಕೇತ : ಮೋದಿ
2
+ ನವದೆಹಲಿ, ಫೆ 13- (ಪಿಟಿಐ) ಗಲ್ಫ್ ರಾಷ್ಟ್ರಕ್ಕೆ ಎರಡು ದಿನಗಳ ಭೇಟಿಯ ಸಂದರ್ಭದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‍ನೊಂದಿಗೆ ಭಾರತದ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವವನ್ನು ಮತ್ತಷ್ಟು ಹೆಚ್ಚಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಯುಎಇಗೆ ಎರಡು ದಿನಗಳ ಭೇಟಿಯನ್ನು ಮುಗಿಸಿದ ಮೋದಿ ನಾಳೆ ಮಧ್ಯಾಹ್ನ ಕತಾರ್ ರಾಜಧಾನಿ ದೋಹಾಗೆ ಪ್ರಯಾಣ ಬೆಳೆಸಲಿದ್ದಾರೆ.
3
+ ಎರಡು ರಾಷ್ಟ್ರಗಳ ಭೇಟಿಯ ಮುನ್ನಾ ತಮ್ಮ ನಿರ್ಗಮನ ಹೇಳಿಕೆಯಲ್ಲಿ, ಕತಾರ್‍ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಭೇಟಿ ಮಾಡಲು ಎದುರು ನೋಡುತ್ತಿದ್ದೇನೆ ಎಂದು ಮೋದಿ ಹೇಳಿದರು, ಅವರ ನಾಯಕತ್ವದಲ್ಲಿ ದೇಶವು ಪ್ರಚಂಡ ಬೆಳವಣಿಗೆ ಮತ್ತು ಪರಿವರ್ತನೆ ಯನ್ನು ವೀಕ್ಷಿಸುತ್ತಿದೆ ಎಂದು ಹೇಳಿದರು.
4
+ ಜೈಲಿನಲ್ಲಿರುವ ಎಂಟು ಮಾಜಿ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಕತಾರ್ ಬಿಡುಗಡೆ ಮಾಡಿದ ಹಿನ್ನೆಲೆಯಲ್ಲಿ ಮೋದಿ ಅವರ ದೋಹಾ ಭೇಟಿಯ ಘೋಷಣೆ ಹೊರಬಿದ್ದಿದೆ. ಭಾರತ ಮತ್ತು ಕತಾರ್ ಐತಿಹಾಸಿಕವಾಗಿ ನಿಕಟ ಮತ್ತು ಸೌಹಾರ್ದ ಸಂಬಂಧವನ್ನು ಹೊಂದಿವೆ. ಇತ್ತೀಚಿನ ವರ್ಷಗಳಲ್ಲಿ, ಉನ್ನತ ಮಟ್ಟದ ರಾಜಕೀಯ ವಿನಿಮಯಗಳು, ಎರಡು ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆಯನ್ನು ಹೆಚ್ಚಿಸುವುದು, ನಮ್ಮ ಶಕ್ತಿ ಪಾಲುದಾರಿಕೆಯನ್ನು ಬಲಪಡಿಸುವುದು ಮತ್ತು ಸಹಕಾರ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಬಹುಮುಖಿ ಸಂಬಂಧಗಳು ಗಾಢವಾಗುತ್ತಿವೆ. ಸಂಸ್ಕøತಿ ಮತ್ತು ಶಿಕ್ಷಣದಲ್ಲಿ ಎಂದು ಮೋದಿ ಹೇಳಿದರು.
5
+ ಪಾಕ್ ಚುನಾವಣೆ ಹಿಂಸಾಚಾರಕ್ಕೆ ವಿಶ್ವಸಂಸ್ಥೆ ಕಳವಳ
6
+ ದೋಹಾದಲ್ಲಿ 800,000 ಕ್ಕೂ ಹೆಚ್ಚು ಬಲಿಷ್ಠ ಭಾರತೀಯ ಸಮುದಾಯದ ಉಪಸ್ಥಿತಿಯು ನಮ್ಮ ಬಲವಾದ ಜನರ-ಜನರ ಸಂಬಂಧಗಳಿಗೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಭಾರತ ಮತ್ತು ಯುಎಇ ನಡುವಿನ ಸಹಕಾರವು ವಿವಿಧ ಕ್ಷೇತ್ರಗಳಲ್ಲಿ ಏರಿಕೆ ಕಂಡಿದೆ ಎಂದು ಪ್ರಧಾನಿ ಹೇಳಿದರು.
7
+ ಕಳೆದ ಒಂಬತ್ತು ವರ್ಷಗಳಲ್ಲಿ, ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಆಹಾರ ಮತ್ತು ಇಂಧನ ಭದ್ರತೆ ಮತ್ತು ಶಿಕ್ಷಣದಂತಹ ವೈವಿಧ್ಯಮಯ ವಲಯಗಳಲ್ಲಿ ಯುಎಇಯೊಂದಿಗಿನ ನಮ್ಮ ಸಹಕಾರವು ಬಹುಪಟ್ಟು ಬೆಳೆದಿದೆ. ನಮ್ಮ ಸಾಂಸ್ಕøತಿಕ ಮತ್ತು ಜನರ ನಡುವಿನ ಸಂಪರ್ಕವು ಹಿಂದೆಂದಿಗಿಂತಲೂ ಬಲವಾಗಿದೆ ಎಂದು ಅವರು ಹೇಳಿದರು. ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಅಬುಧಾಬಿಯಲ್ಲಿ ಭೇಟಿಯಾಗಲು ನಾನು ಎದುರು ನೋಡುತ್ತಿದ್ದೇನೆ ಮತ್ತು ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದಕ್ಕೆ ಕೊಂಡೊಯ್ಯುವ ಕುರಿತು ವ್ಯಾಪಕ ಚರ್ಚೆಗಳನ್ನು ನಡೆಸುತ್ತೇನೆ ಎಂದು ಮೋದಿ ಹೇಳಿದರು. ಅಬುಧಾಬಿಯಲ್ಲಿ ಮೋದಿ ನಗರದಲ್ಲಿ ಮೊದಲ ಹಿಂದೂ ಕಲ್���ಿನ ದೇವಾಲಯವನ್ನು ಉದ್ಘಾಟಿಸಲಿದ್ದಾರೆ.
8
+ 1.45 ಕೋಟಿ ಮೌಲ್ಯದ ನಿಷೇಧಿತ ನಿಕೋಟಿಕ್ ಜಪ್ತಿ : 9 ಮಂದಿ ಬಂಧನ
9
+ ನಾನು ಅಬುಧಾಬಿಯಲ್ಲಿ ಮೊದಲ ಹಿಂದೂ ಮಂದಿರವನ್ನು ಸಹ ಉದ್ಘಾಟಿಸುತ್ತೇನೆ. ಭಾರತ ಮತ್ತು ಯುಎಇ ಎರಡೂ ಹಂಚಿಕೊಳ್ಳುವ ಸೌಹಾರ್ದತೆ, ಶಾಂತಿ ಮತ್ತು ಸಹಿಷ್ಣುತೆಯ ಮೌಲ್ಯಗಳಿಗೆ ಈ ದೇವಾಲಯವು ನಿರಂತರ ಗೌರವವಾಗಿದೆ ಎಂದು ಪ್ರಧಾನಿ ಹೇಳಿದರು.ಅಬುಧಾಬಿಯಲ್ಲಿ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಯುಎಇಯ ಎಲ್ಲಾ ಎಮಿರೇಟ್ಸ್‍ನ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡುತ್ತೇನೆ ಎಂದು ಅವರು ಹೇಳಿದರು.
eesanje/url_47_162_8.txt ADDED
@@ -0,0 +1,6 @@
 
 
 
 
 
 
 
1
+ ರೈತ ಧ್ವನಿ ಹತ್ತಿಕ್ಕುತ್ತಿದೆ ಮೋದಿ ಸರ್ಕಾರ : ಖರ್ಗೆ
2
+ ನವದೆಹಲಿ, ಫೆ 13 (ಪಿಟಿಐ) ಕಳೆದ 10 ವರ್ಷಗಳಿಂದ ರೈತರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾಗಿರುವ ಮೋದಿ ಸರ್ಕಾರ ರೈತರ ಧ್ವನಿಯನ್ನು ಹತ್ತಿಕ್ಕುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಸಾವಿರಾರು ರೈತರು ದೆಹಲಿ ಚಲೋ ಪ್ರತಿಭಟನೆಗೆ ಕರೆ ನೀಡಿದ ದಿನದಂದು ಸರ್ಕಾರದ ವಿರುದ್ಧ ಖರ್ಗೆ ಅವರ ವಾಗ್ದಾಳಿಯು ಈ ಬಂದಿದೆ.
3
+ ರಾಜಧಾನಿಗೆ ಆಗಮಿಸುವ ರೈತರನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಸರ್ವಾಧಿಕಾರಿ ಧೋರಣೆ ಎಂದು ಜರಿದಿರುವ ಅವರು ಮೋದಿ ಸರಕಾರ ರೈತರ ಧ್ವನಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ ಎಂದು ಅವರು ಎಕ್ಸ್ ಮಾಡಿದ್ದಾರೆ. ಆಂದೋಲನ ಜೀವಿ ಮತ್ತು ಪರಾವಲಂಬಿ ಎಂದು ಕರೆಯುವ ಮೂಲಕ ರೈತರನ್ನು ಹೇಗೆ ಮಾನನಷ್ಟಗೊಳಿಸಲಾಯಿತು ಮತ್ತು 750 ರೈತರು ಹೇಗೆ ಪ್ರಾಣ ಕಳೆದುಕೊಂಡರು ಎಂಬುದನ್ನು ನೆನಪಿಸಿಕೊಳ್ಳಿ ಎಂದು ಅವರು ಹಿಂದಿಯಲ್ಲಿ ತಮ್ಮ ಪೆಪೋಸ್ಟ್‍ನಲ್ಲಿ ತಿಳಿಸಿದ್ದಾರೆ.
4
+ ಒಂದು ಮಿಲಿಯನ್ ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಮಸ್ಕ್ ಪ್ಲಾನ್
5
+ 10 ವರ್ಷಗಳಲ್ಲಿ ಮೋದಿ ಸರ್ಕಾರ ದೇಶದ ಅನ್ನದಾತರಿಗೆ ನೀಡಿದ್ದ ಮೂರು ಭರವಸೆಗಳನ್ನು ಉಲ್ಲಂಘಿಸಿದೆ ಎಂದು ಖರ್ಗೆ ಹೇಳಿದರು. ಅವುಗಳೆಂದರೆ, 2022 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸುವುದು, ಸ್ವಾಮಿನಾಥನ್ ವರದಿಗೆ ಅನುಗುಣವಾಗಿ ಇನ್‍ಪುಟ್ ವೆಚ್ಚಗಳ ಅನುಷ್ಠಾನ ಮತ್ತು ಶೇ.50 ರಷ್ಟು ಮತ್ತು ಎಂಎಸ್‍ಪಿಗೆ ಕಾನೂನು ಸ್ಥಾನಮಾನವನ್ನು ನೀಡುವುದು.
6
+ ರೈತರ ಆಂದೋಲನಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ ಖರ್ಗೆ, ಇಂದು ಛತ್ತೀಸ್‍ಗಢದ ಅಂಬಿಕಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ರೈತ ಪರ ನ್ಯಾಯದ ಧ್ವನಿ ಎತ್ತಲಿದೆ ಎಂದು ಹೇಳಿದರು. ಇದರ ಜತೆ ನಾವು ಹೆದರುವುದಿಲ್ಲ, ತಲೆಬಾಗುವುದಿಲ್ಲ ಎಂದು ಖರ್ಗೆ ತಮ್ಮ ಪೋಸ್ಟ್‍ನಲ್ಲಿ ತಿಳಿಸಿದ್ದಾರೆ.
eesanje/url_47_162_9.txt ADDED
@@ -0,0 +1,7 @@
 
 
 
 
 
 
 
