diff --git a/Kenda Sampige/article_1.txt b/Kenda Sampige/article_1.txt new file mode 100644 index 0000000000000000000000000000000000000000..5a305a2ec01cf158792745e880f6020c2b55294d --- /dev/null +++ b/Kenda Sampige/article_1.txt @@ -0,0 +1,43 @@ +ಮಾರ್ಕ್ಸ್‌ವಾದಿ ಚಿಂತಕ ಮತ್ತು ಹೋರಾಟಗಾರ ಕುವಲಯಶ್ಯಾಮ ಶರ್ಮಾ (ಡಾ. ಕೆ.ಎಸ್. ಶರ್ಮಾ) ಅವರು ೧೯೩೪ನೇ ಸೆಪ್ಟೆಂಬರ್‌ ೩೦ರಂದು ಚಿಕ್ಕಬಳ್ಳಾಪುರದಲ್ಲಿ ಜನಿಸಿದರೂ ಬದುಕಿನ ಬಹುಭಾಗವನ್ನು ಹುಬ್ಬಳ್ಳಿ- ಧಾರವಾಡದಲ್ಲೇ ಕಳೆದಿದ್ದಾರೆ. ವೇದ ವಿದ್ವಾಂಸರಾಗಿದ್ದ ತಂದೆ ಎಂಬಾರ್‌ ಭಾಸ್ಕರಾಚಾರ್ಯರು ಸ್ವಾತಂತ್ರ್ಯ ಹೋರಾಟಗಾರರೂ ಗ್ರಂಥಕರ್ತರೂ ಮುದ್ರಕರೂ ಆಗಿದ್ದರು. ತಾಯಿ ಸಂಪತ್ತಮ್ಮ. ತೆಲುಗು ಮಾತೃಭಾಷೆಯ ಅವರ ಬದುಕು ಕನ್ನಡಮಯವಾಗಿದ್ದು ದುಡಿಯವ ವರ್ಗಕ್ಕೆ ಮೀಸಲಾಗಿದೆ. + +ಶಿಕ್ಷಣ ಬೆಂಗಳೂರಿನಲ್ಲಾದರೂ ಕಾಯಕ ಕ್ಷೇತ್ರ ಹುಬ್ಬಳ್ಳಿ-ಧಾರವಾಡವಾಗಿದೆ. ಶರ್ಮಾ ಅವರ ೭೫ನೇ ಜನ್ಮದಿನ ಆಚರಿಸಿ ೧೫ ವರ್ಷಗಳು ಕಳೆದವು. ಅವರು ಇಂದಿಗೂ ದುಡಿಯುವ ವರ್ಗದ ಏಳ್ಗೆಗಾಗಿ ಸದಾ ಚಿಂತನೆ ಮಾಡುತ್ತಾರೆ. + +ಕಾನೂನು ಪ್ರಾಧ್ಯಾಪಕ, ಪತ್ರಕರ್ತ, ಮಾರ್ಕ್ಸ್‌ವಾದಿ ವಿದ್ವಾಂಸ, ಸಾಹಿತಿ, ಸಂಘಟನಾ ಚತುರ, ಸದಾ ದುಡಿಯುವ ವರ್ಗದ ಹೋರಾಟದಲ್ಲಿ ತೊಡಗಿದ ಕಾಯ್ದೆತಜ್ಞ, ಪ್ರಕಾಶಕ ಹೀಗೆ ಅನೇಕ ಕೆಲಸ ಕಾರ್ಯಗಳಲ್ಲಿ ಶರ್ಮಾ ಅವರು ತೊಡಗುತ್ತಲೇ ಕಾನೂನಿನ ಹೋರಾಟ ಮಾಡುತ್ತ ದಿನಗೂಲಿಗಳಿಗೆ ಖಾಯಂ ನೌಕರಿಯ ಐತಿಹಾಸಿಕ ವಿಜಯ ದೊರಕಿಸಿ “ದಿನಗೂಲಿಗಳ ಮಹಾತ್ಮ” ಎನಿಸಿದ್ದಾರೆ. “ದುಡಿಯುವ ಕೈಗಳೇ ಆಳುವ ಕೈಗಳಾಗಬೇಕು” ಎಂಬುದು ಅವರ ಘೋಷವಾಕ್ಯವಾಗಿದೆ. + +“ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಲ” ಮತ್ತು “ಭಾರತೀಯ ಕ್ರಾಂತಿಕಾರಿ ಕಾರ್ಮಿಕ ಸಂಘಗಳ ಒಕ್ಕೂಟ” ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರಾಗಿ ಕಾರ್ಮಿಕ ವರ್ಗಕ್ಕೆ ನ್ಯಾಯ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕಕರ ಹೋರಾಟದ ನಾಯಕತ್ವವನ್ನು ವಹಿಸಿ ಅವರಿಗೆ ಸೌಲಭ್ಯ ದೊರೆಯುವಂತೆ ಮಾಡಿದ್ದಾರೆ. ಇತರ ೨೪ ಕಾರ್ಮಿಕ ಸಂಘಗಳ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. + +ಧಾರವಾಡದ ಟೈವಾಕ್‌ ಗಡಿಯಾರ ಕಂಪನಿಯ ಕಾರ್ಮಿಕರಿಗೆ ನ್ಯಾಯ ಒದಗಿಸಲು ಅವರು ಮೊದಲ ಬಾರಿಗೆ ೧೯೫೮ರಲ್ಲಿ ಹೋರಾಟ ಪ್ರಾರಂಭಿಸಿದರು. ದಿನಗೂಲಿ ನೌಕರರ ಹೋರಾಟಕ್ಕೆ ನ್ಯಾಯ ಸಿಗುವವರೆಗೆ ಮೊದಲ ಹಂತದ ೩೨ ವರ್ಷಗಳ ಇತಿಹಾಸವಿದೆ. ಶರ್ಮಾ ಅವರ ನಾಯಕತ್ವದಲ್ಲಿ ಕರ್ನಾಟಕದ ದಿನಗೂಲಿ ನೌಕರರು ಪಟ್ಟು ಬಿಡದೆ ಹೋರಾಡಿದ ಫಲವಾಗಿ ಸರ್ವೋಚ್ಚ ನ್ಯಾಯಾಲಯ ೧೯೯೦ನೇ ಫೆಬ್ರುವರಿ ೨೩ರಂದು ಇಡೀ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ “೧೦ ವರ್ಷ ಕೆಲಸ ಮಾಡಿದ ದಿನಗೂಲಿ ನೌಕರರನ್ನು ಖಾಯಂ ಮಾಡಬೇಕು” ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತು. ಈ ಐತಿಹಾಸಿಕ ತೀರ್ಪು ನೀಡಿದವರು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಗನಾಥ ಮಿಶ್ರಾ. ಅವರು ಬಸವತತ್ತ್ವವನ್ನು ಮೆಚ್ಚಿಕೊಂಡವರಾಗಿದ್ದರು. (೧೯೮೬ರಲ್ಲಿ ಮಹಾದೇವ ಹೊರಟ್ಟಿ ಅವರ ಅಧ್ಯಕ್ಷತೆಯಲ್ಲಿ ಪ್ರಾರಂಭಿಸಿದ “ಬಸವ ಶಾಂತಿ ಯಾತ್ರೆ” ಮೂಲಕ ಏರ್ಪಡಿಸಿದ್ದ ಬಸವ ಕಲ್ಯಾಣ ಮತ್ತು ಉಳವಿ ಕ್ಷೇತ್ರಗಳ ಸಮಾರಂಭಗಳಲ್ಲಿ ಕೂಡ ರಂಗನಾಥ ಮಿಶ್ರಾ ಅವರು ಭಾಗವಹಿಸಿ ಬಸವಣ್ಣನವರ ಕುರಿತು ಮಾತನಾಡಿದ್ದರು.) + +ಈ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರ ೬೬ ಸಾವಿರ ದಿನಗೂಲಿ ನೌಕರರನ್ನು ಖಾಯಂ ಮಾಡಿತು. ರಾಜ್ಯದ ದಿನಗೂಲಿ ನೌಕರರ ಪರವಾಗಿ ಬಂದ ಈ ತೀರ್ಪಿನಿಂದ ದೇಶದ ೨೦ ಲಕ್ಷ ದಿನಗೂಲಿ ನೌಕರರಿಗೆ ಲಾಭವಾಯಿತು!ದಿನಗೂಲಿ ನೌಕರರು ಸನ್ಮಾನಿಸಿ ಅರ್ಪಿಸಿದ ಹಮ್ಮಿಣಿಯಿಂದ ಶರ್ಮಾ ಅವರು ಹುಬ್ಬಳ್ಳಿಯ ಗೋಕುಲರಸ್ತೆ ಬಳಿ ೧೦ ಎಕರೆ ಜಮೀನು ಖರೀದಿಸಿ “ವಿಶ್ವ ಶ್ರಮ ಚೇತನ” ಕ್ಯಾಂಪಸ್‌ ನಿರ್ಮಿಸಿದರು. ಅದು ಆರೋಗ್ಯ, ಶಿಕ್ಷಣ, ಸಂಸ್ಕೃತಿ ಮತ್ತು ಸಾಹಿತ್ಯ ಕೇಂದ್ರವಾಗಿ ಬೆಳೆದು ನಿಂತಿದೆ. + +ಕಾಲೇಜ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್ಸ್, ಪುರೋಗಾಮಿ ಸಾಹಿತ್ಯ ಪ್ರಕಾಶನ, ಆಫ್‌ಸೆಟ್‌ ಮುದ್ರಣ ಹಾಗೂ ಪ್ರಕಾಶನ ಸಂಸ್ಥೆ, ಔದ್ಯೋಗಿಕ ತರಬೇತಿ ಕೇಂದ್ರ, ಶಿಶುವಿಹಾರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ನಿಸರ್ಗ ಚಿಕಿತ್ಸಾಲಯ ಹಾಗೂ ಯೋಗ ವಿಜ್ಞಾನ ಕೇಂದ್ರ, ಕಲ್ಯಾಣ ಸಭಾಭವನ, ಬೇಂದ್ರೆ ಸ್ಮಾರಕ, ದ.ರಾ. ಬೇಂದ್ರೆ ಸಂಶೋಧನಾ ಸಮುಚ್ಚಯ, ದ.ರಾ. ಬೇಂದ್ರೆ ಸಂಗೀತ ಅಕಾಡೆಮಿ ಮುಂತಾದ ಸಾಮಾಜಿಕ ಅಭಿವೃದ್ಧಿ ಸಂಸ್ಥೆಗಳಿಂದ “ವಿಶ್ವ ಶ್ರಮ ಚೇತನ” ಕ್ಯಾಂಪಸ್‌ ಕಂಗೊಳಿಸುತ್ತಿದೆ. + +ಶರ್ಮಾ ಅವರು ಮಾಲಿಕರ ಆ ಸ್ಥಳವನ್ನು ಕಾರ್ಮಿಕರ ಹಣದಿಂದ ಪಡೆದದ್ದು ಹೆಮ್ಮೆಯ ಸಂಗತಿಯಾಗಿದೆ. ಹಾಗೆ ಪಡೆದ ಸ್ಥಳವನ್ನು ಕಾರ್ಮಿಕರ ಮತ್ತು ಒಟ್ಟಾರೆ ಜನಸಾಮಾನ್ಯರ ಉತ್ತಮ ಭವಿಷ್ಯಕ್ಕಾಗಿ ಶ್ರದ್ಧೆಯಿಂದ ಬಳಸುತ್ತ ಮಹತ್ತರವಾದುದನ್ನು ಸಾಧಿಸಿ ತೋರಿಸಿದ್ದಾರೆ. + + + +ಎಂ.ಎ. (ರಾಜ್ಯಶಾಸ್ತ್ರ ಮತ್ತು ಸಮಾಜಶಾಸ್ತ್ರ), ಎಂ.ಎ. (ಇಂಗ್ಲಿಷ್), ಡಿ.ಪಿ.ಎ, ಎಲ್.ಎಲ್‌.ಎಂ, ಮತ್ತು ರಾಜ್ಯಶಾಸ್ತ್ರದಲ್ಲಿ ಪಿಎಚ್‌.ಡಿ. ಪಡೆದ ಡಾ. ಕೆ.ಎಸ್. ಶರ್ಮಾ ಅವರನ್ನು ೧೯೭೫ರಿಂದ ಬಲ್ಲೆ. ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದದ್ದು ಹುಬ್ಬಳ್ಳಿಯ ಜೆ.ಎಸ್.ಎಸ್. ಸಕ್ರಿ ಕಾನೂನು ಮಹಾವಿದ್ಯಾಲಯದಲ್ಲಿ ಎಂಬ ನೆನಪು. ಅಲ್ಲಿ ಅವರು ಲಾ ಪ್ರೊಫೆಸರ್‌ ಆಗಿದ್ದರು. ಆಗ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದೆ. ವಿದ್ಯಾರ್ಥಿ ಸಂಘಟನೆಯಾದ ಎ.ಐ.ಎಸ್‌.ಎಫ್. ಅನ್ನು ವಿಶ್ವವಿದ್ಯಾಲಯದಲ್ಲಿ ಮೊದಲ ಬಾರಿಗೆ ಸಂಘಟಿಸಿದ್ದೆ. ಆದರೆ ಎಸ್.ಎಫ್.ಐ. ಸಂಘಟನೆಯ ನಾಯಕರಾದ ಕಾಮ್ರೇಡ್‌ ವಿ.ಎನ್. ಹಳಕಟ್ಟಿ ಮತ್ತು ಇತರ ಸಂಗಾತಿಗಳ ಜೊತೆ ಹಾರ್ದಿಕ ಸಂಬಂಧವಿಟ್ಟುಕೊಂಡು ಒಂದಾಗಿ ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಿದ್ದೆವು. + +ಅಪ್ಪಾಸಾಹೇಬ ಯರನಾಳ, ಮೋಹನ ಹಿಪ್ಪರಗಿ, ರುದ್ರಪ್ಪ ಕಾಯಿ, ಮುಂತಾದ ಎ.ಐ.ಎಸ್.ಎಫ್. ಗೆಳೆಯರು ಮತ್ತು ಹಳಕಟ್ಟಿ, ಹದ್ಲಿ, ಹಾಗೂ ಇತರ ಎಸ್.ಎಫ್.ಐ. ಗೆಳೆಯರಿಗೆ ಡಾ. ಕೆ.ಎಸ್. ಶರ್ಮಾ ಮತ್ತು ಆಗ ಧಾರವಾಡ ಕೃಷಿ ಕಾಲೇಜಿನಲ್ಲಿ ಸೈಕಾಲಾಜಿ ಪ್ರೊಫೆಸರ್‌ ಆಗಿದ್ದ ಡಾ. ಬಿ.ಕೃಷ್ಣಮೂರ್ತಿ ಅವರು ಮಾರ್ಗದರ್ಶಿಗಳಂತೆ ಇದ್ದರು. ನಾನು ಅವಕಾಶ ಸಿಕ್ಕಾಗಲೆಲ್ಲ ಇವರ ಜೊತೆ ಕಮ್ಯುನಿಜಂ ಬಗ್ಗೆ ಚರ್ಚಿಸುತ್ತಿದ್ದೆ. + +ಕೃಷ್ಣಮೂರ್ತಿ ಅವರ ಸಾಮಾಜಿಕ ಮನೋವಿಜ್ಞಾನದ ವಿಚಾರಗಳು ಮತ್ತು ಶರ್ಮಾ ಅವರ ಹೋರಾಟದ ಚಿಂತನಾ ಕ್ರಮ ನನಗೆ ಬಹಳ ಹಿಡಿಸುತ್ತಿದ್ದವು. ಶರ್ಮಾ ಅವರು ಪ್ರಖರ ಭಾಷಣಕಾರರು. ಅವರು ತಮ್ಮ ಸೈದ್ಧಾಂತಿಕ ಚಿಂತನೆಗಳನ್ನು ಮನಂಬುಗುವಂತೆ ತಿಳಿಸುವ ಸಾಮರ್ಥ್ಯವುಳ್ಳವರು. ಅವರ ಮಾತಿನಲ್ಲಿ ಅಂಕಿ‌ ಅಂಶಗಳ ಜೊತೆ ಖಚಿತತೆ ಇದೆ. + +‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು. ಎಷ್ಟೇ ಕಷ್ಟಕಾರ್ಪಣ್ಯಗಳು ಬಂದರೂ ಎದೆಗುಂದದೆ ಮುನ್ನಡೆಯುವ ಛಲವನ್ನು ಸಾಧಿಸಲು ಸಹಕಾರಿಯಾಯಿತು. + +ವ್ಯಕ್ತಿಗತವಾಗಿ ಶರ್ಮಾಜಿ ಬಹಳ ಸೌಮ್ಯ ಸ್ವಭಾವದವರು. ಎಲ್ಲರನ್ನೂ ಸಮಾನವಾಗಿ ಗೌರವದಿಂದ ಕಾಣುವ ಗುಣವುಳ್ಳವರು. ಗುಣಗ್ರಾಹಿಗಳು. ವ್ಯಕ್ತಿ ಸಣ್ಣವನಿರಲಿ ದೊಡ್ಡವನಿರಲಿ ಸಲಹೆ ಬಯಸಿ ಬಂದಾಗ, ಅವರ ಕಣ್ಣಲ್ಲಿ ಇಬ್ಬರೂ ಸಮಾನರು. ಎಂಥ ಪ್ರಸಂಗದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದಂಥ ವ್ಯಕ್ತಿತ್ವ. ಯಾರ ಮನಸ್ಸಿಗೂ ನೋವಾಗದಂತೆ ಸತ್ಯದ ಪ್ರತಿಪಾದನೆ ಮಾಡುವ ಅಗಾಧ ಶಕ್ತಿ ಅವರಲ್ಲಿದೆ. ಅವರು ಸಿಡಿಮಿಡಿಗೊಳ್ಳುವುದನ್ನು ನಾನು ನೋಡಲೇ ಇಲ್ಲ. ಅವರಿಗೆ ವಿಶ್ರಾಂತಿ ಎಂಬುದೇ ಗೊತ್ತಿಲ್ಲ. ಒಂದು ಕಾರ್ಯದಿಂದ ಇನ್ನೊಂದು ಕಾರ್ಯದಲ್ಲಿ ತೊಡಗಿಕೊಳ್ಳುವುದೇ ಅವರಿಗೆ ವಿಶ್ರಾಂತಿ. + + + +ಅವರ ಕಾ‍ರ್ಯಕ್ಷೇತ್ರಗಳು ಅನೇಕ. ಅಧ್ಯಯನ, ಅಧ್ಯಾಪನ, ಉಪನ್ಯಾಸ, ಕಾನೂನು ಸಲಹೆ, ಸಂಘಟನೆ, ಹೋರಾಟ, ಯುವಕರಿಗೆ ಮತ್ತು ದುಡಿಯುವ ಜನರಿಗೆ ಮಾರ್ಗದರ್ಶನ, ವಿವಿಧ ವಿಷಯಗಳಿಗೆ ಸಂಬಂಧಿಸಿದ ಚಿಂತನಕಮ್ಮಟ, ವಿಚಾರ ಸಂಕಿರಣ, ಸಾಹಿತ್ಯ ರಚನೆ, ಪತ್ರಿಕೋದ್ಯಮ ಹೀಗೆ ಅವರು ಹಲವು ಹದಿನೆಂಟು ರೀತಿಯ ಕಾರ್ಯಗಳಲ್ಲಿ ತಲ್ಲೀನರಾಗಿರುವವರು. ಈ ಇಳಿ ವಯಸ್ಸಿನಲ್ಲೂ ಅವರ ಚಿಂತನೆಯ ಕೇಂದ್ರ ಶ್ರಮಿಕರೇ ಆಗಿದ್ದಾರೆ. + +ಡಾ. ಕೆ.ಎಸ್. ಶರ್ಮಾ ಅವರು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ೩೨ ಕೃತಿಗಳನ್ನು ರಚಿಸಿದ್ದಾರೆ. ಅವರ ಬರವಣಿಗೆ ಕೂಡ ವೈವಿಧ್ಯಮಯವಾಗಿದೆ. ‘ಮಾರ್ಕ್ಸ್‌ ಮತ್ತು ಮಾರ್ಕ್ಸವಾದʼ, ‘ಲೆನಿನ್‌ – ಗಾಂಧಿʼ, ‘ಲೆನಿನ್‌ವಾದ – ಗಾಂಧಿವಾದʼ, ‘ಕ್ರಾಂತಿ ಪ್ರತಿಕ್ರಾಂತಿʼ ಮತ್ತು ‘ಹೋಚಿಮಿನ್‌ʼ ಕೃತಿಗಳು ಮಾರ್ಕ್ಸವಾದದ ಬೆಳವಣಿಗೆ ಮತ್ತು ದೇಶೀ ಗಾಂಧೀವಾದದ ಮುಖಾಮುಖಿಯ ಪರಿಚಯ ಮಾಡಿಕೊಡುತ್ತವೆ. ‘ಸಮಾಜವಾದಿ ಮಹಿಳೆʼ ಮತ್ತು ‘ಮಹಿಳಾ ವಿಮೋಚನೆʼಯಂಥ ಕೃತಿಗಳು ಐದು ದಶಕಗಳಷ್ಟು ಹಿಂದೆಯೆ ಮಹಿಳೆಯ ಸ್ಥಿತಿಗತಿಗಳ ಕುರಿತು ನಮ್ಮನ್ನು ಎಚ್ಚರಿಸಿವೆ. ಅವರು ನಾಟಕ ಮತ್ತು ಕವನ ಸಂಕಲನಗಳನ್ನೂ ಪ್ರಕಟಿಸಿದ್ದಾರೆ. ಡಾ. ಕೆ. ರಾಘವೇಂದ್ರರಾವ್‌ ಮತ್ತು ಡಾ. ವಾಮನ್‌ ಬೇಂದ್ರೆ ಅವರ ಜೊತೆ ಸೇರಿ ಬೇಂದ್ರೆ ಕವನಗಳನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ. ಸೋವಿಯತ್‌ ಲ್ಯಾಂಡ್‌ ನೆಹರೂ ಅವಾರ್ಡ್‌ ಸೇರಿದಂತೆ ಎಂಟು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ‘ಶ್ರಮಚೇತನʼ, ‘ದಿನಗೂಲಿ ದಿನಕರʼ ಮುಂತಾದ ಅಭಿನಂದನಾ ಗ್ರಂಥಗಳು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ. + +ಬೇಂದ್ರೆ ಅವರನ್ನು ಶರ್ಮಾ ಅವರು ದಾ‍ರ್ಶನಿಕವಾಗಿ ಅರ್ಥೈಸಿದ ರೀತಿ ಅನನ್ಯವಾಗಿದೆ. ಬೇಂದ್ರೆ ಕಾವ್ಯದ ಒಳಜಗತ್ತಿನಲ್ಲಿರುವ ಸಮಾನತೆ, ಮಾನವ ಘನತೆ, ವೈಜ್ಞಾನಿಕ ಮನೋಭಾವ, ಜಾತಿ, ಮತಧರ್ಮಗಳನ್ನು ಮೀರಿದ ವಿಶ್ವಮಾನವತ್ವವನ್ನು ಅವರು ಕಾಣುವ ಪರಿ ಕಂಡು ಬೆರಗಾಗಿದ್ದೇನೆ. ನೆಲದ ಸಂಸ್ಕೃತಿಯನ್ನು ವಿಶ್ವಸಂಸ್ಕೃತಿಯ ಜೊತೆಗೆ ಬೆಸೆಯಬಲ್ಲವರಿಗೆ ಮಾತ್ರ ಇದು ಸಾಧ್ಯ. + +ದೇಶೀ ನೆಲೆಯಲ್ಲಿ ನಿಂತು ಗತಿತಾರ್ಕಿಕ ಭೌತಿಕವಾದದ ಪ್ರಜ್ಞೆಯೊಂದಿಗೆ ಬೇಂದ್ರೆ ಪ್ರತಿಭೆಯನ್ನು ಅರ್ಥೈಸುವ ಅವರ ವಿಧಾನ; ಬೇಂದ್ರೆ ಸಾಹಿತ್ಯದ ಮರುಮೌಲ್ಯಮಾಪನಕ್ಕೆ ಒತ್ತಾಯಿಸುತ್ತದೆ. ಶತಮಾನದ ಹಿಂದೆ ಬೇಂದ್ರೆಯವರು ಬರೆದ ‘ಹುಬ್ಬಳ್ಳಿಯಾಂವʼ ಕವನ ಬಂಡವಾಳಶಾಹಿ ವ್ಯವಸ್ಥೆಯ ಆಗಮನವನ್ನು ತಿಳಿಸುತ್ತದೆ. ‘ಕುರುಡು ಕಾಂಚಾಣʼ ಕವನ ಬಂಡವಾಳದ ಅಂತ್ಯವನ್ನು ಸೂಚಿಸುತ್ತದೆ. ‘ಪುಟ್ಟ ವಿಧವೆʼ, ‘ಅನ್ನಾವತಾರʼ, ‘ಅನ್ನ ಬೇಕುʼ, ‘ಸೀಮೋಲ್ಲಂಘನʼ ಮುಂತಾದ ಕವನಗಳು ಧರ್ಮದ ಕರ್ಮಠತನ, ಜನಸಮುದಾಯದ ಸಂಕಷ್ಟ ಮತ್ತು ಆಶಾವಾದಕ್ಕೆ ಸಾಕ್ಷಿಯಾಗಿವೆ. ದ.ರಾ. ಬೇಂದ್ರೆಯವರ ಸಮಗ್ರ ಸಾಹಿತ್ಯ ಸಂಪುಟಗಳನ್ನು ಶರ್ಮಾ ಅವರು ಪ್ರಕಟಿಸಿದ್ದಾರೆ. ಹೀಗೆ ನನಗೆ ಬೇಂದ್ರೆ ಕುರಿತು ಚಿಂತಿಸಲು ಪ್ರೇರಣೆ ನೀಡಿದವರು ಡಾ. ಕೆ.ಎಸ್. ಶರ್ಮಾ ಅವರು. + + + +‘ಡಾ. ಕೆ.ಎಸ್. ಶರ್ಮಾ ಇನ್‌ಸ್ಟಿಟ್ಯೂಟ್‌ ಆಫ್‌ ನೇಚರೋಪತಿ ಅಂಡ್‌ ಯೋಗಿಕ್‌ ಸೈನ್ಸಿಸ್‌ʼ ಸಂಸ್ಥೆಯ ಉದ್ಘಾಟನೆಗೆ ಶರ್ಮಾ ಅವರು ನನ್ನನ್ನೂ ಕರೆದಿದ್ದರು. ಆಗ ಅಲ್ಲಿ ಸಹಸ್ರಾರು ಜನ ಖಾಯಂಗೊಂಡ ಸರ್ಕಾರಿ ದಿನಗೂಲಿ ನೌಕರರು ‘ಮಹಾತ್ಮಾ ಶರ್ಮಾ ಅವರಿಗೆ ಜಯವಾಗಲಿʼ ಎಂದು ಘೋಷಣೆ ಕೂಗುತ್ತಿದ್ದರು. ಅದು ನಿಜವಾಗಿಯೂ ಕಾರ್ಮಿಕ ವಿಜಯವೇ ಆಗಿತ್ತು. ಹೊಸ ಬದುಕನ್ನು ಪಡೆದ ಕಾರ್ಮಿಕರ ಪಾಲಿಗೆ ಶರ್ಮಾ ಅವರು ಮಹಾತ್ಮರೇ ಆಗಿದ್ದರು. ಇದೇ ಸಪ್ಟೆಂಬರ್‌ ೩೦ಕ್ಕೆ ಅವರು ೯೧ನೇ ವರ್ಷಕ್ಕೆ ಕಾಲಿಡುತ್ತಾರೆ. ಡಾ. ಕೆ.ಎಸ್. ಶರ್ಮಾ ಅವರು ನೂರ್ಕಾಲ ಬಾಳುತ್ತ ನಮಗೆಲ್ಲ ಸ್ಫೂರ್ತಿಯ ಚಿಲುಮೆಯಾಗಿ ಇರಲಿ. + +ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ. \ No newline at end of file diff --git a/Kenda Sampige/article_10.txt b/Kenda Sampige/article_10.txt new file mode 100644 index 0000000000000000000000000000000000000000..6628ffb08b9a97909b5e5dd6e796a20efdcc0eef --- /dev/null +++ b/Kenda Sampige/article_10.txt @@ -0,0 +1,5 @@ +ಹಿಂದಿನ ಶತಮಾನದ ಎಪ್ಪತ್ತರ ದಶಕದವರೆಗೆ ಮಲೆನಾಡಿನ ನಮ್ಮ ಊರುಗಳಿಗೆ  ಬಸ್ಸಿನ ಸವಲತ್ತು ತೀರ ಅಪರೂಪವಾಗಿತ್ತು. ನೆಂಟರ ಮನೆಗೆ ಹೋಗುತ್ತಿದ್ದುದು ಕಾಲ್ನಡಿಗೆಯಲ್ಲಿ ಅಥವಾ ಎತ್ತಿನ ಗಾಡಿಯಲ್ಲಿ. ದ್ವಿಚಕ್ರ ವಾಹನಗಳೂ ಇರದ ಕಾಲವದು. ಸೈಕಲ್‌ಗಳು ಮಾತ್ರ ಇದ್ದವು. ಹಾಗಾಗಿ ಬಂದವರು ಎರೆಡೋ ಮೂರೋ ದಿನಗಳಿದ್ದು ಹೊರಡುತ್ತಿದ್ದರು. ಮನೆಯಲ್ಲಿ ಎತ್ತಿನಗಾಡಿ ಇದ್ದವರು ಅವರನ್ನು ಗಾಡಿಯಲ್ಲಿ ಕಳಿಸುತ್ತಿದ್ದರು. ಆಗೆಲ್ಲ ಮನೆಯಿಂದ ಹೊರಡುವ ಸಂಭ್ರಮವೇ ಸಂಭ್ರಮ. ʻನಿನ್ನ ಹಲ್ತಿಕ್ಕ ಬ್ರಶ್‌ ತಂಗಂಡ್ಯಾ?, ಒಣಗಿಸಿದ್ದ ಬಟ್ಟೆ ಚೀಲಕ್ಕೆ ಹಾಕಿಯಾತಾ?ʼ ಅಂತ ವಿಚಾರಿಸುತ್ತಿದ್ದರು. ಇನ್ನೇನು ಹೊರಡಬೇಕು ಎನ್ನುವಾಗ ಅವರ ಮನೆ ಅಂಗಳದಲ್ಲೋ ಹಿತ್ತಿಲಿನಲ್ಲೋ ಇದ್ದ ಗುಲಾಬಿ ಕಡ್ಡಿಯೋ, ಮಲ್ಲಿಗೆಯ ಹಂಬೋ, ಡೇರೆಯ ಗಡ್ಡೆಯೋ ನೆನಪಾಗಿ, ʻಅಕ್ಕಯ್ಯ ಆ ಗಿಡ ಬೇಕು ಕೊಡು ಅಂತ ಹೇಳಿದ್ದು ಮರ್ತೇ ಹೋಗಿತ್ತುʼ ಎನ್ನುತ್ತಿದ್ದಂತೆ ಮನೆಯ ಯಜಮಾನಿ ʻಹೌದು ಯಂಗೂ ಮರ್ತೇಹೋತು. ತಡಿ ತಗಂಡು ಬರ್ತಿʼ ಅಂತ ಅದನ್ನು ಕತ್ತರಿಸಿಯೋ ಕಿತ್ತೋ ತರುತ್ತಿದ್ದರು. ಹೀಗೆ ತಂದುದನ್ನು ಪಡೆದು ಅದಕ್ಕೊಂದು ದಾರವನ್ನೋ ಬಳ್ಳಿಯನ್ನೋ ಕಟ್ಟಿ ಅದು ಮನೆಯವರೆಗೆ ತಲುಪುವಂತೆ ಜೋಪಾನವಾಗಿ ಒಯ್ಯುವುದಿತ್ತು.  ದೊಡ್ಡವರೊಂದಿಗೆ ನಾವೂ ಗಾಡಿ ಮರೆಯಾಗುವವರೆಗೆ ಅಂಗಳದಲ್ಲಿ ನಿಂತು  ಕೈಬೀಸುತ್ತಿದ್ದೆವು. ನಡೆದು ಹೋಗುವುದಾದಲ್ಲಿ ಕೆಲವೊಮ್ಮೆ ಊರಬಾಗಿಲವರೆಗೆ ಅಥವಾ ಕೆರೆಯೋ ಗದ್ದೆಯೋ ತೋಟವೋ ಇದ್ದರೆ ಅಲ್ಲಿವರೆಗೂ ಹೋಗುವುದಿತ್ತು. ಬಸ್ಸಿನ ಸೌಕರ್ಯ ಬಂದ ಮೇಲೆ ಮನೆಯ ಮಕ್ಕಳಿಗೆ ಅವರನ್ನು ಬಸ್ಸಿಗೆ ಹತ್ತಿಸಿ ಬರುವ ಖಯಾಲಿ. ಒಂದೋ ಎರಡೋ ಕಿ.ಮೀ ದೂರವಿರುವ ಬಸ್‌ ನಿಲ್ದಾಣದತನಕ ಹೋಗಿ ಅವರಿಗೆ ಟಾಟಾ ಮಾಡುವುದು ಮಜಾ ಅನಿಸುತ್ತಿತ್ತು. ಅಲ್ಲೇನಾದರೂ ಅಂಗಡಿ ಇದ್ದರೆ ಅವರ ಕೈಗೆ ಚಾಕ್ಲೇಟೋ, ಪೆಪ್ಪರಮೆಂಟೋ ಬಿಸ್ಕತ್ತೋ ಕಡಲೆಕಾಯಿ ಪೊಟ್ಟಣವೋ ಸಿಗುವುದೂ ಇತ್ತು. ಹಾಗೆ ಪಡೆದು ಮನೆಗೆ ಬಂದ ಮೇಲೆ ಆ ಮಕ್ಕಳು ಮಾಡುವ ಡೌಲು ನೋಡುವಂತಿರುತ್ತಿತ್ತು. ನೆಂಟರ ಜೊತೆಗೆ ಹೋಗದೆ ಇರುವ ಮಕ್ಕಳ ಮುಖ ಬಾಡುತ್ತಿತ್ತು. ಮನೆಗೆ ಮತ್ಯಾರಾದರೂ ಬಂದರೆ ಸಾಕು, ಅವರನ್ನು ಕಳಿಸಿ ಬರಲಿಕ್ಕೆ ಮಕ್ಕಳಲ್ಲಿ ʻನಾ ಮುಂದು ತಾ ಮುಂದು ʼ ಎನ್ನುವ ಸ್ಪರ್ಧೆ ಏರ್ಪಡುತ್ತಿತ್ತು. + +ಈಗಲೂ ಹಳ್ಳಿಯನ್ನು ಬಿಟ್ಟಬಂದು ನಗರ ಪ್ರದೇಶದಲ್ಲಿ ಉದ್ಯೋಗದಲ್ಲಿರುವವರು ಊರಿಗೆ ಹೋಗಿ ಮರಳಿ ಬರುವಾಗಿನ ಸಂಭ್ರಮವನ್ನು ನೋಡಬೇಕು. ಅದರಲ್ಲಿಯೂ ನಾಲ್ಕು ಚಕ್ರದ ವಾಹನ ಇರುವವರ ವಾಹನದಲ್ಲಿ ಹಿಡಿಸದಷ್ಟು ವಸ್ತುಗಳು ಅಲ್ಲಿ ಆಶ್ರಯ ಪಡೆದಿರುತ್ತವೆ. ಮನೆಯಲ್ಲಿ ಬೆಳೆದ ಸೊಪ್ಪು, ತರಕಾರಿ, ಬಾಳೆಹಣ್ಣು, ಮಾವು, ಹಲಸು, ನಿಂಬೆ ಹೀಗೆ ಆಯಾ ಪ್ರದೇಶದ ಬೆಳೆಗಳನ್ನು ಆಧರಿಸಿ ಮಕ್ಕಳ ಮನೆಗೆ ಕಳುಹಿಸಲು ಹೆತ್ತವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ʻಇದು ಈ ಬಾರಿ ಬಂದ ಹೊಸ ಫಸಲು, ನೀವೂ ತಿನ್ನಿʼ ಎನ್ನುತ್ತ ಇನ್ನಷ್ಟು ತುಂಬುತ್ತಾರೆ. ಹೈನು ಇರುವ ಮನೆಯ ಮಕ್ಕಳಿಗೆ ಕಳುಹಿಸುವ ವಸ್ತುಗಳ ಪಟ್ಟಿಯಲ್ಲಿ ತುಪ್ಪವೂ ಜಾಗವನ್ನು ಪಡೆದುರುತ್ತದೆ. ಹೀಗೆ ಮಾಡುವುದರಲ್ಲಿ ವಸ್ತುಗಳ ಪ್ರಾಧಾನ್ಯಕ್ಕಿಂತ ಮಕ್ಕಳು, ಮೊಮ್ಮಕ್ಕಳ ಮೇಲಿನ ಪ್ರೀತಿ ಮತ್ತು ಮಮಕಾರ ಮುಖ್ಯವಾಗುತ್ತವೆ. ಹಸುವೋ ಎಮ್ಮೆಯೋ ಕರು ಹಾಕಿದಾಗ ಸದ್ಯದಲ್ಲಿಯೇ ಮಕ್ಕಳು ಬರುವವರಿದ್ದಾರೆ ಎಂದಾದರೆ ಗಟ್ಟಿ ಗಿಣ್ಣು ಮಾಡಿ ಫ್ರಿಜ್‌ನಲ್ಲಿಟ್ಟು ಕಾಪಿಡುವ ಅವರ ನಿಷ್ಕಲ್ಮಷ ಪ್ರೀತಿಗೆ ಯಾರಾದರೂ ಸೋಲಲೇಬೇಕು. ಕೆಲವೊಮ್ಮೆ ಮನೆಗೆ ಬಂದರಿವವರ ಮನೆಯ ಯಾರಿಗೂ ಯಾವುದೋ ಪ್ರೀತಿಯೆಂದು ತಮ್ಮಲ್ಲಿರುವುದನ್ನು ಕೊಟ್ಟು ಕಳುಹಿಸುವುದೂ ಇದೆ.  ಹೀಗೆ ಕೊಟ್ಟಿರುವುದು ಬೇಡವೆನಿಸಿದರೂ ತೆಗೆದುಕೊಂಡು ಹೋಗಲು ನಿರಾಕರಿಸುವುದು ಕಷ್ಟವಾಗುತ್ತದೆ. + +ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ. \ No newline at end of file diff --git a/Kenda Sampige/article_100.txt b/Kenda Sampige/article_100.txt new file mode 100644 index 0000000000000000000000000000000000000000..2fe927c067b7b4a40ce2257e5d33913e428d367f --- /dev/null +++ b/Kenda Sampige/article_100.txt @@ -0,0 +1,31 @@ +“ಬೊಗಸೆ ತುಂಬಾ ಮಲ್ಲಿಗೆಯನ್ನಲ್ಲಮದ್ದುಗುಂಡುಗಳನ್ನೇಗರ್ಭಧರಿಸಿ ತಿರುಗುತಿದೆ”ಅಂತಹ ಪ್ರತಿಮೆಗಳನ್ನಿರಿಸುತ್ತ ಇಲ್ಲಿನ ಕಾವ್ಯ ತನ್ನೊಳಗಿನಿಂದ ತೆರೆದುಕೊಳ್ಳುವುದನ್ನೇ ವಿಶೇಷವಾಗುಳ್ಳದು, ಸುತ್ತಲಿನ ಪರಿಸರಕ್ಕಾಗಿ ಚಾಚಿಕೊಳ್ಳುವುದು ನಿಧಾನ ಜೊತೆಗೂಡಿದಂತಿದೆ. + +‘ಈಗಪ್ರತಿ ದಿನವೂಉರಿಸಬೇಕು ಕಾರಿರುಳು’ಅನ್ನುವಂಥ ತಹತಹಿಕೆಯ ಮಾತು ಇಲ್ಲಿನ ಒಂದು ಬಗೆಯ ಕುದಿತಕ್ಕೆ ಸಾಕ್ಷಿಯೂ ಆಗಿದೆ ಅನಿಸುತ್ತದೆ. + +“ಹಾಡಿನೊಳಗಣ ಅಗ್ನಿತಂಪುಹಿಮದ ಕಿಡಿಗಳನು ಕರಗಿಸುವಂತೆಇನ್ನೊಂದು ಮತ್ತೊಂದು ಹಾಡಿಗೆಅನುದಿನದ ಹೊಸ ಬೆಳಕು ಕತ್ತಲೆಯನೆ ಕೊಲ್ಲುವುದು”ಎನ್ನುತ್ತ ಒಂದು ತಣ್ಣನೆಯ ಭರವಸೆಯನ್ನು ಇಟ್ಟುಕೊಂಡು ಇಲ್ಲಿನ ರಚನೆ ಹಾಡಾಗ ಬಯಸುತ್ತದೆ. + +(ಸುಮಿತ್‌ ಮೇತ್ರಿ) + +‘ಮತ್ತೆ ಮತ್ತೆ ನಿರೀಕ್ಷೆ ಹುಟ್ಟಿಸುವ ಮಳೆಯ ಸದ್ದಿನಂತೆ ದೂರದಲ್ಲೆಲ್ಲೋ ಕರಗಿ ಕಪ್ಪುಮೋಡದ ಆಲಾಪದಂತೆ’ ಸೋಲು ಪ್ರತಿ ಸಲವಿರುವಾಗಲೂ ಕಾಯುವ, ಭರವಸೆಗೊಳ್ಳುವ ದನಿ ಕೇಳುತ್ತದೆ. + +‘ಮುಖ ಕೊಂದುಮುಖ ಹುಡುಕುವ ಹಾದಿಯಲ್ಲಿಇಲ್ಲ… ಇಲ್ಲ… ಇಲ್ಲ…ನನ್ನದೆ ಮುಖದ ಹೊರತು ನನಗೇನು ಬೇಕಿಲ್ಲ’ಎನ್ನುವ ಹಟವೂ ಬೆರೆಯುತ್ತದೆ. ಒಂದಿಗೇ‘ಇಲ್ಲಿಈ ಕಿರುತರುಣನೊಬ್ಬತನ್ನದೇ ಮುಖದ ಹುಡುಕಾಟದಲ್ಲಿಅಲೆಯುತ್ತಿದ್ದಾನೆ ಮುಖ ಕೊಂದು; ಮುಖ ಹುಡುಕುವ ಹಾದಿಬೀದಿಯಲ್ಲಿ’ಎನ್ನುವ ದಿಗಿಲಾಗಿರುವ ವಾಸ್ತು ಸಂಗತಿಯೂ ಕಾಣುತ್ತದೆ. + +‘ಆತ್ಮಭಾವದ ಆಚೆ ಜೀವಭಾವದ ಈಚೆ’ ಎನ್ನುವ ರಚನೆ ಕೆಲವೆಲ್ಲ ಚರ್ವಿತ ಚರ್ವಣಗಳನ್ನ ಮುಂದಿರುಸತ್ತಲೇ ಸಾಗುತ್ತದಾದರೂ“ನನ್ನಂಥ ಹಾದಿಹೋಕರ ಭರವಸೆಗೆಹೃದ್ಗತವನು ಬೈಲಿಗಿಟ್ಟೆಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿಪ್ರತಿಯೊಬ್ಬರೂ ಒಂಟಿ!’ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ. + +“ಆದರೆ,ಒಂದು ತಿಳಿದುಕೊ ಪ್ರಿಯ ಪಾರ್ಟನರ್ಎದೆಗೆ ಒದೆಯುವ ಕೂಸಿಗೆತಾಯಿ ಎಂದೂ ಹಾಲುಣಿಸುವುದನು ನಿಲ್ಲಿಸುವುದಿಲ್ಲ”ಎನ್ನುವ ಗಟ್ಟಿ ಅನಿಸುವ ಅನುಭವದ ಮಾತುಗಳೇ ಇಲ್ಲಿ ಹೆಚ್ಚು ಹೆಚ್ಚೆ ಸೆಳೆದದ್ದು ನನ್ನನ್ನು. (ಇಲ್ಲೆ ಕೆಲವೆಲ್ಲ ಗಜಲ್ ಮಾದರಿಗಳನ್ನ ಇರಿಸಿಕೊಂಡಂತೆಯೇ ಕಂಡುವು ನನಗೆ ಅದಲೆಲ ಕ್ಲೀಷೆಯಾಗಿ ಕಂಡು ಸುಮ್ಮನಾಗಿರುವೆ) + +“ಧ್ಯಾನಕ್ಕೆ ಗುಹೆಬೇಕಿಲ್ಲ” ಮತ್ತೆ ಕವಿಯ ಖಾಸಾ ದನಿಯಾಗಿ ಕಾಣುತ್ತಲೂ ಇಡಿಕಿರದ ಇಮೇಜುಗಳಿಂದ ಮೂರ್ತ ಅಮೂರ್ತಗೊಳಿಸಿ ಚೆಂದಗೊಳಿಸುವ ಕೆಲಸವೇ ಆಗಿಬಿಟ್ಟಿದೆಯಾ ಅನ್ನಿಸಿತು. ಕವಿತೆ ಅಂದರೆ ಇಮೇಜ್ ಕಟ್ಟುವುದೇ ಕೆಲಸವೇ?“ಗಾಯಗಳಿಗೆ ಸಾಕ್ಷಿ ಹೇಳುವಪಾದದ ಪಡಿಯಚ್ಚಿನ ಹೆಜ್ಜೆ ಗುರುತುಗಳುಧ್ಯಾನಕ್ಕೆ ಗುಹೆ ಬೇಕಿಲ್ಲಕಟ್ಟಕಡೆಯ ಪ್ರಜೆಗೆ ತಲುಪದ ಜನತೆಯ ಕಣ್ಮಣಿಯೇಆಕ್ರಂದನದ ಮೊರೆ ಕೇಳು…ಹಸಿವಾಗದಿರಲೆಂದು ದಯಾಮಯಿ ಭಗವಂತನಲ್ಲಿ ಮೊರೆಯಿಟ್ಟೆಒಲೆಯ ಧ್ಯಾನಸ್ತ ಕೆಂಡದ ಕಿಡಿಬದುಕಿನ ಬಿದಾಯಿ ಕೊಡುವ ಘಳಿಗೆಸುಳ್ಳು ಸತ್ಯವಾಗುವ ಸತ್ಯ ಸುಳ್ಳಾಗುವಪ್ರತ್ಯಕ್ಷ ಕಂಡರೂ ತನ್ನನ್ನೇ ತಾನು ನೋಡುವಖತಾಯತಿ ಕೇಳುವ ಕಾಲ”ಈ ಬಗೆಯ ಮಾತುಗಳು ಬಲು ದೊಡ್ಡವೇ ಅನ್ನಿಸಿತು, ಗೊತ್ತಿಲ್ಲ + +“ಈ ಲೋಕದ ಕಣ್ಣೀಗಹೊಸ ಕುದುರೆಗಳ ಮೇಲೆಸಾರಿ, ಗೆಲುವ ಕುದುರೆ ಮೆಲೆ*ನೆನಪಿರಲಿಈಗ ಎಲ್ಲಾ ದಾರಿಗಳೂಪುನಃ ಅಲ್ಲೇ ಬಂದು ಸೇರುತ್ತವೆಮನುಷ್ಯ ಮುಕ್ತತೆ ಏನೋ ಬಯಸುತ್ತಾನೆಆದರೆ ಯಾವತ್ತೂ ಹಾಗೆ ಬದುಕುವುದಿಲ್ಲ ಮತ್ತು ಬದುಕಲು ಬಿಡುವುದಿಲ್ಲ” + +ಇಲ್ಲಿ ಪ್ರತಿ ಸಲವೂ ವ್ಯಕ್ತಿಯ ಒಳದನಿಯ ಕಡೆಗೆ ಕಿವಿಯಾಗುವ, ಮನುಷ್ಯನ ಒಳಗನ್ನ ಕೆದಕುವ ನುಡಿಗಳೇ ಕೇಳುತ್ತವೆ. ಅನೇಕ ಸಲ ಫಿಲಾಸಫಿಯಾಗಿ ಬಿಡುವ ಧಾವಂತವೂ ಕಂಡುಬಿಡುತ್ತದೆ. + +“ಕವಿತೆಗಾಗಿಕರುಳಕುಡಿ ಒಂದಾಗಿ ಜಿಬುಕುವತಾಯ ಮೊಲೆಯಂತೆ”ಕಾಯುವುದು ಇಲ್ಲಿನ ಒಟ್ಟು ಹಂಬಲ. ಅವರವರಿಗೆ ಒಂದೊಂದು ಹಂಬಲ ಅನಿಸಿತು. ಬೇಂದ್ರೆ ಎಷ್ಟೇ ದೊಡ್ಡ ಕವಿ ಎನಿಸಿದರೂ ನನಗೆ ಎಷ್ಟೋ ಸಲ ಶಬ್ಧ ವ್ಯಾಮೋಹಿ, ಕವಿತಾ ವ್ಯಸನಿಯೂ ಆಗಿ ಕಂಡುದಿದ್ದೇ ಇದೆ. ಏನೂ ಮಾಡಲಾಗದು. + +“ಆಖಾಡಕ್ಕೆ ಇಳಿದ ಮೇಲೆಒಂದು ಕೈ ನೋಡಿದ ಮೇಲೆಆಟದ ನಶೆ ತಲೆ ಏರಿದ ಮೇಲೆಆಟವೇ ಆ ಡಿ ಸು ತ್ತ ದೆ. . .”ಎನ್ನುವಂಥ ಬಹು ವಿಸ್ತಾರದ ಮಾತುಗಳು ಇಲ್ಲಿ ಇದ್ದಕಿದ್ದಂತೆ ಕಂಡು ಬಿಡುತ್ತವೆ. + + + +“ಉಗುಳು ನುಂಗುತ್ತಿದ್ದೇನೆಅಂತ್ಯ ಇರುವುದು ದೇವರ ಹೆಸರಿನಲ್ಲೋಇಲ್ಲ,ಸಾವಿನ ಹೆಸರಿನಲ್ಲೋ*ಈ ಲೋಕದಲ್ಲಿಎಲ್ಲ ಭಾವನೆಗಳು ಸಾಪೇಕ್ಷ*ಬಾ . . .ಸೈರಣೆಯಿಂದಲೇನಮ್ಮನಮ್ಮ ಪಾಲಿನಏಕಾಂತದ ನೋವುಗಳನು ಹಂಚಿಕೊಳ್ಳೋಣ”ಎನ್ನುವ ಮಾತುಗಳು ಗುಚ್ಛವಾಗಿ ಸಂಕಲನದ ತುಂಬ ಅನುರಣಿಸಿವೆ ಅನಿಸಿತು. ಇಲ್ಲಿನ ರಚನೆಗಳು ಅನೇಕ ಸಲ ಬಹುದೊಡ್ಡದನ್ನು ತೆಕ್ಕೆಗೆ ಎಳೆದುಕೊಳ್ಳಲು ಹಂಬಲಿಸತೊಡಗುತ್ತವೆ. ಅದು ಭೃಮಾತ್ಮಕವೆ ಅಂತ ಅನಿಸಿಯೂ ಬಿಡುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_101.txt b/Kenda Sampige/article_101.txt new file mode 100644 index 0000000000000000000000000000000000000000..c2d2dfb0c1298a44d9d5b65cedf395b5babb548e --- /dev/null +++ b/Kenda Sampige/article_101.txt @@ -0,0 +1,179 @@ +ಯಾವುದೇ ಸಮಾಜ, ಯಾವುದೇ ಸಂಸ್ಕೃತಿ, ಯಾವುದೇ ಭಾಶೆ, ಪ್ರೇಮಕವನಗಳಿಲ್ಲದಿದ್ದರೆ ಅಪೂರ್ಣವೇ ಅನ್ನಬಹುದು. ಸಾಹಿತ್ಯದಲ್ಲಿ ಬಗೆಬಗೆಯ ರುಚಿಯುಳ್ಳ ಶೈಲಿಗಳು ಬರಬಹುದು, ಹೋಗಬಹುದು; ಆದರೆ, ಪ್ರೇಮಕವನ ಒಂದು ಶಾಶ್ವತ ಪ್ರಕಾರ – ಒಂದು ಅರ್ಥದಲ್ಲಿ ಕಾವ್ಯದ ಜೀವಾಳ. ಸಾಹಿತ್ಯ ಚರಿತ್ರೆ, ವಿಮರ್ಶೆ ಈ ಮೂಲಭೂತ ಕಾವ್ಯಪ್ರಕಾರವನ್ನು ಕಡೆಗಣಿಸಿದ್ದರೂ, ಇತಿಹಾಸದುದ್ದಕ್ಕೂ ಜನಜೀವನದ ಅವಿಭಾಜ್ಯ ಭಾಗವಾಗಿರುವ ಸಾಹಿತ್ಯಪ್ರಕಾರಗಳಲ್ಲಿ ಪ್ರೇಮಕವನ ಪ್ರಮುಖವಾದದ್ದು. ಊಟಕ್ಕೆ ಬೇಕಾಗುವ ಉಪ್ಪಿನಕಾಯಿಯಂತೆ ದಿನನಿತ್ಯದ ಬಾಳಿಗೆ ಅವಶ್ಯಕ ಕೊಡುಗೆ ಪ್ರೇಮಕವನದ್ದು. + +(ಜಬೀವುಲ್ಲಾ ಅಸದ್) + +ಅತ್ಯುತ್ತಮ ಕವನಗಳೂ ಕೂಡ ಅತ್ಯಂತ ಸಂಕೀರ್ಣವಾಗಿರುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ ಶಿಶುನಾಳ ಶರೀಫರ “ಕೋಡಗನ ಕೋಳಿ ನುಂಗಿತ್ತ”, ಅಥವಾ ಕನಕದಾಸರ ಮುಂಡಿಗೆಗಳು, ಬೇಂದ್ರೆಯವರ “ಜೋಗಿ” ಇಂತಹ ಕವನಗಳನ್ನು ನೋಡಬಹುದು. ಆದರೆ, ಪ್ರೇಮಕವನ ಪ್ರಕಾರದಲ್ಲಿ ಮಾತ್ರ ಇದು ಅಪರೂಪ. ಈ ಮಾತಿಗೆ ಹೊರತು ಎಂದರೆ ನವ್ಯಕಾವ್ಯ ಎನ್ನಬಹುದು, ಯಾಕೆಂದರೆ ನವ್ಯಕವಿಗಳು ವ್ಯಂಗ್ಯಕ್ಕೆ ಎಷ್ಟು ಒತ್ತು ಕೊಡುತ್ತಾರೆ ಅಂದರೆ ಸರಳ ಅಭಿವ್ಯಕ್ತಿಯ ಕುರಿತಾಗಿ ನವ್ಯಕಾವ್ಯದಲ್ಲಿ ಒಂದು ಬಗೆಯ ಅಪನಂಬಿಕೆಯೇ ಇರುವುದನ್ನು ಕಾಣಬಹುದು. ಈ ಅಪನಂಬಿಕೆಯಿಂದಾಗಿಯೇ ನವ್ಯಕವಿಗಳು ಪ್ರೇಮಕವನ ಬರೆದಿದ್ದು ಕಡಿಮೆ ಅಥವಾ ನವ್ಯ ಪದ್ಧತಿಯ ಪ್ರೇಮಕವನದ ರೀತಿಯೇ ಭಿನ್ನ. ಹೀಗೆ, ಪ್ರೇಮಕಾವ್ಯದ ದಾರಿ ಬಿಟ್ಟು ಬರೆಯುವ ವಿಧಾನಕ್ಕೆ ಮೂಲಮಾದರಿ ಒದಗಿಸಿದ ಮಹಾಶಯನೆಂದರೆ ಇಂಗ್ಲೀಷ್ ಕವಿ ಟಿ ಎಸ್ ಎಲಿಯೆಟ್. + +ಸರಿಸುಮಾರು ನೂರಾ ಹತ್ತು ವರುಷಗಳ ಹಿಂದೆ 1910-11ರಲ್ಲಿ ಟಿ ಎಸ್ ಎಲಿಯೆಟ್ ತನ್ನ ಮೊಟ್ಟ ಮೊದಲ ಕವನ “ದ ಲವ್ ಸಾಂಗ್ ಆಫ್ ಜೆ ಆಫ್ರೆಡ್ ಪ್ರುಫ್ರಾಕ್” ಬರೆದರು. ಕೊಂಚ ಪರಿಷ್ಕರಣೆಗಳಿಗೆ ಒಳಗಾಗಿ ಈ ಕವನ ಮೊದಲು 1915ರಲ್ಲಿ ಪ್ರಕಟವಾಯಿತು. ಮುಂದೆ, 1917ರಲ್ಲಿ ಪ್ರಕಟವಾದ ಅವರ ಮೊದಲ ಕವನ ಸಂಕಲನದ ಮೊದಲ ಕವನವೂ ಇದಾಗಿತ್ತು. ಆಧುನಿಕನೊಬ್ಬನ ಹತಾಶೆ, ಭ್ರಮನಿರಸನ, ಏಕಾಕಿತನ, ಕ್ರಿಯಾಶೂನ್ಯತೆಗಳನ್ನು ವಿಷಯವಾಗಿಸಿಕೊಂಡ ಈ ಕವನ ಪ್ರೇಮಕವನಗಳ ಇಡೀ ಇತಿಹಾಸಕ್ಕೆ ವ್ಯತಿರಿಕ್ತ ರೀತಿಯ ಪ್ರೇಮಕವನವಾಗಿತ್ತು. ಪ್ರೇಮದ ವಿಷಯದಲ್ಲಿ ವ್ಯಂಗ್ಯದ ಬಳಕೆಯ ಮೂಲಕ ಮನುಷ್ಯ ಸಾಧ್ಯತೆಗಳನ್ನೇ ಸಂದೇಹಾತ್ಮಕವಾಗಿ ನೋಡುವ ಈ ಕವನ ಪ್ರತಿನಿಧಿಸುವ ಅಪನಂಬಿಕೆಯ ವಿಧಾನ ಮಾಡರ್ನಿಸ್ಟ್ (ಕನ್ನಡದಲ್ಲಿ ನವ್ಯ) ಎಂಬ ಸಾಹಿತ್ಯ ವಿದ್ಯಮಾನದ ಗುರುತಾಗಿ ಬೆಳೆದಿದ್ದು ನಮಗೆಲ್ಲ ತಿಳಿದೇ ಇದೆ. ನವೋದಯ ಕವಿಗಳ ಪ್ರೇಮಕವನಗಳಲ್ಲಿ ಕಂಡುಬರುವ ಸಹಜ ಧ್ವನಿ, ಭಾಶಿಕ ಸೊಗಸು, ತಿಳಿ ಅಭಿವ್ಯಕ್ತಿ, ಆದರೂ ಗಹನ ವಿಚಾರಕ್ಕೆ ನಮ್ಮನ್ನು ಎತ್ತರಿಸುವ ಅವುಗಳ ಗುಣ ಇವೆಲ್ಲವೂ ಎಲಿಯೆಟ್ ಕಾವ್ಯವಿಧಾನಕ್ಕೆ ವಿಪರೀತವಾದದ್ದು. ಎಲಿಯೆಟ್ ಕಾವ್ಯಮಾದರಿ ಚಾಲ್ತಿಗೆ ತಂದ ಆತ್ಮ-ನಿರೀಕ್ಷಣೆಯ (self-conscious), ಸ್ವ-ನಿರಾಕರಣೆಯ (self-deprecating) ಮತ್ತು ಪರೋಕ್ಷ ಅಭಿವ್ಯಕ್ತಿ ಶೈಲಿ ಪ್ರೇಮಕವನಕ್ಕೆ ಹೊಂದುವಂತದ್ದಲ್ಲ. ಎಲಿಯೆಟ್ ಮಾದರಿಯನ್ನು ಅನುಸರಿಸಿದ ಕಡೆಯೆಲ್ಲ ಸಹಜ ಮತ್ತು ನೇರ ಅಭಿವ್ಯಕ್ತಿಯನ್ನು ಬೇಡುವ ಪ್ರೇಮಕವನ ಬಾಡಿ ಹೋಗಿದ್ದನ್ನು ಕಾಣಬಹುದು. ಕನ್ನಡದ ಅನೇಕ ಮೇರು ಕವಿಗಳು ನವ್ಯೋತ್ತರ ಕಾಲದಲ್ಲಿ ನವ್ಯಕಾವ್ಯದ ಅಭಿವ್ಯಕ್ತಿಯ ಬಿಗಿತನ, ವಿಷಯ ಪ್ರಸ್ತುತಿಯ ಹೃಸ್ವತೆ, ಪ್ರತಿಮೆಗಳ ನಿಖರತೆಗಳನ್ನು ಮುಂದುವರಿಸಿದರೂ ಸಹ, ವ್ಯಂಗ್ಯ ಮತ್ತು ಅಪನಂಬಿಕೆಯ ಬಳಕೆಯನ್ನು ಗೌಣವಾಗಿಸಿದರು. ಆದರೂ, ನವ್ಯಕಾವ್ಯ ಕೊಟ್ಟ ಪೆಟ್ಟಿನಿಂದ ಪ್ರೇಮಕವನ ಸುಧಾರಿಸಿಕೊಂಡಿಲ್ಲ – ಬದಲಿಗೆ ಕನ್ನಡದಲ್ಲಿ ಮುನ್ನೆಲೆಗೆ ಬಂದ ಶ್ರಾವ್ಯಕಾವ್ಯ ಮತ್ತು ಸಿನೆಮಾಗೀತೆಗಳಲ್ಲಿ ತನ್ನ ಜೀವಂತಿಕೆ, ಸೃಜನಶೀಲತೆಯನ್ನು ದರ್ಶಿಸಿದೆ. + +ಈ ಹಿನ್ನೆಲೆಯಲ್ಲಿ, ವ್ಯಂಗ್ಯ ಮತ್ತು ಸ್ವ-ನಿರಾಕರಣೆಯ ಶೈಲಿಗಳಿಂದ ಬಿಡಿಸಿಕೊಂಡ, ಆತ್ಮ-ನಿರೀಕ್ಷಣೆಯ ಚಪಲಕ್ಕೆ ಬೀಳದೇ ನೇರ ಅಭಿವ್ಯಕ್ತಿಗೆ ಪ್ರಯತ್ನಿಸುವ, ಆಗೀಗ ವಾಚಾಳಿಯಾಗಲು ಹಿಂಜರಿಯದ, ಪ್ರೇಮಕವನಗಳನ್ನು ಓದಿದಾಗ ನನಗೆ ಹೊಸದೇನನ್ನೋ ಓದುತ್ತಿರುವೆ ಅನಿಸುತ್ತದೆ. ಇದು, ಒಂಥರಾ ಯೌವನದ ಅಮಾಯಕತೆಗೆ ಹೊರಳಿದಂತೆ. ಸಾಹಿತ್ಯಜ್ನಾನದಿಂದ ಮುಕ್ಕಾಗಿ ಹೋದ ಸರಳ ಸ್ಪಂದನಶೀಲತೆಯನ್ನು ಮರಳಿ ಕಂಡುಕೊಂಡಂತೆ. ಅದೇನೋ ಭಾರವಾದದ್ದನ್ನು ಹೊತ್ತಿಯೇ ಇರಬೇಕು ಎನ್ನುವ ದಾಕ್ಷಿಣ್ಯಕ್ಕೆ ಬೀಳದೇ, ಹೆಗಲ ಮೇಲಿಂದ ಹೊರೆ ಇಳಿಸಿಕೊಂಡು ಹಗುರವಾದಂತೆ. ಭಾಶೆ, ಭಾವ ಮತ್ತು ಸ್ವರೂಪದ ನೆಲೆಯಲ್ಲಿಯೇ ಕವನದ ಒಟ್ಟೂ ಅನುಭವವನ್ನು ಪಡೆದುಕೊಂಡಂತೆ. ಉರ್ದು ಭಾಶೆಯ ಮುಶೈರಾಗಳು ಸಾವಿರಾರು ಕೇಳುಗರಿಂದ ತುಂಬಿ ತುಳುಕಲು ಕಾರಣ ಪ್ರೇಮಕವನಗಳ ಇದೇ ಸ್ಪಂದನಶೀಲ ಗುಣ ಎನಿಸುತ್ತದೆ. + +ಹೀಗೆ ನನ್ನನ್ನು ಯೋಚಿಸಲು ಹಚ್ಚಿದ್ದು ಜಬಿವುಲ್ಲಾ ಅಸದ್ ಅವರ “ಪ್ರೇಮಯಾತನ” ಸಂಕಲನದ ಕವನಗಳು. ಈ ಸಂಕಲನದ ಶೀರ್ಷಿಕೆಯಿಂದಲೇ ಮೊದಲಾಗುವ ಕಾವ್ಯಲಕ್ಷಣ ಎಂದರೆ ವ್ಯಂಗ್ಯಾತ್ಮಕತೆ ಇಲ್ಲದ ನೇರ ಶೈಲಿ. ಸವಕಲು, ಜಾಳು, ಅಮೂರ್ತ ಎಂದೆಲ್ಲ ನವ್ಯಪ್ರಣೀತ ವಿಮರ್ಶಾ ಸೂತ್ರಗಳು ಸೂಚಿಸಬಹುದಾದ ಆದರೆ ಪ್ರೇಮಕವನವೆಂಬ ಕಾವ್ಯಮಾದರಿಯಲ್ಲಿ ಅಪೇಕ್ಷಣೀಯ ಆಗಿರುವ ಶೈಲಿ. ಈ ಬಗೆಯ ಅಭಿವ್ಯಕ್ತಿಯ ನೇರತನ, ಸಹಜತೆ, ಮತ್ತು ಸ್ಪಷ್ಟತೆ ಪ್ರೇಮದ ಅನುಭವಕ್ಕೆ ಅತ್ಯಂತ ಸೂಕ್ತ. ಜಬಿವುಲ್ಲಾ ಅವರ ಅನೇಕ ಕವನಗಳು ಈ ಸಹಜ ಲಕ್ಷಣಗಳನ್ನು ಹೊಂದಿದ್ದು, ಪ್ರೇಮ ಎಂಬ ವಿಷಯವನ್ನು ಯಾವುದೇ ಸಂಕೀರ್ಣತೆಗಳಿಗೆ, ಪರೋಕ್ಷ ನುಡಿಗಳಿಗೆ ಒಪ್ಪಿಸದೇ ನೇರಾನೇರವಾಗಿ ಹೇಳುತ್ತವೆ. ಪ್ರೇಮಕ್ಕೆ ಸಂಬಂಧಿಸಿದ ಕವನಗಳನ್ನೇ ಬರೆಯಲು ಹೊರಟಿರುವ ಕವಿ ಪ್ರತಿಯೊಂದು ಕವನದಲ್ಲಿಯೂ ಅದೇ ವಿಷಯವನ್ನು ಬೇರೆ ಬೇರೆ ಬಗೆಯಲ್ಲಿ ನಿರೂಪಿಸ ಬೇಕಾಗುತ್ತದೆ – ಜಬಿವುಲ್ಲಾ ಹಾಗೆಯೇ ಮಾಡುತ್ತಾರೆ. ಅವರು ಇದಕ್ಕಾಗಿ ಬಳಸುವ ಪ್ರತಿಮೆಗಳು, ರೂಪಕಗಳು, ಅವರ ಭಾಶೆ, ಅವರ ಸಾಲುಗಳ ಲಯ, ಇವೆಲ್ಲ ಯಾವುದೇ ಓದುಗನನ್ನೂ ದಣಿಸದೇ ತಣಿಸುವ ರೀತಿಯದಾಗಿವೆ. + +ಜಬಿವುಲ್ಲಾ ಅವರು ಪ್ರೇಮಕವನಗಳ ವ್ಯಾಕರಣವನ್ನು ಚೆನ್ನಾಗಿ ಅರಿತು ಬರೆದಿರುವ ಕವಿತೆಗಳು ಇವು. ಪ್ರೇಮಪಾಶಕ್ಕೆ ಸಿಲುಕಿದ ಮನಸೊಂದರ ನಿರೂಪಣೆಗಳಾಗಿ ಪ್ರಸ್ತುತವಾಗುವ ಈ ಕವನಗಳು, ಪ್ರೇಮಕ್ಕೆ ಹೊರತಾದ ಅನುಭವ, ಮೌಲ್ಯ, ಭಾವನೆಗಳ ಕಡೆ ಸುಳಿಯುವುದಿಲ್ಲ. ಪ್ರೇಮದ ಭಾವತೀವ್ರತೆ ಜಬಿವುಲ್ಲಾ ಅವರ ಕವನಗಳಲ್ಲಿ ಕಡಿಮೆ. ಹಾಗಾಗಿ ಅವರು ಅತಿಶಯೋಕ್ತಿ ಬಳಸುವುದು ಕಡಿಮೆ. ಇದು ಈ ಸಂಕಲನದ ಕವನಗಳಿಗೆ ವಾಸ್ತವದ ನೆಲೆಯನ್ನು ಒದಗಿಸುತ್ತದೆ. ಇಲ್ಲಿಯ ಅನೇಕ ಸಾಲುಗಳನ್ನು, ನುಡಿಗಟ್ಟುಗಳನ್ನು ನಾವು ಯಾರೇ ಆದರೂ ಯಾವಗಲೇ ಆದರೂ ಬಳಸಬಹುದು:ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತುಕೇಳುವ ಕೊಳಲಿನ ನಾದ ಪ್ರೇಮವೆಂದರೆ + +ಪ್ರೇಮಕವನಗಳನ್ನು ಬರೆಯುವ ಕವಿ ಎದುರಿಸುವ ಮುಖ್ಯ ಸವಾಲು ಅಂದರೆ ಅಭಿವ್ಯಕ್ತಿಯ ಸವಕಲು ಗುಣ. ಅತಿಬಳಕೆಯಿಂದಾಗಿ ಪ್ರೇಮದ ಕುರಿತಾಗಿ ಹೇಳಬಹುದಾದ ಅನೇಕ ಮಾತುಗಳು ತೀರಾ ಸವಕಲಾಗಿ, ಈಗ ಕೃತ್ರಿಮ ಅನಿಸಿಬಿಡುವುದು ಸಹಜ. ಈ ನಿಟ್ಟಿನಲ್ಲಿ ನನಗೆ ಜಬಿವುಲ್ಲಾ ಅವರ ಸೃಜನಶೀಲ ಮರುರೂಪಿಸುವಿಕೆ ಇಷ್ಟವಾಯಿತು. ವ್ಯಾಪಕವಾಗಿ ಬಳಕೆಯಾದ ಭಾವನೆಯೊಂದನ್ನು ಬಳಸುವಾಗ ಅವರು ಅದಕ್ಕೊಂದು ಟ್ವಿಸ್ಟ್ ಕೊಡುತ್ತಾರೆ. ಅವರು ಕೊಡುವ ಈ ತಿರುವು ಆ ಭಾವನೆ ಮತ್ತು ಅಭಿವ್ಯಕ್ತಿಗೆ ಹೊಸ ಚಾಲ್ತಿ ಸಾಧ್ಯವಾಗಿಸುತ್ತದೆ:ಕಂಬನಿಗಳೆಲ್ಲ ನಿನ್ನ ನೆನಪಲ್ಲೆ ಇಂಗಿನೋವು ಹೆಪ್ಪುಗಟ್ಟಿ ಹೃದಯವೇ ಶಿಲೆಯಾಗಿದೆ“ಸಂಗ್-ಎ-ದಿಲ್” ಎಂಬ ಉರ್ದು ಕಾವ್ಯದ, “ಪಥರ್‌ಸಾ ದಿಲ್” ಎಂಬ ಹಿಂದಿ ಕಾವ್ಯದ, “ಕಲ್ಲುಹೃದಯ” ಎಂಬ ಕನ್ನಡದ ನುಡಿಗಟ್ಟನ್ನು ಅವರು ಇಲ್ಲಿ ಮಾರ್ಪಡಿಸಿ ಕೊಂಡಿರುವುದು ವಿಶೇಷವಾಗಿದೆ. “ಮತ್ತೆ ಎಲ್ಲಿ ಸಿಗುವೆ ಸಖಿ” ಎನ್ನುವ ಕವನದಲ್ಲಿ ಜಬಿವುಲ್ಲಾ ಅವರ ನಿರೂಪಕ ತನ್ನ ಸಖಿಗೆ ಹೇಳುವ ಮಾತನ್ನು ಬಳಸಿಯೂ ಈ ಕವಿ ಬಳಲಿದ ನುಡಿಗಟ್ಟುಗಳಿಗೆ ಮರುಜೀವ ಕೊಡುವುದನ್ನು ವರ್ಣಿಸಬಹುದು:ಮತ್ತೆ ಎಂದಾದರೂ ನೀಅವುಗಳ ಬಿಡಿಸಿ ಅಕ್ಷರಗಳನ್ನು ತಾಕಲುಭಾವಸುಮಗಳಿಗೆ ಮತ್ತೆ ಜೀವ ಬಂದುಅರಳಿ ನಕ್ಕು ಘಮ್ ಎನ್ನು(ತ್ತಾವೆ) + + + +ಜಬಿವುಲ್ಲಾ ಅವರ ನಿರೂಪಕ ಪ್ರೇಮಿ – ಆದರೆ ಆತ ಇಂದಿನ ಸಾರ್ವಜನಿಕ ಸಂಸ್ಕೃತಿ ಎದುರು ಮಾಡಿರುವ ಅತಿಗಂಡಸುತನದ ಗರ್ವಿ, ಹಠಮಾರಿ, ಹಿಂಸಾಚಾರಿಯಾದ “ಸಿಕ್ಸ್ ಪ್ಯಾಕ್” ಪ್ರೇಮಿಯಲ್ಲ. ಬದಲಿಗೆ, ಭಾವನೆಗಳನ್ನು ಅಕ್ಷರಗಳಿಗೆ ಹೋಲಿಸುವಷ್ಟು ಸೂಕ್ಷ್ಮಜೀವಿ; ತನ್ನಂತೆಯೇ ಪ್ರೇಮದ ಅನುಭವ ಎಲ್ಲರಿಗೂ ದಕ್ಕಲಿ ಎನ್ನುವಷ್ಟು ಹೃದಯವಂತಿಕೆಯ ಭಾವಜೀವಿ.ಚೆಂದದ ನೋವಿಗೆಒಲವೆಂದು ಹೆಸರಿಟ್ಟು ಹರಸಿಬದುಕುವ ವರ ಎಲ್ಲರಿಗೂದಕ್ಕುವಂತಾಗಲಿ…ಮನಸಿನ ವೇದನೆಗೆಕೆದಿಗೆಯ ಹೂ ಮುಡಿಸಿದುಃಖವನು ಸಂಭ್ರಮಿಸುವ ಬಯಕೆತಲೆದೂಗುವಂತಾಗಲಿ.. + +“ಪ್ರೀತಿಯ ನವಿಲು ಎದೆಯ ಹಸಿ ನೆಲದ ಮೇಲೆ ರೆಕ್ಕೆ ಬಿಚ್ಚಿ ಕುಣಿದ ಹೆಜ್ಜೆ ಗುರುತುಗಳು” ಈ ಕವನಗಳು ಎಂದು ತಮ್ಮ ಮಾತಿನಲ್ಲಿ ಹೇಳಿಕೊಂಡಿರುವ ಜಬಿವುಲ್ಲಾ ಅವರ ಸಂವೇದನೆ ವೈವಿಧ್ಯಮಯ ಓದಿನಿಂದ ರೂಪುಗೊಂಡಿದೆ ಅಂತ ನನಗೆ ಅನಿಸಿದೆ ಮತ್ತು ಈ ಓದು ಕೇವಲ ಕನ್ನಡ ಪ್ರೇಮಕವನಗಳಿಗೆ ಸೀಮಿತವಾಗಿರದೇ, ಹಿಂದಿ ಮತ್ತು ಉರ್ದು ಭಾಶೆಯ ಪ್ರೇಮಕವನಗಳನ್ನೂ ಒಳಗೊಂಡಿದೆ ಅನಿಸುತ್ತದೆ. ಇನ್ನೊಂದು ವಿಶೇಷ ಲಕ್ಷಣವೆಂದರೆ ಜಬಿವುಲ್ಲಾ ಅವರ ನಿರಾಭರಣ ಅಭಿವ್ಯಕ್ತಿ ವಿಧಾನ. ಅನೇಕ ಕವಿತೆಗಳಲ್ಲಿ ಅನಗತ್ಯ ಅಲಂಕಾರದ ಬಟ್ಟೆ ತೊಡಿಸದೇ ಹೇಳಬೇಕಿರುವುದನ್ನು ಮಗುವಿನಂತೆ ಸಹಜವಾಗಿ ಹೇಳಿಬಿಡುತ್ತಾರೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ “ಅವನು ಬರಬಹುದು” ಎಂಬ ಕವನ. ಅದರ ಕೆಲವು ಚರಣಗಳು ಹೀಗಿವೆ:ತೆರೆದ ಬಾಗಿಲು ತೆರೆದೆ ಇರಲಿಮುಚ್ಚುವುದು ಬೇಡಅವನು ಬರಬಹುದು + +ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿಮೊಲ್ಲೆಯೊಂದು ಬಿರಿಯುತ್ತಿದೆಅವನು ಬರಬಹುದು + +ಮುರಿದ ಕನಸುಗಳಲ್ಲಿಹಕ್ಕಿ ಗೂಡು ಹೆಣೆಯುತ್ತಿದೆಅವನು ಬರಬಹುದು… + +ಎಲ್ಲಿಂದಲೋ ಬಂದ ಚಿಟ್ಟೆಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆಅವನು ಬರಬಹುದು + +ಸುಮ್ಮನೆ ಕೂತಿದ್ದರುಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆಅವನು ಬರಬಹುದು + +ಸುಡುವ ಬಿಸಿಲಲ್ಲಿ ಮಳೆ ಸುರಿದುಭೂಮಿ ಘಮ್ ಎನ್ನುತ್ತಿದೆಅವನು ಬರಬಹುದು + +(ಕಮಲಾಕರ ಕಡವೆ) + +ಜಬಿವುಲ್ಲಾ ಅಸದ್ ಅವರ ಕವನಗಳನ್ನು ಫೇಸ್ಬುಕ್‌ನಲ್ಲಿ ಓದಿ ಮೆಚ್ಚಿಕೊಂಡಿದ್ದ ನನಗೆ ಅವರ ಕವನಗಳನ್ನು ಈ ಸಂಕಲನದಲ್ಲಿ ಒಟ್ಟಿಗೇ ಓದುತ್ತ ಖುಶಿಯಾಗಿದ್ದು ನಿಜ. ಭಾಶೆಯ ಬಳಕೆಯಲ್ಲಿ, ಲಯದ ನಿರ್ವಹಣೆಯಲ್ಲಿ, ಪದನಾದ ಹುಡುಕುವುದರಲ್ಲಿ, ಭಾವನೆಗಳಿಗೆ ಸೂಕ್ತ ಪ್ರತಿಮೆ ಬಳಸುವಲ್ಲಿ ಜಬಿವುಲ್ಲಾ ಕಲಾವಂತಿಕೆ ತೋರಿಸುತ್ತಾರೆ. ಕವಿತೆಗಳಿಗೆ ಹೊಂದುವಕಾಲ್ ಕಾಲ್ ಕ್ಚ್ಚ್ ccçರೇಖಾಚಿತ್ರಗಳನ್ನೂ ಸ್ವತಃ ಬಿಡಿಸಿರುವ ಜಬಿವುಲ್ಲಾ ಈಗಾಗಲೇ ಕಲಾವಿದರಾಗಿಯೂ ಹೆಸರು ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಕವನಗಳು ನಮ್ಮನ್ನು ಮತ್ತಷ್ಟು ಆವರಿಸುತ್ತಾವೆ, ಕನ್ನಡ ಕಾವ್ಯ ಪರಂಪರೆಯ ಶ್ರೀಮಂತಿಕೆಗೆ ಕೊಡುವ ಕೊಡುಗೆಗಳಾಗುತ್ತಾವೆ ಎಂದು ನಾನು ನಂಬಿದ್ದೇನೆ. ಜಬಿವುಲ್ಲಾ ಅವರ “ಪ್ರೇಮಯಾತನ” ಸಂಕಲನದ ಕವನಗಳು ಕನ್ನಡ ಓದುಗರನ್ನು ತಲುಪಿ ಮುದಗೊಳಿಸಲಿ ಎಂದು ಹಾರೈಸುತ್ತೇನೆ. + +ಒಂದು ಕವಿತೆ + +ಮಾತಿಲ್ಲದ ಘಳಿಗೆಹುಟ್ಟುತ್ತದೆ ಒಂದು ಕವಿತೆಕರುಣಾಳ ಬೆಳಕ ಸಂಹಿತೆಸಂಭವಿಸುತ್ತದೆ ಅಂತರಂಗದಬಯಲೊಳಗೆ + +ಏಕಾಂತದ ಪ್ರಮೆಯಕೆಕಣ್ತೆರೆಯುತ್ತದೆ ಒಂದು ಕವಿತೆಜಗದ ಸಂತೆಯ ನಡುವೆನೋವ ಎಸೆದು ಹಾರುತ್ತದೆಅನಂತತೆಯೆಡೆಗೆ + +ಸಂಘರ್ಷದ ಸಂಜೆಗೆಜೀವ ಪಡೆಯುತ್ತದೆ ಒಂದು ಕವಿತೆಕೆಂಪು ಆಗಸ ತಂಪಾಗುವ ಮೊದಲೇಕಡಲಾಗಿ ಭೋರ್ಗರೆಯುತ್ತದೆಎಲ್ಲೆಯೊಳಗೆ + +ಮೊದಲ ಮಳೆಗೆಘಮ್ ಎನ್ನುತ್ತದೆ ಒಂದು ಕವಿತೆಹುಡಿ ಮಣ್ಣಿನ ತಾಜಾ ಅನುಭೂತಿಗೆಸಾಕ್ಷಿಯಾಗಿ ನಿಲ್ಲುತ್ತದೆಅನುಭವದೊಳಗೆ + +***** + +ಭಾವ ತರಂಗ + +ಮನಸ್ಸಿಗೆ ರೆಕ್ಕೆ ಕಟ್ಟಿ ಹಾರಲು ಬಿಡಿಮುಗಿಲನ್ನು ಸೇರಿಕೊಳ್ಳಲಿ… + +ಮನಸ್ಸನ್ನು ನದಿಯಾಗಿ ಹರಿಯಲು ಬಿಡಿಕಡಲನ್ನು ಹುಡುಕಿಕೊಳ್ಳಲಿ… + +ಮನಸ್ಸನ್ನು ಅಲೆಮಾರಿ ಆಗಲು ಬಿಡಿಗುರಿಯನ್ನು ಆಯ್ದುಕೊಳ್ಳಲಿ… + +ಮನಸ್ಸಿಗೆ ಕಣ್ಣುಗಳನ್ನು ಕೊಟ್ಟು ಬಿಡಿಕಾಣದಿರುವುದನ್ನು ಕಂಡುಕೊಳ್ಳಲಿ… + +ಮನಸ್ಸನ್ನು ಪರವಶಗೊಳ್ಳಲು ಬಿಡಿಅನುಭವ ದಕ್ಕಿಸಿಕೊಳ್ಳಲಿ… + +ಮನಸ್ಸನ್ನು ಕತ್ತಲಲ್ಲಿ ಕಳೆಯಲು ಬಿಡಿತನ್ನನ್ನು ತಾ ಹುಡುಕಿಕೊಳ್ಳಲಿ… + +ಮನಸ್ಸನ್ನು ಏಕಾಂತಕ್ಕೆ ಮಾರಿ ಬಿಡಿಲಾಭ ತಂದುಕೊಡಲಿ… + +ಮನಸ್ಸಿನ ಜೊತೆಕೂತು ಮಾತನಾಡಿ ಬಿಡಿನೋವು ಹಂಚಿಕೊಂಡು ಹಗುರಾಗಲಿ… + +ಮನಸ್ಸನ್ನು ಧ್ಯಾನಶೂನ್ಯದಲಿ ಕರಗಲು ಬಿಡಿಜ್ಞಾನೋದಯವನ್ನು ಪಡೆದುಕೊಳ್ಳಲಿ… + +***** + +ಅಪಸ್ವರ + +ಬೆಳಕಿಲ್ಲದ ಶೂನ್ಯ ತುಂಬಿದ ಹಾದಿಯಲಿಕತ್ತಲೇ ಎದುರಾಗುವುದುರೆಪ್ಪೆ ಮುಚ್ಚಿದ ಕನಸು ಹುಟ್ಟುವ ಕಣ್ಣಲಿಲೋಕವೇ ಕುರುಡಾಗುವುದು! + +ಹೃದಯವಿದು ದುಃಖ ತುಂಬಿದ ಖಜಾನೆಕೀಲಿ ಕೈ ಕಳೆದಿಹುದುಕಾಣದ ದೇವರ ಮೇಲಿನ ನಂಬಿಕೆಯನೆಕೈ ಬಿಡದೆ ಕಾಯುತಿಹುದು + +ಕಲ್ಪನೆಗಳನ್ನು ಕೆತ್ತಿ ಭಾವಗಳಿಗೆರೂಪ ಕೊಡಬಹುದುಬದುಕಿನ ಖಾಲಿ ಬಟ್ಟಲಲ್ಲಿ ಹೇಗೆಅರ್ಥವನ್ನು ತುಂಬಬಹುದು? + +ನಿತ್ಯವೂ ಬಂದು ರಮಿಸಿಸದ್ದಿಲ್ಲದೆ ಕಾಲ ನಿರ್ಗಮಿಸುತಿಹುದುಆಯುಷ್ಯದ ಕ್ಷಣಗಳನ್ನು ನೋಂದಾಯಿಸಿಎಣಿಸಿ, ಕಳಚಿ, ಕಳೆಯುತಿಹುದು + +ಅವ್ಯಕ್ತ ಭಾವಗಳ ಅಭೂತ ಪ್ರೇಮಮುಜುಗರವಿಲ್ಲದೆ ಬೆನ್ನಹತ್ತಿಹುದುಬಿಡಿಸಿಕೊಳ್ಳಲೆತ್ನಿಸಿದಷ್ಟು ಸಡಿಸಲಾಗದ ನಿಯಮಬ್ರಹ್ಮಗಂಟಾಗಿ ಪರಿಣಮಿಸುತಿಹುದು + +ಅಲೆಅಲೆಯಾಗಿ ಅಲೆವ ಕಡಲ ಮೇಲೆಚಂದಿರನ ಬೆಳಕ ನೆರಳ ಹೆಣ ತೇಲುತಿಹುದುವಿಧಿವಶದ ಬಂಡೆಗೆ ಅಪ್ಪಳಿಸುತಲೆಚೂರು ಚೂರಾಗಿ ಮರಳ ಕಣಗಳಲಿ ಕರಗುತಿಹುದು + +***** + +ನೀನೆಂಬ ಕಲ್ಪನೆ ನಾನೆಂಬ ವಾಸ್ತವ + +ನಸುಕಿನ ಮಳೆಯಲ್ಲಿ ತೊಯ್ದು ಗುಬ್ಬಚ್ಚಿಯಾದಕಡಲಿನ ಹೃದಯದ ನೀಲಿ ನಕ್ಷತ್ರ ನೀನು!ಕಾರಿರುಳ ದಟ್ಟ ಕಾಡಿನ ಕಾಡುವ ನಿರವ ಮೌನದಬಿಸಿ ನಿಟ್ಟುಸಿರ ಮೋಹ ನಾನು! + +ಚಳಿಯ ಘಳಿಗೆ ರಾಗವಾಗುವ ಅಮಲು ಹತ್ತಿದಯೋಗ ನಿದಿರೆಯ ಅರಸಿ ನೀನು!ಹೊಸ್ತಿಲ ಬಾಗಿಲಿಗೆ ಅಂಟಿದ ಹಳದಿ ಬಣ್ಣದಹಳೆಯ ನೊಂದ ನೆನಪಿನ ಕುರುಹು ನಾನು! + +ಕರಗುವ ಕನಸ ಬಳ್ಳಿಯ ಕನವರಿಕೆಯಆರದ ಸುಗಂಧದ ಅತೀತ ನೀನು!ಕಣ್ಣರೆಪ್ಪೆ ನಿರ್ದಯವಾಗಿ ಕೆಡವಿದ ಅನಾಥಕಂಬನಿಯ ಮುಗುಳ್ನಗೆ ನಾನು! + +ಹಕ್ಕಿಯ ರೆಕ್ಕೆಯ ಸ್ಪರ್ಶದ ಅನುಭೂತಿಯನೆಮ್ಮದಿಯ ಅನಂತ ಆಗಸ ನೀನು!ಗಾಳಿಗೆ ಪಟಪಟಿಸಿ ಹರಿದು ಚಿಂದಿಯಾಗಿ ದಿಕ್ಕಿಲ್ಲದೆಹಾರಿದ ಧ್ವಜದ ನಿರ್ಗತಿಕ ತುಣುಕು ನಾನು! + +ಕಡಲ ತೀರದಿ ಕಾಲುಚಾಚಿ ಅಂಗಾತವಾಗಿಮುಗಿಲ ಚುಕ್ಕಿಗಳ ಮಿಡಿಯುವ ಮಾಯೆ ನೀನು!ಹೆಸರಿಲ್ಲದ ಬೀದಿಗಳ ನಡುವೆ ಅಲೆಮಾರಿಯಾಗಿಅಲೆವ ನಿರ್ಗತಿಕ ಒಂಟಿ ನೆರಳು ನಾನು! + +ಅರಳದ ಮೊಗ್ಗಿನ ದುಂಬಿಯ ದಾಹದಮಧುವಿನ ಶತಮಾನದ ದಾಹ ನೀನು!ಗೀತೆಯ ನಡುವೆ ಅರ್ಥವೆ ಇಲ್ಲದ ಸುಪ್ತವಾದವ್ಯರ್ಥ ಶ್ಲೋಕದ ಸ್ಮೃತಿ ನಾನು! + +ಮೇಘದ ಹೃದಯಕೆ ಮುತ್ತಾಗುವ ಸಂಭ್ರಮದ ಅಮೃತ ಘಳಿಗೆಯ ಡವ ಡವ ನಿನಾದ ನೀನು!ಒಣಮರದ ತಾಜಾ ಬೇರಿನ ನಿರ್ಲಿಪ್ತ ಭಾವದಹಸಿರು ಧ್ಯಾನದ ಕೊನರೊಡೆದ ಅಂಕುರ ನಾನು! + +ಬಾಣದ ವೇಗದ ಮೇಲೊಡುವ ಬಿಳಿ ಅಶ್ವದಹೆಜ್ಜೆ ಗುರುತುಗಳ ಮಾರ್ದನಿ ನೀನು!ಬಯಲಲ್ಲಿ ಹಚ್ಚಿದ ಬೆಂಕಿಯ ಮೇಲಿನಸುಟ್ಟ ಕಾವಲಿಯ ಕಳೆಬರ ನಾನು! + +ಮನದ ಅಲಮಾರಿಯಲ್ಲಿನ ಹೊತ್ತಿಗೆಯಪುಟಗಳ ನಡುವಲ್ಲಿ ಅರಳಿದ ಕುಸುಮ ನೀನು!ಮಸಣದ ಕಣಗಿಲೆ ಗಿಡದ ಬಳಿ ಕೂತುಬಾಳಿನ ಹಾಡು ಹೆಣೆದು ಗುನುಗುವ ಫಕೀರ ನಾನು! + +ನಗೆಯ ಒಲುಮೆಯ ನಾಚಿಕೆಯ ಉನ್ಮಾದದಸಂಚಲನದ ಉದ್ರೇಕ ಪಿಸುಮಾತು ನೀನು!ಕಾಲದ ಕ್ಷಣಗಳೊಂದಿಗೆ ಕೂಡಿ ಘಟಿಸುವಮೇಣದ ಪ್ರತಿರೂಪದ ಪ್ರತಿಬಿಂಬ ನಾನು! + +ಮಿಂಚಿನ ಓಟದ ಜಿಂಕೆಯ ಕಣ್ಣಿನ ಹೊಳಪಿನಆಹ್ವಾನದ ರಂಗಿನ ಸಂಚಿಕೆ ನೀನು!ಮರದ ಕೊಂಬೆಯ ಸಂಗ ಕಳಚಿ ಉದುರಿ ಬೀಳುವಹಣ್ಣೆಲೆಯ ನಿಶಾಂತ ಏಕಾಂತ ನಾನು! + +ಎಂದಿಗೂ ಕಾಣದ, ಸಿಗದ ಗಮ್ಯದ ಗಹನತೆಯಮಹೋನ್ನತ ಅನೂಹ್ಯ ನೀನು!ಕೈಜಾರಿ ಒಡೆದು ಚುರುಚೂರಾದ ಮಡಿಕೆಯಮತ್ತೆ ಅಂಟಿಸಿದ ಅಸ್ಮಿತೆ ನಾನು! + +***** + +ಪ್ರೇಮವೆಂದರೆ…. + +ಪರ್ವತದಿಂದ ಜಾರಿ ಪ್ರಪಾತಕ್ಕೆ ಬೀಳುವಾಗಅಚಾನಕ್ಕಾಗಿ ಅಂಗೈಗೆ ಸಿಲುಕಿದ ಹುಲ್ಲುಗರಿಕೆ – ಪ್ರೇಮವೆಂದರೆ…! + +ಸೂರ್ಯನ ಕಿರಣಕೆ ಶರಣಾಗಿ ಕರಗಿಕಳೆದು ಹೋಗುವ ಮಂಜಿನ ಕನಸು –ಪ್ರೇಮವೆಂದರೆ…! + +ಸಂತೆಯ ನಡುವೆ ನಿಂತು, ಲೋಕದ ಚಿಂತೆ ಮರೆತುಕೇಳುವ ಕೊಳಲಿನ ನಾದ –ಪ್ರೇಮವೆಂದರೆ…! + +ಸಾವಿನ ಸೂತಕದ ಶೋಕದ ನಡುವೆಭರವಸೆಯ ವಚನ ನೀಡುವ ಹಣತೆಯ ಬೆಳಕು –ಪ್ರೇಮವೆಂದರೆ…! + +ಕಾಡುವ ಕತ್ತಲಲಿ, ಅಮ್ಮನ ಮಡಲಲ್ಲಿ ಕೂತಮಗುವಿನ ಕಣ್ಣಲಿ ತೇಲುವ ಚಂದಿರನ ಚೂರು –ಪ್ರೇಮವೆಂದರೆ…! + +ಶಿಲೆಯ ಕಡೆಯುವ ಕರಕಮಲದ ಹೃದಯದಲ್ಲಿಹೆಪ್ಪುಗಟ್ಟಿದ ಬಿಸಿ ನೆತ್ತರು –ಪ್ರೇಮವೆಂದರೆ…! + +ಕಡಲ ಮರಳ ಕಿನಾರೆಯಲಿ, ಎಂದಿಗೂ ಮರಳಿ ಬಾರದ ಹಡಗಿಗೆ ಕಾದು ಕುಳಿತ ಲಂಗರು –ಪ್ರೇಮವೆಂದರೆ…! + +ಹಸಿದ ಕರುಳಿನ ಕಂಬನಿಗಳ ಅರ್ತನಾದಕೆ ಮಿಡಿವರೊಟ್ಟಿಯ ಚೂರಿನ ಸಾಂತ್ವಾನ –ಪ್ರೇಮವೆಂದರೆ…! + +ಭೂಮಿಯ ಎದೆಗೆ ಬಿದ್ದ ಮಳೆಗೆ ಪುಟಿದೆದ್ದಅನಾಮಿಕ ಹಸಿರು ಮೊಳಕೆಯ ನಗು –ಪ್ರೇಮವೆಂದರೆ…! + +ಕಾಣದೆ, ತಾಕದೆ, ಮಾತಾಗದೆ, ಅನುಭವಿಸದೆಹೃದಯದ ಹಾದಿಯಲ್ಲಿ ಕೈಪಿಡಿದು ಸಾಗುವ ಸಂಭ್ರಮ – ಪ್ರೇಮವೆಂದರೆ…! + +***** + +ಅವನು ಬರಬಹುದು + +ತೆರೆದ ಬಾಗಿಲು ತೆರೆದೆ ಇರಲಿಮುಚ್ಚುವುದು ಬೇಡಅವನು ಬರಬಹುದು + +ಹೂ ಬಾಡುವ ಸಮಯಕ್ಕೆ ಮುಡಿಯಲ್ಲಿಮೊಲ್ಲೆಯೊಂದು ಬಿರಿಯುತ್ತಿದೆಅವನು ಬರಬಹುದು + +ಮುರಿದ ಕನಸುಗಳಲ್ಲಿಹಕ್ಕಿ ಗೂಡು ಹೆಣೆಯುತ್ತಿದೆಅವನು ಬರಬಹುದು… + +ಎಲ್ಲಿಂದಲೋ ಬಂದ ಚಿಟ್ಟೆಗಲ್ಲಕೆ ಅರಿಶಿಣ ಹಚ್ಚಿ ಹೋಗಿದೆಅವನು ಬರಬಹುದು + +ಸುಮ್ಮನೆ ಕೂತಿದ್ದರುಕಾಲ್ಗೆಜ್ಜೆ ಘಲ್ ಎಂದು ಸದ್ದು ಮಾಡುತ್ತಿದೆಅವನು ಬರಬಹುದು + +ಸುಡುವ ಬಿಸಿಲಲ್ಲಿ ಮಳೆ ಸುರಿದುಭೂಮಿ ಘಮ್ ಎನ್ನುತ್ತಿದೆಅವನು ಬರಬಹುದು + +ವಸಂತವಲ್ಲದಿದ್ದರು ಮಾಮರವೇರಿಕೋಗಿಲೆ ಕೂಹೂ ಕೂಗುತ್ತಿದೆಅವನು ಬರಬಹುದು + +ಕಡಲ ಅಲೆಗಳೆಲ್ಲ ಸೇರಿ ಒಟ್ಟಾಗಿನಾವೆಯನ್ನು ತೀರ ಮುಟ್ಟಿಸುತ್ತಿವೆಅವನು ಬರಬಹುದು + +ಇಳೆಯ ಎದೆಗೆ ಬಿದ್ದ ಇಬ್ಬನಿ ಹನಿಗಳಿಗೆಬಯಲಲ್ಲಿ ಗರಿಕೆ ಮೊಳೆಯುತ್ತಿವೆಅವನು ಬರಬಹುದು + +ಇರುಳು ಸುಳಿವ ಮುನ್ನವೇಚಂದ್ರ ಚುಕ್ಕಿಗಳೆಲ್ಲ ಮಿನುಗುತ್ತಿವೆಅವನು ಬರಬಹುದು + +ಬೀಸಿದ ಗಾಳಿಗೆ ಉನ್ಮಾದಗೊಂಡುತರುಲತೆಗಳೆಲ್ಲ ತೂಗುತ್ತಿವೆಅವನು ಬರಬಹುದು + +ಮುಗಿಲ ಮಹಡಿಯ ಮೇಲೆಮೇಘಗಳು ಸೇರಿ ಪಿಸುಗುಟ್ಟುತ್ತಿವೆಅವನು ಬರಬಹುದು + +ಕಣ್ಣಿಂದ ಮಿಡಿದ ಕಂಬನಿಗಳುಕರಗಿ ಕಾಣೆಯಾಗುತ್ತಿವೆಅವನು ಬರಬಹುದು + +ನಗೆಯ ದುಂಬಿ ಝೇಂಕರಿಸಿಕುಣಿದು ಹಾಡುತ್ತಿದೆಅವನು ಬರಬಹುದು + +ಕೊಳಲಿಂದ ಹರಿದ ನಾದ ಸುಧೆವನವನ್ನು ರಮಿಸುತ್ತಿದೆಅವನು ಬರಬಹುದು + +ಎಂದೂ ಇಲ್ಲದ ಮನವಿಂದುದಾರಿ ಕಾಯುತ್ತಿದೆಅವನು ಬರಬಹುದು + +ಒಲವಿಗೆ ರೆಕ್ಕೆಗಳ ವರ ದಕ್ಕಿಮತ್ತೆ ಹಾರಲು ಹಾತೊರೆಯುತ್ತಿದೆಅವನು ಬರಬಹುದು + +ನೆನಪಿರಲಿ,ಅವನು ಬಂದ ಮೇಲೆಮತ್ತೆ ಕದವ ಮುಚ್ಚುವುದನ್ನು ಮರೆಯದಿರುಮರಳಿ ಹೋಗಲು ಬಿಡದಿರು + +ಈಗಾಗಲೇ,ಅವನು ಹೊರಟಿರಬಹುದುಬರುತ್ತಿರಬಹುದು + +ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಕಮಲಾಕರ ಕಡವೆ ಅನುವಾದಕರೂ ಹೌದು.ಚೂರುಪಾರು ರೇಶಿಮೆ (ಅಭಿನವ, 2006, ಪುತಿನ ಪ್ರಶಸ್ತಿ), ಮುಗಿಯದ ಮಧ್ಯಾಹ್ನ (ಅಕ್ಷರ, 2010). ಮತ್ತು, “ಜಗದ ಜತೆ ಮಾತುಕತೆ” (ಅಕ್ಷರ, 2017) ಇವರ ಪ್ರಕಟಿತ ಕವನ ಸಂಕಲನಗಳು.ಮರಾಠಿ ದಲಿತ ಕಾವ್ಯದ ರೂವಾರಿ ಮತ್ತು ದಲಿತ ಪ್ಯಾಂಥರ್ಸ್ ಜನಕ ನಾಮದೇವ್ ಧಸಾಲ್ ಅವರ ಕವನಗಳನ್ನು ಅನುವಾದಿಸಿ “ನಾಮದೇವ್ ಧಸಾಲ್ ವಾಚಿಕೆ” ಪ್ರಕಟಿಸಿದ್ದಾರೆ \ No newline at end of file diff --git a/Kenda Sampige/article_102.txt b/Kenda Sampige/article_102.txt new file mode 100644 index 0000000000000000000000000000000000000000..993e903cb6a6b963b13b5de0fdddd08ca2ea72e2 --- /dev/null +++ b/Kenda Sampige/article_102.txt @@ -0,0 +1,35 @@ +ಒಂದು ನಡು ಮಧ್ಯಾಹ್ನದ ಬಿಸಿಲು, ಮನೆಯ ಮುಂದಿನ ಕಟ್ಟೆಯ ಮೇಲೆ ಕುಳಿತು ಎದುರಿಗಿನ ತೋಟವನ್ನೇ ನೋಡುತ್ತಿದ್ದೇನೆ. ಬಿರುಬಿಸಿಲು ಇನ್ನೂ ಕಣ್ಣಿಗೆ ರಾಚುತ್ತಿತ್ತು. ಮನೆಯ ಪಕ್ಕದ ಗಿಡವೊಂದರಲ್ಲಿ ಜೋಡಿ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಿದ್ದವು. ಸೂರ್ಯ ನೆತ್ತಿಯಿಂದಾಚೆಗೆ ನಿಧಾನಕ್ಕೆ ಸರಿದು ಹೋಗುತ್ತಿದ್ದ. ಮನೆಯ ಮುಂದಿನ ಹೂವಿನ ಗಿಡಗಳು, ನಾನೇ ನೆಟ್ಟ ತೆಂಗಿನ ಮರಗಳು, ಅದರಾಚೆಗಿನ ಅಡಿಕೆ ಮರಗಳೆಲ್ಲ ಈ ಬಿರುಬೇಸಿಗೆಯಲ್ಲೂ ತಂಪನ್ನೆರೆಯುತ್ತಿದ್ದವು. ಎಡಕ್ಕೆ ಹೊರಳಿದರೆ ನಾನೇ ಸಾಕಿದ ದನಗಳು, ಆಗಾಗ ಅಂಬಾ ಎಂದು ಕರೆಯುತ್ತಿರುತ್ತವೆ. ಎದುರಿಗೆ ಈಗ ಫಸಲು ನೀಡುತ್ತಿರುವ ಅಡಿಕೆ, ತೆಂಗು ಮರಗಳು. ಬೆನ್ನ ಹಿಂದೆ ಬಂಗ್ಲೆಯಂತಹ ಮನೆ, ಅದಕ್ಕೆ ತೆರೆದ ಪುಸ್ತಕದಂತಿರುವ ಹೆಬ್ಬಾಗಿಲು…ಎಲ್ಲ ಸೇರಿ ಇಡೀ ಪಂಚಮವೇದ ಫಾರ್ಮ್ ಹೌಸ್ ಇಂದು ನಳನಳಿಸುತ್ತಿದೆ. ಇದೆಲ್ಲ ಹೇಗೆ ಸಾಧ್ಯವಾಯಿತು? ಇವೆಲ್ಲ ನಾನು ಮಾಡಿದ್ದಾ? ನಾವು ಮಾಡಿದ್ದಾ…? ಕಾಲಿಗೆ ಚಕ್ರ ಕಟ್ಟಿಕೊಂಡವಳಂತೆ ಊರಿಂದೂರಿಗೆ ಅಲೆದಾಡುತ್ತ, ಬಿಸಿಲನಾಡಿನಲ್ಲಿ ಬಸವಳಿದು ಸಾಕಾಗಿ ಕುಳಿತಾಗಲೂ ಪಂಚಮವೇದದ ಕನಸಿರಲಿಲ್ಲ. ಆದರೆ ಏನನ್ನಾದರೂ ಸಾಧಿಸಲೇಬೇಕೆಂಬ ಹಠ ಇತ್ತು. ಆ ಹಠ ನನ್ನಲ್ಲಿ, ನಮ್ಮಿಬ್ಬರಲ್ಲಿ ಮೊಳೆತದ್ದಾದರೂ ಹೇಗೆ…? + +ಒಂದು ಹೆಣ್ಣಿಗೊಂದು ಗಂಡು ಹೇಗೋ ಸೇರಿ ಹೊಂದಿಕೊಂಡುಕಾಣದೊಂದು ಕನಸ ಕಂಡು ಮಾತಿಗೊಲಿಯದಮೃತವುಂಡುದುಃಖ ಹಗುರವೆನುತಿರೆ ಪ್ರೇಮವೆನಲು ಹಾಸ್ಯವೇ…? + + + +ನರಸಿಂಹಸ್ವಾಮಿಯವರ ಬಾರೆ ನನ್ನ ಶಾರದೆ ಪದ್ಯ ಸದಾ ನನ್ನೊಳಗೆ ಮೊರೆಯುತ್ತಲೇ ಇರುತ್ತದೆ. ನಾವು ಕೂಡ ಹೀಗೆಯೇ… ಬದುಕಿನ ಒಂದು ತಿರುವಿನಲ್ಲಿ ಸಿಕ್ಕೆವು, ಒಪ್ಪಿದೆವು, ಹೊಸ ಹೊಸ ಕನಸುಗಳನ್ನು ಕಟ್ಟಿದೆವು. ಅದನ್ನು ನನಸಾಗಿಸುವತ್ತ ಹೋರಾಡಿದೆವು. ಹೇಳಿಕೇಳಿ ಪ್ರೇಮಿಸಿ ಮದುವೆಯಾದವರು ನಾವು. ಅದೂ ಜಾತಿಯ ಸಂಕೋಲೆಗಳನ್ನು ಕಿತ್ತು ಹಾಕಿ ಮದುವೆಯಾದವರು. ನಾನು ತಂಪು ಪ್ರದೇಶವಾದ ಕೊಡಗಿನಿಂದ ಬಂದಿದ್ದರೆ ಅವರು ಬಿಸಿಲನಾಡಿನವರು. ಪ್ರೇಮಕ್ಕೆ ಪ್ರಾಂತ್ಯದ ಹಂಗಿರಲಿಲ್ಲ. ಜಾತಿಯೂ ಬೇಕಿರಲಿಲ್ಲ. ಜಾತಿಯ ಅಡ್ಡಗೋಡೆ ನಮ್ಮನ್ನು ಕಾಡಿರಲಿಲ್ಲ. ಆದರೆ ಸಮಾಜಕ್ಕೆ ಅದು ಕಾಡಿತ್ತು. ಈಗ 35 ವರ್ಷಗಳ ಹಿಂದೆ ಅದೂ ಮಸ್ಕಿಯಂತಹ ಗ್ರಾಮದ ಅಪ್ಪಟ ಸಾಂಪ್ರದಾಯಿಕ ಮನಸ್ಥಿತಿಯುಳ್ಳಂತಹ ಮನೆತನವೊಂದಕ್ಕೆ ಅನ್ಯ ಸಮುದಾಯದ ಹುಡುಗಿಯೊಬ್ಬಳು ಮದುವೆಯಾಗಿ ಹೋಗುವುದೆಂದರೆ ಸಾಮಾನ್ಯದ ವಿಷಯವಾಗಿರಲಿಲ್ಲ. ಹಾಗೆಯೇ ಅತ್ಯಂತ ಕಟ್ಟುನಿಟ್ಟಿನ ಸಂಪ್ರದಾಯವಿರುವ ಕೊಡವ ಜನಾಂಗದಲ್ಲೂ ಇದು ಸಾಮಾನ್ಯದ ಮಾತಾಗಿರಲಿಲ್ಲ. ಹಾಗಾಗಿ ವಿರೋಧದ ನಡುವೆಯೇ ನಾವು ಸೇರಿದೆವು. + +ನಾವಿಬ್ಬರೂ ಪ್ರೇಮಿಸುತ್ತೇವೆಂದು ಅರಿವಾದ ತಕ್ಷಣವೇ ನಮ್ಮೊಳಗೊಂದು ಹಠ ಮೊಳೆತಿತ್ತು. ಯಾವತ್ತೂ, ಯಾವ ಕಾರಣಕ್ಕೂ ನಾವು ಸೋಲಬಾರದೆಂದು. ನಮ್ಮನ್ನು ನೋಡಿ ಜನ ಹಾಸ್ಯ ಮಾಡಬಾರದೆಂದು. ಅದಕ್ಕಾಗಿಯೇ ಒಬ್ಬರಿಗೊಬ್ಬರು ಭರವಸೆ ಕೊಟ್ಟುಕೊಂಡು ಮುನ್ನಡೆದೆವು. ಜೊತೆಜೊತೆಯಾಗಿ ಹೆಜ್ಜೆ ಇರಿಸಿದೆವು. ಅಲ್ಲಿ ಹೋರಾಟವಿತ್ತು, ಸಂಘರ್ಷವಿತ್ತು, ಏನೆಲ್ಲ ಇತ್ತು… ಬಡತನದ ಬೇಗೆಯಲ್ಲಿ ನರಳಿದ್ದಿದೆ. ಬಿಸಿಲಿನ ಝಳಕ್ಕೆ ಬಾಡಿದ್ದಿದೆ. ಉದ್ಯೋಗವಿಲ್ಲದೆ ಮುಂದೇನು ಎಂಬ ಭೀತಿಯಲ್ಲಿ ತೊಳಲಾಡಿದ್ದೂ ಇದೆ. ಹೀಗಿದ್ದೂ ಸೋಲಲಿಲ್ಲ. ಅಂತರ್ಜಾತಿ ವಿವಾಹವಾದವರು ನೀವು ಎಂಬ ಮಾತು ಸೋಲಕೂಡದು ಎಂದು ನಮ್ಮೊಳಗೆ ಸದಾ ಎಚ್ಚರಿಸುತ್ತಲೇ ಇರುತ್ತಿತ್ತು. ನಾವು ವಿವಾಹವಾಗುತ್ತೇವೆಂದು ಹೇಳಿದಾಗ, ‘ಮುಳ್ಳಿನ ಮೇಲೆ ಬಿದ್ದ ಹೂವಿದು. ಹೂವು ನೋಡಲು ಚೆಂದ ಕಾಣಿಸುತ್ತದೆ. ಆದರೆ ಆಯ್ದುಕೊಳ್ಳಲು ಹೋದರೆ ಚುಚ್ಚುತ್ತದೆ. ಎತ್ತಿಕೊಂಡರೂ, ಅಲ್ಲೇ ಬಿಟ್ಟರೂ ಹೂವು ಹರಿದೇ ಹೋಗುತ್ತದೆ’ ಎಂದು ಹೇಳಿದ ಅಪ್ಪನ ಮಾರ್ಮಿಕ ಮಾತುಗಳು ಯಾವಾಗಲೂ ಚುಚ್ಚುತ್ತಲೇ ಇರುತ್ತಿತ್ತು. ಏನೂ ಹೇಳದೆ ಮೌನವಾಗಿಯೇ ರೋದಿಸಿದ ಅಮ್ಮ, ಬೇರೆ ಜಾತಿ ಎಂದು ಮನೆಗೇ ಕರೆಯದ ಸರೀಕರ ನಡುವೆ ತಲೆ ಎತ್ತಿ ನಿಲ್ಲಲೇಬೇಕೆಂಬ ಹಠವಿತ್ತು. ಆರ್ಥಿಕ ಸಂಕಷ್ಟವೂ ನಮ್ಮನ್ನು ಕಾಡಿತ್ತು. ಆಗೆಲ್ಲ ಮತ್ತೆ ಮತ್ತೆ ನಮ್ಮ ಶಕ್ತಿಯನ್ನೆಲ್ಲ ಒಗ್ಗೂಡಿಸಿಕೊಳ್ಳುತ್ತಿದ್ದೆವು. ಅದಕ್ಕೆ ಬೆನ್ನ ಹಿಂದೆ ನಿಂತವರು ಪತಿ ಮನೋಹರ್. ಸ್ನೇಹಿತರೊಬ್ಬರು ಹೇಳಿದ್ದರು, ಅವರು ತಳಪಾಯ ಹಾಕುತ್ತಾರೆ, ನಾನು ಗೋಪುರ ಕಟ್ಟುತ್ತೇನೆಂದು. ಇದ್ದರೂ ಇರಬಹುದು. ಬೆನ್ನ ಹಿಂದೆ ನಿಂತು ಅವರು ಮುಂದೆ ಕೈ ತೋರಿಸಿದರು, ಆ ಹಾದಿಯಲ್ಲಿ ನಾನೂ ಮುನ್ನಡೆದೆ. ಒಬ್ಬರಿಗೊಬ್ಬರು ಆತುಕೊಂಡೆವು. ನಾನು ಸೋತಾಗ ಅವರು ಕೈ ಹಿಡಿದರು, ಅವರು ಸೋತಾಗ ನಾನು ನಿಂತು ಮುನ್ನಡೆದೆ. ಹೀಗೆ ಮುನ್ನಡೆಯುತ್ತಾ ಇಂದು ಈ ಪಂಚಮವೇದದಲ್ಲಿ ಬಂದು ನಿಂತಿದ್ದೇವೆ. + + + +ಜೊತೆಯಾಗಿ ನಡೆದು ೩೫ ವರ್ಷಗಳಾದವು. ಈ ಇಷ್ಟೂ ವರ್ಷವೂ ಪರಸ್ಪರ ಜಗಳ ಆಡಿದ್ದೇವೆ, ಕಿತ್ತಾಡಿದ್ದೇವೆ, ಮತ್ತೆ ಒಂದಾಗಿದ್ದೇವೆ. ಮಳೆ ನಿಂತು ಹೋದ ಮೇಲಿನ ಒದ್ದೆ ನೆಲದಂತೆ… ಈ ಬದುಕು ಆರ್ದ್ರವಾಗಿಸುವ ಅದೆಷ್ಟೋ ಸಂಗತಿಗಳಿಗೆ ಸಾಕ್ಷಿಯೆಂಬಂತೆ ಇಲ್ಲಿ ಪಂಚಮವೇದ ನಿಂತಿದೆ. + +ಈಗ ಗಿಡದಲ್ಲಿ ಕುಳಿತ ಹಕ್ಕಿ ಹಾರಿ ಹೋಯಿತು. ಬಹುಶಃ ಅದು ಗಂಡು ಹಕ್ಕಿಯೇ ಇರಬೇಕು. ಇನ್ನೊಂದು ಹಕ್ಕಿ ಗೂಡೊಳಗಿನ ಮರಿಗಳಿಗೆ ಆಹಾರ ಹಾಕುತ್ತಿರುವುದನ್ನು ನೋಡುತ್ತಿದ್ದೇನೆ. ಇಡೀ ಜೀವಸಂಕುಲಕ್ಕೇ ತಮ್ಮದೇ ಆದ ಸ್ವಂತ ಗೂಡೊಂದರ ಕಲ್ಪನೆ ಅದೆಷ್ಟು ಅದ್ಭುತವಾಗಿದೆ. ಇಂಥದ್ದೇ ಗೂಡಿಗಾಗಿಯಲ್ಲವೇ ನಮ್ಮೆಲ್ಲರ ಹೋರಾಟ…? ಇಂಥದ್ದೇ ಆಹಾರಕ್ಕಾಗಿಯಲ್ಲವೇ ನಮ್ಮ ಸಂಘರ್ಷ…? ಹೊರಳಿ ನೋಡುತ್ತೇನೆ. ಬದುಕಿನ ಅದೆಷ್ಟು ಸಂಘರ್ಷಗಳ ಹೆಜ್ಜೆಗಳು ಅಲ್ಲಿದ್ದವು…! + +ಮಲೆನಾಡಿನ ತಪ್ಪಲಲ್ಲಿ ಹುಟ್ಟಿ, ಜಗತ್ ಪ್ರಸಿದ್ಧ ಪ್ರವಾಸಿ ತಾಣವಾದ ಕೊಡಗಿಗೆ ಹೋಗಿ, ಅಲ್ಲಿ ಬಾಲ್ಯ ಕಳೆದು, ಉಕ್ಕಿನ ಕಾರ್ಖಾನೆಗೆ ಹೆಸರಾದ ಭದ್ರಾವತಿಯ ಸಮೀಪದ ಬಯಲನಾಡು ತಿಮ್ಮಾಪುರಕ್ಕೆ ಬಂದು, ನನ್ನ ಯೌವನದ ದಿನಗಳನ್ನು ಸವೆಸಿದ್ದು, ಇಲ್ಲಿಯೇ ಮನೋಹರ್ ಅವರನ್ನು ಪ್ರೇಮಿಸಿದ್ದು, ನಂತರ ಬಿಸಿಲನಾಡು ಸಿಂಧನೂರಿಗೆ ಹೋಗಿದ್ದು, ಮಗ ಹುಟ್ಟಿದ ಮೇಲೆ ಮಾಯಾನಗರಿ ಬೆಂಗಳೂರಿಗೆ ಪಯಣಿಸಿದ್ದು, ಈಗ ಎಲ್ಲವನ್ನೂ ಬಿಟ್ಟು, ಮತ್ತದೇ ಭದ್ರಾವತಿಯ ಸಮೀಪದ ಗುಡ್ಡದ ಹಟ್ಟಿಗೆ ಬಂದು ಪಂಚಮವೇದ ತೋಟದಮನೆ ತಲೆ ಎತ್ತುವಂತೆ ಮಾಡಿದ್ದು…ಎಲ್ಲವೂ ನನ್ನ ಕಣ್ಣಮುಂದೆ ನಿಚ್ಚಳವಾಗಿ ಕಾಣಿಸುತ್ತಿದೆ. ಬದುಕಿನಲ್ಲಿ ಬಂದು ಹೋದ ಪಾತ್ರಗಳೆಲ್ಲವೂ ನನ್ನ ಕಣ್ಣೆದುರು ಹಾದು ಬರುತ್ತಿವೆ. ಈ ಪಂಚಮವೇದದ ಒಟ್ಟು 27 ಎಕರೆ ಜಾಗದಲ್ಲಿ ನಿಂತು ಬದುಕಿನ ಒಂದೊಂದೇ ಪುಟಗಳನ್ನು ಮಗುಚಿ ಹಾಕುತ್ತಿದ್ದೇನೆ. ಇದರಲ್ಲಿ ಒಳ್ಳೆಯದಿತ್ತು, ಕೆಟ್ಟದಿತ್ತು, ನೋವಿತ್ತು, ನಲಿವಿತ್ತು, ಸೋಲಿತ್ತು, ಯಶಸ್ಸಿತ್ತು… + +(ಭಾರತಿ ಹೆಗಡೆ) + +ಯಾವುದೇ ಸಂಘರ್ಷವಿಲ್ಲದ ಬದುಕು ಅದೊಂದು ಬದುಕೇ ಅಲ್ಲ ಎಂದು ಬಗೆದವಳು ನಾನು. ನಷ್ಟವಿಲ್ಲದ ವ್ಯಾಪಾರವಿಲ್ಲ, ಕಷ್ಟವಿಲ್ಲದ ಬೇಸಾಯವಿಲ್ಲ, ನೋವಿಲ್ಲದ ಸಂಸಾರವಿಲ್ಲ, ಕಷ್ಟವಿಲ್ಲದ ಮನುಷ್ಯನೂ ಇಲ್ಲ. ಆದರೆ ಇದೆಲ್ಲವನ್ನೂ ಜಯಿಸಿ ಅಲ್ಲಿ ಖುಷಿ ಕಾಣುವುದೇ ಜೀವನ ಎಂಬ ಪಾಠವನ್ನೂ ಕಲಿತವಳು…! + +ಅಪ್ಪ ಹೇಳಿದಂತೆ ನಿಜಕ್ಕೂ ಇದು ಮುಳ್ಳಿನ ಮೇಲಿನ ಹೂವೇ… ಯಾವತ್ತೂ ನಾವು ಹೂವಿನ ಹಾಸಿಗೆಯ ಮೇಲೆ ನಡೆದವರಲ್ಲ. ಅಷ್ಟು ಸುಲಭಕ್ಕೆ ಯಾವುದೂ ನಮಗೆ ದಕ್ಕಲೂ ಇಲ್ಲ. ಆದರೆ ಮುಳ್ಳುಗಳನ್ನು ನಿವಾರಿಸಿಕೊಂಡು ಮುನ್ನಡೆದಿದ್ದೇವೆ. ಈಗ ಅರಳಿದ ಹೂವಂತೆ ಈ ಪಂಚಮವೇದ ಇಂದು ತಲೆ ಎತ್ತಿ ನಿಂತಿದೆ. + +ಈ ಹೋರಾಟಗಳಲ್ಲೆಲ್ಲಿಯೂ ನನಗೆ ಪಶ್ಚಾತ್ತಾಪವಿರಲಿಲ್ಲ. ಹಾಗೆ ನೋಡಿದರೆ ಇದು ನಾನೇ ಆಯ್ದುಕೊಂಡ ಬದುಕು. ನನ್ನ ಬದುಕನ್ನು ಅಪ್ಪ ಅಮ್ಮನ ಮಡಿಲಿಗೆ ಹಾಕಲಿಲ್ಲ. ಪ್ರೇಮಿಸಿ ಮದುವೆಯಾಗಿ ನನ್ನ ಹಾದಿಯನ್ನು ನಾನೇ ಕಂಡುಕೊಂಡೆ. ಮನೋಹರ್ ಅವರನ್ನು ಮದುವೆಯಾದ ಮೇಲೂ ಸಂಪೂರ್ಣವಾಗಿ ಅವರನ್ನು ಅವಲಂಬಿಸಕೂಡದು ಎಂಬ ತತ್ವ ನನ್ನದಿತ್ತು. ಅದಕ್ಕೆ ನೀರೆರೆದವರು ಮನೋಹರ್. ಅದೀಗ ಫಲ ಕೊಟ್ಟಿದೆ. ಯಾಕೆಂದರೆ ನಮ್ಮನ್ನು ನಾವು ನಂಬಿ ಮುನ್ನಡೆದಾಗ ಮಾತ್ರ ನಮಗೆ ಯಶಸ್ಸು ಸಿದ್ಧ ಎಂಬ ತತ್ವದಡಿ ಬದುಕಿದವಳು ನಾನು. ಆ ತತ್ವವೇ ಇಂದಿಗೂ ಮುಂದೆಯೂ ಮುನ್ನಡೆಸುತ್ತದೆ ಎಂದು ನಂಬಿದ್ದೇನೆ… + +ಮತ್ತೆ ನೆನಪಾಗುತ್ತಿದೆ, ಪ್ರೇಮವೆನಲು ಹಾಸ್ಯವೇ ಎಂಬ ಸಾಲುಗಳು. ಪ್ರೇಮಕ್ಕೊಂದು ಜವಾಬ್ದಾರಿ ಇದೆ. ಅದು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಮರ ಸುತ್ತುವ ಸಿನಿಮೀಯವಾದ ಪ್ರೇಮವಾಗಿರಲಿಲ್ಲ. ಬದುಕಿನ ಛಲ ಹುಟ್ಟಿಸುವ ಪ್ರೇಮವದು… ಬದುಕಲು ಸಾಧ್ಯವೇ ಇಲ್ಲ ಎಂಬಂತಹ ದಿನಗಳು ನಮಗೂ ಬಂದಿದ್ದವು. ಆದರೂ ಸೋಲಲಿಲ್ಲ… ಸೋಲುವುದಕ್ಕೆ ಈ ಪ್ರೇಮ ಬಿಡಲೂ ಇಲ್ಲ…! + + + +ಇದು ಇಳಿಸಂಜೆಯ ತೃಪ್ತ ಜೀವನದ ಕಥೆಯಲ್ಲ, ಮುಸ್ಸಂಜೆಯ ಪ್ರಸಂಗವೂ ಅಲ್ಲ, ಬೆಳ್ಳಂಬೆಳಗಿನ ಚೇತೋಹಾರಿಯಾದ ವಾತಾವರಣವೂ ಅಲ್ಲಿರಲಿಲ್ಲ. ಇದು ನಟ್ಟ ನಡು ಮಧ್ಯಾಹ್ನದ ಇಂಚಿಂಚೇ ಆಗಿ ಸರಿದು ಹೋಗುವ ಸೂರ್ಯನ ಪ್ರಖರ ಬೆಳಕಿನ ಕೋಲ್ಮಿಂಚಿನ ಥರಹದ ಬದುಕಿನ ಪುಟಗಳು… ಒಂದೊಂದೇಯಾಗಿ ಮಗುಚಿಕೊಳ್ಳುತ್ತಿವೆ ನನ್ನೆದುರು…! + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_103.txt b/Kenda Sampige/article_103.txt new file mode 100644 index 0000000000000000000000000000000000000000..264ce8d6c8ac2970a0680a84ad81e7685d64e5b3 --- /dev/null +++ b/Kenda Sampige/article_103.txt @@ -0,0 +1,83 @@ +ಒಂದು ದಿನ ರಾತ್ರಿ ಮುದುಕನ ಮೈಯಾಗ ದೇವರು ಬಂತು. ಅಂವಾ ಕಾನ್ಹೂ ಸತಿಮಾತೆಯ ಮಾಲೀದಾ ಪ್ರಸಾದ ಮಾಡಾಕ ಹೇಳಿದ. ಕಾನ್ಹೂ ಸತಿಮಾತೆ ಬೇಲದಾರರ ಕುಲದೇವತೆ. ಬೇಲದಾರರು ಈ ದೇವತೆಗೆ ಶ್ರದ್ಧೆಯಿಂದ ನಡಕೊಳ್ತಾರೆ. ಸಂಕಟ ಬಂದಾಗಲೆಲ್ಲ ಈ ಮಂದಿ ಸತೀ ಮಾತೆಗೇ ಮಾಲೀದಾದಿಂದ ಮಾಡಿದ ನೇವೇದ್ಯ ತೋರಿಸ್ತಾರು. ಆವಾಗ ಆ ದೇವಿ ದುಃಖ ನಿವಾರಣೆ ಮಾಡ್ತಾಳು. ಬೇಲದಾರರಿಗೆ ಕೆಲಸ ಸಿಗದಿದ್ದರ, ಆಕಿಗೆ ನೇವೇದ್ಯ ತೋರಿಸಿದರ, ಆಕಿ ಆಶೀರ್ವಾದದಿಂದ ಕೆಲಸ ಸಿಗತಿತ್ತು. ಮುದುಕ ಶೆರಿ ಕುಡಿದ ದಿನಾ ಸತೀಮಾತೆಯ ಕಥಿ ಹೇಳತಿದ್ದ. ಆ ಕಥಿ ಹಿಂಗದ – ‘ಇದು ನಾನೂರು ವರುಷದ ಹಿಂದಿನ ಕಥಿ. ಬುಲ್ಡಾಣಾ ಜಿಲ್ಲೆಯ ಪಾನ್ಹೋರಾ ಎಂಬ ಹಳ್ಳಿಯೊಳಗ 20-25 ಬೇಲದಾರರ ಬಿಡಾರ ಇಳಿದಿತ್ತು. ಒಂದು ದಿನ ಬೇಲದಾರ ಜನರ ಜಾತಿ ಪಂಚಾಯತಿ ಸೇರಿತು. ಆವತ್ತು ಮದವಿ ಮಾಡೋದು, ಮದವಿ ಮುರಿಯೋದು ಎಲ್ಲ ನಡೀತದ. ಪಂಚರು ಗ್ಲಾಸ ಮ್ಯಾಲೆ ಗ್ಲಾಸ ಶೆರಿ ಕುಡಿತಿದ್ದರು. ಒಬ್ಬ ಬೇಲದಾರರ ಪೋರಿ ನೋಡಾಕ ಭಾಳ ಚೆಂದ ಇದ್ಲು. ಆಕಿ ಹೆಸರು ಕಾನ್ಹೂ. ಪೇನೆಖಾನೆ ಎಂಬ ಬೇಲದಾರ ಯುವಕನ ಜೋಡಿ ಕಾನ್ಹೂಳ ಲಗ್ನ ನಿಕ್ಕಿಯಾತು. ಆ ಯುವಕನಿಗೆ ರಗುತ ವಾಂತಿ ಮಾಡಿಕೊಳ್ಳೊ ರೋಗಯಿತ್ತು. ಈ ವಿಷಯ ಕಾನ್ಹೂಳ ತಾಯಿ ತಂದಿಗೆ ಗೊತ್ತಾತ. ಅವರು ಈ ಲಗ್ನಕ್ಕೆ ಒಪ್ಪಿಗೆ ಕೊಡಲಿಲ್ಲ. ಆಗ ಆ ಯುವಕನ ಅಪ್ಪ ಜಾತಿ ಪಂಚಾಯತಿ ಕರೆದ. ನಮ್ಮ ಮಂದ್ಯಾಗ ಪಂಚರ ಮುಂದ ಒಮ್ಮಿ ಮಾತು ಕೊಟ್ಟಿರಿ ಅಂದರ ಬದಲಾಯಿಸಾಂಗಿಲ್ಲ. ಜಾತಿ ಪಂಚಾಯತಿಯೇ ಈ ಲಗ್ನ ನಿಕ್ಕಿ ಮಾಡಿತ್ತು. ಹಿಂಗಾಗಿ ಅವರು ಮದವಿ ಮಾಡಿದರು. + +(ಅಶೋಕ ಪವಾರ) + +ಕಾನ್ಹೂ ಗಂಡನ ಮನಿಗೆ ಹೋದ್ಲು. ಒಂದೆರಡು ತಿಂಗಳು ಕಳೆಯಿತು. ಕಾನ್ಹೂಳ ಸಂಸಾರ ನಡೀತು. ಆದರ ಆಕಿ ಗಂಡನ ರೋಗ ಹೆಚ್ಚಾಯಿತು. ಅಂವಾ ಹಾಸಿಗಿನೇ ಹಿಡಿದ. ಅನ್ನ ನೀರು ಬಿಟ್ಟ. ಮೈ ಸೊರಗಿ ಕಡ್ಡಿ ಹಾಂಗಾತು. ಜೀವಾ ಒದ್ದಾಡಾಕ ಹತ್ತಿತು. ಆಗ ಕಾನ್ಹೂ ಸ್ವತಃ ದುಡಿದು ಗಂಡನನ್ನು ಸಾಕಿದ್ಲು. ಗಂಡನ ಸೇವೆ ಮಾಡಿದ್ಲು. ಮತ್ತ ಒಂದೆರಡು ತಿಂಗಳು ಕಳೀತು. ಹಾಸಿಗ್ಯಾಗ ಮಲಗಿ-ಮಲಗಿ ಅವನ ದೇಹ ಕೊಳೀತು. ಹುಳಾ ಹತ್ತಿತು. ಹಾಸಿಗಿ ಮ್ಯಾಲೇ ಉಚ್ಚಿ-ಹೇಲು. ಆಕಿನೇ ಗಂಡನ ಉಚ್ಚಿ ಹೇಲು ಬಳಿತಿದ್ಲು. ಎಷ್ಟೋ ದ್ಯಾವರು – ದೇವರ್ಸಿಗಳಾದರು. ಬೂದಿ-ವಿಭೂತಿ, ಭಸ್ಮ ಎಲ್ಲ ಹಚ್ಚಿ ನೋಡಿದರು. ಆದರೆ ಕಾನ್ಹೂನ ಗಂಡ ಮಾತ್ರ ನೆಟ್ಟಿಗಾಗಲಿಲ್ಲ. ಅಂತೂ ಕೊನೆಗೊಂದು ದಿನಾ ಅಂವಾ ಸತ್ತ. ಅವನ ಹೆಣದ ಸುತ್ತಲೂ ಕುಂತು ಎಲ್ಲರೂ ಬೊಬ್ಬೆ ಹೊಡೆದು ಅತ್ತರು. ಅತ್ತಿ-ಮಾವ ಕಾನ್ಹೂಳಿಗೇ ಬಯ್ಯಾಕ ಹತ್ತಿದರು. ಈ ಪೋರಿ ಕೆಟ್ಟ ಕಾಲ್ಗುಣದಾಕಿ. ಆಕಿಯಿಂದಾನೇ ನನ್ನ ಮಗ ಸತ್ತ. ಆಕಿ ಈಗ ಗಂಡನ್ನ ನುಂಗಿ ಕುಂತಾಳು. ಕಾನ್ಹೂ ಹರೇದಾಗ ರಂಡಿಯಾದ್ಲು. ಸುತ್ತಮುತ್ತ ಹಳ್ಳಿಯೊಳಗ ಬಿಡಾರ ಮಾಡಿಕೊಂಡಿದ್ದ ಎಲ್ಲ ಬೇಲದಾರ ಮಂದಿ ಮಣ್ಣಿಗೆ ಬಂದರು. ಕಟ್ಟಿಗಿ ತಂದರು. ಊರ ಹೊರಗ ಆಗಸಿ ಹತ್ತರ ತಂದರು. ಅಲ್ಲಿ ಚಿತೆ ತಯಾರ ಮಾಡಿದರು. + +ಕಾನ್ಹೂಳ ಗಂಡನಿಗೆ ಜಳಕ ಹಾಕಿದರು. ಹೊಸ ಅರವಿ ತೊಡಿಸಿದರು. ಕಾನ್ಹೂಳ ಕೊಳ್ಳಾಗಿದ್ದ ಕರೀಮಣಿ ಸರ ತುಂಡ ಮಾಡಿದರು, ಹಣಿ ಮ್ಯಾಲಿನ ಕುಂಕುಮ ಅಳಿಸಿದರು. ಕಾನ್ಹೂಳ ಕಣ್ಣು ಅತ್ತು-ಅತ್ತು ಕೆಂಪಾಗಿತ್ತು. ಹಣಿ-ಹಣಿ ಬಡಕೊಂಡ್ಲು. ಎಚ್ಚರ ತಪ್ಪಿ ಬಿದ್ಲು. ಎಲ್ಲಾರೂ ಹೆದರಿದರು. ಆಕಿ ಮಾರಿಗೆ ನೀರ ಹೊಡೆದ ಮ್ಯಾಗ ಆಕಿ ಎಚ್ಚರ ಆತು. ಆಕಿ ಎದ್ದು ಕುಂತಳು. ನಾನ ಸತಿ ಹೋಗತೇನಿ ಅಂದ್ಲು. ಎಲ್ಲ ಬೇಲದಾರರು ಅಂಜಿದರು. ಜಾತಿ ಪಂಚಾಯತಿ ಸಭೆ ಕರೆದರು, ಅವರು ಕಾನ್ಹೂಳಿಗೆ ಸತಿ ಹೋಗಾಕ ವಿರೋಧ ಮಾಡಿದರು. ಆದರೆ ಕಾನ್ಹೂಳ ತಾಯಿ-ತಂದಿ, ಅತ್ತಿ-ಮಾವ ಆಕಿಗೆ ಸತಿ ಹೋಗಾಕ ಅನುಮತಿ ಕೊಡರಿ ಅಂತ ಜಾತಿ ಪಂಚಾಯತಿಗೆ ಹೇಳಿದರು. ಆದರೂ ಪಂಚರು ಅನುಮತಿ ಕೊಡಲಿಲ್ಲ. ಆದರ ಕಾನ್ಹೂ ಮಾತ್ರ ಹಠ ಬಿಡಲಿಲ್ಲ. ಈ ಪ್ರಕರಣ ಊರ ಗೌಡರ ಮುಂದ ಒಯ್ದರು. ಗೌಡರೂ ವಿರೋಧ ಮಾಡಿದರು. ಆದರೂ ಕಾನ್ಹೂ ಹಠ ಬಿಡಲಿಲ್ಲ. ಆಗ ಗೌಡ ಸಿಟ್ಟಿಗೆದ್ದು ‘ಏ ಪೋರಿ, ನೀನು ಸತಿ ಹೋಗಬೇಕಂತಿ ಯಲ್ಲ, ನಿನ್ನ ಹಂತ್ಯಾಕ ಅಂಥ ಯಾವ ಶಕ್ತಿಯದ ತೋರಿಸು’ ಎಂದರು. ಗೌಡರ ಆ ಮಾತಿಗೆ ಆಕಿ ನಡೆಯಾಕ ಶುರು ಮಾಡಿದ್ಲು. ಆಕಿ ಪ್ರತಿ ಹೆಜ್ಜಿ ಕೆಳಗ ಕುಂಕುಮದ ಹೆಜ್ಜಿ ಮೂಡಿದ್ದು ಕಾಣಿಸಿತು. ಗೌಡ ಬೆರಗಾದ. ಆಕಿಗೆ ಸತಿ ಹೋಗಾಕ ಅನುಮತಿ ನೀಡಿದ. ಜಾತಿ ಪಂಚಾಯತಿನೂ ಒಪ್ಪಿಗೆ ನೀಡಿತು. ಇಡೀ ಊರಾಗ ಈ ಸುದ್ದಿ ಹಬ್ಬಿತು. ಊರಿಗೆ ಊರೇ ಬೇಲದಾರರ ಬಿಡಾರಕ್ಕ ಬಂತು. ಹೆಂಗಸರು ಕಾನ್ಹೂಳಿಗೆ ಜಳಕ ಹಾಕಿದರು. ‘ಸತೀ ಮಾತಾ ಕಾನ್ಹೂಳಿಗೆ ಜೈ’ ಎಂದರು. ಸೀರಿ ಉಡಸಿದರು. ಅಡ್ಡ ಕುಂಕುಮ ಹಚ್ಚಿದರು. ಕೊರಳಿಗೆ ಕರೀಮಣಿ ಸರ ಹಾಕಿದರು. ಕಾಲ ಬೆರಳಿಗೆ ಕಾಲುಂಗುರ ಹಾಕಿದರು. ಹಿಂಗ ಎಲ್ಲ ತಯಾರಿ ಮಾಡಿದರು. ಬೇಲದಾರರೂ ಶೆರಿ ಕುಡಿದು ಟೈಟ್ ಆಗಿದ್ದರು. ಒಬ್ಬಾಂವ ಕಾನ್ಹೂಳನ್ನು ಹೆಗಲ ಮ್ಯಾಲೆ ಹೊತಕೊಂಡ. ಮುಂದೆ ಆಕಿ ಗಂಡನ ಹೆಣಕ್ಕ ನಾಲ್ಕಮಂದಿ ಹೆಗಲು ಕೊಟ್ಟಿದ್ದರು. ಅದಕ್ಕಿಂತ ಮುಂದೆ `ಡಂಗ್ ಚಿಕ್ ಡಡಂಗ ಡಂಗ’ ಅಂತ ಹಲಗಿ ಬಾರಿಸಾಕ ಹತ್ತಿದ್ದ. ಎಲ್ಲಾರೂ ಹಾದಿ ಹಿಡಿದು ಹೊಂಟರು. ಇಡೀ ಊರಿಗೆ ಊರೇ ಬೆನ್ನ ಹಿಂದೆ ಬರಾಕ ಹತ್ತಿತ್ತು. ಬೇಲದಾರರು ಕುಣಿತಿದ್ದರು. ಕಾನ್ಹೂಳಿಗೆ ನಿವಾಳಿಸಿ ಚಿಲ್ಲರೆ ದುಡ್ಡು ಬೀಸಿ ಒಗಿತಿದ್ದರು. ನಡೀತಾ ನಡೀತಾ ಚಿತೆ ಹತ್ತರ ಬಂದರು. ಕಾನ್ಹೂಳನ್ನು ಹೆಗಲ ಮ್ಯಾಲಿಂದ ಕೆಳಗ ಇಳಿಸಿದರು. + +ಆಕಿ ಚಿತೆ ಮ್ಯಾಲೆ ಏರಿದಳು. ಗಂಡನ ಹೆಣ ತೊಡಿ ಮ್ಯಾಲೆ ಇಟಕೊಂಡ್ಲು. ಆಮ್ಯಾಲೆ ಆಕಿ ಬೇಲದಾರರಿಗೆ ಹೇಳಿದ್ಲು, ‘‘ಬೇಲದಾರರೆ, ನಾನೀಗ ಹೊಂಟೆ. ನೀವು ಚಿತೆಗೆ ಉರಿ ಹಚ್ಚಿದ ಮ್ಯಾಲೆ ಇಲ್ಲೇ ನಿಂದರ್ರಿ. ನಾನು ಸುಟ್ಟ ಹ್ವಾದ ಮ್ಯಾಲೆ ಬೆಂಕಿಯಿಂದ ಹೊರ ಬರ್ತೇನಿ. ನಿಮಗೊಂದು ವಸ್ತು ಕೊಡ್ತೀನಿ. ಅದನ್ನ ತಗೊಂಡು ಮನಿಗೆ ಹೋಗರಿ. ಆ ವಸ್ತು ಒಂದು ಪೆಟ್ಟಿಗ್ಯಾಗ ಇಡರಿ. ಮುಂದ ನಿಮ್ಗ ಹತ್ತು ಊರು ತಿರುಗಾಡೋ ಪಾಳಿ ಬರಾಂಗಿಲ್ಲ. ನೀವು ಲಕ್ಷಾಧಿಪತಿ ಆಗತೀರಿ. ಆದರ ನಿದ್ದಿ ಮಾಡಬ್ಯಾಡರಿ. ಜಾಗರಣೆ ಮಾಡರಿ. ಹಚ್ಚರಿ ಬೆಂಕಿ ಚಿತೆಗೆ’’. ಊರ ಮಂದಿ ಮತ್ತು ಬೇಲದಾರರು ಕಾನ್ಹೂಳ ಮೈಮ್ಯಾಗ ತುಪ್ಪದ ಡಬ್ಬಿ ಸುರವಿದರು. ಕಾನ್ಹೂಳ ಮಾವ ಮುಂದ ಬಂದ. ಚಿತೆಗೆ ಬೆಂಕಿ ಹಚ್ಚಿದ. ಬೆಂಕಿ ಭಗಭಗ ಅಂತ ಉರಿಯಾಕ ಹತ್ತಿತು. ಕಾನ್ಹೂಳ ಆಕ್ರಂದನ ಪ್ರತಿಧ್ವನಿಯಾಗಿ ಕೇಳಬರಾಕ ಹತ್ತಿತು. ಎಲ್ಲಾರೂ ಶೆರಿ ಕುಡಿದಿದ್ದರು. ಸತೀ ಮಾತೆಗೆ ಜೈ ಅಂತ ಕುಣಿಯಾಕ ಹತ್ತಿದ್ದರು. ಕೂಗುತಿದ್ದರು. ಜರಾ ಹೊತ್ತ ಆದ ಮ್ಯಾಗ ಎಲ್ಲಾನೂ ಶಾಂತವಾಯಿತು. ಕಾನ್ಹೂ ಗಂಡನ ಜೋಡಿ ಸುಡಾಕ ಹತ್ತಿದ್ಲು. ಮುಂದ ಬೆಂಕಿ ನಡುವಿಂದ ಫಟ್ ಅಂತ ಸದ್ದಾಯಿತು. ತಲೀ ಒಡೀತು. ಎಲ್ಲ ಊರ ಮಂದಿ ಮತ್ತು ಬೇಲದಾರ ಹೆಂಗಸರು ತಿರುಗಿ ಹೋದರು. ಅಲ್ಲಿ ಬರೇ ಬೇಲದಾರರು ಮತ್ತು ದಾಡಿ ಜಾತಿ ಮಾತ್ರ ಉಳಿದರು. ಸಾಕಷ್ಟು ಹೊತ್ತಾತು. ಕಾನ್ಹೂ ಬೆಂಕಿಯಿಂದ ಹೊರಗ ಬರೋ ಹಾದಿ ಬೇಲದಾರರು ಕಾಯಾಕ ಹತ್ತಿದರು. ಆಕಿ ಎಷ್ಟ ಹೊತ್ತಾದರೂ ಬಂದಿಲ್ಲ. ಬೇಲದಾರರು ಬ್ಯಾಸತ್ತ ಹ್ವಾದರು. ಅವರು ದಾಡಿ ಜಾತಿಗೆ ಜಾಗರಣೆ ಮಾಡಾಕ ಹೇಳಿದರು, ಕಾನ್ಹೂ ಬಂದ ಮ್ಯಾಲೆ ನಮಗ ಎಬ್ಬಿಸು ಅಂತ ಹೇಳಿ ಎಲ್ಲಾ ಬೇಲದಾರರು ಮಲಗಿಬಿಟ್ಟರು. ದಾಡಿ ಜಾತಿ ಮಾತ್ರ ಜಾಗರಣೆ ಮಾಡಿದರು. + +ಮುಂದ ಕಾನ್ಹೂ ಬೆಂಕಿಯಿಂದ ಹೊರಗ ಬಂದ್ಲು. ನೋಡಿದರ ಎಲ್ಲಾ ಬೇಲದಾರರು ಮಲಕ್ಕೊಂಡಾರು. ದಾಡಿ ಜಾತಿಯವರು ಮಾತ್ರ ಎಚ್ಚರವಾಗಿದ್ದರು. ಆಕಿಗೆ ಕೆಟ್ಟ ಅನಿಸ್ತು. ಆಕಿ ದಾಡಿ ಜಾತಿ – ಅವರಿಗೆ ಸೀರಿ ಧಡಿ ಕೊಟ್ಲು. ಅದನ್ನ ಪೆಟ್ಟಿಗ್ಯಾಗ ಇಡಾಕ ಹೇಳಿದ್ಲು. ಮತ್ತು ಎಲ್ಲ ಬೇಲದಾರ ಮಂದಿ ಭಿಕ್ಷುಕರಾಗೇ ಇರ್ತಾರು ಅಂತ ಶಾಪ ಕೊಟ್ಲು. ಆಕಿ ಅದೃಶ್ಯ ಆದ್ಲು. ದಾಡಿ ಜಾತಿಯವರು ಬೇಲದಾರರನ್ನು ಎಬ್ಬಿಸಿದರು. ಅವರು ಯಾವ ವಿಷಯಾನೂ ಹೇಳಲಿಲ್ಲ. ಎಲ್ಲಾರೂ ತಮ್ಮ ತಮ್ಮ ಬಿಡಾರಕ್ಕ ಹ್ವಾದರು. ದಾಡಿಜಾತಿ ಪೆಟ್ಟಿಗ್ಯಾಗ ಇಟ್ಟ ಸೀರಿ ಥಡಿ ಬಂಗಾರ ಆಯಿತು. ಆವತ್ತಿನಿಂದ ದಾಡಿಜಾತಿ ಲಕ್ಷಾಧಿಪತಿ ಆದರು, ಬೇಲದಾರರು ಭಿಕ್ಷಾಧಿಪತಿಯಾಗೇ ಉಳಿದರು. + +ಆಮ್ಯಾಲೆ ಆಕಿ ಬೇಲದಾರರ ದೇವಿ ಆದ್ಲು. ಆಕಿಗೆ ಹರಕೆ ಹೊತ್ತರ ಫಲ ಸಿಗಾಕ ಹತ್ತಿತು. ಬೇಲದಾರರು ಆಕಿ ಪೂಜಿ ಮಾಡಾಕ ಸುರು ಮಾಡಿದರು. ಸಂಕಟ ಬಂತಂದರ ಮಾಲೀದಾ ನೇವೇದ್ಯ ತೋರಿಸ್ತಾರು. ಆಕಿನೇ ಮುಂದ ಬೇಲದಾರರ ಕಾನ್ಹೂ ಸತೀ ಮಾತೆಯಾದ್ಲು. + +ಅಪ್ಪನಿಗೆ ಕೆಲಸ ಸಿಗಲಿ ಅಂತ ಸತಿ ಮಾತೆಗೆ ಮಾಲೀದದ ನೈವೇದ್ಯ, ತೋರಿಸೋದು ನಿಕ್ಕಿಯಾಯಿತು. ಅಪ್ಪ ಒಂದೂವರಿ ಶೇರ ಗೋದಿ ತಂದ. ಊರಾಗ ಹಿಟ್ಟಿನ ಗಿರಣಿಯಿಲ್ಲ, ನಮ್ಮ ಮನ್ಯಾಗ ಬೀಸೋ ಕಲ್ಲಿಲ್ಲ. ಬೀಸೊಧ್ಯಾಂಗ ಅನ್ನೋ ಪ್ರಶ್ನೆ ಬಂತು. ಆವಾಗ ನಾನೂ, ಅವ್ವ ಊರಾಗ ಬೀಸಿ ತರಾಕ ಹೋದವಿ. ಬೀಸಾಕ ಜರಾ ಬೀಸೋಕಲ್ಲ ಕೊಡರಿ ಅಂದಿವಿ, ಆದರ ಯಾರೂ ಕೊಡಲಿಲ್ಲ. ಬೀಸೋಕಲ್ಲ ಸಲುವಾಗ ಇಡೀ ಊರ ತುಂಬ ತಿರುಗಾಡಿದಿವಿ. ಜನ ನಮ್ಮನ್ನು ಕ್ಷುದ್ರ ಅಂತ ತಿಳಕೊಳ್ಳತಿದ್ದರು. ನಮ್ಮ ಹುಚ್ಚು ಅವತಾರ ನೋಡಿ ನಾಯಿಗಳು ಬೊಗಳಾಕ ಹತ್ತಿದ್ವು. ಹೆಂಗಸರು ಮನೀ ಬಾಗಿಲಾದಾಗ ನಿಂತು ನಗಾಕ ಹತ್ತಿದರು. ಕೆಲವರು ಚ್ಯಾಷ್ಟಿ ಮಾಡತ್ತಿದ್ದರು. ‘ನೋಡರಿ ಪಾವಣ್ಯಾರ ಬಂದರು’ ಅಂತ ಹಂಗಿಸುತ್ತಿದ್ದರು. ನಾವು ಮಾತ್ರ ಬೀಸೋಕಲ್ಲಿಗಾಗಿ ಯಾಚನೆ ಮಾಡತಿದ್ವಿ. + +ಕೊನೆಗೆ ಒಬ್ಬ ಮುದುಕಪ್ಪನಿಗೆ ನಮ್ಮ ಮ್ಯಾಲೆ ದಯೆ ಬಂತು. ಅವನ ಹೆಂಡತಿ ಬೀಸೊಕಲ್ಲ ಕೊಡಾಕ ತಯಾರಿರಲಿಲ್ಲ, ಮುದುಕಪ್ಪ ಆಕಿ ಮನಸು ಬದಲಾಯಿಸಿದ. ಆಕಿ ಪಡಸಾಲ್ಯಾಗ ಬೀಸೊಕಲ್ಲು ತಂದಿಟ್ಟಳು. ಅವ್ವ ಗೋದಿ ಗಂಟು ಬಿಚ್ಚಿ ಬೀಸಾಕ ಕುಂತ್ಲು. ಒಂದು ಮುಟಗಿ ಗೋದಿ ಹಾಕಿ ಒಂದು ಸಾಲು ಹಾಡತಿದ್ಲು. ಬೀಸೊಕಲ್ಲು ಘರಾಘರಾ ತಿರಗತಿತ್ತು. + +ಅವ್ವ ಬೀಸಾಕ ಕುಂತಾಗ ನನಗ ನೀರಡಿಕೆ ಆಯಿತು. ಅವ್ವನಿಗೆ ನನ್ನ ಕಡಿ ಲಕ್ಷಯಿರಲಿಲ್ಲ. ಸಾವಕಾಶ ಎದ್ದು ಮನಿಯೊಳಗೆ ನುಗ್ಗಿದೆ. ತಂಬಿಗಿ ತಗೊಂಡು ನೀರಾಗ ಮುಳುಗಿಸಿದೆ. ತಂಬಿಗಿಗೆ ಬಾಯಿ ಹಚ್ಚಿ ಕುಡಿಯಾಕ ಶುರು ಮಾಡಿದೆ. ಯಜಮಾನಿ ಬಯ್ಯುತ್ತ ಓಡಿ ಬಂದ್ಲು. ತಂಬಿಗಿ ನನ್ನ ಕೈಯಿಂದ ಜಾರಿ ಕೆಳಗ ಬಿತ್ತು. + +ಬೆಂಕಿ ಹಚ್ಚಲಿ ಈ ಬೇಲದಾರ ಜಾತಿಗೆ. ಮಟನ-ಮೀನು ತಿನ್ನೋ ಹಲ್ಕಟ ಮಂದಿ. ಮೈಲಗಿ ಮಾಡಿಬಿಟ್ಟ. ಅಂತ ಬೊಬ್ಬೆ ಹೊಡೆದ್ಲು. ನೀರೆಲ್ಲ ಹೊರಗ ಸುರಿದ್ಲು. ಅಷ್ಟರಾಗ ಅವ್ವ ಬಂದು ನನಗ ಬಡಿದ್ಲು. ‘‘ನಾವು ಬೇಲದಾರ ಮಂದಿ. ಕೆಳಗಿನ ಜಾತಿಯವರು. ಯಾಕ ಮೈಲಗಿ ಮಾಡಿದಿಯೋ ಭಾಡ್ಯಾ’’ ಅಂತೆಲ್ಲ ಬಾಯಿಗೆ ಬಂದಾಗ ಬಯ್ದಳು. ನಾನು ಹೆದರಿ ಕಂಗಾಲು. ಆ ಯಜಮಾನಿ ಅವ್ವನಿಗೆ ಬೈದಳು ‘‘ಏನೇ ಉಂಡಗಿ ರಂಡೆ, ನಿನಗೂ ಬುದ್ಧಿ ಬ್ಯಾಡೇನು. ಕಣ್ಣ ಮುಚಕೊಂಡು ಕುಂತಿಯೇನು? ಸಾಕ ಮಾಡು ಬೀಸೋದು. ಇಲಾಂದರ ಖಾರ ತುರುಕಿ ಬಿಡಿಸಾಕ ಹಚ್ಚತೇನ ನೋಡು. ಮೊದ್ಲು ಇಲ್ಲಿಂದ ಹೊರಗ ಹೋಗರಿ’’ ಪುಣ್ಯಕ್ಕ ಗೋದಿ ಬೀಸಿ ಮುಗಿದಿತ್ತು. ಅವ್ವ ನಡಗಾಕ ಹತ್ತಿದ್ಲು. ಹಿಟ್ಟು ಗಂಟಿನಾಗ ಕಟ್ಟಿಕೊಂಡ್ಲು. ತಾಯಿ-ಮಗ ಇಬ್ಬರೂ ಬಿಡಾರದ ಕಡಿಗೆ ಹೊಂಟವಿ. ಅವ್ವ ಅಪ್ಪನಿಗೆ ಇದನ್ನೆಲ್ಲ ಹೇಳ್ತೇನಿ ಅಂದ್ಲು. ನನಗ ಹೆದರಿಕೆ ಶುರುವಾಯಿತು. ಆದರ ಆಕಿ ಅಪ್ಪನಿಗೆ ಏನೂ ಹೇಳಲಿಲ್ಲ. + +ಸಂಜಿಗೆ ಅವ್ವ ಮತ್ತ ಮುದುಕಿ ಕೂಡಿ ಗೋದಿ ಹಿಟ್ಟು ಕಲಸಿ ದಪ್ಪ ರೋಟಿ ಮಾಡಿದರು. ಅದನ್ನ ಚೂರು ಚೂರು ಮಾಡಿದರು. ಅದರಾಗ ಬೆಲ್ಲ ಹಾಕಿದರು. ಆವಾಗ ಮಾಲೀದಾ ತಯಾರಾತು. ಮುದುಕ ದೇವರ ಪೆಟ್ಟಗಿ ತೆರೆದ. ದೇವರನ್ನು ತೊಳೆದ. ದೇವರ ಮುಂದ ಊದುಬತ್ತಿ ಹಚ್ಚಿದ. ಮಾಲೀದಾದ ರಾಶಿ ದೇವರ ಮುಂದಿಟ್ಟ. ಅದರ ಮ್ಯಾಗ ಎಣ್ಣಿದೀಪ ಹಚ್ಚಿದ. ಎಲ್ಲಾದರ ಮ್ಯಾಲೂ ಗೋಮೂತ್ರ ಸಿಂಪಡಿಸಿದ. ನಾವು ಕೈಮುಗಿದು ದೇವರಿಗೆ ನಮಸ್ಕಾರ ಮಾಡಿದ್ವಿ. ಮುದುಕ ದೇವರ ಮುಂದ ಶಿರಯಿಟ್ಟು ಬೇಡಿಕೊಂಡ. ‘‘ತಪ್ಪಾತು-ತಪ್ಪಾತು. ಕಾನ್ಹೂಸತಿ, ನಿನ್ನ ಹೇಲು- ಉಚ್ಚಿ ಕುಡಿತೇವಿ. ತಪ್ಪಾಗಿದ್ದರ ಕ್ಷಮಿಸು. ಮಕ್ಕಳ ಮರಿಗೆ ಸುಖಾ ಕೊಡು. ಬೇಗ ಕೆಲಸ ಸಿಗೋ ಹಾಂಗ ಮಾಡವ್ವ ತಾಯೀ..”. ಮುಂದ ಉಂಡು ಮಲಗಿದ್ವಿ. + +ನಸುಕಿಗೇ ಎದ್ದು ಕತ್ತಿ ಮ್ಯಾಲೆ ಬಿಡಾರ ಹೇರಿದ್ವಿ. ಹರದಾರಿ-ಹರದಾರಿ ನಡೀತ-ನಡೀತ ಕಾಟಿಖೇಡಾ ಅನ್ನೋ ಊರಿಗೆ ಬಂದು ಮುಟ್ಟಿದಿವಿ- ಅಲ್ಲೇ ಬಿಡಾರ ನಿಲ್ಲಿಸಿದಿವಿ. ನೀರು ಕುಡಿದಿವಿ. ಅಲ್ಲಿ ಧೋಂಡು ಮಾಮಾ ಭೇಟಿಯಾದ. ಅಪ್ಪ-ಅಂವಾ ನಮಸ್ಕಾರ ಮಾಡಿದರು. ಅವನಿಗೆ ಅಲ್ಲಿ ಕೆಲಸ ಸಿಕ್ಕಿತ್ತು. ಅಂವಾ ಅಂದ- ಸಾಮಾಯಿಕ ಕೆಲಸ ಮಾಡೋಣು. ಅಪ್ಪ-ಅಂವಾ ಕೂಡಿ-ಕೂಡಿ ಕೆಲಸ ಮಾಡೋದು ನಿಕ್ಕಿ ಆತು. ಅಂತೂ ಅಪ್ಪನಿಗೂ ಕೆಲಸ ಸಿಕ್ಕಿತು. ಅಪ್ಪ-ಅವ್ವ ಇದೆಲ್ಲ ಸತಿ ಮಾತೆಯ ಪುಣ್ಯ ಅಂದರು. ಆಕಿಗೆ ಮಾಲೀದಾದ ನೇವೇದ್ಯ ಮಾಡಿದ್ದರಿಂದಾನೇ ಕೆಲಸ ಸಿಗ್ತು ಅಂದರು. + +ಮುಂದ ಬಿಡಾರ ಹೊತಕೊಂಡು ಧೋಂಡು ಮಾಮಾನ ಬೆನ್ನ ಹತ್ತಿದ್ವಿ. ಮಾಮಾ ನಮ್ಮನ್ನ ಊರ ಹೊರಗ ಕರ್ಕೊಂಡ ಬಂದ. ಅಲ್ಲೊಂದು ಬಾವಿಯಿತ್ತು. ಅವನ ಬಿಡಾರಾನೂ ಅಲ್ಲೇ ಇತ್ತು. ಅವನ ಬಿಡಾರದ ಹತ್ತಿರಾನೇ ನಮ್ಮ ಬಿಡಾರಾನೂ ಇಳಿಸಿದಿವಿ. ಅಪ್ಪ ಮತ್ತು ಮಾಮಾ ಸಾಮಾಯಿಕ ಕೆಲಸ ಶುರು ಮಾಡಿದರು. + +ಧೋಂಡೋ ಮಾಮಾನಿಗೆ ಪಾಂಡೂ ಮತ್ತು ಸೋಮು ಅಂತ ಇಬ್ಬರು ಮಕ್ಕಳು. ನಂದೇ ವಯಸ್ಸು. ಈಗ ನಮ್ಮ ಬುದ್ದಿ ಬಲೀತಿತ್ತು. ಮೊದಮೊದಲು ನಾನು ಬಿಡಾರದಾಗ ಅಡಗಿ ಕುಂಡರತಿದ್ದೆ. ಮುಂದ ನಂದೂ ಅವರದೂ ದೋಸ್ತಿ ಆಯಿತು. ದಿನಾಲೂ ನಾನೂ, ಪಾಂಡೂ, ಸೋಮು ಕತ್ತಿ ಮೇಯಿಸಾಕ ಕರ್ಕೊಂಡು ಹೋಗತಿದ್ದಿವಿ. ನಡು-ನಡುವೆ ಚಿನ್ನಿದಾಂಡೂ, ಕಣ್ಮುಚ್ಚಾಲೆ ಆಟ ಆಡತಿದ್ವಿ. ಈಗ ನಾನೂ-ಪಾಂಡೂ ಜೀವದ ಗೆಳೆಯರಾದ್ವಿ. ಒಬ್ಬರನ್ನ ಬಿಟ್ಟು ಮತ್ತೊಬ್ಬರು ಒಂದು ತುತ್ತೂ ತಿಂತಿರಲಿಲ್ಲ. ಅಪ್ಪ-ಮಾಮಾ ಕಲ್ಲು ಒಡಿತಿದ್ದರು. ಅವ್ವ ಮತ್ತು ಸರಿಮಾಮಿ ಕಲ್ಲ-ಚೂರಿನ ಸಾರಿಗೆ ಮಾಡತ್ತಿದ್ದರು. ಕತ್ತಿಗಳಿಗೆ ಕೆಲಸ ಇರದಿದ್ದರ ನಾವು ಮೇಯಿಸಿಕೊಂಡು ಬರತಿದ್ವಿ. + +ನಮ್ಮಪ್ಪನಿಗೆ ಚಿಗರಿ ಸಾಕೋ ಹುಚ್ಚ ಭಾಳ. ಕಾಡಿಗೆ ಹೋಗಿ ಚಿಗರಿ ಮರಿ ಹಿಡಕೊಂಡು ಬಂದು ಸಾಕತಿದ್ವಿ. ಸ್ವಲ್ಪ ದೊಡ್ಡ ಆದ ಮ್ಯಾಲ ಹಗ್ಗದ ಕುಣಿಕೆ ಮತ್ತು ಪಂಜರಾ ತಗೊಂಡು ಅಪ್ಪ-ಮಗ ಇಬ್ಬರೂ ಕಾಡಿಗೆ ಹೋಗತಿದ್ವಿ. ಸರಿಯಾದ ಜಾಗ ನೋಡಿ ಪಂಜರಾ ಇಡತಿದ್ವಿ. ಪಂಜರದ ಸುತ್ತಲೂ ನೇಣಿನ ಹಗ್ಗ ಹಾಸತಿದ್ವಿ. ನಾವು ಪೆÇದೆ ಹಿಂದೆ ಅಡಗಿ ಕುಂಡರತಿದ್ವಿ. ಪಂಜರದಾಗಿರೋ ಚಿಗರಿ ಮರಿ ಕೂಗತಿತ್ತು. ಅದರ ಕೂಗು ಕೇಳಿ ಕಾಡಿನಾಗಿರೋ ಉಳಿದ ಚಿಗರೆಗಳು ಬರುತಿದ್ದವು. ಆವಾಗ ನೇಣು ಹಗ್ಗದಾಗ ಕಾಲು ಅಥವಾ ತಲೀ ಸಿಕ್ಕಿ ಹಾಕ್ಕೋತಿತ್ತು. ಚಿಗರಿ ಬಿಡಿಸಿಕೊಳ್ಳಾಕ ಒದ್ದಾಡುತ್ತಿತ್ತು. ನಮ್ಮ ಧ್ಯಾನ ಎಲ್ಲ ಅಲ್ಲೇ. ನಾವು ಓಡಿ ಬರತಿದ್ವಿ. ಗಪ್ಪಂತ ಚಿಗರಿ ಹಿಡಿತಿದ್ವಿ. ಅದರ ನೇಣ ಹಗ್ಗ ಬಿಡಿಸಿ, ಅದರ ಕಾಲು ಕಟ್ಟಿ ಹಾಕತಿದ್ವಿ. ಒಮ್ಮೊಮ್ಮೆ ಏನೂ ಸಿಗತಿರಲಿಲ್ಲ. ಒಮ್ಮೊಮ್ಮೆ ಐದಾರ ಚಿಗರಿ ಸಿಗತಿದ್ದವು. ಅದನ್ನ ಹೊತಕೊಂಡು ಬಿಡಾರಕ್ಕ ಬರತಿದ್ವಿ. ರಾತ್ರಿ ಚಿಗರಿ ಮಟನ ಊಟ ಮಾಡತಿದ್ವಿ. ಅಪ್ಪ ಶೆರಿ ಕುಡಿದು ಬರ್ತಿದ್ದ. ರಾತ್ರಿ ಉಂಡ ಮುಗಿದ ಮ್ಯಾಲೆ ಅವ್ವನಿಗೆ ಬರೀ ಬಯ್ಯತಾನೇ ಇರ್ತಿದ್ದ. ಧೋಂಡು ಮಾಮಾ ಅಪ್ಪನ ಮ್ಯಾಲೆ ಗುರುಗುಡತ್ತಿದ್ದ. ಹಾಂಗೆಲ್ಲ ಬಯ್ಯಬ್ಯಾಡರಿ. ಬಾಯಿ ಬಿಗಿ ಹಿಡೀರಿ. ಇಲ್ಲದಿದ್ದರ ಹಲ್ಲು ಉದುರಿಸೇ ಬಿಡತೇನಿ. ಅಪ್ಪ ಕ್ಯಾರೆ ಮಾಡತಿರಲಿಲ್ಲ. ಸರಿಮಾಮಿ ಧೋಂಡು ಮಾಮಾನಿಗೆ ಸಮಾಧಾನ ಮಾಡತಿದ್ಲು, ಆವಾಗ ಜಗಳ ತಣ್ಣಗಾಗತಿತ್ತು. + +ಕಾಟಖೇಡ ಊರಾಗಿನ ಕೆಲಸ ಮುಗೀತು. ಕೆಲಸ ಹುಡುಕ್ತ-ಹುಡುಕ್ತ ನಮ್ಮ ಬಿಡಾರ ಧುಂದಿ ಗಾಟೋಡಿ ಅನ್ನೋ ಊರಿಗೆ ಬಂತು. ಭಾಳ ಊರು ಸುತ್ತಾಡಿದಿವಿ. ಆದರ ಎಲ್ಲೂ ಕೆಲಸ ಸಿಗಲಿಲ್ಲ. ಉಪವಾಸ ಸಾಯೋ ಪಾಳಿ ಬಂತು. ಪ್ರತಿದಿವಸ ಅಪ್ಪ ಮತ್ತು ಮಾಮಾ ಎದ್ದವರೇ, ಮಾರಿಸೈತ ತೊಳಿದೇನೆ ಕೆಲಸ ಹುಡಕಾಕ ಹೊರ ಬೀಳತಿದ್ದರು. ಸುತ್ತಮುತ್ತಲಿನ ಹಳ್ಳಿ-ಹಳ್ಳಿ ಸುತ್ತಾಡಿ, ರಾತ್ರಿ-ಅಪರಾತ್ರಿಗೆ ಬಿಡಾರಕ್ಕ ಬರತಿದ್ದರು. ಅದೂ ಖಾಲಿ ಕೈಯಿಂದಾನೇ. ಅವ್ವ, ಮುದುಕಿ, ಸರಿಮಾಮಿ, ನಾನು ಪಾಂಡೂ ದಿನಾಲೂ ಊರಾಗ ಭಿಕ್ಕಿ ಬೇಡಾಕ ಹೋಗತಿದ್ವಿ. ಮುಂದ ಮುಂದ ಮಂದಿ ಭಿಕ್ಷಾ ಹಾಕೋದೂ ಬಿಟ್ಟರು. ಹಾಂಗ ಅರ್ಧ ಹೊಟ್ಟಿ ಉಪಾಸ ಇದ್ದ ದಿನಾ ಕಳೀಬೇಕಾಗತಿತ್ತು. ಏನ ಮಾಡಬೇಕು ಅನ್ನೋದ ಗೊತ್ತಾಗತ್ತಿರಲಿಲ್ಲ. ಬೇಕಾದ್ದ ಕೆಲಸ ಮಾಡಾಕೂ ನಾವು ತಯಾರಿದ್ದಿವಿ. ಆದರ ಕೆಲಸ ಮಾತ್ರ ಸಿಗತಿರಲಿಲ್ಲ. ‘ಬೇಲದಾರರೂ ಕಳ್ಳರಿದ್ದಾಂಗ, ಯಾರೂ ಅವರಿಗೆ ಕೆಲ್ಸ ಕೊಡಬ್ಯಾಡರಿ’ ಅಂತ ಮಂದಿ ಮಾತಾಡಿ ಕೊಳ್ಳತಿದ್ದರು. + +ನಮ್ಮ ಬಿಡಾರದ ಆಚೆಗೆ ಕಬ್ಬಿನ ಹೊಲದ ಹತ್ತರ ಹತ್ತು-ಹನ್ನೆರಡು ಲಮಾಣಿಗರ ಗುಡಿಸಲು ಇತ್ತು. ಅವರು ತಮ್ಮ ತಾಂಡೆ ಬಿಟ್ಟು ಇಲ್ಲಿ ಕಬ್ಬು ಕಡಿಯಾಕ ಬಂದಿದ್ದರು. ಲಮಾಣಿಗರಿಗೂ-ಧೋಂಡಿ ಮಾಮಾನಿಗೂ ಗುರುತು-ಪರಿಚಯ ಆಯಿತು. ಅವರ ನಂಬಿಗೆ ಮ್ಯಾಲಿಂದ ಅಪ್ಪ ಮತ್ತು ಮಾಮಾನಿಗೆ ಕಬ್ಬು ಕಟಾವು ಮಾಡೋ ಕೆಲಸ ಸಿಗ್ತು. ನಮ್ಮ ಬಿಡಾರಾನೂ ಅವರ ಗುಡಿಸಲು ಹತ್ತಿರಾನೇ ಹಾಕಿದ್ವಿ. ಲಮಾಣಿಗಳ ಸಂಗಡ ಅಪ್ಪ-ಧೋಂಡಿ ಮಾಮಾ, ಅವ್ವ-ಸರಿಮಾಮಿ ನಸುಕಿನ್ಯಾಗ ಎದ್ದು ಕೆಲಸ ಶುರು ಮಾಡತಿದ್ದರು. ಗಂಡಸರು ಕಬ್ಬು ಕಡಿತಿದ್ದರು, ಹೆಂಗಸರು ಕಬ್ಬು ಸವರುತ್ತಿದ್ದರು. ಟ್ರಕ್ ಬಂದ ನಿಂತ ಮ್ಯಾಲೆ, ಗಂಡಸರು ಕಬ್ಬಿನ ಹೊರೆ ಕಟ್ಟಿ ಅದರ ಮ್ಯಾಲೆ ಹೇರತಿದ್ದರು. ಟ್ರಕ್ ಹ್ವಾದ ಮ್ಯಾಲೆ ಮತ್ತ ಕಬ್ಬು ಕಡಿಯೋದು ಶುರು. ಬಿಸಿಲು ನೆತ್ತಿಗೆ ಬಂದ ಮ್ಯಾಲೆ ಹೆಂಗಸರು ಬಿಡಾರಕ್ಕ ಬಂದು, ಮೂರು ಕಲ್ಲಿನ ಒಲಿ ಮ್ಯಾಲೆ ರೊಟ್ಟಿ ಮಾಡತ್ತಿದ್ದರು. ಮುಂದೆ ಗಂಡಸರು ಊಟಕ್ಕ ಬರ್ತಿದ್ದರು. ಎಲ್ಲಾರೂ ಬಕ್‍ಬಕಾ ತಿಂತಿದ್ದರು. ಕೈ ತೊಳಕೊಂಡಿದ್ದೇ ತಡ, ಮತ್ತ ಕೆಲಸ ಶುರು. ಸಣ್ಣ-ಸಣ್ಣ ಹುಡುಗರು ಅಳುತ್ತಿದ್ದರು. ನಾವು ಆ ಹುಡುಗರನ್ನ ಆಡಸ್ತಿದ್ವಿ. ಆಟ ಆಡ್ತ-ಆಡ್ತ ಬಿಡಾರ ಮತ್ತ ಕತ್ತಿಗಳನ್ನ ಕಾಯತಿದ್ವಿ. ಎಲ್ಲಾರೂ ಸಾಯೋಮಟ ಕೆಲಸ ಮಾಡತಿದ್ದರು. ಬಿಸಿಲ ಕಡೆಗೂ ಖಬರೆ ಯಿರತಿರಲಿಲ್ಲ. ನೀರಡಿಕೆಯಾದರೂ ಖಬರಯಿರತಿರಲಿಲ್ಲ. ಹಗಲು ರಾತ್ರಿ ಬರೇ ಕೆಲಸ ಕೆಲಸ ಮತ್ತ ಕೆಲಸ. ಪ್ರತಿದಿನ ಸಂಜಿಗೆ ಅಪ್ಪ, ಧೋಂಡಿ ಮಾಮಾ, ಮತ್ತು ಲಮಾಣಿ ಮಂದಿ ಶೆರಿ ಕುಡಿದು-ಕುಡಿದು ಟೈಟ್ ಆಗತ್ತಿದ್ದರು. ರಾತ್ರಿಯಿಡೀ ಗಲಾಟೆಯೋ- ಗಲಾಟೆ. ಉಣಬೇಕು ಅನ್ನೋ ಖಬರೂ ಇರಲಿಲ್ಲ. + + + +ಹೋಳಿ ಹುಣ್ಣವಿ ಸನೇಕ ಬಂತು. ಎರಡು ವಾರ ಮೊದಲೇ ಲಮಾಣಿಗರ ಹಾಡು, ಕುಣಿತ, ಶೆರೆ ಕುಡಿಯೋದು, ಗದ್ದಲ ಹಾಕೋದು ನಡೆದಿತ್ತು. ಜೇಮಲ್ಯಾ ಲಮಾಣಿ ಹೋಳಿ ಹುಣ್ಣವಿ ದಿನ ಔತಣ ಹಾಕಾಂವ ಇದ್ದ. ಅಂವಾ ಹರಕಿ ಹೊತ್ತಿದ್ದ. ಏಳು ಪೋರಿಯರ ನಂತರ ಅವನಿಗೆ ಗಂಡಮಗಾ ಹುಟ್ಟಿದ್ದ. ಇದಕ್ಕ ನಮ್ಮ ಮಂದಿಯೊಳಗ ಧುಂಡ ಅಂತಾರೆ. ಎಲ್ಲಾರಿಗೂ ಮಟನ ಊಟ, ಮತ್ತು ದಾರೂ ಕುಡಿಸಬೇಕಾಗತದ. + +ಹೋಳಿ ಹುಣ್ಣವಿ ದಿನ ಬೆಳಕ ಹರೀತು. ಕಪ್ಪು ಎರಿ ಭೂಮ್ಯಾಗ ಖೀರ ತುಂಬಿದ ಒಂದು ದೊಡ್ಡ ಪಾತ್ರೆಯಿಟ್ಟರು. ನಾಲ್ಕೂ ಕಡೆ ಗೂಟ ಹುಗಿದರು. ಪಾತ್ರೆಯನ್ನು ಹಗ್ಗದಿಂದ ಗೂಟಕ್ಕ ಬಿಗಿದು ಕಟ್ಟಿದರು. ಕುಮಾರಿ ಪೋರಿಯರು ಕೈಯಾಗ ಬಡಿಗಿ ಹಿಡಕೊಂಡು, ಆ ಭಾಂಡೆದ ಸುತ್ತಲೂ ನಿಂತರು. ಅವರಿಗೆ ಗೆಹಳನಿ ಅಂತ ಕರೀತಾರೆ. ಹುಡುಗರು ಆ ಭಾಂಡೆ ಎತಕೊಂಡ ಹೋಗಬೇಕು. ಅವರಿಗೆ ಗೆರ್ಯಾ ಅಂತಾರೆ. ಗೆರ್ಯಾ ಮತ್ತು ಗೆಹಳನಿ ಶೆರಿ ಕುಡಿದು ಟೈಟ್ ಆಗಿರ್ತಾರೆ. ಗೆರ್ಯಾ ಹುಡುಗರು ಭಾಂಡೆ ಒಯ್ಯಾಕ ಮುಂದ ಬಂದರ ಸಾಕು ಗೆಹಳನಿ ಪೋರಿಯರು ಬಡಿಗಿ ತಗೊಂಡ ಬಡಿತ್ತಿದ್ದರು. ಗೆರ್ಯಾಗಳು ಗೆಹಳನಿಯವರಿಂದ ಹೊಡೆತ ತಿಂದು ಭಾಂಡೆ ಎತಕೊಂಡ ಹೋಗಬೇಕಾಗತದ. ಆದರ ಗೂಟಕ್ಕ ಬಿಗಿದ ಕಟ್ಟಿದ ಹಗ್ಗ ಮಾತ್ರ ಹರೀಬಾರದು. ಗೂಟ ಕಿತ್ತ ಹಾಕಿ ಭಾಂಡೆ ತಗೊಂಡ ಹೋಗಬೇಕು. ಒಂದು ವ್ಯಾಳೆ ಹರೀತು ಅಂದರ ಕೂಸುಗಳು ಸಾಯತಾವೆ – ಅಂತ ಅವರ ನಂಬಿಕಿ. ಸುತ್ತಲೂ ಮುದುಕರು ಮುದುಕಿಯರು ಹೆಂಗಸರು ನಿಂತು ತಮಾಷೆ ನೋಡತ್ತಿದ್ದರು. ಗೆರ್ಯಾ ಹಾಗೂ ಗೆಹಳನಿಯವರ ಹಾಡೂ ಶುರು ಇರತದ. ಅದಕ್ಕ ಲೇಂಗಿ ಅಂತಾರೆ. ಅವರ ಈ ರಿವಾಜು ನೋಡಾಕ ನಾವೂ ಹೋದವಿ. ಬಿಸಲ ಏರಿದ ಮ್ಯಾಲ ಗಂಡಸರು ಹೆಂಗಸರು, ಪೋರ ಪೋರಿಯರು ಮತ್ತ ದಾರೂ ಕುಡಿತಾರು. ಎಲ್ಲಾರೂ ದಾರೂ ಕುಡದು ಲೋಡ್ ಆಗ್ತಾರು. ಹಿಂಗ ಅವರ ಗದ್ದಲ ನಡೆದಿತ್ತು. ಅಷ್ಟರಾಗ ಝಾಮವ್ವ ಅನ್ನೋ ಒಬ್ಬಾಕಿಗೆ ದಾರೂ ತಲಿಗೇರಿತು. ಜೋಲಿ ಹೊಡಿಯಾಕ ಹತ್ತಿದ್ಲು. ಈ ಗದ್ದಲದಾಗ, ನೂಕಾಟ-ತಳ್ಳಾಟದಾಗ ಆಕಿ ಲಂಗದ ದಾರ ಹರೀತು. ಲಂಗ ಬಿಚ್ಚಿತು. ಆಕಿ ಬತ್ತಲೆಯಾಗಿಯೇ ಕೆಳಗ ಬಿದ್ಲು. ಆವಾಗ ಗೆರ್ಯಾಗಳು ಓಡಿ ಬಂದರು. ಆಕಿ ಮುಕಳಿ ಮ್ಯಾಲೆ ದಾರೂ ಸುರಿವಿದರು. ಇದನು ಗೆಹಳನಿಯರು ನೋಡಿದರು. ಅವರೆಲ್ಲ ಓಡಿ ಬಂದರು ಮತ್ತು ಝಾಮವ್ವ ಎತ್ತಕೊಂಡು ಜೋಪಡಿಗೆ ಒಯ್ದರು. ಅಷ್ಟರಾಗ ಗೆರ್ಯಾ ಹುಡುಗರು ಹಗ್ಗ ಹರಿದಾಂಗ ಖೀರ ಭಾಂಡೆ ಹೊತಕೊಂಡ ಹ್ವಾದರು… + +ಹೋಳಿ ಹುಣ್ಣವಿ ಮಾರನೇ ದಿನ ಧೂಳವಾಡಿ. ಆವತ್ತು ಒಬ್ಬರು ಮತ್ತೊಬ್ಬರ ಮ್ಯಾಲೆ ಕೆಸರು ಎರಚೋದು, ರಾಡ್ಯಾಗ ಮುಳುಗಿಸೋದು, ಮಾರಿಗೆ ಕಾಡಿಗೆ ಹಚ್ಚೋದು, ದಾರೂ ಕುಡಿಯೋದು. ಇದು ಮಧ್ಯಾಹ್ನದವರೆಗೆ ನಡೀತು. ಆಮ್ಯಾಲೆ ಎಲ್ಲಾರೂ ಜಳಕ ಮಾಡಿದರು. + +ಸಂಜೆಯಾದ ಮ್ಯಾಲೆ ನಾನೂ, ಪಾಂಡೂ, ಅಪ್ಪ ಮತ್ತು ಧೋಂಡು ಮಾಮಾ ಊರಾಗ ಹೋದಿವಿ. ನಾವು ನಾಲ್ಕೂ ಮಂದಿ ಕೂಡಿ ಒಂದು ಬಾಗಿಲ ಎದುರು ನಿಲ್ಲೋದು, ಅಪ್ಪ ಹಾಡು ಹೇಳತಿದ್ದ. ಮಾಮಾ ಮತ್ತು ನಾವು ಕುಣಿತಿದ್ವಿ. ಆವಾಗ ಆ ಮನಿಯವರು ನಮ್ಗ ಒಂದೆರಡು ರುಪಾಯಿ ಕೊಡುತ್ತಿದ್ದರು. ಹಿಂಗ ಹಾಡತ-ಕುಣೀತ ಎಲ್ಲರ ಕಡೆ ದುಡ್ಡು ಬೇಡತಿದ್ದಿವಿ. ಇದಕ್ಕ ನಮ್ಮ ಮಂದಿ ಪೋಸ್ ಬೇಡೋದು ಅಂತಾರೆ. ಕತ್ತಲೆಯಾಗೋ ಮಟಾ ನಮ್ಮ ಮಂದಿ ಪೋಸ್ ಬೇಡಿದರು. ಸುಮಾರು ಎರಡುನೂರು ರುಪಾಯಿ ಜಮಾ ಆಗಿರಬೇಕು. ರಾತ್ರಿಯಾದ ಮ್ಯಾಲೆ ಬಿಡಾರಕ್ಕ ಬಂದಿವಿ. ಆ ದುಡ್ಡಿಂದ ಅಪ್ಪ ಮತ್ತು ಮಾಮಾ ಶೆರಿ ಕುಡಿದರು ಮತ್ತು ಮಟನ್ ತಗೊಂಡ ಬಂದರು. ರಾತ್ರಿಯೆಲ್ಲ ದಾರೂ ಕುಡಿದು ಗದ್ದಲ ಹಾಕಿದರು. ಹಿಂಗ ಹೋಳಿ ಹುಣ್ಣವಿ ಮಾಡಿದ್ವಿ. + +ಬೆಳಕು ಹರೀದ ಬಳಿಕ ಎಲ್ಲರೂ ಕೆಲಸದಾಗ ಮುಳುಗಿದರು. + +***** + +ಲಮಾಣ್ಯಾರಾಗ ಒಬ್ಬ ಗಟ್ಟಿಮುಟ್ಟ ಹುಡುಗಯಿದ್ದ. ಅವ್ನ ಹೆಸರು ಧಾರ್ಯಾ. ಅಂವಾ ಏನೂ ಕೆಲಸ ಮಾಡತಿರಲಿಲ್ಲ. ರಾತ್ರಿ ಹೊತ್ತಿನಾಗ ಸಣ್ಣಪುಟ್ಟ ಕಳ್ಳತನ ಮಾಡಿ, ತಂದ ಮಾಲು ಕಟುಕನಿಗೆ ಮಾರುತ್ತಿದ್ದ. ಕಟುಕ ಅರ್ಧ ದುಡ್ಡು ಕೊಡತಿದ್ದ. ಅವನ ಸಹವಾಸ ಮಾಡಿ ನಾನೂ ಮತ್ತು ಪಾಂಡೂ ಕಳ್ಳತನ ಮಾಡಾಕ ಹೋಗತಿದ್ವಿ. ಹತ್ತಿ, ಭಾಂಡೆ, ಕೋಳಿ, ಆಡು-ಕದ್ದಕೊಂಡು ಬರತಿದ್ವಿ. ಭಾಂಡೆ ಮತ್ತು ಹತ್ತಿ ಕಟುಕನ ಮೂಲಕ ಮಾರುತ್ತಿದ್ವಿ. ಆಡು, ಕೋಳಿ ಬಿಡಾರದಾಗ ಕೊಯ್ದು ತಿಂತಿದ್ವಿ. ಕೆಲವರು ಇದಕ್ಕ ವಿರೋಧ ಮಾಡಿದರು. ಅಪ್ಪ, ಧೋಂಡು ಮಾಮಾ, ಧಾರ್ಯಾನ ಅಪ್ಪ ಯಾವ ತಕರಾರೂ ಮಾಡಲಿಲ್ಲ. ಯಾಕಂದರ ಪುಗಸಟ್ಟೆ ತಿನ್ನಾಕ ಸಿಗತಿತ್ತು. + +ಒಮ್ಮೆ ಬೆಳ್ದಿಂಗಳು ಬಿದ್ದಾಗ ನಾನು, ಪಾಂಡೂ, ಧಾರ್ಯಾ ಹೊಂಟವಿ. ನಡೀತ-ನಡೀತ ಒಂದು ಹೊಲಕ ಬಂದಿವಿ. ಹೊಲದಾದ ಹತ್ತಿ ಬೊಂಡೆ ಒಡೆದು ಹತ್ತಿ ಹೊರ ಬಿದ್ದಿತ್ತು. ಅರಿವಿ ಹಾಸಿದಿವಿ, ಮತ್ತು ಹತ್ತಿ ಕೀಳಾಕ ಶುರು ಮಾಡಿದ್ವಿ. ಕೀಳಾತ ಕೀಳಾತ ಮೂರು ಮಂದಿ ಮೂರು ಗಂಟ ತಯಾರಾತು. ಇನ್ನೇನ ಗಂಟು ಹೊತಕೋಬೇಕು ಅನ್ನೋದರಾಗ, ತೊಗರಿ ಹೊಲದಾಗಿಂದ ಯಾರೊ ಬಂದು ಗಪ್ಪಂತ ಧಾರ್ಯಾನ್ನ ಅಪ್ಪಿಕೊಂಡ. ನಾನು, ಪಾಂಡೂ ಭೂತ ಬಂತಂತ ಅನಕೊಂಡ್ವಿ. ನಾನು ಮತ್ತು ಪಾಂಡೂ ಠಣ್ಣಂತ ಜಿಗಿದು, ಭರ್ರಂತ ಓಡಿದ್ವಿ. ಹೊಲದಿಂದ ದೂರ ಬಂದು ನಿಂತಕೊಂಡಿವಿ. ನಾನು ತಿರುಗಿ ಬಂದೆ. ಪಾಂಡೂ ಓಡಿ ಹ್ವಾದ. ಬಂದ ನೋಡಿದರ ಆ ಮನಶ್ಯಾ ಮತ್ತು ಧಾರ್ಯಾನ ನಡುವೆ ಝಟಾಪಟಿ ನಡೆದಿತ್ತು. ಇಬ್ಬರೂ ಒಬ್ಬರಿಗಿಂತ ಒಬ್ಬರು ಬಹಾದ್ದೂರರೇ. ಅಂವಾ ನಾನು ಗೌಡ ಅದೇನಿ, ನಿಮ್ಮನ್ನ ಬಿಡಾಂಗಿಲ್ಲ ಅಂತ ಅಂತಿದ್ದ. ಆಗ ನನಗ ಅಂವಾ ಗೌಡ ಅದಾನು, ಭೂತ ಅಲ್ಲ ಅಂತ ಗೊತ್ತಾತು. ಧಾರ್ಯಾ ಬಿಡಿಸಿಕೊಂಡು ಓಡಿ ಹೋಗಾಕ ನೋಡತಿದ್ದ. ಆವಾಗ ಗೌಡ, ಅವನನ್ನು ಕೆಳಗ ಕೆಡವಿ, ಅವನ ಎದೀ ಮ್ಯಾಲೆ ಕುಂತ. ಮುಖಾ-ಮಾರಿ ನೋಡದೆ ಗುದ್ದಿದ. ನಾನು ಗೌಡಗೆ ಒದ್ದೆ. ಅವನೂ ತಿರುಗಿ ನನ್ನ ಮುಕುಳಿ ಮ್ಯಾಲೆ ಒದ್ದ. ನಾನು ಗಪ್ಪಂತ ಬಿದ್ದೆ. ಚಲೋ ಹೊಡೆತ ಬಿದ್ದಿತ್ತು. ನನಗ ಗೌಡ ಮ್ಯಾಲೆ ಭಾಳ ಸಿಟ್ಟು ಬಂತು. ತಲೀ ಮ್ಯಾಲೆ ಕಲ್ಲು ಹಾಕಬೇಕಂತ ಕಲ್ಲು ಹುಡುಕಿದೆ. ನೋಡಿದರ ಎಲ್ಲ ಕಪ್ಪು ಎರಿನೆಲಾ, ಕಲ್ಲು ಎಲ್ಲಿ ಸಿಗಬೇಕು. ಅಷ್ಟರಾಗ ಸಿಂಧೂರ ಹಚ್ಚಿದ ಕಲ್ಲು ಕಾಣಿಸಿತು. ಅದು ದೇವರ ಕಲ್ಲು ಇರಬೇಕು. ನಾನು ಹಿಂದ ಮುಂದ ವಿಚಾರ ಮಾಡಲಿಲ್ಲ. ಆ ದೇವರ ಕಲ್ಲು ಎತ್ತಿ ಗೌಡನ ತಲೀ ಮ್ಯಾಲೆ ಹಾಕಿದೆ. ಆಗ ಅಂವಾ ಜೋರಾಗಿ ಕಿರುಚಿದ. ಮೈಯೆಲ್ಲ ರಗುತದಿಂದ ತೊಯ್ದಿತ್ತು. ಎಚ್ಚರ ತಪ್ಪಿ ಕೆಳಗ ಬಿದ್ದ. ಆವಾಗ ಧಾರ್ಯಾ ಪಾರಾದ. ನಾವಿಬ್ಬರೂ ಓಡಿ-ಓಡಿ ಬಿಡಾರಕ್ಕ ಬಂದಿವಿ. ಕೌಂದಿಯೊಳಗೆ ಹೊಕ್ಕಿದ್ವಿ. ಗುಜಾ, ಗೋಬರ್ಯಾ, ಜೇಮಲ್ಯಾ, ಧೇನೂ, ಪೋಗೂ, ಗೇಮು – ಹಿಂಗ ಲಮಾಣಿಗಳು ಡೋಲು ಬಾರಿಸ್ತ ಭಜನೀ ಮಾಡಾಕ ಹತ್ತಿದ್ದರು. ಸ್ವಲ್ಪ ಹೊತ್ತ ಆದಮ್ಯಾಲೆ ಭಜನೀ ಮುಗೀತು. ಇನ್ನ ಬೆಳಕು ಹರೀತಂದರ ಏನ ಗತಿ ಅಂಬೋ ಚಿಂತೆಯಿಂದ ನಮಗ ನಿದ್ದಿನೇ ಹತ್ತಲಿಲ್ಲ. ಹೊಲದಾಗ ನಡೆದ ಈ ಹಗರಣ ನಾವು ಯಾರಿಗೂ ಹೇಳಲಿಲ್ಲ. + +ನಸುಕಿನ ಹೊತ್ತಿಗೆ ಪೋಲೀಸರ ಗಾಡಿ ನಮ್ಮ ಬಿಡಾರಗಳ ಎದುರಿಗೆ ಬಂತು. ಪೋಲೀಸರ ಜೊತೆಗೆ ಇಡೀ ಊರೇ ಬಂದಿತ್ತು. ಎಲ್ಲ ಕಡೆ ಗದ್ದಲವೋ ಗದ್ದಲ. ಹೆದರಿಕೆಯಿಂದ ನಮ್ಮ ಎದಿ ಪಕ ಪಕ ಅಂತ ಹಾರುತ್ತಿತ್ತು. ಏನು ಮಾಡಬೇಕು ಅನ್ನೋದೆ ಗೊತ್ತಾಗಲಿಲ್ಲ. ಪೋಲೀಸರು ಬಿಡಾರದೊಳಗೆ ಹೋಗಿ ಎಲ್ಲರನ್ನು ಕೌಂದಿಯಿಂದ ಹೊರಗೆ ಎಳೆದು ತಂದರು. ಕೇಳಿದರು, ‘‘ಖರೆ ಖರೆ ಹೇಳರಿ, ರಾತ್ರಿ ಗೌಡರ ಹೊಲಕ್ಕ ಯಾರ-ಯಾರ ಕಳ್ಳತನ ಮಾಡಾಕ ಹೋಗಿದ್ದಿರಿ, ಗೌಡರ ತಲೀ ಮ್ಯಾಲೆ ಕಲ್ಲು ಹಾಕಿದವರು ಯಾರು? ನಮ್ಗ ಪುರಾವೆ ಸಹಿತ ಖರೇ ಮಾಹಿತಿ ಸಿಕ್ಕೇದ. ಅವರೊಳಗ ನಿಮ್ಮ ಪೈಕಿ ಜನರೇ ಅದಾರು. ಯಾರ-ಯಾರ ಇದ್ದರು, ಅವರ ಹೆಸರು ಹೇಳರಿ. ನೀವು ಹೇಳದಿದ್ದರೂ ಗೌಡರು ದವಾಖಾನೆದಾಗ ಅದಾರು, ಅವರನ್ನ ಕರ್ಕೊಂಡ ಬರತೇವಿ. ಅವರು ಗುರತಾ ಹಿಡಿತಾರು, ಇಲ್ಲಂದರ ನಿಮ್ಮ ಎಲ್ಲರನ್ನೂ ಬಡಿದು ಜೇಲಿನ್ಯಾಗ ಹಾಕತೇವಿ. ಹೆಸರ ಹೇಳರಿ. ಅಂಜಬ್ಯಾಡರಿ ಖರೆ ಹೆಸರ ಹೇಳಿದಿರಿ ಅಂದರ ನಾವು ನಿಮಗ ಏನೂ ಮಾಡಾಂಗಿಲ್ಲ. ಬರೇ ಕಾಗದದ ಮ್ಯಾಲೆ ಸಹಿ ಮಾಡಿಸಕೊಂಡು ಬಿಟ್ಟ ಬಿಡ್ತೇವಿ.’’ + +ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ. ಮತ್ತ ಹೊಯ್ಕೊಳ್ಯಾಕ ಹತ್ತಿದ. ‘‘ಅವ್ವಾ ಸತ್ತೆ, ನಂಗ ಹೊಡಿಬ್ಯಾಡರಿ. ಸಾಯೇಬರ ಬ್ಯಾಡರಿಯಪ್ಪ. ಎಲ್ಲ ಖರೆ-ಖರೆ ಹೇಳತೇನಿ. ಜರಾ ನಿಂದರ್ರಿ. ನಂಗೆಲ್ಲ ಗೊತೈತಿ’’ ಅಪ್ಪ ಬೆನ್ನು ತಿಕ್ಕುತ್ತ ಎದ್ದು ನಿಂತ. ಧಾರ್ಯಾ ಲಮಾಣಿಯ ಹೆಸರು ಹೇಳಿದ. ಆವಾಗ ಪೋಲೀಸರು ಧಾರ್ಯಾನನ್ನು ಹಿಡಿದರು. ದಬಾದಬಾ ಅಂತ ಬಡಿದರು. ಅಂವಾ ಒಪ್ಪಿಕೊಂಡ. ನನ್ನ ಮತ್ತ ಪಾಂಡೂನ ಹೆಸರೂ ಹೇಳಿದ. ಪಾಂಡೂ ಸಣ್ಣಂವ ಇದ್ದ. ಪೋಲೀಸರು ಅವನನ್ನು ಬಿಟ್ಟರು. ನನಗ ಹತ್ತು-ಹನ್ನೊಂದು ವರ್ಷ ಆಗಿರಬೇಕು. ನನಗ ಹಾಗೂ ಧಾರ್ಯಾನಿಗ ಪೋಲೀಸರು ಬೇಡಿ ಹಾಕಿದರು. ಮತ್ತು ಗಾಡ್ಯಾಗ ಕುಂಡರಿಸಿದರು. ನಾನು ಬೊಬ್ಬೆ ಹೊಡಿಯಾಕ ಶುರು ಮಾಡಿದೆ. ಪೋಲೀಸ ರಪ್ಪಂತ ಹೊಡೆದ. ನಾನು ಗಪ್ಪಗಾರ್ ಆದೆ. ಹೊರಗ ನೋಡಿದೆ. ಅವ್ವ ನನಗಾಗಿ ತಲೀ-ತಲೀ ಬಡಕೋತಿದ್ಲು. ಕೂದಲಾ ಕಿತ್ತಕೋತಿದ್ಲು. ಅಪ್ಪ ಪೋಲೀಸರಿಗೆ ಹೇಳಿದ, ‘‘ಸಾಯೇಬರ„„, ನನ್ನ ಕೂಸು ಸಣ್ಣದೈತರಿ. ಎಳೆ ಕೂಸು ಅಂಜೀ ಸತ್ತ ಹೋಗಬೌದು. ಅವನನ್ನ ಬಿಡರಿಯಪ್ಪ. ಬೇಕಾದರ ನನ್ನ ಎಳಕೊಂಡ ಹೋಗರಿ, ಆದರ ಅವನ್ನ ಬಿಡರಿ’’ ಪೋಲೀಸರ ಯಾಕ ಅವ್ನ ಮಾತಿಗೆ ಕಿಮ್ಮತ್ತ ಕೊಡ್ತಾರು, ಮತ್ತ ಯಾಕ ಬಿಡ್ತಾರು. ಪೋಲೀಸರು ತಮ್ಮ ಮಾತು ಕೇಳಾಂಗಿಲ್ಲ ಅನ್ನೋದು ಅಪ್ಪ ಮತ್ತು ಮಾಮಾನ ಧ್ಯಾನದಾಗ ಬಂತು. ಹಿಂಗಾಗಿ ಅಪ್ಪ ಊರ ಮಂದಿ ಕಾಲಿಗೆ ಬಿದ್ದ. ನನ್ನ ಕೂಸಿನ್ನ ಬಿಡಸರಿ ತಾಯಿ-ತಂದೆ ಅಂದ. + +ಅಪ್ಪ-ಅವ್ವನ ಆಕ್ರಂದನ ಕೇಳಿ ಒಬ್ಬ ಮನಶ್ಯಾ ಮುಂದೆ ಬಂದ. ಅವ್ನಿಗೆ ನಮ್ಮ ಮ್ಯಾಲೆ ದಯೆ ಬಂದಿರಬೇಕು. ಅಂವಾ ಪೋಲೀಸರಿಗೆ ಅಂದ ‘‘ಬಚ್ಚಾ ಬಹುತ್ ಹೀ ಛೋಟಾ ಹೈ, ಹುಡುಗ ಅಂಜಿ ಸಾಯಬೌದು. ಅವ್ನಿಗೆ ಬಿಡರಿ. ನಾನು ಬೇಕಾದರ ನಾಳೆ ಅವನನ್ನ ಟೇಶನಕ್ಕ ಕರ್ಕೊಂಡ ಬರ್ತೇನಿ’’ ಈ ಮಾತು ಕೇಳಿ ಊರ ಮಂದಿಯೆಲ್ಲ ಅವನ ಮ್ಯಾಲೆ ಏರಿ ಬಂದರು. ಕೆಲವರು ಅವ್ನಿಗೆ ಹೇಳಿದರು, ‘‘ಈ ಹಲ್ಕಟ್ ಜಾತಿ ಜವಾಬ್ದಾರಿ ನೀ ಯಾಕ ತಗೋತಿ? ಈ ಬೇಲದಾರ ಅಲೆಮಾರಿ ಜನರನ್ನ ನಂಬೋ ಹಾಂಗಿಲ್ಲ. ಇವತ್ತ ಇಲ್ಲಿ ಇದ್ದರ, ನಾಳೆ ಮತ್ತೆಲ್ಲೋ ಇರ್ತಾರೆ. ಅವರು ಓಡಿ ಹೋದರಂತೂ ನೀನ ಟೇಶನಕ್ಕ ಎಡತಾಕಾಕ ಬೇಕು. ಈ ಅಲೆಮಾರಿ ಮಂದಿ ಹನ್ನೆರಡು ಊರೆಲ್ಲ ತಿರುಗಾಡಿ ಕಳ್ಳತನ ಮಾಡತಾರು. ಅವರ ಮ್ಯಾಲೆ ದಯಾ ತೋರಿಸಬಾರ್ದು. ದಯೆ ತೋರಿಸಿದವರ ಜೀವಾನ್ನೇ ತಗೋತಾರು. ಇವರೇನು ಮನಶ್ಯಾರ ಅಂದಕೊಂಡಿಯೇನು, ಪಕ್ಕಾ ಪ್ರಾಣಿಗಳು ಅವರು. ಮಾರಾಯಾ, ಅವರ ಜವಾಬ್ದಾರಿ ತಗೋಬ್ಯಾಡ. ಗೌಡರ ವಿರುದ್ಧ ಹೋಗಬ್ಯಾಡ. ನೀನು ಊರಾಗ ಇರಬೇಕಂತ ಮಾಡಿಯೋ ಇಲ್ಲೋ?’’ ಆ ಮನಶ್ಯಾನ ಹೆಂಡತಿನೂ ಬೈದ್ಲು. ಆವಾಗ ಅಂವಾ ಪೋಲೀಸರಿಗೆ ಅಂದ, ‘‘ಸಾಯೇಬರ, ನಮ್ಮೂರ ಮಂದಿ ಹೇಳಿದ್ದೂ ಖರೆ ಅದ. ನೀವೀಗ ಇವರನ್ನು ಹಿಡಕೊಂಡ ಹೋಗರಿ. ಇಲ್ಲಾ ಬಿಡರಿ. ನನಗೇನ ಸಂಬಂಧಯಿಲ್ಲ. ನಿಮ್ಮ ಮನಸಿಗೆ ಬಂದಾಂಗ ಮಾಡರಿ. ನಾನು ಇವರ ನಡುವೆ ಬೀಳೊದಿಲ್ಲ’’. ಆ ಮನಶ್ಯಾ ತಲೀ ಕೆಳಗ ಹಾಕಿ ಊರ ಕಡೆ ಸರಸರ ಹೊಂಟ. ಅಪ್ಪ ಅವ್ನ ಕಾಲಿಗೆ ಬಿದ್ದ, ಕೈ ಮುಗಿದ, ಅವನ ಕೈ ಹಿಡಕೊಂಡ. ನನ್ನ ಮಗನನ್ನ ಪಾರ ಮಾಡರಿಯಪ್ಪ ಅಂತ ಗೋಗರೆದ. ಆದರ ಆ ಮನಶ್ಯಾ ಬಾಯಿ ತೆರೀಲಿಲ್ಲ. ಅಪ್ಪನ ಕೈ ಝಾಡಿಸಿ, ಬಿಡಿಸಿಕೊಂಡು ಊರ ಹಾದಿ ಹಿಡಿದ. + +ಆಮ್ಯಾಲೆ ಪೋಲೀಸರು ಬೇಲದಾರರಿಗೆ ಬೆದರಿಕೆ ಹಾಕಿದರು, ‘‘ನೀವು ಇವತ್ತೇ ತಾಲೂಕಿನ ಸೀಮೆ ಬಿಟ್ಟು ಹೋಗಬೇಕು. ಇಲ್ಲದಿದ್ದರ ಉಲ್ಟಾ ತೂಗುಹಾಕಿ ಮೆಣಸಿನ ಖಾರ ಮುಕಳ್ಯಾಗ ತುರಕತೇವಿ’’. ಮುಂದ ಪೋಲೀಸರು ಗಾಡಿಯೊಳಗ ಹೋಗಿ ಕುಂತರು. ನಾನು ಮತ್ತು ಧಾರ್ಯಾ ಇಬ್ಬರೂ ಮೋಟಾರ ಏರಿದ್ವಿ. ಗಾಡಿ ಶುರು ಆದಾಗ ಅಪ್ಪನ ಬೊಬ್ಬೆ ಮತ್ತ ಜೋರಾಯಿತು. ಅವ್ವ ಕೂದಲಾ ಕಿತ್ತಕೋತಿದ್ಲು, ಧೋಂಡು ಮಾಮಾ, ಲಮಣ್ಯಾರು ಅಳಾಕ ಹತ್ತಿದ್ದರು. + +ಗಾಡಿ ಓಡತ್ತಿತ್ತು. ಸ್ವಲ್ಪ ಹೊತ್ತಾದ ಮ್ಯಾಲೆ ಎಲ್ಲರೂ ಕಣ್ಮರೆಯಾದರು. ನಡು ಮಧ್ಯಾಹ್ನದ ಹೊತ್ತಾಗಿತ್ತು. ದಾರಿಯಲ್ಲಿ ಒಬ್ಬ ನರಮನಶ್ಯಾನೂ ಕಾಣಲಿಲ್ಲ. ನನ್ನ ಎದಿ ದಡ ದಡ ಅಂತ ಹಾರತಿತ್ತು. ಧಾರ್ಯಾ ಪೋಲೀಸರ ಹತ್ತರ ಒಂದು ಬೀಡಿ ಇಸಕೊಂಡು ಸೇದಾಕ ಹತ್ತಿದ. ಗಾಡಿ ಈಗ ಒಂದು ಕಚ್ಚಾ ರಸ್ತೆಗೆ ಹೋಗಿ ನಿಂತಿತು. ಹೊರಗ ಇಣುಕಿ ನೋಡಿದರ ಒಂದು ಚಕ್ಕಡಿ ನಿಂತಿತ್ತು. ಅದರಾಗ ಗೌಡ ಮತ್ತು ಅವನ ಮಂದಿಯಿತ್ತು. ಗೌಡ ಗಟ್ಟಿಮುಟ್ಟಾದ ಆಸಾಮಿ, ಹುರಿಮೀಸಿ ತಲೆಗೆ ಬ್ಯಾಂಡೇಜ ಕಟ್ಟಿತ್ತು. ಗೌಡ ಮತ್ತು ನಾಲ್ಕು ಮಂದಿ ಗಾಡಿಯಿಂದ ಕೆಳಗ ಇಳಿದರು. ಪೋಲೀಸರು ಕೆಳಗೆ ಇಳಿದು ಬಂದರು. ಎಲ್ಲಾರೂ ಸೇರಿ ದೂರ ಹೋಗಿ ನಿಂತರು. ಎಷ್ಟೋ ಹೊತ್ತು ಗುಸುಗುಸು ಮಾತಾಡಿದರು. ಪೋಲೀಸರು ಅಲ್ಲೇ ಗಿಡದ ಕೆಳಗೆ ಕುಂತರು. ಗೌಡರ ಜೋಡಿ ಮೂರ್ನಾಕ ಮಂದಿ ಗಾಡಿ ಹಂತ್ಯಾಕ ಬಂದರು. ನನ್ನ ಮತ್ತು ಧಾರ್ಯಾನಿಗೆ ಕೆಳಗಿಳಿ ಅಂದರು. ಆ ಮಂದಿ ಎಲ್ಲಾರೂ ಸೇರಿ ನಮ್ಮನ್ನ ಹಿಡಿದು ಒದಿಲಿಕ್ಕ ಶುರು ಮಾಡಿದರು. ಧಾರ್ಯಾ ಬೊಬ್ಬೆ ಹೊಡೆಯಾಕ ಹತ್ತಿದ. ಬಿಡಿಸಬರ್ರಿ„„ ಅಂತ ಪೋಲೀಸರಿಗೆ ಗೋಗರೆದು ಬೇಡಿಕೊಂಡ. ನನ್ನ ಕೆನ್ನೆಗೂ ನಾಲ್ಕಾರು ಹೊಡೆತ ಹಾಕಿದರು. ನಾನು ಉಚ್ಚೆ ಹೊಯ್ದಬಿಟ್ಟೆ. ಅದನ್ನು ನೋಡಿ ನನ್ನ ಬಿಟ್ಟರು. ಮತ್ತ ಧಾರ್ಯಾನ್ನ ಹಿಡಿದು ಬಡಿಯಾಕ ಹತ್ತಿದರು. ಒಬ್ಬಾಂವ ಧಾರ್ಯಾನ ತರಡ ಮ್ಯಾಲೆ ಜೋರಾಗಿ ಒದ್ದ. ಧಾರ್ಯಾ ಕುಸಿದು ಗಕ್ಕಂತ ಕೆಳಗ ಬಿದ್ದ. ಧಾರ್ಯಾ ಕಣ್ಣ ಬೆಳ್ಳಗ ಮಾಡಿದ. ಕೈಕಾಲು ಝಾಡಿಸಾಕ ಹತ್ತಿದ. ಅವನ ಬಾಯಿಂದ ನೊರಿ ಬಂತು. ಬಾಯಿಂದ ಒಂದ ಶಬುದ ಹೊರಗ ಬರಲಿಲ್ಲ. ಮಂದಿ ಬಡಿಯೋದು ನಿಲ್ಲಿಸಿದರು. ಇದು ಪೋಲೀಸರ ಗಮನಕ್ಕ ಬಂತು. ಅವರು ಓಡಿ ಬಂದರು. ಒಬ್ಬ ಪೋಲೀಸ ಜೀಪಿನ್ಯಾಗ ಇದ್ದ ನೀರ ತಗೊಂಡ ಬಂದ. ಧಾರ್ಯಾನ ಬಾಯಾಗ ನೀರು ಸುರಿದ. ಮಾರಿಗೆ ನೀರು ಸಿಂಪಡಿಸಿದ. ಆವಾಗ ಧಾರ್ಯಾ ಉಸಿರಾಡಾಕ ಹತ್ತಿದ. ಸ್ವಲ್ಪ ಹೊತ್ತಾದ ಮ್ಯಾಲೆ ಕಣ್ಣಬಿಟ್ಟ. ಎದ್ದು ಕುಂತ. ಪೋಲೀಸರಿಗೂ ಸಿಟ್ಟು ಬಂದು, ಆ ಮಂದಿಗೆ ಹೇಳಿದರು, ‘‘ವ್ಹಾರೆವ್ಹಾ! ಹಿಂಗ ತರಡ ಬೀಜದ ಮ್ಯಾಲೆ ಹೊಡಿ ಅಂತ ಹೇಳಿದ್ವಿ ಏನು? ನಾವು ನೌಕರಿ ಕಳಕೊಳ್ಳೊ ಪಾಳಿನೇ ಬರ್ತಿತ್ತು.’’ ಆಮ್ಯಾಲೆ ಪೋಲೀಸರು ನನ್ನ ಮತ್ತು ಧಾರ್ಯಾನನ್ನ ಕರ್ಕೊಂಡು ಮೋಟಾರು ಏರಿದರು. ಮೋಟಾರು ಹೊಂಟಿತು. ಒಬ್ಬ ಪೋಲೀಸ ಧಾರ್ಯಾನಿಗೆ ಬೀಡಿ ಕೊಟ್ಟ. ಧಾರ್ಯಾ ಬೀಡಿ ಸೇದಾಕ ಹತ್ತಿದ. ನಾನು ಈ ಹಿಂದ ಒಂದೆರಡು ಸಲ ಅಪ್ಪನ ಜೋಡಿ ಪೋಲೀಸ ಠಾಣಿಕ್ಕ ಬಂದಿದ್ದೆ. ಆದರ ಹಿಂಗ ಮಾತ್ರ ಎಂದೂ ಆಗಿರಲಿಲ್ಲ. ಮೋಟಾರು ಪೋಲೀಸ ಠಾಣೆ ಮುಂದೆ ಬಂದು ನಿಂತಿತು. ನಮ್ಮಿಬ್ಬರನ್ನು ಕೆಳಗ ಇಳಿಸಿ, ಒಂದು ಖೋಲಿಯೊಳಗೆ ಕೂಡಿ ಹಾಕಿದರು. + +ಸ್ವಲ್ಪ ಹೊತ್ತಾದ ಮ್ಯಾಲೆ ನನ್ನನ್ನು ಒಬ್ಬ ಸಾಹೇಬರ ಮುಂದೊಯ್ದು ನಿಲ್ಲಿಸಿದರು. ಸಾಹೇಬ ಪ್ರಶ್ನೆ ಕೇಳುತ್ತಿದ್ದ, ನಾನು ಖರೆ ಖರೆ ಹೇಳುತ್ತಿದ್ದೆ. ಮತ್ತೊಬ್ಬ ಸಾಹೇಬ ಬರಕೋತಿದ್ದ. ಅಷ್ಟರಾಗ ಒಬ್ಬ ಪೋಲೀಸ ನನ್ನ ಹಂತ್ಯಾಕ ಬಂದ. ‘‘ಚೋರಿ ಕರತಾ ಹೈ ಕ್ಯಾ ಭೋಸಡಿಕೆ’’ ಎಂದವನು ನನ್ನ ಗಲ್ಲಕ್ಕ ಹೊಡಿಲಿಕ್ಕ ಬಂದ. ನಾನು ತಪ್ಪಿಸಿಕೊಂಡೆ. ಆ ಹೊಡೆತ ಒದೆಯಾಕ ಹತ್ತಿದ ಸಾಹೇಬನ ಗಲ್ಲಕ್ಕ ಬಡಿತು. ಅಂವಾ ಬರೆಯೋದನ್ನ ನಿಲ್ಲಿಸಿದ. ಹೊಡೆದ ಪೋಲೀಸ ಗಾಬರಿಯಾದ. ಅಂವಾ ತಪ್ಪಾಯ್ತರಿ – ತಪ್ಪಾಯ್ತರಿ ಸಾಹೇಬರಿಗೆ ಬೇಡಿಕೊಂಡ. ಸಾಹೇಬರು ಸಿಟ್ಟಿನಿಂದ ಬೈದರು. ನೌಕರಿಯಿಂದ ಕಿತ್ತ ಹಾಕ್ತೇನಿ ಅಂತ ಧಮಕಿ ಹಾಕಿದರು. ಮತ್ತೊಬ್ಬ ಪೋಲೀಸ ಬಂದು ಅವನನ್ನು ಹೊರಗೆ ಕಳಿಸಿದ. ಮುಂದ ಮತ್ತೆ ಸಾಹೇಬ ಪ್ರಶ್ನೆ ಕೇಳಿದ. ನಾನು ಹೇಳಿದ್ದು ಬರಕೊಂಡ. ಬರೆದು ಮುಗಿಸಿದ ಮ್ಯಾಲೆ ಅಂವಾ ಗಂಟೆ ಬಾರಿಸಿದ. ಆಗ ನನಗೆ ಹೊಡೆಯಾಕ ಬಂದ ಪೋಲೀಸ ಓಡಿ ಬಂದ. ‘ಇವನ್ನ ಕರ್ಕೊಂಡು ಹೋಗಿ ಖೋಲಿದಾಗ ಹಾಕರಿ’ ಅಂತ ಅವನಿಗೆ ಹೇಳಿದ. ಪೋಲೀಸರು ಹೊರಗೆ ಹೋದರು. ಆ ಪೋಲೀಸ ನನ್ನನ್ನ ಜೇಲಿಗೆ ಕರ್ಕೊಂಡು ಹೋದ. ಕತ್ತಲೆ ಖೋಲಿ ಲೈಟ್ ಹಚ್ಚಿದ. ಬಾಗಿಲಾ ತೆರೆದ. ಒಳಗ ಧಾರ್ಯಾ ಇದ್ದ. ಇಬ್ಬರು-ಮೂವರು ಸೇರಿ ಅವನನ್ನು ಕೆಳಗ ಕೆಡವಿದರು. + +ಹೊಡೆಯಾಕ ಶುರು ಮಾಡಿದರು. ಧಾರ್ಯಾ ಜೋರಾಗಿ ಬೊಬ್ಬೆ ಹೊಡೆದ. ಅವನ ಪಾಯಜಾಮಾ ಬಿಚ್ಚಿದರು. ಕುಂಡ್ಯಾಗ ಖಾರದ ಪುಡಿ ತುರುಕಿದರು. ಧಾರ್ಯಾಗ ಬೆಂಕಿ ಬಿದ್ಧಾಂಗ ಆಗಿರಬೇಕು. ಅಂವಾ ಲಬೋ-ಲಬೋ ಅಂತ ಭಾಳ ಹೊಯ್ಕೊಂಡ. ನನ್ನ ಮುಂದ ಇದೆಲ್ಲ ನಡೆದದ್ದ ನೋಡಿ ನನಗ ಭಾಳ ಅಂಜಿಕಿಯಾತು. ನಾನೂ ಬೊಬ್ಬೆ ಹೊಡೆಯಾಕ ಹತ್ತಿದೆ. ಒಬ್ಬ ಪೋಲೀಸ ನನ್ನ ಬೆನ್ನಿಗೆ ಗುದ್ದಿದ. ನನ್ನ ಕಾಲು ಲಟಲಟ ನಡಗಾಕ ಹತ್ತಿತು. ನಾನು ಪಾಯಜಾಮಾದಾಗ ಸಳಸಳ ಉಚ್ಚೆ ಹೊಯ್ಕೊಂಡೆ. ಆಗ ಹೊಡೆಯೋದು ನಿಲ್ಲಿಸಿದರು. + +(ಚಂದ್ರಕಾಂತ ಪೋಕಳೆ) + +ಅಷ್ಟರಾಗ ಮತ್ತೊಬ್ಬ ಪೋಲೀಸ ಬಂದು ಹೇಳಿದ, ‘‘ಅದೇನ ಮಾಡಾಕ ಹತ್ತಿದಿರೋ, ಅಂಥ ಸಣ್ಣ ಹುಡುಗನಿಗೆ ಹಾಂಗೆಲ್ಲ ಹೊಡಿಬ್ಯಾಡರಿ. ಸತ್ತಗಿತ್ತ ಹೋದಾನು. ಸಾಕು ಮಾಡರಿ’’ ಪೋಲೀಸರು ಹೊಡೆಯೋದು ನಿಲ್ಲಿಸಿದರು. ನಾವು ಅಳಾಕ ಹತ್ತಿದ್ವಿ. ಆ ಪೋಲೀಸ ನಮ್ಗ ಸುಮ್ನಿರಾಕ ಹೇಳಿದ. ಹೊಡಿಬ್ಯಾಡ ಅಂತ ಹೇಳಿದ ಪೋಲೀಸ ನನ್ನ ಹಂತ್ಯಾಕ ಬಂದ. ನನ್ನ ತಲೀಮ್ಯಾಲೆ ಕೈಯಾಡಿಸಿದ. ಕುಡಿಯಾಕ ನೀರು ಕೊಟ್ಟ. ಮಾರಿ ತೊಳಕೊಳ್ಳಾಕ ಹೇಳಿದ. ಆವಾಗ ನನಗ ನಮ್ಮಪ್ಪನ ನೆನಪಾಯಿತು. ಆ ಪೋಲೀಸ ಅಂದ, ‘‘ಹೆದರಬ್ಯಾಡ, ನಾನೀಗ ಅವರಿಗೆ ಹೊಡಿಯಾಕ ಬಿಡಾಂಗಿಲ್ಲ.’’ ಮುಂದ ನನ್ನ ಮತ್ತ ಧಾರ್ಯಾನ ಒಯ್ದು ಬ್ಯಾರೆ ಖೋಲಿಯೊಳಗ ಕೂಡಿ ಹಾಕಿದರು. ಅಲ್ಲಿ ಮತ್ತ ಮೂರ್ನಾಕ ಮಂದಿ ಬ್ಯಾರೆದವರು ಇದ್ದರು. ಸಣ್ಣ ಖೋಲಿ. ಎದುರಿಗೆ ಬಾಗಿಲಾ. ಅದಕ್ಕ ದೊಡ್ಡ ಕೀಲಿ. ಖೋಲಿಯೊಳಗೇ ಉಚ್ಚಿ ಹೊಯ್ಯೋದು. ದೊಡ್ಡ-ದೊಡ್ಡ ಚಿಕ್ಕಾಡು. ಕಚಾ ಕಚಾ ಕಚ್ಚುತ್ತಿದ್ವು. ಕಚ್ಚಿದಾಗ ಪಟ್ಟಂತ ಹೊಡೀತಿದ್ದೆ. ಹುಚ್ಚು ಹಿಡಿದವರಾಂಗಾತು. ಅಲ್ಲಿ ರಾತ್ರಿ ಮಲಗಬೇಕಾರ ಹಾಸಗಿನೂ ಇಲ್ಲ. ಹೊದಿಕಿನೂ ಇಲ್ಲ. ರಾತ್ರಿಯಿಡೀ ಹಾಂಗ ಕೂತೆ. ಚಿಕ್ಕಾಡಂತೂ ಸಾರ್ಕೆ ಕಚ್ಚತಾನೆ ಇತ್ತು. ನಿದ್ದಿನೂ ಬರಲಿಲ್ಲ. ಪ್ರತಿದಿನ ಒಂದು ಹಸಿಬಿಸಿ ರೊಟ್ಟಿ ಕೊಡತಿದ್ದರು. + +ಹೊಟ್ಟಿ ತುಂಬತಿರಲಿಲ್ಲ. ಬಾಟಲಿ ನೀರು ಕುಡಿಬೇಕಾಗತಿತ್ತು. ಆಲ್ಯುಮನಿಯಂ ಬಾಲ್ಡಿ ಜಂಗ ಹಿಡಿದಿತ್ತು. ಧಾರ್ಯಾ ಪೋಲೀಸರಿಗೆ ಸಲಾಂ ಹೊಡಿತಿದ್ದ. ಗುರುತು ಮಾಡಿಕೊಳ್ಳುತ್ತಿದ್ದ. ನೂರು – ಎರಡು ನೂರು ಕೊಡತೇನಿ ಅಂತಿದ್ದ. ಸಾಯೇಬರ ನೋಡತಾರ ಮಾರಾಯಾ ಅಂತ ಪೋಲೀಸರ ಉತ್ತರ. ಧಾರ್ಯಾ ಪೋಲೀಸರ ಹತ್ತರ ಬೀಡಿ ಬೇಡಿ ಸೇದತ್ತಿದ್ದ. ಪೋಲೀಸರು ಅವ್ನಿಗೆ ಹೆಚ್ಚು ರೊಟ್ಟಿ ಕೊಡತ್ತಿದ್ದರು. ಅಲ್ಲಿ ಮತ್ತ ಮೂರ್ನಾಕ ಮಂದಿ ಇದ್ದರು. ಅವರೂ ರೊಟ್ಟಿ ಕೊಡರಿ ಅಂತ ಬಡಕೋತ್ತಿದ್ದರು. ಅವರು ಕೊಟ್ಟ ಒಂದ ರೊಟ್ಟಿಯಿಂದ ಹೊಟ್ಟಿ ತುಂಬತಿರಲಿಲ್ಲ. ಅವರು ಹಸಿವಿನಿಂದ ಹೈರಾಣಾಗತ್ತಿದ್ದರು. ಆಗಾಗ ಜೋರಾಗಿ ಕೂಗಿ ಹೇಳತಿದ್ದರು, ‘‘ನಮ್ಗ ರೊಟ್ಟಿ ತಂದ ಕೊಡರಿ, ಇಲ್ಲಾ ಅಂದರ, ನಾಯಿ ಹೇಲಾದರೂ ತಂದ ಕೊಡರಿ. ಅದನ್ನೂ ಬೇಕಾರ ನಾವು ತಿಂತೇವಿ. ಹೊಟ್ಟಾ ್ಯಗ ಭಾಳ ಬೆಂಕಿ ಬಿದ್ದೆ ೈತರೋ. ರೊಟ್ಟಿಯಾರ ಕೊಡರಿ, ಇಲ್ಲಾ ಗುಂಡ ಹಾಕಿ ಕೊಲ್ಲರಿ’’ ಹಿಂಗ ಏನೇನೋ ಬಡಬಡಸ್ತಿದ್ದರು. ಮೂರ್ನಾಕ ದಿನಾ ಆದಮ್ಯಾಲೆ ಧಾರ್ಯಾ ಜಾಮೀನ ಮ್ಯಾಲೆ ಹೊರಗ ಬಂದ. ನಾನ ಮಾತ್ರ ಹಾಂಗ ಉಳಕೊಂಡೆ. ನನ್ನ ಬಿಡಿಸಿ ಕರಕೊಂಡ ಹೋಗಾಕ ನಮ್ಮ ಮಂದಿ ಯಾರೂ ಬರಲಿಲ್ಲ. ಅಂಥವರು ಯಾರದಾರು? ಎಲ್ಲಾರೂ ಪೋಲೀಸರಿಗೆ ಅಂಜತಿದ್ದರು. ಜೈಲಿನಾಗ ನನ್ನ ಜೋಡಿಯಿದ್ದ ಮೂರ್ನಾಕ ಮಂದಿ, ನನಗ ಕಾಲೊತ್ತಾಕ ಹೇಳತಿದ್ದರು. ಅವರು ಅಲ್ಲೇ ಉಚ್ಚಿ ಹೊಯ್ಯುತ್ತಿದ್ದರು. ನನಗ ಸ್ವಚ್ಚ ಮಾಡಾಕ ಹೇಳತಿದ್ದರು. ನಾನು ಅದನ್ನ ಮಾಡದಿದ್ದರ, ಅವರು ಹೇಳಿದ ಮಾತು ಕೇಳದಿದ್ದರ, ಹಿಡಿದು ಬಡೀತ್ತಿದ್ದರು. ರಾತ್ರಿ ಅವರು ಮಲಗಿದಾಗ ಚಿಕ್ಕಾಡ ಕಚ್ಚತಾವ ಅಂತ, ನನಗ ಅಂಗಿ ಕಳದ ಗಾಳಿ ಹಾಕಾಕ ಹೇಳತ್ತಿದ್ದರು. ಗಾಳಿ ಹಾಕಿ ಹಾಕಿ ಕೈ ಸೋತಬಂದು ನೋಯಿಸತಿತ್ತು. ಒಮ್ಮೊಮ್ಮಿ ತೂಕಡಿಕೆ ಬರತಿತ್ತು. ಗಾಳಿ ಹಾಕೋದು ನಿಲ್ಲಿಸಿದರ ಮುಕುಳಿ ಮ್ಯಾಲೆ ಒದೀತಿದ್ದರು. ಏನ್ ಮಾಡಬೇಕೋ ಗೊತ್ತಾಗತಿರಲಿಲ್ಲ. ಪೋಲೀಸರಿಗೆ ಹೇಳೋಣ ಅಂದರ, ಅವರೂ ಹಿಡಿದ ಬಡಿದರ ಅಂತ ಅಂಜಿಕಿ… + +ಒಂದು ದಿನ ನನ್ನ ಕೈ ಕಾಲು ನೋವು ಹೆಚ್ಚಾಗಿ ಜ್ವರ ಬಂತು. ಬಾಯಿಂದ ಬಿಸಿ-ಬಿಸಿ ಉಸಿರು ಹೊರ ಬರಾಕ ಹತ್ತಿತು. ಪೋಲೀಸ ಸಾಯೇಬರ ಕಿವಿಗೆ ಈ ಸುದ್ದಿ ಹಾಕಿ ನನಗೆ ಆಸ್ಪತ್ರೆಗೆ ಒಯ್ದ ತೋರಿಸಿಕೊಂಡು ಆ ಪೋಲೀಸ ಸಾಯೇಬರಿಗೆ ಏನೋ ಹೇಳಿದ. ನನ್ನನ್ನ ಅವರ ಹತ್ತರ ಕರಕೊಂಡ ಹೋದ. ಸಾಯೇಬನಿಗೆ ಹುರಿ ಮೀಸೆಯಿತ್ತು. ಟೇಬಲ ಮ್ಯಾಲೆ ಟೊಪ್ಪಿಗೆಯಿಟ್ಟು ಕೂತಿದ್ದ. ಎಲ್ಲ ಪೋಲೀಸರು ಅವನಿಗೆ ಸಲಾಮ ಹೊಡಿತಿದ್ದರು. ಸಾಯೇಬ ಎತ್ತರವಾಗಿದ್ದ. ಸಣ್ಣ ಕೂದಲು. ದೊಡ್ಡ ಕಣ್ಣು. ಅವರು ಮೆಲ್ಲಗೆ ಕೇಳಿದರು ‘‘ಹುಡುಗಾ, ನೀನ ಯಾರ ಪೈಕಿ?’’‘‘ಬೇಲದಾರ ಪೈಕಿರಿ.’’‘‘ಯಾಕ ಹಿಡಕೊಂಡ ಬಂದರು?’’‘‘ಗೌಡರ ತಲೀ ಒಡೆದೆ, ಕಳ್ಳತನ ಮಾಡಿದೆ ಅಂತ.’’ + +ನಾನಂತೂ ನಡಗಾಕ ಹತ್ತಿದ್ದೆ. ಸಾಯೇಬ ‘‘ಕತ್ತೆ, ಮತ್ತ ಕಳ್ಳತನ ಮಾಡಬೇಡ. ಅರೆ ಹವಾಲ್ದಾರ ಬಚ್ಚಾ ಛೋಟಾ ಹೈ, ಐಸೇ ಬಚ್ಚೆಕೋ ಕಾಯಕು ಲಾತೆ ಹೋ? ಇಸಕೋ ಛೋಡದೋ. ಔರ ರಸ್ತಾ ಬತಾದೇನಾ.’’ ಯಾವ ಪೋಲೀಸನಿಗೆ ನನ್ನ ಮ್ಯಾಲೆ ದಯೆ ಬಂದಿತ್ತೋ ಅಂವಾ ನನ್ನನ್ನು ಠಾಣೆಯಿಂದ ಹೊರಗ ಕರ್ಕೊಂಡ ಬಂದ. ಹೋಟೆಲಿಗೊಯ್ದು ಭಜಿ ತಿನ್ನಿಸಿದ. ತಲೀ ನೇವರಿಸಿದ. ಅಂಜಬ್ಯಾಡ ಅಂತ ಹೇಳಿ ಬಿಟ್ಟುಬಿಟ್ಟ.ನಾನು ರಸ್ತೆ ಹಿಡಿದು ಹೊಂಟೆ. ಎಲ್ಲಿ ನೋಡಿದರೂ ಬರೇ ಮಂದಿನೇ ತುಂಬಿ ಕೊಂಡಿದ್ದರು. ಮೋಟಾರಗಳೂ ಓಡತಿದ್ದವು. ನನಗ ನಡೆಯಾಕ ಬರತಿರಲಿಲ್ಲ. ಊರು ನೆನಪಿದ್ದರೂ, ದಾರಿ ನೆನಪಿರಲಿಲ್ಲ. ಒಂದಿಬ್ಬರಿಗೆ ಕೇಳಿದೆ. ಅವರು ಏನೂ ಹೇಳಲಿಲ್ಲ. ನಾನು ಮಂದಿ ನಡುವೆ ನಡಕೋತ ಹೊಂಟೆ. ಕಾಲು ಎಳಕೊಂಡ ಹೋದ ಕಡೆ ಹೊಂಟಿದ್ದೆ. ಕೊನೆಗೆ ಒಬ್ಬ ಪೇಟಾದವನಿಗೆ ಕೇಳಿದೆ. ಅಂವಾ ಏನೇನೋ ಪ್ರಶ್ನೆ ಕೇಳಿದ. ಪೆಪ್ಪರಮಿಂಟ ತಿನ್ನಲು ಹತ್ತು ಪೈಸೆ ಕೊಟ್ಟ. ‘‘ಹುಡುಗಾ, ಹಿಂಗ„„ ಹೋಗಿ ಬಲಕ್ಕ ತಿರುಗು. ಸೀದಾ ಹೋಗು, ಅಂದರ ಅದೇ ಊರಿಗೆ ಹೋಗತಿ’’ ಎಂದ.ಅಂವಾ ಹೇಳಿದ ಹಾದಿ ಹಿಡಿದು ನಾನು ಹೊಂಟೆ. ನಡೀತ-ನಡೀತ ಊರ ಹೊರಗ ಬಂದೆ. ಈಗ ಮೈಕೈ ನೋವು ಕಡಿಮೆ ಆಗಿತ್ತು. ಜ್ವರಾನೂ ಹೋಗಿತ್ತು. ಧುಂದಿ-ಘಾಟುಡಿ ಹಾದಿ ಹಿಡಿದು ಹೊಂಟೆ. ಹೊಟ್ಟಾ ್ಯಗ ಅನ್ನದ ಅಗಳೂ ಇರಲಿಲ್ಲ. ಹಸಿವೆಯಾಗಿತ್ತು. ಜೀವಾ ಚಡಪಡಿಸಾಕ ಹತ್ತಿತ್ತು. ಒಂದು ಹೆಜ್ಜಿನೂ ಮುಂದಿಡಾಕ ಆಗತಿರಲಿಲ್ಲ. ಆದರೆ ನಡೀದೆ ಬಿಡುವಾಂಗ ಇರಲಿಲ್ಲ. ಅವ್ವ-ಅಪ್ಪನ್ನು ಭೇಟಿ ಆಗಬೇಕೆಂಬ ಇಚ್ಚಾ ಕಾಡಾಕ ಹತ್ತಿತ್ತಲ್ಲ. ಅಂತೂ ನಡೀತ ನಡೀತ ಧುಂದಿ-ಘಾಟೋಡಿ ಊರಿಗೆ ಬಂದೆ. ಹಳ್ಳದ ಆಚೆಗಿರುವ ಹೊಲಕ್ಕ ಬಂದೆ. ನೋಡಿದರ ಅಲ್ಲಿ ನಮ್ಮ ಬಿಡಾರವಾಗಲಿ, ಲಮಾಣಿಗಳ ಜೋಪಡಿಯಾಗಲಿ ಇರಲಿಲ್ಲ. ಬಿಡಾರ ಯಾವಾಗೋ ಹೋಗಿತ್ತು. ಗೂಟ ಕಿತ್ತ ಜಾಗ. ಮೂರು ಕಲ್ಲಿನ ಒಲಿ ಹೆಂಗಿತ್ತೋ ಹಾಂಗ ಇತ್ತು. ಸ್ವಲ್ಪ ತೊಗರಿ ಕಟ್ಟಗಿ ಮತ್ತು ಕತ್ತಿಗಳ ಲದ್ದಿ. ಈಗ ಅಲ್ಲಿ ಮಂದಿ ಹೇಲಾಕ ಕುಂಡರತಿದ್ದರು. ಕಾಲಿಟ್ಟಲ್ಲೆಲ್ಲ ಹೇಲ„„ ಹೇಲು, ಅದನ್ನೆಲ್ಲ ನೋಡಿ ಕಣ್ಣಾಗ ನೀರು ಬಂತು. + + + +ಈ ಜಾಗದಾಗ ನಮ್ಮ ಬಿಡಾರಗಳಿದ್ದವು. ಲಮಾಣಿಗಳ ಜೋಪಡಿಗಳಿದ್ದವು. ಜನರ ಓಡಾಟವಿತ್ತು. ಅವ್ವ-ಅಪ್ಪ ಈಗ ಎಲ್ಲಿಗೆ ಹೋಗಿರಬಹುದು? ಅವ್ವನ ಗತಿ ಏನಾಗೈತೋ? ಅವರನ್ನು ಎಲ್ಲಿ ಭೇಟಿಯಾಗಲಿ? ಏನ ಮಾಡಲಿ? ನಾನು ಒಬ್ಬನೇ ವಿಚಾರ ಮಾಡತಾ ನಿಂತಿದ್ದೆ. ಅಳು ಬಂತು. ಕಣ್ಣ ಒರೆಸಿಕೊಂಡೆ. ಅವ್ವ-ಅಪ್ಪ ಭೇಟಿಯಾಗಲಿ ಸತೀಮಾಯಿ ಅಂತ ಕೈಮುಗಿದೆ. ಹಾಂಗ ಮುಂದ ಹೆಜ್ಜೆಯಿಟ್ಟೆ. ವಾಡಿ ಊರಾಗ ತಾತ್ಯಾನ ಬಿಡಾರ ಇರೋದು ನನಗ ಗೊತ್ತಿತ್ತು. ವಾಡಿಗೆ ಬಂದೆ. ಅಲ್ಲಿ ಬೇಲದಾರರ ಬಿಡಾರ ಎಲ್ಲಿಯದ ಅಂತ ಮಂದಿನ್ನ ಕೇಳಿದೆ. ಅವರು ಹೇಳಿದರು. ಅವರನ್ನು ಹುಡುಕ್ತ-ಹುಡುಕ್ತ ಒಂದು ಕರಿ-ಎರಿ ಹೊಲಕ್ಕ ಬಂದೆ. ಅಲ್ಲಿ ಒಂದು ಬಿಡಾರ ಕಾಣಿಸ್ತು. ತಾತ್ಯಾನಿಗೆ ಐದಾರು ಸಣ್ಣ ಸಣ್ಣ ಹುಡುಗರು ಇದ್ದರು. ತಾತ್ಯಾ, ಕಾಕೂ ಮಾತಾಡಕೋತ ಕುಂತಿದ್ದರು. ಸಂಜಿಯಾಗಾಕ ಹತ್ತಿತ್ತು. ನನಗೂ ನಡೆದು-ನಡೆದು ಸಾಕಾಗಿತ್ತು. ಹಸಿವೆಯಿಂದ ಕಸಿವಿಸಿಯಾಗಾಕ ಹತ್ತಿತ್ತು. ನಾನು ತಾತ್ಯಾನನ್ನು ‘‘ತಾತ್ಯಾ-ಓ-ತಾತ್ಯಾ’’ ಅಂತ ಕೂಗಿ ಕರೆದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_104.txt b/Kenda Sampige/article_104.txt new file mode 100644 index 0000000000000000000000000000000000000000..38587493f164f4083e8cd339decda44c90227c20 --- /dev/null +++ b/Kenda Sampige/article_104.txt @@ -0,0 +1,27 @@ +ಪ್ರಿಯ ಕಂಟಲಗೆರೆ, + +ನೀನು ಕಳುಹಿಸಿದ ‘ಟ್ರಂಕುತಟ್ಟೆ’ ಓದಿದೆ. + +ಈ ಟ್ರಂಕು ಮತ್ತು ತಟ್ಟೆ ನನ್ನ ಮತ್ತು ನಿನ್ನ ತಲಮಾರಿನ ಬಹುದೊಡ್ಡ ರೂಪಕ ಹಾಗು ಪ್ರತಿಮೆ. ಹಾಸ್ಟೆಲ್ ಜೀವನದ ನಿನ್ನ ಬದುಕಿನ ಹೆಜ್ಜೆಗಳನ್ನು ದಾಖಲಿಸಿರುವ ಈ ಬರಹಗಳ ಗುಚ್ಚಕ್ಕೆ ಅಕಳಂಕ ಸೂಕ್ತವಾದ ಹೆಸರಿಟ್ಟಿರುವೆ. ಪ್ರಬಂಧದ ಗುಣಲಕ್ಷಣಗಳಿರುವ ನಿನ್ನ ಬರಹಗಳು ಬಹುತೇಕ ಗಾಯಗೊಂಡಿರುವ ಕಾರಣ ಇವು ಲಹರಿಗಳಲ್ಲ. ಆದರೆ ನಿನ್ನ ಈ ಬರಹಗಳಲ್ಲಿ ನೀನು ಎಲ್ಲಿಯೂ ಕುಂಟುತ್ತಿಲ್ಲ, ನೋವಿನಿಂದ ನರಳುತ್ತಿಲ್ಲ. ನಗುವಿನ ಅಲೆಯ ಮೇಲೆ ನಿನ್ನ ಯಾನ ಸಾಗಿರುವುದು ವಿಶೇಷ. + +(ಗುರುಪ್ರಸಾದ್‌ ಕಂಟಲಗೆರೆ) + +ನಿನ್ನ ಈ ಬರಹಗಳಲ್ಲಿ ಅವಮಾನದ ದಾಖಲೆಗಳಿವೆ. ಪ್ರತಿರೋಧದ ನೆಲೆಗಳಿವೆ, ಆದರೆ ದ್ವೇಷದ ಪ್ರತೀಕಾರದ ಛಾಯೆಗಳಿಲ್ಲ. ಇದು ನಿನ್ನ ಬರವಣಿಗೆಯನ್ನು ಭಿನ್ನ ನೆಲೆಯಲ್ಲಿ ಅರ್ಥ ಮಾಡಿಕೊಳ್ಳಲು ಒತ್ತಾಯಿಸುತ್ತದೆ. + +ನಿನ್ನ ಈ ಬರಹಗಳಲ್ಲಿ ಬಾಲ್ಯಕಾಲದ ಜೀವನ ಚರಿತ್ರೆ ಅಡಗಿದೆ. ಅವು ಸ್ವವಿಮರ್ಶೆ ಮತ್ತು ಆಪ್ತತೆಯಿಂದ ಓದುಗರನ್ನು ಒಳಗೊಂಡು ಬೆಳೆಯತೊಡಗುತ್ತವೆ. ಚಿಕ್ಕ ಚಿಕ್ಕ ವಿವರಗಳಲ್ಲಿ ದೊಡ್ಡ ನೋವಿನ ಸ್ತರಗಳಿವೆ. ಓದುಗರು ಇವುಗಳನ್ನೆಲ್ಲ ಅನುಭವಿಸುತ್ತಲೇ ಮುಂದೆ ಸಾಗಬೇಕು.ನನ್ನ ಅವ್ವನ ತವರೂರಾದ ಕಂಗಸನಹಳ್ಳಿಯಿಂದ ನಾಲ್ಕು ಹೊಲಗಳನ್ನು ದಾಟಿದರೆ ನಿಮ್ಮೂರು ಕಂಟಲಗೆರೆ ಸಿಗುತ್ತದೆ. ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ. + +ನೀನು ಮತ್ತು ನಿನ್ನ ತಮ್ಮ ಜೇಪಿ ನಿಮ್ಮಪ್ಪನ ಜೊತೆ ತಿಪಟೂರಿನ ಬಸ್ ಸ್ಟಾಂಡ್‍ನಿಂದ ಹಾಸ್ಟೆಲ್‌ವರೆಗೆ ಸಾಗುವ ನಿಮ್ಮ ನಡಿಗೆ ಇದೆಯಲ್ಲ ಅದು ಕಳುವಾಗಿದ್ದ ಅಕ್ಷರಗಳನ್ನು ಹುಡುಕಿಹೊರಟ ದಾಳಿಯಾಗಿತ್ತೆಂದು ನಾನು ತಿಳಿಯುತ್ತೇನೆ. + + + +ನಿನ್ನ ಈ ಪುಸ್ತಕದಲ್ಲಿ ಒಟ್ಟು ಹಾಸ್ಟೆಲ್‍ಗಳ ಚಿತ್ರಗಳನ್ನು ಕೆತ್ತಿದ್ದೀಯ. ವಕ್ರವಾಗಿ ನೇತಾಡುತ್ತಿದ್ದ ಸಮಾಜ ಕಲ್ಯಾಣ ಇಲಾಖೆಯ ಬೋರ್ಡು, ಗವ್‌ಗತ್ತಲು, ಮಾಜಿ ದನದ ಕೊಟ್ಟಿಗೆಯಂತ ಕಟ್ಟಡ, ಹೊಗೆ ಸುತ್ತಿಕೊಂಡ ಆಫೀಸು, ಮಾಸಿ ಚುಮ್ಟವಾಗಿದ್ದ ಕಾರ್ಪೆಟ್ಟು, ಸಾಕಾದವರಂತೆ ಬಿದ್ದಿದ್ದ ಟ್ರಂಕುಗಳು ಎಂಬ ಈ ನಿನ್ನ ವಿವರಗಳು ಅಂದಿನ ಸಾರ್ವಜನಿಕ ಹಾಸ್ಟೆಲ್‌ಗಳ ಸ್ಥಿತಿಗತಿಗಳನ್ನು ಅಧಿಕಾರಿಗಳ ಮತ್ತು ವಾರ್ಡನ್‌ಗಳ ಬೇಜವಾಬ್ದಾರಿತನ ಮತ್ತು ಭ್ರಷ್ಟತೆಯನ್ನು ದಾಖಲಿಸುತ್ತವೆ. + +ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳನ್ನು ಬಡವರ ಮಕ್ಕಳಿಗಾಗಿ ಇರುವ ಹಾಸ್ಟೆಲ್‌ಗಳು ಎಂದು ಕರೆಯಲು ನನಗೆ ಇಷ್ಟವಿಲ್ಲ. ಅದ್ಯಾಕೊ ಬಡವರು ಎಂಬ ಪದವನ್ನು ದುಡಿಯುವ ವರ್ಗಗಳಿಗೆ ಅಂಟಿಸುವುದು ನನ್ನನ್ನು ರೊಚ್ಚಿಗೆಬ್ಬಿಸುತ್ತದೆ. ಇರಲಿ ಇಂಥ ಹಾಸ್ಟೆಲ್‌ಗಳ ಪೂರ್ಣ ಚರಿತ್ರೆಯನ್ನೆ ನೀನು ಅನಾವರಣಗೊಳಿಸಿದ್ದೀಯ. ಅದೂ ಅಲ್ಲಿನ ಎಲ್ಲ ಒಳ್ಳೆ ತನಗಳನ್ನು ಬೆರೆಸಿ. ಇದು ಅಷ್ಟು ಸುಲಭವೆಂದು ನನಗೆ ಅನಿಸುವುದಿಲ್ಲ. + +(ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ) + +ನಿನ್ನ ಈ ಎಲ್ಲಾ ಬರಹಗಳ ಗುಣಗಳೆಂದರೆ ತಮಾಷೆ, ವಿಷಾದ, ಖುಷಿ, ಸಿಟ್ಟುಗಳನ್ನು ಮಿಶ್ರಣಮಾಡಿ ರೂಪಿಸುವ ವಾಕ್ಯಗಳು ನನಗೆ ಇಷ್ಟವಾದವು. ಅಂದು ಹಾಸ್ಟೆಲ್‍ನಲ್ಲಿ ಕೊಟ್ಟ ಹೊಸ ಸ್ಟೀಲ್ ತಟ್ಟೆಯಲ್ಲಿ ಕಂಡ ನಿನ್ನಮುಖವೂ ಹೊಸದಾಗಿಯೇ ಕಂಡದ್ದು, ನಿಂತ ರೈಲಿನಲ್ಲಿ ಕಕ್ಕಸ್‍ಗೆ ಹೋಗಿ ನೆಗೆಯುವ ಪರಿ, ಮೊಟ್ಟೆಯನ್ನು ಗೆಳೆಯರೊಟ್ಟಿಗೆ ಸೇರಿ ಕಬಳಿಸುವ ವಿವರ, ನಿನ್ನ ಗೆಳೆಯನಂದ ‘ನಾನು ಬಾಳೆಹಣ್ಣಿನ ಸಿಪ್ಪೆಯನ್ನೂ ಬಿಡದೆ ಪೂರ್ತಿ ತಿಂದೆ’ ಎಂಬ ನುಡಿಯನ್ನು ಹಿಡಿದಿರುವ ರೀತಿ, ಇಡ್ಲಿ ಉಪ್ಪಿಟ್ಟಿನ ಶ್ರೀಮಂತಿಕೆ, ಕರೆಂಟು ಹೋದಾಗ ಟ್ರಂಕು ತಟ್ಟೆ ಎಂಬ ವಾದ್ಯಗಳೊಂದಿಗಿನ ಹಾಡುಗಾರಿಕೆ, ಹಾಸ್ಟೆಲ್ ಹುಡುಗರ ಸೆಕೆಂಡ್ ಶೋ ಪಿಚ್ಚರ್, ದುಡ್ಡಿನ ಆಟ ಇತ್ಯಾದಿಗಳು ಮೂಲ ಕೆಡುವ ಸಾದ್ಯತೆಗಳು, ಚಿತ್ರಾನ್ನದಲ್ಲಿ ಕಡ್ಳೆಬೀಜ ಅನ್ವೇಷಣೆ, ಈ ಮಧ್ಯೆ ಊರಿನಲ್ಲಿನ ಕಷ್ಟಗಳು, ಸಣ್ಣಹೊನ್ನಯ್ಯನವರು ಪಾರ್ಟ್ ಟೈಮ್ ಕೆಲಸ ಹುಡುಕಿದ್ದು, ಟಿಸಿಹೆಚ್ ಕಾಲದಲ್ಲಿ ರಂಗಸ್ವಾಮಿಯ ಬೆಂಬಲ, ತುಮಕೂರಿನ ಅಖಿಲ ಬಾರತ ಸಮ್ಮೇಳನದಲ್ಲಿ ಊಟಕ್ಕಾಗಿ ಕಾಂಪೌಂಡ್ ಹಾರಿ ವಿ.ಐ.ಪಿ ಆದದ್ದು, ಹನುಮಂತಪುರದ ಡಿಗ್ರಿ ಕಾಲೇಜಿನ ವೈಭವದ ಜೊತೆಗೆ ಆ ದಾರಿಯಲ್ಲೆ ಇದ್ದ ಸ್ಲಂನ ದಾರುಣ ಪ್ರಸಂಗಗಳು, ಗೆಸ್ಟ್ ಗಂಗಾಧರನ ಕಥೆಗಳು, ಬೆಲ್ಲದ ಮಡು ರಂಗಸ್ವಾಮಿಯವರ ದಲಿತ ವಿದ್ಯಾರ್ಥಿ ಒಕ್ಕೂಟ, ಡಿಎಸ್‍ಎಸ್ ಹಾಸ್ಟೆಲ್‍ಗಳಲ್ಲಿ ಉಂಟು ಮಾಡಿದ ಪರಿಣಾಮಗಳು, ಹಾಡು, ಪಾಂಪ್ಲೆಟ್ ಪ್ರಭಾವಗಳು, ಇತ್ಯಾದಿಯಿಂದ ತುಂಬಿ ತುಳುಕುವ ಟ್ರಂಕು ತಟ್ಟೆ ಅನುಭವಗಳು ಗದ್ಯ ಪದ್ಯಗಳ ಲಯದಿಂದ ಓದುಗರ ಮನೋರಂಗದಲ್ಲಿ ಕುಣಿಯಬಲ್ಲದು, ಕುಣಿಸಬಲ್ಲದು. + +(ಕೃತಿ: ಟ್ರಂಕು ತಟ್ಟೆ (ಹಾಸ್ಟೆಲ್‌ ಅನುಭವ ಕಥನ), ಲೇಖಕರು: ಗುರುಪ್ರಸಾದ್‌ ಕಂಟಲಗೆರೆ, ಪ್ರಕಾಶಕರು: ಚೈತನ್ಯ ಪ್ರಕಾಶನ, ಬೆಲೆ: 180/-) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_105.txt b/Kenda Sampige/article_105.txt new file mode 100644 index 0000000000000000000000000000000000000000..58029fab6c4a1991af5acd0c441b08b84ded410f --- /dev/null +++ b/Kenda Sampige/article_105.txt @@ -0,0 +1,23 @@ +‘ನೆಲದ ಮೇಲಣ ನಕ್ಷತ್ರಗಳು’ ಶಿಕ್ಷಕ ಸಾಹಿತಿ ವೀರೇಶ ಬ. ಕುರಿ ಸೋಂಪೂರ ಅವರ ಸಾಹಿತ್ಯ ಕೊಡುಗೆಯಾಗಿದ್ದು ‘ಧರೆಗೆ ಮೆರುಗು ತಂದವರು’ ಎಂಬ ಉಪಶೀರ್ಷಿಕೆಯೇ ಈ ಸಂಕಲನದ ಮಹತ್ವವನ್ನು ಪೂರ್ತಿಯಾಗಿ ಅರಿವಾಗಿಸುತ್ತದೆ. ಈ ನೆಲದ ಮೇಲೆ ಸವೆದು ಹೋದ ರಾಷ್ಟ್ರೀಯ, ರಾಜ್ಯಮಟ್ಟದ ನಾಯಕರಿಂದ ಪ್ರಾರಂಭಿಸಿ ತನ್ನನ್ನು ತಿದ್ದಿದ ಗುರುಗಳು, ಮಠಾಧೀಶರು ಮತ್ತು ಹೆತ್ತ ತಂದೆತಾಯಿಗಳವರೆಗೂ ಅವರು ಕಂಡುಂಡ ವ್ಯಕ್ತಿಚಿತ್ರಣವನ್ನು ಕವನರೂಪದಲ್ಲಿ ಕಟ್ಟಿಕೊಡುವ ಪ್ರಯತ್ನ ವೀರೇಶರದ್ದು. + +(ವೀರೇಶ ಬ. ಕುರಿ ಸೋಂಪೂರ) + +ಶಾರ್ಟ್‌ ಹ್ಯಾಂಡ್ ಬರಹದಲ್ಲಿ ವಿಸ್ತಾರ ಸ್ವರೂಪವನ್ನು ಹೇಗೆ ಸಂಕೇತರೂಪದಲ್ಲಿ ಚಿಕ್ಕದಾಗಿ ದಾಖಲಿಸಿಕೊಳ್ಳುತ್ತಾರೋ ಹಾಗೆಯೇ ಇಲ್ಲಿ ವೀರೇಶರು ನಿಜ ಸಾಧಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಓದುಗರಿಗೆ ಬೇಸರವಾಗದಿರಲೆಂದು ಪ್ರಾಸ ಬಳಕೆಗೆ ಒತ್ತು ನೀಡಿರುವ ವೀರೇಶರು ತಮ್ಮ ಕವನಗಳನ್ನು ಶಾಲಾ ಮಕ್ಕಳೂ ಸಂತಸದಿಂದ ಕಲಿತು ಹಾಡಲು ಅನುಕೂಲವಾಗುವಂತಾಗಿಸಿರುವುದು ಅವರ ಹೆಗ್ಗಳಿಕೆ. ಅದಕ್ಕೆ ಕೆಲವು ಉದಾಹರಣೆಗಳನ್ನು ಹೇಳುವುದಾದರೆ ಪುನೀತ್ ರಾಜಕುಮಾರರ ಬಗ್ಗೆ ಬರೆದ ಕವನದಲ್ಲಿ + +ಮುತ್ತಂತೆ ನೀನು ಬದುಕಿದೆ ಅಪ್ಪುಹೊತ್ತೊಯ್ದು ‘ವಿಧಿ’ ಮಾಡಿತು ತಪ್ಪು. + +ಎಂಬುವ ಸಾಲುಗಳಾಗಲೀ, ವಿಜಯಪುರದ ಜ್ಞಾನ ಯೋಗಾಶ್ರಮದ ಸಂತ ಶ್ರೀ ಸಿದ್ದೇಶ್ವರರ ಕುರಿತಾದ ಪದ್ಯದಲ್ಲಿನ + +‘ಕಿಸೆಯಿರದ ಅಂಗಿಯ ನಸುನಗುವ ಸಂತಇತಿಹಾಸದ ಪುಟಗಳಲಿ ಶಾಶ್ವತ ನೆಲೆ ನಿಂತ’ + +ಸಾಲುಗಳೂ ಹಾಗೂ ಸಾಲುಮರದ ತಿಮ್ಮಕ್ಕಳ ಕುರಿತಾದ + +‘ಶರಣು ಶರಣು ತಿಮ್ಮಕ್ಕಮರಣವಿರದ ನಮ್ಮಕ್ಕ’ + + + +ಎಂಬ ಪ್ರಾಸಬದ್ಧ ಸಾಲುಗಳು ಮಕ್ಕಳಿಂದಿಡಿದು ವೃದ್ಧರವರೆಗೂ ರಂಜನೀಯವೆನಿಸಿವೆ ಮತ್ತು ಸಾಧಕರ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರರ ಕುರಿತಾದ ‘ದೀನರ ಬಾಳಿನ ದಿನಕರ’ ಹಾಗೂ ನಟ ಶಂಕರ್‌ನಾಗರ ಕುರಿತಾದ ‘ಸಾಗರ ವಿದ್ಯೆಯ ಸಿನಿಸರದಾರ’ ಎಂಬ ಉಪಮೆಗಳು ವೀರೇಶರು ತಾವು ಆಯ್ದುಕೊಂಡ ಸಾಧಕರ ಬಗ್ಗೆ ಆಳ ಅಧ್ಯಯನವನ್ನು ನಡೆಸಿರುವುದರ ಕುರುಹುಗಳಾಗಿವೆ. + +ಸಂಕಲನಕ್ಕೆ ಮುನ್ನುಡಿಯನ್ನು ಬರೆದಿರುವ ಖ್ಯಾತ ವಿಮರ್ಷಕ ಡಾ. ಹೆಚ್ ಎಸ್ ಸತ್ಯನಾರಾಯಣರವರು ತಿಳಿಸಿದಂತೆ ವೀರೇಶರು ಇಲ್ಲಿ ಕಾವ್ಯವನ್ನು ವ್ಯಕ್ತಿ ಚಿತ್ರಣದ ಹೂಮಾಲಿಕೆಯಾಗಿಸಿಕೊಂಡು ಆದರಣೀಯ ವ್ಯಕ್ತಿತ್ವಗಳ ಬಿಡಿ ಬಿಡಿ ಹೂಗಳನ್ನು ಪೋಣಿಸಿ ಅಂದದ ಹೂಮಾಲಿಕೆಯನ್ನು ಹೆಣೆದಿದ್ದಾರೆ. ಪ್ರತೀ ಕವನಕ್ಕೂ ಅಂದದ ರೇಖಾಚಿತ್ರಗಳನ್ನು ರಚಿಸಿರುವ ಸಂತೋಷ ಸಸಿಹಿತ್ಲುರವರ ಬದ್ಧತೆ ಶ್ಲಾಘನೀಯ. ಇಂತಹ ಹತ್ತಾರು ಕೊಡುಗೆಗಳು ವೀರೇಶರ ಲೇಖನಿಯಿಂದ ಒಡಮೂಡಲಿ ಎಂಬ ಆಶಯ ನಮ್ಮದು. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_106.txt b/Kenda Sampige/article_106.txt new file mode 100644 index 0000000000000000000000000000000000000000..963595d1972522e5b4704c63280b9b4bca337c60 --- /dev/null +++ b/Kenda Sampige/article_106.txt @@ -0,0 +1,71 @@ +ಚಿಕ್ಕಂದಿನ ಆತ್ಮೀಯ ಸ್ನೇಹಿತರು + +ಶಂಕರ ಮೂರ್ತಿ + +ಪ್ರೈಮರಿ ಸ್ಕೂಲು, ಮಿಡ್ಡ್ಲ್ ಸ್ಕೂಲು ಮತ್ತು ಹೈಸ್ಕೂಲುಗಳಲ್ಲಿ ನನ್ನ ಜತೆಯಲ್ಲಿ ಓದಿದ ಸ್ನೇಹಿತರುಗಳಲ್ಲಿ ಬಹುತೇಕ ವಿದ್ಯಾರ್ಥಿಗಳು ನಂತರ ಬೇರೆಬೇರೆ ಕಾಲೇಜುಗಳಲ್ಲಿ ಓದಿ, ಬೇರೆಬೇರೆ ಊರುಗಳಲ್ಲಿ ನೆಲೆಸಿದ್ದರಿಂದ, ನಾನು ದೊಡ್ಡವನಾದ ಮೇಲೂ ಸಂಪರ್ಕದಲ್ಲಿದ್ದವರು ಅಲ್ಲೊಬ್ಬರು ಇಲ್ಲೊಬ್ಬರು ಮಾತ್ರ. ಅವರಲ್ಲಿ ಒಬ್ಬ ಶಂಕರಮೂರ್ತಿ, ನಮ್ಮ ಮನೆಯ ಹಿಂದೆ ಇದ್ದ ಅವರ ಚಿಕ್ಕಪ್ಪ-ಚಿಕ್ಕಮ್ಮನ ಮನೆಯಲ್ಲೇ ಇದ್ದುಕೊಂಡು ಪ್ರೈಮರಿ ಸ್ಕೂಲಿನಿಂದ ಹೈಸ್ಕೂಲಿನ ಕೊನೆಯವರೆಗೂ (1945 ರವರೆಗೆ) ನನ್ನ ಜತೆ ಸಹಪಾಠಿಯಾಗಿದ್ದ. ನಂತರ 22 ವರ್ಷಗಳು ಅವನ ಸಂಪರ್ಕ ತಪ್ಪಿಹೋಗಿತ್ತು. ನಾನು ಫಿಲಿಪ್ಪೈನ್ಸ್‍ನಲ್ಲಿ ವಿಶ್ವ ಆಹಾರ ಮತ್ತು ಕೃಷಿ ಸಂಸ್ಥೆಯಲ್ಲಿ ಕೆಲಸ ಮಾಡಿ, 1967ರಲ್ಲಿ ಆ ಕೆಲಸ ಬಿಟ್ಟು ಭಾರತಕ್ಕೆ ಚೆನ್ನೈ ಮೂಲಕ ಸಂಸಾರ ಸಮೇತ ವಾಪಸ್ಸು ಬಂದೆ. ಆಕಸ್ಮಿಕವಾಗಿ ಚೆನ್ನೈನಲ್ಲಿ ಶಂಕರಮೂರ್ತಿ ಸಿಕ್ಕಿದ. ಆಮೇಲೆ ನಮ್ಮ ಚಿಕ್ಕಂದಿನ ಆತ್ಮೀಯ ಗೆಳೆತನವನ್ನು ಮುಂದುವರೆಸುವುದು ಸಾಧ್ಯವಾಯಿತು. ಅವನು ಒಬ್ಬ ಉತ್ತಮ ಎಲೆಕ್ಟ್ರಿಕಲ್ ಕಂಟ್ರಾಕ್ಟರಾಗಿ ಚೆನ್ನೈನಲ್ಲಿ ಒಳ್ಳೆಯ ಹೆಸರು ಸಂಪಾದಿಸಿಕೊಂಡಿದ್ದ. ಆರ್ಥಿಕ ವಾಗಿ ಅನುಕೂಲವಾಗಿದ್ದ. ಅವನ ಹೆಂಡತಿ-ಮಕ್ಕಳನ್ನು ಭೇಟಿ ಮಾಡಿ, ನಾನು ನನ್ನ ಹೆಂಡತಿ ಮತ್ತು ಮಕ್ಕಳು ಹಲವಾರು ಬಾರಿ ಚೆನ್ನೈಗೆ ಹೋದಾಗ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆವು. 7-8 ವರ್ಷಗಳ ಹಿಂದೆ ಅವನು ತೀರಿಕೊಳ್ಳುವವರೆಗೂ ಆಗಾಗ್ಗೆ ಭೇಟಿ ಮಾಡುತ್ತಿದ್ದೆವು. ತೀರ್ಥಹಳ್ಳಿಯ ಹತ್ತಿರ ಹುಂಚದಕಟ್ಟೆಯಲ್ಲಿರುವ ಅವನ ತಂದೆ ತಾಯಿಯರ ಮನೆಗೆ ಆಗಾಗ್ಗೆ ಅವನು ಬರುತ್ತಿದ್ದ. ಹಾಗೆ ಬಂದಾಗ, ಎರಡು ಬಾರಿ ಹೆಂಡತಿ ಸಮೇತ ನಮ್ಮ ಭೀಮನಕಟ್ಟೆಯ ಮನೆಗೂ ಬಂದಿದ್ದ. + +ವೆಂಕಟೇಶರಾವ್ + +ಶಿವಮೊಗ್ಗದಲ್ಲಿ ನನ್ನ ಜತೆ 1939-1942 ರಲ್ಲಿ ಓದುತ್ತಿದ್ದ ಮತ್ತು ಆಟವಾಡುತ್ತಿದ್ದ, ಯಾವಾಗಲೂ ಹಸನ್ಮುಖಿಯಾಗಿರುತ್ತಿದ್ದ ಆತ್ಮೀಯ ಸ್ನೇಹಿತ ವೆಂಟೇಶರಾವ್ 1942 ರಿಂದ 1969 ರತನಕ ಬೇರೆಬೇರೆ ಊರುಗಳಲ್ಲಿ ಓದಿ ನಂತರ ಕೆಲಸ ಮಾಡುತ್ತಿದ್ದುದರಿಂದ ನನ್ನ ಜೀವನದಿಂದ ಮಾಯವಾಗಿದ್ದ. ನಾನು ಹೊರದೇಶಗಳಲ್ಲಿ 11 ವರ್ಷಗಳಿದ್ದು, ಅಲ್ಲಿಂದ ವಾಪಸ್ಸು ಬಂದ ಮೇಲೆ ಮೈಸೂರಿನ ಹತ್ತಿರದ ಕಳಲವಾಡಿಯಲ್ಲಿ 1969 ರಿಂದ 1979 ರವರೆಗೆ ನೆಲೆಸಿದ್ದಾಗ ಅವನೂ ಮೈಸೂರಿನಲ್ಲಿ ಎನ್.ಐ.ಇ. ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ಪ್ರೊಫೆಸರ್ ಆಗಿದ್ದು ನಂತರ ಪ್ರಿನ್ಸಿಪಾಲನಾಗಿದ್ದ. ಆದ್ದರಿಂದ ನಮ್ಮ ಸ್ನೇಹವನ್ನು ಮುಂದುವರೆಸುವುದು ಸಾಧ್ಯವಾಯಿತು. ಮೈಸೂರಿನ ಹತ್ತಿರ ಕಳಲವಾಡಿ ಎಂಬ ಹಳ್ಳಿಯಲ್ಲಿ ನಾನು ಜಮೀನು ಕೊಂಡುಕೊಂಡು ಅದರಲ್ಲಿ ನನ್ನ ಮನೆ ಕಟ್ಟುವುದಕ್ಕೆ, ತನ್ನ ಮನೆಯನ್ನು ಕಟ್ಟುವಾಗ ಕೊಟ್ಟಷ್ಟೇ ಗಮನಕೊಟ್ಟು, ಪ್ರೀತಿ-ವಿಶ್ವಾಸಗಳಿಂದ ಮಾಡಿದ ಸಹಾಯವನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳುತ್ತೇನೆ. ಅವನ ಹೆಂಡತಿ-ಮಕ್ಕಳೂ ನನ್ನ ಹೆಂಡತಿ-ಮಕ್ಕಳಿಗೆ ಆತ್ಮೀಯ ಸ್ನೇಹಿತರಾಗಿದ್ದರು. ನಾವು ತೀರ್ಥಹಳ್ಳಿಗೆ 1980ರಲ್ಲಿ ಹೋದ ಮೇಲೂ ನಾನು ಮೈಸೂರಿಗೆ ಹೋದಾಗ ವೆಂಕಟೇಶ ನನ್ನು ನೋಡುವುದು ಒಂದು ಮುಖ್ಯ ಕೆಲಸವಾಗಿತ್ತು. ನಂತರ ಅವನ ಅರವತ್ತರ ದಶಕದ ವಯಸ್ಸಿನಲ್ಲೇ ಹೃದಯಾಘಾತದಿಂದ ತೀರಿಕೊಂಡ ವರ್ತಮಾನ ಬಂತು. ಅವನ ಹಸನ್ಮುಖಿಯಾದ ಮೃದುವಾದ ವ್ಯಕ್ತಿತ್ವ, ನನ್ನ ಅವಶ್ಯಕತೆಗಳಿಗೆ ಸ್ಪಂದಿಸಿ ಪ್ರೀತಿಯಿಂದ ಮಾಡುತ್ತಿದ್ದ ಸಹಾಯ ಯಾವಾಗಲೂ ನನಗೆ ಸವಿಯಾದ ನೆನಪುಗಳು. ಒಮ್ಮೆ ಮೈಸೂರಿನಲ್ಲಿ ನನ್ನ ಪರ್ಸನ್ನು ಯಾರೋ ಪಿಕ್‍ಪಾಕೆಟ್ ಮಾಡಿ ಕದ್ದುಕೊಂಡಿದ್ದರು. ಅದರಲ್ಲಿ 700 ರುಪಾಯಿಗಳಿದ್ದವು. ಆ ವಿಷಯವನ್ನು ನ್ಯಾನ್ಸಿಗೆ ನಗುನಗುತ್ತ ಹೇಳಿದೆ. ನ್ಯಾನ್ಸಿಗೆ ಅಷ್ಟೊಂದು ದುಡ್ಡು ಕಳೆದುಕೊಂಡಿದ್ದ ವಿಷಯ ಕೇಳಿ ಅಳುವೇ ಬಂದುಬಿಟ್ಟಿತ್ತು. ಏನು ಮಾಡಿದರೂ ಅವಳ ದುಃಖ ಕಡಿಮೆಯಾಗಲಿಲ್ಲ. ಆಗ ನಾನು ‘ಓ, ನಾನು ಮರೆತೇ ಬಿಟ್ಟಿದ್ದೆ, ಬಸ್ನಲ್ಲಿ ಓಡಾಡುವುದಕ್ಕೆ ಮುಂಚೆ ನನ್ನ ಪರ್ಸನ್ನು ವೆಂಕಟೇಶನ ಕೈಲಿ ಕೊಟ್ಟು ಕೆಲವೇ ರುಪಾಯಿಗಳನ್ನು ಜೇಬಿನಲ್ಲಿಟ್ಟುಕೊಂಡಿದ್ದನ್ನು ಮರೆತೇಬಿಟ್ಟಿದ್ದೆ’ ಎಂದು ನಗುನಗುತ್ತಾ ಸುಳ್ಳು ಹೇಳಿದೆ. ಅದನ್ನು ಕೇಳಿ ‘ಅದು ನಿಜವಾ, ನಿಜವಾಗಿ ಅವನಿಗೆ ಕೊಟ್ಟಿದ್ದೀಯಾ’ ಎಂದು ನ್ಯಾನ್ಸಿ ನನ್ನ ಸುಳ್ಳನ್ನು ನಂಬಿ ಸಮಾಧಾನ ಮಾಡಿಕೊಂಡಳು. ನಾನು ವೆಂಕಟೇಶನಿಗೆ ಕಾಗದ ಬರೆದು ನ್ಯಾನ್ಸಿ ಕೇಳಿದರೆ ನನ್ನಂತೆ ಅವನೂ ಸುಳ್ಳು ಹೇಳಬೇಕೆಂದು ವಿನಂತಿಸಿಕೊಂಡೆ. ಅದೃಷ್ಟವಶಾತ್ ಆಗ ನಮ್ಮ ಮನೆಯಲ್ಲಿ ಟೆಲಿಫೋನಿರಲಿಲ್ಲ. + +ಸ್ವಾತಂತ್ರ್ಯ ಹೋರಾಟಗಾರನಾಗಿ + +1939 ರಲ್ಲಿ ನಾನು ಮಿಡ್ಲ್‍ಸ್ಕೂಲಿನಲ್ಲಿ ಓದುತ್ತಿದ್ದಾಗ ಅಣ್ಣನಿಗೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ವರ್ಗವಾಯಿತು. ಅಲ್ಲಿ ನಾನು ಸರ್ಕಾರಿ ಮೈನ್ ಮಿಡ್ಲ್‍ಸ್ಕೂಲಿನಲ್ಲಿ ಎರಡು ವರ್ಷ ಓದಿ, 1942 ರಲ್ಲಿ ಸರ್ಕಾರಿ ಹೈಸ್ಕೂಲಿನ ಮೊದಲನೆಯ ತರಗತಿಗೆ ಜೂನ್ ತಿಂಗಳಲ್ಲಿ ಸೇರಿಕೊಂಡೆ. ನಾಆಗಸ್ಟ್ ತಿಂಗಳಲ್ಲಿ ಗಾಂಧೀಜಿಯವರು ಕ್ವಿಟ್ ಇಂಡಿಯಾ ಚಳುವಳಿಗೆ ಕರೆಕೊಟ್ಟರು. ಭಾರತದಲ್ಲಿ ಎಲ್ಲೆಲ್ಲೂ ವಿದ್ಯಾರ್ಥಿಗಳೂ ಸೇರಿ, ಎಲ್ಲ ವರ್ಗದ ಜನರಲ್ಲೂ ವಿದ್ಯುತ್ ಸಂಚಾರವಾದ ರೀತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಳುವಳಿಯಲ್ಲಿ ಭಾಗವಹಿಸುವುದಕ್ಕೆ ಸ್ಫೂರ್ತಿ ಬಂತು. ನನ್ನಂತಹ ಚಿಕ್ಕವಯಸ್ಸಿನ ಹುಡುಗರ ಮೇಲೂ ಕೂಡ ಗಾಂಧೀಜಿಯವರ ಪ್ರಭಾವ ಜೋರಾಗಿದ್ದು ನಾವೆಲ್ಲ ಚಳುವಳಿಯಲ್ಲಿ ಸ್ಫೂರ್ತಿಯಿಂದ ಭಾಗವಹಿಸಿದೆವು. ಸ್ಕೂಲಿಗೆ ಸ್ಟ್ರೈಕ್‌ ಮಾಡಿ, ತ್ರಿವರ್ಣದ ಕಾಂಗ್ರೆಸ್ ಬಾವುಟ ಹಿಡಿದುಕೊಂಡು, ದೇಶಭಕ್ತಿ ಗೀತೆಗಳನ್ನು ಹಾಡುತ್ತ ಶಿವಮೊಗ್ಗದ ಬೀದಿಗಳಲ್ಲಿ ಮೆರವಣಿಗೆ ಮಾಡುತ್ತಿದ್ದೆವು. ನಾನು ಇತರರಿಗಿಂತ ಸಣ್ಣಕ್ಕಿದ್ದುದರಿಂದ, ನನ್ನ ಕೈಯಲ್ಲಿ ಬಾವುಟ ಕೊಟ್ಟು ಮೆರವಣಿಗೆಯ ಮುಂಭಾಗದಲ್ಲಿ ನಿಲ್ಲಿಸುತ್ತಿದ್ದರು. ಸರಕಾರಕ್ಕೆ ಈ ವಿಷಯ ಗೊತ್ತಾದ ಮೇಲೆ ನನ್ನ ತಂದೆಯವರಿಗೆ ನನ್ನನ್ನು ಚಳುವಳಿಯಲ್ಲಿ ಭಾಗವಹಿಸ ದಂತೆ ತಡೆಯಬೇಕೆಂಬ ಹುಕುಂ ಬಂತು. ಚಳುವಳಿಯಲ್ಲಿ ನಾನು ಭಾಗವಹಿಸಿದರೆ, ಅಣ್ಣ ತನ್ನ ಸರ್ಕಾರಿ ಕೆಲಸಕ್ಕೇ ಕುತ್ತು ಬರುವ ಸಾಧ್ಯತೆ ಇದ್ದುದನ್ನು ನನಗೆ ವಿವರಿಸಿ ಹೇಳಿ, ತಾವೂ ಸ್ವಾತಂತ್ರ್ಯ ಚಳುವಳಿಯ ಬೆಂಬಲಿಗರೆಂದೂ, ಆದರೆ ತಮ್ಮ ಸರ್ಕಾರಿ ನೌಕರಿಯಿಂದ ಬರುವ ಸಂಬಳದ ಅವಶ್ಯಕತೆ ನಮ್ಮೆಲ್ಲರ ಬದುಕಿಗೂ ಅತ್ಯವಶ್ಯಕವಾದುದ ರಿಂದ ನಾನು ಚಳುವಳಿಯಲ್ಲಿ ನೇರವಾಗಿ ಭಾಗವಹಿಸಬಾರದೆಂದು ತಿಳುವಳಿಕೆ ಕೊಟ್ಟರು. ಆಮೇಲೆ ನಾನು ಮೆರವಣಿಗೆಗಳಲ್ಲಿ ನೇರವಾದ ಪಾತ್ರ ವಹಿಸುವುದನ್ನು ನಿಲ್ಲಿಸಿದೆ. ಆದರೆ ಕ್ಲಾಸಿಗೆ ಹೋಗುತ್ತಿರುವ ಹುಡುಗರನ್ನು ತಡೆಯುವುದಕ್ಕೆ ಮಾಡುತ್ತಿದ್ದ ಪಿಕೆಟಿಂಗ್‍ನಲ್ಲಿ ಭಾಗವಹಿಸುವ ಮೂಲಕ ಚಳುವಳಿಯಲ್ಲಿ ಭಾಗವಹಿಸುವುದನ್ನು ಮುಂದುವರೆಸಿದೆ. ಒಂದು ದಿವಸ ನಾನು ಸ್ಕೂಲಿಗೆ ಹೋಗಿ ಹೆಡ್ಮೇಷ್ಟ್ರರನ್ನು “ಇವತ್ತು ಸ್ಕೂಲಿಗೆ ರಜೆ ಇದೆಯೇ?” ಎಂದು ಕೇಳಿದೆ. ಅದಕ್ಕೆ ಅವರು “ನೀವು ಸ್ಟ್ರೈಕ್ ಮಾಡೋ ಹುಡುಗರು. ನಿಮಗೆ ರಜವಾದರೇನು ಬಿಟ್ಟರೇನು” ಎಂದು ನನ್ನನ್ನು ಕೇಳಿದ್ದಕ್ಕೆ, ನಾನು “ನಾಳೆ ನಾವು ಪಿಕೆಟ್ ಮಾಡೋಕೆ ಬರಬೇಕೆ ಬೇಡವೇ ಎನ್ನುವ ಕಾರಣಕ್ಕೆ ಕೇಳಿದೆ” ಎಂದು ಹೇಳಿದೆ. ಅವರಿಗೆ ತುಂಬಾ ಕೋಪ ಬಂದು, ನನ್ನ ತಂದೆಯವರಿಗೆ ದೂರುಕೊಟ್ಟು ನನ್ನ ವರ್ತನೆಯ ವಿವರಗಳನ್ನು ಕೊಟ್ಟರಂತೆ. ತಂದೆಯವರಿಗೆ ಅದನ್ನು ಕೇಳಿ ನಗು ಬಂದು, ಅದನ್ನು ಕಷ್ಟಪಟ್ಟು ತಡೆದುಕೊಂಡರಂತೆ. ನಂತರ ಸರ್ಕಾರಿ ನೌಕರರ ಮಕ್ಕಳಾದ ನಾವೆಲ್ಲ ಕ್ಲಾಸಿಗೆ ಹೋಗಿ ಅಧ್ಯಾಪಕರ ಕಡೆಗೆ ಬೆನ್ನುಮಾಡಿ ಕುಳಿತೋ ಅಥವಾ ಬಾಯಿ ಮುಚ್ಚಿಕೊಂಡು ಶಬ್ದ ಮಾಡುತ್ತಲೋ ಅಥವಾ ಬೇರೆಬೇರೆ ರೀತಿಯಲ್ಲಿ ಗಲಾಟೆ ಮಾಡಿಯೋ ನಮ್ಮ ಪ್ರತಿಭಟನೆಯನ್ನು ತೋರಿಸುತ್ತಿದ್ದೆವು. ಒಟ್ಟಿನಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ್ದ “ನಾವೆಲ್ಲ ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀಜಿಯ ಅನುಯಾಯಿಗಳು” ಎನ್ನುವ ಭಾವನೆಯನ್ನು ನೆನೆಸಿಕೊಂಡರೆ ಈಗಲೂ ಸಂತೋಷ ವಾಗುತ್ತದೆ. + +ಮಹಾಜನ ಹೈಸ್ಕೂಲಿನಲ್ಲಿ + +ಮುಂದಿನ ವರ್ಷ (1943 ರಲ್ಲಿ) ಅಣ್ಣನಿಗೆ ಮೈಸೂರಿಗೆ ಆಕಾಶವಾಣಿಯ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ವರ್ಗವಾಗಿದ್ದರಿಂದ ನನ್ನ ಹೈಸ್ಕೂಲು ವಿದ್ಯಾಭ್ಯಾಸದ ಕೊನೆಯ ಎರಡು ವರ್ಷ ಮೈಸೂರಿನ ಒಂಟಿಕೊಪ್ಪಲಿನಲ್ಲಿ ನಮ್ಮ ಮನೆಯ ಹತ್ತಿರವೇ ಇದ್ದ ಮಹಾಜನ ಹೈಸ್ಕೂಲಿನಲ್ಲಿ ಓದಿದ್ದೆ. ಆ ಸ್ಕೂಲಿನಲ್ಲಿ ಕೆಲಸ ಮಾಡುತ್ತಿದ್ದ ಹಲವಾರು ಅಧ್ಯಾಪಕರು ಖಾದೀಧಾರಿಗಳು ಮತ್ತು ಸ್ವಾತಂತ್ರ್ಯ ಹೋರಾಟದ ಪರವಾಗಿದ್ದವರು. ಯಾರಾದರೂ ಒಬ್ಬ ಅಧ್ಯಾಪಕರು ರಜ ತೆಗೆದುಕೊಂಡಿದ್ದರೆ, ಅವರ ಬದಲಿಗೆ ಮತ್ತೊಬ್ಬರು ಬಂದಾಗ, ಅವರಲ್ಲಿ ಒಬ್ಬ ಅಧ್ಯಾಪಕರು ಷೇಕ್ಸ್‍ಪಿಯರನ ಯಾವುದಾದರೂ ನಾಟಕವನ್ನು ಓದಿ, ನಮಗೆ ಅದರ ಅರ್ಥವನ್ನು ವಿವರಿಸಿ ಹೇಳುತ್ತಿದ್ದರು. ಮತ್ತೆ ಕೆಲವರು ಗಾಂಧೀಜಿ ಯವರ ಬಗ್ಗೆಯೋ, ಸ್ವಾತಂತ್ರ್ಯ ಚಳುವಳಿಯ ಬಗ್ಗೆಯೋ, ರಾಮಕೃಷ್ಣ ಪರಮ ಹಂಸರ ಅಥವಾ ವಿವೇಕಾನಂದರ ಬಗ್ಗೆಯೋ ಪಾಠ ಮಾಡುತ್ತಿದ್ದರು. ಒಟ್ಟಿನಲ್ಲಿ ನಮ್ಮ ಶಾಲೆಯು ಸ್ವಾತಂತ್ರ್ಯ ಹೋರಾಟದ ಮತ್ತು ಅಧ್ಯಾತ್ಮದ ಪರವಾದ ವಾತಾವರಣವನ್ನು ಸೃಷ್ಟಿಸಿತ್ತು. + +ತಿಲಕ್ ಸಂಘದಲ್ಲಿ + +ನಾವು ವಾಸಮಾಡುತ್ತಿದ್ದ ಒಂಟಿಕೊಪ್ಪಲ್ ಬಡಾವಣೆಯಲ್ಲಿ ನಾವು ಕೆಲವು ಹುಡುಗರು ಸೇರಿ ತಿಲಕ್ ಸಂಘ ಎಂಬ ಸಂಸ್ಥೆಯನ್ನು ಸ್ಥಾಪಿಸಿ, ಪ್ರತಿ ಭಾನುವಾರ ಅಥವಾ ರಜಾದಿನಗಳಲ್ಲಿ ದೇಶಭಕ್ತಿಗೀತೆಗಳನ್ನು ಹಾಡಿಕೊಂಡು ಪ್ರಭಾತ್ ಫೇರಿ (ಬೆಳಿಗ್ಗೆಯ ಮೆರವಣಿಗೆ) ಯನ್ನು ನಡೆಸುತ್ತಿದ್ದೆವು. ಈ ಸಂಸ್ಥೆಯಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ ಎಚ್ ಸಿ ದಾಸಪ್ಪ ಮತ್ತು ಶ್ರೀಮತಿ ಯಶೋಧರಮ್ಮ ದಾಸಪ್ಪ ಅವರ ಮಗ ತುಳಸೀದಾಸ್ ಕೂಡ ನಮ್ಮ ಜೊತೆಗಾರನಾಗಿದ್ದ. ಅವನೂ ನಾನು ಮೆರವಣಿಗೆಯಲ್ಲಿ ಹಾಡುಗಾರರಾಗಿ ದ್ದೆವು. ಯಶೋಧರಮ್ಮ ಮತ್ತು ದಾಸಪ್ಪ ಗಾಂಧೀಜಿಯ ಆದರ್ಶಗಳನ್ನು ಪಾಲಿಸುತ್ತಿದ್ದ ಅವರ ಶಿಷ್ಯರಾಗಿದ್ದರು. + +ತುಳಸಿದಾಸನನ್ನು ಕರೆಯುವುದಕ್ಕೆ ಆಗಾಗ್ಗೆ ಅವರ ಮನೆಗೆ ಹೋಗುತ್ತಿದ್ದಾಗ ಯಶೋಧರಮ್ಮನವರು ನನ್ನನ್ನು ಅವರ ಮಗನ ಹಾಗೇ ನೋಡಿ ಕೊಳ್ಳುತ್ತಿದ್ದರು. ಅವರು ಮಂತ್ರಿಯಾಗಿದ್ದಾಗ ಕರ್ನಾಟಕ ಸರ್ಕಾರ ಪಾನನಿಷೇಧದ ವಿಷಯದಲ್ಲಿ ಗಾಂಧೀಜಿಯ ಆದರ್ಶಗಳನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕಾಗಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಗಾಂಧೀಜಿಯ ನಿಜವಾದ ಅನುಯಾಯಿ ಎಂದು ನಮ್ಮೆಲ್ಲರಿಗೂ ಅವರ ಮೇಲಿದ್ದ ಗೌರವ, ಪ್ರೀತಿ ವಿಶ್ವಾಸಗಳು ಇಮ್ಮಡಿಯಾದವು. ಹಲವಾರು ವರ್ಷಗಳ ನಂತರ ನಾನು ಅಮೆರಿಕಾಕ್ಕೆ ಹೋಗಿ ವಾಪಸ್ಸು ಬಂದು ಮೈಸೂರಿನಲ್ಲಿ ನೆಲಸಿದಾಗ ತುಳಸಿ ‘ತುಳಸಿ ದಾಸಪ್ಪ’ ಎಂಬ ಹೆಸರಿನಲ್ಲಿ ಪಾರ್ಲಿಮೆಂಟಿನ ಮೆಂಬರ್(ಎಮ್.ಪಿ) ಆಗಿ ಚುನಾಯಿತನಾಗಿದ್ದ. ಪಾರ್ಲಿಮೆಂಟಿನ ಕೆಲಸಕ್ಕೆ ದೆಹಲಿಗೆ ಹೋಗುತ್ತಿದ್ದರೂ, ವರ್ಷದಲ್ಲಿ ಬಹುಕಾಲ ಮೈಸೂರಿನಲ್ಲೇ ಇರುತ್ತಿದ್ದುದರಿಂದ ಅವನೂ ನಾನು ಆಗಾಗ್ಗೆ ಭೇಟಿ ಮಾಡಿ ಮೊದಲಿನಂತೆಯೇ ಆಪ್ತಮಿತ್ರರಾಗಿದ್ದೆವು. 1970ರಲ್ಲಿ ನಾನು ಮೈಸೂರಿನ ಹತ್ತಿರ ನನ್ನ ತೋಟದಲ್ಲಿ ನೆಲೆಸಿದ ಮೇಲೆ, ಅವನು ಹಳ್ಳಿಹಳ್ಳಿಗಳಿಗೆ ಹೋಗಿ ತನ್ನನ್ನು ಚುನಾಯಿಸಿದ ಜನಗಳನ್ನು ಭೇಟಿ ಮಾಡಿ ಅವರ ಕುಂದು ಕೊರತೆಗಳು ಮತ್ತು ಅವಶ್ಯಕತೆಗಳ ಬಗ್ಗೆ ವಿಚಾರಿಸಿಕೊಳ್ಳುತ್ತಿದ್ದಾಗ ನಾನೂ ಅವನ ಜೊತೆ ಹೋಗುತ್ತಿದ್ದೆ. ದಾರಿಯಲ್ಲಿ ಅವನು ಕಲಿತಿದ್ದ ಹಿಂದೂಸ್ತಾನಿ ಶೈಲಿಯ ಹಾಡುಗಳನ್ನು ಹೇಳುತ್ತಿದ್ದ. ನನಗೂ ಹೇಳಿಕೊಡುತ್ತಿದ್ದ. ದುರ್ಗಾ ರಾಗದ ‘ಸಖಿ ಮೋರಿ ರುಮ ಝೂಮ’ ನಾನು ಅವನಿಂದ ಕಲಿತ ಒಂದು ಹಾಡು. ಈಗಲೂ ದುರ್ಗಾ ರಾಗ ನನಗೆ ತುಂಬಾ ಪ್ರಿಯವಾದ ರಾಗ. + +ನಾನು ಮೈಸೂರು ಬಿಟ್ಟು ತೀರ್ಥಹಳ್ಳಿಗೆ ಹೋದಮೇಲೆ, ಅವನು ಮತ್ತೊಮ್ಮೆ ಎಂಪಿ ಆಗದೆ ಬೆಂಗಳೂರಿನಲ್ಲಿ ಮನೆ ಕಟ್ಟಿಕೊಂಡು ಅಲ್ಲಿಯೇ ನೆಲೆಸಿದ. ನಾನು ನನ್ನ ತೋಟ ಮಾರಿ ತೀರ್ಥಹಳ್ಳಿಯ ಹತ್ತಿರ ಭೀಮನಕಟ್ಟೆಯಲ್ಲಿ ನೆಲೆಸಿದ ಮೇಲೆ ನಾವಿಬ್ಬರೂ ಭೇಟಿಯಾಗಲೇ ಇಲ್ಲ. ಅವನು ಬೆಂಗಳೂರಿಗೆ ಹೋದ ಕೆಲವೇ ವರ್ಷಗಳಲ್ಲಿ ಹೃದಯಾ ಘಾತದಿಂದ ತೀರಿಕೊಂಡನೆಂಬ ವರ್ತಮಾನ ಕೇಳಿ ಮನಸ್ಸಿಗೆ ಬೇಸರವಾಯಿತು. + +ಮತ್ತೊಬ್ಬ ಆಗಿನ ಕಾಲದ ಆಪ್ತಮಿತ್ರ ತವನಪ್ಪ ಭೋಪಾಲ್ ತಿಲಕ್ ಸಂಘದ ಕಾರ್ಯದರ್ಶಿಯಾಗಿ ಅದರ ಚಟುವಟಿಕೆಗಳಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದ. ಅವರ ತಂದೆ ಒಬ್ಬ ಅನುಕೂಲಸ್ಥ ವ್ಯಾಪಾರಿಯಾಗಿ ಮಗನ ಚಟುವಟಿಕೆಗಳಿಗೆ ಧಾರಾಳವಾಗಿ ಹಣ ಒದಗಿಸುತ್ತಿದ್ದರು. ಅದನ್ನು ಬಳಸಿಕೊಂಡು ಸಂಘದ ಚಟುವಟಿಕೆಗಳಿಗೆ ಅವನೇ ಬಹುಮಟ್ಟಿಗೆ ಹಣ ಒದಗಿಸುತ್ತಿದ್ದ. ಸಿಗರೇಟು ಸೇದುವುದು ಅವನಿಗೊಂದು ಚಟವಾಗಿತ್ತು. ನಾನು ಹೈಸ್ಕೂಲು ಮುಗಿಸುವುದಕ್ಕೆ ಮುಂಚೆಯೇ, ಅವನು ಮತ್ತು ಮತ್ತೊಬ್ಬ ಸ್ನೇಹಿತ, ಯಾರು ಹೆಚ್ಚು ಸಿಗರೇಟ್ಗಳನ್ನು ಅತಿಕಡಿಮೆ ಸಮಯದಲ್ಲಿ ಸೇದುತ್ತಾರೆ ಎನ್ನುವ ಒಂದು ‘ಆಟ’ ಆಡಿ, ಅದರಲ್ಲಿ ಭೋಪಾಲ್ ಗೆದ್ದನಂತೆ. ಆದರೆ ಆ ಆಟದಿಂದ ಅವನಿಗೆ ಉಸಿರಾಟದ ತೊಂದರೆಯಾಗಿ ಕೆಲವೇ ನಿಮಿಷಗಳಲ್ಲಿ ಸತ್ತುಹೋದ. ಒಬ್ಬ ಸ್ವಾತಂತ್ರ್ಯ ಹೋರಾಟಗಾರ ಮತ್ತು ನನ್ನ ಒಬ್ಬ ಆತ್ಮೀಯ ಸ್ನೇಹಿತನ ಜೀವನವು ಒಂದು ಕ್ಷುಲ್ಲಕ ಆಟದಲ್ಲಿ ಕೊನೆಗೊಂಡಿತು. + +ಗಾಂಧೀಜಿಯ ಆಶ್ರಮದ ಪ್ರಾರ್ಥನೆಯಲ್ಲಿ + +ನನ್ನ ಹೈಸ್ಕೂಲು ಮತ್ತು ಕಾಲೇಜಿನ ಮೊದಲ ಎರಡು ವರ್ಷಗಳಲ್ಲಿ, ನಮ್ಮ ಮನೆಯ ಹತ್ತಿರದಲ್ಲಿ ಗಾಂಧೀಜಿಯ ಮೊಮ್ಮಗ ಕಾಂತಿಲಾಲ್ ಗಾಂಧಿ ಮತ್ತು ಅವರ ಹೆಂಡತಿ ಸರಸ್ವತಿ ವಾಸವಾಗಿದ್ದರು. ಕಾಂತಿಲಾಲ್ ಅವರನ್ನು ನಾವೆಲ್ಲ ಕಾಂತಿಭಾಯ್ ಎಂದು ಕರೆಯುತ್ತಿದ್ದೆವು. ಅವರು ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿ ದ್ದರು. ಅವರ ಮನೆಯಲ್ಲಿ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಾಯಂಕಾಲ, ಗಾಂಧೀಜಿಯ ಆಶ್ರಮದ ಪ್ರಾರ್ಥನೆಯನ್ನು ಮಾಡುತ್ತಿದ್ದರು. ಆ ಪ್ರಾರ್ಥನೆಗಳಲ್ಲಿ ನಾನು ಮತ್ತು 10-15 ಜನ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದೆವು. “ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಹ ಸ್ತುನ್ವಂತಿ ದಿವ್ಯೈ ಸ್ತವೈಹಿ” ಎಂಬ ಒಂದು ಶ್ಲೋಕ, “ಯಂ ಶೈವಾಸ್ಸಮುಪಾಸತೇ ಶಿವೈತಿ ಬ್ರಹ್ಮೇತಿ ವೇದಾಂತಿನಹ, ಬೌದ್ಧಾ ಬುದ್ಧಯಿತಿ ಪ್ರಮಾಣ ಪಟವಹ ಕರ್ತೇತಿ ನೈಯಾಯಿಕಾಹ” ಎಂಬ ಮತ್ತೊಂದು ಶ್ಲೋಕ ಇತ್ಯಾದಿ ದೇವರನ್ನು ಬೇರೆ ಗುಂಪುಗಳ ಜನಗಳು ಹೇಗೆ ಬೇರೆಬೇರೆ ಹೆಸರುಗಳಿಂದ ಆರಾಧಿಸುತ್ತಾರೆ ಎಂದು ಅರ್ಥ ಕೊಡುವ ಶ್ಲೋಕಗಳನ್ನು ಮತ್ತು ಕಬೀರ್, ಮೀರಾ ಇತ್ಯಾದಿ ಭಕ್ತರ ಗೀತೆಗಳನ್ನು ನಮ್ಮ ಪ್ರಾರ್ಥನೆ ಯಲ್ಲಿ ಹಾಡುತ್ತಿದ್ದೆವು. ಎಲ್ಲ ಮತಗಳ ಬಗ್ಗೆ ಬೇರೆಬೇರೆ ನಂಬಿಕೆಗಳ ಬಗ್ಗೆ ಗಾಂಧೀಜಿ ಯವರಿಗಿದ್ದ ಗೌರವಪೂರ್ವಕ ಭಾವನೆಗಳನ್ನು ನಾವೂ ಬೆಳೆಸಿಕೊಂಡೆವು. ಸ್ಥಿತಪ್ರಜ್ಞನ ಲಕ್ಷಣಗಳ ಬಗ್ಗೆ ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಹಾಡುತ್ತಿದ್ದೆವು. “ರಘುಪತಿ ರಾಘವ ರಾಜಾ ರಾಮ್, ಪತಿತ ಪಾವನ ಸೀತಾರಾಮ್, ಈಶ್ವರ-ಅಲ್ಲಾ ತೇರೆ ನಾಮ್” ಎಂದು ಸಾರುವ ಹಾಡುಗಳನ್ನು ಹೇಳಿಕೊಂಡು ಭಜನೆ ಮಾಡುತ್ತಿದ್ದೆವು. ಕಾಂತಿಭಾಯ್ ಅವರ ಮೂಲಕ ನಾವು ಗಾಂಧೀಜಿಯವರ ಶಿಷ್ಯರಾಗಿ ಬಿಟ್ಟಿದ್ದೆವು. ಖಾದಿ ಬಟ್ಟೆಗಳನ್ನೆ ಹಾಕುತ್ತಿದ್ದೆವು. ಈ ಪ್ರಾರ್ಥನೆಗಳು ನನ್ನ ಮನಸ್ಸಿಗೆ ತುಂಬಾ ಶಾಂತಿ ಕೊಡುತ್ತಿದ್ದವು. ನಾನೂ ಒಬ್ಬ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ, ಗಾಂಧೀಜಿಯ ಶಿಷ್ಯ ಎಂಬ ಉಲ್ಲಾಸಕರ ಭಾವನೆ ನನ್ನಲ್ಲಿತ್ತು. ದೇವರು ಒಬ್ಬನೆ, ಬೇರೆಬೇರೆ ಮತೀಯರು ಅವನನ್ನು ಬೇರೆಬೇರೆ ಹೆಸರುಗಳಿಂದ ಕರೆಯುತ್ತಾರೆ ಎಂಬ ಗಾಂಧೀಜಿಯ ನಂಬಿಕೆಗಳು ನನ್ನಲ್ಲಿ ಆಗ ಬೆಳೆದು ಇಂದಿಗೂ ಜೀವಂತವಾಗಿವೆ. + +ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ. ಯಾರೂ ಅದರ ಬಗ್ಗೆ ಚಕಾರ ಎತ್ತದೇ ಇದ್ದುದು ಗಾಂಧೀಜಿಯವರ ಬಗ್ಗೆ ಬಹುತೇಕ ಜನಗಳಿಗೆ ಆಗ ಇದ್ದ ಗೌರವ, ನಂಬಿಕೆ ಮತ್ತು ಭಕ್ತಿಗಳನ್ನು ತೋರಿಸುತ್ತಿತ್ತು. + +ಹೈಸ್ಕೂಲು ಮುಗಿಸಿದ ಮೇಲೆ ಮೈಸೂರಿನ ಯುವರಾಜಾ ಕಾಲೇಜಿನಲ್ಲಿ ನಾನು ಆಯ್ದುಕೊಂಡಿದ್ದ ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಪ್ರಾಣಿಶಾಸ್ತ್ರದಲ್ಲಿ ಪಾಠಗಳು ಅಷ್ಟೊಂದು ಸ್ಫೂರ್ತಿಯನ್ನಾಗಲೀ, ಆನಂದವನ್ನಾಗಲೀ ಕೊಡಲಿಲ್ಲ. ಮುಖ್ಯವಾಗಿ ನಮ್ಮ ತಿಲಕ್ ಸಂಘದ ಚಟುವಟಿಕೆಗಳು, ಮತ್ತು ಕಾಂತಿಲಾಲ್ ಗಾಂಧಿಯವರ ಮನೆಯಲ್ಲಿ ನಡೆಯುತ್ತಿದ್ದ ಪ್ರಾರ್ಥನೆಗಳು ಕಾಲೇಜಿನ ವಿದ್ಯಾಭ್ಯಾಸಕ್ಕಿಂತ ಮುಖ್ಯವಾಗಿದ್ದವು. + + + +ಯುವರಾಜಾ ಕಾಲೇಜಿನಲ್ಲಿ ಎರಡನೆಯ ವರ್ಷ ಕೊನೆಯ ಎರಡು-ಮೂರು ತಿಂಗಳು ಮೈಬಗ್ಗಿಸಿ ಚೆನ್ನಾಗಿ ಓದಿಕೊಂಡಿದ್ದರಿಂದ, ಆಯ್ದುಕೊಂಡಿದ್ದ ಮೂರೂ ವಿಷಯಗಳಲ್ಲಿ (ರಸಾಯನಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಜೀವಶಾಸ್ತ್ರ ಮೊದಲನೆಯ ದರ್ಜೆಯಲ್ಲಿ ಪಾಸು ಮಾಡುವುದು ಸಾಧ್ಯವಾಯಿತು. ರಸಾಯನಶಾಸ್ತ್ರದ ಪಾಠ ಮಾಡುತ್ತಿದ್ದ ಸಂತಾನಂ, ಪ್ರಾಣಿಶಾಸ್ತ್ರದಲ್ಲಿ ಎಲ್.ಎಸ್.ರಾಮಸ್ವಾಮಿ, ಕನ್ನಡದಲ್ಲಿ ವೆಂಕಟರಾಮಪ್ಪ, ಇಂಗ್ಲಿಷ್‍ನಲ್ಲಿ ಮೈಲಾರಿರಾವ್ ಮತ್ತು ಎಮ್.ವಿ. ಕೃಷ್ಣಸ್ವಾಮಿ ಮಾತ್ರ ಚೆನ್ನಾಗಿ ಪಾಠ ಹೇಳುತ್ತಿದ್ದರು ಎಂದು ನೆನಪು. ಮಿಕ್ಕ ಉಪಾಧ್ಯಾಯರುಗಳ ಬಗ್ಗೆ ಹೆಚ್ಚು ನೆನಪಿಲ್ಲ. + +ಯುವರಾಜಾ ಕಾಲೇಜು ನಮ್ಮ ಒಂಟಿಕೊಪ್ಪಲಿನ ಮನೆಯಿಂದ ಎರಡೂವರೆ ಮೈಲಿ ದೂರವಿತ್ತು. ಅಲ್ಲಿಗೆ ಮೊದಲ ವರ್ಷ ಪ್ರತಿನಿತ್ಯ ಸ್ನೇಹಿತರುಗಳ ಜತೆ ಹರಟೆ ಹೊಡೆದುಕೊಂಡು ಬರಿಗಾಲಿನಲ್ಲಿ ನಡೆದೇ ಹೋಗುತ್ತಿದ್ದೆವು. ಬಸ್ಸುಗಳಿಲ್ಲದ್ದರಿಂದ ಮನೆಯಿಂದ ಅಷ್ಟೇ ದೂರವಿದ್ದ ದೇವರಾಜ ಮಾರ್ಕೆಟ್ಟಿಗೂ ನಡೆದೇ ಹೋಗುತ್ತಿದ್ದೆವು. ಎರಡನೆಯ ವರ್ಷದಲ್ಲಿ ಓದುತ್ತಿದ್ದಾಗ ಸುಬ್ರಾಮು ಬೆಂಗಳೂರಿಗೆ ಬಿಎಸ್‍ಸಿ ಓದುವುದಕ್ಕೆ ಹೋಗಿ ಹಾಸ್ಟೆಲ್ ಸೇರಿಕೊಂಡಿದ್ದರಿಂದ ಅವನ ಸೈಕಲ್ ನನಗೆ ಸಿಕ್ಕಿತು. ಅಣ್ಣ ನನಗೆ ಒಂದು ಜೊತೆ ಚಪ್ಪಲಿಯನ್ನೂ ತೆಗೆಸಿಕೊಟ್ಟರು. ಆರಾಮವಾಗಿ ಬರಿಗಾಲಿನಲ್ಲಿ ನಡೆಯು ತ್ತಿದ್ದಾಗ ಕಾಲಿಗೆ ಕಲ್ಲು ಒತ್ತಿ ತೊಂದರೆಯಾದ ನೆನಪಿಲ್ಲ. ಈಗ ಬರಿಗಾಲಿನಲ್ಲಿ ಸ್ವಲ್ಪ ದೂರ ಕೂಡ ನಡೆಯುವುದೂ ತುಂಬಾ ಕಷ್ಟ. + +ಕಾಲೇಜಿಗೆ ಹೋಗುತ್ತಿದ್ದಾಗ ಜಯಮ್ಮ ನನಗೆ ಮಧ್ಯಾನ್ಹದ ತಿಂಡಿಗಾಗಿ ದಿವಸಕ್ಕೆ ನಾಲ್ಕಾಣೆ ಕೊಡುತ್ತಿದ್ದಳು. ಅದರಲ್ಲಿ ಮೂರು ಕಾಸಿಗೆ ಒಂದು ಮಸಾಲೆ ದೋಸೆ ತಿಂದು, ಮೂರು ಕಾಸಿಗೆ ಕಾಫಿ ಕುಡಿದು, ಇನ್ನೂ ಮೂರೂವರೆ ಆಣೆ ಉಳಿಯುತ್ತಿತ್ತು ಎಂದು ನನ್ನ ಅಸ್ಪಷ್ಟವಾದ ನೆನಪು. + +ಇಂಟರ್‍ಮೀಡೀಯಟ್ ಪರೀಕ್ಷೆ ಪಾಸಾದ ಮೇಲೆ 1947 ರಲ್ಲಿ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿ ವೈದ್ಯನಾಗಬೇಕೆಂಬ ಆಸೆಯಿತ್ತು. ಆದರೆ ಅಲ್ಲಿ ಸೀಟು ಸಿಕ್ಕದಿದ್ದುದರಿಂದ ಬೆಂಗಳೂರಿನ ಹತ್ತಿರ ಹೆಬ್ಬಾಳದಲ್ಲಿದ್ದ ಅಗ್ರಿಕಲ್ಚರಲ್ ಕಾಲೇಜಿನಲ್ಲಿ ಸೇರಿಕೊಂಡು, ಅಲ್ಲ್ಲಿ ಮೂರು ವರ್ಷ ಹಾಸ್ಟೆಲಿನಲ್ಲಿದ್ದುಕೊಂಡು ಬಿ.ಎಸ್ಸಿ.(ಅಗ್ರಿ) ಡಿಗ್ರಿಗೆ ಓದಿದೆ. + +ಅಗ್ರಿಕಲ್ಚರಲ್ ಕಾಲೇಜಿನ ಹಾಸ್ಟೆಲ್ ಜೀವನ + +ಅಲ್ಲಿಯ ಹಾಸ್ಟೆಲ್ ಜೀವನ ಒಂದು ಹೊಸ ಅನುಭವವನ್ನು ಕೊಟ್ಟಿತು. ನಮ್ಮ ಸಹಪಾಠಿಗಳ ಜೊತೆ ಆತ್ಮೀಯ ಒಡನಾಟವಿತ್ತು, ಅಧಿಕಾರ ಚಲಾಯಿಸಲು ಯಾರೂ ಯಜಮಾನರಿರಲಿಲ್ಲ. ಜಗಳಗಳಿಲ್ಲ, ಪ್ರೀತಿ ವಿಶ್ವಾಸ ತುಂಬಿದ ಸ್ನೇಹಿತರುಗಳು ಅನೇಕರಿ ದ್ದರು. ಎಲ್ಲಾ ಸೇರಿದ ನಮ್ಮ ಗುಂಪು ಒಂದು ದೊಡ್ಡ ಆತ್ಮೀಯ ಅವಿಭಕ್ತ ಕುಟುಂಬ ದಲ್ಲಿದ್ದಂತಿತ್ತು. ಪ್ರತಿ ಶುಕ್ರವಾರ ರಾತ್ರಿ ಸ್ಪೆಷಲ್ ಹಬ್ಬದ ಊಟವಿರುತ್ತಿತ್ತು. ಆ ಊಟಕ್ಕೆ ನಮ್ಮ ಸಂಬಂಧಿಗಳು ಮತ್ತು ಸ್ನೇಹಿತರುಗಳನ್ನು ಅತಿಥಿಗಳಾಗಿ ಕರೆಯುವ ಅವಕಾಶ ವಿರುತ್ತಿತ್ತು. ಅಡುಗೆ ಭಟ್ಟರು ರಾಮು ಮತ್ತು ಲಕ್ಷ್ಮಣ ಎಂಬ ಉಡುಪಿಯ ಅವಳಿ-ಜವಳಿ ಹುಡುಗರು ನಮ್ಮ ಅಣ್ಣ-ತಮ್ಮಂದಿರ ಹಾಗೇ ನಮ್ಮ ಜತೆ ಅನ್ಯೋನ್ಯವಾಗಿದ್ದರು. ಮತ್ತೊಬ್ಬ ಹಿರಿಯ ಅಡುಗೆಯವರು ರಾಮಚಂದ್ರಪ್ಪ ಒಳ್ಳೆಯ ಅಡುಗೆ ಮಾಡುತ್ತಿದ್ದರೂ ನಮ್ಮೊಂದಿಗೆ ಆತ್ಮೀಯರಾಗಿರಲಿಲ್ಲ. + +ಗಾಂಧೀಜಿಯ ಆದರ್ಶಗಳನ್ನು ಮರೆತಿದ್ದು + +ಅಗ್ರಿಕಲ್ಚರಲ್ ಕಾಲೇಜಿನಲ್ಲಿದ್ದ ಎರಡನೆಯ ವರ್ಷ, ಮೈಸೂರು ಸಂಸ್ಥಾನದಲ್ಲಿ ಇನ್ನೂ ಸ್ವಾತಂತ್ರ್ಯ ಬಂದಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪಿಸಬೇಕೆಂದು ಒತ್ತಾಯಿಸಲು ಮೈಸೂರು ಕಾಂಗ್ರೆಸ್ ಸಂಸ್ಥೆಯು ಹೋರಾಟ ಮಾಡುವುದಕ್ಕೆ ಕರೆ ಕೊಟ್ಟಿತು. ಹಲವಾರು ಕಡೆಗಳಲ್ಲಿ ಸತ್ಯಾಗ್ರಹಗಳು ನಡೆದ ಮೇಲೆ ಶಾಲಾ ಕಾಲೇಜುಗಳಿಗೆ ರಜಾ ಕೊಟ್ಟರು. ಹೋರಾಟದಲ್ಲಿ ಭಾಗವಹಿಸುವ ಮೊದಲ ಹೆಜ್ಜೆಯಾಗಿ, ಬೆಂಗಳೂರಿನಿಂದ ಮೈಸೂರಿಗೆ ಟಿಕೆಟ್ ತೆಗೆದುಕೊಳ್ಳದೆ ಕಾನೂನು ಉಲ್ಲಂಘಿಸಿ ನೂರಾರು ವಿದ್ಯಾರ್ಥಿಗಳು ರಾತ್ರಿಯ ರೈಲಿನಲ್ಲಿ ಪ್ರಯಾಣ ಮಾಡಿದೆವು. ಶ್ರೀರಂಗಪಟ್ಟಣದಲ್ಲಿ ನಮ್ಮನ್ನೆಲ್ಲಾ ಇಳಿಸಿ, ಅಲ್ಲಿಯ ಕೋರ್ಟಿನಲ್ಲಿ ನಮ್ಮೆಲ್ಲರಿಗೂ ಒಂದು ವಾರದ ಜೈಲು ಶಿಕ್ಷೆ ಕೊಟ್ಟರು. ಆ ಸಣ್ಣ ಊರಿನಲ್ಲಿದ್ದ ಜೈಲಿನಲ್ಲಿ ನಮ್ಮೆಲ್ಲರಿಗೂ ಸಾಕಷ್ಟು ಜಾಗವಿಲ್ಲದೆ, 2 ದಿವಸಗಳ ನಂತರ ಎಲ್ಲರನ್ನೂ ಬಿಡುಗಡೆ ಮಾಡಿದರು. ಮೈಸೂರಿನಲ್ಲಿ ನಡೆಯುತ್ತಿದ್ದ ಸತ್ಯಾಗ್ರಹದಲ್ಲಿ ಪೋಲೀಸರು ಭಾಗವಹಿಸಿದ ಹುಡುಗರನ್ನು ತುಂಬಾ ಕ್ರೂರವಾಗಿ ಹೊಡೆದು ಜೈಲಿಗೆ ಹಾಕುತ್ತಿದ್ದರು. ಲಾಕಪ್ಪಿನಲ್ಲಿ ಪೋಲೀಸರು ಸಾಲಾಗಿ ನಿಂತು ಎಲ್ಲರೂ ಹುಡುಗರಿಗೆ ಬೂಟ್ಸ್ ಕಾಲಿನಲ್ಲಿ ಒದೆಯುತ್ತಿದ್ದರಂತೆ. ನನ್ನ ಕಸಿನ್ ಪಾಪಣ್ಣಿ ಅಂತಹ ಒಂದು ಸತ್ಯಾಗ್ರಹದಲ್ಲಿ ಭಾಗವಹಿಸಲು ಒಂದು ಹಸಿರು ಶರ್ಟು ಹಾಕಿಕೊಂಡು ಹೋಗಿದ್ದ. ಕೆಲವು ಹುಡುಗರು ಪೋಲಿಸರ ಮೇಲೆ ಕಲ್ಲು ಎಸೆದರಂತೆ. ಕೆಲವರನ್ನು ಬಂಧಿಸಿ, ಲಾಟಿಯಿಂದ ಹೊಡೆದು ಪೋಲೀಸ್ ವ್ಯಾನಿನಲ್ಲಿ ತುಂಬಿದರಂತೆ. ಮಿಕ್ಕ ಹುಡುಗರನ್ನು ಅಟ್ಟಿಸಿಕೊಂಡು ಬಂದು ಹೊಡೆಯುತ್ತಿದ್ದರು. ಪಾಪಣ್ಣಿ ಅವರಿಂದ ತಪ್ಪಿಸಿಕೊಂಡು, ಮೇನ್ ರೋಡಿನಿಂದ ಅಡ್ಡರಸ್ತೆಯಲ್ಲಿದ್ದ ನಮ್ಮ ಮನೆಯ ಕಡೆ ತಿರುಗಿದ್ದನ್ನು ಮಾತ್ರ ನೋಡಿ ಮನೆಯೊಳಗೆ ನುಗ್ಗಿದ್ದನ್ನು ಪೋಲೀಸರು ನೋಡಲಿಲ್ಲ. ಪಾಪಣ್ಣಿ ಮನೆಯೊಳಗೆ ಬಂದು ತಕ್ಷಣ ಹಸಿರು ಶರ್ಟು ಬದಲಿಸಿ, ಅಟ್ಟದ ಮೇಲೆ ಕುಳಿತಿದ್ದ. ಸುಬ್ರಾಮು ಮನೆಯ ಎದುರಿಗೆ ನಿಂತಿದ್ದ. ಪೋಲೀಸರು ಸುಬ್ರಾಮುವನ್ನು ಹಸಿರು ಶರ್ಟು ಹಾಕಿಕೊಂಡಿದ್ದ ಹುಡುಗ ನಿಮ್ಮ ಮನೆಗೆ ಬಂದನೇ ಎಂದು ಕೇಳಿದ್ದಕ್ಕೆ ಸುಬ್ರಾಮು ‘ಈಗ ತಾನೇ ಹಲವರು ನಮ್ಮ ಅಡ್ಡ ರಸ್ತೆಯಿಂದ ಇನ್ನೊಂದು ಮೇನ್ ರೋಡಿನ ಕಡೆಗೆ ಓಡಿಹೋದರು. ಅದರಲ್ಲಿ ಒಬ್ಬ ಹಸಿರು ಶರ್ಟಿನವನೂ ಇದ್ದನೋ ಏನೊ’ ಎಂದು ಬಹಳ ನಂಬಿಕೆ ಬರುವ ರೀತಿಯಲ್ಲಿ ಹೇಳಿದ. ಪೋಲೀಸರು ನನ್ನ ಒಬ್ಬ ಸ್ನೇಹಿತನಿಗೆ ಲಾಠಿಯಿಂದ ಹೊಡೆದು ತಲೆ ಒಡೆದಿದ್ದರು. ಇದನ್ನೆಲ್ಲಾ ನೋಡಿ, ನನಗೆ ಏನಾದರೂ ಮಾಡಿ ಪೋಲೀಸ್ ವ್ಯಾನನ್ನು ಬೀಳಿಸಿ ನಮ್ಮ ಕೋಪ ತೋರಿಸಬೇಕೆಂಬ ಉತ್ಕಟವಾದ ಭಾವನೆಗಳು ಬಂದವು. ಆ ಭಾವನೆಗಳ ಅಮಲಿನಲ್ಲಿ ಗಾಂಧೀಜಿಯ ಅಹಿಂಸಾತ್ಮಕ ಹೋರಾಟದ ಆದರ್ಶಗಳು ತಾತ್ಕಾಲಿಕವಾಗಿ ಹಾರಿಹೋದವು. ನನ್ನ ಸಲಹೆಯಂತೆ ನಾವು 8-10 ಹುಡುಗರು ಸೇರಿ, ರಾತ್ರಿ ಹೊತ್ತಿನಲ್ಲಿ ಪೋಲೀಸ್ ವ್ಯಾನು ಬರುವ ರಸ್ತೆಯಲ್ಲಿ ಒಂದು ಅಥವಾ ಒಂದೂವರೆ ಅಡಿ ಅಗಲದ ಹೊಂಡ ಹೊಡೆದು, ಪೇಪರುಗಳನ್ನು ಹಾಸಿ, ಮೇಲೆ ಮಣ್ಣನ್ನು ಹೊಂಡ ಕಾಣದಂತೆ ಮುಚ್ಚಿ, ಎಲ್ಲರೂ ಮನೆ ಸೇರಿಕೊಂಡ ಮೇಲೆ, ಸ್ವಲ್ಪ ಗಲಾಟೆ ಮಾಡಿ ಪೋಲೀಸ್ ವ್ಯಾನು ಬರಲು ಪ್ರೇರೇಪಿಸುವುದಕ್ಕೆ, ಬೋಲೋ ಭಾರತ್ ಮಾತಾಕಿ ಜೈ ಅಂತ ಕೂಗುವ ಯೋಜನೆ ಹಾಕಿಕೊಂಡೆವು. ಆ ಯೋಜನೆಯ ಬಗ್ಗೆ ಮಾತಾಡಲು ಬೆಳಿಗ್ಗೆ ಒಂದು ಸೀಕ್ರೆಟ್ ಮೀಟಿಂಗ್ ಕರೆದಿದ್ದೆವು. ಆ ಮೀಟಿಂಗ್ ಬಗ್ಗೆ ಒಬ್ಬ ಹುಡುಗ ರಸ್ತೆಯ ಒಂದು ಕೊನೆಯಲ್ಲಿ ನಿಂತುಕೊಂಡು ರಸ್ತೆಯ ಮತ್ತೊಂದು ಕೊನೆಯಲ್ಲಿದ್ದ ಹುಡುಗನಿಗೆ ‘ಗೋಪಾಲಾ ಸಾಯಂಕಾಲ ಆರು ಗಂಟೆಗೆ ಸೀಕ್ರೆಟ್ ಮೀಟಿಂಗ್, ನಿಮ್ಮಣ್ಣನನ್ನೂ ಕರೆದುಕೊಂಡು ಬಾ’ ಅಂತ ಕೂಗಿ ಹೇಳಿದ್ದ. ರಾತ್ರಿ ಹನ್ನೊಂದು ಗಂಟೆಗೆ ಸುಮಾರು 10 ಹುಡುಗರು, ಪಿಕಾಸಿ, ಹಾರೆ ಇತ್ಯಾದಿ ಆಯುಧಗಳನ್ನು ತೆಗೆದುಕೊಂಡು ಬರಬೇಕೆಂದು ನಿರ್ಧರಿಸಿದ್ದೆವು. ಹತ್ತೂ ಮುಕ್ಕಾಲಿಗೆ ನಿದ್ದೆ ಮಾಡುತ್ತಿದ್ದ ಪಾಪಣ್ಣಿಯನ್ನು ಬಹಳ ಕಷ್ಟ ಪಟ್ಟು ಎಬ್ಬಿಸಿದೆ. ನಾವಿಬ್ಬರೂ ಪಿಕಾಸಿ ಹಾರೆ ಇತ್ಯಾದಿಗಳನ್ನು ತೆಗೆದುಕೊಂಡು ಹೊಂಡ ತೋಡಬೇಕೆಂದಿದ್ದ ಜಾಗಕ್ಕೆ ಹೋದೆವು. ಬೇರೆ ಒಬ್ಬನೂ ಬಂದಿರಲಿಲ್ಲ. ಗಾಂಧೀಜಿಯ ಬೋಧನೆಗೆ ವಿರುದ್ಧ ಹೋಗುವ ಆಸೆ ಅಲ್ಲಿಗೇ ಮುಕ್ತಾಯ ವಾಯಿತು. ಮುಗ್ಧ ಹುಡುಗರ ಸೀಕ್ರೆಟ್ ಮೀಟಿಂಗಿನ ಬಗ್ಗೆ ಪೋಲೀಸರಿಗೆ ಎಲ್ಲಾ ಗೊತ್ತಿತ್ತಂತೆ. ಏನಾದರೂ ಹೊಂಡ ಹೊಡೆದಿದ್ದರೆ, ಎಲ್ಲರಿಗೂ ಹೊಡೆದು ಬುದ್ಧಿ ಕಲಿಸುತ್ತಿದ್ದರು ಎಂಬುದು ಕಾಲಕ್ರಮೇಣ ನಮಗೆ ಗೊತ್ತಾಯಿತು. ಅಹಿಂಸಾತ್ಮಕ ಹೋರಾಟ ದಲ್ಲೇ ಸುಮಾರು ಜನ ಸತ್ತಿದ್ದರು. ಆದರೆ ಪೋಲೀಸರು ಮತ್ತು ಆಡಳಿತ ವರ್ಗದವರು, ನಮ್ಮ ಹೋರಾಟ ಹಿಂಸಾತ್ಮಕವಾಗಿದ್ದರೆ ನಮ್ಮ ಹಿಂಸೆಯ ಪ್ರಚೋದನೆಯಿಂದಲೇ, ಅತಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಜನಗಳನ್ನು ಸಾಯಿಸುತ್ತಿದ್ದರು ಎಂಬ ವಿಷಯ ಕಾಲಕ್ರಮೇಣ ನನಗೆ ಅರ್ಥವಾಯಿತು. + +ಆತ್ಮೀಯ ಸ್ನೇಹಿತರು + +ನಮ್ಮ ಡಿಗ್ರಿ ಕಾಲೇಜು ನಾನು ಸೇರುವುದಕ್ಕೆ ಒಂದು ವರ್ಷ ಮುಂಚೆ ಶುರುವಾಗಿತ್ತು. ನಮ್ಮದು ಎರಡನೆಯ ಬ್ಯಾಚು. ಈ ಎರಡು ಬ್ಯಾಚಿನ ವಿದ್ಯಾರ್ಥಿಗಳು ನಾವೆಲ್ಲ ಎರಡು ಮೂರು ವರ್ಷಗಳು ಒಟ್ಟಿಗೇ ಇದ್ದುದರಿಂದ ಹಲವಾರು ವಿದ್ಯಾರ್ಥಿಗಳು ನನಗೆ ತುಂಬಾ ಆತ್ಮೀಯ ಸ್ನೇಹಿತರುಗಳಾಗಿಬಿಟ್ಟರು. ಅವರಲ್ಲಿ ಕೃಷ್ಣಸ್ವಾಮಿರಾವ್ ಎಂಬಾತ ಒಳ್ಳೆಯ ಕರ್ನಾಟಿಕ್ ಕ್ಲಾಸಿಕಲ್ ಹಾಡುಗಾರ ಮತ್ತು ನಟ. ಯಾವಾಗಲೂ ಹಾಡನ್ನು ಗುನುಗುತ್ತ ತಮ್ಮದೇ ಲೋಕದಲ್ಲಿ ಇರುತ್ತಿದ್ದರು. ನಾನು ಡಿಗ್ರಿ ಮುಗಿಸಿ ಕಾಲೇಜು ಬಿಟ್ಟು, ದೆಹಲಿಗೆ ಎಮ್.ಎಸ್ಸಿ ಮಾಡಲು ಹೋದನಂತರ ಅವರ ಸಂಪರ್ಕ ತಪ್ಪಿ ಹೋಯಿತು. ಹಲವಾರು ವರ್ಷಗಳ ನಂತರ ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಕೇಳಿ ಮನಸ್ಸಿಗೆ ಬೇಜಾರಾಯಿತು. ಜಡೆ ಶ್ರೀನಿವಾಸಮೂರ್ತಿ ಎಂಬ ಸ್ನೇಹಿತರು ಹೆಬ್ಬಾಳದ ಅಗ್ರಿಕಲ್ಚರಲ್ ಯೂನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಇತ್ತೀಚೆಗೆ ತೀರಿ ಕೊಳ್ಳುವವರೆಗೂ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಡಾ. ಆರ್. ದ್ವಾರಕಿನಾಥ್‍ರವರು ಅದೇ ಯೂನಿವರ್ಸಿಟಿಯ ವೈಸ್‍ಛಾನ್ಸೆಲರ್ ಆಗಿದ್ದು ಇತ್ತೀಚೆಗೆ ತೀರಿಕೊಂಡರು. ಡಾ. ರಾಮಕೃಷ್ಣ ಮಧ್ಯಪ್ರದೇಶದಲ್ಲಿ ವ್ಯವಸಾಯದ ಇಲಾಖೆಯಲ್ಲಿ ದೊಡ್ಡ ಹುದ್ದೆಯಲ್ಲಿದ್ದು ನಂತರ ವಲ್ರ್ಡ್ ಬ್ಯಾಂಕಿನಲ್ಲಿ ಕೆಲಸ ಮಾಡಿ ಅಮೇರಿಕದಲ್ಲಿ ನೆಲೆಸಿ ಅವರು ಕೂಡ ಇತ್ತೀಚೆಗೆ ತೀರಿಕೊಂಡರು. ಹಾಸ್ಟೆಲಿನಲ್ಲಿ ನನ್ನ ರೂಂಮೇಟುಗಳಾಗಿದ್ದ ನನ್ನ ಚಿಕ್ಕಮ್ಮನ ಮಗ ಶ್ರೀಕಂಠು ಮತ್ತು ಮತ್ತೊಬ್ಬ ಅದೇ ಹೆಸರಿನ ಕೆ.ಆರ್. ಶ್ರೀಕಂಠಯ್ಯ ಎಂಬಿಬ್ಬರು ತುಂಬಾ ಹತ್ತಿರದ ಅಣ್ಣ ತಮ್ಮಂದಿರ ಹಾಗೇ ಇದ್ದು ಆತ್ಮೀಯ ಮಿತ್ರರಾಗಿದ್ದರು. ಶ್ರೀಕಂಠಯ್ಯ ಕ್ಲಾಸಿನಲ್ಲಿ ಯಾವಾಗಲೂ ನೋಟ್ಸ್‍ಗಳನ್ನು ಚೆನ್ನಾಗಿ ಬರೆದುಕೊಳ್ಳುತ್ತಿದ್ದನು. ಅವನ ನೋಟ್ಸ್‍ಗಳನ್ನು ಓದಿಕೊಂಡೇ ನಾನು ಕೊನೆಯ ವರ್ಷದಲ್ಲಿ ಕಾಲೇಜಿಗೆ ಮೂರನೆಯ ಸ್ಥಾನದಲ್ಲಿ ಉತ್ತೀರ್ಣನಾಗುವುದು ಸಾಧ್ಯವಾಯಿತು.ನಮ್ಮ ಕಾಲೇಜಿನ ಆಗಿನ ಪಾಠಪ್ರವಚನಗಳು ನಮ್ಮನ್ನು ಸರ್ಕಾರಿ ನೌಕರರನ್ನಾಗಿ ಕೆಲಸ ಮಾಡುವುದಕ್ಕೆ ತಯಾರು ಮಾಡಿತ್ತೇ ಹೊರತು ಒಬ್ಬ ವ್ಯವಸಾಯಗಾರನಾಗಿ ಕೆಲಸ ಮಾಡುವುದಕ್ಕೆ ತಯಾರು ಮಾಡುವಂತಿರಲಿಲ್ಲ ಎಂಬುದು ಮುಂದೆ ನಾನು ವ್ಯವಸಾಯಗಾರನಾಗಿ ಕೆಲಸ ಮಾಡಲು ಶುರು ಮಾಡಿದ ಮೇಲೆ ಮನದಟ್ಟಾಯಿತು. + +ಅಧ್ಯಾತ್ಮದ ಬಗ್ಗೆ ಆಸಕ್ತಿ + +ಅಗ್ರಿಕಲ್ಚರಲ್ ಕಾಲೇಜಿನ ಪಾಠಗಳಿಗಿಂತ ಹೆಚ್ಚು ಆಸಕ್ತಿ, ದೇವರ ಬಗ್ಗೆ ತೀವ್ರ ಆಸಕ್ತಿ ನನ್ನಲ್ಲಿ ಹುಟ್ಟಿತ್ತು. ಸ್ವಾಮಿ ವಿವೇಕಾನಂದರವರ, ಏಳು ಸಂಪುಟಗಳಲ್ಲಿದ್ದ, ಎಲ್ಲ ಬರವಣಿಗೆಗಳನ್ನೂ ತುಂಬಾ ಆಸ್ತೆಯಿಂದ ಓದಿ ಮುಗಿಸಿದೆ. ಜತೆಗೆ ಸರ್ ಎಸ್ ರಾಧಾಕೃಷ್ಣನ್ ಬರೆದ ‘ದಿ ಹಿಂದೂ ವ್ಯೂ ಆಫ್ ಲೈಫ್’, ‘ಎನ್ ಐಡಿಯಲಿಸ್ಟ್ಸ್ ವ್ಯೂ ಆಫ್ ಲೈಫ್’, ರೊಮೆಯ್ನ್ ರೋಲನ್ಡ್ ಬರೆದ ರಾಮಕೃಷ್ಣ ಪರಮಹಂಸರ ಜೀವನ ಚರಿತ್ರೆ ಮತ್ತು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಇಂಗ್ಲೀಷಿನಲ್ಲಿ ಮತ್ತು ಕನ್ನಡದಲ್ಲಿ ಹಲವಾರು ಪುಸ್ತಕಗಳನ್ನೂ ಓದಿ ಉಪನಿಷತ್ತುಗಳಲ್ಲಿ ವಿವರಿಸಿರುವ ಆಧ್ಯಾತ್ಮಿಕ ಅನುಭಾವವನ್ನು ಪಡೆದುಕೊಳ್ಳುವುದಕ್ಕೆ ಹಿಮಾಲಯಕ್ಕೆ ಹೋಗಿ ತಪಸ್ಸು ಮಾಡುವ ಬಗ್ಗೆ ಯೋಚನೆಗಳು ಕೂಡ ಬಂದಿದ್ದವು. ಜ್ಞಾನಯೋಗ ಮತ್ತು ರಾಜಯೋಗಗಳನ್ನು ಅಭ್ಯಾಸ ಮಾಡಿದವರಲ್ಲಿ ದೈವಸಾಕ್ಷಾತ್ಕಾರ ದೊರಕುವುದು ಕೆಲವೇ ಜನರಿಗೆ ಮಾತ್ರ ಎಂಬುದನ್ನು ವಿವೇಕಾನಂದರ ಪುಸ್ತಕಗಳನ್ನು ಓದಿದ ಮೇಲೆ, ಹಾಗೆ ದೊರಕದಿದ್ದವರು ಈ ಜೀವನದಲ್ಲಿ ಸರಳವಾಗಿ ಮತ್ತು ಸುಲಭವಾಗಿ ಉತ್ತಮ ಮಾನವೀಯ ಸಂಬಂಧಗಳಲ್ಲಿ ದೊರಕುವ ಆನಂದಗಳಿಂದಲೂ ವಂಚಿತರಾಗುತ್ತಾರೆ ಎಂದು ನನಗನ್ನಿಸಿತು. ಹಿಮಾಲಯಕ್ಕೆ ಹೋಗುವುದರ ಬದಲು ಈ ಸಂಸಾರದಲ್ಲಿದ್ದುಕೊಂಡೆ ಪ್ರೀತಿ ಮತ್ತು ಸ್ನೇಹಗಳ ಮೂಲಕ ದೈವಸಾಕ್ಷಾತ್ಕಾರ ಪಡೆದುಕೊಳ್ಳಬೇಕೆಂದು ಆಗ ನಿರ್ಧರಿಸಿಕೊಂಡೆನು. ಸ್ವಾರ್ಥರಹಿತ ಪ್ರೀತಿ- ಸ್ನೇಹಗಳು, ಕ್ಷಮಾಗುಣ, ಇತರರ ಕಷ್ಟಗಳಿಗೆ ಸ್ಪಂದಿಸುವುದು, ಕೋಪ, ದ್ವೇಷ, ಅಸೂಯೆ ಇತ್ಯಾದಿ ನಕಾರಾತ್ಮಕ ಗುಣಗಳನ್ನು ವರ್ಜಿಸುವುದು ಇತ್ಯಾದಿಗಳೇ ದೈವೀಗುಣಗಳು ಮತ್ತು ಅವುಗಳನ್ನು ಬೆಳೆಸಿಕೊಂಡರೆ ದೊರಕುವ ಆನಂದವೇ ದೈವಾನುಭವಕ್ಕೆ ಅತಿಹತ್ತಿರ ಎನ್ನುವ ನಂಬಿಕೆ ನನ್ನಲ್ಲಿ ಆಗ ಬೆಳೆದು ಇಂದಿಗೂ ಜೀವಂತವಾಗಿದೆ. + +ಕಾಶಿಯಲ್ಲಿ + +ನನ್ನ 21ನೆಯ ವರ್ಷದಲ್ಲಿ (1950 ನೇ ಇಸವಿಯಲ್ಲಿ) ನನ್ನ ಬಿ.ಎಸ್ಸಿ(ಅಗ್ರಿ) ಡಿಗ್ರಿ ಮುಗಿದ ಮೇಲೆ, ಕಾಶಿ ಹಿಂದೂ ವಿಶ್ವವಿದ್ಯಾಲಯದಲ್ಲಿ ನನಗಿಷ್ಟವಾದ ಸಸ್ಯಗಳ ವೈರಸ್ ಕಾಯಿಲೆಗಳ ಬಗ್ಗೆ ಎಮ್.ಎಸ್ಸಿ(ಅಗ್ರಿ) ಡಿಗ್ರಿಗೆ ಓದುವುದಕ್ಕೆ ಹೋದೆನು. ಕಾಶಿ ಪಟ್ಟಣದಲ್ಲಿ ವಿಶ್ವನಾಥನ ದೇವಾಲಯಕ್ಕೆ ಎಲ್ಲಕ್ಕಿಂತ ಮೊದಲು ಭೇಟಿ ಕೊಟ್ಟೆನು. ಅಲ್ಲಿಯ ಪಂಡರು ದೇವರ ಹೆಸರಿನಲ್ಲಿ ಎಲ್ಲರನ್ನೂ ಸುಲಿಗೆ ಮಾಡುತ್ತಿದ್ದುದನ್ನು ಕಂಡು ಬೇಸರವಾಯಿತು. ಜನಗಳು ನದಿಯಲ್ಲಿ ಸ್ನಾನಮಾಡಿ ಒದ್ದೆ ಬಟ್ಟೆಯಲ್ಲೇ ದೇವಸ್ಥಾನಕ್ಕೆ ಹೋಗುತ್ತಿದ್ದರು. ಈ ಅಭ್ಯಾಸದಿಂದ ದೇವಸ್ಥಾನದ ಒಳಗೆಲ್ಲ ಕೆಸರು ತುಂಬಿಕೊಂಡಿತ್ತು. ಇವೆರಡು ವಿಷಯಗಳು ದೇವಸ್ಥಾನದಲ್ಲಿರಬೇಕಾದ ಪವಿತ್ರವಾದ ವಾತಾವರಣವನ್ನು ಕಲುಷಿತ ಗೊಳಿಸಿದ್ದವು. + + + +ಕಾಶಿಯಲ್ಲಿ ಒಮ್ಮೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿದ್ದೆ. ಗಾಡಿಯ ಚಾಲಕನು ಸುಶ್ರಾವ್ಯವಾಗಿ ಹಿಂದೂಸ್ತಾನಿ ಕ್ಲಾಸಿಕಲ್ ಶೈಲಿಯಲ್ಲಿ ಕೊಳಲು ಊದುತ್ತ ನನ್ನನ್ನು ಕರೆದುಕೊಂಡು ಹೋಗಿದ್ದು ಒಂದು ವಿಶಿಷ್ಟವಾದ ಅನುಭವವಾಗಿತ್ತು. ಕರ್ನಾಟಕ ದಲ್ಲಿ ಕ್ಲಾಸಿಕಲ್ ಸಂಗೀತವು ಕೆಲವು ಮೇಲ್ವರ್ಗದವರಿಗೆ ಸೀಮಿತವಾಗಿದೆ. ಕುದುರೆ ಗಾಡಿ ಹೊಡೆಯುವವರು, ಗಾರೆ ಕೆಲಸದವರು ಇತ್ಯಾದಿ ಸಾಧಾರಣ ಜನಗಳು ಕ್ಲಾಸಿಕಲ್ ಸಂಗೀತ ಹಾಡುವುದನ್ನು ನಾನೆಲ್ಲೂ ಕೇಳಿರಲಿಲ್ಲ. ಕಾಶಿಯಲ್ಲಿ ಅನೇಕ ಸಾಧಾರಣ ಜನಗಳು ಕೂಡ ಕ್ಲಾಸಿಕಲ್ ಸಂಗೀತವನ್ನು ಹಾಡುತ್ತಿದ್ದದ್ದು ನನಗೊಂದು ಅಪರೂಪದ ಸಂತೋಷಕರ ಅನುಭವವಾಗಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_107.txt b/Kenda Sampige/article_107.txt new file mode 100644 index 0000000000000000000000000000000000000000..b3b8d0cef64e87566d5150b3d62668836d02df75 --- /dev/null +++ b/Kenda Sampige/article_107.txt @@ -0,0 +1,21 @@ +ಬಾಲ್ಯವೆಂಬುದು ಅನುಭವಗಳ ಖಜಾನೆ. ಕತೆಗಳ ಕಣಜ. ಬಹುಷಃ ನಮ್ಮಗಳ ಯಾರ ಬಾಲ್ಯವೂ ಇದಕ್ಕೆ ಹೊರತಾಗಿಲ್ಲ ಅಂತನ್ನಿಸುತ್ತದೆ. ಆ ಕಾಲಕ್ಕೆ ಬಾಲ್ಯ ನಮಗೆ ಕೊಟ್ಟ ಖುಷಿ, ಸಿಕ್ಕ ನೋವು, ಇನ್ನು ಹೇಳಿಕೊಳ್ಳಲಾಗದ ಅನೇಕ ಅಚ್ಚರಿಗಳು ಮುಪ್ಪರಿಗೊಂಡು ನಮ್ಮ ವ್ಯಕ್ತಿತ್ವವನ್ನು ರೂಪುಗೊಳಿಸುತ್ತಲೇ ಇರುತ್ತದೆ. ಟಿ.