CoolCoder44 commited on
Commit
aefb762
·
verified ·
1 Parent(s): 9a3c0a3

356b48bd5b031218f943b31ccac397240110e5b7c16a735141d10613accdbaea

Browse files
Files changed (50) hide show
  1. eesanje/url_47_17_1.txt +5 -0
  2. eesanje/url_47_17_10.txt +10 -0
  3. eesanje/url_47_17_11.txt +9 -0
  4. eesanje/url_47_17_12.txt +7 -0
  5. eesanje/url_47_17_2.txt +6 -0
  6. eesanje/url_47_17_3.txt +7 -0
  7. eesanje/url_47_17_4.txt +7 -0
  8. eesanje/url_47_17_5.txt +6 -0
  9. eesanje/url_47_17_6.txt +5 -0
  10. eesanje/url_47_17_7.txt +6 -0
  11. eesanje/url_47_17_8.txt +8 -0
  12. eesanje/url_47_17_9.txt +9 -0
  13. eesanje/url_47_180_1.txt +10 -0
  14. eesanje/url_47_180_10.txt +9 -0
  15. eesanje/url_47_180_11.txt +8 -0
  16. eesanje/url_47_180_12.txt +8 -0
  17. eesanje/url_47_180_2.txt +7 -0
  18. eesanje/url_47_180_3.txt +7 -0
  19. eesanje/url_47_180_4.txt +7 -0
  20. eesanje/url_47_180_5.txt +8 -0
  21. eesanje/url_47_180_6.txt +10 -0
  22. eesanje/url_47_180_7.txt +6 -0
  23. eesanje/url_47_180_8.txt +6 -0
  24. eesanje/url_47_180_9.txt +7 -0
  25. eesanje/url_47_181_1.txt +6 -0
  26. eesanje/url_47_181_10.txt +6 -0
  27. eesanje/url_47_181_11.txt +9 -0
  28. eesanje/url_47_181_12.txt +5 -0
  29. eesanje/url_47_181_2.txt +6 -0
  30. eesanje/url_47_181_3.txt +8 -0
  31. eesanje/url_47_181_4.txt +6 -0
  32. eesanje/url_47_181_5.txt +14 -0
  33. eesanje/url_47_181_6.txt +8 -0
  34. eesanje/url_47_181_7.txt +7 -0
  35. eesanje/url_47_181_8.txt +9 -0
  36. eesanje/url_47_181_9.txt +7 -0
  37. eesanje/url_47_182_1.txt +8 -0
  38. eesanje/url_47_182_10.txt +7 -0
  39. eesanje/url_47_182_11.txt +8 -0
  40. eesanje/url_47_182_12.txt +8 -0
  41. eesanje/url_47_182_2.txt +6 -0
  42. eesanje/url_47_182_3.txt +5 -0
  43. eesanje/url_47_182_4.txt +5 -0
  44. eesanje/url_47_182_5.txt +6 -0
  45. eesanje/url_47_182_6.txt +6 -0
  46. eesanje/url_47_182_7.txt +6 -0
  47. eesanje/url_47_182_8.txt +7 -0
  48. eesanje/url_47_182_9.txt +6 -0
  49. eesanje/url_47_183_1.txt +14 -0
  50. eesanje/url_47_183_10.txt +12 -0
eesanje/url_47_17_1.txt ADDED
@@ -0,0 +1,5 @@
 
 
 
 
 
 
1
+ ಇಯರ್‌ಫೋನ್‌ ವ್ಯಾಮೋಹದಿಂದ ರೈಲಿಗೆ ಬಲಿಯಾದ ಪೊಲೀಸಪ್ಪ
2
+ ,
3
+ ನವದೆಹಲಿ,ಸೆ.6-ಇಯರ್‌ ಪೋನ್‌ ವ್ಯಾಮೋಹಕ್ಕೆ ಪೊಲೀಸ್‌‍ ಪೇದೆಯೊಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.ಇಯರ್‌ಫೋನ್‌ ಹಾಕಿಕೊಂಡು ಹೋಗುತ್ತಿದ್ದ ಪೊಲೀಸಪ್ಪನಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ಆತ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
4
+ ಪ್ರಾಣ ಕಳೆದುಕೊಂಡ ನತದೃಷ್ಟ ಪೊಲೀಸಪ್ಪನನ್ನು ಶಾಮ್ಲಿ ಜಿಲ್ಲೆಯ ನಿವಾಸಿ ಅಕ್ಷಯ್‌ವೀರ್‌ ಸಿಂಗ್‌ ಎಂದು ಗುರುತಿಸಲಾಗಿದೆ.ನಿನ್ನೆ ಅವರು ಶಹಜಹಾನ್‌ಪುರದ ಇಂದಿರಾನಗರ ರೈಲ್ವೆ ಕ್ರಾಸಿಂಗ್‌ನಲ್ಲಿ ಇಬ್ಬರು ಪುರುಷರೊಂದಿಗೆ ರೈಲ್ವೆ ಹಳಿ ದಾಟುತ್ತಿದ್ದರು.
5
+ ಈ ಸಂದರ್ಭದಲ್ಲಿ ರೈಲು ಬಂದರೂ ಇಯರ್‌ಫೋನ್‌ ಹಾಕಿಕೊಂಡಿದ್ದರಿಂದ ರೈಲು ಬರುವುದು ತಿಳಿಯದ ಕಾರಣ ರೈಲು ಅಪ್ಪಳಿಸಿ ಆತ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.ಸಿಂಗ್‌ಗೆ ರೈಲು ಅಪ್ಪಳಿಸುವ ದೃಶ್ಯ ಸಿಸಿ ಟಿವಿಯಲ್ಲಿ ಸೇರೆಯಾಗಿದೆ. ಅಪಘಾತದಲ್ಲಿ ಅವರ ಒಂದು ಕಾಲು ತುಂಡಾಗಿದ್ದು, ಅತಿಯಾದ ರಕ್ತಸ್ರಾವದಿಂದ ಚಿಕಿತ್ಸೆ ವೇಳೆ ಮತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
eesanje/url_47_17_10.txt ADDED
@@ -0,0 +1,10 @@
 
 
 
 
 
 
 
 
 
 
 
1
+ 2025ರ ಜುಲೈ ವೇಳೆಗೆ ಎತ್ತಿನಹೊಳೆ ಯೋಜನೆ ಕಾಮಗಾರಿ ಪೂರ್ಣ : ಸಚಿವ ಪರಮೇಶ್ವರ್
2
+ ತುಮಕೂರು,ಸೆ.5-ಬಯಲುಸೀಮೆ ಪ್ರದೇಶಗಳಿಗೆ ಶಾಶ್ವತ ನೀರಾವರಿ ಯೋಜನೆ ಕಲ್ಪಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಕೈಗೊಂಡಿರುವ ಎತ್ತಿನಹೊಳೆ ಯೋಜನೆ ಕಾಮಗಾರಿ 2025ರ ಜುಲೈ ಮಾಹೆಯೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
3
+ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮೊದಲ ಹಂತದ ಎತ್ತಿನಹೊಳೆ ಯೋಜನೆಗೆ ಚಾಲನೆ ನೀಡುತ್ತಿರುವ ಕುರಿತು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಾಳೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1ರ ಕಾಮಗಾರಿ ಉದ್ಘಾಟನೆಯಾಗಲಿದೆ ಎಂದರು.
4
+ ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆಬ್ಬನಹಳ್ಳಿ ವಿತರಣಾ ತೊಟ್ಟಿ 4ರಲ್ಲಿ ನಾಳೆ ಮಧ್ಯಾಹ್ನ 12 ಗಂಟೆಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ 1ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
5
+ ಸದರಿ ಕಾಮಗಾರಿಗೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಾಯೋಗಿಕವಾಗಿ ಪರೀಕ್ಷೆ ನಡೆಸಿದ್ದಾರೆ. ಕಾಮಗಾರಿ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ವಾಣಿವಿಲಾಸ ಸಾಗರ ಅಣೆಕಟ್ಟಿಗೆ 1500 ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ಮುಂದಿನ ವರ್ಷ ಅರಸಿಕೆರೆ, ತಿಪಟೂರು ಭಾಗದಲ್ಲಿನ ಕಾಮಗಾರಿ ಪೂರ್ಣಗೊಂಡು ತುಮಕೂರಿಗೆ ನೀರು ಹರಿಯಲಿದ್ದು, ಇದರಲ್ಲಿ 0.20 ಟಿಎಂಸಿ ನೀರನ್ನು ವಸಂತನರಸಾಪುರಕ್ಕೆ ಕುಡಿಯುವ ಉದ್ದೇಶಕ್ಕಾಗಿ ಪೂರೈಕೆ ಮಾಡಲಾಗುವುದು ಎಂದರು.
6
+ ಎತ್ತಿನಹೊಳೆ ಯೋಜನೆಗೊಳಪಡುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಹಾಸನ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಿಗೆ ಹಂಚಿಕೆಯಾದ 24.01 ಟಿಎಂಸಿ ನೀರಿನಲ್ಲಿ ಜಿಲ್ಲೆಗೆ 5.470 ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ಕುಡಿಯುವ ನೀರಿಗಾಗಿ 2.294 ಟಿಎಂಸಿ, ಸಣ್ಣ ನೀರಾವರಿಯ 113 ಕೆರೆಗಳ ಭರ್ತಿ ಮಾಡಲು 3.446 ಟಿಎಂಸಿ ನೀರನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
7
+ ಎತ್ತಿನ ಹೊಳೆ ಯೋಜನೆಗಾಗಿ ಅಗತ್ಯವಿರುವ 3117.26 ಎಕರೆ ಪ್ರದೇಶದ ಪೈಕಿ ಸ್ವಾಧೀನಪಡಿಸಿಕೊಂಡ 2022 ಎಕರೆ ವಿಸ್ತೀರ್ಣದ ಭೂಮಿಗೆ ಸರ್ಕಾರದಿಂದ ಹಣ ಮಂಜೂರಾಗಿದೆ. ಈವರೆಗೂ ಶೇ.80ರಷ್ಟು ಭೂಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಮಾಲೀಕರಿಗೆ ಅವಾರ್ಡ್ ಹಣ ವಿತರಿಸಲು ಸರ್ಕಾರದಿಂದ 1200 ಕೋಟಿ ರೂ.ಗಳು ಬಿಡುಗಡೆಯಾಗಿದ್ದು, ಈಗಾಗಲೇ ಭೂ ಮಾಲೀಕರಿಗೆ 448 ಕೋಟಿ ರೂ.ಗಳನ್ನು ವಿತರಿಸಲಾಗಿದೆ. ಉಳಿದ 434 ಕೋಟಿ ರೂ. ಗಳು ಎತ್ತಿನಹೊಳೆ ಭೂ ಸ್ವಾಧೀನಾಧಿಕಾರಿಗಳ ಖಾತೆಯಲ್ಲಿದೆ. ಭೂ ಮಾಲೀಕರಿಂದ ಅಗತ್ಯ ದಾಖಲೆಗಳು ಸಲ್ಲಿಕೆಯಾಗಿ ಅನುಮೋದನೆಗೊಂಡ ನಂತರ ಅವಾರ್ಡ್ ಹಣವನ್ನು ನೀಡಲಾಗುವುದು ಎಂದರು.
8
+ ಭದ್ರಾ ಮೇಲ್ದಂಡೆ :ಭದ್ರಾ ಮೇಲ್ದಂಡೆ ಯ��ಜನೆಗೆ ಸಂಬಂಧಿಸಿದಂತೆ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೊರಟಗೆರೆ ತಾಲ್ಲೂಕಿನ ಬೈರಗೊಂಡನಹಳ್ಳಿ ಗ್ರಾಮದಲ್ಲಿ 2500 ಎಕರೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನಲ್ಲಿ 2500 ಎಕರೆ ಸೇರಿ ಒಟ್ಟು 5000 ಎಕರೆ ಭೂಮಿಯಲ್ಲಿ ಕೈಗೊಳ್ಳಲು ಭದ್ರಾ ಮೇಲ್ದಂಡೆ ಯೋಜನೆಯನ್ನು ರೂಪಿಸಲಾಗಿತ್ತು.
9
+ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರವು ಭೂಸ್ವಾಧೀನ ದರವನ್ನು ಪ್ರತಿ ಎಕರೆಗೆ ದೊಡ್ಡಬಳ್ಳಾಪುರ ತಾಲ್ಲೂಕಿಗೆ 32ಲಕ್ಷ ಹಾಗೂ ಕೊರಟಗೆರೆ ತಾಲ್ಲೂಕಿಗೆ 12 ಲಕ್ಷ ರೂ.ಗಳೆಂದು ನಿಗಧಿಪಡಿಸಿದ್ದರಿಂದ ಕೊರಟಗೆರೆ ತಾಲ್ಲೂಕಿನ ರೈತರು ಈ ಯೋಜನೆ ನಮಗೆ ಬೇಡವೆಂದು ನಿರಾಕರಿಸಿದಾಗ ಸರ್ಕಾರವು ಯೋಜನೆಯನ್ನು ಕೈಬಿಟ್ಟಿತು ಎಂದರು.
10
+ ಪೂರ್ಣಗೊಂಡ ಕಾಲುವೆಗಳ ವಿವರ :ಎತ್ತಿನಹೊಳೆ ಯೋಜನೆಯಡಿ ಜಿಲ್ಲೆಯ ತಿಪಟೂರಿನಲ್ಲಿ 43.45 ಕಿ.ಮೀ, ಚಿಕ್ಕನಾಯಕನಹಳ್ಳಿ 12.75 ಕಿ.ಮೀ, ತುರುವೆಕೆರೆ 2.15 ಕಿ.ಮೀ, ಗುಬ್ಬಿ 41.48 ಕಿ.ಮೀ, ತುಮಕೂರು ಗ್ರಾಮಾಂತರ 31.8, ಕೊರಟಗೆರೆ 19.091, ಮಧುಗಿರಿ(ಫೀಡರ್ ಕಾಲುವೆ) 40.90 ಕಿ.ಮೀ, ಪಾವಗಡ 42.10 ಕಿ.ಮೀ. ಕಾಲುವೆ ಹಾದು ಹೋಗಲಿದೆ.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿ.ಪಂ. ಸಿಇಒ ಪ್ರಭು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
eesanje/url_47_17_11.txt ADDED
@@ -0,0 +1,9 @@
 
 
 
 
 
 
 
 
 
 
1
+ ಕೇಂದ್ರ ಸರ್ಕಾರದಿಂದ ಪಿಂಚಣಿದಾರರಿಗೆ ಗುಡ್ ನ್ಯೂಸ್
2
+ , , 1, 2025
3
+ ನವದೆಹಲಿ,ಸೆ.5-ಪ್ರಮುಖ ಬೆಳವಣಿಗೆಯೊಂದರಲ್ಲಿ, ನೌಕರರ ಪಿಂಚಣಿ ಯೋಜನೆ (ಇಪಿಎಸ್)ಗಾಗಿ ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.ಈ ವ್ಯವಸ್ಥೆಯ ಮೂಲಕ ಪಿಂಚಣಿದಾರರು 2025ರ ಜನವರಿ 1 ರಿಂದ ಭಾರತದ ಯಾವುದೇ ಬ್ಯಾಂಕ್ನಿಂದ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ.
4
+ ರಾಷ್ಟ್ರೀಯ ಮಟ್ಟದ ಕೇಂದ್ರೀಕೃತ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿರುವುದು ಸಿಪಿಪಿಎಸ್ನಲ್ಲಿ ಮಹತ್ವದ ಬದಲಾವಣೆಯಾಗಿದೆ. ಇದರಿಂದ ಭಾರತದಾದ್ಯಂತದ ಯಾವುದೇ ಬ್ಯಾಂಕ್, ಯಾವುದೇ ಶಾಖೆಯ ಮೂಲಕ ಪಿಂಚಣಿ ಪಡೆಯಲು ಸಾಧ್ಯವಾಗಲಿದೆ ಎಂದು ಸರ್ಕಾರ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
5
+ ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ಕಾರ್ಮಿಕ ಸಚಿವ ಡಾ.ಮನ್ಸುಖ್ ಮಾಂಡವಿಯಾ, ಕೇಂದ್ರೀಕೃತ ಪಿಂಚಣಿ ಪಾವತಿ ವ್ಯವಸ್ಥೆ (ಸಿಪಿಪಿಎಸ್) ಅನುಮೋದನೆಯು ಇಪಿಎಫ್ಒ ಆಧುನೀಕರಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಪಿಂಚಣಿದಾರರು ಇನ್ನು ಮುಂದೆ ತಮ ಪಿಂಚಣಿಯನ್ನು ದೇಶದ ಯಾವುದೇ ಭಾಗದಲ್ಲಿನ ಯಾವುದೇ ಬ್ಯಾಂಕ್, ಯಾವುದೇ ಶಾಖೆಯಿಂದ ಪಡೆಯಬಹುದಾಗಿದೆ.
6
+ ಹೊಸ ವ್ಯವಸ್ಥೆಯು ಪಿಂಚಣಿದಾರರು ಎದುರಿಸುತ್ತಿರುವ ದೀರ್ಘಕಾಲದ ಸಮಸ್ಯೆಗಳನ್ನು ಪರಿಹರಿಸಲಿದೆ ಮತ್ತು ತಡೆರಹಿತ ಹಾಗೂ ಪರಿಣಾಮಕಾರಿ ಪಿಂಚಣಿ ವಿತರಣೆಗೆ ಅನುವು ಮಾಡಿಕೊಡಲಿದೆ. ಇಪಿಎಫ್ಒ ಅನ್ನು ಹೆಚ್ಚು ದೃಢವಾದ, ಸ್ಪಂದಿಸುವ ಮತ್ತು ತಂತ್ರಜ್ಞಾನ – ಶಕ್ತ ಸಂಸ್ಥೆಯಾಗಿ ಪರಿವರ್ತಿಸುವ ನಮ ನಿರಂತರ ಪ್ರಯತ್ನಗಳಲ್ಲಿ ಇದು ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಹೇಳಿದರು.
7
+ 78 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಅನುಕೂಲ:ಸಿಪಿಪಿಎಸ್ ಇಪಿಎಫ್ಒನ 78 ಲಕ್ಷಕ್ಕೂ ಹೆಚ್ಚು ಇಪಿಎಸ್ ಪಿಂಚಣಿದಾರರಿಗೆ ಅನುಕೂಲವಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸುಧಾರಿತ ಐಟಿ ಮತ್ತು ಬ್ಯಾಂಕಿಂಗ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವ ಮೂಲಕ ಇದು ಪಿಂಚಣಿದಾರರಿಗೆ ಹೆಚ್ಚು ಪರಿಣಾಮಕಾರಿ, ತಡೆರಹಿತ ಮತ್ತು ಬಳಕೆದಾರ ಸ್ನೇಹಿ ಅನುಭವವನ್ನು ನೀಡುತ್ತದೆ ಎಂದು ಸರ್ಕಾರ ಹೇಳಿದೆ.
8
+ ಪಿಂಚಣಿದಾರನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡಾಗ ಅಥವಾ ತನ್ನ ಬ್ಯಾಂಕ್ ಅಥವಾ ಶಾಖೆ ಬದಲಾಯಿಸಿದಾಗಲೂ ಸಹ ಪಿಂಚಣಿ ಪಾವತಿ ಆದೇಶಗಳನ್ನು (ಪಿಪಿಒ) ಒಂದು ಕಚೇರಿಯಿಂದ ಇನ್ನೊಂದಕ್ಕೆ ವರ್ಗಾಯಿಸುವ ಅಗತ್ಯವಿಲ್ಲದೇ ಭಾರತದಾದ್ಯಂತ ಪಿಂಚಣಿ ಪಡೆಯುವಿಕೆಯನ್ನು ಸಾಧ್ಯವಾಗಿಸುತ್ತದೆ ಎಂದು ಅದು ಹೇಳಿದೆ. ನಿವೃತ್ತಿಯ ನಂತರ ಬೇರೆ ಊರುಗಳಿಗೆ ತೆರಳುವ ಪಿಂಚಣಿದಾರರಿಗೆ ಇದು ಬಹಳ ಅನುಕೂಲ ಒದಗಿಸಲಿದೆ.
9
+ 2025 ರ ಜನವರಿ 1 ರಿಂದ ಇಪಿಎಫ್ಒನ ಐಟಿ ಆಧುನೀಕರಣ ಯೋಜನೆ ಕೇಂದ್ರೀಕೃತ ಐಟಿ ಎನೇಬಲ್ಡ್ ಸಿಸ್ಟಮ್ (ಸಿಟಿಇಎಸ್ 2.01) ಭಾಗವಾಗಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗುವುದ��. ಮುಂದಿನ ಹಂತದಲ್ಲಿ, ಸಿಪಿಪಿಎಸ್ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಗೆ (ಎಬಿಪಿಎಸ್) ಸುಗಮವಾಗಿ ಬದಲಾವಣೆ ಮಾಡುವುದು ಇದರಿಂದ ಸಾಧ್ಯವಾಗಲಿದೆ.
eesanje/url_47_17_12.txt ADDED
@@ -0,0 +1,7 @@
 
 
 
 
 
 
 
 
1
+ ನೀಟ್‌ ಪರೀಕ್ಷೆ ತಯಾರಿ ನಡೆಸುತ್ತಿದ್ದ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ
2
+ ' , 15th
3
+ ಜೈಪುರ,ಸೆ.5-ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ಪದವಿಪೂರ್ವ) (ನೀಟ್‌) ಗೆ ತಯಾರಿ ನಡೆಸುತ್ತಿದ್ದ 21 ವರ್ಷದ ವಿದ್ಯಾರ್ಥಿ ಕಳೆದ ರಾತ್ರಿ ರಾಜಸ್ಥಾನದ ಕೋಟಾದಲ್ಲಿ ಆತಹತ್ಯೆ ಮಾಡಿಕೊಂಡಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
4
+ ಉತ್ತರ ಪ್ರದೇಶದ ಮಥುರಾದ ವಿದ್ಯಾರ್ಥಿಯು ಒಂದು ವರ್ಷದ ಹಿಂದೆ ಕೋಟಾಕ್ಕೆ ಆಗಮಿಸಿ ತನ್ನ ಬಾಡಿಗೆ ಮನೆಯಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯೊಂದಿಗೆ, ಕೋಟಾದಲ್ಲಿ 16 ನೇ, ಸಿಕರ್‌ ಮತ್ತು ಜೈಪುರದಲ್ಲಿ ತಲಾ ಒಬ್ಬರು ಸೇರಿದಂತೆ ರಾಜಸ್ಥಾನದಾದ್ಯಂತ 18 ಕ್ಕೆ ತಲುಪಿದೆ.
5
+ ಕೋಟಾ (ಪ್ರಥಮ) ಉಪ ಪೊಲೀಸ್‌‍ ಅಧೀಕ್ಷಕರ ಪ್ರಕಾರ, ಉತ್ತರ ಪ್ರದೇಶದ ಮಥುರಾದ ವಿದ್ಯಾರ್ಥಿ ರಾಜೇಶ್‌ ಟೈಲರ್‌ ಒಂದು ವರ್ಷದ ಹಿಂದೆ ಕೋಟಾಕ್ಕೆ ಆಗಮಿಸಿ ಜವಾಹರ್‌ ನಗರ ಪ್ರದೇಶದಲ್ಲಿ ಕಳೆದ ರಾತ್ರಿ ತನ್ನ ಬಾಡಿಗೆ ನಿವಾಸದಲ್ಲಿ ಆತಹತ್ಯೆ ಮಾಡಿಕೊಂಡಿದ್ದಾನೆ.
6
+ ಹಲವಾರು ಮನವಿ ಮಾಡಿಕೊಂಡರೂ ಸ್ಪಂದಿಸದ ಹಿನ್ನಲೆಯಲ್ಲಿ ಮನೆಯ ಮಾಲೀಕರಿಗೆ ಅನುಮಾನ ಬಂದಾಗ ಈ ಘಟನೆ ಬಯಲಿಗೆ ಬಂದಿದೆ. ಬಳಿಕ ಸ್ಥಳೀಯ ಪೊಲೀಸ್‌‍ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಠಾಣಾಧಿಕಾರಿ ಹರಿ ನಾರಾಯಣ ಶರ್ಮಾ ಅವರು ತಕ್ಷಣ ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಮೃತದೇಹ ಪತ್ತೆಯಾಗಿದೆ. ಆತನ ಸ್ಥಳದಿಂದ ಇದುವರೆಗೆ ಯಾವುದೇ ಆತಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
7
+ ಸ್ಥಳವನ್ನು ಪರೀಕ್ಷಿಸಲು ಎಫ್‌ಎಸ್‌‍ಎಲ್‌ ತಂಡವನ್ನು ಸಹ ಕರೆಯಲಾಗಿದೆ. ಆತನ ಪೋಷಕರಿಗೂ ಮಾಹಿತಿ ನೀಡಲಾಗಿತ್ತು. ಕಳೆದ ಕೆಲವು ದಿನಗಳಲ್ಲಿ ವಿದ್ಯಾರ್ಥಿಯಲ್ಲಿ ಯಾವುದೇ ವರ್ತನೆಯ ಬದಲಾವಣೆಗಳ ಬಗ್ಗೆ ನಾವು ಅವರನ್ನು ಪ್ರಶ್ನಿಸುತ್ತೇವೆ ಎಂದು ಡಿಎಸ್ಪಿ ಹೇಳಿದರು.
eesanje/url_47_17_2.txt ADDED
@@ -0,0 +1,6 @@
 
 
 
 
 
 
 
1
+ ಉತ್ತರ ಪ್ರದೇಶ : ಸರಣಿ ಅಪಘಾತಕ್ಕೆ ಇಡಿ ಕುಟುಂಬ ಬಲಿ
2
+ 5 - '
3
+ ಲಕ್ನೋ,ಸೆ.6-ಸರಣಿ ಅಪಘಾತ ಸಂಭವಿಸಿ ಒಂದೇ ಕುಟುಂಬದ ಐವರು ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಮಧ್ಯರಾತ್ರಿ ನಡೆದಿದೆ.ವೇಗವಾಗಿ ಬಂದ ಕಾರು ಇತರೆ ಎರಡು ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮಗು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಗಾಯಗೊಂಡವರಲ್ಲಿ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
4
+ ಉತ್ತರಪ್ರದೇಶದ ಮೆಹಮೂದಾಬಾದ್‌ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಲಕ್ನೋ ಕಡೆಗೆ ಹೋಗುತ್ತಿದ್ದ ಅತಿವೇಗದ ಕಾರು ಮೊದಲು ಆಟೋರಿಕ್ಷಾಕ್ಕೆ ಡಿಕ್ಕಿ ಹೊಡೆದು ನಂತರ ವಿರುದ್ಧ ದಿಕ್ಕಿನಿಂದ ಬಂದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡನೇ ಕಾರು ಸಮೀಪದ ಹೊಂಡಕ್ಕೆ ಹಾರಿದೆ.
5
+ ಸ್ಥಳೀಯರು ಕೂಡಲೇ ರಕ್ಷಣೆ ಮಾಡಲು ಮುಂದಾದರು. ಮೂವರು ಸ್ಥಳದಲ್ಲೇ ಮತಪಟ್ಟರೆ, ಇಬ್ಬರು ಚಿಕಿತ್ಸೆ ವೇಳೆ ಕೊನೆಯುಸಿರೆಳೆದಿದ್ದಾರೆ. ಮತರೆಲ್ಲರೂ ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಟೋದಲ್ಲಿ ಹೋಗುತ್ತಿದ್ದರು.
6
+ ಮತರನ್ನು ಇರ್ಫಾನ್‌, ವಹಿದುನ್‌ ನಿಶಾ, ಅಜೀಜ್‌ ಅಹದ್‌ (ಅಲಿಯಾಸ್‌‍ ಬುದ್ಧ), ತಾಹಿರಾ ಬಾನೋ ಮತ್ತು ಸಬ್ರೀನ್‌ ಎಂದು ಗುರುತಿಸಲಾಗಿದೆ, ಎಲ್ಲರೂ ಬಾರಾಬಂಕಿ ಜಿಲ್ಲೆಯ ಒಂದೇ ಕುಟುಂಬದವರು. ಕಾರು ಚಾಲಕ ವಿವೇಕ್‌ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.
eesanje/url_47_17_3.txt ADDED
@@ -0,0 +1,7 @@
 
 
 
 
 
 
 
 
1
+ ಕೋಲ್ಕತ್ತಾ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ : ಸಿಬಿಐ
2
+ - , :
3
+ ನವದೆಹಲಿ,ಸೆ.6-ಕೋಲ್ಕತ್ತಾದ ಆರ್‌ಜಿಕರ್‌ ಆಸ್ಪತ್ರೆಯಲ್ಲಿ ರೇಪ್‌ ಅಂಡ್‌ ಮರ್ಡರ್‌ಗೆ ಬಲಿಯಾಗಿರುವ ವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿಲ್ಲ. ಬಂಧಿತ ವ್ಯಕ್ತಿ ಸಂಜಯ್‌ ರಾಯ್‌ ಮಾತ್ರ ಆರೋಪಿಯಾಗಿದ್ದಾನೆ ಎಂದು ಸಿಬಿಐ ಸ್ಪಷ್ಟಪಡಿಸಿದೆ ಎಂದು ಮೂಲಗಳು ತಿಳಿಸಿವೆ.
4
+ ಕೋಲ್ಕತ್ತಾ ಹೈಕೋರ್ಟ್‌ ಸೂಚನೆ ಮೇರೆಗೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ತನಿಖೆಯನ್ನು ಪೂರ್ಣಗೊಳಿಸಿದ್ದು ಶೀಘ್ರದಲ್ಲೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ಉಲ್ಲೇಖಿಸಿವೆ.
5
+ ನಾನು ಐದು ದಿನಗಳ ಕಾಲಾವಕಾಶ ಕೇಳಿದೆೞ (ಪೊಲೀಸರು ಫೆಡರಲ್‌ ಏಜೆನ್ಸಿಗೆ ಕರೆ ಮಾಡುವ ಮೊದಲು ತನಿಖೆ ಮಾಡಲು) ಆದರೆ ಪ್ರಕರಣವನ್ನು ಸಿಬಿಐಗೆ ಕಳುಹಿಸಲಾಗಿದೆ. ಅವರಿಗೆ ನ್ಯಾಯ ಬೇಡ, ಅವರಿಗೆ ವಿಳಂಬ ಬೇಕು. 16 ದಿನಗಳಾಗಿವೆ, ನ್ಯಾಯ ಎಲ್ಲಿದೆ? ಎಂದು ಸಿಎಂ ಮಮತಾ ಬ್ಯಾನರ್ಜಿ ಪ್ರಶ್ನಿಸಿದ್ದರು.
6
+ ಇಪ್ಪತೂರು ದಿನಗಳು ಕಳೆದಿವೆ (ಪ್ರಕರಣವನ್ನು ವರ್ಗಾಯಿಸಿದ ನಂತರ) … ಸಿಬಿಐನಿಂದ ಯಾವುದೇ ಪ್ರಗತಿ ವರದಿ ಇಲ್ಲ. ನಾವು ತನಿಖೆಯ ವಿವರವಾದ ವರದಿಯನ್ನು ಕೋರುತ್ತೇವೆ. ಕೋಲ್ಕತ್ತಾ ಪೊಲೀಸರು ತನಿಖೆ ನಡೆಸುತ್ತಿದ್ದಾಗ ಪತ್ರಿಕಾಗೋಷ್ಠಿಗಳ ಮೂಲಕ ನಿಯಮಿತ ನವೀಕರಣಗಳನ್ನು ನೀಡಲಾಯಿತು ಎಂದು ಅವರು ಘೋಷಿಸಿದ್ದರು.
7
+ ದೆಹಲಿಯ ಸರ್ಕಾರಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿನ ತಜ್ಞರಿಗೆ ಆರೋಪಿಗಳಿಂದ ಡಿಎನ್‌ಎ ಸಹಿತ ವೈದ್ಯಕೀಯ ವರದಿಯನ್ನು ಸಿಬಿಐ ಸಿದ್ದಪಡಿಸಿದೆ. ವಿಷಯದ ಕುರಿತು ವೈದ್ಯರ ಅಂತಿಮ ಅಭಿಪ್ರಾಯವನ್ನು ಪಡೆದ ನಂತರ ಈ ವಿಚಾರಣೆಯನ್ನು ಪೂರ್ಣಗೊಳಿಸಲು ಸಂಸ್ಥೆ ಎದುರುನೋಡುತ್ತಿದೆ.
eesanje/url_47_17_4.txt ADDED
@@ -0,0 +1,7 @@
 
 
 
 
 
 
 
 
1
+ ಆರ್‌ಜಿ ಕರ್‌ ಆಸ್ಪತ್ರೆ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಮನೆ ಮೇಲೆ ಇಡಿ ದಾಳಿ
2
+
3
+ ಕೋಲ್ಕತ್ತಾ,ಸೆ.6-ಆರ್‌ಜಿಕರ್‌ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್‌ ಘೋಷ್‌ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿದೆ. ಸರ್ಕಾರಿ ಸಂಸ್ಥೆಯಲ್ಲಿ ನಡೆದ ಆರ್ಥಿಕ ಹಗರಣದ ಭಾಗವಾಗಿ ದಾಳಿ ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಯುತ್ತಿದೆ.
4
+ ಸಂದೀಪ್‌ ಘೋಷ್‌ ಅವರ ಅಧಿಕಾರಾವಧಿಯಲ್ಲಿ ಆಸ್ಪತ್ರೆಯಲ್ಲಿ ನಡೆದ ಆರೋಪದ ಹಣಕಾಸು ಅಕ್ರಮಗಳ ಬಗ್ಗೆ ಕೇಂದ್ರೀಯ ಸಂಸ್ಥೆಗಳ ತನಿಖೆಗೆ ಕಾರಣವಾಯಿತು. ಸಂದೀಪ್‌ ಘೋಷ್‌ ಅವರು ಆಪಾದಿತ ಹಣಕಾಸು ಅಕ್ರಮಗಳ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ ಕೋಲ್ಕತ್ತಾ ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
5
+ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್‌ ನೇತತ್ವದ ಪೀಠದ ಮುಂದೆ ಈ ಅರ್ಜಿ ಇಂದು ವಿಚಾರಣೆ ನಡೆಸಲಿದೆ.ಕೋಲ್ಕತ್ತಾ ನ್ಯಾಯಾಲಯವು ಆರ್‌ಜಿ ಕರ್‌ ವೈದ್ಯಕೀಯ ಕಾಲೇಜಿನಲ್ಲಿ ಹಣಕಾಸು ಅವ್ಯವಹಾರದ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿ ಘೋಷ್‌ ಮತ್ತು ಇತರ ಮೂವರನ್ನು ಎಂಟು ದಿನಗಳ ಕಾಲ ಸಿಬಿಐ ಕಸ್ಟಡಿಗೆ ಒಪ್ಪಿಸಿತು.
6
+ ಭ್ರಷ್ಟಾಚಾರ ಪ್ರಕರಣದಲ್ಲಿ ಹೆಚ್ಚಿನ ತನಿಖೆಯ ಅಗತ್ಯ ಉಲ್ಲೇಖಿಸಿ ಸಿಬಿಐ 10 ದಿನಗಳ ಕಸ್ಟಡಿಗೆ ಕೋರಿತ್ತು. ಸೋಮವಾರ ರಾತ್ರಿ ಫೆಡರಲ್‌ ಏಜೆನ್ಸಿಯಿಂದ ಬಂಧಿಸಲ್ಪಟ್ಟ ಸಂದೀಪ್‌ ಘೋಷ್‌ ಅವರನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಹಲ್ಲೆ ಮಾಡಲಾಗಿದೆ.
7
+ ಸಿಬಿಐ ತನ್ನ ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ಘೋಷ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 120 ಬಿ (ಕ್ರಿಮಿನಲ್‌ ಪಿತೂರಿ), ಸೆಕ್ಷನ್‌ 420 ಐಪಿಸಿ (ವಂಚನೆ ಮತ್ತು ಅಪ್ರಮಾಣಿಕತೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಆರೋಪ ಮಾಡಿದೆ.ಸೆಪ್ಟೆಂಬರ್‌ 2 ರಂದು, ಭ್ರಷ್ಟಾಚಾರ ಪ್ರಕರಣದಲ್ಲಿ ಡಾ ಘೋಷ್‌ ಅವರನ್ನು ಸಿಬಿಐ ಬಂಧಿಸಿತು ಮತ್ತು ನಂತರ ಅವರನ್ನು ತನಿಖಾ ಸಂಸ್ಥೆಯ ಕಸ್ಟಡಿಗೆ ಕಳುಹಿಸಲಾಯಿತು.
eesanje/url_47_17_5.txt ADDED
@@ -0,0 +1,6 @@
 
 
 
 
 
 
 