 
1
+ ಮೇನ್ಸ್ ಪರೀಕ್ಷಾ ಫಲಿತಾಂಶ ಪ್ರಕಟ : 100ಕ್ಕೆ 100 ಅಂಕ ಪಡೆದ 23 ವಿದ್ಯಾರ್ಥಿಗಳು
2
+ ನವದೆಹಲಿ, ಫೆ 13 (ಪಿಟಿಐ) ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಜೆಇಇ-ಮೇನ್‍ನಲ್ಲಿ ಇಪ್ಪತ್ತಮೂರು ಅಭ್ಯರ್ಥಿಗಳು ಪರಿಪೂರ್ಣ 100 ಅಂಕಗಳನ್ನು ಗಳಿಸಿದ್ದಾರೆ ಮತ್ತು ಅವರಲ್ಲಿ ಗರಿಷ್ಠ ತೆಲಂಗಾಣದವರು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಪ್ರಕಟಿಸಿದೆ.
3
+ ನಿರ್ಣಾಯಕ ಪರೀಕ್ಷೆಯ ಮೊದಲ ಆವೃತ್ತಿಗೆ 11.70 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. 100 ಎನ್‍ಟಿಎ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳಲ್ಲಿ ತೆಲಂಗಾಣದಿಂದ ಏಳು, ಹರಿಯಾಣದಿಂದ ಇಬ್ಬರು, ಆಂಧ್ರಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರದಿಂದ ತಲಾ ಮೂರು, ದೆಹಲಿಯಿಂದ ಇಬ್ಬರು ಮತ್ತು ಗುಜರಾತ್, ಕರ್ನಾಟಕ ಮತ್ತು ತಮಿಳುನಾಡಿನಿಂದ ತಲಾ ಒಬ್ಬರು ಇದ್ದಾರೆ. ಅಧಿಕಾರಿಗಳ ಪ್ರಕಾರ, ಎನ್‍ಟಿಎ ಸ್ಕೋರ್ ಪಡೆದ ಅಂಕಗಳ ಶೇಕಡಾವಾರು ಒಂದೇ ಅಲ್ಲ ಆದರೆ ಸಾಮಾನ್ಯ ಅಂಕಗಳು.
4
+ ಎನ್‍ಟಿಎ ಸ್ಕೋರ್‍ಗಳು ಬಹು-ಅಧಿವೇಶನ ಪತ್ರಿಕೆಗಳಲ್ಲಿ ಸಾಮಾನ್ಯೀಕರಿಸಿದ ಸ್ಕೋರ್‍ಗಳಾಗಿವೆ ಮತ್ತು ಒಂದು ಸೆಷನ್‍ನಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲರ ಸಾಪೇಕ್ಷ ಕಾರ್ಯಕ್ಷಮತೆಯನ್ನು ಆಧರಿಸಿವೆ. ಪಡೆದ ಅಂಕಗಳನ್ನು ಪರೀಕ್ಷಾರ್ಥಿಗಳ ಪ್ರತಿ ಸೆಷನ್‍ಗೆ 100 ರಿಂದ 0 ವರೆಗಿನ ಸ್ಕೇಲ್‍ಗೆ ಪರಿವರ್ತಿಸಲಾಗುತ್ತದೆ, ಎಂದು ಹಿರಿಯ ಅಧಿಕಾರಿಯೊಬ್ಬರು ವಿವರಿಸಿದರು. ಪರೀಕ್ಷೆಯು ಅಸ್ಸಾಮಿ, ಬಂಗಾಳಿ, ಇಂಗ್ಲಿಷ್, ಗುಜರಾತಿ, ಹಿಂದಿ, ಕನ್ನಡ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಮತ್ತು ಉರ್ದು ಭಾಷೆಗಳಲ್ಲಿ ನಡೆಯಿತು.
5
+ ಒಂದು ಮಿಲಿಯನ್ ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಮಸ್ಕ್ ಪ್ಲಾನ್
6
+ ಪರೀಕ್ಷೆಯನ್ನು ಭಾರತದ ಹೊರಗೆ ಮನಾಮಾ, ದೋಹಾ, ದುಬೈ, ಕಠ್ಮಂಡು, ಮಸ್ಕತ್, ರಿಯಾದ್, ಶಾರ್ಜಾ, ಸಿಂಗಾಪುರ್, ಕುವೈತ್ ಸಿಟಿ, ಕೌಲಾಲಂಪುರ್, ಲಾಗೋಸ್/ಅಬುಜಾ, ಕೊಲಂಬೊ, ಜಕಾರ್ತಾ, ಮಾಸ್ಕೋ, ಒಟ್ಟಾವಾ, ಪೋರ್ಟ್ ಲೂಯಿಸ್, ಬ್ಯಾಂಕಾಕ್ ಮತ್ತು ವಾಷಿಂಗ್ಟನ್ ಡಿಸಿಗಳಲ್ಲೂ ನಡೆಸಲಾಗಿತ್ತು. ಇದೆ ಮೊದಲ ಬಾರಿಗೆ ಅಬುಧಾಬಿ, ಹಾಂಗ್ ಕಾಂಗ್ ಮತ್ತು ಓಸ್ಲೋದಲ್ಲೂ ಪರೀಕ್ಷೆ ನಡೆಸಲಾಯಿತು.
7
+ ಪರೀಕ್ಷೆಯ ಮೊದಲ ಆವೃತ್ತಿಯನ್ನು ಜನವರಿ-ಫೆಬ್ರವರಿಯಲ್ಲಿ ನಡೆಸಿದರೆ, ಎರಡನೇ ಆವೃತ್ತಿಯನ್ನು ಏಪ್ರಿಲ್‍ನಲ್ಲಿ ನಿಗದಿಪಡಿಸಲಾಗಿದೆ. ಜೆಇಇ-ಮೇನ್ಸ್ ಪೇಪರ್ 1 ಮತ್ತು ಪೇಪರ್ 2 ರ ಫಲಿತಾಂಶಗಳ ಆಧಾರದ ಮೇಲೆ, ಅಭ್ಯರ್ಥಿಗಳನ್ನು ಜೆಇಇ-ಅಡ್ವಾನ್ಸ್ಡ್ ಪರೀಕ್ಷೆಗೆ ಹಾಜರಾಗಲು ಶಾರ್ಟ್‍ಲಿಸ್ಟ್ ಮಾಡಲಾಗುತ್ತದೆ, ಇದು 23 ಪ್ರಧಾನ ಭಾರತೀಯ ತಂತ್ರಜ್ಞಾನ ಸಂಸ್ಥೆಗಳಿಗೆ (ಐಐಟಿ) ಪ್ರವೇಶ ಪಡೆಯಲು ಮಹತ್ವದ ಹೆಜ್ಜೆಯಾಗಿದೆ.
eesanje/url_47_163_1.txt ADDED
@@ -0,0 +1,8 @@
 
 
 
 
 
 
 
 
 
1
+ ರೈತರ ದೆಹಲಿ ಚಲೋ ತಡೆಯಲು ಪೊಲೀಸ್ ಸರ್ಪಗಾವಲು
2
+ ನವದೆಹಲಿ, ಫೆ.13 (ಪಿಟಿಐ) ರಾಷ್ಟ್ರ ರಾಜಧಾನಿಗೆ ಆಗಮಿಸುವ ರೈತರ ದೆಹಲಿ ಚಲೋ ಮೆರವಣಿಗೆಯನ್ನು ತಡೆಯಲು ಗಡಿಗಳಲ್ಲಿ ಭಾರಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಗಡಿಭಾಗಗಳಲ್ಲಿ ಬಹು ಪದರದ ಬ್ಯಾರಿಕೇಡ್‍ಗಳು, ಕಾಂಕ್ರೀಟ್ ಬ್ಲಾಕ್‍ಗಳು, ಕಬ್ಬಿಣದ ಮೊಳೆಗಳು ಮತ್ತು ಕಂಟೈನರ್‍ಗಳ ಗೋಡೆಗಳೊಂದಿಗೆ ದೆಹಲಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
3
+ ಸಿಂಘು, ಟಿಕ್ರಿ ಮತ್ತು ಘಾಜಿಪುರ ಎಂಬ ಮೂರು ಗಡಿ ಬಿಂದುಗಳಲ್ಲಿ ಗಲಭೆ ನಿಗ್ರಹ ಪಡೆಗಳಲ್ಲಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿಯನ್ನು ಭಾರೀ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಮೆರವಣಿಗೆಯ ದೃಷ್ಟಿಯಿಂದ ನಿರ್ದಿಷ್ಟ ಸ್ಥಳಗಳಲ್ಲಿ ತಾತ್ಕಾಲಿಕ ಜೈಲುಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿದುಬಂದಿದೆ.
4
+ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‍ಪಿ) ಖಾತರಿಪಡಿಸುವ ಕಾನೂನನ್ನು ಜಾರಿಗೊಳಿಸುವುದು ಸೇರಿದಂತೆ ತಮ್ಮ ಬೇಡಿಕೆಗಳನ್ನು ಅಂಗೀಕರಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ರೈತರು ಇಂದು ದೆಹಲಿಗೆ ತೆರಳಲಿದ್ದಾರೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ಘೋಷಿಸಿವೆ.
5
+ ಚವಾಣ್‍ರನ್ನು ರಾಜ್ಯಸಭೆಗೆ ಕಳುಹಿಸುವುದು ಹುತಾತ್ಮರಿಗೆ ಅಗೌರವ ತೋರಿದಂತೆ : ಠಾಕ್ರೆ
6
+ ರೈತರು ಇಂದು ಮುಂಜಾನೆ ತಮ್ಮ ಮೆರವಣಿಗೆಯನ್ನು ಆರಂಭಿಸಿದ್ದಾರೆ. ತಮ್ಮ ಬೇಡಿಕೆಗಳ ಕುರಿತು ಇಬ್ಬರು ಕೇಂದ್ರ ಸಚಿವರೊಂದಿಗೆ ಚಂಡೀಗಢದಲ್ಲಿ ಐದು ಗಂಟೆಗಳ ಕಾಲ ನಡೆದ ಸಭೆಯ ನಂತರ ಕೃಷಿ ನಾಯಕರೊಬ್ಬರು ಪ್ರತಿಭಟನೆ ಅನಿವಾರ್ಯ ಎಂದಿದ್ದಾರೆ. ನಮ್ಮ ಯಾವುದೇ ಬೇಡಿಕೆಗಳ ಬಗ್ಗೆ ಸರ್ಕಾರವು ಗಂಭೀರವಾಗಿದೆ ಎಂದು ನಾವು ಭಾವಿಸುವುದಿಲ್ಲ. ಅವರು ಇಂದು ನಮ್ಮ ಬೇಡಿಕೆಗಳನ್ನು ಈಡೇರಿಸಲು ಬಯಸುವುದಿಲ್ಲ ಎಂದು ನಾವು ಭಾವಿಸುತ್ತೇವೆ, ನಾವು ದೆಹಲಿಯತ್ತ ಮೆರವಣಿಗೆ ಮಾಡುತ್ತೇವೆ ಎಂದು ಸಭೆಯ ನಂತರ ರೈತ ಮುಖಂಡ ಸರ್ವಾನ್ ಸಿಂಗ್ ಪಂಧೇರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
7
+ ಉದ್ದೇಶಿತ ವ್ಯಾಪಕ ಉದ್ವಿಗ್ನತೆ ಮತ್ತು ಸಾಮಾಜಿಕ ಅಶಾಂತಿ ಯ ದೃಷ್ಟಿಯಿಂದ ನಗರದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರ ಸಭೆ, ಮೆರವಣಿಗೆಗಳು ಅಥವಾ ರ್ಯಾಲಿಗಳು ಮತ್ತು ಜನರನ್ನು ಸಾಗಿಸುವ ಟ್ರ್ಯಾಕ್ಟರ್ ಟ್ರಾಲಿಗಳ ಪ್ರವೇಶವನ್ನು ನಿಷೇಸುವ ಸೆಕ್ಷನ್ 144 ಅನ್ನು ದೆಹಲಿ ಪೊಲೀಸರು ಒಂದು ತಿಂಗಳ ಕಾಲ ವಿಧಿಸಿದ್ದಾರೆ.
8
+ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾ ಹೊರಡಿಸಿದ ಆದೇಶಗಳ ಪ್ರಕಾರ, ಮದುವೆಗಳು, ಅಂತ್ಯಕ್ರಿಯೆಗಳು ಮತ್ತು ಇತರ ಧಾರ್ಮಿಕ ಕಾರ್ಯಗಳಿಗೆ ಸಂಬಂಧಿಸಿದ ಸಭೆಗಳು ಮತ್ತು ಮೆರವಣಿಗೆಗಳಿಗೆ ಸಂಬಂಧಿಸಿದ ಅಧಿಕಾರಿಗಳಿಂದ ಪೂರ್ವಾನುಮತಿ ಅಗತ್ಯವಿದೆ.
eesanje/url_47_163_10.txt ADDED
@@ -0,0 +1,5 @@
 