ವಿ., ಮೊಬೈಲ್, ಹೀಗೆ ಅಂತರ್ಜಾಲದ ಕಿಟಕಿಯೊಳಗೆ ಕಣ್ಣು ಕೀಲಿಸಿ ಕಳೆದುಹೋಗುತ್ತಿರುವ ನಮ್ಮ ಇಂದಿನ ಮಕ್ಕಳನ್ನು ನೋಡುವಾಗ ಯಾಕೋ ಅವರ ಕುರಿತು ಕನಿಕರ ಉಕ್ಕಿ, ನಮ್ಮ ಬಾಲ್ಯ ನೆಚ್ಚಾಗಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಆದರೆ ನಮ್ಮ ಮಕ್ಕಳಿಗೆ ನಮ್ಮ ಬಾಲ್ಯದ ಕತೆಗಳು ಕಟ್ಟುಕತೆಗಳಂತೆ ಗೋಚರಿಸುವ ಸಂಭವನೀಯತೆ ಹೆಚ್ಚಿರುವ ಕಾರಣ, ಜೊತೆಗೆ ಅವರಿಗೆ ಅವುಗಳ ಕುರಿತಾಗಿ ಅಷ್ಟೊಂದು ಆಸಕ್ತಿಯಿರದ ಕಾರಣ ಬಹುಷಃ ನಮ್ಮ ಬಾಲ್ಯ ನಮಗೆ ಇಷ್ಟ ಆದ ಹಾಗೆ ಪ್ರಸ್ತುತ ವಾತಾವರಣದಲ್ಲಿ ಅವರ ಬಾಲ್ಯ ಅವರಿಗೆ ಆಪ್ಯಾಯಮಾನವಾಗಿ ತೋರುತ್ತಿದೆಯೋ ಏನೋ? ಅದೇನೇ ಇರಲಿ, ನಾಗರೇಖಾರವರ ಇಡೀ ಬಾಲ್ಯದ ಕಥಾಬುತ್ತಿಯನ್ನು ಬಿಚ್ಚಿದಾಗ ನಮ್ಮ ಇಂದಿನ ಮಕ್ಕಳ ಬಾಲ್ಯ ಕಣ್ಣೆದುರಿಗೆ ಬಂತು ಅಷ್ಟೆ. ಪ್ರತಿದಿನವೂ ಒಂದೊಂದು ಕತೆಯಾಗುತ್ತಿದ್ದ ಬದುಕು ಮತ್ತು ಯಾವುದೋ ಕತೆಗಳಿಗೆ ಅಂತರ್ಜಾಲದಲ್ಲಿ ನಿರ್ಭಾವುಕರಾಗಿ ತಡಕುವ ನಮ್ಮ ಮಕ್ಕಳ ಬಾಲ್ಯವೂ… + +(ನಾಗರೇಖಾ ಗಾಂವಕರ) + +ನಾಗರೇಖಾರ ಪ್ರತಿಯೊಂದು ಪ್ರಬಂಧಗಳನ್ನು ಓದುವಾಗಲೂ ಕೂಡಾ ನಾನು ನನ್ನ ಬಾಲ್ಯಕ್ಕೆ ಹೊರಳಿಕೊಳ್ಳುತ್ತಿದ್ದೆ. ಅವೇ ನದಿ, ಮಳೆಗಾಲ, ಬಾಲ್ಯದ ಕೆಲಸ, ಅದೇ ತುಂಟಾಟದ ಅನೇಕ ಕತೆಗಳು.ಆದರೆ ಅದು ನಮ್ಮನ್ನು ಕಾಡಿದ ಪರಿ, ನಮ್ಮ ಅನುಭವಕ್ಕೆ ದಕ್ಕಿದ ರೀತಿ ಬೇರೆಯದೇ ಬಗೆಯಲಿ. ಅಬ್ಬಾ! ಬಾಲ್ಯ ಎಷ್ಟೊಂದು ದಟ್ಟವಾಗಿ ನಮ್ಮೆದುರು ತೆರೆದುಕೊಂಡಿತ್ತಲ್ಲ? ಬಾಲ್ಯಕ್ಕಿಂತ ದೊಡ್ಡ ವಿಶ್ವವಿದ್ಯಾನಿಲಯ ಬೇರೆ ಯಾವುದೂ ಇಲ್ಲ ಅನ್ನುವುದು ಎಷ್ಟು ಸತ್ಯದ ಮಾತು. ಅಲ್ಲಿ ದಕ್ಕಿದ ಅನುಭವಗಳ ಗರಡಿಯಲ್ಲಿ ಪಳಗಿ ಬಂದವರು ನಾವೆಲ್ಲ. ಆದರೆ ಆ ಹೊತ್ತಿನಲ್ಲಿ ಅದರ ಕುರಿತು ಕಿಂಚಿತ್ತು ಅರಿವೂ ಇರಲಿಲ್ಲವಲ್ಲ ಅಂತ ಈಗ ಅಚ್ಚರಿ ಹುಟ್ಟಿ ಮೆಲುಕು ಹಾಕುವಂತೆ ಮಾಡುತ್ತದೆ. + +ಲೇಖಕಿಯ ಇಲ್ಲಿಯ ಎಲ್ಲ ಪ್ರಬಂಧಗಳೂ ಕೂಡ ಬಾಲ್ಯದ ಅನಾವರಣವೇ. ಪ್ರತಿಯೊಂದು ಪ್ರಬಂಧದೊಳಗೂ ರೋಚಕವೂ, ಕುತೂಹಲಕರವಾದ ಘಟನೆಗಳ ಚಿತ್ರಣವಿದೆ. ಎಷ್ಟೆ ಬರೆದುಕೊಂಡರೂ ಇನ್ನೂ ಹೇಳಲು ಅದೆಷ್ಟೋ ಬಾಕಿ ಇದೆ ಅನ್ನುವಷ್ಟರ ಮಟ್ಟಿಗೆ ಇಲ್ಲಿಯ ಬಾಲ್ಯದ ಕತೆಗಳು ಪಿಸುಗುಟ್ಟಿದಂತಾಗುತ್ತದೆ. ಇದು ಲಲಿತ ಪ್ರಬಂಧವೂ, ಅನುಭವ ಕಥನವೂ ಯಾವುದೂ ಆಗಬಲ್ಲದು ಅಂತನ್ನಿಸುತ್ತದೆ. ಬರಹದ ತುಂಬಾ ಬಾಲ್ಯದ ಗಳಿಗೆಗಳ ಮೊಗೆಮೊಗೆದು ಕೊಟ್ಟರೂ ವಸ್ತು ವಿಷಯಗಳು ಇಲ್ಲಿ ಪುನರಾವರ್ತನೆಯಾಗದಿರುವುದೇ ವಿಶೇಷ. ಸ್ವತಃ ಆಕೆ ಕತೆಗಾರ್ತಿಯಾಗಿರುವ ಕಾರಣ ಹೆಚ್ಚಿನ ಸಂಗತಿಗಳು ಕಥನ ಮಾದರಿಯಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. + +ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು. ಹಾಗೆಯೇ ಬಾಲ್ಯ ಕೊಟ್ಟ ಕೆಲವೊಂದು ಕಷ್ಟದ ಕ್ಷಣಗಳಿಗೆ ಇಲ್ಲಿ ಲೇಖಕಿ ಯಾರ ಮೇಲೂ ಗೂಬೆ ಕೂರಿಸುವುದಿಲ್ಲ, ಆತ್ಮಾನುಕಂಪನವನ್ನು ಕೂಡ ಬಯಸುವುದಿಲ್ಲ. ಆಗಿನ ಬದುಕಿನ ವಾತಾವರಣವೇ ಹಾಗಿತ್ತು ಎಂಬುದನ್ನು ಅಷ್ಟೇ ಸಹಜ ತಣ್ಣಗೆ ಹೇಳಿ ಮುಗಿಸುತ್ತಾರೆ. ಕೆಲವರು ನಮ್ಮ ಬಾಲ್ಯದಲ್ಲಿ ನಾವು ಎಷ್ಟೆಲ್ಲಾ ಅನುಭವಿಸಿದ್ದೇವೆ ಅಂತ ಪದೇ ಪದೇ ಸಂದರ್ಭ ಸಿಕ್ಕಾಗಲೆಲ್ಲಾ ಗೋಳಾಡುವುದನ್ನು ಗಮನಿಸಿದ್ದೇವೆ. ಆ ನಿಟ್ಟಿನಲ್ಲಿ ಹೇಳುವುದಾದರೆ ನಾಗರೇಖಾರ ಪ್ರಬಂಧಗಳು ಸಮಚಿತ್ತತೆಯಿಂದ ಮಾತನಾಡತೊಡಗುತ್ತವೆ. ಅವರಿಗೆ ಬಾಲ್ಯದ ಮೇಲೆ ಯಾವುದೇ ದೋಷಾರೋಪಗಳು ಇಲ್ಲ. ಸುಂದರ ಬಾಲ್ಯವೊಂದು ಹಿಡಿದಿಟ್ಟುಕೊಳ್ಳಲಾಗದೆ ಬೆರಳ ಸಂದಿಯಿಂದ ಹಾಗೇ ಜಾರಿ ಹೋಯಿತಲ್ಲ ಅಂತ ಕಳವಳಿಸಿದಂತೆ ತೋರುತ್ತದೆ. + +ಬಾಲ್ಯದಲ್ಲಿ ಬದುಕು ಎಲ್ಲ ರೀತಿಯ ಮಗ್ಗಲುಗಳಿಗೆ ಒಡ್ಡಿಕೊಂಡ ಕಾರಣ ಬದುಕು ಹೇಗೆ ಪರಿಪಾಕಗೊಂಡು ನಮ್ಮನ್ನು ಹೇಗೆ ಪಕ್ವವಾಗಿ ಬೆಳೆಸಬಲ್ಲುದು ಎಂಬುದಕ್ಕೆ ಅವರ ಒಂದು ಪ್ರಬಂಧದ ಸಾಲು ನನ್ನ ಗಾಢವಾಗಿ ತಟ್ಟಿತು. ‘ಹಾಲುಮಾರಿ ಶಾಲೆಗೆ ಪಾದ ಬೆಳೆಸಬೇಕಾದ ಅನಿವಾರ್ಯತೆಯಿದ್ದ ಸಂದರ್ಭದಲ್ಲಿ ಒಮ್ಮೆ ನೀರು ಹಾಕಿ ತಂದಿಯೇನೇ?’ ಅಂತ ಶಾಂತಕ್ಕ ಗುರಾಯಿಸಿದ್ದಕ್ಕೆ ಮುಖ ದುಮ್ಮಿಸಿಕೊಂಡು ಹೋದ ಹುಡುಗಿ ಇವತ್ತು ಸರಕಾರಿ ಕಾಲೇಜಿನಲ್ಲಿ ಇಂಗ್ಲೀಷ್‌ ಉಪನ್ಯಾಸಕಿಯಾಗಿದ್ದಾಳೆಂಬುದ್ದಕ್ಕೆ ಇನ್ಯಾವ ನಿದರ್ಶನ ಬೇಕಿಲ್ಲ ಅನಿಸುತ್ತದೆ. ಆದರೆ ತಾನು ಈ ಮಟ್ಟಕ್ಕೆ ಬರಲು ಇವೆಲ್ಲ ಕಾರಣಗಳು ಅಂತ ಆಕೆ ಎಲ್ಲೂ ಬಡಬಡಿಸಿಕೊಳ್ಳುವುದಿಲ್ಲ. ಆದರೆ ಓದುಗರಾದ ನಮ್ಮೊಳಗೆ ಇಳಿದು ಒಂದು ಸಂಚಲನ ಉಂಟುಮಾಡಬಲ್ಲದು. + +ಬಾಲ್ಯದಲ್ಲಿ ಹುಟ್ಟಿಕೊಂಡ ಇಂಗ್ಲೀಷ್‌ ಆಕರ್ಷಣೆ, ಮೇಷ್ಟ್ರ ಮೇಲಿನ ಸಿಟ್ಟಿನಲ್ಲಿ ಹರಕೆ ಹೊರುವುದು, ಹರಕೆ ಹೊತ್ತರೂ ಮೇಷ್ಟ್ರಿಗೆ ಏನೂ ಆಗದೇ ಇರುವುದು. ನಂತರ ಅದೇ ವಿಷಯ ಗೋಟಾಳಿ ಆಗುವುದು, ಇವೆಲ್ಲಾ ಬಾಲ್ಯದಲ್ಲಿ ಮಾತ್ರ ಘಟಿಸಬಹುದಾದ ಸಂಗತಿಗಳು. ಹಾಗೇ ಅಲ್ಲಿ ನಗಲು, ನಗಿಸಲು ಎಷ್ಟೊಂದು ಕಾರಣಗಳು? ಆ ನಗುವನ್ನು ಹಂಚಿಕೊಳ್ಳುವ ಭರದಲ್ಲಿ ನಮ್ಮೊಳಗಿನ ನಗುವಿನ ಸೆಲೆಯನ್ನು ಒಕ್ಕುತ್ತಾರೆ. ಇನ್ನು ಭೂತ ದೆವ್ವದ ಜೊತೆಗೆ ಅಂಟಿಕೊಂಡ ಅದೆಷ್ಟು ಭಯಾನಕ ರಸವತ್ತಾದ ಕತೆಗಳು? ಅವರಿಗೆ ನೆನಪುಗಳು ಜೀರುಂಡೆ ಸಾಲಿನಂತೆ. ಎಳವೆಯಲ್ಲಿ ಹಕ್ಕಿ ಕಾವಲು ಕೂತದ್ದು, ತೆರೆದ ಕೊಡೆಯ ಕಡ್ಡಿಯಿಂದ ಮಳೆಯ ಹನಿಯೊಂದಿಗೆ ನೆನಪುಗಳು ತೊಟ್ಟಿಕ್ಕುತ್ತಾ ಕತೆಯಾಗಿ ಜೊತೆಗೆ ಪಾದ ಸವೆಸಿದ್ದು, ಒಂದೇ ಎರಡೇ? + +ನಾಗರೇಖಾರ ನೆನಪಿನ ಶಕ್ತಿ ನಮ್ಮನ್ನು ಬೆರಗುಗೊಳಿಸುತ್ತದೆ. ಅವರ ನೆನಪಿನ ಕೋಶದಲ್ಲಿ ಇನ್ನು ಅದೆಷ್ಟೋ ಕತೆಗಳು ಹಸಿಹಸಿಯಾಗಿಯೇ ಇವೆ. ಸಮಯ ಸಂದರ್ಭ ಬಂದಾಗಲೆಲ್ಲಾ ಅವು ತಲೆ ಹೊರಗೆ ಹಾಕಿ ಇಣುಕುತ್ತವೆ. ಹಳ್ಳಿಯ ಮನಸ್ಸುಗಳ ನಿಷ್ಕಲ್ಮಷ ಪ್ರೇಮ, ಪೇಟೆಯ ನಾಟಕೀಯತೆ ಜೊತೆಗೆ ಮನಸ್ಸು ತುಲನೆ ಮಾಡಿಕೊಳ್ಳುತ್ತದೆ. ಹಳ್ಳಿಯ ತೃಪ್ತ ಬದುಕಿನ ಸಮಾಧಾನಗಳನ್ನು ಅರಸುತ್ತಾ ಬಂದರೆ, ಮಮತೆಯ ಒರತೆಗಳಾದ ಹಿರಿಜೀವಗಳು ಕಳಚಿ ಹೋದುದರ ಕುರಿತು ವಿಷಾದ ವ್ಯಕ್ತಪಡಿಸುತ್ತಾ ಬದುಕು ಅಂದರೆ ಇಷ್ಟೇ ಅನ್ನುವ ವೇದಾಂತವನ್ನು ಇಲ್ಲಿಯ ಬರಹಗಳು ಕಟ್ಟಿಕೊಡುತ್ತವೆ. ತಂದೆ, ತಾಯಿ, ಒಡಹುಟ್ಟಿದವರ ಒಡನಾಟದಲ್ಲಿ ಬದುಕು ಹಸನಾದುದರ ಕುರಿತು ಅವರಿಗೆ ಅಪಾರ ಪ್ರೀತಿಯಿದೆ. ಅಲ್ಲಿ ಸಿಕ್ಕ ಪ್ರತಿಯೊಂದು ಘಟನೆಗಳ ಹಿಂದೆ ಸರಿ ತಪ್ಪುಗಳ ತರ್ಕವಿದೆ. ಬಹುಷಃ ಈ ಅನುಭವವೇ ಅವರ ಸಾಹಿತ್ಯಕ್ಕೆ ಪ್ರೇರಣೆ. ಸಣ್ಣ ಸಣ್ಣ ಜಗಳಗಳನ್ನು, ತಾನು ಮಾಡಿದ ತಪ್ಪುಗಳನ್ನು ಕೂಡ ಇಲ್ಲಿ ಲೇಖಕಿ ಯಾವುದೇ ಮುಲಾಜಿಲ್ಲದೆ ಬರೆಯುತ್ತಾರೆ. ಬಾಲ್ಯದಲ್ಲಿ ಮಾಡಿದ ತಂಟೆ ತಕರಾರುಗಳು ಯಾವುದೂ ಉದ್ದೇಶಪೂರ್ವಕವಾದುದ್ದಲ್ಲ ಅನ್ನುವುದನ್ನು ಇದು ಸಾಬೀತುಪಡಿಸುತ್ತದೆ. + + + +ನಾಗರೇಖಾರ ಪ್ರಬಂಧವನ್ನು ಓದಿ ಮುಗಿಸಿದಾಗ ಸರಿದ ಬಾಲ್ಯವೊಂದು ಕಣ್ಣ ಮುಂದೆ ಚಲಿಸಿದಂತೆ ಭಾಸವಾಗುತ್ತದೆ. ಮುದಕೊಡುವ ಭಾಷೆಯೊಂದಿಗೆ ಸರಳ ಸಹಜ ನಿರೂಪಣೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಸ್ವಲ್ಪ ತಿಳುವಳಿಕೆ ಇದ್ದರೆ ಬಾಲ್ಯದ ಗಳಿಗೆಗಳನ್ನ ಮೊಗೆಮೊಗೆದು ಅನುಭವಿಸಬಹುದ್ದಿತ್ತಲ್ಲ ಅಂತ ಅನ್ನಿಸಿದ್ದು ಸುಳ್ಳಲ್ಲ. ಇಲ್ಲಿಯ ಬರಹಗಳನ್ನು ಓದಿದ ಮೇಲೆ ನನ್ನ ಬಾಲ್ಯ ಮತ್ತು ನಾಗರೇಖರ ಬಾಲ್ಯಕ್ಕಿಂತ ಬೇರೆಯಲ್ಲ ಅಂತ ಅನ್ನಿಸಿದ್ದು, ಮತ್ತು ಅಂದಿನ ನೆನಕೆಗಳು ಇವತ್ತು ನೆನಪಾಗಿ ನೇವರಿಸಿ ಕೈ ಹಿಡಿದು ಬರೆಯಿಸುತ್ತಾ ಬದುಕನ್ನ ಸಹ್ಯಗೊಳಿಸುತ್ತಿರುವುದು, ಇದು ಬಾಲ್ಯ ಕೊಟ್ಟ ಬಹುದೊಡ್ಡ ಉಡುಗೊರೆ. ನೆನಪುಗಳಿಗೆ ಜೀವ ತುಂಬಿದ ನಾಗರೇಖಾರಿಗೆ ಅಭಿನಂದನೆಗಳು. + +ಸ್ಮಿತಾ ಅಮೃತರಾಜ್ ಕೊಡಗಿನ ಸಂಪಾಜೆ ಬಳಿಯ ಚೆಂಬುವಿನ ನಿವಾಸಿ.  ಗೃಹಿಣಿ, ಕೃಷಿಕ ಮಹಿಳೆ. ‘ಕಾಲ ಕಾಯುವುದಿಲ್ಲ’, ‘ತುಟಿಯಂಚಿನಲ್ಲಿ ಉಲಿದ ಕವಿತೆಗಳು’ ಸೇರಿದಂತೆ ಮೂರು ಕವನ ಸಂಕಲನ ಹಾಗೂ ಮೂರು ಲಲಿತ ಪ್ರಬಂಧಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_108.txt b/Kenda Sampige/article_108.txt new file mode 100644 index 0000000000000000000000000000000000000000..20706886ade889ffc6b3db628937caf452b990d0 --- /dev/null +++ b/Kenda Sampige/article_108.txt @@ -0,0 +1,21 @@ +ಕಾವ್ಯ ಸುಲಭವಾಗಿ ಕೈಗೆ ಸಿಕ್ಕುವ ಸಾಲುಗಳಂತೆ ಕಾಣಿಸುತ್ತದೆ. ಈ ಗ್ರಹಿಕೆಯನ್ನೇ ಹಿಡಿದು ಹೊರಡುವವರಿಗೆ ಕಾವ್ಯ ನಿತ್ಯವೂ ಎದುರಾದಂತೆ ಕಂಡರೂ ಅದು ಕೈಗೆ ಸಿಕ್ಕುವುದೇ ಇಲ್ಲ. ಸುಮ್ಮನೇ ತಿರುತಿರುಗಿ ದಣಿಯುವುದೇ ಅಂಥವರ ಕಾಯಕವಾಗುತ್ತದೆ. + +ಸುಮಿತ್‌ ಮೇತ್ರಿ ಕಾವ್ಯವನ್ನು ಹೀಗೆ ಭಾವಿಸಿದವರಲ್ಲ ಎನ್ನುವುದನ್ನು ಅವರ ಸಂಕಲನ – ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ತೋರಿಸಿಕೊಡುತ್ತದೆ. ಭಾಷೆಯೊಂದಿಗೆ, ಲಯಗಳ ಜೊತೆ, ರೂಪಕಗಳ ಸಾಮೀಪ್ಯದಲ್ಲಿ ಮೇತ್ರಿ ಸದಾ ನಡೆಸುವ ಸೆಣಸಾಟ ಅವರ ಕಾವ್ಯವನ್ನು ಗಂಭೀರವಾಗಿ ಪರಿಗಣಿಸುವಂತೆ ಓದುಗರನ್ನು ಒತ್ತಾಯಿಸುತ್ತದೆ. ಹಾಗೆ ಓದದಿದ್ದರೆ ಮೇತ್ರಿಯವರ ಕಾವ್ಯ ಹತ್ತಿರವೂ ಬರುವುದಿಲ್ಲ. ಇದೆ ನಿಜ ಕಾವ್ಯದ ಸಹಜ ಗುಣ. + +(ಸುಮಿತ್‌ ಮೇತ್ರಿ) + +ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಕಾವ್ಯ ಎನ್ನುವುದು‘ಎದೆಗೆ ಚುಚ್ಚಿದ ಬಾಣಅದನ್ನು ಕೀಳ ಹೋದರೆಅದು ಎದೆಯಲ್ಲಿಯೇ ಮುರಿದುಕೊಳ್ಳುತ್ತ,ನೆತ್ತರು ಒಸರುತ್ತ,ಹಿತಯಾತನೆಯನ್ನು ನೀಡುತ್ತಲೇ ಇರುತ್ತದೆ.ಈ ಯಾತನೆಯಲ್ಲಿಯೇ‘ಪ್ರತಿದಿನವೂ ಉರಿಸಬೇಕು ಕಾರಿರುಳು’ + +ಇಲ್ಲಿನ ಕೆಲವು ಕವಿತೆಗಳಲ್ಲಿ ಸ್ಥಾಪಿತ ಗ್ರಹಿಕೆಗಳನ್ನು ಭಂಜಿಸುವ, ಹೊಸ ನೋಟದ ಕಡೆಗೆ ಬೆರಳು ತೋರಿಸುವ ಯತ್ನವಿದೆ. ಭಾಷೆಯೂ ಕೆಲವೆಡೆ ಇಂಥ ಕೆಲಸವನ್ನು ಮಾಡುತ್ತದೆ: + +‘ಗಾಳಿ ತಳಿರೊಡೆಯುವುದು’‘ದೇಹದೊಳಗೆ ಆತ್ಮ ಕಾಲಿಳಿಬಿಟ್ಟು ಕೂರುವುದು’‘ಇರುವೆ ಸಾಲಿನ ಗೆಜ್ಜೆ ಕಿರುಗುಡುವುದು’‘ಮೌನ ಕತ್ತಲೆಯ ಬೆನ್ನೇರಿ ಬೆತ್ತಲಾಗುವುದು’ ‘ಬಿರುಕುಬಿಟ್ಟ ಸೂರ್ಯನೆದೆಗೆ ಬೆರಳು ತುರುಕಿ’ಇತ್ಯಾದಿ ಈ ಸಂಕಲನದಲ್ಲಿ ಫ್ರೆಷ್‌ ಎನಿಸುವ ಸಾಲುಗಳು ಧಂಡಿಯಾಗಿ ಸಿಗುತ್ತವೆ. + +(ಜಿ.ಪಿ. ಬಸವರಾಜು) + +ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್‌ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ. ಇದು ಕಾವ್ಯದ ಬಗ್ಗೆ ಅವರಿಗಿರುವ ಅಪಾರ ಪ್ರೀತಿಯನ್ನು ಮತ್ತು ಗಾಢ ಶ್ರದ್ಧೆಯನ್ನು ತೋರಿಸುತ್ತದೆ. ಹಾಗೆಯೇ ಅವರ ತಾಳ್ಮೆಯನ್ನೂ. + + + +‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಎನ್ನುವ ಹೆಸರೇ ವಿಭಿನ್ನ ನಡೆಯನ್ನು ತೋರಿಸುವುದರ ಜೊತೆಗೆ ಬೇರೆ ರೀತಿಯ ಓದಿಗೇ ಸಹೃದಯರನ್ನು ಬರಮಾಡಿಕೊಳ್ಳುತ್ತದೆ. ಹಾಗೆಯೇ ಅರ್ಥ ವ್ಯಾಪ್ತಿಯನ್ನೂ ಸೂಚಿಸುತ್ತದೆ. ಈ ಸಂಕಲನದ ‘ಧ್ಯಾನಕ್ಕೆ ಗುಹೆ ಬೇಕಿಲ್ಲ’ ಮತ್ತು ‘ಕಣ್ಣೂರು ಅಮೀನ್‌ ಸಾಬ್‌ ಹೇಳಿದ ಕತಿ’ ಕವಿತೆಗಳು ಸುಮಿತ್‌ ಅವರ ಕಾವ್ಯದ ಬಗ್ಗೆ ಮತ್ತು ಮುಂದಿನ ಅವರ ನಡೆಯ ಬಗ್ಗೆ ಆಸೆಯನ್ನು ಚಿಗುರಿಸುತ್ತವೆ. ಅವರು ಬಹುದೂರ ನಡೆಯಬಹುದಾದ ಸಾಧ್ಯತೆಯನ್ನೂ ಹೇಳುತ್ತವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_109.txt b/Kenda Sampige/article_109.txt new file mode 100644 index 0000000000000000000000000000000000000000..f41495dda886fa93a7a3a6750a2d72501bc774f9 --- /dev/null +++ b/Kenda Sampige/article_109.txt @@ -0,0 +1,37 @@ +ಸಾವಿನ ದಶಾವತಾರ (ಅಭಿನವ ಪ್ರಕಾಶನ, 2017), ಕೆ. ಸತ್ಯನಾರಾಯಣ ಅವರ ಎಂಟನೇ ಕಾದಂಬರಿ. ಕಾದಂಬರಿಯ ಹೆಸರೇ ಸೂಚಿಸುವಂತೆ ಹತ್ತು ಹಲವು ಬಗೆಯ ಮೃತ್ಯು ದರ್ಶನ ಇಲ್ಲಿ ನಮಗಾಗುತ್ತದೆ. ಮೃತರ ಅಂತಿಮ ಪಯಣಕ್ಕಾಗಿ ಬೇಕಾದ ಎಲ್ಲ ಸೌಲಭ್ಯಗಳನ್ನು (ಅಪರ ಕ್ರಿಯಾ ಕರ್ಮಾದಿಗಳಿಂದ ಹಿಡಿದು, ಶವಾಗಾರದ ವ್ಯವಸ್ಥೆ, ಬಂಧು-ಬಳಗ/ಆಪ್ತರ ವಾಸ್ತವ್ಯ ಇತ್ಯಾದಿ) ಒದಗಿಸಿ ಕೊಡುವ Death services consultant (Event manager for death services) ಕಾದಂಬರಿಯ ಪ್ರಮುಖ ಪಾತ್ರವಾಗಿರುವುದರ ಜೊತೆಗೇ ಅದರ ನಿರೂಪಕ ಕೂಡಾ. ಸಾಂಪ್ರದಾಯಿಕವೆನ್ನಬಹುದಾದ ಕಥೆ ಇಲ್ಲಿಲ್ಲವಾದರೂ ಪ್ರತೀ ಸಾವಿನ ಸುತ್ತಲ ಘಟನಾವಳಿಗಳು, ಮೃತರ ಆಪ್ತರಷ್ಟೇ ಅಲ್ಲದೆ ಅಂತಿಮ ಕ್ರಿಯೆಯ ವಿವಿಧ ಹಂತಗಳಲ್ಲಿ ಭಾಗಿಯಾದವರನ್ನು ಒಳಗೊಂಡ ಕಥಾನಕಗಳು, ಮೇಲ್ನೋಟಕ್ಕೆ ಸ್ವತಂತ್ರವೆನಿಸಿದರೂ ದೊಡ್ಡ ಹಂದರವೊಂದರ ಅವಿಭಾಜ್ಯ ಅಂಗಗಳಾಗಿ ಬಂದಿರುವುದು ಕಾದಂಬರಿಯ ವಿಶೇಷ. ಹೊಸ ಬಗೆಯ ಪ್ರಯೋಗ ಕೂಡಾ. + +(ಕೆ. ಸತ್ಯನಾರಾಯಣ) + +ತಾವು ಕೆಲಸ ಮಾಡುವ ಸಂಸ್ಥೆಗೆ ಅಗತ್ಯವಾದ ವೃತ್ತಿ ಸಂಬಂಧಿತ ಸಮೀಕ್ಷೆಯೊಂದರ ಸಲುವಾಗಿ ಪುರುಷೋತ್ತಮ ಮತ್ತು ಅನುಪಲ್ಲವಿ (ಪಿ & ಎ,ಪಿ) ನಿರೂಪಕನನ್ನು (ಎಲ್ಲಿಯೂ ಆತನ ಹೆಸರು ಪ್ರಸ್ತಾಪವಾಗಿಲ್ಲ) ಸಂಪರ್ಕಿಸುವುದು ಕಥೆಯ ಆರಂಭ. ಆ ಸಮೀಕ್ಷೆಯಲ್ಲಿ ಅಷ್ಟೇನೂ ಆಸಕ್ತಿ ಇಲ್ಲದಿದ್ದರೂ ಆಕರ್ಷಕ ವ್ಯಕ್ತಿತ್ವದ ಯುವತಿ ಅನುಪಲ್ಲವಿಯ ಸಂಪರ್ಕ/ಒಡನಾಟವನ್ನು ಉಳಿಸಿಕೊಳ್ಳುವ ಹಂಬಲದಿಂದ ಅವರು ತಯಾರಿಸಿದ ಪ್ರಶ್ನಾವಳಿಗಳಿಗೆ ಲಿಖಿತ ಉತ್ತರಗಳನ್ನು ನೀಡಲು ಆತ ಒಪ್ಪಿಕೊಳ್ಳುತ್ತಾನೆ. ಮಧ್ಯವಯಸ್ಸನ್ನು ಮೀರಿದ ಸಭ್ಯ ಗ್ರಹಸ್ಥ ಆತ: ಹೆಚ್ಚಿನೆಲ್ಲ ಗೃಹಿಣಿಯರಂತೆ ತನ್ನ ಮನೆ-ಗಂಡ-ಮಕ್ಕಳು, ಸಮಾಜದಲ್ಲಿನ ಸ್ಥಾನಮಾನ ಇತ್ಯಾದಿಗಳತ್ತ ಮಾತ್ರ ಆಸಕ್ತಿ ಇರುವ ಪತ್ನಿ, ತಮ್ಮ ಸಂಸಾರದಲ್ಲೇ ವ್ಯಸ್ತರಾದ ವಿವಾಹಿತ ಹೆಣ್ಣುಮಕ್ಕಳು, ಅವರ ಮಕ್ಕಳು; ಇವರೊಂದಿಗಿನ ಗಟ್ಟಿ ಭಾವನಾತ್ಮಕ ಸಂಬಂಧದ ಸುಳಿವು ಇಲ್ಲಿಲ್ಲ. ಸಾವಿಗೆ ಸಂಬಂಧಿಸಿದ ಆತನ ವೃತ್ತಿಯ ಕುರಿತು ಪತ್ನಿ ತೋರಿಸುವ ಅಸಮಾಧಾನ ದಂಪತಿಗಳ ನಡುವಿನ ಬಿರುಕನ್ನು ಸೂಚಿಸುತ್ತದೆ. ಯುವತಿ ಅನುಪಲ್ಲವಿಯೆಡೆಗೆ ಆತನಿಗೆ ಉಂಟಾಗುವ ಆಕರ್ಷಣೆ ಪ್ರಾಯಶಃ ಸಹಜವಾದದ್ದು. ಆದರೆ ಯಾವುದೇ ಅನುಚಿತ ಉದ್ದೇಶಗಳಿಲ್ಲದ್ದು. ಆಕೆಯಡೆಗೆ ಕೇಂದ್ರೀಕೃತವಾಗುವ ಮನಸ್ಸು, ಒಡನಾಟದಿಂದ ಅನುಭವಿಸುವ ಆಹ್ಲಾದ, ಇವೆಲ್ಲ ಆತ ತನ್ನೊಳಗನ್ನು ಕೂಲಂಕಷವಾಗಿ ಗಮನಿಸುವ ಬಗೆಯಲ್ಲಿ ಮೂಡಿಬಂದಿದೆಯೇ ಹೊರತು ಭಾವೋತ್ಕಟತೆಯಿಂದಲ್ಲ. ಒಂದು ಮಟ್ಟದ ಪ್ರಬುದ್ಧತೆಯ ಸಂಕೇತ ಕೂಡಾ ಎಂದು ಕಾದಂಬರಿ ಮುಂದುವರೆದಂತೆಲ್ಲ ಅನಿಸತೊಡಗುತ್ತದೆ. + +ಅನುಪಲ್ಲವಿಯ ಸಲುವಾಗಿ ಒಪ್ಪಿಕೊಂಡಿದ್ದರೂ, ತನ್ನ ವೃತ್ತಿಯ ಬಗ್ಗೆ ಬರೆಯಲೇ ಬೇಕೆಂದು ಆತ ನಿರ್ಧರಿಸುವುದು ತನ್ನದೇ ವಯಸ್ಸಿನ, ತನ್ನದೇ ಹೆಸರು, ಪೂರ್ವನಾಮ ಹೊಂದಿ ತನ್ನದೇ ಜಾತಿಗೆ ಸೇರಿದ ಇನ್ನೊಬ್ಬ ವ್ಯಕ್ತಿಯ ಸಾವು ತನ್ನ ಆಸುಪಾಸಿನಲ್ಲೇ ಸಂಭವಿಸಿದಾಗ. ಹಲವಾರು ಅಂತ್ಯಕ್ರಿಯೆಗಳ ಮೇಲುಸ್ತುವಾರಿ ವಹಿಸಿ ನಡೆಸಿಕೊಟ್ಟ ಆತ ಈ ಸಾವಿಗೆ ಪ್ರತಿಕ್ರಿಯಿಸುವ ರೀತಿ ಸ್ವಲ್ಪ ವಿಚಿತ್ರವೇ. ತನ್ನ ಪತ್ನಿಗೆ ಈ ಸಾವಿನ ಬಗ್ಗೆ ತಿಳಿಯದಂತೆ ಆ ಸುದ್ದಿ ಇರುವ ದಿನಪತ್ರಿಕೆಯನ್ನು ಎಸೆದುಬಿಡುವುದು, ತನಗೆ ಆತನ ಅಂತಿಮ ಪಯಣದ ವ್ಯವಸ್ಥೆ ಮಾಡಲು ಕರೆ ಬಾರದಂತೆ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡುವುದು, ಆತನ ಅಂತಿಮ ಕ್ರಿಯೆಗಳನ್ನು ದೂರದಿಂದ, ಮರೆಯಲ್ಲಿ ನಿಂತು ನೋಡುವುದು ಇತ್ಯಾದಿ. ತಲ್ಲಣಗೊಂಡ ಸುಪ್ತ ಮನಸ್ಸಿನ ಪ್ರತಿಕ್ರಿಯೆ ಬಾಹ್ಯರೂಪದಲ್ಲಿ ಪ್ರಕಟವಾದ ಬಗೆ ಅದು. ಈ ಚಿತ್ರಣ ಲೇಖಕರ ಮನಶ್ಯಾಸ್ತ್ರೀಯ ಒಲವನ್ನು ಸೂಚಿಸುತ್ತಿರಬಹುದೇನೋ! + +ಸಮೀಕ್ಷೆಯ ಮೊದಲ ಪ್ರಶ್ನೆಯೇ `ಈ ವೃತ್ತಿಯನ್ನು ಆರಿಸಿಕೊಳ್ಳಲು ಕಾರಣಗಳೇನು?’. ತೀರ ಹೆಚ್ಚಿನ ವಿವರಣೆಯ ಅಗತ್ಯವಿಲ್ಲದಿದ್ದರೂ, ಅದುವರೆಗಿನ ತನ್ನ ಜೀವನವನ್ನು ವಸ್ತುನಿಷ್ಠವಾಗಿ ಗಮನಿಸುವ ಮನಸ್ಥಿತಿಯಲ್ಲಿದ್ದ ನಿರೂಪಕ ಬ್ಯಾಂಕ್ ಆಫೀಸರ್ ಆಗಿ ಪ್ರಾರಂಭಗೊಂಡ ತನ್ನ ವೃತ್ತಿ ಜೀವನ, ವಿವಾಹ, ಶೇರ್ ಮಾರ್ಕೆಟ್‌ನಲ್ಲಿ ಹಣ ಹೂಡುವ ಆಸಕ್ತಿ ಬೆಳೆದ ಬಗೆ, ಗಳಿಸಿದ ಲಾಭದಿಂದ ಬದಲಾದ ಜೀವನ ಶೈಲಿ, ಹೆಸರಾಂತ investment consultant ಆದ ತನ್ನ ಹಿತೈಷಿಯೊಬ್ಬರೊಂದಿಗೆ ಪಾರ್ಟನರ್ ಆಗಿ ಸೇರಿ ಬ್ಯಾಂಕ್ ಕೆಲಸಕ್ಕೆ ರಾಜೀನಾಮೆ ನೀಡಿದ್ದು ಇತ್ಯಾದಿ ತನ್ನ ಈ ವೃತ್ತಿಯವರೆಗಿನ ಘಟ್ಟಗಳನ್ನು ವಿವರಿಸುತ್ತಾ ಹೋಗುತ್ತಾನೆ. ಹೊರ ದೇಶದಲ್ಲಿ ನೆಲೆಸಿದ್ದು ತನ್ನನ್ನು ಬಹಳಷ್ಟು ನೆಚ್ಚಿಕೊಂಡಿದ್ದ ಪ್ರಭಾವಿ ಶ್ರೀಮಂತ ವ್ಯಕ್ತಿಯೊಬ್ಬನ ನಿಧನ, ಅಂತ್ಯ ಸಂಸ್ಕಾರದ ವ್ಯವಸ್ಥೆ ಮಾಡುವಂತೆ ಆತನ ಸಂಬಂಧಿಕರು ತನ್ನನ್ನು ಕೇಳಿಕೊಂಡದ್ದು, ತುಂಬ ವ್ಯವಸ್ಥಿತವಾಗಿ ಎಲ್ಲವೂ ನಡೆದದ್ದರಿಂದ ಅವರ ಪರಿಚಿತರು ಮುಂದೆ ತಮ್ಮ ಹತ್ತಿರದವರ ನಿಧನದ ಸಂಧರ್ಭಗಳಲ್ಲಿ ತನ್ನನ್ನೇ ಮತ್ತೆ ಮತ್ತೆ ಸಂಪರ್ಕಿಸಿದ್ದು.. ಹೀಗೆ ತಾನು ಈ ವೃತ್ತಿಯನ್ನು ಆಯ್ಕೆ ಮಾಡದೆಯೂ ಅದು ತನ್ನದಾದದ್ದನ್ನು ನಿರೂಪಕ ಹೇಳುತ್ತಾನೆ. + +ಶೇರು ಪೇಟೆಯ ಏರುಗಾಲದಲ್ಲಿ, ಊಹಿಸಿದ್ದಕ್ಕಿಂತ ಹೆಚ್ಚು ಲಾಭ ಬರುತ್ತಿದ್ದ ದಿನಗಳಲ್ಲಿ, ತಮ್ಮ ಆಡಂಬರದ ಜೀವನ, ತಾನು ಹಾಗೂ ತನ್ನ ಪತ್ನಿ ತಮ್ಮ ಇಬ್ಬರು ಹೆಣ್ಣು ಮಕ್ಕಳಿಗಾಗಿ ಕೊಳ್ಳಬೇಕಾದ ಆಸ್ತಿ ಪಾಸ್ತಿಯ ಕುರಿತು ನಡೆಸುತ್ತಿದ್ದ ಮಾತುಕತೆ, ಸಂಬಂಧಿಕರಿಂದ ತಮ್ಮ ಶ್ರೀಮಂತಿಕೆಯನ್ನು ಮರೆ ಮಾಚುವ ತಂತ್ರಗಳು, ಜೊತೆಯಾಗಿ ಕಾಣುತ್ತಿದ್ದ ಭವಿಷ್ಯದ ಕನಸುಗಳು.. ಇವೆಲ್ಲದರಿಂದ ತಮ್ಮಿಬ್ಬರಲ್ಲಿ ಹುಟ್ಟಿದ ಆಪ್ತ ಭಾಂಧವ್ಯ ನಂತರದ ದಿನಗಳಲ್ಲಿ, ಅದರಲ್ಲೂ ತಾನು death services ಪ್ರಾರಂಭ ಮಾಡಿದ ನಂತರ, ಸಡಿಲವಾದ ರೀತಿಯನ್ನು ಗಮನಿಸಿದ್ದ ನಿರೂಪಕ ಅದನ್ನು ನಿರ್ವಿಕಾರವಾಗಿ ಒಪ್ಪಿಕೊಂಡಿದ್ದಾನೆ. + +ವ್ಯಾವಹಾರಿಕವಾಗುತ್ತಿರುವ ಸಂಬಂಧಗಳು, ಮಧ್ಯಮ, ಮೇಲು ಮಧ್ಯಮ ವರ್ಗದ ಸಂಸಾರಗಳಲ್ಲಿನ ಒಳ ಸುಳಿಗಳನ್ನು ನಿರೂಪಕನ ಸಂಸಾರ ಹಾಗೂ ಮೃತರ ಸಂಬಂಧಿಕರ ವರ್ತನೆಗಳ ಮೂಲಕ ಪರಿಶೋಧಿಸುವ ಲೇಖಕರ ಉದ್ದೇಶ ಇಲ್ಲಿ ಸ್ಪಷ್ಟ: ಯಶಸ್ವಿ ಪ್ರಯತ್ನ ಕೂಡಾ. ಈ ಮನೋವ್ಯಾಪಾರಗಳ ಜೊತೆಗೇ death services ನಲ್ಲಿ ಒದಗಿಸಬೇಕಾದ ಸೇವೆಯ ವಿವರಗಳು; ಶವಾಗಾರ, ಚಿತಾಗಾರ, ಅಂತಿಮ ವಿಧಿಗಳಿಗಾಗಿ ಪುರೋಹಿತರ ನಿಯೋಜನೆ, ಅಗತ್ಯ ಸಾಮಗ್ರಗಳನ್ನು ಒದಗಿಸುವುದು, ವಿದೇಶದಿಂದ/ಪರ ಊರಿನಿಂದ ಈ ಕಾರ್ಯಕ್ಕಾಗಿ ಬರುವ ಆಪ್ತರು/ಸಂಬಂಧಿಕರು ಇದ್ದಲ್ಲಿ ಅವರನ್ನು ಕರೆತರಲು ವಾಹನ ವ್ಯವಸ್ಥೆ, ಅವರ ವಾಸ್ತವ್ಯ, ಊಟೋಪಚಾರ; ಅಂತಿಮ ಸಂಸ್ಕಾರದ ನಂತರ ಆಸ್ತಿ ಮಾರಾಟ/ಪರಭಾರೆ ಇದ್ದಲ್ಲಿ ಅದಕ್ಕೆ ಬೇಕಾದ ಅಗತ್ಯ ಸಹಾಯ ಹೀಗೆ,, ತಾನು ಕೈಗೆತ್ತಿಕೊಳ್ಳಬೇಕಾದ ಒಂದೆರಡು ಕೇಸ್‌ಗಳ ಮೂಲಕ ವಿಶದ ವಿವರಣೆ ನೀಡುತ್ತಾನೆ ನಿರೂಪಕ. ಈ ವೃತ್ತಿಯನ್ನು ಪ್ರಾರಂಭಿಸಲು ಬೇಕಾದ ಅಗತ್ಯ ವಿವರಗಳೆಲ್ಲ ಇಲ್ಲಿ handy ಆಗಿ ಸಿಗುತ್ತವೆ. ಈ ಕಾದಂಬರಿಯನ್ನು ಓದಿದ ನಂತರ ಯಾರಾದರೂ ಈ ವೃತ್ತಿಯನ್ನು ಕೈಗೆತ್ತಿಕೊಂಡಲ್ಲಿ ಖಂಡಿತ ಆಶ್ಚರ್ಯ ಪಡಬೇಕಾದ್ದಿಲ್ಲ. ಲೇಖಕರಿಗೆ ಕೃತಜ್ಞತೆ ಹೇಳುವುದು ಮಾತ್ರ ಅಂತಹವರ ಧರ್ಮ. ಪ್ರಾಯಶಃ ತಪ್ಪಿಸಲಾರರು. + +ತೀರ ಅಪರೂಪದ ಸಂದರ್ಭಗಳನ್ನು ಬಿಟ್ಟರೆ, ಶ್ರೀಮಂತ ಕುಟುಂಬಗಳಿಗೆ ಮಾತ್ರ ಈ ಬಗೆಯ ಸೇವೆಗಳ ಅಗತ್ಯವಿರುವುದರಿಂದ ಸಾಕಷ್ಟು ಆದಾಯ ಇರುವ ವೃತ್ತಿ ಇದು ಎಂದು ತಿಳಿಸುತ್ತಾ ಮುಂದಿನ ದಿನಗಳಲ್ಲಿ ಹಲವು ಸುಶಿಕ್ಷಿತ ಯುವಕರು ಈ ವೃತ್ತಿಯೆಡೆಗೆ ಸೆಳೆಯಲ್ಪಡಬಹುದು ಎಂದು ನಿರೂಪಕ ಅಭಿಪ್ರಾಯ ಪಡುತ್ತಾನೆ. ಅಪರಕರ್ಮ, ಶ್ರಾದ್ಧ ಇತ್ಯಾದಿ ವಿಧಿ ವಿಧಾನಗಳನ್ನು ನಡೆಸಿಕೊಡುವ ವ್ಯಕ್ತಿಗಳ ಜೊತೆಗೇ ಇನ್ನಿತರ ಅಗತ್ಯ ಸೇವೆಗಳಿಗೆ ಸೂಕ್ತರಾದವರನ್ನು ನಿಯೋಜಿಸುವ ಏಜೆನ್ಸಿಗಳು ಆಗಲೇ ತಲೆ ಎತ್ತಿರುವುದರ ಪ್ರಸ್ತಾಪವೂ ಇಲ್ಲಿದೆ ಪ್ರತಿಷ್ಠಿತ ವಿದೇಶೀ ವಿದ್ಯಾಸಂಸ್ಥೆಯಲ್ಲಿ ಹಾಸ್ಪಿಟಲ್ ಮ್ಯಾನೇಜ್‌ಮೆಂಟ್‌ನಲ್ಲಿ ಎಂಬಿಎ ಪದವಿ ಪಡೆದ ತನ್ನ ಸಂಬಂಧಿ ಯುವಕನೊಬ್ಬ ತುಂಬ ಆಧುನಿಕ ರೀತಿಯಲ್ಲಿ funeral service ಗಳನ್ನು hospital franchise ಒಂದರಲ್ಲಿ ಪ್ರಾರಂಭ ಮಾಡಿದ್ದು, ಶವಗಳು ಹಾಳಾಗದಂತೆ ಇರಿಸಲು ಬೇಕಾದ ದೊಡ್ಡ ದೊಡ್ದ ತಂಪು ಪೆಟ್ಟಿಗೆಗಳನ್ನು ಒದಗಿಸುವ ಕೆಲಸದಲ್ಲಿ ತನ್ನ ಇನ್ನೊಬ್ಬ ಸಂಬಂಧಿ ತೊಡಗಿಕೊಂಡದ್ದು ಹೀಗೆ ಉದಾಹರಣೆಗಳ ಮೂಲಕ ಈ ವೃತ್ತಿಯ ಇಂದಿನ ಮತ್ತು ಭವಿಷ್ಯದ ಆಯಾಮಗಳ ಕುರಿತು ನಿರೂಪಕ ಚರ್ಚಿಸುತ್ತಾನೆ. ತಮ್ಮ ಮುಂದಿನ ತಲೆಮಾರಿನವರು ಈ ವೃತ್ತಿಯನ್ನು ಆಯ್ದುಕೊಳ್ಳಲಿ ಎಂದು ಬಯಸುತ್ತೀರಾ? ಎಂಬ ಪ್ರಶ್ನೆಯ ಉತ್ತರ ರೂಪದ ಚಿತ್ರಣ ಇದು. ಅಂತಿಮ ವಿಧಿಗಳ ಶಾಸ್ತ್ರೋಕ್ತ ತರಬೇತಿ ಪಡೆದ ಬ್ರಾಹ್ಮಣೇತರ (ದಲಿತರನ್ನೂ ಒಳಗೊಂಡ) ವರ್ಗದವರನ್ನು ಈ ಸೇವೆಗಾಗಿ ನೇಮಿಸಿದಾಗ ಬಂದ/ಬರಬಹುದಾದ ವಿರೋಧ, ಇಂತಹ ವಿಧಿಗಳಲ್ಲಿ ನಂಬಿಕೆ, ಶ್ರದ್ಧೆ ಇದನ್ನು ನಡೆಸಿಕೊಡುವ ಬ್ರಾಹ್ಮಣ ಪುರೋಹಿತರಲ್ಲಿ ನಿಜಕ್ಕೂ ಇದೆಯೇ, ಅಂತಹ ಶ್ರದ್ಧೆ ಮತ್ತು ವಿಧಿಗಳನ್ನು ನೆರವೇರಿಸುವ ಕ್ಷಮತೆ ಮಾತ್ರ ಮುಖ್ಯವಾಗಬೇಕೇ ಹೊರತು ಜಾತಿ ಅಲ್ಲ ಎನ್ನುವ ಚಿಂತನೆಗಳು ಮಹತ್ವದ್ದು; ಇವು ಕೂಡ ಅಂತಹ ಸಂದರ್ಭಗಳ ಹಿನ್ನೆಲೆಯಲ್ಲಿ ಬಂದಿದ್ದು preachy ಆಗಿಲ್ಲದಿರುವುದು ಮೆಚ್ಚುಗೆಯ ಅಂಶ. + +ಪ್ರತಿಷ್ಠಿತ ವಾಣಿಜ್ಯ ಸಂಸ್ಥೆಯೊಂದರ ವಿವಾಹ ಸಮಾರಂಭಕ್ಕೆ ತಯಾರಾದ ಛತ್ರಗಳಲ್ಲಿ ಬ್ಲಾಕ್ ಆದ ಟಾಯ್ಲೆಟ್‌ಗಳು, ಸಂಬಂಧ ಪಟ್ಟ ಮ್ಯಾನ್ ಹೋಲ್‌ನಲ್ಲಿ ಇಳಿದು ಕೊಳೆ ನೀರಿನ ಹರಿದಾಟವನ್ನು ನಿಯಂತ್ರಿಸುತ್ತಿದ್ದ ಜಾಡಮಾಲಿಯ ಸಾವು, ರಾತ್ರೋ ರಾತ್ರಿ ಆತನ ಅಂತ್ಯ ಕ್ರಿಯೆಗಳನ್ನು ಮಾಡಲು ಕಮಿಷನರರಿಂದ ಆದೇಶ, ತನ್ನನ್ನು ಹುಡುಕಿಕೊಂಡು ಮನೆಗೆ ಬಂದ ನಗರ ಕಾರ್ಪೊರೇಶನ್‌ನ ಅಧಿಕಾರಿಗಳು, ತೀರ ಅಸಹಜ ಪರಿಸ್ಥಿತಿಯಲ್ಲಿ ನಡೆದ ವಿಧಿ ವಿಧಾನಗಳು; ಇವನ್ನೆಲ್ಲ ವಿಶದವಾಗಿ ವಿವರಿಸುತ್ತಾ, ತನ್ನ ವೃತ್ತಿಯಲ್ಲಿ ಎದುರಾದ ಸವಾಲಿನ ಸಂದರ್ಭ ಇದು ಎಂದು ನಿರೂಪಕ ಹೇಳಿಕೊಳ್ಳುತ್ತಾನೆ. ನಮ್ಮೆದುರಿಗೇ ಇದೆಲ್ಲ ನಡೆಯುತ್ತಿದೆಯೇನೋ ಎಂದು ಭ್ರಮೆಯಾಗುವಷ್ಟು ಚೆನ್ನಾಗಿ ಚಿತ್ರಿಸಿದ ಪ್ರಕರಣ ಕೂಡಾ. ಈ ಪ್ರಕರಣದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮುಂದೆಂದೂ ತನಿಖೆಗೆ ಒಳಗಾಗಬಾರದೆಂಬ ಉದ್ದೇಶದಿಂದ ನಡೆಸಲಾದ ಈ ಅಂತ್ಯ ಸಂಸ್ಕಾರದ ನಾಟಕದಲ್ಲಿ ತಾನು ಸಹಭಾಗಿಯಾಗಬೇಕಾಗಿ ಬಂದಂಥ ಪರಿಸ್ಥಿತಿ ಹಲವು ದಿನಗಳ ಕಾಲ ತನ್ನನ್ನು ಕಾಡಿತ್ತು ಎಂದು `ನಿಮ್ಮ ವೃತ್ತಿಯಲ್ಲಿ ಸವಾಲುಗಳು ಎದುರಾಗಿವೆಯೇ’ ಎಂಬ ಪ್ರಶ್ನೆಯ ಪ್ರತಿಕ್ರಿಯೆಯಲ್ಲಿ ಆತ ದಾಖಲಿಸುತ್ತಾನೆ. ವಿಮಾನ ಅಪಘಾತದಲ್ಲಿ ಗುರುತಿಸಲಾಗದ ಸ್ಥಿತಿಯಲ್ಲಿದ್ದ ಶವಗಳ ರಾಶಿಯಲ್ಲಿ ತಮ್ಮದಲ್ಲದ ವ್ಯಕ್ತಿಯ ಶವವೊಂದನ್ನು ತಮ್ಮದೆಂದು ತಪ್ಪಾಗಿ ಗುರುತಿಸಿದ್ದು, ತಿಳಿದಿದ್ದರೂ ಅದನ್ನು ಹೇಳಲಾರದ ಪರಿಸ್ಥಿತಿಯಲ್ಲಿ ಆ ಅಪರಿಚಿತ ಶವಕ್ಕೆ ಶಾಸ್ತ್ರೋಕ್ತ ವಿಧಿ ವಿಧಾನಗಳನ್ನು ಮಾಡಬೇಕಾದ ವಿಚಿತ್ರ ಸನ್ನಿವೇಶ ಕೂಡಾ ತನ್ನನ್ನು ಕಂಗೆಡಿಸಿತ್ತು ಎಂದು ನಿರೂಪಕ ಉಲ್ಲೇಖಿಸುತ್ತಾನೆ. ಕಾದಂಬರಿಯಲ್ಲಿ ಬಂದ ಎಲ್ಲ ಸಾವುಗಳೂ ಬೇರೆ ಬೇರೆ ಬಗೆಯವು ಮತ್ತು ಪ್ರತಿಯೊಂದು ಕೂಡಾ ಸ್ವತಂತ್ರ ಕಥಾನಕಗಳಂತೆ ಓದಿಸಿಕೊಂಡು ಹೋಗುತ್ತದೆ. ಸ್ವಗತ ರೂಪದ ನಿರೂಪಕನ ಚಿಂತನೆಗಳು ಇವುಗಳನ್ನು ಹೊಂದಿಸುವ ಕೊಂಡಿಯಂತೆ ಕೆಲಸ ಮಾಡಿವೆ. + + + +ಈ ವೃತ್ತಿಯಿಂದ ನಿಮ್ಮ ಸ್ವಭಾವದ ಮಿತಿಗಳನ್ನು ಮೀರಲು ಸಾಧ್ಯವಾಗಿದೆಯೇ ಎಂಬ ಪ್ರಶ್ನೆಗೆ ನಿರೂಪಕನ ಪ್ರತಿಕ್ರಿಯೆ ಮನುಷ್ಯ ಸ್ವಭಾವದ ಕುರಿತಾದ ಲೇಖಕರ ಚಿಂತನೆಗಳನ್ನು ನಮ್ಮ ಮುಂದಿಡುತ್ತದೆ. ಇನ್ನೊಂದು ಅಸಹಜ ಸಾವಿನ ವಿಸ್ತೃತ ವಿವರ ಕೂಡಾ ಇಲ್ಲಿ ಸಿಗುತ್ತದೆ. + +ಒಂದೇ ಜಾತಿಗೆ ಸೇರಿದ ಇಬ್ಬರು ಪ್ರಭಾವೀ ವ್ಯಕ್ತಿಗಳು; ಶ್ರೀಮಂತಿಕೆಯಲ್ಲೂ ಸರಿಸಾಟಿಯಾದವರು; ವಿದೇಶದಲ್ಲಿ ವಿದ್ಯಾಭ್ಯಾಸ ನಡೆಸಿ ಉತ್ತಮ ಪದವಿ ಪಡೆದ ಇವರಲ್ಲೊಬ್ಬರ ಮಗ, ಅದೇ ಮಟ್ಟದ ವಿದ್ಯಾವಂತೆಯಾದ ಇನ್ನೊಬ್ಬರ ಮಗಳ ವಿವಾಹದ ನಿರ್ಧಾರ: ಹಿಂದೆಂದೂ ಕಂಡು ಕೇಳಿ ಅರಿಯದಷ್ಟು ಅದ್ಧೂರಿಯಾಗಿ ನಡೆದ ವಿವಾಹ ಒಂದೆರಡು ತಿಂಗಳಲ್ಲಿ ಮುರಿದು ಬಿದ್ದು ತನ್ನ ತಂದೆಯ ಮನೆಗೆ ಹಿಂದಿರುಗಿದ ಯುವತಿ; ಈ ವಿಷಯದ ಗುಲ್ಲು ಇನ್ನೂ ಹಸಿಯಾಗಿರುವಾಗಲೇ ನೇಣಿಗೆ ಶರಣಾಗಿ ಆಕೆಯ ಆತ್ಮಹತ್ಯೆ; ಅಂತ್ಯ ಸಂಸ್ಕಾರದ ಎಲ್ಲ ವ್ಯವಸ್ಥೆ ಮಾಡಲು ನಿಯೋಜಿತನಾದ ನಿರೂಪಕ ಸುತ್ತಲಿನ ವಿದ್ಯಮಾನಗಳನ್ನು ಕಂಡ ರೀತಿ; ಈ ಪ್ರಮುಖರ ನಡುವೆ ಉಂಟಾದ ತೀವ್ರತರ ವೈಷಮ್ಯವನ್ನು ತಣಿಸಲು ಅಂತ್ಯಕ್ರಿಯೆಗಳ ನಡುವೆಯೇ ನಡೆಯುತ್ತಿದ್ದ ಸಂಧಾನ ಯತ್ನಗಳು; ಈ ಜಾತಿಯ ಮಠಾಧೀಶರು ಈ ಸಂಧಾನದಲ್ಲಿ ಮುಖ್ಯ ಪಾತ್ರ ವಹಿಸಿದ್ದು, ಮುಂಬರುವ ಚುನಾವಣೆಯಲ್ಲಿ ಇವರಿಬ್ಬರ ನಡುವಿನ ಬಿರುಕು ಬೀರಬಹುದಾದ ಪರಿಣಾಮದ ಕುರಿತು ಮಠಾಧೀಶರ ಚಿಂತೆ ಇತ್ಯಾದಿ ಇಡೀ ಪ್ರಕರಣವನ್ನು ದಾಖಲಿಸಿದ ರೀತಿ ಅನನ್ಯ. ಸ್ವಭಾವ ಎನ್ನುವುದು ಶನಿಮಹಾತ್ಮನ ಹಾಗೆ, ಎಷ್ಟೇ ಪ್ರಯತ್ನ ಪಟ್ಟರೂ ಅದರ ಮಿತಿಗಳನ್ನು ಮೀರುವುದು ಕಷ್ಟಸಾಧ್ಯ ಎನ್ನುವ ನಿರೂಪಕ, ಈ ದುರಂತ ಸಾವಿನ ಪ್ರಕರಣದಲ್ಲಿ ಕೂಡ ಪ್ರತಿಯೊಬ್ಬ ವ್ಯಕ್ತಿಯೂ (ತನ್ನನ್ನೂ ಸೇರಿ) ತಮ್ಮ ಸ್ವಭಾವಕ್ಕೆ ಬದ್ಧರಾಗಿಯೇ ನಡೆದುಕೊಂಡಿದ್ದೇವೆ ಎಂದು ವಾದಿಸುತ್ತಾನೆ. ಇದೊಂದು ವ್ಯಕ್ತಿಗತ ಅಭಿಪ್ರಾಯ ಎಂದಷ್ಠೇ ಪರಿಗಣಿಸಲು ಸಾಧ್ಯ. ಈ ಪ್ರಕರಣದ ಮೂಲಕ ಆ ವಾದಕ್ಕೆ ನೀಡಿರುವ ಪುಷ್ಟೀಕರಣವೂ ಶಕ್ತವಾಗಿಲ್ಲ ಎನಿಸಿದರೂ ಅದು ಈ ಕಥಾನಕವನ್ನು, ಅದರ ನಿರೂಪಣೆಯ ರೀತಿಯನ್ನು ಮೆಚ್ಚುವಲ್ಲಿ ಯಾವ ಅಡ್ಡಿಯನ್ನೂ ಉಂಟು ಮಾಡುವುದಿಲ್ಲ. + +ಸಿರಿವಂತ ಕುಟುಂಬಗಳು ಮಾತ್ರವೇ ವಾಸಿಸುತ್ತಿದ್ದ, ಎಲ್ಲ ಆಧುನಿಕ ಸೌಕರ್ಯಗಳನ್ನು ಹೊಂದಿದ್ದ ಹೆಸರುವಾಸಿ ವಸತಿ ಸಂಕೀರ್ಣ; ಹಿರಿಯರು ಕಿರಿಯರನ್ನು ಸೇರಿ ಎಲ್ಲ ವಯಸ್ಸಿನವರ ಸುರಕ್ಷತೆಗೆ ಆದ್ಯತೆ ಕೊಡುತ್ತಿದ್ದ ವ್ಯವಸ್ಥಾಪಕ ವರ್ಗ… ಇಂಥ ಕಡೆ, ಆಟದ ಭರದಲ್ಲಿದ್ದ ಏಳೆಂಟು ವರ್ಷದ ಬಾಲಕ ಆಕಸ್ಮಿಕವಾಗಿ ಟೆರೇಸ್‌ನಿಂದ ಬಿದ್ದು ಸ್ಥಳದಲ್ಲೇ ಮೃತನಾದದ್ದು ನಂಬಲಸಾಧ್ಯವಾದ ಸಂಗತಿಯೇ. ನಡೆದದ್ದಂತೂ ನಿಜ. ಜಗತ್ತನ್ನು ಕಣ್ತೆರೆದು ನೋಡುವ ಮುನ್ನವೇ ಆ ಎಳೆಯ ಜೀವದ ಅಂತಿಮ ಪಯಣ; ಈ ದಾರುಣ ಸಂದರ್ಭದಲ್ಲಿ, ಆ ನತದೃಷ್ಟ ತಂದೆ ತಾಯಿಯ ಇನ್ನಿಲ್ಲದ ದುಃಖದ ನಡುವೆ ಆ ಮಗುವಿನ ಅಂತ್ಯ ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕಾಗಿರುವುದು ಈ ವೃತ್ತಿಯಿಂದಷ್ಟೇ ಅಲ್ಲ, ಜೀವನದಿಂದಲೇ ವಿಮುಖನಾಗಿಸುತ್ತದೆ ಎಂದು ನಿರೂಪಕ ಹೇಳಿಕೊಳ್ಳುತ್ತಾನೆ. ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು.. ತಾವು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬದವರಿಂದ ವಿವಾಹಕ್ಕೆ ಬಂದ ತೀವ್ರ ಪ್ರತಿರೋಧಕ್ಕೆ ನೊಂದು ಜೀವನಕ್ಕೇ ಅಂತ್ಯ ಹಾಡಿದ ಪ್ರೇಮಿಗಳು-ಇನ್ನೇನು ವಿವಾಹಕ್ಕೆ ತಯಾರಾದವರಂತೆ ಸಾಲಂಕೃತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ಭಂಗಿಯಲ್ಲಿದ್ದ ಅವರ ಮೃತ ದೇಹಗಳು-ದೂರದಲ್ಲಿದ್ದು ವೀಕ್ಷಕರಂತೆ ನೋಡಲೂ ಕಷ್ಟವಾದ ಈ ಸಾವುಗಳಿಗೆ ಅಂತ್ಯ ಸಂಸ್ಕಾರದ ಸಿದ್ಧತೆ ಮಾಡುವುದು ಹತಾಶೆಯ ಪರಮಾವಧಿಯಲ್ಲದೆ ಇನ್ನೇನು ಎಂದು ಅಲವತ್ತುಕೊಳ್ಳುತ್ತಾನೆ ನಮ್ಮ ನಿರೂಪಕ. ದೇವರ ಮೇಲಿನ ನಂಬಿಕೆ, ಕ್ಷಣಭಂಗುರ ಜೀವನದಲ್ಲಿ ಸ್ಥಿತಪ್ರಜ್ಞೆಯನ್ನು ಭೋದಿಸುವ ಬುದ್ಧ ಮತ್ತಿತರ ದಾರ್ಶನಿಕರ ತತ್ವಗಳು ಇವೆಲ್ಲವೂ ಎಷ್ಟು ನಿರರ್ಥಕ ಎಂಬೆಲ್ಲ ಚಿಂತನೆಯಲ್ಲಿ ತನ್ನನ್ನು ಮುಳುಗಿಸಿದ್ದ ಈ ಸಂದರ್ಭಗಳನ್ನು ದಾಖಲಿಸುತ್ತಾ ಆತ ಕೊನೆಗೂ ಈ ವಿಮುಖತೆಗೇ ವಿಮುಖರಾಗಿ ತಂತಮ್ಮ ಜೀವನಕ್ಕೆ ಮರಳುವುದೇ ಜೀವನಧರ್ಮವೇನೋ ಎನ್ನುವ ತೀರ್ಮಾನಕ್ಕೆ ಬರುತ್ತಾನೆ. ಸಮೀಕ್ಷೆಯ ಮಗದೊಂದು ಪ್ರಶ್ನೆಗೆ ವಿಸ್ತೃತ ಪ್ರತಿಕ್ರಿಯೆ ಇದು. + +ಮೃತ್ಯುವನ್ನು ಯಾವ ಬಗೆಯಲ್ಲಿ ಸ್ವೀಕರಿಸುವುದು ಸೂಕ್ತ ಎಂಬ ಲೇಖಕರ ಚಿಂತನೆಗಳು ನಿರೂಪಕನ ಮೂಲಕ ಹೊರಬಂದದ್ದು ಈ ವೃತ್ತಿಯಲ್ಲಿದ್ದವರ, ಇವರಿಂದ ಸೇವೆ ಪಡೆದವರ ಮನೋಧರ್ಮವನ್ನು ಹೇಗೆ ಹೆಚ್ಚು ಮಾನವೀಯಗೊಳಿಸಬಹುದು ಎಂದು ಸಮೀಕ್ಷಕರು ಒಡ್ಡಿದ ಪ್ರಶ್ನೆಯಿಂದ. ಓದುಗರನ್ನೂ ಸೇರಿ ಪ್ರತಿಯೊಬ್ಬರೂ ತಮ್ಮನ್ನು ತಯಾರು ಮಾಡಿಕೊಳ್ಳ ಬೇಕಾದ ಅನಿವಾರ್ಯ ಸಂದರ್ಭ ಈ ಮೃತ್ಯು. ಇಲ್ಲಿಯ ಚಿಂತನಾ ಲಹರಿ ಹಲವರನ್ನು ತಟ್ಟುವುದಂತೂ ಸತ್ಯ. ಈ ಕಾದಂಬರಿಯ ಉದ್ದೇಶವೂ ಅದೇ ಇದ್ದೀತು. + +ತನ್ನನ್ನು ಅತ್ಯಂತ ಪ್ರಭಾವಿಸಿದ ವ್ಯಕ್ತಿಯೆಂದೆನ್ನಲಾಗದಿದ್ದರೂ ತಾರುಣ್ಯದಲ್ಲಿ ಹಲವು ದುಷ್ಕೃತ್ಯಗಳನ್ನು ಎಸಗಿ ಪ್ರಸ್ತುತ ಯೋಗಿಯಂತಹ ಜೀವನ ನಡೆಸುತ್ತಿರುವ ತನ್ನ `ಚಿಕ್ಕಪ್ಪ’ ನ ಪ್ರಸ್ತಾಪ ಮಾಡುತ್ತಾನೆ ನಿರೂಪಕ. ಇಲ್ಲಿ ಈ ವ್ಯಕ್ತಿಯ ಕುರಿತಾದ ವಿಶ್ಲೇಷಣೆಯಲ್ಲಿ ಕಾಣ ಸಿಗುವ ಲೇಖಕರ ಚಿಂತನೆಗಳು-ಪರಿಸ್ಥಿತಿಗೆ ತಕ್ಕುದಾಗಿ ಬದಲಾಗುವ ಮನುಷ್ಯನ ವರ್ತನೆ, ಅಂತೆಯೇ ಪಡೆಯಬಹುದಾದ ಪ್ರಬುದ್ಧತೆ ಇತ್ಯಾದಿ-ಓದುಗರನ್ನೂ ಆ ಎಡೆಗೆ ಸೆಳೆದೀತು. ತಮ್ಮನ್ನು ಪ್ರಭಾವಿಸಿದ ವ್ಯಕ್ತಿ/ವ್ಯಕ್ತಿಗಳ ವಿಶ್ಲೇಷಣೆಯಲ್ಲಿ ತೊಡಗುವಂತೆಯೂ ಮಾಡಬಹುದು. ಜೀವನವೆಂಬ ಮಾಯೆಯಾಟದ ಕುರಿತು ತಾವೇ ಚಿಂತನೆಗೆ ತೊಡಗಿರುವ ಓದುಗ ವರ್ಗಕ್ಕೆ ಈ ಭಾಗವೂ ಪ್ರಿಯವಾಗುವುದು ಖಂಡಿತಾ. ಯಾವ ಸಾಲು, ಯಾವ ಸನ್ನಿವೇಶ ಯಾರಲ್ಲಿ ಯಾವ ಬಗೆಯ ಹೊಳಹನ್ನು ನೀಡಬಹುದೆಂದು ಖಚಿತವಾಗಿ ಯಾರೂ ಹೇಳಲಾರರು. ಅಂತೆಯೇ ಇಲ್ಲಿಯೂ. + +ಕಾದಂಬರಿಯ ಕೊನೆಯ ಭಾಗದಲ್ಲಿ ಅನುಪಲ್ಲವಿಯ ಪಾತ್ರ ಮತ್ತೆ ಹಾಜರಾಗುತ್ತದೆ. ಸಮೀಕ್ಷೆಯ ಸಂಕ್ಷಿಪ್ತ ವರದಿ ತಯಾರಿಸಿ ಆಕೆಯನ್ನು ಭೇಟಿಯಾಗಲೆಂದು ಹೊರಡುವ ನಿರೂಪಕನಿಗೆ ಆಕೆಯನ್ನು ಮತ್ತೆ ಕಾಣುವ ಸಂಭ್ರಮ; ಆಕೆಯ ಪ್ರತಿಕ್ರಿಯೆಯ ಕುರಿತು ಆತಂಕ.. ಆ ಭೇಟಿಯ ವಿವರ, ನಂತರದ ವಿದ್ಯಮಾನಗಳು ಒಂದಷ್ಟು ನಾಟಕೀಯವೆನಿಸುತ್ತವೆ. ಆಕೆಯ ಪಾತ್ರ ಚಿತ್ರಣವೂ ಗಟ್ಟಿ ನೆಲೆಯಲ್ಲಿ ಮೂಡಿಲ್ಲ ಎನಿಸುತ್ತದೆ. ಹಾಗಿದ್ದೂ ನಿರೂಪಕನ ಒಳತೋಟಿಗಳು, ಚಿಂತನೆಗಳು ಈ ಅಂತಿಮ ಭಾಗದಲ್ಲೂ ಸಮರ್ಥವಾಗಿ ಮೂಡಿಬಂದಿವೆ. + + + +ಮನುಷ್ಯ ಸಂಬಂಧಗಳ, ವರ್ತನೆಗಳ ಕುರಿತು ವಿಶ್ಲೇಷಣೆ, ಸಾವಿನ ವಿಷಣ್ಣತೆಯಿಂದ ಹೊರಬರುವ ಪ್ರಯತ್ನದಲ್ಲಿ ಮೂಡಿದ ಅನಿಸಿಕೆಗಳು, ಜೀವನ್ಮರಣದ ಹಲವು ತಲ್ಲಣಗಳ ಕುರಿತಾದ ಚಿಂತನಾ ಲಹರಿ `ಸಾವಿನ ದಶಾವತಾರ’ ಪ್ರಮುಖ take-home ಅಂಶಗಳು. ಇವುಗಳು ತುಂಬ ಪ್ರಾಮಾಣಿಕವಾಗಿ ಮೂಡಿಬಂದಿರುವುದು ಕಾದಂಬರಿಯ authenticity ಯನ್ನು ಹೆಚ್ಚಿಸುತ್ತದೆ. ಸಾಮಾನ್ಯ, ವ್ಯಾವಹಾರಿಕ ವ್ಯಕ್ತಿ ಎಂದೇ ಕಾಣುವ ನಿರೂಪಕ ತನ್ನ ಸುತ್ತ ಮುತ್ತಲಿನ ವಿದ್ಯಮಾನಗಳನ್ನು ಸಹಜ ಆಸ್ಥೆಯಿಂದ ಗಮನಿಸುವಂತೆ ತನ್ನ ಒಳಗನ್ನೂ ಅಷ್ಟೇ non judgemental ಆಗಿ ಗಮನಿಸಬಲ್ಲ ಸೂಕ್ಷ್ಮಜ್ಞ Introverted extrovert ಎನ್ನಬಹುದೇನೋ! ಸೊಗಸಾದ ಭಾಷೆ, ನಿರೂಪಣೆಯ ಶೈಲಿ, ಒಳಗೊಂಡ ವಿಚಾರಗಳು, ವಿವರಣೆಗೆ ನಿಲುಕದ ಆದರೆ ಆಪ್ತವೆನಿಸುವ ಹಲವಾರು ಆಂಶಗಳನ್ನು ಒಳಗೊಂಡ ಕಾದಂಬರಿ ಇದು. ಕಥಾವಸ್ತುವಂತೂ ನಿಜಕ್ಕೂ ಅಪರೂಪದ್ದು. ಒಂದು ಒಳ್ಳೆಯ ಕಲಾತ್ಮಕ ಸಿನೆಮಾವನ್ನು ನೋಡಿದ ಅನುಭವ ಕೊಡುವ ಈ ಕಾದಂಬರಿ, ಕನ್ನಡ ಕಾದಂಬರಿ ಲೋಕದಲ್ಲಿ ಮಹತ್ವದ ಮೈಲಿಗಲ್ಲಾಗಿ ನಿಲ್ಲ ಬಲ್ಲ ಕೃತಿ ಎಂದರೆ ಅತಿಶಯೋಕ್ತಿಯಾಗಲಾರದು. + +ಡಾ. ಸುಧಾ ಅವರು ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಭೌತಶಾಸ್ತ್ರ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಹಾಗೂ ವಿಶ್ವವಿದ್ಯಾಲಯದ ಪ್ರಸಾರಾಂಗದ ಸಹನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಕನ್ನಡಕ್ಕೆ ಅನುವಾದಿಸಿದ ಸಾಮರ್ ಸೆಟ್ ಮಾಮ್, ಮೊಪಾಸಾ ಮತ್ತಿತರ ಹೆಸರಾಂತ ಲೇಖಕರ ಕಥೆಗಳು ಕನ್ನಡದ ಹಲವು ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. \ No newline at end of file diff --git a/Kenda Sampige/article_11.txt b/Kenda Sampige/article_11.txt new file mode 100644 index 0000000000000000000000000000000000000000..186b317f1ed5664f3536b3f63230fc9e717fee10 --- /dev/null +++ b/Kenda Sampige/article_11.txt @@ -0,0 +1,23 @@ +ಹೈಸ್ಕೂಲ್ ಶಿಕ್ಷಕರಾಗಿರುವ ನನ್ನ ಸ್ನೇಹಿತರೊಬ್ಬರು ಅಲ್ಲಿ ಶುರುವಾಗುವ ಮಕ್ಕಳ ಪ್ರೇಮ ಪ್ರಸಂಗಗಳ ಬಗ್ಗೆ ಹೇಳ್ತಾ ಇರ್ತಾರೆ. ಮಕ್ಕಳನ್ನು ಕುರಿತು ‘ಓದೋಕೆ ಅಂತಾ ಶಾಲೆಗೆ ಕಳಿಸಿದ್ರೆ, ಲವ್ವು ಗಿವ್ವು ಅಂತಾ ಲೈಫನ್ನು ಹಾಳು ಮಾಡಿಕೊಳ್ತಾರೆ. ಈ ರೀತೀನ ಸರ್ ಮಾಡೋದು?’ ಅಂತಾ ಬಯ್ತಾ ಇರ್ತಾರೆ. ಆಫ್ ಕೋರ್ಸ್, ಅವರು ಬಯ್ಯೋದ್ರಲ್ಲಿ ಅರ್ಥ ಇದೆ. ಲೈಫಲ್ಲಿ ಸೆಟ್ಲೇ ಆಗಿರೋಲ್ಲ. ಜೀವನ ಅಂದ್ರೆ ಏನು ಅಂತಾನೇ ಗೊತ್ತಿರೊಲ್ಲ… ಇಂಥವ್ರು ಈ ರೀತಿ ಮಾಡಿದ್ರೆ ಸಿಟ್ಟು ಬರಬೇಕಾದ್ದೆ. ‘ಹುಚ್ಚು ಖೋಡಿ ಮನಸ್ಸು, ಅದು ಹದಿನಾರರ ವಯಸು’ ಎನ್ನುವಂತೆ ಇದು ಅವರ ತಪ್ಪಲ್ಲ. ಅವರ ವಯಸ್ಸಿನ ತಪ್ಪು ಅಂತಾ ಆ ಸ್ನೇಹಿತನಿಗೂ ಗೊತ್ತು. ಸರಿಯಾಗಿ ಮಾರ್ಗದರ್ಶನ ಮಾಡಿದರೆ ಅವರನ್ನು ಸರಿದಾರಿಗೆ ತರಬಹುದು. ತಮಾಷೆ ಏನಪ್ಪಾ ಅಂದ್ರೆ ಈ ರೀತಿ ಮಕ್ಕಳನ್ನು ಬಯ್ಯೋ ಆ ನನ್ನ ಗೆಳೆಯ ಅವನೂ ಸಹ ಆ ವಯಸ್ಸಿನಲ್ಲಿ ಇದೇ ರೀತಿ ಮಾಡಿದ್ದ!!! + +ಆಗ ಹೈಸ್ಕೂಲಿನಲ್ಲಿ ಓದುವಾಗ ನನ್ನ ಕೆಲ ಗೆಳೆಯರು ತಾವು ಇಷ್ಟಪಡುವ ಹುಡುಗಿಯರ ಹೆಸರಿನ ಮೊದಲ ಇಂಗ್ಲೀಷ್ ಅಕ್ಷರ ಹಾಗೂ ತಮ್ಮ ಹೆಸರಿನ ಮೊದಲಕ್ಷರ ಸೇರಿಸಿ ನೋಟ್ ಬುಕ್ಕಿನ ಮೇಲೆ ಬರೆದುಕೊಳ್ಳೋದು ಅಥವಾ ಲವ್ ಸಿಂಬಲ್ ಹಾಕಿ ಶಾಲಾ ಗೋಡೆಯ ಮೇಲೆ ಮಾವಿನ ಕಾಯ ಹೀಚಿನ ವಾಟೆಯಲ್ಲಿ ಬರೆಯುತ್ತಿದ್ದರು. ಬಹುತೇಕರು ಡೆಸ್ಕಿನ ಮೇಲೆ ಬರೆಯೋದು ಅಥವಾ ಬಸ್ಸಿನ ಸೀಟಿನ ಮೇಲೆ ಬರಿಯೋದನ್ನು ಮಾಡ್ತಾರೆ. ನನ್ನ ಜೊತೆಯಲ್ಲಿ ಹಾಸ್ಟೆಲ್ಲಿನಲ್ಲಿ ನನ್ನ ಪಕ್ಕದಲ್ಲೇ ಇದ್ದ ಶಂಕರ್ ಮಾತ್ರ ಯಾವಾಗ್ಲೂ ನಮ್ಮ ಕ್ಲಾಸ್ ಮೇಟ್ ಹುಡುಗಿಯ ನೆನಪಿನಲ್ಲಿಯೇ ಕಾಲ ಕಳೀತಿದ್ದ. ಹೀಗೆ ಮಾಡ್ತಾ ಮಾಡ್ತಾ 9 ನೇ ಕ್ಲಾಸಲ್ಲೇ ಫೇಲ್ ಆಗಿ ಶಾಲೆ ಬಿಟ್ಟು ಹೋಗಿದ್ದ. ಈ ಸಮಯದಲ್ಲಿ ನಾವು ವಾರ್ಡನ್ ಗಮನಕ್ಕೆ ತಂದಿದ್ದರೆ ಅವನನ್ನು ಸರಿದಾರಿಗೆ ತರಬಹುದಿತ್ತೇನೋ? ಆದರೆ ವಾರ್ಡನ್ ಹತ್ತಿರ ಹೇಳಿದರೆ ಚಾಡಿ ಹೇಳ್ದಂತೆ ಆಗುತ್ತೋ? ಎಲ್ಲಿ ಅವನಿಗೆ ಹೊಡೆತ ಕೊಡುತ್ತಾರೋ? ಎಂದುಕೊಂಡು ಸುಮ್ಮನಾಗಿದ್ದನ್ನು ಈಗ ನೆನಪಿಸಿಕೊಂಡರೆ ನಾನು ಹೇಳಿದ್ದರೆ ಚೆಂದವಿತ್ತೇನೋ ಅಂತಾ ಅನಿಸುತ್ತೆ. + +ಈ ವಯಸ್ಸಿನಲ್ಲಿ ಮಕ್ಕಳಿಗೆ ಈ ಭಾವನೆ ಬರೋದಿಕ್ಕೆ ಕ್ರಶ್ ಅನ್ತಾರೆ. ‘ವಯಸ್ಸಿಗೆ ಬಂದಾಗ ಕತ್ತೆಯೂ ಸಹ ಸುಂದರವಾಗಿ ಕಾಣುತ್ತೆ’ ಅಂತಾರಲ್ಲಾ ಹಾಗೆ!! ಈ ವಯಸ್ಸಲ್ಲಿ ಮಕ್ಕಳಿಗೆ ವಿರುದ್ಧ ಲಿಂಗಿಗಳ ಕಡೆ ಆಕರ್ಷಣೆಯಾಗೋದು ಸಹಜ. ಆದರೂ ಸೂಕ್ತ ರೀತಿಯ ಸಲಹೆ ಸೂಚನೆ ನೀಡಿ ಅವರನ್ನು ಸರಿ ದಾರಿಗೆ ತರಬಹುದು. ‘ಖಾಲಿ ಮನಸ್ಸು ದೆವ್ವಗಳ ಕಾರ್ಯಾಗಾರ’ ಎಂಬಂತೆ ಮಕ್ಕಳು ಬ್ಯೂಸಿಯಾಗಿರುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಸ್ನೇಹಿತರಂತೆ ಕಂಡು ಅವರ ಭಾವನೆಗಳಿಗೆ ಸ್ಪಂದಿಸಿ, ಅವರನ್ನು ಪ್ರೀತಿಸಿದರೆ ಹಾಗೂ ಅವರಿಗೆ ಸಮಯ ಕೊಟ್ಟರೆ ಮಕ್ಕಳು ಪ್ರೀತಿಯನ್ನು ಹುಡುಕಿಕೊಂಡು ಬೇರೆಯವರ ಬಳಿ ಹೋಗುವುದು ತಪ್ಪುತ್ತದೆ. ನನಗೂ ಸಹ ಈ ಭಾವನೆಗಳು ಬರುತ್ತಿದ್ದವಾದರೂ ಮನೆಯ ಕಂಡೀಷನ್ ನೆನಪು ಬಂದು ಓದಿನತ್ತ ಮನಸ್ಸನ್ನು ಹೊರಳಿಸುತ್ತಿದ್ದೆ. + +ನಮ್ಮ ಕ್ಲಾಸಲ್ಲಿ ನಮ್ಮ ಇಂಗ್ಲೀಷ್ ಮೇಷ್ಟ್ರು ಆಗಿದ್ದ ಕೆಆರ್ ಎಸ್ ಆಗಾಗ್ಗೆ ಕ್ಲಾಸಿನಲ್ಲಿ ಹಾಡನ್ನು ಹೇಳಿಸುತ್ತಿದ್ದರು. ಅದರಲ್ಲೂ ನರಸಿಂಹ ಹೇಳುತ್ತಿದ್ದ ‘ಹರಿ ಭಜನೆ ಮಾಡೋ ನಿರಂತರ….. “ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು….’ ಎಂಬ ಹಾಡುಗಳನ್ನು ಕೇಳಿ ಕೇಳಿ ನಮಗೆ ಕಂಠಪಾಠವಾಗಿ ಹೋಗಿದ್ದವು. ನರಸಿಂಹ ನಮ್ಮದೇ ಶಾಲೆಯ ಕ್ಲರ್ಕ್‌ರವರ ಮಗ. ಅವನು ನನ್ನ ಪಕ್ಕ ಕೂರುತ್ತಿದ್ದ. ನೋಡೋಕೆ ಸಣ್ಣ ಹುಡುಗನಂಗೆ ಇದ್ದ. ಆದರೆ ಅವನು ಮಾಡುತ್ತಿದ್ದ ತರಲೆ ಮಾತ್ರ ನಮಗೆ ಮಾತ್ರ ಗೊತ್ತಾಗ್ತಿತ್ತು. ನಾವು ಎದ್ದಾಗ ನಮ್ಮ ಯೂನಿಫಾರಂ ಚಡ್ಡಿಯನ್ನು ಮೆಲ್ಲಗೆ ಮೇಲೆತ್ತುವ ತರಲೆ ಮಾಡುತ್ತಿದ್ದ, ಓದಲು ಕುಳಿತರೆ ಹುಳದ ರೀತಿ ಕಿವಿ ಹತ್ತಿರಕ್ಕೆ ಬಂದು ‘ಗುಂಯ್’ ಗುಟ್ಟುವ ಶಬ್ದ ಮಾಡುತ್ತಿದ್ದ. ಬೇರೆ ಹುಡುಗರ ಮಿಮಿಕ್ರಿ ಮಾಡುವುದು, ಆ ಊರಲ್ಲಿದ್ದ ಡಾಕ್ಟರ್ ಅವರ ಮಿಮಿಕ್ರಿ ಮಾಡುವುದು.. ಹೀಗೆಲ್ಲ ಏನೇನೋ ಮಾಡುತ್ತಿದ್ದ. ರಂಗನಾಥನಿಗೆ ಕಾಮಿಡಿ ಮಾಡುತ್ತಾ ನಮ್ಮನ್ನೆಲ್ಲಾ ನಗೆಗಡಲಲ್ಲಿ ತೇಲುವಂತೆ ಮಾಡುತ್ತಿದ್ದ. ಈಗ ಇದೇ ನರಸಿಂಹ ಬೆಂಗಳೂರಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದಾನೆ. + + + +ನನ್ನ ಪಕ್ಕ ಸಂದೇಶ(ಹೆಸರು ಬೇರೆ ಇದೆ) ಕೂರುತ್ತಾ ಇದ್ದ. ಅವನು ಬಾಯಲ್ಲಿ ಬೆಲ್ಲದಚ್ಚನ್ನು ಇಟ್ಟುಕೊಂಡು ಕೂರುತ್ತಿದ್ದ. ದಪ್ಪನೆಯ ಕನ್ನಡಕ ಹಾಕುತ್ತಿದ್ದ ಇವನು ಕಣ್ಮುಚ್ಚಿಕೊಂಡು ನಿದ್ರಿಸಿದರೂ ಯಾರಿಗೂ ತಿಳಿಯುತ್ತಿರಲಿಲ್ಲ. ಪಾಠವನ್ನು ಕೇಳುತ್ತಲೇ ಇರಲಿಲ್ಲ. ಇವನ ನೋಟ್ಸ್ ನೋಡಿದರೆ ತುಂಬಾ ಕಚಡಾ ಥರ ಇರುತ್ತಿತ್ತು. ಇವನು 10 ನೇತರಗತಿಯಲ್ಲಿ ತೆಗೆದ ಅಂಕಗಳನ್ನು ನೋಡಿದರೆ ಇವನು ಯಾಕಾದ್ರೂ ಓದುತ್ತಿದ್ದಾನೆ ಎಂದು ಅನಿಸುತ್ತಿತ್ತು. ಆದರೆ ಇಂದು ಇದೇ ವ್ಯಕ್ತಿ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಲ್ಲಿ ಲೆಕ್ಚರರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾನೆ!! ಇದೇ ರೀತಿ ಇನ್ನೂ ಅನೇಕರು ಆಗ ಕಮ್ಮಿ ಅಂಕ ಪಡೆಯುತ್ತಿದ್ದವರು ಇಂದು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಇದೇ ರೀತಿ ನಮ್ಮ ಶಾಲೆಯಲ್ಲಿ ‘ಕನ್ನಡ ಪಂಡಿತ’ ಎಂದು ಹೆಸರಾಗಿದ್ದ ಇಂದ್ರಜಿತ್ ಎಂಬ ನನ್ನ ಸ್ನೇಹಿತನಿದ್ದ. ಇವನು ಮೊದಲ ವರ್ಷ ತನ್ನೂರಿನಿಂದ ಶಾಲೆಗೆ ಬರುತ್ತಿದ್ದ. ಆದರೆ ಬಹುಷಃ 9 ನೇತರಗತಿಗೆ ಹಾಸ್ಟೆಲ್‌ಗೆ ಸೇರಿದ ಅನಿಸುತ್ತೆ. ಕನ್ನಡ ಮೇಷ್ಟ್ರ ಹತ್ತಿರ ಭಾಷೆಯ ಬಗ್ಗೆ ಪ್ರಶ್ನೆ ಕೇಳುತ್ತಿದ್ದ. ಕನ್ನಡದಲ್ಲಿ ಹೆಚ್ಚು ಅಂಕ ಪಡೆಯುತ್ತಿದ್ದ ಎಂಬ ಕಾರಣಕ್ಕೆ ಇರಬೇಕು ಇವನಿಗೆ ಪಂಡಿತ ಎಂಬ ಹೆಸರು ಸೂಕ್ತವಾಗಿತ್ತು. ಇವನು ಸಾಮಾನ್ಯವಾಗಿ ಓದುತ್ತಿದ್ದ. ಹಾಸ್ಟೆಲ್ಲಿನಲ್ಲಿ ಊಟ ಬಡಿಸೋಕೆ ಹೋಗುತ್ತಿದ್ದ. ಇದೇ ವ್ಯಕ್ತಿ ಇಂದು ಶೇರ್ ಮಾರ್ಕೆಟ್ಟಿನ ಬಗ್ಗೆ ಇಂಗ್ಲೀಷಿನಲ್ಲಿ ಮೂರ್ನಾಲ್ಕು ಪುಸ್ತಕಗಳನ್ನು ಬರೆದಿದ್ದಾನೆ! ಯಶಸ್ವೀ ಇಂಟ್ರಾಡೇ ಟ್ರೇಡರ್ ಆಗಿದ್ದಾನೆ. ಆದ್ದರಿಂದ ನಾವು ಯಾವತ್ತೂ ಮಕ್ಕಳನ್ನು ಮೊದಲೇ ಇವರು ಹೀಗೇ ಎಂದು ಜಡ್ಜ್ ಮಾಡಬಾರದು. ಮುಂದೆ ಅವರು ಬದಲಾಗಬಹುದು. ನಾವು ಅವಕಾಶಗಳನ್ನು ಒದಗಿಸಬೇಕಷ್ಟೇ. + +ನನ್ನ ಡೆಸ್ಕಿನ ಮುಂದೆ ವೆಂಕಟೇಶ ಎಂಬುವವನು ಕೂರುತ್ತಿದ್ದ. ಇವನು ಹೊಳಲ್ಕೆರೆಯಿಂದ ಬರುತ್ತಿದ್ದ. ಮಿತ ಭಾಷಿ. ಆದರೆ ಇವನದೊಂದು ವಿಶೇಷ ಏನಪ್ಪಾ ಅಂದ್ರೆ ಇವನಿಗೆ ಯಾರಾದ್ರೂ ಒಂದು ಹೊಡೆತ ಹೊಡೆದರೆ ಇವನು ಆ ಹೊಡೆತಕ್ಕೊಂದು ಹೊಡೆತ ಕೊಟ್ಟು, ಹೊಡೆದವನಿಗೆ ವಾಪಸ್ಸು ಹೊಡೆಯೋತನಕ ಮನೆಗೆ ಹೋಗ್ತಾ ಇರಲಿಲ್ಲ. ಮೊದಲೇ ಬಸ್ಸಿನಲ್ಲಿ ಓಡಾಡುತ್ತಿದ್ದವ. ಬಸ್ಸನ್ನು ಮಿಸ್ ಮಾಡಿಕೊಂಡರೂ ಇವನು ಮಾತ್ರ ಹೊಡೆತ ಕೊಟ್ಟೇ ಹೋಗುತ್ತಿದ್ದ. ಶಾಲೆಗೆ ಬೆಲ್ ಹೊಡೆದಾಗ ನಾನು ಇವನಿಗೆ ಸುಖಾಸುಮ್ಮನೆ ಹೊಡೆದು ಜೋರಾಗಿ ಹೋಗುತ್ತಿದ್ದೆ. ಇವನು ನನ್ನನ್ನು ಅಷ್ಟೇ ವೇಗವಾಗಿ ಬೆನ್ನತ್ತಿ ಹೊಡೆದು ಬರುತ್ತಿದ್ದ. ಎಷ್ಟೋ ಬಾರಿ ಇವನಿಗೆ ಸಿಗದೇ ಎಲ್ಲೆಲ್ಲೋ ಓಡಿದಾಗ ಇವನೂ ಸಹ ಹಾಗೇ ಹೋದ ಜಾಯಮಾನದವನಲ್ಲ. ಅಪ್ಪಿತಪ್ಪಿ ಮಿಸ್ಸಾಗಿ ಸಿಗದೇ ಹೋದಾಗ ಮಾರನೇ ದಿನವಾದರೂ ನೆನಪಿಸಿಕೊಂಡು ಹೊಡೆಯುತ್ತಿದ್ದ. ಇವನೇ 10 ನೇತರಗತಿಯಲ್ಲಿ ಶಾಲೆಗೆ ಟಾಪರ್ ಆದ. + +ನಾನು ಎನ್.ಸಿ.ಸಿ. ಗೆ 9 ನೇ ತರಗತಿಯಲ್ಲಿ ಸೇರಿದ್ದಕ್ಕೆ 10 ನೇತರಗತಿಗೆ ಎನ್.ಸಿ.ಸಿ ಯ ಎರಡನೇ ವರ್ಷಕ್ಕೆ ಬಂದೆ. ಎಸ್ಸೆಸ್ಸೆಲ್ಸಿ ಅಂತಾ ಬಹುತೇಕರು ಎಸ್ಸೆಸ್ಸೆಲ್ಸಿಗೆ ‘ಎನ್ ಸಿ ಸಿ’ ಸೇರೋದನ್ನು ಇಷ್ಟಪಡುತ್ತಿರಲಿಲ್ಲ. ನಾನು ಎರಡನೇ ವರ್ಷ ಮುಗಿಸೋಣ ಎಂದು ಎನ್ ಸಿ ಸಿ ಬಿಡಲಿಲ್ಲ. ಈ ವರ್ಷ ನಮಗೆ ಕ್ಯಾಂಪ್ ಕಳಿಸ್ತಾ ಇದ್ರು. ನನಗೂ ಅದೇ ರೀತಿ ಸಿ.ಎ.ಟಿ.ಸಿ ಕ್ಯಾಂಪ್ ಎಂದು ಕೊಂಡಜ್ಜಿಗೆ ಕಳಿಸಿದ್ರು. ಈ ಊರು ದಾವಣಗೆರೆಯ ಬಳಿ ಇತ್ತು. ಇಲ್ಲೊಂದು ಗುಡ್ಡವಿತ್ತು. ಇದು ಕೊರಕಲು ಕೆಂಪು ಮಣ್ಣಿನಿಂದ ತುಂಬಿತ್ತು. ವಿಶಾಲವಾದ ಜಾಗವಾದ್ದರಿಂದ ಇಲ್ಲೇ ನಾವು ಇರಬೇಕಾಗಿತ್ತು. ನಮಗೆ ಹತ್ತು ಜನರಿಗೊಂದರಂತೆ ಟೆಂಟ್ ಕೊಟ್ಟಿದ್ದರು. ಇದರಲ್ಲೇ ನಾವು ವಾಸ ಮಾಡಬೇಕಾಗಿತ್ತು. ಚೇಳುಗಳಿದ್ದ ಕಾರಣಕ್ಕೆ ನಾವು ಶೂಗಳನ್ನು ಬಿಚ್ಚುವಂತೆ ಇರಲಿಲ್ಲ. ಕಡೇ ಪಕ್ಷ ಸಾಕ್ಸ್‌ಗಳನ್ನಾದರೂ ಹಾಕಿಕೊಂಡು ಇರಬೇಕಾಗಿತ್ತು. ಬೆಳಗ್ಗೆ 5 ಘಂಟೆಗೆ ನಮ್ಮ ದಿನಚರಿ ಆರಂಭವಾಗುತ್ತಿತ್ತು. ಅಷ್ಟೊತ್ತಿಗೆ ಒಂದು ಬಕೇಟ್ಟಿನಲ್ಲಿ ಟೀ ಬರುತ್ತಿತ್ತು. ಹಾಸ್ಟೆಲ್ಲಿನಲ್ಲಿ ನಮಗೆ ಟೀ ಸೌಲಭ್ಯವಿಲ್ಲದ ಕಾರಣಕ್ಕೋ ಏನೋ ನಾವು ಟೀಯನ್ನು ತುಸು ಜಾಸ್ತಿಯೇ ಕುಡಿಯುತ್ತಿದ್ದೆವು. ಆನಂತರ ನಮ್ಮನ್ನು ಮಾರ್ಚ್ ಫಾಸ್ಟ್‌ಗೆಂದು ಕರೆದುಕೊಂಡು ಹೋಗುತ್ತಿದ್ದರು. 8 ಘಂಟೆಯವರೆಗೂ ಮಾಡಿಸಿ ನಂತರ ಸ್ನಾನಕ್ಕೆ ಬಿಡುತ್ತಿದ್ದರು. ತದನಂತರ ಟಿಫನ್ ವ್ಯವಸ್ಥೆ. ಆಮೇಲೆ ಮಾರ್ಚ್ ಫಾಸ್ಟ್ ತರಬೇತಿ, ರೈಫಲ್ ಟ್ರೈನಿಂಗ್ ಕೊಡುತ್ತ ಇದ್ದರು. ಮಧ್ಯಾಹ್ನದವರೆಗೂ ಬಿಡುವಿಲ್ಲದ ತರಬೇತಿ ಮಧ್ಯಾಹ್ನದ ಊಟ. ಆಮೇಲೆ ಒಂದು ಘಂಟೆ ರೆಸ್ಟ್‌ಗೆ ಅವಕಾಶ ಕೊಡುತ್ತಿದ್ದರು. ಸಂಜೆ ಕಲ್ಚರಲ್ ಪ್ರೋಗ್ರಾಂ ಇರುತ್ತಿತ್ತು. ನಂತರ ರಾತ್ರಿ ಊಟ ಕೊಡುತ್ತಿದ್ದರು. ಆನಂತರ ನಾವು ಮಲಗಬೇಕಾಗಿತ್ತು. ಟೆಂಟಿನೊಳಗೆ ನೆಲದ ಮೇಲೆಯೇ ಚಾಪೆಯನ್ನಾಸಿಕೊಂಡು ಮಲಗುತ್ತಿದ್ದೆವು. ಸುಸ್ತಾಗುತ್ತಿದ್ದ ಕಾರಣ ನಮ್ಮ ನಿದ್ದೆಗೆ ಇದ್ಯಾವುದೂ ಭಂಗ ತರುತ್ತಿರಲಿಲ್ಲ. ಇದೇ ರೀತಿ ಒಂದು ವಾರ ಕಳೆದು ಊರಿಗೆ ವಾಪಸ್ಸಾಗುವಾಗ ಏನೋ ಒಂಥರಾ ಬೇಸರವಾಗ್ತಾ ಇತ್ತು. ಬೇರೆ ಬೇರೆ ಕಡೆಯಿಂದ ಬಂದು ಗೆಳೆಯರಾಗಿದ್ದವರನ್ನು ಬಿಟ್ಟು ಹೋಗೋ ಮನಸ್ಥಿತಿಯ ಜೊತೆಗೆ, ಕೊಡುತ್ತಿದ್ದ ಉತ್ತಮ ತಿಂಡಿ, ಊಟ ಬಿಟ್ಟು ಮತ್ತೆ ಹಾಸ್ಟೆಲ್ಲಿಗೆ ಹೋಗಬೇಕಲ್ಲಪ್ಪ ಎಂಬ ನೋವು ನಮಗೆ ತುಂಬಾ ಬೇಸರ ತರಿಸುತ್ತಿತ್ತು. + +ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ. ಈ ಕಾರಣದಿಂದ ನನ್ನ ಓದಿನ ಆಸಕ್ತಿ ಕುಂಠಿತವಾಗುತ್ತಾ ಹೋಯ್ತು. ಇದರ ಜೊತೆಗೆ ಇದೇ ವರ್ಷ ನಮ್ಮ ಸ್ವಾಮೀಜಿಯವರು ಸ್ವರ್ಗಸ್ತರಾದ ಕಾರಣ ನಮಗೆ ಪಾಠಗಳು ಪ್ರತೀ ವರ್ಷದಂತೆ ನಡೆಯಲಿಲ್ಲ. ಶತಕದ ಗಡಿ ದಾಟಿ ‘ಸೇವೆ ಸೇವೆ ಸೇವೆ’ ಎಂದು ತಮ್ಮ ಜೀವನವನ್ನೇ ಸಮಾಜಕ್ಕೆ ಮೀಸಲಾಗಿರಿಸಿ ಬದುಕಿ, ಹಲವರ ಬಾಳು ಬೆಳಗಿದ ಮಹಾನ್ ಚೇತನ ಶ್ರೀ ರಾಘವೇಂದ್ರ ಸ್ವಾಮೀಜಿಗಳ ಆರಾಧನೆ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದರು. ಅಂದು ಇವರ ಪಾರ್ಥಿವ ಶರೀರ ಬರುವ ದಿನ ನಾನು ಎನ್ ಸಿ ಸಿ ಕ್ಯಾಡೆಟ್ ಆಗಿದ್ದರಿಂದ ನನ್ನನ್ನೂ ಕಾಯಲು ರಸ್ತೆಯಂಚಿನ ಬದಿಯಲ್ಲಿ ಹಾಕಿದ್ದು ಅದನ್ನು ತೀರ ಹತ್ತಿರದಿಂದ ನೋಡಲು ಅದೃಷ್ಟ ನನಗೆ ಸಿಕ್ಕಿತು ಎಂದು ಭಾವಿಸುತ್ತೇನೆ. + + + +“ಬದುಕು ಜಟಕಾಬಂಡಿ ವಿಧಿ ಅದರ ಸಾಹೇಬಕುದುರೆ ನೀನ್ ಅವನು ಪೇಳ್ದಂತೆ ಪಯಣಿಗರುಮದುವೆಗೋ ಮಸಣಕೋ ಹೋಗೆಂದ ಕಡೆಗೋಡುಪದ ಕುಸಿಯೇ ನೆಲವಿಹುದು ಮಂಕುತಿಮ್ಮ||”ಎಂಬ ಡಿವಿಜಿಯವರ ಮಾತಿನಂತೆ ನಾವು ಬಾಳಬೇಕು. ಬಾಳಲ್ಲಿ ನಾವು ಯಾವತ್ತೂ ಇನ್ನೊಬ್ಬರನ್ನು ಲಘುವಾಗಿ ಪರಿಗಣಿಸಬಾರದು. ಅವರಿಂದ ನಮಗೇನು ಎಂಬ ಅಹಂಕಾರವನ್ನು ಪಡುವುದು ಬೇಡ. ಎಲ್ಲರೊಳೊಂದಾಗಿ ಬಾಳಬೇಕು. + +ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ. \ No newline at end of file diff --git a/Kenda Sampige/article_110.txt b/Kenda Sampige/article_110.txt new file mode 100644 index 0000000000000000000000000000000000000000..bd26634c8c934b7ea524410ca4e1bff30ab9a270 --- /dev/null +++ b/Kenda Sampige/article_110.txt @@ -0,0 +1,11 @@ +ನಮ್ಮ ಸ್ವಂತಿಕೆಯ ಅರಿವು ಮೂಡಿಸುವ ಪುಸ್ತಕ ನಾವಿಬ್ಬರೇ ಗುಬ್ಬಿ. ಸುಮಾರು 35 ಕವನಗಳನ್ನು ಒಳಗೊಂಡ ಈ ಪುಸ್ತಕದಲ್ಲಿ ಕಲಿಯುವುದನ್ನು, ಕಲಿಯಬೇಕಾದದ್ದನ್ನು ಅಕ್ಷರಗಳಲ್ಲಿ ಕಟ್ಟಿಕೊಟ್ಟಿದ್ದಾರೆ ವಿಕ್ರಮ್ ಬಿ. ಕೆ. ಇಲ್ಲಿನ ಬರಹದ ಒಂದೊಂದು ಸಾಲು ಸುದೀರ್ಘವಾಗಿ ಓದಿಸಿಕೊಂಡಿತು… ವಿಭಿನ್ನ ವಿಚಾರಗಳು, ವೈಚಾರಿಕತೆಯ ನೋಟ, ಕಂಡುಂಡದ್ದನ್ನು ಬರಹದಲ್ಲಿ ಕಟ್ಟಿಕೊಟ್ಟಿರುವ ಧಾಟಿ. ಅದರಿಂದಾಚೆಗೂ ಗುಬ್ಬಿಯ ಒಳಗಿನ ಭಾವ ಓದುಗರನ್ನು ಪ್ರತಿ ಕ್ಷಣ ಮಂತ್ರಮುಗ್ಧರನ್ನಾಗಿ ಮಾಡುವುದಂತೂ ನಿಜ. ಪ್ರತಿ ಪದಗಳು ಜೀವ ತುಂಬಿ ಬಂದಂತೆ ಓದುಗ ಸಹೃದಯರ ಉಸಿರಲ್ಲಿ ಬೆರೆತು ಹೋಗಿವೆ. + +(ವಿಕ್ರಮ್‌ ಬಿ.ಕೆ.) + +ಸಾರ್ಥಕತೆಯ ಸಂತೃಪ್ತಿಯನ್ನು ಮೂಡಿಸುವ ಕವಿತೆಗಳು ಸಫಲತೆಯ ಸಂದೇಶವನ್ನು ಸಹಜವಾಗೇ ಚಿತ್ರಿಸಿವೆ. ಹೇಳಬೇಕಾದದ್ದು ದೀರ್ಘವಿದ್ದರೂ ಸುಲಲಿತವಾಗಿ ನಾಲ್ಕಾರೂ ಸಾಲುಗಳಲ್ಲಿ ಕಟ್ಟಿಕೊಟ್ಟಿರುವುದೇ ಸೋಜಿಗ. ಹೃದಯದ ಭಾವ ತಣಿಯುವಂತೆ, ಮೊದಲ ತೊದಲ ಮಾತು ತುಡಿಯುವಂತೆ, ಎಲ್ಲ ಪದ್ಯಗಳು ಬರೆಯಲ್ಪಟ್ಟಿವೆ. + +ಪದ್ಯಗಳ ಅನಂತತೆ ಎಂಬುದು ಜ್ಞಾನವನ್ನು ಧ್ಯಾನಿಸುವತ್ತ ಸಾಗಿದಂತೆ ಓದುಗರಿಗೆ ಇದು ಮೊದಲ ಕವನಸಂಕಲನವೆಂದು ಎಲ್ಲಿಯೂ ಅನಿಸಲಿಕ್ಕಿಲ್ಲ. + +ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು… ಇಡೀ ಕವನ ಸಂಕಲನವೇ ಸಶಕ್ತವಾಗಿರುವುದರಿಂದ ಆ ಈ ಕವನವಷ್ಟೇ ಚೆನ್ನಾಗಿದೆಯೆಂದು ಎನ್ನಲಾಗುವುದಿಲ್ಲ. ಹಾಗಾಗಿ ವಿಕ್ರಮ ಅವರ ಮುಂದಿನ ಪುಸ್ತಕದ ನಿರೀಕ್ಷೆಯಲ್ಲಿದ್ದೇನೆ. + +ತೇಜ ಎಸ್. ಬಿ. ಚನ್ನಪಟ್ಟಣದವರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೃತೀಯ ಬಿ. ಎ ಐಚ್ಚಿಕ ಕನ್ನಡ ವ್ಯಾಸಂಗ ಮಾಡುತ್ತಿದ್ದಾರೆ. ಓದು-ಬರಹದಲ್ಲಿ ಆಸಕ್ತಿ ಹೊಂದಿದ್ದಾರೆ. \ No newline at end of file diff --git a/Kenda Sampige/article_111.txt b/Kenda Sampige/article_111.txt new file mode 100644 index 0000000000000000000000000000000000000000..6dba708556f8f6623544065148088245378175ad --- /dev/null +++ b/Kenda Sampige/article_111.txt @@ -0,0 +1,51 @@ +ತಾಳೆಗರಿ ಇದು ತಮಿಳು ಕಥನ ಕರುಕ್ಕುವಿನ ಕನ್ನಡ ಅನುವಾದ. ಭಾಮಾ ಅವರು ತಮಿಳಿನಲ್ಲಿ ಬರೆದ ಜೀವನ ಗಾಥೆ. ಇದು ಆಕ್ಸಫರ್ಡ್ ಯೂನಿವರ್ಸಿಟಿ ಪ್ರೆಸ್‌ನವರು ಪ್ರಕಟಿಸಿರುವ ಕರುಕ್ಕುವಿನ ಇಂಗ್ಲೀಷ್‌ ಅನುವಾದದ ಮೂಲಕ ಕನ್ನಡಕ್ಕೆ ಬಂದಿದೆ. ಇಂಗ್ಲಿಷಿಗೆ ಅನುವಾದಿಸಿದವರು ಹೆಸರಾಂತ ತಮಿಳು ಬರಹಗಾರ್ತಿ ಲಕ್ಷ್ಮಿ ಹೋಲ್ ಸ್ಟ್ರಾಮ್. ಕನ್ನಡಕ್ಕೆ ಡಾಕ್ಟರ್ ಎಚ್.ಎಸ್. ಅನುಪಮಾ ಅವರು ಅನುವಾದಿಸಿದ್ದಾರೆ. ಡಾ. ಅನುಪಮಾ ಅವರು ತಮ್ಮ ಕಥನ ಭಾಷೆಯನ್ನು ಬಿಟ್ಟು ಈ ಕೃತಿಗಾಗಿಯೇ ಬೇರೆಯ ನಿರೂಪಣಾ ಭಾಷೆಯನ್ನು ಕಟ್ಟಿಕೊಟ್ಟಿದ್ದನ್ನು ಇದರಲ್ಲಿ ನೋಡುತ್ತೇವೆ. + +ಭಾಮಾರ ಪೂರ್ಣ ಹೆಸರು ಫಾಸ್ಟಿನಾ ಸೊಸೈರಾಜ್ ಅಥವಾ ಫಾಸ್ಟಿನಾ ಮೇರಿ ಫಾತಿಮಾ ರಾಣಿ. ತಮಿಳಿನಲ್ಲಿ ಫಾತಿಮಾ ಪದ ಭಾತಿಮ ಎಂದು ಉಚ್ಚರಿಸಲ್ಪಡುತ್ತದೆ. 1958 ರಲ್ಲಿ ತಮಿಳುನಾಡಿನಲ್ಲಿ ವಿರುದು ನಗರ ಜಿಲ್ಲೆಯ ಪುತುಪಾಟ್ಟಿ ಎಂಬ ಹಳ್ಳಿಯ ರೋಮನ್ ಕ್ಯಾಥೊಲಿಕ್ ಕುಟುಂಬದಲ್ಲಿ ಹುಟ್ಟಿದ ಭಾಮಾ, ಪದವಿ ಪಡೆದು, ಗಣಿತ ಶಿಕ್ಷಕಿಯಾದವರು. ದಲಿತ ಪರಯಾ ಸಮುದಾಯಕ್ಕೆ ಸೇರಿದ ಇವರು ತಮ್ಮ ಅಜ್ಜಿ ಅಜ್ಜನ ತಲೆಮಾರಿನಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರು. ಗಣಿತ ಶಿಕ್ಷಕಿಯಾಗಿ ವೃತ್ತಿಯನ್ನು ಪ್ರಾರಂಭಿಸಿದ ಇವರು ಮುಂದೆ ಸಮುದಾಯದ ಸೇವೆಯತ್ತ ಸೆಳೆಯಲ್ಪಟ್ಟು ಕ್ರೈಸ್ತ ಸನ್ಯಾಸಿನಿಯಾದರು. ಏಳು ವರ್ಷ ಬೇರೆ ಬೇರೆ ಶಾಲೆಯಲ್ಲಿ ಬೋಧಿಸಿ, ಅಲ್ಲಿಯ ವಾತಾವರಣಕ್ಕೆ ವ್ಯವಸ್ಥೆಗೆ ಬೆಸತ್ತು, ಆ ಪಂಥದಿಂದ ಹಾಗೂ ಸನ್ಯಾಸದಿಂದ ಹೊರಬಂದರು. ದಲಿತ ಮಕ್ಕಳಿಗೆ ಶಾಲೆಯನ್ನು ತೆರೆದು, ತಮ್ಮ ಬಾಲ್ಯ ಮತ್ತು ನನ್ನ್ ಆಗಿದ್ದಾಗಿನ ಅನುಭವವನ್ನು ಆತ್ಮಕಥೆಯಾಗಿ ‘ಕರುಕ್ಕು’ ಎಂಬ ಹೆಸರಿನಲ್ಲಿ ಬರೆದಿದ್ದಾರೆ. + +(ಡಾ. ಎಚ್.ಎಸ್. ಅನುಪಮಾ) + +ಈ ಕೃತಿಯನ್ನು ಒಟ್ಟು ಒಂಬತ್ತು ಭಾಗದಲ್ಲಿ ಬರೆಯಲಾಗಿದೆ. ದಲಿತ ಹಾಗೂ ದಲಿತತ್ವದ ಕೃಷಿಯನ್ನು, ಮಹಿಳೆಯಾಗಿ ಅನುಭವಿಸಿದ ಸಂಘರ್ಷದ ಬದುಕಿನ ಅನಾವರಣದ ಕಥೆ ಇದು. ಒಂದನೇ ಭಾಗದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಊರು ಅಂದರೆ ಏನೊ ವಿಶೇಷ ಸೆಳೆತ. ಆ ಊರಲ್ಲಿ ಬೇರೆಯವರಿಗೆ ಏನೂ ವಿಶೇಷ ಇಲ್ಲ ಅಂತ ಅನಿಸಿದರೂ ಕೂಡ ತಮಗೆ ಮಾತ್ರ ಅದರ ಪ್ರತಿಯೊಂದು ಓಣಿ, ಗಲ್ಲಿ, ಹಾದಿ, ನೀರು, ಗಿಡ-ಮರ-ಬಳ್ಳಿ ಬೆಟ್ಟ, ಗುಡ್ಡ ಎಲ್ಲದರಲ್ಲೂ ಒಂದೊಂದು ವಿಶೇಷತೆ ಕಾಣಿಸುತ್ತಿರುತ್ತದೆ. ಅದೇ ರೀತಿಯಾಗಿ ಇಲ್ಲಿ ಭಾಮಾ ಅವರಿಗೂ ತಮ್ಮ ಹಳ್ಳಿಯ ಪ್ರತಿಯೊಂದರಲ್ಲಿಯೂ ವಿಶೇಷ ಸೆಳೆತ ಇದೆ. + +ಮೊದಲ ಭಾಗದಲ್ಲಿಯೇ ಅವರು ಪ್ರತಿಯೊಂದು ಓಣಿಯ ಹೆಸರು, ಅಲ್ಲಿ ವಾಸವಿರುವ ಜಾತಿಯ ಹೆಸರಿನ ಜನ ಮತ್ತು ಅವರ ಕಸುಬಿನ ಬಗ್ಗೆ ಪರಿಚಯಿಸುತ್ತಾರೆ. “ಬಲಕ್ಕೆ ಕೊರವರ ಮನೆ. ಅವರು ಬೀದಿ ಕಸ ತೆಗೆಯುವರು. ಆಮೇಲೆ ಚರ್ಮದ ಕೆಲಸ ಮಾಡೋ ಚಕ್ಕಿಲಿಯಾರರ ಮನೆ, ಸ್ವಲ್ಪ ದೂರದಲ್ಲಿ ಕೂಸವರ ಮನೆ. ಅವರು ಮಣ್ಣಿನ ಮಡಕೆ ಮಾಡೋರು, ಅದರ ಪಕ್ಕದಲ್ಲಿ ಇರೋದು ನಾವಿರೋ ಜಾಗ ಪರಯ್ಯಾಕೇರಿ. ಊರಿನ ಪೂರ್ವ ದಿಕ್ಕಿಗೆ ಸ್ಮಶಾನದ ಜಾಗ. ನಾವು ಅದ್ರ ಪಕ್ಕನೇ ಇರೋರು” + +ಹೀಗೆ ತಮ್ಮ ಊರಿನ ಪ್ರತಿಯೊಂದು ಬೀದಿ, ಅಲ್ಲಿನ ಜನರ ಜಾತಿ, ವೃತ್ತಿಗಳ ಬಗ್ಗೆ ಹೇಳಿದ್ದಾರೆ. ಏನಾದರೂ ಕೆಲಸ ಇದ್ದರೆ ಮಾತ್ರವೇ ಇವರು ಮೇಲು ಜಾತಿಯವರ ಕೇರಿಯ ಕಡೆಗೆ ಹೋಗುತ್ತಿದ್ದರು. ಆದರೆ ಅಪ್ಪಿ ತಪ್ಪಿಯು ಮೇಲ್ಜಾತಿಯ ಜನ ಇವರ ಕೇರಿಗೆ ಬರುತ್ತಿರಲಿಲ್ಲ, ಎನ್ನುವುದನ್ನು ಹೇಳುತ್ತಲೇ ಅದಕ್ಕೆ ಕಾರಣ ಹೇಳುತ್ತಾರೆ. ಪಂಚಾಯಿತಿ ಬೋರ್ಡ್, ಹಾಲಿನ ಡೈರಿ, ಅಂಗಡಿ, ಚರ್ಚ್‌, ಸ್ಕೂಲು, ಪೋಸ್ಟಾಫಿಸು ಎಲ್ಲಾನೂ ಮೇಲ್‌ ಜಾತಿಯವರ ಬೀದಿಲೆ ಇದ್ದದ್ದು. ಈ ತರಹದ ವ್ಯವಸ್ಥೆ ಈಗಲೂ ಸಹ ಪ್ರತಿಯೊಂದು ಹಳ್ಳಿಯಲ್ಲಿ ನಾವು ನೋಡುತ್ತೇವೆ. ವ್ಯವಹಾರಕ್ಕೆ ಸಂಬಂಧಿಸಿದ, ಸರಕಾರಿ ಆಫೀಸುಗಳು ಬಹುತೇಕ ಗ್ರಾಮದಲ್ಲಿ ಇದೇ ರೀತಿಯಾಗಿರುವುದನ್ನು ಕಾಣಬಹುದು. + +ಮೇಲ್ಜಾತಿ ಅವರು ಕೆಳಗೇರಿ ಕಡೆಗೆ ಬರಲು ಯಾವುದೇ ಕಾರಣಗಳು ಇಲ್ಲದ ಹಾಗೆ ಅವರು ವ್ಯವಸ್ಥೆಯನ್ನು ಮಾಡಿಕೊಂಡಿರುವುದನ್ನು ಕಾಣುತ್ತೇವೆ. “ನೀವು ಚಪ್ಪಲಿ ಹೊಲಿಯಕ್ಕೆ ಲಾಯಕ್ ನನ್ಮಕ್ಳಾ” ಎಂದು ಯಾರೇ ಏನೇ ತಪ್ಪು ಮಾಡಿದರೂ ಅವರ ಕಸುಬು ಜಾತಿ ಹಿಡಿದೆ ಅವರನ್ನ ಬೈಯೋದು. ಇತಹ ಪ್ರಸಂಗಗಳು ಈಗಲೂ ಹಳ್ಳಿಗಳಲ್ಲಿ ಪ್ರಸ್ತುತವಾಗಿರುವುದನ್ನು ಕಾಣುತ್ತೇವೆ. ಒಂದನೇ ಭಾಗದಲ್ಲಿ ಭಾಮಾ ಅವರು ವ್ಯಕ್ತಿಯ ಹೆಸರಿನ ಪರ್ಯಾಯ ಅಥವಾ ಅಡ್ಡ ಹೆಸರಿನ ಬಗ್ಗೆಯೂ ಉಲ್ಲೇಖಿಸುತ್ತಾರೆ, ಉದಾಹರಣೆಗೆ ಅಂತ ಹೆಸರಿದ್ರೆ ಮುಂಗೋಪಿ ಅಂತ, ಮತ್ತೆ ಮಿಂಡೇ ಮಸಾಲ, ಮುರುಗನಹಳ್ಳಿ ಹೀಗೆ ಅನೇಕ ಹೆಸರುಗಳಿಗೆ ಅಡ್ಡ ಹೆಸರಿನಿಂದ ಕರೆಯುತ್ತಿರುವುದನ್ನು ಉಲ್ಲೇಖಿಸಿದ್ದಾರೆ. + +ಊರಿಗೊಂದು ಕಥೆ ಇದ್ದಮೇಲೆ ಆ ಊರಿನ ದೇವರಿಗೊಂದು ಕಥೆಯು ಇರುವ ಹಾಗೆ ತಮ್ಮ ಗ್ರಾಮದೇವರ ಕಥೆಯನ್ನ ಈ ಮೊದಲ ಭಾಗದಲ್ಲಿ ಹೇಳಿದ್ದಾರೆ. ಇದರಲ್ಲಿ ಅವರು ವ್ಯವಸ್ಥೆಯ ಕುರಿತು ರೂಪಕವನ್ನು ಕೊಟ್ಟು ಹೇಳಿರುವುದನ್ನು ಕಾಣುತ್ತೇವೆ. ಜೊತೆಗೆ ಅಲ್ಲಿ ನರಿಗಳು ಗದ್ದೆ ತುಂಬಾ ಓಡಾಡುತ್ತಾ ಬೆಳೆಯನೆಲ್ಲ ಹೇಗೆ ನಾಶಪಡಿಸುತ್ತಿದ್ದವು ಎಂಬುದನ್ನು ವಿವರಿಸುತ್ತಾರೆ. ಈ ನರಿಗಳು ಹಳ್ಳಿಯ ಜಾತಿ ವ್ಯವಸ್ಥೆ ಮತ್ತು ಅದರಿಂದಾಗುವ ತೊಡಕುಗಳ ಕುರಿತು ವಿವರಿಸಿರುವುದನ್ನು ಕಾಣುತ್ತೇವೆ. ಒಂದು ಸುಂದರ ಪ್ರಕೃತಿಯ ಗ್ರಾಮ, ಅದರಲ್ಲಿ ಇರುವ ಮಡಿ, ಮೈಲಿಗೆ ಪುಟ್ಟ ಮನಸ್ಸಿನ ಆಳದಲ್ಲಿ ಹೇಗೆ ಉಳಿದಿದೆ ಎನ್ನುವುದನ್ನು ಇಲ್ಲಿ ಚಿತ್ರಿಸಿದ್ದಾರೆ. + +ಭಾಗ ಎರಡರಲ್ಲಿ ಅವರಿಗೆ ಎದುರಾದ ಜಾತಿಯ ಕ್ರೂರ ಮುಖ ದರ್ಶನ. ಅದರ ಬಗ್ಗೆ ತಿಳಿದಾಗ ಮೊದಲ ಬಾರಿಗೆ ಮನಸ್ಸಿನಲ್ಲಿ ಪ್ರತಿರೋಧವನ್ನು ವ್ಯಕ್ತಪಡಿಸುತ್ತಾರೆ. ನಾಯ್ಕಾರ್ಗಳು ಎಂದರೆ ಮೇಲ್ಜಾತಿಯವರು. ಪರಿಹಾರಗಳು ಎಂದರೆ ಕೆಳಜಾತಿಯ ಒಬ್ಬ ಹಿರಿಯ ವ್ಯಕ್ತಿಯ ಕೈಯಿಂದ ತನಗೆ ತಿನ್ನಲು ವಡೆಯನ್ನು ತರಿಸಿದ. ಆ ಹಿರಿಯ ವಡೆ ಕಟ್ಟಿದ ಪೊಟ್ಟಣಕ್ಕೆ ಕಟ್ಟಿದ ದಾರ ಹಿಡಿದುಕೊಂಡು ಬರುತ್ತಿರುವುದನ್ನು, ಭಾಮಾ ಅವರು ಚಿಕ್ಕವರಿದ್ದಾಗ ನೋಡಿ ನಕ್ಕಿದ್ದರು. ಅದನ್ನು ಮನೆಯಲ್ಲಿ ಇದ್ದ ಅಣ್ಣನಿಗೆ ತಿಳಿಸುತ್ತಾರೆ. ಆಗ ಅವರ ಅಣ್ಣ ಆ ಹಿರಿಯ ವ್ಯಕ್ತಿ ಹಾಗೆ ಮಾಡಲು ಕಾರಣ ತಿಳಿಸಿದ ಮೇಲೆ ಅವರಿಗೆ ಪ್ರತಿಯೊಂದು ವಡೆಯನ್ನು ತನ್ನ ಕೈಯಿಂದ ಮುಟ್ಟಿ ಮುಟ್ಟಿ ಬರಬೇಕು ಅಂತ ಅನಿಸಿತ್ತು. ಕೆಳಜಾತಿಯ ಹಿರಿಯರನ್ನ ಗೌರವ ಕೊಡದೆ ಅವರ ಹೆಸರಿನಿಂದ ಕರೆಯುವುದು, ಇವರು ಅವರನ್ನು ಸ್ವಾಮಿ, ಒಡೆಯ ಎಂದು ಸಂಭೊದಿಸುವುದನ್ನು ಕೇಳಿದ ಭಾಮಾ ಅವರಿಗೆ ಚಿಕ್ಕಂದಿನಲ್ಲಿಯೇ ಅದರ ಕುರಿತು ಅಸಮಾಧಾನವಾಗುತ್ತಿದ್ದ ಕುರಿತು ಮುಕ್ತವಾಗಿ ಹೇಳಿದ್ದಾರೆ. + +ತಮ್ಮ ಅಣ್ಣ ಎಂ.ಎ. ಓದಿದ್ದು, ನಾಯಕರ ಒಂದು ದಿನ ಇವರ ಅಣ್ಣ ಕೆರೆಯ ದಂಡೆಯ ಮೇಲೆ ನಡೆದುಕೊಂಡು ಹೋಗುವಾಗ ಇವರ ಅಣ್ಣನಿಗೆ ನಾಯ್ಕರ್ ಕೇರಿಯವನು ‘ನೀನು ಯಾವ ಕೇರಿಯವನು?’ ಎಂದು ನಾಯಕರ ವಿಚಾರಿಸಿದ. ಇವರು ತಾನು “ನಾನ್ ಪರಯ್ಯಾಕೇರಿಯ್ಞಾಂವ, ಏನೀಗ” ಎಂದು ಹೇಳಿ ಅಲ್ಲಿಂದ ಬೇಗ ಬೇಗ ನಡೆದು ಆ ನಾಯ್ಕರ ವ್ಯಕ್ತಿಯನ್ನು ಹಿಂದೆ ಹಾಕಿದ್ದ. ಈ ವಿಷಯವಾಗಿ ಮಾರನೇ ದಿನ ಅವರ ಅಜ್ಜಿಗೆ ಆ ನಾಯ್ಕರ ವ್ಯಕ್ತಿ ಬೈದಿದ್ದು, ಇವರ ಅಜ್ಜಿ ಅವರಿಗೆ ಸಮಾಧಾನ ಮಾಡಿದ್ದನ್ನು ಹೇಳುತ್ತಾರೆ. ಬೀದಿಯಲ್ಲಿ ಅವರಿಗಿಂತಲೂ ಮೊದಲು ನಡೆಯುವ ಸ್ವತಂತ್ರ ದಲಿತರಿಗೆ ಇಲ್ಲಿಯವರೆಗೂ ಇಲ್ಲದೆ ಇರುವುದನ್ನು ಸಹ ಅನೇಕ ಘಟನೆಗಳ ಮೂಲಕ ನಾವು ಪ್ರಸ್ತುತವಾಗಿ ಕಾಣುತ್ತೇವೆ. + +ಇನ್ನೊಂದು ಘಟನೆ; ಭಾಮಾ ಅವರು 8ನೇ ತರಗತಿಯವರೆಗೆ ತಮ್ಮ ಹಳ್ಳಿಯಲ್ಲಿಯೇ ಕಲಿತರು. ನಂತರದ ಶಿಕ್ಷಣಕ್ಕಾಗಿ ಪಕ್ಕದ ಊರಿಗೆ ಹೋಗಿದ್ದರು. ಅಲ್ಲಿಯೆ ಹಾಸ್ಟೆಲಿನಲ್ಲಿ ಇದ್ದು ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಅಲ್ಲಿಯೂ ಅವರು ಅನೇಕ ರೀತಿಯ ಜಾತಿ ನಿಂದನೆಗೆ ಒಳಗಾಗುತ್ತಾರೆ. ಒಂದು ಬಾರಿ ಭಾಮಾ ತಮ್ಮ ಊರಿಗೆ ಹೋಗುವಾಗ ಬಸ್ಸಿನಲ್ಲಿ ಕುಳಿತಿದ್ದರು, ಆಗ ನಾಯಕರ ಹೆಂಗಸು ಇವರ ಪಕ್ಕದಲ್ಲಿ ಕುಳಿತು, ಇವರ ಬಗ್ಗೆ ವಿಚಾರಿಸುತ್ತಾರೆ. ಇವರ ಜಾತಿಯ ಬಗ್ಗೆ ತಿಳಿದ ತಕ್ಷಣವೇ ಅಲ್ಲಿಂದ ಸೀಟು ಬದಲಾಯಿಸುತ್ತಿದ್ದರು. ಇಲ್ಲವೇ ಇವರನ್ನೇ ಬದಲಾಯಿಸಲು ಹೇಳುತ್ತಿದ್ದರು. ಇವರು ಒಪ್ಪದೇ ಇದ್ದಾಗ ಬೇರೆ ಎಲ್ಲೂ ಕೂಡಲು ಸ್ಥಳವಿಲ್ಲದೆ ಇದ್ದರೆ ತಮ್ಮ ಊರು ಬರುವವರೆಗೆ ನಿಂತೆ ಬರುತ್ತಿದ್ದರಾದರೂ ಇವರ ಪಕ್ಕದಲ್ಲಿ ಕೂಡುತ್ತಿರಲಿಲ್ಲ. ಭಾಮಾ ಅವರಿಗೆ ಸೀಟು ಬಿಡದೆ ಇರೋದನ್ನು ಮನೆಯಲ್ಲಿ ಬಂದು ಅಮ್ಮನ ಹತ್ತಿರ ಹೇಳಿದಾಗ, ಅವರು “ಅವು ಕೇಂಡ್ರೆ ನೀನು ಬೇರೆ ಇನ್ಯಾವ್ದೋ ಜಾತಿಯೋಳ್ ಅಂತ ಹೇಳ್, ನಂ ಜಾತಿ ಹೆಸರ್ಯಾಕೆ ಹೇಳುದು?” ಎಂದು ಅವರ ತಾಯಿ ಹೇಳಿದಾಗ ಭಾಮಾ ಇದನ್ನ ವಿರೋಧಿಸುತ್ತಾರೆ. ತಮ್ಮ ಅಸ್ಮಿತೆಯನ್ನ ಅವರು ಬಿಟ್ಟು ಕೊಡುವುದಿಲ್ಲ. ತಮ್ಮ ಜಾತಿ ಬಗ್ಗೆ ಅವರಿಗೆ ಸುಳ್ಳು ಯಾಕೆ ಹೇಳಬೇಕು. ತಾನು ಹಾಗೆ ಮಾಡುವುದಿಲ್ಲ ಎಂದು ಯೋಚಿಸುತ್ತಾರೆ. ಅವರಿಗೆ ಆಗ ಆದ ಅವಮಾನ ಸಣ್ಣದಲ್ಲ ಎನ್ನುವುದು ಅವರ ಅರಿವಿಗೆ ಬಂದಿದ್ದನ್ನು ಕಾಣುತ್ತೇವೆ. + +ನಂತರದ ದಿನಗಳಲ್ಲಿ ಇವರು ಪರೀಕ್ಷೆಯಲ್ಲಿ ದಲಿತ ಹುಡುಗರಲ್ಲಿಯೆ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಳ್ಳುತ್ತಾರೆ. ಆಗ ಊರಲ್ಲಿ ಅವರಿಗೆ ಸನ್ಮಾನಿಸಿ, ಅಭಿನಂದಿಸಿದಾಗ ತಾವು ದಲಿತ ಎಂದು ಕರೆಸಿಕೊಳ್ಳಲು ಹೆಮ್ಮೆಪಟ್ಟಿಕೊಂಡಿದ್ದರು ಭಾಮಾ. ಓದಿ ಮುಂದೆ ಬಂದರೆ ಈ ಜಾತಿ ಅನ್ನೋದು ನಮ್ಮ ಹಿಂದೆ ಬರುವುದಿಲ್ಲ ಅಂತ ಆ ಕ್ಷಣ ಅವರಿಗೆ ಅನ್ನಿಸಿತ್ತು. ಶಿಕ್ಷಣವೇ ನಮ್ಮ ಬಿಡುಗಡೆಗೆ ಮಾರ್ಗ ಎಂದು ಮುಂದೆ ಕಾಲೇಜು ಶಿಕ್ಷಣ ಮುಂದುವರಿಸಿಕೊಂಡರು. ಇನ್ನು ಮುಂದೆ ಈ ಜಾತಿ ಅನ್ನೋದು ಅವರಿಗೆ ಕಾಡುವುದಿಲ್ಲ ಎನ್ನುವ ಅವರ ಕಲ್ಪನೆ ಹುಸಿಯಾಯಿತು. ಒಂದು ದಿನ ಕ್ಲಾಸಿನಲ್ಲಿ ಒಬ್ಬ ಶಿಕ್ಷಕರು ಬಂದು ಹರಿಜನ ವಿದ್ಯಾರ್ಥಿಗಳು ಯಾರ್ಯಾರು ಎದ್ದು ನಿಲ್ಲಿ ಎಂದು ಹೇಳಿದಾಗ ಭಾಮಾ ಮತ್ತೆ ಇನ್ನೊಬ್ಬರು ಮಾತ್ರ ನಿಂತಿದ್ದರು. ಅವರಿಗೆ ವಿಶೇಷ ಕೋಚಿಂಗ್ ಕೊಡುವುದಾಗಿ ಸರ್ಕಾರ ತಮಗೆ ಹೇಳಿದ್ದಾಗಿ ಶಿಕ್ಷಕರು ಹೇಳಿದ್ದರು. ಭಾಮಾ ಆಗ ತಮಗೆ ಅದರ ಅಗತ್ಯವಿಲ್ಲ ಅಂತ ಅಲ್ಲೇ ಪ್ರತಿರೋಧಿಸಿದ್ದನ್ನು ಕೃತಿಯಲ್ಲಿ ಹೇಳುತ್ತಾರೆ. + +ಅವರು ವಿರೋಧಿಸಿದ್ದಕ್ಕೆ ಕಾರಣ ಅಲ್ಲಿದ್ದ ಇತರ ವಿದ್ಯಾರ್ಥಿಗಳ ಮಧ್ಯೆ ಗೊಣಗೊಣ ಮಾತುಕತೆ ಶುರುವಾಗಿದ್ದು. ಈ ಜಾತಿ ಅನ್ನೋದು ಎಲ್ಲಿ ಹೋದರೂ ತಮ್ಮನ್ನು ಬಿಡುವುದಿಲ್ಲ ಅಂತ ಅವರಿಗೆ ಆ ಕ್ಷಣ ಅನ್ನಿಸಿತ್ತು. ಮತ್ತೊಮ್ಮೆ ಊರಿಗೆ ಹೋಗಬೇಕಾಗಿ ಬಂದಾಗ “ನನ್ನ ತಮ್ಮ ಮತ್ತು ತಂಗಿಯ ಮೊದಲನೇ ಶಾಸ್ತ್ರ, ಫಸ್ಟ್ ಕಮೀನಿಯನ್” ಇತ್ತು ಅದು ರಜೆ ದಿನವಾದ ಶನಿವಾರ ಮತ್ತು ಭಾನುವಾರ ಇದ್ದದ್ದು. ಆದರೆ ವಾರ್ಡನ್ ಮತ್ತು ಪ್ರಿನ್ಸಿಪಾಲರು ಇದಕ್ಕೆ ಒಪ್ಪಿಗೆ ಕೊಡಲು ನಿರಾಕರಿಸಿದರು. ಅವರು ನಿರಾಕರಿಸಲು ಕಾರಣ ಇದೇನು, ಅಷ್ಟು ದೊಡ್ಡ ಹಬ್ಬ ಅಲ್ಲ. ನಿಮ್ಮ ಜಾತಿಯಲ್ಲಿ ಏನು ಅಷ್ಟು ವಿಜೃಂಭಣೆ ಇರುವುದಿಲ್ಲ ಅಂತ ನಿರಾಕರಿಸಿದ್ದರು. ಆದರೆ ಇತರ ಮೇಲ್ಜಾತಿಯ ಹುಡುಗರಿಗೆ ರಜೆಯನ್ನು ಕೊಟ್ಟಿದ್ದರು. ಇದನ್ನು ಕಂಡು ಭಾಮಾ ಪ್ರಶ್ನೆಗಳನ್ನ ಕೇಳುವುದರ ಮುಖಾಂತರ ತಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಿದ್ದರು. ಇದನ್ನು ದಲಿತತ್ವದ ನೆಲೆಯಾಗಿ ನಾವು ನೋಡುತ್ತೇವೆ. ಎಲ್ಲರೂ ಸಮಾನರು ಎಲ್ಲರಿಗೂ ಒಂದೇ ನಿಯಮ ಇರುತ್ತದೆ. ಅವರಿಗೊಂದು ನಿಯಮ ನಮಗೊಂದು ನಿಯಮ ಅಂತ ಇರುವುದಿಲ್ಲ. ಎಂದು ಹೇಳಿ ವಾದ ಮಾಡಿ ಕೊನೆಗೆ ರಜೆ ತೆಗೆದುಕೊಂಡು ಮನೆಗೆ ಹೋಗುತ್ತಾರೆ. + + + +ಹೀಗೆ ಭಾಮಾ ಅವರು ತಮ್ಮ ಶಿಕ್ಷಣದ ಬಲದಿಂದ ಜಾತಿ ತಾರತಮ್ಯವನ್ನು ಮುರಿದು, ಅದರ ಬಗ್ಗೆ ಮಾತನಾಡುವ ಜನರ ಮಧ್ಯೆ ತಾವು ಹೊಸ ಬದುಕನ್ನು ಕಟ್ಟಿಕೊಂಡರು. ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಮುಂದೆ ಸನ್ಯಾಸಿನಿ ಆಗಬೇಕು ಅದರಿಂದ ತಮ್ಮ ಜನರಿಗೆ ಹೆಚ್ಚು ಸೇವೆ ಮಾಡಲು ಅವಕಾಶ ದೊರೆಯುತ್ತದೆ ಎಂದು ತಿಳಿದು ಮನೆಯವರ ವಿರೋಧದ ಮಧ್ಯೆ ನನ್ ತರಬೇತಿ ಮುಗಿಸುತ್ತಾರೆ. ಆದರೆ ತಮ್ಮ ಜಾತಿಯ ಕಪ್ಪು ನೆರಳು ಅವರ ಬೆನ್ನು ಬಿಡದೆ ಅಲ್ಲಿಯೂ ಈ ಪಂತದಲ್ಲಿ ಹರಿಜನ ನನ್ ಗಳಿಗೆ ಅಂತ ಒಳ್ಳೆ ಭವಿಷ್ಯ ಇಲ್ಲ ಅಂತೋರಿಗಂತಾನೆ ಬೇರೆ ಒಂದು ಪಂಥ ಇದೆ… ಎಂದು ಹೇಳಿದ್ದನ್ನು ಕೇಳಿದವರಿಗೆ ನಿರಾಸೆ ಆಗುತ್ತದೆ. + +ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ದಲಿತರಾಗಿ  ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ. ತಮ್ಮಒಳಗೆ ನಡೆಯುವ ಜಾತಿ ನಿಂದನೆಗಳ ಕುರಿತು ತಮ್ಮ ಆತ್ಮಕಥೆಯಲ್ಲಿ ಒಂದೊಂದಾಗಿ ಬಿಚ್ಚಿಡುತ್ತಾರೆ. ಇವರ ಆತ್ಮಕಥೆಯು ಒಂದೇ ಕ್ರಮದಲ್ಲಿ ಸಾಗುವುದಿಲ್ಲ. ಮೊದಲ ಭಾಗದಲ್ಲಿ ಹಳ್ಳಿಯ ಚಿತ್ರಣವನ್ನು, ಜಾತಿಯ ಕ್ರೌರ್ಯದ ಬಗ್ಗೆ ಹೇಳುತ್ತಾರೆ. ಅದರ ಮುಂದುವರಿದು ಎರಡನೇ ಭಾಗದಲ್ಲಿ ಅವರ ಬಾಲ್ಯ, ಶಿಕ್ಷಣ ಕುರಿತು ಮಾತನಾಡುತ್ತಾರೆ. ನಂತರ ಸಂಪೂರ್ಣ ಶಿಕ್ಷಣದ ಬಗ್ಗೆ ಹೇಳಿ ಅವರ ಶಿಕ್ಷಕಿ ವೃತ್ತಿಯ ಬಗ್ಗೆ ಮಾತನಾಡುತ್ತಾರೆ. ಆಗ ಅವರ ಮನಸ್ಸಿನಲ್ಲಿ ಆದ ತಲ್ಲಣದ ಕುರಿತು ಹೇಳುತ್ತಾ ಮುಂದೆ ನನ್ ಆಗಿ ಬದಲಾದ ಅವರ ಜೀವನದ ಕುರಿತು ಹೇಳುತ್ತಾರೆ. + +ಜಾತಿ ತಾರತಮದಲ್ಲಿ ಯಾವ ಬದಲಾವಣೆಯು ಕಾಣದೆ ಜಾತಿ ಪದ್ಧತಿಯ ವಿರುದ್ಧ ಮಾತನಾಡುತ್ತಾರೆ. ಸಮ ಸಮಾಜ ಕಟ್ಟುವ ಹೊಸ ಕನಸನ್ನು ಕಾಣುತ್ತಾರೆ. ಆದರೆ ಮೂರನೇ ಭಾಗದಲ್ಲಿ ಮತ್ತೆ ಬಾಲ್ಯದಲ್ಲಿ ನಡೆದ ಕೆಲವು ಘಟನೆಗಳ ಕುರಿತು ಮಾತನಾಡುತ್ತಾರೆ. ನಾಲ್ಕನೇ ಭಾಗದಲ್ಲಿ ಅವರ ಬಾಲ್ಯದಲ್ಲಿ ನಡೆದ ಶೇಂಗಾ ಒಡೆಯುವ ಪ್ರಸಂಗದ ಕುರಿತು ಹೇಳುತ್ತಾರೆ. ಇದೇ ತರಹದ ಪ್ರಸಂಗವು ಸಮತಾ ದೇಶಮಾನೆ ಅವರ ಆತ್ಮಕಥೆ ‘ಮಾತಂಗಿ ದಿವಟಿಗೆ’ ಯಲ್ಲಿಯೂ ದಾಖಲಾಗಿದೆ. ಇದು ಕನ್ನಡದಲ್ಲಿ ಬಂದ ಪ್ರಥಮ ಮಹಿಳಾ ದಲಿತ ಆತ್ಮಕಥೆ. ಈ ಎರಡೂ ಕೃತಿಗಳಲ್ಲಿ ದಲಿತರ ಬದುಕು, ಪ್ರದೇಶ, ದೇಶ ಎಲ್ಲದರಲ್ಲಿಯೂ ಅವರ ಶೋಷಣೆ ಅಥವಾ ಬದುಕು ಹೆಚ್ಚು ಕಡಿಮೆ ಒಂದೇ ರೀತಿಯಾಗಿರುವುದನ್ನು ಕಾಣುತ್ತೇವೆ. + +ದಲಿತರು ಬೇರೆ ಧರ್ಮಕ್ಕೆ ಮತಾಂತರ ಹೊಂದಿದರು ಕೂಡ ಅವರಿಗೆ ಅಲ್ಲಿಯೂ ಜಾತಿಯ ಹೆಸರಿನಲ್ಲಿ ಅನ್ಯಾಯ ಆಗುತ್ತದೆ, ಎನ್ನುವುದನ್ನು ಭಾಮಾ ಅವರು ಹೇಳಿದ್ದಾರೆ. ಕ್ರಿಶ್ಚಿಯನರಲ್ಲಿಯೂ ಮೇಲು-ಕೀಳು ಇದೆ. ಮತಾಂತರ ಹೊಂದಿದವರ ಪರಿಸ್ಥಿತಿ ಏನು ಎಂಬುದನ್ನು ತಮ್ಮ ಆತ್ಮಕಥೆಯಲ್ಲಿ ಎಳೆ ಎಳೆಯಾಗಿ ಒಂದೊಂದೇ ಪ್ರಸಂಗವನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಮೇಲ್ಜಾತಿಯ ಕ್ರಿಶ್ಚಿಯನ್ನರಷ್ಟೇ ಚರ್ಚಿನ ಎಲ್ಲಾ ಸವಲತ್ತು, ಸೌಭಾಗ್ಯ ಪಡೆದುಕೊಳ್ಳುತ್ತಿರುವುದರ ಕುರಿತು ಹೇಳುತ್ತಾರೆ. ಪಾದ್ರಿ ನನ್‌ಗಳ ವಿಷಯದಲ್ಲಿ ಮೇಲ ಜಾತಿಯವರೇ ಆಯಕಟ್ಟಿನ ಸ್ಥಾನದಲ್ಲಿ ಕೊಡುತ್ತಿದ್ದರು. ದಲಿತರು ಪಾದ್ರಿ ಅಥವಾ ನನ್‌ ಆಗಿದ್ದರೆ ಅವರನ್ನು ಬೇರೆಯವರು ಮೂಲೆಗುಂಪು ಮಾಡಿ ಬಿಡುತ್ತಿದ್ದರು. + +ಪ್ರತಿಯೊಬ್ಬರೂ ಚಿಕ್ಕವರಿದ್ದಾಗ ಕುತೂಹಲಕ್ಕೆ ದೇವರನ್ನ ಪರೀಕ್ಷೆ ಮಾಡಿ ಇರುತ್ತೇವೆ. ಹಾಗೆಯೇ ಭಾಮಾರು ಚರ್ಚಿನಲ್ಲಿ ಕೊಡುವ ಪ್ರಸಾದವನ್ನು ಕೈಯಿಂದ ಮುಟ್ಟಬಾರದು ಎಂದು ನನ್‌ಗಳು ಹೇಳಿದ್ದನ್ನು ಮೀರಿ ಅದನ್ನು ಮುಟ್ಟಿದ್ದು, ನಂತರ ಅವರು ಹೇಳಿದ ಹಾಗೆ ತನಗೆ ಏನೂ ಹಾನಿ ಆಗದೆ ಇರುವುದನ್ನು ಕಂಡು ನನ್‌ಗಳು ಹೇಳಿದು ಸುಳ್ಳು ಎಂದು ಅರಿತಿರುವುದನ್ನು ಇಲ್ಲಿ ಹೇಳಿದ್ದಾರೆ. ತಾವು ನನ್ ಆದಾಗ ಅಲ್ಲಿರುವ ಎರಡು ದೇವರನ್ನ ಅವರು ಕಂಡುಕೊಳ್ಳುತ್ತಾರೆ. ಒಂದು ಶ್ರೀಮಂತರ ದೇವರು. ಮತ್ತೊಂದು ಬಡವರ ದೇವರು. ಶ್ರಿಮಂತರು ತಮ್ಮ ದೇವರನ್ನು ಶ್ರೀಮಂತವಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿಯಾಗಲಿ ಪ್ರೀತಿ ಆಗಲಿ ಇಲ್ಲ ಎನ್ನುವುದನ್ನು ಅರಿತ ಭಾಮಾರಿಗೆ ಚಿಕ್ಕ ವಯಸ್ಸಿನಲ್ಲಿ ಇದ್ದ ಭಕ್ತಿ ಕ್ರಮೇಣ ಕಡಿಮೆಯಾಗಿ ಎಲ್ಲವನ್ನ ಪ್ರಶ್ನಿಸುತ್ತಾ ಬರುತ್ತಾರೆ. + +(ಲಕ್ಷ್ಮಿ ಹೋಲ್‌ಸ್ಟ್ರಾಮ್‌) + +ಅವರು ಪಂಥದಿಂದ ಹೊರಬಂದ ಮೇಲೆ ಇತರ ನನ್‌ಗಳ ನಡೆ-ನುಡಿ ನಡವಳಿಕೆಯನ್ನು ಕಂಡು ಭಾಮಾರಿಗೆ ಸಿಟ್ಟು ಬರುತ್ತದೆ. ಶ್ರೀಮಂತ ನನ್‌ಗಳ ಭಕ್ತಿಯಲ್ಲಿ ಮಾನವೀಯತೆ ಅನ್ನೋದು ಇಲ್ಲ. ಅವರ ಮಾತುಗಳು ಕೇವಲ ಕಪಟತನದಿಂದ ಕೂಡಿದವು ಎನ್ನುವುದು ಅವರ ಅರಿವಿಗೆ ಬರುತ್ತದೆ. ಬಡವರ ಬಗ್ಗೆ ಅವರ ಕಷ್ಟದ ಬಗ್ಗೆ ಅವರು ಯಾವತ್ತೂ ಯೋಚಿಸದೆ ಇರುವ ಶ್ರೀಮಂತ ನನ್‌ಗಳ ಬಗ್ಗೆ ಭಾಮಾ ತಮ್ಮ ಸಿಟ್ಟನ್ನು ವ್ಯಕ್ತಪಡಿಸುತ್ತಾರೆ. ಕಾನ್ವೆಂಟ್‌ಗಳ ಏಳಿಗೆಗೆ ಬಡವರ ಮಕ್ಕಳೆ ಮೆಟ್ಟಿಲಾಗಿದ್ದನ್ನು, ಹೇಳುತ್ತಾ ತಮ್ಮ ಅಸಹಾಯಕತೆಯ ಕುರಿತು ನಿರಾಶರಾಗಿ ಅಲ್ಲಿಂದ ಹೊರ ಬರುತ್ತಾರೆ. ಪ್ರೀತಿ, ಶಾಂತಿ, ಕರುಣೆ ಸೌಮ್ಯತೆಯ ಮುಖವಾಡದ ಹಿಂದೆ ಇರುವ ಕ್ರೂರವಾದ ಮುಖವಾಡವನ್ನು ಭಾಮಾ ಅವರು ಇಲ್ಲಿ ತೆಗೆದು ತೋರಿಸಿದ್ದಾರೆ. + +ಜನರಲ್ಲಿ ತಾವು ಮುಗ್ಧರು, ಪ್ರೀತಿಯ ಸಾಗರ ಅವರಲ್ಲಿದೆ. ಅನ್ಯಾಯಕ್ಕೆ ಒಳಗಾದ ಜನರಿಗೆ ತಮ್ಮಲ್ಲಿ ನ್ಯಾಯ ಮತ್ತು ಸಮಾನವಾದ ಬದುಕು ಕೊಡುತ್ತೇವೆ ಎಂದು ಸುಳ್ಳು ಭರವಸೆಯನ್ನು ಕೊಟ್ಟು. ಸಮಾಜ ಸೇವೆಯ ಹೆಸರಿನಲ್ಲಿ ಆಡಂಬರದ ಬದುಕು ತಮ್ಮದಾಗಿಸಿಕೊಳ್ಳುವ ನನ್‍ಗಳ ಮುಖವಾಡ ಬಿಚ್ಚಿಡುತಾರೆ. ಮುಗ್ಧ ಜನರನ್ನು ಆಮಿಷಕ್ಕೆ ಬಲಿ ಮಾಡಿ ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡು ಬದುಕಲು, ಮುಗ್ಧ ಮಹಿಳೆಯರಿಗೆ ಪ್ರೇರೇಪಿಸುತ್ತಿದ್ದುದನ್ನು ಈ ಆತ್ಮ ಕಥೆಯಲ್ಲಿ ಬಿಚ್ಚಿಡುತ್ತಾ ಹೋಗುತ್ತಾರೆ. + +ಆ ಕಾಲದಲ್ಲಿ ದಲಿತ ಮಹಿಳೆ ನನ್ ಆಗಿ ಮತ್ತೆ ಅದರಿಂದ ಹೊರ ಬಂದು ಹೊಸ ಬದುಕನ್ನು ಕಟ್ಟಿಕೊಳ್ಳುವುದು ನಿಜಕ್ಕೂ ದೊಡ್ಡ ಸಾಧನೆ ಸರಿ. ಒಂದು ವ್ಯವಸ್ಥೆಯ ಒಳಗಿನ ಎಲ್ಲಾ ನ್ಯೂನ್ಯತೆ, ಅನ್ಯಾಯ, ಅವರ ಕ್ರೌರ್ಯವನ್ನು ಬಿಚ್ಚಿಡುವುದು ನಿಜಕ್ಕೂ ಸಣ್ಣ ಮಾತಲ್ಲ. ಅಂತಹ ಸಾಹಸದ ಕೆಲಸವನ್ನು ಮಾಡಿದ ಭಾಮಾ ಅವರು ಪ್ರತಿಯೊಬ್ಬ ದಲಿತ ಮಹಿಳೆಯರಿಗೆ ಸ್ಪೂರ್ತಿ ಈ ಆತ್ಮಕಥೆ. ಆತ್ಮಕಥೆಯು ಮೊದಲ ಒಂದೆರಡು ಭಾಗಗಳು ಓದುವಾಗ ಬರಿ ದಿನಚರಿಯ ಹಾಗೆ ಓದುಗರು ಆಸಕ್ತಿಯನ್ನು ಕಳೆದುಕೊಂಡರು, ಸಹ ಅದನ್ನು ಓದುತ್ತಾ ಹೋದ ಹಾಗೆ ಕುತೂಹಲ ಕೆರಳಿಸುತ್ತದೆ. + + + +ಓದುವ ಪ್ರಾರಂಭದಲ್ಲಿದ್ದ ಅಭಿಪ್ರಾಯ ಓದಿದ ಮೇಲೆ ಸಂಪೂರ್ಣವಾಗಿ ಬದಲಾಗುತ್ತದೆ. ಈ ಆತ್ಮಕಥೆಯು ಪ್ರಾರಂಭವಾಗುವುದು ಅಸ್ಪೃಶ್ಯತೆಯಿಂದ. ಮಧ್ಯದಲ್ಲಿ ವರ್ಗವೇ ಮುಖ್ಯ ಅಂತ ಅನಿಸಿದರೂ ಕೊನೆಗೆ ಬಂದು ನಿಲ್ಲೋದು ದಲಿತತ್ವದಲ್ಲಿ. ಇಡೀ ಆತ್ಮಕಥೆಯ ಪ್ರಾರಂಭದಿಂದ ಕೊನೆಯವರೆಗೂ ದಲಿತತ್ವದ ನೆಲೆಗಳು ಕಾಣಿಸಿಕೊಳ್ಳುತ್ತವೆ. ನಿಜಕ್ಕೂ ದಲಿತರ ಬದುಕು ತಾಳೆಗರಿಗಳ ಹಾಗೆ ಎರಡು ಕಡೆಯಿಂದ ಗರಗಸದ ಹಾಗೆ ಕೊಯ್ಯುತ್ತಲೇ ಇರುತ್ತದೆ. ಹಾಗಾಗಿ ಭಾಮಾ ಅವರು ಈ ಕೃತಿಗೆ “ತಾಳೆಗರಿ” ಅಂತ ಹೆಸರು ಕೊಟ್ಟಿದ್ದು ತುಂಬಾ ಸಂಮಜಸವಾಗಿದೆ. + +ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಕಲ್ಬುರ್ಗಿಯವರು. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲ್ಬುರ್ಗಿಯಲ್ಲಿ ಕನ್ನಡ ವಿಭಾಗದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದಾರೆ. \ No newline at end of file diff --git a/Kenda Sampige/article_112.txt b/Kenda Sampige/article_112.txt new file mode 100644 index 0000000000000000000000000000000000000000..b7f73cbf33740cf1d39f870a92ca5f86e699d2b2 --- /dev/null +++ b/Kenda Sampige/article_112.txt @@ -0,0 +1,35 @@ +byಸಂಜೋತಾ ಪುರೋಹಿತ|Apr 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ.ರಾಜಲಕ್ಷ್ಮಿ ಎನ್.‌ ರಾವ್‌ ಅವರ “ಸಂಗಮ” ಕಥಾಸಂಕಲನದ ಕುರಿತು ಸಂಜೋತಾ ಪುರೋಹಿತ್‌ ಬರಹ + +byಕೆಂಡಸಂಪಿಗೆ|Apr 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ.ಕೆ. ಸತ್ಯನಾರಾಯಣ ಪ್ರವಾಸ ಕಥನ “ಅಮೆರಿಕದಲ್ಲಿ ಬಸವನಗುಡಿ”ಯ ಒಂದು ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Apr 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ.ಚಾಂದಿನಿ ಖಲೀದ್‌ ಕವನ ಸಂಕಲನ “ಸೂಜಿಮೊಗದ ಸುಂದರಿ”ಕ್ಕೆ ಜಯಂತ ಕಾಯ್ಕಿಣಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Apr 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ.ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ”ಕ್ಕೆ ಎಂ. ಜಿ. ಹೆಗಡೆ ಬರೆದ ಮುನ್ನುಡಿ + +byಕೆ. ಎನ್. ಲಾವಣ್ಯ ಪ್ರಭಾ|Apr 12, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ.ಡಾ. ಪ್ರಸನ್ನ ಸಂತೇಕಡೂರು ಕಾದಂಬರಿ “ಸು” ಕುರಿತು ಕೆ.ಎನ್. ಲಾವಣ್ಯ ಪ್ರಭಾ ಬರಹ + +byಸಂಗೀತ ರವಿರಾಜ್‌ ಚೆಂಬು|Apr 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ”ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ + +byಮಮತಾ ಆರ್.|Apr 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ.ಇಂದ್ರಕುಮಾರ್ ಎಚ್.ಬಿ. ಯವರ “ಎತ್ತರ” ಕಾದಂಬರಿಯ ಕುರಿತು ಮಮತಾ ಆರ್. ಬರಹ + +byಪ.ನಾ.ಹಳ್ಳಿ ಹರೀಶ್ ಕುಮಾರ್|Apr 5, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು.ಪ್ರೊ. ಕಟಾವೀರನಹಳ್ಳಿ ನಾಗರಾಜು ಬರೆದ ಕಾದಂಬರಿ “ಪುಟ್ಟಮ್ಮಯ್ಯ” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಸದಾನಂದ ನಾರಾವಿ|Mar 29, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ.ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಕೃತಿಯ ಕುರಿತು ಸದಾನಂದ ನಾರಾವಿ ಬರಹ \ No newline at end of file diff --git a/Kenda Sampige/article_113.txt b/Kenda Sampige/article_113.txt new file mode 100644 index 0000000000000000000000000000000000000000..b46e71bd1f01d9938818538699bfd175452d75e1 --- /dev/null +++ b/Kenda Sampige/article_113.txt @@ -0,0 +1,35 @@ +byಸಂಗೀತ ರವಿರಾಜ್‌ ಚೆಂಬು|Mar 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ.ಕೆ. ಎನ್. ಲಾವಣ್ಯಪ್ರಭ ಕವನ ಸಂಕಲನ “ಸ್ಪರ್ಶ ಶಿಲೆ”ಯ ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ + +byದಯಾನಂದ ಸಾಲ್ಯಾನ್|Mar 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ.ಡಾ. ಕೆ. ರಘುನಾಥ್‌ ಬರೆದ ‘ಮುಂಬಯಿ ಕನ್ನಡ ಲೋಕʼ ಕೃತಿಯ ಕುರಿತು ದಯಾನಂದ ಸಾಲ್ಯಾನ್‌ ಬರಹ + +byಕೆಂಡಸಂಪಿಗೆ|Mar 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ..ಆಶಾ ರಘು ಹೊಸ ಕಾದಂಬರಿ “ಚಿತ್ತರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ‌ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು.ನಗೋಲತೆ ಬರೆದ “ಬೆದ್ಲು ಬದ್ಕು” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ.ಕ್ಷಮಾ ವಿ. ಭಾನುಪ್ರಕಾಶ್‌ ಬರೆದ ವಿಜ್ಞಾನ ಲೇಖನಗಳ ಸಂಕಲನ “ಜೀವಿವಿಜ್ಞಾನ”ದಿಂದ ಆಯ್ದ ಲೇಖನ ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ.ಇಂದ್ರಕುಮಾರ್ ಎಚ್.ಬಿ. ಹೊಸ ಕಾದಂಬರಿ “ಎತ್ತರ”ದ ಕೆಲ ಪುಟಗಳು ನಿಮ್ಮ ಓದಿಗೆ + +byಪ.ನಾ.ಹಳ್ಳಿ ಹರೀಶ್ ಕುಮಾರ್|Mar 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ.ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ “ನೋಟ್‌ಬುಕ್‌” ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಕೆಂಡಸಂಪಿಗೆ|Mar 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ.ನವೀನ ಗಂಗೋತ್ರಿ ಕಥಾಸಂಕಲನ “ಕಥಾಗತ”ಕ್ಕೆ ಸದ್ಯೋಜಾತ ಭಟ್ಟ ಬರೆದ ಮುನ್ನುಡಿ + +byಕೆಂಡಸಂಪಿಗೆ|Mar 8, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ.ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಡಾ. ಎಚ್.ಎಸ್. ಅನುಪಮಾ ಅವರ “ಬೆಳಗಿನೊಳಗು ಮಹಾದೇವಿಯಕ್ಕ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_114.txt b/Kenda Sampige/article_114.txt new file mode 100644 index 0000000000000000000000000000000000000000..83987ab92b078781bebfbd0051dd7d9d9041a0f0 --- /dev/null +++ b/Kenda Sampige/article_114.txt @@ -0,0 +1,19 @@ +ಮಾತೃಭಾಷೆಯಲ್ಲಿ ಶಿಕ್ಷಣ ದೊರೆತಾಗಲೇ ಮಗು ಅದನ್ನು ಸುಲಭವಾಗಿ ಗ್ರಹಿಸಿಕೊಳ್ಳಬಹುದು. ಅದಕ್ಕಾಗಿ ಪ್ರಾಥಮಿಕ ಶಿಕ್ಷಣವಾದರೂ ಮಾತೃಭಾಷೆಯಲ್ಲಿಯೇ ಸಿಗಬೇಕೆಂಬುದು ಎಲ್ಲ ಶಿಕ್ಷಣ ತಜ್ಞರು ಮತ್ತು ಮನೋವಿಜ್ಞಾನಿಗಳು ಹೇಳುವ ಮಾತು. ಹೊಸ ಶಿಕ್ಷಣ ನೀತಿಯಲ್ಲಿ ಕೂಡಾ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಮಹಾತ್ಮಾ ಗಾಂಧೀಜಿಯವರು ಕೂಡಾ ಮಾತೃಭಾಷೆಯ ಶಿಕ್ಷಣವೇ ಹೆಚ್ಚು ಪರಿಣಾಮಕಾರಿ ಎಂಬುದನ್ನು ಒತ್ತಿ ಹೇಳಿದ್ದಾರೆ. ಆದರೆ ದುರ್ದೈವದ ಸಂಗತಿಯೆಂದರೆ ಇಂಗ್ಲೀಷಿನ ವ್ಯಾಮೋಹದಿಂದಾಗಿ ಇಂದು ಕನ್ನಡದ ಬಗ್ಗೆ ಕೀಳರಿಮೆ ಬೆಳೆಯುತ್ತಿದೆ. ಸರಕಾರ ಕೂಡಾ ಒಂದೆಡೆಯಿಂದ ಕನ್ನಡದ ಉದ್ಧಾರದ ಮಾತುಗಳನ್ನಾಡುತ್ತಿದ್ದಂತೆ ಇನ್ನೊಂದು ಕಡೆಯಿಂದ ಆಂಗ್ಲಮಾಧ್ಯಮ ಶಾಲೆಗಳನ್ನು ಪ್ರೋತ್ಸಾಹಿಸುತ್ತಾ ಕನ್ನಡ ಶಾಲೆಗಳನ್ನು ಮುಚ್ಚುವಲ್ಲಿ ಪರೋಕ್ಷವಾಗಿ ಸಹಕರಿಸುತ್ತಿದೆ. + +(ಅಕ್ಷತಾ ಕೃಷ್ಣಮೂರ್ತಿ) + +ಇಂತಹ ದಿನಮಾನದಲ್ಲಿ ದಟ್ಟ ಕಾನನದ ಮಧ್ಯೆ ಇರುವ ಪುಟ್ಟ ಗ್ರಾಮದ ಸರಕಾರಿ ಶಾಲೆಯೊಂದರ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀಮತಿ ಅಕ್ಷತಾ ಕೃಷ್ಣಮೂರ್ತಿಯವರು ತನ್ನ ಶಾಲೆ ಮತ್ತು ಮಕ್ಕಳ ಕತೆಯನ್ನು ಹೇಳುವುದರ ಜೊತೆಗೆ ಆ ಪ್ರದೇಶದ ಪ್ರಕೃತಿಯ ಮನೋಹರ ನೋಟವನ್ನೂ, ಅಲ್ಲಿನ ಜನಜೀವನವನ್ನೂ ನಮ್ಮ ಕಣ್ಣಿಗೆ ಕಟ್ಟುವಂತೆ ತಮ್ಮ ‘ಇಸ್ಕೂಲು’ ಕೃತಿಯಲ್ಲಿ ಸೊಗಸಾಗಿ ಓದುಗರ ಮುಂದಿಟ್ಟಿದ್ದಾರೆ. ಉತ್ತಮ ಶಿಕ್ಷಕಿಯಾಗಿ, ಶಾಲಾ ಮಕ್ಕಳಿಗೆ ಮಾತೆಯಾಗಿ, ಆ ಊರಿನವರಿಗೆ ಮಗಳಾಗಿ ತನ್ನ ಜೀವನಾನುಭವಗಳನ್ನು “ತುಷಾರ” ಮಾಸಪತ್ರಿಕೆಯಲ್ಲಿ ಅಂಕಣ ಬರಹವಾಗಿ ನೀಡುತ್ತಾ ಬಂದಿದ್ದು ಈಗ ಅದು ಕೃತಿ ರೂಪದಲ್ಲಿ ನಮ್ಮ ಮುಂದಿದೆ. ಶಿಕ್ಷಕಿಯಾಗಿ, ಲೇಖಕಿಯಾಗಿ ಅವರ ಗಾಢ ಅನುಭವಗಳು ಇಲ್ಲಿ ರಸವತ್ತಾಗಿ ಮೂಡಿಬಂದಿವೆ. ಶಾಲೆ ಅನ್ನುವುದು ಇಲ್ಲಿ ಪಠ್ಯದ ಬೋಧನೆಗಷ್ಟೇ ಸೀಮಿತವಾಗಿಲ್ಲ. ಇಲ್ಲಿ ಸರಕಾರ ನಿಗದಿಪಡಿಸಿದ ಸಿದ್ಧ ಮಾದರಿಗಳನ್ನಷ್ಟೇ ಮಕ್ಕಳಿಗೆ ಬೋಧಿಸದೆ ಮಕ್ಕಳ ಕಲಿಕೆಗೆ, ಮನೋವಿಕಾಸಕ್ಕೆ ಪೂರಕವಾದ ಅನೇಕ ಚಟುವಟಿಕೆಗಳನ್ನು ಪ್ರಯೋಗಿಸಿರುವುದನ್ನು ಗಮನಿಸಬಹುದಾಗಿದೆ. ಇಲ್ಲಿ ಮಕ್ಕಳೊಂದಿಗಿನ ರಸಮಯ ಕ್ಷಣಗಳೊಂದಿಗೆ, ರೋಚಕ ಘಟನೆಗಳು, ಆತಂಕದ ಗಳಿಗೆಗಳು, ಹೃದಯ ಮೀಟುವ ಭಾವಪೂರ್ಣ ಸಂಗತಿಗಳೆಲ್ಲವೂ ಹೃದ್ಯವಾಗಿ ದಾಖಲಾಗಿವೆ. + +ಸರಕಾರದ ನೀತಿಯಿಂದಾಗಿ ಒಂದೊಂದೇ ಕನ್ನಡ ಶಾಲೆಗಳು ಜೀವ ಕಳೆದುಕೊಳ್ಳುತ್ತಿದ್ದು ಇರುವ ಕನ್ನಡ ಶಾಲೆಗಳನ್ನು ಉಳಿಸುವುದೇ ಇಂದು ಸವಾಲಿನ ಕಾರ್ಯವಾಗಿದೆ. ವೈಭವದಿಂದ ಮೆರೆದು ನಾಡಿಗೆ ನೂರಾರು ಸಾಧಕರನ್ನು ನೀಡಿದ ಕನ್ನಡ ಶಾಲೆಗಳ ದುಃಸ್ಥಿತಿ ಕಂಡು ಕಣ್ಣೀರು ಹರಿಸಿದ ಶಿಕ್ಷಕರನ್ನು ಕಂಡು ನಾನು ಕೂಡಾ ಮರುಗಿದ್ದೇನೆ. ಶತಮಾನ ಕಂಡ ಅನೇಕ ಶಾಲೆಗಳೂ ಇಂದು ಮುಚ್ಚಿ ಹೋಗಿರುವುದು ಕನ್ನಡದ ಪಾಲಿಗೆ ದುರಂತವೇ ಸರಿ. ಆಂಗ್ಲರ ದಾಸ್ಯದಿಂದ ಮುಕ್ತರಾಗಿ ನಾವು ಸ್ವಾತಂತ್ರವನ್ನೇನೋ ಗಳಿಸಿದ್ದೇವೆ. ಆದರೆ ಇನ್ನೂ ನಾವು ಭಾಷೆಯ ಪಾರತಂತ್ರ್ಯದಲ್ಲಿಯೇ ಇದ್ದೇವೆ. ನಮ್ಮದೇ ಮಾತೃಭಾಷೆ ಮತ್ತು ದೇಶದ ಇತರ ಭಾಷೆಗಳನ್ನು ಗೌರವಿಸದೆ ಇಂಗ್ಲೀಷ್ ಭಾಷೆಯನ್ನು ಮೆರೆಸುತ್ತಿದ್ದೇವೆ. “ಇಂಗ್ಲೀಷ್ ವ್ಯಾಮೋಹ ಬಿಡಿ ನಿಮ್ಮ ಭಾಷೆಯ ಬಗ್ಗೆ ಅಭಿಮಾನ ಪಡಿ” ಎಂದು ಪಾಶ್ಚಾತ್ಯರು ಹೇಳಿದರೂ ನಾವಿಂದು ಕೇಳುವ ಸ್ಥಿತಿಯಲ್ಲಿಲ್ಲ. ಇಂಗ್ಲೀಷ್ ಭಾಷಾ ಜ್ಞಾನ ಇಂದು ಖಂಡಿತಾ ಅವಶ್ಯ ಅನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಅದರ ಜೊತೆಯಲ್ಲಿ ನಮ್ಮ ಮಾತೃಭಾಷೆಯ ಜ್ಞಾನ ಕೂಡ ಅಷ್ಟೇ ಮುಖ್ಯವಾದುದು. ಆ ಸೌಲಭ್ಯ ಇಂದು ಮಕ್ಕಳಿಗೆ ದೊರಕುತ್ತಿರುವುದು ಸರಕಾರಿ ಮತ್ತು ಖಾಸಗಿ ಅನುದಾನಿತ ಶಾಲೆಗಳಲ್ಲಿ ಅನ್ನುವುದನ್ನು ಅಲ್ಲಗಳೆಯಲಾಗದು. + + + +ಇದರ ಜೊತೆಗೆ ರಾಜ್ಯದಲ್ಲಿ ಅನೇಕ ಖಾಸಗಿ ವಿದ್ಯಾಸಂಸ್ಥೆಗಳು ಸರಕಾರದ ನೆರವಿಲ್ಲದೆಯೂ ಅತ್ಯುತ್ತಮ ದರ್ಜೆಯ ಕನ್ನಡ ಶಾಲೆಗಳನ್ನು ನಡೆಸುತ್ತಿವೆ. ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿರುವುದರಿಂದ ಭಾಷೆಯ ಅವನತಿ ಅಂದರೆ ಅದು ಒಂದು ಸಂಸ್ಕೃತಿಯ ಅವನತಿಯೂ ಹೌದು. ಈ ನಿಟ್ಟಿನಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಕನ್ನಡ ಶಾಲೆಗಳ ಶಿಕ್ಷಕರ ಕೊಡುಗೆ ಅನನ್ಯವಾದುದು. ಇಂತಹ ಕಾಲಘಟ್ಟದಲ್ಲಿ ಕನ್ನಡ ಶಾಲೆಯ ಉಳಿವಿಗಾಗಿ ಮನಪೂರ್ವಕವಾಗಿ ದುಡಿಯುತ್ತಿರುವ ಅನೇಕ ಶಿಕ್ಷಕರಲ್ಲಿ ಅಕ್ಷತಾ ಕೃಷ್ಣಮೂರ್ತಿಯವರೂ ಮುಂಚೂಣಿಯಲ್ಲಿ ನಿಲ್ಲುತ್ತಾರೆ. ಕೃತಿಯಲ್ಲಿ “ರಾಧಕ್ಕೋರು” ಆಗಿರುವ ಅಕ್ಷತಾ ಕೃಷ್ಣಮೂರ್ತಿಯವರಂತಹ ಶಿಕ್ಷಕರು ನಮ್ಮ ನಾಡಿನ ಹೆಮ್ಮೆ ಅನ್ನಬಹುದು. ಇಂತಹ ಶಿಕ್ಷಕರ ಸಂಖ್ಯೆ ವೃದ್ಧಿಯಾಗಲಿ ಉಳಿದ ಕನ್ನಡ ಶಾಲೆಗಳಾದರೂ ಅಳಿಯದೆ ಉಳಿದು ಬೆಳಗಲಿ ಎಂದು ಹಾರೈಸೋಣ. + +ಈ ಕೃತಿಯನ್ನು ಅವರು ಜೋಯಿಡಾದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಮತ್ತು ಎಲ್ಲಾ ಕನ್ನಡ ಶಾಲೆಗಳ ಮಕ್ಕಳಿಗೆ ಅರ್ಪಿಸಿದ್ದಾರೆ. ಇದು ಕೂಡಾ ಅವರ ಕನ್ನಡ ಪ್ರೀತಿಯನ್ನು ಸೂಚಿಸುತ್ತದೆ. ಸಂದರ್ಭನುಸಾರ ಅನೇಕ ಚಿತ್ರಗಳನ್ನು ಇಲ್ಲಿ ಬಳಸಿಕೊಂಡಿರುವುದು ಕೂಡಾ ಕೃತಿಯನ್ನು ಒಂದು ಅಪೂರ್ವ ದಾಖಲಾತಿಯೆನ್ನುವಂತೆ ರೂಪಿಸುವಲ್ಲಿ ನೆರವಾಗಿವೆ. ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕೃತಿಯನ್ನು ಮೆಚ್ಚಿ ಸೊಗಸಾದ ಮುನ್ನುಡಿ ಬರೆದಿದ್ದು ಬೆಂಗಳೂರಿನ ಜನಪ್ರಕಾಶನ ಇದನ್ನು ಪ್ರಕಟಿಸಿದೆ. + + + +ಶಿಕ್ಷಕರು, ಶಿಕ್ಷಣ ಪ್ರೇಮಿಗಳು ಮತ್ತು ಕನ್ನಡದ ಅಭಿಮಾನಿಗಳೆಲ್ಲರೂ ಓದಬೇಕಾದ ಈ ಕೃತಿಯನ್ನು ಸರಕಾರವು ಎಲ್ಲ ಶಾಲಾ ಗ್ರಂಥಾಲಯಗಳಿಗೆ ಹಾಗೂ ಸಾರ್ವಜನಿಕ ಗ್ರಂಥಾಲಯಗಳಿಗೆ ದೊರೆಯುವಂತೆ ಮಾಡಿದರೆ ಒಳ್ಳೆಯದು. + +ಅಂಚೆ ಇಲಾಖೆಯಲ್ಲಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿ ನಿವೃತ್ತರಾಗಿರುವ ಸದಾನಂದ ನಾರಾವಿಯವರು ಪ್ರಸ್ತುತ ಕಾಂತಾವರ ಕನ್ನಡ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ಕತೆ, ಕವನ, ಲೇಖನಗಳನ್ನು ಬರೆಯುತ್ತಾರೆ. ‘ಮುತ್ತುಮಲ್ಲಿಗೆ’, ‘ಸಂರಚನೆಯ ಸುತ್ತಮುತ್ತ’, ‘ಉಜ್ರೆ ಈಶ್ವರ ಭಟ್’, ‘ಡಾ.ಕೆ, ಪ್ರಭಾಕರ ಆಚಾರ್’ ಇವರ ಪ್ರಕಟಿತ ಕೃತಿಗಳು. ತುಳು ಭಾಷೆ ಹಾಗೂ ಸಂಸ್ಕೃತಿಗೆ ಸದಾನಂದ ನಾರಾವಿಯವರ ಸೇವೆಯನ್ನು ಪರಿಗಣಿಸಿ ತುಳು ಸಾಹಿತ್ಯ ಅಕಾಡೆಮಿ ಇವರನ್ನು ಗೌರವಿಸಿದೆ. \ No newline at end of file diff --git a/Kenda Sampige/article_115.txt b/Kenda Sampige/article_115.txt new file mode 100644 index 0000000000000000000000000000000000000000..eb88783f91eac52ac95a9cfa8040ae7b04118f98 --- /dev/null +++ b/Kenda Sampige/article_115.txt @@ -0,0 +1,19 @@ +ನಿವೃತ್ತ ಪ್ರಾಂಶುಪಾಲರಾದ ಪ್ರೊಫೆಸರ್ ಕಟಾವೀರನಹಳ್ಳಿ ನಾಗರಾಜುರವರ ಲೇಖನಿಯಿಂದ ಬಹಳ ದಿನಗಳ ನಂತರ ಮೂಡಿಬಂದ ಅದ್ಭುತ ಕಲಾಕೃತಿ ಪುಟ್ಟಮ್ಮಯ್ಯ. ಇದೊಂದು ಸಾಮಾಜಿಕ ಕಾದಂಬರಿ ಆಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಕೇವಲ ಒಂದು ಕುಟುಂಬ ಅಥವಾ ಮನೆತನಕ್ಕೆ ಸೀಮಿತವಾದ ಕಥಾ ವಸ್ತುವಾಗಬಹುದಾಗಿದ್ದ ಕಾದಂಬರಿಯನ್ನು ಅಂದಿನ ಸಾಮಾಜಿಕ ಸ್ಥಿತಿಗತಿಗಳೊಡನೆ ತುಲನೆ ಮಾಡುತ್ತಾ ಸಾರ್ವಜನಿಕ ಅನುಭವ ಕಥನವಾಗಿಸುವ ಪ್ರಯತ್ನ ಕಾದಂಬರಿಕಾರರದ್ದು. + +(ಪ್ರೊ. ಕಟಾವೀರನಹಳ್ಳಿ ನಾಗರಾಜು) + +ಊರಿಗೊಬ್ಬ ಗೌಡ (ಕರಿಯಪ್ಪ), ಅವನ ವಿಧವಾ ತಂಗಿ (ಕರಿಯಮ್ಮ), ಬೆಳೆದು ನಿಂತ ತಂಗಿಯ ಮಗ (ಚಿಕ್ಕಾವಲ್ಲಪ್ಪ), ಅವರ ಜೀವನ ಹಸನಾಗಿಸುವ ಜವಾಬ್ದಾರಿ ಹೊತ್ತ ಹಿರಿಯ ಗೌಡ. ಪ್ರಾಕೃತಿಕ ಬದಲಾವಣೆಗಳ ಸಂಘರ್ಷಕ್ಕೆ ಸಿಲುಕಿ ಅಪರಿಚಿತ ಅನ್ಯಜಾತಿ ಮಹಿಳೆ ಆಲಮ್ಮನೊಂದಿಗಿನ ಚಿಕ್ಕಾವಲ್ಲಪ್ಪನ ಮಿಲನ. ಸ್ವತಂತ್ರ ಹೋರಾಟದ ಭಾಗವಾಗಿ ಚಿಕ್ಕಾವಲ್ಲಪ್ಪನ ಸೆರೆವಾಸ. ಬಿಡುಗಡೆಯ ನಂತರ ಆಲಮ್ಮನೊಂದಿಗೆ ನಿಶಾಲಗ್ನ, ಸಾಕ್ಷಿಯಾಗಿ ಮಗಳು ಭಂಗಾರಿಯ ಜನನ. ಇದ್ಯಾವುದರ ಪರಿವೇ ಇಲ್ಲದೆ ಸ್ವಂತ ಅಣ್ಣನ ಮಗಳು ಪುಟ್ಟಮ್ಮನೊಂದಿಗೆ ಚಿಕ್ಕಾವಲ್ಲಪ್ಪನ ಮದುವೆ ಮಾಡುವ ತಾಯಿ ಕರಿಯಮ್ಮ, ಆಲಮ್ಮನ ಸಖ್ಯದಲ್ಲಿ ಬಾಲೆ ಪುಟ್ಟಮ್ಮನನ್ನು ಕಡೆಗಣಿಸುವ ಚಿಕ್ಕಾವಲ್ಲಪ್ಪ. ಮುಂದೆ ಪುಟ್ಟಮ್ಮ ಋತುಮತಿಯಾದರೂ ಅವಳನ್ನು ಸೇರದ ಗಂಡ. ಎಲ್ಲವನ್ನೂ ನುಂಗಿಕೊಂಡೇ ಕನ್ಯಾ ಜೀವನ ನಡೆಸುವ ಪುಟ್ಟಮ್ಮ. ತನ್ನ ತಂಗಿ ಹಾಗೂ ಸಹೋದರರ ಮಕ್ಕಳಲ್ಲೇ ತಾಯ್ತನದ ಸಿಹಿ ಉಣ್ಣುವ ಪುಟ್ಟಮ್ಮ ಅವರ ಮೆಚ್ಚಿನ ಪುಟ್ಟಮ್ಮಯ್ಯಳಾಗಿ ಬದಲಾಗುತ್ತಾಳೆ. ಮತ್ತೊಮ್ಮೆ ಪ್ರಾಕೃತಿಕ ಸಂಘರ್ಷದಲ್ಲಿ ಪುಟ್ಟಮ್ಮನೊಂದಿಗೆ ಸೇರುವ ಗಂಡ, ನಾಗಪ್ಪ ಎಂಬ ಗಂಡು ಸಂತಾನ ಉದಯ. + +ಆಲಮ್ಮನೊಂದಿಗಿನ ಸಂಸಾರದ ವಿಷಯ ತಿಳಿಸಲು ಸಾಧ್ಯವಾಗದೇ ಮಾನಸಿಕ ಹೊಯ್ದಟದಲ್ಲೇ ಅಂತ್ಯವಾಗುವ ಚಿಕ್ಕಾವಲ್ಲಪ್ಪ. ಹೀಗೇ ಕಾದಂಬರಿಯ ಕಥೆ ಸಾಗುತ್ತದೆ. + +ವೃದ್ಧೆ ಕರಿಯಮ್ಮ, ನಾಯಕನನ್ನು ಗುಟ್ಟಾಗಿ ಮದುವೆಯಾಗುವ ಆಲಮ್ಮ ಹಾಗೂ ನಾಯಕನನ್ನು ಧಾರ್ಮಿಕ ವಿಧಿವಿಧಾನದಲ್ಲಿ ಮದುವೆಯಾಗಿ ಬರುವ ಪುಟ್ಟಮ್ಮ ಈ ಮೂರೂ ಪಾತ್ರಗಳ ಸುತ್ತಲೇ ಗಿರಕಿ ಹೊಡೆಯುವ ಕಥೆಯಲ್ಲಿ ಎಲ್ಲರ ಮನಸ್ಸನ್ನು ಗೆಲ್ಲುವುದು ಮಡದಿ ಪುಟ್ಟಮ್ಮಳ ಪಾತ್ರವಷ್ಟೇ. ಬಾಲಕಿಯಾಗಿ ಏನೊಂದನ್ನೂ ಅರಿಯುವ ಮುನ್ನವೇ ಚಿಕ್ಕಾವಲ್ಲಪ್ಪನನ್ನು ಮದುವೆಯಾಗಿ ಸ್ವಂತ ಅತ್ತೆಯ ಮನೆಗೆ ಬರುವ ಪುಟ್ಟಮ್ಮ ಮನೆ ಹಾಗೂ ಹೊಲದ ಕೆಲಸಗಳ ಜವಾಬ್ದಾರಿಯನ್ನು ನಿರ್ವಹಿಸುತ್ತ ಮುಂದೆ ಕನ್ಯೆಯಾಗಿಯೂ ಗಂಡನೊಂದಿಗೆ ಸೇರಲು ಅವಕಾಶವಿರದೆ ವಯೋಸಹಜ ಕಾಮನೆಗಳನ್ನು ಹತ್ತಿಕ್ಕಿಕೊಂಡು ಸುಮಾರು ಎರೆಡು ದಶಕಗಳ ಕಾಲ ಬಂಜೆ ಎಂಬ ಹಣೆಪಟ್ಟಿ ಹೊತ್ತು ಮುಂದೊಮ್ಮೆ ತಾಯಿಯಾಗುವುದು, ಕೆಳಜಾತಿಯ ಕೆಲಸಗಾರರೊಂದಿಗೆ ಸಲುಗೆಯಿಂದ ಬೆರೆತು ಅಂದಿನ ಆಚರಣೆಯಾದ ವರ್ಣಸಂಘರ್ಷವನ್ನು ನೈತಿಕವಾಗಿ ವಿರೋಧಿಸುವುದು. ಜವಾಬ್ದಾರಿಯುತ ಸೋದರಿಯಾಗಿ ತಮ್ಮನನ್ನು ವಿದ್ಯಾವಂತನನ್ನಾಗಿ ಮಾಡುವುದು. ಮುಂದೆ ಸ್ವಂತ ಮಗನನ್ನು ಓದಿಸುವ ಫಣ ತೊಡುವುದು. ಹೀಗೇ ಕಾದಂಬರಿಯ ತುಂಬಾ ಪುಟ್ಟಮ್ಮಳ ವ್ಯಕ್ತಿತ್ವವೇ ಆವರಿಸಿಕೊಳ್ಳುತ್ತಾ ಸಾಗುತ್ತದೆ. ಇಲ್ಲಿ ಬಾಲಕಿ ಪುಟ್ಟಮ್ಮ ದಿನಕಳೆದಂತೆಲ್ಲ ಮಾತೃ ಹೃದಯದ ಮೇರು ಪರ್ವತವಾಗಿ ಬೆಳೆಯುತ್ತಾ ಹೋಗುತ್ತಾಳೆ. ತಂದೆ ಮನೆಯಲ್ಲಿ ಆದರ್ಶ ಮಗಳಾಗಿ, ಅತ್ತೆ ಮನೆಯಲ್ಲಿ ಮುದ್ದಿನ ಸೊಸೆಯಾಗಿ, ಜವಾಬ್ದಾರಿಯುತ ಗೌಡತಿಯಾಗಿ, ಮಗನಿಗೆ ಭವಿಷ್ಯ ನಿರ್ಮಿಸುವ ತಾಯಿಯಾಗಿ ಪುಟ್ಟಮ್ಮಳ ಪಾತ್ರ ಕಾದಂಬರಿಯ ಉದ್ದಕ್ಕೂ ಓದುಗರನ್ನು ಆವರಿಸಿಕೊಳ್ಳುತ್ತಾ ಸಾಗುತ್ತದೆ. + +ಕಾದಂಬರಿಯ ಕಥಾವಸ್ತು ಸರಳವಾದದ್ದೇ ಆದರೂ ಅದನ್ನು ನಿರೂಪಿಸಿರುವ ಬಗೆ ವಿಶೇಷವಾಗಿದ್ದು ಅದಕ್ಕಾಗಿ ಕಾದಂಬರಿಕಾರರು ಆಯ್ದುಕೊಂಡಿರುವ ಗ್ರಾಮ್ಯ ಭಾಷೆ ಎಲ್ಲಿಯೂ ತನ್ನ ಸೊಗಡನ್ನು ಕಳೆದುಕೊಂಡಿಲ್ಲ. ಕಾದಂಬರಿಯಲ್ಲಿ ಬರುವ ಸ್ವಾತಂತ್ರ್ಯ ಹೋರಾಟದ ಸಂದರ್ಭಗಳ ಹಿನ್ನೆಲೆ, ಸ್ಥಳೀಯವಾಗಿ ಪ್ರಖ್ಯಾತವಾದ ಮಾಗೋಡು ಹಾಗೂ ಜುಂಜಪ್ಪನ ಜಾತ್ರೆಗಳ ಉಲ್ಲೇಖ, ಪ್ರಾಕೃತಿಕ ವರ್ಣನೆಗಳು ಓದುಗರಿಗೆ ಓದುತ್ತಿದ್ದೇವೆ ಎನ್ನುವುದರ ಬದಲು ಕಥೆಯನ್ನು ಕೇಳುತ್ತಿರುವಂತೆ ಭಾಸವಾಗಿಸುವುದರಲ್ಲಿ ಆಶ್ಚರ್ಯವಿಲ್ಲ. + +ಎಲ್ಲಾ ಶ್ರೇಷ್ಠತೆಗಳೂ ಒಂದಿಷ್ಟು ಮಿತಿಯನ್ನು ಒಳಗೊಂಡಿರುತ್ತವೆ ಎಂಬಂತೆ ಪುಟ್ಟಮ್ಮಯ್ಯ ಕಾದಂಬರಿಯಲ್ಲಿಯೂ ಕೆಲವೊಂದು ಮಿತಿಗಳಿದ್ದು ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕಾದಂಬರಿಯ ಪ್ರಾರಂಭದಲ್ಲಿ ಬರುವ ಕೊನಪ್ಪ ಮತ್ತು ದೇವೀರಿಯ ದಾಂಪತ್ಯಕ್ಕೆ ಸಂಬಂಧಿಸಿದ ವಿವರಣೆಯು ಇದ್ದಕ್ಕಿದ್ದಂತೆ ಕಾಣೆಯಾಗುವುದು. ಮಕ್ಕಳಿಗಾಗಿ ಪುಟ್ಟಮ್ಮಳು ದೇವರು, ಕಂದಾಚಾರದ ಮೊರೆ ಹೋಗುವುದು… ಅದರ ಬಲದಿಂದಲೇ ಪ್ರಾಕೃತಿಕ ಸಂಘರ್ಷ ಉಂಟಾಗಿ ನಾಯಕ ನಾಯಕಿ ಸೇರಿದರೆಂಬಂತೆ ಬಿಂಬಿಸುವ ಪ್ರಯತ್ನ ಮಾಡಿರುವುದು. ಕಥೆ ನಡೆಯುವುದು ಸ್ವತಂತ್ರ ಪೂರ್ವದ ಸಣ್ಣ ಹಳ್ಳಿಯಲ್ಲಾದರೂ ಸುಮಾರು ಎರಡು ದಶಕಗಳವರೆಗೂ ಕಥಾನಾಯಕ ಚಿಕ್ಕಾವಲ್ಲಪ್ಪ ಹಾಗೂ ಆಲಮ್ಮಳ ಗುಟ್ಟಿನ ಸಂಸಾರದ ವಿಚಾರ ಬಯಲಾಗದೆ ಉಳಿದದ್ದು, ಬೆಳೆದು ನಿಂತ ಮಗಳು ಭಂಗಾರಿ ಹಾಗೂ ಮಗ ನಾಗಪ್ಪನಿಗೂ ಅನುಮಾನ ಬಾರದಿದ್ದುದು. ಅಂದು ಪ್ರಬಲವಾಗಿದ್ದ ವರ್ಣ ಸಂಘರ್ಷವನ್ನು ಮೀರುವ ನಾಯಕ ನಾಯಕಿಯನ್ನು ಯಾರೊಬ್ಬರೂ ವಿರೋಧಿಸದಿರುವುದು. ಗಂಡನ ಗುಟ್ಟಿನ ಸಂಸಾರದ ಸತ್ಯ ಕೊನೆಯವರೆವಿಗೂ ಪುಟ್ಟಮ್ಮಳಿಗೆ ತಿಳಿಯದೇ ಹೋದದ್ದು ನಿಜಕ್ಕೂ ಓದುಗರನ್ನು ಗೊಂದಲಕ್ಕೀಡು ಮಾಡುತ್ತವೆ. + + + +ಇಂತಹ ಸಣ್ಣ ಪ್ರಮಾದಗಳನ್ನು ಹೊರತುಪಡಿಸಿದರೆ ಪುಟ್ಟಮ್ಮಯ್ಯ ಒಮ್ಮೆ ಎಲ್ಲರೂ ಓದಿ ಸುಲಭವಾಗಿ ಅರ್ಥೈಸಿಕೊಳ್ಳಬಹುದಾದ ಕಾದಂಬರಿಯಾಗಿದ್ದು. ಓದಿ ಪ್ರೋತ್ಸಾಹಿಸಬೇಕಾಗಿ ಮನವಿ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_116.txt b/Kenda Sampige/article_116.txt new file mode 100644 index 0000000000000000000000000000000000000000..455b7f99909a09f470264159c871c5dea416d801 --- /dev/null +++ b/Kenda Sampige/article_116.txt @@ -0,0 +1,23 @@ +‘ನಾನೇಕೆ ಬರೆಯುತ್ತೇನೆ’ ಎಂಬುದರ ಬಗ್ಗೆ ಹಲವಾರು ಸಾಹಿತಿಗಳು ಮಾತನಾಡುತ್ತಾರೆ. ಬರೆಯುವುದರ ಹಿಂದಿನ ಪ್ರೇರಣೆಯನ್ನು ವಿವರಿಸುತ್ತಾರೆ. ಮೊನ್ನೆಯಷ್ಟೇ ಜೋಗಿ ಸರ್ ಬರೆದ ಒಂದು ಲೇಖನದಲ್ಲಿ ಬೇಂದ್ರೆಯವರಿಂದ ಹಿಡಿದು ಗಾರ್ಸಿಯಾ ಮಾರ್‌ಕ್ವೆಜ್ ವರೆಗೂ ಬರವಣಿಗೆಯ ಬಗ್ಗೆ ಅನೇಕ ಲೇಖಕರು ಹಂಚಿಕೊಂಡಿದ್ದ ಮಾತುಗಳನ್ನು ಉಲ್ಲೇಖಿಸಿದ್ದರು. ಆದರೆ ‘ನಾನೇಕೆ ಬರೆಯುವುದನ್ನು ನಿಲ್ಲಿಸಿದೆ?’ ಎಂಬ ವಿಷಯದ ಬಗ್ಗೆ ಮಾತನಾಡಿದವರು ಕಡಿಮೆ. ನನ್ನ ತಿಳುವಳಿಕೆಯ ಪ್ರಕಾರ ಹಾಗೆ ಬರವಣಿಗೆಯನ್ನು ನಿಲ್ಲಿಸಿದವರೂ ಸಹ ಕಡಿಮೆಯೇ. ತೀರಾ ಮೊನ್ನೆಯವರೆಗೂ ನನಗೆ ಹೀಗೆ ಏಕಾಏಕಿಯಾಗಿ ಬರೆಯುವುದನ್ನು ನಿಲ್ಲಿಸಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಒಬ್ಬರಿದ್ದಾರೆ, ಒಂದು ಕಾಲಕ್ಕೆ ಅಮೋಘವಾಗಿ ಬರೆಯುತ್ತಿದ್ದವರು ಈಗ ಬರವಣಿಗೆಯನ್ನು ನಿಲ್ಲಿಸಿ ಬಿಟ್ಟಿದ್ದಾರೆ ಎಂದು ತಿಳಿದಾಗ ಹುಟ್ಟಿದ ಸೋಜಿಗ ಇನ್ನೂ ಜೀವಂತವಾಗಿದೆ. + +ರಾಜಲಕ್ಷ್ಮೀ ಎನ್.ರಾವ್ ಅವರ ಹೆಸರನ್ನು ನಾನು ಕೇಳಿಯೇ ಇರಲಿಲ್ಲ. ಇದು ನನ್ನ ಅಲ್ಪ ಜ್ಞಾನವೂ ಇರಬಹುದು ಜೊತೆಗೆ ತಲೆಮಾರುಗಳ ವ್ಯತ್ಯಾಸವೂ ಇರಬಹುದು. ಹೀಗೆ ಅಕಸ್ಮಾತ್ತಾಗಿ ಕಂಡ ರಾಜಲಕ್ಷ್ಮೀ ಅವರ ವಿಡಿಯೋ ನೋಡಿ ನನಗೆ ಎರಡು ದಿನಗಳ ಕಾಲ ತಲೆಯಲ್ಲಿ ಅವರದೇ ಗುಂಗು. ಅದು ಹೇಗೆ ಬರೆಯುವುದನ್ನು ನಿಲ್ಲಿಸಲಿಕ್ಕೆ ಸಾಧ್ಯ ಎಂದು ಅಚ್ಚರಿ ಪಡುತ್ತಲೇ ಇದ್ದೆ. ನಿಜ ಹೇಳ್ತೇನೆ, ಬಹಳ ದಿನಗಳ ಕಾಲ ಬರೆಯದೇ ಹೋದರೆ ನನಗೆ ವಿಚಿತ್ರ ಕನಸುಗಳು ಬೀಳುತ್ತವೆ. ಕತೆಯಾಗಿ ಕಟ್ಟಲು ನಾನು ಅವುಗಳನ್ನು ನೆನಪಿಟ್ಟುಕೊಳ್ಳಲು ಯತ್ನಿಸುತ್ತೇನೆ. ಎಷ್ಟು ನೆನಪಿದೆಯೋ ಅಷ್ಟಕ್ಕೆ ಉಪ್ಪು, ಖಾರ, ಮೆಣಸು, ಬೆಲ್ಲ ಸೇರಿಸಿ ಕತೆಯಾಗಿಸಲು ಯತ್ನಿಸುತ್ತೇನೆ. ಸಣ್ಣ ಪುಟ್ಟ ಲೇಖನ, ಕತೆಗಳನ್ನು ಬರೆಯುವ ನನಗೇ ಹೀಗಾಗುವಾಗ ದೊಡ್ಡವರ ಜೊತೆಗೆ ಒಡನಾಡಿದ, ಸಾಹಿತಿಗಳ ಜೊತೆಗೆನೇ ಬಹುಪಾಲು ಕಳೆಯುತ್ತಿದ್ದ, ಉತ್ತಮ ಕತೆಗಳು ಎಂದು ಓದಿದವರೆಲ್ಲರೂ ಹೇಳುವ ಹಾಗೆ ಕತೆಗಳನ್ನು ಬರೆದ ರಾಜಲಕ್ಷ್ಮಿಯವರಿಗೆ ಹೀಗೆಲ್ಲ ಅನ್ನಿಸಲೇ ಇಲ್ಲವೇ ಎಂದು ಯೋಚಿಸುತ್ತಲೇ ಇದ್ದೆ. + +ಅವರು ಅದೆಂತಹ ಕತೆಗಳನ್ನು ಬರೆದಿದ್ದರು ಎಂಬ ಕುತೂಹಲದಲ್ಲಿಯೇ ಅವರ ಕಥಾ ಸಂಕಲನ ‘ಸಂಗಮ’ ವನ್ನು ಓದಲು ಶುರು ಮಾಡಿದೆ. ಅದರಲ್ಲಿ ಮೊದಲ ಕಥೆಯೇ ಕೆಂಪು ಕಪ್ಪು ಬಿಳುಪು. ಕಪ್ಪು ಹುಬ್ಬಿನ, ಕೆಂಪು ಲಿಪಸ್ಟಿಕ್ಕಿನ, ಬಿಳಿ ಹಲ್ಲಿನ ಒಬ್ಬ ಹೆಂಗಸು. ನೂರಾರಿ ಜನರಾಡಿ ಬಿಸುಟ ಬೊಂಬೆ ಅವಳು. ನೂರಾ ಒಂದನೇ ಗಂಡಸು ಇವನು. ಪ್ರಯೋಗಕ್ಕಾಗಿ ಅವಳೊಡನೆ ಸೇರಿದ, ಕೂಡಿದ ಕತೆಯನ್ನು ಇನ್ನೊಂದು ಹೆಂಗಸಿನ ಮುಂದೆ ಹೇಳುತ್ತಿರುತ್ತಾನೆ. ಈ ಕತೆಯನ್ನು ಕೇಳುವ ಅವಳು ಯಾರು ಎಂಬುದು ಇಡೀ ಕತೆಯಲ್ಲಿ ಎಲ್ಲಿಯೂ ಕಾಣಿಸುವುದಿಲ್ಲ. ಯಾವುದೋ ಒಂದು ಹೋಟೆಲಿನಲ್ಲಿ ಈ ಕೆಂಪು ಕಪ್ಪು ಬಿಳುಪಿನ ಹೆಂಗಸಿನ ಜೊತೆಗೆ ಸೇರುವ ಕತೆಗಾರನಿಗೆ ಅವಳಿಂದ ಸಂತೃಪ್ತಿಯಾಗುವುದಿಲ್ಲ. ಆದರೆ ಕತೆ ಕೇಳುತ್ತಿದ್ದ ಹೆಂಗಸಿಗೆ ಕತೆಯ ಕೊನೆಯಲ್ಲಿ ಅವನ ಮೇಲೆ ಮೆಚ್ಚುಗೆ, ಗೌರವ ತೆರೆದಿತ್ತು ಎಂದು ಬರುತ್ತದೆ. ಅವನ ಕತೆಯನ್ನು ಕೇಳುತ್ತಿರುವ ಹೆಂಗಸು ಆ ಕೆಂಪು ಕಪ್ಪು ಬಿಳುಪಿನ ಹೆಂಗಸೇ ಆಗಿರಬಹುದೇ? ‘ಖೂಬ್ ಸೂರತ್ ಹೈ ಲಡಕೀ. ಬುಲಾವೂ?’ ಎಂದು ಹೋಟೆಲಿನಲ್ಲಿ ಕೆಲಸ ಮಾಡುವ ಆ ಪುಟ್ಟ ಹುಡುಗ ಹೇಳಿದಾಗ ಕತೆಗಾರ ‘ಬುಲಾವ್’ ಎನ್ನುತ್ತಾನೆ. ಅವನು ಹೀಗೆ ಹೇಳಿದಾಗ ಕತೆ ಕೇಳುತ್ತಿರುವ ಹೆಂಗಸಿಗೆ ನೋವಾಗುತ್ತದೆ. ಕಣ್ಣು, ಮುಖದಲ್ಲಿ ವೇದನೆ ಕಾಣಿಸುತ್ತದೆ. ಅದನ್ನು ನೋಡಿದ ಕತೆಗಾರ ಮೃದುವಾಗಿ ‘ಹಾಗೇಕೆ ಉತ್ತರ ಕೊಟ್ಟೆನೆಂದು ಗೊತ್ತಿಲ್ಲವೇ ನಿನಗೆ?’ ಎಂದು ಕೇಳುತ್ತಾನೆ. ಈ ಎರಡೇ ಎರಡು ಸಾಲಿನ ಸಂಭಾಷಣೆ ಆಕೆ ಅವಳೇ ಆಗಿರುವ ಸಾಧ್ಯತೆಗೆ ಪುರಾವೆ ನೀಡಿದಂತಿದೆ. + + + +‘ಸಂಗಮ’ ಕಥಾ ಸಂಕಲನದಲ್ಲಿ ನನಗೆ ಬಹಳ ಇಷ್ಟವಾಗಿದ್ದು ಕತೆಗಳಿಗೆ ಆಯ್ದುಕೊಂಡಿರುವ ಶೀರ್ಷಿಕೆಗಳು. ಓದಿದ ತಕ್ಷಣ ಕತೆಯ ಬಗ್ಗೆ ಯಾವ ತರಹದ ಸುಳಿವನ್ನೂ ಬಿಟ್ಟು ಕೊಡುವುದಿಲ್ಲ ಅವು. ಆ ಶೀರ್ಷಿಕೆ ಯಾಕೆ ಎಂದು ತಿಳಿಯಬೇಕಿದ್ದರೆ ನೀವು ಇಡೀ ಕತೆಯನ್ನು ಓದಬೇಕು. ಉದಾಹರಣೆಗೆ ಎರಡನೇಯ ಕತೆ ‘ಮೈ ದಾಸ್’ ಅನ್ನೇ ತೆಗೆದುಕೊಳ್ಳಿ. ಊಹುಂ.. ನೀವು ಗೆಸ್ ಮಾಡಲಿಕ್ಕೆ ಸಾಧ್ಯವೇ ಇಲ್ಲ. ಮುಟ್ಟಿದೆಲ್ಲವೂ ಚಿನ್ನ ಎಂಬ ಗಾದೆ ಮಾತಿದೆಯಲ್ವ.. ಅದನ್ನು ನಿಜವಾಗಿಯೂ ಸಾಧ್ಯವಾಗಿಸಲು ಯತ್ನಿಸುವ ವೈಜ್ಞಾನಿಕ ಸಂಶೋಧಕನ ಕತೆ. ಎಂಟು ವರ್ಷಗಳ ಸತತ ಪ್ರಯತ್ನದಿಂದ ಅವನ ಪ್ರಯೋಗ ಕೊನೆಗೂ ಫಲಕಾರಿಯಾಗುತ್ತದೆ. ಆದರೆ ಮುಂದೇನು? ಚಿನ್ನದ ಕುರ್ಚಿಯಲ್ಲಿ ಕುಳಿತುಕೊಳ್ಳಬಹುದು ಆದರೆ ಚಿನ್ನದ ಅನ್ನವನ್ನು ತಿನ್ನಲಿಕ್ಕಾಗುತ್ತದೆಯೇ? ಹೀಗೆ ಒಂದು ಆಡು ಮಾತನ್ನು ಸಹ ಕತೆಯಾಗಿ ಕಟ್ಟಬಹುದು ಎಂದು ರಾಜಲಕ್ಷ್ಮಿಯವರು ತೋರಿಸಿ ಕೊಟ್ಟಿದ್ದಾರೆ. ಇದರ ಮೂಲಕ ಅವರು ಪ್ರತಿಯೊಂದು ವಿಷಯದ ಬಗ್ಗೆಯೂ ಹೇಗೆಲ್ಲ ಆಳವಾಗಿ ಯೋಚಿಸುತ್ತಿದ್ದರು ಎಂದು ಅರಿಯಬಹುದಾಗಿದೆ. + +‘ಆವೇ ಮರಿಯಾ’ ದಲ್ಲಿ ಮದುವೆ ಮಾಡಿಕೊಳ್ಳುವುದೋ ಬೇಡವೋ ಎಂಬ ಸಂದಿಗ್ಧದಲ್ಲಿರುವ ಯುವಕನ ತಳಮಳ ಕತೆಯಾಗಿ ಬಂದಿದೆ. ಸಂಸಾರದ ತಾಪತ್ರಯ, ರೇಗುವ ಸಿಡುಕುವ ಬಿಗು ಮಾರಿಯ ಯುವಕರು, ಬೇಸತ್ತ ಹೆಂಗಸರು, ತಿಂಗಳ ಮೊದಲ ವಾರದ ಕನಸುಗಳು, ಒಲವಿನ ಮೊದಲ ತಿಂಗಳ ಕನಸುಗಳು ಎಲ್ಲವೂ ಇಲ್ಲಿವೆ. + +ಸಂದರ್ಶನದಲ್ಲಿ ರಾಜಲಕ್ಷ್ಮೀಯವರು ತಾವು ಈಗ ಪ್ರಕೃತಿಯ ಜೊತೆಗೆ ಕಾಲ ಕಳೆಯುತ್ತಿರುವುದಾಗಿ ಹೇಳಿಕೊಳ್ಳುತ್ತಾರೆ. ಹೂವುಗಳನ್ನು ನೋಡುವ, ಚಿಗುರೆಲೆಗಳನ್ನು ಗಮನಿಸುವ ಈಗಿರುವ ನಿಸರ್ಗ ತನ್ಮಯತೆ ಮೊದಲಿನಿಂದಲೂ ಇತ್ತು ಎಂದು ಎಲ್ಲಾ ಕತೆಗಳಲ್ಲೂ ಕಾಣಿಸುತ್ತದೆ. ಕತೆಗಳು ಎಷ್ಟು ಕಾವ್ಯಾತ್ಮಕವಾಗಿವೆಯೆಂದರೆ ಒಂದೊಂದು ಸಾಲು ಒಂದೊಂದು ಕವನ ಎಂಬಂತಿವೆ. ಪಾದದ ಬಳಿ ಸುಟ್ಟು ಬಿಸುಡುವ ಸಿಗರೇಟಿನ ಬಿಳಿ ತುಂಡುಗಳನ್ನು ಪೂಜೆಗೆ ಸುರಿದ ಹೂವುಗಳಿಗೆ ಹೋಲಿಸುತ್ತಾರೆ. ಮತ್ತೊಂದು ಕಡೆಗೆ ಅವೇ ತುಂಡುಗಳನ್ನು ಸತ್ತ ಬಿಳಿ ಪತಂಗಗಳಿಗೂ ಹೋಲಿಸುತ್ತಾರೆ. ಕಂದು ಬಣ್ಣದ ಎಲೆಗಳನ್ನು ಚಾಚಿ ನಿಂತಿರುವ ಮರವನ್ನು ಬಟ್ಟೆ ಹರಿದು ಹೋದ ಕೊಡೆಗೆ, ವಸಂತ ಕಾಲವನ್ನು ಬಳೆಗಾರನಿಗೆ, ನೆನಪನ್ನು ಬಳ್ಳಿಗೆ, ಬಿಕ್ಕುಗಳನ್ನು ಬಿರುಕುಗಳಿಗೆ, ಮನಸ್ಸಿನ ಖುಷಿಯನ್ನು ಎಳೆ ಗರಿಕೆ ಹುಲ್ಲಿಗೆ, ಸ್ಪರ್ಶವನ್ನು ಹೂದಳಕ್ಕೆ, ನಿಂಬೆ ಹೂವನ್ನು ಉಸಿರಿಗೆ, ದೇವಕಣಗಿಲೆಯ ಮೊಗ್ಗನ್ನು ಉಗುರಿಗೆ ಹೀಗೆ ಹಲವಾರು ಹೋಲಿಕೆಗಳು ಕಾಣಿಸುತ್ತಲೇ ಹೋಗುತ್ತವೆ. ಅವುಗಳನ್ನು ಓದುವುದೇ ಒಂದು ಸೊಬಗು. ಹೂದೋಟದಲ್ಲಿ ಒಂದು ಸುತ್ತು ಹಾಕಿ ಬಂದಂತೆ. + +‘ನನಗೊಂದು ಬಿಳಿ ಗುಲಾಬಿ’ ಕತೆಯಲ್ಲಿ ಗುಲಾಬಿಯನ್ನು ವರ್ಣಿಸುವ ಏಳೆಂಟು ಸಾಲುಗಳಿವೆ. ಇದನ್ನು ಓದಿದಾಗ ಗುಲಾಬಿ ಹೂವು ಹೊಸದೇ ರೂಪದಲ್ಲಿ ನಮ್ಮ ಕಣ್ಮುಂದೆ ಕಾಣಿಸಿಕೊಳ್ಳುತ್ತದೆ. ಮುಂದಿನ ಸಲ ಗುಲಾಬಿಯನ್ನು ನೋಡಿದಾಗ ಅದರೊಳಗಿನ ಕೇಸರ ಮಗುವಿನ ಗುಂಗುರು ಕೂದಲಿನಂತೆ ಕಾಣಿಸದೇ ಇರಲಾರದು. ಕಂದು ಬಣ್ಣಕ್ಕೆ ತಿರುಗಿದ ಆ ಗುಲಾಬಿ ದಳದ ನರಗಳನ್ನು ನಕಾಶೆಯ ಮೇಲಿನ ನದಿಗಳಿಗೆ ಹೋಲಿಸುತ್ತಾರೆ ಲೇಖಕಿ. ಅದನ್ನು ಓದಿದ ತಕ್ಷಣ ವಾವ್ ಎಷ್ಟು ಅದ್ಭುತ ಪರಿಕಲ್ಪನೆ ಎನ್ನಿಸದೇ ಇರಲಾರದು. ‘ಸಂಗಮ’ ಕತೆಯಲ್ಲಿ ಪತ್ರಿಕೆಯಲ್ಲಿರುವ ಕಪ್ಪು ಅಕ್ಷರಗಳ ಮೇಲೆ ಕಣ್ಣಾಡಿಸುವುದನ್ನು ಜಪಾನಿ ಆಟಗಾರ ತಂತಿಯ ಮೇಲೆ ನಡೆಯುವುದಕ್ಕೆ ಹೋಲಿಸುತ್ತಾರೆ. ಹೀಗೆ ಎತ್ತಣ ಮಾಮರ ಎತ್ತಣ ಕೋಗಿಲೆಗೆ ಸಂಬಂಧ ಕಲ್ಪಿಸಿ ಹೊಸ ಬೆರಗನ್ನು ಸೃಷ್ಟಿಸುವ ರಾಜಲಕ್ಷ್ಮಿಯವರ ಜಾಣ್ಮೆಗೆ ನಾನು ಬೆರಗಾಗಿದ್ದೇನೆ. + +‘ಕಲ್ಯಾಣಿ’ ಕತೆಯಲ್ಲಿ ಪ್ರಪಂಚದಲ್ಲಿರುವ ಗಂಡಸರನ್ನು ಮೂರು ವಿಧಗಳಾಗಿ ವಿಂಗಡಿಸುತ್ತಾರೆ. ಆ ವಯಸ್ಸಿಗೇ ಜಗತ್ತನ್ನು ಇಷ್ಟು ಸ್ಪಷ್ಟವಾಗಿ ಅವಲೋಕಿಸಿದ ರಾಜಲಕ್ಷ್ಮಿಯವರ ಸೂಕ್ಷ್ಮ ಮನಸ್ಸಿಗೆ ಬರೆಯುವುದನ್ನು ಯಾಕೆ ನಿಲ್ಲಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟತೆಯಿತ್ತು ಮತ್ತು ಆ ಸ್ಪಷ್ಟತೆಯಿಂದಲೇ ಅಷ್ಟು ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳಲು ಅವರಿಂದ ಸಾಧ್ಯವಾಯಿತು ಎಂದು ಅರ್ಥವಾಗುತ್ತದೆ. ‘ಇಲ್ಲ ಇಲ್ಲಿ..’ ಇದು ಕಮ್ಯುನಿಷ್ಟ್‌ ಆದವನ ಕತೆ. ‘ಫೀಡ್ರಾ’ ಕತೆಯಲ್ಲಿ ತನಗಿಂತ ಎರಡು ವರ್ಷ ದೊಡ್ಡ ಮಗನಿರುವ ಗಂಡಸಿನೊಂದಿಗೆ ಮದುವೆಯಾಗುವ ತರುಣಿಗೆ ಆ ಹುಡುಗನ ಮೇಲೆ ಮೋಹವಾಗುತ್ತದೆ. ಆ ಕಾಲದಲ್ಲಿಯೇ ಖಿನ್ನತೆಯನ್ನು ಗುರುತಿಸಿ ಅದರ ಲಕ್ಷಣಗಳ ಬಗ್ಗೆ ಸರಿಯಾಗಿ ಬರೆದಿದ್ದಾರೆ. ಒಂದೊಂದು ಕತೆಯೂ ಒಂದೊಂದು ಜಗತ್ತು. + + + +ಲಾರ್ಡ್ ಲೇಟನ್ನಿನ ಹೇಲನ್, ಎಲೆಕ್ಟ್ರಾ, ಆಂಟಿಗೊನೆ ಎಂಬ ಇಂಗ್ಲೀಷ್ ನಾಟಕಗಳ ಪಾತ್ರಗಳು. ಮಾರ್ಕ್ಸ್, ರೂಸೋ, ಬ್ರಿಡ್ಜಸ್, ರಸೆಲ್, ಗಾಂಧಿ, ಪ್ಲೆಟೋ ಎಂಬೆಲ್ಲ ವ್ಯಕ್ತಿತ್ವಗಳ ಉಲ್ಲೇಖ. ಭಿನ್ನ ಕಥಾವಸ್ತು. ಸಶಕ್ತ ನಿರೂಪಣೆ. ಬಗೆ ಬಗೆಯ ರೂಪಕಗಳು. ಎಲ್ಲವೂ ರಾಜಲಕ್ಷ್ಮಿಯವರಿಗಿದ್ದ ಅನುಭವದ ಆಳವನ್ನು, ಸೂಕ್ಷ್ಮ ಒಳನೋಟವನ್ನು, ಓದಿನ ವಿಸ್ತಾರವನ್ನು ಸಾರಿ ಹೇಳುತ್ತವೆ. ಅವರೊಳಗೆ ಕತ್ತಲಿನಂತಹ ಮೌನವೊಂದಿದೆ. ಹೂ ದಳಗಳನ್ನು ನೋಡಿ ಕಣ್ಣುಗಳಲ್ಲಿ ಚಂದ್ರಬಿಂಬ ಮೂಡುತ್ತದೆ. ಅವರ ಬೆರಗನ್ನು ಮತ್ತೊಮ್ಮೆ ನಮ್ಮೊಂದಿಗೆ ಹಂಚಿಕೊಳ್ಳುವಂತಾಗಲಿ. ಮತ್ತೆ ಬರೆಯಬೇಕು ಎಂಬ ಆಸೆಯೊಂದು ಅವರೊಳಗೆ ಮೊಳೆಯಲಿ ಎಂಬುದಷ್ಟೇ ಸಾಹಿತ್ಯದ ವಿದ್ಯಾರ್ಥಿಯಾಗಿ ನನ್ನ ಆಶಯ. + +ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ. \ No newline at end of file diff --git a/Kenda Sampige/article_117.txt b/Kenda Sampige/article_117.txt new file mode 100644 index 0000000000000000000000000000000000000000..33ba2b06df221131769acceb4de4a94cdc96eb28 --- /dev/null +++ b/Kenda Sampige/article_117.txt @@ -0,0 +1,21 @@ +ಮತ್ತೆ ಮತ್ತೆ ಕತ್ತ್ಹೊರಳಿಸಿಬೀರುತಿಹಳು ಹೂನಗೆಯಸೂಜಿ ಮೊಗದ ಸುಂದರಿಊಟದ ಪಂಕ್ತಿಯಕಡೆಯ ಸಾಲಿನಲಿ + +(ಚಾಂದಿನಿ ಖಲೀದ್‌) + +ಓದುವ ಮನಸ್ಸನ್ನು ಸೂಜಿಗಲ್ಲಿನಂತೆ ಸೆಳೆಯುವ ಸರಳವಾದ ಚಿತ್ರವತ್ತಾದ ಪಂಕ್ತಿ ಇದು. ಇಲ್ಲಿ ‘ಮತ್ತೆ ಮತ್ತೆ ಕತ್ತು ಹೊರಳಿಸುವ’, ‘ಹೂನಗೆಯ ಬೀರುವ’, ‘ಊಟದ ಪಂಕ್ತಿ’ ಮತ್ತು ‘ಕಡೆಯ ಸಾಲು’ ಈ ನಾಲ್ಕೂ ಸಾಲುಗಳನ್ನು ಬಿಡಿ ಬಿಡಿಯಾಗಿ ನೋಡಿದಾಗ ಇಲ್ಲದ ಧ್ವನಿಯೊಂದು, ಅವೆಲ್ಲವನ್ನು ಒಟ್ಟಿಗೇ ಓದಿದಾಗ ಉಂಟಾಗುತ್ತದೆ. ಇದು ಯಾವುದೇ ಕಾವ್ಯದ ಮುಖ್ಯ ಮತ್ತು ಐಚ್ಛಿಕವಾದ ಲಕ್ಷಣಗಳಲ್ಲಿ ಒಂದು. ಇಂಥ ಲಕ್ಷಣಗಳನ್ನು ತಮ್ಮ ಈ ಮೊದಲ ಸಂಕಲನದ ಕೆಲವು ಕವನಗಳಲ್ಲಿ ಹೊಂದಿರುವ ಚಿತ್ರದುರ್ಗದ ಚಾಂದಿನಿ ಅವರನ್ನು ಕಾವ್ಯಲೋಕಕ್ಕೆ ಈ ಮೂಲಕ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ನನ್ನ ಈ ಶುಭಾಶಯದ ಎರಡು ಮಾತುಗಳಿಗಾಗಿ ಹಸ್ತಪ್ರತಿ ಕೊಟ್ಟು ಐದಾರು ವರ್ಷಗಟ್ಟಲೆ ಪಿಟ್ಟೆನ್ನದೆ ಕಾದಿರುವ ಅವರ ತಾಳ್ಮೆ ದೊಡ್ಡದು. ಈ ಅವಧಿಯಲ್ಲಿ ಕೆಲವು ಕವಿತೆಗಳನ್ನು ತಿದ್ದಲು ಅವರು ಹಿಂಜರಿಯಲಿಲ್ಲ. ಈ ಚಡಪಡಿಕೆ ಕವಿಗೆ ಇರಲೇಬೇಕು. ಈ ನಿಷ್ಠೆಗಾಗಿ ಅವರನ್ನು ಅಭಿನಂದಿಸುತ್ತೇನೆ. + +ಕನ್ನಡದಲ್ಲಿ ಇಂದು ಕವಿತೆ ಮತ್ತು ಕಥೆಗಳನ್ನು ಬರೆಯುವವರಲ್ಲಿ ಶಿಕ್ಷಕರು, ಶಿಕ್ಷಕಿಯರು ಹೆಚ್ಚು ಹೆಚ್ಚು ಕಂಡು ಬರುತ್ತಿರುವುದು ತುಂಬಾ ಉತ್ಸಾಹದ ವಿಷಯವಾಗಿದೆ. ಏಕೆಂದರೆ ಇದು ಅವರ ಸಂವೇದನಾಶೀಲತೆಯನ್ನು, ಜೀವನ್ಮುಖಿ ನಿಲುಕುಗಳನ್ನು ವಿಸ್ತರಿಸಿ-ಅವರ ವಿದ್ಯಾರ್ಥಿಗಳನ್ನು ಸಹಜವಾಗಿ ಆಳವಾಗಿ ಪ್ರಭಾವಿಸಬಲ್ಲುದು. ಏಕೆಂದರೆ ಒಬ್ಬ ಶಿಕ್ಷಕಿ ಅಥವಾ ಶಿಕ್ಷಕನ ಮುಂದೆ ನಾಳಿನ ಸಮಾಜವೇ ಪುಟ್ಟ ಕಣ್ಣುಗಳನ್ನು ಅರಳಿಸಿಕೊಂಡು ಕೂತಿರುತ್ತದೆ. ಕವಿಹೃದಯ ಅಂದರೆ ಇನ್ನೇನೂ ಅಲ್ಲ- ಅದೊಂದು ಚಿಂತನಶೀಲ ಮಾನವೀಯ ಹೃದಯ. ಶಿಕ್ಷಕರಿಗೆ ಇರಬೇಕಾದದ್ದೂ ಅದೇ. ಸಮಾಜವನ್ನು ಒಂದು ಕೂಡು ಕುಟುಂಬವಾಗಿಯೇ ಗ್ರಹಿಸುವ, ಪ್ರಕೃತಿಯನ್ನು ಒಂದು ಆದರ್ಶ ಮಾದರಿಯೆಂದು ಆರಾಧಿಸುವ, ಉತ್ತರದ ಹಂಗಿರದ ಪ್ರಶ್ನೆಗಳನ್ನು ಕೇಳುವ, ನಿತ್ಯದ ಬಾಳುವೆಯ ಹೋರಾಟದಲ್ಲಿ ಪ್ರೀತಿಯ ಅಭಯದ ಕಾವಿಗಾಗಿ ಹಂಬಲಿಸುವ ಮನೋಭೂಮಿಕೆ ಇದು. + +ಚಾಂದಿನಿಯವರ ಈ ಕವಿತೆಗಳ ಮುಖ್ಯ ಧಾಟಿ ಬಿಗುಮಾನವಿಲ್ಲದ ನಿವೇದನೆಯದು, ಅವರ ಅನುಭವಜನ್ಯ ಕವಿತೆಗಳಾದ “ಕ್ಲಾಸ್ ರೂಂ”, “ಅವನಾರು”, “ನನ್ನ ಬಾಲ್ಯ”, “ಅಣ್ಣ ಬರಲಿಲ್ಲ”-ಗಳ ಜೀವಂತಿಕೆ ಅನುಭವ ಮೂಲದಿಂದಲೇ ಬರುತ್ತದೆ. ಮುಂದಿನ ಸಾಲಿನ ಮತ್ತು ಹಿಂದಿನ ಸಾಲಿನ ಖಾಲಿ ಬೆಂಚುಗಳ ಲಕ್ಷಣಗಳು “ಕ್ಲಾಸ್ ರೂಂ” ಕವಿತೆಯನ್ನು ರೂಪಿಸಿದ ರೀತಿ, ಬಾಲ್ಯದ ಅನುಭವಗಳು ಹೊಳೆಯಲ್ಲಿ ಹಿಡಿದು ಅಲ್ಲೇ ಸುಟ್ಟು ತಿಂದ ಏಡಿಯಷ್ಟೆ ತಾಜಾ ಆಗಿ ಬರುವ ರೀತಿ ಆಪ್ತವಾಗಿದೆ. “ಅಣ್ಣ ಬರಲಿಲ್ಲ” ಕವಿತೆಗೆ ತಂತಾನೆ ಬಂದಂತಿರುವ ಜನಪದೀಯ ಗುಣ ಅದರ ವಿಷಾದಕ್ಕೆ, ಆತ್ಮಮರುಕವನ್ನು ಮೀರುವ ಸ್ಪರ್ಶವನ್ನು ಕೊಟ್ಟಿದೆ. ಇದೆ ಜಾಡಿಗೆ ಸೇರುವ “ದೀಪಮಾಲೆ” ಎನ್ನುವ ಆರ್ತ ವಚನಗಳ ಗುಚ್ಛಕ್ಕೂ ಒಂದು ಪ್ರಾಮಾಣಿಕ ಭಕ್ತಿಯ ಕಂಪನ ಇದೆ. + +‘ಭಾವಗಳ ಮರಳಲ್ಲಿ ಕಟ್ಟಿದ ಗುಬ್ಬಚ್ಚಿ ಗೂಡ’ ನ್ನು ಸೆಳೆದೊಯ್ಯುವ ಅಲೆಗಳ ಭಯವನ್ನು ಮೀರಲೆಂದೆ ಕವಿ ‘ಬಲಗಾಲಿಟ್ಟು ಬಾರೆ ನೀಲ’-ಎಂದು ಗಗನದ ನೀಲಿಯನ್ನು ಅಂತರಂಗಕ್ಕೆ ಆಹ್ವಾನಿಸುತ್ತಾರೆ. “ಭೇದಭಾವಗಳ ಅಗ್ನಿ ಕಂದಕ”-ವನ್ನು ದಾಟಲೆಂದೇ ‘ನೆಲೆಸು ಮನದಲಿ ಪ್ರೀತಿಯಾಗಿ ನೀ ದೇವಾ’ ಎಂದು “ಅನಂತ ಮಾಯೆ”ಯನ್ನು ಪ್ರಾರ್ಥಿಸುತ್ತಾರೆ. ಈ ಕವಿತೆಗಳ ‘ಉದ್ವಿಗ್ನ ಮನಸು’, ‘ಸೌಗಂಧಿಯ ಕಂಪಿ’ಗಾಗಿ ಹಂಬಲಿಸುತ್ತದೆ. ‘ಮನ್ವಂತರ’, ‘ಭೇದ’-ಕವಿತೆಗಳು ಸಮನ್ವಯದ ಸಹಬಾಳ್ವೆಗಾಗಿ ಮಿಡಿಯುತ್ತವೆ. + +(ಜಯಂತ ಕಾಯ್ಕಿಣಿ) + +ಈ ಸಂಕಲನದ ಇನ್ನು ಕೆಲವು ಕವಿತೆಗಳಲ್ಲಿ ಜೀವನ ಪ್ರೀತಿಯ ವಿಸ್ತರಣೆಯೇ ಆಗಿರುವ ಪ್ರೇಮ ಸಖ್ಯದ ರಮ್ಯ ಪ್ರಲಾಪ ಇದೆ. “ಕಾದಿರುವೆ ನಿನಗಾಗಿ ಓ ಮಾಧವ”, “ಹೊಸ ಅಧ್ಯಾಯ”, “ಮರೆಯಾದೆ ಎಲ್ಲಿ”, “ತಲ್ಲಣ”, “ರಾಧೆಯ ನಿರೀಕ್ಷೆ”-ಈ ಕವಿತೆಗಳಲ್ಲಿ ಹೊಮ್ಮುವ ಪ್ರೀತಿಗಾಗಿನ ಹಂಬಲ, ದೈನಿಕದಿಂದ ಎತ್ತುವ ದೈವಿಕ ಸೆಳೆತದ ಹಂಬಲವೇ ಆಗಿದೆ ಹೊರತು ದೈಹಿಕ ದಾಹವಾಗಿಲ್ಲ. ಅದಕ್ಕೇ ಇಲ್ಲಿ “ನೆನಹುಗಳ ಬೆರಳು ಹಿಡಿದು”-ನಡೆವ ಯತ್ನವಿದೆ. ನೆನಪುಗಳು ಒಂದು ಕಡೆ ಚಿಟ್ಟೆಗಳಾದರೆ, ಇನ್ನೊಂದು ಕಡೆ ಮಿಂಚು ಹುಳುಗಳಾಗುತ್ತವೆ ‘ಒದ್ದೆ ಭಾವಗಳಲ್ಲಿ ಮುದ್ದೆಯಾಗಿರುವ ಮನಸ್ಸಿಗೆ’-“ಬನ ಬನದಾಗಿ ಆಡಿ, ಸದ್ದಿಲ್ಲದೆ ಮುದ್ದು ಮಾಡಿ ಹೂಧೂಳಿಯಲಿ ಮಿಂದ ಪಾತರಗಿತ್ತಿ”-ಯ ಕನಸಾಗುತ್ತದೆ. ‘ಹೂಧೂಳಿ’ ಪದ ಎಷ್ಟು ಚೆನ್ನಾಗಿದೆ! ಇದು ಚಾಂದಿನಿ ಅವರ ‘ಹೂಧೂಳಿ ಮುಹೂರ್ತ’ವೇ ಸರಿ. + + + +ಇಂಥs ತನ್ಮಯಗೊಳಿಸುವ ಬದುಕಿನ ನಡುವೆಯೇ ಹಠಾತ್ತಾನೆ ಎರಗುವ ಸಾವಿನ ಕುರಿತ ಜಿಜ್ಞಾಸೆ ಚಾಂದಿನಿಯವರ “ಮರೀಚಿಕೆ”, “ಅಗಲುವ ಮುನ್ನ”, “ಅಂತಿಮ ಯಾತ್ರೆ” ಮತ್ತು “ಪಯಣ” ಈ ಕವಿತೆಗಳಲ್ಲಿ ಇದೆ. ಸಾವಿನ ಅನಿವಾರ್ಯತೆಯನ್ನು ಮನಗಾಣುತ್ತಲೇ ಬದುಕಿನ ತೀವ್ರತೆಯನ್ನು ಹೆಚ್ಚಿಸುವ ತುಡಿತ ಇಲ್ಲಿದೆ. ರಾಜಕೀಯ ಶಕ್ತಿಗಳು ತಮ್ಮ ಐಹಿಕ ಸ್ವಾರ್ಥಕ್ಕಾಗಿ ಬಹುಮುಖೀ ಸಮಾಜದ ಮಮತೆಯ ನಂಟುಗಳಲ್ಲಿ ವೈಷಮ್ಯದ ವಿಷವನ್ನು ಪಸರಿಸುತ್ತಿರುವ ಇಂದಿನ ಪರೀಕ್ಷಾ ಸಮಯದಲ್ಲಿ, ಶಿಕ್ಷಕರ ಮೇಲಿನ ಜವಾಬ್ದಾರಿ ತುಂಬ ಮಹತ್ವದ್ದಾಗಿದೆ. ಸಮಾಜಶೀಲ ಶಿಕ್ಷಕಿಯಾಗಿರುವ ಚಾಂದಿನಿ ಅವರ ಸಂವೇದನೆ ಅವರ ಕಾವ್ಯಯಾನದಿಂದ ವಿಶಾಲವಾಗಲಿ. ಈ ಯಾನದಲ್ಲಿ ಕನ್ನಡದ ವಿಶಿಷ್ಟ ಕವಿಗಳನ್ನು ಅವರು ಓದಬೇಕು. ತಕ್ಕ ಓದು ಮತ್ತು ತಹತಹಗಳು ಚಾಂದಿನಿ ಅವರ ಮುಂದಿನ ಬರವಣಿಗೆಗೆ ಹೆಚ್ಚಿನ ಕಸುವನ್ನೂ ಹಸಿವನ್ನೂ ಕೊಡಲಿ ಎಂದು ಅಕ್ಕರೆಯಿಂದ ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_118.txt b/Kenda Sampige/article_118.txt new file mode 100644 index 0000000000000000000000000000000000000000..daafe58946cfa2a4940d4d6d0f1b4ad1459db27a --- /dev/null +++ b/Kenda Sampige/article_118.txt @@ -0,0 +1,31 @@ +ಬರವಣಿಗೆಯಲ್ಲಿ ನನಗಿರುವ ಆಸಕ್ತಿಯನ್ನು ಬಲ್ಲವರು ಮತ್ತು ನನ್ನ ವಿದೇಶ ಪ್ರವಾಸಗಳ ಪರಿಚಯವಿರುವವರು ಆಗಾಗ್ಗೆ ಒಂದು ಪ್ರಶ್ನೆ ಕೇಳುತ್ತಲೇ ಇರುತ್ತಾರೆ. ನೀವೇಕೆ ಪ್ರವಾಸ ಕಥನವನ್ನು ಮತ್ತೆ ಬರೆದಿಲ್ಲವೆಂದು? 1995ರಲ್ಲಿ ಮಾನಸ ಸರೋವರಕ್ಕೆ ಪ್ರವಾಸ ಹೋಗಿ 1998ರಲ್ಲಿ ಪ್ರಕಟಿಸಿದ, ಸದ್ದು! ದೇವರು ಸ್ನಾನ ಮಾಡುತ್ತಿದ್ದಾರೆ, ಪ್ರವಾಸ ಕಥನವು ಜನಪ್ರಿಯವಾಗಿರುವುದು ಕೂಡ ಮೇಲಿನ ಪ್ರಶ್ನೆ ಕೇಳುವವರ ಮನಸ್ಸಿನಲ್ಲಿ ಇರುವುದು ನನಗೆ ಗೊತ್ತಿದೆ. 1995ರ ನಂತರವೂ ನಾನು ದೇಶದೊಳಗೆ ಮತ್ತು ಹೊರಗಡೆ ಸಾಕಷ್ಟು ಪ್ರವಾಸ ಮಾಡಿದ್ದೇನೆ. ಆದರೂ ನನಗೆ ಪ್ರವಾಸ ಕಥನವನ್ನು ಬರೆಯಬೇಕೆನಿಸಲಿಲ್ಲ. ಈಗ ಬರೆಯಬೇಕೆನಿಸಿದರೂ ಬರೆಯಬೇಕಾದರೆ ಈ ಕಾಲದ ಪ್ರವಾಸ ಕಥನದ ಸ್ವರೂಪ ಬೇರೆಯದೇ ರೀತಿಯದು ಎನಿಸಿದೆ. ಈ ಹೊಸ ಸ್ವರೂಪದ ಹುಡುಕಾಟ ಕೂಡ ಇಲ್ಲಿನ ಬರವಣಿಗೆಯ ಉದ್ದೇಶಗಳಲ್ಲೊಂದು. + +(ಕೆ. ಸತ್ಯನಾರಾಯಣ) + +ಪ್ರವಾಸದ ಸಮಯದಲ್ಲಿ ನಾನು ಯಾವ ರೀತಿಯ ಬರವಣಿಗೆಯನ್ನೂ ಮಾಡುವುದಿಲ್ಲ. ಟಿಪ್ಪಣಿಗಳನ್ನು ಕೂಡ ಮಾಡಿಕೊಳ್ಳುವುದಿಲ್ಲ. ಗಮನ ನೋಡುವುದರ ಕಡೆಗಿರಬೇಕು, ಬರವಣಿಗೆಯ ಕಡೆ ಹೋಗಬಾರದು ಎನ್ನುವ ನನ್ನ ನಂಬಿಕೆ ಕೂಡ ಇದಕ್ಕೆ ಕಾರಣ. ಅದೂ ಅಲ್ಲದೆ ಪ್ರವಾಸ ಹೋಗುವ ದೇಶಗಳ, ನಗರಗಳ ಬದುಕು ನಮ್ಮ ಬರವಣಿಗೆಗೇನು ಕಾದುಕೊಂಡು ಕೂತಿರುವುದಿಲ್ಲ. ಪ್ರವಾಸಿಗಳದ್ದು ಯಾವತ್ತೂ ಮೇಲುಮೇಲಿನ ಅನುಭವ. ಒಂದು ದೇಶದ, ನಗರದ ಬದುಕಿನ ಬಗ್ಗೆ ತಿಳಿಯಬೇಕಾದರೆ, ಕೆಲ ವರ್ಷಗಳಾದರೂ ಅಲ್ಲಿ ವಾಸ ಮಾಡಬೇಕು. ದಿನನಿತ್ಯದ ಜೀವನ, ಸಮಸ್ಯೆಗಳೊಡನೆ ಬೆರೆಯಬೇಕು. ನಾನಾ ರೀತಿಯ ಜನರನ್ನು ಭೇಟಿ ಮಾಡಬೇಕು. ಇದೆಲ್ಲ ಎಲ್ಲ ಸಂದರ್ಭದಲ್ಲೂ ಸಾಧ್ಯವಾಗುವುದಿಲ್ಲ. ಯಾವುದೇ ಗ್ರಾಮವಾಗಲೀ ನಗರವಾಗಲೀ ಪೇಕ್ಷಣೀಯ ಸ್ಥಳವಾಗಿ ಮಾತ್ರ ಅಸ್ತಿತ್ವದಲ್ಲಿರುವುದಿಲ್ಲವಷ್ಟೇ! ಅತಿಥಿಗಳಾಗಿ ನಾವು ನೋಡುತ್ತೇವೆ, ಸಂತೋಷ, ತಿಳುವಳಿಕೆ ಪಡೆಯುತ್ತೇವೆ. ಅಷ್ಟು ಸಾಕು. + +ಆದರೂ ಕೆಲವು ಅನುಭವ, ನೆನಪು, ಒಡನಾಟಗಳು ಮನಸ್ಸಿನಲ್ಲಿ ಉಳಿಯುತ್ತವೆ, ಊರುತ್ತವೆ. ಇವುಗಳಲ್ಲಿ ಕೆಲವು ಬರವಣಿಗೆಯಲ್ಲೂ ಸೇರಿಕೊಳ್ಳಬಹುದು. 2001ರಲ್ಲಿ ಥಾರ್‌ ಮರುಭೂಮಿಯ ಪ್ರವಾಸಕ್ಕೆ ಹೋದದ್ದು ಅಂತಹ ಒಂದು ಅನುಭವ. ಕೆಲವು ಮುಖ್ಯ ದೃಶ್ಯಗಳು, ಅಲ್ಲಿ ಕಂಡ ಕೆಲವರ ಮನೋಭೂಮಿಕೆ, “ಕಾಲಜಿಂಕೆ” ಕಾದಂಬರಿಯಲ್ಲಿ, “ಸನ್ನಿಧಾನ” ಕಾದಂಬರಿಯಲ್ಲಿ ಸೇರಿಕೊಂಡು ಬರವಣಿಗೆಯ ಧ್ವನಿಗೆ, ಬಹುಮುಖತೆಗೆ ಕಾರಣವಾಯಿತು. ಅಮೆರಿಕ ಪ್ರವಾಸದ, ವಾಸದ ಅನುಭವ “ಹೀಗಿಲ್ಲಿ ಅಮೆರಿಕ” ಮತ್ತು “ಅಮೆರಿಕನ್‌ ಮನೆ” ನೀಳ್ಗತೆಗಳ ಬರವಣಿಗೆಯಾಯಿತು. ಎಲ್ಲ ಸಂದರ್ಭಗಳು, ಅನುಭವಗಳ ವಿಷಯದಲ್ಲೂ ಹೀಗಾಗುವುದಿಲ್ಲ. ಹೀಗೆ ಆಗಬೇಕೆಂಬ ಹಠವೂ ನನಗಿಲ್ಲ. + +ಅಲ್ಲದೆ ನಾನು ಪ್ರವಾಸವನ್ನು ಸಾಮಾನ್ಯ ನಾಗರಿಕನ ನೆಲೆಯಲ್ಲಿ ಅನುಭವಿಸಲು ಇಷ್ಟಪಡುತ್ತೇನೆ. ಕನ್ನಡ ಲೇಖಕನೆಂಬ ದೃಷ್ಟಿಕೋನದಿಂದ ನಾನು ನೋಡುವುದಿಲ್ಲ. ಹೋದ ಕಡೆಯೆಲ್ಲ ನಾನು ಲೇಖಕನೆಂದು ಹೇಳಿಕೊಳ್ಳುವುದು, ಸ್ಥಳೀಯ ಸಂಘ-ಸಂಸ್ಥೆಗಳನ್ನು ಸಂಪರ್ಕಿಸುವುದು ನನ್ನ ಸ್ವಭಾವಕ್ಕೆ ಒಗ್ಗದ್ದು. ಅದೂ ಅಲ್ಲದೆ ಹಾಗೆಲ್ಲ ಸಂಪರ್ಕ ಸಾಧಿಸಿ ಸಂಬಂಧ ಸ್ಥಾಪಿಸಿಕೊಳ್ಳುವಷ್ಟು ಜನಪ್ರಿಯ ಅಥವಾ ಮಹತ್ವದ ಬರಹಗಾರನೂ ನಾನಲ್ಲ. ಇನ್ನೂ ಮುಖ್ಯವಾಗಿ ಸಾಮಾನ್ಯ, ಸಾಧಾರಣ ನಾಗರಿಕನ ನೆಲೆಯಲ್ಲಿ ಪ್ರವಾಸ ಮಾಡಿದಾಗಲೇ ಒಂದು ದೇಶ, ಒಂದು ಜನರೆಲ್ಲ ಚೆನ್ನಾಗಿ ಪರಿಚಯವಾಗುತ್ತದೆ ಎಂಬುದು ನನ್ನ ನಂಬಿಕೆ. ಒಂದು ಆಸಕ್ತಿ, ಒಂದು ಪ್ರವೃತ್ತಿಯವನು ನಾನು ಎಂದು ಗುರುತಿಸಿಕೊಂಡುಬಿಟ್ಟರೆ, ಹೋದ ಕಡೆಯೆಲ್ಲ ಜನ ನಮ್ಮನ್ನು ಹಾಗೇ ನೋಡುತ್ತಾರೆ. ನಾವೂ ಕೂಡ ಸ್ವಘೋಷಿತ ವ್ಯಕ್ತಿತ್ವದ ಆಯಾಮಗಳಿಗನುಗುಣವಾಗಿಯೇ ಅಲ್ಲಿಯವರನ್ನು ನೋಡುತ್ತೇವೆ. ಈ ಎರಡೂ ಅಪಾಯಗಳಿಂದ ತಪ್ಪಿಸಿಕೊಳ್ಳಲು ನನಗೆ ಇಷ್ಟ. + +ಎರಡು ಮೂರು ದಶಕಗಳ ಹಿಂದೆ ವಿದೇಶಗಳ ಬಗ್ಗೆ ಇದ್ದಷ್ಟು ಕುತೂಹಲ ಈಗ ಭಾರತದಲ್ಲಾಗಲಿ, ಮೂರನೆ ಜಗತ್ತಿನ ದೇಶಗಳಲ್ಲಾಗಲಿ ಇಲ್ಲ. ಜಾಗತೀಕರಣವೂ ಸೇರಿದಂತೆ ಬೇರೆ ಬೇರೆ ಕಾರಣಗಳಿಗಾಗಿ, ಉದ್ಯೋಗ, ವ್ಯಾಪಾರ, ಪ್ರವಾಸಗಳಿಗೆ ಬೇರೆ ದೇಶಗಳಿಗೆ ಹೋಗಿ ಬರುವವರ ಸಂಖ್ಯೆ ಹೆಚ್ಚಾಗಿದೆ. ಹೆಚ್ಚು ಅವಕಾಶಗಳು ಕೂಡ ತೆರೆದಿವೆ. ಉದಾಹರಣೆಗೆ ಕರ್ನಾಟಕದ ಪ್ರತಿ ಜಿಲ್ಲೆಯಿಂದ ಕನಿಷ್ಠ ಹತ್ತು ಕುಟುಂಬಗಳ ಸದಸ್ಯರಾದರೂ, ಬಂಧುಗಳಾದರೂ ಈಗ ಹೊರದೇಶಗಳೊಡನೆ ಬೇರೆ ಬೇರೆ ರೀತಿಯಲ್ಲಿ ಸಂಪರ್ಕ, ಒಡನಾಟ ಇಟ್ಟುಕೊಂಡಿರುತ್ತಾರೆ. ಗೂಗಲ್‌ ಸಾಮ್ರಾಜ್ಯದ ಈ ದಿನಗಳಲ್ಲಿ, ಎಲ್ಲ ದೇಶಗಳ, ಸಂಸ್ಕೃತಿಗಳ ಬಗ್ಗೆ ಈಗ ಯಾವುದೇ ಮಾಹಿತಿ, ದೃಶ್ಯವಾದರೂ ಸುಲಭವಾಗಿ ಸಿಗುತ್ತದೆ. ಬೇರೆ ದೇಶಗಳಲ್ಲಿ ನಡೆಯುವ ಕ್ರೀಡಾ ಪಂದ್ಯಗಳು, ರಾಜಕೀಯ-ಸಾಮಾಜಿಕ ಸಮ್ಮೇಳನಗಳು, ವೃತ್ತಿ ಸಂದರ್ಶನ, ಮೀಟಿಂಗುಗಳಲ್ಲಿ ನಾವೆಲ್ಲ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾಗವಹಿಸುತ್ತಲೇ ಇರುತ್ತೇವೆ. ಗೊತ್ತಿದ್ದೋ, ಗೊತ್ತಿಲ್ಲದೆಯೋ, ಇಷ್ಟವಿದ್ದೋ, ಇಲ್ಲದೆಯೋ, ಯಾವುದೇ ದೇಶದ ಬದುಕು ಕೂಡ ಈಗ ಬೇರೆ ದೇಶಗಳ, ವಿಶೇಷವಾಗಿ ಮುಂದುವರೆದ ದೇಶಗಳ ಆರ್ಥಿಕ, ಸಾಮಾಜಿಕ, ಕೈಗಾರಿಕಾ ಬದುಕಿನೊಡನೆ ತಳುಕು ಹಾಕಿಕೊಂಡಿದೆ. ಹೀಗೆ ತಳುಕು ಹಾಕಿಕೊಂಡಿರುವುದರಿಂದ, ಲಾಭ-ನಷ್ಟ, ಎಷ್ಟು, ಹೇಗೆ ಎಂಬುದು ಬೇರೆ ಪ್ರಶ್ನೆ; ಆದರೆ ಅದು ಈ ಕಾಲದ ಅನಿವಾರ‍್ಯತೆ. ಇಲ್ಲ ಹಾಗೆಂದು ನಮ್ಮನ್ನು ನಂಬಿಸಲಾಗಿದೆ. + +ಇಂತಹ ಇನ್ನೂ ಎಷ್ಟೋ ಕಾರಣಗಳಿಗಾಗಿ ಈಗ ಹಿಂದಿನಂತೆ ಮಾಹಿತಿ ಪ್ರಧಾನ, ಅನುಭವ ಪ್ರಧಾನ ಪ್ರವಾಸ ಕಥನಗಳನ್ನು ಬರೆಯುವ ಅವಶ್ಯಕತೆಯಿಲ್ಲ. ಬರೆಯುವುದು ಸಾಧ್ಯವೂ ಇಲ್ಲ. ಇನ್ನೂ ಒಂದು ಮುಖ್ಯ ಕಾರಣವೂ ಇದೆ. ಸಿಯಾಟಲ್‌ನಿಂದ ಮುಕ್ಕಾಲು ಘಂಟೆ ಪ್ರಯಾಣದ ದೂರವಿರುವ ಜಲಪಾತವನ್ನು ನೋಡಲು ಕುಟುಂಬದವರೆಲ್ಲ ಹೋಗಿದ್ದೆವು. ನಗರದ ಹೊರವಲಯ, ಕಾಡು, ಗುಡ್ಡ, ಉದ್ಯಾನವನಗಳ ಮಧ್ಯೆ ಇರುವ ಜಲಪಾತವದು. ಒಂದು ಕಾಲಕ್ಕೆ ಅಲ್ಲಿ ಬುಡಕಟ್ಟಿನವರು ಮಾತ್ರ ವಾಸಿಸುತ್ತಿದ್ದರಂತೆ. ನೀರು ಇಲ್ಲಿ ಧುಮುಕುವ ರೀತಿಯಲ್ಲಿ ಒಂದು ವಿಶಿಷ್ಟತೆಯಿದೆ. ಹಿಂದೆ ಇದು ಜನವಸತಿಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿ ಜಲಪಾತದ ಕೆಳಗಡೆ ನೀರಿನ ದಂಡೆಯ ಬಳಿ ಮನೆಗಳಿವೆ. ದೋಣಿ ಓಡಾಟಕ್ಕೆ ವ್ಯವಸ್ಥೆಯಿದೆ. ದೃಶ್ಯ ಸೌಂದರ್ಯದ ಶ್ರೀಮಂತಿಕೆಯನ್ನು ಕಣ್ಣು ತುಂಬಿಕೊಳ್ಳಲು ಕಷ್ಟ. ಯಾವ ಎತ್ತರ, ಕೋನದಿಂದ ನೋಡಿದರೂ ಪ್ರತಿ ಕ್ಷಣವೂ ಬೇರೆ ಬೇರೆಯಾಗಿ ಕಾಣುತ್ತದೆ. ನಾನು ಅಸಹಾಯಕನಾಗಿ ಎಲ್ಲ ಕಡೆಯೂ ಓಡಾಡುತ್ತಾ, ಹತ್ತಿ ಇಳಿಯುತ್ತಾ, ಮಗನಿಗೊಂದು ಪ್ರಶ್ನೆ ಕೇಳಿದೆ – ಇದನ್ನೆಲ್ಲಾ ಪದಗಳಲ್ಲಿ ಹಿಡಿಯುವಷ್ಟು ಶಕ್ತಿ ನನಗಿಲ್ಲ. ಕ್ಯಾಮೆರಾ, ವೀಡಿಯೋ ಮೂಲಕ ತೆಗೆದರೂ ಕೆಲ ಕ್ಷಣ, ಕೆಲ ದೃಶ್ಯಗಳು ಮಾತ್ರ ದಾಖಲಾಗುತ್ತವೆ. ಸುಮ್ಮನೆ ಬಂದು ಇಲ್ಲಿರುವುದೇ ನಿಜವಾದ ಪ್ರವಾಸ ಕಥನವಾಗುತ್ತದೆ, ಅಷ್ಟೇ! ನನ್ನ ಮಾತು ಕೇಳಿ ಮಗ ನಕ್ಕ. ನಿನಗೆ ಮಾತ್ರ ಹೀಗನ್ನಿಸುತ್ತಿರಬೇಕು ಅಷ್ಟೆ. ಸುತ್ತಮುತ್ತ ಸ್ವಲ್ಪ ಗಮನಿಸು. ಇಲ್ಲಿಗೆ ಬಂದಿರುವವರ ಗಮನವೆಲ್ಲ ಇದೆನ್ನೆಲ್ಲ ನೋಡಿ ಅನುಭವಿಸುವುದಕ್ಕಿಂತ ಹೆಚ್ಚಾಗಿ ಇದನ್ನು ನಾವು ನೋಡಿದೆವು ಎಂದು ಅಂದುಕೊಳ್ಳುವುದಕ್ಕೆ, ಹಾಗೆ ನೋಡಿದ್ದನ್ನು, ತಿಳಿದುಕೊಂಡದ್ದನ್ನು ಕುರಿತು ಇನ್ನೊಬ್ಬರನ್ನು ನಂಬಿಸಲು ಫೋಟೋ ತೆಗೆದು ಕಳಿಸುವುದಕ್ಕೇ ಸೀಮಿತವಾಗಿದೆ. ಈಗ ಜನರಿಗೆ ಅನುಭವಿಸುವ, ನೋಡುವ ಕುತೂಹಲವಿಲ್ಲ, ಶ್ರದ್ಧೆಯಿಲ್ಲ. ಸುಮ್ಮನೆ ಕ್ಲಿಕ್ಕಿಸುವುದು, ಕ್ಲಿಕ್ಕಿಸಿದ್ದನ್ನು ರವಾನಿಸುವುದು, ಇದರ ಕಡೆಯೇ ಗಮನ. ನೀನು ಸುಮ್ಮನೆ ಪ್ರವಾಸ ಕಥನವನ್ನು ಬರೆಯುವ ವ್ಯರ್ಥ ಪ್ರಯತ್ನ ಮಾಡಬೇಡ. ಅದು ಈ ಕಾಲದ ಪ್ರಕಾರವಲ್ಲ. ಅಲ್ಲದೆ ಇಲ್ಲಿಗೆ ಬರುವ ಪ್ರವಾಸಿಗರು ಕೂಡ ಬರುವ ಮುನ್ನ ಗೂಗಲ್‌ನಲ್ಲಿ, ಗ್ರಂಥಾಲಯಗಳಲ್ಲಿ, ಪುಸ್ತಕಗಳಲ್ಲಿ, ಯೂ-ಟ್ಯೂಬ್‌ನಲ್ಲಿ ಈ ಜಲಪಾತವನ್ನು ಕುರಿತು ಇರುವ ದೃಶ್ಯ ಮಾಹಿತಿಗಳನ್ನು ನೋಡಿಕೊಂಡೇ ಬಂದಿರುತ್ತಾರೆ. ಈಗಾಗಲೇ ನೋಡಿರುವುದನ್ನು ಇನ್ನೊಂದು ಸಲ ಖಚಿತಪಡಿಸಿಕೊಳ್ಳುತ್ತಾರೆ. ಜಗತ್ತಿನಲ್ಲಿ ಇನ್ನು ಮುಂದೆ Primary Experienceಎನ್ನುವುದೇ ಕಡಿಮೆಯಾಗುತ್ತದೆ. ಅದರ ಬಗ್ಗೆ ಆಸಕ್ತಿ ಕೂಡ. ಹೀಗಾಗಿ ಪ್ರವಾಸ ಕಥನಗಳ ಅವಶ್ಯಕತೆಯಿಲ್ಲ. + +ನನ್ನ ಮಗನ ಮಾತು ಸರಿಯಾಗಿಯೇ ಇದೆ. ಆದರೆ ಅವನು ಇದನ್ನು ಹೇಳುತ್ತಿರುವುದು ಮೂರು ವರ್ಷಗಳಿಂದ ಅವನನ್ನು ನೋಡದೇ ಇದ್ದ ತಂದೆ-ತಾಯಿ ಈಗ ಅವನನ್ನು ನೋಡಲು ಪ್ರವಾಸ ಬಂದಿರುವ ಸಂದರ್ಭದಲ್ಲಿ. ಮಗಳ ಎರಡನೆ ಹೆರಿಗೆಗೆಂದು ಹೇಗ್‌ ಪಟ್ಟಣಕ್ಕೆ ಹೋಗಿ, ಅಲ್ಲಿ ಲಾಕ್‌ಡೌನ್‌ನಲ್ಲಿ ಸಿಕ್ಕಿ ಹಾಕಿಕೊಂಡು ಮೂರು ತಿಂಗಳು ಮನೆಯಲ್ಲೇ ಕಳೆದು, ಮತ್ತೆ ವಾಪಸ್‌ ಭಾರತಕ್ಕೆ ಹೊರಡುವ ದಿನ ಸುಂಟರಗಾಳಿಗೆ ಸಿಕ್ಕಿ ಹಾಕಿಕೊಂಡು ಪ್ರಯಾಣವೆಲ್ಲ ಅಸ್ತವ್ಯಸ್ತವಾಗಿ, ಬೆಂಗಳೂರಿಗೆ ಬಂದು ವಿಶ್ರಾಂತಿ ತೆಗೆದುಕೊಳ್ಳೋಣವೆಂದರೆ, ನಿಮ್ಮನ್ನು ನೋಡಿ ಮೂರು ವರ್ಷವಾಯಿತು, ಬನ್ನಿ ಬನ್ನಿ ಎಂದು ಆತುರಾತುರವಾಗಿ ಹೊರಡಿಸಿದ್ದು ಕೂಡ ಇದೇ ಮಗನೇ! ನಮ್ಮ ಕುಟುಂಬ ಮಾತ್ರವಲ್ಲ, ನಮಗೆ ಪರಿಚತವಿರುವ ಬಂಧುಮಿತ್ರರ ಬಹುತೇಕ ಕುಟುಂಬಗಳಲ್ಲೂ, ಕೋವಿಡ್‌ನಿಂದ ಸ್ವಲ್ಪ ಬಿಡುಗಡೆ ದೊರಕಿದ ನಂತರ ದೇಶದೊಳಗೆ, ದೇಶ ದೇಶಗಳ ನಡುವೆ ಪ್ರವಾಹದ ರೀತಿಯಲ್ಲಿ ಪ್ರವಾಸದ ನಿರಂತರ ಚಟುವಟಿಕೆ. ಮಕ್ಕಳನ್ನು ಮೂರು ವರ್ಷ ನೋಡದೇ ಇರುವುದು, ಹಾಗೆ ನೋಡದೆ ಇರುವುದೇ ಸಹಜವೆಂದು ಮನಸ್ಸು ಒಪ್ಪಿಕೊಂಡ ರೀತಿ, ಅದರಿಂದೆಲ್ಲ ಯಾವ ರೀತಿಯ ಮುಜುಗರ, ಹಿಂಸೆ ಕೂಡ ಮನಸ್ಸಿಗೆ ಆಗದಿರುವುದು, ಇದರಲೆಲ್ಲ ಏನೋ ತಪ್ಪಿದೆ, ನಮ್ಮ ಬದುಕು ಎಲ್ಲೋ ಆಯ ತಪ್ಪಿದೆ ಎಂಬ ಭಾವನೆ ಕೂಡ ಬಂತು. + +ಪ್ರವಾಸ ಹೋಗದಿದ್ದರೂ ಪ್ರವಾಸದ ಭಾವನೆಗೆ, ಅನುಭವಕ್ಕೆ ಮನಸ್ಸು ಹಪಹಪಿಸುತ್ತಿರುವ ರೀತಿಯನ್ನೇ ಕೆಲವರು ದಾಖಲಿಸಿದ್ದಾರೆ. ಕೋವಿಡ್‌ ಇನ್ನೂ ಪೂರ್ಣವಾಗಿ ಇಳಿಮುಖವಾಗದಿದ್ದಾಗಲೇ ಜಗತ್ತಿನ ಬೇರೆ ಬೇರೆ ಭಾಗಗಳಲ್ಲಿ, ಯುದ್ಧ, ಹಿಂಸೆ ಕೂಡ ನಡೆಯುತ್ತಲೇ ಇತ್ತು. ಪ್ರವಾಸದ ಸ್ವರೂಪ ದಿಕ್ಕು ದೆಸೆ ಬದಲಾಯಿಸಿರುವುದರಿಂದ ಈಗ ಪ್ರವಾಸ ಬರವಣಿಗೆಯ ಸ್ವರೂಪ ಕೂಡ ಬದಲಾಗಬೇಕಾಗುವುದು. ಜಾಗತೀಕರಣದಿಂದ ಪ್ರಾರಂಭವಾಗಿ, ವಲಸೆ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಮೂಡಿರುವ ಬಿಕ್ಕಟ್ಟು, ಎಲ್ಲವನ್ನೂ ಗಣನೆಗೆ ತೆಗೆದುಕೊಂಡೇ ಹೊಸ ರೀತಿಯ ಪ್ರವಾಸ ಕಥನಗಳು ರೂಪುಗೊಳ್ಳಬಹುದೇನೋ ಎನಿಸಿತು. ಈ ಕುರಿತು ಕೂಡ ವಿಚಾರ ವಿನಿಮಯ ನಡೆಯುತ್ತಿರುವುದು ಸತ್ಯ. + + + +Best American Travel Writing ಬರವಣಿಗೆಯ ಸರಣಿ ಸಂಪಾದಕರಾದ ಜೇಸನ್‌ ವಿಲ್ಸನ್‌, ಈ ಕುರಿತು ಮಂಡಿಸಿರುವ ವಿಚಾರಗಳು ಕುತೂಹಲಕಾರಿಯಾಗಿವೆ. ಹೊಸ ರೀತಿಯ ಪ್ರವಾಸ ಬರವಣಿಗೆಯ ಸ್ವರೂಪ ಅರ್ಥಪೂರ್ಣವಾಗಿರಬೇಕಾದರೆ, ಅಂತಹ ಕಥನ ಅಂತರಂಗದ ಪಯಣ, ತಳಮಳವನ್ನು ಕುರಿತು ಕೂಡ ಇರಬೇಕು. ಇಂತಹ ತಳಮಳಕ್ಕೂ, ನಾವು ಬಾಹ್ಯ ಜಗತ್ತಿನಲ್ಲಿ ಮಾಡುವ ಪ್ರಯಾಣಕ್ಕೂ, ಪ್ರಯಾಣದ ವಿವರ, ಆಸೆ, ಆಕಾಂಕ್ಷೆಗಳಿಗೂ ಇರುವ ಸಂಬಂಧವನ್ನು, ಹೆಣಗಾಟವನ್ನು ಕೂಡ ಬರವಣಿಗೆ ಸೂಚಿಸಬೇಕು. ನಾವು ಹೋಗಲಿರುವ ದೇಶಗಳ, ಜಾಗಗಳ ಬಗ್ಗೆ ನಮಗಿದ್ದ ನಿರೀಕ್ಷೆ, ಕನಸುಗಳೇನು? ನಾವು ಅಲ್ಲಿಗೆ ತಲುಪಿದಾಗ ನಾವು ನಿರೀಕ್ಷಿಸಿದ್ದನ್ನು ಕಂಡೆವೇ? ಅದೆಲ್ಲ ಅಲ್ಲಿ ಯಾವತ್ತೂ ಹಿಂದೆ ಇರಲೇ ಇಲ್ಲವೇ? ಹಾಗಿದ್ದರೆ, ಅಲ್ಲಿಗೆ ತಲುಪಿದಾಗ ಕಾಣುವ ವಾಸ್ತವಕ್ಕೂ, ನಮ್ಮ ನಿರೀಕ್ಷೆಗೂ ಇರುವ, ಇರಬೇಕಾದ ಸಂಬಂಧ ಯಾವ ರೀತಿಯದು? ಇಷ್ಟೆಲ್ಲದರ ನಡುವೆ ಮನೆಯೊಳಗೆ, ದೇಶದೊಳಗೆ ಇರುವಾಗ ನಮ್ಮ ವ್ಯಕ್ತಿತ್ವದ ಸ್ವರೂಪ ಹೇಗಿರುತ್ತದೆ? ಪ್ರವಾಸದ ಗುರಿ ತಲುಪಿದಾಗ ಈ ವ್ಯಕ್ತಿತ್ವಕ್ಕೆ ಏನಾಗುತ್ತದೆ? ಎಂಬುದನ್ನು ಕೂಡ ಪರಿಶೀಲಿಸಬೇಕು. ಸದ್ಯಕ್ಕೆ ಇದು ಬರವಣಿಗೆಯಲ್ಲಿ ಆದರ್ಶದ ಸ್ವರೂಪವನ್ನು ಬಯಸಿದಂತೆ ಎಂದು ಮಾತ್ರ ಹೇಳಬಹುದು. + +ವಲಸಿಗರಿಗೂ, ಪ್ರವಾಸಿಗರಿಗೂ ಏನೂ ವ್ಯತ್ಯಾಸವಿಲ್ಲ. ಈವತ್ತಿನ ಪ್ರವಾಸಿಗಳು, ನಾಳಿನ ವಲಸಿಗರು. ಹಾಗಾಗಿ ವಲಸಿಗರು ಬರೆಯುವ ಕಥನಗಳಲ್ಲಿ ಯಾವಾಗಲೂ ಪ್ರವಾಸ ಕಥನದ ಅಂಶಗಳು ಇದ್ದೇ ಇರುತ್ತವೆ ಎಂಬ ಒಂದು ವಾದವೂ ಇದೆ. ಏಕೆಂದರೆ, ವಲಸಿಗರಿಗೆ ಶತಮಾನಗಳೇ ಕಳೆದರೂ ಬಿಟ್ಟು ಬಂದ ಮಾತೃಭೂಮಿಯ, ಬೇರುಗಳ ಕಲ್ಪನೆ, ಕನಸುಗಳು, ಹಂಬಲ ಬಾಧಿಸುತ್ತಲೇ ಇರುತ್ತದೆ. ಈ ಅಭಿಪ್ರಾಯಕ್ಕೆ ಉದಾಹರಣೆಯಾಗಿ ವಿ. ಎಸ್‌. ನೈಪಾಲ್‌ ಕತೆ, ಕಾದಂಬರಿಗಳ ಪ್ರಕಾರದ ಜೊತೆಗೇ ನಿರಂತರವಾಗಿ ಪ್ರವಾಸ ಕಥನಗಳನ್ನು ಬರೆಯುತ್ತಿದ್ದುದನ್ನು ಉಲ್ಲೇಖಿಸುತ್ತಾರೆ. ವಲಸಿಗರ ಬರವಣಿಗೆಗಳಲ್ಲಿ ಯಾವಾಗಲೂ Wish fulfilment ಹಂಬಲ ಇದ್ದೇ ಇರುತ್ತದೆ. ಈ ಹಂಬಲದಲ್ಲಿ ವಾಸ್ತವ ಪ್ರಜ್ಞೆ ಕೂಡ ಕಡಿಮೆಯಿರಬಹುದು. ಝುಂಪಾ ಲಹರಿಯ ಒಂದು ಕಾದಂಬರಿಯ ನಾಯಕಿ ಅಮೆರಿಕೆಗೆ ಬಂದು ಒಂದು ತಲೆಮಾರು ಕಳೆದು, ಗಂಡನ ಸಾವಿನ ನಂತರ ಮತ್ತೆ ಕಲ್ಕತ್ತೆಗೆ ಹೋಗಿ ಸಂಗೀತ ಕಲಿಯುತ್ತಾಳೆ. ಆದರೆ ನಿಜ ಜೀವನದಲ್ಲಿ ಝುಂಪಾ ಲಹರಿಯೇ ಅಮೆರಿಕದಿಂದ ಇಟಲಿಗೆ ವಲಸೆ ಹೋಗುತ್ತಾಳೆ. ಇಟಾಲಿಯನ್‌ ಭಾಷೆ ಕಲಿಯುತ್ತಾಳೆ. ಅನುವಾದಿಸುತ್ತಾಳೆ. ಮತ್ತೆ ಅಮೆರಿಕಕ್ಕೆ ವಾಪಸ್‌ ಬರುತ್ತಾಳೆ. ವಲಸೆ ಹೋಗಿ, ಇನ್ನೊಂದು ದೇಶದಲ್ಲಿ ಬೇರುಬಿಟ್ಟ ಮೇಲೂ ಬರಹಗಾರರು ತಾವು ಬಿಟ್ಟು ಬಂದ ದೇಶದ ಬದುಕು ಕೂಡ ನಿರಂತರವಾಗಿ ಹಸನಾಗಿರಬೇಕೆಂದು ಬಯಸುತ್ತಾರೆ. ಆಫ್ರಿಕಾದಿಂದ ವಲಸೆ ಬಂದ ಕಪ್ಪು ಲೇಖಕರಿಗೆ ಇದೊಂದು ದೊಡ್ಡ ಸಮಸ್ಯೆ. ಮಿತಿಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತದಿಂದ ಕಂಗಾಲಾಗಿರುವ ತಮ್ಮ ದೇಶಗಳ ಆಡಳಿತವನ್ನು ದ್ವೇಷಿಸುತ್ತಾರೆ. ತಮ್ಮ ಇತಿಹಾಸದ ಬಗ್ಗೆ ಗೌರವ, ವರ್ತಮಾನದ ಬಗ್ಗೆ ಅಸಮಾಧಾನ, ನಿರಂತರವಾಗಿ ಇವರನ್ನು ಕಾಡುತ್ತದೆ. ವಲಸಿಗರೇ ಬರೆಯಲಿ, ಪ್ರವಾಸಿಗರೇ ಬರೆಯಲ್ಲಿ, ಅವರ ಕಥನಗಳು ಈ ಅಂಶವನ್ನು ಒಳಗೊಂಡಿರಲೇಬೇಕು, ಎದುರಿಸಲೇಬೇಕು ಎಂದು ಮೀಮಾಂಸಕರು ಹೇಳುತ್ತಾರೆ. ಚಿನುವ ಅಚಿಬೆ ಮತ್ತು ಜೇಮ್ಸ್‌ ಬಾಲ್ಡ್‌ವಿನ್‌ ಇಂಥವರ ಉದಾಹರಣೆಗಳನ್ನು ನೀಡುತ್ತಾರೆ. + +ವಿವೇಕ್‌ ಬಾಲ್ಡ್‌ ಅವರ ಪ್ರಕಾರ ವಲಸಿಗರ, ಅನಿವಾಸಿಗಳ ಪ್ರತಿಯೊಂದು ತಲೆಮಾರು ಎದುರಿಸುವ ಸವಾಲುಗಳು, ಸಮಸ್ಯೆಗಳು ಭಿನ್ನವಾಗಿರುತ್ತವೆ. ಒಂದು ಖಂಡದಿಂದ ಇನ್ನೊಂದು ಖಂಡಕ್ಕೆ ಹೋದಾಗಲೂ, ಹೊಸ ಹೊಸ ಆಯಾಮಗಳು ಸೇರಿಕೊಳ್ಳುತ್ತವೆ. ಈ ಸವಾಲು, ಸಮಸ್ಯೆ, ಆಯಾಮಗಳು ಪ್ರವಾಸಿಗರ ಬರವಣಿಗೆ, ಗ್ರಹಿಕೆಯ ಮೇಲೂ ಪರಿಣಾಮ ಬೀರುತ್ತವೆ. ಇನ್ನು ಮೇಲೆ ಯಾವುದೇ ಪ್ರವಾಸ ಕಥನವು ನೂರಕ್ಕೆ ನೂರರಷ್ಟು ಪ್ರವಾಸ ಕಥನವಾಗಿರುವುದಿಲ್ಲ. ಹತ್ತು ಹಲವು ರೀತಿಯ ಸಂಸ್ಕೃತಿ ಕಥನಗಳು ಅನಾಯಾಸವಾಗಿ ಬೆರೆತುಹೋಗಿರುತ್ತವೆ. ಈ ವಿದ್ಯಮಾನಕ್ಕೆ ಅವರು ಬಾಂಗ್ಲಾ ದೇಶದಿಂದ ಬಂದ ಮುಸಲ್ಮಾನ ಕುಟುಂಬಗಳ ಉದಾಹರಣೆ ನೀಡುತ್ತಾರೆ. 1917ರಲ್ಲಿ ಏಷ್ಯ ಖಂಡದಿಂದ ಬರುವ ವಲಸಿಗರ ಮೇಲೆ ನಾನಾ ರೀತಿಯ ನಿರ್ಬಂಧಗಳನ್ನು ಹೇರಲಾಯಿತು. ಇದು 1965ರ ತನಕವೂ ಮುಂದುವರೆಯಿತು. 1965ರಲ್ಲಿ ನಿಯಮಗಳನ್ನು ಸಡಿಲಿಸಿದ್ದರಿಂದ ಭಾರತವೂ ಸೇರಿದಂತೆ ಬೇರೆ ಬೇರೆ ಏಷ್ಯ ದೇಶಗಳಿಂದ ವಲಸೆ ಪ್ರಾರಂಭವಾಯಿತು. ತಂತ್ರಜ್ಞಾನದ ಕ್ಷೇತ್ರದಲ್ಲಿ ಮೂಡಿಬಂದ ವ್ಯಾಪಕ ಸಂಖ್ಯೆಯ ಕಾರ್ಮಿಕರ ಬೇಡಿಕೆಗಳಿಗನುಗುಣವಾಗಿ ಈ ನಿಯಮಾವಳಿಗಳು ಮತ್ತಷ್ಟು ಮತ್ತಷ್ಟು ಸಡಿಲವಾಗಿ, ಈವತ್ತು ಅಮೆರಿಕದಲ್ಲಿ ನಲವತ್ತು ಲಕ್ಷಕ್ಕೂ ಮೀರಿದ ಅನಿವಾಸಿ ಭಾರತೀಯರಿದ್ದಾರೆ. ನಿರ್ಬಂಧಗಳು ಕಠಿಣವಾಗಿದ್ದಾಗ ಬಂದ ಎಲ್ಲ ವಲಸಿಗರ ಪ್ರವೇಶ, ವಾಸ, ಕೌಟುಂಬಿಕ ಜೀವನ ಯಾವುದೂ ಕಾನೂನುಬದ್ಧವಾಗಿರಲಿಲ್ಲ. ಇವರೆಲ್ಲ ಅಧಿಕೃತ ನಾಗರಿಕರಾಗಲಿಲ್ಲ. ಅಮೆರಿಕದ ನಾಗರಿಕರ ಸಮಾಜದ ಜೊತೆ ಬೆರೆಯದೆ ತಮ್ಮ ಹಾಗೆಯೇ ನುಸುಳಿಕೊಂಡ ಬಂದು ಸಮಾಜದ, ನಗರಗಳ ಅಂಚಿನಲ್ಲಿ ವಾಸಿಸುತ್ತಿದ್ದ ಬೇರೆ ಬೇರೆ ದೇಶಗಳ ವಲಸಿಗರ ಜೊತೆ ಬೆರೆತರು. ಆ ದೇಶಗಳ ವಲಸಿಗರ ಜೊತೆಯೇ ಅಂತರ್‌ ಧರ್ಮೀಯ ವಿವಾಹಗಳನ್ನು ಮಾಡಿಕೊಂಡರು. ಆದರೆ ಧಾರ್ಮಿಕವಾಗಿ ಗಂಡಸರಾಗಲೀ, ಹೆಂಗಸರಾಗಲೀ ಪರಿವರ್ತನೆ ಹೊಂದುತ್ತಿರಲಿಲ್ಲ. ಆದರೆ ಮಕ್ಕಳು, ತಾಯಂದಿರ ಧರ್ಮದ ಕಡೆಗೆ, ಅಂದರೆ ಕ್ರೈಸ್ತ ಧರ್ಮದ ಕಡೆಗೆ ಆಕರ್ಷಿತಗೊಂಡರು. ಆದರೆ ಎಲ್ಲರೂ ಒಟ್ಟಿಗೆ ಸೇರಿ, ಈದ್‌ನಂತಹ ಹಬ್ಬಗಳನ್ನು ಕೂಡ ಆಚರಿಸುತ್ತಿದ್ದರು. ಇವತ್ತು ಎಲ್ಲ ದೇಶಗಳೂ ವಲಸಿಗರ ವಿರುದ್ಧವಾಗಿವೆ. ಆದರೆ ವಲಸಿಗರು ಏಕಕಾಲಕ್ಕೆ ವಿಶ್ವ ಪ್ರಜೆಗಳೂ ಹೌದು, ತಾವು ಬಿಟ್ಟು ಬಂದ ದೇಶದ ಪ್ರಜೆಗಳೂ ಹೌದು, ಹಾಗೆಯೇ ಸ್ಥಳೀಯರೂ ಹೌದು. ಪ್ರವಾಸ ಬರುವವರಲ್ಲೂ ತಾತ್ಕಾಲಿಕವಾಗಿಯಾದರೂ ಈ ಎಲ್ಲ ಅಂಶಗಳು ಕೆಲಸ ಮಾಡುತ್ತಿರುತ್ತವೆ. ಹೊಸ ಕಾಲದ ಪ್ರವಾಸ ಕಥನಗಳು ಈ ಅಂಶಗಳನ್ನೆಲ್ಲ ಪರಿಗಣಿಸಬೇಕಾಗುತ್ತದೆ. + + + +ಈ ವಿಚಾರಗಳಿಗನುಗುಣವಾಗಿ ಪ್ರಸ್ತುತ ಬರವಣಿಗೆಯಿದೆ ಎಂದು ಹೇಳುವುದು ತಪ್ಪಾಗುತ್ತದೆ. ಈ ಪುಸ್ತಕ ಬರೆಯಬೇಕೆ, ಪ್ರಕಟಿಸಬೇಕೆ ಎಂಬುದರ ಬಗ್ಗೆ ಯೋಚಿಸುತ್ತಿದ್ದಾಗ ಮತ್ತು ಅಮೆರಿಕಕ್ಕೆ ಬರುವಾಗ, ಬಂದ ನಂತರವೂ ಈ ದೇಶದೊಳಗಡೆ ಬೇರೆ ಬೇರೆ ಕಡೆ ಓಡಾಡಿದಾಗ, ಜನರನ್ನು ಭೇಟಿ ಮಾಡುತ್ತಿದ್ದಾಗ, ಇದನ್ನೆಲ್ಲ ಬರೆದುಕೊಳ್ಳುವಾಗ, ಇಂತಹ ವಿಚಾರಗಳೆಲ್ಲ ನನ್ನನ್ನು ಬಾಧಿಸಿತು ಎಂದು ಮಾತ್ರ ಹೇಳಬಹುದು. ನಮ್ಮ ಕಾಲಕ್ಕೆ ಬೇಕಾದ ಪ್ರವಾಸ ಕಥನದ ಹೊಸ ಸ್ವರೂಪವು ಇಲ್ಲಿನ ಬರವಣಿಗೆಗೆ ದಕ್ಕಿದೆಯೇ ಎಂಬ ಪ್ರಶ್ನೆಗೆ ಓದುಗರು ಉತ್ತರ ಹೇಳಬೇಕು. ಹೊಸ ಸ್ವರೂಪದ ಅಗತ್ಯವಿದೆ ಎಂದು ಅವರಿಗೆ ಅನಿಸಿದರೂ, ನನ್ನ ಬರವಣಿಗೆ ಸಾರ್ಥಕವಾದಂತೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_119.txt b/Kenda Sampige/article_119.txt new file mode 100644 index 0000000000000000000000000000000000000000..f2ac573f4646cd0466a754f1c6730c5d44481961 --- /dev/null +++ b/Kenda Sampige/article_119.txt @@ -0,0 +1,33 @@ +ಮೂಲತಃ ಶಿವಮೊಗ್ಗದವರಾದ ಡಾ. ಪ್ರಸನ್ನ ಸಂತೆಕಡೂರು ಮೈಸೂರು ವಿ.ವಿ.ಯಿಂದ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಸುಮಾರು ಹತ್ತು ವರ್ಷಗಳ ಕಾಲ ಅಮೆರಿಕಾದಲ್ಲಿ ನೆಲೆಸಿದ್ದರು. ಅಲ್ಲಿನ ಪ್ರತಿಭಾವಂತ ಭಾರತೀಯ ವಿದ್ಯಾರ್ಥಿಗಳಿಗೆ ನೀಡಲಾಗುವ ಹೆಸರಾಂತ ರಾಮಲಿಂಗಸ್ವಾಮಿ ಫೆಲೋಶಿಪ್ಪನ್ನು ಪಡೆದು ಭಾರತಕ್ಕೆ ಹಿಂತಿರುಗಿ ಇದೀಗ ಮೈಸೂರಿನ ಜೆ.ಎಸ್.ಎಸ್.ಮೆಡಿಕಲ್ ಕಾಲೇಜಿನ ಬಯೋಕೆಮಿಸ್ಟ್ರಿ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಲಿವರ್ ಕ್ಯಾನ್ಸರಿಗೆ ಸಂಬಂಧಿಸಿದಂತೆ ಇವರ ಹಲವಾರು ಸಂಶೋಧನೆಗಳಿಗಾಗಿ ಅಮೆರಿಕದ ಹಲವಾರು ಪ್ರಶಸ್ತಿಗಳು ದೊರಕಿವೆ. ಪ್ರತಿಷ್ಠಿತ ಪತ್ರಿಕೆಗಳಲ್ಲಿ ಕ್ಯಾನ್ಸರ್ ಸಂಬಂಧಿತ ಇವರ ಅನೇಕ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಇತ್ತೀಚೆಗೆ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಸಿ.ವಿ.ರಾಮನ್ ಪ್ರಶಸ್ತಿ ದೊರಕಿದೆ. “ಮಾಯಾ ಪಂಜರ” ಮತ್ತು “ಎತ್ತಣ ಅಲ್ಲಮ ಎತ್ತಣ ರಮಣ” ದ ನಂತರದ ಕಿರು ಕಾದಂಬರಿ “ಸು” ಎಂಬತ್ತು ಪುಟಗಳ ಕಿರು ಕಾದಂಬರಿ. ಇದರ ನಂತರ “ಬಾಲಕ ಮತ್ತು ಕಾರಂತಜ್ಜ” ಮತ್ತೊಂದು ಕೃತಿಯೂ ಪ್ರಕಟವಾಗಿದೆ. + +(ಡಾ. ಪ್ರಸನ್ನ ಸಂತೇಕಡೂರು) + +“ಸು” ಕಾದಂಬರಿಯ ಕಥಾನಾಯಕ “ಸು” ಒಬ್ಬ ವಿಜ್ಞಾನಿ. ಪೂರ್ಣ ಹೆಸರು “ಝವ್ ಜೊಂಗ್ ಸು. ಚೀನಾದವನಾದ ಈತನ ಮೊದಲ ಪತ್ನಿ ಮಿಯಾನ್ ಗರ್ಭಕಂಠದ ಕ್ಯಾನ್ಸರಿನಿಂದ ತೀರಿಕೊಂಡಿದ್ದರೆ ಎರಡನೇ ಪತ್ನಿ ಟಿಬೆಟ್ಟಿನ ನೋರ್ಝೋಮ್‌ಳನ್ನು ದೊಡ್ಡ ಕ್ಯಾನ್ಸರ್ ಬಲಿ ತೆಗೆದುಕೊಂಡಿರುತ್ತದೆ. “ಸು” ನ್ಯೂಯಾರ್ಕ್‌ನ ಕೊಲಂಬಿಯಾ ವಿ.ವಿ.ಯಲ್ಲಿ ಕ್ಯಾನ್ಸರ್ ರೋಗಕ್ಕೆ ಔಷಧ ಕಂಡುಹಿಡಿಯುವ ಸಂಶೋಧನೆಯಲ್ಲಿ ನಿರತನಾಗಿ ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸುತ್ತಾ ಕೊನೆಗೆ ತಾನೇ ಕ್ಯಾನ್ಸರ್‌ಗೆ ಬಲಿಯಾಗುತ್ತಾನೆ. ಒಂದು ವಿಶೇಷ ಸಂಗತಿಯೆಂದರೆ ಈ “ಸು” ಜೊತೆ ಜೊತೆಗೆ ಕೆಲವು ವರ್ಷಗಳ ಕಾಲ ಸಂಶೋಧನೆ ಮಾಡುತ್ತಾ ಸು ಗೆ ಆತ್ಮೀಯ ಸ್ನೇಹಿತನೂ ಆಗಿಬಿಡುವ ಪ್ರಕಾಶ ಎಂಬ ಪಾತ್ರ ಬೇರಾರೂ ಅಲ್ಲ ನಮ್ಮ ಗೆಳೆಯ ಪ್ರಸನ್ನ ಅವರೇ. ಪ್ರಕಾಶನ ಪಾತ್ರದಲ್ಲಿ ಪ್ರಸನ್ನ ಹೇಳುತ್ತಾ ಹೋಗುವ ಕತೆ ಕ್ಯಾನ್ಸರ್ ಬಗ್ಗೆ, ಕ್ಯಾನ್ಸರ್ ಪೀಡಿತರ ಬಗ್ಗೆ ವಿದ್ಯಾರ್ಥಿಗಳಿಗೆ, ಸಂಶೋಧನಾಕಾರರಿಗೆ, ಜನಸಾಮಾನ್ಯರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ ಕಾದಂಬರಿ ಹೆಣೆದಿದ್ದರೂ… ಎಷ್ಟೋ ಕಡೆ ಕಾವ್ಯಾತ್ಮಕ, ಅಧ್ಯಾತ್ಮಿಕ, ತಾತ್ವಿಕ ಚಿಂತನೆಗಳು ಕಂಡು ಬಂದು ವಿಶಿಷ್ಟ ಮೆರುಗನ್ನು ನೀಡಿವೆ. ಬರಹಗಾರರ ಸೃಜನಶೀಲ ಪ್ರತಿಭೆ ಇಲ್ಲಿ ಕ್ಯಾನ್ಸರಿನಂತಹ ಸಮಸ್ಯೆಯನ್ನು ಕೊಂಚ ಹಗುರಾಗಿಸುತ್ತಲೇ ಆಳದಲ್ಲಿ ಅದರ ಗಂಭೀರತೆಯನ್ನು ಅರ್ಥಮಾಡಿಸುತ್ತಾ ಹೋಗುತ್ತಾರೆ. + +ಈ ಕಾದಂಬರಿ ಓದುವಲ್ಲಿ ಮುಖ್ಯವಾಗಿ ನನಗೆ ಕೆಲವು ಸಂಗತಿಗಳು ಮನ ಸೆಳೆದವು. “ಸು” ತನ್ನ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತನಾಗಿದ್ದ ಹೊತ್ತಿನಲ್ಲಿ ಪೆಟ್ರಿ ತಟ್ಟೆಯೊಳಗಿರುವ ಕ್ಯಾನ್ಸರ್ ಜೀವಕೋಶಗಳನ್ನು ಸೂಕ್ಷ್ಮದರ್ಶಕದಲ್ಲಿ ಪರೀಕ್ಷಿಸುವಾಗ ಆ ಜೀವಕೋಶಗಳು ಒಂದು ಸುಂದರ ಕರಿಯ ಮಹಿಳೆಯಾಗಿ ರೂಪಾಂತರಗೊಂಡು ಹೊರಗೆ ಬಂದು ಅಡುಗೆಮನೆ ಕಡೆ ಹೋಗುತ್ತಾ “ಸು” ನನ್ನು ಕೈಬೀಸಿ ಕರೆದ ದೃಶ್ಯ ಕಂಡದ್ದಾಗಿ ಸು ತನ್ನ ಗೆಳೆಯ ಪ್ರಕಾಶ ಬಂದ ಮೇಲೆ ಹೇಳುತ್ತಾನೆ. ಹಾಗೆ ಹೇಳುತ್ತಾ ಕಂಪ್ಯೂಟರ್ ತೆರೆದು ಇಂಟರ್ನೆಟ್‌ನಲ್ಲಿ ಒಂದು ಚಿತ್ರ ತೋರಿಸಿ ಇವಳನ್ನೇ ನಾನು ಕಂಡದ್ದು ಎನ್ನುತ್ತಾನೆ. ಆ ಚಿತ್ರದ ಕೆಳಗೆ “ಹೆನ್ರಿಯೆಟ್ಟಾ ಲ್ಯಾಕ್ಸ್” ಎಂದು ಬರೆದಿರುತ್ತದೆ. ಈ ಹೆಸರನ್ನು “ಹೇಲಾ” ಎನ್ನುತ್ತಾರೆ. ಹೇಲಾ ಆಫ್ರೋ ಅಮೇರಿಕನ್ ಮಹಿಳೆ. ಆಕೆ ಕ್ಯಾನ್ಸರ್‌ನಿಂದ ಸತ್ತ ಮೇಲೆ ಅವಳ ಕ್ಯಾನ್ಸರ್ ಜೀವಕೋಶಗಳನ್ನು ತೆಗೆದು ಕ್ಯಾನ್ಸರ್ ರೋಗಕ್ಕೆ ಔಷಧಿ ಕಂಡು ಹಿಡಿಯಲು ಉಪಯೋಗಿಸುತ್ತಿರುವುದರಿಂದ ನೂರು ವರ್ಷಗಳಾದರೂ ಹೇಲಾ ಜೀವಂತವಾಗಿರುವ ಮೃತ್ಯುಂಜಯೆ. ಕಾದಂಬರಿಯ ಕೊನೆಯಲ್ಲಿ “ಸು” ಕ್ಯಾನ್ಸರ್ ಪೀಡಿತನಾಗಿ ಆಸ್ಪತ್ರೆಗೆ ಸೇರಿದಾಗ ಹೇಲಾ ತನ್ನ ಕೊನೆಯ ದಿನಗಳನ್ನು ಕಳೆದ ಆಸ್ಪತ್ರೆ ಅಷ್ಟೇ ಅಲ್ಲ ರೂಮು ಸಹಾ ಒಂದೇ ಆಗಿರುವುದು ಕಾಕತಾಳೀಯವೋ ಅಥವಾ ಹೇಲಾ ಕ್ಯಾನ್ಸರ್ ಜೀವಕೋಶಗಳೊಂದಿಗೆ ಪ್ರಯೋಗಗಳನ್ನು ನಡೆಸುತ್ತಾ ಅವಳೊಂದಿಗೆ ಒಂದು ಆತ್ಮಿಕ ಸಂಬಂಧವನ್ನು ಕಟ್ಟಿಕೊಂಡ ಕಾರಣವೋ ಅಥವಾ ಜನ್ಮಾಂತರಗಳ ನಂಟಿನ ಕಾರಣವೋ…. ಇದೊಂದು ವಿಷಾದನೀಯ ಸೋಜಿಗವೆನಿಸುತ್ತದೆ. + +ಸುʼನ ಎರಡನೇ ಹೆಂಡತಿ ಸುಂದರಿ ನೋರ್ಝೋಮ್ ತೀರಿಕೊಂಡ ನಂತರ ಟಿಬೆಟಿಯನ್ ಶವ ಸಂಸ್ಕಾರ ಬೆಚ್ಚಿಬೀಳಿಸುತ್ತದೆ. ಎತ್ತರದ ಸ್ಥಳಕ್ಕೆ ಕೊಂಡೊಯ್ದು ಅವಳ ಸಹೋದರ ಶವದ ಬೆನ್ನಿನ ಮೇಲೆ ಚಾಕುವಿನಿಂದ ಏನನ್ನೋ ಬರೆದು ಹೆಣದ ಕಾಲಿನ ತೊಡೆಯಿಂದ ಮಾಂಸವನ್ನು ಕಿತ್ತು ಅಲ್ಲಿಯೇ ಇದ್ದ ರಣಹದ್ದುಗಳಿಗೆ ಎಸೆದು ತಲೆಯನ್ನು ಸುತ್ತಿಗೆಯಿಂದ ಹೊಡೆದು ಹಣೆಯ ಮೇಲೆ ಏನೋ ಬರೆದು ದೇಹವನ್ನು ಸೀಳಿ ಇತ್ತ ಮನೆಗೆ ಎಲ್ಲರೂ ಹೊರಟ ನಂತರ ನರಿಗಳು ಹಾಗೂ ರಣಹದ್ದುಗಳು ಆ ಹೆಣದ ಮೇಲೆರಗಿ ಬರೀ ಮೂಳೆಗಳು ಉಳಿದ ವಿವರಣೆ ಕೇಳಿ ತಲೆತಿರುಗಿದ್ದಂತೂ ಈ ಆಚರಣೆ ಸತ್ಯ. “ಮಾನವ ಮೂಳೆ ಮಾಂಸದ ತಡಿಕೆ” ಎನ್ನುವ ನಮ್ಮ ಅಣ್ಣಾವ್ರ ಬಾಯಲ್ಲಿ ದಾಸರ ತಾತ್ವಿಕ ಹೊಳಹುಗಳೇ ಇವೆಯೆನಿಸಿತು. + +ಕ್ಯಾನ್ಸರ್ ಸುʼನ ದೇಹವನ್ನು ತಿಂದುಹಾಕುವಾಗ ಬಹಳಷ್ಟು ಕೃಶನಾಗುವುದಲ್ಲದೇ ಅಂತಹ ತೀವ್ರ ಗಂಭೀರ ಸ್ಥಿತಿಯಲ್ಲೂ ಸಹಾ “ತಾನು ಯಾರು? ಇಲ್ಲಿ ಯಾಕಿದ್ದೇನೆ?” ಎಂಬ ಆತ್ಮವಿಮರ್ಶೆಗೆ ತೊಡಗಿಕೊಂಡು ಕೊನೆಗೆ ತಾನು ಇಡೀ ವಿಶ್ವಕ್ಕೆ ಸೇರಿದವ, ಬ್ರಹ್ಮಾಂಡದ ಅವಿಭಾಜ್ಯ ಅಂಗ. ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯೇ ನನ್ನನ್ನೂ ನಿಯಂತ್ರಿಸುತ್ತಿದೆ ಎಂಬಂತಹ ಆಲೋಚನೆಗಳು ಉಪನಿಷತ್ತಿನಲ್ಲಿ ಬರುವ “ಯಾವ ಒಂದೇ ದಾರದ ಎಳೆಗಳಿಂದ ಬಟ್ಟೆಗಳು ತಯಾರಾಗುತ್ತದೋ ಅದೇ ತರಹ ಒಂದೇ ಶಕ್ತಿ ಇಡೀ ಸೃಷ್ಟಿಯ ಚರಾಚರದಲ್ಲೂ ಇದೆ” ಎಂಬಂತಹ ಬೌದ್ಧಿಕ ಸ್ತರದಲ್ಲಿ ತನ್ನಾತ್ಮವನ್ನು ವಿಶ್ವಾತ್ಮದೊಂದಿಗೆ ಬೆಸೆದುಕೊಳ್ಳುವ ಚಿಂತನೆಗಳು ಅವನನ್ನು ದಾರ್ಶನಿಕನೆನಿಸುತ್ತದೆ. + +ರೋಗದಿಂದ ಮನಸ್ಸು ಜರ್ಜರಿತವಾದಾಗ ಭಯ ಆತಂಕಗಳು ಸಹಜವೇ… ಇಂತಹ ಪರಿಸ್ಥಿತಿಯಲ್ಲಿ “ಸು” ಅವನಿದ್ದ ಸ್ಥಳಕ್ಕೆ ಬಹಳ ಸಮೀಪದಲ್ಲಿದ್ದ ಭಾರತೀಯ ಮೂಲದ ಅಧ್ಯಾತ್ಮಿಕ ಆಶ್ರಮಕ್ಕೆ ಹೋಗಿ ಅಲ್ಲಿನ ಅಧ್ಯಾತ್ಮ ಸಾಧಕರ ಜೊತೆ ಒಡನಾಟ ಬೆಳೆಸಿಕೊಂಡು ಧ್ಯಾನ ಯೋಗ ಭಜನೆ ಮೊದಲಾವುಗಳಲ್ಲಿ ಭಾಗವಹಿಸುತ್ತಾ ಹೋದಂತೆ ಅವನಲ್ಲಿದ್ದ ಭಯಾತಂಕಗಳು ಕ್ರಮೇಣ ಕಡಿಮೆಯಾಗಿ ಮಾನಸಿಕವಾಗಿ ದೃಢಗೊಳ್ಳುತ್ತಾ ಹೋಗುತ್ತಾ “ತಾನು ಹುಯೆನ್ ತ್ಸಾಂಗ್ ಕಾಲದಲ್ಲಿ ಹುಟ್ಟಿದ್ದರೆ ಭಾರತ ಶ್ರೀಲಂಕಾಗಳಿಗೆ ಭೇಟಿ ಕೊಡಬಹುದಿತ್ತು” ಎನ್ನುವ ಆತ್ಮವಿಶ್ವಾಸದ ಮೂಲ ಅಧ್ಯಾತ್ಮವೇ ಆಗಿರುತ್ತದೆ ಎನಿಸುವುದು. + +ಹೀಗೆ ಧೈರ್ಯ ಮತ್ತು ನಿರ್ಭಯನಾದ ಸು ತನ್ನ ಲಿವರ್ ಕ್ಯಾನ್ಸರಿಗೆ ಕಾರಣವನ್ನೂ ಕಂಡುಹಿಡಿದು ಬಿಡುತ್ತಾನೆ. ಆತ ಸತ್ತ ನಂತರ ಸುʼನ ಆರೋಗ್ಯ ಸಹಾಯಕಿ ಅವನು ಬರೆದಿಟ್ಟ ಲಿವರ್ ಕ್ಯಾನ್ಸರ್‌ನ ಕಾರಣ ಕುರಿತ ವಿವರಗಳನ್ನು ಸುʼನ ಒಡನಾಡಿಯಾಗಿದ್ದ ಪ್ರಕಾಶನಿಗೆ ತಲುಪಿಸುತ್ತಾಳೆ. + + + +ಕಾದಂಬರಿಯ ಆರಂಭದಲ್ಲಿ ಪ್ರಕಾಶ “ಸು” ನನ್ನು ನೋಡಿದರೆ ಹುಯೆನ್ ತ್ಸಾಂಗ್ ನೆನಪಾಗುತ್ತಿತ್ತು ಎನ್ನುವುದು, ಕಾದಂಬರಿಯ ಅಂತ್ಯದಲ್ಲಿ ಸು ತಾನೇ ಹುಯೆನ್ ತ್ಸಾಂಗ್‌ನನ್ನು ನೆನಪಿಸಿಕೊಳ್ಳುವುದು ಒಂದು ಅಚ್ಚರಿ. ಆದರೆ ಸು ಕ್ಯಾನ್ಸರ್ ಸಂಬಂಧಿತ ಸಂಶೋಧನೆಗಳಲ್ಲಿ ಮಹಾನ್ ತಪಸ್ವಿ… ಸ್ವತಃ ತಾನೇ ರೋಗಪೀಡಿತನಾದರೂ ಅದರೊಂದಿಗೆ ಹೋರಾಡುತ್ತಲೇ ತನ್ನ ರೋಗದ ಕಾರಣ ಅರಿಯುವ ಸಂಶೋಧನೆಯ ಮಹಾಯಾತ್ರೆ ಕೈಗೊಂಡ ಹುಯೆನ್ ತ್ಸಾಂಗ್ ಎಂದೇ ಅನುಭವವಾಗುತ್ತದೆ. ಲಿವರ್ ಕ್ಯಾನ್ಸರಿಗೆ ಕಡ್ಲೆಕಾಯಿ ಹೆಚ್ಚಾಗಿ ತಿನ್ನುವುದೂ ಒಂದು ಕಾರಣ ಎಂಬ ಹೊಸ ಕಾರಣ “ಸು” ಕಂಡುಕೊಳ್ಳುತ್ತಾನೆ. ಇನ್ನೂ ಹೆಚ್ಚಿನ ವಿವರಗಳಿಗೆ ನೀವು “ಸು” ಕಾದಂಬರಿ ಓದಬೇಕು. + +ಕಾದಂಬರಿಯ ಆರಂಭದಲ್ಲಿ ಸುʼನ ಗೆಳೆಯ ಪ್ರಕಾಶ ಒಮ್ಮೆ ರಾತ್ರಿ ಕಿಟಕಿ ಹತ್ತಿರ ನಿಂತು ಹೊರಗೆ ನೋಡುವಾಗ ದೈತ್ಯಾಕಾರದ ಕೋಣದ ಮೇಲೆ ಕೂತ ದೈತ್ಯ ವ್ಯಕ್ತಿ ತನ್ನ ಕೈಲಿ ಪಾಶವನ್ನು ಹಿಡಿದು ಸುʼನನ್ನು ಓಡಿಸಿಕೊಂಡು ಬರುವುದು ಸು ಕೂಗುತ್ತಾ ತನ್ನನ್ನು ಕಾಪಾಡು ಅವನಿಂದ ಎಂದು ಬೇಡುವ ಆರ್ತನಾದ…,ಈ ಘಟನೆ ಕನಸು ಅಥವಾ ಭ್ರಮೆ ಎಂದೆಣಿಸಿದರೂ ನಂತರದ ದಿನಗಳಲ್ಲಿ ಕ್ಯಾನ್ಸರ್‌ಗೆ ಬಲಿಯಾಗುತ್ತಾ ಹೋಗಿ ಸು ತೀರಿಕೊಂಡಾಗ ಪ್ರಕಾಶ ಕಂಡದ್ದು ಕನಸಲ್ಲ ಬದಲಿಗೆ ಅದು ವಿಜ್ಞಾನದ ಭಾಷೆಯಲ್ಲಿ Intuition ಆಗಿರುತ್ತದೆ. ವಿಜ್ಞಾನಿಗಳು, ಋಷಿಗಳು ಇಬ್ಬರೂ ತಪಸ್ವಿಗಳೆ. ಕವಿಯೂ ಸಹಾ. ಇವರುಗಳು ಸದಾ ತಮ್ಮ ಅಂತರಂಗದೊಳ ಹೊಕ್ಕು ನಿರ್ದಿಷ್ಟ ವಿಷಯಗಳನ್ನು ಧ್ಯಾನಿಸುವಾಗ ಒಂದು ಹೊಸ ಮಾರ್ಗ ಕಾರಣ ಅಥವಾ ಹೊಳಹುಗಳನ್ನು ಕಂಡು ಹಿಡಿಯುವ ಮನಸ್ಸಿನ ಒಂದು ಅದ್ಭುತ ಶಕ್ತಿ. ಆರ್ಕಿಮಿಡೀಸ್ ಅಥವಾ ಗೌತಮ ಬುದ್ಧ ಇವರೆಲ್ಲಾ ಇದೇ ಮಾರ್ಗದಲ್ಲಿ ಜೀವನಕ್ಕೆ ಹೊಸ ಹೊಳಹುಗಳನ್ನು ಕೊಟ್ಟವರು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ ಕವಿವರ್ಯರು ಕಂಡುಕೊಂಡದ್ದು ಸಹಾ ಇದೇ ಇಂಟ್ಯೂಷನ್‌ನಿಂದಲೇ ಎನ್ನಬಹುದೇನೋ. + +ಪ್ರಕಾಶ ಮೈಸೂರಿನ ವಿಶ್ವವಿದ್ಯಾನಿಲಯದಲ್ಲಿ ಓದುವಾಗ ಟಿಬೆಟ್ ವಿದ್ಯಾರ್ಥಿಗಳ ಸ್ನೇಹ ದೊರೆಯುತ್ತದೆ. ಮೈಸೂರಿಂದ ಕೆಲವೇ ಕಿ.ಮೀ. ಗಳ ದೂರದಲ್ಲಿರುವ ಬೈಲುಕುಪ್ಪೆ ಗ್ರಾಮ ಟಿಬೆಟಿಯನ್ ನಿರಾಶ್ರತರ ನೆಲ. ಇಲ್ಲಿ ಅಂಗಡಿ ಆಸ್ಪತ್ರೆ ಬ್ಯಾಂಕ್ ಶಾಲೆ ಕಾಲೇಜು ಹೊಲ ಗದ್ದೆ ಎಲ್ಲದರಲ್ಲೂ ಟಿಬೆಟಿಯನ್ ಜನರೇ ಕೆಲಸ ಮಾಡುತ್ತಾ ಅಲ್ಲಿಯೇ ವಾಸವಾಗಿದ್ದಾರೆ. ಚೀನಾ ಟಿಬೆಟನ್ನು ಆಕ್ರಮಿಸಿಕೊಂಡಾಗ ಅಲ್ಲಿಂದ ಭಾರತಕ್ಕೆ ಬಂದ ನಿರಾಶ್ರಿತರಿಗೆ ಸಿಕ್ಕ ಭೂಮಿಯಲ್ಲಿ ಒಂದು ಸುಂದರ ಗ್ರಾಮ ನಿರ್ಮಿಸಿಕೊಂಡಿದ್ದು, ಬೈಲುಕುಪ್ಪೆಯ ಸುವರ್ಣ ದೇಗುಲ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಇಂತಹ ಟಿಬೆಟಿಯನ್ ಸ್ನೇಹಿತರ ಸ್ನೇಹದ ಕಾರಣ ಪ್ರಕಾಶ ಒಮ್ಮೆ ಬೈಲುಕುಪ್ಪೆಗೆ ಹೋಗಿ ಅವರ ಮನೆಯ ಆತಿಥ್ಯ ಸ್ವೀಕರಿಸುವಾಗ ಅವರ ಮನೆಯ ಇಬ್ಬರು ಬೆನ್ನು ಬಾಗಿದ ವಯಸ್ಸಾದ ಮುದುಕಿಯರು ವಾಕಿಂಗ್ ಹೋಗ್ತೇವೆ ಎಂದು ಹೇಳಿ ದಡದಡ ಓಡುವುದನ್ನು ಕಂಡು ಸ್ನೇಹಿತರಲ್ಲಿ ಪ್ರಶ್ನಿಸುತ್ತಾರೆ. ಆಗ ಆ ಟಿಬೆಟಿಯನ್ ಸ್ನೇಹಿತರು ಮುಂದಿನ ದಿನಗಳಲ್ಲಿ ಚೀನಾದ ಅತಿಕ್ರಮಣದಿಂದ ಟಿಬೆಟ್ ಸ್ವತಂತ್ರವಾದರೆ ತಮ್ಮ ದೇಶಕ್ಕೆ ಕಾಲ್ನಡಿಗೆಯಲ್ಲಿ ಹೋಗುವ ಆಶಾವಾದವಿರಿಸಿಕೊಂಡಿರುವ ಈ ಮುದುಕಿಯರು ಈಗಿನಿಂದಲೇ ಓಡಿ ಓಡಿ ತಮ್ಮ ಕಾಲುಗಳನ್ನು ಬಲಗೊಳ್ಳಿಸಿಕೊಳ್ಳುತ್ತಿದ್ದಾರೆ ಎನ್ನುವ ವಿಷಯ ತಿಳಿದು ಪ್ರಕಾಶರೊಂದಿಗೆ ನಾನೂ ಅಚ್ಚರಿಗೊಂಡೆ. ಆ ಮುದುಕಿಯರ ಆತ್ಮವಿಶ್ವಾಸ ಸಂಕಲ್ಪಬಲ ಮತ್ತು ಸಕಾರಾತ್ಮಕ ಚಿಂತನೆಗೆ ಹ್ಯಾಟ್ಸಾಫ್ ಎಂದುಕೊಂಡೆ ಮನಸ್ಸಿನಲ್ಲೇ. + +ಪ್ರಕಾಶ ಟಿಬೆಟಿಯನ್ ಮಿತ್ರರನ್ನು ಕೇಳುತ್ತಾನೆ “ನಿಮ್ಮ ದೇಶ ಸ್ವತಂತ್ರವಾದ ನಂತರ ನಿಮ್ಮ ನಡೆ ಏನು?” ಎಂಬ ಪ್ರಶ್ನೆಗೆ ಅವರಿತ್ತ ಉತ್ತರ ತಾಯ್ನಾಡಿನಲ್ಲಿ ಹುಟ್ಟಿ ಬೆಳೆದ ಪ್ರತಿಯೊಬ್ಬ ದೇಶವಾಸಿಯೂ ಆತ್ಮವಿಶ್ಲೇಷಣೆ ಮಾಡಿಕೊಳ್ಳಬೇಕೇನೋ ಎನಿಸಿತು. ತಾಯ್ನೆಲದ ಮಣ್ಣಿನ ಘಮ ಹೊತ್ತ ಉತ್ತರ ಹೀಗಿದೆ.”ಟಿಬೆಟ್ ನಮ್ಮ‌ ಮಾತೃಭೂಮಿ ನಿಜ, ಅದು ಸ್ವತಂತ್ರಗೊಳ್ಳಬೇಕೆನ್ನುವುದು ನಮ್ಮ ಆಶಯವೂ, ಗುರಿಯೂ ಹೌದು. ಭಾರತ ನಮಗೆ ಎರಡನೇ ಮಾತೃಭೂಮಿ ಈ ಭೂಮಿಗೆ ನಾವು ಯಾವತ್ತೂ ಚಿರ ಋಣಿಗಳಾಗಿರುತ್ತೇವೆ.” ಎಂದು ಸ್ವಲ್ಪ ಮಣ್ಣನ್ನು ತನ್ನ‌ ಕೈಯಲ್ಲಿ ಭೂಮಿಯಿಂದ ತೆಗೆದುಕೊಂಡು ಕೆಳಗೆ ಹಾಕಿದ. + +ಕೊನೆಗೂ ತಮ್ಮ ಪ್ರೀತಿ ಮತ್ತು ಬದುಕು ಈ‌ ಮಣ್ಣಿನ ಮೇಲೆಯೇ ಎಂಬಂತೆ ಅವನು ಕೊಟ್ಟ ಉತ್ತರದಿಂದ ಪ್ರಕಾಶನಿಗೆ ಟಿಬೆಟಿಯನ್ ಸ್ನೇಹಿತರೊಂದಿಗೆ ಮತ್ತಷ್ಟು ಆತ್ಮೀಯತೆ ಬೆಳೆಯುತ್ತದೆ. + + + +ಒಟ್ಟಿನಲ್ಲಿ ವಿಜ್ಞಾನ, ತತ್ವಜ್ಞಾನಗಳನ್ನು ರೂಪಕಗಳೊಂದಿಗೆ ಒಡಲಲ್ಲಿರಿಸಿಕೊಂಡೂ ಜನಸಾಮಾನ್ಯರೆಲ್ಲರಿಗೂ ಅರ್ಥವಾಗುವ ಸರಳ ಭಾಷೆಯಲ್ಲಿ, ಶೈಲಿಯಲ್ಲಿ ಪ್ರಸನ್ನ “ಸು” ಕಾದಂಬರಿ ಬರೆದಿದ್ದಾರೆ. + +ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್.  ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ.  “ಹುಟ್ಟಲಿರುವ ನಾಳೆಗಾಗಿ”, “ಗೋಡೆಗಿಡ”, “ನದಿ ಧ್ಯಾನದಲ್ಲಿದೆ” (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು “ಸ್ಪರ್ಶ ಶಿಲೆ” ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ‌ ಹವ್ಯಾಸಗಳು. \ No newline at end of file diff --git a/Kenda Sampige/article_12.txt b/Kenda Sampige/article_12.txt new file mode 100644 index 0000000000000000000000000000000000000000..74b850765d0de3efc0338036b95b7d766b647cce --- /dev/null +++ b/Kenda Sampige/article_12.txt @@ -0,0 +1,43 @@ +ಅಂದು “ದೂರದರ್ಶನ ವೀಕ್ಷಣೆ ಕಲಿಕೆಗೆ ಪೂರಕವೋ? ಮಾರಕವೋ? ಎಂಬ ವಿಷಯದ ಬಗ್ಗೆ ಡಿಬೆಟ್ ನಡೆಯುತ್ತಿತ್ತು. ಹೆಣ್ಣು ಮಕ್ಕಳು ‘ದೂರದರ್ಶನ ವೀಕ್ಷಣೆ ಕಲಿಕೆಗೆ ಮಾರಕ’ ಎಂದು ವಾದ ಮಂಡಿಸುತ್ತಿದ್ದರು. ಗಂಡು ಮಕ್ಕಳು ಇಲ್ಲ ಇಲ್ಲ ‘ದೂರದರ್ಶನ ಕಲಿಕೆಗೆ ಪೂರಕ’ ಎಂದು ವಾದಿಸುತ್ತಿದ್ದರು. ಈ ಮಕ್ಕಳ ವಾದ ಪ್ರತಿವಾದದ ಬಿಸಿ ಬೇಸಿಗೆ ಕಾಲದ ಬೇಗುದಿಯನ್ನು ಮತ್ತಷ್ಟು ಹೆಚ್ಚಿಸಿದ್ದು ತರಗತಿಯಲ್ಲಿ ಇವೆಲ್ಲವನ್ನು ವೀಕ್ಷಣೆ ಮಾಡುತ್ತಿದ್ದ ನನ್ನ ಅನುಭವಕ್ಕೆ ಬಾರದಿರಲಿಲ್ಲ. + +ಈ ದೂರದರ್ಶನ ವೀಕ್ಷಣೆ ಸರಿಯೋ ತಪ್ಪೋ ಎಂಬ ತೀರ್ಪಿಗಿಂತ ನನ್ನ ಮಕ್ಕಳು ವಿಷಯವನ್ನು ಎಷ್ಟು ಆಯಾಮಗಳಲ್ಲಿ ಚಿಂತಿಸುತ್ತಾರೆ ಎಂಬ ಅಚ್ಚರಿ ಮೂಡಿತು. ಆಗಾಗ ವಾದಗಳು ವಿವಾದಗಳಿಗೆ ತಿರುಗುತ್ತಿದ್ದವು. ಆಗೆಲ್ಲ ನಾನು ಮಕ್ಕಳಿಗೆ ವಿಷಯಾಂತರ ಆಗದಂತೆ, ವಸ್ತುವಿಗಿಂತ ವ್ಯಕ್ತಿಯನ್ನು ಟಾರ್ಗೆಟ್ ಮಾಡದಂತೆ ಎಚ್ಚರಿಕೆ ನೀಡುತ್ತಿದ್ದೆ‌ನು. + +ಹುಡುಗಿಯರು ತಮ್ಮ ವಿಚಾರಗಳನ್ನು ವ್ಯಕ್ತಪಡಿಸುವಾಗ ಆ ವಿಷಯ ನನ್ನ ಹೃದಯ ತಟ್ಟಿದರೆ ಚಪ್ಪಾಳೆ ಹಾಕಿ ಅಭಿನಂದಿಸುತ್ತಿದ್ದೆ. ಆಗ ಗಂಡು ಮಕ್ಕಳು “ಹೋಗಿ ಮಿಸ್, ನೀವು ಯಾವಾಗಲೂ ಹುಡುಗಿಯರ ಪರ ಎಂದು ಹುಸಿ ಮುನಿಸು ತೋರುತ್ತಿದ್ದರು. ಇಲ್ಲ ಕಣ್ರೋ ಮಕ್ಕಳಾ ನಾನು ನಿಮ್ಮಿಬ್ಬರ ಪರವು ಇರುವೆ ಎಂದು ಹೇಳುತ್ತಾ ಅದನ್ನು ಸಮರ್ಥಿಸಲು ಅವರು ಹೇಳಿದ ಪಾಯಿಂಟ್‌ಗಳಿಗೂ ಚಪ್ಪಾಳೆ ತಟ್ಟಿ ಬೆಂಬಲಿಸುವುದನ್ನು ಮರೆಯಲಿಲ್ಲ.