1
+ ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮದ್ಯ ಕುಡಿಸಿ ರಸ್ತೆ ಮಧ್ಯೆಯೇ ಅತ್ಯಾಚಾರ
2
+ ,
3
+ ಭೂಪಾಲ್‌,ಸೆ.6– ದುಷ್ಕರ್ಮಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ಮದ್ಯಪಾನ ಮಾಡಿಸಿ ರಸ್ತೆಯಲ್ಲೇ ಆಕೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಈ ಘಟನೆ ನಡೆದಿದ್ದು ಈ ವಿಷಯದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್‌ ಆಗಿದೆ.
4
+ ಉಜ್ಜಯಿನಿಯ ಕೊ್ಲಾ ಫಾಟಕ್‌ ಬಳಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ. ಘಟನೆಯ ವಿಡಿಯೋ ವೈರಲ್‌ ಆದ ನಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ವಿಡಿಯೋ ವೈರಲ್‌ ಆದ ನಂತರ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಸಂತ್ರಸ್ತ ಮಹಿಳೆಯ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
5
+ ಯುವಕ ತನ್ನನ್ನು ಮದುವೆಯಾಗುವುದಾಗಿ ಆಮಿಷ ಒಡ್ಡಿ ನಂತರ ಮದ್ಯ ಕುಡಿಸಿ ನಂತರ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಆರೋಪಿ ಲೋಕೇಶ್‌ ಎಂದು ಹೇಳಲಾಗಿದ್ದು, ಕತ್ಯ ಎಸಗಿ ಅಲ್ಲಿಂದ ಪರಾರಿಯಾಗಿದ್ದ.
6
+ ನಂತರ ಮಹಿಳೆಯ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಡಿಯೋ ಆಧರಿಸಿ ಪೊಲೀಸರು ತಕ್ಷಣ ಕ್ರಮ ಕೈಗೊಂಡು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಉಜ್ಜಯಿನಿ ಸೆಂಟ್ರಲ್‌ ಕೊತ್ವಾಲಿ ಪೊಲೀಸ್‌‍ ಠಾಣೆಯ ಸಿಎಸ್‌‍ ಪಿ ಓಂ ಪ್ರಕಾಶ್‌ ಮಿಶ್ರಾ ತಿಳಿಸಿದ್ದಾರೆ.
eesanje/url_47_17_6.txt ADDED
@@ -0,0 +1,5 @@
 
 
 
 
 
 
1
+ ಕುಡಿದ ನಶೆಯಲ್ಲಿ ತಾಯಿ ಮೇಲೆ ಅತ್ಯಾಚಾರವೆಸಗಿದ ಪಾಪಿಪುತ್ರ
2
+ :
3
+ ಜೈಪುರ,ಸೆ.5-ಕುಡಿತದ ಮತ್ತಿನಲ್ಲಿದ್ದ ಮಗ ತನ್ನ ತಾಯಿಯ ಮೇಲೆ ಅತ್ಯಾಚಾರ ನಡೆಸಿರುವ ಹೀನ ಕೃತ್ಯ ರಾಜಸ್ಥಾನದಲ್ಲಿ ನಡೆದಿದೆ.ದೂರದಲ್ಲಿರುವ ತನ್ನ ಸಹೋದರ ಮನೆಗೆ ಪುತ್ರನೊಂದಿಗೆ ತೆರಳಿದ್ದ 52 ವರ್ಷದ ಮಹಿಳೆ ಅಲ್ಲಿಂದ ವಾಪಸ್ಸಾಗುತ್ತಿದ್ದಾಗ ನಿರ್ಜನ ಪ್ರದೇಶದಲ್ಲಿ ಕುಡಿತದ ಮತ್ತಿನಲ್ಲಿದ್ದ ಮಗನೆ ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
4
+ ಮತ್ತೊಬ್ಬ ಮಗ ಹಾಗೂ ಮಗಳೊಂದಿಗೆ ದಾಬಿ ಪೊಲೀಸ್‌‍ ಠಾಣೆಗೆ ತೆರಳಿ ಕಾಮುಕ ಮಗನ ವಿರುದ್ಧ ಆ ತಾಯಿ ದೂರು ನೀಡಿದ್ದಾರೆ.ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಪ್ರಾಥಮಿಕ ವಿಚಾರಣೆ ವೇಳೆ ಆರೋಪಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ.
5
+ ನಾವು ಆರೋಪಿಯನ್ನು ಬಂಧಿಸಿದ್ದೇವೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್‌‍ ವರಿಷ್ಠಾಧಿಕಾರಿ (ಡಿಎಸ್ಪಿ) ತರುಂಕಂತ್‌ ಸೋಮಾನಿ ತಿಳಿಸಿದ್ದಾರೆ.
eesanje/url_47_17_7.txt ADDED
@@ -0,0 +1,6 @@
 
 
 
 
 
 
 
1
+ ಮೊಮ್ಮಗನಿಂದಲೇ ಕೊಲೆಯಾದ ನಿವೃತ್ತ ಯೋಧ
2
+
3
+ ನವದೆಹಲಿ,ಸೆ.5-ಆಸ್ತಿ ವ್ಯಾಮೋಹದಿಂದ ಮೊಮಗನೆ ನಿವೃತ ಸೈನಿಕರಾಗಿದ್ದ ತಾತನನ್ನು ಕೊಲೆ ಮಾಡಿರುವ ಘಟನೆ ದೆಹಲಿಯ ಆದರ್ಶ್ನಗರದಲ್ಲಿ ನಡೆದಿದೆ.ತಾತ ಭೋಜರಾಜ್‌ ಅವರನ್ನು ಕೊಂದ ಪಾಪಿ ಮೊಮಗನ್ನು 35 ವರ್ಷದ ಪ್ರದೀಪ್‌ ಎಂದು ಗುರುತಿಸಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಆತನ ಬಂಧನಕ್ಕಾಗಿ ಪೊಲೀಸರು ಕಾರ್ಯಚರಣೆ ನಡೆಸುತ್ತಿದ್ದಾರೆ.
4
+ 1985 ರಲ್ಲಿ ಭಾರತೀಯ ಸೇನೆಯಿಂದ ನಿವತ್ತರಾಗಿದ್ದ ಮಾಜಿ ಹವಾಲ್ದಾರ್‌ ಭೋಜರಾಜ್‌ ಅವರು ತಮ ಪಿಂಚಣಿ ಹಣವನ್ನು ತನ್ನ ಇಬ್ಬರು ಪುತ್ರರಾದ ಜಯವೀರ್‌ ಮತ್ತು ಸುರೇಶ್‌ ಅವರಿಗೆ ಕೊಡುತ್ತಿದ್ದರು. ಅವರು ಇಬ್ಬರು ಪುತ್ರರಿಗೂ ಮನೆಗಳನ್ನು ಕಟ್ಟಿಸಿಕೊಟ್ಟಿದ್ದರು ಆದರೆ ಆಜಾದ್‌ಪುರ ಗ್ರಾಮದಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.
5
+ ಪಿಂಚಣಿ ಹಣ ಹಂಚಿಕೆ ವಿಚಾರವಾಗಿ ಸುರೇಶ್‌ ಅವರ ಪುತ್ರ ಪ್ರದೀಪ್‌ ಭೋಜರಾಜ್‌ ಜತೆ ವಾಗ್ವಾದ ನಡೆಸಿದಾಗ ಈ ಘಟನೆ ನಡೆದಿದೆ. ಜಗಳ ವಿಕೋಪಕ್ಕೆ ಹೋಗಿದ್ದು, ಪ್ರದೀಪ್‌ ಭೋಜರಾಜ್‌ ಅವರನ್ನು ದೊಣ್ಣೆಯಿಂದ ಪದೇ ಪದೇ ಥಳಿಸಿದ್ದ ಎನ್ನಲಾಗಿದೆ.
6
+ ಭೋಜರಾಜ್‌ ತೀವ್ರವಾಗಿ ಗಾಯಗೊಂಡಿದ್ದು ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಾಗಿದ್ದು, ಪ್ರದೀಪ್‌ನನ್ನು ಪತ್ತೆ ಹಚ್ಚಿ ಬಂಧಿಸುವ ಪ್ರಯತ್ನ ನಡೆಯುತ್ತಿದೆ.
eesanje/url_47_17_8.txt ADDED
@@ -0,0 +1,8 @@
 
 
 
 
 
 
 
 
 
1
+ ಮನೆಯ ಮೇಲೆ ಬಿತ್ತು ವಿಮಾನದ ಎಂಜಿನ್‌ ತುಣುಕು
2
+ ' ;
3
+ ನವದೆಹಲಿ,ಸೆ.5-ಇಲ್ಲಿನ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಆದ ವಿಮಾನೆ ಎಂಜಿನ್‌ನಿಂದ ಲೋಹದ ವಸ್ತುವೊಂದು ಮನೆಯ ಮೇಲೆ ಬಿದ್ದಿರುವ ಘಟನೆ ವರದಿಯಾಗಿದೆ.ತಕ್ಷಣವೇ, ಆ ಸಮಯದಲ್ಲಿ ಟೇಕ್‌ ಆಫ್‌ ಆಗುತ್ತಿದ್ದ ಎಲ್ಲಾ ವಿಮಾನಗಳ ಪೈಲಟ್‌ಗಳಿಗೆ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಯಿತು. ಇದರ ನಂತರ, ವಿಮಾನವನ್ನು ಗುರುತಿಸಿ ಮತ್ತು ಅದನ್ನು ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಲು ಸೂಚನೆಗಳನ್ನು ನೀಡಲಾಗಿತ್ತು.
4
+ ಈ ಘಟನೆ ಸೆ.2 ರಂದು ತಡರಾತ್ರಿ 9.30 ರ ಸುಮಾರಿಗೆ ಸಂಭವಿಸಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ. ಖಾಸಗಿ ವಿಮಾನಯಾನ ಸಂಸ್ಥೆಯೊಂದು ಐಜಿಐ ವಿಮಾನ ನಿಲ್ದಾಣದಿಂದ ಹೊರಟಿತ್ತು. ವಿಮಾನವು ವಸಂತ್‌ ಕುಂಜ್‌ ಪ್ರದೇಶದಿಂದ ಹೊರಡುವಾಗ, ಅದರ ಕೆಲವು ಲೋಹದ ತುಣುಕುಗಳು ಆ ಪ್ರದೇಶದ ಮನೆಯೊಂದರ ಛಾವಣಿಯ ಮೇಲೆ ಬಿದ್ದಿದ್ದವು.
5
+ ತಕ್ಷಣ ಮನೆಯ ಮಾಲೀಕರು ದೆಹಲಿ ಪೊಲೀಸ್‌‍ ಕಂಟ್ರೋಲ್‌ ರೂಂಗೆ ಮಾಹಿತಿ ನೀಡಿದ್ದಾರೆ. ದೆಹಲಿ ವಿಮಾನ ನಿಲ್ದಾಣದ ಹೊರಗೆ ವಿಮಾನದ ಎಂಜಿನ್‌ನ ಭಾಗ ಪತ್ತೆಯಾದ ಘಟನೆಯ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತನಿಖೆಗೆ ಆದೇಶಿಸಿದೆ ಎಂದು ಮೂಲಗಳು ತಿಳಿಸಿವೆ.
6
+ ಕಳೆದ ಸೋಮವಾರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದ ಏರ್‌ ಇಂಡಿಯಾ ಎಕ್‌್ಸಪ್ರೆಸ್‌‍ ವಿಮಾನದಿಂದ ಈ ಲೋಹದ ವಸ್ತುಗಳು ಬಿದ್ದಿರಬಹುದು ಎಂದು ಮೂಲಗಳು ತಿಳಿಸಿವೆ.
7
+ ಬಹುಶಃ ವಿಮಾನ ಎಂಜಿನ್‌ನಿಂದ ಮುರಿದ ಬ್ಲೇಡ್‌ನ ಭಾಗ ಇದಾಗಿರಬಹುದು. ಆದಾಗ್ಯೂ, ಲೋಹದ ತುಂಡುಗಳು ಆ ವಿಮಾನದದ್ದೇ ಅಥವಾ ಇಲ್ಲವೇ ಎಂಬುದನ್ನು ಇನ್ನೂ ಖಚಿತಪಡಿಸಲು ಸಾಧ್ಯವಿಲ್ಲ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.
8
+ ಐಜಿಐ ವಿಮಾನ ನಿಲ್ದಾಣ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಇದಾದ ನಂತರ ವಸಂತ್‌ ಕುಂಜ್‌ ಕಡೆಗೆ ಹಾರಿದ ವಿಮಾನಗಳನ್ನು ಗುರುತಿಸುವ ಕಾರ್ಯ ತ್ವರಿತವಾಗಿ ಆರಂಭವಾಯಿತು. ಆದಾಗ್ಯೂ, ಸ್ವಲ್ಪ ತನಿಖೆಯ ನಂತರ, ಆ ಸಮಯದಲ್ಲಿ ಐಜಿಐ ವಿಮಾನ ನಿಲ್ದಾಣದಿಂದ ಟೇಕ್‌ ಆಫ್‌ ಮತ್ತು ಲ್ಯಾಂಡ್‌ ಆಗುವ ಬಗ್ಗೆ ಎಟಿಸಿ ವಿಮಾನದ ಪೈಲಟ್‌ಗೆ ಮಾಹಿತಿ ನೀಡಿತು. ಏರ್‌ ಇಂಡಿಯಾ ಎಕ್‌್ಸಪ್ರೆಸ್‌‍ ವಿಮಾನ ಐಎಕ್‌್ಸ -145 ನ ಭಾಗ ಅದು ಎಂದು ತಿಳಿದುಬಂದಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿಸುರಕ್ಷಿತವಾಗಿದ್ದಾರೆ.
eesanje/url_47_17_9.txt ADDED
@@ -0,0 +1,9 @@
 
 
 
 
 
 
 
 
 
 
1
+ 11 ಕೋಟಿ ರೈತರಿಗೆ ಡಿಜಿಟಲ್ ಐಡಿ ಕಾರ್ಡ್
2
+ - 11 FY27
3
+ ನವದೆಹಲಿ,ಸೆ.5-ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ಡಿಜಿಟಲ್ ಐಡಿ ಕಾರ್ಡ್ ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್ನಂತೆಯೇ ಇರುತ್ತದೆ.
4
+ ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ)ದಂತೆ ರಚಿಸಿರುವ ಅಗ್ರಿಸ್ಟಾಕ್ ಉಪಕ್ರಮದ ಭಾಗವಾಗಿರುವುದು ಇದರ ಗುರಿಯಾಗಿದೆ.
5
+ ಆಧಾರ್ ಕಾರ್ಡ್ನಂತೆಯೇ ರೈತರಿಗೆ ೞರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್ನ ಪ್ರಮುಖ ವೈಶಿಷ್ಟ್ಯವಾಗಿದೆ. 2024-25ರ ಹಣಕಾಸು ವರ್ಷದಲ್ಲಿ 6 ಕೋಟಿ, 2025-26ರ ಹಣಕಾಸು ವರ್ಷದಲ್ಲಿ 3 ಕೋಟಿ ಮತ್ತು 2026-27ನೇ ಸಾಲಿನಲ್ಲಿ 2 ಕೋಟಿ ಡಿಜಿಟಲ್ ಐಡಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಸರ್ಕಾರ ಹೇಳಿದೆ.
6
+ ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಈ ಗುರುತಿನ ಚೀಟಿಗಳಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾವನ್ನು ಲಿಂಕ್ ಮಾಡಲಾಗುತ್ತದೆ ಎಂದು ಸರ್ಕಾರ ಹೇಳಿದೆ.
7
+ 2024-25 ರಲ್ಲಿ 400 ಜಿಲ್ಲೆಗಳು ಮತ್ತು 2025-26 ರಲ್ಲಿ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳುವ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಎರಡು ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ.
8
+ ಕೃಷಿ ಸಚಿವಾಲಯದ ಪ್ರಕಾರ, ಡಿಜಿಟಲ್ ಕ್ರಾಂತಿಯು ಸುರಕ್ಷಿತ ಪಾವತಿಗಳು ಮತ್ತು ವಹಿವಾಟುಗಳನ್ನು ರಚಿಸುವ ಮೂಲಕ ಇತ್ತೀಚಿನ ವರ್ಷಗಳಲ್ಲಿ ಆಡಳಿತ ಮತ್ತು ಸೇವಾ ವಿತರಣೆಯನ್ನು ಗಣನೀಯವಾಗಿ ಪರಿವರ್ತಿಸಿದೆ. ಇದು ಹಣಕಾಸು, ಆರೋಗ್ಯ, ಶಿಕ್ಷಣ, ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲ್ ಪೂರಕ ಪರಿಸರಕ್ಕೆ ಹಾದಿ ಸುಗಮಗೊಳಿಸಿದೆ.
9
+ ಕೃಷಿ ಕ್ಷೇತ್ರದಲ್ಲಿ ಇದೇ ರೀತಿಯ ಪರಿವರ್ತನೆಗಾಗಿ, ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2,817 ಕೋಟಿ ರೂಪಾಯಿಗಳ ಗಣನೀಯ ಹಣಕಾಸಿನ ವೆಚ್ಚದೊಂದಿಗೆ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ೞ ಗೆ ಅನುಮೋದನೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿತ್ವದ ಮೂಲಕ ಅಗ್ರಿಸ್ಟಾಕ್ ಅನುಷ್ಠಾನ ಪ್ರಗತಿಯಲ್ಲಿದ್ದು, 19 ರಾಜ್ಯಗಳು ಕೃಷಿ ಸಚಿವಾಲಯದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿವೆ.
eesanje/url_47_180_1.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಗಣರಾಜ್ಯೋತ್ಸವದಲ್ಲಿ ಸ್ತ್ರೀ ಶಕ್ತಿ ಪ್ರದರ್ಶನ ಅನಾವರಣ
2
+ ನವದೆಹಲಿ, ಜ 26 (ಪಿಟಿಐ) ರಾಷ್ಟ್ರ ರಾಜಧಾನಿಯ ಹೃದಯಭಾಗದಲ್ಲಿರುವ ಕರ್ತವ್ಯ ಪಥದಲ್ಲಿ ಭಾರತವು ತನ್ನ ಮಿಲಿಟರಿ ಶಕ್ತಿ ಮತ್ತು ಶ್ರೀಮಂತ ಸಾಂಸ್ಕøತಿಕ ಪರಂಪರೆಯ ಪ್ರಭಾವಶಾಲಿ ಪ್ರದರ್ಶನದೊಂದಿಗೆ ಇಂದು ತನ್ನ 75 ನೇ ಗಣರಾಜ್ಯೋತ್ಸವವನ್ನು ಆಚರಿಸಿತು.
3
+ ರಾಷ್ಟ್ರದ ಮಹಿಳಾ ಶಕ್ತಿ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಪ್ರತಿಬಿಂಬಿಸುವ ಪ್ರಮುಖ ವಿಷಯದೊಂದಿಗೆ ಮಹಾ ಆಚರಣೆಗಳು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಗಣರಾಜ್ಯೋತ್ಸವವನ್ನು ಆಚರಿಸುವ ಮೂಲಕ 90 ನಿಮಿಷಗಳ ಪರೇಡ್‍ಗೆ ವಿದ್ಯುಕ್ತ ಚಾಲನೆ ನೀಡಿದರು.
4
+ ಸಶಸ್ತ್ರ ಪಡೆಗಳು ಪರೇಡ್‍ನಲ್ಲಿ ಕ್ಷಿಪಣಿಗಳು, ಡ್ರೋನ್ ಜಾಮರ್‍ಗಳು, ಕಣ್ಗಾವಲು ವ್ಯವಸ್ಥೆಗಳು, ವಾಹನ-ಆರೋಹಿತವಾದ ಮಾರ್ಟರ್‍ಗಳು ಮತ್ತು ಪದಾತಿ ದಳದ ಯುದ್ಧ ವಾಹನಗಳಂತಹ ಸ್ವದೇಶಿ ನಿರ್ಮಿತ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ಉಪಕರಣಗಳ ಶ್ರೇಣಿಗಳನ್ನು ಪ್ರದರ್ಶಿಸಲಾಯಿತು. ಇದೆ ಮೊದಲ ಬಾರಿಗೆ, ಎಲ್ಲಾ ಮಹಿಳಾ ತ್ರಿ-ಸೇವಾ ತುಕಡಿಯು ಗಣ ರಾಜ್ಯೋತ್ಸದ ಭಾಗವಾಗಿದ್ದವು.
5
+ ಅಲ್ಲದೆ, ಸಾಂಪ್ರದಾಯಿಕ ಮಿಲಿಟರಿ ಬ್ಯಾಂಡ್‍ಗಳ ಬದಲಿಗೆ ಮೊದಲ ಬಾರಿಗೆ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ಭಾರತೀಯ ಸಂಗೀತ ವಾದ್ಯಗಳಾದ ಸಂಖ್, ನಾದಸ್ವರಂ ಮತ್ತು ನಾಗಾರವನ್ನು ನುಡಿಸಿದರು. ಸುಮಾರು 15 ಮಹಿಳಾ ಪೈಲಟ್‍ಗಳು ನಾರಿ ಶಕ್ತಿಯನ್ನು ಪ್ರತಿನಿಸುವ ಭಾರತೀಯ ವಾಯುಪಡೆಯ ಫ್ಲೈ-ಪಾಸ್ಟ್ ಸಮಯದಲ್ಲಿ ಪ್ರೇಕ್ಷಕರನ್ನು ಆಕರ್ಷಿಸಿದರು. ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ತುಕಡಿಗಳು ಮಹಿಳಾ ಸಿಬ್ಬಂದಿಗಳು ಹಾಜರಿದ್ದರು.
6
+ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡು ಮಡಿದ ವೀರಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ಆರಂಭವಾದ ಪರೇಡ್ ಕಾರ್ಯಕ್ರಮಗಳು 90 ನಿಮಿಷಗಳ ಕಾಲ ನಡೆಯಿತು.
7
+ 105 ಎಂಎಂ ಭಾರತೀಯ ಫೀಲ್ಡ ಗನ್‍ಗಳ ಸ್ವದೇಶಿ ಬಂದೂಕು ವ್ಯವಸ್ಥೆಯೊಂದಿಗೆ 21-ಗನ್ ಸೆಲ್ಯೂಟ್‍ನೊಂದಿಗೆ ರಾಷ್ಟ್ರಗೀತೆ ಹಾಡಿದ ನಂತರ ರಾಷ್ಟ್ರಧ್ವಜಾರೋಹಣ ನೆರವೇರಿಸಲಾಯಿತು. 105 ಹೆಲಿಕಾಪ್ಟರ್ ಘಟಕದ ನಾಲ್ಕು ಎಂಐ -17 ಐವಿ ಹೆಲಿಕಾಪ್ಟರ್‍ಗಳು ಕರ್ತವ್ಯ ಪಥದಲ್ಲಿರುವ ಪ್ರೇಕ್ಷಕರ ಮೇಲೆ ಹೂ ಮಳೆ ಸುರಿಸಿದವು. ನಂತರ 100 ಕ್ಕೂ ಹೆಚ್ಚು ಮಹಿಳಾ ಕಲಾವಿದರು ವಿವಿಧ ರೀತಿಯ ತಾಳವಾದ್ಯಗಳನ್ನು ನುಡಿಸುವ ಆವಾಹನ್ ಬ್ಯಾಂಡ್ ನಡೆಸಿಕೊಟ್ಟರು. ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಗೌರವ ವಂದನೆ ಸ್ವೀಕರಿಸುವುದರೊಂದಿಗೆ ಪಥಸಂಚಲನ ನಡೆಯಿತು.
8
+ ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ
9
+ ಇದರ ನೇತೃತ್ವವನ್ನು ದೆಹಲಿ ಪ್ರದೇಶದ ಜನರಲ್ ಆಫೀಸರ್ ಕಮಾಂಡಿಂಗ್ ಲೆಫ್ಟಿನೆ���ಟ್ ಜನರಲ್ ಭವ್ನಿಶ್ ಕುಮಾರ್ ವಹಿಸಿದ್ದರು. ಕರ್ತವ್ಯ ಪಥವು ಫ್ರೆಂಚ್ ಸಶಸ್ತ್ರ ಪಡೆಗಳ ಸಂಯೋಜಿತ ಬ್ಯಾಂಡ್ ಮತ್ತು ಮಾರ್ಚಿಂಗ್ ತುಕಡಿಯಿಂದ ಮಾರ್ಚ್ ಪಾಸ್ಟ್‍ಗೆ ಸಾಕ್ಷಿಯಾಯಿತು.
10
+ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಒಟ್ಟು 16 ಟ್ಯಾಬ್ಲೋಗಳು ಮತ್ತು ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳಿಂದ ಒಂಬತ್ತು ಟ್ಯಾಬ್ಲೋಗಳು ಪರೇಡ್‍ನಲ್ಲಿ ಭಾಗವಹಿಸಿದ್ದವು.ಅರುಣಾಚಲ ಪ್ರದೇಶ, ಹರಿಯಾಣ, ಮಣಿಪುರ, ಮಧ್ಯಪ್ರದೇಶ, ಒಡಿಶಾ, ಛತ್ತೀಸ್‍ಗಢ, ರಾಜಸ್ಥಾನ, ಮಹಾರಾಷ್ಟ್ರ, ಆಂಧ್ರಪ್ರದೇಶ, ಲಡಾಖ್, ತಮಿಳುನಾಡು, ಗುಜರಾತ್, ಮೇಘಾಲಯ, ಜಾರ್ಖಂಡ್, ಉತ್ತರ ಪ್ರದೇಶ, ತೆಲಂಗಾಣ ಮತ್ತಿತರ ಕೇಂದ್ರಾಡಳಿತ ಪ್ರದೇಶಗಳ ಟ್ಯಾಬ್ಲೋಗಳು ಪರೇಡ್‍ನಲ್ಲಿ ಹಾಜರಿದ್ದವು.
eesanje/url_47_180_10.txt ADDED
@@ -0,0 +1,9 @@
 
 
 
 
 
 
 
 
 
 
1
+ ಹಿಂಡೆನ್‍ಬರ್ಗ್ ಆರೋಪದಿಂದ ಅಮೂಲ್ಯ ಪಾಠ ಕಲಿತಿದ್ದೇವೆ ; ಅದಾನಿ
2
+ ನವದೆಹಲಿ,ಜ.25-ಅಮೆರಿಕದ ಮೂಲದ ಹಿಂಡೆನ್‍ಬರ್ಗ್ ಸಂಸ್ಥೆಯ ಆರೋಪಗಳಿಂದ ಅದಾನಿ ಗ್ರೂಪ್ ಮುಕ್ತವಾಗಿದೆ. ಈ ಅನುಭವವು ಕಂಪನಿಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿದೆ ಎಂದು ಅಧ್ಯಕ್ಷ ಗೌತಮ್ ಅದಾನಿ ಅಭಿಪ್ರಾಯಪಟ್ಟಿದ್ದಾರೆ.
3
+ ನಮ್ಮ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳು ಹೊಸದೇನಲ್ಲ. ಆದ್ದರಿಂದ, ಸಮಗ್ರ ಪ್ರತಿಕ್ರಿಯೆಯನ್ನು ನೀಡಿದ ನಂತರ, ನಾನು ಅದರ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಕಡಿಮೆ-ಮಾರಾಟದ ದಾಳಿಯ ಪರಿಣಾಮವು ಸಾಮಾನ್ಯವಾಗಿ ಹಣಕಾಸಿನ ಮಾರುಕಟ್ಟೆಗಳಿಗೆ ಸೀಮಿತವಾಗಿದೆ. ಆದಾಗ್ಯೂ, ಇದು ಒಂದು ವಿಶಿಷ್ಟವಾದ ಎರಡು ಆಯಾಮದ ದಾಳಿಯಾಗಿದೆ ಎಂದಿದ್ದಾರೆ.
4
+ ಮಾಧ್ಯಮದಲ್ಲಿ ಕೆಲವರ ನೆರವಿನಿಂದ, ನಮ್ಮ ವಿರುದ್ಧದ ಈ ಸುಳ್ಳುಗಳು ನಮ್ಮ ಬಂಡವಾಳದ ಮಾರುಕಟ್ಟೆ ಕ್ಯಾಪ್ ಅನ್ನು ಗಣನೀಯವಾಗಿ ನಾಶಮಾಡುವಷ್ಟು ವಿನಾಶಕಾರಿಯಾಗಿದೆ. ವಿಶಿಷ್ಟವಾಗಿ, ಬಂಡವಾಳ ಮಾರುಕಟ್ಟೆಗಳು ತರ್ಕಬದ್ಧವಾಗಿರುವುದಕ್ಕಿಂತ ಹೆಚ್ಚು ಭಾವನಾತ್ಮಕವಾಗಿರುತ್ತವೆ. ಸಾವಿರಾರು ಸಣ್ಣ ಹೂಡಿಕೆದಾರರು ತಮ್ಮ ಉಳಿತಾಯವನ್ನು ಕಳೆದುಕೊಂಡಿರುವುದು ನನಗೆ ಹೆಚ್ಚು ನೋವುಂಟುಮಾಡಿದೆ.
5
+ ಲೋಕಸಭೆ ಚುನಾವಣೆ ನಂತರ ರಾಹುಲ್ ಬಂಧನ : ಹಿಮಂತ ಬಿಸ್ವಾ ಶರ್ಮಾ
6
+ ನಮ್ಮ ವಿರೋಧಿಗಳ ಯೋಜನೆಯು ಸಂಪೂರ್ಣವಾಗಿ ಯಶಸ್ವಿಯಾಗಿದ್ದರೆ, ಡೊಮಿನೊ ಪರಿಣಾಮಗಳು ಅನೇಕ ನಿರ್ಣಾಯಕ ಮೂಲಸೌಕರ್ಯ ಸ್ವತ್ತುಗಳು, ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ವಿದ್ಯುತ್ ಸರಬರಾಜು ಸರಪಳಿಗಳಿಗೆ ದುರ್ಬಲಗೊಳಿಸಬಹುದು ಇದುವ ಯಾವುದೇ ದೇಶಕ್ಕೆ ದುರಂತ ಪರಿಸ್ಥಿತಿ.
7
+ ಈ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಪೂರ್ವನಿದರ್ಶನದ ಮೇಲೆ ಹಿಂದೆ ಬೀಳಲು ಸಾಧ್ಯವಾಗಲಿಲ್ಲ. ನಮ್ಮ ವ್ಯವಹಾರಗಳ ಘನತೆಯ ಮೇಲಿನ ನಮ್ಮ ವಿಶ್ವಾಸವು ನಮ್ಮ ಹೆಚ್ಚಾಗಿ ವಿರೋಧಾತ್ಮಕ ಕಾರ್ಯತಂತ್ರವನ್ನು ನಿರ್ದೇಶಿಸುತ್ತದೆ. ನಾವು ಸತ್ಯಗಳನ್ನು ಪಾರದರ್ಶಕವಾಗಿ ವಿವರಿಸುವ ಮತ್ತು ಕಥೆಯ ನಮ್ಮ ಭಾಗವನ್ನು ನಿರೂಪಿಸುವುದರ ಮೇಲೆ ಕೇಂದ್ರೀಕರಿಸಿದ್ದೇವೆ. ಇದು ನಮ್ಮ ಗುಂಪಿನ ವಿರುದ್ಧ ನಕಾರಾತ್ಮಕ ಪ್ರಚಾರಗಳ ಕ್ಷೀಣಿಸಲು ಕಾರಣವಾಯಿತು.
8
+ ಕಳೆದ ವರ್ಷದ ಪ್ರಯೋಗಗಳು ಮತ್ತು ಕ್ಲೇಶಗಳು ನಮಗೆ ಅಮೂಲ್ಯವಾದ ಪಾಠಗಳನ್ನು ಕಲಿಸಿವೆ, ನಮ್ಮನ್ನು ಬಲಪಡಿಸಿವೆ ಮತ್ತು ಭಾರತೀಯ ಸಂಸ್ಥೆಗಳಲ್ಲಿ ನಮ್ಮ ನಂಬಿಕೆಯನ್ನು ಪುನರುಚ್ಚರಿಸಿವೆ. ನಮ್ಮ ಮೇಲಿನ ಈ ವಂಚಕ ದಾಳಿ – ಮತ್ತು ನಮ್ಮ ಬಲವಾದ ಪ್ರತಿಕ್ರಮಗಳು – ನಿಸ್ಸಂದೇಹವಾಗಿ ಒಂದು ಕೇಸ್ ಸ್ಟಡಿ ಆಗುತ್ತದೆ ಎಂದಿದ್ದಾರೆ.
9
+ ಈ ಅನುಭವದಿಂದ ನಾವು ಬಲಶಾಲಿಯಾಗಿ ಹೊರಹೊಮ್ಮಿದ್ದೇವೆ ಮತ್ತು ಭಾರತದ ಬೆಳವಣಿಗೆಯ ಕಥೆಗೆ ನಮ್ಮ ವಿನಮ್ರ ಕೊಡುಗೆಯನ್ನು ಮುಂದುವರಿಸುವ ನಮ್ಮ ಸಂಕಲ್ಪದಲ್ಲಿ ಹೆಚ್ಚು ಅಚಲವಾಗಿದ್ದೇವೆ ಎಂದು ನಾನು ನಂಬುತ್ತೇನೆ.
eesanje/url_47_180_11.txt ADDED
@@ -0,0 +1,8 @@
 
 
 
 
 
 
 
 
 
1
+ ಇಂದು ಗಣರಾಜ್ಯೋತ್ಸವದ ಮುಖ್ಯ ಅತಿಥಿ ಮ್ಯಾಕ್ರನ್ ಜೊತೆ ಮೋದಿ ರೋಡ್ ಶೋ
2
+ ನವದೆಹಲಿ,ಜ.25- ಈ ವರ್ಷದ ಗಣರಾಜ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿರುವ ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರು ಇಂದು ಜೈಪುರಕ್ಕೆ ಬಂದಿಳಿಯಲಿದ್ದು, ಅವರು ಒಂದೆರಡು ಪಾರಂಪರಿಕ ತಾಣಗಳ ಪ್ರವಾಸ ಮತ್ತು ರೋಡ್‍ಶೋಗಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ಅವರು ಇಂದು ಅಮೇರ್ ಕೋಟೆಗೆ ಭೇಟಿ ನೀಡಲಿದ್ದು, ಅಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
3
+ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಜಂತರ್ ಮಂತರ್ ಪ್ರವಾಸದಲ್ಲಿ ಪ್ರಧಾನಿ ಮೋದಿ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ. ನಂತರ ಉಭಯ ನಾಯಕರು ಜಂತರ್ ಮಂತರ್‍ನಿಂದ ಸಂಗನೇರಿ ಗೇಟ್‍ವರೆಗೆ ಹವಾ ಮಹಲ್‍ನಲ್ಲಿ ನಿಲುಗಡೆಯೊಂದಿಗೆ ಜಂಟಿ ರೋಡ್‍ಶೋನಲ್ಲಿ ಭಾಗವಹಿಸಲಿದ್ದಾರೆ.
4
+ ಅವರು ಹವಾ ಮಹಲ್‍ನಲ್ಲಿ ಜೈಪುರದ ವಿಶೇಷ ಮಸಾಲಾ ಚಾಯ್ ಅನ್ನು ಹೊಂದಿರುತ್ತಾರೆ ಮತ್ತು ನೀಲಿ ಕುಂಬಾರಿಕೆ ಮತ್ತು ಪ್ರಸಿದ್ಧ ಕೆತ್ತನೆಯ ಕೆಲಸದಂತಹ ಕರಕುಶಲ ವಸ್ತುಗಳನ್ನು ತೆಗೆದುಕೊಳ್ಳುತ್ತಾರೆ, ಅದಕ್ಕಾಗಿ ಅವರು ಭೀಮ್ ಯುಪಿಐ ಮೂಲಕ ಪಾವತಿಸುತ್ತಾರೆ ಎಂದು ಮೂಲಗಳು ತಿಳಿಸಿವೆ. ಗಣ್ಯರು ಬ್ರೌಸ್ ಮಾಡಲು ಹವಾ ಮಹಲ್‍ನ ಪಕ್ಕದಲ್ಲಿ ಕರಕುಶಲ ಕಿಯೋಸ್ಕ್‍ಗಳನ್ನು ಸ್ಥಾಪಿಸಲಾಗಿದೆ.
5
+ ರೈಲುಗಳ ಅಪಘಾತ ತಡೆಯುವ ‘ಕವಚ್’ ಸಿಸ್ಟಮ್ ಯಶಸ್ವಿ ಪರೀಕ್ಷೆ
6
+ ರಾಂಬಾಗ್ ಅರಮನೆಯಲ್ಲಿ ಮ್ಯಾಕ್ರನ್‍ಗೆ ಖಾಸಗಿ ಭೋಜನವನ್ನು ಸಹ ಯೋಜಿಸಲಾಗಿದೆ. ಕೇಂದ್ರ ಮತ್ತು ಫ್ರೆಂಚ್ ಸರ್ಕಾರವು ಫ್ರೆಂಚ್ ಫೈಟರ್ ಜೆಟ್‍ಗಳು ಮತ್ತು ಸೈನ್ಯಕ್ಕಾಗಿ ಜಲಾಂತರ್ಗಾಮಿ ನೌಕೆಗಳ ಬಹು-ಶತಕೋಟಿ ಡಾಲರ್ ವ್ಯವಹಾರಗಳ ಮಾತುಕತೆಯನ್ನು ಮುಂದುವರೆಸುತ್ತಿರುವಾಗ ಈ ಭೇಟಿ ಬಂದಿದೆ.
7
+ ನಂತರ ನಡೆಯಲಿರುವ ದ್ವಿಪಕ್ಷೀಯ ಮಾತುಕತೆಯಲ್ಲಿ ಭಾರತದ 26 ರಫೇಲ್ ಯುದ್ಧ ವಿಮಾನಗಳು ಮತ್ತು ಮೂರು ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆಗಳ ಖರೀದಿಯ ಪ್ರಸ್ತಾಪವೂ ಆಗಲಿದೆ ಎಂದು ನಿರೀಕ್ಷಿಸಲಾಗಿದೆ. ಫ್ರಾನ್ಸ್ ಭಾರತದ ಎರಡನೇ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು ದಶಕಗಳಿಂದ ಯುರೋಪ್‍ನಲ್ಲಿ ಅದರ ಅತ್ಯಂತ ಹಳೆಯ ಮತ್ತು ಹತ್ತಿರದ ಪಾಲುದಾರರಲ್ಲಿ ಒಂದಾಗಿದೆ.
8
+ ಗಣರಾಜ್ಯೋತ್ಸವದ ಕೊನೆಯ ಕ್ಷಣದ ಆಹ್ವಾನವನ್ನು ಅಧ್ಯಕ್ಷ ಮ್ಯಾಕ್ರನ್ ಸ್ವೀಕರಿಸಿದ್ದರು, ಇದು ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳ ಬಲದ ಗುರುತು ಎಂದು ಬಿಂಬಿಸಲಾಗಿದೆ. ತಾನು ಬರಲು ಸಾಧ್ಯವಿಲ್ಲ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ತಿಳಿಸಿದಾಗ ನವದೆಹಲಿ ಪ್ಯಾರಿಸ್‍ಗೆ ಕರೆ ಮಾಡಿತ್ತು. ಕಳೆದ ವರ್ಷ ಜುಲೈನಲ್ಲಿ ಫ್ರಾನ್ಸ್‍ನ ಬಾಸ್ಟಿಲ್ ಡೇ ಆಚರಣೆಯಲ್ಲಿ ಪ್ರಧಾನಿ ಮೋದಿ ಗೌರವಾನ್ವಿತ ಅತಿಥಿಯಾಗಿದ್ದರು.
eesanje/url_47_180_12.txt ADDED
@@ -0,0 +1,8 @@
 