 
 
 
 
 
1
+ ತಾಯಿ-ಮಗನಿಗೆ ವಿಷವುಣಿಸಿ ಕೊಂದು ಉದ್ಯಮಿ ಆತ್ಮಹತ್ಯೆ
2
+ ಆಗ್ರಾ,ಫೆ.12- ಉದ್ಯಮಿಯೊಬ್ಬ ತನ್ನ ತಾಯಿ ಹಾಗೂ 12 ವರ್ಷದ ಮಗನಿಗೆ ವಿಷವುಣಿಸಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ತರುಣ್ ಚೌಹಾಣ್ ತನ್ನ ತಾಯಿ ಮತ್ತು ಮಗನಿಗೆ ವಿಷವುಣಿಸಿ ನಂತರ ನ್ಯೂ ಆಗ್ರಾ ಪೊಲೀಸ್ ಠಾಣೆಯ ಲಾಯರ್ಸ್ ಕಾಲೋನಿಯಲ್ಲಿರುವ ಅವರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
3
+ ಆಂಧ್ರ ಸಿಎಂ ತಮ್ಮ ಚಿಕ್ಕಪ್ಪನನ್ನು ಹತ್ಯೆ ಮಾಡಿದ್ದಾರೆ : ನಾರಾ ಲೋಕೇಶ್
4
+ ಮನೆ ಕೆಲಸದವರು ನಿತ್ಯ ಕೆಲಸಕ್ಕೆ ಬರುವಂತೆ ಬಂದಿದ್ದರು. ಆಕೆ ಮನೆಗೆ ಬಂದಾಗ ತರುಣ್ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಅವರ ತಾಯಿ ಮತ್ತು 12 ವರ್ಷದ ಮಗನ ಶವಗಳು ಹಾಸಿಗೆಯ ಮೇಲೆ ಬಿದ್ದಿರುವುದು ಕಂಡುಬಂದಿದೆ. ಆಕೆ ಕೂಡಲೇ ಅಕ್ಕಪಕ್ಕದ ಮನೆಯವರು ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
5
+ ಸ್ಥಳಕ್ಕೆ ಬಂದ ಪೊಲೀಸರು ತರುಣ್ ಚೌಹಾಣ್ ಅವರ ಶವವನ್ನು ಕುಣಿಕೆಯಿಂದ ಹೊರತೆಗೆದು, ಮರಣೋತ್ತರ ಪರೀಕ್ಷೆಗಾಗಿ ಶವಗಳನ್ನು ಆಸ್ಪತ್ರೆಗೆ ರವಾನಿಸಿ, ತರುಣ್ ಚೌಹಾಣ್ ಅವರ ಪತ್ನಿ ಮತ್ತು ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ.ಘಟನಾ ಸ್ಥಳದಲ್ಲಿ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಪ್ರಕರಣದ ತನಿಖೆಯನ್ನು ಪ್ರಾರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
eesanje/url_47_163_11.txt ADDED
@@ -0,0 +1,9 @@
 
 
 
 
 
 
 
 
 
 
1
+ ಬೆಂಬಲ ಬೆಲೆಗೆ ಆಗ್ರಹಿಸಿ ರೈತರಿಂದ ದೆಹಲಿ ಚಲೋ
2
+ ನವದೆಹಲಿ,ಫೆ.12- ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಸುಮಾರು 200 ರೈತ ಸಂಘಟನೆಗಳು ನಾಳೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದೆಹಲಿ ಚಲೋ ನಡೆಸಲಿವೆ. ಈ ಬಾರಿಯೂ ಸಹ, ರೈತರು ಎಲ್ಲಾ ಅಗತ್ಯ ವಸ್ತುಗಳು, ಪಡಿತರ ಮತ್ತು ಸಿಲಿಂಡರ್‍ಗಳೊಂದಿಗೆ ರಾಷ್ಟ್ರ ರಾಜಧಾನಿಗೆ ಬರುತ್ತಿದ್ದಾರೆ.
3
+ ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರನ್ನು ಕರೆತರುವ ವಾಹನಗಳು ನಗರಕ್ಕೆ ಪ್ರವೇಶಿಸದಂತೆ ಗಡಿಗಳನ್ನು ಕಾಂಕ್ರೀಟ್ ಬ್ಲಾಕ್‍ಗಳು ಮತ್ತು ಕಬ್ಬಿಣದ ಮೊಳೆಗಳಿಂದ ಭದ್ರಪಡಿಸಲಾಗಿದೆ. ಹೆಚ್ಚಾಗಿ ಉತ್ತರಪ್ರದೇಶ, ಹರಿಯಾಣ ಮತ್ತು ಪಂಜಾಬ್‍ನಿಂದ ಹಲವಾರು ರೈತ ಸಂಘಗಳು ನಾಳೆ ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಖಾತರಿಪಡಿಸುವ ಕಾನೂನನ್ನು ಜಾರಿ ಮಾಡುವಂತೆ ಡೆಲ್ಲಿ ಚಲೋಗೆ ಕರೆ ನೀಡಿವೆ.
4
+ ಇಂದು ಸಿಂಗು ಗಡಿಯಲ್ಲಿ ವಾಣಿಜ್ಯ ವಾಹನಗಳಿಗೆ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ನಾಳೆಯ ನಂತರ ಎಲ್ಲಾ ರೀತಿಯ ವಾಹನಗಳಿಗೆ ನಿರ್ಬಂಧಗಳು ಅನ್ವಯಿಸುತ್ತವೆ. ಪೊಲೀಸರು 5,000 ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ರಸ್ತೆನಿರ್ಬಂಧಿಸಲು ದೊಡ್ಡ ಕಂಟೈನರ್‍ಗಳನ್ನು ಸಾಗಿಸುವ ಕ್ರೇನ್‍ಗಳು ಮತ್ತು ಮಣ್ಣು ಮೂವರ್‍ಗಳು ಸಹ ಕಾರ್ಯ ನಿರ್ವಹಿಸುತ್ತಿವೆ. ರೈತರು ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ಗಡಿಯಲ್ಲಿ ಈಗಾಗಲೇ ಭದ್ರತಾ ಬ್ಯಾರಿಕೇಡ್‍ಗಳನ್ನು ಅಳವಡಿಸಲಾಗಿದ್ದು, ಪ್ರತಿಭಟನಾನಿರತ ರೈತರು ವಾಹನಗಳ ಮೇಲೆ ನಗರ ಪ್ರವೇಶಿಸಲು ಪ್ರಯತ್ನಿಸಿದರೆ, ಅವರ ಟೈರ್‍ಗಳು ಪಂಕ್ಚರ್ ಆಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
5
+ ಏತನ್ಮಧ್ಯೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ದೆಹಲಿಯ ಈಶಾನ್ಯ ಜಿಲ್ಲೆಯಲ್ಲಿ ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 144ರಡಿ ನಿಷೇತ ಆದೇಶಗಳನ್ನು ಜಾರಿಗೊಳಿಸಲಾಗಿದೆ. ದೆಹಲಿ ಚಲೋದಲ್ಲಿ ಸುಮಾರು 20,000 ರೈತರು ಪಾಲ್ಗೊಳ್ಳಲಿದ್ದಾರೆ. ಹೀಗಾಗಿ ರಾಷ್ಟ್ರ ರಾಜಧಾನಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ರೈತರು ದೆಹಲಿ ಪ್ರವೇಶ ಮಾಡಲು ಯತ್ನಿಸಿದರೆ ಹೆದ್ದಾರಿಯನ್ನೇ ಬಂದ್ ಮಾಡಲು ಪೊಲೀಸರು ಯೋಜಿಸಿದ್ದಾರೆ. ಇದರೊಂದಿಗೆ ಯಾವುದೇ ಅನಾಹುತಕಾರಿ ಘಟನೆಗಳನ್ನು ತಡೆಯಲು ಹೆಚ್ಚುವರಿ ಪೊಲೀಸ್ ಭದ್ರತೆಯನ್ನು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.
6
+ ಕ್ಷೇತ್ರ ಹಂಚಿಕೆ ಕುರಿತು ಜೆಡಿಎಸ್-ಬಿಜೆಪಿ ನಡುವೆ ಸಮಸ್ಯೆ ಇಲ್ಲ : ಹೆಚ್‌ಡಿಕೆ
7
+ ಅಂಬಾಲಾ, ಜಿಂದ್ ಮತ್ತು ಫತೇಹಾಬಾದ್ ಜಿಲ್ಲೆಗಳ ಗಡಿಗಳನ್ನು ಮುಚ್ಚಲಾಗಿದೆ. ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಎಂಬ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರನೆಟ್ ಸೇವೆಗಳು ಮತ್ತು ಎಸ್‍ಎಂಎಸ್‍ಗಳನ್ನು ಸ್ಥಗಿತಗ��ಳಿಸಲಾಗಿದೆ. ಅಂಬಾಲಾ ಬಳಿಯ ಶಂಭು ಗಡಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಹರಿಯಾಣದ ಪೆÇಲೀಸ್ ಮಹಾನಿರ್ದೇಶಕ ಶತ್ರುಜೀತ್ ಕಪೂರ್, ಪೊಲೀಸ್ ಮಹಾನಿರೀಕ್ಷಕ (ಅಂಬಾಲಾ ರೇಂಜ್) ಶಿವಾಸ್ ಕವಿರಾಜ್ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಜಶಂದೀಪ್ ಸಿಂಗ್ ಗಡಿ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ.
8
+ ಚಂಡೀಗಢದಿಂದ ದೆಹಲಿಗೆ ಹೋಗುವ ಪ್ರಯಾಣಿಕರು ದೇರಾಬಸ್ಸಿ, ಬರ್ವಾಲಾ/ರಾಮ್ಗಢ, ಸಹಾ, ಶಹಬಾದ್, ಕುರುಕ್ಷೇತ್ರ ಅಥವಾ ಪಂಚಕುಲ, ಯಮುನಾನಗರ ಇಂದ್ರಿ/ಪಿಪ್ಲಿ, ಕರ್ನಾಲ್ ಮೂಲಕ ಪರ್ಯಾಯ ಮಾರ್ಗಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಪಂಜಾಬ್‍ಗೆ ಪ್ರಯಾಣಿಸಲು ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹರಿಯಾಣ ಪೊಲೀಸರು 50 ಕಂಪನಿಗಳ ಕೇಂದ್ರೀಯ ಅರೆಸೇನಾ ಪಡೆಗಳನ್ನು ನಿಯೋಜಿಸಿದ್ದಾರೆ.
9
+ ಪ್ರತಿಭಟನಾನಿರತ ರೈತರು ಯೋಜಿತ ಮೆರವಣಿಗೆಯಲ್ಲಿ ಅನುಮತಿ ಇಲ್ಲದೆ ಭಾಗವಹಿಸದಂತೆ ಮನವಿ ಮಾಡಲಾಗಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡಿದರೆ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.
eesanje/url_47_163_12.txt ADDED
@@ -0,0 +1,6 @@
 
 
 
 
 
 
 