ಅಂತಹ ವಿಚಾರಗಳು ಮಕ್ಕಳ ಮನಸ್ಸಿನಲ್ಲಿ ಉಳಿಯದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿ. ಹಾಗೆ ನಾನು ಇವರನ್ನು ಪ್ರೋತ್ಸಾಹಿಸುತ್ತಾ ಡಿಬೆಟ್ ಮುಗಿಸಿದೆ. ಕೊನೆಗೆ ಮಕ್ಕಳು ಹೇಳಿದ ದೂರದರ್ಶನದ ಅನುಕೂಲಗಳು ಮತ್ತು ಅನಾನೂಕೂಲ ಎರಡನ್ನು ವಿಶ್ಲೇಷಿಸುತ್ತಾ ಪ್ರತಿಯೊಂದರಲ್ಲೂ ಒಳಿತು ಕೆಡುಕು ಎರಡು ಇರುತ್ತವೆ. ನಾವು ಅವುಗಳಲ್ಲಿ ಇರುವ ಧನಾತ್ಮಕ ಅಂಶಗಳನ್ನು ಬೆಂಬಲಿಸುತ್ತಾ, ಅವುಗಳನ್ನು ಪಾಲಿಸುತ್ತಾ ಹಾಡಬೇಕೆಂದು ಹೇಳಿದೆ. + +ಇಂತಹ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸುವುದರಿಂದ ಅವರಿಗೆ ಸ್ಟೇಜ್ ಫಿಯರ್ ಕಡಿಮೆಯಾಗಿ ಆತ್ಮವಿಶ್ವಾಸ ಮೂಡುತ್ತದೆ. ಯಾವುದೇ ಒಂದು ವಿಷಯದ ಸುತ್ತಲಿನ ಸಾಧಕಬಾದಕಗಳ ಬಗ್ಗೆ ಚಿಂತಿಸುತ್ತಾರೆ. ಸರಿ ತಪ್ಪುಗಳ ಅರಿವು ಮೂಡುತ್ತದೆ. ತಾವು ಗೆಲ್ಲಲೇಬೇಕು ಎಂಬ ಆರೋಗ್ಯಯುತ ಸ್ಪರ್ಧೆಯಲ್ಲಿ ಹೊಸ ಹುಡುಕಾಟದಲ್ಲಿ ತೊಡಗುವರು. ಇದು ಇಂದಿನ ಶಿಕ್ಷಣದ ತುರ್ತು ಕೂಡ ಹೌದು. + +ಮತ್ತೊಂದು ದಿನ ನಾಟಕ ಅಭಿನಯ ಮಾಡಿಸಿದೆ. ಪಠ್ಯಪುಸ್ತಕದ ಸಂಭಾಷಣೆ ರೂಪದ ಪಾಠ ನೀಡಿ ನಾಟಕ ಅಭಿನಯ ಮಾಡುವ ಚಟುವಟಿಕೆ ನೀಡಿದೆನು. ಅದರಲ್ಲಿ ಗಂಡು ಮತ್ತು ಹೆಣ್ಣು ಪಾತ್ರಗಳೆರಡು ಇದ್ದವು. ಹೆಣ್ಣು ಮಕ್ಕಳು ಗಂಡು ಪಾತ್ರವನ್ನು, ಗಂಡು ಮಕ್ಕಳು ಗಂಡು ಪಾತ್ರವನ್ನು ಗಂಡು ಮಕ್ಕಳು ಮಾಡಿ ಎಂದೆನು. ಆಗ ಹುಡುಗಿಯರೆಲ್ಲ “ಇಲ್ಲ ಮಿಸ್, ನಾವು ಅವರ ಜೊತೆಯಲ್ಲಿ ಪಾತ್ರ ಮಾಡುವುದಿಲ್ಲ. ನಾವೇ ಬೇಕಾದರೆ ಪ್ರತ್ಯೇಕವಾಗಿ ಗಂಡು ಹೆಣ್ಣು ಎರಡು ಪಾತ್ರಗಳನ್ನು ಮಾಡುತ್ತೇವೆ” ಎಂದರು. ಆಗ ಹುಡುಗರು ಹಿಂದೆ ಬೀಳಲಿಲ್ಲ ಹೌದು ಮಿಸ್ ನಾವು ಅಷ್ಟೇ, ಈ ಹುಡುಗಿಯರನ್ನು ಸೇರಿಸಿಕೊಳ್ಳುವುದಿಲ್ಲ ನಾವೇ ಹುಡುಗಿಯರ ಪಾತ್ರವನ್ನು ಮಾಡುತ್ತೇವೆ ಎಂದರು. + +ಇಷ್ಟು ಚಿಕ್ಕ ವಯಸ್ಸಿನಲ್ಲಿ ಈ ತರ ಬೇಧ ಭಾವ ಏಕೆ ಎಂದು ಪ್ರಶ್ನಿಸಿದೆ. ಆಗ ಹುಡುಗಿಯರು ಹೇಳಿದ್ದು ಮಿಸ್ ಹಿಂದೆ ಒಮ್ಮೆ ನಮ್ಮ ಊರಿನಲ್ಲಿ ಹುಡುಗರು ಹುಡುಗಿಯರು ಸೇರಿ ನಾಟಕ ಮಾಡಿದ್ದರು. ಆಗ ಹೆಂಡತಿ ಪಾತ್ರ ಮಾಡಿದ ಹುಡುಗಿಯನ್ನು ಊರಿನವರೆಲ್ಲ ನಿನ್ನ ಗಂಡ ಎಲ್ಲಿ? ನಿನ್ನ ಗಂಡ ಚೆನ್ನಾಗಿದ್ದಾನಾ? ಎಂದು ತಮಾಷೆ ಮಾಡುತ್ತಾ ಹುಸಿ ಹುಸಿ ನಗುತ್ತಿದ್ದರು. ಆ ವಿಷಯ ಅವರ ಅಪ್ಪನಿಗೆ ಗೊತ್ತಾಗಿ ಆ ಅಕ್ಕನಿಗೆ ಚೆನ್ನಾಗಿ ಥಳಿಸಿದರು ಎಂದು ಅಂದರು. ಈ ಮಾತು ಕೇಳಿ ಸುಧಾರಿಸದ ನಮ್ಮ ಅಸ್ವಸ್ಥ ಸಮಾಜದ ಪೊರೆ ಬಂದ ಕಣ್ಣುಗಳಿಗೆ ಮನಸ್ಸು ಕಣ್ಣೀರಾಯಿತು. ಗಂಡು ಹೆಣ್ಣು ಇಬ್ಬರು ಪಾತ್ರಧಾರಿಗಳಾದರೂ ಸಮಾಜ ಹೆಣ್ಣನ್ನು ಮಾತ್ರ ದೂಷಿಸುವುದಕ್ಕೆ ಮನಸ್ಸು ಖೇದಗೊಂಡಿತು. ಈ ವಯಸ್ಸಿನಲ್ಲಿ ಅವರಿಗೆ ಅದರ ಕುರಿತು ಏನೆ ಬೋಧೆನೆ ಮಾಡಿದರು ಅರ್ಥವಾಗುವುದಿಲ್ಲ ಎಂದು ಅರಿತ ನಾನು ಮಕ್ಕಳ ಇಚ್ಛೆಯಂತೆ ನಾಟಕ ಮಾಡಲು ಹೇಳಿದೆ. ಇಬ್ಬರು ಎರಡು ಪಾಠಗಳನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ನಾಟಕ ಪ್ರಾಕ್ಟೀಸ್ ಮಾಡಿದರು. ಆ ನಾಟಕವನ್ನು ಗಣರಾಜ್ಯೋತ್ಸವ ದಿನಾಚರಣೆಯ ವೇದಿಕೆಯಲ್ಲಿ ಅಭಿನಯಿಸಿದರು. ನಿಜಕ್ಕೂ ನಾಟಕ ನೋಡಿ ನಾವು, ಕಾರ್ಯಕ್ರಮಕ್ಕೆ ಬಂದಿದ್ದ ಪೋಷಕರು, ಎಸ್ ಡಿ ಎಮ್ ಸಿ ಯವರು, ಗ್ರಾಮಸ್ಥರು ಭಾವುಕರಾದರು. ಸ್ತ್ರೀ ಪಾತ್ರಗಳಿಗೆ ಗಂಡು ಮಕ್ಕಳು, ಗಂಡು ಪಾತ್ರಗಳಿಗೆ ಹೆಣ್ಣು ಮಕ್ಕಳು ಅದೆಷ್ಟು ಜೀವ ತುಂಬಿದರು ಎಂದರೇ ಅವರು ವೇಷಭೂಷಣಗಳಲ್ಲಿ ವಿರುದ್ಧ ಲಿಂಗಗಳು ಅಭಿನಯಿಸುತ್ತಿದ್ದಾರೆ ಎಂದು ತಿಳಿಯಲು ಆಗಲಿಲ್ಲ. ಅಷ್ಟು ಸೊಗಸಾಗಿ ಸ್ತ್ರೀ ಮತ್ತು ಪುರುಷ ಸಂವೇದನೆಗಳನ್ನು ಮಕ್ಕಳು ಅನುಸಂದಾನಿಸಿದ್ದರು. + +ಇಂತಹ ನಾಟಕಗಳು ಮಕ್ಕಳ ಭಾಷಾ ಕಲಿಕೆಗೆ ಹಾಗೂ ಮೌಲ್ಯಮಾಪನಕ್ಕೆ ತುಂಬಾ ಸೂಕ್ತವಾದ ತಂತ್ರಗಳಾಗಿವೆ. ಇಲ್ಲಿ ಮಕ್ಕಳು ದೈರ್ಯ ಸಾಹಸದ ಪ್ರವೃತ್ತಿ ಬೆಳೆಸಿಕೊಳ್ಳುವರು. ಹತ್ತಾರು ಜನರ ಮುಂದೆ ಮಾತಾಡುವರು. ಆಗ ಅವರ ಮೌಖಿಕ ಅಭಿವ್ಯಕ್ತಿ ಬೆಳವಣಿಗೆ ಹೊಂದುವುದು. ಸಂಭಾಷಣೆಗಳನ್ನು ದ್ವನಿಯ ಏರಿಳಿತದೊಂದಿಗೆ, ಸೂಕ್ತ ಸ್ವರಬಾರಕ್ಕೆ ಅನುಗುಣವಾಗಿ ಹೇಳುವರು. ಆಂಗಿಕ ಹಾವ ಭಾವಗಳನ್ನು ಕಲಿಯುವರು. + +ಯೋಜನೆಗಳ ತಯಾರಿ, ನಿಯೋಜಿತ ಕಾರ್ಯಗಳನ್ನು ನೀಡಿದಾಗ ಮಕ್ಕಳ ಪರಸ್ಪರ ಸಹಕಾರ, ಹೊಂದಾಣಿಕೆ ಮನೋಭಾವ, ಗುಂಪಿನಲ್ಲಿನ ವರ್ತನೆಗಳು ವಿಶೇಷವಾಗಿ ಗಮನ ಸೆಳೆಯುತ್ತವೆ. ಇವು ಈಗ ಕೇವಲ ಮನೋರಂಜನೆ ಅಥವಾ ಪೂರಕ ಚಟುವಟಿಕೆಗಳಾಗಿ ಉಳಿದಿಲ್ಲ. ಇವು ಮಕ್ಕಳ ಕಲಿಕಾ ಪ್ರಕ್ರಿಯೆಯಲ್ಲಿ ಮೌಲ್ಯ ಮಾಪನ ತಂತ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಚಿತ್ರಕಲೆ, ಪದ್ಯಗಳ ಹಾಡುಗಾರಿಕೆ ಒಂದು ರೀತಿಯಲ್ಲಿ ಮಕ್ಕಳನ್ನು ಅಳೆದರೆ, ಪ್ರಯೋಗಗಳು, ಕಲಿಕೋಪಕರಣ ತಯಾರಿಕೆಗಳು ಮಗುವಿನ ಸೃಜನಶೀಲತೆಯನ್ನು ಪ್ರತಿಫಲಿಸುತ್ತವೆ. + + + +ಶಾಲೆಯಲ್ಲಿ ಕನ್ನಡದ ಕೋಟ್ಯಧಿಪತಿ ಮಾದರಿಯಲ್ಲಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ ಹೊಸತನ ಇರಲೆಂದು ಶಿಕ್ಷಕರು ಮಕ್ಕಳನ್ನು ಪ್ರಶ್ನಿಸುವುದು, ಮಕ್ಕಳು ಶಿಕ್ಷಕರನ್ನ ಪ್ರಶ್ನಿಸುವುದು ವಿಶೇಷವಾಗಿತ್ತು. ನಿಗದಿತ ಪಾಠಕ್ಕೆ ಸಂಬಂಧಿಸಿದಂತೆ ಅವರವರ ಪ್ರಶ್ನೆ ಪತ್ರಿಕೆಗಳನ್ನ ಅವರೇ ತಯಾರು ಮಾಡಿಕೊಳ್ಳಬೇಕು. ಇದರಿಂದ ಮಕ್ಕಳಲ್ಲಿ ಪ್ರಶ್ನಿಸುವ ಹಾಗೂ ಪ್ರಶ್ನೆಗಳನ್ನು ತಯಾರಿಸುವ ಕೌಶಲ್ಯವನ್ನ ಬೆಳೆಸುವುದು ಇದರ ಪ್ರಮುಖ ಆಶಯವಾಗಿತ್ತು. ಇಂದಿನ ಮಕ್ಕಳು ಶಿಕ್ಷಕರನ್ನು ಪ್ರಶ್ನಿಸುತ್ತಿದ್ದಾರೆ. ಹಿಂದೆಲ್ಲ ಗುರುಗಳನ್ನು ಪ್ರಶ್ನೆ ಮಾಡುವಂತಿರಲಿಲ್ಲ. ಹಾಗೇನಾದರೂ ಟೀಚರನ್ನು ಪ್ರಶ್ನಿಸಿದರೆ ಅವನು ಆ ತರಗತಿಯಲ್ಲಿ ಒಬ್ಬ ಅವಿಧೇಯ ವಿದ್ಯಾರ್ಥಿ, ನೈತಿಕ ಮೌಲ್ಯಗಳೇ ಇಲ್ಲದವನು ಎಂಬ ಭಾವವಿತ್ತು. ಅದರಿಂದ ಸಿಸಿಇ ಮೌಲ್ಯ ಮಾಪನ ಪ್ರಕ್ರಿಯೆ ಬಂದ ಮೇಲೆ ಮಕ್ಕಳು ಪ್ರಶ್ನಿಸುವುದನ್ನು ಕಲಿಯುವುದೇ ಒಂದು ಕೌಶಲ್ಯವಾಗಿದೆ. ‘ಪ್ರಶ್ನೆಗಳು ಅನೇಕ ಸಮಸ್ಯೆಗಳ, ಸವಾಲುಗಳ, ಸಾಧನೆಗಳ ಕೀಲಿ ಕೈ’ ಗಳಾಗಿವೆ ಇಂತಹ ಹತ್ತು ಹಲವು ಅವಕಾಶಗಳು ಸಿಸಿಇ ಕೊಡುಗೆಗಳಾಗಿವೆ. ಇದು ಸಾಧ್ಯವಾಗಿರುವುದು ಹೊಸ ಮೌಲ್ಯಮಾಪನ ಪದ್ಧತಿಯಾದ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ. + +ಸಿಸಿಇ ಯೋಜನೆಗೂ ಪೂರ್ವ ನಾವೆಲ್ಲ ಓದುವಾಗ ಇದ್ದ ಪರೀಕ್ಷಾ ಕ್ರಮಗಳ ಬಗ್ಗೆ ಯೋಚಿಸೋಣ. ಆಗೆಲ್ಲ ಅಂಕಗಳೇ ಪ್ರಧಾನವಾಗಿದ್ದವು. ಲಿಖಿತ ಮತ್ತು ಮೌಖಿಕ ಪರೀಕ್ಷೆಗಳೆರಡು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ನಿರ್ಧರಿಸುತ್ತಿದ್ದವು. ಆಗ ನಾವೆಲ್ಲ ಪಡುತ್ತಿದ್ದ ಕಷ್ಟ ಅಷ್ಟು ಇಷ್ಟಲ್ಲ. ಕಂಠಪಾಠ ಮಾಡುವುದು, ಪರೀಕ್ಷೆಗಳಲ್ಲಿ ಯಥಾವತ್ತಾಗಿ ಉತ್ತರಿಸಿ ಅಂಕ ಪಡೆಯುತ್ತಿದ್ದೆವು. ಏನಾದರೂ ಕಂಠಪಾಠ ಮಾಡಿದ್ದು ಅಲ್ಲಲ್ಲಿ ಮರೆತು ಹೋದರೆ ಆ ನೆನಪಿಸಿಕೊಳ್ಳುವ ಸಾಹಸ ವರ್ಣಿಸಲು ಸಾಧ್ಯವಿಲ್ಲ. ಇದರಿಂದ ಮಕ್ಕಳ ಶೈಕ್ಷಣಿಕ ವಲಯವನ್ನು ಪರೀಕ್ಷಿಸಬಹುದಾಗಿತ್ತು. ಆ ಮಕ್ಕಳು ಪುಸ್ತಕ ಜ್ಞಾನವನ್ನು ಮಾತ್ರ ಹೊಂದಿದ್ದು ಕಲಿಕಾ ಪ್ರಕ್ರಿಯೆಯಲ್ಲಿ ಮುಂದುವರೆಯುತ್ತಿದ್ದರು. ಆದರೀಗ ಮಕ್ಕಳ ಪರೀಕ್ಷೆಗೆ ಸಂಬಂಧಿಸಿದಂತೆ ಮಕ್ಕಳ ಜ್ಞಾನಾತ್ಮಕ ವಲಯದ ಪ್ರಗತಿ ಜೊತೆಗೆ ಅವರ ಭಾವನಾತ್ಮಕ, ಕ್ರಿಯಾತ್ಮಕ ವಲಯವನ್ನು ಮೌಲ್ಯಮಾಪನಕ್ಕೆ ಒಳಪಡಿಸುವ ಅವಕಾಶ ನೀಡಿದ್ದು ಇದೇ ಸಿಸಿಇ. + +ಲಿಖಿತ ಮತ್ತು ಮೌಖಿತ ಪರೀಕ್ಷೆಗಳೆ ಶೈಕ್ಷಣಿಕ ಪರೀಕ್ಷೆಯ ಮಹಾದಂಡಗಳಾಗಿದ್ದು ಶಿಕ್ಷಕರು ಮತ್ತು ಮಕ್ಕಳಿಗೆ ಇಬ್ಬರಿಗೂ ಕಷ್ಟ ಆಗುತ್ತಿತ್ತು. ಮಕ್ಕಳಿಗೆ ಅಷ್ಟು ಕಲಿಕಾಂಶಗಳನ್ನು ಕಲಿಸಲೇಬೇಕೆಂಬ ನಮ್ಮ ಧಾವಂತದಲ್ಲಿ ಇಬ್ಬರು ಅದೆಷ್ಟು ಪರದಾಡುತ್ತಿದ್ದೆವು. ಮಗ್ಗಿಗಳ ಕಂಠಪಾಠ ನಮ್ಮ ತಾಳ್ಮೆಯನ್ನು ಪರೀಕ್ಷಿಸಿ ಬಿಡುತ್ತಿತ್ತು. ಒಂದು ದಿನ ಹೀಗಾಯಿತು. + +ಆಗ ಸಮಯ ರಾತ್ರಿ 10.30. ಆಗಿ ಪೋಷಕರೊಬ್ಬರಿಂದ ಕಾಲ್ ಬಂತು. ತಡರಾತ್ರಿ ಬಂದ ಪೋನ್ ಕಾಲ್‌ಗೆ ಬಹಳ ಆತಂಕವಾಯಿತು. ಕಾಲ್ ರಿಸೀವ್ ಮಾಡಿದಾಗ ಮೇಡಂ ನನ್ನ ಮಗನಿಗೆ ನೀವು ಏನು ಹೇಳಿದ್ದೀರಿ? ಎಂದರು ಆ ಪೋಷಕರು. ನನಗೆ ಗಾಬರಿಯಾಯಿತು. “ಏನಮ್ಮ, ವಿಷಯ” ಅಂದೆ. ಏನಿಲ್ಲ ಮೇಡಮ್. ಇವತ್ತು ಶನಿವಾರ. ನನ್ನ ಮಗ ಮಧ್ಯಾಹ್ನ ಶಾಲೆಯಿಂದ ಬಂದಾಗಿಂದ ಪುಸ್ತಕಗಳನ್ನು ಬಿಟ್ಟಿಲ್ಲ ಅಂದರು. ನನಗೆ ಬಹಳ ಖುಷಿಯಾಯಿತು. ನಾಳೆ ಪರೀಕ್ಷೆ ಇದೆ ಅದಕ್ಕೆ ಬುಕ್ ಹಿಡಿದು ಓದುತ್ತಿದ್ದಾನೆ. ಸಂತೋಷದ ವಿಷಯವಲ್ಲವೇ ಎಂದಾಗ, ಅಯ್ಯೋ ಮೇಡಮ್ ಅವನು ಪುಸ್ತಕ ತೆರೆದು ಒಂದು ಅಕ್ಷರವನ್ನು ಓದಿಲ್ಲ. ಆದರೆ ಪುಸ್ತಕ ಮಾತ್ರ ಕೆಳಗೆ ಇಟ್ಟಿಲ್ಲ ಎಂದರು. ಅವರಪ್ಪ ಮತ್ತು ನಾನು ಎಷ್ಟು ಹೇಳಿದರು ಪುಸ್ತಕ ಕೆಳಗೆ ಮಡಗಿಲ್ಲ. ಆಟವಾಡಲು ಹೋಗಿದ್ದನು. ಆಗಲು ಪುಸ್ತಕ ಕೈಯಲ್ಲೇ ಇದೆ. ಊಟ ಮಾಡುವಾಗಲೂ ಕೈಯಲ್ಲೆ ಇದೆ. ಹೊಲದ ಬಳಿ ಬಂದಿದ್ದ ಆಗಲು ಪುಸ್ತಕ ಕೈಲೆ ಹಿಡಿದಿದ್ದನು. ಈಗ ನೋಡಿದರೆ ಮಲಗುವಾಗಲೂ ಕೈಯಲ್ಲಿ ಪುಸ್ತಕ ಹಿಡಿದುಕೊಂಡೆ ಮಲಗಿದ್ದಾನೆ. ಕೇಳಿದ್ದಕ್ಕೆ ನೀವೇನೋ ಹೇಳಿದ್ದೀರಂತೆ, ಪುಸ್ತಕ ಕೆಳಗೆ ಇಡಬಾರದು ಅಂತ ಅಂದಾಗ ನನಗೆ ಅರ್ಥವಾಯಿತು. ಅಂದು ನಾನು “ಇದು ಪರೀಕ್ಷಾ ಸಮಯ. ನೀವೆಲ್ಲ ಶಾಲೆಯಿಂದ ಹೋಗಿ ಪುಸ್ತಕ ಮೂಲೆಗೆಸೆದು ತಿರುಗಲು, ಆಡಲು ಹೋಗಬಾರದು. ಇನ್ನು ಪರೀಕ್ಷೆ ಮುಗಿಯುವವರೆಗೂ ಪುಸ್ತಕ ಕೆಳಗೆ ಇಡುವಂತಿಲ್ಲ. ಸದಾ ಕಾಲ ಪುಸ್ತಕವನ್ನು ಕೈಯಲ್ಲೇ ಹಿಡಿದಿರಬೇಕು” ಎಂದಿದ್ದೆ. ನನ್ನ ಮಾತಿನ ಸೂಕ್ಷ್ಮಾರ್ಥವನ್ನು ಗ್ರಹಿಸದ ಆ ಮಗು ಕೇವಲ ಪುಸ್ತಕವನ್ನು ಕೈಯಲ್ಲಿ ಹಿಡಿದು ನನ್ನ ಮಾತಿನ ಪರಿಪಾಲನೆ ಮಾಡಿದ್ದನು. ನನಗಾಗ ಅರ್ಥವಾಯಿತು. ಯಾವುದೇ ವಿಷಯವನ್ನು ಮಕ್ಕಳಿಗೆ ಮಾರ್ಮಿಕವಾಗಿ, ಗೂಡಾರ್ಥದಲ್ಲಿ ಅಸ್ವಷ್ಟವಾಗಿ ಹೇಳಬಾರದು ಎಂದು. ಇಂತಹ ಸವಾಲುಗಳನ್ನ ಎದುರಿಸುವಲ್ಲಿ ಸಿಸಿಇ ಮೌಲ್ಯಮಾಪನ ತಂತ್ರ ಸಾಕಷ್ಟು ಉಪಯುಕ್ತವಾಗುತ್ತದೆ. + +“ವಿದ್ಯಾರ್ಥಿಯ ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿನ ಸಾಧನೆ, ಶಾಲಾ ಸನ್ನಿವೇಶದಲ್ಲಿ ವಿವಿಧ ಪಾತ್ರ ನಿರ್ವಹಣೆ, ಪಾಲ್ಗೊಳ್ಳುವಿಕೆ ಮತ್ತು ಪ್ರಗತಿಯನ್ನು ವಿವಿಧ ತಂತ್ರಗಳ ಮೂಲಕ ಸಮಗ್ರವಾಗಿ ದಾಖಲಿಸಿಕೊಂಡು ವಿಶ್ಲೇಷಿಸಿ ಪಡೆದ ಒಳ ನೋಟಗಳಿಂದ ಮಗುವಿನ ಸರ್ವಾಂಗೀಣ ಅಭಿವೃದ್ಧಿಯ ಅನುಕೂಲಿಸುವ ಪ್ರಕ್ರಿಯೆಗೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನ” ಎನ್ನುತ್ತೇವೆ. + +ನಿರಂತರ ಮೌಲ್ಯಮಾಪನ ಎಂದರೆ “ವಿದ್ಯಾರ್ಥಿಗಳ ಶಾಲೆಯಲ್ಲಿನ ಕಲಿಕಾ ಸಂದರ್ಭಗಳು ಹಾಗೂ ತೊಡಗಿಸಿಕೊಳ್ಳುವ ವಿವಿಧ ಚಟುವಟಿಕೆಗಳಲ್ಲಿನ ಅವರ ಸಹಜ ವರ್ತನೆಗಳನ್ನು ನಿರಂತರವಾಗಿ ಗಮನಿಸಿ ಮಗುವಿನ ಬೆಳವಣಿಗೆ ಮತ್ತು ಅಭಿವೃದ್ಧಿ ಪ್ರಕ್ರಿಯೆಗಳನ್ನು ಪೋಷಿಸುವುದು”.ವ್ಯಾಪಕ ಮೌಲ್ಯಮಾಪನ ಎಂದರೆ “ನಿರ್ದಿಷ್ಟ ಪಡಿಸಿದ ಪಠ್ಯಕ್ಕೆ ಸೀಮಿತವಾಗದೆ ಸಹಪಠ್ಯ ಚಟುವಟಿಕೆಗಳನ್ನು ಒಳಗೊಂಡಂತೆ ಮಗುವಿನ ಎಲ್ಲಾ ವರ್ತನೆಗಳನ್ನು ಅಭಿವೃದ್ಧಿಗೊಳಿಸುವುದಾಗಿದೆ”. + +ನಿರಂತರ ಮೌಲ್ಯಮಾಪನದಿಂದ ಮಗುವಿನ ದೈಹಿಕ, ಬೌದ್ಧಿಕ, ಮಾನಸಿಕ, ಸಾಮಾಜಿಕ ಬೆಳವಣಿಗೆಯನ್ನು ಗಮನಿಸಿ ಪ್ರಗತಿಯ ನಿರಂತರತೆಯಲ್ಲಿ ಅರ್ಥೈಸಿಕೊಳ್ಳುವುದು”. ಇದರಿಂದ ಮಗುವಿನ ವ್ಯಕ್ತಿತ್ವ ಯಾವ ರೀತಿಯಲ್ಲಿ ವಿಕಸನಗೊಳ್ಳುತ್ತಿದೆ ಎಂದು ಸುಲಭವಾಗಿ ಗುರುತಿಸಬಹುದು. ವ್ಯಾಪಕ ಮೌಲ್ಯಮಾಪನದಿಂದ ಪಠ್ಯ ಸಹಪಠ್ಯ ಸಂಯೋಜಿತ ಹಾಗೂ ಮಗುವಿನ ಸಹಜ ವರ್ತನೆಯ ಕ್ಷೇತ್ರಗಳನ್ನು ಗಮನಿಸಿ ಅವುಗಳನ್ನ ಅಭಿವೃದ್ಧಿ ಪಡಿಸಬಹುದು. ಒಟ್ಟಾರೆ ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನದಿಂದ ಮಗುವಿನ ಸರ್ವಾಂಗಣ ಬೆಳವಣಿಗೆಯನ್ನು ನಿರಂತರವಾಗಿ ಅನುಕೂಲಿಸಲು ಸಾಧ್ಯವಾಗುತ್ತದೆ. + +ಹಿಂದಿಗಿಂತ ಇಂದು ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಾಗಾಗಿ ಇಂದಿನ ಸಾಂಪ್ರದಾಯಿಕ ಮೌಲ್ಯಮಾಪನ ಪದ್ಧತಿ, ಕೇವಲ ಪಠ್ಯಪುಸ್ತಕಗಳನ್ನು ಓದುವುದು ಕಂಠಪಾಠ ಮಾಡುವುದು ಪಠ್ಯ ವಿಷಯಗಳಿಗೆ ಮಾತ್ರ ಸೀಮಿತವಾಗಿದ್ದರೆ, ನಿರಂತರ ಮತ್ತು ವ್ಯಾಪಕ ಮೌಲ್ಯಮಾಪನ ವಿದ್ಯಾರ್ಥಿಗಳ ಕಲಿಕೆ ಮಟ್ಟವನ್ನ ಅರ್ಥೈಸಿಕೊಳ್ಳೋದಕ್ಕೆ ಸಹಕಾರ ನೀಡುತ್ತೆ. ಮಕ್ಕಳ ಪ್ರಗತಿಯನ್ನು ಅರ್ಥೈಸಿಕೊಳ್ಳುವ ಸಲುವಾಗಿ ಸಾಧನ ಸಲಕರಣೆಗಳನ್ನು ರಚಿಸಿಕೊಳ್ಳಲು ಮತ್ತು ಪರಿಷ್ಕೃತಗೊಳಿಸಲು ದಾರಿ ಮಾಡಿಕೊಡುತ್ತದೆ. ಸಕಾಲದಲ್ಲಿ ಪೋಷಕರಿಗೆ ಪ್ರಗತಿಯನ್ನು ಅರ್ಥೈಸಿಕೊಳ್ಳಬೇಕು. ನಾನು ಎಲ್ಲಿದ್ದೇನೆ ನಾನು ನೀಡಬೇಕಾದ ಕಲಿಕೆ ಅನುಭವಗಳು ಯಾವುವು? ಎಂದು ಅರಿಯಲು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ವಿದ್ಯಾರ್ಥಿಗೆ ತನ್ನ ಕಲಿಕೆಯ ಬಗ್ಗೆ ಆತ್ಮ ವಿಶ್ವಾಸವನ್ನು ಮೂಡಿಸಲು ಹಾಗೂ ಅಪೇಕ್ಷಿತ ಬೆಳವಣಿಗೆ ಕಡೆಗೆ ಮಾರ್ಗದರ್ಶಿಸಲು ನೆರವಾಗುತ್ತದೆ. ಯಾವುದೇ ಭಯ ಆತಂಕಗಳಿಲ್ಲದೆ ಸ್ವಚ್ಛ ಪರಿಸರದಲ್ಲಿ ಕಲಿಯಲು ಸಹಕಾರ ನೀಡುತ್ತದೆ. ಅಪೇಕ್ಷಿತ ಶಾಲಾ ಸನ್ನಿವೇಶವನ್ನು ನಿರ್ಮಾಣ ಮಾಡುತ್ತದೆ. ಗುಣಮಟ್ಟದ ಶಿಕ್ಷಣ ಅಭಿವೃದ್ಧಿಯನ್ನ ಕಾಲಕಾಲಕ್ಕೆ ದಾಖಲಿಸುತ್ತದೆ. + +ನಿರಂತರ ವ್ಯಾಪಕ ಮೌಲ್ಯಮಾಪನವು ಭಾಷೆಗಳು, ಲಲಿತ ಕಲೆ, ಜೀವನ ಶಿಕ್ಷಣ, ಮೌಲ್ಯಗಳ ಅರಿವು, ಗುಂಪಿನಲ್ಲಿ ವರ್ತನೆ, ದೈಹಿಕ ಹಾಗೂ ಕ್ರೀಡೆ, ಶಾಲಾ ಚಟುವಟಿಕೆಗಳು, ಇವೆಲ್ಲವನ್ನು ಸಮಗ್ರವಾಗಿ ಒಳಗೊಂಡಿರುತ್ತದೆ. + +ನಿರಂತರ ಹಾಗೂ ವ್ಯಾಪಕ ಮೌಲ್ಯಮಾಪನವು ಸಂದರ್ಶನ, ಸಮೀಕ್ಷೆ, ಮೌಖಿಕ ಅಭಿವ್ಯಕ್ತಿ, ಸಹವರ್ತಿ ಪರೀಕ್ಷೆ, ಪ್ರತಿಫಲನ, ಅವಲೋಕನ, ವ್ಯಕ್ತಿ ವೃತ್ತಾಂತ ದಾಖಲೆ, ಅಭ್ಯಾಸ ಪುಸ್ತಕ, ಗೃಹ ಪಾಠ, ಘಟಕ ಪರೀಕ್ಷೆ, ಕಿರುಪರೀಕ್ಷೆ, ಅರ್ಧವಾರ್ಷಿಕ ಪರೀಕ್ಷೆ, ವಾರ್ಷಿಕ ಪರೀಕ್ಷೆ, ಆರೋಗ್ಯ ದಾಖಲೆ, ಮಕ್ಕಳ ಅವಲೋಕನ ಹಾಳೆ, ಪ್ರಗತಿಪತ್ರಗಳು, ಪ್ರಗತಿ ನೋಟ, ಸಂಚಿತ ದಾಖಲೆ, ಮಾಹಿತಿ ಹಂಚಿಕೊಳ್ಳುವಿಕೆ, ಗುಂಪು ಚರ್ಚೆ, ಪ್ರಶ್ನೋತ್ತರ, ಆಟ, ನ್ಯಾಯಾಮ, ಆರೋಗ್ಯ, ಕಥೆ ಹೇಳುವುದು, ಕೈಬರಹ ಓದುವುದು, ಸಂಭಾಷಣೆ, ಸಮೀಕ್ಷೆ, ಯೋಜನೆ, ಪ್ರಯೋಗಗಳು, ನಿಯೋಜಿತ ಕಾರ್ಯಗಳೆಲ್ಲವನ್ನು ಒಳಗೊಂಡಿರುತ್ತದೆ. + + + +ಒಟ್ಟಿನಲ್ಲಿ ಸಿಸಿಇ ಮೌಲ್ಯ ಮಾಪನ ಪದ್ಧತಿ ವಿನೂತನವಾಗಿದ್ದು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡುತ್ತದೆ.‌ ಮಕ್ಕಳಿಗೆ‌ ಬರವಣಿಗೆಯ ಹೊರತಾಗಿ ವಿಭಿನ್ನ ಚಟುವಟಿಕೆಗಳಲ್ಲಿ ತೊಡಗಲು ಅವಕಾಶ ನೀಡುತ್ತದೆ. ಆ ಮೂಲಕ ಮಕ್ಕಳಲ್ಲಿ ಇರುವ ಪರೀಕ್ಷಾ ಭಯ, ಹಿಂಜರಿಕೆಯನ್ನು ಹೋಗಲಾಡಿಸಿ. ಭಯ ಮುಕ್ತ ಮೌಲ್ಯ ಮಾಪನ ಮಾಡುವ ಮೂಲಕ ಮಕ್ಕಳನ್ನು ಪ್ರೇರೇಪಿಸುತ್ತದೆ. ಪ್ರತಿಯೊಂದು ಮಗುವು ವಿಶಿಷ್ಟ ಹಾಗೂ ವಿಭಿನ್ನ. ಅವರವರ ಆಸಕ್ತಿಗೆ ಅನುಗುಣವಾಗಿ ಪರೀಕ್ಷೆಗಳನ್ನು ಎದುರಿಸಲು ಅಗತ್ಯವಾದ ಚಟುವಟಿಕೆಗಳು ಇದು ಪ್ರೋತ್ಸಾಹಿಸುತ್ತದೆ. ಪಠ್ಯದ ಜ್ಞಾನಕ್ಕಿಂತ ತೊಡಗಿಸಿಕೊಳ್ಳುವಿಕೆ ಬಹುಮುಖ್ಯವಾಗಿದ್ದು ಮಕ್ಕಳು ತಾವು ಶಾಲೆಯಲ್ಲಿ ಕಲಿತಿದ್ದನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಲು ನೆರವಾಗುವ ಸಿಸಿಇ ಶಿಕ್ಷಣ ಕ್ಷೇತ್ರದ ಮಹತ್ವದ ಯೋಜನೆಯಾಗಿದೆ. + +ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. \ No newline at end of file diff --git a/Kenda Sampige/article_120.txt b/Kenda Sampige/article_120.txt new file mode 100644 index 0000000000000000000000000000000000000000..a3418a55086f6ac1dea33e323ca00bffda15add4 --- /dev/null +++ b/Kenda Sampige/article_120.txt @@ -0,0 +1,23 @@ +ಪ್ರಸನ್ನರ ʻರಥಸಪ್ತಮಿʼ ಕಥಾ ಸಂಕಲನಕ್ಕೆ ಬಿ. ಎಚ್‌. ಶ್ರೀಧರ ಪ್ರಶಸ್ತಿ ಬಂದಾಗ ಅವರನ್ನು ಮೊದಲ ಸಲ ಭೆಟ್ಟಿಯಾಗಿದ್ದೆ. ಪ್ರಶಸ್ತಿ ಸ್ವೀಕರಿಸಿ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ಕುರಿತು ತುಂಬ ಕಳಕಳಿಯಿಂದ ಅವರು ಆಡಿದ ಮಾತುಗಳು ಮನಸ್ಸಿನಲ್ಲಿ ಇನ್ನೂ ಹಸಿರಾಗಿವೆ. ಮನುಷ್ಯ ತನ್ನ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾನೆ, ಸಂಬಂಧಗಳನ್ನು ಹೇಗೆ ನಿಭಾಯಿಸುತ್ತಾನೆ ಎಂಬುದನ್ನು ಅನ್ವೇಷಿಸುವ ಒಳ್ಳೆಯ ಕತೆಗಳು ಓದುಗನಲ್ಲಿ ಅರಿವು ಮೂಡಿಸುತ್ತವೆ; ಅವರನ್ನು ಸಹನಶೀಲರನ್ನಾಗಿಸುತ್ತವೆ. ಹೀಗಾಗಿ ಮಕ್ಕಳಿಗೆ ಒಳ್ಳೆಯ ಕತೆಗಳನ್ನು ಓದಿಸುವುದು ಶಿಕ್ಷಣದ ಭಾಗವಾಗಬೇಕು ಎಂದು ಅವರು ಹೇಳಿದ್ದರು. + +(ಎ.ಎನ್. ಪ್ರಸನ್ನ) + +ಮರುವರ್ಷ ಅವರು ಕುಮಟಾಕ್ಕೆ ಬಂದು ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಎರಡು ದಿನಗಳ ಸಿನಿಮಾ ರಸಗ್ರಹಣ ಶಿಬಿರವನ್ನು ನಡೆಸಿಕೊಟ್ಟರು. ಹೀಗೆ ಆರಂಭವಾಗಿ ಆಗೀಗ ಭೆಟ್ಟಿ, ದೂರವಾಣಿ, ಈ-ಮೈಲ್‌ನಲ್ಲಿ ಕತೆ-ಅಭಿಪ್ರಾಯ ವಿನಿಮಯದಿಂದ ಗಟ್ಟಿಯಾದ ಗೆಳೆತನವನ್ನು ಇನ್ನಷ್ಟು ಗಟ್ಟಿಗೊಳಿಸುವ ಉಪಕ್ರಮವಾಗಿ ಅವರ ಹೊಸ ಸಂಕಲನದ ಕತೆಗಳ ಜೊತೆ ನನ್ನ ಎರಡು ಮಾತುಗಳನ್ನು ಜೋಡಿಸುವ ಅವಕಾಶವನ್ನು ಅವರು ಕಲ್ಪಿಸಿಕೊಟ್ಟಿದ್ದಾರೆ. ಇದನ್ನೆಲ್ಲ ನೆನಪಿಸಿಕೊಂಡಿದ್ದು ಈಗಾಗಲೇ ಸಮರ್ಥರೂ ಪ್ರಯೋಗಶೀಲರೂ ಆದ ಕತೆಗಾರರೆಂದು ವಿಮರ್ಶಕರ ಮನ್ನಣೆ ಗಳಿಸಿಕೊಂಡಿರುವ ಪ್ರಸನ್ನರ ಕತೆಗಳಿಗೆ ಮುನ್ನುಡಿ ಹಿನ್ನುಡಿಗಳ ಅಗತ್ಯವಿಲ್ಲದಿದ್ದರೂ ಅಪ್ಪಟ ಸ್ನೇಹ ಜೀವಿಯಾದ ಪ್ರಸನ್ನರಿಗೆ ಅವೆಲ್ಲ ಬೇಕು ಎಂದು ಹೇಳಲು ಮಾತ್ರವಲ್ಲ, ಬದಲಾಗಿ ಇದೀಗ ಅವರು ಓದುಗರ ಕೈಯಲ್ಲಿಡುತ್ತಿರುವ ಆರು ನೀಳ್ಗತೆಗಳ ಸಂಗ್ರಹಕ್ಕೆ ಅವರು ಶಿರಸಿಯಲ್ಲಿ ಆಡಿದ ಜೀವೋತ್ಕರ್ಷಿಯಾದ ಮಾತುಗಳೇ ಅತ್ಯುತ್ತಮ ಪ್ರವೇಶಿಕೆಯೊದಗಿಸುತ್ತವೆ ಎನ್ನುವುದಕ್ಕಾಗಿ. + +ಪ್ರತ್ಯೇಕ ವ್ಯಕ್ತಿಗಳು ತಮ್ಮ ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ಹೇಗೆ ವರ್ತಿಸುತ್ತಾರೆ ಮತ್ತು ಅವನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲವೇ ಪ್ರಸ್ತುತ ಸಂಗ್ರಹದ ‘ಕುಣಿಕೆ’, ‘ಹೊರದಾರಿ’, ‘ನಿರ್ಧಾರ’ ಮತ್ತು ‘ದಾಸವಾಳ’- ಈ ನಾಲ್ಕು ಕತೆಗಳ ಕಥನ ಕಾರಣವಾಗಿದೆ. ಇವು ಮಹಿಳಾ ಕೇಂದ್ರಿತವಾಗಿವೆಯಲ್ಲದೆ ಅವುಗಳ ನಿರೂಪಣೆಯ ದೃಷ್ಟಿಕೋನವೂ ಸಹ ಮಹಿಳೆಯದು, ಇಲ್ಲವೇ ಕೇಂದ್ರ ಪಾತ್ರದ ಪ್ರಜ್ಞೆಯೊಂದಿಗೆ ಶ್ರುತಿಗೊಂಡಿದ್ದು. ಇವರೆಲ್ಲ ನಗರವಾಸಿ, ಮಧ್ಯಮ ವರ್ಗದ ಉದ್ಯೋಗಸ್ಥ ಮಹಿಳೆಯರು; ಮನೆ-ಕಛೇರಿಗಳಿಗೆ ಸೀಮಿತವಾದ ಜಗತ್ತಿನಲ್ಲಿರುವವರು; ಬಹುತೇಕವಾಗಿ ಸ್ವಕ್ಷೇಮದ ಪರಿಧಿಯಲ್ಲಿ ಯೋಚಿಸುವವರು. ಖಂಡಿತಕ್ಕೂ ಇವೆಲ್ಲ ಅವರು ಬದುಕನ್ನು ಹೇಗೆ ಕಟ್ಟಿಕೊಳ್ಳುತ್ತಾರೆ, ಸನ್ನಿಹಿತವಾದ ಬಿಕ್ಕಟ್ಟನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವುದನ್ನು ಪ್ರಭಾವಿಸುತ್ತವೆ. ಆದರೆ ಅವರು ಅನುಭವಿಸುವ ತೊಳಲಾಟ, ಸಂಕಟ, ಸಂಭ್ರಮ, ಭಾವೋದ್ವೇಗಗಳು ಸರ್ವಸಾಧಾರಣ. ಅವುಗಳ ಸರ್ವಸಾಧಾರಣತೆಯನ್ನು ಸ್ವತಃ ಅವರು ಕಂಡುಕೊಳ್ಳುವ ಕ್ಷಣವೇ ಅವರು ತಮ್ಮ ಪರಿಧಿಯನ್ನು ಮೀರುವ ಮಾನವೀಯ ಆರ್ದ್ರ ಕ್ಷಣ. ಕಥನ ಮುಖ ಮಾಡಿರುವುದು ಮನುಷ್ಯ ಬದುಕಿನಲ್ಲಿ ಭರವಸೆ ಕುದುರಿಸುವ ಅಂತಹ ಹಗುರಾದ ನವಿರಾದ ಆರ್ದ್ರವಾದ ಅರಿವಿನ ತಂಪು ಘಳಿಗೆಯತ್ತ. ಹೀಗಾಗಿ ಈ ಕತೆಗಳ ವಿನ್ಯಾಸದಲ್ಲಿಯೂ ಸಹ ಸಾಮ್ಯವಿದೆ. ಪ್ರತಿ ಕತೆಯೂ ವರ್ತಮಾನದಲ್ಲಿ ಪ್ರಾರಂಭವಾಗಿ, ಭೂತಕಾಲವನ್ನು ಅಗತ್ಯಕ್ಕೆ ಬೇಕಾದಷ್ಟೇ ಅವಾಹಿಸಿ ಮತ್ತೆ ವರ್ತಮಾನಕ್ಕೆ ವಾಪಸಾಗಿ ಓದುಗನ ಮನಸ್ಸಿನಲ್ಲಿ ಬೆಳೆಯಲು ಅವಕಾಶವಾಗುವಂತೆ ಮುಕ್ತಾಯವಲ್ಲದ ಮುಕ್ತಾಯವನ್ನು ತಲುಪುತ್ತವೆ. + +ಈ ನಾಲ್ಕು ಕತೆಗಳಲ್ಲಿ ‘ದಾಸವಾಳ’ ಕೊಂಚ ಭಿನ್ನವಾಗಿದೆ. ‘ಕುಣಿಕೆ’, ‘ಹೊರದಾರಿ’, ‘ನಿರ್ಧಾರ’ಗಳಲ್ಲಿ ಬಿಕ್ಕಟ್ಟಿನ ಸನ್ನಿವೇಶದಿಂದ ಹೊರದಾರಿ ಕಂಡುಕೊಳ್ಳುವುದು ಕಥಾನಾಯಕಿಯರು ತಮ್ಮನ್ನು ಬಂಧಿಸಿರುವ ‘ಅತಿ ಸಣ್ಣ ಪ್ರಪಂಚ’ದ ಹೊರಗೂ ಸ್ಪಂದಿಸಬಲ್ಲವರಾಗುವುದಷ್ಟೇ ಆಗಿದ್ದರೆ ‘ದಾಸವಾಳ’ದ ನಿರೂಪಕ-ನಾಯಕಿ ತನಗೆ ‘ಬೇಕಾದ ಉಸಿರನ್ನು ಕೊಡಿ ಅಂತ ಇನ್ನೊಬ್ಬರನ್ನು ಕೇಳದೆ ಎಲ್ಲಿ ತಿಳಿಗಾಳಿ ಸಿಗುತ್ತದೆಯೋ ಅಲ್ಲಿಗೆ ಹೋಗಿ ನಿರಾತಂಕದಿಂದ ಉಸಿರಾಡೋ ಅನುಕೂಲಕ್ಕಾಗಿ’ ಹಂಬಲಿಸಿದವಳು; ತನ್ನ ಬದುಕನ್ನು ತಾನೇ ನಿರ್ಮಿಸಿಕೊಳ್ಳಬೇಕಾದ ಒತ್ತಡಕ್ಕೆ ಸಿಲುಕಿದವಳು. ಇಂತಹುದೇ ಹಂಬಲ ಮತ್ತು ಒತ್ತಡದಿಂದ ಪಾರಾದ ಅವಳ ತಾಯಿ ಅವಳಿಗೆ ಪ್ರೇರಣೆ ಮತ್ತು ಆದರ್ಶವೆನ್ನುವುದನ್ನು ಕತೆಯ ವಿವರಗಳು ಸೂಚಿಸುತ್ತವೆ. ಉದ್ದಕ್ಕೂ ಹಾಜರಿರುವ ದಾಸವಾಳದ ಪ್ರತಿಮೆ ದುಡಿಯುವುದೇ ಇದಕ್ಕಾಗಿ. ಆದರೆ ತಾಯಿ ಕಂಡುಕೊಂಡ ಯಶಸ್ಸು ಇವಳದಾಗಿಲ್ಲವೆನ್ನುವುದು ಅವಳು ಆಯ್ದುಕೊಂಡ ದಾರಿಯಲ್ಲೇ ಇರುವ ಇನ್ನೊಂದು ಸಾಧ್ಯತೆಯಷ್ಟೇ. ಹೀಗಾಗಿ “ದಿಕ್ಕುದೆಸೆಯಿಲ್ಲದೆ, ಹೇಳೋರು ಕೇಳೋರು ಯಾರು ಇಲ್ಲದೆ ಇದ್ದದ್ದು ನಾನು” ಎಂದು ತನ್ನ ಕತೆಯನ್ನು ತಾನೇ ಹೇಳಿಕೊಳ್ಳುವ ಕಥಾನಾಯಕಿಯ ನಿರೂಪಣೆ ವಸ್ತುನಿಷ್ಠವಾದ ಆತ್ಮವಿಮರ್ಶೆಯನ್ನು ಸಾಧಿಸುವ ಅಗ್ನಿ ಪರೀಕ್ಷೆಯಲ್ಲಿ ಗೆಲ್ಲುತ್ತದೆ ಎನ್ನುವುದೇ ಈ ಕತೆಯ ಹೆಚ್ಚಳವಾಗಿದೆ. ಇಷ್ಟಾದರೂ ಕತೆ ಸಂಪೂರ್ಣವಾಗಿ ತೃಪ್ತಿಕರವಾಗಿದೆ ಎನ್ನುವಂತಿಲ್ಲ. ಗತಕಾಲದ ದಿನಗಳನ್ನು ಕಾಲದ ಅಂತರ ಒದಗಿಸುವ ಸೌಲಭ್ಯದಿಂದ ವಸ್ತುನಿಷ್ಠವಾಗಿ ನೋಡಲು ಸಾಧ್ಯವಾಗುವಂತೆ ವರ್ತಮಾನದ ಈ ಕ್ಷಣವನ್ನು ನೋಡಲು ಸಾಧ್ಯವಾಗಬಹುದೇ ಎನ್ನುವುದರ ಕುರಿತು ಸ್ವತಃ ಕತೆಗಾರರಿಗೂ ಸಂದೇಹವಿರುವಂತಿದೆ. ಹೀಗಾಗಿಯೇ ಕತೆಯ ಕೊನೆಯ ಸಾಲು ಉತ್ತಮ ಪುರುಷ ನಿರೂಪಣೆಯನ್ನು ಬಿಟ್ಟುಕೊಟ್ಟು ಸರ್ವಸಾಕ್ಷಿ ನಿರೂಪಕನ ಮಾತಾಗಿದೆ. ಇದರಿಂದಾದ ಲಾಭವೆಂದರೆ ಕಥಾನಾಯಕಿಗೆ ಸ್ಪಷ್ಟವಾಗಿದೆ ಎನ್ನಲಾದ ದಾರಿ ಯಾವುದಿದ್ದೀತು ಎಂದು ಓದುಗನ ಮನಸ್ಸಿನಲ್ಲಿ ಹೊಸದೇ ಕತೆಯೊಂದು ಮೊಳೆಯುವುದಕ್ಕೆ ಬೀಜ ಬಿತ್ತಿದಂತಾಗಿದೆ. + + + +‘ವಿಹಾರ’ ಮತ್ತು ‘ಹದ್ದು ಹಾರುವ ಹೊತ್ತು’ ಭಿನ್ನ ಬಗೆಯ ಕತೆಗಳು. ಅವುಗಳ ಭಿತ್ತಿ ಇದೀಗ ಪ್ರಸ್ತಾವಿಸಿದ ಕತೆಗಳಿಗಿಂತ ಹೆಚ್ಚು ವಿಶಾಲವಾದದ್ದು. ‘ವಿಹಾರ’ ಪ್ರಸನ್ನರ ಆರಂಭಿಕ ಕತೆಗಳಲ್ಲೊಂದಾದ ‘ಹೊಳೆಗೆ ಹೋಗಿದ್ದು’ಗೆ ಹತ್ತಿರವಾಗಿದೆ. ಅಲ್ಲಿಯ ಹಲವು ಆಶಯಗಳು ಇಲ್ಲಿಯೂ ಕಾಣಿಸಿಕೊಳ್ಳುತ್ತವೆ. ಆದರೆ ‘ಹೊಳೆಗೆ ಹೋಗಿದ್ದು’ ಕಥಾನಾಯಕಿಯ ಆತ್ಮನಿರೂಪಣೆಯಾದರೆ ‘ವಿಹಾರ’ ಪ್ರಥಮ ಪುರುಷ ನಿರೂಪಣೆ. ಇಲ್ಲಿ ವಿಹಾರಕ್ಕೆಂದು ಬಂದ ಐದೂ ಜನ ತಮ್ಮ ಬ್ಯಾಗುಗಳೊಂದಿಗೆ ತಮ್ಮದೇ ಆದ ಸಮಸ್ಯೆಗಳನ್ನೂ ಸಂಬಂಧದ ತೊಡಕುಗಳನ್ನೂ ಹೊತ್ತು ತಂದಿದ್ದಾರೆ. ಈ ಸಂಬಂಧ ಹಾಗೂ ಸಮಸ್ಯೆಗಳ ಸ್ವರೂಪವೇ ಅವರ ಮಾತು, ಚಹರೆಗಳನ್ನು ನಿರ್ಧರಿಸುತ್ತವೆಯೆಂದೇ ನಿರೂಪಕ ಕತೆಯ ಹರಿವನ್ನು ಹಿಂತಿರುಗಿಸಿ ಆ ವಿವರಗಳನ್ನು ಒದಗಿಸುತ್ತಾನೆ. ಅವರು ಇಳಿದುಕೊಂಡ ಗೆಸ್ಟ್ ಹೌಸ್‌ನ ದುರವಸ್ಥೆ ಈ ಐವರ ಉತ್ಸಾಹವನ್ನು ತಗ್ಗಿಸುವುದರೊಂದಿಗೆ ವಿಹಾರವು ವಿಕಾರವಾಗುವ ಮುನ್ಸೂಚನೆಯನ್ನೂ ನೀಡುತ್ತದೆ. ನದಿಯಲ್ಲಿ ಮುಳುಗಿದವನ ಹುಡುಕಾಟ ಮುಂದುವರಿದಿದ್ದಾಗಲೇ ಗೆಸ್ಟ್ ಹೌಸಿನಲ್ಲಿ ಕಾದು ಕುಳಿತವರು ನೀರು ಪಾಲದವನು ತಿರುಗಿ ಬಂದಂತೆ, ವಿಹಾರ ಕಾರ್ಯಕ್ರಮ ವಿವಾಹ ಸಂಭ್ರಮವಾಗಿ ಬದಲಾದಂತೆ ಭ್ರಮಿಸುವ ಬೆಳದಿಂಗಳಲ್ಲಿ ಮಿಂದಿರುವ ಇಡೀ ದೃಶ್ಯವು ಮುಂದೆ ಅವರು ಎದುರಿಸಲಿರುವ ವಾಸ್ತವವನ್ನು ದಾರುಣವಾಗಿಸುತ್ತದೆ. ಈ ಕನಸು ವಾಸ್ತವಗಳ ಪ್ರತಿಯೊಂದು ವಿವರದಲ್ಲೂ ವೈದೃಶ್ಯವನ್ನು ಕಡೆದಿರುವುದೂ ಕುಶಲ ಕಲೆಗಾರಿಕೆಯೇ ಸರಿ. ಕತೆಯಲ್ಲಿ ಉದ್ದಕ್ಕೂ ಕಾಣುವ ಸದೃಶ ಮತ್ತು ವಿಷಯ ಸನ್ನಿವೇಶಗಳ ಜೋಡಣೆ ವಿಹಾರದ ಧ್ವನಿಶಕ್ತಿಯನ್ನು ಹೆಚ್ಚಿಸಿದೆ. + +(ಎಂ. ಜಿ. ಹೆಗಡೆ) + +‘ವಿಹಾರ’ಕ್ಕಿಂತ ‘ಹದ್ದು ಹಾರುವ ಹೊತ್ತು’ ಇನ್ನೂ ವಿಸ್ತಾರವಾದ ಕ್ಯಾನ್ವಾಸ್ ಹೊಂದಿರುವ ಕತೆ. ಊರಿಗೆ ಹೊಸತಾಗಿ ಬಂದು ಹೊರವಲಯದಲ್ಲಿ ಬಾಡಿಗೆ ಮನೆ ಮಾಡಿರುವ ಈ ಕತೆಯ ನಿರೂಪಕನು ಬಡಾವಣೆಯ ಪರಿಸರವನ್ನು ತಿಳಿದುಕೊಳ್ಳುವ ಹವಣಿಕೆಯಲ್ಲಿ ಕೇಳಿಸಿಕೊಂಡಿದ್ದೆಲ್ಲ ಕತೆಯ ಪ್ರಥಮಾರ್ಧವಾದರೆ ಉತ್ತರಾರ್ಧದ ಘಟನೆಗಳಿಗೆ ಆತ ಸಾಕ್ಷಿಯಾಗುತ್ತಾನೆ. ಹೀಗೆ ಹೊರಗಿನವನಾದ, ಆದರೆ ಒಂದು ಮಟ್ಟದಲ್ಲಿ ಭಾಗಿಯೂ ಆಗಿರುವ ನಿರೂಪಕನಿಗೆ ಎಲ್ಲಾ ಪಾತ್ರ ಮತ್ತು ಘಟನೆಗಳನ್ನು ಸನಿಹದಿಂದ, ಆದರೆ ವಸ್ತುನಿಷ್ಠವಾಗಿ, ನಿರೀಕ್ಷಿಸುವ ಅನುಕೂಲತೆ ಇದೆ. ನಿರೂಪಣೆಯ ದೃಷ್ಟಿಕೋನದ ಕುಶಲ ನಿರ್ವಹಣೆಯಿಂದಾಗಿ ದೇವಸ್ಥಾನ, ದೇವರು, ಧಾರ್ಮಿಕ ಸಂಕೇತಗಳೆಲ್ಲ ಜೀವನೋಪಾಯವಾಗಿ, ರಾಜಕೀಯ ದಾಳವಾಗಿ ಮಾರ್ಪಾಟಾಗಿರುವುದನ್ನಷ್ಟೇ ಹೇಳಬಹುದಾಗಿದ್ದ ಕತೆಗೆ ಮನುಷ್ಯ ಸಂಬಂಧಗಳ ನಿಗೂಢತೆ ಹಾಗೂ ವರ್ತನೆಗಳ ಅನೂಹ್ಯತೆಯನ್ನು ಕೂಡ ಧ್ವನಿಸಲು ಸಾಧ್ಯವಾಗಿದೆ. + + + +‘ಹದ್ದು ಹಾರುವ ಹೊತ್ತು’ ಕತೆಯ ಭಾಗಿ-ನಿರೂಪಕ ಹೊಸ ಊರಿನಲ್ಲಿ ಮನೆ ಮಾಡಿದ ಮೇಲೆ ತಾನು ಮಾಡಬೇಕಿದ್ದ ಅಗತ್ಯದ ಕೆಲಸಗಳಲ್ಲಿ ಮುಖ್ಯವಾದದ್ದೆಂದರೆ “ಬೇರೆಯ ಪ್ರಪಂಚ ಎಂದು ಭಾವಿಸಿದ್ದ ಊರಿನ ಪರಿಸರಕ್ಕೆ ಹೊಂದಿಕೊಳ್ಳುವುದಷ್ಟೇ” ಎನ್ನುತ್ತಾನೆ. ಗಟ್ಟಿಮುಟ್ಟಾದ ಸಂವಿಧಾನವನ್ನು ಹೊಂದಿರುವ ಪ್ರಸನ್ನರ ಕತೆಗಳು ಓದುಗನನ್ನು ಸಹಯಾತ್ರಿಯಾಗಿ ಜೊತೆಗೂಡಿಸಿಕೊಂಡು ಬೇರೆಯದೆಂದು ಭಾವಿಸಲ್ಪಟ್ಟಿರುವ ಪ್ರಪಂಚಕ್ಕೆ ಕರೆದೊಯ್ಯುತ್ತವೆ; ಅವನ ಕುತೂಹಲವನ್ನು ಪ್ರಚೋದಿಸುತ್ತ ಸದಾ ಕ್ರಿಯಾಶೀಲನಾಗಿರುವಂತೆ ನೋಡಿಕೊಳ್ಳುತ್ತವೆ; ಬೇರೆಯದೆಂದು ಭಾವಿಸಿದ್ದು ನಮ್ಮದೇ ಪ್ರಪಂಚ, ಅಲ್ಲಿಯ ನೋವು, ನಲಿವು, ಆತಂಕಗಳು ಥೇಟ್ ನಮ್ಮದೇ ಅಲ್ಲವೇ ಎನ್ನುವ ಸಹ-ಅನುಭೂತಿ ದೊರಕಿಸಿಕೊಡುತ್ತವೆ. ಕಥನ ಸಾರ್ಥಕವಾಗುವುದೇ ಹೀಗೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_121.txt b/Kenda Sampige/article_121.txt new file mode 100644 index 0000000000000000000000000000000000000000..4d2ad81a96a7712729d5e6e6b3833353137fca00 --- /dev/null +++ b/Kenda Sampige/article_121.txt @@ -0,0 +1,27 @@ +ವಜ್ರವನ್ನೇ “ಕೆಲಸಕ್ಕೆ ಬಾರದ ವಜ್ರದ ಹೊಳಪಿಗೆ ಮಾರು ಹೋಗುತ್ತೇವೆ ನಾವು” ಎಂದುಚ್ಛರಿಸುವ ಧೀಶಕ್ತಿ ಇರುವ ಆಶಾ ಜಗದೀಶರವರ ಎರಡನೆ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” . ಮಧ್ಯಾಹ್ನವೇ ನಡು. ಅಂಥದ್ದರಲ್ಲಿ ಮಧ್ಯಾಹ್ನದ ನಡು ಹೊತ್ತಿಗೆ ಕಣ್ಣು ತೆರೆದು ಅದರ ಝಳದ ಬೆಳಕಿನಲ್ಲಿ ಸ್ಪುರಿಸಿದ ಕವಿತೆಗಳಿವು. ಹಾಗಾಗಿ ಫಳ ಫಳ ಹೊಳೆಯುವ ಹೊಳಪಿನ ಅಂತರಂಗದ ಕವಿತೆಗಳಂತೆ ಭಾಸವಾಗುವುದರಲ್ಲಿ ತಪ್ಪಿಲ್ಲ. ಒಂದು ರೀತಿಯಲ್ಲಿ ಹೇಳುವುದಾದರೆ ಅವರದೇ ಆದ ಖಾಸಗಿ ಬದುಕಿನ ಸ್ವಗತಗಳೆ ಹೆಚ್ಚಿನದೆಲ್ಲ ಕವಿತೆಗಳ ವಸ್ತುಗಳಾಗಿವೆ. ಕವಿತೆ ಎಂದರೆ ಇದೇ ತಾನೇ ಅಲ್ಲವೇ? ನಮ್ಮದೇ ಏಕಾಂತದಲ್ಲಿ ನಾವನುಭವಿಸಿದ ತಲ್ಲಣಗಳು, ಲೋಕದೊಳಗೆ ಗುರುತಿಸಿದ ಸೂಕ್ಷ್ಮಾತಿ ಸೂಕ್ಷ್ಮ ಪದರಗಳು, ಒಟ್ಟಿನಲ್ಲಿ ತನ್ನ ಸ್ವ-ವಿಮರ್ಶೆಗಳೆ ಇಲ್ಲಿ ಕವಿತೆಗಳಾಗಿವೆ ಎನ್ನಬಹುದು. ಕನ್ನಡ ಕವಿತೆಯ ಲೋಕ ಹಿಡಿಯಬೇಕಿರುವ ಸರಿಯಾದ ದಾರಿಯಲ್ಲೇ ಇವರ ಕವಿತೆಗಳು ಚಲಿಸುತ್ತಿವೆ. ನವ್ಯ ಕವಿತೆಗಳ ನಾಡಿಮಿಡಿತವನ್ನು ಕವಯತ್ರಿ ಹೃದ್ಯವಾಗಿ ಧ್ವನಿಸಿದ್ದಾರೆ. ತುಂಬಾ ಆಳವಾದ ಆಲೋಚನೆಗಳೊಂದಿಗೆ ಹೊಸ ಸ್ವರೂಪದ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. + +(ಆಶಾ ಜಗದೀಶ್‌) + +“ಭೂಮಿ ಮತ್ತು ಆಕಾಶಗಳು /ತಮ್ಮ ಪ್ರೇಮ ಕಿತಾಬಿನಲ್ಲಿ ಇನ್ನೂ ಸ್ಕಲಿಸಬೇಕಿರುವ ಅಸಂಖ್ಯ ಅಸ್ಕಲಿತ/ ಪ್ರೇಮ ನಿವೇದನೆಗಳ/ಅಡಿ ಮತ್ತು ಮುಡಿಗೆ / ನುಡಿ ದಾನ ಮಾಡುತ್ತಿದೆ” ಹೀಗೆ ಸಿಹಿಯಾಗಬೇಕೆಂಬ ಕವಿತೆಯಲ್ಲಿ ಅಗಾಧ ಕಡಲು, ನಿಗೂಢ ಭೂಮಿ ಮತ್ತು ಆಕಾಶಗಳ ಕುರಿತು ಇನ್ನೂ ಆಳವಾಗಿಯೆ ನಮ್ಮೊಡನೆ ತೆರೆದಿಟ್ಟಿದ್ದಾರೆ. ತನ್ನೊಳಗಿನ ಭಾವನೆಗಳನ್ನೆಲ್ಲ ಪ್ರೇಮದ ಪಿಸು ಮಾತಿನಲ್ಲಿ ಅರುಹಿ ಮೈಮನಗಳನ್ನು ಹಗುರಾಗಿಸಿಕೊಂಡ ಕೀರ್ತಿ ಇಲ್ಲಿನ ಕವಿತೆಗಳಿಗೆ ಸಲ್ಲಬೇಕು. ಕವಿತೆಯ ಭಾವವನ್ನು ಸಾರ್ವಕಾಲಿಕ ಮಾಡಿ ತಮ್ಮ ನವಿರು ಪ್ರೀತಿ ಪ್ರೇಮದ ತಲ್ಲಣಗಳನ್ನು ಕಂಡು ಕಾಣದಂತೆ ಸಂವೇದಿಸಿದ್ದಾರೆ. ಕವಿತೆಯ ಸಖ್ಯದಿಂದ, ದಾಂಪತ್ಯ ಸಖ್ಯವನ್ನು ಓದುಗರು ತಮ್ಮ ಬಾಳಲ್ಲಿ ಕಂಡುಕೊಳ್ಳುವ ಪ್ರಯತ್ನ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಯಾಕೆಂದರೆ ಕವಿತೆಗಳು ಅಷ್ಟೊಂದು ಆಪ್ತವಾಗಿ, ಅಪ್ಯಾಯಮಾನವಾಗಿ ನಮ್ಮನ್ನು ತಟ್ಟುತ್ತವೆ. ಇಂಥ ಸಂದರ್ಭದಲ್ಲೇ ಕವಿತೆ ಸಾರ್ಥಕತೆಯನ್ನು ಪಡೆದುಕೊಳ್ಳುವುದು. + +“ರಾತ್ರಿಯ ತಂಪು ಸುಡುತ್ತಿದೆ / ನಿಶ್ಯಬ್ದದ ಗದ್ದಲ ಕಿವಿ ತಮಟೆಯ ಹರಿಯುತ್ತಿದೆ” ಹೀಗೆ ಪ್ರೀತಿ, ಪ್ರೇಮ, ವಿರಹದ ಜಾಡು ಹಿಡಿದು ಅದರ ಚುಂಗು ಬಿಡದೆ ಹರಿಬಿಟ್ಟ ಒಲವಿನ ಸಾಲುಗಳ ಹೂರಣವೆ ಇಲ್ಲಿದೆ. ‘ಸಾವು’ ಎಂಬ ಅರ್ಥಗರ್ಭಿತ ಕವಿತೆಯಲ್ಲಿ, ಕೊನೆಯದಾಗೊಮ್ಮೆ ನಿನ್ನೊಂದಿಗೆ ಕಳೆದ ಪುರಾತನ ಕ್ಷಣವೊಂದನ್ನು/ ಸೋರುವ ಮೊಲೆ ತೊಟ್ಟಿನ ಬುಡದಲ್ಲಿ ಹಚ್ಚಿಟ್ಟು / ಎರಡೆಸಳು ಚಿಗುರುವವರೆಗೂ / ಅದನ್ನು ಕಾಯಿಸಬೇಕೆನಿಸುತ್ತದೆ. ಹೀಗೆ ಮಾರ್ಮಿಕವಾಗಿ ಕವಯತ್ರಿ ಹೇಳುತ್ತಾರೆ. + +ಕವಯತ್ರಿಯ ಪಾಲಿಗೆ, ಕಾವ್ಯವೊಂದು ಪ್ರೀತಿಯ ಸೆಲೆ, ರೂಪಕಗಳ ಮಾಲೆ ಎನ್ನಬಹುದು. ಮನಸ್ಸು ಕೂಡ ಸೂಕ್ಷ್ಮತೆಯ ಕಣಜದ ಭಾರವನ್ನು ಹೊತ್ತಿದೆ. ಇಲ್ಲವೆಂದರೆ ‘ಅಮ್ಮ ಮತ್ತು ಹೊಲಿಗೆ’ ಎಂಬ ಅದ್ಭುತ ಕವಿತೆ ಹುಟ್ಟಿಕೊಳ್ಳಲು ಸಾಧ್ಯವಿರುತ್ತಿರಲಿಲ್ಲ. + +“ಅಮ್ಮ ಮತ್ತೆ ಮತ್ತೆ ಹೇಳಿಕೊಡುತ್ತಾಳೆ/ ಹೊಲಿಗೆ ಹಾದಿಗೆ ಬರುತ್ತದೆ/” ಮೆಷಿನ್ನಿನ ರೂಪಕದೊಂದಿಗೆ ಬದುಕಿನ ಪಾಠವ ತಿಳಿಸುವ ಕಾವ್ಯ ನಾವೆಲ್ಲರೂ ಅತಿಯಾಗಿ ಮೆಚ್ಚುವಂತಿದೆ. ಒಂದು ಕಾವ್ಯಧರ್ಮಕ್ಕೆ ಇರಬೇಕಾದ ನಿಪುಣತೆ ಮತ್ತು ಸೃಜನಶೀಲತೆ ಇವರ ಬರಹದಲ್ಲಿದೆ. ಕಾವ್ಯ ಸಂಯೋಜನೆಯನ್ನು ಕೂಡ ಚೆನ್ನಾಗಿ ಅರಿತಂತಹ ಕೌಶಲ್ಯ ಇವರ ಕವಿತೆಗಳದ್ದು. “ಎಲ್ಲವನ್ನೂ ಕುಬ್ಜ ವಾಗಿಸುತ್ತ ಬೆಳೆದ ಅಮ್ಮ /ಹೆಮ್ಮರದ ಸೂಚನೆಯನ್ನು ನೀಡುತ್ತಾ / ನನ್ನೊಳಗೂ ಬೀಜವಾಗಿದ್ದಾಳೆ / ಅಮ್ಮನಂತಿದ್ದು ಅಮ್ಮನಂತಾಗದಿರುವ / ಎಚ್ಚರವಾಗುಳಿದಿದ್ದಾಳೆ ನನ್ನೊಳಗೆ”. ಹೀಗೆ ಕವಿತೆಯೆಂದರೆ ಕೇವಲ ಕವಿತೆಯಲ್ಲ ಇವರ ಪಾಲಿಗೆ- ಅದು ಬದುಕಿನ ಭಾವವು ಹೌದು, ಬದುಕಿನ ಭಾಗವು ಹೌದು ಎಂಬುದಾಗಿ ಗೋಚರಿಸುತ್ತದೆ. + + + +ನಡು ಮಧ್ಯಾಹ್ನದ ಕಣ್ಣು ಸಂಕಲನದಲ್ಲಿ ಪದಗಳಲ್ಲಿಯೆ ಪದ್ಯವನ್ನು ಅಡಗಿಸಿಟ್ಟು ಹೆಣೆಯುವುದರೊಂದಿಗೆ, ಕನ್ನಡದ ಶಬ್ದಗಳನ್ನು ಜೊತೆಗೆ ಕನ್ನಡ ಭಾಷೆಯನ್ನು ಅಷ್ಟೇ ಚೆನ್ನಾಗಿ ದುಡಿಸಿಕೊಂಡಿದ್ದಾರೆ. ನಿಕ್ಕಿಯಾಗಬೇಕು, ಹತ್ಯಾರು, ಅಗೇವು, ಮಿಡಿನಾಗರ, ಶತರಂಗಿ, ಕರತಲಾಮಲಕ, ಗತ್ಯಂತರ, ದೈನೇಸಿತನ, ಅಟೆದಂತಾಗಿ, ಅಂತಃಚಕ್ಷು, ಬಿಸಿಲಕೋಲು, ಈಕ್ಷಿಸು, ಯಮಳ ಯುಗ್ಮ, ಸ್ಪೃಹ, ಚುಚ್ಚುಗವನ್ನೀಗ ಇತ್ಯಾದಿ ಪದಗಳೆಲ್ಲ ಹೊಸ ಅನುಭೂತಿಯನ್ನು ನಮಗೆ ನೀಡುತ್ತದೆ. ಈಗಿನ ಅತ್ಯಾಧುನಿಕ ಕನ್ನಡದ ಕವಿತೆಗಳು ಎಂದು ಕರೆಯಲ್ಪಡುವ ಎಲ್ಲ ಲಕ್ಷಣಗಳೂ ಇಲ್ಲಿವೆ. ಕನ್ನಡದ ವಿಶೇಷ ಪದಗಳೊಂದಿಗೆ ಇಂಗ್ಲಿಷ್ ಮತ್ತು ಹಿಂದಿಯ ಪದಗಳನ್ನು ಸಹ ಕವಿತೆಯ ಸ್ವಾದಕ್ಕೆ ತೊಡಕಾಗದಂತೆ ಲೀಲಾಜಾಲವಾಗಿ ಬಳಸಿಕೊಂಡಿದ್ದಾರೆ. + +ಕೃತಿಯ ಮುನ್ನುಡಿಗೆ ಲಲಿತಾ ಸಿದ್ಧಬಸವಯ್ಯ ಶೀರ್ಷಿಕೆ ಕೊಟ್ಟು ಹೇಳಿದಂತೆ, ‘ಹೊಸ ರೂಪಕಗಳ ಹೊಸ ಪದಕೂಟದ ಕವಿ’ ಎಂಬುದು ಇವರ ಕವಿತೆಗಳಿಗೆ ಚೆನ್ನಾಗಿ ಒಪ್ಪುತ್ತದೆ. ಕವಿತೆಗಳನ್ನು ಭ್ರಮಾ ಲೋಕದ ಸಾಲುಗಳಂತೆ ಬಿಂಬಿಸದೆ ವಾಸ್ತವಕ್ಕೆ ಹತ್ತಿರ ಬಂದು ನಿಲ್ಲಿಸಿದ್ದಾರೆ. ಬದುಕು ಮತ್ತು ಕವಿತೆ ಒಂದಕ್ಕೊಂದು ಮುಖಾಮುಖಿಯಾಗುವಂತೆ ನಮಗಿಲ್ಲಿ ಭಾಸವಾಗುತ್ತದೆ. + +ಸ್ತ್ರೀ ಬದುಕಿನ ಅಗಾಧತೆ ಮತ್ತು ಸ್ತ್ರೀಯ ಇತಿಮಿತಿಯೊಳಗಿನ ಬದುಕು ಅನಾವರಣಗೊಳ್ಳುವ ಕವಿತೆಗಳಾದ ಹೂವಿಡುವಷ್ಟೆ ನಿಧಾನವಾಗಿ, ನಾವು ಸ್ವಲ್ಪ ಹೀಗೆ, ಆಸೀಫಾ, ಅವಳು, ಅಡುಗೆಯಾಟದ ಹುಡುಗಿ ಮುಂತಾದ ಕವಿತೆಗಳು ಮಹಿಳೆಯ ಅಂತರಂಗವನ್ನು ಬಿಂಬಿಸುತ್ತವೆ. ಕವಯತ್ರಿ ಆಶಾ ಅಭಿಮಾನದಿಂದ ಅಭಿವ್ಯಕ್ತಿ ಪಡಿಸಿದ ಸ್ತ್ರೀಯ ಬಗೆಗಿನ ಈ ಸಾಲು ಪ್ರತಿ ಹೆಂಗಳೆಯರ ಹೆಮ್ಮೆ. “ಹೋಗಲಿ ಬಿಡಿ ನೀವವಳನ್ನು ಆಪಾದ ಮಸ್ತಕವೇ/ ನೋಡಿದುದು ಸರಿಯೇ ಏಕೆಂದರೆ/ ದೇವತೆಯನ್ನು ಹಾಗೆಯೇ ನೋಡಬೇಕಂತೆ” + +ನಿಜ ಪ್ರತಿ ಹೆಣ್ಣು ದೇವತೆಯೆ ಆಗಿದ್ದಾಳೆ. + + + +ಇಲ್ಲಿನ ಪ್ರತಿ ಕವಿತೆಯು ಒಂದೊಂದು ಸಂದೇಶ ಸಾರುವಂತಿದೆ. ವಿಷಾದ, ಟೀಕೆಗಳು ಒಂದೊಂದು ಕಡೆ ನಮ್ಮನ್ನು ಎಚ್ಚರಿಸುತ್ತವೆ. ಹೆಚ್ಚಿನ ಕವಿತೆಗಳು ಹೆಣ್ಣಿನ ಭಾವವನ್ನು ಸ್ಪುರಿಸುತ್ತ ವೈಯುಕ್ತಿಕತೆಯನ್ನು, ಸಾಮಾಜಿಕತೆಯನ್ನಾಗಿಸಿ ಸಮಾಜವನ್ನು ಧೈರ್ಯವಾಗಿ ಎದುರಿಸುವ ನೀತಿ ಪಾಠ ಹೇಳಿಕೊಟ್ಟಂತಿದೆ. ಸಂಕಲನವನ್ನು ಓದಿದ ಮೇಲೆ, ನಿಗೂಢವಾಗಿದ್ದ ಹೆಣ್ಣಿನ ಮನಸ್ಸೊಂದು ಈಗ ಆಕಾಶದಲ್ಲಿ ಸ್ವಚ್ಛಂದವಾಗಿ ಹಾರುವ ಹಕ್ಕಿಯಾಗಿದೆ ಎಂಬುದಾಗಿ ನಮಗಿಲ್ಲಿ ಭಾಸವಾಗುತ್ತದೆ. ತುಂಬು ಆತ್ಮವಿಶ್ವಾಸದಿಂದ ಬರೆದ ಈ ಕವಿತೆಗಳಿಗೆ ಅಪಾರ ಜನ ಮನ್ನಣೆ ಸಿಗಲಿ ಎಂಬುದಾಗಿ ನಮ್ಮ ಕಾಲದ ಮಹತ್ವದ ಕವಯತ್ರಿ ಆಶಾರವರಿಗೆ ನಾವೆಲ್ಲರೂ ಮನಪೂರ್ವಕವಾಗಿ ಹಾರೈಸೋಣ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_122.txt b/Kenda Sampige/article_122.txt new file mode 100644 index 0000000000000000000000000000000000000000..4a1b48e9672cb1767c0360ebee00d6eec331049e --- /dev/null +++ b/Kenda Sampige/article_122.txt @@ -0,0 +1,25 @@ +ಮನುಷ್ಯ ಎಂಬ ಪ್ರಾಣಿಯನ್ನು ಹೊರತು ಪಡಿಸದೆ ಸಕಲ ಜೀವಸಂಕುಲಗಳ ಉಳಿವು ನಿರ್ಧಾರಿತವಾಗುವುದು ಯಾವುದೇ ಬೌದ್ಧಿಕನೆಲೆಯಲ್ಲಿ ಆಗಿರದೇ ‘ಅಡಾಪ್ಟಬಿಲಿಟಿ’ಯ ಮೇಲೆ ನಿಂತಿರುತ್ತದೆ ಎನ್ನುವುದು ಡಾರ್ವಿನ್ನಿನ ಉವಾಚ. ಇಂದ್ರಕುಮಾರ್ ಎಚ್.ಬಿ. ಅವರ ಹೊಸ ಕಾದಂಬರಿ ‘ಎತ್ತರ’ ಈ ಥಿಯರಿಯನ್ನು ಕೃತಿಕಾರನ ಕಲ್ಪನೆಯಲ್ಲಿ ಎಲ್ಲ ಪ್ರಯೋಗಗಳನ್ನು ಪಡೆದುಕೊಂಡು ಸೋದಾಹರಣವಾಗಿ ವಿವರಿಸುತ್ತದೆ ಎಂದು ನನಗೆ ಅನಿಸುತ್ತದೆ. ಪ್ರಕೃತಿ ಮತ್ತು ಪ್ರಕೃತಿಯ ಅಂತರ್ಗತ ಸತ್ವವಾದ ಮನಸ್ಸು ಎಂಬುದರ ಜೊತೆ ನಿರಂತರವಾಗಿ ಏರ್ಪಡುವ ಸಂಘರ್ಷವನ್ನು ನಿಭಾಯಿಸಿಕೊಳ್ಳಬೇಕು ಮತ್ತು ಸ್ವಸ್ಥವಾಗಿ ಬದುಕಲು ಬೇಕಾಗಿರುವ ಸಾಮರಸ್ಯವನ್ನು ಕಂಡುಕೊಳ್ಳಲೇ ಬೇಕಾಗಿರುತ್ತದೆ. + +(ಇಂದ್ರಕುಮಾರ್ ಎಚ್.ಬಿ.) + +ಇದು ಕೃಷ್ಣಮೂರ್ತಿ ಮತ್ತು ರವಿಕಿರಣ ಎಂಬ ಎರಡು ಹೆಸರಿರುವ ವ್ಯಕ್ತಿಯ ದಾವಣಗೆರೆ – ಚಿತ್ರದುರ್ಗ ಎಂಬ ನಾಗರೀಕ ಹಾಗೂ ಕತ್ಲೆಕಾನು ಎಂಬ ಪ್ರಾಕೃತಿಕ ಎಂಬ ಎರಡೆರಡು ಜಗತ್ತುಗಳ ನಡುವಿನ ತಾಕಲಾಟದ ವ್ಯಥೆ. ಇದನ್ನು ಕಥೆಯಾಗಿಸುವವರು ಪಾರ್ವತಿ, ಪುಟ್ಟ, ಲಲಿತಾ, ಕಾದಂಬರಿ, ಸರಿತಾ, ವಿಮಲಾ, ಕೌಸಲ್ಯಮ್ಮ, ಗಣಪಯ್ಯಜ್ಜ, ಸರಳಾ… ಇನ್ನಿತರರು. ಅದೃಶ್ಯ ವಿಕಿರಣವನ್ನು ಹೊರಸೂಸಬಲ್ಲ ಲಿಂಗ ಪ್ರಧಾನ ರೂಪಕ. + +ಹೈರಾರ್ಕಿಯನ್ನು ಕಣ್ಣಿಗೊತ್ತಿಕೊಂಡು ಆಚರಿಸುವ ವಿದ್ಯಾವಂತ ಸಮಾಜದ ಸಾಂಸ್ಥಿಕ ರೂಪವಾದ ಕಾಲೇಜೊಂದರಲ್ಲಿ ಶೋಷಿತನಾಗಿ, ಅಸಹಾಯಕನಾಗಿ, ವಂಚಿತನಾಗಿ ಅನ್ಯಾಯಕ್ಕೊಳಗಾಗಿದ್ದ ನಿರೂಪಕನನ್ನು ಅನ್ನ ನೀರಿನ ಜೊತೆ ಅಸ್ತಿತ್ವದ ಅರ್ಥವನ್ನು ಹುಡುಕಿಕೊಳ್ಳುವ ಸಮಯಾವಕಾಶ ನೀಡಿ ‘ಕತ್ಲೆಕಾನು’ ಪೊರೆಯುತ್ತದೆ. ಈ ಕಾನನದ ಬಹುಸ್ತರೀಯ ನಿವಾಸಿಗಳು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಹಾಗೂ ಲಿಂಗೀಯ ಹೈರಾರ್ಕಿಗಳನ್ನೆಲ್ಲ ಸಲೀಸಾಗಿ ಮತ್ತು ಸಹಜವಾಗಿ ಬದಿಗೆ ಸರಿಸಿ ಅಪರಿಚಿತನೊಡನೆ ಬಾಂಧವ್ಯ ಬೆಳೆಸಿಕೊಳ್ಳಬಲ್ಲವರಾಗಿದ್ದಾರೆ. ಹಾಗಂತ ಇದೇನು ಅಮಾಯಕವಾದ ಪ್ರಪಂಚವಲ್ಲ. ಇಲ್ಲೂ ಆಟವಿದೆ. ಯಾರು ಪ್ರಿಡೇಟರ್ ಯಾರು ಪ್ರೇ ಎಂದು ಕಂಡುಕೊಳ್ಳಲು ಹೆಣಗಾಡುವ ಆಟ. ನಿರೂಪಕ ಏನೆಲ್ಲ ಗೊಂದಲ ದ್ವಂದ್ವಗಳ ಜೊತೆಗೇ ಕತ್ಲೆಕಾನಿನ ಈ ಸೆಟ್ ಆಫ್ ಲೇಡೀಸ್ ಜೊತೆ ಸೆಣಸಾಡಬೇಕು. ಅವರೋ ಸ್ತ್ರೀ ಸಹಜ ಶಿಸ್ತು, ಸಂಯಮ, ಸಂಕಲ್ಪಶಕ್ತಿಗಳ ಗಟ್ಟಿತನದ ಜೊತೆ ಹಲವಾರು ಪಟ್ಟುಗಳನ್ನು ಕಲಿತವರು. ತಮ್ಮ ನಿಗೂಢತೆ, ಕೌಶಲ್ಯ, ತಂತ್ರಗಳಿಂದ ಮಾರ್ವೆಲ್ಲಿನ ಫ್ರಾಂಚೈಸಿಯ ಪಾತ್ರಗಳನ್ನು ನೆನಪಿಸುವಂಥವರು. ಇವರೆಲ್ಲರೂ ಕಥಾನಾಯಕನ ಅನಿಶ್ಚಿತತೆ, ಆ್ಯಂಕ್ಸೈಟಿ, ಆಗಾಗ ಆವರಿಸುವ ಅನಾಸಕ್ತಿ ಮತ್ತು ನಿಶ್ಯಕ್ತಿಯನ್ನು ಚಿತ್ತು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಾರೆ. ಈ ಅಂತಃಕರಣದ ಗುಣವೇ ಬದುಕಲು ಆಸರೆ ಆಗುವಂಥಹುದು. + +ಮನಸ್ಸಿನ ಮನೋವಿನ್ಯಾಸಗಳ ಪ್ರಕ್ರಿಯೆ ಮತ್ತು ಪರಿಸರದ ಪಾಲ್ಗೊಳ್ಳುವಿಕೆಯಿಂದ ಉಂಟಾಗುವ ತರ್ಕದ ಜೊತೆಗೆ ಊಹೆಗೂ ನಿಲುಕದ ಪರಿಸ್ಥಿತಿಗಳು ಪತ್ತೇದಾರಿಕೆಯಿಂದ ಮಾಂತ್ರಿಕ ವಾಸ್ತವವಾದ, ಅತಿವಾಸ್ತವವಾದದವರೆಗೂ ಶೈಲಿಯನ್ನು ವಿಸ್ತರಿಸುತ್ತವೆ. + +ಪಲಾಯನಗೈದು ಪರಸ್ಥಳಕ್ಕೆ ಬಂದಿರುವ ಕಥಾನಾಯಕ ಎದುರುಗೊಳ್ಳುವುದು ಗಟ್ಟಿಯಾಗಿ ನೆಲೆನಿಂತವರು ಮತ್ತು ಜಿಗುಟುತನದಲ್ಲಿ ಜೀವಿಸುತ್ತಿರುವವರು ಮತ್ತು ಅವರೆಲ್ಲರೂ ಕಥಾನಾಯಕ ಅವರು ಪ್ರತಿನಿಧಿಸುವ ಜೀವನಕ್ರಮದ ಮೇಲೆ ಕಟ್ಟಿಕೊಳ್ಳುವ ಸ್ಟೀರಿಯೋಟೈಪ್‌ಗಳಾಗಿರದೇ ಹಲವಾರು ತಿರುವುಗಳನ್ನು ಅಚ್ಚರಿಯನ್ನುಂಟುಮಾಡುವುದು ಕಥಾಹಂದರವಾಗಿದೆ. ತಾನು ತಯಾರಿಸಿದ ತಿಂಡಿ ತಿನಿಸುಗಳನ್ನು ಮಾರಾಟ ಮಾಡಲು ಸಿರ್ಸಿ ಯಲ್ಲಾಪುರ ಪೇಟೆಗಳಿಗೆ ಹೋಗಿ ಬಂದಷ್ಟೇ ಸಲೀಸಾಗಿ ಸರಿತಾ ನಿಗೂಢ ಚಕ್ರವ್ಯೂಹದೊಳಗೆ ಹೋಗಿ ಬಂದು ಮಾಡಬಲ್ಲಳು. ಕಾದಂಬರಿ, ಲಲಿತಾ ತಮ್ಮ ಬಗ್ಗೆ ಇತರರಿಗೆ ಅಭಿಪ್ರಾಯ ಮೂಡಿಸಿಕೊಳ್ಳಲು ಅನುವು ಮಾಡಿಕೊಡುತ್ತಲೇ ಹಿಂದಿನಿಂದ ಕೆಡವುತ್ತ ಬರಬಲ್ಲರು. ಪಾರ್ವತಿಯದು ಫೀನಿಕ್ಸ್ ಪ್ರತಿಭೆ. + + + +ಒಟ್ಟಾರೆ ಇವರೆಲ್ಲರೂ ಹಳೆಕಾಲದ ಟ್ರಂಕಿನೊಳಗೆ ಘಾತುಕ ರಹಸ್ಯವನ್ನು ತಣ್ಣಗೆ ಮಡಚಿಡಬಲ್ಲರು. ಹಾಗೆಯೇ ಮಡಿಲಿನಲ್ಲಿ ಮಲಗಿರುವ ಬೆಕ್ಕಿನ ಮರಿಯನ್ನು ಅತಿ ಅನೌಪಚಾರಿಕವಾಗಿ ಕೆಳಗಿಳಿಸುವಂತೆ ಗುಟ್ಟು ಬಿಟ್ಟುಕೊಡಬಲ್ಲವರು. ರಾಜಕಿಶೋರ, ಸರಳ, ಸುಗುಣೇಶ, ಮಾಧವ ಎಂಬ ಚುಕ್ಕಿಪಾತ್ರಗಳೆಲ್ಲ ಇವನನ್ನು ಸುಳಿಯ ಇನ್ನಷ್ಟು ಒಳಗೆ ಸೆಳೆಯಬಲ್ಲವರು. ಇವರೆಲ್ಲರಿಂದ ಸುತ್ತುವರೆದಿರುವ ಕಥಾನಾಯಕನಿಗೆ ಸಾವಯವ ಸಂಬಂಧದ ತಾದ್ಯಾತ್ಮ ಸಾಧ್ಯವಾಗುವುದು ‘ಒಂದು ಸುತ್ತು ಕಡಿಮೆ’ ಇರುವ ವಿಮಲಾಳೊಂದಿಗೆ. ನಾಣ್ಯ ಅವರ ನಡುವಿನ ಸಂವಾದದ ಭಾಷೆ. ವಿಮಲಾಳ ಕೈಯಲ್ಲಿ ನೇರವಾಗಿ ನಿಂತುಬಿಡುವ ನಾಣ್ಯ – ಈ ಕಥಾನಕದ ಅನಿಶ್ಚಿತ ಕ್ಲೈಮ್ಯಾಕ್ಸ್. + +ಮೀನುಸಾರಿನ ಘಮಲು, ಕ್ವಾಂಟಮ್ ಫಿಸಿಕ್ಸ್‌ನ ಜಿಜ್ಞಾಸೆ, ಫಲವತ್ತತೆಗೆ ಆದೀತು, ಚಿರಯೌವನಕ್ಕೆ ಆದೀತು, ಅಮರತ್ವಕ್ಕೆ ಆದರೆ ಆದೀತು ಎನ್ನುವ ‘ಟ್ರಯಲ್ ಅಂಡ್ ಎರರ್ ಮೋಡ್’ನಲ್ಲಿರುವ ಹಸಿರು ಜ್ಯೂಸ್‌ಗಳ ಲೋಕದಲ್ಲಿ ಅಂತಿಮವಾಗಿ ತಾನೇ ಪರಿಸರ, ಪ್ರಜ್ಞೆ, ವಿದ್ಯಮಾನ, ತಾನೇ ಕಾರ್ಯಕಾರಣ ಎಂಬ ತಲ್ಲಣದಿಂದ ‘ತತ್ವಮನೆ’ಯವರೆಗಿನ ರೂಪಾಂತರ ಈ ‘ಎತ್ತರ’. + +ಈ ಕಾದಂಬರಿಯು ಓಪನ್ ಎಂಡೆಡ್ ಆಗಿ ಮುಕ್ತಾಯಗೊಳ್ಳುತ್ತದೆ ಎನ್ನುವುದಕ್ಕಿಂತ ‘ಟು ಬಿ ಕಂಟಿನ್ಯೂಡ್…’ ಮಾದರಿಯದು ಎಂದು ಹೇಳಬಹುದು. ಸೃಜನಶೀಲ ಸಾಹಿತ್ಯದ ಬಗೆಗಿನ ಬದ್ಧತೆ ಮತ್ತು ಜೀವನದ ಡೈನಾಮಿಕ್ಸ್ ಬಗೆಗಿನ ತಣಿಯದ ಕೌತುಕ ಇಂದ್ರಕುಮಾರ್ ಅವರನ್ನು ತೀಕ್ಷ ಮತ್ತು ಸಮೃದ್ಧ ಬರಹಗಾರರನ್ನಾಗಿಸುತ್ತದೆ. + + + +ಎತ್ತರ ಎತ್ತರವಷ್ಟೇ ಅಲ್ಲದೇ ಆಳ, ಅಗಲ… ಎಲ್ಲ ಆಯಾಮಗಳಲ್ಲೂ ಸಮೃದ್ಧವಾಗಿದೆ. ವಿಶೇಷವಾಗಿ ಪ್ರಾಂತೀಯ ಭಾಷಾಬಳಕೆಯನ್ನು ಶ್ಲಾಘಿಸಲೇಬೇಕು. ಇಂದಿನ ಕನ್ನಡ ಸಾಹಿತ್ಯದ ಪ್ರಮುಖ ಕಥೆಗಾರರೆನಿಸಿಕೊಳ್ಳುತ್ತಿದ್ದ ಇಂದ್ರಕುಮಾರ್ ಎಚ್.ಬಿ. ಅವರು ಪ್ರಮುಖ ಕಾದಂಬರಿಕಾರರೂ ಎನ್ನುವ ಪಟ್ಟವನ್ನು ಗಳಿಸಿಕೊಂಡಿರುವುದಕ್ಕೆ ಅಭಿನಂದನೆಗಳು. + +ಮಮತಾ ಆರ್ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಮೂಲದವರು. ಇಂಗ್ಲಿಷ್ ಭಾಷಾ ಸಹಾಯಕ ಪ್ರಾಧ್ಯಾಪಕರು ಹಾಗೂ ಕವಿ, ಕಥೆಗಾರ್ತಿಯಾಗಿದ್ದಾರೆ. ಜಾಗತಿಕ ಸಾಹಿತ್ಯವನ್ನು ಅಪಾರವಾಗಿ ಓದಿಕೊಂಡಿರುವ ಇವರು, ತಮ್ಮ ಕಥೆಗಳಿಗಾಗಿ ಪ್ರಜಾವಾಣಿ, ವಿಜಯವಾಣಿ, ಇನ್ನೂ ಅನೇಕ ಬಹುಮಾನಗಳನ್ನು ಪಡೆದಿದ್ದು, ‘ಅತಿ ತಲ್ಲಣ ಅತಿ ನಿಶಬ್ದ’ ಎನ್ನುವ ಕಥಾಸಂಕಲನವನ್ನು, ‘ಒಂಚೂರು ಅಪಚಾರವೆಸಗದ ಅನುಭವಗಳು’ ಎನ್ನುವ ಕವನಸಂಕಲನವನ್ನು ಪ್ರಕಟಿಸಿದ್ದಾರೆ. ಭಾರತೀಯ ಸಿನಿಮಾಗಳ ಮೇಲೆ ಪಿಎಚ್‌ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. \ No newline at end of file diff --git a/Kenda Sampige/article_123.txt b/Kenda Sampige/article_123.txt new file mode 100644 index 0000000000000000000000000000000000000000..5312ef00d1c6deb8f85b483ea02e305fd20b4b81 --- /dev/null +++ b/Kenda Sampige/article_123.txt @@ -0,0 +1,23 @@ +ಇನ್ನೊಂದು ತಿಂಗಳು ಹುಬ್ಬಳ್ಳೀಲಿ ವಾಸ್ತವ್ಯ… ಹೋದ ಸಲ ಅಲ್ಲಿ ಮಾಡಿದ್ದ ಹೋಟೆಲಿನ ರೂಮು ಸರಿ ಇರಲಿಲ್ಲ… ಹಾಗಂತ ಹೇಳಿದ್ದಕ್ಕೆ ಈ ಸಲ ಯಾರದೋ ಮನೆ ಮೇಲ್ಗಡೆ ರೂಮಿನ ವ್ಯವಸ್ಥೆ ಮಾಡಿದೀನಿ ಅಂದ ನರಸು… ಕ್ಲೀನಾಗಿ ಇದ್ದರಾಯ್ತು… ಅಂದ ಚಂದ ನಾನು ಮಾಡ್ಕೋತೀನಿ. ಮನುಷ್ಯನಿಗೆ ರಸಿಕತೆ ಇರ್ಬೇಕು… ಅಭಿರುಚಿ ಇರ್ಬೇಕು… ತಾನಿರೋ ಪರಿಸರದ ಸುತ್ತಮುತ್ತಲು ಮನಸಿಗೆ ಮುದ ಕೊಡೋ ಹಾಗೆ ಇರೋತರ ಚಂದವಾಗಿಟ್ಟಿರಬೇಕು… ಹ್ಯಾಗಿಟ್ಟಿದೀನಿ ನನ್ನ ‘ಆನಂದ ನಿಲಯ’ ಬಂಗಲೇನ..? ಪ್ರತೀ ರೂಮಿಗೂ ಬೇರೆಬೇರೆ ಬಣ್ಣದ ಕರ್ಟನ್ಸು.. ಮತ್ತೆ ಆ ರೂಮಿನಲ್ಲಿ ಆ ಕರ್ಟನ್ನಿನ ಬಣ್ಣದ್ದೇ ಕಾರ್ಪೆಟ್ಟು… ಅದಕ್ಕೆ ಹೊಂದೋ ಹಾಗೆ ಬೆಡ್ ಸ್ಪ್ರೆಡ್ಡು., ಬ್ಲಾಂಕೇಟುಗಳು… ಮನೆ ಸುತ್ತ ಹೂವಿನ ಗಿಡಗಳು… ಯಾವುದೇ ರೂಮಿನ ಕಿಟಕಿ ತೆರೆದ್ರೂ ಹೊರಗಡೆ ಸೀಲಿಂಗ್‌ನಿಂದ ಕೆಳಗೆ ತೂಗ್ತಾ ಇರೋ ಹ್ಯಾಂಗಿಂಗ್ ಪಾಟ್ಸ್ ಕಾಣಿಸಬೇಕು..! ಚಿಕ್ಕಮ್ಮನ ರೂಮಿನ ಒಳಗಡೆಯಿಂದ ಸ್ಟೋರ್ ರೂಮಿಗೆ ಹೋಗೋಕ್ಕೆ ಒಂದು ಬಾಗಿಲಿದೆ… ಅದೂ ಸ್ವರ್ಗದ ಬಾಗಿಲ ಥರ ‘ಆಂ’ ಅಂತ ಇಷ್ಟಗಲಕ್ಕೆ ಬಾಯಿ ತೆರ್ಕೊಂಡು..! ಅದು ಒಂದು ಚೂರೂ ಚೆನ್ನಾಗಿಲ್ಲ… ಮುಚ್ಚಿಸಿಬಿಡಬೇಕು. ಕಾರ್ಪೆಂಟರಿಗೆ ಕೇಳಿದೀನಿ… ‘ಗೋಡೆ ಕಟ್ಟೋದೇನೂ ಅವಶ್ಯಕತೆ ಇಲ್ಲ. ಪ್ಲೇವುಡ್ಡಲ್ಲಿ ನಾನು ಮಾಡಿಕೊಡ್ತೀನಿ… ಅದಕ್ಕೇ ಗೋಡೇ ಪೇಂಟ್ ಹಾಕಿ, ಫಿನಿಷಿಂಗ್ ಮಾಡಿದ್ರೆ ಗೋಡೆ ಥರಾನೇ ಕಾಣುತ್ತೆ’ ಅಂತ ಹೇಳಿದಾನೆ. ಮಾಡಿಸ್ಬೇಕು… ಊಂ… ಖರ್ಚು..! ಏನ್ಮಾಡೋದು..? ನಮಗೆ ಬೇಕಾದ ಹಾಗೆ ಮನೇನ ಮಾರ್ಪಾಡು ಮಾಡ್ಕೋಬೇಕು ಅಂದ್ರೆ ಖರ್ಚು ಮಾಡ್ಲೇಬೇಕು..! ಈಗಾಗಲೇ ದುಡ್ಡು ನೀರಿನ ಹಾಗೆ ಸುರಿದಿದೀನಿ… ಇನ್ನೂ..! ಈ ಡ್ರೈವರ್ ಯಾಕಿಷ್ಟು ಸ್ಪೀಡಾಗಿ ಗಾಡಿ ಓಡಿಸ್ತಾ ಇದಾನೆ..!? ಮುಂದೆ ಏನಾದ್ರೂ ಟ್ರೋಫಿ ಇಟ್ಟಿದಾರಾ ಇವನ್ಗೆ..? + +(ಆಶಾ ರಘು) + +ತುಸು ಮುಂದೆ ಬಾಗಿ ‘ಏನಪ್ಪಾ… ಹಲೋ., ಟ್ಯಾಕ್ಸಿ ಸ್ವಲ್ಪ ನಿಧಾನವಾಗಿ ಡ್ರೈವ್ ಮಾಡಿ… ಏನೂ ಆತುರವಿಲ್ಲ’ ಎಂದಳು ಕಸ್ತೂರಿ. ಅವನು, ‘ಸಾರಿ ಮೇಡಂ… ಆಯ್ತು ಮೇಡಂ’ ಅಂತಂದು ಟ್ಯಾಕ್ಸಿಯ ವೇಗವನ್ನು ಸ್ವಲ್ಪ ಕಡಿಮೆ ಮಾಡಿಕೊಂಡು ಓಡಿಸತೊಡಗಿದ ಮೇಲೆ ಇವಳು ಪುನಃ ಹಿಂದಕ್ಕೆ ಒರಗಿ, ಆಂತುಕೊಂಡು ಕುಳಿತಳು. + +…ತಿಂಗಳಿಗೊಂದು ಸಲ ಈ ಥರ ಟ್ಯಾಕ್ಸೀಲಿ ದೂರದ ಪ್ರಯಾಣ ಮಾಡೋದು ಈಗ ರೂಢಿನೇ ಆಗೋಯ್ತು. ಹಿಂದೇನೂ ಈ ಥರ ಪ್ರಯಾಣ ಮಾಡೋದು ಇರ್ತಿತ್ತು. ನಟಿ ಅಂದ ಮೇಲೆ ಇಲ್ಲದೆ ಇರುತ್ತಾ..? ಅದರಲ್ಲೂ ಈ ಕಸ್ತೂರಿಯಂಥಾ ಬ್ಯುಸಿ ನಟಿಗೆ..!? ಹ್ಹ… ಹೆಸರು.. ಖ್ಯಾತಿ.. ಹಣದ ಓಡಾಟದಲ್ಲಿ ಆ ಪ್ರಯಾಣಗಳ ಆಯಾಸ ಗೊತ್ತಾಗ್ತಾ ಇರಲಿಲ್ಲ! ಈಗ..!? ಹೂಂ…  ನಾಟಕ ಅಂದ್ರೆ ಅದರ ದರ್ಜೆ ಕಡಿಮೇದು ಅಂತ ನನ್ನ ಅಭಿಪ್ರಾಯವಲ್ಲ. ಇವತ್ತಿನ ನನ್ನ ಸ್ಥಿತೀಲಿ ಕೈ ಹಿಡಿದು ಅನ್ನ ಹಾಕ್ತಾ ಇರೋದೇ ರಂಗಭೂಮಿ! ಇಲ್ಲದೇ ಇದ್ದಿದ್ರೆ ಇರೋ ಕಮಿಟ್ಮೆಂಟಿಗೆ ನೇಣು ಹಾಕ್ಕೊಂಚಿತ್ರರಂಗ ನನ್ನನ್ನ ಮರೆತೇ ಹೋಯ್ತು ಅಂತ ಕಾಣುತ್ತೆ! ಈಗೊಂದು ಮೂರು ವರ್ಷಗಳಿಂದ ಒಂದು ಸಿನಿಮಾನೂ ಇಲ್ಲ..! ಅದಕ್ಕೆ ಹಿಂದಿನ ವರ್ಷ ಎರಡೇ ಸಿನಿಮಾ..! ಅದರಲ್ಲೂ ಕನ್ನಡದ್ದು ಒಂದಾದರೆ, ಮಲಯಾಳಂದು ಒಂದು! ಬರೀ ಕನ್ನಡದ್ದು ಅಂತ ಮಾತ್ರ ಲೆಕ್ಕ ಹಾಕಿದ್ರೆ ಒಂದೇ ಸಿನಿಮಾ! ಚಿತ್ರರಂಗ ನನ್ನನ್ನ ಮರೀದೇ ಹೋಗಿದ್ರೆ ಈ ಥರ ಊರಿಂದೂರಿಗೆ ಅಲ್ಕೊಂಡು ಕನಿಷ್ಟ ಸಂಭಾವನೆಗೆ ಒಪ್ಕೊಂಡು ನಾಟಕಗಳಲ್ಲಿ ಬಣ್ಣ ಹಚ್ಚೋ ಪರಿಸ್ಥಿತಿ ಬರ್ತಾ ಇರಲಿಲ್ಲ!ಡು ಸಾಯಬೇಕಾಗಿತ್ತು! ಏ ಛೀ..! ಅಮ್ಮನ ಎದುರಿಗೆ ಆಡಿದ್ರೆ, ‘ಬಿಡ್ತು ಅನ್ನೇ., ಯಾವುದೇ ಸಂದರ್ಭಕ್ಕೂ ಸಾಯೋ ಮಾತು ಬೇಗ ಬರುತ್ತೆ ನಿನ್ನ ಬಾಯಲ್ಲಿ’ ಅಂತ ಬೈತಿದ್ರು! ಆದ್ರೂ ನಾಟಕದಲ್ಲಿ ಅಭಿನಯಿಸೋದು ಅಂದ್ರೆ ಎಷ್ಟು ಸಮಯ..!? ಶ್ರಮ..!? ನಾನೆಷ್ಟೇ ಹೆಸರು ಮಾಡಿರೋ ನಟಿ ಅಂದ್ರೂನೂ ಎಲ್ಲರ ಹಾಗೆ ರಿಹರ್ಸಲ್ ಮಾಡಲೇ ಬೇಕು. ತಿಂಗಳು ಅಲ್ಲದಿದ್ರೂ ಐದು ದಿನಗಳ ಕಾಲನಾದ್ರೂ! ಇಲ್ಲದೆ ಇದ್ರೆ ಸಹಕಲಾವಿದರ ಜೊತೆಗೆ ಕೋ-ಆರ್ಡಿನೇಷನ್ ಕಷ್ಟ ಆಗೋಗುತ್ತೆ. ಇನ್ನು, ನಿತ್ಯ ಮೇಕಪ್ ಮಾಡ್ಕೊಂಡು ಅದದೇ ಸಂಭಾಷಣೆ ಹೇಳ್ಕೊಂಡು.. ಅದದೇ ಮೂವ್ಮೆಂಟ್ಸ್ ಮಾಡ್ಕೊಂಡು ನಾಟಕದ ಪ್ರದರ್ಶನ ಕೊಡೋದು.. ಆ ಊರಿನಲ್ಲಿ ಎಷ್ಟು ದಿನಗಳ ಕಾಲ ಶೋ ಅಂತ ನರಸು ನಿರ್ಧರಿಸಿರ್ತಾನೋ ಅಷ್ಟು ದಿನಗಳ ಕಾಲ..! ಮತ್ತೆ ಚಿತ್ರರಂಗದಲ್ಲಿ ಇನ್ನೊಂದು ಸಲ ಒಂದೊಳ್ಳೆ ಪಾತ್ರ ಸಿಕ್ಕಿಬಿಟ್ರೆ ಸಾಕು… ಆ ಚಂಗು ಹಿಡಿದು ಇನ್ನಷ್ಟು ಕಾಲ ಮಿಂಚಿಬಿಡ್ತೀನಿ. ಆದರೆ ಯಾರು ಅವಕಾಶ ಕೊಡುವವರು..? + +ನನ್ನ ಸಿನಿಮಾ ಬದುಕಿನದೇ ಒಂದು ಆಸಕ್ತಿಕರ ಗ್ರಾಫ್..! ಕೆಳಗಿನ ಹಂತದಿಂದ ಸ್ವಲ್ಪ ಮೇಲೇರಿ, ಹಿಂದೆಯೇ ಕೆಳಗಿಳಿದು, ಅದೇ ಕೆಳಗಿನ ಹಂತದಲ್ಲೇ ಸ್ವಲ್ಪ ದೂರ ಕ್ರಮಿಸಿ, ನಿಧಾನವಾಗಿ ಮೇಲೇರಿ, ಬಹಳ ಕಾಲ ಆ ಏರಿದ ಮಟ್ಟದಲ್ಲೇ ಮುಂದುವರಿದು, ನಂತರ ಇದ್ದಕ್ಕಿದ್ದಂತೆ ಕೆಳಗೆ ಕುಸಿದು, ಪುನಃ ಸ್ವಲ್ಪ ಚೇತರಿಸಿಕೊಂಡು ಸ್ವಲ್ಪಸ್ವಲ್ಪವೇ ತೆವಳಿದ್ರೂನೂ ಕೆಳಗೇ ಉಳಿದು.. ಈಗ ಏನೂ ಇಲ್ಲವಾಗಿ..! ಶಿವಮೊಗ್ಗದ ಸರ್ಕಾರಿ ಪ್ರಾಥಮಿಕ ಪಾಠಶಾಲೆಯಲ್ಲಿ ಚೂಟಿಯಾಗಿ ಓದ್ಕೊಂಡು, ಎಲ್ಲಾ ಸಾಂಸ್ಕೃತಿಕ ಸ್ಪರ್ಧೆಗಳಲ್ಲೂ ಭಾಗವಹಿಸ್ತಾ, ಬಹುಮಾನಗಳನ್ನ ಗೆಲ್ತಾ, ಸ್ಕೂಲಿನಿಂದ ಇಳಿಜಾರಿನ ಮಣ್ಣು ರಸ್ತೇಲಿ ಸೀಬೇಹಣ್ಣು ತಿನ್ತಾ ಕುಣ್ಕೊಂಡು ಮನೆ ಕಡೆ ಹೆಜ್ಜೆ ಹಾಕ್ತಾ ಇದ್ದ ಆ ಶಶಿಕಲಾ ಅನ್ನೋ ಹುಡುಗಿ ಎಲ್ಲಿ? ಜಗತ್ತಿನ ಭಾರನೇ ತಲೆ ಮೇಲೆ ಹೊತ್ಕೊಂಡ ಹಾಗೆ, ಕಣ್ಣು ಮುಚ್ಚಿ ಸುಧಾರಿಸಿಕೊಳ್ಳೋಕ್ಕೂ ಬಿಡದೇ ಇರೋ ಚಿಂತೇಲಿ ಬೇಯ್ತಾ ದುಡಿಮೆಯ ಬೆನ್ನು ಹತ್ತಿ ದೂರದ ಊರಿಗೆ ಪ್ರಯಾಣ ಮಾಡ್ತಾ ಇರೋ ಈ ಕಸ್ತೂರಿ ಅನ್ನೋ ನಡುಪ್ರಾಯದ ಹೆಂಗಸೆಲ್ಲಿ..? ಶಿವಮೊಗ್ಗದ ಒಂದು ಪುಟ್ಟ ಊರು ಕಪ್ಪಳ.. ಆ ಕಪ್ಪಳದ ಸರ್ಕಾರಿ ಆಸ್ಪತ್ರೆಯ ಪಕ್ಕದ ಬೀದೀಲಿ ನಮ್ಮದೊಂದು ಪುಟ್ಟಮನೆ. ನಾನು., ಅಪ್ಪ, ಅಮ್ಮ, ಚಿಕ್ಕಮ್ಮ, ತಮ್ಮ, ಅಜ್ಜಿ.. ಆರು ಜನವೂ ಎಷ್ಟು ಅಡಕವಾಗಿ ಬದುಕ್ತಾ ಇದ್ದೆವು ಆ ಪುಟ್ಟ ಬಾಡಿಗೆ ಗೂಡಿನಲ್ಲಿ!? ನನಗೆ ಆಗಿನಿಂದಲೂ ಮನೆಯ ಆವರಣವನ್ನು ಅಂದವಾಗಿ ಇಡುವುದರಲ್ಲಿ ವಿಶೇಷ ಆಸಕ್ತಿ. ಎಲ್ಲೆಲ್ಲಿಂದಲೋ ಬೇಡಿ ತಂದು ಮನೆಯ ಮುಂಭಾಗ ಚಿಕ್ಕಮ್ಮನ ಜೊತೆ ಸೇರಿಕೊಂಡು ಕೈದೋಟ ಮಾಡಿದ್ದೆನಲ್ಲ..! ಆಗಾಗ ಯಾವುದಾದರೂ ಕುರಿಯೋ, ಮೇಕೆಯೋ, ದನವೋ ಗಿಡಗಳನ್ನು ತಿಂದುಕೊಂಡು ಹೋಗಿಬಿಡುತ್ತಿದ್ದುವು… ಆಗೆಲ್ಲಾ ನನ್ನ ಗೋಳಾಟವನ್ನು ಶಮನ ಮಾಡಲು ಮನೆಮಂದಿಯೆಲ್ಲಾ ಹರಸಾಹಸ ಪಡಬೇಕಾಗುತ್ತಿತ್ತು! ‘ಬೇಲಿ ಹಾಕಿದರೂ ದನಗಳು ತುಳಿದು ಮಲಗಿಸಿಬಿಡುತ್ತವೆ. ಇದೇನು ಸ್ವಂತ ಮನೆಯೇ? ಕಾಂಪೌಂಡು ಕಟ್ಟಿಸೋಣ ಅನ್ನೋಕ್ಕೆ..? ಇನ್ನು ಮೇಲೆ ಗಿಡಗಳನ್ನ ಬೆಳೆಸೋದೇ ಬೇಡ’ ಅಂತಿದ್ದರು ಅಜ್ಜಿ. ಆದರೂ ಒಂದು ವಾರದಲ್ಲಿ ಮತ್ತೆ ಅಲ್ಲಿ ಹೊಸ ಸಸಿಗಳು ನಲಿಯುತ್ತಿದ್ದವು..! + +ಅಪ್ಪನ ಹತ್ತಿರ ಒಂದು ಹಳೇ ಸ್ಕೂಟರ್ ಇತ್ತು. ಆಗಾಗ ಅಪ್ಪನ ಹಿಂದೆ ಕೂತು ಶಿವಮೊಗ್ಗ, ಸಾಗರಗಳ ಸುತ್ತು ಹಾಕುತ್ತಿದ್ದೆ. ಮುಂದೆ ಓಡಿಸುತ್ತಾ ಕುಳಿತ ಅಪ್ಪನ ಬೆನ್ನಿಗೆ, ಬೆನ್ನು ತಾಕಿಸಿಕೊಂಡು, ಹಿಮ್ಮುಖವಾಗಿ ಕೂತು ದೂರವಾಗುತ್ತಾ ಸಾಗುವ ಸುತ್ತಲಿನ ಪರಿಸರಾನ, ಬೆಳೆಯುತ್ತಾ ಸಾಗುವ ಕಪ್ಪು ರಸ್ತೇನ ನೋಡುವುದರಲ್ಲಿ ನನಗೆ ಎಲ್ಲಿಲ್ಲದ ಖುಷಿ. ಐವತ್ತು ಪೈಸೆಗೆ ಒಂದು ಪೊಟ್ಟಣದ ಭರ್ತಿ ಪೆಪ್ಪರಿಮೆಂಟು ಸಿಗೋದು..! ಅವನ್ನು ಜೋಬಿನಲ್ಲಿ ತುಂಬಿಕೊಂಡು, ಆಗಾಗ ಒಂದೊಂದು ತೆಗೆದು ಬಾಯಿಗೆ ಹಾಕಿಕೊಂಡು ಚೀಪುತ್ತಿದ್ದೆನಲ್ಲ… ಈಗ ಅಂತಹ ಪೆಪ್ಪರಿಮೆಂಟು ಸಿಕ್ಕೋದೇ ಇಲ್ಲ. ಸಿಟಿಗಳಲ್ಲಿ ಸಿಗೋಲ್ಲ ಅಂತ, ಹಳ್ಳಿಗಳ ಕಡೆ ಶೂಟಿಂಗ್ ಇದ್ದಾಗಲೆಲ್ಲಾ ನಾನೇ ಸಣ್ಣಪುಟ್ಟ ಅಂಗಡಿಮನೆಗಳಿಗೆ ಹೋಗಿ ಚಿಕ್ಕ ಮಕ್ಕಳ ಥರ ಕೇಳಿದೀನಿ..! ತಮ್ಮ ನೆಚ್ಚಿನ ನಟಿ ಹೀಗೆ ಏನನ್ನೋ ಕೇಳುತ್ತಾ ತಮ್ಮಲ್ಲಿಗೆ ಬಂದಳಲ್ಲ ಅನ್ನೋ ಅಭಿಮಾನದಲ್ಲಿ ಅವರುಗಳು ಅಂಗಡಿಯಲ್ಲಿ ಇದ್ದಬದ್ದ ಎಲ್ಲ ಥರದ ಮಿಠಾಯಿಗಳನ್ನೂ ತಂದು ನನ್ನ ಮುಂದೆ ತೋರಿದ್ದಾರೆ..! ಆದರೆ ನನ್ನ ಬಾಲ್ಯದ ದಿನಗಳ ಇಷ್ಟದ ಪೆಪ್ಪರಿಮೆಂಟನ್ನ ಎಲ್ಲೂ ಕಾಣದೆ ಬೇಸರಪಟ್ಟುಕೊಂಡಿದ್ದೀನಿ. ನನಗೆ ಬೇಕಾದುದನ್ನು ಒದಗಿಸಲು ಆಗದುದ್ದಕ್ಕೆ ಅಂಗಡಿ ವ್ಯಾಪಾರಿಗಳೂ ಬೇಸರಪಟ್ಟುಕೊಂಡಿದಾರೆ. ಆಗೆಲ್ಲಾ ಹಳ್ಳಿಯ ಸೊಸೈಟಿಯಲ್ಲಿ ಸಿಗ್ತಾ ಇದ್ದ ಚೀಟಿ ಬಟ್ಟೇಲಿ ಅಮ್ಮ ನನಗೆ ತಾವೇ ಲಂಗ, ಜಾಕೀಟು ಹೊಲಿದು ಹಾಕೋರು. ಒಂದೊಂದು ಬಟ್ಟೆ ತೆಳ್ಳಗೆ ಹತ್ತಿಯ ಹಾಗೆ ಮೈಗಂಟಿಕೊಂಡರೆ, ಒಂದೊಂದು ಬಟ್ಟೆ ಕಲ್ಲಿನ ಹಾಗೆ ಘನವಾಗಿ ಇರೋದು..! ಎಲ್ಲಕ್ಕೂ ಬಣ್ಣಬಣ್ಣದ ಪ್ರಿಂಟೆಂಡ್ ಹೂವುಗಳ ಚಿತ್ತಾರ! ನವಿಲು, ಚಿಟ್ಟೆ, ಗಿಳಿಗಳ ಚಿತ್ರ..! ಅವುಗಳನ್ನ ನೋಡ್ಕೊಂಡು ಹಾಗೇ ಬಿಳೀ ಹಾಳೆ ಮೇಲೆ ಬಿಡಿಸಿ, ಕಲರ್ ಪೆನ್ಸಿಲ್‌ನಿಂದ ಬಣ್ಣ ತುಂಬ್ತಾ ಇದ್ದೆ. + + + +ನಾಲ್ಕಾಣೆ ಕೊಟ್ಟರೆ ಒಂದು ಮಾರು ಹೂ ಸಿಗ್ತಿತ್ತು. ಚಿಕ್ಕಮ್ಮನಿಗೂ ಆ ದಿನಗಳಲ್ಲಿ ಹೂವು ಅಂದರೆ ಇಷ್ಟ. ಕೊಂಡುಕೊಳ್ಳೋರು. ನನಗೂ ಮುಡಿಸಿ, ಅಮ್ಮನಿಗೂ ಕೊಟ್ಟು, ತಾವೂ ಮುಡ್ಕೊಳೋವ್ರು. ನನಗಂತೂ ಜಡೆಗಿಂತಲೂ ಉದ್ದಕ್ಕೆ ಹೂವಿರಬೇಕಿತ್ತು! ‘ಬೇಡ ಕಣೆ ಶಶಿ., ಹಾಗೆ ಮುಡ್ಕೊಂಡ್ರೆ ಎಲ್ಲರೂ ನಗ್ತಾರೆ’ ಅಂತ ಅವರುಗಳು ಎಷ್ಟು ಹೇಳಿದ್ರೂ ಕೇಳ್ತಿರಲಿಲ್ಲ. ಜಡೆಗಿಂತಲೂ ಉದ್ದಕ್ಕೆ ಹೂ ಮುಡಿದುಕೊಂಡೇ ಸ್ಕೂಲಿಗೆ ಹೋಗ್ತಿದ್ದೆ! ನನ್ನ ನೋಡಿ ಯಾರು ನಗಬೇಕು..? ಅವರುಗಳೂ ಹಾಗೇ ನೆತ್ತಿಯ ಮೇಲೆ ಹೂದಂಡೆ ಸಿಕ್ಕಿಸಿಕೊಂಡು ಬರೋ ಅಂಥವರು! ಹಹ್ಹಹ್ಹ… ಸ್ಕೂಲಿನಲ್ಲಿ., ಅಪೂರ್ವಕ್ಕೆ ನಮ್ಮ ಮನೆಯ ಮುಂದೆಯೂ ಗುಲಾಬಿ ಹೂ ಬಿಡ್ತಿತ್ತು. ಕೆಂಪು, ಹಳದಿ, ಬಿಳಿ ಎಲ್ಲ ಬಣ್ಣದ್ದೂ ಇರ್ತಿತ್ತು! ಅದನ್ನ ನಾನು ತೆಲುಗು ನಟಿ ಚಾರುಮತಿಯವರ ಹಾಗೆ ಕಿವಿಯ ಪಕ್ಕಕ್ಕೇ ಮುಡಿದುಕೊಂಡು ಪಿನ್ನು ಚುಚ್ಚಿಕೋತಿದ್ದೆ. ಆಗೆಲ್ಲಾ ನನಗೆ, ನಾನೂ ಚಾರುಮತಿಯವರ ಹಾಗೇ ದೊಡ್ಡ ನಟಿ ಆಗ್ಬೇಕು ಅನ್ನೋ ಆಸೆ ಇತ್ತು! ಸ್ಕೂಲಿನ ನಾಟಕಗಳಲ್ಲಿ ಅಭಿನಯಿಸ್ತಾ ಇದ್ದೆನಲ್ಲ..? ಪ್ರತೀ ವರ್ಷವೂ ಮುಖ್ಯಪಾತ್ರ ನನ್ನನ್ನೇ ಹುಡುಕ್ಕೊಂಡು ಬರೋರು..! ಆ ದಿನಗಳಲ್ಲೆ ಅಲ್ಲವ ನಾನು ಅವರಿಗೆ ಕಾಗದ ಬರೆದಿದ್ದು..? ‘ಪ್ರೀತಿಯ ಚಾರುಮತಿ ಆಂಟಿ…’ ಅಂತೇನೋ ಆರಂಭಿಸಿದ್ದೆ ಅಂತ ನೆನಪು… ‘ನಾನೂ ನಿಮ್ಮ ಹಾಗೇ ನಟಿ ಆಗ್ಲಾ?’ ಅಂತ ಆಪ್ತ ಸಮಾಲೋಚನೆ ನಡೆಸಿದ್ದೆ. ಹತ್ತು ದಿನಗಳಲ್ಲೇ ಅವರಿಂದ ಉತ್ತರ ಬಂತು! ‘ನಟಿಯಾಗಬೇಕು ಅನ್ನೋದು ನಿನ್ನ ಅದೃಷ್ಟದಲ್ಲಿದ್ದರೆ ಅದನ್ನ ಯಾರಿಂದಲೂ ತಪ್ಪಿಸೋಕ್ಕೆ ಆಗಲ್ಲ’ ಅಂತ! ಆ ಪತ್ರ ಎದೆಗೊತ್ತಿಕೊಂಡು ಎಷ್ಟು ಕುಣಿದಾಡಿದ್ದೆ ನಾನು..? ಸ್ಕೂಲಿಗೆಲ್ಲಾ ತೆಗೊಂಡು ಹೋಗಿ ಟೀಚರುಗಳಿಗೂ ತೋರಿಸಿಕೊಂಡು ಬಂದಿದ್ದೆ! ಆಗಲಿಂದ ಸ್ಕೂಲಿನಲ್ಲಿ ನನ್ನನ್ನ ‘ಜೂನಿಯರ್ ಚಾರುಮತಿ’ ಅಂತ ಕರೆಯೋಕ್ಕೆ ಶುರುಮಾಡಿದ್ರಲ್ಲ..? ನಾನೂ ನಾಟಕ, ನೃತ್ಯಗಳನ್ನ ಮನಸ್ಸಿಟ್ಟು ಮಾಡತೊಗಿದೆನಲ್ಲ..? + +ಆಗ ನಾನು ಹತ್ತನೇ ಕ್ಲಾಸಿನಲ್ಲಿ ಓದ್ತಿದ್ದೆ. ಶಾಲೆಯ ವಾರ್ಷಿಕೋತ್ಸವದಲ್ಲಿ ಒಂದು ನಾಟಕವಿತ್ತು. ಅದರಲ್ಲಿ ನಂದು ವಿಶ್ವಾಮಿತ್ರನ ತಪೋಭಂಗ ಮಾಡೋ ಮೇನಕೆಯ ಪಾತ್ರ! ಚೆನ್ನಾಗಿ ರಿಹರ್ಸಲ್ ಮಾಡಿದ್ದೆ. ಮನೆಯವರೆಲ್ಲಾ ಕಾರ್ಯಕ್ರಮದ ಹೊತ್ತಿಗೆ ಬರ್ತೀವಿ ಅಂತ ಹೇಳಿದ್ರು. ಸಂಜೆ ಆಯ್ತು… ಕಾರ್ಯಕ್ರಮ ವೇಳೆ ಸಮೀಪಿಸ್ತಾ ಇದೆ… ಸಾಧಾರಣವಾಗಿ ಮನೆಯವರೆಲ್ಲಾ ಕಾರ್ಯಕ್ರಮಕ್ಕೆ ಬಂದರೆ, ಚಿಕ್ಕಮ್ಮನೋ, ಅಮ್ಮನೋ ಗ್ರೀನ್ ರೂಮಿಗೆ ಬಂದು ಮಾತಾಡಿಸಿಕೊಂಡು ಹೋಗೋದು ವಾಡಿಕೆ. ಆ ದಿನ ಎಷ್ಟು ಹೊತ್ತಾದ್ರೂ ಯಾರೂ ಬರಲಿಲ್ಲ. ನಮ್ಮ ನಾಟಕ ಶುರುವಾಗೇ ಹೋಯ್ತು. ನಾನು, ಜನಜಂಗಳಿ ಜಾಸ್ತಿ ಇದ್ದದ್ದರಿಂದ ಇವರು ಒಳಗೆ ಬರೋಕ್ಕೆ ಆಗಿಲ್ಲದೇ ಇರಬಹುದು, ಪ್ರೇಕ್ಷಕರ ನಡುವೆ ಕೂತ್ಕೊಂಡು ನೋಡ್ತಾ ಇರಬಹುದು ಅಂದ್ಕೊಂಡು, ಪಾತ್ರದಲ್ಲಿ ಎಷ್ಟೇ ಇನ್ವಾಲ್ವ್ ಆಗಿದ್ರೂನೂ ನನ್ನ ಕಣ್ಣುಗಳು ಮಾತ್ರ ಆಗಾಗ ಅಮ್ಮ, ಚಿಕ್ಕಮ್ಮಂದಿರಿಗಾಗಿ ಹುಡುಕ್ತಾ ಇದ್ದುವು. ಕಾರ್ಯಕ್ರಮ ಮುಗೀತು. ಎಲ್ಲಾ ಹೋಗತೊಡಗಿದರು… ಮನೆಯವರು ಯಾರೂ ಬಂದಿಲ್ಲ ಅಂತ ಖಚಿತವಾಯ್ತು. ಆಗೆಷ್ಟು..? ಸುಮಾರು ಒಂಭತ್ತೂವರೆ, ಹತ್ತು ಗಂಟೆ ಇರಬಹುದು. ಮೇಕಪ್ ತೆಗೆದು, ಬಟ್ಟೆ ಬದಲಿಸಿಕೊಂಡು ಮನೆಗೆ ಹೋದೆ. ಬೀಗ..! ಪಕ್ಕದ ಮನೆಯವರಲ್ಲಿ ವಿಚಾರಿಸಿದೆ. ಚಿಕ್ಕಮ್ಮನನ್ನು ತೆರೇಸಾ ನರ್ಸಿಂಗ್ ಹೋಮ್‌ನಲ್ಲಿ ಅಡ್ಮಿಟ್ ಮಾಡಿದಾರೆ ಅಂತ ಗೊತ್ತಾಯಿತು. ಯಾಕೆ… ಏನು… ಅಂತ ಅವರು ಹೇಳಲಿಲ್ಲ. ಪಕ್ಕದ ಬೀದಿಯಲ್ಲೇ ಸರ್ಕಾರಿ ಆಸ್ಪತ್ರೆ ಇದ್ದರೂ, ಸೌಲಭ್ಯ ಕಡಿಮೆಯೆಂದು, ತುರ್ತು ಸಂದರ್ಭಗಳಲ್ಲಿ ಎಲ್ಲರೂ ಊರೊಳಗೆ ಇದ್ದ ತೆರೇಸಾ ನರ್ಸಿಂಗ್ ಹೋಂಗೆ ಹೋಗುತ್ತಿದ್ದರು. ಅಂದರೆ.. ಚಿಕ್ಕಮ್ಮನಿಗೆ ಅಂತಹ ತುರ್ತಾದ ಆರೋಗ್ಯ ಸಮಸ್ಯೆ ಏನಾಗಿರಬಹುದು ಅಂತ ನನಗೆ ಗಾಭರಿಯಾಯ್ತು! ಹೋದರೆ, ಚಿಕ್ಕಮ್ಮ ಚೇತರಿಕೊಂಡಿದ್ದರಾದರೂ, ಉಕ್ಕುತ್ತಿದ್ದ ಕಣ್ಣೀರನ್ನ ಒರೆಸಿಕೊಳ್ಳುತ್ತಾ ಇದ್ದರು. ಅಮ್ಮ, ಅಜ್ಜಿಯರು ಅವರಿಗೆ ಸಮಾಧಾನ ಹೇಳುತ್ತಿದ್ದರು. + +ಅಪ್ಪ ಮೌನವಾಗಿ ಒಂದು ಓರೆಗೆ ಕೂತಿದ್ದರು. ಅರವಿಂದ ಅದೆಲ್ಲಿ ಅಲೆಯೋಕ್ಕೆ ಹೋಗಿದ್ದನೋ ಏನೋ… ಅವನೊಬ್ಬ ಶುದ್ಧ ಪೋಕರಿ ತಮ್ಮ. ಏನಾಯಿತೆಂದು ವಿಚಾರಿಸಿದರೆ, ಅಮ್ಮ, ‘ಚಿಕ್ಕಮ್ಮನಿಗೆ ಸ್ವಲ್ಪ ಹೊಟ್ಟೆನೋವು ಕಾಣಿಸಿಕೊಂಡಿತ್ತು ಅಷ್ಟೆ. ಈಗ ಹುಷಾರಾಗಿದ್ದಾಳೆ’ ಎಂದರು. ಹುಂ… ಮಕ್ಕಳಿಗೆ ಇದೆಲ್ಲಾ ಗೊತ್ತಾಗಬಾರದು ಅಂತ ದೊಡ್ಡವರು ಹೀಗೆ ಸುಳ್ಳು ಹೇಳೋದು ಸಹಜವಲ್ಲವೇ..? ಚಿಕ್ಕಮ್ಮನನ್ನು ಡಿಸ್ಚಾರ್ಜ್ ಮಾಡಿಸಿಕೊಂಡು ಮನೆಗೆ ಕರೆದುಕೊಂಡು ಬಂದ ಕೆಲದಿನಗಳಲ್ಲಿ, ಮನೆಯಲ್ಲಿ ನಡೀತಾ ಇದ್ದ ಮಾತುಕತೆಗಳಿಂದಲೇ ತಿಳಿಯಿತು ಚಿಕ್ಕಮ್ಮ ಆತ್ಮಹತ್ಯೆಗೆ ಯತ್ನಿಸಿದ್ದರು ಅಂತ! ಯಾರೋ ಬಸ್ ಕಂಡೆಕ್ಟರ್ ಅಂತೆ.. ಗಾಢವಾಗಿ ಪ್ರೀತಿಸಿದ್ರಂತೆ.. ಅವನು ಊರಿಗೆ ಹೋಗಿದ್ದವನು, ಹಿಂದಿರುಗಿ ಬರ್ತಾ ಮದುವೆಯಾಗಿ ಹೆಂಡತಿಯನ್ನೂ ಜೊತೆಗೆ ಕರೆದುಕೊಂಡು ಬಂದು, ಕಪ್ಪಳ ಊರೊಳಗಿದ್ದ ತನ್ನಣ್ಣನ ಮನೆಯಲ್ಲಿ ಸಂಸಾರ ಹೂಡಿದನಂತೆ. ಚಿಕ್ಕಮ್ಮನಿಗೆ ಕೆಲಕಾಲದಿಂದ ಇವನು ಸಂಧಿಸಿರದ ಕಾರಣ ವಿಚಾರಿಸೋಣವೆಂದು ಅವನ ಅಣ್ಣನ ಮನೆಗೆ ಹೋಗಿದ್ದರಂತೆ. ಅಲ್ಲಿ ನೋಡುವುದೇನನ್ನು..? ನವದಂಪತಿಗಳು ಜೊತೆಗೆ ಕೂತು ಸತ್ಯನಾರಾಯಣ ವ್ರತ ಮಾಡಿ, ಊಟಕ್ಕೆ ಕೂತಿದ್ದರಂತೆ! ಚಿಕ್ಕಮ್ಮನಿಗೂ ಅವನಿಗೂ ಎಲ್ಲರೆದುರಿಗೇ ಮಾತುಕತೆಗಳಾದುವಂತೆ. + +ಅವನು ಕೋಪದಿಂದ ಎದ್ದು ಬಂದವನೇ, ಎಂಜಿಲ ಕೈಯಲ್ಲಿ ಚಿಕ್ಕಮ್ಮನ ಕಪಾಳಕ್ಕೆ ನಾಲ್ಕೈದು ಏಟು ಹಾಕಿದನಂತೆ! ನೊಂದು ಅಲ್ಲಿಂದ ಮನೆಗೆ ಬಂದ ಚಿಕ್ಕಮ್ಮ, ಫ್ಯಾನಿಗೆ ಸೀರೆ ಕಟ್ಟಿ..! ಪಾಪ… ಆದರೂ ಚಿಕ್ಕಮ್ಮನಿಗೆ ಅವನನ್ನ ಮರೆಯೋಕ್ಕೆ ಆಗಲೇ ಇಲ್ಲ ನೋಡು..? ಮದುವೆಯನ್ನೇ ಮಾಡಿಕೊಳ್ಳದೆ ಹಾಗೇ ಉಳಿದುಬಿಟ್ಟರು! ಎಷ್ಟಿರಬಹುದು ಅವರಿಗೆ ವಯಸ್ಸೀಗ..? ಐವತ್ತು..? ಊಂ.. ಅಮ್ಮನಿಗೆ ಐವತ್ತೆರಡು ಅಂದರೆ, ಅವರು ಅಮ್ಮನಿಗಿಂತ ಎರಡು ವರ್ಷ ಚಿಕ್ಕವರಿರಬಹುದು ಅಂದುಕೊಂಡರೆ, ಐವತ್ತು ಅಲ್ಲವ!? ಈಗಲೂ ಅವರು ಮನಸ್ಸು ಮಾಡಿದರೆ… ಹುಂ… ಎಲ್ಲಿ..? ಇಬ್ಬರು ಒಂಟಿ ಹೆಂಗಸರು ಒಬ್ಬರಿಗೊಬ್ಬರು ಜೊತೆಯಾಗಿ ಇದ್ದುಬಿಟ್ಟರು! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_124.txt b/Kenda Sampige/article_124.txt new file mode 100644 index 0000000000000000000000000000000000000000..7c51a7895dd4850285fd0cde7058aee312ac8db2 --- /dev/null +++ b/Kenda Sampige/article_124.txt @@ -0,0 +1,19 @@ +2022ನೇ ಸಾಲಿನ ವೀಚಿ ಸಾಹಿತ್ಯ ಪುರಸ್ಕಾರಕ್ಕೆ ಡಾ.ಶಿವಲಿಂಗಪ್ಪ ಹಂದಿಹಾಳು ಅವರ ಮಕ್ಕಳ ಕಥಾ ಸಂಕಲನ ನೋಟ್‌ಬುಕ್‌’ ಆಯ್ಕೆಯಾಗಿದೆ. ಆಳವಾಗಿ ಚಿಂತಿಸಿ ಕಥೆಗಳನ್ನು ಪರಿಕಲ್ಪಿಸುವ ಗೋಜಿಗೆ ಹೋಗದ ಶಿವಲಿಂಗಪ್ಪ ಅವರು ಕಥೆಗಾಗಿ ಯಾವುದೇ ಚಿಂತನೆಯನ್ನೂ ಮಾಡಿಲ್ಲ, ಯಾವ ಭಾಷಾ ಮಾಧ್ಯಮದಿಂದಲೂ ಹೆಕ್ಕಿ ತಂದಿಲ್ಲ. ತಮ್ಮೂರಿನ ಪರಿಸರದಲ್ಲಿಯೇ ಆಯ್ದುಕೊಂಡಿದ್ದಾರೆ. ಸಂಕಲನದಲ್ಲಿ ಬರುವ ಕಥೆಗಳಲ್ಲಿನ ಪಾತ್ರಗಳೆಲ್ಲ ನಮ್ಮ ಸುತ್ತಲಿನವುಗಳೇ ಆಗಿರುವುದು ವಿಶೇಷ. + +(ಡಾ.ಶಿವಲಿಂಗಪ್ಪ ಹಂದಿಹಾಳು) + +ಎಂಟು ಕಥೆಗಳಿರುವ ಈ ಸಂಕಲನದಲ್ಲಿನ ಕಥೆಗಳು ದೀರ್ಘವಾಗಿ ಹರಡಿಕೊಂಡಿದ್ದರೂ ಬಳ್ಳಾರಿ ಭಾಷೆಯ ಸೊಗಡಿನಲ್ಲಿ ಪ್ರತ್ಯಕ್ಷ ಅನುಭವ ನೀಡುತ್ತವೆಯಾದ್ದರಿಂದ ಓದುಗರಿಗೆ ಎಲ್ಲಿಯೂ ಬೇಸರವಾಗದು. ‘ಮೊದ್ಲು ಈ ತಂದೇ ತಾಯಿಗಳಿಗೆ ಪಾಠ ಕಲಿಸಬೇಕು, ಆವಾಗ ಮಕ್ಕಳನ್ನು ಸಾಲಿಗೆ ಕಳುಸ್ತಾರ’ ಎನ್ನುವ ಖುಷಿ ಎಂಬ ಬಡ ಬಾಲಕಿಯ ಬಾಯಿಂದ ಬರುವ ಸಾಲುಗಳ ಸುತ್ತಲೇ ಇಡೀ ನೋಟ್‌ಬುಕ್‌ನ ಪುಟಗಳಲ್ಲಿನ ಕತೆಗಳು ಗಿರಕಿ ಹೊಡೆಯುತ್ತವೆ. + +ಶಿವಲಿಂಗಪ್ಪ ಹಂದಿಹಾಳು ಅವರು ಮಕ್ಕಳಿಗೆ ಅಗತ್ಯವಾದ ನೈತಿಕ ಮೌಲ್ಯಗಳನ್ನು ನೇರವಾಗಿ ಹೇಳುವ ಗೋಜಿಗೆ ಹೋಗದೆ ಮಕ್ಕಳ ಮೂಲಕವೇ ನಿರೂಪಿಸುವ ಹೊಸತನವನ್ನು ಮಾಡಿರುತ್ತಾರೆ. ಇಲ್ಲಿನ ‘ಐಸ್ ಕ್ರೀಮ್’ ಕಥೆಯು ಬಡ ವಿದ್ಯಾರ್ಥಿಯೊಬ್ಬನ ಐಸ್ ಕ್ರೀಮ್ ಬಗೆಗಿನ ಚಪಲ ಅವನನ್ನು ತನ್ನ ಮನೆಯ ಬಡತನವನ್ನು ಮೀರಿ ಖಾಸಗಿ ಶಾಲೆಯೊಂದಕ್ಕೆ ದಾಖಲಾಗಿ ಕೊನೆಗೆ ಅಲ್ಲಿನ ಆರ್ಥಿಕ ಒತ್ತಡ ಸಹಿಸಲಾರದೆ ಪುನಃ ತನ್ನೂರಿನ ಸರ್ಕಾರಿ ಶಾಲೆಗೆ ಸೇರುವ ಕಥಾ ಹಂದರವನ್ನು ಹೊಂದಿದ್ದು, ಅಗತ್ಯವಿದ್ದಷ್ಟೇ ಆಸೆಪಡು ಎಂಬುದನ್ನು ಸೂಚ್ಯವಾಗಿ ಹೇಳುತ್ತದೆ. + +‘ಹೊಸಬಟ್ಟೆ’ ಎಂಬ ಕಥೆಯಲ್ಲಿನ ಶಾಲಾ ಹೆಣ್ಣು ಮಗುವೊಬ್ಬಳು ತನ್ನ ಅನುಕೂಲಸ್ಥ ಸ್ನೇಹಿತೆಯರಂತೆ ತಾನೂ ಹೊಸ ಬಟ್ಟೆ ತೊಡಬೇಕೆಂಬ ಆಸೆಯಿಂದ ರಜಾದಿನಗಳಲ್ಲಿ ಕೂಲಿ ಮಾಡಿ ಕೂಡಿಟ್ಟ ಹಣವನ್ನು ಕೊನೆಯಲ್ಲಿ ತನ್ನ ತಮ್ಮನ ಚಿಕಿತ್ಸೆಗಾಗಿ ಖರ್ಚು ಮಾಡುವ ಸನ್ನಿವೇಶವು ಪುನೀತ್ ಅಭಿನಯದ ಬೆಟ್ಟದ ಹೂವು ಚಲನಚಿತ್ರದ ಕಥೆಯನ್ನು ಕ್ಷಣ ಕಾಲ ಕಣ್ಮುಂದೆ ತರುತ್ತದೆ. + +‘ನಾನೂ ಶಾಲೆಗೆ ಸೇರಿದೆ’ ಕಥೆಯಂತೂ ತಂದೆಯನ್ನು ಕಳೆದುಕೊಂಡ, ತಾಯಿಯಿಂದಲೂ ದೂರವಾದ ಶಾಲಾ ವಯಸ್ಸಿನ ಹುಡುಗನೊಬ್ಬ ತನ್ನ ಮಾವನ ಮನೆಯಲ್ಲಿ ಜೀತದಾಳುವಿನಂತೆ ಕೆಲಸ ಮಾಡಿಕೊಂಡು ತನ್ನ ಓರಗೆಯವರು ಶಾಲೆಗೆ ಹೋಗುವುದನ್ನು ಕಂಡು ತಾನೂ ಶಾಲೆಗೆ ಸೇರಬೇಕೆಂಬ ಹಂಬಲದಿಂದ ಶಾಲಾ ಶಿಕ್ಷಕರ ಬಳಿಗೆ ಬಂದು, ಅವರ ಮನಗೆದ್ದು, ಸರ್ಕಾರಿ ಶಾಲೆಗೆ ದಾಖಲಾಗುವ ಮನೋಜ್ಞ ಚಿತ್ರಣವನ್ನು ಒಳಗೊಂಡಿದೆ. + + + +ಸಂಕಲನದ ಶೀರ್ಷಿಕೆಯಾಗಿ ಬಳಸಿಕೊಂಡಿರುವ ‘ನೋಟ್‌ಬುಕ್‌’ ಕತೆಯು ಫ್ಯಾಂಟಸಿ ಬಗೆಯದಾಗಿದ್ದು ಓದುಗರಿಗೆ ಆಶ್ಚರ್ಯವೆನಿಸುವ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ, ಬಡ ಮಗುವೊಂದು ತನ್ನ ಆಸೆಗಳನ್ನು ಪೂರೈಸಿಕೊಳ್ಳಲು ಮನದಲ್ಲೇ ಬಯಸುವ ಅತಿಮಾನ ಸ್ವರೂಪಗಳು ಇಲ್ಲಿದ್ದು ಬೈಸಿಕಲ್‌ನ ಚಿತ್ರವೇ ನಿಜರೂಪ ತಾಳುವ ಮೂಲಕ ಅವು ವ್ಯಕ್ತವಾಗಿವೆ. ಇವಿಷ್ಟೇ ಅಲ್ಲದೇ ಶಿವಣ್ಣ ಮೇಷ್ಟ್ರು ಮತ್ತು ಮಳೆಬಿಲ್ಲು, ಕೂಸುಮೋಡ, ಖುಷಿ ಮತ್ತು ಲೈಟುಕಂಬ ಕಥೆಗಳು ಓದುಗರ ಆಸಕ್ತಿ ಮತ್ತು ಕುತೂಹಲವನ್ನು ಹಿಡಿದಿಡುತ್ತವೆ. + +ಸ್ವತಃ ಶಾಲಾ ಶಿಕ್ಷಕರಾಗಿರುವ ಶಿವಲಿಂಗಪ್ಪ ಅವರು ಮಕ್ಕಳ ಸಾಹಿತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದು ತಮ್ಮ ಕಥೆಗಳನ್ನು ಮಕ್ಕಳಿಗೆ ವಿಶೇಷವಾಗಿ ತಲುಪಿಸಬೇಕೆಂಬ ಆಸ್ಥೆಯಿಂದ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಕ್ಯೂಆರ್ ಕೋಡ್ ಬಳಕೆ ಮಾಡಿದ್ದಾರೆ. ಕನ್ನಡದಲ್ಲಿ ಮಕ್ಕಳ ಸಾಹಿತ್ಯದ ಮಟ್ಟಿಗೆ ಇದೊಂದು ಹೊಸ ಪ್ರಯೋಗವಾಗಿದ್ದು ಕನ್ನಡದ ಪ್ರಖ್ಯಾತ ರಂಗಭೂಮಿ ಕಲಾವಿದರು, ಕಿರುತೆರೆ ಕಲಾವಿದರು ಮತ್ತು ರಂಗಕರ್ಮಿಗಳಿಂದಲೇ ಕಥೆಗಳನ್ನು ಲಯಬದ್ಧವಾದ ಏರಿಳಿತಗಳೊಂದಿಗೆ ವಾಚನ ಮಾಡಿಸಿರುವುದು ಮತ್ತೊಂದು ವಿಶೇಷ. ಹಿರಿಯ ಮಕ್ಕಳ ಸಾಹಿತಿ ಡಾ. ಆನಂದ ಪಾಟೀಲರ ಹಿನ್ನುಡಿ, ಖ್ಯಾತ ಕಥೆಗಾರ ಕೇಶವ ಮುಳಗಿಯವರ ಬೆನ್ನುಡಿ ಹಾಗೂ ಚಿತ್ರಕಲಾವಿದ ಮುರಳೀಧರ ರಾಥೋಡ್ ಅವರ ಚಿತ್ರಗಳು ಸಂಕಲನಕ್ಕೆ ಮತ್ತಷ್ಟು ಹೊಳಪನ್ನು ತಂದಿವೆ. ಬಳ್ಳಾರಿಯ ಕವನ ಪ್ರಕಾಶನ ಹೊರತಂದಿರುವ, ಪ್ರತೀ ಪುಟವೂ ವರ್ಣಮಯವಾಗಿದೆ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_125.txt b/Kenda Sampige/article_125.txt new file mode 100644 index 0000000000000000000000000000000000000000..09a6e72694f8808e1a437edcbb421e1f0f79f426 --- /dev/null +++ b/Kenda Sampige/article_125.txt @@ -0,0 +1,17 @@ +ಅಲ್ಪ ಸ್ವಲ್ಪ ಗಿಡಮರಗಳಿಂದ ಕೂಡಿರುವ ಪ್ರಶಾಂತ ಪ್ರದೇಶದ ಪ್ರಶಾಂತತೆಯನ್ನು ಗಮನಿಸಿದರೆ ಅಲ್ಲಿ ನೀರವತೆ ಇರುವುದಿಲ್ಲ; ಬದಲಿಗೆ ಆ ವಾತಾವರಣದಲ್ಲಿ ಹಾಸುಹೊಕ್ಕಾಗಿರುವ ಗುಮ್ ಎನ್ನುವ ಸದ್ದು ಅತ್ಯಂತ ಸಹಜವಾಗಿ ಕೇಳಿಬರುತ್ತದೆ. ಈ ಸದ್ದಿನ ಮೂಲವೇ, ಕೀಟಗಳ ಸಂಗೀತ ಸಾಮ್ರಾಟ ಎನಿಸಿಕೊಂಡಿರೋ ಸಿಕಾಡ ಎಂಬ ಜೀವಿ. ಎತ್ತರಿಸಿದ ಧ್ವನಿಯಲ್ಲಿ ಸದಾ ಹಾಡುತ್ತಿರುವ ಈ ಕೀಟಗಳದ್ದು ಒಂದು ವಿಶಿಷ್ಟ ವಿಚಿತ್ರ ಪ್ರಪಂಚ. ‘ಸಿಕಾಡಿಡೇ’ ಕುಟುಂಬಕ್ಕೆ ಸೇರಿದ ಈ ಕೀಟವು ಭಾರತದಲ್ಲಷ್ಟೇ ಅಲ್ಲದೇ ಆಸ್ಟ್ರೇಲಿಯಾ, ಚೈನಾ, ಜಪಾನ್, ಯೂರೋಪ್‍ನಲ್ಲೂ ಅತೀ ಸಾಮಾನ್ಯವಾಗಿ ಕಂಡುಬರುತ್ತದೆ; ಸಮಶೀತೋಷ್ಣ ಪ್ರದೇಶದಲ್ಲಿ ಕಂಡುಬರುವ ಸಿಕಾಡಗಳಿಗೂ ಉಷ್ಣವಲಯದ ಸಿಕಾಡಗಳಿಗೂ ಅಜಗಜಾಂತರ ವ್ಯತ್ಯಾಸಗಳಿವೆ. ಆದರೆ ಯಾವ ಪ್ರದೇಶದ ಸಿಕಾಡವಾದರೂ ದನಿ ಎತ್ತರಿಸಿ ಹಾಡುವ ವಿಶೇಷತೆ ಇಲ್ಲದೇ ಇಲ್ಲ. + +(ಕ್ಷಮಾ ವಿ. ಭಾನುಪ್ರಕಾಶ್‌) + +ಇವುಗಳ ಹಾಡು ನಮ್ಮಂತೆ ಗಂಟಲಿನೊಳಗಿರುವ ಧ್ವನಿತಂತುವಿನಿಂದ ಹೊರಡುವುದಿಲ್ಲ; ಅದಕ್ಕಾಗೇ ವಿಶೇಷವಾದ ‘ಟಿಂಬಾಲ್’ಗಳೆಂಬ ಸ್ನಾಯುಗಳಿವೆ. ಇವು ಸಿಕಾಡದ ಕಿಬ್ಬೊಟ್ಟೆಯ ಪಕ್ಕದಲ್ಲಿರುತ್ತವೆ. ಇವುಗಳನ್ನು ಕುಗ್ಗಿಸಿದಾಗ ಒಂದು ‘ಕ್ಲಿಕ್’ ಶಬ್ದ ಮತ್ತು ಹಿಗ್ಗಿಸಿದಾಗ ಮತ್ತೊಮ್ಮೆ ಮತ್ತೊಂದು ಬಗೆಯ ‘ಕ್ಲಿಕ್’ ಶಬ್ದ ಉತ್ಪಾದನೆಯಾಗುತ್ತದೆ. ಈ ಸದ್ದು ಉತ್ಪಾದನೆಯಾದಾಗ ಎತ್ತರಿಸಿದ ಪಿಚ್‍ನಲ್ಲಿರುವುದಿಲ್ಲ; ಆದರೆ, ಸಾಮಾನ್ಯವಾಗಿ ಟೊಳ್ಳಾಗಿರುವ ಸಿಕಾಡಗಳ ಹೊಟ್ಟೆ, ಅದರಲ್ಲೂ ಗಂಡು ಸಿಕಾಡದ ಹೊಟ್ಟೆಯು ಅನುರಣನ ಕೊಠಡಿಯಂತೆ ವರ್ತಿಸಿ ಆ ಸದ್ದನ್ನು ಹಲವಾರು ಡೆಸಿಬಲ್‍ಗಳಷ್ಟು ಎತ್ತರಿಸುತ್ತದೆ. ಹೀಗೆ ಎತ್ತರಿಸಿದ ಸದ್ದನ್ನು ಹೊರಡಿಸುವ ಸಿಕಾಡಗಳು ಗುಂಪುಗುಂಪಾಗಿರುವ ಕಾರಣ, ಅವುಗಳ ವೈಯಕ್ತಿಕ ಹಾಡು ಸಾಮೂಹಿಕ ಹಾಡಾಗಿ ಪರಿವರ್ತನೆಗೊಂಡು, ಗುಮ್ ಎನ್ನುತ್ತಾ ಮರಗಿಡಗಳ ನಡುವೆ ಅನುರಣಿಸುತ್ತವೆ. ಹಾಗೆಂದು ಎಲ್ಲಾ ಸಿಕಾಡಗಳೂ ಒಂದೇ ಹಾಡನ್ನು ಹಾಡುತ್ತವೆ ಎಂದರ್ಥವಲ್ಲ. ನಮ್ಮಲ್ಲಿರುವಂತೆ ಇವುಗಳ ಪ್ರಪಂಚದಲ್ಲೂ ಸನ್ನಿವೇಶಕ್ಕೆ, ಭಾವನೆಗೆ ತಕ್ಕಂತೆ ಹಾಡುಗಳೂ ಬದಲಾಗುತ್ತವೆ. + +ಸಾಮಾನ್ಯವಾಗಿ ಹಾಡುವುದು ಗಂಡು ಸಿಕಾಡಗಳೇ; ಇವು ಹಲವಾರು ಹೆಣ್ಣು ಸಿಕಾಡಗಳ ಮಧ್ಯೆ ಒಂದು ಹೆಣ್ಣು ಸಿಕಾಡವನ್ನು ಆರಿಸಿ, ಅದಕ್ಕೆ ಸಂಗಾತಿಯಾಗೆಂದು ಆಹ್ವಾನವೀಯುವಾಗ ಹಾಡುವ ಹಾಡೇ ಬೇರೆ; ಆ ಹೆಣ್ಣುಸಿಕಾಡವು ಈ ಆಹ್ವಾನವನ್ನು ಒಪ್ಪಿ ಬಳಿಬಂದರೆ ಆಗ ಗಂಡು ಸಿಕಾಡವು ಹಾಡುವ ಹಾಡೇ ಬೇರೆ, ಅಕಸ್ಮಾತ್ ಆ ಆಹ್ವಾನ ತಿರಸ್ಕೃತಗೊಂಡರೆ ಮತ್ತೊಂದು ಶೋಕರಾಗವನ್ನು ಹೊರಡಿಸುತ್ತದೆ ಗಂಡು ಸಿಕಾಡ. ಇನ್ನು ಅಪಾಯಕ್ಕೆ ಸಿಲುಕಿದಾಗ ಹೊರಡಿಸುವ ಹಾಡೇ ಒಂದು ಬಗೆಯದ್ದಾದರೆ ಸಾಮೂಹಿಕವಾಗಿ ಒಂದು ಕುಟುಂಬದ ಸಿಕಾಡಗಳು ಹಾಡುವ ಹಾಡು ಮತ್ತೊಂದು ರೀತಿಯದ್ದು. ಕೆಲವೊಮ್ಮೆ ಸಿಕಾಡಗಳು ಹೊರಡಿಸುವ ಸದ್ದು ಎಷ್ಟು ಎತ್ತರದ ಪಿಚ್‍ನಲ್ಲಿರುತ್ತದೆಂದರೆ ಹತ್ತಿರದಲ್ಲಿ ಆ ಸದ್ದನ್ನು ಕೇಳಿದರೆ ಒಬ್ಬ ಮನುಷ್ಯನ ಕಿವಿಯು ಶಾಶ್ವತವಾಗಿ ಕಿವುಡಾಗುತ್ತದೆ. ಮತ್ತೂ ಕೆಲವು ಸಿಕಾಡಗಳ ಹಾಡು, ಮನುಷ್ಯನ ಕಿವಿಗಳು ಗುರುತಿಸಲಾಗದಷ್ಟು ಹೆಚ್ಚಿನ ಡೆಸಿಬಲ್‍ಗಳದ್ದಾಗಿರುತ್ತದೆ. ವಿಚಿತ್ರವೆಂದರೆ, ಇಂತಹಾ ಕಿವುಡುತನವು ಹಾಡುವ ಸಿಕಾಡಗಳನ್ನೂ ಕಾಡಬಹುದು. ಹಾಗಾಗಿ ತಮ್ಮ ಕಿವಿಯಂತಹಾ ‘ಟಿಂಪಾನ’ಗಳನ್ನು ಮುಚ್ಚಿಕೊಂಡ ನಂತರವಷ್ಟೇ ತಮ್ಮ ಹಾಡನ್ನು ಪ್ರಾರಂಭಿಸುತ್ತವೆ ಸಿಕಾಡಗಳು. + + + +ಇವುಗಳ ಹಾಡಿನಷ್ಟೇ ವಿಶೇಷ ಇವುಗಳ ಜೀವನಚಕ್ರ ಕೂಡ. ಗಿಡಗಳಮೇಲೆ ಒಂದು ಸಣ್ಣ ಸೀಳನ್ನು ರಚಿಸಿ ಅದರಲ್ಲಿ ನೂರಾರು ಮೊಟ್ಟೆಗಳನ್ನಿಡುತ್ತದೆ ಹೆಣ್ಣು ಸಿಕಾಡ. ಅವುಗಳೊಡೆದು ಹೊರಬರುವ ಅಪಕ್ವ ಮರಿಗಳು ಗಿಡದಮೇಲಿನಿಂದ ನೆಲಕ್ಕೆ ಬೀಳುತ್ತವೆ. ಅವುಗಳಿಗಿರುವ ಚೂಪಾದ ಮತ್ತು ಬಲಿಷ್ಠವಾದ ಮುಂಗೈಗಳಿಂದ ನೆಲವನ್ನು ಅಗೆದು. ಬಿಲ ತೋಡಿ ಬಿಲದೊಳಗೆ ಮರೆಯಾಗುತ್ತವೆ. ಹೀಗೆ ಭೂಗತವಾಗಿ ವರ್ಷಾನುಗಟ್ಟಲೇ ಸಮಯ ದೂಡುವ ಮರಿಗಳು, ಗಿಡಗಳ ಬೇರಿನೊಳಗಿನ ರಸವನ್ನು ಹೀರುತ್ತಾ ಬೆಳೆಯುತ್ತವೆ. 2ರಿಂದ 17 ವರ್ಷಗಳವರೆಗೂ ಭೂಗತವಾಗಿರಬಲ್ಲ ಮರಿಗಳು ಪ್ರಬುದ್ಧ ಕೀಟಗಳಾಗಿ ಹೊರಬರುತ್ತವೆ. ಭೂಗತ ಅಪಕ್ವ ಸ್ಥಿತಿಯಿಂದ ಪ್ರಬುದ್ಧತೆಯ ಸ್ಥಿತಿಯೆಡೆಗೆ ತಲುಪುವ ಮುನ್ನ ಬಿಲದಿಂದ ಹೊರಕ್ಕೆ ಒಂದು ಸುರಂಗ ತೋಡಿ ಹೊರಬರುತ್ತವೆ. ಹೊರಬಂದ ತಕ್ಷಣ ಒಂದು ಗಿಡದ ತೊಗಟೆಗೆ ಅಂಟಿಕೊಂಡು ಪೊರೆ ಕಳಚಲು ಆರಂಬಿಸುತ್ತವೆ. ತನ್ನ ಬೆನ್ನಿನ ಭಾಗದ ಮಧ್ಯದಲ್ಲಿ ಹೊಸದಾಗಿ ಹುಟ್ಟುಹಾಕುವ ಒಂದು ಸೀಳುವಿಕೆಯ ಮುಖಾಂತರ ಹೊರಬರುವ ಪ್ರಬುದ್ಧ ಕೀಟವು ಹೊರಕವಚವನ್ನು ಗಿಡದ ಮೇಲೇ ಬಿಟ್ಟು ಹೊರಕ್ಕೆ ಹಾರುತ್ತವೆ. ಬಹಳ ಕೂಲಂಕುಷವಾಗಿ ಗಮನಿಸದಿದ್ದರೆ ಅದು ಸಿಕಾಡವೋ ಅಥವಾ ಅದರ ಹೊರಕವಚ ಮಾತ್ರವೋ ಎಂಬುದು ತಿಳಿಯುವುದು ಕಷ್ಟಸಾಧ್ಯ. ಹೀಗೆ ಹೊರಕವಚವನ್ನು ಕಳಚಿಕೊಂಡು ಹೊರಬರುವ ಸಿಕಾಡವು ಪಾರದರ್ಶಕ ರೆಕ್ಕೆಗಳನ್ನು ಹೊಂದಿರುತ್ತವೆ. + + + +ಕೆಲವು ಜಾತಿಯ ಸಿಕಾಡಗಳು ಪಾರಭಾಸಕ ಅಥವಾ ಅರೆಪಾರದರ್ಶಕ ರೆಕ್ಕೆಗಳನ್ನು ಹೊಂದಿರುವುದೂ ಉಂಟು. ಈ ಕೀಟವು ಪ್ರಬುದ್ಧತೆಯನ್ನು ಪಡೆದ ಸ್ಥಿತಿಯಲ್ಲಿ ಇದಕ್ಕೆ ಬಾಯಿಯೇ ಇರುವುದಿಲ್ಲ ಮತ್ತು ಇದು ಆಹಾರವನ್ನೇ ಸೇವಿಸುವುದಿಲ್ಲ ಎಂಬುದು ಒಂದು ಪುರಾಣ ಕಟ್ಟುಕಥೆಯಷ್ಟೇ; ಪ್ರಬುದ್ಧ ಸಿಕಾಡವು ಇತರ ಕೀಟಗಳಂತೆ ಬಾಯನ್ನು ಹೊಂದಿದ್ದು, ಬಾಯಿಯ ಮುಖಾಂತರವೇ ಸಸ್ಯರಸವನ್ನು ಹೀರುತ್ತವೆ. ಈ ಪ್ರಬುದ್ಧ ಸ್ಥಿತಿಯಲ್ಲಿ ಹಾಡನ್ನು ಆರಂಭಿಸಿ, ಸಂಗಾತಿಯನ್ನು ಆರಿಸಿ, ಸಂಗಾತಿ ಕೀಟದೊಡನೆ ಕೆಲವಾರು ದಿನಗಳು ಬದುಕಿ, ಹೆಣ್ಣು ಸಿಕಾಡವು ಮೊಟ್ಟೆಯಿಟ್ಟ ಬಳಿಕ ಅಲ್ಪ ಸಮಯದಲ್ಲಿ ಇವುಗಳ ಜೀವನಚಕ್ರ ನಿಲುಗಡೆಗೆ ಬರುತ್ತದೆ. ಯಾವುದಾದರೂ ಪ್ರಾಣಿಗೋ ಪಕ್ಷಿಗೋ ಆಹಾರವಾಗಿಯೋ, ಅಥವಾ ಸಹಜವಾಗಿಯೋ ಸಾವನ್ನಪ್ಪುತ್ತವೆ. ಹಲವಾರು ಪ್ರಾಣಿ ಪಕ್ಷಿಗಳ ನೆಚ್ಚಿನ ಆಹಾರವಾದ ಸಿಕಾಡವನ್ನು ಮನುಷ್ಯನೂ ಬಿಟ್ಟಿಲ್ಲ. ಚೀನಾ, ಮಲೇಷಿಯಾ, ಬರ್ಮಾ, ದಕ್ಷಿಣ ಅಮೇರಿಕಾ ದೇಶಗಳಲ್ಲಿ ಹಲವಾರು ಬಗೆಯಲ್ಲಿ ಸಿಕಾಡಗಳನ್ನು ಸೇವಿಸುತ್ತಾರೆ. ಪರಿಸರ ಪ್ರೇಮಿಗಳಿಗೆ ಸಿಕಾಡಗಳ ‘ಗುಮ್’ ಸದ್ದು ಇವುಗಳ ಇರುವಿಕೆಯ ಬಗ್ಗೆ ಪುಳಕಿತಗೊಳಿಸಿದರೆ ಮತ್ತೂ ಕೆಲವರ ಬಾಯಲ್ಲಿ ನೀರೂರಿಸುತ್ತದೆ ಎಂಬುದು ವೈಯಕ್ತಿಕತೆಯ ಆಚರಣೆಯ ನಿದರ್ಶನವಷ್ಟೇ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_126.txt b/Kenda Sampige/article_126.txt new file mode 100644 index 0000000000000000000000000000000000000000..50c2ece0623334d70f6cae3cb45cadf8d06c61bc --- /dev/null +++ b/Kenda Sampige/article_126.txt @@ -0,0 +1,35 @@ +byಕೆಂಡಸಂಪಿಗೆ|Mar 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? `ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು.ಜೋಗಿ ಸಂಪಾದಿಸಿದ “ವೈಯೆನ್ಕೆ UNLIMITED ವಾಚಿಕೆ” ಕೃತಿಯ ಆಯ್ದ ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Mar 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ.ಚಾಂದ್‌ ಪಾಷ ಎನ್.ಎಸ್. ಕವನ ಸಂಕಲನ “ಒದ್ದೆಗಣ್ಣಿನ ದೀಪ”ಕ್ಕೆ ರಾಜೇಂದ್ರ ಚೆನ್ನಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Mar 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ.ವಿನಾಯಕ ಅರಳಸುರಳಿ ಕಥಾಸಂಕಲನ “ಮರ ಹತ್ತದ ಮೀನು”ಕ್ಕೆ ಎ.ಆರ್‌. ಮಣಿಕಾಂತ್ ಬರೆದ ಮುನ್ನುಡಿ + +byಮಂಡಲಗಿರಿ ಪ್ರಸನ್ನ|Mar 1, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ.ಅಂಬಮ್ಮ ಪ್ರತಾಪ್‌ ಸಿಂಗ್‌ ಗಜಲ್‌ ಸಂಕಲನ “ಮೌನದೊಡಲ ಮಾತು” ಕುರಿತು ಮಂಡಲಗಿರಿ ಪ್ರಸನ್ನ ಬರಹ + +byಮಹಾಬಲ ಭಟ್|Feb 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ.ಸುಧಾ ಎಂ. ಚೊಚ್ಚಲ ಕಥಾ ಸಂಕಲನ “ಅಪೂರ್ಣವಲ್ಲ” ಕುರಿತು ಮಹಾಬಲ ಭಟ್‌ ಅವರ ಬರಹ + +byಕೆಂಡಸಂಪಿಗೆ|Feb 27, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ.ಪರಿಸರವಾದಿ ನಾಗೇಶ ಹೆಗಡೆಯವರ ಹೊಸ ಕೃತಿ “ಅಪಾಯ ಬಂದಿದೆ: ಅಡಗಲು ಸ್ಥಳವೆಲ್ಲಿ?”ಯ ಒಂದು ಅಧ್ಯಾಯ ನಿಮ್ಮ ಓದಿಗೆ + +byಕೆಂಡಸಂಪಿಗೆ|Feb 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು.ವಿಜಯಾ ಮೋಹನ್‌ ಕಥಾ ಸಂಕಲನ “ಮೇವು”ಗೆ ಡಾ. ಸಬಿತಾ ಬನ್ನಾಡಿ ಬರೆದ ಮುನ್ನುಡಿ + +byಮಾಲಾ ಮ. ಅಕ್ಕಿಶೆಟ್ಟಿ|Feb 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ.ಮಲ್ಲಿಕಾರ್ಜುನ್ ಶೆಲ್ಲಿಕೇರಿಯವರ “ದೀಡೆಕರೆ ಜಮೀನು” ಕಥಾ ಸಂಕಲನದ ಕುರಿತು ಮಾಲಾ ಮ. ಅಕ್ಕಿಶೆಟ್ಟಿ ಬರಹ + +byಕೆಂಡಸಂಪಿಗೆ|Feb 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು.ನೆನ್ನೆಯಷ್ಟೇ ಬಿಡುಗಡೆಯಾದ ಜೋಗಿಯವರ ಕಾದಂಬರಿ “ಹಸ್ತಿನಾವತಿ”ಯ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_127.txt b/Kenda Sampige/article_127.txt new file mode 100644 index 0000000000000000000000000000000000000000..614fe36e0ae2bc6db2f32b1f329888d2ac217aad --- /dev/null +++ b/Kenda Sampige/article_127.txt @@ -0,0 +1,15 @@ +ಸ್ಪರ್ಶ ಶಿಲೆ ಎಂಬ ವಿನೂತನ ಶೀರ್ಷಿಕೆ ಹೊತ್ತ ಕೃತಿಯ ಕರ್ತೃ, ನಾಡಿನ ಪ್ರಬುದ್ಧ ಕವಯತ್ರಿ ಡಾ. ಕೆ. ಎನ್. ಲಾವಣ್ಯಪ್ರಭಾ. ಅಂತಃಕರಣವನ್ನು ಪ್ರಾಮಾಣಿಕವಾಗಿ ತೆರೆದಿಟ್ಟು ಯಾವುದೇ ವೈಭವೀಕರಣವಿಲ್ಲದ ವಸ್ತುನಿಷ್ಠ ನಿರೂಪಣೆಯ ಕವಿತೆಗಳ ಗುಚ್ಛವಿದು. ಇಲ್ಲಿ ನೆಲದ ನೋವಿದೆ, ಪ್ರೀತಿಯ ಪ್ರತೀಕ ಕೃಷ್ಣನ ಹದವಾದ ನವಿರು ಪ್ರೀತಿಯಿದೆ, ಬುದ್ಧನ ಮೌನಕ್ಕೆ ಅರ್ಥವಿದೆ, ವರ್ಷಧಾರೆಯ ಪುಳಕವಿದೆ, ಪ್ರಕೃತಿಗೂ ಜೀವ ತುಂಬಿ ಭಾಷ್ಯ ಬರೆದಿದ್ದಾರೆ ಜೊತೆಗೆ ವಿಶೇಷವಾಗಿ ಶಿಲೆಗು ಜೀವ ತುಂಬಿ ಭಾವಪರವಶರಾಗಿದ್ದಾರೆ. ತಮ್ಮೊಳಗೆ ಬಚ್ಚಿಟ್ಟ ಮೌನಕ್ಕೆಲ್ಲ ಸಾವಧಾನದಿಂದ ಕವಿತೆಯ ಮೂಲಕ ಅರ್ಥ ನೀಡಿದ್ದಾರೆ. ಕವಿತೆ ಓದಿದ ನಂತರ ಖುಷಿಯ ಅನುಭೂತಿಯ ಅನುಭವವಾಗುತ್ತದೆ. ಮಹಿಳೆಯ ಮನಸ್ಸು ಅನುಭವಿಸುವ ತಣ್ಣನೆಯ ತಲ್ಲಣಗಳ ಸಾಲುಗಳು ಇಲ್ಲಿನ ಕವಿತೆಗಳಲ್ಲಿ ತುಂಬಾ ಅಪ್ಯಾಯಮಾನವಾಗಿದೆ. + +(ಡಾ. ಕೆ. ಎನ್. ಲಾವಣ್ಯಪ್ರಭಾ) + +“ಭೂಮಿ ಇವಳು / ಒಡಲುರಿಗೆ ಒಳಗೆಲ್ಲೋ ಮಾಯಿಗಟ್ಟಿ / ನಿಂತ ಕಣ್ಣ ಹನಿಯನ್ನೆಲ್ಲ ಹಿಂಗಿ ಮುರುಟಿ ತನ್ನೊಳಗೆ ತಾನೆ ಜ್ವಾಲಾಮುಖಿ ಇವಳು / ಮೇಲೆ ತಣ್ಣಗಿನ ಯಮುನೆಯಾದವಳು. ಹೀಗೆ ‘ಇವಳನ್ನು’ ಭೂಮಿಯಾಗಿ ಪರಿವರ್ತಿಸಿ ಹೇಳಿ ಅಚ್ಚರಿಗೊಳಿಸುತ್ತಾರೆ. ಹೆಣ್ಣೆಂಬ ಕ್ಷಮಯಾ ಧರಿತ್ರಿಗೆ ಅನ್ವರ್ಥ ನಾಮವೇ ಈ ಭೂಮಿಯೆಂಬ ಸತ್ಯವನ್ನು “ಭೂಮಿ ಇವಳು” ಎಂಬ ಚಂದನೆಯ ಕವಿತೆಯಲ್ಲಿ ಅನಾವರಣಗೊಳಿಸುತ್ತಾರೆ. ಹೆಣ್ಣು ಮತ್ತು ಪ್ರಕೃತಿಯ ಧ್ಯಾನ ಇಲ್ಲಿನ ಹಲವಾರು ಕವಿತೆಗಳಲ್ಲಿವೆ. ಬೀಸುವ ಗಾಳಿಗೆ ಹಸಿರೆಲೆ ಬಳ್ಳಿ ತೊನೆದಾಡಿ / ಹನಿದ ಸೋನೆ ಮಳೆಗೆ ಮಣ್ಣು ಗಂಧವ ತೀಡಿ ನಿರ್ವಾತದಲ್ಲು ಬೆಳಕ ಝರಿ ಹರಿದಾಡಿ… ಹೀಗೆ ಸಾಗುವ ಪ್ರಕೃತಿ ಲೋಕ ಬೃಂದಾವನಕ್ಕೆ ತೆರಳುತ್ತದೆ. ಬೃಂದಾವನದ ವರ್ಣನೆ ವರ್ಣನಾತೀತ. ಇಲ್ಲಿನ ಮುಖ್ಯ ಕವಿತೆಗಳೆಲ್ಲವೂ ಪ್ರಕೃತಿಯ ವರ್ಣ ರಂಜಿತ ನಿಲುವನ್ನು ಎತ್ತಿ ತೋರಿಸುತ್ತದೆ. ಹೆಣ್ಣಿನೆದೆಗೆ ಮೊದಲು ತಾಕುವುದೆ ಪ್ರಕೃತಿ ಪ್ರೇಮ ಎಂಬುದು ನಮಗಿಲ್ಲಿ ನಿರೂಪಿತವಾಗುತ್ತದೆ. ಪ್ರಕೃತಿಯೆಂದರೆ ಕೋಗಿಲೆ ಬೇಕು, ಚಂದಿರನಿರಬೇಕು, ನೀಲಿಯಾಕಾಶ, ಕರಿ ಮುಗಿಲು, ಆಷಾಡದ ಮೋಡ, ಸುಖದ ಮಳೆ, ನಿತ್ಯ ಪುಷ್ಪ, ಪಾರಿಜಾತ, ಕಲ್ಪವೃಕ್ಷ, ಸೂರ್ಯ, ಚಂದ್ರ, ನಕ್ಷತ್ರ ಎಲ್ಲವೂ ಇಲ್ಲಿನ ಕವಿತೆಗಳಲ್ಲಿದೆ. ಏನೋ ಒಂದು ತಿಳಿಯಲು ಆಗದಂತಹ ಆಧ್ಯಾತ್ಮಕತೆಯ ದಿವ್ಯ ಸಾನಿಧ್ಯದ ಸೆಳವು ಇಲ್ಲಿನ ಕವಿತೆಗಳು ಎದ್ದು ತೋರಿಸುತ್ತವೆ. ಅಂದರೆ ಪ್ರಕೃತಿಯೆಡೆಗಿನ, ನಮ್ಮನ್ನು ಕಾಯುವ ಶಕ್ತಿಯೆಡೆಗಿನ ಮೋಹದ ಕವಿತೆಗಳು. + +ಕಾವ್ಯದ ಹಲವಾರು ಸವಾಲುಗಳನ್ನು ಮೀರಿ ಬೆಳೆದು ನಿಂತ ಸೃಷ್ಠಿಯೆ ಇವರ ಕವಿತೆಗಳು. ಇಲ್ಲಿನ ರಸ್ತೆ ಕವಿತೆ ಅದಮ್ಯ ಜೀವನಕಾಂಕ್ಷೆಯನ್ನೂ, ಜೀವನೋತ್ಸಾಹವನ್ನು ಹುಟ್ಟು ಹಾಕುವಂತಿದೆ. ಜೀವನದ ಹಾದಿಯ ಸಹಜ ಏರಿಳಿತಗಳನ್ನು, ಸಹಜ ತಾತ್ವಿಕತೆಯೊಂದಿಗೆ ಈ ಕವಿತೆಯಲ್ಲಿ ನಿರೂಪಿಸುತ್ತಾರೆ. ಅದೆಷ್ಟೋ ತಿರುವುಗಳ / ಅಸಂಖ್ಯ ಉಬ್ಬು ತಗ್ಗುಗಳ ಕೊನೆ ಮೊದಲಿಲ್ಲದ ದಾರಿಗಳೊಳಗೆ / ಹೂತು ಹೋದ ಸತ್ಯಗಳ / ಹಾದು ಹೋದ ಹೆಜ್ಜೆಗಳೆಲ್ಲವನ್ನು ಬಲ್ಲ ಮಲ್ಲನಾದರು…. ಹೀಗೆ ಸಾಗುವ ಕವಿತೆಯಲ್ಲಿ ರಸ್ತೆಯನ್ನು “ಈ ಘಳಿಗೆ ರಸ್ತೆ ತನ್ನ ಪಾಲಿಗೆ ಅದ್ಭುತ ತತ್ವಜ್ಞಾನಿ” ಎಂದು ಕರೆದಿದ್ದಾರೆ. ಹೀಗೆ ಇಲ್ಲಿನೆಲ್ಲ ಕವಿತೆಗಳು ಲವಲವಿಕೆಯ ಭಾಷೆಯಿಂದಾಗಿ ಓದುಗ ಸ್ನೇಹಿಯಾಗಿದೆ. ಕವಿತೆಗಳನ್ನು ಓದಿದಾಗ ನಮಗನಿಸುವುದು ಏನೆಂದರೆ, ಆಗ ತಾನೇ ಅನುಭವಿಸಿದ ತಲ್ಲಣಗಳು, ಪ್ರಕೃತಿಯ ಚೆಲುವನ್ನು, ಅಂತರಾಳದ ಭಕ್ತಿ ಇವನ್ನೆಲ್ಲ ತಾಜಾವಾಗಿಯೆ ಕವಿತೆಗಳಿಗೆ ಇಳಿಸಿಬಿಟ್ಟಿದ್ದಾರೆ. ಏಕೆಂದರೆ ಇಲ್ಲಿನ ಕವಿತೆಗಳ ವಸ್ತುಗಳಿಗೆ ಅತ್ಯಂತ ಜೀವಕಳೆ ಇದೆ. ಹಾಗಾಗಿ ಇವು ಯಾವತ್ತಿಗೂ ತನ್ನ ಹೊಸತನವನ್ನು ಹಾಗೆಯೇ ಉಳಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ. + + + +“ದಾರಿಯಲ್ಲಿ ಸಾಲು ಸಾಲಾಗಿ ಬರುವ ಎಲ್ಲ ಬೇಸರಗಳು/ ನಲಿವಿಗೆ ದಾರಿಯಂತೆ.. ಹೀಗೆ ಸಾಗುವ ಕವಿತೆಯಲ್ಲಿ, ಯಾಕೆ ನಲಿವಿಗೆ ದಾರಿ ಎಂಬುದಾಗಿ ಹೇಳಿ ನಮ್ಮ ಚಿಂತೆಯನ್ನು ತೇಜೋಹಾರಿಯಾಗಿ ಮಾಡಿ ಬಿಡುತ್ತಾರೆ. ಸಂಕಲನದ ಚೆಲುವ ಕವಿತೆಯಂತು ಮಾರ್ಮಿಕವಾಗಿದೆ. ಅನೂಹ್ಯವಾದ ಚೆಲುವ ನಾರಾಯಣನ ಕರುಣೆಯಲ್ಲಿ ಭಕ್ತಿರಸ ಉಕ್ಕಿ ಬರುತ್ತದೆ. ಇತಿಹಾಸದ ಸಾಕ್ಷ್ಯಗಳಿಲ್ಲದಿದ್ದರೂ ಹೊರಗಮ್ಮ ದೇವಿಯ ವಿಹ್ವಲ ಪ್ರೀತಿ ಮನ ಮಿಡಿಯುವಂತೆ ಇಲ್ಲಿ ಪಡಿಮೂಡಿದೆ. + +ಒಟ್ಟಿನಲ್ಲಿ ಸಂಪೂರ್ಣ ಸ್ಪರ್ಶ ಶಿಲೆಯಲ್ಲಿ ಸತ್ವ ಇದೆ. ಭಾವನಾತ್ಮಕವಾಗಿ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. ಕವಿತೆಯ ಒಳನೋಟವನ್ನು ತಾತ್ವಿಕವಾಗಿ ನಮಗೆ ಹೇಳುತ್ತಾರೆ. ಒಂದು ರೀತಿಯಲ್ಲಿ ಹೇಳುವುದಾದರೆ ಬದುಕು ಮತ್ತು ಪ್ರಕೃತಿಯನ್ನು ಅನುಸಂಧಾನಿಸುತ್ತಲೆ ರಚಿಸಿದ ಹದವಾದ ಭಾವ, ಭಾಷೆಯ ಕವಿತೆಗಳು ನಮ್ಮಲ್ಲೂ ಹೊಸ ಸಂವೇದನೆಯನ್ನು, ಚೈತನ್ಯವನ್ನು ಹುಟ್ಟು ಹಾಕುತ್ತವೆ. ಮೈಸೂರಿನ ಕವಿತಾ ಪ್ರಕಾಶನದಿಂದ ಈ ಸಂಕಲನ ಪ್ರಕಟಗೊಂಡಿದೆ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_128.txt b/Kenda Sampige/article_128.txt new file mode 100644 index 0000000000000000000000000000000000000000..5d981681750f3f82632f6fb49aca8adf59ff8f13 --- /dev/null +++ b/Kenda Sampige/article_128.txt @@ -0,0 +1,49 @@ +“ನಿಮಿಗೇನ್ ಒಂದ್ ಎಳ್ ಕಾಳೋಷ್ಟರ ಜವಾಬ್ದಾರಿ ಇಲ್ಲ ವಯಸ್ಸಿಗೆ ಬಂದ್ ಮಗುಳ್ನ ಇನ್ನು ಮನೆಗೆ ಇಟ್ಕಂಡಿದಿರಲ್ಲ. ನನಗಿಂತ ಸಣ್ಣುಡ್ರಿಗೆಲ್ಲ ಮದ್ವೆ ಆಗ್ತೈತಿ. ನನ್ನುನ್ ನೋಡಕ್ ಒಂದೇ ಒಂದ್ ಗಂಡ್ ಕರ್ಕಂಡ್ ಬಂದಿಲ್ಲ ಇನ್ನೂ. ಇಲ್ಲೇ ನಿಮ್ಮ ಚಾಕ್ರಿ ಮಾಡ್ಕೆಂದು ಬಿದ್ದಿರ್ಲಿ ಅಂತನೇನು ನೀವು” ಎಂದು ಅಪ್ಪ ಅವ್ವನಿಗೆ ಮೂದಲಿಸಿ ಜಗಳವಾಡುತಿದ್ದುದನ್ನು ನೆನೆದು ತೊಡೆಯ ಮೇಲೆ ಪವಡಿಸಿದ್ದ ಹೆಣ್ಣು ಕೂಸಿನ ಮೇಲೆ ಗೊತ್ತಿಲ್ಲದೆ ಕಣ್ಣೀರು ಹನಿಕಿಸುತ್ತ ಅಂತರ್ಮುಖಿಯಾಗಿದ್ದಾಳೆ ಸಾವಿತ್ರಿ. + +ಇನ್ನೊಂದು ಮೂರು ಮೂರುವರೆ ವರ್ಷದ ಕೂಸು ಹಿತ್ತಲ ಬಾಗಿಲಿನ ಪಕ್ಕದಲ್ಲಿ ಗುಡ್ಡದಂತೆ ಒಟ್ಟಿದ್ದ ಮೈಲಿಗೆ ಬಟ್ಟೆಯ ಸಂಧಿಯಲ್ಲಿ ತೋಟದ ಕಡೆಯಿಂದ ಬಂದು ಸರಸದಲ್ಲಿದ್ದ ಎರಡು ಕಪ್ಪೆಗಳನ್ನು ಕೈಯಲ್ಲೇ ಹಿಡಿದು ತಾಯಿಗೆ ತೋರಿಸಲೆಂದು ಮನೆಯೊಳಗೆ ತಂದು “ಅಮ್ಮ ಇಲ್ಲಿ ನೋಡು ಕಪ್ಪೆ, ಎರೆಡು ಜಗಳ ಆಡ್ತಿದ್ವು ಅದಿಕ್ಕೆ ಜಗಳ ಬಿಡಿಸಿ ಎತ್ಕೆಂಬಂದೆ” ಎಂದು “ಹಿ ಹಿ ಹಿ” ಎಂದು ಕಿಸಿಯುತ್ತಿದ್ದ ಆ ಹುಡುಗಿಗೆ ತಾಯಿಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಮತ್ತೆ “ಅಮ್ಮಾ….” ಎಂದಳು ಎಳೆ ಕೈಯಿಂದೊಮ್ಮೆ ಸ್ಪರ್ಶಿಸಿ. ಮೈ ಜಲಕಿಸಿ ಎಚ್ಚರಗೊಂಡ ಸಾವಿ ತನ್ನ ದುಖ: ಮಗಳಿಗೆ ತಿಳಿಯಬಾರದೆಂದು ಸೆರಗಿನಲ್ಲಿ ಮುಖ ತಿಕ್ಕಿಕೊಂಡು “ಏನಮ್ಮಾ ಕನಕ ?” ಎಂದಾಗ ಕೈಲಿದ್ದ ಎರಡು ಕಪ್ಪೆಗಳನ್ನು ಮುಂಚಾಚಿ ತೋರಿದಳು. ಕೊರಗಿ ಮಂಕಾಗಿದ್ದ ಮುಖವನ್ನು ಕಿವುಚಿ “ಶೀ….. ಬಿಸಾಕಮ್ಮ ಹಂಗೆಲ್ಲ ಹಿಡಿತಾರೇನೆ ಬರಿಗೈಲಿ” ಅಂದು ಬಿಸಾಕಲೇಳಿ ಈ ದಿನವಾದರು ತನ್ನ ಗಂಡ ಮನೆಗೆ ಬರಬಹುದು ಬೇಗ ಅಡಿಗೆ ಮಾಡೋಣವೆಂದು ತೊಡೆ ಮೇಲಿದ್ದ ಕೂಸನ್ನ ಬಿದಿರ ತೊಟ್ಟಿಲಿಗೆ ಹಾಕಿ ಒಲೆಯ ಕಡೆ ಸಾರಿದಳು. + +(ನಗೋಲತೆ) + +ಆ ಮನೆ, ಅದೊಂದು ಸಣ್ಣ ಕೆಂಪು ಹಂಚಿನ ಕೋಣೆ ಅದಕ್ಕೆ ಅಂಟಿಕೊಂಡೆ ಚಿಕ್ಕ ಅಡಿಗೆ ಮನೆ ಅದರಲ್ಲೆ ಕೈಬಚ್ಚಲು ಒಂದು ಊಡೊಲೆ ಮತ್ತೆ ಹೇಳುವಂತದ್ದೇನು ಇಲ್ಲ. ಸಾವಿತ್ರಿ ಮದುವೆಯಾಗಿ ಬಂದಾಗ ದೊಡ್ಡದಿತ್ತು. ಬರುಬರುತ್ತಾ ಗಂಡ ಮತ್ತೆ ಗಂಡನ ಅಣ್ಣಂದಿರಿಬ್ಬರು ತಂದೆಯ ಎಲ್ಲ ಆಸ್ತಿಯನ್ನು ಪಾಲು ಮಾಡಿಕೊಂಡಾಗ ಅದೇ ಮನೆಯನ್ನು ಮೂರು ಭಾಗ ಮಾಡಿ ಹಂಚಿಕೊಂಡಿದ್ದರಿಂದ ಇವರ ಪಾಲಿಗೆ ಬಂದ ಮನೆಯ ಭಾಗ ತೀರ ಸಣ್ಣದಾಗಿತ್ತು. + +ಆದರೆ ಆ ಉಳ್ಳಾಗಡ್ಡಿ ಹೊನ್ನೂರುನಲ್ಲಿ ಬಹುತೇಕ ಮನೆಗಳ ಪಾಡು ಇದೇ ಆಗಿದ್ದರಿಂದ ಮೊದಮೊದಲು ಸಣ್ಣದಾಗಿ ತೋರುತ್ತಿದ್ದ ಗುಡಿಸಲು ಈಗ ವಾಸಿಸಲು ತೊಂದರೆ ಇಲ್ಲದ ಮನೆಯಾಗಿದೆ. ಮುಂಚೆಯಿಂದಲು ಬಹಳ ಈರುಳ್ಳಿ ಬೆಳೆಯುತ್ತಿದ್ದರಿಂದ ಹೊನ್ನೂರಿಗೆ ಉಳ್ಳಾಗಡ್ಡಿ ಎಂದು ಹೆಸರು ಜೋಡಿಯಾಗಿತಂತೆ. ಸಣ್ಣ ಗ್ರಾಮ, ಊರ ಮಧ್ಯದಲ್ಲೆ ಬಸ್ ಸ್ಟಾಪ್ ಅದರೆದುರು ಗ್ರಾಮ ಪಂಚಾಯತಿ, ಪೊಲೀಸ್ ಠಾಣೆ, ಪೋಸ್ಟ್ ಆಫೀಸ್ ಮೂರೂ ಒಂದೇ ಸೂರಿನಡಿ ಇದ್ದವು. ಇವುಗಳ ಪಕ್ಕದಲ್ಲಿ ಸರಕಾರಿ ಪ್ರಾಥಮಿಕ ಶಾಲೆ. ಊರಿಂದ ಸ್ವಲ್ಪ ದೂರದಲ್ಲಿ ಒಂದು ದನದಾಸ್ಪತ್ರೆಯೂ ಇದೆ ಸುತ್ತಲ ನಾಲ್ಕು ಹಳ್ಳಿಗೂ ಉಪಕಾರವಾಗುವಂತೆ. ಊರ ಹೆದ್ದಾರಿಯಲ್ಲಿ ಬೆಳಗ್ಗೆ ಒಂದು ಬಸ್ಸು ಬಿಟ್ಟರೆ ಸಂಜೆ ಒಂದು ಬಸ್ಸು ಮಾತ್ರ ಓಡಾಡುತ್ತಿದ್ದದ್ದು ಇದು ಬಿಟ್ಟರೆ ಮೂರ್ನಾಲ್ಕು ಪುಟ್ಟ ಗುಡಿಗಳು, ಐದಾರು ಒಣಗಿದ ಬಾವಿಗಳು, ಒಂದು ಕೆರೆಯೂ ಇದೆ, ಆದರೆ ಅದರಲ್ಲೂ ನೀರು ಮಾತ್ರ ಎಂದೆಂದೂ ಇರುವುದಿಲ್ಲ ಸದಾ ಹಸಿರು ಬೆಳೆದಿರುತ್ತದೆ. ದನಗಾಯಿಗಳು, ಕುರುಬರೆಲ್ಲ ಅದರಲ್ಲೆ ತಮ್ಮ ಜಾನುವಾರುಗಳನ್ನೆಲ್ಲಾ ಮೇಯಿಸುತ್ತಿರುತ್ತಾರೆ. ಆ ಊರಿನ ಜನ ಬಸ್ಸಿನಲ್ಲಿ ಓಡಾಡುವುದಕ್ಕಿಂತ ಪಕ್ಕದ ಊರಿನಲ್ಲಿದ್ದ ರೈಲ್ವೆ ಮಾರ್ಗವನ್ನೇ ಹೆಚ್ಚು ಬಳಸುತ್ತಿದ್ದರು. ಹಂಗಾಗಿ ಸಂಪರ್ಕಕ್ಕೇನು ತೊಡಕು ಕಾಣುತ್ತಿರಲಿಲ್ಲ.. + +ಸಾವಿಮನೆ ಊರಿನ ಪೂರ‍್ವದ ಸೆರಗಿನಲ್ಲಿದ್ದು ಮನೆಯ ಹಿಂದೆಯೇ ಒಂದು ಎಕರೆ ತೆಂಗಿನ ತೋಟ. ಹೊರಗಿನಿಂದ ನೋಡಲು ಒಂದೇ ಮನೆಯಂತೆ ಕಂಡರೂ ಅದರಲ್ಲಿ ಮೂರು ಮನೆಗಳಿವೆ. ದೂರದಿಂದ ನೋಡಿದವರಿಗೆ ಅಡಿಗೆ ಕೋಣೆಗಳಿಂದ ಏಳುವ ಹೊಗೆ ಮನೆಯ ಹಂಚಿಗೆ ಮೋಡ ಹತ್ತಿದ ಹಾಗೆ ಕಾಣುತ್ತದೆ. ಸಾವಿಯ ಮಾವ ಸತ್ತು ಮಕ್ಕಳು ಆಸ್ತಿ ಪಾಲು ಮಾಡಿಕೊಂಡಾಗ ಒಬ್ಬೊಬ್ಬರಿಗೆ ಎರಡು ಎಕರೆ ಬೆದ್ದಲು ಹಾಗು ಮನೆ ಹಿಂದೆ ಇರುವ ತೆಂಗಿನ ತೋಟದಲ್ಲಿ ತಲಾ ಇಪ್ಪತ್ಮೂರು ಮರಗಳು ದೊರಕಿದ್ದವು. ತಮ್ಮ ಸುಬ್ಬನನ್ನು ಕಂಡರೆ ಹಿರೆ ಅಣ್ಣನಿಗೂ, ಕಿರೆ ಅಣ್ಣನಿಗೂ ಮೊದಲಿನಿಂದ ತಾತ್ಸಾರ. ಅವನೇನು ದುಡಿಮೆ ಮಾಡದೇ ಹಣ ಹಾಳು ಮಾಡುವುದೆ ಇದಕ್ಕೆ ಕಾರಣ. ಇದೇ ಕಾರಣದಿಂದಲೇ ಜಗಳವಾಡಿ ಭಾಗ ಮಾಡಿಕೊಂಡಿದ್ದು. + +ಒಂದು ವಾರದಿಂದ ಬರದೇ ಸೂಳೆಯ ಮನೆಯಲ್ಲೇ ಟಿಕಾಣಿ ಊಡಿದ್ದ ಗಂಡ ಇವತ್ತು ಬರಬಹುದೆಂಬ ಭ್ರಮೆಯಲ್ಲಿ ಉಣ್ಣದೆ ಕಾಯುತ್ತಿದ್ದ ಸಾವಿಗೆ ಸಮಯ ಜರುಗಿದಂತೆಲ್ಲ ಆಸೆ ಕರಗಿ ಮಕ್ಕಳಿಗೆ ಅನ್ನಕ್ಕೆ ಕೊಂಚ ಹೆಸರಾಕಿ ಕಲಸಿ ಮೆದ್ದಿ ಹಸಿವು ನೀಗಿಸಿ ತಾನು ಒಂದಿಷ್ಟು ತಿಂದು ಉಳಿದ ಅನ್ನವನ್ನು ನಾಯಿಗಾಕಲೆಂದು ಮನೆಯ ಹಿಂದೆ ಹೋಗಿ “ಹುಲಿಯಾ ಬಾ…” ಎಂದು ಕೂಗಿದೊಡನೆ ತೋಟದಲ್ಲಿ ಬೆಳೆದು ನಿಂತಿದ್ದ ಕಾಂಗ್ರೆಸ್ ಗಿಡಗಂಟೆಗಳ ನಡುವೆ ಇಲಿ ಹೆಗ್ಗಣಗಳ ಶೋಧನೆಯಲ್ಲಿದ್ದ ಹುಲಿಯಾ ಚಂಗನೆ ನೆಗೆದು ಹಾರಿ ಚಿರತೆಯ ವೇಗದಲ್ಲಿ, ಬಾಲ ಅಲ್ಲಾಡಿಸುತ್ತ ಸಾವಿಯ ಎದುರು ಹಾಜರಿದ್ದ. ಹೆಸರಿಗೆ ತಕ್ಕ ಹುಲಿಯ ಬಲು ಧೈರ್ಯವಂತ. ಅನ್ನಕ್ಕೆ ಸಾರಾಕಿ ಕಲಸಿ ಕಲ್ಲಿನ ಮೇಲಾಕಿದಳು. ಸಾವಿಯ ಹಿರಿಯ ಕೂಸು ಕನಕ ಹುಲಿಯನ ತಲೆ ಸವರುತ್ತ ಅದು ತಿನ್ನುವುದನ್ನೇ ನೋಡುತ್ತಿದ್ದಳು. + +ತೋಟದಲ್ಲೆಲ್ಲ ನೀರವ ಕತ್ತಲು. ಮನೆಯ ಹಿಂದಿದ್ದ ನೂರು ವ್ಯಾಟ್ ಬಲ್ಬಿನ ಬೆಳಕಿನ ಪ್ರಖರತೆಗೆ ಹತ್ತಿರವಿದ್ದ ಒಂದೆರಡು ಮರಗಳ ಬುಡ ಕಾಣುತಿದ್ದವು ಅದನ್ನು ಹೊರತು ಮತ್ತೇನು ಇಲ್ಲ. ಕನಕ ಒಮ್ಮೆ ತಲೆ ಎತ್ತಿ ನೋಡಿದಳು. ಭಯವಾಗಿ ಅಮ್ಮ ತನ್ನ ಹಿಂದೆ ಇರುವಳೆಂದು ಹಿಂದೆ ನೋಡಿದರೆ ಇರಲಿಲ್ಲ! ಒಮ್ಮೆ ಜೀವ ಬಾಯಿಗೆ ಬಂದಂತಾಯ್ತು, ಆದರು ಹುಲಿಯಾ ಇರುವನಲ್ಲ ಎಂಬ ಧೈರ್ಯ. ಗೂಬೆ ಕೂಗಿದ ಸದ್ದಿಗೆ ಆ ಧೈರ್ಯವೂ ಮಾಯವಾಗಿ ಒಳಗೆ ಓಡಿದಳು. ಆಗಲೇ ತಂಗಿ ನಿಧಿ ತೊಟ್ಟಿಲಲ್ಲಿ ಮಲಗಿದ್ದಾಳೆ. ಅಮ್ಮ ಸಾವಿತ್ರಿ ಮಂಕಾಗಿ ಕಡ್ಡಿ ಚಾಪೆ ಹಾಕಿ ಮಲಗಲು ಹಾಸುತ್ತಿದ್ದಾಳೆ. ಹುಲಿಯ ಹೊರಗೆ ಹಾಕಿದ್ದ ಅನ್ನ ತಿಂದು ಹಿತ್ತಲ ಬಾಗಿಲಿನಿಂದಲೇ ನೆಲ ಮೂಸುತ್ತಾ ಒಳಗೆ ಬಂದುದ್ದನ್ನು ನೋಡಿ ಸಾವಿ “ಹಚ್ಚ ಹಚ್ಚ” ಎಂದು ಗದರಲು ಹಿಂದಿನಿಂದಲೇ ಮತ್ತೆ ತೋಟದ ಪೊದೆಗಳ ನಡುವೆ ಕಾಣದಾಯಿತು. + +ಹಿತ್ತಲ ಬಾಗಿಲಾಕಲೆಂದು ಹೋಗುತ್ತಿದ್ದ ಸಾವಿಯ ಹಿಂದೆ ಹೋಗಿ ನಿಂತ ಕನಕ ಅವಳಮ್ಮನ ಸೆರಗ ಜಗ್ಗಿ “ಉಚ್ಚೆ ಒಯ್ಬೇಕು ಕರ್ಕಂಡೋಗು” ಎಂದಳು. ಬಚ್ಚಲು ಪಾಯಿಖಾನೆ ಇಲ್ಲದ ಮನೆಯಾದ್ದರಿಂದ ಬಾಗಿಲು ತೆಗೆದು ನೂರಡಿ ತೋಟದ ಕಡೆ ಹೋಗಿ ತಾಯಿ ಮಗಳು ಇಬ್ಬರು ಪೊದೆಗಳ ನಡುವೆ ಕೂತು ಮೂತ್ರ ವಿಸರ್ಜನೆ ಮಾಡಿ ಒಳ ನಡೆದು ಬಾಗಿಲ ಅಗಳಿ ಹಾಕಿ ಅರವತ್ತು ವ್ಯಾಟ್‌ನ ಬಲ್ಬನ್ನು ಕಳುಬಿ ಆಗ ತಾನೆ ಬಳಕೆಗೆ ಬಂದ ಪ್ಲಾಸ್ಟಿಕ್ ಚಾಪೆಯ ಮೇಲೆ ಉರುಳಿದರು. + +ಮನೆ ಭಾಗವಾದಾಗ ಮಧ್ಯಕ್ಕೆ ಪೂರ್ತಿ ಗೋಡೆ ಕಟ್ಟದೆ ಅಟ್ಟದವರೆಗೆ ಮಾತ್ರ ಕಟ್ಟಿದ್ದರಿಂದ‌ ಅಟ್ಟ ಎಲ್ಲರಿಗೂ ಒಂದೆ ಇತ್ತು ಹಾಗಾಗಿ ಪಕ್ಕದ ಮನೆಯಲ್ಲಿ ಮಾತಾಡುವುದೆಲ್ಲ ಪಕ್ಕದಲ್ಲೆ ಮಾತಾಡಿದಷ್ಟು ಸ್ಪಷ್ಟವಾಗೆ ಕೇಳುತ್ತಿತ್ತು. ಸಾವಿ ನಿದ್ದೆ ಬಾರದೆ ಗಂಡನನ್ನು ಹೇಗಾದರು ಮಾಡಿ ಸೂಳೆ ಸಹವಾಸ ಬಿಡಿಸಿ ನನ್ನ ಕಡೆ ಸೆಳೆಯಬೇಕೆಂದು ಯೋಚಿಸುತ್ತಿದ್ದಳು. ಪಕ್ಕದ ಮನೆಯಲ್ಲಿ ಮಾವ ಅಕ್ಕಂದಿರು ತನ್ನ ಗಂಡನ ಬಗ್ಗೆ ಪಿಸುಗುಡುವುದು ಗೊತ್ತಾಗುತಿತ್ತು. ಸಾವಿತ್ರಿ ತನಗರಿವಿಲ್ಲದೆ ಶೋಕಿಸುತ್ತ ಮಗಳು ಕನಕಳನ್ನು ತಬ್ಬಿ ಕಣ್ಣು ಮಿಟುಕಿಸಿದಾಗ ಕಣ್ತುಂಬಿದ್ದ ಅಶ್ರು ದಳದಳನೆ ಇಳಿದು ಎಣ್ಣೆ ಜಿಡ್ಡು ಮೆತ್ತಿ ಕೊಳಕಾಗಿದ್ದ ತಲೆದಿಂಬು ಸಹ ಅದನ್ನು ಹೀರದೆ ಕೆಳಕ್ಕೆ ಹರಿದವು. ತೋಟದ ಕಡೆಯಿಂದ ಜೋರಾಗಿ ಬೀಸುವ ಗಾಳಿ ಹಂಚಿನ ಮಧ್ಯೆ ತೂರುವಾಗ “ಶಿಳ್” ಎಂಬ ಶಬ್ದ, ತೆಂಗಿನ ಗರಿಗಳು ಒಂದಕ್ಕೊಂದು ಬಡಿಯುತ್ತಿರುವ “ಪಟಪಟ” ಸದ್ದು, ನಾಯಿಗಳ ಊಳು ಇದ್ಯಾವುದರ ಅರಿವಿಲ್ಲದೆ ಅಂತರ್ಮುಖಿಯಾಗಿದ್ದ ಸಾವಿ ನಿದ್ರಾವಶಳಾದಳು. + +ಬೆಳಗ್ಗೆ ಪಕ್ಕದ ಮನೆಯ ಹಿರಿಮಾವನ ಮನೆಯಲ್ಲಿ ಸಾಕಿದ್ದ ಕೋಳಿಗಳು ಬಿದಿರ ಜಲ್ಲೆಯನ್ನು ಎತ್ತಿದ್ದೆ ತಡ ನಾಮುಂದು ತಾಮುಂದು ಎಂದು ಹಾರಿ ಓಡಿ ಜಿಗಿದು ಆಹಾರ ಶೋಧನೆಗೆ ಶುರುಇಟ್ಟವು. ಹಿಂದೆ ತೊಳೆಯದೆ ಬಿಟ್ಟಿದ್ದ ಪಾತ್ರೆಗಳಲ್ಲಿ ಉಳಿದಿದ್ದ ಮುದ್ದೆಯ ಸೀಕು ಅನ್ನದಗುಳ ತಿನ್ನುತ್ತಾ “ಕೊಕೊಕೋ ಕೋ” ಎಂದು ಕೂಗುತಿದ್ದವು. ನೇಸರನ ಎಳೆ ಬಿಸಿಲಿಗೆ ತೆಂಗಿನ ಮರಗಳ ನೆರಳು ಮನೆಯ ಮೇಲೆ ಬಿದ್ದು ಇನ್ನು ಹೊತ್ತಾಗಿಲ್ಲ ಎಂಬಂತೆ ಒಳಗಿದ್ದವರಿಗೆ ಅನ್ನಿಸುವಂತಿತ್ತು. + + + +ಮೂರು ಮನೆಗಳಲ್ಲಿ ಮೊದಲು ಏಳುತ್ತಿದ್ದವನೇ ಹಿರಿ ಅಣ್ಣ ಹನುಮಂತ. ಬೆಳ್ಳಂಬೆಳ್ಳಗೆಯೇ ಹೋಗಿ ತನ್ನ ಮರಗಳದ್ದಲ್ಲದೆ ತಮ್ಮಂದಿರ ಮರಗಳ ಕೆಳಗೆ ಬಿದ್ದಿರುವ ತೆಂಗಿನಕಾಯಿ ಗರಿಗಳನೆಲ್ಲ ಕದ್ದು ಯಾರಿಗೂ ಗೊತ್ತಾಗದಂತೆ ತಂದಿಟ್ಟುಕೊಳ್ಳುತ್ತಿದ್ದ. ನಂತರ ಆ ವಿಷಯ ಉಳಿದೆರಡು ಮನೆಯವರಿಗೆ ಗೊತ್ತಾಗಿ ಜಗಳವಾದಾಗಿನಿಂದ ತನ್ನ ೨೩ ಮರಗಳದ್ದಷ್ಟೇ ತರುತ್ತಿದ್ದಾನೆ. + +ಸಾವಿತ್ರಿಯ ಸಣ್ಣ ಕೂಸು ನಿಧಿ ತೊಟ್ಟಿಲಲ್ಲಿ ಅಬ್ಬರಿಸುತ್ತಾ ಒದ್ದಾಡುತಿತ್ತು. “ವತ್ತಾರೆ ವತ್ತಾರೆಲೆ ಇದುರ್‌ದೊಂದ್ ಕಾಟ” ಅಂತ ಗೊಣುಗುತ್ತ ಎದ್ದು ನೋಡಿದರೆ ತೊಟ್ಟಿಲೆಲ್ಲ ರಾಡಿ!. ಕಕ್ಕ ಉಚ್ಚೆ ಮಾಡಿಕೊಂಡಿದೆ ಮನೆ ತುಂಬಿದ್ದ ವಾಸನೆ ಹೋಗಲೆಂದು ಮುಂದಿನ ಬಾಗಿಲು ತೆರೆದು ಬಿದಿರ ತೊಟ್ಟಿಲನ್ನು ಹಗ್ಗದಿಂದ ಬಿಡಿಸಿ ಎತ್ತಿಕೊಂಡು ಹೊರಕ್ಕೆ ಹೋದಳು. + +“ಅಯ್ಯೋ… ನಿನ್ನೇನು ಇದುರವ್ ಇಸ್ಸೀ ಬಟ್ಟೆ ತೊಳುದಿಲ್ಲ. ಇವಾಗಿದುರಡಿಗೆ ಏನ್ ಆಕದು?” ಅಂತ ಯೋಚಿಸುತ್ತ ಒಳಗೆ ಹೋಗಿ ಒಂದು ಗಂಟು ಬಿಚ್ಚಿ ಹಳೆ ಸೀರೆ ತಂದು ಗಲೀಜಾಗಿರೋ ಬಟ್ಟೆಗಳನ್ನೆಲ್ಲ ತೆಗೆದು ಆ ಸೀರೆಯನ್ನು ಮಡಿಸಿ ಹಾಕಿ ಕೂಸಿನ ಮುಕಳಿ ತೊಳೆದು ಕಾಲಿಗೆಲ್ಲ ನೀರಾಕಿ ಒರೆಸಿ ಹಾಸಿದ್ದ ಚಾಪೆಯ ಮೇಲೆ ಬಿಟ್ಟು ಮಗುವಿನ ಕಕ್ಕದ ಬಟ್ಟೆ ತೊಳೆಯಲು ಹಿಂದಕ್ಕೆ ಹೋದಳು. + +ಹಿಂದೆ ಸಾವಿಯ ಗಂಡ ಸುಬ್ಬುನ ಅಣ್ಣಂದಿರು ಹನುಮಂತ ಹಾಗು ಗಣೇಶನ ಹೆಂಡತಿಯರು ಸಹ ಪಾತ್ರ‍್ರೆ ತೊಳೆಯುತ್ತಿದ್ದರು ಅವರಿಬ್ಬರು ಕಾಸ ಅಕ್ಕಾ ತಂಗಿಯರು. ಸಾವಿತ್ರಿ ಹೋದ ತಕ್ಷಣ ಗೊತ್ತಿದ್ದರೂ “ಏನೇ ಸಾವಿ ನಿನ್ ಗಂಡ ಸೂಳೆಮನೆಯಿಂದ ಇನ್ನು ಬರ್ಲಿಲ್ವೇನೇ? ಒಬ್ಳೆ ಇಲ್ಲೇನ್ ಮಾಡ್ತಿಯಾ ತವರಿಗಾದ್ರು ಹೋಗ್ಬಾರ್ದಾ?, ಆ ಸಣ್ಣ ಕೂಸುಗಳನ್ನು ಒಬ್ಳೆ ಹೆಂಗ್ ಸಾಕ್ತಿಯ?” ಎಂದೆಲ್ಲ ಪ್ರಶ್ನೆಗಳ ಬಾಣಗಳನ್ನು ಬಿಟ್ಟರು. ಮೊದಲೆ ಇವಳ ಮನಸ್ಸಿನಲ್ಲಾದ ಗಾಯಗಳಿಗೆ ಅವು ನಾಟಿ ಇನ್ನೂ ನೋವಾಯಿತು. ಆದರೆ ಸಾವಿ ಅದನ್ನು ಹೊರ ಹಾಕದೆ ಮೌನಿಯಾಗಿ ಕೂಸಿನ ಹೊಲಸು ಬಟ್ಟೆಯನ್ನು “ಉಸ್‌ ಉಸ್” ಎಂದು ತಿಕ್ಕಿ ತೊಳೆಯುತ್ತಿದ್ದಾಳೆ. + +“ಥೂ..ತೂ, ಹೇ ಸಾವಿ ಮಗಿನ ಉಚ್ಚೆನೆಲ್ಲ ಸಿಡಿಯ ಹಂಗೆ ಶೆಳಿತಿಯಲ್ಲ ನಿಧಾನುಕ್ಕೆ ತೊಳಿಯೇ” ಎಂದಳು ಕಿರಿ ಮಾಮ ಗಣೇಶನ ಹೆಂಡತಿ. ಅಷ್ಟರಲ್ಲೇ ಕನಕ ಎದ್ದು ತಂಗಿಯ ಕೈ ಹಿಡಿದು ಮೆಲ್ಲಗೆ ನೆಡೆಸಿಕೊಂಡು ಬಂದು ಅಮ್ಮನ ಪಕ್ಕ ಕುಂತು ಕಣ್ಣು ತಿಕ್ಕಿಕೊಳ್ಳುತಿದ್ದಳು. ಅವನ್ನು ನೋಡಿದ ಸಾವಿಗೆ ಅಯ್ಯೋ ಕಾಫಿ ಕಾಸಕ್ಕೆ ಹಾಲಿಲ್ಲ, ರಾಗಿ ಗಂಜಿ ಕಾಸನ ಅಂದ್ರೆ ಕಟ್ಗೆನೂ ಇಲ್ಲ ಅಂತ ಆ ಹೇಲಿನ ಅರಿವೆಗಳನ್ನ ಬೇಲಿಯ ಮೇಲೆ ಹಾಕಿ ತೋಟದೊಳಕೆ ಓಡಿ ಒಂದೈದು ನಿಮಿಷದಲ್ಲಿ ಒಂದು ತೆಂಗಿನ ಮಟ್ಟೆಯನ್ನು ಎಳೆದು ತಂದು ಕನಕಳಿಗೆ ಮಚ್ಚು ತರಲು ಹೇಳಿ ಹಿತ್ತಲ ಬಾಗಿಲಲ್ಲಿ ಕುಳಿತು ಕಾಲಿನ ಬಳಿಯಿದ್ದ ಇರುವೆ ಗೂಡನ್ನು ನೋಡುತ್ತಾ ಏನನ್ನೋ ಯೋಚಿಸುತ್ತಿದ್ದಳು. ಕನಕ ಬಂದು ಭಾರದ ಮಚ್ಚನ್ನು ಎರಡು ಕೈಲಿ ಹಿಡಿದು “ಅಮ್ಮ ಹಿಡಿ…” ಎಂದಾಗ ಎಚ್ಚೆತ್ತು ಗರಿಯನ್ನೆಲ್ಲ ಬಿಡಿಸಿ ಮಟ್ಟೆಯ ಕಡಿದು ಒಲೆಯ ಪಕ್ಕ ಹಾಕಿ ನೆಗ್ಗಿದ್ದ ಸಿಲ್ವರ್ ಪಾತ್ರೆಯಲ್ಲಿ ನೀರು ಬೆಲ್ಲ ಒಂದು ಚಿಟಿಗೆ ಉಪ್ಪು ಹಾಕಿ ರಾಗಿ ಹಿಟ್ಟು ಕಲಸಿ ಒಲೆ ಹೊತ್ತಿಸಿದಳು. ತೆಂಗಿನ ಮಟ್ಟೆ ಇನ್ನು ಹಸಿಹಸಿಯಿದ್ದರಿಂದ ಬೆಂಕಿ ಬೇಗ ಕಚ್ಚಿಕೊಳ್ಳದೆ ಹೊಗೆ ದಟ್ಟವಾಯ್ತು ಬದಿಯಲ್ಲಿದ್ದ ಸೀಮೆ ಎಣ್ಣೆ ಸ್ವಲ್ಪ ಹಾಕಿದಾಗ “ದಗ್” ಎಂದು ಹೊತ್ತಿ ಗಂಜಿ ಕುದಿಯಲು ಶುರುವಾಯ್ತ್ತು. ಗಂಜಿ ಕುದ್ದು ಮೇಲೆ ಬರುತ್ತಿದ್ದರು ಸಾವಿಗೆ ಗಮನವಿಲ್ಲದೆ ಒಲೆಯನ್ನೇ ನೋಡುತ್ತಿದ್ದಳು. ಗಂಜಿ ಉಕ್ಕಿ ಒಲೆಯ ಮೇಲೆ “ಚುಸ್ ಚುಸ್” ಎಂದು ಬಿದ್ದಾಗ, ಬರಿಗೈಲಿ ಪಾತ್ರೆ ಇಳಿಸ ಹೋಗಿ ಕೈ ಸುಟ್ಟುಕೊಂಡ ನಂತರ ಮಸಿ ಬಟ್ಟೆಯಿಂದ ಪಾತ್ರೆ ಇಳಿಸಿ ಗಂಜಿ ತಣ್ಣಗಾಗಲೆಂದು ತಟ್ಟೆಗೆ ಹಾಕಿ ಆರಿಸಿ ಲೋಟಕ್ಕೆ ಸರೇ ಹೊಯ್ದು, ಒಂದು ಚಮಚ ಇಟ್ಟು, ಕನಕಳಿಗೆ ಕೊಡುತ್ತ ತಂಗಿಗೂ ತಿನಿಸೆಂದು ಬಾಗಿಲು ಬಳಿಯಲು ಹೋದಳು. + +ಒಂದಿಬ್ಬರು ಕ್ಯಾನ್ ಹಾಗು ಚೀಲ ಹಿಡಿದು ಹೋಗುತ್ತಿದ್ದುದನ್ನು ಕಂಡು ‘ಹೋ ರೇಷನ್ ಕೊಡುತ್ತಿರಬೇಕು’ ಎಂದು ತಿಳಿದು ಹತ್ತಿರ ಹೋಗಿ ದೃಢಪಡಿಸಿಕೊಂಡು ತಾನೂ ಚೀಲ, ಕ್ಯಾನ್ ಹಿಡಿದು ಕಾರ್ಡ್ ಹುಡುಕಿ ಸಣ್ಣ ಕೈ ಚೀಲಕ್ಕೆ ಹಾಕಿಕೊಂಡು “ಹೇ ಕನಕ ತಂಗಿ ಹುಷಾರು” ಎಂದು ಹೇಳಿ ಹೊರಟಳು. + +ನ್ಯಾಯ ಬೆಲೆ ಅಂಗಡಿ ಮುಂದೆ ಜನ ಸಾಗರ. ನೂಕು ನುಗ್ಗಲು, ಇವಳು ಹೋಗಿ ನಿಂತಳು. ಇನ್ನು ಅಂಗಡಿ ತೆಗೆದಿರಲಿಲ್ಲ. ಎಲ್ಲರು ತಮ್ಮ ಚೀಲ ಕ್ಯಾನುಗಳನ್ನು ತಮ್ಮ ಪರವಾಗಿ ಸರದಿ ಸಾಲಿನಲ್ಲಿಟ್ಟು ಹತ್ತಿರದ ನೆರಳಿನಲ್ಲೇ ಕುಳಿತಿದ್ದರು. ಸಾವಿತ್ರಿ ಯಾರೋ ಇಬ್ಬರು ಮಾತನಾಡುತ್ತಿರುವುದನ್ನು ಕೇಳಿಸಿಕೊಳ್ಳುತ್ತಿದ್ದಳು:“ಯಾರೋ ನಮ್ಮನಿಗೆ ಮಾಡಿಸಿಬಿಟ್ಟಾರೆ, ನಮ್ಮನೆ ನೆಮ್ಮದಿನೇ ನುಚ್ಚು ನೂರಾಗೈತಿ” ಅಂತ ಒಂದು ಧ್ವನಿ ಹೇಳಿ ಮುಗಿಸುತ್ತಲು ಇನ್ನೊಂದು “ಅಯ್ಯೋ ಅದಿಕ್ಯಾಕೆ ಚಿಂತೆ ಮಾಡ್ತಿಯಾ ಆ ಸರ್ಕಾರಿ ದನಿನ್ ದವಾಖಾನಿ ಐತಲಾ ಅದುರ್ ಪಕ್ಕದಾಗೆ ಒಂದ್ ಕಾಲ್ದಾರಿ ಐತಿ ನೋಡು, ಅದುರಗುಂಟೆ ಸ್ವಲ್ಪ ಮುಂದೋದ್ರೆ ಅಲ್ಲೊಬ್ಬ ಮಂತ್ರವಾದಿ ಅದನೆ ಅವ್ನು ಎಲ್ಲ ಮಂತ್ರನ ನಿವಾಳಿಸಿ ಬಿಸಾಡ್ತಾನೆ” ಎಂದಿತು. ಅದಕ್ಕೆ ಪ್ರತ್ಯುತ್ತರವಾಗಿ “ಹು ನಾನು ಆ ಮಂತ್ರವಾದಿ ಬಗ್ಗೆ ಕೇಳಿದಿನಿ ಅವ್ನ ಹತ್ರ ಹಾಕಿಸಿದ್ ಮಂತ್ರ ತಪ್ದೆ ನೆಡಿತಾವಂತೆ” ಎಂದಿತು. + +ಸಮಾಧಾನದಿಂದ ಕುಳಿತಿದ್ದ ಜನ ಒಂದೇ ಕ್ಷಣದಲ್ಲಿ ದಾಯಾದಿಗಳಂತೆ ನಾಮುಂದೆ ತಾಮುಂದೆ ಎಂದು ತೆರೆದ ನ್ಯಾಯ ಬೆಲೆ ಅಂಗಡಿ ಮುಂದೆ ಕುರಿಗಳಂತೆ ನುಗ್ಗುತ್ತಿದ್ದರು. “ನೀವಿಂಗೆಲ್ಲ ಮಾಡಿದ್ರೆ ನಾನ್ ಯಾ ನನ್ ಮಗ್ನಿಗೂ ಸಾಮಾನ್ ಕೊಡೋದಿಲ್ಲ” ಎಂದು ಅಧಿಕಾರದ ದನಿಯಲ್ಲಿ ಅಂಗಡಿಯವ ನುಡಿದಿದ್ದಕ್ಕೆ ಮತ್ತೆ ಎಲ್ಲರು ಸಾಲಾಗಿ ನಿಂತರು. + +ಸಾವಿ ಅಕ್ಕಿ ಬೇಳೆ ಗೋಧಿಯನ್ನು ತಲೆ ಮೇಲೆ ಹೊತ್ತುಕೊಂಡು ಕೈನಲ್ಲಿ ಸೀಮೆ ಎಣ್ಣೆ ಕ್ಯಾನ್ ಹಿಡಿದು ಇರುವ ಎಲ್ಲ ಶಕ್ತಿ ಬಳಸಿ ಹೆಜ್ಜೆ ಹಾಕುತ್ತ ಮನೆ ತಲುಪಿದಳು. ಪೂರ ದಣಿದಿದ್ದ ಜೀವಕ್ಕೆ ತಲೆ ಮೇಲಿನ ಭಾರ ಇಳಿಸಿದ ತಕ್ಷಣ ಒಂದು ಖುಷಿ ಆವರಿಸಿತು. ಮನದಲ್ಲೆ ನ್ಯಾಯ ಬೆಲೆ ಅಂಗಡಿಯ ಬಳಿ ಆ ದನಿಗಳು ಮಾತಾಡಿಕೊಂಡ ಜಾಗಕ್ಕೆ ಹೋಗಿ ನನ್ನ ಗಂಡ ನನಗೆ ಸಿಗುವಂತೆ ಮಂತ್ರ ಹಾಕಿಸಲೆಬೇಕೆಂದು ನಿಶ್ಚಿಯಿಸಿದಳು. ಕೈಲಿದ್ದ ದುಡ್ಡೆಲ್ಲ ಖಾಲಿ ಆಗಿದೆ. ಮನೆಯಲ್ಲಿ ದುಡಿದು ಹಾಕಬೇಕಾದ ಜವಾಬ್ದಾರಿ ಹೊತ್ತ ಗಂಡ ಸೂಳೆ ಸೆರಗ ಹಿಡಿದಿದ್ದಾನೆ. ಇವತ್ತೊಂದು ದಿನ ಈರುಳ್ಳಿ ಕೊಯ್ಯಲು ಹೋಗಬೇಕು ಎಂದು ಮನದಲ್ಲೇ ಅಂದುಕೊಂಡು, ರೇಷನ್ ಚೀಲ ಮನೆ ಒಳಕ್ಕೆ ಒಯ್ದು ಗಡಿಯಾರ ನೋಡಿದರೆ ಆಗಲೇ ಹನ್ನೊಂದು ಗಂಟೆ ದಾಟಿತ್ತು. ಇನ್ನೇನು ಕೂಲಿ ಹೋಗೋದು ಎಂದು ಅಸೆ ಕೈ ಬಿಟ್ಟಳು. + +ಮಕ್ಕಳೆರಡು ಹಿಂದೆ ಹುಲಿಯನೊಂದಿಗೆ ಆಡುತ್ತಿವೆ. ಅಯ್ಯೋ ಆಗಲೆ ಮಧ್ಯಾಹ್ನ. ಬೆಳಗ್ಗೆಯಿಂದ ತಾನು ಹೊಟ್ಟೆಗೇನು ತಿಂದಿಲ್ಲ ಎಂದು ನೆನಪಿಗೆ ಬಂದು ಅನ್ನಕಿಟ್ಟಳು. ಇವತ್ತು ಮಂತ್ರವಾದಿಯ ಬಳಿಗೆ ಹೋಗಲೆ ಬೇಕೆಂದು ನಿಶ್ಚಯಿಸಿದಳು. + + + +ಅನ್ನ ಬೆಂದ ಮೇಲೆ ಹೊಲೆಯಿಂದ ಇಳಿಸಿ ನಿನ್ನೆಯ ತಂಗಳು ಸಾರಿನಲ್ಲಿ ಅನ್ನ ಮೆದ್ದಿ ತನ್ನೆರಡು ಕೂಸುಗಳಿಗೂ ತಿನಿಸಿ ತಾನು ಉಂಡು ಗಂಡನ ಈ ಕೆಟ್ಟ ಚಪಲವನ್ನು ಹೇಗೆ ಬಿಡಿಸಬೇಕೆಂದು ಯೋಚಿಸುತ್ತ ಕರಿ ಕಡಪದ ಕಲ್ಲಿನ ಮೇಲೆ ತೆಲೆದಿಂಬು ಹಾಕಿ ಹಾಗೆ ಉಶ್ ಎಂದು ಉರುಳಿಕೊಂಡಳು. ಮಕ್ಕಳಿಗೆ ಸ್ನಾನ ಮಾಡಿಸದೆ ಎರಡು ದಿನವಾಯ್ತು, ತಾನು ಮಿಂದು ಮೂರು ದಿನ ಆಗಿರುವುದನ್ನು ಮರೆತು ಗಂಡನ ಚಿಂತೆಯಲ್ಲೆ ಕೊರಗುತ್ತ ನಿದ್ರಾಸಾಗರದಲ್ಲಿ ಮೆಲ್ಲಗೆ ಮುಳುಗಿದಳು ಸಾವಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_129.txt b/Kenda Sampige/article_129.txt new file mode 100644 index 0000000000000000000000000000000000000000..0c3ce05d9a985c74e07f18fd450440f92ec3463d --- /dev/null +++ b/Kenda Sampige/article_129.txt @@ -0,0 +1,105 @@ +ಮಹಾಮನೆಯಲ್ಲಿ ದಾಸೋಹದ ಅಡಿಗೆಯ ಹದ ನೋಡುವ ಹೊಣೆ ಕಾಳವ್ವೆಯದು. ಅವಳೋ ನಿಜ ಕಾಯಕಿ. ಅಡುಗೆಯಾಗುವ ಪ್ರತಿ ಪದಾರ್ಥವನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವಳು. ಅನ್ನದಗುಳು ಹಿಸುಕುವಳು. ಸುಟ್ಟ ರೊಟ್ಟಿಯ ದಪ್ಪ ನೋಡುವಳು. ಬೇಳೆ ತೊಗೆಯ ಪರಿಮಳ ಹೇಗಿದೆಯೆಂದು ಕೇಳುವಳು. ಕಾರ ಮಸಾಲೆಯ ಹದ, ಪಲ್ಲೆಗೆ ಬೆಂದ ತರಕಾರಿಗಳ ಗುಣ ಎಲ್ಲವನ್ನೂ ನೋಡಿ, ನೋಡಿ ಚೆನ್ನಾಗಿಲ್ಲವೆನಿಸುವುದನ್ನು ಬಿಟ್ಟುಬಿಡಲು ಸೂಚಿಸುವಳು. ಹುಳಿತ, ಕೊಳೆತ ಹಣ್ಣು, ತರಕಾರಿಗಳನ್ನು ತಿಪ್ಪೆಗೆ ಹಾಕಿಸುವಳು. ಮೊದಲ ಬಾರಿ ಬೆಂದ ಅನ್ನವನ್ನು ಮೊದಲ ಪಂಕ್ತಿಗೇ ಬಡಿಸುವಂತೆ ಹೇಳುವಳು. ಅಡುಗೆ ಮಾಡುವ ತನಕ ಒಲೆಯೆದುರು ಅಡುಗೆಯವರೊಡನೆ, ಅನ್ನಬೇಳೆಯೊಡನೆ, ತಾನೂ ಬೆಂದು, ಉಣಬಡಿಸುವಾಗ ಪ್ರತಿ ಪಂಕ್ತಿಯಲ್ಲೂ ಸುತ್ತಾಡುವಳು. ಯಾರೂ ಎಲೆಯಲ್ಲಿ ಒಂದಗುಳನ್ನೂ ವ್ಯರ್ಥ ಮಾಡಬಾರದು. ಅರ್ಧಹೊಟ್ಟೆಯಲ್ಲೆದ್ದು ಹೋಗುವಂತೆಯೂ ಆಗಬಾರದು. `ಬೇಕಿದ್ದು ಕೇಳರಿ. ನಿಧಾನ ಪ್ರಸಾದ ತಗೋರಿ, ನೀಡಿದ್ನ ಎಲಿಯಾಗ ಚಲ್ಲಬ್ಯಾಡರಿ’ ಮೊದಲಾಗಿ ಪ್ರತಿನಿತ್ಯ ಅವಳು ಕೊಡುವ ಸೂಚನೆಗಳು ಕೇಳುವ ಎಲ್ಲರಿಗೂ ಬಾಯಿಪಾಠವಾಗಿದ್ದವು. + +ಕಾಳವ್ವೆಯು ತಾನೇ ಖುದ್ದಾಗಿ ನಿಂತು ಕಾರ ಕುಟ್ಟುವಳು. ಬೆಳಿಗ್ಗೆ ಮೊದಲ ತಪ್ಪಲೆ ಅನ್ನ ಬೇಯುವುದರಲ್ಲಿ, ಬೇಳೆ ಬೆಂದು ತರಕಾರಿ ಹೆಚ್ಚುವುದರಲ್ಲಿ ಕಾಳವ್ವನ ತಂಡದ ಕಾರ ಕುಟ್ಟಿ, ಅರೆದು ಮುಗಿಯುತ್ತದೆ. ಕಾಳವ್ವೆ ಇಲ್ಲ ಎಂದರೆ ಒಂದು ದಿನ ಮಹಾಮನೆ ಮೌನದಲ್ಲಿ ಸೊರಗುತ್ತದೆ. ಕಾಳವ್ವೆ ಇಲ್ಲದ ದಿನ ಮೇಲೋಗರ ಸಪ್ಪಗೆಟ್ಟಿರುತ್ತದೆ. ಉಳಿದವರು ಸಪ್ಪೆ ತಿನ್ನಿ, ಉಪ್ಪು ಬಿಡಿ ಎಂಬಿತ್ಯಾದಿ ವ್ರತನೇಮಗಳ ಬಗೆಗೆ ಮಾತನಾಡಿದರೆ ಕಾಳವ್ವೆ ಅದಕ್ಕೆ ವಿರುದ್ಧ. ಹೊಟ್ಟೆಯೊಳಗಿನ ಶಿವನನ್ನು ತೃಪ್ತಿಪಡಿಸದೇ ಭಕ್ತಿ ಮಾಡುವುದು ಹೇಗೆ? ಕಾಯಕ, ಸಂಸಾರ ನಡೆಸುವುದು ಹೇಗೆ ಎಂದು ಪ್ರಶ್ನಿಸುವಳು. ಸಪ್ಪೆ ಊಟ, ಉಪ್ಪು ಹಾಳು ಎಂದು ಸದಾ ಊಟದ ವ್ರತದ ಬಗೆಗೆ ಹೇಳುತ್ತಿದ್ದ ಶರಣೆ ಅಕ್ಕಮ್ಮನೊಡನೆ ಒಂದು ದಿನ ಇದೇ ಸಲುವಾಗಿ ಬಿರುಸು ವಾದವೇ ನಡೆದಿತ್ತು. `ಬಾಯಿ ಕಟ್ಟಾಕ ನಾವ್ಯೇನು ಸನ್ಯಾಸಿಗುಳಾ’ ಎನ್ನುವಳು ಕಾಳವ್ವೆ. ಅತಿಯಾಗಿ ತಿನ್ನಬಾರದು, ದನ ಹುಲ್ಲು ಮೇಯುವಂತೆ ಯಾವಾಗಲೂ ಬಾಯಾಡಿಸುತ್ತ ಇರಬಾರದು. ಆದರೆ ತಿನ್ನುವುದನ್ನು ಅಚ್ಚುಕಟ್ಟಾಗಿ, ಶ್ರದ್ಧೆಯಿಂದ ಮಾಡಿ, ಉಣಿಸಿ, ಉಣ್ಣಬೇಕು ಎನ್ನುವುದು ಅವಳ ನಿಲುವು. + +(ಡಾ. ಎಚ್.ಎಸ್. ಅನುಪಮಾ) + +ಅವಳು ತಾ ಕುಟ್ಟುವ ಕಾರದಂತೆಯೇ ಸ್ವಲ್ಪ ಕಟು ಮಾತಿನ ಅವ್ವೆ. ಶರಣರಲ್ಲಿ ಅಂಬಿಗರಣ್ಣ ಚೌಡಯ್ಯ, ಶರಣೆಯರಲ್ಲಿ ಕಾಳವ್ವಕ್ಕ ಎಂದು ಎಲ್ಲರೂ ನಗೆಯಾಡಿ ಅವರನ್ನು ಹುರಿದುಂಬಿಸುವರು. ದುರುದ್ದೇಶದಿಂದ ಚುಚ್ಚಬೇಕೆಂದೇ ಮಾತನಾಡುವವರಿಗೆ ಕಾರ ಕುಟ್ಟಿದ ಒನಕೆಯಿಂದ ಬೀಸಿ ಹೊಡೆದರೆ ಎಷ್ಟು ನೋವು, ಉರಿಯಾಗುವುದೋ ಅವಳ ಮಾತಿನಿಂದ ಅಷ್ಟೇ ಉರಿಯಾಗುವುದು. ಒಮ್ಮೆ ಅವಳ ಕಿವಿಗೆ ಬಸವಣ್ಣನಿಗೆ ಯಾರೋ ಏನೋ ಅಂದರೆಂಬ ಸುದ್ದಿ ಬಿದ್ದಿತು. ಬಸವಣ್ಣ ತೋರಿಕೆಗಾಗಿ ದಾಸೋಹ ಮಾಡುತ್ತಾನೆ. ತಾನೇ ರಾಜನಾಗುವ ಇಚ್ಛೆಯಿಂದ ಶರಣರನ್ನು ಗುಡ್ಡೆ ಹಾಕಿಕೊಳ್ಳುತ್ತಿದ್ದಾನೆ; ಬಿಜ್ಜಳನ ವೈರಿಗಳೆಲ್ಲ ಮಹಾಮನೆಯಲ್ಲಿ ಒಟ್ಟುಗೂಡುತ್ತಿದ್ದಾರೆ ಮುಂತಾಗಿ. ಶರಣರನ್ನು ರಾಜನ ಕಡೆಯ ಗೂಢಚಾರರು ನಾನಾರೀತಿಗಳಲ್ಲಿ ಪರೀಕ್ಷಿಸುವ ಕೆಲಸ ನಡೆಯುತ್ತಿದೆ ಎಂದೂ ತಿಳಿಯಿತು. ಕಾಳವ್ವಕ್ಕ ಎಷ್ಟು ಕೋಪಗೊಂಡಳೆಂದರೆ ಮಹಾಮನೆಯ ಕೆಲಸದ ನಡುವೆ ಅನುಭವ ಮಂಟಪಕ್ಕೆ ಸೆರಗಿಗೆ ಕೈಯೊರೆಸಿಕೊಳ್ಳುತ್ತ ಹೋಗಿ ಒಂದು ಗಂಟೆ ಕೂತಳು. + +`ಊರು ಉಪಕಾರ ಅರೀದು, ಹೆಣಾ ಶೃಂಗಾರ ಅರೀದು. ಭಾಗ್ಯವುಳ್ಳ ಪುರುಷಂಗೆ ಕಾಮಧೇನು ಕಾಮಿಸಿದುದನೀವುದಯ್ಯಾ./ನಿರ್ಭಾಗ್ಯ ಪುರುಂಷಗೆ ಕಾಮಧೇನು ತುಡುಗುಣಿಯಾಗಿ ತೋರುವುದಯ್ಯಾ./ಸತ್ಯಪುರುಷಂಗೆ ಕಲ್ಪವೃಕ್ಷ ಕಲ್ಪಿಸಿದುದನೀವುದಯ್ಯಾ./ಅಸತ್ಯಪುರುಷಂಗೆ ಕಲ್ಪವೃಕ್ಷ ಬೊಬ್ಬುಳಿಯಾಗಿ ತೋರುವುದಯ್ಯಾ./ಧರ್ಮಪುರುಷಂಗೆ ಚಿಂತಾಮಣಿ ಚಿಂತಿಸಿದುದನೀವುದಯ್ಯಾ./ಅಧರ್ಮಪುರುಷಂಗೆ ಚಿಂತಾಮಣಿ ಗಾಜಿನಮಣಿಯಾಗಿ ತೋರುವುದಯ್ಯಾ./ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ ಜಂಗಮಲಿಂಗವಾಗಿ ತೋರುವುದಯ್ಯಾ./ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ ಮಾನವನಾಗಿ ತೋರುವುದಯ್ಯಾ./ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ’ + +ಎಂದು ಬಸವಣ್ಣನನ್ನು ಕೊಂಡಾಡಿ ಪದ ಕಟ್ಟಿ ಹೇಳಿದಳು. ಅಸೂಯೆಯಿಂದ ಕುರುಡರಾದವರಿಗೆ ದೀಪ ಬೇಡವಾದರೆ ಊರಿಗೆಲ್ಲ ಬೇಡವೇ? ಅನ್ಯಾಯವಾಗಿ ಬಸವ ಮೂದಲಿಕೆ ನಡೆದರೆ ಸುಮ್ಮನಿರಲಾರೆವೆಂದು ಗುಡುಗಿ ಹೋದಳು. ಕಾಳವ್ವನೆಂಬ ಕಾರದ ಜೊತೆ ರೆಮ್ಮವ್ವಕ್ಕನ ನೂಲೂ ಸೇರಿದರೆ ಮುಗಿಯಿತು, ಮತ್ಯಾರೂ ಸುಲಭಕ್ಕೆ ಬಾಯಿ ತೆಗೆಯಲಾರರು. + +ಕದಿರೆ ರೆಮ್ಮವ್ವೆ ಹೆಂಗಸರ ಪರವಿರುವವಳು ಎಂದು ಪ್ರಸಿದ್ಧಳು. ಅವಳ ಮಾತುಗಳು ಕೈಯೆತ್ತುವ, ದನಿಯೆತ್ತುವ ಪುರುಷರನ್ನು ಚಾಟಿಯಿಂದ ಬಾರಿಸಿ ಸುಮ್ಮನೆ ಕೂರಿಸುವುದಿದೆ. ಆ ದಿನ ಕಾಳವ್ವೆ ಕಾರ ಕುಟ್ಟುತ್ತ ಬುಸುಬುಸು ಉಸುರು ಬಿಡುತ್ತಿದ್ದಳು. ದಪ್ಪ ಕಬ್ಬಿಣದ ಹಾರೆಯನ್ನು ಎರಡೂ ಕೈಯಿಂದ ಎತ್ತಿ ಹಾಕುತ್ತ, ಹಾರುವ ಕಾರ ಮೂಗು, ಬಾಯಿಗಡರದಿರಲೆಂದು ಸೆರಗು ಕಟ್ಟಿಕೊಂಡು ಒಂದೇಸಮ ಏಟು ಹಾಕುತ್ತಿದ್ದಳು. `ಏ, ಇವತ್ ಜಗ್ಗಿ ಕಾರ ಐತಿ ಕುಟ್ಟಾಕ. ಈಸೊಂದು ನಿನಗ ಕುಟ್ಟಾಕಾಗಂಗಿಲ್ಲ ತಗಿ’ ಅಂದ ಅಲ್ಲೇ ಹೋಗುತ್ತಿದ್ದ ಹಂಪಣ್ಣ. + +`ಯಾಕಣಾ, ನಿಂ ಮನೆ ಒಳಗೆ ಕುಟ್ಟೂ ಕೆಲ್ಸಾನೆಲ್ಲಾ ನೀನ ಮಾಡತೀಯ? ಹೋಗ್ ಹೋಗ್, ನಿನ ಕಂಡನಿ’ ರೆಮ್ಮವ್ವೆ ಹಂಗಿಸಿದಳು. + +`ಅಕ್ಕೋ, ನೀವು ಕುಟ್ಟತೀರೋ, ಬೀಸತೀರೋ, ನಾದತೀರೊ. ಏಸರೆ ಗುದ್ಯಾಡ್ರಿ, ಏನರೆ ಹೇಳರಿ. ನಿಮಗಿಂತ ಗಣಸು ಮಕ್ಳ ಒಂದು ತೊಲಿ ಹೆಚ್ಚು. ಒಳ್ಳಿಗಿಂತ ಒನಕಿನ ಹೆಚ್ಚ. ಏಳಬೆ, ನಿಂಗಾಗಂಗಿಲ್ಲ, ನಾ ಕುಟ್ಟತೇನಿ’ ಅಂದ ಹಂಪಣ್ಣ. + +`ಆಂ, ಯಾನಂದೆ ಹಂಪ? ನಮಗ ಆಗಂಗಿಲ್ಲಂದ? ಎತ್ತು ಹೌದು, ಕೋಡು ಅಲ್ಲ ಅಂತೀಯ? ಬಾಯಿಲ್ಲೆ’ ಎಂದು ಕಾಳವ್ವೆ ಸೀರೆ ಮೇಲೆತ್ತಿ ಕಟ್ಟಿ, ಹಾರೆ ಹಿಡಿದು ಸಾಕ್ಷಾತ್ ಕಾಳಿಯಂತೆಯೇ ನಿಂತುಬಿಟ್ಟಳು. ಹಂಪಣ್ಣ ತಪ್ಪಾಯಿತೆಂದು ಕೈಮುಗಿವ ನಾಟಕ ಮಾಡಿದ. ಕೊನೆಗೆ ಹಾರೆ ಬಿಟ್ಟು ಒನಕೆ ತೆಗೆದುಕೊಂಡು ಇಬ್ಬರೂ ಕುಟ್ಟಿ ಮುಗಿಸಿದರು. ಒಬ್ಬರಾದ ಮೇಲೊಬ್ಬರು ಉಸ್‌ಉಸ್ ಎನ್ನುತ್ತ ಲಯಬದ್ಧವಾಗಿ ಕಾರ ಕುಟ್ಟುತ್ತಿರಲು, ಮಹಾದೇವಿಯಕ್ಕ ಬಂದಳು. ಅಂದು ಬೆಳಿಗ್ಗೆ ಮುಂಚೆಯಿಂದಲೇ ಅವಳಿಗೆ ಪುರುಸೊತ್ತು ಇಲ್ಲ. ನಸುಕಿನಲ್ಲೇ ಕಾಳವ್ವನ ಹಟ್ಟಿಯಿಂದ ಬಟ್ಟೆ ಒಯ್ದು ಮಡಿ ಮಾಡಿ ತಂದಿದ್ದಳು. ಹಂಪಣ್ಣನ ಚಪ್ಪಲು ಹರಿದು ಹೋಗಿದ್ದುದನ್ನು ಸಮಗಾರಣ್ಣನ ಬಳಿ ಹೊಲಿಸಿ ತಂದಿದ್ದಳು. ಅನ್ನ ಬಾಗುವ ಬಿದಿರ ತಟ್ಟು ಮುರಿದು ಹೋಗಿತ್ತಾಗಿ ಮ್ಯಾದಾರ ಹಟ್ಟಿಯಿಂದ ಕೇಳಿ ಹೊಸದನ್ನು ತಂದಿದ್ದಳು. ರೊಟ್ಟಿ ಬಡಿಯುವವರಿಗೆ ಒಲೆಗೆ ನೂಕಲು ಮೋಳಿಗಣ್ಣ ತಂದು ಹಾಕಿದ ಕಟ್ಟಿಗೆ ಹೊರೆಯಿಂದ ಸಣ್ಣಸಣ್ಣ ತುಂಡು ಎತ್ತಿ ಆರಿಸಿ ಅವರ ಬುಡಕ್ಕಿಟ್ಟು ಬಂದಿದ್ದಳು. ಮಹಾಮನೆಯ ಬಾಗಿಲಿಗಿದ್ದ ಗಬ್ಬಿದೇವಣ್ಣನ ಮಗುವಿಗೆ ಆರಾಮವಿಲ್ಲವೆಂದು ತಿಳಿದು ವೈದ್ಯ ರಾಮಯ್ಯನ ಬಳಿ ಕಷಾಯ ಪಡೆದು ಮಗುವಿಗೆ ಕೊಟ್ಟು ಬಂದಿದ್ದಳು. ಈಗ ಸರಸರ ತರಕಾರಿ ಹೆಚ್ಚುತ್ತಿದ್ದ ರೆಮ್ಮವ್ವೆಯ ಕೆಲಸಕ್ಕೆ ಸೇರಿಕೊಂಡಳು. + +`ಹಂಪಣ್ಣಾ, ನೀ ಯಾವಾಗೂ ಹೀಂಗ ನೋಡು. ಹೆಂಗಸರಂದ್ರ ಕೈಲಾಗದರು ಅನಕೊಂಡಿರಿ. ಒಳ್ಳುಕಲ್ಲು ಮಿಗಿಲೋ ಒನಕೆ ಮಿಗಿಲೋ ಅಂತ ಕೇಳಿದ್ರೆ ಏನು ಹೇಳದ ಯಣ್ಣ? ಕುಟ್ಟುವ ಕಾರವೇ ಮಿಗಿಲು, ಹಾರುವ ಹೊಟ್ಟು ಮಿಗಿಲು. ಯಾರು ಮಿಗಿಲು ಅಂಬ ಪ್ರಶ್ನೆನೇ ಸರಿ ಅಲ್ಲ. ಎರಡೂ ತತ್ತ್ವ. ಅವೆರೆಡು ಕೂಡಿ ಹುಟ್ಟೋ ರುಚಿ ಇದೆಯಲ್ಲ ಅದೇ ಮಿಗಿಲು. ಒಳ್ಳು ಕಲ್ಲೇ ನೀ ತಳಗದಿ, ನೀನು ಕೀಳು. ನಾ ಮ್ಯಾಲಿಂದ ಕುಟ್ಟತೇನಿ, ನಾ ಒನಕಿ, ನಾನ ಮಿಗಿಲು ಅಂದ್ರ ಏನರ್ಥ? ಹುಚ್ಚರ ಸಂತಿ.’ + +ರೆಮ್ಮವ್ವೆ ಚಟಪಟವೆಂದಳು. + +`ನೀವ್ ಹೆಂಗಸ್ರು ಹೀಂಗ ನೋಡರಿ. ಒಬ್ರಿದ್ರೆ ಹೆದರಿ ಸಾಯದು, ಇಬ್ರಿದ್ರೆ ಜಗಳಾಡಿ ಸಾಯದು’ ಎಂಬ ಹಂಪಣ್ಣನ ಗಾದೆ ಕೇಳಿ ಕಾಳವ್ವಕ್ಕನಿಗೆ ಸಿಟ್ಟು ಬಂತು. `ಗಾದಿ ಹೇಳಾಕ ನಿಂಗೊಬ್ನಿಗೇ ರ‍್ತತಿ ಅಂತ ತಿಳದ್ಯಾ? ಬರೀ ಗಾದಿ ಹೇಳೋ ಬಾಯ್ಗೆ ಬೂದಿ ಬೀಳ್ತಾವ ನೆಪ್ಪಿರ್ಲಿ.’ + +ಈ ಚರ್ಚೆ ಇಲ್ಲಿ ನಡೆದರೆ ಸಾಲದು, ಇದನ್ನೀಗ ನಿಲ್ಲಿಸಬೇಕು ಎಂದು ಅಕ್ಕನಾದ ಮಹಾದೇವಿ ಮಾತು ತೆಗೆದಳು. + +`ಹೆಣ್ಣು ಎಂದರೆ ಕಾಮದ ಬಲೆ, ಸಂಸಾರವೆಂದರೆ ಕಾಮದ ಬಲೆ ಅಂತ ಅಂದ್ಕೊಂಡಿದ್ದೀರಿ. ಅದಕ್ಕೇ ಹೆಚ್ಚುಕಮ್ಮಿ, ಮೇಲೆಕೆಳಗೆ ವಿಚಾರ ಬರತಾವೆ. ಗಂಡಿಗೆ ಹೆಣ್ಣು ಕಾಮದ ಬಲೆ, ಹೆಣ್ಣಿಗೆ ಗಂಡು ಕಾಮದ ಬಲೆ. ಕಾಮವಿಲ್ಲದೆಯೂ ಸಂಸಾರ ಇದೆ. ಇದು ಸೃಷ್ಟಿಯ ನಿಯಮ’ ಎಂದು ಬಿಸಿಯನ್ನು ಕಡಿಮೆ ಮಾಡಿದಳು. ಇದು ಬರಿಯ ಹಂಪಣ್ಣನೊಬ್ಬನ ವಿಚಾರವಲ್ಲ, ಪುರುಷರು ತಾವೇ ಒಂದು ಕೈಮೇಲೆಂಬ ಅಹಮನ್ನು ಒಳಗೇ ಪೋಷಿಸಿಕೊಂಡಿರುತ್ತಾರೆ. ಅದಕ್ಕೇ ಈ ವಿಷಯವನ್ನು ಅನುಭವ ಮಂಟಪದಲ್ಲಿ ಎತ್ತಬೇಕು ಎಂದು ಅಲ್ಲಿದ್ದ ಹೆಣ್ಣುಗಳು ಯೋಜನೆ ಹಾಕಿಕೊಂಡರು. ಅಂದು ರೆಮ್ಮವ್ವೆ, ಕಾಳವ್ವೆ, ಮಹಾದೇವಿಯಕ್ಕ ಮೂವರೂ ಸೇರಿ ಯಾವ ನುಡಿಮಾಲೆಯಿಂದ ಇದನ್ನು ಎತ್ತುವುದು ಎಂದು ಮಾತಾಡಿಕೊಂಡರು. + +ಮರುದಿನ `ಹೆಸರಿಸಲಾಗದ ಎಷ್ಟೆಷ್ಟೋ ಕಾಯಕಗಳಿದಾವೆ. ಹೆಣ್ಣುಕುಲದ ಕಾಯಕನ ಕಾಯಕ ಅಂತ ಯಾರೂ ಹೇಳಲ್ಲ. ಆ ಬಗ್ಗೆ ನುಡಿಮಾಲೆ ಕಟ್ಟರಿ’ ಎಂದು ಕದಿರೆ ರೆಮ್ಮವ್ವೆ ಒಂದು ಮಾತಂದು ಕೂತಳು. ಅದನ್ನೇ ಕಾಯುತ್ತಿದ್ದವಳಂತೆ ಮಹಾದೇವಿ ಎದ್ದಳು.’ + +`ಅಟ್ಟು ಉಣಿಸಿ, ಹೊತ್ತು ಹೆತ್ತು ಮಕ್ಕಳ ಸಂಭಾಳಿಸಿ, ಸಂಸಾರ ನಿಭಾಯಿಸೋ ಕೆಲಸಗಳನ್ನ ಯಾರೂ ಕಾಯಕ ಅನ್ನಲ್ಲ. ಮನೆಗೆಲಸ ಅನ್ನೋದು ಸಂಬಳವೇ ಇಲ್ಲದ ಕೀಳು ಕೆಲಸ ಅನ್ನೋ ಭಾವನೆ ಎಲ್ಲರ ಮನದಲ್ಲಿದೆ. ಸ್ವತಃ ಹೆಣ್ಣುಗಳಿಗೂ ತಾವು ಮಾಡೋ ಕೆಲಸದ ಮೇಲೆ ಗೌರವ ಇಲ್ಲ. ಯಾವ ಹೆಣ್ಣೂ ಮನೆಗೆಲಸಾನ ತನ್ನ ಕಾಯಕ ಅಂತ ಹೆಸರ ಹಿಂದೆ ಸೇರಿಸಿಕೊಳ್ಳಲ್ಲ. ಮನೆಗೆಲಸದ ಮಹಾದೇವಿ, ಮನೆಗೆಲಸದ ಕಾಮಮ್ಮ, ಅಡುಗೆ ಕಾಯಕದ ಬಸಮ್ಮ, ಪಾತ್ರೆ ತೊಳೆಯುವ ಪಂಪಮ್ಮ, ಬಟ್ಟೆ ಒಗೆಯುವ ಬಸಮ್ಮಗಳು ಕಾಣಲ್ಲ. ಆದರೆ ಸಂಸಾರ ನಡೆಸೋರೇ ಹೆಣ್ಣುಗಳು. ಹೆಂಗಸರು ಮಾಡುವುದೆಲ್ಲ ಕಾಯಕವೇ’ ಎಂಬ ದೀರ್ಘ ನುಡಿಮಾಲೆಯನ್ನು ಮಹಾದೇವಿಯಕ್ಕ ಎತ್ತಿದಳು. ಹೆಂಗಸರ ಕಡೆಯಿಂದ ಕರತಾಡನ, ಹರ್ಷೋದ್ಗಾರ. ಕೆಲ ಪುರುಷರೂ ಅದಕ್ಕೆ ದನಿಗೂಡಿಸಿದರು. + +ಹೆಣ್ಣು ಮಾಡುವುದೆಲ್ಲ ಕಾಯಕವೇ ಎಂದು ತಮ್ಮ ಬಾಲ್ಯದಿಂದ ತಾವು ಇಂದಿನವರೆಗೆ ಕಂಡ ಹೆಂಗಸರನ್ನೆಲ್ಲ ಪುರುಷರು ನೆನೆದರು. ಯಾವ ಸ್ವಾರ್ಥವೂ ಇಲ್ಲದೆ, ಕಾಯಕ ಎಂಬ ಹೆಸರಿಲ್ಲದೆ, ಗುರುತಿಲ್ಲದೆ, ಸಂಭಾವನೆಯಿಲ್ಲದೆ, ರಜೆಯಿಲ್ಲದೆ, ವಿರಾಮವಿಲ್ಲದೆ ಸಾಯುವ ತನಕ ಒಂದಲ್ಲ ಒಂದು ಕೆಲಸ ಮೈಮೇಲೆಳೆದುಕೊಂಡು ಮಾಡುವ ಹೆಂಗಸರಿಲ್ಲದಿದ್ದರೆ ಲೋಕ ನಡೆಯುವುದೇ ಇಲ್ಲ ಎಂದ ಮಾರಯ್ಯ. ತನ್ನ ತಾಯಿಯು ಏನಾದರೂ ಮಾತಾಡುವಾಗ, ಕತೆ ಹೇಳುವಾಗ ಕೈಗೊಂದು ಕೆಲಸ ಅಂಟಿಸಿಕೊಂಡುಬಂದು ಕೂರುತ್ತಿದ್ದಳೆಂದೂ, ಕೆಲಸವಿಲ್ಲದಿದ್ದರೆ ಅವಳ ಬಾಯಿಂದ ಮಾತೇ ಬರುತ್ತಿರಲಿಲ್ಲವೆಂದೂ ಉಗ್ಘಡಿಸುವ ಗುಬ್ಬಿದೇವಯ್ಯ ನೆನಪಿಸಿಕೊಂಡು ಹೇಳಿದ. ಒಬ್ಬರಾದ ಮೇಲೊಬ್ಬರು ಹೆಂಗಸರ ಕೆಲಸವನ್ನು ಸ್ಮರಿಸುತ್ತಾ ತಮ್ಮ ತಾಯಿಯನ್ನು ನೆನೆದು ಕಣ್ಣು ಒದ್ದೆ ಮಾಡಿಕೊಂಡರು. ಆಗ ಅದು ಎಲ್ಲಿಂದ, ಯಾರಿಂದ ಬಂತೆಂದು ಗೊತ್ತಾಗದ ಒಂದು ಮಾತು ಕೇಳಿ ಬಂತು. + +`ಹೌದು, ಹೆಂಗಸ್ರು ಅಂದ್ರ ಬರೀ ಅಬ್ಬೇನ ನೆಪ್ಪಾಗತಾಳಲ ನಿಮ್ಗೆ. ಅಪ್ಪ ಅಬ್ಬೆ ಬಿಟ್ಟು ನಿಂ ಹಿಂದ ಬಂದ ಹೇಂತಿ, ಮಗಳು, ಅಕ್ಕ, ತಂಗಿ, ದಾಸಿ, ವೇಶಿ ಮಾಡಿದ್ ಸೇವಾನ ಒಬ್ರರೆ ನೆಪ್ಪು ಮಾಡ್ಕ್ಯಂಡ್ರ ನೋಡ್?’ + +ಯಾರು ಹೇಳಿರಬಹುದು ಇದನ್ನು ಎಂದು ಎಲ್ಲ ನೋಡುತ್ತ, ಹುಡುಕುತ್ತ, ಊಹಿಸುತ್ತ ಇರುವಾಗ ಮತ್ತೊಂದು ದನಿ ಕೇಳಿಬಂತು. + +`ಹೌದೌದು ಹೆಂಗಸರು ಮಾಡೂದೆಲ್ಲ ಕಾಯಕಾನಾ. ಹಂಗಾರ, ವೇಶಿಯರು ಮಾಡೂದು ಕಾಯಕಾನನು? ಗರತೇರು ಹೇಳ್ರಿ’ + +ಹೆಣ್ಣುಗಳನ್ನು ಗರತಿಯರು, ವೇಶ್ಯೆಯರೆಂದು ಇಬ್ಭಾಗಿಸುವ ಈ ವಾಕ್ಯ ಹೊರಬಿದ್ದದ್ದೇ ನಿರ್ಭರ ಮೌನ ಅಲ್ಲಿ ನೆಲೆಸಿತು. ವೇಶ್ಯೆಯರ ಬಗೆಗೆ ಕೆಲವೊಮ್ಮೆ ಹೆಂಗಸರೇ ನಿಕೃಷ್ಟವಾಗಿ ಮಾತನಾಡುವುದಿತ್ತು. ಈಗ ಈ ಸಾಲು ಕೇಳಿದ್ದೇ ಮೌನ ಹೆಪ್ಪುಗಟ್ಟಿ, ದೊಡ್ಡ ಬಂಡೆಯಾಗಿ ಬೆಳೆಯಿತು. ಯಾರೂ ಮಾತನಾಡುತ್ತಿಲ್ಲ, ಎಲ್ಲರಿಗೂ ಅವರವರ ಉಸಿರ ಸದ್ದು ಕೇಳಿಸುತ್ತಿದೆ. ಪಿಸುಪಿಸು ಇಲ್ಲ, ಗುಸುಗುಸುವೂ ಇಲ್ಲ. ಮೌನಬಂಡೆ ಎತ್ತರೆತ್ತರ ಬೆಳೆದು ಶೂನ್ಯ ಸಿಂಹಾಸನದ ಎತ್ತರವನ್ನೂ ಮೀರಿ ಬೆಳೆಯಿತು. ಶೂನ್ಯದಾಚೆಗಿನ ಶೂನ್ಯಪೀಠವಾಗಿ ಮೌನಪೀಠವು ಹುಟ್ಟಿತು. ಅದರ ಮೇಲೆ ವಿರಾಜಿಸಿ ಸಭೆ ಮುನ್ನಡೆಸುವವರಾರಿಲ್ಲ. ಇವತ್ತಿನ ನುಡಿಮಾಲೆಯ ವಾಕ್ಯವೋ ಉರಿಬೆಂಕಿಯ ಜ್ವಾಲೆ. ಅದ ಹಿಡಿದು ನೇವರಿಸಿ ಅನುನಯಿಸಿ ಮುನ್ನಡೆಸುವುದು ಅಲ್ಲಮಯ್ಯನಿಗೇ ಆದರೂ ಸುಲಭವಿಲ್ಲ. ಆಗ ನಿಶ್ಶಬ್ದ ಬಯಲಿನಿಂದ ಒಂದು ಧ್ವನಿ ಕೇಳಿ ಬಂತು. + +`ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ/ಹಿಡಿದೆಡೆ ಬತ್ತಲೆ ನಿಲಿಸಿ ಕೊಲುವರಯ್ಯಾ./ವ್ರತಹೀನನನರಿದು ಬೆರೆದಡೆ/ಕಾದ ಕತ್ತಿಯಲ್ಲಿ ಕೈ ಕಿವಿ ಮೂಗ ಕೊಯ್ವರವ್ವಾ/ಒಲ್ಲೆನೊಲ್ಲೆ ಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರಾ’ + +ನಾಲ್ಕಾರು ಹೆಣ್ಣು ದನಿಗಳು ಸಣ್ಣಕ್ಕೆ ಸಿಳ್ಳು ಹಾಕಿ ತಮ್ಮ ಖುಷಿ, ಸಹಮತ ತೋರಿಸಿದವು. + +`ನೋಡಿದಿರಾ ಅವ್ವ ಈ ಜಗದ ನೀತಿ! ಕದ್ದು ಕುರೀನಾದ್ರೂ ತರತಾರೆ. ಬೇಡಿದ ಕಾಸನ್ನಾದರೂ ತಂದು ಕೊಡತಾರೆ. ಶಿವನಿಷ್ಠೆಯಿಲ್ಲದೆ ಬಸವಣ್ಣ ಕೊಟ್ಟ ಹೊನ್ನು ಇಸಗೋತಾರೆ. ಹೇಗಾದರೂ ಧನಕನಕವಸ್ತು ಒಟ್ಟುಮಾಡಿ ವೇಶಿ ಮನೆಗೆ ಬರೋರು ಎಷ್ಟು ಜನ ಬೇಕು? ಆದರೆ ಇವತ್ತು ಒಬ್ಬೇ ಒಬ್ರೂ ಹೊಟ್ಟೆ ತಣಿಸೋ ದಾಸೋಹ ಕಾಯಕ ಆದ್ರೆ, ತಮ್ಮ ದೇಹದ ಹಸಿವೆ ತಣಿಸೋ ವೇಶಿಯರದೂ ಕಾಯಕಾಂತ ಬಾಯ್ಬಿಟ್ಟಾರಾ? ನೋಡಿದ್ರಾ ಅವ್ವ? ನೋಡಿದ್ರಾ ಅಕ್ಕಮ್ಮ? ಮನೆಯಾಗೆ ಹೆಂಡತಿ ಮುನಿದರೆ, ಮುದುಡಿದರೆ, ಮಡಿದರೆ, ಮರುಳೆಯಾದರೆ, ಮಗು ಹೆತ್ತರೆ, ಮೈದುಂಬಿ ಬಸುರಾದರೆ, ಕೆರಳಿದರೆ, ಒಲ್ಯಾಂದರೆ ಗಂಡರ ಚಿತ್ತ ವೇಶಿಯರತ್ತ. ನಿಮ್ಮ ಗಂಡರ ಕರಾಳ ಮುಖವನ್ನ ತಡಕೊಂಡು ನಿಮ್ಮನ್ನು ರಕ್ಷಿಸೋರು ವೇಶ್ಯೆಯರು. ಆದರೀಗ ನೋಡಿ. ಯಾರಾದರೂ ಬಾಯ್ಬಿಡತಾರೇನ? ಹೆಣ್ಣುಗಳಾದ ನೀವೇ ಸೂಳೆ, ಸೂಳೆಮಕ್ಳು ಅಂತ ಹೀನಾಯವಾಗಿ ಜರೀತೀರಿ. ಅಕ್ಕಗಳಿರಾ, ಅವ್ವಗಳಿರಾ, ನೀವು ಕಾಲಿಂದ ತೊಳೆಯಕ್ಕಾಗದ ಕೊಳೇನ ನಾವು ಮೈಯುಜ್ಜಿ ತೊಳಿತೀವಿ. ನೀವು ತಣಿಸಕ್ಕಾಗದ ವಿಷಮ ಬೆಂಕೀನ ನುಂಗಿ ಒಡಲು ಸುಟಕೊಂಡೀವಿ. ನೀವು ಸಹಿಸಲಾಗದ ಹೊಲಸನ್ನು ಪರಮ ಪ್ರಸಾದ ಅಂತ ಉಂಡೀವಿ. ಸಿಟ್ಟು, ಹೆದ್ರಿಕೆ, ಉದ್ವೇಗ, ಉದ್ರೇಕ, ಯುದ್ಧ, ಸೋಲು, ಅವಮಾನ ಅಂತ ಗಂಡಸಿನ ಆ ಅರ್ಧಮಖಾನ ತಡಕಂಡೀವಿ. ಶಿವಾ ಒಮ್ಮೆ ವಿಷಕಂಠ ಆದ. ನಾವು ಹಂಗಲ್ಲ, ನಿತ್ಯ ಹಾಲಾಹಲ ಕುಡಿದು ನೀಲಿಗಟ್ತಾ ಅದೀವಿ. ನಾನೆಂದಿಗೂ ಹಣಕ್ಕಂತ ಒತ್ತೆ ಹಿಡಿಯೋಳಲ್ಲ. ಒಂದು ದಿನಕ್ಕೆ ಒಬ್ಬ ವ್ರತಿಯ ಒತ್ತೆ ಅಷ್ಟೆ. ಅವ ಕೊಟ್ಟಿದ್ ತಗಂಡು ಹೊಟ್ಟೆಗೆ, ದಾಸೋಹಕ್ಕೆ ಕೊಡತೀನಿ. ನೀವು ಒಪ್ತಿರೋ, ಇಲ್ಲೋ, ಇದು ನನ್ನ ವ್ರತ. ಇದು ನನ್ನ ಕಾಯಕ. ನಾ ಇನ್ನು ಅಂಜಿಕಿಲ್ಲದಂಗೆ ನನ್ನ ಕಾಯಕಾ ಏನಂತ ಹೇಳತೀನಿ. ನಾನು ಸೂಳೆ. ನಾನು ಸೂಳೆ ಸಂಕವ್ವೆ. ನಾನು ಶರಣೆ, ಸೂಳೆ ಸಂಕವ್ವೆ. ನನ್ನ ಕಾಯಕ ಸೂಳೆಯ ಕಾಯಕ.’ + +ಸಂಕವ್ವಕ್ಕ ಹಾಗೆ ಹೇಳಿದ್ದೇ ಮತ್ತೆ ನಾಲ್ಕಾರು ಹೆಣ್ಣುಮಕ್ಕಳು ಒಬ್ಬರಾದ ಮೇಲೊಬ್ಬರು ಎದ್ದುನಿಂತರು. + +`ನಾನು ಶರಣೆ, ಸೂಳೆ ನಂಬಿಯಕ್ಕ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಬೊಮ್ಮಕ್ಕ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಚಾಕಲದೇವಿ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಪದ್ಮಲಾದೇವಿ. ನನ್ನ ಕಾಯಕ ಸೂಳೆಯ ಕಾಯಕ.’`ನಾನು ಶರಣೆ, ಸೂಳೆ ಬೊಪಲದೇವಿ. ನನ್ನ ಕಾಯಕ ಸೂಳೆಯ ಕಾಯಕ.’ + +ದಾಸಿವೇಶಿಯರೆಂದು, ಸೂಳೆಯ ಮಕ್ಕಳು ಎಂದು ಮಾತುಮಾತಿಗೆ ಬೈಯುತ್ತಿದ್ದವರೆಲ್ಲ ಮಾತು ಸತ್ತು ದಂಗು ಬಡಿದು ಕುಳಿತರು. ತಮ್ಮ ನಡುವೆ ಇಷ್ಟು ಜನ ಸೂಳೆ ಕಾಯಕದವರು ಇರಬಹುದೆಂದು ಅಲ್ಲಿದ್ದವರಿಗೆ ತಿಳಿದೇ ಇರಲಿಲ್ಲ. ಸಂಕವ್ವ ಕೂತದ್ದೇ ಮತ್ತೊಬ್ಬ ಅವ್ವ ಎದ್ದು ನಿಂತಳು. + +`ಸಂಕವ್ವಕ್ಕ, ನೀನು ನಿಜ ಶರಣೆ. ನಿಜವನ್ನು ಧೈರ್ಯವಾಗಿ ಹೇಳಿದಿ. ನಿನ್ನ ಧೈರ್ಯಕ್ಕೆ ನಾವು ಮೆಚ್ಚಿದೆವು. ಇತ್ತಲಾಗಿ ಧರ್ಮಪತ್ನಿನೂ ಅಲ್ಲ, ಅತ್ತಲಾಗಿ ವೇಶಿನೂ ಅಲ್ಲದೆ ಇರೋರು ಭಾಳ ಹೆಣ್ಣುಗಳು. ಎರಡನೆ ಹೆಂಡ್ತಿಯಾಗಿ, ಮೂರನೆ ನಾಲ್ಕನೆಯವಳಾಗಿ, ಇಟ್ಟುಕೊಂಡೋಳಾಗಿ, ಕೊಂಡು ತಂದೋಳಾಗಿ, ಮನದನ್ನೆಯರಾಗಿ, ಮನೆಮುರುಕಿ ಅನ್ನೋ ಬೈಗುಳ ಕೇಳ್ತ, ಆಟಕ್ಕುಂಟು ಲೆಕ್ಕಕ್ಕಿಲ್ಲ ಆಗಿ, ಪಣ ಕೊಟ್ಟು ತಂದ ಪುಣ್ಣಸ್ತ್ರೀಯರಾಗಿ ಇರೋರು ನಾವು. ಯಾವುದೋ ಸನ್ನಿವೇಶಕ್ಕೆ ಸಿಕ್ಕಂಡು ಸಂಸಾರ ಕಟ್ಟಿಕೊಳ್ಳಲಾಗದ್ದಕ್ಕೆ ಈ ಹಳ್ಳದಲ್ಲಿ ಬಿದ್ದು ತೊಳಲ್ತ ಇದೀವಮ್ಮಾ. ಮಕ್ಕಳು ಮರಿ, ಅವರ ಉದ್ಧಾರದ ಕನಸು ಕೈಬಿಟ್ಟು ಬದುಕಿದೀವಮ್ಮ. ನಾವೂ ಇನ್ನು ನಮ್ಮ ಹೆಸರಿನ ಹಿಂದೆ ನಮ್ಮ ಅರ್ಧಾಂಗನಾದ ಗಂಡಿನ ಹೆಸರಿನ ಜೊತೆ ನಮ್ಮ ಹೆಸರ ಅಂಟಿಸಿಕೊಳ್ತೀವಿ. ನಾವೂ ಪುಣ್ಯಸ್ತ್ರೀಯರು ಅನಿಸಿಕೊಳ್ತೀವಿ. ಇನ್ನು ನಾವು ಪುಣ್ಯಸ್ತ್ರೀಯರಲ್ಲ, ಪುಣ್ಯಸ್ತ್ರೀಯರು. ನಾನು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಕಾಳವ್ವೆ’ + + + +ಈಕೆ ಇಷ್ಟು ಮಾತಾಡಬಲ್ಲಳೇ ಎಂದು ರಾಯಸದ ಮಂಚಣ್ಣನೂ ಸೇರಿದಂತೆ ಎಲ್ಲರೂ ಅಚ್ಚರಿಯಿಂದ ತೆರೆದ ಬಾಯಿ ತೆರೆದೇ ಕುಳಿತುಕೊಂಡಿರಲು ಒಬ್ಬರಾದ ಮೇಲೊಬ್ಬರು ಎದ್ದು ನಿಂತು ಹೇಳತೊಡಗಿದರು: + +`ನಾನು ರೇವಣಸಿದ್ದಯ್ಯಗಳ ಪುಣ್ಯಸ್ತ್ರೀ ರೇಕಮ್ಮ’.`ನಾನು ಸಿದ್ಧಬುದ್ದಯ್ಯಗಳ ಪುಣ್ಯಸ್ತ್ರೀ ಕಾಳವ್ವೆ’.`ನಾನು ಹಡಪದ ಅಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ತಾಯಿ’,`ನಾನು ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ’,`ನಾನು ರಾಯಸದ ಮಂಚಣ್ಣಗಳ ಪುಣ್ಯಸ್ತ್ರೀ ಕಾಳವ್ವೆ’,`ನಾನು ಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿ’,`ನಾನು ದಸರಯ್ಯಗಳ ಪುಣ್ಯಸ್ತ್ರೀ ವೀರಮ್ಮ’,`ನಾನು ಬತ್ತಲೇಶ್ವರಯ್ಯಗಳ ಪುಣ್ಯಸ್ತ್ರೀ ಗುಡ್ಡವ್ವೆ’,`ನಾನು ಬಾಚಿ ಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ’,`ನಾನು ಗಜೇಶ ಮಸಣಯ್ಯಗಳ ಪುಣ್ಯಸ್ತ್ರೀ ಕೇತಲದೇವಿ’,`ನಾನು ಡೋಹರ ಕಕ್ಕಯ್ಯನವರ ಪುಣ್ಯಸ್ತ್ರೀ ಭಿಷ್ಟಾದೇವಿ’,`ನಾನು ಕೊಂಡೆ ಮಂಚಣ್ಣಗಳ ಪುಣ್ಯಸ್ತ್ರೀ ಲಕ್ಷ್ಮಮ್ಮ’,`ನಾನು ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ’,`ನಾನು ಕಾಟಕೂಟಯ್ಯಗಳ ಪುಣ್ಯಸ್ತ್ರೀ ರೇಚವ್ವೆ’,`ನಾನು ನಾಗಿಮಯ್ಯಗಳ ಪುಣ್ಯಸ್ತ್ರೀ ಮಸಣಮ್ಮ’ + +ಹೆಣ್ಣುದುಃಖದ ಬಳ್ಳಿ ಕಣ್ಣಿಗೆ ಕಾಣುವಷ್ಟೂ ದೂರ ಎಲ್ಲೆಲ್ಲ ಹಬ್ಬಿರುವುದಲ್ಲ ಎಂದು ನೆರೆದವರು ನಿಟ್ಟುಸಿರಾಗುವಾಗ ಮತ್ತೊಂದು ದನಿ ಕೇಳಿಸಿತು: + +`ಸೂಳೆಯಕ್ಕ, ಪುಣ್ಯಕ್ಕಗಳ ಮಾತು ಆಯಿತು. ಸತಿಯರು, ಅವ್ವಂದಿರದಂತೂ ಆಯಿತೇ ಆಯಿತು. ನೀವೆಲ್ಲ ನಿಮಗಾಗಿ ಒಂದು ಕಾಯ, ಒಂದು ಜೀವ, ಒಂದು ಸಂಸಾರ ಇರೋರು. ಮನೆ, ನಂಟು, ಸಂಬಂಧಗಳ ಹೊಂದಿರೋರು. ಆದರೆ ನನ್ನಂತಹ ಹಲವರಿದೇವೆ. ಒಂಟಿ ಹೆಂಗಸರು. ನಮಗಾವ ನಂಟೂ ಇಲ್ಲ. ಒಂದೇ ನಂಟು, ಗಂಡನೆಂದರೂ ಶಿವನೇ. ಮಿಂಡನೆಂದರೂ ಶಿವನೇ. ಅಯ್ಯನೆಂದರೂ ಶಿವನೇ. ಅವ್ವನೆಂದರೂ ಶಿವನೇ. ಅಣ್ಣನೆಂದರೂ ಶಿವನೇ. ಮಾವನೆಂದರೂ ಶಿವನೇ. ಗುರುವೆಂದರೂ ಶಿವನೇ, ಹರನೆಂದರೂ ಶಿವನೇ. ಅಕ್ಕಗಳಿರಾ, ಅವ್ವಗಳಿರಾ. ನೀವು ಬೇಲಿಯೊಳಗಿನ ತೋಟದ ವೃಕ್ಷಗಳು. ಹಬ್ಬಿದರೂ ಹರಡಿದರೂ ಒಂದು ಬೇಲಿಯೊಳಗೆ ಸುರಕ್ಷಿತ ಎಂದುಕೊಂಡಿರೋರು. ನಾವು ಬಯಲಲ್ಲಿ ನಿಂತ ಒಂಟಿಮರಗಳು. ಬಿರುಗಾಳಿ, ಬಿರುಮಳೆ, ಬಿರುಬಿಸಿಲು, ಯಮಚಳಿಗಳನ್ನೆಲ್ಲ ಸಹಿಸೋರು. ಸಿಡಿಲಿಗೂ ಕೊಡಲಿಗೂ ತಲೆಕೊಟ್ಟು ಯಾರದೂ ಅಲ್ಲದ, ಎಲ್ಲರೂ ತಮ್ಮದು ಅಂದುಕೊಳ್ಳಕ್ಕೆ ಹಾತೊರೆಯೋ ಆಸ್ತಿಯಂತೆ ಇರೋರು. ತಾಪತ್ರಯಗಳು ಸಂಸಾರವಂದಿಗರಿಗೆಷ್ಟೋ ಅಷ್ಟೇ ನಮಗೂ ಇದಾವೆ. ಲೋಕಜಂಜಡಗಳು ಮಕ್ಕಳು ಮರಿ ಇಲ್ಲದ ಬಂಜೆಯೆನಿಸಿಕೊಂಬವರಿಗೂ ಇದಾವೆ. ಒಂಟಿನಿಂತ ಮರಗಳಂತಹ ನಮಗೆ ಹಿಂದೆಮುಂದೆ ಯಾವ ಹೆಸರೂ ಬೇಡ. ಯಾವ ಕಾಯಕದ ಹೆಸರೂ ಬೇಡ. ಅಪ್ಪ, ಗಂಡ, ಕುಲ, ಕಾಯಕ ಯಾವುದರ ಹೆಸರೂ ಬೇಡ. ನಾನು ಸತ್ಯಕ್ಕ. ಬರಿಯ ಸತ್ಯಕ್ಕ ನಾನು.’ + +ಸತ್ಯಕ್ಕ ಇಷ್ಟು ಹೇಳುವುದರಲ್ಲಿ ಉಳಿದವರು ತಮ್ಮ ತಯಾರಿ ನಡೆಸಿಕೊಂಡಿದ್ದಂತೆ ತಾವೂ ಹೇಳಿದರು. + +`ನಾನು ಗೊಗ್ಗವ್ವೆ, ಬರಿಯ ಗೊಗ್ಗವ್ವೆ ನಾನು.’`ನಾನು ಬೊಂತವ್ವೆ, ಬರಿಯ ಬೊಂತವ್ವೆ ನಾನು’`ನಾನು ಮಹಾದೇವಿ. ಮಹಾದೇವಿ ನಾನು.’ + +ಶರಣೆಯರ ನಡುವೆ ನಾನಾ ಸ್ವರೂಪಗಳಲ್ಲಿರುವ ಹೆಣ್ಣು ಜೀವಗಳು ತಂತಮ್ಮ ಒಡಲ ಆಳವನ್ನು ಶರಣ ಪಥಿಕರಿಗೆ ತೆರೆದು ತೋರಿಸಿದವು. ಅನುಭವ ಮಂಟಪವು ಎಲ್ಲರೊಂದಿಗೆ ಕುಳಿತುಕೊಳ್ಳಲು, ಕೇಳಲು, ಹೇಳಲು, ಮಾತನಾಡಲು ಅವರಿಗೆಲ್ಲ ಅವಕಾಶ ಕೊಟ್ಟದ್ದಕ್ಕೆ ಸಾರ್ಥಕವಾಯಿತು ಎಂದು ಬಸವಣ್ಣ ಭಾವಿಸಿದನು. ಒಬ್ಬರಾದ ಮೇಲೊಬ್ಬರು ಶರಣರು ಮೇಲೆದ್ದು ಹೆಣ್ಣಿನ ಬಗೆಗೆ ತಮ್ಮ ನಿಲುವನ್ನು ವಿವಿಧ ಮಾತುಗಳಲ್ಲಿ ಹೊರಗೆಡಹಿದರು. + +`ಅವ್ವಗಳಿರಾ, ಅಕ್ಕಗಳಿರಾ, ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು/ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು/ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು/ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು/ಅದು ಕಾರಣ ಹೆಣ್ಣು ಹೆಣ್ಣಲ್ಲ, ಹೆಣ್ಣು ರಾಕ್ಷಸಿಯಲ್ಲ/ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ನೋಡಾ’ ಎಂದನು ಸಿದ್ಧರಾಮ. + +`ಸತ್ವಗೆಟ್ಟಲ್ಲಿ ಕಾಷ್ಟವನೂರಿ ನಡೆಯಬೇಕು/ಮಟ್ಟತ್ವದಲ್ಲಿ ನಿಶ್ಚಯವ ಹೇಳಲಾಗಿ/ಮಹಾಪ್ರಸಾದವೆಂದು ಕೈಗೊಳ್ಳಬೇಕು/ಎನ್ನ ಭಕ್ತಿಗೆ ನೀ ಶಕ್ತಿಯಾದ ಕಾರಣ/ಎನ್ನ ಸತ್ವಕ್ಕೆ ನೀ ಸತಿಯಾದ ಕಾರಣ/ಎನ್ನ ಸುಖದುಃಖ ನಿನ್ನ ಸುಖದುಃಖ ಅನ್ಯವಿಲ್ಲ/ಇದಕ್ಕೆ ಭಿನ್ನ ಭೇದವೇನು ಹೇಳಾ ನಿಃಕಲಂಕ ಮಲ್ಲಿಕಾರ್ಜುನಾ’ ಎಂದು ಮೋಳಿಗೆಯ ಮಾರಯ್ಯ ತನ್ನ ಸತಿ ಮೋಳಿಗೆ ಮಹಾದೇವಿಗೆ ಮತ್ತು ಆ ಮೂಲಕ ಇಡಿಯ ಹೆಣ್ಣುಕುಲಕ್ಕೆ ಶರಣೆಂದನು. + +`ಸತಿಯ ಗುಣವ ಪತಿ ನೋಡಬೇಕಲ್ಲದೆ/ಪತಿಯ ಗುಣವ ಸತಿ ನೋಡಬಹುದೆ ಎಂಬರು/ಸತಿಯಿಂದ ಬಂದ ಸೋಂಕು ಪತಿಗೆ ಕೇಡಲ್ಲವೆ/ಪತಿಯಿಂದ ಬಂದ ಸೋಂಕು ಸಂತಿಯ ಕೇಡಲ್ಲವೆ/ಒಂದಂಗದ ಕಣ್ಣು ಉಭಯದಲ್ಲಿ ಒಂದು ಹಿಂಗಲಿಕ್ಕೆ/ಭಂಗವಾರಿಗೆಂದು ತಿಳಿದಲ್ಲಿಯೆ/ಕಾಲಾಂತಕ ಭೀಮೇಶ್ವರ ಲಿಂಗಕ್ಕೆ ಸಲೆ ಸಂದಿತ್ತು’ ಎಂದು ಸತಿಪತಿಯರಿಬ್ಬರಿಗೂ ಪರಸ್ಪರರ ಮೇಲೆ ಇರುವ ಅವಲಂಬನೆ, ಹಕ್ಕುಗಳ ಬಗೆಗೆ ಹೇಳಿದ ಢಕ್ಕೆಯ ಬೊಮ್ಮಣ್ಣ. + +`ಶಿವ ಶಿವ ಎಂಬ ವಚನವ ಬಿಡದಿರು, ಮಡದಿಯರೊಲುಮೆಯ ನಚ್ಚದಿರು ಎಂದು ಹೇಳಿದವರು ನಾವು. ಹೆಣ್ಣನ್ನು ಮಾಯೆಯೆಂದವರು. ಈಗ ನಮ್ಮ ಮಾತನ್ನೂ ಬದಲಿಸಿಕೊಳ್ಳಬೇಕಿದೆ. ಹೊನ್ನು ಮಾಯೆಯೆಂಬರು ಹೊನ್ನು ಮಾಯೆಯಲ್ಲ/ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ/ಮಣ್ಣು ಮಾಯೆಯೆಂಬರು ಮಣ್ಣು ಮಾಯೆಯಲ್ಲ/ಮನದ ಮುಂದಣ ಆಸೆಯೇ ಮಾಯೆ ಕಾಣಾ ಗುಹೇಶ್ವರಾ’ + +ಎಂದು ಅಲ್ಲಮಯ್ಯ ಹೇಳುವುದರೊಂದಿಗೆ ಅಂದಿನ ನುಡಿಮಾಲೆಯು ಮುಕ್ತಾಯ ಕಂಡಿತು. + + + +ಆದರೆ ಕೆಲವರು ಹೆಣ್ಣುಗಳ ಇರುವಿಕೆಯನ್ನು ಗೌರವಿಸಿ ಮಾತನಾಡಿದರೂ ಮುಕ್ಕಾಲು ಪಾಲು ಜನರ ಮನದಲ್ಲಿ ಅದಕ್ಕೆ ವಿರುದ್ಧ ವಿಚಾರಗಳೇ ತುಂಬಿಕೊಂಡಿದ್ದವು. ಅನುಭವ ಮಂಟಪದಿಂದ ನಿಧಾನಕ್ಕೆ ದಾಸೋಹದ ಮನೆಯತ್ತ ಕಾಲೆಳೆಯುತ್ತ ಹೋಗುತ್ತಿರುವವರು ಅಲ್ಲಲ್ಲಿ ಗುಂಪುಗೂಡಿ ಆಡಿಕೊಂಡ ಮಾತುಗಳನ್ನು ಮಹಾದೇವಿಯೂ, ಶರಣೆಯರೂ ಸೂಕ್ಷ್ಮವಾಗಿ ಗ್ರಹಿಸಿದರು. ಕೆಲವರು ಹೆಣ್ಣನ್ನು ಹಾದರಗಿತ್ತಿಯೆಂಬಂತೆ ಮಾತಾಡಿಕೊಳ್ಳುತ್ತ ಸಾಗಿದರೆ ಚಂದಿಮರಸಯ್ಯನು, `ಕಾಳಕೂಟ ಹಾಳಾಹಳ ವಿಷಂಗಳು ಕುಡಿದವರನಲ್ಲದೆ ಮಿಕ್ಕವರನೇನನೂ ಮಾಡಲಮ್ಮವು. ಸ್ತ್ರೀಯೆಂಬ ಕಡುನಂಜು ನೋಡಿದವರ, ನುಡಿಸಿದವರ, ಕೇಳಿದವರ, ಕೂಡಿದವರ ಗಡಣ ಸಂಗ ಮಾತ್ರದಿಂದ ಮಡುಹಿ ನರಕದಲ್ಲಿ ಕೆಡಹದೆ ಮಾಡಳು’ ಎಂದುಕೊಳ್ಳುತ್ತ ಸಾಗಿದನು. ಹಾದರಗಿತ್ತಿ, ಬೋಸರಗಿತ್ತಿಯೆಂಬ ಪದಗಳನ್ನು ಶರಣೆಯರು ಕೇಳದಿದ್ದೇನಲ್ಲ. ಬಸವಣ್ಣ ಕೂಡ `ಮಾನಿಸಗಳ್ಳಿ’ ಎಂದು, `ಕಂಗಳಲೊಬ್ಬನ ಕರೆವಳು, ಮನದಲೊಬ್ಬನ ನೆರೆವಳು’ ಎಂದು ಮೂದಲಿಸಿದ್ದಿದೆ. ಉರಿಲಿಂಗಪೆದ್ದಿಯು ಒಮ್ಮೆ ನುಡಿಮಾಲೆಯಲ್ಲಿ `ಹೆಣ್ಣ ನಚ್ಚಿ, ಅಶುಭವ ಮಚ್ಚಿ ಮರೆಯಬೇಡ. ಅವಳು ನಿನ್ನ ನಂಬಳು, ನೀನು ತನು ಮನ ಧನವನಿತ್ತಡೆಯೂ ಪರಪುರುಷರ ನೆನೆವುದ ಮಾಣರು’ ಎಂದು ಹೇಳಿ ಸ್ವತಃ ಕಾಳವ್ವೆಯ ಕೋಪಕ್ಕೂ ಗುರಿಯಾಗಿದ್ದಿದೆ. ಪತ್ನಿ ಎಂದರೆ ಪತಿಯನ್ನು ಒಲಿಸಿಕೊಂಡು ವಿನೀತಳಾಗಿ ಬದುಕಬೇಕೆನ್ನುವುದು ಹೆಚ್ಚುಕಡಿಮೆ ಎಲ್ಲರ ಇಂಗಿತಭಾವವಾಗಿದ್ದುದನ್ನು ಮಹಾದೇವಿಯಕ್ಕ ಗಮನಿಸಿದಳು. ಶರಣ ಪಥವು ಇಷ್ಟಲಿಂಗವನರಿತಂತೆ ಹೆಣ್ಣು ಲಿಂಗವನರಿವುದರಲ್ಲಿ ಇನ್ನೂ ಬಹುದೂರವಿದೆ ಎಂದನಿಸಿತು. + +ಅಷ್ಟರಲ್ಲಿ ಹಡಪದ ಲಿಂಗಮ್ಮ ಎದುರಾದಳು. ಇಡಿಯ ದಿನ ಅನುಭವ ಮಂಟಪದಲ್ಲಿ ನಡೆದ ಚರ್ಚೆಯ ಸುತ್ತ ಎಲ್ಲರ ಯೋಚನೆಗಳು ತಿರುಗುತ್ತಿದ್ದವು. ಶರಣರು ಯಾಕೆ ಆ ಪರಿ ಹೆಣ್ಣು ಸ್ವಭಾವದ ಬಗೆಗೆ ಉಗ್ರಟೀಕೆ ಇಟ್ಟುಕೊಂಡಿರುವರೋ ಎಂದು ಮಹಾದೇವಿ ಲಿಂಗಮ್ಮನನ್ನು ಕೇಳಿದಳು. `ಘಟ್ಟಿವಾಳಯ್ನ ಕತಿ ಕೇಳೀಯಲವ್ವ ನೀನು. ಅವ್ನ ಪಾಡ ನೋಡಿ ಎಲ್ಲಾರೂ ಹೆಂಗುಸ್ರು ಮ್ಯಾಲ ಸಿಟ್ಟಾಗ್ಯಾರ. ಆದ್ರ ಅದು ಬಾಳೊತ್ತಿನ ಸಿಟ್ಟಲ್ಲ ತಗ. ಉಣ್ಣಾಕ ಬೇಕಾದ್ದು ಮಾಡಿ ಹಾಕಕಿ ಹೆಣ್ಣೇ. ಉಂಡು ಮಲಗಿದ ಬಳಿಕ ಬೇಕಾಗೂದು ಹೇಂತಿನೆ. ಘಟ್ಟಿವಾಳಯ್ಯಗ ಆದದ್ದೇ ತಮಗು ಆದರ ಗತಿ ಏನಂತ ಹೆರ‍್ಯಾರ ಅಷ್ಟ’ ಎಂದು ಲಿಂಗಮ್ಮ ವಿವರವಾಗಿ ಘಟ್ಟಿವಾಳಯ್ಯನ ವಿಷಯ ತಿಳಿಸಿದಳು. + +ಘಟ್ಟಿವಾಳಯ್ಯನ ಮೊದಲ ಹೆಸರು ಮುದ್ದಣ್ಣ. ಗಂಧ ತೇಯುವುದು, ಭಕ್ತನಾಗಿ ಮದ್ದಳೆಯನ್ನು ಬಾರಿಸುತ್ತ ಶಿವಾನುಭವವನ್ನು ಸಾರುವ ನರ್ತನ ಕಾಯಕವನ್ನು ಮಾಡುತ್ತಿದ್ದ. ಘಟ್ಟಿವಾಳಯ್ಯ ಮದುವೆಯಾದರೂ ಹೆಂಡತಿಯೊಡನೆ ಬಾಳ್ವೆ ಸಾಧ್ಯವಾಗಲಿಲ್ಲ. ಗಂಡನ ಶಿವಭಕ್ತಿ, ಅಧ್ಯಾತ್ಮದ ಹುಚ್ಚು ಅವಳಿಗೆ ಹಿಡಿಸಲಿಲ್ಲ. ಶರಣ ಮಾರ್ಗ ಪ್ರಿಯವಾಗಲಿಲ್ಲ. ಕಾಯಮೋಹಿಯಾಗಿದ್ದ ಅವಳು ಇವನೊಡನೆ ಬಾಳ್ವೆ ಮಾಡಲಾಗದೇ ಅನ್ಯಪುರುಷನಲ್ಲಿ ಅನುರಕ್ತಳಾದಳು. ಅದು ತಿಳಿದ ಘಟ್ಟಿವಾಳಯ್ಯನು ಅವಳ ಮತ್ತೊಂದು ಮದುವೆಗೆ ತಾನೇ ನಿಂತು ಸಹಾಯ ಮಾಡಿದ. ಈ ಘಟನೆಯ ನಂತರ ಘಟ್ಟಿವಾಳಯ್ಯನ ಮನಸ್ಸು ಸಂಪೂರ್ಣವಾಗಿ ವೈರಾಗ್ಯದತ್ತ ತಿರುಗಿತು. + +`ಹೊನ್ನು ಭೂಪಾಲರಿಗೆ, ಹೆಣ್ಣೊಲಿದ ಕಾಮುಕಗೆ, ಮಣ್ಣು ಬಲವಂತಂಗಲ್ಲದೆ ಬರಿಯ ಭ್ರಾಂತಿಯಲ್ಲಿ ಕಣ್ಣುಗೆಟ್ಟರೆ ಬರುವುದೇ? ಎನ್ನ ಧನ ಜ್ಞಾನವೆಂಬಾಗಮದ ವಚನ ನಿನ್ನರಿದುಕೋ’ ಎಂದು ಸಾರುತ್ತ ತನ್ನ ಊರುಬಿಟ್ಟು ಕಲ್ಯಾಣಕ್ಕೆ ಬಂದ. ಇಲ್ಲಿ ಹಗಲಿರುಳು ದಾಸೋಹದ ಮನೆಯಲ್ಲಿ ಕಾಯಕ ಮಾಡುತ್ತಿದ್ದಾನೆ. ಉಚಿತ ಪ್ರಸಾದದ ಆಸೆಗಾಗಿ ಬಂದು ನೆರೆಯುವ ವೇಷಧಾರಿ ಜಂಗಮರನ್ನು, ಕಾಮಿಗಳನ್ನು ಕಂಡರೆ ಅವನಿಗೆ ಕೋಪ. ಅಂಥವರಿಗೆ ನಿಷ್ಠುರವಾಗಿ ನುಡಿದು ಹಲವರ ಕೋಪಕ್ಕೆ ಪಾತ್ರನಾಗುವುದೂ ಇದೆ. ಕಪಟ ಜಂಗಮರು ಅವನ ಹಿತನುಡಿಗಳ, ಸದಾಚಾರದ ಪ್ರಭಾವದಿಂದ ಪ್ರಾಮಾಣಿಕ ಜಂಗಮರಾದದ್ದು ಇದೆ. ಅಂಥವನಿಗೆ ಹೆಂಡತಿ ಮಾಡಿದ ಮೋಸ ನೆನಪಾಗಿ ಶರಣರು ಹೆಂಗಸರ ಮೇಲೆ ಕೆಟ್ಟ ಭಾವನೆ ಇಟ್ಟುಕೊಂಡಿರಬಹುದು ಎನ್ನುವುದು ಲಿಂಗಮ್ಮನ ವಿವರಣೆ. + +`ಘಟ್ಟಿವಾಳಣ್ಣನಿಗೆ ಆಗಿದ್ದು ಒಂದು ಅಪವಾದ ಅವ್ವಾ. ಹಾಗೆ ಎಷ್ಟು ಪುರುಷರು ತಂತಮ್ಮ ಹೆಂಡತಿಯರಿಗೆ ಮೋಸ ಮಾಡಿಲ್ಲ? ಶರಣರೆಲ್ಲ ಏಕಪತ್ನೀ ವ್ರತಸ್ಥರೇ? ಎಷ್ಟು ಜನ ಎರಡು, ಮೂರು ಲಗ್ನವಾದವರಿಲ್ಲ? ಅದರ ನೆನಪೂ ಇವರಿಗೆ ಆಗಬೇಕಲ್ಲ?’ + +`ಪ್ರಶ್ನಿ ಕೇಳೂದು ಸೊಲೂಪ್ ಕಮ್ಮಿ ಮಾಡ್ಕಳೆ ಮಾದೇವಿ. ಹಂಗ ನೋಡಿದರ ಬಸಣ್ಣಾರೂ ಎಡ್ಡ ಲಗ್ಣ ಆಗಿಲ್ಲೆನು? ಮಕಾಮಾರಿ ನೋಡ್ದ ಅಡ್ಡಮಾತ ಎತ್ತಬ್ಯಾಡ. ಅಕ್ಕನ ಚಾಳಿ ಮನೆ ಮಂದೀಗೆಲ್ಲಾ ರ‍್ತಾವ. ನಿನ್ನಂಗೇ ಎಲ್ಲಾ ಹೆಣ್ಣುಗುಳೂ ಪ್ರಶ್ನಿ ಒಗದರ? ಈ ಹೆಣಮಕ್ಳ ಕಾಲದಾಗ ಅನಬವ ಮಂಡಪ ನಡಸಾಕ ಕಠೀಣ ಆಗೇದ. ಬಾಳ ದಿನ ನಡೆಂಗಿಲ್ಲ ಅಂತ ಹಿರೇರು ಅನಾಕತಿದ್ರು’ + +ಲಿಂಗಮ್ಮಕ್ಕ ಪಿಸುಗುಟ್ಟಿದಳು. ಬರಬರುತ್ತ ಅವಳ ದನಿಯಲ್ಲಿ, ಮುಖದಲ್ಲಿ ಅಸಹನೆ ಇಣುಕಿದ್ದನ್ನು ಮಹಾದೇವಿ ಗಮನಿಸಿದಳು. ಈ ಮಾತು ಲಿಂಗಮ್ಮಕ್ಕನ ಬಾಯಿಯಲ್ಲಿ ಬರುವುದರ ಹಿಂದೆ ಹಲವು ಪಿಸುಮಾತುಗಳು ಕೆಲಸ ಮಾಡಿರಬಹುದು ಎಂದು ಮಹಾದೇವಿ ಯೋಚಿಸಿದಳು. ಮೈಯೆಲ್ಲ ಕಿವಿಯಾಗಿ ಕೊನೆತನಕ ಕೂತು ಕೇಳಿ ತಾನು ಪ್ರಶ್ನೆ ಎತ್ತುವುದು ಹಿರಿಯರಿಗೆ ಇರಿಸುಮುರುಸುಂಟಾಗಿದೆಯೇ ಎಂಬ ಅನುಮಾನವಾಯಿತು. + + + +ಹೌದು, ಬಸವಣ್ಣ, ಅಲ್ಲಮಯ್ಯಗಳೂ ತತ್ತರಿಸುವಂತೆ ಕೇಳುವ ಅವಳ ಪ್ರಶ್ನೆಗಳ ಹರಿತ ಅಲಗನ್ನು ಮೊಂಡು ಮಾಡಲೆಂದೇ ಲಿಂಗಮ್ಮ ಆ ಮಾತು ಹೇಳಿದ್ದಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_13.txt b/Kenda Sampige/article_13.txt new file mode 100644 index 0000000000000000000000000000000000000000..a8d05a76e38dac699045cec86119d2ea2ad5ae49 --- /dev/null +++ b/Kenda Sampige/article_13.txt @@ -0,0 +1,35 @@ +byರಾಮ್ ಪ್ರಕಾಶ್ ರೈ ಕೆ.|Sep 27, 2024|ಸರಣಿ| 0 Comments + +ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹಿಂದಿಯ ‘ಸೆಕ್ಟರ್ -36’ ಸಿನಿಮಾದ ವಿಶ್ಲೇಷಣೆ + +byಕೆ. ಸತ್ಯನಾರಾಯಣ|Sep 27, 2024|ಸರಣಿ| 3 Comments + +ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ?ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ + +byಡಾ. ಚಂದ್ರಮತಿ ಸೋಂದಾ|Sep 27, 2024|ಸರಣಿ| 1 Comment + +ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು + +byಗುರುಪ್ರಸಾದ್‌ ಕುರ್ತಕೋಟಿ|Sep 26, 2024|ಸರಣಿ| 0 Comments + +ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು.ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೈದನೆಯ ಬರಹಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು + +byಸುಮಾ ಸತೀಶ್|Sep 25, 2024|ಸರಣಿ| 0 Comments + +ಮೈಗೆ ಲೈಫ಼್ ಬಾಯ್ ಸೋಪು.‌ ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು.‌ ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ‌ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಮನೆ-ಮನೆಯ ಜನಗಳ + +byಬಸವನಗೌಡ ಹೆಬ್ಬಳಗೆರೆ|Sep 24, 2024|ಸರಣಿ| 2 Comments + +ಈ ಕ್ಯಾಂಪಿನಿಂದ ಬಂದು ವಾಪಸ್ಸು ಹೋದಾಗಲೇ ನನಗೆ ತಿಳಿದದ್ದು ಈ ಸಮಯದಲ್ಲಿ ಹಲವಾರು ಪಾಠಗಳನ್ನು ನಮ್ಮ ಮೇಷ್ಟ್ರು ಮುಗಿಸಿದ್ದಾರೆ ಎಂಬುದು. 8 ರಲ್ಲಿ ಮೂರನೇ ರ್ಯಾಂಕು, 9 ರಲ್ಲಿ ಎರಡನೇ ರ್ಯಾಂಕು ಬಂದಿದ್ದವನು 10 ನೇ ತರಗತಿಯಲ್ಲಿ ಮೊದಲ ರ್ಯಾಂಕನ್ನು ಗಳಿಸುತ್ತಾನೆ ಎಂಬ ಹಲವರ ನಿರೀಕ್ಷೆ ಸುಳ್ಳಾಗಲು ಇದೂ ಒಂದು ಕಾರಣವಾಗಿತ್ತು. ಎಷ್ಟೇ ಪ್ರಯತ್ನ ಪಟ್ಟರೂ ಪಾಠದ ವಿಷಯದಲ್ಲಿ ನನಗೆ ರೀಟೇಕ್ ಆಗಲು ಸಾಧ್ಯವಾಗಲೇ ಇಲ್ಲ.ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ + +byರಂಜಾನ್ ದರ್ಗಾ|Sep 23, 2024|ಸರಣಿ| 0 Comments + +‘ನ್ಯಾಯನಿಷ್ಠುರಿ, ಲೋಕವಿರೋಧಿ, ಶರಣನಾರಿಗೂ ಅಂಜುವವನಲ್ಲʼ ಎಂಬಂಥ ವ್ಯಕ್ತಿತ್ವ ಅವರದು. ಹೀಗೆ ಮಾತನಾಡಿದರೆ ಆಡಳಿತ ವರ್ಗಕ್ಕಾಗಲೀ ರಾಜ್ಯಶಕ್ತಿಗಾಗಲೀ ತಮ್ಮ ಬಗ್ಗೆ ಯಾವ ಭಾವನೆ ಮೂಡಬಹುದು; ಅದರಿಂದ ತಮಗೆ ಯಾವ ತೊಂದರೆಯಾಗಬಹುದು ಎಂಬ ಲೆಕ್ಕಾಚಾರವನ್ನು ಅವರು ಎಂದೂ ಹಾಕಿದವರಲ್ಲ. ಮನುಷ್ಯರ ಬಗ್ಗೆ ಇರುವ ಅವರ ಕಾಳಜಿಯೆ ಅಂಥದ್ದು. ಆ ಕಾಲದಲ್ಲಿ ಅವರು ಒಂದು ರೀತಿಯ ಏಕಾಂಗವೀರರಾಗಿದ್ದರು. ಸದಾ ಕ್ರಿಯಾಶೀಲವಾಗಿರುವ ಅವರ ವ್ಯಕ್ತಿತ್ವ ನನ್ನಂಥವರ ಮೇಲೆ ಆಳವಾದ ಪರಿಣಾಮ ಬೀರಿತು.ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ + +byಕಾರ್ತಿಕ್ ಕೃಷ್ಣ|Sep 21, 2024|ಸರಣಿ| 1 Comment + +ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ.ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ + +byಎಚ್. ಗೋಪಾಲಕೃಷ್ಣ|Sep 20, 2024|ಸರಣಿ| 2 Comments + +ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ.ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ \ No newline at end of file diff --git a/Kenda Sampige/article_130.txt b/Kenda Sampige/article_130.txt new file mode 100644 index 0000000000000000000000000000000000000000..fbffb92b87fe1abd339d9d3ac78ecd33916d1fcc --- /dev/null +++ b/Kenda Sampige/article_130.txt @@ -0,0 +1,17 @@ +‘ಸುರತ್ಕಲಾಲಾಪ-ವಿಲಾಸಕೋಮಲಾ ಕರೋತಿ ರಾಗಂ ಹೃದಿ ಕೌತುಕಾಧಿಕಮ್’ ಇದು ಬಾಣ ಭಟ್ಟನ ಕಾದಂಬರಿಯಲ್ಲಿ ಬರುವ ಒಂದು ಶ್ಲೋಕದ ತುಣುಕು. ಒಮ್ಮೆ ನಮ್ಮನ್ನು ಕಾದಂಬರಿಯ ಲೋಕಕ್ಕೆ ಕೊಂಡೊಯ್ಯುವುದು ಕಥಾಗತ. ಹೌದು ಬಾಣ ಮತ್ತು ಭಾರವಿಯ ಪರಿಚಯವಿದ್ದರೆ ಡಾ. ನವೀನ್ ಗಂಗೋತ್ರಿಯವರಿಗೆ ಆ ಬಾಣ, ಭಾರವಿ ಎನ್ನುವ ಪಿತೃದೇವತೆಗಳು ಆವಾಹಿಸಿರಬಹುದೇನೋ ಎನ್ನುವಷ್ಟರ ಮಟ್ಟಿಗೆ ಕಥಾಗತ ಆವರಿಸಿ ಬಿಡುತ್ತದೆ. ನಾನಿಲ್ಲಿ ಮುಖಸ್ತುತಿಯನ್ನು ಮಾಡುತ್ತಿಲ್ಲ. ಇಲ್ಲಿ ಕಥಾಗತದಲ್ಲಿ ಇವರು ಒಂದಷ್ಟು ಐತಿಹಾಸಿಕ ವಿಷಯಗಳನ್ನು ವಿವರಿಸುತ್ತಾ ಹೋಗುವಾಗ ಗಂಭೀರತೆಯನ್ನು ಅತ್ಯಂತ ಸರಳೀಕರಿಸಿ ಸುಲಲಿತವಾಗಿ ಹೇಳುತ್ತಾ ಸಾಗಿದ್ದಾರೆ. ಆರಂಭದಲ್ಲಿಯೇ ವಡ್ಡಿಸೇನನನ್ನು ಹಿಡಿದು ವಿಷಯವನ್ನು ಹೇಳುತ್ತಾ ಸಾಗಿದ್ದಾರೆ. ಹಾಗಂತ ವಡ್ಡಿಸೇನ ಸಹಜ ಶೈಲಿಯಲ್ಲಿ ಪರಿಸರದ ವರ್ಣನೆ ಮಾಡುವುದಿಲ್ಲ. ಸ್ವತಃ ಕೃತಿಕಾರರು ಮಾಡುವುದು ನಮಗೆ ಅವನೇ ವರ್ಣಿಸಿದಂತೆ ಭಾಸವಾಗುತ್ತದೆ. + +(ನವೀನ ಗಂಗೋತ್ರಿ) + +ಇಲ್ಲಿ ಇನ್ನೊಂದು ನನ್ನನ್ನು ಕಟ್ಟಿ ಹಿಡಿಯಿತು; ವಡ್ಡಿಸೇನ ಎನ್ನುವ ಹೆಸರನ್ನು ಬಳಸಿಕೊಂಡಿರುವುದು. ವಡ್ಡಿ, ವದ್ಧಿ ಮುಂತಾದ ಪದಪ್ರಯೋಗ ಮೊದಲು ಬಳಕೆಗೆ ತಂದದ್ದು ಕದಂಬರು. ಧಾರವಾಡ ಜಿಲ್ಲೆಯ ನಿರ್ಗುಂದದ ಹಳೆವಾಸನ ಶಾಸನದಲ್ಲಿ ಪ್ರಾಯಶಃ ಮೊದಲ ವಡ್ಡಿಯ ಉಲ್ಲೇಖ ಬರುತ್ತದೆ. ಅಂದರೆ ವಡ್ಡಿಯೇ ವರ್ಧಕಿಯಾಗಿ ಮುಂದೆ ಕನ್ನಡದ ಬಡಗಿಯಾಗುತ್ತಾನೆ. ಇಡೀ ಕಥಾಗತವನ್ನು ಇದೇ ವಡ್ಡಿಯಲ್ಲಿ ಹಿಡಿದಿಟ್ಟಿದ್ದಾರೆ. ಕದಂಬರ ಮಯೂರ ಶರ್ಮನ ಕಾಲಕ್ಕಾಗಲೇ ಬೌದ್ಧಧರ್ಮದ ಕೊಂಡಿ ಕಳಚಿಕೊಂಡು ಜೈನಧರ್ಮೀಯರಿಗೆ ರಾಜಧರ್ಮ ಬೋಧಿಸಿದ ಮಯೂರ ಶರ್ಮ ರಾಜಧರ್ಮದಲ್ಲಿ ಹಿಂಸೆಯ ವ್ಯಾಖ್ಯೆಗೆ ಅರ್ಥವಿಲ್ಲವೆಂದು ಜೈನರನ್ನು ದೂರೀಕರಿಸಿದ್ದ, ಹಾಗಂತ ನಂತರದ ರಾಜರು ಜೈನ ಮತ್ತು ಬೌದ್ಧ ಸರಯು ಮಾಡಿದ್ದಿದೆ. ಇಲ್ಲಿ ಡಾ. ನವೀನ್ ಅವರು ತಮ್ಮ ಬರವಣಿಗೆಯಲ್ಲಿ ಪ್ರಾಕೃತದ ಇದು, ಮೂಡಿಸಿ ಕದಂಬ ಮತ್ತು ಅವರಿಗೂ ಪೂರ್ವದ ಶಾತಕರ್ಣಿಗಳ ಕೊಂಡಿ ಭಾಸವಾಗುತ್ತದೆ. + +ಕಥಾಗತವನ್ನು ಓದುತ್ತಾ ಹೋದಂತೆ ಇಂದಿನ ಕಾಲಮಾನದಿಂದ ಕೊಂಡೊಯ್ಯುವ ಕಲೆ ಡಾ. ನವೀನ್ ಅವರು ಸಿದ್ಧಿಸಿಕೊಂಡದ್ದು ವೇದ್ಯವಾ ಆಶ್ಚರ್ಯವಾಗುತ್ತದೆ. ಜೊತೆಗೆ ತಮಿಳಿನ ಕುರಿತಾದ ಭಾವನೆ ಸ್ಪುಟವಾಗುವುದು ಮಧ್ಯದಲ್ಲಿ, ಮಹಾಬಲಿಪುರವನ್ನು ಚಾಳುಕ್ಯರ ಶಿಲ್ಪಕ್ಕೆ ತಂದು ನಿಲ್ಲಿಸುವ ತುಲನೆಯ ಜೊತೆಗೆ ಒಂದು ವಿಷಾದ ಹೊರಹೊಮ್ಮುತ್ತದೆ. ಸುನಾಮಿಯ ಹೊಡೆತಕ್ಕೆ ಮುಲು ಇದು ಸಿಗಲಾರದೇನೋ ಎನ್ನುವ ಭಾವನೆ ಕೆದಕುತ್ತದೆ. ಮಗಧ ಮಹಾಜನಪದ ಇರಬಹುದು ನಾಲಂದಾ ಇರಬಹುದು, ಇವರ ಬರಹದಲ್ಲಿ ಕಾಡಿ ಕೆದಕುತ್ತದೆ. ನಾಲಂದಾದ ಅನ್ವೇಷಣೆಗೂ ಮೊದಲು ನಾಲಂದಾ ಹೀಗಿತ್ತು ಎನ್ನುವುದು ನವದ್ವೀಪದಂಥಹ ಅಪ್ಪಟ ವೈದಿಕ ನಗರಿಗಳು. ಅದನ್ನೂ ಮುಂದೆ ನವೀನರು ಬರೆಯಬಹುದೆನ್ನುವ ನಿರೀಕ್ಷೆ ಇದೆ. + + + +ವೈಜಯಂತೀ ಪುರವೆಂದು ಕರೆಸಿಕೊಂಡ ಬನವಾಸಿ ಆಗಾಗ ತನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತ ಬಂದಿದೆ. ಆದರೆ ಬನವಾಸಿ ಹೆಸರೇ ಕನ್ನಡದ ಕಂಪನ್ನು ಸೂಸುವ ಹೆಸರು ಅನ್ನಿಸಿ ಬಿಡುತ್ತದೆ. ಬನವಾಸಿ ಅಂದಾಕ್ಷಣ ಕನ್ನಡದ ನೆನಪಾಗಿಯೇ ಆಗುತ್ತದೆ. ಅದಕ್ಕೆ ಕೇವಲ ಕದಂಬರು ಮಾತ್ರವೇ ಕಾರಣರು ಅಂತ ನಾನು ಭಾವಿಸುತ್ತಿಲ್ಲ. ಕದಂಬರು ಇದ್ದಲ್ಲೆಲ್ಲಾ ಬನವಾಸಿಯನ್ನು ನೆನಪಿಸಿಕೊಂಡದ್ದಂತೂ ಹೌದು, ದಕ್ಷಿಣದ ಭಾಷೆಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಕದಂಬರು ಕನ್ನಡದ ಜೊತೆಗೆ ಸಂಸ್ಕೃತವನ್ನು ಪೋಷಿಸಿಕೊಂಡು ಬಂದರು. ಬನವಾಸಿ ಕದಂಬರ ಕಾಲದ ನಂತರ ಹೊಗಳಿಸಿಕೊಂಡದ್ದು ಬಾದಾಮಿ ಚಾಳುಕ್ಯರ ಕಾಲದಲ್ಲಿ. ಬನವಾಸಿಯನ್ನು ಅದೆಷ್ಟು ಆಪ್ಯಾಯಮಾನವಾಗಿ ಕರೆದರು ಅಂದರೆ “ವರದಾ ತುಂಗ ತರಂಗ’ ಎಂದು ಚಾಳುಕ್ಯರ ಎರಡನೇ ಪೊಲೆಕೇಶಿಯ ಕುರಿತಾದ ಐಹೊಳೆಯ ಮೇಗುಟಿಯ ರವಿಕೀರ್ತಿಯ ಶಾಸನದಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿ ಬನವಾಸಿಯ ಕದಂಬರ ವರ್ಣನೆ ಬರುವಾಗ ರವಿಕೀರ್ತಿಯ ಪದ ಪ್ರಯೋಗವಂತೂ ಅಸದೃಶ. ವರದಾ-ತುಂಗ-ತರಂಗ- ವಿಲಸದ್ರಸ್ತಾವಲೀಮೇಖಲಾಮ್ | ವನವಾಸೀಮವದ್ಯತಃ ಸುರಪುರಪ್ರಸ್ಪರ್ಧಿನೀಂ ಸಂಪದಾ ಎಂದು ಕದಂಬರ ಪ್ರದೇಶದ ವರ್ಣನೆ ಮಾಡುತ್ತಾನೆ. ಇಂಥಹ ಒಂದೆರಡು ಶಾಸನಗಳು ಸಿಕ್ಕಿದರೆ ಕಥಾಗತದಂತಹ ಇನ್ನಷ್ಟು ರಸ ಭಕ್ಷಗಳು ಈ ಕೃತಿಕಾರರಿಂದ ಸಿಗುವುದಂತೂ ಸ್ಪಷ್ಟ, ಪ್ರಾಯಶಃ ಹರಿಷೇಣನ ಶಾಸನ ಮತ್ತು ವತ್ಸಭಟ್ಟಿಯ ಶಾಸನವಿಟ್ಟುಕೊಂಡು ಮುಂದೆ ಉದ್ದಂಥವೊಂದನ್ನು ಇದೇ ಕೃತಿಕಾರರು ಕನ್ನಡದಲ್ಲಿ ರಚಿಸಿದರೆ ನಾವು ಧನ್ಯರು. + +(ಸದ್ಯೋಜಾತ ಭಟ್ಟ) + +ಈ ಕಥಾಗತ ಭಾವನೆಗಳೊಂದಿಗೆ ಬಾಂಧವ್ಯ ಬೆಸೆಯುತ್ತದೆ. ಭಾವನೆಗಳನ್ನು ತಡಕಾಡುತ್ತದೆ. ವಿಜಯನಗರದ ಕಡೆ ಬಂದಾಗ ವಿಷಾದವೂ ಬಾಧಿಸುತ್ತದೆ. ಈ ಕೃತಿ ನನ್ನನೆಷ್ಟು ಬಾಧಿಸಿತೆಂದರೆ ಮೂರನೇ ಸಲ ಓದಿಸುವಷ್ಟು ಕಥಾಗತದಲ್ಲಿ ತಥಾಗತನೂ ಹಾಸುಹೊಕ್ಕಾಗಿ ಬಂದು ಬುದ್ಧಿಗೆ ಚುರುಕನ್ನು ಮುಟ್ಟಿಸುತ್ತಾನೆ. ಡಾ. ನವೀನ್ ಭಟ್‌(ಗಂಗೋತ್ರಿ)ಯವರಿಂದ ಇಂಥಹದ್ದೇ ಇನ್ನೂ ಹೆಚ್ಚಿನ ಕೃತಿಗಳು ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿರುವೆ. ಸಮುದ್ರಗುಪ್ತನನ್ನು ತಡಕಾಡಿದರೆ ನಮ್ಮ ಭಾಗ್ಯವದು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_131.txt b/Kenda Sampige/article_131.txt new file mode 100644 index 0000000000000000000000000000000000000000..6e11c7befa5ffdb221413361143e4aa191be2d01 --- /dev/null +++ b/Kenda Sampige/article_131.txt @@ -0,0 +1,39 @@ +ಮುಂಬಯಿ ಕನ್ನಡ ಸಾಹಿತ್ಯದ ವಿಮರ್ಶಾ ಕ್ಷೇತ್ರದಲ್ಲಿ ವಸ್ತುನಿಷ್ಠ, ಕೃತಿನಿಷ್ಠ ವಿಮರ್ಶಕರಲ್ಲಿ ಡಾ. ಕೆ. ರಘುನಾಥ್ ಅವರು ಹೆಸರು ಮುಂಚೂಣಿಯಲ್ಲಿದೆ. ಅದರಲ್ಲೂ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಸಂಶೋಧಕ, ವಿಮರ್ಶಕ ಡಾ. ಕೆ. ರಘುನಾಥ್ ಅವರ ಇತ್ತೀಚೆಗೆ ಬೆಳಕು ಕಂಡ ಕೃತಿ, “ಮುಂಬಯಿ ಕನ್ನಡ ಲೋಕ”. ಈ ಕೃತಿಯು ‘ಮುಂಬಯಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ’ ಮತ್ತು ‘ಮುಂಬಯಿ ಕನ್ನಡ ದರ್ಶನ’ ಎಂಬ ಎರಡು ಭಾಗಗಳನ್ನೊಳಗೊಂಡಿದೆ. + +(ಡಾ. ಕೆ. ರಘುನಾಥ್‌) + +ಕೈಗಾರಿಕೆ, ಬೃಹತ್ ಉದ್ಯಮಗಳು ಸೃಷ್ಟಿಗೊಂಡು ಒಂದು ಊರು ಪೇಟೆಯಾಗಿ, ಪಟ್ಟಣವಾಗಿ, ನಗರವಾಗಿ ರೂಪಾಂತರಗೊಂಡು; ಅವಕಾಶಗಳನ್ನು ಹುಡುಕುತ್ತಾ ವಲಸೆ ಬಂದ ಜನರನ್ನು ಸೇರಿಸಿಕೊಂಡು ನಗರ-ಮಹಾನಗರವಾಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ ಸೃಷ್ಟಿಗೊಂಡ ಮಹಾನಗರದಲ್ಲಿ ಉಂಟಾಗುವ ಧನಾತ್ಮಕ – ಋಣಾತ್ಮಕ ಅಂಶಗಳು, ಸಾಂಸ್ಕೃತಿಕ ಪಲ್ಲಟಗಳು, ಅಸ್ತಿತ್ವದ ಪ್ರಶ್ನೆ ಮೊದಲಾಗಿ ಕಾಡುವಾಗ ಸಾಹಿತ್ಯದಲ್ಲಿ ನಗರ ಪ್ರಜ್ಞೆ ಕಾಣಿಸಿಕೊಳ್ಳಲು ಪ್ರಾರಂಭವಾಯಿತು. + +ಪ್ರಸ್ತುತ ‘ಮುಂಬಯಿ ಕನ್ನಡ ಲೋಕ’ದಲ್ಲಿ ರಘುನಾಥ್ ಅವರು, ಪ್ರಥಮ ಭಾಗ ‘ಮುಂಬಯಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ’ಯಲ್ಲಿ ವಿಶೇಷವಾಗಿ ಮುಂಬಯಿ ಕನ್ನಡ ಕಾವ್ಯಕ್ಕೆ ಒತ್ತು ನೀಡಿ ಚರ್ಚಿಸಿದ್ದಾರೆ. ಕೃತಿಯ ಪ್ರಾರಂಭದಲ್ಲಿ, ‘ಮಹಾನಗರವೊಂದು ರೂಪುತಳೆದಾಗ ಅವಕಾಶಗಳನ್ನು ಹುಡುಕುತ್ತಾ ಬಂದ ಜನರು ಭಿನ್ನ ವಾತಾವರಣದಲ್ಲಿ ಎದುರಿಸಬೇಕಾದ ಸವಾಲುಗಳು; ಆ ಮೂಲಕ ಹುಟ್ಟಿಕೊಂಡ ಭೌತಿಕ ಮಾತ್ರವಲ್ಲದೆ ಮಾನಸಿಕವೂ ಆದ ಸಂಘರ್ಷ ನಗರ ಪ್ರಜ್ಞೆಯ ಉಗಮ ಮತ್ತು ವಿಕಾಸಕ್ಕೆ ಕಾರಣವಾಯಿತು. ಈ ಬೆಳವಣಿಗೆಗೆ ತೀವ್ರವಾಗಿ ಸ್ಪಂದಿಸಿದ ಬರಹಗಾರರು ತಮಗಾದ ಆಘಾತ ಭ್ರಮನಿರಸನದ ತಲ್ಲಣಗಳನ್ನು ತಮ್ಮ ಸೃಜನಶೀಲ ಕೃತಿಗಳ ಮೂಲಕ ವ್ಯಕ್ತಪಡಿಸಿದ್ದೇ ನಗರ ಪ್ರಜ್ಞೆಯ ಮೂಲವಾಗಿದೆ’ ಎಂದು ನಗರ ಪ್ರಜ್ಞೆ ಹುಟ್ಟುಪಡೆದ ಬಗ್ಗೆ ಡಾ. ಕೆ. ರಘುನಾಥ್ ನಿಖರವಾಗಿ ತಮ್ಮ ನಿಲುವನ್ನು ನಮ್ಮ ಮುಂದಿಡುತ್ತಾರೆ. ಅಮಿತಾವ್ ಘೋಷ್ ಅವರು ಕೃತಿ ಬಿಡುಗಡೆ ಸಂದರ್ಭ ಕೊಟ್ಟ ಮುನ್ನೆಚ್ಚರಿಕೆಯ ಮಾತುಗಳು ರಘುನಾಥ್ ಅವರಲ್ಲಿ ನಗರ ಪ್ರಜ್ಞೆಯ ಬಗ್ಗೆ ಹೊಸ ಅರಿವನ್ನು, ಚಿಂತನೆಯನ್ನು ಮೂಡಿಸಿತು. ಅದರ ಫಲಶ್ರುತಿಯಾಗಿ ಇಲ್ಲಿ ನಗರ ಪ್ರಜ್ಞೆಯ ಹೊಸ ಒಲವುಗಳು ಮೂಡಿ ಬಂದಿರುವುದನ್ನು ಗಮನಿಸಬಹುದು. + +ಅಧ್ಯಾಯ ಒಂದರಲ್ಲಿ, ‘ಹಳ್ಳಿಗಳಿಂದ ನಗರಗಳಿಗೆ ವಲಸೆ ಬರುವವರು ನಗರಗಳಲ್ಲಿನ ಮೌಲ್ಯಗಳ ಜೊತೆಗೆ ಸಂಘರ್ಷವನ್ನು ಎದುರಿಸುತ್ತಾರೆ’ ಎಂದು ಮೊದಲ್ಗೊಂಡು ನಗರ ಪ್ರಜ್ಞೆಯ ವ್ಯಾಖ್ಯಾನ ನೀಡಲಾಗಿದೆ. ನಗರೀಕರಣದ ಪರಿಣಾಮ, ನಗರೀಕರಣಕ್ಕೆ ಕಾರಣಗಳು ಇತ್ಯಾದಿಗಳನ್ನು ತಳಸ್ಪರ್ಶಿಯಾಗಿ ಅಧ್ಯಯನ ಪೂರ್ಣವಾಗಿ ಇಲ್ಲಿ ಕಟ್ಟಿಕೊಡಲಾಗಿದೆ. + +ನಗರ ಪ್ರಜ್ಞೆಯ ಬಗ್ಗೆ; ಅದೂ ಮುಂಬಯಿ ಕನ್ನಡಿಗರ ಬಗ್ಗೆ ಮಾತನ್ನಾಡುವಾಗ ಇಲ್ಲಿನ ಇತಿಹಾಸದ ಬಗ್ಗೆ ಅರಿವು ಅವಶ್ಯಕ. ಸಪ್ತ ದ್ವೀಪಗಳ ಸಮೂಹವಾಗಿದ್ದ ಮುಂಬಾಪುರಿಯ ಬಗ್ಗೆ ರಘುನಾಥ್ ಅಧ್ಯಯನ ಪೂರ್ಣವಾದ ಇತಿಹಾಸವನ್ನು ಇಲ್ಲಿ ಕಟ್ಟಿಕೊಟ್ಟಿರುವುದು ಈ ಕೃತಿಗೆ ಮಹತ್ವವನ್ನು ತಂದುಕೊಟ್ಟಿದೆ. + +‘ಬೇಂದ್ರೆಯವರು ಕೇಶವ ಸುತರ ಮೂಲಕ (ಮರಾಠಿ) ಮಾಡಿದ ಹೊಸ ಪ್ರಯೋಗಗಳು ಹೊಸ ಕಾವ್ಯಕ್ಕೆ ನಾಂದಿ ಹಾಡಿದವು’ ಎನ್ನುವ ಮೂಲಕ ಹೊಸ ಕಾವ್ಯ ಪಡಿಮೂಡಿದ ಬಗ್ಗೆ ನಮ್ಮ ಗಮನ ಸೆಳೆಯುತ್ತಾರೆ ಲೇಖಕರು. ಮುಂದೆ ನವೋದಯ, ಪ್ರಗತಿಶೀಲ, ನವ್ಯ, ದಲಿತ, ಬಂಡಾಯ ಹೀಗೆ ಕನ್ನಡ ಸಾಹಿತ್ಯದಲ್ಲಿ ವಿವಿಧ ಘಟ್ಟಗಳನ್ನು ಸ್ಥೂಲವಾಗಿ ಪರಿಚಯಿಸುತ್ತಾ ಅವುಗಳ ಮೂಲ ಸೆಲೆಗಳನ್ನು ಬಿಚ್ಚಿಡುತ್ತಾರೆ. + +‘ನವ್ಯ ಕಾವ್ಯದ ಅತ್ಯುತ್ತಮ ಪ್ರತಿನಿಧಿಯಾದ ಅಡಿಗರ ನವ್ಯವು ಒಂದು ಬಗೆಯ ನವೋದಯವಾಗಿದೆ’, ‘ಗೋಕಾಕರ ನವ್ಯತೆ ಕಾವ್ಯ ತಂತ್ರದ ಅನ್ವೇಷಣೆಯೇ ಹೊರತು ಬೇರೇನಲ್ಲ’, ‘ನವ್ಯ ಕಾವ್ಯದ ಚಳವಳಿಯು ಅತ್ಯುತ್ತಮ ಕಾವ್ಯದ ನಿರ್ಮಾಣಕ್ಕೆ ಕಾರಣವಾಯಿತು’, ‘ನವೋದಯದ ಮಾನವತಾವಾದದ ಉಪ ಉತ್ಪನ್ನವೇ ಪ್ರಗತಿಶೀಲ’ – ಹೀಗೆ ಕನ್ನಡ ಸಾಹಿತ್ಯದ ವಿವಿಧ ಘಟ್ಟಗಳನ್ನು, ಅವು ಸಾಗಿಬರುವ ನಡೆಯನ್ನು ಪ್ರಾತಿನಿಧಿಕ ಕವಿಗಳ ಕವಿತೆಗಳನ್ನು ಉಲ್ಲೇಖಿಸುತ್ತಾ ಕಟ್ಟಿಕೊಡುವ ರೀತಿ ಹೊಸ ತಲೆಮಾರಿನ ಸಂಶೋಧಕರಿಗೆ ಮಾದರಿಯಾಗಿದೆ. + +ಆಧುನಿಕ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆಯು ವಿವಿಧ ಎಂಟು ಆಯಾಮಗಳಲ್ಲಿ ಪ್ರಕಟಗೊಂಡಿರುವುದನ್ನು ಉಲ್ಲೇಖಿಸಿರುವ ಲೇಖಕರು ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಬಗ್ಗೆ ಹೊಸ ಬೆಳಕನ್ನು ಬೀರುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಮುಂದಿನ ಅಧ್ಯಯನಕಾರರಿಗೆ ಉಪಯುಕ್ತವಾಗಲಿದೆ. ಕೆ.ಎಸ್.ನ., ಜಿ.ಎಸ್.ಎಸ್., ತೇಜಸ್ವಿ, ಕಣವಿ, ಗೋಪಾಲಕೃಷ್ಣ ಅಡಿಗ, ಕೆ.ವಿ.ತಿರುಮಲೇಶ್, ನಿಸಾರ್, ಕುವೆಂಪು, ಎ.ಕೆ.ರಮಾನುಜನ್, ಗಂಗಾಧರ ಚಿತ್ತಾಲ ಮೊದಲಾದವರ ಕವಿತೆಗಳಲ್ಲಿ ಕನ್ನಡ ಕಾವ್ಯದಲ್ಲಿ ನಗರ ಪ್ರಜ್ಞೆ ಪಡಿಮೂಡಿರುವುದನ್ನು ಸೋದಾಹರಣವಾಗಿ ವಿವರಿಸಿದ್ದಾರೆ. + + + +‘ಮುಂಬಯಿ ಕನ್ನಡ ಕಾವ್ಯ’ ಶೀರ್ಷಿಕೆಯು ನಾಲ್ಕು ಭಾಗಗಳನ್ನು ಒಳಗೊಂಡಿದೆ. ಪ್ರಾರಂಭದಲ್ಲಿ ಮುಂಬಯಿ ಕನ್ನಡ ಕಾವ್ಯದ ಸ್ಥೂಲ ಸಮೀಕ್ಷೆಯನ್ನು ಲೇಖಕರು ಮಾಡಿದ್ದಾರೆ. ಹಟ್ಟಿಯಂಗಡಿ ನಾರಾಯಣರಾಯರ ‘ಆಂಗ್ಲ ಕವಿತಾವಳಿ’ಯ ಮೂಲಕ ಮುಂಬಯಿ ಕನ್ನಡ ಕಾವ್ಯದ ಉಗಮವನ್ನು ಗುರುತಿಸಿರುವ ಲೇಖಕರು ಅದರ ವೈಶಿಷ್ಟ್ಯ ಹಾಗೂ ಮಿತಿಗಳನ್ನು ವಿವರಿಸಿದ್ದಾರೆ. ಮುಂದೆ ಚುಟುಕು ಬ್ರಹ್ಮ ದಿನಕರ ದೇಸಾಯಿ, ವಿಡಂಬನಾ ಕವಿ ವಿ.ಜಿ‌. ಭಟ್, ಗಂಗಾಧರ ಚಿತ್ತಾಲ, ಬಿ.ಎ. ಸನದಿ, ಬಿ.ಎಸ್. ಕುರ್ಕಾಲ್, ಸುನೀತಾ ಶೆಟ್ಟಿ, ಜಿ.ವಿ. ಕುಲಕರ್ಣಿ, ಅರುಷಾ ಶೆಟ್ಟಿ, ಅಮಿತಾ ಭಾಗವತ್ ಮೊದಲಾದವರ ಕಾವ್ಯಗಳಲ್ಲಿ ರಾಜಕೀಯ ಪ್ರಜ್ಞೆ, ಮಣ್ಣಿನ ಸೆಳೆತ, ನಾಡು-ನುಡಿ, ವ್ಯಕ್ತಿತ್ವದ ಅನಾವರಣ, ಸಮ್ಮಿಶ್ರ ಭಾಷಾ ಸಂಸ್ಕೃತಿ, ಊರಿನಲ್ಲಿ ಆಗುತ್ತಿರುವ ಪಲ್ಲಟಗಳು ಪಡಿಮೂಡಿ ಬಂದಿರುವುದನ್ನು ಗುರುತಿಸಿದ್ದಾರೆ. + +ಮುಂಬಯಿ ಬದುಕಿನ ವಿವಿಧ ವಿನ್ಯಾಸಗಳು ಕನ್ನಡ ಕಾವ್ಯದಲ್ಲಿ ಮೂಡಿ ಬಂದಿರುವ ಬಗೆಯನ್ನು ‘ಮುಂಬಯಿ ಕವಿಗಳು ಕಂಡ ಮುಂಬಯಿ’ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇಲ್ಲಿ ಲೇಖಕರು ಜಿ.