 
 
 
 
 
 
 
 
1
+ ಲೋಕಸಭೆ ಚುನಾವಣೆ ನಂತರ ರಾಹುಲ್ ಬಂಧನ : ಹಿಮಂತ ಬಿಸ್ವಾ ಶರ್ಮಾ
2
+ ಶಿವಸಾಗರ್,ಜ.25- ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ರಾಹುಲ್ ಅಸ್ಸಾಂ ಅನ್ನು ಅಸ್ಥಿರಗೊಳಿಸಲು ಬಯಸಿದ್ದರು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಲೋಕಸಭೇ ಚುನಾವಣೆ ನಂತರ ರಾಹುಲ್ ಅವರನ್ನು ಬಂಧಿಸುವುದಾಗಿ ಘೋಷಿಸಿದ್ದಾರೆ.
3
+ ಅಂದು ಅವರು (ಕಾಂಗ್ರೆಸ್) ಬಟಾದ್ರವ ಥಾನ್ ಪ್ರವೇಶಿಸಲು ಗಲಾಟೆ ಪರಿಸ್ಥಿತಿಯನ್ನು ಸೃಷ್ಟಿಸಿದ ಕಾಂಗ್ರೆಸ್ ಪಕ್ಷಕ್ಕೆ ನಾನು 2-3 ಪ್ರಶ್ನೆಗಳನ್ನು ಕೇಳಲು ಬಯಸುತ್ತೇನೆ. ಆದರೆ ರಾಹುಲ್ ಗಾಂಧಿ ಅವರು ಭೂಪೇನ್ ಹಜಾರಿಕಾ ಸಮಾ ಖೇತ್ರದ ಮುಂದೆ ಗುವಾಹಟಿ ದಾಟಿದರು ಮತ್ತು ಅವರು ನಿಲ್ಲಿಸಲಿಲ್ಲ. ಭೂಪೇನ್ ಹಜಾರಿಕಾ ಸಮಾಯಲ್ಲಿ ರಾಹುಲ್ ಗಾಂಧಿ ಹಜೋ ಹಯಗ್ರೀವ್ ಮಾಧವ್ ಮಂದಿರ ಮತ್ತು ಪೊವಾ ಮೆಕ್ಕಾವನ್ನು ದಾಟಿದರು, ಆದರೆ ಅವರು ಅಲ್ಲಿ ನಿಲ್ಲಲಿಲ್ಲ, ರಾಹುಲ್ ಗಾಂಧಿ ಕೂಡ ಬಾರ್ಪೇಟಾ ಸತ್ರದ ಮುಂದೆ ದಾಟಿದರು ಮತ್ತು ಅವರು ಅಲ್ಲಿ ಒಂದು ನಿಮಿಷ ನಿಲ್ಲಲಿಲ್ಲ; ಅವರು ಸಹ ನಿಲ್ಲಲಿಲ್ಲ. ಕಾಮಾಖ್ಯ ದೇವಸ್ಥಾನದಲ್ಲಿ ನಿಲ್ಲಿಸಿ, ಇಡೀ ಘಟನೆಯು ಕೇವಲ ಮಾಧ್ಯಮಗಳ ಆಕರ್ಷಣೆಗಾಗಿ ಮತ್ತು ಅಸ್ಸಾಂ ಅನ್ನು ಅಸ್ಥಿರಗೊಳಿಸಲು ನಾಟಕವಾಡಿದ್ದಾರೆ ಎಂದಿದ್ದಾರೆ.
4
+ ರಾಹುಲ್ ಗಾಂಧಿಯನ್ನು ಟೀಕಿಸಿದ ಅಸ್ಸಾಂ ಮುಖ್ಯಮಂತ್ರಿ, ಅವರು (ರಾಹುಲ್ ಗಾಂಧಿ) ಮಹಾಪುರುಷ ಶ್ರೀಮಂತ ಶಂಕರದೇವರನ್ನು ಗೌರವಿಸಿದ್ದರೆ, ಅವರು ಬರ್ಪೇಟ ಸತ್ರ, ಪಟಬೌಷಿ ಸತ್ರಕ್ಕೆ ಹೋಗಬಹುದಿತ್ತು, ಏಕೆಂದರೆ ಶ್ರೀಮಂತ ಶಂಕರದೇವ ಬರ್ಪೇಟ ಸತ್ರವನ್ನು ಸ್ಥಾಪಿಸಿ ಪಟಬೌಶಿಯಲ್ಲಿ ಉಳಿದುಕೊಂಡರು.
5
+ ರೈಲುಗಳ ಅಪಘಾತ ತಡೆಯುವ ‘ಕವಚ್’ ಸಿಸ್ಟಮ್ ಯಶಸ್ವಿ ಪರೀಕ್ಷೆ
6
+ ಅವರು ಅಸ್ಸಾಂ ಅನ್ನು ಪ್ರೀತಿಸುತ್ತಿದ್ದರೆ, ಅವರು ಭೂಪೇನ್ ಹಜಾರಿಕಾ ಸಮಾ ಖೇತ್ರಾದಲ್ಲಿ ನಿಲ್ಲಿಸಿ ಭೂಪೇನ್ ಹಜಾರಿಕಾ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಬಹುದಿತ್ತು, ಅವರು ಹಿಂದೂ ಧರ್ಮದಲ್ಲಿ ನಂಬಿಕೆ ಹೊಂದಿದ್ದರೆ, ಅವರು ಕಾಮಾಖ್ಯ ದೇವಸ್ಥಾನಕ್ಕೆ ಒಂದು ನಿಮಿಷ ಹೋಗಬಹುದಿತ್ತು, ಅಸ್ಥಿರಗೊಳಿಸುವುದು ಅವರ ಮುಖ್ಯ ಗುರಿಯಾಗಿತ್ತು. ಇಂದು ನಾವು ಅದನ್ನು ವಿಫಲಗೊಳಿಸಿದ್ದೇವೆ, ಈಗ ಅವರು ಧುಬ್ರಿಯಲ್ಲಿ ನ್ಯಾಯ್ ಯಾತ್ರೆ ಮಾಡಲು ಬಯಸುತ್ತಾರೆ ಅದನ್ನು ಮಾಡಿ ನನ್ನ ಅಭ್ಯಂತರವಿಲ್ಲ, ಎಂದು ಅವರು ಹೇಳಿದರು.
7
+ ಲೋಕಸಭಾ ಚುನಾವಣೆಯ ನಂತರ ನಾವು ಅವರನ್ನು ಬಂಧಿಸುತ್ತೇವೆ, ನಾವು ಅವರನ್ನು ಮೊದಲು ಬಂಧಿಸಿದರೆ ಅದು ರಾಜಕೀಯವಾಗುತ್ತದೆ, ಈಗ ಪ್ರಕರಣ ದಾಖಲಾಗಿದೆ, ಎಸ್‍ಐಟಿ ತನಿಖೆ ನಡೆಸುತ್ತದೆ, ಮತ್ತು ನಮ್ಮ ಬಳಿ ಸಾಕ್ಷ್ಯವಿದೆ, ಅವರು ಪ್ರಚೋದನೆ ನೀಡಿದ ನಂತರ ಗುವಾಹಟಿಯಲ್ಲಿ ದೊಡ್ಡ ಘಟನೆ ಸಂಭವಿಸಬಹುದು. ಬ್ಯಾರಿಕೇಡ್‍ಗಳನ್ನು ಒಡೆದು, ಲೋಕಸಭೆ ಚುನಾವಣೆಗೂ ಮುನ್ನ ನಾವು ರಾಜಕೀಯ ಮಾಡಲು ಬಯಸುವುದಿಲ್ಲ ಏಕೆಂದರೆ ಈ ಚುನಾವಣೆಯಲ್ಲಿ ನಾವು ಗೆಲ್ಲಲಿದ್ದೇವೆ ಎಂದು ಅವರು ಹೇಳಿದರು.
8
+ ಮುಂಬರುವ ಲೋಕಸಭಾ ಚುನಾವಣಾ ದಿನಾಂಕಗಳ ಕುರಿತು ಮಾತನಾಡಿದ ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂನಲ್ಲಿ ಏಪ್ರಿಲ್ 14 ರ ಮೊದಲು ಲೋಕಸಭಾ ಚುನಾವಣೆಯನ್ನು ನಡೆಸುವಂತೆ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡುವುದಾಗಿ ಹೇಳಿದರು, ಇದರಿಂದ ಜನರು ಬೋಹಾಗ್ ಅಥವಾ ರೊಂಗಾಲಿ ಬಿಹು ಆಚರಣೆಯನ್ನು ಆಚರಿಸಬಹುದು ಎಂದು ತಿಳಿಸಿದ್ದಾರೆ.
eesanje/url_47_180_2.txt ADDED
@@ -0,0 +1,7 @@
 
 
 
 
 
 
 
 
1
+ ಭಿನ್ನಾಭಿಪ್ರಾಯಗಳು ಹಿಂಸಾಚಾರಕ್ಕೆ ಕಾರಣವಾಗಬಾರದು : ಖಾನ್
2
+ ತಿರುವನಂತಪುರಂ, ಜ 26 (ಪಿಟಿಐ) ಭಿನ್ನಾಭಿಪ್ರಾಯ ಮತ್ತು ಅಭಿಪ್ರಾಯಗಳು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಅತ್ಯಗತ್ಯ ಅಂಶಗಳಾಗಿವೆ ಆದರೆ ಅವು ಹಿಂಸಾಚಾರಕ್ಕೆ ಇಳಿಯಬಾರದು ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಹೇಳಿದ್ದಾರೆ.
3
+ ರಾಜ್ಯ ರಾಜಧಾನಿಯ ಸೆಂಟ್ರಲ್ ಸ್ಟೇಡಿಯಂನಲ್ಲಿ ಗಣರಾಜ್ಯೋತ್ಸವದ ನೇತೃತ್ವ ವಹಿಸಿದ್ದ ಖಾನ್ ಅವರು, ಮುಂದಿನ ಪೀಳಿಗೆಗೆ ಕೆಟ್ಟ ಉದಾಹರಣೆಯಾಗುವುದರಿಂದ ಆಡಳಿತದ ಮೇಲೆ ಪರಿಣಾಮ ಬೀರುವ ಗುಂಪು ಪೈಪೋಟಿ ಅಥವಾ ಅಕಾರಕ್ಕಾಗಿ ಆಂತರಿಕ ಹೋರಾಟಗಳಿಗೆ ಸಮಾಜವು ಅವಕಾಶ ನೀಡಬಾರದು ಎಂದು ಹೇಳಿದರು.
4
+ ಶಿಕ್ಷಣವು ಸಮಾಜವನ್ನು ಪರಿವರ್ತಿಸುವ ಮುಖ್ಯ ಸಾಧನವಾಗಿದೆ ಮತ್ತು ಹಳೆಯ ಪೂರ್ವಾಗ್ರಹಗಳಿಂದ ಮನಸ್ಸನ್ನು ಶುದ್ಧೀಕರಿಸುವ ಏಕೈಕ ಪರಿಣಾಮಕಾರಿ ವಿಧಾನವಾಗಿದೆ ಎಂದು ರಾಜ್ಯಪಾಲರು ಹೇಳಿದರು. ಭವಿಷ್ಯವು ನಮ್ಮ ಆಲೋಚನೆಗಳು ಮತ್ತು ಕಾರ್ಯಗಳಲ್ಲಿ ನಾವು ಏನಾಗಿದ್ದೇವೆ ಎಂಬುದರ ಮೇಲೆ ಅವಲಂಬಿತವಾಗಿದೆ, ಇದಕ್ಕಾಗಿ, ನಮಗೆ ನಿಜವಾದ ಸ್ವಾಯತ್ತ ಮತ್ತು ಯಾವುದೇ ಬಾಹ್ಯ ಹಸ್ತಕ್ಷೇಪದಿಂದ ಮುಕ್ತವಾದ ಉನ್ನತ ಶಿಕ್ಷಣದ ಸಂಸ್ಥೆಗಳು ಬೇಕಾಗುತ್ತವೆ, ಅದು ಯುವಕರನ್ನು ಶೈಕ್ಷಣಿಕ ವಾತಾವರಣವನ್ನು ಕಲುಷಿತಗೊಳಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೂಡ ಭಾಗವಹಿಸಿದ್ದರು.
5
+ ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ
6
+ ಸ್ಟಾರ್ಟಪ್‍ಗಳು, ಆರೋಗ್ಯ ಮತ್ತು ಪ್ರವಾಸೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕೇರಳ ಸಾಸಿರುವ ವಿವಿಧ ಸಾಧನೆಗಳು ಮತ್ತು ಪ್ರಶಸ್ತಿಗಳನ್ನು ಖಾನ್ ಉಲ್ಲೇಖಿಸಿದರು ಮತ್ತು ಅಂತಹ ಉನ್ನತ ಸಾಧನೆ ಮಾಡಿದ ರಾಜ್ಯದ ಜನರು ಆರೋಗ್ಯಕರ ಪ್ರಜಾಪ್ರಭುತ್ವವನ್ನು ಪೋಷಿಸುವುದು ಕಡ್ಡಾಯವಾಗಿದೆ ಎಂದು ಹೇಳಿದರು. ಪರಸ್ಪರ ಗೌರವ ಮತ್ತು ಆಳವಾದ ತಿಳುವಳಿಕೆಯ ಮನೋಭಾವ.
7
+ ಭಿನ್ನಾಭಿಪ್ರಾಯ ಮತ್ತು ಭಿನ್ನಾಭಿಪ್ರಾಯಗಳು ಪ್ರಜಾಪ್ರಭುತ್ವದ ಕಾರ್ಯಚಟುವಟಿಕೆಗೆ ಅತ್ಯಗತ್ಯ ಅಂಶಗಳಾಗಿವೆ. ಆದರೆ ಭಿನ್ನಾಭಿಪ್ರಾಯವು ಹಿಂಸಾಚಾರಕ್ಕೆ ಇಳಿಯುತ್ತದೆ, ಅದು ದೈಹಿಕ ಅಥವಾ ಮೌಖಿಕವಾಗಿರಬಹುದು, ಇದು ಪ್ರಜಾಪ್ರಭುತ್ವದ ದ್ರೋಹ ಮತ್ತು ಮಾನವ ವೈಫಲ್ಯದ ಸಂಕೇತವಾಗಿದೆ. ಒಂದು ಸಮಾಜವಾಗಿ, ನಾವು ಗುಂಪು ಪೈಪೋಟಿ ಅಥವಾ ಅಧಿಕಾರಕ್ಕಾಗಿ ಆಂತರಿಕ ಹೋರಾಟಗಳನ್ನು ಆಡಳಿತದ ಮೇಲೆ ಪರಿಣಾಮ ಬೀರಲು ಅವಕಾಶ ನೀಡಬಾರದು, ಆ ಮೂಲಕ ಯುವಕರಿಗೆ ಕೆಟ್ಟ ಉದಾಹರಣೆ ನೀಡಬಾರದು ಎಂದು ಖಾನ್ ಹೇಳಿದರು.
eesanje/url_47_180_3.txt ADDED
@@ -0,0 +1,7 @@
 
 
 
 
 
 
 
 
1
+ ಇಂಡಿಯಾ ಒಕ್ಕೂಟದ ಏಕತೆ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ ರಾಹುಲ್
2
+ ಕೂಚ್ ಬೆಹಾರ್, ಜ 25 (ಪಿಟಿಐ) ಲೋಕಸಭೆ ಚುನಾವಣೆಯಲ್ಲಿ ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಏಕಾಂಗಿಯಾಗಿ ಸ್ರ್ಪಧಿಸಲು ನಿರ್ಧರಿಸಿದ ಒಂದು ದಿನದ ನಂತರ, ರಾಷ್ಟ್ರವ್ಯಾಪಿ ಅನ್ಯಾಯದ ವಿರುದ್ಧ ಹೋರಾಡುವಲ್ಲಿ ಇಂಡಿಯಾ ಒಕ್ಕೂಟದ ಬಣಗಳ ಏಕತೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
3
+ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ್ ಯಾತ್ರೆ ಅಸ್ಸಾಂನಿಂದ ಕೂಚ್ ಬೆಹಾರ್ ಜಿಲ್ಲೆಯ ಬಕ್ಷಿರ್ಹತ್ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿತು. ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಅೀಧಿರ್ ಚೌಧರಿ ಆತ್ಮೀಯವಾಗಿ ಸ್ವಾಗತಿಸಿದರು. ಕೂಚ್ ಬೆಹಾರ್‍ನಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಗಾಂಧಿ, ಬಿಜೆಪಿ ಮತ್ತು ಆರ್‍ಎಸ್‍ಎಸ್ ದೇಶಾದ್ಯಂತ ದ್ವೇಷ ಮತ್ತು ಹಿಂಸಾಚಾರವನ್ನು ಹರಡುತ್ತಿವೆ ಎಂದು ಆರೋಪಿಸಿದರು.
4
+ ದೇಶದಾದ್ಯಂತ ಅನ್ಯಾಯ ನಡೆಯುತ್ತಿರುವುದರಿಂದ ಯಾತ್ರೆಗೆ ನ್ಯಾಯ್ (ನ್ಯಾಯ) ಪದವನ್ನು ಲಗತ್ತಿಸಲಾಗಿದೆ. ಇಂಡಿಯಾ ಒಕ್ಕೂಟ ದೇಶದಾದ್ಯಂತ ಅನ್ಯಾಯದ ವಿರುದ್ಧ ಹೋರಾಡಲಿದೆ ಎಂದರು. ಪಶ್ಚಿಮ ಬಂಗಾಳದ ಸಂಸತ್ತಿನ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ರ್ಪಧಿಸುವ ಮಮತಾ ಬ್ಯಾನರ್ಜಿ ಅವರ ನಿರ್ಧಾರವು ಪ್ರತಿಪಕ್ಷ ಬಣದಲ್ಲಿ ಅಲ್ಲೊಲ್ಲ ಕಲ್ಲೊಲ ಸೃಷ್ಟಿಸಿದ ಒಂದು ದಿನದ ನಂತರ ಗಾಂಧಿಯವರ ಈ ಹೇಳಿಕೆಯು ಇಂಡಿಯಾ ಒಕ್ಕೂಟದಲ್ಲಿ ವಿಶ್ವಾಸವನ್ನು ವ್ಯಕ್ತಪಡಿಸಿದೆ.
5
+ ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ
6
+ ಬ್ಯಾನರ್ಜಿಯವರ ಹಠಾತ್ ಕಾಮೆಂಟ್‍ಗಳು ಕಾಂಗ್ರೆಸ್‍ಗೆ ಸಮನ್ವಯ ವಿಧಾನವನ್ನು ಅಳವಡಿಸಿಕೊಳ್ಳಲು ಒತ್ತಾಯಿಸಿತು, ಪಕ್ಷದ ವಕ್ತಾರ ಜೈರಾಮ್ ರಮೇಶ್ ಅವರು ಮಮತಾ ಬ್ಯಾನರ್ಜಿ ಇಲ್ಲದೆ ಇಂಡಿಯಾ ಒಕ್ಕೂಟ ಕಲ್ಪಿಸಿಕೊಳ್ಳಲಾಗುವುದಿಲ್ಲ ಎಂದು ಪ್ರತಿಪಾದಿಸಿದರು. ಸಿಪಿಐ(ಎಂ) ಮತ್ತು ಎಡ ಪಕ್ಷಗಳು, ರಾಜ್ಯದೊಳಗಿನ ಕಾಂಗ್ರೆಸ್‍ನ ಮಿತ್ರಪಕ್ಷಗಳು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇಂಡಿಯ ಒಕ್ಕೂಟದ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆದರೆ, ಯಾತ್ರೆಯ ಬಗ್ಗೆ ಮಾಹಿತಿ ಕೊರತೆಯನ್ನು ಮುಂದಿಟ್ಟುಕೊಂಡು ಟಿಎಂಸಿ ಗೈರಾಗಲು ನಿರ್ಧರಿಸಿದೆ.
7
+ ಯಾತ್ರೆಯ ಬಂಗಾಳದ ಭಾಗವು ಆರು ಜಿಲ್ಲೆಗಳು ಮತ್ತು ಆರು ಲೋಕಸಭಾ ಕ್ಷೇತ್ರಗಳಾದ ಡಾರ್ಜಿಲಿಂಗ್, ರಾಯ್‍ಗುಂಜ, ಉತ್ತರ ಮತ್ತು ದಕ್ಷಿಣ ಮಾಲ್ಡಾ ಮತ್ತು ಎರಡು ಮುರ್ಷಿದಾಬಾದ್‍ನಲ್ಲಿ ಐದು ದಿನಗಳ ಕಾಲ 523 ಕಿ.ಮೀ. ಏಪ್ರಿಲ-ಮೇ 2021 ರ ವಿಧಾನಸಭಾ ಚುನಾವಣೆಯ ನಂತರ ಇದು ರಾಜ್ಯಕ್ಕೆ ಗಾಂಧಿಯವರ ಮೊದಲ ಭೇಟಿಯಾಗಿದೆ.
eesanje/url_47_180_4.txt ADDED
@@ -0,0 +1,7 @@
 
 
 
 
 
 
 
 
1
+ ಅಂಬೇಡ್ಕರ್ ಮೊಮ್ಮಗನಿಗೆ ಗಾಳ ಹಾಕಿದ ಮಹಾ ವಿಕಾಸ್ ಅಘಾಡಿ
2
+ ಮುಂಬೈ, ಜ. 25 (ಪಿಟಿಐ) ಮಹಾರಾಷ್ಟ್ರದಲ್ಲಿ ವಿರೋಧ ಪಕ್ಷದ ಮೈತ್ರಿಕೂಟದ ಭಾಗವಾಗಲು ಮತ್ತು ಸೀಟು ಹಂಚಿಕೆಯ ಚರ್ಚೆಗೆ ಸೇರಲು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್ ನೇತೃತ್ವದ ವಂಚಿತ್ ಬಹುಜನ ಅಘಾಡಿ ಗೆ ಮಹಾ ವಿಕಾಸ್ ಅಘಾಡಿ ಆಹ್ವಾನ ನೀಡಿದೆ.
3
+ ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ನಾನಾ ಪಟೋಲೆ, ಎನ್‍ಸಿಪಿಯ ಶರದ್ ಪವಾರ್ ಬಣದ ಜಯಂತ್ ಪಾಟೀಲ್ ಮತ್ತು ಶಿವಸೇನೆ (ಯುಬಿಟಿ) ಸಂಸದ ಸಂಜಯ್ ರಾವುತ್ ಅವರು ಸಹಿ ಮಾಡಿದ ಪತ್ರವನ್ನು ಪ್ರಕಾಶ್ ಅಂಬೇಡ್ಕರ್ ಅವರಿಗೆ ಕಳುಹಿಸಲಾಗಿದ್ದು, ಸೀಟು ಹಂಚಿಕೆ ಮಾತುಕತೆಗೆ ಸೇರಲು ವಿಬಿಎಯಿಂದ ಹಿರಿಯ ನಾಯಕರನ್ನು ನಿಯೋಜಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.
4
+ ದೇಶವು ಕಠಿಣ ಸಮಯವನ್ನು ಹಾದುಹೋಗುತ್ತಿದೆ ಮತ್ತು ಸರ್ವಾಕಾರದ ವಿರುದ್ಧ ಧ್ವನಿ ಎತ್ತುತ್ತಿದೆ ಎಂದು ಪತ್ರದಲ್ಲಿ ಹೇಳಲಾಗಿದೆ. ಸಂವಿಧಾನ ಮತ್ತು ದೇಶವನ್ನು ರಕ್ಷಿಸುವ ಅಗತ್ಯವಿದೆ ಹೀಗಾಗಿ ಸೀಟು ಹಂಚಿಕೆ ಕುರಿತು ಚರ್ಚಿಸಲು ಎಂವಿಎ ಮಿತ್ರಪಕ್ಷಗಳು ಸಭೆ ನಡೆಸುತ್ತಿದ್ದು, ವಿಬಿಎಯನ್ನು ಮಾತುಕತೆಗೆ ಆಹ್ವಾನಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ವಿಬಿಎ ಮೈತ್ರಿ ಮಾತುಕತೆಯ ಭಾಗವಾಗಬೇಕೆಂದು ನಾವು ಬಯಸುತ್ತೇವೆ ಎಂದು ಅಂಬೇಡ್ಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಲಾಗಿದೆ.
5
+ ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ
6
+ ಈ ವರ್ಷ ಲೋಕಸಭೆ ಮತ್ತು ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಎನ್‍ಸಿಪಿ ಅಧ್ಯಕ್ಷ ಶರದ್ ಪವಾರ್ ಕಳೆದ ವಾರ ಬಿಜೆಪಿ ನೇತೃತ್ವದ ಎನ್‍ಡಿಎಗೆ ಪರ್ಯಾಯವಾಗಿ ಒಗ್ಗೂಡಿರುವ ಸಮಾನ ಮನಸ್ಕ ವಿರೋಧ ಪಕ್ಷಗಳಿಗೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರವನ್ನು ಸೋಲಿಸುವವರೆಗೆ ವಿಶ್ರಾಂತಿ ಪಡೆಯಬಾರದು ಎಂದು ಒತ್ತಾಯಿಸಿದ್ದರು.
7
+ ಶಿವಸೇನೆ (ಯುಬಿಟಿ), ಎನ್‍ಸಿಪಿ ಮತ್ತು ಕಾಂಗ್ರೆಸ್‍ಗಳನ್ನು ಒಳಗೊಂಡಿರುವ ಎಂವಿಎ ಮುಂಬರುವ ಚುನಾವಣೆಗೆ ಮೈತ್ರಿ ಮಾಡಿಕೊಳ್ಳಲು ಎಡಪಕ್ಷಗಳು ಮತ್ತು ಪ್ರಕಾಶ್ ಅಂಬೇಡ್ಕರ್ ಅವರ ವಿಬಿಎ ಜೊತೆ ಮಾತನಾಡುತ್ತಿದೆ ಎಂದು ಅವರು ಹೇಳಿದರು.
eesanje/url_47_180_5.txt ADDED
@@ -0,0 +1,8 @@
 
 
 
 
 
 
 
 
 
1
+ ಕೆಲವೇ ವರ್ಷಗಳಲ್ಲಿ ವಿಶ್ವಗುರುವಾಗಲಿದೆ ಭಾರತ : ಮೋಹನ್ ಭಾಗವತ್
2
+ ನಾಗ್ಪುರ, ಜ. 26 (ಪಿಟಿಐ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ಇಂದು ಜನರನ್ನು ಸಹೋದರತೆಯಿಂದ ಬಾಳುವಂತೆ ಕೇಳಿಕೊಂಡರು ಮತ್ತು ಭಾರತವು ಕೆಲವೇ ವರ್ಷಗಳಲ್ಲಿ ವಿಶ್ವ ಗುರು ಆಗುವ ಸಾಮಥ್ರ್ಯವನ್ನು ಹೊಂದಿದೆ ಎಂದು ಪ್ರತಿಪಾದಿಸಿದರು. ಭಾರತದ 75 ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾಗ್ಪುರದ ಆರ್‍ಎಸ್‍ಎಸ್ ಪ್ರಧಾನ ಕಚೇರಿಯಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ನಂತರ ಭಾಗವತ್ ಮಾತನಾಡಿದರು.
3
+ ನಾವು ಧರ್ಮ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಈ ಶಕ್ತಿ ಎಲ್ಲಿಂದ ಬಂತು? ಈ ಶಕ್ತಿ ಯಾವಾಗಲೂ ಇತ್ತು. ಜನವರಿ 22 ರಂದು (ರಾಮ ಮಂದಿರ ಪ್ರತಿಷ್ಠಾಪನಾ ದಿನ) ವಾತಾವರಣವನ್ನು ನಿರ್ಮಿಸಲಾಯಿತು. ಅದೇ ರೀತಿಯಲ್ಲಿ, ಈ ದಿನವೂ ವಾತಾವರಣ ನಿರ್ಮಾಣವಾಗಿದೆ.
4
+ ಈ ವಾತಾವರಣ ಒಂದು ದಿನಕ್ಕೆ ಸೀಮಿತವಾಗಿರುತ್ತದೆ ಎಂದು ನಿರೀಕ್ಷಿಸಲಾಗುವುದಿಲ್ಲ ಎಂದು ಅವರು ಹೇಳಿದರು. ಸಂವಿಧಾನವನ್ನು ರಕ್ಷಿಸುವಲ್ಲಿ ಸರ್ಕಾರವು ತಾಂತ್ರಿಕ ಜವಾಬ್ದಾರಿಯನ್ನು ಹೊಂದಿದೆ, ಆದರೆ ನಾಗರಿಕರು ಅದರಲ್ಲಿ ಹೆಚ್ಚು ಮಹತ್ವದ ಪಾತ್ರವನ್ನು ವಹಿಸುತ್ತಾರೆ ಎಂದು ಆರ್‍ಎಸ್‍ಎಸ್ ಮುಖ್ಯಸ್ಥರು ಹೇಳಿದರು.
5
+ ಭಾರತವು ಯಾವಾಗಲೂ ಮೇಲೇರುವ ಸಾಮಥ್ರ್ಯವನ್ನು ಹೊಂದಿದೆ, ಆದರೆ ಜನರು ಸಹೋದರತೆಯಿಂದ ಬದುಕಿದಾಗ ಅದು ಫಲಿತಾಂಶಗಳನ್ನು ನೀಡುತ್ತದೆ ಎಂದು ಭಾಗವತ್ ಹೇಳಿದರು. 40 ವರ್ಷಗಳ ಹಿಂದೆ ಭಾರತವರ್ಷದ ಉದಯದ ಬಗ್ಗೆ ಯಾರಾದರೂ ಮಾತನಾಡಿದ್ದರೆ, ನಮ್ಮವರೇ ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದರು ಎಂದು ಅವರು ಹೇಳಿದರು.
6
+ ಹನಿಮೂನ್‍ ಹೆಸರಲ್ಲಿ ಅಯೋಧ್ಯೆಗೆ ಕರೆದೊಯ್ದ ಪತಿಗೆ ವಿಚ್ಚೇದನ ನೀಡಲು ಮುಂದಾದ ಮಹಿಳೆ
7
+ ಪ್ರತಿಯೊಬ್ಬರೂ ನಮ್ಮ ಸ್ವಂತ ಸಾಮಥ್ರ್ಯಗಳನ್ನು ಹೊಂದಿರುವುದರಿಂದ ಎಲ್ಲರ ಅನುಕೂಲಕ್ಕಾಗಿ ನಮ್ಮ ಸಾಮಥ್ರ್ಯಗಳನ್ನು ಬಳಸುವುದು ನಮಗೆ ಪ್ರತಿಯೊಬ್ಬರಿಗೂ ಆಗಿದೆ. ನಾವು ವಿಭಿನ್ನವಾಗಿ ಕಂಡರೂ, ನಮ್ಮ ದೇಶವು ವೈವಿಧ್ಯತೆಯನ್ನು ಒಪ್ಪಿಕೊಳ್ಳುವ ಸಂಪ್ರದಾಯವನ್ನು ಹೊಂದಿದೆ. ನಾವು ಸಹೋದರತೆಯಿಂದ ಬಾಳಬೇಕು ಮತ್ತು ಸಂವಿಧಾನದ ತತ್ವಗಳನ್ನು ಅನುಸರಿಸಬೇಕು. ಆಗ ದೇಶ ಪ್ರಗತಿಯತ್ತ ಸಾಗುತ್ತದೆ ಎಂದರು.ಜನರು ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಡಬೇಕು ಎಂದು ಭಾಗವತ್ ಹೇಳಿದರು. ಕೆಲವು ವರ್ಷಗಳಲ್ಲಿ ಭಾರತವು ವಿಶ್ವ ಗುರುವಾಗುವುದನ್ನು ನಾವು ನೋಡಬಹುದು ಎಂದು ಅವರು ಹೇಳಿದರು.
8
+ ಗಣರಾಜ್ಯೋತ್ಸವವನ್ನು ಆಚರಿಸಲು ಜನರನ್ನು ಕೋರಿದ ಅವರು ತಮ್ಮ ಜವಾಬ್ದಾರಿಗಳನ್ನು ಅರಿತು ಸರಿಯಾಗಿ ನಿರ್ವಹಿಸುವಂತೆ ಒತ್ತಾಯಿಸಿದರು.ಸಂಘವು ಇಲ್ಲಿನ ರೇಶಿಂಬಾಗ್ ಪ್ರದೇಶದಲ್ಲಿರುವ ಡಾ ಹೆಡಗೇವಾರ್ ಸ್ಮತಿ ಮಂದಿರದಲ್ಲಿ ಕಾರ್ಯಕ್ರಮವನ್ನು ಆಯೋಜಿಸಿದೆ.
eesanje/url_47_180_6.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಮತ್ತೆ ತೀವ್ರಗೊಂಡ ಮರಾಠ ಮೀಸಲಾತಿ ಹೋರಾಟ
2
+ ಮುಂಬೈ, ಜ. 26 (ಪಿಟಿಐ) – ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಮತ್ತೆ ಮರಾಠ ಮೀಸಲಾತಿ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ. ಸಮುದಾಯದ ಮೀಸಲಾತಿಗಾಗಿ ಒತ್ತಾಯಿಸಲು ಮರಾಠ ಕೋಟಾದ ನಾಯಕ ಮನೋಜ್ ಜಾರಂಗೆ ಅವರು ಇಂದು ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ನವಿ ಮುಂಬೈ ತಲುಪಿದ್ದಾರೆ.
3
+ ಜಾರಂಗೆ ಮತ್ತು ಇತರ ಮರಾಠಾ ಕಾರ್ಯಕರ್ತರು ಬೈಕ್‍ಗಳು, ಕಾರುಗಳು, ಜೀಪುಗಳು, ಟೆಂಪೋಗಳು ಮತ್ತು ಟ್ರಕ್‍ಗಳ ಮೂಲಕ ಮುಂಬೈನ ಹೊರವಲಯದಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮುಂಭಾಗಕ್ಕೆ ಬಂದು ಜಮಾಯಿಸಿದ್ದಾರೆ. ಅವರ ಯೋಜನೆಯಂತೆ ಜಾರಂಗೆ ಅವರು ತಮ್ಮ ಬೆಂಬಲಿಗರೊಂದಿಗೆ ಇಂದು ಆಜಾದ್ ಮೈದಾನದಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಲಿದ್ದಾರೆ. ಮರಾಠಾ ಸಮುದಾಯಕ್ಕೆ ಕುಂಬಿ (ಒಬಿಸಿ) ಸ್ಥಾನಮಾನ ನೀಡಬೇಕು ಎಂದು ಪ್ರತಿಭಟನಾಕಾರರ ಒತ್ತಾಯವಾಗಿದೆ.
4
+ ನಗರದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲು ಅನುಮತಿ ನಿರಾಕರಿಸಿ ಮುಂಬೈ ಪೊಲೀಸರು ನೋಟಿಸ್ ಜಾರಿ ಮಾಡಿದ್ದರೂ, ಜನವರಿ 26ರಂದು ದಕ್ಷಿಣ ಮುಂಬೈನ ಆಜಾದ್ ಮೈದಾನ ತಲುಪುವುದಾಗಿ ಗುರುವಾರ ಜಾರಂಜ್ ಘೋಷಿಸಿದ್ದರು. ಕ್ರಿಮಿನಲ್ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 149 ರ ಅಡಿಯಲ್ಲಿ ಹೊರಡಿಸಲಾದ ನೋಟಿಸ್‍ನಲ್ಲಿ ಪೊಲೀಸರು, ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿದೆ ಮತ್ತು ಮುಂಬೈನಲ್ಲಿ ವಿವಿಧ ಹಣಕಾಸು ಸಂಸ್ಥೆಗಳು, ಅಂತರರಾಷ್ಟ್ರೀಯ ವಕೀಲರು ಮತ್ತು ಇತರ ಹಣಕಾಸು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
5
+ ಮುಂಬೈನಲ್ಲಿ ಪ್ರತಿದಿನ ಸರಿಸುಮಾರು 60 ರಿಂದ 65 ಲಕ್ಷ ನಾಗರಿಕರು ಕೆಲಸಗಳಿಗಾಗಿ ರೈಲು ಮತ್ತು ಇತರ ಸಾರಿಗೆ ವಿಧಾನಗಳಲ್ಲಿ ಪ್ರಯಾಣಿಸುತ್ತಾರೆ. ಮರಾಠಾ ಪ್ರತಿಭಟನಾಕಾರರು ತಮ್ಮ ವಾಹನಗಳಲ್ಲಿ ನಗರಕ್ಕೆ ಬಂದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ನಗರದಲ್ಲಿ ದೈನಂದಿನ ಸಾರಿಗೆ ವ್ಯವಸ್ಥೆ ಕುಸಿಯುತ್ತದೆ ಎಂದು ಎಚ್ಚರಿಸಿದ್ದರು.
6
+ ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದ ನಂತರ ನವಿ ಮುಂಬೈನ ಖಾರ್ಘರ್‍ನಲ್ಲಿರುವ ಇಂಟರ್‍ನ್ಯಾಷನಲ್ ಕಾಪೆರ್ರೇಷನ್ ಪಾರ್ಕ್ ಗ್ರೌಂಡ್‍ನಲ್ಲಿ ಪ್ರತಿಭಟನಾಕಾರರು ಸೇರಬಹುದು ಎಂದು ಮುಂಬೈ ಪೊಲೀಸರು ಸೂಚಿಸಿದ್ದಾರೆ. ಒಂದು ವೇಳೆ ಮೋರ್ಚಾ ನೋಟಿಸ್‍ಗೆ ಬದ್ಧವಾಗಿಲ್ಲದಿದ್ದರೆ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‍ನ ಆದೇಶಗಳನ್ನು ನಿಂದನೆ ಮಾಡಿದಂತೆ ಎಂದು ಸೂಚಿಸಲಾಗಿದೆ.
7
+ ಹೈಕೋರ್ಟ್ ಪ್ರಕಾರ, ಆಜಾದ್ ಮೈದಾನದ 7,000 ಚದರ ಮೀಟರ್ ಪ್ರದೇಶವನ್ನು ಮಾತ್ರ ಪ್ರತಿಭಟನೆಗೆ ಮೀಸಲಿಡಲಾಗಿದೆ ಮತ್ತು ಅದರ ಸಾಮಥ್ರ್ಯವು 5,000 ರಿಂದ 6,000 ಪ್ರತಿಭಟನಾಕಾರರಿಗೆ ಮಾತ್ರ ಅವಕಾಶ ಕಲ್ಪಿಸುತ್ತದೆ, ಆದರೆ ಹೆಚ್ಚಿನ ಸಂಖ್ಯೆಯ ಪ್ರತಿಭಟನಾಕಾರರು ಅಲ್ಲಿಗೆ ಬಂದರೆ, ಅವರಿಗೆ ಸಾಕಷ್ಟು ಸ್ಥಳಾವಕಾಶವಿಲ್ಲ. ಉಳಿದ ಮೈದಾನವು ಶಾಲಾ ಶಿಕ್ಷಣ ಮತ್ತು ಕ್ರೀಡಾ ಇಲಾಖೆಗೆ ಒಳಪಟ್ಟಿದ್ದು, ರ್ಯಾಲಿ ನಡೆಸಲು ಅನುಮತಿ ನಿರಾಕರಿಸಿದೆ ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.
8
+ ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ
9
+ ದಾದರ್‍ನ ಶಿವಾಜಿ ಪಾರ್ಕ್ ಮೈದಾನದಲ್ಲಿ ಜನಸಮೂಹ ಸೇರಲು ಅನುಮತಿ ನಿರಾಕರಿಸಿದ ಪೊಲೀಸರು, ಜನವರಿ 26 ಗಣರಾಜ್ಯೋತ್ಸವ ದಿನವಾದ್ದರಿಂದ ಶಿವಾಜಿ ಪಾರ್ಕ್‍ನಲ್ಲಿ ಸರ್ಕಾರಿ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದ್ದು, ಇದರಿಂದ ತೊಂದರೆಯಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ. ಆಂದೋಲನ. ಶಿವಾಜಿ ಪಾರ್ಕ್ ಮೈದಾನಕ್ಕೆ ಇಷ್ಟು ದೊಡ್ಡ ಸಂಖ್ಯೆಯ ಪ್ರವಾಸಿಗರಿಗೆ ಅವಕಾಶ ಕಲ್ಪಿಸುವ ಸಾಮಥ್ರ್ಯ ಇಲ್ಲ ಎಂದು ನೋಟಿಸ್ ಸೇರಿಸಲಾಗಿದೆ.
10
+ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್ ರಿಟ್ ಅರ್ಜಿಯ ಪ್ರಕಾರ, ಪ್ರತಿಭಟನೆಯಿಂದ ಮುಂಬೈನಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ನ್ಯಾಯಾಲಯವು ಪೊಲೀಸರಿಗೆ ಸೂಚಿಸಿದೆ ಎಂದು ಪೊಲೀಸರು ಉಲ್ಲೇಖಿಸಿದ್ದಾರೆ. ಮರಾಠಾ ಆಂದೋಲನವು ಗಣರಾಜ್ಯೋತ್ಸವದಂದು ಯೋಜಿಸಲಾದ ಯಾವುದೇ ಆಚರಣೆಯನ್ನು ಎಂದಿಗೂ ಅಡ್ಡಿಪಡಿಸುವುದಿಲ್ಲ ಎಂದು ಜಾರಂಗೆ ಹೇಳಿದರು.
eesanje/url_47_180_7.txt ADDED
@@ -0,0 +1,6 @@
 