1
+ ಆಂಧ್ರ ಸಿಎಂ ತಮ್ಮ ಚಿಕ್ಕಪ್ಪನನ್ನು ಹತ್ಯೆ ಮಾಡಿದ್ದಾರೆ : ನಾರಾ ಲೋಕೇಶ್
2
+ ಅಮರಾವತಿ,ಫೆ.12- ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಚಿಕ್ಕಪ್ಪ ವೈ.ಎಸ್.ವಿವೇಕಾನಂದ ರೆಡ್ಡಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಗಂಭೀರ ಆರೋಪ ಮಾಡಿದ್ದಾರೆ.
3
+ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಗನ್ ತಮ್ಮ ಚಿಕ್ಕಪ್ಪನನ್ನ (ಬಾಬಾಯ್) ಹತ್ಯೆ ಮಾಡಿದ್ದೀರಿ? ಇನ್ನಷ್ಟು ಕುಟುಂಬಗಳನ್ನು ಕೊಲ್ಲಲು ಅವರು ಸಿದ್ಧರಿದ್ದಾರೆ, ಅಮರನಾಥ್ ಗೌಡ ಅವರಂತಹ ಹಿಂದುಳಿದ ವರ್ಗದ ನಾಯಕ ಮತ್ತು ಡಾ.ಸುಧಾಕರ್ ಅವರಂತಹ ದಲಿತರನ್ನು ಹತ್ಯೆ ಮಾಡಲು ಸಿದ್ಧರಿದ್ದಾರಾ? ಈ ರಾಜ್ಯವನ್ನು ನಾಶ ಮಾಡೋವುದಕ್ಕಾಗಿಯೇ ನಿಂತಿದ್ದೀರಾ ರೆಡ್ಡಿಯವರೇ? ಎಂದು ಪ್ರಶ್ನೆಗಳ ಮಳೆ ಸುರಿಸಿದ್ದಾರೆ.
4
+ ಮನೆಗೆ ಬೆಂಕಿ, ಮೂವರು ಸಹೋದರಿಯರು ಆಹುತಿ
5
+ ತಂದೆಯಾಗಿರುವ ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡು ಅವರನ್ನ ಕಾನೂನು ಬಾಹಿರವಾಗಿ ಬಂಧಿಸಿ, 53 ದಿನಗಳ ಕಾಲ ಜೈಲಿನಲ್ಲಿರಿಸಿದೆ ಎಂದು ನಾರಾ ಲೋಕೇಶ್ ವಾಗ್ದಾಳಿ ನಡೆಸಿದ್ದಾರೆ.
6
+ ಅಷ್ಟೇ ಅಲ್ಲ ಕಳೆದ ನಾಲ್ಕು ವರ್ಷಗಳಲ್ಲಿ ತೆಲುಗು ದೇಶಂ ಪಕ್ಷದ ಕಾರ್ಯಕರ್ತರ ವಿರುದ್ಧ ಕೊಲೆಗೆ ಯತ್ನ ದೌರ್ಜನ್ಯ ಸೇರಿದಂತೆ 22 ಪ್ರಕರಣಗಳನ್ನು ದಾಖಲಿಸಿದ್ದಾರೆ. ವೈಎಸ್‍ಆರ್‍ಪಿ ಪಕ್ಷದ ಮುಖಂಡರು ಉದ್ದೇಶಪೂರ್ವಕವಾಗಿಯೇ ಟಿಡಿಪಿ ನಾಯಕರಿಗೆ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರನ್ನು ರೆಡ್ಲಿಸ್ಟ್ನಲ್ಲಿ ಇಟ್ಟಿದ್ದಾರೆ ಎಂದರಲ್ಲದೇ, ಭಾರತದಲ್ಲಿ ಆಂಧ್ರಪ್ರದೇಶವನ್ನು ಗಾಂಜಾ ರಾಜಧಾನಿಯನ್ನಾಗಿ ಮಾಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
eesanje/url_47_163_2.txt ADDED
@@ -0,0 +1,5 @@
 
 
 
 
 
 
1
+ ಲೈಂಗಿಕ ಅಲ್ಪಸಂಖ್ಯಾತರಿಗೆ ಉದ್ಯೋಗ ನೀಡಲು ಮುಂದಾದ ಟಾಟಾ ಸಂಸ್ಥೆ
2
+ ರಾಂಚಿ, ಫೆ 13 (ಪಿಟಿಐ) ಟ್ರಾನ್ಸ್‌ಜೆಂಡರ್‌ಗಳನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಲು ಮುಂದಾಗುವ ಮೂಲಕ ಟಾಟಾ ಸ್ಟೀಲ್ ಹೊಸ ಇತಿಹಾಸ ಬರೆಯಲು ಮುಂದಾಗಿದೆ. ತಮ್ಮ ಸಂಸ್ಥೆಯಲ್ಲಿರುವ ವಿವಿಧ ಹುದ್ದೆಗಳಿಗೆ ಟ್ರಾನ್ಸ್‍ಜೆಂಡರ್ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಮೂಲಕ ಟಾಟಾ ಸ್ಟೀಲ್ಸ್ ಸಂಸ್ಥೆ ಮಹತ್ವದ ಹೆಜ್ಜೆಯನ್ನು ತೆಗೆದುಕೊಂಡಿದೆ ಎಂದು ಕಂಪನಿ ತಿಳಿಸಿದೆ.
3
+ ಪ್ರಮುಖ ಜಾಗತಿಕ ಉಕ್ಕಿನ ಕಂಪನಿಯಾಗಿರುವ ಟಾಟಾ ಸ್ಟೀಲ್ ಸಮಾಜದಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ತರಬೇಕು ಎಂಬ ಉದ್ದೇಶದಿಂದ ಈ ಕ್ರಮಕ್ಕೆ ಮುಂದಾಗಿದೆಯಂತೆ.ಇಂಗ್ಲೀಷ್ ಅಥವಾ ಐಟಿಐನಲ್ಲಿ ಮೆಟ್ರಿಕ್ಯುಲೇಷನ್ ಅಥವಾ ಯಾವುದೇ ವಿಭಾಗದಲ್ಲಿ ಪದವಿ ಅಥವಾ ಎಐಸಿಟಿಇ ಅಥವಾ ಯುಜಿಸಿ ಮಾನ್ಯತೆ ಪಡೆದ ಯಾವುದೇ ಸಂಸ್ಥೆಯಿಂದ ಎಂಜಿನಿಯರಿಂಗ್‍ನಲ್ಲಿ ಡಿಫ್ಲೋಮಾ… ಅಥವಾ ಯಾವುದೇ ವಿಭಾಗದಲ್ಲಿ ಬಿಇ/ಬಿ ಟೆಕ್‍ನಲ್ಲಿ ಪದವಿ ಸಂಸ್ಥೆ, ಎಐಸಿಟಿಇ ಅಥವಾ ಯುಜಿಸಿ ಪಾಸಾದವರು ಅರ್ಜಿ ಸಲ್ಲಿಸಬಹುದು ಎಂದು ಟಾಟಾ ಸ್ಟೀಲ್ ಅಸೂಚನೆಯಲ್ಲಿ ತಿಳಿಸಿದೆ.ಅರ್ಜಿಗಳನ್ನು ಸಲ್ಲಿಸಲು ಫೆಬ್ರವರಿ 15 ಕೊನೆಯ ದಿನಾಂಕವಾಗಿದೆ.
4
+ ಬೆಂಗಳೂರಿನ ಮಹಿಳೆ ಮೇಲೆ ಅತ್ಯಾಚಾರ ಆರೋಪಿ ಬಂಧನ
5
+ ಎಲ್ಲಾ ಶಾರ್ಟ್‍ಲಿಸ್ಟ್ ಮಾಡಿದ ಅಭ್ಯರ್ಥಿಗಳು ಆಯ್ಕೆ ಪ್ರಕ್ರಿಯೆಗೆ ಒಳಗಾಗುತ್ತಾರೆ, ಇದು ಅಗತ್ಯಕ್ಕೆ ಅನುಗುಣವಾಗಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ಒಳಗೊಂಡಿರುತ್ತದೆ ಎಂದು ಅದು ಹೇಳಿದೆ.
eesanje/url_47_163_3.txt ADDED
@@ -0,0 +1,5 @@
 
 
 
 
 
 
1
+ ಬಹುಕೋಟಿ ಪಡಿತರ ಹಗರಣ, ಬಂಗಾಳದಲ್ಲಿ ಇಡಿ ದಾಳಿ
2
+ ಕೋಲ್ಕತ್ತಾ, ಫೆ 13 (ಪಿಟಿಐ) ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಬಹುಕೋಟಿ ಪಡಿತರ ಹಗರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ತಂಡಗಳು ಇಂದು ಬೆಳಗ್ಗೆ ಮಹಾನಗರದ ಹಲವು ಸ್ಥಳಗಳಲ್ಲಿ ದಾಳಿ ಆರಂಭಿಸಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೇಂದ್ರ ಪಡೆಗಳೊಂದಿಗೆ ಇಡಿ ತಂಡಗಳು ಸಾಲ್ಟ ಲೇಕ್, ಕೈಖಾಲಿ, ಮಿರ್ಜಾ ಗಾಲಿಬ್ ಸ್ಟ್ರೀಟ್, ಹೌರಾ ಮತ್ತು ಇತರ ಕೆಲವು ಸ್ಥಳಗಳಲ್ಲಿ ದಾಳಿ ನಡೆಸಿವೆ ಎಂದು ಅವರು ಹೇಳಿದರು.
3
+ ರಾಜ್ಯಪಾಲರ ಮೂಲಕ ಜನರಿಗೆ ತಪ್ಪು ಮಾಹಿತಿ : ಜಿ.ಟಿ.ದೇವೇಗೌಡ
4
+ ವಿಚಾರಣೆ ನಡೆಸುತ್ತಿರುವವರಲ್ಲಿ ಉದ್ಯಮಿಗಳು ಮತ್ತು ಹಗರಣದಲ್ಲಿ ಈ ಹಿಂದೆ ಬಂಧಿತರಾದವರಿಗೆ ನಿಕಟ ಸಂಬಂಧ ಹೊಂದಿರುವವರು ಸೇರಿದ್ದಾರೆ ಎಂದು ಅವರು ಹೇಳಿದರು. ಈ ದಾಳಿಗಳು ಪಡಿತರ ವಿತರಣೆ ಹಗರಣಕ್ಕೆ ಸಂಬಂಧಿಸಿವೆ. ಈಗಾಗಲೇ ಬಂಧಿಸಲ್ಪಟ್ಟವರನ್ನು ವಿಚಾರಣೆ ಮಾಡಿದ ನಂತರ ಈ ಜನರು ಭಾಗಿಯಾಗಿರುವ ಬಗ್ಗೆ ನಮಗೆ ಮಾಹಿತಿ ಸಿಕ್ಕಿದೆ ಎಂದು ಇಡಿ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
5
+ ತನಿಖಾ ಸಂಸ್ಥೆಯು ಪಶ್ಚಿಮ ಬಂಗಾಳದಲ್ಲಿ ಪಡಿತರ ವಿತರಣೆಯಲ್ಲಿ ಅಕ್ರಮಗಳಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ರಾಜ್ಯ ಸಚಿವರು ಮತ್ತು ಟಿಎಂಸಿ ಮುಖಂಡರನ್ನು ಬಂಧಿಸಿದೆ.
eesanje/url_47_163_4.txt ADDED
@@ -0,0 +1,5 @@
 
 
 
 
 