ಎಸ್.ಎಸ್. ಅವರ ‘ಮುಂಬಯಿ ಜಾತಕ’ವನ್ನು ಮೊದಲ್ಗೊಂಡು, ಜಯಂತ ಕಾಯ್ಕಿಣಿ, ಕರುಣಾಕರ ಶೆಟ್ಟಿ, ಗಿರಿಜಾ ಶಾಸ್ತ್ರಿ, ಸಾ.ದಯಾ, ಅರವಿಂದ ನಾಡಕರ್ಣಿ, ಸನದಿ, ತುಳಸಿ ವೇಣುಗೋಪಾಲ್, ಕೆ.ವಿ. ಕಾರ್ನಾಡ್, ಗೋಪಾಲ್ ತ್ರಾಸಿ, ಜಿ.ಪಿ. ಕುಸುಮಾ ಮೊದಲಾದವರ ಕವಿತೆಗಳಲ್ಲಿ ಮುಂಬಯಿ ವಿಭಿನ್ನ ರೀತಿಯಲ್ಲಿ ಅನಾವರಣಗೊಂಡಿರುವುದನ್ನು ಲೇಖಕರು ಕಂಡು ಕೊಂಡಿದ್ದಾರೆ. ಮುಂಬಯಿ ಮತ್ತು ಊರಿನ ಸಂಸ್ಕೃತಿಯನ್ನು ಲೇಖಕರು, ‘ಇದೊಂದು ತೆರೆದ ಸಂಸ್ಕೃತಿಯಾದರೆ ಅದೊಂದು ಮುಚ್ಚಿದ ಸಂಸ್ಕೃತಿ’ ಎಂದಿರುವುದು ಔಚಿತ್ಯಪೂರ್ಣವಾಗಿದೆ. + +‘ಕನ್ನಡ ಕಾವ್ಯದಲ್ಲಿ ಮೊದಲ ಬಾರಿಗೆ ಪರಕೀಯತೆಯನ್ನು ಅನುಭವಿಸಿ ಅದನ್ನು ಕಾವ್ಯದ ಮೂಲಕ ವ್ಯಕ್ತಪಡಿಸಿದ ಕವಿಯೆಂದರೆ ಕುವೆಂಪು’ ಎಂದು ವಿಶ್ಲೇಷಿಸಿರುವ ಡಾ. ರಘುನಾಥ್ ಮುಂಬಯಿ ಕನ್ನಡ ಕಾವ್ಯದಲ್ಲಿ ಪರಕೀಯತೆಯ ಹಲವು ಮುಖಗಳನ್ನು ಕಂಡುಕೊಂಡಿದ್ದಾರೆ. ಅರವಿಂದ ನಾಡಕರ್ಣಿ ಅವರ ‘ಜರಾಸಂಧ’ದಲ್ಲಿ ಬರುವ ಕೌಟುಂಬಿಕ ಪರಕೀಯತೆಯಿಂದ ಮೊದಲ್ಗೊಂಡು ಪರಿಸರದ ಪರಕೀಯತೆ, ಸಾಂಸ್ಕೃತಿಕ ಪರಕೀಯತೆ, ನಿರುದ್ಯೋಗದ ಪರಕೀಯತೆ, ಸಮುದಾಯ ಪರಕೀಯತೆಗಳು ಮುಂಬಯಿ ಕನ್ನಡ ಕಾವ್ಯದಲ್ಲಿ ಪಡಿಮೂಡಿರುವ ಬಗ್ಗೆ ಸವಿವರವಾಗಿ ಗುರುತಿಸಿದ್ದಾರೆ. + +ಮುಂಬಯಿ ಕನ್ನಡ ಕಾವ್ಯದಲ್ಲಿ ಸಂಘರ್ಷದ ಸ್ವರೂಪವನ್ನು ಮುಂದಿನ ಅಧ್ಯಾಯದಲ್ಲಿ ಕಾಣಬಹುದು. ಇಲ್ಲಿ ಲೇಖಕರು ಸ್ವದೊಡನೆ ಸಂಘರ್ಷ, ಮನುಷ್ಯ ಮತ್ತು ಸಮಾಜದೊಡನೆ ಸಂಘರ್ಷ, ಮನುಷ್ಯ ಮತ್ತು ವಿಧಿ, ಮನುಷ್ಯ ಮತ್ತು ನಿಸರ್ಗ, ಮನುಷ್ಯ ಮತ್ತು ತಂತ್ರಜ್ಞಾನ – ಎಂದು ಸಂಘರ್ಷದ ವಿಭಿನ್ನ ನೆಲೆಗಳನ್ನು ಗುರುತಿಸಿರುವುದು ಸಾಹಿತ್ಯದಲ್ಲಿ ನಗರ ಪ್ರಜ್ಞೆಗೆ ಹೊಸ ಆಯಾಮ ಕೊಡಲು ಸಹಕಾರಿಯಾಗಬಲ್ಲುದು. ಈ ಅಧ್ಯಾಯದಲ್ಲಿ ಭೌತಿಕ ಅಸ್ತಿತ್ವಕ್ಕಾಗಿ ನಡೆಸುವ ಸಂಘರ್ಷ, ಅಸ್ಮಿತೆಯ ಸಲುವಾಗಿನ ಸಂಘರ್ಷ ಹಾಗೂ ಮೌಲ್ಯಗಳ ಸಂಘರ್ಷಗಳ ಬಗ್ಗೆ ಕವಿತೆಗಳ ಆಧಾರದಿಂದ ಕಟ್ಟಿಕೊಡಲಾಗಿದೆ. + +ಪರಕೀಯತೆ ಮತ್ತು ಸಂಘರ್ಷಗಳ ಪರಿಣಾಮಗಳನ್ನು ಮುಂದಿನ ಭಾಗದಲ್ಲಿ ಲೇಖಕರು ಕಟ್ಟಿಕೊಟ್ಟಿದ್ದಾರೆ. ‘ಶಿವಸೇನೆ’ ಎಂಬ ರಾಜಕೀಯ ಪಕ್ಷದ ಉದಯ, ಕೋಮುವಾದ, ವಸತಿ ಸಮಸ್ಯೆ: ಅದರ ಪರಿಣಾಮ, ಜೋಪಡಾ ಪಟ್ಟಿಗಳು – ಇವೆಲ್ಲಕ್ಕೂ ಮುಂಬಯಿ ಕವಿಗಳು, ಅದರ ಪರಿಣಾಮವನ್ನು ತಮ್ಮ ಕವಿತೆಗಳಲ್ಲಿ ವಿವಿಧ ಬಗೆಯಲ್ಲಿ ಚಿತ್ರಿಸಿರುವುದನ್ನು ಸೋದಾಹರಣವಾಗಿ ಕಟ್ಟಿಕೊಡಲಾಗಿದೆ. + +ನಗರೀಕರಣದಿಂದಾಗಿ ಉಂಟಾಗಿರುವ ಸಮಸ್ಯೆಗಳಿಗೆ ಆಧುನಿಕ ಕನ್ನಡ ಕಾವ್ಯ ಮತ್ತು ಮುಂಬಯಿ ಕನ್ನಡ ಕಾವ್ಯಗಳು ಯಾವ ಪರ್ಯಾಯಗಳನ್ನು ಸೂಚಿಸಿವೆ ಎಂಬುವುದನ್ನು ಈ ಭಾಗದ ಏಳನೇ ಅಧ್ಯಾಯದಲ್ಲಿ ಕಾಣಬಹುದು. ‘ಹೋಗುವೆನು ನಾ ಮಲೆನಾಡಿಗೆ’ ಎಂದು ಹೇಳಿರುವ ಕವಿ ಕುವೆಂಪು, ‘ಕಾಡಿನ ಕವಿಯು ನಾನು’ ಎಂದು ಈ ಮೂಲಕ ನಾಗರಿಕ ಜಗತ್ತಿಗೆ ಪರ್ಯಾಯವಾಗಿ ನಿಸರ್ಗ ಸೃಷ್ಟಿಯನ್ನು ನಮ್ಮ ಮುಂದಿಟ್ಟಿರುವುದನ್ನು ಉಲ್ಲೇಖಿಸಿರುವ ಲೇಖಕರು ಸನದಿ, ನಾಡಕರ್ಣಿ, ಎ.ಕೆ. ರಾಮಾನುಜನ್, ಜಯಂತ ಕಾಯ್ಕಿಣಿ, ಕೆ.ಎಸ್.ನ., ಚಿತ್ತಾಲ ಮೊದಲಾದವರು: ‘ಹಸಿರು ಗ್ರಾಮಾಳಿ ಕರೆಯುತಿದೆ’, ‘ಹನೇ ಹಳ್ಳಿಗೆ ರೈಲೇ ಇಲ್ಲ’, ‘ಊರು ನಾನು ಮತ್ತು ಸಾವು’, ‘ಸಂಪರ್ಕ’, ‘ಹಚ್ಚಗೆ ಕೊಯ್ದ ಕೊತ್ತಂಬರಿ ಸೊಪ್ಪು’ – ಮೊದಲಾಗಿ ಕೆಲವೊಂದು ಪರ್ಯಾಯಗಳ ಬಾಗಿಲು ಬಡಿದಿರುವುದನ್ನು ಸೋದಾಹರಣವಾಗಿ ಕಟ್ಟಿಕೊಟ್ಟಿದ್ದಾರೆ. + +ಕೃತಿಯ ಭಾಗ – ೨ರಲ್ಲಿ ‘ಮುಂಬಯಿ ಕನ್ನಡ ದರ್ಶನ’ವನ್ನು ನಾವು ಕಾಣಬಹುದು. ಇಲ್ಲಿ ಚಿತ್ತಾಲರ ಸಾಹಿತ್ಯದಲ್ಲಿ ನಗರ ಪ್ರಜ್ಞೆ, ವ್ಯಾಸರಾಯ ಬಲ್ಲಾಳರ ಒಡನಾಟದ ಕ್ಷಣಗಳಿವೆ. ಮಣಿಮಾಲಿನಿ ಅವರ ದೃಷ್ಟಿ ಮತ್ತು ಸೃಷ್ಟಿ, ಗಿರಿಜಾ ಶಾಸ್ತ್ರಿ ಅವರ ಕಥಾಮಾನಸಿ, ಸುನೀತಾ ಶೆಟ್ಟಿ ಅವರ ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸ್ರೀ ಪಾತ್ರಗಳು ಮೊದಲಾದ ಕೃತಿಗಳ ಸಮೀಕ್ಷೆ, ಪರಿಚಯಗಳಿವೆ. ಕೆಲವೊಂದು ಕೃತಿಗಳ ಇತಿ ಮಿತಿಗಳನ್ನೂ ಈ ಭಾಗದಲ್ಲಿ ಲೇಖಕರು ಗುರುತಿಸಿದ್ದಾರೆ. ‘ಅಧ್ಯಯನ ವಸ್ತುನಿಷ್ಠ ದೃಷ್ಟಿಕೋನದಿಂದ ಮಾತ್ರ ಸಾಧ್ಯ’ ಎಂದಿರುವ ಲೇಖಕರ ಈ ನಿಲುವು ಕೃತಿಯುದ್ದಕ್ಕೂ ನಮಗೆ ಕಂಡುಬರುತ್ತದೆ. + + + +ರಘುನಾಥರ ಗಂಭೀರವಾದ ಓದು, ಅಧ್ಯಯನಶೀಲತೆ, ಸಂಶೋಧನಾ ಪ್ರವೃತ್ತಿ, ಅಚ್ಚುಕಟ್ಟುತನ ಈ ಕೃತಿಯಲ್ಲಿ ಕಂಡುಬರುತ್ತದೆ. ಮುಂದೆ ಕನ್ನಡ ಸಾಹಿತ್ಯದಲ್ಲಿ ನಗರ ಪ್ರಜ್ಞೆಯ ಬಗ್ಗೆ ಅಧ್ಯಯನ ಮಾಡುವವರಿಗೆ ಇದೊಂದು ಮಾದರಿ ಕೈಪಿಡಿ ಹಾಗೂ ಆಕರ ಗ್ರಂಥವಾಗಲಿದೆ. + +ಮುಂಬೈ ನಿವಾಸಿಯಾಗಿರುವ ದಯಾನಂದ ಸಾಲ್ಯಾನ್ ಅವರು ಕವಿಯಾಗಿ, ನಾಟಕಕಾರರಾಗಿ ಗುರುತಿಸಿಕೊಂಡಿದ್ದಾರೆ. ‘ಜಾತ್ರೆಯ ಮರುದಿನ’ ಕವನ ಸಂಕಲನ, ಪೊಸ ಬೊಲ್ಪು ತುಳು ಕವಿತೆಗಳು, ‘ ಒಸರ್’ ತುಳು ನಾಟಕ, ಪಾಟಕ್ ಮತ್ತು ಇತರ ಕತೆಗಳು, ಇವರ ಪ್ರಕಟಿತ ಕೃತಿಗಳು. ‘ಸುರಭಿ’ ಸುರೇಶ್ ಭಂಡಾರಿಯವರ ಅಭಿನಂದನ ಗ್ರಂಥ ಸಂಪಾದನೆ ಮಾಡಿದ್ದು ಇವರ ಕವಿತೆಗಳಿಗೆ ಸಂಕ್ರಮಣ ಬಹುಮಾನ ಪಡೆದಿದ್ದಾರೆ. \ No newline at end of file diff --git a/Kenda Sampige/article_132.txt b/Kenda Sampige/article_132.txt new file mode 100644 index 0000000000000000000000000000000000000000..19cad65330286baea9eaec30e88d4cb6ee21471f --- /dev/null +++ b/Kenda Sampige/article_132.txt @@ -0,0 +1,45 @@ +ಹೆಗ್ಗಾನಿನ ನಡುವಿನ ಸಣ್ಣಕಾಡುಹಳ್ಳಿಯಂಥ ಕತ್ಲೆಕಾನು ಊರಿನ ಜನರ ಮನೆಗಳ ದಾಟಿ, ಮರಗಳ ಮನೆಯ ಕಾಡುದಾರಿಯನ್ನು ಪ್ರವೇಶಿಸಿದ್ದೆ. ಕಾಡಿನ ಮನಮೋಹಕ ದಾರಿ. ಯಾವ ಜೀವಜಂತು ಬೇಕಾದರೂ ಬರಬಹುದು ಎದುರು ನಿಲ್ಲಬಹುದು ಹಿಂದಿನಿಂದ ಕಾಣಿಸಿಕೊಳ್ಳಬಹುದು ಮೇಲಿನಿಂದ ಹಾರಬಹುದು ಅನ್ನುವ ಆತಂಕಿತ ನಿರೀಕ್ಷೆ ವಿಶೇಷ ಸುಖದ್ದು. ಬಹಳ ವರ್ಷಗಳ ಮೇಲೆ ಬಹಳ ದೂರ ಒಬ್ಬನೇ ಕಾಡಿನಲ್ಲಿ ನಡೆಯುತ್ತಿದ್ದೆ. ಬಹಳ ವರ್ಷಗಳ ಮೇಲೆ ನನ್ನನ್ನು ನಾನೇ ಎಚ್ಚರಿಸಿಕೊಂಡು ಕೈಬಾಯಿಮುಖಮೈ ತೊಳೆಸಿಕೊಂಡು ನನ್ನ ಹಸಿವಿಗೆ ನಾನೇ ಉಪಾಹಾರವನ್ನು ಹುಡುಕಿಕೊಂಡು ಹೋಗಿ ದುಡ್ಡಿಗೆ ಆಹಾರವನ್ನು ಖರೀದಿಸಿ ಹೊಟ್ಟೆ ತುಂಬಿಸಿಕೊಂಡು ನಡೆಯುತ್ತಿದ್ದೆ. ಬಹಳ ವರ್ಷಗಳ ಮೇಲೆ ನನ್ನ ಶ್ವಾಸಕೋಶಗಳಲ್ಲಿ ವಾಹನಗಳ ಮಾಲಿನ್ಯವಿರದ ಗಾಳಿ, ಅತಿಹೆಚ್ಚಿನ ಮರಗಳು ಬಿಡುವ ಅತಿಹೆಚ್ಚಿನ ಆಮ್ಲಜನಕವಿರುವ ಗಾಳಿ ತುಂಬಿಕೊಂಡಿತ್ತು. ಆಧುನಿಕತೆಯ ಯಂತ್ರಗಳು ಕರ್ಕಶ ಶಬ್ಧವನ್ನು ಮಾಡದ ಕಾಡಿನ ಸಜೀವ ಸದ್ದು ನನ್ನ ಕಿವಿಗಳಿಗೆ ಬಿದ್ದು ಪುಳಕವನ್ನೆಬ್ಬಿಸುತ್ತಿತ್ತು. + +(ಇಂದ್ರಕುಮಾರ್ ಎಚ್.ಬಿ.) + +ಕೆಂಪುಹುಡಿಮಣ್ಣಿನ ಮೂರು ಸುತ್ತು ಎಡಕ್ಕೆ ಹೊರಳುವ ನಾಲ್ಕು ಸುತ್ತು ಬಲಕ್ಕೆ ಹೊರಳುವ ದಾರಿ ಮುಗಿಯಿತು. ಈಗ ಕಪ್ಪುಮಣ್ಣಿನ ಬೇರೆ ತರಹದ ಮರಗಳ ದಟ್ಟಕಾಡುದಾರಿ. ಕಾಲಿಗೋ ಪುಳಕ! ದಾರಿ ಹೊರಳಿದಂತೆ ಹೊರಳುತ್ತಾ ನಡೆದೆ. ಸಣ್ಣ ಸಣ್ಣ ತಿರುವುಗಳು. ಎಡಬಲ ಎದೆಮಟ್ಟದ ಪೊದೆಗಳು. ಸಣ್ಣಸಣ್ಣ ಕಾಡುಹೂಗಳು, ಸಣ್ಣಸಣ್ಣ ಕಾಡುಹಣ್ಣುಗಳು. ಹಾವಿನಂತೆ ಸುರುಳಿಸುರುಳಿ ಸುತ್ತಿಕೊಂಡು ಮರವನ್ನೇ ಬಗ್ಗಿಸಿದಂತೆ ಮೇಲಿಂದ ತೇಲಾಡುವ ಬಳ್ಳಿಗಳು. ದಪ್ಪನೆಯ ಕಾಂಡದ ಮರಗಳ ಮೇಲೆ ಬೇರೆ ತರಹದ ಸಣ್ಣಸಣ್ಣ ಎಲೆಯ ಸಸ್ಯಗಳು. ಜೀವವೈವಿಧ್ಯದ ಸ್ಪಷ್ಟ ಮಾದರಿ. ನೋಡಿ ಕಣ್ತುಂಬಿಸಿಕೊಳ್ಳುವುದು ದಿನದ ಅಪರೂಪದ ಸಮಯ. ಕಳೆದೆರೆಡು ವಾರಗಳಿಂದ ಅನುಭವಿಸುತ್ತ ಬಂದಿದ್ದೆ. ದೇಹವನ್ನು ಹುರಿಗೊಳಿಸುತ್ತ. ಅನುಭವದ ಹೊಸ ಶಾಖೆ ಬುದ್ಧಿಯಲ್ಲಿ ಆಪ್ತವಾಗಿ ಸ್ಥಾಪಿಸಿತ್ತು. ಹೊಸ ಹೊಸ ಪಕ್ಷಿ ಸದ್ದು ಹೊಸ ಹೊಸ ವಾಸನೆ ನನ್ನ ಗುರುತಿಸು ನನ್ನ ಕಂಡು ಹಿಡಿ ಹೊಸ ಹೊಸ ಎತ್ತರ ನನ್ನ ಕ್ರಮಿಸು ಅಂತ ಪ್ರೇರಣೆ ನೀಡುತ್ತಿತ್ತು. ಪ್ರಕೃತಿ ಸಹಜ ಶುದ್ಧ ಪ್ರೇರಣೆ. ಸ್ಪಂದಿಸುತ್ತಿದ್ದೆ. ಹೊಸ ಮನುಷ್ಯನಾಗುತ್ತಿದ್ದೆ. + +ಎದ್ದ ಮೇಲಿನ ಮುಖತೊಳೆ, ಸ್ನಾನ ಮಾಡು, ಬಟ್ಟೆ ಹಾಕಿಕೋ, ಸಾಮಾನು ಜೋಡಿಸಿಕೋ, ಬೀಗ ಹಾಕು ಕೆಲಸಗಳಿಗೆ ಅರ್ಧ ಗಂಟೆ ಹಿಡಿದರೂ, ತಿಂಡಿ ತಿಂದು ಸಣ್ಣ ಪೇಟೆಯ ಎಡಬಲದ ಅಂಗಡಿಮುಂಗಟ್ಟು ದೇವಸ್ಥಾನ, ಚರ್ಚಿನ ದಾರಿ ಕ್ರಮಿಸಿ ಕಾಡಿಗೆ ಹೊರಳಲು ಮುಕ್ಕಾಲು ಗಂಟೆ ಹಿಡಿದರೂ, ಈ ಕಾಡಿನ ಮಾರ್ಗದಲ್ಲಿ ಕ್ರಮಿಸಿ ನನ್ನ ಪ್ರಕೃತಿ ಸೌಂದರ್ಯದ ಜೀವವೈವಿಧ್ಯದ ಸೃಷ್ಟಿಸೊಬಗಿನ ಕೀಟಹುಳುಗಳ ಲೋಕದ ಸರೀಸೃಪಗಳ ಸಸ್ತನಿಗಳ ಹಕ್ಕಿಗಳ ಪ್ರಪಂಚ ತಡೆದು ನಿಲ್ಲಿಸಿ ನನ್ನ ನೋಡು ನನ್ನ ಮುಟ್ಟು ನನ್ನ ಬಳಸು ನನ್ನ ವಿಶೇಷತೆ ಗಮನಿಸು ಎಂದಂತಾಗಿ ಒಂದೂವರೆ ಗಂಟೆ ಮೀರಿ ಬಿಡುತ್ತಿತ್ತು. ಹತ್ತು ಗಂಟೆಯ ಆಸುಪಾಸಿಗೆ ಈ ಕಾಡು ನನ್ನ ಕೈ ಬಿಡುತ್ತಿತ್ತು. ವಿಶೇಷ ಕಳೆ ಬೆವರಿನ ಮುಖದ ಮೇಲೆ ಆಡುತ್ತಿರುತ್ತಿತ್ತು. + +ಇಂದು ಇಷ್ಟು ದಿನ ಕಾಣಿಸಿರದ ಹೂವೊಂದು ಕಾಣಿಸಿ, ನನ್ನ ಮುಂದೆ ಹೋಗದೆ ತಡೆದು ನಿಲ್ಲಿಸಿತು. ಅದರ ವಿಶೇಷ ನೆರಳೆ ಬಿಳಿ ಮಿಶ್ರಿತ ಬಣ್ಣ ಒಮ್ಮೆಲೆ ಕಣ್‌ಸೆಳೆಯಿತು. ಕಿತ್ತೆ. ಕಿತ್ತ ಮೇಲೆ ಮೂಸಿದೆ, ಹೊರಳಿಸಿ ನೋಡಿದೆ. ಕನಕಾಂಬರ ದಾಸವಾಳದ ಮಿಶ್ರಿತ ಆಕೃತಿಯ ಹೊಸ ಹೂವು. ವಿಶೇಷ ವಾಸನೆ. ಎಲ್ಲ ದಳ ಮುಟ್ಟಿ ಅರಳಿಸಿ ಅಗಲಿಸಿ ನೋಡಿದೆ. ನಡೆದೆ. ಬಿಸಾಡಲು ಮನಸ್ಸು ಬರಲಿಲ್ಲ. ಏನು ಮಾಡಬೇಕೆಂದು ಹೊಳೆಯಲಿಲ್ಲ. ಒಮ್ಮೆಲೆ ಸಣ್ಣ ಜ್ಞಾನೋದಯ. ಹಾಗೇ ಹೂವಿದ್ದಲ್ಲೇ ಗಿಡದ ಬಳಿ ಬಗ್ಗಿ ಅದನ್ನು ಮುಟ್ಟಿ ಹೊರಳಿಸಿ ಮೂಸಿ ನೋಡಬಹುದಿತ್ತಲ್ಲ, ಕೀಳಬಾರದಿತ್ತು. ಇನ್ನು ಸ್ವಲ್ಪ ಹೊತ್ತಾದರೂ ಅದು ತಾನಾಗಿ ಇರುತ್ತಿತ್ತು. ದೊಡ್ಡ ವಿಜ್ಞಾನದ ಸಂಶೋಧಕ, ಲೇಖಕ, ಬೋಧಕನಂತೆ ಕಿತ್ತು ಬಿಟ್ಟೆ. ಈಗಿನಿಂದ ಅದರ ಕೊನೆಯ ಕ್ಷಣಗಳು ಶುರು. ಈಗ ಏನು ಮಾಡಲಿ, ಎಲ್ಲಿ ಇಡಲಿ. ಕಿತ್ತ ಜಾಗದಲ್ಲೀಗ ಇದಕ್ಕೆ ಸ್ಥಾನವಿಲ್ಲ. ಜೇಬಲ್ಲಿಟ್ಟರೆ ಹಾಳಾದೀತೆಂದು, ಕೈಯಲ್ಲೇ ಹಿಡಿದು ನಡೆದೆ. ಕಾಡುದಾರಿ ನಿಧಾನ ಏರುದಾರಿಯಾಗಿ ಸುರುಳಿದಾರಿಯಾಗಿ ಏದುಸಿರಿನ ಸುಸ್ತಿನ ದಾರಿಯಾಯಿತು. ನಡೆದೆ. ಹತ್ತಿದಂತೆ ನಡೆದೆ. ಈಗ ದೊಡ್ಡ ಆವರಣದಲ್ಲಿ ಮಧ್ಯ ನೆಟ್ಟಗೆ ನಿಂತ ಬೃಹತ್ ಬಂಗಲೆಮನೆಯ ತೋರಿಸಿತು. + +ಇಂತಹುದೊಂದು ಕನಸಿನ ಕಟ್ಟಡದಲ್ಲಿ ಕನಸಿನಂತೆ ಜನರು ವಾಸಿಸುತ್ತ ಅವರೊಡನೆ ನಾನು ಒಡನಾಡುತ್ತ ಹೆಚ್ಚು ಅವಸರದಲ್ಲದ ಹೆಚ್ಚು ಒತ್ತಡವಲ್ಲದ ಹೆಚ್ಚು ಮೈಕೈನೋವಿಲ್ಲದ ಬಿಸಲಲ್ಲದ ನೆರಳೇ ಆಗಿರುವ ಗಾಳಿ ಬೆಳಕು ಸುಳಿಯುತ್ತಲೇ ಇರುವ ವಿರಾಮಕ್ಕೆ ಎದ್ದು ಓಡಾಡಿದರೆ ಮತ್ತೆ ಇದೇ ಕಾಡಿನ ಮರಗಳ ನೆತ್ತಿ ಅವುಗಳ ಮೇಲಿನ ನೀರಾವಿಯ ಮಬ್ಬು ಅವುಗಳ ಮೇಲಿನ ಪಶ್ಚಿಮ ಘಟ್ಟಗಳು ಅವುಗಳ ಮೇಲಿನ ನೀಲಿ ನೀಲಿ ನೀಲಿ ಆಕಾಶ. ಸ್ವರ್ಗದ ಬಾಗಿಲಿಗೆ ಬಂದು ನಿಂತಿದ್ದೆ. ಅಡ್ಡಗಲದ ದೊಡ್ಡ ಗೇಟು ತೆರೆದೆ. ಶಬ್ದ ಮಾಡಿತು. ನಾಯಿ ಓಡಿಬರಲಿಲ್ಲ. ದೂರದಲ್ಲಿ ಟೋಪಿ ಗಡ್ಡದ ಮುದಿಕೆಲಸಗಾರ ಕುಕ್ಕುರು ಕೂತು ಬಗ್ಗಿ ಹೂ-ಗಿಡಗಳನ್ನು ಗಮನಿಸುತ್ತಿದ್ದ. ಆವರಣ ಪ್ರವೇಶಿಸಿದೆ. ದುಂಡನೆಯ ಕಲ್ಲುಗಳನ್ನು ಹಾಕಿ ದಾರಿ ಮಾಡಿದ ಜಾಗದಲ್ಲಿ ನಡೆದೆ. ಕಾಲುದಾರಿಯ ಆಚೀಚೆ ಸಣ್ಣಹುಲ್ಲುಗಳು ಇನ್ನಾದರೂ ಇಬ್ಬನಿಯನ್ನು ಇಟ್ಟುಕೊಂಡಿದ್ದವು. ನಾಲ್ಕೇ ಮೆಟ್ಟಲೇರಿ ಬೃಹತ್ ಕಟ್ಟಡದ ಬೃಹತ್‌ಬಾಗಿಲ ಬಳಿ ನಿಂತೆ. ದೀರ್ಘ ಉಸಿರು ತೆಗೆದುಕೊಂಡೆ. ಎತ್ತರದ, ಮೇಲೆ ಕಮಾನಿ ಆಕಾರದಲ್ಲಿರುವ, ಮುಟ್ಟಿದರೆ ತಾನು ನಮ್ಮನ್ನು ಮುಟ್ಟಿ ಖುಷಿಕೊಡುವಂತಹ ಸಾಗುವಾನಿಯ ಕಲಾಕೃತಿಯುಳ್ಳ ಬಾಗಿಲು. ಅದಕ್ಕೆ ತಟ್ಟಲೆಂದೇ ಇಳಿಬಿಟ್ಟಿರುವ ವಿಶೇಷ ವಿನ್ಯಾಸದ ಲೋಹದ ಬಳೆ. ಟಕ್ ಟಕ್ ಎರಡು ಬಾರಿ ತಟ್ಟಿದೆ. ಎರಡು ನಿಮಿಷ ಕಾದೆ. ಬಾಗಿಲು ತೆರೆದುಕೊಳ್ತು. ತಳ್ಳಿ ಒಳ ಹೊಕ್ಕೆ. ಹೊರಗಿನ ಲೋಕ ಮರೆಯಾಯಿತು. ಹೊಸ ಒಳಲೋಕ ಶುರುವಾಯಿತು. ಪ್ರಕೃತಿಸೃಷ್ಟಿಯಿಂದ ಮನುಷ್ಯ ಸೃಷ್ಟಿಗೆ. ಹೊರಗೊಂದು ಲೋಕ, ಒಳಗೊಂದು ಲೋಕ. ಮನುಷ್ಯನ ಆಯ್ಕೆಯ ಮನುಷ್ಯನ ವಾಸದ ಮನುಷ್ಯ ವಾಸನೆಯ – ಸುಖದ ಇರುವಿಕೆಯ ಸೌಲಭ್ಯದ ಲೋಕ. ಕಣ್ಣು ಮೂಗು ಚರ್ಮ ನಾಲಗೆಗಳಿಗೆ ಮತ್ತೊಂಥರ ಸುಖದ ಲೋಕ. ಅದೇ ವಿಶೇಷ ವಾಸನೆ ವಿಶೇಷ ಭಾವವನ್ನು ಸ್ಫುರಿಸಿತು. ಅದೇ ಮೌನ. ಅವವೇ ಕೋಣೆಗಳೊಳಗೆ ನೋಡಲಾರದೆ ನೋಡಲಾಗದೆ ಇರಲಾರದೆ ಕಣ್ಣಂಚಿನಿಂದ ಅಲ್ಲಿಂದ ಹೊರಬಹುದಾದ ಅಥವಾ ಅಲ್ಲಿರಬಹುದಾದ ವಸ್ತುವಿಶೇಷಗಳನ್ನು ಗಮನಿಸುತ್ತ ಡೈನಿಂಗ್ ಟೇಬಲ್ ಇರುವ ಜಾಗದಲ್ಲಿ ನಿಂತೆ. ಮನೆಯ ಕೆಲಸದವಳು ಬಂದಳು. ಕಪ್ಪುಬಣ್ಣದವಳು, ಗುಂಗುರುಗೂದಲಿನವಳು. ಈ ಎರಡು ವಾರಗಳಲ್ಲಿ ನಾಲ್ಕೇ ಬಾರಿ ಮಾತನಾಡಿದವಳು. ಟ್ರೇನಲ್ಲಿ ಜ್ಯೂಸ್ ಹಿಡಿದಿದ್ದಳು. ತೆಳ್ಳನೆಯ ಉದ್ದನೆಯ ಗಾಜಿನ ಲೋಟದಲ್ಲಿನ ಹಸಿರು ಬಣ್ಣದ ಜ್ಯೂಸ್. ಗಾಜಿನ ಲೋಟವನ್ನು ಬಾಯಿಕಚ್ಚಿ ಕುಡಿದು ಟ್ರೇನಲ್ಲೇ ಇಟ್ಟೆ. ಹೊರಳಿದಳು ಕಿಚನ್ನಿನ ಕಡೆ. ಜೀವ ತಣ್ಣಗಾಯಿತು. ಮೈಮೇಲಿನ ಬೆವರೂ ತಣ್ಣಗಾಯಿತು.ಬಾಯೊಳಗೆ ಒಂಥರಾ ಹೊಸ ಸಪ್ಪೆಸಪ್ಪೆ ಸಿಹಿಸಿಹಿ ಒಗರು ಮಿಶ್ರಿತ ರುಚಿ. ಬದಲಾವಣೆ ತರುವ ರುಚಿ ಅಂತಲೇ ಅದಕ್ಕೆ ಹೆಸರಿಟ್ಟಿದ್ದೆ. + +ಬಲಕ್ಕೆ ಹೊರಳಿ ಸುರುಳಿಯಾಕಾರದ ಮೆಟ್ಟಿಲುಗಳನ್ನು ಮರದ ಹ್ಯಾಂಡ್‌ರೇಲಿಂಗ್ ಹಿಡಿದು ನಿಧಾನಕ್ಕೆ ಏರಿದೆ. ಸಂಭ್ರಮವೂ ಏರತೊಡಗಿತು. ಈಗಾಗಲೇ ಕತ್ಲೆಕಾನಿನಿಂದ ಬಹಳಷ್ಟು ದೂರ ಬಂದಿದ್ದೇನೆ. ಬೆಳಕಿನಕಾನು, ಐಷಾರಾಮಿ ಕಾನು ಇದು. ಈಗ ಬಹಳಷ್ಟು ಎತ್ತರಕ್ಕೆ ಹೋಗುತ್ತಿದ್ದೇನೆ. ಇದೊಂಥರ ಸುತ್ತಲೆಕಾನು. ತಿರುಗಲೆ ಕಾನು. ನನ್ನ ದೂರದ ಬಾಡಿಗೆಮನೆ ಗೂಡೇಶಾ, ಸಣ್ಣಚುಕ್ಕೆಯಾಗುವಷ್ಟು ಎತ್ತರ ಮತ್ತು ದೂರ. ಮೊದಲನೆಯ ಮಹಡಿ. ಮೂರುದಿಕ್ಕಿಗೂ ವಿಸ್ತರಿಸಿದ ಸಣ್ಣದಾರಿ, ಎಡಬಲ ಕೋಣೆಗಳು. ಮತ್ತೊಂದು ಮಹಡಿಗೆ ಮೆಟ್ಟಿಲೇರಿದೆ. ಮೆಟ್ಟಿಲ ಪಕ್ಕದ ಒಂದು ಗಾಜಿನಕಿಟಕಿ ಪ್ರಪಾತವನ್ನು ತೋರಿಸಿ ಮನುಷ್ಯನನ್ನು ಸೊಕ್ಕಿಲ್ಲದವನನ್ನಾಗಿ ಮಾಡಿಸುವಂತ ಅದ್ಭುತರಮ್ಯ ದೃಶ್ಯ. ಎರಡು ನಿಮಿಷ ನಿಲ್ಲಲೇಬೇಕು ನೋಡಲೇ ಬೇಕು. ಪಾಚಿಹಸಿರು, ಗಿಣಿಹಸಿರು, ಕೆಂಪಸಿರು, ಕೆಂದಸಿರು, ಕಪ್ಪಸಿರುಗಳ ಅಲೆಅಲೆಅಲೆ ಮರಗಳ ನೆತ್ತಿ.. ಹೊಗೆ-ಆವಿ-ಇಬ್ಬನಿಮಿಶ್ರಿತ ಗಾಳಿಯಾಟ. ಅಲ್ಲೆಲ್ಲೋ ಸಣ್ಣಗೆ ಬೀಳುವ ಜಲಪಾತವೊಂದರ ಬಿಳಿನೊರೆನೀರು. ಮತ್ತೊಂದು ಮಹಡಿ ದಾಟಿದೆ ಮತ್ತೆ ಮೂರು ದಿಕ್ಕಿಗೆ ಹೊರಟ ಎಡಬಲ ಕೋಣೆಗಳ ಜಾಗ. ಮತ್ತೆ ಹೊರಳಿ ಕೊನೆಮಹಡಿಯ ಮೆಟ್ಟಿಲೇರಿದೆ. ಒಮ್ಮೆಲೆ ಒಬ್ಬನೇ ಅನ್ನುವಷ್ಟು ಹೆದರಿಕೆಯಾಗುವ ಜಾಗ. ವಿಲಕ್ಷಣ ಗಾಳಿಯ ಸುಯ್ದಾಟದ ಸದ್ದಿನ ಜಾಗ. ಒಂದೇ ವಿಶಾಲಕೋಣೆ. ಚೂಪುಛಾವಣಿಯ ನಾಲ್ಕು ದಿಕ್ಕಿಗೆ ಬಾಲ್ಕನಿ ತೆರೆಯಲ್ಪಟ್ಟ ದೊಡ್ಡ ಕಿಟಕಿಗಳ ವಿಶೇಷ ವಿನ್ಯಾಸದಲ್ಲಿ ಹಾರಾಡುವ ತೆಳುಬಿಳಿ ಕರ್ಟನ್ನುಗಳ ದೊಡ್ಡಪೇಂಟಿಂಗ್‌ಗಳ ಅಪರೂಪದ ಮರಮುಟ್ಟುಗಳ ಪೀಠೋಪಕರಣಗಳ ನಮ್ಮನ್ನು ಬೇರೆ ಯಾರೋ ಆಗಿಸಿಬಿಡುವಂಥಹ ಜಾಗ. + + + +ಇಲ್ಲಿ, ಈ ಜಾಗದಲ್ಲಿ ನನಗೆ ಒಂದು ಕೆಲಸ ಹುಟ್ಟಿಸಲಾಗಿತ್ತು. ಇದೊಂಥರ ಪುಣ್ಯವೇ ಅಂದುಕೊಂಡರೂ ನಿಜವೆಂದು ನಂಬಲಾಗದ ಸ್ಥಿತಿಯಲ್ಲಿ ನಾನಿದ್ದೆ. ಈ ಕೆಲಸ ನೆಚ್ಚಿಕೊಂಡು, ನಂಬಿಕೊಂಡು ಇನ್ನೂರು ಕಿಲೋಮೀಟರ್ ಕ್ರಮಿಸಿ ಬಂದಿದ್ದೆ. ನನ್ನ ಕೆಲಸದಲ್ಲಿ ಲೋಪವಿರಲಿಲ್ಲ, ಮೊದಲ ದಿನದ ಕೆಲನಿಮಿಷಗಳಲ್ಲೇ ನಾನು ಅವರು ಹುಡುಕುತ್ತಿದ್ದ ಸೂಕ್ತ ವ್ಯಕ್ತಿ ಅನ್ನುವಂತೆ ತಲೆಯಾಡಿಸಿದ್ದರು. ಬದುಕಿನ ವಿಲಕ್ಷಣ ಸನ್ನಿವೇಶದ ವಿಚಿತ್ರ ಸಮಯದಲ್ಲಿ ದೇಹ ಬಲುವಿಕಾರವಾಗಿ ವರ್ತಿಸುತ್ತಿದ್ದ ಕಾಲದಲ್ಲಿ ಈ ಸ್ವರ್ಗವನ್ನು ಕನಸಿನಂತೆ ನನಗೆ ಕೊಡಲಾಗಿತ್ತು. ವಿದೇಶದ ಮಹಾಘನಿ ಮರದ್ದೆನಿಸುವ ಪಕ್ಕಾ ಪಶ್ಚಿಮಘಟ್ಟಗಳ ಬಹಳ ವರ್ಷಗಳ ಸಮೃದ್ಧ ಬೀಟೆಯ ಮರದಿಂದ ನುರಿತ ಬಡಗಿಯಷ್ಟೇ ಮಾಡಲು ಸಾಧ್ಯವಾದ ಮರದ ದೊಡ್ಡ ಟೇಬಲ್ಲು, ಮನಮೋಹಿಸುವ ವಿನ್ಯಾಸದ ಮರದ ಕುರ್ಚಿಗಳು, ಟಿಪಾಯಿ. + +ಮೆಟ್ಟಿಲೇರಿದ ತಕ್ಷಣ ಸಿಗುವ ಜಾಗದಲ್ಲೊಂದು ಗೋಡೆಗೆ ಅಂಟಿಕೊಂಡೇ ಇರುವ ಚೆಸ್ಟ್ ಆಫ್ ಡ್ರಾರ‍್ಸ್ ಇರುವ ಟೇಬಲ್ಲು. ಅದರ ಮೇಲೊಂದು ಅಗಲವಾದ ವೃತ್ತಾಕಾರದ ಹಿತ್ತಾಳೆಯಂಥಹ ಪಾತ್ರೆಯಲ್ಲಿ ನೀರು ತುಂಬಿ ಅದರಲ್ಲಿ ಅಗಲವಾಗಿ ಹರಡಿಕೊಂಡು ಸಮವಿನ್ಯಾಸದಲ್ಲಿ ತೇಲುತ್ತ ನಿಲ್ಲುವ ಆಕರ್ಷಕ ಹೂಗಳನ್ನು ಇಡಲಾಗಿತ್ತು. ಒಂದೊಂದು ದಿನ ಒಂದೊಂದು ತರಹದ ಹೂಗಳು. ಇಂದು ನೇರಳೆ ಬಣ್ಣದ ಐದೈದು ದಳಗಳ ಸಣ್ಣ ಹೂಗಳು ಈಸುವಂತೆ ನೀರಿನೊಳಗೆ ಓಡಿಯಾಡುತ್ತಿದ್ದವು. ಅಂಗಿ ಜೇಬಿನಿಂದ ಕಾಡಿನಲ್ಲಿ ಕಿತ್ತ ಹೂವನ್ನು ಮೃದುವಾಗಿ ತೆಗೆದೆ. ಇದು ಅವುಗಳಿಗಿಂತ ಭಿನ್ನ. ಹೂವಿನ ಹಿತ್ತಾಳೆ ಪಾತ್ರೆಯ ಪಕ್ಕ ಇಟ್ಟೆ. ಅದರ ಮೇಲೊಂದು ದೊಡ್ಡ ಪೇಂಟಿಂಗ್ ಗೋಡೆಗೆ ಅಂಟಿಕೊಂಡಂತೇ ಇತ್ತು. ಇಂದೇ ಕಂಡವನಂತೆ ಗಮನಿಸತೊಡಗಿದೆ. ದೇವರ ಎದುರು ಜನ ನಿಲ್ಲುವ ಭಾವದಲ್ಲಿ ಕೈಕಟ್ಟಿ ನಿಂತೆ. ಅದೆಷ್ಟು ನಾಜೂಕಿನಲ್ಲಿ ಬಣ್ಣಗಳನ್ನು ಬಳಸಿ ಅದೆಷ್ಟು ಏಕಾಗ್ರತೆಯಲ್ಲಿ ಚಿತ್ರಿಸಿದ್ದಾನೆ ಕಲಾವಿದ ಎಂಬ ಗೌರವ. ಅಮೂರ್ತಚಿತ್ರದಲ್ಲಿ ಕಾಡು, ಮರಗಳು, ಬೆಂಕಿ, ಪ್ರಾಣಿಗಳು. ಹಿನ್ನೆಲೆಯಲ್ಲಿ ಮನುಷ್ಯ ಹೀಗೆ. ಒಂದರೊಳಗೊಂದು ಸೇರಿ ಮತ್ತಿನ್ನೇನೋ ಆಗಿ, ಬಣ್ಣಗಳು ಒಂದು ತುದಿಯಲ್ಲಿ ಆಸೆಯನ್ನೂ ಇನ್ನೊಂದು ತುದಿಯಲ್ಲಿ ಕುತೂಹಲವನ್ನೂ ಮತ್ತೊಂದು ತುದಿಯಲ್ಲಿ ವೈಚಿತ್ರ್ಯವನ್ನೂ ಮಗದೊಂದು ತುದಿಯಲ್ಲಿ ಭಯವನ್ನೂ ಮೂಡಿಸುವಂತಿದ್ದವು. ಮಧ್ಯದಲ್ಲಿ ಶಾಂತಿ, ನಾಲ್ಕೂದಿಕ್ಕಿಗೆ ಹರಡುವಂತೆ, ಹೂವು ಅದರ ಕೇಂದ್ರವಾಗಿರುವಂತೆ. ಅಲ್ಲಿಂದ ಬಳ್ಳಿಗಳೋಪಾದಿಯ ತೆಳುಗೆರೆಗಳೂ ಹರಡಿಕೊಂಡಿರುವಂತೆ ಇತ್ತು. ಎಡಕೆಳತುದಿಯ ಭಾಗದಿಂದ ವೃತ್ತಾಕಾರವಾಗಿ ನೋಡುತ್ತ ಬಂದರೆ ಒಂದು ಕಥನ ಒಂದು ಅರ್ಥ, ಬಲಕೆಳತುದಿಯ ಭಾಗದಿಂದ ನೋಡಿದರೆ ಮತ್ತೊಂದು ಕಥನ ಮತ್ತೊಂದು ಅರ್ಥ, ಮಧ್ಯದಿಂದ ಬಳ್ಳಿಗಳು ಸೂಚಿಸಿರುವ ಸೂಕ್ಷ್ಮಗಳನ್ನು ಗಮನಿಸಿದರೆ ಮತ್ತಷ್ಟು ಗೂಢಾರ್ಥಗಳು. ಮುಗಿಯದ ಕಥನ ಮುಗಿಯದ ದಾಹ ಮುಗಿಯದ ಕಲೆಗೆ ತೋರುವ ಗೌರವ. ಒಮ್ಮೆ ಕಣ್ಮುಚ್ಚಿ ಅಂಗೈಗಳಿಂದ ಮುಖವೊರೆಸಿಕೊಂಡೆ. ಉಳಿದ ಕಲಾಸಂಶೋಧನೆ ನಾಳೆಗೆ. ಈಗ ಕೆಲಸ ಎಂದುಕೊಂಡು ಸುತ್ತಲೂ ಕಣ್ಣಾಡಿಸಿದೆ. + +ಎಲ್ಲ ಕಿಟಕಿಗಳು ಎಂದಿನಂತೆ ತೆರೆದಿದ್ದವು. ವುಡನ್ ಫ್ಲೋರಿಂಗ್‌ನ ಕರಾರುವಕ್ ಜೋಡಣೆ ಹೆಜ್ಜೆ ಇಟ್ಟಂತೆ ಹೆಜ್ಜೆಗಳನ್ನು ಸಾಧನೆಯ ನಡಿಗೆಯಂತೆ ಬಿಂಬಿಸುತ್ತಿದ್ದವು. ಸಣ್ಣ ಕಿರಕ್‌ಕಿರಕ್ ಸದ್ದು ಆ ಸುತ್ತಣ ಮೌನದಲ್ಲಿ ಎದೆಯಲ್ಲೊಂದು ಹೆಮ್ಮೆಯನ್ನೇ ಮೂಡಿಸುತ್ತಿದ್ದವು. ಎಲ್ಲ ಕಿಟಕಿಗಳ ಬಳಿ ನಿಂತು, ಅಲ್ಲಲ್ಲಿನ ಆಯಾ ಪಾಲಿನ ಸ್ವರ್ಗವನ್ನು ಅನುಭವಿಸಿದೆ. ಇದರ ನೂರನೆಯ ಒಂದು ಭಾಗದ ಅನುಭವಕ್ಕೆ ದುಡ್ಡು ಕಸಿದುಕೊಳ್ಳುವ ರೆಸಾರ್ಟ್ ಹೊಟೆಲಿನ ಲೋಕ ಬಹುವೇಗದಲ್ಲಿ ಬೆಳೆಯುತ್ತಲಿರುವುದು ನೆನಪಾಯಿತು. ಈ ಅನುಭವಕ್ಕೆ ಈ ಸಮಾಧಾನಕ್ಕೆ ಈ ಎತ್ತರಕ್ಕೆ ಈ ಕಾಡಿಗೆ ಈ ಗಾಳಿಗೆ ಮನಸ್ಸು ದೇಹವನ್ನು ಪ್ರಫುಲ್ಲಗೊಳಿಸುವುದಕ್ಕೆ ನಾನೇ ಹಣ ಕೊಡಬೇಕೇನೋ ಅನ್ನಿಸುತ್ತಿತ್ತು. ಅಧೋಲೋಕದ ತುತ್ತತುದಿಯ ಮೇಲ್ಛಾವಣಿಯ ಸುತ್ತಣ ಚಿತ್ರಕಥನವನ್ನು ನೋಡಲು ಇನ್ನಾದರೂ ಸಾಧ್ಯವಾಗಿರಲಿಲ್ಲ. ತಲೆಯೆತ್ತಿ ಒಂದೆರೆಡು ಸಣ್ಣ ಚಿತ್ರ ಗಮನಿಸುತ್ತಿದ್ದೆಯಷ್ಟೆ. + +ಕೆಳಗಿನಿಂದ ಬೆಡ್‌ರೂಮ್ ಕೋಣೆ ಬಾಗಿಲು ಹಾಕಿಕೊಳ್ಳುವ ಸದ್ದು. ನನ್ನ ಇಲ್ಲಿನ ಕೆಲಸವನ್ನು ಶುರುಮಾಡುವ ಸದ್ದು. ಟೈಪಿಂಗ್ ಕೆಲಸ. ನಾನು ಟೈಪಿಸ್ಟ್. ಸೃಜನಶೀಲ ಬರವಣಿಗೆಗೆ ಮುದ್ರಣ ಮಾರ್ಗ ತೋರಿಸಬಲ್ಲ ನಿರ್ದೇಶಕ. + +ಸರಕ್ಕನೆ ಹೋಗಿ ಟೈಪಿಂಗ್ ಟೇಬಲ್ಲಿಗೆ ಕೂತೆ. ಹಾಳೆ, ಟೈಪ್‌ರೈಟರ್, ಕಂಪ್ಯೂಟರ್, ಕ್ಲಿಪ್‌ಬೋರ್ಡ್, ರೆಡ್ ಇಂಕ್ ಪೆನ್ನು, ಪೆನ್ಸಿಲ್, ಸ್ಪೈರಲ್‌ಬೈಂಡೆಡ್ ಮ್ಯಾನುಸ್ಕಿçಪ್ಟು ನೋಡಿಕೊಂಡೆ. ಕೆಳಗಿನ ಡ್ರಾ ಒಳಗೆ ಎರಡುಮೂರು ವರ್ಷಗಳಿಗಾಗುವಷ್ಟು ಎ-ಫೋರ್ ಸೈಜಿನ ಪೇಪರಿನ ಬಂಡಲ್‌ಗಳು. ಒಂದನ್ನು ಎಳೆದು ಅದರ ಬಿಳಿತನವನ್ನು ನೋಡಿದರೆ ಅದರಲ್ಲೇನೋ ಬರೆದುಬಿಡುವ ಕಪ್ಪನೆ ಪೆನ್ನಿನಲ್ಲಿ ಚಿತ್ರವನ್ನು ಇಳಿಸುವ ಆಸೆ ಮತ್ತೆ ಒತ್ತೊತ್ತಿ ಬಂತು. ಇಲ್ಲಿಗೆ ಬಂದು ಬೀಳುವ ಇಲ್ಲಿನ ಕಿಟಕಿ ಕರ್ಟನ್ನು ಗೋಡೆಯ ಬಣ್ಣಗಳಿಂದ ಪ್ರತಿಫಲಿತವಾದ ಚದುರಿದ ಈ ಬಿಸಿಲು ಅಚ್ಚುಕಟ್ಟಾಗಿ ಯಂತ್ರ ಕತ್ತರಿಸಿಟ್ಟ ಈ ಬಿಳಿಕಾಗದವನ್ನು ಹೆಚ್ಚುಗಾರಿಕೆಯಲ್ಲಿ ತೋರಿಸುತ್ತಿದೆಯೆಂದೆನಿಸುತ್ತಿತ್ತು. ಕೈಗಳು ಕಪ್ಪನೆಯ ಬಣ್ಣದ ಪೆನ್ನಿನಿಂದ ಮೆಲ್ಲಗೆ ಬಳ್ಳಿಗಳಾಕಾರದಲ್ಲಿ ಎಲೆಗಳ ವಿನ್ಯಾಸದಲಿ ಚಿತ್ರಗಳನ್ನು ಮೂಡಿಸಲು ಶುರು ಮಾಡಿದ್ದವು. ಲೋಕ ಸೃಷ್ಟಿಯಾಗತೊಡಗಿತ್ತು. ನಿಶಬ್ದತೆಗೊಂದು ಅಪರೂಪದ ಶಕ್ತಿ. ಬರೆಸತೊಡಗಿತ್ತು. ಬರೆಯತೊಡಗಿದ್ದೆ. ಅಚ್ಚಬಿಳಿಮೈ ಮೇಲೆ ಕಪ್ಪನೆಯ ಗೆರೆಗಳು ಎಲ್ಲಿಬೇಕಲ್ಲಿ ಹೇಗೆಬೇಕೋ ಹಾಗೆ ಓಡಿಯಾಡತೊಡಗಿದ್ದವು. ಉಲ್ಲಾಸ ಎದೆಯೊಳಗೆ ಕಾರಂಜಿಯಂತೆ ಏಳತೊಡಗಿತ್ತು. ನನ್ನ ಬೆರಳುಗಳು ಸೃಷ್ಟಿಸುತ್ತಿದ್ದ ಇಂದಿನ ಈ ಚಿತ್ರವನ್ನು ಹೆಮ್ಮೆಯಲಿ ಸ್ಪರ್ಶಿಸಿ ನೋಡತೊಡಗಿದೆ. + +ವಿದ್ಯುತ್ತೇ ಬಾರದ ಕಗ್ಗಾಡಿನಲ್ಲಿ ಒಂದು ಕ್ಷಣವೂ ನಿಲ್ಲದ ನಿರಂತರ ವಿದ್ಯುತ್ ಸಂಪರ್ಕ! ಪ್ರಶ್ನೆಯೇಳಿಸಿ ಅಚ್ಚರಿ ಮೂಡಿಸುತ್ತಿತ್ತು. ಕಂಪ್ಯೂಟರ್ ಸ್ವಿಚ್ ಆನ್ ಮಾಡಿದೆ. ಡೂಮ್‌ಮಾನೀಟರ್ ಹೊತ್ತಿಕೊಂಡು ಬೆಳಗಿತು. ತನ್ನ ಸೃಷ್ಟಿಪ್ರಕ್ರಿಯೆಯ ಮಾಹಿತಿಯನ್ನು ಪರದೆ ಮೇಲೆ ಪ್ರದರ್ಶಿಸಿಕೊಂಡು ಸಂಪೂರ್ಣ ಚಾಲನೆಗೊಂಡು ವಿದೇಶಿ ಸಪಾಟುಹುಲ್ಲುಗಾವಲಿನ ಸ್ಕ್ರೀನ್‌ಸೇವರಿಗೆ ಬಂದು ನಿಂತಿತು. ಮೈಕ್ರೊಸಾಫ್ಟ್ ವರ್ಡ್ ಫೈಲ್ ತೆರೆದೆ. ನಿನ್ನೆಯ ಟೈಪಿಂಗ್ ಹಂತ ನೋಡಿಕೊಂಡೆ. ಒಮ್ಮೆ ತಪ್ಪುಗಳಿಗೆ ಕಣ್ಣಾಡಿಸಿದೆ.. ಮೊನ್ನೆ ತೆಗೆದ ಪ್ರಿಂಟ್‌ಔಟ್ ಕಾಗದ ಜೋಡಿಸಿಟ್ಟೆ. ಐದು ಹಂತದ ಐದು ಬಣ್ಣದ ಕ್ಲಿಪ್‌ಬೋರ್ಡ್ಗಳಲ್ಲಿ ಸಿಕ್ಕಿಸಿದ ಶಿಸ್ತನ್ನು ಪ್ರಶಂಸೆಯಲಿ ನೋಡಿದೆ. ಟೈಪ್ ಮಾಡಬೇಕಾದ ಕೆಂಪು, ಟೈಪ್ ಮಾಡಿದ ಹಳದಿ, ಟೈಪ್ ಮಾಡಿ ಪ್ರಿಂಟ್‌ಔಟ್ ತೆಗೆದಿಟ್ಟ ನೀಲಿ, ಪ್ರಿಂಟ್‌ಔಟ್ ಓದಿ ಪ್ರೂಫ್ ಹಾಕಿದ ಹಸಿರು, ಪ್ರೂಫ್ ಹಾಕಿದ್ದನ್ನು ಕ್ಯಾರಿ ಮಾಡಿ ಮತ್ತೆ ಪ್ರಿಂಟ್‌ಔಟ್ ತೆಗೆದಿರಿಸಿದ ಫೈನಲ್ ಕಪ್ಪುಬಣ್ಣದ ಕ್ಲಿಪ್‌ಬೋರ್ಡ್ ಸಾಲಾಗಿ ಕ್ರಮವಾಗಿ ಜೋಡಿಸಲಾಗಿತ್ತು. ಪ್ರಾಕೃತಿಕ ಶಿಸ್ತಿನ ಕಾಡಿನಲ್ಲಿ ಈ ಮಾನುಷ ಶಿಸ್ತು ಏನೋ ಕಲಿಸುತ್ತಿತ್ತು. + +‘ನಂಬಿಕೆ ಮುಖ್ಯ’ ಅನ್ನೋ ಸಾಲಿನ ಮುಂದೆ ಕಪ್ಪನೆಯ ಕಡ್ಡಿಯಂತಹ ಕರ್ಸರ್ ನೆಟ್ಟಗೆ ನಿಂತು ಕುಣಿಯುತಿತ್ತು. ಟೈಪಿಸು ಟೈಪಿಸು ಟೈಪಿಸು ಅಂತ. ನಾನೇ ಈ ಬರವಣಿಗೆ ಮುಂದುವರೆಸಿಬಿಡಲೆ ಅನ್ನುವಂತೆ ಕೆಣಕುತ್ತಿತ್ತು. ಇಪ್ಪತ್ತೆರಡು ಪುಟವಷ್ಟೇ ಈ ಹನ್ನೆರಡು ದಿನಗಳಲ್ಲಿ ಟೈಪ್ ಆದದ್ದು. ನಿಧಾನ ಸಾಗಿತ್ತು ಕೆಲಸ. ಯಾರಿಗೂ ಅವಸರವಿರಲಿಲ್ಲ. ಬರೆಸುವವಳಿಗೂ, ಈ ಪಠ್ಯಕ್ಕೂ. ಪಾತ್ರಗಳು ತಮ್ಮ ಸಹಜ ದೈನಿಕದಲ್ಲೇ ಇರುತ್ತಿದ್ದವು. ಮುಂದಕ್ಕೆ ಹೋಗಿ ಹಿಂದಕ್ಕೆ ಬರುವಂಥ ನಿರೂಪಣೆ. ಬರಿ ಚಹಾ-ಕಾಫಿಗಳೇ. + +ಕೆಳಗಿನ ಕೋಣೆಯ ಬಾಗಿಲು ತೆರೆದ ಸದ್ದಿನ ಬಹಳ ಹೊತ್ತಿನ ನಂತರ ಅವಳು ಬಂದಳು. ಮೆಟ್ಟಿಲು ಹತ್ತಿ ಬಂದು ನನ್ನೆಡೆಗೆ ಬಾರದೇ ಅಲ್ಲೇ ನಿಂತಳು. ಕಣ್ಣಂಚಿನಿಂದ ಗಮನಿಸಿದೆ. ಹೊರಳಿ ನೋಡಿದೆ. ರೇಶಿಮೆಯ ಲಿಂಬೆಬಣ್ಣದ ನೈಟಿಯೊಳಗೆ ಬಳಕುವ ದೇಹ. ಉದ್ದನೆಯ ತೆಳ್ಳನೆಯ ತೆಳುದೇಹ. ತಲೆಗೂದಲು ಸುರುಳಿಸುತ್ತಿ ಹಿಂದೆ ಕ್ಲಿಪ್ಪಿನಡಿ ಬಂಧಿಸಿದ್ದಳು. ನಿರಾಭರಣ ಬಿಳಿಚಿಕೊಂಡ ಆಕರ್ಷಕವಲ್ಲದ ಮುಖ. ತೆಳುಬೆರಳು ಉದ್ದ ನೇರಮೂಗು ದೊಡ್ಡಕಣ್ಣು ತೆಳುತುಟಿ ಉದ್ದನೆಯ ಕುತ್ತಿಗೆ. ಮೊದಲನೆಯ ದಿನ ಗಮನಿಸಿದ್ದ ವಿವರಗಳ ಹಾಗೇ ಇದ್ದಳು. ಅವಳ ಧ್ವನಿ ಮಾತ್ರ ಗೌರವ ಪಡೆದುಕೊಳ್ಳುವಂತೆ ಅವಳ ಭಾಷೆ ತುಂಬಾ ಕಲಿತ ಓದಿದವಳ ಮಾದರಿಯದ್ದು. + +ಅಲ್ಲೇ ಇದ್ದ ಟೇಬಲ್ಲಿನ ಮೇಲಿಟ್ಟುಬಂದಿದ್ದ ಆ ಹೂವನ್ನು ಕೈಯಲ್ಲಿ ಹಿಡಿದು ನೋಡಿದಳು. ಹೊರಳಿಸಿ ಹೊರಳಿಸಿ ನೋಡಿದಳು. ತೆಳುಬೆರಳುಗಳ ನಡುವೆ ನಾನು ತಂದಿದ್ದ ಹೂವಿನ ಉದ್ದನೆಯ ತೊಟ್ಟು ಹಿಡಿದು ಹೊರಳಾಡಿಸುತ್ತ ನನ್ನ ಕಡೆ ಹೊರಳಿದಳು. ಸಣ್ಣ ಭಯ. ದಿನದ ಮೊದಲನೆಯ ನಮಸ್ಕಾರ ಗೌರವದ ತರಹ ತಲೆಯನ್ನು ಸಣ್ಣಗೆ ಆಡಿಸಿ, ಕುರ್ಚಿ ಹಿಂದೆ ಸದ್ದಾಗದಂತೆ ಸರಿಸಿ, ಎದ್ದು ನಿಂತೆ. ದೇವಸ್ಥಾನದ ನೈವೇದ್ಯದ ಜಾಗದಲ್ಲಿ ನಾಯಿ ಓಡಾಡಿ ಗಲೀಜು ಮಾಡಿದಂತೆ ಮಾಡಿದಳು ತನ್ನ ಮುಖಭಾವವ. ಅಸಹನೆಯ ಉಸಿರುಗಳನ್ನು ಎಣಿಸುವಂತೆ ಕೇಳಿಸಿಕೊಂಡು ಉಗುಳು ನುಂಗುತ್ತಿದ್ದೆ. ಹೂವು ತಂದಿಡಬಾರದಿತ್ತು. ಅವಳ ಕರಾರುವಕ್ ಆಯ್ಕೆಗಳೇನಿದ್ದವೋ. ಈ ಪೇಂಟಿಂಗನ್ನು ದೇವರಂತೆ ನೋಡುತ್ತಿದ್ದಳೇನೋ ಅಪಚಾರವಾಯಿತೇನೋ. ಹೊರಗಿನದ್ದು ಕಾಡಿನದ್ದು ಏನೂ ಇಲ್ಲಿ ಬರುವಂತಿಲ್ಲವೇನೋ ಗಾಳಿಯೂ. ಇವಳ ಮನೆ ಮುಂದಿನ ವಿಸ್ತಾರ ಅರ್ಧವೃತ್ತಾಕಾರ ಜಾಗದ ಅಂಚಿನುದ್ದಕ್ಕೂ ಬೆಳೆಸಿದ್ದ ಹೂಗಳ ಗಿಡಗಳಿಂದಲೇ ಇಲ್ಲಿಗೆ ಹೂಗಳು ಬರಬೇಕೇನೋ ಪ್ರಮಾದ ಮಾಡಿಬಿಟ್ಟೆನಾ! + +ಹೂವನ್ನು ಬೆಕ್ಕಿನ ಕಿವಿಹಿಡಿದೆತ್ತುವಂತೆ ತೊಟ್ಟುಹಿಡಿದು ಎತ್ತಿದಳು. ಕೆಳಮುಖವಾಗಿ ಹಿಡಿದಿದ್ದಳು. ‘ಲಲಿತಾ…’ ಅರಚಿದಂತೆ ಕೂಗಿದಳು. ನಿಟ್ಟುಬಿದ್ದೆ. ಹೊರಳಿದೆ. + +ನನ್ನೆಡೆಗೇ ನೋಡುತ್ತ ಮತ್ತೆ ಕೂಗಿದಳು. ತಪ್ಪನ್ನು ಆದಷ್ಟು ಬೇಗ ಒಪ್ಪಿಕೊಂಡರೆ ಸರಿ ಎಂದು ನಾನೇ ಎದ್ದು ಅವಳೆಡೆ ತಿರುಗಿ, ‘ಆ ಹೂವನ್ನು ನಾನೇ ತಂದಿದ್ದೆ ಬಿಸಾಕುವೆ ಬಿಡಿ’ ಅಂದೆ. ಮುಂದೆ ನಡೆದು ಕೈ ಮುಂದೆ ಮಾಡಿದೆ. ದೊಡ್ಡಕಣ್ಣುಗಳಲ್ಲಿ ಅರ್ಧಕರಗಿದ ಸಿಟ್ಟಿನಲ್ಲಿ ನೋಡಿ ತನ್ನನ್ನು ತಾನೇ ಸಾವರಿಸಿಕೊಂಡು, ಹೂವು ಹಿಡಿದೇ ಇಳಿಯುತ್ತ ನಡೆದು ಹೋದಳು. ಇವಳು ನಡೆದರೆ ಶಬ್ದವಾಗುವುದಿಲ್ಲ. ಮಾರ್ಗ ಮಧ್ಯೆಯಲ್ಲಿ ಲಲಿತಾ ಸಿಕ್ಕು ಅವಳೊಡನೆ ಮಾತನಾಡಿದ್ದು ಕೇಳಿಸಿತು. + +ಇಲ್ಲಿ ನೂರಕ್ಕೆ ನೂರರಷ್ಟು ಸ್ವಾಂತಂತ್ರ್ಯತೆ ಎಂದುಕೊಂಡು ಬಂದವನಿಗೆ ಒಂದು ಪರ್ಸೆಂಟ್ ಕಡಿಮೆಯಾದಂತೆನಿಸಿತು. ಆದರೂ ಇನ್ನೊಮ್ಮೆ ಹಾಗೆ ಮಾಡದಿದ್ದರಾಯಿತು. ಎಂದುಕೊಂಡು ಟೈಪ್ ಮಾಡಬೇಕಾದ ಪಠ್ಯವನ್ನು ತೆಗೆದಿಟ್ಟುಕೊಂಡೆ. + + + +‘ನಂಬಿಕೆ ಮುಖ್ಯ’ ಸಾಲು ಹಂಗಿಸಿತು. ಕೈಬೆರಳು ಮೂಸಿಕೊಂಡೆ. ಆ ಹೂವಿನ ವಿಲಕ್ಷಣ ಘಮ, ಈ ವಿಲಕ್ಷಣ ಸನ್ನಿವೇಶದಲ್ಲಿ ವಿಚಿತ್ರವೆನ್ನಿಸಿತು. ಮತ್ತೆ ಮತ್ತೆ ಮೂಸುವಂತೆ ಹುಚ್ಚು ಪ್ರಚೋದನೆ, ಪ್ರೇರಣೆ. ತಲೆಕೊಡವಿಕೊಂಡೆ. ಡೆಸ್ಕ್ಟಾಪ್ ಸ್ಕ್ರೀನ್ ನೋಡಿದೆ. ಅದರ ಸ್ಕ್ರೀನಿನ ಕೆಳಗಿನ ಬಲಮೂಲೆಯಲ್ಲಿ ಟೈಮ್ ತೋರಿಸುತ್ತಿತ್ತು. ಹನ್ನೊಂದುವರೆ ಆಗಿಹೋಗಿತ್ತು. ಹೊಟ್ಟೆ ಹಸಿಯಲೂ ಶುರುವಾಗಿತ್ತು. ಕೆಲಸ ಒಂದಕ್ಷರ ಶುರುವಾಗಿರಲಿಲ್ಲ. ತಲೆ ಏನೆಲ್ಲ ಎಷ್ಟೆಲ್ಲ ಯೋಚನೆ ಮಾಡಿಮುಗಿಸಿತ್ತು. ಅಷ್ಟೊಂದು ಯೋಚನೆ ಬೇಕಿಲ್ಲ ಸಾಮಾನ್ಯ ಮನುಷ್ಯನಿಗೆ ಅನ್ನಿಸಿತು. ನಾನು ಸಾಮಾನ್ಯ ಮನುಷ್ಯನಲ್ಲ ಅಂತಲೂ ಅನ್ನಿಸಿತು. ಅಸಾಮಾನ್ಯ ಮನುಷ್ಯನಾಗಲು ಹೋಗಿ ಮಾಡಿಕೊಂಡು ಅವಾಂತರ ನೆನಪಾಯಿತು. ಸರ್ವೇಸಾಮಾನ್ಯ ಮನುಷ್ಯನೇ ಆಗಬೇಕೆಂದು ತೀರ್ಮಾನ ಮಾಡಿದವನಂತೆ ಮಿಸುಕಾಡಿ ಸರಿಯಾಗಿ ಕೂತೆ. ಮೌಸ್‌ನ ಬಾಣದ ಗುರುತನ್ನು ಆ ವಿಹಂಗಮ ಹುಲ್ಲುಗಾವಲಿನ ಮೇಲಾಡಿಸಿದೆ. ಪಕ್ಕದಲ್ಲಿದ್ದ ಬಿಳಿಯ ಕಾಗದದಲ್ಲಿ ಅದರ ಚಿತ್ರ ಮೂಡಿಸಲು ಕೈಬೆರಳು ಹಾತೊರೆದವು. ಡ್ರಾನಲ್ಲಿ ಹತ್ತಾರು ತರಹದ ಪೆನ್ಸಿಲ್, ಬಣ್ಣದ ಪೆನ್‌ಗಳಿದ್ದವು. ತಲೆಗೆ ಟಪ್ಪೆಂದು ಮೊಟಕಿಕೊಂಡು ಮತ್ತೆ ನೇರ ಕೂತೆ. ಕಣ್ಣು ಬಲಕೆಳ ಮೂಲೆಯ ಟೈಮ್‌ಸ್ಟ್ಯಾಂಪ್ ಪಕ್ಕದ ನೆಟ್‌ವರ್ಕ್ ಸಿಂಬಲ್ ಕಡೆ ಹೋಯಿತು. ಪೂರ್ತಿ ಸಿಗ್ನಲ್ಲುಗಳಿರುವ ಇಂಟರ್ನೆಟ್ ಓಡುತ್ತಿದೆ! ನನ್ನ ಬದುಕಿನ ದುಡಿಮೆಯ ಅರ್ಧದಷ್ಟನ್ನು ಇಂಟರ್ನೆಟ್ ಬಾಡಿಗೆಗೆ ಖರ್ಚುಮಾಡಿದ್ದೆ. ಈಗ ಇಲ್ಲಿ ಇಂಟರ್ನೆಟ್ ಇದೆ. ಈ ಕಗ್ಗಾಡಿನಲ್ಲಿ! ನಿಲ್ಲದೆ ಹರಿಯುವ ಸದಾ ಹರಿಯುವ ನೀರಿನ ಒರತೆಯಂತೆ. ಅದರ ಮೇಲೆ ಮೌಸ್‌ನ ಬಾಣ ತೆಗೆದುಕೊಂಡು ಹೋದವನು ಒತ್ತುವಷ್ಟರಲ್ಲಿ ಮೆಟ್ಟಿಲಬಳಿ ಸದ್ದು ಆದಂತಾಯಿತು. ಕೆಮ್ಮಿ ಸರಿಯಾಗಿ ಕೂತು ತೆಗೆದಿರಿಸಿಕೊಂಡಿದ್ದ ಮೈಕ್ರೊಸಾಫ್ಟ್ ವರ್ಡ್ ಫೈಲ್‌ನಲ್ಲಿ ಇವತ್ತಿನ ದಿನಾಂಕ ಹಾಕಿ ಟೈಪ್ ಮಾಡಲು ಶುರುಮಾಡಿದೆ.‘ಬದುಕು ಹೀಗೆ ಇರುತ್ತದೆಂದು ನನಗೆ ಅನ್ನಿಸಿರಲಿಲ್ಲ…’ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_133.txt b/Kenda Sampige/article_133.txt new file mode 100644 index 0000000000000000000000000000000000000000..2320df473de89d44b96817425ce45b0c87ed7acd --- /dev/null +++ b/Kenda Sampige/article_133.txt @@ -0,0 +1,35 @@ +byರಾಮ್ ಪ್ರಕಾಶ್ ರೈ ಕೆ.|Feb 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು.ಸತೀಶ ಬಳೆಗಾರ ಬರೆದ ‘ಶಂಕರ ನಾಗ್ The Legend’ ಕೃತಿಯ ಕುರಿತು ರಾಮ್‌ ಪ್ರಕಾಶ್‌ ರೈ ಬರಹ + +byಕೆಂಡಸಂಪಿಗೆ|Feb 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ.ಡಾ. ಲಕ್ಷ್ಮಣ ವಿ.ಎ. ಬರಹಗಳ ಸಂಕಲನ “ಮಿಲ್ಟ್ರಿ ಟ್ರಂಕು”ಕ್ಕೆ ರಹಮತ್‌ ತರೀಕೆರೆ ಬರೆದ ಮುನ್ನುಡಿ + +byರಾಘವೇಂದ್ರ ಈ. ಹೊರಬೈಲು|Feb 15, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.ಸದಾಶಿವ ಸೊರಟೂರು ಅವರ ಅರ್ಧ ಮಳೆ ಅರ್ಧ ಬಿಸಿಲು ಕಥಾ ಸಂಕಲನದ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ + +byಡಾ. ಸುಭಾಷ್ ಪಟ್ಟಾಜೆ|Feb 14, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ.ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ ಕೃತಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ + +byವಿಶ್ವ ದೊಡ್ಡಬಳ್ಳಾಪುರ|Feb 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ.ಡಾ. ಕೆ.ಎನ್. ಗಣೇಶಯ್ಯ ಬರೆದ “ಹಾತೆ-ಜತೆ-ಕತೆ” ಕೃತಿಯ ಕುರಿತು ವಿಶ್ವ ದೊಡ್ಡಬಳ್ಳಾಪುರ ಬರಹ + +byಕೆಂಡಸಂಪಿಗೆ|Feb 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ.ಎ.ಎನ್. ಪ್ರಸನ್ನರವರ ಆಯ್ದ ಜಾಗತಿಕ ಸಿನಿಮಾಗಳ ಕುರಿತ ಲೇಖನಗಳ ಸಂಕಲನ “ಸಿನಿ ಲೋಕ 21”ಕ್ಕೆ ಗಿರೀಶ್‌ ಕಾಸರವಳ್ಳಿ ಬರೆದ ಮುನ್ನುಡಿ + +byಸುಮಾವೀಣಾ|Feb 10, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….!ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ + +byಮಂಜಯ್ಯ ದೇವರಮನಿ, ಸಂಗಾಪುರ|Feb 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. ‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ.ದಯಾನಂದ ಅವರ ಕಥಾ ಸಂಕಲನ “ಬುದ್ಧನ ಕಿವಿ”ಯ ಕುರಿತು ಮಂಜಯ್ಯ ದೇವರಮನಿ ಬರಹ + +byಕೆಂಡಸಂಪಿಗೆ|Feb 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ.ಸು. ರುದ್ರಮೂರ್ತಿ ಶಾಸ್ತ್ರಿ ಬರೆದ ಹೊಸ ಕಾದಂಬರಿ “ಶ್ರೀಕೃಷ್ಣ”ದ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_134.txt b/Kenda Sampige/article_134.txt new file mode 100644 index 0000000000000000000000000000000000000000..6a28629866fd3c4aea84ace36dba46fb18f40b40 --- /dev/null +++ b/Kenda Sampige/article_134.txt @@ -0,0 +1,23 @@ +ಐವತ್ತು ವರ್ಷಗಳ ಹಿಂದೆ ಜಪಾನೀಯರ ನಿಘಂಟಿಗೆ ‘ಕೊಗಾಯ್‌ʼ ಎಂಬ ಹೊಸ ಪದವೊಂದು ಸೇರಿಕೊಂಡಿತು. ಅದರ ಸರಿಯಾದ ಅರ್ಥ ಬೇಕೆಂದರೆ ನಾವು ಕನ್ನಡದಲ್ಲೂ “ದುಸ್ಸುಧಾರಣೆ” ಎಂಬ ಹೊಸ ಪದವನ್ನು ಟಂಕಿಸಬೇಕು. ಅಥವಾ ಅಪಸೌಲಭ್ಯ ಎಂದರೂ ಸರಿ. ಅಭಿವೃದ್ಧಿಯ ಹೆಸರಿನಲ್ಲಿ ಒಂದು ಸಮಾಜ ತನ್ನ ಮೇಲೆ ಎಳೆದುಕೊಳ್ಳುತ್ತಿರುವ ಸಂಕಟಗಳಿಗೆ ‘ಕೊಗಾಯ್‌ʼ ಪದ ಅಲ್ಲಿ ಬಳಕೆಗೆ ಬಂದಿತ್ತು. ಆಕಾಶದಲ್ಲಿ ಕೊಳಕು ಗಾಳಿ, ಸಮುದ್ರದಲ್ಲಿ ಕೊಳಕು ನೀರು, ನದಿಯಲ್ಲಿ ಕೊಳಕು ಧಾರೆ, ಮಣ್ಣೆಂದರೆ ಕೊಳಕು ಮಣ್ಣು. + +(ನಾಗೇಶ ಹೆಗಡೆ) + +ಅಂದು ಜಪಾನಿನಲ್ಲಿ ಎಲ್ಲೆಲ್ಲೂ ಕೈಗಾರಿಕಾ ಕ್ರಾಂತಿಯ ಈ ಎಲ್ಲ ದುರ್ಲಕ್ಷಣಗಳು ಕಾಣುತ್ತಿದ್ದವು. ಪಾದರಸದ ಅತಿ ಬಳಕೆಯಿಂದ ‘ಮಿನಾಮಾಟಾ ಕಾಯಿಲೆʼ ಮೈದಳೆದಿತ್ತು. ಕಡಲಂಚಿನ ಮಿನಾಮಾಟಾ ಎಂಬ ಊರಿನಲ್ಲಿ ಮೀನನ್ನು ತಿನ್ನುವ ಎಲ್ಲ ಜೀವಿಗಳೂ (ಬೆಕ್ಕು, ನಾಯಿ, ಮನುಷ್ಯ ಜೀವಿಗಳು, ಹಾರಾಡುವ ಪಕ್ಷಿಗಳು) ಕುಣಿಕುಣಿದು ತಲೆತಿರುಗಿ ಬಿದ್ದು ಸಾಯುತ್ತಿದ್ದವು. ಅದು ಅಂದಿನ ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಸಂಭವಿಸಿ ಎನ್ನಿಸಿತ್ತು. ನಮ್ಮ ಭೋಪಾಲ್‌ ದುರಂತದಂತೆ ಅದೇನೂ ಹಠಾತ್‌ ಸಂಭವಿಸಿರಲಿಲ್ಲ. ಕಾರ್ಖಾನೆಯೊಂದು ಮೀಥೈಲ್‌ ಮರ್ಕ್ಯುರಿ ಹೆಸರಿನ ಕೊಳೆಯನ್ನು ನೀರಿಗೆ ಹರಿಸುತ್ತಿರುವುದೇ ಕಾರಣ ಎಂಬುದು ಗೊತ್ತಾಗಲು ಇಪ್ಪತ್ತು ವರ್ಷಗಳೇ ಬೇಕಾದವು. ಇಂದು ಅಲ್ಲಿ ‘ಕೊಗಾಯ್‌ʼ ಪದ ಬಳಕೆಯಲ್ಲಿಲ್ಲ. ಜಪಾನ್‌ ಅದೆಷ್ಟು ತ್ವರಿತವಾಗಿ, ಅದೆಷ್ಟು ದಕ್ಷತೆಯಿಂದ ಮಾಲಿನ್ಯ ನಿವಾರಣಾ ಕ್ರಮಗಳನ್ನು ಜಾರಿಗೆ ತಂದಿತೆಂದರೆ -ಉದಾಹರಣೆಗೆ, ಕಾರುಗಳ ತಯಾರಿಕೆಗೆ ಬೇಕಿದ್ದ ಎಲ್ಲ ಲೋಹ, ಗಾಜು, ಪ್ಲಾಸ್ಟಿಕ್‌, ರಬ್ಬರ್‌ ಉತ್ಪಾದನಾ ಘಟಕಗಳೂ ಚೊಕ್ಕಟಗೊಂಡವು; ಹಾಗೆ ತಯಾರಾಗಿ ರಸ್ತೆಗಿಳಿಯುವ ಕಾರುಗಳ ಹೊಗೆ ಕೊಳವೆ, ಇಂಧನ ಕ್ಷಮತೆಯೂ ಸುಧಾರಿಸುತ್ತ, ಅಲ್ಲಿ ತಯಾರಾಗುವ ಉತ್ಪನ್ನಗಳು ಇತರ ದೇಶಗಳಿಗೂ ಮಾದರಿಯಾದವು. + +ನಾವೆಲ್ಲಿದ್ದೇವೆ? ನಿನ್ನೆಯ ಪಿಟಿಐ ವರದಿಯ ಪ್ರಕಾರ, ಜಗತ್ತಿನ 180 ದೇಶಗಳ ‘ಪರಿಸರ ನಿರ್ವಹಣಾ ಸೂಚ್ಯಂಕʼದ ಪ್ರಕಾರ ಡೆನ್ಮಾರ್ಕ್‌ ದೇಶ 78 ಅಂಕಗಳನ್ನು ಪಡೆದು ಮೊದಲ ಸ್ಥಾನದಲ್ಲಿದ್ದರೆ, ಇಂಡಿಯಾ 19 ಅಂಕಗಳನ್ನು ಪಡೆದು ಕೊನೆಯ 180ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ, ಟರ್ಕಿ, ಸುಡಾನ್‌, ಹೈಟಿ, ಇಥಿಯೋಪಿಯಾದಂಥ ದೇಶಗಳು ಭಾರತಕ್ಕಿಂತ ಹೆಚ್ಚು ಗೌರವದ ಸ್ಥಾನದಲ್ಲಿವೆ. ಹಾಗೆಂದು ನಮ್ಮ ಸರಕಾರ ಘೋಷಿಸಿದ ಯೋಜನೆಗಳ ಸಂಖ್ಯೆಯೇನೂ ಕಡಿಮೆಯಿಲ್ಲ. ಸ್ವಚ್ಛ ಭಾರತ್‌, ಸಶಕ್ತ ಭಾರತ್‌, ಸಕ್ಷಮ ಭಾರತ್‌, ಸಮಗ್ರ ಭಾರತ್‌, ಸನಾತನ ಭಾರತ್‌ ಮುಂತಾದ ಸ-ಕಾರಾತ್ಮಕ ಯೋಜನೆಗಳು ಸಾಲುಗಟ್ಟಿ ಬರುತ್ತಿವೆ. ಆದರೂ ಅಂತರರಾಷ್ಟ್ರೀಯ ಮಾನದಂಡಗಳ ಪ್ರಕಾರ ಭಾರತದ ಶ್ರೇಯಾಂಕ ಪದೇ ಪದೇ ಕುಸಿಯುತ್ತಿದೆ ಯಾಕೊ? + +ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ 1984ರಲ್ಲಿ ಭೋಪಾಲ್‌ನಲ್ಲಿ ಸಂಭವಿಸಿತು. ಕೀಟನಾಶಕ ವಿಷಗಳ ಉತ್ಪಾದನೆಗೆ ಬೇಕಿದ್ದ ಮೂಲ ಸಂಯುಕ್ತವನ್ನು (ಮೀಥೈಲ್‌ ಐಸೊಸೈನೇಟ್‌) ಭೋಪಾಲದ ಕಾರ್ಖಾನೆ ತಯಾರಿಸುತ್ತಿತ್ತು. ಅದು ಜಗತ್ತಿನ ಅತಿ ದೊಡ್ಡ ಔದ್ಯಮಿಕ ದುರಂತ ಎನ್ನಿಸಿತು. ಆ ದುರಂತ ನಡೆದ 15 ವರ್ಷಗಳ ನಂತರ ಎಂಡೊಸಲ್ಫಾನ್‌ ದುರಂತವೂ ಕಾಸರಗೋಡಿನಲ್ಲಿ ಬೆಳಕಿಗೆ ಬಂತು. ಅದೂ ಜಗತ್ತಿನ ಅತಿ ದೊಡ್ಡ ಕೃಷಿವಿಷದ ದುರಂತ. ನಾವು ಪಾಠ ಕಲಿತೆವೆ? ಬೇರೆ ದೇಶಗಳಲ್ಲಿ ನಿಷೇಧಿಸಲಾದ 66 ಬಗೆಯ ಕೀಟವಿಷಗಳು ಈಗಲೂ ನಮ್ಮಲ್ಲಿ ಬಳಕೆಯಲ್ಲಿವೆ. ಆ 66ರ ಪೈಕಿ ಮನುಷ್ಯನಿಗೆ ಮತ್ತು ಪ್ರಾಣಿಗಳಿಗೆ ಅಪಾಯ ತರಬಲ್ಲ 27ನ್ನು ನಿಷೇಧಿಸುವ ಪ್ರಸ್ತಾವನೆಯೇನೋ ಇದೆ. ನಿಷೇಧವಾಗಿಲ್ಲ ಇನ್ನೂ. ವಿಷವಸ್ತುಗಳ ಉತ್ಪಾದಕರಿಗೆ ಒಳ್ಳೆಯದಾಗಲೆಂದು ಈ ಪ್ರಸ್ತಾವನೆಯನ್ನೇ ಆದಷ್ಟು ದುರ್ಬಲಗೊಳಿಸುವ ಮತ್ತು ನೆಪಮಟ್ಟಕ್ಕಿಳಿಸುವ ಹುನ್ನಾರ ಕಾಣುತ್ತದೆಂಬ ಟೀಕೆ ಆಗಲೇ ಬಂದಿತ್ತು. ಈಗಂತೂ ನಿಷೇಧ ಎಂದರೆ ಹಿಜಾಬ್‌ ನಿಷೇಧ, ಧ್ವನಿವರ್ಧಕ ನಿಷೇಧದ ಚರ್ಚೆಗಳೇ ಮುನ್ನೆಲೆಗೆ ಬರುತ್ತಿವೆ ವಿನಾ ಜೀವರಕ್ಷಕ ವಿಷಯಗಳೆಲ್ಲ ಹಿನ್ನೆಲೆಗೆ ಹೋಗಿಬಿಟ್ಟಿವೆ. + +ನಮ್ಮಲ್ಲಿ ಅರಣ್ಯ ವಿಸ್ತೀರ್ಣ ಹೆಚ್ಚಾಗಿದೆ ಎಂದು ಉಪಗ್ರಹ ಚಿತ್ರಗಳ ಆಧರಿಸಿ ಸರಕಾರಿ ಅಂಕಿ ಅಂಶಗಳ ಘೋಷಣೆಯಾಗುತ್ತದೆ. ಅಂಥ ಅರಣ್ಯದಲ್ಲಿ ಜೀವಾವಾಸ ನಿಜಕ್ಕೂ ಹೆಚ್ಚಾಗಿದೆಯೆ, ಪಶುಪಕ್ಷಿಗಳ ಸಂಖ್ಯೆ, ದುಂಬಿ-ಜೇನ್ನೊಣಗಳ ಸಾಂದ್ರತೆ ಹೆಚ್ಚಿದೆಯೆ, ನದಿ ಕೊಳ್ಳಗಳಲ್ಲಿ ಜಲಚರಗಳ ಸಂಖ್ಯೆ ಹೆಚ್ಚಾಗಿದೆಯೆ, ಅದು ಗೊತ್ತಿರುವುದಿಲ್ಲ. ಮಳೆ ಚೆನ್ನಾಗಿ ಸುರಿದಾಗ ಎಲ್ಲ ಕೆರೆಕಟ್ಟೆಗಳಲ್ಲೂ ನೀರು ತುಂಬಿ ಹೊರಕ್ಕೆ ಹರಿಯುತ್ತದೆ; ಆದರೆ ಅಂಥ ಕೆರೆಗಳಲ್ಲಿ ಹೂಳು ಎಷ್ಟು ತುಂಬಿದೆ ಎಂಬುದು ಲೆಕ್ಕಕ್ಕೆ ಬರುವುದೇ ಇಲ್ಲ. ಹಾಗೆಯೇ ಕೊಳಕು ಗಾಳಿಯ ವಿಸರ್ಜನೆಯ ಪ್ರಮಾಣ ಕಡಿಮೆಯಾಗಿದೆ ಎಂದು ನಮ್ಮ ದೊಡ್ಡ ನಗರಗಳಲ್ಲಿನ ಉಪಕರಣಗಳು ಸಾರುತ್ತವೆ. ಆದರೆ ಲಕ್ಷಾಂತರ ಸಣ್ಣಪುಟ್ಟ ನಗರಗಳಲ್ಲಿ ಗಾಳಿಯ ಗುಣಮಟ್ಟವನ್ನು ಅಳೆಯುವವರೇ ಇಲ್ಲ. ಅದರ ಬದಲು ಒಟ್ಟೂ ಎಷ್ಟು ವಾಹನಗಳು ಮಾರಾಟವಾಗಿವೆ, ರಸ್ತೆಯಲ್ಲಿ 15 ವರ್ಷಗಳಿಗಿಂತ ಹಳೇ ವಾಹನಗಳು ಎಷ್ಟಿವೆ ಎಂಬುದರ ಲೆಕ್ಕ ಹಿಡಿದು ಹೊರಟರೆ ಗಾಳಿಯ ಗುಣಮಟ್ಟದ ನೈಜ ಚಿತ್ರಣ ಸಿಗುತ್ತದೆ. ಇಂಥ ಎಲ್ಲ ಲೆಕ್ಕಾಚಾರಗಳಲ್ಲೂ ನಮ್ಮ ದೇಶ ನಪಾಸಾದಂತಿದೆ. + + + +ಈ ವರ್ಷದ ‘ವಿಶ್ವ ಪರಿಸರ ದಿನʼ ಹಿಂದೆಂದಿಗಿಂತ ವಿಶೇಷದ್ದಾಗಿತ್ತು. ಐವತ್ತು ವರ್ಷಗಳ ಹಿಂದೆ, 1972ರಲ್ಲಿ ಸ್ವೀಡನ್ನಿನ ಸ್ಟಾಕ್‌ಹೋಮ್‌ ನಗರದಲ್ಲಿ “ಇರುವುದೊಂದೇ ಭೂಮಿ” ಹೆಸರಿನ ಮೊದಲ ಪರಿಸರ ಸಮ್ಮೇಳನ ನಡೆದಿತ್ತು. ಈ 50ನೇ ವರ್ಷದಲ್ಲಿ ಮತ್ತೊಮ್ಮೆ “ಸ್ಟಾಕ್‌ಹೋಮ್‌+50” ಹೆಸರಿನಲ್ಲಿ ಅಲ್ಲೇ ಅದೇ “ಇರುವುದೊಂದೇ ಭೂಮಿ” ಹೆಸರಿನ ಸಮಾವೇಶ ನಡೆಯಿತು. ಮನುಕುಲ ತನ್ನ ಹೊಣೆಯನ್ನು ಸೂಕ್ತವಾಗಿ ನಿಭಾಯಿಸುವುದನ್ನು ಕಲಿತಿದೆಯೆ ಎಂಬುದರ ಮೌಲ್ಯಮಾಪನ ನಡೆಯಿತು. ಕೆಲವು ರಾಷ್ಟ್ರಗಳು ಕಟ್ಟುನಿಟ್ಟಿನ ಕಾನೂನುಗಳನ್ನು ಜಾರಿಗೆ ತಂದು ತಂತಮ್ಮ ನೆಲಜಲವನ್ನು ತಕ್ಕಮಟ್ಟಿಗೆ ಚೊಕ್ಕಟ ಇಟ್ಟುಕೊಂಡಿವೆ. ಯುರೋಪಿನ ಆರು ದೇಶಗಳ ಮೂಲಕ ಹಾದು ಹೋಗುವ ರೈನ್‌ (Rhine) ನದಿ ಸಮುದ್ರಕ್ಕೆ ಸೇರುವವರೆಗೂ ಚೊಕ್ಕಟವಾಗಿಯೇ ಇದೆ. ಆ ನದಿಯ ಒಂದೊಂದು ಹನಿಯೂ ಎಂಬತ್ತು ಬಾರಿ ಬಳಕೆಯಾಗಿ ಮತ್ತೆ ನದಿಗೆ ಸ್ವಚ್ಛ ಸ್ಥಿತಿಯಲ್ಲೇ ಸೇರುತ್ತದೆ ಎಂಬ ಪ್ರತೀತಿ ಇದೆ. ಅಲ್ಲಿನವರ ಆ ಮಟ್ಟಿನ ಪರಿಸರ ಪ್ರಜ್ಞೆಯನ್ನು ಮೆಚ್ಚಲೇಬೇಕು. ಆದರೆ ಇಡೀ ಪೃಥ್ವಿಯ ಸಾಮೂಹಿಕ ಆಸ್ತಿ ಎನಿಸಿದ ವಾಯುಮಂಡಲ ಮತ್ತು ಸಪ್ತಸಾಗರಗಳು ಈ 50 ವರ್ಷಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಕೊಳೆಯನ್ನು ಸೇರಿಸಿಕೊಂಡಿವೆ. ಶ್ರೀಮಂತ, ಶಕ್ತಿವಂತ ದೇಶಗಳ ಬೇಜವಾಬ್ದಾರಿ ಜಾಸ್ತಿಯಾಗುತ್ತಿದೆ. ನಮ್ಮ ದೇಶದಲ್ಲೂ ಶ್ರೀಮಂತರು ತುಂಬಾ ದೊಡ್ಡ ಪ್ರಮಾಣದಲ್ಲಿ ಬಿಸಿಗಾಳಿಯನ್ನು ಹೊರ ಹೊಮ್ಮಿಸುತ್ತಾರೆ. ತಾಪಮಾನ ಏರಿಕೆಯ ದುಷ್ಫಲ ಮಾತ್ರ ಜಗತ್ತಿನೆಲ್ಲೆಡೆ ದುರ್ಬಲರಿಗೇ ಹೆಚ್ಚಾಗಿ ಬಡಿಯುತ್ತದೆ. + +ಕಳೆದ ವಾರ ಜಗತ್ತಿನ ಪ್ರತಿಷ್ಠಿತ 17 ವಿಜ್ಞಾನ ಸಂಸ್ಥೆಗಳ ತಜ್ಞರು ಒಂದು ಜಂಟಿ ಹೇಳಿಕೆಯನ್ನು ಪ್ರಕಟಿಸಿದರು. ಭೂಮಿಯನ್ನು ಮತ್ತೆ ಸುಸ್ಥಿತಿಗೆ ತರಲು ಹೆಚ್ಚು ಸಮಯ ಉಳಿದಿಲ್ಲ ಎಂದು ಎಚ್ಚರಿಸಿದರು. ನಾವೆಲ್ಲರೂ “ಉತ್ತಮ ನೆರೆಹೊರೆಯವರಾಗೋಣ, ಉತ್ತಮ ಪೂರ್ವಜರಾಗೋಣ” ಎಂದು ಕರೆ ಕೊಟ್ಟರು. ಪೂರ್ವಜರು ಅಂದಾಕ್ಷಣ ನಮಗಿಂತ ಹಿರಿಯರು ಎಂತಲೋ ಅಥವಾ ಇನ್ನೂ ಹಿಂದಿನ ವಾನರರೋ ಎಂಬ ಭಾವನೆ ಮೂಡುತ್ತದೆ. ಅದು ಹಾಗಲ್ಲ. ಮುಂದಿನ ಪೀಳಿಗೆಯ ಮಟ್ಟಿಗೆ ನಾವೂ ಒಂದಲ್ಲ ಒಂದು ದಿನ ಪೂರ್ವಜರೇ ಆಗುತ್ತೇವೆ ತಾನೆ? + + + +ನಮ್ಮ ಪೂರ್ವಜರ ಸಾಧನೆಗಳನ್ನು ಕೊಂಡಾಡಲು ಈಗೀಗ ನಾಮುಂದು, ತಾಮುಂದು ಎನ್ನುತ್ತ ಅನೇಕ ಸ್ವಯಂಘೋಷಿತ ಇತಿಹಾಸಕಾರರು ಉದ್ಭವಿಸುತ್ತಿದ್ದಾರೆ. ನಾಳಿನ ಇತಿಹಾಸ ನಮ್ಮನ್ನು ಹೇಗೆ ಬಣ್ಣಿಸಬಹುದು? ಉತ್ಖನನ ಮಾಡಿದಲ್ಲೆಲ್ಲ ಪ್ಲಾಸ್ಟಿಕ್‌ ಕಚಡಾ, ಹಳೇ ಟೈರ್‌, ಸ್ಯಾನಿಟರಿ ಪ್ಯಾಡ್‌, ಕಾಂಕ್ರೀಟ್‌ ಕಂಬಿ, ಕೇಬಲ್‌ ತಂತಿಗಳೇ ಸಿಗುತ್ತಿದ್ದರೆ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_135.txt b/Kenda Sampige/article_135.txt new file mode 100644 index 0000000000000000000000000000000000000000..d3e1425ff7a0dae150d1475835aa3a6364b4a53c --- /dev/null +++ b/Kenda Sampige/article_135.txt @@ -0,0 +1,45 @@ +ಚಾಂದ್‌ ಪಾಷಾ ಅವರು ತಮ್ಮ ಪದ್ಯಗಳ ಹೊಸ ಸಂಕಲನದ ಕರಡನ್ನು ನನಗೆ ಕಳಿಸಿದರು. ಅವುಗಳನ್ನು ನಾನು ಓದಿದ್ದು ಹೇಗೆಂದರೆ ಒಂದು ಮುಶಾಯಿರಾನಲ್ಲಿ ಉರಿಯುತ್ತಿರುವ ಮೇಣಬತ್ತಿಯನ್ನು ಕವಿಯ ಎದುರಿಗೆ ಹಿಡಿದು ‘ಇರ್ಷಾದ್’ ಎಂದ ಮೇಲೆ ಅವರು ಇಡೀ ಮಹಫಿಲ್‌ಗಾಗಿ ಓದಿದಂತೆ ಈ ಪದ್ಯಗಳನ್ನು ಕೇಳಿಸಿಕೊಂಡೆ. ಕಾರಣವೆಂದರೆ ಚಾಂದ್‌ ಪಾಷಾ ಅವರ ಪದ್ಯಗಳು ಕೇಳುಗಬ್ಬದ ಮಾದರಿಯವು. ಅವುಗಳಲ್ಲಿ ಕವಿಯ ದನಿ ಹಾಗೂ ವ್ಯಕ್ತಿತ್ವಗಳು (ಅಂದರೆ ಕಲ್ಪಿತ ವ್ಯಕ್ತಿತ್ವ) ಬಹುಮುಖ್ಯವಾದುದು. ಇಲ್ಲಿಯ ಅನೇಕ ಪದ್ಯಗಳು ಮುಶಾಯರಾಗಳಲ್ಲಿ ಓದಬೇಕಾದ ಗಜಲ್ ಶೈಲಿಯಲ್ಲಿವೆ. ದ್ವಿಪದಿ, ಛಂದಸ್ಸು ಇವುಗಳನ್ನು ಪಾಲಿಸುತ್ತವೆಯೆಂದಲ್ಲ. ಆದರೆ ಅವುಗಳ ಸತ್ವ ಇರುವುದು ನಿರೀಕ್ಷಿತ ಸ್ಥಾನದಲ್ಲಿ ಅನಿರೀಕ್ಷಿತ ಪದಪುಂಜಗಳು, ಪ್ರತಿಮೆಗಳು ಬಂದು ಅಚ್ಚರಿ, ಖುಷಿ ಹಾಗೂ ಮತ್ತೆ ಮತ್ತೆ ಮೆಲುಕುಹಾರುವಂತೆ ಮಾಡುವ ಲಯೆಗಳು ಹಾಗೂ wit ಎಂದು ಕರೆಯಬಹುದಾದ ಪದ ಮತ್ತು ಅರ್ಥಗಳ ಬಳಕೆಯ ಹಿಂದೆ ಇರುವ ಜಾಣ್ಮೆ ಇವೆಲ್ಲವುಗಳು ಉರ್ದು ಕಾವ್ಯದ ಮೂಲ ಸತ್ವವಾಗಿವೆ. ಇವನ್ನು ಮಹಫಿಲ್‌ನಲ್ಲಿ ಕುಳಿತು ‘ವಾಹ್ ವಾಹ್ʼ ಎಂದು ನಾವೂ ಪುನರುಚ್ಚಿಸಿ ಆಸ್ವಾದಿಸಬೇಕು. + +(ಚಾಂದ್‌ ಪಾಷ ಎನ್.ಎಸ್.) + +ದಖ್ಖಣದಿಂದ ಆರಂಭವಾಗಿ ಮೊಘಲರ ಉತ್ತರ ಭಾರತದಲ್ಲಿ ಹಬ್ಬಿ ಬೆಳೆದ ಈ ಅದ್ಭುತ ಕಾವ್ಯ ಸಂಸ್ಕೃತಿ ವಿಶ್ವ ಸಾಹಿತ್ಯದ ಅಪೂರ್ವ ಸಾಧನೆಗಳಲ್ಲಿ ಒಂದು. ನನ್ನ ದೃಷ್ಟಿಯಲ್ಲಿ ಚಾಂದ್‌ ಪಾಷಾ ಈ ಕಾವ್ಯ ಸಂಸ್ಕೃತಿಯ ವಾರಸುದಾರರಾಗಿರುವ, ಈಗಾಗಲೇ ಜನಪ್ರಿಯರಾಗಿರುವ ನಮ್ಮ ಶಾಯರ್, ವಿವಿಧ ಶೈಲಿಗಳಲ್ಲಿ ಅಷ್ಟೇ ಸಮರ್ಥವಾಗಿ ಬರೆದಾಗಲೂ ಅವರ ಕಾವ್ಯ ಕೇಳುಗರನ್ನು ಉದ್ದೇಶಿಸಿ ‘ಹೇಳುವ’ ಕಾವ್ಯವಾಗಿದೆ. ಹೈಸ್ಕೂಲ್‌ನಲ್ಲಿ ಹಿಂದಿ ಕಲಿತ ಮೇಲೆ ದೇವನಾಗರಿ ಲಿಪಿಯಲ್ಲಿ ಅಚ್ಚಾದ ಉರ್ದು ಕಾವ್ಯವನ್ನು ಹಿಂದ್ ಪಾಕೆಟ್ ಬುಕ್ಸ್‌ನಿಂದ ಪ್ರಕಟವಾದ, ಬಹುಪಾಲು ಪ್ರಕಾಶ್ ಪಂಡಿತರಿಂದ ಸಂಪಾದನೆಯಾದ ಪುಟ್ಟ ಪುಸ್ತಕಗಳಲ್ಲಿ ಓದತೊಡಗಿದೆ. ಅವುಗಳಲ್ಲಿ ಅಪರಿಚಿತ ಪದಗಳ ಅರ್ಥವನ್ನು ವಿವರಿಸುತ್ತಿದ್ದರಿಂದ ಅನುಕೂಲವಾಗುತ್ತಿತ್ತು. ಹೀಗೆ ಮೀರ್, ಝೌಕ್, ಗಾಲಿಬ್, ಜೋಶ್, ಸಾಹಿರ್ ಎಲ್ಲರನ್ನೂ ಓದಲು ಸಾಧ್ಯವಾಯಿತು. ಸಾಹಿರ್ ಈಗಲೂ ನನ್ನ ಆರಾಧ್ಯ ದೈವ. ಇದೆಲ್ಲ ಯಾಕೆ ನೆನಪು ಮಾಡಿಕೊಂಡೆಯೆಂದರೆ ಈ ಕಾವ್ಯವನ್ನು ಓದಿದ ಖುಷಿ, ಅಚ್ಚರಿ, ಮೆಚ್ಚುಗೆ ಇವೆಲ್ಲವೂ ಚಾಂದ್ ಪಾಷಾರ ಪದ್ಯಗಳನ್ನು ಓದಿದಾಗ ಅನ್ನಿಸಿದವು. ದುಂದುಗಾರಿಕೆಯ ಮಟ್ಟದ ಪ್ರತಿಮೆಗಳು ಅನಿರೀಕ್ಷಿತವಾದ ಅರೆಸಾಲುಗಳು ಮತ್ತು ನಾಟಕೀಯವಾದ ಮಾತಿನ ಗತ್ತು ಇವು ಹದಿಹರೆಯವನ್ನು ಮರುಕಳಿಸುವಷ್ಟು ಜೀವಂತವಾಗಿವೆ. ಉದಾಹರಣೆಗೆ ‘ಆಸ್ಮಾಳಿಗೆ’ ಎನ್ನುವ ಪದ್ಯದಲ್ಲಿನ ಈ ಸಾಲುಗಳು:‘ನಿನ್ನ ಅಮಲಿನಲ್ಲಿ ಕಳೆದು ಹೋದ ಎಷ್ಟೋ ಕವಿತೆಗಳು ಹಿಂತಿರುಗಲೇ ಇಲ್ಲಬಹುಶಃ ನನ್ನೆದೆಯ ವಿಳಾಸ ಮರೆತಿರಬಹುದು’ಅಥವಾ‘ದಾವೆ ಹೂಡಿದಾನಂತೆ’ ಪದ್ಯದ ಈ ಸಾಲು:‘ಈ ಗಂಧದ ಗೊಂಬೆಯ ಕಂಡು ಗಂಧರ್ವರೂ ಕೂಡ ಕಾಡುಗಳ್ಳರಾಗಿದ್ದಾರಂತೆ!’ + +ಇವುಗಳಲ್ಲಿ ಉದ್ದೇಶಪೂರ್ವಕವಾದ ಚಮತ್ಕಾರವಿದೆ. ಭಾಷೆಯೊಂದಿಗೆ ಆಟವಾಡುವ ಖುಷಿಯೂ ಇದೆ. ಆದರೆ ಬಹುಮುಖ್ಯವಾದ ಸೃಜನಶೀಲವಾದ ಒಂದು imagination ಇದೆ. ಇದು ಲೋಕವನ್ನು ಕಾಣುವ ದೃಷ್ಟಿಯೇ ಬಹು ವಿಶಿಷ್ಟವಾಗಿದೆ. + +“ಕಂಬಳಿಯ ಹೊದ್ದು ಮಲಗಿದ ನಕ್ಷತ್ರಗಳಿಗೂ ನೆಗಡಿಯಾಗಿದೆ”“ಚಳಿ ಹೆರುವ ಕಾರ್ಖಾನೆಯಾಯಿತೇ ಭೂಮಿ”(‘ಅವಳೆಂದರೆ ವಿಪರೀತ ಚಳಿಗಾಲ’) + +ಇವು ಸಾಂಪ್ರದಾಯಿಕವಾದ ಉಕ್ತಿ ವೈಚಿತ್ರ್ಯಕ್ಕಿಂತ ಭಿನ್ನವಾಗಿವೆ. ಇಡೀ ಪದ್ಯವೇ ಪ್ರೀತಿ ಜೀವನೋತ್ಸಾಹಗಳ ವಿಜೃಂಭಣೆಯಾಗಿದೆ. ಆದ್ದರಿಂದ‘ನೀ ಸಿಗುವ ಮೊದಲು ಚಳಿಗಿಷ್ಟು ಚರಿತ್ರೆ ಇರಲಿಲ್ಲ’ಎನ್ನುವ ಸಾಲು ಕೇಳುವ ಮಹಫಿಲ್ ‘ವಾಹ್’ ಅನ್ನುತ್ತದೆ. + +ಇದು ಕವಿ ವ್ಯಕ್ತಿತ್ವದ ಒಂದು ಮುಖವಾದರೆ ಇನ್ನೊಂದರಲ್ಲಿ ಧರ್ಮ, ಪ್ರಭುತ್ವ, ಗಂಡಾಳ್ವಿಕೆ, ಹಿಂಸೆಗಳಿಗೆ ತೀವ್ರವಾಗಿ ಮಿಡಿಯುವ ಪ್ರತಿಭಟಿಸುವ ಕೆಚ್ಚಿದೆ. ಹಾಗೆ ನೋಡಿದರೆ ಇದು ಉರ್ದು ಕಾವ್ಯಕ್ಕೆ ಹೊಸತಲ್ಲ, ಗಾಲಿಬ್, ಜಿಗರ್ ಮತ್ತು ಸಾಹಿರ್‍ರು ಸಮಕಾಲೀನ ಸಮಾಜದ ಬಗ್ಗೆ ವ್ಯಂಗ್ಯವಾಗಿ, ವ್ಯಗ್ರವಾಗಿ ಸ್ಪಂದಿಸಿದ್ದಾರೆ. ನನಗೆ ನೆನಪಿರುವಂತೆ ನಜ್ಮ ಎಂಬ ಪ್ರಕಾರವು ಇಂಥ ವಸ್ತುವಿಗೆ ಮೀಸಲಾಗಿದ್ದ ಪ್ರಕಾರವಾಗಿದೆ. ಆದರೆ ಚಾಂದ್ ಪಾಷಾರ ಈ ವಸ್ತುವಿನ ಪದ್ಯಗಳ ಹಿಂದೆ ಬಂಡಾಯ-ದಲಿತ ಕಾವ್ಯವಿದೆ. ಅಲ್ಲದೆ ಅವರಿಗೇ ವಿಶಿಷ್ಟವಾದ ವ್ಯಗ್ರತೆ ಇದೆ. ಸುತ್ತು ಬಳಸದೇ ನೇರವಾಗಿ ತಮ್ಮ ಕಾವ್ಯದ ಹತಾರವನ್ನು ಬಳಸುವ ಸ್ವಭಾವವೂ ಇದೆ. + +“ದವಾಖಾನೆಗಳ ತೆರೆಯಲಾಗದ ಈ ಬಡದೇಶದಲ್ಲಿಮುಗಿಲಿಗೆ ಮುತ್ತಿದಂಥ ಪುತ್ಥಳಿ ನಿಲ್ಲಿಸಿಕಾವಲಿಗೆ ಬಡರೋಗಿಯನ್ನೇ ನೇಮಿಸಿದ್ದೇವೆ’.“ಬೆಂಕಿ ಹಚ್ಚುವವರ ಕೈಗೆ ದೇಶ ಕೊಟ್ಟು,ಸುಟ್ಟ ಗಾಯಕ್ಕೆ ಔಷಧಿ ಹುಡುಕುತ್ತಿದ್ದೇವೆ”(‘ಅಲೆಮಾರಿಯ ಅಂಗಾಲು’) + +ಇಂಥ ರಾಜಕೀಯ ಪದ್ಯಗಳು ವೇದಿಕೆಯಿಂದ ನೇರವಾಗಿ ಕೇಳುಗರಿಗೆ ತಲುಪುವಂಥ ಮಾದರಿಯ ಪದ್ಯಗಳು. ಆದರೆ ಇವು ಪ್ರಚಾರ ಪ್ರಿಯತೆಗಾಗಿ ಬರೆದ ಪದ್ಯಗಳಲ್ಲ. ಸದ್ಯದ ಸ್ಥಿತಿಯಲ್ಲಿ ಕಾವ್ಯಕ್ಕೆ ಇರಬೇಕಾದ ಸಮಾಜಮುಖಿ ಬದ್ಧತೆಯ ಎಚ್ಚರದಿಂದ ಬರೆದ ಪದ್ಯಗಳು. ಈ ಪದ್ಯಗಳಲ್ಲಿ ಕೂಡ ಚಾಂದ್‌ ಪಾಷಾ ಭಾಷೆಯನ್ನು ಪ್ರಯೋಗಶೀಲವಾಗಿ ಬಳಸುತ್ತಾರೆ. ಹರಿತವಾದ ವ್ಯಂಗ್ಯದೊಂದಿಗೆ ಪ್ರತಿಮೆಗಳು, ರೂಪಕಗಳು ನುಗ್ಗಿ ಬರುತ್ತವೆ. + + + +“ನಿಮ್ಮ ಧರ್ಮದ ತಕ್ಕಡಿಯಲ್ಲಿ ತೂಗದೇ ಸತ್ತ ನಮ್ಮಹಸಿವಿನ ಗುಜರಿ ಐಟಂಗಳೆಲ್ಲನಿಮ್ಮದೇ, ಶಾಸ್ತ್ರ, ಪುರಾಣಗಳ ಸ್ಮಶಾನದಲ್ಲಿ ಗೋರಿಯಾಗಿವೆ” + +*** + +“ನಾವು ನಿಮ್ಮ ಮುಕ್ಕೋಟಿ ದೇವತೆಗಳನ್ನು ತಿನ್ನುತ್ತಿಲ್ಲನಮ್ಮ ಅನ್ನವನ್ನಷ್ಟೇ ತಿನ್ನುತ್ತಿದ್ದೇವೆ.ಶತಮಾನದಿಂದಲೂ ಹಸಿದ ಬದುಕಿಗೆ ಆಹಾರವಾದದನದ ಮಾಂಸವನ್ನಷ್ಟೇ ತಿನ್ನುತ್ತಿದ್ದೇವೆ.ನಿಮ್ಮ ಕಾಮಧೇನುವನ್ನಲ್ಲ”‘ಹಸಿವು’ + +ಈ ಸಾಲುಗಳನ್ನು ಓದಿದಾಗ ನನಗೆ ಎನ್.ಕೆ. ಹನುಮಂತಯ್ಯನವರ ‘ಗೋವನ್ನು ತಿಂದು’ ಪದ್ಯವು ನೆನಪಾಯಿತು. ಚಾಂದ್‌ ಪಾಷಾ ಅವರ ಕಾವ್ಯ ಸದ್ಯದ ಹಂಗಿನ ಕಾವ್ಯ. ಹೀಗಾಗಿ ಹಿಜಾಬ್, ಆಹಾರ ರಾಜಕೀಯ, ಕೋಮುವಾದ ಇವುಗಳಿಗೆ ಈ ಪದ್ಯಗಳು ತೀವ್ರವಾಗಿ ಸ್ಪಂದಿಸುತ್ತವೆ. ಎದುರಿಸಿ ನಿಲ್ಲುವ, ಸವಾಲು ಹಾಕುವ ದನಿಯ ಪದ್ಯಗಳು ಇವು. ಆದರೆ ಇನ್ನೂ ಅನೇಕ ಪದ್ಯಗಳಲ್ಲಿ ಗಾಢವಾದ ವಿಷಾದವಿದೆ. ಬದುಕಿನ ದುರಂತಗಳ ಗಾಢವಾದ ಅರಿವೂ ಇದೆ. ‘ಬೂದಿಯಾದವರು’ ಇಂಥ ಒಂದು ಪ್ರಭಾವಿಯಾದ ಪದ್ಯ. ಇದರಲ್ಲಿ ಚಂದ್ರಮತಿ, ಪಾಂಚಾಲಿ, ಗಾಂಧಾರಿ, ಅಕ್ಕ, ಅಹಲ್ಯೆ, ಸೀತೆ ಇವರೆಲ್ಲ ಇದ್ದಾರೆ. + +“ತೇಪೆ ಹಚ್ಚಿಕೊಂಡ ಬದುಕಿಗೇನು ಗೊತ್ತು?ಗಾಂಧಾರಿಯ ಕಣ್ಣರೆಪ್ಪೆಯ ಹೊಲಿಗೆ ಎಷ್ಟು ಮಜುಬೂತಾಗಿದೆ ಎಂದು!” + +ಇಡೀ ಪದ್ಯದಲ್ಲಿ ಪ್ರಶ್ನಿಸಿ, ಕಟ್ಟಳೆಗಳನ್ನು ಮುರಿದ ಹೆಣ್ಣು ವ್ಯಕ್ತಿತ್ವಗಳು ಇನ್ನೂ ನೆಲೆಸಿಕ್ಕದೆ, ಚರಿತ್ರೆ, ಪುರಾಣಗಳ ನೆನಪುಗಳಲ್ಲಿ ಅನಾಥ, ಅಲೆಮಾರಿಗಳ ಹಾಗೆ ಅಲೆಯುತ್ತಿವೆ. ಹೆಣ್ಣು, ಬಟ್ಟೆ ತೊಟ್ಟಿದ್ದಕ್ಕಿಂತ ಗಂಡಸಿನ ಕಣ್ಣು ತೊಟ್ಟದ್ದೇ ಹೆಚ್ಚು’ ಆಗಿರುವುದರಿಂದ ಈಗ ಹಿಜಾಬು, ಧರಿಸಿದ್ದಕ್ಕಾಗಿ ಶಾಲೆಯೊಳಗೆ ಹೋಗದೆ ಹೊರಗಾಗಿ ಹೊರಗೆ ಇದ್ದಾಳೆ. ಜೀವ ಜಲ ಹುಡುಕಿ, ಅಗೆದು ಬಾವಿ ತೋಡುವವರಿಗೆ ಬಾಯಾರಿಕೆಗೂ ನೀರಿಲ್ಲ. ಮನುಷ್ಯರಿಗೆ ಸಿಕ್ಕದ ನೀರು ತುಳಸಿಕಟ್ಟೆಗೆ ಹೋಗುತ್ತದೆ. ನಾವೇ ಸೃಷ್ಟಿಸಿರುವ ಈ ನರಕಗಳ ನಡುವೆ ನೆನಪಾಗುವುದು ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ಮತ್ತು ಬಾಬಾ ಸಾಹೇಬರು. ಒಂದು ಗುಂಡಿಗೆಗೆ ಗುಂಡಿಟ್ಟು ಕೊಂದರೇನಂತೆ ನೂರು ಗುಂಡಿಗೆಗಳು ಸನ್ನದ್ಧವಾಗಿವೆ ಎಂದು ಗೌರಿ ಲಂಕೇಶರ ನೆನಪಿನ ಪದ್ಯದಲ್ಲಿ ಹೇಳುವ ಎದೆಗಾರಿಕೆ ಕವಿಗೆ ಇದೆ. + +ಚಾಂದ್ ಪಾಷಾರಿಗೆ ಇರುವ ಸವಾಲೆಂದರೆ ಒಂದು mood ಅಥವಾ ಒಂದು ಹೊಳಹನ್ನು ಎಷ್ಟು ಸಶಕ್ತವಾಗಿ ಹೇಳಬಲ್ಲರೋ ಅದೇ ಸಾಮರ್ಥ್ಯವನ್ನು ಸಂಕೀರ್ಣ ವಸ್ತುವಿನ ನಿರ್ವಹಣೆಯಲ್ಲಿಯೂ ಸಾಧಿಸಬೇಕಾಗುತ್ತದೆ. ಹೇಳಿದ್ದನ್ನು ಚುರುಕಾಗಿ, ಪ್ರಭಾವಿಯಾಗಿ ಹೇಳುವುದು ಎಷ್ಟು ಮುಖ್ಯವೋ ಕಾವ್ಯದಲ್ಲಿ ಒಂದು ಅನುಭವವನ್ನು ಸಾಂದ್ರವಾಗಿ ಗಂಭೀರ ಚಿಂತನೆಯೊಂದಿಗೆ ಅಭಿವ್ಯಕ್ತಿಸುವುದು ಅಷ್ಟೇ ಮುಖ್ಯ. ಈ ಹಿಂದಿನ ಸಂಕಲನಗಳಲ್ಲಿ ಮತ್ತು ಪ್ರಸ್ತುತ ಕೃತಿಯಲ್ಲಿ ಈ ಸಾಮರ್ಥ್ಯದ ಝಲಕುಗಳನ್ನು ಚಾಂದ್‌ ಪಾಷಾ ತೋರಿದ್ದಾರೆ. ಒಂದು ಪದ್ಯದಲ್ಲಿ ಮಮತಾ ಸಾಗರ ಕಾವ್ಯದ ಬಗ್ಗೆ ಹೇಳಿದ್ದನ್ನು ಅವರು ನೆನಪಿಸಿಕೊಂಡಿದ್ದಾರೆ. + +(ಡಾ. ರಾಜೇಂದ್ರ ಚೆನ್ನಿ) + +“ಕವಿತೆ ಹುಟ್ಟುವುದಲ್ಲ ಕಟ್ಟುವುದು, ನೀಲಾಕಾಶದ ನಿಹಾರಿಕೆಗಳನೋವು ಗೊತ್ತಿರಬೇಕು ಅಂದಿದ್ದಿರಿ.ನಾನೀಗ ನೂರು ನೋವಿನ ನೆನಪು ಹೆಣೆದು ಒಂದೇ ಪದ್ಯ ಬರೆಯುತ್ತಿದ್ದೇನೆ” + +ಒಬ್ಬ ಪ್ರತಿಭಾವಂತ ಯುವ ಕವಿಗೆ ಮಮತಾ ಹೇಳಿದ ಮಾತಿಗಿಂತ ಉತ್ತಮ ಮಾರ್ಗದರ್ಶನ ಇರಲಾರದು. ಕವಿತೆ ಕಟ್ಟುವುದು ಅಪಾರವಾದ ತಾಳ್ಮೆ, ಚಿಂತನೆ ಹಾಗೂ ಜೀವನದ ಬಗ್ಗೆ ಗಂಭೀರವಾದ ಚಿಂತನೆಯನ್ನು ಬಯಸುತ್ತದೆ. ಇಂಥ ಪ್ರಯತ್ನವನ್ನು ‘ಒದ್ದೆಗಣ್ಣಿನ ರಾತ್ರಿ’ ಯಂಥ ಪದ್ಯದಲ್ಲಿ ಕಾಣಬಹುದಾಗಿದೆ. ಈ ಪ್ರಯತ್ನವು ಹೀಗೇ ನಡೆಯುತ್ತಿರಲಿ ಎಂದು ಹಾರೈಸುತ್ತೇನೆ. + + + +“ಮಗ್ಗಲು ಬದಲಿಸಿದಂತೆಲ್ಲ ದುಃಖದ ದೋಣಿಗಳು ತೇಲುತ್ತಲೆ ಇವೆ, ಮುಳುಗುವ ಭಯವಿಲ್ಲದೆ” ಎನ್ನುವ ತಿಳುವಳಿಕೆ ಈ ಪದ್ಯದಲ್ಲಿದೆ. ಇದು ಕವಿಯ ಜೊತೆಗೆ ಸದಾ ಇರಲಿ. ಈ ಪದ್ಯಗಳಲ್ಲಿ ಮತ್ತೆ ಮತ್ತೆ ಅವರಿಗೆ ನೆನಪಾಗುವ ವಚನಕಾರರ ‘ಸಕಲ ಜೀವಿಗಳಿಗೆ ಲೇಸನ್ನೇ ಬಯಸುವ’ ಪ್ರಜ್ಞೆಯ ವಿಸ್ತಾರವು ಅವರಿಗೆ ಲಭಿಸಲಿ ಎಂದೂ ಆಶಿಸುತ್ತೇನೆ. ಈ ಪದ್ಯಗಳು ನನಗೆ ನೀಡಿದ ಖುಷಿಗಾಗಿ ಅವರಿಗೆ ಕೃತಜ್ಞತೆಗಳನ್ನು ತಿಳಿಸುತ್ತಿದ್ದೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_136.txt b/Kenda Sampige/article_136.txt new file mode 100644 index 0000000000000000000000000000000000000000..4d846d176bb9660517e476e6a256ee10de7f133c --- /dev/null +++ b/Kenda Sampige/article_136.txt @@ -0,0 +1,11 @@ +ನನಗೆ ಮೊದಲ ಆಶ್ಚರ್ಯ ಮತ್ತು ಇವರ ಬಗ್ಗೆ ವೈಶಿಷ್ಟತೆಯ ಸೋಜಿಗ ಏನೆಂದರೆ ಇವರು ಹೇಗೆ ಕಥೆ ಬರೆಯುವದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆಂಬುದು. ಯಾಕೆ ಈ ಮಾತು ಅಂದ್ರೆ ಶೆಲ್ಲಿಕೇರಿಯವರು ಕೆ ಎ ಎಸ್ ಪಾಸಾಗಿ ಉನ್ನತ ಹುದ್ದೆಯಲ್ಲಿರುವವರು. ಕಚೇರಿಯ ಕೆಲಸದಿಂದ ವೇಳೆ ಸಿಗುವುದೇ ಕಷ್ಟ ಅನ್ನುವಾಗ ಇವರು ಕಥೆ, ಕವನ ಎಂದು ಬರೆಯುವುದರಲ್ಲಿ ತೊಡಗಿಸಿಕೊಂಡದ್ದು ಸ್ವಲ್ಪ ವಿಸ್ಮಯವೇ ಸರಿ. + +(ಮಲ್ಲಿಕಾರ್ಜುನ ಶೆಲ್ಲಿಕೇರಿ) + +ಸಂಕಲನದಲ್ಲಿರುವ ಎಂಟೂ ಕಥೆಗಳು ಗ್ರಾಮದ ಜೀವನ, ಭಾಷೆ, ವೃತ್ತಿ, ಹವ್ಯಾಸ ಮತ್ತು ಸಂಪ್ರದಾಯಗಳಿಗೆ ಸಂಬಂಧಪಟ್ಟವುಗಳಾಗಿವೆ. ನಾನು ಓದಿದ ಹಲವು ಕಥೆಗಾರರು ಗ್ರಾಮ ಜೀವನವನ್ನು ಬಹಳ ಶಕ್ತಿಯುತವಾಗಿ ಕಥೆಗಳಲ್ಲಿ ಚಿತ್ರಿಸುತ್ತಿದ್ದಾರೆ. ಅವರಲ್ಲಿ ಶೆಲ್ಲಿಕೇರಿಯವರು ಒಬ್ಬರು. ಆ ತರಹದ ಗ್ರಾಮ್ಯ ಜೀವನ ಅನುಭವವಿದ್ದವರಿಗೆ ಮಾತ್ರ ಸಾಧ್ಯವಾಗುತ್ತದೆ. + +ನಾನು ಈ ಮೊದಲು ಇವರ “ಆಲದ ಮರ” ಎಂಬ ಕತೆಯನ್ನು ಮಯೂರ ಪತ್ರಿಕೆಯಲ್ಲಿ ಓದಿದ್ದೆ. ಆವಾಗಲೇ ಓಹ್! ಸರ್ ಚೆನ್ನಾಗಿ ಕಥೆ ಬರೀತಾರಲ್ಲ ಎಂದು ಉದ್ಗರಿಸಿದ್ದೆ. “ಭಜಿ ಅಂಗಡಿ ಮಲ್ಲಕ್ಕ” ಮತ್ತು “ತಪ್ದಂಡ” ಇವೆರಡು ಕಥೆಗಳನ್ನು ಬಿಟ್ಟರೆ ಉಳಿದೆಲ್ಲವೂ ನೋವು, ಹತಾಶೆ ಅಸಹಾಯಕತೆಯಿಂದ ಕೂಡಿವೆ. ಕೊನೆವರೆಗೂ ಹೋರಾಡುವ “ಆಲದ ಮರ”ದ ಅಜ್ಜ, “ತಲ್ಲಣ”ದಲ್ಲಿರುವ ಮಕ್ಕಳ ಸಾವು, “ಮಹಾಪೂರ”ದಲ್ಲಿಯ ರಾಜಕೀಯ ನಾಟಕ, “ದಿವ್ಯ ಮೌನದ ಸಂತ”ನಲ್ಲಿ ಅಮಾಯಕನ ಕೊಲೆ, “ಋಣಮುಕ್ತ”ದಲ್ಲಿಯ ವ್ಯಕ್ತಿ ಅನ್ಯಾಯವಾಗಿ ನೋವು ಪಡುವ ದೃಶ್ಯಗಳು ಓದುಗನನ್ನು ಹಿಂಸಿಸುತ್ತವೆ. “ದೀಡೆಕರೆ ಜಮೀನು” ಕಥೆಯಲ್ಲಿ ಪಾತ್ರ ಹೆಚ್ಚಿನ ಜಮೀನನ್ನು ನಿರಾಕರಿಸಿ, ಬರೀ ಸ್ವಲ್ಪದರಲ್ಲೇ ತೃಪ್ತಿಹೊಂದುವುದು ಅನುಕರಣೀಯವಾದರೂ ಕೊನೆಗೆ ಪ್ರಾಮಾಣಿಕತೆ ಮತ್ತು ಸರಳತೆಯ ಸೋಲುಂಟಾಗುತ್ತದೆ. + +“ದಿವ್ಯ ಮೌನದ ಸಂತ” ಕಥೆಯಲ್ಲಿ ಕಥೆಗಾರರು ಅಧ್ಯಾತ್ಮದೊಂದಿಗೆ ಮೌನದ ಬಗ್ಗೆ ಅತಿ ವಿವರವಾಗಿ ವಿಶ್ಲೇಷಿಸಿದ್ದು ಸಂತೋಷ ಕೊಡುತ್ತದೆ. ಕೆಲವು ಕಥೆಗಳಲ್ಲಿ ಕಥೆಯ ವಿಷಯ ಕಡಿಮೆ ಅನಿಸಿದರೂ ಅವುಗಳಿಗೆ ಸಂಭಾಷಣೆಯು ಪುಷ್ಟಿ ನೀಡಿದೆ. ಈ ಎಲ್ಲಾ ಕಥೆಗಳಲ್ಲಿ ಇನ್ನೊಂದು ವೈಶಿಷ್ಟವೇನೆಂದರೆ ಎಲ್ಲವೂ ವರ್ತಮಾನದಲ್ಲಿ ಇದ್ದುಕೊಂಡೇ ಭೂತಕಾಲಕ್ಕೆ ಹೋಗಿ ಕಥೆ ಹೇಳುವ ಫ್ಲ್ಯಾಷ್‌ಬ್ಯಾಕ್ ತಂತ್ರವನ್ನು ಕಥೆಗಾರ ಬಳಸಿದ್ದಾರೆ. ಪ್ರತೀ ಕಥೆಯಲ್ಲಿ ನೋವು, ಸಂಕಟ, ಕ್ರೌರ್ಯ, ದುರಂತಗಳೇ ರಾರಾಜಿಸುತ್ತವೆ. ಒಳ್ಳೆತನವೆನ್ನುವುದು ಕಸಕಸೆಯಷ್ಟು ಮಾತ್ರ ಈ ಜಗತ್ತಿನಲ್ಲಿ ಉಳಿಯುತ್ತಿದೆ ಎನ್ನುವುದು ಸಾಬೀತಾಗುತ್ತಿದೆ. ಇದು ಸಮಾಧಾನಕರವೂ ಹೌದು. + +ಮಾಲಾ ಅಕ್ಕಿಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ. ಲೇಖನ, ಕವಿತೆ, ಕಥೆ, ಲಲಿತ ಪ್ರಬಂಧ, ಮಕ್ಕಳ ಕಥೆಗಳನ್ನು ಬರಿಯೋದು ಹವ್ಯಾಸ. ಹಲವು ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ \ No newline at end of file diff --git a/Kenda Sampige/article_137.txt b/Kenda Sampige/article_137.txt new file mode 100644 index 0000000000000000000000000000000000000000..1a23146d507118571a05d95775be70fc65818cf1 --- /dev/null +++ b/Kenda Sampige/article_137.txt @@ -0,0 +1,19 @@ +ಇಲ್ಲಿನ ಹಲವು ಕತೆಗಳು ಕೆಳ ಮಧ್ಯಮ ವರ್ಗದ ದಿನ ದಿನದ ಬದುಕಿನ ಮಂದ್ರ ಸ್ಥಾಯಿಯನ್ನು ನಮ್ಮ ಮುಂದಿಟ್ಟು ಮುಂದಕ್ಕೆ ಹೋಗುತ್ತದೆ. ಹೆಚ್ಚಿನವು ದಂದುಗ, ಬವಣೆ, ಒಂದು ನೋವಿನೆಳೆ, ಒಂದು ನಿಟ್ಟುಸಿರಿನಲ್ಲಿ ಮುಗಿಯುತ್ತದೆ. ಉತ್ತರವಿಲ್ಲದ ಈ ದಿನ ದಿನದ ಬದುಕಿನ ಪುಟಗಳು ವ್ಯಕ್ತಿಗಳ ಸಮಸ್ಯೆಯೋ, ವ್ಯವಸ್ಥೆಯ ಸಮಸ್ಯೆಯೋ ಎಂಬುದನ್ನು ಕತೆ ಹೆಚ್ಚು ಯೋಚಿಸುವುದಿಲ್ಲವಾದರೂ ಅವುಗಳಿಗೊಂದು ಕಿವಿಯಾಗಿ ಕತೆಯ ರೂಪ ಧರಿಸಿದೆ. + +(ವಿಜಯಾ ಮೋಹನ್‌) + +ಇದರಲ್ಲಿ ವ್ಯಕ್ತಿಗಳ ಸಮಸ್ಯೆಯೂ, ವ್ಯವಸ್ಥೆಯ ಅವ್ಯವಸ್ಥೆಯಿಂದಾಗಿ ಹುಟ್ಟಿದ ಸಮಸ್ಯೆಗಳೂ ಕತೆಗಳಾಗಿವೆ. ದನಗಳಿಗೆ ಮೇವು ಇಲ್ಲದಿರುವ ಸಮಸ್ಯೆ, ಕೋವಿಡ್‌ನ ಕಾಲದ ವಲಸೆ ಸಮಸ್ಯೆ, ಸರ್ಕಾರವೇ ಸಬ್ಸಿಡಿ ನೀಡಿದಾಗಲೂ ಹಣಹೊಡೆಯುವ ದುರಾಸೆಗೆ ಬಿದ್ದು ಶೌಚಾಲಯವನ್ನು ಕಟ್ಟಿಕೊಳ್ಳದೆ ಮನೆಯ ಸೊಸೆ ಬೀದಿಯಲ್ಲಿ ಹೆತ್ತ ಮಗು ಬೀದಿನಾಯಿಗಳ ಪಾಲಾಗುವ ದಾರುಣತೆ, ಹೀಗೆ ಹಲವು ಮುಖಗಳು ಇಲ್ಲಿವೆ. ವಿಜ್ಞಾನ ಓದಿಯೂ ಮೌಢ್ಯ ಪೊರೆವ, ಯಾವ ತಪ್ಪು ಮಾಡದೆಯೂ ಮತ್ತೆ ಮತ್ತೆ ತಪ್ಪಿತಸ್ಥನೆನಿಸಿಕೊಳ್ಳುವ ದುರಾದೃಷ್ಟಕ್ಕೆ ಒಳಗಾದ ವ್ಯಕ್ತಿನೆಲೆಯ ಕತೆಯ ಜೊತೆಗೆ ಸಂಬಂಧಗಳ ನಡುವೆ ಬಿರುಕು ಬಂದಿರುವ ಆಧುನಿಕ ಜೀವನಶೈಲಿಯ ಪರಿಣಾಮಗಳನ್ನು ಹೇಳುವ ಕತೆಗಳೆಡೆಗೆ ಲೇಖಕಿಯ ಗಮನವಿದೆ. ತಾಯಿಯನ್ನು ನೋಡಿಕೊಳ್ಳಲು ಲೆಕ್ಕಾಚಾರ ಹಾಕುವ ಮಕ್ಕಳು ಮತ್ತು ಕೊನೆಗೂ ಆ ಬಗ್ಗೆ ಅಪರಾಧಿ ಭಾವ ಹೊಂದಿ ತಾಯಿಗಾಗಿ ಮನೆಯನ್ನೇ ಬಿಡುವ ಮಗನ ಕತೆಯಾದ ‘ನಿರ್ಧಾರ’, ಜೀವನದುದ್ದಕ್ಕೂ ಊರಿನಲ್ಲಿ ಹಲವರಿಗೆ ಪಂಚಾಯಿತಿ ಮಾಡಿ ಪರಿಹಾರದ ಪರೋಪಕಾರ ಮಾಡುತ್ತಾ ಸಣ್ಣ ಮಟ್ಟದಲ್ಲಿ ನಾಯಕನಂತೆ ಬದುಕಿದ ರಂಗಣ್ಣನ ಈ ಗುಣವೇ ಅವನ ಜೀವನ ಸಂಜೆಯಲ್ಲಿ ಅಧಿಕಪ್ರಸಂಗಿತನವಾಗಿ ಸ್ವತಃ ಹೆತ್ತ ಮಗನಿಗೂ, ಊರಿನ ಹೊಸ ತಲೆಮಾರಿನವರಿಗೂ ಕಾಣಿಸುವ, ಸಂಪೂರ್ಣವಾಗಿ ಸಾಮುದಾಯಿಕ ಬದುಕೆಂಬುದು ಅಧಃಪತನಕ್ಕೆ ಹೋಗಿರುವ ಸನ್ನಿವೇಶದಲ್ಲಿ ಅದಕ್ಕಾಗಿ ಪದೇ ಪದೇ ಅವಮಾನಕ್ಕೆ ಒಳಗಾಗುವ ಹಾಗೂ ಅಂತಿಮವಾಗಿ ವೃದ್ಧಾಶ್ರಮಕ್ಕೆ ಆತನನ್ನು ಸೇರಿಸಲು ಅದೇ ನೆಪವಾಗುವ ದುರಂತವನ್ನು ‘ತಪ್ಪು ಕಥೆ’ ಹೇಳುತ್ತದೆ. ಇಲ್ಲೆಲ್ಲಾ ಗಮನಿಸಬೇಕಾದ ಸಂಗತಿಯೆಂದರೆ, ಭೌತಿಕ ಸವಲತ್ತಿನ ಬೆನ್ನು ಬಿದ್ದಿರುವ ಇಂದಿನ ಜೀವನದಲ್ಲಿ, ಮನುಷ್ಯ ಸಂಬಂಧಗಳ ಚೆಲುವಿನೆಡೆಗೆ ಇರುವ ಗಾಢ ಅವಜ್ಞೆಯು ಹೇಗೆ ತಮ್ಮ ಬದುಕುಗಳ ಸುಖವನ್ನು ನುಂಗುತ್ತಿದೆ ಎಂಬುದು ಸ್ವತಃ ಶೋಷಣೆ ಮಾಡುವವರಿಗೇ ತಿಳಿಯದೇ ಹೋಗುವುದು. ಎಲ್ಲೆಲ್ಲೂ ‘ಅನ್ಯತೆ’ ಎಂಬುದು ಮೌಲ್ಯವಾಗಿ ಬದುಕು ದಿಕ್ಕಾಪಾಲಾಗಿರುವುದು. + + + +ವಿಜಯಾ ಮೋಹನ್ ಅವರು ಮಧುಗಿರಿಯ ಅಚ್ಚ ನುಡಿಯಲ್ಲಿ ಬರೆಯುವವರು. ಈ ಸಂಕಲನದಲ್ಲಿ ಸ್ವಲ್ಪ ಭಾಷೆಯನ್ನು ತಿಳಿಯಾಗಿಸಿ ಓದುಗರನ್ನು ತಲುಪುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಕೇವಲ ಸಂಭಾಷಣೆಗೆ ಮಾತ್ರ ಆಡುನುಡಿಯನ್ನು ಬಳಸಿಕೊಳ್ಳುವ ಒಂದು ಕ್ರಮ ಕನ್ನಡದಲ್ಲಿದೆ. ಆದರೆ ವಿಜಯಾ ಅವರು ಈ ಮಾದರಿಯಲ್ಲಿ ಬರೆಯುವವರಲ್ಲ. ಅವರ ಕತೆಗಳಲ್ಲಿ ಸಂಭಾಷಣೆಗಿಂತ ನಿರೂಪಣೆಯೇ ಮುನ್ನೆಲೆಗೆ ಬರುತ್ತದೆ. ಹೀಗಾಗಿ ಕತೆಯ ಪೂರ್ಣ ಹೆಣಿಗೆ ಆಡುಮಾತಿನಲ್ಲೇ ಇರುತ್ತದೆ. ಆಡುವ ನುಡಿಯಂತೆಯೇ ಬರವಣಿಗೆಯೂ ಇರುತ್ತಾ, ನಿರೂಪಣೆಯಲ್ಲೇ ‘ಹ’ಕಾರ ‘ಅ’ಕಾರಗಳ ಅದಲು ಬದಲುಗಳೂ ಸೇರಿಕೊಂಡು ಇತರ ಸ್ಥಳೀಯ ಪದಗಳ ಬಳಕೆಯೂ ಹಾಗೇ ದಾಖಲಾಗುತ್ತದೆ. ಇದು ಕೆಲವೊಮ್ಮೆ ಭಾಷೆಯ ಬಳಕೆಯ ಬಗೆಗೆ ‘ಮಡಿವಂತಿಕೆ’ ಹೊಂದಿದ್ದು, ತಮ್ಮದೇ ಸರಿ ಕನ್ನಡ, ಇದೆಲ್ಲ ‘ಅಶುದ್ಧ’ ಕನ್ನಡ ಎಂದುಕೊಳ್ಳುವವರಿಗೆ ಇರಿಸು ಮುರಿಸು ಮಾಡಬಹುದು. ಆದರೆ ಇವು ಆಡುಕನ್ನಡದ ಒಂದು ಟಿಸಿಲು ಎಂದು ಅರಿತರೆ ಸಮಸ್ಯೆ ಅನ್ನಿಸದು. ಹಾಗೆ ನೋಡಹೋದರೆ, ಅವರು ಬಳಸುವ ದಟ್ಟ ಮಧುಗಿರಿಯ ಭಾಷೆಯೇ ಅವರ ಕತೆಗಳ ವೈಶಿಷ್ಟ್ಯ ಅನ್ನುವುದು ಈ ಸಂಕಲನದ ಭಾಷೆಗೆ ಹೋಲಿಸಿದಾಗ ನಿಚ್ಚಳವಾಗುತ್ತದೆ. ಆದ್ದರಿಂದ ವಿಜಯಾ ಅವರಿಗೆ ಈ ಸವಾಲು ಅವರ ಮುಂದಿದೆ. ಅಂದರೆ, ಕತೆಯು ಬಯಸಿದ ಭಾಷೆಯನ್ನು ಬಳಸಬೇಕೋ, ನಮ್ಮ ಆಯ್ಕೆಯ ಭಾಷೆ ಬಳಸುವುದೇ ಆದರೆ ಕತೆಯ ತಂತ್ರ, ಆಶಯಗಳನ್ನು ಪುನರ್‍ನಿರ್ಮಿಸಿಕೊಳ್ಳಬೇಕೋ ಅನ್ನುವುದು ಆ ಸವಾಲು. ನನಗನಿಸುತ್ತದೆ, ವಿಜಯಾ ಅವರು ಇನ್ನು ಮುಂದೆ ಬದುಕಿನ ಇನ್ನಷ್ಟು ಮಗ್ಗುಲುಗಳನ್ನು ಶೋಧಿಸಬೇಕಾದ ಅನಿವಾರ್ಯತೆಗೆ ಸಿಲುಕುವಷ್ಟರ ಮಟ್ಟಿಗೆ ಈಗಾಗಲೇ ಬರೆದಿರುವ ಕತೆಗಳು ಒಂದು ಹಂತವನ್ನು ದಾಟಿವೆ ಅಂತ. + +(ಡಾ. ಸಬಿತಾ ಬನ್ನಾಡಿ) + +ಈ ಸಂಕಲನದಲ್ಲಿ ಅಂತಹದೊಂದು ಪ್ರಯತ್ನ ನನಗೆ ‘ಹಣೆ ಬರ’ ಕತೆಯಲ್ಲಿ ಕಂಡಿದೆ. ಈ ಕತೆಯಲ್ಲಿ ಎಂದಿನಂತೆ ಬವಣೆ, ಸಂಕಟಗಳಿಗೆ ಕಿವಿಯಾಗುವುದಷ್ಟೇ ಇಲ್ಲದೆ, ಜನಪದರು ಎಷ್ಟೋ ಸಲ ಸಿದ್ಧ ಚೌಕಟ್ಟುಗಳ ಬದುಕಿನ ಎಲ್ಲೆಯನ್ನು ಮೀರಿ ತಮ್ಮದೇ ಬದುಕು ಕಟ್ಟಿಕೊಳ್ಳುತ್ತಾರೆ ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಾರೆ ಎನ್ನುವುದರ ಚಿತ್ರಣ ಇದೆ. ಈಗ ನಳಿನಾ ಆಗಿರುವ ನಂಜಮ್ಮ, ಬಾಲ್ಯದಿಂದಲೇ ಕಷ್ಟದ ಬದುಕು ಕಂಡವಳು. ಮದುವೆಯಾಗಿ ಎರಡು ಮಕ್ಕಳಾದ ಮೇಲೂ ವಿಷಮ ದಾಂಪತ್ಯದ ಕಾಠಿಣ್ಯದ ದುಃಖದಲ್ಲಿಯೇ ಇರುವವಳು. ಹೀಗಿರುವಾಗ ಆಕಸ್ಮಿಕವಾಗಿ ಒದಗುವ ರುದ್ರಣ್ಣನ ಪ್ರೇಮ ನಿವೇದನೆಯನ್ನು ಒಪ್ಪಿ ಅವನೊಂದಿಗೆ ತನ್ನೆರಡು ಹೆಣ್ಣು ಮಕ್ಕಳನ್ನೂ ಕರೆದುಕೊಂಡು ಹೋಗಿ ಹೊಸಬದುಕು ಕಟ್ಟಿಕೊಳ್ಳುತ್ತಾಳೆ. ನಿಜ, ಅವನು ಅವಳ ನಂಬಿಕೆ ಮುರಿಯದೇ, ಕೊರತೆಯಾಗದಂತೆ ಅವಳನ್ನು ನಡೆಸಿಕೊಂಡ ಎಂಬುದು ಅವಳ ಅದೃಷ್ಟ ಎಂದೇ ನಂಬಬೇಕಾದ ಸಾಮಾಜಿಕ ವಾಸ್ತವ ನಮ್ಮ ನಡುವೆ ಇದೆ. ಹಾಗಿದ್ದೂ, ಯಾವುದೇ ಗಿಲ್ಟ್‌ಗಳಿಲ್ಲದೆ ಆಕೆ ತನ್ನ ಮಕ್ಕಳನ್ನು ಬೆಳೆಸುತ್ತಾ ಅವನೊಂದಿಗಿನ ಬದುಕಿನ ಸುಖ ಅನುಭವಿಸುತ್ತಾಳೆ ಎಂಬ ವಾಸ್ತವವೂ ಇಲ್ಲಿರುವುದರಿಂದಲೇ ನಿರೂಪಕಿಗೆ, “ಇಷ್ಟು ದಿನಕ್ಕಿಂತ ನನ್ನ ಮನಸ್ಸೆಂಬೋದು ಇವತ್ತು ಸೊಯ್ಯೆಂದು ಬೀಸುತ್ತಿದ್ದ ಗಾಳಿಯ ಜೊತೆ ಸರ ಸರನೆ ತೇಲಾಡಂಗಾಯಿತು.” ಎಂದೆನಿಸುವುದು – ಓದುಗರಿಗೂ ಚೇತೋಹಾರಿಯಾಗಿರುತ್ತದೆ. + + + +ಈ ಚೇತೋಹಾರಿತನ, ಬದುಕಿನ ಕಟುತ್ವವನ್ನೂ ಮೀರಿ ನಲಿವನ್ನು ಅರಸುವ ಅಚ್ಚರಿಯ ಮುಖಗಳು, ಛಲದಿಂದ ಮುನ್ನಡೆಯುವ ಕಥನಗಳು, ಬದುಕಿನ ದುರಂತಗಳಿಗೆ ಇರುವ ಕಾರಣಗಳ ಆಳ ಶೋಧನೆ, ಹೀಗೆ ಭಿನ್ನ ಮಗ್ಗುಲುಗಳೆಡೆಗೆ ವಿಜಯಾ ಅವರ ಕಥಾ ಪ್ರಯಾಣ ಮುಂದುವರೆಯಲಿ ಎಂದು ಹಾರೈಸುತ್ತಾ ಶುಭಕೋರುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_138.txt b/Kenda Sampige/article_138.txt new file mode 100644 index 0000000000000000000000000000000000000000..1e6f9529dc8b87c391317f3302e52cb36f5fb197 --- /dev/null +++ b/Kenda Sampige/article_138.txt @@ -0,0 +1,27 @@ +ಒಮ್ಮೊಮ್ಮೆ ಹಾಗಾಗಿ ಬಿಡುತ್ತದೆ. ನಾವು ಓದಿದ, ದೃಶ್ಯರೂಪದಲ್ಲಿ ನೋಡಿದ ಅಥವಾ ಅವರಿವರಿಂದ ಕೇಳಿದ ಪ್ರಸಂಗಗಳು ನಮ್ಮ ಪರಿಸರದ, ಪರಿಚಯದ, ಬಂಧುಗಳ ಅಥವಾ ಊರಲ್ಲಿರುವ ಕುಟುಂಬದ ಪೈಕಿ ಒಬ್ಬರ ಬದುಕಿನ ಕಥೆಯನ್ನೇ ಹೋಲುವಂತೆ ಇರುತ್ತವೆ. ಓದುತ್ತ/ನೋಡುತ್ತ/ಕೇಳುತ್ತ ಹೋದಂತೆಲ್ಲ ಅರರೆ, ಇದು ಡಿಟ್ಟೊ ಅವರ ಕಥೆಯನ್ನೇ ಹೋಲುವಂತಿದೆಯಲ್ಲ? ಕೆಲವು ಸ್ಥಳಗಳ ಮತ್ತು ಪಾತ್ರಗಳ ಹೆಸರನ್ನು ಬದಲಿಸಿದರೆ ಇವರ ಕಥೆ ಇದ್ದದ್ದು ಅವರ ಕಥೆ ಆಗಿಬಿಡುತ್ತದಲ್ಲ ಅನಿಸುತ್ತದೆ. ಒಂದು ಕಥೆ ಅಥವಾ ಪ್ರಸಂಗ ಓದುಗನಿಗೆ ಇಂಥ ಫೀಲ್‌ ಕೊಟ್ಟರೆ ಅದು ಗೆದ್ದಂತೆ! + +(ವಿನಾಯಕ ಅರಳಸುರಳಿ) + +ಓದುಗರನ್ನು ಆವರಿಸಿಕೊಳ್ಳುವಂಥ ಗುಣ ಕಥೆಗಳಿಗೆ ದಕ್ಕಬೇಕಾದರೆ ಕಥೆಗಾರ ಹಲವು ಅನುಭವಗಳಿಗೆ ಈಡಾಗ ಬೇಕಾಗುತ್ತದೆ. ಎಷ್ಟೋ ಸಂದರ್ಭಗಳಿಗೆ ಸಾಕ್ಷಿಯಾಗಬೇಕಾಗುತ್ತದೆ. ಕೆಲವೊಮ್ಮೆ ತಾನೇ ಪಾತ್ರವಾಗಬೇಕಾಗುತ್ತದೆ. ಕಷ್ಟವನ್ನು, ಕೆಡುಕುಗಳನ್ನು ನೋಡಬೇಕಾಗುತ್ತದೆ. ಅನುಭವಿಸಬೇಕಾಗುತ್ತದೆ. ಮತ್ತೆ ಕೆಲವೊಮ್ಮೆ ಮರೆಯಲ್ಲಿ ನಿಂತ ನಿರೂಪಕನಂತೆ ಕಥೆ ಹೇಳಬೇಕಾಗುತ್ತದೆ. ಇದೆಲ್ಲವನ್ನು ವಿನಾಯಕ ಅರಳಸುರಳಿ ಅವರು ಅನುಭವಿಸಿದ್ದಾರೆ. ಅದರ ಪರಿಣಾಮ ಈ ಸಂಕಲನದ ಕಥೆಗಳಲ್ಲಿ ಢಾಳಾಗಿ ಕಾಣಿಸುತ್ತದೆ. ಒಂದೊಂದು ಕಥೆಯನ್ನು ಓದಿ ಮುಗಿಸಿದಾಗಲೂ, ಇಂಥದೇ ಪ್ರಸಂಗ ಅಲ್ಲೆಲ್ಲೋ ನಡೆದಿತ್ತಲ್ಲವಾ ಎಂದು ಯೋಚಿಸುವಂತಾಗುತ್ತದೆ. + +ಹತ್ತು ಕಥೆಗಳ ಈ ಸಂಕಲನದಲ್ಲಿ ಮನುಷ್ಯನ ಅಹಮಿಕೆ, ಅನುಮಾನ, ದರ್ಪ, ಅಸಹಾಯಕತೆ, ತಣ್ಣಗಿನ ಕ್ರೌರ್ಯ, ತಲೆಮಾರು ಕಳೆದರೂ ತಣಿಯದ ದ್ವೇಷ, ಮತ್ತೊಬ್ಬರ ಏಳಿಗೆಯನ್ನು ಕಂಡಾಗ ಇದ್ದಕ್ಕಿದ್ದಂತೆ ಉಂಟಾಗುವ ಅಸಹನೆ, ಹಲವು ಸಂದರ್ಭಗಳಲ್ಲಿ ಎಲ್ಲರ ಮೇಲೂ ಉಂಟಾಗುವ ಅನುಮಾನ, ಪದೇ ಪದೇ ಸುಳ್ಳಾಗಿ ಹೋಗುವ ನಿರೀಕ್ಷೆಗಳು, ಯಾರಿಗೂ ಕಾಯದೆ ಹೋಗಿ ಬಿಡುವ ಪ್ರಾಣ.. ಹೀಗೆ ಮುನುಷ್ಯನ ಮಿತಿಗಳಿಗೆ ಪುರಾವೆ ಒದಗಿಸುವ ಪ್ರಸಂಗಗಳು ಎಲ್ಲಾ ಕಥೆಗಳಲ್ಲೂ ಬರುತ್ತವೆ. ಕೆಲವು ಕಥೆಗಳನ್ನು ಮೊದಲ ಎರಡು ಪುಟ ಓದಿದರೆ ಆನಂತರದಲ್ಲಿ ಕಥೆ ಸಾಗುವ ಹಾದಿಯನ್ನು, ಕಥೆಯ ಅಂತ್ಯವನ್ನು ಊಹಿಸಬಹುದು. ಇಲ್ಲಿ ಹಾಗಾಗುವುದಿಲ್ಲ. ಪ್ರತಿಯೊಂದು ಕಥೆಯೂ ತನ್ನದೇ ರೀತಿಯಲ್ಲಿ ಮುಗಿದು ಲೈಫು ಇಷ್ಟೇನೇ! ಎಂದು ಪಿಸುಗುಟ್ಟಿದಂತೆ ಭಾಸವಾಗುತ್ತದೆ. + +ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿದಾಗ ಮನುಷ್ಯ ಅದೆಷ್ಟು ಅಸಹಾಯಕನಾಗುತ್ತಾನೆ, ಸಿಟ್ಟು ಬಂದಾಗ, ಬೇಸರಗೊಂಡಾಗ ಹೇಗೆ ವ್ಯಗ್ರನಾಗುತ್ತಾನೆ, ಅವಕಾಶ ಸಿಕ್ಕರೆ ಕಾಣದ ದೇವರನ್ನೂ ಹೇಗೆಲ್ಲಾ ನಿಂದಿಸುತ್ತಾನೆ ಎಂಬುದಕ್ಕೆ ‘ಕೆಂಪು ಕುಂಕುಮ, ಕಪ್ಪು ಕುಂಕುಮʼ, ‘ಸಕಲ ಕಲಾವಲ್ಲಭʼ, ‘ಒಣಮರದ ಹಸಿರೆಲೆʼ ಕಥೆಗಳು ಸಾಕ್ಷಿ ಒದಗಿಸಬಲ್ಲವು. ಏಕಕಾಲಕ್ಕೆ ಡಿಫೆರೆಂಟ್‌ ಮತ್ತು ಸಿನಿಮೀಯ ಅನ್ನಿಸಿಬಿಡುವ ‘ಭೂಮಿʼ ಹೆಸರಿನ ಕಥೆಯೊಂದಿದೆ. ತಾಯಿಯನ್ನು ಉಳಿಸಿಕೊಳ್ಳಲು, ಉಡಾಳ ಸ್ವಭಾವದವನನ್ನು ಮದುವೆಯಾಗಲು ಸಮ್ಮತಿಸುವ ಹೆಣ್ಣೊಬ್ಬಳ ಕಥೆ ಅದು. ಅದರಲ್ಲಿ ನಾಯಕಿ ಹೇಳುತ್ತಾಳೆ: + +“ಅಮ್ಮನಿಗೆ ಕ್ಯಾನ್ಸರ್‌ ಎರಡನೇ ಸ್ಟೇಜ್‌ ತಲುಪಿದೆ ಮನೂ. ಅವಳ ಚಿಕಿತ್ಸೆಗೆ ತಿಂಗಳಿಗೆ ನಲವತ್ತು ಸಾವಿರ ಬೇಕು. ಈ ಚಿಕಿತ್ಸೆ ಎಷ್ಟು ವರ್ಷ ಬೇಕಾದರೂ ಮುಂದುವರಿಯಬಹುದಂತೆ. ಮರುಕಳಿಸಲೂಬಹುದಂತೆ. ಇದು ನನ್ನ ಶಕ್ತಿ ಮೀರಿದ ಖರ್ಚು ಕಣೋ. ಇದರಲ್ಲಿ ಅರ್ಧವನ್ನು ಅವರು ಕೊಟ್ಟರೂ ಸಾಕು. ಅಮ್ಮನನ್ನು ಉಳಿಸಿಕೊಳ್ಳಬಹುದು. ಅವತ್ತೇ ಹೇಳಿದ್ದೆನಲ್ಲಾ? ಅವರು ಇದಕ್ಕೆ ಒಪ್ಪಿದ್ದಾರೆ ಪಾಪ ಅಮ್ಮ……. ಇಲ್ಲಿಯತನಕ ಬದುಕಿನಲ್ಲಿ ಸ್ವಲ್ಪ ಖುಷಿಯನ್ನೂ ನೋಡಿಲ್ಲ. ನನಗೋಸ್ಕರ ನನ್ನ ಸುಭದ್ರ ಭವಿಷ್ಯಕ್ಕೋಸ್ಕರ ದೊಡ್ಡಪ್ಪ ಮತ್ತು ಅವನ ಮನೆಯವರ ಹಿಂಸೆಗಳನ್ನು ಸಹಿಸಿಕೊಂಡು ಅವರ ಮನೆಯಲ್ಲಿದ್ದಳು. ಈಗ ಮತ್ತೆ ನನ್ನ ಆಸೆ, ನಿರೀಕ್ಷೆಗಳಿಗೋಸ್ಕರ ಅವಳನ್ನು ಸಾವಿನ ಬಾಯಿಗೆ ದೂಡಲೇನು? ಅವಳು ಜೀವಂತ ಜೊತೆಗಿದ್ದರೆ ಅದಕ್ಕಿಂತ ಬೇರೆ ಸುಖ ನನ್ನ ಪಾಲಿಗೆ ಬೇರೇನಿದೆ ಹೇಳು? ಅದಕ್ಕೆ ಅವರನ್ನು ಒಪ್ಪಿಕೊಂಡೆ….” + +ಅಮ್ಮನನ್ನು ಉಳಿಸಿಕೊಳ್ಳಲು, ಅಮ್ಮನ ಮೊಗದ ನಗೆಯನ್ನು ನೋಡಲು ತನ್ನ ಬದುಕನ್ನೇ ಪಣಕ್ಕಿಡುವ ‘ಭೂಮಿʼ ಹೆಸರಿನ ನಾಯಕಿ, ಇಲ್ಲಿ ಭೂಮಿ ತೂಕದ ಹೆಣ್ಣಾಗಿ ಹೊಳೆಯುತ್ತಾಳೆ. ಮನಸ್ಸಿಗೆ ಇಳಿಯುತ್ತಾಳೆ. ಕಥೆಯನ್ನು ಓದಿ ಮುಗಿಸಿದ ಅದೆಷ್ಟೋ ಸಮಯದವರೆಗೂ ಮನದಲ್ಲೇ ಉಳಿಯುತ್ತಾಳೆ. + +ಇವೆಲ್ಲವೂ ಈ ಸಂಕಲನವನ್ನು ಇಷ್ಟಪಡುವುದಕ್ಕೆ ಇರುವ ಕಾರಣಗಳು. ಹಾಗಂತ ಕೊರತೆಗಳು ಇಲ್ಲವೆಂದಲ್ಲ. ಯಾವುದೇ ಕಥೆಯನ್ನು ಓದಲು ಹೊರಟಾಗ ಅದರ ಪಾತ್ರಗಳು ಹೀಗಿದ್ದರೆ ಚೆನ್ನಾಗಿತ್ತು, ಪಾತ್ರಗಳ ಮಾತು ಹೀಗಿದ್ದರೆ ಚೆನ್ನಾಗಿತ್ತು ಎಂಬ ಯೋಚನೆ ಆಗಾಗ್ಗೆ ಓದುಗರಿಗೆ ಬರುತ್ತದೆ. ನಮ್ಮ ನಿರೀಕ್ಷೆಗೆ ವಿರುದ್ಧವಾಗಿ ಕಥೆಗಳು ಸಾಗಿದಾಗ, ಕಥೆಯನ್ನು ‘ಎಳೆಯಲಾಗುತ್ತಿದೆʼ ಅನ್ನಿಸಿದಾಗ ಸಣ್ಣದೊಂದು ಅಸಹನೆ ಜೊತೆಯಾಗಿ ಬಿಡುತ್ತದೆ. ಒಂದೆರಡು ಕಥೆಗಳನ್ನು ಓದುವಾಗ ಹಾಗೂ ಅನಿಸುತ್ತದೆ. ಆದರೆ, ಓದುಗರ ನಿರೀಕ್ಷೆಗೆ ವಿರುದ್ಧವಾಗಿ ಸಾಗುವುದೇ ಕಥೆಯೊಂದು ಸಾಗಬೇಕಿರುವ ರೀತಿ ಅಂದುಕೊಂಡಾಗ ಈ ಸಂಕಲನದ ಕಥೆಗಳ ಕುರಿತು ಮೆಚ್ಚುಗೆ ಮತ್ತು ಪ್ರೀತಿ ಉಂಟಾಗಲು ಕಾರಣವಾಗುತ್ತದೆ. + +(ಎ.ಆರ್‌. ಮಣಿಕಾಂತ್) + +ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಮತ್ತೊಂದು ವಿಶೇಷವಿದೆ. ಇಲ್ಲಿನ ಪಾತ್ರಗಳೆಲ್ಲ ತಮಗೆ ತಾವೇ ಒಂದು ಚೌಕಟ್ಟು ಹಾಕಿಕೊಂಡಂತೆ ವರ್ತಿಸುತ್ತವೆ. ಸಂದರ್ಭಕ್ಕೆ ತಕ್ಕಂತೆ ಅವುಗಳ ಮಾತು ಮೆದುವಾಗುತ್ತದೆ. ಒರಟಾಗುತ್ತದೆ. ವ್ಯಂಗ್ಯಕ್ಕೆ ತಿರುಗುತ್ತದೆ. ಬಯ್ದು ಬುದ್ಧಿ ಹೇಳುತ್ತದೆ. ಯಾವುದೋ ಒಂದು ಗುರುತರ ಹೊಣೆ ಹೊತ್ತಿವೆಯೇನೋ ಎಂಬಂತೆ ವರ್ತಿಸುತ್ತಾ ತಮ್ಮ ಪಾತ್ರದ ಅವಧಿ ಮುಗಿಯುತ್ತಿದ್ದಂತೆ ಏಕ್ದಂ ಮಾಯವಾಗುತ್ತವೆ. ಚಿಟ್ಟೆಯಂತೆ ಚಿಗರೆಯಂತೆ… + +ಕೊನೆಯಾಗದ ಕಷ್ಟಗಳು, ಮರೆಯಲಾಗದ ನೋವು, ಸದಾ ಉಳಿಯುವ ಚಡಪಡಿಕೆ, ಹೆದರಿಸುವ ಒಂಟಿತನ- ಈ ಸಂಕಲನದ ಎಲ್ಲಾ ಕಥೆಗಳಲ್ಲೂ ಕಾಣುತ್ತವೆ. ಎದೆಯೊಳಗಿನ ನೋವನ್ನು ಅಂಗೈಲಿ ಹಿಡಿದುಕೊಂಡೇ ವಿನಾಯಕ ಇಲ್ಲಿನ ಕಥೆಗಳಿಗೆ ಅಕ್ಷರ ರೂಪ ನೀಡಿರಬಹುದೇನೋ ಎಂದು ಪದೇ ಪದೇ ಅನಿಸುವಷ್ಟರಮಟ್ಟಿಗೆ ಇಲ್ಲಿನ ಕಥೆಗಳು ಸಂಕಟವನ್ನು ಉಸಿರಾಡಿದೆ. ಒಬ್ಬೊಬ್ಬರ ಬದುಕೂ ಸಂಕಟದ ಸಾಗರವೇ ಆಗಿರುತ್ತದೆ ಎಂಬುದನ್ನು ಎದೆ ಬಗೆದು ತೋರುವಂಥ ಹುಮ್ಮಸ್ಸಿನಲ್ಲಿ ವಿನಾಯಕ ಕಥೆ ಹೇಳಿದ್ದಾರೆ. ತಮ್ಮ ಪ್ರಯತ್ನದಲ್ಲಿ ತಕ್ಕಮಟ್ಟಿನ ಗೆಲುವನ್ನು ಕಂಡಿದ್ದಾರೆ. + + + +ತೀವ್ರ ಸಂಕೋಚ, ವಿನಯ, ಅತಿಯಾದ ಭಾವುಕತೆ, ಕಳೆದುಕೊಂಡಿದ್ದಕ್ಕೆ ಪರಿತಪಿಸುವ ಮನಸ್ಸಿನ ವಿನಾಯಕರಿಗೆ ಈ ಸಂಕಲನದ ಕಥೆಗಳು ಅವರನ್ನು ಕೈ ಹಿಡಿದು ನಡೆಸಲಿ ಎಂಬುದು ನನ್ನ ಆಶಯ ಮತ್ತು ಹಾರೈಕೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_139.txt b/Kenda Sampige/article_139.txt new file mode 100644 index 0000000000000000000000000000000000000000..17d1f99976d980cd6e402180d7b796f85c286a57 --- /dev/null +++ b/Kenda Sampige/article_139.txt @@ -0,0 +1,29 @@ +ಸುಧಾ ಎಂ. ಅವರ ಚೊಚ್ಚಲ ಕಥಾಸಂಕಲನ ಅಪೂರ್ಣವಲ್ಲ… ಒಂದು ಪೂರ್ಣಪ್ರಮಾಣದ ತೃಪ್ತಿಯನ್ನು ನೀಡುವ ಉತ್ತಮ ಕೃತಿ. ಹಳ್ಳಿಯ ಬದುಕಿನ ಸೊಗಡನ್ನೂ, ಹಳ್ಳಿಗರ ಹೃದಯದ ಭಾವನೆಗಳನ್ನೂ ಹಿಡಿದಿಡುವಲ್ಲಿ ಲೇಖಕಿಯ ಬರಹಗಳು ಸಶಕ್ತವಾಗಿವೆ. ಕಾರ್ತಿಕಾದಿತ್ಯ ಬೆಳ್ಗೋಡು ಅವರು ಬೆನ್ನುಡಿಯಲ್ಲಿ ಹೇಳಿದಂತೆ ‘ಪ್ರತೀ ಕಥೆಯ ಪಾತ್ರಗಳನ್ನು ಅವರು ಯಾಂತ್ರಿಕವಾದ ನೆಲೆಗಟ್ಟಿನಲ್ಲಿ ಕಟ್ಟದೆ, ಭಾವನೆಗಳೊಂದಿಗೆ ಒಂದು ನಮೂನೆಯ ಪ್ರೀತಿಯೊಂದಿಗೆ ಪರಸ್ಪರ ಬೆಸೆಯುತ್ತಾರೆ.’ ಅವರ ಕಥೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ಹೋಗೋಣ. + +(ಸುಧಾ ಎಂ.) + +ಕೃತಿಯ ಹೆಸರನ್ನೇ ಹೊಂದಿರುವ ಮೊದಲ ಕಥೆ ಒಬ್ಬ ಪ್ರೇಮಿಯದ್ದು. ಅವನ ಪ್ರೇಯಸಿ ಇನ್ನೊಂದು ಮದುವೆಯಾಗಿರುವುದು ಗೊತ್ತಿದ್ದರೂ ಅವನನ್ನು ಭಗ್ನಪ್ರೇಮಿ ಎಂದು ಕರೆಯಲಾಗದು. ಯಾಕೆಂದರೆ ಅವನು ತನ್ನ ಪ್ರೇಮನಿವೇದನೆಯನ್ನೇ ಮಾಡಿಕೊಂಡಿರಲಿಲ್ಲ. ಅಷ್ಟೇ ಅಲ್ಲ ಆ ಪ್ರೇಮ ಇನ್ನೂ ಅವನ ಹೃದಯದಲ್ಲಿ ಸತ್ತಿಲ್ಲ. ಅದರ ಜೀವಂತಿಕೆಯೇ ಅವನನ್ನು ಅವಿವಾಹಿತನನ್ನಾಗಿಯೇ ಇರಿಸಿದೆ. ಒಂದಿನ ಅಚಾನಕ್ಕಾಗಿ ಅವಳೇ ಸಿಕ್ಕಾಗ ಅವನ ಹೃದಯ ಅರಳಿದ ಪರಿಯನ್ನು ಲೇಖಕಿ ಸೊಗಸಾಗಿ ಚಿತ್ರಿಸಿದ್ದಾರೆ. ಹೃದಯದ ಅದೆಷ್ಟೋ ಭಾವನೆಗಳು ಹೀಗೆಯೇ ವ್ಯಕ್ತವಾಗದೆ ಹುದುಗಿಹೋಗಿರುತ್ತವೆ. ಸ್ನೇಹದ ಮಧ್ಯೆ ಪ್ರೇಮದ ಮಾತು ಬಂದರೆ ಅದು ಕೆಟ್ಟ ಭಾವನೆಯೆಂದು ಪರಿಗಣಿತವಾಗುತ್ತದೆ ಎಂಬ ಅಳುಕು ಆ ಸಂದರ್ಭದಲ್ಲಿರುತ್ತದೆ. + +ಎರಡನೆಯ ಕಥೆ ಹಾಳಿ ಹಳ್ಳಿಯ ಬದುಕಿನ ಕರುಣಾಮಯ ಬದುಕನ್ನು ತೆರೆದಿಡುತ್ತದೆ. ನೆರೆಬಂದಾಗ ಹೊಳೆದಾಟುವುದು, ಗದ್ದೆಯ ಹಾಳಿಯ ಮೇಲೆ ನಡೆದುಹೋಗುವುದು ಮುಂತಾದ ಹಳ್ಳಿಯ ಚಿತ್ರಗಳನ್ನು ಈ ಕಥೆ ಕಟ್ಟಿಕೊಡುತ್ತದೆ. + +ಬಿದ್ದಾಗ ಬರದವರು ಎಂಬ ಮೂರನೆಯ ಕಥೆ ಒಂದು ನೀಳ್ಗತೆ. ದಿನಕರನೆಂಬ ಇಂಜಿನಿಯರಿಂಗ್ ಓದಿದ ವ್ಯಕ್ತಿ, ವಿದೇಶದಲ್ಲಿ ಕೆಲಸ ಮಾಡುತ್ತ, ಹಳ್ಳಿಯ ಮೇಲೆ ಪ್ರೀತಿಯನ್ನು ಬೆಳೆಸಿಕೊಳ್ಳುವ ಕಥಾನಕ. ಒಂಟಿ ಮನೆಯ ಬದುಕು, ಅಪ್ಪನ ಮೇಲಿನ ಅಪಾರ ಪ್ರೀತಿ ಇವು ಎಳೆ ಎಳೆಯಾಗಿ ಹೆಣೆಯಲ್ಪಟ್ಟಿವೆ. ಜೊತೆಗೆ, ಕಷ್ಟದಲ್ಲಿದ್ದಾಗ ಬರದವರು, ಮಗ ಓದಿ ವಿದೇಶದಲ್ಲಿದ್ದಾನೆ ಎಂದಾಕ್ಷಣ ಜಾತಕ ಹಿಡಿದು ಬರುವ ಸೋಗಲಾಡಿತನವನ್ನೂ ಲೇಖಕಿ ಬಿಚ್ಚಿಟ್ಟಿದ್ದಾರೆ. + +ನಾಲ್ಕನೆಯ ಕಥೆ ಹಿಸೆ, ಗಂಡುಮಕ್ಕಳು ದೊಡ್ಡವರಾದಾಗ ಅಪ್ಪನನ್ನೇ ಹಿಸೆ ಕೇಳುವ ಮಟ್ಟಕ್ಕೆ ಇಳಿಯುತ್ತಾರೆ ಎಂಬ ಕಹಿ ಸತ್ಯವನ್ನು ನಮ್ಮ ಮುಂದಿಡುತ್ತದೆ. ಗಂಡುಮಕ್ಕಳೆಂದು ಬೀಗುವುದು ಮುಖ್ಯವಲ್ಲ, ಅವರಿಗೆ ಬೇಕು ಬೇಕಾದ್ದನ್ನೆಲ್ಲ ಒದಗಿಸುತ್ತ ಜೀವನದ ಕಷ್ಟವೆಂದರೇನು ಎಂಬುದೇ ತಿಳಿಯದಂತೆ ಬೆಳೆಸುವುದು ಸರಿಯಲ್ಲ ಎಂಬ ಪಾಠವನ್ನು ಈ ಕಥೆ ತಿಳಿಸಿಕೊಡುತ್ತದೆ. + +ತಲೆಮಾರು ಎಂಬ ಕಥೆ ಹಳ್ಳಿಯ ಮನೆಯೊಂದರ ಚಿತ್ರಣವನ್ನು ನೀಡುತ್ತದೆ. ತುಂಬಿ ತುಳುಕುತ್ತಿದ್ದ ಮನೆಯೊಂದು ತಲೆಮಾರುಗಳ ನಂತರ ಜೇಡರಬಲೆಯ ಬೀಡಾಗಿ ಹೋಗುವುದಕ್ಕೆ ಕಾರಣ ಏನು? ಪೇಟೆಯ ಥಳುಕು ಬಳುಕಿನ ಜೀವನದ ಆಕರ್ಷಣೆಯೊ, ಹಳ್ಳಿಯ ಜೀವನದ ಬಗೆಗಿನ ತಾತ್ಸಾರವೊ ಎಂಬೆಲ್ಲ ವಿಷಯಗಳ ಚರ್ಚೆ ಈ ಕಥೆಯಲ್ಲಿದೆ. + +ಫಿರ್ಖಾನ್-ಸೋಮಿ ಎಂಬ ಬುಡಕಟ್ಟು ಜನಾಜಂಗದ ಜೋಡಿಯ ಸುತ್ತ ಹೆಣೆದ ಕಥೆ ಬಲಿ. ಕಾಡಿನಲ್ಲಿ ವಾಸಿಸುತ್ತ, ಕಾಡನ್ನು ಪ್ರೀತಿಸುತ್ತ, ಕಾಡನ್ನೇ ಜೀವನವನ್ನಾಗಿಸಿಕೊಂಡ ಈ ಜೋಡಿಯ ಮೂಲಕ ಕಾಡಿನ ಬುಡಕಟ್ಟು ಜನಾಂಗದ ಜೀವನಚಿತ್ರಣವನ್ನು ಲೇಖಕಿ ನೀಡಿದ್ದಾರೆ. ಮಧ್ಯೆ ಮಧ್ಯೆ ಕೊಂಕಣಿ ಭಾಷೆಯ ಸಂಭಾಷಣೆಯನ್ನೂ ಅಳವಡಿಸಿ ಚಿತ್ರಣವನ್ನು ನೈಜವಾಗಿಸಿದ್ದಾರೆ. ಅಂಥವರ ಜೀವನದಲ್ಲಿ ಹೊರಗಿನಿಂದ ಪ್ರವೇಶಿಸುವ ವಿಶಾಲ್ ಎಂಬ ಸ್ವಾರ್ಥಿ, ತನ್ನ ಸ್ಮಗ್ಲಿಂಗ್ ವ್ಯವಹಾರಕ್ಕೆ ವನವಾಸಿಗಳನ್ನು ಬಳಸಿಕೊಳ್ಳುತ್ತಾ, ಅವರಿಗೂ ಕಳ್ಳದಂಧೆಯ ರುಚಿಹತ್ತಿಸಿ ಕೆಡಿಸುತ್ತಾನೆ. ಮತಾಂತರದ ಪ್ರಯತ್ನದ ಬಗ್ಗೆ ಅದರ ವಿರುದ್ಧದ ಹೋರಾಟದ ಬಗ್ಗೆಯೂ ಇಲ್ಲಿ ಉಲ್ಲೇಖ ಇದೆ. ಕೊನೆಗೆ ವಿಶಾಲನ ಸ್ವಾರ್ಥಕ್ಕೆ ಸೋಮಿಯ ಜೀವ ಬಲಿಯಾಗಿ ಹೋಗುತ್ತದೆ. + + + +ಕಣಿ ಎನ್ನುವ ಕಥೆ ಜೀವನದಲ್ಲಿ ನೊಂದ ಹೆಣ್ಣುಮಗಳೊಬ್ಬಳ ಮನೋಗತವನ್ನು ತೆರೆದಿಡುತ್ತದೆ. ಜೋಗತಿಯೊಬ್ಬಳ ಕಣಿಯ ಮಾತಿನ ಮೋಡಿಗೊಳಗಾಗುತ್ತ, ತನ್ನೆಲ್ಲ ನೋವುಗಳನ್ನು ಕಥಾನಾಯಕಿ ತೆರೆದಿಡುತ್ತಾಳೆ. ಕುಟುಂಬದಲ್ಲಿ ಆರ್ಥಿಕ ಕಷ್ಟ ಎದುರಾದಾಗ ಯಾವ ರೀತಿಯಲ್ಲಿ ನಿಭಾಯಿಸಬೇಕು, ಅದು ಜೀವನವನ್ನು ಯಾವರೀತಿ ಜರ್ಜರಿತವನ್ನಾಗಿ ಮಾಡಿಬಿಡುತ್ತದೆ ಎಂಬುದನ್ನು ಕಥೆ ಚಿತ್ರಿಸಿಕೊಡುತ್ತದೆ. + +ಕೊನೆಗೌಡ ಮತ್ತು ಪ್ರೀತಿ ಎಂಬ ಕಥೆ ವಿಶಿಷ್ಟವಾದದ್ದು. ಪ್ರೀತಿ ಎನ್ನುವುದು ಕೇವಲ ಮೇಲ್ವರ್ಗದ ಸೊತ್ತಲ್ಲ, ಪ್ರೀತಿಯ ನಿಜವಾದ ರೂಪ ಕಾಣಿಸುವುದು ಸಂಸಾರ ಆರಂಭವಾದ ಮೇಲೆ ಎಂಬುದನ್ನು ಸುಂದರವಾಗಿ ತಿಳಿಸಿಕೊಡುವ ಕಥೆ. ಅನಾಥನಾಗಿದ್ದ ಕಥಾನಾಯಕ ಹೆಂಡತಿಯನ್ನೇ ಸರ್ವಸ್ವವೆಂದು ಬಗೆದು ಅವಳಿಗೆ ಪ್ರೀತಿಯನ್ನು ಧಾರೆಯೆರೆಯುವ ಪರಿ ಮನೋಜ್ಞವಾಗಿ ಚಿತ್ರಿತವಾಗಿದೆ. ವೃದ್ಧಾಪ್ಯದಲ್ಲೂ ಪ್ರೀತಿ ಬಾಡದೆ ಮಾಗುತ್ತದೆ ಎಂಬುದನ್ನು ಲೇಖಕಿ ಸಮರ್ಥವಾಗಿ ನಿರೂಪಿಸಿದ್ದಾರೆ. + +ಕಾಲವು ಬರುವುದು ಒಂದು ದಿನ ಎಂಬ ಕೊನೆಯ ಕಥೆ ಸಾಮಾಜಿಕ ಸುಧಾರಣೆಯನ್ನು ಮಾಡಹೋಗಿ ಬಹಿಷ್ಕಾರಕ್ಕೆ ಒಳಗಾದವನ ಕಥೆ. ವಿಧವಾ ವಿವಾಹದಂತಹ ಸಾಮಾಜಿಕ ಸುಧಾರಣೆಗಳ ಬಗ್ಗೆ ಭಾಷಣ ಬಿಗಿಯುವ ಮಠ ಮಾನ್ಯಗಳೇ ನಿಜವಾಗಿ ಅಂಥವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವವರನ್ನು ಬಹಿಷ್ಕರಿಸುತ್ತದೆ ಎಂಬ ವಿಡಂಬನೆಯನ್ನು ಈ ಕಥೆಯಲ್ಲಿ ಹೊರಗೆಡಹಿದ್ದಾರೆ. + + + +ಹೀಗೆ ಒಂಭತ್ತು ಕಥೆಗಳ ಈ ಸಂಕಲನದ ತುಂಬೆಲ್ಲ ಹಳ್ಳಿಯ ಜೀವನದ ಏಳು-ಬೀಳುಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಹಳ್ಳಿಯ ಜೀವನದ ಮೇಲೆ ಲೇಖಕಿಗಿರುವ ಪ್ರೀತಿ, ಇಲ್ಲಿಯ ಸಿರಿಯನ್ನೆಲ್ಲ ತೊರೆದು ತಂದೆ ತಾಯಿಯರನ್ನು ಅನಾಥರನ್ನಾಗಿ ಮಾಡಿ ಹೋಗುವ ಆಧುನಿಕ ಪೀಳಿಗೆಯ ಮೇಲಿರುವ ತಾತ್ಸಾರ ಸ್ಪಷ್ಟವಾಗಿ ವ್ಯಕ್ತವಾಗಿವೆ. ಇಲ್ಲಿನ ಕಥೆಗಳು ಸರಳವಾಗಿ ಹೇಳಲ್ಪಟ್ಟಿವೆ. ಭಾಷೆಯಲ್ಲಿಯೂ ಗ್ರಾಂಥಿಕತೆ ಇಲ್ಲ. ಹಳ್ಳಿಯ ಆಡುಭಾಷೆಯನ್ನೇ ಸಮರ್ಥವಾಗಿ ಬಳಸಿಕೊಂಡಿದ್ದಾರೆ. ಇಲ್ಲಿ ಕಥಾಹಂದರಕ್ಕಿಂತ ಪಾತ್ರಗಳ ಮೂಲಕ ಲೇಖಕಿ ಹೇಳಿಸುವ ವಿಚಾರಗಳು, ಚಿಂತನೆಗಳು ಮುಖ್ಯವೆನಿಸುತ್ತವೆ. ಅವೇ ಇಲ್ಲಿನ ಕಥೆಗಳ ಜೀವ. ಒಟ್ಟಿನಲ್ಲಿ ಲೇಖಕಿ ಒಂದು ಚೆಂದದ ಕಥಾಸಂಕಲನವನ್ನು ಇತ್ತಿದ್ದಾರೆ. ಚೊಚ್ಚಲ ಕೃತಿಯಲ್ಲೇ ಭರವಸೆಯನ್ನು ಮೂಡಿಸಿದ್ದಾರೆ. + +ಮಹಾಬಲ ಭಟ್ಟರು ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಸ್ತುತ ಗೋವಾ ರಾಜ್ಯದ ಮಾಪುಸಾ ನಗರದಲ್ಲಿರುವ ಸೈಂಟ್ ಜೇವಿಯರ್ ಉಚ್ಚಮಾಧ್ಯಮಿಕ ವಿದ್ಯಾಲಯದಲ್ಲಿ ಸಂಸ್ಕೃತ ಅಧ್ಯಾಪಕರು. ಅನೇಕ ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಇವರು ಸಂಸ್ಕೃತದಲ್ಲಿ ಬರೆದಿರುವ ಎರಡು ಪುಸ್ತಕಗಳು ಪ್ರಕಾಶನಗೊಂಡಿವೆ. \ No newline at end of file diff --git a/Kenda Sampige/article_14.txt b/Kenda Sampige/article_14.txt new file mode 100644 index 0000000000000000000000000000000000000000..85cbada9a2a02836b80f3c997b03614db49e084c --- /dev/null +++ b/Kenda Sampige/article_14.txt @@ -0,0 +1,15 @@ +ಕೂರಾ ಸ್ವಭಾವದಲ್ಲಿ ಸೂಕ್ಷ್ಮ. ಅದರ ಜೊತೆಗೆ ಪುಕ್ಕಲುತನವೂ ಇದೆ. ಸಣ್ಣವನಿದ್ದಾಗ ಅಡುಗೆ ಮನೆಯಲ್ಲಿ ಕುಕ್ಕರ್ ವಿಷಲ್ ಕೂಗಿದರೆ ಓಡಿ ಹೋಗುತ್ತಿದ್ದ. ಅವನು ಮನೆಯನ್ನು ಅಥವಾ ನಮ್ಮನ್ನು ಕಾಯುವ ಬದಲಾಗಿ ಅವನಿಗೆ ಭಯವಾಗಬಾರದು ಎಂದು ನಾವು ಅವನನ್ನು ಕಾಯುವುದೇ ಹೆಚ್ಚಾಗಿತ್ತು. ಅದರಲ್ಲೂ ಅವನು ಮಲಗಿದ್ದಾಗ ಅವನಿಗೆ ಎಚ್ಚರವಾಗದಿರಲಿ ಎಂದು ನಾನು ಮೆಲ್ಲನೆ ಹೆಜ್ಜೆಗಳನ್ನಿಡುತ್ತ ನಡೆಯುತ್ತೇನೆ. ಅವನೋ… ಶನಿವಾರ ಭಾನುವಾರಗಳಲ್ಲು ಸಹ ಬೆಳಗಾಗುವ ಮೊದಲೇ ಬೊಗಳಿ ನನ್ನನ್ನು ಎಬ್ಬಿಸಿ ಬಿಡುತ್ತಾನೆ. ಅದೂ ಅವನು ಬೊಗಳುವುದು ಯಾವುದಕ್ಕೆ? ರಸ್ತೆಯಲ್ಲಿ ಹಾರಿ ಹೋಗುವ ಯಾವುದೋ ಎಲೆಯ, ಪೇಪರಿನ ಸದ್ದಿಗೆ. ಎದುರಿನ ಮನೆಯವರು ಅವರ ಮನೆಯ ಮುಂದೆ ನಡೆದಾಡಿದರೆ ಇವನು ಬೊಗಳುತ್ತಾನೆ. ಪಕ್ಕದ ಮನೆಯ ಮುಂದೆ ಅವರದೇ ಕಾರು ಬಂದು ನಿಂತು ಅವರು ಅದರಿಂದ ಇಳಿಯುವಾಗ ಬೊಗಳುತ್ತಾನೆ. ಯಾವುದಕ್ಕೆ ಬೊಗಳಬೇಕು, ಯಾವುದಕ್ಕೆ ಬೊಗಳಬಾರದು ಎಂದು ನಾಯಿಗಳಿಗೆ ದೇವರು ಟ್ರೇನಿಂಗ್ ಕೊಟ್ಟು ಕಳಿಸೋದಿಲ್ಲವಾ ಅಂತ. ಮನೆಯೊಳಗೆ ಒಂದು ನೊಣ ಬಂದರು ಅವನಿಗೆ ಆಗುವುದಿಲ್ಲ. ತಲೆ ಕೆಟ್ಟು ಬಿಡುತ್ತದೆ. ಮನೆಯೆಲ್ಲ ಓಡಾಡಿ, ಗಾಳಿಯಲ್ಲಿ ಗುದ್ದಾಡಿ, ನೊಣ ಹಿಡಿಯಲು ಹರಸಾಹಸ ಪಟ್ಟು, ತಲೆ ಮೇಲೆ ಮಾಡಿ ಹಾರುವ ನೊಣವನ್ನು ನುಂಗಲು ಯತ್ನಿಸುತ್ತ, ಎಷ್ಟು ಒದ್ದಾಡಿದರು ಅದು ಸಿಕ್ಕದೇ ಹೋದಾಗ ಬಾಲ ಮುದುರಿಸಿಕೊಂಡು ಕೋಣೆಗೆ ಹೋಗಿ ಮಲಗಿ ಬಿಡುತ್ತಾನೆ. ಎಂತೆಂತಹ ದೊಡ್ಡ ನಾಯಿಗಳಿಗು ಸಹ ಹೆದರದೇ ಅವುಗಳ ಮುಂದೆ ಬೊಗಳುತ್ತ ಭಂಡ ಧೈರ್ಯ ತೋರಿಸುವ ನಮ್ಮ ಉತ್ತರಕುಮಾರನಿಗೆ ಈ ನೊಣಕ್ಕಿಂತಲು ಹೆಚ್ಚಿನ ಭಯ ಹುಟ್ಟಿಸುವ ಸಂಗತಿಯೊಂದಿದೆ. ಅದೇನೆಂದರೆ ಅವನ ನಾಲ್ಕು ಕಾಲಿನ ಉಗುರುಗಳು! ಏನಪ್ಪಾ ಇದು ಉಗುರಿನ ಕತೆ ಎಂದಿರೇ.. ಇದಕ್ಕೆ ಉಗುರುಪುರಾಣ ಎಂತಲೂ ಹೇಳಬಹುದು. ಯಕಃಶ್ಚಿತವಾದಂತಹ ಉಗುರಿನಿಂದ ಅದು ಹೇಗೆ ಭಯ ಹುಟ್ಟಲು ಸಾಧ್ಯ ಎಂದು ಉಗುರನ್ನ ಕಡೆಗಣಿಸದಿರಿ. + +ಮನುಷ್ಯರಂತೆಯೇ ನಾಯಿಗಳ ಉಗುರುಗಳನ್ನು ಆಗಾಗ ಕತ್ತರಿಸುತ್ತಿರಬೇಕು. ಇಲ್ಲದೇ ಹೋದರೆ ಉದ್ದಕ್ಕೆ ಚೂಪಾಗಿ ಬೆಳೆದು ಅವು ಮೈ ಮೇಲೆ ಹತ್ತಿ ಬಂದಾಗಲೆಲ್ಲ ಪರಚುತ್ತ ಗಾಯ ಮಾಡುತ್ತವೆ. ಅದಲ್ಲದೇ ಉಗುರುಗಳನ್ನು ಕತ್ತರಿಸುವುದು ಅವುಗಳ ಆರೋಗ್ಯಕ್ಕು ಸಹ ಕ್ಷೇಮ. ಇಲ್ಲದಿದ್ದರೆ ಅವುಗಳಿಗು ನಮ್ಮ ಹಾಗೆಯೇ ಉಗುರು ಸುತ್ತಾಗುತ್ತದೆ. ತೀರಾ ಉದ್ದಕ್ಕೆ ಬಂದರೆ ಅವೇ ತಮ್ಮ ಉಗುರುಗಳನ್ನು ಕಚ್ಚಿಕೊಂಡು ಸಣ್ಣ ಮಾಡಿಕೊಳ್ಳುತ್ತವೆ. ನಮ್ಮದು ಸಾಕುನಾಯಿಯಾಗಿರುವುದರಿಂದ ಇಂತಹ ವಿಷಯಗಳಲ್ಲಿ ಹೆಚ್ಚಿನ ಕಾಳಜಿ. ಆದರೆ ನಾಯಿಗಳ ಉಗುರಿನಲ್ಲಿ ನರವಿರುವುದರಿಂದ ಆ ನರಕ್ಕೆ ತಾಗದಂತೆ ಅದರ ಮುಂದಿನ ಭಾಗವನ್ನು ಮಾತ್ರ ಕತ್ತರಿಸಬೇಕು. ಬೆಳ್ಳಗಿನ ಉಗುರುಗಳಿದ್ದರೆ ಬೆಳಕಿಗೆ ಈ ನರ ಸ್ಪಷ್ಟವಾಗಿ ಗೋಚರಿಸುತ್ತದೆ. ಅಂತಹ ನಾಯಿಗಳ ಉಗುರುಗಳನ್ನು ತೆಗೆಯುವುದು ಸುಲಭ. ನಾಯಿಗಳಿಗೆ ಭಯವಿದ್ದರೂ ಅವುಗಳನ್ನು ತೆಗೆಯುವಾಗ ಎಲ್ಲಿ ನರಕ್ಕೆ ತಗುಲಿ ಬಿಡುತ್ತದೋ ಎಂದು ಮನುಷ್ಯರಿಗೆ ಭಯವಿರುವುದಿಲ್ಲ. ಆದರೆ ಕೂರಾನಂತಹ ಕಪ್ಪು ಉಗುರುಗಳ ನಾಯಿಗಳ ಉಗುರುಗಳನ್ನು ಕತ್ತರಿಸುವುದಕ್ಕೆ ತುಸು ಸಂಯಮ ಮತ್ತು ಜಾಣ್ಮೆಯಿರಬೇಕು. ಈ ಎಲ್ಲ ವಿಷಯ ನಮಗೆ ಗೊತ್ತಾಗಿದ್ದು ಹಲವು ಯೂಟ್ಯೂಬ್ ವಿಡಿಯೋಗಳನ್ನು ನೋಡಿದ ಬಳಿಕ. ಅವರು ತೋರಿಸಿದ ಹಾಗೆ ಉಗುರು ತೆಗೆಯಬೇಕೆಂದು ಅದಕ್ಕೆ ಬೇಕಾದ ಸಲಕರಣೆಗಳನ್ನು ತಂದಿಟ್ಟುಕೊಂಡು ಒಂದು ದಿನ ಸನ್ನದ್ಧರಾಗಿ ಕೂತೆವು. ನಮ್ಮ ಕೈಯ್ಯಲ್ಲಿ ಇಲ್ಲಿಯವರೆಗು ನೋಡಿರದಿದ್ದ ಹೊಸ ಸಾಧನವೊಂದನ್ನು ನೋಡಿ ಕೂರಾನಿಗೆ ಆಗಲೇ ಸಂಶಯ ಶುರುವಾಗಿತ್ತು. ನಮ್ಮನ್ನೇ ಪ್ರಶ್ನಾರ್ಥಕ ಕಣ್ಣುಗಳಿಂದ ನೋಡುತ್ತಿದ್ದ. ಒಬ್ಬರು ಮುಂದೆ ಕೂತು ಅವನಿಗೆ ಟ್ರೀಟ್ ತಿನ್ನಿಸುವುದು ಇನ್ನೊಬ್ಬರು ಅವನಿಗೆ ಗೊತ್ತಾಗದ ಹಾಗೆ ಅವನ ಉಗುರನ್ನು ಕತ್ತರಿಸುವುದು ಎಂಬುದು ನಮ್ಮ ರಣತಂತ್ರವಾಗಿತ್ತು. ಸುಮಾರು ಹತ್ತು ಟ್ರೀಟ್ ತುಂಡುಗಳ ಬಳಿಕ ಯಶಸ್ವಿಯಾಗಿ ಒಂದು ಉಗುರನ್ನು ತೆಗೆದೆವು. ಎರಡನೇ ಉಗುರನ್ನು ತೆಗೆಯುವ ಹೊತ್ತಿಗೆ ಅವನಿಗೆ ಹೊಟ್ಟೆ ತುಂಬಿತ್ತೇನೋ ಕೂತಲ್ಲಿಂದ ಓಡಿ ಬಿಟ್ಟ. ಟ್ರೀಟ್ ತಿಂದು ಅವನಿಗೆ ಶಕ್ತಿ ಬಂದಿತ್ತು, ಮನೆಯೆಲ್ಲ ಓಡಾಡಿಸಿದ. ನಮ್ಮ ಹೊಟ್ಟೆ, ತಾಳ್ಮೆ ಎರಡೂ ಖಾಲಿಯಾಗಿ ಗುಟುರು ಹಾಕುತ್ತಿದ್ದವು. + + + +ಅದಾದ ಮೇಲೆ ಎಷ್ಟೇ ಸಲ ಪ್ರಯತ್ನಿಸಿದರು ಅವನ ಉಗುರುಗಳನ್ನು ತೆಗೆಯಲು ಆಗಲೇ ಇಲ್ಲ. ಓಡಿ ಹೋಗಿ ಮೂಲೆಯಲ್ಲಿ ಕುಳಿತುಕೊಳ್ಳುವುದು, ನಮ್ಮ ಮೇಲೆ ಜಿಗಿದಾಡಿ ರಂಪ ಮಾಡುವುದು, ಸಕ್ಕರೆ ಹಲ್ಲುಗಳಲ್ಲಿ ಕಚ್ಚಲು ಯತ್ನಿಸುವುದು.. ಪ್ರತಿ ಸಲ ಅವನದ್ದೇ ರಣಭೇರಿ. ಎಷ್ಟೇ ಸಿದ್ಧವಾಗಿ ಕೂತರೂ ನಮ್ಮ ಪ್ರಯತ್ನಗಳು ವಿಫಲವಾಗುತ್ತಲೇ ಹೋದವು. ನಮ್ಮ ಕೈಯ್ಯಲ್ಲಿರುವ ಸಾಧನ ಉಗುರುಗಳನ್ನು ತೆಗೆಯುವ ಕ್ಲಿಪ್ಪರ್ ಎಂದು ಅವನಿಗೆ ಗೊತ್ತಾಗಿ ಬಿಟ್ಟಿರುವುದರಿಂದ ನಮ್ಮ ಕೈಯ್ಯಲ್ಲಿ ಅದನ್ನು ನೋಡಿದ ಕೂಡಲೇ ಎಲ್ಲಿದ್ದಲ್ಲಿಂದ ಚೆಂಗನೆಯ ನೆಗೆತ. ಚೂಪಾದ ಉಗುರುಗಳಿದ್ದ ಕಾಲುಗಳನ್ನೆತ್ತಿ ನಮ್ಮ ಮೇಲೆ ಹತ್ತಿದರೆ ಪರಚಿದಂತಾಗುತ್ತಿತ್ತು. ಅದರಲ್ಲೂ ಮೈ ಮೇಲೆ ಹತ್ತುವ ಚಟವೂ ಇರುವುದರಿಂದ ಅವನ ಉಗುರುಗಳು ನಮ್ಮನ್ನು ಪರಚುತ್ತ ಗಾಯ ಮಾಡುತ್ತಲೇ ಇದ್ದವು. ಅದರಿಂದ ಅವನಿಗೆ ಒಳಗೊಳಗೆ ಖುಷಿಯೂ ಆಗುತ್ತಿತ್ತು ಎಂದು ನನಗೆ ಖಂಡಿತವಾಗಿ ಗೊತ್ತಿದೆ. ಇದಕ್ಕೇನು ಪರಿಹಾರ, ಏನು ಮಾಡಿದರೆ ಈ ನಿತ್ಯಸಂಕಟದಿಂದ ಮುಕ್ತಿ ಹೊಂದಬಹುದು ಎಂದು ನಾವು ಎಲ್ಲಾ ದೇವರುಗಳ, ನಾಯಿಪೋಷಕರ, ಯುಟ್ಯೂಬ್ ವಿಡಿಯೋಗಳ ಮೊರೆ ಹೊಕ್ಕಿದ್ದೆವು. + +ಯಾರೋ ಕಾಂಕ್ರೀಟ್ ನೆಲದ ಮೇಲೆ ಓಡಿಸಿದರೆ ಆ ಉಗುರುಗಳು ನೆಲದಿಂದ ಸವೆಯುತ್ತವೆ ಎಂದು ಹೇಳಿದ್ದರಿಂದ ಕೂರಾನನ್ನು ಪ್ರತಿಮುಂಜಾನೆ ಓಡಲು ಕರೆದುಕೊಂಡು ಹೋಗುವ ಕೆಲಸವೂ ಆಯಿತು. ಅದು ಸ್ವಲ್ಪ ಕೆಲಸ ಮಾಡಿತಾದರು ಚೂಪಾದ ಉಗುರುಗಳ ಕಾಟ ಸಂಪೂರ್ಣವಾಗಿ ಮುಗಿಯಲಿಲ್ಲ. ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು! ಕೂರಾ ವಿಜಯದ ನಗೆ ಬೀರಿದ್ದ. ಆಗ ಅರ್ಥವಾಗಿದ್ದು ಇದು ಮುಗಿಯದ ಸಮಸ್ಯೆ. ಹೀಗೆಯೇ ಮುಂದುವರೆದರೆ ನಮ್ಮ ಜೀವನ ಬಹಳ ಘೋರವಾಗಲಿದೆ ಎಂಬುದನ್ನು ನೆನೆದು ನಡುಕ ಹುಟ್ಟಿತ್ತು. + + + +ನಾನು ಮಾತ್ರ ಛಲ ಬಿಡದ ತ್ರಿವಿಕ್ರಮನ ಹಾಗೆ ಆಗಾಗ ಅವನ ಉಗುರು ತೆಗೆಯುವ ಪ್ರಯತ್ನ ಮಾಡುತ್ತಿರುತ್ತೇನೆ. ಕೆಲವೊಮ್ಮೆ ಮಗನೇ ಎಂದು ಮುದ್ದು ಮಾಡಿ ಇನ್ನು ಕೆಲವೊಮ್ಮೆ ಮಗನೇ! ಎಂದು ಬೈಯ್ಯುತ್ತ ಕಾರ್ಯಸಾಧಿಸಲು ಹೆಣಗುತ್ತೇನೆ. ಅವನು ಮಲಗಿದ್ದಾಗ ಅವನಿಗೆ ಗೊತ್ತಾಗದ ಹಾಗೆ ಅವನ ಪಕ್ಕಕ್ಕೆ ಹೋಗಿ ಕೂತು ಅವನ ಕಾಲು ಹಿಡಿದರೂ ಅವನ ನರಕ್ಕೆ ತಾಕಬಾರದು ಎಂಬ ಕಾರಣಕ್ಕೆ ನನಗು ಪುಕುಪುಕು. ಅಷ್ಟೊತ್ತಿಗೆ ಅವನಿಗೆ ವಾಸನೆ ಬಂದು ಮತ್ತದೇ ಕಥೆ ರಿಪೀಟ್. ಈಗೀಗ ಅವನ ಕಾಲು ಹಿಡಿದರೆ ಸಾಕು ಎದ್ದು ಓಡಲು ಶುರು ಮಾಡಿದ್ದಾನೆ. ಇದನ್ನು ಬರೆಯುವ ಹೊತ್ತಿನಲ್ಲಿ ಇಲ್ಲೇ ಪಕ್ಕದಲ್ಲಿ ಕೂತಿರುವ ಅವನ ಉಗುರುಗಳು ನನ್ನನ್ನು ಪರಚುತ್ತಿವೆ. + +ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ. \ No newline at end of file diff --git a/Kenda Sampige/article_140.txt b/Kenda Sampige/article_140.txt new file mode 100644 index 0000000000000000000000000000000000000000..14a8fc61b99bc0d6f8b7c9f75c7168f5d2fdf6a7 --- /dev/null +++ b/Kenda Sampige/article_140.txt @@ -0,0 +1,129 @@ +ಸಂಜಯ್ ಸರ್ಕಾರ್, ಏಲಿಯಾಸ್, ಸಂಸ ರಾಜಿಯಾಗುವವರಲ್ಲ ಅನ್ನುವುದು ಅವರನ್ನು ಬಲ್ಲ ಯಾರು ಬೇಕಾದರೂ ಹೇಳುತ್ತಾರೆ. ಸಹದೇವನೂ ಅದನ್ನು ಕಳೆದ ಹದಿನೆಂಟು ವರ್ಷಗಳಿಂದ ನೋಡುತ್ತಾ ಬಂದಿದ್ದಾನೆ. ತಪ್ಪು ನಿರ್ಧಾರ ತಗೋಬೇಡ, ಒಂದು ಸಲ ನಿರ್ಧಾರ ತಗೊಂಡ ಮೇಲೆ ಬದಲಾಯಿಸಬೇಡ ಅನ್ನುವ ಮಾತನ್ನು ಸಂಸ ಎಲ್ಲರಿಗೂ ಹೇಳುತ್ತಾ ಇರುತ್ತಾರೆ. ಅವರ ಪ್ರಕಾರ ನಿರ್ಧಾರ ಬದಲಾಯಿಸುವುದಕ್ಕಿಂತ ತಪ್ಪು ತೀರ್ಮಾನವೇ ವಾಸಿ. ಒಂದು ಸಲ ಅಂದುಕೊಂಡದ್ದನ್ನು ನಾವು ಮತ್ತೊಬ್ಬರ ಮಾತು ಕೇಳಿ ಬದಲಾಯಿಸುತ್ತಾ ಹೋದರೆ ಜೀವನ ಪೂರ್ತಿ ನಮ್ಮ ಬದುಕನ್ನು ರಿಪೇರಿ ಮಾಡುತ್ತಲೇ ಇರಬೇಕಾಗುತ್ತದೆ. + +ಸಂಸ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ನಿರ್ಧರಿಸಿದ್ದು ಯಾಕೆಂಬುದು ಸಹದೇವನಿಗೆ ಸ್ಪಷ್ಟವಾಗಲಿಲ್ಲ. ಆ ಪ್ರಶ್ನೆಗೆ ಉತ್ತರ ಸಿಕ್ಕರೆ ಕಗ್ಗಂಟು ಸಡಿಲಾಗುತ್ತದೆ. ಒಳಹೊಕ್ಕಲು ಒಂದು ಸಣ್ಣ ಜಾಗ ಸಿಕ್ಕರೂ ಸಾಕು, ಅವರ ಮನಸ್ಸನ್ನು ಪೂರ್ತಿ ಜಾಲಾಡಬಹುದು. ಅಥವಾ ಅವರ ಜತೆ ಮಾತಾಡಲಿಕ್ಕೆ ಒಂದರ್ಧ ಗಂಟೆ ಸಿಕ್ಕರೂ ಸಾಕು. ಆದರೆ ಸಂಸ ಯಾರ ಜತೆಗೂ ಅಷ್ಟೆಲ್ಲ ಮಾತಾಡುವುದಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಅವರು ಮೌನವಾಗಿಯೇ ಇದ್ದಿದ್ದನ್ನು ಸಹದೇವ ನೋಡಿದ್ದ. ಅಲ್ಲದೇ ಚೀಫ್ ಕೂಡ ಕಂಗಾಲಾಗಿದ್ದಾರೆ ಅಂದರೆ ಸಂಸ ಖಡಾಖಂಡಿತವಾಗಿಯೇ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿರಬೇಕು. + +(ಜೋಗಿ) + +ಈ ಸಂಗತಿಯನ್ನು ಯಾರ ಜತೆಗೂ ಚರ್ಚಿಸುವ ಹಾಗೂ ಇಲ್ಲ. ಸಂಸ ಅಧಿಕಾರದಲ್ಲಿ ಇರುವುದಿಲ್ಲ ಅಂತ ಗೊತ್ತಾದ ಮರುಗಳಿಗೆಯೇ ಒಳಜಗಳ ಶುರುವಾಗುತ್ತದೆ. ಪಕ್ಷ ಒಡೆದು ಛಿದ್ರವಾಗುತ್ತದೆ. ಇಷ್ಟು ದಿನಗಳ ಕಾಲ ಅಧಿಕಾರದ ಲಾಲಸೆ ಇದ್ದರೂ ಭಯಭಕ್ತಿಯಿಂದ ಸುಮ್ಮಗಿದ್ದವರು ಶಕ್ತಿ ಪ್ರದರ್ಶನ ಆರಂಭಿಸುತ್ತಾರೆ. ಚುನಾವಣೆಯಲ್ಲಿ ಟಿಕೆಟ್ ಸಿಗದೇ ಇದ್ದವರು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧೆಗಿಳಿಯುತ್ತಾರೆ. ಅಂಥವರು ಗೆಲ್ಲುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಇನ್ನು ಮೂರು ತಿಂಗಳಿಗೆ ಪಕ್ಷ ಒಡೆದು ಹೋಗಿ, ಹನ್ನೆರಡು ವರುಷದ ಶ್ರಮ ಸೋರಿಹೋಗುತ್ತದೆ. + +ಹೀಗೆ ಏನೂ ತೋಚದೇ ಹೋದಾಗೆಲ್ಲ ಸಹದೇವ ತನ್ನ ಬಾಲ್ಯದ ಗೆಳೆಯ ನಿರಂಜನನಿಗೆ ಫೋನ್ ಮಾಡುತ್ತಾನೆ. ಅವನ ಬಳಿ ಸಲಹೆ ಕೇಳುತ್ತಾನೆ ಅಂತೇನಲ್ಲ. ಆದರೆ ಅವನ ಜೊತೆ ಮಾತಾಡುತ್ತಾ ಹೋದ ಹಾಗೆ ಅಸ್ಪಷ್ಟವಾಗಿದ್ದದ್ದು ನಿಚ್ಚಳವಾಗುತ್ತಾ ಹೋಗುತ್ತದೆ. ಅಲ್ಲದೇ, ನಿರಾಳವಾಗಿ ಹರಟಲು ಸಹದೇವನಿಗೆ ಇದ್ದದ್ದು ಅವನೊಬ್ಬನೇ. + +ಸಹದೇವನ ಫೋನು ಬರುವ ಹೊತ್ತಿಗೆ ನಿರಂಜನ ಸುರತ್ಕಲ್‍ನ ಟೈಲರ್ ದೇವೇಂದ್ರನ ಅಂಗಡಿಯಲ್ಲಿ ಹರಟೆ ಹೊಡೆಯುತ್ತಾ ಕುಳಿತಿದ್ದ. ಸಹದೇವನ ಫೋನು ಅಂತ ಗೊತ್ತಾಗುತ್ತಿದ್ದಂತೆ ದೇವೇಂದ್ರ ತರಿಸಿದ್ದ ಚಹಾವನ್ನೂ ಗೋಳಿಬಜೆಯನ್ನೂ ಅರ್ಧಕ್ಕೇ ಬಿಟ್ಟು ರಸ್ತೆಗೆ ಜಿಗಿದ. ಒಂದು ಕಿವಿಗೆ ಸಹದೇವನ ಮಾತು ಕೇಳಿಸುತ್ತಿದ್ದರೂ, ದೇವೇಂದ್ರ ಅಂಗಡಿಯಲ್ಲಿದ್ದ ಯಾರಿಗೋ `ಅದ್ಯಾರದ್ದೋ ಫೋನ್ ಬರ್ತದೆ. ಎಲ್ಲಾ ಬಿಟ್ಟು ಓಡಿ ಹೋಗ್ತಾನೆ. ಯಾವುದೋ ಹುಡುಗಿಯದ್ದೇ ಇರಬೇಕು’ ಎಂದು ತಮಾಷೆ ಮಾಡಿದ್ದು ನಿರಂಜನನಿಗೆ ಕೇಳಿಸದೇ ಹೋಗಲಿಲ್ಲ. + +`ಎಂಥದಾ, ಸುದ್ದಿಯೇ ಇಲ್ಲ, ಭಯಂಕರ ಬಿಜಿಯಾ? ನಮ್ಮ ಗಣಿತದ ಮಾಸ್ಟ್ರಿಗೆ ಹುಚ್ಚು ಹಿಡಿದದ್ದು ಗೊತ್ತುಂಟಾ ನಿಂಗೆ. ಈಗ ಗೋಡೆಯಲ್ಲಿ, ರಸ್ತೆಯಲ್ಲಿ, ಎಲ್ಲೆಂದರಲ್ಲಿ ಗಣಿತದ ಸೂತ್ರ ಬರೆಯುವುದು, ಸಮಸ್ಯೆ ಬಿಡಿಸುವುದು, ಭಯಂಕರ ಉಪದ್ರ ಮಾರಾಯ’ ಎಂದು ನಿರಂಜನ ಎಂದಿನ ಮಾತಿಗಿಳಿದ. ಸಹದೇವನಿಗೂ ಅದೇ ಬೇಕಿತ್ತು. ಮನಸ್ಸು ಜಡವಾಗಿದೆ ಅಂತ ಅನ್ನಿಸಿದಾಗೆಲ್ಲ ನಿರಂಜನನ ಕತೆ, ತಮಾಷೆ, ಹಾಡು, ಅವನು ಹೇಳುತ್ತಿದ್ದ ಊರಿನ ಪ್ರಸಂಗಗಳು, ಯಕ್ಷಗಾನದ ಹೊಸ ಪಟ್ಟುಗಳು ಸಹದೇವನಿಗೆ ಹೊಸ ಚೈತನ್ಯ ತುಂಬುತ್ತಿದ್ದವು. + +ನಿರಂಜನ ಒಂಚೂರೂ ಬದಲಾಗಿರಲಿಲ್ಲ. ಸಹದೇವ ಮತ್ತು ನಿರಂಜನ ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ ಹೇಗಿದ್ದನೋ ಈಗಲೂ ಹಾಗೆಯೇ ಇದ್ದ. ಮದುವೆ ಆಗುವುದಿಲ್ಲ ಅಂತ ತೀರ್ಮಾನ ಮಾಡಿದವನು, ಯಾರೆಷ್ಟೇ ಹೇಳಿದರೂ ಮದುವೆ ಮಾಡಿಕೊಳ್ಳಲಿಲ್ಲ. ಕೊನೆಗೆ ನಲವತ್ತೆಂಟು ವರ್ಷಕ್ಕೆ ಮದುವೆ ಆಗುತ್ತೇನೆ ಅಂದ. ಯಶೋದೆಯೇ ಹುಡುಗಿ ಹುಡುಕುವ ಜವಾಬ್ದಾರಿ ಹೊತ್ತಳು. ಒಬ್ಬಳು ವಿಧವೆಯನ್ನು ಹುಡುಕಿ ನಿರಂಜನನನ್ನು ಒಪ್ಪಿಸಿ ಮದುವೆ ಮಾಡಿದಳು. ಇಬ್ಬರು ಮಕ್ಕಳ ತಂದೆಯೂ ಆದ. ಆದರೆ ಆಮೇಲೂ ಅವನು ಕಿಂಚಿತ್ತೂ ಬದಲಾಗಲಿಲ್ಲ. ಅವನ ಹೆಂಡತಿ ನಾಗವೇಣಿಗೆ ಅಂಥ ನಿರೀಕ್ಷೆಗಳೂ ಇರಲಿಲ್ಲವಾಗಿ, ಆಕೆ ನಿರಂಜನನ ಓಡಾಟವನ್ನೆಲ್ಲ ಒಪ್ಪಿಕೊಂಡಿದ್ದಳು. ಸಹದೇವ ಎಷ್ಟೇ ಕರೆದರೂ ನಿರಂಜನ ದೆಹಲಿಯ ಕಡೆ ತಲೆ ಹಾಕಲಿಲ್ಲ. ತನ್ನ ಮನೆ, ಮೂರೂವರೆ ಎಕರೆ ಅಡಕೆ ತೋಟ, ಕೊನೆಯ ದಿನಗಳನ್ನು ಲೆಕ್ಕ ಹಾಕುತ್ತಿರುವ ಅಮ್ಮ, ಆಗಾಗ ಫೋನ್ ಮಾಡುವ ಸಹದೇವನನ್ನು ಬಿಟ್ಟರೆ ಅವನಿಗೆ ಇಷ್ಟವಾದ ಸಂಗತಿಗಳು- ರುಚಿಯಾದ ಊಟ, ಇಸ್ಪೀಟು ಆಟ, ಈಜು ಮತ್ತು ಯಕ್ಷಗಾನ. ಶ್ರೀಮಂತರ ಮನೆಯ ಊಟಕ್ಕೆ ಹೋದ ಅಮ್ಮ ಮಕ್ಕಳಿಗೆಂದು ಸಿಹಿತಿಂಡಿಗಳನ್ನು ಸೆರಗಿನಲ್ಲಿ ಗಂಟು ಕಟ್ಟಿ ತರುವಂತೆ, ಊರಲ್ಲಿ ನಡೆದ ಸ್ವಾರಸ್ಯಕರ ಘಟನೆಗಳನ್ನು ಸಹದೇವನಿಗೆ ಹೇಳಲಿಕ್ಕೆಂದೇ ಅವನು ನೆನಪಿನ ಸಂಚಿಯಲ್ಲಿ ಇಟ್ಟುಕೊಳ್ಳುತ್ತಿದ್ದ. + +`ಸಿಕ್ಕಾಪಟ್ಟೆ ಒತ್ತಡದಲ್ಲಿದ್ದೇನೆ ನಿರಂಜನ. ಒಂದು ದೊಡ್ಡ ಸಮಸ್ಯೆ ತಲೆ ಮೇಲೆ ಬಂದು ಕೂತಿದೆ. ಅದನ್ನು ಕೆಳಗಿಳಿಸಲಿಕ್ಕೂ ಆಗುತ್ತಿಲ್ಲ, ಹೊತ್ತುಕೊಂಡು ಓಡಾಡಲಿಕ್ಕೂ ಆಗುತ್ತಿಲ್ಲ. ಸಾವು ಬದುಕಿನ ಪ್ರಶ್ನೆ ಆಗಿಬಿಟ್ಟಿದೆ’ ಅಂತ ಸಹದೇವ ಬಿಟ್ಟುಕೊಡಲಾಗದ ಗುಟ್ಟನ್ನು ಬಚ್ಚಿಟ್ಟುಕೊಂಡು, ಅದು ಉಂಟು ಮಾಡುತ್ತಿರುವ ತಲ್ಲಣಗಳನ್ನು ಮಾತ್ರ ನಿರಂಜನನ ಹತ್ತಿರ ಹೇಳಿಕೊಂಡ. + +`ನಿನ್ನ ಸಮಸ್ಯೆಗೆ ಮನುಷ್ಯರು ಕಾರಣ ಆದ್ರೆ ಅವರ ಹತ್ರ ಮಾತಾಡು. ಗ್ರಹಗಳು ಕಾರಣ ಆದರೆ ಶಾಂತಿ ಹೋಮ ಮಾಡಿಸು. ದುಷ್ಟರು ಕಾರಣ ಆದ್ರೆ ಸಂಹಾರ ಮಾಡು. ನೀನೇ ಕಾರಣ ಆಗಿದ್ರೆ ನೇಣು ಹಾಕ್ಕೊಂಡು ಸಾಯಿ’ ಎಂದು ನಿರಂಜನ ಗಹಗಹಿಸಿ ನಕ್ಕ. ಸಹದೇವನಿಗೂ ನಗು ಉಕ್ಕಿ ಬಂದು `ನೇಣು ಹಾಕ್ಕೊಂಡು ಸಾಯೋ ದಾದರೆ ನಿನ್ನನ್ನು ಕೊಂದೇ ಹೋಗೋದು ನಾನು’ ಅಂದ. + +ಹೀಗೇ ಇಬ್ಬರೂ ಸುಮಾರು ಹೊತ್ತು ಮಾತಾಡಿದರು. ನಿರಂಜನ ಸುರತ್ಕಲ್ಲನ್ನು ಸೀಳಿಕೊಂಡು ಹೋಗುತ್ತಿರುವ ಹೊಸ ಅಷ್ಟಪಥ ರಸ್ತೆ ಇಡೀ ಊರನ್ನೇ ಎರಡು ಭಾಗ ಮಾಡಿದೆ. ಮೊದಲೇ ನಾವು ಹೊಡೆದಾಟಕ್ಕೆ ಎತ್ತಿದ ಕೈ. ಈಗ ಒಂದು ಭಾಗಕ್ಕೆ ಇಂಡಿಯಾ ಇನ್ನೊಂದು ಭಾಗಕ್ಕೆ ಪಾಕಿಸ್ತಾನ ಅಂತ ಹೆಸರಿಟ್ಟು ಹೊಡೆದಾಡಿಕೊಳ್ಳಬಹುದು. ಕ್ರಿಕೆಟ್ ಕೂಡ ಆಡಬಹುದು. ಈಗಂತೂ ಹೆಣ ಬೀಳೋದಕ್ಕೆ ಕಾರಣಗಳೇ ಬೇಕಿಲ್ಲ. ಸಾವು ತುಂಬ ಅಗ್ಗವಾಗಿದೆ ಮಾರಾಯ. ರುಪಾಯಿಗೆರಡು ಕೇಜಿ ಅಂತೆಲ್ಲ ಹೇಳಿದ. ಆ ಕತೆಗಳೆಲ್ಲ ಸಹದೇವನಿಗೂ ಗೊತ್ತಿದ್ದವು. `ಅದು ಆಧುನಿಕ ರಾಜಕಾರಣದ ಅವಿಭಾಜ್ಯ ಅಂಗ. ಸಾವಿಲ್ಲದೇ ಹೋದರೆ ಸಹಬಾಳ್ವೆಗೆ ಅರ್ಥವೇ ಇಲ್ಲ. ಹೊಡೆದಾಡ್ತಾ ಇರಬೇಕು, ಒಂದಾಗುತ್ತಿರಬೇಕು ಅಂತ ರಾಜಕಾರಣ ನಂಬಿದೆ’ ಎನ್ನುವುದನ್ನು ಎಷ್ಟು ಸರಳವಾಗಿ ಹೇಳಲು ಸಾಧ್ಯವೋ ಅಷ್ಟು ಸರಾಗವಾಗಿ ಸಹದೇವ ನಿಧಾನವಾಗಿ ನಿರಂಜನನಿಗೆ ವಿವರಿಸಿದ. + +ಮಾತಾಡುತ್ತಾ ಆಡುತ್ತಾ ತನ್ನ ಸಮಸ್ಯೆಗೆ ನಿರಂಜನನ ಹತ್ತಿರ ಪರಿಹಾರ ಸಿಗುತ್ತದೆ ಅಂತ ಸಹದೇವನಿಗೆ ಗಾಢವಾಗಿ ಅನ್ನಿಸಿತು. ಆದರೂ ನೇರವಾಗಿ ಎಲ್ಲವನ್ನೂ ಅವನಿಗೆ ಹೇಳುವಂತಿರಲಿಲ್ಲ. `ಒಂದು ಪ್ರಶ್ನೆ ಕೇಳ್ತೀನಿ. ಸರಿಯಾಗಿ ಆಲೋಚನೆ ಮಾಡಿ ಉತ್ತರ ಕೊಡು. ನಿಮ್ಮೂರಿನ ಒಂದು ಪಾರ್ಟಿಯಲ್ಲಿ ಒಬ್ಬ ನಾಯಕ ಇದ್ದಾನೆ ಅಂತಿಟ್ಕೋ. ಎಲ್ಲರೂ ಅವನ ವರ್ಚಸ್ಸು, ಒಳ್ಳೇತನ ನೋಡಿ ಅವನಿಗೆ ಮತ ಹಾಕಿ ಗೆಲ್ಲಿಸ್ತಿರ್ತಾರೆ. ಅವನಿಲ್ಲದೇ ಹೋದರೆ ಪಕ್ಷ ಸೋತು ಹೋಗೋದರ ಬಗ್ಗೆ ಯಾರಿಗೂ ಅನುಮಾನವೇ ಇರೋದಿಲ್ಲ. ಹೀಗಿದ್ದಾಗ ಒಂದು ದಿನ ಇದ್ದಕ್ಕಿದ್ದಂತೆ ಅವನು ನಾನು ರಾಜಕೀಯ ಸನ್ಯಾಸ ತಗೋಬೇಕು ಅಂತ ತೀರ್ಮಾನ ಮಾಡ್ತಾನೆ. ಅವನ ಮನಸ್ಸು ಬದಲಾಯಿಸೋದು ಹ್ಯಾಗೆ?’ + +`ದೊಡ್ಡವರು ಒಂದು ಸಲ ತೀರ್ಮಾನ ಮಾಡಿದ ಮೇಲೆ ಅದನ್ನು ಸತ್ತರೂ ಬದಲಾಯಿಸೋದಿಲ್ಲ. ಅವರಿಗೆ ತಾವು ಮಾಡ್ತಿರೋದೇ ಸರಿ ಅನ್ನೋ ಅಹಂಕಾರ.’ ಕೊಂಚ ಒರಟಾಗಿಯೇ ಹೇಳಿದ ನಿರಂಜನ. + +`ಹಾಗಿದ್ದರೆ ಇಂಥ ಪರಿಸ್ಥಿತಿಯಿಂದ ಪಾರಾಗೋದು ಹೇಗೆ?’ + +`ಅಂಥವರನ್ನು ಬಲಿ ಕೊಡಬೇಕು. ಅಂಥವರ ಸಾವಿನ ಅನುಕಂಪದ ಅಲೆಗಳ ಮೇಲೆ ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಬಹುದು’ ನಿರಂಜನ ಗಂಭೀರವಾಗಿ ಹೇಳಿದ. ಸಹದೇವನ ಕಡೆಯಿಂದ ಏನೂ ಉತ್ತರ ಬರದೇ ಇದ್ದದ್ದು ನೋಡಿ, ತನ್ನ ಮಾತಿನ ಗಾಂಭೀರ್ಯವನ್ನು ತಾನೇ ಮುರಿಯಲಿಕ್ಕೆಂದು `ಚೆನ್ನಾಗಿಲ್ವಾ ಐಡಿಯಾ? ಇದಕ್ಕಿಂತ ಒಳ್ಳೇ ಪ್ಲಾನು ಆ ದೇವರ ಹತ್ರವೂ ಇರಲಿಕ್ಕೆ ಸಾಧ್ಯವಿಲ್ಲ’ ಅಂತ ಜೋರಾಗಿ ನಕ್ಕ. + +ಸಹದೇವನೂ ನಕ್ಕು `ಇವತ್ತಿಗಿಷ್ಟು ಜ್ಞಾನ ಸಾಕು’ ಅಂದ. ಮಾತು ಮುಗಿದ ಮೇಲೂ ತುಂಬಾ ಹೊತ್ತು ನಿರಂಜನ ಹೇಳಿದ ಮಾತು ಸಹದೇವನ ಕಿವಿಯಲ್ಲಿ ಅನುರಣಿಸುತ್ತಿತ್ತು. `ಬಲಿ, ಸಾವು, ಅನುಕಂಪ, ಸಾಮ್ರಾಜ್ಯ’ ಈ ನಾಲ್ಕು ಪದಗಳನ್ನು ಸಹದೇವ ಹೆಕ್ಕಿ ಜೇಬಿಗೆ ಹಾಕಿಕೊಂಡ. + +***** + +‘ಐ ವಾಂಟ್ ಅನದರ್ ಮೀಟಿಂಗ್ ವಿತ್ ಯೂ. ಸೂನರ್ ದಿ ಬೆಟರ್’ ಎಂಬ ಒಂದು ಸಾಲಿನ ಚೀಟಿಯನ್ನು ಬೆಳಗ್ಗೆ ಪೇಪರ್ ತಲುಪುವ ಮುಂಚೆಯೇ ಸೋನು ಚೀಫ್ ಮನೆಗೆ ತಲುಪಿಸಿಯಾಗಿತ್ತು. ಅದನ್ನು ನೋಡುತ್ತಲೇ ಚೀಫ್ ಮುಖದಲ್ಲಿ ಸಣ್ಣ ನಗು ಅರಳಿತು. ಅವರಿಗೆ ಸಹದೇವ್ ಬಗ್ಗೆ ಯಾವ ಅಪನಂಬಿಕೆಯೂ ಇರಲಿಲ್ಲ. ಒಪ್ಪಿಸಿದ ಕೆಲಸವನ್ನು ಆತನಷ್ಟು ನಿಷ್ಠೆಯಿಂದ ಮಾಡುವ ವ್ಯಕ್ತಿ ಅವರಿಗೆ ಯಾವತ್ತೂ ಸಿಕ್ಕಿರಲಿಲ್ಲ. ತಾನು ಯಾರೆಂಬುದನ್ನು ಯಾವತ್ತೂ ಬಿಟ್ಟುಕೊಡದ, ತಾನು ಮಾಡಿದ ಕೆಲಸವನ್ನು ಕೂಡ ತಾನು ಮಾಡಿದೆ ಎಂದು ಕ್ಲೈಮ್ ಮಾಡಿಕೊಳ್ಳದ ಅನಗತ್ಯವಾಗಿ ಯಾರನ್ನೂ ಭೇಟಿಯಾಗದ ಯಾವ ಸವಲತ್ತನ್ನೂ ಬಯಸದ ದೇವ್ ಬಗ್ಗೆ ಅವರಿಗಿದ್ದ ಏಕೈಕ ತಕರಾರೆಂದರೆ ಅವನನ್ನು ಸಂಪರ್ಕಿಸುವ ಕಷ್ಟ. ಅವನು ಯಾವತ್ತೂ ಫೋನಿನಲ್ಲಿ ಮಾತಾಡುತ್ತಿರಲಿಲ್ಲ. ಯಾವ ಆಧುನಿಕ ತಂತ್ರಜ್ಞಾನವೂ ಇಲ್ಲದ ಬೇಸಿಕ್ ಫೋನ್ ಇಟ್ಟುಕೊಂಡು ಓಡಾಡುತ್ತಿದ್ದ ದೇವ್, ತನ್ನ ಲ್ಯಾಪ್‍ಟಾಪನ್ನು ಮಾತ್ರ ನಂಬುತ್ತಿದ್ದ. ಒಮ್ಮೆ ಭೇಟಿಯಾದ ಜಾಗದಲ್ಲಿ ಮತ್ತೊಮ್ಮೆ ಭೇಟಿಯಾಗುತ್ತಿರಲಿಲ್ಲ. ಭೇಟಿಯಾಗುವಾಗ ಬೇರೆ ಯಾರೂ ಜತೆಗಿರಬಾರದು ಎಂಬುದನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದ. ಫೋನಿನಲ್ಲಿ ಇಪ್ಪತ್ತು ಸೆಕೆಂಡಿನಲ್ಲಿ ಮುಗಿದುಹೋಗುವ ಮಾತುಕತೆಗೂ ಚೀಫ್ ಮೂರು ಗಂಟೆ ಖರ್ಚು ಮಾಡಬೇಕಾಗುತ್ತಿತ್ತು. ಆದರೆ ದೇವ್ ಮಾತ್ರ ಆ ವಿಚಾರದಲ್ಲಿ ರಾಜಿಯಾಗು ತ್ತಿರಲಿಲ್ಲ. ಈಗ ಮೂರು ಗಂಟೆ ಖರ್ಚಾದರೆ ಆಗಲೀ, ನಂತರ ಮೂರು ವರ್ಷ ಖರ್ಚು ಮಾಡಿದರೂ ಆದ ತಪ್ಪನ್ನು ಸರಿಪಡಿಸಲಿಕ್ಕಾಗದು ಎಂದು ವಾದಿಸುತ್ತಿದ್ದ. + +ಅದರಲ್ಲಿ ಅತಿಶಯೋಕ್ತಿಯೇನೂ ಇರಲಿಲ್ಲ. ದೆಹಲಿಯ ಶಕ್ತಿ ರಾಜಕಾರಣದ ಪ್ರಭಾವಲಯದಲ್ಲಿ ಎಲ್ಲರಿಗೂ ಎಲ್ಲರೂ ಗೊತ್ತಿದ್ದರು. ಯಾವುದೇ ಪಕ್ಷ ಯಾರೇ ಹೊಸಬರನ್ನು ನೇಮಿಸಿಕೊಂಡರೂ ಅದು ಎರಡೇ ದಿನಕ್ಕೆ ಎಲ್ಲರಿಗೂ ಗೊತ್ತಾಗುತ್ತಿತ್ತು. ಪಕ್ಷದ ರಹಸ್ಯಗಳನ್ನು ಯಾರು ಹೊರಹಾಕುತ್ತಿದ್ದಾರೆ ಎಂಬುದು ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ಇಬ್ಬರೇ ಕುಳಿತು ಆಡಿದ ಮಾತುಗಳು ಕೂಡ ಎಷ್ಟೋ ಸಲ ಜಗಜ್ಜಾಹೀರಾಗುತ್ತಿದ್ದವು. ಅದರಿಂದಾಗಿಯೇ ಅನೇಕರು ಪಡಬಾರದ ಪಾಡು ಪಟ್ಟದ್ದನ್ನು ಚೀಫ್ ಕಣ್ಣಾರೆ ಕಂಡಿದ್ದರು. + +ಚೀಫ್ ಭೇಟಿಯ ಸಮಯ ಮತ್ತು ಜಾಗವನ್ನು ಒಂದು ಚೀಟಿಯಲ್ಲಿ ಬರೆದು ತಾವೇ ಹೋಗಿ ಮನೆಯಾಚೆ ಕಾಯುತ್ತಿದ್ದ ಸೋನು ಕೈಗೆ ಕೊಟ್ಟು ಬಂದರು. ಅವರು ಹೇಳಿದ ಸಮಯಕ್ಕೆ ಸರಿಯಾಗಿ ಅವರು ಹೇಳಿದ ಜಾಗದಲ್ಲಿ ಸಹದೇವ್ ಕಾಯುತ್ತಿದ್ದ. ಎಂದಿನಂತೆ ಚೀಫ್ ಒಬ್ಬರೇ ಬಂದಿದ್ದರು. + +ಅದೊಂದು ಹಳೆಯ ಕಟ್ಟಡ. ಒಂದು ಕಾಲದಲ್ಲಿ ಆ ಮನೆಯಲ್ಲಿ ಯಾರೋ ಪಂಜಾಬಿ ವಾಸ ಮಾಡುತ್ತಿದ್ದರೆಂದು ಕಾಣುತ್ತದೆ. ಮನೆಯ ಹೊರಗಿನ ತಿಳಿಹಸಿರು ಬಣ್ಣದ ಕಾಂಪೌಂಡಿನ ಮೇಲೆ, ಗೇಟಿನ ಪಕ್ಕದಲ್ಲಿ ನಾರಂಗ್ ಎಂದು ಬರೆದದ್ದು ಕಾಣುತ್ತಿತ್ತು. ಅದರ ಪಕ್ಕದಲ್ಲಿ ಇದ್ದ ಹೆಸರು ಅಳಿಸಿಹೋಗಿತ್ತು. ಗೇಟಿನ ಒಂದು ತುದಿ ತುಂಡಾಗಿದ್ದರಿಂದ ಅದು ನೆಲಕ್ಕೆ ತಾಕಿ ಜೋತಾಡುತ್ತಿತ್ತು. ಅದನ್ನು ಎತ್ತಿ ಪಕ್ಕಕ್ಕೆ ಸರಿಸುತ್ತಾ ಚೀಫ್ ಒಳಗೆ ಕಾಲಿಟ್ಟರು. + +ಮನೆಯೊಳಗೆ ಕುಳಿತುಕೊಳ್ಳಲು ಕುರ್ಚಿಗಳೇ ಇರಲಿಲ್ಲ. ಮನೆಯೊಳಗೇ ಜಗಲಿಯಂತೆ ಮಾಡಿ ಒಂದೂವರೆ ಅಡಿ ಎತ್ತರದ ಕಟ್ಟೆ ಕಟ್ಟಿದ್ದರು. ಇಬ್ಬರೂ ಕಟ್ಟೆಯ ಮೇಲೆ ಕೂತರು. + +`ಇಂಥ ಮನೆಗಳನ್ನು ಎಲ್ಲಿಂದ ಹುಡುಕ್ತೀನಿ ಅಂತ ಆಶ್ಚರ್ಯ ಆಗ್ತಿದ್ಯಾ? ಇದು ನಾನು ದೆಹಲಿಗೆ ಕಾಲಿಟ್ಟಾಗ ವಾಸ ಮಾಡ್ತಿದ್ದ ಮನೆ. ಈ ಮನೆಯಲ್ಲಿ ದೇವಕಿ ನಾರಂಗ್ ವಾಸ ಮಾಡ್ತಿದ್ದಳು. ಗಂಡನನ್ನು ಕಳಕೊಂಡು ಇಬ್ಬರು ಮಕ್ಕಳನ್ನು ಸಾಕ್ತಿದ್ದಳು. ನಾನಿಲ್ಲಿಗೆ ವಿದ್ಯಾಭ್ಯಾಸಕ್ಕೆಂದು ಬಂದೆ. ಅವಳ ಮಗನ ಹಾಗೇ ಇದ್ದು ಓದಿದೆ. ಆ ನೆನಪಿಗೆ ಈ ಮನೇನ ನಾನೇ ಕೊಂಡುಕೊಂಡೆ. ಈಗ ದೇವಕಿ ಬದುಕಿಲ್ಲ. ಅವಳ ಇಬ್ಬರು ಮಕ್ಕಳೂ ಜರ್ಮನಿಯಲ್ಲಿದ್ದಾರೆ. ಈ ಮನೆಯಲ್ಲೇ ನಾನು ಲಾ ಓದಿದ್ದು. ಕಷ್ಟ ಎದುರಾದಾಗೆಲ್ಲ ಇಲ್ಲಿಗೆ ಬರ್ತೀನಿ. ಎಷ್ಟೋ ಪ್ರಶ್ನೆಗಳಿಗೆ ನನಗೆ ಇಲ್ಲಿ ಉತ್ತರ ಸಿಕ್ಕಿವೆ’ ಚೀಫ್ ಎಂದಿಗಿಂತ ಹೆಚ್ಚು ಮಾತಾಡಿದರು. ಅವರು ಹೇಳಿದ ವಿವರಗಳಲ್ಲಿ ಆ ಕ್ಷಣಕ್ಕೆ ಸಹದೇವನಿಗೆ ಯಾವ ಆಸಕ್ತಿಯೂ ಇರಲಿಲ್ಲ. + +`ನನಗೆ ಕೆಲವು ಮಾಹಿತಿಗಳು ಬೇಕು. ಅದಿಲ್ಲದೇ ಮುಂದೆ ಹೋಗೋದಕ್ಕೆ ಸಾಧ್ಯವೇ ಇಲ್ಲ. ಆ ಮಾಹಿತಿ ನಿಮ್ಮಲ್ಲಿದೆ ಅಂದುಕೊಂಡು ಬಂದಿದ್ದೀನಿ. ನಿಮ್ಮಲ್ಲಿಲ್ಲದೇ ಹೋದರೆ ನಾನು ಕಲೆಕ್ಟ್ ಮಾಡಿಕೊಳ್ಳಬಲ್ಲೆ. ಆದರೆ ಅದಕ್ಕೆ ಜಾಸ್ತಿ ಸಮಯ ಹಿಡೀಬಹುದು’ ಸಹದೇವ ನೇರವಾಗಿ ವಿಷಯಕ್ಕೆ ಬಂದ. + +`ಸಂಜಯ್ ಸರ್ಕಾರ್ ಭೇಟಿಯಾಗೋ ವಿಚಾರ ಏನಾಯಿತು? ಆದಷ್ಟು ಬೇಗ ಅವರ ಹತ್ರ ಮಾತಾಡೋದು ಒಳ್ಳೇದು. ತಡವಾದಷ್ಟು ಸುದ್ದಿ ಹಬ್ಬುವ ಸಾಧ್ಯತೆ ಜಾಸ್ತಿ.’ ಹಿಂದಿನ ಭೇಟಿಯಲ್ಲಿ ಹೇಳಿದ ಮಾತುಗಳನ್ನೇ ಚೀಫ್ ಮತ್ತಷ್ಟು ಆತಂಕದಿಂದ ಆಡಿದರು. + +`ನಾವು ನಿನ್ನೆ ಭೇಟಿಯಾದಾಗ ನೀವು `ಮೂರು ತಿಂಗಳ ಹಿಂದೆ ಸರ್ಕಾರ್ ಲವಲವಿಕೆಯಿಂದಲೇ ಇದ್ದರು. ಚುನಾವಣೆ ಗೆಲ್ಲುವ ಉತ್ಸಾಹದ ಮಾತಾಡಿದ್ದರು’ ಅಂತ ಹೇಳಿದ್ರಿ. ನಿಮಗೆ ಅದು ಮೂರು ತಿಂಗಳ ಹಿಂದೆ ಅನ್ನೋದು ಸರಿಯಾಗಿ ನೆನಪಿದೆಯೇ?’ + +`ನೆನಪು ಮಾಡಿಕೊಂಡು ಹೇಳಬಹುದು. ಅವರು ಈ ಮಾತು ಹೇಳಿದ್ದು ನ್ಯಾಷನಲ್ ಪಾರ್ಟಿ ಸಮಾವೇಶ ನಡೀತಲ್ಲ, ಆವತ್ತು. ಅಂದರೆ ಇವತ್ತು ಆಗಸ್ಟ್ ಹದಿನೆಂಟು. ಅವರ ಸಮಾವೇಶ ನಡೆದದ್ದು ಮೇ ಒಂದು. ಮೂರೂವರೆ ತಿಂಗಳಾಗಿರಬಹುದು. ಅದನ್ನು ತಗೊಂಡು ಏನು ಮಾಡೋದಕ್ಕಿದೆ?’ + +`ಸರ್ಕಾರ್ ಮನ ಪರಿವರ್ತನೆ ಯಾವಾಗ ಆಯ್ತು ಅಂತ ಗೊತ್ತಾಗಬೇಕು. ಅವರ ಉತ್ಸಾಹ ಕ್ಷೀಣಿಸೋದಕ್ಕೆ ಒಂದೋ ಒಳಗಿನ ಕಾರಣ ಇರಬೇಕು. ಇಲ್ಲವೇ ಬಲವಾದ ಹೊರಗಿನ ಕಾರಣ ಇರಬೇಕು, ಚೀಫ್, ನನಗೆ ಈ ಮೂರೂವರೆ ತಿಂಗಳಲ್ಲಿ ಅವರು ಎಲ್ಲಿಗೆ ಹೋಗಿದ್ದಾರೆ, ಯಾರನ್ನು ಭೇಟಿ ಮಾಡಿದ್ದಾರೆ, ಅವರನ್ನು ಯಾರು ಭೇಟಿ ಮಾಡಿದ್ದಾರೆ, ಯಾರ ಜತೆ ಎಷ್ಟು ಹೊತ್ತು ಕಳೆದಿದ್ದಾರೆ, ಯಾರ ಜತೆಗೆಲ್ಲ ಫೋನಿನಲ್ಲಿ ಮಾತಾಡಿದ್ದಾರೆ- ಈ ಎಲ್ಲಾ ವಿವರಗಳೂ ಬೇಕು. ವಿಡಿಯೋ ಫೂಟೇಜ್ ಸಮೇತ ಸಿಕ್ಕರೆ ತುಂಬಾ ಒಳ್ಳೇದು. ಹಾಗೇ, ಅವರ ಇಬ್ಬರು ಪರ್ಸನಲ್ ಸೆಕ್ರೆಟರಿಗಳನ್ನೂ ನಾನು ಮಾತಾಡಿಸಬೇಕು’. + + + +ಚೀಫ್ ವಿಷಾದದಿಂದಲೂ ಅನುಕಂಪದಿಂದಲೂ ಸಹದೇವನನ್ನು ನೋಡುತ್ತಾ ಕೂತರು. ಸ್ವಲ್ಪ ಹೊತ್ತು ಏನೂ ಮಾತಾಡಲಿಲ್ಲ. ಅವರ ಮನಸ್ಸಲ್ಲಿ ಏನು ನಡೆಯುತ್ತಿದೆ ಅನ್ನುವುದು ಸಹದೇವನಿಗೆ ಅಲ್ಪಸ್ವಲ್ಪ ಅರ್ಥವಾಗುತ್ತಿತ್ತು. ಅವರೇ ಮಾತಾಡಲಿ ಅಂತ ಸಹದೇವ ಸುಮ್ಮನೆ ಕಾಯುತ್ತಾ ಕೂತ. + +`ಇಷ್ಟೆಲ್ಲ ಸರ್ಕಸ್ ಮಾಡೋ ಅಗತ್ಯ ಇದೆಯಾ? ನೇರವಾಗಿ ಹೋಗಿ ಮಾತಾಡಿದರೆ ಆಗೋದಿಲ್ವಾ? ಈ ವಿವರಗಳನ್ನೆಲ್ಲ ಕಲೆ ಹಾಕೋ ಹೊತ್ತಿಗೆ ತುಂಬ ತಡವಾಗುತ್ತೆ. ಅಷ್ಟು ಟೈಮ್ ಇಲ್ಲ ನಮ್ಮ ಹತ್ರ.’ಸಹದೇವ ತಣ್ಣಗೆ ಹೇಳಿದ. + +`ನಾನೇನು ಹುಡುಕ್ತಿದ್ದೇನೋ ಆ ವಿವರ ಸಿಗದೇ ಮಾತಾಡಿ ಪ್ರಯೋಜನ ಇಲ್ಲ. ನಿಮಗೆ ಆಗ ಹೇಳಿದ್ದನ್ನೇ ಈಗಲೂ ಹೇಳುತ್ತಾರೆ. ನಾವು ಒತ್ತಾಯ ಮಾಡಿದಷ್ಟೂ ಅವರ ನಿರ್ಧಾರ ಬಲವಾಗುತ್ತಾ ಹೋಗುತ್ತದೆ. ಮೂರನೇ ಸಲ ಈ ವಿಚಾರ ಮಾತಾಡ್ತೀವಿ ಅಂತ ಗೊತ್ತಾದರೆ ನಮ್ಮನ್ನು ಭೇಟಿಯಾಗಲಿಕ್ಕೂ ಅವರು ನಿರಾಕರಿಸಬಹುದು. ಒಂದಂತೂ ನಿಜ ಚೀಫ್. ಇದು ನಾವು ಅಂದುಕೊಂಡಷ್ಟು ಸರಳವಾಗಿಲ್ಲ. ನಾವು ಅವರ ಫೋನ್ ಟ್ಯಾಪ್ ಮಾಡಬೇಕಾದ ಪ್ರಸಂಗ ಬಂದರೂ ಬರಬಹುದು.’ + +`ವಾಟ್…. ಪ್ರಧಾನಿಯ ಫೋನ್ ಟ್ಯಾಪ್ ಮಾಡೋದಾ? ಇಂಪಾಸಿಬಲ್. ಅವರಿಗೆ ಬರೀ ಫಿಸಿಕಲ್ ಸೆಕ್ಯುರಿಟಿಯಷ್ಟೇ ಇದೆ ಅಂದ್ಕೋಬೇಡ. ಡಿಜಿಟಲೀ ಸೆಕ್ಯೂರ್ಡ್ ಆಫೀಸು ಅವರದ್ದು. ಡಾಟಾ ಸೋರಿಕೆ ಆಗೋದಕ್ಕೆ ಸಾಧ್ಯವೇ ಇಲ್ಲ.’ + +`ಚೀಫ್, ಅವರು ಯಾವ ದಿನ ಬದಲಾದರು ಅನ್ನೋದು ಮೊದಲು ಗೊತ್ತಾಗ ಬೇಕು. ಯಾಕೆ ಬದಲಾದರು ಅಂತ ತಿಳ್ಕೋಬೇಕು. ಆಮೇಲೆ ಅವರನ್ನು ಭೇಟಿಯಾಗಿ ಒಪ್ಪಿಸೋದು ಸುಲಭ. ಮನುಷ್ಯನಿಗೆ ಯಾಕೆ ವೈರಾಗ್ಯ ಬರುತ್ತೆ ಹೇಳ್ಲಾ? ಆರೋಗ್ಯ ಕೆಟ್ಟರೆ, ಇಂತಿಷ್ಟು ದಿನದಲ್ಲಿ ಸಾಯ್ತೀನಿ ಅಂತ ಗೊತ್ತಾದ್ರೆ, ಹೆಂಡ್ತಿ ತನಗೆ ಮೋಸ ಮಾಡ್ತಿದ್ದಾಳೆ ಅನ್ನೋದು ಸಾಬೀತಾದ್ರೆ, ಮಕ್ಕಳಿಗೆ ತನ್ನ ಮೇಲೆ ಪ್ರೀತಿಯಿಲ್ಲ ಅನ್ನೋದು ಖಾತ್ರಿಯಾದ್ರೆ ಗಂಡಸು ಈ ಜೀವನ ಸಾಕು ಅಂದ್ಕೋತಾನೆ. ಇವುಗಳ ಪೈಕಿ ಕೊನೆಯ ಎರಡು ಸಾಧ್ಯತೆಗಳನ್ನು ಬಿಟ್ಟು ಬಿಡಬಹುದು. ಅವರ ಆರೋಗ್ಯ, ಸಾವಿನ ಭಯ- ಎರಡರ ಬಗ್ಗೆ ರಿಪೋರ್ಟ್ ಬೇಕು. ನೀವು ನನಗೆ ಪರ್ಮಿಷನ್ ಕೊಟ್ಟರೆ ಸಾಕು. ಈ ಎಲ್ಲಾ ವಿವರಗಳನ್ನೂ ನಾನೇ ತರಿಸ್ಕೋತೇನೆ’ ಸಹದೇವ ಆತ್ಮವಿಶ್ವಾಸದಿಂದ ಹೇಳಿದ. + +`ಇದೆಲ್ಲ ರಹಸ್ಯವಾಗಿರುತ್ತಾ? ಒಂದು ವೇಳೆ ನಾನೇ ಇದನ್ನು ಮಾಡಿಸಿದೆ ಅಂತ ಯಾರಿಗಾದ್ರೂ ಗೊತ್ತಾದರೆ ನನ್ನ ರಾಜಕೀಯ ಜೀವನ ಮುಗಿದ ಹಾಗೆ. ಯಾರೂ ನನ್ನ ಹತ್ತಿರಕ್ಕೂ ಸೇರಿಸೋದಿಲ್ಲ. ನನ್ನ ಮೇಲೆ ಕೇಸ್ ಹಾಕಿ ಜೈಲಿಗೆ ಕಳಿಸಿದರೂ ಆಶ್ಚರ್ಯ ಇಲ್ಲ. ಆ ಶುಭಗಳಿಗೆ ನೋಡೋದಕ್ಕೆ ನಮ್ಮ ಪಾರ್ಟಿಯಲ್ಲೇ ಸುಮಾರು ಜನ ಕಾಯ್ತಿದ್ದಾರೆ.’ + +ಚೀಫ್ ಮಾತಲ್ಲಿ ಸುಳ್ಳಿರಲಿಲ್ಲ. ಫೋನ್ ಕದ್ದಾಲಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದು ಒದ್ದಾಡಿದವರನ್ನು, ಹೆಸರು ಕಳಕೊಂಡವರನ್ನು, ಅಧಿಕಾರ ಕಳಕೊಂಡವರನ್ನು ಅವನು ಓದಿ ತಿಳಿದಿದ್ದ. + +`ಚೀಫ್, ನಮ್ಮದೇ ಪಕ್ಷದ ಪ್ರಧಾನಿಯ ಫೋನನ್ನು ನಮ್ಮದೇ ಪಕ್ಷದ ಅಧ್ಯಕ್ಷರು ಟ್ಯಾಪ್ ಮಾಡಿದ್ದಾರೆ ಅನ್ನೋದು ಸುದ್ದಿಯೇ ಅಲ್ಲ. ನಾವಿದನ್ನು ಮಾಡ್ತಿರೋದು ಅವರ ಭದ್ರತೆಗೋಸ್ಕರ ಅಂತ ಹೇಳಿಬಿಡಬಹುದು. ನಾವೇನೂ ಅವರ ಖಾಸಗಿ ಫೋನನ್ನು ಟ್ಯಾಪ್ ಮಾಡ್ತಿಲ್ಲ. ಇದು ಅಫಿಷಿಯಲ್ ನಂಬರ್.’ + +ಚೀಫ್ ಸಂದಿಗ್ಧಕ್ಕೆ ಬಿದ್ದರು. ಒಪ್ಪಿಗೆ ಕೊಡದೇ ಹೋದರೆ ಸರ್ಕಾರ್ ನಿರ್ಧಾರ ಬದಲಾಗಿದ್ದು ಯಾಕೆ ಎನ್ನುವ ಬಗ್ಗೆ ಯಾವುದೇ ಕ್ಲೂ ಸಿಗುವುದಿಲ್ಲ. ಒಪ್ಪಿಗೆ ಕೊಟ್ಟರೆ ಮುಂದೇನಾಗುತ್ತದೋ ಗೊತ್ತಿಲ್ಲ. ಈ ಸಹದೇವನನ್ನು ಎಷ್ಟರ ಮಟ್ಟಿಗೆ ನಂಬಬಹುದು ಎಂಬ ಅನಗತ್ಯ ಅನುಮಾನವೊಂದು ಅವರ ಮುಖದಲ್ಲಿ ಸುಳಿದುಹೋಯಿತು. ಈತ ತನಗಾಗಿ ಕೆಲಸ ಮಾಡುತ್ತಿದ್ದಾನಾ? ಪಕ್ಷಕ್ಕೋಸ್ಕರವೋ? ಸಹದೇವನೇ ಬಾಯಿಬಿಟ್ಟರೆ ಮಾಡುವುದೇನು? + +ಚೀಫ್ ತಲೆಯೆತ್ತಿ ಸಹದೇವನ ಮುಖ ನೋಡಿದರು. ಅಲ್ಲಿ ಯಾವ ಭಾವನೆಯೂ ಇರಲಿಲ್ಲ. ಏನಾದರಾಗಲಿ ಸಹದೇವನನ್ನು ಅರ್ಧ ನಂಬಿದ್ದಾಗಿದೆ, ಪೂರ್ತಿಯಾಗಿಯೇ ನಂಬೋಣ ಅನ್ನಿಸಿ `ಗೋ ಅಹೆಡ್’ ಅಂದರು. + +ಸಹದೇವ `ನಾಳೆಯಿಂದ ನಮ್ಮ ಟೀಮ್ ಕೆಲಸ ಶುರುಮಾಡುತ್ತೆ. ಸೋನು ನಿಮ್ಮ ಜತೆ ಸಂಪರ್ಕದಲ್ಲಿರ್ತಾಳೆ. ಬೇರೆ ಯಾರ ಜತೆಗೂ ನೀವು ಮಾತಾಡಬೇಡಿ. ನಿಮ್ಮ ಹೆಸರು ಎಲ್ಲೂ ಬರದಂತೆ ನೋಡಿಕೊಳ್ಳೋ ಜವಾಬ್ದಾರಿ ನಂದು. ಮುಂದಿನ ಭೇಟಿಯಲ್ಲಿ ಸರ್ಕಾರ್ ಜತೆ ಯಾವಾಗ ಮಾತಾಡೋದು ಅಂತ ತೀರ್ಮಾನ ಮಾಡೋಣ’ ಎಂದು ಹೇಳಿ, ಆವತ್ತಿನ ಮಾತು ಮುಗಿಯಿತು ಎಂಬಂತೆ ಎದ್ದು ನಿಂತ. + +ಚೀಫ್ ಅವನ ಕೈ ಹಿಡಿದು ನಿಲ್ಲಿಸಿ, ಪಿಸುಮಾತಲ್ಲಿ, `ಪ್ರೈವೆಸಿ, ಸೀಕ್ರೆಸಿ ಎರಡೂ ಕಾಪಾಡು. ನಾನಿನ್ನೂ ಪೂರ್ತಿ ಕನ್ವಿನ್ಸ್ ಆಗಿಲ್ಲ’ ಅಂದರು. ಸಹದೇವ ನಂಬುಗೆಯ ಮುಗುಳ್ನಗು ನಕ್ಕ. + +***** + +ಸಾಲೋಮನ್ ನಂಬಿಕೆಗೆ ಅರ್ಹನೋ ಅಲ್ಲವೋ ಅನ್ನುವ ಅನುಮಾನ ಸಹದೇವನಿಗೆ ಇರಲಿಲ್ಲ. ಆದರೆ ಸೋನು ಅವನನ್ನು ಪೂರ್ತಿ ನಂಬಲು ಸಿದ್ಧಳಿರಲಿಲ್ಲ. ಅವನು ಹ್ಯಾಕರ್, ಬ್ಲಾಕ್‍ಮೇಲ್ ಮಾಡುತ್ತಾನೆ, ಆಮ್ರ್ಸ್ ಡೀಲರ್, ಬ್ಯಾಂಕುಗಳಿಂದ ಸಾಲ ಕೊಡಿಸುತ್ತಾನೆ, ಅನೇಕ ರಾಜಕೀಯ ನಾಯಕರ ಪರಿಚಯ ಇದೆ, ಪೊಲೀಸ್ ಡಿಪಾರ್ಟ್‍ಮೆಂಟಲ್ಲಿ ಅವನ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ ಎಂಬ ವಿವರಗಳನ್ನು ಕಳಿಸಿಕೊಟ್ಟ ಸೋನು, ಅವನಿಗೆ ಕೆಲಸ ಒಪ್ಪಿಸುವ ಮುಂಚೆ ಮತ್ತೊಮ್ಮೆ ಯೋಚಿಸೋದು ಒಳ್ಳೆಯದು ಎಂದು ಟಿಪ್ಪಣಿ ಬರೆದಿದ್ದಳು. + +ಸಹದೇವನಿಗೆ ಸಾಲೋಮನ್ ಇಪ್ಪತ್ತು ವರ್ಷಗಳಿಂದ ಗೊತ್ತು. ಸಾಲೋಮನ್, ಸುಲೇಮಾನ್, ಶಾಲಿವಾಹನ- ಹೀಗೆ ಏನೇನೋ ಹೆಸರಿಟ್ಟುಕೊಂಡು ವ್ಯವಹಾರ ಕುದುರಿಸಿಕೊಳ್ಳುತ್ತಿದ್ದ. ಅವನಂಥ ಚಾಣಾಕ್ಷ ಕಳ್ಳನನ್ನು ಸಹದೇವ ನೋಡಿರಲೇ ಇಲ್ಲ. ಅನೇಕರು ಅವನೊಬ್ಬ ಮೋಸಗಾರ, ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ ಅಂತ ದೂರುತ್ತಿದ್ದರು. ಸಹದೇವನಿಗೆ ಮಾತ್ರ ಅವನು ಪ್ಯಾಷನ್ನಿಗೋಸ್ಕರ ಅದನ್ನೆಲ್ಲ ಮಾಡುತ್ತಾನೆ ಅನ್ನುವುದು ಗೊತ್ತಿತ್ತು. ಯಾರಾದರೂ ಮನೆಗೆ ಬೀಗ ಹಾಕಿ ನಾವು ಸುರಕ್ಷಿತವಾಗಿದ್ದೇವೆ, ನಮ್ಮ ಮನೆಯಲ್ಲಿ ಕಳ್ಳತನ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಬೀಗುತ್ತಿದ್ದರೆ ಸಾಲೋಮನ್ ಅಂಥ ಮನೆಯಿಂದಲೇ ಕದಿಯುತ್ತಿದ್ದ. ನಮ್ಮ ಸೈಟಿನಿಂದ ಮಾಹಿತಿ ಕದಿಯಲಿಕ್ಕೆ ಸಾಧ್ಯವಿಲ್ಲ ಎಂದು ಯಾವುದಾದರೂ ವೆಬ್‍ಸೈಟ್ ಹೇಳಿಕೊಂಡರೆ ಅದನ್ನು ಸಾಲೋಮನ್ ಹ್ಯಾಕ್ ಮಾಡಿ ಮಾಹಿತಿ ತೆಗೆಯುತ್ತಿದ್ದ. ತಾನೇ ತೋಡಿದ ಸುರಂಗವನ್ನು ಅವನಲ್ಲದೇ ಬೇರೆ ಯಾರಿಗೂ ಮುಚ್ಚುವುದಕ್ಕೆ ಆಗುತ್ತಿರಲಿಲ್ಲ. ಸಾಲೋಮನ್ ಕೈತುಂಬ ಫೀಸ್ ತೆಗೆದುಕೊಂಡು ಅದನ್ನೆಲ್ಲ ಸರಿಮಾಡಿ ಕೊಡುತ್ತಿದ್ದ. ಹೀಗಾಗಿಯೇ ಅವನ ಬಗ್ಗೆ ಗೊತ್ತಿದ್ದ ಎಲ್ಲರಿಗೂ ಅವನ ಬಗ್ಗೆ ಅಚ್ಚರಿಯೂ ಭಯವೂ ಗೌರವವೂ ಇತ್ತು. + +ಅವನು ಸುಳ್ಳು ಹೇಳದೇ ಇದ್ದ ಏಕೈಕ ವ್ಯಕ್ತಿ ಸಹದೇವ. ಅವರಿಬ್ಬರೂ ತಿಂಗಳಿ ಗೊಮ್ಮೆಯಾದರೂ ಭೇಟಿಯಾಗುತ್ತಿದ್ದರು. ಸಹದೇವನಿಗೆ ಬೇಕಾದ ಮಾಹಿತಿಗಳನ್ನೆಲ್ಲ ಅವನೇ ಎಲ್ಲೆಲ್ಲಿಂದಲೋ ಹೆಕ್ಕಿ ತರುತ್ತಿದ್ದ. ಅವನ ಮಾಹಿತಿ ಒಮ್ಮೆಯೂ ಸುಳ್ಳಾದದ್ದಿಲ್ಲ. ಫೋನ್ ಟ್ಯಾಪ್ ಮಾಡುವುದು, ಸಿಸಿಟೀವಿಯ ಮಾಹಿತಿ ಕದಿಯುವುದು, ನಕಲಿ ಪಾಸ್‍ಪೋರ್ಟ್ ಮಾಡಿಕೊಡುವುದು, ವೆಬ್‍ಸೈಟ್ ಹ್ಯಾಕ್ ಮಾಡಿ ಡಾಟಾ ಕದಿಯುವುದು, ತನಗೆ ಬೇಕಾದಂತೆ ಡಾಟಾ ತಿದ್ದುವುದು, ಜಿಪಿಎಸ್ ಮೂಲಕ ವ್ಯಕ್ತಿಯ ಚಲನವಲನ ಕಂಡುಹಿಡಿಯುವುದು, ಪಾಸ್‍ವರ್ಡ್ ಕಂಡುಹಿಡಿದು ಈಮೇಲ್ ಜಾಲಾಡುವುದು, ನಕಲಿ ಆಧಾರ್ ಕಾರ್ಡ್ ಬಳಸಿ ಸಿಮ್ ಕಾರ್ಡ್ ಹೊಂದುವುದು – ಹೀಗೆ ಅವನಿಗೆ ಗೊತ್ತಿಲ್ಲದ ವಿದ್ಯೆಯೇ ಇರಲಿಲ್ಲ. ಸಾಲೋಮನ್ ತನ್ನ ಸಾಹಸದ ಕತೆಗಳನ್ನು ಸಹದೇವನಿಗೆ ಹೇಳುತ್ತಿದ್ದ. ಅವರಿಬ್ಬರು ಭೇಟಿಯಾಗುವ ಸಂಗತಿಯನ್ನು ಸಹದೇವ ಸೋನುವಿಗೂ ಗೊತ್ತಾಗದಂತೆ ರಹಸ್ಯವಾಗಿಟ್ಟಿದ್ದ. ಸಾಲೋಮನ್ ಒಬ್ಬ ಮಾಹಿತಿದಾರ ಎನ್ನುವುದಷ್ಟೇ ಅವಳಿಗೆ ಗೊತ್ತಿದ್ದದ್ದು. ಹೀಗಾಗಿಯೇ ಅವಳು ಪ್ರಧಾನ ಮಂತ್ರಿಗಳ ಫೋನ್ ಹ್ಯಾಕ್ ಮಾಡುವ ಗುರುತರ ಜವಾಬ್ದಾರಿಯನ್ನು ಸಾಲೋಮನ್ ಎಂಬ ಅಡಕಸಬಿಗೆ ಒಪ್ಪಿಸುವುದರ ಬಗ್ಗೆ ಅಪನಂಬಿಕೆ ಇಟ್ಟುಕೊಂಡಿದ್ದಳು. + +ಸಹದೇವನ ಲೆಕ್ಕಾಚಾರವೇ ಬೇರೆ ಇತ್ತು. ಈ ಕೆಲಸವನ್ನು ದೊಡ್ಡ ಏಜನ್ಸಿಗೆ ಒಪ್ಪಿಸಿದಷ್ಟೂ ಅಪಾಯ ಜಾಸ್ತಿ. ಡಿಟೆಕ್ಟಿವ್ ಏಜನ್ಸಿಗಳ ಮೇಲೆ ಸರ್ಕಾರ ಒಂದು ಕಣ್ಣಿಟ್ಟಿರುತ್ತದೆ. ಬೇಹುಗಾರಿಕಾ ವಿಭಾಗದವರೂ ನಿಗಾ ಇಟ್ಟಿರುತ್ತಾರೆ. ಡಿಟೆಕ್ಟಿವ್ ಏಜನ್ಸಿಯ ಒಳಗೇ ಒಬ್ಬ ಪೊಲೀಸ್ ಮಾಹಿತಿದಾರ ಇರುತ್ತಾನೆ. ಅಲ್ಲದೇ, ಏಜನ್ಸಿ ಇಂಥ ರಿಸ್ಕೀ ಕಾರ್ಯಾಚರಣೆ ಒಪ್ಪಿಕೊಳ್ಳುವುದಕ್ಕೆ ಹೆದರುತ್ತದೆ. ಒಂದು ವೇಳೆ ಒಪ್ಪಿಕೊಂಡರೂ ಅದಕ್ಕೂ ಮುಂಚೆ ಸಂಸ್ಥೆಯ ಒಳಗಡೆಯೇ ಸಾಕಷ್ಟು ಚರ್ಚೆ ನಡೆದಿರುತ್ತದೆ. ಬೇಕಿದ್ದವರಿಗೂ ಬೇಡದವರಿಗೆಲ್ಲ ವಿಷಯ ಗೊತ್ತಾಗಿರುತ್ತದೆ. ಸಾಲೋಮನ್ ಆದರೆ ಅಂಥ ಯಾವ ಅಪಾಯವೂ ಇಲ್ಲ. ಅವನು ಯೆಸ್ ಅಂದರೆ ಮುಗಿಯಿತು. ಅವನಿಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಅವನ ಮೇಲೆ ಯಾರಿಗೂ ಅನುಮಾನವೂ ಬರುವುದಿಲ್ಲ. ಇದನ್ನೆಲ್ಲ ಅಳೆದೂ ತೂಗಿ ಸಹದೇವ ಈ ಕೆಲಸವನ್ನು ಅವನಿಗೆ ಒಪ್ಪಿಸೋಣ ಎಂದು ಸೋನುಗೆ ಹೇಳಿದ್ದು. ಕೊನೆಗೂ ಸೋನು ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಂಡಿದ್ದಳು. + +ಸಾಲೋಮನ್ ಮತ್ತು ಸಹದೇವನ ಭೇಟಿಯನ್ನು ಸೋನು ಪಶ್ಚಿಮ್ ವಿಹಾರ್‍ನ ಅಮರ್ ಪಾಲಿಕ್ಲಿನಿಕ್‍ನಲ್ಲಿ ಅರೇಂಜ್ ಮಾಡಿದ್ದಳು. ಬೆಳಗ್ಗೆ ಒಂಬತ್ತು ಗಂಟೆಗೆ ಫುಲ್ ಬಾಡಿ ಚೆಕಪ್‍ಗೆ ಅಲ್ಲಿಗೆ ಸಹದೇವ್ ಹೋಗುತ್ತಾನೆ. ಅವನ ಜತೆಗೆ ಅಸಿಸ್ಟೆಂಟ್ ಆಗಿ ಸಾಲೋಮನ್ ಹೋಗಬೇಕು. ಅಲ್ಲೇ ಮಾತುಕತೆ ನಡೆದು ಇಬ್ಬರೂ ಬೇರಾಗಬೇಕು. ಹೋಗುವ ಹೊತ್ತಿಗೆ ಇಬ್ಬರೂ ಮೊಬೈಲ್ ಫೋನ್ ಒಯ್ಯಬಾರದು. ಸಾಲೋಮನ್ ಚಪ್ಪಲಿ ಹಾಕಿಕೊಂಡಿರಬೇಕು. ಅವನನ್ನು ಪೂರ್ತಿ ಚೆಕ್ ಮಾಡಿ ಯಾವುದೇ ಹಿಡನ್ ಕ್ಯಾಮರಾ ಇಲ್ಲವೆಂದು ಖಚಿತಪಡಿಸಿಯೇ ಒಳಗೆ ಬಿಡಲಾಗುತ್ತೆ ಮುಂತಾದ ಷರತ್ತುಗಳನ್ನೂ ಸೋನು ಹಾಕಿದ್ದಳು. + +ಸರಿಯಾದ ಸಮಯಕ್ಕೆ ಟೆಸ್ಟ್ ಶುರುವಾಯಿತು. ಪೆಥಾಲಜಿ ಮುಗಿಸಿ, ಇಸಿಜಿ, ಟಿಎಂಟಿ ಮುಗಿಸಿದ ನಂತರ, ಸ್ಕಾ ್ಯನಿಂಗ್ ನಡುವೆ ಸಿಕ್ಕ ಹನ್ನೆರಡು ನಿಮಿಷಗಳ ಬಿಡುವಿನಲ್ಲಿ ಸಾಲೋಮನ್ ಹತ್ತಿರ ಸಹದೇವ ಮಾತಾಡಿದ. + +`ಒಂದು ಫೋನ್ ನಂಬರ್ ಕೊಡ್ತೀನಿ, ಅದು ಯಾರದ್ದು ಅಂತ ಕೇಳಬಾರದು. ಟ್ಯಾಪ್ ಮಾಡಬೇಕು. ಇಡೀ ದಿನದ ಕಾನ್‍ವರ್ಸೇಷನ್ ರೆಕಾರ್ಡ್ ಬೇಕು. ಅದನ್ನು ನೀನು ಮಾಡಿಸ್ತಿದ್ದೀಯ ಅಂತಲೂ ಗೊತ್ತಾಗಬಾರದು. ಕಳೆದ ಮೂರು ತಿಂಗಳಲ್ಲಿ ಅವರಿಗೆ ಯಾರೆಲ್ಲ ಫೋನ್ ಮಾಡಿದ್ದಾರೆ ಅನ್ನುವ ಪಟ್ಟಿಯೂ ಬೇಕು. ಬರೀ ನಂಬರ್ ಕೊಟ್ರೆ ಸಾಲದು, ಹೆಸರು, ಅಡ್ರೆಸ್ ಸಹಿತ ಕೊಡಬೇಕು.’ + +ಸಾಲೋಮನ್ ಕಣ್ಣುಗಳು ಫಳಫಳ ಹೊಳೆದವು. ಮತ್ತೊಂದು ಇಂಪಾಸಿಬಲ್ ಟಾಸ್ಕ್ ಸಿಕ್ಕಿತು ಅನ್ನುವ ಸಂತೋಷದಲ್ಲಿ ಅವನು ಮುಗುಳ್ನಗುತ್ತಾ ಹೇಳಿದ. `ಸಿಕ್ಕಿಬಿದ್ರೆ ಜೈಲೇನಾ?’. ಸಹದೇವ ಕೂಡ ಅವನ ನಗುವನ್ನು ಮರಳಿಸುತ್ತಾ ಹೇಳಿದ; `ಮರ್ಡರ್ ಆಗ್ತೀಯ. ಯಾರು ಕೊಂದರು ಅನ್ನೋದೂ ಗೊತ್ತಾಗೋದಿಲ್ಲ. ಮೊದಲ ಗುಂಡು ನಂದೇ ಆಗಿರುತ್ತೆ’. + +`ಥ್ರಿಲ್ ಅಂದ್ರೆ ಇದು. ರಿಸ್ಕ್ ಜಾಸ್ತಿ ಇದ್ದಷ್ಟೂ ಕೆಲಸ ಮಾಡಕ್ಕೆ ಜಾಸ್ತಿ ಖುಷಿ. ಆ ಹೆಂಗಸಿನ ಹತ್ರ ಹೇಳಿಕಳಿಸಿದ್ರಲ್ಲ. ಏನೋ ಚಿಕ್ಕಪುಟ್ಟ ಕೆಲಸ ಅಂದ್ಕೊಂಡಿದ್ದೆ. ಆ ಲೇಡಿ ಮಾತೇ ಆಡಲ್ಲ. ಫೋನೂ ಇಟ್ಕೊಂಡಿಲ್ಲ. ಬರೀ ಚೀಟೀಲಿ ಬರೆದು ಕೊಡ್ತದೆ. ಅದೂ ಕೂಡ ಥರ್ಟಿ ಸೆಕೆಂಡಲ್ಲಿ ಅಳಿಸಿ ಹೋಗ್ತದೆ. ಫುಟ್ ಪ್ರಿಂಟ್ಸೇ ಬಿಡಲ್ಲ ಅವರು. ಅಂತೋರೇನಾದ್ರೂ ಸಿಕ್ಕಿದ್ರೆ ನಾನು ಸೋತುಬಿಡ್ತೀನಿ. ಅವರ ಡಾಟಾ ಕದಿಯೋದಕ್ಕೆ ಸಾಧ್ಯವೇ ಇಲ್ಲ. ಅವರ ಹೆಸರೇನು?’ ಹುರುಪು ಹೆಚ್ಚಿಸಿಕೊಂಡು ಕೇಳಿದ ಸಾಲೋಮನ್. + +`ಕೆಲಸ ಮುಗೀಲಿ. ಹೆಸರೂ ಹೇಳ್ತೀನಿ, ಅವಳೊಪ್ಪಿದ್ರೆ ಮದುವೇನೂ ಮಾಡಿಸ್ತೀನಿ. ಮೂರೇ ದಿನ ಟೈಮ್ ಇರೋದು’ ಎನ್ನುತ್ತಾ ಸಹದೇವ ಎದ್ದು ನಿಂತ. ಸಾಲೋಮನ್ ಅವನನ್ನೇ ನೋಡ್ತಾ `ಈ ಕ್ಲಿನಿಕ್ಕಲ್ಲೂ ಸೀಸಿ ಟೀವಿ ಹಾಕಿದ್ದಾರೆ. ಹಾರ್ಡ್ ಡಿಸ್ಕ್ ಕ್ರಾ ್ಯಶ್ ಮಾಡಿ, ಒಂದು ವಾರದ ರೆಕಾರ್ಡಿಂಗ್ ಮಾಯ ಮಾಡಿ ಹೊರಡ್ತೀನಿ’ ಎಂದು ತುಂಟತನದ ಕಣ್ಣು ಮಿಟುಕಿಸಿದ. + +ಸಹದೇವ ರಿಪೋರ್ಟ್ ಕಲೆಕ್ಟ್ ಮಾಡಿಕೊಂಡು ಹೊರಗೆ ಬರುವ ಹೊತ್ತಿಗೆ ಸೋನು ಕಾರು ತಂದು ಕಾಯುತ್ತಿದ್ದಳು. ಸಹದೇವ ಕಾರೊಳಗೆ ಕೂರುತ್ತಿದ್ದಂತೆ ಅವನ ಸೀಟಿನ ಪಕ್ಕದಲ್ಲಿಟ್ಟ ಚೀಟಿ ಕಣ್ಣಿಗೆ ಬಿತ್ತು. ಅವಸರದಿಂದ ತೆರೆದು ಓದಿದ. + +`ನಾಡಿದ್ದು ಪಿಎಂ ತವರೂರಿಗೆ ಹೋಗ್ತಿದ್ದಾರೆ. ಅಲ್ಲಿ ಹಳೆಯ ಗೆಳೆಯರನ್ನು ಭೇಟಿ ಆಗ್ತಿದ್ದಾರೆ. ಸಂಗೀತ್ ಉತ್ಸವ್ ಉದ್ಘಾಟಿಸಿ ಅದರಲ್ಲಿ ಭಾಗವಹಿಸ್ತಿದ್ದಾರೆ.’ + +ಸಂದೇಶ ಇದ್ದದ್ದು ಅಷ್ಟೇ. ಆದರೆ, ಅವರು ತವರೂರಿಗೆ ಹೋಗುವುದನ್ನು ತಡೆಯಬೇಕು ಅಂತ ಚೀಫ್ ಬಯಸಿದ್ದಾರೆ ಅನ್ನುವುದು ಸಹದೇವನಿಗೆ ಅರ್ಥವಾಯಿತು. ಇದು ಸಂಸರ ರಾಜಕೀಯ ನಿವೃತ್ತಿಯ ಮೊದಲ ಹೆಜ್ಜೆ. ಪೂರ್ವಮೇದಿನಿಪುರದ ನಂದಿಗ್ರಾಮಕ್ಕೆ ಹೋದರೆ ಅವರಿಗೆ ಹಳೆಯ ಬದುಕು ನೆನಪಾಗುತ್ತದೆ. ನಂದಿಗ್ರಾಮದ ರೈತರು ಕಣ್ಮುಂದೆ ಬರುತ್ತಾರೆ. ಹಳೆಯ ಗೆಳೆಯರೆಂದರೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಜತೆಗೆ ಓದಿದ ಸಹಪಾಠಿಗಳು. ಸಂಸರ ಜತೆಗೇ ಶೈಲೇಂದ್ರ ಸರ್ಕಾರ್ ವಿದ್ಯಾಲಯದಲ್ಲಿ ಜತೆಗೆ ಓದಿದವರು. ಸಂಸ ಕವಿತೆ ಬರೆಯುತ್ತಿದ್ದ ದಿನಗಳಲ್ಲಿ ಅವರ ಜತೆಗಿದ್ದ ಕವಿಗಳೆಲ್ಲ ಸಿಗುತ್ತಾರೆ. ಅವರ ಜತೆ ಮಾತಾಡುವಾಗ ರಾಜಕೀಯ ನಿವೃತ್ತಿಯ ಮಾತು ಬಂದೇ ಬರುತ್ತದೆ. ಅಲ್ಲಿಗೆ ಕತೆ ಮುಗಿದಂತೆ. + +ಸಹದೇವನ ನೆನಪು ತಾನು ಓದಿ, ಕೇಳಿ ತಿಳಿದುಕೊಂಡ ಸಂಸರ ಬದುಕಿನ ಕತೆಯತ್ತ ಹಾಯಿತು. ಸಂಜಯ್ ಸರ್ಕಾರ್ ತಾರುಣ್ಯದಲ್ಲಿ ಮಾವೋವಾದಿ ಎಂದೇ ಹೆಸರಾದವರು. ಪಶ್ಚಿಮ ಬಂಗಾಳದ ಹೆಬ್ಬುಲಿ ಎಂದು ಕರೆಸಿಕೊಂಡವರು. ಅವರು ಹೋರಾಟದ ಮುಂಚೂಣಿಯಲ್ಲಿದ್ದರೆ ಸರ್ಕಾರ ನಡುಗುತ್ತಿತ್ತು. `ಶೈಲೇಂದ್ರ ಸರ್ಕಾರ್ ವಿದ್ಯಾಲಯ’ದಲ್ಲಿದ್ದಾಗಲೇ ವಿದ್ಯಾರ್ಥಿ ಫೆಡರೇಷನ್ನಿನ ನಾಯಕರಾಗಿ ಅನೇಕ ಹೋರಾಟ ಗಳಲ್ಲಿ ತೊಡಗಿಸಿಕೊಂಡವರು. ನಂದಿಗ್ರಾಮದಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತರ ಮೇಲೆ ಪೊಲೀಸರು ಹಾರಿಸಿದ ಗುಂಡು ಹದಿನೆಂಟು ರೈತರನ್ನು ಬಲಿತೆಗೆದುಕೊಳ್ಳದೇ ಹೋಗಿದ್ದರೆ ರಾಷ್ಟ್ರೀಯ ರಾಜಕಾರಣಕ್ಕೆ ಸಂಜಯ್ ಸರ್ಕಾರ್ ಕಾಲಿಡುತ್ತಲೇ ಇರಲಿಲ್ಲ. ತಮ್ಮ ಭೂಮಿಯನ್ನು ವಿದೇಶಿ ಬಂಡವಾಳಶಾಹಿಗಳಿಗೆ ಮಾರಬೇಡಿ ಎಂದು ಹೇಳಿದ ರೈತರನ್ನು ಕೊಂದದ್ದು ಅವರ ರಕ್ತ ಕುದಿಯುವಂತೆ ಮಾಡಿತ್ತು. ಆವತ್ತು ನಂದಿಗ್ರಾಮದಲ್ಲೇ ಅವರು ಧರಣಿ ಕುಳಿತರು. ಈ ದೇಶದ ಬಡವರನ್ನು, ನೊಂದವರನ್ನು, ದಲಿತರನ್ನು, ರೈತರನ್ನು ಕಾಯುವ ಕೆಲಸಕ್ಕೆ ನನ್ನ ಉಳಿದ ಆಯುಷ್ಯ ಮೀಸಲು ಎಂದು ಘೋಷಿಸಿದರು. ಬರಿಗಾಲಲ್ಲಿ ಇಡೀ ದೇಶ ಸುತ್ತಿದರು. ಪ್ರತಿಯೊಂದು ಊರಿಗೂ ಹೋಗಿ ಜನರನ್ನು ಒಗ್ಗೂಡಿಸಿದರು. ಎರಡು ವರುಷಗಳ ನಿರಂತರ ತಿರುಗಾಟದಲ್ಲಿ ಯಾವತ್ತೂ ಪಂಚತಾರಾ ಹೋಟೆಲಿಗೆ ಕಾಲಿಡಲಿಲ್ಲ. ಶ್ರೀಮಂತರ ಮನೆಗಳನ್ನು ಪ್ರವೇಶಿಸಲಿಲ್ಲ. ಪ್ರತಿ ಊರಿನ ಅತ್ಯಂತ ಬಡವನ ಮನೆಯಲ್ಲಿ ಊಟ ಮಾಡಿದರು. ದಲಿತರ ಅಂಗಳದಲ್ಲಿ ಚಾಪೆ ಹಾಸಿಕೊಂಡು ಮಲಗಿದರು. ಅವರು ಕುಡಿಯುತ್ತಿದ್ದ ನೀರನ್ನೇ ಕುಡಿದರು. ಎರಡೇ ಜತೆ ಬಟ್ಟೆ ಇಟ್ಟುಕೊಂಡು, ತಾವೇ ಅದನ್ನು ಒಗೆದು ತೊಟ್ಟುಕೊಳ್ಳುತ್ತಿದ್ದರು. + +ಅವರ ಈ ಪರ್ಯಟನೆಯನ್ನು ನಿಲ್ಲಿಸಲು ರಾಜಕೀಯ ಪಕ್ಷಗಳು ತಂತ್ರ ಪ್ರತಿ ತಂತ್ರಗಳನ್ನು ಹೂಡಿದವು. ನ್ಯಾಷನಲ್ ಪಾರ್ಟಿ ಅವರನ್ನು ಬಂಧಿಸಲು ಯತ್ನಿಸಿತು. ಅವರ ಕಾಲ್ನಡಿಗೆಯನ್ನು ತಡೆಯಲು ಹವಣಿಸಿತು. ಅಂಥ ಪ್ರತಿಯೊಂದು ಪ್ರತಿರೋಧವೂ ಅವರನ್ನು ನಾಯಕನನ್ನಾಗಿ ಮಾಡುತ್ತಾ ಹೋಯಿತು. ಅವರಿದನ್ನು ಚುನಾವಣೆ ಗೆಲ್ಲಲು ಮಾಡುತ್ತಿದ್ದಾರೆ ಎಂದು ನ್ಯಾಷನಲ್ ಪಾರ್ಟಿಯ ಅಧ್ಯಕ್ಷ ಹೇಳಿಕೆ ಕೊಟ್ಟರು. ಆಗ ಪ್ರಧಾನಿಯಾಗಿದ್ದ ನ್ಯಾಷನಲ್ ಪಾರ್ಟಿಯ ನೇತಾರ ಜಗನ್ಮೋಹನ್ `ಸಂಜಯ್ ಸರ್ಕಾರ್ ಒಬ್ಬ ಜೋಕರ್. ಅವರಿಗಿಂತ ಪಿಸಿ ಸರ್ಕಾರ್ ಎಷ್ಟೋ ವಾಸಿ. ಅವರು ಮ್ಯಾಜಿಕ್ ಮಾಡಬಲ್ಲರು. ಇವರದ್ದು ಅಪಸ್ವರದ ಮ್ಯೂಸಿಕ್’ ಎಂದು ಹೇಳಿಕೆ ಕೊಟ್ಟರು. + +ಆ ಚುನಾವಣೆಯಲ್ಲಿ ಸಂಜಯ್ ಸರ್ಕಾರ್ ಸ್ಪರ್ಧಿಸಿದ್ದರೆ ಬಹುಮತದಿಂದ ಗೆದ್ದು ಬರುತ್ತಿದ್ದರು. ಅವರು ಆ ಕೆಲಸ ಮಾಡಲಿಲ್ಲ. ನ್ಯಾಷನಲ್ ಪಾರ್ಟಿಯೇ ಮತ್ತೆ ಅಧಿಕಾರಕ್ಕೆ ಬರುವತನಕ ಕಾದರು. ನಂತರ ಸರ್ಕಾರದ ಲೋಪಗಳನ್ನು ಎತ್ತಿ ತೋರಿದರು. ನ್ಯಾಷನಲ್ ಪಾರ್ಟಿಯ ಸರ್ಕಾರಕ್ಕೆ ಒಂದು ವರ್ಷವಾಗುತ್ತಿದ್ದಂತೆ, ಸಂಜಯ್ ಸರ್ಕಾರ್ ತಮ್ಮ ಹೊಸ ಪಕ್ಷವನ್ನು ಹುಟ್ಟುಹಾಕಿದರು. ಅದಕ್ಕೆ ಮಾತೃಭೂಮಿ ಎಂದು ಹೆಸರಿಟ್ಟರು. ಸಂಜಯ್ ಸರ್ಕಾರ್ ಜತೆ ಹೋರಾಟದ ಉದ್ದಕ್ಕೂ ಜತೆಗಿದ್ದ ಚಿದಾನಂದ ಪಾಂಡೆಯನ್ನು ಪಕ್ಷದ ಅಧ್ಯಕ್ಷರೆಂದು ಘೋಷಿಸಿದರು. + +ನ್ಯಾಷನಲ್ ಪಾರ್ಟಿಯ ಸರ್ಕಾರವನ್ನು ಉರುಳಿಸೋಣ ಅಂತ ಚಿದಾನಂದ ಪಾಂಡೆ ಎಷ್ಟೇ ಹೇಳಿದರೂ ಸಂಜಯ್ ಸರ್ಕಾರ್ ಒಪ್ಪಲಿಲ್ಲ. ಸರ್ಕಾರವನ್ನು ಉರುಳಿಸೋದು ಸುಲಭ. ಆದರೆ ಅವಧಿಗೆ ಮುಂಚೆ ಚುನಾವಣೆ ನಡೆದರೆ ಅದರ ಹೊರೆ ಪ್ರಜೆಗಳ ಮೇಲೆ ಬೀಳುತ್ತದೆ. ಅಲ್ಲದೇ, ಸರ್ಕಾರ ಉರುಳಿಸಿದವರು ಎಂಬ ಕೆಟ್ಟ ಹೆಸರು ನಮ್ಮದಾಗುತ್ತದೆ. ನಾವು ಸರಿಯಾದ ಮಾರ್ಗದಲ್ಲಿ ಹೋಗೋಣ. ಸರ್ಕಾರವನ್ನು ಬೀಳಿಸುವುದು ಬೇಡ, ಜನರೇ ತಮಗೆ ಬೇಕಾದ ಸರ್ಕಾರವನ್ನು ಆರಿಸುವಂತೆ ಮಾಡೋಣ ಎಂದು ಸಾರ್ವಜನಿಕವಾಗಿಯೇ ಹೇಳಿದರು. + +ಅದಾಗಿ ಮೂರು ವರುಷಕ್ಕೆ ಚುನಾವಣೆ ಬಂತು. ನ್ಯಾಷನಲ್ ಪಾರ್ಟಿ ಹೇಳಹೆಸರಿಲ್ಲದಂತೆ ಸೋತಿತು. ಪ್ರಧಾನಿ ಜಗನ್ಮೋಹನ ಠೇವಣಿ ಕಳಕೊಂಡರು. ಅದುವರೆಗೂ ಒಂದೂ ಚುನಾವಣೆಯಲ್ಲಿ ಸ್ಪರ್ಧಿಸದೇ ಇದ್ದವರು, ತರುಣರು, ತರುಣಿಯರೆಲ್ಲ ಆರಿಸಿ ಬಂದರು. ಸಂಜಯ್ ಸರ್ಕಾರ್ ಎಲ್ಲರ ಒತ್ತಾಯದ ಮೇಲೆ ಪ್ರಧಾನಿಯಾದರು. ಅವರ ಜನಪ್ರಿಯತೆ ಅಧಿಕಾರಕ್ಕೆ ಬಂದ ನಂತರವೂ ಕುಗ್ಗಲಿಲ್ಲ. ಎರಡನೆಯ ಅವಧಿಯಲ್ಲೂ ಅವರು ಇನ್ನೂ ಹೆಚ್ಚಿನ ಬಹುಮತದಿಂದ ಗೆದ್ದುಬಂದರು. + +ಈಗ ಮೂರನೆಯ ಚುನಾವಣೆಗೆ ಹೋಗುವ ಹೊತ್ತಿನಲ್ಲಿ ಸಂಜಯ್ ಸರ್ಕಾರ್ ನಿವೃತ್ತಿಯ ವೈರಾಗ್ಯದ ವಿದಾಯದ ಮಾತಾಡುತ್ತಿದ್ದಾರೆ. ಅವರೇನಾದರೂ ಪಕ್ಷ ತೊರೆದರೆ, ಮುಂದಿನ ಪ್ರಧಾನ ಮಂತ್ರಿ ಅವರಾಗುವುದಿಲ್ಲ ಎಂದು ಗೊತ್ತಾದರೆ, ಮಾತೃಭೂಮಿ ಪಕ್ಷ ಅಧಿಕಾರಕ್ಕೆ ಬರುವುದು ಅನುಮಾನವೇ.‌ + + + +ಸಹದೇವ ಇದನ್ನೆಲ್ಲ ನೆನಪಿಸಿಕೊಳ್ಳುತ್ತಾ ತುಂಬ ಹೊತ್ತು ಒಬ್ಬನೇ ಕೂತಿದ್ದ. ರಾಜಕಾರಣದಲ್ಲಿ ಗೆಲ್ಲಬೇಕಾದರೆ ಒಬ್ಬ ಮಹಾತ್ಮ ಬೇಕು ಅಥವಾ ಒಬ್ಬ ಹುತಾತ್ಮ ಬೇಕು ಅಂತ ಅವನಿಗೆ ತೀವ್ರವಾಗಿ ಅನ್ನಿಸಿತು. + +ಸದ್ಯಕ್ಕೆ ಸಂಸರ ತವರೂರಿನ ಪ್ರವಾಸವನ್ನು ಹೇಗೆ ತಡೆಯಬಹುದು ಎನ್ನುವ ಪ್ರಶ್ನೆಗೆ ಮಾತ್ರ ಅವನಿಗೆ ಉತ್ತರ ಸಿಗಲಿಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_141.txt b/Kenda Sampige/article_141.txt new file mode 100644 index 0000000000000000000000000000000000000000..0734b746610987b64f83fe49d6e7a1a7136d5fbf --- /dev/null +++ b/Kenda Sampige/article_141.txt @@ -0,0 +1,59 @@ +ಯು.ಎಫ್.ಒ. – ಅನ್‍ಐಡೆಂಟಿಫೈಡ್ ಫ್ಲೈಯಿಂಗ್ ಆಬ್ಜೆಕ್ಟ್- ಎಂದರೆ ಗುರುತು ಸಿಗದ ಹಾರುವ ವಸ್ತುಗಳು. ಇವುಗಳ ಬಗ್ಗೆ ಅನೇಕ ದಶಕಗಳಿಂದ ಜಿಜ್ಞಾಸೆ ನಡೆದಿದೆ. ಆದರೆ ರಹಸ್ಯ ಗಾಢವಾಗುತ್ತಲೇ ಹೋಗಿದೆ. ಬೇರೆ ಗ್ರಹಗಳಿಂದ ಭೂಮಿಗೆ ಭೇಟಿ ಕೊಡುವ ತುಂಬ ಮುಂದುವರಿದ ನಾಗರಿಕತೆಯ ಈ ಹಾರುವ ವಸ್ತುಗಳು (ಅನೇಕ ವೇಳೆ ಹಾರುವ ತಟ್ಟೆಗಳಂತೆಯೇ ಕಂಡಿವೆ; ಫ್ಲೈಯಿಂಗ್ ಸಾಸರ್ಸ್ ಎಂದೂ ಹೆಸರಾಗಿವೆ.) ಬರಿಯ ಕಲ್ಪನೆ ಎಂದು ಅನೇಕರ ವಾದ. ಮನಶ್ಶಾಸ್ತ್ರಜ್ಞ ಯೂಂಗ್ ಪ್ರಕಾರ ಇದು ಸಾಮೂಹಿಕ ಕಲ್ಪನೆ ಅಥವಾ ಭ್ರಮೆ. ಇನ್ನು ಕೆಲವರು ಸಂಶಯವಾದಿ ವಿಜ್ಞಾನಿಗಳ ಪ್ರಕಾರ ವಾಯುಪಡೆಯ ಸಂಶೋಧನೆಗೆಂದು ಹಾರಿಬಿಟ್ಟ ಬಲೂನ್ ಅಥವಾ ಇತರ ರೀತಿಯ ಯಂತ್ರಗಳು. + +ವಿಶ್ವದಲ್ಲಿ, ಸೌರವ್ಯೂಹದಾಚೆ- ಈ ಭೂಮಿಗಿಂತ ಲಕ್ಷಾಂತರ ವರ್ಷಗಳು ಮುಂದುವರಿದ ಜೀವಿಗಳಿದ್ದಾರೆ. ಅವರು ಸೌರವ್ಯೂಹದಲ್ಲಿ ಜೀವಿಗಳಿರುವ ಬಹುಶಃ ಏಕಮಾತ್ರ ಗ್ರಹವಾದ ಭೂಮಿಯ ಬಗ್ಗೆ ಗಮನ ಹರಿಸಿ ಇಲ್ಲಿಯ ಜನಜೀವನ ಅರಿಯುವ ಉದ್ದೇಶದಿಂದ ಇಂಥ ಯಂತ್ರ ಕಳಿಸಿದ್ದಾರೆ ಎನ್ನುವವರು, `ಅಮೆರಿಕಾದಂಥ ಸರ್ಕಾರಗಳಿಗೆ ಈ ವಿಚಾರ ಗೊತ್ತು; ಯು.ಎಫ್.ಓ ಭೂಮಿಗೆ ಬಿದ್ದು ಅದರಲ್ಲಿದ್ದ ಜೀವಿಗಳು ಸತ್ತುದನ್ನೆಲ್ಲ ಮುಚ್ಚಿಡಲಾಗಿದೆ’ ಎಂದೂ ಹೇಳುತ್ತಾರೆ. ಎಂದರೆ ಯಾರೂ ನಂಬುವಂಥ ಸಾಕ್ಷ್ಯಗಳನ್ನು ಮುಂದಿಡುವುದಿಲ್ಲ. ಊಹಾ ಪ್ರಪಂಚಕ್ಕೇ ಒತ್ತು. + +(ಜೋಗಿ) + +ನಮ್ಮ ಕವಿಯೊಬ್ಬರು ಹೇಳುತ್ತಿದ್ದರು: ನೋಡಿ, ಬೇರೆ ಗ್ರಹಗಳ ಜನ ಎಷ್ಟು ಮುಂದುವರಿದಿದ್ದಾರೆಂದರೆ ಭೂಮಿಯವರಿಗೆ ಕಂಡ ಅವರ ಮಹಾಯಂತ್ರಗಳು ಒಂದೂ ಭೂಮಿಗೆ ಬಿದ್ದಿಲ್ಲ. ಅದಕ್ಕೆ ಪ್ರತಿಯಾಗಿ ಸಂದೇಹವಾದಿಗಳು ಹೇಳುತ್ತಿದ್ದುದು- ಏಕೆ ಒಂದು ಯಂತ್ರವೂ ಕೆಳಗೆ ಬಿದ್ದಿಲ್ಲವೆಂದರೆ ಅಲ್ಲಿ ಯಂತ್ರವೇ ಇಲ್ಲ. ಹಾರುವ ಯಂತ್ರ ಇದ್ದರೆ ತಾನೆ ಕೆಳಗೆ ಬೀಳುವುದಕ್ಕೆ! ಅದೆಲ್ಲ ಬರಿಯ ಕಟ್ಟುಕತೆ. + +(ಬೆಂಗಳೂರಿನಲ್ಲಿ 1982ರವರೆಗೆ ಜೀವಿಸಿದ್ದ ಯೋಗಿ ಅಂಬರೀಶ್ ವರ್ಮರ ಪ್ರಕಾರ ಯು.ಎಫ್.ಓ. ಪೂರ್ತಿ ನಿಜ. ಕಾಶ್ಮೀರದ ಉತ್ತರ ಪಾಮರ್ ಪ್ರಸ್ಥಭೂಮಿಯಲ್ಲಿ ಯು.ಎಫ್.ಓ.ಗಳ ನಿರ್ಮಾಣ ತಾಣ. ನಮ್ಮ ರಥಗಳ ಆಕಾರಕ್ಕೆ ಯು.ಎಫ್.ಓ.ನ ಆಕಾರವೇ ಆಧಾರ. ಆಕಾಶದಲ್ಲಿ ಕಾಣುವ ಎಲ್ಲ ಬೆಂಕಿ ಉಗುಳುವ ವಿಚಿತ್ರ ವಸ್ತುಗಳೂ ಯು.ಎಫ್.ಓ. ಅಲ್ಲ, `ಡಯಾಗನಲ್’ ನಂತೆ ಓರೆಯಾಗಿ ಹಾರುವ ಬೆಳಕಿನ ವಸ್ತುಗಳು ವಾತಾವರಣ ಸರಿಮಾಡುವ `ಮರುತ್ ಕುಮಾರ’ರ ಯಂತ್ರಗಳು. ಆದರೆ `Astral Travel’ ಮುಂತಾದವುಗಳಲ್ಲಿ ನಿರತರಾಗಿದ್ದ, ಹೆಸರು ಮತ್ತು ಹಣಕ್ಕೆ ಆಸೆ ಪಡದೆ ಇದ್ದ ಈ ವರ್ಮರ ಹೇಳಿಕೆ ಸಮರ್ಥಿಸುವ ಬೇರೆ ಯಾವ ಸಾಕ್ಷ್ಯಗಳೂ ಇತರರಿಗೆ ದೊರೆಯಲಿಲ್ಲ. + +ಇಂಥ ವಿಚಾರಗಳಲ್ಲಿ Willing Suspension of disbelief- ಎಂದರೆ ಇದೆಲ್ಲ ಬೊಗಳೆ ಎಂದು ಹೇಳುವುದಕ್ಕಿಂತ ಅಪನಂಬಿಕೆಯನ್ನು ತಾತ್ಕಾಲಿಕವಾಗಿ ಒತ್ತಟ್ಟಿಗೆ ಇಟ್ಟು, ಈ ರಹಸ್ಯದ ಎಳೆಗಳನ್ನು ಅನುಸರಿಸಿ ಶೋಧನೆ ಮುಂದುವರೆಸುವುದು ತೆರೆದ ಮನಸ್ಸಿನ ಲಕ್ಷಣವಾದೀತು, ಆದರೆ ಸ್ಪಷ್ಟ ಸಾಕ್ಷ್ಯ ಸಿಗುವವರೆಗೆ ಯು.ಎಫ್.ಓ. ಅನೇಕ ಲೇಖಕರ ಊಹಾಪ್ರಪಂಚಕ್ಕೆ ಮಾತ್ರವಲ್ಲದೆ, ಸ್ಟೀಲ್‍ಬರ್ಗ್‍ರಂಥ ಸಿನಿಮಾ ತಯಾರಕರಿಗೆ ಒಳ್ಳೆಯ ವಸ್ತುವಾದೀತು.`ಬೋರ್’ `ವೆಲ್’ + +ಆಂಧ್ರದ ಮಚಲೀಪಟ್ಟಣಂ ಬಳಿಯ ಗ್ರಾಮದಲ್ಲಿ, ಬೋರ್‍ವೆಲ್ ತೋಡುತ್ತಿದ್ದಾಗ ತಿಳಿನೀರಿಗೆ ಬದಲಾಗಿ ಮಂದವಾದ ದ್ರವವೊಂದು ಸಿಕ್ಕಿತು. ಅದರ ಮೇಲೆ ಹಚ್ಚಿದ ಬೆಂಕಿಕಡ್ಡಿ ಎಸೆದಾಗ ಪೆಟ್ರೋಲಿಯಂ ಉತ್ಪನ್ನದಂತೆ ಆ ಬಾವಿಯೇ ಉರಿಯಿತು. ಅಗ್ನಿಶಾಮಕದಳದ ನೆರವಿನಿಂದ ಆ ಜ್ವಾಲೆ ಆರಿಸಬೇಕಾಯಿತು. + +ನೀರಿಗೆಂದು ಅಗೆದಾಗ ದ್ರವರೂಪದ ಚಿನ್ನ ಎನ್ನಿಸಿದ ಪೆಟ್ರೋಲ್ ಸಿಕ್ಕರೆ? ಕರ್ನಾಟಕದಲ್ಲಿ ಕಂಡಕಂಡೆಡೆ ಬೋರ್‍ವೆಲ್ ತೋಡುತ್ತಿರುವ ನೀರ್ ಸಾಬರು ಎನ್ನಿಸಿರುವ ನಜೀರ್ ಸಾಬರೂ ಕಡಿಮೆ ಆಗುತ್ತಿರುವ ನೀರಿನ ಮಟ್ಟವನ್ನು ಗಣಿಸದೆ ಬೋರ್‍ವೆಲ್ ತೋಡುವ ಕೆಲಸವನ್ನು ಇನ್ನೂ ಚುರುಕುಗೊಳಿಸಿದರೆ ನೀರಿಗೆ ಬದಲು ನಮಗೂ ಪೆಟ್ರೋಲ್ ಸಿಕ್ಕರೆ ನೀರ್‍ಸಾಬರು ಪೆಟ್ರೋಲ್ ಸಾಬ್ ಆಗಬಹುದು. ಕಾವೇರಿ ಬೇಸಿನ್‍ನಲ್ಲಿ ತೈಲ ಸಿಕ್ಕ ಸುದ್ದಿ ಆಗಾಗ್ಗೆ ಬರುತ್ತಿರುವಾಗ ಕರ್ನಾಟಕಕ್ಕೇಕೆ ಈ ದ್ರವರೂಪದ ಚಿನ್ನ ಬೇಡ? + +`ಬೋರ್‍ವೆಲ್’ ತೋಡುವುದು ಹೆಚ್ಚಾಗಬಹುದು. `ಬೋರ್’ `ವೆಲ್’ ಎಂದರೆ ಚೆನ್ನಾಗಿ ಬೋರ್ ಮಾಡು ಎಂದೂ ಅರ್ಥವಾಗುವುದರಿಂದ ಎಲ್ಲ ಸಚಿವರಿಗೂ ಈ `ಬೋರ್’ `ವೆಲ್’ ಚಾನ್ಸ್ ಸಿಕ್ಕೀತೆಂದು ಶ್ರೀಮಾನ್ ಘಾ ಹೇಳುತ್ತಾರೆ. + +ನಗದು ನವಾಬರು + +ಬ್ರಿಟನ್ನಿನಲ್ಲೂ `ಚೆಕ್‍ಬುಕ್ ಅರಿಸ್ಟೋಕ್ರಾಟ್’ ಎಂಬ ಒಂದು ಹೊಸ ತಂಡ ತಯಾರಾಗಲಿದೆ. `ಲಾರ್ಡ್’, `ಲೇಡಿ’ ಪದವಿಗಳಂಥ `ಟೈಟಲ್’ಗಳು ಮಾರಾಟಕ್ಕಿವೆ. `ಲೇಡಿ ಗೋಡಿವಾ’ ಆಗಬೇಕೆಂದು ಶ್ರೀಮಂತೆ ಆಸೆಪಟ್ಟರೆ ಸಾಕಷ್ಟು ಹಣ ಕೊಟ್ಟು ಆ ಪದವಿ ಪಡೆಯಬಹುದು. ವಂಶಾವಳಿಗಳೇ ಹರಾಜಿಗಿವೆ. + +ಪಿ.ಜಿ. ವುಡ್‍ಹೌಸ್‍ರಂಥ ಹಾಸ್ಯಸಾಮ್ರಾಟನ ವಿಡಂಬನೆಗೆ ಮೂಲವಸ್ತು ಎಂದರೆ ಹಣವಾಗಲೀ ತಲೆಯೊಳಗೆ ಮಿದುಳಾಗಲೀ ಇರದ ಲಾರ್ಡ್ ಎಮ್ಸ್‍ವರ್ಥ್‍ರಂಥ ಶ್ರೀಮಂತರು. ಹಳೆಯ `ಕ್ಯಾಸಲ್’ಗಳಿದ್ದರೂ ಅದನ್ನು ನೋಡಿಕೊಳ್ಳಲು ಸಾಕಷ್ಟು ಹಣವಿರದ, ಈಗ ಹೆಸರಿಗೆ ಮಾತ್ರ `ಲಾರ್ಡ್’ ಎನಿಸಿದವರು ವಿದೇಶಿಯರ ಭೇಟಿ ಕೊಡುವ ಪ್ರದರ್ಶನ ಕೇಂದ್ರ ಮಾಡಿ ಹಣ ಗಳಿಸುತ್ತಾರೆ. + +ಈ ಹೊಸ `ನಗದು ನವಾಬರು’ ಹೊಸ ಪದವಿ ಪಡೆದು ಏನು ಮಾಡುತ್ತಾರೋ ನೋಡಬೇಕು. + +`ಕೊರವಂಜಿ’ಯ ರಾ.ಶಿ. ಹಿಂದೆ ಬರೆದ ಕತೆಯ ಸಾರಾಂಶವಿದು: ಸೋಪಿನ ವ್ಯಾಪಾರ ಮಾಡಿ ಅಪಾರ ಹಣ ಗಳಿಸಿ ಸೋಪಿನ ಶಾಮಿ ಎಂದು ಹೆಸರಾದ ಶಾಮಿಗೆ, ರಾವ್ ಬಹಾದೂರ್, ರಾವ್ ಸಾಹೇಬ್‍ಗಳಂಥ `ಟೈಟಲ್’ ಪಡೆದು ಗೌರವಸ್ಥನಾಗ ಬೇಕೆಂದು ಆಸೆ. ಕಡೆಗೆ ಸರ್ವಪ್ರಯತ್ನಗಳಿಂದ ಆ ಟೈಟಲ್ ಪಡೆಯುತ್ತಾನೆ. ಆದರೆ ಅವನನ್ನು ಎಲ್ಲರೂ ಕರೆಯಲಾರಂಭಿಸಿದ್ದು ರಾವ್ ಬಹಾದ್ದೂರ್ ಸೋಪಿನ ಶಾಮಿ. (ಸೋಪೇ ಜಿಡ್ಡಿನಂತೆ ಅಂಟಿಬಿಟ್ಟಿತ್ತು.) + +ತಥಾಸ್ತು- ತಥಾಸ್ತ್ರೀ + +ಪುರುಷರೊಡನೆ ಸಮಾನತೆಗೆಂದು ಶುರುವಾದ ನಾರೀ ವಿಮೋಚನಾ ಚಳವಳಿ ಎಷ್ಟರಮಟ್ಟಿಗೆ ಮುಂದುವರಿದಿದೆ ಎಂದರೆ ಪುರುಷ ವಿಮೋಚನಾ ಚಳವಳಿ ಅಗತ್ಯವಾಗಿದೆ ಎಂದು ಸಿನಿಕರು ಹೇಳಿಯಾರು. ಪುರುಷಪ್ರಧಾನ ಸಮಾಜದಲ್ಲಿ ಪುರುಷನಿಗೆ ಅನ್ವಯವಾದದ್ದು ಸ್ತ್ರೀಗೂ ಅನ್ವಯ ಎಂದು ಭಾವಿಸಿಕೊಂಡೇ ಮುಂದುವರಿಯು ತ್ತಿದ್ದಾಗ(?) ಪ್ರತಿ ಹಂತದಲ್ಲೂ ಸ್ತ್ರೀಗೆ ಸಮಾನ ಸ್ಥಾನ ಬೇಕೆಂದು `ವಿಮೆನ್ಸ್ ಲಿಬ್’ ಅಥವಾ ನಾರೀ ವಿಮೋಚನಾವಾದಿಗಳ ಹೋರಾಟ ಆರಂಭವಾಯಿತು. + +ಚೇರ್‍ಮನ್ ಎಂದೇಕೆ? ಚೇರ್‍ವುಮನ್ ಎಂದು ಕರೆಯಿರಿ ಎಂದರು. ಆದರೆ ಈಗ `ಚೇರ್‍ಪರ್ಸನ್’ ಎಂದು ಕರೆದು ಉಭಯ ಲಿಂಗಿಗಳಿಗೂ ಅನ್ವಯಿಸಲಾಗಿದೆ. ಆದರೆ `ಮ್ಯಾನ್’ ಬಂದ ಕಡೆ `ವುಮನ್’ ಎನ್ನಬೇಕಾದರೆ, `ಹಿಸ್’ ಬಂದ ಕಡೆ `ಹರ್’ ಎನ್ನಬೇಕಾದರೆ ಅನೇಕ ವಿನೋದಕರ ಪದಗಳು ಉದ್ಭವಿಸುವುದೆಂದು ತರಲೆಗಳು (ತರಳೆ ಅಲ್ಲ) ಹೇಳುತ್ತಾರೆ. ಹಾಗಾದರೆ `ಮ್ಯಾನ್‍ಡೇಟ್’ `ವುಮನ್‍ಡೇಟ್’ ಆಗಿ, `ಹಿಸ್ಟರಿ’ `ಹರ್‍ಟರಿ’ ಆಗಬೇಕೆ? `ಮ್ಯಾನ್‍ಷನ್’ `ವುಮನ್‍ಷನ್’ ಆಗಬೇಕೆ? ಮ್ಯಾನ್ ಹೋಲ್ ಗತಿ ಏನು?- ಹೀಗೆಲ್ಲ. ಇದೆಲ್ಲ ಇಂಗ್ಲಿಷ್ ಭಾಷೆಯ ತರಲೆ. + +ಹಿಂದೆ ಕೈಲಾಸಂ ತಮ್ಮ ಭಾಷಣ ಮುಗಿಸಿ, ಗಂಡಸರ ಕಡೆ ತಿರುಗಿ, `ಆ ಮೆನ್’ -ತಥಾಸ್ತು ಎಂದರು. ಮಹಿಳೆಯರ ಕಡೆ ತಿರುಗಿ `ಆ ವಿಮೆನ್’- ತಥಾಸ್ತ್ರೀ ಎಂದಿದ್ದರು. + + + +`ಕೇಕೆ’ಗೆ ಕತ್ತರಿ + +ಜನಶಾಂತಿ ಕದಡುವ ಭಾಷಣ ಕೊಡಬಾರದು; ಧ್ವನಿವರ್ಧಕ ಬಳಸಿ ಮೌನ ಭಂಗ ಮಾಡಬಾರದು- ಇತ್ಯಾದಿ `ಕೂಡದು’ ಆಜ್ಞೆಗಳನ್ನು ಎಲ್ಲ ಸರ್ಕಾರಗಳೂ ಹೊರಡಿಸುತ್ತವೆ. (`ನಗಿ’ ಎನ್ನಲಿಕ್ಕೀ ಪರವಾನಗಿ ಬೇಕಾದೀತು.) ಆದರೆ ನಗಬಾರದು, ಹಾಡಬಾರದು, ಓಡಬಾರದು ಎಂದು ಹೇಳುವಂತೆ ಈಗ ನವಿಲಿನ ಕೇಕೆಗೂ ಜರ್ಮನಿಯ ನ್ಯಾಯಾಲಯ ಕತ್ತರಿ ಹಾಕಿದೆ. + +ಅಲ್ಲಿ `ಆಡಾಡು ಬಾ ನವಿಲೆ, ತೆರೆದೆರಡು ಸಾವಿರದೆರಡು ಕಣ್ಣ’ ಎಂದು ಕವಿ ಕೂಗುವಂತಿಲ್ಲ. ಮೇ- ಜೂನ್ ತಿಂಗಳ `ಬೇಟದ ಕೂಟ’ದ ಕಾಲದಲ್ಲಿ ಪ್ರಣಯ ಕಾತರದಿಂದ ನವಿಲು ಹಾಕಿದ ಕೇಕೆ ನಿದ್ರಾ ಗ್ರಾಮದ ನಿದ್ರೆ ಹಾಳುಮಾಡಿತೆಂದು ನ್ಯಾಯಾಲಯಕ್ಕೆ ದೂರು ಬಂದ ಮೇಲೆ, ಮಾನವನ ಕಿವಿಗೆ ಅಪಾಯಕರವಾಗಿ 70 ಡೆಸಿಬಲ್ ಮಟ್ಟದಲ್ಲಿ ಕೇಕೆ ಹಾಕಿ ನವಿಲು ಕೂಗುವಂತಿಲ್ಲ ಎಂದು ಆಜ್ಞೆಯಾಗಿದೆ. + +ಭಾರತದ ರಾಷ್ಟ್ರಪಕ್ಷಿ ಮಯೂರದ `ವಾಕ್’ ಸ್ವಾತಂತ್ರ್ಯಕ್ಕೆ ಧಕ್ಕೆ ಬಂದಿದೆ ಎಂದು ನಾಟ್ಯಮಯೂರಿಯ ದೇಶವಾದ ಭಾರತವು ಜರ್ಮನಿಗೆ ರಾಜತಾಂತ್ರಿಕವಾಗಿ ಪ್ರತಿಭಟನೆ ಸಲ್ಲಿಸಬೇಕೆಂದು ಪ್ರಾಣಿದಯಾಸಂಘದವರು ಒತ್ತಾಯ ತಂದಾರೆ? ನಮ್ಮ ನವಿಲೂರಿನ ಕವಿಗಳು ಈ ಪಕ್ಷಿ ಸ್ವಾತಂತ್ರ್ಯದ ಬಗ್ಗೆ ಪದ್ಯ ಬರೆಯಬಹುದೆ? ನಿರೀಕ್ಷಿಸಿ. + +ಹೊಸ ಹೆಸರು + +ಬೆಂಗಳೂರು ನಗರದಲ್ಲಿ ಅನೇಕ ಬಡಾವಣೆಗಳಿಗೆ ಹೆಸರನ್ನು ಬದಲಾಯಿಸಿ ನೂತನ ನಾಮಕರಣಗಳಾಗಿವೆ. ರಿಚ್‍ಮಂಡ್ ಟೌನ್, ಸರ್ ಮಿರ್ಜಾ ಇಸ್ಮಾಯಿಲ್ ನಗರವಾಗಿದೆ. ಬೆನ್‍ಸನ್ ಟೌನ್ ಕದಂಬ ನಗರವಾಗಿ, ಆಸ್ಟಿನ್ ಟೌನ್ ಕಿಟ್ಟಲ್ ನಗರವಾಗಿ, ದೊಡ್ಡ ಕುಂಟೆ ಸರ್ವಜ್ಞ ನಗರವಾಗಿ, ಆನೆಪಾಳ್ಯ ಗಜೇಂದ್ರ ನಗರವಾಗಿದೆ. ಪಾಳ್ಯ ನಗರವಾಗುವುದರ ಜೊತೆಗೆ ಆನೆ ಸಂಸ್ಕೃತೀಕರಣಕ್ಕೆ ಒಳಗಾಗಿ ಗಜೇಂದ್ರವಾಗಿದೆ. + +ಹಿಂದೆ ಬೌರಿಂಗ್ ಪೇಟೆ ಬಂಗಾರು ಪೇಟೆಯಾಗಿ, ಕಾನ್‍ಕಾನ್ ಹಳ್ಳಿ (ಖಾನ್‍ಖಾನ್ ಹಳ್ಳಿ?) ಕನಕಪುರವಾಯಿತು. ಹೆಮ್ಮಡು ಆಳ ಎನ್ನುವ ಸುಂದರ ಕನ್ನಡದ ಹೆಸರು ಸಂಸ್ಕೃತದ ಧಾಳಿಗೆ ಒಳಗಾಗಿ ಹೇಮದಳವಾಯಿತು. ಸಂಸ್ಕೃತದ ಮೋಹ ಕನ್ನಡದ ಮೂಲದ ನಾಮವನ್ನೇ ನಿರ್ನಾಮ ಮಾಡಿತು. `ಕೋಗಿಲೆ, ಕೋಗಿಲೆ ಎಂಥ ಹೆಸರು ಊರಿಗೆ’ ಎಂದು ಮಲೆನಾಡ ಹಳ್ಳಿಗಳ ಹೆಸರಿನ ಮೋಹಕತೆಗೆ ಮಾರುಹೋದ ಮಾಸ್ತಿ ಪದ್ಯ ಬರೆದರು. ಎಳನಡು ಸಿರಿಗಳಲೆ….ಒಂದೇ ಎರಡೇ? ನೂರಾರು. ಮೂಲದ ಸುಂದರ ಕನ್ನಡ ಹೆಸರುಗಳನ್ನು ಮಾರ್ಪಡಿಸುವುದು ಅನಗತ್ಯವಲ್ಲವೇ? + + + +ಕೊನೆ ಸಿಡಿ + +ಕಳಲೆ, ಸೋಸಲೆ ಎಂಬ ಊರುಗಳಿಲ್ಲವೇ? `ಕಳಲೆ?’ ಎಂಬುದನ್ನು ಪ್ರಶ್ನೆಯೆಂದು ಪರಿಗಣಿಸಿಯೇ `ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ವಚನದ ಉತ್ತರ ತಯಾರಾಯಿತೆಂದು ಶ್ರೀಮಾನ್ ಘಾ ಹೇಳುವುದು ಶುದ್ಧ ತರಲೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_142.txt b/Kenda Sampige/article_142.txt new file mode 100644 index 0000000000000000000000000000000000000000..c9ec1b3b79cc4d3deb881cc203c7875713c493ab --- /dev/null +++ b/Kenda Sampige/article_142.txt @@ -0,0 +1,55 @@ +‘ಜಗದ ಕತ್ತಲೆಯನು ಕಳೆಯಲು ದೀಪ ಹಚ್ಚೋಣಮನದ ಅಂಧಕಾರವ ತೊಳೆಯಲು ದೀಪ ಹಚ್ಚೋಣ’(ಗಜಲ್-6) + +ಎನ್ನುವ ಆಶಯದೊಂದಿಗೆ ಗಜಲ್ ಲೋಕವನ್ನು ಪ್ರವೇಶಿಸುತ್ತಿರುವ ಕವಯಿತ್ರಿ ಅಂಬಮ್ಮ ಪ್ರತಾಪ್ ಸಿಂಗ್ ದಶಕಗಳಿಂದ ಗಜಲ್ ಬರವಣಿಗೆಯಲ್ಲಿ ತೊಡಗಿಕೊಂಡಿದ್ದರೂ ತಡವಾಗಿ ತಮ್ಮ ಚೊಚ್ಚಲ ಗಜಲ್ ಸಂಕಲನ `ಮೌನದೊಡಲ ಮಾತುʼ ಪ್ರಕಟಿಸುತ್ತಿದ್ದಾರೆ. + +ರಾಯಚೂರು ಜಿಲ್ಲೆ, ಬಿಸಿಲ ಹನಿಗಳ ನೆಲ. ಈ ನೆಲ ವಿಶಿಷ್ಟ ಬಗೆಯ ಕಾವ್ಯ ಪರಂಪರೆಯದು. ಇಲ್ಲಿನ ಕವಿಗಳು ನವೋದಯ, ನವ್ಯ, ದಲಿತ, ಬಂಡಾಯದ ಕಾಲ ಘಟ್ಟದಲ್ಲೂ ತೀವ್ರವಾಗಿ ಸ್ಪಂದಿಸಿ ಕಾವ್ಯ ಕಟ್ಟಿಕೊಟ್ಟಿದ್ದು, ಅದು ಗಟ್ಟಿಯಾದ ಕಾವ್ಯ ಎಂಬುದನ್ನು ಅನೇಕರು ಸಾಬೀತು ಪಡಿಸಿದ್ದಾರೆ. + +(ಅಂಬಮ್ಮ ಪ್ರತಾಪ್‌ ಸಿಂಗ್‌) + +ಈ ನೆಲದ ಮೂಲಕ ಹುಟ್ಟಿ ಬಂದ ಮತ್ತೊಂದು ಕಾವ್ಯ ಪ್ರಕಾರ ಕನ್ನಡ ಗಜಲ್‌ಗಳು. ಉರ್ದು ಸಾಹಿತ್ಯದ ಮೂಲ ಬೇರುಗಳ ಶಕ್ತಿಯನ್ನು ಹೀರಿಕೊಂಡು ಬೆಳೆದ ಇಲ್ಲಿನ ಗಜಲ್‌ಗಳು ಅಷ್ಟೇ ಸತ್ವಯುತ. ಕರ್ನಾಟಕದ ಬೇರೆ ಭಾಗದಿಂದಲೂ ಗಜಲ್ ರಚನೆಗಳು ಹೊರಹೊಮ್ಮಿದ್ದರೂ ರಾಯಚೂರು ನೆಲದ ಗಜಲ್‌ಗೆ, ಇಲ್ಲಿನ ಗಜಲ್ ಕವಿಗಳಿಗೆ ಒಂದು ವಿಭಿನ್ನವಾದ ಸಂವೇದನಾಶೀಲತೆ ಇದೆ. ಆ ಕಾರಣಕ್ಕಾಗಿಯೆ ಇಲ್ಲಿನ ಗಜಲ್ ಕವಿಗಳನ್ನು ಕುತೂಹಲದ ದೃಷ್ಟಿಯಿಂದ ನೋಡುವುದು. ಶಾಂತರಸರು ಹೈ-ಕ ಬಗೆಗಿನ ಚಿಂತನೆಯನ್ನು, ಕಾಳಜಿಯನ್ನು, ಕಳವಳವನ್ನು ತಮ್ಮ ಗಜಲ್ ಮೂಲಕ ಬಹು ಹಿಂದೆಯೆ ಅಭಿವ್ಯಕ್ತಿಗೊಳಿಸಿದರು. ರಾಯಚೂರಿನ ನೆಲದ ಕಾವ್ಯ ಸತ್ವವನ್ನು, ಅದರಲ್ಲೂ ಕನ್ನಡ ಗಜಲ್ ಸಾಹಿತ್ಯವನ್ನು ಜಗದಗಲ, ಮುಗಿಲಗಲ ಬೆಳೆಸಿದ ಅನೇಕರಲ್ಲಿ ಅವರು ಪ್ರಮಥರು. + +***** + +`ಗಜಲ್’ ಎಂಬುದು ಅರಬ್ಬಿ ಶಬ್ದ. ಹೆಂಗಸರೊಡನೆ, ಪ್ರೇಯಸಿಯೊಡನೆ ಮಾತನಾಡುವುದು ಎಂದು ಅದರ ಅರ್ಥ. ಗಜಲ್ ಅರಬ್ಬಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಲಿಲ್ಲ. ಬದಲಿಗೆ ಅದು ಇರಾನ್ ದೇಶಕ್ಕೆ ವಲಸೆಗೊಂಡು ಪಾರ್ಸಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆಯಿತು. ಪಾರ್ಸಿ ಭಾಷೆಯಲ್ಲಿ ಗಜಲ್ ಎಂದರೆ ಭಾವಗೀತೆ, ಪ್ರೇಮಗೀತೆ, ಹಾಡು ಇತ್ಯಾದಿ…. ಅರ್ಥ. ಅಲ್ಲಿಂದ ಇದು ಭಾರತದ ಉರ್ದುವಿಗೆ ಬಂತು. ಭಾರತೀಯತೆಯನ್ನು ಮೈಗೂಡಿಸಿಕೊಂಡು ಭಾರತದ ಇತರೆ ಭಾಷೆಗೂ ವ್ಯಾಪಿಸಿತು. + +ಗಜಲ್‌ನಲ್ಲಿ ಇರುವ ಪ್ರಬೇಧ, ಅದರ ಸಾಂಸ್ಕೃತಿಕ ಹಿನ್ನೆಲೆ, ಅದರ ವ್ಯಾಕರಣ, ಅಲಂಕಾರಗಳ ಬಗ್ಗೆ ನಾವಿಲ್ಲಿ ಚರ್ಚೆ ಮಾಡುವುದು ಬೇಡ. ಕನ್ನಡದ ಇತರ ಕಾವ್ಯದಷ್ಟೇ ಸಮರ್ಥವಾಗಿ ಬೆಳೆದಿರುವ ಕನ್ನಡ ಗಜಲ್ ಲೋಕದ ಚಿಂತನೆಗೆ ಬಂದಾಗ ಅದು ಕೇವಲ ಪ್ರೀತಿ, ಪ್ರೇಮ, ವಿರಹ, ಪ್ರೇಮಿಗಳ ಮಾತು, ಅಷ್ಟಕ್ಕೆ ಮಾತ್ರ ಸೀಮಿತವಾಗದೆ, ರಸಿಕತೆಯ ಮಾತಿನಿಂದ ಹಿಡಿದು ಪ್ರತಿಭಟನೆಯವರೆಗೂ ಬೆಳೆದಿದೆ. ಅಲ್ಲಿನ ಪ್ರತಿರೋಧ, ಬಂಡಾಯದ ಕಾವನ್ನೂ ನಾವು ನೋಡಬಹುದಾಗಿದೆ. + +ಅತ್ಯುತ್ತಮ ಸಣ್ಣಕಥೆ, ಕಾವ್ಯ, ಗಜಲ್‌ಗಳನ್ನು ನೀಡಿದ ರಾಯಚೂರ ನೆಲದಲ್ಲಿ ಇಂದು ನೂರಾರು ಗಜಲ್ ಕವಿಗಳು ಅರಳಿರುವುದು ನೋಡಿದರೆ ಅಚ್ಚರಿಯಾಗುತ್ತದೆ. ಆದರೆ, ಮಹಿಳಾ ಗಜಲ್‌ಕಾರರ ತೀವ್ರ ಕೊರತೆ ತುಂಬಾ ಎದ್ದು ಕಾಣುತ್ತದೆ. ಹಿರಿಯ ಕವಯಿತ್ರಿ ಎಚ್.ಎಸ್. ಮುಕ್ತಾಯಕ್ಕ ಅವರ ನಂತರ ರಾಯಚೂರು ಜಿಲ್ಲೆಯಲ್ಲಿ ಪ್ರಸ್ತುತ ಮಹಿಳಾ ಗಜಲ್‌ಕಾರರ ಸಂಖ್ಯೆ ಬೆರಳೆಣಿಕೆಯಷ್ಟು! ಗಜಲ್‌ನ ಮೋಹಕತೆಗೆ ಶರಣಾಗಿ, ಗಜಲ್ ಕಾವ್ಯವನ್ನೆ ತಮ್ಮ ಅಭಿವ್ಯಕ್ತಿಯನ್ನಾಗಿಸಿಕೊಂಡ ಬರಹಗಾರರು ತೀರ ಕಡಿಮೆ, ಅದರಲ್ಲೂ ಮಹಿಳಾ ಬರಹಗಾರ್ತಿಯರು ಇನ್ನೂ ಅಪರೂಪ. ಇಂತಹ ಸಂದರ್ಭದಲ್ಲೆ ಅಂಬಮ್ಮ ಪ್ರತಾಪ್ ಸಿಂಗ್ `ಮೌನದೊಡಲ ಮಾತುʼ ಗಜಲ್ ಸಂಕಲನ ಪ್ರಕಟಿಸುತ್ತಿರುವುದು ಮಹತ್ವದ ಸಂಗತಿ. ವೃತ್ತಿಯಿಂದ ಶಿಕ್ಷಕಿಯಾಗಿರುವ ಅಂಬಮ್ಮ ಪ್ರತಾಪ್ ಸಿಂಗ್ ಪ್ರವೃತ್ತಿಯಿಂದ ಬರಹಗಾರ್ತಿ. ಕನ್ನಡ ಸಾಹಿತ್ಯದ ವಿವಿಧ ಪ್ರಾಕಾರಗಳಲ್ಲಿ 4-5 ಕೃತಿಗಳನ್ನು ಪ್ರಕಟಿಸಿರುವ ಅವರು ಪ್ರಸ್ತುತ ಗಜಲ್ ಸಂಕಲನದಲ್ಲಿ 60 ಗಜಲ್‌ಗಳಿವೆ. ದಶಕಗಳಿಂದ ಕಾವ್ಯ ರಚನೆಯಲ್ಲಿ ತೊಡಗಿಕೊಂಡಿರುವ ಅವರು ವಿಶೇಷವಾಗಿ ರಾಯಚೂರು ಜಿಲ್ಲಾ ಕೆಲವೆ ಕೆಲವು ಮಹಿಳಾ ಗಜಲ್‌ಕಾರ್ತಿಯರ ಪೈಕಿ ಮುಂಚೂಣಿಯಲ್ಲಿದ್ದಾರೆ. + + + +ಉರ್ದು ಸಾಹಿತ್ಯ ಪರಂಪರೆಯ ʻಗಜಲ್ʼ ಸೃಷ್ಟಿಸಿರುವ ಸೋಜಿಗ, ರಸಾನುಭವ, ಚಮತ್ಕಾರ, ಪತಂಗದ ಆಕರ್ಷಣೆ ಹೀರಿಕೊಂಡು ಬೆಳೆದ ಕನ್ನಡ ಗಜಲ್‌ಗಳು ಉರ್ದು ಭಾಷೆಯಷ್ಟು ಸತ್ವಯುತವಾಗಿ ಅಲ್ಲದಿದ್ದರೂ ಇಲ್ಲಿನ ಪ್ರಾದೇಶಿಕತೆ, ಜನಜೀವನ, ಜೀವನ ಶೈಲಿ, ಭಾಷೆ, ಸಂಸ್ಕೃತಿ, ಇರುವಿಕೆಯ ಹಿನ್ನೆಲೆಯಲ್ಲಿ ಮೂಡಿಬಂದಿವೆಯಾದರೂ ಗಟ್ಟಿತನಕ್ಕೆ ಕಡಿಮೆಯಿಲ್ಲ. ಇದಕ್ಕೆ ಅಂಬಮ್ಮ ಅವರ ಕೆಲ ಗಜಲ್‌ಗಳ ಆಶಯವೂ ಹೊರತಲ್ಲ. + +`ಬದುಕಿದರೂ ಜೀವಚ್ಛವವಾಗಿತ್ತು ಪ್ರೀತಿಯಿಲ್ಲದೆನಿನ್ನ ಪ್ರೀತಿಯು ಸಂಜೀವಿನಿಯಾಯಿತು ಜೀವನದಲ್ಲಿ(ಗಜಲ್-4)ಎನ್ನುವಲ್ಲಿ ಮನುಷ್ಯ ಪ್ರೀತಿಯ ಸಹಜತೆಯ ಬಯಕೆಯನ್ನು ಪ್ರಕಟಿಸುವ ಈ ಕವಯಿತ್ರಿ, ಅಗಾಧವಾದ ಜೀವನ ಪೀತಿ ಪ್ರಕಟಿಸುತ್ತಾರೆ. ಇಲ್ಲಿನ ಹಲವು ಗಜಲ್‌ಗಳಲ್ಲಿ ಅಂತಹ ಅಂತರ್ಮುಖಿ ಮಾತುಗಳ, ಮೌನ ಆದ್ರತೆಯ ವಿಚಕ್ಷಣ ಸಂಗತಿಗಳನ್ನು ಹೇಳುತ್ತವೆ. + +ತಾವು ಕಂಡುಂಡ ಅನೇಕ ವಿಷಯಗಳನ್ನು ಕವಯಿತ್ರಿ ಅವನ್ನು ಕಾವ್ಯದ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಒಂದು ಮಾತು, ಎಲ್ಲ ಅನುಭವಗಳೂ ಕಾವ್ಯವಲ್ಲ. ಅದೂ ಅಲ್ಲದೆ ಒಂದು ವಿಷಯವನ್ನು ಗಜಲ್ ಆಗಿ ಪರಿವರ್ತಿಸುವ ಕಾವ್ಯಕಾರಣ ಕೆಲವಕ್ಕೆ ಸಲ್ಲುತ್ತದೆ, ಕೆಲ ಮನೋಧರ್ಮ ಎಲ್ಲಕ್ಕೂ ಸಲ್ಲದು. ಈ ಸಂಕಲನದಲ್ಲಿ ಕಾತರತೆಯ ಮಾತುಗಳಿವೆ, ಪ್ರೀತಿ-ಪ್ರೇಮದ ಉಸಿರಾಟವಿದೆ, ಹತಾಶೆಗಳಿವೆ, ಸುಖದ ಕನಸುಗಳಿವೆ, ವ್ಯವಸ್ಥೆಯ ತಾಕಲಾಟಗಳಿವೆ, ವರ್ತಮಾನದ ಹಲಬಗೆಯ ಸಂಕಟಗಳಿವೆ, ತವಕಗಳಿವೆ, ತಲ್ಲಣಗಳಿವೆ, ಬಂಧನಗಳಿವೆ-ಬಿಡುಗಡೆಗಳಿವೆ. ಬದುಕಿನ ಸಾವಿರ ಬವಣೆಗಳನ್ನು ಕವಿ ಹೇಗೆ ತನ್ನ ಕಾವ್ಯಕುಂಚಕ್ಕೆ ಇಳಿಸುವ ಪ್ರಯತ್ನ ಮಾಡಬಲ್ಲ ಎಂಬುದಕ್ಕೆ ಈ ಗಜಲ್ ಉದಾಹರಣೆ: + +`ಬಾಳ ಕಡಲ ಪಯಣದಲಿ ಬಿರುಗಾಳಿಯೇ ಹೆಚ್ಚುಬದುಕಲಿ ನಿನ್ನ ಜೊತೆಗೆ ಮುಳ್ಳುರಾಶಿಯೇ ಹೆಚ್ಚು’(ಗಜಲ್-54)ಎನ್ನುವ ರೂಪಕದ ಮತ್ಲದಲ್ಲಿ ಬರಿ ಸುಖದ ಕಲ್ಪನೆಯ ಜೀವನದಲಿ ಸಾಗುವ, ದಾಟುವ ಮುಳ್ಳಿನ ರಾಶಿಯ ವಾಸ್ತವ ಸಂಗತಿ ಇಲ್ಲಿ ಪ್ರಕಟಗೊಂಡಿದ್ದು, ಮುಂದುವರೆದ ಈ ಗಜಲ್‌ನ ನಾಕನೆ ಶೇರ್ ಹೇಳುವ ಮಾತು ಕವಯಿತ್ರಿಯ ಕಲ್ಪನಾ ಶಕ್ತಿಗೆ ಹಿಡಿದ ಸಾಣೆಯಂತಿದೆ. ಮುಂದುವರೆದ ಈ ಗಜಲ್‌ನ ಶೇರ್:`ಮೆಹಂದಿ ರಂಗು ಕರಗುವ ಮೊದಲೆ ಬದುಕು ಭಾರನಿಶ್ಯಬ್ದ ರಾತ್ರಿಯಲಿ ವಿರಹದ ಬಿಕ್ಕಳಿಕೆಯೇ ಹೆಚ್ಚು’ಎಂದು ಹೇಳುವ ಮೂಲಕ ಹೆಣ್ಣು ಮನಸೊಂದು ಮೆಹಂದಿ ಕರಗುವ ಮೊದಲೆ ವಿರಹದ ಬಿಕ್ಕಳಿಕೆಯಲಿ ಬೇಯುವ ಛಾಯೆ ದುರಂತ ಕಥೆಯ ಪ್ರತಿಬಿಂಬವಾಗಿದೆ.