 
 
 
 
 
 
1
+ ಹನಿಮೂನ್‍ ಹೆಸರಲ್ಲಿ ಅಯೋಧ್ಯೆಗೆ ಕರೆದೊಯ್ದ ಪತಿಗೆ ವಿಚ್ಚೇದನ ನೀಡಲು ಮುಂದಾದ ಮಹಿಳೆ
2
+ ಭೋಪಾಲ್, ಜ.26 (ಪಿಟಿಐ) – ವಿದೇಶಕ್ಕೆ ಹನಿಮೂನ್‍ಗೆ ಕರೆದೊಯ್ಯದೆ ತನ್ನ ಹೆತ್ತವರೊಂದಿಗೆ ಅಯೋಧ್ಯೆ ಮತ್ತಿತರ ಧಾರ್ಮಿಕ ಕ್ಷೇತ್ರಗಳಿಗೆ ಕರೆದೊಯ್ದ ವ್ಯಕ್ತಿಯೊಬ್ಬರ ವಿರುದ್ಧ ಆತನ ಪತ್ನಿ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದಾರೆ. ವಿವಾಹವಾಗಿ ಕೇವಲ ಎಂಟು ತಿಂಗಳು ಕಳೆದಿರುವ ದಂಪತಿಯ ವಿಚ್ಛೇದನದ ಅರ್ಜಿಯು ಕೌನ್ಸೆಲಿಂಗ್ ಹಂತದಲ್ಲಿ ಬಾಕಿ ಉಳಿದಿದ್ದು, ಮಹಿಳೆ ಮತ್ತು ಆಕೆಯ ಪತಿ ನಡುವೆ ಸೌಹಾರ್ದಯುತ ಪರಿಹಾರಕ್ಕಾಗಿ ಪ್ರಯತ್ನಗಳು ನಡೆಯುತ್ತಿವೆ ಎಂದು ಕೌಟುಂಬಿಕ ನ್ಯಾಯಾಲಯದ ವಿವಾಹ ಸಲಹೆಗಾರ ಶೈಲ್ ಅವಸ್ತಿ ಪಿಟಿಐಗೆ ತಿಳಿಸಿದರು.
3
+ ದಂಪತಿ ಕಳೆದ ವರ್ಷ ಮೇ 3 ರಂದು ವಿವಾಹವಾಗಿದ್ದರು. ಚೆನ್ನಾಗಿ ಸಂಪಾದನೆ ಮಾಡುತ್ತಿರುವುದರಿಂದ ವಿದೇಶಕ್ಕೆ ಹನಿಮೂನ್ ಹೋಗುವಂತೆ ಮಹಿಳೆ ಹಠ ಹಿಡಿದಿದ್ದಾಳೆ. ಪತಿ ಐಟಿ ವೃತ್ತಿಪರರಾಗಿದ್ದರೆ, ಮಹಿಳೆ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಅವಸ್ತಿ ಹೇಳಿದರು.
4
+ ಪತಿ ಹನಿಮೂನ್‍ಗಾಗಿ ವಿದೇಶಕ್ಕೆ ಹೋಗಲು ಇಷ್ಟವಿರಲಿಲ್ಲ ಮತ್ತು ನಂತರ ಗೋವಾ ಅಥವಾ ದಕ್ಷಿಣ ಭಾರತದಲ್ಲಿ ಎಲ್ಲೋ ಸಾಧ್ಯವಿರುವ ಸ್ಥಳಗಳಿಗೆ ತೆರಳಿ ವಾಪಸ್ಸಾಗಿದ್ದರು. ವ್ಯಕ್ತಿ ತನ್ನ ಹೆಂಡತಿಗೆ ತಿಳಿಸದೆ ಅಯೋಧ್ಯೆ ಮತ್ತು ವಾರಣಾಸಿಗೆ ವಿಮಾನ ಟಿಕೆಟ್‍ಗಳನ್ನು ಕಾಯ್ದಿರಿಸಿದ್ದಾನೆ ಮತ್ತು ಹೊರಡುವ ಒಂದು ದಿನದ ಮೊದಲು ಪ್ರವಾಸದ ಬಗ್ಗೆ ತಿಳಿಸಿದ್ದಾನೆ ಎಂದು ಅವಸ್ತಿ ಹೇಳಿದರು.
5
+ ಕಾರಿನಲ್ಲಿ ಸರಸ-ಸಲ್ಲಾಪ : ಎಸ್ಐ ಹತ್ಯೆಗೆ ಯತ್ನಿಸಿದ ಯುವಕ-ಯುವತಿಗಾಗಿ ಶೋಧ
6
+ ರಾಮ ಮಂದಿರದ ವಿಗ್ರಹ ಪ್ರತಿಷ್ಠಾಪನೆಗೂ ಮುನ್ನ ತನ್ನ ತಾಯಿ ಅಯೋಧ್ಯೆಗೆ ಭೇಟಿ ನೀಡಲು ಬಯಸಿರುವುದಾಗಿ ಪತ್ನಿಗೆ ತಿಳಿಸಿದರು. ಆ ಸಮಯದಲ್ಲಿ ಮಹಿಳೆ ಆಕ್ಷೇಪಿಸಲಿಲ್ಲ ಆದರೆ ಕುಟುಂಬವು ಹಿಂತಿರುಗಿದ ನಂತರ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ನಂತರ ಅದರ ಬಗ್ಗೆ ಜಗಳವಾಯಿತು. ಮಹಿಳೆ ತನ್ನ ಹೇಳಿಕೆಯಲ್ಲಿ ಪುರುಷನು ತನ್ನ ಹೆತ್ತವರನ್ನು ತನಗಿಂತ ಹೆಚ್ಚು ಕಾಳಜಿ ವಹಿಸಿದ್ದಾನೆ ಎಂದು ಮುನಿಸಿಕೊಂಡು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ದಂಪತಿಗೆ ಸಮಾಲೋಚನೆ ನಡೆಸಲಾಗುತ್ತಿದೆ ಆದರೆ ಸಮಸ್ಯೆಯನ್ನು ಪರಿಹರಿಸಲು ಸಮಯ ತೆಗೆದುಕೊಳ್ಳಬಹುದು ಎಂದು ಅವಸ್ತಿ ತಿಳಿಸಿದ್ದಾರೆ.
eesanje/url_47_180_8.txt ADDED
@@ -0,0 +1,6 @@
 
 
 
 
 
 
 
1
+ ಮೆಗಾಸ್ಟಾರ್ ಚಿರಂಜೀವಿಗೆ ಲಭಿಸಿದ ಪದ್ಮವಿಭೂಷಣ ಪ್ರಶಸ್ತಿ
2
+ ಬೆಂಗಳೂರು, ಜ.26- ಸಿನಿಮಾ ಹಾಗೂ ಸಾಮಾಜಿಕ ರಂಗದಲ್ಲಿ ಮುಂಚೂಣಿಯಲ್ಲಿರುವ ಟಾಲಿವುಡ್‍ನ ಮೆಗಾಸ್ಟಾರ್ ಚಿರಂಜೀವಿ ಅವರಿಗೆ 2024ರ ಪ್ರತಿಷ್ಠಿತ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದ್ದು, ಅಭಿಮಾನಿಗಳಲ್ಲಿ ಸಂತಸ ಮನೆಮಾಡಿದೆ.
3
+ ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ಸಿನಿಮಾ, ಕಲೆ, ವಿಜ್ಞಾನ, ಸಾಮಾಜಿಕ ಸೇರಿದಂತೆ ಹಲವಾರು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರನ್ನು ಗೌರವಿಸುವ ಸಲುವಾಗಿ ಕೇಂದ್ರ ಸರ್ಕಾರವು ಪದ್ಮ ಪ್ರಶಸ್ತಿಯನ್ನು ಘೋಷಿಸಿದ್ದು 132 ಮಂದಿಗೆ ಈ ಗೌರವ ಸಂದಿದೆ. ಚಿರಂಜೀವಿ ಸೇರಿದಂತೆ 5 ಮಂದಿಗೆ ಪದ್ಮವಿಭೂಷಣ, 17 ಮಂದಿಗೆ ಪದ್ಮಭೂಷಣ್ ಹಾಗೂ 110 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.
4
+ ಸಿನಿಮಾರಂಗವಲ್ಲದೆ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಮೆಗಾಸ್ಟಾರ್ ಚಿರಂಜೀವಿ ರಕ್ತದಾನ ಮತ್ತು ನೇತ್ರದಾನವನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದು, ಕೊರೊನಾ ಲಾಕ್‍ಡೌನ್ ವೇಳೆಯಲ್ಲಿ ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಿದ್ದರು. ಈ ಸೇವೆಯನ್ನು ಪರಿಗಣಿಸಿ ಚಿರುಗೆ ಪದ್ಮವಿಭೂಷಣ ಪ್ರಶಸ್ತಿ ಲಭಿಸಿದೆ. ಈ ಹಿಂದೆ ಅವರಿಗೆ ಪದ್ಮಭೂಷಣ ಪ್ರಶಸ್ತಿಯೂ ಲಭಿಸಿತ್ತು.
5
+ ಕಾರಿನಲ್ಲಿ ಸರಸ-ಸಲ್ಲಾಪ : ಎಸ್ಐ ಹತ್ಯೆಗೆ ಯತ್ನಿಸಿದ ಯುವಕ-ಯುವತಿಗಾಗಿ ಶೋಧ
6
+ ಚಿರಂಜೀವಿ ಅಲ್ಲದೆ ತಮಿಳು ಚಿತ್ರರಂಗ ಹಿರಿಯ ನಟಿ ವೈಜಯಂತಿ ಬಾಲಿ ಹಾಗೂ ಖ್ಯಾತ ನೃತ್ಯಪಟು ಪದ್ಮಸುಬ್ರಮಣಿಯಂ ಅವರು ಕೂಡ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಕಾಲಿವುಡ್‍ನ ಖ್ಯಾತ ನಟ ಹಾಗೂ ರಾಜಕಾರಣಿ ಕ್ಯಾಪ್ಟನ್ ವಿಜಯ್ ಕಾಂತ್ ಅವರಿಗೆ ಮರಣೋತ್ತರ ಪದ್ಮಭೂಷಣ ಪ್ರಶಸ್ತಿ ಲಭಿಸಿದ್ದರೆ, ಬಾಲಿವುಡ್‍ನ ಖ್ಯಾತ ನಟ ಮಿಥುನ್ ಚಕ್ರವರ್ತಿ, ಖ್ಯಾತ ಗಾಯಕಿ ಉಷಾ ಉತ್ತುಪ್, ಸಂಗೀತ ನಿರ್ದೇಶಕ ಪ್ಯಾರೆಲಲ್ ಶರ್ಮಾ ಅವರಿಗೂ ಪದ್ಮಭೂಷಣ ಪ್ರಶಸ್ತಿ ಸಂದಿದೆ.
eesanje/url_47_180_9.txt ADDED
@@ -0,0 +1,7 @@
 
 
 
 
 
 
 
 
1
+ ಪರೇಡ್‍ನಲ್ಲಿ ಭಾಗವಹಿಸುವ ಅದೃಷ್ಟ ಪಡೆದ ಸೇನಾ ದಂಪತಿ
2
+ ನವದೆಹಲಿ,ಜ.25- ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪರೇಡ್‍ನಲ್ಲಿ ತಮಿಳುನಾಡು ಹಾಗೂ ಕರ್ನಾಟಕ ಮೂಲದ ಸೇನಾ ದಂಪತಿ ಎರಡು ಪ್ರತ್ಯೇಕ ತುಕಡಿಗಳಲ್ಲಿ ಭಾಗವಹಿಸುವ ಅವಕಾಶ ಪಡೆದುಕೊಂಡಿದ್ದಾರೆ. ಭಾರತೀಯ ಸೇನೆಗೆ ಐತಿಹಾಸಿಕ ಕ್ಷಣದಲ್ಲಿ, ವಿವಿಧ ತುಕಡಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಿವಾಹಿತ ದಂಪತಿಯಾದ ಮೇಜರ್ ಜೆರ್ರಿ ಬ್ಲೇಜ್ ಮತ್ತು ಕ್ಯಾಪ್ಟನ್ ಸುಪ್ರೀತಾ ಸಿಟಿ ನಾಳೆ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಭಾಗವಹಿಸಲಿದ್ದಾರೆ. ಅವರು ಎರಡು ಪ್ರತ್ಯೇಕ ತುಕಡಿಗಳ ಸದಸ್ಯರಾಗಿ ಕರ್ತವ್ಯ ಪಥದಲ್ಲಿ ಸಾಗಲಿದ್ದಾರೆ.
3
+ ಮೇಜರ್ ಜೆರ್ರಿ ಬ್ಲೇಜ್ ಮೂಲತಃ ತಮಿಳುನಾಡಿನವರು ಮತ್ತು ಮಿಲಿಟರಿ ಪೊಲೀಸ್‍ನಲ್ಲಿ ಪರಿಣತಿ ಹೊಂದಿರುವ ಮದ್ರಾಸ್ ರೆಜಿಮೆಂಟ್‍ನ ಭಾಗವಾಗಿದ್ದು, ಜೂನ್ 2023 ರಲ್ಲಿ ಕ್ಯಾಪ್ಟನ್ ಸುಪ್ರೀತಾ ಸಿಟಿ ಅವರನ್ನು ವಿವಾಹವಾದರು. ಮೈಸೂರಿನ ನಿವಾಸಿ ಕ್ಯಾಪ್ಟನ್ ಸುಪ್ರೀತಾ ಅವರು ಆರ್ಮಿ ಏರ್ ಡಿಫೆನ್ಸ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸ್ಥಳಗಳಲ್ಲಿ ಪೋಸ್ಟ್ ಮಾಡಲಾಗಿದ್ದರೂ, ಗಣರಾಜ್ಯೋತ್ಸವ ಪರೇಡ್ ಅವರಿಗೆ ಹೊಸದಿಲ್ಲಿಯಲ್ಲಿ ಒಟ್ಟಿಗೆ ಸೇವೆ ಸಲ್ಲಿಸಲು ಅನನ್ಯ ಅವಕಾಶವನ್ನು ಒದಗಿಸಿಕೊಟ್ಟಿದೆ.
4
+ ಇಂದು ಗಣರಾಜ್ಯೋತ್ಸವದ ಮುಖ್ಯ ಅತಿಥಿ ಮ್ಯಾಕ್ರನ್ ಜೊತೆ ಮೋದಿ ರೋಡ್ ಶೋ
5
+ ಈ ಕುರಿತಂತೆ ಮಾಧ್ಯಮದೊಂದಿಗೆ ಸಂತಸ ಹಂಚಿಕೊಂಡಿರುವ ಕ್ಯಾಪ್ಟನ್ ಸುಪ್ರೀತಾ ಅವರು, ಜೆರ್ರಿ ಮತ್ತು ನಾನು ಎನ್‍ಸಿಸಿ ದಿನಗಳಿಂದಲೂ ಒಬ್ಬರಿಗೊಬ್ಬರು ತಿಳಿದಿದ್ದೇವೆ. ನಾವಿಬ್ಬರೂ ಬೇರೆ ಬೇರೆ ಸ್ಥಳಗಳಲ್ಲಿ ಪೋಸ್ಟ್ ಮಾಡಿದ್ದೇವೆ. ಅದೃಷ್ಟವಶಾತ್ ನಾವಿಬ್ಬರೂ ಗಣರಾಜ್ಯೋತ್ಸವ ಪರೇಡ್‍ನಿಂದ ಇಲ್ಲಿಗೆ ಬಂದಿದ್ದೇವೆ.
6
+ ಇದು ಸಂತಸ ತಂದಿದೆ ಎಂದಿದ್ದಾರೆ. ಮೇಜರ್ ಜೆರ್ರಿ ಬ್ಲೇಜ್ ಅವರು ತಮ್ಮ ಪ್ರೇರಣೆಯನ್ನು ಹಂಚಿಕೊಂಡರು, ನನ್ನ ಪತ್ನಿ 2016 ರಲ್ಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಎನ್‍ಸಿಸಿ ತುಕಡಿಯ ಭಾಗವಾಗಿದ್ದರು. 2014 ರಲ್ಲಿ ನವದೆಹಲಿಯಲ್ಲಿ ನಡೆದ ಎನ್‍ಸಿಸಿ ಗಣರಾಜ್ಯೋತ್ಸವ ಶಿಬಿರದ ಭಾಗವಾಗಲು ನನಗೆ ಅವಕಾಶ ಸಿಕ್ಕಿತು.
7
+ ಇದು ಕೂಡ ನನಗೆ ಪ್ರೇರಕ ಅಂಶಗಳಲ್ಲಿ ಒಂದಾಗಿದೆ. 2024 ರ ಗಣರಾಜ್ಯ ದಿನದಂದು ನನ್ನ ರೆಜಿಮೆಂಟ್ ಅನ್ನು ಕರ್ತವ್ಯದ ಹಾದಿಯಲ್ಲಿ ಮುನ್ನಡೆಸಲು ಮತ್ತು ನನ್ನ ರೆಜಿಮೆಂಟ್ ಅನ್ನು ಹೆಮ್ಮೆ ಪಡಿಸಲು ನಾನು ಬಯಸುತ್ತೇನೆ. ನನ್ನ ಈ ಆಸೆ ಈಗ ಈಡೇರುತ್ತಿದೆ ಎಂದು ಹೇಳಿಕೊಂಡಿದ್ದಾರೆ.
eesanje/url_47_181_1.txt ADDED
@@ -0,0 +1,6 @@
 
 
 
 
 
 
 
1
+ ಪಶ್ಚಿಮ ಬಂಗಾಳ ಪ್ರವೇಶಿಸಿದ ರಾಹುಲ್ ‘ನ್ಯಾಯ್ ಯಾತ್ರೆ’
2
+ ಕೋಲ್ಕತ್ತಾ, ಜನವರಿ 25 (ಪಿಟಿಐ) ಇಂಡಿಯಾ ಒಕ್ಕೂಟದ ಮೈತ್ರಿಕೂಟದೊಳಗಿನ ರಾಜಕೀಯ ಏರಿಳಿತದ ನಡುವೆಯೇ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ನ್ಯಾಯ್ ಯಾತ್ರೆ ಇಂದು ಅಸ್ಸಾಂನಿಂದ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು ಪಶ್ಚಿಮ ಬಂಗಾಳದಲ್ಲಿ ಸ್ವತಂತ್ರವಾಗಿ ಸ್ರ್ಪಧಿಸಲಿದೆ ಎಂದು ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಘೋಷಿಸಿದ ಒಂದು ದಿನದ ನಂತರ ಯಾತ್ರೆಯ ಬಂಗಾಳ ಲೆಗ್ ಆರಂಭವಾಗಿದೆ.
3
+ ಕಾಂಗ್ರೆಸ್ ಮತ್ತು ಟಿಎಂಸಿ ಎರಡೂ 2024 ರ ಸಂಸತ್ತಿನ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟವನ್ನು ಎದುರಿಸಲು ರಚಿಸಲಾದ ಇಂಡಿಯಾ ಬ್ಲಾಕ್‍ನ ಘಟಕಗಳಾಗಿವೆ.ಯಾತ್ರೆಯು ರಾಜ್ಯದ ಉತ್ತರ ಭಾಗದಲ್ಲಿರುವ ಕೂಚ್ ಬೆಹಾರ್ ಜಿಲ್ಲೆಯ ಬಕ್ಷೀರ್ಹತ್ ಮೂಲಕ ಪಶ್ಚಿಮ ಬಂಗಾಳವನ್ನು ಪ್ರವೇಶಿಸಿದೆ. ರಂದು ಎರಡು ದಿನಗಳ ಪ್ರವಾಸದ ನಂತರ, ಜನವರಿ 29 ರಂದು ಬಿಹಾರವನ್ನು ಪ್ರವೇಶಿಸುವ ಮೊದಲು ಜಲ್ಪೈಗುರಿ, ಅಲಿಪುದೌರ್ರ, ಉತ್ತರ ದಿನಜ್ಪುರ್ ಮತ್ತು ಡಾರ್ಜಿಲಿಂಗ್ ಜಿಲ್ಲೆಗಳ ಮೂಲಕ ನ್ಯಾಯ ಯಾತ್ರೆ ಸಂಚರಿಸಲಿದೆ.
4
+ ರೈಲುಗಳ ಅಪಘಾತ ತಡೆಯುವ ‘ಕವಚ್’ ಸಿಸ್ಟಮ್ ಯಶಸ್ವಿ ಪರೀಕ್ಷೆ
5
+ ಜನವರಿ 31 ರಂದು ಮಾಲ್ಡಾ ಮೂಲಕ ಪಶ್ಚಿಮ ಬಂಗಾಳವನ್ನು ಮರುಪ್ರವೇಶಿಸುವ ಇದು ಫೆಬ್ರವರಿ 1 ರಂದು ರಾಜ್ಯದಿಂದ ನಿರ್ಗಮಿಸುವ ಮೊದಲು ಎರಡೂ ಕಾಂಗ್ರೆಸ್ ಭದ್ರಕೋಟೆ ಜಿಲ್ಲೆಗಳಾದ ಮುರ್ಷಿದಾಬಾದ್ ಮೂಲಕ ಹಾದುಹೋಗುತ್ತದೆ. ಯಾತ್ರೆಯ ಬಂಗಾಳದ ಭಾಗವು ಆರು ಜಿಲ್ಲೆಗಳು ಮತ್ತು ಆರು ಲೋಕಸಭಾ ಕ್ಷೇತ್ರಗಳಾದ ಡಾರ್ಜಿಲಿಂಗ್, ರಾಯ್‍ಗುಂಜ, ಉತ್ತರ ಮತ್ತು ದಕ್ಷಿಣ ಮಾಲ್ಡಾ ಮತ್ತು ಎರಡು ಮುರ್ಷಿದಾಬಾದ್‍ನಲ್ಲಿ ಐದು ದಿನಗಳ ಕಾಲ 523 ಕಿಮೀ ವ್ಯಾಪಿಸಿದೆ.
6
+ ಇದು ಏಪ್ರಿಲ್-ಮೇ 2021 ರ ವಿಧಾನಸಭಾ ಚುನಾವಣೆಯ ನಂತರ ರಾಜ್ಯಕ್ಕೆ ರಾಹುಲ್ ಗಾಂಧಿಯವರ ಮೊದಲ ಭೇಟಿಯಾಗಿದೆ. ರಾಜ್ಯ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಪ್ರದೀಪ್ ಭಟ್ಟಾಚಾರ್ಯ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ, ರಾಹುಲ್ ಜಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯು ಬಂಗಾಳದ ಕಾಂಗ್ರೆಸ್ ಘಟಕಕ್ಕೆ ಹೊಸ ಜೀವನ ನೀಡಲಿದೆ ಎಂದು ನಾವು ಭಾವಿಸುತ್ತೇವೆ. ಈ ಯಾತ್ರೆಯು ನಮಗೆ ಸಂಘಟನಾತ್ಮಕವಾಗಿ ಮಾತ್ರವಲ್ಲದೆ ಚುನಾವಣಾ ಪೂರ್ವದಲ್ಲಿಯೂ ಸಹಾಯ ಮಾಡುತ್ತದೆ ಎಂದಿದ್ದಾರೆ.
eesanje/url_47_181_10.txt ADDED
@@ -0,0 +1,6 @@
 
 
 
 
 
 
 
1
+ ಜಯಲಲಿತಾರ ಚಿನ್ನದ ಆಭರಣಗಳನ್ನು ಸರ್ಕಾರಕ್ಕೆ ವರ್ಗಾಯಿಸಲು ಕೋರ್ಟ್ ಆದೇಶ
2
+ ಬೆಂಗಳೂರು, ಜ 23 – ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜೆ ಜಯಲಲಿತಾ ಅವರಿಂದ ವಶಪಡಿಸಿಕೊಂಡ ಬೆಲೆಬಾಳುವ ವಸ್ತುಗಳನ್ನು ತಮಿಳುನಾಡು ರಾಜ್ಯ ಸರ್ಕಾರಕ್ಕೆ ವರ್ಗಾಯಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯವು ಆದೇಶಿಸಿದೆ. ಜಯಲಲಿತಾ ಮತ್ತು ಇತರರ ವಿರುದ್ಧದ ಅಕ್ರಮ ಆಸ್ತಿ ಪ್ರಕರಣದಲ್ಲಿ ವಸ್ತು ಸಾಕ್ಷ್ಯದ ಭಾಗವಾಗಿರುವ ಈ ಚಿನ್ನ ಮತ್ತು ವಜ್ರದ ಆಭರಣಗಳನ್ನು ವಿಲೇವಾರಿ ಮಾಡಲು ತಮಿಳುನಾಡು ಸರ್ಕಾರವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧಿಶ ಹೆಚ್ ಎ ಮೋಹನ್ ಅವರು ಈ ಆದೇಶವನ್ನು ನೀಡಿದ್ದಾರೆ.
3
+ ಅಮೆರಿಕದಲ್ಲಿ ಬಂದೂಕುದಾರಿಯಿಂದ ಗುಂಡಿನ ದಾಳಿ, 8 ಮಂದಿ ಬಲಿ
4
+ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕರ್ನಾಟಕದಲ್ಲಿ ನಡೆದ ವಿಚಾರಣೆಯಲ್ಲಿ ಎಲ್ಲಾ ವಸ್ತು ಸಾಕ್ಷ್ಯಗಳು ಈಗ ನ್ಯಾಯಾಲಯದ ವಶದಲ್ಲಿರುವ ಕರ್ನಾಟಕ ಖಜಾನೆಯಲ್ಲಿವೆ. ಜಯಲಲಿತಾ ಅವರ ಸಂಬಂಧಿಕರು ರಾಜ್ಯದಿಂದ ಮುಟ್ಟುಗೋಲು ಹಾಕಿಕೊಂಡಿರುವ ಆಸ್ತಿಗಳಿಗೆ ಅರ್ಹರಲ್ಲ ಎಂದು ನ್ಯಾಯಾಲಯ ಈ ಹಿಂದೆ ಹೇಳಿತ್ತು. ಹೀಗಾಗಿ ಜಯಲಲಿತಾ ಅವರ ಸೋದರಳಿಯ ಜೆ.ದೀಪಾ ಮತ್ತು ಜೆ.ದೀಪಕ್ ಸಲ್ಲಿಸಿದ್ದ ಅರ್ಜಿಯನ್ನು ವಿಶೇಷ ಸಿಬಿಐ ನ್ಯಾಯಾಲಯ ತಿರಸ್ಕರಿಸಿತ್ತು.
5
+ ವಿಶೇಷ ನ್ಯಾಯಾಲಯವು ತಮಿಳುನಾಡು ಗೃಹ ಇಲಾಖೆಯು ಆಭರಣಗಳನ್ನು ಸಂಗ್ರಹಿಸಲು ಪೊಲೀಸರೊಂದಿಗೆ ಕಾರ್ಯದರ್ಶಿ ಶ್ರೇಣಿಯಲ್ಲಿರುವ ಸಮರ್ಥ ವ್ಯಕ್ತಿಗಳಿಗೆ ಅ„ಕಾರ ನೀಡುತ್ತದೆ ಎಂದು ನಿರ್ದೇಶನ ನೀಡಿತು ಇದೇ ಆದೇಶದಲ್ಲಿ ವಿಶೇಷ ನ್ಯಾಯಾಲಯವು ರಾಜ್ಯದಲ್ಲಿ ನಡೆಸಿದ ವಿಚಾರಣೆಯ ವೆಚ್ಚಕ್ಕಾಗಿ ಕರ್ನಾಟಕಕ್ಕೆ ಐದು ಕೋಟಿ ರೂ. ಚೆನ್ನೈನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಜಯಲಲಿತಾ ಅವರಿಗೆ ಸಂಬಂಧಿಸಿದ ಖಾತೆಯಲ್ಲಿನ ನಿಶ್ಚಿತ ಠೇವಣಿಯಿಂದ ಪಾವತಿ ಮಾಡಲಾಗುತ್ತದೆ.
6
+ ಜಯಲಲಿತಾ, ಅವರ ಮಾಜಿ ಆಪ್ತ ಸಹಾಯಕಿ ವಿ ಶಶಿಕಲಾ, ಜಯಲಲಿತಾ ಅವರ ಸಾಕು ಪುತ್ರ ವಿಎನ್ ಸುಧಾಕರನ್ ಮತ್ತು ಶಶಿಕಲಾ ಅವರ ಸೊಸೆ ಜೆ ಇಳವರಸಿ ವಿರುದ್ಧ ಬೆಂಗಳೂರಿನ ವಿಶೇಷ ನ್ಯಾಯಾಲಯವು ಅಕ್ರಮ ಆಸ್ತಿ ಗಳಿಕೆ ವಿಚಾರಣೆ ನಡೆಸಿತು.
eesanje/url_47_181_11.txt ADDED
@@ -0,0 +1,9 @@
 
 
 
 
 
 
 
 
 