 
1
+ ಚವಾಣ್‍ರನ್ನು ರಾಜ್ಯಸಭೆಗೆ ಕಳುಹಿಸುವುದು ಹುತಾತ್ಮರಿಗೆ ಅಗೌರವ ತೋರಿದಂತೆ : ಠಾಕ್ರೆ
2
+ ಛತ್ರಪತಿ ಸಂಭಾಜಿನಗರ, ಫೆ.13 (ಪಿಟಿಐ) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಅವರನ್ನು ಗುರಿಯಾಗಿಸಿ ಆದರ್ಶ ವಸತಿ ಹಗರಣವನ್ನು ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ (ಯುಬಿಟಿ) ನಾಯಕ ಉದ್ಧವ್ ಠಾಕ್ರೆ, ಬಿಜೆಪಿ ಅವರನ್ನು ರಾಜ್ಯಸಭೆಗೆ ಕಳುಹಿಸಿದರೆ ಹುತಾತ್ಮ ಯೋಧರಿಗೆ ಅಗೌರವ ತೋರಿದಂತಾಗುತ್ತದೆ ಎಂದು ಹೇಳಿದ್ದಾರೆ. ಛತ್ರಪತಿ ಸಂಭಾಜಿನಗರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಠಾಕ್ರೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಹಿಂದೆ ನಾಂದೇಡ್ (ಚವಾಣ್ ಅವರ ತವರು ಜಿಲ್ಲೆ)ಗೆ ಹೋಗಿ ಅಶೋಕ್ ಚವಾಣ್ ಮಾಡಿರುವ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ದರು ಎನ್ನುವುದನ್ನು ಮರೆಯಬಾರದು ಎಂದಿದ್ದಾರೆ.
3
+ ಆದರೆ ಪ್ರಧಾನಿ ಅವರನ್ನು (ಚವಾಣ್‍) ರಾಜ್ಯಸಭೆಗೆ ಕಳುಹಿಸಿದರೆ, ಅದು ನಮ್ಮ ಸೈನಿಕರಿಗೆ ಅಗೌರವ ತೋರಿದಂತಾಗುತ್ತದೆ ಎಂದು ಅವರು ಹೇಳಿದರು. ಈ ಹಿಂದೆ, ಪ್ರಧಾನಿ ಮತ್ತು ಫಡ್ನವೀಸ್ ಚವಾಣ್ ಅವರನ್ನು ಡೀಲರ್ ಮತ್ತು ನಾಯಕನಲ್ಲ ಎಂದು ಕರೆಯುತ್ತಿದ್ದರು ಎಂದು ಠಾಕ್ರೆ ನೆನಪಿಸಿಕೊಂಡಿದ್ದಾರೆ. ಅವರು ಆದರ್ಶ್ ವಸತಿ ಹಗರಣವನ್ನು ಸೈನಿಕರಿಗೆ ಅಗೌರವ ಎಂದು ಬಣ್ಣಿಸಿದ್ದಾರೆ. ಹುತಾತ್ಮ ಸೈನಿಕರು ಮತ್ತು ಅವರ ಕುಟುಂಬಗಳಿಗೆ ಅಗೌರವ ತೋರಿದ ವ್ಯಕ್ತಿಯನ್ನು (ಚವಾಣ್‍) ಅವರು ರಾಜ್ಯಸಭೆಗೆ ಕಳುಹಿಸುತ್ತೀರಾ ಎಂದು ನಾನು ಪ್ರಧಾನಿಯನ್ನು ಕೇಳಲು ಬಯಸುತ್ತೇನೆ? ಎಂದು ಮಾಜಿ ಸಿಎಂ ಪ್ರಶ್ನಿಸಿದರು.
4
+ ರಾಜ್ಯಪಾಲರ ಮೂಲಕ ಜನರಿಗೆ ತಪ್ಪು ಮಾಹಿತಿ : ಜಿ.ಟಿ.ದೇವೇಗೌಡ
5
+ ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಲಾದ ಶ್ವೇತಪತ್ರದಲ್ಲಿ ಉಲ್ಲೇಖಿಸಲಾದ ಆದರ್ಶ್ ಬಿಲ್ಡಿಂಗ್ ಹಗರಣದ ಹಿನ್ನೆಲೆ, 2010 ರಲ್ಲಿ ರಾಜ್ಯದ ಮುಖ್ಯಮಂತ್ರಿ ಚವಾಣ್ ರಾಜೀನಾಮೆಗೆ ಕಾರಣವಾದ ಹಗರಣ, ಅವರ ನಿರ್ಗಮನದ ಸಂಭಾವ್ಯ ಅಂಶವಾಗಿ ಗಮನ ಸೆಳೆದಿದೆ. ಚವಾಣ್ ಅವರು ಈ ಹಕ್ಕನ್ನು ನಿರಾಕರಿಸಿದ್ದಾರೆ.
eesanje/url_47_163_5.txt ADDED
@@ -0,0 +1,5 @@
 
 
 
 
 
 
1
+ ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ
2
+ ಬೆಂಗಳೂರು,ಫೆ.12- ಬೆಂಗಳೂರಿನ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದ್ದು, ಸುರಂಗ ರಸ್ತೆ ನಿರ್ಮಾಣದ ಸಾಧಕ ವರದಿ ಪರಿಶೀಲನೆ ಯಾಗುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಲ್ಹೋಟ್ ತಿಳಿಸಿದ್ದಾರೆ. ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಇಂದು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ ನಿರ್ಮಾಣಕ್ಕೆ ಸಂಬಂಧಪಟ್ಟಂತೆ ಸಾಧಕ ವರದಿಯನ್ನು ಸಿದ್ದಪಡಿಸಲಾಗುತ್ತಿದೆ. ಬೆಂಗಳೂರು ಮೆಟ್ರೊ ಹಂತ-2 ರಿಚ್ 5ರಲ್ಲಿ ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‍ವರೆಗಿನ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು 2024ರ ಜುಲೈ ವೇಳೆಗೆ ಕಾರ್ಯಾಚರಣೆಯ ಸಾಧ್ಯತೆ ಇದೆ.
3
+ ಸೆಂಟ್ರಲ್ ಸಿಲ್ಕ್‍ಬೋರ್ಡ್‍ನಿಂದ ಕೃಷ್ಣರಾಜಪುರದವರೆಗೆ ಮತ್ತು ಕೃಷ್ಣರಾಜಪುರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಕಾಮಗಾರಿಗಳು 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದ್ದಾರೆ. ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಪ್ರದೇಶಗಳಿಗೆ 775 ಎಂಎಲ್‍ಡಿ ಹೆಚ್ಚುವರಿ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ 2024ರ ಮಾರ್ಚ್‍ಗೆ ಕಾರ್ಯಾರಂಭ ಮಾಡಲಿದೆ ಎಂದು ಹೇಳಿದ್ದಾರೆ.
4
+ ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಯಾವುದೂ ಇಲ್ಲ : ಕುಮಾರಸ್ವಾಮಿ
5
+ ಬೆಂಗಳೂರು ಉಪನಗರ ರೈಲ್ವೆ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಬೈಯಪ್ಪನಹಳ್ಳಿ ಚಿಕ್ಕಬಾಣವಾರ ನಡುವಿನ 25 ಕಿ.ಮೀಗಳ ಕಾರಿಡಾರ್‍ನ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. ಹೀಲಲಿಗೆ ರಾಜಾನುಕುಂಟೆ ನಡುವಿನ 46.24 ಕಿ.ಮೀ ಕಾರಿಡಾರ್‍ನ ಸಿವಿಲ್ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದ್ದು, ಶೀಘ್ರವೇ ಕೆಲಸ ಆರಂಭವಾಗಲಿದೆ ಎಂದು ವಿವರಿಸಿದ್ದಾರೆ.
eesanje/url_47_163_6.txt ADDED
@@ -0,0 +1,5 @@
 
 
 
 
 
 
1
+ ಬಿಹಾರ ವಿಧಾನಸಭೆಯಲ್ಲಿ ವಿಶ್ವಾಸ ಮತ ಗೆದ್ದ ನಿತೀಶ್
2
+ ಪಾಟ್ನಾ,ಫೆ.12-ಭಾರೀ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆಯಲ್ಲಿ ಬಹುಮತ ಸಾಬೀತು ನಿರ್ಣಯದಲ್ಲಿ ಕೊನೆಗೂ ಮುಖ್ಯಮಂತ್ರಿ ನಿತೀಶ್‍ಕುಮಾರ್ ಅಚ್ಚರಿ ರೀತಿಯಲ್ಲಿ ಗೆದ್ದು ಬೀಗಿದ್ದಾರೆ. ಒಟ್ಟು 129 ಮತಗಳು ವಿಶ್ವಾಸ ಮತ ಪರವಾಗಿ ಚಲಾವಣೆಗೊಂಡಿದ್ದು, ಸದನದಲ್ಲಿದ್ದವರಿಗೆ ಅಚ್ಚರಿ ಮೂಡಿಸಿತ್ತು. ನಿತೀಶ್‍ರ ಪರಮ ವೈರಿ ಎಂದೇ ಬಿಂಬಿತವಾಗಿದ್ದ ಆರ್‍ಜೆಡಿಯ ನಾಲ್ಕರಿಂದ ಐದು ಶಾಸಕರು ವಿಶ್ವಾಸಮತ ಚಲಾಯಿಸಿದ್ದಾರೆ.
3
+ ಜೆಡಿಯುನಲ್ಲಿ ಒಡಕಿದೆ ಎಂದು ಹೇಳುತ್ತಿದ್ದ ಆರ್‍ಜೆಡಿಯ ಎಲ್ಲ ತಂತ್ರಗಾರಿಕೆಯು ಕೈಕೊಟ್ಟಿದೆ. ಬದಲಾಗಿ ಅದಕ್ಕೆ ತಿರುಗು ಬಾಣವಾಗಿದೆ ಬಿಜೆಪಿಯ 78 ಹಾಗೂ ಜೆಡಿಯುನ 45 ಶಾಸಕರನ್ನು ಹೊಂದಿದ್ದು, ಹೊಸ ಮೈತ್ರಿಕೂಟದ ವಿಶ್ವಾಸ ಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಆರ್‍ಜೆಡಿಯ ಮೂವರು ಶಾಸಕರು ಆಡಳಿತ ಪಕ್ಷದ ಆಸನದತ್ತ ಕೂತಿದ್ದರು. ಇದನ್ನು ನೀಡಿದ ಆರ್‍ಜೆಡಿ ನಾಯಕ ಹಾಗೂ ಮಾಜಿ ಡಿಸಿಎಂ ತೇಜಸ್ವಿ ಯಾದವ್ ಆಕ್ಷೇಪ ವ್ಯಕ್ತಪಡಿಸಿದರು. ಆದರೂ ನಂತರ ನಡೆದ ಬೆಳವಣಿಗೆಯಲ್ಲಿ ಮೊದಲು ಬಿಜೆಪಿಯ ಶಾಸಕರಿಂದ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು.
4
+ ನ್ಯಾಯಯುತವಾಗಿ ರಾಜ್ಯಕ್ಕೆ ತೆರಿಗೆ ಪಾಲು ಸಿಗುತ್ತಿಲ್ಲ : ಭಾಷಣದಲ್ಲಿ ರಾಜ್ಯಪಾಲ ಅಸಮಾಧಾನ
5
+ ನಂತರ ನಡೆದ ಮತದಾನದಲ್ಲಿ ಅವಿಶ್ವಾಸದ ಪರ 125 ಮತಗಳು ಬಂದರೆ ಇದಕ್ಕೆ ವಿರುದ್ಧವಾಗಿ ಕೇವಲ 112 ಶಾಸಕರು ಇದ್ದರು. ಸ್ಪೀಕರ್ ಪದಚ್ಯುತಿ ನಂತರ ಸಿಎಂ ನಿತೀಶ್‍ಕುಮಾರ್ ವಿಶ್ವಾಸ ಮತ ಯಾಚನೆ ನಿರ್ಣಯವನ್ನು ಮಂಡಿಸಿ ಬಹಳ ಚರ್ಚೆಯ ನಂತರ ಎಲ್ಲರೂ ಅಚ್ಚರಿಪಡುವಂತೆ 129 ಶಾಸಕರ ಬೆಂಬಲದೊಂದಿಗೆ ಸಂಪೂರ್ಣ ಬಹುಮತ ಸಾಬೀತುಪಡಿಸುವಲ್ಲಿ ನಿತೀಶ್ ಯಶಸ್ವಿಯಾಗಿದ್ದಾರೆ.ಈ ಬಳಿಕ ಬಿಜೆಪಿ ಹಾಗೂ ಜೆಡಿಯು ಶಾಸಕರು ಸಂಭ್ರಮಿಸಿದರು.
eesanje/url_47_163_7.txt ADDED
@@ -0,0 +1,6 @@
 
 
 
 
 
 
 