ನಮ್ಮ ಸಮಾಜದಲ್ಲಿ ಜಾತಿ, ಧರ್ಮಗಳ ಹಂಗು ತೊರೆದು ಅಂತರ್ಜಾತಿ, ಧರ್ಮಗಳ ವಿವಾಹ ನಡೆದಿವೆ. ಅದರ ವಿರುದ್ಧ ಮರ್ಯಾದ ಹತ್ಯೆಯಂಥಹ ಪ್ರಕರಣಗಳೂ ನಡೆದಿರುವುದು ದುರಂತವೆ! ಇಂತಹ ನಾಡಿನಲ್ಲಿ ವೈರುಧ್ಯ ಎಂಬಂತೆ ಕೃಷ್ಣ ರಾಧೆಯರ ಪ್ರೇಮವನ್ನು ನಾವು ಆದರ್ಶವಾಗಿ ನೋಡುತ್ತೇವೆ. ಆ ಮಿಡಿತದ ಒಂದು ಗಜಲ್‌ನ ಶೇರ್ ನೋಡುವುದಾದರೆ: + +`ಕೃಷ್ಣ ರಾಧೆಯ ಪ್ರೇಮವ ಆದರ್ಶ ಎಂದು ಪೂಜಿಸುವ ಜನರಿಹರುಯುವ ಮನಸಿನ ಒಲವಿಗೆ ಜಾತಿ ನೆರಳಿನ ಕತ್ತಿ ಮಸೆಯುತ್ತಿದೆ’(ಗಜಲ್-36)ಎನ್ನುವ ಗಜಲ್‌ನಲ್ಲಿ ರಾಧೆ ಕೃಷ್ಣ ಸೇರಿದಂತೆ, ಲೈಲಾ ಮಜನೂ, ಸಲೀಂ ಅನಾರ್ಕಲಿ, ರೋಮಿಯೋ ಜೂಲಿಯಟ್‌ರನ್ನು ಆದರ್ಶವಾಗಿ ನೋಡುವ ದೇಶದಲ್ಲಿ ಒಲವಿಗೆ ವಿಷ ಉಣಿಸುವ ಕಾರಣವನ್ನು ಕವಯತ್ರಿ ಪ್ರಶ್ನಿಸುತ್ತಾ, ಪ್ರೀತಿಯ ಉದಾತ್ತತೆ ತೋರುತ್ತಾ, ಅದೆ ಒಲವನ್ನು ಹೀಗೆ ಮಧುರವಾಗಿಸುತ್ತಾರೆ:`ನಿನ್ನೊಲವಿನ ಕರೆಗೆ ಸರ್ವಸ್ವವನ್ನೂ ತ್ಯಜಿಸಿ ಬಂದಿಹಳು ವನಿತಾಒಲವಿನ ಹಾದಿಯಲ್ಲಿ ಮಧುರ ಪ್ರೀತಿಯ ಪಲ್ಲಕ್ಕಿ ಸಾಗುತ್ತಿದೆ’ಎಂದು ಒಲವಿಗೆ ಸೋಲುತ್ತಾರೆ. + +***** + +ಈ ಸಂಕಲನದ ಎಲ್ಲ ಗಜಲ್‌ಗಳು ಶ್ರೇಷ್ಠ ಕಾವ್ಯಗುಣ ಹೊಂದಿದ ಗಜಲ್‌ಗಳೆಂದು ಹೇಳಲಾಗದು. ಆದರೆ ಕವಿಯೊಬ್ಬರ ಮನದಾಳದ ಮಾತುಗಳು ಅಲ್ಲಲ್ಲಿ ಕೆಲ ಸಾಲುಗಳಲ್ಲಿ ನಿಖರವಾಗಿ ಪ್ರಕಟಗೊಂಡಿವೆ. ಅದಕ್ಕೆ ಉದಾಹರಣೆಯಾಗಿ ಈ ಶೇರ್‌ಗಳನ್ನು ಗಮನಿಸಬಹುದು. + +`ಮನವು ನೊಂದು ಬೇಯುತ್ತಿದೆ ನಿನ್ನ ಮೌನಕ್ಕೆ ಗೆಳೆಯನೆನಪು ಸತ್ತು ಸಮಾಧಿಯಾಗಿದೆ ನಿನ್ನ ಮೌನಕ್ಕೆ ಗೆಳೆಯ’(ಗಜಲ್-10) + +*** + +`ಕೊನೆಗೊಮ್ಮೆ ನನ್ನ ಶವವನ್ನಾದರೂ ತೋರಿಸಿಬಿಡಿವನಿತಾ ಹೇಗೆ ಕಾಣುವಳೆಂದು ನೋಡುವೆ ನಾನು’(ಗಜಲ್-14) + +*** + +`ನೀನು ಆಲಾಪಗೈಯ್ಯುತ್ತಿರುವ ಗಾಯನದಲಿನನ್ನ ಹೃದಯದ ಬಡಿತವು ತಾಳ ಹಾಕುತ್ತಿರಲಿ’(ಗಜಲ್-21) + +*** + +ಗಜಲ್ ಮೂಲತಃ ಮನುಷ್ಯ ಸಹಜ ಪ್ರೀತಿ, ಪ್ರೇಮ, ಪ್ರಣಯ, ವಿರಹ, ವೇದನೆ, ಏಕಾಂಗಿತನ, ನೋವು, ಹತಾಶೆ, ವಿಪ್ರಲಂಭನ, ಬೇಗುದಿ, ತಳಮಳಗಳನ್ನು ಅಭಿವ್ಯಕ್ತಿಗೊಳಿಸುವ ಕಾವ್ಯವಾದರೂ, ಅದರಾಚೆಯ ವರ್ತಮಾನದ ಸಂಗತಿಗಳನ್ನೂ ಅದು ಪ್ರತಿಧ್ವನಿಸುತ್ತದೆ. ಇಂತಹ ಹಲವು ದೃಷ್ಟಿಕೋನಗಳನ್ನಿಟ್ಟುಕೊಂಡು ಇಲ್ಲಿ ಕೆಲ ಗಜಲ್‌ಗಳು ಮೈದಾಳಿವೆ. ಅಂಬಮ್ಮ ಅವರ ಗಜಲ್‌ಗಳಲ್ಲಿ ಪ್ರೇಮ ನಿವೇದನೆ ಇದೆ, ನೋವುಂಡ ಹೃದಯಾಂತರಾಳದ ಯಾತನೆ ಇದೆ. ಜೊತೆಗೆ ಕೆಲವೆಡೆ ಚಡಪಡಿಕೆ, ಕಾತರತೆ, ಆರ್ದ್ರತೆ, ಮನದ ತಾಕಲಾಟಗಳ ತಳಮಳವೂ ಇದೆ. ಮನುಷ್ಯ ಸಮಾಜ ಕುರಿತ ವಿವೇಚನೆಯುಕ್ತ ಪ್ರಶ್ನೆಗಳಿವೆ, ಕುತೂಹಲಗಳಿವೆ. ಗಂಡು-ಹೆಣ್ಣಿನ ನಡುವಿನ ಅಗಣಿತ ನೋವಿನ ಗೆರೆಗಳನ್ನು ಇಲ್ಲಿನ ಕೆಲ ಗಜಲ್‌ನಲ್ಲಿ ಕಂಡುಬಂದ ಅಂಶ. + +ಕೊನೆಗೊಂದು ಮಾತು, ಹೊಸಪೀಳಿಗೆಯ ಕನ್ನಡ ಗಜಲ್‌ಕಾರರನ್ನು ಕುರಿತು ಗಜಲ್ ಸಾಹಿತ್ಯ ಲೋಕದ ಗಂಭೀರ ಬರಹಗಾರರಲ್ಲಿ ಒಂದು ಆರೋಪವಿದೆ. ಈ ಮಾತನ್ನು ನಾವೆಲ್ಲರೂ ಒಪ್ಪಿಕೊಳ್ಳಲೇಬೇಕು. ಅದೆಂದರೆ, ಇಂದಿನ ಬಹುತೇಕರು ಗಜಲ್‌ಕಾರರು ಛಂದೋಬದ್ಧ ಲಕ್ಷಣಗಳನ್ನಿಟ್ಟುಕೊಂಡು ಆ ಚೌಕಟ್ಟಿನಲ್ಲಿ ಮಾತ್ರ ಗಜಲ್ ಎಂದು ಕೆಲ ಶಬ್ದಗಳನ್ನು ತುರುಕುತ್ತಾರೆ. ಗಜಲ್‌ಗೆ ಅನಿವಾರ್ಯವಾದ ಕಾವ್ಯಗುಣ, ಭಾಷಾ ಸಂಪತ್ತು, ಲಯಗಾರಿಕೆ, ಪ್ರತಿಮೆ-ರೂಪಕಗಳ ಮುಖ್ಯ ಭೂಮಿಕೆಯನ್ನು ಮರೆಯುತ್ತಾರೆ ಎಂಬ ಅಂಶ. ಬಹುತೇಕರು ತಾವು ಬರೆದುದೆ ಗಜಲ್ ಎಂದು ಗಜಲ್‌ನ ಗಾಂಭೀರ್ಯತೆಗೆ ಧಕ್ಕೆ ತರುತ್ತಿರುವುದು ಆತಂಕದ ವಿಷಯ. ಕಾವ್ಯದ ಗುಣ ಗಜಲ್‌ನಲ್ಲಿ ಅವಿರ್ಭವಿಸದೆ ಸಾವಿರ ಗಜಲ್ ಬರೆದರೂ ಆ ಗಜಲ್ ರುಚಿ ನೀಡದು. ಇಂತಹ ಅಂಶಗಳನ್ನು ಹೊಸ ಗಜಲ್ ಕವಿಗಳು ಗಮನದಲ್ಲಿಟ್ಟಿಕೊಂಡು ಗಜಲ್ ರಚನೆ ಮಾಡುವ ಅಗತ್ಯವಿದೆ. + + + +ಭರವಸೆಯ ಕವಯಿತ್ರಿಯಾಗಿ ಪ್ರಕಟಗೊಳ್ಳುವ ಸೂಚನೆ ನೀಡಿರುವ ಈ ಕವಯಿತ್ರಿಯಿಂದ ಇನ್ನಷ್ಟು ಉತ್ತಮ ಸಾಹಿತ್ಯ ಕನ್ನಡಕ್ಕೆ ಲಭಿಸಲಿ, ಎನ್ನುತ್ತಾ ಅಂಬಮ್ಮ ಪ್ರತಾಪ್ ಸಿಂಗ್ ಅವರನ್ನು ಹೃತ್ಪೂರ್ವಕ ವಾಗಿ ಅಭಿನಂದಿಸುವೆ. + +ಮಂಡಲಗಿರಿ ಪ್ರಸನ್ನ ಮೂಲತಃ ರಾಯಚೂರಿನವರು. ಓದಿದ್ದು ಇಂಜಿನಿಯರಿಂಗ್. ಹಲವು ವರ್ಷಗಳ ಕಾಲ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ `ಪ್ರಾಜೆಕ್ಟ್ ಮತ್ತು ಮಾರ್ಕೆಟಿಂಗ್’ ವಿಭಾಗದ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಈಗ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಕನಸು ಅರಳುವ ಆಸೆ(ಕವಿತೆ), ಅಮ್ಮ ರೆಕ್ಕೆ ಹಚ್ಚು(ಮಕ್ಕಳ ಕವಿತೆ), ನಿನ್ನಂತಾಗಬೇಕು ಬುದ್ಧ(ಕವಿತೆ), ಏಳು ಮಕ್ಕಳ ನಾಟಕಗಳು(ಮಕ್ಕಳ ನಾಟಕ), ಪದರಗಲ್ಲು (ಸಂಪಾದನೆ), ನಾದಲಹರಿ(ಸಂಪಾದನೆ-2010) ಸೇರಿ ಒಟ್ಟು ಒಂಭತ್ತು ಕೃತಿಗಳು ಪ್ರಕಟವಾಗಿವೆ \ No newline at end of file diff --git a/Kenda Sampige/article_143.txt b/Kenda Sampige/article_143.txt new file mode 100644 index 0000000000000000000000000000000000000000..f1e50c96fa7cd19d42139468e91f1ee0343b826b --- /dev/null +++ b/Kenda Sampige/article_143.txt @@ -0,0 +1,115 @@ +ಹಕ್ಕಿಗಳ ಚಿಲಿಪಿಲಿ ಸದ್ದಿನಿಂದ ಎಚ್ಚರಗೊಂಡೆ. ಮೈಯೆಲ್ಲ ಹಗುರವಾದಂತೆನಿಸಿತು. ಎದ್ದು ಕೂಡುವುದು ಸಾಧ್ಯವಾಯಿತು. ಅಬ್ಬ! ಮರಣಕ್ಕೆ ಮೊದಲು ಈ ಜರಾ ತನ್ನ ಅದ್ಭುತ ಚಿಕಿತ್ಸೆಯಿಂದ ನನ್ನನ್ನು ಬದುಕಿಸಿದ! ಮರಣಕ್ಕೆ ಎಲ್ಲ ರೀತಿಯಿಂದಲೂ ಹತ್ತಿರ ವಾಗಿದ್ದು, ಜರೆಯಿಂದ ಜರ್ಝರಿತನಾದ ನನ್ನನ್ನು ಇವನು ಕೆಲವು ದಿನಗಳ ಮಟ್ಟಿಗೆ ಬದುಕಿಸಿದ. ಹೌದು, ಅವನು ಸೊಪ್ಪಿನ ರಸ, ಬೇರಿನ ರಸದ ಮದ್ದು ನೀಡಿದ; ಮರಣವೇ ಇಲ್ಲದ ಅಮೃತ ನೀಡಲಿಲ್ಲ; ನೀಡಲು ಸಾಧ್ಯವೂ ಇಲ್ಲ.ಒಂದು ಕ್ಷಣ, ಅವನು ಬಾಣ ಬಿಟ್ಟೊಡನೆ ಪ್ರಾಣ ಹೋಗಿಬಿಡಬೇಕಾಗಿತ್ತು + +ಎನಿಸಿತು. ಅವನ ಔಷಧಿಯ ಪ್ರಭಾವದಿಂದ ನಾನು ಸುಮಾರು ಒಂದು ದಿನ ಪ್ರಜ್ಞಾಹೀನ ನಿದ್ರೆಯಲ್ಲಿ ಮುಳುಗಿದ್ದೆ. ಹೌದು, ಮುಸ್ಸಂಜೆ ಸಮುದ್ರ ತೀರದಿಂದ ಹೊರಟಿದ್ದೆ. ತಾವು ಹಚ್ಚಿಕೊಂಡಿದ್ದ ಕೃತಕ ದೀಪಗಳ ಬೆಳಕಿನಲ್ಲಿ ಯಾದವ ಪ್ರಮುಖರು ಮದ್ಯಪಾನದ ಲೀಲಾವಿನೋದದಲ್ಲಿ ತೊಡಗಿದ್ದರು. ಇಲ್ಲಿ ಎಚ್ಚರವಾದ ಸ್ವಲ್ಪ ಹೊತ್ತಿಗೆ ಜರಾ ಬಂದು ಕುಟೀರದ ಬಾಗಿಲು ತೆರೆದಾಗ ಮುಸ್ಸಂಜೆಯಾಗಿತ್ತು. ಅಂದರೆ ಅಖಂಡವಾಗಿ ಒಂದು ದಿನ ನಾನು ಎಚ್ಚರವಿಲ್ಲದಂತಿದ್ದೆ. ಅಂದರೆ, ಸತ್ತಂತೆ ಮಲಗಿದ್ದೆ. ಹೌದು ನಿದ್ರೆ ಒಂದು ತಾತ್ಕಾಲಿಕ ಸಾವು. ಸಾವೂ ಈ ನಿದ್ರೆಯಂತಿರಬಹುದೆ? ಅದು ನಿಜವಾದರೆ ಮಾನವರೆಲ್ಲ ಸಾಯಲು ಏಕೆ ಹೆದರುತ್ತಾರೆ? ಇಲ್ಲ, ಸಾವು ನಿಗೂಢವೇ! ಅದರ ರಹಸ್ಯ ಕೈವಶವಾದರೆ ಈ ಮನುಷ್ಯನನ್ನು ಹಿಡಿಯುವವರಾರು? + +(ಸು. ರುದ್ರಮೂರ್ತಿ ಶಾಸ್ತ್ರಿ) + +ಕುಳಿತವನು ಎದ್ದು ನಿಂತೆ. ನಿಧಾನವಾಗಿ ಕುಂಟುತ್ತಾ ನಡೆದು, ಬಾಗಿಲು ತೆರೆದು ಹೊರಬಂದು ಮೂತ್ರ ಬಾಧೆ ತೀರಿಸಿಕೊಂಡೆ. ಮತ್ತೆ ಒಳಬಂದು, ಮಣ್ಣಿನ ತಂಬಿಗೆಯಲ್ಲಿ ನೀರು ತುಂಬಿಕೊಂಡು ಬಂದು ಮುಖ ಕೈಕಾಲು ತೊಳೆದುಕೊಂಡೆ. ಗಾಯದ ಕಾಲಿಗೆ ನೀರು ಸೋಕಿಸಲಿಲ್ಲ. ಮತ್ತೆ ಕುಟೀರದ ಒಳಗೆ ಹೋಗದೆ ಹೊರಗಿನ ಒಂದು ಬಂಡೆಯ ಮೇಲೆ ಕುಳಿತುಕೊಂಡೆ. ಎಡಗಾಲಿನ ನೋವು ಎಷ್ಟೋ ಕಡಿಮೆಯಾಗಿತ್ತು. ಪಕ್ಷಿಗಳ ಕಲರವವನ್ನು ಕೇಳುತ್ತಾ, ಗಿಡಮರಗಳನ್ನು ನೋಡುತ್ತಾ, ಪ್ರಕೃತಿ ಎಷ್ಟು ರಮಣೀಯವಾಗಿದೆ, ಎಂದುಕೊಂಡೆ. + +ಆಕಸ್ಮಿಕವಾಗಿ ನನ್ನ ದೃಷ್ಟಿ ನನ್ನ ಕೈಗಳ ಮೇಲೆ ಬಿತ್ತು. ಮುಂಗೈಗಳ ಮೇಲೆ ನರಗಳು ಎದ್ದು ಕಾಣುತ್ತಿದ್ದವು. ಚರ್ಮ ಸುಕ್ಕಾಗಿರುವುದು ಸ್ಪಷ್ಟವಾಗಿ ಕಂಡಿತು. ಇದು ಜರೆಯ ಪ್ರಭಾವ. ಅದರಿಂದ ಪಾರಾಗಬಲ್ಲವರು ಯಾರು? ದೇವಲೋಕದ ಅಮೃತದ ಕನಸು ಕಂಡಾಕ್ಷಣಕ್ಕೆ ನಾವು ಅಮರರಾಗುವುದು ಸಾಧ್ಯವೆ? ಜರೆಯ ಲಕ್ಷಣಗಳು ಮರಣದ ಮಹಾನೆಲೆಗೆ ಕರೆದೊಯ್ಯುವ ಸಂದೇಶಗಳಲ್ಲವೆ? + +ಹಸಿವಿನ ಅನುಭವವಾಗತೊಡಗಿತು. ಅಷ್ಟರಲ್ಲಿ ಜರಾ ಆತುರಾತುರವಾಗಿ ಬಂದ. “ಒಡೆಯ ತಡ ಆಯ್ತು. ನನಗೆ ಗೊತ್ತು ನಿಮಗೆ ಹಸಿವಾಗರ‍್ತದೆ ಅಂತ. ಅದಕ್ಕೇ ಹತ್ತಿರದಲ್ಲೇ ನನ್ನ ಪರಿಚಯದವರ ಕುಟೀರ ಇದೆ. ಆ ಮನೇಲಿ ಹೆಂಗಸರೂ ಇದ್ದಾರೆ. ನಿಮಗೊಂದಿಷ್ಟು ರೊಟ್ಟಿ, ಬೆಣ್ಣೆ, ಕುಡಿಯಕ್ಕೆ ಹಾಲು ತಂದಿದ್ದೀನಿ. ಬನ್ನಿ ಒಳಗೆ ಹೋಗೋಣ.” + +“ಖಂಡಿತ ಹಸಿವಾಗಿದೆ. ಅದೇನನ್ನು ತಂದಿರುವೆಯೋ, ಅದನ್ನು ಇಲ್ಲೇ ಕೊಡು” ಎಂದೆ ನಾನು. + +ಅವನು ಎಲೆಯಲ್ಲಿ ಮುದುರಿ ತಂದಿದ್ದ ಎರಡು ರೊಟ್ಟಿ, ಬೆಣ್ಣೆ ಕೊಟ್ಟ. ನಾನು ಆತುರದಿಂದ ತಿನ್ನತೊಡಗಿದೆ. ಅದು ಆ ಕ್ಷಣದಲ್ಲಿ ಯಾವ ರಾಜಭೋಜನಕ್ಕೂ ಕಡಿಮೆ ಯಾಗಿರಲಿಲ್ಲ. ಹೌದು, ಅದೊಂದು ಸ್ವಭಾವ ನನ್ನಲ್ಲಿದೆ. ಅರಮನೆಯ ಮೃಷ್ಟಾನ್ನವನ್ನು ಚಪ್ಪರಿಸಿಕೊಂಡು ತಿನ್ನುವಂತೆ, ಬಡವನಾದ ಮಿತ್ರ ಕುಚೇಲನ ಮನೆಯ ಅವಲಕ್ಕಿಯನ್ನೂ ಅಷ್ಟೇ ರುಚಿಕರವಾಗಿ ಆಸ್ವಾದಿಸಬಲ್ಲೆ. ವಿದುರನ ಮನೆಯ ಸರಳ ಆಹಾರವೂ ಅಷ್ಟೇ ಸವಿಯಾಗಿರುತ್ತದೆ. ಇಷ್ಟರಿಂದಲೇ ನಾನು ಸ್ಥಿತಪ್ರಜ್ಞ ಎನ್ನುವುದಾದರೆ, ಖಂಡಿತ ನಾನು ಸ್ಥಿತಪ್ರಜ್ಞನೇ! + +ರೊಟ್ಟಿ ತಿಂದು ಹಾಲು ಕುಡಿದ ಮೇಲೆ ಜರಾ ನನ್ನ ಎಡ ಪಾದವನ್ನು ತನ್ನ ತೊಡೆಯ ಮೇಲಿರಿಸಿಕೊಂಡು, ಪಟ್ಟಿಯನ್ನು ಬಿಚ್ಚಿ ನೋಡಿದ. “ಒಡೆಯ, ಗಾಯ ಮಾಯ್ತಾ ಇದೆ. ಇನ್ನು ಎರಡು ಮೂರು ದಿನ ಮದ್ದು ಮಾಡಿದ್ರೆ ಪೂರ್ತಿ ಗುಣ ಆಗುತ್ತೆ” ಎಂದು ಸೊಪ್ಪನ್ನು ಮತ್ತೆ ಅರೆದು ಕಟ್ಟಿದ. ನಾನು ಸದ್ಯದಲ್ಲಿ ಸ್ವಲ್ಪ ಹೊತ್ತು ಅಲ್ಲೇ ಕುಳಿತಿದ್ದು ನಂತರ ಕುಟೀರದೊಳಗೆ ಹೋಗಿ ಮಲಗುವುದಾಗಿ ಹೇಳಿದೆ. ಅವನು ನಿನ್ನೆ ತಂದಿದ್ದ ಮೊಲದ ದೇಹವನ್ನು ಹೆಗಲ ಮೇಲೆ ಹಾಕಿಕೊಂಡು, ಬಿಲ್ಲು ಬಾಣ ಹಿಡಿದು, ಸಂಜೆ ಬೇಗ ಬರುವುದಾಗಿ ಹೇಳಿ ಹೊರಟುಹೋದ. ಮೊಲದ ಮಾಂಸವನ್ನು ನನ್ನೆದುರು ಬೇಯಿಸಿ ತಿನ್ನಲು ಸಂಕೋಚ ಪಟ್ಟುಕೊಂಡು ತನ್ನ ಪರಿಚಿತರ ಮನೆಗೆ ತೆಗೆದುಕೊಂಡು ಹೋದನೆಂದು ನಾನು ಅರ್ಥ ಮಾಡಿಕೊಂಡೆ. + +ನಾನು ಒಂಟಿಯಾಗುತ್ತಿದ್ದಂತೆ ಮೊನ್ನೆಯ ಸಮುದ್ರ ತೀರದ ಹತ್ಯಾಕಾಂಡ ನೆನಪಾಯಿತು, ವಿಷಾದವಾಯಿತು. ಒಂದು ಕ್ಷಣ ಅರಮನೆಗೆ ಹೋಗಿಬಿಡಲೇ ಎನ್ನಿಸಿತು. ಅಲ್ಲಿ ಇನ್ನು ನನಗೇನು ಕೆಲಸ? ಎಂಬ ಪ್ರಶ್ನೆ ಮೂಡಿತು. ನಿನ್ನೆಯ ಹತ್ಯಾಕಾಂಡದ ಆರಂಭವನ್ನು ನೋಡಿದರೆ, ಬಹುಶಃ ಯಾದವ ಮುಖ್ಯರಲ್ಲಿ ಯಾರೂ ಬದುಕಿರಲಾರರು. ನಗರದಲ್ಲಿ, ಅರಮನೆಯಲ್ಲಿ ನನಗಿಂತ ಮುದುಕರಾದ ಕೆಲವರಿರಬಹುದು. ಈಗ ನಾನು ಮಾಡಬೇಕಾದ ಮಹತ್ವದ ಕರ‍್ಯ ಯಾವುದೂ ಇಲ್ಲ, ಸಾಧಿಸಬೇಕಾದ ಯಾವ ಆದರ್ಶವೂ ಇಲ್ಲ. ಅಂಥ ಶಕ್ತಿ, ಉತ್ಸಾಹಗಳೂ ದೇಹದಲ್ಲಿ ಉಳಿದಿಲ್ಲ. ಮುಪ್ಪು ಬಂದು ಹಲವು ವರ್ಷಗಳು ಕಳೆದರೂ, ಅದನ್ನು ಮರೆತು, ಸೋಗಿನ ಸ್ಥಿತಪ್ರಜ್ಞತೆಯಲ್ಲಿ ಕೆಲವು ಕಾಲ ಕಳೆದದ್ದಾಯಿತು. ಹೌದು, ಒಂದು ರೀತಿಯಲ್ಲಿ ನನ್ನ ಇಡೀ ಬದುಕು, ನನಗೇ ಈಗ ಸೋಗಿನ ಪ್ರದರ್ಶನವಿರಬಹುದೇ ಎಂಬ ಸಂದೇಹ ಮೂಡಿಸುತ್ತಿದೆ. + +ನನ್ನ ಬದುಕು ಸಾಗಿ ಬಂದ ದಾರಿಯನ್ನು ಒಮ್ಮೆ ಹಿಂದಿರುಗಿ ನೋಡಬೇಕೆಂದು ಪ್ರೇರಣೆಯಾಯಿತು. ನನ್ನ ಕಥೆ ಎಲ್ಲಿಂದ ಆರಂಭಗೊಂಡಿತು! ನನಗೆ ಬುದ್ಧಿ ತಿಳಿದಾಗಿನ ನೆನಪು ಗೋಕುಲಕ್ಕೇ ಕರೆದೊಯ್ಯುತ್ತದೆ…… + +ಎರಡು + +ನನಗಾಗ ಐದಾರು ವರ್ಷ ವಯಸ್ಸಿರಬೇಕು. ಬಲರಾಮ ಬಹುಶಃ ನನಗಿಂತ ಎರಡು ಮೂರು ವರ್ಷ ದೊಡ್ಡವನಿರಬಹುದು. ಬಲರಾಮ ಬೆಳ್ಳಗಿದ್ದ. ನಾನು ಶಾಮಲ ವರ್ಣದವನು. ಅದಕ್ಕೇ ನನಗೆ ‘ಕೃಷ್ಣ’ ಎಂದು ಹೆಸರಿಟ್ಟರಂತೆ. ಬಲರಾಮ ಹೆಸರಿಗೆ ತಕ್ಕಂತೆ ಬಲವಾಗಿಯೂ ಇದ್ದ, ಗಾತ್ರವಾಗಿಯೂ ಇದ್ದ. + +ಒಂದು ರೀತಿಯಲ್ಲಿ ಗೋಕುಲದ ಹುಡುಗರಿಗೆಲ್ಲ ನಾವೇ ನಾಯಕರು. ಎಷ್ಟೋ ಸಲ ಎಲ್ಲರ ತುಂಟಾಟಗಳಿಗೆ ನಾವೇ ಹೊಣೆಯಾಗಬೇಕಾಗಿತ್ತು. ಅದರಲ್ಲೂ, ಹೆಚ್ಚಾಗಿ ನಾನೇ ಗುರಿಯಾಗುತ್ತಿದ್ದೆ. ಆದರೆ ಅಮ್ಮ ಯಶೋದೆಗೆ ನನ್ನ ಮೇಲೆ ಎಷ್ಟು ಅಕ್ಕರೆ ಯಿತ್ತೆಂದರೆ, ನನ್ನ ಎಲ್ಲ ತಪ್ಪುಗಳನ್ನೂ ಸಾಮಾನ್ಯವಾಗಿ ಕ್ಷಮಿಸಿಬಿಡುತ್ತಿದ್ದಳು. ತೀರ ಕೋಪ ಬಂದಾಗ ಒಂದೆರಡು ಏಟು ಕೊಟ್ಟರೂ, ಮರುಕ್ಷಣದಲ್ಲಿ ತಬ್ಬಿಕೊಂಡು “ನನ್ನನ್ನು ಏಕೆ ಗೋಳಾಡಿಸುತ್ತೀಯೋ ಕೃಷ್ಣ? ನಿನಗೆ ಹೊಡೆದರೆ ನನ್ನ ಕರುಳು ಸುಟ್ಟು ಹೋಗುತ್ತದೆ ಎಂದು ನಿನಗೇಕೋ ಅರ್ಥವಾಗುವುದಿಲ್ಲ? ತುಂಟ ಹುಡುಗರ ಸಹವಾಸ ಮಾಡಬೇಡವೆಂದರೆ ಕೇಳುವುದಿಲ್ಲ” ಎಂದು ಜೋರಾಗಿ ಅತ್ತುಬಿಡುತ್ತಿದ್ದಳು. + +ಅವಳ ಸಂಕಟವನ್ನು ನೋಡಲಾರದೆ ನಾನೂ ಅವಳ ತೊಡೆಯಲ್ಲಿ ಮುಖ ಹುದುಗಿಸಿ, “ಅಳಬೇಡಮ್ಮ, ನಾನು ಇನ್ನು ಮೇಲೆ ಯಾವ ತಪ್ಪನ್ನೂ ಮಾಡುವುದಿಲ್ಲ” ಎಂದು ಬಿಕ್ಕಳಿಸುತ್ತಿದ್ದೆ. + +ಎಂಥ ವಾತ್ಸಲ್ಯ! ಸಾಗರದಷ್ಟು ಸಮೃದ್ಧವಾದ ಯಶೋದೆಯ ವಾತ್ಸಲ್ಯವನ್ನು ನೆನಪು ಮಾಡಿಕೊಂಡರೆ, ಈಗಲೂ ನಾನೊಂದು ಪುಟ್ಟ ಮಗುವಾಗಿ, ಮತ್ತೆ ಅವಳ ಮಡಿಲಲ್ಲಿ ಮಲಗಿರುವಂತೆ ಭ್ರಮೆಯಾಗುತ್ತದೆ. ನಾನು ಅವಳೇ ನನ್ನ ಹೆತ್ತ ತಾಯಿಯೆಂದು ಕೊಂಡಿದ್ದೆ, ಆದರೆ ಅವಳು ನನ್ನ ಸಾಕುತಾಯಿ, ಮಥುರೆಯ ವಸುದೇವ, ದೇವಕಿಯರು ನನ್ನ ಹೆತ್ತ ತಂದೆ ತಾಯಿಗಳೆಂದು ನನಗೆ ಆರೇಳು ವರ್ಷವಾದ ಮೇಲೆ ತಿಳಿಯಿತು. + +ಒಂದು ದಿನ ರಾಜಧಾನಿ ಮಥುರೆಯಿಂದ ವಸುದೇವ, ಅಕ್ರೂರ ಕುದುರೆಗಳ ಮೇಲೆ ಬಂದರು. ವಸುದೇವ ಅಪ್ಪ ನಂದನಿಗೆ ಪ್ರಾಣಮಿತ್ರನಂತೆ. ಇಬ್ಬರೂ ಸಾಂದೀಪನೀ ಮುನಿಗಳ ಆಶ್ರಮದಲ್ಲಿ ನಾಲ್ಕೈ ವರ್ಷ ಜತೆಯಲ್ಲೇ ಕಲಿಯುತ್ತಿದ್ದರಂತೆ. ಅಕ್ರೂರ ಸುಮಾರು ಇಪ್ಪತ್ತೈದು ವರ್ಷದ ತರುಣ. ಅವನು ಅಪ್ಪನಿಗೆ ದಾಯಾದಿ ಎಂದು ಆಮೇಲೆ ಗೊತ್ತಾಯಿತು. + +ಅಮ್ಮನ ತೊಡೆಯ ಮೇಲೆ ನಾನು ಮಲಗಿದ್ದೆ. ಬಲರಾಮ ಹತ್ತಿರದಲ್ಲೇ ಚಿಕ್ಕಮ್ಮ ರೋಹಿಣಿಯ ತೊಡೆಯ ಮೇಲೆ ಮಲಗಿದ್ದ. ಎದುರಿಗೆ ಅಮ್ಮ, ಅಪ್ಪ ನಂದ, ವಸುದೇವ, ಅಕ್ರೂರ ಮಾತನಾಡುತ್ತ ಕುಳಿತಿದ್ದರು. ವಸುದೇವ ಮಥುರೆಯ ರಾಜ ಕಂಸನ ತಂಗಿಯ ಗಂಡನೆಂಬುದೂ ನನಗೆ ಮೊದಲು ಗೊತ್ತಿರಲಿಲ್ಲ. + +“ಇವರ ಬಳಿಗೆ ಹೋಗು ಮಗು” ಎಂದಳು ಅಮ್ಮ ವಸುದೇವನನ್ನು ತೋರಿಸಿ. ಬಾಲ್ಯದಲ್ಲಿ ನನ್ನನ್ನು ಯಾರು ಪ್ರೀತಿಸಿದರೂ, ನಾನು ಅವರ ಬಳಿಗೆ ಹೋಗುತ್ತಿದ್ದೆ. ಈಗಲೂ ಹೋದೆ. ನಾನು ಮೊದಲು ಒಂದೆರಡು ಸಲ ವಸುದೇವನನ್ನು ನಮ್ಮ ಗೋಕುಲದ ಮನೆಯಲ್ಲಿ ಕಂಡಿದ್ದೆ. ನಾನು ಅವನನ್ನು ಯಾವ ಶಬ್ದದಿಂದಲೂ ಸಂಬೋಧಿಸುತ್ತಿರಲಿಲ್ಲ. ವಸುದೇವ ನನ್ನನ್ನು ತೊಡೆಯ ಮೇಲೆ ಕೂಡಿಸಿಕೊಂಡು ಮುದ್ದು ಮಾಡಿದ. ನನಗೆ ಒಂದಿಷ್ಟು ಮುಜುಗರವಾಯಿತು. “ಇವರು ಯಾರು ಗೊತ್ತೆ?” ಎಂದು ಅಪ್ಪ ನಂದ ಕೇಳಿದ. + +“ನಿನ್ನ ಮಿತ್ರ ಎಂದು ನನಗೆ ಗೊತ್ತು” ಎಂದೆ. + +“ಹೌದು ವಸುದೇವ ನನ್ನ ಪ್ರಾಣಮಿತ್ರ ನಿಜ. ಇವನು ನಿನ್ನ ತಂದೆಯೆಂಬುದೂ ಅಷ್ಟೇ ನಿಜ” ಅಪ್ಪ ಹೇಳಿದ. + +ನಾನು ಆಘಾತಗೊಂಡೆ, “ಏನಿಲ್ಲ, ನೀನು ಸುಳ್ಳು ಹೇಳುತ್ತಿರುವೆ” ಎಂದು ನಾನು ಯಶೋದೆಯ ಬಳಿಗೆ ಧಾವಿಸಿ, “ಅಮ್ಮ, ನೀನೇ ಹೇಳು, ನೀನು ತಾನೇ ನನ್ನ ಅಮ್ಮ” ಎಂದು ಅವಳ ತೊಡೆಯಲ್ಲಿ ಮುಖ ಹುದುಗಿಸಿದೆ. + +ಅಮ್ಮ ಮೊದಲು ಮಾತಾಡಲಿಲ್ಲ. ಆದರೆ ಕಂಬನಿ ಧಾರಾಕಾರವಾಗಿ ಧುಮುಕುತ್ತಿತ್ತು. “ಹೌದು ಕಂದ, ನಾನೇ ನಿನ್ನ ಅಮ್ಮ, ನಿನಗೆ ಹಾಲೂಡಿ ಬೆಳೆಸಿದವಳು, ಆದರೆ ನಿನ್ನ ಹೆತ್ತಮ್ಮ ಈ ವಸುದೇವಣ್ಣನ ಹೆಂಡತಿ ದೇವಕಿ. ಇವರೇ ನಿನ್ನ ತಂದೆ. ನಾವಿಬ್ಬರೂ ನಿನ್ನ ಸಾಕು ತಂದೆ ತಾಯಿ, ಅಷ್ಟೆ” ಎಂದಳು ಅಮ್ಮ. + +“ಹೌದು ಮಗು” ನಂದ ಹೇಳಿದ, “ನಾವಿಬ್ಬರೂ ನಿನ್ನ ಸಾಕು ತಂದೆ ತಾಯಿಗಳು.” + +“ಹಾಗಾದರೆ, ನಾನು ಇಲ್ಲಿಂದ ಹೊರಟುಹೋಗಬೇಕೆ?” ನಾನು ಹತಾಶೆಯಿಂದ ಕೇಳಿದೆ. + +ಅಳುತ್ತಲೇ ಯಶೋದೆ ನನ್ನ ತಲೆಯನ್ನು ತನ್ನ ಎದೆಗೆ ಅಪ್ಪಿಕೊಂಡು, ನನ್ನ ತಲೆಯ ಮೇಲೆ ತನ್ನ ಕಣ್ಣೀರಿನ ಅಭಿಷೇಕ ಮಾಡುತ್ತ ಹೇಳಿದಳು, “ನಿನ್ನನ್ನು ಹೆತ್ತ ತಾಯಿ ದೇವಕಿ. ದೇವತೆಯಂಥ ಹೆಂಗಸು ಮಗು. ನನಗೆ ಹುಟ್ಟಿದ ಮಗು ಸತ್ತುಹೋಗಿ, ಸನ್ನಿ ಹಿಡಿದು ನಾನು ಹುಚ್ಚಿಯಂತಾಗಿದ್ದೆ. ಆಗ, ಇನ್ನೂ ಎದೆಹಾಲು ಕುಡಿಯುತ್ತಿದ್ದ, ಇನ್ನೂ ಒಂದು ವರ್ಷ ತುಂಬಿರದ ತನ್ನ ಕರುಳ ಕುಡಿಯನ್ನು ನನಗೆ ಕಳಿಸಿಕೊಟ್ಟು ನನ್ನನ್ನು ಬದುಕಿಸಿದಳು. ಹೌದು ಕೃಷ್ಣ, ನೀನು ಬಾರದಿದ್ದರೆ ನಾನು ಸತ್ತು ಹೋಗುತ್ತಿದ್ದೆ. ನಿನ್ನನ್ನು ಪ್ರೀತಿಸುವ ಅಧಿಕಾರ ನನಗಿದೆ. ಆದರೆ ನೀನು ಸಂಪೂರ್ಣವಾಗಿ ನನ್ನ ಮಗ ಎಂದು ಹೇಳಿಕೊಂಡರೆ ಅದು ನಿನ್ನ ತಾಯಿಗೆ ದ್ರೋಹ ಮಾಡಿದಂತಾಗುತ್ತದೆ. ಎಂದಿದ್ದರೂ ನೀನು ಆ ಮಹಾತಾಯಿ ದೇವಕಿಯ ಮಗನೇ.” + +ಆ ವಯಸ್ಸಿನ ನನ್ನ ಅರಿವಿಗೆ ಅದೆಲ್ಲ ವಿಚಿತ್ರವಾಗಿ ಕಂಡಿರಬಹುದು. ಯಶೋದೆ ಯನ್ನೇ ತಾಯಿಯೆಂದು ಭಾವಿಸಿಕೊಂಡಿದ್ದ ನನಗೆ, ನನ್ನ ಹೆತ್ತ ತಾಯಿ ಬೇರೆಯವಳು, ವಸುದೇವ ನನ್ನ ತಂದೆ ಎಂದಾಗ ನಂಬಲಾಗದ ಆಘಾತವಂತೂ ಉಂಟಾಯಿತು. ಆದರೆ ದಿನ ಕಳೆದಂತೆ, ವಯಸ್ಸು ಬೆಳೆದಂತೆ ದೇವಕಿ ಎಂಥ ಉದಾತ್ತಳು ಎಂಬ ಅಪರಿಮಿತ ಗೌರವ ಭಾವನೆಯುಂಟಾಯಿತು. ಯಾವ ತಾಯಿ ತಾನೆ ತನ್ನ ವರ್ಷ ತುಂಬದ ಮಗುವನ್ನು, ಗಂಡನ ಗೆಳೆಯನ ಹೆಂಡತಿಗೆ ಕೊಡುತ್ತಾಳೆ? ಅಂಥ ಔದರ‍್ಯ ಬರಬೇಕಾದರೆ ದೇವಕಿ ನಿಜವಾಗಲೂ ದೇವತೆಯೇ ಎಂಬ ಭಾವನೆ ಸ್ಥಿರವಾಯಿತು. + +ಬಾಲ್ಯದ ಭಾವುಕತೆಯನ್ನು ಮೀರಿದ, ವಯಸ್ಸಿಗೆ ಮೀರಿದ ಆಲೋಚನಾ ಶಕ್ತಿ ನನ್ನಲ್ಲಿತ್ತು. ವಾಸ್ತವವನ್ನು ಬಹು ಬೇಗನೆ ಅರ್ಥ ಮಾಡಿಕೊಂಡೆ. ಆದರೂ ನಂದ ಯಶೋದೆಯರ ಪ್ರೀತಿ ವಾತ್ಸಲ್ಯದ ಮುಂದೆ ನಾನು ಕರಗಿ ಹೋಗುತ್ತಿದ್ದೆ. ಅದು ಅಪರಿಮಿತವಾದ ವಾತ್ಸಲ್ಯ! ಹೆತ್ತವರು, ಅಂಥ ಪ್ರೀತಿ ವಾತ್ಸಲ್ಯ ತೋರಿಸುತ್ತಿದ್ದರೇ ಎಂದು ಸಂದೇಹ ಪಡುವಷ್ಟು ಅಗಾಧವಾದ ಅಕ್ಕರೆ! + +ಗೋಕುಲದಲ್ಲಿ ನಾನು ಗೋಪಾಲಕನಂತೆಯೇ ಬೆಳೆದೆ. ಬಲರಾಮ ಸದಾ ನನ್ನ ಜೊತೆಯಲ್ಲಿರುತ್ತಿದ್ದ. ಚಿಕ್ಕಮ್ಮ ರೋಹಿಣಿ ಆಗಾಗ ಬಂದು ತನ್ನ ಮಗನನ್ನು ನೋಡಿ ಕೊಂಡು, ದೇವಕಿ ವಸುದೇವರ ವಾರ್ತೆಯನ್ನು ತಿಳಿಸಿ, ಕೆಲವು ದಿನವಿದ್ದು, ಇಲ್ಲಿಂದ ನನ್ನ ಮತ್ತು ನಂದ ಯಶೋದೆಯರ ವಾರ್ತೆಯನ್ನು ತೆಗೆದುಕೊಂಡು ಹೋಗುತ್ತಿದ್ದಳು. ನನಗೂ ಬಲರಾಮನಿಗೂ ವಸುದೇವನೇ ತಂದೆ, ತಾಯಿಯರು ಮಾತ್ರ ಬೇರೆ. ಅವನು ನನ್ನ ಸ್ವಂತ ಅಣ್ಣ ಎಂದು ಅರ್ಥವಾದ ದಿನದಿಂದ ನಾನು ಅವನನ್ನು ಪ್ರೀತಿ ಗೌರವಗಳಿಂದ ಕಾಣತೊಡಗಿದೆ. + +ಆಟಪಾಟಗಳೆಂದರೆ ನನಗೆಷ್ಟು ಇಷ್ಟವೋ, ಹಾಲು ಬೆಣ್ಣೆಗಳೆಂದರೂ ಅಷ್ಟೇ ಇಷ್ಟ. ನಂದಗೋಪ ಇಡೀ ಗೋಕುಲದ ಗೋಪಾಲಕರ ನಾಯಕನೆಂದ ಮೇಲೆ ಅವನಲ್ಲಿ ಗೋಸಂಪತ್ತಿಗೆ ಕೊರತೆಯೇ? ಮನೆಯಲ್ಲಿ ಹಾಲು ಮೊಸರು ಬೆಣ್ಣೆಗಳ ಸಮೃದ್ಧಿ. ವಾರಕ್ಕೊಮ್ಮೆ ಬೆಣ್ಣೆಯನ್ನು ಪೂರೈಸಲು, ಇತರ ಗೋಪಾಲಕರ ಬಂಡಿಗಳೊಂದಿಗೆ ನಮ್ಮ ಬಂಡಿಯೂ ಮಥುರೆಗೆ ಹೋಗಿ ಬರುವುದಿತ್ತು. ತುಸು ದೂರದ ಕೆಲವು ಪಟ್ಟಣಗಳಿಗೂ ಗೋಕುಲದಿಂದ ಬೆಣ್ಣೆ ಪೂರೈಕೆಯಾಗುತ್ತಿತ್ತು. ಕೆಲವರು ಬೆಣ್ಣೆ ಕಾಯಿಸಿದ ತುಪ್ಪವನ್ನು ಜಾಡಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದರು. ಒಟ್ಟಾರೆ ಸಾಕಷ್ಟು ಗೋಪಾಲಕರ ಕುಟುಂಬಗಳಿದ್ದ ನಮ್ಮ ಗೋಕುಲ ಸಂಪತ್ಸಮೃದ್ಧಿಯಿಂದ ಕೂಡಿತ್ತು.ವಿಶೇಷವಾಗಿ ತನ್ನ ಮಿತ್ರ ವಸುದೇವ ಮತ್ತು ಅವನ ಕುಟುಂಬಕ್ಕೆಂದು, ಅಪ್ಪ ನಂದ ಪ್ರತಿದಿನ ಅರಮನೆಗೆ ಸಮೃದ್ಧವಾಗಿ ಹಾಲನ್ನು ಕಳಿಸಿಕೊಡುತ್ತಿದ್ದ. ತಿಂಗಳಿಗೊಮ್ಮೆ ಯಾದರೂ ತಾನೇ ಅರಮನೆಗೆ ಹೋಗಿ ಮಿತ್ರನನ್ನು ಮಾತಾಡಿಸಿಕೊಂಡು ಬರುತ್ತಿದ್ದ. ಆದರೆ ನನ್ನನ್ನು ಮಾತ್ರ ಕರೆದುಕೊಂಡು ಹೋಗುತ್ತಿರಲಿಲ್ಲ. ಆಕಸ್ಮಿಕವಾಗಿ ಹೆತ್ತ ತಂದೆ ತಾಯಿಗಳ ಮೋಹದಿಂದ ನಾನು ಅಲ್ಲೇ ಉಳಿದುಬಿಟ್ಟರೆ? ಎಂದು ಯಶೋದೆಗೆ ಅಳುಕಿದ್ದಂತಿತ್ತು. ಅಂಥ ಸಂದಿಗ್ಧ ಸ್ಥಿತಿ ಬರಬಾರದೆಂದು, ಅಮ್ಮ ದೇವಕಿಯೂ ನನ್ನನ್ನು ನೋಡಲು ಒಮ್ಮೆಯೂ ಗೋಕುಲಕ್ಕೆ ಬರಲಿಲ್ಲ. ಆದರೆ ಬಲರಾಮ ಮಾತ್ರ ಒಂದೆರಡು ಸಲ ಹೋಗಿ ಬಂದಿದ್ದ. ಅಂಥ ಒಂದು ದಿನ ನಾನು ಅವನನ್ನು ಕೇಳಿದೆ, “ಅಣ್ಣ, ಅರಮನೆ ಹೇಗಿದೆ? ಬಹಳ ವೈಭವದಿಂದ ಕೂಡಿದೆಯೇ?” + +“ಹೌದು, ವೈಭವದಿಂದ ಕೂಡಿದೆ. ನಮ್ಮ ಸೋದರ ಮಾವ, ಅಂದರೆ, ನಿನ್ನ ತಾಯಿ ದೇವಕಿಯ ಅಣ್ಣ ಕಂಸನೇ ಈಗ ರಾಜನಂತೆ” ಎಂದ ಬಲರಾಮ.“ಅಣ್ಣ, ನನ್ನ ಹೆತ್ತಮ್ಮ ಹೇಗಿದ್ದಾಳೆ? ನಿನ್ನ ಅಮ್ಮ ರೋಹಿಣಿಯಷ್ಟು ಸುಂದರ ವಾಗಿದ್ದಾಳೆಯೆ? ಅಥವಾ ಈ ಅಮ್ಮ ಯಶೋದೆಗಿಂತ ಚೆನ್ನಾಗಿದ್ದಾಳೆಯೆ? ಅಥವಾ ನನ್ನ ಹಾಗೆ ಕಪ್ಪಗಿದ್ದಾಳೆಯೆ?” + +“ಕಪ್ಪಗಿರುವವರೆಲ್ಲ ನಿನ್ನಷ್ಟು ಸುಂದರವಾಗಿರುವುದಿಲ್ಲ ಕೃಷ್ಣ!” ಎಂದು ಅಮ್ಮ ಯಶೋದೆ ಹತ್ತಿರ ಬಂದು ನನ್ನನ್ನು ತಬ್ಬಿಕೊಂಡಳು. ನನಗೆ ಮುಜುಗರವಾಯಿತು. “ಅಮ್ಮ, ನಾನು ಆ ಅಮ್ಮನನ್ನು ನೋಡೇ ಇಲ್ಲವಲ್ಲ, ಅದಕ್ಕೇ, ಅವಳು ಹೇಗಿದ್ದಾಳೆ, ಎಂದು ಕೇಳುತ್ತಿದ್ದೆ” ಎಂದೆ. + +“ನಿನ್ನ ಅಮ್ಮ” ಯಶೋದೆ ಹೇಳಿದಳು, “ನನಗಿಂತ, ಬಲರಾಮನ ತಾಯಿ ರೋಹಿಣಿಗಿಂತ, ಲೋಕದ ಎಲ್ಲ ತಾಯಂದಿರಿಗಿಂತ ಸುಂದರವಾಗಿದ್ದಾಳೆ. ಇಲ್ಲವಾದರೆ ನಿನ್ನಂಥ ಸುಂದರವಾದ ಮಗು ಹುಟ್ಟಲು ಸಾಧ್ಯವೆ?” + +“ಹಾಗಾದರೆ, ಅವಳು ನನ್ನ ಹಾಗೆ ಕಪ್ಪು, ಎಂದಾಯಿತು.” + +“ಇಲ್ಲ, ದೇವಕಿ ಅಪರಂಜಿ ಚಿನ್ನದಂತಿದ್ದಾಳೆ. ಅವಳ ಗುಣ ಆ ಚಿನ್ನಕ್ಕಿಂತ ಶ್ರೇಷ್ಠ. ಇಲ್ಲವಾದರೆ ನನ್ನ ಜೀವವುಳಿಸಲು, ವರ್ಷ ತುಂಬದ ತನ್ನ ಕರುಳ ಕುಡಿಯನ್ನು ನನಗೆ ಕೊಡುತ್ತಿದ್ದಳೆ? ನೀನು ನನ್ನ ಮಗನಲ್ಲ ಎಂಬ ಭಾವನೆ ಬರಬಾರದೆಂದು ಅವಳು ನಿನ್ನನ್ನು ನೋಡಲು ಒಮ್ಮೆಯೂ ಇಲ್ಲಿಗೆ ಬರಲಿಲ್ಲ ಕೃಷ್ಣ, ಅಂಥ ಮಹಾಸಾಧ್ವಿ. + +ದೇವಕಿಯ ವಾತ್ಸಲ್ಯ, ಹರಕೆ ಆಶೀರ್ವಾದವೂ ನಿನಗೆ ದೊರೆಯಬೇಕು. ಈ ಸಲ ಅಪ್ಪನೊಂದಿಗೆ ನೀನೂ ಮಥುರೆಯ ಅರಮನೆಗೆ ಹೋಗಿ ಬಾ ಕಂದ.”“ಬೇಡ ಬಿಡಮ್ಮ, ನಿನ್ನ ಮನಸ್ಸಿಗೆ ನೋವಾಗುತ್ತದೆ.” + + + +“ಇಲ್ಲ ಕೃಷ್ಣ, ಸತ್ಯವನ್ನು ಅಂಗೀಕರಿಸಿದಂತೆ, ಅದನ್ನು ನಾವು ಗೌರವಿಸಲೂ ಬೇಕು. ನೀನು ದೇವಕಿಯ ಮಗನೆಂಬುದು ನನಗೂ ಗೊತ್ತು, ಅವಳಿಗೂ ಗೊತ್ತು, ಈಗ ನಿನಗೂ ಗೊತ್ತು. ನಿನಗೆ ಯಾರು ಬೇಕೆಂದು ಆಯ್ಕೆ ಮಾಡಿಕೊಳ್ಳುವ ಸಂದಿಗ್ಧ ವಂತೂ ಇಲ್ಲ. ನಿನಗೆ ದೇವಕಿ, ನಾನು ತಾಯಿಯಾದಂತೆ, ಈ ಗೋಕುಲದ ಎಲ್ಲ ಹೆಂಗಸರೂ ತಾಯಂದಿರೇ. ಅವರೆಲ್ಲ ನಿನ್ನನ್ನು ಎಷ್ಟು ಪ್ರೀತಿಸುತ್ತಾರೆಂದು ನಿನಗೂ ಗೊತ್ತಲ್ಲ. ಜೊತೆಗೆ ನೀನು ಕೆಚ್ಚಲಿಗೇ ಬಾಯಿ ಹಾಕಿ ಹಾಲು ಕುಡಿಯಲು ಬಿಟ್ಟ ಗಂಗೆ ಹಸು ನಿನ್ನ ತಾಯಿಯಲ್ಲ ಎಂದು ಹೇಗೆ ಹೇಳುವುದು?” + +ಅದು ಮಾತ್ರ ನೂರಕ್ಕೆ ನೂರು ಸತ್ಯ. ಗೋಕುಲದ ಎಲ್ಲ ತಾಯಂದಿರ ವಾತ್ಸಲ್ಯದ ಸೆರಗಿನ ವಾಸನೆ ನನ್ನ ಉಸಿರಿನಲ್ಲಿ ಬೆರೆತುಹೋಗಿದೆ. ಅಷ್ಟೊಂದು ಜನರ ಅಕ್ಕರೆಯ ಒಂದೊAದು ಬಿಂದು ನನ್ನ ವ್ಯಕ್ತಿತ್ವದಲ್ಲಿ ಸೇರಿಕೊಂಡು, ನನ್ನನ್ನು ನಿಜದ ಮನುಷ್ಯನಾಗು ವಂತೆ ಮಾಡಿವೆ ಎಂದು ಈಗ ಅನ್ನಿಸುತ್ತಿದೆ. ನಾನು ಅರಮನೆಯ ಅರೆಬೆಂದ ನಾಗರಿಕರ ನಡುವಿನಿಂದ, ಮುಕ್ತವಾಗಿ ಪ್ರಾಣಿ, ಪ್ರಕೃತಿಗಳೊಂದಿಗೆ ಸಮಾಹಿತವಾಗಿ ತೃಪ್ತಿಯಿಂದ ಬದುಕುವ ಈ ಗೋಕುಲದ ಜನರ ನಡುವೆ ಬಂದು ಬಿದ್ದೆನೆಂದು ಈಗ ಹೆಮ್ಮೆಯೆನಿಸುತ್ತಿದೆ; ಮನಸ್ಸು ಕೃತಜ್ಞತೆಯಿಂದ ಮೃದುವಾಗುತ್ತದೆ. + +ನಾನು ಯಶೋದೆಯ ಮಡಿಲು ಸೇರಿದ ಹೊಸದರಲ್ಲಿ ಇಡೀ ಗೋಕುಲದ ಹೆಂಗಸರೆಲ್ಲ ನಮ್ಮ ಮನೆಗೆ ದಾಳಿಯಿಡುತ್ತಿದ್ದರಂತೆ. “ಎಂಥ ಮುದ್ದು ಮಗು! ಯಶೋದೆ, ಇಂಥ ಮಗುವನ್ನು ಪಾಲಿಸಲು ನೀನು ಎಷ್ಟು ಪುಣ್ಯ ಮಾಡಿದ್ದೆಯೋ!” “ಇಂಥ ಕಂದನನ್ನು ಸಾಕಲು ನಿನಗೆ ಕೊಟ್ಟ ಆ ದೇವಕಿ ತಾಯಿಯದು ಎಷ್ಟು ದೊಡ್ಡ ಮನಸ್ಸಮ್ಮ!” ಇತ್ಯಾದಿ ಬಂದವರೆಲ್ಲ ಉದ್ಗರಿಸುತ್ತಿದ್ದರಂತೆ. ಸದಾ ಒಬ್ಬರಲ್ಲ ಒಬ್ಬರು, ನನ್ನನ್ನು ಎತ್ತಿ ಕೊಂಡೇ ಇರುತ್ತಿದ್ದರಂತೆ! ಕೆಲವು ಸಲ ಅವರ ಕೈಯಿಂದ ಇನ್ನೊಬ್ಬರ ಕೈಗೆ ವರ್ಗಾವಣೆ ಯಾಗುತ್ತ, ಅಮ್ಮ ಯಶೋದೆ, ನಾನು ಯಾರ ಮನೆಯಲ್ಲಿ, ಯಾರ ಮಡಿಲಲ್ಲಿರುವೆನೆಂದು ಹುಡುಕುತ್ತಾ ಎಲ್ಲ ಮನೆಗಳನ್ನೂ ಇಣುಕಿ ನೋಡಬೇಕಾಗಿತ್ತಂತೆ. ಪ್ರತಿದಿನ ಮನೆಗೆ ಎತ್ತಿಕೊಂಡು ಬಂದು, ಅಮ್ಮ ದೃಷ್ಟಿ ತೆಗೆಯುತ್ತಿದ್ದಳಂತೆ. “ನೀನು ಎಷ್ಟು ಬೇಕಾದರೂ ಬೈಯಿ ಯಶೋದೆ, ನಿನ್ನ ಕೃಷ್ಣನ ಮುಖ ನೋಡದೆ ನನಗೆ ದಿನದ ಕೆಲಸ ಮಾಡಲು ಉತ್ಸಾಹವೇ ಇರುವುದಿಲ್ಲ” ಎಂದು ಎಲ್ಲ ಹೆಂಗಸರೂ ಹೇಳುತ್ತಿದ್ದರಂತೆ. + +ಗೋಕುಲದ ಸಮೀಪದ ಗುಡ್ಡದಲ್ಲಿ ನವಿಲುಗಳು ಹಿಂಡು ಹಿಂಡಾಗಿದ್ದವು. ದನಕರುಗಳನ್ನು ಮೇಯಿಸಲು ಹೋದ ಗೋಪಾಲಕರು ನಿತ್ಯ ಅವುಗಳನ್ನು ನೋಡು ತ್ತಿದ್ದರಂತೆ. ಅವುಗಳ ದೇಹದಿಂದ ಬಿದ್ದ ಸುಂದರವಾದ ಕಣ್ಣುಳ್ಳ ಗರಿಗಳನ್ನು ತಂದು ಯಶೋದೆಗೆ ಕೊಡುತ್ತಿದ್ದರು. ಯಶೋದೆ ನನ್ನ ಉದ್ದ ಕೂದಲನ್ನು ನಯವಾಗಿ ಬಾಚಿ, ಹಣೆಯಿಂದ ಬರುವಂತೆ, ಕೂದಲು ಕೆದರದಂತೆ ಒಂದು ಪಟ್ಟಿ ಕಟ್ಟುತ್ತಿದ್ದಳು. ಆ ಪಟ್ಟಿಗೆ ಕಣ್ಣಿನ ಭಾಗವಿರುವಂತೆ ನವಿಲು ಗರಿಯನ್ನು ಸಿಕ್ಕಿಸುತ್ತಿದ್ದಳು. ಅದೇ ನನ್ನ ಪರಿಚಿತ ಅಲಂಕಾರವಾಯಿತು. ನಾನು ಗೋಕುಲವನ್ನು ಬಿಡುವವರೆಗೆ ನವಿಲುಗರಿಯ ಅಲಂಕಾರ ನನ್ನ ತಲೆಯಲ್ಲಿತ್ತು. + +ಹಾಲು ಮೊಸರು ಬೆಣ್ಣೆಗಳೆಂದರೆ ಬಾಲ್ಯದಿಂದಲೂ ನನಗೆ ಹೆಚ್ಚಿನ ಪ್ರೀತಿಯಿತ್ತಂತೆ. ಗೋಕುಲದ ಎಲ್ಲರ ಮನೆಯಲ್ಲೂ ಸಮೃದ್ಧವಾಗಿ ಹಸುಕರುಗಳಿದ್ದವು. ಎಲ್ಲರ ಮನೆಯಲ್ಲೂ ಹಾಲು ಮೊಸರು ಬೆಣ್ಣೆಗಳಿಗೆ ಕೊರತೆಯಿಲ್ಲ. ಜೊತೆಗೆ ನನ್ನ ಮೇಲಿನ ಪ್ರೀತಿಯಿಂದ ಗೋಕುಲದ ಹೆಂಗಸರು ಹಿಡಿ ಹಿಡಿ ಬೆಣ್ಣೆ ತಿನ್ನಿಸುತ್ತಿದ್ದರಂತೆ. ನನಗೆ ಆರೋಗ್ಯ ಕೆಟ್ಟರೇನು ಗತಿಯೆಂದು ಅಮ್ಮ ಯಶೋದೆ ಆತಂಕ ಪಡುವುದು ಸಹಜವಾಗಿತ್ತು. ಆದರೆ ಅಷ್ಟನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಪ್ರಕೃತಿದತ್ತವಾಗಿ ನನಗಿತ್ತು. ಗೋಕುಲದ ತಾಯಂದಿರ ವಾತ್ಸಲ್ಯ, ಅವರು ತಿನ್ನಿಸಿದ ಬೆಣ್ಣೆಯ ಶಕ್ತಿ, ಕುಡಿದ ಹಾಲಿನ ಶಕ್ತಿ ಮುಂದಿನ ನನ್ನ ದೇಹ ಸಾಮರ್ಥ್ಯಕ್ಕೆ ಮೂಲವಾಯಿತೆಂದು ಧರ‍್ಯವಾಗಿ ಹೇಳಬಲ್ಲೆ. + +ನನಗೆ ನಾಲ್ಕು ವರ್ಷಗಳಾಗುವಷ್ಟರಲ್ಲಿ ನನ್ನದೇ ವಯಸ್ಸಿನ ಗೋಕುಲದ ಮಕ್ಕಳ ಸ್ನೇಹವೂ ಆಯಿತು. ಸಂಜೆಯ ವೇಳೆ ಎಲ್ಲ ತಾಯಂದಿರೂ ತಮ್ಮ ಮಕ್ಕಳನ್ನು ಎತ್ತಿ ಕೊಂಡು ನಮ್ಮ ಮನೆಗೆ ಬಂದುಬಿಡುತ್ತಿದ್ದರು. ಅಮ್ಮನೊಂದಿಗೆ ಅವರೆಲ್ಲ ವಿನೋದದಿಂದ ಮಾತನಾಡುತ್ತಿದ್ದರು. ನಾನು ಅವರ ಮಕ್ಕಳೊಂದಿಗೆ ಆಟವಾಡುತ್ತಿದ್ದೆ. ಹಸುಕರುಗಳೂ ನಮ್ಮನ್ನು ಪ್ರೀತಿಸುತ್ತಿದ್ದವು. ಕರುಗಳು ನನ್ನ ಬಳಿಗೆ ಬಂದು ತಮ್ಮ ನಾಲಿಗೆಯಿಂದ ನನ್ನನ್ನು ನೆಕ್ಕುತ್ತಿದ್ದವು. ನಾನು ಬೇರೆ ಮಕ್ಕಳಂತೆ ಹೆದರದೆ ಹಸುಗಳ ಬಳಿಗೆ ಹೋಗಿಬರುತ್ತಿದ್ದೆ. ಅವು ನನ್ನನ್ನು ತಮ್ಮ ಒರಟು ನಾಲಿಗೆಯಿಂದ ನೆಕ್ಕುತ್ತಿದ್ದವು. ನಾನು ಅವುಗಳ ಕೆಚ್ಚಲಿಗೇ ಬಾಯಿ ಹಾಕಿ ಹಾಲು ಕುಡಿಯುತ್ತಿದ್ದೆ. ಆದರೆ ಹಾಗೆ ಹೆಚ್ಚು ಹಾಲು ಕುಡಿದದ್ದು ಗಂಗೆ ಹಸುವಿನಲ್ಲಿ. ಅದು ಅತ್ಯಂತ ಸಾಧು ಮತ್ತು ವಾತ್ಸಲ್ಯಮಯಿ ಹಸು! ಹಸು ಒದ್ದರೆ ಏನು ಗತಿ, ಎಂದು ಅಮ್ಮ ಹೆದರುತ್ತಿದ್ದಳು. ಆದರೆ ಅದು ಒರಟು ಹಸುವಿಗಿಂತ ಹೆಚ್ಚಾಗಿ ಅಕ್ಕರೆಯ ತಾಯಿಯಾಗಿತ್ತು. ಆ ವಯಸ್ಸಿ ನಲ್ಲಿ ನಾನು ಎಷ್ಟೊಂದು ಹಸುಗಳ ಹಾಲು ಕುಡಿದಿರಬಹುದು! ಅಷ್ಟು ಹಸುಗಳ ಅಕ್ಕರೆಯೂ ಇಲ್ಲಿಯವರೆಗೆ ಸಂಜೀವಿನಿಯಂತೆ ನನ್ನನ್ನು ಕಾಪಾಡಿದೆ. + +ನಾನು ಎರಡು ವರ್ಷವಾಗುತ್ತಿದ್ದಂತೆಯೇ ಅಚ್ಚುಕಟ್ಟಾಗಿ ಮಾತಾಡಲು ಆರಂಭಿಸಿದೆ ನಂತೆ. ಬೇರೆ ನನ್ನ ವಯಸ್ಸಿನ ಮಕ್ಕಳು ಇನ್ನೂ ಶಬ್ದಗಳನ್ನು ತೊದಲುತ್ತಿರುವಾಗ ನಾನು ಅರಳು ಹುರಿದಂತೆ ಮಾತಾಡುತ್ತಿದ್ದೆನಂತೆ. ದಾರಿಯಲ್ಲಿ ಹೋಗುವವರನ್ನೆಲ್ಲ ಚಿಕ್ಕಮ್ಮ, ದೊಡ್ಡಮ್ಮ, ಅತ್ತೆ, ಅಕ್ಕ, ಚಿಕ್ಕಪ್ಪ, ದೊಡ್ಡಪ್ಪ, ಮಾವ, ಅಣ್ಣ ಎಂದು ಬಾಯಿ ತುಂಬ ಕರೆದರೆ, ಎಲ್ಲ ಒಂದು ಕ್ಷಣ ನಿಂತು, ನನ್ನನ್ನು ಎತ್ತಿಕೊಂಡು ಮುದ್ದಿಸಿ ಹೋಗುತ್ತಿದ್ದರಂತೆ. ‘ನಂದ, ನಮ್ಮ ಗೋಕುಲದ ರಾಜನೆಂದರೆ ನಿನ್ನ ಮಗ ಕೃಷ್ಣನೇ! ಯಾರ ಬಾಯಲ್ಲಿ ನೋಡಿದರೂ ಅವನ ಹೆಸರೇ. ಎಲ್ಲರೂ ಏನಾದರೂ ನೆಪ ಮಾಡಿಕೊಂಡು ಅವನನ್ನು ನೋಡಿ ಹೋಗಲು ನಿನ್ನ ಮನೆಯ ಬಳಿಗೆ ಬರುತ್ತಾರೆ’ ಎಂದು ಅಪ್ಪನ ಆಪ್ತರು ಹೇಳುತ್ತಿದ್ದರಂತೆ. + +ಮೊದಮೊದಲು ಸ್ವಲ್ಪ ಹೊತ್ತು ನಾನು ಕಣ್ಣಿಗೆ ಮರೆಯಾದರೂ ಆತಂಕಪಡುತ್ತಿದ್ದ ಅಮ್ಮ, ಆಮೇಲೆ ನಿರಾಳವಾದಳು. ಗೋಕುಲದಲ್ಲಿ ಎಲ್ಲೋ ಒಂದು ಕಡೆ ಯಾರದೋ ಮನೆಯಲ್ಲಿ, ಯಾವುದೋ ತಾಯಿಯ ಮಡಿಲಿನಲ್ಲಿ ತನ್ನ ಮಗ ಹಾಯಾಗಿರುತ್ತಾನೆ, ಎಂದು ಅವಳು ನಿಶ್ಚಿಂತಳಾದಳು. + +ಸ್ವಲ್ಪ ಬೆಳೆದ ಮೇಲೆ ನನ್ನ ವಯಸ್ಸಿನ ಹುಡುಗರ ಜೊತೆ ಆಟದಲ್ಲಿ ಜಗತ್ತೇ ಮರೆತು ಹೋಗುತ್ತಿತ್ತು. ಬೀದಿಯ ಮಣ್ಣು, ಕಲ್ಲು, ಎಲ್ಲ ನಮ್ಮ ಆಟದ ವಸ್ತುಗಳೇ. ಮಗುವಿನ ಮುಗ್ಧ ಮನಸ್ಸು ಪ್ರಕೃತಿಯ ಎಲ್ಲದರೊಂದಿಗೂ ತಾರತಮ್ಯವಿಲ್ಲದೆ ಬೆರೆಯುತ್ತದೆ. ವಯಸ್ಸು ಬೆಳೆದಂತೆ ಹಿರಿಯರು ಎಲ್ಲ ತಾರತಮ್ಯಗಳನ್ನು ಮಕ್ಕಳಿಗೆ ಕಲಿಸುತ್ತಾರಲ್ಲವೆ? ಆ ಎಳೆಯ ವಯಸ್ಸಿನಲ್ಲಿ ತಿನ್ನಲು ಮಣ್ಣೂ ರುಚಿಯಾಗಿತ್ತು ಅಥವಾ ರುಚಿಗಳನ್ನು ವರ್ಗೀಕರಿಸಿ ಆಸ್ವಾದಿಸುವ ಜ್ಞಾನ ಆಗ ಇರಲಿಲ್ಲವೆಂದೂ ಹೇಳ ಬಹುದು. ಹಾಗೆ ಮಣ್ಣು ತಿಂದ ಒಂದು ದಿನ, ಅಮ್ಮ ನನಗೆ ಬಲವಾಗಿಯೇ ಬಡಿದು, ಯಥಾಪ್ರಕಾರ ಅಳುತ್ತಾ ನೆಲದ ಮೇಲೆ ಮಲಗಿಬಿಟ್ಟಳಂತೆ. ಯಥಾಪ್ರಕಾರ ನಾನು ಅವಳ ಮೇಲೆ ಬಿದ್ದು, ಇನ್ನೆಂದೂ ಮಣ್ಣು ತಿನ್ನುವುದಿಲ್ಲವೆಂದು ಗೋಳಾಡಿದೆನಂತೆ. ಅಮ್ಮ ಸಮಾಧಾನಗೊಂಡು, ನನಗೆ ಹೊಡೆದೆನಲ್ಲಾ ಎಂದು ಪಶ್ಚಾತ್ತಾಪ ಪಟ್ಟು ನನ್ನನ್ನು ಸಂತೈಸಿದಳಂತೆ. + +ಐದಾರು ವರ್ಷ ವಯಸ್ಸಾದ ಮೇಲಿನ ನೆನಪುಗಳು ಸಾಕಷ್ಟು ಪ್ರಖರವಾಗಿಯೇ ಇದ್ದರೂ, ಅದಕ್ಕೆ ಹಿಂದಿನ ಪ್ರಸಂಗಗಳು, ನಂತರ ನಾನು ಬೇರೆಯವರಿಂದ ಕೇಳಿ ತಿಳಿದದ್ದು. ಮಣ್ಣು ತಿಂದು ಅಮ್ಮನಿಂದ ಏಟು ತಿಂದಂತೆ, ಬೆಣ್ಣೆ ತಿಂದೂ ಏಟು ತಿಂದಿದ್ದೇನೆ. ಗೋಕುಲದಲ್ಲಿ ಹಾಲು ಮೊಸರು ಬೆಣ್ಣೆಗಳಿಗೆ ಕೊರತೆಯಂತೂ ಇರಲಿಲ್ಲ. ಯಾರ ಮನೆಯಲ್ಲೂ ಮಕ್ಕಳಿಗೆ ಕೊರತೆ ಮಾಡಿ ಬೆಣ್ಣೆಯನ್ನು ಮಾರಾಟ ಮಾಡುತ್ತಿರಲಿಲ್ಲ. ಎಲ್ಲ ಮಕ್ಕಳೂ ತಮ್ಮ ತಮ್ಮ ಮನೆಗಳಲ್ಲಿ ಸಮೃದ್ಧವಾಗಿ ಬೆಣ್ಣೆ ತಿನ್ನುತ್ತಿದ್ದರು. ಆದರೆ ಆ ಅಮಾಯಕ ಮನಸ್ಸಿನ ವಯಸ್ಸಿನಲ್ಲಿ ಕದ್ದು ತಿನ್ನುವ ಚಾಪಲ್ಯವುಂಟಾಗಿರಬೇಕು ಅಥವಾ ಆ ವಯಸ್ಸಿನ ಮಕ್ಕಳ ಹುಚ್ಚು ಸಾಹಸವಾಗಿರಬೇಕು. ನಮ್ಮ ಮನೆಯಲ್ಲಿ ಬೆಣ್ಣೆ ಕದ್ದು ತಿಂದಿದ್ದರೆ ಅಮ್ಮ ಕ್ಷಮಿಸಿಬಿಡುತ್ತಿದ್ದಳೇನೋ! ಆದರೆ ಗೆಳೆಯರನ್ನು ಕಟ್ಟಿಕೊಂಡು ಬೇರೆಯವರ ಮನೆಯಲ್ಲಿ ಬೆಣ್ಣೆ ಕದ್ದು ತಿಂದು, ಆ ಮನೆಯ ಗೋಪಮ್ಮ, ಅಮ್ಮನಿಗೆ ದೂರು ಹೇಳಿದಾಗ ಮಾತ್ರ ಅಮ್ಮನ ಕೋಪ ಮಿತಿಮೀರಿತು. ತುಂಟತನವನ್ನು ಅವಳು ಸಹಿಸುತ್ತಿದ್ದಳು, ಆದರೆ ಬೇರೆಯವರು ಬಂದು ದೂರು ಹೇಳುವಂಥ ತಪ್ಪು ನಡವಳಿಕೆ ಯನ್ನು ಅವಳಿಂದ ಸಹಿಸುವುದು ಸಾಧ್ಯವಾಗಲಿಲ್ಲ. ಬಲವಾಗಿಯೇ ಬಾರಿಸಿಬಿಟ್ಟಳು. ಮೈಮೇಲೆ ಬಾಸುಂಡೆ ಬರುವಷ್ಟು ಬಲವಾದ ಹೊಡೆತಗಳು! ಅಪ್ಪ ನಂದ ಬಂದು ತಡೆಯದಿದ್ದರೆ ಆ ಹೊತ್ತು ಇನ್ನಷ್ಟು ಹೊಡೆತಗಳು ಬೀಳುತ್ತಿದ್ದವು. ಅಪ್ಪ ಅಡ್ಡ ಬಂದು ಬಿಡಿಸಿ ನನ್ನನ್ನು ಎತ್ತಿಕೊಂಡು “ಸಾಕು ನಿಲ್ಲಿಸು, ಮಗುವನ್ನು ಕೊಂದುಬಿಡುತ್ತೀಯೇನು?” ಎಂದು ಗದರಿದ. + +“ಇಲ್ಲ, ನಾನು ಇವನನ್ನು ಕೊಲ್ಲುವುದಿಲ್ಲ, ನಾನೇ ಕೊಂದುಕೊಳ್ಳುತ್ತೇನೆ.” + +“ಕೃಷ್ಣ ಅಂಥ ಮಹಾಪರಾಧ ಏನು ಮಾಡಿದ?” + +“ಕಂಡವರ ಮನೆಯಲ್ಲಿ ಬೆಣ್ಣೆ ಕದ್ದು ತಿನ್ನಬೇಕೆ? ನಮ್ಮ ಮನೆಯಲ್ಲಿ ದರಿದ್ರ ಬಂದಿದೆಯೆ? ಆ ಚಂಪ ಬಂದು ದೂರು ಹೇಳಿದಾಗ ನನಗೆ ಕುತ್ತಿಗೆ ಕೊಯ್ದುಕೊಳ್ಳು ವಂತಾಯಿತು. ಈ ವಯಸ್ಸಿಗೇ ಬೆಣ್ಣೆ ಕದ್ದವನು ನಾಳೆ ದೊಡ್ಡ ಕಳ್ಳನಾಗುತ್ತಾನೆ, ಅಷ್ಟೆ.” + +“ಹಾಗಿದ್ದರೆ, ನಾನು ಈಗ ಚೋರಾಗ್ರೇಸರನಾಗಬೇಕಿತ್ತು. ಏಕೆಂದರೆ ನಾನೂ ಬಾಲ್ಯದಲ್ಲಿ ತಿನಿಸುಗಳನ್ನು ಕದಿಯುವುದರಲ್ಲಿ ನಿಸ್ಸೀಮನಾಗಿದ್ದೆನಂತೆ” ಎಂದು ಅಪ್ಪ ನಂದ ಜೋರಾಗಿ ನಕ್ಕುಬಿಟ್ಟ. ಅಮ್ಮನೂ ನಕ್ಕುಬಿಟ್ಟಳು. ಏನೇ ಆದರೂ ತನ್ನ ಮಗನನ್ನು ಯಾರಾದರೂ ಕೆಟ್ಟವನೆಂದು ಕರೆದರೆ ಮಾತ್ರ, ಅವಳಿಗೆ ಸಹಿಸುವುದು ಬಹಳ ಕಷ್ಟವಾಗುತ್ತಿತ್ತು. + +ಒಂದು ಸಲ ಇನ್ನೊಬ್ಬಳು ಗೋಪಿ, “ಯಶೋದ, ನೋಡು ನಿನ್ನ ಮಗ ಕೃಷ್ಣ ತನ್ನ ತುಂಟ ಗೆಳೆಯರೊಂದಿಗೆ ಯಾರೂ ಇಲ್ಲದಾಗ ಮನೆಗೆ ನುಗ್ಗಿ, ನೆಲುವಿನ ಮೇಲಿರಿಸಿದ್ದ ಬೆಣ್ಣೆಯ ಮಡಕೆಯನ್ನು ಒಡೆದು, ಒಂದು ದೊಡ್ಡ ಮುದ್ದೆಯಷ್ಟು ಬೆಣ್ಣೆಯನ್ನು ತಿಂದಿದ್ದಾನೆ” ಎಂದು ದೂರಿದಳು. + +ಅಮ್ಮನಿಗೆ ವಿಪರೀತ ಬೇಸರವಾಗಿ, ಒಂದು ದೊಡ್ಡ ಮಡಕೆಯಲ್ಲಿ ಬೆಣ್ಣೆಯನ್ನು ತೆಗೆದುಕೊಂಡು ಹೋಗಿ ಅವಳಿಗೆ ಕೊಟ್ಟು ಬಂದಳು. ಅವಳಿಗೆ ಮುಖಕ್ಕೆ ಹೊಡೆದಂತಾಗಿ, ಅದೇ ಬೆಣ್ಣೆಯ ಮಡಕೆಯನ್ನು ಹಿಂದಿರುಗಿಸಲು ಹೊತ್ತು ತಂದಳು. ಕ್ಷಮೆ ಕೇಳಿದಳು. ಆದರೆ ಅಮ್ಮ “ನಾನು ಒಮ್ಮೆ ಕೊಟ್ಟದ್ದನ್ನು ಹಿಂದೆ ತೆಗೆದುಕೊಳ್ಳುವುದಿಲ್ಲ. ನನ್ನ ಮಗ ಮಾಡಿದ ತಪ್ಪಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ” ಎಂದುಬಿಟ್ಟಳು. + +ಆ ತಾಯಿಯ ಸ್ವಾಭಿಮಾನ ನನ್ನ ಮೇಲೆ ಚಿಕ್ಕಂದಿನಿಂದಲೇ ಪ್ರಭಾವ ಬೀರುವುದು ಸಹಜವಾಗಿತ್ತು. ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಂದ ಯಶೋದೆಯರ ಅಕ್ಕರೆಯ ಅಮೃತವುಂಡು ನಾನು ಕೆಟ್ಟವನಾಗಿ ಬೆಳೆಯಲು ಸಾಧ್ಯವೇ? ಆಮೇಲೆ ನಾನು ಬೆಣ್ಣೆ ಕದಿಯುವ ಧರ‍್ಯ ತೋರಲಿಲ್ಲ. ಅಮ್ಮನ ಹೊಡೆತ, ಅವಳ ದುಃಖ, ಎರಡನ್ನೂ ಸಹಿಸುವುದು ನನ್ನಿಂದಾಗುತ್ತಿರಲಿಲ್ಲ. ಕೆಲವು ಸಲ ನಾನಿಲ್ಲದಾಗ ನನ್ನ ಗೆಳೆಯರು ಮಾಡಿದ ತುಂಟಾಟಕ್ಕೆ ನನ್ನನ್ನೇ ಹೊಣೆ ಮಾಡಿ ಆಕ್ಷೇಪಿಸುವುದೂ ನಡೆಯಿತು.ಒಂದು ವಿಚಿತ್ರವೆಂದರೆ, ನಾನು ಗೆಳೆಯರೊಂದಿಗೆ ಬೆಣ್ಣೆ ಕದ್ದೆನೆಂದು ದೂರು ಹೇಳಿದವರೇ, ನನ್ನನ್ನು ಕಂಡಾಗ ಎತ್ತಿ ಮುದ್ದಿಸಿ ಬೆಣ್ಣೆ, ಸಿಹಿ ತಿನಿಸುಗಳನ್ನು ಕೊಡುತ್ತಿದ್ದರು. “ನನಗೇನೂ ಬೇಡ, ನೀವು ಅಮ್ಮನಿಗೆ ದೂರು ಹೇಳಿದರೆ, ಅಮ್ಮ ನನಗೆ ಹೊಡೆಯುತ್ತಾಳೆ” ಎಂದು ಅರೆಮನಸ್ಸಿನಿಂದ ಹೇಳುತ್ತಿದ್ದೆ. + +“ನಾನು ಖಂಡಿತ ನಿನ್ನ ಅಮ್ಮನಿಗೆ ಹೇಳುವುದಿಲ್ಲ” ಎಂದು ಅವಳು ಆಶ್ವಾಸನೆ ನೀಡಿದ ಮೇಲೆ ನಾನು ತಿನ್ನುತ್ತಿದ್ದೆ. ಈಗಲೂ ನನಗೆ, ಗೋಕುಲದಲ್ಲಿ ಎಷ್ಟು ಮನೆಗಳಿದ್ದವು, ಯಾವ ಮನೆಯ ಗೋಪಮ್ಮ ಯಾವ ತಿನಿಸನ್ನು ರುಚಿಯಾಗಿ ಮಾಡುತ್ತಿದ್ದಳು, ಎಂದು ಚೆನ್ನಾಗಿ ನೆನಪಿದೆ. ಅವರೆಲ್ಲರ ಪ್ರೀತಿ ವಾತ್ಸಲ್ಯಗಳ ನೂರಾರು, ಸಾವಿರಾರು ಪ್ರಸಂಗಗಳು ನೆನಪಾಗುತ್ತವೆ. ಈಗಲೂ ಅವರೆಲ್ಲರ ಪ್ರೀತಿಯ ಋಣವನ್ನು ಹೊತ್ತು ನಾನು ಬೆಳೆದೆನೆಂದು ವಿನೀತನಾಗುತ್ತೇನೆ. ಮನುಷ್ಯನ ಬದುಕೇ ಸಾವಿರಾರು ಋಣಗಳಿಂದ ಪಾಲನೆ ಪೋಷಣೆ ಪಡೆಯುತ್ತದೆ. ನಾನೇ, ನನ್ನನ್ನು ಬಿಟ್ಟರೆ ಬೇರೆ ಯಾರೂ ಇಲ್ಲ, ಎಂದು ಅಹಂಕಾರದಿಂದ ಮೆರೆಯುವ ಉದ್ಧಟ ಅಹಂಕಾರಿ, ಕ್ಷಣ ಹೊತ್ತು ತನ್ನ ಬದುಕಿನ ಭೂತಕಾಲವನ್ನು, ವರ್ತಮಾನವನ್ನು ತೆರೆದ ಮನಸ್ಸಿನಿಂದ ಅವಲೋಕಿಸಿದರೆ ತಾನು ಏನೂ ಅಲ್ಲ, ತನ್ನ ಅಹಂಕಾರಕ್ಕೆ ಅರ್ಥವೇ ಇಲ್ಲವೆಂದು ಅರಿವಾಗುತ್ತದೆ. ಸಹ ಮಾನವರ ಋಣ ಮಾತ್ರವಲ್ಲದೆ ಭೂಮಿ, ಗಾಳಿ, ಬೆಳಕು, ನೀರು, ದವಸ ಧಾನ್ಯ, ಹಣ್ಣು ಹಂಪಲು, ಪ್ರಾಣಿ ಪಕ್ಷಿಗಳ ಋಣಭಾರವೂ ನಮ್ಮ ಬೆನ್ನ ಮೇಲಿದೆ ಎಂಬ ಅರಿವಿರದ ಮನುಷ್ಯ ನನ್ನ ದೃಷ್ಟಿಯಲ್ಲಿ ಮನುಷ್ಯನೇ ಅಲ್ಲ. + + + +ಗೋಕುಲದ ನನ್ನ ಜೀವನ ವ್ಯಾಕುಲರಹಿತವಾಗಿತ್ತೆಂದೇ ಹೇಳಬಹುದು. ನನ್ನ ಭಾವಕೋಶ ಬೆಳೆಯಲು, ಬುದ್ಧಿ ವಿಕಸನವಾಗಲು, ದೇಹದ ಕ್ಷಮತೆ ಹೆಚ್ಚಾಗಲು ಗೋಕುಲ ಕಾರಣವಾಯಿತು. ಆ ನೆನಪುಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದು, ಕೃತಜ್ಞತೆ ಯಿಂದ ಸ್ಮರಿಸಬೇಕೆಂದು ಪ್ರೇರಣೆಯಾಗುತ್ತದೆ. ಹೌದು, ಭೂತಕಾಲವನ್ನು ಮರೆತವನಿಗೆ ವರ್ತಮಾನ ಅರ್ಥವಾಗುವುದಿಲ್ಲ, ಭವಿಷ್ಯ ಕೈಗೆಟುಕುವುದಿಲ್ಲ. ಅಂಥ ಜೀವನ ಬೇರಿಲ್ಲದ ಮರದಂತೆ, ಅಲ್ಲವೆ? ಅದರಲ್ಲಿ ಮರದ ಲಕ್ಷಣವಿರುತ್ತದೆ. ಆದರೆ ಅದರಲ್ಲಿ ಹೂ ಅರಳುವುದಿಲ್ಲ, ಹಣ್ಣುಗಳು ತೂಗುವುದಿಲ್ಲ. ಹಸಿರಿನಿಂದ ನಳನಳಿಸಿ, ಆಸರೆ ನೀಡಲು ಪಕ್ಷಿಗಳನ್ನು ಕರೆಯುವುದಿಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_144.txt b/Kenda Sampige/article_144.txt new file mode 100644 index 0000000000000000000000000000000000000000..0bfdd4a2868d8909f451b111f327358c76898119 --- /dev/null +++ b/Kenda Sampige/article_144.txt @@ -0,0 +1,19 @@ +ಕನ್ನಡ ಕಥಾಲೋಕ ಅನೇಕ ಮಹಾನ್ ಕಥೆಗಾರರ ಕಥೆಗಳ ಕೊಡುಗೆಯಿಂದ ಶ್ರೀಮಂತವಾಗಿದೆ. ಮಾಸ್ತಿಯವರು ಹುಟ್ಟುಹಾಕಿದ ಸಣ್ಣಕಥೆಗಳ ಸಂಸ್ಕೃತಿ ಅಮೋಘವಾಗಿ ಮುಂದುವರಿದು, ಚಿರಂತನವಾಗಿ ಉಳಿಯುವ ಭರವಸೆ ನೀಡಿದೆ. ಇಂದಿನ ತಲೆಮಾರಿನ ಅನೇಕ ಯುವ ಬರಹಗಾರರೊಳಗೆ ಗಟ್ಟಿ ಕತೆಗಾರನನ್ನು ಕಾಣಬಹುದು. ವಿಶಿಷ್ಟವಾದ ಸಣ್ಣ ಕತೆಗಳ ಬಗ್ಗೆ ಭರವಸೆಯನ್ನು ಹೊಂದಬಹುದು. ಇತ್ತೀಚಿನ ಅಂತಹ ಗಟ್ಟಿ ಕತೆಗಾರರ ಸಾಲಿನಲ್ಲಿ ಸದಾಶಿವ ಸೊರಟೂರರ ಹೆಸರನ್ನು ಖಂಡಿತಾ ಸೇರಿಸಬಹುದು. + +(ಸದಾಶಿವ ಸೊರಟೂರು) + +ಸಾಕಷ್ಟು ಬಿಡಿ ಲೇಖನಗಳನ್ನು ಬರೆದಿರುವ ಸದಾಶಿವ್ ಸೊರಟೂರು ಅವರು ಮೊದಲ ಬಾರಿಗೆ ಕಥೆಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ‘ಅರ್ಧ ಬಿಸಿಲು ಅರ್ಧ ಮಳೆ’ ಎನ್ನುವ ಆಕರ್ಷಕ ಶೀರ್ಷಿಕೆಯಡಿಯಲ್ಲಿ ಬಂದಿರುವ ಈ ಕಥೆ ಪುಸ್ತಕವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಥೆಯೂ ಭಿನ್ನ, ಪ್ರತಿಯೊಂದೂ ಚೆನ್ನ. ಮೊದಲ ಕಥಾಸಂಕಲನ ಎನ್ನುವ ಯಾವ ವಿನಾಯಿತಿಯನ್ನೂ ಕೊಡದೆ ಓದುಗರು ಮೆಚ್ಚಬಹುದು. + +‘ಈ ಜಗತ್ತಿನಲ್ಲಿ ಯಾರ ಉಸಾಬರಿ ಯಾರಿಗೂ ಇರುವುದಿಲ್ಲ..’ ಎನ್ನುವ ಸಾಲೊಂದು ‘ನೀಲಿ’ ಕಥೆಯಲ್ಲಿ ಬರುತ್ತದೆ. ನೀಲಿ ಎಂಬ ಪಾತ್ರದ ಮೂಲಕ ಜಗತ್ತಿನ ಪ್ರತಿಯೊಬ್ಬರು ಯಾವ ಉಸಾಬರಿಗೆ ಹೋರಾಡುತ್ತಾರೆ ಎಂಬುದನ್ನು ವಿಭಿನ್ನವಾದ ಕಥಾತಂತ್ರದ ಮೂಲಕ ಹೇಳಿದ್ದಾರೆ. ಬಯಲು ಕಥೆಯಲ್ಲಿ ಹೆಣ್ಣು ಮೀರುವ ಗೆರೆ, ವಿದಾಯ ಕಥೆಯಲ್ಲಿ ಗೆರೆಯೊಳಗೇ ಉಳಿದು ಹೋಗುವ ಹೆಣ್ಣಿನ ಪರಿ, ನೀಲಿ ಕಥೆಯಲ್ಲಿ ಅದೇ ಗೆರೆ ಅವಳನ್ನು ಆಪೋಶನ ತೆಗೆದುಕೊಂಡ ರೀತಿ, ‘ಕನಸಿನಲ್ಲಿ ಸುರಿದ ಕೆಂಪು ಮಳೆ’ ಕಥೆಯಲ್ಲಿ ಪೋರಿಯೊಬ್ಬಳು ಆ ಗೆರೆಯ ಮುಂದೆ ನಿಂತದ್ದು ಅದು ಹಂಬಲವೊ, ಪರಿತಾಪವೊ ಎಂಬುದು ಅರಿವಾಗದೆ ಉಳಿದು ಹೋಗುವ ರೀತಿ ಎಲ್ಲವೂ ಮನೋಜ್ಞವಾಗಿದೆ. + +ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ. + + + +ನವಿರು ಶೈಲಿಯ, ಕವಿತೆಯಂತಹ ಭಾಷೆಯ, ತೀರಾ ತಿರುವುಗಳಿಂದ ಕೂಡಿ ಓದುಗರನ್ನು ತಬ್ಬಿಬ್ಬುಗೊಳಿಸದೆ, ಸರಾಗವಾಗಿ ಓದಿಸುವ ಬರಹಗಳ ಕಥೆಗಳು ಓದುಗರನ್ನು ಕಾಡುತ್ತವೆ. ತೀರಾ ವಿಶೇಷವಾದ, ವಿಭಿನ್ನವಾದ ವಿಷಯಗಳನ್ನು ಹೊಂದಿರದಿದ್ದರೂ ತಮ್ಮ ಗಟ್ಟಿತನದಿಂದ, ನಮ್ಮ ನಡುವಿನ ಕಥೆಗಳಾಗಿ ಗಮನ ಸೆಳೆಯುತ್ತವೆ. ಯಾವುದೊ ಒಂದು ಧೋರಣೆ ಇಟ್ಟುಕೊಂಡು, ಬಲವಾದ ಸಿದ್ಧಾಂತ ಹೇರುವ ವಿಚಿತ್ರ ಹುಕಿ ಇಲ್ಲಿನ ಕಥೆಗಳಲ್ಲಿ ಇಲ್ಲ. ಯಾವುದೇ ಸಿದ್ಧಾಂತದ ಹಂಗಿಲ್ಲದೆ ಸಾಮಾನ್ಯರ ಸಾಮಾನ್ಯ ವಿಷಯ ಇಟ್ಟುಕೊಂಡು ಬರೆದ ಅಸಾಮಾನ್ಯ ಕಥೆಗಳಿವು. + + + +ದಟ್ಟ ಸಂವೇದನೆ, ಬದುಕಿನ ಆಳ ಮತ್ತು ಸಂಕೀರ್ಣತೆ ಗಟ್ಟಿಯಾಗಿ ಬಂದಿದೆ. ಚಂದದ ರೂಪಕಗಳಿವೆ. ವಿಷಯ ಮತ್ತು ವಿಷದ ಭಿನ್ನವಾಗಿ ಹೇಳುವ ಕಲೆಯಿದೆ. ಚಿಕಿತ್ಸಕ ಗುಣವಿದೆ. ಮನೋವೈಜ್ಞಾನಿಕ ಲೇಪನವಿದೆ. ಕಲಾತ್ಮಕತೆ ಇದೆ. ಸುಲಲಿತ ಭಾಷೆ, ವಾಸ್ತವ ಲೋಕದ ತಲ್ಲಣಗಳಿವೆ. “ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು” ಕಥೆಗಳು ಹೊಲದ ಗೊಬ್ಬರದ ಗುಡ್ಡಗಳಡಿಯ ‘ಮಂದಹಸುರು’ ಪೈರುಗಳಂತಿವೆ. ಇವು ಸಂಕಲನದ ಗಟ್ಟಿ ಕಥೆಗಳಷ್ಟೇ ಆಗಿರದೆ ಸೊರಟೂರರು ಕಥನಗಳ ದೋಣಿಗೆ ಸರಿದಿಕ್ಕು ಹಿಡಿಯುವ ಹುಟ್ಟು ಹಾಕಿದರೆ ಚುಳುಗುಟ್ಟುವ ಮೀನುಗಳಿರುವ ನೀರ್ಬಯಲಿಗೆ ನೇರ ಹೋಗುವ ನುರಿತ ಬೆಸ್ತನಾಗಬಹುದು” ಎಂದು ಮುನ್ನುಡಿಕಾರರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ. ಈ ಕಥಾ ಸಂಕಲನವನ್ನು ಓದಿದರೆ ಸದಾಶಿವ್ ಸೊರಟೂರವರು ಖಂಡಿತ ಕನ್ನಡ ಕಥನ ಲೋಕಕ್ಕೆ ಹೊಸ ಭರವಸೆಯಾಗಬಲ್ಲರು ಎಂದು ಖಡಾಖಂಡಿತವಾಗಿ ಹೇಳಬಹುದು. + +ರಾಘವೇಂದ್ರ ಈ ಹೊರಬೈಲುರವರು ಶಿವಮೊಗ್ಗ ಜಿಲ್ಲೆಯ, ಅದೇ ತಾಲೂಕಿನ ಹೊರಬೈಲು ಗ್ರಾಮದವರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಎಂಬಲ್ಲಿ ಸರ್ಕಾರಿ ಪ್ರೌಢಶಾಲೆಯ ಆಂಗ್ಲ ಭಾಷೆಯ ಶಿಕ್ಷಕರಾಗಿದ್ದಾರೆ. ಗಾಯನ, ಚಿತ್ರಕಲೆ, ನಟನೆ, ಭಾಷಣಗಳಲ್ಲಿ ಅಪಾರ ಆಸಕ್ತಿ ಹೊಂದಿದ್ದಾರೆ. ‘ಅಂತರಂಗದುಲಿ’ (ಕವನ ಸಂಕಲನ ೨೦೧೩), ‘ಚೊಂಬೇಶ ಮುಕ್ತಕ'(ಚುಟುಕು ಸಂಕಲನ ೨೦೧೭) ಹಾಗೂ ‘ಬದುಕು ಪುಕ್ಸಟ್ಟೆ ಅಲ್ಲ’ (ಲೇಖನ ಸಂಕಲನ ೨೦೧೯) ಇವರ ಪ್ರಕಟಿತ ಕೃತಿಗಳು \ No newline at end of file diff --git a/Kenda Sampige/article_145.txt b/Kenda Sampige/article_145.txt new file mode 100644 index 0000000000000000000000000000000000000000..f6a0235db0a4855a14fc6b0c7666d19bd78927fe --- /dev/null +++ b/Kenda Sampige/article_145.txt @@ -0,0 +1,25 @@ +“…ವಾಸ್ತವದಲ್ಲಿ, ಕಲ್ಪನೆ ಎಂಬುದೇ ಬಹುದೊಡ್ಡ ಉಲ್ಲಂಘನೆ ಅಲ್ಲವೇ? ವಾಸ್ತವ, ವರ್ತಮಾನ ಎಂಬುದನ್ನೆಲ್ಲ ಉಲ್ಲಂಘಿಸದೆ ಕಲ್ಪನೆ ಬೆಳೆಯುವುದಿಲ್ಲ. ಕಲ್ಪನೆ ಬೆಳೆಯದೆ ಮಕ್ಕಳ ಮನಸ್ಸು ಬೆಳೆಯುವುದಿಲ್ಲ”. ಇವು ಒಂದೆಡೆ ಹಿರಿಯ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಅವರು ಹೇಳಿದ ಮಾತುಗಳು. ಈ ಮಾತುಗಳನ್ನು ನೆನಪಿಸಿದ್ದು ಇಂತಹ ಹಲವು ಉಲ್ಲಂಘನೆಗಳನ್ನು ‘ಉಡಿ’ಯಲ್ಲಿ ತುಂಬಿಕೊಂಡಿರುವ ಗಣೇಶಯ್ಯನವರ ಇತ್ತೀಚಿನ ಪುಸ್ತಕ ಹಾತೆ-ಜತೆ-ಕತೆ. + +ನಮ್ಮೆಲ್ಲರ ನಡುವೆ ಕಾಣಿಸುವ ಇರುವೆ, ಮಿಡತೆ, ಚಿಟ್ಟೆ ಮುಂತಾದ ಕೀಟಗಳೆಂದರೆ ನಮಗೆ ಕಿರಿ ಕಿರಿ ಅಥವಾ ತಿರಸ್ಕಾರ ಭಾವ. ಆದರೆ ಅವುಗಳ ಪ್ರಪಂಚದಲ್ಲಿ ವಿಸ್ಮಯಗಳ ಭಂಡಾರವೇ ಇದೆ ಎಂಬುದು ನಾವು ಅಷ್ಟಾಗಿ ತಲೆಕೆಡಿಸಿಕೊಳ್ಳದೆ ಅವಜ್ಞೆ ತೋರುವ ಸಂಗತಿ! ನಮ್ಮ ಕುತೂಹಲದ ಕಣ್ಣಿಗೆ ನಾವೇ ಕಟ್ಟಿಕೊಂಡ ‘ಬಟ್ಟೆ’ಯೇ ಅದಕ್ಕೆ ಕಾರಣವಿರಬಹುದು. ಅಂಥ ಕೀಟ ಜಗತ್ತಿನ ಭಂಡಾರದಿಂದ ‘ಹೆಕ್ಕಿ’ ತಂದ ಹಲವು ಕುತೂಹಲಕಾರಿ ಅಂಶಗಳಿಗೆ ಒಂದಿಷ್ಟು ‘ಕೀಟಲೆ’ಗಳನ್ನು ಪೂರಕವಾಗಿ ಸೇರಿಸಿ, ಅಚ್ಚರಿಯ (ಹುಟ್ಟು ಹಾಕುವ ಮೂಲಕ) ನಮ್ಮನ್ನು ಜಾಗೃತಗೊಳಿಸಿ, ಕತೆ ಹೇಳುತ್ತಾ ನಮ್ಮ ಕಣ್ಣ ‘ಬಟ್ಟೆಯ ಕಳಚುವ’ ಪುಸ್ತಕವಿದು. + +(ಡಾ. ಕೆ.ಎನ್. ಗಣೇಶಯ್ಯ) + +ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ. ಅಷ್ಟೇ ಅಲ್ಲದೆ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಆ ಘಟನೆಗಳ ಹಿಂದಿನ ವೈಜ್ಞಾನಿಕ ವಿವರಣೆ, ವಿಧಾನವನ್ನು (‘ಏಕೆ? ಏನು? ಹೇಗೆ? ಎಲ್ಲಿ? ಯಾವಾಗ?’) ಸ್ವಾರಸ್ಯಕರವಾಗಿ ತಿಳಿಸಲು ಈ ‘ಉಲ್ಲಂಘನೆ’ (ಕಲ್ಪನೆ) ಯ ತಂತ್ರವನ್ನೇ ಬಳಸಿಕೊಳ್ಳುತ್ತಾರೆ. ಬಹುಶಃ ಕತೆ ಹೇಳುವಲ್ಲಿನ ಈ ‘ದ್ವಂದ್ವ’ (‘ಕಲ್ಪನೆ-ವಾಸ್ತವ’ದ ಪರಿಣಾಮಕಾರಿ ಮಿಳಿತ) ಎಲ್ಲಾ ವಯೋಮಾನದವರಿಗೂ ರುಚಿಸುವುದರಿಂದ, ಎಲ್ಲರನ್ನ ತಲುಪುವುದರಲ್ಲಿ ಪುಸ್ತಕ ಯಶಸ್ವಿ ಕೂಡ ಆಗುತ್ತದೆ ಎನ್ನಬಹುದು. ಅದೇ ಕಾರಣಕ್ಕೆ ಉಪಶೀರ್ಷಿಕೆ “ಹಿರಿಯರಿಗೆ ಕಿರಿಯರಿಗೆ” ಪುಸ್ತಕಕ್ಕೆ ಒಪ್ಪುತ್ತದೆ ಕೂಡ. + +“ಹಿರಿಯರಿಗಾಗಿ ಬರೆಯುವುದು ಸುಲಭ, ದಾಕ್ಷಿಣ್ಯಕ್ಕಾದರೂ, ಶಿಷ್ಟಾಚಾರಕ್ಕಾದರೂ ಅವರು ಒಪ್ಪಿಕೊಂಡಾರು ಆದರೆ ಮಕ್ಕಳು ಹಾಗಲ್ಲ, ಇಷ್ಟವಿಲ್ಲವೆಂದರೆ ಆಕಳಿಸಲು ಹಿಂಜರಿಯುವುದಿಲ್ಲ!”… ಇದು ಸಾಹಿತ್ಯ ರಚನೆಯಲ್ಲಿ ಎದುರಾಗುವ ಸವಾಲಿನ ಕುರಿತ ಪ್ರಶ್ನೆಯೊಂದಕ್ಕೆ ನೋಬೆಲ್ ಪ್ರಶಸ್ತಿ ವಿಜೇತ ಸಾಹಿತಿ ಐಸಾಕ್ ಸಿಂಗರ್, ನೀಡಿದ್ದ ಅವರ ಅನುಭವದ ಉತ್ತರ. ಬಹುಶಃ ಹಾತೆ-ಜತೆ-ಕತೆ ಪುಸ್ತಕ ಈ ಅಭಿಪ್ರಾಯಕ್ಕೆ ‘ಅಪವಾದ’ ಹಾಗೆಯೇ ಗಣೇಶಯ್ಯನವರರಿಗೆ ಸಿಂಗರ್ ರವರ ಈ ಅನುಭವ ‘ಅನ್ವಯಿಸುವುದಿಲ್ಲ’ ಎಂದೆನಿಸುತ್ತದೆ! ಏಕೆಂದರೆ ಇಲ್ಲಿ ಕತೆ ಕಟ್ಟಿಕೊಡುವ ಪ್ರಯತ್ನದಲ್ಲಿನ ಬರಹಗಾರನ ‘ಖುಷಿ’ಯ ಅನುಭಾವವನ್ನು ನಾವು ಕಾಣಬಹುದು. ಆ ಕಾರ್ಯದಲ್ಲಿನ ಸರಳತೆಯನ್ನೂ ನೋಡಬಹುದು. ಹಾಗೆಯೇ ಹಲವು ವಿಸ್ಮಯ ವಿಚಾರಗಳ ಹೂರಣವನ್ನು ಕಥಾ ಹಂದರದಲ್ಲಿ ಜಾಣ್ಮೆಯಿಂದ ತುಂಬಿ, ಹದವಾಗಿ ಬೆರೆಸಿ, ಮಕ್ಕಳಷ್ಟೇ ಅಲ್ಲದೆ ಹಿರಿಯರೂ ತಲೆದೂಗುವಂತೆ ಮಾಡುವ ಕಲೆಯನ್ನೂ ಆಸ್ವಾದಿಸಬಹುದು… ಹೀಗಿರುವಾಗ ಮತ್ತಿನ್ನೆಲ್ಲಿಯ ಕೃತಿಕಾರನ ಕಷ್ಟ?… ಓದುಗನ ತೂಕಡಿಕೆಯ ಪ್ರಶ್ನೆ? + +ಇದಕ್ಕೆ ಪುಸ್ತಕದ ಬರಹ ‘ತಮಸೋಮಾ’ ಉತ್ತಮ ನಿದರ್ಶನ. ಇಲ್ಲಿನ ಕತೆ ಎರಡು ಭಿನ್ನ ಕಾಲಘಟ್ಟಗಳಲ್ಲಿ ನಡೆಯುತ್ತದೆ. ಘಟನೆಗಳ ಪಾತ್ರಗಳ ಕಾಲ, ಸ್ಥಳ ಹಾಗೂ ನಂಬಿಕೆಗಳು ಬೇರೆ ಬೇರೆ. ಒಂದೆಡೆ ಕ್ರಿ.ಪೂ.ದ ಸಮಯ, ಅಜಂತಾ ಗುಹೆಯಲ್ಲಿ ಬಿಕ್ಕುಗಳು. ಮತ್ತೊಂದೆಡೆ ಇತ್ತೀಚಿನ ದಿನಗಳು, ಪಶ್ಚಿಮ ಘಟ್ಟಗಳ ಕಾಡಿನಲ್ಲಿ ವಿಜ್ಞಾನಿಗಳು. ಆದರೆ ಇವರಿಬ್ಬರ ಯೋಚನಾಲಹರಿಯ ಹಿಂದಿನ ಉದ್ದೇಶ ಒಂದೇ, ‘ಮೂಲ’ವನ್ನು ಹುಡುಕುವುದು, ಅರ್ಥಮಾಡಿಕೊಳ್ಳುವುದು. ಹೀಗೆ ಕಾಲಮಾನಗಳ (ಕ್ರಿ.ಪೂ ಮತ್ತು ಕ್ರಿ.ಶ) ‘ನಡುವೆ’ ಗಣೇಶಯ್ಯನವರು ಸ್ವಾರಸ್ಯಕರವಾಗಿ ಚಿಟ್ಟೆಗಳ ವರ್ತನೆಯ ಬಗ್ಗೆ ಚರ್ಚೆ, ಚಿಂತನೆ ನಡೆಸುತ್ತಾ ಕತೆ ಹೇಳುತ್ತಾರೆ. ವಿಶೇಷವೆಂದರೆ ಇಲ್ಲಿ ಚಿಟ್ಟೆಗಳೂ ಅವುಗಳ ಮನೋಗತವನ್ನೂ ಹೇಳಿಕೊಳ್ಳುತ್ತವೆ. ಹೀಗೆ ಹಲವು ದೃಷ್ಟಿಕೋನಗಳ ಜೊತೆಗೆ ಧಾರ್ಮಿಕ ಚಿಂತನೆ, ತಾತ್ವಿಕವಾದ ಮತ್ತು ವಿಜ್ಞಾನ ಪ್ರಯೋಗಗಳ ವಿವರಗಳನ್ನೂ ಬೆರೆಸಿ ನಮ್ಮನ್ನು ಬೆರಗುಗೊಳಿಸುತ್ತಾರೆ. ಇಲ್ಲಿ ಸಾಹಿತ್ಯ ಇದೆ, ವಿಜ್ಞಾನ ಸಹ ಇದೆ, ಒಂದಕ್ಕೊಂದು ಪೂರಕವಾಗಿ… “ಸಾಹಿತ್ಯವಿಲ್ಲದೆ ವಿಜ್ಞಾನ ಕುಂಟು; ವಿಜ್ಞಾನವಿಲ್ಲದ ಸಾಹಿತ್ಯ ಕುರುಡು”… ಎಂಬ ಮಾತಿನಂತೆ (ಧರ್ಮ ಮತ್ತು ವಿಜ್ಞಾನ ಕುರಿತ ಐನ್‌ಸ್ಟೀನ್‌ರವರ ಜನಪ್ರಿಯ ಹೇಳಿಕೆಯನ್ನು ಸ್ವಲ್ಪ ಬದಲಿಸಿ, ನನ್ನ ಗುರುಗಳು ಹೇಳುತ್ತಿದ್ದ ಮಾತು). + +ಇನ್ನೊಂದು ಗಮನಿಸಬೇಕಾದ ಸಂಗತಿ ಎಂದರೆ ಲೇಖಕರು ಯಾವುದೇ ‘ವಿಸ್ಮಯದ’ ಬಗ್ಗೆ ಹೇಳುವಾಗ ನಿಖರತೆಗೆ ನೀಡುವ ಒತ್ತು, ಮಹತ್ವ. ಅದು ಕಲ್ಪನೆಯ ಛಾವಡಿಯಡಿಯ ಸಣ್ಣ ವಿಷಯದ ವಿವರಣೆಯೇ ಆದರೂ ಅಸಡ್ಡೆ ತೋರಿದಂತೆ ಕಾಣುವುದಿಲ್ಲ. ಉದಾಹರಣೆಗೆ ಅಮೃತ ಸರೋವರ ಕತೆಯ ಮೊದಲ ಭಾಗದ ಘಟನೆಯೊಂದರ ವಿವರಣೆ. ಅಲ್ಲಿ ಬರುವ ಕೆಲಸಗಾರರೆಲ್ಲರೂ ‘ಹೆಣ್ಣುಮಕ್ಕಳು’ ಅಥವಾ ‘ಮಹಿಳೆಯರು!’ ಇದು ವಾಸ್ತವ ಹಾಗೂ ಸತ್ಯ ಕೂಡ. ಇರುವೆಗಳ ಸಮುದಾಯದಲ್ಲಿ ಕೆಲಸದ ಹೊರೆ ಹೊರುವ ಜಾತಿ ಹೆಣ್ಣು! + +ಹಾಗೆಯೇ ಅವುಗಳ ‘ಅಪಾರ್ಟ್‌ಮೆಂಟ್’ (ಮನೆ/ಗೂಡಿನ) ವಿವರಗಳ ನಿರೂಪಣೆ ಮತ್ತು ಅದಕ್ಕೆ ಪೂರಕವಾದ ಚಿತ್ರದ ಬಳಕೆ, ಎಲ್ಲವೂ ‘ನೈಜತೆಗೆ’, ಕತೆಯ ಓಘಕ್ಕೆ ಒಪ್ಪುತ್ತದೆ ಕೂಡ. ಇದೇ ರೀತಿ ಸೂಕ್ಷ್ಮ ಮತ್ತು ಸೂಕ್ತ ವಿವರಗಳನ್ನೂ ಅಚ್ಚುಕಟ್ಟಾಗಿ ಬಳಸಿಕೊಂಡಿರುವುದು ಉಳಿದ ಕತೆಗಳಲ್ಲೂ ಕಂಡು ಬರುತ್ತದೆ. ಅಲ್ಲದೆ ಕೆಲವೆಡೆ (‘ಆಹುತಿಯಾದ ಹತ್ಯೆ’) ಉದ್ದೇಶವನ್ನು ಉಪೇಕ್ಷಿಸದೇ, ಉತ್ಪ್ರೇಕ್ಷೆಯನ್ನು ಬಳಸಿಕೊಂಡಿರುವ ರೀತಿ ಕೂಡ ಮೆಚ್ಚತಕ್ಕದ್ದೇ! + +ಆರಂಭದಲ್ಲಿ ಲೇಖಕರು ಹೇಳುವಂತೆ ‘ಕಲ್ಪನಾಲೋಕದ ಬೆರಗನ್ನು ಬಳಸಿಕೊಂಡು ನೈಜತೆಯನ್ನು ಬಿಂಬಿಸುವ ಮಕ್ಕಳ ಕತೆ ಹೆಣೆಯುವ ಪ್ರಯತ್ನ’ ಈ ಪುಸ್ತಕ. ಇದು ಇಲ್ಲಿನ ಎಲ್ಲಾ ಬರಹಗಳಲ್ಲೂ ನಮ್ಮ ಗಮನಕ್ಕೆ ಬರುತ್ತದೆ ಕೂಡ. ಆದರೆ ಇಲ್ಲಿ ವಾಸ್ತವದಿಂದ ‘ದೂರ’ವ (ಕಲ್ಪನೆ) ಸೃಷ್ಟಿಸುವ ಪ್ರಯತ್ನದಲ್ಲಿ ನೈಜತೆಗೆ ಸ್ವಲ್ಪ ಪ್ರಾಧಾನ್ಯತೆ ಕಡಿಮೆಯಾಯಿತೇನೋ ಎನ್ನಿಸುತ್ತದೆ! ಒಂದು ವೇಳೆ ಇನ್ನಷ್ಟು ಸ್ವಾರಸ್ಯಕರ ಸತ್ಯ ಸಂಗತಿಗಳ ಸರಕನ್ನು ಇಲ್ಲಿನ ‘ಉಲ್ಲಂಘನೆಗಳ’ ಮಧ್ಯದಲ್ಲಿ ಸೇರಿಸಿದ್ದರೆ, ಓದಿನ ಆನಂದದ ಜೊತೆಗೆ ಜ್ಞಾನದ ವೃದ್ಧಿಗೂ ಮತ್ತಷ್ಟು ಉಪಯುಕ್ತವಾಗುತ್ತಿತ್ತು ಎಂದೆನಿಸುತ್ತದೆ. ಹಾಗೆಯೇ ಇಲ್ಲಿನ ಚಿತ್ರಗಳಲ್ಲೂ ಈ ಕೊರತೆ ಎದ್ದು ಕಾಣುತ್ತದೆ. ಉಳಿದಂತೆ ಚಿತ್ರಗಳು ವಿಭಿನ್ನ ಮತ್ತು ಆಕರ್ಷಕವಾಗಿವೆಯಾದರೂ ಮಾಹಿತಿಯನ್ನು ‘ಬಿಂಬಿಸುವುದಿಲ್ಲ’. ಇರುವೆ ಗೂಡಿನ ಚಿತ್ರ ಹಾಗೂ ‘ಗಣಕ ಸೌಂದರ್ಯ’ ಬರಹದಲ್ಲಿ ಬರುವ ಕೆಲವು ರೇಖಾ ಚಿತ್ರಗಳು ಇದಕ್ಕೆ ಅಪವಾದ. + +ಬಳಸಿರುವ ಭಾಷೆ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆಯಾದರೂ ಮಧ್ಯೆ ಮಧ್ಯೆ ‘ನಾನ್ಯಾಕಿಲ್ಲಾ’ ಎಂಬಂತೆ ಬರುವ ಹಲವು ಇಂಗ್ಲಿಷ್ ಪದಗಳು ಮೊಸರಿನಲ್ಲಿ ‘ಕಲ್ಲು’ ಸಿಕ್ಕ ಹಾಗೆನಿಸುತ್ತದೆ. ಒಂದೆಡೆ ಪೂರ್ಣ ಪರಿಚ್ಛೇದ (ಪ್ಯಾರಾಗ್ರಾಫ್) ಇಂಗ್ಲೀಷ್ ಭಾಷೆಯಲ್ಲಿದೆ, ಕನ್ನಡದ ತರ್ಜುಮೆ ‘ತಪ್ಪಿ’ಹೋದಂತೆ ಕಾಣುತ್ತದೆ. ಬಹುಶಃ ಕನ್ನಡದ ಪದಗಳನ್ನು ಅಥವಾ ಇಂಗ್ಲಿಷ್ ಪದಗಳನ್ನೇ ಕನ್ನಡದಲ್ಲಿ ಬರೆದಿದ್ದರೂ ಅಡ್ಡಿಯಿರಲಿಲ್ಲ. ಕನ್ನಡದಲ್ಲಿ ವಿಜ್ಞಾನದ ಪದಗಳ ಬೆಳವಣಿಗೆಗೆ ಹಾಗೂ ಜನಪ್ರಿಯಗೊಳಿಸಲು ಇದು ಮುಖ್ಯ, ಕೊಡುಗೆ ಕೂಡ ಆಗಬಲ್ಲದು.‘ಮಕ್ಕಳಿಗಾಗಿ ಬರೆಯಬೇಕಾದರೆ ಮಕ್ಕಳ ಮಟ್ಟಕ್ಕೆ ನಾವು ಏರಬೇಕು’ ಎಂಬ ಮಾತಿದೆ. ಬಹುಶಃ ಆ ಮಾತಿಗನುಗುಣವಾಗಿಯೇ ಬರೆದಂತೆ ಕಾಣುವ ಇಲ್ಲಿನ ಬರಹಗಳು, ಬಹುತೇಕ ಚಿತ್ರಗಳು ಮಕ್ಕಳನ್ನಷ್ಟೇ ಅಲ್ಲದೆ ದೊಡ್ಡವರ ಮನವ ಕೂಡ ಅರಳಿಸಿ ಮುದ ನೀಡುತ್ತವೆ. ಆರು ವಿಸ್ಮಯ ವಿಚಾರಗಳ ಸಂಕಲನವಾಗಿರುವ ಈ ಪುಸ್ತಕದಲ್ಲಿ, ಹಿರಿಯರಿಯರನ್ನು ಲಕ್ಷ್ಯದಲ್ಲಿಟ್ಟುಕೊಂಡು ಬರೆದಿರುವ ‘ಗಣಕ ಸೌಂದರ್ಯ’ ಕೃತಿಯ ಮೌಲ್ಯವನ್ನು ಕೂಡ ಹೆಚ್ಚಿಸುತ್ತದೆ. + + + +ಒಟ್ಟಾರೆಯಾಗಿ ಹೇಳುವುದಾದರೆ, ಕೀಟ ಲೋಕದ ವಿಸ್ಮಯಗಳನ್ನು ರೋಚಕವಾಗಿ ಚಿತ್ರಿಸಿ ರಂಜಿಸುವ, ಕುತೂಹಲವ ಕೆರಳಿಸಿ ತಣಿಸುವ, ಮಕ್ಕಳು ಹಾಗೂ ದೊಡ್ಡವರಿಬ್ಬರೂ ಒಟ್ಟಿಗೆ ಓದಿಬಹುದಾದ ಅರಿವಿನ ಪುಸ್ತಕ ಹಾತೆ ಜತೆ ಕತೆ. + +ವಿಶ್ವ ದೊಡ್ಡಬಳ್ಳಾಪುರ ಹುಟ್ಟಿ, ಬೆಳೆದ ಊರು ಬೆಂಗಳೂರು ಸಮೀಪದ ದೊಡ್ಡಬಳ್ಳಾಪುರ. ಓದಿದ್ದು ಇಂಜಿನಿಯರಿಂಗ್. ಸದ್ಯದ ನೆಲೆ ಪುಣೆ. ಅಲ್ಲಿನ ಪ್ರತಿಷ್ಟಿತ ಖಾಸಗಿ ಸಂಸ್ಥೆಯೊಂದರ ಸಂಶೋಧನಾ ವಿಭಾಗದಲ್ಲಿ ಕೆಲಸ. ಜನಪ್ರಿಯ ವಿಜ್ಞಾನ ಸಾಹಿತ್ಯ ಆಸಕ್ತಿಯ ವಿಷಯ. ಬರವಣಿಗೆ, ಓದು, ಚಾರಣ ಇತ್ಯಾದಿ ನೆಚ್ಚಿನ ಹವ್ಯಾಸಗಳು. \ No newline at end of file diff --git a/Kenda Sampige/article_146.txt b/Kenda Sampige/article_146.txt new file mode 100644 index 0000000000000000000000000000000000000000..1cea281f917e7dc35b813b3e335bb08671ea1446 --- /dev/null +++ b/Kenda Sampige/article_146.txt @@ -0,0 +1,18 @@ +“ಸತ್ತ ಮೇಲೆ ಮಲಗೋದು ಇದ್ದೇ ಇದೆ, ಎದ್ದಿರುವಾಗ ಏನಾದರೂ ಸಾಧಿಸು” ಇದು ಖ್ಯಾತ ನಟ, ನಿರ್ದೇಶಕ, ಕರಾಟೆ ಕಿಂಗ್, ಅಭಿಮಾನಿಗಳ ಆಟೋರಾಜ ಶಂಕರ್ ನಾಗ್ ರವರ ಮಾತು. ಅಕ್ಷರಶಃ ತಾನು ನುಡಿದಂತೆ ನಡೆದವರು, ಸಾಹಸ, ಸಾಧನೆಗಳೆಂಬ ಶರಧಿಯನ್ನು ದಾಟಿದವರು ಶಂಕರ್ ನಾಗ್. ಪ್ರಾಯಶಃ ಅವರಿಗೆ ಅರಿವಿತ್ತೋ ಏನೋ, ತನ್ನ ಬದುಕಿನ ಪಯಣ ಕಿರು ಮೈಲಿಗಳದ್ದೆಂದು.‌ ಅದಕ್ಕೆಂದೇ, ಜಿದ್ದಿಗೆ ಬಿದ್ದವರಂತೆ ಅನಂತ ಅಸಾಧಾರಣ ಮೈಲಿಗಲ್ಲುಗಳನ್ನು ಪ್ರತಿಷ್ಟಾಪಿಸಿ ಹಾಗೆ ಸುಮ್ಮನೆ ಎದ್ದು ನಡೆದು ಹೋದರು. ಇಂತಹ ಒಂದು ಸ್ಫೂರ್ತಿಗಾಥೆಯ ಸಾರೋಟು ಹಿಡಿದು ಬಂದವರು ಲೇಖಕರಾದ ಸತೀಶ ಬಳೆಗಾರ ‘ಶಂಕರನಾಗ್ The Legend’ ಎನ್ನುವ ಪುಸ್ತಕದ ಮುಖಾಂತರ. ಮನೋಹರ ಮುಖಪುಟ, ಮುದ್ರಣವುಳ್ಳ ಈ ಪುಸ್ತಕವನ್ನು ‘ಸಾವಣ್ಣ ಪ್ರಕಾಶನ’ ಪ್ರಕಟಿಸಿದೆ. + +(ಸತೀಶ ಬಳೆಗಾರ) + +ಶಂಕರ್ ನಾಗ್ ಎಂದರೆ ಪ್ರಥಮತಃ ನೆನಪಾಗುವುದು ಅವರ ವೇಗೋತ್ಕರ್ಷ, ಕ್ರಿಯಾಶೀಲತೆ, ತಾಜಾತನ, ಸಮಯ ನಿಷ್ಟೆ ಮತ್ತು ಸರಳತೆ. ನಿಲುಗಡೆ ಇಲ್ಲದ ಮಳೆಯಂತೆ, ಎಲ್ಲೂ ನಿಲ್ಲಿಸದ Non Stop ಬಸ್ಸುಗಳಂತೆ ಅವರ ವೇಗ. ಕೇವಲ 13 ವರುಷಗಳ ಅವಧಿಯಲ್ಲಿ ಅವರು ಕೆಲಸ ಮಾಡಿದ್ದು ಬರೋಬ್ಬರಿ 96 ಸಿನೆಮಾಗಳಲ್ಲಿ ಎನ್ನುವುದೇ ಅವರ ವೇಗಕ್ಕೆ ಹಿಡಿದ ಕೈಗನ್ನಡಿ. ತಾಂತ್ರಿಕತೆ ಉತ್ತುಂಗದ ಶಿಖರದಲ್ಲಿರುವ ಈ ಕಾಲಘಟ್ಟದಲ್ಲಿಯೂ ಒಂದು ಸಂವತ್ಸರದಲ್ಲಿ, ಒಂದು ಸಿನಿಮಾ ಮಾಡಲು ಕಷ್ಟವೆನ್ನುವ ಅಭಿಪ್ರಾಯಗಳನ್ನು ಕೇಳಿದಾಗ ಶಂಕರ್ ನಾಗ್‌ಅವರಿಗೆ 24 ಗಂಟೆಗಳನ್ನು ಮೀರಿದ ಸಮಯವಿತ್ತೇ ಎಂದು ಅಚ್ಚರಿಯಾಗುತ್ತದೆ. ಸಿನಿಮಾದ ದೃಶ್ಯವೊಂದರ ಚಿತ್ರೀಕರಣ ಮುಗಿದ ತಕ್ಷಣ ಕಾಡುಹರಟೆಗಳಿಗೆ ಕಾಲಿಡದೆ, ತನ್ನ ಮೆಟಾಡೋರಿನಲ್ಲಿ ಕುಳಿತು ಓದು ಬರಹಗಳಲ್ಲಿ, ನವೀನ ವಿಚಾರಗಳು, ಸಮಾಜದ ಕುರಿತಾದ ಚಿಂತನೆಗಳಲ್ಲಿ ಮಗ್ನರಾಗುತ್ತಿದ್ದ ಶಂಕರನಾಗ್, ಅರೆನಿಮಿಷವೂ ಅಸಮಾಧಾನಗೊಳ್ಳದಂತೆ ಬದುಕಿದವರು. ಬಹುಶಃ ಸಮಯವೇನಾದರೂ ವ್ಯಕ್ತಿಯಾಗಿದ್ದರೆ, ಅವರ ವ್ಯಕ್ತಿತ್ವಕ್ಕೊಂದು ಸಾವಿರ ಸಲಾಮನ್ನು ಸಲ್ಲಿಸುತ್ತಿತ್ತೋ ಏನೋ. + +ಇನ್ನು ಸಿನಿಮಾ ಜಗತ್ತಿನತ್ತ ದಿಟ್ಟಿ ಹಾಯಿಸಿದರೆ, ಚಿತ್ರರಂಗಕ್ಕೆ ಹೊಸತನದ ಹಾದಿ ತೋರಿದವರು ಶಂಕರನಾಗ್. ಅವರ ನಿರ್ದೇಶನದ ‘ಆಕ್ಸಿಡೆಂಟ್’ ಎನ್ನುವ ಚಿತ್ರವೇ ಸಾಕು, ಯಾಕೆ ಶಂಕರನಾಗ್ ‘ahead of the times’ ವ್ಯಕ್ತಿ ಎನ್ನಲು. ಸಿರಿವಂತಿಕೆಯ ಅಮಲಿನಲ್ಲಿ ತೇಲುತ್ತಿದ್ದ ರಾಜಕೀಯ ಪುಢಾರಿಯ ಮಗನೊಬ್ಬ ಫುಟ್‌ಪಾತ್‌ನಲ್ಲಿ ಮಲಗಿರುವವರ ಮೇಲೆ ಕಾರು ಹಾಯಿಸಿ, ಮಾರಣ ಹೋಮ ಮಾಡಿ, ಕೊನೆಗೆ ತಾನೇ ಅಪಘಾತದಲ್ಲಿ ಸಾಯುವ ಆ ಕಥಾನಕದ ಚಿತ್ರಣವೇ, ಮನವನ್ನು ಅರೆಕ್ಷಣ ಮೌನಕ್ಕೆ ದೂಡುವಂಥದ್ದು. ಇಂದು ಸಮಾಜದಲ್ಲಿ ಆಗುತ್ತಿರುವ, ಆಗಿ ಹೋಗಿರುವ ಸಿರಿವಂತರ ದರ್ಪ ದಬ್ಬಾಳಿಕೆ, ಫುಪ್‌ಪಾತ್‌ ಇತ್ಯಾದಿ ಹಿಟ್ ಅಂಡ್ ರನ್ ಕೇಸುಗಳು, ಶ್ರೀಸಾಮಾನ್ಯನಿಗಾಗುವ ಅನ್ಯಾಯ ಇವೆಲ್ಲಾ ಅನಾಮತ್ತು 38 ವರ್ಷಗಳ ಹಿಂದೆಯೇ ರಿಯಲಿಸ್ಟಿಕ್ ಆಗಿ ತೆರೆಯ ಮೇಲೆ ಮೂಡಿಬಂದಿತ್ತು. ಹಾಡುಗಳೇ ಇಲ್ಲದ ಈ ಸಿನಿಮಾದಲ್ಲಿ ಇಳಯರಾಜರ ನೈಜ ಹಿನ್ನೆಲೆ ಸಂಗೀತ ಮಿನುಗುವ ತಾರೆಗೆ ಹೊಳಪಿನ ಸಂಕಲನ ಎಂದೇ ಹೇಳಬೇಕು. ಇನ್ನು ಮಧ್ಯಮ ವರ್ಗದ ಬದುಕು-ಬವಣೆಗಳನ್ನು ಹಾಸ್ಯರಸದೊಂದಿಗೆ ಬೆರೆಸಿ ಉಣಬಡಿಸಿದ ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ಆರ್ ಕೆ ನಾರಾಯಣ್ ವಿರಚಿತ ‘ಮಾಲ್ಗುಡಿ ಡೇಸ್’ ಸರಣಿ, ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಅಂಡರ್ ವಾಟರ್ ಶೂಟಿಂಗ್ ಮಾಡಿದ ನಟಸಾರ್ವಭೌಮ ಡಾ|ರಾಜಕುಮಾರ್ ಅಭಿನಯದ ‘ಒಂದು ಮುತ್ತಿನ ಕಥೆ’ ಅವರ ನಿರ್ದೇಶನದ ‘ಮಿಂಚಿನ ಓಟ’ಕ್ಕೆ ಸಾಕ್ಷಿ. ಅಭಿನಯದ ವಿಚಾರಕ್ಕೆ ಬಂದರೆ, ವೈಯಕ್ತಿಕವಾಗಿ ಒಂದಾನೊಂದು ಕಾಲದಲ್ಲಿ, S P ಸಾಂಗ್ಲಿಯಾನ, CBI ಶಂಕರ್, ಆಟೋ ರಾಜ, ಗೀತಾ, ನಿಗೂಢ ರಹಸ್ಯ ಇವೆಲ್ಲವೂ ಬಹುಬಾರಿ ಮರಳಿ ವೀಕ್ಷಿಸಿದ ಚಿತ್ರಗಳು. ಅವರ ಆಂಗಿಕ ಅಭಿನಯ, ಆಕ್ಷನ್ ಸೀಕ್ವೆನ್ಸುಗಳು ನಮ್ಮ ಬಾಲ್ಯದ ದಿನಗಳಿಗೆ ರಂಗು ತುಂಬಿದುದನ್ನು ಮರೆಯುವಂತಿಲ್ಲ. ಹಾಡುಗಳೂ ಅಷ್ಟೇ. ಭಾವತೀರದಲ್ಲಿ ವಿಹರಿಸಿದ ಅನುಭವವನ್ನು ನೀಡುವಂತಹದ್ದು. ಬೇಸರದ ಭಾವಕ್ಕೆ ‘ನಗುವ ಗುಲಾಬಿ ಹೂವೇ‘, ಪ್ರೇಮ ಪರವಶರಾದವರಿಗೆ ಗೀತಾಂಜಲಿ, ಜೊತೆಯಲಿ ಜೊತೆ ಜೊತೆಯಲಿ, ಹೆಜ್ಜೆ ಹಾಕಲು ‘ಸಂತೋಷಕ್ಕೆ ಹಾಡು ಸಂತೋಷಕ್ಕೆ’, ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ರಾಗರಸಧಾರೆಯಲ್ಲಿ ಮಿಂದೇಳಲು ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ಇಹದ ಇರುವಿಕೆಯ ಮರೆಸಲು ‘ಅನಾಥ ಮಗುವಾದೆ ನಾನು’ ಹೀಗೆ ಪಟ್ಟಿ ಪೂರ್ಣ ವಿರಾಮವಿಲ್ಲದೆ ಬೆಳೆಯುತ್ತಲೇ ಹೋಗುತ್ತದೆ. + +ಇದೆಲ್ಲಕ್ಕಿಂತ ಶಂಕರ್ ನಾಗ್ ಇಂದಿಗೆ ಅತ್ಯಂತ ಪ್ರಸ್ತುತ ಎನ್ನಿಸುವುದು ಅವರ ಚಿಂತನೆಗಳ ಮುಖಾಂತರ. ಬೆರಳೆಣಿಕೆಯ ಬಸ್ಸು, ಕಾರು, ಆಟೋರಿಕ್ಷಾಗಳಿದ್ದ ಕಾಲದಲ್ಲಿ ಮೆಟ್ರೋ ರೈಲಿನ ಬಗೆಗಿನ ಯೋಚನೆ- ಯೋಜನೆ, ನಂದಿ ಬೆಟ್ಟಕ್ಕೆ ರೋಪ್ ವೇ, ಕಡಿಮೆ ಖರ್ಚಿನ ಮನೆ ನಿರ್ಮಾಣ ಇತ್ಯಾದಿ ಆ ಕಾಲಕ್ಕೆ advanced ಅನ್ನಿಸುವಂತಹ ವಿಷಯಗಳ ಕುರಿತು ಅವರು ಕಂಡ ಕನಸುಗಳು ಇಂದಿನ ಆಡಳಿತಗಾರರಿಗೆ ಮಾದರಿ. ಅಷ್ಟೇ ಅಲ್ಲ, ತಾಂತ್ರಿಕ ಕೆಲಸಗಳಿಗೆ ಮದ್ರಾಸಿನ ಮರ್ಜಿಯಲ್ಲಿರಬೇಕಾಗಿದ್ದ ಕನ್ನಡ ಚಿತ್ರರಂಗಕ್ಕೆ ಬದಲಾವಣೆಯ ಇಶಾರೆಯಾಗಿ ನೀಡಿದ ‘ಸಂಕೇತ್ ಸ್ಟುಡಿಯೋ’ ಕೂಡ ಅವರ ಅನನ್ಯ ಆಲೋಚನೆಗೆ ಸಾಕ್ಷಿಯಾಗಿದೆ. + +ಹೀಗೆ ಸಮಾಜ, ಚಿತ್ರರಂಗಕ್ಕೆ ಅಸಂಖ್ಯ ಉಡುಗೊರೆಗಳನ್ನು ನೀಡಿದ ಶಂಕರನಾಗ್ ದೈಹಿಕವಾಗಿ ಬದುಕಿದ್ದು ಕೇವಲ 36 ವರ್ಷ. ಇಂತಹ ಶ್ರೇಷ್ಟ ಬಾಳುವಿಕೆಯನ್ನು ಸಂಕ್ಷಿಪ್ತವೂ, ಅತಿ ವಿವರವೂ ಅಲ್ಲದಂತೆ, ಹಿತ ಮಿತವಾಗಿ ಬಳೆಗಾರರು ‘ಶಂಕರ್ ನಾಗ್ The Legened’ ಪುಸ್ತಕದಲ್ಲಿ ಸೆರೆಹಿಡಿದಿದ್ದಾರೆ. ಶಂಕರ್ ನಾಗ್ ಕುರಿತಾಗಿ ಬಂದಂತಹ ಮೂರನೇ ಪುಸ್ತಕವಿದು.(ಅನಂತ್ ನಾಗ್ ರವರ ‘ನನ್ನ ತಮ್ಮ ಶಂಕರ’, ಗಣೇಶ್ ಕಾಸರಗೋಡುರವರ ‘ನೆನಪಿನಂಗಳದಲ್ಲಿ ಶಂಕರನಾಗ್’ ಉಳಿದೆರಡು ಪುಸ್ತಕಗಳು)ಇಲ್ಲಿ ಶಂಕರನಾಗ್ ರವರ ಜನನದಿಂದ ಮರಣದವರೆಗಿನ ವೈಯಕ್ತಿಕ ಬದುಕು, ಸಿನಿಮಾ, ಸಾಮಾಜಿಕ ಕಾರ್ಯಗಳು ಇತ್ಯಾದಿಗಳೆಲ್ಲವನ್ನೂ ಅಚ್ಚು ಕಟ್ಟಾಗಿ, ಕ್ರಮಬದ್ಧವಾಗಿ ಜೋಡಿಸಿದ್ದಾರೆ ಲೇಖಕರು. + + + +ಜನಸಾಮಾನ್ಯರು ಇಂದಿಗೂ ನಿಗೂಢವೆಂದು ಭಾವಿಸುವ ಶಂಕರ್ ನಾಗ್ ಸಾವಿನ ಸುತ್ತ ಹುಟ್ಟಿಕೊಂಡ ಅನೂಹ್ಯ ಪ್ರಶ್ನೆಗಳಿಗೆ ವಿವಿಧ ದೃಷ್ಟಿಕೋನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ವರುಷಗಳಿಗನುಗುಣವಾಗಿ ಜೋಡಿಸಲ್ಪಟ್ಟ ಶಂಕರ್ ನಾಗ್ ಚಿತ್ರಗಳು, ಅವುಗಳ ಹಿಂದಿರುವ ಕಹಾನಿ, ಪ್ರಮುಖ ಹಾಡುಗಳು, ಅನಂತ್ ನಾಗ್, ರಮೇಶ್ ಭಟ್ ಆದಿಯಾಗಿ ವಿವಿಧ ನಟರೊಂದಿಗಿನ ಕೆಲಸಗಳು ಹಾಗೂ ಬಾಂಧವ್ಯ ಹೀಗೆ ಅನೇಕ ಮಾಹಿತಿಗಳು ದಾಖಲಾಗಿರುವ ಪರಿಯೇ ಈ ಪುಸ್ತಕದ ಹೈಲೈಟು. ಒಟ್ಟಾರೆಯಾಗಿ ಹೇಳಬೇಕೆಂದರೆ, ಹೊಸ ವಿಚಾರಗಳನ್ನು ತಿಳಿಯಲು ಅಂತರ್ಜಾಲವನ್ನು ಹೇಗೆ ನಾವು ಅವಲಂಬಿಸುತ್ತೇವೆಯೋ, ಹಾಗೆಯೇ ಶಂಕರನಾಗ್ ಅವರ ಅನುಕರಣೀಯ ಬದುಕನ್ನು ಅಭ್ಯಸಿಸಲು ಸತೀಶ ಬಳೆಗಾರರ ‘ಶಂಕರ ನಾಗ್ The Legend’ ಪುಸ್ತಕವನ್ನು ಆಶ್ರಯಿಸಬಹುದು. + +ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು…. + diff --git a/Kenda Sampige/article_147.txt b/Kenda Sampige/article_147.txt new file mode 100644 index 0000000000000000000000000000000000000000..b5c5a1ac0f862c0743e710569aba262fe9c76205 --- /dev/null +++ b/Kenda Sampige/article_147.txt @@ -0,0 +1,35 @@ +byಡಾ.ಎಲ್ .ಸಿ ಸುಮಿತ್ರಾ|Feb 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ.ಡಾ. ಎಚ್.ಎಸ್. ಅನುಪಮಾ ಅವರ ಹೊಸ ಕಾದಂಬರಿ “ಬೆಳಗಿನೊಳಗು” ಕುರಿತು ಡಾ. ಎಲ್.ಸಿ. ಸುಮಿತ್ರಾ ಬರಹ + +byಕೆಂಡಸಂಪಿಗೆ|Jan 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ.ಮಂಡಲಗಿರಿ ಪ್ರಸನ್ನ ಅವರ “ನಿದಿರೆ ಇರದ ಇರುಳು” ಗಜಲ್‌ ಸಂಕಲನಕ್ಕೆ ಡಾ. ರಮೇಶ ಅರೋಲಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Jan 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ!ಡಾ. ಗಜಾನನ ಶರ್ಮ ಹೊಸ ಕಾದಂಬರಿ “ಪ್ರಮೇಯ”ದ ಕೆಲವು ಪುಟಗಳು ನಿಮ್ಮ ಓದಿಗೆ + +byನಾರಾಯಣ ಯಾಜಿ|Jan 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು.ರಾಮಚಂದ್ರ ಹಬ್ಬು ಅನುವಾದಿಸಿರುವ “ಮಹಾತ್ಮ ಗಾಂಧಿ ಜೀವನ ಚರಿತೆ” ಕೃತಿಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ + +byಸುಮಿತ್‌ ಮೇತ್ರಿ|Jan 24, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು.ರವಿಕುಮಾರ್ ಹಂಪಿ ಅನುವಾದಿತ “ನದಿಯೊಂದು ನಿದ್ರಿಸಿದಾಗ” ಕಾದಂಬರಿಯ ಕುರಿತು ಸುಮಿತ್‌ ಮೇತ್ರಿ ಬರಹ + +byಕೆಂಡಸಂಪಿಗೆ|Jan 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ.ಮಂಜುನಾಥ್‌ ಕುಣಿಗಲ್‌ ಬರೆದ “ಕುಣಿಗಲ್‌ ಟು ಕಂದಹಾರ್” ಕೃತಿಯಿಂದ ಆಯ್ದ ಲೇಖನ ನಿಮ್ಮ ಓದಿಗೆ + +byನಾಗರಾಜ ಎಂ ಹುಡೇದ|Jan 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ.ಡಾ. ಬಸು ಬೇವಿನಗಿಡದ ಬರೆದ “ಒಳ್ಳೆಯ ದೆವ್ವ” ಮಕ್ಕಳ ಕಾದಂಬರಿಯ ಕುರಿತು ನಾಗರಾಜ ಎಂ ಹುಡೇದ ಬರಹ + +byಅಕ್ಷತಾ ಕೃಷ್ಣಮೂರ್ತಿ|Jan 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ.ನಾಳೆ ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಅಂಕಣ ಬರಹಗಳ ಸಂಕಲನ ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಇಸ್ಕೂಲಿನ ಕುರಿತ ಅವರ ಮಾತುಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 12, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಯಾಜಿಯವರು ಸರ್ಚ್‌ಲೈಟ್‌ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು.ನಾರಾಯಣ ಯಾಜಿಯವರ “ನೆಲ ಮುಗಿಲು” ಅಂಕಣ ಬರಹಗಳ ಸಂಕಲನಕ್ಕೆ ಹರಿಪ್ರಕಾಶ್‌ ಕೋಣೆಮನೆ ಬರೆದ ಮುನ್ನುಡಿ \ No newline at end of file diff --git a/Kenda Sampige/article_148.txt b/Kenda Sampige/article_148.txt new file mode 100644 index 0000000000000000000000000000000000000000..12ffa9ee2bee7ad2fe179353780d887383a71492 --- /dev/null +++ b/Kenda Sampige/article_148.txt @@ -0,0 +1,21 @@ +ಸಿನಿಲೋಕ-21 ಕೃತಿಯು ಇಪ್ಪತ್ತೊಂದನೆ ಶತಮಾನದ ಮೊದಲಿನ ಈ ಎರಡು ದಶಕಗಳಲ್ಲಿ ಜಗತ್ತಿನಲ್ಲಿ ಮೂಡಿಬಂದ ಚಿತ್ರಗಳಲ್ಲಿ ಆಯ್ದ ನಲವತ್ತು ಚಿತ್ರಗಳ ಕುರಿತ ಲೇಖನ ಮಾಲೆ. ಇಪ್ಪತ್ತೊಂದನೆ ಶತಮಾನದ ಈ ಸಿನಿಮಾಗಳು ಇತ್ತೀಚಿನ ಹೊಸ ಅನ್ವೇಷಣೆಯಾದ ಡಿಜಿಟಲ್‌ ತಂತ್ರಗಳ ಬಳಕೆಯಿಂದಾಗಿ ಮಾತ್ರ ಭಿನ್ನವಾಗಿಲ್ಲ, ಬದುಕನ್ನು ದಾಖಲಿಸುವ ಭಿನ್ನ ಮಾದರಿಯಾಗಿಯೂ ವಿಶಿಷ್ಟವಾಗಿದೆ. ಕಳೆದ ಶತಮಾನದ ಎರಡನೆ ದಶಕದಲ್ಲಾದ ರಷ್ಯಾದ ಕ್ರಾಂತಿಯು ಸೋವಿಯತ್‌ ಸಿನಿಮಾದ ಗತಿ ತಾರ್ಕಿಕ ಕಟ್ಟುವಿಕೆಗೆ ಕಾರಣವಾದರೆ, ಫ್ಯಾಸಿಸಂ ಬೆಳವಣಿಗೆಯ ಮುನ್ಸೂಚನೆಯಾಗಿ ಮೂರನೆಯ ದಶಕದಲ್ಲಿ ಜರ್ಮನ್‌ ಎಕ್ಸಪ್ರೆಷನಿಸಂ ಹುಟ್ಟಿಗೆ ಕಾರಣವಾಯಿತು. ನಲವತ್ತರ ದಶಕದಲ್ಲಿ ಸಿನಿಮಾ ಭಾಷೆಯಲ್ಲಿನ ಹೊಸ ದೃಶ್ಯಬಿಂಬದ ಕ್ರಮವಾದ ನವವಾಸ್ತವವಾದ(ನಿಯೋರಿಯಲಿಸಂ) ಶೈಲಿಯ ಹುಟ್ಟಿಗೆ ದ್ವಿತೀಯ ಮಹಾಯುದ್ಧವು ಕಾರಣವಾದರೆ, ಅರವತ್ತರ ದಶಕದಲ್ಲಿ ಎಲ್ಲೆಡೆ ಹರಡಿದ ಮನುಷ್ಯನ ಅಸ್ಮಿತೆಯ ಹುಡುಕಾಟವು ಫ್ರೆಂಚ್ ನ್ಯೂ ವೇವ್‌ಗೆ ಮೂಲವಾಯಿತು. ಎಂಬತ್ತರ ದಶಕದಲ್ಲಿ ತೃತೀಯ ಜಗತ್ತಿನ ರಾಜಕೀಯ, ಸಾಂಸ್ಕೃತಿಕ ತಲ್ಲಣಗಳು ಮೂರನೆ ಜಗತ್ತಿನ ರಾಜಕೀಯ ಸಿನಿಮಾಗಳ ಪಂಥಕ್ಕೆ ಅಡಿಪಾಯ ಹಾಕಿತು. ಅವುಗಳ ಮುಂದುವರಿಕೆಯಾಗಿ ಇಪ್ಪತ್ತೊಂದನೇ ಶತಮಾನದ ಚಿತ್ರಗಳು ತನ್ನ ಕ್ಷೇತ್ರದಲ್ಲಾದ ಡಿಜಿಟಲ್ ಬೆಳವಣಿಗೆಯನ್ನು ಬಳಸಿಕೊಂಡು ಮನುಕುಲದ ಹೊಸಾ ಬಿಕ್ಕಟ್ಟುಗಳನ್ನು ಅನನ್ಯವಾದ ಸಿನಿಮಾಭಾಷೆಯಲ್ಲಿ ಹಿಡಿದಿಡುವ ಪ್ರಯತ್ನದಲ್ಲಿ ಹೊಸ ಸಿನಿಮಾ ಪರಿಭಾಷೆಯನ್ನು ಹುಟ್ಟುಹಾಕುತ್ತಿವೆ. ಎ. ಎನ್. ಪ್ರಸನ್ನ ಅವರು ಈ ಬೆಳವಣಿಗೆಯ ಪೂರ್ವಾಪರವನ್ನು ಕೆಲವು ವಿಶಿಷ್ಟ ಸಿನಿಮಾ ಕೃತಿಗಳ ಮೂಲಕ ಅರ್ಥೈಸುವ ಪ್ರಯತ್ನವನ್ನು ಈ ಕೃತಿಯಲ್ಲಿ ಮಾಡಿದ್ದಾರೆ. + +(ಎ.ಎನ್. ಪ್ರಸನ್ನ) + +ಉಳಿದ ಪ್ರಕಾರಗಳಿಗೆ ಹೋಲಿಸಿದರೆ ಸಿನಿಮಾ ಇನ್ನೂ ಹರೆಯದಲ್ಲಿದೆ. ಕೇವಲ ನೂರಾಮೂವತ್ತು ವರ್ಷಗಳ ಪರಂಪರೆ ಇರುವ ಈ ಮಾಧ್ಯಮವು ಪ್ರತಿ ಹದಿನೈದು-ಇಪ್ಪತ್ತು ವರ್ಷಗಳಿಗೊಮ್ಮ ಭಾಷೆ-ಸಂವಹನ ಕುರಿತ ಚಿಂತನೆಗಳನ್ನು ಪರಿಷ್ಕರಿಸುತ್ತಾ, ಅವುಗಳಿಗೆ ಅನುಗುಣವಾಗಿ ನುಡಿಗಟ್ಟುಗಳನ್ನು ಹೊಸದಾಗಿ ರೂಪಿಸುತ್ತಾ ಸಾಗಿದೆ. ಅದರ ಜೊತೆಗೇ ಉಳಿದ ಮಾಧ್ಯಮಗಳ ಜೊತೆ ಅನುಸಂಧಾನ ನಡೆಸುತ್ತಾ ತನ್ನ ಶಕ್ತಿಯನ್ನು ವೃದ್ಧಿಸಿಕೊಳ್ಳತ್ತಾ ಸಾಗಿದೆ. ಪ್ರಧಾನವಾಹಿನಿಯ ಸಿನಿಮಾಗಳು ಕಾಲದಿಂದ ಕಾಲಕ್ಕೆ ಬದಲಾಗುತ್ತಿರುವ ಪ್ರೇಕ್ಷಕನನ್ನು ಸೆರೆಹಿಡಿದಿಟ್ಟುಕೊಳ್ಳಲು ಹೊಸಾ ಹೊಸಾ ತಂತ್ರಗಳನ್ನು, ಆಕರ್ಷಣೆಗಳನ್ನು ಬಳಸತೊಡಗಿದರೆ, ಉಪವಾಹಿನಿಯಲ್ಲಿ ಸಾಗುತ್ತಿರುವ ಕೆಲವರು ತಮ್ಮ ರಾಜಕೀಯ ಚಿಂತನೆಗಳನ್ನು, ತಾತ್ವಿಕ ನೆಲೆಗಳನ್ನು, ದರ್ಶನವನ್ನು ಹಂಚಿಕೊಳ್ಳಲು ಹೊಸ ಅಭಿವ್ಯಕ್ತಿ ಕ್ರಮವನ್ನು ಬಳಸತೊಡಗಿದ್ದಾರೆ. ಇನ್ನೂ ಕೆಲವರು ಪ್ರೇಕ್ಷಕರ ಗ್ರಹಣಗುಣವನ್ನು ಧ್ಯಾನಸ್ಥ ನೆಲೆಗೆ ಏರಿಸುವ ಪ್ರಯತ್ನ ಮಾಡುತ್ತಾ ಸಿನಿಮಾದಲ್ಲಿ ಸಂವಹನ ಶಕ್ತಿಯನ್ನು ಹರಿತಗೊಳಿಸುತ್ತಿದ್ದಾರೆ. + +ಇಪ್ಪತ್ತನೆಯ ಶತಮಾನದ ಅಂತ್ಯ, ಇಪ್ಪತ್ತೊಂದನೆಯ ಆರಂಭ ಒಂದು ಸಮಸ್ಯಾತ್ಮಕ ತಿರುವು ಪಡೆದ ಕಾಲ. ಎಲ್ಲ ರೀತಿಯ ಪರ‍್ಯಾಯ ಚಿಂತನೆಗಳೂ ಬದಿಗೆ ತಳ್ಳಲ್ಪಟ್ಟು, ಗ್ರಾಹಕ ಸಂಸ್ಕೃತಿಯೊಂದೇ ಮುನ್ನೆಲೆಗೆ ಬರತೊಡಗಿದ ಕಾಲ. ತನ್ನ ವೈಯಕ್ತಿಕ ದರ್ಶನ ಹಂಚಿಕೊಳ್ಳುವುದಕ್ಕೆ, ನಿಕಷಕ್ಕೆ ಒಡ್ಡುವುದಕ್ಕೆ, ಸಿನಿಮಾ ಸಂಸ್ಕೃತಿಯನ್ನು ಬಳಸಿಕೊಳ್ಳುತ್ತಿದ್ದ ನಿರ್ದೇಶಕರಂತೂ ನಿಬ್ಬೆರಗಾದ ಕಾಲ. ಈ ಸುನಾಮಿ ಅಲೆಯಲ್ಲಿ ಕೊಚ್ಚಿಹೋಗಿ, ನಿರ್ದಿಷ್ಟ ಕಾಲ, ದೇಶಗಳ ಹಂಗಿಲ್ಲದೇ, ಸಮುದಾಯದ ಒಳತಿನ ಬಗ್ಗೆ ಕಾಳಜಿ ಇಲ್ಲದೇ, ಲಾಭದ ಬಗ್ಗೆ ಮಾತ್ರ ಗಮನವಿಟ್ಟು ಸಿನಿಮಾ ನಿರ್ಮಾಣಕ್ಕೆ ಇಳಿವ, ಬಹು ಬಂಡವಾಳ ಸುರಿಯುವ ಚಿತ್ರ ನಿರ್ಮಾಪಕರ ಹಾಗೂ ಬಹುರಾಷ್ಟ್ರೀಯ ಚಿತ್ರ ನಿರ್ಮಾಣ ಸಂಸ್ಥೆಗಳು ಒಡ್ಡುವ ಆಮಿಷಕ್ಕೆ ಸಿಲುಕಿ ತೇಲಿ ಹೋದವರ ಸಂಖ್ಯೆಯೇ ಜಾಸ್ತಿ. ತನ್ನತನದ ಬಣ್ಣ, ರುಚಿ, ವಾಸನೆ, ಚಹರೆ ಕಳೆದುಕೊಂಡ ಇಂತಹ ಚಿತ್ರಗಳಿಗೆ ವ್ಯಾಪಕ ಪ್ರಚಾರ ಕೂಡ ಮಾಡುವ ಕಾರ್ಪೊರೇಟ್ ಹಾಗೂ ಸತ್ತೆಯ ಹುನ್ನಾರವೂ ಸೇರಿದಾಗ ಚಿತ್ರಗಳು ಸಪಾಟಾಗಿ, ಏಕರೂಪ ಪಡೆಯುವತ್ತ ಹೆಜ್ಜೆ ಹಾಕತೊಡಗಿದ್ದು ದೊಡ್ಡ ದುರಂತ. ಇಂತಹ ದುರಿತ ಕಾಲದಲ್ಲಿ ಪ್ರವಾಹದ ವಿರುದ್ಧ ಈಜಾಡುವ ಸಾಹಸ ಮಾಡುವವರ ಸಂಖ್ಯೆ ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಾ ಇರುವುದು ಸಂತಸದ ವಿಷಯ. ಉದ್ಯಮದ ಹಿಡಿತ ಬಲವಾದಷ್ಟೂ ಅದನ್ನು ವಿರೋಧಿಸುವ, ಪ್ರತಿರೋಧ ವ್ಯಕ್ತಪಡಿಸುವ ಹಲವು ಅನ್ಯ ಮಾರ್ಗಗಳನ್ನು, ಭಿನ್ನರೀತಿಯ ಅಭಿವ್ಯಕ್ತಿ ಕ್ರಮಗಳನ್ನು ಕಂಡುಕೊಳ್ಳುತ್ತಾ ಹೋದ ನಿರ್ದೇಶಕರ ಕಾಣಿಕೆ ಅಮೋಘ. ಎ. ಎನ್. ಪ್ರಸನ್ನರವರು ಆರಿಸಿದ ಈ ನಲವತ್ತು ಚಿತ್ರಗಳು ಅಂತಹ ಪ್ರಯತ್ನಗಳ ಪರಿಚಯವಾಗಿದೆ. + + + +ಪ್ರಸನ್ನರ ವಿಶೇಷಣೆಯ ಹಿರಿಮೆ ಎಂದರೆ ಒಂದು ಸಿನಿಮಾ ಕೃತಿಯನ್ನು ಸಮುದಾಯದಿಂದ ಬೇರ್ಪಡಿಸಿ ನಿರ್ವಾತದಲ್ಲಿಟ್ಟು ನೋಡುವುದಿಲ್ಲ. ಒಂದು ಕೃತಿಯನ್ನು ವಿಶ್ಲೇಷಣೆ ಮಾಡುವಾಗ ಆ ಕೃತಿ ನಿರ್ಮಾಣವಾದ ದೇಶದ ಹಿನ್ನೆಲೆ, ಅದರ ರಾಜಕೀಯ-ಸಾಂಸ್ಕೃತಿಕ ತುಮುಲಗಳನ್ನು ಪರಿಗಣಿಸಿ ಅದರ ಹಿನ್ನೆಲೆಯಲ್ಲಿ ವಿಶ್ಲೇಷಿಸುತ್ತಾರೆ. ಅಕಿ ಕೌರಸ್ಮಕಿಯ ʻಮ್ಯಾನ್‌ ವಿತೌಟ್‌ ಎ ಪಾಸ್ಟ್‌ʼ ಬಗ್ಗೆ ಬರೆಯುತ್ತ ಫಿನ್‌ಲ್ಯಾಂಡ್ ದೇಶ ಎದುರಿಸುತ್ತಿರುವ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ವಿಶ್ಲೇಷಿಸುತ್ತಾರೆ. ʻಎ ಸೆಪರೇಷನ್ʼ ಬಗ್ಗೆ ಬರೆಯುತ್ತ ಇರಾನಿನ ಉಸಿರುಗಟ್ಟಿಸುವ ವಾತಾವರಣ ಹೇಗೆ ನಿರ್ದೇಶಕ ಅಸ್ಗರ್‌ ಫರ್ಹಾದಿ ಹೊಸತೇ ಆದ ಶೈಲಿಯನ್ನು ಸೃಷ್ಟಿಸಬೇಕಾಯಿತೆಂದು ದಾಖಲಿಸುತ್ತಾರೆ. ಹಿಯಾ ಯಾಂಗ್ಕೆನ ʻಸ್ಟಿಲ್ ಲೈಫ್‌ʼ ಬಗ್ಗೆ ಬರೆಯುತ್ತ ಚೀನಾ ದೇಶದಲ್ಲಿ ಸರ್ಕಾರದ ತೀರ್ಮಾನಗಳು ಜನವಿರೋಧಿಯಾದರೂ‌ ಅವುಗಳನ್ನು ಜನ ಪ್ರತಿಭಟಿಸಲಾಗದ ದುಃಸ್ಥಿತಿಯಲ್ಲಿರುವುದನ್ನು ದಾಖಲಿಸುತ್ತಾರೆ. ಸತ್ತ/ಸರ್ಕಾರದೊಂದಿಗಿನ ತಿಕ್ಕಾಟದ ರಾಜಕೀಯ ಸ್ವರೂಪವನ್ನು ಕಥಾ ಹಂದರದಲ್ಲಿ ಮಾತ್ರ ಪ್ರಸನ್ನ ಅವರು ದಾಖಲಿಸುವುದಿಲ್ಲ. ಸಿನಿಮಾ ಕೃತಿಯೊಂದರಲ್ಲಿ ಆಕೃತಿಯೂ ಆ ಪ್ರತಿರೋಧ ವ್ಯಕ್ತಪಡಿಸುತ್ತದೆ. ಆದರೆ ಸೂಚ್ಯವಾಗಿ. ಸಬ್ ಲಿಮಿನಲ್ ಆಗಿ. ಪ್ರಸನ್ನರ ಕಣ್ಣು ಅಂತಹ ವಿಷಯಗಳನ್ನು ಗಮನಿಸಿ ವಿಶ್ಲೇಷಿಸುವುದರಿಂದ ಈ ಲೇಖನಗಳು ಕೇವಲ ಕಥಾವಸ್ತುವನ್ನು ಮಾತ್ರ ವಿಶ್ಲೇಷಿಸುವ ವಿಮರ್ಶೆಯಾಗದೆ ವಸ್ತು ಮತ್ತು ಅದನ್ನು ಮಂಡಿಸುವ ಕ್ರಮ ಎರಡರ ವಿಶ್ಲೇಷಣೆಯೂ ಆಗಿವೆ. ಆ ಕಾರಣಕ್ಕಾಗಿ ಈ ಬರಹಗಳು ಆಯಾ ಕೃತಿಗಳ ಪರಿಪೂರ್ಣ ಹಾಗೂ ಸಮಗ್ರ ವಿಶ್ಲೇಷಣೆಯೂ ಆಗಿವೆ. + +(ಗಿರೀಶ್‌ ಕಾಸರವಳ್ಳಿ) + +ಜಗತ್ತಿನಲ್ಲಿ ಮೂಡಿದ ಎಲ್ಲ ವಿಪ್ಲವಗಳಿಗೆ ಪ್ರತಿಸ್ಪಂದಿಸುತ್ತಾ ಬಂದ ಜಾಗತಿಕ ಸಿನಿಮಾ ಇಪ್ಪತ್ತೊಂದನೆಯ ಶತಮಾನದ ಬೆಳವಣಿಗೆಗೆ ಹೇಗೆ ಪ್ರತಿಕ್ರಿಯಿಸುತ್ತಿದೆ ಎನ್ನುವುದನ್ನು ಈ ನಲವತ್ತು ಸಿನಿಮಾಗಳು ದಾಖಲಿಸುತ್ತವೆ. ಹಾಗಾಗಿ ಈ ಲೇಖನಗಳು ಒಂದು ಸಾರ್ಥಕ ಪ್ರಯತ್ನ ಎಂದು ನನ್ನ ಅನಿಸಿಕೆ. ಹೀಗೆ ಹೇಳುತ್ತಲೇ ಕಳೆದೆರಡು ದಶಕಗಳಲ್ಲಿ ಜಾಗತಿಕ ಸಿನಿಮಾಗಳಲ್ಲಿ ಮೂಡಿಬಂದ ಹೊಸಾ ಶೈಲಿಯಾದ ʻಸ್ಲೋ ಸಿನಿಮಾ ಚಳುವಳಿʼಯ ಒಂದೆರಡು ಕೃತಿಗಳನ್ನು ಪರಿಚಯಿಸಿದ್ದರೆ ಸಾಂದರ್ಭಿಕವಾಗಿ ಇನ್ನಷ್ಟು ಉಪಯುಕ್ತತೆ ಬರುತ್ತಿತ್ತೇನೋ. ಹಾಲಿವುಡ್ ಉದ್ದಿಮೆಯ ಜನಪ್ರಿಯ ಸಿದ್ಧಸೂತ್ರಕ್ಕೆ ಪರ್ಯಾಯವಾಗಿ ಮೂಡಿಬಂದದ್ದೇ ʻಸ್ಲೋ ಸಿನಿಮಾ ಚಳುವಳಿʼ. ಇವು ಮಂದಗತಿಯ ಚಿತ್ರಗಳಲ್ಲ, ಮಂದಶೈಲಿಯ ಚಿತ್ರಗಳು. ಧಾವಂತದ ಇಂದಿನ ಬದುಕಿನಲ್ಲಿ ಘಟನೆಗಳನ್ನು, ವಿವರಗಳನ್ನು ಗಮನಿಸಲೇ ಅಸಾಧ್ಯವಾದ ಇಂದಿನ ದಿನಗಳಲ್ಲಿ ಘಟನೆಗಳನ್ನೆ ಮಂದ ಶೈಲಿಯಲ್ಲಿ ಚಿತ್ರಿಸಿ, ಧ್ಯಾನಸ್ಥ ಸ್ಥಿತಿಯಲ್ಲಿ ವಿಷಯ ಗ್ರಹಿಸುವಂತೆ ಮಾಡುವುದು ಈ ಶೈಲಿಯ ಹೆಗ್ಗಳಿಕೆ. ಇಪ್ಪತ್ತನೆಯ ಶತಮಾನದಲ್ಲಿ ಕಾರ್ಲ್‌ ಡ್ರೈಯರ್‌, ರಾಬರ್ಟ್ ಬ್ರೆಸ್ಸೋನ್, ತಾರ್ಕೋವಸ್ಕಿ ಮುಂತಾದ ಕೆಲವರೇ ಬಳಸಿದ ಈ ಶೈಲಿಯಲ್ಲಿ ಇತ್ತೀಚಿಗೆ ಅನೇಕ ಚಿತ್ರಗಳು ತಯಾರಾಗುತ್ತಿದ್ದು, ಬಹು ಪ್ರಭಾವ ಬೀರುತ್ತಿರುವ ಹೊಸಾ ಶೈಲಿಯಾಗಿದೆ. ಮೆಕ್ಸಿಕೋದ ಕಾರ್ಲೋಸ್‌ ರೆಗೆಡೋಸ್‌, ಫಿಲಿಪೈನ್ಸ್ ದೇಶದ ಲವ್‌ ಡಯಾಸ್, ಮಲೇಷಿಯಾ ಸಂಜಾತ ತೈವಾನ್‌ನ ತ್ಸಾಯಿ ಮಿಂಗ್‌ ಲಿನ್‌ರ ಚಿತ್ರಗಳಲ್ಲಿ ಇವನ್ನು ಕಾಣಬಹುದು. ಹಾಗೆಯೇ ಭಾರತವೂ ಸೇರಿದಂತೆ ಈ ಶೈಲಿಯನ್ನು ಬಳಸುತ್ತಿರುವ ಚಿತ್ರ ನಿರ್ದೇಶಕರು ಜಾಗತಿಕ ಸಿನಿಮಾ ಕ್ಷೇತ್ರದಲ್ಲಿ ತಮ್ಮ ವಿಶಿಷ್ಟವಾದ ಚಿತ್ರಗಳಿಂದ ಪ್ರಭಾವ ಬೀರುತ್ತಿದ್ದಾರೆ. + + + +ಕೆ.ಪಿ.ಟಿ.ಸಿ.ಎಲ್‌ನಲ್ಲಿ ಅಭ್ಯಂತರರಾಗಿ ರಾಜ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಜೀವನ ನಡೆಸುತ್ತಿರುವ ಶ್ರೀಯುತ ಎ. ಎನ್‌. ಪ್ರಸನ್ನರವರು ಕಥೆಗಾರರಾಗಿ, ಕಾದಂಬರಿಕಾರರಾಗಿ, ಅನುವಾದಕರಾಗಿ, ಮಕ್ಕಳ ಸಾಹಿತ್ಯದ ಅಧ್ವರ್ಯರಾಗಿ ಸಾಹಿತ್ಯ ಕೃಷಿ ಮಾಡುತ್ತ ಬಂದವರು. ಇತ್ತೀಚಿನ ಕೆಲವರ್ಷಗಳಲ್ಲಿ ಸಿನಿಮಾ ಕ್ಷೇತ್ರದಲ್ಲೂ ಕೃಷಿ ಮಾಡುತ್ತಿದ್ದಾರೆ. ಸ್ವತಃ ಚಿತ್ರ ನಿರ್ದೇಶನ, ದೂರದರ್ಶನ ಧಾರಾವಾಹಿಯೂ ಮಾಡುತ್ತಾ ಗಣನೀಯ ಸೇವೆ ನೀಡಿದ್ದಾರೆ. ಸಿನಿಮಾ ಕುರಿತಾಗಿ ಅವರು ಬರೆದ ನಾಲ್ಕನೆಯ ಪುಸ್ತಕವಿದು. ಈ ಪ್ರಸ್ತುತ ಪುಸ್ತಕವು ಇಪ್ಪತ್ತೊಂದನೆಯ ಶತಮಾನದ ಈ ಮೊದಲೆರಡು ದಶಕಗಳಲ್ಲಿ ಜಗತ್ತಿನಾದ್ಯಂತ ಸೃಷ್ಟಿಯಾದ ಸಿನಿಮಾಗಳಲ್ಲಿ ಮುಖ್ಯವಾದ ನಲವತ್ತು ಕೃತಿಗಳನ್ನು ಸಮರ್ಥವಾಗಿ ಕನ್ನಡಿಗರಿಗೆ ಪರಿಚಯಿಸುತ್ತದೆ. ಇಂಗ್ಲಿಷಿನಲ್ಲಿ ವಿಕಿಪೀಡಿಯಾ, ಐ.ಎಂ.ಡಿ.ಬಿ ಮೊದಲಾದ ಜಾಲತಾಣಗಳು ಮಾಡುತ್ತಿರುವ ಕೆಲಸವನ್ನು ಕನ್ನಡದಲ್ಲಿ ಆರಂಭಿಸಿದ ಸಾಧನೆ ಈ ಕೃತಿಯದು. ಅದಕ್ಕಾಗಿ ಪ್ರಸನ್ನ ಅವರನ್ನು ಅಭಿನಂದಿಸುತ್ತೇನೆ. ಸುಮಾರು ನಾಲ್ಕು ದಶಕಗಳ ಒಡನಾಟ, ಸ್ನೇಹ ನಮ್ಮದು. ನನಗೆ ಮುನ್ನುಡಿ ಬರೆಯುವ ಸೌಭಾಗ್ಯ ದೊರಕಿಸಿದ ಪ್ರಸನ್ನರಿಗೆ ವಂದನೆಗಳನ್ನು ಹೇಳುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_149.txt b/Kenda Sampige/article_149.txt new file mode 100644 index 0000000000000000000000000000000000000000..11b6ce74360b203be27193a569c0dfb4f5642a6f --- /dev/null +++ b/Kenda Sampige/article_149.txt @@ -0,0 +1,35 @@ +ಕೆ.ವಿ. ತಿರುಮಲೇಶರ ‘ಅಕ್ಷಯ ಕಾವ್ಯ’ವು ಕನ್ನಡ ಸಾಹಿತ್ಯದಲ್ಲೇ ಹೊಸ ಪ್ರಯೋಗ. ಧುಮ್ಮಿಕ್ಕಿ ಹರಿಯುವ ನದಿಯು ತನ್ನ ಸೆಳೆತಕ್ಕೆ ಸಿಕ್ಕಿದ್ದೆಲ್ಲವನ್ನೂ ಸ್ವೀಕರಿಸುವಂತೆ ಈ ಕಾವ್ಯ ನದಿಯು ಹಿರಿಕಿರಿದೆಂಬ ಭೇದವಿಲ್ಲದೆ ಸಕಲ ಸೂಕ್ಷ್ಮಾತಿಸೂಕ್ಷ್ಮ ವಿಚಾರಗಳನ್ನೂ ತನ್ನ ತೆಕ್ಕೆಗೆ ತೆಗೆದುಕೊಂಡು ರಭಸದಿಂದ ಹರಿದಿದೆ. ಎಲ್ಲೂ ನಿಲ್ಲದ ಈ ಪ್ರವಾಹವು ಒಂದರ್ಥದಲ್ಲಿ ಬತ್ತಲಾರದ ಗಂಗೆ. ಹಾಗಾಗಿ ಇದು ‘ಅಕ್ಷಯ ಕಾವ್ಯ’ + +ಈ ಕಾವ್ಯಕ್ಕೆ ಕೇಂದ್ರವಸ್ತು ಇಲ್ಲ. ಕಾವ್ಯವಿಡೀ ಕೇಂದ್ರವೇ. ಕ್ರಮಬದ್ಧತೆ-ಕಟ್ಟುಪಾಡುಗಳಿಗೆ ಒಗ್ಗದ, ಪ್ರತ್ಯೇಕ ಸೂತ್ರ-ಶೀರ್ಷಿಕೆಗಳಿಲ್ಲದ ಈ ಕಾವ್ಯವನ್ನು ಓದಿ ಆಸ್ವಾದಿಸಲು ಯಾವ ತೊಡಕೂ ಇಲ್ಲ. ಎಲ್ಲೇ ಓದನ್ನು ಆರಂಭಿಸಿ ಎಲ್ಲೇ ನಿಲ್ಲಿಸಿದರೂ ಕಾವ್ಯದ ಆಸ್ವಾದನೆಗೆ ತೊಂದರೆಯಾಗುವುದಿಲ್ಲ. ಕಾವ್ಯವನ್ನು ಇಡಿಯಾಗಿ ಅಥವಾ ಬಿಡಿಬಿಡಿಯಾಗಿ ಓದಿದರೂ ಕಾವ್ಯದ ತಾತ್ವಿಕತೆಯನ್ನು ಗ್ರಹಿಸಲು ಕಷ್ಟವಾಗುವುದಿಲ್ಲ. + +‘ಅಕ್ಷಯ ಕಾವ್ಯ’ ಹೇಗಿದೆ? ಅದರೊಳಗೆ ಏನಿದೆ? ಎಂಬ ಪ್ರಶ್ನೆಗೆ ಎಲ್ಲವೂ ಇದೆ ಎಂಬುದೇ ಉತ್ತರ. ಮನುಕುಲದ ವರ್ತನೆ, ಅವರ ಚರ್ಯೆಗಳು, ಕರ್ಮಪ್ರವೃತ್ತಿ, ಮನುಷ್ಯ ನಡೆದು ಬಂದ ದಾರಿ ಮತ್ತು ಇನ್ನು ಮುನ್ನಡೆಯಬೇಕಾದ ಹಾದಿಗಳನ್ನು ಕುರಿತ ಚಿಂತನೆ ದೇಶ ಕಾಲಾತೀತ ನೆಲೆಯಲ್ಲಿ ವ್ಯಕ್ತವಾಗಿದೆ. ಹಾಗಾಗಿ ಈ ಕಾವ್ಯವು ಮನುಷ್ಯ ಜೀವನದ ಆಗುಹೋಗುಗಳು ಮತ್ತು ವಾಸ್ತವದ ಪ್ರತಿರೂಪವಾಗಿದೆ. ಕೇವಲ ಭ್ರಮೆಯಲ್ಲಿ ಕಳೆದುಹೋಗುವ, ಮಹಾ ಮಹಾ ಸಿದ್ಧಾಂತಗಳಿಂದ ಭಾರವಾಗಿರುವ ಇಂದಿನ ಸಾಹಿತ್ಯ ಸಂದರ್ಭದಲ್ಲಿ ಜೀವನೋತ್ಸಾಹ ಮತ್ತು ಪ್ರೀತಿಗಳನ್ನು ಪ್ರತಿಬಿಂಬಿಸುವ ಇಂಥ ಕಾವ್ಯದ ಅಗತ್ಯವಿದೆ. + +ಕಾವ್ಯದ ಭಿತ್ತಿಯಲ್ಲಿ ಜೀವನದರ್ಶನ ಅರಳಿದೆ. ಸಿದ್ಧಶೈಲಿಗೆ ಜೋತುಬೀಳದ ಕಾವ್ಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಪಾತ್ರ, ಶೈಲಿ ಮತ್ತು ವಿವರಗಳು ಬದಲಾಗುತ್ತಾ ಹೋಗುತ್ತವೆ. ಪಾಶ್ಚಾತ್ಯ ಸಾಹಿತ್ಯ ಕೃತಿ-ಕರ್ತೃಗಳ ಪ್ರಸ್ತಾಪ ಬಹಳಷ್ಟಿದೆ. “ಇಲ್ಲಿನ ಕಾವ್ಯ ಖಂಡಗಳನ್ನು ಓದುತ್ತ ಓದುತ್ತ ಜೀವನವೆಂಬ ಮಹಾಕಾವ್ಯದ ದರುಶನ ಸಿಕ್ಕಿದರೆ ಆಶ್ಚರ್ಯವಿಲ್ಲ. ಅದರಲ್ಲಿ ಈ ಬದುಕಿನ ಗೂಢಗಳ ವಿಸ್ಮಯದ ಬಗ್ಗೆ ಚಿಂತಿಸಿದ ಜಗತ್ತಿನ ಅನೇಕಾನೇಕ ದಾರ್ಶನಿಕ ಹೊಳಹುಗಳ ಉಲ್ಲೇಖವೂ ಇದೆ. ಶೋಧನೆ ಮಾತ್ರ ಮುಂದುವರಿಯುತ್ತಲೇ ಇರುತ್ತದೆ. ಯಾವ ದರ್ಶನವೂ ಸಮಗ್ರವಾಗಲಾರದು. ಪರಿಪೂರ್ಣವಾಗಲಾರದು. ಅದಕ್ಕೆ ಕೊನೆಯೆಂಬುದೇ ಇಲ್ಲ. ಈ ಕಾರಣದಿಂದ ‘ಅಕ್ಷಯ ಕಾವ್ಯ’ದ ಓದು ಪರಿಪೂರ್ಣವಾದ ಅನುಭವವನ್ನು ಕೊಡುತ್ತದೆ. ಅನುಭಾವವನ್ನು ಕಲಿಸುತ್ತದೆ. ಕವಿಯೊಳಗಿನ ದಾರ್ಶನಿಕ, ದಾರ್ಶನಿಕನೊಳಗಿನ ಕವಿ ಸಮರಸದಿಂದ ಬೆರೆತ ಹದ ಈ ಕಾವ್ಯದ್ದು” ಎನ್ನುವ ಡಾ. ಯು. ಮಹೇಶ್ವರಿ ಅವರ ಮಾತುಗಳನ್ನು ಇಲ್ಲಿ ಉಲ್ಲೇಖಿಸಬಹುದು (ಗಡಿನಾಡಿನ ಬಾನಾಡಿ ಪ್ರತಿಭೆ ಡಾ. ಕೆ.ವಿ. ತಿರುಮಲೇಶ್- ಪುಟ ೧೩) ಹೋಮರ್, ದೋಸ್ತೋವ್‌ಸ್ಕಿ, ಕಾಫ್ಕ, ಯೇಟ್ಸ್, ಬ್ರಾಖ್, ಷಿಲ್ಲರ್ ಮೊದಲಾದವರು ತಮ್ಮ ತತ್ವ ಚಿಂತನೆಗಳೊಂದಿಗೆ ಬಂದು ಹೋಗುತ್ತಾರೆ. ಈ ಸಾಹಿತಿಗಳ ಕೃತಿಗಳನ್ನು ಓದುವ ಮೂಲಕ ಇವರ ತತ್ವಚಿಂತನೆಗಳನ್ನು ಅರಗಿಸಿಕೊಳ್ಳುವುದು ಸಾಮಾನ್ಯ ಜನರ ಪಾಲಿಗೆ ತೀರಾ ಕಷ್ಟ. ಇಂಥ ಸಂದರ್ಭದಲ್ಲಿ ಅವರ ಬರಹಗಳ ಮರ್ಮವನ್ನರಿತ ತಿರುಮಲೇಶರು ಕೃತಿಗಳಲ್ಲಿ ಅಡಕಗೊಂಡ ತತ್ವಗಳನ್ನು ಸರಳವಾಗಿ ನಿರೂಪಿಸುವಾಗ ಪಾಶ್ಚಾತ್ಯ-ಪೌರಾತ್ಯ ಭೇದವಿಲ್ಲದೆ ಇವರೆಲ್ಲರೂ ಓದುಗರಿಗೆ ಹತ್ತಿರವಾಗುತ್ತಾರೆ. + +‘ಅಕ್ಷಯ ಕಾವ್ಯ’ವನ್ನು ರಚಿಸುವುದರ ಮೊದಲೇ ತಿರುಮಲೇಶರು ಪ್ರಯೋಗಶೀಲರಾಗಿಯೇ ಮುಂದುವರಿದವರು ಎಂದು ಅವರ ಹಿಂದಿನ ಸಂಕಲನಗಳನ್ನು ಅವಲೋಕಿಸಿದಾಗ ತಿಳಿಯುತ್ತದೆ. ‘ಅವಧ’ ಮತ್ತು ‘ಪಾಪಿಯೂ’-ಈ ಎರಡು ಕೃತಿಗಳನ್ನು ಮುಖ್ಯವಾಗಿಟ್ಟುಕೊಂಡು ಡಾ. ಸಿ. ಎನ್. ರಾಮಚಂದ್ರನ್ ಅವರು ತಿರುಮಲೇಶರ ಕಾವ್ಯದ ಮುಖ್ಯ ಕಾಳಜಿಗಳನ್ನು ಹೀಗೆ ಗುರುತಿಸುತ್ತಾರೆ. “ಕಾಲ ಮತ್ತು ವ್ಯಕ್ತಿಗಳ ನಡುವಿನ ಸಂಕೀರ್ಣ ಸಂಬಂಧ ಅಥವಾ ಸಂಬಂಧವಿಲ್ಲದಿರುವುದು ಇವರನ್ನು ಕಾಡುವ ಪ್ರಶ್ನೆ” (ಕೆ.ವಿ.ತಿರುಮಲೇಶರ ಸಾಹಿತ್ಯ- ಪುಟ ೬೭ ಸಂ: ಗಿರಡ್ಡಿ ಗೋವಿಂದರಾಜ) ಇದಕ್ಕೆ ಸಮರ್ಥನೆಯನ್ನು ಒದಗಿಸುವ ಕವಿತೆಗಳು ಈ ಕೃತಿಗಳಲ್ಲಿ ಹೇರಳವಾಗಿ ದೊರಕುತ್ತವೆ. + +ತಿರುಮಲೇಶರ ಕವಿತೆಗಳಲ್ಲಿ ಬರುವ ಕಾಲ-ದೇಶಗಳ ವ್ಯಾಪ್ತಿ ವಿಸ್ತಾರಗಳ ಬಗ್ಗೆ ಓ. ಎಲ್. ನಾಗಭೂಷಣ ಸ್ವಾಮಿಯವರು ಹೇಳಿದ ಮಾತುಗಳು ಪರಿಶೀಲನಾರ್ಹವಾಗಿವೆ. + + + +“ಅವರ ಕವಿತೆಯಲ್ಲಿ ದೇಶವಿಸ್ತಾರ ಮತ್ತು ಕಾಲವಿಸ್ತಾರಗಳೆರಡೂ ಓದುಗರಿಗೆ ಎದುರಾಗುತ್ತವೆ. ದೇಶವೆನ್ನುವುದು ಮೊದಮೊದಲ ನವ್ಯಚಹರೆಯ ಪದ್ಯಗಳಲ್ಲಿ ಕೇವಲ ಅಂತರಂಗದ ಭಾವದೇಶಕ್ಕಷ್ಟೇ ಸೀಮಿತವಾಗಿದ್ದರೆ ಅದೇ ಕಾಲದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಂಡು ಮುಂದೆ ಹೇರಳವಾಗಿ ದೊರೆಯುವ ಪ್ರದೇಶ ವಿಸ್ತಾರವಿದೆ. ಕುಂಬಳೆಯಂಥ ಪುಟ್ಟ ಊರು, ಪಟ್ಟಣದಿಂದ ಆರಂಭವಾಗಿ ಕೇರಳದ ನಾಡನ್ನೂ ಒಳಗೊಂಡು ಹೈದರಾಬಾದ್, ಹಿಮಾಲಯದ ಹೃಷಿಕೇಶ, ಇಂಗ್ಲೆಂಡ್, ಯುರೋಪಿನ ದೇಶಗಳವರೆಗೆ ಈ ದೇಶ ವಿಸ್ತಾರ ಹಬ್ಬುತ್ತದೆ. ಮಹಾಭಾರತದ ಕಾಲ, ಗೌತಮ ಅಹಲ್ಯೆಯರ ಪೌರಾಣಿಕ ಕಾಲ, ಈಜಿಪ್ತು ಮೆಸಪೊಟೋಮಿಯಾಗಳ ನಾಗರಿಕತೆಯ ಆರಂಭದ ಕಾಲ ಈ ಎಲ್ಲಾ ವಿಸ್ತಾರಗಳಲ್ಲಿ ತಿರುಮಲೇಶರ ಕಾವ್ಯ ವ್ಯವಹರಿಸುತ್ತದೆ. ಕಾಲ ಯಾವುದಾದರೂ ದೇಶ ಯಾವುದಾದರೂ ವಸ್ತುವನ್ನು ಗ್ರಹಿಸುವ ಪ್ರಜ್ಞೆಯ ಸಂದಿಗ್ಧ ಸ್ಥಿತಿ ಮತ್ತು ತೀರ್ಮಾನದ ನೆಲೆಯನ್ನು ಒಲ್ಲದ ಮನೋಭಾವ ಹಾಗೆಯೇ ಇರುತ್ತದೆ” (ಕೆ.ವಿ. ತಿರುಮಲೇಶರ ಸಾಹಿತ್ಯ- ಪುಟ ೫- ಸಂ: ಗಿರಡ್ಡಿ ಗೋವಿಂದರಾಜ) + +ಇಂಥ ಕಾವ್ಯ ಪ್ರಜ್ಞೆಯನ್ನು ಹೊಂದಿರುವ ತಿರುಮಲೇಶರ ‘ಅಕ್ಷಯ ಕಾವ್ಯ’ವು ತನ್ನದೇ ಆದ ‘ತಿರುಮಲೇಶತನ’ದಿಂದ ಸಮೃದ್ಧವಾಗಿದೆ. + +‘ಅಕ್ಷಯ ಕಾವ್ಯ’ವು ತಿರುಮಲೇಶರ ಕಾವ್ಯದ ಕಾಳಜಿಯನ್ನು ವಿಸ್ತಾರವಾಗಿ ಬಿಚ್ಚಿಡುತ್ತದೆ. ಮನುಷ್ಯ ಪ್ರಪಂಚವೇ ಇಲ್ಲಿನ ವಸ್ತು. ಇವರ ‘ಮುಖಾಮುಖಿ’, ‘ಪಾಪಿಯೂ’ ಸಂಕಲನಗಳನ್ನು ಓದಿದವರಿಗೆ ‘ಅಕ್ಷಯ ಕಾವ್ಯದ ವಸ್ತು ಪ್ರಪಂಚ, ಕವಿತೆಯನ್ನು ಹೇಳುವ ರೀತಿ ಅಪರಿಚಿತವೆನಿಸಲಾರದು. ವಿಶಾಲವಾದ ಓದು ಮತ್ತು ತತ್ವಚಿಂತನೆಗಳಿಂದ ಪಕ್ವಗೊಂಡ ಕವಿಯ ಮನಸ್ಸು ಈ ಬೃಹತ್ ಕಾವ್ಯವನ್ನು ಸೃಷ್ಟಿಸಿದೆ. + +ಓದು ಈ ಕಿಡಿಗೇಡಿಗಳ ಬರಹಅರಸರ ಶಾಸನಗಳಂತಿರುವ ಗ್ರಾಫಿಟಿಗಳಸತ್ಯವಾಕ್ಯಗಳಾಗಿದ್ದರೆ ಅವನ್ನುಶಿಲೆಯಲ್ಲಿ ಯಾಕೆ ಬರೆಯಬೇಕಿತ್ತು ನೀರಲ್ಲಿಬರೆಯಬೇಕಿತ್ತು ಶಾಶ್ವತ(ಪುಟ ೧೫) + +ಎಂದು ಬರೆಯುವ ತಿರುಮಲೇಶರ ಕಾವ್ಯವು ಪುರಾಣ, ಇತಿಹಾಸ, ಮಹಾಕಾವ್ಯ, ತತ್ವಜ್ಞಾನ, ಸಮುದ್ರ, ಅನೇಕ ದೇಶ ಭೂಖಂಡಗಳನ್ನೊಳಗೊಂಡು ಅವರವರ ಓದು, ಅನುಭವ ಮತ್ತು ಸಂವೇದನೆಗೆ ತಕ್ಕಂತೆ ರೂಪುಗೊಳ್ಳುತ್ತಾ ಹೋಗುತ್ತದೆ. ಇದುವರೆಗಿನ ಕನ್ನಡದ ಮಹಾಕಾವ್ಯಗಳಲ್ಲಿರುವಂತೆ ಒಂದು ಕತೆ ಇಲ್ಲ. ಆದ್ದರಿಂದ ಇದು ಓದುಗರ ಮನದಲ್ಲಿ ರೂಪುಗೊಳ್ಳಬಹುದಾದ ಕತೆಯೂ ಹೌದು; ಕವಿತೆಯೂ ಹೌದು. + +“ನೋಡಿ ಅವ ಎದ್ದೇ ಬಿಟ್ಟ. ನಾನಿನ್ನು ಕೂತಿರಲು ಸಾಧ್ಯವೇ ಇಲ್ಲ” ಎಂಬ ಸಾಲು ಅಥವಾ ಧ್ವನಿಯು ಏನೆಂದರಿಯದೆ ಏಕೆಂದರಿಯದೆ ಕಚ್ಚಾಡುವ ಮಂದಿಯ ತವಕ, ತಲ್ಲಣ ಮತ್ತು ದಮನಕಾರಿ ಮನೋವೃತ್ತಿಯನ್ನು ಬಯಲಿಗೆಳೆಯುತ್ತದೆ. ಈ ಕಾವ್ಯಕ್ಕೆ ಮನುಷ್ಯರ ಮನಸ್ಸಿನ ಮೂಲ ರಾಗ ಭಾವಗಳ ಕುರಿತು ವಿವಿಧ ನೆಲೆಗಳಲ್ಲಿ ಚಿಂತನೆಗೊಳಪಡಿಸುವ ಧ್ವನಿ ಪ್ರಾಪ್ತವಾಗಿದೆ. ಇಂಗ್ಲೆಂಡಿನಿಂದ ತಂದ ಮಿರಮಿರ ಮಿಂಚುವ ಸ್ವಚ್ಛ ಬೂಟುಗಳು ಊರಿನ ಕೊಳೆತ ಸಸ್ಯಾವಳಿಯ, ನೊಣ ಹಾರುವ ಗಲೀಜು ಬೀದಿಗೆ ಹೊಂದಲಾರದ ಪರಿಸ್ಥಿತಿಯು ಹಳ್ಳಿ ನಗರಗಳ ನಡುವಿನ ಬಿರುಕನ್ನು ಒಂದೇ ಮಾತಿನಲ್ಲಿ ವಿವರಿಸುತ್ತದೆ. ಕಾಚಿಗುಡ ನಿಲ್ದಾಣದಲ್ಲಿನ ಎಲ್ಲ ಹೊಸ ಯಾತ್ರಿಕರು, ಆದರೂ ಹೊಸದಾಗಿರದ ಅವರ ಮುಖಭಾವ ಎಲ್ಲೆಲ್ಲೋ ಎಷ್ಟೋ ಸಾರಿ ಕಂಡಂತೆನಿಸುವ ಭಾವಗಳೆಲ್ಲವೂ ಹೇಳಿಕೊಳ್ಳಲಾಗದ ತುಡಿತ, ಸಂಬಂಧಕ್ಕೆ ತೆರೆದುಕೊಳ್ಳಬಯಸುವವನ ಎದೆಯ ಮಿಡಿತಗಳನ್ನು ದಾಖಲಿಸುತ್ತದೆ. ಅಂತೆಯೇ ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ ಎಂಬ ಮನೋಸ್ಥಿತಿಯನ್ನೂ, ಗುಂಪಿನಲ್ಲಿ ಏಕಾಕಿಯೆನಿಸಿಕೊಳ್ಳುವ ಅವಸ್ಥೆಯನ್ನೂ ಕಟ್ಟಿಕೊಡುತ್ತದೆ. ಮಗಳ ಸ್ಕೂಲ್ ಬ್ಯಾಗಿನೊಳಗಿನ ಹಕ್ಕಿಯ ಗರಿ, ಒಣಹೂವಿನ ದಳ, ಪರಿಮಳದ ರಬ್ಬರ್‌ಗಳು ಬದಲಾಗಿ ಕ್ರಮೇಣ ಬೇರೇನೋ ವಸ್ತುಗಳು ಬರುವುದು ಜಗತ್ತಿನ ಬೆಡಗು ಬೆರಗುಗಳು ಮತ್ತು ಮಾನವೀಯ ಸಂಬಂಧಗಳತ್ತ ವ್ಯಕ್ತಿಯೊಬ್ಬನು ತೋರುವ ಅಗಾಧ ವಿಸ್ಮಯದ ಪ್ರತೀಕ. ಅಂತೆಯೇ ಪ್ರತಿ ತಂದೆಯೂ ಜೋಕರ್ ಎನಿಸಿಕೊಳ್ಳುವುದು, ಜೊತೆಯಾಗಿ ಬಂದ ರಾಜ ಮತ್ತು ವಿದೂಷಕ ಕೊನೆಗೆ ಒಬ್ಬನೇ ಆಗಿಬಿಡುವುದು ಬದುಕಿನ ವ್ಯಂಗ್ಯ. + +ಹಾದಿಯ ನಡುವೆ ರೋಡ್ ರೋಲರ್ ನಿಂತು ಬಿಡುವುದು, ಎಷ್ಟು ಎಳೆದರೂ ಬರದೇ ಇದ್ದಾಗ “ಕ್ರಮೇಣ ಮಾರ್ಗ ಕ್ರಮಿಸದೆ ಇದ್ದೀತೆ” ಎಂಬ ಒಂದೇ ನಂಬಿಕೆಯಲ್ಲಿ ವ್ಯಕ್ತಿಯು ದೂರಕ್ಕೆ ದೃಷ್ಟಿ ಹಾಯಿಸುವುದು- ಮನುಷ್ಯರ ತಟಸ್ಥ ಬದುಕಿಗೊಡ್ಡಿದ ಸಮರ್ಥ ರೂಪಕ. ಜೀವನದ ಹಾದಿಯಲ್ಲಿ ಎದುರಾಗುವ ಒತ್ತಡಗಳ ನಡುವೆ ಎದ್ದು ಕಾಣುವ ಭರವಸೆಯ ಪ್ರತೀಕ. ಬದುಕಿನಲ್ಲಿ ನಿತ್ಯವೂ ಕಾಣುವ ಇಂಥ ಅನುಭವಗಳು ಪರಿಚಿತವೆಂದೆನಿಸಿದರೂ ಸಾಮಾನ್ಯ ಸಂಗತಿಯ ಮೂಲಕ ಜೀವನಕ್ಕೆ ಬೇಕಾದ ದಾರ್ಶನಿಕ ಹೊಳಹುಗಳನ್ನು ಹೊಳಪಿಸುವ ಕ್ರಮ ನಿಜಕ್ಕೂ ಬೆರಗುಗೊಳಿಸುವಂಥದ್ದು. ಸದಾ ಆಶಾವಾದಿಯಾಗಿರುವ ತಿರುಮಲೇಶರೊಳಗಿನ ದಾರ್ಶನಿಕ ಯಾವತ್ತೂ ಜಾಗೃತನಾಗಿರುತ್ತಾನೆ ಎನ್ನುವುದಕ್ಕೆ ಇದು ಒಳ್ಳೆಯ ಉದಾಹರಣೆ. + +ನೆನಪುಗಳು ಬೆಚ್ಚಗೆ ಉಳಿಯುತ್ತವೆ. ಗತವೊಂದೇ ನಿರ್ದಿಷ್ಟ. ಭವಿಷ್ಯವೆಂಬುದು ಒಣಕಲ್ಪನೆ. ವರ್ತಮಾನವು ಹಿಡಿಯಲು ಅಸಾಧ್ಯವಾದ ಮಹಾಮಾಯೆ ಎಂಬ ವಿಚಾರಗಳು ‘ಅಕ್ಷಯ ಕಾವ್ಯ’ದ ಸಾಲುಗಳಲ್ಲಿ ಮೂಡಿವೆ. ಸೋಗಲಾಡಿಗಳ, ಗೋಮುಖ ವ್ಯಾಘ್ರರ ನಡುವೆ ಬದುಕುವ ಕಷ್ಟ ಇಲ್ಲಿದೆ. ಕವಿತೆಯು ಅಸಾಧ್ಯತೆಗಳಿಂದ ಉಂಟಾಗುತ್ತದೆ ಎಂಬ ಮಾತು ಕಾವ್ಯ ಸತ್ಯವಾಗಿ ಪರಿಣಮಿಸಿದೆ. + + + +‘ಅಕ್ಷಯ ಕಾವ್ಯ’ವನ್ನು ಓದಿದಾಗ ಮನುಕುಲದ ಜೀವನ ಚಿತ್ರಣ ಲಭಿಸುತ್ತದೆ. ಕಾವ್ಯವನ್ನು ಓದಿ ಸವಿಯುವುದರೊಂದಿಗೆ ಅದರ ಅರ್ಥವನ್ನರಿತುಕೊಳ್ಳಲು ಒತ್ತಾಯಿಸುವ ಮಹತ್ವದ ಕೃತಿ ಇದು. + +ಡಾ. ಸುಭಾಷ್‌ ಪಟ್ಟಾಜೆ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ  ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಕತೆಗಾರರಾದ ಇವರ ಕತೆ, ಕವಿತೆ, ಲೇಖನ ಮತ್ತು 200ಕ್ಕೂ ಮಿಕ್ಕಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನ ಪತ್ರಿಕೆ, ಮಾಸ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಬಿತ್ತರಗೊಂಡಿವೆ. ‘ಗೋಡೆ ಮೇಲಿನ ಗೆರೆಗಳು’  (ಕಥಾ ಸಂಕಲನ) ‘ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್’ ಹಾಗೂ  ‘ಕಥನ ಕಾರಣ’ (ಸಂಶೋಧನ  ಕೃತಿ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_15.txt b/Kenda Sampige/article_15.txt new file mode 100644 index 0000000000000000000000000000000000000000..e4b19653eadd263043d86e2d5c80e200699443ec --- /dev/null +++ b/Kenda Sampige/article_15.txt @@ -0,0 +1,83 @@ +ಅದೂ ದೇಶ ನವ ಆರ್ಥಿಕತೆಗೆ, ಕಂಪ್ಯೂಟರ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಆರಂಭಿಕ ವರ್ಷಗಳಲ್ಲಿ! ನಾನು ಅದೆಷ್ಟು ಪುಳಕಿತನೂ ಆನಂದ ತುಂದಿಲನೂ ಆಗಿದ್ದಿರಬಹುದೆಂದು ನೀವು ಯೋಚಿಸಬಹುದಲ್ಲವೇ!? + +ಆದರೆ, ವಾಸ್ತವವಾಗಿ ಆ ದಿನ ನಾನು ಕಂಪ್ಯೂಟರ್ ಕ್ಲಾಸ್‌ಗೆ ಹೋಗದೆ ಹೊಟ್ಟೆ ನೋವಿನ ಸುಳ್ಳು ನೆಪ ಹೇಳಿ ‘ಕಳ್ ಪೇಷಂಟ್’ಗಳ ಪಟ್ಟಿ ಸೇರಿ ಡಾರ್ಮಿಟರಿಯಲ್ಲೇ ಉಳಿದು ಬಿಟ್ಟಿದ್ದೆ! + +ಇದಕ್ಕೆಲ್ಲಾ ಕಾರಣ, ನಮ್ಮ ಬ್ಯಾಚಿನ ಕೊನೆಯವನಾಗಿ ಶಾಲೆಗೆ ಸೇರಿದ ನನಗೆ ಈ ಮೊದಲೇ ಶಾಲೆಗೆ ಸೇರಿ ನನ್ನ ಪಾಲಿಗೆ ‘ಸೀನಿಯರ್’ಗಳಂತಾಗಿದ್ದ ನನ್ನ ತರಗತಿ ಮಿತ್ರರು ‘ಕಂಪ್ಯೂಟರ್ ಸರ್’ರನ್ನೂ ಅವರ ತರಗತಿಯನ್ನೂ ವರ್ಣಿಸಿದ ಪರಿ ಹಾಗಿತ್ತು! + +ಅವರ ವರ್ಣಿಕೆಯಲ್ಲೇನೂ ಅನೈಜತೆಯಾಗಲಿ, ಉತ್ಪ್ರೇಕ್ಷೆಯಾಗಲಿ ಇರಲಿಲ್ಲ ಬಿಡಿ. ಕಂಪ್ಯೂಟರ್ ತರಗತಿಯೆಂಬುದನ್ನು ಅಟೆಂಡ್ ಮಾಡುವುದಕ್ಕಿಂತ ‘ಕಳ್ ಪೇಷಂಟ್’ಗಳ ಪಟ್ಟಿ ಸೇರುವುದು ಎಷ್ಟೋ ವಾಸಿ ಎಂಬ ಅನುಭವ ಮೊದಲ ತರಗತಿಯನ್ನು ಅಟೆಂಡ್ ಮಾಡಿದ ಯಾರಿಗಾದರೂ ಆಗುವಂತದ್ದೇ ಆಗಿತ್ತು. + +***** + +ಮೊದಲನೆಯದಾಗಿ, ನಮ್ಮ ಕಂಪ್ಯೂಟರ್ ಸರ್ ಸರಿಸುಮಾರು ಆರು ಅಡಿಗೂ ಎತ್ತರದ ನೂರರ ಲೆಕ್ಕದ ತೂಕದ ಅಜಾನುಬಾಹುವಾಗಿದ್ದರು. ನೋಡುತ್ತಿದ್ದರೆ ನಾವು ಶಾಲಾ ಲೈಬ್ರರಿಯಲ್ಲಿ ಕುಳಿತು, ವೀಡಿಯೋ ಕ್ಯಾಸೆಟ್ ಹಾಕಿ ಬಿಟ್ಟ ಕಣ್ಣು ಬಿಟ್ಟಂತಹೇ ನೋಡುತ್ತಿದ್ದ “ಗಲಿವರ ಲಿಲಿಪುಟ್” ಸಿನೆಮಾದ ಗಲಿವರನನ್ನೇ ನೆನಪಿಸುವಂತಿದ್ದರು. + +ಇಂತಹ ದೈತ್ಯದೇಹಿ ಗಲಿವರ ಜಗದೆಲ್ಲಾ ಗಂಭೀರತೆ, ರೌದ್ರವತೆ, ಕಠೋರತೆಗಳನ್ನು ಆವಾಹಿಸಿಕೊಂಡವರಂತೆ ತರಗತಿಯೊಳಗೆ ಬಂದರೆ, ಬಂದವರೇ ತಮ್ಮ ಬಿಗು ಮುಖವನ್ನು ಮತ್ತಷ್ಟು ಬಿಗಿಯಾಗಿಸಿಕೊಂಡು ಪಾಠ ಬೋಧನೆ ಆರಂಭಿಸಿದರೆ ಲಿಲಿಪುಟ್‌ಗಳಾಗಿದ್ದ ನಮ್ಮ‌ ಕತೆ ಏನಾಗಿರಬೇಡ!? + +ಅದೂ ಹೇಳಿ ಕೇಳಿ ಈಗಿನಂತೆ ಮೌಸ್ ಕ್ಲಿಕ್, ಸ್ಕ್ರೀನ್ ಟಚ್ ಗಳ ಅಥವಾ ಪೆನ್ ಡ್ರೈವ್, ಸಿ.ಡಿ ಗಳ ಜಮಾನವಲ್ಲ! ಮಾತೆತ್ತಿದರೆ ಪ್ರತಿಯೊಂದಕ್ಕೂ ಉದ್ದುದ್ದನೆಯ ಪ್ರೋಗ್ರಾಂಗಳು, ಫ್ಲೋಚಾರ್ಟ್‌ಗಳು, ಶಾರ್ಟ್ ಕಟ್ ಕೀಗಳು, ಕಂಟ್ರೋಲ್ ಕೀಗಳು, ಕಮಾಂಡ್‌ಗಳು ಎಂದು ತಲೆ ಕೆಡಿಸಿಕೊಳ್ಳಬೇಕಿದ್ದ, ಪ್ರತಿಯೊಂದಕ್ಕೂ ಹೆಚ್ಚಿನ ವಿವರಣೆ ಬೇಕಿದ್ದ ಕಾಲ! + +ಇಂತಹ ಕಾಲದಲ್ಲಿ ನಮ್ಮ ಕಂಪ್ಯೂಟರ್ ಸರ್ ಪಾಠ ಬೋಧನೆ ಎಂದರೆ ತಾನು ಹೇಳ ಬೇಕಿಂದಿರುವುದನ್ನೆಲ್ಲಾ ತನ್ನ ಪಾಡಿಗೆ ತಾನು ಹೇಳಿಬಿಡುವುದೆಂದು ದೃಢವಾಗಿ ನಂಬಿದಂತಿತ್ತೇ ವಿನಃ ಕೇಳುಗರ ಸ್ಥಿತಿಗತಿಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಂತಿರಲಿಲ್ಲ. ಅದಕ್ಕೆಂದೇ ತಾನು ಬೋಧನೆ ಮಾಡುತ್ತಿರುವುದು ಬಹುತೇಕ ಕನ್ನಡ ಮಾಧ್ಯಮ ಶಾಲೆಗಳಿಂದ ಬಂದ, ಸರಿಯಾಗಿ ಇಂಗ್ಲಿಷ್ ಬಾರದ ಮಕ್ಕಳ ಮುಂದೆ ಎಂಬ ಅರಿವಿದ್ದರೂ ಅಪ್ಪಿ ತಪ್ಪಿಯೂ ಕನ್ನಡ ಪದವೊಂದನ್ನು ಬಳಸನೆಂದು ಪ್ರತಿಜ್ಞೆ ಮಾಡಿದವರಂತೆ ಪಾಠ ಬೋಧಿಸುತ್ತಿದ್ದರು. + +ಅಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲವೇನೋ! ಮುಂದುವರೆದು, ‘ತಮ್ಮ ವಿದ್ಯಾರ್ಥಿ ಮಹಾಶಯರು ಪ್ರಶ್ನೆಯನ್ನೇ ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರವನ್ನು ಹೇಗೆ ತಾನೇ ನೀಡುವರು!’ ಎಂಬ ಸಾಮಾನ್ಯ ತಿಳುವಳಿಕೆಯನ್ನೂ ಮೀರಿ ಪಾಠದ ಮಧ್ಯೆ ಮಧ್ಯೆ ಪ್ರಶ್ನೆ ಕೇಳಿ ಸರಿಯಾಗಿ ಬಾರಿಸುತ್ತಿದ್ದರು. + +ಬಾರಿಸುವುದೆಂದರೆ ಸಾಮಾನ್ಯವೇನಲ್ಲ. ತಮ್ಮ ಕೈಯ ಮುಷ್ಟಿಯನ್ನು ಬಿಗಿದು ಸುತ್ತಿಗೆಯಂತೆ ಮಾಡಿ ಥೇಟು ಆನೆಯೊಂದು ಸೊಂಡಿಲ ತುದಿ ಮಡುಚಿ ಹಿಡಿದು ತಲೆ ಮೇಲೆ ಬಡುಚುವಂತೆ ಸರಿಯಾಗಿ ನೆತ್ತಿಯ ಮೇಲೆ ಕುಟುಕುತ್ತಿದ್ದರು. ಹೀಗೆ ಕುಟುಕಿಸಿ ಕೊಂಡವರಿಗೋ ಯಾವುದೋ ಬಂಡೆ ಜಾರಿ ಥಟ್ಟನೆ ತಲೆಯ ಮೇಲೆ ಬಿದ್ದಂತೆ ಅನುಭವವಾಗುತಿತ್ತು. ಅದು ಅಲ್ಲಿಗೆ ನಿಲ್ಲದೇ ‘ಏನಾಯ್ತು!’ ಎಂದು ಯೋಚಿಸುವಷ್ಟರಲ್ಲಿ ಮತೊಮ್ಮೆ ಮಗದೊಮ್ಮೆ ಅದೇ ಅನುಭವವಾಗುತ್ತಾ ಸಾಗಿ ಕಣ್ಣು ಕತ್ತಲಾದಂತಾಗಿ ಅಕ್ಷರಶಃ ನರಕ ಯಾತನೆ ಎಂದರೇನೆಂಬುದರ ಅನುಭವವಾಗುತಿತ್ತು. + +ಆ ನರಕ ಯಾತನೆ ಅನುಭವಿಸಿದವರು ಒಬ್ಬಿಬ್ಬರಾಗಿದ್ದರೆ ಅನುಭವಿಸಿದವರಿಗೇ ಗೊತ್ತು ಎನ್ನಬಹುದಾಗಿತ್ತಾದರೂ ಅನುಭವಿಸಿದವರ ಸಂಖ್ಯೆ ಸಚಿನ್ ಸಿಡಿಸಿದ ಸೆಂಚುರಿಗಳ ಪಟ್ಟಿಯನ್ನೂ ಮೀರಿಸುವಂತಿದ್ದರಿಂದ ಅನುಭವಿಸಿದವರೆಲ್ಲರಿಗೂ ಗೊತ್ತು ಎನ್ನುವುದೇ ಸೂಕ್ತವೆನಿಸೀತು. + +ಸರಿ, ಈ ಕತೆ ಪಾಠ ಬೋಧನೆಗಷ್ಟೇ ಸೀಮಿತಗೊಂಡಿದ್ದರೆ ‘ಸದ್ಯ ಪರ್ವಾಗಿಲ್ಲ!’ ಎಂದು ಖುಷಿ ಪಡುತ್ತಿದ್ದೆವೇನೋ! ಆದರೆ, ಅದು ಅಷ್ಟು ಸುಲಭವಾಗಿ ಮುಗಿಯಬೇಕಲ್ಲ! ಟೆಸ್ಟ್, ಎಕ್ಸಾmffಗಳು, ಅವನ್ನೂ ಮೀರಿ ಅಂಕ ವಿತರಣೆಯವರೆಗೂ ಮುಂದುವರೆಯುತಿತ್ತು. + +***** + +ಪ್ರಶ್ನೆ ಪತ್ರಿಕೆ ಎಂದರೆ ಅದರಲ್ಲಿ ರ್ಯಾಮ್, ರೋಮ್, ಬೇಸಿಕ್ ಇತ್ಯಾದಿಗಳ ವಿಸ್ತರಣೆ ಮಾಡುವ ಮಟ್ಟಿಗಿದ್ದ ನಮ್ಮ ಜ್ಞಾನ ಮಟ್ಟಕ್ಕೆ ಅಥವಾ ಪಾರ್ಟ್ಸ್ ಆಫ್ ದ ಕಂಪ್ಯೂಟರ್, ಯೂಸಸ್ ಆಫ್ ದ ಕಂಪ್ಯೂಟರ್ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸುವ ನಮ್ಮ ತಿಳುವಳಿಕೆ ಮಟ್ಟಕ್ಕೆ ನಿಲುಕುವ ಪ್ರಶ್ನೆಗಳನ್ನು ಕೇಳುವರೆಂದು ನಿರೀಕ್ಷಿಸುತ್ತಿದ್ದೆವು. ಆದರೆ ಅವರೋ ಹೊಸ ವಿಷಯ ನೀಡಿ ಅದಕ್ಕೆ ಸಂಬಂಧಿಸಿದಂತೆ ಫ್ಲೋಚಾರ್ಟ್, ಪ್ರೋಗ್ರಾಂಗಳ ರಚನೆಯಂತಹ ಬಹುತೇಕ ಅಪ್ಲಿಕೇಶನ್ ಮಟ್ಟದ ಪ್ರಶ್ನೆಗಳ ಬ್ರಹ್ಮಾಸ್ತ್ರಗಳನ್ನು ತುಂಬಿ, ನಮ್ಮತ್ತ ತೂರಿ ನಮ್ಮನ್ನು ಅಕ್ಷರಶಃ ನಿಶಸ್ತ್ರಗೊಳಿಸಿ ಅಧೀರರನ್ನಾಗಿಸಿ ಬಿಡುತ್ತಿದ್ದರು. + +ಇನ್ನೂ ಮುಂದುವರೆದು ಅಂಕ ವಿತರಣೆ ಎಂಬುದು ಈಗಾಗಲೇ ಅಪರಾಧಿಗಳೆಂದು ಸಾಬೀತಾಗಿರುವ ಖೈದಿಗಳಿಗೆ ನ್ಯಾಯಾಧೀಶನೊಬ್ಬ ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಘನ ಘೋರ ಗಳಿಗೆಯಂತಿರುತಿತ್ತು. ಅಂತಿದ್ದಾಗ ಮುಖದ ಮೇಲೆ ಉತ್ತರ ಪತ್ರಿಕೆ ಎಸೆಯುವುದು, ಬೈಯುವುದು, ಹೀಯಾಳಿಸುವುದು, ಕುಟುಕುವುದು, ಚೀರಾಡುವುದು, ಗೋಳಾಡುವುದು ಇವಕ್ಕೇನೂ ಕಡಿಮೆ ಇರದೆ ತರಗತಿ ಕೋಣೆ ಎಂಬುದು ಒಂದು ರೀತಿಯ ರಣಾಂಗಣವಾಗಿಬಿಡುತಿತ್ತು. + +‘ಪರೀಕ್ಷೆಗಳಲ್ಲಿ ಫೇಲಾದವರಿಗೆ, ಕಡಿಮೆ ಅಂಕ ತೆಗೆದವರಿಗೆ ಈ ರೀತಿಯ ಶಿಕ್ಷೆ ನೀಡುವುದು ಮಾಮೂಲಲ್ಲವೇ’ ಎಂದು ನಿಮಗನಿಸಬಹುದು. ಆದರೆ, ನಮ್ಮ ಕಂಪ್ಯೂಟರ್ ವಿಷಯದಲ್ಲಿನ ಪಾಸ್ ಪರ್ಸೆಂಟೇಜ್ ನಾವು ಆ ಕಾಲಕ್ಕೆ ಕಡಿಮೆ ಪರ್ಸೆಂಟೇಜ್ ನ ಪರೀಕ್ಷೆಗಳೆಂದು ಕೇಳಿ ತಿಳಿದಿದ್ದ ಸಿ.ಎ, ಐ.ಎ.ಎಸ್, ಐ.ಐ.ಟಿ ಗಳಿಗಿಂತಲೂ ಹೆಚ್ಚಿರುತ್ತಿರಲಿಲ್ಲ. ಹೋಗಲಿ, ಪಾಸಾದವರು, ಹೆಚ್ಚು ಅಂಕ ತೆಗೆದವರಾದರೂ ಪ್ರಶಂಸೆಗೆ ಪಾತ್ರರಾಗುತ್ತಿದ್ದರ, ಕುಟಕುವಿಕೆಯಿಂದ ವಿನಾಯಿತಿ ಪಡೆದುಕೊಳ್ಳುತ್ತಿದ್ದರ ಎಂದರೆ ಅದೂ ಸುಳ್ಳಾಗಿತ್ತು. ಪಾಸಾದ, ಹೆಚ್ಚು ಅಂಕ ತೆಗೆದ ಕಾರಣಕ್ಕಾಗಿಯೂ ಪೆಟ್ಟು ತಿಂದ ಮಹನೀಯರಿರುತ್ತಿದ್ದರು!.ಪಾಪ, ಸೇಠು! ಬೇರೆ ವಿಷಯಗಳಲ್ಲಿ ಅವರೇಜ್ ಅಂಕ ತೆಗೆಯುತ್ತಿದ್ದವನು ಅದ್ಯಾವ ಗಳಿಗೆಯಲ್ಲಿ ಕಂಪ್ಯೂಟರ್ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡನೋ! ವಿಶೇಷ ಆಸಕ್ತಿಯಿಂದ ತರಗತಿಯಲ್ಲಿ ಪಾಠ ಕೇಳಲಾರಂಭಿಸಿದ್ದ. ಕಂಪ್ಯೂಟರ್ ಒರೆಸುವುದರಿಂದ ಹಿಡಿದು ಕಂಪ್ಯೂಟರ್ ರೂಮಿನ ಕಸ ಗುಡಿಸುವವರೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಂಪ್ಯೂಟರ್ ಸಹವಾಸ ಮಾಡ ತೊಡಗಿದ್ದ. ಈ ಒಲವು, ಆಸಕ್ತಿ, ಸಹವಾಸದ ಫಲವೆಂಬಂತೆ ಕಂಪ್ಯೂಟರ್‌ನಲ್ಲಿ ಪಾಸಾಗಿದುದಲ್ಲದೇ ಒಮ್ಮೆ ಹೆಚ್ಚು ಅಂಕಗಳನ್ನು ತೆಗೆದುಬಿಟ್ಟಿದ್ದ. ಹೆಚ್ಚು ಅಂಕವನ್ನೇನೋ ತೆಗೆದಿದ್ದನಾದರೂ “ಹೇಗೆ ತೆಗೆದೆ?” ಎಂಬ ಸರ್ ರ ಇಂಗ್ಲಿಷ್ ಪ್ರಶ್ನೆಯನ್ನು ಅರ್ಥೈಸಿಕೊಳ್ಳಬಲ್ಲನಾದನೇ ಹೊರತು ಇಂಗ್ಲಿಷ್ ನಲ್ಲೇ ಉತ್ತರಿಸ ಬಲ್ಲವನಾಗದೆ ಸರ್ ಕುಟುಕುವಿಕೆಯ ಪ್ರಯೋಗಕ್ಕೆ ತಲೆ ಕೊಡಬೇಕಾಯಿತು. ಫೇಲಾದವರೆಲ್ಲ ಒಂದೆರಡು ಬಾರಿ ತಲೆ ಕೊಟ್ಟು ಖುಷಿಯಿಂದಲೇ ಇದ್ದರೆ, ಪಾಪ ಸೇಠು ತಾನು ಪಾಸಾದದಕ್ಕೆ ನಾಲ್ಕಾರು, ಹೆಚ್ಚು ತೆಗೆದದ್ದಕ್ಕೆ ನಾಲ್ಕಾರು ಎನ್ನುತ್ತಾ ಡಜನ್‌ಗಟ್ಟಲೆ ಬಾರಿ ತಲೆ ಕೊಟ್ಟುದಲ್ಲದೇ ಕಂಪ್ಯೂಟರ್‌ನಲ್ಲಷ್ಟೇ ಅಲ್ಲ, ಜೀವನದಲ್ಲಿ ಮತ್ತೆಂದೂ ಮತ್ತ್ಯಾವ ವಿಷಯದಲ್ಲೂ ಹೆಚ್ಚು ಅಂಕ ತೆಗೆಯುವುದಿರಲಿ ಪಾಸಾಗಲೂಬಾರದು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದ! + +ಹೇಳಲೊರಟರೆ, ತರಗತಿಗೆ ತಡವಾಗಿ ಬಂದುದರಿಂದ ಹಿಡಿದು ಬೇಗ ಬೇಗನೆ ಓಡಿ ಬಂದದ್ದಕ್ಕೆ, ಮಳೆ ಎಂಬ ಕಾರಣಕ್ಕೆ ನಿಂತು ಬಂದುದರಿಂದ ಹಿಡಿದು ಮಳೆಯಲ್ಲೇ ನೆನೆದು ಬಂದದ್ದಕ್ಕೆ, ಗಾಂಧಿ ಸ್ಮರಣೆಯ ಮೌನಾಚರಣೆಯಲ್ಲಿ ತೂಕಡಿಸಿದ್ದರಿಂದ ಹಿಡಿದು ಮುಸಿ ಮುಸಿ ನಕ್ಕಿದ್ದಕ್ಕೆ.. ಹೀಗೆ ಸಾಲು ಸಾಲು ಕತೆಗಳು ಬಿಚ್ಚಿಕೊಳ್ಳುತ್ತವೆ! + +ಒಟ್ಟಿನಲ್ಲಿ, ಕಂಪ್ಯೂಟರ್ ಸರ್ ರ ಕುಟುಕುವಿಕೆಯ ಪ್ರಯೋಗಕ್ಕೆ ಕಾರಣಗಳು ಬೇಕೆಂದೇನೂ ಇರಲಿಲ್ಲ ಅಷ್ಟೇ. ಹೀಗಾಗಿಯೇ ಕಂಪ್ಯೂಟರ್ ಪೀರಿಯಡ್ ಎಂದೊಡನೆ ಎಲ್ಲರೂ ಬಗೆ ಬಗೆಯಾಗಿ ವರ್ಣಿಸುತ್ತಿದ್ದದ್ದು! + +ನಮ್ಮ ಪುಣ್ಯಕ್ಕೆ ಕಂಪ್ಯೂಟರ್ ಪೀರಿಯಡ್ ಎಂಬುದು ಇರುತಿದ್ದದ್ದು ವಾರಕ್ಕೊಮ್ಮೆ ಮಾತ್ರ. ಆದರೆ, ಕಂಪ್ಯೂಟರ್ ಪೀರಿಯಡ್ ಮತ್ತೆ ಬಂದಾಗ ವಾರ ಎಂಬುದು ನಮ್ಮ ಪಾಲಿಗೆ ಅರೆ ಗಳಿಗೆಯಲ್ಲೇ ಮರುಕಳಿಸಿದಂತಾಗುತಿತ್ತು! ಅದಕ್ಕೆಂದೇ ಯಾರಾದರೂ ಮಹನೀಯರು ಸತ್ತು ರಜೆ ಘೋಷಣೆಯಾದಾಗ ‘ಛೇ! ಸಾಯೋರು ಸತ್ತರು, ಕಂಪ್ಯೂಟರ್ ಪೀರಿಯಡ್ ಇದ್ದ ದಿನವಾದರೂ ರಜೆ ಸಿಗುವಂತೆ ಸಾಯಬಾರದಿತ್ತೆ ದೇವರೇ!’ ಎಂದು ದೇವರಲ್ಲಿ ಮೊರೆ ಇಡುತಿದ್ದೆವು. ಆದರೇನು ಮಾಡುವುದು! ಪ್ರತಿದಿನವೂ ಒಂದಲ್ಲ ಒಂದು ತರಗತಿಗೆ ಕಂಪ್ಯೂಟರ್ ಪೀರಿಯಡ್ ಇರುತ್ತಿದುದರಿಂದ, ಪ್ರತಿಯೊಂದು ತರಗತಿಯವರೂ ಹೀಗೆಯೇ ದೇವರ ಮೊರೆ ಹೋಗುತ್ತಿದುದರಿಂದ ದೇವರೆಂಬ ದೇವರು ಯಾರ ಮೊರೆಯನ್ನು ತಾನೇ ಕೇಳಿಯಾನು! + +ಮತ್ತೆ ಇನ್ನೇನು ಮಾಡುವುದು! ವೃತ್ತಪತ್ರಿಕೆಗಳಲ್ಲಿ ಅದೆಲ್ಲೋ ದೂರದಲ್ಲಿ ಭೂಕಂಪವಾಗಿ ಕಟ್ಟಡಗಳು ನೆಲ ಸಮವಾದವು, ಪ್ರವಾಹಕ್ಕೆ ಕಟ್ಟಡಗಳು ಕೊಚ್ಚಿ ಹೋದವು ಎಂದೆಲ್ಲಾ ಓದುವಾಗ ‘ಕನಿಷ್ಟ ಪಕ್ಷ ಅಂತಹ ಲೀಲೆಯನ್ನಾದರೂ ನಮ್ಮ ಕಂಪ್ಯೂಟರ್ ಲ್ಯಾಬ್‌ನ ಮೇಲೆ ನೀನು ತೋರಬಾರದೆ ದೇವ!’ ಎಂದು ನಾವೆಲ್ಲ ದೇವರ ಮೇಲೆ ಮುನಿಸಿಕೊಳ್ಳುತ್ತಿದ್ದೆವು. + +ಹಾಗೆಂದು ಕಂಪ್ಯೂಟರ್ ಸರ್ ಮೇಲೆ ನಮಗೆ ದ್ವೇಷವಿತ್ತೆಂದಾಗಲಿ, ಅವರಿಗೆ ಏನಾದರೂ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವೆಂದಾಗಲಿ ತಪ್ಪಾಗಿ ಯೋಚಿಸ ಹೋಗಬೇಡಿ. ಎಷ್ಟಾದರೂ ಗಲಿವರನ ಮುಂದೆ ಲಿಲಿಪುಟ್‌ಗಳಂತಿದ್ದ ಅಥವಾ ಆನೆಯ ಮುಂದೆ ಕೋಳಿ ಪಿಳ್ಳೆಗಳಂತಿದ್ದ ನಮಗೆ ಕಂಪ್ಯೂಟರ್ ಸರ್ ರ ದೇಹಸಿರಿಯ ಬಗ್ಗೆ ಅದೇನೋ ವಿಶೇಷ ಬೆರಗು, ಅಭಿಮಾನ! + +ಈ ಅಭಿಮಾನದಿಂದಲೇ ಕಂಪ್ಯೂಟರ್ ಸರ್ ಅವರನ್ನೂ ಮತ್ತು ಅವರ ದೇಹಸಿರಿಯನ್ನೂ ಮೀರಿಸುವಂತಿದ್ದ, ಕನ್ನಡ, ಹಿಂದಿ, ಇಂಗ್ಲಿಷ್ ಎಂದರೆ ನಾವು ಅಂದಾಜಿಸ ಬಹುದೆಂದು ತಮಿಳು, ತೆಲುಗು ಸಿನಿಮಾಗಳಲ್ಲಿ ತಾನು ಹೀರೋ ಪಾತ್ರ ಮಾಡಿರುವವನೆಂದು ಫೈಟಿಂಗ್ ಸೀನ್‌ಗಳ ಸಮೇತ ವರ್ಣಿಸುತ್ತಿದ್ದ, ಬೆಳಿಗ್ಗೆ ಸಂಜೆ ಶಾಲಾ ಮೈದಾನದ ನಡುವೆ ಇದ್ದ ಮಾಸ್ತಿಕಲ್ಲಿನ ಮೇಲೆ ಕುಳಿತು ನಮ್ಮಂತಹ ನಾಲ್ಕಾರು ಹುಡುಗರಿಂದ ಕೈಕಾಲು ಒತ್ತಿಸಿಕೊಳ್ಳುತ್ತಿದ್ದ ಪೀಟೀ ಸರ್ ರನ್ನು ಒಂದುಗೂಡಿಸಿ, ಇಬ್ಬರ ತಲೆ ಬೋಳಿಸಿ, ಕೈಗೆ ಒಂದೊಂದು ಹಾಕಿ ಸ್ಟಿಕ್‌ಗಳನ್ನು ಕೊಟ್ಟು ನಿಲ್ಲಿಸಿದರೆ ಹಾಲಿವುಡ್ ವಿಲನ್‌ಗಳನ್ನೂ ಮೀರಿಸುವಂತಹ ಜಗದ್ವಿಖ್ಯಾತ ವಿಲನ್‌ಗಳಾಗಬಲ್ಲರೆಂದೂ ಸಿನೆಮಾ ಸೂಪರ್ ಹಿಟ್ ಆಗ ಬಲ್ಲದೆಂದೂ ನಮ್ಮ ನಮ್ಮ ನಡುವೆಯೇ ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಈ ಅಭಿಮಾನದ ಮಾತುಗಳನ್ನು ಅವರೆದುರು ಬಿಚ್ಚಿಡುವ ಧೈರ್ಯ ಯಾರಿಗೂ ಇರಲಿಲ್ಲವಾಗಿ ಅಮೆರಿಕ ಅಮೆರಿಕ ಸಿನೆಮಾದ ರಮೇಶನ ಪ್ರೀತಿಯಂತೆ ಅದು ಎದೆಯಲ್ಲಿಯೇ ಉಳಿದು ಬಿಟ್ಟಿತ್ತು. + +ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ! ಆಗೆಲ್ಲಾ ನಾವು ‘ ಅಯ್ಯೋ! ನಮಗೂ ಹಾಗೆಯೇ ಕಂಪ್ಯೂಟರ್ ಮುಂದೆ ಕುಳ್ಳಿರಿಸಿ ನಗು ಮೊಗದಿಂದ ಪಾಠ ಹೇಳಿ ಕೊಡವಂತಿದ್ದರೇ..’ ಎಂದು ಯೋಚಿದರೆ ಕೆಲ ಕಿರಾತಕರು ಅದನ್ನು ಮೀರಿ‘ಅಯ್ಯೋ! ಅತಿಥಿ ಶಿಕ್ಷಕಿಗೆ ಪಾಠ ಹೇಳಿಕೊಡುವ ಕಂಪ್ಯೂಟರ್ ಸರ್ ನಾವೇ ಆಗಿದ್ದರೇ..’ ಎಂದು ವೇದನೆ ತೋಡಿಕೊಳ್ಳುತ್ತಿದ್ದರು. + + + +ಆದರೆ, ನಮ್ಮ ನತದೃಷ್ಟತನಕ್ಕೆ ಈ ಯಾವ …ರೇ ಗಳು ಈಡೇರುವಂತಿರಲಿಲ್ಲ. ಹಾಗಾಗಿ ನಮ್ಮ ಈ ಸಮಸ್ಯೆಗೆ ನಾವೇ ಪರಿಹಾರ ಕಂಡು ಹಿಡಿಯಬೇಕಾಗಿತ್ತು. ಅದಕ್ಕಾಗಿ ಈ ಕಂಪ್ಯೂಟರ್ ತಜ್ಞರು ವೈಟುಕೆ ಬಗ್ ನಂತಹ ಸಮಸ್ಯೆ ಎದುರಾಗಬಹುದೆಂದು ತಲೆ ಕೆಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚು ತಲೆ ಕೆಡಿಸಿಕೊಳ್ಳಲಾರಂಭಿಸಿದೆವು. ತರಗತಿಗೆ ತರಗತಿಯೇ ತಲೆ ಕೆಡಿಸಿಕೊಂಡ ಮೇಲೆ ಪರಿಹಾರ ಸಿಗದಿರುವುದೇ. ಅಂತೂ ಸಿಕ್ಕಿತು. ಅದು ಸರಳವೂ ಆಗಿದ್ದಂತೆ ತೋರಿತು. ಅದು ‘ಮಾಸ್ ಕಾಪಿ’ ಮಾಡುವುದಾಗಿತ್ತು! + +ಎಷ್ಟಾದರೂ ನಾವು ಮಿತಿ ಮೀರಿ ಪ್ರಾಮಾಣಿಕರಾಗಿದ್ದವರು. ಹೆಚ್ಚು ಅಂಕ ತೆಗೆಯುತ್ತೇವೆಂದು ಮೈಸೂರು ಪಾಕ್, ಹಾಲು ಕೋವಾಗಳನ್ನೆಲ್ಲಾ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿದ್ದವರು, ಅರ್ಧ ಅಂಕ, ಕಾಲು ಅಂಕಕ್ಕೂ ಶಿಕ್ಷಕರೊಡನೆ ಚೌಕಾಸಿ ಮಾಡಿ ಕಣ್ಣೀರು ಹಾಕುತ್ತಿದ್ದವರು, ಪದೇ ಪದೇ ಒಬ್ಬರು ಹೆಚ್ಚು ಅಂಕ ತೆಗೆದರೆಂದರೆ ಶಿಕ್ಷಕರು ಪಾರ್ಷಿಯಾಲಿಟಿ ಮಾಡುತ್ತಿರುವರೆಂದು ದೂರುತ್ತಿದ್ದವರೂ ಆಗಿದ್ದೆವು. ಹೀಗಿರುವಾಗ ಯಾರಾದರೂ ಕಾಪಿ ಮಾಡುವುದಿರಲಿ ಅತ್ತಿತ್ತ ತಿರುಗಿದರೂ ‘ಚೀಟಿಂಗ್ ಚೀಟಿಂಗ್’ ಎಂದು ಅವರ ಉತ್ಸಾಹ ಭಂಗಗೊಳಿಸಿಬಿಡುತ್ತಿದ್ದೆವು. + +ಆದರೆ, ಕಂಪ್ಯೂಟರ್ ವಿಚಾರದಲ್ಲಿ ಮಾತ್ರ ಈ ಎಲ್ಲಾ ರಗಳೆಗಳಿಂದ ನಮಗೆ ನಾವೇ ವಿನಾಯಿತಿ ಕೊಟ್ಟು ಕೊಳ್ಳಲು ನಿರ್ಧರಿಸಿ ಬಿಟ್ಟಿದ್ದೆವು. ಹೇಳಿಕೇಳಿ ಕಂಪ್ಯೂಟರ್ ವಿಷಯ ಪಾರ್ಟ್ ಬಿ ಯಲ್ಲಿ ಬರುತ್ತಿದ್ದು, ಅದರಲ್ಲಿನ ಅಂಕಗಳು ಗ್ರೇಡ್ ಗಷ್ಟೇ ಸೀಮಿತವಾಗಿದ್ದವೇ ವಿನಃ ರ್ಯಾಂಕ್ ಗೆ ಕೌಂಟ್ ಆಗುತ್ತಿರಲಿಲ್ಲ. ಈ ಅಂಶವೂ ವಿನಾಯಿತಿ ಕೊಟ್ಟುಕೊಳ್ಳುವ ನಮ್ಮ ನಿರ್ಧಾರಕ್ಕೆ ಅನುಕೂಲಕರವಾಗಿ ಪರಿಣಮಿಸಿತ್ತು. + +ಸರಿ, ಮಾಸ್ ಕಾಪಿಯ ನಿರ್ಧಾರ ಮಾಡಿದರಷ್ಟೇ ಸಾಕೆ, ಕಾರ್ಯರೂಪಕ್ಕೆ ತರಬೇಡವೇ. ಆ ಗಳಿಗೆಗಾಗಿಯೇ ಕಾದು ಕುಳಿತೆವು. ಅದೊಂದು ಕಿರು ಪರೀಕ್ಷೆಯ ದಿನ ಆ ಗಳಿಗೆಯೂ ಬಂದು ಬಿಟ್ಟಿತ್ತು. + +ಆದರೆ, ಆ ಗಳಿಗೆಯಲ್ಲಿ ನಾವು ನಿರೀಕ್ಷಿಸದೆ ಇದ್ದ ಘಟನೆಯೊಂದು ಘಟಿಸಿಬಿಟ್ಟಿತು. ಪರೀಕ್ಷೆ ಆರಂಭವಾಗಿ ನಾವೆಲ್ಲಾ ‘ಕಾಪಿ ಮಾಡಿವುದಾ ಬೇಡವಾ, ಮಾಡುವುದಾದರೆ ಕಂಪ್ಯೂಟರ್ ಸರ್ ಕಣ್ತಪ್ಪಿಸಿ ಕಾಪಿ ಮಾಡುವುದಾದರೂ ಹೇಗೆ’ ಎಂಬ ಆಲೋಚನೆ, ಅಂಜಿಕೆ, ಅಳುಕಿನಲ್ಲಿರುವಾಗಲೇ ಮೃತ್ಯುಂಜಯ ಡೆಸ್ಕ್ ಅಡಿಯಲ್ಲಿನ ಬುಕ್ ತೆಗೆದು ನಮ್ಮ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಕಂಪ್ಯೂಟರ್ ಸರ್ ಜೊತೆಗೇ ಮಾಡಿಕೊಂಡಿರುವೆನೋ ಎಂಬಂತೆ, ಸರ್ಕಾರ ಈಗ ಜಾರಿಗೆ ತರಲು ಯೋಚಿಸುತ್ತಿರುವ ‘ಓಪನ್ ಬುಕ್ ಎಕ್ಸಾಮ್’ ಅನ್ನು ಅದಾಗಲೇ ಜಾರಿಗೆ ತಂದವನಂತೆ ಕಾಪಿ ಮಾಡಲಾರಂಭಿಸಿದ್ದ. ಇದನ್ನು ಕಂಪ್ಯೂಟರ್ ಸರ್ ಅವರ ಹದ್ದಿನ ಕಣ್ಣು ಹಿಂದಿನಿಂದ ಗಮನಿಸಿಬಿಡಬೇಕೆ! + +ಗಮನಿಸಿದೊಡನೆಯೇ ‌ಮೃತ್ಯುವನ್ನು ಹಿಡಿದೆಳೆದು ಮುಂದಕ್ಕೆ ತಂದು ನಿಲ್ಲಿಸಿದರು. ಅಲ್ಲದೇ ಡಾಕ್ಟರನೊಬ್ಬ ಸ್ಟ್ರಾಂಗ್ ಡೋಸೇಜ್‌ನ ಇಂಜೆಕ್ಷನ್ ನೀಡುವ ಮುನ್ನ ಸಣ್ಣದೊಂದು ಟೆಸ್ಟ್ ಡೋಸ್ ನೀಡುವಂತೆ ತಲೆಗೆ ಒಮ್ಮೆ ಸರಿಯಾಗಿ ಕುಟುಕಿದರು. ಮೃತ್ಯು ಕುಸಿದು ಬಿದ್ದ! + +ನಾವುಗಳೋ ಗಾಬರಿಯಿಂದ ಎದ್ದು ಹೋಗಿ ‘ಮೃತ್ಯು ಮೃತ್ಯು’ ಎನ್ನುತ್ತಾ ಮುಖ ತಟ್ಟಿದೆವು. ಎಚ್ಚರಾಗಲಿಲ್ಲ. ಮುಖಕ್ಕೆ ನೀರು ಚುಮುಕಿಸಿದೆವು. ಎಚ್ಚರಾಗಲಿಲ್ಲ. ಕೊನೆಗೆ ಜಿಗುಟುವಂತೆ ಮಾಡಿದೆವು. ಆದರೂ ಎಚ್ಚರಾಗದೇ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ. ಇನ್ನೇನು ತಾನೇ ಮಾಡುವುದು! ಕಂಪ್ಯೂಟರ್ ಸರ್ ಕೊಟ್ಟ ‘ಮೆಡಿಕಲ್ ರೂಮ್ ಗೆ ಕರೆದುಕೊಂಡು ಹೋಗಿ’ ಎಂಬ ಸೂಚನೆ ಮೇರೆಗೆ ಅವನ ಎರಡು ಭುಜಗಳಿಗೆ ಇಬ್ಬರು ಹೆಗಲು ಕೊಟ್ಟು, ಇನ್ನಿಬ್ಬರು ಎರಡು ಕಾಲುಗಳನ್ನೊತ್ತು, ಒಬ್ಬ ತಲೆ ಹಿಡಿದು ಥೇಟು ಚಟ್ಟ ಹೊತ್ತಂತೆಯೇ ಹೊತ್ತು ನಡೆದೆವು. + +ಕಂಪ್ಯೂಟರ್ ಸರ್ ಮಾತ್ರ ಅಂತಹ ವಿಷಮ ಪರಿಸ್ಥಿತಿಯಲ್ಲೂ ತರಗತಿಯಲ್ಲೇ ಉಳಿದರು. ತಮ್ಮ ಅನುಪಸ್ಥಿತಿಯಲ್ಲಿ ಪರೀಕ್ಷೆ ಬರೆದು ಯಾರಾದರೂ ಪಾಸಾಗಿ ಬಿಟ್ಟರೆ ಎಂಬ ಚಿಂತೆ ಅವರನ್ನು ಕಾಡಿರಬಹುದು! + +ಸರಿ, ನಾವುಗಳು ಮೃತ್ಯುವನ್ನು ಹೊತ್ತು ಆತಂಕಿತರಾಗಿಯೇ ನಿಧಾನವಾಗಿ ಮೆಡಿಕಲ್ ರೂಮಿನತ್ತ ಸಾಗಲಾರಂಭಿಸಿದ್ದೆವು. ತರಗತಿ ಕೋಣೆ ಮರೆಯಾಗಿ ನಾಲ್ಕು ಹೆಜ್ಜೆ ಸಾಗಿರಬಹುದು ಅಷ್ಟರಲ್ಲಿ ಮೃತ್ಯು ಒಡನೆಯೇ ತಲೆ ಎತ್ತಿ ಕಣ್ಣು ಹೊಡೆಯಬೇಕೆ! ಹೆಣವೊಂದು ದಾರಿ ಮಧ್ಯೆ ಎದ್ದು ಕೂತರೆ ಆಗಬಹುದಾದಷ್ಟೇ ಅಚ್ಚರಿ ಪಡುವ ಸರದಿ ನಮ್ಮದಾಗಿತ್ತು. ಈ ಅಚ್ಚರಿಯಿಂದ ಉಕ್ಕಿ ಬಂದ ನಗುವನ್ನು ಯಾರಿಂದಲೂ ತಡೆಯಲು ಸಾಧ್ಯವಾಗದೇ, ಪಕ್ಕದಲ್ಲೇ ಇದ್ದ ತರಗತಿಗೆ ಕೇಳಿಸಿದರೆಂದು ಜೋರಾಗಿ ನಗಲೂ ಆಗದೆ ಮುಸಿ ಮುಸಿ ನಗುತ್ತಾ ಮೃತ್ಯುವನ್ನು ಹಾಗೆಯೇ ಹೊತ್ತು ಅಕ್ಷರಶಃ ಓಡುತ್ತಾ ಮೆಡಿಕಲ್ ರೂಮ್ ತಲುಪಿದೆವು. + +ನಾವು ಹೊತ್ತು ಹೊಯ್ದ ಧಾಟಿ ನೋಡಿ ನರ್ಸ್ ಆಂಟಿ ಇದೇನೋ ಭಾರಿ ಸೀರಿಯಸ್ ಕೇಸ್ ಇರಬಹುದೆಂದು ಎಣಿಸಿ ವಿಚಾರಿಸಿದರು. ಮೃತ್ಯುವೋ ಮೊದಲೇ ಒಂದು ಒಂದೂವರೆ ಗಂಟೆಗಳ ಇಂಗ್ಲಿಷ್ ಸಿನೆಮಾಗಳನ್ನು ನೋಡಿ ಬಂದು ವಾರಗಟ್ಟಲೆ ಆ್ಯಕ್ಷನ್, ಡಿಟಿಎಸ್ ಎಫೆಕ್ಟ್, ಗ್ರಾಫಿಕ್ಸ್ ಎಫೆಕ್ಟ್ಸ್‌ಗಳೊಂದಿಗೆ ವರ್ಣಿಸುವ ಕೆಪಾಸಿಟಿ ಇದ್ದಾತ. ಅವನು ಹೇಳಿದ ಸ್ಟೋರಿ ಕೇಳಿಸಿಕೊಂಡು ಅದೆಷ್ಟೋ ಕಾಲವಾದ ಮೇಲೆ ಟರ್ಮಿನೇಟರ್, ಮ್ಯಾಡ್ ಮ್ಯಾಕ್ಸ್ ನಂತಹ ಸಿನೆಮಾ ನೋಡ ಹೊರಟರೆ ಸಿನೆಮಾಗಿಂತಲೂ ಮೃತ್ಯು ಹೇಳುತ್ತಿದ್ದ ಸ್ಟೋರೀನೆ ಭಾರಿ ಇಂಟರೆಸ್ಟಿಂಗ್ ಆಗಿತ್ತಲ್ಲ ಎಂದು ನಮಗೆಲ್ಲಾ ಅನಿಸಿದ್ದಿದೆ. ಇಂತಹ ಮೃತ್ಯು ಇರುವೆ ಕಚ್ಚಿದಷ್ಟರ ಮಟ್ಟಿಗಿನ ತನ್ನ ನೋವನ್ನು ಆನೆ ತುಳಿತದ ರೇಂಜಿಗೆ ವರ್ಣಿಸಲು ಕಷ್ಟಪಡುವುದುಂಟೆ. ಒಂದಕ್ಕೆ ನಾಲ್ಕು ಸೇರಿಸಿ ಹೇಳಿದ. + +ಪಾಪ ನರ್ಸ್ ಆಂಟಿ, ಕೆಲ ಹೊತ್ತಿನ ಮುಂಚೆ ಮೃತ್ಯು ನಿಜವಾಗಿಯೂ ಮರಣಶಯ್ಯೆಯಲ್ಲಿದ್ದನೆಂದೇ ನಂಬಿ ಕನಿಕರ ಪಟ್ಟರು. ಅಲ್ಲದೇ ಮೃತ್ಯುವಿನ ಆಯಾಸಕ್ಕೆ ಗ್ಲುಕೋಸ್ ಪುಡಿಯ ಟ್ರೀಟ್ ಮೆಂಟ್ ನೀಡಿರೆಂಬ ನಮ್ಮ ಸಲಹೆಯನ್ನೂ ಒಪ್ಪಿ ಪೂರಾ ಪ್ಯಾಕೆಟ್ ಒಂದನ್ನು ನೀಡಿದರು. ನಾವುಗಳು ಪಡೆದ ಪ್ಯಾಕೆಟ್‌ನಲ್ಲಿ ಗುಟುಕಿನಷ್ಟನ್ನು ಮಾತ್ರ ಮೃತ್ಯುವಿನ ಬಾಯಿಗೆ ಸುರಿದು ಉಳಿದದ್ದನ್ನು ಸ್ಪರ್ಧೆ ನಡೆಸುವವರಂತೆ ನಮ್ಮಗಳ ಬಾಯಿಗೇ ಸುರಿದುಕೊಂಡೆವು. + +ಅಹಾ, ಒಂದೆಡೆ ಕಂಪ್ಯೂಟರ್ ಪರೀಕ್ಷೆ ನಡುವಿನ ಅಪರೂಪದ ಬ್ರೇಕ್ ಮತ್ತೊಂದೆಡೆ ಗ್ಲುಕೋಸ್ ಪುಡಿಯ ಬೋನಸ್ ನ ಸಂಭ್ರಮ. ಆ ಸಂಭ್ರಮದಲ್ಲಿ ನಾವು ಹೋಗಿ ಪರೀಕ್ಷೆ ಬರೆಯಲಿರುವವರೆಂಬ ಅರಿವೂ ನಮಗಿರದಾಗಿತ್ತು! + +ಇನ್ನೂ ಮೆಡಿಕಲ್ ರೂಮಿನಿಂದ ಹೊರ ಬಂದವರು ಒಬ್ಬರ ಮುಖ ಒಬ್ಬರು ನೋಡುತ್ತಲೇ ಉಕ್ಕಿ ಬರುತ್ತಿದ್ದ ನಗುವನ್ನು ತಡೆಯಲಾರದೇ ಹೊಟ್ಟೆ ಹುಣ್ಣಾಗುವಂತೆಂಬಂತೆ ಜೋರಾಗಿ ಮತ್ತೆ ಮತ್ತೆ ನಗುತ್ತಾ ಹೊಟ್ಟೆ ಹಿಡಿದು ಕುಳಿತೆವು. ಸಂಭ್ರಮದಿಂದಾದ ಆಯಾಸವನ್ನು ಸುಧಾರಿಸಿಕೊಳ್ಳಲೂ ಸಾಕಷ್ಟು ಸಮಯ ಬೇಕೆನಿಸಿತ್ತು. ಆದರೆ, ಪರೀಕ್ಷೆ ಬರೆಯುವುದಿನ್ನೂ ಬಾಕಿ ಇತ್ತಲ್ಲ. ಹಾಗಾಗಿ ತರಗತಿಯೆಡೆಗೆ ಹೊರಟೆವು. ಹೋಗುವಾಗ ಮೃತ್ಯುವನ್ನು ಚಟ್ಟದಂತೆ ಹೊತ್ತೊಯ್ದಿದ್ದ ನಾವು ಈಗ ಹಿಂದಿರುಗುವಾಗ ಹೆಗಲಿಗೆ ಆಸರೆಯಾದವರಂತೆ ನಿಧಾನವಾಗಿ ನಡೆಸಿಕೊಂಡು ಕೊಠಡಿ ಪ್ರವೇಶಿಸಿದೆವು. + + + +ಕಂಪ್ಯೂಟರ್ ಪರೀಕ್ಷೆ ಎಂದರೆ ಮೊದಲೇ ಪ್ರಪಂಚ ತಲೆ ಮೇಲೆ ಹೊತ್ತವರಂತೆ ಇರುತ್ತಿದ್ದವರೆಲ್ಲಾ ಈಗ ಮೃತ್ಯುವಿನ ಸ್ಥಿತಿ ನೆನೆ ನೆನೆದು ಶೋಕತಪ್ತರಂತೆ ಮುಖ ಭಾವ ಹೊತ್ತು ಪರೀಕ್ಷೆ ಬರೆಯುತ್ತಿದ್ದಾರೆ. ನಮಗೋ ಇತ್ತ, ಒಬ್ಬರ ಮುಖ ಒಬ್ಬರು ನೋಡಿದಾಗೆಲ್ಲಾ ಒಳಗೊಳಗೆ ಉಕ್ಕಿ ಬರುತ್ತಿರುವ ಸಂಭ್ರಮದ ನಗು! ಅತ್ತ, ಎಲ್ಲಿ ನಗುವಿನ ಕಟ್ಟೆ ಹೊಡೆದು ಕಂಪ್ಯೂಟರ್ ಸರ್ ರ ಕಿವಿ ತಲುಪಿ ಕುಟುಕುವಿಕೆಗೆ ತಲೆ ಕೊಡಬೇಕಾದೀತೊ ಎಂಬ ಸಂಕಟ! + +ಹೀಗೆ ಸಂಭ್ರಮ, ಸಂಕಟಗಳೆರಡೂ ಮಿಶ್ರಿತಗೊಂಡ ವಿವರಿಸಲಾಗದ ವಿಚಿತ್ರ ಮನಸ್ಥಿತಿಯಲ್ಲಿ ಪರೀಕ್ಷೆ ಬರೆಯ ಕೂತೆವು.ಈ ಸಂದರ್ಭದಲ್ಲೂ ನಮ್ಮ ಕಂಪ್ಯೂಟರ್ ಸರ್ ತಮ್ಮ ಬಿಗುಮೊಗವನ್ನಾಗಲಿ, ಕಣ್ಗಾವಲನ್ನಾಗಲಿ ಸಡಿಲಗೊಳಿಸಿದಂತಿರಲಿಲ್ಲ. ಆದರೆ, ಅಂದಿನಿಂದ ತಮ್ಮ ಕುಟುಕುವಿಕೆಯ ಪ್ರಯೋಗವನ್ನು ಮಾತ್ರ ಸಂಪೂರ್ಣ ಎಂಬಂತೆ ಕಡಿಮೆ ಮಾಡಿ ಬಿಟ್ಟಿದ್ದರು. + +ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. “ದೇವರಿದ್ದಾನೆ! ಎಚ್ಚರಿಕೆ!!” ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ.. \ No newline at end of file diff --git a/Kenda Sampige/article_150.txt b/Kenda Sampige/article_150.txt new file mode 100644 index 0000000000000000000000000000000000000000..04be3aa69b83db275b0436631285d209f622dab7 --- /dev/null +++ b/Kenda Sampige/article_150.txt @@ -0,0 +1,27 @@ +ಕೆ ವಿ. ತಿರುಮಲೇಶರ ಇನ್ನೊಂದು ಮಹತ್ವದ ಮನುಕುಲದ ವೈರುಧ್ಯಗಳನ್ನು ಧ್ವನಿಸುವ ಕಾದಂಬರಿ ಎಂದರೆ ಅನೇಕ. ಕಾದಂಬರಿಯ ನಾಯಕನ ಹೆಸರೇ ಅನೇಕ. ಈತ ದ್ವೀಪವಾಸಿ. ದ್ವೀಪದಲ್ಲಿ ಏಕಾಂಗಿಯಾಗಿ ಇದ್ದು ಅವನ ಮನಸ್ಸು ಹಾಗು ಬುದ್ಧಿ ಎರಡೂ ಬಂಧಿಯಾಗಿದ್ದುವೇ? ಏಕೆ ಹೀಗೆ? ಎಂಬ ಪ್ರಶ್ನೆಗಳು ಕಾಡುತ್ತವೆ. ಏಕವ್ಯಕ್ತಿಯಾದರೂ ಬದುಕಿನ ಅನೇಕ ಪರಿಪ್ರೇಕ್ಷಗಳನ್ನು ಒಟ್ಟಿಗೆ ಕ್ರಿಯೆಯಲ್ಲಿ ಹೇಳುವ ಪಾತ್ರ ‘ಅನೇಕ’; ಕಾದಂಬರಿಯ ಪುಟ ಸಂ. 2-3 ರಲ್ಲಿ ಬರುವ “ನಂತರ ಅವನು ಮತ್ತೆ ಅದೇ ತಾಣಕ್ಕೆ ಹೋಗಿ ನೋಡಿದಾಗ ಅಣಬೆಗಳೆಲ್ಲಾ ಬಿಸಿಲಲ್ಲಿ ಒಣಗಿ ಬೂದು ಬಣ್ಣಕ್ಕೆ ತಿರುಗಿದ್ದವು. ಯಾವ ಪ್ರಾಣಿಗಳು ತನ್ನು ಗೊಡವೆಗೆ ಹೋಗದಿರುವಾಗ ತಾನೇಕೆ ತಿನ್ನುವ ಚಪಲ ತೋರಿಸಿದೆ” ಎಂದು ತನಗೇ ಕೇಳಿಕೊಳ್ಳುವ ವಾಕ್ಯ “ಪ್ರಾಣಿಗಳೆ ಮನುಷ್ಯನಿಗೆ ಗುರು” ಎಂಬುದನ್ನು ಸಾಬೀತು ಮಾಡುತ್ತವೆ. ಕ್ರೌರ್ಯ ಅಪರಾಧವಲ್ಲ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಪರಿ ಎಂಬುದನ್ನು ಅನೇಕ ಹಾವು ಮುಂಗುಸಿಯ ಹೋರಾಟದಲ್ಲಿ ಕಲಿತಿರುತ್ತಾನೆ. ಇಲ್ಲಿ ಲಾಭದ ಹೋರಾಟ ಅಲ್ಲವೇ ಅಲ್ಲ, ಅಸ್ತಿತ್ವದ ಹೋರಾಟ ಎಂಬುದು ಸತ್ಯ. ಕೆಲವೊಮ್ಮೆ ಬೇಟೆಯಾಡುವುದನ್ನೂ ಕಲಿತ ಎಂಬುದು ಬದುಕಿಗೆ ಇರಬೇಕಾದ ಕಟ್ಟುಜಾಣ್ಮೆಯನ್ನು ಕುರಿತು ಹೇಳುವಂಥದ್ದಾಗಿದೆ. + +ಮಾತನಾಡಬೇಕು ಅನ್ನಿಸುತ್ತದೆ ಏನನ್ನೋ ಹೇಳಬೇಕು ಅನ್ನಿಸುತ್ತದೆ. ಬಂಡೆಯನ್ನೇರಿ ಆದರೆ ಯಾರಿಗೆ? ಎಂಬುದು ಒಂಟಿತನ ಕ್ರೂರ, ಮತ್ತು ವಿಚಿತ್ರ ಎಂಬ ಸತ್ಯದ ಅರಿವು ಮೂಡಿಸುತ್ತದೆ. ಇಲ್ಲಿ ಆಮೆಯನ್ನು ಹಿಡಿದ ಎನ್ನುವುದೂ ಪ್ರತಿಮೆಯೇ! ದೀರ್ಘಕಾಲ ಬದುಕಬಲ್ಲ ಆಮೆಯನ್ನು ಹಿಡಿದ “ಅನೇಕ” ಅದೇಕೆ ಮನುಷ್ಯಾಕೃತಿಯನ್ನು ಕಂಡಾಗ ಬದುಕಿಸಬೇಕೆನ್ನಿಸಿತು? ಬೆಂಕಿ ಮಾಡಿ ಅವನ ಚಳಿಯನ್ನು ಹೋಗಲಾಡಿಸಬೇಕೆನ್ನಿಸಿತು… ಅವನ ಎದೆ ಸೇರಿದ್ದ ನೀರನ್ನು ಹೊರತೆಗೆಯಬೇಕಾಗಿತ್ತು ಎಂಬ ಪ್ರಶ್ನೆಗಳು ಮನುಷ್ಯ ಕರುಣಾಮಯಿಯೂ ಹೌದು ಅನ್ನಿಸುತ್ತದೆ. ಆದರೆ ನಿರ್ಜೀವಿಯಂತೆ ಬಿದ್ದಿದ್ದ ವಿಶಾಲ ಎಂಬ ಅನೇಕ ಕಾದಂಬರಿಯ ಪಾತ್ರ ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಮನುಷ್ಯ ನರಭಕ್ಷಕ, ರಾಕ್ಷಸ… ಕ್ರೂರಿ ಎಂಬ ಪೂರ್ವಾಗ್ರಹ ಪೀಡಿತ ಮನಸ್ಸನ್ನಿರಿಸಿಕೊಂಡು ಈ ಕ್ಷಣ ಅಲ್ಲದೇ ಇದ್ದರೆ ಮರುಕ್ಷಣ ಈತ ನನ್ನ ಮೇಲೆ ಹಲ್ಲೆ ಮಾಡುತ್ತಾನೆ ಎಂದು ಮನಸ್ಸಿನಲ್ಲೇ ಹೋರಾಟಕ್ಕೆ ಸಿದ್ಧನಾಗಿರುತ್ತಿದ್ದುದು ಅದೇ ಮನುಷ್ಯನ ಸಂಕುಚಿತತೆಯನ್ನು ಹೇಳುತ್ತದೆ. ಇಲ್ಲಿ ಕಾದಂಬರಿಕಾರರು ಏಕಕಾಲಕ್ಕೆ ಮನುಷ್ಯನ ವ್ಯಕ್ತಿತ್ವದ ಅಗಾಧತೆಯನ್ನೂ ಸಂಕುಚಿತತೆಯನ್ನು ಒಂದೇ ಚೌಕಟ್ಟಿನಲ್ಲಿ ಒದಗಿಸಿಕೊಡುತ್ತಿರುವುದು ವಿಶೇಷವೆ! + +ವಿಶಾಲ ಹೆಸರಿನ ಪಾತ್ರ ಅಸೌಖ್ಯದ ಪರಿಸ್ಥಿತಿಯಲ್ಲು ಬೆಲ್ಟ್‌ನಲ್ಲಿ ಇರಿಸಿಕೊಂಡಿದ್ದ ಚೂರಿಯನ್ನು ನೆನಪು ಮಾಡಿಕೊಳ್ಳುವುದು “ಹೆಣ ಶೃಂಗಾರವರಿಯದು” ಎಂಬ ಮಾತನನ್ನು ನೆನಪಿಸುತ್ತದೆ. ಆತ ಅದ್ಯಾವುದೋ ವ್ಯಾಪಾರಿಗಳ, ಏಜೆಂಟರುಗಳ ವ್ಯೂಹಕ್ಕೆ ಸಿಲುಕಿ ಕಡೆಗೆ ತಪ್ಪಿಸಿಕೊಂಡು ಅನೇಕ ಇದ್ದ ದ್ವೀಪದ ಬುಡಕ್ಕೆ ಬಂದು ಬೀಳುತ್ತಾನೆ.. ಕಾಮಾಲೆ ಕಣ್ಣಿಗೆ ಕಾಣುವುದು ಹಳದಿಯೇ ಎಂಬ ಮಾತು ನೆನಪಿಗೆ ಬರುತ್ತದೆ. ನೀರನ್ನು ಕೊಟ್ಟಾಗ ಕುಡಿದವನು ಆಹಾರವನ್ನು ಆತ ಕೊಟ್ಟಾಗ ಅದನ್ನು ಅಪನಂಬಿಕೆಯಿಂದಲೇ ನೋಡುತ್ತಾನೆ. + +ಇಲ್ಲಿ ತಿರುಮಲೇಶರು ನೆಪೋಲಿಯನ್ನನ ಯುದ್ಧ ರೀತಿಯನ್ನು ಕುರಿತು ಮಾಹಿತಿ ನೀಡುತ್ತಾರೆ. ಅದೇನೆಂದರೆ ವೈರಿಯನ್ನು ನಾನೇ ಮೊದಲು ಆಕ್ರಮಿಸಬೇಕು ವೈರಿಯೇ ಮೊದಲು ಆಕ್ರಮಿಸುವವರೆಗೂ ಕಾಯಬಾರದು ಎಂಬುದಾಗಿ. ವಿಶಾಲ ತನ್ನಲ್ಲಿದ್ದ ಚೂರಿಯನ್ನು ಅನೇಕನ ಮೇಲೆ ಬಲಪ್ರಯೋಗ ಮಾಡಿ ಬಿಡುತ್ತಾನೆ. ಆಯುಧಗಳು ಕೊಲ್ಲುವುದಕ್ಕೆ ಅಲ್ಲ ಆತ್ಮ ರಕ್ಷಣೆಗೆ ಎಂಬ ಮಾತು ಇಲ್ಲಿ ಸಹಜವಾಗಿ ಬಂದಿವೆ. ತನ್ನಲ್ಲಿ ಚಾಕು ಇದೆ ಎಂದು ಹೇಳದ ವಿಶಾಲ ಆ ಚಾಕು ಮೊಲವನ್ನು ಭೇಟೆಯಾಡಲು ವಿಫಲವಾಗಿ ಕಳೆದುಹೋದಾಗ ಅದರ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನ ಮಾಡುತ್ತಾನೆ, ಅನೇಕನ ಬಳಿಯೂ ಕಲ್ಲಿನಿಂದ ಮಾಡಿದ ಚೂಪಾದ ಆಯುಧವಿರುತ್ತದೆ. ಇಲ್ಲಿ ಆಯುಧಗಳು ಹರಿತವಾಗಿವೆ ಆದರೆ ಮನುಷ್ಯನ ನಡವಳಿಕೆಯೂ ಹಾಗೆಯೇ ಅಲ್ಲವೆ! ಕೆಲವೊಮ್ಮೆ ಧನಾತ್ಮಕ, ಕೆಲವೊಮ್ಮೆ ಋಣಾತ್ಮಕ ಎಂಬುದನ್ನು ಓದುಗರು ಅಧ್ಯಾಹಾರ ಮಾಡಿಕೊಳ್ಳಬಹುದು. + +ಕಾದಂಬರಿಯ ಪ್ರಮುಖಘಟ್ಟ ಅನೇಕ ಹಾಗು ವಿಶಾಲನ ನಡುವೆ ನಡೆಯುವ ಸಂಭಾಷಣೆ. ಅವರಿಬ್ಬರೂ ಪರಸ್ಪರ ಮಾತನಾಡುವಾಗ “ನಾಗರಿಕ ಸಮಾಜದಿಂದ ಎಷ್ಟು ವರ್ಷ ಹೀಗೆ ಇದ್ದೆ ಎನ್ನುವುದಕ್ಕಿಂತ ಇನ್ನೂ ಎಷ್ಟು ವರ್ಷ ಹೀಗೆ?” ಎಂಬ ಮೌಲ್ಯಯುತವಾದ ಪ್ರಶ್ನೆಗೆ ಬಂದು ಆಲೋಚನಾ ಬಂಧಿಯಾಗುತ್ತದೆ ಪರಿವರ್ತನೆ, ಸುಧಾರಣೆ ಬದಲಾವಣೆ ಬೇಕಿಲ್ಲವೇ ನಿರಂತರ ನಿಂತ ನೀರಿನಂತೆಯೇ ಹಾಗಿದ್ದರೆ ಎಂಬ ಜಿಜ್ಞಾಸೆಯನ್ನು ಹೊರಹಾಕುತ್ತದೆ. “ಉಪಯೋಗಿಸಿದ ಮೇಲೆ ನಂದಿಸಬೇಕು ಎಂಬ ಮಾತು ಇಲ್ಲಿ ಬೆಂಕಿಯನ್ನು ಕುರಿತು ಹೇಳಿರುವುದಾದರೂ ಬಳಸಿದ ವಸ್ತುಗಳನ್ನು ಎಸೆಯುವಂತೆ ಮನುಷ್ಯ ಅವಶ್ಯಕತೆ ತೀರಿದ ಬಳಿಕ ಎಂಥವರನ್ನೂ ವರ್ಜಿಸುತ್ತಾನೆ ಎಂಬ ಸತ್ಯವನ್ನು ಪರಾಮರ್ಶಿಸುವಂತೆ ಮಾಡುತ್ತದೆ. + + + +ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….! ಎಂದು ಸುಳ್ಳುಗಳಿಂದಲೇ ತನ್ನನ್ನು ರಕ್ಷಿಸಿಕೊಳ್ಳಲು ಹವಣಿಸುವುದು ಮನುಷ್ಯನ ಸಹಜ ಗುಣಕ್ಕೆ ಹಿಡಿದಿರುವ ಕನ್ನಡಿಯಾಗಿದೆ. + +ಹೆಸರನ್ನು ಬದಲಾಯಿಸುವುದು ಅಸಾಧ್ಯ ಎಂಬುದು ನಂಬಿಕೆ ಆದರೆ ಇಟ್ಟುಕೊಂಡ ಹೆಸರನ್ನೂ ಸಮಯಾನುಸಾರ ಬದಲಾವಣೆ ಮಾಡಿಕೊಳ್ಳುವ ವೇಶ್ಯೆಯರ ಅಸಹಾಯಕತೆಯ ಪ್ರಸಂಗವೂ ಇಲ್ಲಿ ಬರುತ್ತದೆ. ಇದು ಮನರಂಜನೆಯಲ್ಲ ಬದಲಾಗಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಇರಬೇಕಾದ ಸೂಕ್ಷ್ಮ. ನಂತರ ಬರುವುದು ಯಾರ ಮೇಲೆ ಯಾರಿಗೆ ನಂಬಿಕೆ ಇರುವುದು ಗಂಡ -ಹೆಂಡಿರ, ಗಂಡ-ಹೆಂಡಿರ ಅಂದರೆ ಇಬ್ಬರು ಮಹಿಳೆಯರು ಇಬ್ಬರು ಪುರುಷರು ನಂಬಿಕೆಯ ಹೆಸರಿನಲ್ಲಿ ನಡೆಸುವ ಕೊಲೆ ಸಂಚು ಇಲ್ಲಿ ಕುತೂಹಲವಾಗಿ ಬರುತ್ತದೆ. ಶವದ ಪೆಟ್ಟಿಗೆಯಲ್ಲಿ ಒಬ್ಬರನ್ನೊಬ್ಬರು ಮಲಗಿಸುವುದು ಮರಳು ಮುಚ್ಚುವುದು, ಎದ್ದು ಬರುವುದು ಜೀವಂತವಾಗಿರುವುದು ಇದೇ ಪ್ರತ್ಯಯ ಎಂದು ವ್ಯಕ್ತಿಯೊಬ್ಬನನ್ನು ಬೇಕಂತಲೇ ಮರಳಲ್ಲಿ ಹೂತು ಅವನನ್ನು ಅಲ್ಲೇ ಬಿಟ್ಟು ಬಂದು ಮತ್ತೆ ಅವನ್ನು ತಿರುಗಿ ಎದ್ದು ಬಂದಾಗ ಏನೂ ಆಗದಂತೆ ವರ್ತಿಸುವುದು ವ್ಯಕ್ತಿ ವ್ಯಕ್ತಿಗಳ ನಡುವಿನ ತಿರಸ್ಕಾರದ ಪ್ರಾತ್ಯಕ್ಷಿಕೆ ಅನ್ನಿಸುತ್ತದೆ. + +ಅನೇಕ ಕಾದಂಬರಿ ಬಂಧಿತವಾಗಿರುವುದೇ ಕಾದಂಬರಿಯ ಪುಟ ಸಂ 41 ರಲ್ಲಿ ಉಲ್ಲೇಖವಾಗಿರುವ ಪರಾಕ್ರಮ ಶಕ್ತಿ ಎಂಬ ಕತೆಯ ಮೇಲೆ ನಾವು ಯಾರನ್ನು ಕೊಲ್ಲುತ್ತೇವೆಯೋ ಅವರ ಶಕ್ತಿ ತಮಗೆ ಬರುತ್ತದೆ ಎಂಬ ಹುಚ್ಚು ನಂಬಿಕೆಯಿಂದಲೆ. ಅದನ್ನು ಹೇಳಿಕೊಟ್ಟ ದೇವರನ್ನೇ ಕಡೆಗೆ ಶಕ್ತಿಗೋಸ್ಕರ ಕೊಲ್ಲಲು ಹಿಂಬಾಲಿಸುವುದು ಅಸಂಗತತೆಯ ಛಾಯೆಯನ್ನು ದರ್ಶಿಸುತ್ತದೆ. ಮುಂದಿನ ಜನ್ಮದಲ್ಲಿ ರಾಜನಾಗುತ್ತೇನೆ ಎಂಬ ನಂಬಿಕೆಯಿಂದ ಕಳ್ಳನ ಸಾವಿಗೆ ಪರಿಹಾರ್ಯ ಸಾವು ಕಂಡುಕೊಳ್ಳುವ ಬೇಂದ್ರೆಯವರ ‘ಸಾಯೋ ಆಟ’ ನಾಟಕದ ಪಾತ್ರಗಳು ಇಲ್ಲಿ ನೆನಪಾಗುತ್ತವೆ. + +ಅನೇಕನ ಜೊತೆ ವಿಶಾಲನಿಗೆ ಇರಲು ಸಾಧ್ಯವಾಗುವುದಿಲ್ಲ ಅವನೊಡನೆ ಹೊಂದಿಕೆ ಆಗುವ ಮನಸ್ಸು ಇರುವುದಿಲ್ಲ. ಅನೇಕ ಹಾಗಲ್ಲ ಅವನು ವಿಷಯುಕ್ತ ಕಾಯಿಗಳನ್ನು ತಿನ್ನಲು ಮನಸ್ಸು ಮಾಡಿದಾಗ ಅವನನ್ನು ತಡೆಯುತ್ತಾನೆ. ಆದರೆ ವಿಶಾಲ ಅವನ ವಿರುದ್ಧ ಆಕ್ರಮಣಕ್ಕೆ ಸಮಯ ಸಾಧಿಸುತ್ತಾನೆ. ಇನ್ನು ಹೆಚ್ಚು ಸಮಯ ಇಲ್ಲಿರಲು ಅಸಾಧ್ಯಎಂದು ತೀರ್ಮಾನಿಸಿ ಬೆಂಕಿಯನ್ನು ಮಾಡುತ್ತಾನೆ ಅದನ್ನು ಹೆಚ್ಚಿಸಿ ಹೆಚ್ಚಿಸಿ ಉರಿಯುವಂತೆ ಮಾಡುತ್ತಾನೆ ಕಡಲ ತುದಿಯಲ್ಲಿ ಇದ್ದ ಮರದ ಕೊರಡನ್ನು ಆಶ್ರಯ ಎಂದು ತಿಳಿದು ಅದನ್ನೇ ನಂಬುತ್ತಾನೆ. ಒಂದು ನಿರ್ಜೀವ ವಸ್ತುವನ್ನು ನಂಬುವಂತೆ ಮನುಷ್ಯ ಸಜೀವಿಗಳನ್ನು ಅರ್ಥಾತ್ ಸಹಜೀವಿಗಳನ್ನು ನಂಬದಿರಲು ಕಾರಣವೇನು? ಎಂಬುದು ಎಂದಿಗೂ ಪ್ರಶ್ನಾರ್ಥಕವೇ. + +ಅನೇಕ ತಾನು ಹೊಡೆದ ಹಕ್ಕಿಯ ಮಾಂಸವನ್ನು ವಿಶಾಲನೊಂದಿಗೆ ಹಂಚಿಕೊಳ್ಳಲು ತೆರಳಿದಾಗಲೆ ಅವನು ನಾಪತ್ತೆಯಾಗಿರುವ ವಿಚಾರವೂ ತಿಳಿಯುತ್ತದೆ. ಕಡೆಗೆ ಅವನು ದ್ವೀಪದಲ್ಲಿ ಕಂಡ ಬೆಂಕಿಯನ್ನು ಗಮನಿಸಿದಾಗ ಬೆಂಕಿ ಹೊತ್ತಿಸುವ ತಯಾರಿಯಲ್ಲಿದ್ದ ವಿಶಾಲನ್ನು ನೆನಪಿಸಿಕೊಳ್ಳುತ್ತಾನೆ. ದ್ವೀಪದ ತುಂಬೆಲ್ಲಾ ಬೆಂಕಿ ಆವರಿಸುತ್ತದೆ. ಅಂದರೆ ಬೆಳಕು ಸಮುದ್ರದ ನೀರಿನಲ್ಲಿ ಬಣ್ಣದೋಕುಳಿಯನ್ನಾಡುವಂತೆ ಕಾಣುತ್ತದೆ. ಅದನ್ನೂ ಸಂಭ್ರಮಿಸುತ್ತಾನೆ. ಆದರೆ ಅವನಿಗೆ ಕಳೆದುಕೊಂಡ ಅನನ್ಯ ಜೀವರಾಶಿಗಳ ಬಗ್ಗೆ ಬೇಸರವಾಗುತ್ತದೆ. ಇನ್ನೆರಡು ದಿನ ಕಳೆದ ಬಳಿಕ ವಿಶಾಲ ದಡ ದಾಟದೆ ಅದೇ ದ್ವೀಪದ ಬುಡದಲ್ಲಿ ಹೆಣವಾಗಿ ಮೀನುಗಳ ಆಹಾರವಾಗಿ ಗೋಚರಿಸಿದಾಗ ಅನೇಕ ಅವನನ್ನು ಹಿಂದೆ ಜೀವ ಇದೆಯಾ ಎಂದು ನೋಡಿದಂತೆ ಇನ್ನೊಮ್ಮೆ ಪರೀಕ್ಷೆ ಮಾಡಲು ಹೋಗುವುದಿಲ್ಲ ಬದಲಾಗಿ ಆ ಶವವವನ್ನು ಹೊತ್ತುಕೊಂಡು ಇಡೀ ದ್ವೀಪಕ್ಕೆ ಕೊಡಬಹುದಾದ ಬಲಿಯಂತೆ ಬಯಲಿನಲ್ಲಿಯೇ ಇಡುತ್ತಾನೆ. ನಂಬಿಕೆ ಮೈಮರೆತರೆ ದುಸ್ಸಾಹಸ ಮಾಡಿದರೆ ಏನಾಗುತ್ತದೆ ಎಂಬುದನ್ನು ತಿರುಮಲೇಶರು ಎತ್ತುಗೆಗಳ ಮೂಲಕ ಇಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ. + + + +ಅನೇಕ ಕಾದಂಬರಿಯಲ್ಲಿ ಏಕ ಅನೇಕ ಪಾತ್ರಗಳು ಅನ್ನುವ ಹಾಗೆ ಇಲ್ಲ. ಬರುವುದೇ ಎರಡು ಪಾತ್ರಗಳು ಮನುಷ್ಯನ ಮನಸ್ಥಿತಿಯನ್ನು ಚುಟುಕಾಗಿ ನೇರವಾಗಿ ಹೇಳುವುದಕ್ಕೆ ಅಗತ್ಯದಷ್ಟೇ ಪಾತ್ರಗಳನ್ನು ಸೃಷ್ಟಿಮಾಡಿರುವುದು ತಿರುಮಲೇಶರ ನಿರಾಡಂಬರ ಹಾಗು ಸ್ಪಷ್ಟಗುಣಕ್ಕೆ ಉದಾಹರಣೆಯಾಗಿದೆ. ಒಂದು ಜಾಗರೂಕ ಇನ್ನೊಂದು ಅಜಾಗರೂಕ ಪಾತ್ರ ಸ್ವಾರ್ಥಕ್ಕೆ ಇಡೀ ದ್ವೀಪಕ್ಕೆ ಬೆಂಕಿ ಇಟ್ಟು ವ್ಯಕ್ತಿತ್ವ ದಹಿಸಿಕೊಂಡು ನೀರಲ್ಲಿ ಸತ್ತ ಪಾತ್ರ. ಅಸ್ತಿತ್ವ ಕಂಡುಕೊಳ್ಳಹೋಗಿ ಜೀವ ಕಳೆದುಕೊಂಡವನು. ತಾರ್ಕಿಕ ಚಿಂತನೆಯನ್ನು ಓದುಗರಿಗೆ ಬಿಡುವ ಈ ಕಾದಂಬರಿ ಸಾರ್ವಕಾಲಿಕವಾದದ್ದು. + +ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_151.txt b/Kenda Sampige/article_151.txt new file mode 100644 index 0000000000000000000000000000000000000000..03d044ffa1bac0811fcdfc6a8d68f991cab8ac38 --- /dev/null +++ b/Kenda Sampige/article_151.txt @@ -0,0 +1,19 @@ +ಕತೆಗಾರ, ಮಾಧ್ಯಮ ಅಧ್ಯಾಪಕ ದಯಾನಂದ ಅವರ ಎರಡನೇ ಕಥಾ ಸಂಕಲನ ‘ಬುದ್ಧನ ಕಿವಿ’. ಸಮಕಾಲೀನ ಸಂಗತಿಗಳಿಗೆ ಧ್ವನಿಯಾಗುವ ಕತೆಗಾರ ದಯಾನಂದ ಅವರು ಈ ಸಂಕಲನದ ಕಥೆಗಳಲ್ಲಿ ಅದನ್ನು ಸಶಕ್ತವಾಗಿ ಕಟ್ಟಿಕೊಟ್ಟಿದ್ದಾರೆ. + +(ದಯಾನಂದ) + +‘ದೇವರ ಮಗು’ ಕಥೆ ಇದಕ್ಕೆ ಉತ್ತಮ ಉದಾರಹಣೆ. ಮುಗ್ಧ ಮಗು ಸಚ್ಚಿದಾನಂದನನ್ನು ಭವಿಷ್ಯದ ಪೀಠಾಧಿಪತಿಯನ್ನಾಗಿ ಮಾಡಬೇಕೆನ್ನುವ ತಂದೆ- ತಾಯಿಗಳ ಆಸೆ, ಅಧಿಕಾರ ಲಾಲಸೆ, ಆಶ್ರಮದಲ್ಲಿನ ಅನೈತಿಕ ಚಟುವಟಿಕೆಗಳನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸುವ ಪರಿ, ದೇವರ ಸನ್ನಿಧಾನ, ದೇವರ ಸೇವೆ ಮುಗ್ಧ ಮಗುವಿನ ಕಣ್ಣಲ್ಲಿ ಕಾಣುತ್ತವೆ. ಸಮಾಜವನ್ನು ತಿದ್ದುವ, ಆದರ್ಶ ವಟುಗಳನ್ನು ಬೆಳೆಸುವ ಸನ್ನಿಧಾನಗಳೇ ದುರ್ಮಾರ್ಗ ಹಿಡಿದಿರುವುದು ‘ದೇವರ ಮಗು’ ಕತೆಯಲ್ಲಿ ವ್ಯಕ್ತವಾಗಿದೆ. + +‘ಮುಳ್ಳು’ ಕಥೆಯಲ್ಲಿ ಬಶೀರನ ಮನಸ್ಸಿನ ತೊಳಲಾಟವನ್ನು ಅತ್ಯಂತ ಮಾರ್ಮಿಕವಾಗಿ ಕಟ್ಟಿಕೊಟ್ಟಿದ್ದಾರೆ. ಕತೆಯ ಕೊನೆ ಸಾಲು ‘ಗಂಟಲಲ್ಲಿ ಒತ್ತುತ್ತಿದ್ದ ಮುಳ್ಳು ಎದೆಯಲ್ಲೂ ಒತ್ತುತ್ತಿತ್ತು’ ಚಿಂತನೆಗೆ ಹಚ್ಚುತ್ತದೆ. + +‘ಮಡ್ಳಕ್ಕಿ’ ಕಥೆಯಲ್ಲಿ ಜಬೀನಕ್ಕ ತನ್ನ ರೇಷನ್ ಕಾರ್ಡ್ ಮಾಡಿಸಿಕೊಳ್ಳಲು ಆಫೀಸಿಗೆ ಅಲೆಯುವ ಸನ್ನಿವೇಶ, ನಮ್ಮ ಈಗಿನ ವ್ಯವಸ್ಥೆ ಹಾಗೂ ಭ್ರಷ್ಟಾಚಾರವನ್ನು ಒಂಟಿ ಕಾಗೆಯಂತೆ ಅರಚುವ ಮೂಲಕ ಕಟ್ಟಿಕೊಟ್ಟಿದ್ದಾರೆ. + +‘ವಾಟ್ಸ್ ಇನ್ ಎ ನೇಮ್’ ಕಥೆಯಂತೂ ತುಂಬಾ ಮೆಚ್ಚುಗೆ ಆಯಿತು. ತುಂಬಾ ಸಂಕೀರ್ಣವಾದ ವಿಷಯವನ್ನು ಅತ್ಯಂತ ಸೂಕ್ಷ್ಮವಾಗಿ ಮತ್ತು ಅತ್ಯಂತ ನಾಜೂಕಾಗಿ ಕೆತ್ತಿ ನಿಲ್ಲಿಸಿದ್ದಾರೆ‌ ಈ ಕಥೆಯಲ್ಲಿ. ಸೂಕ್ಷ್ಮವೊಂದನ್ನು ಮನವರಿಕೆ ಮಾಡಿದ ಸಂಗತಿ ಇಷ್ಟವಾಯಿತು. + + + +‘ಜಗತ್ತಿನ ಕೊನೇ ದಿನಗಳ ಒಂದು ಬೆಳಗು’ ಎಂಬ ಕಥೆಯಲ್ಲಿ ಪ್ರೀತಿಸಿ, ಮನೆಬಿಟ್ಟ ಹುಡುಗ- ಹುಡುಗಿ ಸಾಮಾಜಿಕ ವ್ಯವಸ್ಥೆಯಿಂದ ನಿಸರ್ಗದ ಮಡಿಲಲ್ಲಿ ಪ್ರಣಯ ಪಕ್ಷಿಗಳಂತೆ ವಿಹರಿಸುವ ಭಾವಲೋಕ ಸೊಗಸಾಗಿ, ಕಾವ್ಯಾತ್ಮಕವಾಗಿ ಚಿತ್ರಿತವಾಗಿದೆ. ಕತೆಯ ಅಂತ್ಯ ವಿನೋದವೋ… ಇಲ್ಲವೇ ವಿಷಾದವೋ… ಎಂಬುದನ್ನು ನೀವು ಕಥೆ ಓದಿಯೇ ತಿಳಿಯಬೇಕು. ನನ್ನನ್ನು ತುಂಬಾ ಕಾಡಿದ ಕಥೆ ಇದು. ಉಳಿದಂತೆ ‘ಬೈಬಲ್ ಬಂಪ್’, ‘ಸರ್ವೈವಲ್ ಬೆನಿಫಿಟ್’, ‘ಬುದ್ಧನ ಕಿವಿ’ ಒಪ್ಪುವಂಥ ಕಥೆಗಳು. + +ದಯಾನಂದ ಅವರು ತುಂಬಾ ಸೂಕ್ಷ್ಮ ಸಂವೇದಿ ಕಥೆಗಾರರು. ಅವರು ಕಥೆಯನ್ನು ನಿಭಾಯಿಸುವ ಶೈಲಿ ಮೆಚ್ಚುಗೆಯಾಯಿತು. ಈ ಕಥೆಗಳು ನಮ್ಮ ಜೊತೆಗೆ ಮಾತನಾಡುತ್ತವೆ. ಕೆ.ವಿ. ನಾರಾಯಣ ಅವರು ಹೇಳಿರುವಂತೆ ನಿಜಕ್ಕೂ ಯಾವ ನೆರವಿನ ಅಗತ್ಯವೂ ಈ ಕತೆಗಳಿಗಿಲ್ಲ! + +ಮಂಜಯ್ಯ ದೇವರಮನಿ ರಾಣೇಬೆನ್ನೂರಿನವರು. ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಕರಿಜಾಲಿ ಮರ’ ಪ್ರಕಟಿತ ಕಥಾಸಂಕಲನ.  ಚಾರಣ ಮತ್ತು ಚಿತ್ರಕಲೆ ಇವರ ಹವ್ಯಾಸಗಳು. \ No newline at end of file diff --git a/Kenda Sampige/article_152.txt b/Kenda Sampige/article_152.txt new file mode 100644 index 0000000000000000000000000000000000000000..9fe6c7e7e15f0c0e3e96f58ca8a31651ba1540b7 --- /dev/null +++ b/Kenda Sampige/article_152.txt @@ -0,0 +1,21 @@ +ಮೂಲತಃ ವೈದ್ಯರಾದ ಲಕ್ಷ್ಮಣ ಅವರು, ತಮ್ಮ ನೆನಪುಗಳನ್ನು ಪುಟ್ಟಪುಟ್ಟ ಲೇಖನಗಳಲ್ಲಿ ಹಿಡಿದಿಟ್ಟಿದ್ದಾರೆ. ಈ ಸ್ಮೃತಿಚಿತ್ರಗಳು ಹಲವು ಕಾರಣಗಳಿಂದ ವಿಶಿಷ್ಟವಾಗಿವೆ: ಕರ್ನಾಟಕದ ಎರಡು ತುದಿಯಲ್ಲಿರುವ ಅಥಣಿಸೀಮೆ ಹಾಗೂ ಬೆಂಗಳೂರು ಸೀಮೆಯ ಬದುಕನ್ನು ಒಟ್ಟಿಗೆ ಹಿಡಿದುಕೊಡುವುದಕ್ಕೆ; ಪುಟ್ಟ ಹಳ್ಳಿಯ ಮತ್ತು ಧಾರವಾಡ ಬೆಂಗಳೂರುಗಳಂತಹ ಮಹಾ ನಗರಗಳ ಬದುಕನ್ನು ಜತೆಗಿಟ್ಟು ನೋಡುವುದಕ್ಕೆ; ಹಳ್ಳಿಯ ಕೃಷಿಕ ಸಂಸ್ಕೃತಿಯನ್ನು ಮತ್ತು ವೈದ್ಯಕೀಯ ಕ್ಷೇತ್ರ ಅನುಭವಗಳನ್ನು ಬೆರೆಸುವುದಕ್ಕೆ; ಬಾಲ್ಯದ ಅನುಭವಗಳ ಜತೆ ಪ್ರಾಯದ ಚಿಂತನೆಗಳ ಅಭಿನ್ನಗೊಳಿಸಿರುವುದಕ್ಕೆ. + +(ಡಾ. ಲಕ್ಷ್ಮಣ ವಿ.ಎ.) + +ಸಾಮಾನ್ಯವಾಗಿ ಆತ್ಮಕಥೆಗಳಲ್ಲಿ, ಬಾಲ್ಯದ ನೆನಪುಗಳು ಬಂದಾಗ ಆಪ್ತವೂ ಗಾಢವೂ ಆಗುವ ಬರೆಹ, ವೃತ್ತಿಬದುಕಿನ ಅಥವಾ ನಡುವಯಸ್ಸಿನ ಬದುಕಿನ ದಾಖಲೆಯಾಗುವಾಗ ಅಳ್ಳಕಗೊಳ್ಳುವುದು; ಕಳೆದುಹೋದ ಬದುಕಿನ ನೆನಪುಗಳು ರಮ್ಯವಾಗಿ ಸಿಹಿಯಾಗಿ, ಬಾಳಿನ ವೈರುಧ್ಯಗಳನ್ನು ಕಳೆದುಕೊಳ್ಳುವುದೂ ಉಂಟು. ಆದರೆ ಇಲ್ಲಿ ಹಾಗಾಗಿಲ್ಲ. ಬಾಲ್ಯಕಾಲದ ಸಿಹಿ ನೆನಪುಗಳ ಜತೆಗೆ ಅಲ್ಲಿನ ದಾರುಣವಾದ ಚಿತ್ರಗಳೂ ಸೇರಿಕೊಳ್ಳುತ್ತವೆ. ಎಂತಲೇ ಇಲ್ಲಿನ ಚಿತ್ರಗಳು ಮತ್ತು ಪಾತ್ರಗಳು ಸಂಕೀರ್ಣವಾಗಿವೆ. ಇಲ್ಲಿರುವ ಅನುಭವವನ್ನು ಪಡೆದ ಪ್ರದೇಶ, ಕಾಲ, ಸಂಸ್ಕೃತಿ, ಸನ್ನಿವೇಶಗಳು ಬೇರೆಬೇರೆಯಾದರೂ, ಪ್ರೀತಿ ದ್ವೇಷ ಸಿಟ್ಟು ಅಸೂಯೆ ದೊಡ್ಡತನ ಸಣ್ಣತನವುಳ್ಳ ಇಲ್ಲಿನ ಮನುಷ್ಯರು ಮಾತ್ರ ಒಂದೇ. ಅವರನ್ನು ಅವರ ಸ್ವಭಾವದ ಅರೆಕೊರೆಗಳೊಂದಿಗೆ ಹಿಡಿಯುವುದರಿಂದ ಪಾತ್ರಗಳು ಜೀವಂತವಾಗಿವೆ. + +ಅದರಲ್ಲೂ ಘನವಾದ ಪಾತ್ರಗಳಾಗಿ ನಿಲ್ಲುವವರು ಲೇಖಕರ ಅಪ್ಪ ಮತ್ತು ಅಮ್ಮ. ಇಲ್ಲಿನ ಪಂಡರಪುರದ ಯಾತ್ರೆ, ಅಪ್ಪ ಅಮ್ಮನ ಸಂಬಂಧವನ್ನು ಚಿತ್ರಿಸುವ ನೆನಪುಗಳು ಸಣ್ಣಕತೆಗಳೂ ಆದಂತಿವೆ. ಜಾತ್ರೆಯ ದಿನ ಅಪ್ಪ ಅಮ್ಮ ನಿಗೂಢವಾಗಿ ಕಣ್ಮರೆಯಾಗಿ ಮತ್ತೆ ಪ್ರತ್ಯಕ್ಷವಾಗುವುದನ್ನು ವಾಚ್ಯಗೊಳಿಸದೆ ಚಿತ್ರಿಸಲಾಗಿದೆ. ಯಾವುದಾದರೂ ಕಾದಂಬರಿಯೊಳಗೆ ಮೈತಳೆಯಬೇಕಾದ ಅನುಭವಲೋಕವು ಹೀಗೆ ಬಿಡಿಚಿತ್ರಗಳಾಗಿ ಪರ್ಯವಸಾನಗೊಂಡಿತೇ ಎಂದು ಅನಿಸುವುದುಂಟು. + + + +ಇಲ್ಲಿರುವ ಮೊದಲ ನೆನಪು, ಮಲೆನಾಡಿನ ಸ್ನೇಹಿತೆಯೊಬ್ಬಳು ಗುಬ್ಬಿಕಾಯುವುದು ಎಂದರೇನು ಎಂಬ ಪ್ರಶ್ನೆಗೆ ಉತ್ತರಿಸುವ ಪ್ರಸಂಗದಿಂದ ಆರಂಭವಾಗುವುದು ಸಾಂಕೇತಿಕವಾಗಿದೆ. ಕರ್ನಾಟಕದ ಒಂದು ಭಾಗದವರು ಇನ್ನೊಂದು ಭಾಗದ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ತಮ್ಮ ಅನುಭವ ಹಂಚಿಕೊಳ್ಳುವ ವಿನ್ಯಾಸವು ಕನ್ನಡದಲ್ಲಿ ಜನಪ್ರಿಯವಾಗಿದೆ. ಆದರೆ ಇಲ್ಲಿ ಅಧಿಕಾರ ಕೇಂದ್ರವಿರುವ ದಕ್ಷಿಣದ ಕರ್ನಾಟಕದ ಎದುರು, ಉತ್ತರ ಕರ್ನಾಟಕ ವಿಶಿಷ್ಟವಾದ ಭಾಷೆಯನ್ನಾಗಲಿ ಅನುಭವವನ್ನಾಗಲಿ ವೈಭವೀಕರಿಸುವುದಿಲ್ಲ, ಇಲ್ಲವೇ ಕೀಳೀಕರಿಸುವುದಿಲ್ಲ. ತನ್ನ ಪಾಲಿಗೆ ಕನ್ನಡ ನಾಡಿನ ಬದುಕೆಲ್ಲ ಒಂದೇ ಎಂಬ ಸಮದರ್ಶಿಯಾದ ದೃಷ್ಟಿಕೋನವು ಇಲ್ಲಿ ಕೆಲಸಮಾಡುತ್ತದೆ. ಹೀಗಾಗಿ ಇಲ್ಲಿನ ಸ್ಮೃತಿಚಿತ್ರಗಳು ರೋಚಕವಾದ ಅನುಭವವನ್ನು ಮಂಡಿಸಿ ಓದುಗರನ್ನು ರಂಜಿಸುವುದಕ್ಕೆ ಉತ್ಸುಕವಾಗುವುದಿಲ್ಲ. ಎಲ್ಲ ಭಾಗದ ಜೀವನದಲ್ಲಿರುವ ವಿಷಾದಕರ ದುರಂತಗಳನ್ನು ದಾಖಲಿಸುತ್ತವೆ. ಜನರ ಹಸಿವು ಬಡತನ ದುಡಿಮೆ ಹೋರಾಟ ಜೀವಂತಿಕೆಗಳನ್ನು ತಾಳ್ಮೆಯಿಂದ ಘನತೆಯಿಂದ ಕಾಣಿಸುತ್ತವೆ. ತನ್ನನ್ನು ರಕ್ಷಿಸಿಕೊಳ್ಳದ ಊರದೇವರನ್ನು ಕುರಿತು ದುಃಖಿಸುವ ಜನರ ಬಗ್ಗೆ ವ್ಯಂಗ್ಯ ಮಾಡುತ್ತವೆ. ಕಾಣೆಯಾದ ಗುಬ್ಬಿಗಳನ್ನು ಮತ್ತು ಊರವರೆಲ್ಲ ಸೇರಿ ಕೊಲ್ಲುವ ಹುಲಿಯನ್ನು ವಿಷಾದದಲ್ಲಿ ಕಾಣಿಸುತ್ತವೆ. ವೈರುಧ್ಯಗಳನ್ನು ಮುಂದಿಡುವ ಮೂಲಕ ಸುಡುಬಾಳಿನ ಬಗ್ಗೆ ಚಿಂತಿಸಲು ಪ್ರೇರೇಪಿಸುತ್ತವೆ. + +(ರಹಮತ್‌ ತರೀಕೆರೆ) + +ಬಾಲ್ಯಕಾಲದ ಮುಗ್ಧ ನಂಬಿಕೆಗಳು ಭಗ್ನವಾದ ಬಳಿಕ ಮತ್ತು ವೈಚಾರಿಕ ದೂರದಿಂದ ಪರಿಸರವನ್ನು ನೋಡುವುದರಿಂದ ಹುಟ್ಟಿರುವ ಚಿಂತನಶೀಲತೆ, ಇಲ್ಲಿನ ಬರೆಹವನ್ನು ರೂಪಿಸಿದೆ. ಅನುಭವವು ಚಿಂತನೆಗೆ ಬುನಾದಿಯಾಗುವ ಅಥವಾ ಚಿಂತನೆಯು ಅನುಭವಕ್ಕೆ ಚೌಕಟ್ಟೊಂದನ್ನು ಕಟ್ಟುವ ಕಡೆಯಲ್ಲೆಲ್ಲ ಬರೆಹ ದಾರ್ಶನಿಕವಾಗುತ್ತದೆ. ಸಹಜವಾದ ವಿವರಗಳು ದೊಡ್ಡ ಅರ್ಥವನ್ನು ಕೊಡುವ ಸಂಕೇತಗಳಾಗುತ್ತವೆ. ಉದಾ.ಗೆ, ಮಗನನ್ನು ಆಸ್ಪತ್ರೆಗೆ ಕರೆದೊಯ್ಯುವ ತಂದೆ ರಸ್ತೆಬದಿ ವಾಹನಕ್ಕೆ ಕಾಯುವ ಪ್ರಸಂಗವನ್ನು ಗಮನಿಸಬಹುದು. ಬುತ್ತಿಕಟ್ಟುವ, ಚಪ್ಪಲಿ ಕಳೆದುಹೋಗದಂತೆ ವಿಶಿಷ್ಟ ಗುರುತು ಮಾಡುವ, ಪಂಡರಪುರಕ್ಕೆ ಯಾತ್ರೆ ಹೋಗುವ, ಹೈನ ಮುಗಿದರೂ ಹಾಲುತುಪ್ಪದ ವಾಸನೆ ಪರಿಮಳ ಬೀರುವ ಕಪಾಟುಗಳು, ಪರಿಮಳ ಬೀರುವ ಮಿಲಿಟರಿ ಟ್ರಂಕು ಇತ್ಯಾದಿ ಪ್ರಸಂಗಗಳಲ್ಲಿ, ವಿವರಗಳನ್ನು ಸೂಕ್ಷ್ಮವಾಗಿ ದಾಖಲಿಸುವ ಶ್ರದ್ಧೆಯಿಂದ ಇಲ್ಲಿನ ನೆನಪುಗಳಿಗೆ ಒಂದು ಬಗೆಯ ಜೈವಿಕ ಸಮೃದ್ಧತೆ ಒದಗಿದೆ. ಕೆಲವು ನೆನಪುಗಳಂತೂ ಕಾವ್ಯಾತ್ಮಕವಾಗಿಯೂ ದಾರ್ಶನಿಕವಾಗಿಯೂ ಆಗಿದ್ದು, ಸುಂದರ ಪ್ರಬಂಧಗಳಾಗಿವೆ. ಆದರೆ ನೆನಪುಗಳ ಜತೆ ಜೀವನದ ಅರ್ಥವೊಂದನ್ನು ಹುದುಗಿಸುವ ವಿಷಯದಲ್ಲಿ ನಿರಾಸಕ್ತವಾಗಿರುವ ಲೇಖನಗಳೂ ಇಲ್ಲಿವೆ. ಅವು ಲಘುವಾಗಿವೆ, ವಾಚಾಳಿಯಾಗಿವೆ ಮತ್ತು ಶಿಥಿಲವಾಗಿವೆ. + + + +ಇಲ್ಲಿನ ನೆನಪುಗಳು ಲವಲವಿಕೆಯಿಂದ ಕೂಡಿದ್ದು, ಪುಸ್ತಕವೂ ಬಿಡದೆ ಓದಿಸಿಕೊಳ್ಳುತ್ತದೆ. ಇದಕ್ಕೆ ಲೇಖಕರ ವಿನೋದಪ್ರಜ್ಞೆಯೂ ಆ ಪ್ರಜ್ಞೆಯ ಹಿಂದಿರುವ ಜೀವನಪ್ರೀತಿಯೂ ಕಾರಣವಾಗಿದೆ. ಬದುಕನ್ನು ಅದರ ಸಮೃದ್ಧಿ ವೈರುಧ್ಯ ದುರಂತಗಳ ಸಮೇತ ಹಿಡಿದಿಡುವ ಸಹನೆ ಮತ್ತು ಪ್ರತಿಭೆಯುಳ್ಳ ಲೇಖಕರಿಗೆ, ಇಂತಹ ಬಿಡಿಬಿಡಿ ನೆನಪುಗಳಾಚೆ ದೊಡ್ಡದಾದ ಬರೆಹವನ್ನು ಮಾಡುವ ಶಕ್ತಿಯಿದೆ. ಅಂತಹ ಬರೆಹಕ್ಕೆ ಈ ಪುಸ್ತಕ ಪೂರ್ವಪೀಠಿಕೆ ಆದರೂ ಆದೀತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_153.txt b/Kenda Sampige/article_153.txt new file mode 100644 index 0000000000000000000000000000000000000000..8f87e30664c3d2cd30bb1b9114de74d94c33a163 --- /dev/null +++ b/Kenda Sampige/article_153.txt @@ -0,0 +1,89 @@ +ತನ್ನ ಕಣ್ಣೆದುರಿನ ಸಂಕಟಗಳಿಗೆ ಸ್ಪಂದಿಸದ ವಿಜ್ಞಾನಿ, ಕಲಾವಿದ, ರಾಜಕಾರಣಿ, ನಟ, ಹಾಡುಗಾರ, ಕವಿ ಮತ್ತು ಒಬ್ಬ ನಾಗರಿಕ ಒಂದು ಅಪ್ರಸ್ತುತ ಬದುಕನ್ನು ಜೀವಿಸುವ ಅಪಾಯಕ್ಕೆ ಈಡಾಗಬೇಕಾಗುತ್ತದೆ. ಕಾಲದ ದಂದುಗಗಳಿಗೆ ಮಿಟುಕುವ ಜವಾಬುದಾರಿ ಎಲ್ಲರ ಮೇಲೂ ಒಂದಲ್ಲಾ ಒಂದು ರೂಪದಲ್ಲಿ ಇರುತ್ತದೆ. ಮತ್ತದಕ್ಕೆ ನಾವೆಲ್ಲ ಭಾಗೀದಾರರೇ ಅನಿಸಿತು. ಮಂಡಲಗಿರಿ ಪ್ರಸನ್ನ ಅವರ ಇಲ್ಲಿನ ಗಜಲ್‌ಗಳನ್ನು ಓದಿ ನನ್ನ ಎರಡು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದೇನೆ. ಇದನ್ನು ಯಾವ ಅರ್ಥದಲ್ಲೂ ಮುನ್ನುಡಿ ಅಂತಲೋ, ಇಲ್ಲ ವಿಮರ್ಶೆ ಅಂತಲೋ ಭಾವಿಸುವ ಅಗತ್ಯವಿಲ್ಲ. ಈ ಬರಹ ಕೇವಲ ಒಬ್ಬ ಸಹ ಬರಹಗಾರನ ಅನಿಸಿಕೆ ಎಂದಷ್ಟೇ ಇಲ್ಲಿ ಹೇಳುವ ಮೂಲಕ ನಾನು ವಿಮರ್ಶಕ ಅಲ್ಲ ಅನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಇಲ್ಲಿಯ ಗಜಲ್‌ಗಳಲ್ಲಿ ಮೂಲ ವ್ಯಾಕರಣ, ಛಂದಸ್ಸಿನ ಸಮರ್ಪಕ ಬಳಕೆ ಇರುವುದರಿಂದ ಆ ಕುರಿತು ನಾನೇನೂ ಹೇಳುವುದಿಲ್ಲ. ಇಲ್ಲಿನ ರಚನೆಗಳನ್ನು ಗಜಲ್ ಅನ್ನುವುದರ ಜೊತೆ ಜೊತೆಗೆ ಮುಕ್ತ ಕವಿತೆಗಳಂತೆ ಓದಿಕೊಂಡಿದ್ದೇನೆ. ಹೀಗೆ ಅಂದುಕೊಂಡೇ ಪ್ರತಿಕ್ರಿಯಿಸುತ್ತಿದ್ದೇನೆ. + +೬೧ ಗಜಲ್ ರಚನೆಗಳ “ನಿದಿರೆ ಇರದ ಇರುಳು” ಈ ಗುಚ್ಛವು ಮಂಡಲಗಿರಿ ಪ್ರಸನ್ನ ಅವರ ಈ ಮುಂಚಿನ ಸಾಹಿತ್ಯ ಪ್ರಕಾರಗಳಿಗೆ ಹೊಸ ಸೇರ್ಪಡೆಯಾದರೂ, ಈಗಾಗಲೇ ಅವರು ಕವಿತೆ ರಚನೆಯಲ್ಲಿ ತೊಡಗಿದ ಕಾರಣ ಕಾವ್ಯ ಓದುಗರಿಗೆ ಪರಿಚಿತರು. ಓದಿದ್ದು ಇಂಜಿನಿಯರಿಂಗ್ ಆದರೂ ಅವರ ಆಸಕ್ತಿ ಕಾವ್ಯ, ಲಲಿತ ಪ್ರಬಂಧ, ಮಕ್ಕಳ ಕಾವ್ಯ, ಮಕ್ಕಳ ನಾಟಕಗಳಂತಹ ಸೃಜನಶೀಲ ಬರವಣಿಗೆಯ ಕಡೆಗೆ ವಾಲಿದ್ದು ಅವರಿಗೂ ಖುಷಿ ನೀಡಿದೆ ಎಂದು ನಂಬುತ್ತೇನೆ. + +(ಮಂಡಲಗಿರಿ ಪ್ರಸನ್ನ) + +ಮನುಷ್ಯ ಮತ್ತು ಪರಿಸರದ ಸಾವಯವ ಸಂಬಂಧವನ್ನು ಸಾರುವ ಅನೇಕ ಗಜಲ್ ರಚನೆಗಳು ಈ ಸಂಕಲನದಲ್ಲಿವೆ. ನೆನಪಿನ ಬಗ್ಗೆ, ಪ್ರಕೃತಿಯ ವಿಸ್ಮಯಗಳ ಬಗ್ಗೆ, ಬೆಳಗಿನ ರಂಗೋಲಿ, ಹೂವುಗಳ ಮೇಲೆ, ಪ್ರೇಮ, ವಿರಹ, ತ್ಯಾಗ, ವಂಚನೆ, ತೃಪ್ತಿಯ ಕುರಿತು ಬರೆದ ಗಜಲ್ ಗಳಿವೆ. ಒಂದು ಗಜಲ್‌ನ ಸಾಲು ನೋಡುವುದಾದರೆ: + +ಭೋರ್ಗರೆವ ಕಡಲುಕ್ಕಿ ಕಿನಾರೆಗೆ ಮುತ್ತಿಡುತಿರಲು `ಗಿರಿ’ಸುಳಿಯಪ್ಪುಗೆ ನೆನಪಿಸಿಕೊಂಡಾಗೊಮ್ಮೆ ನಿನ್ನ ನೆನಪು(ಗಜಲ್-೩) + +ಗಜಲಿನಲ್ಲಿ ಮನುಷ್ಯನ ಇಂದ್ರೀಯಗಳಿಗೆ (ಪ್ರಾಣಿ ಪಕ್ಷಿಗಳಷ್ಟು ನಾವು ನಿಸರ್ಗಕ್ಕೆ ಹತ್ತಿರವಿಲ್ಲ ಎಂದಾಗಲೂ) ಪರಿಸರ ಸದಾ ಒಂದಲ್ಲಾ ಒಂದು ವಿಶೇಷತೆಯನ್ನು ದಾಖಲಿಸಬಲ್ಲ ಅನುಭೂತಿಯನ್ನು ನಮಗೆ ನೀಡುತ್ತದೆ ಎಂಬುದನ್ನು ಇಲ್ಲಿ ನೆನಪಿಸಿದ್ದಾರೆ. ಇಂತಹ ಅನುಭವಗಳನ್ನು ಒಳಮನಸಿಗೆ ಇಳಿಸಿಕೊಂಡು, ಸರಿ ಸಮಯಕ್ಕೆ ಕಾದು ಯಾವುದೋ ಕ್ರಿಯಾಶೀಲ ರೂಪದಲ್ಲಿ ವ್ಯಕ್ತಪಡಿಸುತ್ತೇವಷ್ಟೆ. ಹಾಗೆ ದಕ್ಕಿಸಿಕೊಳ್ಳುವ ಸಾಮರ್ಥ್ಯ ಇರಬೇಕು. + +ನಮ್ಮತನವ ತಿಳಿಯಲೆಂದೆ ಮೈಯ ತುಂಬ ಕಣ್ಣುತಿರುತಿರುಗಿ ಆಗಾಗ ನೋಡಲಿದೆ ಅರಿವಿನ ಬೆನ್ನುಡಿ(ಗಜಲ್-೧) + +ಹೀಗೆ ಮೈಯೆಲ್ಲಾ ಕಣ್ಣಾದಾಗ ಮಾತ್ರ ನಮ್ಮ ಅನುಭವದ ರೆಟೀನಾದಲ್ಲಿ ಒಂದಷ್ಟು ಉಳಿಯಬಲ್ಲ ಸಂಗ್ರಹಯೋಗ್ಯ ಚಿತ್ರಗಳು ಸೆರೆಯಾಗಬಲ್ಲವು. ಹಾಗಾದರೆ ನಮಗೆ ಖುಷಿ ಕೊಡಬಲ್ಲುವಷ್ಟೇ ನೆನಪಿಟ್ಟುಕೊಳ್ಳಬೇಕೆ? ಅದಾಗದು. + +ಇಲ್ಲಿನ ಗಜಲ್‌ಗಳಲ್ಲಿ ನಿದ್ದೆಗೆಡಿಸುವ ಯಾತನೆಗಳು ಸಹ ಇವೆ. ಇಂತಹ ಒಳ ಸಂಕಟಗಳು ಮನುಷ್ಯರಾದ ನಮ್ಮನ್ನು ಸೋಲಿಸುತ್ತವೆ; ಆದರೆ ಕಾವ್ಯಕ್ಕೆ ಅವೇ ಅಸಲು ಮಾಲು. ಇದೊಂದು ವಿಪರ್ಯಾಸವು ಹೌದು. ಒಳ್ಳೆಯ ಕಾವ್ಯ ಬದುಕಿನ ಕೆಟ್ಟ ಅನುಭವಗಳಿಂದ ರೂಪ ತಾಳುತ್ತದೆ. ಬಹುಶಃ ಒಂದು `ಸಂತೃಪ್ತ’ ಭಾವದ ಬದುಕಿನಿಂದ ನಮಗಷ್ಟೇ ತೃಪ್ತ ಅನಿಸಬಹುದಾದ ಕವಿತೆ ಹುಟ್ಟಬಹುದು. ಆದರೆ ಬದುಕು ಸುಟ್ಟುಕೊಂಡು ಕಟ್ಟಿದ ಕಾವ್ಯಕ್ಕೆ ಮಿಡಿವ ತಾಕತ್ತು ಎಲ್ಲಾ ಕಾಲಕ್ಕು ಪ್ರಸ್ತುತ ಅನಿಸುತ್ತದೆ. ಸಾವಯವ ಸಂಬಂಧದ ಜರೂರು ಇಲ್ಲಿ ಕೆಲಸ ಮಾಡುತ್ತದೆ. + +ನಯನಗಳೀಗ ಸೋತಿವೆ ದಣಿವು ಮರೆತು ನಿದಿರೆಗೆ ಜಾರಬೇಕೆಂದಿದ್ದೆಹಾಸಿಗೆಯಲೂ ಮುಳ್ಳು ಕಾಣುತಿದ್ದೇನೆ ಈ ಯಾತನೆಗೆ ಕೊನೆಯೆಂದು(ಗಜಲ್-೪) + +ಮಾರುಕಟ್ಟೆಯ ಈ ದಿನಗಳಲ್ಲಿ ನಿದಿರೆಯೆಂಬುದು ಸಹ ಸರಕು ಆದ ಈ ಹೊತ್ತಲ್ಲಿ, ನಿದ್ದೆಗೆ ಜಾರುವುದು ಸಹ ಸುಲಭದ ಮಾತಲ್ಲ. ಉಂಡು ಗಡದ್ದು ನಿದ್ದೆ ಮಾಡುವವರನ್ನು ಕಂಡು ಹೇಳುವ `ಎಂಥಾ ಅದೃಷ್ಟವಂತನಪ್ಪ ನೀನು’ ಮಾತು ಕೇವಲ ಹಾಸಿಗೆಯಲಿ ಚೆಲ್ಲಿದ ದೇಹಕ್ಕೆ ಹೇಳುವುದಲ್ಲ. ಅದು ಅಂತಹ ವ್ಯಕ್ತಿಯ ಮಾನಸಿಕ ಸ್ಥಿತಿಗೂ ಹೇಳಿದ ಮಾತಾಗುವುದು. ನಿದ್ದೆ ಹತ್ತುವುದಿಲ್ಲ ಅಂದರೆ ಅದಕ್ಕೆ ಬಾಹ್ಯ ಕಾರಣ ಎಷ್ಟಿರುತ್ತವೋ; ಅಷ್ಟೇ ಪ್ರಮಾಣದ ಆಂತರಿಕ ಸಂಗತಿಗಳು ಸಹ ನಮ್ಮನ್ನು ಕದಡಿಬಿಡಬಲ್ಲವಾಗಿರುತ್ತವೆ. ಇದರಲ್ಲಿ ಸಾಮಾಜಿಕ ಕಾರಣವೋ ಅಥವಾ ವೈಯಕ್ತಿಕ ಕಾರಣವೋ ಅಂತು ನಾವು ಅವುಗಳ ಶಿಕಾರಿಯಾಗಬೇಕಾಗುತ್ತದೆ. ಈ ಸ್ಥಿತಿ ಒಬ್ಬ ಕ್ರಿಯಾಶೀಲ ಮನಸು ಉಳ್ಳಾತನಿಗೆ ಆದಲ್ಲಿ ಮೇಲಿನಂತಹ ಸಾಲು ಹುಟ್ಟಬಲ್ಲವು. ನಿದಿರೆ ಎಂಬುದು ಸರಕು ಅಂದೆ. ಹೌದು ಈಗಾಗಲೇ ಐರೋಪ್ಯ ದೇಶಗಳು ಸೇರಿದಂತೆ ಒತ್ತಡದಲ್ಲಿ ದಿನಗೆಲಸ ಮಾಡುವ ನೌಕರರು ಮಧ್ಯಾಹ್ನದ ಹೊತ್ತು ಲಘು ನಿದ್ರೆಗಾಗಿ `ಸ್ಲೀಪಿಂಗ್ ಪಾರ್ಲರ್’ ಅಥವಾ `ನ್ಯಾಪಿಂಗ್ ಸೆಂಟರ್’ ಗಳಲ್ಲಿ ಅರ್ಧ ಗಂಟೆ, ಒಂದು ತಾಸಿನ ನಿದ್ದೆ ಮಾಡಿ ಬರುತ್ತಾರೆ, ಇವೆಲ್ಲವೂ `ಪೇಡ್’-ಹಣ ಕೊಟ್ಟು ಮಲಗುವ ಕೇಂದ್ರಗಳು. ನಮ್ಮ ದೇಶದಲ್ಲಿ ಸಾರ್ವಜನಿಕ ಪಾರ್ಕು, ಬಸ್ ಸ್ಟ್ಯಾಂಡ್ ರೈಲು ನಿಲ್ದಾಣಗಳಲ್ಲಿ ಅಡ್ಡಾದಿಡ್ಡಿ ಮಲಗಿ ಜಗದ ಜಂಜಡಗಳನ್ನು ಮರೆವ ರೀತಿಯವು. ಆದರೆ ಮಂಡಲಗಿರಿ ಪ್ರಸನ್ನ ಅವರು ಹೇಳುವ ಈ ಶೇರ್‌ನಲ್ಲಿ: + +ಕಾಯುತಿವೆ ಪ್ರತಿಕ್ಷಣ ಮುಪ್ಪಡರದ ಭರವಸೆಗಳು `ಗಿರಿ’ಕನಸುಗಳು ಕಣ್ಣೊಳಗೆ ಉಳಿದು ಬಿಟ್ಟಿವೆ ಸಾಯದೆ ಹಾಗೆ(ಗಜಲ್-೧೨)ಎಂಬ ಗಜಲಿನಲ್ಲಿ ಇನ್ನೂ ಕಾಣಲಾರದ ಕನಸು ಎಂದೆಂದಿಗೂ ಜೀವಂತ ಎಂಬುದನ್ನು ಸೊಗಸಾಗಿ ಹೇಳಿದ್ದಾರೆ. ಮತ್ತೊಂದು ಗಜಲ್‌ನಲ್ಲಿ ಮುಂದುವರೆದ ಅವರ ಭಾವ: + +ಸತ್ತ ದೇಹದ ಮುಂದೆ ಕೂತು ಅಳುವಲ್ಲಿ ಅರ್ಥವೇನಿದೆಇರುವಾಗ ಪ್ರೀತಿ ತೋರದೆ ಕಣ್ಣೀರಿಡುವಲ್ಲಿ ಅರ್ಥವೇನಿದೆ(ಗಜಲ್-೧೩)ಅನ್ನುವಾಗಲೂ ಸಾವೆಂಬುದು ಸತ್ತವರ ವಿಷಯವಲ್ಲ; ಅದೆಂದಿಗೂ ಇನ್ನು ಬದುಕುಳಿದವರ ಮಾತಿನ ವಸ್ತು ಮತ್ತು ಅದರ ಅಂದಾಜು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ, ಎಂಬ ತಾತ್ಪರ್ಯ ನೀಡುತ್ತದೆ. + +ಸುಖದ ನಿದಿರೆಯಲಿಹಳು ನಲ್ಲೆ ಹಾಡಬೇಡ ಕೋಗಿಲೆಎದೆಗೆ ತಲೆಯಿಟ್ಟು ಮಲಗಿಹಳು ಕಾಡಬೇಡ ಕೋಗಿಲೆ(ಗಜಲ್-೨೨)ಮೇಲಿನ ಸಾಲು ಥಟ್ಟನೆ ನನಗೆ ತೆಲುಗು ಚಿತ್ರವೊಂದರ `ಓ ಪಾಪ ಲಾಲಿ’ ಹಾಡು ನೆನಪಿಸಿತು. ಎಸ್.ಪಿ. ಬಾಲಸುಬ್ರಮಣ್ಯ ಹಾಡಿರುವ ಆ ಗೀತೆಯಲ್ಲಿ `ಓ ಕೋಯಿಲಾ ಪಾಡವೆ ನಾ ಪಾಟಾನಿ’- ಓ ಕೋಗಿಲೆಯೇ ನೀನೆ ನನ್ನ ಹಾಡನ್ನು ಹಾಡಿ ನನ್ನ ಪ್ರೇಯಸಿಗೆ ಹಿತ ನೀಡು ಅಂದಂತೆ, ಇಲ್ಲಿ ಪ್ರಿಯಕರ ಎದೆ ಮೇಲೆ ಒರಗಿ ನಿದ್ದೆಗೆ ಜಾರಿದ ಪ್ರೇಯಸಿಗೆ ಭಂಗ ಬಾರದಿರಲೆಂದು ಕೋಗಿಲೆ ಹಾಡದಂತೆ ವಿನಂತಿಸಿಕೊಂಡ ಪರಿ ಒಬ್ಬ ಕವಿಗೆ ಸಾಧುವೇ. ದೇವರಲ್ಲಿ ಪ್ರೀತಿಗಾಗಿ, ನಿದಿರೆಗಾಗಿ ಪ್ರಾರ್ಥಿಸುತ್ತ, ಏಕ್ ದಮ್ ಬಯಲು ಸೀಮೆಯಿಂದ ಕಡಲಿಗೆ ಹಾತೊರೆವ, ಬೆಟ್ಟ-ಕಣಿವೆ ಸುತ್ತಲು ಹಂಬಲಿಸುವ ರೀತಿ ಏಕಕಾಲಕ್ಕೆ ಭವೊಲ್ಲಂಘನೆಯಂತೆಯು ಮತ್ತು ಭಾವೋಲ್ಲಂಘನೆಯಂತೆಯೂ ಗೋಚರಿಸುತ್ತದೆ. ಇಂತಹ ತದ್ವಿರುದ್ಧತೆ ಕಾವ್ಯಕ್ಕೆ ಅನುಚಿತವೇನಲ್ಲ. ಹಾಗೆಯೆ, ಓದಲು ಮುದನೀಡುವ ಇನ್ನೊಂದು ಗಜಲ್ ಮನ ಸೆಳೆಯುತ್ತದೆ: + +(ರಮೇಶ ಅರೋಲಿ) + +ಸೂರ್ಯನನ್ನೇ ಕಣ್ಣಲಿ ತಂದಿಟ್ಟು ಬಯಕೆ ದೀಪ ಹಚ್ಚಿದಳುನಲುಮೆ ಮಾತಿಂದ ಒಡಲುತಣಿಸಿ ನೂರು ನವಿಲ ಕುಣಿಸಿದಳು(ಗಜಲ್-೬)ಎಂಬಲ್ಲಿ `ಬಯಕೆ ದೀಪ’ ದ ರೂಪಕ ಅದ್ಭುತವಾಗಿ ಪ್ರಕಟಗೊಂಡಿದೆ. ಇಲ್ಲಿಯ ರಚನೆಗಳನ್ನು ಓದುತ್ತಾ `ಮದಿರೆ ಇರದ ಗಜಲ್’ ಎಂಬ ಅಭಿಪ್ರಾಯಕ್ಕೆ ಬರುವ ಹೊತ್ತಿಗೆ ಅಲ್ಲೆರಡು ಮದಿರೆ ಕುರಿತಾದ ರಚನೆ ಎದುರಾದವು. + +ಕನ್ನಡದ ಪ್ರಮುಖ ಬರಹಗಾರ ಪಿ.ಲಂಕೇಶ್ ಹೇಳುವಂತೆ ಒಬ್ಬ ಬರಹಗಾರನ ಭಾಷೆಯೇ ಆತನ ಅಸಲಿ ಮತ್ತು ಖೊಟ್ಟಿತನವನ್ನು ಬಯಲು ಮಾಡುವ ಸಾಧನ. ಬರಹದಲ್ಲಿ ಹೆಚ್ಚು ಹೊತ್ತು ಅದನ್ನು ಅವಿತಿಟ್ಟು ಆಟ ಆಡಲಾಗದು. ಇಲ್ಲಿ ಗೆದ್ದ ಮಾತಿವೆ, ಸೋತ ಮಾತಿವೆ. `ಕವಿಯ ಜೀವನಾನುಭವ ಮತ್ತೆ ಮತ್ತೆ ಕಸಿಗೊಂಡಾಗ ಆತನ ಕಾವ್ಯದಲ್ಲಿ ಹೊಸಕಳೆ ಕಾಣಬಹುದು. ಆ ಕಸುವು ಹೊಂದಿರುವ ಮಂಡಲಗಿರಿ ಪ್ರಸನ್ನ ಅವರ ಮುಂದಿನ ಬರಹಗಳು ಮತ್ತಷ್ಟು ಹೊಸತನದೊಂದಿಗೆ ಓದುಗ ವಲಯಕ್ಕೆ ತಲುಪಲಿ ಎಂದು ಆಶಿಸುತ್ತ….. ಈ ಗಜಲ್ ಸಂಕಲನಕ್ಕಾಗಿ ಕವಿಮಿತ್ರ ಮಂಡಲಗಿರಿ ಪ್ರಸನ್ನ ಅವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. + + + +ಗಜಲ್-೧ + +ಬದುಕಿನ ರಮ್ಯತೆ ಭಗ್ನಗೊಳಿಸಿದ ನಿನಗೆ ಕೃತಜ್ಞತೆಗಳುಮಲ್ಲಿಗೆ ಮನಕೆ ಕೊಳ್ಳಿಯಿರಿಸಿದ ನಿನಗೆ ಕೃತಜ್ಞತೆಗಳು + +ಜಗದ ಚೆಲುವಿಗೆ ಬೀಗಿ ಬಿಳಿಯದೆಲ್ಲ ಹಾಲೆಂದುಕೊಂಡೆನೊರೆ ಹಾಲಿಗೂ ಹುಳಿ ಹಿಂಡಿದ ನಿನಗೆ ಕೃತಜ್ಞತೆಗಳು + +ಋತುಗಳ ಸಹಜಗುಣ ತಿಳಿಯದೆ ಸುಮ್ಮನೆ ದೂರಿದೆನಲ್ಲಉಸುರಿಗೂ ಕೆಂಡದ ಲೇಪನೀಡಿದ ನಿನಗೆ ಕೃತಜ್ಞತೆಗಳು + +ಇರುಳ ನಿದಿರೆಯನು ದೂರವಿರಿಸಿ ನಕ್ಷತ್ರವೆಣಿಸುತ ಕುಳಿತೆಸವಿಗನಸ ನೆಮ್ಮದಿಗೂ ಕನ್ನವಿರಿಸಿದ ನಿನಗೆ ಕೃತಜ್ಞತೆಗಳು + +ಮಾಸಿದ ಮುಖದಲೂ ಚೆಲುವು ಮೂಡಿಸುವ ಹುಂಬತನನನ್ನೊಳಗೆ ನಗೆ ಕಾರಂಜಿ ಬತ್ತಿಸಿದ ನಿನಗೆ ಕೃತಜ್ಞತೆಗಳು + +ಊಹಿಸಲಾಗದ ತಿರುವಿನ ಹಾದಿಯ ಚಮತ್ಕಾರವೆ ಅದುನೆನಪಿನ ಸೋನೆಗೂ ನೋವುಣಿಸಿದ ನಿನಗೆ ಕೃತಜ್ಞತೆಗಳು + +ಬಿಡದ ವ್ಯಾಮೋಹವೆ ಕೊನೆಗೆ ಮುಳುವಾಯಿತಲ್ಲ `ಗಿರಿ’ಇತಿಹಾಸದ ದುರಂತಕಥೆ ನೆನಪಿಸಿದ ನಿನಗೆ ಕೃತಜ್ಞತೆಗಳು + +ಗಜಲ್-೨ + +ನಿನ್ನೆದೆಗೆ ತಲೆಯಿಟ್ಟು ನನ್ನೆದೆ ತೊಳಲಾಟ ಹೇಳಲು ಬಿಡುನನ್ನಂತರಂಗವು ನಿನ್ನ ಸಂಕಟಗಳ ಏನೆಂದು ಕೇಳಲು ಬಿಡು + +ಎಷ್ಟುದಿನ ಅದನು ಹೀಗೆ ಅದುಮಿ ಇಡುವುದು ಹೇಳುಒಡಲ ಭಾವಗಳ ಗುದ್ದಾಟದ ಪೆಟ್ಟುಗಳ ತೋರಲು ಬಿಡು + +ಕತ್ತಲೆಯ ಗೂಡಲಿ ಉಳಿದು ಉಸಿರುಗಟ್ಟುತಿದೆ ಪ್ರತಿದಿನಬೆಳಗಿನ ಉದಯಿಸುವ ಸೂರ್ಯಕಿರಣ ನೋಡಲು ಬಿಡು + +ಸೆರೆಮನೆಯಾಗಿದೆ ನಾಕು ಗೋಡೆಗಳ ನಡುವಿನ ಬದುಕುಮನಕೆ ಮುದನೀಡುವ ಆಹ್ಲಾದಕರ ಗಾಳಿ ತೂರಲು ಬಿಡು + +ಕಣ್ಣಾಲಿ ನೀರು ಮಡುಗಟ್ಟಿ ಕತಕತನೆ ಕುದ್ದು ಆವಿಯಾಗುತಿದೆ`ಗಿರಿ’ ಒಡಲ ಗಾಯಗಳನು ಒಂದಷ್ಟಾದರೂ ಮಾಯಲು ಬಿಡು + +ಗಜಲ್-೩ + +ಇಂದಿನ ಸಂಜೆ ಅದೇಕೊ ಕಳೆಗಟ್ಟಿದೆ ಅವಳು ಬರಬಹುದೇನೊದಿನನಿತ್ಯದ ಬೇಸರವನು ದೂರಕಟ್ಟಿದೆ ಅವಳು ಬರಬಹುದೇನೊ + +ಪಡುವಣದ ಗಳಿಗೆ ರಮ್ಯಗೊಂಡು ಹೊಸತು ಹುರುಪಿನಿಂದಿದೆಮೌನಹೃದಯ ಶೃಂಗಾರ ಕಾವ್ಯಕಟ್ಟಿದೆ ಅವಳು ಬರಬಹುದೇನೊ + +ಇರುಳಿಗೂ ಇಂದು ಹತ್ತಿರ ಸುಳಿಯಲು ಹೆದರಿಕೆ ಎನಿಸಿದಂತಿದೆದೀವಟಿಗೆಯ ಜೋಡಿಕಣ್ಣು ಬೆಳಕಿಟ್ಟಿದೆ ಅವಳು ಬರಬಹುದೇನೊ + +ನೂರು ನವಿಲ ನರ್ತನ ಏಕಕಾಲದಿ ಮನ ಕುಣಿಸಿ ತಣಿಸಿವೆಭೂರಮೆಯಂತೆ ಒಡಲು ಚೆಲುವಿಟ್ಟಿದೆ ಅವಳು ಬರಬಹುದೇನೊ + +ಆಸೆ ಕಂಗಳು ಹುಣ್ಣಿಮೆ ಚಂದಿರನಂತೆ ಅರಳಿ ನಿಂತಿವೆ `ಗಿರಿ’ಎದೆಯೊಳಗೆ ನಲ್ಮೆ ಬೀಜಗಟ್ಟಿದೆ ಅವಳು ಬರಬಹುದೇನೊ + +ಗಜಲ್-೪ + +ಕತ್ತಲಾಗುತಿದೆ ಮೇಲೊಂದು ಮನೆಯಿದೆ ಹೋಗಬೇಕುಕಾಯುತ ಕುಳಿತಿಹೆ ಸುಮ್ಮನೆ ಹೋಗಲಿದೆ ಹೋಗಬೇಕು + +ಸಾಕು ನೋಡಲೇನಿದೆ ವೃಥಾ ಕಾಲ ತಳ್ಳುತ್ತಾ ಕೂಡಲುಬಂದ ಕೆಲಸ ಪೂರ್ಣವೇನಲ್ಲ ಸಾಗುತಿದೆ ಹೋಗಬೇಕು + +ಮಿಂಚುಳ್ಳಿ ಬದುಕಲಿ ನೂರಾರು ಆಸೆ ಕೆಲ ಉಳಿದಿವೆ ನಿಜಹಿಂದಿನವರಿಗೆ ದಾರಿಬಿಡುವ ಕ್ಷಣ ಬಂದಿದೆ ಹೋಗಬೇಕು + +ಬದುಕಿನ ಜೊತೆ ಹರಿದ ನಗುಅಳುವಿನ ಹೊಳೆ ಸಾಲುಆಗಾಗ ಬಿಸಿಲ್ಗುದುರೆ ಮಿಂಚು ಕಂಡಿದೆ ಹೋಗಬೇಕು + +ಏಸೋ ವಸಂತ ಕಳೆದಿವೆ ಹಗಲಿನಂತಲ್ಲ ಇರುಳೀಗ ದೀರ್ಘʻಗಿರಿʼ ಸಾಕಿನ್ನು ಪ್ರಯಾಸ ದೇಹ ಬಳಲಿದೆ ಹೋಗಬೇಕು + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_154.txt b/Kenda Sampige/article_154.txt new file mode 100644 index 0000000000000000000000000000000000000000..f1a07be1b8e519ca7e1b19065b4fc62a975a7a52 --- /dev/null +++ b/Kenda Sampige/article_154.txt @@ -0,0 +1,41 @@ +ಡಾ. ಬಸು ಬೇವಿನಗಿಡದ ಅವರು ಮಕ್ಕಳ ಸಾಹಿತ್ಯಕ್ಕೆ ಕಥೆ, ಕಾದಂಬರಿಯಂತಹ ಮಹತ್ವದ ಕೃತಿಗಳನ್ನು ನೀಡಿದ್ದಾರೆ. ಇವರ ‘ಓಡಿ ಹೋದ ಹುಡುಗ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲಸಾಹಿತ್ಯ ಪುರಸ್ಕಾರವೂ ದೊರೆತಿದೆ. ಇವರ ಇತ್ತೀಚಿನ ಮಹತ್ವದ ಕಾದಂಬರಿ ‘ಒಳ್ಳೆಯ ದೆವ್ವ’. + +ಈ ಕಾದಂಬರಿಯ ಕೇಂದ್ರಬಿಂದು ಮುಖ್ಯ ಪಾತ್ರದಾರಿ ಮಂಜುನಾಥ. ಅವನಿಗೆ ದೆವ್ವ ಹಿಡಿದಿದೆ ಎಂಬುದೇ ಮುಖ್ಯ ಕಥೆ. ದೆವ್ವದ ಕುರಿತು ಇಲ್ಲಿಯವರೆಗೂ ನಾನಾ ಕಥೆಗಳು, ಚಲನಚಿತ್ರಗಳು ಬಂದಿವೆ. ಅವೆಲ್ಲ ನಮ್ಮನ್ನು ರೋಮಾಂಚನಗೊಳಿಸಿದ್ದಲ್ಲದೆ, ಅಂಜುಬುರುಕರನ್ನಾಗಿಸಿವೆ. ಆದರೆ ಇಲ್ಲಿ ಡಾ.