 
1
+ ಸಂಸತ್ತಿನ ಸಂಕೀರ್ಣ ಭದ್ರತೆಗಾಗಿ 140 ಸಿಐಎಸ್‍ಎಫ್ ಸಿಬ್ಬಂದಿ ನಿಯೋಜನೆ
2
+ ನವದೆಹಲಿ, ಜ.23: ಮುಂದಿನ ಜ. 31 ರಿಂದ ಪ್ರಾರಂಭವಾಗುವ ಸಂಸತ್ ಬಜೆಟ್ ಅ„ವೇಶನದಿಂದ ಸಂದರ್ಶಕರು ಮತ್ತು ಅವರ ವಸ್ತುಗಳನ್ನು ಪರೀಕ್ಷಿಸಲು ಹೊಸ ಕ್ರಮದ ಭಾಗವಾಗಿ 140 ಸಿಐಎಸ್‍ಎ-ï ಸಿಬ್ಬಂದಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ನಿಯೋಜಿಸಲಾಗಿದೆ.
3
+ ಕಳೆದ ವರ್ಷ ಡಿಸೆಂಬರ್ 13 ರಂದು ಸಂಸತ್ತಿನ ಸಭಾಂಗಣಕ್ಕೆ ಪ್ರವೇಶಿಸಿ ಇಬ್ಬರು ಬಣ್ಣದ ಹೊಗೆ ಡಬ್ಬಿಗಳನ್ನು ಎರಚಿ ಬೀತಿ ಹುಟ್ಟಿಸುವ ಕೃತ್ಯ ನಡೆದಿತ್ತು ಈ ಹಿನ್ನೆಲೆಯಲ್ಲಿ ಸೌಲಭ್ಯದ ಸಮಗ್ರ ಭದ್ರತಾ ಪರಿಶೀಲನೆಯ ನಂತರ ಕೇಂದ್ರ ಗೃಹ ಸಚಿವಾಲಯವು ಸಿಐಎಸ್‍ಎ-ï ಪಡೆ ಮಂಜೂರು ಮಾಡಿದೆ.ಎಂದು ಅ„ಕೃತ ಮೂಲಗಳು ತಿಳಿಸಿವೆ.
4
+ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಒಟ್ಟು 140 ಸಿಬ್ಬಂದಿ ನಿನ್ನೆಯಿಂದಲೆ ಸಂಸತ್ತಿನ ಸಂಕೀರ್ಣದಲ್ಲಿ ಅ„ಕಾರ ವಹಿಸಿಕೊಂಡಿದ್ದಾರೆ. ಅವರು ಸಂದರ್ಶಕರನ್ನು, ಅವರ ವಸ್ತುಗಳನ್ನು ಪರಿಶೀಲಿಸುತ್ತಿದ್ದಾರೆ ಮತ್ತು ಕಟ್ಟಡಕ್ಕೆ ಅಗ್ನಿ ಸುರಕ್ಷತಾ ಸಾಧನವನ್ನು ಕೂಡ ಸಹ ಒದಗಿಸಲಾಗಿದೆ.
5
+ ಸಿದ್ದರಾಮಯ್ಯನವರು ರಾಮ ಭಕ್ತರಲ್ಲ, ಹೈಕಮಾಂಡ್ ಭಕ್ತರು : ಆಶೋಕ್ ವಾಗ್ದಾಳಿ
6
+ ಸಂಸತ್ತಿನ ಸಂಕೀರ್ಣವನ್ನು ಈಗಾಗಲೇ ಅಲ್ಲಿ ಇರುವ ಇತರ ಭದ್ರತಾ ಏಜೆನ್ಸಿಗಳೊಂದಿಗೆ ಪರಿಚಿತಗೊಳಿಸುತ್ತಿದೆ, ಇದರಿಂದಾಗಿ ಅವರು ಬಜೆಟ್ ಅ„ವೇಶನ ಪ್ರಾರಂಭವಾಗುವ ಜನವರಿ 31 ರಿಂದ ಕಾರ್ಯಕ್ಕೆ ಸಿದ್ಧರಾಗಿದ್ದಾರೆ ಎಂದು ಅವರು ಹೇಳಿದರು.
7
+ ಸಿಐಎಸ್‍ಎ-ï ಹೊಸ ಮತ್ತು ಹಳೆಯ ಸಂಸತ್ತಿನ ಕಟ್ಟಡಕ್ಕೆ ಪ್ರವೇಶ ನಿಯಂತ್ರಣವನ್ನು ಏರ್‍ಪೆÇೀರ್ಟ್ ಭದ್ರತೆಯಂತಹ ಶೈಲಿಯಲ್ಲಿ ನೀಡುತ್ತದೆ, ಅಲ್ಲಿ ವ್ಯಕ್ತಿಗಳು ಮತ್ತು ಅವರ ವಸ್ತುಗಳ ದೇಹವನ್ನು ಪರೀಕ್ಷಿಸಲಾಗುತ್ತದೆ ಎಕ್ಸ್-ರೇ ಯಂತ್ರಗಳು, ಹ್ಯಾಂಡ್‍ಹೆಲ್ಡ್ ಡಿಟೆಕ್ಟರ್‍ಗಳ ಮೂಲಕ ಶೂಗಳನ್ನು ಸ್ಕ್ಯಾನ್ ಮಾಡಲು ಸಹ ಅವಕಾಶವಿದೆ. ಭಾರವಾದ ಜಾಕೆಟ್‍ಗಳು ಮತ್ತು ಬೆಲ್ಟ್‍ಗಳನ್ನು ಟ್ರೇನಲ್ಲಿ ಇರಿಸಿ ಮತ್ತು ಅವುಗಳನ್ನು ಎಕ್ಸ್-ರೇ ಸ್ಕ್ಯಾನರ್ ಮೂಲಕ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
8
+ ಸುಮಾರು 1.70 ಲಕ್ಷ ಸಿಬ್ಬಂದಿ ಬಲಿಷ್ಠ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕೇಂದ್ರ ಸಶಸ ಪೆÇಲೀಸ್ ಪಡೆ ಆಗಿದೆ ಮತ್ತು ಇದು ಏರೋಸ್ಪೇಸ್ ಮತ್ತು ಪರಮಾಣು ಶಕ್ತಿ ಡೊಮೇನ್‍ನಲ್ಲಿ ಪ್ರಮುಖ ಸ್ಥಾಪನೆಗಳನ್ನು ಹೊರತುಪಡಿಸಿ ದೇಶದ 68 ನಾಗರಿಕ ವಿಮಾನ ನಿಲ್ದಾಣಗಳ ಸುರಕ್ಷತೆ ಕಾಪಾಡುತ್ತಿದೆ.
9
+ ಹೊಸ ಮತ್ತು ಹಳೆಯ ಸಂಸತ್ತಿನ ಸಂಕೀರ್ಣ ಮತ್ತು ಅದರ ಮಿತ್ರ ಕಟ್ಟಡಗಳನ್ನು ಸಿಐಎಸ್‍ಎ-ïನ ಸಮಗ್ರ ಭದ್ರತೆಯ ಅಡಿಯಲ್ಲಿ ತರಲಾಗುವುದು ಎಂದು ಮೂಲಗಳು ಈ ಹಿಂದೆ ಪಿಟಿಐಗೆ ತಿಳಿಸಿದ್ದವು, ಇದು ಸಂಸತ್ತಿನ ಭದ್ರತಾ ಸೇವೆ (ಪಿಎಸ್‍ಎಸ್), ದೆಹಲಿ ಪೆÇಲೀಸ್ ಮತ್ತು ಸಂಸತ್ತಿನ ಅಸ್ತಿತ್ವದಲ್ಲಿರುವ ಅಂಶಗಳನ್ನು ಸಹ ಹೊಂದಿರುತ್ತದೆ.
eesanje/url_47_181_12.txt ADDED
@@ -0,0 +1,5 @@
 
 
 
 
 
 
1
+ ಶ್ರೀರಾಮನಿಗೆ 11 ಕೋಟಿ ಮೌಲ್ಯದ ವಜ್ರಖಚಿತ ಕಿರೀಟ ಸಮರ್ಪಿಸಿದ ಉದ್ಯಮಿ ಮುಖೇಶ್ ಪಟೇಲ್‍
2
+ ಗಾಂಧಿನಗರ, ಜ.16- ಗುಜರಾತ್‍ನ ಖ್ಯಾತ ಚಿನ್ನಾಭರಣ ಉದ್ಯಮಿ ಮುಖೇಶ್ ಪಟೇಲ್ ಅವರು ಅಯೋಧ್ಯೆಯ ಶ್ರೀರಾಮನಿಗಾಗಿ 11 ಕೋಟಿ ರೂ. ಮೌಲ್ಯದ ಮುತ್ತು-ರತ್ನ-ವಜ್ರಗಳಿಂದ ಕೂಡಿದ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ನೀಡಿದ್ದಾರೆ.
3
+ ಸೂರತ್‍ನಲ್ಲಿ ಗ್ರೀನ್ ಲ್ಯಾಬ್ ಡೈಮಂಡ್ ಕಂಪೆನಿ ಮಾಲೀಕರಾಗಿರುವ ಮುಖೇಶ್ ಪಟೇಲ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬ ಕನಸು ಕಂಡಿದ್ದರು. ಅದರಂತೆ ಅದು ಸಾಕಾರಗೊಂಡಾಗ ಭಾವಪರವಶರಾಗಿರುವ ಅವರು ಶ್ರೀರಾಮನಿಗಾಗಿ ಆರು ಕೆಜಿ ಚಿನ್ನ ಬಳಸಿ ವಜ್ರ, ಮುತ್ತು, ಪಚ್ಚೆ ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಅಳವಡಿಸಿ ಚಿನ್ನದ ಕಿರೀಟವನ್ನು ತಯಾರಿಸಿ ಅದನ್ನು ಶ್ರೀರಾಮನಿಗೆ ಸಮರ್ಪಿಸಿದ್ದಾರೆ.
4
+ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಶಾಶ್ವತ ಸ್ಥಾನ ಇರಬೇಕು ; ಮಸ್ಕ್
5
+ ಸುಮಾರು ಐದು ತಿಂಗಳ ಕಾಲ ವ್ರತ ಮಾಡಿ ಮಡಿಯಿಂದ ಈ ಕಿರೀಟ ತಯಾರಿಸಲಾಗಿದೆ. ನನ್ನ ತಂದೆ-ತಾಯಿ ಜತೆ ಇದನ್ನು ಶ್ರೀರಾಮ ಮಂದಿರ ಟ್ರಸ್ಟ್‍ಗೆ ಹಸ್ತಾಂತರಿಸಿದ್ದು, ನನಗೆ ಇದೊಂದು ಪವಿತ್ರ ಹಾಗೂ ಅವಿಸ್ಮರಣೀಯ ದಿನವಾಗಿದೆ ಎಂದು ಮುಖೇಶ್ ಪಟೇಲ್ ಹೇಳಿದ್ದಾರೆ.
eesanje/url_47_181_2.txt ADDED
@@ -0,0 +1,6 @@
 
 
 
 
 
 
 
1
+ ಶ್ರೀರಾಮನಿಗೆ ಉಡುಪು ತಯಾರಿಸಲು ದೈವಪ್ರೇರಣೆಯಾಗಿತ್ತು ; ತ್ರಿಪಾಠಿ
2
+ ಅಯೋಧ್ಯೆ,ಜ. 25 (ಪಿಟಿಐ) ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ದೇವಾಲಯದಲ್ಲಿ ರಾಮ ಲಲ್ಲಾ ವಿಗ್ರಹದಿಂದ ಅಲಂಕರಿಸಲ್ಪಟ್ಟ ಉಡುಪನ್ನು ವಿನ್ಯಾಸಗೊಳಿಸಿದ ಮನೀಶ್ ತ್ರಿಪಾಠಿ ಅವರು ದೇವರೊಂದಿಗಿನ ದೈವಿಕ ಸಂಬಂಧವು ಈ ಕಾರ್ಯವನ್ನು ಸಾಧಿಸಲು ಸಹಾಯ ಮಾಡಿದೆ ಎಂದು ತಿಳಿಸಿದ್ದಾರೆ.
3
+ ಉಡುಪಿನ ವಸ್ತು ಮತ್ತು ವಿನ್ಯಾಸದ ಬಗ್ಗೆ ವಿವರಿಸಿದ ತ್ರಿಪಾಠಿ, ನಾವು ಕಾಶಿಯಲ್ಲಿ (ವಾರಣಾಸಿ) ದೇವರಿಗೆ ಸಿದ್ಧಪಡಿಸಿದ ಪೀತಾಂಬರಿ (ಹಳದಿ) ಬಟ್ಟೆಯನ್ನು ಪಡೆದುಕೊಂಡಿದ್ದೇವೆ ಎಂದು ಪಿಟಿಐಗೆ ತಿಳಿಸಿದರು. ಬಟ್ಟೆ ತಯಾರಿಕೆಯಲ್ಲಿ ರೇಷ್ಮೆ ಜೊತೆಗೆ ಚಿನ್ನ ಮತ್ತು ಬೆಳ್ಳಿಯ ತಂತಿಗಳನ್ನು ಬಳಸಲಾಗಿದೆ ಎಂದು ಅವರು ಹೇಳಿದರು. ಉಡುಪು ಮೇಲೆ ಮಾಡಿದ ಕಸೂತಿ ವೈಷ್ಣವ ಚಿಹ್ನೆಗಳನ್ನು ಹೊಂದಿದೆ, ವಿನ್ಯಾಸಕರು ಹೇಳಿದರು.
4
+ ಉಡುಪಿನ ಪರಿಕಲ್ಪನೆ ಮತ್ತು ತಯಾರಿಕೆಯಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಕೇಳಿದಾಗ, ತ್ರಿಪಾಠಿ ಹೇಳಿದರು, ರಾಜಕುಮಾರ ಮತ್ತು ದೇವರ ಹಿರಿಮೆಗೆ ಸರಿಹೊಂದುವ ಬಟ್ಟೆಯನ್ನು ಸಿದ್ಧಪಡಿಸುವುದು ದೊಡ್ಡ ಸವಾಲಾಗಿತ್ತು. ನನಗೆ ದಾರಿ ತೋರಿಸಲು ನಾನು ದೇವರನ್ನು ಪ್ರಾರ್ಥಿಸಿದೆ ಮತ್ತು ಅವರು ನನಗೆ ಚಿಹ್ನೆಗಳನ್ನು ತೋರಿಸಿದರು. ಮತ್ತು ನಾನು ಸೂಕ್ತವಾದ ಬಟ್ಟೆಗಳನ್ನು ಸಿದ್ಧಪಡಿಸಲು ಬುದ್ಧಿವಂತಿಕೆಯನ್ನು ಕೊಟ್ಟನು. ಲಕ್ನೋದಲ್ಲಿ ಹುಟ್ಟಿ ಬೆಳೆದ ಯುವ ವಿನ್ಯಾಸಕ, ದೇವಾಲಯವನ್ನು ನಿರ್ಮಿಸಲು 500 ವರ್ಷಗಳಿಂದ ಕಾಯುತ್ತಿರುವ ಭಕ್ತರ ಕಲ್ಪನೆ ಮತ್ತು ನಿರೀಕ್ಷೆಗಳಿಗೆ ತಕ್ಕಂತೆ ಬದುಕುವುದು ತನಗೆ ಸವಾಲಾಗಿದೆ ಎಂದು ಹೇಳಿದರು.
5
+ ರಾಮಮಂದಿರ ನಿರ್ಮಾಣದ ಮೂಲಕ ದೇಶ, ದೇಹ, ಮನಸ್ಸುಗಳ ಶುದ್ಧೀಕರಣ ಮಾಡಿದ ನಮೋ
6
+ ಭಕ್ತಿಯಿಂದ ತುಂಬಿರುವ ಜನರು ಉಡುಪಿಗೆ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಕುರಿತು ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಇತ್ತು. ಎಲ್ಲರ ಮೆಚ್ಚುಗೆಯನ್ನು ಪಡೆದ ನಂತರ ನಾನು ತುಂಬಾ ಹೆಮ್ಮೆಪಡುತ್ತೇನೆ ಎಂದು ತ್ರಿಪಾಠಿ ಹೇಳಿದರು. ನನ್ನ ತಾಯಿ ಮತ್ತು ಹೆಂಡತಿಯಿಂದ ನಾನು ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದ್ದೇನೆ, ಅವರು ತಮ್ಮ ಮುಖದಲ್ಲಿ ನಗು ಮತ್ತು ಅವರ ಕಣ್ಣುಗಳಲ್ಲಿ ಕಣ್ಣೀರುಗಳೊಂದಿಗೆ ಉಡುಪನ್ನು ಅಭಿನಂದಿಸಿದರು ಎಂದು ಅವರು ಹೇಳಿದರು.
eesanje/url_47_181_3.txt ADDED
@@ -0,0 +1,8 @@
 
 
 
 
 
 
 
 
 
1
+ ರೈಲುಗಳ ಅಪಘಾತ ತಡೆಯುವ ‘ಕವಚ್’ ಸಿಸ್ಟಮ್ ಯಶಸ್ವಿ ಪರೀಕ್ಷೆ
2
+ ನವದೆಹಲಿ, ಜ.25 (ಪಿಟಿಐ) ಗಂಟೆಗೆ 160 ಕಿಮೀ ವೇಗದಲ್ಲಿ ಸಂಚರಿಸುವ ಅರೆ-ಹೈ ಸ್ಪೀಡ್ ಎಂಜಿನ್‍ನಲ್ಲಿ ಆಂಟಿ-ಟ್ರೇನ್ ಡಿಕ್ಕಿ ಸಿಸ್ಟಮ್ ಕವಚ್‍ನ ಬ್ರೇಕಿಂಗ್ ಅಳವಡಿಕೆ ಪರೀಕ್ಷೆ ಯಶಸ್ವಿಯಾಗಿದೆ ಎಂದು ಉತ್ತರ ಮಧ್ಯ ರೈಲ್ವೆಯ ಆಗ್ರಾ ವಿಭಾಗ ತಿಳಿಸಿದೆ. ರಿಸರ್ಚ್ ಡಿಸೈನ್ಸ್ ಅಂಡ್ ಸ್ಟ್ಯಾಂಡಡ್ರ್ಸ್ ಆರ್ಗನೈಸೇಶನ್ ಅಭಿವೃದ್ಧಿಪಡಿಸಿದ ಕವಚ್ ಸಿಸ್ಟಮ್, ರೈಲು ಚಾಲಕನು ಸಮಯಕ್ಕೆ ಸರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದಾಗ ತುರ್ತು ಸಂದರ್ಭದಲ್ಲಿ ಸ್ವಯಂಚಾಲಿತವಾಗಿ ಬ್ರೇಕ್‍ಗಳನ್ನು ಅನ್ವಯಿಸಬಹುದು.
3
+ ಕಾರ್ಯಾಚರಣೆಯ ಸುರಕ್ಷತೆಯನ್ನು ಹೆಚ್ಚಿಸಲು ಭಾರತೀಯ ರೈಲ್ವೇ ತನ್ನ ನೆಟ್‍ವರ್ಕ್‍ನಾದ್ಯಂತ ಈ ವ್ಯವಸ್ಥೆಯನ್ನು ಅಳವಡಿಸುವ ಪ್ರಕ್ರಿಯೆಯಲ್ಲಿದೆ. ಉತ್ತರ ಮಧ್ಯ ರೈಲ್ವೆಯ ಉಪ ಮುಖ್ಯ ಸಿಗ್ನಲ್ ಮತ್ತು ದೂರಸಂಪರ್ಕ ಇಂಜಿನಿಯರ್ ಕುಶ್ ಗುಪ್ತಾ ಅವರ ಮೇಲ್ವಿಚಾರಣೆಯಲ್ಲಿ, ಅರೆ-ಹೈ ಸ್ಪೀಡ್ ಇಂಜಿನ್ ವ್ಯಾಪ್-5 ಅನ್ನು ಕವಚ ವ್ಯವಸ್ಥೆಯೊಂದಿಗೆ ಅಳವಡಿಸಲಾಯಿತು ಮತ್ತು ಜನವರಿ 19 ರಂದು ಪಲ್ವಾಲ್-ಮಥುರಾ ವಿಭಾಗದಲ್ಲಿ ಗಂಟೆಗೆ 160 ಕಿ.ಮೀ ಸಂಚರಿಸಬಹುದು ಎಂದು ಆಗ್ರಾ ರೈಲು ವಿಭಾಗದ ಪಿಆರ್‍ಒ ಶ್ರೀ ವಾಸ್ತವ ತಿಳಿಸಿದ್ದಾರೆ.
4
+ ಮುಂದೆ ಕೆಂಪು ಸಿಗ್ನಲ್ ಅನ್ನು ಗಮನಿಸಿದ ನಂತರ ಬ್ರೇಕ್ ಹಾಕದಂತೆ ಇಂಜಿನ್‍ನ ಚಾಲಕನನ್ನು ಕೇಳಲಾಯಿತು. ಕವಚ್ ತನ್ನದೇ ಆದ ಬ್ರೇಕ್‍ಗಳನ್ನು ಅನ್ವಯಿಸುತ್ತದೆಯೇ ಮತ್ತು ಸಿಗ್ನಲ್‍ಗೆ ಮುಂಚಿತವಾಗಿ ರೈಲನ್ನು ನಿಲ್ಲಿಸುತ್ತದೆಯೇ ಎಂದು ನಾವು ಪರಿಶೀಲಿಸಲು ಬಯಸಿದ್ದೇವೆ ಎಂದು ಅವರು ಹೇಳಿದರು. ಭಾಗವಹಿಸಿದ ಇಂಜಿನಿಯರ್‍ಗಳು ಮತ್ತು ಅಧಿಕಾರಿಗಳು ಕೆಂಪು ಸಿಗ್ನಲ್‍ಗೆ 30 ಮೀಟರ್ ಮೊದಲು ಇಂಜಿನ್ ನಿಲ್ಲಿಸಿರುವುದನ್ನು ಗಮನಿಸಿ ಸಂತೋಷಪಟ್ಟರು. ಇದು ಇತರ ಸುರಕ್ಷತಾ ನಿಯತಾಂಕಗಳನ್ನು ಸಹ ಪೂರೈಸಿದೆ ಎಂದು ಅವರು ಹೇಳಿದರು.
5
+ ವ್ಯಾಪ್ -5 ಲೊಕೊಮೊಟಿವ್‍ಗಳು ಪ್ಯಾಸೆಂಜರ್ ಕೋಚ್‍ಗಳನ್ನು 160 ಕಿ.ಮೀ ವೇಗದಲ್ಲಿ ಎಳೆಯುವ ಸಾಮಥ್ರ್ಯವನ್ನು ಹೊಂದಿವೆ ಮತ್ತು ಶತಾಬ್ದಿ ಮತ್ತು ಗತಿಮಾನ್ ಎಕ್ಸ್‍ಪ್ರೆಸ್‍ನಂತಹ ರೈಲುಗಳಲ್ಲಿ ಬಳಸಲಾಗುತ್ತದೆ. ಉತ್ತರ ಪ್ರದೇಶದ ವೃಂದಾವನದಿಂದ ಬೆಳಿಗ್ಗೆ 10 ಗಂಟೆಗೆ ವಿಚಾರಣೆ ಪ್ರಾರಂಭವಾಯಿತು ಮತ್ತು ವೇಳಾಪಟ್ಟಿಯ ಪ್ರಕಾರ ಡೌನ್ ಲೈನ್ ದಿಕ್ಕಿನಲ್ಲಿ ಹರಿಯಾಣದ ಪಲ್ವಾಲ್‍ನಲ್ಲಿ ಮಧ್ಯಾಹ್ನ 1:20 ಕ್ಕೆ ಪೂರ್ಣಗೊಂಡಿತು. ಪಲ್ವಾಲ್‍ನಿಂದ ವೃಂದಾವನದವರೆಗೆ ಉತ್ತರ ಪ್ರದೇಶದ ಮಾರ್ಗದ ದಿಕ್ಕಿನಲ್ಲಿ ಮಧ್ಯಾಹ್ನ 2 ಮತ್ತು 3:35 ರ ನಡುವೆ ಪುನರಾವರ್ತನೆಯಾಯಿತು.
6
+ ಬೆಂಗಳೂರಲ್ಲಿ ಮನೆಗೆ ನುಗ್ಗಿ ರೌಡಿಯಭೀಕರ ಕೊಲೆ
7
+ ಈಗ ವಿಭಾಗವು ಶೀಘ್ರದಲ್ಲೇ ಪ್ರಯಾಣಿಕರ ಕೋಚ್‍ಗಳೊಂದಿಗೆ ಲೊಕೊಮೊಟಿವ್‍ನಲ್ಲಿ ಪ್ರಯೋಗವನ್ನು ಪುನರಾವರ್ತಿಸುತ್ತದೆ ಎಂದು ಅಕಾರಿಗಳು ತಿಳಿಸಿದ್ದಾರೆ.ಆಗ���ರಾ ವಿಭಾಗವು ಮಥುರಾ (ನಿಲ್ದಾಣವನ್ನು ಹೊರತುಪಡಿಸಿ) ಮತ್ತು ಪಲ್ವಾಲ್ ನಡುವಿನ 80-ಕಿಮೀ ವಿಸ್ತಾರದಲ್ಲಿ ಸಂಪೂರ್ಣ ಕವಚ ಜಾಲವನ್ನು ಅಭಿವೃದ್ಧಿಪಡಿಸಿದೆ. ನಿಲ್ದಾಣಗಳಂತಹ ಹಲವಾರು ಸ್ಥಳಗಳಲ್ಲಿ ಸ್ಥಾಯಿ ಕವಾಚ್ ಘಟಕಗಳನ್ನು ಸ್ಥಾಪಿಸುವುದು ಮತ್ತು ಟ್ರ್ಯಾಕ್‍ಗಳ ಉದ್ದಕ್ಕೂ ಟವರ್‍ಗಳು ಮತ್ತು ಆಂಟೆನಾಗಳನ್ನು ಸ್ಥಾಪಿಸುವುದನ್ನು ಒಳಗೊಂಡಿರುತ್ತದೆ.
8
+ ಆರ್‍ಡಿಎಸ್‍ಒ ಅಧಿಕಾರಿಗಳ ಪ್ರಕಾರ, ದೆಹಲಿ ಮತ್ತು ಆಗ್ರಾ ನಡುವಿನ ಮೂರು ಭಾಗಗಳಲ್ಲಿ 125 ಕಿಮೀ ವಿಸ್ತಾರವು ಸಂಪೂರ್ಣ ರೈಲು ಜಾಲದಾದ್ಯಂತ ಇರುವ ಏಕೈಕ ವಿಸ್ತರಣೆಯಾಗಿದ್ದು, ಗರಿಷ್ಠ 160 ಕಿಮೀ ವೇಗದಲ್ಲಿ ರೈಲುಗಳು ಚಲಿಸಬಹುದು.
eesanje/url_47_181_4.txt ADDED
@@ -0,0 +1,6 @@
 
 
 
 
 
 
 
1
+ ಅಯೋಧ್ಯೆಯಲ್ಲಿ 2 ತಿಂಗಳವರೆಗೂ ಭಕ್ತರಿಗೆ ನಿರಂತರ ಊಟದ ವ್ಯವಸ್ಥೆ
2
+ ಅಯೋಧ್ಯೆ,ಜ.24-ಶ್ರೀ ರಾಮಚಂದ್ರ ಪ್ರಭುವಿನ ದರ್ಶನ ಪಡೆಯಲು ದೇಶ-ವಿದೇಶದಿಂದ ಸಾವಿರಾರು ಭಕ್ತರು ಆಗಮಿಸುತ್ತಿದ್ದು ಇದಕ್ಕಾಗಿ ಅಯೋಧ್ಯೆಯಲ್ಲಿ ಎರಡು ತಿಂಗಳ ಕಾಲ ವಿವಿಧ ವಸ್ತುಗಳನ್ನು ಸಂಗ್ರಹಿಸಲು ದೊಡ್ಡ ಭಂಡಾರಗಳನ್ನು ನಿರ್ಮಿಸಲಾಗಿದೆ.
3
+ ರಾಮಭಕ್ತರು ಕಳುಹಿಸಿದ ಆಹಾರ ಸಾಮಗ್ರಿಗಳನ್ನು ಸಂಗ್ರಹಿಸಲು ರಾಮಮಂದಿರ ಟ್ರಸ್ಟ್‍ಗೆ ಈಗ ಸ್ಥಳಾವಕಾಶವಿಲ್ಲದ ಕಾರಣ ದೊಡ್ಡ ಭಂಡಾರಗಳನ್ನು ಸ್ಥಾಪಿಸಲಾಗುತ್ತಿದೆ. ಅಯೋಧ್ಯೆಯ ಸರಯು ನದಿ ಮತ್ತು ಹನುಮಾನ್‍ಗಢದ ಬಳಿ 6 ಸಂಸ್ಥೆಗಳ ಭವ್ಯವಾದ ಸಭಾಂಗಣ ಸಿದ್ಧವಾಗಿದೆ.
4
+ !../
5
+ 30 ಅಡುಗೆಯವರು ಮತ್ತು 100 ಕೆಲಸಗಾರರ ತಂಡವು ಆಹಾರವನ್ನು ಸಿದ್ಧಪಡಿಸುತ್ತದೆ. ಇದಲ್ಲದೆ ವಿವಿಧ ವಸ್ತಗಳನ್ನು ಸಂಗ್ರಹಿಸಲಾಗುತ್ತಿದ್ದು ಅಗತ್ಯವಿರುವ ಭಕ್ತರಿಗೆ ಆಹಾರ,ಬೆಡ್ ಶೀಟ್,ಔಷದ ಸೇರಿ ವಿವಿಧ ಸೌಲಭ್ಯ ನೀಡಲಾಗುತ್ತಿದೆ.
6
+ 660 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ
eesanje/url_47_181_5.txt ADDED
@@ -0,0 +1,14 @@
 
 
 
 
 
 
 
 
 
 
 
 
 
 
 
1
+ ಅಯೋಧ್ಯೆಗೆ ಹರಿದು ಬರುತ್ತಿರುವ ಭಕ್ತರ ನಿಯಂತ್ರಣಕ್ಕೆಪೊಲೀಸರ ಹರಸಾಹಸ
2
+ ಅಯೋಧ್ಯೆ, ಜ.24- ರಾಮ ಮಂದಿರ ದಲ್ಲಿ ಬಾಲ ರಾಮನ ಪ್ರಾಣಪ್ರತಿಷ್ಠಾಪನೆ ಬಳಿಕ ದರ್ಶನಕ್ಕೆ ದೇಶ-ವಿದೇಶಗಳಿಂದ ಆಗಮಿಸುತ್ತಿರುವ ಭಕ್ತರ ಸಂಖ್ಯೆ ಕ್ಷಣ-ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಭದ್ರತೆ ಒದಗಿಸುವುದೇ ಪೊಲೀಸರಿಗೆ ಸವಾಲಾಗಿ ಪರಿಣಮಿಸಿದೆ. ಈ ನಡುವೆ ಭಕ್ತರ ಮೇಲೆ ಅನಗತ್ಯವಾಗಿ ಪೊಲೀಸರು ಲಾಠಿ ಪ್ರಹಾರ ನಡೆಸದಂತೆ ಹಾಗೂ ಸಂಯಮದಿಂದ ವರ್ತಿಸುವಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.
3
+ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಬರುವ ಎಲ್ಲಾ ಭಕ್ತರಿಗೆ ರಾಮಲಲ್ಲಾನ ದರ್ಶನಕ್ಕೆ ಅವಕಾಶವಿದೆ. ಆದರೆ, ತಾಳ್ಮೆಯಿಂದ ಇರುವಂತೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕ ಅಚಾರ್ಯ ಸತ್ಯೇಂದ್ರ ದಾಸ್ ಅವರು ಮನವಿ ಮಾಡಿದ್ದಾರೆ. ಭದ್ರತೆಗೆ ಸವಾಲಾದ ಭಕ್ತರ ಸಂಖ್ಯೆ: ದೇವಾಲಯದ ಭದ್ರತೆಯ ನಿರ್ವಹಣಾ ಅಧಿಕಾರಿಗಳು, ಭದ್ರತಾ ಸಿಬ್ಬಂದಿ ಭಾರೀ ಯಾತ್ರಾರ್ಥಿಗಳ ಗುಂಪನ್ನು ನಿಯಂತ್ರಿಸಲು ಕಷ್ಟಪಟ್ಟ ನಂತರ ಈ ಹೇಳಿಕೆ ಬಂದಿದೆ. ಎಲ್ಲಾ ಭಕ್ತರು ರಾಮಲಲ್ಲಾನ ದರ್ಶನ ಪಡೆಯಲು ಸಾಧ್ಯವಾಗುತ್ತದೆ. ದರ್ಶನವು ನಿರಂತರವಾಗಿ ನಡೆಯುತ್ತಿದೆ. ಭಕ್ತರು ತಾಳ್ಮೆಯಿಂದ ಇರಬೇಕೆಂದು ಅವರು ಹೇಳಿದ್ದಾರೆ.
4
+ ರಾಮಮಂದಿರದ ಗರ್ಭಗುಡಿಯೊಳಗೆ ಜನಸಂದಣಿಯನ್ನು ನಿರ್ವಹಿಸಲು ಸ್ವತ: ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉತ್ತರ ಪ್ರದೇಶ ಡಿಜಿಪಿ ಪ್ರಶಾಂತ್ ಕುಮಾರ್ ಮತ್ತು ಇತರ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.ಮಂಗಳವಾರ ಸುಮಾರು 5 ಲಕ್ಷ ಭಕ್ತರು ಭೇಟಿ ನೀಡಿದ್ದರು. ಇಂದು ಸಹ ಲಕ್ಷಾಂತರ ಭಕ್ತರು ಬಾಲ ರಾಮನ ದರ್ಶನಕ್ಕೆ ಮುಂಜಾನೆಯಿಂದಲೇ ಕಾದು ಕುಳಿತಿದ್ದರು.
5
+ ರಾಮನ ದರ್ಶನಕ್ಕೆ ಅವಕಾಶ ಕೊಟ್ಟ ಮೊದಲ ದಿನ, ಮುಂಜಾನೆ 3 ಗಂಟೆ ಸುಮಾರಿಗೆ ಲಕ್ಷಾಂತರ ಭಕ್ತರು ಸೇರಿದ್ದರು. ಈ ವೇಳೆ ರಾಮ ಮಂದಿರದ ಬಾಗಿಲು ತೆರೆಯುತ್ತಿದ್ದಂತೆ ದರ್ಶನಕ್ಕೆ ನೂಕು ನುಗ್ಗಲು ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ದೇವಾಲಯದ ಒಳಗೆ ಪ್ರವೇಶಿಸುವ ಭಕ್ತರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಲಾಗುತ್ತಿದೆ.
6
+ ಮಂದಿರಕ್ಕೆ ಜನರನ್ನು ಸರದಿಯಲ್ಲಿ ಬಿಡಲಾಗುತ್ತಿದ್ದು, ಶಿಸ್ತು, ಸಂಯಮ ಪಾಲನೆಗೆ ಮನವಿ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದಕ್ಕಾಗಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಅದೆಷ್ಟೋ ವರ್ಷದಿಂದ ರಾಮ ಮಂದಿರ ನಿರ್ಮಾಣವಾಗಬೇಕೆಂಬ ಬಯಕೆ ಈಗ ಈಡೇರಿದೆ. ಹಾಗಾಗಿ ಜೀವನದಲ್ಲಿ ಒಮ್ಮೆ ರಾಮನ ದರ್ಶನ ಪಡೆಯಬೇಕೆಂಬ ಹಂಬಲ ಭಕ್ತರಲ್ಲಿ ಮೂಡಿದೆ. ಎರಡು ದಿನಗಳಿಂದ ಅಯೋಧ್ಯೆಗೆ ಲಕ್ಷಾಂತರ ಭಕ್ತರು ನ���ರಂತರವಾಗಿ ಆಗಮಿಸುತ್ತಿದ್ದಾರೆ. ಅಪಾರ ಸಂಖ್ಯೆಯಲ್ಲಿ ಬಂದ ಭಕ್ತರನ್ನು ನಿಯಂತ್ರಿಸಲು ಅಲ್ಲಿದ್ದ ಪೊಲೀಸರು, ಭದ್ರತಾ ಸಿಬಂದಿ ಹರಸಾಹಸ ಪಡುವಂತಾಗಿದೆ.
7
+ ಭಕ್ತರಿಗೆ ಬಾಲ ರಾಮನ ದರ್ಶನಕ್ಕೆ ಸಮಯ ನಿಗದಿ:
8
+ ಬಾಲಕ ರಾಮನ ದರ್ಶನಕ್ಕೆ ಬರುವ ಭಕ್ತರಿಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ವೆಬ್ಸೈಟ್ನಲ್ಲಿ ನಿರ್ದಿಷ್ಟ ಸಮಯದ ಸ್ಲಾಟ್ಗಳನ್ನು ಒದಗಿಸಿರುವ ಮಾಹಿತಿ ಇದೆ. ಇದರಂತೆ ನಿತ್ಯ ಬೆಳಗ್ಗೆ 7 ರಿಂದ 11:30 ರವರೆಗೆ ಮತ್ತು ಮಧ್ಯಾಹ್ನ 2 ರಿಂದ ಸಂಜೆ 7 ರವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಬೆಳಗ್ಗೆ 6:30ಕ್ಕೆ ಆರತಿ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 7:30 ಕ್ಕೆ ಸಂಧ್ಯಾ ಆರತಿ ನಡೆಯಲಿದೆ. ಆಫ್ಲೈನ್ ಮತ್ತು ಆನ್ಲೈನ್ ಎರಡರಲ್ಲೂ ಆರತಿಗಾಗಿ ಪಾಸ್ಗಳು ದೊರೆಯಲಿವೆ. ಆಫ್ಲೈನ್ ಪಾಸ್ಗಳು ಶ್ರೀರಾಮ ಜನ್ಮಭೂಮಿಯ ಕಚೇರಿಯಲ್ಲಿ ಲಭ್ಯವಿದ್ದು, ಗುರುತಿನ ಪುರಾವೆ ಒದಗಿಸಿ ಪಡೆಯಬಹುದಾಗಿದೆ.
9
+ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿರುವ ಕಾರಣ, ಅಯೋಧ್ಯೆಯಲ್ಲಿ ಅಧಿಕಾರಿಗಳು ಒಳಬರುವ ಎಲ್ಲಾ ವಾಹನಗಳಿಗೆ ತಕ್ಷಣ ಪ್ರವೇಶವನ್ನು ನಿರ್ಬಂಸಿದ್ದಾರೆ. ಬೆಳಿಗ್ಗೆ ಅಯೋಧ್ಯೆಯಲ್ಲಿ ಹಠಾತ್ ಯಾತ್ರಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಇದರಿಂದ ಭದ್ರತಾ ವ್ಯವಸ್ಥೆಯು ಸವಾಲಾಗಿ ಪರಿಣಮಿಸಿದೆ. ಜನದಟ್ಟಣೆಯಿಂದಾಗಿ ಕೆಲವು ವ್ಯಕ್ತಿಗಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಗಂಭೀರ ಹಾನಿಯ ವರದಿಯಾಗಿಲ್ಲ. ಭಾರೀ ಜನಸಂದಣಿಯನ್ನು ಗಮನಿಸಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಮತ್ತಷ್ಟು ಯಾತ್ರಿಗಳ ಆಗಮನವನ್ನು ನಿರ್ಬಂಸಲು ಆದೇಶಿಸಿದರು.
10
+ ಗೊಂದಲಗಳಿಲ್ಲದೆ ನಡೆದ ಪಿಎಸ್‍ಐ ಹುದ್ದೆಗಳ ನೇಮಕಾತಿ ಲಿಖಿತ ಮರು ಪರೀಕ್ಷೆ
11
+ ಅಯೋಧ್ಯೆಯಲ್ಲಿನ ಪರಿಸ್ಥಿತಿ ಕುರಿತು ಸಭೆ ನಡೆಸಲಾಗಿದ್ದು, ಮುಂದಿನ ಕೆಲವು ದಿನಗಳವರೆಗೆ ಅಯೋಧ್ಯೆಗೆ ತೆರಳುವ ಎಲ್ಲಾ ವಾಹನಗಳ ಮೇಲೆ ನಿಷೇಧ ಹೇರಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಈ ವಾಹನಗಳಿಗೆ ಮಾಡಲಾದ ಎಲ್ಲಾ ಆನ್ಲೈನ್ ಬುಕಿಂಗ್ಗಳನ್ನು ರದ್ದುಗೊಳಿಸಲಾಗಿದೆ ಮತ್ತು ಯಾತ್ರಿಕರ ಬಸ್ ದರಗಳ ಮರುಪಾವತಿಯನ್ನು ತ್ವರಿತ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ.
12
+ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಿರುವ ಕಾರಣ ಅಯೋಧ್ಯೆಯಲ್ಲಿ ಹೋಟೆಲ್, ರೂಮ್ಗಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಎಷ್ಟೋ ತಿಂಗಳ ಕಾಲದವರೆಗೆ ಹೋಟೆಲ್ಗಳು ಬುಕ್ ಆಗಿದೆ ಎನ್ನಲಾಗಿದೆ. ಅದೂ ಅಲ್ಲದೆ ಕೆಲವೊಂದು ಹೋಟೆಲ್ಗಳಲ್ಲಿ ಹೆಚ್ಚಿನ ಬಾಡಿಗೆ ವಸೂಲಿ ಮಾಡುತ್ತಿರುವ ಆರೋಪಗಳು ಕೇಳಿಬರುತ್ತಿವೆ.
13
+ ಅಯೋಧ್ಯೆ ದೇವಸ್ಥಾನದಲ್ಲಿ ನೂತನ ರಾಮಲಲ್ಲಾ ಮೂರ್ತಿಯ ಪ್ರಾಣಪ್ರತಿಷ್ಠಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಸಮಾರಂಭವನ್ನು ದೇಶಾದ್ಯಂತ ನೇರಪ್ರಸಾರ ಮಾಡಲಾಯಿತು. ಸಮಾರಂಭಕ್ಕೆ ಪ್ರಮುಖ ರಾಜಕಾರಣಿಗಳ��, ಉದ್ಯಮಿಗಳು, ಕ್ರೀಡಾಪಟುಗಳು ಮತ್ತು ಸೆಲೆಬ್ರಿಟಿಗಳು ಸೇರಿದಂತೆ ಸಾವಿರಾರು ಜನರನ್ನು ಆಹ್ವಾನಿಸಲಾಗಿತ್ತು. ಆಮಂತ್ರಿತರು ನಂತರ ಸಮಾರಂಭ ಮುಗಿದ ಕೂಡಲೇ ದೇವರ ದರ್ಶನ ಪಡೆದರು.
14
+ ಕಳೆದ ಸೋಮವಾರ ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ನೆರವೇರಿದ್ದು ಇದರೊಂದಿಗೆ ನೂರಾರು ವರುಷಗಳ ತಪಸ್ಸಿನ ಫಲವಾಗಿ ನೆರವೇರಿದಂತಾಗಿದೆ. ಅಂದಿನಿಂದ ಅಯೋಧ್ಯೆಗೆ ಭಕ್ತರ ದಂಡೇ ಹರಿದು ಬರುತ್ತಿದೆ.
eesanje/url_47_181_6.txt ADDED
@@ -0,0 +1,8 @@
 