1
+ ಸರ್ಕಾರ ಬರೆದುಕೊಟ್ಟಿದ್ದ ಭಾಷಣವನ್ನು ಓದಲ್ಲ ಎಂದು ಹೊರ ನಡೆದ ರಾಜ್ಯಪಾಲ
2
+ ಚನ್ನೈ, ಫೆ.12 – ರಾಜ್ಯ ಬಜೆಟ್ ಅವೇಶನದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ. ಸರ್ಕಾರ ಬರೆದುಕೊಟ್ಟಿದ್ದ ಭಾಷಣವನ್ನು ಓದಲ್ಲ ಅಂತ ಹೇಳುವ ಮೂಲಕ ತಮಿಳುನಾಡು ರಾಜ್ಯಪಾಲರಾದ ಆರ್.ಎನ್.ರವಿ ಹೊಸ ವಿವಾದ ಸೃಷ್ಟಿಸಿದ್ದಾರೆ. ನಾನು ನನ್ನ ಧ್ವನಿಯನ್ನು ನೀಡಿದರೆ, ಅದು ಸಾಂವಿಧಾನಿಕ ಅಪಹಾಸ್ಯಕ್ಕೆ ಕಾರಣವಾಗುತ್ತದೆ ಎಂದು ಆರ್.ಎನ್.ರವಿ ಅೀಧಿವೇಶನದಲ್ಲಿ ಹೇಳಿದರು.
3
+ ರಾಜ್ಯಪಾಲರು ತಮ್ಮ ವಾಡಿಕೆ ಭಾಷಣವನ್ನು ಎರಡು ನಿಮಿಷಗಳಲ್ಲಿ ಮುಗಿಸಿದ್ದಾರೆ. ಭಾಷಣದ ಪ್ರಾರಂಭ ಮತ್ತು ಕೊನೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಿದ್ದಾರಂತೆ. ತಮಿಳುನಾಡು ವಿಧಾನಸಭೆಯಲ್ಲಿನ ಸಮಾವೇಶದ ಪ್ರಕಾರ, ಭಾಷಣದ ಮೊದಲು ರಾಜ್ಯಗೀತೆ ಮತ್ತು ನಂತರ ರಾಷ್ಟ್ರಗೀತೆಯನ್ನು ಹಾಕಲಾಗುತ್ತೆ. ಆದರೆ ರಾಜ್ಯಪಾಲರು ಆರ್.ಎನ್.ರವಿ ಇದಕ್ಕೆ ನಿರಾಕರಿಸಿದ್ದಾರೆ.
4
+ ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಯಾವುದೂ ಇಲ್ಲ : ಕುಮಾರಸ್ವಾಮಿ
5
+ ತಮಿಳುನಾಡು ವಿಧಾನಸಭೆ ಸೇರುತ್ತಿದ್ದಂತೆ ತಮಿಳುನಾಡು ರಾಜ್ಯಪಾಲ ರವಿ ಅವರು ಕೇರಳದಲ್ಲಿ ನಡೆದಂತೆ ತಮ್ಮ ಭಾಷಣವನ್ನು ಪೂರ್ತಿಯಾಗಿ ಓದಲಿಲ್ಲ.ತಮಿಳುನಾಡು ಸರ್ಕಾರ ತಮಗಾಗಿ ಸಿದ್ಧಪಡಿಸಿರುವ ಭಾಷಣದಲ್ಲಿ ಮಾಡಿರುವ ಕೆಲವು ಟೀಕೆಗಳನ್ನು ಒಪ್ಪುವುದಿಲ್ಲ ಎಂದು ಹೇಳಿ ಭಾಷಣ ಮುಗಿಸಿದರು. ಕೆಲವೇ ನಿಮಿಷಗಳಲ್ಲಿ ರಾಜ್ಯಪಾಲರು ಭಾಷಣ ಮುಗಿಸಿದರು.
6
+ ಕೇರಳ ರಾಜ್ಯದಲ್ಲೂ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಜಟಾಪಟಿ ಏರ್ಪಟ್ಟಿತ್ತು. ಕಳೆದ ತಿಂಗಳು ಅಲ್ಲಿ ವಿಧಾನಸಭೆ ಅವೇಶನ ನಡೆದಾಗ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಚಟುವಟಿಕೆಗಳು ಚರ್ಚೆಗೆ ಗ್ರಾಸವಾಗಿತ್ತು.
eesanje/url_47_163_8.txt ADDED
@@ -0,0 +1,8 @@
 
 
 
 
 
 
 
 
 
1
+ ಕೇರಳ : ಅಕ್ರಮ ಪಟಾಕಿ ಗೋದಾಮಿನಲ್ಲಿ ಭಾರೀ ಸ್ಫೋಟ, ಓರ್ವ ಸಾವು, ಹಲವರಿಗೆ ಗಾಯ
2
+ ಕೊಚ್ಚಿ, -ಫೆ.12: ಇಲ್ಲಿಗೆ ಸಮೀಪದ ತ್ರಿಪುಣಿತುರಾದಲ್ಲಿ ವಸತಿ ಪ್ರದೇಶದಿಂದ ನಡೆಯುತ್ತಿದ್ದ ಅಕ್ರಮ ಪಟಾಕಿ ಗೋದಾಮಿನಲ್ಲಿಂದು ಸಂಭವಿಸಿದ ಭಾರೀ ಸೋಟದಲ್ಲಿ ಒಬ್ಬ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 16 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ವೈದ್ಯಕೀಯ ತಜ್ಞರ ಚಿಕಿತ್ಸೆಗಾಗಿ ಅವರನ್ನು ಸಮೀಪದ ಆಸ್ಪತ್ರೆಯಿಂದ ಕಲಮಸ್ಸೆರಿ ವೈದ್ಯಕೀಯ ಕಾಲೇಜಿಗೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ಮೃತ ವ್ಯಕ್ತಿಯನ್ನು ತಿರುವನಂತಪುರಂ ಮೂಲದ ವಿಷ್ಣು ಎಂದು ಗುರುತಿಸಲಾಗಿದೆ .ಸೋಟದಲ್ಲಿ ಸುತ್ತಮುತ್ತಲಿನ 25 ಕ್ಕೂ ಹೆಚ್ಚು ಮನೆಗಳು ಮತ್ತು ಕೆಲವು ಅಂಗಡಿಗಳು ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಎರಡು ವಾಹನಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ ಮತ್ತು ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ ಗೋದಾಮಿಗೆ ತಂದಿದ್ದ ಪಟಾಕಿಗಳ ಬೃಹತ್ ಸಂಗ್ರಹ ಒಟ್ಟಿಗೆ ಸೋಟಗೊಂಡಿರುವ ಶಂಕೆ ಇದೆ ಎಂದು ಅಗ್ನಿಶಾಮಕ ಮತ್ತು ಪಾರುಗಾಣಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4
+ ಇದು ಭಾರೀ ಸೋಟವಾಗಿದ್ದು, ಹಲವಾರು ಕಿಮೀ ದೂರದಲ್ಲಿ ಜನರು ಭೂಮಿ ನಡುಗಿದ ಅನುಭವವಾಗಿದೆ ಸ್ಥಳೀಯ ಅಗ್ನಿಶಾಮಕ ಠಾಣೆಯಲ್ಲೂ ಕಂಪನದ ಅನುಭವವಾಗಿದೆ ಎಂದು ಅವರು ಹೇಳಿದರು ಮತ್ತು ಸೋಟದ ದೊಡ್ಡ ಶಬ್ದದಿಂದ ಜನರು ಆತಂಕಗೊಂಡಿದ್ದಾರೆ.ದಟ್ಟ ಜನನಿಬಿಡ ಪ್ರದೇಶದಲ್ಲಿ ಪಟಾಕಿ ಗೋದಾಮು ನಡೆಸುತ್ತಿರುವ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಅದನ್ನು ನಿರ್ವಹಿಸುವವರು ಅದಕ್ಕೆ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಸಹಾಯಕ ಠಾಣಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದರು.
5
+ ರಾಜ್ಯಪಾಲರ ಭಾಷಣದಲ್ಲಿ ಉಪ್ಪು, ಹುಳಿ, ಖಾರ ಯಾವುದೂ ಇಲ್ಲ : ಕುಮಾರಸ್ವಾಮಿ
6
+ ವಾಹನದಿಂದ ಪಟಾಕಿಗಳನ್ನು ಗೋದಾಮಿಗೆ ಇಳಿಸುವಾಗ ಈ ಅನಾಹುತ ಸಂಭವಿಸಿದೆ ಎಂದು ಸ್ಥಳೀಯ ಜನರು ಮಾಹಿತಿಯ ನೀಡಿದ್ದಾರೆ.ಈ ಪ್ರದೇಶದಲ್ಲಿ ಗೋದಾಮು ಸ್ವಲ್ಪ ಸಮಯದಿಂದ ಕಾರ್ಯನಿರ್ವಹಿಸುತ್ತಿದೆ ಮತ್ತು ಸ್ಥಳೀಯ ದೇವಾಲಯದ ಉತ್ಸವದ ಭಾಗವಾಗಿ ಪಟಾಕಿಗಳನ್ನು ಸಂಗ್ರಹಿಸಲಾಗಿದೆ ಎಂದು ತಿಳಿದುಬಂದಿದೆ.
7
+ ಈ ಪ್ರದೇಶದಲ್ಲಿ ಎರಡು ಅಂತಸ್ತಿನ ಕಟ್ಟಡಗಳ ಮೇಲ್ಛಾವಣಿ ತೀವ್ರವಾಗಿ ಹಾನಿಗೀಡಾಗಿರುವುದು ಕಂಡುಬಂದಿದೆ. ಸೋಟದ ಪ್ರಭಾವದಿಂದ ಅನೇಕ ಮನೆಗಳ ಬಾಗಿಲು ಮತ್ತು ಕಿಟಕಿಗಳು ಗೋಡೆಯಿಂದ ಹಾರಿಹೋಗಿವೆ ಮತ್ತು ಪೋರ್ಟಿಕೋಗಳಲ್ಲಿ ನಿಲ್ಲಿಸಲಾಗಿದ್ದ ಕಾರುಗಳ ಮೇಲೆ ಇಟ್ಟಿಗೆಗಳು ಮತ್ತು ಹೆಂಚುಗಳು ಬಿದ್ದು ನಾಶವಾಗಿವೆ.
8
+ ಬೆಂಕಿಯಿಂದಾಗಿ ಎತ್ತರದ ಮರಗಳು ಸಹ ಸಂಪೂರ್ಣವಾಗಿ ಸುಟ್ಟುಹೋದವು, ಸೋಟದ ಅವಶೇಷಗಳು ಹಲವಾರು ಮ���ಟರ್ ದೂರದಲ್ಲಿ ಕಾಣಿಸಿಕೊಂಡಿದೆ ಹಿರಿಯ ಅಧಿದಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
eesanje/url_47_163_9.txt ADDED
@@ -0,0 +1,5 @@
 
 
 
 
 
 
1
+ ಮಾಜಿ ಸಿಎಂ ಅಶೋಕ್ ಚವ್ಹಾಣ್ ಕಾಂಗ್ರೆಸ್‌ಗೆ ಗುಡ್ ಬೈ
2
+ ಮುಂಬೈ,ಫೆ.12- ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಭಾರೀ ಮರ್ಮಾಘಾತ ಉಂಟಾಗಿದ್ದು, ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಪಕ್ಷ ತೊರೆಯಲು ತೀರ್ಮಾನಿಸಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮೂಲಗಳ ಪ್ರಕಾರ ಅಶೋಕ್ ಚವ್ಹಾಣ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಸಲ್ಲಿಸಿದ್ದಾರೆಂದು ತಿಳಿದುಬಂದಿದೆ.
3
+ ಮಹಾರಾಷ್ಟ್ರದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಾನಾ ಪಟೋಳ್ ಅವರಿಗೆ ಒಂದು ಸಾಲಿನ ಪತ್ರ ಬರೆದಿರುವ ಚವ್ಹಾಣ್, ನಾನು ಕಾಂಗ್ರೆಸ್‍ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ನನ್ನ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕೆಂದು ಕೋರಿದ್ದಾರೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಅಶೋಕ್ ಚವ್ಹಾಣ್, ಪಕ್ಷ ಬಿಡಲು ಮುಂದಾಗಿರುವುದು ಕಾಂಗ್ರೆಸ್‍ಗೆ ಭಾರೀ ಹಿನ್ನಡೆ ಎಂದೇ ಹೇಳಲಾಗಿದೆ.
4
+ ಬೆಂಬಲ ಬೆಲೆಗೆ ಆಗ್ರಹಿಸಿ ರೈತರಿಂದ ದೆಹಲಿ ಚಲೋ
5
+ ಕೆಲದಿನಗಳ ಹಿಂದೆ ಪಕ್ಷದ ಪ್ರಮುಖರಾದ ಮಿಲಿಂದ್ ದೇವೂರ ಹಾಗೂ ಬಾಬಾ ಸಿದ್ದಕ್ಕಿ ಪಕ್ಷಕ್ಕೆ ಗುಡ್ ಬೈ ಹೇಳಿದ್ದರು. ಇದೀಗ ಅಶೋಕ್ ಚವ್ಹಾಣ್ ನಿರ್ಗಮನ ಹೊಡೆತದ ಮೇಲೆ ಹೊಡೆತ ಕೊಟ್ಟಂತಾಗಿದೆ.
eesanje/url_47_164_1.txt ADDED
@@ -0,0 +1,5 @@
 