ಬಸು ಬೇವಿನಗಿಡದ ಅವರು ದೆವ್ವವನ್ನು ನಂಬುತ್ತಿದ್ದವರನ್ನು ದೆವ್ವವೇ ಇಲ್ಲ ಎಂದು ಹೇಳುವಂತೆ ಮಾಡಿದ್ದಾರೆ. ಓದುಗರಿಗೆ ಸ್ಪಷ್ಟವಾಗುವಂತೆ ಹಲವಾರು ಅಂಶಗಳನ್ನು ನಿರೂಪಿಸಿದ್ದಾರೆ. ಎಳೆಯ ಓದುಗರಲ್ಲಿ ಧೈರ್ಯದ ಕಿಚ್ಚು ತುಂಬಿದ್ದಾರೆ. + +(ಡಾ. ಬಸು ಬೇವಿನಗಿಡದ) + +ಮಂಜುನಾಥ ಧಾರವಾಡದ ಹತ್ತಿರವಿರುವ ಪ್ರೌಢಶಾಲೆಗೆ ಸೈಕಲ್ ಮೇಲೆ ಹೋಗಿ ಬರುತ್ತಿದ್ದ. ಕ್ರೀಯಾಶೀಲತೆಯಿಂದಿದ್ದ ಮಂಜುನಾಥ ಒಳ್ಳೆಯ ವಿದ್ಯಾರ್ಥಿಯಾಗಿದ್ದ. ಇವರದು ಬಡ ಕುಟುಂಬ ಆದರೂ ತಾಯಿ ನೀಲವ್ವ ಅವನನ್ನು ಮುದ್ದಿನಿಂದ ಸಾಕಿದ್ದಳು. ಒಂದು ದಿನ ಸಾಯಂಕಾಲ ಮಂಜುನಾಥ ಅದೇಕೋ ಏನೇನೋ ಮಾತನಾಡೋದು, ಒಂದುತರಹ ವರ್ತನೆಯಲ್ಲಿ ವಿಚಿತ್ರವಾಗಿ ಕಾಣಿಸತೊಡಗಿದ. ಆಗ ಮಂಜುನಾಥನಿಗೆ ದೆವ್ವ ಹೊಕ್ಕಿದೆ ಎಂಬ ಮಾತು ಕೇಳಿ ನೀಲವ್ವಳಿಗೆ ದಿಕ್ಕೆ ತೋಚದಂತಾಯಿತು. ಹೀಗೆ ಕಾದಂಬರಿ ಆರಂಭವಾಗುತ್ತದೆ. + +ಮಗನ ಬಗ್ಗೆ ತಾಯಿ ತೋರುವ ಕಕ್ಕುಲತೆಯನ್ನು ಲೇಖಕರು ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ‘ಇಷ್ಟು ಸಣ್ಣ ಹುಡುಗನೇ ಬೇಕಾಗಿತ್ತಾ? ಮಲ್ಲಿಗೆ ಅರಳಿದಂತೆ ಮೆಲ್ಲಗೆ ಮಾತನಾಡುವ ಈ ಕಂದನೆ ಅದಕ್ಕೆ ಸಿಗಬೇಕಾಗಿತ್ತಾ? ದಪ್ಪನವರು, ತೆಳ್ಳಗಿರೋರು, ಎತ್ತರೆತ್ತದವರು ಹೀಗೆ ವಿವಿಧ ತರಹದ ಜನ ಬೇಕಾದ್ರು ಇದ್ರು. ಅವರನ್ನು ಹಿಡಿದುಕೊಳ್ಳಬಹುದಿತ್ತು’. ಎಂದು ತಾಯಿ ದೆವ್ವನಿಗೆ ಪರಿಪರಿಯಾಗಿ ಕೇಳುತ್ತಾಳೆ. + +ಹಾಗೆಯೇ ದೆವ್ವ ಮಂಜುನಾಥನಿಗೆ ಹಿಡಿದುಕೊಳ್ಳಲೂ ಕಾರಣವನ್ನು ಊಹಿಸುತ್ತಾಳೆ. ‘ಹುಡುಗ ತನಗೇನು ಅಪಾಯ ಮಾಡೋದಿಲ್ಲ ಅನಿಸಿರಬೇಕು. ಅದು ಅವನಂತೆ ಆಟ ಆಡಬೇಕು, ಕುಣಿಬೇಕು, ಸೈಕಲ್ ಹೊಡಿಬೇಕು, ಗಿರಿ-ಗವ್ಹರಗಳನ್ನು ಸುತ್ತಬೇಕು ಎಂದು ಕನಸು ಕಂಡಿರಬೇಕು’ ಎಂದು ತಾಯಿ ನೀಲವ್ವ ಮಂಜುನಾಥನ ಸ್ವಭಾವ ಮತ್ತು ಒಳ್ಳೆಯತನವನ್ನು ಈ ಮೂಲಕ ಹೇಳುತ್ತಾರೆ. ಅಂದರೆ ಲೇಖಕರು ಕಾದಂಬರಿಯನ್ನು ಮುಗ್ಧ ಮಗುವಿನಂತೆ ಪೋಷಣೆ ಮಾಡುತ್ತಾ ಹೋಗಿದ್ದಾರೆ. ಪ್ರತಿಯೊಂದನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಟ್ಟಿದ್ದಾರೆ. + +ಮಂಜುನಾಥ ಶಾಲೆಗೆ ಹೋಗುವಾಗ ದಿನಾಲೂ ಅವನ ತಾಯಿಯನ್ನು ತಬ್ಬಿ ಮುದ್ದಾಡುತ್ತಿದ್ದ. ಅಷ್ಟೊಂದು ಪ್ರೀತಿ ವಾತ್ಸಲ್ಯ ಇಬ್ಬರಲ್ಲೂ ತುಂಬಿತ್ತು. ‘ತಾಯಿ ವಾತ್ಸಲ್ಯ ಮತ್ತು ಮಗನ ಮಂದಹಾಸ ಇದಕ್ಕಿಂತ ಉತ್ತಮವಾಗಿರಲು ಸಾಧ್ಯವಿಲ್ಲ’ ಎನ್ನುವ ಶಿರ್ಷಿಕೆಯೊಂದಿಗೆ ಅದು ಪತ್ರಿಕೆಯ ಮುಖಪುಟದಲ್ಲಿ ಅಚ್ಚಾಗಿತ್ತು. ಅಷ್ಟೊಂದು ಅಮೋಘವಾದ ಪ್ರೀತಿ ಇವರದಾಗಿತ್ತು. ಅದನ್ನು ನೋಡಿ ಮಗ ಫೋಟೋದಂತೆ ಕಟ್ಟು ಹಾಕಿಸಲು ತಾಯಿಗೆ ಹೇಳಿದ. ಬಾಲ್ಯದ ಆ ಅಮೂಲ್ಯ ನೆನಪನ್ನು ಗೆಳೆಯರಾದ ಪಲ್ಲವಿ, ಪವನ, ಆಕಾಶ ನೆನಪಿಸಿಕೊಳ್ಳುತ್ತಾರೆ. ಅವ್ವ ಬಹಳ ಸಂತೋಷ ಪಡುವ ರೀತಿಯನ್ನು ಲೇಖಕರು ಬಹಳ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ತಾಯಿಯು ಮಾಡುವ ಹುಗ್ಗಿ, ತಾಲಿಪಟ್ಟು, ಸವತಿಬೀಜದ ಪಾಯಸ ಮತ್ತು ತಿಂಡಿ ತಿನಿಸುಗಳ ಸವಿಯನ್ನು ಕಾದಂಬರಿಯಲ್ಲಿ ಸವಿಯುವಂತೆ ಮಾಡಿದ್ದಾರೆ. ಉಂಡವರಿಗೆ ಅವುಗಳ ರುಚಿ ಮತ್ತೊಮ್ಮೆ ಬಾಯಲ್ಲಿ ನೀರೂರಿಸುತ್ತವೆ. ಬದಲಾದ ಈಗಿನ ಆಹಾರ ಪದ್ಧತಿಯನ್ನು ತುಲನೆ ಮಾಡುವಂತೆ ಮಾಡಿದ್ದಾರೆ. ಅವನ ಗೆಳೆಯರ ಒಡನಾಟ, ಆತ್ಮೀಯತೆ ನಮ್ಮ ಗೆಳೆಯರ ಗುಂಪನ್ನು ನೆನಪಿಸುತ್ತವೆ. + +ಇಂತಹ ಮಂಜುನಾಥನಿಗೆ ದೆವ್ವ ಬಡಿದಿದೆ ಎಂದರೆ ಆಶ್ಚರ್ಯ. ಮಕ್ಕಳು ಕ್ಲಾಸ್ ರೂಂನಲ್ಲಿ ತರ್ಲೆ ಮಾಡೋದು ಇದ್ದೇ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ಹೆಸರಿಡೋದು, ತಮ್ಮ ತಮ್ಮಲ್ಲಿ ಮಾತಾಡಿಕೊಳ್ಳೋದು ಮಂಜುನಾಥನ ಗೆಳೆಯರ ಗುಂಪಿನಲ್ಲಿಯೂ ಇತ್ತು. + +ಈಗ ದೆವ್ವ ಬಿಡಿಸುವ ಕಾರ್ಡನ್ನು ಮಾಡಿಕೊಂಡಿರುವ ಗಾಳೆಪ್ಪ ಮಹಾರಾಜ ಮಂಜುನಾಥನಿಗೆ ಹಿಡಿದ ದೆವ್ವ ಬಿಡಿಸಲು ಬರುತ್ತಾನೆ. ಅವನ ಆಕಾರವೂ ದೆವ್ವನ ತರಹವೇ ಇತ್ತು. ಅವನು ಮಂಜುನಾಥನಿಗೆ ಹೊಡಿಯೋದು ನೋಡಿದ್ರ ಹೊಟ್ಟೆಯ ಕರುಳು ಕಿತ್ತು ಬರುತ್ತಿತ್ತು. ಇಲ್ಲಿ ನಡೆಯುವ ಘಟನೆಗಳನ್ನು ಓದುತ್ತಾ ಹೋದಂತೆ ಮೈ ಜುಮ್ಮೆನ್ನುತ್ತದೆ. ಮಗ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದ್ದಾನೆ. ಏನೂ ಊಟ ಮಾಡಿಲ್ಲ ಮತ್ತು ಮಾತನಾಡುವುದಿಲ್ಲ. ಮಗನ ಈ ಸ್ಥಿತಿಯನ್ನು ನೋಡಿ ಮಮ್ಮಲ ಮರುಗುತ್ತಾಳೆ. + +ಕಾದಂಬರಿಯಲ್ಲಿ ಹಾಸ್ಯದ ಲೇಪನ ಹಚ್ಚಿದ ಬೆಚ್ಚಪ್ಪ ಕಾಕಾ ವಿಶೇಷ ಪಾತ್ರವಹಿಸುತ್ತಾನೆ. ಹಾಗೆಯೇ ಧಾರವಾಡದ ಗೋಡೆ ಗಡಿಯಾರ ತಯಾರಿಸುವ ಕಾರ್ಖಾನೆ ಕುರಿತು ಇದ್ದ ನಂಬಿಕೆಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ನೀರಸಾಗರದಂತ ಪ್ರದೇಶಗಳಿಗೆ ಭೇಟಿ ನೀಡಿದಾಗ ಇರಬೇಕಾದ ಎಚ್ಚರವನ್ನು ನಮಗೆ ತಿಳಿಸುತ್ತದೆ. ಮಕ್ಕಳ ಅಜಾಗೂರಕತೆಯಿಂದ ನಡೆದ ನೀರಿನಲ್ಲಿ ಮುಳುಗಿಹೋದ ಘಟನೆಯನ್ನೂ ನೆನಪಿಸುತ್ತಾರೆ. ಮನೆಯಲ್ಲಿ ಹಿರಿಯರು, ಓಣಿಯಲ್ಲಿ ಜನರು ಮಾತನಾಡುವುದನ್ನು ಮಕ್ಕಳೂ ಆಲಿಸುತ್ತಾರೆ. ಅವೆಲ್ಲವೂಗಳನ್ನೂ ಪಲ್ಲವಿ, ಆಕಾಶ, ದುರ್ಗಾ, ಪವನ ಮಾತಾಡಿಕೊಳ್ಳುವದು ಮತ್ತು ತಮ್ಮದೇ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದನ್ನು ಲೇಖಕರು ಅರ್ಥವತ್ತಾಗಿ ಬರಹಕ್ಕಿಳಿಸಿದ್ದಾರೆ. + + + +ನಮ್ಮ ಸಮಾಜದಲ್ಲಿ ಅನೇಕ ಕ್ಷುಲ್ಲಕ ವಿಚಾರಗಳೂ ಗಾಳಿಸುದ್ದಿಯಾಗಿ ಹರಡುವುದನ್ನು ನಾವು ಕಾಣುತ್ತೇವೆ. ಇಲ್ಲಿಯೂ ಸಹಿತ ಕರೆನೋ-ಸುಳ್ಳೋ ಗೊತ್ತಿಲ್ಲ ಆ ಸಂದರ್ಭಕ್ಕಾದರೂ ನಂಬಿ ಬಿಡುವ ಪ್ರಸಂಗಗಳಿವೆ. ಹಾಗಾಗಿ ದೆವ್ವದ ಬಗ್ಗೆ ಅನೇಕ ಅವರವರ ಜೀವನದ ಘಟನೆಗಳು, ಅನಿಸಿಕೆಗಳು ವ್ಯಕ್ತವಾಗಿವೆ. + +ಭಗವತಿ ಗುರುಗಳ ಮೂಲಕ ವೈದ್ಯರ ಕಡೆ ಕರೆದುಕೊಂಡು ಹೋಗಲು ಹೇಳಿದರು. ವೈಜ್ಞಾನಿಕ ಕಾರಣಗಳನ್ನು ಹುಡುಕಿ ಪರಿಹಾರ ನೀಡುವ ಅವಶ್ಯಕತೆಯನ್ನೂ ಮತ್ತು ಮಕ್ಕಳಲ್ಲಿ ಬೆಳೆಸಲು ಲೇಖಕರು ಪ್ರಯತ್ನಿಸಿರುವುದು ಕೃತಿಗೆ ಮೆರಗು ತಂದಿದೆ ಎನ್ನಬಹುದು. ದೆವ್ವ, ಭೂತ ಕೇವಲ ನಮ್ಮ ಭ್ರಮೆ ಎಂಬುದನ್ನು ದೃಢಪಡಿಸುತ್ತದೆ. + +ಅಂತಿಮವಾಗಿ ಮಂಜುನಾಥ ಅವನ ತಾಯಿಯ ಕನಸಿನಲ್ಲಿ ಬರುತ್ತಾನೆ. ಅಲ್ಲಿ ನಡೆದ ಭಯಾನಕ ದೃಶ್ಯದಿಂದ ನಲುಗಿಹೋಗುತ್ತಾಳೆ. ನಿಜ ಜೀವನದಲ್ಲಿ ನಡೆಯದಿರಲಿ ಎಂದು ಕೈ ಕೈ ಹಿಚುಕಿಕೊಳ್ಳುತ್ತಾಳೆ. ಕೊನೆಗೂ ಮಂಜುನಾಥ ಗೆಳೆಯರೊಂದಿಗೆ ಮಾತನಾಡತೊಡಗಿದ. ಆರಾಮವಾದ. ಆದರೆ ನೀಲವ್ವಳಿಗೆ ತಲೆತಿರುಗಿ ಬಿದ್ದದ್ದು ಆ ಇಡೀ ಓಣಿಯ ಜನ ನೋಡಲು ಬಂದರು. ಆಗ ಅವರು ನೀಲವ್ವಳ ಸಹಾಯಕ್ಕೆ ನಿಂತು ಉಪಚಾರ ಮಾಡಿದರು. ಅದು ಅವರ ಅನ್ಯೋನ್ಯ ಪ್ರೀತಿಗೆ, ಸಾಮರಸ್ಯಕ್ಕೆ ಗೆಲುವಾಗುತ್ತದೆ. ಕಾದಂಬರಿ ಇಂತಹ ಬದುಕು ಇಂದಿನ ಜೀವನಕ್ಕೂ ಬೇಕೆಂಬ ಸಂದೇಶವನ್ನು ಸಾರುತ್ತದೆ. + +ಕೊನೆಯಲ್ಲಿ ಕಾರವಾರದಲ್ಲಿದ್ದ ಮಂಜುನಾಥನ ತಂದೆಯನ್ನು ಸಂಪರ್ಕಿಸಿ ಊರಿಗೆ ಕರೆಸಿದರು. ಆಗ ಅವನ ತಂದೆ ತಾನು ಒಂದು ಸಾರಿ ಮಂಜುನಾಥನ ತಲೆಗೆ ಹೊಡೆದಿದ್ದರಿಂದ ಪೆಟ್ಟಾಗಿ ಅವನು ಈ ರೀತಿಯಾಗಿ ವರ್ತಿಸಿದನೆಂದು, ತನ್ನ ತಪ್ಪನ್ನು ಅಂದು ಬಿಚ್ಚಿಟ್ಟ. ಪ್ರತಿ ಸಂಸಾರಕ್ಕೂ ಅನ್ಯೋನ್ಯತೆ, ಒಬ್ಬರನ್ನೊಬ್ಬರು ಅರಿತು ನಡೆಯಬೇಕೆಂಬುದನ್ನು ಕಾದಂಬರಿ ಸೂಚ್ಯವಾಗಿ ಹೇಳಿದೆ. + +ಕಾದಂಬರಿಗುಂಟ ಗೆಳೆಯರ ಹಾಸ್ಯ, ಪ್ರಶ್ನೆ ಮಾಡುವುದು ಹಾಗೂ ಕೀಟಲೆ ಮಾಡುವ ಸ್ವಭಾವ ಓತಪ್ರೋತವಾಗಿ ಹರಿದಿದೆ. ಹಾಗಾಗಿ ಮಕ್ಕಳಿಗೆ ಇಷ್ಟವಾಗುತ್ತದೆ. ಮೊದ ಮೊದಲು ಓದುವಾಗ ಭಯವೆನಿಸಿದರೂ ಓದುತ್ತಾ ಹೋದಂತೆ ಕಾದಂಬರಿ ಓದಿ ಮುಗಿಸುವಷ್ಟರಲ್ಲಿ ದೆವ್ವಕ್ಕೆ ಅಂಜುವ ಮಕ್ಕಳೂ ಕೂಡ ಧೈರ್ಯವಂತರಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ. ಅಂತಹದೊಂದು ಶಕ್ತಿ ಈ ಕೃತಿಗಿದೆ. ಇದು ಈ ಕಾದಂಬರಿಯ ಯಶಸ್ಸೂ ಕೂಡಾ ಆಗಿದೆ. + +“ಡಾ. ಬಸು ಬೇವಿನಗಿಡದ ಮಕ್ಕಳಿಗಾಗಿ ಬರೆದ ಅದ್ಭುತ ರಮ್ಯ ಕಾದಂಬರಿ ‘ಒಳ್ಳೆಯ ದೆವ್ವ’. ಹೆಜ್ಜೆ ಹೆಜ್ಜೆಗೂ ಮೈ ನವಿರೇಳುವಂತೆ ನಿರೂಪಿತವಾಗಿರುವ ಕಾದಂಬರಿ ಕೊನೆಗೆ ದೆವ್ವದ ಕಲ್ಪನೆ ಹುಸಿ ಎಂಬುದನ್ನು ರೋಚಕವಾಗಿ ಸ್ಫೋಟಿಸಿ ಮೂಢನಂಬಿಕೆಗಳನ್ನು ಉಚ್ಛಾಟಿಸುವ ರೀತಿ ಆಕರ್ಷಕವಾಗಿದೆ. ಲವಲವಿಕೆಯ ಗದ್ಯ, ಮಕ್ಕಳಿಗೆ ಹಿತವಾಗುವಂಥ ತಮಾಷೆ, ಪುಟ್ಟ ಪುಟ್ಟ ವಾಕ್ಯಗಳಿಂದ ಕೂಡಿರುವ ಈ ಕೌತುಕದ ಕಥೆ ಮಕ್ಕಳ ಮನಸ್ಸನ್ನು ಸೂರೆಗೊಳ್ಳುವುದರೊಂದಿಗೆ ಅವರ ವೈಚಾರಿಕ ಜಗತ್ತನ್ನೂ ಜಾಗೃತಗೊಳಿಸುತ್ತದೆ” ಎಂದು ಖ್ಯಾತ ಮಕ್ಕಳ ಸಾಹಿತಿ ಡಾ. ಎಚ್.ಎಸ್. ವೆಂಕಟೇಶಮೂರ್ತಿ ಯವರು ಕೃತಿ ಕುರಿತು ನುಡಿದಿದ್ದಾರೆ. + +ಡಾ.ಬಸು ಬೇವಿನಗಿಡದ ಅವರು ಬಳಸಿರುವ ಸಹಜ ಸಂಭಾಷಣೆಗಳು, ನುಡಿಗಟ್ಟುಗಳು, ನಾಣ್ಣುಡಿಗಳು ಕಾದಂಬರಿಗೆ ಗಟ್ಟಿತನ ತುಂಬಿವೆ. ಹೀಗೆ ‘ಒಳ್ಳೆಯ ದೆವ್ವ’ ಕಾದಂಬರಿ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಹಿರಿಮೆ ಗರಿಮೆಯಾಗಿದೆ. + + + +ವಸಂತ ಬಾಲ ಸಾಹಿತ್ಯ ಮಾಲೆ -2 ರ ಅಡಿಯಲ್ಲಿ ಈ ಕೃತಿ ಪ್ರಕಟವಾಗಿದೆ. ಆಕರ್ಷಕ ಮುಖಪುಟ ಮತ್ತು ಒಳಚಿತ್ರಗಳನ್ನು ಸಂತೋಷ ಸಸಿಹಿತ್ಲು ಅವರು ರಚಿಸಿದ್ದಾರೆ. ಅಚ್ಚುಕಟ್ಟಾದ ಮುದ್ರಣದಿಂದಾಗಿ ಕೃತಿ ಓದಲು ಕೈಗೆತ್ತಿಕೊಳ್ಳಲು ಪ್ರೇರಣೆ ನೀಡುತ್ತದೆ. + +ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ  (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_155.txt b/Kenda Sampige/article_155.txt new file mode 100644 index 0000000000000000000000000000000000000000..aaa6350eaea1f7849623842ad41c8a6314b01133 --- /dev/null +++ b/Kenda Sampige/article_155.txt @@ -0,0 +1,21 @@ +ಅಕ್ಕಮಹಾದೇವಿಯ ‘ಮಹಾಪ್ರಸ್ಥಾನʼವನ್ನು ಆಧರಿಸಿ ಬರೆದ 775 ಪುಟಗಳ ಮಹಾ ಕಾದಂಬರಿಯನ್ನು ಓದಿದಾಗ ಹನ್ನೆರಡನೇ ಶತಮಾನದ ಅಕ್ಕಮಹಾದೇವಿಯ ಜತೆಗೆ ನಾನು ಕದಳಿಯ ಗುಹೆಗಳವರೆಗೆ ಹೋದ ಅನುಭವ ಆಯ್ತು. ಜತೆಗೆ ಅನುಪಮಾ ಅವರ ವೈದ್ಯ ವೃತ್ತಿಯ ನಡುವೆ ಇದಕ್ಕೆಲ್ಲ ಸಮಯ ಹೇಗೆ ಹೊಂದಿಸುತ್ತಾರೆ ಎಂದು ಅಚ್ಚರಿಯೂ ಆಯ್ತು. + +(ಡಾ. ಎಚ್.ಎಸ್. ಅನುಪಮಾ) + +ಡಾಕ್ಟರ್ ಎಚ್ ಎಸ್ ಅನುಪಮಾ ಹೊನ್ನಾವರದ ಕವಲಕ್ಕಿಯಲ್ಲಿ ವೈದ್ಯೆ. ಅವರ ಪತಿ ಕೃಷ್ಣ ಗಿಳಿಯಾರ್ ಸಹ ಹೊನ್ನಾವರದಲ್ಲಿ ವೈದ್ಯರು. ಚಿತ್ರ ಕಲಾವಿದರು. ನನ್ನ ಎರಡು ಪುಸ್ತಕಗಳಿಗೆ ಕೃಷ್ಣ ಗಿಳಿಯಾರ್ ಬರೆದ ಚಿತ್ರಗಳೇ ಮುಖಪುಟವಾಗಿವೆ. 2008 /09 ರಲ್ಲಿ ಕೆಂಡಸಂಪಿಗೆಯಲ್ಲಿ ಅನುಪಮಾ ಬರೆಯುತ್ತಿದ್ದಾಗ ಅವರ ಬರವಣಿಗೆ ನನ್ನ ಗಮನ ಸೆಳೆಯಿತು. ಅವರು ಮಹಿಳಾ ದೌರ್ಜನ್ಯ ವಿರೋಧಿ ಹೋರಾಟದಲ್ಲಿಯೂ ಸಕ್ರಿಯರಾಗಿದ್ದಾರೆ. ಯುವಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಸುತ್ತಾರೆ. ಇದೆಲ್ಲದರ ನಡುವೆ ಸಾಹಿತ್ಯ ರಚನೆ ಮಾಡುತ್ತಾರೆ. ಮೌಲಿಕವಾದ ಪುಸ್ತಕ ಬರೆಯುತ್ತಾರೆ. ಚೆಗೆವಾರನ ಜೀವನ ಚರಿತ್ರೆಯಿಂದ ಪ್ರಾರಂಭಿಸಿ, ನಾನು ಕಸ್ತೂರ್, ಯಶೋಧರ ದಾಸಪ್ಪ, ಸ್ವಾತಂತ್ರ್ಯದ ಬೆಳಗಿನಲ್ಲಿ ಗಡಿ ದಾಟಿದ ಸಾಧಕಿಯರು, (ಅಚ್ಚಿನಲ್ಲಿ) ಪುಸ್ತಕಗಳನ್ನು ಗಮನಿಸಿದರೆ ಅನುಪಮಾ ಅವರ ಆಸಕ್ತಿ ಅವರ ಬರವಣಿಗೆಯ ಉದ್ದೇಶ ಅರಿವಾಗುತ್ತದೆ. ಕೋವಿಡ್ ಡೈರಿ ಅವರ ಇನ್ನೊಂದು ಮುಖ್ಯ ಪುಸ್ತಕ. ಮುಟ್ಟು, ಪುಸ್ತಕ ಸಹ ಹೆಣ್ಣು ಮಕ್ಕಳು ಅನುಭವಿಸುವ ಕೊನೆಯಿಲ್ಲದ ಸಂಕಟವನ್ನು ತೆರೆದಿಡುತ್ತದೆ. ಪ್ರಸ್ತುತ ಬೆಳಗಿನೊಳಗು ಕಾದಂಬರಿ‌ ಅವರ ೫೬ ನೆಯ ಪುಸ್ತಕ. + +ಈಗ ಹೊಸದಾಗಿ ಬಂದಿರುವ ಬೆಳಗಿನೊಳಗು ಎಂಬ ಬೃಹತ್ ಕಾದಂಬರಿ ಅಕ್ಕಮಹದೇವಿಯ ಜೀವನವನ್ನು, ಕುರಿತು ಬರೆದಿದ್ದು. ಇತಿಹಾಸ, ಕಾವ್ಯ, ಶಾಸನಗಳಲ್ಲಿ ಸಿಗುವ ಮಹಾದೇವಿಯ ಕುರಿತ ಆಕರಗಳನ್ನು ಬಳಸಿಕೊಂಡಿದ್ದಾರೆ. ಕಲ್ಲರಳಿ, ಹೂವಾಗಿ, ಎಲ್ಲರಿಗೂ ಬೇಕಾಗಿ, ಶಿಖರಕ್ಕೆ ಬೆಳಕಾಗಿ, ಬಲ್ಲವರಿದ ಪೇಳಿ, ಐಕ್ಯ ಎಂಬ ಆರು ಭಾಗಗಳು ಇದ್ದು ಐದು ಜನ ಚಿತ್ರಕಾರರು ಚಿತ್ರ ಬರೆದಿದ್ದಾರೆ. + +ಕೆರೆ ಗೌರವ್ವ ಎಂಬ ಅಧ್ಯಾಯದಲ್ಲಿ ಕೌಳ ಪಂಥದವರು ಪೂಜಿಸುವ ಲಜ್ಜಾಗೌರಿ ಪ್ರತಿಮೆ ಕೆರೆ ಶುದ್ಧೀಕರಣದಲ್ಲಿ ಸಿಗುವುದರೊಂಡಿಗೆ ಉಡುತಡಿಯ ಕತೆ ತೆರೆದುಕೊಳ್ಳುತ್ತದೆ. ಸೋಮಯ್ಯ ಶೆಟ್ಟಿ ಲಿಂಗಮ್ಮನವರ ಮಗಳು ಮಾದೇವಿ ಬಹಳ ಚುರುಕು ಕುತೂಹಲಿ. ಸದಾ ಕೆಲಸದಲ್ಲಿ ತೊಡಗಿರುವ ಹುಡುಗಿ ಎಲ್ಲದರಲ್ಲೂ ಕುತೂಹಲ, ಪ್ರಶ್ನೆ. ಬೆಳೆಯುವಾಗಲೇ ಭಿನ್ನ. ಎಲ್ಲದಕ್ಕೂ ಯಾಕೆ ಯಾಕೆ ಎಂದು ಪ್ರಶ್ನಿಸುತ್ತಲೇ ಬೆಳೆದವಳು. + + + +ಅಕ್ಕಮಹಾದೇವಿಯದು ಅಭಾವ ವೈರಾಗ್ಯಅಲ್ಲ. ಅವಳದು ಸ್ವಭಾವ ವೈರಾಗ್ಯ ಎಲ್ಲ ಇದ್ದು ಅದರ ಕುರಿತು ಆಕರ್ಷಣೆ ಇಲ್ಲದಿರುವುದು ಅವಳ ವ್ಯಕ್ತಿತ್ವವೇ ವಿಶಿಷ್ಟ ಚೈತನ್ಯ ಉಳ್ಳದ್ದು. ಮಠದ ಗುರು ಲಿಂಗ ಶರಣರು ಅವಳಿಗೆ ಲಿಂಗ ದೀಕ್ಷೆ ನೀಡುತ್ತಾರೆ. ದಿಗಂಬರ ಸನ್ಯಾಸಿಗಳನ್ನು ನೋಡಿ ಎಲ್ಲವನ್ನು ಕಳಚಿ ಇರುವುದರ ಕುರಿತು ಯೋಚಿಸುತ್ತಾಳೆ. ಲಿಂಗ ಶರಣರು ಕಲ್ಯಾಣಕ್ಕೆ ಹೋಗಿ ಬಂದು ಬಸವಣ್ಣನ ಮಹಾಮನೆಯ ವಿಷಯ ಹೇಳುತ್ತಾರೆ. ಕಸಪಯ್ಯ ರಾಯ ಇವನ ಗುಡಿ ಕಟ್ಟಿಸುವಾಗ ಅವನ ಸತಿಗೂ ಗುಡಿ ಕಟ್ಟಲು ಹೇಳುತ್ತಾಳೆ. ಎರಡೇ ಭೇಟಿಗಳಲ್ಲಿ ರಾಯನು ಮಾದೇವಿಯು ಪರಸ್ಪರ ಒಲಿದು ಮದುವೆಯು ಆಗುತ್ತದೆ. ಆದರೆ ಅರಮನೆಯ ಕಟ್ಟುಕಟ್ಟಲೆಗಳು ಮಾದೇವಿಗೆ ಬಂಧನವಾಗುತ್ತದೆ. ಒಮ್ಮೆ ಮಹಾದೇವಿಯ ತಂದೆ ತಮ್ಮ ಮನೆಯಿಂದ ಮಗಳಿಗಾಗಿ ತಿಂಡಿಗಳನ್ನು ಬಿಳಿ ಬುತ್ತಿ ಕರಿ ಬುತ್ತಿ ಎಂಬ ಭಕ್ಷಗಳನ್ನು ತಂದಾಗ ಮಹದೇವಿಯ ಅತ್ತೆ ಆ ಆ ತಿಂಡಿಗಳ ಬೆಳ್ಳುಳ್ಳಿಯ ಈರುಳ್ಳಿಯ ವಾಸನೆಗೆ ಅಸಹಿಸಿಕೊಂಡು ಮಡಿಹಾಳಾಯಿತು ಎಂದು ಅದನ್ನು ಎಸೆಯುತ್ತಾರೆ. ರಾಯನು ಕೋಪಿಸಿಕೊಂಡು ನೀರಿನ ತಂಬಿಗೆಯನ್ನು ಅಡುಗೆಯ ಮೇಲೆ ಬೀಸಿ ಒಗೆಯುತ್ತಾನೆ. ಮೊದಲೇ ಜಿನಮತ್ತಕ್ಕೂ ಶಿವ ಭಕ್ತಿಗೂ ಹೊಂದಾಣಿಕೆ ಮನೆಯಲ್ಲಿ ಇರಲಿಲ್ಲ. ಕಸಪ್ಪಯ್ಯನ ಕ್ರೌರ್ಯ ಅಧಿಕಾರ ಶಾಹಿಯನ್ನು ಸಹಿಸದೆ ಅವನು ಮತ್ತೆ ಮತ್ತೆ ದೈಹಿಕ ಹಲ್ಲೆಯನ್ನು ಮಾಡಿದಾಗ ಮಹಾದೇವಿ ಆ ಪಂಜರದಿಂದ ಹೊರ ಹೋಗುತ್ತಾಳೆ. ತೊಟ್ಟ ತೊಡುಗೆಗಳನ್ನು ಉಟ್ಟ ಬಟ್ಟೆಗಳನ್ನು ಕಿತ್ತೆಸೆದು ಹೋಗುತ್ತಾಳೆ. ಕುರುಬರ ಚಂದ್ರಿ ಅವಳಿಗೆ ಹೊದೆದುಕೊಳ್ಳಲು ಕಂಬಳಿ ಒಂದನ್ನು ಕೊಡುತ್ತಾಳೆ. ಮಹಾದೇವಿಯ ಪ್ರಕಾರ ಧರ್ಮವೆಂದರೆ ದೇವಲೋಕದತ್ತ ಮುಖ ಮಾಡುವುದಲ್ಲ, ಮನುಷ್ಯ ಲೋಕವನ್ನು ಹಸನುಗೊಳಿಸುವುದು. ಕೂದಲು ಬಿಚ್ಚಿಕೊಂಡು ಅರೆ ನಗ್ನಳಾಗಿ ಹೋಗುವ ಅಕ್ಕನನ್ನು ಹುಚ್ಚಿ ಎಂದು ಕೆಲವರು ಭಾವಿಸುತ್ತಾರೆ. ಆದರೆ ಲಕ್ಕುಂಡಿಯಲ್ಲಿ ಅವಳು ಶಾಸನವನ್ನು ಓದಿದಾಗ ಅವಳು ಹೇಳುವ ಪದಗಳನ್ನು ಕೇಳಿದಾಗ ಜನರು ಅವಳನ್ನು ಜ್ಞಾನಿ ಎಂದು ತಿಳಿಯುತ್ತಾರೆ. ಗೌರವಿಸುತ್ತಾರೆ ಪ್ರೀತಿ ತೋರುತ್ತಾರೆ. ಅವಳಿಗೆ ಪಯಣದ ಉದ್ದಕ್ಕೂ ಕೌಳ ಗೋರಖನಾಥ ಭೈರವಿ ಕಾಳ ಮುಖ ಹಲವು ಸಂಪ್ರದಾಯದ ಸಂತರು ಭೇಟಿಯಾಗುತ್ತಾರೆ. + +ಕಪ್ಪಡಿ ಸಂಗಮದಲ್ಲಿ ಅಕ್ಕನಾಗಮ್ಮ ಚೆನ್ನಬಸವಣ್ಣ ಇವರನ್ನು ಭೇಟಿಯಾಗುತ್ತಾಳೆ. ಕಲ್ಯಾಣದಲ್ಲಿ ಮಹಾಮನೆಯಲ್ಲಿ ಕೆಲವು ಕಾಲ ಇರುತ್ತಾಳೆ. ಅಲ್ಲಮ, ಬಸವಣ್ಣ ಅವರ ಜೊತೆ ವಿಚಾರ ವಿನಿಮಯ ಮಾಡುತ್ತಾಳೆ. ಅಲ್ಲಿ ಕೆಲವು ಕಾಲ ಇದ್ದು ಶ್ರೀಶೈಲಕ್ಕೆ ಹೊರಡುತ್ತಾಳೆ. ಈ ದೀರ್ಘ ಪ್ರಯಾಣವೇ ಅವಳ ಅರಿವನ್ನು ವಿಸ್ತರಿಸುತ್ತದೆ. ಕೃಷ್ಣಾ ನದಿ ತೀರದಲ್ಲಿ ನಡೆದು ಹೋಗುವಾಗ ಒಮ್ಮೆ ಅವಳನ್ನು ಹುಡುಕಿಕೊಂಡು ರಾಯ ಬರುತ್ತಾನೆ. ಕ್ಷಮೆ ಕೇಳುತ್ತಾನೆ. ಚೆಂಚು ಆದಿವಾಸಿಗಳ ಸಹಾಯದಿಂದ ಶ್ರೀಶೈಲ ಗಿರಿಯನ್ನು ಏರುತ್ತಾಳೆ. ಅವರು ಆಹಾರ ನೀರು ಒದಗಿಸಿ ಸಹಾಯ ಮಾಡುತ್ತಾರೆ. ಚೇಳು ಕಚ್ಚಿ ಪ್ರಜ್ಞೆ ತಪ್ಪಿದಾಗ ತಮ್ಮ ಗುಡಿಸಲಿಗೆ ಕರೆದೊಯ್ದು ಉಪಚರಿಸುತ್ತಾರೆ. ಪೆದ್ದನ ಎಂಬ ಚಿಂಚು ಯುವಕ ಅವಳಿಗೆ ಚಪ್ಪಲಿಯನ್ನು, ಊರೆಗೋಲನ್ನೂ ಕೊಡುತ್ತಾನೆ. ಅವಳು ಕೃಷ್ಣಾ ನದಿ ದಾಟಿ ಕದಳಿ ಗುಹೆಗಳನ್ನು ತಲುಪಲು ಸಹಾಯ ಮಾಡುತ್ತಾನೆ. ಐಕ್ಯ ಎಂಬ ಅಧ್ಯಾಯದಲ್ಲಿ ಅವಳ ಕೊನೆಯ ಚಿತ್ರ ತುಂಬಾ ತೀವ್ರವಾಗಿ ಮೂಡಿದೆ. + + + +ಗುರುಮನೆಯಲ್ಲಿ ಕಲಿತ ವಿದ್ಯೆಯನ್ನು ಅಕ್ಕಮಹಾದೇವಿ ತನ್ನ ಪಯಣದ ದಾರಿಯಲ್ಲಿ ಬೇಟಿಯಾದ ಜನರಿಂದ ಕಲಿಯುತ್ತ ಬೆಳೆಯುತ್ತಾ ಮಾಗುತ್ತ ಹೋಗುತ್ತಾಳೆ. ಇವತ್ತಿನ ಭೋಗಜೀವನವೆ ಅಂತಿಮ ಎಂದು ಭಾವಿಸುವ ಕಾಲದಲ್ಲಿ ಅಕ್ಕಮಹಾದೇವಿಯ ಬದುಕು ವಿಚಾರ ತುಂಬಾ ಪ್ರಸ್ತುತವಾಗಿವೆ. ಕಾದಂಬರಿ ಓದಿ ಮುಗಿಸಿದಾಗ ನಾವು ಅಕ್ಕನ ಜತೆ ಕದಳಿ ಗುಹೆಗಳನ್ನು ಕಂಡ ಅನುಭವ ಆಗುತ್ತದೆ. 12ನೇ ಶತಮಾನದ ಚಾರಿತ್ರಿಕ ಸಂಗತಿಗಳನ್ನು ವಚನ ಸಾಹಿತ್ಯವನ್ನು ಶಾಸನದ ಮಾಹಿತಿಗಳನ್ನು ಲೇಖಕಿ ಸಮರ್ಥವಾಗಿ ಬಳಸಿಕೊಂಡು ಆ ಕಾಲದ ಪರಿಸರವನ್ನು ಸೃಷ್ಟಿಸಿದ್ದಾರೆ. ವಚನಗಳ ಜೊತೆಗೆ ಆ ಕಾಲದ ಜನಪದವನ್ನು, ಗಾದೆಗಳನ್ನು ಬಳಸಿಕೊಂಡಿದ್ದಾರೆ.ಒಂದು ಉತ್ತಮ ಓದಿನ ಅನುಭವಕ್ಕಾಗಿ ಅನುಪಮಾ ಅವರಿಗೆ ಅಭಿನಂದನೆಗಳು. + +ಲೇಖಕಿ ಸುಮಿತ್ರ ಎಲ್.ಸಿ ತೀರ್ಥಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರದವರು. ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ತುಂಗಾ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ನಿವೃತ್ತರಾಗಿದ್ದಾರೆ. ಬಕುಲದ ದಾರಿ (ಕಾವ್ಯ), ಪಿಂಜರ್(ಕಾದಂಬರಿ ಅನುವಾದ), ನಿರುಕ್ತ, ಕಾಡು ಕಡಲು, ವಿಭಾವ (ವಿಮರ್ಶೆ), ಗುಬ್ಬಿ ಹಳ್ಳದ ಸಾಕ್ಷಿಯಲ್ಲಿ(ಕಥಾ ಸಂಕಲನ) ಹೂ ಹಸಿರಿನ ಮಾತು (ಪಶ್ಚಿಮ ಘಟ್ಟದ ಹೂ ಸಸ್ಯಗಳ ಕುರಿತು) ಇವು ಸುಮಿತ್ರ ಅವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_156.txt b/Kenda Sampige/article_156.txt new file mode 100644 index 0000000000000000000000000000000000000000..daad587ee45c366d8da9ba7701520fdaa7a0145b --- /dev/null +++ b/Kenda Sampige/article_156.txt @@ -0,0 +1,35 @@ +byಕೆಂಡಸಂಪಿಗೆ|Jan 10, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ.ಮನು ಗುರುಸ್ವಾಮಿ ಬರೆದ “ಅವಳೂ ಕತೆಯಾದಳು” ಕೃತಿಗೆ ಡಾ. ವಿಜಯಕುಮಾರಿ ಎಸ್ ಕರಿಕಲ್ ಬರೆದ ಮುನ್ನುಡಿ + +byಕೆಂಡಸಂಪಿಗೆ|Jan 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ.ನೌಶಾದ್‌ ಜನ್ನತ್ತ್‌ ಹೊಸ ಕಾದಂಬರಿ “ಫಾರೆಸ್ಟರ್‌ ಪೊನ್ನಪ್ಪ” ಇಂದ ಆಯ್ದ ಭಾಗ ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 6, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ.ಇತ್ತೀಚೆಗಷ್ಟೇ ಬಿಡುಗಡೆಯಾದ ಶಶಿಧರ ಹಾಲಾಡಿಯವರ “ನಾ ಸೆರೆಹಿಡಿದ ಕನ್ಯಾಸ್ತ್ರೀ” ಪ್ರಬಂಧ ಸಂಕಲನದ ಒಂದು ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ.ಮಂಜಯ್ಯ ದೇವರಮನಿ ಕಥಾ ಸಂಕಲನ “ದೇವರ ಹೊಲ”ಕ್ಕೆ ಎಸ್. ಗಂಗಾಧರಯ್ಯ ಬರೆದ ಮುನ್ನುಡಿ + +byಗೀತಾ ಹೆಗಡೆ|Dec 30, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ.ಜಯಂತ ಕಾಯ್ಕಿಣಿಯವರ “ವಿಚಿತ್ರಸೇನನ ವೈಖರಿ” ಕವನ ಸಂಕಲನದ ಕುರಿತು ಗೀತಾ ಹೆಗಡೆ ಬರಹ + +byಕೆಂಡಸಂಪಿಗೆ|Dec 28, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕವಿತೆ ಪ್ರಣಾಳಿಕೆಯೋ ವಾಗ್ವಾದವೋ ಉತ್ತರವೋ ಪ್ರತಿಭಟನೆಯೋ ಆಗಿ ಮೆರೆಯುತ್ತಿರುವ ದಿನಗಳಲ್ಲಿ ರಾಜು ಹೆಗಡೆ ಬರೆಯುತ್ತಿರುವ ಪದ್ಯಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಲು ಅಂಜಿಕೆಯಾಗುತ್ತದೆ. ನಮ್ಮ ಕಾವ್ಯದ ಓದನ್ನು ರಾಜಕೀಯ ನಿಲುವು, ಸೈದ್ಧಾಂತಿಕತೆ ಮತ್ತು ಸಾಮಾಜಿಕನಿಲುವುಗಳು ನಿರ್ಧರಿಸುವ ಕಾಲ ಇದು. ಶುದ್ಧಕವಿತೆ ಎಂಬ ಮಾತನ್ನು ಗೇಲಿ ಮಾಡಲಾಗುತ್ತದೆ ಮತ್ತು ಶುದ್ಧ ಸಾಹಿತ್ಯವನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಘೋಷಿತ ಗೊತ್ತುವಳಿಯಂಥ ಸಾಲುಗಳನ್ನು ಪದ್ಯಗಳೆಂದು ಕರೆಯಲಾಗುತ್ತಿದೆ.ರಾಜು ಹೆಗಡೆ ಕವನ ಸಂಕಲನ “ಕಣ್ಣಿನಲಿ ನಿಂತ ಗಾಳಿ” ಗೆ ಜೋಗಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Dec 27, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ.ಆಶಾ ಜಗದೀಶ್‌ ಕವನ ಸಂಕಲನ “ನಡು ಮಧ್ಯಾಹ್ನದ ಕಣ್ಣು” ಕೃತಿಗೆ ಲಲಿತಾ ಸಿದ್ಧಬಸವಯ್ಯ ಬರೆದ ಮುನ್ನುಡಿ + +byಕೆ.ಆರ್.ಉಮಾದೇವಿ ಉರಾಳ|Dec 23, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ.ಶಾರದಾ ಮೂರ್ತಿ ಬರೆದ “ ಪಲಾಯನ ಮತ್ತು ಇತರೆ ಕಥೆಗಳು” ಕಥಾಸಂಕಲನದ ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ + +byನಾರಾಯಣ ಯಾಜಿ|Dec 20, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ.ಕುಸುಮಾ ಆಯರಹಳ್ಳಿ ಕಾದಂಬರಿ “ದಾರಿ”ಯ ಕುರಿತು ನಾರಾಯಣ ಯಾಜಿ ವಿಶ್ಲೇಷಣೆ \ No newline at end of file diff --git a/Kenda Sampige/article_157.txt b/Kenda Sampige/article_157.txt new file mode 100644 index 0000000000000000000000000000000000000000..4e120357f05ddc4377c9b827820f50caa4928818 --- /dev/null +++ b/Kenda Sampige/article_157.txt @@ -0,0 +1,37 @@ +ಪರ್ವತಾಗ್ರದ ಅವಘಡ + +ನಿದ್ದೆಯ ಮಂಪರಿನಲ್ಲಿ ಗಾಯಗೊಂಡಿದ್ದ ಕಾಲನ್ನು ಹೊರಳಿಸಲೆತ್ನಿಸಿ ಉಂಟಾದ ನೋವಿಗೋ, ಪೆಟ್ಟುಬಿದ್ದು ಊದಿಕೊಂಡಿದ್ದ ತೋಳು ಟೆಂಟಿನ ಗುಡಾರಕ್ಕೆ ತಾಕಿ ಉಂಟಾದ ಬಾಧೆಗೋ ಸಾಹೇಬರು ನರಳಿದ ಸದ್ದು ಕೇಳಿಸಿ, ಮಂಚದ ಬದಿಗೆ ನೆಲದಲ್ಲಿ ಹುಲ್ಲುಚಾಪೆಯ ಮೇಲೆ ಗುಡಾರಹಾಸಿ ಕಂಬಳಿಹೊದ್ದು ಮಲಗಿದ್ದ ಐವಾನ್ ದಡಬಡಿಸಿ ಮೇಲೆದ್ದು ಕುಳಿತ. ಕಣ್ಣುಜ್ಜಿಕೊಂಡು ಟೆಂಟಿನ ಮೂಲೆಯಲ್ಲಿ ಸಣ್ಣಗೆ ಉರಿಯುತ್ತಿದ್ದ ಲಾಂದ್ರದ ಬತ್ತಿಯನ್ನು ತುಸು ಮುಂದೆ ಮಾಡಿ ಲಾಂದ್ರವನ್ನು ಎತ್ತಿ ಹಿಡಿದು ಸಾಹೇಬರನ್ನು ಗಮನಿಸಿದ. ನೋವಿನ ತೀವ್ರತೆಗೆ ಕಿವುಚಿಕೊಂಡಿದ್ದ ಮುಖದ ನಿರಿಗೆಗಳು ಸಡಿಲಗೊಳ್ಳುತ್ತಿದ್ದವು. ಅರೆತೆರೆದಿದ್ದ ಕಣ್ಣುಗಳು ಮೆಲ್ಲಗೆ ಮುಚ್ಚಿಕೊಳ್ಳುತ್ತಿದ್ದವು. ಲಾಂದ್ರವನ್ನು ಮಂಚದ ಪಟ್ಟಿಯ ಮೇಲಿಟ್ಟು ಬಲಗೈಯಿಂದ ಹೊದಿಕೆಯನ್ನು ಮೆಲ್ಲಗೆ ಬದಿಗೆ ಸರಿಸಿದ ಐವಾನ್, ತೋಳು ಮತ್ತು ಕಾಲಿಗೆ ವೈದ್ಯರು ಕಟ್ಟಿದ್ದ ಕಟ್ಟನ್ನು ಪರೀಕ್ಷಿಸಿದ. ಹಸಿರೌಷಧ ಲೇಪಿಸಿ, ಬಿಳಿಬಟ್ಟೆಯನ್ನು ಸುತ್ತಿ ಅದರ ಮೇಲೆ ಮೊಳದುದ್ದದ ದೇವದಾರು ಕಟ್ಟಿಗೆಯನ್ನಿಟ್ಟು ಕಟ್ಟಿದ್ದ ಕಟ್ಟುಗಳು ಸುಸ್ಥಿತಿಯಲ್ಲಿದ್ದವು. `ಅಕಸ್ಮಾತ್ ನಿದ್ದೆಗಣ್ಣಲ್ಲಿ ಹೊರಳಿ ಕಟ್ಟು ಸಡಿಲವಾದರೆ ವಾಸಿಯಾಗುವುದು ನಿಧಾನವಾಗುತ್ತದೆ, ಜಾಗ್ರತೆಯಿಂದ ಗಮನಿಸುತ್ತಿರಬೇಕು’ ಎಂದು ವೈದ್ಯ ಕೈವಲ್ಯನಾಥ ಮಟ್ಟು ಮೊದಲ ದಿನವೇ ತಾಕೀತು ಮಾಡಿದ್ದ. + +(ಡಾ. ಗಜಾನನ ಶರ್ಮ) + +ನೋವಿನಿಂದ ನರಳಿದರೆ ಕುಡಿಸಲೆಂದು ವೈದ್ಯರು ಕೊಟ್ಟಿದ್ದ ಔಷಧವನ್ನು ಕುಡಿಸುವುದೋ ಬಿಡುವುದೋ ಎಂದು ಯೋಚಿಸುತ್ತ ತುಸುಹೊತ್ತು ಅವರನ್ನೇ ಗಮನಿಸುತ್ತ ಕುಳಿತಿದ್ದ ಐವಾನ್, ಸದ್ದಿಲ್ಲದೆ ಅವರು ಕಣ್ಮುಚ್ಚಿ ನಿದ್ರಿಸತೊಡಗಿದ್ದನ್ನು ಕಂಡು ಔಷಧ ಬೇಡವೆಂದು ನಿರ್ಧರಿಸಿ, ಮಲಗಲು ಸಿದ್ಧನಾಗುವಷ್ಟರಲ್ಲಿ ಅವನನ್ನು ಮೂತ್ರಶಂಕೆ ಬಾಧಿಸತೊಡಗಿತು. ಆ ಚಳಿರಾತ್ರಿಯಲ್ಲಿ ನಂದಕೋಲ್ ಸರೋವರದ ಮೇಲಿನಿಂದ ಬೀಸಿಬರುವ ತಣ್ಣನೆ ಗಾಳಿಯ ನೆನಪಾಗಿ ಹೊರಗೆ ಹೋಗುವುದು ಬೇಡವೆಂದು ಮಲಗಲು ಹೊರಟವನಿಗೆ ಮೂತ್ರಬಾಧೆ ಇನ್ನಷ್ಟು ಒತ್ತರಿಸತೊಡಗಿತು. ‘ದರಿದ್ರ, ಒಮ್ಮೆ ಬರುತ್ತಿದೆಯೆಂಬ ಶಂಕೆ ಆರಂಭವಾದರೆ ಸಾಕು, ಕ್ರಮೇಣ ತಡೆಯಲಾಗದ ಒತ್ತಡವೇ ಶುರುವಿಟ್ಟುಕೊಳ್ಳುತ್ತದೆ’ ಎಂದು ಬೈದುಕೊಂಡವನಿಗೆ ಒಂದು ಆಲೋಚನೆ ಬಂತು. ಟೆಂಟಿನ ಬಲಮೂಲೆಯಲ್ಲಿ ಪರದೆಯೊಂದನ್ನು ಮರೆಮಾಡಿ ಸಾಹೇಬರ ಶೌಚಕ್ಕೆ ತಾತ್ಕಾಲಿಕ ವ್ಯವಸ್ಥೆಯೊಂದನ್ನು ಕಲ್ಪಿಸಲಾಗಿತ್ತು. ಹೇಗೂ ಅವರು ನಿದ್ದೆಯಲ್ಲಿರು ವುದರಿಂದ ಅಲ್ಲಿ ಮೂತ್ರವಿಸರ್ಜನೆ ಮಾಡಲು ಅಡ್ಡಿಯಿಲ್ಲವೆಂಬ ಉಪಾಯ ಹೊಳೆಯಿತಾದರೂ, ಅದು ಸಾಹೇಬರಿಗಾಗಿ ಮೀಸಲಿಟ್ಟ ವಿಶೇಷ ವ್ಯವಸ್ಥೆ, ಸಹಾಯಕರು ಅದನ್ನು ಬಳಸಕೂಡದು ಎಂದು ಜಾನ್ಸನ್ ಸಾಹೇಬ ಕಟ್ಟುನಿಟ್ಟಾಗಿ ಆದೇಶಿಸಿದ್ದು ನೆನಪಿಗೆ ಬಂತು. ಹಾಗೆ ಆತ ಆಜ್ಞೆ ಮಾಡಲೂ ಕಾರಣವಿತ್ತು. ಎಲ್ಲರೂ ಅಲ್ಲೆ ಮಲಮೂತ್ರ ವಿಸರ್ಜಿಸಿದರೆ ಟೆಂಟಿನೊಳಗೆ ಇರುವುದು ಕಷ್ಟವಾಗುತ್ತಿತ್ತು. ಮಲಮೂತ್ರ ವಿಸರ್ಜಿಸಿದ ನಂತರ ಮುಚ್ಚಲೆಂದು ಬುಟ್ಟಿಯಲ್ಲಿ ಹುಡಿ ಮಣ್ಣು ಇಡಲಾಗಿತ್ತಾದರೂ ಒಟ್ಟಾರೆ ವ್ಯವಸ್ಥೆ ಸಾಹೇಬರಿಗಷ್ಟೇ ಮೀಸಲಾಗಿತ್ತು. ಕಳೆದ ಮೂರು ವರ್ಷಗಳಿಂದ ಮಾಂಟ್ಗೊಮರಿ ಸಾಹೇಬರ ನೆಚ್ಚಿನ ಶಿಷ್ಯನಾಗಿದ್ದ ಐವಾನ್ ಎಂದೂ ಸಾಹೇಬರುಗಳ ಆದೇಶವನ್ನು ಮೀರಿದವನಲ್ಲ. ಜೊತೆಗೆ ಶಿಸ್ತಿಗೆ ಕಟ್ಟುಬೀಳುವ ಪರಂಗಿ ಸಾಹೇಬರುಗಳ ಗುಣವೂ ಅವನಿಗೆ ಚೆನ್ನಾಗಿ ತಿಳಿದಿತ್ತು. ಅದರಲ್ಲೂ ಅಪ್ಪಿತಪ್ಪಿ ತಮ್ಮ ಆದೇಶವನ್ನು ಮೀರಿದ್ದು ಗೊತ್ತಾದರೆ, ಮಾಂಟ್ಗೊಮರಿ ಸಾಹೇಬರು ಕ್ಷಮಿಸಿದರೂ, ಕಠಿಣ ಶಿಸ್ತಿನ ಜಾನ್ಸನ್ ಕ್ಷಮಿಸಲಾರರೆಂಬುದು ಆತನಿಗೆ ತಿಳಿದಿತ್ತು. `ಇನ್ನೇನು, ಹೇಗೂ ಒಂದೆರಡು ತಾಸಿನಲ್ಲಿ ಬೆಳಗಾದೀತು, ಸುಮ್ಮನೆ ಈ ತಗಾದೆಯೆಲ್ಲ ಯಾಕೆ’ ಎಂದು ಗಟ್ಟಿಮನಸ್ಸು ಮಾಡಿ ಮುಸುಕೆಳೆದು ಮಲಗಿಬಿಟ್ಟ. ಆತನ ದುರಾದೃಷ್ಟಕ್ಕೆ ನಿದ್ದೆಮಾಡಲು ಯತ್ನಿಸಿದಷ್ಟೂ ಮೂತ್ರದೊತ್ತಡ ಹೆಚ್ಚಿದಂತೆ ಅನ್ನಿಸತೊಡಗಿತ್ತು. ತಾನೇಕೆ ಹೀಗೆ ಹೊರಗೆ ಹೋಗಿ ಹತ್ತುಹೆಜ್ಜೆ ನಡೆದು ಮೂತ್ರವಿಸರ್ಜನೆ ಮಾಡಿಬರಲು ಹಿಂಜರಿಯುತ್ತಿದ್ದೇನೆಂಬುದು ಆತನಿಗೇ ಅರ್ಥವಾಗಲಿಲ್ಲ. + +ಈ ಚಳಿ ತನಗೇನು ಹೊಸದೇ? ಕೇವಲ ಐದು ವಾರಗಳ ಹಿಂದೆ ಇದೇ ಸಾಹೇಬರ ತಂಡ ಮೂರು ವಾರಗಳ ಕಾಲ ಹರ್ಮುಖ ಪರ್ವತದ ನೆತ್ತಿಯ ಮೇಲಿನ ಭೀಕರ ಚಳಿಯಲ್ಲಿ ತಮ್ಮನ್ನೆಲ್ಲ ಕೊಳೆಹಾಕಿರಲಿಲ್ಲವೇ? ಅಲ್ಲಿದ್ದ ಚಳಿಗೆ ಹೋಲಿಸಿದರೆ ಇದೇನು ಮಹಾ, ಇದಕ್ಕೆಲ್ಲ ತಾನು ಹೆದರುವವನೇ ಎಂದು ಹುಂಬಧೈರ್ಯವನ್ನು ಆವಾಹಿಸಿಕೊಂಡು ಹೊರಗೆ ಹೋಗಲು ನಿರ್ಧರಿಸಿ ಎದ್ದು ಕುಳಿತ. ಟೆಂಟಿನ ಮೂಲೆಯಲ್ಲಿದ್ದ `ಕಾಂಗಾರ’ನ್ನು ಹತ್ತಿರಕ್ಕೆಳೆದು ಅದರ ಕೆಂಡ ಕೆದರಿ ಅದಕ್ಕೊಂದಿಷ್ಟು ಚೀಡ್ ಮರದ ಚಕ್ಕೆಪುಡಿ ಸುರಿದು ಗಾಳಿಯೂದಿದ. ಚಕ್ಕೆಪುಡಿಯ ಉರಿಗೆ ಕೆಂಡಗಳು ಕೆಂಪಾಗಿ ಕಾಂಗಾರ್ ಸಾಕಷ್ಟು ಬೆಚ್ಚಗಾಗಿದ್ದೇ ತಡ, `ಫಿರಾನ್’ ಮೇಲಕ್ಕೆತ್ತಿ ಪಾಯಿಜಾಮ ಸಡಿಲಿಸಿ ಅದನ್ನು ಕಿಬ್ಬೊಟ್ಟೆಯ ಅಡಿಗೆ ಸೇರಿಸಿ ಅದರ ಕಂಠದ ಹುರಿಯನ್ನು ಸೊಂಟಕ್ಕೆ ಬಿಗಿದು ಕಟ್ಟಿಕೊಂಡ. ಕಿವಿಮುಚ್ಚುವಂತೆ ತಲೆಗೆ ಪಗ್ರಿ, ಅದರ ಮೇಲೆ ಕಬ್ಬಿಣದ ಟೊಪ್ಪಿಗೆಯಿಟ್ಟು, ಕೈಗವಸು ತೊಟ್ಟ. ಕಾಲಿಗೆ ಚರ್ಮದ ಪಟ್ಟಿಸುತ್ತಿ, ಹುಲ್ಲುಕಡ್ಡಿಯ ಪಾದರಕ್ಷೆ ತೊಟ್ಟು ಟೆಂಟಿನಿಂದ ಹೊರಹೋಗಲು ಬಿಟ್ಟಿದ್ದ ಗುಡಾರದ ಸೀಳಿನ ಕಟ್ಟುಬಿಚ್ಚಿ ಅದನ್ನು ತುಸು ಓರೆಮಾಡಿ ಮೊದಲಿಗೆ ಮಂಡೆಯನ್ನು ಮಾತ್ರ ಹೊರಗೆ ಹಾಕಿ ಇಣುಕಿದ. ಹಿಂದಿನ ರಾತ್ರಿ ಬಹುಹೊತ್ತು ಮಂಜಿನಮಳೆ ಸುರಿಸುತ್ತಿದ್ದ ಮೋಡಗಳು ಮರೆಯಾಗಿ ತೊಳೆದಿಟ್ಟಂತೆ ತಿಳಿಗೊಂಡಿದ್ದ ಆಕಾಶದಲ್ಲಿ ಅರ್ಧಚಂದ್ರ ಮುಖ ತೋರಿಸಿ, ಹೊರಗೆ ಲಾಂದ್ರದ ಅವಶ್ಯಕತೆಯಿಲ್ಲವೆಂದು ಖಚಿತ ಪಡಿಸಿದ. ಗಟ್ಟಿ ಮನಸ್ಸುಮಾಡಿ ಟೆಂಟಿನ ಹೊರಗೆ ಅಡಿಯಿಡುತ್ತಿದ್ದಂತೆಯೇ ಬಾಗಿಲು ಬಳಿ ಆತನ ಬರುವಿಕೆಯನ್ನೇ ಕಾದು ಕುಳಿತಿದ್ದ ಚಳಿ ಅವನನ್ನು ಗಬಕ್ಕನೆ ಹಿಡಿದು ನಖಶಿಖಾಂತ ನಡುಗಿಸಿಬಿಟ್ಟಿತು. + +ತೊಟ್ಟಬಟ್ಟೆಯನ್ನೂ ಲೆಕ್ಕಿಸದೆ ಸೀದ ಚರ್ಮದೊಳಗೆ ತೂರಿ, ಮಾಂಸಖಂಡಗಳ ಆಳಕ್ಕೆ ನುಗ್ಗಿ, ಮೂಳೆಯ ಒಳತಳಕ್ಕಿಳಿದು ಕೊರೆಯತೊಡಗಿದ ಶೀತಲಗಾಳಿಯ ಪರಿಣಾಮಕ್ಕೆ ಇಡೀ ಮೈ ಮರಗೆಟ್ಟು ಮಂಜುಗಡ್ಡೆಯ ಶಿಲ್ಪವಾದಂತೆ ಭಾಸವಾಯಿತು. ಹಲ್ಲುಗಳೆಲ್ಲ ಕಳಚಿ ಬಿದ್ದೇ ಹೋದವೆಂಬತೆ ದವಡೆಗಳೆರಡೂ ಅನಿಯಂತ್ರಿತವಾಗಿ ಕಂಪಿಸತೊಡಗಿದವು. ತಣ್ಣನೆಯ ಗಾಳಿಗೆ ತೆರೆದುಕೊಂಡ ದೇಹದ ಭಾಗಗಳು ಸ್ಪರ್ಶಜ್ಞಾನವನ್ನೇ ಕಳೆದುಕೊಂಡು ಕೊರಡಾದಂತೆ ಅನ್ನಿಸಿತು. ಸ್ವಲ್ಪಹೊತ್ತು ಹೊರಬಿದ್ದ ಜಾಗದಲ್ಲೇ ನಿಂತು ತಿಂಗಳ ಬೆಳಕಿಗೆ ಕಣ್ಣನ್ನು ಒಗ್ಗಿಸಿಕೊಂಡು ನೆಲದಲ್ಲಿ ಉದ್ದಕ್ಕೂ ಹಾಸಿಬಿದ್ದ ಕಲ್ಲುಗಳನ್ನು ಎಡವದಂತೆ ಟೆಂಟಿನ ಬದಿಯಲ್ಲಿ ನಿಧಾನಕ್ಕೆ ಹತ್ತೆಂಟು ಹೆಜ್ಜೆ ನಡೆದು, ನಿಂತಲ್ಲೇ ಫಿರಾನ್ ನೆಲಕ್ಕೆ ತಾಗುವಷ್ಟು ತಗ್ಗಿ ಮುಂಭಾಗವನ್ನು ಎತ್ತಿ ಹಿಡಿದುಕೊಂಡು, ಕಾಂಗಾರ್ ಕೆಳಗೆ ಬೀಳದಂತೆ ಜಾಗ್ರತೆಯಿಂದ ಪಾಯಿಜಾಮದ ಲಾಡಿಯನ್ನು ಸಡಿಲಿಸಿ ಲಂಗೋಟಿ ಬದಿಗೆ ಸರಿಸಿ ಕುಕ್ಕರುಗಾಲಿನಲ್ಲಿ ಕೂತು ಮೂತ್ರ ವಿಸರ್ಜನೆಗೆ ಯತ್ನಿಸಿದರೆ ಜಠರದ ಸ್ನಾಯುಗಳು ಮೂತ್ರಕೋಶದ ಮೇಲೆ ಒತ್ತಡ ಹೇರಿ ಮೂತ್ರವನ್ನು ಹೊರದಬ್ಬುವ ಶಕ್ತಿಯನ್ನೇ ಕಳೆದುಕೊಂಡಂತೆ ಭಾಸವಾಯಿತು. ಐವಾನನಿಗೆ ಇಂತಹ ಅನುಭವ ಇದು ಮೊದಲೇನೂ ಅಲ್ಲ. ಹಾಗಾಗಿ ಪಕ್ಕದಲ್ಲಿದ್ದ ಬಂಡೆಗಲ್ಲಿಗೆ ಒರಗಿ ತುಸುಹೊತ್ತು ಅಲ್ಲಾಡದೇ ನಿಂತು, ಆದಷ್ಟೂ ದೀರ್ಘವಾಗಿ ಉಸಿರಾಡಿ ಸಾಕಷ್ಟು ಸುಧಾರಿಸಿಕೊಂಡು ಮತ್ತೆ ಕುಕ್ಕುರುಗಾಲಿನಲ್ಲಿ ಕೂತು ಸಾಕಷ್ಟು ಒತ್ತಡಹಾಕಿ ಹನಿಹನಿಯಾಗಿ ಮೂತ್ರ ವಿಸರ್ಜಿಸಿ ಮುಗಿಸುವ ಹೊತ್ತಿಗೆ ಜೀವ ಬಾಯಿಗೆ ಬಂದಿತ್ತು. ಬಗ್ಗಿ ಪಾಯಿಜಾಮ ಮೇಲೆತ್ತಿ ಲಂಗೋಟಿ ಸರಿಸಿ ಸಡಿಲಿಸಿದ ಲಾಡಿಯನ್ನು ಬಿಗಿದು ಕಟ್ಟಲು ಹವಣಿಸಿದರೆ ಇದುವರೆಗೂ ಗವಸಿನೊಳಗೇ ಇದ್ದಿದ್ದರೂ, ಈಗ ಬೆರಳನ್ನು ಆಡಿಸಲಾಗದ ಮಟ್ಟಿಗೆ ಕೈಗಳು ಮರಗಟ್ಟು ಹೋಗಿದ್ದವು. ಸ್ವಲ್ಪಹೊತ್ತು ಕೈಗಳನ್ನು ಕಿಬ್ಬೊಟ್ಟೆಗೆ ಕಟ್ಟಿದ್ದ ಕಾಂಗಾರ್ ಮೇಲಿಟ್ಟು ಬೆರಳಾಡುವಷ್ಟು ಬಿಸಿಮಾಡಿಕೊಂಡು ಲಾಡಿಬಿಗಿದು ಮೇಲೇಳಲು ಹೊರಟರೆ ಕುಳಿತಲ್ಲಿಂದ ಏಳುವುದೂ ಸುಲಭವಿರಲಿಲ್ಲ. ಅಂತೂ ಇಂತೂ ಕಷ್ಟಪಟ್ಟು ಪಕ್ಕದಲ್ಲಿದ್ದ ಬಂಡೆಯ ಮೇಲೆ ಕೈಯೂರಿ ಮೆಲ್ಲಗೆ ಮೇಲೆದ್ದು ಮುಖವೆತ್ತಿ ಆಕಾಶವನ್ನು ದಿಟ್ಟಿಸಿದರೆ ಬೆಳಗಾಗಲು ಕನಿಷ್ಟವೆಂದರೂ ಎರಡು ತಾಸು ಇದ್ದಂತೆನ್ನಿಸಿತ್ತು. ವಿಶಾಲವಾಗಿ ಹರಡಿಕೊಂಡಿದ್ದ ನೀಲಾಗಸದ ಟೆಂಟಿನಡಿಯಲ್ಲಿ ಲಕ್ಷೋಪಲಕ್ಷ ನಕ್ಷತ್ರಗಳು ಚಳಿಗೆ ಗಡಗಡ ನಡುಗುತ್ತ ಮುದುಡಿ ಕುಳಿತು ಅಸಹಾಯಕವಾಗಿ ಕಣ್ಣು ಪಿಳುಕಿಸುತ್ತಿದ್ದುದನ್ನು ಕಂಡ ಐವಾನ ಚಳಿಗಾಳಿಯ ಚಿತ್ರಹಿಂಸೆಗೆ ತುತ್ತಾದವನು ತಾನೊಬ್ಬನೇ ಅಲ್ಲವೆಂದು ಸಮಾಧಾನ ಪಟ್ಟುಕೊಂಡ. ಅಪರಾತ್ರಿಯ ಘನಘೋರ ನೀರವವನ್ನು ಭೇದಿಸಿ ನಂದಕೋಲ್ ಕೊಳದ ನೀರು ದಡಕ್ಕೆ ಬಡಿದು ಹಿಂದಿರುಗುವ ಸದ್ದು ಸುಸ್ಪಷ್ಟವಾಗಿ ಕೇಳಿಸುತ್ತಿತ್ತು. ಪಕ್ಕದಲ್ಲಿದ್ದ ಹರ್ಮುಖ ಪರ್ವತ ಶಿಖರವೂ ಹಿಮದಹೊದಿಕೆ ಹೊದ್ದು ಚಳಿಗಾಳಿಗೆ ಹೆದರಿ ಮುಡಿಯನ್ನು ಮೋಡದ ಮುಸುಕಿನೊಳಗೆ ಹುದುಗಿಸಿಕೊಂಡಿತ್ತು. ಅದರ ಭುಜಪ್ರದೇಶದಲ್ಲಿ ಹರಡಿಕೊಂಡಿದ್ದ ಬೃಹತ್ ಹಿಮನದಿಯ ಹರಹು ಪರ್ವತದ ಎದೆಗೆ ಬಿಳಿಯ ದುಪ್ಪಟವನ್ನು ಹೊದೆಸಿದಂತೆ ಕಾಣುತಿತ್ತು. + +ಪರ್ವತದ ಮೇಲ್ಮೈಯಲ್ಲಿ ಗುಂಡಿಗಳಿರುವ ಪ್ರದೇಶದಲ್ಲೆಲ್ಲ ಚೆಲ್ಲಿಕೊಂಡ ಬೆಳ್ಳನೆಯ ಹಿಮರಾಶಿ ಮತ್ತು ಉಬ್ಬುದಿಬ್ಬಗಳಲ್ಲಿ ಎದ್ದುತೋರುವ ಕಪ್ಪುಶಿಲೆಗಳು ತಿಂಗಳ ಬೆಳಕಿನಲ್ಲಿ, ಕಪ್ಪುಬಿಳಿ ಚಿತ್ತಾರದ ಫಿರಾನ್ ತೊಟ್ಟ ದಢೂತಿ ಮುದುಕಿಯೊಬ್ಬಳು ಚಳಿಯಲ್ಲಿ ಮುದುಡಿ ಕುಳಿತಂತೆ ಕಾಣುತ್ತಿತ್ತು. ಪರ್ವತ ತಪ್ಪಲಿನ ಹಿಮಮೌನವನ್ನು ಸೀಳಿ ಬರುತ್ತಿದ್ದ ಕೊಳದ ಅಲೆಗಳ ಲಯಬದ್ಧ ಸದ್ದಿನ ಜೊತೆಗೆ ಬಿಟ್ಟುಬಿಟ್ಟು ಬರುತ್ತಿದ್ದ ಇನ್ನೊಂದು ಸದ್ದು ಯಾವುದೆಂಬ ಕುತೂಹಲ ಹುಟ್ಟಿ, ಆತ ನಾಲ್ಕಾರು ಹೆಜ್ಜೆ ಮುಂದಿಟ್ಟು ಸರೋವರವನ್ನೇ ಗಮನಿಸುತ್ತ ನಿಂತ. ಕಿವಿಗೊಟ್ಟು ಆಲಿಸಿದಾಗ ಅದು ಮೀನು, ಕಪ್ಪೆಗಳೇ ಮೊದಲಾದ ಜಲಚರಗಳು ಮುಳುಗೇಳುವ ಸದ್ದು ಎನ್ನಿಸಿತು. ಕೊರೆಯುವ ಚಳಿಯಲ್ಲಿ ತಣ್ಣೀರಿನೊಳಗೆ ಜಲಚರಗಳು ಅಷ್ಟೊಂದು ಚಟುವಟಿಕೆಯಿಂದ ಹೇಗಿರುವವೋ ಎಂಬ ಹುಚ್ಚು ಪ್ರಶ್ನೆ ಹುಟ್ಟಿಕೊಂಡಿತು. ಇದ್ದಕ್ಕಿದ್ದಂತೆ ಆತನಿಗೆ ಬಾಲ್ಯದಲ್ಲಿ ತಾನು ತನ್ನಪ್ಪನೊಂದಿಗೆ ಬಂದು ಇದರಲ್ಲಿ ಮತ್ತು ಇದರ ಮೇಲ್ಭಾಗದಲ್ಲಿರುವ ಗಂಗಬಾಲ್ ಸರೋವರದಲ್ಲಿ ಕಂದು ಮೀನುಗಳನ್ನು ಹಿಡಿಯುತ್ತಿದ್ದುದು ನೆನಪಾಗಿ ಬಾಯಲ್ಲಿ ನೀರೂರಿತು. ನಾಳೆ ಮಾಂಟ್ಗೊಮರಿ ಸಾಹೇಬರ ಒಪ್ಪಿಗೆ ಪಡೆದು ದಡೂತಿ ಕಂದು ಮೀನು ಹಿಡಿದು ಅಡುಗೆ ಮಾಡಿಸಿ ಅವರಿಗೂ ಈ ಸರೋವರದ ಮೀನುಗಳ ವಿಶೇಷ ರುಚಿ ತೋರಿಸಬೇಕು ಎಂದುಕೊಳ್ಳುವಷ್ಟರಲ್ಲಿ ಮತ್ತೊಮ್ಮೆ ಜೋರಾಗಿ ಚಳಿಗಾಳಿ ಬೀಸಿತು. ಮೀನು ಹಿಡಿಯುವ ಯೋಚನೆಯನ್ನು ಅಲ್ಲಿಗೇ ಕೈಬಿಟ್ಟು ಮೊದಲು ಒಳಗೆ ಹೋಗಿ ಬೆಚ್ಚಗೆ ಮಲಗಲು ನಿರ್ಧರಿಸಿ, ಗಡಗಡ ನಡುಗುತ್ತ ಅವಸರದಲ್ಲಿ ಟೆಂಟಿನತ್ತ ನಡೆದು ಒಳಸೇರಿಕೊಳ್ಳುವ ಹೊತ್ತಿಗೆ ಆತನಿಗೆ ಸಾಕುಸಾಕಾಗಿತ್ತು. ಪಾದರಕ್ಷೆಗಳನ್ನು ಕಳಚಿ, ಪಗ್ರಿ, ಟೊಪ್ಪಿಯನ್ನು ತೆಗೆದಿಟ್ಟು ಕಿಬ್ಬೊಟ್ಟೆಯಲ್ಲಿದ್ದ ಕಾಂಗಾರನ್ನು ತೆಗೆಯದೇ ಹಾಗೇ ಇರಿಸಿಕೊಂಡು ಕಂಬಳಿ ಹೊದ್ದು ನಿಶ್ಚಲನಾಗಿ ಕುಳಿತ. ತುಸುಹೊತ್ತಿನ ನಂತರ ಕುಳಿತಲ್ಲೇ ಮತ್ತೊಮ್ಮೆ ಲಾಟೀನು ಎತ್ತಿ ಹಿಡಿದು ಕಣ್ಮುಚ್ಚಿ ಮಲಗಿದ್ದ ಸಾಹೇಬರನ್ನು ಗಮನಿಸಿದ. ಹೊರಜಗತ್ತಿನ ಪರಿವೆಯಿಲ್ಲದೆ ನಿದ್ರಿಸಿದ್ದ ಅವರನ್ನು ನೋಡಿ ನಿದ್ದೆಯಲ್ಲಿ ಅದ್ಯಾವ ಶಿಖರದ ಎತ್ತರವನ್ನು ಅಳೆಯುತ್ತಿದ್ದಾರೋ ಪುಣ್ಯಾತ್ಮ ಎಂಬ ಯೋಚನೆ ಬಂದು ತನ್ನೊಳಗೇ ಮುಗುಳ್ನಕ್ಕ. ಇನ್ನೇನು ನಿದ್ದೆ ಬರುತ್ತಿದೆ ಎನ್ನಿಸಿದಾಗ ಕಾಂಗಾರನ್ನು ಕಳಚಿ ಬದಿಗಿಟ್ಟು ಕಂಬಳಿ ಹೊದ್ದು ಕಣ್ಮುಚ್ಚಿ ಮಲಗಿದ. + +ಅಂದಿಗೆ ಮಾಂಟ್ಗೊಮರಿ ಸಾಹೇಬರಿಗೆ ಪೆಟ್ಟುಬಿದ್ದ ದುರ್ಘಟನೆ ಸಂಭವಿಸಿ ಏಳು ದಿನ ಕಳೆದಿತ್ತು. ಅಂದಿನ ಅವಘಡದ ಭಯಾನಕ ಸನ್ನಿವೇಶ ನೆನಪಾದರೆ ಐವಾನನಿಗೆ ದುಃಸ್ವಪ್ನವೊಂದನ್ನು ಕಂಡಂತೆ ಈಗಲೂ ಮೈನಡುಕ ಹುಟ್ಟುತ್ತಿತ್ತು. ತಾವೆಲ್ಲ ಅಂದು ಬದುಕಿ ಬಂದದ್ದು ಅಲ್ಲಾನ ಕೃಪೆಯಿಂದ ಮಾತ್ರ ಎಂಬುದು ಆತನ ಗಟ್ಟಿ ನಂಬಿಕೆಯಾಗಿತ್ತು. + +ಸರಿಸುಮಾರು ಎರಡು ವಾರಗಳ ಹಿಂದೆ, ಇಪ್ಪತ್ತು ದಿನಗಳ ಕಾಲ ದುರ್ಗಮ ಹರ್ಮುಖ ಪರ್ವತದ ನೆತ್ತಿಯಲ್ಲಿ ಉಳಿದುಕೊಂಡಾಗಿನ ಕಡುಸಂಕಷ್ಟಗಳು ಆತನಿಗೆ ನೆನಪಾಗತೊಡಗಿದವು. ಪರ್ವತದ ನೆತ್ತಿಯಲ್ಲಿ ಹೂಡಿಕೊಂಡಿದ್ದ ಶಿಬಿರಗಳನ್ನೇ ಕಿತ್ತು ಹೊತ್ತೊಯ್ಯುವ ವೇಗದಲ್ಲಿ ಬೀಸುತ್ತಿದ್ದ ಬಿರುಗಾಳಿ, ಸಂಜೆ ಮುಂಜಾನೆ ಬಿಡುವಿಲ್ಲದೆ ಸುರಿಯುತ್ತಿದ್ದ ಹಿಮ, ಸದಾ ಸುತ್ತುವರಿದಿರುತ್ತಿದ್ದ ದಟ್ಟಮಂಜು, ಇದ್ದಕ್ಕಿದ್ದಂತೆ ಆಗಸವನ್ನೆಲ್ಲ ಆವರಿಸಿಕೊಳ್ಳುತ್ತಿದ್ದ ಕಾರ್ಮೋಡ, ತಲೆಗೂದಲನ್ನು ನೆಟ್ಟಗಾಗಿಸಿ, ಮೈಮೇಲಿನ ಬಟ್ಟೆಗಳು ಅಲ್ಲಾಡಿದರೂ ಕಿಡಿಗೆದರಿಸುತ್ತಿದ್ದ ವಿದ್ಯುದಾವೇಶಿತ ಮೋಡ, ಹಗಲೆಲ್ಲ ನೆತ್ತಿಸುಡುವ ಉರಿಬಿಸಿಲಿನ ಝಳ, ಸಂಜೆಯಾದೊಡನೆ ಮೈಕೊರೆಯುತ್ತಿದ್ದ ಚಳಿ, ಬಾಯಾರಿಕೆ ನೀಗಿಕೊಳ್ಳಲೂ ಮಂಜುಗಡ್ಡೆಯನ್ನು ಕರಗಿಸಿ ಕುಡಿಯಬೇಕಿದ್ದ ಅನಿವಾರ್ಯ ಪರಿಸ್ಥಿತಿ, ಶಿಬಿರದೊಳಗೆ ಉರಿಹೊತ್ತಿಸಲು ಪಡಬೇಕಿದ್ದ ಪಾಡು, ಹೊತ್ತಿಸಿದಷ್ಟೂ ಆರಿಹೋಗುತ್ತಿದ್ದ ಬೆಂಕಿ, ಸ್ಟವ್ ಮೇಲಿಂದ ಕೆಳಗಿಳಿಸಿದ ಮರುಗಳಿಗೆಯಲ್ಲೇ ತಣ್ಣಗಾಗುತ್ತಿದ್ದ ಅಡುಗೆ, ಹೀಗೆ ಅಲ್ಲಿದ್ದ ಸಂಕಷ್ಟ ಒಂದೆರಡಲ್ಲ. ಎಷ್ಟೋ ರಾತ್ರಿ ಬೀಸುವ ಗಾಳಿಯ ರಭಸಕ್ಕೆ ಟೆಂಟಿನ ಗುಡಾರ ಹಾರಿಹೋಗಬಹುದೆಂಬ ಆತಂಕ, ಗಾಢನಿದ್ದೆಗೂ ಆಸ್ಪದ ನೀಡುತ್ತಿರಲಿಲ್ಲ. + + + +ಹಲ್ಲುಜ್ಜುವುದು, ಮುಖ ತೊಳೆಯುವುದು, ಮಲಮೂತ್ರ ವಿಸರ್ಜನೆ ಮೊದಲಾದ ನೈಸರ್ಗಿಕ ಕ್ರಿಯೆಗಳೂ ಸುಲಭವಿರಲಿಲ್ಲ. ಮೂಗಿನಲ್ಲಿ ಸದಾ ಸುರಿಯುತ್ತಿದ್ದ ನೀರು, ದವಡೆಗಳ ಅನಿಯಂತ್ರಿತ ಕಂಪನ, ಅವಯವಗಳ ಸೆಳೆತ, ಅಂಗಾಲು ಅಂಗೈಗಳ ನವೆ, ಮೂಗು ಮತ್ತು ಕಣ್ಣುಗಳ ಉರಿ ಸಾಮಾನ್ಯವಾಗಿದ್ದವು. ಉಸಿರಾಡುವುದೂ ಚಿತ್ರಹಿಂಸೆ ಯಾಗಿತ್ತು. ಸೂರ್ಯಕಿರಣವನ್ನು ಪ್ರತಿಫಲಿಸುತ್ತಿದ್ದ ಹಿಮಶಿಖರಗಳ ಪ್ರಭೆ, ಕಣ್ಣುಗಳ ದೃಷ್ಟಿಯನ್ನೇ ಮಂದವಾಗಿಸಿ ಹಿಮಗುರುಡುತನಕ್ಕೆ ಈಡುಮಾಡುವಂತಿತ್ತು. ಸುತ್ತಿದ್ದ ಚರ್ಮದ ಪಟ್ಟಿಗಳ ಹೊರತಾಗಿಯೂ ಕಾಲುಗಳಿಗೆ ಹಿಮಹುಣ್ಣು ಹತ್ತುತ್ತಿತ್ತು. ಮೈಚರ್ಮ ವೆಲ್ಲ ಬಿರುಕುಬಿಟ್ಟು ತೇವಾಂಶ ತುಂಬಿದ ಚಳಿಗಾಳಿ ತಾಗಿದರೆ ಪ್ರಾಣವೇ ಹೋದಷ್ಟು ಬಾಧೆಯಾಗುತ್ತಿತ್ತು. ಸುಂಯ್ ಎಂದು ಸದಾ ಬೀಸುತ್ತಿದ್ದ ಗಾಳಿಯ ಸದ್ದಿಗೆ ಕಿವಿಗಳು ಡಬ್ಬು ಹಾಕಿಕೊಂಡಿದ್ದವು. ಇಂತಹ ತೊಂದರೆಗಳ ನಡುವೆ ಆ ದುರ್ಗಮ ಪರ್ವತಗಳ ನೆತ್ತಿಯಲ್ಲಿ ಅದೇಕೆ ಅಷ್ಟೊಂದು ಕಷ್ಟಪಡಬೇಕೆಂಬುದೇ ಅರ್ಥವಾಗುತ್ತಿರಲಿಲ್ಲ. ಆದರೆ ಪರಂಗಿ ಸಾಹೇಬರು ಮಾತ್ರ ಮೈಯಲ್ಲಿ ಸೈತಾನ ಹೊಕ್ಕವರಂತೆ ಸದಾ ಒಂದಿಲ್ಲೊಂದು ಕೆಲಸದಲ್ಲಿ ತಾವೂ ತೊಡಗಿರುತ್ತಿದ್ದರು, ಸಿಬ್ಬಂದಿಗಳನ್ನೂ ತೊಡಗಿಸುತ್ತಿದ್ದರು. ಒಬ್ಬರು ಪ್ರಿಸ್ಮಾಟಿಕ್ ಕಂಪಾಸ್ ತರಲು ಹೇಳುತ್ತಿದ್ದರೆ, ಇನ್ನೊಬ್ಬರು ಕುದಿದು ಆವಿಯಾಗುವ ನೀರಿಗೆ ಥರ್ಮಾಮೀಟರ್ ಅದ್ದಲು, ಮತ್ತೊಬ್ಬರು ದೂರ ಪರ್ವತದ ರೀಡಿಂಗ್ ತೆಗೆದುಕೊಳ್ಳಲು ಥಿಯೋಡಲೈಟ್ ಸೆಟ್ ಮಾಡಲು ಹೇಳುತ್ತಿದ್ದರು. ಮಗದೊಬ್ಬರು ಪರ್ವತ ಶ್ರೇಣಿಯಲ್ಲಿ ಸಿಗ್ನಲ್ಮನ್ಗಳು ಹಿಡಿದ ಬಾವುಟ ಅಥವಾ ದೀಪಗಳನ್ನು ಟೆಲಿಸ್ಕೋಪ್ ಮೂಲಕ ಗುರುತಿಸಿ, ಶಿಖರಗಳ ಸಂಖ್ಯೆ ಬರೆದುಕೊಂಡು ಡ್ರಾಯಿಂಗ್ ಬೋರ್ಡ್ ಮೇಲೆ ಅದರ ರೇಖಾಚಿತ್ರ ಬಿಡಿಸಿದರೆ, ಇನ್ನೊಬ್ಬರು ಕ್ರೋನೋಮೀಟರ್ ಹಿಡಿದು ಓಡಾಡುತ್ತಿದ್ದರು. ಮಾಡಿದ್ದನ್ನೇ ಬೆಳಿಗ್ಗೆ ಒಮ್ಮೆ ಮಧ್ಯಾಹ್ನ ಒಮ್ಮೆ, ರಾತ್ರಿ ಇನ್ನೊಮ್ಮೆ ಮಾಡಿಸುತ್ತಿದ್ದರು. ಇಷ್ಟೂ ಸಾಲದೆಂಬಂತೆ ಉದ್ದಕೊಳವೆಯ ಝೆನಿತ್ ಟೆಲಿಸ್ಕೋಪ್ ಇಟ್ಟುಕೊಂಡು ಇಡೀ ರಾತ್ರಿ ನಕ್ಷತ್ರಗಳನ್ನು ಗುರುತಿಸಿ ನೋಟ್ ಮಾಡಿಕೊಳ್ಳುತ್ತಿದ್ದರು. ಇಂದಲ್ಲ ನಾಳೆ ಮುಗಿದೀತೆಂದು ತಾವೆಲ್ಲ ಕಾಯುತ್ತಿದ್ದರೆ ಸಾಹೇಬರುಗಳ ಕೆಲಸಕ್ಕೆ ತುದಿಮೊದಲೆಂಬುದೇ ಇರಲಿಲ್ಲ. ತಮಗೆಲ್ಲ ಸಿಟ್ಟು ಬರುತ್ತಿತ್ತು. `ದುರ್ಗಮ ಪರ್ವತದ ನೆತ್ತಿಗೆ ಕರೆತಂದು ನಮ್ಮನ್ನು ಹೀಗೆ ಗೋಳು ಹೊಯ್ದುಕೊಳ್ಳುವುದಲ್ಲದೆ ತಾವೂ ಇಷ್ಟೆಲ್ಲ ಕಷ್ಟಪಡಲು ಇವರಿಗೆ ತಲೆಕೆಟ್ಟಿರಬೇಕು. ಕೆಳಗೇ ಕುಳಿತು ಏನೋ ಒಂದು ಲೆಕ್ಕಬರೆದು ತೋರಿಸಿದರೆ ಇಲ್ಲಿಗೆ ಬಂದು ಪರೀಕ್ಷಿಸಿ ಸುಳ್ಳು ಎನ್ನಲು ಯಾರಿಗೆ ಸಾಧ್ಯವಿತ್ತು? ಇವರಂತೂ ಹೆಂಡಿರು ಮಕ್ಕಳನ್ನು ಬಿಟ್ಟುಬಂದ ಪರದೇಶಿಗಳು, ನಾವೇನು ಎಲ್ಲವನ್ನೂ ಬಿಟ್ಟ ಸನ್ಯಾಸಿಗಳೇ’ ಎಂದು ತಾವೆಲ್ಲ ಸಾಹೇಬರನ್ನು ಬೈದುಕೊಳ್ಳುತ್ತಿದ್ದುದು ಆತನಿಗೆ ನೆನಪಾಯಿತು. + +ಹೀಗೆ ಕಡುಹಿಂಸೆಯಲ್ಲೇ ಹದಿನೈದು ದಿನ ಕಳೆದ ಮೇಲೆ ಕೊನೆಗೊಂದು ದಿನ ಸ್ವತಃ ಮಾಂಟ್ಗೊಮರಿ ಸಾಹೇಬರು, `ಕಾರಕೋರಂ ಶ್ರೇಣಿಯ ಎರಡು ಶಿಖರಗಳ ಅನ್ವೇಷಣೆ ದೊಡ್ಡ ಸಾಧನೆ. ನಂಗಾ ಪರ್ವತದ ವಿವರಗಳನ್ನು ಕಲೆ ಹಾಕಿದ್ದೂ ಸಾರ್ಥಕವಾಯಿತು. ಕಾರಕೋರಂ ಶ್ರೇಣಿಯ ದ್ವಿತೀಯ ಶಿಖರ, ಪೀಕ್ ಹದಿನೈದನ್ನೂ ಮೀರಿಸುವಷ್ಟು ಎತ್ತರ ಇರುವಂತಿದೆ’ ಎಂದು ಹೆಮ್ಮೆಯಿಂದ ಹೇಳಿದ್ದರು. ಉಳಿದವರೂ ತಲೆಯಾಡಿಸಿ ಸಮ್ಮತಿಸಿದ್ದರು. ಅವರ ಸಂಭಾಷಣೆ ಕೇಳಿ, `ಕಾರಕೋರಂ ಕಾಶ್ಮೀರದ ಉತ್ತರದಲ್ಲಿರುವ ಪರ್ವತಶ್ರೇಣಿ ಎಂಬುದು ಯಾರಿಗೆ ಗೊತ್ತಿಲ್ಲ. ಅದರಲ್ಲಿರುವ ಎರಡು ಎತ್ತರದ ಶಿಖರಗಳನ್ನು ಇವರೇ ಶೋಧಿಸಿದರಂತೆ! ಇವರಜ್ಜಿ ಪಿಂಡ. ಆ ಪರ್ವತದ ಹತ್ತಿರ ಇದ್ದವರು ಇವರಿಗಿಂತ ಮೊದಲು ಆ ಶಿಖರಗಳನ್ನು ಕಂಡಿರಲಿಲ್ಲವೇ? ಇವರು ನೋಡುವುದಕ್ಕೂ ಮೊದಲು ಆ ಶಿಖರಗಳು ತಲೆಮರೆಸಿಕೊಂಡಿದ್ದವೇ? ಇವರು ಬಂದು ನೋಡುವವರೆಗೆ ಯಾರಿಗೂ ಮುಖ ತೋರಿಸಬಾರದೆಂದು ನಾಚಿಕೊಂಡಿ ದ್ದವೇ? ತಾವೇ ಕಂಡುಹಿಡಿದಿದ್ದೇವೆ ಎಂಬುದು ಇವರ ಬೊಗಳೆ’ ಎಂದು ನಾಸಿರ್ ಹಾಸ್ಯ ಮಾಡಿಕೊಂಡು ನಕ್ಕಿದ್ದ. `ಪರ್ವತ ಶಿಖರವನ್ನು ಯಾರೋ ಕಂಡು ಹಿಡಿಯು ತ್ತಾರೆಂದರೆ ಅದು ಹೇಗೆ, ಅದು ಮೊದಲಿನಿಂದ ಅಲ್ಲೇ ಇದ್ದಿತ್ತಲ್ಲವೇ’ ಎಂದು ತನಗೂ ಅನ್ನಿಸಿದ್ದು ನೆನಪಾಗಿ ಆತ ಮುಗುಳ್ನಕ್ಕ. + +ಅಂತೂ ಹರ್ಮುಖದ ನೆತ್ತಿಯ ನರಕವಾಸ ಮುಗಿಯುತ್ತಿದೆಯೆಂದು ತಾವೆಲ್ಲ ಖುಷಿಯಾಗಿದ್ದರೆ ಸಾಹೇಬರುಗಳ ಅತೃಪ್ತ ಆತ್ಮಗಳಿಗಿನ್ನೂ ತೃಪ್ತಿಯಾದಂತಿರಲಿಲ್ಲ. ಒಂದು ಮಧ್ಯಾಹ್ನ, ಪರ್ವತದ ನೆತ್ತಿಯಲ್ಲಿದ್ದ ಬಂಡೆಯೊಂದನ್ನು ಹತ್ತಿ ಕಾರಕೋರಂ ಶ್ರೇಣಿಯ ಅವೆರಡೂ ಶಿಖರಗಳಿಗೆ ಹೀಲಿಯೋಟ್ರೋಪಿನಿಂದ ಬೆಳಕನ್ನು ಬಿಡಿಸಿ ಮತ್ತೊಂದಿಷ್ಟು ರೀಡಿಂಗ್ ತೆಗೆದುಕೊಳ್ಳಲು ಮಾಂಟ್ಗೊಮರಿ ಸಾಹೇಬರು ನಿಶ್ಚಯಿಸಿ ಕೊಂಡಿದ್ದರು. ಅವರ ದುರಾದೃಷ್ಟವೋ ನಮ್ಮ ಗ್ರಹಚಾರವೋ ಮತ್ತೆ ನಾಲ್ಕೈದು ದಿನ ಕಳೆದರೂ ಮೋಡಮುಸುಕಿದ ವಾತಾವರಣ ತಿಳಿಯಾಗದೆ ಬಂಡೆಗಲ್ಲಿನ ಮೇಲೇರಿ ರೀಡಿಂಗ್ ತೆಗೆದುಕೊಳ್ಳುವ ಅವರ ಆಸೆ ಈಡೇರಿರಲಿಲ್ಲ. ಸರಿ, ಸಾಹೇಬರ ತಲೆಗೆ ಇನ್ನೇನೋ ಉಪಾಯ ಹೊಳೆದು, ಸರ್ವೆತಂಡಕ್ಕೆ ಇಳಿಯಲು ಅನುಮತಿ ಕೊಟ್ಟರಲ್ಲದೆ ಇಡೀ ತಂಡಕ್ಕೆ ಒಂದು ವಾರದ ರಜೆ ಘೋಷಿಸಿದ್ದರು. + +ದುರದೃಷ್ಟವೆಂದರೆ ತಾವೆಲ್ಲ ರಜೆ ಮುಗಿಸಿ ಹಿಂದಿರುಗಿದರೂ ಮಾಂಟ್ಗೊಮರಿ ಸಾಹೇಬರ ಹರ್ಮುಖದ ಹುಚ್ಚು ಬಿಟ್ಟಿರಲಿಲ್ಲ. ಹಾಗಾಗಿ ಮೊದಲಿನ ಜಾಗ ಬಿಟ್ಟು, ವಾಂಗಟ್ ಕಣಿವೆಯ ನಾರಾನಾಗ್ ಗ್ರಾಮದ ಮೂಲಕ ಪುನಃ ಹರ್ಮುಖ ಪರ್ವತ ಹತ್ತಿ ಸರ್ವೆ ನಡೆಸಲು ಅವರು ನಿಶ್ಚಯಿಸಿಕೊಂಡಿದ್ದರು. ಸರಿ, ಎಲ್ಲರೂ ಕಂಗನ್ ಪಟ್ಟಣದ ಮೂಲಕ ನಾರಾನಾಗ್ ಗ್ರಾಮವನ್ನು ತಲುಪಿ, ಅದರ ಬೆನ್ನಿಗೆ ಆತುಕೊಂಡಂತಿದ್ದ ಭೂತೇಸರ್ ಪರ್ವತವನ್ನು ಹತ್ತಿ ಟ್ರಂಕೋಲ್ ಮೂಲಕ ಇದೇ ನಂದಕೋಲ್ ಸರೋವರವನ್ನು ದಾಟಿ ಗಂಗಬಾಳ್ ಸರೋವರದ ದಿಬ್ಬದಂತಿದ್ದ ಬೆಟ್ಟದ ಏಣಿನ ಮೇಲೆ ನಡೆದು, ನಡುವೆ ಹರಡಿಕೊಂಡಿದ್ದ ನೀರ್ಗಲ್ಲನ್ನು ಕಷ್ಟಪಟ್ಟು ದಾಟಿ, ಹಗ್ಗದ ಮೂಲಕ ಹರ್ಮುಖದ ಬಲಭಾಗದ ನಂದಿಪರ್ವತವನ್ನು ಏರಿದ್ದೆವು. ಹರ್ಮುಖ ಪರ್ವತದ ಆ ಭಾಗದಲ್ಲಿ ಮತ್ತೆ ನಮ್ಮ ಸರ್ವೆ ಕೆಲಸಗಳ ಪುನರಾರಂಭವಾಗಿತ್ತು. ಅದರ ಮರುದಿನವೇ ಸಂಭವಿಸಿತ್ತು ಮಹಾ ಅವಘಡ. + +ನಾವು ಸರ್ವೆ ಆರಂಭಿಸಿದ್ದ ಜಾಗದಲ್ಲೊಂದು ದೊಡ್ಡ ಬಂಡೆ ಆಕಾಶದತ್ತ ಕೋಡಿನಂತೆ ಚಾಚಿಕೊಂಡಿತ್ತು. ಅದರ ಮೇಲಿನಿಂದ ಕಾರಕೋರಂ ಶಿಖರದ ನಿಖರ ಅಳತೆ ಸಾಧ್ಯವಾಗುವುದೆಂಬ ನಿರೀಕ್ಷೆಯಲ್ಲಿ ಮಾಂಟ್ಗೊಮರಿ ಸಾಹೇಬರು, ಅಂದು ಮಧ್ಯಾಹ್ನದ ಊಟದ ನಂತರ, ಆ ಕೋಡುಗಲ್ಲಿಗೆ ಏಣಿಯನ್ನು ಒರಗಿಸಲು ಸೂಚಿಸಿ, ಜಬ್ಬಾರ್, ಖಾಸಿಂ, ಖಾದರ್ ಮುಂತಾದ ಕೆಲಸಗಾರರ ಜೊತೆಗೆ ಬಂಡೆಯ ಮೇಲೇರಿ ಸಹಾಯಕರ ಜೊತೆಗೆ ಥಿಯೋಡಲೈಟ್ ರೀಡಿಂಗ್ ತೆಗೆದುಕೊಳ್ಳುವುದರಲ್ಲಿ ನಿರತ ರಾಗಿದ್ದರು. ಕ್ರಮೇಣ ಕಾರ್ಮೋಡಗಳು ಶಿಖರದ ನೆತ್ತಿಯನ್ನು ಮುತ್ತಿ ಸಂಜೆಗತ್ತಲು ಆವರಿಸತೊಡಗಿತ್ತು. ವಿಪರೀತ ಹಿಮಪಾತ ಆರಂಭವಾಗಿತ್ತು. ವಾತಾವರಣ ವಿದ್ಯುದಾವೇಶ ಗೊಂಡು ತಲೆಗೂದಲೆಲ್ಲ ಮೇಲೆದ್ದು ನಿಂತಿತ್ತು. ಥಿಯೋಡಲೈಟ್ ಮೇಲೆ ಹಿಮ ಸುರಿಯದಂತೆ ಛತ್ರಿ ಹಿಡಿದಿದ್ದ ಜಬ್ಬಾರ್ ತುಸು ಅಲ್ಲಾಡಿದರೂ ಜುಮ್ಮೆನ್ನುತ್ತಿದ್ದ ಅದರ ಲೋಹದ ಹಿಡಿಕೆಯನ್ನು ಹಿಡಿದುಕೊಳ್ಳಲು ತಿಣುಕುತ್ತಿದ್ದ. ಪರಿಸ್ಥಿತಿಯನ್ನು ಗಮನಿಸಿದ ಸಾಹೇಬರು, `ವಾತಾವರಣ ವಿದ್ಯುತ್ ಪ್ರೇರಿತವಾಗಿದೆ. ಇಲ್ಲಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿದೆ. ತಕ್ಷಣ ಕೆಲಸ ನಿಲ್ಲಿಸಿ, ಉಪಕರಣಗಳನ್ನು ಎತ್ತಿಕೊಂಡು ಎಲ್ಲರೂ ಕೆಳಗಿಳಿಯಿರಿ’ ಎಂದರು. ಅಷ್ಟರಲ್ಲಾಗಲೇ ಗುಡುಗು ಮಿಂಚುಗಳ ಆರ್ಭಟ ಆರಂಭವಾಗಿತ್ತು. ಕೆಳಗಿಳಿಯುವ ಅವಸರದಲ್ಲಿ ಹುಸೇನ್ ಮೊದಲು ಲೈಟ್ನಿಂಗ್ ಕಂಡಕ್ಟರ್ ಕಂಬವನ್ನು ಭೂ-ಸಂಪರ್ಕಕ್ಕೆ ಜೋಡಿಸಿದ್ದ ತಂತಿಯನ್ನು ಬಿಚ್ಚಿ, ನಂತರ ಕಂಬವನ್ನು ಮೇಲೆತ್ತಲು ಎರಡೂ ಕೈಯಲ್ಲಿ ಹಿಡಿದು ಅಲ್ಲಾಡಿಸತೊಡಗಿದ್ದ. ಉಪಕರಣ ಹೊತ್ತು ಇಳಿಯುತ್ತಿದ್ದವರಿಗೆ ಆಧಾರವಾಗಿ ಖಾಸಿಂ ಕೋಡುಗಲ್ಲಿಗೆ ಒರಗಿಸಿದ್ದ ಲೋಹದ ಏಣಿಯನ್ನು ಹಿಡಿದು ನಿಂತಿದ್ದ. ಛತ್ರಿಯನ್ನು ಮಡಚಿ ಕೆಳಗಿಟ್ಟು ಜಬ್ಬಾರ್ ಥಿಯೋಡಲೈಟಿನ ಟ್ರೈಪಾಡ್ ಸ್ಟ್ಯಾಂಡ್ ಬಿಚ್ಚುತ್ತಿದ್ದ. ಹುಸೇನ್ ಟೆಲಿಸ್ಕೋಪನ್ನು ಎತ್ತಿಕೊಳ್ಳಲು ಕೈಯಿಕ್ಕುವಷ್ಟರಲ್ಲಿ ಇದ್ದಕ್ಕಿದ್ದಂತೆ ಕಣ್ಣುಕೋರೈಸಿ ಇಡೀ ಪ್ರದೇಶವನ್ನು ಬೆಳ್ಳಂಬೆಳಗಿಸಿ ಭಾರೀ ಮಿಂಚೊಂದು ಅಪ್ಪಳಿಸಿತ್ತು. ಶಿಖರವೇ ಸೀಳಿ ಹೋಯಿತೆನ್ನುವಂತಹ ಅಬ್ಬರ. ಕ್ಷಣಾರ್ಧದಲ್ಲಿ ಲೈಟ್ನಿಂಗ್ ಪೋಲ್ ಕೀಳುತ್ತಿದ್ದ ಹುಸೇನನ ಕೈಗಳೆರಡೂ ಸುಟ್ಟು ಕರಕಲಾಗಿ ಆತ ಕಿರಿಚಿಕೊಂಡು ಎಚ್ಚರದಪ್ಪಿ ಕೆಳಗುರುಳಿ ಬಿದ್ದಿದ್ದ. ಏಣಿ ಹಿಡಿದಿದ್ದ ಖಾಸಿಂ ಅದನ್ನು ಕಿತ್ತೆಸೆದು ಅಯ್ಯೋ ಎಂದು ಕೈಕೊಡವುತ್ತ ಬಂಡೆಯಿಂದ ಉರುಳಿದ್ದ. + +ಜಬ್ಬಾರನ ಕೈಯಿಂದ ಕಿತ್ತೆಸೆಯಲ್ಪಟ್ಟ ಥಿಯೋಡಲೈಟಿನ ಸ್ಟಾ÷್ಯಂಡು ಮಾಂಟ್ಗೊಮರಿ ಸಾಹೇಬರ ಭುಜ ಮತ್ತು ಕಾಲಿಗೆ ಬಡಿದು ಅವರೂ ನರಳುತ್ತ ಕೆಳಗುರುಳಿ ಸ್ಮೃತಿತಪ್ಪಿ ಬಿದ್ದಿದ್ದರು. ಹುಸೇನ ವಿಲವಿಲನೆ ಒದ್ದಾಡುತ್ತ ಅರಚಿಕೊಳ್ಳುತ್ತಿದ್ದ. ಮಿಂಚಿನ ಪ್ರಖರತೆಗೆ ಕಣ್ಣು ಕುರುಡಾಗಿ ಹೋಯಿತೆಂದು ಪೀಟರ್ ಕುಣಿಯುತ್ತಿದ್ದರು. ಕಣ್ಣುಗುಡ್ಡೆ ಸಿಡಿದು ಹೋದಂತಾಗಿ ಬೆಚ್ಚಿ ತಾನೂ ನರಳುತ್ತ ಮಂಜಿನ ರಾಶಿಯ ಮೇಲೆ ಬಿದ್ದು ಒದ್ದಾಡುತ್ತಿದ್ದುದನ್ನು ಐವಾನ್ ನೆನೆಸಿಕೊಂಡ. ಎದೆಯ ಮಾಂಸಖಂಡಗಳು ಬಿಗಿದು ಡಗ್ಲಾಸ್ ಉಸಿರುಗಟ್ಟಿ ಬಿದ್ದು ಹೊರಳಾಡುತ್ತಿದ್ದರು. ಇದೆಲ್ಲಕ್ಕಿಂತ ಭಯಾನಕವಾಗಿ ಶಿಖರದ ಬಲತುದಿಯ ಬಂಡೆಯ ಪಕ್ಕ ನಿರ್ಮಿಸಿದ್ದ ಅಡುಗೆ ಡೇರೆಯಲ್ಲಿ ಸ್ಟವ್ ಉರಿಸಿ ಚಹಾ ಮಾಡುತ್ತಿದ್ದ ಉಮ್ಮರ್ ಹೊರಗೆ ಬಂದು ನಡುಗುತ್ತ ಬಾಯ್ಬಡಿದುಕೊಳ್ಳುತ್ತಿದ್ದ. ಮಿಂಚಿನ ಹೊಡೆತಕ್ಕೆ ಲೋಹದ ಸ್ಟವ್ ಸಿಡಿದು ಎರಡು ಹೋಳಾಗಿ ಸೀಮೆಯೆಣ್ಣೆ ಎರಚಿ ಡೇರೆಯ ಗುಡಾರವೇ ಹೊತ್ತಿ ಉರಿಯ ತೊಡಗಿತ್ತು. ಸಕಾಲದಲ್ಲಿ ಉಮ್ಮರ್ ಹೊರಗೋಡಿ ಬರದಿದ್ದರೆ ಕ್ಷಣಾರ್ಧದಲ್ಲಿ ಬೆಂಕಿಯ ಝಳಕ್ಕೆ ಸಿಲುಕಿ ಕರಕಲಾಗಿ ಹೋಗುತ್ತಿದ್ದ. ಅವನ ಸಹಾಯಕನಿಗೆ ಸ್ಟವ್‌ನಿಂದ ಸಿಡಿದ ಲೋಹದ ಚೂರು ಬಡಿದು ಭುಜದಿಂದ ಎದೆಯವರೆಗೆ ಕತ್ತರಿಸಿ ರಕ್ತ ಸೋರುತಿತ್ತು. ಕಣ್ಮುಚ್ಚಿ ತೆರೆಯುವುದರೊಳಗೆ ಎಲ್ಲಿ ನೋಡಿದರೂ ನೋವಿನಿಂದ ಅರಚುವವರೇ, ಬಿದ್ದು ಒದ್ದಾಡುವವರೇ. ಒಂದರೆ ಕ್ಷಣದಲ್ಲಿ ಪರಿಸ್ಥಿತಿ ಅಯೋಮಯವಾಗಿತ್ತು. ಇಲ್ಲಿ ನಡೆದಿದ್ದ ಕಿರಿಚಾಟ ಕೇಳಿ ಶಿಖರದ ಇನ್ನೊಂದು ದಿಕ್ಕಿನಲ್ಲಿ ಸರ್ವೆ ನಡೆಸುತ್ತಿದ್ದ ಜಾನ್ಸನ್ ಸಾಹೇಬರ ತಂಡ ಗಾಬರಿಯಿಂದ ಓಡಿಬಂದಿತ್ತು. ಅಲ್ಲಾನ ಕೃಪೆಯಿಂದ ಎತ್ತರದ ಬಂಡೆಯೊಂದರ ಕೆಳಗಿದ್ದ ಅವರ್ಯಾರೂ ಸಿಡಿಲಿನ ಆಘಾತಕ್ಕೆ ಸಿಲುಕಿರಲಿಲ್ಲ. ಇಲ್ಲಿ ನಡೆದಿದ್ದ ಅನಾಹುತವನ್ನು ಕಂಡು ಹೌಹಾರಿದ್ದ ಅವರು ಬಿದ್ದು ಒದ್ದಾಡುತ್ತಿದ್ದವರ ಸಹಾಯಕ್ಕೆ ಧಾವಿಸಿದ್ದರು. ವಿಷಮ ಪರಿಸ್ಥಿತಿಯನ್ನು ನಿಭಾಯಿಸಿ ಅನುಭವವಿದ್ದ ಜಾನ್ಸನ್ ಸಾಹೇಬರು ತಮ್ಮ ತಂಡದವರನ್ನು ಕರೆದು, ಸುಟ್ಟು ಗಾಯಗೊಂಡವರನ್ನು ಮತ್ತು ಪೆಟ್ಟು ತಿಂದವರನ್ನು ಮೊದಲು ಉಪಚರಿಸಿ ಟೂಲ್ ಕಿಟ್ಟಿನಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ತೆರೆದು ಚಿಕಿತ್ಸೆ ನೀಡಲು ಸೂಚಿಸುತ್ತ ಒಬ್ಬೊಬ್ಬರನ್ನೇ ನಿಧಾನಕ್ಕೆ ನಂದಕೋಲ್ ಸರೋವರದ ಸಮೀಪಕ್ಕೆ ಒಯ್ಯಲು ಸಿದ್ಧತೆ ನಡೆಸಿದ್ದರು. ಅಡುಗೆ ಮತ್ತು ಉಗ್ರಾಣ ಶಿಬಿರಗಳೆರಡೂ ಸುಟ್ಟು ಕರಕಲಾಗಿ ಹೋಗಿದ್ದರಿಂದ ಜೋಲಿ ಮಾಡಿ ಕರೆದೊಯ್ಯಲು ಬೇಕಾದ ಕಂಬಳಿ, ಚಾದರ, ಹುರಿ, ಹಗ್ಗ, ಗಳಗಳೂ ಸುಟ್ಟು ಹೋಗಿದ್ದವು. + + + +ಇದ್ದುದರಲ್ಲೇ ವ್ಯವಸ್ಥೆ ಮಾಡಿಕೊಂಡು ಮೊದಲು ತೀವ್ರ ಪೆಟ್ಟಾದವರನ್ನು, ಎಚ್ಚರತಪ್ಪಿದವರನ್ನು ಒಬ್ಬೊಬ್ಬರನ್ನಾಗಿ ಸಾಗಿಸಿ ನಂತರ ಉಳಿದವರನ್ನು ಕೆಳಗೊಯ್ಯುವುದೆಂದು ನಿರ್ಧರಿಸಿದ ಜಾನ್ಸನ್, ಒಂದೊಂದಾಗಿ ಅಗತ್ಯಕ್ರಮ ಕೈಗೊಳ್ಳತೊಡಗಿದ್ದರು. ಮಾಂಟ್ಗೊಮರಿ ಸಾಹೇಬರು ಎಚ್ಚರದಪ್ಪಿ ಬಿದ್ದಿದ್ದರು. ಡಗ್ಲಾಸ್ ಮತ್ತು ಪೀಟರ್ ಪೆಟ್ಟು ತಿಂದು ಕಂಗೆಟ್ಟಿದ್ದರು. ಆಪತ್ತುಗಳ ನಿರ್ವಹಣೆಯಲ್ಲಿ ಅಪಾರ ಅನುಭವವಿದ್ದ ಜಾನ್ಸನ್ ಕುದುರೆ ಸವಾರಿಯಲ್ಲಿ ಚುರುಕಾಗಿದ್ದ ಮಕ್ಬುಲ್ ಹುಸೇನನ ಮೂಲಕ ಟ್ರಂಕಾಲ್ ಕಣಿವೆಯಲ್ಲಿದ್ದ ಬೇಸ್‌ಕ್ಯಾಂಪಿಗೆ, ತುರ್ತು ಅಗತ್ಯವಿದ್ದ ಟೆಂಟು, ಕಂಬಳಿ, ಹುರಿ, ಹಗ್ಗ, ಆಹಾರ, ಪಾನೀಯವೇ ಮುಂತಾದ ಅಗತ್ಯ ಸಾಮಗ್ರಿ ಒದಗಿಸಲು ಹಾಗೂ ಒಂದಿಷ್ಟು ಸಹಾಯಕರನ್ನು ಕೂಡಲೇ ಕಳಿಸಿ ನಂದಕೋಲ್ ತೀರದಲ್ಲಿ ಟೆಂಟ್ ಹಾಕಲು ಸೂಚನೆ ರವಾನಿಸಿದ್ದರು. ಅವಘಡಕ್ಕೆ ತುತ್ತಾದವರನ್ನು ಶಿಖರದ ತುದಿಯಿಂದ ಜೋಲಿಗಳಲ್ಲಿ ಹೊತ್ತು ತರುವ ಹೊತ್ತಿಗಾಗಲೇ ಬೇಸ್ ಕ್ಯಾಂಪಿನ ಸಿಬ್ಬಂದಿ ಧಾವಿಸಿ ಬಂದು ನಂದಕೋಲ್ ತೀರದಲ್ಲಿ ಟೆಂಟ್ ಹಾಕ ತೊಡಗಿದ್ದರು. ಜಾನ್ಸನ್ನರ ಸೂಚನೆಯಂತೆ ಬೇಸ್ ಕ್ಯಾಂಪಿಗೆ ಸಂದೇಶ ತಲುಪಿಸಿದ ಹುಸೇನ, ಅಲ್ಲಿಂದ ಸೀದ ನಾರಾನಾಗ್ ಮತ್ತು ಸುತ್ತಮುತ್ತಲ ಹಳ್ಳಿಗಳಿಗೆ ತೆರಳಿ ಕುಂದನ್ ಗ್ರಾಮದಿಂದ ವೈದ್ಯರೊಬ್ಬರನ್ನು ತಲಾಷ್ ಮಾಡಿ ಕರೆತಂದಿದ್ದ. ತೀವ್ರ ಪೆಟ್ಟಾಗಿದ್ದ ಐವರು ಸಹಾಯಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಹಾಯಕರ ಜೊತೆಗೂಡಿಸಿ ಪೋನಿಗಳ ಮೇಲೆ ಶ್ರೀನಗರಕ್ಕೆ ಕಳಿಸುವ ವ್ಯವಸ್ಥೆ ಮಾಡಲಾಗಿತ್ತು. ಇಡೀ ಘಟನೆಯಲ್ಲಿ ಸಾವು ಸಂಭವಿಸಲಿಲ್ಲ ಎಂಬುದೊಂದೇ ಸಮಾಧಾನದ ಸಂಗತಿಯಾಗಿತ್ತು. ತನಗೂ ಎರಡು ಮೂರು ದಿನ ಕಣ್ಣುಗುಡ್ಡೆ ತೊಂದರೆ ಕೊಟ್ಟಿದ್ದನ್ನು ಐವಾನ್ ನೆನಪಿಸಿಕೊಂಡ. ಆ ದುರ್ಘಟನೆಯ ನೆನಪಿನಲ್ಲಿ ಬಹುಹೊತ್ತು ನಿದ್ದೆ ಬಾರದೆ ಒದ್ದಾಡುತ್ತಿದ್ದವನಿಗೆ, `ಒಂದು ರೀತಿಯಲ್ಲಿ ಮಾಂಟ್ಗೊಮರಿ ಸಾಹೇಬರಿಗೆ ಪೆಟ್ಟು ಬಿದ್ದದ್ದೇ ಒಳ್ಳೆಯದಾಯಿತು, ಅವರೇನಾದರೂ ಎದ್ದು ಓಡಾಡುವಂತಿದ್ದಿದ್ದರೆ ತಮಗೆಲ್ಲ ಇಷ್ಟು ವಿಶ್ರಾಂತಿಯೂ ದೊರೆಯುತ್ತಿರಲಿಲ್ಲ’ ಎಂಬ ಹುಸೇನನ ಕುಚೇಷ್ಟೆಯ ಮಾತು ನೆನಪಾಗಿ, ನಾಳೆ ಬೆಳಿಗ್ಗೆ ಗೆಳೆಯರ ಜೊತೆ ಚಹಾ ಕುಡಿಯುವಾಗ ಅದನ್ನು ಹೇಳಿ ಎಲ್ಲರನ್ನೂ ನಗಿಸಬೇಕೆಂದು ಯೋಚಿಸುತ್ತ ಕಂಬಳಿಯನ್ನು ಮತ್ತಷ್ಟು ಬಿಗಿಯಾಗಿ ಮುಚ್ಚಿಕೊಂಡು ಮುರುಟಿ ಮಲಗಿದ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_158.txt b/Kenda Sampige/article_158.txt new file mode 100644 index 0000000000000000000000000000000000000000..a2d87056dd1366b8dd86f62f094e5c079c9f572b --- /dev/null +++ b/Kenda Sampige/article_158.txt @@ -0,0 +1,45 @@ +ಪ್ರತಿದಿನ ಬೆಳಗ್ಗೆ, ಮಧ್ಯಾಹ್ನ ಮತ್ತು ಸಂಜೆಯ ಪಾಳಿಯಂತೆ ಮಿಲಿಟರಿ ಪಡೆಯ ಕ್ಯಾರವಾನು ಹತ್ತಿರದ ಕಂದಹಾರ್ ಪಟ್ಟಣದ ಕಡೆಗೋ, ಸುತ್ತ-ಮುತ್ತಲ ಹಳ್ಳಿಗಳ ಕಡೆಗೋ ಅಥವಾ ತಮಗೆ ಆದೇಶ ಬಂದ ಕಡೆಗೋ ಹೊರಡುತ್ತಿತ್ತು. ಮುಂದೆ ಹತ್ತು ಮಾರುದ್ದದ ತ್ರಿಕೋಣಾಕಾರದ ಮೂತಿಯಿದ್ದ, ಆ ಮೂತಿಯ ತುದಿಗೊಂದು ಚಕ್ರ ಅಳವಡಿಸಿದ್ದ ಬಾಂಬ್ ಡಿಟೆಕ್ಟರ್ ವಾಹನ. ವಿಶೇಷ ಎಂದರೆ ಅದೇ ರೀತಿಯಿದ್ದ ಮತ್ತೊಂದು ವಾಹನಕ್ಕೆ ಬೆಂಕಿಯನ್ನು ನೂರು ಮಾರು ದೂರಕ್ಕೆ ಉಗುಳುವ ಸಾಮರ್ಥ್ಯವಿದ್ದದ್ದು. ಅದರ ಹಿಂದೆ ನೋಡಲು ಯುದ್ಧಟ್ಯಾಂಕಿನಂತಿದ್ದ ಆಧುನಿಕ ಶಸ್ತ್ರಸಜ್ಜಿತವಾದ ಹತ್ತಾರು ಆರ್ಮಡ್ ಮಿಲಿಟರಿ ವಾಹನಗಳು. + +(ಮಂಜುನಾಥ್‌ ಕುಣಿಗಲ್‌) + +ಶಸ್ತ್ರ-ಸಲಕರಣೆಗಳನ್ನು ತಮ್ಮ ವಾಹನಗಳಿಗೆ ಅಳವಡಿಸುತ್ತಿದ್ದ ರೀತಿ, ತಾವೇ ಯಂತ್ರಗಳಂತೆ ಅವರು ತಯಾರಾಗುತ್ತಿದ್ದ ಶಿಸ್ತು ನನ್ನನ್ನು ಬೆರಗುಗೊಳಿಸುತ್ತಿತ್ತು. ತುಂಬಾ ಹೊತ್ತು ನಿಂತು ನೋಡಿದರೆ ಅಲ್ಲಿಂದ ಜಾಗ ಖಾಲಿ ಮಾಡಿರೆಂದು ಮೆಲ್ಲನೆ ಗದರುತ್ತಿದ್ದರು. ಅವರ ಪಾಳಿಯು ಮುಗಿದು ಸಮಯಕ್ಕೆ ಸರಿಯಾಗಿ ಅದೇ ಶಿಸ್ತಿನ ಸಾಲು ಧೂಳನ್ನೆಬ್ಬಿಸಿ ಹಿಂತಿರುಗುತ್ತಿದ್ದದ್ದನ್ನು ನಾನು ಹಲವು ಬಾರಿ ಗಮನಿಸಿದ್ದೇನೆ. ಇದು ಅವರ ದೈನಂದಿನ ಕೂಂಬಿಂಗ್ ಮತ್ತು ಪ್ಯಾಟ್ರೋಲ್ ವ್ಯವಸ್ಥೆ! + +ಅದೆಲ್ಲಿ ಹೋಗಿ ಯುದ್ಧ ಮಾಡಿ ಬರುತ್ತಾರೋ? ಇಷ್ಟೇ ಜನ ಸಾಕೇ? ದಿನಾಲೂ ಯುದ್ಧ ಇರುತ್ತದೆಯೇ? ಅಥವಾ ಸುಮ್ಮನೆ ಊರು ಸುತ್ತಾಡಿ ಬರುತ್ತಾರೋ ಏನೋ? ಹೀಗೆ ಎಲ್ಲರಂತೆ ನನಗೂ ಪ್ರಶ್ನೆಗಳು. ಹೊರಗೆ ಅದೆಲ್ಲಿ ,ಅದೇನು ಘರ್ಷಣೆಗಳು ನಡೆಯುತ್ತಿದ್ದವೋ ಕಾಣೆ? ಆಗ್ಗಾಗ್ಗೆ ಮಿಲಿಟರಿ ಆಫೀಸುಗಳ ಮೇಲೆ ಎತ್ತರಕ್ಕೆ ಹಾರುತ್ತಿದ್ದ ಧ್ವಜಗಳು ಅರ್ಧಕ್ಕೆ ಜಾರುತ್ತಿದ್ದವು, ಊಟದ ಹಾಲಿನಲ್ಲಿ ಮಿಲಿಟರಿ ಜನರ ದೇಹ ಭಾಷೆ ಬೇರೆ ಕಥೆ ಏನನ್ನೋ ಹೇಳುತ್ತಿದ್ದವು. ಆ ಸಮಯದಲ್ಲಿ ಗಾಳಿಗೂ ಕೇಳದ ಪಿಸುಮಾತಿನಲ್ಲೋ ಅಥವಾ ಸಂಜ್ಞೆಗಳಲ್ಲೋ ಪರಸ್ಪರ ಸಂವಹನ. ಅಪ್ಪಿತಪ್ಪಿಯೂ ಯಾರೂ ಸಹ ಘಟಿಸಿದ ವಿಷಯವನ್ನು ಬಾಯಿ ಬಿಡುತ್ತಿರಲಿಲ್ಲ. ನನಗೆ ಪರಿಚಿತ ಮಿಲಿಟರಿ ಇಂಜಿನಿಯರುಗಳೂ ಸಹ ಏನೂ ಕೇಳಬೇಡಿರೆಂದು ಖಡಕ್ಕಾಗಿ ಹೇಳಿಬಿಡುತ್ತಿದ್ದರು. ಸಾವು-ನೋವುಗಳು ಅಲ್ಲಿ ವಿಶೇಷವೇನಲ್ಲ. ಆದರೆ ಅವರು ಅದನ್ನು ಗೌಪ್ಯವಾಗಿ ಕಾಪಾಡಿಕೊಳ್ಳುತ್ತಿದ್ದ ರೀತಿ, ಗಾಯಾಳುವಾದ ಇಲ್ಲಾ ಗತಿಸಿದ ತನ್ನ ಸಹ ಯೋಧನಿಗೆ ಅವರದೇ ರೀತಿಯಲ್ಲಿ ಸಲ್ಲಿಸುತ್ತಿದ್ದ ಗೌರವ ನನಗೆ ಅತೀವ ಹೆಮ್ಮೆ ಅನಿಸುತ್ತಿತ್ತು. + +ಪ್ರಮುಖ ಮಿಲಿಟರಿ ಬೇಸ್ ಗಳಿಂದ ಸೈನಿಕರು ಏರ್-ಸ್ಟ್ರಿಪ್ ಇಲ್ಲದ ಯಾವುದೇ ಉಪ-ಕ್ಯಾಂಪುಗಳಿಗೆ ಸಾಮಾನ್ಯವಾಗಿ ಚಾಪರುಗಳಲ್ಲಿ ಹೋಗುತ್ತಿದ್ದುದನ್ನು ಗಮನಿಸಿದ್ದೇನೆ. ಇಂತಹ ಮಿಲಿಟರಿ ಚಾಪರುಗಳಲ್ಲಿ ಕ್ಯಾಂಪಿನಲ್ಲಿದ್ದ ನನ್ನಂತಹ ಸಿವಿಲಿಯನ್ಸ್ ಗಳನ್ನೂ ಅಗತ್ಯಕ್ಕೆ ತಕ್ಕಂತೆ ತಮ್ಮೊಡನೆ ಕರೆದುಕೊಂಡು ಹೋಗುತ್ತಿದ್ದುದೂ ಹೌದು. ಒಂದು ವೇಳೆ ಸರಕು-ಸರಂಜಾಮು ಹೆಚ್ಚಿದ್ದರೆ ಅಥವಾ ಬೇರಾವುದೇ ಕಾರಣಗಳಿದ್ದಲ್ಲಿ ಮಾತ್ರ ಮಿಲಿಟರಿ ಕಾರವಾನ್ ರಸ್ತೆಯಲ್ಲಿ ಹೋಗುತ್ತಿತ್ತು. ಇದೊಂದು ತುಂಬಾ ಅಪಾಯಕಾರಿ ಪ್ರಯಾಣವೇ! ಅಂತಹ ಒಂದು ಅಪಾಯಕಾರಿ ಸನ್ನಿವೇಶಕ್ಕೆ ನಾನು ಸಾಕ್ಷಿಯಾಗುತ್ತೇನೆಂದು ಗೊತ್ತಿದ್ದರೆ ಅದೆಷ್ಟೇ ಡಾಲರುಗಳ ಸಂಬಳ ಕೊಟ್ಟಿದ್ದರೂ ನಾನಿಲ್ಲಿಗೆ ಬರುವ ಯೋಚನೆಯನ್ನೂ ಮಾಡುತ್ತಿರಲಿಲ್ಲವೇನೋ? ಮಿಲಿಟರಿ ಚಾಪರುಗಳಷ್ಟೇ ಅಲ್ಲದೆ ಕೆಲವು ಖಾಸಗಿ ‘ಚಾರ್ಟರ್ ಚಾಪರುಗಳು’ ಕೂಡ ಉಪ-ಕ್ಯಾಂಪುಗಳಿಗೆ ಜನರನ್ನು ತೆಗೆದುಕೊಂಡು ಹೋಗುತ್ತಿದ್ದವು. ಇದರ ಪ್ರಯಾಣ ವೆಚ್ಚ ಕೂಡ ಸಾಮಾನ್ಯಕ್ಕಿಂತ ಹತ್ತಾರು ಪಟ್ಟು ಹೆಚ್ಚು. ತುಂಬಾ ಅಗತ್ಯವಿದ್ದಲ್ಲಿ ಕಂಪನಿಗಳ ಕೆಲಸಗಾರರಿಗಾಗಿ ಮಾಡಿದ್ದ ಪರ್ಯಾಯ ವ್ಯವಸ್ಥೆಯದು. ಒಮ್ಮೆಗೆ ೧೦ ರಿಂದ ೩೦ಕ್ಕೂ ಹೆಚ್ಚು ಜನರನ್ನು ಕೂರಿಸಿಕೊಂಡು ಹೋಗುವ ದೊಡ್ಡ ಚಾಪರುಗಳವು. ಕಂದಹಾರ್ ಕ್ಯಾಂಪಿನಲ್ಲಿ ಒಮ್ಮೆ ಜನ ತುಂಬಿದ್ದ ಇಂತಹ ಒಂದು ಚಾಪರ್ ನೆಲಕ್ಕೆ ಬಿದ್ದ ಘಟನೆಗೆ ನಾನು ಪ್ರತ್ಯಕ್ಷ ಸಾಕ್ಷಿಯಾದದ್ದು ನನ್ನನ್ನು ಎಷ್ಟೋ ವರ್ಷಗಳವರೆಗೆ ತೀವ್ರವಾಗಿ ಕಾಡಿಬಿಟ್ಟಿತ್ತು. + +ಅಂದು ಬಹುಶಃ ಬೆಳಗ್ಗೆ ೧೧ರ ಸಮಯ. ದಿನನಿತ್ಯದ ಕೆಲಸದ ಭಾಗವಾಗಿ, ಕಂದಹಾರ್ ಕ್ಯಾಂಪಿನ ಏರ್-ಸ್ಟ್ರಿಪ್ ಬಳಿಯ ನಿರ್ಮಾಣ ಹಂತ ಮುಕ್ತಾಯದಲ್ಲಿದ್ದ ಎರಡಂತಸ್ತಿನ ಕಟ್ಟಡದ ಮೇಲೆ ನ್ಯಾಟೋ ಮಿಲಿಟರಿ ಇಂಜಿನಿಯರ್ ಜೊತೆ ನಾನು ನಿಂತು ತಾಂತ್ರಿಕ ವಿಷಯಗಳ ಬಗ್ಗೆ ವಿವರಣೆ ನೀಡುತ್ತಿದ್ದೆ. ನಮ್ಮೊಡನೆ ಕೆಲವು ಅಲ್ಬೇನಿಯನ್ ಕಾರ್ಮಿಕರಿದ್ದರು. ನಾವಿದ್ದ ಕಟ್ಟಡದ ಒಂದು ಸಮಾನಾಂತರ ಪಾರ್ಶ್ವಕ್ಕೆ ಏರ್-ಸ್ಟ್ರಿಪ್ ಕಾಣಿಸುತ್ತಿತ್ತು. ಏರ್-ಸ್ಟ್ರಿಪ್ಪಿನಲ್ಲಿ ಅಂತಿಂದಿತ್ತ ಇಳಿಯುವ ಮತ್ತು ಮೇಲೇರುವ ಯುದ್ಧ ವಿಮಾನಗಳು, ಎಂದಿನಂತೆ ಕ್ಪಣಕ್ಕೊಮ್ಮೆ ಆ ವಿಮಾನಗಳ ಹಾರಾಟದ ಅದೇ ಕಿವಿಗಡಚಿಕ್ಕುವ ಸದ್ದಿನ ಏಕತಾನತೆ! ಈ ಮಧ್ಯೆ ಏರ್-ಸ್ಟ್ರಿಪ್ಪಿನ ಪಕ್ಕದ ಚಾಪರುಗಳ ನಿಲ್ದಾಣದ ಜಾಗದಲ್ಲಿ ದೈತ್ಯ ಚಾರ್ಟರ್ ಚಾಪರೊಂದು ನಾಲ್ಕು ರೆಕ್ಕೆಗಳನ್ನು ಸುತ್ತಲೂ ರಭಸದಿಂದ ಆಡಿಸುತ್ತಾ ನಿಧಾನವಾಗಿ ಆನೆಯಂತೆ ಮೆಲ್ಲನೆ ಏಳುತ್ತಿದ್ದುದು ತುಂಬಾ ಹತ್ತಿರದಲ್ಲಿ ಕಾಣಿಸುತ್ತಿತ್ತು. ಇವೆಲ್ಲ ಅಲ್ಲಿ ಉಸಿರಾಟದಷ್ಟೇ ಸಾಮಾನ್ಯ ಸಂಗತಿಗಳಾದರೂ ನಾನಿದ್ದ ಎತ್ತರದಲ್ಲಿ ಏರ್-ಸ್ಟ್ರಿಪ್ಪಿನಲ್ಲಿ ಕಾಣುತ್ತಿದ್ದ ಆ ಸ್ಪಷ್ಟ ದೃಶ್ಯಗಳು ಅಪರೂಪವೇನೋ ಎಂದು ನನಗೆ ಅನಿಸುತಿತ್ತು. ಮೆಲ್ಲನೆ ಮೇಲಿರಿದ್ದ ಆ ಚಾಪರ್ ಕೆಲವು ನೂರಡಿಗಳ ಮೇಲೇರಿರಬಹುದಷ್ಟೇ. ಏನಾಯಿತೆಂದು ಗೊತ್ತಿಲ್ಲ, ಇದ್ದಕ್ಕಿದ್ದ ಹಾಗೆ ರೆಕ್ಕೆಯ ವೇಗ ಕಡಿಮೆಯಾದಂತೆ ಕಾಣಿಸಿತು. ಕೆಲವೇ ಕ್ಷಣಗಳಲ್ಲಿ ಅಲ್ಲಿಂದ ಒಂದಿಬ್ಬರು ಕೆಳಗೆ ಧುಮುಕಿದ್ದು ಮತ್ತು ಬೀಳುವಾಗ ಪ್ಯಾರಾಚೂಟ್ ತೆರೆದಿದ್ದು ಕಾಣಿಸಿತು. ನನ್ನ ಜೊತೆ ಇದ್ದ ಮಿಲಿಟರಿ ಇಂಜಿನಿಯರ್ ಕೂಡ ‘ಹೋ…’ ಎಂದು ಉದ್ಗಾರ ತೆಗೆದು ಅವಕ್ಕಾಗಿ ನಿಂತುಬಿಟ್ಟ! ‘ಎಂಥದೋ ಅವಘಡ ಘಟಿಸಲಿಕ್ಕಿದೆ!’ ತಣ್ಣಗೆ ಅವ ಹೇಳಿದ್ದಷ್ಟೇ. ಜೊತೆಗಿದ್ದ ಕೆಲಸಗಾರರೂ ಅಪರೂಪದ ದೃಶ್ಯವೇನೋ ಎಂಬಂತೆ ಕಣ್ಣಗಲಿಸಿ ಅತ್ತಲೇ ನೋಡುತ್ತಾ ‘ಹಾಯ್ದೆ.. ಹಾಯ್ದೇ…’ ಎಂದು ಅವರ ಭಾಷೆಯಲ್ಲಿ ಜೋರಾಗಿ ಕಿರುಚುತ್ತಾ ನಿಂತರು. ಹಿಂದೆಯೇ ಮತ್ತೊಂದಷ್ಟು ಜನ ತಮ್ಮ ಹಿಂದೆ ಬ್ಯಾಗುಗಗಳಂತಹ ವಸ್ತುಗಳನ್ನು ನೇತುಹಾಕಿಕೊಂಡು ಧುಮುಕುವ ದೃಶ್ಯ ಕಣ್ಣಿಗೆ ಕಟ್ಟಿದಂತೆ ಕಾಣುತ್ತಿತ್ತು. ಇವರ ಪ್ಯಾರಾಚೂಟ್ ತೆರೆದುಕೊಳ್ಳಲಿಲ್ಲವೋ ಅಥವಾ ಇರಲೇ ಇಲ್ಲವೋ ಗೊತ್ತಾಗಲಿಲ್ಲ. ನಾವಿದ್ದ ದೂರಕ್ಕೆ ಅವರು ನೆಲಕ್ಕೆ ತೊಪ್ಪೆಯಂತೆ ಬಿದ್ದಂತೆ ಕಾಣಿಸಿತಷ್ಟೆ ಹೊರತು ಯಾವ ಶಬ್ದವೂ ಕೇಳುತ್ತಿರಲಿಲ್ಲ. + + + +ನೋಡನೋಡುತ್ತಿದ್ದ ಹಾಗೆ ಚಾಪರ್ ನಿಧಾನಕ್ಕೆ ಕುಸಿಯುತ್ತಿತ್ತು. ನಮಗೆ ಅಪಾಯದ ಅರಿವಾಗಿಹೋಯ್ತು! ಅದಿನ್ನೂ ಕೆಳಗೆ ಬರುತ್ತಿದ್ದಂತೆ ಮತ್ತೊಂದಷ್ಟು ಜನ ಧುಮುಕಿ ಕೆಳಗೆ ಧೊಪ್ಪನೆ ಬಿದ್ದರು. ಆಗ ಪ್ಯಾರಾಚೂಟ್ ತೆರೆದುಕೊಳ್ಳುವ ಎತ್ತರ ಮತ್ತು ಸಾಧ್ಯತೆ ಅಲ್ಲಿರಲಿಲ್ಲ. ಜನ ಬೀಳುತ್ತಲೇ ಇದ್ದರು. ರೆಕ್ಕೆಗಳ ವೇಗ ತುಂಬಾ ನಿಧಾನವಾಗಿಬಿಟ್ಟಿತ್ತು. ನಿಯಂತ್ರಣ ಕಳೆದುಕೊಂಡು ಗಾಳಿಯಲ್ಲಿ ಡೋಲಾಯಮಾನವಾಗಿ ಹೊಯ್ದಾಡುತ್ತಲೇ ನೆಲಕ್ಕೆ ರೊಪ್ಪನೆ ಬಿದ್ದ ತಕ್ಷಣವೇ ಬಾಂಬು ಹಾಕಿದ ಹಾಗೆ ‘ಬ್ಲ್ಯಾಮ್’ ಎನ್ನುವ ಶಬ್ದದೊಂದಿಗೆ ಬೆಂಕಿಯ ವಿಸ್ಫೋಟವಾಯ್ತು. ಇವೆಲ್ಲಾ ಕೆಲವೇ ನಿಮಿಷಗಳಲ್ಲಿ ಆಗಿಹೋಗಿತ್ತು. ನಾವು ಅಲ್ಲಿಗೆ ಓಡಿಹೋಗಿ ನೋಡುವಂತಹ ಸಾಮಾನ್ಯ ಪ್ರದೇಶವಲ್ಲ ಅದು. ಸ್ವಲ್ಪ ಕಾಲ ಅಲ್ಲಿಯೇ ನಿಂತು ನೋಡುತ್ತಿದ್ದೆವು. ಆಗ ಒಮ್ಮೆಗೇ ‘ಎಮರ್ಜೆನ್ಸಿ’ ಎನ್ನುವ ಸೈರನ್ ಕೂಗಲು ಶುರುವಾಯ್ತು. ಅಂತಹ ‘ತುರ್ತು ಘೋಷಣೆ ಸಂದರ್ಭ’ಗಳಲ್ಲಿ ಯಾರೂ ಕೂಡ ಹೊರಗೆ ಬರಬಾರದು ಎನ್ನುವುದು ಅಲ್ಲಿನ ಶಿಷ್ಟಾಚಾರಗಳಲ್ಲೊಂದು. ಕೆಲವು ಅಗ್ನಿಶಾಮಕ ಟ್ರಕ್ಕುಗಳು ಅತ್ತ ಹೋಗುತ್ತಿದ್ದುದು ಕಾಣಿಸುತ್ತಿತ್ತು. ಅಲ್ಲಿ ಇನ್ನೇನು ನಡೆಯುತ್ತದೆಯೋ ನೋಡಲಿಕ್ಕೆ ನನಗೆ ಇಷ್ಟವಿರಲಿಲ್ಲ. ಎದೆ ಗಟ್ಟಿಯಾಗಿ ಕಟ್ಟಿಕೊಂಡ ನೋವಾಗಿ ದುಃಖ ಉಮ್ಮಳಿಸಿ ಬಂದಂತಾಯ್ತು. ಅವರೆಲ್ಲರ ಮುಂದೆ ಅಳಲು ನಾಚಿಕೆಯಾಗಿ ಬಿಗಿಹಿಡಿದುಕೊಂಡೆ. ನಾವೆಲ್ಲರೂ ಕೆಳಗೆ ಇಳಿದು ಆ ಕಟ್ಟಡದ ನೆಲ ಅಂತಸ್ತಿನ ಒಳ ಹೊಕ್ಕೆವು. ಏನಾಗುತ್ತಿದೆಯೆಂಬ ಸ್ಪಷ್ಟ ಅರಿವಿಲ್ಲದ ಕ್ಯಾಂಪಿನ ಇತರೆ ಜನರಲ್ಲಿ ಕೆಲವರು ಬಂಕರಿನತ್ತಲೋ ಇನ್ನು ಕೆಲವರು ಹತ್ತಿರವಿದ್ದ ಕಟ್ಟಡದ ಒಳಗೋ ಓಡುತ್ತಿದ್ದರು. + +ಕಚೇರಿಗೆ ಬಂದಾಗ ಡಾಕ್ಟರ್ ಕಿರ್ಕಿಗೆ ಕರೆ ಬಂದು ಅಗತ್ಯ ವೈದ್ಯಕೀಯ ನೆರವಿಗಾಗಿ ಅವಘಡ ನಡೆದ ಜಾಗಕ್ಕೆ ಹೋದನೆಂದು ಗೊತ್ತಾಯ್ತು. ಇಂತಹ ಪ್ರಮುಖ ಅವಘಡಗಳಾದಾಗ ಕ್ಯಾಂಪಿನಲ್ಲಿನ ಇಂತಹ ಖಾಸಗಿ ವೈದ್ಯರನ್ನು ಘಟನೆಯ ಜಾಗಕ್ಕೆ ನೆರವಿಗಾಗಿ ಕರೆಸಲಾಗುತ್ತದೆ. ನಾನು ನೋಡಿದ ವಿವರಗಳನ್ನು ಆಂಟೋನಿಯೋ ಮತ್ತು ಅಲ್ಲಿದ್ದ ಇತರೆ ಆಲ್ಬೇನಿಯನ್ ಜನರಿಗೆ ವಿವರಿಸಿದೆ. ಎಲ್ಲರೂ ಆಘಾತಕ್ಕೊಳಗಾದಂತೆ ದೊಡ್ಡ ನಿಟ್ಟುಸಿರುಬಿಟ್ಟರು. ಆಂಟೋನಿಯೋ ಮಾತ್ರ ತುಂಬಾ ಕಂಗಾಲಾದವನಂತೆ ತಲೆಮೇಲೆ ಕೈಹೊತ್ತು ಏನೇನೋ ಮನಸ್ಸಿಗೆ ಬಂದಂತೆ ಅವನ ಭಾಷೆಯಲ್ಲಿ ಗೊಣಗಲು ಶುರುಮಾಡಿದ. ಅಂದು ಆ ಚಾಪರಿನಲ್ಲಿ ನಮ್ಮ ಕಂಪನಿಯ ನಾಲ್ಕು ಹುಡುಗರೂ ಕೂಡ ಇದ್ದರು ಎಂದು ಆ ನಂತರವೇ ಗೊತ್ತಾಗಿದ್ದು! ಅಂಟೋನಿಯೋ ಗಾಡಿಯನ್ನು ಚಲಾಯಿಸಿ ಮಿಲಿಟರಿ ಆಸ್ಪತ್ರೆ ಕಡೆ ಹೊರಟ. ನಾನೂ ಬರಲೇ ಅಂದದ್ದಕ್ಕೆ ಬೇಡ ಎಂದ. ಸಂಜೆ ಆಂಟೋನಿಯೋ ಮತ್ತು ಕಿರ್ಕಿ ಒಟ್ಟಿಗೇ ಬಂದಾಗ ನಮಗೆ ಸಿಕ್ಕ ವಿವರವಿಷ್ಟು… ‘ಆ ಚಾಪರಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಜನರನ್ನು ತುಂಬಲಾಗಿತ್ತು. ಸರಿಯಾದ ತಾಂತ್ರಿಕ ನಿರ್ವಹಣೆಯಿಲ್ಲದ ಹಳೆಯ ಚಾಪರಂತೆ ಅದು. ಪ್ಯಾರಚೂಟುಗಳು ಸಮಯಕ್ಕೆ ಸರಿಯಾಗಿ ತೆರೆದುಕೊಳ್ಳಲಿಲ್ಲ. ಕೆಳಗೆ ಧುಮುಕಿದವರಲ್ಲಿ ಕೆಲವರು ಮಾತ್ರ ಕೈಕಾಲು ಸೊಂಟ ಮುರಿದುಕೊಂಡು ಜೀವಂತವಾಗಿದ್ದಾರಷ್ಟೇ. ಮಿಕ್ಕವರೆಲ್ಲಾ ದೇವರ ಪಾದಕ್ಕೆ! ಬಹುತೇಕ ಎಲ್ಲರೂ ಸುಟ್ಟು ಕರಕಲಾಗಿದ್ದಾರೆ. ಉಳಿದ ನಾಲ್ಕೈದು ಜನ ಅದ್ಯಾವ ಪವಾಡ ನಡೆದು ಬದುಕಿದರೋ ಗೊತ್ತಿಲ್ಲ. ಪ್ಯಾರಾಚೂಟ್ ಜೊತೆ ಹಾರಿದ ಪೈಲಟ್ ಬದುಕಿಕೊಂಡ. ನಮ್ಮ ಕಂಪನಿಯ ಕೆಲಸಗಾರರು ಗುರುತು ಸಿಗದ ಹಾಗೆ ಸೀದುಹೋಗಿದ್ದಾರೆ. ಶವಗಳನ್ನು ಅವರ ಮನೆಗಳಿಗೆ ತಲುಪಿಸುತ್ತಾರಂತೆ’. ಅಂದು ಸುಟ್ಟು ಕರಕಲಾದ ನಮ್ಮ ಕಂಪನಿಯ ಆ ನಾಲ್ಕು ಜನರೂ ಸೇರಿ ಇತರೆ ಎಲ್ಲರ ಬಗೆಗಿನ ಯಾವ ವಿಷಯವನ್ನೂ ಹೊರಗೆ ಬಿಟ್ಟುಕೊಡದೆ ರಹಸ್ಯವಾಗಿ ಇಟ್ಟುಬಿಟ್ಟರು. ಸತ್ತವರು ಯಾರು? ಯಾವ ದೇಶದವರು? ಯಾವ ವಿವರಗಳೂ ಸಿಗಲಿಲ್ಲ. ‘ಅವರೆಲ್ಲರೂ ಆಫ್ಘಾನಿ ಕೆಲಸಗಾರರಂತೆ’ ಎಂದು ಅಲ್ಲಿ ಕೆಲವರು ಮಾತಾಡಿಕೊಂಡರು. ಹೌದು, ಇಲ್ಲಿ ಎಲ್ಲರಿಗೂ ಎಲ್ಲಾ ಮಾಹಿತಿಗಳು ಸುಲಭಕ್ಕೆ ಎಟಕುವಂತದ್ದಲ್ಲ ಎಂಬುದು ನನಗೆ ಅನೇಕ ಸಂದರ್ಭಗಳಿಂದ ವೇದ್ಯವಾಗಿತ್ತು! + +ನನ್ನಂತಹ ಕೆಲಸಗಾರ ಜನಗಳಿಗೆ ಮಿಲಿಟರಿ ಕ್ಯಾರವಾನಿನೊಡನೆ ಹೋಗುವ ಕೆಲ ವಿಶೇಷ ಸಂದರ್ಭಗಳು ಉಂಟು. ಆ ವಿಶೇಷ ದಿನವೂ ಬೇಗನೇ ಬಂದಿತು. ಕಂದಹಾರ್, ಕಾಬುಲ್(HKIA), ಬಗ್ರಾಮ್, ಮಝರ್-ಇ-ಶರಿಫ್, ಕ್ಯಾಂಪ್ ಬ್ಯಾಷನ್ ಮತ್ತು ಹೇರತ್ ನಂತಹ ಏರ್-ಬೇಸುಗಳು ಆಫ್ಘಾನಿಸ್ತಾನದ ಪ್ರಮುಖ ಯುದ್ಧ ನಗರಿಗಳು. ಈ ಯುದ್ಧಕೇಂದ್ರ ನಗರಗಳ ಸುತ್ತ ಮಿಲಿಟರಿಯವರ ಜಾಲ ಇನ್ನೂ ಆಳ ಮತ್ತು ಅಗಲವಾಗಿ ಹಳ್ಳಿ-ಪಟ್ಟಣ, ಬೆಟ್ಟ-ಗುಡ್ಡ, ಮರುಭೂಮಿ-ಗೊಂಡಾರಣ್ಯ ಹೀಗೆ ಎಲ್ಲಾ ಕಡೆಗೂ ವ್ಯವಸ್ಥಿತವಾಗಿ ಹರಡಿಕೊಂಡಿತ್ತು. ಪ್ರತಿ ಪ್ರಮುಖ ಯುದ್ಧಕೇಂದ್ರ ಮಿಲಿಟರಿ ಕ್ಯಾಂಪುಗಳಿಗೆ ಹೊಂದಿಕೊಂಡಂತೆ ಹಲವಾರು ಉಪಕ್ಯಾಂಪುಗಳು. ಅತಿ ಅಪಾಯಕಾರಿ ಎಂದೂ, ಯೋಧರೂ ಸಹ ಅಲ್ಲಿಗೆ ಹೋಗಲು ಹಿಂದೇಟು ಹಾಕುತ್ತಾರೆ ಎಂದೂ ಕುಖ್ಯಾತಿ ಗಳಿಸಿದ್ದ ಪಾಕಿಸ್ತಾನದ ಗಡಿಗೆ ಹೊಂದಿಕೊಂಡ ‘ಸ್ಪಿನ್ ಬೋಲ್ದಾಕ್’ ಪ್ರಾಂತ್ಯದ ‘ಕ್ಯಾಂಪ್ ಡ್ವಯರ್’ ನೆಡೆಗೆ ನಾವು ಹೋಗಬೇಕಿತ್ತು. ಜಲಾಲಾಬಾದ್, ನಂಗಹಾರ್ ಮತ್ತು ಸ್ಪಿನ್ ಬೋಲ್ಡಾಕ್ ಪ್ರಾಂತ್ಯಗಳು ಆಫ್ಘಾನಿಸ್ತಾನದಲ್ಲೇ ಅತಿ ಹೆಚ್ಚು ಸಾವು ನೋವು ಘಟಿಸುವ ಪ್ರದೇಶಗಳು. ಕಂದಹಾರ್ ಕ್ಯಾಂಪಿಗೆ ಕೆಲವೇ ಮೈಲುಗಳ ಸಮೀಪದಲ್ಲಿದ್ದ ‘ಹೌಸ್-ಇ-ಮದದ್’ ಎನ್ನುವ ಉಪ ಕ್ಯಾಂಪಿಗೆ ಹೋಗಿ ಕೆಲವರನ್ನು ಅಲ್ಲಿ ಇಳಿಸಿ ಅಲ್ಲಿಂದ ‘ಕ್ಯಾಂಪ್ ಡ್ವಯರ್’ ಕಡೆಗೆ ನಮ್ಮ ಪ್ರಯಾಣದ ರೂಪುರೇಷೆಗಳು ಸಿದ್ಧವಾದವು. ದಕ್ಷಿಣಕ್ಕಿದ್ದ ಕ್ಯಾಂಪ್ ಡ್ವಯರ್ ಗೆ ಹೋಗಲು ಇವರು ಉತ್ತರಕ್ಕಿದ್ದ ಕಂದಹಾರ್ ಕಡೆ ಹೋಗಿ ಅದೇಕೆ ಸುತ್ತು ಬಳಸಿ ಬರುತ್ತಾರೋ? ಎಂದು ‘ಅಮೀರ್ ಅರಿಫಿ’ ಗೊಣಗುತ್ತಿದ್ದ. ನನಗೆ ಇದ್ಯಾವುದರ ಭೌಗೋಳಿಕ ಜ್ಞಾನವಿರಲಿಲ್ಲ. ಅಮೀರ್ ಅರಿಫಿ ಎನ್ನುವ ಅಲ್ಬೇನಿಯನ್ ಕ್ಯಾಂಪ್ ಮ್ಯಾನೇಜರ್ ನಮ್ಮ ನೇತೃತ್ವ ವಹಿಸಿದ್ದ ಆಗ. ಆತ ಮತ್ತು ನಾನೂ ಸೇರಿದಂತೆ ಒಟ್ಟು ಎಂಟು ಜನರು ಮಿಲಿಟರಿ ಕ್ಯಾರವಾನಿನಲ್ಲಿ ಹೊರಟೆವು. ನನ್ನನ್ನು ಅಲ್ಲಿಗೆ ಹೊರಡಿಸಲು ಅಂಟೊನಿಯೋ ಪಟ್ಟ ಪರಿಪಾಟಲು ಅಷ್ಟಿಷ್ಟಲ್ಲ. ನನ್ನನ್ನು ಹೆಣವಾಗಿಸಿಯೇ ಊರಿಗೆ ಕಳಿಸಬೇಕೆಂದು ತೀರ್ಮಾನಿಸಿದ್ದೀಯಾ ಎಂದು ನಾನು ವಾಗ್ವಾದಕ್ಕಿಳಿದಿದ್ದೆ. ನಾನು ಹೋಗಲೇಬೇಕೆಂದೂ, ಅದರ ಅನುಭವ ನನಗೆ ಆಗಬೇಕೆಂದೂ ನಮ್ಮ ದುಬೈ ಕಚೇರಿಯ ಮುಖ್ಯಸ್ಥ ತೀರ್ಮಾನಿಸಿಯಾಗಿತ್ತು. ಅಂದು ನಾನು ಹೊರಡದಿದ್ದಿದ್ದರೆ ಜೀವನದ ಅತಿ ವಿಶೇಷ ಅನುಭವದಿಂದ ವಂಚಿತನಾಗುತ್ತಿದ್ದೇನೇನೋ. + +ಮಿಲಿಟರಿಯವರು ಸುಮಾರು ೪೪ ಜನರಿದ್ದರು. ನಾವು ಹೊರಟಿರುವ ಉದ್ದೇಶವಿಷ್ಟೆ, ಕ್ಯಾಂಪ್ ಡ್ವಾಯರಿನ ಸಮೀಪ ಇನ್ನೊಂದು ಉಪ-ಕ್ಯಾಂಪಿನ ನಿರ್ಮಾಣ. ಹತ್ತಾರು ಯುದ್ಧಟ್ಯಾಂಕ್ ನಂತಹ ವಾಹನಗಳು ಮತ್ತು ಮಿಲಿಟರಿ ಟ್ರಕ್ಗಳು ಸಾಮಾನು ಸರಂಜಾಮುಗಳನ್ನು ಹೇರಿಕೊಂಡು ಹೊರಡಲು ಸಿದ್ಧವಾದವು. ನಮ್ಮನ್ನೆಲ್ಲ ಯುದ್ಧಟ್ಯಾಂಕಿನಂತಿದ್ದ ಗಾಡಿಗಳಲ್ಲಿ ತುರುಕಿದರು. ಒಳಗೆ ಅದೆಂತಹುದೋ ವಿಚಿತ್ರ ಘಾಟು. ಮೊದಮೊದಲು ಉಸಿರಾಡಲು ಕಷ್ಟವಾಯ್ತು. ಹೊರಗೆ ಇಣುಕಲು ಕಾಲು-ಚದುರ ಅಡಿಯಷ್ಟು ಕಿರಿದಾದ ಎರಡು ಪುಟ್ಟ ಗುಂಡು ನಿರೋಧಕ ಕಿಟಕಿಗಳು. ಒಳಗೆ ಸಾವಿರ ಜನರನ್ನು ಕೆಡವಬಹುದಾದಷ್ಟು ಅಧುನಿಕ ಶಸ್ತ್ರಗಳು. ನೀಳವಾದ ದೂರಗ್ರಾಹಿ ಯಂತ್ರಗಳು, ಒಂದಷ್ಟು ಆಹಾರ ಪೊಟ್ಟಣಗಳು, ನೀರಿನ ಬಾಟಲ್ಗಳು. ಬಂಕರುಗಳಲ್ಲಿ ಕುಳಿತಾಗಲೂ ಇಷ್ಟು ಕುಬ್ಜರಾದೆವೆಂದು ಅನಿಸಿರಲಿಲ್ಲ, ಕಿಷ್ಕಿಂದೆಯಂತಹ ಜಾಗ. ಅಮೀರ್ ಅರಿಫಿ, ನಾನು ಮತ್ತು ಇನ್ನಿಬ್ಬರು ಮಿಲಿಟರಿಯವರೊಡನೆ ಒಂದು ವಾಹನದಲ್ಲಿ ಕುಳಿತೆವು. ಮಿಕ್ಕವರು ಅದೆಲ್ಲಿ ಹೇಗೆ ಜಾಗ ಮಾಡಿಕೊಂಡರೋ ಏನೋ ಗಮನಕ್ಕೆ ಬಾರಲಿಲ್ಲ. ವಿಚಾರಿಸೋಣವೆಂದರೆ ಆ ಮಿಲಿಟರಿಯವರೋ ಬಾಯಿ ಬಿಟ್ಟು ನಾಲ್ಕು ಮಾತನಾಡಲು ತಯಾರಿಲ್ಲ, ವಿಚಿತ್ರ ಶಿಸ್ತು ಮಾರಾಯ ಇವರದ್ದು ಎಂದು ಗೊಣಗಿ ಕೂತದ್ದಷ್ಟೇ. + + + +ನಮ್ಮ ವಾಹನಗಳ ಸಾಲು ಕ್ಯಾಂಪಿನ ಚಕ್ರವ್ಯೂಹದಂತಿದ್ದ ಬಾಗಿಲುಗಳನ್ನು ನಿಧಾನವಾಗಿ ಭೇಧಿಸಿ ಹೊರಬಂದಿತು. ಹೊರ ಹೊರಟ ಮಿಲಿಟರಿ ವಾಹನಕ್ಕೂ ಅದೆಂತಹ ತಪಾಸಣೆ? ಅರ್ಧ ತಾಸಿಗೂ ಹೆಚ್ಚಾಯ್ತು ಅನಿಸಿತ್ತು. ನಾನಂತೂ ಆ ಸಣ್ಣ ಕಿಟಕಿಯಲ್ಲಿ ಪಿಳಿಪಿಳಿ ಕಣ್ಣು ಬಿಟ್ಟು ಹೊರನೋಟವನ್ನು ಆಸ್ವಾದಿಸುತ್ತಿದ್ದೆ. ಇದೇ ಮೊದಲ ಬಾರಿಗೆ ಕಂದಹಾರ್ ಕ್ಯಾಂಪಿನ ಸುರಕ್ಷಿತ ವಲಯದಿಂದ ಬಹುದೂರ ಆಚೆಗೆ ಕಂದಹಾರ್ ಪಟ್ಟಣದ ಕಡೆ ಹೊರಟಿದ್ದೆ. ನಾವಿದ್ದ ವಾಹನದ ಚಾವಣಿಯ ಸಣ್ಣ ಭಾಗವನ್ನು ಸರಿಸಿದ ಒಬ್ಬ ಮಿಲಿಟರಿಯವ ಸರಪಟಾಕಿಯಂತಿದ್ದ ಗುಂಡುಗಳ ಸರವನ್ನು ಮಶೀನ್ ಗನ್ನಿಗೆ ಪೇರಿಸಿ ಗಕ್ಕನೆ ಅರ್ಧ ಮೇಲೇರಿ ತಲೆಹೊರಹಾಕಿ ನಿಂತುಬಿಟ್ಟ! ರಸ್ತೆ ಉತ್ತಮವಾಗಿಯೇ ಇತ್ತು. ನಮ್ಮ ಮುಂದೆ ನಮ್ಮದೇ ರೀತಿಯ ವಾಹನಗಳು ಸಾಲಾಗಿ ನಿಧಾನವಾಗಿ ಚಲಿಸುತ್ತಿದ್ದವು. ಇಕ್ಕೆಲಗಳಲ್ಲಿ ದಿಗಂತದವರೆಗೂ ಬರಡು ನೆಲದಂತೆ ಕಂಡರೂ ಕಲ್ಲಂಗಡಿ ಬಳ್ಳಿಯ ಹಸಿರು ಹಾಸು ಅಲ್ಲಲ್ಲಿ. ದೂರದಲ್ಲೆಲ್ಲೋ ಕುರಿಗಳು, ಒಂಟೆಗಳು ಮೇಯುತ್ತಿದ್ದವು. ರಸ್ತೆಯಲ್ಲಿ ಟ್ರಕ್ಕುಗಳು, ಮೋಟಾರು ಬೈಕುಗಳು, ಜನರನ್ನು ತುಂಬಿಕೊಂಡ ಪಿಕ್-ಅಪ್ ನಂತಹ ವಾಹನಗಳು ಮಿಲಿಟರಿ ಕ್ಯಾರವಾನ್ ಬರುವುದನ್ನು ಗಮನಿಸಿ ಆಂಬುಲೆನ್ಸ್ ಗಾಡಿಗೆ ಜಾಗ ಬಿಡುವವರಂತೆ ಪಕ್ಕಕ್ಕೆ ಸರಿದುಬಿಡುತ್ತಿದ್ದರು. ಇವರೆಲ್ಲಾ ಇಂತಹದ್ದುಕ್ಕೆ ಸಾಕಷ್ಟು ಪಳಗಿದ್ದಾರೆ ಅನಿಸುತ್ತಿತ್ತು. ಅದು ಭಯಪೂರ್ವಕ ಶಿಸ್ತಿನ ಅಭಿವ್ಯಕ್ತಿಯೇನೋ ಎಂಬಂತಿತ್ತು. ಕೆಲ ಹೊತ್ತಿನ ನಂತರ ಇದಕ್ಕೆಲ್ಲ ಕಾರಣ ನನಗೆ ಸ್ಪಷ್ಟವಾಯ್ತು ಕೂಡ. + +ಬೆಳಗ್ಗೆ ಹತ್ತು-ಹನ್ನೊಂದರ ಸಮಯವಿದ್ದಿರಬಹುದು. ಕಂದಹಾರ್ ಪಟ್ಟಣದ ತುಂಬಾ ಕಿಕ್ಕಿರಿದ ಜನ. ರಸ್ತೆಯ ಎರಡೂ ಬದಿಯಲ್ಲಿ ಸಂತೆ ನಡೆಯುತ್ತಿದೆಯೇನೋ ಎಂಬ ನೋಟ. ನೋಟ-ವಿನ್ಯಾಸದಲ್ಲಿ ಕಾಬುಲ್ ನಗರಕ್ಕಿಂತ ಕೊಂಚ ವಿಭಿನ್ನ ಷಹರವಾದರೂ ಬೇರೆಯ ವ್ಯತ್ಯಾಸವೇನೂ ಇರಲಿಲ್ಲ. ಜನರೂ ಕೂಡ ಅಲ್ಲಿಯ ಹಾಗೆಯೇ. ಕಾಬುಲ್ನಲ್ಲಿ ನೋಡಿದಂತಹುದೇ ರೊಟ್ಟಿ, ತರಕಾರಿ, ಹಣ್ಣು, ಮಾಂಸದಂಗಡಿಗಳ ಸಾಲು. ಬಿಸಿಲು ಮತ್ತು ಧೂಳಿನ ಪರಕಾಷ್ಟೆ. ಕ್ಯಾರವನಿನತ್ತ ಬೆರಗುಗಣ್ಣಿಂದ ನೋಡುತ್ತಿದ್ದ ಮುಗ್ಧ ಜನಗಳು. ಪ್ರತಿನಿತ್ಯದ ಗೋಳಿದು ಎಂದೋ, ನಮಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತಿದ್ದ ಜನಗಳೂ ಕಮ್ಮಿಯಿರಲಿಲ್ಲ ಅಲ್ಲಿ. ರಸ್ತೆಯ ಮೇಲಿದ್ದ ಎಲ್ಲರೂ ಗಾಬರಿಗೊಂಡವರಂತೆ ಪಕ್ಕಕ್ಕೆ ಸರಿದುಬಿಡುತ್ತಿದ್ದರು. ಕಂದಹಾರ್ ನಗರದ ಹೊರವಲಯಕ್ಕೆ ಬಂದಿದ್ದೆವು. ರಸ್ತೆಯ ಮುಂದೆ ಅದೇನೋ ಢಾಂ ಎನ್ನುವ ಶಬ್ದ ದಿಢೀರನೆ ಬಂದು ಬೆಂಕಿಯ ಉರಿ ಒಮ್ಮೆಗೆ ಒಂದಷ್ಟು ಜಾಗದಲ್ಲಿ ಆವರಿಸಿಕೊಂಡಿತು. ಇದ್ದಕ್ಕಿದ್ದ ಹಾಗೆ ಗುಂಡಿನ ಮೊರೆತ ಶುರುವಾಯ್ತು. ವಾಕೀ-ಟಾಕಿಯಂತಿದ್ದ ರೇಡಿಯೋ ಸಾಧನದಲ್ಲಿ ಅದೇನೇನೋ ಶಬ್ದವಾಗಿ ಗೊಂದಲದ ಗೂಡಾಗಿತ್ತು . ನಮ್ಮ ವಾಹನದಲ್ಲಿದ್ದ ಸೈನಿಕನೂ ಅದೆಲ್ಲಿಗೋ ಗುರಿಯಿಟ್ಟು ಗುಂಡಿನ ಸುರಿಮಳೆಗೈಯುತ್ತಿದ್ದ. ಒಮ್ಮೆಲೇ ಗುಂಡಿನ ಜೋರು ಮೊರೆತ. ನನಗಂತೂ ಕಿವಿ ಕಿತ್ತು ಹೊಯ್ತೆನೋ ಅನ್ನುವಷ್ಟು ಭೀಕರ ಶಬ್ಧ. ಇಷ್ಟು ಹತ್ತಿರದಿಂದ ಗುಂಡಿನ ಮೊರೆತ ಎಂದೂ ಕೇಳಿರಲಿಲ್ಲ. ಏನೋ ಅಚಾತುರ್ಯವಾಗ್ತಿದೆ ಎಂದು ಎದೆ ಬಡಿತ ಎರಡಷ್ಟಾಗಿತ್ತು. ನನ್ನ ಪುಕ್ಕಲುತನವನ್ನ ಮೊಂಡುಧೈರ್ಯಕ್ಕೆ ತಿರುಗಿಸುವ ವಿಫಲ ಯತ್ನ ಮಾಡುತ್ತಿದ್ದೆ. ಅಪಾಯ ಅದೇನು ಎಂದು ಗೊತ್ತಾದಾಗ ಮೊಂಡು ಧೈರ್ಯದ ವಿವೇಚನೆ. ಆದರೆ ಹೊರಗೆ ಆದೇನಾಗುತ್ತಿದೆಯೋ ಒಂದೂ ಸುಳಿವಿಲ್ಲ. ಒಬ್ಬ ಬಂಡಿಯನ್ನು ಓಡಿಸುತ್ತಿದ್ದ ಮತ್ತೊಬ್ಬ ಮದ್ದುಗುಂಡಿನ ಯಂತ್ರವನ್ನು! ನಾನು ಮತ್ತು ಅಮೀರ್ ಅರಿಫಿ ನಮ್ಮ ಸೋತ ಮುಖಗಳನ್ನು ನೋಡಿಕೊಂಡು ಬೆಪ್ಪರಂತೆ ಕೂತಿದ್ದೆವು. ಹೆದರಿಕೆಯಿಂದ ನಾನು ಬೆವರಿನ ತೊಪ್ಪೆಯಾಗಿದ್ದೆ. + +ಇದೆಲ್ಲಾ ಮುಗಿದು ತಣ್ಣಗಾಗಲು ಸುಮಾರು ಇಪ್ಪತ್ತು ನಿಮಿಷಗಳು ಬೇಕಾದವು. ಎಲ್ಲರಿಗಿಂತ ಮುಂದಿದ್ದ ವಾಹನ ದೂರ ದೂರಕ್ಕೆ ಬೆಂಕಿಯನ್ನುಗುಳುತ್ತಾ ಹೊರಟಿತ್ತು. ಎಲ್ಲವೂ ನಿಶಬ್ಧವಾಗಿರಲಿಲ್ಲ! ಸಣ್ಣ ಸಣ್ಣ ಊರು ಸಮೀಪಿಸಿದಾಗಲೆಲ್ಲಾ ಆಗಾಗ ಸಣ್ಣ ಸುತ್ತಿನ ಗುಂಡಿನ ಮೊರೆತ ಚಾಲ್ತಿಯಲ್ಲಿತ್ತು. ವಾಹನ ಚಲಾಯಿಸುತ್ತಿದ್ದ ಸೈನಿಕನನ್ನು ಅಮೀರ್ ಇಷ್ಟವಿಲ್ಲದಿದ್ದರೂ ಮಾತಿಗೆಳೆದ. “ಏನು ನಡೆದದ್ದು? ನಮಗೆ ತುಂಬಾ ಗಾಬರಿಯಾಗಿದೆ”, ಎಂದ. “ಇದೆಲ್ಲಾ ಮಾಮೂಲಿ, ನೀವು ಇದೆ ಮೊದಲ ಬಾರಿಗೆ ಕ್ಯಾರವಾನಿನಲ್ಲಿ ಹೊರಟಿರುವುದೋ” ಎಂದು ಕೇಳಿದ ಸೈನಿಕ. ಅಮೀರ್ ಹೌದೆಂದು ಹೂಂಗುಟ್ಟಿದ. “ಅದ್ದದ್ದು ಏನು”? ಮತ್ತೆ ಅಮೀರ್ ಕುತೂಹಲ ಪ್ರಶ್ನೆ. ಗಂಭೀರವಾಗಿಯೇ ಮಾತು ಶುರುಮಾಡಿದ ಆ ಸೈನಿಕ “ಯಾವುದೋ ಎಳಸು ಹುಡುಗ ನಮ್ಮ ಕಡೆ ಪೆಟ್ರೋಲ್ ಬಾಂಬ್ ಎಸೆದ. ಹಾಗಾಗಿ ಇಷ್ಟೆಲ್ಲಾ! ಅವ ಸರಿಯಾಗಿ ಗುರಿ ಬೀಸಲಿಲ್ಲ. ಗುರಿ ತಲುಪಿದ್ದರೂ ನಮಗೆ ಏನೂ ಆಗುತ್ತಿರಲಿಲ್ಲ. ಭಯ ಪಡುವಂತಹುದ್ದು ಏನೂ ಇಲ್ಲ, ಇದೆಲ್ಲ ನಮಗೆ ದಿನನಿತ್ಯದ ಅನುಭವ”. ಇಷ್ಟೇ ಹೇಳಿದ್ದು.ತಾಲಿಬಾನಿಗಳು ಈ ಹುಡುಗರನ್ನು ಮುಂದೆ ಬಿಟ್ಟು ಮಿಲಿಟರಿ ಪಡೆಯನ್ನು ಗೊಂದಲಗೊಳಿಸಿ ಆಕ್ರಮಣ ಮಾಡುವುದು ಅವರ ಗೆರಿಲ್ಲಾ ಯುದ್ಧ ನೀತಿಗಳಲ್ಲಿ ಒಂದು. ಪೆಟ್ರೋಲ್ ಬಾಂಬುಗಳನ್ನೋ, ಗ್ರೇನೆಡ್ ಗಳನ್ನೋ ಇಲ್ಲ ಅಂದರೆ ಕಲ್ಲುಗಳನ್ನೋ ತೂರಿ ಇವರ ಸೇನಾ ವಾಹನ ಸಾಲನ್ನು ಧೃತಿಗೆಡಿಸಲು ಪ್ರಯತ್ನಿಸುವುದು ಸಾಮಾನ್ಯವಂತೆ. ಅಂದು ಪೆಟ್ರೋಲ್ ಬಾಂಬ್ ಎಸೆದು ಓಡಿ ಹೋದ ಸಣ್ಣ ಹುಡುಗರ ಹಿಂದೆ ಮರೆಯಲ್ಲಿ ಅವಿತುಕುಳಿತ ದೊಡ್ಡ ಉಗ್ರಗಾಮಿ ಪಡೆಯೇ ಇತ್ತಂತೆ. ಭಾರಿ ಗುಂಡಿನ ಚಕಮಕಿಯಲ್ಲಿ ಆ ಕಡೆ ಹಲವು ಹೆಣಗಳು ಉರುಳಿ, ಇನ್ನುಳಿದವರು ಓಡಿಹೋದ ಮೇಲೆ ಇವರು ಮುಂದೆ ಹೋದರಂತೆ. ಮಿಲಿಟರಿಯವರ ಕಡೆ ಎನೊಂದೂ ಸಾವು-ನೋವು ಆಗಲಿಲ್ಲ ಎಂದು ಗೊತ್ತಾಯ್ತು. ಇವೆಲ್ಲ ಸಂಘರ್ಷಗಳ ವಿವರಣೆಯನ್ನು ಮಿಲಿಟರಿಯವರು ಕೊಡುವುದಿಲ್ಲ. ನಮ್ಮ ಹಾಗೆ ಬೇರೆ ವಾಹನಗಳಲ್ಲಿ ಕುಳಿತಿದ್ದ ನಮ್ಮ ಹುಡುಗರು ತಾವು ಕಿಟಕಿಯಲ್ಲಿ ಇಣುಕಿ ನೋಡಿದ ವಿವರಗಳನ್ನು ಹೇಳುತ್ತಿದ್ದರು. ನಾವು ಇದ್ದ ಜಾಗದಿಂದ ಇಷ್ಟೆಲ್ಲ ನಡೆದಿರುವುದು ಕಾಣಲಿಲ್ಲ. ನನಗಂತೂ ಇದನ್ನೆಲ್ಲ ಕೇಳಿ ಎದೆ ಧಸಕ್ಕನೆ ಬಿದ್ದ ಹಾಗಾಯ್ತು! ಆ ಕ್ಷಣದಲ್ಲಿ ಎಲ್ಲ ದೇವರೂ ಒಮ್ಮೆ ಕಣ್ಮುಂದೆ ಬಂದು ಹೋಗಿದ್ದರು! ನೆನೆಸಿಕೊಂಡರೆ ಇಂದಿಗೂ ಎದೆ ಬಡಿದುಕೊಳ್ಳುವಂತಹ ಅನುಭವ ಅದು. ನಾವು ಹೋದ ನಂತರ ಆ ಜಾಗಕ್ಕೆ ಮತ್ತೊಂದು ಕೂಂಬಿಂಗ್ ತಂಡ ಬಂದಿತ್ತು ಎಂದು ತಡವಾಗಿ ಗೊತ್ತಾದದ್ದು. + + + +‘ಹೌಸ್-ಇ-ಮದದ್’ ದಾಟಿ ಕ್ಯಾಂಪ್ ಡ್ವಾಯರನ್ನು ತಲುಪ ಹೊತ್ತಿಗೆ ಸಂಜೆ ೪ ಅನಿಸುತ್ತೆ. ಆ ರಾತ್ರಿ ಅಲ್ಲಿ ತಂಗಿದ ನಂತರ ಬೆಳಗ್ಗೆ ಎದ್ದು ಅಲ್ಲಿಂದ ಹತ್ತು ಮೈಲುಗಳು ದಾಟಿ ಒಂದು ನಿರ್ಜನ ಪ್ರದೇಶದಲ್ಲಿ ಹೊಸ ಉಪಕ್ಯಾಂಪ್ ನಿರ್ಮಿಸುವ ಕೆಲಸ ನಮ್ಮದು. ಕೇವಲ ೪ ದಿನಗಳಲ್ಲಿ ಮುಗಿಸುವ ತೀವ್ರತರವಾದ ಜವಾಬ್ದಾರಿ. ಆ ರಾತ್ರಿ ನಮ್ಮೆಲ್ಲ ೮ ಜನಕ್ಕೂ ಮಿಲಿಟರಿ ಟೆಂಟಿನಲ್ಲಿ ವಾಸ. ಸುರೇಶ್ ಎನ್ನುವ ಅತ್ಯಂತ ನುರಿತ ಎಲೆಕ್ಟ್ರಿಷಿಯನ್ ರಾಜಸ್ಥಾನದವ. ಈಗಾಗಲೇ ೬-೭ ವರ್ಷಗಳ ಸುದೀರ್ಘ ಅನುಭವ ಇರಾಕ್ ಮತ್ತು ಇಲ್ಲಿನ ರಣಭೂಮಿಗಳಲ್ಲಿ. ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪುಗಳಿಗೆ ಹಲವಾರು ಬಾರಿ ಈ ರೀತಿ ಓಡಾಡಿದ ಅನುಭವವಿದೆ. ಕೆಲವು ಬಾರಿ ಮಿಲಿಟರಿ ಚಾಪರ್ ನಲ್ಲಿ ಓಡಾಡಿದ್ದನ್ನು ಹೇಳಿದ್ದಾನೆ. ಆ ದಿನ ನಡೆದ ಪುಟ್ಟ ಯುದ್ಧದ ಘಟನೆಯನ್ನು ಎಲ್ಲರ ಬಾಯಲ್ಲಿ ಅವರವರಿಗೆ ಇಣುಕಿದಷ್ಟನ್ನೂ ಕೇಳಿ ಹೀಗೆಯೇ ಆಗಿದೆ ಎಂದು ಕರಾರುವಾಕ್ಕಾಗಿ ವಿವರಿಸಿದ್ದೂ ಈತನೇ. ಹೀಗೆ ಹೆಲಿಕಾಪ್ಟರುಗಳಲ್ಲಿ ಓಡಾಡುವಾಗ ಬಾಗಿಲಿಗೆ ಆತುಕೊಂಡು ದೂರ್ಬಿನ್ನಿನಲ್ಲಿ ಕೆಳಗೆ ನೋಡುತ್ತ ನಿಲ್ಲುವ ಮಿಲಿಟರಿಯವರು ಕಾರಣವಿಲ್ಲದೆ ಕೆಳಗೆ ಕಾಣುವ ಊರಿನೆಡೆಗೋ ಅಥವಾ ಜನ ಹೆಚ್ಚು ಸೇರಿದ್ದ ಜಾಗದೆಡೆಗೋ ಗುರಿಯಿಟ್ಟು ಗುಂಡಿನ ಮೊರೆತವನ್ನು ಮಾಡುತ್ತಾರೆ, ಕೆಟ್ಟ ಮಾತುಗಳಲ್ಲಿ ಬೈಯುತ್ತಾರೆ ಎಂದು ಹೇಳಿದ್ದು ನನಗೆ ವಿಪರೀತ ನೋವನ್ನೂ ಗೊಂದಲವನ್ನೂ ಉಂಟುಮಾಡಿತ್ತು. ಅದೆಂತಹ ಚೇಷ್ಟೆ ಇದು ಎನಿಸಿತ್ತು. ಒಂದು ವೇಳೆ ಗುಂಡು ತಗುಲಿ ಅಮಾಯಕರು ಸತ್ತರೆ? ನೂರಾರು ದಿನಗಳು ಮನೆಯ ಸೌಖ್ಯದಿಂದ ಹೊರ ಇದ್ದು ಇಷ್ಟೊಂದು ಅಪಾಯವನ್ನು ಎದುರಿಸುತ್ತಿರುವ ಇವರ ಮನಸ್ಥಿತಿ ಹೀಗಾಗಿದೆಯೇ? ಅಥವಾ ಅದು ಅವರ ಯುದ್ಧ ನೀತಿಯ ಭಾಗವೇ? ಯುದ್ಧ ಭೂಮಿಯ ಕರಾಳ ಸತ್ಯಗಳು ಇನ್ನೂ ನೂರಾರಿವೆಯೇನೋ? ನನಗೆ ಕೊನೆಯಿಲ್ಲದ ಪ್ರಶ್ನೆಗಳು ಮನದಲ್ಲಿ. + +ರಾತ್ರಿ ಸರಿಯಾಗಿ ನಿದ್ದೆ ಹತ್ತಲಿಲ್ಲ. ಏನೇನೋ ತಾತ್ವಿಕ ಯೋಚನೆಗಳು ಮನಸ್ಸಿನಲ್ಲಿ ಹಾಯ್ದು ಹೋಗುತ್ತಿತ್ತು. ಮಧ್ಯರಾತ್ರಿ ‘ರಾಕೆಟ್ ಅಟ್ಯಾಕ್’ ಎಂದು ಸ್ಪೀಕರ್ ಕಿರುಚಿ ಇನ್ನಷ್ಟು ಗಾಬರಿ ಮಾಡಿಟ್ಟಿತ್ತು. ಬಂಕರ್ ನೆಡೆಗೆ ಓಡುವುದೇ ಆಯ್ತು ರಾತ್ರಿಪೂರ. ಬೆಳಗ್ಗೆ ಆದರೆ ಸಾಕು ಎಂದುಕೊಂಡೆ. ಬೆಳಗ್ಗೆ ಬೇಗ ತಿಂಡಿ ತಿಂದು ಹೊರಟು ನಿಂತೆವು. ಈಗ ನಮ್ಮ ಸಂಖ್ಯೆ ಸ್ವಲ್ಪ ಕರಗಿತ್ತು. ಕೆಲವರು’ ಹೌಸ್-ಇ-ಮದದ್ ‘ಕ್ಯಾಂಪಿನಲ್ಲಿ ಉಳಿದರೆ ಮತ್ತೊಂದಷ್ಟು ಜನ ಕ್ಯಾಂಪ್ ಡ್ವಾಯರಿನಲ್ಲಿ ಉಳಿದುಕೊಂಡರು. ಈಗ ನಾವು ೮ ಜನ ಮತ್ತು ಮಿಲಿಟರಿಯ ೨೮ ಜನರು. ನಮ್ಮ ಕ್ಯಾರವಾನ್ ಹೊರಟಿತು. ಸ್ಪಿನ್ ಬೋಲ್ದಾಕ್ ಪ್ರಾಂತ್ಯ ಅತ್ಯಂತ ಅಪಾಯಕಾರಿ ಎಂದು ಗೊತ್ತಿದ್ದರಿಂದಲೇ ಅತೀವ ಭಯ ಮನದಲ್ಲಿ. ಯಾವಾಗ ಹೇಗೆ ಧಾಳಿಯಾಗಬಹುದೋ ಎಂಬ ಭಯ ತೀವ್ರ ಕಾಡತೊಡಗಿತು. ನಾವು ಹೊರಟಿರುವುದು ಯಾವುದೇ ಮಿಲಿಟರಿ ಸುರಕ್ಷಾ ವ್ಯವಸ್ಥೆಯಿರದ ತೆರೆದ ಬಯಲು ಪ್ರದೇಶ. ಅದೂ ಕೂಡ ಸುತ್ತ ಬೆಟ್ಟ ಗುಡ್ಡಗಳಿಂದ ಆವೃತ ಜಾಗ. ಯಾವ ಬೆಟ್ಟದ ಕಡೆಯಿಂದ ರಾಕೆಟ್ ನುಗ್ಗಿ ಬರುವುದೋ, ಯಾವ ಭಾಗದಿಂದ ನೂರಾರು ಉಗ್ರರು ನುಗ್ಗಿ ಬಂದಾರೋ ಎಂಬ ಭಯ. + +ಕೇವಲ ೩೦-೪೦ನಿಮಿಷಗಳ ಪ್ರಯಾಣ ಅಷ್ಟೇ. ರಸ್ತೆ ಕಡಿದಾಗಿತ್ತು ಮತ್ತು ಕೆಟ್ಟದಾಗಿತ್ತು. ಬರೀ ಧೂಳು. ಮೊದಲು ಶಸ್ತ್ರ-ಸಜ್ಜಿತ ಮಿಲಿಟರಿಯವರು ಕೆಳಗೆ ಇಳಿದು ಸುತ್ತಮುತ್ತ ಓಡಾಡುತ್ತಿದ್ದುದು ಒಳಗಿಂದಲೇ ನೋಡುತ್ತಿದ್ದೆವು. ಸುಮಾರು ಹೊತ್ತಿನ ನಂತರ ನಮ್ಮನ್ನು ಕೆಳಗಿಳಿಯಲು ಸೂಚಿಸಿದರು. ಮೊದಲು ಹತ್ತು ನಿಮಿಷಗಳು ನಮಗೆ ಸೂಚನೆಗಳನ್ನು ಹೇಳಿಕೊಡಲು ಆಯ್ತು. ನಾವು ಅಲ್ಲಿ ಯಾವ ಸಂದರ್ಭಗಳಲ್ಲಿ ಹೇಗೆ ನಡೆದುಕೊಳ್ಳಬೇಕೆಂಬ ವಿಶದವಾದ ವಿವರಣೆಗಳು ಮತ್ತು ನಮಗೆ ಯಾವುದೇ ಅಪಾಯವಾಗದಂತೆ ನಮ್ಮನ್ನು ನೋಡಿಕೊಳ್ಳುವಿರೆಂಬ ಅಭಯ. ಇಲ್ಲಿ ಕೆಲಸ ಮುಗಿಸಿ ಆದಷ್ಟು ಬೇಗ ಹೊರಡಬೇಕು, ನಿಗದಿಗಿಂತ ಇನ್ನೂ ಬೇಗ ಮುಗಿದರೆ ಒಳ್ಳೆಯದೇ ಎಂದೆಲ್ಲಾ ನಮ್ಮನ್ನು ನಾವು ಹುರಿದುಂಬಿಸಿಕೊಂಡೆವು. ಅವರೆಲ್ಲ ನಮ್ಮ ಸುತ್ತ ಪಹರೆಗೆ ನಿಂತರು. ಕೆಲಸ ಶುರುವಾಯ್ತು. ನಾನು, ಅಮೀರ್ ಮತ್ತು ಆ ಮಿಲಿಟರಿ ಪಡೆಯ ಮುಖ್ಯಸ್ಥ ‘ಸಾರ್ಜಂಟ್ ಜೆಫ್’ ಯೋಜಿಸಿದಂತೆ ಮೊದಲ ದಿನ ಅಗತ್ಯವಿರುವ ಟೆಂಟುಗಳನ್ನು ಜೋಡಿಸಿ ನಿಲ್ಲಿಸಿ ವಿದ್ಯುತ್ ಮತ್ತು ನೀರಿನ ಸಂಪರ್ಕ ವ್ಯವಸ್ಥೆ ಕಲ್ಪಿಸುವುದು. ಎರಡನೇ ದಿನ ಅಡುಗೆ ಮಾಡುವ ಮಾಡ್ಯುಲರ್ ಕ್ಯಾಬಿನ್, ಲಾಂಡ್ರಿ ಕ್ಯಾಬಿನ್ ಮತ್ತು ಇತರೆ ಅಗತ್ಯ ವ್ಯವಸ್ಥೆ. ಮೂರನೇ ದಿನ ಕ್ಯಾಂಪಿನ ಸುತ್ತ ತಂತಿ ಸುರುಳಿ ಬೇಲಿಯನ್ನು ಹಾಕುವುದು. ಅಷ್ಟರಲ್ಲಿಯೇ ಪಕ್ಕದ ಕ್ಯಾಂಪ್ ಡ್ವಾಯರಿನಿಂದ ಕಾಂಕ್ರೀಟ್ ಟಿ-ವಾಲ್ ಗಳು ಬಂದಿರುತ್ತೆ. ಅವನ್ನು ಅಂದೇ ಸುತ್ತ ಜೋಡಿಸುವುದು ಎಂದು. ಅಂದುಕೊಂಡ ಹಾಗೆ ಮೊದಲ ದಿನದ ಕೆಲಸ ಮುಗಿಯಿತು, ಟೆಂಟ್ ವ್ಯವಸ್ಥೆಯಾಯ್ತು. ಒಂದು ಪುಟ್ಟ ಮಾಡ್ಯುಲರ್ ಜೆನರೇಟರ್ ಮತ್ತು ನೀರಿನ ಟ್ಯಾಂಕುಗಳನ್ನು ಕ್ಯಾರವಾನಿನಲ್ಲಿ ಈಗಾಗಲೇ ತಂದಿದ್ದೆವು. ಹಲವಾರು ತಿಂಗಳಿಗೆ ಸಾಕಾಗುವಷ್ಟು ಟ್ರಕ್ಕುಗಟ್ಟಲೆ ಕುಡಿಯುವ ನೀರಿನ ಬಾಟಲುಗಳು. ಬಳಸುವ ನೀರನ್ನು ಹತ್ತಿರದ ಕ್ಯಾಂಪ್ ಡ್ವಾಯರಿನಿಂದ ಟ್ಯಾಂಕರಿನಲ್ಲಿ ಪ್ರತಿನಿತ್ಯ ತಂದು ಟ್ಯಾಂಕುಗಳಿಗೆ ತುಂಬಿ ಹೋಗುತ್ತಿದ್ದರು. ಸ್ನಾನಕ್ಕೆ ಮತ್ತು ಮುಖ ತೊಳೆಯಲು ಬಳಸಿದ ನೀರು ಅಲ್ಲಿಯೇ ತೆಗೆದ ಇಂಗುಗುಂಡಿಗೆ ಹೋಗುತ್ತಿತ್ತು. ಕಕ್ಕಸ್ಸು ಕ್ಯಾಬಿನ್ನುಗಳಿಂದ ಶೇಖರವಾದ ಗಲೀಜನ್ನು ತೆಗೆಯಲು ದಿನಾಲೂ ಸಿವೇಜ್ ಟ್ರಕ್ಕುಗಳು ಬರುತ್ತಿದ್ದವು. ಒಂದು ಕ್ಯಾಂಪಿನಿಂದ ಇನ್ನೊಂದು ಕ್ಯಾಂಪಿಗೆ ಬರುವ ಆಹಾರ, ನೀರು ಮತ್ತು ಸಿವೇಜ್ ಟ್ರಕ್ಕುಗಳನ್ನು ರಸ್ತೆ ಮಧ್ಯದಲ್ಲಿ ಉಗ್ರರು ಉಡಾಯಿಸಿಬಿಡುತ್ತಿದ್ದರು ಇಲ್ಲವೇ ಟ್ರಕ್ ಸಮೇತ ಅಪಹರಿಸಿಬಿಡುತ್ತಿದ್ದರು. ಹಾಗಾಗಿ ಮಿಲಿಟರಿ ಎಸ್ಕಾರ್ಟ್ ಜೊತೆಯಲ್ಲೇ ಸರಬರಾಜಿನ ಸಾಗಣೆ ಮಾಡುತ್ತಿದ್ದರು. + +ಅಂದು ರಾತ್ರಿ ತೀವ್ರ ಚಳಿಯಿತ್ತು. ಯುದ್ಧಟ್ಯಾಂಕ್ ವಾಹನಗಳನ್ನು ಟೆಂಟುಗಳ ಸುತ್ತ ವೃತ್ತಾಕಾರವಾಗಿ ನಿಲ್ಲಿಸಿ ಸುರಕ್ಷಾ ಕವಚವನ್ನು ನಿರ್ಮಿಸಿದ ರೀತಿ ನನಗೆ ತುಂಬಾ ಇಷ್ಟವಾಯ್ತು. ತಂದಿದ್ದ ಆಹಾರ ಪೊಟ್ಟಣಗಳನ್ನು ಬಿಚ್ಚಿ ತಿಂದೆವು. ಕೆಲವು ಪ್ರೊಟೀನ್ ಬಾರ್ಗಳನ್ನು ತಿಂದು ಅದೆಂತಹುದೋ ಸೂಪಿನ ಪೌಡರನ್ನು ನೀರಿಗೆ ಬೆರೆಸಿ ಕುಡಿದೆವು. ಮೊದಲ ಬಾರಿಗೆ ಆ ತರಹದ ಊಟ, ವಿಚಿತ್ರ ಅನಿಸಿತ್ತು. ಕೆಲವರು ಟೆಂಟಿನೊಳಗೆ, ಕೆಲವರು ವಾಹನದೊಳಗೆ ಮಲಗಿದರು. ಪಾಳಿಯಂತೆ ಕೆಲವರು ರಾತ್ರಿಯೆಲ್ಲ ಪಹರೆ ಕಾಯ್ದರು. ನಿಜವಾಗಿಯೂ ನಾವು ಅತಿ ಅಪಾಯದ ಜಾಗದಲ್ಲಿದ್ದೆವು. ನಮ್ಮ ದುರಾದೃಷ್ಟಕ್ಕೆ ಉಗ್ರರಿಗೆ ಈ ವಿಷಯ ತಿಳಿದಿದ್ದರೆ ನಮ್ಮ ಮೇಲೆ ಧಾಳಿ ಖಂಡಿತ ಎಂದು ಮಾತಾಡಿಕೊಂಡೆವು. ಸರ್ವಸಜ್ಜಿತ ಮಿಲಿಟರಿ ಕ್ಯಾಂಪಿನೊಳಗೆ ಕೆಲಸ ಮಾಡುವುದು ಹೆಚ್ಚುಗಾರಿಕೆಯೇನಲ್ಲ. ಇಂತಹ ಹೊಸ ಕ್ಯಾಂಪ್ ನಿರ್ಮಾಣ ಅತಿ ಅಪಾಯಕಾರಿ ಹಾಗೂ ಚಾಲೆಂಜ್ ನಿಂದ ಕೂಡಿದ್ದು. ಹೆಚ್ಚು ಧಾಳಿಗಳು ಇಂತಹ ಸಂದರ್ಭದಲ್ಲೇ ಆಗುವುದು ಎಂದು ನಂತರ ನನಗೆ ಹಲವರು ಹೇಳಿದರು. ಕೆಲವರು ತುಂಬಾ ಹೆದರಿದ್ದರು. ಆ ರಾತ್ರಿ ಕೂಡ ನಿದ್ದೆ ಹತ್ತಲಿಲ್ಲ. + + + +ಬೆಳಗ್ಗೆಯಾಗಿತ್ತು. ಇನ್ನೂ ಬದುಕಿದ್ದೀವಿ ಎಂದು ವಿಚಿತ್ರ ಖುಷಿಯಿಂದ ನಾವೆಲ್ಲ ಪರಸ್ಪರ ನಕ್ಕು ಶುಭಾಶಯ ವಿನಿಮಯ ಮಾಡಿಕೊಂಡೆವು. ಇನ್ನೆರೆಡು ದಿನ ಅಷ್ಟೇ, ವಾಪಸ್ ಹೊರಡೋಣ ಎಂದೆಲ್ಲಾ ಮಾತಾಡಿದೆವು. ಪಕ್ಕದ ಕ್ಯಾಂಪ್ ಡ್ವಾಯರಿನಿಂದ ಆಹಾರ ಸಾಮಗ್ರಿಯಿದ್ದ ಒಂದು ಸಣ್ಣ ಕಂಟೈನರ್ ಬಂದಿತ್ತು. ನಮ್ಮಲ್ಲಿದ್ದ ಒಬ್ಬ ಅಡುಗೆಯವ ಅಂದು ಅಡುಗೆ ಮಾಡಿದ. ದೇವರಿಗೆ ಕೃತಜ್ಞತೆ ಸಲ್ಲಿಸುತ್ತಾ ಹರಟುತ್ತಾ ಬಿಸಿ ಊಟವನ್ನು ಸವಿದೆವು. ಇನ್ನೊಂದು ರಾತ್ರಿ ಕೂಡ ಹೀಗೆಯೇ ಕಳೆಯಿತು. ಅಂದು ಗಡದ್ದಾಗಿ ನಿದ್ದೆ ಹೋದೆವು. ಕೊನೆಯ ದಿನವೂ ಎಲ್ಲ ಅಂದುಕೊಂಡಂತೆ ಆಯ್ತು. ಬಹು ಶಿಸ್ತಿನ ಪೂರ್ವ ಸಿದ್ಧತೆಯ ಹಾಗೂ ಅಚ್ಚುಕಟ್ಟಾದ ವ್ಯವಸ್ಥೆ ಆದ್ದರಿಂದ ಎನೊಂದೂ ಸಮಸ್ಯೆ ಆಗಲಿಲ್ಲ. ಮೂರನೇ ರಾತ್ರಿಯೂ ಹೀಗೇ ಕಳೆಯಿತು. ನಾಲ್ಕನೆಯ ದಿನ ಮಧ್ಯಾಹ್ನ ನಮ್ಮನ್ನು ಕ್ಯಾಂಪ್ ಡ್ವಾಯರಿಗೆ ತಂದು ಇಳಿಸಿದರು. ಅಡುಗೆಯವ ಸೇರಿ ಒಂದಿಬ್ಬರು ಅಲ್ಲೇ ಉಳಿದರು. ಕ್ಯಾಂಪ್ ಡ್ವಾಯರ್ ಏರ್-ಸ್ಟ್ರಿಪ್ ಹೊಂದಿರುವ ಸುಸಜ್ಜಿತ ಮಿಲಿಟರಿ ಕ್ಯಾಂಪ್. ಯೂ‌ಎಸ್ ಮರೀನ್ಸ್ ಪಡೆ ಆ ಕ್ಯಾಂಪನ್ನು ನಿರ್ವಹಿಸುತ್ತಿತ್ತು. ಅಮೆರಿಕೆಯ ಸೇನೆಯಲ್ಲೇ ಅತಿ ಸಮರ್ಥ ಪಡೆಯೆಂಬ ಹೆಗ್ಗಳಿಕೆ ಅವರದ್ದು. ಈ ಶಿಸ್ತಿನ ಸಿಪಾಯಿಗಳೇ ಪ್ರಧಾನವಾಗಿ ಇದ್ದ ಇನ್ನೊಂದು ಕ್ಯಾಂಪ್ ‘ಲೆದೆರ್ನೆಕ್’ ಬಗ್ಗೆ ಮುಂದೆ ಸಾಕಷ್ಟು ಅತಿ ವಿಶೇಷವಾದ ವಿಷಯಗಳನ್ನು ತಿಳಿಸುವುದಿದೆ. ಅಲ್ಲಿಂದ ನಾವು ಕಂದಹಾರ್ ಕ್ಯಾಂಪ್ ಕಡೆಗೆ ಮಿಲಿಟರಿ ವಿಮಾನದಲ್ಲಿ ವಾಪಸಾದೆವು. ಕಂದಹಾರಿನಿಂದ ಯಾಕೆ ನಮಗೆ ವಿಮಾನದಲ್ಲೇ ಕಳುಹಿಸಲಿಲ್ಲವೋ ಎಂದು ಗೊಣಗಿದ್ದೂ ಕೂಡ ನಿಜ. ಇನ್ನೊಂದೆಡೆ ನಾವೇ ಯುದ್ಧ ಜಯಿಸಿದ ಹಾಗೆ ಬೀಗಿ ಪ್ರಾಣ ಉಳಿಸಿಕೊಂಡು ಬಂದೆವಲ್ಲ ಎನ್ನುವ ಸಂತೋಷ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_159.txt b/Kenda Sampige/article_159.txt new file mode 100644 index 0000000000000000000000000000000000000000..b83d79b7872302107ad4a92fd0d8103b822a16a0 --- /dev/null +++ b/Kenda Sampige/article_159.txt @@ -0,0 +1,33 @@ +ರವಿಕುಮಾರ್ ಹಂಪಿ ಅವರ ಅನುವಾದಿತ ಕಾದಂಬರಿ “ನದಿಯೊಂದು ನಿದ್ರಿಸಿದಾಗ” ಒಂದೇ ಸಿಟ್ಟಿಂಗ್‌ನಲ್ಲಿ ಓದಿ ಮುಗಿಸಿದೆ. ಆದರೆ ಈಗಾಗಲೇ ಒಂದು ಬಾರಿ ಓದಿದರೂ ಎರಡನೇ ಸುತ್ತಿನ ಓದಿಗೆ ತೆರೆದುಕೊಂಡಿದ್ದೇನೆ ಈ ಬರೆಹದ ಜೊತೆಗೆ… ಕಾದಂಬರಿ ತುಂಬಾ ಸೊಗಸಾಗಿ ಮೂಡಿಬಂದಿದೆ. ಇದೊಂದು ಅನುವಾದವೇ? ಎನಿಸುವಷ್ಟು ಸಹಜವಾಗಿ ಓದಿಸಿಕೊಂಡು ಹೋಗುತ್ತದೆ. + +ಏನೋ ಸದ್ದಾಯಿತು! ಕಾಳರಾತ್ರಿಯ ಒಂಟಿತನದ ಸದ್ದು ಸತ್ತವರನ್ನು ಎದ್ದು ಕೂರುವಂತೆ ಮಾಡುತ್ತದೆ ಅನ್ನುತ್ತಾರಲ್ಲ ಹಾಗೆ ಆಯಿತು ಈ ನಡುರಾತ್ರಿ 01:43 ಸಮಯ, ಓದಿನ ನಡುವೆಯೇ ಖುಷಿ ತಾಳಲಾರದೆ ನಿಮಗೆ ಹೀಗೆ ಹೇಳಲು ಬಯಸುತ್ತಿದ್ದೇನೆ. + +(ರವಿಕುಮಾರ್ ಹಂಪಿ) + +ಜನರಿಂದಲೇ ಸಾಧ್ಯವಾದಷ್ಟು ದೂರ ಇರಲು ಇಚ್ಚಿಸುವ ನಾನು, ನಾನು ವೀಲಿ ನಾ? ನನ್ನ ಬಾಲ್ಯದ ಕನಸುಗಳ ಪ್ರತಿಬಿಂಬದಂಥ ಈ ಕಾದಂಬರಿ ಕುರಿತು ನಾನಾದರೂ ಏನು ಹೇಳಲು ಸಾಧ್ಯ ಹೇಳಿ? ಈಗ ಈ ಕತ್ತಲೆ ಸಾಮ್ರಾಜ್ಯದ ಕಾಡಿನಲ್ಲಿ ನಾನಿದ್ದೇನೆ. ಕೇಡು, ಅಸೂಯೆ, ಹೊಟ್ಟೆ ಕಿಚ್ಚಿನಿಂದ ಉರಿಯುವ ಜನರಿಂದ ದೂರವಿರಲು ಓದು ಮತ್ತು ಕಾಡು ನಿಜವಾಗಿಯೂ ಎಷ್ಟೊಂದು ಸೂಕ್ತ ಅನಿಸುವುದರ ಜೊತೆಗೆ ಈ ನಿಟ್ಟಿನಲ್ಲಿ ಸದಾಕಾಲವೂ ನೀರಡಿಕೆ. + +ಎಲೆಗಳ ಮೇಲಿನ ನಡಿಗೆ ಯಾವಾಗಲೂ ಖುಷಿ ಕೊಡುತ್ತದೆ. ಹಳ್ಳಿದಾರಿಗಿಂತಲೂ ಕಾಡಿನ ಹಾದಿ ನಡೆಯುತ್ತಾ, ನಡೆಯುತ್ತಾ, ಓಡುತ್ತಾ, ಓಡುತ್ತಾ, ಆಕಾಶವೂ ಕಾಣಿಸದಂಥ ಕೆಟ್ಟಕಾಡಿನೊಳಗೆ ಮೈಲಿಗಟ್ಟಲೆ ದೂರ ಹೊಕ್ಕು ಕಳೆದು ಹೋಗಿ ಬಿಡಬೇಕು. ನನಗೆ ನಾನೇ ಕಳೆದು ಹೋದೆ ಅನಿಸುವಂತೆ. ಮೊದಲೇ ನನಗೆ ಕಾಡು ಎಂದರೆ ತುಂಬಾ ಇಷ್ಟ, ಅದೊಂದು ನನಗೆ ಹೊಕ್ಕುಳುಬಳ್ಳಿ ಸಂಬಂಧದಂತೆ. ಅದು ಇಂತಹಾ ಈ ಸಂದರ್ಭದಲ್ಲಿ “ನದಿಯೊಂದು ನಿದ್ರಿಸಿದಾಗ” ಕಾದಂಬರಿ ಓದು ಇನ್ನಷ್ಟು ಮತ್ತಷ್ಟು ರೋಮಾಂಚನವನ್ನು ತಂದಿದ್ದು, ನಾನು ಮತ್ತೆ ನನ್ನ ಬಾಲ್ಯದ ದಿನಗಳನ್ನು ಮೆಲುಕು ಹಾಕಲು ಸಾಧ್ಯವಾಗಿದ್ದು ಕಾಕತಾಳೀಯವೇ ಸರಿ. ಅಲೌಕಿಕ ಹುಡುಕಾಟದಲ್ಲಿ ಯಾವಾಗಲೂ ಅಲೆಯುವ ನಾನು, ಪೂರ್ಣಚಂದ್ರ ತೇಜಸ್ವಿ ಅವರ ಕಡೆ ಒಂದು ಬೆರಗು ಕಣ್ಣಿನಿಂದಲೇ ನೋಡುತ್ತೇನೆ. ಈಗ ನೀವು ಜೊತೆಯಾದರಿ, ಆಗಾಗ ನಿಮ್ಮ ಜೊತೆಗೆ ಮಾತನಾಡಬಹುದು ಎಂಬ ಸಂತೋಷ ಮನೆ ಮಾಡಿದೆ. ಈಗ ನಾನು ಯಾವುದೋ ಒಂದು ಹೊಸ ಕಾಡಿಗೆ ಪ್ರವೇಶಿಸಿದ್ದೇನೆ. ಅಲ್ಲಿ ಆ ಹಂದಿ, ಕಾಡೆಮ್ಮೆ, ಕರಡಿ, ಅಳಿಲು, ಕೋತಿ, ಹುಲಿ, ಕಾಡುಕೋಣ, ಕಾಡುನಾಯಿ, ಎಮ್ಮೆಗಳು, ಹಾಗೆ ವೀಲಿ, ಆ ಕಾಡು ಜನರ ಜೊತೆ ನಾನು ಹೆಜ್ಜೆ ಹಾಕುತ್ತಿದ್ದೇನೆ ಎಂದೇ ಎನ್ನಿಸುತ್ತಿದೆ. + +ಕಾಡಿನ ಮಧ್ಯೆ ಬೆಂಕಿಗಿಡ, ಜೋತೋ ಸಸ್ಯ, ಗಾರಾ (ಬ್ರಾಹ್ಮಿಸೊಪ್ಪು), ಜರಿಗಿಡ, ಗಾಪಾ (ಕಾಡುಬಾಳೆ), ಟಿರುಟಿಫು, ವಿಲ್ಹುಲಿ ನಾ ಸೊಪ್ಪು, ಇನ್ನಿತರ ಸಸ್ಯ ಜೊತೆಗೆ ಒಂದು ಟೆಂಟು ಹಾಕಿಕೊಂಡು ನಾನು ಇರುವ ಆಶೆ ಜೀವಂತವಾಗಿದೆ. “ಏಳು, ತಕ್ಷಣ ಹೊರಡು, ಅಪಾಯ, ಅಪಾಯ…” ಮನಸು ಗಂಟೆ ಹೊಡೆಯುತ್ತಲೇ ಇದೆ. ನಾನು ಈಗ ಈ‌ ಓದು ಮುಗಿಸಿ ವಾಪಾಸು ಕಾಡಿಗೆ ಹೋಗ್ಬೇಕು “ಮೆಕಸೇನೋ” ಳನ್ನು ನಾನು ಭೇಟಿಯಾಗಬೇಕು. ನನಗೆ ಸಿಗಬಹುದು ಅಲ್ವಾ? ಹಂಪಿ ಮಾಸ್ಟರ್! “ನನ್ನ ಪ್ರಿಯ ಆತ್ಮವೇ ನಿನಗೆ ನನ್ನ ನೆನಪು, ಆತ್ಮವೇ ನಿನಗೆ ಧನ್ಯವಾದ!” + + + +“ಆತ್ಮದ ಹುಲಿ, ಹೃದಯದ ಕಲ್ಲು” ನನ್ನ ಆತ್ಮದ ಹುಡುಕಾಟದಲ್ಲಿ ನಾನು ಇದ್ದೇನೆ. ನೀವು? ನಿಮ್ಮ ಮಗಳಿಗೆ ಅನಿಸಿದಂತೆ ನನಗೆ ಪ್ರತಿ ಕ್ಷಣವೂ ಹಾಗೆ ಅನಿಸಿದೆ, ಅನಿಸುತ್ತದೆ ಹಾಗೂ ನಾನು ಅದೇ ಮಂಪರಿನಲ್ಲಿ ಮುಳುಗಿರುತ್ತೇನೆ. ಯಾವುದಾದರೊಂದು ಆತ್ಮ ನನಗೆ ಎದುರಾಗಬಹುದು ಎಂದು ಮತ್ತು ಆತ್ಮಗಳ ಕಾಡಿಗೆ ಹೊಕ್ಕು ಬಿಡಬೇಕೆಂಬ ಆಶೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮೆಲುವಾದ, ಜೋಂಪು ಹತ್ತಿಸುವ ಕಾಡಿನ ಹಾಡು ಹಾಡಿ, ಆತ್ಮದ ಹಾಡು ಕೇಳಿ, ಕರುಣೆ ತುಂಬಿದ ಮೋಹಕ, ಪರಮ ಆತ್ಮಸುಂದರಿ ಜೊತೆಗೆ ಕಾಡಿನ ಹಾಡಿಗೆ ಹೆಜ್ಜೆ ಹಾಕಬೇಕು. ಏಕಾಂಗಿ ಹಳ್ಳಿಯ ಪುಟ್ಟ ಮನೆಯಲ್ಲಿ ವಾಸಿಸಬೇಕು. + +“ನಿದ್ರಿಸುವ ನದಿಯೆಡೆಗೆ ಹೋಗುವವರ ಎದೆಯಲ್ಲಿ ಎಳ್ಳಷ್ಟೂ ಭಯ ಇರಬಾರದು. ಅಕಸ್ಮಾತ್ ನಿನ್ನ ಮನಸ್ಸಿನಲ್ಲಿ ಒಂದೇ ಒಂದು ಕ್ಷಣ ಭಯ ಹೊಕ್ಕರೆ ನೀನು ಸತ್ತಂತೆ ಸರಿ, ನಿನ್ನ ಆತ್ಮಕ್ಕೆ ಅವುಗಳನ್ನು ಎದುರಿಸಲು ಆಗುವುದಿಲ್ಲ. ನೀನು ಪಾಪದ ಕೆಲಸ ಮಾಡಿದ್ದರೆ ಆ ಆತ್ಮಗಳು ನಿನ್ನನ್ನು ಸುಲಭವಾಗಿ ಮುಗಿಸಿಬಿಡುತ್ತವೆ. ಭಯಾನಕ ಅಂತ್ಯ ನಿನ್ನದಾಗುತ್ತದೆ. ಶುದ್ಧ ಮನಸ್ಸು ಮತ್ತು ಒಳ್ಳೆಯ ಹೃದಯ ನಿನ್ನ ರಕ್ಷಣೆ, ನಿದ್ರಿಸುವ ನದಿಯೆಡೆಗೆ ಹೋಗುವಾಗ ಯಾರೊಡನೆಯೂ ದ್ವೇಷ ಹೊಂದಿರಬಾರದು. ಮನಸ್ಸಿನಲ್ಲಿ ಕೆಡುಕು, ದುಷ್ಟತನ ಇರಬಾರದು. ಒಳ್ಳೆಯ ಆಲೋಚನೆ, ಶುದ್ಧ ಹೃದಯ ಇದ್ದವರು ಮಾತ್ರ ನಿದ್ರಿಸುವ ನದಿಯ ಸಮೀಪ ಹೋಗಲು ಸಾಧ್ಯ. ಅದನ್ನು ಮುಟ್ಟಲು ಸಾಧ್ಯ. ಇಲ್ಲದಿದ್ದರೆ ಸತ್ತು ಹೋಗುತ್ತಾರೆ. ನಿನ್ನಲ್ಲಿ ದುರಾಸೆ, ಕೆಟ್ಟತನ ಇದ್ದರೆ ನಿದ್ರಿಸುವ ನದಿ ಮುಟ್ಟುವ ಆಸೆ ಬಿಡುವುದು ಒಳ್ಳೆಯದು” ಈಗ ಹೇಳಿ ನಾನು ನಿದ್ರಿಸುವ ನದಿಯನ್ನು ಸೇರಲು ಬಯಸದೇ ಹೋದರೆ ಏನಿದೆ ಈ ಬದುಕಿಗೆ ಅರ್ಥ? + +ಇನ್ನೂ ಓಕ್, ಸಿಲ್ವರ್ ಓಕ್ ಮರಗಳು, ಹುಳಿ, ರುಚಿ ಮೆಜೋಸಿ ಹಣ್ಣುಗಳು, ಬಾಳೆ ಹಣ್ಣುಗಳು, ಕಾಡುಬಾಳೆಯಂತೆ ವೀಲಿ, ಇಡಿಲಿ, ತೀಸೋಯೋಕೋ, ಸುಬಾಲೆ, ಏಟಿ, ಸೆಲೋನಾ, ಪೆಲೋನಾ, ವಿಭು, ಅಸಾಕೋ, ರೋಕೋ, ಬೆರಳ ತುದಿಯಲ್ಲಿ ಸಾವು ತರುವ ಶಕ್ತಿ ಇರುವ ಜೊತೆಗೆ ಔಷಧಿ ಸಸ್ಯಗಳ ಬಗೆಗಿನ ತಿಳುವಳಿಕೆಯ “ಕರ್ಫ್ಯೂಮಿಯಾ” ಬಗ್ಗೆ ನಾವು ಈ ಕಾದಂಬರಿ ಓದಿಯೇ ತಿಳಿಯಬೇಕು. ಅಲ್ಲದೆ “ನನಗೆ ಖಂಡಿತ ಗೊತ್ತು ನಿನ್ನಲ್ಲೇನೋ ಮಹತ್ವದ್ದಿದೆ. ಅದು ಯಾರ ಬಳಿಯೂ ಇರಲಾರದ್ದು, ಆದ್ದರಿಂದ ಅದನ್ನು ಪಡೆಯಲು ಜನ ನಿನಗೆ ಮೋಸ ಮಾಡಬಹುದು. ಅದರ ಕುರಿತು ಜಾಗ್ರತೆ ವಹಿಸು. ಯಾರಿಗೂ ಮೋಸ ಮಾಡಬೇಡ, ನೀನೂ ಮೋಸ ಹೋಗಬೇಡ. ಹೃದಯ ಶುದ್ಧತೆ ಬಹಳ ಮುಖ್ಯವಾದುದು.” ಹೌದೇ? + + + +ನಿಜಾ ಎನಿಸುತ್ತದೆ ನನಗೆ:“ತುಂಬಾ ಜಾಗ್ರತೆ ಮಗನೇ, ಅಪಾರ ತಾಳ್ಮೆ ಇದ್ದವರಿಗೆ ಮಾತ್ರ ನಿದ್ರಿಸುವ ನದಿಯ ಆಶೀರ್ವಾದ ಸಿಗುತ್ತದೆ, ಕಾಯಬೇಕು, ಕಾಯಬೇಕು ನೀನು ತಯಾರಾಗುವವರೆಗೆ ಕಾಯಬೇಕು…” ಹೌದು ಹಾಗೆಯೇ ಅನಿಸುತ್ತಿದೆ ನನಗೆ “ನದಿಯೊಂದು ನಿದ್ರಿಸಿದಾಗ; ಕನಸೊಂದು ನನಸಾದಾಗ” ಅದನ್ನು ಕಾಣಲು ಧ್ಯಾನಸ್ಥ ಸ್ಥಿತಪ್ರಜ್ಞೆರಿಗೆ ಮಾತ್ರ ದಕ್ಕುವುದು ಎಂದು. + +“ಇದು ನನ್ನ ದಿನನನ್ನದು ಪರಮ ಆತ್ಮಈ ನದಿಯ ಸಂಪತ್ತು ನನಗೂ ಸೇರಿದೆಈ ಕಲ್ಲು ನನ್ನ ಆತ್ಮಕ್ಕೆ ಸೇರಿದೆ + +ಆತ್ಮಗಳೊಂದಿಗಿನ ಹೋರಾಟಆತ್ಮವೊಂದು ಇನ್ನೊಂದು ಆತ್ಮಕ್ಕೆ ಮಾತ್ರಸ್ಪಂದಿಸುತ್ತದೇ ಅಂತೆ + +ಆತ್ಮದ ಜಯಅಂತಿಮ ವಿದಾಯ ಹೇಳಲಾದರೂಆ ಆತ್ಮ ನನ್ನ ಮತ್ತೊಮ್ಮೆ ಹುಡುಕಿಕೊಂಡು ಬರಲಿನಾನು ಕಾಯುತ್ತೇನೆ ಕಾಯುತ್ತಲೇ ಇರುತ್ತೇನೆ + +ಹಾಲು ಕುಡಿಸುತ್ತಾಮಗುವನ್ನು ಬೆಚ್ಚಗಿಡಲುಎದೆಗೊತ್ತಿಕೊಂಡಂತೆನನ್ನ ಎದೆ ಒತ್ತಿಕೋ ಆತ್ಮದ ಹುಲಿ!” + +ಸುಮಿತ್ ಮೇತ್ರಿ ವಿಜಯಪುರ ಜಿಲ್ಲೆಯ ಹಲಸಂಗಿಯವರು. ಕವಿತೆ/ಲಹರಿ/ಕಥೆ/ಪ್ರಬಂಧಗಳು ಬರೆಯುವಲ್ಲಿ ಆಸಕ್ತಿ ಹೊಂದಿದ್ದಾರೆ. ಫೋಟೋಗ್ರಾಫಿ ಅವರ ಮೆಚ್ಚಿನ ಹವ್ಯಾಸ. ಸದ್ಯ ರಾಯಚೂರು ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಥಟ್ ಅಂತ ಬರೆದು ಕೊಡುವ ರಶೀದಿಯಲ್ಲ ಕವಿತೆ’ (ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅತ್ಯುತ್ತಮ ಕೃತಿ ಪ್ರಶಸ್ತಿ ಪುರಸ್ಕೃತ) ಮತ್ತು ‘ಈ ಕಣ್ಣುಗಳಿಗೆ ಸದಾ ನೀರಡಿಕೆ’ ಇವರ ಪ್ರಕಟಿತ ಕವನ ಸಂಕಲನಗಳು. \ No newline at end of file diff --git a/Kenda Sampige/article_16.txt b/Kenda Sampige/article_16.txt new file mode 100644 index 0000000000000000000000000000000000000000..04926150799b95b1ea353227bc188afd658bfa14 --- /dev/null +++ b/Kenda Sampige/article_16.txt @@ -0,0 +1,20 @@ +ಮೊದಲ ಮಳೆಯಂತೆಎದೆಗೆ ಇಳಿದೆ ಮೆಲ್ಲಗೆಮೊದಲ ಕನಸಂತೆಒಲವೇ ಒಲಿದೆ ಮೆಲ್ಲಗೆ…..-ಜಯಂತ ಕಾಯ್ಕಿಣಿ + +ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ನಿಖರ ಟಿಪ್ಪಣಿಯಿಲ್ಲ. ಕಣ್ಣುಗಳಿಂದ ಕಣ್ಣುಗಳಿಗೆ, ಹೃದಯದಿಂದ ಹೃದಯಕ್ಕೆ ಆ ರೂಪಕ ಥರಾವರಿಯಾಗಿ ಬದಲಾಗುತ್ತದೆ. ಘಟ್ಟದ ಮಡಿಲಲ್ಲಿ ಸಿಗುವ ಮಳೆ, ಹಣೆಯಲ್ಲಿ ಮಾಯವಾಗಿ ಕೆಂಪಗಿನ ಕೆಂದಾವರೆಯ ದರ್ಶನವಾದಂತೆ, ಹನಿಗಳ ಕಿರುನಗೆಯಿಂದ ಆರಂಭವಾಗಿ ಎಕರೆಗಟ್ಟಲೆ ಆಪೋಶನ ತೆಗೆದುಕೊಳ್ಳುವ ನದಿಯಂತೆಯೇ ಪ್ರೀತಿ, ಕನ್ನಡಿ ಸೆರೆಹಿಡಿಯಲಾಗದ ಪ್ರತಿಬಿಂಬ. ಅನಂತ ಅಲಗುಗಳು, ತಿರುವುಗಳಿರುವ ರಾಗಮಾಲಿಕೆ. ಪದಗಳು ಒಲಿಯದ ಕವಿತೆ. ಒಲವಿನ ಜನನವೇ ಜಗದಲ್ಲಿರುವ ಒಂದು ಸುಂದರ ಬೆರಗು. ವಿಭಿನ್ನ ಕಾರಣಗಳು, ವೈವಿಧ್ಯಮಯ ಅನುಭಾವಗಳು. ಅನೂಹ್ಯತೆ, ಅಚ್ಚರಿಗಳ ಮೂಟೆಯದು. ಎಲ್ಲವುಗಳ ಆಚೆ, ಪ್ರೀತಿ ಎಂದರೆ ಭಾವನೆಗಳಿಗೆ ಮೀಸಲಾದ ಶಬ್ದವೆಂದರೆ ಅತಿಶಯೋಕ್ತಿಯಲ್ಲ. ಇಂತಹ ಒಂದು ದೇಹದ ಭಾಷೆಗೂ ಮಿಗಿಲಾದ, ಪರಿಶುದ್ಧ ಭಾವಗಳ ಅತ್ಯಂತಿಕ ಚಿತ್ರಣವೇ ನಾಗಶೇಖರ್ ನಿರ್ದೇಶನದ ‘ಮೈನಾ’. + + + +ಅವನು ಸತ್ಯ. ಕಾಸಲ್ ರಾಕ್ ಬಳಿ ಮಲಗಿರುವ ರೈಲ್ವೆ ಹಳಿಯ ಮಗ್ಗುಲಲ್ಲಿ ನಡೆಯುತ್ತಿದ್ದ ರಿಯಾಲಿಟಿ ಶೋವೊಂದರ ಸ್ಪರ್ಧಿ. ಮಳೆಯ ಮಧ್ಯೆ ಹಾಲಿನ ಅಭಿಷೇಕ ಮಾಡುತ್ತಿದ್ದ ಜಲಪಾತದ ನಾಭಿಯ ಮೇಲೆ ಉಗಿಬಂಡಿ ಓಡುತ್ತಿದ್ದಂತಹ, ಪರಿಸರವೇ ಪರವಶಗೊಳಿಸುವ ಭೂರಮೆಯದು. ಆ ರೈಲಿನಲ್ಲಿ ಸ್ಪರ್ಧೆಯೊಂದರ ಸಲುವಾಗಿ, ಭಿಕ್ಷುಕನ ನೆಪದಲ್ಲಿ ಬಂದಾಗ ಅವಳ ಕಣ್ಣುಗಳು ಕಾಣುತ್ತವೆ ಸತ್ಯನಿಗೆ. ಸುಳ್ಳಿಗೂ ಹೃದಯಘಾತವಾಗುವಂತಹ ನೋಟವದು. ಅವಳು ಮೈನಾ. ಪ್ರತಿ ದಿನ ಅದೇ ರೈಲಿನಲ್ಲಿ, ಅದೇ ಸೀಟಿನಲ್ಲಿ ಪಯಣ ಬೆಳೆಸುವುದು ಅವಳ ದಿನಚರಿ. ಅವಳ ಹುಮ್ಮಸ್ಸು, ಉತ್ಸುಕತೆ ಎಲ್ಲವೂ ನಿಲ್ಲದ ಮಳೆಯ ಹೆಗಲು ಹಚ್ಚಿ ಸುರಿವ ಜಲಪಾತದಂತೆಯೇ. ಅವಳ ಕಣ್ಣುಗಳಿಗೆ ಎಲ್ಲವೂ ಸುಂದರ, ಸಂಭ್ರಮ. ಸತ್ಯ ಅವಳ ಜೀವಂತಿಕೆಗೆ ಸೋತು ಹೋಗುತ್ತಾನೆ. ರಿಯಾಲಿಟಿ ಶೋ ಸಹವಾಸ ತೊರೆದು, ಕಾಲಿಲ್ಲದ ವ್ಯಕ್ತಿಯಂತೆ ರೈಲಿನಲ್ಲಿ ದಿನಂಪ್ರತಿ ಭಿಕ್ಷೆಯನ್ನು ಬೇಡುತ್ತಾನೆ, ಅವಳನ್ನು ನೋಡುವ ನೆಪದಲ್ಲಿ. ಅವಳು ಇವನಿಗೆ ಒಂದಿಷ್ಟು ಹಣವನ್ನು ನೀಡಿ, ಬೇಡುವ ಕಾಯಕದ ಬದಲು, ಕೆಲಸವನ್ನು ಮಾಡಿ ಸ್ವಾಭಿಮಾನದ ಬದುಕನ್ನು ಬಾಳಬೇಕು ಎಂದು ತಿಳಿ ಹೇಳುತ್ತಾಳೆ. ಅದರಂತೆಯೇ, ಆತ ಅದೇ ರೈಲಿನಲ್ಲಿ ಪತ್ರಿಕೆ ಮಾರಾಟವನ್ನು ಆರಂಭಿಸುತ್ತಾನೆ. ಅವರಿಬ್ಬರ ಮಧ್ಯೆ ಮಾತು ದ್ವಿಗುಣಗೊಂಡು ಒಲವಿನ ವಿನಿಮಯಕ್ಕೆ ಮುನ್ನುಡಿ ಬರೆಯುತ್ತದೆ. ಇನ್ನೇನು ಮುಂಜಾನೆ ನೇಸರ ಅರಳುವಂತೆಯೇ, ಪ್ರೇಮಧಾರೆಯೆರೆಯಬೇಕು ಅನ್ನುವಾಗಲೇ, ಮೈನಾಳ ಕೈಚೀಲವನ್ನು ಕಳ್ಳನೊಬ್ಬ ಕದಿಯುತ್ತಾನೆ. ಆತನನ್ನು ಹಿಡಿಯಲು, ಸತ್ಯ ತಾನು ಕಾಲಿಲ್ಲದ ವ್ಯಕ್ತಿಯಂತೆ ನಟಿಸುತ್ತಿದ್ದೇನೆ ಎಂಬುವುದನ್ನು ಮರೆತು ಅವನ ಹಿಂದೆ ಓಡುತ್ತಾನೆ. ಆತನನ್ನು ಬೆನ್ನಟ್ಟಿ, ಕೈಚೀಲ ವಶಪಡಿಸಿ, ಮರಳುತ್ತಿರಬೇಕಾದರೆ, ಮೈನಾ ರೈಲಿನಿಂದ ಇಳಿಯುತ್ತಿರುವ ದೃಶ್ಯ ಕಾಣಿಸುತ್ತದೆ. ಕಣ್ಣುಗಳು ಅರೆಕ್ಷಣ ಆಘಾತದ ಹನಿಗಳಲ್ಲಿ ಮಿಂದೇಳುತ್ತದೆ. ಕಾರಣ ಅವಳಿಗೂ ಕಾಲಿನ ಶಕ್ತಿ ತೊರೆದು ಹೋಗಿರುತ್ತದೆ. ಕೈಗಳನ್ನು ಭೂಮಿಗೆ ಒತ್ತಿ ಮುಂದೆ ಸಾಗುತ್ತಿರುತ್ತಾಳೆ ಅವಳು. ಮುಂದೆ ಈರ್ವರ ಮಧ್ಯೆ ಒಲವು ಖಾಯಂಗೊಳ್ಳುತ್ತದೆ. ಇಬ್ಬರೂ ಕಾಯಕದ ದಾರಿ ಹಿಡಿಯುತ್ತಾರೆ. ಆಕೆಯ ಕಾಲಿನ ಶಕ್ತಿಯ ಪುನರಪಿ ತುಂಬಲು, ವೈದ್ಯರೊಬ್ಬರು ಮುಂದೆ ಬರುತ್ತಾರೆ. ಬಹಳಷ್ಟು ನಂಬಿಕೆಯಿಟ್ಟು ಚಿಕಿತ್ಸೆಗೆಂದು ಮುಂದುವರೆದಾಗ, ಆ ಡಾಕ್ಟರ್ ಬಹುದೊಡ್ಡ ವಿಶ್ವಾಸದ್ರೋಹವನ್ನು ಮಾಡುತ್ತಾನೆ. ಮೈನಾಳ ಖಾಸಗಿ ಕ್ಷಣಗಳನ್ನು ಸೆರೆ ಹಿಡಿಯುತ್ತಾನೆ ಮತ್ತು ಅಂತರ್ಜಾಲದಲ್ಲಿ ಹರಿಬಿಡುವುದಾಗಿ ಹೆದರಿಸುತ್ತಾನೆ. ಮುಂದೆ ಪ್ರೇಮದ ಕೆಂಪು ನೆತ್ತರಿನ ರೂಪ ಧರಿಸುತ್ತದೆ. ಬದುಕು ಘೋರ ತಿರುವಿನ ಕಣಿವೆಗೆ ಬಿದ್ದು ನಜ್ಜು ಗುಜ್ಜಾಗುತ್ತದೆ. ಮಾತ್ರವಲ್ಲ, ಅಂತ್ಯವೇ ಇಲ್ಲದ ಚಿರಂಜೀವಿ ಸ್ವರೂಪವನ್ನು ತಾಳುತ್ತದೆ ಅವರಿಬ್ಬರ ಒಲವು. ಉಸಿರು ನಿಂತರೂ, ಪ್ರೇಮಧಾರೆ ಹಸಿರಾಗಿ ಸುಶೋಭಿಸುತ್ತಲೇ ಇರುತ್ತದೆ. ಒಟ್ಟಾರೆಯಾಗಿ, ಎಲ್ಲಾ ಇರುವಿಕೆ-ಇಲ್ಲದಿರುವಿಕೆಗಳ ಮಧ್ಯೆ, ಅವಳು ನನ್ನವಳು, ಅವನು ನನ್ನವನು ಎಂದು ಯಾವ ಸಂದೇಹಗಳ ಸುಳಿವೇ ಇಲ್ಲದೇ, ಪರಿಧಿಯ ಮೀರಿ, ಆತ್ಮಾನುಸಂಧಾನಗೊಂಡ ಜೇವವೆರಡರ, ಭಾವ ತೇರ ಪಯಣವೇ ‘ಮೈನಾ’ + +ನಾಗಶೇಖರ್ ಎಂದರೆ ಕನ್ನಡ ಚಿತ್ರ ಜಗತ್ತಿನ ಭಾವಪೂರಿತ ಪ್ರೇಮ ಕಥೆಗಳ ಸರದಾರ. ‘ಅರಮನೆ’, ‘ಮೈನಾ’ ಮತ್ತು ‘ಸಂಜು ಮತ್ತು ಗೀತಾ’ ಅದಕ್ಕೆ ಸಾದೃಶ್ಯ. ಅವರ ಬರವಣಿಗೆಯಲ್ಲಿ ಅರಳುವ ದೃಶ್ಯಗಳು ಬಿರಿಯುವ ಹೂವಿನಂತೆಯೇ ಅತೀ ಮಧುರ. ಬಿಡುವಿಲ್ಲದೆ ಓಟ ಕೀಳುವ ಮಳೆ, ಗಾಢ ಹಸಿರು ವಸ್ತ್ರ ಧರಿಸಿ ಮಿಂಚುವ ಪ್ರಕೃತಿ, ಬದುಕನ್ನು ಗಾಢವಾಗಿ ಪ್ರೀತಿಸುವ ನಾಯಕಿ, ತುಸು ಭಾವುಕತೆಯ ನೆರಳಿನಲ್ಲಿಯೇ ಕನಸು ಕಾಣುವ ನಾಯಕ ಇವೆಲ್ಲವೂ ಅವರ ಚಿತ್ರಗಳಲ್ಲಿ ಗೈರು ಹಾಜರಾಗದ ಸಂಗತಿಗಳು. ‘ಮೈನಾ’ ಚಿತ್ರವೊಂದು ಪ್ರಥಮಾರ್ಧದಲ್ಲಿ ಸುಂದರ ಪ್ರೇಮ ಕವಿತೆಯಾಗಿ, ಮಧ್ಯಂತರ ದಾಟುತ್ತಿದ್ದಂತೆಯೇ ಕೆಂಪು ಸಮುದ್ರವಾಗುತ್ತದೆ. ಅಂತ್ಯದಲ್ಲಿ ನೋವಿನ ಆರ್ತನಾದ ಕಾಡುತ್ತದೆ. ಚಿತ್ರದ ಮುಗಿತಾಯ ನೀಡುವುದು ನಿರ್ಮಾನುಷ ಬೀದಿಯಲ್ಲಿನ ಪಯಣದ ಭಾವ. ಈ ತೆರನಾದ ಭಾವಗಳ ಹದವಾದ ಮಿಶ್ರಣದಿಂದಾಗಿ, ಕಾಡುವ ಕಥನವಾಗಲು ಸಾಧ್ಯವಾಗಿದೆ ಮೈನಾ. + +(ನಾಗಶೇಖರ್) + +ಚಿತ್ರದಲ್ಲಿ ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ. ಇನ್ನು ನಾಯಕಿಯ ಪಾತ್ರಧಾರಿಯಲ್ಲಿರುವ ‘ನಾಗಶೇಖರ್’ ಮ್ಯಾಜಿಕ್. ‘ಸಂಜು ಮತ್ತು ಗೀತಾ’ ಚಿತ್ರದಲ್ಲಿ ‘ಬ್ಯೂಟಿ’ ಎಂಬ ಪದ ಸಂತಸದ ಉತ್ಕಟತೆಗೆ ಬಳಕೆಯಾಗಿದ್ದರೆ, ಮೈನಾ ‘ಕಲರ್ಫುಲ್’ ನಿಂದ ತುಂಬಿದೆ. ಕಥೆಯ ಎರಡು ಭಾಗ ಅಂದರೆ ಪ್ರೇಮಗಾಥೆ ಮತ್ತು ಕ್ರೈಮ್ ಸರಣಿಯು ಭಾವ ಉದ್ದೀಪನ ಮಟ್ಟದಲ್ಲಿ ಒಂದೇ ಸೇತುವೆಯಲ್ಲಿ ಚಲಿಸುವುದರಿಂದ ಕಥೆಯ ತೀವ್ರತೆ ಗಾಢವಾಗಿ ನೋಡುಗನ ಮನಸ್ಸಿಗೆ ವರ್ಗಾವಣೆಗೊಳ್ಳುತ್ತದೆ. + +ಕರ್ನಾಟಕ ಕಂಡ ದಕ್ಷ ಪೊಲೀಸ್ ಅಧಿಕಾರಿ ಟೈಗರ್ ಅಶೋಕ್ ಕುಮಾರ್ ಅನುಭವದಿಂದ ಆಯ್ದ ಸಾಲಿನ ವಿಸ್ತೃತ ರೂಪವಾದ ಈ ಚಿತ್ರದ ಆವರಿಸುವಿಕೆಗೆ ಇನ್ನೊಂದು ಮುಖ್ಯ ಕಾರಣ ಜೆಸ್ಸಿ ಗಿಫ್ಟ್ ಸಂಗೀತ. ಜಯಂತ ಕಾಯ್ಕಿಣಿ ಸಾಹಿತ್ಯದ ‘ಮೊದಲ ಮಳೆಯಂತೆ’ ಹಾಡು ಚಂದಿರನಿಗೆ ಉಡಿಸಿದ ಶ್ವೇತವಸ್ತ್ರ. ‘ಮೈನಾ’ ಹಾಡು ಹೂದೋಟಕ್ಕೆ ಪ್ರಜ್ಞೆ ತಪ್ಪಿಸುವ ಸುಗಂಧ. ಹಿನ್ನೆಲೆ ಸಂಗೀತದಲ್ಲಿ ವಿಶೇಷತಃ, ರಾಗ ಮಾಲಿಕೆಯೊಂದರ ಬಳಕೆ ತೀರಕ್ಕೊಂದು ಸಿಹಿ ನೀರಿನ ಅಭಿಷೇಕ. ಮುಂದೆ ನಟನೆಯಲ್ಲಿ ಚೇತನ್ ಗಮನ ಸೆಳೆದರೆ ‘ನಿತ್ಯಾ ಮೆನನ್’ ಭಾವ ನಡಿಗೆಯು ತನಗೆ ನಿತ್ಯ ನೂತನ ಎನ್ನುವಂತೆಯೇ ಜೀವಿಸಿದ್ದಾರೆ ಮೈನಾ ಪಾತ್ರದಲ್ಲಿ. ಈ ಎರಡು ದಶಕ ಕಂಡ, ಅತ್ಯುತ್ತಮ ನಟಿ ಅವರು… ಭಾಷೆ, ಪ್ರಾಂತ್ಯಗಳೆಲ್ಲದರ ಎಲ್ಲೆ ಮೀರಿ, ಎಂದರೆ ಅತಿ ವರ್ಣನೆಯಲ್ಲ. ಸಿಹಿ ವಾಸ್ತವ. ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಆಗಿ ಶರತ್ ಕುಮಾರ್ ಗಂಭೀರ, ತೂಕಬದ್ಧ ನಟನೆ. ಇನ್ನುಳಿದಂತೆ ಮಾಳವಿಕಾ ಅವಿನಾಶ್, ಸಾಧು ಕೋಕಿಲ, ತಬಲಾ ನಾಣಿ, ಬುಲೆಟ್ ಪ್ರಕಾಶ್ ಸೇರಿದಂತೆ ಎಲ್ಲರದ್ದೂ ಪಾತ್ರೋಚಿತ ಅಭಿವ್ಯಕ್ತಿ. + + + +ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು…. + diff --git a/Kenda Sampige/article_160.txt b/Kenda Sampige/article_160.txt new file mode 100644 index 0000000000000000000000000000000000000000..0f0c7e2a29a34e8472c11744dae7e3feca54b8e5 --- /dev/null +++ b/Kenda Sampige/article_160.txt @@ -0,0 +1,43 @@ +ಜೋಯಿಡಾದ ಕಾನನದಲ್ಲಿ ವರ್ಷದ ಆರು ತಿಂಗಳು ಮಳೆ, ಮಳೆಯ ಎಲ್ಲಾ ರೂಪಗಳನ್ನು ತೆರೆದಿಡುವ ಹಗಲು, ಮನ ತುಂಬಿ ತನ್ನದೆ ಹೊಸ ಹೊಸ ಸ್ವರ ಸಂಯೋಜನೆಯೊಂದಿಗೆ ಹರಿಯುವ ನದಿ, ಹಳ್ಳಗಳ ಸೊಬಗು, ಆಗಾಗ ಏಳುವ ಝರಿಗಳೊಂದಿಗೆ ನಿಚ್ಚ ತನಮನದಲ್ಲಿ ಅಚ್ಚಳಿಯದೆ ಉಳಿಯುವ ಜಲಪಾತಗಳ ಭೋರ್ಗರೆತ, ಇಲ್ಲಿ ಪ್ರತಿ ಕಲ್ಲು ಒಂದೊಂದು ಶಿಲ್ಪ ರೂಪ, ಕಲ್ಲರಳುವ ಸೊಬಗು ನಿತ್ಯ ನಿರಂತರ, ಇಂತಹ ತಪೋಭೂಮಿ ನನ್ನ ಜೋಯಿಡಾ. ಉತ್ತರಕನ್ನಡ ಜಿಲ್ಲೆ ಭೌಗೋಳಿಕವಾಗಿ ಬಹು ದೊಡ್ಡದಾದ ತಾಲೂಕು. ಮರಗಳೆ ಸಂಗಾತಿಗಳಾಗುವ, ಗೆಳತಿಯಾಗುವ, ಮಾತಾಡುವ, ಮೌನವಾಗುವ, ನಲಿವುಕ್ಕಿಸುವ, ಕಣ್ಣೀರೊರೆಸುವ, ಶಕ್ತಿ ತುಂಬುವ, ಹುರುಪು ಸೃಷ್ಟಿಸುವ ವಿಸ್ಮಯದ ಗೂಡು. ಜೋಯಿಡಾ ಎಂದರೆ ಪ್ರವಾಸಿ ತಾಣ, ಪ್ರೇಕ್ಷಣೀಯ ಸ್ಥಳ. ಅದರ ಜೊತೆ ಜೊತೆಗೆ ಮುಗ್ಧ ಕುಣಬಿ, ಗೌಳಿ ಮುಂತಾದ ಬುಡಕಟ್ಟು ಜನಾಂಗದ ಹಾಡು ಪಾಡು. + +ಈ ಗೂಡಿನೊಳಗೆ ವಿದ್ಯಾದೇವಿಯ ಗಂಟೆ ಬಾರಿಸುತ್ತದೆ, ನಿಧಾನ ಒಂದೊಂದಾಗಿ ಶಾಲೆಯ ಬಾಗಿಲು ತೆರೆದುಕೊಳ್ಳುತ್ತದೆ, ಕಿಟಕಿಯೂ ತಾನೇ ಮುಂದಾಗಿ ತನ್ನ ತಾ ತೆರೆದುಕೊಂಡು ಬೆಳಕು ಹರಡುತ್ತದೆ. ಹರಡಿದ ಬೆಳಕಲ್ಲಿ ಎಲ್ಲ ಮುಖಗಳು ಸ್ಪಷ್ಟವಾಗಿ ಕಾಣುತ್ತವೆ. ಮುಖದ ಮೇಲಿದ್ದ ಗುರುತುಗಳು ತಮ್ಮ ಪರಿಚಯವನ್ನು ನೀಡುತ್ತವೆ, ತಮ್ಮ ಕಥೆಗಳನ್ನು ಹೇಳುತ್ತಾ ಇತಿಹಾಸ ಸೃಷ್ಟಿಸುತ್ತವೆ. ಇಂತಹ ಕಥೆಯನ್ನು ಕೇಳುತ್ತ, ಕಥೆಯ ಕೆಲವರು ಪಾತ್ರಧಾರಿಗಳಾಗುತ್ತಾರೆ, ಕೆಲವರು ಕಣ್ಣಲ್ಲಿ ತುಂಬಿಕೊಳ್ಳುತ್ತಾರೆ. ಇನ್ನೂ ಹಲವರು ಕಿವಿಯಾಗುತ್ತಾರೆ. ಕುತೂಹಲ ಬೆಳೆಸಿಕೊಳ್ಳುತ್ತಾರೆ. ವಿದ್ಯಾದೇವಿ ಇರುವಲ್ಲಿ ಸದಾ ಖುಷಿ, ನೆಮ್ಮದಿಯೆ ಇರುತ್ತದೆ. ಆತ್ಮತೃಪ್ತಿ ಕೆಲಸಗಳು ನಡೆಯುತ್ತವೆ. ಸುತ್ತ ಹರಡಿದ ಬೆಳಕಲ್ಲಿ ಕಂಡ ಮುಖಗಳು ತಮ್ಮ ತಮ್ಮ ಕಥೆ ಹೇಳುತ್ತಾ ಸರಕಾರಿ ಶಾಲೆಯ ಶಿಕ್ಷಕಿಯಾದ ನನ್ನಲ್ಲಿ ಬಂದು ಸೇರಿಕೊಳ್ಳುತ್ತವೆ. ಹೀಗೆ ಸೇರಿದ ಕಥೆಗಳು ಜೋಯಿಡಾದ ಕಾಳಿ ನದಿಯನ್ನು ಬಳಸಿ ಸುತ್ತುವರಿದು ನಿಮ್ಮೊಳಗು ದಾಖಲಾಗುತ್ತವೆ. ಇಸ್ಕೂಲು ಬಾಗಿಲು ತೆರೆಯುತ್ತದೆ. ಸೌತೆ ಬಳ್ಳಿ ಚಿಗುರುವವರೆಗೂ ಮುಂದುವರೆಯುತ್ತದೆ. + +***** + +ಇಂದು ನನ್ನೆಲ್ಲ ಇಸ್ಕೂಲಿನ ವಿಷಯಗಳು ತುಷಾರದಲ್ಲಿ ದಾಖಲಾಗಿ, ತುಷಾರ ಓದುಗ ಬಳಗದವರ ಮನಸ್ಸಿನಲ್ಲಿ ಜಾಗ ಪಡೆದಿವೆ. ಈಗ ಪುಸ್ತಕ ರೂಪದಲ್ಲಿ ನಿಮಗೆ ಸಿಕ್ಕಿ ಇಸ್ಕೂಲು ನಿಮ್ಮದಾಗುವ ಕಾಲಕ್ಕೆ ಬಂದು ನಿಂತಿದೆ. ಈ ಅಂಕಣ ಆರಂಭವಾದಾಗ ಅದು ಇಷ್ಟೆಲ್ಲ ಬರೆಸುತ್ತದೆ ಎಂದು ನನಗೆ ಅನಿಸಿರಲಿಲ್ಲ, ಕಾಳಿ ತೀರದ ಗೀತಗಳು, ನನ್ನ ಜೋಯಿಡಾ ತಾಲೂಕಿನ ಮಕ್ಕಳ ರೀತಿನೀತಿಗಳು ಏನನ್ನೆಲ್ಲಾ ನನಗೆ ಕಲಿಸಿಕೊಟ್ಟವು ಎಂದು ನನಗೆ ಒಮ್ಮೆ ಅಚ್ಚರಿಯಾಗುತ್ತದೆ, ನಿಜ, `ಮಕ್ಕಳಿಂದ ಕಲಿಯುವುದಿರುತ್ತದೆ’ ಎಂದು ಹೇಳಿದ ಮಾತು ಈಗ ದಕ್ಕಿತು ಅನಿಸುತ್ತದೆ. ಜೋಯಿಡಾ ಗಡಿ ತಾಲೂಕು. ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ತಾಲೂಕು. ಇಂದಿಗೂ ಪಟ್ಟಣ ಪಂಚಾಯತಿ ಹೊಂದಿರದ ರಾಜ್ಯದ ಏಕೈಕ ತಾಲೂಕು. ಇಲ್ಲಿನ ಬಹುತೇಕ ಹಳ್ಳಿಗಳಿಗೆ ಮಳೆಗಾಲದಲ್ಲಿ ತಲುಪಲು ಇಂದಿಗೂ ಕೂಡ ಸಾಧ್ಯವಿಲ್ಲ. ಇಂತಹ ಗಡಿ ತಾಲೂಕಿನಲ್ಲಿ ವರ್ಷದುದ್ದಕ್ಕೂ ಸಂಭ್ರಮದಿಂದ ತೆರೆದುಕೊಳ್ಳುವುದು ಸರ್ಕಾರಿ ಶಾಲೆಗಳು ಮಾತ್ರ. ಇಲ್ಲಿನ ಶಿಕ್ಷಕರು ಮೂಲಭೂತ ಸೌಲಭ್ಯದ ಕೊರತೆಯ ನಡುವೆಯೂ, ಉತ್ತಮ ದವಾಖಾನೆ ಇಲ್ಲದ ಜೋಯಿಡಾ ತಾಲೂಕಿನಲ್ಲಿ ತಮ್ಮ ಆರೋಗ್ಯ ಪಣವಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಕಾಡಿನ ನಡುವೆ, ಸಮಸ್ಯೆಗಳ ನಡುವೆ ಸರ್ಕಾರದ ಯೋಜನೆಗಳನ್ನು ಸಫಲಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಎಲ್ಲರಿಂದ ತಿರಸ್ಕೃತಗೊಂಡಂತಿರುವ ಈ ಜೋಯಿಡಾದಲ್ಲಿ ವರ್ಷಗಟ್ಟಲೆ ನಮ್ಮ ಶಿಕ್ಷಕರು ಅಕ್ಷರ ಬೀಜ ಸದ್ದಿಲ್ಲದೆ ಬಿತ್ತುತ್ತಿದ್ದಾರೆ. ಅವರೆಲ್ಲರ ಕೆಲಸಗಳ ಬಗ್ಗೆ ನನಗೆ ರಾಶಿ ಹೆಮ್ಮೆಯಿದೆ. ಹಾಗಾಗಿ ಈ ಕೃತಿ ನಾನು ಜೋಯಿಡಾದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಮಾತ್ರ ಅರ್ಪಿಸಬಯಸುತ್ತೇನೆ. ಅಂಕಣ ಬರೆಯುತ್ತಿದ್ದ ಒಂದುವರೆ ವರ್ಷದ ಯಾನದಲ್ಲಿ ಇಸ್ಕೂಲಿನ ಅಂಗಳದಲ್ಲಿ ಕಂಡ ಚಿತ್ರಗಳನ್ನು ದಾಖಲಿಸಿರುವುದು ನಿಜ. ಆದರೆ ಇಸ್ಕೂಲಿನ ಹೊರಗೆ ನಿಂತು ಬರೆದವುಗಳನ್ನು ನಾವು ನೋಡುವ ರೀತಿಗಿಂತ ಭಿನ್ನವಾಗಿ ನೋಡಿದವರು ಇಸ್ಕೂಲಿನ ಓದುಗರು. ತುಷಾರದಲ್ಲಿ ಕೆಲವರಿಗೆ ಇಸ್ಕೂಲು ಬಹಳವಾಗಿ ತೆರೆದುಕೊಂಡರೆ, ಇನ್ನೂ ಕೆಲವರಿಗೆ ಏನೂ ಕಾಣದೆ ಕೂಡ ಹೋಗಿರಬಹುದು. + +ಆದರೂ `ಚಂದ ಬರುತ್ತಿದೆ, ಬರಿ. ಈ ಅನುಭವವೇ ಹೊಸದು. ಜೊತೆಗೆ ಕವಿತೆ ಕಥೆ ಬರೆಯುವುದನ್ನು ನಿಲ್ಲಿಸಬೇಡ’ ಎಂದು ಎಚ್ಚರಿಸಿದ ಮಿತ್ರರಿದ್ದಾರೆ. `ಬೇಗ ಇಸ್ಕೂಲಿನ ಅಂಕಣಗಳ ಸೇರಿಸಿ ಪುಸ್ತಕ ಮಾಡಿ ಕೊಡು’ ಎಂದು ಕೇಳುವ ಜೀವಗಳಿವೆ. `ನಮ್ಮೆಲ್ಲರ ಬಾಲ್ಯ ನೆನಪಿಸಿತು’ ಎಂದು ಓದುವ ಓದುಗರಿದ್ದಾರೆ. ಸಕ್ಕರೆ ಕಾಯಿಲೆಯಿಂದ ದೃಷ್ಟಿ ದೋಷ ಅನುಭವಿಸುತ್ತಿದ್ದಾಗಲೂ ಮನೆಗೆ ಬಂದ ಅತಿಥಿಗಳಿಂದ ಇಸ್ಕೂಲು ಓದಿಸಿಕೊಂಡು ಪ್ರತಿ ತಿಂಗಳು ಫೋನಾಯಿಸುವ ಕಸ್ತೂರಿ ಬಾಯೇರಿ ಅವರಂತಹ ಹಿರಿಯ ಲೇಖಕಿಯ ಮಾತುಗಳು, ಇಸ್ಕೂಲನ್ನು ಪ್ರತಿ ತಿಂಗಳು ಓದಿ, ಕಥೆಯ ರೂಪದಲ್ಲಿ ತನ್ನ ಮೊಮ್ಮಕ್ಕಳಿಗೆ ಹೇಳುವ ಅದೆಷ್ಟೊ ಜನ ಅಮ್ಮಂದಿರ ಮೇಲ್‌ಗಳು, `ಓದುತ್ತಾ ಹೋದರೆ ಬೇರೆಯದೆ ಅನುಭೂತಿ ನೀಡಿ ನೆಮ್ಮದಿ ಸಿಗುತ್ತದೆ’ ಎನ್ನುವ ಬರಹಗಾರರು, ಶಿಕ್ಷಕರು, ಖಾಸಗಿ ಬಸ್ ಚಾಲಕರು, ಕಂಡೆಕ್ಟರಗಳು, ಬ್ಯಾಂಕಿನವರು, ವೈದ್ಯರು… ಬರೆಯುತ್ತ ಹೋದರೆ ದೊಡ್ಡದಾಗಿ ಬೆಳೆಯುವ ಅನೇಕ ವೃತ್ತಿಯ ಓದುಗರು ಬಹುಬಗೆಯಾಗಿ ಪ್ರತಿ ತಿಂಗಳು ಮೇಲ್ ಮೂಲಕ ಪತ್ರ ಬರೆಯುತ್ತಿದ್ದಾರೆ. ಫೋನ್ ನಂಬರ್‌ ಸಿಕ್ಕಿದರೆ ಫೋನಾಯಿಸುತ್ತಾರೆ, ಮೇಸೆಜಿಸುತ್ತಾರೆ. ಕೊನೆ ಕೊನೆಗೆ ಕರ್ನಾಟಕದ ದೂರದೂರುಗಳಿಂದ ಇಸ್ಕೂಲಿನ ಮುಖಗಳನ್ನು ನೋಡಲು, ರಾಧಕ್ಕೋರನ್ನು ನೋಡಲು ಬಂದ ಅನೇಕ ಶ್ರೀಮಂತ ಮನಸುಗಳ ಪ್ರೀತಿಗೆ ಏನೆನ್ನಲಿ. ಇವರೆಲ್ಲರ ಹೆಸರು ಇಸ್ಕೂಲಿನ ಅಂಗಳ ಖಂಡಿತ ಮರೆತಿಲ್ಲ. ಅವರೆಲ್ಲರ ಒಂದೊಂದು ಪತ್ರ ಬಂದಾಗ ಆಗುವ ಖುಷಿಯನ್ನು, ಮಕ್ಕಳೆದುರು ಪತ್ರ ಓದಿ, ಮಕ್ಕಳೊಂದಿಗೆ ನಾನು ರೋಮಾಂಚಿತಳಾಗುವ ಘಳಿಗೆಯ ಸುಖವನ್ನು ಉಂಡಿದ್ದೇನೆ. ತುಷಾರದಲ್ಲಿ ಮಕ್ಕಳು ತಮ್ಮ ಫೋಟೋಗಳನ್ನು ನೋಡಿ ಕಣ್ಣರಳಿಸುವ ವಿಸ್ಮಯದ ಅವ್ಯಕ್ತ ಭಾವವನ್ನು ಅನುಭವಿಸಿದ್ದೇನೆ. ನನ್ನೂರು ಅಂಕೋಲೆಯ ಬೇಲೇಕೇರಿಗೆ ಹೋದಾಗ `ನಿನ್ನ ಅಮ್ಮನ ನಮೂನಿಯೆ ಲೈಕ್ ಮಾಸ್ತರ್ಣಿ ಆಗಿಬಿಟ್ಟಿ’ ಎಂದಾಗ ಅಮ್ಮನ ಮಡಿಲಿನ ಗುಬ್ಬಿಮರಿಯಾಗಿ ಬಿಡುತ್ತೇನೆ. ಇಸ್ಕೂಲು ಬರಿ ಅಂಕಣವಲ್ಲ ನನಗೆ. ನನ್ನ ವೃತ್ತಿ ಮತ್ತು ಪ್ರೀತಿ ಅದು. ನನ್ನ ಸುತ್ತ ಮುತ್ತ ಓಡಾಡುವ ಚಿಗರೆ ಕಣ್ಣಿನ ಮಕ್ಕಳ ಭರವಸೆ ಅದು. ಅಂದಹಾಗೆ, ಇಸ್ಕೂಲು ಅಂಕಣ ಮುಗಿದು ಈ ಪುಸ್ತಕ ಪ್ರಕಟವಾಗುವ ಹೊತ್ತಿನವರೆಗೆ ನನ್ನ ಶಾಲೆಗೆ ಸಹಾಯ ಮಾಡುತ್ತಿರುವ ಮನಸುಗಳ ಪ್ರೀತಿಗೆ ರಾಶಿ ಧನ್ಯವಾದ. ಇಸ್ಕೂಲನ್ನು ನೋಡಲು ಬೆಳಗಾವಿ, ಠಾಣಾ, ಬೆಂಗಳೂರಿನಿಂದ ಬರುವ ಹೂ ಮನಸುಗಳ ಪ್ರೀತಿಗೆ ಅಣಶಿ ಹಾಗೂ ನಾನು ಋಣಿಯಾಗಿದ್ದೇವೆ. + +***** + +ಈ ಸಂದರ್ಭದಲ್ಲಿ ವಿಶೇಷವಾಗಿ ಕೆಲವರಿಗೆ ಧನ್ಯವಾದ ಹೇಳಲೇಬೇಕು. ಅವರೆಲ್ಲ ನನ್ನ ಶಾಲೆಗೆ ಸಹಾಯ ಮಾಡಿದವರು. ಇಸ್ಕೂಲು ಅಂಕಣ ಓದಿ ಶಾಲೆಗೆ ಏನಾದರೂ ನೆರವು ಬೇಕೆ ಎಂದು ಕೇಳಿದವರು. ಅವರೆಲ್ಲರ ಮೂಲಕ ಇಂದು ಸುಮಾರು 23,000 ರೂ. ಮೌಲ್ಯದ ಪುಸ್ತಕಗಳು ನನ್ನ ಶಾಲೆಯ ಗ್ರಂಥಾಲಯಕ್ಕೆ ಸೇರಿವೆ. ಇವೆಲ್ಲ ಪುಸ್ತಕಗಳನ್ನು ಮಕ್ಕಳು ಓದುವಂತಹದ್ದು, ಮಕ್ಕಳ ಜ್ಞಾನ ಹೆಚ್ಚಿಸುವ ಪುಸ್ತಕಗಳಿವು. ಇಸ್ಕೂಲನ್ನು ಓದಿ ದೂರದ ಕೋಲಾರದಿಂದ ಇಸ್ಕೂಲು ನೋಡಲು ಬಂದ ಬಂದ ನಿವೃತ್ತಿ ಜೀವನ ನಡೆಸುತ್ತಿರುವ ವೇಣುಗೋಪಾಲ, ಬೆಂಗಳೂರಿನ ಸಂಜಯ ಹಾಗೂ ಅವರ ಮಗ ತೇಜಸ್ವಿ ಶಾಲೆಗೆ ಬಂದು ಇಸ್ಕೂಲಿನೊಂದಿಗೆ ಮನದಣಿಯೆ ಮಾತಾಡಿಹೋಗಿದ್ದಾರೆ. ಇನ್ನೂ ಅನೇಕ ಶಿಕ್ಷಕರು ಶಾಲೆಗೆ ಬರುವವರಿದ್ದಾರೆ. + +ತುಷಾರಕ್ಕಾಗಿ ಕಾಯುತ್ತಾ ಸಿಕ್ಕಿದ ಕೂಡಲೆ ಇಸ್ಕೂಲನ್ನು ಮೊಟ್ಟ ಮೊದಲು ತೆರೆದು ನೋಡುವ ಸಹೃದಯರು ಬಹಳಷ್ಟು ಜನರಿದ್ದಾರೆ. ನನ್ನ ಜಿಲ್ಲೆಯವರು, ಜಿಲ್ಲೆಯ ಹೊರಗಿನವರು, ರಾಜ್ಯದ ಹೊರಗಿನವರು… ಹೀಗೆ ಅನೇಕರು. ಇಸ್ಕೂಲನ್ನು ಓದುವುದಕ್ಕಾಗಿಯೆ ತುಷಾರ ಚಂದಾದಾರರಾದವರು ನನ್ನ ಕಣ್ಣೆದುರು ಇದ್ದಾರೆ. ನಿಮ್ಮೆಲ್ಲರ ಇಂತಹ ಪ್ರೀತಿಗೆ ಏನೆನ್ನಲಿ. ಧನ್ಯವಾದವೆಂದರೆ ಕಡಿಮೆ ಅನಿಸುತ್ತೆ. ನಿಮ್ಮ ಅಮೂಲ್ಯ ಸಮಯ ಮೀಸಲಿಟ್ಟು ಪ್ರತಿಬಾರಿ ಇಸ್ಕೂಲನ್ನು ಓದಿ ಮೇಲ್ ಕಳಿಸುವ ನಿಮ್ಮ ಮನಸ್ಸಿಗೆ ಶರಣು. + +ಪುಸ್ತಕ ಪ್ರಕಟವಾಗುತ್ತಿರುವ ಈ ಹೊತ್ತಿನವರೆಗೂ ಇಸ್ಕೂಲು ನೋಡಲು ಬರುವವರ ಪಟ್ಟಿಯಿದೆ. ಇಸ್ಕೂಲು ಅವರಿಗಾಗಿ ಸದಾ ಕಾಯುತ್ತಿರುತ್ತದೆ. ಇಸ್ಕೂಲು ಪ್ರಕಟ ಮಾಡಿದ ಜನ ಪ್ರಕಾಶನಕ್ಕೆ ಈ ಸಂದರ್ಭದಲ್ಲಿ ವಂದಿಸುತ್ತೇನೆ. ಪುಸ್ತಕವನ್ನು ನೀವೆಲ್ಲ ಕೊಂಡು ಓದುವಿರಿ ಎಂಬ ನಂಬಿಕೆ ಖಂಡಿತ ಇದೆ. ರಾಶಿ ಧನ್ಯವಾದಗಳು ನಿಮಗೆ. + +-ಅಕ್ಷತಾ ಕೃಷ್ಣಮೂರ್ತಿ + + + +ಬಾವುಟ ಹಾರುವ ಹೊತ್ತು + +ಉತ್ತರಕನ್ನಡ ಜಿಲ್ಲೆಯ ದಟ್ಟ ಅರಣ್ಯ ಗಡಿ ತಾಲೂಕು ಜೋಯಿಡಾದ ಬೇರೆ ಬೇರೆ ಹಳ್ಳಿಯಲ್ಲಿ ರಾಷ್ಟ್ರೀಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಕನ್ನಡ ಹಾಗೂ ಮರಾಠಿ ಮಾಧ್ಯಮದ ಗಡಿಭಾಗದ ಶಾಲೆಗಳಾಗಿರುವ ಕಾರಣದಿಂದ ಶಾಲೆಯ ಹಬ್ಬಗಳು, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಆ ಇಡೀ ಊರಿಗೆ ಊರೇ ಸಂಭ್ರಮದಿಂದ ತಯಾರಿಗೊಳ್ಳುತ್ತದೆ. ಗಣರಾಜ್ಯ ದಿನಾಚರಣೆಗೆ ಒಂದು ವಾರದ ಹಿಂದಿನಿಂದಲೂ ತಯಾರಿ ಜೋರಾಗಿರುತ್ತದೆ. ಕರ್ನಾಟಕದ ನಕಾಶೆಯಲ್ಲಿ `ಕಾಳಿ ಹುಲಿ ಸಂರಕ್ಷಿತ ಪ್ರದೇಶ’ವೆಂದು ಗುರ್ತಿಸಿಕೊಂಡ `ಅಣಶಿ’ ಊರಿನ ಶಾಲೆಯಲ್ಲಿ ಆ ದಿನ ಹೊಸ ಸಂಭ್ರಮ ಪ್ರತಿ ಬೆಳಕಿನ ಕಿರಣದಲ್ಲೂ ಅಡಗಿದೆ. ಸುತ್ತ ಹಸಿರು ಗುಡ್ಡ, ಒತ್ತೊತ್ತಾದ ಮರಗಳ ನಡುವೆ ಸಣ್ಣ ಮೈದಾನ ಹೊಂದಿದ ಆ ಶಾಲೆಯ ಎದುರಿಗೆ ಗ್ರಾಮ ಪಂಚಾಯತಿ ಇದೆ. ಕುಣಬಿಗಳು, ದೇಸಾಯಿಗಳು, ಮಡಿವಾಳರು ಒಂದೆರಡು ಮುಸ್ಲಿಂ ಕುಟುಂಬಗಳು ಪ್ರೀತಿಯಿಂದ ವಾಸಿಸುವ ಹಳ್ಳಿ ಇದು. ಇಂತಿರ್ಪ ಕನ್ನಡ ಶಾಲೆಯಲ್ಲಿ ಹಬ್ಬ ಬಂತೆಂದರೆ ಶಿಕ್ಷಕರೇ ವಿದ್ಯಾರ್ಥಿಗಳಾಗಿ ತಯಾರಿಯಲ್ಲಿ ತೊಡಗಿಬಿಡುತ್ತಾರೆ. ಸರ್ಕಾರದಿಂದ ಶಾಲೆಗೆ ಸಿಗುವ ಅನುದಾನ ಕಡಿಮೆಯಿರುವುದರಿಂದ ಮಾಸ್ತರುಗಳು, ಬಾಯೋರು ಸೇರಿ ಹೆಡ್ ಬಾಯೋರ ಸಮ್ಮುಖದಲ್ಲಿ ಧ್ವಜದ ಕಟ್ಟೆಯ ಮುಂದೆ ಕುಳಿತು ಸಣ್ಣ ಮೀಟಿಂಗ್ ನಡೆಯುತ್ತದೆ. ಇರುವ ಹಣದಲ್ಲಿ ಶಾಲೆಗೆ ಸುಣ್ಣ ಬಣ್ಣ ಬಳಿಯಬೇಕಾಗಿದೆ. ಹಳ್ಳಿಯ ಕಡೆಗೆಲ್ಲ ಕಟ್ಟಡಕ್ಕೆ ಬಣ್ಣ ಮಾಡಿಕೊಡುವವರು ಬಹಳ ಕಡಿಮೆಯಿರುವುದರಿಂದ ತುರ್ತಾಗಿ ಬಣ್ಣ ಬಳಿಯಲು ಸಿಕ್ಕವರು ಸಿಕ್ಕಾಪಟ್ಟೆ ಹಣ ಕೇಳುತ್ತಾರೆ. ಹೀಗಾಗಿ, ಏಳನೆಯ ವರ್ಗದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಾವೇ ಬಣ್ಣ ಬಳಿದು ಒಂದೊಂದೇ ಕೋಣೆಯನ್ನು ಮಕ್ಕಳಿಗೆ ಇಷ್ಟವಾದ ಬಣ್ಣದಿಂದಲೇ ಶೃಂಗರಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾರೆ. ಹಣ ಉಳಿತಾಯವಾಗಿದೆ ಎಂದು ಹೆಡ್ ಬಾಯಿ ಕೂಡ ಖುಷಿಯಾಗಿದ್ದಾರೆ. + +ಮೊನ್ನೆ ತಾನೆ ಸಂಕ್ರಾಂತಿಯ ಎಳ್ಳು, ಬೆಲ್ಲ, ಚಿರಮುರಿ ಹಂಚಿ ಖುಷಿಯಲ್ಲಿದ್ದ ಊರಿನ ಹಿರೀಕರೆಲ್ಲ ಗಣರಾಜ್ಯ ದಿನಾಚರಣೆ ಹತ್ತಿರ ಬರುತ್ತಿದೆ ಎಂದೇ ಅವರ ವೈಯಕ್ತಿಕ ಕೆಲಸ ಕಾರ್ಯ ಬೇಗ ಮುಗಿಸಿಕೊಳ್ಳುತ್ತಾರೆ. ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪಾಲಕರು ಮಕ್ಕಳ ಜೊತೆಗೂಡಿ ಶಾಲಾ ಆವರಣ ಸ್ವಚ್ಛತೆಯ ಕೆಲಸ ಮಾಡಿದರೆ, ಅಡುಗೆಯವರು ತಲೆಗೊಂದು ಟೋಪಿ ತೊಟ್ಟು ಏಪ್ರಾನ್ ಹಾಕಿಕೊಂಡು, ಬಳಸದೇ ಇದ್ದ ದೊಡ್ಡ ಪಾತ್ರೆಗಳನ್ನೆಲ್ಲ ತೊಳೆಯುತ್ತಿದ್ದಾರೆ. ಕಳೆದ ರವಿವಾರ ಊರಿಗೆ ಹೋಗಿದ್ದ ಮೋಹನ ಸರ್ ಖುಷಿಯಿಂದ ಮೂವರಿಗೂ ದೊಡ್ಡ ಟೋಪಿ ತಂದು ಕೊಟ್ಟಿದ್ದಾರೆ. ಒಂದೇ ನಮೂನಿಯ ಮೂರು ಟೋಪಿಗಳು ಅದಲು ಬದಲಾಗಬಾರದು ಎಂದು ಬೇರೆ ಬೇರೆ ರೀತಿ ಬಣ್ಣದ ದಾರದಿಂದ ಹೊಲಿದುಕೊಂಡಿದ್ದಾರೆ. ಮುಖ್ಯ ಮತ್ತು ಸಹಾಯಕ ಅಡುಗೆಯವರ ಈ ಟೋಪಿಗಳು ಹೊಸತಾಗಿರುವುದರಿಂದ ಬಣ್ಣ ಎದ್ದು ಕಂಡು ಅವರ ಮುಖವು ಒಂದು ನಮೂನಿ ಹೊಳೆಯುತ್ತಿದೆ. ತಾಲೂಕು ಪಂಚಾಯಿತ ಅನುದಾನದಿಂದ ಕಟ್ಟುತ್ತಿರುವ ಹೊಸ ವರ್ಗಕೋಣೆಯ ಕಟ್ಟಡ ಕೆಲಸಕ್ಕೆ ತಂದ ಕಂಬಗಳ ಮೇಲೆ ಮೋಹನ ಮಾಸ್ತರರ ದೃಷ್ಟಿ ಬಿದ್ದಿದೆ. + +ಧ್ವಜದ ಸುತ್ತ ಕಂಬ ನೆಟ್ಟು ಪತಾಕೆ ಹಚ್ಚಲು ಎರಡು ದಿನದ ಮಟ್ಟಿಗೆ ಕಂಬ ಬೇಡಿ ಪಡೆದಿದ್ದಾರೆ. ತರಗತಿಯ ದೊಡ್ಡ ಹುಡುಗರು ದೇಸಾಯಿ ಮನೆಯಿಂದ ಎರಡು ಮೂರು ಹಾರೆ ತಂದು ಹೊಂಡ ತೆಗೆದು ಕಂಬ ನೆಟ್ಟು ಕಂಬ ಗಟ್ಟಿಯಾಗಿದೆಯೆ ಎಂದು ಪರೀಕ್ಷಿಸಲು ಮಲ್ಲ ಕಂಬದ ಮೊದಲ ಪಾಠ ಕಲಿತಿದ್ದಾಗಿದೆ. ಹಳೆ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೆಲ್ಲ ಬಂದು ಬಾಯೋರಿಗೆ `ತಮ್ಮಿಂದ ಏನಾದರೂ ಕೆಲಸವಾಗಬೇಕೇ?’ ಎಂದು ಪ್ರಶ್ನಿಸಿದ್ದಾರೆ. ರಾಧಕ್ಕೋರು ನಗುತ್ತ ಅವರಿಗೊಂದು ಚಂದದ ಕೆಲಸ ಹೇಳಿದ್ದಾರೆ. ಊರಿನ ಸುತ್ತ ತಿರುಗಿ ಬಿದ್ದ ಸಗಣಿಯನ್ನೆಲ್ಲ ಆರಿಸಿ ತಂದು ಧ್ವಜ ಕಟ್ಟೆಯ ಸುತ್ತ ಸಾರಿಸಲು ಸೂಚಿಸಿದ್ದಾರೆ. ಆ ಕೆಲಸವನ್ನು ಮಾಡಲು ಖುಷಿಯಿಂದಲೇ ಹಳೆ ವಿದ್ಯಾರ್ಥಿಗಳು ತೆರಳಿದ್ದಾರೆ. ಅವರ ಕೈಯಲ್ಲಿ ಖಾಲಿಯಾದ ಬಣ್ಣದ ಡಬ್ಬಗಳಿವೆ. ಪೇಯಿಂಟ್ ತುಂಬಿದ್ದ ಖಾಲಿಯಾದ ಆ ಡಬ್ಬಗಳು ಬಕೇಟುಗಳಾಗಿ ಮಕ್ಕಳ ಕೈಯಿಂದ ಜಾರಿ ಬಿದ್ದರೂ ಒಡೆಯದೆ ಬಹುಕಾಲ ಬಾಳಿಕೆ ಬರುವಂತದು ಎಂದು ತಿಳಿದ ಕಾರಣದಿಂದ ಬಾಯೋರು ಮಕ್ಕಳಿಗೆ ಬಳಸಲು ಅಂತಹ ಹಳೆಯ ಬಕೇಟುಗಳನ್ನೇ ಕೊಡುತ್ತಾರೆ. ಮೂರನೆಯ ವರ್ಗದ ಸ್ನೇಹ ವೇಳಿಪ, ಗಿಡಕ್ಕೆ ನೀರು ಹಾಕುತ್ತೇನೆ ಎಂದು ಮೂರು ಬಕೇಟು ಒಡೆದದ್ದು, ಅಕ್ಕೋರಿಗೆ ತಲೆಬಿಸಿ ಆಗಿದ್ದು ಎಲ್ಲ ಮಕ್ಕಳಿಗೆ ಅರಿವಿದೆ. ಮಕ್ಕಳೆಲ್ಲ ಸೇರಿ ಕೆಲಸ ಮಾಡುವಾಗ ಇಂತಹ ಬಕೇಟುಗಳ ಅಗತ್ಯ ತೀರಾ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಊರಿನ ಸುತ್ತ ಬಿದ್ದ ಎಲ್ಲ ಸೆಗಣಿ ಹೆಕ್ಕಿ ಹಳೆಯ ವಿದ್ಯಾರ್ಥಿಗಳು ಹಾಡು ಹೇಳುತ್ತ ಸಾರಿಸಲು ಶುರು ಮಾಡಿದ್ದಾರೆ. `ದಶಮಿಚ ಫೂಲಗೋ ಮಗೇಲ್ ಬೈಣ ರೂಪಾಗೋ’ ಎಂದು ಒಬ್ಬೊಬ್ಬರ ಹೆಸರು ಹೇಳುತ್ತ ಮುಂದುವರೆಯುವ ಕುಣಬಿಗಳ ಸಾಂಪ್ರದಾಯಿಕ ಹಾಡು ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ರಾಧಕ್ಕೋರು ಕೂಡ ಮಕ್ಕಳ ಜೊತೆ ಹಾಡುತ್ತ ಹಿಡಿಯನ್ನು ತಿರುಗಿಸುತ್ತ ಮಣ್ಣಿನಂಗಳಕ್ಕೆ ಸಗಣಿಯ ಮೆತ್ತುತ್ತ ಖುಷಿಯನ್ನು ಹೆಚ್ಚಿಸುತ್ತಿದ್ದಾರೆ. ಮಕ್ಕಳ ಖುಷಿ ಕಂಡು ಸಗಣಿಯೂ ತನ್ನ ವಾಸನೆ ಮರೆತಂತಿದೆ. ಧ್ವಜದ ಕಟ್ಟೆ ಹಾಗೂ ಕಂಬಗಳು ಏಳನೇ ವರ್ಗದವರ ಕೈ ಸ್ಪರ್ಷಕ್ಕೆ ಪುಳಕಗೊಂಡು ಬಿಳಿ ಬಣ್ಣ ಮೆತ್ತಿಕೊಂಡಿದೆ. + +ಆರನೆಯ ವರ್ಗದ ನಾಗವೇಂದ್ರ ಹಾಗೂ ಅವನ ಗೆಳೆಯರು ಶಾಲೆಯ ಆವರಣದಲ್ಲಿರುವ ಮಾವಿನ ಮರದ ಎಲೆಯನ್ನು ಹೊತ್ತು ತರುತ್ತಿದ್ದಾರೆ. ಶಾಲೆಯ ಸುತ್ತ ಮಾವಿನ ತೋರಣ ಹಾಕುವ ಅವರ ಯೋಜನೆಗೆ ರಾಧಕ್ಕೋರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ. ಅಣಶಿಯ ಮೂಲಕ ಹಾದುಹೋಗುವ ಸಹೇಲಿ ಟೇಂಪೋದ ಮಾಲೀಕ ಹಾಗೂ ಚಾಲಕ ಅನ್ವರ ಬಯ್ಯಾನಿಗೆ ಹೇಳಿದರೆ ಅವನು ತಂದು ಮುಟ್ಟಿಸುತ್ತಾನೆಂಬ ನಂಬಿಕೆ ಇದೆ. ದಾಂಡೇಲಿಯಿಂದ ಉಳವಿ ಮಾರ್ಗವಾಗಿ ಅಣಶಿಯಿಂದ ಕಾರವಾರಕ್ಕೆ ಹಾದು ಹೋಗುವಾಗ ನಡುವೆ ಸಿಕ್ಕ ಹಳ್ಳಿಗರಿಗೆ ಅವಶ್ಯವಿದ್ದ ಕೆಲವು ಸಾಮಾನು, ಔಷಧಿಗಳನ್ನು ಅವನೇ ತಂದುಕೊಡುತ್ತಾನೆ. ಅವನ ಈ ಸೇವೆ ಮಕ್ಕಳಿಗೆ ಬಣ್ಣ ಬಣ್ಣದ ಕಾಗದ ತಂದು ಕೊಡುವಲ್ಲಿಯವರೆಗೆ ಮುಂದುವರೆದಿದೆ. ಏಳನೆಯ ವರ್ಗದ ಹುಡುಗಿಯರೆಲ್ಲ ಕಾಗದವನ್ನು ಮಡಚಿ ಚಂದವಾಗಿ ಕತ್ತರಿಸುತ್ತಿದ್ದಾರೆ. ರಾಧಕ್ಕೋರು ಅವರಿಗೆ ಪರಪರೆ ಕತ್ತರಿಸುವ ವಿಧಾನ ಹೇಳಿಕೊಟ್ಟಿದ್ದಾರೆ. ಇನ್ನು ಕೆಲವು ಹುಡುಗಿಯರು ಕಂಬಕ್ಕೆ ದಾರವನ್ನು ಕಟ್ಟಿ ಅಡುಗೆಯವರು ಮಾಡಿಕೊಟ್ಟ ಮೈದಾ ಹಿಟ್ಟಿನ ಅಂಟನ್ನು ನಾಜೂಕಾಗಿ ಬಣ್ಣದ ಹಾಳೆಗೆ ಹಾಕಿ ಕಟ್ಟಿದ ದಾರಕ್ಕೆ ಅಂಟಿಸುತ್ತಿದ್ದಾರೆ. ಎಂತಹ ಮರವನ್ನಾದರು ಕ್ಷಣ ಮಾತ್ರದಲ್ಲಿ ಮೇಲೇರುವ ಪ್ರಜ್ವಲ್ ಹಾಗು ಪ್ರವೀಣ ನೆಟ್ಟ ಕಂಬ ಹತ್ತುವುದರಲ್ಲೂ ಮುಂದೆ. ಕಂಬದ ತುದಿಯವರೆಗೂ ಹತ್ತಿ ಪರಪರೆಯ ದಾರ ಕಟ್ಟುವರು. ಹೆಡ್ ಬಾಯೋರು `ನಿಧಾನ ಹತ್ತು, ನಿಧಾನ’ ಎಂದು ಹೆದರಿಕೆಯನ್ನು ಹೊತ್ತಿದ್ದಾರೆ. ಆದರೆ ರಾಧಕ್ಕೋರು ಮಕ್ಕಳ ಮರ ಹತ್ತುವ ಕೌಶಲ್ಯ ಹತ್ತಿರದಿಂದ ಕಂಡವರು. ಖಂಡಿತ ಅವರು ಬೀಳಲಾರರು ಎಂಬ ನಂಬಿಕೆ ಅವರಿಗಿದೆ. ಅಷ್ಟೇ ಅಲ್ಲ, ಅನೇಕ ಸಲ ಮರ ಹತ್ತುವ ಆಟವನ್ನು ಕೂಡ ರಾಧಕ್ಕೋರು ಮಕ್ಕಳಿಗೆ ಆಡಿಸಿದ್ದಿದೆ. ಹುಡುಗಿಯರು ಪರಪರೆ ಅಂಟಿಸಿದ ದಾರವೀಗ ಕಂಬದ ತುದಿಯೇರಿ ನಗುತ್ತಿದೆ. ಮಕ್ಕಳ ಕಣ್ಣಲ್ಲಿ ಆಕಾಶಕ್ಕೊಂದು ತೂಗುಸೇತುವೆ ಕಟ್ಟಿದ ರೀತಿಯಲ್ಲಿ ಅದು ಕಂಡು ಹಾರಿ ಹಾರಿ ಕುಣಿಯುತ್ತಿದ್ದಾರೆ. ಪರಪರೆಯ ಚಪ್ಪರ ಶಾಲೆಗೊಂದು ಹೊಸ ಮೆರಗು ತಂದಿದೆ. ಸಣ್ಣ ಗಾಳಿ ಬಂದಾಗ ಪರಪರೆಯು ಅಲುಗಿ ಪಿಸುಮಾತನಾಡುತ್ತದೆ. ಇದೆಲ್ಲ ಸಡಗರ ತನ್ನಿಂದ ಎಂದು ಧ್ವಜದ ಕಟ್ಟೆಯೂ ಜಂಭ ತೋರುತ್ತಿದೆ. + +ಶಾಲೆಯ ಚಿತ್ರ ಕಲಾವಿದರ ಕೈಯಲ್ಲೀಗ ಬಿಳಿ ಬಣ್ಣದ ಶೇಡಿಯ ಗಟ್ಟಿಗಳು. ಶೇಡಿಯನ್ನು ನೀರಿನಲ್ಲಿ ಕಲಿಸಿ ಅಡಿಕೆ ಸಿಪ್ಪೆಯ ಸಹಾಯದಿಂದ ಗೆರಕಿ( ನಾಲ್ಕು ರೇಖೆ ಒಂದೇ ಬಾರಿ ಮೂಡಿಸಲು ತಯಾರಿಸಿಕೊಂಡ ಬೆರಳಿನಾಕಾರದಂತೆ ಕಾಣುವ ಬ್ರಷ್) ತಯಾರಿಸಿಕೊಂಡು ಅಂಗಳದ ತುಂಬ ಹಲಿ ಹಾಕುತ್ತಿದ್ದಾರೆ. ಯಾವುದೇ ಖರ್ಚಿಲ್ಲದೇ ಅಣಶಿಯಲ್ಲಿ ಸಿಗುವ ಶೇಡಿಯಿಂದ(ಒಂದು ರೀತಿಯ ಬಿಳಿ ಮಣ್ಣು) ಮಕ್ಕಳು ಚಿತ್ರ ರಚಿಸುತ್ತಿದ್ದಾರೆ. ಅದು ಒಣಗಿದ ನಂತರ ಬಿಳಿ ಬಣ್ಣ ಅಚ್ಚಾಗಿ ಕಂಡು ಹಲಿ(ರಂಗೋಲಿ) ಎದ್ದು ಕಾಣುತ್ತದೆ. ರಾಧಕ್ಕೋರು ಈ ಹಿಂದೆಯೇ ಹಲಿ ತೆಗೆಯುವ ವಿಧಾನ ಕಲಿಸಿದ್ದಾರೆ. ಟಾಟಾ ಫೆಲೋಶಿಫ್ ಪಡೆದ ಹೊನ್ನಾವರದ ಹನುಮಿ ಗೌಡ ಶೇಡಿ ಬಳಸಿ ಚಂದದ ಚಿತ್ರ ತೆಗೆಯುತ್ತಾರೆ. ಅವರ ಜಾನಪದ ಕಲೆಗೆ ಹಲವಾರು ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಹನುಮಿಯವರಿಂದ ಹಲಿ ತೆಗೆಯುವುದನ್ನು ಕಲಿತ ರಾಧಕ್ಕೋರು ಅಣಶಿ ಶಾಲೆಯ ಎಲ್ಲ ಮಕ್ಕಳಿಗೆ ಹಲಿ ತೆಗೆಯುವುದನ್ನು ಕಲಿಸಿದ್ದಾರೆ. ಮಕ್ಕಳ ಕಲಿಕೆಯ ಫಲವೀಗ ಜನವರಿ ಇಪ್ಪತ್ತೈದರಿಂದಲೇ ದಾಖಲಾಗುತ್ತಿದೆ. ಶಾಲೆಯ ಚಿಟ್ಟಿ ಮೇಲೆ ಹಲಿ ಮೈ ಅರಳಿಸಿಕೊಂಡು ಕಣ್ಣು ಹೊಡೆಯುತ್ತಿದೆ. + +ಗಣರಾಜ್ಯ ದಿನಾಚರಣೆಯ ಪೂರ್ವಭಾವಿ ತಯಾರಿ, ಮಕ್ಕಳ ಉತ್ಸಾಹ ನೋಡಲು ಬಂದ ಗ್ರಾಮ ಪಂಚಾಯತಿಯ ಪಿ.ಡಿ.ಓ ಎನ್.ಆರ್.ಅಕ್ಕಿ ಸಾಹೇಬರು ಖುಷಿಗೊಂಡು ಜಾನಪದ ಕಲೆ ಬಿಡಿಸಿದ ಮಕ್ಕಳಿಗೆ ಬಹುಮಾನ ಘೋಷಿಸಿದ್ದಾರೆ. ಶಾಲೆಯ ಕೆಲವು ಮಕ್ಕಳು ಕಳೆದ ಒಂದು ವಾರದಿಂದ ತಮ್ಮಷ್ಟಕ್ಕೆ ತಾವೇ ಗುಣುಗುಡುತ್ತ ಭಾಷಣ ಬಾಯಿಪಾಠ ಮಾಡುವ ತುರ್ತಿನಲ್ಲಿದ್ದಾರೆ. ಗಟ್ಟು ಹಾಕಿದಷ್ಟೂ ಹೊತ್ತು ಸರಿ ಹೇಳಿ ಮಾರನೆಯ ದಿನ ಮತ್ತೆ ಕೇಳಿದರೆ ತಪ್ಪುವ ಮೂರನೇ ವರ್ಗದ ಆಯೇರಾಳ ಉರ್ದು ಭಾಷಣ ಕೇಳಿದಷ್ಟು ನಗು ಹುಟ್ಟಿಸುತ್ತದೆ. ಶಾಲೆಯ ಪ್ರಸಿದ್ಧ ಗಾಯಕರು ಸಂಗೀತ ವಿದ್ವಾಂಸರಂತೆ ದೇಶಭಕ್ತಿಗೀತೆ ಹೊಸಬಗೆಯಲ್ಲಿ ಹಾಡಲು ತಾಲೀಮು ನಡೆಸಿದ್ದಾರೆ. + + + +ಇಂತಹ ಹಬ್ಬಗಳಲ್ಲಂತೂ ಮಕ್ಕಳು ಶಾಲೆಗೆ ಬರುವ ಸನ್ನಿವೇಶವಂತೂ ಮರೆಯಲಾಗದು. ಸಂಕ್ರಾಂತಿ ಕಳೆದರೂ ಚಳಿ ಕಡಿಮೆಯಾಗದ ಹೊತ್ತು ಇದು. ಶಾಲೆಗೆ ಆರು ಕಿ.ಮೀ ನಡೆದು ಬರುವ ಮಕ್ಕಳು, ಎರಡು ಕಿ.ಮೀ ಮಣ್ಣಿನ ರಸ್ತೆಯಲ್ಲಿ ನಡೆದು ನಂತರ ಮುಖ್ಯ ರಸ್ತೆಗೆ ಬಂದು ಬೆಳಿಗ್ಗಿನ ಬಸ್ ಹತ್ತಿ ಶಾಲೆಗೆ ಬರುವ ಮಕ್ಕಳಿಗೆಲ್ಲ ಬೆಳಕು ಹರಿದು ಬಿಡಬಹುದೆಂದು ರಾತ್ರಿ ಸರಿ ನಿದ್ದೆಯೇ ಬಾರದು. ರಾಧಕ್ಕೋರು ತರಗತಿಯಲ್ಲಿ ಓದಿದ `ಎಲ್ಲರು ಸರಿಯಾಗಿ 7-30 ಕ್ಕೆ ಬರಬೇಕು’ ಎಂಬ ನೋಟಿಸು ಕನಸಲ್ಲೂ ನಕ್ಕಂತೆ ಕಾಣುವುದು. ಅಮ್ಮ ಹಚ್ಚಿದ ಒಲೆಯಲ್ಲಿ ಕರಗುವ ಕಟ್ಟಿಗೆ ತುಂಡುಗಳ ಸದ್ದು ಅಲಾರಾಂ ಆಗಿ ಮಕ್ಕಳನ್ನು ಎಬ್ಬಿಸಿವೆ. ವಿದ್ಯುತ್ ಸಂಪರ್ಕವಿಲ್ಲದ ಇಲ್ಲಿನ ಕೆಲ ಊರುಗಳಲ್ಲಿ ಒಂದೇ ಚಿಮಣಿಯಿರುವ ಕುಟುಂಬಗಳಲ್ಲಿ ಹೀರೋಗಳಂತೆ ತಯಾರಾಗುವ ಕನಸು ಕಂಡ ಮಕ್ಕಳು ಕತ್ತಲೆಯ ಗವಿಯಲ್ಲಿ ಒಂದು ಕಾಲಿಗೆ ನೀಲಿ, ಇನ್ನೊಂದು ಕಾಲಿಗೆ ಕರಿ ಬಣ್ಣದ ಸಾಕ್ಸ ಧರಿಸಿ ಬರುವ ಪ್ರಸಂಗಗಳು, ದೂರದೂರಿನಿಂದ ನಡೆದು ಬರಲಾಗದೆ ಅಣಶಿಯಲ್ಲಿ ಸಂಬಂಧಿಕರ ಮನೆಯಲ್ಲಿ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡವರು, ರಾತ್ರಿ, ಕೈಯಲ್ಲಿ ಒತ್ತಿ ಒತ್ತಿ ಗರಿಮುರಿಯಾದ ಸಮವಸ್ತ್ರ ಮತ್ತೆ ಮುದ್ದೆಯಾಗಿ ಉಸಿರುಗಟ್ಟಿ ಬಾಡಿದ ಘಟನೆಗಳು, ಎರಡನೆಯ ಸೆಮಿಸ್ಟರ್‌ಗೆ ಕೊಟ್ಟ ಸಮವಸ್ತ್ರ ಇನ್ನೂ ಹೊಲಿಸಿಕೊಳ್ಳಲಾಗದೆ ಹಳೆಯದನ್ನೆ ಹಾಕಿ ಬಂದ ಮಕ್ಕಳ ನೋವು ದೊಡ್ಡ ತರಗತಿಯವರು ಬಾರಿಸುತ್ತಿದ್ದ ಶಾಲೆಯ ಬ್ಯಾಂಡ್ ಸೆಟ್ಟಿನ ಖುಷಿ, ಶಬ್ದಕ್ಕೆ ಹೆದರಿ ಮರದಿಂದ ಮರಕ್ಕೆ ಬಳ್ಳಿಗಳ ಹಿಡಿದು ಹಾರುವ ಮಂಗಗಳ ಹಗ್ಗ ಜಗ್ಗಾಟ, ಮಂಗನ ಕಂಡೊಡನೆ ಕರ್ನಾಟಕದ ಕೆಲವು ಅರಣ್ಯ ಇರುವ ಊರಲ್ಲಿ ಹರಡುತ್ತಿರುವ ಮಂಗನ ಕಾಯಿಲೆ ಹಾಗೂ ಅದರಿಂದಾಗಿ ಜನ ಸತ್ತುಹೋಗಿರುವುದೆಲ್ಲ ರಾಧಕ್ಕೋರಿಗೆ ನೆನಪಾಗಿ `ಅಣಶಿ ಸುರಕ್ಷಿತವಾಗಿರಲಿ’ ಎಂದು ಊರಿನ ಸಿದ್ದೇಶ್ವರನಿಗೆ ಅರ್ಪಿಸಿದ ಒಂದು ಬೇಡಿಕೆ, ಕಾಡಿನ ನೀರವತೆ ಮೀರಿ ಅರಣ್ಯ ಇಲಾಖೆಯವರ ಆಫೀಸಿನ ಮೈಕೋದಲ್ಲಿ ಕೇಳಿ ಬರುವ `ಹಿಂದ್ ದೇಶಕೆ ನಿವಾಸಿ ಸಭಿ ಜನ ಏಕ ಹೈ’ ಎಂಬ ಹಾಡು, ಧ್ವಜ ಹಾರಿಸಲು ಈ ಬಾರಿ ಸೀರೆಗೆ ಸ್ಪೇಷಲ್ ಇಸ್ತ್ರಿ ಕುಂಬಾರವಾಡಾದಿಂದ ಮಾಡಿಸಿಕೊಂಡು ಬಂದ ಎಸ್.ಡಿ.ಎಮ್.ಸಿ ಅಧ್ಯಕ್ಷೆ, ತಾವು ಕಟ್ಟಿದ ಧ್ವಜ ಹಾರುವವರೆಗೂ ಆತಂಕದಲ್ಲಿರುವ ರಾಧಕ್ಕೋರು, ಧ್ವಜ ಹಾರಿದ ಕೂಡಲೇ ರಾಷ್ಟ್ರಗೀತೆ ಪಟ್ ಅಂತ ಹಾಡಬೇಕು ಎಂದು ತಲೆಯಲ್ಲಿ ತುಂಬಿಕೊಂಡ ಶಾಲೆಯ ಮುಖ್ಯಮಂತ್ರಿ, ಅಧ್ಯಕ್ಷೆ ಧ್ವಜ ಕಟ್ಟೆಯ ಮುಂದೆ ಬಂದು ನಿಲ್ಲುವ ಮುನ್ನವೇ ಗಡಿಬಿಡಿಯಲ್ಲಿ `ಹಿಲೋ ಮತ್’ ಎಂದ ಪ್ರಭಾತಫೇರಿಗೆ ಹೊರಡುವ ತಂಡದ ನಾಯಕನ ಆದೇಶಕ್ಕೆ ನಕ್ಕ ಮಕ್ಕಳ ಖುಷಿ, ಧ್ವಜಾರೋಹಣದ ನಂತರ ಕೊಡುವ ಚಾಕೋಲೇಟ್ ಆಸೆ, ಕೆಲವರಿಗೆ ಅರಣ್ಯ ಇಲಾಖೆಯವರು, ಗ್ರಾಮ ಪಂಚಾಯತಿಯವರು ಕೊಡುವ ಬೂಂಧಿ ಲಾಡು ಬಾಯಲ್ಲಿ ನೀರು, ದಾರಿಯುದ್ದಕ್ಕೂ ಮಕ್ಕಳ ಚಡ್ಡಿಕಿಸೆಯಲ್ಲಿ ಸದ್ದಿಡುವ ಚಾಕಲೇಟ್ ರ್ಯಾಪರ್, ಪದೇ ಪದೇ ಮುಟ್ಟಿ `ಬಿದ್ದಿಲ್ಲ ತಾನೇ’ ಎಂದು ನೋಡಿಕೊಳ್ಳುವ ಮಕ್ಕಳ ಹೂವಿನಂತಹ ಕೈಗಳು.. ಹೀಗೆ ವಿಧವಿಧದ ಚಿತ್ರಗಳು.. ಊರಿನ ತುಂಬ ಬಣ್ಣಗಳು.. ಎಲ್ಲರೆದೆಯಲ್ಲಿ ಜನವರಿ ಇಪ್ಪತ್ತಾರರ ಸಂತಸಗಳು.. ಬನ್ನಿ, ನಾವು ಸೇರಿಕೊಳ್ಳೋಣ `ಈ-ಸ್ಕೂಲಿ’ನೊಳಗೆ. + +(ಪುಸ್ತಕ ಬಿಡುಗಡೆ ಸಮಾರಂಭ-  ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಬೆಂಗಳೂರು, 14/01/2023 ಶನಿವಾರ, ಸಂಜೆ 4:30ಕ್ಕೆ) + +ಅಕ್ಷತಾ ಕೃಷ್ಣಮೂರ್ತಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾದವರು. ಜೊಯಿಡಾದ ದಟ್ಟ ಕಾನನದ ಅಣಶಿಯ ಶಾಲೆಯಲ್ಲಿ ಹದಿನಾಲ್ಕು ವರ್ಷದಿಂದ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ದೀಪ ಹಚ್ಚಬೇಕೆಂದಿದ್ದೆʼ ಇವರ ಪ್ರಕಟಿತ ಕವನ ಸಂಕಲನ \ No newline at end of file diff --git a/Kenda Sampige/article_161.txt b/Kenda Sampige/article_161.txt new file mode 100644 index 0000000000000000000000000000000000000000..fa033c17ad1adc659744ffad552c9f3bb445c9dc --- /dev/null +++ b/Kenda Sampige/article_161.txt @@ -0,0 +1,23 @@ +ಸನ್ಮಿತ್ರ ಶ್ರೀ ನಾರಾಯಣ ಯಾಜಿ ಅವರ ಅಂಕಣ ಬರಹಗಳನ್ನು ಓದುವುದೇ ಒಂದು ಹಿತದ ಅನುಭವ. ಸಂಸ್ಕೃತದ ಕಾವ್ಯ ಪುರಾಣ ಉಪನಿಷತ್ತುಗಳು, ಕನ್ನಡ ಹಾಗೂ ಆಂಗ್ಲ ಸಾಹಿತ್ಯದ ಆಳವಾದ ಓದಿನಿಂದ ಪಡೆದ ಜ್ಞಾನದ ಸಾರ್ಥಕ ಅವತರಣಿಕೆಯಾಗಿ ಈ ಕೃತಿ ಮೂಡಿಬಂದಿದೆ. ಜತೆಗೆ ಯಕ್ಷಗಾನ ಅರ್ಥಧಾರಿಯಾಗಿ ಅವರು ಪಡೆದ ಅನುಭವವೂ ಇಲ್ಲಿನ ಬರಹಗಳಲ್ಲಿ ಕೈಗೂಡಿಸಿದೆ. + +(ನಾರಾಯಣ ಯಾಜಿ) + +ಸಾಮಾನ್ಯವಾಗಿ ಅಂಕಣ ಬರಹಗಳು ಆಯಾ ಕ್ಷಣದ ದಾಖಲೆಗಳಾಗಿರುತ್ತವೆ. ಒಂದು ಕಾಲದ ಬಳಿಕ ಅವು ತಮ್ಮ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತವೆ. ಆದರೆ ಯಾಜಿಯವರು ಅಂಥ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವ ಗೋಜಿಗೆ ಹೋಗದೆ, ಸಾರ್ವಕಾಲಿಕವಾದ ಕೆಲವು ಸಂಗತಿಗಳನ್ನು ಎತ್ತಿಕೊಂಡು ಬರೆದಿದ್ದಾರೆ. ಇದು ಅವುಗಳನ್ನು ಕ್ಷಣಿಕತೆಯಿಂದ ಪಾರು ಮಾಡಿವೆ. ಆದರೆ ಸಮಕಾಲೀನ ಸ್ಪರ್ಶವೂ ಇವುಗಳಿಗೆ ಇದೆ. ಅವರ ಹೆಚ್ಚಿನ ಬರಹಗಳು ಉಪನಿಷತ್ತುಗಳು, ಪುರಾಣಗಳು, ಆದಿಕಾವ್ಯಗಳ ಆಟದ ಅಂಗಳಲ್ಲಿ ಕುಣಿದಾಡುತ್ತದೆ. ಅಲ್ಲಿಂದ ಕತೆಗಳನ್ನು ಎತ್ತಿಕೊಂಡು ಬಂದು ನಮ್ಮ ಮುಂದಿಟ್ಟು ಅವುಗಳಲ್ಲಿ ಹೊಸ ವಿಚಾರಗಳನ್ನು ಯಾಜಿ ನಮಗೆ ಕಾಣಿಸುತ್ತಾರೆ. ಆದರೆ ಆಂಗ್ಲ ಸಾಹಿತ್ಯದ ‘ಮಹಾ ಭಿಕ್ಷುಕʼನೆಂದೇ ಹೆಸರಾದ ವಿಲಿಯಂ ಹೆನ್ರಿ ಡೇವಿಸ್‌ ಬಗೆಗೂ ಬರೆದು ಅಚ್ಚರಿ ಮೂಡಿಸುತ್ತಾರೆ. + +ಯಾಜಿಯವರು ಸರ್ಚ್‌ಲೈಟ್‌ ಬೀರದ ಸಂಗತಿಗಳು ವಿರಳ. ನಾವೆಲ್ಲ ಮರೆತೇ ಬಿಟ್ಟಿರುವ ವೇದಕಾಲದ ಮಹಾಜ್ಞಾನಿ, ಗಾರ್ಗಿ ವಾಚಕ್ನವಿ ಎಂಬ ಮಹಾಪಂಡಿತೆಯ ಬಗೆಗೂ ಬೆಳಕು ಚೆಲ್ಲುತ್ತಾರೆ. ಗೌತಮ ಬುದ್ಧ ಕರ್ಮಯೋಗವನ್ನು ಪ್ರತಿಪಾದಿಸಿದವನು ಎಂದು ಹೇಳುತ್ತಾ ಬುದ್ಧನೂ ನಮ್ಮ ಪರಂಪರೆಯ ಜತೆಗೆ ಹೊಂದಿರುವ ಸಾಂಗತ್ಯವನ್ನು ಗುರುತಿಸುತ್ತಾರೆ. ಶಂಕರಾಚಾರ್ಯರ ಅದ್ವೈತ ವಿಚಾರದ ವಿಲಾಸವನ್ನು ಬೆರಗಾಗುವಂತೆ ಕಟ್ಟಿಕೊಡುತ್ತಾರೆ. ಹಾಗೆಯೇ ಪುರಾಣದ ಹತಭಾಗ್ಯ ಸ್ತ್ರೀ ಪಾತ್ರಗಳ ಬಗ್ಗೆ ತುಂಬಾ ಮಮತೆಯಿಂದ ಅವರು ಬರೆಯುತ್ತಾರೆ. ಉದಾಹರಣೆಗೆ, ಮಹಾಭಾರತದ ಅಂಬೆ, ಕುಂತಿ, ರಾಮಾಯಣದ ಕೈಕೇಯಿ ಮುಂತಾದವರು. ಹಾಗೇ ಕಿಬ್ಬಚ್ಚಲ ಮಂಜಮ್ಮ ಎಂಬ ಅಜ್ಞಾತ ಅಪರೂಪದ ಯಕ್ಷಗಾನ ಕೃತಿಕಾರ್ತಿಯ ಬಗೆಗೂ ಬೆಳಕು ಚೆಲ್ಲುತ್ತಾರೆ. ‘ರಾಷ್ಟ್ರವೆನ್ನುವುದು ಅಸ್ಮಿತೆಯ ಭಾವನಾತ್ಮಕ ಅನುಬಂಧʼ ಎನ್ನುವ ಮೂಲಕ ಹೊಸ ಬಗೆಯ ವ್ಯಾಖ್ಯಾನವನ್ನೇ ನೀಡುತ್ತಾರೆ. ಮಹಾಕವಿ ಪಂಪನ ಬಗ್ಗೆ ಬರೆದಂತೆಯೇ ಇತಿಹಾಸದಲ್ಲಿ ಮರೆಯಾದ ಎರಡನೇ ಸಿಪಾಯಿ ಕ್ರಾಂತಿಯ ಬಗ್ಗೆಯೂ ಅಷ್ಟೇ ಅಥೆಂಟಿಕ್‌ ಆಗಿ ಬರೆಯುತ್ತಾರೆ. + + + +ಇಲ್ಲಿ ಭೂಮಿಯನ್ನು ಮೇಲಿದ್ದುಕೊಂಡು ಕಾಪಾಡುವ, ‘ದ್ಯುಲೋಕʼ ಕರೆಯಲಾಗುವ ಸ್ವರ್ಗೀಯ ಸಂಗತಿಗಳಿಗೆ ಸಂಬಂಧಪಟ್ಟ, ಹಾಗೇ ಈ ಮಣ್ಣಿಗೂ ಮನುಷ್ಯರ ಭಾವನೆಗಳಿಗೂ ಸಂಬಂಧಿಸಿದ ಬರಹಗಳೂ ಇವೆ. ಹೀಗಾಗಿಯೇ ‘ನೆಲ ಮುಗಿಲುʼ ಎಂಬ ಹೆಸರು ಈ ಕೃತಿಗೆ ಅರ್ಥಪೂರ್ಣವಾಗಿದೆ. ಯಾಜಿಯವರು ಇಲ್ಲಿನ ಬರಹಗಳನ್ನು ‘ಅಂಬರದಿಂದʼ ಮತ್ತು ‘ಅವನಿಯ ತನಕʼ ಎಂಬ ಎರಡು ವಿಭಾಗಗಳನ್ನು ಮಾಡಿದ್ದಾರೆ. ಮನುಷ್ಯನ ಬದುಕು ಈ ಭೂಮಿಯ ಸಂಗತಿಗಳಿಗೆ ಹೊಂದಿಕೊಂಡಿರುವಂತೆಯೇ, ಅಮೂರ್ತವಾದ ಅನೇಕ ಸಂಗತಿಗಳಿಗೂ ಕೃತಜ್ಞವಾಗಿದೆ ಎಂಬುದನ್ನು ಇದು ಸಾರುತ್ತದೆ. ಉದಾಹರಣೆಗೆ ತತ್ವಮಸಿ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ಅಯತಾತ್ಮಾ ಬ್ರಹ್ಮ ಎಂಬ ಉಪನಿಷತ್ತಿನ ವಾಕ್ಯಗಳಿಗೆ ಇವರು ಮಾಡುವ ವ್ಯಾಖ್ಯಾನಗಳನ್ನೇ ಪರಿಶೀಲಿಸಬಹುದು. ಅಂಥ ಇನ್ನಷ್ಟು ಗಾಢವಾದ ಓದಿಗಾಗಿ ಓದುಗನನ್ನು ಸಜ್ಜುಮಾಡುವ ಬಗೆಯ ಬರಹಗಳು ಇವು. + +ಇಲ್ಲಿ ಎರಡು ಮೂರು ಬಾರಿ ಓದಿ ಅರ್ಥಮಾಡಿಕೊಳ್ಳಬೇಕಾದಂಥ ಬರಹಗಳು, ವಾಕ್ಯಗಳು ಇವೆ. ಉದಾಹರಣೆಗೆ, ನಚಿಕೇತನ ಬಗೆಗಿನ ಬರಹದಲ್ಲಿ ಬರುವ “ಹುಟ್ಟು ಸಾವುಗಳು ಕೇವಲ ಕರ್ತೃ ಮತ್ತು ಕರ್ಮಗಳಿಲ್ಲದ ಕ್ರಿಯೆ ಆಗಬೇಕು” ಎಂಬ ಮಾತು. ಹಾಗೇ ಈಶಾವಾಸ್ಯ ಉಪನಿಷತ್ತಿನ ಬಗ್ಗೆ ಬರೆದ ಬರಹದಲ್ಲಿ ಬರುವ “ನಮ್ಮೊಳಗಿನ ಆತನನ್ನು ಅರಿಯಲು ಹೊರಗಡೆ ಕಟ್ಟಿದ ನಮ್ಮದೇ ಆವರಣವನ್ನು ನಾವು ಮುರಿಯಬೇಕು” ಎಂಬ ಮಾತು. ಹಾಗೇ ಮಹಾತ್ಮ ಗಾಂಧಿಯವರ ಬಗ್ಗೆ ಹೇಳುವ ‘ಭಯವಿಲ್ಲದ ಅಸ್ತ್ರದಿಂದಲೇ ಭಯ ಹುಟ್ಟಿಸಿದ ಸಂತʼ ಎಂಬ ಮಾತು. ಇಂಥ ಸಾಲುಗಳನ್ನು ತೀರಾ ಮಗ್ನವಾಗಿ ಓದದೇ ಹೋದ ಹೊರತು ಅರ್ಥ ಮಾಡಿಕೊಳ್ಳಲಾಗದು. + +(ಹರಿಪ್ರಕಾಶ್‌ ಕೋಣೆಮನೆ) + +ಹಾಗೇ ಇವೆಲ್ಲವನ್ನೂ ಅವರು ಈ ಕಾಲದ ಜ್ಞಾನದ ಜತೆಗೆ ಸೊಗಸಾಗಿ ತಳುಕು ಹಾಕುತ್ತಾರೆ. ಉದಾಹರಣೆಗೆ, ಕಠೋಪನಿಷತ್ತಿನ ನಚಿಕೇತನ ವಿನಯವನ್ನು ಬಸವಣ್ಣನವರ ‘ಎನಗಿಂತ ಕಿರಿಯರಿಲ್ಲʼ ಎಂಬ ವಚನದ ಜತೆಗೆ ಹೋಲಿಸಿ ಅವರು ನೀಡುವ ಹೋಲಿಕೆ ಇಡೀ ಬರಹಕ್ಕೇ ಒಂದು ಹೊಸ ಆಯಾಮವನ್ನು ನೀಡುತ್ತದೆ. ಹಾಗೆಯೇ, ಈಶಾವಾಸ್ಯೋಪನಿಷತ್ತಿನ ‘ತೇನ ತ್ಯಕ್ತೇನ ಭುಂಜೀಥಾʼ (ತ್ಯಾಗದಿಂದಲೇ ಅನುಭವಿಸಬೇಕು) ಎಂಬ ಮಾತನ್ನು ಇವರು ಇಸ್ಲಾಂನ ಕುರಾನ್‌ನ ‘ನಿನ್ನ ನೆರೆಮನೆಯವರು ಉಪವಾಸವಿದ್ದಾಗ ನೀನು ಹಬ್ಬ ಮಾಡಕೂಡದುʼ ಎಂಬ ಮಾತಿಗೆ, ‘ಎಲ್ಲ ಉತ್ತಮ ಉಡುಗೊರೆಗಳೂ ನಮಗೆ ಸ್ವರ್ಗದಿಂದ ಕೊಡಲ್ಪಟ್ಟಿವೆʼ ಎಂಬ ಬೈಬಲ್‌ಗೆ ಮಾತಿಗೆ ಹೋಲಿಸುತ್ತಾರೆ. ಇದು ಎಷ್ಟು ಸೊಗಸಾಗಿದೆ ಅಲ್ಲವೇ? + + + +ಹೀಗೆ ನಮ್ಮನ್ನು ಪುರಾಣ- ಉಪನಿಷತ್ತು- ಇತಿಹಾಸ- ವರ್ತಮಾನಗಳ ಕೋಣೆ ಕೋಣೆಗಳಲ್ಲಿ ಸುತ್ತಾಡಿಸುವ ಇವರ ಬರಹಗಳು ನನಗಂತೂ ತುಂಬಾ ತಿಳಿವನ್ನೂ ಆನಂದವನ್ನೂ ಕೊಟ್ಟಿವೆ. ನಿಮಗೂ ನೀಡಲಿದೆ ಎಂಬ ದೃಢವಿಶ್ವಾಸ ನನ್ನದು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_162.txt b/Kenda Sampige/article_162.txt new file mode 100644 index 0000000000000000000000000000000000000000..a2964c9979a60cea8385275b5f001f14f312050d --- /dev/null +++ b/Kenda Sampige/article_162.txt @@ -0,0 +1,37 @@ +ಮಹಾತ್ಮಾ ಗಾಂಧಿ ಎನ್ನುವ ಹೆಸರು ಮೂಡಿಸುವ ಭಾವನೆಗಳೇ ಬೇರೆ. ತುಂಡು ಬಟ್ಟೆಯ ಫಕೀರ ತನಗಾಗಿ ಅಂತ ಗಳಿಸಿರುವದು ಏನೂ ಇಲ್ಲ. ಆದರೆ ಆತ ಕೊಟ್ಟುಹೋದ ಮೌಲ್ಯಗಳ ಮೌಲ್ಯವನ್ನು ಮಾತ್ರ ಸರಿಗಟ್ಟಲಾಗದು. ಗಾಂಧಿಯವರ ವಿಷಯವನ್ನು ಓದುವದೆಂದರೆ ಅದೊಂದು ಸೊಗಸು, ಬೆರಗು ಮತ್ತು ಅಚ್ಚರಿಗಳ ಮಿಶ್ರಣದ ಭಾವ. ಅವರ ವ್ಯಕ್ತಿತ್ವದ ಕುರಿತು ಹೇಳುವಾಗ ಸತ್ಯ ಮತ್ತು ಅಹಿಂಸೆಯನ್ನು ಬಿಟ್ಟು ಸಾಗುವುದೇ ಇಲ್ಲ. ಭಾರತಕ್ಕೆ ಸ್ವಾತಂತ್ರ್ಯವನ್ನು ತರಲು ಅವರು ಮಾಡಿದ ಹೋರಾಟಗಳು ಸಾಮಾನ್ಯವೇನಲ್ಲ. 1915ರಲ್ಲಿ ಭಾರತಕ್ಕೆ ಗೋಪಾಲಕೃಷ್ಣ ಗೋಖಲೆಯವರ ಆಗ್ರಹದ ಮೇರೆಗೆ ಗಾಂಧಿ ಮುಂಬಯಿಗೆ ಬಂದು ಇಳಿದು ಇಲ್ಲಿನ ಸ್ವಾತಂತ್ರ್ಯದ ಹೋರಾಟದ ನೇತೃತ್ವವನ್ನು ವಹಿಸಿಕೊಂಡಮೇಲೆ ಕಾಂಗ್ರೆಸ್ಸಿನ ಹೋರಾಟಕ್ಕೆ ಒಂದು ನಿರ್ದಿಷ್ಟಸ್ವರೂಪ ಬಂದಿರುವುದು. ಇಂಥಹ ಗಾಂಧಿಯವರ ಕುರಿತು ನೂರಾರು ಪುಸ್ತಕಗಳು ಪರವಾಗಿ ಮತ್ತು ವಿರೋಧವಾಗಿ ಬಂದಿವೆ. ಕನ್ನಡದಲ್ಲಿ ಗೊರೂರು ರಾಮಸ್ವಾಮಿ ಅಯ್ಯಂಗಾರ ಅನುವಾದಿಸಿದ “ನನ್ನ ಆತ್ಮ ಕಥೆ ಅಥವಾ ನನ್ನ ಸತ್ಯಶೋಧನೆಯ ಕಥೆ” ಗಾಂಧಿಯ ಓದುಗರಿಗೆ ಒಂದು ಕೈಪಿಡಿ. ಗಾಂಧಿಯೆನ್ನುವ ಸಂಕೀರ್ಣ ವ್ಯಕ್ತಿತ್ವವನ್ನು ಸಮಗ್ರವಾಗಿ ಓದಲು ಈ ಕೈಪಿಡಿ ಅಪೂರ್ಣವೆಂದು ಅನೇಕಸಲ ಅನಿಸಿದೆ. ಗಾಂಧಿ ತನ್ನನ್ನು ತಾನು ನೋಡಿಕೊಂಡು ಬರೆದಿರುವುದಕ್ಕೂ ಅವರನ್ನು ಇನ್ನೊಬ್ಬರು ಭೂತಕನ್ನಡಿಯಲ್ಲಿ ನೋಡಿ ಆ ವ್ಯಕ್ತಿತ್ವವನ್ನು ಅಳೆಯುವುದಕ್ಕೂ ವ್ಯತ್ಯಾಸವಿದೆ. ಯಾವ ವ್ಯಕ್ತಿಯೇ ಆಗಲಿ, ಆತ್ಮಕಥೆ ಬರೆಯುವಾಗ ಆತ ತನ್ನ ನಿಲುವನ್ನು ಸಮರ್ಥಿಸಿಕೊಳ್ಳುತ್ತಲೇ ಇರುತ್ತಾನೆ. ಇದು ಆತ್ಮ ಕಥೆಯ ಮಿತಿಯೂ ಹೌದು. ಆದರೆ ಇನ್ನೊಬ್ಬರು ಅಳೆಯುವಾಗ ಅದು ಮಾನಸಹಿತವಾಗಿರುತ್ತದೆ. ಮಾನವೆನ್ನುವುದು ಅಳತೆ ಎನ್ನುವ ಅರ್ಥ. ನಾನು ಹೀಗಿದ್ದೇನೆ ಎಂದು ನಮಗೆ ನಾವೇ ಹೇಳಿಕೊಳ್ಳುವುದಕ್ಕಿಂತ ಇನ್ನೊಬ್ಬರು ನಮ್ಮ ಕುರಿತು ಯಾವ ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ಮುಖ್ಯವಾಗುತ್ತದೆ. ಇದು ವ್ಯಕ್ತಿಯ ಮುಖಕ್ಕೆ ಹಿಡಿದ ಕನ್ನಡಿಯೂ ಹೌದು. + +(ರಾಮಚಂದ್ರ ಹಬ್ಬು) + +ಗಾಂಧಿಯ ಕುರಿತು ಇಷ್ಟೊಂದು ಆಸಕ್ತಿ ಮತ್ತೆ ಹುಟ್ಟಿಸಿರುವುದಕ್ಕೆ ಕಾರಣ ಗಾಂಧೀಜಿಯ ಕುರಿತಾದ ಹೊಸತೊಂದು ಕೃತಿ “ಮಹಾತ್ಮಾ ಗಾಂಧಿ; ಜೀವನ ಚರಿತೆ”. ಶ್ರೀ. ರಾಮಚಂದ್ರ ಹಬ್ಬು ಅವರು ಈ ಕೃತಿಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮೂಲ ಬರಹ ಖ್ಯಾತ ಗಾಂಧಿವಾದಿಗಳಾದ ಮತ್ತು ಇತಿಹಾಸ ತಜ್ಞರಾದ ಬಲ ರಾಮ ನಂದಾ ಅವರು 1958ರಲ್ಲಿ ಬರೆದ Mahatma Gandhi: A biography ಎನ್ನುವ ಕೃತಿ. ಬಿ. ಆರ್. ನಂದಾ ಅವರು ಓರ್ವ ಮಹತ್ವದ ಇತಿಹಾಸ ತಜ್ಞರಾಗಿ ಗುರುತಿಸಲ್ಪಡುತ್ತಾರೆ. ಅವರು ನವದೆಹಲಿಯ ನೆಹರು ಸ್ಮಾರಕ ಗ್ರಂಥಾಲಯದ ಮೊದಲ ನಿರ್ದೇಶಕರಾಗಿ ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರದ ಮಹತ್ವದ ಸಾಧನೆಗಾಗಿ ಅವರಿಗೆ ಭಾರತಸರ್ಕಾರದಿಂದ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಲಭಿಸಿದೆ. + +ನಂದಾ ಅವರು ಮಾಮೂಲಿನಂತೆ ಗಾಂಧೀಜಿಯವರನ್ನು ವೈಭವೀಕರಿಸಿ ಅಟ್ಟಕ್ಕೇರಿಸಲಿಲ್ಲ. ಹಾಗಂತ ಅವರನ್ನು ಟೀಕಿಸುವ ಸಂದರ್ಭಗಳಲ್ಲಿ ಗಾಂಧಿ ಎನ್ನುವ ಗೌರವವು ಮುಕ್ಕಾಗದಂತೇ ನೋಡಿಕೊಂಡಿದ್ದಾರೆ. 20ನೆಯ ಶತಮಾನರ್ಧದ ಮೊದಲಾರ್ಧದ ಭಾರತೀಯ ಇತಿಹಾಸದ ವಿಹಂಗಮ ನೋಟ ಇಲ್ಲಿದೆ. ಗಾಂಧೀಜಿಯವರ ತತ್ತ್ವಶಾಸ್ತ್ರ ಮತ್ತು ಅಹಿಂಸೆ. ಧರ್ಮ ಲೈಂಗಿಕತೆ, ಅರ್ಥಶಾಸ್ತ್ರ ಮತ್ತು ಕಮ್ಯುನಿಸಂನ ದೃಷ್ಟಿಕೋನಗಳ ಕುರಿತು ಗಾಂಧೀಜಿಯವರಿಗೆ ಇರುವ ದೃಷ್ಟಿಕೋನವನ್ನು ಇಲ್ಲಿ ವಿವರಿಸಲಾಗಿದೆ. ಈ ಕಾರಣದಿಂದ ಹಲ ಗಾಂಧೀಜಿಯವರ ಕೃತಿಗಳ ನಡುವೆ ಇಂತಹದ್ದೊಂದು ಕೃತಿಯ ಅವಶ್ಯಕತೆ ಕನ್ನಡಕ್ಕೆ ಅಗತ್ಯವಿತ್ತು. ಈ ಕಾರ್ಯವನ್ನು ಕನ್ನಡದ ಓರ್ವ ಶ್ರೇಷ್ಠ ವಿದ್ವಾಂಸರಾದ ಮತ್ತು ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಮತ್ತು ಅದರ ಪ್ರಾಚಾರ್ಯರಾಗಿ ನಿವೃತ್ತರಾದ ಶ್ರೀಯುತ ರಾಮಚಂದ್ರ ಹಬ್ಬು ಅವರು ಅಷ್ಟೇ ಸಮರ್ಥವಾಗಿ ಮಾಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಹಬ್ಬು ಸಹೋದರರ ಹೆಸರು ಚಿರಪರಿಚಿತ. ಅವರು ಒಟ್ಟೂ ಆರು ಜನ; ಈ ಆರುಮಂದಿ ಸಹೋದರರ ಜೊತೆಗೆ ಇವರ ತಂದೆ ಸಗುಣ ಶಂಕರ ಹಬ್ಬು ಅವರೂ ಸಾಹಿತ್ಯಕ್ಕೆ ಸಂಬಂಧಿಸಿದಂತಹ ಕೃತಿಗಳನ್ನು ತೊಡಗಿಸಿಕೊಂಡಿದ್ದರು. ಅದನ್ನು ವಿವರಿಸ ಹೊರಟರೆ ಅದೇ ಒಂದು ಸಾಹಿತ್ಯಿಕ ವಿಶೇಷವಾಗುತ್ತದೆ. ಶ್ರೀ ರಾಮಚಂದ್ರ ಹಬ್ಬು ನಂದಾ ಅವರ ಕೃತಿಯನ್ನು ಮೂಲತಃ ಕನ್ನಡದ್ದೇನೋ ಎನ್ನುವ ರೀತಿಯಲ್ಲಿ ಅನುವಾದಿಸಿದ್ದಾರೆ. + +ಗಾಂಧೀಜಿಯಂತಹ ಸಂಕೀರ್ಣ ವ್ಯಕ್ತಿತ್ವವನ್ನು ಬರೆಯುವಾಗ ಲೇಖಕರಿಗೆ ಅನೇಕ ಸವಾಲುಗಳು ಎದುರಾಗುತ್ತದೆ. ಅವರ ಬದುಕಿನ ವಿವಿಧ ಮಜಲುಗಳ ಅರಿವು ಮತ್ತು ಅದಕ್ಕಿರುವ ಗಾಂಧಿಜಿಯವರ ತಾತ್ವಿಕ ನಿಲುವು ಏನಾಗಿತ್ತು ಎನ್ನುವ ಪ್ರಜ್ಞೆಯಿಲ್ಲದೇ ಬರೆಯಲು ಸಾಧ್ಯವಾಗುವುದಿಲ್ಲ. ಈ ಕೆಲಸವನ್ನು ಇಲ್ಲಿ ಅನುವಾದಕರು ತುಂಬಾ ಸುಲಭವಾಗಿ ಮಾಡಿದ್ದಾರೆ. 1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಸ್ಥಾಪನೆಯಾಗಿದ್ದರೂ ಈ ಸಂಸ್ಥೆ ಭಾರತದ ಜನಸಾಮಾನ್ಯರ ಹೋರಾಟವಾಗಿ ಗುರುತಿಸಿಕೊಂಡಿರಲಿಲ್ಲ. 1917ರವರೆಗೂ ನಗರ ಪ್ರದೇಶದ ಮತ್ತು ನವ ಇಂಗ್ಲೀಷ್‌ ಪ್ರಜೆಗಳನ್ನಷ್ಟೇ ಸೆಳೆಯುವಲ್ಲಿ ಇದು ಯಶಸ್ವಿಯಾಗಿತ್ತು. ಕಾಂಗ್ರೆಸ್ಸಿನಲ್ಲಿ ಸೌಮ್ಯವಾದಿಗಳ ಗುಂಪು ಮತ್ತು ತೀವ್ರವಾದಿಗಳ ಗುಂಪುಗಳಾಗಿ ತಮ್ಮ ತಮ್ಮಲ್ಲೇ ತಿಕ್ಕಾಟವನ್ನು ನಡೆಸಿದ್ದರು. ಇಂಥ ಹೊತ್ತಿನಲ್ಲಿ ದಕ್ಷಿಣ ಆಫ್ರಿಕಾದಿಂದ ಗೋಖಲೆಯವರ ಆಗ್ರಹಕ್ಕೆ ಮಣಿದು ಬಂದ ಗಾಂಧೀಜಿ ಈ ಹೋರಾಟಕ್ಕೆ ಹೊಸ ಅಸ್ಮಿತೆಯನ್ನು ಒದಗಿಸಿದರು. ದಕ್ಷಿಣ ಆಫ್ರಿಕಾದಲ್ಲಿ ಕೈಗೊಂಡು ಯಶಸ್ಸನ್ನು ಪಡೆದ ಸತ್ಯಾಗ್ರಹದ ಶಕ್ತಿಯ ಪೂರ್ಣ ಪರಿಚಯವನ್ನು ಈ ದೇಶದ ಜನತೆಗೆ ಪರಿಚಯಿಸಿದರು. ಜನ ಜಾಗ್ರತೆಯೆನ್ನುವುದು ಗಾಂಧಿಯವರಿಗೆ ಸುಲಭದ ಮಾರ್ಗವಾಗಿರಲಿಲ್ಲ. + +ಸ್ವತಃ ವಲ್ಲಭಬಾಯಿ ಪಟೇಲರು ತಮ್ಮ ವಕೀಲಿವೃತ್ತಿ ದಿನಗಳಲ್ಲಿ ಗಾಂಧಿಯವರ ಸತ್ಯಾಗ್ರಹದ ಕುರಿತು “ಗಾಂಧಿಯವರ ಭಾಷಣವೆಂದರೆ ಗೋಧಿಯಲ್ಲಿನ ಬೆಣಚುಕಲ್ಲನ್ನು ಆರಿಸಿರಿ; ಅದರಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುತ್ತದೆ” ಎಂದು ಗೇಲಿಮಾಡುತ್ತಿದ್ದರು. ಆಮೇಲೆ ಅವರೇ ಗಾಂಧೀಜಿಯವರ ಅಪ್ಪಟ ಶಿಷ್ಯರಾದರು ಎನ್ನುವುದು ಬೇರೆಯ ವಿಷಯ. ಗಾಂಧೀಜಿಯವರಿಗೆ ಸ್ವಾತಂತ್ರ್ಯ ಮುಖ್ಯವಾಗಿತ್ತು. ಅದು ಅವರ ಗುರಿಯೂ ಆಗಿತ್ತು. ಆದರೆ ಅದನ್ನು ಸಾಧಿಸಲು ಸತ್ಯ ಮತ್ತು ಅಹಿಂಸೆಯ ಹೊರತಾಗಿ ಬೇರೆ ಯಾವ ವಿಧಾನಗಳಿಂದ ಪಡೆಯುಬಹುದಾದ್ದನ್ನು ಸ್ಪಷ್ಟವಾಗಿ ನಿರಾಕರಿಸಿದ್ದರು. ಈ ಕಾರಣಗಳಿಂದಾಗಿ ಅನೇಕ ಬಾರಿ ಅವರು ಟೀಕಾಕಾರರಿಗೆ ಆಹಾರವಾಗಿದ್ದಾರೆ. ಅವರ ಕೆಲ ನಿರ್ಧಾರಗಳು ವಿವಾದಾತ್ಮಕವಾಗಿರುವದೂ ಹೌದು. ಉದಾಹರಣೆಗೆ ಮೋಪ್ಲಾ ದಂಗೆಯಲ್ಲಿ ಮತ್ತು ಭಗತ್ ಸಿಂಗರನ್ನು ಗಲ್ಲಿಗೇರಿಸುವ ಸಂದರ್ಭದಲ್ಲಿನ ಅವರ ಮೌನ, ಚೌರೀ ಚೌರಾ ಹಿಂಸಾಚಾರದ ನಂತರ ಏಕಾಏಕಿ ಹೋರಾಟವನ್ನು ಹಿಂದೆತೆಗೆದುಕೊಂಡಿರುವದು, ದೇಶ ವಿಭಜನೆ ಮತ್ತು ಪಾಕಿಸ್ಥಾನಕ್ಕೆ ನೆರವು ನೀಡುವಕುರಿತು ಉಪವಾಸ ಸತ್ಯಾಗ್ರಹದ ಬೆದರಿಕೆ ಹಾಗೇ ಇನ್ನೂ ಅನೇಕ ವಿಷಯಗಳಿವೆ. ಇವು ಸತ್ಯವೂ ಕೂಡ. ಆದರೆ ಗಾಂಧೀಯೆನ್ನುವ ವ್ಯಕ್ತಿತ್ವ ದೇಶ ಕಾಲವನ್ನು ಮೀರಿ ವ್ಯಾಪಿಸಿರುವ ಒಂದು ದೊಡ್ಡ ಸಂದೇಶ. ಅವರ ಬದುಕೇ ಅನೇಕ ವಿಸ್ಮಯ, ಗೂಢ ಮತ್ತು ಪ್ರಭಾವಳಿಗಳಿಂದ ತುಂಬಿಹೋಗಿದೆ ಎನ್ನುವದೂ ಸಹ ಅಷ್ಟೇ ಸತ್ಯವೂ ಹೌದು. + +ಇಂತಹ ಅನೇಕ ಸಂಕೀರ್ಣ ವಿಷಯಗಳನ್ನು ಅದಕ್ಕೆ ಕಾರಣ ಮತ್ತು ಗಾಂಧೀಜಿಯವರು ಯಾವ ಕಾರಣಕ್ಕಾಗಿ ಈ ನಿಲುವುಗಳನ್ನು ತೆಗೆದುಕೊಂಡರು ಎನ್ನುವುದನ್ನು ಅರಿಯಲು ಈ ಪುಸ್ತಕ ಉಪಯುಕ್ತವಾಗಿದೆ. ಒಂದು ಉದಾಹರಣೆಯನ್ನು ಹೇಳಬೇಕೆಂದರೆ ಗಾಂಧೀಜಿಯವರ ಮೇಲೆ ಭಗವದ್ಗೀತೆ ಬೀರಿದ ಪ್ರಭಾವ. ಗಾಂಧೀಜಿಯವರು ಏಕಾಏಕಿ ಗೀತೆಯನ್ನು ಓದಲು ಪ್ರಾರಂಭಿಸಿರಲಿಲ್ಲ. ಲಂಡನ್ನಿನಲ್ಲಿ ಇರುವಾಗ ಅವರಮೇಲೆ ಕೃೈಸ್ತಧರ್ಮದ ಪ್ರಭಾವ ಆಗತೊಡಗಿತು. ಹೊಸ ಒಡಂಬಡಿಕೆಯನ್ನು ಅವರು ಓದತೊಡಗಿದರು. ಕ್ರೈಸ್ತರಾಗುವಂತೆ ಅವರಿಗೆ ಅನೇಕ ಬಗೆಯ ಒತ್ತಡಗಳು ಬರತೊಡಗಿತು. ಈ ಹೊತ್ತಿನಲ್ಲಿ ಅವರಿಗೆ ಅವರ ತಾಯಿ ಪುತಲೀಬಾಯಿಯವರಿಗೆ ಕೊಟ್ಟ ಭಾಷೆ ನೆನಪಿಗೆ ಬಂದು ತೊಳಲಾಡತೊಡಗಿರುತ್ತಾರೆ. ಅದನ್ನು ಬಿಟ್ಟರೆ ಅವರಿಗೆ ಹಿಂದುಧರ್ಮದ ಕುರಿತು ಅತ್ಯಲ್ಪ ಪರಿಚಯವಿತ್ತು. ಈ ಸಂದರ್ಭದಲ್ಲಿ ಸರ್ ಎಡ್ವಿನ್ ಆರ್ನಾಲ್ಡ್‌ ಅವರ “ಸಾಂಗ್ ಆಫ್ ಸೆಲೆಸ್ಟಿಯಲ್” ಓದಲು ಆಮಂತ್ರಿಸಿದಾಗ ಅವರಿಗೆ ಭಗವದ್ಗೀತೆಯನ್ನು ತಾನೂ ಅದುತನಕವೂ ಓದೇ ಇಲ್ಲ ಎನ್ನುವುದು ಅರಿವಾಗಿ ಮುಜುಗರವಾಯಿತು. ಸರ್. ಎಡ್ವಿನ್ ಅವರು ಬುದ್ಧನ ಕುರಿತು ಬರೆದ “ಲೈಟ್ ಆಫ್ ಏಶಿಯಾ” ಕೃತಿಯೂ ಅವರನ್ನು ಮೋಡಿಮಾಡಿತು. ಈ ನಡುವೆ ಗುಜರಾತಿನ ಕವಿ ಶಾಮಲಾಲ್ ಭಟ್ಟರು ಗುಣುಗುಣುಸುತ್ತಿದ್ದ ಕವನಗಳು ನೆನಪಾದವು. ಹೀಗೆ ಬೈಬಲ್, ಬುದ್ಧ ಮತ್ತು ಭಟ್ಟರ ಬೋಧನೆಗಳು ಗಾಂಧಿಯವರ ಮನಸ್ಸಿನಲ್ಲಿ ಒಂದಾದವು. ಈ ಪ್ರಭಾವದ ಹಿಂದೆ ಬೈಬಲ್ಲಿನ ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆ ತೋರಿಸು ಎನ್ನುವ ಮಾತುಗಳು ಅವರನ್ನು ಕಾಡುತ್ತಿದ್ದವು. + + + +ಗಾಂಧಿಯವರ ಮೇಲಿನ ಗೀತೆಯ ಪ್ರಭಾವದ ಹಿಂದೆ ಈ ಅಂಶಗಳಿದ್ದವು ಎನ್ನುವುದು ಬೇರೆಲ್ಲಿಯೂ ವ್ಯಕ್ತವಾಗದ ನಿಲುವು. ಮೂಲದ ನಂದಾ ಅವರ ನಿಲುವನ್ನು ಹಬ್ಬು ಅನುವಾದಿಸುವದು ಹೀಗೆ “ಗೀತೆಯ ಕುರಿತಾಗಿ ಗಾಂಧಿಯವರ ತಿಳುವಳಿಕೆಯು, ಸಾಂಪ್ರದಾಯಕ ತಿಳುವಳಿಕೆಗಳಿಗಿಂತ ಮತ್ತು ಟಿಳಕ ಮತ್ತು ಅರಬಿಂದೋ ಘೋಷರಂಥ ಘನ ವಿದ್ವಾಂಸರ ವಿಶ್ಲೇಷಣೆಗಿಂತ ತುಂಬಾ ಭಿನ್ನವಾಗಿತ್ತು. ಕುರುಕ್ಷೇತ್ರದ ಯುದ್ಧದ ಐತಿಹಾಸಿಕ ವಿವರಣೆಯನ್ನು ಅಲ್ಲಗೆಳೆಯುವದೆಂದರೆ, ಸತ್ಯಸಂಗತಿಗಳನ್ನು ನಿರ್ಲಕ್ಷಿಸಿದಂತೆ” (ಪು. 66) ಎಂದು ಅನುವಾದ ಮಾಡಿದ್ದಾರೆ. ಮಹತ್ವದ ಅಂಶವಿದು. ಗಾಂಧಿಯವರ ಗೀತೆಯ ಮೇಲಿನ ವಿಶ್ಲೇಷಣೆ ಕ್ರಿಶ್ಚಿಯನ್ ಪ್ರಭಾವಕ್ಕೆ ಒಳಗಾಗಿರುವುದು ಎನ್ನುವ ವಿರೋಧಿಗಳ ಟೀಕೆಯನ್ನು ಇಲ್ಲಿ ಸ್ಪಷ್ಟವಾಗಿ ನಿರಾಕರಿಸಲಾಗಿದೆ. ಇದಕ್ಕೆ ವಿನ್ಸ್ಂಟ್ ಶೀನ್ ಅವರ ಅಭಿಪ್ರಾಯವನ್ನು ಕೊಟ್ಟು ನಂದಾ ಸಮರ್ಥಿಸಿಕೊಳ್ಳುತ್ತಾರೆ. ಇಂತಹ ಅನೇಕ ವಿವರಗಳನ್ನು ಈ ಕೃತಿಯಲ್ಲಿ ಆಧಾರಸಹಿತವಾಗಿ ವಿವರಿಸಲಾಗಿದೆ. ಮೂಲದ ಸೊಗಸನ್ನು ಇಟ್ಟುಕೊಂಡೇ ಹಬ್ಬು ಅವರು ಕನ್ನಡೀಕರಿಸಿದ್ದಾರೆ. + +ಈ ಕೃತಿಯಲ್ಲಿ ಗಾಂಧೀಜಿಯ ಜೀವನ ಚರಿತ್ರೆ ತೆರೆದುಕೊಳ್ಳುವುದು ನಾಲ್ಕು ಭಾಗಗಳಲ್ಲಿ. ಮೊದಲ ಭಾಗ ಗಾಂಧಿಯ ಬಾಲ್ಯದಿಂದ. ಇಲ್ಲಿ ತಮ್ಮೆಲ್ಲಾ ಹೋರಾಟದ ಧಾತುಗಳಿಗೆ ಕಾರಣವಾದ ದಕ್ಷಿಣ ಆಫ್ರಿಕಾ-ಒಂದು ಪ್ರಯೋಗಾಲಯ ಎನ್ನುವಲ್ಲಿಂದ. ಅತ್ಯಂತ ಲಜ್ಜೆಯ ಸ್ವಭಾವದ ಮೋಹನದಾಸ ಎನ್ನುವ ಬಾಲಕ, ಬದುಕಿನುದ್ದಕ್ಕೂ ಓರ್ವ ವಿಫಲ ವಕೀಲನಾಗಿ ನಂತರ ಹೋರಾಟಗಾರನಾಗಿ ಬೆಳೆದ ಹಂತಹಂತಗಳೆಲ್ಲವೂ ಕಾವ್ಯಾತ್ಮಕ ಮತ್ತು ವಿಮರ್ಶಾತ್ಮಕವಾಗಿ ವಿವರಿಸಲಾಗಿದೆ. ದಕ್ಷಿಣಾಫ್ರಿಕಾ ಅವರಿಗೆ ನಿರಾಶೆ, ಅವಮಾನ, ಬೇಸರ, ಹೋರಾಟಕ್ಕೆ ಸ್ಪೂರ್ತಿ, ಗುರಿಯೆಡೆಗೆ ಸ್ಪಷ್ಟ ನಿದರ್ಶನ ಎಲ್ಲ ಭಾವನೆಗಳನ್ನೂ ಕೊಟ್ಟ ಮತ್ತು ಕೆಡಕು ಒಳಿತುಗಳೆಡೆಯಲ್ಲಿ ಸಿಲುಕಿಯೂ ಅದರಿಂದ ಹೇಗೆ ಹೊರಬರಬಹುದೆನ್ನುವ ಪಾಠವನ್ನು ಕಲಿಸಿದ ಕುಲುಮೆ. ಇಂಗ್ಲೆಂಡಿನಲ್ಲಿ ಅಪರಿಚಿತನಾದ ಗಾಂಧಿ ಇಲ್ಲಿ ಹೋರಾಟಗಾನಾಗಿ ಬೆಳೆದ ಬಗೆ ಮಹಾದೇವ ದೇಸಾಯಿಯವರ ಆತ್ಮಚರಿತ್ರೆಗಿಂತಲೂ ಭಿನ್ನವಾಗಿವೆ. ಧರ್ಮಗಳ ನಡುವಿನ ತುಲನಾತ್ಮಕ ಅಧ್ಯಯನಕ್ಕೆ ಆಫ್ರಿಕಾ ಒಂದು ವೇದಿಕೆಯಾಯಿತು. ಜಗತ್ತಿನ ಇನ್ನಿತರ ಧರ್ಮಗಳ ತಿರುಳನ್ನು ತೌಲಿನಿಕವಾಗಿ ಅಧ್ಯಯನ ಮಾಡಲು ಸಾಧ್ಯವಾಯಿತು. ಅವರ ಮೇಲೆ ಕ್ರಿಶ್ಚಿಯನ್ ಆಗೆಂದು ಒತ್ತಾಯಿಸಿದವರಿಗೆ “ತಿಜೋರಿಯ ಚಿಕ್ಕ ರಂದ್ರದೊಳಗೆ ತೂರಿಕೊಂಡು, ದೇವರನ್ನು ಸಮೀಪಿಸಲು ಅವನೇನು ಆ ತಿಜೋರಿಯಲ್ಲಿ ಮುಚ್ಚಿಡಲ್ಪಟ್ಟಿಲ್ಲ. ಶುದ್ಧ ಹೃದಯವುಳ್ಳವರಿಗೆ ಮತ್ತು ವಿನೀತರಿಗೆ ದೇವರನ್ನು ಸಮೀಪಿಸಲು ಕೋಟ್ಯಾವದಿ ರಂದ್ರಗಳಿವೆ” ಎನ್ನುವ ಮೂಲಕ ತಾನೋರ್ವ ಸನಾತನಿ ಹಿಂದು ಎನ್ನುವುದನ್ನು ಗಟ್ಟಿಗೊಳಿಸುತ್ತಲೇ ಹಿಂದು ಧರ್ಮದ ನಿಜ ತಿರುಳನ್ನು ತೆರೆದಿಟ್ಟರು. ಇಂಗ್ಲೀಷಿನಲ್ಲಿರುವ ಮೂಲಕ್ಕಿಂತ ಹಬ್ಬು ಕನ್ನಡದಲ್ಲಿ ಗಾಂಧಿಯವರ ಭಾವನೆಯನ್ನು ಅಭಿವ್ಯಕ್ತಿಸಿದ್ದಾರೆ. + +ಎರಡನೇ ಭಾಗ ಗಾಂಧಿ ಉತ್ಥಾನ, ಅಪರಿಚಿತ ದೇಶವಾದ ಭಾರತಕ್ಕೆ ಗಾಂಧಿ ಅಪರಿಚಿತರಾಗಿರಲಿಲ್ಲ ಎನ್ನುವ ಮೂಲಕ ಗಾಂಧಿಯವರನ್ನು ಭಾರತಕ್ಕೆ ಬರಮಾಡಿಕೊಳ್ಳುತ್ತಾರೆ. 