 
 
 
 
 
 
 
 
1
+ ಭಾರತ್ ನ್ಯಾಯ ಯಾತ್ರೆಗೆ ಭದ್ರತೆ ನೀಡುವಂತೆ ಅಮಿತ್ ಷಾಗೆ ಖರ್ಗೆ ಪತ್ರ
2
+ ನವದೆಹಲಿ, ಜ.24- ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ನ್ಯಾಯ ಯಾತ್ರೆಗೆ ಸೂಕ್ತ ಭದ್ರತೆ ಒದಗಿಸಲು ಸಂಬಂಧಪಟ್ಟ ಪೊಲೀಸರಿಗೆ ನಿರ್ದೇಶನ ನೀಡುವಂತೆ ಎಐಸಿಸಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಅವರು, ಕೇಂದ್ರ ಗೃಹ ಸಚಿವ ಅಮಿತ್ ಷಾಗೆ ಪತ್ರ ಬರೆದಿದ್ದಾರೆ.
3
+ ಅಸ್ಸಾಂನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆ ವೇಳೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಎದುರಿಸಿರುವ ಭದ್ರತಾ ಲೋಪಗಳ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರು, ಪತ್ರದ ಮೂಲಕ ಸೂಕ್ತ ಭದ್ರತೆ ನೀಡಲು ಮನವಿ ಮಾಡಿಕೊಂಡಿದ್ದಾರೆ.ರಾಜ್ಯಸಭೆಯ ವಿರೋಧಪಕ್ಷ ನಾಯಕರೂ ಆಗಿರುವ ಖರ್ಗೆ ಮಂಗಳವಾರ ರಾತ್ರಿ ಬರೆದ ಪತ್ರವು ಕಾಂಗ್ರೆಸ್ ನಾಯಕನ ಸುರಕ್ಷತೆಯ ಬಗ್ಗೆ ಮೂಡಿರುವ ಕಳವಳವನ್ನು ಎತ್ತಿ ಹೇಳಿದೆ.
4
+ ಜನವರಿ 22ರಂದು ನಾಗಾಂವ್ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಬೆಂಗಾವಲು ಪಡೆಗೆ ಅಡ್ಡಿಪಡಿಸಿದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಅಸ್ಸಾಂ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಮತ್ತು ಕೆಲವೊಮ್ಮೆ ಕಾರ್ಯಕರ್ತರ ಬೆಂಗಾವಲು ವಾಹನವನ್ನು ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.ಹೀಗಾಗಿ ರಾಹುಲ್ ಗಾಂ ಭದ್ರತೆಗೆ ಅಪಾಯವಿದೆ ಎಂದಿದ್ದಾರೆ. ಮಂಗಳವಾರ ಗುವಾಹಟಿಯ ಹೊರವಲಯದಲ್ಲಿ ಗಾಂಧಿ ನೇತೃತ್ವದ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ ನಂತರ ಅಮಿತ್‍ಶಾಗೆ ಅವರು ಪತ್ರ ಬರೆದಿದ್ದಾರೆ.
5
+ ಕಾಂಗ್ರೆಸ್‍ನ ನ್ಯಾಯ ಯಾತ್ರೆಯಲ್ಲಿ ಭಾಗವಹಿಸುವುದಿಲ್ಲ : ಟಿಎಂಸಿ
6
+ ಶಾ ಮಧ್ಯಪ್ರವೇಶಿಸಿ ರಾಹುಲ್ ಗಾಂಧಿ ಹಾಗೂ ಯಾತ್ರೆಯಲ್ಲಿ ಭಾಗವಹಿಸುವವರ ಸುರಕ್ಷತೆಯನ್ನು ಖಾತ್ರಿಪಡಿಸುವಂತೆ ಪತ್ರದಲ್ಲಿ ಒತ್ತಾಯಿಸಲಾಗಿದೆ. ದೈಹಿಕ ಹಾನಿಗೆ ಕಾರಣವಾಗುವ ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಮತ್ತು ಅಸ್ಸಾಂನ ಪೊಲೀಸ್ ಮಹಾನಿರ್ದೇಶಕರನ್ನು ವಿನಂತಿಸುತ್ತೇನೆ ಎಂದಿದ್ದಾರೆ.
7
+ ಭಾರತ್ ಜೋಡೋ ನ್ಯಾಯ ಯಾತ್ರೆಯು ಜನವರಿ 14 ರಂದು ಮಣಿಪುರದ ಇಂಫಾಲ್‍ನಿಂದ ಪ್ರಾರಂಭವಾಯಿತು. ಮುಂಬೈನಲ್ಲಿ ಕೊನೆಗೊಳ್ಳುವ ಈ ಯಾತ್ರೆ 6,700 ಕಿಲೋಮೀಟರ್‍ಗಳನ್ನು ಕ್ರಮಿಸಲು ಸಿದ್ಧವಾಗಿದೆ. ಸಮಾಜದ ದುರ್ಬಲ ವರ್ಗಗಳನ್ನು ಒಗ್ಗೂಡಿಸುವುದರೊಂದಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
8
+ ಕಾರ್ಮಿಕ ಕಾನೂನುಗಳ ನಿರ್ವಹಣೆ ಮತ್ತು ವಿರೋಧ ಪಕ್ಷದವರ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳ ದುರುಪಯೋಗ ಸೇರಿದಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಜನವಿರೋ ನೀತಿಗಳನ್ನು ಜನರಿಗೆ ವಿವರಿಸಲು ಕಾಂಗ್ರೆಸ್ ಈವಯಾತ್ರೆಯನ್ನು ವೇದಿಕೆಯಾಗಿಸಿಕೊಂಡಿದೆ.
eesanje/url_47_181_7.txt ADDED
@@ -0,0 +1,7 @@
 
 
 
 
 
 
 
 
1
+ ಬಾಬರ್‌ನ ಕಾಲದಲ್ಲಿ ಉಂಟಾದ ಗಾಯಕ್ಕೆ ರಾಮ ಮಂದಿರ ಹೊಲಿಗೆ ಹಾಕಿದೆ : ಅಮಿತ್ ಶಾ
2
+ ಅಹಮದಾಬಾದ್, ಜ 24- ಅಯೋಧ್ಯೆಯಲ್ಲಿ ನಿರ್ಮಿಸಲಾದ ರಾಮ ಮಂದಿರದಲ್ಲಿ ನಡೆದ ಪ್ರಾಣಪ್ರತಿಷ್ಠಾಪನೆ ಸಮಾರಂಭವು ಸುಮಾರು 500 ವರ್ಷಗಳ ಹಿಂದೆ ಮೊಘಲ್ ದೊರೆ ಬಾಬರ್ ಕಾಲದಲ್ಲಿ ಉಂಟಾದ ಆಳವಾದ ಗಾಯಕ್ಕೆ ಹೊಲಿಗೆ ಹಾಕಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
3
+ ಗುಜರಾತ್‍ನ ಅಹಮದಾಬಾದ್‍ನ ರಾನಿಪ್ ಪ್ರದೇಶದಲ್ಲಿ ನೂತನವಾಗಿ ಜೀರ್ಣೋದ್ಧಾರಗೊಂಡಿರುವ ರಾಮಜಿ ದೇವಸ್ಥಾನದಲ್ಲಿ ಮಂಗಳವಾರ ಪುನಃ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯ ರಾಮ ಮಂದಿರದಲ್ಲಿ ಶೀ ಬಾಲರಾಮನ ಪ್ರಾಣ ಪ್ರತಿಷ್ಠಾ ಮಾಡುವ ಮೂಲಕ ಗಮನಾರ್ಹ ಕೆಲಸ ಮಾಡಿದ್ದಾರೆ.
4
+ ಕಳೆದ 500 ವರ್ಷಗಳಿಂದ ವಿಶ್ವದಾದ್ಯಂತ ಶ್ರೀರಾಮನ ಭಕ್ತರು ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ಶ್ರೀರಾಮನನ್ನು ನೋಡುವುದು ಯಾವಾಗ ಎಂದು ಅವರು ಕೇಳುತ್ತಿದ್ದರು. ಈಗ ಭವ್ಯವಾದ ದೇವಾಲಯ ಕಂಗೊಳಿಸುತ್ತಿದೆ ಈ ಘಟನೆಯನ್ನು ನೋಡಿದಾಗ ಬಾಬರ್‍ನ ಕಾಲದಲ್ಲಿ ನಮ್ಮ ಹೃದಯದಲ್ಲಿ ಆಗಿದ್ದ ಆಳವಾದ ಗಾಯಕ್ಕೆ ಈಗ ಹೊಲಿಗೆ ಮಾಡಿದಂತಾಗಿದೆ ಎಂದು ಷಾ ಹೇಳಿದರು.
5
+ ಈ ವರ್ಷವೂ ಮುಂದುವರೆಯಲಿದೆ ಭಾರತ ಆರ್ಥಿಕ ಪ್ರಾಬಲ್ಯ
6
+ 2014ರ ಹಿಂದಿನ ಕಾಂಗ್ರೆಸ್ ಸರ್ಕಾರ ದೇಶದ ಸಂಸ್ಕøತಿ, ಧರ್ಮ ಮತ್ತು ಭಾಷೆಗಳನ್ನು ಗೌರವಿಸಲು ಹೆದರುತ್ತಿದ್ದವು.ಔರಂಗಜೇಬನು ಕಾಶಿ ವಿಶ್ವನಾಥ ದೇವಾಲಯವನ್ನು ಧ್ವಂಸ ಮಾಡಿದನು. ಇಷ್ಟು ವರ್ಷಗಳ ನಂತರ ಅದನ್ನು ಪುನಃ ನಿರ್ಮಿಸಿದ ಮತ್ತು ಅಲ್ಲಿ ಎಲ್ಲಾ ಭಕ್ತರಿಗೆ ಅನುಕೂಲತೆಗಳನ್ನುಮಾಡಿದ ಕೀರ್ತಿ ಪ್ರಧಾನಿ ಮೋದಿಗೆ ಸಲ್ಲಬೇಕು ಎಂದು ಗೃಹ ಸಚಿವರು ಹೇಳಿದರು.
7
+ ಬಾಬರ್ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಧ್ವಂಸ ಮಾಡಿದ್ದಾನೆ. ಈಗ ಅಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗಿದೆ ಜೈ ಶ್ರೀರಾಮ್ ಘೋಷಣೆಗಳ ಮೊಳಗಿದೆ ಎಂದರು.
eesanje/url_47_181_8.txt ADDED
@@ -0,0 +1,9 @@
 
 
 
 
 
 
 
 
 
 
1
+ ಈ ವರ್ಷವೂ ಮುಂದುವರೆಯಲಿದೆ ಭಾರತ ಆರ್ಥಿಕ ಪ್ರಾಬಲ್ಯ
2
+ ಬೆಂಗಳೂರು,ಜ.24- ಭಾರತವು ಈ ವರ್ಷ ಮತ್ತು ಮುಂದಿನ ವರ್ಷ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಮುಂದುವರೆಯಲಿದೆ ಹಾಗೂ ಹಣದುಬ್ಬರ ಮತ್ತೆ ಏರಿಕೆಯಾಗುವ ಸಾಧ್ಯತೆ ಇಲ್ಲ ಎಂದು ಆರ್ಥಶಾಸ್ತ್ರಜ್ಞರ ಸಮೀಕ್ಷೆ ಅಭಿಪ್ರಾಯಪಟ್ಟಿದೆ.
3
+ ಮೇ ತಿಂಗಳಲ್ಲಿ ನಡೆಯಲಿರುವ ರಾಷ್ಟ್ರೀಯ ಚುನಾವಣೆಯ ಬೆಳವಣಿಗೆಯ ಆವೇಗವನ್ನು ಹೆಚ್ಚಿಸಲು ಸರ್ಕಾರವು ಈಗಾಗಲೇ ಬಲವಾದ ವೆಚ್ಚವನ್ನು ಹೆಚ್ಚಿಸಲು ಈ ಹಣಕಾಸು ವರ್ಷದ ಮೊದಲ ಎರಡು ತ್ರೈಮಾಸಿಕಗಳಲ್ಲಿ ಮಾರ್ಚ್ ಅಂತ್ಯದವರೆಗೆ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವು ನಿರೀಕ್ಷೆಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದೆ.
4
+ ಇತ್ತೀಚಿನ ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರದ ಹೆಚ್ಚಿನ ವೆಚ್ಚವು ಮೂಲಸೌಕರ್ಯಗಳನ್ನು ನಿರ್ಮಿಸಲು ಹೋಗಿದೆ. ಖಾಸಗಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯು ಹಿಂದುಳಿದಿದೆ, ಇದು ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಹೊಸ ಪಾತ್ರವನ್ನು ವಹಿಸುವುದನ್ನು ಮುಂದುವರಿಸುತ್ತದೆ ಎಂದು ಸೂಚಿಸುತ್ತದೆ.
5
+ ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2024)
6
+ ಜನವರಿ 10-23 ರ 54 ಅರ್ಥಶಾಸ್ತ್ರಜ್ಞರ ರಾಯಿಟರ್ಸ್ ಸಮೀಕ್ಷೆಯು ಈ ಆರ್ಥಿಕ ವರ್ಷದಲ್ಲಿ ಆರ್ಥಿಕತೆಯು ಶೇ. 6.9 ರಷ್ಟು ಬೆಳೆಯುತ್ತದೆ ಎಂದು ಭವಿಷ್ಯ ನುಡಿದಿದೆ, ಇದು ಡಿಸೆಂಬರ್ ಸಮೀಕ್ಷೆಯಲ್ಲಿ ಶೇ.6.7ರಿಂದ ಸಣ್ಣ ಅಪ್‍ಗ್ರೇಡ್ ಆಗಿದೆ. ಹಿಂದಿನ ಸಮೀಕ್ಷೆಯಂತೆಯೇ ಮುಂದಿನ ಹಣಕಾಸು ವರ್ಷದಲ್ಲಿ ಶೇ.6.3 ರಷ್ಟು ವಿಸ್ತರಿಸುವ ಮುನ್ಸೂಚನೆಯನ್ನು ನೀಡಿದೆ.
7
+ ಹಣದುಬ್ಬರವು ಅಲ್ಪಾವಯಲ್ಲಿ ತೀವ್ರವಾಗಿ ಕಡಿಮೆಯಾಗುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ, ಈಗಾಗಲೇ ಕೆಳಹಂತದ ಕೋರ್ ಹಣದುಬ್ಬರದಿಂದ ತೊಂದರೆಗೆ ಸಿಲುಕುತ್ತದೆ ಎಂದು ಪ್ಯಾಂಥಿಯಾನ್ ಮ್ಯಾಕ್ರೋ ಎಕನಾಮಿಕ್ಸ್‍ನ ಮುಖ್ಯ ಉದಯೋನ್ಮುಖ ಏಷ್ಯಾದ ಅರ್ಥಶಾಸ್ತ್ರಜ್ಞ ಮಿಗುಯೆಲ್ ಚಾಂಕೊ ಹೇಳಿದ್ದಾರೆ.
8
+ ಅದೇ ಸಮಯದಲ್ಲಿ, ಈ ಪ್ರವೃತ್ತಿಗಳು ಆರ್ಥಿಕತೆಯಲ್ಲಿ ನಿರಂತರವಾದ ನಿಧಾನತೆಯನ್ನು ಪ್ರತಿಬಿಂಬಿಸುತ್ತವೆ, ವಿಶೇಷವಾಗಿ ಖಾಸಗಿ ಬಳಕೆಗೆ ಸಂಬಂಸಿದಂತೆ, ಬೆಳವಣಿಗೆಯ ಪ್ರಮುಖ ಅಂಶವಾಗಿದೆ. ಈ ವಿತ್ತೀಯ ವರ್ಷದಲ್ಲಿ ಗ್ರಾಹಕರ ಬೆಲೆ ಹಣದುಬ್ಬರವು ಸರಾಸರಿ 5.4% ಮತ್ತು 4.7% ಎಂದು ಸಮೀಕ್ಷೆಯು ತೋರಿಸಿದೆ ಮತ್ತು ಮುಂದಿನ ಆರು ತಿಂಗಳ ಅವಯಲ್ಲಿ ಗಮನಾರ್ಹವಾದ ಪುನರುತ್ಥಾನದ ಅಪಾಯವು ಕಡಿಮೆಯಾಗಿದೆ ಎಂದು 32 ರಲ್ಲಿ 23 ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
9
+ ಏಷ್ಯಾದ ಮೂರನೇ ಅತಿದೊಡ್ಡ ಆರ್ಥಿಕತೆಯ ಶೇ.60 ರಷ್ಟಿರುವ ಗ್ರಾಹಕ ಖರ್ಚು ನಿಧಾನಗೊಂಡಿದೆ. ಆದರೆ ಬಹುಪಾಲು ಅರ್ಥಶಾಸ್ತ್ರಜ್ಞರು, 28 ರಲ್ಲಿ 25, ಮುಂದಿನ ಆರು ತಿಂಗಳಲ್ಲಿ ಉದ್ಯೋಗವು ಸುಧಾರಿಸುತ್ತದೆ ಎಂದು ಹೇಳಿದ್ದಾರೆ.ಭಾರತದ ಆರ್ಥಿಕತೆಯು ಬಲವಾದ ಆವೇಗದಲ್ಲಿದ್ದರೂ… ಖಾಸಗಿ ಬಳ���ೆ ಬೇಡಿಕೆಯಲ್ಲಿನ ದೌರ್ಬಲ್ಯದ ಕಾರಣದಿಂದಾಗಿ ಮಿತವಾದ ಲಕ್ಷಣಗಳಿವೆ ಎಂದು ಅಕ್ಯೂಟ್ ರೇಟಿಂಗ್ಸ್ ಮತ್ತು ರಿಸರ್ಚ್‍ನ ಮುಖ್ಯ ಅರ್ಥಶಾಸ್ತ್ರಜ್ಞ ಸುಮನ್ ಚೌಧರಿ ಹೇಳಿದ್ದಾರೆ.
eesanje/url_47_181_9.txt ADDED
@@ -0,0 +1,7 @@
 
 
 
 
 
 
 
 
1
+ ಅಯೋಧ್ಯೆಯತ್ತ ಹರಿದು ಬರತ್ತಲೇ ಇದೆ ಭಕ್ತ ಸಾಗರ
2
+ ಅಯೋಧ್ಯೆ,ಜ.24- ರಾಮ ಲಲ್ಲಾನ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಮಂದಿರ ಉದ್ಘಾಟನೆಗೊಂಡ ಒಂದು ದಿನದ ನಂತರ ಸುಮಾರು 5 ಲಕ್ಷ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದಾರೆ. ಅಯೋಧ್ಯೆಯಲ್ಲಿ ಮೈ ಕೊರೆಯುವ ಚಳಿ ಇದ್ದರೂ ಭಕ್ತರ ದಂಡು ಆಗಮಿಸುತ್ತಲೆ ಇದ್ದು, ಇಂದು ಕೂಡ ರಾಮನ ದರ್ಶನಕ್ಕೆ ಭಕ್ತ ಸಾಗರ ಕಾದು ನಿಂತಿದೆ.
3
+ ಇಂದು ಬೆಳಗ್ಗೆಯೂ ದೇವಾಲಯದ ಹೊರಗೆ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿರುವ ದೃಶ್ಯಗಳು ಕಂಡುಬಂದಿವೆ. ಪ್ರತಿದಿನ ಒಂದು ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸುವ ನಿರೀಕ್ಷೆಯಿದೆ.ಹರಿದು ಬರುತ್ತಿರುವ ಭಕ್ತ ಸಾಗರವನ್ನು ನಿಯಂತ್ರಿಸಲು ಉತ್ತರ ಪ್ರದೇಶ ಸರ್ಕಾರ ತನ್ನ ಪ್ರಧಾನ ಗೃಹ ಕಾರ್ಯದರ್ಶಿ ಸಂಜಯ್ ಪ್ರಸಾದ್ ಮತ್ತು ಉನ್ನತ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ಅಯೋಧ್ಯೆಗೆ ಕಳುಹಿಸಿದೆ.
4
+ ಜನರು ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದಾರೆ. ಪ್ರಧಾನ ಗೃಹ ಕಾರ್ಯದರ್ಶಿ ಮತ್ತು ನನ್ನನ್ನು ಇಲ್ಲಿಗೆ ಕಳುಹಿಸಲಾಗಿದೆ. ನಾವು ಜನಸಂದಣಿ ನಿರ್ವಹಣೆಗಾಗಿ ನಾವು ಸರದಿ ವ್ಯವಸ್ಥೆಯನ್ನು ಸುಧಾರಿಸಿದ್ದೇವೆ. ನಾವು ಜನರಿಗಾಗಿ ಚಾನಲ್‍ಗಳನ್ನು ಮಾಡಿದ್ದೇವೆ ಎಂದು ಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
5
+ ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (24-01-2024)
6
+ ಉತ್ತರ ಪ್ರದೇಶ ಪೊಲೀಸ್, ರಾಪಿಡ್ ಆಕ್ಷನ್ ಫೋರ್ಸ್ (ಆರ್‍ಎಎಫ್), ಮತ್ತು ಸಶಸ್ತ್ರ ಸೀಮಾ ಬಾಲ್ (ಎಸ್‍ಎಸ್‍ಬಿ) ಯ ಸುಮಾರು 8,000 ಭದ್ರತಾ ಸಿಬ್ಬಂದಿಯನ್ನು ದೇವಸ್ಥಾನದಲ್ಲಿ ನಿಯೋಜಿಸಲಾಗಿದೆ. ಎಂಟು ಮ್ಯಾಜಿಸ್ಟ್ರೇಟ್‍ಗಳು ದೇವಾಲಯದ ವಿವಿಧ ಸ್ಥಳಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.
7
+ ಅಯೋಧ್ಯೆಯ ಇನ್ಸ್‍ಪೆಕ್ಟರ್ ಜನರಲ್ ಆಫ್ ಪೊಲೀಸ್ ಪ್ರವೀಣ್ ಕುಮಾರ್ ಅವರು, ಜನರು ಎರಡು ವಾರಗಳ ನಂತರ ಮಂದಿರ ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳಿ ಯಾವುದೆ ಅತುರ ಸಲ್ಲದು ಎಂದು ಮನವಿ ಮಾಡಿಕೊಂಡಿದ್ದಾರೆ. ದೇವಾಲಯದ ಆವರಣದಲ್ಲಿ ವಿಶೇಷವಾಗಿ ಭಕ್ತರು ದರ್ಶನಕ್ಕೆ ತೆರಳುವ ಸ್ಥಳಗಳಲ್ಲಿ ಸಾಕಷ್ಟು ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಯುಪಿ ಪೊಲೀಸ್ ಮುಖ್ಯಸ್ಥ ವಿಜಯ್ ಕುಮಾರ್ ಈ ಹಿಂದೆ ಭರವಸೆ ನೀಡಿದ್ದರು.
eesanje/url_47_182_1.txt ADDED
@@ -0,0 +1,8 @@
 
 
 
 
 
 
 
 
 
1
+ ಜ.22ರಂದು ಜನಿಸಿದ ಶಿಶುಗಳಿಗೆ ರಾಮ, ಸೀತಾ ಹೆಸರು
2
+ ಕೇಂದ್ರಪಾರ,ಜ.23 (ಪಿಟಿಐ) ಒಡಿಶಾದ ಕೇಂದ್ರಪಾರ ಮತ್ತು ಜಗತ್‍ಸಿಂಗ್‍ಪುರ ಜಿಲ್ಲೆಗಳಲ್ಲಿ ಅನೇಕ ಪೋಷಕರು ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ಜನಿಸಿದ ತಮ್ಮ ಶಿಶುಗಳಿಗೆ ರಾಮ ಮತ್ತು ಸೀತಾ ಎಂದು ಹೆಸರಿಸಿದ್ದಾರೆ. ಜ.22 ರಂದು ಕೇಂದ್ರಪಾರಾ ಮತ್ತು ಜಗತ್‍ಸಿಂಗ್‍ಪುರ ಜಿಲ್ಲೆಗಳ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜನಿಸಿದ ಕನಿಷ್ಠ ಆರು ಶಿಶುಗಳು, ಗಂಡು ಮತ್ತು ಹೆಣ್ಣುಮಕ್ಕಳಿಗೆ ಅವರ ಪೋಷಕರು ಭಗವಾನ್ ರಾಮ ಮತ್ತು ದೇವಿ ಸೀತೆಯ ಹೆಸರನ್ನು ಇಟ್ಟಿದ್ದಾರೆ.
3
+ ಒಡಿಶಾದಲ್ಲಿ ಸಂಪ್ರದಾಯದ ಪ್ರಕಾರ ಮಗು ಹುಟ್ಟಿದ 21 ನೇ ದಿನದಂದು ನಾಮಕರಣ ಮಾಡುವುದಾದರೂ, ಸೋಮವಾರ ನಡೆದ ಭಗವಾನ್ ರಾಮನ ಪ್ರಾಣ ಪ್ರತಿಷ್ಠಾ ಸಮಾರಂಭದಂದೆ ಪೋಷಕರು ತಮ್ಮ ನವಜಾತ ಶಿಶುಗಳಿಗೆ ರಾಮ, ಸೀತಾ ಎಂದು ಹೆಸರಿಸಲು ಮುಂದಾದರು.
4
+ ಸನಾತನ ಧರ್ಮದ ಎಲ್ಲಾ ಸಾಧಕರಿಗೆ ಇದು ಮಹತ್ವದ ದಿನವಾಗಿದೆ. ನಮ್ಮ ಕುಟುಂಬಕ್ಕೆ ಹೊಸ ಆಗಮನದಿಂದ ನಮಗೆ ಇದು ಡಬಲ್ ಸಂತೋಷವಾಗಿದೆ ಎಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಪ್ರಿಯಾಂಕಾ ಮಲ್ಲಿಕ್ (24) ಹೇಳಿದರು.
5
+ ಇಂದಿನಿಂದ ಭಕ್ತರಿಗೆ ರಾಮಲಲ್ಲಾನ ದರ್ಶನ ಭಾಗ್ಯ
6
+ ಅಯೋಧ್ಯೆಯಲ್ಲಿ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭದ ನಂತರ ಕೇಂದ್ರಪಾರ ಜಿಲ್ಲಾ ಕೇಂದ್ರ ಆಸ್ಪತ್ರೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆಕೆಯ ಮಗುವಿನ ಜನನ ನಡೆದಿದೆ. ಯುಗಪುರುಷದ ದಿನದ ನೆನಪಿಗಾಗಿ ನಮ್ಮ ಮಗಳಿಗೆ ಸೀತೆ ಎಂದು ಹೆಸರಿಡಲು ನಿರ್ಧರಿಸಿದ್ದೇವೆ ಎಂದು ನವಜಾತ ಶಿಶುವಿನ ತಂದೆ ನಾರಾಯಣ್ ಹೇಳಿದ್ದಾರೆ. ಮಂಗಳಕರ ದಿನದಂದು ಮಗುವಿನ ಜನನದಿಂದ ಅನೇಕ ಪೋಷಕರು ಸಂತೋಷಪಟ್ಟರು.
7
+ ರೇಣುಬಾಲಾ ರೌತ್ (24) ಕೇಂದ್ರಪಾರ ಪಟ್ಟಣದ ಖಾಸಗಿ ನರ್ಸಿಂಗ್ ಹೋಂನಲ್ಲಿ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ ನಂತರ ಹರ್ಷ ವ್ಯಕ್ತಪಡಿಸಿದರು. ರಾಮ ಮಂದಿರದ ಪ್ರತಿಷ್ಠಾಪನೆಯ ದಿನದಂದು ನಾನು ಗಂಡು ಮಗುವಿಗೆ ತಂದೆಯಾಗಿದ್ದೇನೆ. ಶುಭ ದಿನದಂದು ಅವನ ಜನನವು ನಮ್ಮನ್ನು ಭಾವಪರವಶಗೊಳಿಸಿದೆ. ನಮ್ಮ ಮಗನಿಗೆ ರಾಮ ಎಂದು ಹೆಸರಿಸಲು ನಾವು ನಿರ್ಧರಿಸಿದ್ದೇವೆ ಎಂದು ರೇಣುಬಾಲಾ ಅವರ ಪತಿ ಅಜಯ್ ಹರ್ಷ ವ್ಯಕ್ತಪಡಿಸಿದರು.
8
+ ಜನವರಿ 22 ರಂದು ಜನಿಸಿದ ತಮ್ಮ ನವಜಾತ ಶಿಶುಗಳಿಗೆ ರಾಮ್ ಮತ್ತು ಸೀತೆ ಎಂದು ನಾಮಕರಣ ಮಾಡುವ ಪೋಷಕರು ಇದೇ ರೀತಿಯ ನಿದರ್ಶನಗಳು ರಾಜ್ಯದ ವಿವಿಧ ಭಾಗಗಳಿಂದ ಹರಿದಾಡುತ್ತಿವೆ.
eesanje/url_47_182_10.txt ADDED
@@ -0,0 +1,7 @@
 
 
 
 
 
 
 
 
1
+ ಶ್ರೀರಾಮ ಪಾದ ಸ್ಥಾಪಿಸಿದ ಸ್ಥಳದ ಅಭಿವೃದ್ಧಿ : ಮೋಹನ್ ಯಾದವ್
2
+ ಭೋಪಾಲ್, ಜ 23 (ಪಿಟಿಐ) ಅಯೋಧ್ಯೆಯಲ್ಲಿ ಹೊಸದಾಗಿ ನಿರ್ಮಿಸಲಾದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಯು ಐತಿಹಾಸಿಕ ಘಟನೆಯಾಗಿದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ ಹೇಳಿದ್ದಾರೆ ಮತ್ತು ರಾಜ್ಯದಲ್ಲಿ ಹಿಂದೂ ದೇವತೆಗೆ ಸಂಬಂಧಿಸಿದ ಸ್ಥಳಗಳನ್ನು ಜನಪ್ರಿಯ ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಘೋಷಿಸಿದ್ದಾರೆ.
3
+ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಪ್ರದೇಶದ ಪಟ್ಟಣದಲ್ಲಿ ಬೃಹತ್ ಮೂರ್ತಿ ಪ್ರತಿಷ್ಠಾಪನೆ ಸಮಾರಂಭವು ತಾರತಮ್ಯವಿಲ್ಲದೆ ಸಾಮರಸ್ಯದ ಸಮಾಜವನ್ನು ಸೂಚಿಸುವ ಪ್ರಾಚೀನ ಪರಿಕಲ್ಪನೆಯಾದ ರಾಮ ರಾಜ್ಯದ ಬರವಣಿಗೆಗೆ ನಾಂದಿ ಹಾಡುತ್ತದೆ ಎಂದಿದ್ದಾರೆ. ರಾಮ ಮಂದಿರದ ಮೂರ್ತಿ ಪ್ರತಿಷ್ಠಾಪನಾ ಸಮಾರಂಭವು ಐತಿಹಾಸಿಕ ಘಟನೆಯಾಗಿದೆ. ಮಧ್ಯಪ್ರದೇಶದಲ್ಲಿ ಶ್ರೀರಾಮನು ತನ್ನ ಪಾದವನ್ನು ಸ್ಥಾಪಿಸಿದ ಸ್ಥಳಗಳನ್ನು ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.
4
+ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಉತ್ತಮ ಆಡಳಿತವನ್ನು ಸ್ಥಾಪಿಸಲಾಗಿದೆ. ವಾಸ್ತವದಲ್ಲಿ ರಾಮ ರಾಜ್ಯಬರುತ್ತಿದೆ. ಸುಮಾರು 142 ಕೋಟಿ ಜನರು ಸರ್ಕಾರದ ಪರವಾಗಿ ನಿಂತು ಕೋಮು ಸೌಹಾರ್ದದ ಉದಾಹರಣೆಯನ್ನು ಪ್ರದರ್ಶಿಸಿದರು, ಎಂದು ಅವರು ಹೇಳಿದರು. ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಸಂದರ್ಭದಲ್ಲಿ ಯಾದವ್ ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಸಿದರು.
5
+ ಲೋಕಸಭಾ ಚುನಾವಣೆ ಅಂತಿಮ ಮತದಾರರ ಪಟ್ಟಿ ಪ್ರಕಟ
6
+ ಅಲಂಕೃತಗೊಂಡಿದ್ದ ಅವರ ಮನೆಯಲ್ಲಿ ಸಿಎಂ ಶ್ರೀರಾಮನಿಗೆ ಪ್ರಾರ್ಥನೆ ಸಲ್ಲಿಸಿದರು, ದೀಪಗಳನ್ನು ಹಚ್ಚಿದರು ಮತ್ತು ಜೈ ಶ್ರೀ ರಾಮ ಎಂದು ಘೋಷಣೆ ಮಾಡಿದರು. ಹಿಂದಿನ ದಿನ, ಅವರು ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದ ರಾಮ್ ರಾಜ ದೇವಸ್ಥಾನದಿಂದ ವಾಸ್ತವಿಕವಾಗಿ ಪವಿತ್ರೀಕರಣ ಸಮಾರಂಭವನ್ನು ವೀಕ್ಷಿಸಿದರು.
7
+ ಯಾದವ್ ಅವರು ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗೆ ಓರ್ಚಾದ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದರು, ಇದನ್ನು ಛೋಟಿ ಅಯೋಧ್ಯೆ ಎಂದೂ ಕರೆಯುತ್ತಾರೆ.
eesanje/url_47_182_11.txt ADDED
@@ -0,0 +1,8 @@
 