 
 
 
 
 
1
+ ಗಡಿಯಲ್ಲಿ ಪಾಕಿಸ್ತಾನದ ಡ್ರೋನ್ ಮೇಲೆ ಸೇನೆಯಿಂದ ಗುಂಡಿನ ದಾಳಿ
2
+ ಮೆಂಧರ್/ಜಮ್ಮು, ಫೆ.12: ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಸೇನಾ ಪಡೆಗಳು ಪಾಕಿಸ್ತಾನದ ಡ್ರೋನ್ ಮೇಲೆ ಗುಂಡಿನ ದಾಳಿ ನಡೆಸಿದೆ. ತಡರಾತ್ರಿ ಭಾರತದ ಭೂಪ್ರದೇಶ ಪ್ರವೇಶಿಸಿದಾಗ ಅದನ್ನು ಹಿಮ್ಮೆಟ್ಟಿಸಲಾಗಿದೆ. ಗುಂಡಿಗೆ ಡ್ರೋನ್ ಹಾನಿಗೊಂಡರೂ ಪಾಕಿಸ್ತಾನದ ಕಡೆಗೆ ಮರಳಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.
3
+ ಮೆಂಧರ್‍ನ ನಾರ್ ಮಾನ್‍ಕೋಟೆ ಪ್ರದೇಶದಲ್ಲಿ ಪಾಕ್ ಡ್ರೋನ್‍ನ ಚಲನೆಯನ್ನು ಪತ್ತೆಮಾಡಿ ನಿಯಂತ್ರಣ ರೇಖೆಯಲ್ಲಿ ಕಾವಲು ಕಾಯುತ್ತಿರುವ ಪಡೆಗಳು ಅದನ್ನು ಉರುಳಿಸಲು ಮೂರು ಸುತ್ತು ಗುಂಡು ಹಾರಿಸಿದರು ಆದರೆ ಭಾರತೀಯ ಸೈನಿಕರ ಗುಂಡಿನ ದಾಳಿಗೆ ಡ್ರೋನ್ ಪಾಕಿಸ್ತಾನದ ಕಡೆಗೆ ಮರಳಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
4
+ 33 ಲಕ್ಷ ರೈತರಿಗೆ 628 ಕೋಟಿ ಹಣ : ಸಚಿವ ಕೃಷ್ಣ ಭೈರೆಗೌಡ
5
+ ಪ್ರಸ್ತುತ್ತ ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇತ್ತೀಚೆಗೆ ಮಾದಕ ದ್ರವ್ಯಗಳು, ಶಶಸ್ತ್ರಗಳು ಅಥವಾ ಸ್ಪೋಟಕ ವಸ್ತುಗಳನ್ನು ಗಡಿಯಾಚೆಯಿಂದ ತರುವ ಡ್ರೋನ್‍ಗಳ ಕುರಿತು ಮಾಹಿತಿ ನೀಡುವವರಿಗೆ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಘೋಷಿಸಿದರು,
eesanje/url_47_164_10.txt ADDED
@@ -0,0 +1,6 @@
 
 
 
 
 
 
 
1
+ ಬೂದಿ ಮುಚ್ಚಿದ ಕೆಂಡದಂತಿರುವ ಉತ್ತರಾಖಂಡದ ಬಂಭುಲ್‍ಪುರದಲ್ಲಿ ಬಿಗಿ ಬಂದೋಬಸ್ತ್
2
+ ಡೆಹ್ರಾಡೂನ್,ಫೆ.11- ಕೆಲವು ದಿನಗಳ ಹಿಂದೆ ಜಿಲ್ಲಾಡಳಿತದ ಅತಿಕ್ರಮಣ ವಿರೋಧಿ ಅಭಿಯಾನದ ವೇಳೆ ಹಿಂಸಾಚಾರ ಭುಗಿಲೆದ್ದಿದ್ದ ಹಲ್ದ್ವಾನಿಯ ಬಂಭುಲ್‍ಪುರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಉತ್ತರಾಖಂಡ ಸರ್ಕಾರ ನಾಲ್ಕು ಹೆಚ್ಚುವರಿ ಕೇಂದ್ರೀಯ ಅರೆಸೇನಾ ಪಡೆಗಳನ್ನು ಕರೆಸಿಕೊಂಡಿದೆ.
3
+ ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ ಉತ್ತರಾಖಂಡದ ಮುಖ್ಯ ಕಾರ್ಯದರ್ಶಿ ರಾಧಾ ರತುರಿ ಅವರು, ನೈನಿತಾಲ್ ಜಿಲ್ಲೆಯ ಹಲ್ದ್ವಾನಿ ನಗರದ ಬನ್‍ಭುಲ್‍ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮಲಿಕ್ ಕಾ ಬಗಿಚಾದಲ್ಲಿ ಫೆ.8ರಂದು ನಡೆದ ಅತಿಕ್ರಮಣ ಅಭಿಯಾನದ ದೃಷ್ಟಿಯಿಂದ ನಿರಂತರ ಪ್ರಯತ್ನಗಳು ನಡೆಯುತ್ತಿವೆ. ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಪ್ರಭಾವ ಬೀರಲು ಅರಾಜಕತಾವಾದಿ ಅಂಶಗಳಿಂದ ಮಾಡಲ್ಪಟ್ಟಿದೆ, ಆದ್ದರಿಂದ ಹೆಚ್ಚುವರಿ ಅರೆಸೈನಿಕ ಪಡೆಗಳ 04 ಕಂಪನಿಗಳ ಅವಶ್ಯಕತೆಯಿದೆ ಎಂದು ಮನವಿ ಮಾಡಿಕೊಂಡಿದ್ದಾರೆ.
4
+ “ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಮಕ್ಕಳೇ 2 ದಿನ ಊಟ ಬಿಡಿ” ಎಂದ ಶಾಸಕ
5
+ ಗುರುವಾರ ನಡೆದ ಅತಿಕ್ರಮಣ ವಿರೋಧಿ ಅಭಿಯಾನದ ನಂತರ ಭುಗಿಲೆದ್ದ ಹಿಂಸಾಚಾರದಲ್ಲಿ ಐವರು ಸಾವನ್ನಪ್ಪಿದ್ದು, ನಂತರ ಈ ಪ್ರದೇಶದಲ್ಲಿ ಕಫ್ರ್ಯೂ ವಿಸಲಾಗಿದೆ. ಹಿರಿಯ ಪೊಲೀಸ್ ಅೀಧಿಕ್ಷಕ (ಎಸ್‍ಎಸ್‍ಪಿ) ನೈನಿತಾಲ್ ಪಿಎನ್ ಮೀನಾ ಅವರು ಮೂರು ಪ್ರಕರಣಗಳನ್ನು ದಾಖಲಿಸಿದ್ದು, 19 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಅಧಿಕಾರಿಗಳ ಪ್ರಕಾರ ಪ್ರಕರಣಗಳಲ್ಲಿ ಸುಮಾರು 5,000 ಅಪರಿಚಿತರನ್ನು ಹೆಸರಿಸಲಾಗಿದೆ.
6
+ ಇದಕ್ಕೂ ಮೊದಲು, ಬನ್‍ಭೂಲ್‍ಪುರದಲ್ಲಿ ಗುರುವಾರ ಹಿಂಸಾಚಾರ ಭುಗಿಲೆದ್ದ ನಂತರ ಗೃಹ ಸಚಿವಾಲಯವು ನಾಲ್ಕು ಕಂಪನಿಗಳ ಅರೆಸೇನಾ ಪಡೆಗಳನ್ನು ನೈನಿತಾಲ್ ಜಿಲ್ಲೆಯ ಹಲ್ದ್ವಾನಿಗೆ ಧಾವಿಸಿವೆ. ಉತ್ತರಾಖಂಡ್ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಹಲ್ದ್ವಾನಿಗೆ ಭೇಟಿ ನೀಡಿದ್ದು, ಮಹಿಳಾ ಅಧಿಕಾರಿಗಳು ಸೇರಿದಂತೆ ಪೊಲೀಸ್ ಸಿಬ್ಬಂದಿಯ ಮೇಲಿನ ಹಲ್ಲೆ ಅತ್ಯಂತ ಖಂಡನೀಯ ಎಂದು ಹೇಳಿ್ದದ್ದಾರೆ. ದೇವಭೂಮಿಯಲ್ಲಿ ಕೆಲವರು ಕಾನೂನನ್ನು ಕೈಗೆತ್ತಿಕೊಂಡು ವಾತಾವರಣ ಹಾಳು ಮಾಡಲು ಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
eesanje/url_47_164_11.txt ADDED
@@ -0,0 +1,9 @@
 
 
 
 
 
 
 
 
 
 
1
+ ಹರಿಯಾಣದ ಏಳು ಜಿಲ್ಲೆಗಳಲ್ಲಿ ಇಂಟರ್ನೆಟ್‌ ಸಂಪರ್ಕ ಕಟ್
2
+ ಚಂಡೀಗಢ,ಫೆ.11- ಬಿಜೆಪಿ ನೇತೃತ್ವದ ಹರಿಯಾಣ ಸರ್ಕಾರವೂ ದೆಹಲಿಗೆ ತೆರಳುವ ರೈತರ ಪಾದಯಾತ್ರೆಯನ್ನು ತಡೆಯಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದೆ. ಮನೋಹರ್ ಲಾಲ್ ಖಟ್ಟರ್ ಸರ್ಕಾರ ಅಧಿಸೂಚನೆಯನ್ನು ಹೊರಡಿಸಿದ್ದು, ಮೊಬೈಲ್ ಫೋನ್‍ಗಳಲ್ಲಿ ಒದಗಿಸಲಾದ ಡಾಂಗಲ್ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಮತ್ತು ಧ್ವನಿ ಕರೆಗಳು ಮಾತ್ರ ಹೋಗುತ್ತವೆ ಎಂದು ಹೇಳಿದೆ.
3
+ 200ಕ್ಕೂ ಹೆಚ್ಚು ಸಂಘಟನೆಗಳ ರೈತರು ತಮ್ಮ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಮತ್ತು ಪಿಂಚಣಿ ಮತ್ತು ವಿಮಾ ಯೋಜನೆಗಳಿಗೆ ಖಾತರಿ ನೀಡುವ ಕಾನೂನನ್ನು ಒತ್ತಾಯಿಸುತ್ತಿದ್ದಾರೆ. ಮಂಗಳವಾರ ರಾತ್ರಿಯವರೆಗೆ ಅಂಬಾಲಾ, ಕುರುಕ್ಷೇತ್ರ, ಕೈತಾಲ್, ಜಿಂದ್, ಹಿಸಾರ್, ಫತೇಹಾಬಾದ್ ಮತ್ತು ಸಿರ್ಸಾ ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
4
+ ಏತನ್ಮಧ್ಯೆ, ದೆಹಲಿಗೆ ತೆರಳುವ ಮೊದಲು ನೆರೆಯ ರಾಜ್ಯದ ರೈತರು ಹರಿಯಾಣವನ್ನು ಪ್ರವೇಶಿಸದಂತೆ ಖಚಿತಪಡಿಸಿಕೊಳ್ಳಲು ಹರಿಯಾಣ-ಪಂಜಾಬ್ ಗಡಿಗಳನ್ನು ಮುಚ್ಚಲು ಪೊಲೀಸರು ಯೋಜಿಸಿದ್ದಾರೆ. ಈ ಕ್ರಮವು ಚಂಡೀಗಢ ಮತ್ತು ದೆಹಲಿ ನಡುವೆ ಪ್ರಯಾಣಿಸುವವರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ. ಈ ನಿಟ್ಟಿನಲ್ಲಿ ಪೊಲೀಸರು ಪರ್ಯಾಯ ಮಾರ್ಗಗಳನ್ನು ಘೋಷಿಸಿದ್ದಾರೆ.
5
+ ನಮ್ಮ ಸರ್ಕಾರಕ್ಕೆ225 ಶಾಸಕರ ಬಲವಿದೆ ; ಅಜಿತ್ ಪವಾರ್
6
+ ಮಂಗಳವಾರದಂದು ಅಪಧಮನಿಯ ರಸ್ತೆಗಳನ್ನು ತಪ್ಪಿಸುವಂತೆ ಹರಿಯಾಣ ಪೊಲೀಸರು ಪ್ರಯಾಣಿಕರಿಗೆ ಸಲಹೆ ನೀಡಿದ್ದಾರೆ. ಪ್ರತಿಭಟನೆಯಿಂದಾಗಿ ಸಂಚಾರ ವ್ಯತ್ಯಯವಾಗುವ ಎಚ್ಚರಿಕೆಯನ್ನೂ ನೀಡಿದೆ. ಹರಿಯಾಣ ಮತ್ತು ದೆಹಲಿ ನಡುವಿನ ಗಡಿಯಲ್ಲಿ, ಸಿಮೆಂಟ್ ತಡೆಗೋಡೆಗಳು, ಮುಳ್ಳುತಂತಿಗಳು ಮತ್ತು ಮರಳು ಚೀಲಗಳು ರಾಷ್ಟ್ರ ರಾಜಧಾನಿಗೆ ರೈತರು ದಾಟುವುದನ್ನು ತಡೆಯಲು ಸ್ಥಳದಲ್ಲಿವೆ. ಜಲ ಫಿರಂಗಿಗಳು ಮತ್ತು ಡ್ರೋನ್‍ಗಳನ್ನು ಸಹ ತರಲಾಗಿದೆ.
7
+ ಹರಿಯಾಣ ಪೊಲೀಸರಿಗೆ ನೆರವಾಗಲು ಐವತ್ತು ಕಂಪನಿಗಳ ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಯಾರಾದರೂ ಶಾಂತಿ ಕದಡಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಹರಿಯಾಣ ಪೊಲೀಸ್ ಮುಖ್ಯಸ್ಥ ಶತ್ರುಜೀತ್ ಕಪೂರ್ ಎಚ್ಚರಿಕೆ ನೀಡಿದ್ದಾರೆ. ರೈತರು ದೂರ ಉಳಿಯುವಂತೆ ಪೊಲೀಸರು ಸೂಚಿಸಿದ್ದು, ಸಾರ್ವಜನಿಕ ಆಸ್ತಿಗೆ ಹಾನಿಯಾದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಕೂಡ ರಾಜ್ಯ ಸರ್ಕಾರ ಸಂಪೂರ್ಣ ಶಾಂತಿಯನ್ನು ಖಚಿತಪಡಿಸುತ್ತದೆ ಎಂದು ಹೇಳಿದ್ದಾರೆ.
8
+ ಏತನ್ಮಧ್ಯೆ, ಕೇಂದ್ರವು ಪ್ರತಿಭಟನಾ ನಿರತ ರೈತರನ್ನು ನಾಳೆ ಮಾತುಕತೆಗೆ ಆಹ್ವಾನಿಸಿದೆ. ಆದರೆ ಸಭೆಯು ರೈತರು ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವಲ್ಲಿ ಕಾರಣವಾಗುವುದು ಅಸಂಭವವಾಗಿದೆ ಏಕೆಂದರೆ ಬೇಡಿಕೆಗಳಿಗೆ ವಿವರವಾದ ಚರ್ಚೆ ಮತ್ತು ಸಂಸತ್ತಿನ ನಡೆಗಳು ಬೇಕಾಗುತ್ತವೆ.
9
+ ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಈ ಪ್ರತಿಭಟನೆಯನ್ನು ಆಯೋಜಿಸುತ್ತಿದ್ದು, ಹಲವಾರು ರೈತ ಸಂಘಟನೆಗಳು ಅದರಿಂದ ದೂರ ಸರಿದಿವೆ. 2020-21ರಲ್ಲಿ ರೈತರ ಪ್ರತಿಭಟನೆಯ ಭಾಗವಾಗಿದ್ದ ಭಾರತೀಯ ಕಿಸಾನ್ ಯೂನಿಯನ್ (ಲಖೋವಲï), ಕೇಂದ್ರವು ಮೂರು ಕಾನೂನುಗಳನ್ನು ಹಿಂತೆಗೆದುಕೊಳ್ಳಲು ಕಾರಣವಾಯಿತು, ಅವರು ಮಂಗಳವಾರದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದರು.
eesanje/url_47_164_12.txt ADDED
@@ -0,0 +1,8 @@
 
 
 
 
 
 
 
 
 
1
+ ಚರಣ್‍ಸಿಂಗ್ ಭಾರತರತ್ನ ಲಭಿಸಿರುವುದು ದೇಶದ 90 ಕೋಟಿ ರೈತರಿಗೆ ಸಂದ ಗೌರವ : ಚೌಧರಿ
2
+ ಲಕ್ನೋ, ಫೆ 11 (ಪಿಟಿಐ) ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡಿರುವುದು ಭಾರತದ 90 ಕೋಟಿ ರೈತರಿಗೆ ಸಂದ ಗೌರವ ಎಂದು ಉತ್ತರ ಪ್ರದೇಶದ ಸಚಿವ ಲಕ್ಷ್ಮೀ ನಾರಾಯಣ ಚೌಧರಿ ಹೇಳಿದ್ದಾರೆ. ಫೆಬ್ರವರಿ 9 ರಂದು ಮರಣೋತ್ತರವಾಗಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಪಡೆದ ಸಿಂಗ್ ಅವರು ರೈತರ ಸಮಸ್ಯೆಗಳಿಗೆ ಹೋರಾಡಿದ ಮಹಾತ್ಮ ಎಂದು ಅವರು ಬಣ್ಣಿಸಿದ್ದಾರೆ.
3
+ ಪಿಟಿಐ ಜೊತೆ ಮಾತನಾಡಿದ ಚೌಧರಿ, ಸ್ವಾತಂತ್ರ್ಯದ ನಂತರ, ಚೌಧರಿ ಚರಣ್ ಸಿಂಗ್ ಅವರು ರೈತರ ಮೆಸ್ಸಿಹ್ ಎಂದು ಪರಿಗಣಿಸಲ್ಪಟ್ಟ ಏಕೈಕ ರಾಜ್ಯವಾಗಿದೆ, ಅವರು ದೇಶದ ಅಭಿವೃದ್ಧಿಗೆ ಕಾರಣವಾಗುವ ಮಾರ್ಗವು ಅದರ ಮೂಲಕ ಹಾದುಹೋಗುತ್ತದೆ ಎಂದು ಹೇಳಿದರು.
4
+ ರೈತರ ಹಿತಾಸಕ್ತಿ ಮತ್ತು ಕಲ್ಯಾಣಕ್ಕಾಗಿ ಅವರು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಅವರ ಹೆಸರು ಯಾವಾಗಲೂ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುತ್ತದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಉದ್ಯಮದ ಸಚಿವರು ಹೇಳಿದರು. ಚೌಧರಿ ಚರಣ್ ಅವರಿಗೆ ಭಾರತ ರತ್ನ ನೀಡಿರುವುದು ಭಾರತದ 90 ಕೋಟಿ ರೈತರಿಗೆ ಗೌರವವಾಗಿದೆ ಎಂದು ಅವರು ಹೇಳಿದರು.
5
+ ದೇಶದ ರೈತರ ಕಲ್ಯಾಣಕ್ಕಾಗಿ ಭಾರತ ರತ್ನ ಪುರಸ್ಕøತರು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಯುಪಿ ಕ್ಯಾಬಿನೆಟ್ ಸಚಿವರು, ಸಿಂಗ್ ಅವರು 1953 ರ ಹಿಡುವಳಿಗಳ ಬಲವರ್ಧನೆ ಕಾಯಿದೆ ಮತ್ತು ಉತ್ತರ ಪ್ರದೇಶ ಜಮೀನ್ದಾರಿ ಮತ್ತು ಭೂಸುಧಾರಣಾ ಕಾಯ್ದೆಯಂತಹ ಹಲವಾರು ರೈತ ಪರ ಕಾನೂನುಗಳನ್ನು ತಂದರು ಎಂದು ಹೇಳಿದರು. ಮಾಜಿ ಪ್ರಧಾನಿಯೊಂದಿಗಿನ ಅವರ ಸಂಬಂಧವನ್ನು ನೆನಪಿಸಿಕೊಂಡ ಚೌಧರಿ, ಅವರೊಂದಿಗಿನ ನನ್ನ ಒಡನಾಟವು ನನ್ನ ಬಾಲ್ಯದ ದಿನಗಳಿಂದಲೂ ಇತ್ತು. ನಾನು ಅವರನ್ನು ಮೊದಲು ಭೇಟಿಯಾದದ್ದು 1967 ರಲ್ಲಿ. ಆ ಸಮಯದಲ್ಲಿ ನಾನು ಹೈಸ್ಕೂಲ್ (10 ನೇ ತರಗತಿ) ನಲ್ಲಿದ್ದೆ.
6
+ ಅವರ (ಚರಣ್ ಸಿಂಗ್) ಆಶೀರ್ವಾದದಿಂದ, ನಾನು ಶಾಸಕನಾಗಿದ್ದೇನೆ (ಫೋಮ್ ಛಾಟಾ). ನಾನು ವಿದ್ಯಾರ್ಥಿಯಾಗಿದ್ದಾಗ ಕೋಸಿ ಕಾಲನ್ (ಮಥುರಾದಲ್ಲಿ) ಮಂಡಿ ಸಮಿತಿಯ ಅಧ್ಯಕ್ಷನಾಗುವ ಗೌರವವನ್ನು ಹೊಂದಿದ್ದೇನೆ. ಇದು 1977 ರಲ್ಲಿ, ನಾನು ಎಂಎ ಮುಗಿಸಿ ಎಲ್‍ಎಲ್‍ಬಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದೆ. ನಂತರ 1985ರಲ್ಲಿ ನನಗೆ ಪಕ್ಷ (ಲೋಕದಳ) ಟಿಕೆಟ್ ನೀಡಿತ್ತು.
7
+ “ನಿಮ್ಮ ಪೋಷಕರು ನನಗೆ ಮತ ಹಾಕದಿದ್ದರೆ ಮಕ್ಕಳೇ 2 ದಿನ ಊಟ ಬಿಡಿ” ಎಂದ ಶಾಸಕ
8
+ ಚೌಧರಿ ಅವರು ಯುಪಿ ವಿಧಾನಸಭೆಯಲ್ಲಿ ಐದು ಬಾರಿ ಮಥುರಾ ಜಿಲ್ಲೆಯ ಛಾಟಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಅವರು 1985 ರಿಂದ 1989 ರವರೆಗೆ ಲೋಕದಳದ ಶಾಸಕರಾಗಿದ್ದರು ಮತ್ತು 1996 ರಿಂದ 2002 ರವರೆಗೆ ಕಾಂಗ್ರೆಸ್ ಶಾಸಕರಾಗಿದ್ದರು. 2007 ರಿಂದ 2012 ರವರೆಗೆ ಅವರು ಅದೇ ಸ್ಥಾನದಿಂದ ಬಿಎಸ್ಪಿ ಶಾಸಕರಾಗಿದ್ದರು. 2017 ರಿಂದ, ಚೌಧ��ಿ ಬಿಜೆಪಿ ಟಿಕೆಟ್‍ನಲ್ಲಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಛಾಟಾವನ್ನು ಪ್ರತಿನಿಧಿಸುತ್ತಿದ್ದಾರೆ.