 
 
 
 
 
 
 
 
1
+ ಶ್ರೀರಾಮ ಸಾಂಸ್ಕೃತಿಕ, ಆಧ್ಯಾತ್ಮಿಕತೆಯ ಪ್ರತೀಕ : ರಾಷ್ಟ್ರಪತಿ
2
+ ನವದೆಹಲಿ, ಜ.22- ಅಯೋಧ್ಯೆಯ ರಾಮಮಂದಿರದಲ್ಲಿಂದು ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಹಿನ್ನಲೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪ್ರಧಾನಿ ನರೇಂದ್ರಮೋದಿಯವರಿಗೆ ಪತ್ರ ಬರೆದು ಅಭಿನಂದನೆ ತಿಳಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ನಿರ್ಮಾಣವಾಗಿದೆ. ಶ್ರೀರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭದಲ್ಲಿ ಭಾಗಿಯಾಗಲು ನೀವು ಕಠಿಣ ಅನುಷ್ಠಾನವನ್ನು ಕೈಗೊಂಡಿದ್ದೀರಿ.
3
+ ನೀವು ಕೈಗೊಂಡ 11-ದಿನಗಳ ಅನುಷ್ಠಾನ ಕೇವಲ ಪವಿತ್ರ ಧಾರ್ಮಿಕ ಆಚರಣೆಗಳ ಅನುಸರಣೆ ಮಾತ್ರವಲ್ಲ, ಇದು ತ್ಯಾಗ ಮನೋಭಾವದಿಂದ ಪ್ರೇರಿತವಾದ ಅತ್ಯುನ್ನತ ಆಧ್ಯಾತ್ಮಿಕ ಕಾರ್ಯವಾಗಿದೆ ಎಂದು ಶ್ಲಾಘಿಸಿದ್ದಾರೆ.ಇಂತಹ ಶುಭ ಸಂದರ್ಭದಲ್ಲಿ, ನೀವು ಅಯೋಧ್ಯೆಗೆ ಭೇಟಿ ನೀಡುತ್ತಿರುವುದಕ್ಕೆ ನಾನು ನಿಮಗೆ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ತಿಳಿಸುತ್ತೇನೆ ಎಂದು ಹೇಳಿದ್ದಾರೆ.
4
+ ಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿಸಿ : ವೆಂಕಟೇಶ್‍ಪ್ರಸಾದ್
5
+ ಶ್ರೀರಾಮಮಂದಿರ ಉದ್ಘಾಟನೆಯಿಂದ ರಾಷ್ಟ್ರವ್ಯಾಪಿ ಹಬ್ಬದ ವಾತಾವರಣ ಮನೆ ಮಾಡಿದೆ. ನಮ್ಮ ರಾಷ್ಟ್ರ ಹೊಸತನದತ್ತ ಹೆಜ್ಜೆ ಇಡುತ್ತಿದ್ದು, ನಾವು ಸಾಕ್ಷಿಯಾಗುತ್ತಿರುವುದು ನಮ್ಮೆಲ್ಲರ ಅದೃಷ್ಟ. ಪ್ರಭು ಶ್ರೀರಾಮನ ಧೈರ್ಯ, ಸಹಾನುಭೂತಿ ಮತ್ತು ಕರ್ತವ್ಯದ ಮೇಲಿನ ಅಚಲ ಭಕ್ತಿಯಂತಹ ಮೌಲ್ಯಗಳು ಭವ್ಯವಾದ ಮಂದಿರದ ಮೂಲಕ ಜನರಿಗೆ ತಲಪುತ್ತದೆ ಎಂದಿದ್ದಾರೆ.
6
+ ಶ್ರೀರಾಮನು ನಮ್ಮ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಯ ಪ್ರತೀಕ. ಕೆಟ್ಟದ್ದರ ವಿರುದ್ಧ ಹೋರಾಡುವ, ಒಳ್ಳೆಯ ಆದರ್ಶವನ್ನು ಪ್ರತಿನಿಸುತ್ತಾನೆ. ನಮ್ಮ ರಾಷ್ಟ್ರೀಯ ಇತಿಹಾಸದ ಅನೇಕ ಅಧ್ಯಾಯಗಳು ಶ್ರೀರಾಮನ ಜೀವನ ಮತ್ತು ತತ್ವಗಳಿಂದ ಪ್ರಭಾವಿತವಾಗಿವೆ. ರಾಮ್ ಕಥಾದ ಆದರ್ಶಗಳು ರಾಷ್ಟ್ರ ನಿರ್ಮಾತೃಗಳಿಗೆ ಸೂರ್ತಿ ನೀಡಿವೆ.
7
+ ನನಸಾಯ್ತು ಶತಕೋಟಿ ಭಾರತೀಯರ 500 ವರ್ಷಗಳ ಕನಸು
8
+ ಗಾಂೀಜಿಯವರು ತಮ್ಮ ಕೊನೆ ಉಸಿರಿನವರೆಗೂ ರಾಮನಾಮ ಜಪಿಸಿದರು. ನನ್ನ ಕಷ್ಟದ ಸಮಯದಲ್ಲಿ ರಾಮನ ಹೆಸರು ನನ್ನ ರಕ್ಷಕವಾಗಿದೆ ಮತ್ತು ಈಗಲೂ ಆ ಹೆಸರು ನನ್ನನ್ನು ರಕ್ಷಿಸುತ್ತಿದೆ ಎಂದು ಮಹಾತ್ಮಾ ಗಾಂಧೀಜಿ ಹೇಳಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
eesanje/url_47_182_12.txt ADDED
@@ -0,0 +1,8 @@
 
 
 
 
 
 
 
 
 
1
+ ತೀವ್ರ ಚಳಿ ಹಿನ್ನೆಲೆಯಲ್ಲಿ ರಾಮೋತ್ಸವಕ್ಕೆ ಲಾಲ್ ಕೃಷ್ಣ ಅಡ್ವಾಣಿ ಗೈರು
2
+ ನವದೆಹಲಿ,ಜ.22- ತೀವ್ರ ಚಳಿ ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿಜೆಪಿಯ ಹಿರಿಯ ನಾಯಕ ಎಲ್.ಕೆ. ಅಡ್ವಾಣಿಯವರು ಅಯೋಧ್ಯೆಯಲ್ಲಿ ನಡೆಯುವ ಬಾಲರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಗೈರಾದರು.ಆರೋಗ್ಯದ ಹಿತದೃಷ್ಟಿ ಹಾಗೂ ವೈದ್ಯರ ಸಲಹೆ ಮೇರೆಗೆ ಕೊನೆಯ ಕ್ಷಣದಲ್ಲಿ ಅಡ್ವಾಣಿಯವರ ಅಯೋಧ್ಯೆ ಪ್ರಯಾಣ ರದ್ದಾಯಿತು. ಈ ಮೂಲಕ ಅಡ್ವಾಣಿಯವರು ಇಂದಿನ ಕಾರ್ಯಕ್ರಮದಿಂದ ಹೊರಗುಳಿದರು.
3
+ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಹೋರಾಟ ನಡೆಸಿದವರಲ್ಲಿ ಅಡ್ವಾಣಿ ಕೂಡ ಪ್ರಮುಖ ವ್ಯಕ್ತಿ. 96ನೇ ವಯಸ್ಸಿನಲ್ಲಿಯೂ ಆಹ್ವಾನ ಸ್ವೀಕರಿಸಿ ಅಯೋಧ್ಯೆಗೆ ತೆರಳಲು ಸಿದ್ಧರಾಗಿದ್ದರು. ಹಿರಿಯ ನಾಯಕರ ಆರೋಗ್ಯ ಮತ್ತು ವಯಸ್ಸಿನ ಕಾರಣದಿಂದ ಈ ಮಹಾ ಕಾರ್ಯಕ್ರಮಕ್ಕೆ ಹಾಜರಾಗದಂತೆ ಈ ಹಿಂದೆ ವಿನಂತಿಸಲಾಗಿತ್ತು.
4
+ ಅಡ್ವಾಣಿಯವರೊಂದಿಗೆ ರಾಮಮಂದಿರ ಚಳುವಳಿಯ ನೇತೃತ್ವ ವಹಿಸಿದ್ದ ಮುರಳಿ ಮನೋಹರ್ ಜೋಶಿ ಅವರನ್ನೂ ಸಮಾರಂಭದಿಂದ ಹೊರಗುಳಿಯುವಂತೆ ಕೇಳಲಾಗಿತ್ತು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ (ರಾಮ ಮಂದಿರ ಟ್ರಸ್ಟ್) ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಡ್ವಾಣಿ ಮತ್ತು ಜೋಶಿ ಅವರ ವಯಸ್ಸು ಮತ್ತು ಆರೋಗ್ಯದ ಸ್ಥಿತಿಯನ್ನು ಪರಿಗಣಿಸಿ ಸಮಾರಂಭಕ್ಕೆ ಹಾಜರಾಗದಂತೆ ವಿನಂತಿಸಲಾಗಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅದರಂತೆ ಇಬ್ಬರೂ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
5
+ ಜೈಶ್ರೀರಾಮ್ ಘೋಷ ಜೋರಾಗಿ ಮೊಳಗಿಸಿ : ವೆಂಕಟೇಶ್‍ಪ್ರಸಾದ್
6
+ ಆಹ್ವಾನಿತರಲ್ಲಿ ಕ್ರಿಕೆಟ್ ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಬಿಗ್‍ಬಿ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಅನಿಲ್ ಅಂಬಾನಿ, ಗೌತಮ್ ಅದಾನಿ ಕೂಡ ಸೇರಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‍ಎಸ್‍ಎಸ್) ಮುಖಂಡ ಕೃಷ್ಣ ಗೋಪಾಲ್ ಮತ್ತು ರಾಮ್‍ಲಾಲ್ ಅವರು ವಿಎಚ್‍ಪಿ ಮುಖ್ಯಸ್ಥ ಅಲೋಕ್‍ಕುಮಾರ್ ಅವರೊಂದಿಗೆ ಎಲ್.ಕೆ.ಅಡ್ವಾಣಿ ಅವರನ್ನು ಭೇಟಿ ಮಾಡಿ ರಾಮಮಂದಿರ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಆಹ್ವಾನ ನೀಡಿದ್ದರು.
7
+ ಅಯೋಧ್ಯೆಯಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಸಮಾರಂಭಕ್ಕೆ ಎಲ್.ಕೆ.ಅಡ್ವಾಣಿ ಭೇಟಿ ನೀಡುವ ಸಂದರ್ಭದಲ್ಲಿ ಅವರಿಗೆ ಅಗತ್ಯವಿರುವ ಎಲ್ಲಾ ವೈದ್ಯಕೀಯ ಸೌಲಭ್ಯಗಳು ಮತ್ತು ಇತರ ವ್ಯವಸ್ಥೆಗಳನ್ನು ಒದಗಿಸಲಾಗುವುದು ಎಂದು ಅಲೋಕ್ ಕುಮಾರ್ ತಿಳಿಸಿದ್ದರು.
8
+ ರಾಮಮಂದಿರ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಕ್ಕೆ ಕಾಂಗ್ರೆಸ್ ನಿರಾಕರಿಸಿದೆ. ಕಾಂಗ್ರೆಸ್‍ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ಅೀಧಿರ್ ರಂಜನ್ ಚೌಧರಿ ಸಮಾರಂಭದ ಆಹ್ವಾನವನ್ನು ತಿರಸ್ಕರಿಸಿದ್ದಾರೆ.
eesanje/url_47_182_2.txt ADDED
@@ -0,0 +1,6 @@
 
 
 
 
 
 
 
1
+ ಅಯೋಧ್ಯೆ ನೆನಪು ಎಂದಿಗೂ ಮಾಸುವುದಿಲ್ಲ ; ಮೋದಿ
2
+ ನವದೆಹಲಿ, ಜ 23 (ಪಿಟಿಐ) ರಾಮ ಮಂದಿರದ ಪ್ರತಿಷ್ಠಾಪನೆಯ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ನಾವು ಕಂಡದ್ದು ಮುಂದಿನ ವರ್ಷಗಳಲ್ಲಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಹೇಳಿದ್ದಾರೆ. ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ ಮೋದಿ ಅವರು ಅಯೋಧ್ಯೆ ದೇವಸ್ಥಾನದಲ್ಲಿ ರಾಮ್ ಲಲ್ಲಾನ ಹೊಸ ವಿಗ್ರಹವನ್ನು ಪ್ರತಿಷ್ಠಾಪಿಸಿದ ಸಮಾರಂಭದ ವೀಡಿಯೊ ಮಾಂಟೇಜ್ ಅನ್ನು ಹಂಚಿಕೊಂಡಿದ್ದಾರೆ.
3
+ ನಾವು ನಿನ್ನೆ ಅಯೋಧ್ಯೆಯಲ್ಲಿ ನೋಡಿದ್ದು ಮುಂದಿನ ವರ್ಷಗಳಲ್ಲಿ ನಮ್ಮ ನೆನಪಿನಲ್ಲಿ ಉಳಿಯುತ್ತದೆ ಎಂದು ಮೋದಿ ತಮ್ಮ ಪೋಸ್ಟ್‍ನಲ್ಲಿ ವೀಡಿಯೊದೊಂದಿಗೆ ಹೇಳಿದ್ದಾರೆ. ಮುಂದಿನ 1,000 ವರ್ಷಗಳ ಬಲವಾದ, ಸಮರ್ಥ ಮತ್ತು ದೈವಿಕ ಭಾರತದ ಅಡಿಪಾಯವನ್ನು ನಿರ್ಮಿಸಲು ಭವ್ಯ ಮಂದಿರದ ನಿರ್ಮಾಣವನ್ನು ಮೀರಿ ಹೋಗಬೇಕೆಂದು ಮೋದಿ ಕರೆ ನೀಡಿದ್ದಾರೆ.
4
+ ತಾಯ್ನಾಡಿಗೆ ಹಿಂತಿರುಗಿದ ಮ್ಯಾನ್ಮಾರ್ ಸೈನಿಕರು
5
+ ದೇವಾಲಯದ ಉದ್ಘಾಟನೆಯು ಅಯೋಧ್ಯೆಯಲ್ಲಿ ವಿವಾದಿತ ಧಾರ್ಮಿಕ ಸ್ಥಳವನ್ನು ಮರುಪಡೆಯಲು ದಶಕಗಳ ಕಾಲ ನಡೆದ ಅಭಿಯಾನದ ಪರಾಕಾಷ್ಠೆಯನ್ನು ಗುರುತಿಸಿದೆ, ಇದು ಹೊಸ ಯುಗದ ಆಗಮನವಾಗಿದೆ ಎಂದು ಮೋದಿ ಹೇಳಿದರು.
6
+ ಲಕ್ಷಾಂತರ ಜನರು ತಮ್ಮ ಮನೆಗಳಲ್ಲಿ ಮತ್ತು ನೆರೆಹೊರೆಯ ದೇವಾಲಯಗಳಲ್ಲಿ ದೂರದರ್ಶನದಲ್ಲಿ ಪ್ರಾಣ್ ಪ್ರತಿಷ್ಠಾ (ಪ್ರತಿಷ್ಠಾಪನೆ) ಸಮಾರಂಭವನ್ನು ವೀಕ್ಷಿಸಿದ್ದರು.
eesanje/url_47_182_3.txt ADDED
@@ -0,0 +1,5 @@
 
 
 
 
 
 
1
+ ನೇತಾಜಿ ಜನ್ಮದಿನ : ಗೌರವ ನಮನ ಸಲ್ಲಿಸಿದ ಪ್ರಧಾನಿ ಮೋದಿ
2
+ ನವದೆಹಲಿ, ಜ. 23 (ಪಿಟಿಐ) ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಅವರಿಗೆ ಗೌರವ ಸಲ್ಲಿಸಿದ್ದಾರೆ ಮತ್ತು ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರ ಅಚಲವಾದ ಸಮರ್ಪಣೆಯು ಸೂರ್ತಿದಾಯಕವಾಗಿದೆ ಎಂದು ಹೇಳಿದ್ದಾರೆ.
3
+ ಆಜಾದ್ ಹಿಂದ್ ಫೌಜ್ ಸಂಸ್ಥಾಪಕರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸುವ ಪರಾಕ್ರಮ್ ದಿವಸ್ ದಿನದಂದು ಮೋದಿ ಜನರಿಗೆ ಶುಭಾಶಯ ಕೋರಿದ್ದಾರೆ. ಭಾರತದ ಜನತೆಗೆ ಪರಾಕ್ರಮ್ ದಿವಸ್‍ನ ಶುಭಾಶಯಗಳು. ಇಂದು ಬೋಸ್ ಜಯಂತಿಯಂದು ನಾವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜೀವನ ಮತ್ತು ಧೈರ್ಯವನ್ನು ಗೌರವಿಸುತ್ತೇವೆ ಎಂದು ಮೋದಿ ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.
4
+ ತಾಯ್ನಾಡಿಗೆ ಹಿಂತಿರುಗಿದ ಮ್ಯಾನ್ಮಾರ್ ಸೈನಿಕರು
5
+ ನಮ್ಮ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಅವರ ಅಚಲವಾದ ಸಮರ್ಪಣೆಯು ಸೂರ್ತಿ ನೀಡುತ್ತಿದೆ ಎಂದು ಪ್ರಧಾನಿ ಹೇಳಿದರು.
eesanje/url_47_182_4.txt ADDED
@@ -0,0 +1,5 @@
 
 
 
 
 
 
1
+ ಮೂರು ಮರಿಗಳಿಗೆ ಜನ್ಮ ನೀಡಿದ ನಮೀಬಿಯಾ ಚೀತಾ ಆಶಾ
2
+ ನವದೆಹಲಿ, ಜ.23 (ಪಿಟಿಐ) ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದ ಚೀತಾ ಮೂರು ಮರಿಗಳಿಗೆ ಜನ್ಮ ನೀಡಿದೆ. ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಎಕ್ಸ್‍ನಲ್ಲಿ ಈ ಸುದ್ದಿ ಹಂಚಿಕೊಂಡಿದ್ದಾರೆ, ಕುನೋನ ಹೊಸ ಮರಿಗಳು! ನಮೀಬಿಯಾ ಚೀತಾ ಆಶಾ ತನ್ನ ಮರಿಗಳಿಗೆ ಜನ್ಮ ನೀಡಿದ ಕೆಲವೇ ವಾರಗಳಲ್ಲಿ ನಮೀಬಿಯಾದ ಚೀತಾ ಜ್ವಾಲಾ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ಅವರು ಪೋಸ್ಟ್ ಮಾಡಿದ್ದಾರೆ.
3
+ ದೇಶಾದ್ಯಂತ ಎಲ್ಲಾ ವನ್ಯಜೀವಿ ಮುಂಚೂಣಿ ಯೋಧರು ಮತ್ತು ವನ್ಯಜೀವಿ ಪ್ರೇಮಿಗಳಿಗೆ ಅಭಿನಂದನೆಗಳು. ಭಾರತದ ವನ್ಯಜೀವಿಗಳು ಅಭಿವೃದ್ಧಿ ಹೊಂದಲಿ ಎಂದು ಅವರು ಆಶಿಸಿದ್ದಾರೆ. ಜನವರಿ 3 ರಂದು ಕುನೊ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ನಮೀಬಿಯಾದ ಚೀತಾ ಆಶಾ ಮೂರು ಮರಿಗಳಿಗೆ ಜನ್ಮ ನೀಡಿದೆ ಎಂದು ವರದಿ ಮಾಡಿದರು. ಇದಕ್ಕೂ ಮುನ್ನ ಕಳೆದ ಮಾರ್ಚ್‍ನಲ್ಲಿ ಸಿಯಾಯಾ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಅದರಲ್ಲಿ ಒಂದು ಮರಿ ಬದುಕುಳಿದಿತ್ತು.
4
+ ರಾಮಮಂದಿರ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಿದ ಬಿಹಾರ
5
+ ಜ್ವಾಲಾ, ಆಶಾ ಮತ್ತು ಸಿಯಾಯಾ ಚೀತಾಗಳು ನಮೀಬಿಯಾದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಾಜೆಕ್ಟ್ ಚೀತಾ ಅಡಿಯಲ್ಲಿ ಭಾರತಕ್ಕೆ ಸ್ಥಳಾಂತರಗೊಂಡಿವೆ, ಇದು ಸ್ವತಂತ್ರ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಏಕೈಕ ದೊಡ್ಡ ಮಾಂಸಾಹಾರಿ ಜಾತಿಗಳನ್ನು ಮರು-ಪರಿಚಯಿಸುವ ಗುರಿಯನ್ನು ಹೊಂದಿದೆ.
eesanje/url_47_182_5.txt ADDED
@@ -0,0 +1,6 @@
 
 
 
 
 
 
 
1
+ ಇಂದಿನಿಂದ ಭಕ್ತರಿಗೆ ರಾಮಲಲ್ಲಾನ ದರ್ಶನ ಭಾಗ್ಯ
2
+ ಅಯೋಧ್ಯೆ, ಜ. 23 (ಪಿಟಿಐ) ಹೊಸ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಯ ಒಂದು ದಿನದ ನಂತರ ಅಯೋಧ್ಯೆಯಲ್ಲಿ ರಾಮಮಂದಿರದ ಬಾಗಿಲು ಇಂದಿನಿಂದ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಿದೆ. ತಡರಾತ್ರಿ ದೇವಾಲಯದ ಸಂಕೀರ್ಣಕ್ಕೆ ಹೋಗುವ ರಾಮಪಥದ ಉದ್ದಕ್ಕೂ ಮುಖ್ಯ ಗೇಟ್‍ವೇ ಬಳಿ ಸ್ಥಳೀಯರು ಮತ್ತು ಇತರ ರಾಜ್ಯಗಳ ಪ್ರವಾಸಿಗರು ಹೆಚ್ಚಿನ ಸಂಖ್ಯೆಯ ಭಕ್ತರು ಆವರಣಕ್ಕೆ ಪ್ರವೇಶ ಕೋರಿ ಜಮಾಯಿಸಿದರು.
3
+ ವಿಧ್ಯುಕ್ತ ಗೇಟ್‍ವೇ ಬಳಿ ದೊಡ್ಡ ಜನಸಮೂಹವು ನಿರ್ಮಾಣಗೊಂಡಿದ್ದರಿಂದ ಪವಿತ್ರ ಸಮಾರಂಭಕ್ಕೆ ಅಲಂಕೃತಗೊಂಡಿದ್ದರಿಂದ ಇಂದಿನಿಂದ ದೇವಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುವುದು ಎಂದು ಪೊಲೀಸರು ಭಕ್ತರಿಗೆ ತಿಳಿಸಿದರು.
4
+ ರಾಮಮಂದಿರ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಿದ ಬಿಹಾರ
5
+ ಅಯೋಧ್ಯೆ ದೇವಸ್ಥಾನದಲ್ಲಿ ಹೊಸ ರಾಮಲಲ್ಲಾನ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು, ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಹೆಗ್ಗುರುತಾಗಿದೆ, ಅವರು ಬಲವಾದ, ಸಮರ್ಥ ಮತ್ತು ದೈವಿಕತೆಯ ಅಡಿಪಾಯವನ್ನು ನಿರ್ಮಿಸಲು ಭವ್ಯ ಮಂದಿರದ ನಿರ್ಮಾಣವನ್ನು ಮೀರಿ ಹೋಗಬೇಕೆಂದು ಸ್ಪಷ್ಟ ಕರೆ ನೀಡಿದ್ದಾರೆ.
6
+ ಹೀಗಾಗಿ ರಾಮ ಲಲ್ಲಾನ ದರ್ಶನಕ್ಕೆ ದೇಶ ವಿದೇಶಗಳಿಂದ ಸಹಸ್ರಾರು ಭಕ್ತರು ಅಯೋಧ್ಯೆಗೆ ದೌಡಾಯಿಸುತ್ತಿದ್ದಾರೆ. ಇಂದಿನಿಂದ ಸಾರ್ವಜನಿಕರು ರಾಮನ ದರ್ಶನ ಪಡೆಯುವ ಸೌಭಾಗ್ಯ ಪಡೆದಿದ್ದಾರೆ.
eesanje/url_47_182_6.txt ADDED
@@ -0,0 +1,6 @@
 
 
 
 
 
 
 
1
+ ಬಾಂಗ್ಲಾ ಗಡಿಯಲ್ಲಿ 3 ಕೋಟಿ ಮೌಲ್ಯದ ಚಿನ್ನ ವಶ, ಓರ್ವ ಬಂಧನ
2
+ ಬರಾಸತ್, ಜ 23 (ಪಿಟಿಐ) ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಭಾರತ-ಬಾಂಗ್ಲಾದೇಶ ಗಡಿಯಲ್ಲಿ 3.09 ಕೋಟಿ ರೂಪಾಯಿ ಮೌಲ್ಯದ ಚಿನ್ನದ ತುಂಡುಗಳು ಮತ್ತು ಇಟ್ಟಿಗೆಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.4.82 ಕೆಜಿ ತೂಕದ ಎರಡು ಚಿನ್ನದ ತುಂಡುಗಳು ಮತ್ತು 30 ಚಿನ್ನದ ಬಿಸ್ಕೆಟ್‍ಗಳನ್ನು ಬಿಎಸ್‍ಎಫ್ ಸಿಬ್ಬಂದಿ ಆಂಗ್ರೇಲ್ ಗಡಿ ಹೊರಠಾಣೆ ಪ್ರದೇಶದ ಹಲ್ದರ್‍ಪಾರಾದಿಂದ ವಶಪಡಿಸಿಕೊಂಡಿದ್ದಾರೆ ಎಂದು ಸೇನೆ ತಿಳಿಸಿದೆ.
3
+ ಎರಡು ದೇಶಗಳ ನಡುವಿನ ನೈಸರ್ಗಿಕ ಗಡಿಯಾಗಿರುವ ಇಚಮತಿ ನದಿಯಲ್ಲಿ ಬಾಂಗ್ಲಾದೇಶದ ಕಡೆಯಿಂದ ಭಾರತಕ್ಕೆ ದಾಟುತ್ತಿರುವ ಮೂವರು ವ್ಯಕ್ತಿಗಳನ್ನು ಕರ್ತವ್ಯದಲ್ಲಿದ್ದ ಸಿಬ್ಬಂದಿ ಗುರುತಿಸಿದ್ದಾರೆ. ಬಿಎಸ್‍ಎಫ್ ಸಿಬ್ಬಂದಿ ಬೆನ್ನಟ್ಟಿದ್ದರಿಂದ ಇಬ್ಬರು ಪರಾರಿಯಾಗಿದ್ದು, ಒಬ್ಬ ಸಿಕ್ಕಿಬಿದ್ದಿದ್ದಾನೆ.
4
+ ರಾಮಮಂದಿರ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಿದ ಬಿಹಾರ
5
+ ಆರೋಪಿಯನ್ನು ಪ್ರೊಸೆನ್‍ಜಿತ್ ಮಂಡಲ್ ಎಂದು ಗುರುತಿಸಲಾಗಿದ್ದು, ನದಿ ದಾಟಲು ಮತ್ತು ಚಿನ್ನವನ್ನು ಭಾರತಕ್ಕೆ ಪಡೆಯಲು ವ್ಯಕ್ತಿಯೊಬ್ಬರಿಂದ 500 ರೂ. ಪಡೆದುಕೊಂಡಿದ್ದರು ಎಂದು ತಿಳಿದುಬಂದಿದೆ.ಸ್ಥಳೀಯರಾದ ಮಂಡಲ್ ಅವರು ಬಾಂಗ್ಲಾದೇಶದ ಕಡೆಗೆ ಹೋದಾಗ, ಒಬ್ಬ ವ್ಯಕ್ತಿ ಚಿನ್ನದ ಬಿಸ್ಕತ್ತು ಮತ್ತು ಬಾರ್‍ಗಳೊಂದಿಗೆ ಅವನಿಗಾಗಿ ಕಾಯುತ್ತಿದ್ದನು. ಅವರು ಅವರನ್ನು ಕರೆದೊಯ್ದು ಭಾರತಕ್ಕೆ ಹಿಂತಿರುಗುತ್ತಿದ್ದಾಗ ಬಿಎಸ್‍ಎಫ್ ಅವರನ್ನು ಹಿಡಿದಿತ್ತು.
6
+ ಮುಂದಿನ ಕಾನೂನು ಪ್ರಕ್ರಿಯೆಗಾಗಿ ಬಿಎಸ್‍ಎಫ್ ಅವರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ (ಡಿಆರ್‍ಐ) ಹಸ್ತಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
eesanje/url_47_182_7.txt ADDED
@@ -0,0 +1,6 @@
 
 
 
 
 
 
 
1
+ ವಿದ್ಯಾರ್ಥಿಗಳು, ನಾಗರೀಕರೊಂದಿಗೆ ಸಂವಾದ ನಡೆಸಿದ ರಾಹುಲ್‍ಗಾಂಧಿ
2
+ ಗುವಾಹಟಿ, ಜ.23 (ಪಿಟಿಐ) ಭಾರತ್ ಜೋಡೋ ನ್ಯಾಯ್ ಯಾತ್ರೆಯ ಭಾಗವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರು ಸೇರಿದಂತೆ ವಿವಿಧ ಗುಂಪುಗಳೊಂದಿಗೆ ಇಂದು ಸಂವಾದ ನಡೆಸಿದರು.
3
+ ಮೇಘಾಲಯವನ್ನು ಪ್ರವೇಶಿಸಿದ ಯಾತ್ರೆಯು ತನ್ನ ಕೊನೆಯ ಹಂತಕ್ಕೆ ಅಸ್ಸಾಂಗೆ ಹಿಂದಿರುಗಿ ರಾಜ್ಯದ ಅತಿದೊಡ್ಡ ನಗರವಾದ ಗುವಾಹಟಿಯ ಹೊರವಲಯದಲ್ಲಿ ಇಂದು ಸಂಚರಿಸಿತು. ನಂತರ ಅವರು ಮೇಘಾಲಯದ ರಿ ಭೋಯ್ ಜಿಲ್ಲೆಯ ಜೋರಾಬತ್‍ನಲ್ಲಿರುವ ಹೋಟೆಲ್‍ನಲ್ಲಿ ಗಾಂಧಿ ಅವರು ಈಶಾನ್ಯ ಕಾಂಗ್ರೆಸ್ ಸಮಿತಿಯೊಂದಿಗೆ ಸಭೆ ನಡೆಸಿದರು. ಇದರ ನಂತರ ಗುವಾಹಟಿಯಲ್ಲಿ ವಿದ್ಯಾರ್ಥಿಗಳು ಮತ್ತು ನಾಗರಿಕ ಸಮಾಜದ ಸದಸ್ಯರೊಂದಿಗೆ ಪ್ರತ್ಯೇಕ ಸಂವಾದ ನಡೆಸಿದರು.
4
+ ಮುಖ್ಯ ನಗರವನ್ನು ಬೈಪಾಸ್ ಮಾಡುವ ರಾಷ್ಟ್ರೀಯ ಹೆದ್ದಾರಿಯ ಮೂಲಕ ಮುತ್ತಣದವರಿಗೂ ಗಾಂಧಿಯವರು ಸಾರ್ವಜನಿಕ ಭಾಷಣ ಮಾಡಲಿದ್ದಾರೆ. ಪ್ರಮುಖ ನಗರದಲ್ಲಿ ರೋಡ್‍ಶೋ ಅಥವಾ ಪಾದಯಾತ್ರೆ ನಡೆಸಲು ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎಂದು ಪಕ್ಷ ಹೇಳಿಕೊಂಡಿದೆ.
5
+ ಶ್ರೀರಾಮ ಪಾದ ಸ್ಥಾಪಿಸಿದ ಸ್ಥಳದ ಅಭಿವೃದ್ಧಿ : ಮೋಹನ್ ಯಾದವ್
6
+ ಗುವಾಹಟಿಯಿಂದ ಸುಮಾರು 75 ಕಿ.ಮೀ ದೂರದಲ್ಲಿರುವ ಕಮ್ರೂಪ್ ಜಿಲ್ಲೆಯ ದಮ್ದಾಮಾದಲ್ಲಿ ಗಾಂಧಿಯವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬಾರ್ಪೇಟಾ ಜಿಲ್ಲೆಯ ಗೊರೆಮರಿ ಪೆಟ್ರೋಲ್ ಪಂಪ್‍ನಿಂದ ಕುಕರ್‍ಪರ್‍ಗೆ ಪಾದಯಾತ್ರೆಯನ್ನು ನಿಗದಿಪಡಿಸಲಾಗಿದೆ, ನಂತರ ಸಾರ್ವಜನಿಕರನ್ನು ಉದ್ದೇಶಿಸಿ. ರಾತ್ರಿ ವಿರಾಮವನ್ನು ಬಿಷ್ಣುಪುರದಲ್ಲಿ ನಿಗದಿಪಡಿಸಲಾಗಿದೆ. ಜನವರಿ 14 ರಂದು ಮಣಿಪುರದಿಂದ ಆರಂಭವಾದ ಯಾತ್ರೆ ಮಾರ್ಚ್ 20 ಅಥವಾ 21 ರಂದು ಮುಂಬೈನಲ್ಲಿ ಮುಕ್ತಾಯಗೊಳ್ಳಲಿದೆ
eesanje/url_47_182_8.txt ADDED
@@ -0,0 +1,7 @@
 
 
 
 
 
 
 
 
1
+ ತಾಯ್ನಾಡಿಗೆ ಹಿಂತಿರುಗಿದ ಮ್ಯಾನ್ಮಾರ್ ಸೈನಿಕರು
2
+ ಐಜ್ವಾಲï, ಜ 23 (ಪಿಟಿಐ) ಜನಾಂಗೀಯ ಬಂಡುಕೋರರ ಗುಂಪಿನೊಂದಿಗೆ ನಡೆದ ಗುಂಡಿನ ಚಕಮಕಿಯ ನಂತರ ಕಳೆದ ವಾರ ಮಿಜೋರಾಂಗೆ ಪಲಾಯನ ಮಾಡಿದ 184 ಮ್ಯಾನ್ಮಾರ್ ಸೈನಿಕರು ಅವರ ದೇಶಕ್ಕೆ ವಾಪಸ್ ಕಳುಹಿಸಲಾಗಿದೆ. ಕಳೆದ ವಾರ ಒಟ್ಟು 276 ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಪ್ರವೇಶಿಸಿದ್ದು, ಅವರಲ್ಲಿ 184 ಮಂದಿಯನ್ನು ಸೋಮವಾರ ವಾಪಸ್ ಕಳುಹಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ಧಿಅಧಿಕಾರಿ ತಿಳಿಸಿದ್ದಾರೆ.
3
+ ಅವರನ್ನು ಮ್ಯಾನ್ಮಾರ್ ವಾಯುಪಡೆಯ ವಿಮಾನಗಳಲ್ಲಿ ಐಜ್ವಾಲ್ ಬಳಿಯ ಲೆಂಗ್‍ಪುಯಿ ವಿಮಾನ ನಿಲ್ದಾಣದಿಂದ ನೆರೆಯ ದೇಶದ ರಾಖೈನ್ ರಾಜ್ಯದ ಸಿಟ್ವೆಗೆ ಕಳುಹಿಸಲಾಯಿತು ಎಂದು ಅವರು ಹೇಳಿದರು. ಉಳಿದ 92 ಸೈನಿಕರನ್ನು ಇಂದು ಸ್ವದೇಶಕ್ಕೆ ಕಳುಹಿಸಲಾಗುತ್ತಿದೆ.
4
+ ಮ್ಯಾನ್ಮಾರ್ ಸೈನಿಕರು ಜನವರಿ 17 ರಂದು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳೊಂದಿಗೆ ದಕ್ಷಿಣದ ಮಿಜೋರಾಂನ ಭಾರತ-ಮ್ಯಾನ್ಮಾರ್-ಬಾಂಗ್ಲಾದೇಶ ಟ್ರೈಜಂಕ್ಷನ್‍ನಲ್ಲಿರುವ ಬಂಡುಕ್ಬಂಗಾ ಗ್ರಾಮದ ಮೂಲಕ ಭಾರತಕ್ಕೆ ಬಂದಿದ್ದರು. ಅವರ ಶಿಬಿರವನ್ನು ಅರಕನ್ ಆರ್ಮಿ ಯೋಧರು ವಶಪಡಿಸಿಕೊಂಡ ನಂತರ ಮ್ಯಾನ್ಮಾರ್ ಸೈನಿಕರು ಮಿಜೋರಾಂಗೆ ಓಡಿಬಂದಿದ್ದರು.
5
+ ಶ್ರೀರಾಮ ಪಾದ ಸ್ಥಾಪಿಸಿದ ಸ್ಥಳದ ಅಭಿವೃದ್ಧಿ : ಮೋಹನ್ ಯಾದವ್
6
+ ಮ್ಯಾನ್ಮಾರ್ ಸೈನಿಕರನ್ನು ಹತ್ತಿರದ ಪರ್ವಾದಲ್ಲಿರುವ ಅಸ್ಸಾಂ ರೈಫಲ್ಸ್ ಶಿಬಿರಕ್ಕೆ ಕರೆದೊಯ್ಯಲಾಯಿತು ಮತ್ತು ನಂತರ ಅವರಲ್ಲಿ ಹೆಚ್ಚಿನವರನ್ನು ಲುಂಗ್ಲೈಗೆ ಸ್ಥಳಾಂತರಿಸಲಾಗಿತ್ತು.ಅಂದಿನಿಂದ ಅವರು ಅಸ್ಸಾಂ ರೈಫಲ್ಸ್‍ನ ಮೇಲ್ವಿಚಾರಣೆಯಲ್ಲಿದ್ದಾರೆ.
7
+ ಈ 276 ಸೈನಿಕರನ್ನು ಲೆಂಗ್‍ಪುಯಿ ವಿಮಾನ ನಿಲ್ದಾಣದಿಂದ ಮ್ಯಾನ್ಮಾರ್‍ಗೆ ಸಾಗಿಸಲು ಶನಿವಾರ ಮತ್ತು ಭಾನುವಾರದಂದು ಐಜ್ವಾಲ್‍ಗೆ ಕರೆತರಲಾಯಿತು. ಗುಂಪು ಕರ್ನಲ್ ನೇತೃತ್ವದಲ್ಲಿದೆ ಮತ್ತು 36 ಅಧಿಕಾರಿಗಳು ಮತ್ತು 240 ಕೆಳ ಶ್ರೇಣಿಯ ಸಿಬ್ಬಂದಿಯನ್ನು ಹೊಂದಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.
eesanje/url_47_182_9.txt ADDED
@@ -0,0 +1,6 @@
 
 
 
 
 
 
 
1
+ ರಾಮಮಂದಿರ ಕುರಿತ ಅಂಚೆ ಚೀಟಿ ಬಿಡುಗಡೆ ಮಾಡಿದ ಬಿಹಾರ
2
+ ಪಾಟ್ನಾ, ಜ 23 (ಪಿಟಿಐ) ಅಯೋಧ್ಯೆಯಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಮಾರಂಭದ ನಂತರ ಬಿಹಾರದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರು ಶ್ರೀ ರಾಮ ಜನ್ಮಭೂಮಿ ದೇವಾಲಯ ಕುರಿತು ಅಂಚೆ ಇಲಾಖೆಯ ವಿಶೇಷ ಅಂಚೆ ಟಿಕೆಟ್ ಬಿಡುಗಡೆ ಮಾಡಿದರು.
3
+ ಅಂಚೆ ಇಲಾಖೆಯು 150 ವರ್ಷಗಳಿಂದ ಜನಸೇವೆ ಮಾಡುತ್ತಾ ಬಂದಿದ್ದು, ಅಂಚೆಚೀಟಿಗಳು, ವಿಶೇಷ ಕವರ್‍ಗಳಂತಹ ಸ್ಮರಣಿಕೆಗಳ ಮೂಲಕ ಪರಂಪರೆಯನ್ನು ಜೀವಂತವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
4
+ ಶ್ರೀರಾಮ ಪಾದ ಸ್ಥಾಪಿಸಿದ ಸ್ಥಳದ ಅಭಿವೃದ್ಧಿ : ಮೋಹನ್ ಯಾದವ್
5
+ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ವಿಶೇಷ ಅಂಚೆ ಚೀಟಿ ಬಿಡುಗಡೆ ಮಾಡಿದ ಅರ್ಲೇಕರ್ ಅವರು, ದೇಶವು ಇಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ, ಅಯೋಧ್ಯೆಯ ರಾಮಮಂದಿರದ ಪ್ರಾಣ ಪ್ರತಿಷ್ಠಾ ಸಮಾರಂಭ, ಪ್ರಭು ಅವರ ವಿಶೇಷ ಹೊದಿಕೆಯನ್ನು ಬಿಡುಗಡೆ ಮಾಡಿರುವುದು ನನ್ನ ಸೌಭಾಗ್ಯ ಎಂದರು.
6
+ ಸಮಾರಂಭದಲ್ಲಿ ಮಾತನಾಡಿದ ಬಿಹಾರ ವೃತ್ತದ ಮುಖ್ಯ ಪೋಸ್ಟ್‍ಮಾಸ್ಟರ್ ಜನರಲ್ ಅನಿಲ್ ಕುಮಾರ್, ಈ ವಿಶೇಷ ಕವರ್ ಅನ್ನು ಶ್ರೀರಾಮನ ಬಿಹಾರ ಭೇಟಿಗೆ ಸಮರ್ಪಿಸಲಾಗಿದೆ ಎಂದು ಹೇಳಿದರು. ಭಗವಾನ್ ರಾಮನ ಮೇಲೆ ಈಗಾಗಲೇ ಅನೇಕ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಅವರು ಹೇಳಿದರು.
eesanje/url_47_183_1.txt ADDED
@@ -0,0 +1,14 @@
 
 
 
 
 
 
 
 
 
 
 
 
 
 
 
1
+ ನನಸಾಯ್ತು ಶತಕೋಟಿ ಭಾರತೀಯರ 500 ವರ್ಷಗಳ ಕನಸು
2
+ ಅಯೋಧ್ಯೆ(ಉ.ಪ್ರ)- ಅದೊಂದೇ ಒಂದು ಐತಿಹಾಸಿಕ ಕ್ಷಣಕ್ಕೆ ಸುಮಾರು 500 ವರ್ಷಗಳ ಕಾಲ ಚಾತಕ ಪಕ್ಷಿಯಂತೆ ಕಾಯುತ್ತಿದ್ದ ಶತಕೋಟಿ ಭಾರತೀಯರ ಕನಸು ಸರಿಯಾಗಿ ಮಧ್ಯಾಹ್ನ 12.29ರಿಂದ 12.30ಕ್ಕೆ ಶುಭ ಮುಹೂರ್ತದಲ್ಲಿ ಅಯೋಧ್ಯೆಯ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯೊಂದಿಗೆ ಕೊನೆಗೂ ನನಸಾಯಿತು. ಇದರೊಂದಿಗೆ ಸುಮಾರು 70 ವರ್ಷಗಳ ಟೆಂಟ್‍ವಾಸದಿಂದ ಭವ್ಯ ಮಂದಿರಕ್ಕೆ ರಾಮನ ಪುನರಾಗಮನವಾಗುತ್ತಿದ್ದಂತೆ ಇಡೀ ಭಾರತೀಯರ ಸಂತಸಕ್ಕೆ ಪಾರವೇ ಇರಲಿಲ್ಲ.
3
+ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೂ ಧರ್ಮದ ಧಾರ್ಮಿಕ ವಿವಿಧಾನಗಳನ್ನು ನೇರವೇರಿಸಿದರೆ, ಕಾಶಿಯ ಹೆಸರಾಂತ ವೈದಿಕ ಆಚಾರ್ಯ ಗಣೇಶ್ವರ್ ದ್ರಾವಿಡ್ ಹಾಗೂ ಆಚಾರ್ಯ ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ಸುಮಾರು 121 ವೈದಿಕ ಆಚಾರ್ಯರಿಂದ ಧಾರ್ಮಿಕ ಕ್ರಿಯೆ ನೆರವೇರಿದರೆ, 150ಕ್ಕೂ ಹೆಚ್ಚು ಸಂಪ್ರದಾಯಗಳು, 50ಕ್ಕೂ ಹೆಚ್ಚು ಬುಡಕಟ್ಟು, ಕರಾವಳಿ, ದ್ವೀಪ, ಬುಡಕಟ್ಟು ಸಂಪ್ರದಾಯಗಳ ಸಂತರು ಮತ್ತು ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು.
4
+ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಆರ್‍ಎಸ್‍ಎಸ್ ಸರಸಂಚಾಲಕ ಮೋಹನ್ ಭಾಗವತ್ ಹಾಗೂ ಸಂತರು, ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಪ್ರತಿಷ್ಠಾಪನಾ ಮಹೋತ್ಸವ ನಡೆಯಿತು.
5
+ ಹಿಂದೂಗಳ ಪಾಲಿನ ಮರ್ಯಾದಾ ಪುರುಷೋತ್ತಮನೆಂದು ಕೊಂಡಾಡಲ್ಪಡುವ, ನಾರಾಯಣನ ಅವತಾರಗಳಲ್ಲಿ ಒಂದಾಗಿರುವ ಶ್ರೀರಾಮಚಂದ್ರನ ಜನ್ಮಸ್ಥಾನವಾಗಿರುವ ಸರಯೂ ನದಿ ತೀರದ ಅಯೋಧ್ಯೆಯ ಭವ್ಯಮಂದಿರದಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.ಅದಕ್ಕೂ ಮೊದಲು ಒಂದು ಗಂಟೆ ಕಾಲ ಯೋಗ, ಹೋಮ, ಹವನ ನಡೆದವು. ಪೂಜಾ ವಿವಿಧಾನಗಳು ಮುಗಿಯುತ್ತಿದ್ದಂತೆ ಈ ವೇಳೆ ಭಾರತ ಮಾತ್ರವಲ್ಲದೆ, ವಿಶ್ವದೆಲ್ಲೆಡೆ ಜೈ ಶ್ರೀರಾಮ್ ಘೋಷಣೆಗಳು ಮಾಧರ್ Àನಿಸಿದವು. ಈ ಅಪರೂಪದ ಕ್ಷಣಕ್ಕೆ 60 ದೇಶಗಳಿಂದ 500ಕ್ಕೂ ಹೆಚ್ಚು ವಿದೇಶಿ ಅತಿಥಿಗಳು ಸೇರಿದಂತೆ 7,000 ಗಣ್ಯರು ಸಾಕ್ಷಿಯಾದರು.
6
+ ಕರ್ನಾಟಕದ ಮೈಸೂರಿನ ಅರುಣ್ ಯೋಗಿರಾಜ್ ಅವರು ತಯಾರಿಸಿದ 51 ಇಂಚಿನ ನೂತನ ರಾಮಲಲ್ಲಾ ದೇವಸ್ಥಾನದ ಗರ್ಭಗುಡಿಯಲ್ಲಿ ವಿರಾಜಮಾನನಾಗಿ ಎಲ್ಲರನ್ನೂ ಆಕರ್ಷಿಸುತ್ತಿದ್ದಾನೆ. ಅಯೋಧ್ಯೆಯ ಗರ್ಭಗುಡಿ ಪ್ರವೇಶಿಸಿರುವ ರಾಮಲಲ್ಲಾ ಮೂರ್ತಿಗೆ ಮೊದಲ ಬಾರಿಗೆ ಸುಮಾರು 114 ತೀರ್ಥಕ್ಷೇತ್ರಗಳಿಂದ ತಂದ ನೀರಿನಲ್ಲಿ ಮಹಾಮಜ್ಜನ ಮಾಡಿಸಲಾಯಿತು. ಪ್ರಾಣ ಪ್ರತಿಷ್ಠಾಪನೆಗೂ ಮುನ್ನ ಎರಡು ಗಂಟೆಗಳ ಕಾಲ ದೇಶದ ವಿವಿಧ ರಾಜ್ಯಗಳನ್ನು ಪ್ರತಿನಿಧಿಸುವ 50 ಸಂಗೀತ ವಾದ್ಯಗಳಿಂದ ಮಂಗಳ ವಾದ್ಯ ಮೊಳಗಿದವು.
7
+ ಕರ್ನಾಟಕ ಶಾಸ್ತ್ರೀಯ ಸಂಗೀತದ ಪ್ರತಿನಿಯಾಗಿ ವೀಣೆ, ಉತ್ತರ ಪ್ರದೇಶದ ಪಖ್ವಾಜ್, ಕೊಳಲು, ಧೋಲಕ್, ಆಂಧ್ರ ಪ್ರದೇಶದ ಘಟಂ, ಮಹ��ರಾಷ್ಟ್ರದ ಸುಂದರಿ, ಪಂಜಾಬ್‍ನ ಅಲ್ಗೋಜಾ, ಒಡಿಶಾದ ಮರ್ದಲ್, ಮಧ್ಯಪ್ರದೇಶದ ಸಂತೂರ್, ಗುಜರಾತ್ ಸಂತರ್, ಬಿಹಾರದ ಪಖವಾಜ್, ಮಣಿಪುರದ ಪುಂಗ್, ಅಸ್ಸಾಂನ ನಾಗಡಾ ಮತ್ತು ಕಾಳಿ, ಛತ್ತೀಸ್‍ಗಢದ ತುಂಬೂರಾ, ದೆಹಲಿಯ ಶೆಹನಾಯಿ, ರಾಜಸ್ಥಾನದ ರಾವಣಹತ, ಪಶ್ಚಿಮ ಬಂಗಾಳದ ಶ್ರೀಖೋಲ್ ಮತ್ತು ಸರೋದ್, ಜಾರ್ಖಂಡ್‍ನ ಸಿತಾರ್, ಉತ್ತರಾಖಂಡದ ಹುಡ್ಕಾ, ತಮಿಳುನಾಡಿನ ನಾಗಸ್ವರಂ, ತವಿಲ್, ಮೃದಂಗ ಸೇರಿ ಭಾರತೀಯ ಸಂಗೀತ ಸಂಪ್ರದಾಯದಲ್ಲಿ ಬಳಸುವ ಎಲ್ಲಾ ವಾದ್ಯಗಳನ್ನು ಶ್ರೀ ರಾಮ ಮಂದಿರದ ಪ್ರಾಂಗಣದಲ್ಲಿ ನುಡಿಸಲಾಯಿತು.
8
+ ನವದೆಹಲಿಯ ಸಂಗೀತ ನಾಟಕ ಅಕಾಡೆಮಿ ಸಹಯೋಗದಲ್ಲಿ ಅಯೋಧ್ಯೆಯ ಖ್ಯಾತ ಕವಿ ಯತೀಂದ್ರ ಮಿಶ್ರಾ ಅವರಿಂದ ಈ ಭವ್ಯ ಸಂಗೀತ ಮೇಳವನ್ನು ಆಯೋಜಿಸಲಾಗಿತ್ತು. ನಾಗರ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣವಾಗಿರುವ ರಾಮಮಂದಿರವು, 360 ಅಡಿ ಉದ್ದ, 235 ಅಡಿ ಅಗಲವಿದ್ದು, ದೇವಸ್ಥಾನ ಪೂರ್ಣಗೊಂಡ ನಂತರ, ದೇವಸ್ಥಾನದ ತಳದಿಂದ ಅದರ ಗರ್ಭಗುಡಿಯಲ್ಲಿನ ಗೋಪುರದ ತುದಿಯವರೆಗೆ 161 ಅಡಿ ಎತ್ತರವಿರಲಿದೆ. ಇದು ಮೂರು ಅಂತಸ್ತಿನ ಕಟ್ಟಡವಾಗಿದ್ದು, ಪ್ರತಿ ಅಂತಸ್ತು 20 ಅಡಿ ಎತ್ತರವಿರಲಿದೆ.
9
+ ಈಗ ಪ್ರತಿಷ್ಠಾಪನೆ ಅಂಗವಾಗಿ ಮೊದಲ ಅಂತಸ್ತು (ನೆಲ ಅಂತಸ್ತು) ಪೂರ್ಣವಾಗಿದೆ. ನೆಲ ಅಂತಸ್ತಿನಲ್ಲಿ 160 ಕಂಬಗಳಿದ್ದು (ಪಿಲ್ಲರ್ ಗಳು), ಮೊದಲ ಅಂತಸ್ತಿನಲ್ಲಿ 132 ಕಂಬಗಳು, ಮೂರನೇ ಅಂತಸ್ತಿನಲ್ಲಿ 74 ಕಂಬಗಳು ಇರಲಿವೆ. ದೇವಾಲಯದ ಪ್ರವೇಶವು ಪೂರ್ವ ದಿಕ್ಕಿನಿಂದ ಮತ್ತು ನಿರ್ಗಮನವು ದಕ್ಷಿಣ ದಿಕ್ಕಿನಿಂದ ಇರುತ್ತದೆ. ದೇವಾಲಯವು ಮೂರು ಅಂತಸ್ತಿನದ್ದಾಗಲಿದೆ. ಮುಖ್ಯ ದೇವಾಲಯವನ್ನು ತಲುಪಲು, ಭಕ್ತರು ಪೂರ್ವ ಭಾಗದಿಂದ 32 ಮೆಟ್ಟಿಲುಗಳನ್ನು ಏರುತ್ತಾರೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾದ ದೇವಾಲಯ ಸಂಕೀರ್ಣವು 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರವಿದೆ. ದೇವಾಲಯದ ಪ್ರತಿಯೊಂದು ಮಹಡಿಯು 20 ಅಡಿ ಎತ್ತರವಿದ್ದು, 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿದೆ.
10
+ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ-ಪ್ರತಿಷ್ಠಾಪನಾ ಸಮಾರಂಭದ ವೈದಿಕ ಆಚರಣೆಗಳು ಜನವರಿ 16ರಂದು ಮುಖ್ಯ ಸಮಾರಂಭದ ಒಂದು ವಾರದ ಮೊದಲು ಪ್ರಾರಂಭವಾಗಿತ್ತು. ರಾಮ ಜನ್ಮಭೂಮಿ-ಬಾಬರಿ ಮಸೀದಿ ಶೀರ್ಷಿಕೆ ಮೊಕದ್ದಮೆಯಲ್ಲಿ 2019ರಲ್ಲಿ ಐತಿಹಾಸಿಕ ಸುಪ್ರೀಂಕೋರ್ಟ್ ತೀರ್ಪಿನಿಂದ ಸಾಧ್ಯವಾದ ದೇವಾಲಯದ ನಿರ್ಮಾಣದ ಮೊದಲ ಹಂತದ ನಂತರ ಶಂಕುಸ್ಥಾಪನೆ ಸಮಾರಂಭ ನಡೆಸಲಾಗಿತ್ತು.
11
+ ಕೇಸರಿ ಬಣ್ಣದೊಂದಿಗೆ ಝಗಮಗಿಸುತ್ತಿದೆ ಆಯೋಧ್ಯೆ
12
+ ರಾಮನ ಜನ್ಮಸ್ಥಳವನ್ನು ಗುರುತಿಸುವ ದೇವಾಲಯದ ಸ್ಥಳದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ದಾವೆದಾರರು ವಾದಿಸಿದ್ದರು. 1992ರಲ್ಲಿ, 16ನೇ ಶತಮಾನದ ಮಸೀದಿಯನ್ನು ಕರ ಸೇವಕರು ಕೆಡವಿ ಹಾಕಿದ್ದರು. ಇದೀಗ ಸುಪ್ರೀಂ ಕೋರ್ಟ್ ನ ತೀರ್ಪಿನ ಬಳಿಕ ಅಯೋಧ್ಯೆಯಲ್ಲಿ ಕೊನೆಗೂ ರಾಮಮಂದಿರ ತಲೆ ಎತ್ತಿ ನಿಂತಿದೆ.
13
+ ಅಯೋಧ್ಯೆ-ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ನಡೆಯುತ್ತಿರುವ ಈ ಭವ್ಯ ಸಮಾರಂಭಕ್ಕೆ 7,000 ಕ್ಕೂ ಹೆಚ್ಚು ಗಣ್ಯರು ಸಾಕ್ಷೀಯಾದರು. ಈ ಆಯ್ದ ಪಟ್ಟಿಯಲ್ಲಿ 506 ಎ-ಲಿಸ್ಟರ್ ಗಣ್ಯರೂ ಕೂಡ ಇದ್ದು, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್, ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಮತ್ತು ಕ್ರೀಡಾ ಐಕಾನ್ ಸಚಿನ್ ತೆಂಡೂಲ್ಕರ್ ಕಾರ್ಯಕ್ರಮಕ್ಕೆ ಆಹ್ವಾನಿಸಲಾದ ಪ್ರಮುಖ ವ್ಯಕ್ತಿಗಳಲ್ಲಿ ಸೇರಿದ್ದರು. ಹೀಗಾಗಿ ಇಡೀ ಕಾರ್ಯಕ್ರಮಕ್ಕೆ ಅಭೂತಪೂರ್ವ ಭದ್ರತೆ ಒದಗಿಸಲಾಗಿತ್ತು.ಕ್ರಿಕೆಟ್ ಜಗತ್ತು, ಚಲನಚಿತ್ರ ಜಗತ್ತು, ಸಂತ ಸಮಾಜ, ರಾಜಕೀಯ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ ಮತ್ತು ಇತರ ಕ್ಷೇತ್ರಗಳ ವಿಶೇಷ ಅತಿಥಿಗಳನ್ನು ಈ ಭವ್ಯ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು.
14
+ ಸಮಾಜದ ಉನ್ನತ ವ್ಯಕ್ತಿಗಳಾದ ನ್ಯಾಯಮೂರ್ತಿಗಳು, ವಿಜ್ಞಾನಿಗಳು, ದೈತ್ಯ ಉದ್ಯಮಿಗಳು, ಸಿನಿಮಾ ತಾರೆಯರು, ಕ್ರೀಡಾ ತಾರೆಯರು ಸೇರಿದಂತೆ ಸುಮಾರು 8000 ಗಣ್ಯರನ್ನು ಆಹ್ವಾನಿಸಲಾಗಿತ್ತು. ಇವರಲ್ಲಿ, ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ಮುಕೇಶ್ ಅಂಬಾನಿ, ಇನೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ – ಸುಧಾಮೂರ್ತಿ ದಂಪತಿ, ನಂದನ್ ನಿಲೇಕಣಿ, ಟಿ.ವಿ. ಮೋಹನ ದಾಸ್ ಪೈ, ರತನ್ ಟಾಟಾ, ಸಿನಿಮಾ ಸೂಪರ್ ಸ್ಟಾರ್ ಗಳಾದ ಅಮಿತಾಭ್ ಬಚ್ಚನ್ ದಂಪತಿ, ರಜನೀಕಾಂತ್, ಮೋಹನ್ ಲಾಲ್, ಕನ್ನಡದ ಯಶ್, ತೆಲುಗಿನ ಪ್ರಭಾಸ್; ಕ್ರೀಡಾತಾರೆಗಳಾದ ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ, ಚೆಸ್ ತಾರೆಯಾದ ವಿಶ್ವನಾಥನ್ ಆನಂದ್, ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಂಡಿದ್ದರು.
eesanje/url_47_183_10.txt ADDED
@@ -0,0 +1,12 @@
 
 
 
 
 
 
 
 
 
 
 
 
 
1
+ ಕೇಸರಿ ಬಣ್ಣದೊಂದಿಗೆ ಝಗಮಗಿಸುತ್ತಿದೆ ಆಯೋಧ್ಯೆ
2
+ ಅಯೋಧ್ಯೆ, ಜ 22 (ಪಿಟಿಐ) ಕೇಸರಿ ಧ್ವಜಗಳೊಂದಿಗೆ ರಾರಾಜಿಸುತ್ತಿರುವ ರಾಮನಗರಿ ಆಯೋಧ್ಯೆ ಇಂದು ಇಡಿ ವಿಶ್ವದ ಗಮನ ಸೆಳೆಇದೆ. ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಭದ್ರತಾ ಬ್ಯಾರಿಕೇಡ್‍ಗಳು, ಮುಳ್ಳುತಂತಿಗಳು ಮತ್ತುಪೊಲೀಸ್ ಸಿಬ್ಬಂದಿ ಆಗಾಗ್ಗೆ ತಪಾಸಣೆ ನಡೆಸುವುದು ಸಾಮಾನ್ಯ ದೃಶ್ಯವಾಗಿದೆ.
3
+ ಆದರೆ ಪವಿತ್ರ ನಗರವು ಈಗ ಅದರ ಹೃದಯಭಾಗದಲ್ಲಿರುವ ಭವ್ಯವಾದ ರಾಮಮಂದಿರದೊಂದಿಗೆ ಬೃಹತ್ ಮೂಲಸೌಕರ್ಯ ಬೆಳವಣಿಗೆಯಿಂದ ಉತ್ತೇಜಿತವಾಗಿರುವ ಮಾದರಿ ಬದಲಾವಣೆಗೆ ಒಳಗಾರುವುದರಿಂದ ಇದುವರೆಗೂ ನಿದ್ದೆಯ ಪಟ್ಟಣ್ಣದಂತಿದ್ದ ಆಯೋಧ್ಯೆ ಇದೀಗ ರಾಮನಾಮ ಜಪದಿಂದಾಗಿ ಇಡೀ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
4
+ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ಕುರಿತು 2019 ರ ಸುಪ್ರೀಂ ಕೋರ್ಟ್ ತೀರ್ಪು ಈ ಯಾತ್ರಾ ನಗರದ ಪ್ರಗತಿಗೆ ದಾರಿ ಮಾಡಿಕೊಟ್ಟಿತು, ಕೆಲವು ವರ್ಷಗಳ ಹಿಂದೆ ಉತ್ತರ ಪ್ರದೇಶದ ನಿದ್ದೆಯ ಪಟ್ಟಣವಾಗಿತ್ತು. ಹೊಸದಾಗಿ ನಿರ್ಮಿಸಲಾದ ರಾಮಮಂದಿರದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು 7,000 ಕ್ಕೂ ಹೆಚ್ಚು ಅತಿಥಿಗಳು ಪಾಲ್ಗೊಳ್ಳುವ ಸಮಾರಂಭದಲ್ಲಿ ಅಯೋಧ್ಯೆ ಮತ್ತು ದೇಶದ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದಿದೆ.
5
+ ಈ ಪ್ರಾಣ ಪ್ರತಿಷ್ಠಾ ದ ಅಂಗವಾಗಿ ಸರ್ಕಾರವು ಭವ್ಯ, ದಿವ್ಯ ಮತ್ತು ನವ್ಯ ಅಯೋಧ್ಯೆ ಎಂದು ಕರೆಯುವ ದೇವಾಲಯದ ಪಟ್ಟಣವನ್ನು ಪರಿವರ್ತಿಸಲು ಮೂಲಸೌಕರ್ಯ ಯೋಜನೆಗಳ ಸರಣಿಯನ್ನು ಪ್ರಾರಂಭಿಸಲಾಗಿದೆ. ಭವ್ಯವಾದ ಹೊಸ ವಿಮಾನ ನಿಲ್ದಾಣ, ಪುನರಾಭಿವೃದ್ಧಿ ರೈಲ್ವೆ ನಿಲ್ದಾಣ, ಎರಡು ಅಗಲವಾದ ರಸ್ತೆಗಳು — ರಾಮ್ ಪಥ್ ಮತ್ತು ಧರ್ಮ್ ಪಥ್ ರಸ್ತೆಗಳು, ಬಹು-ಹಂತದ ಕಾರ್ ಪಾರ್ಕಿಂಗ್ ಸೌಲಭ್ಯಗಳು, ಇ-ಬಸ್‍ಗಳು, ಮೀಸಲಾದ ಬಹುಭಾಷಾ ಪ್ರವಾಸಿ ಅಪ್ಲಿಕೇಶನ್ ಮತ್ತು ಹೊಸ ಐಷಾರಾಮಿ ಹೋಟೆಲ್‍ಗಳೊಂದಿಗೆ ಇಡಿ ಅಯೋಧ್ಯೆ ಬದಲಾಗಿದೆ ಮತ್ತು ಅದರ ಚಿತ್ರಣವೂ ಬದಲಾಗಿದೆ.
6
+ ಪ್ರಧಾನಿ ನರೇಂದ್ರ ಮೋದಿಯವರ ವಿಕಾಸ್ ಭಿ, ವಿರಾಸತ್ ಭಿ ಯ ದೃಷ್ಟಿಗೆ ಅನುಗುಣವಾಗಿ, ಈ ಮೂಲಸೌಕರ್ಯ ಪುಶ್ ಪ್ರಾಚೀನ ನಗರದ ಪರಂಪರೆಯನ್ನು ಸಹ ಅಳವಡಿಸಿಕೊಂಡಿದೆ, ಅಲ್ಲಿ ಹಿಂದೂಗಳು ಭಗವಾನ್ ರಾಮನು ಜನಿಸಿದನೆಂದು ನಂಬುತ್ತಾರೆ. ವಿಮಾನ ನಿಲ್ದಾಣ ಮತ್ತು ರೈಲ್ವೇ ನಿಲ್ದಾಣವು ಆಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಹೊಸದಾಗಿ ನಿರ್ಮಿಸಲಾದ ರಾಮ ಮಂದಿರದ ವಾಸ್ತುಶಿಲ್ಪದ ಅಂಶಗಳಿಂದ ವಿನ್ಯಾಸವನ್ನು ಹೊಂದಿರುವ ಮರಳುಗಲ್ಲಿನ ಹೊದಿಕೆಯನ್ನು ಹೊಂದಿದೆ, ಇದು ರಾಜಸ್ಥಾನದಿಂದ ಬಂದ ಮರಳುಗಲ್ಲುಗಳನ್ನು ಬಳಸುತ್ತದೆ.
7
+ ನಾವು ಜಾಗತಿಕ ಮಟ್ಟದಲ್ಲಿ ಅಯೋಧ್ಯೆಗೆ ಹೊಸ ಗುರುತನ್ನು ನೀಡಬೇಕಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇತ್ತೀಚೆಗೆ ಇ ಫ್ಲೀಟ್ ಅನ್ನು ಫ್ಲ್ಯಾಗ್ ಆಫ್ ಮಾಡಿದ ನಂತರ ಹೇಳಿದ್ದರು. 2020ರ ಆಗಸ್ಟ್‍��ಲ್ಲಿ ಮೋದಿಯವರು ರಾಮಮಂದಿರ ನಿರ್ಮಾಣದ ಭೂಮಿಪೂಜೆ ನೆರವೇರಿಸಿದ ನಂತರ ರಾಜ್ಯ ಸರ್ಕಾರದ ಮೂಲಸೌಕರ್ಯ ವಿಸ್ತರಣೆಗೆ ಚಾಲನೆ ನೀಡಿದೆ. ಸಾಂಪ್ರದಾಯಿಕ ನಾಗರ ಶೈಲಿಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರ 380 ಅಡಿ ಉದ್ದ (ಪೂರ್ವ-ಪಶ್ಚಿಮ ದಿಕ್ಕು), 250 ಅಡಿ ಅಗಲ ಮತ್ತು 161 ಅಡಿ ಎತ್ತರ ಇರಲಿದೆ. ಮೂರು ಅಂತಸ್ತಿನ ದೇವಾಲಯದ ಪ್ರತಿ ಮಹಡಿಯು 20 ಅಡಿ ಎತ್ತರ ಮತ್ತು ಒಟ್ಟು 392 ಕಂಬಗಳು ಮತ್ತು 44 ದ್ವಾರಗಳನ್ನು ಹೊಂದಿರುತ್ತದೆ.
8
+ ಈ ದೇವಾಲಯವನ್ನು ತಲುಪಲು ಭಕ್ತರಿಗೆ ಅನುಕೂಲವಾಗುವಂತೆ, ಸರ್ಕಾರವು ಸಹದತ್‍ಗಂಜ್‍ನಿಂದ ನಯಾ ಘಾಟ್ ಚೌರಾಹಾದವರೆಗಿನ 13-ಕಿಮೀ ರಾಮ್ ಪಥವನ್ನು ಒಳಗೊಂಡಂತೆ ನಾಲ್ಕು ರಸ್ತೆಗಳನ್ನು ಮರುಅಭಿವೃದ್ಧಿಗೊಳಿಸಿದೆ – ಇದಕ್ಕಾಗಿ ಹೆಚ್ಚಿನ ಸಂಖ್ಯೆಯ ಅಂಗಡಿಗಳು, ಮನೆಗಳು ಮತ್ತು ಇತರ ಕಟ್ಟಡಗಳ ಭಾಗಶಃ ನೆಲಸಮ ಮಾಡಲಾಗಿದೆ.
9
+ ಎರಡೂ ಬದಿಗಳಲ್ಲಿ ಕಟ್ಟಡಗಳ ಏಕರೂಪದ ಮುಂಭಾಗಗಳನ್ನು ಹೊಂದಿರುವ ಅಗಲವಾದ ರಾಮಪಥ, ಸಾಂಪ್ರದಾಯಿಕ ರಾಮನದಿ ತಿಲಕವನ್ನು ಪ್ರತಿನಿಸುವ ವಿನ್ಯಾಸವನ್ನು ಹೊಂದಿರುವ ಅಲಂಕಾರಿಕ ದೀಪದ ಕಂಬಗಳು ಮತ್ತು ಧರ್ಮ್ ಪಥ್ ಮತ್ತು ಲತಾ ಮಂಗೇಶ್ಕರ್ ಚೌಕ್ ಉದ್ದಕ್ಕೂ ಸ್ಥಾಪಿಸಲಾದ 40 ಸೂರ್ಯ ಸ್ತಂಭಗಳು ನಗರದ ಹೊಸ ಪ್ರವಾಸಿ ಆಕರ್ಷಣೆಗಳಾಗಿವೆ.
10
+ ನಿಗಮ ಮಂಡಳಿಗಳ ನೇಮಕಾತಿ : ಸುರ್ಜೆವಾಲ ಮಹತ್ವದ ಸಭೆ
11
+ ಹಿಂದೆ, ಜನರು ರಾಮಜನ್ಮಭೂಮಿ, ಹನುಮಾನ್‍ಗರ್ಹಿ ದೇವಸ್ಥಾನ, ಕನಕ್ ಭವನ, ಅಶರ್ಫಿ ಭವನಕ್ಕೆ ಭೇಟಿ ನೀಡಿ ವಾಪಸ್ಸಾಗುತ್ತಿದ್ದರು ಈಗ, ಸಂದರ್ಶಕರು ರಾಮ್ ಕಿ ಪೈಡಿ, ಸೂರ್ಯ ಕುಂಡ್ ಮತ್ತು ಇತರ ದೇವಾಲಯಗಳಂತಹ ಇತರ ಸ್ಥಳಗಳನ್ನು ಅನ್ವೇಷಿಸಲು ಒಂದು ದಿನ ಅಥವಾ ಅದಕ್ಕಿಂತ ಹೆಚ್ಚು ಕಾಲ ಉಳಿಯಲು ಬಯಸುತ್ತಿದ್ದಾರೆ.
12
+ 2019 ರ ಸುಪ್ರೀಂ ಕೋರ್ಟ್ ತೀರ್ಪಿನ ನಂತರ ನಗರದಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಬಜೆಟ್ ಹೋಟೆಲ್‍ಗಳು, ಲಾಡ್ಜ್‍ಗಳು ಮತ್ತು ಹೋಂಸ್ಟೇಗಳು ಹುಟ್ಟಿಕೊಂಡಿವೆ. ಮಂದಿರ-ಮಸೀದಿ ವಿವಾದವು ನಗರದ ಬೆಳವಣಿಗೆಯನ್ನು ಸ್ಥಗಿತಗೊಳಿಸಿದೆ. ಆದರೆ ಮಂದಿರದ ನಿರ್ಮಾಣವು ಮೂಲಸೌಕರ್ಯವನ್ನು ಹೆಚ್ಚಿಸಿದೆ ಮತ್ತು ಇದು ಅಯೋಧ್ಯೆಯ ಬೆಳವಣಿಗೆಯ ಕಥೆಯನ್ನು ಉತ್ತೇಜಿಸಿದೆ.