1915 ರಿಂದ 1920 ರತನಕ ಗಾಂಧಿ ಭಾರತೀಯ ಕಾಂಗ್ರೇಸ್ಸಿನ ಅಗ್ರಪಂಕ್ತಿಯ ನಾಯಕರಾಗಿರಲಿಲ್ಲವೆನ್ನುವ ಸತ್ಯವನ್ನು ಹೊರಹಾಕುತ್ತಾರೆ. ಟಿಳಕರು ಮತ್ತು ಅನಿಬೆಸೆಂಟ್ ಪ್ರಭಾವಶಾಲಿಯಾದ ನಾಯಕರಾಗಿದ್ದರು. ಗೋಪಾಲಕೃಷ್ಣ ಗೋಖಲೆಯವರು ಟಿಳಕರ ಈ ಪ್ರಭಾವವನ್ನು ತಗ್ಗಿಸಲೆಂದೇ ಗಾಂಧಿಯವರನ್ನು ಭಾರತಕ್ಕೆ ಕರೆಸಿರುವದು ಎನ್ನುವುದನ್ನು ಪರೋಕ್ಷವಾಗಿ ಸೂಚಿಸುತ್ತಾರೆ. ಅನಿಬೆಸೆಂಟ್ ಅವರ ಹೋಂರೂಲ್ ಚಳುವಳಿಯಿಂದ ಗಾಂಧಿಯವರನ್ನು ಹೊರಗಿಡುವ ವಿಷಯವನ್ನು ಎತ್ತಿಹೇಳುತ್ತಾರೆ. 1919ರಲ್ಲಿ ಆರಂಭವಾದ ಖಿಲಾಫತ್ ಚಳುವಳಿ ಗಾಂಧಿ ಬೆಂಬಲಿಸಿರುವುದು ಅವರ ವಿರುದ್ಧ ಇರುವ ಪ್ರಬಲ ಟೀಕೆಗಳಲ್ಲೊಂದು. ಇಲ್ಲೆಲ್ಲ ನಂದಾ ಜಾಣ ನಡೆಯನ್ನು ಅನುಸರಿಸಿ “ಹಿಂದುಗಳು ಮುಸಲ್ಮಾನ್ ಬಾಂಧವರ ಪರವಾಗಿ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು, ಆ ಸಮುದಾಯದ ದುಃಖವನ್ನು ತಮ್ಮ ದುಃಖವೆಂದೇ ತಿಳಿಯಬೇಕು” ಎನ್ನುವ ಮೂಲಕ ಗಾಂಧಿಯವರನ್ನು ಸಮರ್ಥಿಸಿಕೊಳ್ಳುತ್ತಾರೆ. + +ಗಾಂಧೀಜಿಯವರ ಕುರಿತು ಆಕ್ಷೇಪಗಳು ಬಂದಾಗ ಇದರಲ್ಲಿ ಅವರ ನಡೆ ಆ ಕಾಲದಲ್ಲಿ ಎಷ್ಟು ಸೂಕ್ತವಾಗಿತ್ತು ಎನ್ನುವದನ್ನು ಇಲ್ಲಿ ವಿವರಿಸಲಾಗಿದೆ. ಖಿಲಾಪತ್ ಚಳುವಳಿಯನ್ನು ಗಾಂಧಿ ಸಂಪೂರ್ಣವಾಗಿ ಒಪ್ಪಿಲ್ಲ; ಆದರೆ ಆ ಧರ್ಮದ ಬಗೆಗೆ ಅವರಿಗಿರುವ ಆಳ ದೃಷ್ಟಿಕೋನದಿಂದ ಮುಸಲ್ಮಾನರ ಭಾವನೆಗಳನ್ನು ಗಾಂಧಿ ಅರ್ಥಮಾಡಿಕೊಂಡಿದ್ದರು ಎನ್ನುತ್ತಾರೆ. ಹಾಗೇ ನೋಡಿದರೆ ಖಿಲಾಪತ್ ಚಳುವಳಿಯನ್ನು ಗಾಂಧಿ ಬೆಂಬಲಿಸಿದ ಕಾರಣದಿಂದಲೇ ಗಾಂಧಿ ರಾಷ್ಟ್ರೀಯ ನಾಯಕರಾಗಿ ಹೊಮ್ಮಿದ್ದು ಮತ್ತು 1920ರ ನಾಗಪುರ ಅಧಿವೇಶನದ ನಂತರ ತೀವ್ರವಾದಿಗಳನ್ನು ಬದಿಗೆ ಸರಿಸಿ ಅನಭಿಷಕ್ತ ನಾಯಕರಾಗಿರುವುದು. ಅದೇ ರೀತಿ ಮೂರು ಮತ್ತು ನಾಲ್ಕನೆಯ ಭಾಗಗಳಾದ ಯುದ್ಧ ಮತ್ತು ಶಾಂತಿ ಹಾಗೂ ಅಂತಿಮ ಮಜಲಿನಲ್ಲಿಯೂ ಗಾಂಧೀಜಿಯವರ ಜೀವನ ವಿಧಾನಗಳನ್ನು ಚನ್ನಾಗಿ ವಿವೇಚಿಸಲಾಗಿದೆ. ಸ್ವಾತಂತ್ರ್ಯ ಹೋರಾಟದ ವಿವಿಧ ಮಜಲುಗಳನ್ನು ಅದರಲ್ಲಿ ಗಾಂಧೀಜಿ ಹೇಗೆ ತನ್ನ ನಿಲುವನ್ನು ಸ್ವಲ್ಪವೂ ರಾಜಿ ಮಾಡಿಕೊಳ್ಳದೇ ಪಕ್ಷವನ್ನು ತನ್ನತ್ತ ಸೆಳೆದುಕೊಂಡರು ಎನ್ನುವುದರ ವಿವರಣೆ ಇದೆ. + +ಮಹಾತ್ಮಾ ಗಾಂಧೀಜಿಯವರ ಕುರಿತಾದ ಹಲವು ಗ್ರಂಥಗಳಿಗಿಂತ ಈ ಕೃತಿಯು ಭಿನ್ನವಾಗಿರುವುದು ಗಾಂಧಿ ಹಲ ಸವಾಲುಗಳನ್ನು ನಿಭಾಯಿಸಿದ ರೀತಿಯಿಂದಾಗಿ. ಗಾಂಧಿ-ಅಂಬೇಡ್ಕರ ಅವರ ನಡುವಿನ ಚರ್ಚೆಯ ಸಂದರ್ಭಗಳಲ್ಲಿ ಹಿಂದು ಧರ್ಮದ ಕುರಿತು ಅಂಬೇಡ್ಕರರಿಗಿರುವ ಆಕ್ಷೇಪಗಳಿಗೆ ಸಂಯಮದಿಂದಲೇ ಎತ್ತಿ ಅಲ್ಲಿಗೇ ಮುಗಿಸಿಬಿಡುತ್ತಾರೆ. ಇನೊಮ್ಮೆ 1934ರಲ್ಲಿ ಗಾಂಧೀಜಿಯವರು ಗ್ರಾಮೀಣ ಕೈಗಾರಿಕೆಗಳ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೇಸ್ಸಿನೊಡನೆ ಭಿನ್ನಾಭಿಪ್ರಾಯ ಬಂದು ಸ್ವಾತಂತ್ರ್ಯ ಹೋರಾಟದಿಂದ ಸಕ್ರಿಯವಾಗಿ ಹಿಂದೆಸರಿಯುವ ಘೋಷಣೆಗಳಿಗೆ ಸಂಬಂಧಿಸಿದ ಕಾರಣಗಳ ಕುರಿತು ಕಾಂಗ್ರೆಸ್‌ನ ಬಲಪಂಥೀಯ ಪ್ರಭಾವವನ್ನು ವಿವರಿಸದೆ, ಕಾಂಗ್ರೆಸ್‌ನೊಳಗಿನ ಸಮಾಜವಾದಿಗಳು ಮತ್ತು ಗಾಂಧಿಯವರ ನಡುವೆ ಬೆಳೆಯುತ್ತಿರುವ ಭಿನ್ನಾಭಿಪ್ರಾಯವನ್ನು ಒಂದೇ ಸಾಲಿನಲ್ಲಿ ವಿವರಿಸುತ್ತಾರೆ. + +(ಬಿ. ಆರ್. ನಂದಾ) + +ಸುಭಾಸಚಂದ್ರ ಭೋಸರ ಅಧ್ಯಕ್ಷಗಿರಿಗೆ ಗಾಂಧೀಜಿಯವರಿಗಿರುವ ಸಮಸ್ಯೆಗಳನ್ನು ಇಲ್ಲಿ ವಿವರವಾಗಿ ಚರ್ಚಿಸುವದಿಲ್ಲ. ಹಾಗಂತ ಈ ಕೃತಿಯಲ್ಲಿ ಮಹಾತ್ಮಾಗಾಂಧಿಯವರನ್ನು ದಂತಕಥೆಯಂತೆಯೂ ವೈಭವೀಕರಿಸುವುದಿಲ್ಲ. ಅವರಲ್ಲಿರುವ ಜೀವ ಕಾರುಣ್ಯವನ್ನು ತಪ್ಪದೇ ಪ್ರಸ್ಥಾಪಿಸುತ್ತಾರೆ. ದಕ್ಷಿಣ ಆಫ್ರಿಕಾದ ಪೀಟರ್‌ಮರಿಟ್ಜ್‌ಬರ್ಗ್‌ನಲ್ಲಿನ ರೈಲಿನಿಂದ ಅವರನ್ನು ಹೊರದೂಡಿದ ಪ್ರಕರಣ ಒಂದು ಪ್ರಮುಖವಾದ ವಿಷಯ. ಇಲ್ಲಿ ನಂದಾ ಈ ವಿಷಯವನ್ನು ವಿವರಿಸುವಾಗ ಗಂಧೀಜಿಯವರ ಪ್ರತಿಕ್ರಿಯೆಗಿಂತ ಅದು ಅವರೊಳಗೆ ಅವರು ಮಾಡಿಕೊಂದ ಆತ್ಮಶೋಧನೆಯೆನ್ನುವಂತೆ ವಿವರಿಸುತ್ತಾರೆ. ಇದು ಗಾಂಧಿಯವರ ಪ್ರಕಾರ ಯುರೋಪಿಯನ್ನರ ದುರಹಂಕಾರಕ್ಕಿಂತ ತಾನು ಇತ್ತೀಚೆಗೆ ಲಂಡನ್ನಿನಿಂದ ಹಿಂದಿರಿಗಿದ ಬ್ಯಾರಿಷ್ಟರ್ ಎನ್ನುವ ಅಹಂಕಾರವನ್ನು ತಳೆದಿರುವದೇ ಮುಖ್ಯವಾಗಿರಬಹುದೇ ಎನ್ನುವ ಪ್ರಶ್ನೆಯನ್ನು ಎತ್ತುತ್ತಾರೆ. + +572 ಪುಟಗಳಿರುವ ಈ ಕೃತಿಯಲ್ಲಿ ಗಾಂಧೀಜಿಯವರ ಕುರಿತಂತೆ ವೀಕ್ಷಕರಾಗಿ ನೋಡಿದ ವಿವರಗಳಿವೆ. ಗಾಂಧಿಯವರ ಕುರಿತು ಆಕ್ಷೇಪ ಬರುವ ಸಂದರ್ಭಗಳಲ್ಲಿ ಅದನ್ನು ನವಿರಾಗಿ ನಿಭಾಯಿಸಿ ಹೊಳಪುಕೊಡುವ ಪ್ರಯತ್ನಗಳಾಗಿವೆ. ಮಹಾತ್ಮರ ಬದುಕಿನ ಯಾವ ಮಹತ್ವದ ವಿವರಗಳನ್ನೂ ಈ ಕೃತಿ ಮರೆಮಾಚಲು ಪ್ರಯತ್ನಿಸುವುದಿಲ್ಲ. ಪಾಕಿಸ್ತಾನದ ಹುಟ್ಟು ಎನ್ನುವದು ಈ ಕೃತಿಯಲ್ಲಿನ ತುಂಬಾ ಮಹತ್ವದ ಅಧ್ಯಾಯ. ಕೊನೆಯವರೆಗೂ ದೇಶವಿಭಜನೆಗೆ ಒಪ್ಪದಿರುವ ಗಾಂಧೀಜಿಯವರಿಗೆ ವಿಭಜನೆಯನ್ನುವುದು ಯಾಕೆ ಅನಿವಾರ್ಯವಾದ ವಿಕಲ್ಪವಾಯಿತು ಎನ್ನುವುದನ್ನು ವಿಶ್ಲೇಷಣಾತ್ಮಕವಾಗಿ ಚರ್ಚಿಸಲಾಗಿದೆ. ದೇಶ ವಿಭಜನೆಗೆ ತನ್ನ ಸ್ಪಷ್ಟವಾದ ವಿರೋಧವನ್ನು ವ್ಯಕ್ತಪಡಿಸುತ್ತಿದ್ದ ಗಾಂಧಿ 1940 ಎಪ್ರಿಲ್ 6ರ ಹರಿಜನ ಪತ್ರಿಕೆಯಲ್ಲಿ “ಮುಸಲ್ಮಾನರಿಗೆ ತಮ್ಮದೇ ನಿರ್ಧಾರವನ್ನು ತೆಗೆದುಕೊಳ್ಳಲು ದೇಶದ ಇತರ ಜನರಿಗೆ ಇರುವಷ್ಟೇ ಹಕ್ಕು ಇದೆ. ನಾವು ಈಗ ಒಂದು ಅವಿಭಕ್ತ ಕುಟುಂಬವಾಗಿದ್ದೇವೆ. ಕುಟುಂಬದ ಯಾವುದೇ ಸದಸ್ಯನೂ ಭಾಗವನ್ನು ಕೇಳಬಹುದು” ಎಂದಿರುವುದನ್ನು ಪ್ರಸ್ತಾಪಿಸುವುದರ ಮೂಲಕ ಗಾಂಧಿಯವರಿಗೆ ಮುಂದಿನ ಭಾರತದ ದಿಕ್ಸೂಚಿಯ ಸ್ಪಷ್ಟವಾದ ಅರಿವಿತ್ತು ಎನ್ನುವುದನ್ನು ವಿವರಿಸುತ್ತಾರೆ. + + + +ಮಹಾತ್ಮಾಗಾಂಧಿ ಎನ್ನುವ ಸಂಕೀರ್ಣ ಮತ್ತು ಬೆರಗಿನ ವ್ಯಕ್ತಿತ್ವವನ್ನು ಕನ್ನಡಿಕರಿಸಿರುವ ಪ್ರಾ. ರಾಮಚಂದ್ರ ಹಬ್ಬು ಅವರು ಈ ಕೃತಿಯ ಮೂಲಕ ಕನ್ನದ ಸಾಹಿತ್ಯಕ್ಕೆ ಒಂದು ಹೊಸ ಕೊಡುಗೆಯನ್ನು ನೀಡಿದ್ದಾರೆ. ಗಾಂಧೀಜಿಯವರ ಕುರಿತು ಅನೇಕ ಓದುಗಳಿಲ್ಲದ ವ್ಯಕ್ತಿ ಇಂತಹ ಒಂದು ಪ್ರೌಢವಾದ ಕೃತಿಯೊಂದನ್ನು ಅನುವಾದ ಮಾಡಲು ಸಾಧ್ಯವಿಲ್ಲ. ಈ ಕೃತಿ ಓದುಗರನ್ನು ಆಕರ್ಷಿಸುವುದು ಇಲ್ಲಿ ಉಪಯೋಗಿಸಿರುವ ಕಾವ್ಯಮಯ ಕನ್ನಡ ಭಾಷೆಗಳ ಮೂಲಕ. ಇಲ್ಲಿ ಉಪಯೋಗಿಸಿದ ಕ್ಷಿತಿಜ, ನರಭಕ್ಷರ ರೌದ್ರತೆಯೊಂದಿಗೆ ಹೀಗೆ ಹಲವಾರು ಸಂದರ್ಭಗಳಲ್ಲಿ ಆಯಾ ಘಟನೆಗಳಿಗೆ ಸಂಬಂಧಿಸಿದಂತೆ ಸರಳ ಮತ್ತು ಪ್ರತಿಮಾರೂಪವಾಗಿರಬೇಕಾದ ಶಬ್ಧಗಳನ್ನು ಆಯ್ಕೆಮಾಡಿಕೊಂಡಿದ್ದಾರೆ. ಹಾಗಾಗಿ ಇದೊಂದು ಸ್ವತಂತ್ರ ಕೃತಿಯಾಗಿದೆ. ಸುಂದರ ಮುದ್ರಣ ಮತ್ತು ಹಲವು ಚುಕ್ಕಿಗಳು ಸೇರಿ ಆದ ಮಹಾತ್ಮಾ ಗಾಂಧೀಜಿಯವರ ಮುಖಪುಟ ಅರ್ಥಪೂರ್ಣವಾಗಿದೆ. ಗಾಂಧೀಜಿಯವರ ಜೀವನ ಚರಿತ್ರೆಯನ್ನು ಅಭ್ಯಸಿಸುವವರಿಗೆ ಇದೊಂದು ಮಾರ್ಗದರ್ಶಿ. ಅಭಿನಂದನೆಗಳು ಪ್ರಾ. ರಾಮಚಂದ್ರ ಹಬ್ಬು ಅವರಿಗೆ. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_163.txt b/Kenda Sampige/article_163.txt new file mode 100644 index 0000000000000000000000000000000000000000..b8d28e6d549c414c17a1574cb02e0289693a7c73 --- /dev/null +++ b/Kenda Sampige/article_163.txt @@ -0,0 +1,33 @@ +ಶಿಥಿಲಗೊಂಡ ಮಾನವೀಯ ಸಂಬಂಧಗಳ ನಡುವೆ ಗಾಂಧೀಜಿಗಾಗಿ ಹಂಬಲಿಸುವ ಕನಸುಗಳು + +ದಾರಿಯಿದೆ ಎಂದ ಮೇಲೆ ಅಲ್ಲಿ ಯಾರಾದರು ಕೆಲವೊಂದಿಷ್ಟು ಜನ ಕೆಲವೊಂದಿಷ್ಟು ಕಾಲ ನಿರಂತರವಾಗಿ ಓಡಾಡುತ್ತಿರಬೇಕು. ಯಾರೋ ಒಬ್ಬನೇ ಹೋಗುವದು ದಾರಿಯಾಗುವದಿಲ್ಲ. ಹಾಗಂತ ಎಲ್ಲಾ ದಾರಿಯೂ ಗುರಿಯನ್ನು ತಲುಪುತ್ತದೆ ಅಂತಲೂ ಅರ್ಥವಲ್ಲ. ಇದ್ದಲ್ಲೇ ಇರುವ ದಾರಿ ಹಲವು ಘಟನೆಗಳಿಗೆ ಸಾಕ್ಷಿಯಾಗಿರುತ್ತದೆ. ಸುಮ್ಮನೆ ಬಿದ್ದೂ ಇರುತ್ತದೆ. ಗುರಿಯನ್ನು ತಲುಪುವ ದಾರಿಯೋ ಹಾದಿ ತಪ್ಪಿಸಿದ ದಾರಿಯೋ; ಅದು ಯಾವುದೇ ಆದರೂ ಆ ದಾರಿಯಮೇಲೆ ಹುಲ್ಲೂ ಸಹ ಬೆಳೆಯುವದಿಲ್ಲ. ಹಾಗೆ ಬೆಳೆದರೆ ಅದು ದಾರಿಯಾಗುವದಿಲ್ಲ. ಒಮ್ಮೊಮ್ಮೆ ದಾರಿ ಗೊಂದಲವನ್ನು ಉಂಟು ಮಾಡುತ್ತದೆ. ಹಲವಾರು ದಾರಿಗಳು ಒಂದನ್ನೊಂದು ಅಡ್ಡವೋ ಓರೆಯಾಗಿಯೋ ಸಾಗಿದಾಗ ಎಲ್ಲಿಗೆ ಯಾವದಿಕ್ಕಿಗೆ ಹೋಗಬೇಕೆನ್ನುವದನ್ನು ಅವು ತಿಳಿಸುವದಿಲ್ಲ. ನಾವೇ ಊಹಿಸಿ ಇಲ್ಲವೇ ದಾರಿಯನ್ನು ತಿಳಿದವರ ಹತ್ತಿರ ಕೇಳಿ ತಿಳಿದು ಸಾಗಬೇಕಾಗುತ್ತದೆ. ನಾವೇ ಸ್ವತಃ ದಾರಿಯನ್ನು ನಿರ್ಮಿಸಲೂಬಹುದು. ಅಂತಹ ದಾರಿ ತನ್ನ ಗುರುತನ್ನು ಇರಿಸಿಕೊಳ್ಳಬೇಕಾದರೆ ಆ ದಾರಿಯಮೇಲೆ ನಮ್ಮನ್ನು ಹಿಂಬಾಲಿಸುವ ಪ್ರಾಣಿಯೋ ಮನುಷ್ಯನೋ ಇರಬೇಕಾಗುತ್ತದೆ. ಗುರಿಯ ಅರಿವಿರುವವನಿಗೂ ದಾರಿಯ ಪರಿಚಯ ಬೇಕೇ ಬೇಕು. ಆತ ಹಾರಿ ತನ್ನ ಗುರಿ ಮುಟ್ಟಲಾರ. ದಾರಿಯನ್ನುವದು ತುಳಿದ ಪಾದಗಳ ಒಂದಿಷ್ಟು ಮೊತ್ತವೂ ಹೌದು. ಉತ್ತರ ಸಿಕ್ಕಿತೋ ಇಲ್ಲವೋ ಅದನ್ನು ತಿಳಿಯುವದು ವರ್ತಮಾನದಲ್ಲಿ ಅಲ್ಲ. ಭೂತಕಾಲಕ್ಕೆ ಸರಿದು ಹೋದ ಇತಿಹಾಸಗಳ ಓದಿನಿಂದ. ಅದರ ಕುರಿತು ಆಸಕ್ತಿ ಇರುವವರಿಗೆ ಮಾತ್ರ; ಅದಿಲ್ಲದೇ ಇರುವವರು ಕುರಿ ಕುರುಬನನ್ನು ಅನುಸರಿಸಿದಂತೆ ಸರಿಸಿ ಸಾಗುವುದಷ್ಟೆ. + +ಕುಸುಮಾ ಆಯರಹಳ್ಳಿಯವರ ಚೊಚ್ಚಲ ಕಾದಂಬರಿ “ದಾರಿ” (ಛಂದ ಪ್ರಕಾಶನ) ಓದಿದಾಗ ಅನಿಸಿದ ಭಾವನೆಗಳು ಇವು. ಒಂದು ಅರ್ಥದಲ್ಲಿ ಲೇಖಕಿಯೇ ಅನೇಕ ರೂಪಗಳನ್ನು ತಳೆದು ಗುರಿ ಮುಟ್ಟುವ ದಾರಿಗಾಗಿ ಹುಡುಕಾಟ ನಡೆಸಿದ್ದಾರೆ. ಲೇಖಕರ ಮಾತಿನಲ್ಲಿ ಅವರೇ ಹೇಳಿಕೊಂಡಂತೆ ಅವರ ಈ ಹುಡುಕಾಟ ಅವರ ಕಾಲೇಜುದಿನಗಳಿಂದಲೂ ಆರಂಭವಾಗಿದೆ. ಹಲವಾರು ಸಿದ್ಧಾಂತಗಳ ಸಮೂಹವನ್ನು ಸೇರಿ ತೊಡಗಿಕೊಂಡ ಅವರ ಹುಡುಕಾಟ ಇನ್ನೂ ಮುಂದುವರಿದಿದೆ. ಈ ಹುಡುಕಾಟ ಅವರದ್ದೊಂದೇ ಅಲ್ಲ. ನಾನೂ ಸಹ ಇಂತಹುದೇ ಹುಡುಕಾಟದಲ್ಲಿ ತಲೆಕೆಡಿಸಿಕೊಂಡ ದಿನಗಳ ನೆನಪಾಯಿತು. ಸಿದ್ಧಾಂತಗಳ ಕುರುಡು ನಂಬಿಕೆಯಲ್ಲಿ ಸಾಗಿದಾಗ ಅದು ತೋರಿಸಿದ ಯಾವುದನ್ನೋ ನಮ್ಮ ಗುರಿಯೆಂದು ಭಾವಿಸುತ್ತೇವೆ. ಕೆಲಕಾಲ ಕಳೆದಮೇಲೆ ನಮ್ಮ ಸ್ವಂತಿಕೆಯನ್ನು ಉಪಯೋಗಿಸಿ ಈ ಸಿದ್ಧಾಂತಗಳ ಬೇಲಿಯಾಚೆ ಬಂದು ಅವಲೋಕಿಸಿದಾಗ ಅದುತನಕದ ನಮ್ಮ ಅರಸುವಿಕೆಯೆನ್ನುವುದು ನಾವು ಏರಿದ ಬಿಸಿಲು ಕುದುರೆಯಾಗಿ ತೋರುತ್ತದೆ. ಕಾದಂಬರಿಯನ್ನು ಬರೆಯುವಾಗ ಕಥೆಯನ್ನು ಹಿಡಿದು ಅದರ ಭಾವದ ಮೂಲಕ ಸಾಗುವ ಕ್ರಿಯೆಯೊಂದಿದೆ. ಈ ಮಾರ್ಗದಲ್ಲಿ ಕಥೆಯೇ ಕರ್ತೃವಿಗೆ ಮಾರ್ಗವನ್ನು ತೋರಿಸುತ್ತಾ ಹೋಗುತ್ತದೆ. ಇನ್ನೊಂದು ಹಲವು ಆದರ್ಶಗಳನ್ನು ತುಂಬಿಕೊಂಡ ವ್ಯಕ್ತಿ ಅದರ ಒಂದು ಆದರ್ಶದ ಥೀಮನ್ನು ಹಿಡಿದು ಅದರಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಂಡು ಹೋಗುವದೊಂದು. ಇಲ್ಲಿ ಕುಸುಮಾ ಎರಡನೆಯ ಮಾರ್ಗವನ್ನು ಹಿಡಿದಿದ್ದಾರೆ. ನಗರದ ಥಳುಕಿನ ಬಳುಕಿನ ಬದುಕನ್ನು ಅನುಭವಿಸಿ ಮತ್ತೆ ಹಳ್ಳಿಗೆ ಹೋಗಿ ತಣ್ಣಗೆ ಬದುಕುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ನಗರಕ್ಕೆ ಹೊಂದಿಕೊಂಡಿರುವ ಹಳ್ಳಿ ಈಗ ಮೊದಲಿನ ಸಹಬಾಳ್ವೆಯ ಹಳಿಯಾಗಿ ಉಳಿದಿಲ್ಲ. ಇಲ್ಲಿನ ಕತೆಯಲ್ಲಿ ಬರುವ ನಂಜನಗೂಡಿನ ಸಮೀಪದ ಬಿಳಿಕೆರೆಯೆನ್ನುವ ಹಳ್ಳಿಯೊಂದೇ ಅಲ್ಲ. ಬಿಜಾಪುರ ಜಿಲ್ಲೆಯ ತುತ್ತತುದಿಯ ಚಾಂದಕವಟೆಯಂತ ಕುಗ್ರಾಮದ ಸ್ಥಿತಿಯೂ ಹೌದು. ಮೊದಲೆಲ್ಲ ಊರಿಗೆ ಅಪರಿಚತರು ಯಾರಾದರೂ ಸಂಜೆವೇಳೆಗೆ ಬಂದರೆ ತಮ್ಮ ಮನೆಗೆ ಕರೆದೊಯ್ದು ಉಪಚರಿಸಿ ಯೋಗಕ್ಷೇಮ ವಿಚಾರಿಸುತ್ತಿದ್ದರು. ಈಗ ಪ್ರೇಕ್ಷಣೀಯ ಸ್ಥಳದ ಪ್ರತಿಮನೆಯೂ ಹೋಮ್ ಸ್ಟೇ ಆಗಿದೆ. ಮನೆಯ ಮಕ್ಕಳೇ ಬಂದರೂ ಪುಕ್ಕಟೇ ಕೊಡಬೇಕಲ್ಲ ಎನ್ನುವ ಮನೋಭಾವವನ್ನು ಗಮನಿಸಬಹುದು. + +ಈ ಕಾದಂಬರಿಯಲ್ಲಿ ನಾಯಕ ಮತ್ತು ಕೇಂದ್ರೀಕೃತ ಪಾತ್ರಗಳು ಇಂತವೇ ಅಂತ ಇಲ್ಲ. ಪ್ರಕಾಶ ಪತ್ರಕರ್ತನಾಗಿದ್ದು ಕೆಲಸ ಕಳೆದುಕೊಂಡು ತಮ್ಮ ಹಳ್ಳಿ ಬಿಳಿಕೆರೆಗೆ ಬಂದಿದ್ದಾನೆ. ಆತನ ಹೆಂಡತಿ ಪದ್ಮಿನಿ ಕಿರುತೆರೆಯಲ್ಲಿ ಖ್ಯಾತ ನಟಿ, ಪ್ರತಿಭಾನ್ವಿತೆ ಕೂಡಾ. ಆಕೆಯ ತಾಯಿ ರಮಾ, ಪದ್ಮಿನಿಯ ತಂದೆ ಚಂದ್ರಣ್ಣ, ಜನಪರನಾಯಕ ದಲಿತ ಎನ್ನುವ ಕಾರಣಕ್ಕೆ ಸ್ವಲ್ಪ ಕೀಳರಿಮೆ ಇರುವ ಜವರಪ್ಪ ಈ ಎಲ್ಲರ ನಡುವೆ ಕಥೆ ಸಾಗುತ್ತದೆ. ಈ ಕಾದಂಬರಿಯ ಪ್ರತಿ ಪಾತ್ರಗಳೂ ಹೀಗೆ ಯಾರ ಯಾರದೋ ಹಿಂದೆ ಸಾಗಿ ನಂತರ ಅದಲ್ಲ ತಮ್ಮ ಪಥ ಎಂದು ಸರಿದು ಮತ್ತೆ ಗುರಿ ಮುಟ್ಟದ ದಾರಿಯಲ್ಲಿ ಸಾಗುತ್ತಿರುತ್ತಾರೆ. ಚಂದ್ರಣ್ಣನಂತಹ ಕೆಲವರಿಗೆ ತಮ್ಮ ಮಿತಿಯ ಅರಿವಾಗಿ ಸರಿದು ಮೌನದಲ್ಲಿ ಸವೆದು ಹೋದ ದಾರಿಯನ್ನು ಸರಿಮಾಡುವತ್ತ ಲಕ್ಷ ಹರಿಸುತ್ತಾರೆ. + +(ಕುಸುಮಾ ಆಯರಹಳ್ಳಿ) + +ಪ್ರಕಾಶನದು ಮತ್ತು ಪದ್ಮಿನಿಯದು ಪ್ರೇಮವೋ ಅಥವಾ ಆಕರ್ಷಣೇಯೋ ಎನ್ನುವದು ಗೊತ್ತಾಗುವದರೊಳಗೆ ಅವರ ಮದುವೆ ಆಗಿಹೋಗಿದೆ. ಪದ್ಮಿನಿ ಅನೇಕ ಸಲ ಈ ಸಂಬಂಧವನ್ನು ಅಷ್ಟೊಂದು ಗಂಭೀರವಾಗಿ ತೆಗೆದುಕೊಂಡಿಲ್ಲ. ಹಾಗಂತ ಪ್ರಕಾಶನ ಕುರಿತು ಆಕೆಗೆ ತಿರಸ್ಕಾರವೂ ಇಲ್ಲ. ಅವನ ಬದುಕಿನ ರೀತಿಯನ್ನು ಬದಲಾಯಿಸಲೂ ಆಕೆ ಪ್ರಯತ್ನ ಪಡುತ್ತಿಲ್ಲ. ಹಾಗಾಗಿ ಆತ ಬೆಂಗಳೂರನ್ನು ಬಿಟ್ಟು ಊರಿನಲ್ಲಿ ನೆಲೆಸುವ ನಿರ್ಧಾರವನ್ನು ಕೈಗೊಂಡಾಗ ಅದನ್ನು ಪ್ರತಿಭಟಿಸುವದಿಲ್ಲ. “ಪದ್ಮಿನಿಗೆ ಪ್ರಕಾಶ ಹೋದಮೇಲೆ ಹೊಸದೊಂದು ನಿರಾಳ ಉಂಟಾದದ್ದು ಯಾಕೆಂದೂ ಹೊಳೆಯುವದಿಲ್ಲ. ತಾವಿಬ್ಬರೂ ಮದುವೆಯಾದದ್ದು ವಯೋಸಹಜ ಮೋಹ ಮತ್ತು ಪರಸ್ಪರರಿಗಿದ್ದ ತಾತ್ಕಾಲಿಕ ತಪ್ಪು ಲೆಕ್ಕಾಚಾರಗಳಿಂದ ಅಂತ ಬಹಳಸಲ ಅನಿಸಿದೆ ಇಬ್ಬರಿಗೂ” ಎನ್ನುವಲ್ಲಿ ಇಡೀ ಕಾದಂಬರಿಯ ಕಥಾ ಹಂದರವನ್ನು ಬಿಡಿಸಿಟ್ಟಿದ್ದಾರೆ. ಆಕೆಗೆ ಅದಾಗಲೇ ಜೈಸನ್ ಎನ್ನುವ ಪ್ಯಾಷನ್ ಶೋ ಸಂಘಟಿಸುವನ ಜೊತೆ ಬ್ರೇಕ್-ಅಪ್ ಆಗಿ ಬಳಲಿದ ಮನಕ್ಕೆ ಸಿಕ್ಕವ ಪ್ರಕಾಶನಾಗಿದ್ದ. + +ಊರಿಗೆ ಬಂದ ಪ್ರಕಾಶ ಅಲ್ಲೇ ಇರುತ್ತೇನೆ ಎಂದಾಗ ಮೊದಲು ಶಾಕ್ ಆಗುವದು ಅವರ ಮನೆಮಂದಿಗೆ. ಊರಿನಿಂದ ಬೆಂಗಳೂರಿಗೆ ಹೋದವರು ಎಂದರೆ ಅವರು ತಿರುಗಿ ಬರಲಾರರು ಹಾಗಾಗಿ ಅವರ ಪಾಲಿನ ಆಸ್ತಿ ತಮಗೇ ಎಂದುಕೊಂಡವರಿಗೆ ಆತ ಊರಲ್ಲೇ ಖಾಯಂ ಆಗಿ ಉಳಿಯುತ್ತಾನೆ ಎಂದಾಗ ತಮ್ಮ ತುತ್ತನ್ನು ಕಸಿಯಲು ಬಂದವನಾಗಿ ಕಾಣಿಸುತ್ತಾನೆ. ಪ್ರಕಾಶನಿಗೆ ಊರಲ್ಲಿ ಸುಧಾರಣೆ ಮಾಡಬೇಕು ಎನ್ನುವ ಆದರ್ಶದ ವಿನಾಃ ಬೇರೇನೂ ಮನಸ್ಸಿನಲ್ಲಿಲ್ಲ. ತನ್ನೂರಿನ ಜನರಿಗೆ ಕಾಡುವ ವೃದ್ಧಾಪ್ಯವೇತನ, ಉತ್ತಮ ಶಿಕ್ಷಣ, ಆರೋಗ್ಯ, ಶುದ್ಧ ಕುಡಿಯುವ ನೀರು ಇಂತಹ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಅವರಿಗೊಂದು ನೆಮ್ಮದಿಯ ಬದುಕನ್ನು ಕಲ್ಪಿಸುವುದು ಉದ್ದೇಶ. ಇಲ್ಲಿ ಆತನಿಗೆ ಪದ್ಮಿನಿಯ ಮಾವ ಚಂದ್ರಣ್ಣ ಹಿಂದಿನಿಂದ ಸ್ಪೂರ್ತಿಯಾಗುತ್ತಾರೆ. ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದ ಅವರಿಗೆ ಅವರ ಮಕ್ಕಳೇ ವಂಚಿಸಿ ಆಸ್ತಿ ಲಪಟಾಯಿಸಿದಾಗ ಬೇಸರಪಟ್ಟು ಹೊನ್ನಕುಡುಕಿ ಎನ್ನುವ ಹಳ್ಳಿಯಲ್ಲಿ ಸ್ನೇಹಿತನೇ ಕೊಟ್ಟ ತೋಟದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಇಲ್ಲೆಲ್ಲಾ ಆಗಾಗ ಬರುವ ಗುರುಗಳು ಮತ್ತು ಸ್ವಾಮಿಗಳು ಬೈರಪ್ಪನವರ ಗೃಹಭಂಗದ ಪ್ರಭಾವವನ್ನು ಸೂಕ್ಷ್ಮವಾಗಿ ಬೀರಿದರೂ ಅದರ ಅರಿವಾಗಿ ತಕ್ಷಣ ಈ ಪ್ರಭಾವವಲಯದಿಂದ ಕುಸುಮಾ ತಪ್ಪಿಸಿಕೊಳ್ಳುತ್ತಾರೆ. ಪ್ರಕಾಶ ಪದ್ಮಿನಿಯನ್ನು ಮದುವೆಯಾಗುವ ಹಿಂದಿನ ಪ್ರಾಮಾಣಿಕ ನಿಲುವನ್ನು ತಿಳಿದ ತಕ್ಷಣ ಚಂದ್ರಣ್ಣ ಆತನನ್ನು ಅಪ್ಪಿ ಬೀಳ್ಕೊಡುವ ಸನ್ನಿವೇಶದಲ್ಲಿಯೇ ಪ್ರಕಾಶನ ಬದುಕಿನಲ್ಲಿ ಚಂದ್ರಣ್ಣನ ಆದರ್ಶಗಳು ಹೊಕ್ಕಿಕೊಂಡವೆನಿಸುತ್ತದೆ. + +ಈ ಅನೇಕ ಸಮಸ್ಯೆಗಳು ಮತ್ತು ಆಗಾಗ ಪವರ್-ಕಟ್ಟಿನಲ್ಲಿಯೇ ಬದುಕು ಸವೆಸುವ ಹಳ್ಳಿಯ ಜನರಿಗೆ ನಗರದ ತಳಕು ಬೆಳಕಿನ ಕನಸು ಸಹಜ. ಹಾಗಂತೆ ಸರಕಾರ ಕೊಡುವ ಎಲ್ಲವೂ ಅನುಭವಿಸುವದು ತಮ್ಮ ಹಕ್ಕು; ಕೊನೆಗೆ ಪುಕ್ಕಟೇ ಸಿಗುವ ಕುಡಿಯುವ ನೀರನ್ನೂ ಸಹ ಪೋಲುಮಾಡಬಹುದು ಎನ್ನುವ ಮನೋಭಾವ ಹಳ್ಳಿಗಳಲ್ಲಿದೆ ಎನ್ನುವುದನ್ನು ಲೇಖಕಿ ಸೂಕ್ಷ್ಮವಾಗಿ ತೆರೆದಿಡುತ್ತಾ ಹೋಗುತ್ತಾರೆ. ಹಳ್ಳಿಗರಿಗೆ ಇದು ತಪ್ಪು ಎಂದು ಯಾವತ್ತಿಗೂ ಅನಿಸುತ್ತಿಲ್ಲ. ಕಾರಣ ಅಜ್ಞಾನ. ಗೆಳೆಯ ರಾಜಣ್ಣ ಹಳ್ಳಿಗಳಲ್ಲಿರುವ ಜಾತಿ ರಾಜಕೀಯದ ಸೂಕ್ಷ್ಮತೆಯನ್ನು ತಿಳಿಸಿ ಅದರ ಸಹವಾಸ ಬೇಡವೆಂದರೂ ಅದನ್ನು ಸುಧಾರಿಸುವ ಹುಚ್ಚು ಪ್ರಕಾಶನಿಗೆ. ತನ್ನೂರಿನ ಜನರ ನಿಜವಾದ ಬವಣೆಗಳ ಬಗ್ಗೆ ಜಾಗೃತಿಮೂಡಿಸಿ ಅವರನ್ನು ಗಾಂಧೀಜಿ ಕಂಡ ಕನಸಿನ ಕಡೆಗೆ ಒಯ್ಯಬೇಕೆನ್ನುವದು ಆತ ಕಂಡ ಕನಸು. ಹಳ್ಳಿಗಳಲ್ಲಿ ಯಾರ ಯಾರ ಸಮಸ್ಯೆಗಳು ಯಾವ ರೀತಿಯವು ಎನ್ನುದು ತಿಳಿದಿರುವದು ಅಂಗನವಾಡಿ ಕಾರ್ಯಕರ್ತೆಯರಿಗೆ. ಹಾಗಾಗಿ ಅಲ್ಲಿ ಸಿಗುವ ಮಂಗಳ ಲಗ್ನವಾಗಿ ಅಷ್ಟೇ ಶೀಘ್ರವಾಗಿ ಗಂಡನನ್ನು ಕಳೆದುಕೊಂಡು ತವರುಮನೆ ಸೇರಿದವಳು. ಮೊದಲೊಮ್ಮೆ ಪ್ರಕಾಶನಿಗಾಗಿ ಮನಸ್ಸಿನಲ್ಲಿಯೇ ಮಂಡಿಗೆ ತಿಂದವಳು. ಆತ ಗಗನ ಕುಸುಮ ಎಂದು ಮೌನವಾಗಿ ಇದ್ದು ಬೇಜವಾಬುದಾರಿ ಅಣ್ಣನಿರುವ ತವರುಮನೆಯಲ್ಲಿ ಅತ್ತಿಗೆಯೊಂದಿಗೆ ಹೊಂದಿಕೊಂಡು ಇರುವವಳು. ಕ್ಯಾಮರಾ ಮುಂದೆ ಅಭಿನಯಿಸುವ ಕಲಾವಿದೆ ನಿರ್ದೇಶಕಕ ಕೈಗೊಂಬೆ; ಅಭಿನಯವೆಲ್ಲ ಪರಪುಟ್ಟ. ಆದರೆ ಸ್ವಚ್ಛಂದವಾಗಿ ಹಾಡುವ ಮನಸ್ಸಿನ ನೋವುಗಳನ್ನು ಮರೆಯುವ ಹಳ್ಳಿಯ ಕುಸುಮ ಪ್ರಕಾಶನ ಎದೆಯೊಳಗೆ ಅವಿತುಕೊಳ್ಳಲು ಪ್ರಾರಂಭಿಸುತ್ತಾಳೆ. + +ಪದ್ಮಿನಿಗೆ ಹಿಂದಿಯಿಂದ ಬಂದ ನಿರ್ದೇಶಕ ವಿಜಯ ಇಷ್ಟವಾಗುತ್ತಾನೆ. ಆತ ಈಕೆಯ ಜೊತೆ ವೃತ್ತಿಬಾಂಧವ್ಯದ ಹೊರತೂ ಬೇರೆ ಯಾವ ಸಂಬಂಧವನ್ನೂ ಇಟ್ಟುಕೊಳ್ಳುವದಿಲ್ಲ. ಆತನಿಗೆ ರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ತೋರಬೇಕಿದೆ. ಅವಕಾಶಕ್ಕಾಗಿ ಕಾದಿದ್ದಾನೆ. ತನಗೆ ಇಷ್ಟವಾದವರನ್ನೆಲ್ಲ ಸೆಳೆಯುವ ಪದ್ಮಿನಿಗೆ ಆತ ಒಗಟಾಗಿಬಿಡುತ್ತಾನೆ. ಆತನನ್ನು ಒಲಿಸಿಕೊಳ್ಳುವದಕ್ಕಾಗಿ ಈಕೆ ಪ್ರಯತ್ನಿಸಿದರೂ ಅದನ್ನು ಬಹಿರಂಗವಾಗಿ ಹೇಳಿಕೊಳ್ಳಲಾರಳು. ಜೊತೆಯಾಗಿ ಹೋಗುವ, ಕೃಷ್ಣ ಭವನದ ಕಾಪಿಕುಡಿಯುವ, ಸೆಲ್ಫಿ ತೆಗೆದುಕೊಳ್ಳುವ ಹೀಗೆ ಪದ್ಮಿನಿಗೆ ವಿಜಯನ ಹುಚ್ಚು ಏರಿಬಿಡುತ್ತದೆ. ಒಮ್ಮಿಂದೊಮ್ಮೆಲೇ ಆತನಿಗೆ ತನ್ನ ಕನಸಿನ ಅವಕಾಶ ಸಿಕ್ಕಿದಾಗ ಈಕೆಗೆ ಪಾರ್ಟಿಕೊಟ್ಟು ಉತ್ತರಾಖಂಡಕ್ಕೆ ಹಾರಿಬಿಡುತ್ತಾನೆ. ವಿಜಯ ಇಲ್ಲದ ಬದುಕು ಪದ್ಮಿನಿಗೆ ಶೂನ್ಯವಾಗಿಬಿಡುತ್ತದೆ. ಹೀಗೆ ಎರಡು ಕೋನಗಳಿಂದ ಕಥೆ ಸಾಗುತ್ತಿದ್ದರೂ ಮೂಲ ಆಶಯವಾದ ಗ್ರಾಮವೃದ್ಧಿಯ ದಿಕ್ಕಿನಲ್ಲಿ ಸ್ವಲ್ಪವೂ ಅಲುಗಾಡುವದಿಲ್ಲ. ಪ್ರಕಾಶನಿಗೆ ಜೊತೆಗೂಡುವ ದಲಿತ ಜವರಪ್ಪ ಕೊನೆಯವರೆಗೂ ಇಷ್ಟವಾಗುತ್ತಾನೆ. ದಲಿತತನವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳುವ ಶಿಕ್ಷಕ ಶಂಕರರಿನಿಗೆ ತನ್ನ ಮಗಳು ಇನ್ನೊಂದು ಬಣವಾದ ಹುಡುಗ ಮಂಜನೊಡನೇ ಓಡಿಹೋಗಿರುವದನ್ನು ಸಹಿಸಿಕೊಳ್ಳಲಾಗುವದಿಲ್ಲ. ಜಾತಿ ರಾಜಕಾರಣ ಹಳ್ಳಿಯನ್ನು ವಿಷಮಯ ಮಾಡಿರುವದನ್ನು ಅಂಬೇಡ್ಕರ ಮತ್ತು ಬಸವಣ್ಣನ ಪ್ರತಿಮೆಗೆ ಅದೇ ಸಮಾಜದವರು ಮಾಡಿ ಅದನ್ನು ಕೋಮುಗಲಭೆಗೆ ಅಸ್ತ್ರವಾಗಿಸುವ ವಸ್ತು ಸಹಜವಾಗಿ ಮೂಡಿಬಂದಿದೆ. + +ಈ ನಡುವೆ ಹಳ್ಳಿಯಲ್ಲಿಯೂ ವ್ಯಾಪಿಸಿರುವ ಕೈಗಾರಿಕೆಗಳು ತಮ್ಮ ಜವಾಬುದಾರಿಯನ್ನು ಮರೆತು ಹಳ್ಳಿಯ ನೀರು ಮತ್ತು ಮಣ್ಣನ್ನು ವಿಷಮಯವಾಗಿಸುತ್ತಿವೆ. ಅವುಗಳ ಭೂಮಿಯ ದಾಹದಿಂದ ಇನ್ನುಳಿದ ಭೂಮಿಯನ್ನು ಹಣದ ಆಮಿಷವನ್ನು ಒಡ್ಡಿ ವಶಪಡಿಸಿಕೊಳ್ಳುತ್ತಾ ಇವೆ. ಈ ಎಲ್ಲ ಸಮಸ್ಯೆಗಳಿಗೆ ಸಹಜ ಕೃಷಿಯೇ ಉತ್ತರ ಎನ್ನುವದನ್ನು ತೋರಿಸಿಕೊಡಬೇಕೆನ್ನುವದು ಪ್ರಕಾಶನ ಇಚ್ಚೆ. ಆ ಕಾರಣಕ್ಕಾಗಿಯೇ ಪ್ರಕಾಶ ಮನೆಯ ಪಾಲನ್ನು ತೆಗೆದುಕೊಳ್ಳಲು ಬಯಸುವದು; ಆಗ ಮನೆಯವರು ಮತ್ತು ಮದುವೆಯಾದ ಅತ್ತೆ ಎಲ್ಲ ಒಂದಾಗಿ ಪ್ರಕಾಶನಿಗೆ ಕೇವಲ ಒಂದೆಕರೆ ಜಮೀನು ಸಿಗುವಂತೆ ನೋಡಿಕೊಳ್ಳುತ್ತಾರೆ. ಈ ಮದ್ಯೆ ಸಮಾನ ಮನಸ್ಕರೆಲ್ಲರ ಧಾರವಾಡದ ಸಮಾವೇಶ, ಅಲ್ಲಿ ಪತ್ರಕರ್ತೆ ಚರಿತಾಳ ಪ್ರವೇಶ ಇವೆಲ್ಲ ಮಂಗಳಳ ಬದುಕಿನಲ್ಲಿ ಹೊಸ ಬೆಳಕನ್ನು ತೋರಿಸಿ ಧೈರ್ಯವನ್ನು ತುಂಬುವ ಕೆಲಸವಾಗುತ್ತದೆ. ಹಳ್ಳಿಯಲ್ಲಿ ಇದ್ದವರಿಗೆ ನಗರಕ್ಕೆ ವಲಸೆ ಹೋಗುವ ತಲಬು. ಅವರೆಲ್ಲರೂ ತಮ್ಮ ಪಾಲಿನ ಆಸ್ತಿಯನ್ನು ಕೈಗಾರಿಕೆಗೆ ಮಾರಿ ನಗರ ಸೇರುತ್ತಾರೆ. ರಿಯಲ್ ಎಸ್ಟೇಟ್ ದಂಧೆಯ ಕರಾಳ ಮುಖ ದೇವಿಕೆರೆ ಸ್ವಾಮಿಯ ಕೊಲೆಯೋ ಆತ್ಮಹತ್ಯೆಯವರೆಗೂ ತಂದು ನಿಲ್ಲಿಸುತ್ತದೆ. + +ವಿಜಯ ಮತ್ತು ಮಂಗಳಾ ಪದ್ಮಿನಿ ಮತ್ತು ಪ್ರಕಾಶರನ್ನು ಕಾಡುತ್ತಿರುವಂತೆ ಆಕೆಯ ತಾಯಿ ತನ್ನ ಇಳಿ ವಯಸ್ಸಿನಲ್ಲಿ ವಿಧುರ ಅಶೋಕನನ್ನು ಸೇರಿ ಇಬ್ಬರೂ ವಿದೇಶಕ್ಕೆ ಹಾರುವದು ಸಲಿಸಾಗಿ ನಡೆಯುತ್ತದೆ. ಜೀವನದಲ್ಲಿ ಗುರಿ ಇರದೇ ಇದ್ದಾಗಲೂ ಕೆಲವೊಮ್ಮೆ ಅವಕಾಶಗಳು ಹಾದುಹೋಗುತ್ತವೆ. ಅದನ್ನು ತಮ್ಮ ತಮ್ಮ ಅನುಕೂಲತೆಯನ್ನಾಗಿ ಬಳಸಿ ಬದುಕನ್ನು ಹಸನುಗೊಳಿಸಬಹುದೆನ್ನುವದನ್ನು ಅಪರವಯಸ್ಕರ ಕಹಾನಿ ತಿಳಿಸುತ್ತದೆ. ವಿಷಾದವೆನ್ನುವದು ತೀವ್ರವಾದಾಗ ಗುರುವಿನ ಮಾರ್ಗದರ್ಶನವಿದ್ದರೆ ಅದರಿಂದ ಹೊರಬರುವದು ಸಾಧ್ಯವೆನ್ನುವದು ಪದ್ಮಿನಿ ಕಂಡುಕೊಂಡಿದ್ದು ಮತ್ತೋರ್ವ ಗುರು ಪುರುಷೋತ್ತಮನಲ್ಲಿ. ಪದ್ಮಿನಿಗೆ ಬದುಕಿನ ವಾಸ್ತವದ ಅರಿವು ಬರುವದು ಆತ ನಡೆಸುವ ಅನಾಥಮಕ್ಕಳ ಆಶ್ರಮವನ್ನು ನೋಡಿದಾಗ. ಮಕ್ಕಳ ಆನಂದದಲ್ಲಿ ಆಕೆಯ ಚೆಲ್ಲುಚೆಲ್ಲಿನ ಜೀವನ ಒಂದು ಸ್ಥಿರತೆಗೆ ಬರುತ್ತದೆ. ಇತ್ತ ಪ್ರಕಾಶನಿಗೆ ತನ್ನ ಹೋರಾಟದ ಹಾದಿಯಲ್ಲಿಯೇ ಮಂಗಳಾ ಸಹ ಹತ್ತಿರವಾಗುತ್ತಾಳೆ. ಪ್ರಕಾಶ ತನ್ನ ಈ ಸಂಬಂಧವನ್ನು ಮಗ ನಿನಾದನ ಆಲೋಚನೆಯಿಂದ ಹೆಂಡತಿಗೆ ಹೇಳುವ ಧೈರ್ಯ ಮಾಡಲಾರ. ಇತ್ತ ಮಂಗಳಳನ್ನೂ ಬಿಡಲಾರ. ಈ ಧ್ವಂದ್ವವೇ ಆತನ ಹೋರಾಟದ ಬದುಕಿನಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ. + +ಪ್ರಕಾಶ ಇಷ್ಟವಾಗುವದು ಆತ ತಾನೇ ನಾಯಕನಾಗಬೇಕೆಂದು ಹೊರಟಿಲ್ಲ. ಆತನಿಗೆ ಊರವರೇ ಅವರ ಸಮಸ್ಯೆಗಳ ಕುರಿತು ಹೋರಾಡಬೇಕಾಗಿದೆ. ಈತ ಕೇವಲ ಮಾರ್ಗದರ್ಶಕನಾಗಿರಬೇಕೆಂದುಕೊಳ್ಳುತ್ತಾನೆ. ಊರವರಿಗೆ ಕಾರ್ಖಾನೆಯ ವಿಷದಿಂದ ಚರ್ಮರೋಗ ಕಾಣಿಸಿಕೊಂಡಾಗ ಮಲಗಿದ್ದ ಜನರನ್ನು ಎತ್ತಿ ಅವರಲ್ಲಿ ವಿಷಮ ಪರಿಸ್ಥಿತಿಯ ಅರಿವು ಮೂಡಿಸುವ ಯತ್ನಮಾಡುತ್ತಾನೆ. ಸರಕಾರ ಮತ್ತು ವ್ಯವಸ್ಥೆ ಎಲ್ಲವೂ ಕಾರ್ಖಾನೆಯ ಒಟ್ಟಿಗೆ ಇರುವದರಿಂದ ಮಾಹಿತಿಗಳು ಸುಲಭವಾಗಿ ಸಿಗುವದಿಲ್ಲ. ಈ ನಡುವೆ ಪ್ರಕಾಶನ ಮೇಲೆ ಹಲ್ಲೆಯಾಗುತ್ತದೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತಿದ್ದರೂ ಚಳುವಳಿಯ ದಿಕ್ಕು ತಪ್ಪಬಾರದೆನ್ನುವ ಕಾರಣಕ್ಕೆ ಆತ ಅದು ತಾನೇ ಬೈಕಿನಿಂದ ಬಿದ್ದ ಅಪಘಾತ ಎಂದೇ ಹೇಳುತ್ತಾನೆ. ಪರಿಸರದ ಅನಾಹುತಕ್ಕೆ ಈ ಸಾರಿ ಮಂಗಳಾಳ ಸರದಿ. ಆಕೆಯೂ ವಾಂತಿ ಬೇಧಿಗೆ ಬಲಿಯಾಗುತ್ತಾಳೆ. + +ಕುಸುಮಾ ಅವರದು ಇದು ಚೊಚ್ಚಲ ಕಾದಂಬರಿ. ಆದರೆ ಅವರ ಬರಹಗಳನ್ನು ಮತ್ತು ಅಂಕಣಗಳನ್ನು ಓದುತ್ತಿರುವ ನನಗೆ ಅವರ ನಿರೂಪಣೆಯ ಪ್ರಕಾರವನ್ನು ಆಯ್ದುಕೊಂಡಿರುತ್ತಾರೆ. ಎಲ್ಲಿಯೋ ನೀರಸವಾಗುತ್ತಿದೆ ಎನ್ನುವ ಹೊತ್ತಿನಲ್ಲಿಯೇ ಯಾವುದೋ ಒಂದು ವಿಷಯಗಳನ್ನು ಎತ್ತಿಕೊಂಡು ಪರಿಣಾಮವನ್ನು ಇಮ್ಮಡಿಗೊಳಿಸುವದು ಅವರ ಶೈಲಿ. ಮೈಸೂರಿನ ಗ್ರಾಮ್ಯ ಭಾಷೆಯ ಸೊಗಸನ್ನು ಚನ್ನಾಗಿ ದುಡಿಸಿಕೊಳ್ಳಬಲ್ಲರು. ಇಲ್ಲಿ ಗ್ರಾಮ್ಯ ಭಾಷೆಯೂ ಇದೆ; ಮತ್ತು ಬೆಂಗಳೂರಿನ ಕನ್ನಡವೂ ಇದೆ. ಇಡೀ ಕಾದಂಬರಿಯಲ್ಲಿ ಪಾತ್ರಗಳು ಮುಖಾಮುಖಿಯಾಗುವ ಸನ್ನಿವೇಶದಲ್ಲಿ ಇನ್ನೇನು ಸ್ಪೋಟಗೊಂಡು ಬಿಡುತ್ತದೆ ಎನ್ನುವಾಗ ಅದು ಅಲ್ಲಿಂದ ಜಾರಿ ಬಿಡುತ್ತದೆ. ಮಂಗಳಾ ಮತ್ತು ಪ್ರಕಾಶನ ಸಂಬಂಧ ಬಹಿರಂಗವಾಗುವ ಸನ್ನಿವೇಶವಿರಬಹುದು ಇಲ್ಲವೇ ಪದ್ಮಿನಿಗೆ ಅವರಿಬ್ಬರ ವಿಷಯದ ಕುರಿತು ದ್ಯಾವಮ್ಮ ಹೇಳಿದಾಗ ಆಕೆ ಮಂಗಳಳನ್ನು ಭೇಟಿಯಾಗುವ ಸನ್ನಿವೇಶವಿರಬಹುದು. ಪಾತ್ರಗಳು ಇಡೀ ಕಾದಂಬರಿಯುದ್ದಕ್ಕೂ ಆ ರೀತಿಯ ಸಂಗರ್ಷಕ್ಕೆ ಕಾರಣವಾಗುವದೇ ಇಲ್ಲ. ತಣ್ಣಗೆ ಕಥೆಯನ್ನು ಸಾಗಿಸಿಬಿಡುತ್ತಾರೆ. ಇದಕ್ಕೆ ಕಾರಣ ಕಥೆಯನ್ನು ತೆಗೆದುಕೊಂಡು ಹೀಗೆ ಹೋಗಬೇಕೆನ್ನುವ ಕಥೆಗಾರನ ನಿಲುವು. + +ಕಥಾ ಹಂದರವನ್ನು ನಿರ್ಮಿಸಿಕೊಂಡಿರುವದು ಗಾಂಧೀಜಿಯ ಕನಸಿನ ಗ್ರಾಮರಾಜ್ಯವನ್ನು ಕಟ್ಟಿಕೊಳ್ಳಬೇಕೆಂದು. ಹಾಗಂತ ಆಧುನಿಕ ಭಾರತಕ್ಕೆ ಕೈಗಾರಿಕೆಗಳನ್ನು ಸಂಪೂರ್ಣವಾಗಿ ನಿರಾಕರಿಸುವದಿಲ್ಲ. ಪರಿಸರಕ್ಕೆ ಮತ್ತು ಮನುಕುಲದ ಬದುಕಿಗೆ ಆಪತ್ತು ಬರಲೇ ಬಾರದಂತೆ ಕಾಳಜಿವಹಿಸಬೇಕೆನ್ನುತ್ತಾನೆ. ಕೈಗಾರಿಕೆಗಳನ್ನು ಸ್ಥಾಪಿಸುವಾಗ ಕಟ್ಟುನಿಟ್ಟಾದ ನಿಯಮಗಳನ್ನು ಮತ್ತು ತ್ಯಾಜ್ಯ ವಿಲೇವಾರಿಯನ್ನು ಅದು ಎಷ್ಟೇ ಖರ್ಚಿನದಾದರೂ ಅಳವಡಿಸಿಕೊಳ್ಳಬೇಕೆನ್ನುವದು ಪ್ರಕಾಶನ ಮತ. ತನ್ನ ಗಂಡನ ಕನಸಿಗೆ ಮಂಗಳ ಸರಿಯಾದ ಜೊತೆಯಾಗಬಹುದೆನ್ನುವದು ಅರಿವಾದಾಗ ಪದ್ಮಿನಿ ತೋರುವ ಸಹನೆ ಮತ್ತು ನಿಲುವು ಅದುತನಕದ ಆಕೆಯ ವ್ಯಕ್ತಿತ್ವವನ್ನು ಬದಲಾಯಿಸಿ ಪ್ರಕಾಶನೇ ಆಕೆಯ ಎದುರು ಕುಬ್ಜನಾಗಿಬಿಡುತ್ತಾನೆ. ಆಕೆಯೊಳಗಿನ ವಿಜಯ ಅಚ್ಚಳಿಯದೇ ಉಳಿದಿದ್ದಾನೆ. ಆಕೆಯ ಈ ಪ್ರೇಮದ ಮುಂದೆ “ನನ್ನ ಕಲ್ಪನೆಯ ವಿಜಯ ಎಷ್ಟೊಂದು ಅಗಾಧವಾಗ್ ಬೆಳ್ದಿದಾನೆ ಅಂದ್ರೆ ನಿಜವಾದ ಅವನು ಬಂದ್ರೂ ಒಂತರಾ ಕುಬ್ಜನಾಗಿ ಕಂಡುಬಿಡಬಹುದಾ?” ಎನ್ನುವಲ್ಲಿ ಪದ್ಮಿನಿ ಕಾದಂಬರಿಯನ್ನು ಮೀರಿ ಬೆಳೆದುಬಿಡುತ್ತಾಳೆ. ಹೆತ್ತು ಸಾಕಲು ಕಷ್ಟಪಟ್ಟ ಅಮ್ಮ ದೂರಸಾಗಿದ್ದಾಳೆ. ಕಟ್ಟಿಕೊಂಡ ಗಂಡನ ಎದೆಯಲ್ಲಿ ತನಗೆ ಜಾಗವಿಲ್ಲ. ಆದರೆ ಬಾಲ್ಯದಲ್ಲಿ ತನ್ನಿಂದ ದೂರವಿದ್ದ ಅಪ್ಪ ಹತ್ತಿರವಾಗುತ್ತಿದ್ದಾನೆ. ಅನಾಥ ಮಕ್ಕಳ ಖುಷಿಯಲ್ಲಿ ತನ್ನ ಅನಾಥಪ್ರಜ್ಞೆಯನ್ನು ಮರೆಯುವ ಭಾಗ ಪರಿಣಾಮಕಾರಿಯಾಗಿದೆ. ಇಡೀ ಕಾದಂಬರಿಯುದ್ದಕ್ಕೂ ಮೊಬೈಲ್ ತುಂಬಾ ಸಾಂಕೇತಿಕವಾಗಿ ತನ್ನ ಇರವನ್ನು ಗುರುತಿಸಿಕೊಳ್ಳುತ್ತದೆ. ಬಾಹ್ಯಸ್ವರೂಪದ ವಿಜಯನ ಗುರುತಿನ ಮೊಬೈಲ್ ಕಳೆದುಹೋಗಿದೆ. ಎದೆಯಗೂಡಿನಲ್ಲಿ ಉಳಿಸಿಕೊಳ್ಳುವದು ಆಕೆಗಿಷ್ಟ. ಹೊಸದೊಂದು ಸಿನೇಮಾದಲ್ಲಿನ ನಾಯಕಿಯ ಪಾತ್ರದ ಹೊಸ ಕರೆ ಬಂದಾಗ ತಾನೇ ಆ ಮೊಬೈಲನ್ನು ಎಸೆದು ಬಂಧನವನ್ನು ಕಳೆದುಕೊಳ್ಳುತ್ತಾಳೆ. ಇತ್ತ ಪ್ರಕಾಶ ಮತ್ತು ಮಂಗಳ ಇಬ್ಬರ ಬದುಕಿನಲ್ಲಿಯೂ ಮೊಬೈಲ್ ಸೇತುವಾಗಿದೆ. ಆದರೆ ಇಲ್ಲಿ ಮೊಬೈಲಿನ ಒಡತಿ ಮಂಗಳ ಇನ್ನಿಲ್ಲ. ಪ್ರಕಾಶ ಮಾತಾಡಬೇಕೆಂದು ಕರೆಮಾಡಿದರೆ ಒಡತಿಯಿಲ್ಲದ ಮೊಬೈಲ್ ಪ್ರಕಾಶನ ಪಕ್ಕದಲ್ಲೇ ರಿಂಗಣಿಸುತ್ತದೆ. ಸಿದ್ಧಾಂತವನ್ನು ಹೇಳಬೇಕೆನ್ನುವ ಕತೆಗಾರ್ತಿಯನ್ನು ಮೀರಿ ಕಥೆ ಬೆಳೆಯುವದು ಈ ಸಂದರ್ಭದಲ್ಲಿಯೇ. ಸಂಸಾರದಲ್ಲಿ ಏರುಪೇರಾದರೆ ವಿರಕ್ತರೇ ಅದಕ್ಕೆ ಪರಿಹಾರ ನೀಡಬಲ್ಲರೆನ್ನುವದು ಅವರ ನಿಲುವು. ವಿವರಗಳಿರಬೇಕಾದ ಕಡೆ ಕಥೆಯನ್ನು ಹಾರಿಸುವದು ಸೀದಾ ಹೇಳಬಹುದಾದ ಕಡೆ ಸುತ್ತುಬಳಸಿ ಹೇಳುವ ಅನೇಕ ಸಂಗತಿಗಳು ನಡುವೆಯೂ ಕಥೆಯನ್ನು ಬಿಗಿಯಾಗಿಸಿಕೊಳ್ಳಲು ಮುಂದಾಗುತ್ತಾರೆ. + + + +ಗ್ರಾಮ ಬದುಕಿನಲ್ಲಿ ಪ್ರೇಮಚಂದ ಮುನ್ಷಿಯವರ ಕಾದಂಬರಿ “ಸದ್ಗತಿ” ಎನ್ನುವದನ್ನು ಸತ್ಯಜಿತ್ ರೇಯವರ ನಿರ್ದೇಶನದಲ್ಲಿ ನಿರ್ಮಿಸಿದ Deliverance ಎನ್ನುವ ಚಲನಚಿತ್ರ ನೆನಪಿಗೆ ಬಂತು. 1935ರ ಸುಮಾರಿಗೆ ಇದ್ದ ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆಯ ಭೀಕರತೆ ಮರೆಯಲಾರದ್ದು. ಇಂದಿಗೂ ಅದರ ಕೆಲ ಬೇರುಗಳು ಹಳ್ಳಿಯಲ್ಲಿ ಹಾಗೇ ಉಳಿದು ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ಹಾಳುಮಾಡುತ್ತಿವೆ ಎನ್ನುವ ಕಳಕಳಿ ಈ ಕಾದಂಬರಿಯನ್ನು ಓದಿದಾಗ ನೆನಪಾಗಿ ಸುಮ್ಮನೆ ಪುಸ್ತಕವನ್ನು ಮಡಚಿಟ್ಟೆ. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_164.txt b/Kenda Sampige/article_164.txt new file mode 100644 index 0000000000000000000000000000000000000000..eb14731184c82942689aecc5cc508eb3cf6515a8 --- /dev/null +++ b/Kenda Sampige/article_164.txt @@ -0,0 +1,15 @@ +ಶಾರದಾ ಮೂರ್ತಿಯವರ ವಿವಿಧ ಲೇಖನಗಳು ಕತೆ ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ, ಅವುಗಳ ವಿಶೇಷಾಂಕಗಳಲ್ಲಿ ಬೆಳಕು ಕಾಣುತ್ತಲೇ ಇರುತ್ತವೆ. ಆಕಾಶವಾಣಿಯಲ್ಲೂ ಇವರ ಹಲವಾರು ಕತೆಗಳು ಪ್ರಸಾರವಾಗಿವೆ. ಹಲವಾರು ದೇಶಗಳನ್ನೂ ಕುಟುಂಬದವರೊಂದಿಗೆ ಸುತ್ತಿ ಬಂದಿರುವವರು ಶಾರದಾ ಮೂರ್ತಿಯವರು. ಬರವಣಿಗೆಯ ಕ್ಷೇತ್ರಕ್ಕೆ ತಡವಾಗಿ ಪಾದಾರ್ಪಣೆ ಮಾಡಿದವರು. ಆದರೂ ಆತ್ಮವಿಶ್ವಾಸದಿಂದ ಭರವಸೆ ಉತ್ಸಾಹದಿಂದ ಮುಂದುವರಿಯುತ್ತಾ ಬಂದು “ಪಲಾಯನ ಮತ್ತು ಇತರ ಕಥೆಗಳು” ಎಂಬ ಮೊದಲ ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ + +“ಪಲಾಯನ ಮತ್ತು ಇತರ ಕತೆಗಳು” ಕಥಾ ಸಂಕಲನದಲ್ಲಿ ಒಟ್ಟು ಹತ್ತೊಂಬತ್ತು ಕತೆಗಳಿವೆ. ಲೇಖಕಿಯ ಲವಲವಿಕೆಯ ನಿರೂಪಣಾ ಶೈಲಿಯಿಂದಾಗಿ ಎಲ್ಲವೂ ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. ಲೇಖಕಿ ತಮ್ಮ ಬಾಳಿನ ಗತಕಾಲದ ಅವಲೋಕನದಿಂದ ಹೆಕ್ಕಿ ತೆಗೆದ ಘಟನಾವಳಿಗಳು, ಪಾತ್ರಗಳು, ಅಂದಿನಕಾಲದ ಸನ್ನಿವೇಶ ಪರಿಸ್ಥಿತಿ ಮೌಲ್ಯಗಳು, ಸಂಬಂಧಗಳ ನಡುವಿನ ಬಂಧ, ಆ ಕಾಲದ ಜನರ ನಿರೀಕ್ಷೆಗನುಗುಣವಾದ ನಿರ್ಣಯಗಳು ಇವನ್ನೆಲ್ಲ ಕತೆಯಲ್ಲಿ ಸೂಕ್ತವಾಗಿ ಹೆಣೆದು ಸಮಂಜಸವಾದ ಚಿತ್ರಣವನ್ನು ಕಟ್ಟಿಕೊಡುತ್ತಾರೆ. ಇದರಿಂದಾಗಿ ಈ ಕತೆಗಳ ಓದು ಆಪ್ಯಾಯಮಾನವಾಗಿಯೇ ಸಾಗುತ್ತದೆ. ಈ ಕತೆಗಳ ಕತಾ ನಾಯಕಿಯರು ಹೆಣ್ಣು ಕುಟುಂಬಕ್ಕೆ ಹೊರೆ, ಬೇಗ ಮದುವೆ ಮಾಡಿ ಕಳಿಸಿಕೊಡಬೇಕು ಎಂಬಂತಹ ಲಿಂಗ ಅಸಮಾನತೆಯ ವಾತಾವರಣದಲ್ಲಿ ಬೆಳೆದವರಾದರೂ ತಂತಮ್ಮ ಬಾಳಿನ ಬವಣೆಗಳಿಂದ ಬಸವಳಿದಾಗ ಸಾಂಪ್ರದಾಯಿಕ ಸಮಾಜದ ಕಟ್ಟುಪಾಡುಗಳನ್ನು ತಣ್ಣಗೆ ಬದಿಗೆ ಸರಿಸಿ ಆತ್ಮ ವಿಶ್ವಾಸದಿಂದ ಮುಂದೆ ಸಾಗಿದವರು. + +(ಶಾರದಾ ಮೂರ್ತಿ) + +“ತಪ್ಪಿಲ್ಲ” ಕತೆಯ ನಾಯಕಿಯರಾದ ಸಾವಿತ್ರಿ ಮತ್ತು ಮೀನಾ ಇಂತಹ ಶೋಷಣೆಯ ಬಲಿಪಶುಗಳು. ಅವರಲ್ಲಿ ಮೀನಾ ಸಂಪ್ರದಾಯದ ಶೃಂಖಲೆಗೆ ತಲೆ ಬಾಗದೇ ತನ್ನ ಸುಖ ತಾನು ಕಂಡುಕೊಳ್ಳುವ ದಾರಿಯಲ್ಲಿ ಮುನ್ನಡೆಯುತ್ತಾಳೆ. ಸಾವಿತ್ರಿ ಅದೇ ವ್ಯವಸ್ಥೆಯ ಬಲಿಪಶುವಾಗಿದ್ದವಳು. ಆದರೆ ಅವಳು ಹೃತ್ಪೂರ್ವಕವಾಗಿ ಮೀನಾಳ ದಿಟ್ಟತನವನ್ನು ಬೆಂಬಲಿಸುತ್ತಾಳೆ. ಶೀರ್ಷಿಕೆಯ ಕತೆ “ಪಲಾಯನ” ದ ನಾಯಕಿ ಪತಿ ವಿಧಿಸುವ ಕಟ್ಟುಪಾಡುಗಳಿಗೆ ತಲೆಬಾಗಿ ಬಾಳು ಸಾಗಿಸುತ್ತಿದ್ದವಳು. ಶೋಷಣೆಯಿಂದಾಗಿ ಬಾಗಿದ ಬೆನ್ನನ್ನು ಬಾಗುವವರೆಗೂ ಬಾಗಿಸಿ, ಇನ್ನು ಬಾಗಲಾರೆನೆಂದಾದಾಗ ಎದೆ ಸೆಟೆಸಿ ಎದ್ದು ನಿಲ್ಲುತ್ತಾಳೆ. ಅವಳ ಮಗಳು ಅವಳನ್ನು ಬೆಂಬಲಿಸುತ್ತಾಳೆ. ಹೆಂಡತಿಯನ್ನು ಹದ್ದುಬಸ್ತಿನಲ್ಲಿಡುವುದೇ ತನ್ನ ವ್ಯಕ್ತಿತ್ವದ ಸಾರ ಎಂಬಂತಿದ್ದ ಪತಿ ಶೇಷಯ್ಯ ಹೆಂಡತಿ ಮಗಳ ಈ ಆತ್ಮಪ್ರತ್ಯಯದ ಪ್ರಭೆಯ ಝಳ ತಾಳಲಾರದೆ ಪಲಾಯನ ಮಾಡುತ್ತಾನೆ. + +“ಭರವಸೆ” ಕತೆಯ ನಾಯಕಿ ಕವಿತಾ ಮನೆಯ ಒಳಗೂ ಹೊರಗೂ ಸಮರ್ಥವಾಗಿ ದುಡಿಯುತ್ತಾ ಅತ್ತೆ ಮಾವನ ಸೇವೆಯನ್ನೂ ನಿರ್ವಹಿಸುತ್ತಿದ್ದವಳು. ಗಂಡ ಮಾವನಿಂದ ಇವಳ ಮೇಲೆ ದಬ್ಬಾಳಿಕೆ. ಕ್ಲೀನರ್ ಪಾರ್ವತಿ ಇದೇ ವಿಧದ ಒತ್ತಡವನ್ನು ತಾನು ಚಾಣಾಕ್ಷತನದಿಂದ ಎದುರಿಸಿದ್ದನ್ನು ಹೇಳಿದಾಗ ಅವಳಿಂದ ಪ್ರೇರಿತಳಾಗುವ ಕವಿತಾಳನ್ನು ಅವಳ ಸ್ನೇಹಿತೆ ಮತ್ತು ಅತ್ತೆ ಬೆಂಬಲಿಸುತ್ತಾರೆ‌. ಇಲ್ಲಿ ಹೆಣ್ಣಿಗೆ ಹೆಣ್ಣೇ ಒತ್ತಾಸೆಯಾಗುವ ಚಿತ್ರಣವಿದೆ. ತನ್ನಾತ್ಮ ಬಲವೇ ತನಗೆ ಭರವಸೆಯ ಬೆಳಕಾಗುವುದನ್ನು ಕಾಣುತ್ತಾಳೆ ಕವಿತಾ. + +“ಚೌಕಳಿ ಸೀರೆ” ಯುವಪಡೆಯ ಸಂಘ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಚಂದದ ನಿರೂಪಣೆಯಿಂದ ಪ್ರಾರಂಭವಾಗಿ ಚೌಕಳಿ ಸೀರೆಯೊಂದಕ್ಕಾಗಿ ಬಲಿಯಾದ ತುಂಗಾಳ ಸಾವಿನೊಂದಿಗೆ ಓದುಗರ ಮನ ಮಿಡಿಯುತ್ತದೆ. “ಕಾಣೆ” ಕತೆ ಆಧುನಿಕ ಬದುಕಿನ ವಂಚನೆಯ ಜಾಲವನ್ನು ತೆರೆದಿಡುತ್ತಾ, ಮಾನವೀಯತೆಯ ಸೆಲೆ ಇನ್ನೂ ಒಸರುತ್ತಿರುವ ಆಶಾವಾದಿತ್ವವನ್ನು ಬಿಂಬಿಸುತ್ತದೆ. “ಅಮ್ಮ” ಕತೆಯಲ್ಲಿ ತಾಯಿಯ ಕುರಿತ ಮಗಳ ಮಮತೆ ಉಕ್ಕಿ ಹರಿಯಲು ಕೇವಲ ಒಂದು ಸಂಭಾಷಣೆ, ಅದು ಪ್ರೇರಿಸಿದ ಗತ ಕಾಲದ ನೆನಪು ಕಾರಣವಾಗಿ ಅದೇ ಒಂದು ಕತೆ ಆಗಿದೆ. + +ನಿರರ್ಗಳ ನಿರೂಪಣೆ ಕರಗತವಾಗಿರುವ ಲೇಖಕಿಯ ಕತೆಗಳು ಅನಾಯಾಸವಾಗಿ ಓದಿಸಿಕೊಂಡು ಹೋಗುತ್ತವೆ. ಈ ನಿರೂಪಣೆಯ ಉತ್ಸಾಹದಿಂದ ಮುಂದುವರಿಯುವ ಲೇಖಕಿ ಕೆಲವು ಕತೆಗಳ ಅಂತ್ಯದಲ್ಲಿ ತೀರ್ಪುಗಾರಿಕೆ ಕೈಗೆತ್ತಿಕೊಳ್ಳುತ್ತಾರೆ. ಉದಾಹರಣೆಗೆ “ಸಿಂಗಾರಳ್ಳಿ ಗಣಪತಿ” “ಕಾಣೆ” ಕತೆಗಳ ಅಂತ್ಯದಲ್ಲಿ ಪಾತ್ರಗಳ ಕುರಿತ ವ್ಯಾಖ್ಯೆ. ಈ ವಾಚ್ಯತೆ ಅದುವರೆಗಿನ ಕಥನ ಶೈಲಿಯ ನವಿರುಗಾರಿಕೆಯನ್ನು ಮೊಂಡಾಗಿಸಿ ವರದಿಯ ಸ್ವರೂಪ ತಳೆಯುತ್ತದೆ. ಹಾಗೆಯೇ ಕಥನ ಪ್ರಸ್ತುತಪಡಿಸುವಲ್ಲಿ ವಿಭಿನ್ನ ತಂತ್ರಗಳನ್ನು ಅಳವಡಿಸಿಕೊಂಡಲ್ಲಿ ವೈವಿಧ್ಯತೆ ಲಭಿಸುತ್ತದೆ. ಯಶಸ್ವೀ ಕತೆಗಾರ್ತಿಯಾಗಿ ರೂಪುಗೊಂಡಿರುವ ಲೇಖಕಿಯ ಮುಂದಿನ ಪ್ರಯತ್ನಗಳು ಇಂತಹ ಪ್ರಯೋಗಶೀಲತೆಯಿಂದ ಮತ್ತಷ್ಟು ಸಂಪನ್ನಗೊಳ್ಳಲಿ. + +ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_165.txt b/Kenda Sampige/article_165.txt new file mode 100644 index 0000000000000000000000000000000000000000..0f5ff30892fa5e7199c066088ef1d73b16bd741d --- /dev/null +++ b/Kenda Sampige/article_165.txt @@ -0,0 +1,35 @@ +ಮನು ನನ್ನ ವಿದ್ಯಾರ್ಥಿ. ಆತ ನೋಡುವುದಕ್ಕೆ ಅಷ್ಟೇನೂ ಅಬ್ಬರವಲ್ಲ. ಕುಳ್ಳಗೆ ತೆಳ್ಳಗೆ ಸೌಮ್ಯವಾಗಿ ಇರುವ ಈ ಹುಡುಗನ ಒಳಗೊಬ್ಬ ಕಲಾವಿದ ಇದ್ದಾನೆಂದು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಒಂದು ದಿನ ಅವನೊಂದು ಕಥೆ ತಂದು ಮುನ್ನುಡಿ ಬರೆದು ಕೊಡಿ ಎಂದು ಕೇಳುವವರೆಗೆ ಅವನು ಎಲ್ಲರೊಳಗೆ ಒಬ್ಬನಾಗಿದ್ದ. ಕಥೆ ತಂದು ಕೈಗಿತ್ತಾಗ ಮತ್ತೇನು ಬರೆದಿದ್ದೀಯ ಎಂದು ಕೇಳಲು ಕವಿತೆ, ನಾಟಕ ಇತ್ಯಾದಿ ಬರೆದಿರುವುದಾಗಿ ತನ್ನ ಸಾಹಿತ್ಯ ಕೃಷಿಯ ಬಗೆಗೆ ಹೇಳಿಕೊಂಡ. + +ಈ ನೀಳ್ಗತೆಗೆ ಮುನ್ನುಡಿ ಬರೆದು ಕೊಡುವಂತೆ ಬಂದು ನನಗೆ ಕತೆಯ ಪ್ರತಿಯನ್ನು ಕೊಟ್ಟಾಗ, ಒಂದೇ ಕತೆಯನ್ನು ಪುಸ್ತಕ ಮಾಡುವ ಈ ಹುಡುಗನದು ಹುಚ್ಚುತನವೆ ಎಂದುಕೊಂಡೆ. ನನ್ನ ಕೆಲಸ ಕಾರ್ಯಗಳ ಮಧ್ಯೆ ಓದಲು ಕೆಲದಿನ ತೆಗೆದುಕೊಂಡೆ. ಆಗಾಗ ಬಂದು ಮೇಡಂ ಕಥೆ ಓದಿದ್ದೀರಾ ಎಂದು ಕೇಳಿ ನೆನಪಿಸುತ್ತಿದ್ದ. ಕಥೆಯೇನೋ ಓದಿದೆ ಆದರೆ ಬರೆಯುವಲ್ಲಿ ಮತ್ತೆ ವಿಳಂಬವಾಯಿತು. ನನ್ನ ಈ ವಿಳಂಬ ಮನೋಭಾವವನ್ನು ಸಹಿಸಿಕೊಂಡ ಮನು ಅವರ ತಾಳ್ಮೆಗೆ ಮೊದಲು ಒಂದು ಸಲಾಂ ಹೇಳಲೇಬೇಕು. ಬಹುಶಃ ನನಗೆ ಮುನ್ನುಡಿ ಬರೆಯಲು ಕೊಟ್ಟದ್ದು ಬಿಸಿ ತುಪ್ಪದಂತಾಗಿರಬೇಕು. ಆಡಲಾರ ಅನುಭವಿಸಲಾರ ಇದೀಗ ಆ ಕತೆಯೇ ನನ್ನನ್ನು ಕಾಡಿ ಬರೆಯುವುದಕ್ಕೆ ಪ್ರೇರೇಪಿಸಿದೆ. ಆದರೆ ಒಳಗಿನ ಪಾತ್ರಗಳು ಕಣ್ಣ ಮುಂದೆ ಕುಣಿಯತೊಡಗಿದಾಗ ಇನ್ನು ಬರೆಯದೇ ಇರಲಾರೆ ಎನಿಸಿ ಬರೆಯಲು ಕುಳಿತೆ. + +(ಮನು ಗುರುಸ್ವಾಮಿ) + +ಅವಳು ಕತೆಯಾದಳು ಎಂಬುದು ಈ ಕಥೆಯ ಹೆಸರು. ಹೆಸರಿನಿಂದಲೇ ಇದೊಂದು ಸ್ತ್ರೀ ಕೇಂದ್ರಿತ ಕತೆಯೆಂಬುದು ತಿಳಿದುಬಿಡುತ್ತದೆ. ಅಂತೆಯೇ ಇಲ್ಲಿ ಒಬ್ಬ ಹುಡುಗಿಯ ಕತೆಯಿದೆ. ಬಹುಶಃ ಯಶವಂತ ಚಿತ್ತಾಲರ ಕತೆಯಾದಳು ಹುಡುಗಿ ಎಂಬ ಹೆಸರೂ ನೆನಪಿಗೆ ಬರುತ್ತದೆ. ಆದರೆ ಇಲ್ಲಿಯ ಕತೆಯೇ ಬೇರೆ. ಮನುವಿನ ಈ ವಯಸ್ಸು ಪ್ರೇಮಕತೆಗಳನ್ನು ಬರೆಯುವಂಥದ್ದು. ಹಾಗಾಗಿ ಯಾವುದೋ ಪ್ರೇಮಕಥೆಯೇ ಇರಬಹುದು ಎಂದುಕೊಂಡರೆ ಅದು ಸುಳ್ಳು ಎಂಬುದು ಕತೆ ಓದುತ್ತಾ ಹೋದಂತೆ ಗಮನಕ್ಕೆ ಬರುತ್ತದೆ. + +ಲೇಖಕ ‘ಮನು’ ಕತೆಯ ಆರಂಭದಲ್ಲಿಯೇ ಕತೆಯ ಕುರಿತು ಆಡಿರುವ ‘ಮನದ ಮಾತು’ ಈ ಕತೆಯ ಉದ್ದೇಶವನ್ನು ತೆರೆದಿಟ್ಟಿದೆ. ಸ್ತ್ರೀಯರ ಸ್ವಾತಂತ್ರ್ಯದ ಕುರಿತೇ ಇಲ್ಲಿ ಮಾತನಾಡಿರುವ ಲೇಖಕ, ಯಾಕೆ ಸ್ತ್ರೀಯರಿಗಿನ್ನೂ ಸ್ವಾತಂತ್ರ್ಯ ದಕ್ಕಿಲ್ಲ ಎಂಬ ಪ್ರಶ್ನೆ ಕಾಡಿ ಅದಕ್ಕೆ ಉತ್ತರ ಹುಡುಕುವಾಗ ಕಂಡ ಸಂಗತಿಗಳನ್ನು ಇಲ್ಲಿ ಕತೆಯಾಗಿಸಿದ್ದಾರೆ. “ದೇಹಕ್ಕಾಗಿ ಮೋಹಿಸುವ ಹವ್ಯಾಸವನ್ನೇ ಯುವಜನತೆ ಪ್ರೀತಿಯೆಂದು ಭಾವಿಸಿರುವುದು ವಿಷಾದನೀಯ” ಎಂಬ ಅವರ ಮಾತು ಮನು ಮನಸ್ಸು ಎಷ್ಟು ಸೂಕ್ಷ್ಮಗ್ರಾಹಿ ಎಂಬುದನ್ನು ಸೂಚಿಸುತ್ತದೆ. ಒಬ್ಬ ಗ್ರಾಮೀಣ ಹುಡುಗಿ ತನ್ನ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುವ ಕತೆಯನ್ನು ಓದುಗರ ಮುಂದೆ ತೆರೆದಿಟ್ಟಿರುವುದಾಗಿ ಹೇಳುತ್ತಾರೆ ಮನು. ಇಂದಿಗೂ ಗ್ರಾಮೀಣ ಭಾಗದ ಮಕ್ಕಳು ಉನ್ನತ ಶಿಕ್ಷಣ ಪಡೆಯುವಲ್ಲಿ ಇನ್ನೂ ಎಷ್ಟು ಅಡೆತಡೆಗಳನ್ನು ದಾಟಬೇಕಾಗಿದೆ. ಅದರಲ್ಲೂ ಹಳ್ಳಿಗಳಲ್ಲಿ ಇದು ಇನ್ನೂ ಕಷ್ಟದ ಕೆಲಸ ಎಂಬುದು ನಮಗೆಲ್ಲ ತಿಳಿದ ವಿಷಯ. ಹುಡುಗಿಗೆ ಹದಿನೆಂಟು ತುಂಬುವುದನ್ನೇ ಕಾಯುವ ತಂದೆ ತಾಯಿಗಳು ಮಗಳಿಗೆ ಮದುವೆ ಮಾಡಿ ಅವಳನ್ನೊಂದು ದಡಕ್ಕೆ ಸೇರಿಸಿಬಿಟ್ಟರೆ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಭಾವಿಸುವುದೇ ಹೆಚ್ಚು. ಪ್ರೀತಿ ಪ್ರೇಮ ಎಂಬ ಹುಚ್ಚಿನಲ್ಲಿ ಮಕ್ಕಳು ಮನೆತನದ ಮರ್ಯಾದೆಗೆ ದಕ್ಕೆ ತಂದಾರೊ ಎಂಬ ಆತಂಕ ಮಕ್ಕಳು ಹೊರಗೆ ಕಾಲಿಟ್ಟಾಗ ಏನಾದರೂ ಅವಘಡ ಸಂಭವಿಸುತ್ತದೆಯೋ ಎಂಬ ಭಯ ತಂದೆ ತಾಯಿಯರನ್ನು ಕಾಡುತ್ತಿರುತ್ತದೆ. ಇದೇ ಅಂಶವನ್ನು ಬಹಳ ನಾಜೂಕಾಗಿ ಹೆಣಿದಿರುವುದೇ ಈ ಕತೆಯ ವಿಶೇಷ. ಇದಿಷ್ಟೇ ಅಲ್ಲ ದೇವಿಕ ಎಂಬ ಹುಡುಗಿಯ ಬದುಕು ಕಥೆಯಾಗುವ ಮಟ್ಟಿಗೆ ಆಕೆಯ ಜೀವನದಲ್ಲಿ ನಡೆಯುವ ಘಟನೆಗಳಿವೆಯಲ್ಲ ಅವು ಅನಿರೀಕ್ಷಿತವಾದವು. ಒಂದು ಸಣ್ಣಕತೆಯ ವೈಶಿಷ್ಟ್ಯವೇ ಅದು. ಅನಿರೀಕ್ಷಿತ ತಿರುವಿನಲ್ಲಿ ಕತೆ ಸಮಾಪ್ತಿಗೊಳ್ಳುವುದು. ಕತೆ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಸಂಬಂಧಗಳ ಸಂಕೀರ್ಣ ಜಾಲವನ್ನು ನಿಭಾಯಿಸುವ ರೀತಿ ಈ ಕತೆಯಲ್ಲಿ ಸಹಜವಾಗಿ ಮೂಡಿಬಂದಿದೆ. + +ಚಿಕ್ಕಚೊಕ್ಕದಾದ ಎರಡು ಕುಟುಂಬಗಳ ಚಿತ್ರಣದೊಂದಿಗೆ ಕತೆ ಬಿಚ್ಚಿಕೊಳ್ಳುತ್ತದೆ. ಅಣ್ಣ ತಂಗಿಯರು ಒಂದೇ ಊರಿನಲ್ಲಿ ವಾಸಿಸುತ್ತಿದ್ದಾರೆ. ತಂಗಿಯ ಗಂಡ ತೀರಿಹೋಗಿದ್ದಾನೆ. ಅವಳ ಒಬ್ಬನೇ ಮಗ ಬೆಳೆದು ನಿಂತಿದ್ದಾನೆ. ತಂದೆ ತಾಯಿ ಇಲ್ಲದ ಕಾರಣ ಓದನ್ನು ಮೊಟಕುಗೊಳಿಸಿ ಉದ್ಯೋಗಕ್ಕೆ ಸೇರಿರುವ ಆತ ತಾಯಿಯ ಮಾತು ಮೀರದವನು. ತಾಯಿಗೆ ಮಗನ ಮೇಲೆ ಸಹಜವಾಗಿ ಅತಿಶಯ ಪ್ರೀತಿ ಇದೆ. + +ಅಣ್ಣ ಬಸವಗೌಡನ ಮನೆಯಲ್ಲಿ ಅವನ ಹೆಂಡತಿ ಮತ್ತು ಇಬ್ಬರು ಹೆಣ್ಣು ಮಕ್ಕಳು. ತಂದೆ ತಾಯಿ ಇಬ್ಬರಿಗೂ ತಮ್ಮ ಮಕ್ಕಳ ಮೇಲೆ ಅಪಾರ ಪ್ರೀತಿಯಿದೆ. ಮಕ್ಕಳು ಕೂಡ ತಮ್ಮ ತಂದೆ ತಾಯಿಯ ಮಾತಿನೊಳಗೆ ಕಣ್ಣಂಜಿಕೆಯಲ್ಲಿದ್ದರೂ ಪ್ರೀತಿಗೇನೂ ಕೊರತೆ ಇಲ್ಲ. ಇಬ್ಬರೂ ಶಾಲೆಗೆ ಹೋಗುವವರು. ಹಿರಿಯ ಮಗಳು ದೇವಿಕಳನ್ನು ತನ್ನ ತಂಗಿಯ ಮಗನಿಗೆ ಕೊಟ್ಟು ಮದುವೆ ಮಾಡಬೇಕೆಂಬ ಆಸೆ ಬಸವೇಗೌಡನಿಗೆ. ಆದರೆ ತಾನು ಚೆನ್ನಾಗಿ ಓದಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕು, ಏನಾದರೂ ಸಾಧಿಸಬೇಕೆಂಬ ಹಠ ದೇವಿಕಳದು. ಅವಳಿಗೆ ತಾಯಿಯ ಬೆಂಬಲವೂ ಇದೆ. ಇತ್ತ ಸೋದರತ್ತೆಗೆ ದೇವಿಕಳನ್ನು ತನ್ನ ಮಗನಿಗೆ ತಂದುಕೊಳ್ಳುವ ಇಚ್ಛೆಯಿದೆಯಾದರೂ ತನ್ನ ಅತ್ತಿಗೆಗೆ ಅದು ಇಷ್ಟವಿಲ್ಲ ಎಂಬ ಮನದಾಳದ ಮಾತು ಅರಿವಿರುವುದರಿಂದ ಏನನ್ನೂ ಮಾತನಾಡಲಾಗದೆ ಮನದ ಉಮ್ಮಾಳದಲ್ಲಿದ್ದಾಳೆ. ಆಕೆಯ ಮಗನಿಗೂ ದೇವಿಕಳನ್ನು ಮದುವೆಯಾಗಬೇಕೆಂಬ ಹಂಬಲವಿದ್ದರೂ ಅದನ್ನು ಮಾತನಾಡಲು ಅವಕಾಶಕ್ಕಾಗಿ ಕಾಯುತ್ತಿದ್ದಾನೆ. ಇದ್ಯಾವುದರ ಪರಿವೆಯೂ ಇಲ್ಲದ ದೇವಿಕಳ ತಂಗಿ ಆರಾಮಾಗಿದ್ದಾಳೆ. + +ಈ ಕಣ್ಣಮುಚ್ಚಾಲೆಯಾಟದಲ್ಲಿ ದೇವಿಕ ಮತ್ತು ಅವಳ ತಾಯಿ ಗೆಲುವು ಪಡೆಯುತ್ತಾರೆ. ದೇವಿಕ ಮುಂದೆ ಓದುವುದಕ್ಕೆ ತಂದೆ ಬಸವಗೌಡನ ಅನುಮತಿ ಸಿಗುತ್ತದೆ. ಕಾಲೇಜು ಸೇರಿದ ದೇವಿಕ ಓದು ಬರಹದಲ್ಲಿ ತಲ್ಲೀನಳಾದರೂ ಅವಳದೇ ಮನಸ್ಥಿತಿಯ ರಾಜಶೇಖರನೆಂಬ ಯುವಕನೊಂದಿಗೆ ಸ್ನೇಹ ಬೆಳೆದು ಅದು ಪ್ರೀತಿಗೆ ತಿರುಗುತ್ತದೆ. ಆದರೆ ದೇವಿಕ ಸಂದಿಗ್ಧತೆಯಲ್ಲಿದ್ದಾಳೆ. ಅವಳಿಗೆ ತನ್ನ ಪ್ರೀತಿಗಿಂತ ಜವಾಬ್ದಾರಿ ದೊಡ್ಡದೆನಿಸುತ್ತದೆ. ಪ್ರೀತಿಯನ್ನು ನಯವಾಗಿ ನಿರಾಕರಿಸುತ್ತಾಳೆ. ಪದವಿ ಮುಗಿದೊಡನೆ ತಂದೆ ಅವಳ ಮದುವೆಗೆ ಅವಸರಿಸುತ್ತಾನೆ. ಅಂತೆಯೇ ಲಾಯರ್ ವರನಿಗೆ ಕೊಟ್ಟು ಮಗಳ ಮದುವೆ ಮಾಡಿ ನಿರಾಳವಾಗುತ್ತಾನೆ. ಅವಳ ಬದುಕು ಸುಖವಾಗಿ ಸಾಗಿದೆ. ವರ್ಷ ತುಂಬುವುದರಲ್ಲಿ ಮಗು ಮಡಿಲು ತುಂಬಿದೆ. ಒಳ್ಳೆಯ ಮನೆತನದ ಯಾವುದಕ್ಕೂ ಕೊರತೆಯಿಲ್ಲದ ಜೀವನ. ಈ ಮಧ್ಯೆ ಪತಿಗೆ ಅನಾರೋಗ್ಯ ಕಾಡುತ್ತದೆ. ಅದನ್ನು ತೋರಗೊಡವುದಿಲ್ಲ. ಆದರೆ ದೇವಿಕಳ ಮುಂದಿನ ಭವಿಷ್ಯವೇನು ಎಂಬ ಚಿಂತೆ ಆವರಿಸಿ ಆತ ಅವಳ ಮನದಾಳ ತಿಳಿಯುತ್ತಾನೆ. ಆಕೆಗೆ ಐಎಎಸ್ ಮಾಡುವ ಅಪೇಕ್ಷೆ ಇದ್ದುದ್ದನ್ನು ತಿಳಿದ ಆತ ಅವಳ ಗುರಿ ಸೇರಿಸಲು ನಿರ್ಧರಿಸುತ್ತಾನೆ. ಆಕೆಯ ಓದಿನ ಹಂಬಲ ಅರಿತ ಪತಿ ಅವಳಿಚ್ಛೆಯಂತೆ ಐಎಎಸ್ ಗೆ ಸಿದ್ಧತೆ ಮಾಡಿಕೊಳ್ಳಲು ಎಲ್ಲ ರೀತಿಯ ಸಹಕಾರ ನೀಡುತ್ತಾನೆ. ಪತಿಯ ಈ ಬಗೆಯ ಬದಲಾವಣೆಯ ಹಿಂದಿರುವ ಕಾರಣವನ್ನರಿಯದೆ ದೇವಿಕ ತನ್ನ ಓದಿನಲ್ಲಿ ಮಗ್ನಳಾಗಿ ಹಿಡಿದ ಛಲ ಸಾಧಿಸಿದಳು. ಅಷ್ಟರಾಗಲೇ ಅವಳ ಕಾಲೇಜು ಜೀವನದ ಗುಟ್ಟು ಪತಿಗೆ ತಿಳಿದಾಗ ಆತನಿಗೆ ಸಮಾಧಾನವಾಗುತ್ತದೆ. ರಾಜಶೇಖರನೊಂದಿಗೆ ಅವಳನ್ನು ಸೇರಿಸಬೇಕೆಂದು ಯೋಚಿಸುವಷ್ಟರಲ್ಲಿ ಆತ ತೀರಿಹೋದ ಸುದ್ದಿ ತಿಳಿದು ಆಘಾತಕ್ಕೊಳಗಾಗುತ್ತಾನೆ. + +ಅಂದು ಜಡಿಮಳೆ ಸುರಿಯುವ ಹೊತ್ತು. ದೇವಿಕಳ ಅತ್ತೆ ಹುಷಾರಿಲ್ಲದೆ ಮಲಗಿರುವುದರಿಂದ ಡಾಕ್ಟರನ್ನು ಕರೆತರಲು ಹೊರಟ ಪತಿರಾಯ. ಮನೆಯಲ್ಲಿ ಅತ್ತೆ ಆರೈಕೆ ಮಾಡುತ್ತಿರುವ ದೇವಿಕ ಅಡುಗೆ ಮನೆಯ ಒಳಗಿದ್ದಾಳೆ. ಒಂದೆಡೆ ಕಾಲಿಂಗ್ ಬೆಲ್ ಮೊಳಗಿದರೆ ಇನ್ನೊಂದೆಡೆ ಪೋನ್ ರಿಂಗಣಿಸಿದೆ. ಈ ಎರಡನ್ನೂ ದೇವಿಕ ಅಟೆಂಡ್ ಮಾಡಬೇಕು. ಮೊದಲು ಬಾಗಿಲು ತೆರೆದು ಪೋಸ್ಟ್ ಮ್ಯಾನ್‌ನಿಂದ ಕವರ್ ಪಡೆದಿದ್ದಾಳೆ. ಅದು ಅವಳ ಐಎಎಸ್ ಅಧಿಕಾರಿಯಾಗಿ ನೇಮಕವಾದ ಆದೇಶಪತ್ರ. ಇತ್ತ ಫೋನಿನಲ್ಲಿ ತನ್ನ ಪತಿ ತೀರಿಹೋದ ಸುದ್ದಿ; ಈ ಎರಡೂ ಏಕಕಾಲಕ್ಕೆ ಅಪ್ಪಳಿಸಿದ ಹೊತ್ತು ಕತೆ ಮುಗಿದಿದೆ. + +ಇದು ಒಂದು ಹೆಣ್ಣಿನ ಸಾಹಸಗಾಥೆಯನ್ನು ಚಿತ್ರಿಸುತ್ತದೆ. ಭಾರತದ ಗ್ರಾಮೀಣ ಪ್ರದೇಶದ ಅನೇಕ ಹೆಣ್ಣುಮಕ್ಕಳ ಜೀವನವನ್ನು ಪ್ರತಿನಿಧಿಸುವ ಕತೆಯಿದು. ಬಹುಶಃ ಒಬ್ಬೊಬ್ಬರ ಬದುಕಿನಲ್ಲಿ ಒಂದೊಂದು ಬಗೆಯ ವಿಧಿಯಾಟ. ಹೆಣ್ಣುಮಕ್ಕಳಿಗೆ ಓದು, ವಿದ್ಯೆ, ಉದ್ಯೋಗದ ಅವಕಾಶಗಳು ಎಷ್ಟು ಮಹತ್ವದ್ದು ಎನ್ನುವುದನ್ನು ಬಹಳ ನವಿರಾಗಿ ಈ ಕತೆ ನಿರೂಪಿಸುತ್ತದೆ. + +ಕತೆಯ ಗತಿ ನಿಧಾನವಾಗಿದೆ. ಒಂದೊಂದೇ ಸಂಗತಿಗಳು ತೆರೆದುಕೊಳ್ಳುತ್ತ ಹೋಗುತ್ತವೆ. ಕತೆ ಕೇವಲ ವರದಿಯಾಗದೆ ಕಲಾತ್ಮಕ ರೂಪ ಪಡೆಯುವಲ್ಲಿ ಯಶಸ್ವಿಯಾಗಿದೆ. ಒಂದೊಂದು ಸಂದರ್ಭದಲ್ಲೂ ಒಂದೊಂದು ರೂಪಕ ಆ ಹೊತ್ತಿನ ಮುನ್ಸೂಚನೆಯನ್ನು ಕೊಡುವಂತಿರುವುದು ಅದರ ಗಟ್ಟಿತನಕ್ಕೆ ಸಾಕ್ಷಿಯಾಗಿದೆ. ಕತೆ ಆರಂಭವಾಗುವುದು ಅದು ಪುಟ್ಟಕ್ಕನ ಹಟ್ಟಿ ಎಂಬುವುದರಿಂದ. ಬಸವೇಗೌಡನ ಪತ್ನಿ ದೇವಿಕಳ ತಾಯಿ ಪುಟ್ಟಕ್ಕ. ಇಲ್ಲಿ ಆ ಮನೆ ಪುಟ್ಟಕ್ಕನದು. ಬಸವೇಗೌಡ ಮತ್ತು ಪುಟ್ಟಕ್ಕನ ನಡುವೆ ಮಗಳ ಭವಿಷ್ಯ ಕುರಿತಂತೆ ನಡೆಯುವ ವಾಗ್ವಾದ, ಅದರಲ್ಲಿ ಪುಟ್ಟಕ್ಕನ ಗೆಲುವು ಕಾಣುತ್ತದೆ. ಇತ್ತ ಪ್ರೀತಿ, ತ್ಯಾಗ ಮುಂತಾದ ಸಂಗತಿಗಳು ಸಂದರ್ಭಕ್ಕನುಗುಣವಾಗಿ ಬರುತ್ತವೆ. ಬಸವೇಗೌಡನ ತಂಗಿ ತಾಯವ್ವನ ಮಗ ಅರುಣ ದೇವಿಕಳನ್ನು ಮದುವೆಯಾಗ ಬಯಸುವ ಗುಪ್ತಪ್ರೇಮಿ. ಆದರೆ ಆತ ದೇವಿಕಳ ಮನದ ಆಸೆ ತಿಳಿದು ತನ್ನ ಪ್ರೀತಿಯನ್ನು ತ್ಯಾಗ ಮಾಡುತ್ತಾನೆ. ತಾನು ಇನ್ಯಾರನ್ನೊ ಮೆಚ್ಚಿರುವುದಾಗಿ ಸುಳ್ಳು ಹೇಳಿ ಬಸವೇಗೌಡನನ್ನು ನಂಬಿಸುತ್ತಾನೆ. + +ದೇವಿಕಳೇನೂ ಭಾವನೆಗಳಿಲ್ಲದ ಕೊರಡಲ್ಲ. ಕಾಲೇಜಿನಲ್ಲಿ ತನ್ನ ಮನೋಧರ್ಮವನ್ನು ಹೋಲುವ ರಾಜಶೇಖರನಲ್ಲಿ ಒಲವು ಮೂಡುತ್ತದೆ. ಇಬ್ಬರಲ್ಲೂ ಪ್ರೇಮವಂಕುರಿಸಿದರೂ ತನ್ನ ತಂದೆಯ ಅನುಮಾನ ನಿಜವಾಗಬಾರದು ಎಂಬ ಕಾರಣಕ್ಕೆ ಪ್ರೇಮ ನಿರಾಕರಿಸುವ ದೇವಿಕಳ ಅಸಹಾಯಕ ಸ್ಥಿತಿ ಮನಕರಗಿಸುತ್ತದೆ. ರಾಜಶೇಖರನ ತ್ಯಾಗ ಇಲ್ಲಿ ಎದ್ದು ಕಾಣುತ್ತದೆ. ತಂದೆಗೆ ಕೊಟ್ಟ ಮಾತಿನಂತೆ ತಾನಾಯಿತು ತನ್ನ ಓದಾಯ್ತು ಎಂದು ಬದುಕುವ ಬದ್ಧತೆ ದೇವಿಕಳದು. + +ಈ ಎಲ್ಲವನ್ನೂ ಮೀರಿದ ವಿಧಿಲಿಖಿತವೆಂಬುದೊಂದಿದೆಯಲ್ಲ…. ಅದು ದೇವಿಕಳ ಬಾಳಿನಲ್ಲಿ ಆಟವಾಡಿದ ಪರಿಗೆ ಅವಳ ಬದುಕು ಛಿದ್ರವಾಗಬೇಕು. ಆದರೆ ಅಷ್ಟರಲ್ಲಿ ಈ ವಿಧಿಲಿಖಿತ ಮುನ್ಸೂಚನೆ ಪಡೆದ ಆಕೆಯ ಪತಿ ಅದಕ್ಕೊಂದು ಸರಿಯಾದ ದಾರಿ ಹುಡುಕಿ ದೇವಿಕಳ ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾದರೂ ಆತ ಮಾತ್ರ ವಿಧಿವಶನಾಗುತ್ತಾನೆ. ಹೀಗೆ ಕತೆ ಮುಕ್ತಾಯಗೊಳ್ಳುತ್ತದೆ. ಒಂದು ಕೈಯಲ್ಲಿ ಉಜ್ವಲ ಭವಿಷ್ಯವಿದೆ ಇನ್ನೊಂದು ಕೈಯಲ್ಲಿ ಬದುಕು ಮುರುಟಿಹೋದ ವಿಚಾರವಿದೆ. ಇವೆರಡರ ಮಧ್ಯದಲ್ಲಿ ದೇವಿಕ ದಿಕ್ಕುತೋಚದೆ ನಿಂತಿದ್ದಾಳೆ. ಸಂಭ್ರಮ ಮತ್ತು ಸಂಕಟಗಳೆರಡೂ ಒಟ್ಟಿಗೆ ಅಪ್ಪಳಿಸಿದ ಸ್ಥಿತಿಯಿದು. + +(ಡಾ. ವಿಜಯಕುಮಾರಿ ಎಸ್ ಕರಿಕಲ್) + +ಈ ಕತೆಯು ಸರ್ವಸಾಕ್ಷಿ ಪ್ರಜ್ಞೆಯಲ್ಲಿ ನಿರೂಪಣೆಗೊಂಡಿದೆ. ಕತೆಗಾರ ಕತೆಯ ಹೊರಗೆ ನಿಂತು ಘಟನೆಗಳನ್ನು ನಿರೂಪಿಸುತ್ತಾನೆ. ಈ ಕತೆಗೆ ಒಂದು ನಿರ್ದಿಷ್ಟ ಉದ್ದೇಶವಿರುವುದು ಸ್ಪಷ್ಟ. ಆ ಉದ್ದೇಶ ಈಡೇರಿಕೆಗಾಗಿ ಘಟನೆಗಳು ದುಡಿಯುತ್ತವೆ. ಇಲ್ಲಿಯ ಪಾತ್ರಗಳು ಕತೆಗಾರನ ಉದ್ದೇಶಕ್ಕೆ ತಕ್ಕಂತೆ ಬೆಳೆಯುತ್ತವೆ. ಹಾಗೆಂದು ಕತೆಗಾರನ ಉದ್ದೇಶ ಅಲ್ಪತನದಲ್ಲ. ಸ್ತ್ರೀಪರವಾದ ಕಾಳಜಿ ಪುರುಷಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣು ತನ್ನ ಆಸೆ ಆಕಾಂಕ್ಷೆಗಳನ್ನು ಬಲಿ ಕೊಡಬೇಕಾದ ಪ್ರಸಂಗ, ಇಂತವುಗಳ ಸೂಕ್ಷ್ಮ ನಿರೂಪಣೆ ಇಂತವುಗಳ ಸೂಕ್ಷ್ಮ ನಿರೂಪಣೆಯಿರುವುದನ್ನು ಇಲ್ಲಿ ಕಾಣಬಹುದು. + +ಕತೆಯ ಮುಖ್ಯ ಗುಣವೆಂದರೆ ಕತೆಯ ಘಟನೆಗಳಿಗೆ ಸಮಾನಾಂತರವಾಗಿ ಬರುವ ಕೆಲವು ಸಂಗತಿಗಳು. ಬೆಣ್ಣೆಗಾಗಿ ಕಾಯುವ ಬೆಕ್ಕು, ಬಲಿಯನ್ನು ಹಿಡಿಯಲು ಯತ್ನಿಸುವ ಹಲ್ಲಿ, ಇತ್ತ ಕತೆಯ ಪಾತ್ರವಾದ ಪುಟ್ಟಕ್ಕ ಸಿಟ್ಟಿನ ರಭಸದಲ್ಲಿ ಎದ್ದಾಗ ಆ ಎರಡೂ ತಮ್ಮ ಗುರಿ ಮರೆತು ಓಟ ಕೀಳುವ ಚಿತ್ರಣ, ಬಸವೇಗೌಡ ಹಾಗೂ ತಾಯವ್ವನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ. ಹೀಗೆ ವಸ್ತುಪ್ರತಿರೂಪವನ್ನು ಈ ಕತೆ ತುಂಬ ಚೆನ್ನಾಗಿ ಒಳಗೊಂಡಿರುವುದು ಕತೆಯ ಓಟ ಅನಿರೀಕ್ಷಿತ ಅಂತ್ಯ, ದ್ವಂದ್ವಗಳಲ್ಲಿ ಸಿಲುಕಿದ ಮನಸ್ಥಿತಿ ಇದೆಲ್ಲವೂ ಈ ನೀಳ್ಗತೆಯ ಜೀವಾಳವಾಗಿದೆ. + +ಒಟ್ಟಾರೆ ಮನು ಅವರ ಈ ಕತೆ ಭರವಸೆ ಹುಟ್ಟಿಸುತ್ತದೆ. ಮುಂದಿನ ದಿನಗಳಲ್ಲಿ ಒಬ್ಬ ಉತ್ತಮ ಕಥೆಗಾರನಾಗುವ ಲಕ್ಷಣಗಳು ಈ ಕತೆಯಲ್ಲಿ ಕಾಣಿಸುತ್ತಿದೆ. ಮನು ಈ ಕೃತಿಯ ಮೂಲಕ ಕನ್ನಡ ಕಥಾಲೋಕ ಪ್ರವೇಶಿಸುತ್ತಿದ್ದಾರೆ. ಅವರನ್ನು ಕನ್ನಡ ಓದುಗಲೋಕ ಹಾರ್ದಿಕವಾಗಿ ಬರಮಾಡಿಕೊಳ್ಳಲೆಂದು ಹಾರೈಸುತ್ತೇನೆ. ಉತ್ತಮ ಕತೆಗಳು ಮನು ಅವರಿಂದ ಮೂಡಿಬರಲಿವೆ ಎಂಬ ಆಶಾಭಾವನೆಯಲ್ಲಿ ಅವರ ಉತ್ತರೋತ್ತರ ಬೆಳವಣಿಗೆಗೆ ಹಾರೈಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_166.txt b/Kenda Sampige/article_166.txt new file mode 100644 index 0000000000000000000000000000000000000000..38305f734efc0557af6872f851b266ee4b04ab37 --- /dev/null +++ b/Kenda Sampige/article_166.txt @@ -0,0 +1,35 @@ +ಬರವಣಿಗೆ ಅನ್ನುವುದು ಒಂದು ವಿಸ್ಮಯ. ಕೈ ಕುದುರುವರೆಗೂ ಮೊದ ಮೊದಲು ಬೇರೆಯವರಿಗಾಗಿ, ಹೆಸರಿಗಾಗಿ ಬರೆಯುತ್ತೇವೆ. ಒಮ್ಮೆ ಈ ಹಂತವನ್ನು ಮೀರಿದ ಮೇಲೆ ನಮ್ಮನ್ನು ನಾವು ಸಂತೈಸಿಕೊಳ್ಳುವ ಸಲುವಾಗಿ, ಲೋಕದ ಒಲವು ಚೆಲುವು, ದುಃಖ ದುಮ್ಮಾನಗಳಿಗೆ ದನಿಯಾಗಬಯಸುವ ಸಲುವಾಗಿ ಬರೆಯುತ್ತೇವೆ. ಹೀಗೆ ಒಮ್ಮೆ ಬರೆಯುವ ಬದುಕಿನ ಲಯಕ್ಕೆ ಬಿದ್ದ ಮೇಲೆ ಬರಬರುತ್ತಾ ಬರವಣಿಗೆ ಎಂಬುದು ಒಂದು ಕಲಾತ್ಮಕ ಅಭಿವ್ಯಕ್ತಿಯಾಗಿಬಿಡುತ್ತದೆ. ಹಂಗಾಗಿ ಅದನ್ನು ಕಲಾತ್ಮಕವಾಗಿ ಕಟ್ಟಬೇಕು ಅನ್ನುವ ಅರಿವಿಗೆ ಒಳಗಾಗುತ್ತೇವೆ. ಏಕೆಂದರೆ ನಾವು ಕಟ್ಟಿ ಕೊಡುವ ಕಥೆ ಓದುಗನೊಳಗೆ ಒಂದು ಚಿತ್ರವಾಗಿ,ಆ ಚಿತ್ರ ಓದುಗ ಸ್ಮೃತಿಯನ್ನು ತಾಕುತ್ತಾ ಬೆಳೆಯುತ್ತಾ ಹೋಗುವಂತಿರಬೇಕು. ಹೀಗೆ ನಿಜವಾದ ಕಥೆಯೊಂದು ಕಾಲಾತೀತವಾಗುತ್ತದೆ. + +(ಮಂಜಯ್ಯ ದೇವರಮನಿ) + +ಲೋಕದ ಸಂಕಟಗಳಿಗೆ ಮುಖಾಮುಖಿಯಾಗುವ ಲೇಖಕನಿಗೆ ಬಹುಮುಖ್ಯವಾಗಿ ಸಾಮಾಜಿಕ ಜವಾಬ್ದಾರಿ ಅನ್ನುವುದು ಇರಬೇಕಾಗುತ್ತದೆ. ಯಾಕೆಂದರೆ ಅದು ಅವನು ತಾನು ಬದುಕುತ್ತಿರುವ ಲೋಕಕ್ಕೆ ತೀರಿಸಬಹುದಾದ ಋಣ ಕೂಡಾ ಆಗಿರುತ್ತದೆ. ಇಲ್ಲಿನ ಅಸಮಾನತೆ,ಅಸ್ಪೃಶ್ಯತೆ, ಹೆಣ್ಣಿನ ಶೋಷಣೆ,ಜಾತಿ ಧರ್ಮಗಳ ಕೇಡುಗಳು ಕಾಡದೇ ಹೋದರೆ,ಅಂದರೆ ಲೋಕದ ನೋವಿಗೆ ತುಡಿಯಲಾರದ, ಸಮಕಾಲೀನ ಸಮಸ್ಯೆಗಳಿಗೆ ಕಿವಿಕೊಡಲಾಗದ ಲೇಖಕನೊಬ್ಬನ ಬರವಣಿಗೆ ಅಪ್ರಮಾಣೀಕವಾಗಿರುವುದಷ್ಟೇ ಅಲ್ಲ, ಆತ್ಮವಂಚಕವೂ ಆಗಿರುತ್ತದೆ. ಜೀವಪರ ತುಡಿತ ನಿಜವಾದ ಲೇಖಕನೊಬ್ಬನ ನಿಜ ಕಾಳಜಿಯಾಗಿರುತ್ತದೆ. + +ಅಂತೆಯೇ ಬಾಲ್ಯವಿಲ್ಲದವನು ಲೇಖಕನಾಗಲಾರ. ಆದರೂ ತುಂಬಾ ನೀರಸ ಚಿತ್ರವನ್ನು ಮಾತ್ರ ಕಟ್ಟಿ ಕೊಡಬಲ್ಲ. ಲೋಕದ ಯಾವುದೇ ದೊಡ್ಡ ಲೇಖಕನ ಬಾಲ್ಯವನ್ನು ನೋಡಿದಾಗ ಈ ಮಾತು ಅರಿವಿಗೆ ಬರುತ್ತದೆ. ಹಂಗಂತ ಕೇವಲ ನೆನಪಿಗೇ ಜೋತು ಬೀಳಲಾಗದು. ಆ ನೆನಪುಗಳನ್ನು ವರ್ತಮಾನದ ಕನ್ನಡಿಯಲ್ಲಿ ನೋಡುತ್ತಾ, ಸಮಕಾಲೀನ ಸಮಸ್ಯೆಗಳೊಂದಿಗೆ ಬೆಸೆಯಬೇಕಾಗುತ್ತದೆ. ಅದು ಓದುಗನೊಳಗೊಂದು ಮಾನವೀಯ ಲೋಕವೊಂದು ಅನುರಣಿಸುತ್ತಾ ಹೋಗುತ್ತದೆ. + +ಇಲ್ಲಿನ ಈ ಸಂಕಲನದಲ್ಲಿ ಮಂಜಯ್ಯದೇವರಮನಿಯವರು ಹೀಗೆ ತಾನು ಹುಟ್ಟಿ ಬೆಳೆದ ಹಾಗೂ ತನ್ನೊಳಗೆ ಈಗಲೂ ಬೆಚ್ಚಗೆ ಕೂತಿರುವ ಸ್ನೃತಿಗಳನ್ನು ವಾಸ್ತವದ ಸತ್ಯಗಳೊಂದಿಗೆ ಒರೆ ಹಚ್ಚುತ್ತಾ ಓದುಗನನ್ನು ತಮಾಮ್‌ ತನ್ನ ಹಳ್ಳಿಯ ಬದುಕಿಗೆ ಕರೆದೊಯ್ದು, ಅಲ್ಲಿನ ನೋವು ನಲಿವು, ಕೆರೆ ತೊರೆ, ಬಾವಿ ಬಂಕಗಳನ್ನು ಇಣುಕಾಕುವಂತೆ ಮಾಡಿದ್ದಾರೆ. ಅಂತೆಯೇ ಅಲ್ಲಿನ ಮುಗ್ಧತೆ, ಗೌಡಿಕೆ, ಕಾಮ,ಪ್ರೇಮ,ಸಣ್ಣತನ, ಉದಾರತೆ,ಕ್ರೌರ್ಯಗಳನ್ನುಹಾಗೂ ಒಕ್ಕಲುತನವನ್ನು ಕಣ್ಣಿಗೆ ಕಟ್ಟುವಂತೆ ತೋರಾಕುತ್ತಾರೆ. ಹಂಗಾಗಿ ಇಡೀ ಸಂಕಲನದ ಕಥೆಗಳು ಆತ್ಮಕಥೆಯ ಆತ್ಮದಿಂದ ನಡೆದು ಬಂದಿರುವ ತುಣುಕುಗಳಂತೆ ಭಾಸವಾಗುತ್ತವೆ. + +ಇಡೀ ಕಥೆಗಳ ಅಂತರಾಳದಲ್ಲಿ ವಿಷಾದದ ದನಿಯೊಂದು ಲಘು ಹಾಸ್ಯದ ಲೇಪನದೊಂದಿಗೆ ಅನಾವರಣಗೊಂಡಿದೆ. ಯಾವುದೇ ʻಇಸಂʼನಿಂದ ಮುಕ್ತಗೊಂಡಂತೆ ಕಾಣುವ ಇಲ್ಲಿನ ಲೋಕದಲ್ಲಿ ಮನಕುಲದ ಒಳಿತು ಹಾಗೂ ಜೀವಪರ ತುಡಿತವೇ ಮೇಲುಗೈಯ್ಯಾಗಿದೆ. ಈ ಸಂಕಲನದ ಬಹು ಮುಖ್ಯ ಸಂಗತಿ ಅಂದರೆ, ಇದುಅಪ್ಪಟ ಪ್ರಾದೇಶಿಕ ಸೊಗಡಿನಿಂದ ಲಕಲಕಿಸುತ್ತದೆ. ಅಂತೆಯೇ ಯಾವುದೇ ಮಡಿವಂತಿಕೆಯ ಸೋಗಿಲ್ಲದೆ ಪ್ರಾಮಾಣಿಕವಾಗಿ ಅನಿಸಿದ್ದನ್ನು ನೇರವಾಗಿ ಹೇಳುತ್ತದೆ. ಜೊತೆಗಿಲ್ಲಿ ಬುದ್ಧಿವಾದ ಹೇಳುವ ಇರಾದೆ ಇಲ್ಲದಿರುವುದರಿಂದ ಸನ್ನಿವೇಶಗಳು ಹಾಗೂ ಪಾತ್ರಗಳಿಗೆ ಸಹಜ ನಡಿಗೆಯ ಸೌಭಾಗ್ಯ ದಕ್ಕಿದೆ. + +ಸಂಕಲನದ ಶೀರ್ಷಿಕೆಯ ಕಥೆʻದೇವರ ಹೊಲʼ ಸಾಂಕೇತಿಕವಾದರೂ ವಾಸ್ತವಕ್ಕೆ ಹಿಡಿದ ಕನ್ನಡಿಯಾಗಿದೆ. ಊರ ಗೌಡ ಶಿವರುದ್ರಯ್ಯನ ಹಿಕ್ಮತ್ತು,ಸಂಗಪ್ಪ ಮತ್ತವನ ಕುಟುಂಬದ ಕಡು ಕಷ್ಟ, ಅದನ್ನೇ ಬಂಡವಾಳ ಮಾಡಿಕೊಳ್ಳಲು ಹವಣಿಸುವ ಗೌಡ,ಇದರೊಂದಿಗೆ ಬೆಸಗೊಳ್ಳುವ ಹಳ್ಳಿಯ ರಾಜಕಾರಣ ಹೀಗೆ ಅನಾವರಣಗೊಳ್ಳುವ ಈ ಕಥೆಯಲ್ಲಿ ಒಂದು ರೀತಿಯಲ್ಲಿ ಸಂಗಪ್ಪನ ಹೆಂಡತಿಯ ಧೈರ್ಯʻಬಗ್ಗುವುದಕ್ಕೂ ಒಂದು ಮಿತಿ ಇದೆ. ಅದು ಮೀರಿದರೆ ಬಗ್ಗಿಸ ಬಂದವನಿಗೆ ಅದೇ ತಿರುಗು ಬಾಣವಾಗುತ್ತದೆʼಅನ್ನುವ ಸಂದೇಶವನ್ನು ಹೇಳುತ್ತದೆ. ಇದರ ಜೊತೆ ಜೊತೆಗೇ ಕಥೆಗಾರ ಕಟ್ಟಿಕೊಡುವ ಕಣ್ಮರೆಯಾಗುತ್ತಿರುವ ಹಳ್ಳಿಗಾಡಿನ ಬದುಕು ಮುದಕೊಡುತ್ತದೆ. ಅಕಸ್ಮಾತ್ತಾಗಿ ಸಾಯುವ ʻದ್ಯಾವ್ರ ಎತ್ತುʼವಿನ ಸಾವನ್ನೇ ಕಾರಣವಾಗಿಸಿಕೊಂಡು ʻದೇವರ ಹೊಲʼವನ್ನು ತನ್ನ ಗುಪ್ತ ಆಸೆಯ ಈಡೇರಿಕೆಗಾಗಿ ಕೊಡಿಸಿದ್ದ ಕಾರಣಕ್ಕೆ ಸಂಗಪ್ಪನ ಹೆಂಡತಿ ಶಾರವ್ವನನ್ನು ಬುಟ್ಟಿಗಾಕಿಕೊಳ್ಳಲು ಯತ್ನಿಸುವ ಗೌಡ ಶಿವರುದ್ರಯ್ಯ, ಅದೇ ಶಾರವ್ವನ ರೋಷಕ್ಕೆ ತುತ್ತಾಗಿ ಚಾಟಿ ಏಟಿನಿಂದ ಅವಳಿಂದಲೇ ಸಾಯುವ ದೃಶ್ಯ ಗೌಡಿಕೆ ಕಾಲದ ಹಳ್ಳಿಗೆ ಕರೆದೊಯ್ಯುವುದಲ್ಲದೆ , ಇಂದಿಗೂ ಉಳ್ಳವರು ಬಡವರ ಹೆಣ್ಣು ಮಕ್ಕಳನ್ನು ಹುರಿದು ಮುಕ್ಕುವುದಕ್ಕೆ ಒಂದು ಪ್ರಾತಿನಿಧಿಕ ಸತ್ಯದಂತೆ ರೂಪುಗೊಂಡಿದೆ. + + + +ʻನಾಯಿ ಬುಡ್ಡನ ಪವಾಡʼಅನ್ನುವ ಕಥೆ ಪ್ರಜಾಪ್ರಭುತ್ವದ ಆಶಯದಂತೆ ಕೂಲಿ ನಾಲಿ ಮಾಡಿ ಬದುಕುತ್ತಿದ್ದ ಬಡವನೊಬ್ಬಗ್ರಾಮ ಪಂಚಾಯಿತಿ ಅಧ್ಯಕ್ಷನಾಗುವುದು, ಅವನು ತನ್ನ ಕೇರಿಯ ಒಳಿತಿಗಾಗಿ ದುಡಿಯುವುದು, ʻಪ್ರಜಾಪ್ರಭುತ್ವ ಇರಬೇಕಾದ್ದು ಹೀಗೇಯೇ,ʼಅನ್ನುವ ಸಂಗತಿಯನ್ನು ತೋರಾಕುತ್ತದೆ. ಇಲ್ಲಿ ನಡೆಯುವ ಹಳ್ಳಿಯ ರಾಜಕಾರಣ ನಾಡಿನ ಯಾವುದೇ ಹಳ್ಳಿಯಲ್ಲೂ ನಡೆಯಬಹುದಾದ್ದದ್ದು. ಹಂಗಾಗಿ ಈ ಕಥೆಗೊಂದು ಸಾರ್ವತ್ರಿಕತೆ ದಕ್ಕಿದೆ. + +ʻಮುತ್ತಿನ ರಾಶಿʼಅನ್ನುವ ಕಥೆ ಕೂಡಾ ಹಳ್ಳಿಯ ರಾಜಕಾರಣ ಹಾಗೂ ಅದರ ಪರಿಣಾಮವನ್ನು ಚಂದವಾಗಿ ಚಿತ್ರಿಸುತ್ತದೆ.ಇಲ್ಲಿ ವೈಯಕ್ತಿಕ ದ್ವೇಷದಿಂದಾಗಿ ಗೌರಕ್ಕನ ಜೋಳದ ರಾಶಿಗೆ ಬೆಂಕಿಯಿಕ್ಕಿ ಸರ್ವ ನಾಶ ಮಾಡುವುದು, ಹಳ್ಳಿಗಳಲ್ಲಿ ಇರುವ ಒಳಿತಿನ ಜೊತೆಗಿನ ಕೇಡನ್ನು ಅನಾವರಣಗೊಳಿಸುತ್ತದೆ. ಕಡೆಗೆ ಮಂತ್ರ ಮಾಂಗಲ್ಯದ ಮೂಲಕ ಆದರ್ಶದ ಮದುವೆ ಮಾಡಿಕೊಳ್ಳುವ ಗುರುಬಸವ ಹಾಗೂ ಇಮ್ಲಿ, ಅಂತೆಯೇ ತನ್ನ ಮಗನೇ ಆ ಕೆಲಸ ಮಾಡಿದ್ದಾನೆಂದು ಗೊತ್ತಾದ ಕೂಡಲೇ ಬಸವಣ್ಣೆಪ್ಪ ಸೀದಾ ಗೌರಕ್ಕನ ಮನೆಗೆ ಹೋಗಿ ಅವಳ ಕಷ್ಟಕ್ಕೆ ಆಗುವುದು ಈಗಲೂ ಹಳ್ಳಿಗಳಲ್ಲಿರುವ ಉದಾರತೆ ಹಾಗೂ ಮಾನವೀಯ ತುಡಿತಕ್ಕೆ ಮಾದರಿಯಂತೆ ಗೋಚರಿಸುತ್ತದೆ. ಇದರ ಜೊತೆಗೆ ಹಳ್ಳಿಯೊಂದರ ದಿನಂಪ್ರತಿ ಬದುಕು ತಂತಾನೇ ಅರಳಿಕೊಳ್ಳುವ ಪರಿ ಸೊಗಸಾಗಿದೆ. + +ʻಅಗಸಿ ಹೆಣʼಒಂದು ದುರಂತ ಕಥೆ. ಹೋರಿ ಹಬ್ಬದಲ್ಲಿ ತನ್ನ ಹೋರಿ ಕಾಳಿಂಗನನ್ನು ಸೋಲಿಸಿದ ಅನ್ನುವ ಕಾರಣಕ್ಕೆ ಕುಸ್ಲೆವ್ವಳ ಮಗ ಕಾಂತನನ್ನು ಕೊಲೆ ಮಾಡಿಸುವ ಪುಟ್ಟಾಲಯ್ಯನ ಕ್ರೌರ್ಯ ಗೌಡಿಕೆಯ ಇತಿಹಾಸ ಗೊತ್ತಿರುವವರಿಗೆ ಹೊಸದು ಅನಿಸದಿದ್ದರೂ ಈಗಿನ ಕಾಲಮಾನದಲ್ಲೂ ಹಲವು ಕಾರಣಕ್ಕೆ ಇಂಥ ಕೊಲೆಗಳಿಗೆ ಹಳ್ಳಿಗಳು ಸಾಕ್ಷಿಯಾಗುತ್ತಿವೆ ಅನ್ನುವುದು ಮತ್ತೊಂದು ದುರಂತ. ಇಂಥ ಕೊಲಗಡುಕತನದ ಜೊತೆಗೇ ಬಿಚ್ಚಿಕೊಳ್ಳುವ ಹೋರಿ ಹಬ್ಬದಚಿತ್ರಣ ಸಾಂಸ್ಕೃತಿಕ ವೈಭವಕ್ಕೆ ಕನ್ನಡಿ ಹಿಡಿದಂತಿದೆ. + +ಇಂಥದ್ದೇ ಪರಿಸರದಲ್ಲಿ ನಡೆಯುವ ʻಕಾಡ್ಕೋಣ ಭೂತಲಿಂಗʼಅನ್ನುವ ಕಥೆ ಸಾಂಸಾರಿಕ ಏರುಪೇರುಗಳನ್ನುಹಾಗೂ ಅದರಿಂದಾದ ತಾಪತ್ರಯಗಳನ್ನು ತೋರಾಕುತ್ತದೆ. ಇಬ್ಬರು ಹೆಂಡಿರ ಕಾಟದಲ್ಲಿ ಹೈರಾಣಾಗುವ ಭೂತಲಿಂಗ, ಅವನ ಮಗನೇ ಅವನ ಮೇಲೆ ಟ್ರ್ಯಾಕ್ಟರ್‌ ಹತ್ತಿಸಿ ಕೊಲ್ಲಲೆತ್ನಿಸುವುದು,ಆದರೆ ಭೂತಲಿಂಗ ಸಾಯದೆ ಒಂದು ಕಾಲನ್ನು ಕಳೆದುಕೊಳ್ಳುವ ಸಂಗತಿ ಮೈ ಜುಮ್ಮೆನಿಸುತ್ತದೆ.ಕಥೆಯ ಕೊನೆಯ ವಾಕ್ಯʻಆದರೆ ಬೀಜದ ಕೋಣ ಮಾತ್ರ ಹತ್ತದಾಗಿತ್ತುʼಅನ್ನುವುದು ತುಂಬಾ ಸಾಂಕೇತಿಕವಾಗಿ ಧ್ವನಿಸುತ್ತದೆ. + +(ಎಸ್. ಗಂಗಾಧರಯ್ಯ) + +ಇಂಥ ಕ್ರೌರ್ಯದ ಕೊಪ್ಪೆಯಾಗಿರುವ ಹಳ್ಳಿಗಳಲ್ಲಿ ಮಾನವೀಯತೆಗೇನೂ ಕಡಿಮೆಯಿಲ್ಲಅನ್ನುವುದು ʻಲೆಕ್ಕ ಪುಸ್ತಕʼಅನ್ನುವ ಕಥೆಯಲ್ಲಿ ನಿರೂಪಿತವಾಗಿದೆ. ಊರಿಗೆ ಊರೇ ಬರಗಾಲದ ಬೇಗೆಯಲ್ಲಿ ಬೇಯುತ್ತಿರುವಂಥ ಹೊತ್ತಲ್ಲಿ ತಾನು ಕೂಡಿಟ್ಟ ಕಾಸನ್ನು ಬ್ಯಾಂಕಿನಿಂದ ಬಿಡಿಸಿ ಅದರಿಂದ ತಾನು ಇಟ್ಟುಕೊಂಡಿದ್ದ ಅಂಗಡಿಗೆ ಧಿನಸಿಗಳನ್ನು ತಂದು, ಅದನ್ನು ಸಾಲವಾಗಿ ಕೊಟ್ಟು ತನ್ನೂರಿನ ಹಸಿವನ್ನು ಇಂಗಿಸಲು ಯತ್ನಿಸುವ ಜಗದಣ್ಣ ಹಾಗೂ ತನ್ನ ಜೀವ ಉಳಿಸಿಕೊಳ್ಳುವುದಕ್ಕಾಗಿ ಇಟ್ಟುಕೊಂಡಿದ್ದ ಔಷಧಿಯನ್ನು ಜಗದಣ್ಣನಿಗಾಗಿ ಕೊಟ್ಟು ತಾನು ಸಾಯುವ ಗಂಗಜ್ಜಿ ಅಪರೂಪದ ಪಾತ್ರಗಳುಅನಿಸುತ್ತವೆ. + +ಅಣ್ಣ ತಮ್ಮಂದಿರ ವೈಷಮ್ಯದ ಸುತ್ತಾ ನಡೆಯುವ ʻಕಪಲಿ ಬಾನಿʼ,ಭಜನೆ ಭಕ್ತಿಯ ಲೋಕವನ್ನು ಅನಾವರಣಗೊಳಿಸುವ ʻಸುದ್ದಿಗಾರ ಕೆಂಪಣ್ಣʼ,ಹಳ್ಳಿ ಹೆಂಗಸಿನ ಬದುಕಿನ ಕಾರ್ಪಣ್ಯವನ್ನೂ ಹಾಗೂ ಗಂಡನ ಬೇಜವಾಬ್ದಾರಿತನದಿಂದಾಗಿ ಇಡೀ ಕುಟುಂಬವೇ ಕಷ್ಟದಲ್ಲಿ ಮುಳುಗಿರುವʻಕೂಗುʼ,ತೋಟದ ಕಾವಲುಗಾರನೊಬ್ಬನ ಸಾವನ್ನು ಸಂಭ್ರಮಿಸುವ ಪಡ್ಡೆ ಹುಡುಗರ ವಿಕ್ಷಿಪ್ತ ಲೋಕದ ʻಹುಳಿ ಮಾವುʼ,ಮುಂತಾದ ಕಥೆಗಳು ಓದುಗರನ್ನು ಒಂದು ಆಪ್ತ ವಲಯಕ್ಕೆ ಸೆಳೆದುಕೊಂಡು,ತಾವು ಕಂಡುಂಡ ಸಂಗತಿಗಳೇನೋ ಅನ್ನುವಷ್ಟರ ಮಟ್ಟಿಗೆ ಒಳಗಿಳಿದು ಆಲೋಚನೆಗೆ ಹಚ್ಚುತ್ತವೆ. + + + +ಮತ್ತೊಂದು ಮುಖ್ಯ ಸಂಗತಿ ಅಂದರೆ, ಕಥೆಗಳಲ್ಲಿ ಬರುವ ಪಾತ್ರಗಳ ಹೆಸರುಗಳು ಒಂದು ರೀತಿಯಲ್ಲಿ ಆ ಪಾತ್ರಗಳ ಒಟ್ಟು ಚಲವ ವಲನ ಹಾಗೂ ಅವುಗಳ ಮನಸ್ಥಿತಿಗೆ ಪೂರಕಾವಾಗಿವೆ. ಅಂತೆಯೇ ಭಾಷೆ ಹಾಗೂ ನಿರೂಪಣೆಗಳು ಕಥೆಗಳ ಒಟ್ಟು ಬಂಧಕ್ಕೆ ಹಾಗೂ ಅವುಗಳ ಸಾಪಲ್ಯತೆಗೆ ಪೂರಕವಾಗಿ ಒದಗಿ ಬಂದಿವೆ. ಮಂಜಯ್ಯನವರು ಶಿಷ್ಟ ಭಾಷೆಯ ಹಂಗಿಗೆ ಬೀಳದೆ ತನ್ನ ನಾಲಿಗೆ ಮೇಲೆ ನುಡಿಯುವ ಪದಗಳನ್ನೇ ಇಲ್ಲಿ ನುಡಿಸಿರುವುದು ಕಥನ ಕಲೆಯ ಸೊಗಸನ್ನು ಹೆಚ್ಚಿಸಿದೆ. ಹೀಗೆ ಇಲ್ಲಿನ ಎಲ್ಲ ಕಥೆಗಳು ಒಟ್ಟಾರೆಯಾಗಿ ಹಳ್ಳಿಯ ಮನದ ಅಂಗಳದಲ್ಲೇ ಜರುಗುತ್ತಾ, ಕಥೆಗಳ ಬಿಡಿಬಿಡಿ ಶೀರ್ಷಿಕೆಗಳನ್ನು ತೆಗೆದಾಕಿ ಓದಿದರೆ,ಒಂದು ಕಾದಂಬರಿಯಂತೆ ಕಾಣುತ್ತಾ ಗಮನ ಸೆಳೆಯುತ್ತವೆ. ಆದರೂ ಮಂಜಯ್ಯನವರ ಮುಂದಿನ ಬರವಣಿಗೆಗಾಗಿ, ಮತ್ತಷ್ಟು ಕೌಶಲ್ಯಭರಿತ ಕಲಾತ್ಮಕ ಲೋಕ ಅರಳುವ ಪರಿಗಾಗಿ ನಿಸ್ಸಂಶಯವಾಗಿ ಕಾಯಬಹುದು ಅನ್ನುವ ನಂಬಿಕೆ ನನ್ನದು. ಯಾಕೆಂದರೆ ಮಂಜಯ್ಯನವರು ಮೊದಲ ಸಂಕಲನವನ್ನು ಮನಸ್ಸಿನಲ್ಲಿಟ್ಟುಕೊಂಡು ಈ ಮಾತು ಹೇಳುತ್ತಿದ್ದೇನೆ. ಬರೆಯುವ ಬದುಕಿನಲ್ಲಿ ʻತೃಪ್ತಿʼಗೊಂಡ ಲೇಖಕ ಅಥವಾ ತನ್ನ ಬರವಣಿಗೆಯ ಬಗ್ಗೆಯೇ ಅತಿಯಾದ ಮೋಹ ಇಟ್ಟುಕೊಂಡ ಲೇಖಕ ತನಗೆ ಅರಿವಿಲ್ಲದಂತೆಯೇ ತನ್ನೊಳಗಿನ ಲೇಖಕನನ್ನು ತಾನೇ ಕೈಯ್ಯಾರೆ ಸಾಯಾಕಿರುತ್ತಾನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_167.txt b/Kenda Sampige/article_167.txt new file mode 100644 index 0000000000000000000000000000000000000000..5653e540ca84c1abdf2c0d9278814ec78bac7c7c --- /dev/null +++ b/Kenda Sampige/article_167.txt @@ -0,0 +1,25 @@ +“ಸುಶ್ರಾವ್ಯವಾದ ನಿಃಶ್ಶಬ್ದವಿತ್ತುಹೆಜ್ಜೆ ಇಡದ ಜಾಗದಲ್ಲಿಹಿಡಿಯಹೋದರೆ ಹೊರಟುಬಿಡುತ್ತಿತ್ತು”(‘ಹಿಡಿಯಹೋದರೆ’) + +ಬಹುಶಃ ಇದೊಂದು ವ್ಯಾಖ್ಯಾನದಂತೆ ಸಲ್ಲಬಹುದು; ಎಲ್ಲ- ಕವಿಗಳ, ಕವಿತೆಗಳ ಸಂಭಾವ್ಯ, ಅಸಂಭಾವ್ಯ ಅಂತರಂಗ-ಬಹಿರಂಗಗಳ ನಿಷ್ಪನ್ನ ತೊಳಲಾಟಗಳ, ನಿಗೂಢದ ಅನ್ವೇಷಣೆಗಳ ಕಷ್ಟ-ಸುಖದ ಬಗ್ಗೆ! ಅದೆಷ್ಟೋ ಚುಕ್ಕಿಗಳು ಚೆಲ್ಲಾಡಿರುತ್ತವೆ- ಒಂದು ವಿಶಾಲವಾದ ಅವ್ಯಕ್ತದಲ್ಲಿ; ಮತ್ತದರಲ್ಲಿ ಯಾವ್ಯಾವುದೋ ಚುಕ್ಕಿಗಳನ್ನು, ಯಾವ್ಯಾವುದೋ ಆಕಾರದಲ್ಲಿ, ವಿನ್ಯಾಸದಲ್ಲಿ, ಕಲ್ಪನಾವಿಲಾಸದಲ್ಲಿ, ಜೋಡಿಸಿ, ಜೋಡಿಸಲೇಬೇಕೆಂದೇನೂ ಇಲ್ಲ; ಜೋಡಿಸಿದಂತೆ ಭಾಸವಾದರೂ ಸಾಕು; ಅಲ್ಲಿ ಪ್ರತ್ಯಕ್ಷವಾಗುವ ರೂಪವೇ ಆಗುವುದೊಂದು ಕಾವ್ಯಸೃಷ್ಟಿ! ಅದೊಂದು, ಮುಟ್ಟದೇ, ಮೆಟ್ಟದೇ ಅನುಭವಿಸಬಹುದಾದ ಆನಂದ. “ಹಿಡಿಯಹೋದರೆ ಹೊರಟೇಬಿಡುವ” ಚಕ್ಕಂದ! + +(ಜಯಂತ ಕಾಯ್ಕಿಣಿ) + +ಒಂದು ಉಕ್ಕಂದದಲ್ಲಿ, ಉತ್ಕಟವಾಗಿ ಹೊಮ್ಮುವ ಜಯಂತ್ ಕವಿತೆಗಳು, ‘ವಿಚಿತ್ರಸೇನನ ವೈಖರಿ’ ಯಲ್ಲಿ ಮಾತ್ರ ಅಂತಲ್ಲ; ‘ಆಡುಮಾತಿ’ನಂತೆ ‘ಆಡುದಿನ’ದ- ಎನ್ನಬಹುದಾದ ಸೂಕ್ಷ್ಮಾತಿಸೂಕ್ಷ್ಮ ವಿದ್ಯಮಾನಗಳ ಪ್ರತಿಮಾತ್ಮಕ ರೂಪಣೆಯಲ್ಲಿ ಅವರ ಸಾಹಿತ್ಯಸೃಷ್ಟಿಯಲ್ಲಿ ಇನ್ನೊಂದೇ ಅವ್ಯಕ್ತವನ್ನು ಸಾಂಕೇತಿಸುತ್ತವೆ. ಆ ಕವಿತೆಗಳ ಸಮುದ್ರ, ಅಲೆಗಳ ಉಪ್ಪಿನ ರುಚಿ ನೋಡುತ್ತ ಕಡಲ ಉಪ್ಪಿನ ಸಾಂದ್ರತೆಯ ಬಗೆಗೆ ಯೋಚಿಸಹೊರಡುವ, ಕವಿತೆಯ ಹೀರುಗೊಳವೆಯಂಥ ಓದುಗನೆದೆಯೊಳಗೆ ಅಲೆ-ದಾಟ ಶುರು ಹಚ್ಚಿಕೊಳ್ಳುತ್ತದೆ! ಎಷ್ಟೋ ಸಲ ಹೈರಾಣಾಗಿಸಲೂಬಹುದು! ಸಾಲುಗಳೆಲ್ಲ ಪ್ರತಿಮೆಗಳಾಗಿ, ಸಂಗತಿಗಳೆಲ್ಲ ರೂಪಕಗಳಾದರೆ, ದೈನಿಕದಲ್ಲೇ ದೈವಿಕತೆ ಕಾಣುವ ಜಯಂತರ ಕಾವ್ಯಗಳಲ್ಲಿ ಯಾವುದೇ ಸೈದ್ಧಾಂತಿಕ ಘೋಷಣೆಗಳನ್ನು ನೀವು ಕಾಣಲಾಗದು. ಸೀದಾ-ಸಾದಾ ಆಗಿ, ಜೀವಗಳನ್ನು ದಡ ದಾಟಿಸಲೆಂಬಂಥ ಜವಾಬ್ದಾರಿ ಹೊತ್ತ ಬಸ್ಸು, ಲಾರಿ, ಟ್ರಕ್, ಟ್ರಾಕ್ಟರ್, ಟಪಾಲು ಗಾಡಿಗಳು, ಅವುಗಳ ನಿರುಮ್ಮಳ ಸಂಚಾರಕ್ಕೆ ಹಾಸಿಕೊಂಡಂಥ- ಹೆದ್ದಾರಿಗಳು, ಆ ಲಯಕ್ಕೆ ದನಿಗೂಡಿಸುವ, ಹಲಬಗೆಯ ಪಥಿಕರ. ದಾರಿಹೋಕರ- ಹಸಿವು, ಬಡತನ, ಬೆವರು-ಬವಣೆಗಳು; ಮತ್ತದರಲ್ಲೇ ಕುಡಿಯೊಡೆದು, ದಾಂಗುಡಿಯಿಟ್ಟ, ಪಲ್ಲವಿಸಿ- ಫುಲ್ಲವಿಸುವ ಬದುಕೆಂಬ ತಾಯ ಮೆಲ್ದನಿಯ, ಇನಿದನಿಯ ಜೋಗುಳಗಳು! ಕಾವ್ಯ-ಕಥಾನಕದ ಹಿನ್ನೆಲೆಯಲ್ಲಿ ರೂಪ-ರೂಪಕವಾಗಿ ಮೊರೆವ ಸಮುದ್ರಗಳು, ಮೆರೆಯುವ ಸಂತೆಗಳು!.. ಹಾಗೆ ನೋಡಿದರೆ, ಬರವಣಿಗೆ- ಎಂದರೆ ಕವಿಗೆ, ಅಮ್ಮ ರುಚಿ ಹದಗೊಳಿಸಿ, ‘ಕಂದನ ಬಾಯಲ್ಲಿ ಅದು ವಿಲೀನಗೊಳ್ಳುವ/ ಪರೋಕ್ಷ ಸುಖದ ಬಗೆ’(ರಹಸ್ಯ). ‘ಸದ್ದಿಲ್ಲದೆ ಆಗುವ ಆ ಅಗೋಚರ ತುತ್ತಿನ/ ಜೀವನ ಸತ್ವವೇ ಬೇರೆ..’/‘ಎಲ್ಲಾ ಒಂದನ್ನೊಂದು ಸೇರಿಯೇ/ ಒಂದನ್ನೊಂದು ಮೀರುವ ಈ ಭಂಗುರ ಚಣದಲ್ಲೇ ಇದೆ/ ಅಗೋಚರ ಮಮತಾ ರಹಸ್ಯ..’ ಈ ಸಮೂಹ-ಪ್ರಜ್ಞೆ ಕವಿಯ ಇತರ ಕೃತಿಗಳಲ್ಲೂ ಸಾಕಷ್ಟು ಸಲ ವ್ಯಕ್ತಗೊಳ್ಳುತ್ತದೆ- ಉದಾಹರಣೆಗೆ ಅವರ ‘ಟೂರಿಂಗ್ ಟಾಕೀಸ್’ ಕೃತಿಯಲ್ಲಿ ಪ್ರತಿಪಾದಿಸಲ್ಪಡುವ, ಯಾವುದೇ ಸಿನೆಮಾವೊಂದರ ಸಾಮೂಹಿಕ ದೇಖಾವೆಗೂ- ಬಿಡಿ-ಖಾಸಗೀ ವೀಕ್ಷಣೆಗೂ ತೋರಿಬರುವ ವ್ಯತ್ಯಾಸ!.. + +ಇನ್ನೊಂದೆಡೆ, ಬದುಕು ಮತ್ತು ಬರಹ ಹೇಗೆ ಸಮೀಕರಿಸಿಬಿಡುತ್ತವೆ!- ಇಲ್ಲಿ ನೋಡಿ; ‘ಸಂಸಾರವೇ ತಿದ್ದಿಕೊಳುವ ಆಂತರಿಕ ಒಕ್ಕಣೆ’ ಬದುಕಿನ ಪ್ರೂಫು ಆಗಾಗ ತಿದ್ದುಪಡಿಗಾಗಿ ಕೈಗೆ/ ಬರುತ್ತಲೇ ಇರುತ್ತದೆ/ ಆಯಾ ಕ್ಷಣದಲ್ಲೆ ಮಾಡಿಕೊಂಡರೆ ಒಳಿತು/ ಆ ಅಲ್ಲಿಂದಲೇ ಎಲ್ಲ ಹಗುರಾದೀತು….ʼ ಮರುಛಾವಣಿಗೆಂದು ಹುಲ್ಲಿನ ಮಾಡು ತೆಗೆಸಿಕೊಂಡ ಮನೆಯೊಂದು, ನುಗ್ಗಿ ಆವರಿಸಿದ ಬೆಳಕಿನಲ್ಲಿ ಬೆತ್ತಲಾಗಿಬಿಟ್ಟಂತೆ, ‘ಅಡಗಿ ಕೂತವನ ಮುಖಕೆ ಬ್ಯಾಟರಿ ಬಿಟ್ಟಂತೆ’ ತೋರುತ್ತದೆ: ಅಲ್ಲದೆ, ‘ಬೆಳಕು ಬದಲಾದಾಗ ಕಥೆಯೆ ಬದಲಾದೀತೆ/ ಎಲ್ಲ ಅವಾಕ್ಕಾಗಿ ನಿಂತು ಮುಂದಿನ ಇಶಾರೆಗೆ/ ಕಾಯುತಿವೆ…/ (‘ತಿದ್ದುಪಡಿ’). + +ಕವಿಗೆ ಅಕ್ಷರಗಳು ಮತ್ತು ಬದುಕು ಬೇರೆ-ಬೇರೆಯಲ್ಲ: ಸ್ಥಾವರ-ಜಂಗಮ… ಅಣು-ರೇಣು-ತೃಣ-ಕಾಷ್ಠಗಳಲ್ಲೂ ತಮ್ಮ ಅವಿನಾಭಾವ ಸಂಬಂಧವನ್ನವು ಸೂಚಿಸುತ್ತಲೇ ಇರುತ್ತವೆ!- ಚಲಿಸುವ ಕವಿತೆಗೆ ಕಾದ ನಿಶ್ಚಲ ಪದಗಳಂತೆ…’ (ಇಶಾರೆ). ಇಸ್ತ್ರಿ ಅಂಗಡಿಯವನ ಕಪಾಟಿನ ನಿಶ್ಚಲ ಬಟ್ಟೆಗಳು, “ಶಬ್ದಕೋಶದಲ್ಲಿ ಕಾದು ಕೂತ ಪದಗಳಂತೆ”, “ತೊರೆದ ಕ್ರಿಯಾಪದದಂತೆ ಅವನ ಬಳಕೆಯ ಉಡುಪು ನನ್ನ ಕೈಲಿ’ (ಗಾಳಿಯ ಕೈಗೆ ಸಿಕ್ಕ ದನಿ) ಇಲ್ಲೆಲ್ಲ ವಸ್ತುಗಳು ಪದಗಳಾಗಿ ಮೂಡಿದರೆ, ಪದಗಳೇ ಸಜೀವಾಗಿ ಮರ‍್ತಗೊಳ್ಳುವ ಘಳಿಗೆಗೆ “ಶ್ರುತಿ ಮಿಡಿವ ನೀಳ ಬೆರಳುಗಳು ಆಗಾಗ ಹಾಡುಗಳ ನಡುವೆ/ ಈ ಪುಸ್ತಕಎತ್ತಿ ಪುಟಗಳನ್ನು ತಿರುವುವಾಗ/ ಅದರೊಳಗಿನ ಎಲ್ಲ ಪದಗಳಿಗೂ ರೋಮಾಂಚನವಾಗುತ್ತದೆ/ ಶಿಶುವಿಹಾರದ ಮಕ್ಕಳು ಅಮ್ಮನನ್ನು ಕಂಡಿದ್ದೇ/ ಎತ್ತಿಕೋ ಎತ್ತಿಕೋ ಎಂದು ಕೈ ಚಾಚುವಂತೆ ಅವು ವಿಚಲಿತಗೊಳ್ಳುತ್ತವೆ”, ಸಾಕ್ಷಿಯಾಗುತ್ತವೆ(ಹಾಡುಗರ‍್ತಿಯ ಹಾಡಿನ ಪಟ್ಟಿ)! ‘ಪುಟಗಳ ಮರೆಯಲ್ಲೊಂದು ಪರ‍್ಯಾಯ ಜೀವನ ಕದ್ದು ನಡೆಸಿದ ಮಾಯಾಸಮಯ’, ಮತ್ತದರ ದಾತಾರರಾದ, ‘ಆತ್ಮಿಕ ನೆಂಟಸ್ತನ ಕುದುರಿಸುವ ತವರುಮನೆಗಳಂಥʼ, ‘ಅಭಯದಾಯೀ’- ‘ಹಳೆಪುಸ್ತಕ’- ಕವಿತೆ, ತುದಿಯಲ್ಲಿ ಒಂದು ರಮ್ಯವ್ಯಾಖ್ಯೆಯನ್ನು ಹೇಳಲು ಹಿಂಜರಿಯುವುದಿಲ್ಲ; ಅದೆಂದರೆ, ‘ಹಳೆಯ ಮಾಗಿದ ಪುಸ್ತಕ/ ಕಾಯುತ್ತ ಇರುತ್ತದೆ ಹೀಗೆ/ ತಕ್ಕ ಸಮಯಕ್ಕೆ ಬರಲು ಕೈಗೆ/ ನಮ್ಮ ಶಾಪವಿಮೋಚನೆಗೆ’! ‘ಖೋಡಿ ಬೈರಾಗಿ’ ಕವಿತೆಯಲ್ಲೊಂದು ವಿಷಾದದ ಗೆರೆ ಬಣ್ಣಿಸಲೆಳಸುವದು- ದಶಕಗಳ ಹಿಂದಿನ ಧಾರವಾಡದ ನಚ್ಚುಗೆಯ ಚಿತ್ರಣವನ್ನು. ‘ಡಿಲೀಟ್ ಮಾಡಿದಂತೆ ಮಾಯವಾದ’– ದಶಕಗಳ ಹಿಂದಿನ ಧಾರವಾಡದ ಹತ್ತು ಹಲವು ಸ್ಮೃತಿಚಿತ್ರಗಳಲ್ಲಿ, ‘ಬಟ್ಟೆ-ಬುಟ್ಟಿಯ ಹೊತ್ತ ಇಳಕಲ್‍ ಸೀರಿ ಉಟ್ಟವರು’, ಹೊಟ್ಟೆಪಾಡಿಗಾಗಿ ಪಟ್ಟಣಕ್ಕೆ ಗುಳೆಹೋದವರು, ಹಸಿ-ಹಸಿರು ಹೊಲದಿಂದ ಉಚ್ಚಾಟಿತಗೊಂಡಂಥ ಟ್ರಾಕ್ಟರ್, ‘ಶಾಪವಿಮೋಚನೆಗೆ ಕಾದ ವಿಗ್ರಹಗಳಂತೆ ವಿಹ್ವಲಗೊಂಡ ಕೂಲಿಕುಟುಂಬ.. ಏನೆಲ್ಲ!.. ಆದರೆ.. ಬದುಕಿನ ಪುಸ್ತಕದಲ್ಲಿ ಅಚ್ಚೊತ್ತಿ, ಮನಕೆ ಹತ್ತಿರವಾಗಿ, ಮಾಯವಾದವರು.. ಪುಟವಿಕ್ಕಿ ಪ್ರತ್ಯಕ್ಷರಾಗುವ ಕವಿತೆಗಳಾಗಿ, ಮತ್ತೆ ಸಾಲಾಗಿ ಹೊಳೆವರು..’ ಒಂದು ಸಣ್ಣ ನೀರವ’, ‘ಗಾಳಿಯ ಕೈಗೆ ಸಿಕ್ಕ ದನಿ’, ‘ಮಂಜುನಾಥನ ಕವಿತೆ’, ‘ಎಂ.ವ್ಯಾಸ, ‘ಚಿಹ್ನೆ’..‘ನೆಲಗುಣ’..ದಂಥ ಕವಿತೆಗಳಲ್ಲಿ. + + + +ಓದುವಿಕೆ, ಒಂದು ‘ಸದೇಹ ಸ್ವರ್ಗಾರೋಹಣ’ದಂತೆ(‘ಅದು’) ಆದರೆ, ‘ಅಂಗಿ’ ಒಂದು ಕೇವಲ ಅಂಗಸೌಷ್ಟವ ಕಾಪಾಡುವ ವಸ್ತುವಾಗಿರದೇ, ಬದುಕಿನ ಹತ್ತು-ಹಲವು ಮಜಲುಗಳಲ್ಲಿ ಆತ್ಮೀಯ ಅತಿಶಯಗಳಲ್ಲಿ ಜೀವಕ್ಕೆ ಆತುಕೊಂಡು, ‘ರೆಪ್ಪೆ ಸವರಿ ಕೆನ್ನೆಯೊರೆಸಿ ಪ್ರತೀಕವಾಗುವುದು-(‘ಅಂಗಿ’), ಸದೇಹ ಸ್ವಪ್ನಾರೋಹಣಕ್ಕೆʼ! ‘ಮರ’ ದಲ್ಲಿ, ವಿಹಂಗಮ ಬಣ್ಣನೆಯ ‘ಹೂ-ಸ್ಪರ್ಷ’ವನ್ನೂ, ‘ಆದರೂ ಇರಲಿ’ ತನ್ನ ತೆಳು ಹಾಸ್ಯ, ಮೃದು ವಿಡಂಬನೆಯ ಜೊತೆಜೊತೆಗೇ, ದೈನಿಕದಲ್ಲೇ ಹುಟ್ಟಿಕೊಳ್ಳುವ ತತ್ವದೊಂದು ಅವ್ಯಕ್ತ ಒಕ್ಕಣೆಯೊಂದರ ‘ಭೂಸ್ಪರ್ಶ’ ವನ್ನೂ ಓದುಗನನ್ನು ಸೋಕಬಲ್ಲದು. ವಿಚಿತ್ರಸೇನ ಒಳಹೊಕ್ಕ ಚಾ-ದುಕಾನಿನ ಗೋಡೆಯ ಮೇಲಿನ ಬಾಬಣ್ಣನ ಚಿತ್ರ(ಣ)ದೊಂದಿಗೇ ತೆರೆದುಕೊಳ್ಳುವ ಕವನ, ತನ್ನ ನಾಟಕೀಯತೆಯ ಚೌಕಟ್ಟುಗಳಾಚೆಗೆ ಅನಾವರಣಗೊಳಿಸುವ ಪ್ರಪಂಚ- ಬೇರೆಯದೇ ಇದೆ’- ‘ಜಗತ್ತು ಹಗಲಲ್ಲಿ ಗುರುತು ಬಹಳ ಮುಂದೆ ಹೋಗುತಿತ್ತು..’ ಎಂದ ಹಾಗೆ’! (‘ಕಾಳಗ’). + +ಕಾಯ್ಕಿಣಿಯವರ ಕಾವ್ಯಗಳಲ್ಲಿ ದಂತಗೋಪುರದ ವಾಸಿ, ವಿಲಾಸಿ, ಪ್ರವಾಸಿಗರು ಕಾಣಸಿಗಲಾರರು; ಏಕೆಂದರೆ, ನಮ್ಮ-ನಿಮ್ಮ ನಡುವೆ, ಆಚೆ-ಈಚೆ, ಕಣ್ಣಿಗೆ ಬಿದ್ದರೂ ಬೀಳದಂತಿರುವ, ಅಥವಾ ನಾವು ನೋಡಿದರೂ ನೋಡದಂತೆ ಮುಂದೆ ಸಾಗುವುದಕ್ಕೆ ಯಾವ ಆಕ್ಷೇಪಣೆಯನ್ನೂ ಮಾಡದ- ಕಷ್ಟವೋ-ಕಾರ‍್ಪಣ್ಯವೋ ಎಲ್ಲಕ್ಕೂ ಎದೆಗೊಡುತ್ತ ಕಾಲ್ಪನಿಕ ರೇಖೆಗಳನ್ನು ಧಿಕ್ಕರಿಸುತ್ತ, ಅಲ್ಲಗಳೆಯುತ್ತ, ತಮ್ಮದೇ ಜೀವನಚಿತ್ರವ ಮೂಡಿಸುವ ಜೀವಭಂಡಾರಿಗಳು- ಕಾಯ್ಕಿಣಿಯವರ ಕಾವ್ಯಪ್ರಪಂಚವನ್ನು ನಿರಾಯಾಸ, ನಿರಪೇಕ್ಷ್ಯವಾಗಿ ಧರಿಸುತ್ತಾರೆ; ಭರಿಸುತ್ತಾರೆ. ಅಥವಾ ಕೆಲವೊಮ್ಮೆ, ಜೀವಸಂಕುಲದೆಡೆಗಿನ ನಮ್ಮದೇ ಕಕ್ಕುಲಾತಿ, ಒಳಗುದಿಯಲ್ಲೇ- ನಿಚ್ಚಳವಾಗಿ ವ್ಯಕ್ತಗೊಳಿಲಾಗದಂಥ ಮಾನವಿಕ ಭಾವದಲೆಗಳು, ಅದ್ಯಾವುದೋ ಒಂದು ರೂಪಕದಲ್ಲಿ ರೂಹುತಳೆದಂತೆ ಅನಿಸಿದರೂ ಅಚ್ಚರಿಯಲ್ಲ. ಒಬ್ಬಾತನಿಗೆ, ಎದುರಿವನ ಕೈಗಡಿಯಾರದಲ್ಲಿ ಓಡುತ್ತಿರುವ ಸಮಯ- ತನ್ನದೇ ಅಥವಾ ಆತನದೇ? ಎಂಬ ಗೊಂದಲ; ಇನ್ನೊಬ್ಬನಿಗೆ, ತನ್ನ ಟಿಕೆಟ್ ತೆಗೆದುಕೊಳ್ಳುವಾಗಲೂ ಪರಿವೆಯಿದೆ- ತನ್ನ ಉಳಿದರ್ಧ ಇನ್ನೆಲ್ಲೋ ಇದೆ; ಅಥವಾ ಎಲ್ಲರಲ್ಲೂ ಹಂಚಿಹೋಗಿರಲೂಬಹುದು.. ಇಂಥ, ಅಮರ‍್ತ ಪ್ರತೀಕಗಳು ಶಬ್ದದಾಚೆಗೂ ಇನ್ನೇನನ್ನೋ ಹೇಳುತ್ತವೆ.. ಒಟ್ಟಾರೆ, ಜಯಂತ ಕಾಯ್ಕಿಣಿವರ ಸಾಹಿತ್ಯಕೃಷಿಯ ಬಾಹುಳ್ಯದೃಷ್ಟಿಯಿಂದ ನೋಡಿದಾಗ, ಅವುಗಳ ವಸ್ತು, ವಿನ್ಯಾಸ, ವೈವಿಧ್ಯತೆಗಳು ಅಷ್ಟೇ ಹರಹು ಹೊಂದಿವೆ; ಮತ್ತು ಓದುಗವಲಯದ ಇನ್ನಷ್ಟು ಒಳನೋಟಗಳ ಕಾಯುತ್ತಿವೆ- ಎಂದು ಹೇಳಬಹುದು. ಪ್ರತೀ ಕವಿತೆಯೂ ತನ್ನ ಓದಿಗಷ್ಟಷ್ಟು, ಅಷ್ಟಷ್ಟೇ ಅಥವಾ, ಅಷ್ಟನ್ನೂ!- ಓದಿದಾಗಷ್ಟೇ ವಿನಿಮಯ ಮಾಡಿಕೊಳ್ಳುವುದು. ‘ಆದರೆ’, ಈ ಸಾಲುಗಳನ್ನು ‘ ಓದಿ’….‘ಬಸ್ಸೊಂದು ಪಾಸಾಗಿ ಎಬ್ಬಿಸಿದ ಧೂಳಿನ ಹೆಮ್ಮೋಡದಲ್ಲಿಬಸ್ಸಿನೊಡಗೂಡಿ ಎಲ್ಲವೂ ಮಾಯ..ಒಂದು ಸಣ್ಣ ನೀರವದ ನಂತರ ಮತ್ತೆಚಿತ್ರಕ್ಕೆ ಜೀವ ಬಂದು ಎಲ್ಲ ಮುಂದೆ ಚಲಿಸುತ್ತದೆ’ + +‘….ಹೊರಗಡೆಯಿಂದ ಕೆತ್ತುತ್ತಾರಲ್ಲ ಶಿಲ್ಪಿಹಾಗೆ ಹಾಗೆ ಒಳಗಡೆಯಿಂದಲೇ ಕೆತ್ತುತ್ತ ಕೆತ್ತುತ್ತನಮ್ಮನ್ನು ಬಿಡುಗಡೆ ಮಾಡುತ್ತದೆ ಬೆಳಕುಸದ್ದಿಲ್ಲದೆ..’(‘ಒಂದು ಸಣ್ಣ ನೀರವ’) + + + +ಆಧ್ಯಾತ್ಮಿಕ ಪರಿಪ್ರೇಕ್ಷ್ಯದಲ್ಲಿ ಬಣ್ಣಿಸುವುದಾದರೆ, ಜೀವಯಾತ್ರೆಯ ಯಾತ್ರಿಕ ಜೀವಗಳ ಅಲೆಮಾರಿತನ, ಪರಮಗಮ್ಯವ ಅನ್ವೇಷಿಸುವಲ್ಲಿ, ಅಥವಾ ಅನ್ವೇಷಿಸದೇ ಹೋಗುವ/ಇರುವ ಜಂಜಾಟಗಳಲ್ಲಿ, ಸಿಕ್ಕುಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಅನುಪಾಧಿಕ ಅಸಂಗತ ಲೌಕಿಕ ವ್ಯಾಪಾರಗಳು, ಒಂದು ವರ್ತಮಾನ; ಆದರೂ- ಅದರಲ್ಲೇ ಮಿಡಿಯುವ, ದೈನಿಕವೆ ದೈವಿಕವಾಗಿ ತೋರ್ಪಡಬಲ್ಲಂತ ಒಂದು ಜೀವನಾಡಿ-ಅಂಥದೊಂದು ವಿದ್ಯಮಾನ: ಇದು ಯಾವುದೇ ಒಂದು ದೇಶ-ಕಾಲ-ಜನಾಂಗದ ಸಹೃದಯ ಸಾಹಿತ್ಯದಲ್ಲಿ, ವಿಚಾರಶೀಲತೆಯ ಸೊಬಗಿನಿಂದಲೂ, ಅಂತಃಕರಣದಿಂದಲೂ ಪ್ರತಿಫಲನವಾಗುತ್ತದೆ; ಆಗಬೇಕು. + +ಕವಯತ್ರಿ, ಲೇಖಕಿ ಗೀತಾ ಹೆಗಡೆಯವರಿಗೆ ಸಂಗೀತ ಮತ್ತು ಪ್ರಕೃತಿಯಲ್ಲಿ ಆಸಕ್ತಿ. ‘ಅಕ್ಷರ ಚೈತನ್ಯ’ ಇವರ ಪ್ರಕಟಿತ ಕೃತಿ. \ No newline at end of file diff --git a/Kenda Sampige/article_168.txt b/Kenda Sampige/article_168.txt new file mode 100644 index 0000000000000000000000000000000000000000..00d9f7762327d90fdd818cd20530796ec00ac77c --- /dev/null +++ b/Kenda Sampige/article_168.txt @@ -0,0 +1,27 @@ +ಆಶಾ ಅವರ ಕವಿತೆಗಳಿಗೆ ಶಿಫಾರಸ್ಸು ಬೇಕಿಲ್ಲ. ಅವರು ಪ್ರತಿಭೆಯನ್ನು ಮಾತ್ರ ನಂಬಿಕೊಂಡು ಓದುಗರ ಜೊತೆ ಸಂವಾದಕ್ಕಿಳಿದಿಲ್ಲ. ಶ್ರದ್ಧೆ ಮತ್ತು ಶಿಸ್ತುಗಳನ್ನು ಪ್ರತಿ ಪದದ ಬಳಕೆಯಲ್ಲೂ ಅಳವಡಿಸಿಕೊಂಡು ತನಗಾಗುವಷ್ಟೂ ತನ್ನ ಪ್ರತಿಭೆಯನ್ನು ಸಾಣೆಗೊಳಪಡಿಸಿಕೊಂಡಿದ್ದಾರೆ. ಉತ್ಸಾಹ ಇಲ್ಲದೆ ಕವನ ರಚನೆ ಸಾಧ್ಯವಿಲ್ಲ, ಆದರೆ ಉತ್ಸಾಹವನ್ನೇ ದೊಡ್ಡ ಆಕರವೆಂದು ನಂಬಿ ಹೊರಟಾಗ ನಾವು ಬರಹಗಾರ/ರ್ತಿ ಯರು ಕೆಲವೆ ಹೊತ್ತಲ್ಲಿ ಪುನರಾವರ್ತನೆಯ ಚಾಳಿಗೆ ಬೀಳುತ್ತೇವೆ, ಕಾರಣ ಒಂದು ಪೂರ್ವಸಿದ್ಧತೆಯ ಅಭಾವ. ಎರಡು ತಿದ್ದುವ ಕೆಲಸಕ್ಕೇ ಕೈಯೇ ಇಡದೆ ನಮ್ಮ ಬರಹ ಅಪರೂಪ ರತ್ನವೆಂಬ ಟೊಳ್ಳು ಆತ್ಮವಿಶಾಸವನ್ನು ಪೋಷಿಸಿಕೊಳ್ಳುವುದು. ವಾಸ್ತವವಾಗಿ ಉತ್ಸಾಹವನ್ನು ಬಳಸಿಕೊಂಡು ಪೂರ್ವಸಿದ್ಧತೆ ಮಾಡಿಕೊಳ್ಳುವುದು ಎಲ್ಲಾ ಉತ್ತಮ ಕತೃಗಳ ಲಕ್ಷಣ, ಅದು ಅವಮಾನವಲ್ಲ. ಇದ್ದಕ್ಕಿದ್ದಂತೆ ಸ್ಫೂರ್ತಿ ಬಂದಮರಿಕೊಂಡು ಬರೆದುಬಿಟ್ಟೆ ಎನ್ನುವುದು ಅರ್ಧ ಸತ್ಯದ ಮಾತು. ನಿಜ, ಇದ್ದಕ್ಕಿದ್ದಂತೆಯೇ ಕವಿತೆ ಹೊಳೆಯುತ್ತದೆ. ಆದರೆ ಹೊಳೆದದ್ದೆಲ್ಲ ಓದುಗರ ಮುಂದಿಡುವ ಮೊದಲು ಕೊಂಚ ಸಮಾಧಾನದಿಂದ ಅದರ ಅರಗು ಮೂಲೆಗಳನ್ನು ಕೊರೆದು ಏಣುಗಳು ಸ್ಫುಟವಾಗುವಂತೆ ಮಾಡುವುದು ಬರಹಗಾರ/ರ್ತಿಯ ಕರ್ತವ್ಯ. ಈ ಕರ್ತವ್ಯವನ್ನು ಆಶಾ ಅವರು ಅದೆಷ್ಟು ಶ್ರದ್ಧೆಯಿಂದ ಮಾಡಿದ್ದಾರೆಂದರೆ, ಹೊಸ ರೂಪಕಗಳನ್ನು, ಹೊಸ ನಿರೂಪಣಾ ಶೈಲಿಯನ್ನು, ಹೊಸ ಪದಕೂಟಗಳನ್ನು ಹುಟ್ಟುಹಾಕಿದ್ದಾರೆ. + +(ಆಶಾ ಜಗದೀಶ್‌) + +ಪ್ರಪಂಚದ ಮೇಲೆ ಎರಡೇ ವಸ್ತುಗಳಿರುವುದು ಕವಿಗಳಿಗೆ ಎಂದು ಛೇಡಿಸುತ್ತಾನೆ ಆಧುನಿಕ ಅಸಂಗತ ನಾಟಕವೊಂದರ ವಿದೂಷಕ. ಮೊದಲನೆಯದು ಗಂಡು ಹೆಣ್ಣಿನ ನಡುವಿನ ಕೆಮಿಸ್ಟ್ರಿ, ಇನ್ನುಳಿದಿದ್ದೆಲ್ಲ ಆ ಕೆಮಿಸ್ಟ್ರಿಯ ಉಪ ಉತ್ಪನ್ನಗಳು! ಹೌದು, ಅದಕ್ಕೆ ನಾಚಿಕೆ ಪಡುವಂಥದ್ದೇನಿಲ್ಲ. ಆಡಮ್ ಮತ್ತು ಈವಳ ನಡುವೆ ಹುಟ್ಟಿದ ಕೆಮಿಸ್ಟ್ರಿಯೇ ತಾನೇ ಜಗತ್ ಸೃಷ್ಟಿ. ಆದರೆ ಮೂಲ ಉತ್ಪನ್ನ ಮತ್ತು ಉಪ ಉತ್ಪನ್ನಗಳನ್ನು ಬರಹಗಳಲ್ಲಿ ತಂದಾಗ ಪ್ರತಿ ಬರಹಗಾರರೂ ಅದನ್ನೊಂದು ಹೊಸ ಬಗೆಯಲ್ಲಿ ಹೇಳಲು ಪ್ರಯತ್ನಿಸುತ್ತಾರೆ. ಅದು ಭಾಷೆಯಲ್ಲೋ, ಸನ್ನಿವೇಶ ಸೃಷ್ಟಿಯಲ್ಲೋ, ಬಂಧದಲ್ಲೋ, ಪ್ರಕಾರದಲ್ಲೋ…. ಹೀಗೆ ತಂತಮ್ಮ ಕೈ ಆನಿಸುವಷ್ಟು ಹೊಸದು ಕೊಡಲು ಪ್ರಯತ್ನಿಸುವ ಬರಹಗಳೇ ಇಂದು ಶಾಶ್ವತವಾಗಿ ಉಳಿದಿರುವಂತಹವು. ಆಶಾ ಕೂಡಾ ಅಷ್ಟೇ, ಇಲ್ಲಿನ ಹೆಚ್ಚಿನ ಕವಿತೆಗಳಲ್ಲಿ ಅವರು ಅದೇ ಗಂಡು ಹೆಣ್ಣಿನ ಮನೋಸಾಂಗತ್ಯದ ಬಗೆಬಗೆಗಳನ್ನು ಪರಿಕಿಸಲು ತೊಡಗಿದ್ದರೂ, ಎಲ್ಲಿಯೂ ಓದುಗರಿಗೆ ಇದೂ ಅದೇ ರಾಗವೆಂದೋ ಗೋಳೆಂದೋ ಅನಿಸದಂತೆ ಹೊಸತನ ತಂದಿದ್ದಾರೆ. ಉದಾಹರಣೆಗೆ ಇಲ್ಲಿಯ ‘you were blockedʼ ಎನ್ನುವ ಕವನ ನಿಮ್ಮ ಮುಂದಿಡುವೆ. + +ಈ ಕವನದ ವಸ್ತು ಅನಾದಿಯಾದ ಪ್ರೇಮದ್ರೋಹ! ಅದನ್ನು ಹೇಳಲು ಕವಿಯಿತ್ರಿ ಫೇಸ್ ಬುಕ್ಕಿನಿಂದ ಒಲ್ಲದವರನ್ನು ಬ್ಲಾಕ್ ಮಾಡುವ ಈ ಕಾಲದ ತಂತ್ರವನ್ನು ರೂಪಕ ಮಾಡಿಕೊಳ್ಳುತ್ತಾರೆ. ದ್ರೋಹಿಸಿದವರು ದ್ರೋಹಕ್ಕೊಳಗಾದವರು ಮುಖ ತಪ್ಪಿಸಿ ಓಡಾಡುವ, ಕೊಂಡ ಉಡುಗೊರೆಗಳನ್ನು ಮರಳಿಸುವ ಚೇಷ್ಟೆಗಳು ಹಳೆ ಕಾಲದವಾದರೆ, ಈಗ ಫೇಸ್ಬುಕ್ಕಿನಿಂದ ಬ್ಲಾಕ್ ಮಾಡಿಬಿಡುವ Sizzling ice cream ತೆರದ ಇಬ್ಬಂದಿ ಮಾರ್ಗಗಳಿವೆ. ಅದನ್ನು ಕವಿತೆ ರೂಪಕವಾಗಿಸುವಲ್ಲಿ ಗೆದ್ದಿದೆ. + +ಅರೆಈ ಹೆಜ್ಜೆಗಳಾದರೂ ಎಷ್ಟುಸಮಯಸಾಧಕ….ಯಾವುದನ್ನು ಯಾರನ್ನು ಯಾವಾಗಹೇಗೆ ಬ್ಲಾಕ್ ಮಾಡಬೇಕೆನ್ನುವಎಲ್ಲ ಪಾಠಗಳನ್ನೂಅದೆಲ್ಲಿ ಕಲಿತು ಬರುತ್ತವೋ + +ಹೀಗೆಯೇ ಇಲ್ಲಿ ‘ಪಾರ್ಕಿಂಗ್ ಲಾಟ್’ ಎನ್ನುವ ಕವಿತೆಯೊಂದಿದೆ. ಆಶಾ ಖಾಲಿ ಪಾರ್ಕಿಂಗ್ ಲಾಟಿನ ಕಾರು ಮತ್ತದರ ಚಾಲಕನನ್ನಿಟ್ಟುಕೊಂಡು ಗಂಡು ಹೆಣ್ಣಿನ ನಡುವಿನ ಆಪ್ತಸಾಂಗತ್ಯದ ಕ್ಷಣ ದಾಖಲಿಸುವ ವಿಧಾನವೂ ಅವರ ಹೊಸ ರೂಪಕಗಳ ಬೆಳೆಗೆ ಸೊಗಸಾದ ಉದಾಹರಣೆ. ‘ಮದ್ದು ಬದಲಾಯಿಸುತ್ತಾಳೆ’ ಎನ್ನುವ ಕವಿತೆ ಬಲು ಸೂಕ್ಷ್ಮವಾಗಿ ಭಂಗಿತ ಪ್ರೇಮಿಕೆಯೊಬ್ಬಳ ಎದೆಗುದಿ ಒಣಕೆಮ್ಮಾಗಿ ಕಾಣಿಸಿಕೊಳುವ ಬಗೆಯನ್ನು ಹೇಳುತ್ತದೆ. ಅದು ಗೊತ್ತಿದ್ದೂ ಅಮ್ಮ ಕೇವಲ ಮಗಳ ಹೊರಕೆಮ್ಮಿಗೆ ದಿನದಿನವೂ ಮದ್ದು ಬದಲಾಯಿಸುವ ವ್ಯರ್ಥವನ್ನು ರೂಪಕವನ್ನಾಗಿಸಿ, ಕೊನೆಯೆರಡು ಸಾಲಿನಲ್ಲಿ ಎಲ್ಲ ಹೆತ್ತವರ ಅಸಹಾಯಕತೆಯನ್ನು ಘನವಾಗಿ ಹಿಡಿದಿದೆ. + + + +ಇಂತಹ ಅನೇಕ ಉದಾಹರಣೆಗಳು ಬೇಕೆಂದರೆ, ಆಶಾ ಅವರನ್ನು ಓದಿ! ಪ್ರೇಮಭಂಗದ, ದ್ರೋಹದ, ಜಡಗಟ್ಟುವಿಕೆಯೆ ಮುಂತಾದ ಜಗತ್ತಿನ ಅತಿ ಹಳೆಯ ತಲ್ಲಣಗಳನ್ನು, ಹೊಸ ಕಾಲವು ಕೊಟ್ಟ ದಿಟ್ಟತೆಯಿಂದ ಮುಖಾಮುಖಿಯಾಗುವ ಹುಡುಗಿಯೊಬ್ಬಳಿದ್ದಾಳಿಲ್ಲಿ ! ನೀನೂ ನೋಡಮ್ಮ – look here you, great venus – ನಿನ್ನ ಕುಚೇಷ್ಟೆಗಳನ್ನು ಜೀರ್ಣಿಸಿಕೊಳ್ಳಬಲ್ಲ ಆಧುನಿಕ ಯುವತಿ ಪಡೆ ತಯಾರಾಗಿದೆ ! (ವೀನಸ್ ಗ್ರೀಕ್ ಪುರಾಣದ ಪ್ರೇಮ ಕಾಮಗಳ ದೇವತೆ) + +ಅಮ್ಮನ ಮೇಲೆ ಕವಿತೆ ಬರೆಯದೆ ಯಾವ ಕವಿಗಳ ಸಂಕಲನವೂ ಪೂರ್ತಿಯಾಗದೆಂಬ ಷರಾವನ್ನು ಅದು ಹೇಗೆ ಎಲ್ಲಿ ಯಾರು ಬರೆದರೋ ತಿಳಿಯದು, ಯುವಕರಂತೂ ಜಿದ್ದಿಗೆ ಬಿದ್ದಂತೆ ಅಮ್ಮನನ್ನು ತಂದು ಸಂಕಲನದೊಳಗೆ ನೇಣುಹಾಕುವುದು ಅತ್ಯುಚಿತ ಕ್ರಿಯೆಯೆಂದು ಇತ್ತೀಚೆಗೆ ಎದೆ ಮೇಲೆ ಬರಕೊಂಡ ಹಾಗಿದೆ. ಹೀಗೆ ಮಾಡುತ್ತ ಅವರು ತಮ್ಮದೇ ಕಟ್ಟುಕಲ್ಪನೆಗಳ ಅಮ್ಮನನ್ನು ಕಡೆದುಕೊಂಡುಬಿಟ್ಟು ವಾಸ್ತವದ ಅಮ್ಮ ಆ ಕಲ್ಪನೆಯೊಳಗೆ ಅಮುಕಿಕೊಂಡಾದರೂ ಸರಿ ಅಡ್ಜಸ್ಟ್ ಆಗಲೇಬೇಕೆನ್ನುವ ಒತ್ತಡವನ್ನುಂಟು ಮಾಡುತ್ತಿದ್ದಾರೆ, ಆಧುನಿಕ ಸಾಹಿತ್ಯಿಕ ಭಯೋತ್ಪಾದನೆ ಇದು! ಆಶಾ ಕೂಡಾ ಅಮ್ಮನ ಕುರಿತೊಂದು ಪದ್ಯ ಬರೆದಿದ್ದಾರೆ. ಸಂಕಲನದ ಅತ್ಯುತ್ತಮ ಕವಿತೆಗಳಲ್ಲೊಂದಿದು. ಅಮ್ಮನ ಪ್ರಸ್ತಾಪವನ್ನೇ ಮಾಡದೆ ಅವರೂ ಸೇರಿದಂತೆ ಎಲ್ಲ ಕಾಲದ ಅಮ್ಮಂದಿರೂ ‘ಆತ್ಮದ ಜರೂರತ್ತಲ್ಲದಿದ್ದರೂʼ ಬಹುಕಾಲದಿಂದ ಘೋಸ್ಟ್ ರೈಟರುಗಳು ಬರೆದಿಟ್ಟ ಅಮ್ಮನ ಚಿತ್ರದ ಸಾಕಾರಕ್ಕಾಗಿ ಕಲ್ಲಾಗಲೇ ಬೇಕಾದ ಅನಿವಾರ್ಯತೆಯನ್ನು ಪದ್ಯ ಮಿತಪದಗಳಲ್ಲಿ ಹೇಳಿದೆ. ಮೂಗ ಮೇಲಿನ black heads ಹುತ್ತಗಟ್ಟುವ ಪ್ರತಿಮೆ ನಾನು ಇಲ್ಲೆ ಮೊದಲು ಓದಿದ್ದು. ಆಶಾ ತೀರಾ ವಾಚ್ಯವಾಗಿಸಿ ಯಾವುದನ್ನೂ ಹೇಳುವುದಿಲ್ಲ. ಬಹುಶಃ ಬಂಡಾಯ, ದಲಿತ, ಸ್ತ್ರೀವಾದದ ಘೋಷಣಾ ಸಾಹಿತ್ಯ ಮುಗಿದಂತೆ ಕಾಣುತ್ತಿದೆ. ಆ ಎಲ್ಲ ಚಳುವಳಿಗಳು ಕನ್ನಡದ ಒಟ್ಟೂ ಸಮಾಜದ ಮೇಲೆ, ಸಾಹಿತ್ಯದ ಮೇಲೆ ಉಂಟುಮಾಡಿದ ಅದ್ಭುತ ಚಾಲನಾ ಪ್ರಭಾವವನ್ನು ಅರ್ಥೈಸಿಕೊಂಡು, ಮನದಲ್ಲೂ ಇಟ್ಟುಕೊಂಡು, ಅದೇ ಕಾಲಕ್ಕೆ ಘೋಷಣೆಯ ಕಾಲ್ತೊಡಕುಗಳನ್ನೂ ಕಳಚಿ ಬರೆಯುವ ಹೊಸ ಯುವ ಸಮೂಹವೊಂದು ಕನ್ನಡದಲ್ಲಿ ತಯಾರಾಗಿದೆ. ನಿರ್ವಿವಾದವಾಗಿ ಆಶಾ ಕೂಡಾ ಆ ಪಡೆಯ ಉತ್ತಮ ಸದಸ್ಯೆ. + +(ಲಲಿತಾ ಸಿದ್ಧಬಸವಯ್ಯ) + +ಆಶಾ ಇತ್ತೀಚೆಗೆ ಮಗಳನ್ನು ಪಡೆದ ಹೊಸ ತಾಯಿ. ತಾಯಿಯಾಗುವ, ಮತ್ತಾ ಎಳೆಕೂಸಿನ ಜೊತೆಗೆ ತಾಯಿಯೂ ಬೆಳೆಯುವ ಕವಿತೆಯನ್ನು ನಾವೆಲ್ಲರೂ ಬರೆದವರೇ, ಕ್ಲೀಷೆಯೆನಿಸುವಷ್ಟು! ಆದರಿಲ್ಲಿ ಹೊಸ ತಂದೆಯೊಬ್ಬನ ಪುಳಕ ವರ್ಣಿಸುವ ಕವಿತೆಯೊಂದಿದೆ. ಮಗುವನ್ನು ಎತ್ತಿಕೊಂಡಾಗ ಆ ಹೊಸತಂದೆಗೆ ತನ್ನಪ್ಪ ಇದ್ದಿದ್ದರೆ ಎನ್ನುವ ಪ್ರಶ್ನೆಗಳಿಗೆಲ್ಲ ಉತ್ತರ ಸಿಕ್ಕಿದೆಯಂತೆ! ಮಾಮೂಲಿನ ಹಾಗೆ ಅವನು ಅಮ್ಮನನ್ನು ನೆನಪು ಮಾಡಿಕೊಂಡಿಲ್ಲ. ತಾತನಾಗುವ ಬಯಕೆಯೂ ಅಷ್ಟೇ ಬೆಲೆಯುಳ್ಳದ್ದೆಂದು ನಮ್ಮ ಕವಿಗಳಿಗೆ ಅರ್ಥಾಯಿತು ಸದ್ಯ! + + + +ಬರೆಯುತ್ತ ಹೋದಂತೆ ಅನೇಕ ಕವಿತೆಗಳ ಸಾಲನ್ನು ಉದ್ಧರಿಸಬಹುದು. ಆದರೆ ಓದುಗರ ತೆರೆದ ಅವಕಾಶಕ್ಕೆ ಮುನ್ನುಡಿಯು ಹಾಕುವ ಕತ್ತರಿ ಅದು. ನನಗೆ ಆಶಾ ಜಗದೀಶ್ ಅವರ ಕವಿತೆಗಳು ಇಷ್ಟವಾಗಿವೆ. ನಿಮಗೂ ಇಷ್ಟವಾಗುತ್ತವೆ. ಅವರಿಂದ ಇನ್ನೂ ಒಳ್ಳೆಯ ಕವಿತೆಗಳು ಕನ್ನಡದ ಓದುಗರಿಗೆ ಲಭ್ಯವಾಗಲಿ. ಆಶಾ ಸೊಗಸಾದ ಗದ್ಯವನ್ನೂ ಬರೆಯುತ್ತಾರೆ. ಅವರ ಲಲಿತ ಪ್ರಬಂಧಗಳು ಹೆಸರಾಗಿವೆ. ಅವೂ ಮತ್ತವರ ಕಥೆಗಳು ಬಹುಮಾನ ಪಡೆದಿವೆ. ಗದ್ಯ ಪದ್ಯಗಳೆರಡನ್ನೂ ಸಮರ್ಥವಾಗಿ ನಿಭಾಯಿಸುವ ಈ ಯುವ ಪ್ರತಿಭೆ ಕನ್ನಡ ಓದುಗರಿಂದ ಪ್ರಂಶಂಸೆ ಪಡೆಯಲೆಂದು ಬಯಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_169.txt b/Kenda Sampige/article_169.txt new file mode 100644 index 0000000000000000000000000000000000000000..6b36d047727e5337f0749d1ee53a9bd94653cb9f --- /dev/null +++ b/Kenda Sampige/article_169.txt @@ -0,0 +1,39 @@ +ಪ್ರತಿವರ್ಷ ಎಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ವಿದ್ಯಾರ್ಥಿಗಳಿಗೆ ರಜಾ – ಮೊದಲು ಪರೀಕ್ಷೆಗೆ ಓದಲು ರಜಾ, ನಂತರ ಪರೀಕ್ಷೆ ಮುಗಿದ ನಂತರದ ರಜಾ! ಪ್ರಾಥಮಿಕ ಶಾಲೆಗಾದರೆ ಎಪ್ರಿಲ್ ೧೦ರಂದು ಫಲಿತಾಂಶ, ನಂತರ ರಜಾ. ಎಸ್.ಎಸ್. ಎಲ್.ಸಿ. ಮತ್ತು ನಂತರದ ತರಗತಿಗಳಿಗೆ, ಎಪ್ರಿಲ್‌ನಲ್ಲಿ ಪರೀಕ್ಷೆ ಬರೆದ ನಂತರ ರಜೆಗಳೇ ತಾನೆ! ರಣ ರಣ ಬಿಸಿಲಿಗೂ, ರಜೆಗಳಿಗೂ ಅದೇನೋ ಮಧುರ ನಂಟು! + +(ಶಶಿಧರ ಹಾಲಾಡಿ) + +ಇದೇ ರೀತಿಯ ರಜೆಗೂ ಮುಂಚೆ, ಪರೀಕ್ಷೆಗೆ ಓದಿಕೊಳ್ಳಲು ರಜಾ ಎಂದು ಎರಡರಿಂದ ನಾಲ್ಕು ವಾರ ರಜ ನೀಡಿದಾಗ, ನಮಗೆ ಮಕ್ಕಳಿಗೆ ಖುಷಿಯೋ ಖುಷಿ! ಓದಲಿಕ್ಕೋ, ಆಟವಾಡಲಿಕ್ಕೋ ಒಟ್ಟಿನಲ್ಲಿ ರಜಾ ತಾನೆ! ಆದರೆ, ನಮಗೆಲ್ಲಾ ಪರೀಕ್ಷೆಗೆ ಓದಲು ರಜಾ ಕೊಟ್ಟರು ಎಂದರೆ ಪೋಷಕರು ಒಂದು ಕಣ್ಣನ್ನು ನಮ್ಮ ಮೇಲೆಯೇ ಇಟ್ಟಿರುತ್ತಾರೆ. ಅಂತಹ ರಜಾದಿನಗಳಲ್ಲಿ, ನಾನು ಸರಿಯಾಗಿ ಓದುತ್ತಿದ್ದೆನೋ ಇಲ್ಲವೋ ಎಂದು ನನ್ನನ್ನು ಗಮನಿಸುತ್ತಿದ್ದವರೆಂದರೆ ನಮ್ಮ ಅಮ್ಮಮ್ಮ! ನನ್ನ ತಂಗಿಯರೂ ಸೇರಿದಂತೆ ನಮ್ಮ ಮನೆಯಲ್ಲಿ ಒಟ್ಟು ನಾಲ್ಕು ಜನ ವಿದ್ಯಾರ್ಥಿಗಳು – ಮನೆಯಲ್ಲಿ ನಮಗೆಲ್ಲಾ ಅಮ್ಮಮ್ಮನೇ ಹೆಡ್‌ಮೇಡಂ. ಪ್ರತಿ ದಿನ ಬೆಳಗ್ಗೆ ಐದು ಗಂಟೆಗೆ ಎದ್ದೇಳಿಸಿ, ಕಾಫಿ ಮಾಡಿಕೊಡುತ್ತಿದ್ದರು. ದಿನವಿಡೀ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡುತ್ತಿದ್ದಾರಾ ಇಲ್ಲವಾ ಎಂದು, ನಾವು ಕುಳಿತ ಜಾಗದ ಸುತ್ತ ಮುತ್ತ ಅವರು ಆಗಾಗ ಠಳಾಯಿಸುತ್ತಿದ್ದರು. ಅದರಲ್ಲೂ ಎಸ್.ಎಸ್.ಎಲ್.ಸಿ., ಪಿಯುಸಿ ಪರೀಕ್ಷೆ ಎಂದರೆ ಇನ್ನಷ್ಟು ಪ್ರಾಮುಖ್ಯತೆಯನ್ನು ಅವರೇ ಆರೋಪಿಸಿಕೊಂಡು, ಮನೆಯ ಇಡೀ ವಾತಾವರಣಕ್ಕೆ ಪರೀಕ್ಷೆಗಳ ಬಿಗುವನ್ನು ತಂದಿಡುಬಿಡುತ್ತಿದ್ದರು. + +ಸದುದ್ದೇಶದ್ದೇ ಆದರೂ, ಅವರ ಈ ಮೇಡಂಗಿರಿಯ ಬಿಸಿಯಿಂದ ಸ್ವಲ್ಪ ದೂರ ಇರಲು ನಾನು ಕಂಡುಕೊಂಡ ಉಪಾಯವೆಂದರೆ `ಓದಲಿಕ್ಕೆ ಹಕ್ಕಲಿಗೆ ಹೋಗುವುದು!’ ಬೆಳಗ್ಗೆ ತಿಂಡಿ ತಿಂದು, ಕೈಯಲ್ಲಿ ಒಂದು ಪುಸ್ತಕ ಹಿಡಿದು (ಇದು ಹೆಚ್ಚು ದಪ್ಪ ಇದ್ದಷ್ಟೂ ಅನುಮತಿ ಸಿಗುವುದು ಬೇಗ), ಮನೆ ಹಿಂದಿನ ದರೆಯ ದಾರಿಯನ್ನು ಹತ್ತಿ ಹಾಡಿಗೋ, ಹಕ್ಕಲಿಗೋ ಹೊರಡುವುದು ನನ್ನ ನೆಚ್ಚಿನ ಹವ್ಯಾಸ. `ಎಲ್ಲಿಗೆ ಹೊರಟಿತು ನಿನ್ನ ಸವಾರಿ?’ ಎಂದು ನಿಧಾನವಾಗಿ ನಡೆಯುತ್ತಾ ಗುಡ್ಡೆಯ ಕಡೆ ಹೊರಟ ನನ್ನನ್ನೇ ನೋಡುತ್ತಾ ಅವರು ಕೇಳುವುದುಂಟು. `ಓದಲಿಕ್ಕೆ ಹಕ್ಕಲಿಗೆ ಹೊರಟೆ. ನನಗೆ ಓದಲಿಕ್ಕೆ ಎಷ್ಟು ಪೋರ್ಷನ್ ಇದೆ, ಗೊತ್ತುಂಟಾ?’ ಎಂದು ಕೈಲಿದ್ದ ಪುಸ್ತಕವನ್ನು ತೋರಿಸಿ, ಅವರಿಗೇ ತಿರುಪ್ರಶ್ನೆ ಎಸೆದು, ಮನೆ ಹಿಂದಿನ ಹಕ್ಕಲಿಗೆ ಹೋಗುತ್ತಿದ್ದೆ. + +ಇಪ್ಪತ್ತು ಅಡಿ ಎತ್ತರದ ದರೆಯ ಏರು ದಾರಿಯನ್ನು ಏರಿ ಸಾಗಿದರೆ, ಐದು ನಿಮಿಷದಲ್ಲಿ ಹಕ್ಕಲು ಸಿಗುತ್ತದೆ. ಅದು ಇತ್ತ ದಟ್ಟ ಹಾಡಿಯೂ ಅಲ್ಲ, ಅತ್ತ ಹಕ್ಕಲೂ ಅಲ್ಲ ಎನ್ನಬಹುದು. ಅಲ್ಲಿದ್ದದ್ದು ಸಣ್ಣ ಗಾತ್ರದ ಮರಗಳು ಮಾತ್ರ. ಆ ಜಾಗವು ನಮ್ಮದೇ ಕುಮ್ಕಿ ಜಾಗವಾದ್ದರಿಂದ, ಪ್ರತಿ ಇಪ್ಪತ್ತು ಅಥವಾ ಮೂವತ್ತು ವರ್ಷಗಳಿಗೊಮ್ಮೆ ಅಲ್ಲಿನ ಮರಗಳನ್ನು ಕಡಿಸಿ, ಮಾರುತ್ತಿದ್ದರು. ಗದ್ದೆ, ಗುಡ್ಡ, ಕಾಡುಗಳ ನಡುವೆ ತಾತ್ಕಾಲಿಕ ರಸ್ತೆ ನಿರ್ಮಿಸಿ, ಲಾರಿ ತಂದು `ಹಾಡಿ ಕಡಿಯುವ ಕಂಟ್ರಾಕ್ಟರು’ಗಳು ಮರಗಳನ್ನು ಪೇಟೆಗೆ ಸಾಗಿಸುತ್ತಿದ್ದರು. ನಮ್ಮೂರಿನ ಕೃಷಿಕರಿಗೆ ಅದೊಂದು ಪ್ರಮುಖ ಆದಾಯ. ಈ ರೀತಿ ಎರಡು ಅಥವಾ ಮೂರು ದಶಕಗಳಿಗೊಮ್ಮೆ ಹಾಡಿ ಮಾರಿದಾಗ ಸಿಗುವ ದುಡ್ಡಿನಲ್ಲಿ, ಮದುವೆ ಮಾಡುವುದೋ, ಮನೆ ಕಟ್ಟುವುದೋ, ಬಾವಿ ತೋಡುವುದನ್ನೋ ಮಾಡುತ್ತಿದ್ದರು. ಈ ರೀತಿ ಆಗಾಗ ಅಲ್ಲಿನ ಮರಗಳನ್ನು ಕಡಿದು ಮಾರುತ್ತಿದ್ದುರಿಂದಾಗಿ, ಆ ಜಾಗದಲ್ಲಿ ದೊಡ್ಡ ಗಾತ್ರದ, ಎತ್ತರದ ಮರಗಳು ಬೆಳೆಯುವ ಅವಕಾಶವೇ ಇರಲಿಲ್ಲ. ಆದ್ದರಿಂದ ಅದೊಂದು ಖಾಯಂ ಹಕ್ಕಲು. + +ಆ ಹಕ್ಕಲಿನ ಕೆಳ ಭಾಗದಲ್ಲಿ, ಅಂದರೆ, ಆ ಕುಮ್ಕಿ ಜಾಗಕ್ಕೆ ತಾಗಿಕೊಂಡ ಗದ್ದೆಯ ಹತ್ತಿರ ನಾಲ್ಕಾರು ಗೋವೆ ಮರಗಳಿದ್ದವು. ಇಳಿಜಾರು ಗುಡ್ಡದಲ್ಲಿ ಆ ಹಕ್ಕಲು ಬೆಳೆದಿತ್ತು. ಹಕ್ಕಲಿನ ಮಧ್ಯಭಾಗದಲ್ಲಿ ಮುರಿನ ಮರ, ಸಳ್ಳೆ ಮರ, ನೇರಳೆ ಮರ, ದೂಪದ ಮರ, ಮುಳ್ಳುಹರಳಿನ ಮರ, ಕೆಲವು ಕಿರಾಲು ಬೋಗಿ ಮರಗಳಿದ್ದವು. ಹಕ್ಕಲಿನ ಎತ್ತರದ ಭಾಗದಲ್ಲಿ ಕಂಕುಳು ಮರ, ಹಿರಾಲು ಬೋಗಿ ಮತ್ತಿತರ ಮರಗಳು, ಹಲವು ಮುಳ್ಳುಗಿಡಗಳು, ಬಳ್ಳಿಗಳು ಬೆಳೆದಿದ್ದು, ಅವುಗಳ ನಡುವೆ ಒಂದು ಬಾಗಾಳು ಮರವಿತ್ತು. + +ಅಲ್ಲೆಲ್ಲಾ ಮಧ್ಯಮ ಗಾತ್ರದ ಮರಗಳು ಒತ್ತೊತ್ತಾಗಿ ಬೆಳೆದಿದ್ದರಿಂದಾಗಿ, ಸುತ್ತಲೂ ನೆರಳು, ನಡು ಮಧ್ಯಾಹ್ನವಾದರೂ ಸೂರ್ಯ ಕಿರಣಗಳು ನೆಲಕ್ಕೆ ಬೀಳುತ್ತಿರಲಿಲ್ಲ. ಇವುಗಳ ಪೈಕಿ ನನಗೆ ಇಷ್ಟವೆಂದರೆ ಬಾಗಾಳು ಮರ. ಇಪ್ಪತ್ತು ಅಡಿ ಎತ್ತರದ ಆ ಮರದ ತುಂಬಾ ಹಸಿರು ಎಲೆಗಳು; ಅದರ ಕೊಂಬೆಗಳು ಅಡ್ಡಡ್ಡ ಬೆಳೆದಿದ್ದರಿಂದ ಕುಳಿತುಕೊಳ್ಳಲು ಅನುಕೂಲ. ಬೆಳಗ್ಗೆ ತಿಂಡಿ ತಿಂದು ಹೊರಟವನೇ ಆ ಮರ ಹತ್ತಿ ಕುಳಿತುಕೊಂಡು, ಪುಸ್ತಕ ಬಿಡಿಸುತ್ತಿದ್ದೆ. ಮಧ್ಯಾಹ್ನದ ಊಟದ ತನಕ ಆ ಬಾಗಾಳು ಮರವೇ ನನ್ನ ರೀಡಿಂಗ್ ಡೆಸ್ಕ್, ರೀಡಿಂಗ್ ರೂಂ ಎಲ್ಲವೂ. + +ಇತ್ತ ಪುಸ್ತಕದ ಹಾಳೆಗಳನ್ನು ತಿರುವುತ್ತಾ, ಪ್ರಶ್ನೋತ್ತರಗಳನ್ನು ಮನನ ಮಾಡುತ್ತಿರುವಾಗ, ಅತ್ತಲಿಂದ ತಣ್ಣಗೆ ಗಾಳಿ ಬೀಸುತ್ತಿತ್ತು. ಆ ನಡುವೆ ಹಕ್ಕಿಗಳು ಹಾರಿ ಬರುತ್ತಿದ್ದವು. ಹಕ್ಕಿಗಳ ಆ `ಮಿಕ್ಸ್ಡ್ ಹಂಟಿಂಗ್’ ಪಾರ್ಟಿಯಲ್ಲಿ ನಾಲ್ಕಾರು ಪ್ರಭೇದದ ಹಕ್ಕಿಗಳು ಮಿಡತೆಗಳ ಬೇಟೆಯಾಡುತ್ತಿದ್ದವು. ತರಲೆ ಹಕ್ಕಿಗಳು ಹಕ್ಕಿಗಳು ನೆಲದಲ್ಲಿ ಆಹಾರ ಹುಡುಕಿದರೆ, ಕೊಂಬೆಯಲ್ಲಿ ನಾಲ್ಕಾರು ಹಕ್ಕಿಗಳು ಕೀಟಗಳನ್ನು ಹುಡುಕುತ್ತಿದ್ದವು, ಇನ್ನೂ ಒಂದೆರಡು ಹಕ್ಕಿಗಳು ಮರದ ತುದಿಯಲ್ಲಿರುವ ಎಲೆಗಳ ಅಡಿಯಲ್ಲಿ ತಪಾಸಣೆ ಮಾಡುತ್ತಿದ್ದವು. ವಿಶೇಷ ಎಂದರೆ, ಬೇರೆ ಬೇರೆ ಪ್ರಭೇದದ ಹಕ್ಕಿಗಳು ಈ ರೀತಿ ಪರಸ್ಪರ ಸಹಾಯ ಮಾಡುವ ತತ್ವದಲ್ಲಿ ಒಂದು ಗುಂಪನ್ನು ರೂಪಿಸಿಕೊಂಡಿದ್ದು! ಪಿಕಳಾರ, ಬುಲ್‌ಬುಲ್, ನೀಲ ಸಾಮ್ರಾಟ ಹಕ್ಕಿ (ಬ್ಲಾಕ್ ನೇಪ್ಡ್ ಫ್ಲೈಕ್ಯಾಚರ್), ಟಿಕೆಲ್ಸ್ ಫ್ಲೈಕ್ಯಾಚರ್, ಕಾಜಾಣ, ಗೋಲ್ಡನ್ ಓರಿಯಲ್, ಬ್ಲಾಕ್ ಹೆಡೆಡ್ ಓರಿಯಲ್, ಅಯೋರಾ ಮೊದಲಾದ ಹಕ್ಕಿಗಳು ಒಟ್ಟು ಗೂಡಿ ಈ ರೀತಿ ಕೀಟಗಳ ಬೇಟೆಯಾಡುವುದನ್ನು ನೋಡುವುದೇ ಒಂದು ಆಪ್ತ ಅನುಭವ. ಹಕ್ಕಲಿನ ಒಂದು ತುದಿಯಿಂದ ಹೊರಟ ಈ ಮಿಕ್ಸ್ಡ್‌ ಹಂಟಿಂಗ್ ಪಾರ್ಟಿಯು, ನಿಧಾನವಾಗಿ ನಾನು ಕುಳಿತ ಬಾಗಾಳು ಮರದ ಹತ್ತಿರ ಬಂದ ಕೂಡಲೆ, ಅಲ್ಲಿ ಕುಳಿತ ಈ ಮನುಷ್ಯ ಪ್ರಾಣಿಯನ್ನು ಕಂಡು, ಸಣ್ಣಗೆ ದಿಗಿಲಾಗಿ ಮೆತ್ತಗೆ ಸ್ವಲ್ಪ ದೂರ ಸರಿದು, ನನ್ನ ಕಡೆ ಒಂದೆರಡು ಬಾರಿ ಕತ್ತು ತಿರುಗಿಸಿ ನೋಡಿ, ತಮ್ಮ ಬೇಟೆಯನ್ನು ಮುಂದುವರಿಸುತ್ತಿದ್ದವು. + + + +ಹಕ್ಕಲಿನ ತುದಿಯಲ್ಲಿದ್ದ ಆ ಬಾಗಾಳು ಮರದ ಮೇಲೆ ಹೆಚ್ಚು ಸಮಯ ನಾನು ಕಳೆದದ್ದು ಡಿಗ್ರಿ ಪರೀಕ್ಷೆಯ ಸಮಯದಲ್ಲಿ. ಒಂದು ದಪ್ಪನೆಯ ಇಂಗ್ಲಿಷ್ ಪುಸ್ತಕ ಹಿಡಿದು ಹಕ್ಕಲಿನತ್ತ ನಾನು ಹೊರಟೆನೆಂದರೆ, ಅಮ್ಮಮ್ಮನೂ ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಹಕ್ಕಲಿನ ಮರದ ಮೇಲೆ ಕುಳಿತು, ದಪ್ಪನೆಯ ಪುಸ್ತಕ ಓದುತ್ತಿದ್ದಾನೆ ಎಂದು, ಹೆಮ್ಮೆಯಿಂದಲೋ ಏನೋ, ಸುಮ್ಮನಿರುತ್ತಿದ್ದರು. ಆ ರೀತಿ ಕುಳಿತಾಗ ಒಮ್ಮೊಮ್ಮೆ ಅಪರೂಪದ ಹಕ್ಕಿಗಳನ್ನು ನಾನು ಕಂಡದ್ದುಂಟು. ಪ್ಯಾರಡೈಸ್ ಫ್ಲೈ ಕ್ಯಾಚರ್‌ನ ಗಂಡು ಹಕ್ಕಿಯು ಹಾರಿ ಬಂದರಂತೂ, ಆ ಹಗಲಿನಲ್ಲೂ ಅಲ್ಲೆಲ್ಲಾ ಮಿಂಚಿನ ಸಂಚಾರ. ಹಕ್ಕಲಿನ ನಸು ನೆರಳಿನಲ್ಲಿ ಆ ಹಕ್ಕಿಯು ತನ್ನ ಒಂದಡಿ ಉದ್ದದ ಬಾಲವನ್ನು ಬಳುಕಿಸುತ್ತಾ ಹಾರಿ ಬಂದರಂತೂ, ಆ ನೋಟವು ಪುಟ್ಟ ಕಾವ್ಯಾನುಭವ. ಒಂದು ಮರದಿಂದ ಇನ್ನೊಂದು ಮರಕ್ಕೆ ಹಾರಿ ಹೋಗಿ ಕುಳಿತ ಅದರ ಬಾಲವು, ಆ ಇಡೀ ಪರಿಸರಕ್ಕೆ ಹೊಸ ಭಾಷ್ಯವನ್ನೇ ಬರೆಯುತ್ತದೆ. ಅದರ ಜತೆ, ಜುವನೈಲ್ ಪ್ಯಾರಡೈಸ್ ಫ್ಲೈ ಕ್ಯಾಚರ್ ಕಂಡರೆ, ಅದರ ನಸುಗೆಂಪು ಬಾಲದ ನೋಟ ಮೂಡಿಸುವ ಅನುಭವವೇ ವಿಶಿಷ್ಟ, ವಿಭಿನ್ನ. ಆ ಹಕ್ಕಲಿಗೆ ಪ್ರತಿದಿನ ಭೇಟಿಕೊಡುತ್ತಿದ್ದ ಇನ್ನೊಂದು ಬಾಲದ ಹಕ್ಕಿ ಎಂದರೆ ಉದ್ದ ಬಾಲದ ಕಾಜಾಣ. ಕುವೆಂಪು ಅವರ ಕಾದಂಬರಿಯ ಮುಖಪುಟದಲ್ಲಿ ರಾರಾಜಿಸುತ್ತಿರುವುದು ಇದೇ ಕಾಜಾಣ. + +ಪ್ರಕೃತಿಯ ಮೊದಲ ಪಾಠಗಳನ್ನು ನಾನು ಕಲಿತದ್ದು ಆ ಹಕ್ಕಲಿನಲ್ಲಿ ಎಂದು ಹೇಳಿದರೆ ತಪ್ಪಾಗದು. ಹಾಗೆ ನೋಡಿದರೆ, ನಮ್ಮ ಹಳ್ಳಿಯ ಮನೆಯ ಪರಿಸರವೇ ಒಂದು ಒಳ್ಳೆಯ ಪಾಠಶಾಲೆ. ಮನೆ ಎದುರು ಗದ್ದೆ, ಮನೆ ಸುತ್ತಲೂ ಮರಗಳು, ಮನೆಯ ಛಾವಣಿಯ ಮೇಲೆ ಚಾಚಿಕೊಂಡ ಭಾರೀ ಗಾತ್ರದ ಹಲಸಿನ ಮರ, ಇಪ್ಪತ್ತು ಅಡಿ ದೂರದಲ್ಲಿರುವ ಬೃಹತ್ ಗಾತ್ರದ ಎರಡು ತಾಳೆ ಮರಗಳ ಒಣಗಿದ ಎಲೆಗಳು ಮಾಡುವ ಬರಬರ ಸದ್ದು, ಅಂಗಳದ ಅಂಚಿನ ಹೂಗಿಡಗಳು, ಬಳ್ಳಿಗಳು, ದಾಸವಾಳ, ಬೆಟ್ಟ ತಾವರೆ – ಪಟ್ಟಿ ಮಾಡುತ್ತಾ ಹೋದರೆ ಬೇಗನೆ ಮುಗಿಯದು. ಜತೆಗೆ ನಾವು ಶಾಲೆಗೆ ಹೋಗುತ್ತಿದ್ದ ದಾರಿಯೂ ಇನ್ನೊಂದು ಪಾಠಶಾಲೆ. ನಾಲ್ಕನೆಯ ತರಗತಿಯ ತನಕ ಓದಿದ ಗೋರಾಜಿ ಶಾಲೆ, ೫ರಿಂದ ೭ರ ತನಕ ಓದಿದ ಹಾಲಾಡಿ ಶಾಲೆ, ನಂತರ ಓದಿದ ಶಂಕರನಾರಾಯಣ ಹೈಸ್ಕೂಲು – ಇವೆಲ್ಲಕ್ಕೂ ಹೋಗಬೇಕೆಂದರೆ, ಗದ್ದೆ ಬಯಲು ಮತ್ತು ಕಾಡಿನ ನಡುವೆ ಸಾಗುವ ದಾರಿಯಲ್ಲಿ ನಮ್ಮ ಪ್ರತಿದಿನದ ಪಯಣ. + +ದಿನವೂ ಒಂದೇ ದಾರಿಯಾ ದರೂ, ತಿಂಗಳುಗಟ್ಟಲೆ ಪ್ರತಿದಿನ ಅಂತಹ ದಾರಿಯಲ್ಲಿ ಸಾಗುವಾಗ, ನಮ್ಮ ಸುತ್ತಲಿನ ಪ್ರಕೃತಿಯಲ್ಲಿ ಕಾಲದಿಂದ ಕಾಲಕ್ಕೆ ಆಗುತ್ತಿರುವ ಬದಲಾವಣೆಯನ್ನು ಗುರುತಿಸುವ ಅಪೂರ್ವ ಅವಕಾಶ. ಮಳೆಗಾಲದಲ್ಲಿ ಗಿಡಗಳು ಹೇಗಿವೆ, ಬೇಸಗೆಯಲ್ಲಿ ಹೇಗೆ ಒಣಗುತ್ತವೆ, ಚಳಿಗಾಲದಲ್ಲಿ ಹಾಡಿ, ಹಕ್ಕಲಿನ ತುಂಬಾ ಉದುರುವ ಎಲೆಗಳಿಂದ ಸಿಗುವ ದರಲೆ, ಅದನ್ನು ರೈತರು ಗುಡ್ಡೆ ಮಾಡಿ ಮನೆಗೆ ಸಾಗಿಸಿ, ಹಟ್ಟಿಯಲ್ಲಿ ಹರಡಿ ಗೊಬ್ಬರ ಮಾಡುವ ಪರಿ, ಇವೆಲ್ಲವನ್ನೂ ಆ ದಾರಿಯಲ್ಲಿ ದಿನಾ ನಡೆಯುವ ನಮಗೆ ನೋಡುವ ಅವಕಾಶ! ಇದೂ ಸಹ ಎಷ್ಟು ಉತ್ತಮ ಪರಿಸರ ಪಾಠ ಅಲ್ಲವೆ! + +ಕಾಡು, ಹಾಡಿ, ಹಕ್ಕಲು, ಗುಡ್ಡ ಇಲ್ಲೆಲ್ಲಾ ಒಬ್ಬನೇ ಸುತ್ತುವುದೆಂದರೆ ನನಗೆ ಅದೆಲ್ಲಿಯದೋ ಉತ್ಸಾಹ, ಉಲ್ಲಾಸ. ಆದರೆ, ನಮ್ಮೂರಿನ ರೈತರಿಗೆ ನನ್ನ ಈ ಹವ್ಯಾಸದ ಮೇಲೆ ಸಣ್ಣ ಅಪನಂಬಿಕೆ! ಒಂದು ದಿನ ಹೀಗಾಯ್ತು. ಡಿಗ್ರಿಗೆ ಮಣ್ಣು ಹೊತ್ತಿದ್ದು ಮುಗಿದಿತ್ತು. ಆ ನಂತರ ಒಂದು ವರ್ಷ ನಿರುದ್ಯೋಗಿಯಾಗಿ ಮನೆಯಲ್ಲೇ ಇದ್ದೆನಲ್ಲ – ಅಂತಹ ದಿನಗಳ ಒಂದು ಸಂಜೆ, ಐದು ಗಂಟೆಯ ಸಮಯಕ್ಕೆ ನಮ್ಮ ಮನೆ ಪಶ್ಚಿಮ ದಿಕ್ಕಿನಲ್ಲಿ ಒಂದು ಕಿ.ಮೀ. ದೂರದಲ್ಲಿದ್ದ ಸೊಪ್ಪಿನ ಅಣೆಯ ಕಡೆ ಹೊರಟೆ. ಸೊಪ್ಪಿನ ಅಣೆಯ ತುಂಬಾ ಎತ್ತರವಾದ ಮರಗಳು ದಟ್ಟವಾಗಿ ಬೆಳೆದಿದ್ದವು. ಹಿಂದೆ ಅಲ್ಲಿ ಹುಲಿಗಳಿದ್ದವಂತೆ. ಆ ಬೆಟ್ಟದ ತುದಿಗೆ ಹೋದರೆ, ದೂರದಲ್ಲಿ ಪಶ್ಚಿಮಘಟ್ಟಗಳ ಸಾಲು ಕಾಣಿಸುತ್ತಿತ್ತು. ಹಾಗೇ ನೋಡಿಕೊಂಡು, ಅದಕ್ಕೆ ತಾಗಿಕೊಂಡು ಒಂದು ಕಿ.ಮೀ. ಉತ್ತರ ದಿಕ್ಕಿನಲ್ಲಿದ್ದ ಕಲ್ಲಕಟ್ರ ಅಣೆಯತ್ತ ನಡೆದೆ. ಅವತ್ತಿನ ಮುಖ್ಯ ಉದ್ದೇಶವೆಂದರೆ, ಸಂಜೆಯ ಹೊತ್ತಿನಲ್ಲಿ ಅಲ್ಲಿ ಕಾಣಿಸುವ ಎರಡು, ಮೂರು ಪ್ರಭೇದದ ಗೂಬೆಗಳನ್ನು ನೋಡಿ, ಗುರುತಿಸುವುದು. ಸಂಜೆ ಆರರ ಸಮಯಕ್ಕೆ ಒಂದು ಗೂಬೆ ಸಿಳ್ಳೆ ಹಾಕಿದಂತೆ ಕೂಗತೊಡಗಿತು. ನಮ್ಮೂರಿನಲ್ಲಿ ಸಾಮಾನ್ಯ ಎನಿಸಿದ್ದ ಮೀನು ಗೂಬೆ ಅದು. ಇದು ಎರಡು ಶೈಲಿಯಲ್ಲಿ ಕೂಗುತ್ತದೆ. ಇನ್ನೊಂದು ಶೈಲಿ ಎಂದರೆ ಊಂ ಹೂಂ ಊಂ. ನಸುಗತ್ತಲಿನಲ್ಲಿ, ಎತ್ತರದ ಬೋಗಿಮರದ ಮೇಲಿನಿಂದ ಬಂದ ಶಿಳ್ಳೆಯಂತಹ ದನಿಯನ್ನು ಅನುಸರಿಸುತ್ತಾ, ಆ ದಿಕ್ಕಿಗೆ ನೋಡುತ್ತಾ, ಹಾಡಿಯ ನಡುವೆ ನಿಧಾನವಾಗಿ ನಡೆಯುತ್ತಿದ್ದೆ. + +`ಹ್ವಾಯ್, ಇಲ್ಲಿ ಎಂತ ಮಾಡ್ತಿದ್ದೀರಿ?’ ಎಂದು ಕೇಳುತ್ತಾ ಗಿಡ್ಡ ನಾಯಕ ಒಮ್ಮೆಲೇ ಪ್ರತ್ಯಕ್ಷನಾದ. ಅವನು ಸೌದೆ ತರಲು ಬಂದಿರಬೇಕು. ಅವನ ಮನೆ ಅಲ್ಲೇ ಕೆಳಗಿನ ಕಂಬಳಗದ್ದೆಯ ಬಳಿ. `ಹೀಗೆ ಸುಮ್ಮನೆ ಮಾರಾಯ.. ಈ ಹಾಡಿ, ಗುಡ್ಡ ನೋಡುವಾ ಅಂತ’ ಎಂದೆ. + +`ನೀವು ಹೀಂಗೆಲ್ಲಾ ಸುಮ್ಮನೆ ಓಡಾಡುತ್ತೀರಿ ಎಂದರೆ ನಾನು ನಂಬುವುದಿಲ್ಲ. ನಿಮ್ಮನೆಯ ದನವೋ, ಗುಡ್ಡವೋ ತಪ್ಪಿಸಿಕೊಂಡಿರಬೇಕು, ಅದಕ್ಕೇ ಹುಡುಕಿಕೊಂಡಿ ಬಂದಿದ್ದೀರಿ, ಅಲ್ದಾ?’ ಎಂದು ಆತ ನಗುತ್ತಾ ಕೇಳಿದ. ಪಾಪ, ಅವನ ಕುತೂಹಲಕ್ಕೇಕೆ ನಿರಾಸೆ ಮಾಡುವುದು ಎಂದು `ಹೌದು..’ ಎಂದು ಕಲ್ಲಕಟ್ರ ಅಣೆಯತ್ತ ಸಾಗಿದೆ. ಅದರ ತುದಿಯನ್ನೇರಿದರೆ, ನಮ್ಮೂರಿನ ಒಟ್ಟು ನೋಟ ಮತ್ತು ದೂರ ದಿಗಂತದಲ್ಲಿ ಪಶ್ಚಿಮ ಘಟ್ಟಗಳ ಆಗುಂಬೆ ಘಾಟಿ ಸುತ್ತಲಿನ ಶ್ರೇಣಿ, ಅಲ್ಲೆಲ್ಲೋ ಪರ್ವತ ಕಮರಿಯ ಸಂದಿಯಲ್ಲಿ ನೆಗೆಯುವ ಒಂದು ಜಲಪಾತ ಎಲ್ಲವೂ ಕಾಣಿಸುತ್ತಿತ್ತು. ಅದನ್ನು ಒಂದಷ್ಟು ಹೊತ್ತು ನೋಡಿ, ಆ ದಿನ ನಿಧಾನವಾಗಿ ಮನೆಗೆ ವಾಪಸಾಗುವಾಗ ಪೂರ್ತಿ ಕತ್ತಲಾಗಿತ್ತು. + + + +`ನಿನ್ನ ಪರೀಕ್ಷೆ ಎಲ್ಲಾ ಮುಗಿತಲ್ಲಾ, ಇನ್ನೂ ಓದುವುದಕ್ಕೆ ಹೋಗಿದ್ದೆಯಾ?’ ಎಂದು ಒಂದೊಂದು ದಿನ ನನ್ನ ಬರವನ್ನೇ ಕಾಯುತ್ತಿದ್ದ ಅಮ್ಮಮ್ಮ ಕೇಳುತ್ತಿದ್ದರು. `ಪರೀಕ್ಷೆ ಎಲ್ಲಾ ಮುಗಿಯಿತು ಅಮ್ಮಮ್ಮ, ಮುಂದಿನ ವಾರ ರಿಸಲ್ಟ್’ ಎಂದು, ಅವರನ್ನು ತಬ್ಬಿಬ್ಬುಗೊಳಿಸಲು ಯತ್ನಿಸಿದೆ. ಆದರೆ, ಮುಂದಿನ ವಾರ ಬೇಸ್ತು ಬೀಳುವ ಸರದಿ ನನ್ನದಾಗಿತ್ತು. ಡಿಗ್ರಿ ಪರೀಕ್ಷೆಗಳಲ್ಲಿ ಕಬ್ಬಿಣದ ಕಡಲೆ ಎನಿಸಿದ್ದ ಮ್ಯಾಥಮ್ಯಾಟಿಕ್ಸ್ನಲ್ಲಿ ನನಗೆ ಸಿಕ್ಕಿದ್ದ ಅಂಕ ಕೇವಲ ೩೫! ನಮ್ಮೂರಿನ ಹಕ್ಕಲಿನಲ್ಲಿ ಹಕ್ಕಿಯ ಹಾಡನ್ನು ಕೇಳುತ್ತಾ, ಬಾಗಾಳು ಮರದ ಮೇಲೆ ಕುಳಿತು ಅದನ್ನೇ ರೀಡಿಂಗ್ ಡೆಸ್ಕ್ ಮಾಡಿಕೊಂಡು, ಮರದ ಕೆಳಗೆ ಹರಿದಾಡುತ್ತಿದ್ದ ನಕ್ಷತ್ರ ಆಮೆಯನ್ನು ಗಮನಿಸುತ್ತಾ, ತನ್ನ ಬಾಲದಿಂದಲೇ ಕಾವ್ಯ ಬರೆಯುತ್ತಿದ್ದ ಪ್ಯಾರಡೈಸ್ ಫ್ಲೈ ಕ್ಯಾಚರ್ ಹಾರುವುದನ್ನು ನೋಡುತ್ತಾ, ಆಗೊಮ್ಮೆ ಈಗೊಮ್ಮೆ ಮರದ ತರಗಲೆಯ ಅಡಿ ಸರಿಯುತ್ತಿದ್ದ ನಾಗರಹಾವನ್ನು ಕಂಡು ಬೆರಗಾಗಿದ್ದಕ್ಕೆ, ಮೌಲ್ಯ ಮಾಪಕರು ಆ ವರ್ಷದ ಪರೀಕ್ಷೆಯಲ್ಲಿ ನನಗೆ ನೀಡಿದ್ದ ಅಂಕಗಳು ಅಷ್ಟೇ! + +(ಗುಡ್ಡ = ಗಂಡು ಕರು. ಹಕ್ಕಲು = ಮರಗಿಡಗಳು ವಿರಳವಾಗಿ ಬೆಳೆದ ಕಾಡು. ಬಾಗಾಳು ಮರ = ರಂಜದ ಹೂವಿನ ಮರ.) + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_17.txt b/Kenda Sampige/article_17.txt new file mode 100644 index 0000000000000000000000000000000000000000..d0f455bee5871acde762cfb33d2a0f833f94270a --- /dev/null +++ b/Kenda Sampige/article_17.txt @@ -0,0 +1,17 @@ +ಯಾವುದಾದರೂ ಸಂದರ್ಶನವನ್ನು ಕೊಡುವಾಗ ಅಥವಾ ಸಭೀಕರೆದುರು ಮಾತನಾಡುವಾಗ ನರ್ವಸ್ ಆಗುವ ಸಮಸ್ಯೆ ಬಹಳ ಮಂದಿಗಿದೆ. ಇಂತಹ ಸಮಸ್ಯೆಯನ್ನು ನಿವಾರಿಸಲು ಮನಶಾಸ್ತ್ರಜ್ಞರು ಬಗೆ ಬಗೆಯ ಮಾರ್ಗಗಳನ್ನು ಸೂಚಿಸುತ್ತಾರೆ. ಸರಿಯಾದ ತಯಾರಿ ನಡೆಸಿ, ಕನ್ನಡಿಯ ಮುಂದೊಮ್ಮೆ ಪ್ರಾಕ್ಟಿಸ್ ಮಾಡಿ ಇತ್ಯಾದಿ ಇತ್ಯಾದಿ. ಅವೆಷ್ಟು ಪರಿಣಾಮಕಾರಿ ಎಂಬುದು ಅಂತಹ ಸಲಹೆಗಳನ್ನು ಅನುಸರಿಸುವರ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನನಗೆ ವೈಯಕ್ತಿವಾಗಿ ಇಷ್ಟವಾಗುವ ಸಲಹೆಗಳೆಂದರೆ “make a great entrance” ಎಂಬುದು. ಒಳಗೆ ಎಂತಹದೇ ಭಯವಿದ್ದರೂ, ಮುಖದ ಮೇಲೊಂದು ನಗು ಹಾಗೂ ಕಾನ್ಫಿಡೆಂಟ್ ಆಗಿರುವ ಹಾವಭಾವದೊಂದಿಗೆ ನೀನು ಎಂಟ್ರಿ ಕೊಟ್ಟರೆ ಅರ್ಧ ಕೆಲಸ ಆದ ಹಾಗೆಯೇ ಎಂದು ನನ್ನ ಸಹೋದ್ಯೋಗಿಯೊಬ್ಬರು ನಾನು ವೃತ್ತಿ ಜೀವನ ಶುರುಮಾಡುವ ಸಮಯದಲ್ಲಿ ಹೇಳಿದ್ದರು. ಅದು ಎಷ್ಟೋ ಬಾರಿ ಸಾಬೀತಾಗಿದೆ ಕೂಡ. ಪ್ರೆಸೆಂಟೇಷನ್‌ನ ಮುಂಚೆ ಸಾಕಷ್ಟು ಭಯವಾಗುತ್ತಿದ್ದರೂ, ಮೀಟಿಂಗ್ ಶುರುವಾದಾಗ ಧೈರ್ಯ ತುಂಬಿದ ದನಿಯಲ್ಲಿ, ಮಂದಸ್ಮಿತನಾಗಿ ‘ಹಲೋ ಎವೆರಿನ್’ ಎಂದು ಹೇಳುತ್ತಿದ್ದರೆ, ಅದೆಂತದೋ ಧೈರ್ಯ ತುಂಬಿ ಪ್ರೆಸೆಂಟೇಷನ್ ಸಾಂಗವಾಗಿ ಮುಗಿಯುತ್ತದೆ. + +ಕ್ರೀಡಾಪಟುಗಳೂ ಕೂಡ ಎದುರಾಳಿಯ ಮೇಲೆ ಒಂದು ತೆರನಾದ ಪ್ರೆಷರ್ ಹೇರುವುದು ಇಂತಹ ಎಂಟ್ರಿಯಿಂದಲೇ. ನಾನು ಈ ಮೊದಲು ಅಮೆರಿಕಾದ ಸ್ಪ್ರಿಂಟರ್ ನೋವಾ ಲೈಲ್ಸ್ ಕ್ರೀಡಾಂಗಣ ಪ್ರವೇಶಿಸುವ ಬಗೆಯನ್ನು ಹೇಳಿದ್ದೆ. ವೇಗವಾಗಿ ಓಡಿ ಬಂದು, ಗಾಳಿಯಲ್ಲಿ ಗಿರಕಿ ಹೊಡೆದು, ಎಲ್ಲರ ಗಮನ ಸೆಳೆಯುವ ಈತನ ಕಾನ್ಫಿಡೆನ್ಸ್ ನಮ್ಮೊಳಗೂ ಇರಬೇಕು. ಇನ್ನು ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಬಂದರೆ ಕರೋಲಿನಾ ಮೆರಿನ್ ಹೆಸರನ್ನು ನೀವು ಕೇಳಿರಬಹುದು. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿರುವ ಈಕೆ ತನ್ನ ಆಟದ ವೈಖರಿಯೆಂದಲೇ ಎದುರಾಳಿಯ ಪ್ರಭುತ್ವ ಸಾಧಿಸುತ್ತಾಳೆ. ನಮ್ಮ ಪಿ.ವಿ ಸಿಂಧುವಿನ ಅಪ್ಪಟ ಎದುರಾಳಿಯಾಗಿರುವ ಈಕೆಯ ಆಟವನ್ನು ನೀವೊಮ್ಮೆ ನೋಡಬೇಕು. ಸದಾ ಗಂಭೀರವದನಳಾಗಿದ್ದು, ಗೆದ್ದ ಪ್ರತೀ ಅಂಕವನ್ನು ಜೋರಾಗಿ ಕಿರುಚಿ ಸೆಲೆಬ್ರೇಟ್ ಮಾಡುವ ಮೆರಿನ್‌ಳ ಆಟವನ್ನು ಎಷ್ಟು ಜನ ಹೊಗಳುತ್ತಾರೋ ಅಷ್ಟೇ ಜನ ದ್ವೇಷಿಸುತ್ತಾರೆ ಕೂಡ! + + + +ಬ್ಯಾಡ್ಮಿಂಟನ್‌ನಲ್ಲಿ ಕೆಲವೊಂದು ಶಿಷ್ಟಾಚಾರದ ನಿಯಮಗಳಿವೆ. ಅಂಕವನ್ನು ಗಳಿಸಿದ ನಂತರ ವಿನಾಕಾರಣ ಜೋರಾಗಿ ಕಿರುಚಬಾರದೆಂಬುದು ಅವುಗಳಲ್ಲಿ ಪ್ರಮುಖವಾದದ್ದು. ಎದುರಾಳಿಯ ಏಕಾಗ್ರತೆಗೆ ಭಂಗತರಬಾರದೆಂಬ ಕಾರಣಕ್ಕೆ ಈ ನಿಯಮ. ಮೆರಿನ್ ಹಾಗೂ ಸಿಂಧುವಿನ ನಡುವೆ ನಡೆದ ಒಂದು ಆಟದಲ್ಲಿ, ಇಬ್ಬರೂ ಈ ನಿಯಮ ಮೀರಿ, ರೆಫರಿಯಿಂದ ವಾರ್ನಿಂಗ್ ಪಡೆದುಕೊಂಡಿದ್ದರು. ಮೊದಲ ಎರಡು ಸೆಟ್ಟಿನಲ್ಲಿ ಸಮಬಲದ ಹೋರಾಟ ನಡೆಸಿದ ಇಬ್ಬರೂ ಮೂರನೇ ಸೆಟ್‌ನಲ್ಲಿ ಗೆಲ್ಲಲು ಛಲಬಿಡದೆ ಹೋರಾಡುತ್ತಿದ್ದರು. ಆದರೆ ಮೆರಿನ್ ತನ್ನ ಮೈಂಡ್ ಗೇಮ್‌ನಿಂದ ಪ್ರಾಬಲ್ಯ ಸಾಧಿಸಿ ಗೆದ್ದಿದ್ದು ಈಗ ಇತಿಹಾಸ. ಜೋರಾಗಿ ಕಿರುಚುವುದು, ಅಂಕವನ್ನು ಸೋತ ಎದುರಾಳಿಯು, ಶಟಲ್ ಕಾಕನ್ನು ಅವಳತ್ತ ತಳ್ಳುವ ಮೊದಲೇ ಓಡಿಬಂದು ತನ್ನ ರಾಕೆಟ್‌ನಿಂದ ತನ್ನತ್ತ ಎಳೆದುಕೊಳ್ಳುವುದು… ಅವಳ ಆಟದಲ್ಲಿ ಇವೆಲ್ಲ ಸಾಮಾನ್ಯವಾಗಿ ಕಂಡುಬರುವ ತಂತ್ರಗಳು. + +ಇಂತಿಪ್ಪ ಮೆರಿನ್, 2024 ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿಯೂ ಚಿನ್ನ ಗೆಲ್ಲುವ ಫೇವರೇಟ್ ಆಗಿದ್ದಳು. ತನ್ನ ಚುರುಕಿನ ಆಟದಿಂದ ಸೆಮಿಫೈನಲ್ ತಲುಪಿ, ಎದುರಾಳಿ ಹೇ ಬಿಂಗ್ಜಿಯಾವ್‌ಳನ್ನು ನೇರ ಸೆಟ್‌ನಿಂದ ಮಣಿಸಿ ಇನ್ನೇನು ಫೈನಲ್ ತಲುಪಬೇಕು… ಆಗ ಸಂಭವಿಸಿತು ನೋಡಿ ಒಂದು ದುರಂತ! ಹೇ ಕೊಟ್ಟ ಸ್ಮಾಷನ್ನು ಹಿಂದಿರಿಗಿಸುವ ಯತ್ನದಲ್ಲಿ ಹಿಂದೆ ಸರಿಯುವಾಗ ಅಕಸ್ಮಾತ್ ಜಾರಿ ಬಿದ್ದ ಮೆರೀನ್‌ಳ ಬಲಗಾಲಿನ ಲಿಗಮೆಂಟ್ ಘಾಸಿಗೊಳ್ಳುತ್ತದೆ. ಮೆರಿನ್ ಜಾರಿ ಬಿದ್ದಾಗ ಎಲ್ಲರಿಗಿಂತ ಮೊದಲು ಆಘಾತಗೊಳಗಾಗಿದ್ದು ಕಾಮೆಂಟರಿ ಮಾಡುತ್ತಿದ್ದಾಕೆಗೆ… ಮೆರಿನ್ ಬಿದ್ದ ಕೂಡಲೇ ಓಹ್ ನೋ ನೋ.. ಎಂದು ಅರಚಿದ್ದನ್ನು ಕೇಳಿಯೇ ವೀಕ್ಷಕರಿಗೆ ಮೆರೀನ್ ಆಟ ಮುಂದುವರೆಸುವುದು ದುಸ್ಸಾಧ್ಯ ಎಂದು ಖಚಿತವಾಗಿತ್ತು. + +(ಹೇ ಬಿಂಗ್ಜಿಯಾವ್‌) + +ಯಶಸ್ವೀ ಕ್ರೀಡಾಪಟುಗಳ ಒಂದು ಪ್ರಮುಖ “ಅಟ್ರಿಬ್ಯೂಟ್” ಏನು ಗೊತ್ತೇ? ಅವರೆಂದಿಗೂ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ. ಬಲಗಾಲಿನ ನೋವನ್ನೂ ಲೆಕ್ಕಿಸದ ಮೆರಿನ್ ಕಾಲಿಗೊಂದು ಕ್ರೇಪ್ ಬ್ಯಾಂಡ್ ಸುತ್ತಿಕೊಂಡು ಮತ್ತೆ ಕಣಕ್ಕಿಳಿದಳು. ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು. + + + +ಮೆರೀನ್‌ಗೆ ಈ ರೀತಿಯಾಗಿದ್ದು ಅವಳ ಕರ್ಮದ ಫಲ ಎಂದು ಹಲವರು ಕೊಂಕು ನುಡಿದರು. ಅವಳ ಗರ್ವಕ್ಕೆ ಸಿಕ್ಕ ತಕ್ಕ ಗೌರವ ಎಂದು ಎಷ್ಟೋ ಜನ ಅಣಕಿಸಿದರು. ಆದರೆ ಮೆರಿನ್‌ಳ ಇಂಜುರಿಯಿಂದ, ಪುಕ್ಕಟೆಯಾಗಿ ಫೈನಲ್ ತಲುಪಿ ಅಲ್ಲಿ ಬೆಳ್ಳಿ ಗೆದ್ದ ಹೇ ಬಿಂಗ್ಜಿಯಾವ್ ಏನು ಮಾಡಿದಳು ಗೊತ್ತೆ? ಪದಕ ಸಮಾರಂಭದಲ್ಲಿ ಬೆಳ್ಳಿ ಪದಕವನ್ನು ತೊಡಿಸಿಕೊಂಡು ಜೇಬಿನಿಂದ ಸ್ಪೇನ್‌ನ ಸಣ್ಣ ಬಾವುಟದ ಸ್ಟಿಕರ್ ಹೊರತೆಗೆದು ಪದಕದೊಡನೆ ಹಿಡಿದಳು. ಇಡೀ ಕ್ರೀಡಾಂಗಣ ಅವಳ ಕ್ರೀಡಾ ಮನೋಭಾವವನ್ನು ಮೆಚ್ಚಿ ಕರತಾಡನ ಮಾಡಿತು. ಸ್ವತಃ ಚೀನಾದವಳಾದ ಬಿಂಗ್ಜಿಯಾವ್ ಸ್ಪೇನ್‌ನ ಧ್ವಜದ ಸ್ಟಿಕ್ಕರನ್ನು ಹಿಡಿದ್ದಾದರೂ ಏನಕ್ಕೆ ಗೊತ್ತಾ? ಸೆಮಿಫೈನಲಿನಲ್ಲಿ ಗೆಲ್ಲುವ ಪಂದ್ಯವನ್ನು ಗಾಯದ ಸಮಸ್ಯೆಯಿಂದ ಅರ್ಧಕ್ಕೆ ಕೈ ಬಿಟ್ಟ ಮೆರಿನ್ ಸ್ಪೇನ್ ದೇಶದವಳು. ಆ ಪೋಡಿಯಂ ಮೇಲೆ ಮೆರಿನ್ ಇದ್ದರೇನೆ ಶೋಭೆ ಎಂದುಕೊಂಡ ಬಿಂಗ್ಜಿಯಾವ್, ಮೆರಿನ್‌ನ ದೇಶದ ಧ್ವಜವನ್ನು ಸಾಂಕೇತಿಕವಾಗಿ ಹಿಡಿದು ಎಲ್ಲರ ಮನವನ್ನು ಗೆದ್ದಿದ್ದಳು! \ No newline at end of file diff --git a/Kenda Sampige/article_170.txt b/Kenda Sampige/article_170.txt new file mode 100644 index 0000000000000000000000000000000000000000..f138e5977ad89a5ced41dc121678de0a1ea13fab --- /dev/null +++ b/Kenda Sampige/article_170.txt @@ -0,0 +1,35 @@ +ಕವಿತೆ ಹೇಗಿರಬೇಕು ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಏನೇ ಹೇಳಿದರೂ ಅದು ಉತ್ತರಿಸಿದವನ ಅಪೇಕ್ಷೆ ಮತ್ತು ಮಿತಿಯಷ್ಟೇ ಆಗಿರುತ್ತದೆ. ಆದರೆ ಕವಿತೆ ಹೇಗಿರಬೇಕು ಅನ್ನುವುದು ಅಪೇಕ್ಷೆಯೂ ಹೌದು. ಅದನ್ನು ನಿರ್ಧರಿಸುವುದು ಕೇವಲ ಅಪೇಕ್ಷೆಯಲ್ಲ, ಕವಿತೆಯ ನಿರಂತರ ಓದು. + +ಪ್ರತಿಯೊಂದು ಹೊಸ ಕವಿತೆಯ ಓದಿನ ಮೇಲೂ ನಾವು ಈ ಹಿಂದೆ ಓದಿದ ಮೆಚ್ಚಿದ ಮತ್ತು ನಿರಾಕರಿಸಿದ ಕವಿತೆಯ ಪ್ರಭಾವ ಇದ್ದೇ ಇರುತ್ತದೆ. ನಾವು ಸಾಹಿತ್ಯದ ಯಾವ ಚಳವಳಿಯ ಕಾಲಾವಧಿಯಲ್ಲಿ ಕವಿತೆ ಓದಲು ಆರಂಭಿಸಿದೆವು ಅನ್ನುವುದನ್ನೂ ಅದು ಅವಲಂಬಿಸಿರುತ್ತದೆ. ನವೋದಯದ ಕವಿತೆಗಳಿಂದ ತಮ್ಮ ಕಾವ್ಯಲೋಕ ಕಟ್ಟಿಕೊಂಡವರಿಗೆ, ನವ್ಯೋತ್ತರದ ತನಕವೂ ಅದನ್ನು ಅಷ್ಟೇ ಅಕ್ಕರೆಯಿಂದ ವಿಸ್ತರಿಸಿಕೊಳ್ಳುವುದು ಸಾಧ್ಯವೇ ಎಂಬ ಪ್ರಶ್ನೆಯನ್ನೂ ಹೊಸ ಕಾಲದ ಕವಿಗಳು ಕೇಳಿಕೊಳ್ಳಬೇಕಾಗುತ್ತದೆ. + +ರಾಜು ಹೆಗಡೆ ಅವರ ಹೊಸ ಕವಿತಾ ಸಂಕಲನ ‘ಕಣ್ಣಿನಲಿ ನಿಂತ ಗಾಳಿ’ ಈ ಎಲ್ಲಾ ಪ್ರಶ್ನೆಗಳನ್ನು ತನ್ನ ಪ್ರಾಂಜಲ ಕಾವ್ಯಗುಣ, ಅಪೂರ್ವ ತಾಜಾತನ ಮತ್ತು ನಿರರ್ಗಳ ಅರ್ಥಪೂರ್ಣತೆಯ ಮೂಲಕ ಎದುರಿಸಿದೆ. + +(ರಾಜು ಹೆಗಡೆ) + +ಕಣ್ಣಿನಲಿ ನಿಂತ ಗಾಳಿ ಎಂಬ ಶೀರ್ಷಿಕೆಯೇ ರಾಜು ಹೆಗಡೆಯವರ ಕವಿತೆಗೆ ರೂಪಕದಂತಿದೆ. ನಮ್ಮ ಸಿದ್ಧಮಾದರಿಯ ಕವಿತೆಗಳನ್ನೂ ಕವಿತೆಯ ಸಿದ್ಧಮಾದರಿಗಳನ್ನೂ ಪಕ್ಕಕ್ಕೆ ತಳ್ಳಿ, ಕವಿಮನಸ್ಸಿಗೆ ಕಂಡ ಚಿತ್ರಗಳನ್ನು ಮಾತ್ರ ಅವರು ನಮ್ಮ ಮುಂದಿಡುತ್ತಾ ಹೋಗುತ್ತಾರೆ. ಪದ್ಯ ಇರುತ್ತದೆ, ಹೇಳುವುದಿಲ್ಲ. ಇವು ಆಗಿಹೋದ ಪದ್ಯಗಳಲ್ಲ, ಆಗುತ್ತಲೇ ಇರುವ ಕವಿತೆಗಳು. ಒಂದೊಂದು ಸಲ ಓದಿದಾಗಲೂ ಒಂದೊಂದು ಸ್ಮೃತಿಯನ್ನೋ ಸಂಹಿತೆಯನ್ನೋ ನಮ್ಮಲ್ಲಿ ಮೂಡಿಸುವ ಈ ಸಂಕಲನದ ಯಾವ ಪದ್ಯವೂ ಸುದೀರ್ಘವಾಗಿಲ್ಲ. ಯಾವ ಕವಿತೆಯೂ ಕವಿ ನಿಲ್ಲಿಸಿದಲ್ಲಿಗೆ ಮುಗಿಯುವುದಿಲ್ಲ. + +ಉದಾಹರಣೆಗೆ ಹಕ್ಕಿಯ ಕುರಿತು ಎಂಬ ಕವಿತೆ ಹಕ್ಕಿಯಂತೆ ಹುಟ್ಟಿ, ಹಕ್ಕಿಯಂತೆಯೇ ಹಾರಿಹೋಗುತ್ತದೆ.ಹಕ್ಕಿಗಳು ವಾಕಿಂಗ್ ಮಾಡುವುದಿಲ್ಲಆಹಾರಕ್ಕಾಗಿ ವಿಹರಿಸುತ್ತವೆಯೋಗ ಗೀಗಕ್ಕೆ ಹೋಗುವುದಿಲ್ಲಎಂದು ಶುರುವಾಗಿ, ಒಂದು ಮಾಯಕದಲ್ಲಿ ಕೊನೆಗೊಳ್ಳುತ್ತದೆಆದರೆ ಹಕ್ಕಿಗಳುಇಲ್ಲವಾಗುವವರೆಗೆಇರುತ್ತವೆ. + +ಇದನ್ನೇ ಅವರು ಕವಿತೆಗೂ ಅನ್ವಯಿಸುತ್ತಾರೆ. ಕವಿತೆಯ ಕುರಿತು ಬರೆಯುತ್ತಾರೆಂದುಕೊಂಡರೆ ರಾಜು ಹೆಗಡೆ ಬದುಕಿನ ಕುರಿತು ಬರೆದಿರುತ್ತಾರೆ. ಇರುವುದು ಇಲ್ಲವಾಗುವುದು ಮತ್ತು ಇಲ್ಲವಾಗುವುದು ಇರುವುದರ ಕುರಿತು ಅವರ ಜಿಜ್ಞಾಸೆ ಎಲ್ಲ ಕವಿತೆಗಳಲ್ಲೂ ಬೇರೆ ಬೇರೆ ರೂಪಗಳಲ್ಲಿ ಪ್ರತ್ಯಕ್ಷವಾಗುತ್ತವೆ. ಹೀಗಾಗಿಯೇ ಈ ಕವಿತೆಗಳಿಗೆ ವಿಶಿಷ್ಟವಾದ ಹೊಳಪೊಂದು ದಕ್ಕಿದೆ. + +ಕೆವಿ ತಿರುಮಲೇಶರ ಕುರಿತ ಒಂದು ಪದ್ಯ ಈ ಸಂಕಲನದಲ್ಲಿದೆ. ಅದು ಕವಿಯ ಕುರಿತು ಹೇಳುತ್ತಲೇ ಅವರ ಪದ್ಯವೊಂದು ಸಾಲಾರ್ ಜಂಗ್ ಮ್ಯೂಸಿಯಮ್ಮಿನಲ್ಲಿ ಕಂಡಂತಾಗುವುದನ್ನೂ ಹೇಳುತ್ತದೆ. ಅಲ್ಲಿಂದಾಚೆ ಪದ್ಯ ಸದ್ಯದಲ್ಲಿ ಕುಣಿದವರು ಸದ್ದಿಲ್ಲದೇ ಎದ್ದು ಹೋದದ್ದನ್ನು ಸೂಚಿಸುತ್ತಾ ಅವಾಕ್ಕಾಗುತ್ತದೆ. + + + +ಒಂದು ವಿಲಕ್ಷಣ ಆವರ್ತನದಲ್ಲಿ ಹುಟ್ಟುವ ಅರ್ಥಗಳನ್ನು ರಾಜು ಹೆಗಡೆ ಶೋಧಿಸುವ ಕ್ರಮ ಈ ಕವಿತೆಗಳ ವಿಶೇಷ. ಹೀಗಾಗಿ ಈ ಪದ್ಯಗಳನ್ನು ಒಮ್ಮೆ ಓದಿ ಪಕ್ಕಕ್ಕಿಡುವಂತಿಲ್ಲ. ಹೆಸರಿಲ್ಲದ ಪದ್ಯವೊಂದುಇದ್ರು ಸೈಬ್ರು ಸತ್ರು ಸೈಬ್ರುಇದ್ರು ಸೈಬ್ರುಸತ್ರು ಸೈಬ್ರುಎಂಬ ಬೀಯಿಂಗಿನಿಂದಇದ್ರು ಸೈಬ್ರು ಕಾಣ್ತಿಲ್ಲಸತ್ರು ಸೈಬ್ರು ಕಾಣ್ತಿಲ್ಲಎಂಬ ನಾನ್ ಬೀಯಿಂಗಿಗೆ ಚಲಿಸುತ್ತಲೇ ಯಾವುದು ಬೀಯಿಂಗ್ ಯಾವುದು ನಾನ್ ಬೀಯಿಂಗ್ ಎಂಬ ಪ್ರಶ್ನೆಯನ್ನು ಥಟ್ಟನೆ ಹುಟ್ಟಿಸಿ ಮೌನವಾಗುತ್ತದೆ. + +ನಾಲ್ಕು ಭಾಗಗಳಲ್ಲಿ ಇಲ್ಲಿಯ ಪದ್ಯಗಳನ್ನು ರಾಜು ಹೆಗಡೆ ವಿಭಾಗಿಸಿದ್ದಾರೆ. ಅವರು ಕವಿಯ ವಿಭಾಗೀಕರಣ ಮಾತ್ರ. ಓದುತ್ತಾ ಹೋದರೆ ನಾಲ್ಕೂ ಭಾಗಗಳೂ ಒಂದೇ ಅನ್ನಿಸುತ್ತಾ ಓದಿಸಿಕೊಳ್ಳುತ್ತವೆ. ಆದರೆ ಅವಕ್ಕಿರುವ ವ್ಯತ್ಯಾಸವೂ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಹೊಳೆಯುತ್ತದೆ. ಉದಾಹರಣೆಗೆ ಮೊದಲ ಭಾಗದಯಾವುದು ಕವಿತೆಕವಿತೆಯೆಂದರೆ ಏನುಹೇಗಿರುತ್ತದೆಯಾವುದೂಕವಿತೆಗೆ ಗೊತ್ತಿಲ್ಲಹಾಗೆ ನೋಡಿದರೆಕವಿತೆಯಲ್ಲದಿದ್ದರೆಕವಿತೆಯೇಇರುವುದಿಲ್ಲ! + +ಎರಡನೆಯ ಭಾಗದ-ಕವಿತೆಕೊಡೆಯ ಹಾಗೆಆಗಾಗ,ಕಡ್ಡಿ ಬದಲಾಯಿಬೇಕುಹಿಡಿ ಬೇರೆ ಹಾಕಬೇಕುಕಾವು ಬೇರೆಯಾಗಬೇಕುಅರಿವೆಯನ್ನೂ ಚೇಂಜ್ಮಾಡಬೇಕು…..ಇವೆರಡನ್ನೂ ನಾವು ಒಟ್ಟಿಗೆ ಓದುವುದಿಲ್ಲ. ಮೊದಲ ಕವಿತೆಯನ್ನು ಓದಿ ಮುಂದೆಲ್ಲೋ ಎರಡನೆಯ ಕವಿತೆಯನ್ನು ಪ್ರವೇಶಿಸುವ ಹೊತ್ತಿಗೆ ರಾಜು ಹೆಗಡೆ ಕವಿತೆಗಳ ಕುರಿತೂ ನಮ್ಮ ಅಪೇಕ್ಷೆ ಬದಲಾಗಿರುತ್ತವೆ. ಹಾಗೆ ಬದಲಾದ ಓದುಗನನ್ನು ರಾಜು ಹೆಗಡೆ ನಿರೀಕ್ಷಿಸಿರುತ್ತಾರೆ ಎನ್ನುವುದನ್ನು ಕೂಡ ಅವರು ಕವಿತೆಗಳನ್ನು ಅಳವಡಿಸಿಕೊಂಡ ಕ್ರಮವನ್ನು ಗಮನಿಸಿದರೆ ಹೇಳಬಹುದು. + +(ಜೋಗಿ) + +ಕವಿತೆ ಪ್ರಣಾಳಿಕೆಯೋ ವಾಗ್ವಾದವೋ ಉತ್ತರವೋ ಪ್ರತಿಭಟನೆಯೋ ಆಗಿ ಮೆರೆಯುತ್ತಿರುವ ದಿನಗಳಲ್ಲಿ ರಾಜು ಹೆಗಡೆ ಬರೆಯುತ್ತಿರುವ ಪದ್ಯಗಳಿಗೆ ವಿಶಿಷ್ಟವಾದ ಸ್ಥಾನವಿದೆ ಎಂದು ಹೇಳಲು ಅಂಜಿಕೆಯಾಗುತ್ತದೆ. ನಮ್ಮ ಕಾವ್ಯದ ಓದನ್ನು ರಾಜಕೀಯ ನಿಲುವು, ಸೈದ್ಧಾಂತಿಕತೆ ಮತ್ತು ಸಾಮಾಜಿಕನಿಲುವುಗಳು ನಿರ್ಧರಿಸುವ ಕಾಲ ಇದು. ಶುದ್ಧಕವಿತೆ ಎಂಬ ಮಾತನ್ನು ಗೇಲಿ ಮಾಡಲಾಗುತ್ತದೆ ಮತ್ತು ಶುದ್ಧ ಸಾಹಿತ್ಯವನ್ನು ಅಪರಾಧವೆಂಬಂತೆ ನೋಡಲಾಗುತ್ತಿದೆ. ಯಾವುದಾದರೊಂದು ರಾಜಕೀಯ ಪಕ್ಷದ ಅಘೋಷಿತ ಗೊತ್ತುವಳಿಯಂಥ ಸಾಲುಗಳನ್ನು ಪದ್ಯಗಳೆಂದು ಕರೆಯಲಾಗುತ್ತಿದೆ. + +ನಮ್ಮ ಸಾವಧಾನ ಮತ್ತು ಅವಧಾನವನ್ನು ಉದ್ದಕ್ಕೂ ಬಯಸುವ ಈ ಪದ್ಯಗಳ ಸಂಕಲನದ ಕುರಿತು ಪ್ರೀತಿಯಿಂದ ನಾಲ್ಕು ಮಾತು ಬರೆದಿದ್ದೇನೆ. ರಾಜು ಹೆಗಡೆ ಕವಿತೆಗಳನ್ನು ಒಪ್ಪಿಸುತ್ತಾ ಹೋಗುತ್ತಾರೆ. ಒಪ್ಪಿಗೆಗಾಗಿ ಕಾಯುವುದಿಲ್ಲ. ಅವರ ಕವಿತೆಗಳೂ ಕೂಡ ತಮ್ಮನ್ನು ಪೂರ್ತಿಯಾಗಿ ಒಪ್ಪಿಸಿಕೊಂಡು ಸುಮ್ಮನುಳಿಯುತ್ತವೆ. + +ಕೆವಿ ತಿರುಮಲೇಶರ ಪದ್ಯಗಳ ನಿರಾವಲಂಬ, ಎಸ್ ಮಂಜುನಾಥ್ ಕವಿತೆಗಳ ನಿರ್ಭಾರ ಮತ್ತು ರಾಮು ಕವಿತೆಗಳ ನಿರುಮ್ಮಳ ಈ ಕವಿತೆಗಳಲ್ಲೂ ಬಹಳಷ್ಟು ಕಡೆ ನನಗೆ ಕಾಣಿಸಿದೆ. ಇವರನ್ನೆಲ್ಲ ಓದಿಕೊಂಡ ಕಾವ್ಯಾಸಕ್ತರಿಗೂ ಅದು ಕಂಡೀತು. ಅದು ರಾಜು ಹೆಗಡೆಯವರ ಕಾವ್ಯದ ಗೆಲುವೆಂದೇ ನಾನಂತೂ ಭಾವಿಸುತ್ತೇನೆ. + +ಕಣ್ಣಿನಲಿ ನಿಂತ ಗಾಳಿ ಕವಿತೆಗಳ ಉಸಿರಾಡಲಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_171.txt b/Kenda Sampige/article_171.txt new file mode 100644 index 0000000000000000000000000000000000000000..2735536376016222617fd2fa5cea6f48c1d550bb --- /dev/null +++ b/Kenda Sampige/article_171.txt @@ -0,0 +1,35 @@ +byಕೆಂಡಸಂಪಿಗೆ|Dec 17, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ.ಯೋಗೀಂದ್ರ ಮರವಂತೆ ಪ್ರಬಂಧಗಳ ಸಂಕಲನ “ನನ್ನ ಕಿಟಕಿ”ಗೆ ರಘುನಾಥ ಚ.ಹ. ಬರೆದ ಮುನ್ನುಡಿ + +byನಾಗರೇಖಾ ಗಾಂವಕರ|Dec 16, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ.ವಿವೇಕ ಶಾನಭಾಗ ಬರೆದ “ಸಕೀನಾಳ ಮುತ್ತು” ಕಾದಂಬರಿಯ ಕುರಿತು ನಾಗರೇಖಾ ಗಾಂವಕರ ಬರಹ + +byನಾಗರಾಜ ಎಂ ಹುಡೇದ|Dec 14, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ.ಗುಂಡುರಾವ್ ದೇಸಾಯಿ ಬರೆದ “ಮಕ್ಕಳೇನು ಸಣ್ಣವರಲ್ಲ” ಮಕ್ಕಳ ಕಥಾ ಸಂಕನದ ಕುರಿತು ನಾಗರಾಜ ಎಂ ಹುಡೇದ ಬರಹ + +byಬಿ.ಕೆ. ಮೀನಾಕ್ಷಿ|Dec 12, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ.ಶಶಿಧರ ಹಾಲಾಡಿ ಕಾದಂಬರಿ “ಅಬ್ಬೆ” ಕುರಿತು ಬಿ.ಕೆ. ಮೀನಾಕ್ಷಿ ಬರಹ + +byಕೆಂಡಸಂಪಿಗೆ|Dec 9, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ.ದರ್ಶನ್‌ ಜಯಣ್ಣ ಬರೆದ ಪ್ರಬಂಧಗಳ ಸಂಕಲನ “ಅಪ್ಪನ ರ್ಯಾಲೀಸ್‌ ಸೈಕಲ್‌” ನಿಂದ ಒಂದು ಪ್ರಬಂಧ + +byಕೆಂಡಸಂಪಿಗೆ|Dec 7, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?!ಭಾರತಿ ಬಿ.ವಿ.ಯವರ “ಈ ಪ್ರೀತಿ ಒಂಥರಾ” ಕೃತಿಯ ಒಂದು ಬರಹ ನಿಮ್ಮ ಓದಿಗೆ + +byಪ.ನಾ.ಹಳ್ಳಿ ಹರೀಶ್ ಕುಮಾರ್|Dec 6, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆಯೂ ಬರೆಯುತ್ತಾರೆ.ಪ್ರಕಾಶ್ ಕೆ ನಾಡಿಗ್ ಬರೆದ “ನಾ ಕಂಡ ಯೂರೋಪ್ ಖಂಡ” ಪ್ರವಾಸ ಕಥನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಕೆಂಡಸಂಪಿಗೆ|Dec 3, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು?ಎನ್. ಸಂಧ್ಯಾ‌ ರಾಣಿ ಹೊಸ ಕಾದಂಬರಿ “ಇಷ್ಟುಕಾಲ ಒಟ್ಟಿಗಿದ್ದು” ಯಿಂದ ಆಯ್ದ ಭಾಗ ನಿಮ್ಮ ಓದಿಗೆ + +byಕೆಂಡಸಂಪಿಗೆ|Dec 2, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ.ಪೂರ್ಣಿಮಾ ಮಾಳಗಿಮನಿ ಬರೆದ “ಡೂಡಲ್‌ ಕಥೆಗಳು” ಕೃತಿಗೆ ಗೋಪಾಲ ಕೃಷ್ಣ ಕುಂಟಿನಿ ಬರೆದ ಮುನ್ನುಡಿ \ No newline at end of file diff --git a/Kenda Sampige/article_172.txt b/Kenda Sampige/article_172.txt new file mode 100644 index 0000000000000000000000000000000000000000..e58f5ace26bbf15a65ade128ba6b694deedfd29c --- /dev/null +++ b/Kenda Sampige/article_172.txt @@ -0,0 +1,69 @@ +ಸಮಯ ಸರಿಯುತ್ತಿದ್ದಂತೆ ಕಪ್ಪಿಟ್ಟಿದ್ದ ಮೋಡಗಳೆಲ್ಲ ಸರಿದು, ಮೋಡದೆಡೆಯಲ್ಲಿ ಬಂಧಿಯಾಗಿದ್ದ ಚಂದಮಾಮ ಬೆಳಕನ್ನು ಸೂಸಲು ಶುರುಮಾಡಿದ್ದ. ತಾರೆಗಳೆಲ್ಲ ಮಿನುಗತೊಡಗಿದ್ದವು. ಬಹು ಸಮಯದಿಂದ ಒಂಟಿಸಲಗವೊಂದು ಘೀಳಿಡುತ್ತಿರುವ ಶಬ್ದ ದೂರದಿಂದ ಕೇಳಿಬರುತ್ತಿರುವುದನ್ನು ಬಿಟ್ಟರೆ ಉಳಿದಂತೆ ಕಾಡುಪ್ರಾಣಿಗಳೆಲ್ಲಾ ಅಂದ್ಯಾಕೋ ಮೌನವಾಗಿರುವಂತೆ ತೋಚುತ್ತಿತ್ತು. ‘ಸಲಗ ಯಾಕೆ ಒಂದೇ ಸಮನೆ ಘೀಳಿಡುತ್ತಿದೆ! ಒಂದು ವೇಳೆ ಅದರ ಜೊತೆಗಾರರು ಎಲ್ಲಾದರು ಕಳೆದುಹೋಗಿದ್ದು, ಅವರ ಹುಡುಕಾಟ ನಡೆಸುತ್ತಿರಬಹುದಾ? ಅಥವಾ ಕಾಡೊಳಗೆ ನರಮನುಷ್ಯರು ಲಗ್ಗೆಯಿಟ್ಟಿದ್ದಾರೆ ಎಂಬ ವಾಸನೆ ಮೂಗಿಗೆ ಬಡಿದು, ಆಕ್ರಮಣ ಮಾಡಲೆಂದೇ ನಮ್ಮ ಜಾಡು ಹಿಡಿದು ಇತ್ತಕಡೆ ಏನಾದರು ಬರುತ್ತಿದೆಯ!’ ಎಂದು ಆ ಆನೆಯ ಆಕ್ರಂದನ ಕೇಳಿ ಪೊನ್ನಪ್ಪನ ಮನಸ್ಸಿಗೆ ಅನ್ನಿಸತೊಡಗಿತು. ಆದರೆ ಇದ್ಯಾವುದರ ಪರಿವೆ ಇಲ್ಲದೇ ಸಿದ್ದಣ್ಣ ಮಾತ್ರ ಕಾಲು ನೀಡಿ ಮೆಲ್ಲನೆ ಗೊರಕೆ ಹೊಡೆಯಲು ಶುರು ಮಾಡಿದ್ದ. ಎಲ್ಲರೂ ಜೀವ ಕೈಯಲ್ಲಿ ಹಿಡಿದುಕೊಂಡು ಕಳ್ಳರಿಗಾಗಿ ಕಾದು ಕುಳಿತಿರುವ ಈ ಸಂದರ್ಭದಲ್ಲೂ, ಅದು ಒಂದು ಮರದ ಮೇಲೆ ಕುಳಿತು ಇವನಿಗೆ ಇಷ್ಟು ಚೆನ್ನಾಗಿ ನಿದ್ರೆ ಮಾಡಲು ಸಾಧ್ಯವಾಗುತ್ತಿದೆಯಲ್ಲ! ಎಂದು ಪೊನ್ನಪ್ಪ ಆಶ್ಚರ್ಯಪಟ್ಟುಕೊಂಡು ಮನಸ್ಸಲ್ಲೆ ನಕ್ಕ. + +ಹೊತ್ತು ಕಳೆದಂತೆ ಪೊನ್ನಪ್ಪನ ಹೊಟ್ಟೆ ಕೂಡ ತಾಳ ಹಾಕಲು ಪ್ರಾರಂಭಮಾಡಿತು. ಮೆಲ್ಲನೇ ಶಬ್ದ ಮಾಡದೇ ಕೈಚೀಲದಿಂದ ರೊಟ್ಟಿಯನ್ನು ತೆಗೆದು ಮೆಲ್ಲಲು ಶುರುಮಾಡಿದ. ಸಮಯ ಸುಮಾರು ಹನ್ನೆರಡು ಗಂಟೆಯಾಗಿರಬಹುದು, ಮರಗಳ್ಳರು ಬರುವ ಯಾವುದೇ ಲಕ್ಷಣಗಳು ಕಾಣುತ್ತಿರಲಿಲ್ಲ. ಸೊಳ್ಳೆ ಕಡಿತ ಮಾತ್ರ ವಿಪರೀತವಾಗಿತ್ತು. ಪೊನ್ನಪ್ಪ ಕುಳಿತಲ್ಲಿಂದಲೆ ಸುತ್ತಲೂ ಕಣ್ಣಾಡಿಸುತ್ತಲಿದ್ದ. ಕಾಡಿನ ಉದ್ದಗಲಕ್ಕೂ ನೀರವಮೌನ ಆವರಿಸಿತ್ತು. ‘ಉಳಿದ ಎರಡು ತಂಡಗಳ ಕಥೆಯೇನೋ, ಅವರು ಎಲ್ಲಿ ಬಚ್ಚಿಟ್ಟುಕೊಂಡಿದ್ದಾರೋ, ಅವರಿಗೆ ಸಮಸ್ಯೆ ಏನಾದರು ಆಗಿರಬಹುದಾ?’ ಎಂಬ ನೂರೆಂಟು ಪ್ರಶ್ನೆಗಳು ಪೊನ್ನಪ್ಪನ ತಲೆಯಲ್ಲಿ ಕಾಡುತ್ತಲೆ ಇದ್ದವು. + +(ನೌಶಾದ್‌ ಜನ್ನತ್ತ್‌) + +ಮಧ್ಯರಾತ್ರಿ ಒಂದೂವರೆ ಘಂಟೆ ಕಳೆಯುತ್ತಾ ಇದ್ದ ಹಾಗೆ, ಪೊನ್ನಪ್ಪನಿಗೆ ನಿದ್ದೆಮಂಕು ಆವರಿಸಲು ಶುರುವಾಯಿತು. ಗಡದ್ದಾಗಿ ತಿಂದು, ಕಾಲು ನೀಡಿ ಲೋಕದ ಪರಿವೇ ಇಲ್ಲದೆ ಗೊರಕೆ ಹೊಡೆಯುತ್ತಿದ್ದ ಸಿದ್ದಣ್ಣನಿಗೆ, ಪೊನ್ನಪ್ಪ ಕಾಲಲ್ಲಿ ಎರಡು ಬಾರಿ ತಿವಿದು ಎಚ್ಚರಿಸಿದ. ಚಕ್ಕನೆ ಎಚ್ಚರಗೊಂಡ ಸಿದ್ದಣ್ಣ, ಮರಗಳ್ಳರು ಬಂದಿದ್ದರಿಂದ ಫಾರೆಸ್ಟರ್ ನನ್ನನ್ನು ಎಬ್ಬಿಸಿರಬಹುದು ಎಂದು ಕಣ್ಣು ಬಿಟ್ಟವನೇ ಗಾಬರಿಯಿಂದ ಸುತ್ತಲೂ ನೋಡತೊಡಗಿದ. ಪೊನ್ನಪ್ಪ ಮೆಲ್ಲನೆ ಅವನ ಕೈಯನ್ನು ಅದುಮಿ, “ಏನೂ ಇಲ್ಲ, ಆತಂಕ ಪಡಬೇಡ, ನಾನು ಸ್ವಲ್ಪಹೊತ್ತು ಮಲಗುತ್ತೇನೆ. ಯಾರಾದರೂ ಬಂದ ಶಬ್ದ ಕೇಳಿಸಿದರೆ ನನ್ನನ್ನು ಎಬ್ಬಿಸು” ಎಂದು ಅವನ ಕಿವಿಯಲ್ಲಿ ಪಿಸುಗುಟ್ಟಿದ. + +“ಆಯ್ತು ಸರ್” ಎಂದ ಸಿದ್ದಣ್ಣ, ತೇಗದ ನಾಟಾ ಜೋಡಿಸಿದ್ದ ಕಡೆಗೆ ದೃಷ್ಟಿ ಹಾಯಿಸುತ್ತಾ ಕುಳಿತ. ಮರದ ಮೇಲೆ ಕುಳಿತು ಪಹರೆ ಶುರುಮಾಡಿದ ಸುಮಾರು ಆರೇಳು ಗಂಟೆಗಳಿಂದಲೂ ಒಂದೇ ಭಂಗಿಯಲ್ಲಿ ಕುಳಿತಿದ್ದ ಪೊನ್ನಪ್ಪನಿಗೆ ಕಾಲು ಮರಗಟ್ಟಿದಂತಾಗಿತ್ತು. ಕಾಲು ನೀಡಿ, ಹಾಗೆ ಬೆನ್ನೊರಗಿಸಿ ಕಣ್ಣು ಮುಚ್ಚಿದ. ತುಂಬಾ ಆಯಾಸವಾಗಿದ್ದರಿಂದಲೋ ಏನೋ, ಕಣ್ಣು ಮುಚ್ಚಿದ ಕ್ಷಣಾರ್ಧದಲ್ಲಿ ನಿದ್ದೆಯ ಮಂಪರು ಆವರಿಸಿಬಿಟ್ಟಿತು. ಸಿದ್ದಣ್ಣನಿಗೆ ಒಂದು ಬೀಡಿ ಸೇದಬೇಕು ಎಂದು ಮನಸೆಳೆಯುತ್ತಿತ್ತು. ಆದರೆ ಹೊಗೆಯ ವಾಸನೆಯಿಂದಾಗಿ ಮರಗಳ್ಳರಿಗೆ ತಾವು ಕಾವಲು ಕಾಯುತ್ತಿರುವುದು ಗೊತ್ತಾಗಿ ಬಿಡಬಹುದು ಮತ್ತು ಪೊನ್ನಪ್ಪನವರ ಬೈಗಳ ತಿನ್ನಬೇಕಾಗುತ್ತದೆ ಎಂಬ ಭಯದಿಂದ ತನ್ನ ಬೀಡಿ ಚಟವನ್ನು ನಿಯಂತ್ರಿಸಿಕೊಂಡು ಹಾಗೇ ಕುಳಿತಿದ್ದ. + +ತುಸು ಹೊತ್ತಿನ ಬಳಿಕ ‘ಚರ್ರ್ ಪರ್ರ್’ ಎಂದು ಹುಣ್ಣಿಗುತ್ತಿಗಳನ್ನು ಸರಿಸಿ, ಯಾರೋ ತಮ್ಮತ್ತ ನಡೆದು ಬರುತ್ತಿರುವ ಶಬ್ದ ಕೇಳಿಸತೊಡಗಿತು. ಸಿದ್ದಣ್ಣ ಭಯದಿಂದ ಶಬ್ದ ಕೇಳಿ ಬರುತ್ತಿದ್ದ ದಿಕ್ಕಿನ ಕಡೆಗೆ ದಿಟ್ಟಿಸಿ ನೋಡತೊಡಗಿದ. ದೂರದಿಂದ ಭಾರವಾದ ಹೆಜ್ಜೆಗಳನ್ನಿಡುತ್ತಾ ತಮ್ಮತ್ತ ಯಾರೋ ಬರುತ್ತಿದ್ದಾರೆ. ಆದರೆ ಈ ಕಗ್ಗತ್ತಲಿನಲ್ಲಿ ಯಾವುದೂ ಸ್ಪಷ್ಟವಾಗಿ ಸಿದ್ದಣ್ಣನಿಗೆ ಕಾಣುತ್ತಿಲ್ಲ. ಪೊನ್ನಪ್ಪನನ್ನು ಎಬ್ಬಿಸಬೇಕು ಅನ್ನುವಷ್ಟರಲ್ಲಿ ಮತ್ತೆ ನಿಶ್ಶಬ್ದ! + +ಸಿದ್ದಣ್ಣ ಸೂಕ್ಷ್ಮವಾಗಿ ಕಿವಿಗೊಟ್ಟು ಕೇಳತೊಡಗಿದ. ಬಿದಿರು ಮೆಳೆಗಳು ‘ಕರ್ರ್ ಕರ್ರ್’ ಎಂದು ಒರೆಸಿಕೊಳ್ಳುವ ಶಬ್ದವನ್ನು ಬಿಟ್ಟರೆ ಬೇರೇನೂ ಕೇಳುತ್ತಿರಲಿಲ್ಲ. ಒಂದು ವೇಳೆ ನನಗೆ ಹಾಗೆ ಅನ್ನಿಸಿದ್ದಾ! ಎಂದು ತನ್ನನ್ನು ತಾನೆ ಪ್ರಶ್ನೆ ಮಾಡಿಕೊಂಡ. ಅಷ್ಟರಲ್ಲಿ ದಡೂತಿ ದೇಹದ ಮೂರು ನಾಲ್ಕು ಜನ ಏಕಕಾಲದಲ್ಲಿ, ಒಂದೇ ರೀತಿಯಲ್ಲಿ ಶಿಸ್ತಾಗಿ ಹೆಜ್ಜೆ ಹಾಕುತ್ತ, ತಮ್ಮತ್ತ ಬರುತ್ತಿರುವಂತೆ ಮತ್ತೆ ಶಬ್ದ ಕೇಳಿಬರತೊಡಗಿತು. ಯಾವುದಕ್ಕೂ ಒಮ್ಮೆ ಖಾತರಿಪಡಿಸಿಕೊಂಡ ನಂತರವೇ ಫಾರೆಸ್ಟರ್ ಅವರನ್ನು ಎಬ್ಬಿಸಿದರೆ ಸಾಕು ಎಂದು ಶಬ್ದ ಕೇಳಿಬರುತ್ತಿದ್ದ ದಿಕ್ಕಿನೆಡೆಗೆ ನೋಡುತ್ತಾ ಕುಳಿತ. + +ಒಂದತ್ತು ನಿಮಿಷ ಕಳೆದಿರಬಹುದು. ‘ಬುಸ್ ಬುಸ್’ ಎನ್ನುತ್ತಾ, ತಾವು ಕುಳಿತಿದ್ದ ಹೊನ್ನೆ ಮರದೆಡೆಗೆ ಕಪ್ಪಗಿನ ದೈತ್ಯಾಕೃತಿಯೊಂದು ನಡೆದು ಬರುತ್ತಿತ್ತು. ಕಾಡಿನಲ್ಲೆ ಓಡಾಡಿಕೊಂಡಿದ್ದ ಸಿದ್ದಣ್ಣನಿಗೆ ಬಳಿ ಬರುತ್ತಿರುವುದು ಯಾರೆಂದು ಕ್ಷಣಮಾತ್ರದಲ್ಲಿ ಖಾತರಿಯಾಯಿತು. ಹೌದು! ‘ತಾಸುಗಳ ಮೊದಲು ಅಲ್ಲೆಲ್ಲೋ ದೂರದಲ್ಲಿ ಘೀಳಿಡುತ್ತಿದ್ದ ಒಂಟಿಸಲಗವೇ ಈಗ ನಮ್ಮತ್ತ ಬರುತ್ತಿರುವುದು’ ಆ ಕಗ್ಗತ್ತಲಿನಲ್ಲೂ ಮೇಲಿಂದ ಸೂಸುತ್ತಿದ್ದ ಚಂದಿರನ ಬೆಳಕಿನಲ್ಲಿ ಸಲಗದ ಚೂಪಾದ ಎರಡು ಉದ್ದನೆಯ ಕೊಂಬುಗಳು ನಳನಳಿಸುತ್ತಿದ್ದವು. ನಾವು ಮರದ ಮೇಲೆ ಕುಳಿತಿರುವುದನ್ನೇನಾದ್ರೂ ಆನೆ ನೋಡಿದ್ದರೆ ಅಥವಾ ಅದಕ್ಕೆ ಸಂಶಯ ಮೂಡಿದ್ದರೆ, ಸಲಗ ಮರಕ್ಕೆ ಗುದ್ದಿ, ನಮ್ಮನ್ನು ಕೆಳಕ್ಕೆ ಬೀಳಿಸಿ, ನಮ್ಮ ಮೇಲೆ ಆಕ್ರಮಣ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಭಯಗೊಂಡು, ಆನೆ ಹತ್ತಿರತ್ತಿರ ತಲುಪಿದರೂ ಪೊನ್ನಪ್ಪನನ್ನು ಕರೆಯುವುದನ್ನು ಮರೆತ ಸಿದ್ದಣ್ಣ ಭಯದಿಂದ ಅದನ್ನೆ ದಿಟ್ಟಿಸುತ್ತಾ ಕುಳಿತ. + +ಹೊನ್ನೆ ಮರದ ಬುಡಕ್ಕೆ ಬಂದ ಒಂಟಿಸಲಗ, ಇಲ್ಲಿ ಯಾರೋ ಇದ್ದಾರೆ ಎಂಬ ಸಂಶಯ ಮೂಡಿದಂತೆ ಸುತ್ತಲೂ ಒಮ್ಮೆ ಕಣ್ಣಾಡಿಸಿತು. ನಂತರ ಮರಕ್ಕೆ ಒಂದು ಸುತ್ತು ಬಂದು ಯಾರೂ ಇಲ್ಲ ಎಂಬುದನ್ನು ಖಾತರಿಪಡಿಸಿಕೊಂಡು ಮರಕ್ಕೊರಗಿತು. ಅದಾಗಲೇ ಎಲ್ಲೊ ಕೆಸರಲ್ಲಿ ಮುಳುಗಿ ಎದ್ದು ಬಂದಿದ್ದ ಆ ಸಲಗ ಮೈಯ್ಯಲ್ಲಾಗುತ್ತಿದ್ದ ತುರಿಕೆಗಳನ್ನು ಸಹಿಸಿಕೊಳ್ಳಲಾಗದೇ ಬೃಹದ್ದಾಗಿ ಬೆಳೆದಿದ್ದ ಆ ಹೊನ್ನೆಮರಕ್ಕೆ ತನ್ನ ಮೈಯನ್ನು ಮೆಲ್ಲನೆ ಒರೆಸಿ, ತುರಿಕೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನ ಪಡುತ್ತಿತ್ತು. ಆನೆ ತನ್ನೆಲ್ಲಾ ಬಲವನ್ನು ಪ್ರಯೋಗಿಸಿ, ಮರಕ್ಕೆ ಮೈಯ ಚರ್ಮವನ್ನು ಒರೆಸಿಕೊಳ್ಳುತ್ತಿದ್ದರೆ, ಹೊನ್ನೆ ಮರ ಅತ್ತಿಂದಿತ್ತ ಅಲುಗಾಡಲು ಪ್ರಾರಂಭವಾಯಿತು. + +ನಿದ್ದೆಯಲ್ಲಿದ್ದ ಪೊನ್ನಪ್ಪನಿಗೆ ಯಾಕೋ ಗಾಳಿಯಲ್ಲಿ ತೇಲುತ್ತಾ, ಅಲುಗಾಡಿದ ಅನುಭವವಾಗತೊಡಗಿತು. ಎಚ್ಚರಗೊಂಡ ಪೊನ್ನಪ್ಪ, ದೇಹವನ್ನು ಅಲುಗಾಡಿಸದೇ, ಹಾಗೆಯೇ ಕಣ್ಣುಬಿಟ್ಟು ಸುತ್ತಲೂ ಕಿವಿಗೊಡತೊಡಗಿದ. ನಾವು ಕುಳಿತ ಮರದ ಬುಡದಲ್ಲಿ ‘ಸರ್ರ್ ಸರ್ರ್’ ಎಂದು ಶಬ್ದ ಕೇಳಿಬರುವುದರ ಜೊತೆಗೆ ಮರ ಮೆಲ್ಲನೇ ಅಲುಗಾಡುತ್ತಿದೆ ಎಂಬುದು ಅವನಿಗೆ ಖಾತರಿಯಾಯಿತು. ಒಂದು ವೇಳೆ ಮರಗಳ್ಳರೇನಾದ್ರೂ ಬಂದು, ತಾವು ಕುಳಿತ ಮರಕ್ಕೆ ಗರಗಸ ಹಾಕಲು ಪ್ರಾರಂಭಮಾಡಿಬಿಟ್ಟರಾ! ಎಂದು ಸಂಶಯ ಮೂಡಿ, ಸಿದ್ದಣ್ಣನ ಕಡೆಗೆ ನೋಡಿದ. + +ಒಂದು ಬದಿಯಲ್ಲಿ ಕುಳಿತಿದ್ದ ಸಿದ್ದಣ್ಣ. ಮರ ಅಲುಗಾಡಿದಂತೆ ತಾನು ಕೂಡ ಹಿಂದೆಮುಂದೆ ವಾಲುತ್ತಾ, ಕತ್ತು ಬಗ್ಗಿಸಿ ಕೆಳಭಾಗಕ್ಕೆ ತದೇಕಚಿತ್ತದಿಂದ ನೋಡುತ್ತಿದ್ದ. ತಲೆಯ ಬದಿಯಲ್ಲಿ ಇಟ್ಟಿದ್ದ ಜೋಡಿ ನಳಿಕೆಯ ಕೋವಿಯನ್ನು ಕ್ಷಣಮಾತ್ರದಲ್ಲಿ ಕೈಗೆತ್ತಿಕೊಂಡ ಪೊನ್ನಪ್ಪ, ಕೋವಿಯ ನಳಿಕೆಯಿಂದ ಸಿದ್ದಣ್ಣನ ಬೆನ್ನಿಗೆ ತಿವಿದ, ಮರದ ಕೆಳಬದಿಯಲ್ಲಿ ಸಲಗದ ಕೀಟಲೆಯನ್ನು ನೋಡುತ್ತಾ ಕುಳಿತಿದ್ದ ಸಿದ್ದಣ್ಣನಿಗೆ ಹಿಂಬದಿಯಿಂದ ಯಾರೋ ಚುಚ್ಚಿದ ಅನುಭವ ಆದ ತಕ್ಷಣ ಒಮ್ಮೆಲೆ ಬೆಚ್ಚಿ ತಿರುಗಿ ನೋಡಿದ. ಕುಳಿತಲ್ಲಿಂದಲೇ ಕೋವಿಯನ್ನು ಭುಜಕ್ಕೊರಗಿಸಲು ಸಿದ್ಧವಾಗುತ್ತಿದ್ದ ಪೊನ್ನಪ್ಪನ ಕಣ್ಣುಗಳು ಆ ಕಗ್ಗತ್ತಲಿನಲ್ಲೂ ಕೆಂಡದಂತೆ ಹೊಳೆಯುತ್ತಿದ್ದವು. + +ಪೊನ್ನಪ್ಪ, ‘ಕಳ್ಳರೇನಾದರೂ ಬಂದರಾ?’ ಎಂದು ಸಿದ್ದಣ್ಣನೆಡೆಗೆ ಕಣ್ಸನ್ನೆ ಮಾಡಿದ. ಸಿದ್ದಣ್ಣ ‘ಸಾ.. ಸಾ..’ ಎಂದು ಭಯದಿಂದ ತೊದಲತೊಡಗಿದ. “ಏನೋ ಹೇಳ್ತಾ ಇದ್ದೀಯಾ ನೀನು?” ಎಂದು ಪೊನ್ನಪ್ಪ ಮೆಲ್ಲನೆ ಪಿಸುಗುಟ್ಟಿದ. ಸಿದ್ದಣ್ಣ, ಮತ್ತೆ ‘ಆ.. ಆ..’ ಎಂದು ಕೆಳಗೆ ಕೈ ತೋರಿಸುತ್ತಿದ್ದನೆ ಹೊರತು ಅವನ ಬಾಯಿಂದ ಸ್ಪಷ್ಟವಾಗಿ ಮಾತುಗಳು ಹೊರಬರುತ್ತಿರಲಿಲ್ಲ. ಅವನು ಏನು ಹೇಳುತ್ತಿದ್ದಾನೆ ಎಂದು ಅರ್ಥವಾಗದ ಪೊನ್ನಪ್ಪ, ಬಂದೂಕನ್ನು ಕೆಳಭಾಗಕ್ಕೆ ಗುರಿಮಾಡಿ ದಿಟ್ಟಿಸಿ ನೋಡಿದರೆ, ದೈತ್ಯಕಾರದ ಒಂಟಿಸಲಗವೊಂದು ಹೊನ್ನೆಮರದ ಬುಡಕ್ಕೆ ತನ್ನ ಮೈ ಒರೆಸಿಕೊಂಡು ಪ್ರಪಂಚದ ಶ್ರೇಷ್ಠ ಸುಖಗಳಲ್ಲಿ ಒಂದಾದ ತುರಿಕೆಯನ್ನು ಆಸ್ವಾದಿಸುತ್ತಿತ್ತು. ಪೊನ್ನಪ್ಪ ತನ್ನ ಗುರಿ ಬದಲಿಸದೆ ಹಾಗೆಯೇ ಬಾಗಿ ಕುಳಿತ. ಒಂದು ವೇಳೆ ನಾವು ಮರದ ಮೇಲೆ ಕುಳಿತಿರುವುದನ್ನು ಏನಾದರೂ ಆನೆ ಗಮನಿಸಿದ್ದರೆ, ಈ ವೇಳೆಗಾಗಲೇ ಮರಕ್ಕೆ ಗುದ್ದಿ, ನಮ್ಮನ್ನು ಕೆಳಕ್ಕೆ ಬೀಳಿಸಿ ಆಕ್ರಮಣ ಮಾಡಿಯಾಗಿರುತ್ತಿತ್ತು. ಅದು ನಮ್ಮನ್ನು ನೋಡದಿರುವುದರಿಂದಲೇ ಇನ್ನೂ ಕೂಡ ಮೈಮರೆತು ತನ್ನ ತುಂಟಾಟಗಳನ್ನು ಮುಂದುವರೆಸುತ್ತಾ ಅಲ್ಲಿಯೇ ನಿಂತಿದೆ ಎಂದು ಪೊನ್ನಪ್ಪನಿಗೆ ಅನಿಸಿತು. + +ಭಯದಿಂದ ಸಿದ್ದಣ್ಣನ ಕೈಕಾಲುಗಳು ಅದುರುತ್ತಿರುವುದನ್ನು ಕಂಡ ಪೊನ್ನಪ್ಪ, ‘ಭಯಪಡಬೇಡ ಏನು ಆಗಲ್ಲ’ ಎಂದು ಸಿದ್ದಣ್ಣನ ಕೈಯನ್ನು ಅದುಮಿದ. ಅವನ ಕೈ ನಡುಗುತ್ತಲೇ ಇತ್ತು. ಒಂದರ್ಧ ಗಂಟೆ ಕಳೆದ ನಂತರದಲ್ಲಿ ಆನೆ, ಹೊನ್ನೆ ಮರವನ್ನು ಬಿಟ್ಟು ಮುಂದಕ್ಕೆ ಹೆಜ್ಜೆಹಾಕತೊಡಗಿತು. ಆನೆ ಒಂದು ವೇಳೆ ಉಳಿದ ತಂಡಗಳು ಕುಳಿತಿರುವ ಜಾಗಕ್ಕೆ ಹೋಗಿ ಏನಾದ್ರು ದಾಂಧಲೆ ಮಾಡಿಬಿಡಬಹುದೇನೋ ಎಂದು ಪೊನ್ನಪ್ಪನಿಗೆ ಮತ್ತೆ ಆತಂಕ ಶುರುವಾಯಿತು. ಬಹುಶಃ ಅವರು ಮರದ ಮೇಲೆ ಅಟ್ಟಣೆ ಕಟ್ಟದೆ, ನೆಲದ ಮೇಲೆ ಕುಳಿತಿದ್ದರೆ ಈ ಒಂಟಿಸಲಗದ ಕಣ್ಣಿಗೆ ಬೀಳುವುದರಲ್ಲಿ ಯಾವುದೇ ಸಂಶಯವಿಲ್ಲ. ಆನೆ ಹೋಗುವ ದಾರಿಯಲ್ಲಿ ಅಡ್ಡಲಾಗಿ ನಮ್ಮ ತಂಡದವರು ಸಶ್ತ್ರಸಜ್ಜಿತರಾಗಿ ಕುಳಿತಿರುವುದನ್ನು ಅದು ಗಮನಿಸಿದರೆ, ಅವರ ಮೇಲೆರಗುವುದಂತು ನಿಚ್ಚಳ! ಎಂದು ಪೊನ್ನಪ್ಪ ಯೋಚಿಸುತ್ತಿರುವಾಗಲೇ ಆನೆ, ತೇಗದ ನಾಟಾಗಳನ್ನು ಜೋಡಿಸಿ, ಮುಳ್ಳುಬಳ್ಳಿಗಳಿಂದ ಮುಚ್ಚಿದ್ದ ಪ್ರದೇಶಕ್ಕೆ ತಲುಪಿತು. + +ತಾನು ಸಾಧಾರಣವಾಗಿ ಓಡಾಡುವ ಈ ಜಾಗದಲ್ಲಿ, ಹಿಂದೆಂದೂ ಈ ರೀತಿಯ ಒಂದು ಅನಧಿಕೃತ ಪೊದೆಯನ್ನು ನಾನು ನೋಡಿರಲಿಲ್ಲವಲ್ಲ! ಎಂದು ಅನುಮಾನಗೊಂಡ ಒಂಟಿಸಲಗ ಕೋಪದಿಂದ ‘ಬುಸ್ ಬುಸ್’ ಎನ್ನುತ್ತಾ ಅದರ ಸುತ್ತಲು ಓಡಾಡತೊಡಗಿತು. ಒಂದ್ಹತ್ತು ನಿಮಿಷಗಳ ನಂತರ, ಆ ಜಾಗದಲ್ಲಿ ಕೃತಕವಾದ ಪೊದೆಯೊಂದನ್ನು ನಿರ್ಮಿಸಿ, ತನ್ನ ಮೇಲೆರಗಲು ಯಾರೋ ಸಂಚು ಮಾಡುತ್ತಿದ್ದಾರೆ ಎಂಬ ಸಂಶಯ ಅದಕ್ಕೆ ಕಾಡಿತೊ ಏನೋ! ಕೆಲಹೊತ್ತು ಅಲುಗಾಡದೇ ಆ ಪೊದೆಯನ್ನೆ ದಿಟ್ಟಿಸುತ್ತಾ ನಿಂತಲ್ಲಿಯೇ ನಿಂತಿತು. + +ಮರದ ಮೇಲೆ ಕುಳಿತಿದ್ದ ಪೊನ್ನಪ್ಪ ಮತ್ತು ಸಿದ್ದಣ್ಣನಿಗೆ, ಮರಗಳ್ಳರು ಜೋಡಿಸಿದ್ದ ತೇಗದ ದಿಮ್ಮಿಗಳ ಬಳಿ ಮಿಸುಕಾಡದೇ ನಿಂತು, ಕಿವಿನಿಮಿರಿಸಿ ಸುತ್ತಲೂ ಯಾರಾದರೂ ಇದ್ದಾರಾ ಎಂದು ಆಲಿಸುತ್ತಿರುವ, ಒಂಟಿಸಲಗದ ಕರ್ರಗಿನ ನೆರಳಿನ ಆಕೃತಿ ತಿಂಗಳ ಬೆಳಕಿನಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಈ ಆನೆ ಸಾಮಾನ್ಯದ್ದಲ್ಲ! ಬದಲಿಗೆ, ಅದು ಬಲು ಬುದ್ಧಿವಂತ ಪುಂಡ ಆನೆ ಎಂಬುದು ಪೊನ್ನಪ್ಪನಿಗೆ ಅರಿವಾಯಿತು, ಕಾರಣ, ಅದೆಷ್ಟು ನಿಶ್ಶಬ್ದವಾಗಿ ನಿಂತು, ಸುತ್ತಲೂ ಕಿವಿಗೊಡುತ್ತಿತ್ತು ಅಂದರೆ, ಅಲ್ಲೊಂದು ಪ್ರಾಣಿ ನಿಂತಿದೆ ಎನ್ನುವುದು ಕೂಡ ಯಾರಿಗೂ ಅನುಮಾನ ಬರದಿರುವಷ್ಟರ ಮಟ್ಟಿಗೆ ಶಬ್ದ ಮಾಡದೆ ನಿಂತಿತ್ತು. ಇದರ ಜೊತೆಗೆ ಸುಮಾರು ಒಂದು ತಾಸಿನಿಂದ ಆನೆಯ ಉಪಟಳವನ್ನು ಗಮನಿಸುತ್ತಿದ್ದ ಸಿದ್ದಣ್ಣನಂತೂ ಭಯದಿಂದ ಅವನು ಬಿಡುತ್ತಿರುವ ಉಸಿರಿನ ಶಬ್ದ ಅವನಿಗೆ ಕೇಳಿಸದಿರುವಷ್ಟರ ಮಟ್ಟಿಗೆ ಶಾಂತವಾಗಿ ಬಿಟ್ಟಿದ್ದ. + +ಕೆಲಹೊತ್ತು ಮೌನವಾಗಿ ತೇಗದ ದಿಮ್ಮಿಗಳ ಬಳಿ ನಿಂತಿದ್ದ ಸಲಗಕ್ಕೆ ತನ್ನ ಸೂಕ್ಷ್ಮ ಗ್ರಹಿಕೆಯ ಶಕ್ತಿಯ ಮೂಲಕ ತನ್ನನ್ನು ಮುಖಾಮುಖಿ ಎದುರಿಸಲಾಗದೇ, ಅಲ್ಲೆಲ್ಲೋ ದೂರದಲ್ಲಿ ಹೊಂಚುಹಾಕಿ ಕುಳಿತಿರುವ ನರಮನುಷ್ಯರು ನನ್ನನ್ನೆ ದಿಟ್ಟಿಸುತ್ತಿರುವ ರೀತಿಯಲ್ಲಿ ಭಾಸವಾಗತೊಡಗುತ್ತಿದ್ದಂತೆ ಕೋಪದಿಂದ ಮುಂಬದಿಯ ತನ್ನೆರಡು ಪಾದಗಳನ್ನು ಸ್ವಲ್ಪ ಮೇಲೆಕೆತ್ತಿ, ಕಾಡೆ ನಡುಗಿ ಹೋಗುವಂತೆ ಭಯಂಕರ ಶಬ್ದದೊಂದಿಗೆ ಘೀಳಿಡಲು ಪ್ರಾರಂಭ ಮಾಡಿತು. ಅಷ್ಟುಹೊತ್ತು, ಕಾಡೊಳಗಡೆ ನರಮನುಷ್ಯರು ಬೇಟೆಗಾಗಿ ಕಾದುಕುಳಿತಿದ್ದ ವಾಸನೆ ಮೂಗಿಗೆ ಬಡಿದು, ಆತಂಕದಿಂದ ತೆಪ್ಪಗೆ ಕುಳಿತಿದ್ದ ಪ್ರಾಣಿಗಳೆಲ್ಲ ಆನೆಯ ಆಕ್ರಂದನವನ್ನು ಕೇಳಿದ್ದೆ ತಡ ಒಮ್ಮೆಲೆ ವಿಚಿತ್ರವಾಗಿ ಕಿರುಚಲು ಪ್ರಾರಂಭಮಾಡಿದವು. + +ಅಲ್ಲೆ ಪಕ್ಕದ ಪೊದೆಯೊಳಗೆ ಅವಿತು ಕುಳಿತಿದ್ದ ಗುಳ್ಳೆನರಿಯೊಂದು ಕೂಗುತ್ತಾ ಕಾಡಿನ ಉಳಿದ ಪ್ರಾಣಿಗಳಿಗೆ ಅಪಾಯದ ಮುನ್ಸೂಚನೆ ನೀಡುತ್ತಾ, ಹೊನ್ನೆಮರದ ಪಕ್ಕದಿಂದ ಓಡಿ ಕತ್ತಲಲ್ಲಿ ಕಣ್ಮರೆಯಾಯಿತು. ಒಂದಷ್ಟು ನಿಮಿಷಗಳಿಗೆ ಮೊದಲು ಮೌನವಾಗಿದ್ದ ಕಾಡು, ಪ್ರಾಣಿಗಳ ವಿಚಿತ್ರ ಕೂಗಿನೊಂದಿಗೆ ಎಚ್ಚೆತ್ತುಕೊಂಡು ಕ್ಷಣಮಾತ್ರದಲ್ಲಿ ಒಂದು ರೀತಿಯ ಭಯದ ವಾತಾವರಣವನ್ನು ಸೃಷ್ಟಿಮಾಡಿತು. ಒಂಟಿಸಲಗ ಮಾತ್ರ ಗುಟುರು ಹಾಕುತ್ತಾ ಮದವೇರಿದಂತೆ ದಿಮ್ಮಿಯ ಸುತ್ತಲು ಓಡಾಡುತ್ತಲೇ ಇತ್ತು. + + + +ಇತ್ತ ಪೊನ್ನಪ್ಪನನ್ನು ಹೊರತುಪಡಿಸಿ, ಮರವೇರಿದ್ದ ಮತ್ತೊಂದು ತಂಡ ಎಚ್ಚರದಿಂದ ಮಧ್ಯರಾತ್ರಿಯವರೆಗೂ ಪಹರೆಗೆ ಕುಳಿತಿದ್ದು, ಒಂದು ಗಂಟೆಯ ನಂತರ ಇನ್ನು ಕಳ್ಳರು ಬರುವುದು ಸಂಶಯ ಎಂದು ಮನಗಂಡು ಒಬ್ಬ ನಿದ್ರೆಗೆ ಜಾರಿದರೆ, ಮತ್ತೊಬ್ಬ ತನ್ನ ಕಾವಲಿನ ಭಾಗವಾಗಿ ಕಣ್ಣರಳಿಸಿ, ಕಾಡಿನ ಧ್ವನಿಗಳಿಗೆ ಕಿವಿಗೊಟ್ಟು ಕುಳಿತಿದ್ದ. ನೆಲದ ಮೇಲೆ ಕುಳಿತಿದ್ದ ಮತ್ತೊಂದು ತಂಡ ಕೂಡ ಎಚ್ಚರವಾಗಿಯೇ ಇತ್ತು. ಹೀಗಿರುವಾಗ ಒಂಟಿಸಲಗ ಬಂದು ಪೊನ್ನಪ್ಪನವರು ಕುಳಿತಿದ್ದ ಹೊನ್ನೆಮರಕ್ಕೆ ‘ಸರ್ರ್ ಸರ್ರ್’ ಎಂದು ಮೈಯೊರೆಸಿಕೊಳ್ಳಲು ಶುರುಮಾಡಿದಾಗ ಎಲ್ಲರೂ ಎಚ್ಚರಗೊಂಡು, ಪೊನ್ನಪ್ಪ ಊಹಿಸಿದಂತೆಯೇ, ಕಳ್ಳರು ಅಕ್ಕಪಕ್ಕದಲ್ಲೆಲ್ಲೋ ಗರಗಸದಿಂದ ಮರ ಕುಯ್ಯಲು ಯತ್ನಿಸುತ್ತಿದ್ದಾರೆ ಎಂದು ತಿಳಿದು, ಕಳ್ಳರನ್ನು ಕಣ್ಣಾರೆ ಕಂಡ ಉಳಿದ ತಂಡದವರ್ಯಾರಾದರೂ ಮಂಗಗಳಂತೆ ಧ್ವನಿ ಹೊರಡಿಸಿ ಸಂದೇಶ ನೀಡಿದರೆ, ಮುನ್ನುಗ್ಗಿ ಕಳ್ಳರನ್ನು ಕೈಯಾರೆ ಹಿಡಿಯಬೇಕು ಎಂದು ಕಿವಿನಿಮಿರಿಸಿ ಕಾಯುತ್ತಾ ಕುಳಿತರು. + +ಆದರೆ ತೇಗದ ತುಂಡುಗಳನ್ನು ಜೋಡಿಸಿದ್ದಲ್ಲಿಗೆ ಬಂದ ಒಂಟಿಸಲಗ, ಘೀಳಿಟ್ಟು ಯಾವಾಗ ಕಾಡಿನ ಶಾಂತತೆಯನ್ನು ಕದಡಿತೋ, ಬಂದಿರುವುದು ಕಳ್ಳರಲ್ಲ, ಅದು “ಗಜರಾಜ” ಎಂಬುದು ಎಲ್ಲರಿಗು ಮನವರಿಕೆಯಾಗಿತ್ತು. ಸ್ವಲ್ಪ ಏರುಪೇರಾದರು ಆನೆ ನಮ್ಮ ಮೇಲೆರಗುವುದರಲ್ಲಿ ಯಾವುದೇ ಸಂಶಯವಿಲ್ಲ! ಜೊತೆಗೆ ಅವಿತು ಕುಳಿತಿದ್ದ ಮೂರು ತಂಡಗಳಿಗೂ ಒಂಟಿಸಲಗ ತೇಗದ ದಿಮ್ಮಿಗಳನ್ನು ಮುಚ್ಚಿಟ್ಟಿದ್ದ ಕೃತಕ ಪೊದೆಯ ಸುತ್ತಲೂ ನಡೆಸುತ್ತಿದ್ದ ದಾಂಧಲೆಗಳನ್ನು ಕುಳಿತಲ್ಲಿಂದಲೇ ಕಾಣಬಹುದಾಗಿತ್ತು. ಹೀಗೆ ಪ್ರತಿ ತಂಡದವರು, ಉಳಿದವರ ಕಥೆ ಏನಾಗಿರಬಹುದು? ಎಂಬ ಆತಂಕದಿಂದ ಚಿಂತಾಕ್ರಾಂತರಾಗಿ ಕುಳಿತಿದ್ದರು. + +ಎರಡನೆ ತಂಡದವರ ಅವಸ್ಥೆಯಂತು ಹೇಳತೀರದ್ದಾಗಿತ್ತು. ಕಾರಣ, ಅವರು ಆನೆ ನಿಂತಿರುವ ಕೇವಲ ಐವತ್ತು ಅಡಿ ಅಂತರದಲ್ಲಿ ನೆಲದ ಮೇಲೆ ಕುಳಿತಿದ್ದರು. ಸಲಗ ಏನಾದರು ನಾವು ಕುಳಿತಿರುವ ಬಂಡೆಗಳ ಕಡೆ ಬಂದು, ನಾವೇನಾದರೂ ಅದರ ಕೈಯಲ್ಲಿ ಸಿಕ್ಕಿಹಾಕಿಕೊಂಡರೆ ಅದು ನಮ್ಮನ್ನು ತನ್ನ ಬಲವಾದ ಕೋರೆಗಳಿಂದ ತಿವಿದು, ಅಗಲವಾದ ಅದರ ಪಾದಗಳಿಂದ ತುಳಿದು ಅಪ್ಪಚ್ಚಿ ಮಾಡಿಬಿಡಬಹುದೇನೋ ಎಂಬ ಭಯ ಅವರಿಗೆ ಶುರುವಾಗಿಬಿಟ್ಟಿತ್ತು. ಒಂದು ವೇಳೆ ಒಂಟಿಸಲಗ ನಮ್ಮ ಮೇಲೆ ದಾಳಿ ಮಾಡಲು ಮುಂದೆ ಬಂದರೆ ಆತ್ಮರಕ್ಷಣೆಗಾಗಿ ಒಂದು ಸುತ್ತು ಗುಂಡು ಹಾರಿಸಿ, ಎರಡನೆ ಸುತ್ತಿಗೆ ಮದ್ದು ತುಂಬಿಸುವ ವೇಳೆಗಾಗಲೇ ಅದು ನಮ್ಮನ್ನು ಚೆಂಡಾಡಿರುತ್ತೆ! ಓಡಿ ತಪ್ಪಿಸಿಕೊಳ್ಳುವ ಎಂದರೆ, ಅದು ಈ ಕಗ್ಗತ್ತಲಿನಲ್ಲಿ ಸಾಧ್ಯವಾಗದ ಮಾತು. ಇನ್ನುಳಿದಿರುವ ಏಕೈಕ ದಾರಿಯೆಂದರೆ ಅದು ‘ಆ ಸಲಗದ ಕಣ್ಣಿಗೆ ನಮ್ಮನ್ನು ಕಾಣದೆ ಇರುವ ರೀತಿ ಕಾಪಾಡಪ್ಪ ಎಂದು ತಮಗೆ ಗೊತ್ತಿರುವ ಅಷ್ಟೂ ದೇವರುಗಳ ಹೆಸರನ್ನು ಕರೆಯುವುದು’ ಎಂದು ದೇವನಾಮಗಳನ್ನು ಜಪಮಾಡಲು ಪ್ರಾರಂಭ ಮಾಡಿದರು. + +ಇತ್ತ ಒಂಟಿ ಸಲಗಕ್ಕೆ ‘ಆ ಪೊದೆಯೊಳಗೆ ಯಾರೋ ದುಷ್ಕರ್ಮಿಗಳು ಕುಳಿತಿರಬಹುದು’ ಎಂಬ ಸಂಶಯ ಬಲವಾಗಿ ಕಾಡತೊಡಗಿತು. ಒಂದು ವೇಳೆ ಆ ಪೊದೆಯೊಳಗಡೆ ಕುಳಿತಿರುವ ವೈರಿಗಳು ಎಲ್ಲಾದರು ನನ್ನ ಮೇಲೆ ದಾಳಿ ಮಾಡಿಬಿಡಬಹುದಾ? ಎಂಬ ಭಯದಿಂದಾಗಿ, ಸಲಗ ನಿಂತಲ್ಲಿ ನಿಲ್ಲಲಾಗದೇ ನಾಲ್ಕು ಹೆಜ್ಜೆ ಹಿಂದೆ ಸರಿಯುತ್ತಿತ್ತು, ಮತ್ತೆ ಪುನಃ ಮುಂದೆ ಬಂದು ಸೊಂಡಿಲಿನಿಂದ ಮುಳ್ಳುಗಿಡಗಳನ್ನು ಸರಿಸಿ ಮೂಸುತ್ತಿತ್ತು. ಆನೆಯ ಈ ವಿಚಿತ್ರ ವರ್ತನೆಯನ್ನು ಮರದ ಮೇಲೆ ಮತ್ತು ಬಂಡೆಯ ಹಿಂದೆ ಕುಳಿತಿದ್ದವರು ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಾ ಕುಳಿತಿದ್ದರು. + +ಸಮಯ ಸರಿಯಾಗಿ ತಡರಾತ್ರಿ ಮೂರುವರೆ ಗಂಟೆ ಆಗಿರಬಹುದು. ಕೆಲ ತಾಸುಗಳಿಂದ ಒಂದೇ ಸಮನೆ ರಾದ್ಧಾಂತ ಮಾಡಿ ಬಳಲಿದ್ದ ಸಲಗ ಮೆಲ್ಲನೆ ಬಂದ ದಾರಿಯಲ್ಲೆ ಮರಳಿ ಹೆಜ್ಜೆ ಹಾಕತೊಡಗಿತು. ಆನೆ ಮರಳುವುದನ್ನು ಎಲ್ಲರೂ ನೋಡಿದರಾದರೂ, ಮತ್ತೆ ಮರಳಿ ಬರಬಹುದೇನೋ ಎಂಬ ಆತಂಕದಿಂದ ಮಿಸುಕಾಡದೆ ಹಾಗೆಯೇ ಕುಳಿತುಕೊಂಡಿದ್ದರು. ಹೊತ್ತು ಸರಿದು ತಂಗಾಳಿ ಬೀಸತೊಡಗಿದರು, ಅವಿತು ಕುಳಿತವರ ನೆತ್ತಿಯ ಮೇಲೆ ಬೆವರಿನ ಹನಿಗಳು ಜಿನುಗುತ್ತಲೆ ಇದ್ದವು. ಇನ್ನೇನು ಬೆಳಕ್ಹರಿಯಲಿದೆ ಎಂಬುದಕ್ಕೆ ಪೂರಕವಾಗಿ ಕಾಡುಕೋಳಿಗಳು ಕೂಗುತ್ತಾ, ಓಡಾಡುವ ಶಬ್ದ ಕಾಡಿನ ನಾಲ್ಕು ದಿಕ್ಕುಗಳಿಂದ ಕೇಳಿಬರತೊಡಗಿತು. ಮರದ ಎಲೆಗಳ ಮೇಲೆ ಕುಳಿತ ಇಬ್ಬನಿಗಳು ತಲೆಯ ಮೇಲೆ ತೊಟ್ಟಿಕ್ಕತೊಡಗಿದವು. ಮೂಡಣದಲ್ಲಿ ನೇಸರ ಕೆಂಪಗೆ ಹೊಳೆಯತೊಡಗಿದಂತೆ ಸೂರ್ಯರಶ್ಮಿಯ ಕಿರಣಗಳು ನೆಲಕ್ಕೆ ಚುಂಬಿಸುವ ಸಲುವಾಗಿ ಕಾಡುಮರಗಳ ನಡುವಿನಿಂದ ಇಣುಕತೊಡಗಿದವು. + +ಪೊನ್ನಪ್ಪ ಮರದಿಂದ ಕೆಳಗಿಳಿದು, ಕೈಕಾಲುಗಳನ್ನೆಲ್ಲಾ ಒಮ್ಮೆ ಉದ್ದನೆ ಚಾಚಿ, ಮೈಮುರಿಯತೊಡಗಿದ. ಒಂದೇ ಭಂಗಿಯಲ್ಲಿ ಕುಳಿತು ಬೆಳಕರಿಸಿದ್ದರಿಂದ ಅವನಿಗೆ ಮೈಯೆಲ್ಲ ಹೆಪ್ಪುಗಟ್ಟಿದಂತಾಗಿತ್ತು. ಸಿದ್ದಣ್ಣ ಕೂಡ ಅವನ ಹಿಂದಿನಿಂದಲೆ ಮರದಿಂದ ಇಳಿದು ಪಕ್ಕದ ಪೊದೆಯ ಬಳಿಗೆ ಹೋಗಿ ಮೂತ್ರ ಮಾಡಿದ. ಪೊನ್ನಪ್ಪ ನಾಟಾದ ಬಳಿಗೆ ಹೋಗಿ ನೋಡುವಾಗ, ರಾತ್ರಿ ಒಂಟಿ ಸಲಗ ದಾಂಧಲೆ ನಡೆಸಿದ್ದರಿಂದಾಗಿ ನಾಟಾದ ಸುತ್ತಲೂ ಆನೆಯ ದೊಡ್ಡ ದೊಡ್ಡ ಹೆಜ್ಜೆಗಳು ಮೂಡಿರುವುದು ಎದ್ದು ಕಾಣುತ್ತಿದ್ದವು. ಪೊದೆಯೊಳಗೆ ಯಾರೋ ಕುಳಿತಿದ್ದಾರೆ ಎಂಬ ಸಂಶಯದಿಂದ ಆನೆ ತನ್ನ ಸೊಂಡಿಲಿನಿಂದ ಮುಚ್ಚಿದ್ದ ಸೊಪ್ಪುಸದೆಗಳನ್ನು ಎಳೆದಾಡಿದ್ದರಿಂದ ಒಂದು ಬದಿಯಲ್ಲಿ ನಾಟಾದ ತುಂಡುಗಳು ಕೂಡ ಜರುಗಿದ್ದವು. ಪೊನ್ನಪ್ಪ ಅಡಗುತಾಣದಿಂದ ಹೊರಬಂದು, ಮರದ ದಿಮ್ಮಿಗಳನ್ನು ಜೋಡಿಸಿದ್ದ ಸ್ಥಳವನ್ನು ಪರಿಶೀಲನೆ ಮಾಡುತ್ತಿರುವುದನ್ನು ನೋಡಿದ ಉಳಿದ ಎರಡು ತಂಡಗಳು, ಮೆಲ್ಲನೆ ಕುಳಿತಲ್ಲಿಂದ ಎದ್ದು ಅವರ ಬಳಿಗೆ ಬಂದರು. ಅವರನ್ನು ಕಂಡಿದ್ದೆ ತಡ ಹತ್ತಿರಕ್ಕೆ ಬರಬೇಡಿ ಎಂದು ಸನ್ನೆ ಮಾಡಿದ ಪೊನ್ನಪ್ಪ, ಅವರ ಬಳಿ ತೆರಳಿ, “ದಿಮ್ಮಿಗಳ ಬಳಿ ಹೋಗಬೇಡಿ. ಅಲ್ಲಿ ಆನೆಯ ಹೆಜ್ಜೆಗುರುತು ಮತ್ತು ಲದ್ದಿ ಬಿದ್ದಿದೆ. ಅದರ ಮೇಲೆ ನಾವು ಓಡಾಡಿದರೆ ನಮ್ಮ ಕಾಲ್ಗುರುತುಗಳು ಅಲ್ಲಿ ಅಚ್ಚೊತ್ತುವ ಸಾಧ್ಯತೆ ಇದೆ” ಎಂದು ಹೇಳಿದ. + +ಎಲ್ಲರೂ ‘ಸರಿ, ಸರಿ’ ಎಂದು ರಾತ್ರಿಪೂರ ನಿದ್ದೆಗೆಟ್ಟು ಕೆಂಪಗೆ ಕಾಂತಿಹೀನವಾಗಿದ್ದ ಕಣ್ಣುಗಳಿಂದ ಸನ್ನೆ ಮಾಡಿ ಸರಿದು ನಿಂತರು. ರಾತ್ರಿ ಒಂಟಿಸಲಗ ಅಚಾನಕ್ಕಾಗಿ ಬಂದು ಕಾಟ ಕೊಟ್ಟಿದ್ದರಿಂದ ಎಲ್ಲರೂ ಬಸವಳಿದು ಹೋಗಿದ್ದರು. + +“ಕಳ್ಳರಂತು ಬೆಳಿಗ್ಗೆ ಬರುವ ಯಾವುದೇ ಸಾಧ್ಯತೆ ಇಲ್ಲವಾದ್ದರಿಂದ ನೀವೆಲ್ಲ ಕ್ವಾಟ್ರಸ್‍ಗೆ ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆಯ ವೇಳೆಗೆ ಮರಳಿ ಬಂದರೆ ಸಾಕು” ಎಂದು ಐದೂ ಜನರನ್ನು ಕಳುಹಿಸಿದ ಪೊನ್ನಪ್ಪ, ಕಾಡಿನ ನಡುಭಾಗದಲ್ಲಿದ್ದ ಕೆರೆಯ ಬಳಿಗೆ ಹೆಜ್ಜೆ ಹಾಕಿದ. + +ಬೆಳಗಿನ ನಿತ್ಯಕರ್ಮಗಳನ್ನು ಮುಗಿಸಲು ಕೆರೆಯ ಬಳಿಗೆ ಹೋದ ಪೊನ್ನಪ್ಪನಿಗೆ, ರಾತ್ರಿ ನೀರು ಕುಡಿಯಲು ಬಂದ ಒಂಟಿಸಲಗ ಕೆರೆಯ ಬದಿಯ ಕೆಸರಲ್ಲಿ ಸಿಲುಕಿಕೊಂಡು ಪರದಾಡಿದ ಕುರುಹನ್ನು ಕಾಣಲು ಸಾಧ್ಯವಾಯಿತು. ‘ಹೊ, ಹೋ ಇಲ್ಲಿಂದ ಹೇಗೊ ತಪ್ಪಿಸಿಕೊಂಡು ಆ ಆನೆ ನಾವು ಕುಳಿತಿದ್ದ ಮರದತ್ತ ಬಂದಿರಬೇಕು’. ಪುಣ್ಯಕ್ಕೆ ನಮ್ಮವರು ಯಾರೂ ಆ ಒಂಟಿಸಲಗದ ಕಣ್ಣಿಗೆ ಬಿದ್ದಿಲ್ಲ. ಒಂದುವೇಳೆ ನಾವೇನಾದರು ಅದರ ಕಣ್ಣಿಗೆ ಬಿದ್ದಿದ್ದರೆ ಕೆಸರಲ್ಲಿ ಸಿಕ್ಕಿಕೊಂಡು ಕೊಸರಾಡಿದ ಕೋಪವನ್ನೆಲ್ಲ ನಮ್ಮ ಮೇಲೆ ತೀರಿಸಿಕೊಂಡು ಬಿಡುತ್ತಿತ್ತು ಎಂದು ಮನದಲ್ಲಿ ಅಂದುಕೊಂಡ. + +ಮರಳಿ ಹೋದ ಅರಣ್ಯ ಸಿಬ್ಬಂದಿಗಳು, ‘ಮರಗಳ್ಳರು ರಾತ್ರಿ ಬರದೇ ಇದ್ದದ್ದು ಮತ್ತು ತಡರಾತ್ರಿಯಲ್ಲಿ ಆನೆ ಬಂದು ಕೊಟ್ಟ ಪರಿಪಾಟಲಗಳನ್ನು’ ಚಾಚುತಪ್ಪದೆ ರೇಂಜರ್ ಅಚ್ಚಯ್ಯನವರಿಗೆ ವಿವರಿಸಿದರು. ‘ಛೇ’ ಈ ಮರಗಳ್ಳರಿಂದಾಗಿ ನಮ್ಮ ಸಿಬ್ಬಂದಿ ಎಷ್ಟೊಂದು ಸಮಸ್ಯೆಗಳನ್ನು ಅನುಭವಿಸುವಂತಾಯ್ತಲ್ಲ. “ಕಳ್ಳ ಬಡ್ಡಿಮಕ್ಕಳು, ಸಿಕ್ಕಿ ಹಾಕಿಕೊಳ್ಳಲಿ ಅವರನ್ನು ಜೀವನಪೂರ್ತಿ ಜೈಲಿನಲ್ಲಿ ಕೊಳೆಯುವ ಹಾಗೆ ಮಾಡುತ್ತೇನೆ” ಎಂದು ಹೇಳುತ್ತಾ, ವಾಕಿಟಾಕಿಯನ್ನು ಆನ್ ಮಾಡಿ, “ಹಲೋ ಹಲೋ, ಅಚ್ಚಯ್ಯ ಹಿಯರ್” ಎಂದರು. + +ಅತ್ತ ‘ಕರ್ರ್ ಕರ್ರ್’ ಎಂದು ಶಬ್ದವಾಗುತ್ತಿದ್ದಂತೆ ವೈರ್‍ಲೆಸನ್ನು ಪೊನ್ನಪ್ಪ ಆನ್ ಮಾಡಿದ. “ನೀವು ಬೇರೆ ಒಬ್ಬರೇ ಇದ್ದೀರ, ಸ್ವಲ್ಪ ಹುಷಾರಾಗಿರಿ” ಎಂಬ ಅಚ್ಚಯ್ಯನವರ ಧ್ವನಿ ಕೇಳಿಸಿತು. + +“ನನ್ನ ವಿಚಾರವಾಗಿ ನೀವು ಚಿಂತೆ ಮಾಡಬೇಡಿ ಸರ್, ಇನ್ನೆರಡು ದಿನ ತಡವಾದರೂ ಪರ್ವಾಗಿಲ್ಲ, ಈ ಕಳ್ಳರನ್ನು ಹಿಡಿದು ಅವರಿಗೆ ಒಂದು ಗತಿ ಕಾಣಿಸಲೇಬೇಕು” ಎಂದೆನ್ನುತ್ತಾ ‘ಸಿಬ್ಬಂದಿಯನ್ನು ಸಂಜೆಯ ವೇಳೆಗೆ ಅಗತ್ಯ ಸಾಮಗ್ರಿಗಳೊಂದಿಗೆ ಮರಳಿ ಕಳುಹಿಸಿಕೊಡಿ. ಅದರ ನಡುವಲ್ಲಿ ಏನಾದರು ಮರಗಳ್ಳರು ಬರುವ ಲಕ್ಷಣ ಕಂಡರೆ, ನಾನು ನಿಮಗೆ ಮಾಹಿತಿ ನೀಡುತ್ತೇನೆ’ ಎಂದು ಅಚ್ಚಯ್ಯನವರ ಬಳಿಹೇಳಿ ವೈರ್‍ಲೆಸನ್ನು ಪೊನ್ನಪ್ಪ ಆಫ್ ಮಾಡಿದ. ನಂತರ ಮರಗಳ್ಳತನಕ್ಕೆ ಸಂಬಂಧಪಟ್ಟ ಬೇರೇನಾದರು ಕುರುಹುಗಳು ಸಿಗಬಹುದಾ? ಎಂದು ಕಾಡಿನ ಸುತ್ತಲೂ ಎಚ್ಚರಿಕೆಯಿಂದ ಒಂದಷ್ಟು ಸುತ್ತಾಡಿ, ಹನ್ನೆರಡು ಗಂಟೆಯ ವೇಳೆಗೆ ಮರಳಿ ಮಚ್ಚಾನಿನತ್ತ ಬಂದು, ಮರದ ಮೇಲೆ ಹತ್ತಿ, ನಿನ್ನೆ ಬರುವಾಗ ಕಟ್ಟಿಕೊಂಡು ಬಂದಿದ್ದ ಒಣರೊಟ್ಟಿಯನ್ನು ಬಾಯಿಗೆ ಹಾಕಿಕೊಂಡು ಜಗಿಯತೊಡಗಿದ. ಕೆಲಸಮಯಗಳ ತರುವಾಯ, ರಾತ್ರಿ ಪೂರ ಆನೆ ಅವಾಂತರದಿಂದ ನಿದ್ರೆಗೆಟ್ಟು ಬಳಲಿದ್ದರಿಂದ ಹಾಗೆಯೇ ಕಾಲು ನೀಡಿ ನಿದ್ರೆಗೆ ಜಾರಿದ. + +ಸಮಯ ಸರಿಸುಮಾರು ನಾಲ್ಕು ಗಂಟೆಯಾಗಿರಬಹುದು. ‘ಚರ್ರ್ ಪರ್ರ್’ ಎಂದು ತರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಾ, ತನ್ನತ್ತ ಯಾರೋ ನಡೆದು ಬರುತ್ತಿರುವಂತೆ ಪೊನ್ನಪ್ಪನಿಗೆ ನಿದ್ದೆಮಂಪರಿನಲ್ಲಿ ಭಾಸವಾಗತೊಡಗಿತು. ತಕ್ಷಣ ಎಚ್ಚರಗೊಂಡ ಪೊನ್ನಪ್ಪ, ಯಾರಿರಬಹುದು? ಎಂದು ಮಲಗಿದ್ದಲ್ಲಿಂದಲೆ ಯೋಚಿಸಿ, ಪಕ್ಕದಲ್ಲಿದ್ದ ಕೋವಿಯನ್ನು ಶಬ್ದ ಕೇಳಿಬರುತ್ತಿರುವೆಡೆಗೆ ಗುರಿಯಿಟ್ಟು ನೋಡಿದ. ಬೆಳಿಗ್ಗೆ ವಿಶ್ರಾಂತಿಗೆ ತೆರಳಿದ್ದ ತಮ್ಮದೆ ತಂಡ ಬೆನ್ನಿಗೆ ಬಂದೂಕು ನೇತು ಹಾಕಿಕೊಂಡು, ಒಂದು ಕೈಯಲ್ಲಿ ರಾತ್ರಿ ಪಾಳಿಗೆ ಬೇಕಾದ ಸಾಮಗ್ರಿ ಮತ್ತು ನೀರಿನ ಕ್ಯಾನ್‍ಗಳನ್ನು ಹಿಡಿದು ಮೆಲ್ಲಮೆಲ್ಲನೆ ಹೆಜ್ಜೆಗಳನ್ನು ಹಾಕುತ್ತಾ ಪೊನ್ನಪ್ಪ ಕುಳಿತಿದ್ದ ಹೊನ್ನೆ ಮರದೆಡೆಗೆ ನಡೆದುಕೊಂಡು ಬರುತ್ತಿತ್ತು. ಅವರೆಷ್ಟೇ ಶಬ್ದಬಾರದಂತೆ ಎಚ್ಚರಿಕೆಯಿಂದ ಹೆಜ್ಜೆಹಾಕುತ್ತಿದ್ದರೂ ಕಾಲೆಜ್ಜೆ ಸದ್ದು ಮಾತ್ರ ಕೇಳಿ ಬರುತ್ತಲೆ ಇತ್ತು. + +ಅರಣ್ಯ ಸಿಬ್ಬಂದಿಯ ತಲೆ ಕಂಡ ತಕ್ಷಣ, ಮರದ ಕೊಂಬೆಗೆ ಕಟ್ಟಿದ್ದ ಹಗ್ಗವನ್ನು ಇಳಿಬಿಟ್ಟು ಪೊನ್ನಪ್ಪ ಕೆಳಗಿಳಿದು ಬಂದು, ನಾವು ಕಾವಲು ಕುಳಿತಿರುವ ವಿಚಾರವಾಗಿ ಹೊರಗಡೆ ಯಾರಿಗಾದರು ಸಂಶಯ ಮೂಡಿದೆಯ? ಎಂದು ಸಿಬ್ಬಂದಿಗಳ ಬಳಿ ಕೇಳಿದ. “ಇಲ್ಲ ಸರ್, ಯಾರಿಗೂ ಸಂಶಯ ಬಂದಿಲ್ಲ. ಆದರೆ ನಿನ್ನೆ ರಾತ್ರಿ ನಡೆದ ಆನೆಯ ಕಥೆ ಕೇಳಿದ ಸಾಹೇಬ್ರು, ಇವತ್ತು ಒಂದು ದಿನ ನೋಡಿ, ಮರಗಳ್ಳರು ಬರದೇ ಹೋದರೆ, ನಾಳೆಯಿಂದ ಬೇರೆಯೇನಾದ್ರು ಉಪಾಯ ಹೂಡುವ, ನೀವು ಸುಮ್ಮನೇ ಕಾಡಿನಲ್ಲಿ ಕುಳಿತು ರಿಸ್ಕ್ ತಗೋಬೇಡಿ” ಎಂದು ಹೇಳಿದ್ದಾರೆ ಎಂದರು. ಅಚ್ಚಯ್ಯನವರು ಆ ರೀತಿಯಾಗಿ ಹೇಳುವುದಕ್ಕಿಂತ ಮಿಗಿಲಾಗಿ ‘ಪಹರೆಗೆಂದು ಬಂದಿದ್ದ ಅಷ್ಟು ಜನ ಅರಣ್ಯ ಸಿಬ್ಬಂದಿಗೆ, ಈ ರೀತಿ ಜೀವವನ್ನು ಪಣಕ್ಕಿಟ್ಟು, ಕಾದುಕುಳಿತು ಕಳ್ಳರನ್ನು ಹಿಡಿಯಲು ಸುತಾರಂ ಇಷ್ಟವಿರಲಿಲ್ಲ’ ಎಂಬುದು ಅವರ ಮುಖಲಕ್ಷಣ ನೋಡಿದಾಗಲೆ ಪೊನ್ನಪ್ಪನಿಗೆ ಅರ್ಥವಾಗಿತ್ತು. ಹೆಚ್ಚೆಂದರೆ ಇವತ್ತು ಒಂದು ದಿನ ಮರಗಳ್ಳರಿಗಾಗಿ ನಾವು ಇಲ್ಲಿ ಕಾವಲು ಕಾಯಬಹುದು, ನಾಳೆಯಿಂದ ನಾವು ಕೂರುತ್ತೇವೆ ಎಂದರೂ ಅಚ್ಚಯ್ಯನವರು ಒಪ್ಪುವುದಿಲ್ಲ. ‘ಒಂದು ವೇಳೆ ಈ ರೀತಿ ಕಾವಲುಕುಳಿತು ಏನಾದರು ಸಮಸ್ಯೆ ಎದುರಾದರೆ, ಅದು ಅಚ್ಚಯ್ಯನವರ ತಲೆಗೆ ಬಂದುಬಿಡಬಹುದು ಎಂಬ ಕಳವಳ ಕೂಡ ಅವರಲ್ಲಿರುತ್ತೆ’ ಎಂದು ಪೊನ್ನಪ್ಪನಿಗೆ ಅನ್ನಿಸತೊಡಗಿತು. ‘ಕೊನೆಯದಾಗಿ ಇವತ್ತು ಒಂದು ದಿನ ಪ್ರಯತ್ನ ಮಾಡಿ ನೋಡುವ!’ ಎಂದು ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟ ಪೊನ್ನಪ್ಪ, ‘ಹೆಚ್ಚು ಹೊತ್ತು ಇಲ್ಲೆ ಮಾತನಾಡಿಕೊಂಡು ನಿಲ್ಲುವುದು ಬೇಡ ಎಲ್ಲರೂ ಅವರವರ ಸ್ಥಳಕ್ಕೆ ಹೋಗಿ ಕಾವಲು ಕೂರಲು ಬೇಕಾದ ಸಿದ್ಧತೆಗಳನ್ನು ಮಾಡಿ’ ಎಂದು ತಿಳಿಸಿ, ತನ್ನೊಂದಿಗೆ ರಾತ್ರಿ ತಂಗಿದ್ದ ಸಿದ್ದಣ್ಣನೊಂದಿಗೆ ಊಟದ ಸಾಮಗ್ರಿಗಳು ಮತ್ತು ನೀರಿನ ಕ್ಯಾನ್‍ಗಳನ್ನು ಹಗ್ಗದ ಮೂಲಕ ಮರದ ಮೇಲಕ್ಕೆ ಸಾಗಿಸತೊಡಗಿದ. ನಿನ್ನೆ ರಾತ್ರಿ ಒಂಟಿಸಲಗದ ಕಾಟಕ್ಕೆ ಬೆಚ್ಚಿದ್ದ ಎರಡನೆಯ ತಂಡದವರು ಇಂದು ಬಂದ ಕೂಡಲೇ ತಡಮಾಡದೆ ಒಂದು ಬೀಟೆ ಮರವನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ಮಚ್ಚಾನು ಕಟ್ಟಲು ಶುರುಮಾಡಿದರು. ಉಳಿದಂತೆ ಮೂರನೆ ತಂಡ ಕೂಡ ಮರವೇರಿ ಕುಳಿತುಕೊಂಡಿತು. + + + +ಮಧ್ಯಾಹ್ನ ಬಿಸಿಲಿನ ಧಗೆ ಕೊಂಚ ಹೆಚ್ಚಿದ್ದರಿಂದ, ಸಾಯಂಕಾಲವಾಗುತ್ತಿದ್ದಂತೆ ಮೋಡಗಳು ಕಪ್ಪಿಡಲು ಶುರುವಾಗಿ, ತಣ್ಣನೆಯ ಗಾಳಿ ಬೀಸತೊಡಗಿತು. ಪೊನ್ನಪ್ಪನಿಗೆ ಕಳೆದೆರಡು ದಿನಗಳಿಂದ, ಮರಗಳ್ಳರ ಹಿಂದೆ ಬಿದ್ದಿದ್ದರಿಂದಾಗಿ ಮರೆತು ಹೋಗಿದ್ದ, ಮನೆ ಮತ್ತು ಹೆಂಡತಿ ಮಕ್ಕಳ ನೆನಪು ಮೆಲ್ಲನೆ ಕಣ್ಣ ಮುಂದೆ ಬರತೊಡಗಿತು. ತಾನು ವಾಸ ಮಾಡುತ್ತಿರುವ ಕಾನೂರಿನ ಪರಿಸರ, ಕಾಲೇಜು ದಿನಗಳಲ್ಲಿ ಪ್ರೀತಿಸಿ ಮದುವೆಯಾದ ಬೊಳ್ಳವ್ವ. ಕೆಲವರ್ಷಗಳಲ್ಲಿ ಪ್ರೀತಿಯ ಸಂಕೇತವಾಗಿ ಹುಟ್ಟಿದ ಇಬ್ಬರು ಗಂಡು ಮಕ್ಕಳು, ಅರಣ್ಯ ಇಲಾಖೆಯ ಕೆಲಸದಿಂದಾಗಿ ಕುಟುಂಬದೊಂದಿಗೆ ಅನ್ಯೋನ್ಯವಾಗಿ ಕಳೆಯಬೇಕಾದಂತಹ ಸಮಯದಲ್ಲಿ ಅವರನ್ನು ಅಗಲಿ ಇರಬೇಕಾಗಿ ಬಂದದ್ದು, ಎಲ್ಲವೂ ನೆನಪಿನ ಬುತ್ತಿಯಿಂದ ತೆರೆದುಕೊಳ್ಳಲು ಪ್ರಾರಂಭವಾಯಿತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_173.txt b/Kenda Sampige/article_173.txt new file mode 100644 index 0000000000000000000000000000000000000000..e8e4ec610eaa00c5139ec894a30f7cd102878d91 --- /dev/null +++ b/Kenda Sampige/article_173.txt @@ -0,0 +1,19 @@ +‘ದೇಶ ಸುತ್ತು ಕೋಶ ಓದು’ ಎಂಬುದೊಂದು ಬಹುಪ್ರಚಲಿತ ಮಾತು. ಅದನ್ನೇ ನಂಬಿ ಅನೇಕರು ಸುತ್ತಾಟಗಳಲ್ಲಿ ತೊಡಗಿದರೆ ಮತ್ತೂ ಹಲವರು ಸುತ್ತಾಡಿ ಬಂದವರ ಅನುಭವ ಕಥನಗಳನ್ನೇ ಕೇಳಿಯೋ ಅಥವಾ ಓದಿಯೋ ತಮ್ಮ ಭ್ರಮಾಲೋಕದಲ್ಲಿ ತಾವೂ ಪ್ರವಾಸದ ಅನುಭವ ಹೊಂದುತ್ತಾರೆ. ಈ ಮಾತನ್ನು ಪ್ರಸ್ತಾಪಿಸಲು ಕಾರಣ ನಮ್ಮ ಆತ್ಮೀಯ ಕವಿಮಿತ್ರ, ಪರಿಸರ ಪ್ರೇಮಿ, ಬರಹಗಾರ ಹಾಗೂ ವೃತ್ತಿಯಲ್ಲಿ ಫಾರ್ಮಾಸಿಸ್ಟ್ ಆಗಿರುವ ಪ್ರಕಾಶ್ ಕೆ ನಾಡಿಗ್ ರವರು ಮತ್ತೊಂದು ಸುತ್ತು ಯೂರೋಪ್ ಪ್ರವಾಸ ಮುಗಿಸಿ ಬಂದಿದ್ದಾರೆ. ಸ್ನೇಹಿತನ ಒತ್ತಾಸೆಗೆ ಹೋಗಿಬಂದೆನೆಂದು ಹೇಳಿಕೊಂಡಿದ್ದರೂ ಅವರೊಳಗೊಬ್ಬ ಹವ್ಯಾಸಿ ‘ಪ್ರವಾಸಿ’ ಇರುವುದನ್ನು ಗುರ್ತಿಸಬಹುದಾಗಿದೆ. + +(ಪ್ರಕಾಶ್ ಕೆ ನಾಡಿಗ್) + +ಅದಾಗಲೇ ಒಂದು ಬಾರಿ ಯೂರೋಪ್ ಪ್ರವಾಸ ಹೋಗಿಬಂದು ತಾವು ನೋಡಿದ ಕೆಲವೇ ದೇಶಗಳ ಪರಿಚಯವನ್ನು ರಸವತ್ತಾಗಿ ಕಟ್ಟಿಕೊಟ್ಟು ಓದುಗ ಪ್ರಭುವಿಗೂ ಯೂರೋಪನ್ನು ಕುಳಿತಲ್ಲೇ ಪರಿಚಯಿಸಿದ್ದ ಪ್ರಕಾಶ್ ರವರು ಮತ್ತೊಮ್ಮೆ ಅಂಥಹದ್ದೇ ರಸಾನುಭವವನ್ನು ಕಟ್ಟಿಕೊಡುವಲ್ಲಿ ಹಿಂದೆಬಿದ್ದಿಲ್ಲ. ಹನ್ನೆರೆಡು ದಿನಗಳ ತಮ್ಮ ಪ್ರವಾಸದುದ್ದಕ್ಕೂ ಅವರು ಯೂರೋಪಿನ ಪ್ರಮುಖ ದೇಶಗಳಾದ ಜರ್ಮನಿ, ಬೆಲ್ಜಿಯಂ, ಸ್ವಿಡ್ಜರ್ಲ್ಯಾಂಡ್, ಹಾಲೆಂಡ್ (ನೆದರ್ಲ್ಯಾಂಡ್) ಮತ್ತು ಸ್ವೀಡನ್‌ನಲ್ಲಿನ ತಮ್ಮ ಪ್ರವಾಸಾನುಭವಗಳನ್ನು ಕಟ್ಟಿಕೊಟ್ಟಿದ್ದು. ಅಲ್ಲಿ ತಾವು ಕಂಡುಂಡ ಎಲ್ಲವನ್ನೂ ಕಣ್ಣಿಗೆ ಕಟ್ಟಿದ ಹಾಗೆ ವಿವರಿಸಿರುವುದು ಓದುಗನನ್ನು ಸ್ವತಃ ಯೂರೋಪಿಗೆ ಕರೆದೊಯ್ದ ಅನುಭವ ನೀಡುತ್ತದೆ. + +ಪ್ರವಾಸ ಕಥನಗಳೆಂದರೆ ಕೇವಲ ಅಲ್ಲಿಗೆ ತೆರಳುವ ವಿಧಾನ, ಸಿದ್ಧತೆ, ಪ್ರಮುಖ ಆಕರ್ಷಣೀಯ ಸ್ಥಳಗಳು, ಅವುಗಳ ಒಂದಷ್ಟು ಫೋಟೋಗಳು ಇವಿಷ್ಟೇ ಎಂಬ ಭ್ರಮಾಲೋಕದಿಂದ ಹೊರಬರುವಂತೆ ತಮ್ಮ ಪ್ರವಾಸ ಕಥನವನ್ನು ಹಂತಹಂತವಾಗಿ ನಿರೂಪಿಸಿರುವ ಪ್ರಕಾಶ್ ಅವರು, ಪ್ರವಾಸಕ್ಕೆ ಹೊರಡಲು ಮಾಡಿಕೊಂಡ ಮುನ್ನೆಚ್ಚರಿಕಾ ಸಿದ್ಧತೆಗಳೊಂದಿಗೆ ಆರಂಭದಲ್ಲೇ ಉಂಟಾದ ಸ್ಪೈಸ್ ಜೆಟ್ ಏರ್ವೇಸ್‌ನ ಕಿರಿಕಿರಿಯಿಂದಿಡಿದು, ವಿಮಾನಯಾನದಲ್ಲಿನ ಸಹಪ್ರಯಾಣಿಕನ ಸಮಸ್ಯೆಗೆ ಮಾತ್ರೆ ನೀಡಿ ಸ್ಪಂದಿಸಿದ್ದು ಹಾಗೂ ಅಳುತ್ತಿದ್ದ ಮಗುವನ್ನು ಸಂತೈಸಿ, ಸಹ ಪ್ರಯಾಣಿಕರಿಗೆ ಮುದನೀಡಿದ್ದು ಹೀಗೆ ಎಲ್ಲವನ್ನೂ ಮುಕ್ತವಾಗಿ ಓದುಗನೊಂದಿಗೆ ಹಂಚಿಕೊಂಡಿದ್ದಾರೆ. + +ತಮ್ಮ ಪ್ರವಾಸ ಕಥನದುದ್ದಕ್ಕೂ ಯೂರೋಪಿನ ಸಂಸ್ಕೃತಿ, ಆಚಾರ ವಿಚಾರಗಳು, ಅಲ್ಲಿನ ವೈಭವೋಪೇತ ಜೀವನದತ್ತಲೇ ಗಮನಹರಿಸಿರುವ ಪ್ರಕಾಶ್‌ರವರು ತಾವು ಕಣ್ತುಂಬಿಕೊಂಡ ಕೋಪನ್ ಹೇಗನ್‌ನಲ್ಲಿನ ರೋಸ್ ಗಾರ್ಡನ್ ಅರಮನೆಯ ವೈಭವ, ಪ್ರವಾಸಿಗರ ಸ್ವರ್ಗ ಸ್ವಿಡ್ಜರ್ಲ್ಯಾಂಡ್‌ನ ಶೆಮೊನಿಕ್ಸ್‌ನಲ್ಲಿ ಹಿಮದಲ್ಲಿ ಹೊರಳಾಡಿದ್ದು, ಫ್ರಾನ್ಸ್ ಮತ್ತು ಸ್ವಿಡ್ಜೆ ರ್ಲ್ಯಾಂಡ್‌ಗಳೆರೆಡರಲ್ಲೂ ವ್ಯಾಪಿಸಿರುವ ಜಿನೀವಾ ಸರೋವರ, ಆಲ್ಫ್ಸ್ ಪರ್ವತ ಶ್ರೇಣಿ, ಕೆಥಡ್ರೆಲ್ ಚರ್ಚ್, ಪ್ಲವರ್ ಕ್ಲಾಕ್, ರಷ್ಯನ್ ಚರ್ಚ್, ಬೆಲ್ಜಿಯಂನ ರಾಯಲ್ ಅರಮನೆ, ಬ್ರೂಸೆಲ್ಸ್‌ನ ಆಟೋಮಿಯಂ, ಆನ್ ಫ್ರಾಂಕ್‌ಳ ಮನೆ, 32 ಹೆಕ್ಟೇರ್ ವಿಸ್ತಾರದ ಕ್ಯೂಕೆನ್ ಹಾಫ್ ಹೂದೋಟ, ಸ್ಕಿನ್ನೀ ಬ್ರಿಡ್ಜ್… ಹೀಗೆ ಹೇಳುತ್ತಾ ಹೋದರೆ ಒಂದೆರೆಡಲ್ಲಾ, ಅರ್ಧ ಯೂರೋಪನ್ನೇ ನಮಗೆ ಪರಿಚಯಿಸುವಲ್ಲಿ ಪ್ರಕಾಶ್‌ರವರು ಬಹುತೇಕ ಯಶಸ್ವಿಯಾಗಿದ್ದಾರೆ. + +ಬರೀ ಅಲ್ಲಿನ ಆಡಂಬರ ಅಥವಾ ವೈಭವೋಪೇತ ನೋಟಗಳನ್ನಷ್ಟೇ ನಮಗೆ ಉಣಬಡಿಸಲು ಇಚ್ಚಿಸದ ಪ್ರಕಾಶ್‌ರವರು ತಮ್ಮ ಪ್ರವಾಸದುದ್ದಕ್ಕೂ ಆದ ಕೆಲವೊಂದು ಆಕಸ್ಮಿಕ ಅನುಭವಗಳನ್ನೂ ನಮಗೆ ತಿಳಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದು ಅವುಗಳಲ್ಲಿ ಪ್ರವಾಸಿಗಳಿಗೆ ವಸತಿ ಮಾಡಲು ಅನುಕೂಲವಾಗಿರುವ ಸ್ಟುಡಿಯೋ ಪ್ಲಾಟ್‌ಗಳ ಕುರಿತಾದ ಪರಿಚಯ ಬರಹ, ಬೆಲ್ಜಿಯಂನ ಬಸ್ಸುಗಳಲ್ಲಿನ ಶೌಚಾಲಯ ವ್ಯವಸ್ಥೆಯ ಬಗ್ಗೆ, ಚಾಕೊಲೇಟ್ ವಿಲೇಜ್‌ನಲ್ಲಿ ಸಿದ್ಧವಾಗುವ ಹೋಮ್ ಮೇಡ್ ಚಾಕೊಲೇಟ್‌ಗಳ ಸ್ವಾದದ ಬಗ್ಗೆ, ರುಚಿಯಾದ ಸಸ್ಯಾಹಾರಿ ತಿನಿಸು ಫಲಾಫೆಲ್ ಬಗ್ಗೆ, ಪಾರಿವಾಳಗಳಿಗೆ ಭಾರತದ ಪಾರ್ಲೇಜಿ ಬಿಸ್ಕೇಟ್ ತಿನ್ನಿಸಿ ರೋಮಾಂಚನಗೊಂಡಿದ್ದು, ಹಾಲೆಂಡಿನ ಸೈಕಲ್ ಪಥಗಳು ಹಾಗೂ ಸೈಕಲ್ ನಿಲ್ದಾಣಗಳ ಕುರಿತು, ಐಷಾರಾಮಿ ಕ್ರೂಸ್‌ನಲ್ಲಿನ ಪಯಣದ ಅನುಭವಗಳು ಮುಖ್ಯವಾದವುಗಳೆನಿಸಿಕೊಳ್ಳುತ್ತವೆ. + +ಪ್ರವಾಸದ ಪ್ರತೀ ಕ್ಷಣವನ್ನೂ ಸಾಕಷ್ಟು ಅನುಭವಿಸಿದವರಂತೆ ಕಂಡುಬರುವ ಲೇಖಕರು ಮೋಡಕವಿದ ವಾತಾವರಣದ ಸಂದರ್ಭದಲ್ಲಿ ಪ್ರವೇಶಕ್ಕೆ ಮೊದಲೇ ಸಾಂದರ್ಭಿಕ ಅಪ್ರಾಮುಖ್ಯತೆಯ ಬಗ್ಗೆ ಮಾಹಿತಿ ತಿಳಿಸುವ ಅಲ್ಲಿನ ಅಧಿಕಾರಿಗಳ ಪ್ರಾಮಾಣಿಕತೆಯನ್ನು, ಡಾಕ್ಟರ್ ಪ್ರಿಸ್ಕ್ರಿಪ್ಷನ್ ಇಲ್ಲದೇ ಔಷಧಿ ನಿರಾಕರಿಸಿದ ಫಾರ್ಮಾಸಿಸ್ಟ್‌ಳ ಕಾಳಜಿಯ ಕುರಿತು, ದುಬಾರಿ ನಗರದಲ್ಲಿ ಉಚಿತವಾಗಿ ಚಾಕೋಲೇಟ್ ನೀಡಿ “ದುಬಾರಿ ನಗರ ಕೇವಲ ಪ್ರವಾಸಿಗರಿಗೆ ಮಾತ್ರ, ಸ್ಥಳೀಯರಿಗಲ್ಲ” ಎಂದ ಅನಾಮಿಕ ಮಹಿಳೆಯ ಬಗ್ಗೆ, ಮೈಗೆ ಬಣ್ಣ ಬಳಿದುಕೊಂಡು ಸಂಗೀತೋಪಕರಣ ಕೈಲಿಡಿದು ನುಡಿಸುತ್ತಾ, ದಾರಿಹೋಕರಿಗೆ ಮುದ ನೀಡಿ ಭಿಕ್ಷೆ ಬೇಡುವ ಯೂರೋಪಿನ ಭಿಕ್ಷುಕರ ಬಗ್ಗೆ, ತನ್ನ ಮಾತೃಭೂಮಿ ಕರ್ನಾಟಕವನ್ನು ‘ಐಟಿ ರಾಜಧಾನಿ’ ಎಂದ ಚೆಕಿಂಗ್ ಅಧಿಕಾರಿಯ ಬಗ್ಗೆ ಹೇಳುತ್ತಾ ಓದುಗರಲ್ಲಿ ರೋಮಾಂಚಕ ಅನುಭವವನ್ನು ಉಂಟುಮಾಡಿದ್ದಾರೆ. + + + +ಎಷ್ಟೆಲ್ಲಾ ಹಾರಾಡಿ, ಪ್ರಪಂಚವನ್ನೇ ಸುತ್ತಿ ಬಂದರೂ ತಮ್ಮೂರೇ ತಮಗೆ ಮೇಲು ಎಂಬಂತೆ ಮನೆಗೆ ಬಂದು ಹೆಂಡತಿ ಕೈರುಚಿಯ ಉಪ್ಪಿಟ್ಟು ತಿನ್ನುವವರೆಗೂ ಅವರ ಪ್ರವಾಸದ ಅನುಭವವನ್ನು ಯಾವುದೇ ಮುಜುಗರವಿಲ್ಲದೇ ಓದುಗರ ಮುಂದೆ ಅಕ್ಷರಗಳ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಮುಂದೆ ಯೂರೋಪಿನ ದೇಶಗಳಿಗೆ ಪ್ರವಾಸ ಹೋಗುವವರಿಗೆ ಈ ಕೃತಿಯು ಮಾರ್ಗದರ್ಶಿ ಕೈಪಿಡಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_174.txt b/Kenda Sampige/article_174.txt new file mode 100644 index 0000000000000000000000000000000000000000..48b45ca9c44068c9c9e36334b134624f91fb5a57 --- /dev/null +++ b/Kenda Sampige/article_174.txt @@ -0,0 +1,41 @@ +ಯೋಗೀಂದ್ರ ಮರವಂತೆ ಅವರ ‘ನನ್ನ ಕಿಟಕಿ’ ಪ್ರಬಂಧ ಪ್ರಕಾರದ ಬಗ್ಗೆ ಪ್ರೀತಿಯುಕ್ಕಿಸುವ ಪ್ರಬಂಧಗಳ ಸಂಕಲನ. ನಿರ್ದಿಷ್ಟ ವಿಷಯಕ್ಕೆ ಸಂಬಂಧಿಸಿದಂತೆ ಕಲೆಹಾಕಿದ ವಿವರಗಳ ಆಕರ್ಷಕ ಜೋಡಣೆಯೇ ಪ್ರಬಂಧ ಎನ್ನುವಂತಾಗಿರುವ ದಿನಗಳಲ್ಲಿ, ರಮ್ಯ ಭಾಷೆಯಲ್ಲಿ ರೂಪುಗೊಂಡ ಬರವಣಿಗೆಯನ್ನು ಪ್ರಬಂಧವೆಂದು ಪ್ರಕಟಿಸುತ್ತಿರುವ ಸಂದರ್ಭದಲ್ಲಿ, ಯೋಗೀಂದ್ರರ ಪ್ರಬಂಧಗಳು ‘ಪ್ರಬಂಧ ಧ್ವನಿ’ಯ ಮೂಲಕ ಗಮನಸೆಳೆಯುತ್ತವೆ. ಪ್ರಬಂಧದ ಶಿಲ್ಪ ಹಾಗೂ ಧ್ವನಿಯ ಕಸುಬುದಾರಿಕೆಯ ಬಗ್ಗೆ ಗಮನಕೊಡುವ ನಿಜ ಪ್ರಬಂಧಗಳ ಕಾರಣದಿಂದಾಗಿ ‘ನನ್ನ ಕಿಟಕಿ’ ಗಮನಸೆಳೆಯುತ್ತದೆ. ಯೋಗಿಂದ್ರರ ಪ್ರಬಂಧಗಳಲ್ಲೂ ವಿವರಗಳಿವೆ. ಆಕರ್ಷಕ ಹೆಣಿಗೆಯೂ ಇದೆ. ಆದರೆ, ಈ ವಿವರಗಳು ಮಾಹಿತಿಯಾಗಿಯಷ್ಟೇ ಉಳಿಯದೆ, ಮೋಹಕ ಭಾಷೆ ಬಣ್ಣದ ಹೊದಿಕೆಯಾಗಿಯಷ್ಟೇ ಉಳಿಯದೆ, ಹೊಸ ನೋಟವೊಂದನ್ನು ಕಟ್ಟಿಕೊಡುವ ಮೂಲಕ ಪ್ರಬಂಧದ ಸಾರ್ಥಕ ಕ್ಷಣಗಳನ್ನು ದಕ್ಕಿಸಿಕೊಂಡಿವೆ. + +‘ನನ್ನ ಕಿಟಕಿ’ ಸಂಕಲನದ ೨೬ ಪ್ರಬಂಧಗಳು ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿವೆ. ಮೊದಲ ಭಾಗದ ಪ್ರಬಂಧಗಳು ಪ್ರಬಂಧಕಾರರ ಊರು-ತವರಿನ ಭಿತ್ತಿಯಲ್ಲಿ ರೂಪುಗೊಂಡಿದ್ದರೆ, ಎರಡನೇ ಭಾಗದ ರಚನೆಗಳ ಕೇಂದ್ರದಲ್ಲಿರುವುದು ಪ್ರಬಂಧಕಾರರ ಕರ್ಮಭೂಮಿ ಇಂಗ್ಲೆಂಡು. ಈ ಪ್ರಬಂಧಗಳನ್ನು ‘ಕಿಟಕಿಯೊಳಗಿನ ರಚನೆಗಳು’ ಹಾಗೂ ‘ಹೊರಗಿನ ರಚನೆಗಳು’ ಎಂದೂ ಹೇಳಬಹುದು. ಊರ ಹಿನ್ನೆಲೆಯ ನೆನಪುಗಳು ಸಹಜವಾಗಿಯೇ ಆರ್ದ್ರತೆಯನ್ನು ಹೊಂದಿದ್ದು ನೆನಪುಗಳಿಗೆ ಹೆಚ್ಚು ಆತುಕೊಂಡಿದ್ದರೆ, ಉತ್ತರಾರ್ಧದ ರಚನೆಗಳು ವರ್ತಮಾನದ ನೆಲೆಗಟ್ಟಿನವು ಹಾಗೂ ಬೌದ್ಧಿಕತೆಯನ್ನು ಹೆಚ್ಚು ಅವಲಂಬಿಸಿದವು. + +(ಯೋಗೀಂದ್ರ ಮರವಂತೆ) + +ಸಂಕಲನದ ಮೊದಲ ರಚನೆ ‘ಮತ್ತೆ ಹಾಡಾಗಿದೆ ಮಳೆಸಂಗೀತ’ ಯೋಗೀಂದ್ರರ ಪ್ರಬಂಧ ಕೌಶಲ್ಯಕ್ಕೆ ನಿದರ್ಶನದಂತಿರುವ ರಚನೆ. ಭಾವಗೀತದಂಥ ಭಾಷೆ, ಓದಿನ ಅನುಭವ, ಆ ಅನುಭವ ಕರುಣಿಸಿದ ಒಳನೋಟ – ಎಲ್ಲವೂ ಹದವಾಗಿ ಒದಗಿಬಂದ ರಚನೆಯಿದು. ಭಾರತದಲ್ಲಿ ಆರಂಭವಾಗಿರುವ ಮಳೆಗಾಲವನ್ನು ನೆಪವಾಗಿಟ್ಟುಕೊಂಡು, ಬರಹಗಾರರನ್ನು ಮಳೆ ಯಾವೆಲ್ಲ ಬಗೆಯಲ್ಲಿ ಕಾಡಿದೆ ಎನ್ನುವುದನ್ನು ಚಿತ್ರಿಸುವ ಈ ಪ್ರಬಂಧ ತಾನೇ ಒಂದು ಶಬ್ದಚಿತ್ರವಾಗಿ ರೂಪುಗೊಂಡಿದೆ. ಟ್ಯಾಗೋರರ ಮಳೆ ರಚನೆಗಳನ್ನು ನೆನಪಿಸುವ ಪ್ರಬಂಧ, ಮಳೆಯ ಸ್ವಾಗತಕ್ಕೆ ಶಾಂತಿನಿಕೇತನದಲ್ಲಿ ಅವರು ಆರಂಭಿಸಿದ ‘ಬರ್ಷ ಮಂಗಲ್’ ಎನ್ನುವ ಹಬ್ಬವೀಗ ಪಶ್ಚಿಮ ಬಂಗಾಳ ಮತ್ತು ಬಾಂಗ್ಲಾಗಳಲ್ಲಿ ಆಚರಣೆಗೊಳ್ಳುತ್ತಿದ್ದು, ಈ ಮಳೆಹಬ್ಬ ಬಂಗಾಳಿ ಜನರನ್ನು ಭಾವನಾತ್ಮಕವಾಗಿ ಬೆಸೆಯುವ ತಂತುವಾಗಿರುವುದನ್ನು ಗುರ್ತಿಸುತ್ತದೆ. ರವೀಂದ್ರರ ಮಳೆಕವಿತೆಗಳು ನಮ್ಮನ್ನು ಭಾವನಾತ್ಮಕವಾಗಿ ಮಾತ್ರವಲ್ಲದೆ, ವೈಚಾರಿಕ ನೆಲೆಯಲ್ಲೂ ಕಾಡಬೇಕಾಗಿದೆ ಎನ್ನುವ ಅರಿವು ಹಾಗೂ ಅವರ ಕವಿತೆಗಳ ನಿಸರ್ಗಪ್ರೇಮ ರಮ್ಯ ಕಾವ್ಯವೊಂದರ ಓದಿನ ಖುಷಿಗಷ್ಟೇ ಸೀಮಿತವಾಗದೆ ಪ್ರಾಕೃತಿಕ ಎಚ್ಚರವನ್ನು ನಮ್ಮೊಳಗೆ ಹೊತ್ತಿಸಬೇಕಾಗಿದೆ ಎನ್ನುವ ಕಳಕಳಿಯಲ್ಲಿ ಪ್ರಬಂಧ ಕೊನೆಗೊಳ್ಳುತ್ತದೆ. ಮಳೆಯ ನೆಪದ ಈ ಪಯಣ ಅರಿವಿನ ನೆಲೆಯಲ್ಲಿ ಕೊನೆಗೊಳ್ಳುವುದು ಪ್ರಬಂಧದ ಸಾರ್ಥಕಕ್ಷಣ. + +‘ಮುಂಗಾರಿನ ಮಂದ ಬಣ್ಣಗಳು ಅಘನಾಶಿನಿಯ ಮೀನುದೋಣಿಗಳು’ ಛಾಯಾಗ್ರಾಹಕ ದಿನೇಶ್ ಮಾನೀರರ ಕುಮಟಾದ ಛಾಯಾಚಿತ್ರಗಳಿಗೆ ಸಂವಾದಿಯಾಗಿ ಮೂಡಿರುವ ಪ್ರಬಂಧ. ಮೋನೊಕಲರ್ ಚಿತ್ರಗಳ ನೆಪದಲ್ಲಿ ಪ್ರಬಂಧ ಕಟ್ಟಿಕೊಡುವ ಬಹುವರ್ಣದ ಬಿಂಬಗಳು ಅದೆಷ್ಟು ಮೋಹಕವಾಗಿವೆಯೆಂದರೆ, ಹಿಂದೆಂದೂ ಕಂಡಿರದವರ ಎದೆಯಲ್ಲೂ ಕುಮಟಾ ಹಾಗೂ ಅಘನಾಶಿಯ ನಕಾಶೆ ಅಚ್ಚಾಗಿಬಿಡುತ್ತದೆ. + +ಶಬ್ದಚಿತ್ರಗಳನ್ನು ಕಟ್ಟುವ ಯೋಗೀಂದ್ರರ ಶೈಲಿಗೆ ಒಂದು ಉದಾಹರಣೆ ನೋಡಿ: + +“ಮುಂಗಾರಿನ ಸಮಯದಲ್ಲಿ ಇಲ್ಲಿ ವ್ಯವಸಾಯದ ಜೊತೆಗೆ ಮೀನುಗಾರಿಕೆಯೂ ಸಾಗುತ್ತದೆ; ಭತ್ತವೂ ಬೆಳೆಯುತ್ತದೆ, ಹೊಳೆಮೀನೂ ಸಿಗುತ್ತದೆ! ಭತ್ತ ಬೆಳೆಯುವುದೂ ನೀರಲ್ಲಿ ಮೀನು ಹಿಡಿಯುವುದೂ ನೀರಲ್ಲೆ. ಅಘನಾಶಿನಿಯಲ್ಲಿ ದೋಣಿ ಸಂಚಾರ ನಿರಂತರ. ಸ್ಥಳೀಯ ಮೀನುಗಾರರು ಹತ್ತಿರದ ಐಗಳಕುರ್ವೆ ದ್ವೀಪಕ್ಕೆ ಹೋಗಿಬರುತ್ತಿರುತ್ತಾರೆ. ದೋಣಿ ನಿರ್ವಾಹಕರು ಬಲಿಷ್ಠ ಪುರುಷರೇ ಆಗಿರಬೇಕಾಗಿಲ್ಲ. ಇಲ್ಲಿನ ಮಕ್ಕಳು ಹೆಮ್ಮಕ್ಕಳು ದೋಣಿ ನಡೆಸುವುದು ಕಾಣಿಸುತ್ತದೆ. ಸಣ್ಣ ಮಕ್ಕಳೂ ದೋಣಿಯನ್ನು ತಾವು ಬಯಸಿದಂತೆ ಚಲಾಯಿಸಬಲ್ಲರು ತಾವು ನುಡಿಯುವಂತೆ ನಡೆಸಬಲ್ಲರು. ಹೀಗೆ ನೋಡುತ್ತಾ ಸಾಗುವಾಗ ನೂರಾರು ದೋಣಿಗಳು ಅಘನಾಶಿನಿಯಲ್ಲಿ ಕಾಣಿಸುತ್ತವೆ. ಕೆಲವು ಚಲಿಸುವವುಗಳು ಕೆಲವು ಕಟ್ಟಿಹಾಕಲ್ಪಟ್ಟುವುಗಳು. ದೋಣಿಗಳನ್ನು ಬಂಧಿಸಿದ ಗೂಟಕ್ಕೆ ಸಾವಿರ ಸಾವಿರ ಮೀನುಗಳನ್ನು ಮೋಸದಲ್ಲೊ ಸಾಹಸದಲ್ಲೊ ಹಿಡಿದ ಬಲೆಗಳನ್ನು ನೇತು ಹಾಕಿರುವುದೂ ಕಂಡೀತು. ದೋಣಿ ಮತ್ತು ಬಲೆಗಳನ್ನು ನಿಭಾಯಿಸುವ ಯಜಮಾನರು ಇಲ್ಲದ ಹೊತ್ತಲ್ಲಿ ಅವನ್ನು ಕಟ್ಟಿದ ಗೂಟವೇ ಮೇಲ್ವಿಚಾರಣೆಯ ಜವಾಬ್ದಾರಿ ಹೊತ್ತಿರುತ್ತದೆ. ಕೆಲವು ಒಂಟಿ ದೋಣಿಗಳು ಕೆಲವು ಸಂಸಾರಸ್ಥ ದೋಣಿಗಳು ಮತ್ತೆ ಕೆಲವು ಯುಗಳಗೀತೆ ಹಾಡುವ ನಾವೆಗಳು. ಇಲ್ಲಿ ವಿಹರಿಸುವ ದೋಣಿಗಳು ಮತ್ತು ದೋಣಿಯನ್ನು ತೇಲಿಸುತ್ತ ಮೆಲ್ಲಗೆ ಹರಿಯುವ ನದಿಯೂ ಒಂದು ಇನ್ನೊಂದರ ಮುಖ ನೋಡಿ ಸನ್ನೆ ಮಾಡುತ್ತವೆ, ಮಾತನಾಡುತ್ತವೆ, ಸುಖ ದುಃಖ ಕಷ್ಟ ಸುಖ ಹಂಚಿಕೊಳ್ಳುತ್ತವೆ. ಅಘನಾಶಿನಿಯ ಹರಿವಿನ ಮೇಲಿನ ದೋಣಿಗಳು, ದೋಣಿಯ ಮೇಲಿನ ಮೋಡಗಳು ಕೈ ಕೈ ಹಿಡಿದು ಚಲಿಸಿದಂತೆ ಭಾಸವಾಗುತ್ತದೆ. ಪುರಾತನ ಪರಿಚಯದ ಪಾರಂಪರಿಕ ಗೆಳೆತನದ ಸಖಸಖಿಯರಂತೆ ಯಾವುದೊ ಕಾಲದ ಒಡನಾಡಿಗಳಂತೆ ನಗೆಬೀರುತ್ತವೆ.” + +ಮೇಲಿನ ಶಬ್ದಚಿತ್ರ ಅಘನಾಶಿನಿಯ ಪರಿಸರದ ಚೆಲುವನ್ನಷ್ಟೇ ಕಟ್ಟಿಕೊಡುವುದಿಲ್ಲ. ಆ ಪರಿಸರದಲ್ಲಿ ಬದುಕು ಕಂಡುಕೊಂಡ ಜೀವಗಳ ಸೌಂದರ್ಯವನ್ನೂ ಅವುಗಳ ತವಕ ತಲ್ಲಣಗಳನ್ನೂ ಕಾವ್ಯಕ್ಕೆ ಸಮೀಪವಾದ ಭಾಷೆಯಲ್ಲಿ ಪ್ರಬಂಧಕಾರರು ಕಾಣಿಸುತ್ತಾರೆ. + +ಯೋಗೀಂದ್ರರ ಪ್ರಬಂಧಗಳ ಕಟ್ಟುವಿಕೆ ಹಾಗೂ ನುಡಿಗಟ್ಟು ಜಯಂತ ಕಾಯ್ಕಿಣಿಯವರ ಕಥೆಗಳನ್ನು ನೆನಪಿಸುವಂತಹದ್ದು. ಯಾವುದೋ ಒಂದು ಕ್ಷಣ ಅಥವಾ ಒಂದು ಅನುಭವದ ಬೆನ್ನತ್ತಿ ನಡೆಸುವ ಪಯಣದಲ್ಲಿ ಓದುಗನನ್ನೂ ಅವನಿಗರಿವಿಲ್ಲದಂತೆಯೇ ಸಹಪಯಣಿಗನನ್ನಾಗಿಸಿಕೊಳ್ಳುವ ಕಾಯ್ಕಿಣಿಯವರ ಕಥೆಗಳ ಗಾಳಿ ಇಲ್ಲಿನ ಪ್ರಬಂಧಗಳಿಗೂ ಸೋಕಿದೆ. ಬಹುತೇಕ ಸಂದರ್ಭಗಳಲ್ಲಿ ನಿರ್ದಿಷ್ಟ ಉದ್ದೇಶವಿಲ್ಲದೆ ಸಾಗುವ ಅಥವಾ ಲಘುವಾದ ಎಳೆಯೊಂದರ ಚುಂಗು ಹಿಡಿದು ಪ್ರಾರಂಭವಾಗುವ ಈ ಅಲೆದಾಟ, ದಾರಿಯುದ್ದಕ್ಕೂ ಎಡತಾಕುವ ಅಗಣಿತ ಬಿಂಬಗಳನ್ನು ತನ್ನದಾಗಿಸಿಕೊಳ್ಳುತ್ತ ಕೊಲಾಜ್ ರೂಪ ಪಡೆದುಕೊಳ್ಳುತ್ತದೆ. ಈ ಬಗೆಯ ಅಲೆದಾಟ, ಬಹುತೇಕ ಸಂದರ್ಭಗಳಲ್ಲಿ ಸಾವಯವ ಅನುಭವವಾಗಿ ಮೈದಾಳುವ ಬದಲು, ಬಿಡಿ ಬಿಡಿ ಬಿಂಬಗಳ ರೂಪದಲ್ಲಿ ಕಳೆದುಹೋಗಿ, ಅಂತಿಮವಾಗಿ ಮೋಹಕ ಭಾಷೆಯ ಅನುರಣನವಾಗಿಯಷ್ಟೆ ಉಳಿದುಬಿಡುತ್ತದೆ. ಆದರೆ, ಯೋಗೀಂದ್ರರ ರಚನೆಗಳಲ್ಲಿ ಈ ಅಲೆದಾಟ ಮೋಹಕ ಭಾಷೆಯಲ್ಲಿ ಕಳೆದುಹೋಗದೆ, ಅರ್ಥಸಾಧ್ಯತೆಗಳ ಬೆಳಕನ್ನು ಓದುಗರ ಮನಸ್ಸಿಗೆ ಹಾಯಿಸುತ್ತದೆ. ಆ ಬೆಳಕಿನಲ್ಲಿ ಓದುಗ ತನ್ನ ಕೈಲಾದಷ್ಟು ದೂರ ಸಾಗಲಿಕ್ಕೂ ಅವಕಾಶ ಕಲ್ಪಿಸುತ್ತದೆ. ಈ ಬಗೆಯ ಅಲೆದಾಟಕ್ಕೆ ಉದಾಹರಣೆಗಳಾಗಿ, ‘ನನ್ನ ಕಿಟಕಿ’, ‘ಕಚೇರಿಯೊಂದರ ಕಿಚನ್ ಕಥನ’ ಹಾಗೂ ‘ಪಾಪಡಂ ಪುರಾಣ’ಗಳನ್ನು ಗಮನಿಸಬಹುದು. ಸಂಕಲನದ ಅತ್ಯಂತ ಯಶಸ್ವಿ ರಚನೆಗಳೂ ಆದ ಈ ಪ್ರಬಂಧಗಳನ್ನು, ಪ್ರಬಂಧಕಾರರಾಗಿ ಯೋಗೀಂದ್ರ ಅವರು ರೂಢಿಸಿಕೊಂಡಿರುವ ಶೈಲಿಯ ಚೆಲುವಿನ ಹಿನ್ನೆಲೆಯಲ್ಲೂ ಗಮನಿಸಬಹುದು. + +ಸಂತೆಯ ಬಯೋಸ್ಕೋಪ್ ಡಬ್ಬಿ ವಿಶ್ವರೂಪ ತೋರಿಸಿದಂತೆ, ‘ನನ್ನ ಕಿಟಕಿ’ ಪ್ರಬಂಧದ ಕಿಟಕಿ ಮಾಯಾಲೋಕಕ್ಕೆ ಬೆಳಕಿಂಡಿ. ‘ನನ್ನ ಕಿಟಕಿ’ ಬರಹಗಳ ಪ್ರಬಂಧಕಾರರಾಗಿ ಯೋಗಿಂದ್ರರ ಪ್ರಾತಿನಿಧಿಕ ಪ್ರಬಂಧವಾಗಿಯೂ ನೋಡಬಹುದು. ‘ಒಳಗೇ ಇದ್ದು ಹೊರಜಗತ್ತಲ್ಲಿ ಇಣುಕುವವರಿಗೆ ಈ ಕಿಟಕಿಯೇ, ಬಾಗಿಲು ರಸ್ತೆ ಸೇತುವೆ ಎಲ್ಲವೂ.’ ಈ ಕಿಟಕಿ ಯೋಗಿಂದ್ರರ ಬಹುತೇಕ ಪ್ರಬಂಧಗಳಲ್ಲಿ ದರ್ಶನದ ರೂಪದಲ್ಲಿ ಮರುಕಳಿಸುತ್ತದೆ. ‘ಕಿಟಕಿಯ ಚೌಕದ ಒಂದು ಬದಿಯಿಂದ ಯಾವ ಆಕೃತಿಯ ಪ್ರವೇಶವಾದರೂ ಅದರ ಮುನ್ನೋಟ ಮೊದಲು ಸಿಗುತ್ತದೆ, ಮತ್ತೆ ಅದು ಕಿಟಕಿಯಿಂದ ನಿರ್ಗಮಿಸುವಾಗ ಹಿನ್ನೋಟದ ದರ್ಶನವಾಗುತ್ತದೆ. ಒಂದೇ ವ್ಯಕ್ತಿಯ ಎರಡು ಆಯಾಮಗಳು ಎರಡು ವಿಭಿನ್ನ ವ್ಯಕ್ತಿಗಳಾಗಿ ಕಾಣಿಸುವುದೂ ಇದೆ.’ + +ಕಿಟಕಿಯ ಒಳ-ಹೊರಗಿನ ನೋಟ ಮತ್ತಷ್ಟು ವಿಸ್ತಾರಗೊಂಡಿರುವ ‘ಕಚೇರಿಯೊಂದರ ಕಿಚನ್ ಕಥನ’ – ಕಾರ್ಪೊರೇಟ್ ಕಚೇರಿಯ ಸೃಜನಶೀಲ ಸಂಘರ್ಷ ಮತ್ತು ಸಂಬಂಧಗಳಿಗೆ ಅಲ್ಲಿನ ಪುಟ್ಟ ಅಡುಗೆಮನೆ ವೇದಿಕೆಯಾಗುವುದನ್ನು ಸೂಚಿಸುವ ಪ್ರಬಂಧ. ಅಡುಗೆಮನೆಯ ಚೌಕಟ್ಟಿನಲ್ಲಿ ಮನೆಮಂದಿಯ ಸಂಬಂಧಗಳ ಹರಳುಗಟ್ಟುವ ಕೌಟುಂಬಿಕ ತಾತ್ವಿಕತೆಯನ್ನು ಬಹುರಾಷ್ಟ್ರೀಯ ಕಂಪನಿಯೊಂದರ ಕಿಚನ್ ಮೂಲಕ ಅನ್ವಯಿಸುವ ಈ ಪ್ರಬಂಧ, ಬಹುತ್ವದ ಪ್ರಯೋಗಶಾಲೆಯ ರೂಪದಲ್ಲಿ ಕಿಚನ್ ಅನ್ನು ಗುರ್ತಿಸುತ್ತದೆ. “ಅಡುಗೆಮನೆಯ ಉದಾತ್ತತೆ ಹೆಮ್ಮೆ ಹೊಣೆಗಾರಿಕೆಗಳು ನಮ್ಮ ಕಿಚನ್‌ಗೆ ಇಲ್ಲದಿದ್ದರೂ ನಮ್ಮ ಕಚೇರಿಯ ಮಟ್ಟಿಗೆ ಈ ಕಿಚನ್ ‘ಲಬ್ ಡಬ್’ ಒದಗಿಸುತ್ತದೆ. ಮತ್ತೆ ಇಲ್ಲಿ ರುಚಿ, ಹದ ಬೆರಸುವುದು, ತೊಳೆಯುವುದು, ಒರಸುವುದು ಎಲ್ಲವೂ ನಮ್ಮದೇ ಉಸಾಬರಿ; ಚಾಕರರೂ ಯಜಮಾನರೂ ನಾವೇ” ಎನ್ನುವ ಪ್ರಬಂಧ, ಅಡುಗೆಮನೆಯ ಜೀವಶಕ್ತಿಯನ್ನು ಮನಗಾಣಿಸುತ್ತದೆ. ಇಲ್ಲಿನ ಅಡುಗೆಮನೆ ಹಲವು ತಿನಿಸು ಪಾನೀಯಗಳ ಸಂಗಮ. ಹತ್ತಿಪ್ಪತ್ತು ದೇಶ ಊರುಗಳ ಪ್ರಾಣಿ ಸಸ್ಯಗಳನ್ನು ಮೂಲವಾಗಿ ಹೊಂದಿದ ಆಹಾರ ಕಿಚನ್‌ನಲ್ಲಿ ಬಿಸಿಯಾಗುತ್ತದೆ. ‘ಇಂಗ್ಲಿಷರಿಗೆ ಅತಿ ಪ್ರಿಯವಾದ ಬೇಕನ್, ಬೀಫ್, ಲ್ಯಾಂಬ್, ಚಿಕನ್‌ಗಳಿಂದ ಸುಪುಷ್ಟವಾದ ಆಹಾರದ ಜೊತೆ ಎಳೆಎಳೆಗಳು ಅಪ್ಪಿತಬ್ಬಿಕೊಂಡ ಚೈನಾದ ನೂಡಲ್ಸ್, ಇಟಾಲಿಯನ್ನರ ವಿಶಿಷ್ಟ ಆಕಾರದ ಪಾಸ್ತಾ, ಇನ್ನೆಲ್ಲಿಯದೋ ತೆಳುದಪ್ಪದ ಸೂಪುಗಳ ಆತ್ಮಗಳೂ ಸೇರಿ ಹುಟ್ಟಿದ ಹೊಸ ಜೀವಿಯೊಂದು ಬಂಧಿಸಿಟ್ಟ ಭೂತದಂತೆ ಕಿಚನ್ನಿನಲ್ಲಿ ಸುಳಿಯುತ್ತದೆ.’ ಮನೆಯ ಅಡುಗೆಮನೆಯಲ್ಲಿ ಸಂಬಂಧಗಳು ಸೊಗಸುಗೊಳ್ಳುವ ಬಗೆ ಬಹುರಾಷ್ಟ್ರೀಯ ಕಂಪನಿಯ ಕಿಚನ್‌ನಲ್ಲೂ ನಿಜವೆನ್ನಿಸುತ್ತದೆ. ಅಡುಗೆಮನೆಯ ಕೇಂದ್ರದೊಳಗೆ ಭೂಗೋಳ ದರ್ಶನ ಮಾಡಿಸುವ ಈ ವಿಶಿಷ್ಟ ಪ್ರಬಂಧ ಸೃಜನಶೀಲ ಪ್ರಬಂಧಕಾರನೊಬ್ಬ ಮಾಡಬಹುದಾದ ಸಾರ್ಥಕ ವಿಹಾರದಂತಿದೆ. + + + +ಕಿಚನ್ ಕಥನದ ಕವಲಿನ ರೂಪದಲ್ಲಿ ‘ಪಾಪಡಂ ಪುರಾಣ’ ಪ್ರಬಂಧವನ್ನು ಓದಿಕೊಳ್ಳಬಹುದು. ಭಾರತ ಉಪಖಂಡದಲ್ಲಿ ‘ಕಿರುಸಹಾಯಕ’ನ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಪ್ಪಳ, ಬ್ರಿಟನ್ ಪರಿಸರದಲ್ಲಿ ಸಂಸ್ಕೃತಿಯ ಚಹರೆಯಾಗಿ ಚಲಾವಣೆಗೊಳ್ಳುತ್ತದೆ. ‘ಬಿಗ್ ಬ್ರದರ್’ ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿಯನ್ನು ಪರಕೀಯಳು, ಭಾರತೀಯ ಮೂಲದವಳು ಎಂದು ಹೀಗಳೆಯಲು ಬ್ರಿಟನ್‌ನ ಸಹಸ್ಪರ್ಧಿಗೆ ಒದಗಿಬಂದ ಪದ ಹಪ್ಪಳವೇ! ‘ಶಿಲ್ಪಾ ಪಾಪಡಂ’ ಎನ್ನುವ ಲೇವಡಿ, ಜನಾಂಗೀಯ ನಿಂದನೆಯ ವಿಷಯವಾಗಿ ಇಂಗ್ಲಿಷ್‌ನ ಪಾರ್ಲಿಮೆಂಟ್‌ನಲ್ಲೂ ಚರ್ಚೆಗೊಳಗಾಯಿತು. ಕಣ್ಣುಗಳಲ್ಲಿ ನೀರು ತುಂಬಿಕೊಂಡು ‘ಇಂದಿನ ಬ್ರಿಟನ್ ಹೀಗಿದೆಯೇ?’ ಎಂದು ರಿಯಾಲಿಟಿ ಶೋನಲ್ಲಿ ಶಿಲ್ಪಾ ಶೆಟ್ಟಿ ಕೇಳಿದ ಪ್ರಶ್ನೆ, ಶಿಸ್ತು, ಪರಂಪರೆ ಮತ್ತು ಸಂಸ್ಕೃತಿಯಲ್ಲಿ ತಮ್ಮನ್ನು ಶ್ರೇಷ್ಠರು ಎಂದು ತಿಳಿಯುವ ಇಂಗ್ಲಿಷರಿಗೆ ತಲೆ ತಗ್ಗಿಸಲು ಕಾರಣವಾಯಿತು. ಹಪ್ಪಳದ ಪ್ರಸ್ತಾಪ ಬ್ರಿಟಿಷರನ್ನು ಲಜ್ಜೆಗೀಡು ಮಾಡಿತ್ತು. ಕೊನೆಗೆ, ತಮ್ಮೂರಿನ ಹೆಣ್ಣುಮಗಳನ್ನು ಸೋಲಿಸುವ ಮೂಲಕ ಭಾರತೀಯಳನ್ನು ಗೆಲ್ಲಿಸಿದರು. ಬ್ರಿಟಿಷರ ಸಂಸ್ಕಾರಕ್ಕೆ ಉದಾಹರಣೆಯಂತೆ ಕಾಣಿಸುವ ಈ ಪಾಪಡಂ ಪುರಾಣ, ಜಗತ್ತಿನ ಬೇರೆ ಬೇರೆ ಭಾಗಗಳಿಗೆ ಭಾರತವನ್ನು ನೆನಪಿಸುವ ಮತ್ತು ಅವರು ಇದ್ದಲ್ಲಿಂದಲೇ ಇಂಡಿಯಾಕ್ಕೊಂದು ಸೇತುವೆ ಕಟ್ಟುವ ಸಾಮರ್ಥ್ಯ ಹಪ್ಪಳಕ್ಕಿರುವುದನ್ನು ಸೂಚಿಸುತ್ತದೆ. ಮಹಿಳಾ ಉದ್ಯೋಗದ ಯಶಸ್ಸಿನ ಉದಾಹರಣೆಯಾದ ‘ಲಿಜ್ಜತ್ ಪಾಪಡ್’ನ ಯಶೋಗಾಥೆಯೊಂದಿಗೆ ಕೊನೆಗೊಳ್ಳುವ ಈ ಪ್ರಬಂಧದೊಂದಿಗೆ, ‘ಒಂದು ನೂರು ವರ್ಷಗಳ ಹಿಂದಿನ ಒಂದು ಹತ್ಯಾಕಾಂಡದ ಕುರಿತು ಕ್ಷಮೆ’ ರಚನೆಯನ್ನು ಜೊತೆಗಿಟ್ಟು ನೋಡಬಹುದು. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಸಂಬಂಧಿಸಿದಂತೆ ಕ್ಷಮೆ ಕೇಳಲು ಹಿಂಜರಿಯುತ್ತಲೇ ಇರುವ ಬ್ರಿಟಿಷ್ ಪ್ರಭುತ್ವದ ಸೋಗಲಾಡಿತನವನ್ನು ಈ ಬರಹ ಪ್ರಶ್ನಿಸುತ್ತದೆ. ಹಪ್ಪಳದ ವಿಷಯದಲ್ಲಿ ತೋರುವ ಸಂವೇದನೆ ಸಾಮೂಹಿಕ ಹತ್ಯಾಕಾಂಡದ ವಿಷಯದಲ್ಲಿ ಕುಂಟತೊಡಗಿದೆೆ. ಈ ಘಟನೆಯೊಂದಿಗೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್ ಪರವಾಗಿ ಹೋರಾಡಿ ಸಾವಿಗೀಡಾದ ತೊಂಬತ್ತು ಸಾವಿರ ಯೋಧರ ಬಲಿದಾನದ ಬಗ್ಗೆ ಬ್ರಿಟಿಷರು ಕೃತಘ್ನರಾಗಿರುವುದನ್ನೂ ಪ್ರಬಂಧಕಾರರು ಗುರ್ತಿಸುತ್ತಾರೆ. ೧೮೬೦ರ ನಂತರ ಪೂರ್ವ ಮತ್ತು ದಕ್ಷಿಣ ಭಾರತ ತೀವ್ರ ಬರದ ದವಡೆಗೆ ಸಿಲುಕಿದ್ದಾಗಲೂ, ಭಾರತದಿಂದ ಬ್ರಿಟನ್‌ಗೆ ಧಾನ್ಯಗಳನ್ನು ಸಾಗಿಸುವುದನ್ನು ಮುಂದುವರಿಸಿದ ‘ಬ್ರಿಟಿಷ್ ರಾಜ್’ ಕ್ರೌರ್ಯದಿಂದ ಲಕ್ಷಾಂತರ ಜನ ಸಾವಿಗೀಡಾದುದನ್ನೂ ಪ್ರಬಂಧ ಸ್ಮರಿಸಿಕೊಳ್ಳುತ್ತದೆ. ಇತಿಹಾಸದ ಸಾಧನೆಗಳನ್ನು ಹೆಮ್ಮೆಯಿಂದ ಬಿಂಬಿಸಿಕೊಳ್ಳುವ, ದುಷ್ಕೃತ್ಯಗಳ ಹೊಣೆಗಾರಿಕೆಯನ್ನು ಮಾತ್ರ ನಿರಾಕರಿಸುವ ಸೋಗಲಾಡಿತನವನ್ನು ಈ ಪ್ರಬಂಧ ಸೂಕ್ಷ್ಮವಾಗಿ ಚಿತ್ರಿಸುತ್ತದೆ. + +ಪ್ರಬಂಧಕಾರರಾಗಿ ಯೋಗಿಂದ್ರರ ಅಲೆದಾಟಕ್ಕೆ ವೈಚಾರಿಕತೆಯ ನೆಲೆಗಟ್ಟು ಇರುವಂತೆ ಭಾವುಕತೆಯ ಸ್ಪರ್ಶವೂ ಇದೆ. ‘ಬೆಳಕಿನ ಹಬ್ಬಕ್ಕೆ ಊರಿಗೆ ಹೋದದ್ದು’ ಪ್ರಬಂಧ, ಏಕಕಾಲಕ್ಕೆ ಬ್ರಿಟನ್ನು ಮತ್ತು ಮರವಂತೆಯ ನಡುವೆ ಮನೋವ್ಯಾಪಾರ ಸಾಧ್ಯವಾಗಿರುವ ವಿಶಿಷ್ಟ ರಚನೆಯಿದು. ಲೇಖಕ ಊರಿನಲ್ಲಿ ಹೆಜ್ಜೆಯಿಟ್ಟಾಗ ಮುತ್ತಿಕೊಳ್ಳುವ ದೀಪಾವಳಿಯ ಸಹಸ್ರ ಸಹಸ್ರ ದೀಪಗಳಂಥ ನೆನಪುಗಳು ಪ್ರಬಂಧದಲ್ಲಿ ಬೆಳಗಿವೆ. ‘ನಮ್ಮೂರು ಕಟ್ಟುತ್ತಿರುವ ಬೆಳಕಿನ ಮನೆಯೊಳಗೆ ನಾನೂ ಅಲೆದಾಡುತ್ತಿದ್ದೇನೆ’ ಎನ್ನುವ ಪ್ರಬಂಧಕಾರರ ಅನಿಸಿಕೆ ಓದುಗನದೂ ಆಗುತ್ತದೆ. ‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ – ರೈಲು ಪ್ರಯಾಣವೊಂದರ ಅನುಭವ. ‘ರಿಕ್ಷಾ ಯಶವಂತಪುರ ನಿಲ್ದಾಣವನ್ನು ತಲುಪುವ ಹೊತ್ತಿಗೆ, ಜೀವನಚಕ್ರದೊಳಗಿನ ಬಾಲ್ಯ, ಯೌವನ, ಮುಪ್ಪು ಇವು ಯಾವುದನ್ನೂ ತಿಳಿಯದ ರೈಲುಚಕ್ರಗಳು ಹಳಿಯ ಮೇಲೆ ನನಗಿಂತ ಮೊದಲೇ ಬಂದು ನಿಂತಾಗಿದೆ.’ + +‘ರಜೆ, ರೈಲು ಗಾಲಿಗಳು ಮತ್ತು ಸುಬ್ರಹ್ಮಣ್ಯ ಕ್ರಾಸ್’ ಪ್ರಬಂಧದಲ್ಲಿ, ‘ಸಮುದ್ರ ಖಾಲಿ ಆದರೆ, ಸಮುದ್ರ ಇದ್ದ ಜಾಗದಲ್ಲಿ ದಿನವೂ ಸ್ವಲ್ಪ ಸ್ವಲ್ಪ ನೀರು ಹಾಕಿ ಮತ್ತೆ ಸ್ವಲ್ಪ ಉಪ್ಪು ಹಾಕಿ ಕದಡಿ ಹೊಸ ಸಮುದ್ರ ತಯಾರಿ ಮಾಡುತ್ತೇನೆ ಎಂದು ಹೇಳಿ ಸಣ್ಣ ಹುಡುಗ ನಿರಾಳವಾಗಿದ್ದಾನೆ. ಯಾವತ್ತು ಊರಿಗೆ ಬಂದರೂ, ಸಮುದ್ರವನ್ನು ಯಾರು ಕದ್ದುಕೊಂಡು ಹೋದರೂ, ಸಮುದ್ರವೇ ಇಲ್ಲ ಆಗುವ ಸಂದರ್ಭ ಇಲ್ಲ ಎಂದು ತಿಳಿದು ನಾನೂ ಸಮಾಧಾನವಾಗಿದ್ದೇನೆ’ ಎನ್ನುವ ಮಾತು ಬರುತ್ತದೆ. ಯಾರೂ ಕದಿಯಲಾಗದ ಈ ಸಮುದ್ರ ಭೌತಿಕವಾದುದಷ್ಟೇ ಅಲ್ಲ, ಮಾನಸಿಕವಾದುದೂ ಹೌದು. ಯೋಗೀಂದ್ರರ ಪ್ರಬಂಧಗಳಲ್ಲಿನ ಊರು ಬದಲಾವಣೆಗೊಡ್ಡಿಕೊಂಡ ಭೌತಿಕ ಪ್ರದೇಶವೂ ಹೌದು, ಭಾವಕೋಶದಲ್ಲಿನ ಬದಲಾಗದ ಪರಿಸರವೂ ಹೌದು. ಮರವಂತೆಯ ಕುರಿತಾದ ‘ಬೇಲೆಬದಿಯ ಆಮೆಪುರಾಣ’ ಪ್ರಬಂಧ ವ್ಯಕ್ತಿಚಿತ್ರದಂಥ ರಚನೆ. ಊರಿನ ಕುರಿತ ಯೋಗಿಂದ್ರರ ಪ್ರಬಂಧಗಳನ್ನು ಒಂದೇ ಕಥನದ ಹಲವು ತುಣುಕುಗಳಂತೆ ಜೋಡಿಸಿಕೊಂಡು ಓದಬಹುದು. ಎತ್ತ ಮುಖ ಮಾಡಿ ಬಿಟ್ಟರೂ ಕಡಲಿನತ್ತ ಮುಖ ಮಾಡುತ್ತಾ ಹೊರಡುವ ಆಮೆ ಮರಿಗಳಂತೆ ಪ್ರಬಂಧಕಾರರು ಮರಳುವುದೂ ಊರಿಗೆ, ಸಮುದ್ರದ ಮೊರೆತಕ್ಕೆ. ನಮ್ಮ ಬದುಕು ಮಹಾವೃಕ್ಷವಾಗಿ ಕೊಂಬೆರೆಂಬೆಗಳನ್ನು ಆಕಾಶಕ್ಕೆ ಹರಡಿಕೊಂಡಿದ್ದರೂ ಮಣ್ಣಮರೆಯಲ್ಲಿ ಬೇರುಗಳು ಹುದುಗಿರುವಂತೆ ನಮ್ಮ ಬದುಕೂ ಇರುವುದನ್ನು ಪ್ರಬಂಧಕಾರರು ಸೂಚಿಸುತ್ತಿರುವಂತಿದೆ. + +(ರಘುನಾಥ ಚ.ಹ.) + +ಅಪ್ಪಟ ಪ್ರಬಂಧಗಳ ಜೊತೆಗೆ, ಪ್ರಬಂಧಗಳಾಗಲು ಹವಣಿಸುವ ರಚನೆಗಳೂ ಈ ಸಂಕಲನದಲ್ಲಿವೆ. ‘ಖಾಲಿ ಕುರ್ಚಿ’ ಬರಹವನ್ನು ಕಥೆಯಂತೆಯೂ, ಡೈರಿಯ ಪುಟವೊಂದರ ದಾಖಲಾತಿಯಂತೆಯೂ ಓದಿಕೊಳ್ಳಬಹುದು. ಸಹೋದ್ಯೋಗಿಯೊಬ್ಬಳ ಗೈರುಹಾಜರಿಯಲ್ಲಿ ಅವಳು ಕೂರುತ್ತಿದ್ದ ಕುರ್ಚಿಯ ಖಾಲಿತನದಲ್ಲಿ ಅವಳ ವ್ಯಕ್ತಿಚಿತ್ರವನ್ನು ಕಟ್ಟಿಕೊಡುವ ತಂತ್ರ ಚೆನ್ನಾಗಿದೆ. ಅವಳ ಹಾಜರಿಯಲ್ಲಿ ಆಕೆಯ ಬಗೆಗಿದ್ದ ಪೂರ್ವಗ್ರಹಗಳು, ಈಗ ಗೈರುಹಾಜರಿಯಲ್ಲಿ ತಿಳಿಯಾಗಿ, ಆಕೆಯನ್ನು ಕಚೇರಿಯಲ್ಲಿನ ಎಲ್ಲರೂ ತಮಗರಿವಿಲ್ಲದಂತೆಯೇ ಹಚ್ಚಿಕೊಂಡಿದ್ದಾರೆ. ಸಹೋದ್ಯೋಗಿಯ ಗೈರುಹಾಜರಿಯಲ್ಲಿ, ಆಕೆ ಕಳುಹಿಸಿದ ಕೇಕುಗಳನ್ನು ತಿನ್ನುತ್ತ ಅವಳ ಹುಟ್ಟುಹಬ್ಬದ ಆಚರಣೆ ನಡೆಯುತ್ತದೆ. ಆ ಸಂಭ್ರಮದಲ್ಲಿ, ಚಿನ್ನದ ಕೂದಲುಗಳನ್ನು ಇಳಿಬಿಟ್ಟಿದ್ದ ಅವಳ ತಲೆಯಲ್ಲಿ ಕೂದಲಿನ ಕುರುಹೇ ಇಲ್ಲದ್ದನ್ನು ಮೆಲುಗಾಳಿಗೆ ನಕ್ಕು ಹಾಡಿ ತೊನೆದು ತೂಗುತ್ತಿದ್ದ ಬಂಗಾರದ ಕೇಶ ರಾಶಿ ಮಾಯವಾದುದನ್ನು ಸಹೋದ್ಯೋಗಿಯೊಬ್ಬ ಕೇಕು ತಿನ್ನುತ್ತಲೇ ತಿಳಿಸುವ ಕ್ರೌರ್ಯದ ಕಥನವೂ ಇಲ್ಲಿದೆ. + +‘ಸೈಬರ್ ಯುದ್ಧ’ ಬರಹ ಗುಂಪಿಗೆ ಸೇರದ ಪದದಂತಿದೆ. ‘ಶಿಕ್ಷಕರ ದಿನ ಅಕ್ಷರ ನಮನ’, ‘ಸ್ಕೂಲ್ ಬ್ಯಾಗ್ ರೂಪಕ’ ಬರಹಗಳು ಭಾರತ ಮತ್ತು ಬ್ರಿಟನ್‌ನಲ್ಲಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಚಿತ್ರಗಳನ್ನು ನೀಡುವಂತಹವು. ‘ಕೇಟಿಯ ಹೆರಿಗೆ ರಜೆ’, ‘ಬ್ರಿಸ್ಟಲ್ ಬಾನಿನಲ್ಲಿ ಬಿಸಿಗಾಳಿ ಬಲೂನುಗಳು’, ‘ಸೆಪ್ಟೆಂಬರ್ ಎನ್ನುವ ತಲ್ಲಣದ ಮಾಸ’ – ಇವೆಲ್ಲವೂ ಅನಿವಾಸಿ ಭಾರತೀಯ ಲೇಖಕನ ಅಂಕಣ ಬರಹಗಳಾಗಿ ಗಮನಸೆಳೆಯುತ್ತವೆ. ಪ್ರಬಂಧ ಧ್ವನಿ ಕಡಿಮೆ ಇರುವ ಲಹರಿಗಳ ರೂಪದಲ್ಲಿ ಇವು ಓದಿಸಿಕೊಳ್ಳುತ್ತವೆ. ಜಾವೇದ್ ಅಬಿದಿ ಅವರ ಕುರಿತಾದ ‘ತನ್ನಂತಿರುವವರ ಒಳಿತಿಗಾಗಿಯೇ ಬದುಕಿದ್ದ ವಿಶಿಷ್ಟ ಚೇತನ’ ಹಾಗೂ ‘ಸುಳಿಗಾಳಿಯಂತಿದ್ದ ಸುಧೀರನ ನೆನಪು’ ವ್ಯಕ್ತಿಚಿತ್ರ ಬರಹಗಳಾಗಿವೆ. ‘ಮೊಘಲ್ ಎ ಆಜಮ್’, ‘ಜೀರ್ಜಿಂಬೆ’, ‘ರಿಸರ್ವೇಷನ್’ ಸಿನಿಮಾಗಳ ಕುರಿತ ವಿಶ್ಲೇಷಣೆಗಳು ದೃಶ್ಯಮಾಧ್ಯಮದ ಬಗೆಗಿನ ಯೋಗಿಂದ್ರರ ಆಸಕ್ತಿಯ ಫಲಶ್ರುತಿಗಳಿಂತಿವೆ. + + + +ಅಂಕಣ ಬರಹಗಳ ರೂಪದ ರಚನೆಗಳನ್ನು ಹೊರತುಪಡಿಸಿ ನೋಡಿದರೆ, ‘ನನ್ನ ಕಿಟಕಿ’ ಸೊಗಸಾದ ಪ್ರಬಂಧಗಳ ಸಂಕಲನ. ಹೊಸ ಬೆಳಕಿಗೆ ಹಂಬಲಿಸುತ್ತಿರುವ ಕನ್ನಡ ಪ್ರಬಂಧ ಪ್ರಕಾರಕ್ಕೆ ದೊರೆತಿರುವ ಹೊಸ ಕಿಟಕಿಯ ರೂಪದಲ್ಲಿ ಈ ಕೃತಿ ಮುಖ್ಯವಾದುದು. ಯೋಗೀಂದ್ರರ ಪ್ರಬಂಧ ಕೌಶಲ ಮುಂದಿನ ದಿನಗಳಲ್ಲಿ ಪಡೆಯಬಹುದಾದ ರೂಪದ ಬಗ್ಗೆ ಸಾಹಿತ್ಯದ ವಿದ್ಯಾರ್ಥಿಯಾಗಿ ನಾನಂತೂ ತೆರೆದಕಣ್ಣಾಗಿರುವೆ. ಅರ್ಥಪೂರ್ಣ ಪ್ರಬಂಧಗಳನ್ನು ನೀಡಿದ್ದಕ್ಕಾಗಿ ಮರವಂತೆಯ ಯೋಗೀಂದ್ರರಿಗೆ ಅಭಿನಂದನೆ. ಈ ಸಂಕಲನ, ಓದುಗರಿಗೆ ಹೊಸ ಅನುಭವದ ಕಿಟಕಿಗಳನ್ನು ತೆರೆಯುತ್ತದೆಂದು ನಂಬುವೆ. ಹಾಗೆಯೇ, ಓದುಗರ ಪ್ರೀತಿಯ ಕಾವು ಪ್ರಬಂಧಕಾರರಿಗೆ ಸಾಧ್ಯತೆಗಳ ಹೊಸ ಬೆಳಕಿಂಡಿಗಳನ್ನು ಕಾಣಿಸಲೆಂದು ಪ್ರೀತಿಯಿಂದ ಹಾರೈಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_175.txt b/Kenda Sampige/article_175.txt new file mode 100644 index 0000000000000000000000000000000000000000..acbc5bb0783c0f030490a17e8cae43df18561ab3 --- /dev/null +++ b/Kenda Sampige/article_175.txt @@ -0,0 +1,39 @@ +ನನ್ನ ಶಾಲೆ ಇದ್ದಿದ್ದು ರಾಜಾಜಿನಗರ ಮೊದಲ ಬ್ಲಾಕ್‌ನಲ್ಲಿ. ಅದು ಶುರುವಾಗುತ್ತಿದ್ದುದು ನಡು ಮಧ್ಯಾಹ್ನ 12ಕ್ಕೆ ಮತ್ತು ಮುಗಿಯುತ್ತಿದ್ದುದು ಸಂಜೆ 5.30 ಕ್ಕೆ. ಬೆಳಿಗ್ಗೆ 10 ಗಂಟೆಗೆ ಊಟ ಮಾಡಿ ಶಾಲೆಗೆ ನಡೆದರೆ ಮತ್ತೆ ಸಂಜೆಯವರೆಗೆ ಖಾಲಿ ಹೊಟ್ಟೆ. ದಿನವೂ ವಾಪಸ್ ಬರುವಷ್ಟರಲ್ಲಿ ಹಸಿವಿನಿಂದ ಸುಸ್ತಾಗಿ ಜೋಲು ಮೋರೆ ಹೊತ್ತು ವಾಪಸ್ ಬರುತ್ತಿದ್ದೆ. ‘ಹಾಳು ಹೊಟ್ಟೆಯಲ್ಲಿ ಯಾಕಿರಬೇಕು, ಸ್ಕೂಲಿಗೆ ಡಬ್ಬಿ ಕಟ್ಟಿಕೊಂಡು ಹೋಗಲೇನು ಧಾಡಿ’ ಎಂದು ಅಮ್ಮ ದಿನವೂ ಹೇಳುತ್ತಲೇ ಇದ್ದರೂ ಕೇಳುವವಳಾ ನಾನು? ಚಂಡಿಯ ವಂಶಜಳು! ಶಾಲೆಯ ಬಳಿಯೂ ತಿನ್ನಲು ಏನೂ ಸಿಗುತ್ತಿರಲೂ ಇಲ್ಲ… ಶಾಲೆಯ ಎದುರಿಗೆ ಇದ್ದ ಒಂದೇ ಬೇಕರಿಯಲ್ಲಿ ವೆಜ್ ಪಫ್ ಬಿಟ್ಟು. ಈಗ ಅಲ್ಲಿನ ಅಂಗಡಿಗಳ ಸಾಲು ನೋಡಿದರೆ ಹೊಟ್ಟೆ ಉರಿಯುತ್ತದೆ ‘ಆಗ ಎಲ್ಲಿ ಹಾಳಾಗಿಹೋಗಿದ್ರು ಇವರೆಲ್ಲ’ ಎಂದು! ಒಮ್ಮೊಮ್ಮೆ ಪಫ್ ತಿನ್ನುತ್ತಿದ್ದೆವಾದರೂ ದಿನವೂ ತಿನ್ನಲು ಹಾಗೆಲ್ಲ ಹಣವಿರುತ್ತಿರಲಿಲ್ಲ. ಅವೆಲ್ಲ ಎಂದೋ ಒಮ್ಮೆ ಸ್ಪೆಷಲ್ ಸಂದರ್ಭಗಳಿಗೆ ಮಾತ್ರ ಮೀಸಲು. ಉಳಿದಂತೆ ಮನೆಯದ್ದು ತಿನ್ನಬೇಕು, ಇಲ್ಲವಾದರೆ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ… ಎರಡೇ ಆಯ್ಕೆ… ನನಗೆ ಮಾತ್ರವಲ್ಲ, ಮಧ್ಯಮ ವರ್ಗದ ಎಲ್ಲ ಮಕ್ಕಳಿಗೂ. + +(ಭಾರತಿ ಬಿ.ವಿ.) + +ಇದು ಸಾಲದು ಎಂದು ಮತ್ತೊಂದು ತಲೆಹರಟೆ ಎಂದರೆ ಬಸ್ ಪಾಸ್ ಬೇಡವೆಂದು ನಿರಾಕರಿಸಿ ಶಾಲೆಗೆ ನಡೆದು ಹೋಗಿ ಬರುವುದು. ಬೆಳಿಗ್ಗೆ ನಡೆಯಲು ಹೊಟ್ಟೆ ಭಾರ ಮತ್ತು ಹಿಂದಿರುಗುವಾಗ ಖಾಲಿ ಹೊಟ್ಟೆಯ ಸಂಕಟ. ಹೀಗಿದ್ದೂ ರಸ್ತೆಯುದ್ದಕ್ಕೂ ಮೊದಲು ಸಿಗುವ ಸುಧಾಳನ್ನು ಮನೆಗೆ ಸೇರಿಸಿ, ನಂತರ ಚಿತ್ರ, ನಂತರ ರೂಪ, ನಂತರ ಶೈಲಾ ಎಲ್ಲರನ್ನೂ ಬಿಟ್ಟು ನಾನು ಮತ್ತು ರೇವಿ ಕಾಲೆಳೆದುಕೊಂಡು ಇ. ಎಸ್. ಐ ಹತ್ತಿರವಿದ್ದ ಮನೆ ಸೇರುವುದರಲ್ಲಿ 6 ಕಳೆದಿರುತ್ತಿತ್ತು. ಅಷ್ಟು ಹೊತ್ತಿಗೆ ಅಮ್ಮನನ್ನೇ ತಿನ್ನುವ ಘರ್ಜಿಸುವ ಹೆಣ್ಣು ಹುಲಿಯಾಗಿರುತ್ತಿದ್ದೆ! ನಾನು ರಸ್ತೆಯ ಮೂಲೆಯಲ್ಲಿ ತಿರುಗಿದೊಡನೆ ಎಲ್ಲರೂ ಸಿನೆಮಾದಲ್ಲಿ ರೌಡಿ ಬಂದಾಗ ಗುಸುಗುಸು ಮಾತನಾಡುತ್ತ ಮೌನವಾಗುತ್ತಾರಲ್ಲ… ಹಾಗೆ ಸೈಲೆಂಟು! ನಾನು ಅವರ ಕಡೆಗೆಲ್ಲ ಒಂದು ಕೆಂಗಣ್ಣಿನ ನೋಟ ಬೀರುತ್ತಾ ಸಾಗುವುದು! ಮತ್ತೆ ಜಗತ್ತಿನ ಮಕ್ಕಳೆಲ್ಲ ಶಾಲೆ ಮುಗಿಸಿದ ಎರಡು ಗಂಟೆಗಳ ನಂತರ ಮನೆ ಸೇರುತ್ತಿದ್ದ ಘೋರ ಅನ್ಯಾಯ ಅನುಭವಿಸುತ್ತಿರುವಾಗ ಅವರೆಲ್ಲ ಖುಷಿಯಾಗಿ ನಗುತ್ತ ಇರುವುದು ಏನು ಕಡಿಮೆ ಅಪರಾಧವಾ?! ಇದ್ದಿದ್ದರಲ್ಲಿ ನನ್ನ ಗೆಳತಿ ಗೀತಾ ಮಾತ್ರ ಧೈರ್ಯ ತಾಳಿ ಮೆಲ್ಲನೆ ದನಿಯಲ್ಲಿ ‘ಹೋಗಪ್ಪ ತಿಂದ್ಕೊಂಡು ಬಾ’ ಎನ್ನುತ್ತಿದ್ದಳು. ನಾನು ಕೆಕ್ಕರಿಸಿ ಅವಳನ್ನು ನೋಡುತ್ತಾ ನಡೆಯುತ್ತಿದ್ದೆ ‘ತಿಂದ್ಕೊಂಡು ಬರುವುದರಲ್ಲಿ ಕತ್ತಲಾಯಿತು ಎಂದು ಏನೋ ಓದಿ ಕಡೆದು ಕಟ್ಟೆ ಹಾಕುವವರಂತೆ ಮನೆ ಸೇರುತ್ತಾಳೆ… ತಿಂದ್ಕೊಂಡು ಬರಬೇಕಂತೆ… ಗರ್ರ್ ರ್ರ್ ರ್ರ್ ರ್ರ್ ರ್ರ್… ಒಟ್ಟಿನಲ್ಲಿ ಆಂಗ್ರಿ ಯಂಗ್ ಗರ್ಲ್. ಯಾತಕ್ಕೋ ಯಾರ ಮೇಲೋ ಸಿಟ್ಟು ಮಾಡಿಕೊಳ್ಳುವುದು ನನ್ನ ಹಕ್ಕು! + +ಆಯ್ತು ಇಷ್ಟೆಲ್ಲ ಸುಸ್ತಿರುವಾಗ ತೆಪ್ಪಗೆ ಮನೆಯೊಳಗೆ ಹೋಗಿ ತಿನ್ನಬೇಕು ತಾನೇ? ಆದರೆ ಅದು ಹೇಗಾಗುತ್ತದೆ ನಾನಿಲ್ಲದೇ ಸಂಸಾರ ನಡೆದುಬಿಡುತ್ತದಾ ನೀವೇ ಹೇಳಿ! ಊರ ಉಸಾಬರಿಯೆಲ್ಲ ಬೇಕು ನನಗೆ. ನಾನು ಗಮನಿಸದಿದ್ದರೆ ಮನೆ ಹಾಳಾಗಿ ಹೋಗುತ್ತದೆ ಎನ್ನುವ ಭ್ರಮೆ. ಮನೆಗೆ ಬಂದ ಕೂಡಲೆ ಬದಿಯ ಬಾಗಿಲು ಹಾಕಿದೆಯಾ. ರಾತ್ರಿ ಮಲಗುವಾಗ ಮನೆಯ ಮುಂಬಾಗಿಲು ಹಾಕಿದೆಯಾ, ದೀಪಗಳು ಆರಿಸಿದೆಯಾ, ನಲ್ಲಿಗಳು ಬಂದ್ ಆಗಿದೆಯಾ (ಏನೋ ನೀರು ಸುರಿದು ಹೋಗುವಂತೆ!) ಎಂದು ಖುದ್ದು ನೋಡುವವರೆಗೆ ನೆಮ್ಮದಿ ಇರುತ್ತಿರಲಿಲ್ಲ. + +ಅವತ್ತೂ ಹಾಗೆಯೇ… ಸುಸ್ತಾಗಿ ಮನೆಯೊಳಗೆ ಇನ್ನೇನು ಕಾಲಿಡಬೇಕು ಅನ್ನುವಷ್ಟರಲ್ಲಿ, ಸೈಡಿನ ಬಾಗಿಲು ಹಾಕಿದೆಯಾ ಎಂದು ಬಗ್ಗಿ ನೋಡಿದರೆ ಅಷ್ಟಗಲಕ್ಕೂ ಹಾರು ಹೊಡೆದಿದೆ! ನೋಡಿದ್ದೇ ನಖಶಿಖಾಂತ ಉರಿದು ಹೋಯಿತು. ‘ಹಾಳು ಶನಿಗಳು ಹೋಗುವಾಗ ಹೇಳಿ ಬಾಗಿಲು ಹಾಕಿಸಿ ಹೋಗಿ ಎಂದು ಬಾಯಿ ಬಡಿದುಕೊಂಡರೂ ತಮ್ಮ ಕೆಲಸವಾದ ಕೂಡಲೇ ಹೇಳದೇ ತೊಲಗುವುದು ನೋಡು’ ಎಂದು ಬಯ್ದುಕೊಂಡೆ. ನಾನು ಹಸಿದಿರುವಾಗ ಒಂದು ರೀತಿಯಲ್ಲಿ ಶ್! ಸಿನೆಮಾದ ಬ್ಯಾಂಕ್ ಜನಾರ್ಧನ್ ಥರ ಆರಿಸಿ ಆರಿಸಿದ ಪದಗಳಲ್ಲಿ ಒಂದೇ ಸಮನೆ ಬಯ್ಯುವುದು! ಆ ಶನಿಗಳು ಯಾರೆಂದರೆ ನಮ್ಮ ಮನೆಯ ಬಾವಿಯಲ್ಲಿ ನೀರು ಸೇದಲು ಬರುತ್ತಿದ್ದ ಅಕ್ಕಪಕ್ಕದ ಮನೆಯವರು. ಅದೇನಾಗಿತ್ತೆಂದರೆ ಆಗ ಬೆಂಗಳೂರಿನಲ್ಲಿ ನೀರಿಗೆ ಅಸಾಧ್ಯ ಬರ. ದಿನಕ್ಕೆ ಅರ್ಧ ಘಂಟೆ ಸಹಾ ನೀರು ಬರುತ್ತಿರಲಿಲ್ಲ. ಆ ನೀರು ಬರುತ್ತಿದ್ದುದೂ ನಡುರಾತ್ರಿಯಲ್ಲಿ. ಕುಡಿಯಲು ನಾಲ್ಕು ಕೊಡ ನೀರು ತುಂಬಿಟ್ಟುಕೊಳ್ಳುವುದರಲ್ಲಿ ನಲ್ಲಿ ಆಸ್ತಮಾ ಬಂದಂತೆ ಗೊರಗೊರ ಎನ್ನುತ್ತ ನಿಂತು ಹೋಗುತ್ತಿತ್ತು. ಹಾಗಾಗಿ ಉಳಿದ ಕೆಲಸಕ್ಕೆಲ್ಲ ಬಾವಿಯ ನೀರೇ ಗತಿ. + + + +ನಾವಿದ್ದ ಬಡಾವಣೆ ಶಿವನ ಹಳ್ಳಿ ಹೆಸರಿಗೆ ತಕ್ಕಂತೆ ಹಳ್ಳಿಯೇ. ನಯನಾಜೂಕಿಲ್ಲದ ಜನರು ನಾವೆಲ್ಲ. ಒಬ್ಬರ ಮನೆಯಲ್ಲಿ ನೀರಿದ್ದರೆ ಮುಗಿಯಿತು. ಇಡೀ ರಸ್ತೆಯ ಜನರೆಲ್ಲ ಹಕ್ಕಿನಿಂದೆಂಬಂತೆ ಒಬ್ಬರಾದ ನಂತರ ಒಬ್ಬರು ಬಂದು ನೀರು ಸೇದಿಕೊಳ್ಳುವುದೇ ಕೆಲಸ. ಬಾವಿಯ ಪಕ್ಕ ಒಂದು ಬಾಗಿಲು ಇತ್ತು. ಆಗೆಲ್ಲ ಮನೆಯ ಹಿಂಬಾಗಿಲು ಹಾಕುವ ಅಭ್ಯಾಸವೇ ಇಲ್ಲ ನಮಗೆ. ಎತ್ತರದ ಗೋಡೆ ಇದ್ದುದರಿಂದ ಕಳ್ಳ ಬರುವುದಿಲ್ಲ ಎಂದು ನಾವು ತೀರ್ಮಾನಿಸಿ ಆಗಿತ್ತು! ಆದರೆ ಈ ಸೈಡಿನ ಬಾಗಿಲಿನಿಂದ ಯಾರಾದರೂ ಬಂದರೆ, ತೆಗೆದು ಬಿದ್ದಿರುವ ಹಿಂದಿನ ಬಾಗಿಲಿನ ಮೂಲಕ ಆರಾಮವಾಗಿ ಮನೆಯೊಳಕ್ಕೇ ಬಂದುಬಿಡಬಹುದು. ಹಾಗಾಗಿ ನಾವು ಬಾಗಿಲು ತೆರೆದು ‘ವಾಪಸ್ ಹೋಗುವಾಗ ಹೇಳಿ ಹೋಗಿ, ಬಾಗಿಲು ಹಾಕಿಕೊಳ್ಳುತ್ತೇನೆ’ ಎಂದು ಬೇಜಾರಿಲ್ಲದೆ ಹೇಳುತ್ತಿದ್ದೆವು ಮತ್ತು ಅವರೂ ಶಿಸ್ತಾಗಿ ತಲೆ ಆಡಿಸುತ್ತಿದ್ದರು. ಆದರೆ ನೀರು ಸೇದಿದ ನಂತರ ಯಾರೂ ಹೇಳಿ ಹೋಗುತ್ತಿರಲಿಲ್ಲ. ಹಾಗಾಗಿ ಆ ಬಾಗಿಲು ಹಾರು ಹೊಡೆದೇ ಬಿದ್ದಿರುತ್ತದೆ ಮತ್ತು ಇಡೀ ಬೀದಿಯ ಜನ ಒಬ್ಬರಾದ ಮೇಲೆ ಒಬ್ಬರಂತೆ ಬಂದು ಹೋಗುತ್ತಲೇ ಇರುತ್ತಿದ್ದರು. ಬಹುಶಃ ಅವರು ಹೇಳಿದ್ದರೂ ಅಮ್ಮ ಹಾಕುವುದು ಕಷ್ಟವೇ ಇತ್ತು. ಏಕೆಂದರೆ ಪ್ರತಿ ಹತ್ತು ನಿಮಿಷಕ್ಕೊಮ್ಮೆ ಹಿಂದಿನ ಬಾಗಿಲು ತೆಗೆಯುವ ತಾಳ್ಮೆ ಯಾರಿಗಿತ್ತು! ಆದರೂ ನನಗೆ ಆ ತೆರೆದಿಟ್ಟ ಬಾಗಿಲು ಕಂಡರೆ ಪಿತ್ತ ನೆತ್ತಿಗೇರುತ್ತಿತ್ತು. + +ಹೋಗುವಾಗ ಹೇಳಿ ಹೋಗದ ದರಿದ್ರದವರಿಗೆ ನೀರು ಯಾಕೆ ಕೊಡುತ್ತಿ ಎಂದು ದಿನವೂ ಜಗಳವಾಡಿದರೂ ಅಮ್ಮ ಕಿವಿಗೇ ಹಾಕಿಕೊಳ್ಳುತ್ತಿರಲಿಲ್ಲ. ನೀರು ಇಲ್ಲ ಅಂದರೆ ಮುಂದಿನ ಜನ್ಮದಲ್ಲಿ ಹಲ್ಲಿಯಾಗೋ, ಕೋತಿಯಾಗೋ ಹುಟ್ಟುತ್ತೇವೆ ಎನ್ನುವ ಭಯ ಅವಳಿಗೆ. ನನಗೆ ಇದೊಂದೇ ಜನ್ಮವಾಗಿರುವುದರಿಂದ ಹೆಚ್ಚಿನ ಸಮಸ್ಯೆಯೇನೂ ಇಲ್ಲ. ಆದರೆ ಅಮ್ಮನಿಗೆ ಈ ಜನ್ಮಕ್ಕಿಂತ ಮುಂದಿನ ಜನ್ಮದ ಮೇಲೆ ಗಮನ ಹೆಚ್ಚು. ಈ ಮನುಷ್ಯ ಜನ್ಮ ಹೇಗೂ ಅನುಭವಿಸಿ ಆಗಿರುತ್ತದಲ್ಲ, ಮುಂದಿನ ಜನ್ಮದಲ್ಲಿ vertical ಆಗಿ ಗೋಡೆ ಏರುವ, ಕಟ್ ಆದ ಬಾಲ ಬೆಳೆಸಿಕೊಳ್ಳುವ, ಕೊಂಬೆಯಿಂದ ಕೊಂಬೆಗೆ ಆರಾಮವಾಗಿ ಹಾರುವ, ಬೀದಿ ಬೀದಿಯಲ್ಲಿ ಹೇನು ತೆಗೆದುಕೊಳ್ಳುವ ಸುಖವನ್ನೂ ಅನುಭವಿಸಬೇಕೆನ್ನುವ ಸುಖದ ಪರಿಕಲ್ಪನೆಯಿಲ್ಲದ ಅಮ್ಮನಿಗೆ ಮುಂದಿನ ಜನ್ಮದಲ್ಲೂ ಇದೇ ಮನುಷ್ಯ ಜನ್ಮವೇ ಆಗಬೇಕು! ಹಾಗಾಗಿ ಅದು ದಿನನಿತ್ಯದ ಮುಗಿಯದ ಗೋಳು. ‘ಇವತ್ತೂ ನೀರು ಕೊಟ್ಟಿರಬೇಕು ಅಮ್ಮ, ಹೋಗುವಾಗ ಆ ಕೃತಘ್ನರು ಹೇಳದೇ ಹಾಗೆಯೇ ಹೋಗಿದ್ದಾರೆ’ ಎಂದು ಹಲ್ಲು ಮಸೆಯುತ್ತಾ, ಸೈಡ್ ಬಾಗಿಲಿನತ್ತ ಉರಿಮಾರಿಯ ಮುಖದಲ್ಲಿ ನಡೆದೆ. + +ಬಯ್ದುಕೊಳ್ಳುತ್ತಲೇ ಒಳಗೆ ಹೋಗಿ ಚಿಲಕ ಹಾಕಿ, ಮನೆಯ ಒಳ ಹೋಗಲು ತಿರುಗಿದವಳು ಅವಮಾನದಿಂದ ನಿಂತುಬಿಟ್ಟೆ… ಎದುರಲ್ಲಿ ಅಪರಿಚಿತನೊಬ್ಬ ನೀರು ಸೇದಿ ಕೊಡದ ಕುಣಿಕೆ ಬಿಚ್ಚುತ್ತಾ ನಿಂತಿದ್ದ, ಅವಳನ್ನೇ ನೋಡುತ್ತಾ… ನಗುತ್ತಾ! + +ಇಡೀ ಹಿತ್ತಲಿನಲ್ಲಿ ನಾವಿಬ್ಬರೇ… + +ನನಗೆ ಹಾಳಾದ್ದು ‘ಹಂ ತುಂ ಏಕ್ ಕಮರೇ ಮೆ ಬಂದ್ ಹೋ’ ಹಾಡು ಆ ಘಳಿಗೆಯಲ್ಲಿ ಅದ್ಯಾಕೆ ನೆನಪಾಯ್ತೋ! + +ಅವಮಾನದಿಂದ ಕೆಂಪಗಾಗಿ ಅವನತ್ತ ನೋಡಿದರೆ, ಅವನು ಮೀಸೆಯಡಿಯಲ್ಲಿ ನಗುತ್ತಾ ನನ್ನತ್ತಲೇ ನೋಡುತ್ತಿದ್ದ. + +‘ಸಾರಿ, ನಂಗೆ ನೀವಿರೋದು ಗೊತ್ತಿರಲಿಲ್ಲ’ ಎಂದು ತೊದಲಿದವಳೇ ಮನೆಯೊಳಕ್ಕೆ ಓಡಿದ್ದೆ. + +ರೂಮಿನೊಳಗೆ ನುಗ್ಗಿ ಬ್ಯಾಗ್ ಎಸೆದವಳೇ ಸೋಫಾದ ಮೇಲೆ ಆರಾಮವಾಗಿ ಕುಳಿತಿದ್ದ ಅಮ್ಮನ ಪಕ್ಕ ಕುಳಿತು ಶೂ ಬಿಚ್ಚುತ್ತಾ ‘ಅದ್ಯಾರೇ ಅಮ್ಮ ಆ ಹೊಸಬ’ ಎಂದು ಕೇಳಿದ್ದೆ. ಅಮ್ಮ ಆರಾಮವಾಗಿ ‘ಅವರಾ! ಎದುರು ಮನೆಗೆ ಹೊಸದಾಗಿ ಬಂದಿದ್ದಾರಂತೆ ಕಣೇ ಪಾಪ. ನೆನ್ನೆ ಶಿಫ್ಟ್ ಮಾಡಿದ್ದಾರೆ… ಇವತ್ತು ಒಂದೇ ಒಂದು ಹನಿ ನೀರು ಬಂದಿಲ್ಲ’ ಅಮ್ಮ ರಾಗವಾಗಿ ವರದಿ ಒಪ್ಪಿಸಿದಳು. ಉಳಿದೆಲ್ಲ ಮಾತೂ ಗಾಳಿಯಲ್ಲಿ ಲೀನವಾಗಿ ‘ಎದುರು ಮನೆಗೆ ಬಂದಿದ್ದಾನೆ… ಎದುರು ಮನೆಗೆ ಬಂದಿದ್ದಾನೆ… ಎದುರು ಮನೆಗೆ ಬಂದಿದ್ದಾನೆ!’ ಎನ್ನುವ ಮಾತಷ್ಟೇ ಗೋಳ ಗುಮ್ಮಟದ ಒಳಗಿನಂತೆ ಏಳೇಳು ಸಲ ಎದೆಯೊಳಗೆಲ್ಲ ಪ್ರತಿಧ್ವನಿಸಿತು! + +‘ಯಾವ ಮನೆ?’ + +‘ಎದುರು ಮೇಷ್ಟರ ಮನೆ ಇದೆಯಲ್ಲ… ಅವರ ಚಿಕ್ಕ ಔಟ್‌ಹೌಸ್ ಮನೆಗೆ’ + +ಓಹ್! ಎದುರು ಮನೆಯಲ್ಲಿದ್ದಾನೆ… ಅಂದರೆ ದಿನವೂ ಎದುರಾಗುತ್ತಾನೆ… ಚಂದಕ್ಕಿದ್ದಾನೆ ಡುಮ್ಮ ಮೀಸೆಯ ಹುಡುಗ… + + + +ಮತ್ತೆ ಏನಾದರೂ ನೆಪ ಹೂಡಿ ಮನೆಯ ಹಿಂಭಾಗಕ್ಕೆ ಹೋಗಿ ಅವನನ್ನು ನೋಡಬೇಕು ಎನ್ನಿಸಿ ಸರಸರನೆ ಯೂನಿಫಾರ್ಮ್ ಬದಲಿಸಿ ಒಗೆಯಲು ಹಾಕಲು ಹೋದರೆ ಖಾಲಿ ಜಾಗ ನನ್ನನ್ನು ಸ್ವಾಗತಿಸಿ ನಿರಾಶೆಯೆನಿಸಿತ್ತು… ಛೇ ನಿನ್ನೆ ಬಂದಿದ್ದಾರೆ. ಮತ್ತಿಷ್ಟು ನೀರು ಬೇಡವಾ? ಸ್ನಾನಕ್ಕೆ ನೀರು? ಕುಡಿಯೋದಿಕ್ಕೆ? ಬಟ್ಟೆ ಒಗೆಯೋದಿಲ್ವಾ? ಪಾತ್ರೆ ತೊಳೆಯೋದಿಕ್ಕೆ? ‘ಸೋಮಾರಿ ನನ್ಮಗ’ ಎಂದು ಬಯ್ದುಕೊಂಡೆ! ಆವರೆಗೆ ‘ಗಂಡು ಹುಡುಗಿಯಂತಿದ್ದ’ ನನಗೆ ಮೊದಲ ಸಲ ನಾನು ‘ಹೆಣ್ಣು ಹುಡುಗಿ’ ಅನ್ನಿಸಿತ್ತು!! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_176.txt b/Kenda Sampige/article_176.txt new file mode 100644 index 0000000000000000000000000000000000000000..d136cb18d445e1894223d86a4e4ef04b45380349 --- /dev/null +++ b/Kenda Sampige/article_176.txt @@ -0,0 +1,29 @@ +ನನ್ನ ಹುಟ್ಟಿದೂರು ಅರಸಿಕೆರೆ, ಬೆಳೆದ ಬಾಣಾವರದ ಪರಿಸರದಲ್ಲಿ ನಾವು ಬಾಲ್ಯದಲ್ಲಿ ಆಡಿದ ಆಟಗಳನ್ನು ಒಂದು ಪ್ರಬಂಧವಾಗಿ ಬರೆದಿದ್ದೆನಷ್ಟೆ. ಆಗ ಹಾಲಾಡಿಯವರು ನಿಮ್ಮೂರಿನಲ್ಲಿ ಅಬ್ಬೆಗಳಿವೆಯಂತೆ ಅದರ ಬಗ್ಗೆ ಗೊತ್ತೇ ಎಂದರು. ನನಗೆ ನಿಜಕ್ಕೂ ಅಬ್ಬೆ ಗೊತ್ತಿರಲಿಲ್ಲ. ಆದರೆ ಮಯೂರದಲ್ಲಿ ಅದ್ಭುತವಾದ ಒಂದು ಪತ್ತೇದಾರಿ ಕಥೆ ಓದಿದ್ದೆ. ಅದರ ಬಗ್ಗೆ ಹೇಳಿದೆ. ಅಲ್ಲಿಗೆ ಅಬ್ಬೆಯ ಬಗ್ಗೆ ಮಾತುಕತೆ ಮುಗಿಯಿತು. + +ನೋಡಿದರೆ ಅಬ್ಬೆಯನ್ನೇ ಕಥಾವಸ್ತುವಾಗುಳ್ಳ ಕಾದಂಬರಿಯನ್ನೇ ಪ್ರಕಟಿಸಿದ್ದಾರೆ ಶ್ರೀಯುತ ಶಶಿಧರ ಹಾಲಾಡಿಯವರು.. ಸೋಜಿಗ ಸಂತೋಷಗಳ ಜೊತೆಗೆ ಕುತೂಹಲವೂ ಉಂಟಾಯಿತು. ಹಾಗಾದರೆ ಅಬ್ಬೆಯ ಬಗ್ಗೆ ಕೂಲಂಕುಷವಾದ ವಿವರಣೆ ತಿಳಿವಳಿಕೆ ಇದರಲ್ಲಿ ಸಿಗುತ್ತದೆ. ಅಬ್ಬೆಯ ಬೆನ್ನುಹತ್ತಿ ಅಬ್ಬೆಯ ಜನ್ಮ ಜಾಲಾಡಿದ್ದಾರೆ ಎಂದುಕೊಂಡೆ. ಅಂತೆಯೇ ಅಬ್ಬೆ ಓದುತ್ತಾ ಹೋದೆ. + +(ಶಶಿಧರ ಹಾಲಾಡಿ) + +ಅಬ್ಬೆ ಕಚ್ಚಿದರೆ ಹೆಬ್ಬಾಗಿಲಿಗೆ ಬರಲೂ ಸಮಯವಿರದಷ್ಟು ಬೇಗ ಕಚ್ಚಿಸಿಕೊಂಡವನು ಜೀವ ಬಿಡುತ್ತಾನೆ ಎಂಬ ವ್ಯಾಖ್ಯಾನವನ್ನೇ ಆಧಾರವಾಗಿಟ್ಟುಕೊಂಡು, ನಮ್ಮ ಪಕ್ಕದಲ್ಲೇ ಇರುವ ನೀಚ ಮನುಷ್ಯರಿಗೆ ರೂಪಕವಾಗಿಸಿ ಮನುಷ್ಯನ ಗುಣಸ್ವಭಾವವನ್ನು ಕಥಾನಾಯಕ ಶಿವರಾಂನ ಮೂಲಕ ಬಿಚ್ಚಿಡುತ್ತಾ ಹೋಗುತ್ತಾರೆ ಕಾದಂಬರಿಕಾರರು. ಹಳ್ಳಿಯ ಜೀವನ, ಪರಿಸರ ಕಾಳಜಿ, ಅಲ್ಲಿಯ ಕೆಟ್ಟ ರಾಜಕೀಯ, ದುಷ್ಟ ಜನರ ಸ್ವಭಾವವನ್ನು ಅನಾವರಣಗೊಳಿಸುತ್ತಲೇ. ಕತೆ ಬೆಳೆದುಕೊಂಡು ಹೋಗುತ್ತದೆ. ಅಬ್ಬೆಯ ಬೆನ್ನು ಹತ್ತಿದ ಕಥಾನಾಯಕ, ಹಳ್ಳಿಯಲ್ಲಿ ನಡೆಯುವ ದೌರ್ಜನ್ಯ, ಕಳ್ಳಸಾಗಣೆ, ಯುವಶಕ್ತಿಯ ನಷ್ಟಗಳನ್ನು ಗಮನಿಸುತ್ತಲೇ ತನಗಾಗುತ್ತಿರುವ ಅನ್ಯಾಯದ ವಿರುದ್ಧದ ತಿಕ್ಕಾಟದಲ್ಲಿ ಸೌಮ್ಯವಾದ ಪ್ರತಿಭಟನೆ ಪ್ರಾರಂಭಿಸುತ್ತಾನೆ. ಮೂರ್ತದಿಂದ ಅಮೂರ್ತದೆಡೆಗೆ ಸಾಗುವ ಈ ಕತೆ ಕಡೆಯವರೆಗೂ ಕುತೂಹಲಕಾರಿ ಚಿತ್ರಣವಾಗಿಯೇ ಉಳಿಯುತ್ತದೆ. + +ಅಬ್ಬೆ ಕಾದಂಬರಿ, ನಿರ್ಮಲವಾದ ತಿಳಿನೀರ ಅಲೆಯಂತೆ ನಿಧಾನವಾಗಿ ಸಾಗಿಬಂದು ಮನಸ್ಸನ್ನು ಆಗಾಗ ತಟ್ಟಿ ಮತ್ತೆ ಹಿಂದೆ ಸರಿಯುತ್ತದೆ. ಉಬ್ಬರವಿಳಿತಗಳ ರೋಚಕ ಸನ್ನಿವೇಶಗಳನ್ನು ಕೂಡ ಯಾವುದೇ ಉದ್ವೇಗಕ್ಕೊಳಗಾಗದೆ ದೂರನಿಂತು ವಿವರಿಸುವ ಕಾದಂಬರಿಕಾರರಿಗೆ ಓದುಗರನ್ನು ಹಿಡಿದಿಡುವ ಕಲೆ ಸಿದ್ಧಿಸಿದೆ. ಕಾದಂಬರಿಯ ಪುಟ ತೆರೆದಂತೆ, ನೀರವತೆ ತಾನೇತಾನಾಗಿ ಜನ್ಮ ತಳೆದು ಕಥಾಲೋಕದ ಬಾಗಿಲು ತೆರೆದುಕೊಳ್ಳುತ್ತದೆ.. + +ಹಾಲಾಡಿಯವರ ಶಶಾಂಕಣದ ಸುಮಾರು ಲೇಖನಗಳನ್ನು ಓದಿದಾಗ ಇವರ ಪರಿಸರ ಪ್ರೀತಿ, ಅದರ ಬಗೆಗಿನ ಕಾಳಜಿ, ಲೇಖನಿಯ ಮೂಲಕವೇ ತಮ್ಮ ಸಶಕ್ತ ಹೋರಾಟವನ್ನು ಮುಂದುವರೆಸುತ್ತಲೇ ಬಂದಿದ್ದಾರೆನ್ನುವುದು ಅವರ ಓದುಗರೆಲ್ಲರಿಗೂ ಅರಿವಿಗೆ ಬಂದಿರುವ ವಿಷಯ. ಅಂತೆಯೇ ಅಬ್ಬೆ ಕೂಡ ಅನ್ವೇಷಣೆಗೊಳಪಟ್ಟೂ ನಿರ್ಣಯವನ್ನೀಯಲಾಗದ ಅತಂತ್ರ ಮನಃಸ್ಥಿತಿಯಲ್ಲೇ ಪರಸ್ಥಳಕ್ಕೆ ಕಥಾನಾಯಕ ಸಾಗಬೇಕಾಗುತ್ತದೆ. + +ದಟ್ಟ ಮಲೆನಾಡಿನ ಪರಿಸರದಿಂದ ಬಯಲುಸೀಮೆಗೆ ಉದ್ಯೋಗಾರ್ಥಿಯಾಗಿ ಬಂದ ಕಥಾನಾಯಕ ಶಿವರಾಂ, ಬರಗಾಲ ಕಾಲುಮುರಿದು ಬಿದ್ದ ಬಯಲು ಸೀಮೆಯಲ್ಲೂ ಜೀವವೈವಿಧ್ಯವನ್ನರಸಿ ಹೋಗುವ ಆತನ ಸಂಶೋಧನಾ ಮನಸ್ಸಿಗೆ ಗರುಡನಗಿರಿ, ಹಿರೇಕಲ್ಲುಗುಡ್ಡ, ಅಲ್ಲಿಯ ಬಂಡೆಗಳು, ಪುತ್ರಜಾಜಿಗಳೇ ಪಾತ್ರಗಳಾಗಿ ರೂಪುಗೊಂಡು, ಓದುಗರ ಕುತೂಹಲಕ್ಕೆ ಪಕ್ಕಾಗುತ್ತವೆ. ಕಾಡಿನ ನಾಶಕ್ಕೆ ಕಾರಣವನ್ನು ಕಂಡುಕೊಳ್ಳುವ ಶಿವರಾಂ ಕಡೆಗೆ ಅದಕ್ಕೊಂದು ಪರಿಹಾರವನ್ನೂ ಸೂಚಿಸಿ ಅರಣ್ಯನಾಶವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದು ಕಾದಂಬರಿಯ ಸಾರ್ಥಕತೆಯನ್ನು ಸಾರುತ್ತದೆ. + + + +ತಂತ್ರಜ್ಞಾನ ಮುಂದುವರೆಯದ ಕಾಲಘಟ್ಟದಲ್ಲಿ ನಡೆಯುವ ಈ ಕತೆಯಲ್ಲಿ ಡಾ. ಕಲ್ಲೂರಾಯರು ಕಲ್ಕೆರೆಯ ಖಾಸಗಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿಕೊಳ್ಳುತ್ತಲೇ ತಮ್ಮ ಪರಿಸರಪ್ರೀತಿ ಮತ್ತು ಕಾಳಜಿಯ ಕಾರಣ, ಶಿವರಾಂನ ಜೊತೆಗೂಡಿ ಗರುಡನಗಿರಿ, ಹಿರೇಕಲ್ಲುಗುಡ್ಡಗಳಿಗೆ ಭೇಟಿ ಕೊಡುವುದು, ಅಲ್ಲಿನ ವಿಶೇಷತೆ ಮತ್ತು ಇತಿಹಾಸಗಳನ್ನರಿಯಲು ಪ್ರಯತ್ನಿಸುವುದು ಕಾದಂಬರಿಯ ತಿರುವೊಂದರಲ್ಲಿ ನಮ್ಮನ್ನು ತಂದು ನಿಲ್ಲಿಸುತ್ತದೆ. ಹಾಗೆಯೇ ಗ್ರಾಮದ ನಿರುದ್ಯೋಗಿ ಪಡ್ಡೆ ಹುಡುಗರ ಕ್ರಿಕೆಟ್ ಟೀಮಿಗೆ, ಬ್ಯಾಂಕ್ ಉದ್ಯೋಗಿಯಾಗಿಯೂ ಅವರ ನಡುವೆ ಅಂತರ ಕಾಪಾಡಿಕೊಳ್ಳದೆ, ಈ ಹುಡುಗರ ಜೊತೆ ಸೇರಿ ಕ್ರಿಕೆಟ್ ಆಡುವ ಶಿವರಾಂ ಬಗ್ಗೆ ಬ್ಯಾಂಕಿನವರ ಕೋಪದ ಮೂರನೇ ಕಣ್ಣು ತೆರೆಯುತ್ತದೆ. ಆ ಹುಡಗರ ದಂಡನ್ನೇ ಕಟ್ಟಿಕೊಂಡು ಗರುಡನಗಿರಿಗೆ ಪ್ರವಾಸ ಹೋಗುವ ಶಿವರಾಂ ಮ್ಯಾನೇಜರರ ರೋಷದ ಕಹಿಯನನುಭವಿಸಲು ಸಿದ್ಧನಾಗಬೇಕಾಗುತ್ತದೆ. ತಾವು ನಿಷ್ಪ್ರಯೋಜಕರೆಂದು ಭಾವಿಸಿದ್ದ ಆ ಯುವಕರು, ಶಿವರಾಂ ತಮ್ಮ ಜೊತೆ ಸೇರಿಕೊಳ್ಳುವುದರಿಂದ ತಮ್ಮಲ್ಲೇ ಹೊಸ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾರೆ. ಅಂತೆಯೇ ಭಾಸ್ಕರನು ಕೂಡ ಮುಂದೆ ಡಿಗ್ರಿ ಕಟ್ಟಲು ಶಿವರಾಂ ಪ್ರಚೋದನೆ ನೀಡುವುದು ಧನಾತ್ಮಕ ಪರಿವರ್ತನೆಗೆ ಕಾರಣವಾಗುತ್ತದೆ. + +ಪೂಚಂತೇಯವರು ಹಾರುವ ಓತಿಯ ಹಿಂದೆ ನಮ್ಮನ್ನು ಕರೆದೊಯ್ದಂತೆ, ಕಾದಂಬರಿಕಾರರು ಜೀವನದ ಸಂಕಷ್ಟಗಳ ನಡುನಡುವೆಯೇ ನಮ್ಮನ್ನು ಅಬ್ಬೆಯ ಬೆನ್ನಿಗೆ ದುಂಬಾಲು ಬೀಳುವಂತೆ ಮಾಡುತ್ತಾರೆ. ಅಬ್ಬೆ ಕಚ್ಚಿ ಸತ್ತವರ ನಿಜಕಾರಣವನ್ನರಸುತ್ತಾ ಅಬ್ಬೆಯನ್ನು ನಿಗೂಢವಾಗಿಯೇ ಓದುಗರ ಮನದಲ್ಲಿ ಉಳಿಯುವಂತೆ ಬಲೆ ನೇಯುತ್ತಾರೆ. ಎಲ್ಲಿಯೋ ಏನನ್ನೋ ಓದಿ ನಂಬಿಕೊಂಡಿದ್ದ ಸಾಕ್ಷಿಗಳೆಲ್ಲ ಬುಡಮೇಲಾಗುವಂತೆ ಮಾಡುತ್ತಾರೆ. + +ಹಿರೇಕಲ್ಲುಗುಡ್ಡ ಅನೇಕ ವಿಷಯಗಳನ್ನು ಸಾಕ್ಷೀಕರಿಸುವ ಸಾಕ್ಷಾತ್ ಸಾಕ್ಷಿಕಲ್ಲೆಂದರೂ ಆದೀತು. ದೇವಸ್ಥಾನ, ಜೀವವೈವಿಧ್ಯತೆ, ಪಾಳುಬಂಗಲೆ, ಸನ್ಯಾಸಿಗಳ ಆಶ್ರಮತಾಣ, ಮುಕುಂದೂರುಸ್ವಾಮಿಗಳು ಬಂದು ಹೋಗುವ ಸ್ಥಳ, ಹಣದ ವ್ಯಾಮೋಹಕ್ಕೆ ಬಿದ್ದು, ಯಾವುದರ ಬೆಲೆಯನ್ನೂ ಅರಿಯದೆ ಚಿಪ್ಪುಹಂದಿ, ಹಾವುಗಳು ಇನ್ನಿತರ ಪ್ರಾಣಿಗಳನ್ನು ಹಿಡಿದು ಕಳ್ಳಸಾಗಣೆ ಮಾಡುವ ಪೆದ್ದು ಮುಖವಾಡದ ನಿರ್ದಯೀ ಪ್ರವೃತ್ತಿಯ ಕೆಂಚಪ್ಪನ ಕಾರಸ್ಥಾನ…. ಹೀಗೆ ಹಿರೇಕಲ್ಲುಗುಡ್ಡ ಕೆಟ್ಟ ರಾಜಕೀಯ, ಅಧ್ಯಾತ್ಮ, ಐತಿಹ್ಯ, ದುರಾಸೆಗಳ ಪ್ರತೀಕವಾಗಿ ನಿಲ್ಲುತ್ತದೆ. ಅಲ್ಲದೆ ಅಂಜುಬುರುಕ ಕೆಂಚಪ್ಪನ ಚಾಣಾಕ್ಷತನ ಕುಟಿಲತೆ ಅವನು ಬ್ಯಾಂಕಿನಲ್ಲಿ ಹಣ ವಿನಿಯೋಗಿಸುವುದರ ಮೂಲಕ ತೆರೆದುಕೊಳ್ಳುತ್ತದೆ. + +ಇಲ್ಲಿ ಕಾದಂಬರಿ ಕಲ್ಕೆರೆಯೆಂಬ ಕಲ್ಪಿತ ಗ್ರಾಮದ ಘಾಟಿ ಜನರ ನಡುವೆಯೆ, ಅಬ್ಬೇಪಾರಿಯಂಥ ಶಿವರಾಮನ ಜೀವನ ಕಲ್ಕೆರೆಗೆ ಬೆಸೆದುಕೊಂಡರೂ ಬೆಸೆಯದಂತೆ, ಮಲೆನಾಡಿನ ತನ್ನ ಮಣ್ಣಿನ ಸತ್ವ ಹಾಗೂ ಬಯಲು ಮಣ್ಣಿನ ಸತ್ವವನ್ನು ತಾಳೆ ಹಾಕುತ್ತಾ ಅವುಗಳನ್ನೇ ಸಮೀಕರಿಸಿಕೊಂಡು ಬದುಕುವ ಕಥಾನಾಯಕ ಬದುಕಿನ ಬದಲಾವಣೆಗಳಿಗೆ ಅನಿವಾರ್ಯವಾಗಿ ಹೊಂದಿಕೊಳ್ಳುವ ಜಾಣತನ ತೋರುತ್ತಾನೆ. ಮನರಂಜನೆಯೆಂದರೆ ಕೇವಲ ಇಸ್ಪೀಟು ಕುಡಿತ ಎಂದು ತಿಳಿದವರ ಮನಸ್ಸುಗಳಲ್ಲಿ, ಹೀಗೂ ಒಂದು ಬದುಕನ್ನು ರೂಢಿಸಿಕೊಳ್ಳಬಹುದೆಂಬ ಜಾಗೃತಿಯನ್ನು ಶಿವರಾಂ ಮೂಡಿಸುತ್ತಾನೆ. ಜೀವನದ ಏರುಪೇರುಗಳ ನಡುವೆಯೂ, ಸ್ವಭಾವದ ಮೂಲಗುಣವನ್ನು ಅದರ ತುಡಿತವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ ಜಯಶೀಲನಾಗುವ ಕಥಾನಾಯಕ ಆದರ್ಶಗಳ ಪ್ರತೀಕವಾಗಿ ನಿಲ್ಲುತ್ತಾನೆ. ಕಲ್ಕೆರೆಯಲ್ಲೂ ಪರಿಸರವನ್ನು ಪ್ರೀತಿಸುವ ಜನರಿದ್ದರು ಎಂಬುದನ್ನು ಭಾಸ್ಕರನ ತಂದೆ ಪ್ರತಿನಿಧಿಸುತ್ತಾರೆ. ಹಳ್ಳಿಯ ಕೆಟ್ಟ ರಾಜಕೀಯ, ಅದಕ್ಕೆ ಪೂರಕವಾದ ಪಾತ್ರಗಳು, ಬ್ಯಾಂಕ್ ಎಂಬ ಬ್ಯಾಂಕಿನಲ್ಲೂ ಕೆಟ್ಟ ಹುಳುವೊಂದರಿಂದ ನಡೆವ ಅಪಚಾರಗಳು ಆರೋಪಗಳು, ಸಾಲಮೇಳದ ರಾಜಕೀಯಗಳು ಅಬ್ಬೆ ಕಾದಂಬರಿಯನ್ನು ಸಮಕಾಲೀನ ವಿಷಯ ವೈವಿಧ್ಯತೆಯ ಆಗರವನ್ನಾಗಿಸುತ್ತದೆ. + + + +ಬದುಕು, ಪರಿಸರ, ಪರಿಸರಕಾಳಜಿ, ದುಷ್ಟರ ಮಧ್ಯೆಯೂ ದುಷ್ಟತನ ತೋರದೆ ಸನ್ನಡತೆ ಕಾಪಾಡಿಕೊಳ್ಳುವ, ಜೀವನದ ಮೂಲಭೂತ ಸೌಕರ್ಯಗಳಾದ ಅನ್ನ, ವಸತಿ, ವಸನಗಳನ್ನು ದೊರಕಿಸಿಕೊಳ್ಳುವಲ್ಲಿ ಪ್ರಾಮಾಣಿಕತೆ ಬಿಡದ, ದುಶ್ಚಟಗಳನ್ನು ಅಂಟಿಸಿಕೊಳ್ಳದೆ. ಶಾಂತ ಬದುಕನ್ನು ಬಯಸುತ್ತಾ ಹಾಗೇ ನಡೆಯಬಯಸುವ ಶಿವರಾಂ ಎಲ್ಲ ಕಾಲಕ್ಕೂ ಸಲ್ಲುತ್ತಾನೆ. ಗಾಢ ಪರಿಸರ ಪ್ರೇಮಿ, ಪರಿಸರಕತೆಗಳ ಪೂಚಂತೆಯವರು ಕಾದಂಬರಿಯಲ್ಲಿ ಆಗಾಗ ಗೋಚರಿಸುತ್ತಾರೆ. ಅಂದರೆ, ಅವರ ಜಾಡಿನಲ್ಲೇ ಹೆಜ್ಜೆ ಹಾಕುತ್ತಿರುವ ಶ್ರೀಯುತ ಶಶಿಧರ ಹಾಲಾಡಿಯವರು ಪೂಚಂತೆಯವರ ಪ್ರತಿನಿಧಿಯಾಗಿ ನಿಲ್ಲುತ್ತಾರೆಂದರೆ ಅಬ್ಬೆ ಪರಿಸರಪ್ರೀತಿಯನ್ನು ಪ್ರಚೋದಿಸುವಲ್ಲಿ ಯಶಸ್ವಿಯಾಗಿದೆ ಎಂದರ್ಥ. + +ಬಿ.ಕೆ. ಮೀನಾಕ್ಷಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಬರಹಗಾರ್ತಿ. ಹಲವು ಪತ್ರಿಕೆಗಳಲ್ಲಿ ನನ್ನ ಲೇಖನಗಳು, ಕವನಗಳು ಪ್ರಬಂಧಗಳು, ಕತೆಗಳು, ಮಕ್ಕಳ ಕತೆಗಳು ಪ್ರಕಟಗೊಂಡಿವೆ. ಇದುವರೆಗೂ ಇವರ ಹನ್ನೊಂದು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_177.txt b/Kenda Sampige/article_177.txt new file mode 100644 index 0000000000000000000000000000000000000000..5346b51777e7c8672caa242b591dec2937c0cdfe --- /dev/null +++ b/Kenda Sampige/article_177.txt @@ -0,0 +1,35 @@ +byಆಶಾ ಜಗದೀಶ್|Nov 30, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು.ಇತ್ತೀಚೆಗೆ ಬಿಡುಗಡೆಯಾದ ಆಶಾ ಜಗದೀಶ್‌ ಅವರ “ಕಾಣೆಯಾದವರು” ಲಲಿತ ಪ್ರಬಂಧಗಳ ಸಂಕಲನದ ಒಂದು ಪ್ರಬಂಧ ನಿಮ್ಮ ಓದಿಗೆ + +byಕೆಂಡಸಂಪಿಗೆ|Nov 28, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ.ಜಿ.ಆರ್. ರೇವಣಸಿದ್ದಪ್ಪನವರ ‘ಬಾಳನೌಕೆಗೆ ಬೆಳಕಿನ ದೀಪ’ ಕವನ ಸಂಕಲನಕ್ಕೆ ಡಾ.ಲೋಕೇಶ್ ಅಗಸನಕಟ್ಟೆ ಬರೆದ ಮುನ್ನುಡಿ + +byನಾಗರೇಖಾ ಗಾಂವಕರ|Nov 23, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು.ಎನ್.ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳ ಸಂಕಲನ “ಅಂದದ ಹೆಣ್ಣಿನ ನಾಚಿಕೆ”ಯ ಕುರಿತು ನಾಗರೇಖಾ ಗಾಂವಕರ ಬರಹ + +byಪ.ನಾ.ಹಳ್ಳಿ ಹರೀಶ್ ಕುಮಾರ್|Nov 22, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ.ಪ್ರಕಾಶ್ ಎಸ್ ಮನ್ನಂಗಿ ಬರೆದ “ನೂರೊಂದು ಝೇಂಕಾರ” ಹನಿಗವನಗಳ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಲೇಖನ + +byಕೆಂಡಸಂಪಿಗೆ|Nov 19, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ.ನಾಳೆ ರವಿ ಮಡೋಡಿ ಬರೆದ “ನಮ್ಮಲ್ಲೇ ಮೊದಲು” ಲಘು ಬರಹಗಳ ಸಂಕಲನ ಹಾಗೂ ಪೂರ್ಣಿಮಾ ಹೆಗಡೆ ಬರೆದ “ಅಂತರ್ವೀಕ್ಷಣೆ” ಗೀತಾ ಕಥಾಯಾನ ಕೃತಿಗಳು ಬಿಡುಗಡೆಗೊಳ್ಳಲಿದ್ದು, ಎರಡೂ ಕೃತಿಗಳ ಆಯ್ದ ಭಾಗಗಳನ್ನು ನಿಮ್ಮ ಓದಿಗಾಗಿ ಇಲ್ಲಿ ಹಂಚಿಕೊಳ್ಳಲಾಗಿದೆ. + +byಕೆ.ಆರ್.ಉಮಾದೇವಿ ಉರಾಳ|Nov 18, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು.ಸುಚಿತ್ರಾ ಹೆಗಡೆ ಪ್ರವಾಸ ಕಥನ “ಜಗವ ಸುತ್ತುವ ಮಾಯೆ” ಕುರಿತು ಕೆ.ಆರ್. ಉಮಾದೇವಿ ಉರಾಳ ಬರಹ + +byಕೆಂಡಸಂಪಿಗೆ|Nov 14, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ.ವಸಂತಕುಮಾರ್ ಕಲ್ಯಾಣಿ ಅವರ ಕಥಾಸಂಕಲನ “ಪರ್ಯಾಪ್ತ”ಕ್ಕೆ ಜಿಎಸ್ ಸುಶೀಲಾದೇವಿ ಆರ್ ರಾವ್ ಬರೆದ ಮುನ್ನುಡಿ + +byನಾಗರಾಜ ಎಂ ಹುಡೇದ|Nov 7, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ.ವೈ.ಜಿ. ಭಗವತಿ ಬರೆದ ಮಕ್ಕಳ ಕಾದಂಬರಿ “ಮಕ್ಕಳು ಓದಿದ ಟೀಚರ್ ಡೈರಿ”ಕೃತಿಯ ಕುರಿತು ನಾಗರಾಜ್‌ ಎಂ. ಹುಡೇದ್‌ ಬರಹ + +byಕೆಂಡಸಂಪಿಗೆ|Nov 4, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಸದಾಶಿವ ಸೊರಟೂರು ಕಥಾಸಂಕಲನ “ಅರ್ಧ ಬಿಸಿಲು ಅರ್ಧ ಮಳೆ”ಗೆ ಸ. ರಘುನಾಥ ಬರೆದ ಮುನ್ನುಡಿ \ No newline at end of file diff --git a/Kenda Sampige/article_178.txt b/Kenda Sampige/article_178.txt new file mode 100644 index 0000000000000000000000000000000000000000..094e2f577da534ff3a3f9b266d77ef360ffe1bb0 --- /dev/null +++ b/Kenda Sampige/article_178.txt @@ -0,0 +1,31 @@ +ಸ್ನೇಹಿತೆ ಪೂರ್ಣಿಮಾ ಮಾಳಗಿಮನಿ ‘ಡೂಡಲ್ ಕತೆ’ಗಳನ್ನು ಬರೆದಿದ್ದಾರೆ. ಡೂಡಲಿಂಗ್ ಎನ್ನುವುದು ಸೃಜನಶೀಲ ಚಿಂತನೆಯನ್ನು ಮಾಸುವ ಒಂದು ಕಲೆ. ಈ ಸಂಕಲನದಲ್ಲಿ ಬರುವ ಅಷ್ಟೂ ಕತೆಗಳು ಒಂದು ರೀತಿಯಲ್ಲಿ ಜೀವನದ ಬೃಹತ್ ಕ್ಯಾನ್ವಾಸ್ ಮೇಲೆ ನಾವಿಡುವ ಒಂದೊಂದು ಹೆಜ್ಜೆಯೂ ಮತ್ತೆ ತಿದ್ದಲಾಗದ ಡೂಡಲ್ ಮಾದರಿಯ ಚದುರಿದ ಚಿತ್ರಗಳಾಗಿಬಿಡುತ್ತವೆ ಎನ್ನುವುದನ್ನೇ ಹೇಳಿದಂತಿವೆ. ಆದರೆ ಎಲ್ಲಾ ಚಿತ್ರಗಳೂ ಒಂದಕ್ಕೊಂದು ಅಂಟಿಕೊಂಡು ಮತ್ತೊಂದು ಅರ್ಥವನ್ನು ಹುಟ್ಟಿಸಿ ಓದುಗನ ತಾದಾತ್ಮ್ಯವನ್ನು ಬಯಸುವಂತೆ ಮಾಡುತ್ತಿವೆ. ಹಾಗಾಗಿ ಇಲ್ಲಿನ ಒಂದೊಂದು ಕತೆಯೂ ಮತ್ತೊಂದರ ಕೊಂಡಿಯೋ ಎಂಬಂಥ ಸೂಕ್ಷ್ಮ ನೇಯ್ಗೆ. + +(ಪೂರ್ಣಿಮಾ ಮಾಳಗಿಮನಿ) + +ಪೂರ್ಣಿಮಾ ತನ್ನ ಹುಟ್ಟೂರಿನ ನೆಲದ ಮನುಷ್ಯರನ್ನು ಕತೆಯೊಳಗೆ ತಂದಿದ್ದಾರೆ. ಬರಿಯ ಪಾತ್ರಗಳನ್ನಷ್ಟೇ ಅವರು ತಂದಿಲ್ಲ, ಅವರ ಬದುಕಿನ ಎಳೆಗಳನ್ನು ತಂದಿದ್ದಾರೆ. ಕತೆಗಾರ್ತಿ ಮಾಡಬೇಕಾದ ಕೆಲಸವಿದು. ಕತೆಯ ಮೂಲಕ ಬದುಕನ್ನು, ಭ್ರಮೆಗಳನ್ನು, ನಂಬಿಕೆಗಳನ್ನು, ಅವತಾರಗಳನ್ನು, ಆಕಸ್ಮಿಕಗಳನ್ನು, ಅರ್ಥವಂತಿಕೆಯನ್ನು ವಿವರಿಸುತ್ತಾ ಹೋಗುವುದು, ಇಷ್ಟನ್ನೂ ಪೂರ್ಣಿಮಾ ಸರಳವಾಗಿ ಮಾಡಿದ್ದಾರೆ. ಹಾಗಾಗಿ ಈ ಕತೆಗಳು ನಮ್ಮನ್ನು ಸೆಳೆಯುತ್ತವೆ. ಸೆಳೆದರಷ್ಟೇ ಸಾಕೇ, ಕತೆ ನಮ್ಮಲ್ಲಿ ಬಹುಕಾಲ ಉಳಿಯಬೇಡವೇ? ಅದನ್ನೂ ಅವರು ಕತೆಯ ಪಾತ್ರಗಳ ಮೂಲಕ ಉಳಿಸಿಕೊಟ್ಟಿದ್ದಾರೆ. ಒಬ್ಬಳು ಪಾರವ್ವ, ಒಂದು ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಹೋಗುವ ಸೈಕಲ್ಲು, ಮನೆಗೆಲಸದವಳಿಗೆ ಮನೆಯ ಕಸದ ಬುಟ್ಟಿಯಲ್ಲಿ ಸಿಗುವ ಕಾಂಡೋಮ್… ಹೀಗೇ ಕತೆಯ ಆಗುಹೋಗುಗಳೇ ಕತೆಯನ್ನು ಓದುಗರಲ್ಲಿ ಉಳಿಸಿಕೊಳ್ಳುತ್ತವೆ. + +ಕೆಲವು ಕತೆಗಳನ್ನು ಓದುಗರು ಹೀಗೂ ಪ್ರವೇಶಿಸಬಹುದು ಎಂಬುದಕ್ಕೆ ಈ ಸಂಕಲನದಲ್ಲಿ ನಿದರ್ಶನಗಳಿವೆ. + +‘ಸೂರೊಳೊಂದು ಕಿಟಕಿ’ ಕತೆಯಲ್ಲಿ ಮನುಷ್ಯನ ಹಸಿವಿಗೂ ಹಂಬಲಕ್ಕೂ ಮೂಲ ಕಾರಣ ಭ್ರಮೆ ಎಂಬುದನ್ನು ಪೂರ್ಣಿಮಾ ಸರಳವಾಗಿ ಪ್ರತಿಪಾದಿಸುತ್ತಾರೆ. ಭ್ರಮಾಧೀನ ಜಗತ್ತಿನ ಪ್ರತಿನಿಧಿಯಾದ ಹೆಣ್ಮಗಳು ಆ ಭ್ರಮೆಯನ್ನು ಹೊತ್ತುಕೊಂಡೇ ಹಳ್ಳಿಯಿಂದ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಬೇಕು ಎಂಬ ಹಂಬಲಕ್ಕೆ ಕಾರಣವಾಗಿದ್ದು, ಕೊನೆಗೂ ಬದುಕು ಭ್ರಮೆಯೇ ಎಂದು ವಿವರಿಸುತ್ತಾ ಕತೆಯಲ್ಲಿ ಭ್ರಮೆ ಕರಗಿಸುತ್ತಾರೆ. “ಇಷ್ಟೊಂದು ಬೆಳಕಿದ್ದರೆ ರಾತ್ರಿ ನಿದ್ದೆ ಬರುವುದೋ ಇಲ್ಲವೋ ಎಂದು ಯೋಚಿಸುತ್ತಿದ್ದವಳಿಗೆ ಆ ಕಿಟಕಿಯ ಮೇಲೆ ನೆರಳು ಬಿದ್ದಂತೆಲ್ಲಾ ತನ್ನ ಪ್ರತಿಬಿಂಬ ಕಾಣಿಸಿತು” ಎನ್ನುವುದರಿಂದ ಹಿಡಿದು, ತಾನಾಗಿಯೇ ಒಳಗೆ ಹೋಗಿ ಕುಳಿತುಕೊಂಡು, “ಆ ಮೇಲಿರೋ ಕಿಟಕಿಯಿಂದ ನನ್ನ ರೂಮಲ್ಲಿ ತುಂಬಾ ಜನ ಬಂದು ಬಂದು ಸೇರ್ಕೋತಾ ಇದಾರೆ. ಅದನ್ನು ಮುಚ್ಚಬೇಕು, ಇನ್ನಷ್ಟು ಟ್ರಂಕ್‌ಗಳು ಇದ್ರೆ ಕೊಡಿ, ಪ್ಲೀಸ್” ಎಂದು ಬಡಬಡಿಸಿದಳು, ಎನ್ನುವವರೆಗೂ ಈ ಭ್ರಮಾಲೋಕದ ಚಿತ್ರಣಗಳಿವೆ. + +“ರನ್” ಎಂಬ ಕತೆಯಲ್ಲಿ ಪ್ರೀತಿ ಮತ್ತು ವಂಚನೆಯ ಕತೆ ಇದೆ. ಎಲ್ಲರೂ ಈ ರೀತಿಯ ಕತೆ ಬರೆದುಬಿಡಬಹುದು. ಆದರೆ ಪೂರ್ಣಿಮಾ ಕತೆಯಲ್ಲಿ ಬೇರೆಯೇ ಒಂದು ಸ್ವಾದವಿದೆ. ಓಟ ಬದುಕಿನ ಆಚೆಗೆ ಇದೆ. ಪ್ರೇಮದ ಹೊರ ವರ್ತುಲಕ್ಕೆ, ಜೀವದ ಗೆರೆಯ ದೂರಕ್ಕೆ ಎಂದು ಕತೆಗಾರ್ತಿ ತೋರಿಸುತ್ತಾರೆ. ಕೊನೆಗೂ ಓಟ ಅಂದರೆ ಇರುವುದರಿಂದ ಕಳಚಿಕೊಳ್ಳುವುದೇ ಅಲ್ಲವೇ ಎಂಬ ಸತ್ಯವನ್ನು ಪ್ರತಿಪಾದಿಸುತ್ತಾರೆ. + + + +‘ರಾಜಿಯ ಲೋಲಾಕುಗಳು’ ಕತೆಯಲ್ಲಿ ಒಂದು ಸರಳ ಪ್ರೀತಿ ಮತ್ತು ಒಂದು ಜೊತೆ ಲೋಲಾಕುಗಳಿವೆ. ಆ ಲೋಲಾಕುಗಳು ಎಳೆ ಪ್ರೀತಿಗೂ, ಕಳ್ಳತನಕ್ಕೂ ಕಾರಣವಾಗಿ ಒಂದು ಮನೆಯನ್ನೂ, ಮೂರು ಮನಸ್ಸುಗಳನ್ನೂ ಆಕ್ರಮಿಸುತ್ತವೆ. ಕೊನೆಯಲ್ಲಿ ಲೋಲಾಕುಗಳು ತೊನೆಯುವಂತೆ ಇಬ್ಬರ ಪ್ರೀತಿಯೂ ತೊನೆದು ಸುಮ್ಮನಾಗುತ್ತದೆ. ಪ್ರತಿಮಾ ಮಾದರಿಯ ಕಥಾನಕಕ್ಕೆ ರಾಜಿಯ ಲೋಲಾಕು ಆಪ್ತ ಉದಾಹರಣೆ. + +‘ಶರದೃತು’ ಎಂಬ ಕತೆಯಲ್ಲಿ ಮನುಷ್ಯ ಸಂಬಂಧದ ಅನುಲೋಮ ವಿಲೋಮಗಳಿವೆ. ಮನುಷ್ಯನ ಈಗೋ ಕೇಂದ್ರದಲ್ಲಿ ಸುತ್ತುತ್ತಾ ಮತ್ತೆ ಅಲ್ಲಿಗೆ ಬಂದು ನಿಲ್ಲುತ್ತದೆ. + +‘ವುಮನೈಸರ್’ ಮನುಷ್ಯ ಸಂಬಂಧಗಳು ಹೇಗೆ ಸಮಾಜದಲ್ಲಿ ವ್ಯಕ್ತಿ ಸ್ತರಗಳನ್ನು ನಿರ್ಮಿಸುತ್ತವೆ, ಅಸಲಿ ವ್ಯಕ್ತಿತ್ವಗಳ ಖುಲಾಸೆಯಾದಾಗ ಹೇಗೆ ಆಘಾತಗಳನ್ನು ಉಂಟುಮಾಡುತ್ತವೆ ಎಂದು ಹೇಳುತ್ತದೆ. + +(ಗೋಪಾಲಕೃಷ್ಣ ಕುಂಟಿನಿ) + +‘ಕೆಂಪು ನೈಟಿ’ ಕತೆಯ ಪಾರವ್ವ ಬಹಳ ಪ್ರತಿಭಾವಂತೆ. ಅವಳ ವಿದ್ವತ್ ಮತ್ತು ಜಾಣ್ಮೆಗೆ ಎಲ್ಲರೂ ತಲೆದೂಗುವವರೇ. ಆದರೆ ಅವಳೊಳಗಿನ ಹೆಣ್ತನವನ್ನು ಮಾತ್ರ ಅವಳೇ ಮೆಚ್ಚಿಕೊಳ್ಳಬೇಕು. ಮದುವೆ ಮನೆಯಲ್ಲಿ ಕೆಂಪು ನೈಟಿ ಹಾಕಿಕೊಂಡು, ಆಭರಣ ತೊಟ್ಟುಕೊಂಡು, ವ್ಯಾನಿಟಿ ಬ್ಯಾಗ್ ಹೆಗಲಿಗೆ ತೂಗು ಹಾಕಿಕೊಂಡು, ಕನ್ನಡಿ ಮುಂದೆ ನಿಂತುಕೊಂಡು… ಅದು ಯಾವುದೂ ಅವಳದ್ದಲ್ಲ, ಕೆಂಪು ನೈಟಿಯೂ, ಆಭರಣವೂ, ಕನ್ನಡಿಯೂ… ಯೌವನವೂ ಕೂಡಾ! + +‘ಜೀವದಾನ’ ಕತೆಯ ಹುಡುಗನಿಗೆ ಬಂಧುಗಳಿಲ್ಲ. ಮನೆಯಲ್ಲಿ ಅಮ್ಮ ಒಂಟಿ, ಅಪ್ಪನೂ ಒಂಟಿ. ಈ ಒಂಟಿಗಳ ನಡುವೆ ಮಗನೂ ಒಂಟಿ. ಅಸ್ವಸ್ಥ ಮನೆ ಮತ್ತು ಮನಸ್ಸು. ಇದರ ಮೂಲ ಹೇಳುವುದು ಸೂಳೆಮನೆಯ ಅಜ್ಜಿ. ತನ್ನ ಹುಟ್ಟಿನ ಮೂಲ ಗೊತ್ತಾದ ಮೇಲೆ ಊರು ತೊರೆಯಬೇಕಾದರೂ ತೊರೆಯದೇ ಬರಬೇಕಾದ ಕೆಟ್ಟ ಸ್ಥಿತಿ. ವಾಪಸ್ಸು ಬಂದಾಗ ಅಪ್ಪನನ್ನು ಬದುಕಿಸಲು ಅಮ್ಮ ಮಗನನ್ನೇ ಋಣಸಂದಾಯಕ್ಕೆ ಒಡ್ಡುತ್ತಾಳೆ! + + + +ಇಂಥ ಅನೇಕ ಸೆಲೆಗಳನ್ನು ಕತೆಗಾರ್ತಿ ಬಿಡಿಸುತ್ತಾ ಹೋಗುತ್ತಾರೆ. ಕತೆಗಳ ರಹಸ್ಯಗರ್ಭಗಳಲ್ಲಿ ಅವುಗಳನ್ನು ಮತ್ತೆ ಮತ್ತೆ ಹುದುಗಿಸಿಡುತ್ತಾರೆ. “ನೆನಪಿಗೆ ಜಿನುಗಿ, ಸ್ಪರ್ಶಕೆ ನಲುಗಿ, ಬಿರಿವ ಎರಡೇ ಪಕಳೆಗಳು” ಎಂದು ಒಂದೆಡೆ ಅವರೇ ಬರೆದುಕೊಂಡಂತೆ, ಈ ಕತೆಗಳು ಓದುಗರನ್ನು ನೆನಪಲ್ಲಿ ಜಿನುಗಿಸಿ, ಸ್ಪರ್ಶದಲ್ಲಿ ನಲುಗಿಸಿ, ಬಿರಿಯುವಂತೆ ಮಾಡಿ ಹೋಗುತ್ತವೆ. “I would like to say that, I haven’t sold my soul; merely licensed it” ಎಂಬಂತೆ ಡೂಡಲ್ ಕತೆಗಳ ಒಂದೊಂದು ಪಾತ್ರಗಳೂ ಕತೆಯ ಹೂರಣವನ್ನು ನಮ್ಮ ಕಲ್ಪನೆಯ ಲೋಕದಾಚೆಗೂ, ಲೋಕದ ಸುತ್ತಲೂ ತಿರುಗಿಸಿ ಬಿಟ್ಟು ಬಿಡುತ್ತವೆ! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_179.txt b/Kenda Sampige/article_179.txt new file mode 100644 index 0000000000000000000000000000000000000000..bff5e7d1b43bcc7becd7a6a6e2e506f292d07fb1 --- /dev/null +++ b/Kenda Sampige/article_179.txt @@ -0,0 +1,13 @@ +ಸರೋಜಿನಿ + +(ಎನ್. ಸಂಧ್ಯಾ‌ ರಾಣಿ) + +ಯಾವುದೋ ಹಳೆಯ ಕಾಲದ ಮನೆ. ಮನೆಯ ಹೊರತು ಸುತ್ತಮುತ್ತಲಿನ ಮಿಕ್ಕೆಲ್ಲಾ ಅಸ್ಪಷ್ಟ. ದಪ್ಪಮರದ ತಲೆಬಾಗಿಲು, ಕಬ್ಬಿಣದ ಚಿಲಕ. ಇಷ್ಟೆತ್ತರದ ಹೊಸ್ತಿಲು. ಹೊಸ್ತಿಲ ಎರಡೂ ಕಡೆ ಹಚ್ಚಿದ ಅರಸಿನ, ಕುಂಕುಮ, ಇಟ್ಟಿದ್ದ ಕಾಡುಹೂವು, ಕಟ್ಟಿದ್ದ ತೋರಣ. ಮನೆಯ ತಲೆಬಾಗಿಲಿಗೆ ಅಂಟಿಕೊಂಡಂತೆ ಆಕಡೆ, ಈಕಡೆ ಉದ್ದನೆಯ ಜಗಲಿಗಳು. ಜಗಲಿಗಳ ಮೇಲೆ, ಆಚೆಗೊಂದು, ಈಚೆಗೊಂದು ಎರಡು ಪುಟ್ಟಪುಟ್ಟ ಕಿಟಕಿಗಳು. ಜಗಲಿಗಳ ತುದಿಗೆ ಸ್ವಲ್ಪ ಎತ್ತರಿಸಿದ ಭಾಗ ತಲೆದಿಂಬಿನಂತೆ ಕಾಣುತ್ತಿತ್ತು. ಬಾಗಿಲಿನಿಂದ ಕೆಳಕ್ಕಿಳಿವ ಮೂರು-ನಾಲ್ಕು ಎತ್ತರೆತ್ತರದ ಮೆಟ್ಟಿಲುಗಳು. ಅದರ ಎದುರಿನಲ್ಲಿ ಸಗಣಿ ಹಾಕಿ ಸಾರಿಸಿದ ನೆಲ. ದೊಡ್ಡದೊಂದು ರಂಗೋಲಿ. ಅಂಚಿನಲ್ಲಿ ಕೆಮ್ಮಣ್ಣು. ಆ ರಂಗೋಲಿಯ ಆಚೆಗೆ ಹುಡುಗಿಯೊಬ್ಬಳು ನಿಂತಿದ್ದಾಳೆ. 14-15 ವರ್ಷಗಳಿರಬೇಕು. ಕೂದಲನ್ನು ತಿರುಗಿಸಿ, ಕೈಯಿಂದಲೇ ಸಿಂಬೆ ಸುತ್ತಿದ್ದ ಗಂಟು ಕಳಚಿ ಕೂದಲು ಹಾರಾಡುತ್ತಿವೆ. ಹುಡುಗಿ ಸಿಟ್ಟಿನಿಂದ ಬೆನ್ನು ನೇರವಾಗಿಸಿ ನಿಂತ ನಿಲುವಿಗೆ ಅವಳ ಸಹಜ ಎತ್ತರಕ್ಕಿಂತ ಉದ್ದ ಕಾಣುತ್ತಿದ್ದಾಳೆ. ಉಟ್ಟ ಮಾಸಲು ಸೀರೆ. ಎಡಗೈ ಕಂಕುಳಿನಲ್ಲಿ ಒಂದು ಬಟ್ಟೆಯ ಗಂಟು. ಮುಖ ಕಲಸಿದಂತೆ ಅಸ್ಪಷ್ಟ, ಕಣ್ಣುಗಳಿರಬೇಕಾದ ಕಡೆ ಎರಡು ಕೆಂಡದುಂಡೆಗಳು. ಮುಚ್ಚಿದ ಬಾಗಿಲನ್ನೇ ಸುಡುವಂತೆ ನೋಡುತ್ತಿದ್ದಾಳೆ. ನೆಲಕ್ಕೆ ಬಗ್ಗಿದವಳು ಒಂದು ಹಿಡಿ ಮಣ್ಣು ಗೋಚಿಕೊಂಡು, ಕಣ್ಣೀರು ಸುರಿಸುತ್ತಾ, ಬಾಗಿಲ ಕಡೆ ತೂರಿ ಹೇಳುತ್ತಾಳೆ,‘ಈ ಮನೆ ಹೆಣ್ಣುಮಕ್ಕಳು ಯಾವತ್ತಿಗೂ ಸುಖವಾಗಿರದಿರಲಿ. ಇದು ನನ್ನ ಶಾಪ!’ + +`ಶಾಪ!’ – ಉಸಿರು ಕಟ್ಟಿದಂತಾಗಿ ಸರೋಜಿನಿ ತಟ್ಟನೆ ಎದ್ದು ಕುಳಿತಳು. ಫ್ಯಾನ್ ಕ……ರ್, ಕ……ರ್ ಎಂದು ಸದ್ದು ಮಾಡುತ್ತಾ ತಿರುಗುತ್ತಿತ್ತು. ಆದರೂ ಮುಖವೆಲ್ಲಾ ಬೆವರಿನಿಂದ ತೊಯ್ದು ಹೋಗಿದೆ. ಕಂಕುಳು ಒದ್ದೆಮುದ್ದೆ. ಅದೇ ಕನಸು. ಅವಳು ಸಣ್ಣವಳಾಗಿದ್ದಾಗ ಆ ಕಥೆ ಕೇಳಿದಾಗಿನಿಂದ ಸರಿರಾತ್ರಿಗಳಲ್ಲಿ ಕನಸಾಗಿ, ಎಚ್ಚರವಿದ್ದಾಗ ನೆನಪಾಗಿ ಹೆದರಿಸುವ ಅದೇ ಶಾಪದ ಕನಸು. ಇದನ್ನು ಮೊದಲು ಯಾರು ಹೇಳಿದರು ಎನ್ನುವುದು ಅವಳಿಗೆ ನೆನಪಿಲ್ಲ. ಯಾವಾಗಲೂ ಏನಾದರೊಂದು ಹಳೆಯ ಕಥೆ ಹೇಳುತ್ತಿದ್ದ ದೊಡ್ಡಮ್ಮ ಹೇಳಿದ್ದರೆ, ಅಳುವನ್ನೇ ಕಣ್ಣಕಾಡಿಗೆ ಮಾಡಿಕೊಂಡಿದ್ದ ಸೋದರತ್ತೆ ಹೇಳಿದ್ದರೆ ಅಥವಾ ಯಾವುದೋ ಸಮಾರಂಭದಲ್ಲಿ ರಾತ್ರಿ ಜಮಖಾನ ಹಾಸಿಕೊಂಡು ಹೆಂಗಸರೆಲ್ಲಾ ಉದ್ದಕ್ಕೂ ಮಲಗಿದ್ದಾಗ ಯಾವುದೋ ದನಿ ಹೇಳಿದ್ದ ಕಥೆಯೇ …ನೆನಪಿಗೆ ಬರುತ್ತಿಲ್ಲ. ಆದರೆ ಅವಳು ಚಿಕ್ಕವಳಿದ್ದಾಗ ಎರಡು ಮೂರು ಸಲ ಈ ಕಥೆಯನ್ನು ಕೇಳಿದ್ದಳು. ಅವಳ ಅಜ್ಜನ ಅಜ್ಜನ ಅಜ್ಜನ ಅಜ್ಜನ ಮನೆಯಲ್ಲಿ ತಂದೆತಾಯಿ ಇಲ್ಲದ, ಸಂಬಂಧಿಕರ ಒಂದು ಹೆಣ್ಣು ಮಗಳಿದ್ದಳಂತೆ. ಆಶ್ರಯವಿಲ್ಲದೆ ಇವರ ಮನೆ ಸೇರಿದ್ದ ಹುಡುಗಿ ಅವಳು. ಆಗಿನ ಸಂಪ್ರದಾಯದಂತೆ ಮೈನೆರೆಯುವ ಮೊದಲು ಹೆಣ್ಣುಮಕ್ಕಳ ಮದುವೆ ಮಾಡಿಬಿಡಬೇಕು. ಹಾಗೊಂದು ವೇಳೆ ಮದುವೆಗೆ ಮೊದಲೇ ಹೆಣ್ಣು ಮಗು ನೆರೆದರೆ, ಮನೆತನಕ್ಕೆ ಕೆಟ್ಟದ್ದು ಎಂದು ಅವಳನ್ನು ಊರಾಚೆ, ಕಾಡಿನಲ್ಲಿ ಬಿಟ್ಟು ಬಂದುಬಿಡುತ್ತಿದ್ದರಂತೆ. ಆದರೆ ಅಷ್ಟು ಸುಲಭವೆ ಹೊಟ್ಟೆಯ ಕೂಸನ್ನು ಕಾಡಿನಲ್ಲಿ ಬಿಡುವುದು? ಹಾಗಾಗಿ ಅಕಸ್ಮಾತ್ ಒಂದು ವೇಳೆ ಯಾವುದೇ ಕಾರಣಕ್ಕೆ ಮದುವೆ ತಡವಾದಾಗ ಕೆಲವರು ಹುಡುಗಿ ನೆರೆದಿದ್ದಾಳೆ ಎನ್ನುವುದನ್ನು ಮುಚ್ಚಿಟ್ಟು, ಮದುವೆ ಮಾಡಿಬಿಟ್ಟು ಮದುವೆಯಾಗಿ ಒಂದು ವರ್ಷವಾದ ನಂತರ ಹುಡುಗಿ ದೊಡ್ಡವಳಾದಳು ಎಂದು ಹೇಳಿಕಳಿಸುತ್ತಿದ್ದರಂತೆ. + + + +ಅದು ಸ್ವಂತ ಮಕ್ಕಳ ವಿಷಯಕ್ಕಾಯಿತು. ಆದರೆ ಮನೆಯಲ್ಲಿ ಎಲ್ಲ ಕೆಲಸಕ್ಕೂ ಒದಗುತ್ತಿದ್ದ ಈ ಹುಡುಗಿಗೆ ಬೇಗನೆ ಮದುವೆ ಮಾಡುವ ಆತುರ ಯಾರಿಗಿದ್ದೀತು? ಒಂದಾದ ಮೇಲೆ ಒಂದರಂತೆ ಮನೆ ಹೆಣ್ಣುಮಕ್ಕಳ ಮದುವೆಗಳಾಗುತ್ತಿವೆ. ಈ ಹುಡುಗಿ ಎಲ್ಲಾ ಮದುವೆಗಳಲ್ಲೂ ನೀರು ಸೇದುವ, ಹೂ ಕಟ್ಟುವ, ಕಸಮುಸುರೆ ಬಳಿಯುವ, ಒಲೆ ಎದುರಲ್ಲಿ ಬೇಯುವವಳಾದಳೇ ಹೊರತು ಮದುಮಗಳಾಗಲೇ ಇಲ್ಲ. ಕಡೆಗೊಮ್ಮೆ ಅವಳೂ ನೆರೆದಿದ್ದಾಳೆ. ಮನೆಯವರು ಅದನ್ನು ಮುಚ್ಚಿಡುವ ಯಾವುದೇ ಪ್ರಯತ್ನ ಮಾಡದೆ, ಸಂಪ್ರದಾಯದ ಹೆಸರು ಹೇಳಿ, ಅವಳ ಬಟ್ಟೆ ಗಂಟು ಕಟ್ಟಿ, ಬುತ್ತಿ ಕೊಟ್ಟು ಅವಳನ್ನು ಮನೆಯಿಂದ ಕಳಿಸಿಬಿಟ್ಟರಂತೆ. ಅಷ್ಟು ವರ್ಷಗಳು, ಅಷ್ಟು ಕೆಲಸ ಮಾಡುತ್ತಿದ್ದ ಇವಳನ್ನು ಹೊರಕ್ಕೆ ದಬ್ಬುವಾಗ ಮನೆಯ ಹೆಣ್ಣುಮಕ್ಕಳಲ್ಲಿ ಯಾರೂ ಪಿಟ್ ಎನ್ನಲಿಲ್ಲ, ಒಬ್ಬೊಬ್ಬರ ಕಾಲಿನ ಬಳಿ ಬಿದ್ದು ಬೇಡಿಕೊಂಡರೂ ಕರಗಲಿಲ್ಲ. ಕಣ್ಣೀರು ಹಾಕುತ್ತಾ ಹೋದ ಹುಡುಗಿ,‘ಈ ಮನೆಯ ಹೆಣ್ಣುಮಕ್ಕಳು ಎಂದಿಗೂ ಸುಖವಾಗಿರದಿರಲಿ’ಎಂದು ಶಾಪ ಕೊಟ್ಟು ಹೋದಳಂತೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_18.txt b/Kenda Sampige/article_18.txt new file mode 100644 index 0000000000000000000000000000000000000000..c5a9415d02be062b74b821b6be5c3f36abdf76b8 --- /dev/null +++ b/Kenda Sampige/article_18.txt @@ -0,0 +1,35 @@ +byಗುರುಪ್ರಸಾದ್‌ ಕುರ್ತಕೋಟಿ|Sep 12, 2024|ಸರಣಿ| 2 Comments + +ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು.ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿ + +byಸುಮಾ ಸತೀಶ್|Sep 11, 2024|ಸರಣಿ| 0 Comments + +ಅಲ್ಲಾ ನಮ್‌ ಮೇಷ್ಟ್ರು ಹೇಳಿರೋ ಸಿನ್ಮಾ‌ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ + +byಬಸವನಗೌಡ ಹೆಬ್ಬಳಗೆರೆ|Sep 10, 2024|ಸರಣಿ| 6 Comments + +ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ‌ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ.ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೆರಡನೆಯ ಕಂತು ನಿಮ್ಮ ಓದಿಗೆ + +byರಂಜಾನ್ ದರ್ಗಾ|Sep 9, 2024|ಸರಣಿ| 0 Comments + +ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ.ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ + +byಕಾರ್ತಿಕ್ ಕೃಷ್ಣ|Sep 7, 2024|ಸರಣಿ| 0 Comments + +ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ + +byಎಚ್. ಗೋಪಾಲಕೃಷ್ಣ|Sep 6, 2024|ಸರಣಿ| 6 Comments + +ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ.ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ತೆರಡನೆಯ ಕಂತು ನಿಮ್ಮ ಓದಿಗೆ + +byಡಾ. ಚಂದ್ರಮತಿ ಸೋಂದಾ|Sep 6, 2024|ಸರಣಿ| 0 Comments + +ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ…ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು + +byಪೂರ್ಣೇಶ್ ಮತ್ತಾವರ|Sep 4, 2024|ಸರಣಿ| 2 Comments + +ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ!ನವೋದಯ ಶಾಲಾ ದಿನಗಳ ನೆನಪುಗಳ ಕುರಿತು ಪೂರ್ಣೇಶ್‌ ಮತ್ತಾವರ ಬರೆಯುವ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಕೆಂಡಸಂಪಿಗೆಯಲ್ಲಿ + +byಸಂಜೋತಾ ಪುರೋಹಿತ|Sep 4, 2024|ಸರಣಿ| 0 Comments + +ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ.ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿ \ No newline at end of file diff --git a/Kenda Sampige/article_180.txt b/Kenda Sampige/article_180.txt new file mode 100644 index 0000000000000000000000000000000000000000..7e181bfacdf7c364bc0866cac7dfe308a330f5d2 --- /dev/null +++ b/Kenda Sampige/article_180.txt @@ -0,0 +1,25 @@ +ಇತ್ತೀಚಿನ ಕನ್ನಡ ಮಕ್ಕಳ ಸಾಹಿತ್ಯಕ್ಕೆ ಶುಕ್ರದೆಸೆ ತಿರುಗಿದೆ ಎನ್ನಬಹುದು. ಹಲವು ಅಗತ್ಯತೆಗಳನ್ನು ಅದು ನೀಗಿಸಿಕೊಳ್ಳುತ್ತಿದೆ. ಆ ನಿಟ್ಟಿನಲ್ಲಿ ಹಾಸ್ಯ ಸಾಹಿತ್ಯಕ್ಕೆ ಮತ್ತೊಂದು ಕೃತಿ ಸೇರ್ಪಡೆಯಾಗಿದೆ. ಗುಂಡುರಾವ್ ದೇಸಾಯಿ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತರು. ಶಿಕ್ಷಕರಾಗಿ ಮಕ್ಕಳ ಒಡನಾಡಿಯಾಗಿ ಮಕ್ಕಳ ಒಳಿತನ್ನೆ ಬಯಸುವ, ಅವರು ಮಕ್ಕಳಿಗಾಗಿ ‘ಮಕ್ಕಳೇನೂ ಸಣ್ಣವರಲ್ಲ’ ಎಂಬ ಕಥಾಸಂಕಲನವನ್ನು ಪ್ರಕಟಿಸಿದ್ದಾರೆ. ವಿಶೇಷವಾಗಿ ಮಕ್ಕಳಿಗೆಂದೇ ಆದರೂ ಎಲ್ಲರೂ ಓದುವಂತ ಹಾಸ್ಯಭರಿತ ಕಥೆಗಳನ್ನು ರಚಿಸಿದ್ದಾರೆ. + +ಇಲ್ಲಿಯ ಎಲ್ಲ ಕಥೆಗಳಲ್ಲೂ ಗುಂಡುರಾವ್ ಅವರು ತಮ್ಮ ಪರಿಸರದ ಸುತ್ತಲಿನ ಘಟನೆಗಳಲ್ಲಿ ಹಾಸ್ಯದ ಎಳೆಯನ್ನು ಹಿಡಿದು ಸುಂದರ ಕಥೆಯಾಗಿಸುವ ಪ್ರಯತ್ನವನ್ನು ಮಾಡಿದ್ದಾರೆ. ವಿಭಿನ್ನ ವಿಷಯವಸ್ತು, ಸಂಭಾಷಣೆ, ಸರಳ ಆಡು ಭಾಷೆ ಮೂಲಕ ಚೇತೋಹಾರಿಯಾಗಿವೆ. ಹಾಗೆಯೇ ಇಲ್ಲಿ ಕಥೆಯ ನಿರೂಪಣೆಗಿಂತ ಸಂಭಾಷಣೆಯ ರೂಪದಲ್ಲಿ ಸಾಗಿರೋದು ಆಪ್ತಭಾವ ಮೂಡಿಸುತ್ತವೆ. + +(ಗುಂಡುರಾವ್ ದೇಸಾಯಿ) + +ಸಂಕಲನದ ಮೊದಲ ಕಥೆ ‘ಎಗ್ ರೈಸ್ ಮಂತ್ರಿ’ ಹಾಸ್ಯದ ಜೊತೆಗೆ ಎಚ್ಚರವನ್ನೂ ಮೂಡಿಸುತ್ತದೆ. ಶಾಲಾ ಸಂಸತ್ತಿಗೆ ನಡೆಯುವ ಚುನಾವಣೆಯಲ್ಲಿ ವಿದ್ಯಾರ್ಥಿಯೊಬ್ಬ ಮಂತ್ರಿಯಾಗುವ ಆತುರದಲ್ಲಿ ಪೊಳ್ಳು ಭರವಸೆ ನೀಡಿ, ಗೆದ್ದಮೇಲೆ ಎಗ್ ರೈಸ್ ಕೊಡಿಸಲಾಗದೇ ಇರುವ ಸ್ಥಿತಿ, ಅದನ್ನು ಪಡೆಯಲು ಪ್ರಯತ್ನಿಸುವ ಅವನ ಗೆಳೆಯರು ಮಾಡುವ ಸತತ ಪ್ರಯತ್ನ ಹಾಸ್ಯವನ್ನುಕ್ಕಿಸುತ್ತದೆ. ಇದರಲ್ಲಿ ಸತ್ಯಾಂಶವೂ ಇದೆ. ಆದರೆ ನಾಗ ‘ನನಗೆ ಅಷ್ಟು ದುಡ್ಡು ಎಲ್ಲಿಂದ ಬರತೈತಿ, ಆಗಲ್ಲ ಬೇಕಾದ್ರ ಶಾಲಿಗೆ ಒಳ್ಳೆ ಕೆಲ್ಸ ಮಾಡ್ತೇನಿ’ ಅಂತ ಹೇಳಿದ್ದು ಅವನ ಪ್ರಾಮಾಣಿಕತೆಯಾದರೆ, ಆಸೆಗೆ ಬಲಿಯಾಗಬೇಡಿ ಎಂಬುದನ್ನೂ ಕಥೆ ಸೂಚ್ಯವಾಗಿ ಹೇಳುತ್ತದೆ. + +‘ಮಗ ಮತ್ತು ಗಾಳಿಪಟ’ ಕಥೆಯಲ್ಲಿ ಮಕ್ಕಳ ಸಹಜ ಸ್ವಭಾವ ವ್ಯಕ್ತವಾಗಿದೆ. ಮಕ್ಕಳು ಸದಾ ಉತ್ಸಾಹದ ಬುಗ್ಗೆಯಂತಿರುತ್ತಾರೆ. ಅವರ ಕಾರ್ಯಕ್ಕೆ ದೊಡ್ಡವರು ಪ್ರೋತ್ಸಾಹಿಸಬೇಕು. ಇಲ್ಲಿ ಮಗ ಸಮುದು ನಿತ್ಯ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುವನು. ಛಲ ಬಿಡದೆ ಗಾಳಿಪಟ ಹಾರಿದಾಗ ಎಲ್ಲರೂ ಖುಷಿ ಪಡುತ್ತಾರೆ. ಹಾಗೆಯೇ ಮಕ್ಕಳು ಸ್ವ ಅನುಭವದ ಮೂಲಕ ತಾವೇ ಪಡೆಯುವಂತಾದರೆ ಅವರ ಬುದ್ದಿಮಟ್ಟವೂ ಹೆಚ್ಚಾಗುವುದರಲ್ಲಿ ಸಂದೇಹವೇ ಇಲ್ಲ. + +ಈ ಸಂಕಲನದ ಶಿರ್ಷಿಕೆಯ ಕಥೆ ‘ಮಕ್ಕಳೇನು ಸಣ್ಣವರಲ್ಲ’ ಕಥೆಯು ನಮ್ಮ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಘಟನೆಯೇ ಆಗಿದೆ. ಕೆಲವು ಸಾರಿ ಮಕ್ಕಳು ದೊಡ್ಡವರಿಗಿಂತಲೂ ಹೆಚ್ಚಿನ, ದೊಡ್ಡವರಿಗೆ ಗೊತ್ತಿಲ್ಲದ ವಿಷಯಗಳನ್ನೂ ತಿಳಿದುಕೊಂಡಿರೋದು ಸೋಜಿಗವೆನಿಸುತ್ತದೆ. ಅದಕ್ಕೆ ಅವರ ಪ್ರಾಂಜಲ ಮನಸ್ಸು, ಪ್ರಶ್ನಿಸುವಿಕೆಯೂ ಕಾರಣವಾಗಿರುತ್ತದೆ. ಪಾರಿವಾಳಗಳನ್ನು ಸಾಕುವುದು ಒಂದು ಹವ್ಯಾಸ. ಅದರ ಜೊತೆಗೆ ಲಾಭದಾಯಕವೂ, ಅವುಗಳ ವಿಶಿಷ್ಟ ಗುಣಗಳು, ಪಾರಿವಾಳಗಳ ಉಪಯೋಗಗಳನ್ನು ಮಕ್ಕಳು ತಿಳಿಯಲು ಪ್ರಯತ್ನಿಸುತ್ತಾರೆಂಬ ವಿಷಯವನ್ನು ಕಥೆಯಲ್ಲಿ ಸುಂದರವಾಗಿ ಆಸಕ್ತಿದಾಯಕವಾಗಿ ಕಟ್ಟಿಕೊಟ್ಟಿದ್ದಾರೆ. + + + +ಇನ್ನೊಂದು ಚೆಂದದ ಕಥೆ ‘ನಾಯಿಯೊಂದಿಗಿನ ಸಖ್ಯ’. ನಾಯಿ ಮತ್ತು ಮರಿಗಳೆಂದರೆ ಮಕ್ಕಳಿಗೆ ತುಂಬಾ ಇಷ್ಟ. ಕೆಲವು ಮಕ್ಕಳಂತೂ ಚಿಕ್ಕಂದಿನಲ್ಲಿಯೇ ಹಚ್ಚಿಕೊಂಡರೆ ಬಿಟ್ಟಿರುವುದೇ ಇಲ್ಲ. ಅಷ್ಟೊಂದು ಅನ್ಯೋನ್ಯತೆ ಉಂಟಾಗಿಬಿಡುತ್ತದೆ. ಆದರೆ ಮೈಡಿ ಮೈಲಿಗೆಯ ಧರ್ಮಾಚರಣೆಯ ಸಂದರ್ಭದಲ್ಲಿ ಹಿರಿಕಳಾದ ಅಜ್ಜಿಯ ಮಡಿವಂತಿಕೆ ಮತ್ತು ಮಕ್ಕಳ ಪ್ರೀತಿ ಇಕ್ಕಟ್ಟಿನಲ್ಲಿ ಸಿಲುಕುವ, ಮಕ್ಕಳ ಮನಸ್ಸನ್ನು ಕದಡುವ ಪ್ರಸಂಗವನ್ನು ಈ ಕಥೆ ಕಟ್ಟಿಕೊಡುತ್ತದೆ. ಈ ಕಥೆ ಓದುತ್ತಾ ನಮ್ಮ ನಮ್ಮ ಬಾಲ್ಯದ ಪ್ರಸಂಗಗಳೂ ತೆರೆದುಕೊಳ್ಳುತ್ತವೆ. + +ಇನ್ನು ‘ಚಿರತೆ ಮತ್ತು ಸ್ನ್ಯಾಕ್ಸ್‌’ ಕಥೆಯಲ್ಲಿ ಮಕ್ಕಳ ಸಾಹಸಗಾಥೆ, ಮಗುವಿನ ಮುಗ್ಧತೆ ವ್ಯಕ್ತವಾಗುತ್ತದೆ. ಇಲ್ಲಿ ಕಾಡು ಬೆಳೆಸಲು ಮಕ್ಕಳು ತಾವು ಸಂಗ್ರಹಿಸಿದ ಬೀಜದುಂಡೆಗಳನ್ನು ಮಸ್ಕಿ ಗುಡ್ಡಕ್ಕೆ ಹೋಗಿ ಒಗೆದು ಬರುವ ಸಂದರ್ಭದಲ್ಲಿ ಚಿರತೆ ಕಾಣಿಸಿಕೊಂಡು ಅವರನ್ನು ಅಟ್ಟಿಸಿಕೊಂಡು ಓಡತೊಡಗಿತು. ಮಕ್ಕಳು ಹಗ್ಗದ ಸಹಾಯದಿಂದ ಬಂಡೆಗಲ್ಲೊಂದನ್ನು ಏರಿ ಕುಳಿತುಕೊಳ್ಳುತ್ತಾರೆ. ಅಲ್ಲಿ ಅವರು ಚಿರತೆಯಿಂದ ಪಾರಾಗಲು ಹಲವು ಪ್ರಯತ್ನಗಳನ್ನು ಮಾಡುವ ಪ್ರಯತ್ನದಲ್ಲಿ, ತಮ್ಮ ಬಳಿಯಿದ್ದ ಸ್ನ್ಯಾಕ್ಸನ್ನು ಚೂರು ಚೂರು ಮಾಡಿ ಅದರತ್ತ ಎಸೆಯುತ್ತಾರೆ. ಮಸಾಲೆ ರುಚಿ ತಾಗಿ, ಅದನ್ನು ಚಿರತೆ ತಿಂದದನ್ನು ನೋಡಿ ಮಕ್ಕಳು ಒಳಗೊಳಗೇ ಸಂತೋಷಡುತ್ತಾರೆ. ಸಮುದು ಬಲು ತುಂಟ. ಅದರ ಕಣ್ಣಿಗೆ ಖಾರ ಬಿದ್ದರೆ ಓಡಿ ಹೋಗುತ್ತದೆ ಎಂದು ಹಾಗೆ ಮಾಡುತ್ತಿದ್ದ. ಭಯದ ನಡುವೆ ಸಮುದು ಹಾಸ್ಯಮಯವಾಗಿ ಕೀಟಲೇ ಮಾಡುತ್ತಿರುತ್ತಾನೆ. ಕೊನೆಗೂ ಮಕ್ಕಳೆಲ್ಲ ಸುರಕ್ಷಿತವಾಗಿ ಮನೆ ತಲಪುತ್ತಾರೆ. ಹೀಗೆ ಕಥೆ ಕುತೂಹಲ ಮೂಡಿಸುತ್ತದೆ. ಮಕ್ಕಳಲ್ಲಿ ಜಾಗೃತೆ ಕುರಿತು ಮಾಹಿತಿ ತಿಳಿಯಪಡಿಸುತ್ತದೆ. + +ಹಾಗೆಯೇ ‘ದೆವ್ವ ಬಂತು ದೆವ್ವ’, ‘ನಾನು ನೀರಿನ ಮೇಲೆ ನಡೆಯುವೆ’, ‘ರಾಮುವಿನ ನಾಯಿ’, ಮತ್ತು ‘ಪ್ಲಾಸ್ಟಿಕಾಯಣ’ ಕಥೆಗಳು ಗಮನ ಸೆಳೆಯುತ್ತವೆ. ಮಕ್ಕಳ ನಡುವೆಯೇ ನಡೆಯುವ ನೈಜ ಸಂಭಾಷಣೆ ಇಲ್ಲಿಯ ಕಥೆಗಳ ಯಶಸ್ಸಾಗಿದೆ. ಸ್ಥಳೀಯ ಭಾಷಾ ಸೊಗಡು ಕತೆಯನ್ನು ಮತ್ತಷ್ಟು ಚೆಂದಗಾಣಿಸಿದೆ. ಕಲಾವಿದ ಸಂತೋಷ ಸಸಿಹಿತ್ಲು ಅವರು ರಚಿಸಿದ ಅತ್ಯಾಕರ್ಷಕವಾದ ಮುಖಪುಟ ಮತ್ತು ಒಳ ಚಿತ್ರಗಳು ಚೆಂದಕಿಂತ ಚೆಂದ ಇವೆ. ನೋಡಿದ ತಕ್ಷಣ ಓದಲು ಕೈಗೆತ್ತಿಕೊಳ್ಳುವಂತೆ ಮಾಡುತ್ತವೆ. ಈ ಕೃತಿಯನ್ನು ಕೀರ್ತಿ ಪ್ರಕಾಶನ ಮಸ್ಕಿ ಇವರು ಪ್ರಕಟಿಸಿದ್ದಾರೆ. ಒಟ್ಟು ಹನ್ನೆರೆಡು ಕಥೆಗಳಿರುವ ಈ ಸಂಕಲನ ಓದಲು ಖುಷಿ ನೀಡುತ್ತದೆ. + +ಈ ಕೃತಿಗೆ ಮುನ್ನುಡಿ ಬರೆದಿರುವ ಹಿರಿಯ ಸಾಹಿತಿಗಳಾದ ಆನಂದ ಪಾಟೀಲ ಅವರು ‘ಇಲ್ಲಿನ ಕಥಾ ಬಗೆಗಳಿಗೆ ಅಗತ್ಯವಾಗುವ ಸಹಜದ ಆಡುಮಾತಿನ ವರಸೆಗಳನ್ನು ಗುಂಡುರಾವ್ ಬಹಳ ಸೊಗಸಾಗಿ ತಂದುಕೊಂಡಿದ್ದಾರೆ. ಅದರಲ್ಲೂ ಅವರ ರಾಯಚೂರಿನ ಕಡೆಯ ಘಾಟು ಇಲ್ಲಿ ಮೂಗಿಗೆ ಚೆನ್ನಾಗಿಯೇ ಬಡಿಯುತ್ತದೆ. ಬಲು ದೊಡ್ಡ ಯಶಸ್ಸು ಈ ಭಾಷಾ ಪರಿಕರದಲ್ಲಿಯೇ ಅವರಿಗೆ ಸರಳವಾಗಿ ಸಾಧ್ಯವಾಗಿದೆ. ಹಾಸ್ಯ ಗುಂಡುರಾಯರ ಸ್ವಭಾವದ ಆಯ್ಕೆಯಾಗಿರುವಂತೆಯೇ ಇಲ್ಲಿನ ಮಕ್ಕಳ ಲೋಕದ ಆಯ್ಕೆ ಬಲು ಅಂಟಿಕೊಂಡೇ ಬಂದುದಾಗಿ ಭಾರಿ ಹೊಂದಿಕೊಂಡು ಬಿಟ್ಟಿದೆ.’ ಎಂದು ಹೇಳಿದ್ದಾರೆ. + +ಹಾಸ್ಯಕ್ಕೆ ಆಯಸ್ಸು ವೃದ್ಧಿಸುವ ಶಕ್ತಿಯಿದೆ. ಹಾಗಾಗಿಯೇ ಹಾಸ್ಯ ಸಾಹಿತ್ಯ ನಮ್ಮ ಮಕ್ಕಳಿಗೂ ದೊರೆಯಲಿ. ಈ ಕಥೆ ಓದುತ್ತಾ ಮಕ್ಕಳ ಮುಖದಲ್ಲಿ ಮಂದಹಾಸ ಮೂಡಿ, ರಂಜಿಸಿದರೆ ಲೇಖಕರ ಸಂತೋಷಕ್ಕೆ ಪಾರವೇ ಇಲ್ಲ. ಆ ಕಾರ್ಯ ಕೈಗೂಡಲು ಮಕ್ಕಳ ಕೈಗೆ ಈ ಕೃತಿಯನ್ನು ಓದಲು ನೀಡೋಣ. ಸಾಂದರ್ಭಿಕವಾಗಿಯಾದರೂ ಇಲ್ಲಿಯ ಕಥೆಗಳನ್ನು ಮಕ್ಕಳಿಗೆ ಹೇಳೋಣ. + +ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ  (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_181.txt b/Kenda Sampige/article_181.txt new file mode 100644 index 0000000000000000000000000000000000000000..3b1526c74cae34b1437c3c13ff728fba2ef39df8 --- /dev/null +++ b/Kenda Sampige/article_181.txt @@ -0,0 +1,23 @@ +“ಕಾಕತಾಳೀಯವೆಂಬುದಿಲ್ಲ. ಕೆಲವು ಘಟನೆಗಳ ಹಿಂದಿನ ಸಂಬಂಧ ಸೂತ್ರಗಳು ನಮಗೆ ಗೋಚರಿಸುವುದಿಲ್ಲ ಅಷ್ಟೇ” ಇದು ಕಾದಂಬರಿಯ ಮೊದಲ ಸಾಲು. ಇಡೀ ಕಾದಂಬರಿ ಅರಳಿದ್ದು ಇದೇ ಸಿದ್ಧಾಂತದ ಮೇಲೆಯೇ ಎಂಬುದು ಕಾದಂಬರಿ ಓದಿದ ಮೇಲಿನ ಅಭಿಪ್ರಾಯ. + +ಕೌಂಟ್ ಲಿಯೋ ಟಾಲ್ಸಟಾಯ್ ತನ್ನ “ಅನ್ನಾ ಕರೆನಿನಾ”ದ ಮೊದಲ ಸಾಲನ್ನು ಹೀಗೇ ಬಳಸಿದ್ದಾರೆ. ಕಾದಂಬರಿಯ ಒಟ್ಟೂ ಆಶಯ ಆ ಸಾಲಲ್ಲೇ ಅಡಗಿದೆ. “Happy families are all alike: every unhappy family is unhappy in its own way”. ಇದು ಕಾದಂಬರಿ ಹೇಳ ಹೊರಟ ಕೌಟುಂಬಿಕ ಸತ್ವವನ್ನು ಎರಡೇ ವಾಕ್ಯಗಳಲ್ಲಿ ಹಿಡಿದಿಟ್ಟ ಅಪೂರ್ವ ನುಡಿ. + +(ವಿವೇಕ ಶಾನಭಾಗ) + +ಮನುಷ್ಯ ಭೂತ ಮತ್ತು ಭವಿಷ್ಯದ ಸಂಗತಿಗಳ ನಡುವೆ ಪಕ್ವವಾಗುವ ವರ್ತಮಾನದ ಹಾದಿಯಲ್ಲಿ ಸಾಗಬೇಕಾಗಿರುವುದು. ಕಾಲದ ಸಮಗ್ರತೆಯಲ್ಲಿ ಮನುಷ್ಯನ ಅರ್ಥವಾಗಿಯೂ ಅರ್ಥವಾಗದ ಸ್ವಭಾವಗಳು, ಕ್ಲೀಷೆಯೆನಿಸುವ ವ್ಯಕ್ತಿತ್ವಗಳನ್ನು ಅರ್ಥೈಸಿಕೊಳ್ಳುವುದು ಕೆಲವೊಮ್ಮೆ ಸುಲಭ, ಇನ್ನು ಕೆಲವೊಮ್ಮೆ ಅಷ್ಟೇ ಕಷ್ಟಕರವೂ ಆಗಿ ಪರಿಣಮಿಸುತ್ತದೆ. ಘಟಿಸಿಹೋದ ಸಂಗತಿಗಳಿಂದ ಕಲಿತ ಚಿಕ್ಕ ಪುಟ್ಟ ಅನುಭವಗಳು, ವಿಚಾರಗಳು ನಮ್ಮ ಭವಿಷ್ಯದ ನೆಲೆಯಲ್ಲಿ ವರ್ತಮಾನದ ವರ್ತನೆಗಳನ್ನು ಹೇಗೆ ನಿಯಂತ್ರಿಸುತ್ತವೆ ಎಂಬುದು ಅಷ್ಟೇ ಗಮನಾರ್ಹ. ಇನ್ನು ಪ್ರತಿ ಸಂಗತಿಯೊಂದಿಗೂ ಅಗೋಚರ ಎನ್ನುವಂತೆ ತಳಕು ಹಾಕಿಕೊಂಡಿರುವ ವಿರೋಧಾಭಾಸದ ಚಹರೆಗಳನ್ನು ಗುರುತಿಸುವುದು ಎಷ್ಟು ಆಭಾಸವೋ, ಅಷ್ಟೇ ಸಾಂದರ್ಭಿಕವೂ, ಅನಿವಾರ್ಯವೂ ಆಗುವಂತದ್ದು. + +“ಸಕೀನಾಳ ಮುತ್ತು” ಮನದಲ್ಲೆಬ್ಬಿಸುವ ವಿಶೇಷ ಚಿಂತನೆ ಅಸ್ತಿತ್ವದ ಕುರಿತಾದದ್ದು. ಗಂಟುಗಂಟಾದ ಸಿಕ್ಕುಗಳ ಹೊದ್ದ, ಭಿನ್ನ ವಿಭಿನ್ನ ನಿಗೂಢ ಎನಿಸುವ ಮನೋ ಚಹರೆಗಳು ಇಲ್ಲಿ ಮಾತನಾಡುತ್ತವೆ. ‘ಸಾವಿನಂದ ಮುಕ್ತಿ” ಎನ್ನುವ ಪದವೊಂದು ಕೋರೆ ಬರವಣಿಗೆಯ ಕಾರಣ ‘ಸಕೀನಾಳ ಮುತ್ತುʼ ಎಂಬಂತಾಗಿ, ಮನೆ ಮಂದಿಯೇ ಗುರುತು ಹತ್ತದಂತೆ ಬರೆದ ಕೈ ಬರೆಹವನ್ನು ಗುರುತಿಸುವಲ್ಲೇ ವಿಫಲವಾಗುವುದು, ವ್ಯಕ್ತಿತ್ವ ಅಳೆಯುವಲ್ಲಿ ಸೋಲುವ ಕಾರಣದಿಂದ. ಮನುಷ್ಯ ವ್ಯಕ್ತಿತ್ವದಲ್ಲಿನ ನಿಗೂಢತೆಗೆ ಮಾನದಂಡವಾಗಿ ಈ ಸಂದರ್ಭ ಅಮೋಘವಾಗಿದೆ. ಬದುಕಿನ ಹತ್ತಾರು ದರ್ಶನಗಳನ್ನು ನಿರೂಪಿಸುತ್ತಾ, ಸರಳ ನಿರೂಪಣೆಯಲ್ಲಿ ಸಂಕೀರ್ಣ ಕಥನವೊಂದು ಬೆಳಗಿದೆ. ನಾಯಕ ವೆಂಕಟರಮಣನ ಹೆಸರೇ ಅಪಭ್ರಂಶಗೊಂಡು ವೆಂಕಟ್ ಆಗಿ, ವೆಂಕಿಯಾಗಿ, ವೆಂಕಟ್ ರಾಮನ್ ಆಗಿ ಇನ್ನೇನೋ ಆಗಿ ಹೋಗಬಹುದಾದ ಸಂಘರ್ಷದ ಸಂದರ್ಭವಿದು. ಆಧುನಿಕ ಬದುಕಿನಲ್ಲಿ ಮೂಲವ್ಯಕ್ತಿತ್ವ ಮತ್ತು ಜಗ ತೊಡಿಸಿದ ವ್ಯಕ್ತಿತ್ವಗಳಲ್ಲಿ ಕುಬ್ಜನಾಗುವ ವೆಂಕಟರಮಣ ತಾನೊಬ್ಬ ಪ್ರಗತಿಪರ ಎಂದು ತೋರಿಸಿಕೊಳ್ಳುವ ಪ್ರಯತ್ನದಲ್ಲೇ ತನ್ನ ಸನಾತನತೆಯನ್ನು ಬಚ್ಚಿಡಬಯಸುತ್ತಾ ತಿಳಿಯದೇ ಬಿಚ್ಚಿಡುತ್ತಾನೆ. ಇಂತಹ ಹಲವು ಸೂಕ್ಷ್ಮಗಳನ್ನು ಈ ಕಾದಂಬರಿ ವಿಫುಲವಾಗಿ ತೆರೆದುತೋರುತ್ತದೆ. + +ಉದ್ಯೋಗಸ್ಥ ದಂಪತಿಗಳಾದ ವೆಂಕಟರಮಣ ಮತ್ತು ಪತ್ನಿ ವಿಜಿಯವರದು “ಸಮರಸದ ಜೀವನ”. ಸದಾ ಒಬ್ಬರನ್ನೊಬ್ಬರು ಬೆಂಬಲಿಸುತ್ತಾ, ಮಾದರಿ ದಂಪತಿಗಳಂತೆ ಬದುಕುವವರು. ಹಾಗಾಗಿ ಎಲ್ಲದರಲ್ಲೂ ಅವರು “ಪರ್ಫೆಕ್ಟ್‌ ಪ್ಲಾನಿಂಗ್” ಎಂದು ಸ್ನೇಹಿತರ ಹೊಗಳಿಕೆ ಕಾರಣವಾಗುವವರು. ಆದರೆ ಈ ಸಮರಸವೆಂಬುದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ಕಾದಂಬರಿ ಓದುತ್ತಾ ಅರಿವಾಗುತ್ತದೆ. “ಅನಘನ ಗಂಡನ ಥರ ಎಲ್ಲಾ ಬಿಚ್ಚಿಡೋದು ಒಂದು ರೀತಿ. ಏನನ್ನಾ ಸಹಿಸ್ಕೋತಾ ಇದೀವಿ ಅನ್ನೋದಾದರೂ ಗೊತ್ತಿರುತ್ತೆ. ಗುಟ್ಟಾಗಿ ಸೆಗಣಿ ತಿನ್ನೋ ದ್ರೋಹಿಗಳು ಹೆಚ್ಚು ಅಸಹ್ಯ. ಬಾಯಿ ವಾಸನೆ ಹೊಡೀತಿದ್ರೂ ತಿಂದಿಲ್ಲವೆಂದು ನಾಚಿಕೆಯಿಲ್ಲದೇ ಸುಳ್ಳು ಹೇಳಿ ಸಾಧಿಸುತ್ತಾರೆ” ಎಂಬ ವಿಜಿಯ ಮಾತಲ್ಲಿ ಈ ಸಮರಸದ ವ್ಯಾಖ್ಯಾನವಿದೆ. ಪರಸ್ಪರ ಗೌರವಿಸುವ ಗುಣವಿದೆಯೆಂಬುದನ್ನು ಉಲ್ಲೇಖಿತ ಧ್ವನಿಯಾಗಿ ಪದಗಳಲ್ಲಿ ಮೂರ್ತವಾಗಿ ವ್ಯಕ್ತಪಡಿಸುವ ಲೇಖಕರು ಅಷ್ಟೇ ಅಮೂರ್ತವಾಗಿ ನಾಯಕನ ಒಳಮನಸ್ಸಿನ ನಿಜರೂಪಕ್ಕೆ ಆಕಾರವನ್ನು ಕೊಡುತ್ತಾರೆ. + +ಕಾದಂಬರಿಯ ಉದ್ದಕ್ಕೂ ದ್ವಂದ್ವ ನಿಲುವುಗಳಲ್ಲಿ ವ್ಯಕ್ತವಾಗುತ್ತಾ ಅಸ್ಥಿರ ನಿಲುವಿನ ಕಂದಾಚಾರಗಳಿಂದ ಹೊರಬರಲಾಗದ, ನಾಯಕ ಸ್ಪಷ್ಟವಾಗುತ್ತಾನೆ. ವೆಂಕಟರಮಣ ಹಳ್ಳಿಯಲ್ಲಿ ಬೆಳೆದರೂ ಪಟ್ಟಣದ ಐಶಾರಾಮಿನ, ಆಡಂಬರದ ಜೀವನಕ್ಕೆ ಮರಳಾದವನು, ಕಾರ್ಪೋರೆಟ್ ಜಗತ್ತಿನ ವ್ಯೂಹದಲ್ಲಿ ತನ್ನತನವನ್ನೇ ಮರೆತವನಂತೆ, ಸಮಾಜದ ಸಿದ್ಧ ಮಾದರಿಯ, ಸೀಮಿತ ನೆಲೆಯಲ್ಲೇ ಸಂಭ್ರಮಿಸುವ, ಒಂದು ಸಮೂಹದ ಪ್ರತಿನಿಧಿಯಂತೆ ಕಾಣುತ್ತಾನೆ. ಆದರೆ ಪತ್ನಿ ವಿಜಿ ತನ್ನ ಪರಧಿಯಲ್ಲೇ ಸುತ್ತುತ್ತಾಳಾದರೂ, ಆದರ್ಶದ ಪೊರೆಯನ್ನು, ಸನಾತನತೆಯ ಹೊರೆಯನ್ನು ಕಳಚಿಕೊಂಡ, ಪಕ್ವ ವ್ಯಕ್ತಿತ್ವವಾಗಿ ವಿಸ್ತೃತ ದೃಷ್ಟಿಕೋನದವಳಾಗಿ ಕಂಡುಬರುತ್ತಾಳೆ. + +ಊರಿಗೆ ಹೋದ ಮಗಳು ರೇಖಾಳನ್ನು ಹುಡುಕಿಕೊಂಡು ಬರುವ ಆಕೆಯ ಕಾಲೇಜಿನ ಸಹಪಾಠಿ ಹುಡುಗರು, ಅವರ ವೇಷಭೂಷಣ, ಪ್ರೀತಿ ಪ್ರೇಮವನ್ನು ತಲೆಗೇರಿಸಿಕೊಂಡು, ಈ ಕುಟುಂಬವನ್ನು ಪೇಚಿಗೆ ಸಿಲುಕಿಸುವುದು, ಸಾಮಾನ್ಯ ಸಂಗತಿಯೆನಿಸಿದರೂ, ಅವರ ಬೆಂಗಾವಲಿಗರು, ರೇಖಾ ಯಾರ ಜೊತೆ ಮಾತನಾಡಬೇಕು, ಮಾತನಾಡಬಾರದು ಎಂಬುದನ್ನೆಲ್ಲಾ ತಾವೇ ನಿರ್ಧರಿಸುವವರಂತೆ ವರ್ತಿಸುವುದು ಪುರುಷ ಪಾರಮ್ಯದ ಒಳಧೋರಣೆಯನ್ನು ವಿಡಂಬಿಸುತ್ತದೆ. ಈ ಹುಡುಗರಿಗೆ ಬೆಂಬಲಕ್ಕೆ ನಿಲ್ಲುವ ಅಲ್ಲಿಯ ಮರಿ ಫುಡಾರಿಗಳು ಎಲ್ಲವನ್ನೂ ರಾಜಕೀಯದ ಕಲಸುಮೇಲೋಗರ ಮಾಡುವಂತೆ ಪ್ರಯತ್ನಿಸುವುದು ಪರಿಣಾಮಕಾರಿಯಾಗಿ ಮೂಡಿದೆ, ಕಲಿಕೆಯ ದಿನಗಳಲ್ಲಿ ಹೋರಾಟ, ಬಂಡಾಯ ಇತ್ಯಾದಿಗಳನ್ನು ತಲೆಗೇರಿಸಿಕೊಳ್ಳುವಂತೆ ಮಾಡಿ, ಯುವ ಜನತೆಯನ್ನು ತಮ್ಮ ದಾಳವಾಗಿ ಬಳಸಿಕೊಳ್ಳುವ ದುಷ್ಟ ಕೂಟಗಳ ಹುನ್ನಾರವನ್ನೂ, ರಾಜಕೀಯದ ಕುಟಿಲ ಹಿತಾಸಕ್ತಿಗಳನ್ನೂ ಲೇಖಕರು ಸೂಚ್ಯವಾಗಿ ವಿಡಂಬಿಸಿದ್ದಾರೆ. ಬದುಕಿನ ಸುರಕ್ಷತೆ ಮತ್ತು ಸ್ವಾಸ್ತ್ಯ ಎರಡನ್ನೂ ಉಳಿಸಿಕೊಳ್ಳಲಾಗದ ಯುವ ಜನತೆ, ಹೇಗೆ ಬದುಕನ್ನು ನಾಶಮಾಡಿಕೊಳ್ಳುತ್ತಾರೆ ಎಂಬುದಕ್ಕೆ ನಾಯಕನ ತಾಯಿಯ ತಮ್ಮ ರಮಣ ಉದಾಹರಣೆಯಾದರೂ ಮತ್ತದೇ ದಾರಿಯಲ್ಲಿ ಸಾಗುವ ರೇಖಾ ಮುಂದಿನ ಬಂಡಾಯದ ಪ್ರತಿನಿಧಿಯಾಗಿ ವ್ಯಕ್ತಗೊಳ್ಳುತ್ತಾಳೆ. ಒಟ್ಟಾರೆ ಬದುಕಿನ ಹಲವು ಚಿತ್ರಗಳು, ಅದೇ ಚಕ್ರದಲ್ಲಿ ಮತ್ತೆ ಮತ್ತೆ ಸುತ್ತುವುದನ್ನು ನಾವಿಲ್ಲಿ ಕಾಣುತ್ತೇವೆ. + +ಸಾಮಾಜಿಕ ಕಳಕಳಿಯುಳ್ಳ ಮನಸ್ಸುಗಳು ಒಂದೆಡೆಯಾದರೆ, ಪ್ರತಿ ಸಂಗತಿಯನ್ನು ತಮ್ಮ ಲಾಭದ ಉದ್ದೇಶಕ್ಕಾಗಿಯೇ ಬಳಸಿಕೊಳ್ಳುವ ಇನ್ನೊಂದು ವರ್ಗ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಲೇ ಗೆದ್ದು ಬರುವುದು ವ್ಯವಸ್ಥೆಯ ವಿಪರ್ಯಾಸ. ಚುನಾವಣೆಯಲ್ಲಿ ಸುಬ್ಬು ಗೆದ್ದು ಬರುವುದು ರೇಖಾಗೆ ಹಿತವಾಗುವುದಿಲ್ಲ. ಭ್ರಷ್ಟ ಅಧಿಕಾರ ಹಿಡಿಯುವುದು ನಮ್ಮ ಚುನಾವಣಾ ವ್ಯವಸ್ಥೆಯ ಅತಿ ದೊಡ್ಡ ದುರಂತ. ಒಂದೇ ಸೂರಡಿಯಲ್ಲಿ ಪತ್ನಿ ವಿಜಿ, ಮಗಳು ರೇಖಾ ಸುಬ್ಬುವಿನ ಗೆಲುವನ್ನು ಸ್ವೀಕರಿಸುವ ರೀತಿ ಭಿನ್ನವಾದರೆ, ಅದೇ ವೆಂಕಟರಮಣ ಅದನ್ನು ವ್ಯಾಖ್ಯಾನಿಸುವ ಧಾಟಿಯಲ್ಲಿ ಆ ಗೆಲುವನ್ನು ಆತ ಸಂಭ್ರಮಿಸಿದಂತಿದೆ. ಗೂಂಡಾ ಸಾಮ್ರಾಜ್ಯದ ಪರ್ತಕರ್ತ ರಂಗಣ್ಣನೂ ಸಮಾಜದ ಉದ್ಧಾರದ ಕನಸುಳ್ಳ ಪತ್ರಕರ್ತ ಸುರೇಶನೂ ಎರಡು ದಡಗಳಂತೆ ಚಿತ್ರಿಸಲಾಗಿದೆ. ಇದು ಪ್ರಸ್ತಾಪಿಸುವುದು ಒಂದೇ ವಸ್ತು, ಸಂಗತಿಯೊಳಗಿರುವ ದ್ವಂದ್ವ ನೋಟಗಳನ್ನು. + + + +ನಿಶ್ಚಲವಾದ ಸಂವೇದನೆಗಳು ಇಲ್ಲವೇ ಇಲ್ಲ. ನಿತ್ಯ ರೂಪಾಂತರಗೊಳ್ಳುವ ಭಾವ- ಭಾವನೆಗಳನ್ನು ಸಾಂಘಿಕ ನೆಲೆಯಲ್ಲಿ ಗ್ರಹಿಸುತ್ತಾ, ಸಂವೇದನೆಗಳಿಗೆ ಏಕಮುಖ ವ್ಯಾಖ್ಯಾನ ನೀಡುವ ಪ್ರಯತ್ನ ಮನುಷ್ಯ ಜಗತ್ತಿನದು. ಇದನ್ನೆ ಸಮಕಾಲೀನ ಸಮಾಜದ ದ್ವಂದ್ವ ಮನಸ್ಥಿತಿಯನ್ನು, ಜೀವನದ ಆಶಯ ಮತ್ತು ಧ್ಯೇಯಗಳಲ್ಲಿಯ ಭಿನ್ನತೆಯನ್ನು, ಆಧುನಿಕತೆ ಮತ್ತು ಸಂಪ್ರದಾಯಶೀಲತೆ ಇವೆರಡರ ಮಧ್ಯೆ ನಲಗುವ ಆಧುನಿಕರೆನಿಸಿಕೊಳ್ಳುವವರ ತುಮುಲಗಳನ್ನು ಈ ಕಥಾನಕ ನಿರೂಪಿಸುತ್ತದೆ. ಪುರುಷ ಪ್ರಧಾನ ವ್ಯವಸ್ಥೆಯ ವಿರುದ್ಧ ತಲೆ ಎತ್ತುತ್ತಿರುವ ಸ್ತ್ರೀ ದನಿಗಳಲ್ಲಿ ಗುರುತರವಾಗಿ ಇರಬೇಕಾದ ಧಾಡಸಿತನ ಇದೆಯಾ? ನಾವೆಲ್ಲ ಸತ್ಯ ಎಂದು ಒಪ್ಪಿ ನಡೆಯುತ್ತಿರುವ ಅನುಸರಿಸುತ್ತಿರುವ ಎಲ್ಲ ಆಚಾರ ವಿಚಾರಗಳ ಮೂಲ ಮತ್ತು ಹೊಸ ಜಗತ್ತು ಸೃಷ್ಟಿಸುತ್ತಿರುವ ಹೊಸ ಸತ್ಯಗಳು ಎಲ್ಲವೂ ಅಸಂಗತವೇ? ಹೀಗೆ ಹತ್ತಾರು ಅಸಂಗತ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಕಾದಂಬರಿ. ಸಂಪೂರ್ಣ ಕಾದಂಬರಿಯುದ್ದಕ್ಕೂ ಹಲವು ನೆನಪಿನಿಂದ ಹೆಕ್ಕಿದ ಘಟನೆಗಳನ್ನು ಹೇಳುತ್ತಾ ನಾಯಕನ “ಸ್ವಗತದ ಸುಖ”ದ ಮುಖಾಂತರವೇ ಕಾದಂಬರಿ ಹಿಗ್ಗುತ್ತಾ ಹೋಗುವುದು ವಿಶಿಷ್ಟ ಶೈಲಿಯ ಕಾದಂಬರಿಯನ್ನೋದಿದ ಅನುಭವ ನೀಡುತ್ತದೆ. + +ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ) \ No newline at end of file diff --git a/Kenda Sampige/article_182.txt b/Kenda Sampige/article_182.txt new file mode 100644 index 0000000000000000000000000000000000000000..5a13811c65b46ec6c5d840d0c1cd45313d86717b --- /dev/null +++ b/Kenda Sampige/article_182.txt @@ -0,0 +1,15 @@ +ಅಪ್ಪ ಇಲ್ಲವಾಗಿ ಐದು ನಿಮಿಷಗಳಾಗಿತ್ತು. ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲು ಕರೆದರು. ವಾಸ್ತವತೆ ಅಪ್ಪಳಿಸುವುದೇ ಹೀಗೆ. ಅಲ್ಲಿ ಎಲ್ಲವೂ ಸರಿ ಮತ್ತು ಸಕಾಲಿಕ. ಬಿಲ್ಲು ಕಟ್ಟಿ ಅಲ್ಲೇ ಮೆಟ್ಟಿಲಿನ ಮೇಲೆ ಕುಂತೆ, ಅಮ್ಮನನ್ನು ಮಾವ ಸಂತೈಸುತ್ತಿದ್ದರು. ಅಪ್ಪ ಹೋದದ್ದು ಧಿಡೀರನೆ ಅಲ್ಲವಾದರೂ ೬೨ ಸಾಯುವ ವಯಸ್ಸಾಗಿರಲಿಲ್ಲ. ೫೭ ಕ್ಕೆ ಅವರಿಗೆ ಬಡಿದ ಸ್ಟ್ರೋಕ್ ಮುಂದೆ Parkinson’s ಮತ್ತು Dementia ಎಂದು ತಿಳಿದಾಗ, ಇವೆರಡೂ ಸಂಕೀರ್ಣ ಸ್ಥಿತಿಗಳು ಅವರಿಗೆ ಏಕೆ ಬಂದವು ಎಂದು ಮರುಗಿದೆವು? ಅತ್ಯಂತ ಲವಲವಿಕೆಯಿಂದಿದ್ದ ಅವರನ್ನು ಹೀಗೆ ಮೂಲೆಗುಂಪು ಮಾಡಿದ ಖಾಯಿಲೆಗಳ ಬಗ್ಗೆ ನನಗೂ, ಅಮ್ಮನಿಗೂ ಮತ್ತು ಅಪ್ಪನನ್ನು ನೋಡಿದೆಲ್ಲರಿಗೂ ಬೇಸರವಿತ್ತು. ಮೆಟ್ಟಿಲುಗಳಮೇಲೆ ಕುಂತು ಖಾಲಿ ಖಾಲಿ ಅನ್ನಿಸತೊಡಗಿರುವಾಗಲೇ, ಇಂದು ನಾನು ಕಟ್ಟಿದ್ದು ಅಪ್ಪನ ಕಡೆಯ ಬಿಲ್ಲು ಎಂದು ಹೊಳೆದು ಅಳು ಒತ್ತರಿಸಿ ಬಂತು. ಅಪ್ಪನ ಐದು ವರ್ಷದ ಡಿಪೆಂಡೆಂಟ್ ಸ್ಥಿತಿ ಅವರಿಗೂ, ಅಮ್ಮನಿಗೂ ಮತ್ತು ನಮಗೂ ಸುಖಕರವಾಗಿ ಖಂಡಿತವಾಗಿಯೂ ಇರಲಿಲ್ಲ. ಆದರೆ ನಾವು ಅವರ ಇಲಾಜಿಗಾಗಿ ನಮ್ಮ ಕೈಲಾದ ಎಲ್ಲ ಪ್ರಯತ್ನವೆಲ್ಲ ಮಾಡಿದೆವು. ಯಾರೋ “ಮೇಲೆ ಬರಬೇಕಂತೆ” ಅಂತ ಕರೆದರು, ಹೋದೆ. “ನಿಮ್ಮಲ್ಲಿ ಕಾಲುಕೈ ಮಡಿಸಬೇಕಾ?” ಎಂದು ಕೇಳಿದರು. “ಹೌದು” ಎಂದೆ. ಮಡಿಸಿದವರು, ತಲೆಯನ್ನು ಬಾಯಿ ಜಾರದ ಹಾಗೆ ಕಟ್ಟಿದರು. ಅರ್ಧ ಗಂಟೆಯ ಮುಂಚೆ ಕಡೆಯ ಬಾರಿ ಅಪ್ಪ ಪೈಪ್‌ನ ಮೂಲಕ ‘ರವೆ’ಗಂಜಿ ಕುಡಿದಿದ್ದರು. ಎರಡೇ ನಿಮಿಷದಲ್ಲಿ ICU ಖಾಲಿ ಮಾಡಿಸಿ ಮತ್ತೊಬ್ಬರಿಗೆ ಬೆಡ್ಡು ಅಣಿಮಾಡಲಾಯಿತು. ಅಪ್ಪನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆಸ್ಪತ್ರೆ ಮುಂದೆ ಕರೆತರಲಾಯಿತು. ಆಂಬುಲೆನ್ಸ್ ರೆಡಿ ಇತ್ತು, ಶಿಫ್ಟ್ ಮಾಡಿದೆವು. ಅಮ್ಮ ಮತ್ತು ಇನ್ನೊಬ್ಬರು ಹತ್ತಿದರು. + +(ದರ್ಶನ್‌ ಜಯಣ್ಣ) + +ಆಸ್ಪತ್ರೆಯ ಮಾಲಕರೂ ಆಗಿದ್ದ ಮತ್ತು ಅಪ್ಪನನ್ನು ನೋಡಿದ ವೈದ್ಯರು “ನಿಮ್ಮ ಕೈಲಾದಷ್ಟು ನೋಡಿಕೊಂಡಿದ್ದೀರ, ಈ ಸ್ಥಿತಿಯೇ ಹೀಗೆ ಏನೂ ಮಾಡಲಿಕ್ಕಾಗುವುದಿಲ್ಲ, ಇಟ್ಸ್ ಆ ಡಿಜೆನೆರೆಟಿವ್ ಡಿಸ್ಆರ್ಡರ್” ಅಂದರು. ಜೊತೆಗೆ “ನಾವೆಲ್ಲಾ ಚಿಕ್ಕವರಿರುವಾಗ ನಿಮ್ಮ ಅಂಗಡಿಗೆ ಬಂದು ಜ್ಯೂಸು ಕುಡಿಯುತ್ತಿದ್ದೆವು. ಒಳ್ಳೆಯ ಮನುಷ್ಯ” ಅಂದರು. ಆಂಬುಲೆನ್ಸ್‌ನ ಮುಂದಿನ ಸೀಟಿನಲ್ಲಿ ನಾನು ಕುಳಿತುಕೊಂಡೆ, ಡ್ರೈವರ್‌ಗೆ ಮನೆಯದಾರಿ ತೋರಿಸಬೇಕಿತ್ತು. + +ಅಮ್ಮ ಅಳು ನಿಲ್ಲಿಸಿದ್ದಂತಿತ್ತು. ನಾನು ಹಿಂದಿರುಗಿ ನೋಡಲು ಹೆದರಿದೆ. ನನ್ನೊಳಗೆ ಏನಾಗುತ್ತಿತ್ತೋ ಹೇಳುವುದು ಕಷ್ಟ. ಡ್ರೈವರ್ ದಾರಿ ಕೇಳಿದ. “ದ್ವಾರಕಾ ಹೋಟೆಲ್ಲಿನ ಹತ್ತಿರ ಮನೆ” ಅಂದೆ. B H ರಸ್ತೆಯ ರಾಂಗ್ ಸೈಡ್‌ನಲ್ಲಿ ಹೊರಟ. “ಬೇಡಪ್ಪ ಸರಿಯಾದ ಕಡೆ ಹೋಗೋಣ, ಜನ ಬೈಕೋತಾರೆ” ಅಂದೆ. “ಇಲ್ಲ ಬಿಡಿ ಸಾರ್ ಆಂಬುಲೆನ್ಸ್‌ಗೆ ಯಾರೂ ಬೈಕಳಲ್ಲ” ಅಂದ, ನಾನು ಸುಮ್ಮನಾದೆ. ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ. ಅಮ್ಮ “ಐದು ವರ್ಷ ಆಯ್ತಪ್ಪ” ಅಂದಳು, ಅವನು ತಲೆಯಾಡಿಸಿದ. + +ಮನೆಯಹತ್ತಿರ ಬಂದಾಗ ಅಕ್ಕಪಕ್ಕದವರೆಲ್ಲಾ ಸೇರಿದ್ದರು. ಚಿಕ್ಕಪ್ಪ ಅಪ್ಪನನ್ನು ಒಳಗಡೆ ಮಲಗಿಸಲು ಎಲ್ಲ ವ್ಯವಸ್ಥೆ ಮಾಡಿದ್ದರು. ಅವರನ್ನು ಒಳಗೆ ಮಲಗಿಸಿದ ನಂತರ ಆಂಬುಲೆನ್ಸ್ ನವನೂ ಅವರನ್ನೊಮ್ಮೆ ನೋಡಿ ಹೊರಟ. ನಾನು ಹೊರಬಂದು “ದುಡ್ಡು ಎಷ್ಟು ಕೊಡಬೇಕು?” ಕೇಳಿದೆ. “ಸಾರ್ ಅಲ್ಲಿ ಇದ್ದಾರಲ್ಲ ಆಗ್ಲೇ ಕೊಟ್ಟಿದ್ದಾರೆ” ಅಂತ ನನ್ನ ಸ್ನೇಹಿತನ ಕಡೆ ಕೈ ಮಾಡಿದ. ಅವನು ಅದಕ್ಕೆ ಸಮ್ಮತಿಸಿದ. ಅಪ್ಪನನ್ನು ಆಸ್ಪತ್ರೆಯಲ್ಲಿ, ಮನೆಯಲ್ಲಿ ಕಡೆಗೆ ಸಮಾಧಿಯ ಬಳಿ ತುಂಬಾ ಜನ ನೋಡಲು ಬಂದರು. ಊಹಿಸಲಾರದವರೆಲ್ಲ ಬಂದು ಅಮ್ಮನಿಗೆ ಸಾಂತ್ವನ ಹೇಳಿದರು. ಆದರೆ ನನ್ನನ್ನು ಕಾಡಿದ್ದು ಅವರನ್ನು ಟ್ರೀಟ್ ಮಾಡಿದ ವೈದ್ಯರಿಂದ ಹಿಡಿದೂ ಕಡೆಗೆ ಬಿಟ್ಟು ಹೋದ ಆಂಬುಲೆನ್ಸ್ ನ ಡ್ರೈವರ್‌ನವರೆಗೂ ಅಪ್ಪ ಮುಟ್ಟಿದ್ದರು! ಹುಟ್ಟಿದ್ದು, ಆಡಿ ಬೆಳೆದದ್ದು, ವ್ಯಾಪಾರ ಸಂಸಾರ ಮಾಡಿದ್ದು ಅದೇ ಪೇಟೆ ಅದೇ ಬೀದಿ, ಕಡೆಗೆ ತೀರಿದ್ದೂ ಅಲ್ಲಿಯೇ. ಅಪ್ಪ ಯಾವತ್ತೂ ಬದುಕು ಏಕತಾನ ಅನ್ನಲಿಲ್ಲ. ಅಪ್ಪ ಓದಿದ್ದು S S L C (ಸೆಕೆಂಡ್ ಕ್ಲಾಸ್). ಮುಂದೆ ಓದಲಿಕ್ಕಾಗದೆ ಮಾಡಿದ್ದು ನಾನಾ ಉದ್ಯೋಗ.. ಸೌದೆ ಕಂಟ್ರಾಕ್ಟರ್, ಗ್ರಂಥಿಗೆ ಅಂಗಡಿ, ಗುಲ್ಕನ್ ಫ್ಯಾಕ್ಟರಿ, ಸ್ಪಿರಿಟ್ ಮತ್ತು ಪಟಾಕಿ ವ್ಯಾಪಾರ, ಪೂಜಾ ಸಾಮಗ್ರಿ ಮತ್ತು ಸಮಿತ್ತು, ಪಂಚಲೋಹದ ವಿಗ್ರಹಗಳ ವ್ಯಾಪಾರ, ಡ್ರೈ fruits, ಜ್ಯೂಸು ಅಂಗಡಿ, ಪಾರ್ಟಿ ಹಾಲ್, ಆಯುರ್ವೇದ ಪಂಡಿತ ಹೀಗೆ ಭುಜಂಗಯ್ಯನದ್ದು ದಶಾವತಾರವಾದರೆ ಅಪ್ಪನದ್ದು ಶತಾವತಾರ! + + + +ಯಾರ ಮಾತೂ ಕೇಳದ, ಯಾವುದಕ್ಕೂ ಅಂಟಿಕೊಳ್ಳದ, ಯಾರ ಮರ್ಜಿಗೂ ಸಿಗದ, ಅವರಿವರೆನ್ನದೆ ಎಲ್ಲರನ್ನೂ ನಮ್ಮವರೆಂದುಕೊಂಡ, ಸದಾ ಕಾಯಕ ಮತ್ತು ಶ್ರಮವನ್ನು ಮಾತ್ರ ನಂಬಿದ ಅಪ್ಪ ನನ್ನ ಪಾಲಿಗಂತೂ ಅಚ್ಚರಿಯ ದಾರಿ ದೀಪ. ಅವರ ಬಗ್ಗೆ ಬರೆದು ನೀಗಿಸಿಕೊಳ್ಳುವುದು ಸಾಕಷ್ಟಿದೆ ಅನಿಸತೊಡಗಿತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_183.txt b/Kenda Sampige/article_183.txt new file mode 100644 index 0000000000000000000000000000000000000000..19743d1480d291d7ba64382aa42aa50824874074 --- /dev/null +++ b/Kenda Sampige/article_183.txt @@ -0,0 +1,27 @@ +ಮಕ್ಕಳ ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗ ಗೈಯುತ್ತಿರುವ ವೈ.ಜಿ. ಭಗವತಿಯವರು ಮಕ್ಕಳಿಗಾಗಿ ಕಥೆ ಕಾದಂಬರಿಗಳನ್ನು ರಚಿಸಿ ಸೈ ಎನಿಸಿಕೊಂಡವರು. ಮಕ್ಕಳ ಸಾಹಿತ್ಯದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸುತ್ತಿದ್ದಾರೆ. ರಾಜ್ಯ ಸಾಹಿತ್ಯ ಅಕಾಡೆಮಿಯ ಪುರಸ್ಕಾರವನ್ನೂ ಪಡೆದುಕೊಂಡಿದ್ದಾರೆ. ‘ಮಕ್ಕಳು ಓದಿದ ಟೀಚರ್ ಡೈರಿ’ ಎಂಬ ಕಾದಂಬರಿ ಮೂಲಕ ಮಕ್ಕಳ ಸಾಹಿತ್ಯವನ್ನು ಸಂಪದ್ಭರಿತವಾಗಿಸಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ಮಕ್ಕಳ ಸಾಹಿತ್ಯ ಹೊಸತನದಿಂದ ಹೊಸ ಹರವನ್ನು ಪಡೆದುಕೊಳ್ಳುತ್ತಿದೆ. + +(ವೈ.ಜಿ. ಭಗವತಿ) + +ಈ ಕಾದಂಬರಿಗೆ ವೈ.ಜಿ. ಭಗವತಿಯವರು ಆಯ್ದುಕೊಂಡಿರುವ ಕಥಾವಸ್ತು ವಿಭಿನ್ನ ಮತ್ತು ವಿನೂತನ. ಟೀಚರೊಬ್ಬರು ತಮ್ಮ ಬಾಲ್ಯ ಜೀವನದಲ್ಲಿ ಎದುರಿಸಿದ ಸವಾಲುಗಳು, ರೋಚಕ ಘಟನೆಗಳನ್ನಾಧರಿಸಿದೆ. ಬಹಳ ಕುತೂಹಲಭರಿತವಾದ ಸನ್ನಿವೇಶಗಳನ್ನು ಸೃಷ್ಠಿಸಿರುವ ಭಗವತಿಯವರು ವಾಸ್ತವತೆಯೊಂದಿಗೆ ಬೆಸೆದಿದ್ದಾರೆ. ಭಾವೈಕ್ಯತೆಯ ಭಾವವನ್ನು ಹದಬೆರೆಸಿ ಹುರಿಗೊಳಿಸಿದ್ದಾರೆ. ಓದುಗರಲ್ಲಿ ಒಂದಿಷ್ಟು ಧೈರ್ಯ, ಆತ್ಮವಿಶ್ವಾಸ, ಸಾಧಿಸುವ ಛಲವನ್ನು ಈ ಕೃತಿ ತುಂಬುತ್ತದೆ. ವಿಭಿನ್ನವಾದ ಬಯಲುಸೀಮೆ ಮತ್ತು ಮಲೆನಾಡು ಪ್ರದೇಶವನ್ನು ಬೆಸೆಯುವ ತಂತ್ರಗಾರಿಕೆಯೂ ಇಲ್ಲಿದೆ. + +ಭಾಷಾ ಪ್ರಯೋಗದಲ್ಲೂ ಈ ಕೃತಿ ವಿಶೇಷವಾಗಿದೆ. ಮಕ್ಕಳಿಗೆ ಮುದ ನೀಡುವ ಸರಳ ಪದಬಳಕೆ ಸೊಗಸಾಗಿದೆ. ದಡಲ್ ಬಡಲ್, ದಡಾ ದಡಾ, ನಿಗಿನಿಗಿ, ಭರ ಭರನೆ ಎಂಬಂತಹ ಪದಗಳನ್ನು ಬಳಸಿರೊದರಿಂದ ಓದಲು ಮಜಾ ನೀಡುತ್ತವೆ. ಇಲ್ಲಿ ಮಕ್ಕಳೇ ಕುತೂಹಲದಿಂದ ಡೈರಿಯನ್ನು ಓದುತ್ತಾ ಹೋಗುತ್ತಾರೆ. ಕಾದಂಬರಿಯ ಪ್ರವೇಶವೂ ಅಷ್ಟೇ ಸೊಗಸಾಗಿದೆ. + +ಮಲೆನಾಡಿನ ಭಾವೈಕ್ಯದ ಬೀಡಾದ ಮುಂಡಗೋಡ ತಾಲೂಕಿನ ಇಂದೂರ ಶಾಲೆಯಲ್ಲಿ ಶಿಕ್ಷಕಿಯಾಗಿರುವ ಶಾಲಿನಿ ಮಕ್ಕಳ ಅಚ್ಚುಮೆಚ್ಚಿನ ಟೀಚರ್. ಟೀಚರ್ ಸ್ವಂತ ಊರು ಬಯಲು ಸೀಮೆಯ ಬೀಳಗಿ. ಟೀಚರ್ ಯಾವಾಗಲಾದರೊಮ್ಮೆ ತಮ್ಮ ಊರಿಗೆ ಬಂದು ಹೋಗುತ್ತಿರುತ್ತಾರೆ. ಟೀಚರ್ ಊರಿಗೆ ಹೋದಾಗ ಅವರ ಮನೆಯನ್ನು ಸ್ವಚ್ಛಗೊಳಿಸಲು ಬಂದ ಗೆಳೆಯರಿಗೆ ಸಿಕ್ಕ ದಪ್ಪನೆಯ, ಕಪ್ಪನೆಯ ಪ್ಲಾಸ್ಟಿಕ್ ಕವರ್ ಹೊದಿಕೆ ಇದ್ದ ಪುಸ್ತಕ ಸಿಕ್ಕಿತು. ಹೀಗೆ ಮಕ್ಕಳು ಆಸಕ್ತಿಯಿಂದ ಓದುತ್ತಾ ಹೋಗುತ್ತಾರೆ. + +ಶಾಲಿನಿ ಚಿಕ್ಕವಳಿದ್ದಾಗ ಬೋರ್‍ವೆಲ್ ನಲ್ಲಿ ಪಾಳಿ ಹಚ್ಚಿ ನೀರು ತುಂಬುತ್ತಿದ್ದ ಘಟನೆಯು ಮಕ್ಕಳಿಗೆ ಅಂದಿನ ಸ್ಥಿತಿಯ ಅರಿವಾಗುತ್ತದೆ. ಟೀಚರ್ ಅಪ್ಪನಿಗಿಂತಲೂ ಮಿಗಿಲಾಗಿರುವ ರುಸ್ತುಂ ಪಪ್ಪಾನ ಕುರಿತು ಓದುವಾಗ ಮಕ್ಕಳ ಕುತೂಹಲ ಓದುಗರಲ್ಲಿಯೂ ಉಂಟಾಗುತ್ತದೆ. ಪ್ರತಿ ಅಧ್ಯಾಯಕ್ಕೂ ಹೋಗುವಾಗ ಮಕ್ಕಳು ಕಾತರದಿಂದಿರುವುದು ಕಂಡುಬರುತ್ತದೆ. ಶಾಲಿನಿ ಟೀಚರ್ ಬಾಲ್ಯದಲ್ಲಿ ತುಂಬಾ ಹಟವಾದಿ, ಓದುವುದರಲ್ಲಿ ತುಂಬಾ ಪ್ರತಿಭಾನ್ವಿತೆಯಾಗಿದ್ದರು. ಮನೆಯಲ್ಲಿ ಏನೂ ಕೆಲಸ ಮಾಡುತ್ತಿದ್ದಿಲ್ಲ. ಅವಳ ಸಹೋದರಿಯರು ಮತ್ತು ತಮ್ಮ ಎಲ್ಲ ಕೆಲಸ ಮಾಡುತ್ತಿದ್ದರು. ಮುಂದೆ ಅವಳು ತನ್ನ ಮುಂಗೋಪಿತನವನ್ನು ಬಿಟ್ಟು, ತಪ್ಪನ್ನು ತಿಳಿದು ಮನೆ ಕೆಲಸದಲ್ಲಿ ತೊಡಗಿಕೊಳ್ಳುತ್ತಾಳೆ. ಬರೀ ಪುಸ್ತಕದ ಹುಳುವಾಗಿದ್ದ ಇವಳು ಶಾಲೆಯಲ್ಲಿ ಖೋ ಖೋ ಆಟಕ್ಕೆ ಬರುತ್ತೇನೆಂದಾಗ ಇನ್ನುಳಿದ ಮಕ್ಕಳು ಅವಳನ್ನು ಹೀಯಾಳಿಸುತ್ತಾರೆ. ಅವಳು ಛಲ ಬಿಡದೆ ನಿರಂತರ ಪ್ರ್ಯಾಕ್ಟಿಸ್ ಮಾಡಿ ಖೋಖೋ ಆಟ ಮತ್ತು ಓಟದಲ್ಲಿ ಮಣ್ಣಿಕೇರಿ ಶಾಲೆಯ ಕೀರ್ತಿಯನ್ನು ಎತ್ತರಿಸುತ್ತಾಳೆ. ಇದು ಪ್ರತಿಯೊಬ್ಬರಲ್ಲೂ ಕ್ರೀಡಾಸ್ಫೂರ್ತಿ ತುಂಬುವ ಘಟನೆಯಾಗಿದೆ. + + + +ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ. ಈ ಘಟನೆ ಇಡಿ ಕಾದಂಬರಿಯ ಹೃದಯವಾಗಿದೆ. ಯಲ್ಲಮ್ಮನ ಗುಡ್ಡದ ಜಾತ್ರೆಯಲ್ಲಿ ಆಚರಿಸುವ ಸಂಪ್ರದಾಯಗಳು ದೇವಿಯ ವೈಶಿಷ್ಟತೆಯ ದರ್ಶನ ಮಾಡಿಸಿದ್ದಾರೆ. + +ಡೈರಿ ಓದುವ ಮಕ್ಕಳು ಮಧ್ಯದಲ್ಲಿ ಹಾಸ್ಯ ಮಾಡುತ್ತಾ ಮತ್ತೆ ವಾಸ್ತವಕ್ಕೆ ಮರಳಿ ಮತ್ತೆ ಡೈರಿ ಓದುವಲ್ಲಿ ಲೀನವಾಗುವುದು ಆಯಾಸವನ್ನು ಕಡಿಮೆ ಮಾಡಿ, ಮತ್ತೆ ಓದಿಗೆ ಅಣಿಗೊಳಿಸಿರುವುದು ಲೇಖಕರ ತಂತ್ರಗಾರಿಕೆ. + +ಅವಳು ಓದಿ ಟೀಚರ್ ಆದ ಮೇಲೆ ನೊಂದವರ ಬಾಳಿಗೆ ಮುಲಾಮಾಗುತ್ತಾಳೆ. ಶಾಲಿನಿ ಟೀಚರ್ ಅಕ್ಕರೆಯ ಬೋಧನೆಯಿಂದ ಎಲ್ಲರ ಮೆಚ್ಚುಗೆಗಳಿಸುತ್ತಾಳೆ. ವಿಶೇಷ ಅಗತ್ಯವುಳ್ಳ ಮಗು ಫಕೀರ ಓದಿನಲ್ಲಿ ಬದಲಾದದ್ದು, ಫಕೀರನ ತಾಯಿ ಶಾಂತಮ್ಮಳ ಮುಖಚರ್ಯೆ ಶಾಲಿನಿ ಟೀಚರ್ ತರಹನೇ ಇದ್ದದ್ದು ಕಾದಂಬರಿಯ ಇನ್ನೊಂದು ಮಗ್ಗಲಿಗೆ ಹೊರಳುತ್ತದೆ. ಇಂತಹ ಅನೇಕ ತಿರುವುಗಳಿಂದ ಕಾದಂಬರಿ ಮಕ್ಕಳಲ್ಲಿ ವಿಚಾರಶಕ್ತಿ, ಮಾನಸಿಕ ಸಾಮರ್ಥ್ಯವನ್ನು ವೃದ್ಧಿಸುವಂತೆ ಮಾಡುತ್ತದೆ. + +ಜೀವನಯಾನ ಅನೇಕ ಅನೀರಿಕ್ಷಿತ ತಿರುವುಗಳಿಂದ ಕೂಡಿರುತ್ತದೆ. ಅವುಗಳನ್ನು ಎದುರಿಸುವ ಸಾಮರ್ಥ್ಯಗಳನ್ನು ಪಡೆಯಲು ಇಂತಹ ಸಾಹಿತ್ಯ ಕೃತಿಗಳನ್ನು ಓದುವುದರಿಂದ ಬರುತ್ತದೆ. ಕಾದಂಬರಿಯ ಕೊನೆಯಲ್ಲಿ ಮಕ್ಕಳು ತಮ್ಮ ಜೀವನದ ಘಟನೆಗಳನ್ನೆ ಬರೆದು ಓದಿ ಡೈರಿಯನ್ನು ಬಹುಮಾನವಾಗಿ ಪಡೆದದ್ದು ಸಾರ್ಥಕವೆನಿಸಿದೆ. ನಾವೂ ನಮ್ಮ ಜೀವನದ ಅಮೂಲ್ಯ ಘಟನೆಗಳ್ನು ಬರೆದಿಟ್ಟರೆ ಅದೇ ಮುಂದೆ ಅಮೂಲ್ಯ ಸಾಹಿತ್ಯವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಮಕ್ಕಳಿಗೆ ಪ್ರೇರಣಾದಾಯಕವಾದ ಈ ಕೃತಿಯನ್ನು ನೀವು ಓದಿ, ನಿಮ್ಮ ಮಕ್ಕಳಿಗೂ ಓದಿಸಿ. + + + +2021 ರ ಜಿ.ಬಿ.ಹೊಂಬಳ ಮಕ್ಕಳ ಸಾಹಿತ್ಯ ಪುರಸ್ಕಾರ ಪಡೆದಿರುವ ಈ ಕೃತಿ ಭಗವತಿಯವರ ಹಿಂದಿನ ಕೃತಿಗಳಿಗಿಂತ ಭಿನ್ನವಾಗಿದೆ. ಮಕ್ಕಳ ಮನೋಭಿತ್ತಿಯನ್ನು ಒಂದು ವಿಶಾಲ ದೃಷ್ಟಿಕೋನದಲ್ಲಿ ಚಿಂತಿಸುವ, ಬೆಳೆಸುವ ಪ್ರಯತ್ನ ಮಾಡಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ನಡೆಯುವ ಭಾವನೆಗಳ ಸಂಘರ್ಷವನ್ನು, ಎಳೆಯ ಹೃದಯಗಳಲ್ಲಿ ಕುದಿಯುತ್ತಿರುವ ಸಂಕಟ, ಉಕ್ಕುವ ಸಂಭ್ರಮ, ಹೊಯ್ದಾಡುವ ಅನುಮಾನಗಳನ್ನು ಗಾಢವಾಗಿ ತೆರೆದಿಡುತ್ತದೆ” ಎಂದು ಡಾ. ಬಸು ಬೇವಿನಗಿಡದ ಮುನ್ನುಡಿಯಲ್ಲಿ ನುಡಿದಿದ್ದಾರೆ. ಆಕರ್ಷಣೀಯ ಮುಖಪುಟ, ಮಕ್ಕಳ ಸಾಹಿತಿ ಆನಂದ ಪಾಟೀಲ ಅವರು ರಚಿಸಿದ ಸುಂದರ ಮತ್ತು ಅರ್ಥಪೂರ್ಣವಾದ ಒಳಚಿತ್ರಗಳು ಮತ್ತು ಗುಣಮಟ್ಟದ ಮುದ್ರಣ ಕೃತಿಗೆ ಮೆರಗು ತಂದಿವೆ. + +ನಾಗರಾಜ ಎಂ ಹುಡೇದ ಹಾವೇರಿಯವರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದುವುದು, ಕವನ, ಕಥೆ ರಚನೆ, ಲೇಖನಗಳನ್ನು ಬರೆಯುವುದು ಇವರ ಹವ್ಯಾಸಗಳು. ನಗುವ ತುಟಿಗಳಲ್ಲಿ, ಭರವಸೆ (ಕವನ ಸಂಕಲನಗಳು), ಅವತಾರ್ ಮತ್ತು ಹಾರುವ ಕುದುರೆ  (ಮಕ್ಕಳ ಕಥಾ ಸಂಕಲನ), ಕಿರುಗೊಂಚಲು (ಕವನಗಳ ಸಂಪಾದಿತ ಕೃತಿ), ಸೇಡಿನ ಹುಲಿಗಳು (ಸಾಮಾಜಿಕ ನಾಟಕ) ಸೇರಿದಂತೆ ಇವರ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_184.txt b/Kenda Sampige/article_184.txt new file mode 100644 index 0000000000000000000000000000000000000000..614f8da6594d82d805e69ed8484a1869f3ec5ce3 --- /dev/null +++ b/Kenda Sampige/article_184.txt @@ -0,0 +1,23 @@ +‘ನೂರೊಂದು ಝೇಂಕಾರ’ ಕೃತಿಯು ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಶ್ರೀಯುತ ಪ್ರಕಾಶ್ ಎಸ್ ಮನ್ನಂಗಿ ವಿರಚಿತ ನೂರ ಒಂದು ಹನಿಗವನಗಳ ಸಂಕಲನವಾಗಿದ್ದು, ಮೇಲ್ನೋಟಕ್ಕೆ ಇದೊಂದು ನಗೆಹನಿಗಳ ಗುಚ್ಛದಂತೆ ಕಂಡರೂ ಹನಿಗಳಲ್ಲಿನ ವಿಶಾಲಾರ್ಥವನ್ನು ಕೆದಕಿದಾಗ ಅವುಗಳ ಸಾಮಾಜಿಕ ಮಹತ್ವದ ಅರಿವಾಗುತ್ತದೆ. + +ಲೇಖಕನೊಬ್ಬ ತಾನು ಏನನ್ನೇ ಬರೆಯುವಾಗಲೂ ಅದಕ್ಕೊಂದು ನಿರ್ದಿಷ್ಟ ಉದ್ದೇಶವನ್ನು ಹೊಂದಿರುತ್ತಾನೆ. ಅದೇ ರೀತಿ ಹನಿಗವನಗಳ ರಚನೆಯಲ್ಲಿ ತೊಡಗಿಸಿಕೊಂಡಿರುವ ಮನ್ನಂಗಿಯವರೂ ತಮ್ಮ ಸುಧೀರ್ಘ ವೃತ್ತಿ ಬದುಕಿನುದ್ದಕ್ಕೂ ತಾವು ಕಂಡುಂಡ ಅನೇಕ ಬಗೆಯ ರಸಾನುಭವಗಳನ್ನು ಚುಟುಕು ಚುಟುಕಾಗಿ ತಿಳಿಸುವ ಪ್ರಯತ್ನದಲ್ಲಿ ಓದುಗರ ಬೌದ್ಧಿಕತೆಯನ್ನು ಚುರುಕಾಗಿಸುವಲ್ಲಿ ಸಫಲವಾಗಿದ್ದಾರೆಂದೇ ಹೇಳಬಹುದು. ಅವರ ನೂರಾ ಒಂದು ಹನಿಗವನಗಳೂ ಓದುಗರನ್ನು ಆಸಕ್ತಿದಾಯಕವಾಗಿ ಓದಿಸಿಕೊಳ್ಳುವಲ್ಲಿ ಸಫಲವಾಗಿದ್ದು, ನವರಸಗಳ ಅನುಭೂತಿಯನ್ನು ಕಟ್ಟಿಕೊಡುತ್ತವೆ. + +ಮನ್ನಂಗಿಯವರ ಹನಿಗವನಗಳಲ್ಲಿ ವಿರಹವಿದೆ, ವಾಸ್ತವದ ಕಟುಸತ್ಯಗಳಿವೆ, ಹದಿಹರೆಯದವರಿಗಾಗಿ ಪ್ರಣಯ ಪ್ರಸಂಗಗಳಿವೆ, ನಗಿಸುತ್ತಲೇ ವ್ಯವಸ್ಥೆಯ ನಗ್ನತೆಯನ್ನು ಹೊರಹಾಕುವ ಸಾಮರ್ಥ್ಯ ಈ ಸಂಕಲನದಲ್ಲಿನ ಹನಿಗವನಗಳಿಗಿದೆ. + +‘ಕುಳಿತರೂನಿಂತರೂನೋಟದಲ್ಲೂ,ಆಟದಲ್ಲೂ,ಮನದಲ್ಲೂ,ಎಲ್ಲೆಲ್ಲೂತಹತಹ + +ಈ ವಿರಹ’- ಎಂದೆನ್ನುತ್ತಾ ವಿರಹವೊಂದು ಮನವನ್ನು ಸುಡುವ ಕೆಂಡವಿದ್ದಂತೆ ಎಂದು ಒತ್ತಿ ಹೇಳುತ್ತಾ, ನಲ್ಲೆಯ ವಾರೆನೋಟ, ಐಹಿಕಸುಖ, ಸಾಂಗತ್ಯದ ನೆನಪುಗಳ ನೆಪದಿ ವಿರಹದಳ್ಳುರಿಯನ್ನು ಬಹಿರಂಗಗೊಳಿಸಿರುವ ಲೇಖಕರು ತಮ್ಮ ವಿರಹವನ್ನು ಪ್ರೇಯಸಿಯೊಂದಿಗಿನ ಪ್ರಣಯ ಸಲ್ಲಾಪಗಳ ಸವಿನೆನಪುಗಳ ಮಾಲೆಯನ್ನು ಹನಿರೂಪದಲ್ಲಿ ಕಟ್ಟುತ್ತಾ ಮರೆಯುವ ಪ್ರಯತ್ನವನ್ನು ಮಾಡಿರುವುದನ್ನು ನಾವಿಲ್ಲಿ ಕಾಣಬಹುದಾಗಿದೆ. + +‘ನಲ್ಲೆ ನೀ ಉರುಳಿದರೆನನ್ನೆದೆಯಲ್ಲಿಇನ್ನೆಲ್ಲಿ ಕಾಡೀತುಮಾಗಿಯ ಚಳಿ?’– ಎಂದು ಪ್ರಶ್ನಿಸುತ್ತಾ ‘ರಾತ್ರಿ ಬೀಳುವ ನಿನ್ನ ಕನಸುಗಳ ನೆನೆಯುತ್ತ ಹಗಲು ಕಳೆಯುವೆ, ಮತ್ತೆ ರಾತ್ರಿಗಾಗಿ ಕನವರಿಸುವೆ’ ಎಂದು ತಮ್ಮನ್ನು ತಾವೇ ಸಮಾಧಾನ ಪಡಿಸಿಕೊಳ್ಳುವುದನ್ನೂ ಕಾಣಬಹುದಾಗಿದೆ. + + + +ಕೇವಲ ವಿರಹಾಗ್ನಿಯನ್ನು ನಂದಿಸುವ ಪ್ರಣಯ ರೂಪಕ್ಕಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಳ್ಳದ ಕವಿಗಳು ಸಮಾಜದ ಕಟುಸತ್ಯಗಳನ್ನು ವಾಸ್ತವಿಕ ನೆಲೆಯಲ್ಲಿ ಕಟ್ಟಿಕೊಡುವ ಅನೇಕ ಹನಿಗವನಗಳನ್ನು ಇಲ್ಲಿ ಸಂಕಲಿಸಿದ್ದು ಅವುಗಳಲ್ಲಿ ಅವರ ವೃತ್ತಿ ಜೀವನದಲ್ಲಿ ಕಂಡಂತ ಅವಿದ್ಯಾವಂತ ಜನಪ್ರತಿನಿಧಿಗಳನ್ನು‘ಆಪ್ತಕಾರ್ಯದರ್ಶಿಗಳಬೆಳಕಿನಲ್ಲಿಪ್ರಜ್ವಲಿಸುವಸ್ವಂತಬೆಳಕಿಲ್ಲದ ಗ್ರಹ..’ವಿದ್ದಂತೆ ಎಂದು ವ್ಯಂಗ್ಯವಾಗಿ ಬಣ್ಣಿಸಿದ್ದಾರೆ. ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ ಕಲ್ಪನೆಯಲ್ಲಿ ‘ಬದುಕಿನ ಬ್ಯಾಲೆನ್ಸ್’ ತಿಳಿಸುವ ಚುಟುಕು ಓದುಗರ ಮನಗೆಲ್ಲುತ್ತದೆ.‘ವೇದಿಕೆಯ ತುಂಬಕವಿಗಳುಸಭಾಂಗಣದಲ್ಲಿಲ್ಲಕೇಳುವ ಕಿವಿಗಳು‘ ಎನ್ನುತ್ತಾ ಇಂದಿನ ಸಾಹಿತ್ಯ ಕವಿಗೋಷ್ಠಿಗಳ ಬಣ್ಣ ಬಯಲು ಮಾಡಿರುವ ಮನ್ನಂಗಿಯವರು,‘ನಮ್ಮೂರಲ್ಲಿನಿತ್ಯವೂ ನಡೆಯುತ್ತದೆಸಾಹಿತ್ಯಿಕ ಪ್ರೋಗ್ರಾಂಅಳೆದು ತೂಗಿನೋಡಿದರೆಸಾಹಿತ್ಯವಿರುವುದಿಲ್ಲಒಂದೂ ಗ್ರಾಂ..’ಎಂದೆನ್ನುತ್ತಾ ಜೊಳ್ಳು ಸಾಹಿತ್ಯದ ಗುಣಮಟ್ಟವನ್ನು ವಿಡಂಬಿಸಿದ್ದಾರೆ. + +ಜೀವನದಲ್ಲಿ ಬರುವ ಅನೇಕ ಹಾಸ್ಯ ಸನ್ನಿವೇಶಗಳನ್ನೇ ಚುಟುಕಾಗಿ ಹೊಂದಿಸಿ ಓದುಗರ ತುಟಿಯಂಚಲ್ಲಿ ನಗೆಯುಕ್ಕಿಸುವ ಶಕ್ತಿ ಇಲ್ಲಿನ ಅನೇಕ ಹನಿಗಳಿಗಿದ್ದು ಅವುಗಳು ಹೆಚ್ಚಾಗಿ ದಂಪತಿಗಳ ನಡುವಿನ ಸನ್ನಿವೇಶಗಳಿಂದಲೇ ಹೆಕ್ಕಿದವಾಗಿವೆ. ಉದಾಹರಣೆಗೆ‘ದಂಪತಿಗಳಲ್ಲಿಹೊಂದಾಣಿಕೆಇರಲೇಬೇಕುಈಗ ನೋಡಿ, ನಾನುಅಡುಗೆ ಮಾಡುತ್ತೇನೆನನ್ನವಳು ಬಡಿಸುತ್ತಾಳೆ’ಎಂದೆನ್ನುತ್ತಾ ಕಚಗುಳಿಯಿಡುವ ಕವಿಗಳು ‘ಮಂತ್ರಿಗಳಿಗೆ ಎಷ್ಟೇ ಹಾಕಿದರೂ ಹಾರ, ಬಡವರಿಗೆ ಸಿಗುವುದಿಲ್ಲ ಪರಿಹಾರ’ ಎಂದೆನ್ನುತ್ತಾ ಹಾಸ್ಯದಲ್ಲಿಯೇ ವಾಸ್ತವಿಕತೆಯ ಗಂಭೀರತೆಯನ್ನು ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಾರೆ. + + + +ಕೆಲವೆಡೆ ಪ್ರಾಸಗಳಿಗೆ ಒತ್ತು ಕೊಟ್ಟಿರುವ ಮನ್ನಂಗಿಯವರು ಹಲವೆಡೆ ಪ್ರಾಸಗಳ ತ್ರಾಸೇ ಬೇಡವೆಂದು ಸರಳ ಉಪಮೆಗಳ ಮೊರೆ ಹೋಗಿದ್ದು ಅಲ್ಲಿಯೂ ಅವರು ಗೆದ್ದಿರುವುದನ್ನು ಕಾಣಬಹುದಾಗಿದೆ. ಒಟ್ಟಾರೆಯಾಗಿ ತಮ್ಮ ಮಾಗಿದ ಜೀವನಾನುಭವಗಳನ್ನು ಇಂದಿನ ಯುವಕರಿಗೆ ಕಟ್ಟಿಕೊಡಲು ಮನ್ನಂಗಿಯವರು ಆಯ್ದುಕೊಂಡಿರುವ ಈ ಹನಿಗವನಗಳೆಂಬ ಚುಟುಕು ಸಾಹಿತ್ಯ ಪ್ರಕಾರವು ಸಮಾಜಹಿತಕ್ಕಾಗಿ ದುಡಿಯುವ ವ್ಯವಸ್ಥಿತ ಮಾಧ್ಯಮದಂತೆ ಕೆಲಸ ನಿರ್ವಹಿಸಿದಲ್ಲಿ ಅವರ ಉದ್ದೇಶವೂ ಸಾರ್ಥಕವಾದೀತು. ಅಂತಹ ಸಾರ್ಥಕತೆಗಾಗಿ ಯುವಜನತೆ ಹೆಚ್ಚಾಗಿ ಸಂಕಲನವನ್ನು ಕೊಂಡು ಓದುವುದರ ಮೂಲಕ ಝೇಂಕರಿಸಲೆಂಬುದು ಈ ಟಿಪ್ಪಣಿಯ ಆಶಯವಾಗಿದೆ. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_185.txt b/Kenda Sampige/article_185.txt new file mode 100644 index 0000000000000000000000000000000000000000..48ff31199ae8f4b5df71ba3e32b40894677d2c8c --- /dev/null +++ b/Kenda Sampige/article_185.txt @@ -0,0 +1,35 @@ +ಖುಷ್ಕಿ ಬೇಸಾಯವೋ, ತರಿ ಬೇಸಾಯವೋ, ಬಾಗಾಯಿತಿ ಬೇಸಾಯವೋ ನೆಲ, ನೀರಿರದೆ ಸಾಗದು, ಆಗದು. ತೇವದ ಹದವರಿತರೆ ಹಸನಾದ ಉಳುಮೆ ಹಾಗು ಬಿತ್ತನೆ. ಸಾರವಿದ್ದಂತೆ ಬೆಳೆ. ನೆಲದ ಸಾರದ ಏರಿಳಿಕೆಯ ಅರಿವೂ ರೈತನಿಗೆ ಮುಖ್ಯ. ನಾಟಿ ತಳಿಗೂ, ಸಂಕರ ತಳಿಗೂ ಸಾರವೇ ತ್ರಾಣ ಪ್ರಾಣ. ಇದರಲ್ಲಿ ಬೀಜತ್ರಾಣವೂ ಲೆಕ್ಕವೇ. + +ಉಳುಮೆ ಅನುಭವದ್ದು. ಒಂದು ಸಾಲಿನ ಉಳುಮೆ ಸಾಕೋ, ಎರಡುಸಾಲು ಹೊಡೆಯಬೇಕೋ, ಮೂರುಸಾಲು ಆಗಬೇಕೋ ಎಂಬುದು ಉಳುಮೆಗಾರನ ವಿವೇಚನೆಯದು. ಹಾಗೆಯೇ ಬಲಸುತ್ತು, ಎಡಸುತ್ತು ಉಳುಮೆಯ ವಿಚಾರವೂ ಸಹ. ಬದುವಿನ ಉಬ್ಬಂಚು ತಗ್ಗಬೇಕಾದರೆ ಎಡಸುತ್ತಿನ ಉಳುಮೆಗೆ ನೇಗಿಲು ಹಿಡಿಯಬೇಕು. ಎದೆಯ ಹೊಲದಲ್ಲಿ ಹುಟ್ಟುವ ಕಥೆ ಬೆಳೆದು ಬೆಳೆಯಾಗವುದು ಇಂತಹ ಹದಗಳಲ್ಲಿಯೇ. ಹೊಲದ ವಿಸ್ತಾರವಿದ್ದಂತೆ ಕಥೆಯ ವಿಸ್ತಾರವೂ ಇರುತ್ತದೆ. ವಿಸ್ತಾರ ದೊಡ್ಡದಿದ್ದರೂ ಉಳುಮೆಯಾದಷ್ಟು ನೆಲದಲ್ಲಷ್ಟೇ ಬೆಳೆ. ಬೀಡಿನಲ್ಲಿ ಬಿತ್ತನೆಯಾಗದು. ಆಗಬಾರದೇಕೆಂದು ಬಿತ್ತಿದರೆ ಅದನ್ನು ಬೆಳೆ ಎನ್ನುವುದಿಲ್ಲ. ಅದು ಕೃಷಿಕನಲ್ಲದವನ ಕೆಲಸವಲ್ಲದ ಕೆಲಸ. ಅಲ್ಲಿ ಬಳ್ಳ ಬಿತ್ತಿದರೆ ಬೆಳೆಯುದು ಸೊಲಿಗೆಯಷ್ಟೇ. ಆ ಸೊಲಿಗೆಯೂ ಜೊಳ್ಳಾದರೂ ಆದೀತು. ಯಾವುವನ್ನು ಸೃಜನಶೀಲ ಸಾಹಿತ್ಯವೆನ್ನುವೆವೋ ಅವೆಲ್ಲ ಸರಿಬೆಳೆಯಾಗುವುದು ಹೀಗೆಯೇ ಎಂದು ನನಗನ್ನಿಸುತ್ತದೆ. + +(ಸದಾಶಿವ ಸೊರಟೂರು) + +ಈ ಮಾತುಗಳನ್ನು ವಿವರಿಸುವ ಅವಕಾಶ ಈ ಮುನ್ನುಡಿಯಲ್ಲಿರುವುದೆಂದು ಭಾವಿಸುವೆ. ಹೊಲವೆಂದರೆ ಕಥೆ ಹುಟ್ಟುವ ಮನಸ್ಸು. ಉಳುಮೆಯೆಂದರೆ ಅದಕ್ಕೆ ಬೇಕಾದ ‘ಹದ’ವನ್ನು ಕಂಡುಕೊಳ್ಳುವುದು. ಬೀಜಗಳು ಕಥಾ ವಸ್ತು. ಬಿತ್ತುವುದು ಅನುಭವ. ಬೆಳೆಯೆಂಬುದು ಕಥನ, ವೈಖರಿ. ತೆನೆಗಟ್ಟುವುದು ವಸ್ತು ಕಥೆಯಾಗುವ ಪರಿ. ಕಳೆ ತೆಗೆಯವುದೆಂದರೆ ಪುನರ್ ಓದು ಮತ್ತು ತಿದ್ದುವುದು. ಕಥೆಯಾದದ್ದು ಸುಗ್ಗಿ. ಸುಗ್ಗಿಯಾದವನ್ನು ಕೊಟ್ಟರೆ ಅದು ಕಥೆ. ರಾಶಿ ಅಳೆಯುವುದು ವಿಮರ್ಶೆ. ಇದು ಸ್ವವಿಮರ್ಶೆಯೂ ಆಗಿದ್ದೀತು. ಸ್ವವಿಮರ್ಶೆ ಒಳ ವಿಮರ್ಶೆಯೂ ಹೌದು. ಯಾವದು ಸೃಜನವೋ ಅದು ಸ್ವ(ಒಳ)ವಿಮರ್ಶೆಯ ತೂರಿಕೆಗೆ ಸಿಕ್ಕಬೇಕು. ಆಗ ಜೊಳ್ಳಾಗಿದ್ದರೆ ತಂತಾನೇ ತೂರಿ ಹೋಗುತ್ತದೆ. ತೂರಿ ಹೋಯಿತೋ ಹೋಗಲಿ. ಮುಂದಿನ ಬೆಳೆಗೆ ಅಣಿ ಮಾಡುವುದು ಇದ್ದೇ ಇರುತ್ತದೆ. ಇದು ರೈತನಾದವನಲ್ಲಿರುವ ಮನದರಿವು. + +ಮುಂದಿನ ಬೇಸಾಯವೆಂದರೆ ಮಳೆಗೆ ಕಾಯುವುದು. ಅದರ ಯೋಗವರಿತು ಸಲಕರಣೆಗಳನ್ನು ಕುಲುಮೆಯಲ್ಲಿ, ಬಡಗಿಯ ಬಳಿ ಯೋಗ್ಯಗೊಳಿಸುವುದು. ನದಿ ನಾಲೆ ನೀರಿನ ಬೇಸಾಯ ಬೇರೆ ರೀತಿಯದು. ಕತೆಗಾರನದಂತೂ ಮಳೆನೀರಿನ ಬೇಸಾಯವೆಂದೇ ನಂಬುವೆ. ಇದು ರೂಪುಗೊಳ್ಳುವುದು ಪರಂಪರೆಯ ಅರಿವಿನಿಂದ. ಬೀಜವನ್ನು ಸಂಕರಿಸಿ ಹುಟ್ಟಿಸುವ ಬೀಜವೂ ಮೂಲ ಬೀಜದಿಂದಲೇ. ನೆಲವನ್ನಂತೂ ಲ್ಯಾಬುಗಳಲ್ಲಿ ಸೃಷ್ಟಿಸಲಾಗದಲ್ಲ! ನೀರೂ ಅಷ್ಟೇ. ದದ್ರೂಪಿ ಸೃಷ್ಟಿಗೂ ಮೂಲವಿದ್ದದ್ದೇ. ಪ್ರಣಾಳ ಶಿಶು ಜನನಕ್ಕೂ ವೀರ್ಯ, ಕಾಪಿನ ಗರ್ಭಬೇಕು. ಅಥವಾ ಗರ್ಭಕೋಶದ ಜೀವಾವರಣ ನಿರ್ಮಿಸಬೇಕು. ಇದು ಗೊತ್ತಿದ್ದೂ ಹುಟ್ಟಿಸುವ ವಾದಕ್ಕೆ ಪ್ರತಿವಾದ ಹೂಡುವುದು ಸೃಜನ ಕಾಲವನ್ನು ವ್ಯರ್ಥ ಮಾಡುವುದಾಗುತ್ತದೆ ಮತ್ತು ಸೃಜನ ಬಸಿರನ್ನು ಕಿತ್ತು ಹಾಕಲು ಬಳಸಿದಂತಾಗುತ್ತದೆ. + +ಈ ಆಲೋಚನಾ ತರಂಗಗಳೇಳಲು ಯುವ ಕತೆಗಾರ ಗೆಳೆಯ ಸದಾಶಿವ ಸೊರಟೂರು ತಮ್ಮ ಕಥೆಗಳ ಪ್ರತಿಯನ್ನು ಓದಲು ಕೊಟ್ಟದ್ದು ಕಾರಣವಾಗಿದೆ. ಇದಕ್ಕಾಗಿ ನಾನವರಿಗೆ ಋಣಿ. + +ಸದಾಶಿವ ಸೊರಟೂರು ತಮ್ಮಲ್ಲಿ ಕತೆಗಾರ, ಕವಿಯನ್ನು ಕಂಡುಕೊಳ್ಳುತ್ತಿರುವ ಲೇಖಕ. ತಾನು ಮೊದಲಿಗೆ ಯಾರನ್ನು ಗಟ್ಟಿಯಾಗಿ ಅಪ್ಪಿಕೊಳ್ಳಲಿ ಎಂಬ ಆಯ್ಕೆಯಲ್ಲಿದ್ದಂತಿದೆ ಎಂಬುದು ಅವರ ಕವಿತೆ, ಕಥೆಗಳನ್ನು ಓದಿದಾಗ ಅನ್ನಿಸಿದ್ದುಂಟು. ಇಬ್ಬರನ್ನೂ ಅವರು ಒಟ್ಟಿಗೆ ಬಲವಾಗಿ ಅಪ್ಪಿಕೊಳ್ಳುವ ಬಾಹುಬಂಧ ಅವರದಾದರೆ ಸಂತೋಷವೇ. + + + +ಅವರ ರಚನೆಗಳ ಓದುವಿಕೆಯನ್ನು ಮುಂದುವರೆಸಿದಾಗ ಇಬ್ಬರ ಅಪ್ಪುವಿಕೆಗಾಗಿ ಅವರು ತಹತಹಿಸುತ್ತಿದ್ದಾರೆ ಅನ್ನಿಸುತ್ತದೆ. ಇದಕ್ಕೆ ಅವರ ಕೆಲವು ಕವಿತೆಗಳು, ಕಥೆಗಳು ಸಾಕ್ಷಿಯ ದೀಪ ಹಿಡಿಯುತ್ತವೆ. ಯಾವುದು ಅವರ ಬಿಗಿಯಪ್ಪುಗೆಯಲ್ಲಿದೆ, ಯಾವುದು ಸಡಿಲ ಅಪ್ಪುಗೆಯಲ್ಲಿದೆ, ಯಾವುದು ಅಪ್ಪುಗೆಗೆ ಸಿಕ್ಕಿಲ್ಲ ಅನ್ನುವುದನ್ನು ಸಾಕ್ಷಿದೀಪದ ಬೆಳಕು ಅವರಿಗೂ ನಮಗೂ ಕಾಣಿಸಿಕೊಡುತ್ತದೆ. ಈ ಕಾಣಿಸುವಿಕೆಯಲ್ಲಿ ಇಲ್ಲಿನ ಕಥೆಗಳಿವೆ. + +‘ಅರ್ಧ ಬಿಸಿಲು ಅರ್ಧ ಮಳೆ’ ಸಂಕಲನದಲ್ಲಿರುವ, ಸಂಕಲನದ ಶೀರ್ಷಿಕೆಯ ಕಥೆಯೊಂದಿಗೆ ‘ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು’ ಕಥೆಗಳು ಹೊಲದ ಗೊಬ್ಬರದ ಗುಡ್ಡೆಗಳಡಿಯ ‘ಮಂದಹಸುರು’ ಪೈರುಗಳಂತಿವೆ. ಇವು ಸಂಕಲನದ ಗಟ್ಟಿ ಕಥೆಗಳಷ್ಟೇ ಆಗಿರದೆ ಸೊರಟೂರರು ಕಥನಗಳ ದೋಣಿಗೆ ಸರಿದಿಕ್ಕು ಹಿಡಿಯುವ ಹುಟ್ಟು ಹಾಕಿದರೆ ಚುಳುಗುಟ್ಟುವ ಮೀನುಗಳಿರುವ ನರ‍್ಬಯಲಿಗೆ ನೇರ ಹೋಗುವ ನುರಿತ ಬೆಸ್ತನಾಗಬಹುದು. + +ಕಥೆ ನೆಲದ ಬೇಸಾಯವೂ ಹೌದು, ಮೀನು ಹಿಡಿಯುವ ಕುಶಲತೆಯೂ ಅಹುದು. ಬೇಸಾಯ ಹರಗಿ ಬಿತ್ತಿ, ಫಸಲು ಕಾಣುವುದು. ಮೀನುಗಾರಿಕೆ ದೋಣಿಯನ್ನು ಸಾಗಿಸಿ, ಬಲೆ ಬೀಸಿ, ಸೆಳೆಸಳೆದು ದೋಣಿಗೆ ತರುವುದು. ಎರಡೂ ಶ್ರಮದ ಕ್ರಿಯೆಯೇ. ಈ ಶ್ರಮದಿಂದಲೆ ‘ಫಸಲು’ ಕೈ ಹತ್ತುವುದು. ಹೀಗೆ ಕೈಗೆ ಹತ್ತಿದ ಕಥೆಗಳೇ ಹೇಳುತ್ತವೆ, ಯಾವ ಕಥೆ ಕೈವರೆಗೆ ಬರದೆ ಜಾರಿದೆ ಎಂಬುದನ್ನು. ಇದಕ್ಕೆ ಉದಾಹರಣೆಯಾಗಿ ‘ಬಯಲು, ಕನಸಲ್ಲಿ ಸುರಿದ ಕೆಂಪು ಮಳೆ’ ಕಥೆಗಳು ಸಿಗುತ್ತವೆ. ಇಂತಹ ಕಥೆಗಳಲ್ಲಿ ಅಲ್ಲಲ್ಲಿ ಮೂಡುವ ನೆರಳುಗಳು ಕಥನಕ್ಕೆ ಅಡ್ಡವಾಗಿ ನಿಂತಂತೆ ಕಂಡರು ನೆರಳಲ್ಲಿ ಅಳಿಸಿ ಕೊನೆಗೆ ಬೆಳಕೊಂದು ಮೂಡುತ್ತದೆ. ಆ ತಾವುಗಳಲ್ಲಿ ನೆರಳುಗಳನ್ನು ಸರಿಸುವ ಬೆಳಕು ಹರಿಯಬೇಕು. ಆಗ ಆ ಭಾಗ ಕಥೆಯಲ್ಲಿ ಕಾಣಿಸಿಕೊಳ್ಳುತ್ತದೆ. + +ಸದಾಶಿವ ಸೊರಟೂರು ಯುವಕ. ಕಥಿಸುವ ಹುರುಪಿರುವ ಯುವಕ. ಆ ಹುರುಪಿನಲ್ಲಿ ಅವಸರವೂ ಆತುರವೂ ಕಾಣಿಸುತ್ತದೆ. ಇದು ಈ ವಯಸ್ಸಿಗೆ ಸಹಜವೆನ್ನಿಸಿದರೂ ಕತೆಗಾರನಾಗಿ ಕಥೆಯನ್ನು ಕಥನ ಮಗ್ಗಕ್ಕಿಡುತ್ತಲೇ ಬಟ್ಟೆಯಾಯಿತೆಂದುಕೊಳ್ಳಲಾಗದು. ನೂಲು ತುಂಡಾಗಬಹುದು, ಸಿಕ್ಕಾಗಬಹುದು. ಲಾಳಿ ಆಡದೆ ನಿಂತರೂ ನಿಂತೀತು. ಇಂತಹ ತಡೆಗಳನ್ನು ನಿವಾರಿಸಿಕೊಂಡು ನೂತ ಮೇಲೆಯೇ ಬಟ್ಟೆ, ಅರ್ಥಾತ್ ಕಥೆ. ಸೊರಟೂರರೂ ತಾವೇ ಬಿಡಿಸಿಕೊಳ್ಳಬೇಕಾದ ಸಿಕ್ಕುಗಳಿವೆ. ಅವರು ಬಿಡಿಸಿಕೊಳ್ಳವ ಸೂಚನೆಗಳೂ ಇವೆ. + +(ಸ. ರಘುನಾಥ) + +ಆತುರ, ಅವಸರ ಎಂಬ ಮಾತು ಕಾಣಿಸಿಕೊಳ್ಳುವುದು ಕಥಿಸುವ ಸಮಯಕ್ಕೆ ಸಂಬಂಧಿಸಿದ್ದು. ಅದು ‘ಕಥನಧ್ಯಾನಭಂಗ.’ ಅದು ಯಾವ ಕತೆಗಾರನಿಗೂ ಆಗುವಂತಹುದು. ಗಾಯಕನಿಗೆ ಶ್ರುತಿಜ್ಞಾನವಿದ್ದೂ ಒಮ್ಮೊಮ್ಮೆ ತಪ್ಪುವಂತೆಯೇ ಇದೂ ಸಹ. ಅವನು ಈ ಲೋಪ ಅಥವಾ ದೋಷವನ್ನು ತನ್ನ ಮರು ಗಾಯನದಲ್ಲಿ ಸರಿಪಡಿಸಿಕೊಳ್ಳುವಂತೆ ಕತೆಗಾರ ಸರಿಪಡಿಸಿಕೊಂಡರೆ, ಅಂದರೆ ಕಥೆಯನ್ನು ತಿದ್ದಿದರೆ ಸಮಸ್ಯೆ ತೀರುತ್ತದೆ. ಸಂಗೀತ ಸಂಗೀತಗಾರನ ಮನೋಭಾವದ್ದು ಹೇಗೋ ಹಾಗೆಯೇ ಕಥೆಯೂ ಕಥೆಗಾರನ ಮನೋಭಾವದ್ದೇ. ಸೊರಟೂರು ಅವರ ಕಥೆಗಳು ಕರುಣೆ, ಪ್ರೀತಿ, ಆರ್ದ್ರ ಮನೋಭಾವದವು. ಅವು ಧ್ವನಿಪೂರ್ಣವಾಗಲು ಮುಂದಿನ ಬರವಣಿಗೆಗಾಗಿ ಅವರಲ್ಲಿರುವ ಕಥೆಗಳು ಒದಗಿ ಬರುವುದುಂಟು. ಇದಕ್ಕಾಗಿ ಅವರು ಅವರಲ್ಲಿನ ಕವಿ, ಕತೆಗಾರನ ಸಹಾಯದ ಮೊರೆ ಹೋಗಲೇಬೇಕಿದೆ. + +ಸೊರಟೂರರಲ್ಲಿರುವ ಕತೆಗಾರ ಮುಖ್ಯವಾಗಿ ಭಾವಜೀವಿಯೆಂದು ಅವರ ಕಥೆಗಳು ಸೂಚಿಸುತ್ತವೆ. ‘ಬಯಲು, ಹೆಸರು ಬೇಡ ಊರು ಬೇಡ, ವಿದಾಯ’ದಂತಹ ಕಥೆಗಳಿಗೆ ವೈಚಾರಿಕತೆಯ ಹೊದಿಕೆ ಹಾಕಲು ಹೋಗಿ ಕಥೆಯಾಗಿಸುವಿಕೆಯನ್ನು ಜಾರುಬಂಡೆ ಏರಿಸಿದ್ದಾರೆ ಅನ್ನಿಸಿತು. ಕಥೆಯಲ್ಲಿ ವೈಚಾರಿಕತೆ ನಿಷಿದ್ಧವೇನಲ್ಲ. ಆದರೆ ಅದು ವಸ್ತುವಿನಲ್ಲಿಯೇ ಅರಳಬೇಕಷ್ಟೆ. ಹೊದಿಕೆಯಾಗಬಾರದು. ಇದರ ನಿವಾರಣೆಯೂ ಸೊರಟೂರರಲ್ಲಿ ಇಲ್ಲದಿಲ್ಲ. ಗುರುತಿಸಿಕೊಳ್ಳಬೇಕಿದೆ. ಕಥೆಗಳಿವೆ. ಆ ಕಥೆಗಳನ್ನು ಕಥಿಸುವಾಗ ಎಲ್ಲಿ ಧ್ಯಾನಭಂಗಕ್ಕೆ ಒಳಗಾಗುವರೋ ಅಲ್ಲಿ ವೈಚಾರಿಕತೆಯ ಮೊರೆ ಹೋಗಿಬಿಡುತ್ತಾರೆ. + + + +ಕನ್ನಡ ಕತೆಗಾರರೂ ಸಾಮಾಜಿಕರಾಗಿಯೇ ಕಥೆಗಳನ್ನು ಕಟ್ಟಿದವರು. ರಮ್ಯ ಕಥೆಗಾರರೂ ಸಾಮಾಜಿಕತನದಿಂದೇನೂ ದೂರಸರಿದವರಲ್ಲ. ಸಾಹಿತ್ಯ ಚಳವಳಿಗಳು ಇದನ್ನೇ ಒತ್ತಿ ಹೇಳಿವೆ. ಇದು ಸಾಹಿತ್ಯದ ಜೀವಧ್ವನಿ. ಇದನ್ನು ಕನ್ನಡ ಸಾಹಿತ್ಯ ಆದಿಕವಿ ಪಂಪನಿಂದಲೇ ಮೈಗೂಡಿಸಿಕೊಂಡಿದೆ. ಆದುನಿಕ ಕನ್ನಡ ಸಾಹಿತ್ಯ ಇದಕ್ಕೆ ಗಟ್ಟಿ ಧ್ವನಿ ಕೊಟ್ಟಿತು. ಈ ಧ್ವನಿ ಸೊರಟೂರರ ಕಥೆಗಳಲ್ಲಿಯೂ ಇದೆ. ಇದನ್ನು ತನ್ನ ಧ್ವನಿಶೈಲಿಯಾಗಿಸಿಕೊಳ್ಳಲು ಹಿಂದಿನ ಧ್ವನಿಗಳನ್ನು ಇನ್ನೂ ಸ್ಪಷ್ಟವಾಗಿ ಎದೆಯಿಂದ ಕೇಳಿಸಿಕೊಂಡರೆ, ಅವುಗಳ ನಡುವೆ ತನ್ನ ಧ್ವನಿಸ್ಥಾನವನ್ನು ಗುರುತಿಸಿಕೊಳ್ಳಲು ಅನುಕೂಲವಾಗುತ್ತದೆ. ಈಗಿನ ಕನ್ನಡ ಕಥಾ ಸಾಹಿತ್ಯದ ಕೃಷಿ ಬಯಲಿನಲ್ಲಿ ಬಹಳಷ್ಟು ಯುವಕತೆಗಾರರ ಬೇಸಾಯ ಸಾಗಿದೆ. ನೆಲ ಹಿಡಿದ ದುಡಿಮೆದಾರರಿಂದ ಒಳ್ಳೆಯ ಫಸಲು ಬರುತ್ತಿದೆ. ಸೊರಟೂರರೂ ಅಂತಹ ಬೆಳೆಗಾರನಾಗಲೆಂಬ ಆಸೆ ನನ್ನಲ್ಲಿಯೂ ಇದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_186.txt b/Kenda Sampige/article_186.txt new file mode 100644 index 0000000000000000000000000000000000000000..8c4b817889cba36c2dbd8ecd20ffbd5845ec6f22 --- /dev/null +++ b/Kenda Sampige/article_186.txt @@ -0,0 +1,35 @@ +byಕೆಂಡಸಂಪಿಗೆ|Oct 31, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಈ ಪೊಕ್ಕಣ್ಣ ಶತ ತುಂಟ, ಕಣ್ಣಲ್ಲೇ ಅವನ ತುಂಟತನ ಇಣಕುತ್ತಿತ್ತು. ಒಂದು ಕಿವಿ ನೆಟ್ಟಗೆ ಮಾಡಿ, ಮತ್ತೊಂದನ್ನು ಮಡಿಸಿದ ಅಂದರೆ ಅವನೇನೋ ತರಲೆ ಮಾಡುತ್ತಾನೆಂದು ನಮಗೆ ಖಾತ್ರಿಯಾಗಿತ್ತು. ಮಟ ಮಟ ಮಧ್ಯಾಹ್ನ ಎಣ್ಣೆ ಪಳಚಿಕೊಂಡು ಹಂಡೆತುಂಬಾ ಬೀಸಿನೀರನ್ನು ಸ್ನಾನ ಮಾಡಿ, ಒದ್ದೆ ಸೀರೆಯನ್ನುಟ್ಟು ಬರುವ ಅಜ್ಜಿಗೆ ಅಡ್ಡಲಾಗಿಯೇ ಮಲಗುತ್ತಿದ್ದ ಪೊಕ್ಕಣ್ಣ. ಅವನು ಮಲಗಬಾರದೆಂದು ಕೊಡಪಾನಗಟ್ಟಲೆ ನೀರು ಹೊಯ್ದಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ಆದರೂ ಕಾಲು ಒರೆಸುವ ಗೋಣಿಚೀಲವನ್ನೆಳೆದುಕೊಂಡು ಬೇಕಂತಲೇ ಬಚ್ಚಲಮನೆ ಬುಡದಿ ಮಲಗಿ ಸತಾಯಿಸುತ್ತಿದ್ದ ಅಂವ.ಶುಭಶ್ರೀ ಭಟ್ಟ ಲಲಿತ ಪ್ರಬಂಧಗಳ ಸಂಕಲನ “ಹಿಂದಿನ ನಿಲ್ದಾಣ” ದಿಂದ ಒಂದು ಪ್ರಬಂಧ ನಿಮ್ಮ ಓದಿಗೆ + +byಕೆಂಡಸಂಪಿಗೆ|Oct 29, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ.ದಯಾ ಗಂಗನಘಟ್ಟ ಕಥಾ ಸಂಕಲನ “ಉಪ್ಪುಚ್ಚಿ ಮುಳ್ಳು”ಗೆ ನಟರಾಜ್‌ ಬೂದಾಳು ಬರೆದ ಮುನ್ನುಡಿ + +byಕೆಂಡಸಂಪಿಗೆ|Oct 26, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ.ಶೋಭಾ ಗುನ್ನಾಪೂರ ಕಥಾ ಸಂಕಲನ “ಭೂಮಿಯ ಋಣ”ಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ + +byಪ.ನಾ.ಹಳ್ಳಿ ಹರೀಶ್ ಕುಮಾರ್|Oct 25, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ.ಸೌಜನ್ಯ ದತ್ತರಾಜ ಕವನ ಸಂಕಲನ “ಭಾವನೌಕೆಯನೇರಿ” ಕುರಿತು ಪ ನಾ ಹಳ್ಳಿ ಹರೀಶ್ ಕುಮಾರ್ ಬರಹ + +byಸಿಂಧು ಜಗನ್ನಾಥ್‌|Oct 18, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ.ತೇಜಸ್ವಿನಿ ಹೆಗಡೆ ಕಥಾ ಸಂಕಲನ “ಜೋತಯ್ಯನ ಬಿದಿರು ಬುಟ್ಟಿ”ಯ ಕುರಿತು ಸಿಂಧು ಜಗನ್ನಾಥ್‌ ಬರಹ + +byಕೆಂಡಸಂಪಿಗೆ|Oct 7, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ʻನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರʼ.ಚೈತ್ರ ಶಿವಯೋಗಿಮಠ ಕವನ ಸಂಕಲನ “ಪೆಟ್ರಿಕೋರ್‌”ಗೆ ತಾರಿಣಿ ಶುಭದಾಯಿನಿ ಬರೆದ ಮಾತುಗಳು + +byಡಾ. ರಾಜಶೇಖರ ಜಮದಂಡಿ|Oct 6, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ವ್ಯಾಸರಾಯ ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ.  ವ್ಯಾಸರಾಯ ಬಲ್ಲಾಳರ ʻಅವಿವಾಹಿತೆʼ ಕತೆಯ ಕುರಿತು ರಾಜಶೇಖರ ಜಮದಂಡಿ ಅವರು ಬರೆದ ವಿಮರ್ಶೆ ಇಲ್ಲಿದೆ. + +byಕೆ.ಆರ್.ಉಮಾದೇವಿ ಉರಾಳ|Oct 3, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ.ಮಿತ್ರಾ ವೆಂಕಟ್ರಾಜ ಅವರ ʻಪಾಚಿಗಟ್ಟಿದ ಪಾಗಾರʼ ಕಾದಂಬರಿಯ ಕುರಿತು, ಲೇಖಕಿ ಕೆ.ಆರ್.ಉಮಾದೇವಿ ಉರಾಳ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ + +byಕೆಂಡಸಂಪಿಗೆ|Sep 24, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು…ಚಂದ್ರಕಾಂತ ಪೋಕಳೆ ಅನುವಾದಿಸಿದ ಆಶಾ ಬಗೆಯವರ ಮರಾಠಿ ಕಾದಂಬರಿ “ಸೇತು” ಇಂದ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_187.txt b/Kenda Sampige/article_187.txt new file mode 100644 index 0000000000000000000000000000000000000000..f05797b20e5f3483d39e99338e976014b8f4e667 --- /dev/null +++ b/Kenda Sampige/article_187.txt @@ -0,0 +1,103 @@ +ಕವಿತೆ ಯಾಕಾಗಿ ಮತ್ತು ಯಾವಾಗ ಎಂಬ ಪ್ರಶ್ನೆಗಳನ್ನು ಕಾವ್ಯಮೀಮಾಂಸೆ ಸಾವಿರಾರು ವರ್ಷಗಳಿಂದ ಕೇಳುತ್ತಲೇ ಬಂದಿದೆ ಮತ್ತು ಅದಕ್ಕೆ ಸಮಾನಾಂತರವಾಗಿ ಕಾಲಧರ್ಮದ ನೆಲೆಯಲ್ಲಿ ಉತ್ತರಗಳನ್ನೂ ಅದು ಕಂಡುಕೊಂಡಿದೆ. ಈ ಉತ್ತರ ಸಾಪೇಕ್ಷ ಹಾಗೂ ಕಾಲಧರ್ಮ. ‘ಅದು’ ಎಂದರೆ ‘ಇದು’ ಎಂದು ಖಚಿತವಾಗಿ ಯಾರೂ ಹೇಳಲಾಗದ್ದನ್ನು ನಾವು ಒಪ್ಪಿಕೊಂಡೇ ಮುಂದುವರಿಯುತ್ತಲೇ ಬಂದಿದ್ದೇವೆ. ಇದು ನಿಗೂಢ ಪರತತ್ವವನ್ನು ಕುರಿತ ಮಾತೂ ಹೌದು. ಕಾವ್ಯವೂ ನಿಗೂಢವೇ. ಆದುದರಿಂದಲೇ ಅದು ಸೂಕ್ಷ್ಮದೇಹಿ. ಭಾವನೆಗೆ ನಿಲುಕಿಯೂ ನಿಲುಕದಂತದ್ದು. ಅದು ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಇಂಥಾ ಅನುಭಾವವನ್ನು ಪದಗಳಲ್ಲಿ ಹಿಡಿಯುವುದೂ ಆ ಕ್ಷಣದ ಸತ್ಯ ಮಾತ್ರವೇ ವಿನಾ ಅದು ಶಾಶ್ವತವೂ ಅಲ್ಲ, ಸರ್ವಗ್ರಾಹಿಯೂ ಅಲ್ಲ. ಅವರವರ ಸಂಸ್ಕಾರ ಸಾಮರ್ಥ್ಯಕ್ಕೆ ದಕ್ಕಿದ್ದಷ್ಟೇ ಪುಣ್ಯಫಲ. + +ಪ್ರತಿ ಓದು ಕೂಡ ಇಂಥಾ ಪ್ರಶ್ನೆಗಳನ್ನು ನನ್ನಲ್ಲಿ ಎತ್ತುತ್ತಲೇ ಅದರಲ್ಲಿ ನನಗೆ ದಕ್ಕಿದ್ದೆಷ್ಟು.., ಅದು ನನ್ನೊಳಗಿನ ಅರಿವಿನ ಪರದೆಯ ಸರಿಸಿದ್ದೆಷ್ಟು ಎಂದು ಕೇಳಿಕೊಳ್ಳುತ್ತೇನೆ‌. ಬಹಳ ಬಾರಿ ಈ ಬಗೆಯ ಓದು ನಿರಾಸೆಯನ್ನೂ ಖುಷಿಯನ್ನೂ ಬೆರಗನ್ನೂ ಹುಟ್ಟಿಸಿದ್ದಿದೆ. ಅಂಥಾ ಕ್ಷಣಗಳಲ್ಲಿ ಆ ಬರವಣಿಗೆಯ ಬರಹಗಾರನನ್ನು ಮೆಚ್ಚಿದ್ದೂ, ಕರುಣೆಯಿಂದ ನೋಡಿದ್ದೂ ಇದೆ. ಇದು ನನ್ನ ಮಿತಿಯೂ ಇದ್ದಿರಬಹುದೆಂಬ ಎಚ್ಚರವೂ ನನಗೆ ಇದ್ದೆ ಇದೆ; ಅದು ಸತ್ಯ ಕೂಡ. ಈ ಮಾತು ಈ ಸಂಕಲನದ ಪದ್ಯಗಳ ಕುರಿತೂ ಹೌದು. + +(ಜಿ.ಆರ್. ರೇವಣಸಿದ್ದಪ್ಪ) + +ಜಿ.ಆರ್. ರೇವಣಸಿದ್ದಪ್ಪನವರ ಇಲ್ಲಿನ ಕವಿತೆಗಳನ್ನು ಓದುತ್ತಾ ಹೋದಂತೆ ಸಾಮಾನ್ಯತೆಯಿಂದ ಅಸಾಮಾನ್ಯತೆಗೆ, ಅಮಾನವೀಯ ನೆಲೆಯಿಂದ ಮಾನವೀಯತೆಯ ನೆಲೆಗೆ ಏರುವ ಸಾಧಾರಣೀಕೃತವಾದ ಅನುಭಾವವೊಂದನ್ನು ಪ್ರತಿ ಕ‌ವಿತೆಯ ಪ್ರಭಾವಳಿಯಾಗಿ ರೂಪಿಸುವ ಕುಶಲತೆಯೊಂದು ನನಗೆ ಎದುರಾಗಿದೆ. ಇದು ಬುದ್ದಿ ಪೂರ್ವಕವಾದ ಪ್ರಕ್ರಿಯೆಯೋ ಅಥವ ಅದೊಂದು ಸಹಜ ನಡಿಗೆಯೋ ಎಂದು ಪ್ರತಿ ಪದ್ಯದ ಓದಿನ ನಂತರ ನಿಂತು ಧ್ಯಾನಿಸಿದ್ದೇನೆ. ಅದು ಅವರು ಲೋಕವನ್ನು ಮುಗ್ಧಭಾವದ ನೆಲೆಯಲ್ಲಿ ನಿಂತು ನೋಡಿದಾಗ ಅವರೊಳಗೆ ಪ್ರಕ್ಷುಬ್ಧ ಅಲೆಯನ್ನು ಎಬ್ಬಿಸಿದ್ದ ಕ್ರಿಯೆಗೆ ಪ್ರತಿಕ್ರಿಯಾರೂಪವಾದುದು ಎಂದು ಅನ್ನಿಸಿದೆ. ಆದರೆ ಅದು ಕೇವಲ ಪ್ರತಿಕ್ರಿಯೆ ಮಾತ್ರವಾಗದೆ ಪ್ರಕ್ರಿಯಾತ್ಮಕವಾದ ಚಲನೆಯನ್ನು ಹೊಂದಿರುವುದರಿಂದ ಇಡೀ ಸಂಕಲನದಲ್ಲಿ ಒಂದು ಸಾತತ್ಯತೆ ಒದಗಿ ಬಂದಿದೆ. ಇಲ್ಲಿ ಹೆಸರಿಗೆ ಹಲವು ಪದ್ಯಗಳಿದ್ದರೂ ಅದು ಒಂದೇ ಪದ್ಯದಂತೆ, ಧ್ವನಿಯಂತೆ ಭಾವಿತವಾಗುವುದು ಈ ಸಂಕಲನದ ಧನಾತ್ಮಕ ಅಂಶ. + +ಗೋಪಾಲಕೃಷ್ಣ ಅಡಿಗರ ಮಾತು ‘ಇರುವುದೆಲ್ಲವ ಬಿಟ್ಟು ಇರದುದರೆಡೆ ಸಾಗುವ…’ ಒಂದು ಪ್ರಯತ್ನದ ಆಶಯದಂತೆ ಇಲ್ಲಿಯ ಕವಿತೆಗಳನ್ನು ನಿರ್ವಚಿಸಲಾಗಿದೆ. ಅಂದರೆ ಲೋಕವನ್ನು ಅದು ಇರುವ ಹಾಗೆಯೇ ಗ್ರಹಿಸುವ, ಮತ್ತು ಅದರ ವ್ಯವಹಾರಗಳ ಮಿತಿಗಳನ್ನು ಗುರುತಿಸುತ್ತಾ ಅದರಾಚೆಗೆ ದಾಟಿಕೊಳ್ಳುವ ಒಂದು ಆಶಯವನ್ನು, ತುಡಿತವನ್ನು ಇಲ್ಲಿನ ಬಹುತೇಕ ಪದ್ಯಗಳು ಮಾಡುತ್ತವೆ. ಗೃಹೀತಗಳಾಚೆ ಹೋಗಬೇಕೆನ್ನುವ ವಾಂಛೆಯು ರಚನೆಗಳನ್ನು ನಿರಚನಗೊಳಿಸಲೇಬೇಕೆನ್ನುವ ಬೌದ್ಧಮೀಮಾಂಸೆಯ ತಾತ್ವಿಕತೆಗೆ ತೀರಾ ಹತ್ತಿರವಾದುದು. ಇದೆಲ್ಲವನ್ನು ನಿರ್ವಹಿಸುವಾಗ ಆಪ್ತತೆಯಿಂದ ಗೆಳೆಯನಂತೆ ಮಾತಾಡುವ ‘ಮಿತ್ರಸಂಹಿತೆ’ ಭಾವಸ್ಥಿತಿಯನ್ನು ಇವರ ಪದ್ಯಗಳು ಹೊಂದಿರುವುದರಿಂದ ಸಹ್ಯ ಓದಿಗೆ; ಹೃದ್ಯ ಸಂವೇದನೆಗೆ ಕಾರಣೀಭೂತವಾಗುತ್ತವೆ. ಇದು ಕವಿಯೊಬ್ಬನ ನಿಜದ ನಡಿಗೆಯನ್ನು ಪ್ರಕಟಿಸುವಂತಾದ್ದು. ಆದುದರಿಂದ ಈ ಪದ್ಯಗಳ ಪಿಸುದನಿಯನ್ನು ಆಲಿಸಿ ಮುನ್ನಡೆದಾಗ ಓದು ಸಾರ್ಥಕವೆನ್ನಿಸುತ್ತದೆ. + +ಹತ್ತಿರ ಸೆಳೆದೂದೂರ ನಿಲ್ಲುವ,ದೂರ ಸರಿದೂಹತ್ತಿರವಾಗುವ,ಮೋಡಿಯೀಗಸಾಕೆನಿಸಿದೆ(ಇರುವುದೊಂದೇ ಭೂಮಿಯ ಮೇಲೆ) + +ಒಳಗೂ ಬೆಂಕಿ;ಹೊರಗೂ ಬೆಂಕಿ;ನಡುವೆ ಆತ್ಮದ ಆರ್ತನಾದ.(ಬೆಂಕಿ) + +ಈ ಹೊತ್ತುನಾನು ಜೀವಂತವಾಗಿದ್ದೇನೆ.ನಿಮ್ಮ ನಾಗರಿಕತೆಯಗಂಧವಿಲ್ಲದನಾನೋರ್ವ ಮನುಷ್ಯ ಮಾತ್ರ.(ಕೋರಿಕೆ) + +ಲೋಕದ ದಂದುಗ ಮತ್ತು ಅದರ ಮಿತಿಗಳನ್ನು ಅತಿ ಸೂಕ್ಷ್ಮವಾಗಿ ಗ್ರಹಿಸುತ್ತ ಸೋತಭಾವದಲ್ಲಿ ವ್ಯಕ್ತವಾಗುವ ಭಾವವೇ ವ್ಯಕ್ತಿಯನ್ನು ದೃಢಗೊಳಿಸುವ ನಿರ್ಧಾರವಾಗಿ ಬದಲಾಗುವುದು ಧನಾತ್ಮಕ ಅಂಶವೇ. ತನ್ನೊಳಗಿನ ತಾಕಲಾಟಗಳು ಮನುಷ್ಯನನ್ನು ಅರಿವಿನ ಎತ್ತರಕ್ಕೆ ಕೊಂಡೊಯ್ಯುವ ಸೋಪಾನವಾದಾಗಲೇ ನಿಜ ಬದುಕಿನ ದರ್ಶನವಾಗುವುದು. ಆ ನಂಬುಗೆ ಕವಿಯಲ್ಲಿ ಗಾಢವಾಗಿರುವುದರಿಂದಲೇ ಲೋಕದ ಜಂಜಡತೆಯಿಂದ ದೂರ ನಿಲ್ಲುವ ‘ಕೇವಲ ಮನುಷ್ಯನಾಗುವ’ ನಿರ್ವಾಣದ ಮಾತುಗಳನ್ನು ಆಡುತ್ತಾನೆ. + +ಮನುಷ್ಯನ ವರ್ತನೆ ಈತನಿಗೆ ಅಪರಿಚಿತವೇನಲ್ಲ. ಏಕೆಂದರೆ ಈತನೊಬ್ಬ ಸೂಕ್ಷ್ಮ ಸಂವೇದನೆಯ ಸೃಜನಶೀಲ ವ್ಯಕ್ತಿ. ಅದಕ್ಕೆಂದೆ ಈತ ಹೇಳುತ್ತಾನೆಈಗೀಗಹೃದಯತುಂಬಿಬರಮಾಡಿಕೊಳ್ಳುವುದುಆಸಹಜವಾಗಿದೆ!(ಈಗೀಗ) + +ಶ್ರೇಷ್ಠ ನಿಕೃಷ್ಟಚಿಕ್ಕದು ದೊಡ್ಡವುಗಳೆಲ್ಲಕರಗಿಹೋಗಿರುವಾಗಈ ನಾನು ಅಷ್ಟೇ ತಾನೇ?(ಕೋರಿಕೆ) + +ತನ್ನೊಳಗೇ ನಡೆಸುವ ಆತ್ಮ ಸಂವಾದದಂತೆ ಕಾಣುವ ಈ ಮಾತುಗಳಲ್ಲಿ ‘ನಾನು’ ಎನ್ನುವುದು ಕರಗಿ ಹೋಗದೆ ಇರುವತನಕ ಈ ಲೋಕದ ವ್ಯಾಮೋಹ ತೀರುವುದಿಲ್ಲ. ನಾನು, ನನ್ನದು, ನಮ್ಮವರು ಎಂಬ ಭಾವ ಅಳಿದಾಗಲೇ ನಿಜದ ಸುಖ ಕಂಡುಕೊಳ್ಳಲು ಸಾಧ್ಯ. ಇಲ್ಲವೆಂದರೆ ದಿನವೂ ದುಃಖಿಸುತ್ತಾ, ಹತಾಶನಾಗುತ್ತ ಹೋಗುವುದೇ ಬದುಕಿನ ರೀತಿಯಾಗಿ ಬಿಡುತ್ತದೆ. ಅದಕ್ಕೆ ತಾನೇ ಅಂದುಕೊಳ್ಳುತ್ತಾನೆ… + +ಎಷ್ಟಂತ ಹನಿಯ ಹನಿಸಿಕಣ್ಣ ಕಡಾಯಿಯಬತ್ತಿಸಿಕೊಳ್ಳುವೆ?(ಇನ್ನಿಲ್ಲವಾದಾಗ)ಇದ್ದೂ ಇಲ್ಲದಂತೆಇಲ್ಲದೆಯೂ ಇರುವಂತೆ(ಇನ್ನಿಲ್ಲವಾದಾಗ) + +ನಿರ್ಲಿಪ್ತ ಭಾವಸ್ಥಿತಿಗೇರುವ ತನಕ ಇದಕ್ಕೆ ಬಿಡುಗಡೆಯಿಲ್ಲ ಎಂಬ ಅರಿವನ್ನು ಕಂಡುಕೊಳ್ಳುವ ಕವಿಗೆ ಇದು ಕಷ್ಟದ ದಾರಿಯೆಂಬುದೂ ತಿಳಿಯದಿಲ್ಲ.ಅದು ಸರಾಗವಾಗಿ ನಡೆಯಲ್ಲ,ಮತ್ತೆ ಮತ್ತೆ ಚಲಿಸುತ್ತೇನೆ.ಓಡುತ್ತಿಲ್ಲ ನಾನು;ತೆವಳುತ್ತಲೂ ಇಲ್ಲ;ನಡೆಯುತ್ತಿದ್ದೇನೆ,ನನ್ನದೇ ವೇಗದಲ್ಲಿ.ನಡೆಯುತ್ತಲೇ ಇರುತ್ತೇನೆ,ಗಮ್ಯವ ಸೇರುವ ತನಕಇಲ್ಲಾ ಕಾಲುಗಳು ಸೋಲುವ ತನಕ.(ಎಲ್ಲಿಂದಲೋ ಬಂದವನು) + +ಅದಮ್ಯವಾದ ಈ ನಂಬುಗೆಯ ಹಾದಿಯಲ್ಲಿ ವಿವೇಚನಾಯುತವಾಗಿ, ಸಂಯಮದಿಂದ ಬದುಕಿನ ನಡೆಯನ್ನು ಗಮನಿಸುವ ಪ್ರಯತ್ನ ಮುಂದಿನದು. ಅಲ್ಲೂ ಪರಂಪರೆಯ ವಿವೇಚನೆಯೊಂದಿಗೆ ಹೊರಡುವಂತಾದ್ದು. + +ಹಾಗೆ ಬಂದುದು,ಇಂತು ನಿಂದುದು,ಇಲ್ಲಿಗೇ ಅಂತ ಕಾಣುವುದೇ?(ಇರುವುದೊಂದೇ ಭೂಮಿಯ ಮೇಲೆ) + +ಅಂಟು ಆರಿ,ನಂಟು ಕಳಚಿ,ಸೂಕ್ಷ್ಮದೇಹಿಯಾದರಿಲ್ಲ(ಇರುವುದೊಂದೇ ಭೂಮಿಯ ಮೇಲೆ) + + + +ತತ್ಕಾಲಿನತೆಯನ್ನೇ ಪರಮವೆಂಬ ಮಾಯಕ ಕನ್ನಡಿಯ ಮುಂದೆ ನಿಂತು ನಟಿಸುವುದರಾಚೆಗೆ, ಬಿಂಬರಹಿತರಾಗಿ-ನಿರಾಕಾರ-ಸ್ಥಿತಿ ತಲುಪಬೇಕಾದ ಗಮ್ಯವನ್ನು ಶ್ರಮಣ ಪರಂಪರೆಗಳೂ ಸೇರಿದಂತೆ ಭಾರತೀಯ ತತ್ವಚಿಂತನೆಗಳು ಮುಂದಿರಿಸಿರುವ ಅರಿವು ಈ ಕವಿತೆಯ ನಾಯಕನಿಗೆ ಬಂದಿರುವಂತಾದ್ದೆ. ಮತ್ತು ಸಕಲ ಚರಾಚರಗಳಲ್ಲಿ ಸಾಮ್ಯ ದೃಷ್ಟಿಗತವಾಗುವವರೆಗೂ ಈ ಪಯಣ ಕೊನೆಗೊಳ್ಳಲಾರದೆಂಬ ಅರಿವು ಬಂದು ಹೋಗುವುದು ಅನೇಕ ಬಾರಿ. + +ದೇವರ ಕುಲುಮೆಯಲ್ಲಿಸೃಜಿಸಿದಅಗಣಿತ ಜೀವಿಗಳಲ್ಲಿನಾಯಿಯೂ ಒಂದು;ಮನುಷ್ಯನೂ ಹೌದು!(ನಾಯಿಪಾಡು) + +ಇದೆಲ್ಲವೂ ಸಾಧ್ಯವಾಗುವುದು ತನ್ನದೇ ಅರಿವಿನ ಮಾರ್ಗದಲ್ಲಿ, ಬೆಳಕಿನ ಹಾದಿಯಲ್ಲಿ ಮುನ್ನಡೆದಾಗ. ಯಾರದೋ ಮಾತು, ಹೇಳಿಕೆಗಳೂ ನನ್ನ ‘ಬಾಳನೌಕೆಗೆ ಬೆಳಕಾಗದು.’ ತಾನೇ ತನ್ನ ಹಾದಿಯ ದಾತಾರನಾದಾಗ ಮಾತ್ರ ಸಾಧ್ಯ ಎನ್ನುವ ತಿಳುವಳಿಕೆಯ ಬೆಳಕಿನಲ್ಲಿ ಈ ನಾಯಕ ಹೆಜ್ಜೆ ಇರಿಸುತ್ತಾನೆ. ಬೇರೆಯವರ ಹಾದಿಯ ಅನುಕರಿಸಬಹುದು ಆದರೆ, ಅದು ತಾನೇ ಕೈಗೊಳ್ಳುವ, ತನ್ನ ಅರಿವಿನಿಂದಲೇ ಮೂಡಿದ ನಿಲುವಾಗಿರುವುದಿಲ್ಲ… + +ಪಲಾಯನಗೈಯಬಹುದುಸಿದ್ಧಾರ್ಥ ಮಧ್ಯ ರಾತ್ರಿಯಲ್ಲಿಎದ್ದು ಹೋದಂತೆ(ಪಲಾಯನ) + +ಸಿದ್ಧಾರ್ಥ ತಥಾಗತನಾಗುವ ಮೊದಲು ತಾನು ಕಂಡುಕೊಂಡ ಹಾದಿ ಇದು. ಇದು ತನಗೂ ಅನ್ವಯವಾಗುವುದು ಯಾವಾಗ ಎಂದರೆ, ‘ಸ್ವತಃ ಬುದ್ಧನಾಗದೆ’ನಮ್ಮನಮ್ಮಬುದ್ಧರು, ಬಸವರು, ಅಂಬೇಡ್ಕರ್ಗಳು,ಗಾಂಧಿಗಳುತಮ್ಮತಮ್ಮಲ್ಲೇಘರ್ಷಣೆಗಿಳಿದಾಗಬುದ್ಧ, ಬಸವ, ಅಂಬೇಡ್ಕರ್, ಗಾಂಧಿ,ನಿಜಕ್ಕೂಹೋಗುತ್ತಾರೆ!(ಬುದ್ಧ, ಬಸವ…..) + +ಬರಿದೇ ಬಾಯಚಪಲಕ್ಕೆ ತತ್ವಾರಾಧನೆ, ಭಜನೆಮಾಡುತ್ತಾ ನಿಲ್ಲದೆ ಇವೆಲ್ಲ ಬಂಧನಗಳ ಕಳಚುವ ಪ್ರಕ್ರಿಯೆ ತನ್ನೊಳಗೇ ಮಥಿಸಿದಾಗ ತನ್ನ ದಾರಿಗೆ ಹೊಸ ಪರಿದಿಯೊಂದು ಅನಾವರಣವಾಗುತ್ತದೆ – ಎಂಬ ಚಿಂತನೆ ಕವಿಯ ನಡೆಯ ಸಾರ್ಥಕತೆಯನ್ನು ಸೂಚಿಸುತ್ತದೆ. + +(ಡಾ. ಲೋಕೇಶ್ ಅಗಸನಕಟ್ಟೆ) + +ಅಂತಿಮವಾಗಿ ಯಾವ ಬರವಣಿಗೆಯಾಗಲಿ, ಬದುಕಾಗಲಿ ಅದು ತನ್ನನ್ನು ತಾನು ಕಂಡುಕೊಂಡು ಹಾಗೆ ಮುನ್ನಡೆಯುವ ಒಂದು ಕ್ರಿಯೆ. ಅದು ಸಾರ್ಥಕ. ಈ ಎಚ್ಚರ ಇಡೀ ಸಂಕಲನದುದ್ದಕ್ಕೂ ಮೈಚಾಚಿಕೊಂಡಿದೆ.’ಸಾಗರ’ ‘ಅಯೋಮಯ’ ‘ಪ್ರಕೃತಿ’ ‘ಅಪರಿಚಿತರು’ ‘ಮಗುವಾದರೂ ಆಗದೇ?’ ‘ಯಂತ್ರಜೀವಿ’ ‘ಬೆಂಕಿ’ ‘ಎಳೆಗಾಯಿ’ – ಪದ್ಯಗಳನ್ನು ಈ ಹಿನ್ನೆಲೆಯಲ್ಲಿ ಎದುರಾಗಬಹುದು. + +ಮನುಷ್ಯನಾದರೆ ಸಾಲದೇ?ಮಗುವಾದರೂ ಆಗದೇ?(ಮಗುವಾದರೂ ಆಗದೇ?) + +ಮಗುವಿನ ಮುಗ್ಧತೆಯ ಸಂಪಾದಿಸುವವರೆಗೂ ಈ ಸಾಧನೆಯ ಯಾನ ನಿರಂತರವಾಗಿ ಮುಂದುವರಿಯುತ್ತಿರಬೇಕು. ಲೋಕದ ಉಪಾಧಿಗಳ ಅಂಟಿನಿಂದ ಬಿಡುಗಡೆಯಾಗುವ ಹಾದಿಯಲ್ಲಿ ಈ ಕವಿ ದಿಟ್ಟ ಹೆಜ್ಜೆ ಇರಿಸಿದ್ದಾನೆ ಎಂಬುದು ಖುಷಿಯ ಸಂಗತಿ. ಅಲ್ಲಲ್ಲಿ ಹಳಹಳಿಕೆಯ ಧ್ವನಿಯೂ, ತಿರಸ್ಕಾರ ಭಾವವೂ, ಆಕ್ರೋಶವೂ ವ್ಯಕ್ತವಾಗಿದೆಯಾದರೂ ಅವರ ತಾತ್ವಿಕ ಹಾದಿಗೆ ಅವು ತೊಡಕಾಗಿ ಉಳಿದಿಲ್ಲ. ನಿರ್ವಾಣನಾಗುವುದರಲ್ಲಿ ಅದಮ್ಯ ಸುಖವಿದೆ ಎಂದು ಸಾರುವ ಅವರ ಕವಿತೆಗಳು ಈ ಸಂಕಲನಕ್ಕೆ ಇಟ್ಟ ಹೆಸರಿಗೆ ಅನ್ವರ್ಥವಾಗಿವೆ. + +ಒಬ್ಬರಕೈಕುಲುಕುವುದುಆಲಂಗಿಸುವುದುಹಗುರಾಗುವುದುಎಷ್ಟು ಸಲೀಸು!(ಅಪರಿಚಿತರು) + + + +ಇಂತಹ ಸಂಕಲನ ನೀಡಿದ ಜಿ.ಆರ್. ರೇವಣಸಿದ್ದಪ್ಪನವರ ಕಾವ್ಯಯಾನ ಇನ್ನಷ್ಟು ಕಾಣ್ಕೆಗಳನ್ನು ನೀಡಲೆಂದು ಆಶಿಸುತ್ತೇನೆ.ಡಾ.ಲೋಕೇಶ್ ಅಗಸನಕಟ್ಟೆ + +ಜಿ.ಆರ್. ರೇವಣಸಿದ್ದಪ್ಪನವರ ಕೆಲವು ಕವಿತೆಗಳು + +ಇನ್ನಿಲ್ಲವಾದಾಗ + +ಇಂದು,ನಾಳೆ,ಇಲ್ಲಾ ನಾಳಿದ್ದು,ಈ ಕ್ಷಣ,ಮರುಕ್ಷಣ,ಅಥವಾಆ ಒಂದು ಕ್ಷಣನಾನು ಇಲ್ಲವಾದಾಗಎಲ್ಲಾ ಇರುವಂತೆಎಲ್ಲವೂ ಸಾಂಗವಾಗಿಸಾಗುತ್ತವೆ. + +ಲೋಕದ ಮೋಟಾರುಯಾರೊಬ್ಬರ ಉಸಿರುಹೋದಾಗಲೂಪಂಕ್ಚರ್ ಆಗುವುದಿಲ್ಲ;ಯಾರೊಬ್ಬರ ಕಣ್ಣೀರಿಗೂಪ್ರವಾಹವಾಗುವ ಶಕ್ತಿಯಿಲ್ಲ;ಯಾರೊಬ್ಬರ ನಿಟ್ಟುಸಿರುಬಿರುಗಾಳಿ ಎಬ್ಬಿಸುವುದಿಲ್ಲ;ಯಾರೊಬ್ಬರ ಹೃದಯಛಿದ್ರವಾಗಿಭೂಕಂಪನವಾಗುವುದಿಲ್ಲ. + +ಗತಿಸಿದವರಿಗೆಬದುಕಿದವರುಸಾಥ್ ಕೊಡುವಂತಿದ್ದರೆಪಂಚಭೂತಗಳೂಗುದ್ದು ಸೇರುತ್ತಿದ್ದವು.ಎಷ್ಟಂತ ಹನಿಯ ಹನಿಸಿಕಣ್ಣ ಕಡಾಯಿಯಬತ್ತಿಸಿಕೊಳ್ಳುವೆ?ಎದೆ ನಗಾರಿಯಎನಿತು ಬಡಿದುರೋಧಿಸುವೇ?ಎಷ್ಟು ಕಾಲನಿನ್ನೊಳಗಿನನನ್ನ ನೆನಪಿನ ಗಿಡಕ್ಕೆನೀರೆರೆದುಹಸಿರಾಗಿಡುವೆ?ಸತ್ತವರಿಗೆಲ್ಲಾಸ್ಮಾರಕ ಕಟ್ಟಿಸುವಂತಿದ್ದರೆಬದುಕುವವರಿಗೆಜಾಗವೇ ಇರುತ್ತಿರಲಿಲ್ಲ. + +ತನುತೊರೆದವನಆಸೆ ನಿರಾಸೆನೋವು ನಲಿವುದುಗುಡ ದುಮ್ಮಾನಅವನೊಂದಿಗೇಮಸಣ ಸೇರಿಇರುವವರಆಡಿಸುತ್ತವೆಇನ್ನಿಲ್ಲದಂತೆ.ಇದ್ದೂ ಇಲ್ಲದಂತೆಇಲ್ಲದೆಯೂ ಇರುವಂತೆಭಾಸವಾಗುವಮಾಯಕ ಜಗದಿಅಂತೆಯೇಒಪ್ಪಿಕೊಂಡುಅಪ್ಪಿಕೊಂಡುಮುಪ್ಪುರಿಗೊಳ್ಳಬೇಕು. + +ಜ್ಯೋತಿರ್ವರ್ಷಗಳ ದೂರದಲ್ಲಿಇರುವುದಅರುಹುಹರಿಲ್ಲ;ಜ್ಯೋತಿರ್ವರ್ಷಗಳುಉರುಳುರುಳಿ ಪೋಗಲುಏನಿರ್ಪುದೋ ಬಲ್ಲವರಿಲ್ಲ;ಇಂದಿರುವುದೇನೋ ಒಂದುಆ ಒಂದರೊಳಗೊಂದಾಗಿಬಾಳಬೇಕು ಎಂದೂ. + +*** + +ಇವಳು ಸುಳಿದಾಗ + +ಇವಳು ಸುಳಿದಾಗಕಾಮ ಕೆರಳುವುದಿಲ್ಲ;ಮೋಹ ಸೆಳೆಯುವುದಿಲ್ಲ;ಕೈಮುಗಿಯಬೇಕೆಂಬ ಭಾವ. + +ಇವಳು ಮುಖಾಮುಖಿಯಾದಾಗಮಾತು ಹೊರಡುವುದಿಲ್ಲ;ಮನವು ಕಲಕುವುದಿಲ್ಲ;ಮೌನದಾನಂದದನುಭವ. + +ಇವಳು ಹಾಜರಾದಾಗಕತ್ತಲು ಕವಿಯುವುದಿಲ್ಲ;ಬೆಳಕು ಸರಿಯುವುದಿಲ್ಲ;ಪರಂಜ್ಯೋತಿಯ ಭವ್ಯ ಪ್ರಸರಣ. + +ಇವಳು ಪ್ರತ್ಯಕ್ಷವಾದಾಗದೇಹ ಬಾಧಿಸುವುದಿಲ್ಲ;ಪ್ರಪಂಚ ಕಾಡಿಸುವುದಿಲ್ಲ;ಇದುವೆ ದಿವ್ಯ ಶಕ್ತಿಯ ಭವ್ಯ ಸನ್ನಿಧಾನ. + +*** + +ಅಪರಿಚಿತರು + +ಇವ ಬಾರಿನಲ್ಲಿ ಕುಳಿತುಬೀರು ಹೀರುತ್ತಿದ್ದ.ಎದುರು ಕುಳಿತಿದ್ದಅಪರಿಚಿತ ಕುಡುಕನೊಬ್ಬಪರಿಚಿತ ನಗೆ ನಕ್ಕುಒಂದು ಸಿಗರೇಟಿಗೆಬೇಡಿಕೆ ಇಟ್ಟ.ಬೇಡಿದವನುಭಿಕಾರಿಯಾಗಿರಲಿಲ್ಲ.ಬಾಲ್ಯದ ಸ್ನೇಹಿತನಿಗೆಕೊಡುವಂತೆಇವ ಅವಗೆಸಿಗರೇಟೊಂದ ಕೊಟ್ಟುಪುಳಕಿತನಾದ. + +ಸುರುಳಿಯಾಗಿ ತೇಲುತ್ತಿದ್ದಹೊಗೆಯಂತೆ ಹರಿಯತೊಡಗಿತ್ತುಮಾತಿನ ಲಹರಿ ಈರ್ವರ ಮಧ್ಯೆ.ಅವರ ಮಾತಿನಲ್ಲಿಬಂದು ಹೋದರುಅವರವರಹೆಂಡತಿ ಮಕ್ಕಳುಬಂಧು ಬಳಗ;ಬಂದು ಹೋದವುವೃತ್ತಿ ಪ್ರವೃತ್ತಿ ಎಲ್ಲಾ. + +ಕೊನೆಯ ಗುಟುಕುಕುಡಿದು ಇವನು ಮೇಲೆದ್ದಾಗಅವನು ಮರೆಯಲಿಲ್ಲಹುಷಾರಾಗಿ ಹೋಗಿರೆಂದುಹೇಳಲುಮತ್ತೆ ಸಿಗೋಣವೆಂದುಕೈಕುಲುಕಲು.ಮಂದ ಬೆಳಕಿನಲ್ಲಿಮನುಷ್ಯತ್ವಹೇಗೆ ತೆರೆದುಕೊಳ್ಳುತ್ತದೆ ನೋಡಿ! + +ಒಬ್ಬರಕೈಕುಲುಕುವುದುಆಲಂಗಿಸುವುದುಹಗುರಾಗುವುದುಎಷ್ಟು ಸಲೀಸು! + +ಒಮ್ಮೊಮ್ಮೆಅಂದುಕೊಳ್ಳುತ್ತೇನೆರಣರಂಗದಲ್ಲಿಎದುರಾಗುವ ಅಪರಿಚಿತರುತಮ್ಮತಮ್ಮಬಂದೂಕು ಬದಿಗಿಟ್ಟುಪರಸ್ಪರಸುಖದುಃಖವಿಚಾರಿಸುವಂತಾದರೆಪಾಪಾಸ್ ಕಳ್ಳಿಯ ಜಾಗದಲ್ಲಿಗುಲಾಬಿ ನಳನಳಿಸುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_188.txt b/Kenda Sampige/article_188.txt new file mode 100644 index 0000000000000000000000000000000000000000..a72201ff74ef6763fe927931a2d003b901365765 --- /dev/null +++ b/Kenda Sampige/article_188.txt @@ -0,0 +1,35 @@ +ಕನ್ನಡ ಸಾಹಿತ್ಯ ಚರಿತ್ರೆಯನ್ನು ಅವಲೋಕಿಸಿದಾಗ ಚಂಪೂ ಕಾವ್ಯ, ಷಟ್ಪದಿ, ಹರಿಹರನ ರಗಳೆ.. ಇವುಗಳಿಂದ ಬರೆದ ಕಾವ್ಯಗಳೇ ಎದುರಾಗುತ್ತವೆ. ‘ವಡ್ಡಾರಾಧನೆ’ಯಂತಹ ಕಥೆ ಹೇಳುವ ಗದ್ಯ ಕೃತಿಗಳ ಸಂಖ್ಯೆ ಕಡಿಮೆ. ಈ ಮಹಾಕಾವ್ಯಗಳು ಕಥೆಯನ್ನೇ ಹೇಳುತ್ತವಾದರೂ ಅವು ಕಾವ್ಯ ಪ್ರಕಾರದ ಕೃತಿಗಳು. ಸಾಹಿತ್ಯದಲ್ಲಿ ಬರೀ ಕಾವ್ಯವೇ ತುಂಬಿದ್ದನ್ನು ಕಂಡು ಮುದ್ದಣ ‘ಪದ್ಯಂ ವಧ್ಯಂ, ಗದ್ಯಂ ಹೃದ್ಯಂ’ ಎಂದು ಹೇಳಿದ್ದಾನೆ. + +ಗದ್ಯದಲ್ಲಿ ಕಥೆ ಹೇಳಿದವರು ‘ವಡ್ಡಾರಾಧನೆ’ ಶಿವಕೋಟ್ಯಾಚಾರ್ಯ ,’ಚಾವುಂಡರಾಯಪುರಾಣ’ದ ಚಾವುಂಡರಾಯ, ‘ಜೀವಸಂಬೋಧನಂ’ ಬರೆದ ಬಂಧುವರ್ಮ, ‘ಧರ್ಮಾಮೃತ’ ದ ನಯಸೇನ, ‘ಸಮಯ ಪರೀಕ್ಷೆ’ಯ ಬ್ರಹ್ಮಶಿವ.. ಹೀಗೆ ಕೆಲವು ಜನ ಮಾತ್ರ. + +(ವಸಂತಕುಮಾರ್ ಕಲ್ಯಾಣಿ) + +ಕಥೆಗಳಿಗೆ ತಮ್ಮದೇ ಆದ ವೈಶಿಷ್ಟ್ಯ, ಮೆಚ್ಚುವ ಓದುಗರು ಇದ್ದೇ ಇದ್ದಾರೆ. ‘ಜಾನಪದ ಕಥೆಗಳು’, ರಾಜಕುಮಾರರಿಗೆ ಶಿಕ್ಷಣ ನೀಡಿದ ‘ಪಂಚತಂತ್ರ’ ಕಥೆಗಳು, ತೆನಾಲಿ ರಾಮನ ಕತೆಗಳು, ಶಿವಶರಣರ ಕಥೆಗಳು.. ಇವೆಲ್ಲ ಕಥಾ ಸಾಹಿತ್ಯಕ್ಕೆ ಮೆರಗುಕೊಟ್ಟಿವೆ. ಆಧುನಿಕ ಕನ್ನಡ ಕಥಾ ಸಾಹಿತ್ಯ ಇಪ್ಪತ್ತನೆಯ ಶತಮಾನದಲ್ಲಿ ಒಂದು ನಿರ್ದಿಷ್ಟ ರೂಪವನ್ನು ತಾಳಿತು ಎನ್ನಬಹುದು. 1920ರಲ್ಲಿ ಪ್ರಕಟವಾದ ಮಾಸ್ತಿಯವರ ಸಣ್ಣ ಕತೆಗಳಿಂದ ಆಧುನಿಕ ಕಥಾ ಸಾಹಿತ್ಯದ ಬಾಗಿಲು ತೆರೆಯಿತು. + +ಸಣ್ಣಕತೆಗಳನ್ನು ಅಪಾರ ಆಸಕ್ತಿಯಿಂದ ಓದುತ್ತಲೇ ಬೆಳೆದು, ಸಣ್ಣ ಕಥೆಗಳನ್ನು ಬರೆಯುವ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟವರು- ವಸಂತಕುಮಾರ ಕಲ್ಯಾಣಿ. ಇವರು ಮೂಲತಃ ಕರಾವಳಿಯ ಕಾರ್ಕಳದವರಾದರೂ, ಬೆಳೆಸಿ, ಬದುಕನ್ನು ಕಟ್ಟಿ ಕೊಟ್ಟ ಬೆಂಗಳೂರು ನಗರ, ಇವರ ಕಾರ್ಯಕ್ಷೇತ್ರ. ಜಯಂತ ಕಾಯ್ಕಿಣಿಯವರು, ಮುಂಬಯಿಯ ಮಧ್ಯಮ ವರ್ಗದ ಕಾರ್ಮಿಕರ ಬದುಕನ್ನು, ತಮ್ಮ ಕಥೆಗಳಲ್ಲಿ ಕಟ್ಟಿಕೊಟ್ಟಂತೆ, ‘ವಸಂತಕುಮಾರ್ ಕಲ್ಯಾಣಿ’ ಯವರು ಬೆಂಗಳೂರು ನಗರದ, ಕಾರ್ಮಿಕ, ಮಧ್ಯಮ, ಕೆಳಮಧ್ಯಮ ಜನರ ಬದುಕನ್ನು ತಮ್ಮ ಕಥೆಗಳ ವಸ್ತುವಾಗಿಸಿಕೊಂಡಿದ್ದಾರೆ. + +“ಪಟ್ಟ ಪಾಡೆಲ್ಲವು ಹುಟ್ಟು ಹಾಡಾಗಿ…” ಎಂಬಂತೆ ಇವರು ಕಂಡ ಬದುಕೆಲ್ಲ ಚೆಂದದ ಕಥೆಗಳಾಗಿ ಅರಳಿವೆ. 2012ರಲ್ಲಿ’ ಕಾಂಚನ ಮಿಣಮಿಣ’ ಕಥಾ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಹೆಜ್ಜೆಯಿಟ್ಟ ಅವರು, ಇದೀಗ ಎರಡನೆಯ ಕಥಾಸಂಕಲನ ‘ಪರ್ಯಾಪ್ತ ಮತ್ತು ಇತರ ಕಥೆಗಳು…” ಕೃತಿಯನ್ನು ಹೊರತರುತ್ತಿದ್ದಾರೆ. ಇಪ್ಪತ್ತೊಂದು ಕಥೆಗಳು ಈ ಕಥಾಸಂಕಲನದಲ್ಲಿವೆ. ಬೆಂಗಳೂರು ನಗರದ ಕಾರ್ಮಿಕ ವರ್ಗ ಮಧ್ಯಮ ವರ್ಗ ಕೆಳ ಮಧ್ಯಮವರ್ಗ ಮತ್ತು ಕೊಳಗೇರಿಯ ಜನರ ಬದುಕನ್ನು ಅವರು ಅತ್ಯಂತ ಸಹಜವಾಗಿ ನಿರೂಪಿಸುತ್ತಾರೆ. ಅವರು ನಿರೂಪಕರಾಗಿ ಅವರ ಕಥೆಗಳ ಪಾತ್ರಗಳು ತಮ್ಮ ಬದುಕು, ಬವಣೆ, ಶೋಷಣೆ, ಹೋರಾಟ.. ಎಲ್ಲವನ್ನೂ ಸಹಜವಾಗಿ ತಾವಾಗಿ ಬಂದು ಹೇಳುತ್ತವೆ. + +ಇಲ್ಲಿನ ಕತೆಗಳು, ಅತ್ಯಂತ ಆಳಕ್ಕಿಳಿದು ಮಾನಸಿಕ ಹೋರಾಟ, ತುಮುಲಗಳನ್ನು ಹೇಳಿಕೊಳ್ಳುವುದಿಲ್ಲ. ಹೊಸಬಗೆಯ ಕಥಾತಂತ್ರ, ಧ್ವನಿ, ಇವುಗಳ ತಂಟೆಗೆ ಹೋಗದೆ, ಸಹಜವಾಗಿ ಮತ್ತು ನೇರವಾಗಿ, ತಮ್ಮ ಸುತ್ತಮುತ್ತಲಿನ, ಅಕ್ಕಪಕ್ಕದ ಮನೆಗಳ ಜನರ, ಬದುಕು, ಹೋರಾಟ, ಶೋಷಣೆ, ಬವಣೆಗಳನ್ನು ಚಿತ್ರಿಸುತ್ತಾ.. ಆಧುನಿಕ ಕಾಲದ, ಬೆಂಗಳೂರು ನಗರದ, ಇತ್ತೀಚಿನ ದಶಕಗಳ ಜನಸಾಮಾನ್ಯರ, ತವಕ-ತಲ್ಲಣಗಳನ್ನು, ಹೋರಾಟಗಳನ್ನು ಬಿಂಬಿಸಿವೆ. ಇದು ಅವರ ಕಥೆಗಳ ಮಹತ್ತ್ವವನ್ನು ಹೆಚ್ಚಿಸಿದೆ. ಕಥೆಗಳ ವಸ್ತು ಪ್ರಬುದ್ಧವಾಗಿದ್ದರೂ, ಕಥೆಗಾರರು ತಾವು ಪಾತ್ರವಾಗದೆ, ಹೊರಗೆ ನಿಂತು ಕತೆಗಳನ್ನು ಹೇಳುವ ಕ್ರಮ ಮೆಚ್ಚುಗೆಗೆ ಪಾತ್ರವಾದರೂ, ಇದರಿಂದ ‘ಆಳಕ್ಕಿಳಿಯದೆ ಶ್ರೇಷ್ಠ ಕಥೆಯಾಗುವ ಅವಕಾಶ ತಪ್ಪಿದೆ’ ಎನಿಸುತ್ತದೆ. ಆದರೂ ಈ ಕತೆಗಳು ಕಾರ್ಮಿಕ ಜನರ ಬದುಕನ್ನು, ಅವರ ಆಸೆ, ಬದುಕು, ಶೋಷಣೆ, ಸ್ವಾರ್ಥ, ಹೋರಾಟ.. ಎಲ್ಲವನ್ನೂ ಕಟ್ಟಿಕೊಡುವಲ್ಲಿ ಸಫಲವಾಗಿರುವುದು ಸತ್ಯ. + +‘ಪರ್ಯಾಪ್ತ’ ಕಥೆ ಈ ಸಂಕಲನದ ಉತ್ತಮ ಕಥೆಗಳಲ್ಲೊಂದು. ಆಧ್ಯಾತ್ಮದ ಪುಸ್ತಕಗಳು, ರಾಮಕೃಷ್ಣಾಶ್ರಮದ ಪ್ರಭಾವಕ್ಕೊಳಗಾದ ವಿವೇಕಾನಂದ, ಹೆತ್ತವರಿಗಾಗಿ, ತಮ್ಮನಿಗಾಗಿ ದುಡಿಯುತ್ತಾ, ಬ್ರಹ್ಮಚಾರಿಯಾಗಿರಲು ನಿರ್ಧರಿಸಿದ್ದರೂ.. ಉನ್ನತಿಯ ಪರಿಚಯವಾದಾಗ ಅವಳನ್ನು ಲಗ್ನವಾಗಿ ಬಾಳು ಕೊಡಲು ಅಪೇಕ್ಷಿಸುತ್ತಾನೆ. ಇಬ್ಬರ ಹೆತ್ತವರು ಅವರ ಅನುಕೂಲಕ್ಕಾಗಿ ಸ್ವಾರ್ಥಿಗಳಾದಾಗ ಇವರಿಬ್ಬರೂ ತೆಗೆದುಕೊಂಡ ನಿರ್ಧಾರ ಮನಸೆಳೆಯುತ್ತದೆ. + +‘ತಾಯತ’ ಕಥೆ, ಅಪರೂಪದ ಕಥಾವಸ್ತು. ನಿವೃತ್ತರಾದ ಶ್ರೀನಿವಾಸಮೂರ್ತಿಗಳಿಗೆ ಪಾರ್ಕನಲ್ಲಿ ಗೆಳೆಯರು ಜೊತೆಯಾದರು. ಪರಸ್ಪರ ಸಮಸ್ಯೆಗಳನ್ನು ಹಂಚಿಕೊಳ್ಳುತ್ತಿದ್ದರು. ಶ್ರೀನಿವಾಸಮೂರ್ತಿಗಳು ಸ್ಥಿತಪ್ರಜ್ಞರು. ಗೆಳೆಯರಿಗೆ ತಾಯಿತಗಳನ್ನು ಕೊಟ್ಟು, ಹೇಳುವ ಪರಿಹಾರವು, ಕೊನೆಯಲ್ಲಿ ಕಥೆಗೊಂದು ತಿರುವು ನೀಡಿ ಕಥೆ ಮನಮುಟ್ಟುತ್ತದೆ. + +‘ಕಾಲಿಂಗ್ ಬೆಲ್’ ಕಥೆಯಲ್ಲಿ, ಮಧ್ಯಮವರ್ಗದ ‘ಚಲಪತಿ’ ಕಾಲಿಂಗ್ ಬೆಲ್ ನ ‘ಡಿಂಗ್- ಡಾಂಗ್’ ಶಬ್ದಕ್ಕೆ ಆಸೆಪಟ್ಟರೂ, ಎಲ್ಲಿಯೂ ಆಶಿಸಿದ ಧ್ವನಿಯ ‘ಕಾಲಿಂಗ್ ಬೆಲ್’ ಸಿಗದೆ, ನಿರಾಶನಾಗುತ್ತಾನೆ. ಕೊನೆಗೆ ಅವನು ಕೆಲಸಕ್ಕೆ ಹೋದಾಗ ಎಲೆಕ್ಟ್ರಿಕಲ್ ಕಂಟ್ರ್ಯಾಕ್ಟರ್ ಕಾಲಿಂಗ್ ಬೆಲ್ ಅಳವಡಿಸಿ ಹೋಗುತ್ತಾರೆ. ನಂತರ ಚಲಪತಿಯ ಚಿಕ್ಕ ಆಸೆಗೂ ವಿಷಾದದ ಅಂತ್ಯ ಎದುರಾಗುವುದು ಅನಿರೀಕ್ಷಿತ. + +“ಸ್ವಾಮಿಯೇ ಶರಣಂ..” ಕಥೆಯಲ್ಲಿ, ನಿಖಿಲ್ ಗೆಳೆಯ ಜಗ್ಗಿ, ಕುಡಿತದ ಮತ್ತಿನಲ್ಲಿ ರಾಜಕೀಯ, ಸಿನಿಮಾ.. ಮಾತಾಡುತ್ತಾ ಆಡಿದ ಅಶ್ಲೀಲವಾದ ಮಾತಿಗೆ ಕೆರಳಿದ ಜಗ್ಗಿ, ನಿಖಿಲ್ ನ ಕೊಲೆಗೆ ರೆಡಿಯಾಗಿ ಮಾರೇನಹಳ್ಳಿಯ ಕೆರೆಯ ದಂಡೆಯ ಬಳಿ ಕಾದು ಕೂರುತ್ತಾನೆ. ಆದರೂ, ಗೆಳೆಯರ ನಡುವೆ ಉಂಟಾಗುವ ಒಡಕುಗಳಿಗೆ ಸಿಗುವ, ಆಕಸ್ಮಿಕ ತಿರುವು ಮುದ ನೀಡುತ್ತದೆ. ಹೀಗೆ ವಸಂತಕುಮಾರ್ ಕತೆ ನಿರೂಪಿಸುವಲ್ಲಿ ಗೆಲ್ಲುತ್ತಾ ಹೋಗುತ್ತಾರೆ. + +‘ಝಂಡಾ ಊಂಚಾ..’ ಕತೆಯಲ್ಲಿ, ರಾಜಧಾನಿಯ ಕೊಳಗೇರಿಯಲ್ಲಿ ಗೆಳೆಯ ಫಣಿರಾಜನ ಆಹ್ವಾನಕ್ಕೆ ಒಪ್ಪಿ, ‘ಸ್ವಾತಂತ್ರ್ಯ ದಿನಾಚರಣೆ’ಗೆ ಅತಿಥಿಯಾಗಿ ಹೋದ ಸದಾಶಿವನಿಗೆ, ಕೊಳಗೇರಿಯಲ್ಲಿನ ರಾಜಕೀಯ ಡ್ರಾಮಾದ ಪರಿಚಯವಾಗುತ್ತದೆ. ‘ಮಾಯೆ ನಿನ್ನೊಳಗೋ..’ ಕಥೆಯಲ್ಲಿ ಮೆತ್ತನೆಯ ಮನಸ್ಸಿನ, ದೈವಭೀರು ನಾಯಕ, ಹೆಣ್ಣುಮಗಳೊಬ್ಬಳಿಗೆ ಅನಿವಾರ್ಯವಾಗಿ ಡ್ರಾಪ್ ಕೊಡಬೇಕಾಗಿ ಬಂತು. ಅದು ನಿತ್ಯವೂ ಮುಂದುವರೆದು, ಅಭ್ಯಾಸವಾಗಿ, ಅವನಲ್ಲಿ ತಾಕಲಾಟ, ತಳಮಳ.. ಕೊನೆಗೆ ಸಮಸ್ಯೆಗೆ ಹೇಗೋ ಸಿಗುವ ಪರಿಹಾರ, ಕಥೆಗೆ ಸೂಕ್ತ ಅಂತ್ಯ ಒದಗಿಸುತ್ತದೆ. + +(ಜಿಎಸ್ ಸುಶೀಲಾದೇವಿ ಆರ್ ರಾವ್) + +ಮಧ್ಯಮ ವರ್ಗದ ಜನ ಚೀಟಿ ವ್ಯವಹಾರದಲ್ಲಿ ಮೋಸ ಹೋಗುವುದನ್ನು ಚಿತ್ರಿಸುವ ಕತೆ ‘ಹರಿಚಿತ್ತ’ ಆಂಧ್ರದಿಂದ ವಲಸೆ ಬಂದ ದಲಿತ ಪೆದ್ದ ಪೆಂಚಾಲಯ್ಯ, ಎಂತೆಂಥವೋ ಕೆಲಸ ಮಾಡುತ್ತಾ, ಹೋರಾಡುತ್ತಾ, ಮಗ ಪೆಂಚಾಲಯ್ಯ ನನ್ನು ಪೊಲೀಸ್ ಕೆಲಸಕ್ಕೆ ಸೇರಿಸುತ್ತಾನೆ. ರಾಜಕೀಯ ಗಲಾಟೆಯಲ್ಲಿ ಸಿಕ್ಕಿ ಹೊಡೆತ ತಿಂದು ಬಿದ್ದಾಗ, ಗಲಾಟೆ ನಿಯಂತ್ರಿಸಲು ಮಗ ಪೊಲೀಸ್ ಪೆಂಚಾಲಯ್ಯ ಬರ್ತಾನೆ. ಗಲಾಟೆಗೆ ಬಲಿಯಾಗುವವರು ಇಂತಹ ಅಮಾಯಕರೇ.. ಕೆಳ ಮಧ್ಯಮವರ್ಗದವರಿಗೆ ‘ಯಾರೂ ಕಾಯುವವರಿಲ್ಲ..’ ಎಂಬ ಸ್ಥಿತಿ. ಕಥೆ ನಿರೂಪಣೆಯಲ್ಲಿ ಆಕರ್ಷಣೀಯವಾಗಿದ್ದು ಮಧ್ಯಮ ವರ್ಗದ ಕಾರ್ಮಿಕರ ಕೊಳಗೇರಿಯ ಜನರ ಬದುಕನ್ನು ವಸಂತಕುಮಾರ್ ಕಲ್ಯಾಣಿ ಅವರು ಸಮರ್ಥವಾಗಿ ಬರೆಯುತ್ತಾರೆ. ಆದರೆ ಅವರು ವರದಿಯಂತೆ ನಿರೂಪಿಸುತ್ತಾ ಹೋಗುತ್ತಾರೆ. ಓದುಗರ ಗಮನ ಸೆಳೆದು ಮೆಚ್ಚುಗೆ ಪಡೆದರೂ ಇನ್ನಷ್ಟು ಪರಿಣಾಮಕಾರಿಯಾಗಿ ಚಿತ್ರಿಸಬಹುದಾದ ಅವಕಾಶದಿಂದ ಕಥೆಗಳು ವಂಚಿತವಾಗುತ್ತವೆ. ದಟ್ಟವಾದ ಜೀವನಾನುಭವ ಇದ್ದರೂ, ಸರಳವಾದ ನಿರೂಪಣೆಯಿಂದ ‘ಇದೇ ಕಥಾವಸ್ತು ಇನ್ನಷ್ಟು ಪರಿಣಾಮಕಾರಿಯಾಗಿ ಬರಬಹುದಿತ್ತು’ ಎನಿಸುತ್ತದೆ. + +‘ಮಳೆರಾಯನ ಸ್ವಗತ’ ಅಪರೂಪದ ಥೀಮ್. ಕಥೆ ಕಾಳಿದಾಸನ ‘ಮೇಘಸಂದೇಶ’ವನ್ನು ನೆನಪಿಸುತ್ತದೆ. ಮಳೆರಾಯ ಬೆಂಗಳೂರಿನ ಬೀದಿಗಳಲ್ಲಿ ವಾಕಿಂಗ್ ಹೊರಟಿದ್ದಾನೆ. ಹಲವರಿಗೆ ಮಳೆಬೇಕು, ಹಲವರಿಗೆ ಮಳೆ ಬೇಡ, ಕೊನೆಗೆ ಮಳೆರಾಯ ತಬ್ಬಿಬ್ಬಾಗಿ ಹೈಕಮಾಂಡ್ ಆದೇಶದಂತೆ ನಡೆಯಲು ನಿರ್ಧರಿಸುತ್ತಾನೆ. ಇದೊಂದು ಸಫಲವಾದಕಥೆ. ‘ಕಳ್ಳರ ಸಂತೆ’ ಕಥೆಯಲ್ಲಿ, ಪ್ರಾಮಾಣಿಕ ಆಟೊ ಡ್ರೈವರ್, ಪ್ರಯಾಣಿಕರು ಬಿಟ್ಟುಹೋದ ಕಿಟ್ ಬ್ಯಾಗ್ ಹಿಂದಿರುಗಿಸಲು ಹೋದಾಗ, ನಡೆದ ಘಟನೆ ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬಂತಿದೆ. + + + +ಈ ಕಥಾಸಂಕಲನದ ಇಪ್ಪತ್ತೊಂದು ಕಥೆಗಳು ವಸ್ತು ವೈವಿಧ್ಯತೆಯಿಂದ ಓದುಗರ ಮನ ಗೆಲ್ಲುವತ್ತ ಸಾಗಿವೆ. ‘ವಸಂತಕುಮಾರ್ ಕಲ್ಯಾಣಿ’ ಯವರ ಕಥಾಶೈಲಿ ಸರಳವಾದುದು. ‘ನೇರವಾಗಿ ಕಥೆ ಹೇಳಬೇಕು’ ಎಂಬುದು ಅವರ ಆಶಯ. ಹಾಗಾಗಿ ಅವರ ಕಥೆಗಳು ಸರಳವಾಗಿ ಓದುಗರ ಮನಸ್ಸನ್ನು ತಟ್ಟುತ್ತವೆ, ರಂಜಿಸುತ್ತವೆ, ಆದರೆ ಆಳಕ್ಕೆ ಇಳಿಯುವುದಿಲ್ಲ. ಇದು ಅವರ ಕತೆಗಳ ಮಿತಿಯೂ ಹೌದು. ಅವರ ಅನುಭವ, ಕಂಡ ಜಗತ್ತು, ಜನರ ತವಕ- ತಲ್ಲಣಗಳು ಇಲ್ಲಿಯ ಕಥೆಗಳ ಎಲ್ಲ ಪಾತ್ರೆಗಳಲ್ಲಿ ತುಂಬಿ ಕೊಂಡಿವೆ. ಅಲ್ಲದೆ ಸಮರ್ಥವಾಗಿ ನಿರೂಪಿಸಲ್ಪಟ್ಟಿವೆ. ಮುಂದಿನ ಅವರ ಹೆಜ್ಜೆಗಳಲ್ಲಿ, ಇನ್ನಷ್ಟು ಉತ್ತಮ ಕಥೆಗಳನ್ನು ಬರೆದು, ಮಹತ್ವದ ಕಥೆಗಾರರಾಗಿ ಹೆಸರು ಪಡೆಯಲಿ, ಎಂದು ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_189.txt b/Kenda Sampige/article_189.txt new file mode 100644 index 0000000000000000000000000000000000000000..cb53a9ce669d4162ca27c2220bc84fb1d526565a --- /dev/null +++ b/Kenda Sampige/article_189.txt @@ -0,0 +1,23 @@ +ಇವತ್ತು ಪ್ರವಾಸ ಕೈಗೊಳ್ಳುವುದು ಜನರ ಜೀವನ ಶೈಲಿಯ ಒಂದು ಭಾಗವೇ ಆಗಿದೆ. ಕುಟುಂಬದೊಂದಿಗೆ, ಗೆಳೆಯರೊಂದಿಗೆ, ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ಪ್ರವಾಸ, ಕೊನೆಗೆ ಒಬ್ಬರೇ ಪ್ರವಾಸ ಹೋಗುವುದು, ಚಾರಣ ಎಂದು ಪ್ರವಾಸ ಹೋಗಲು ತುಡಿಯುವ ಮನೋಭಾವ ಜನರದು. “ಜಗವ ಸುತ್ತುವ ಮಾಯೆ” ಪ್ರವಾಸ ಕಥನದ ಲೇಖಕಿ ಸುಚಿತ್ರಾ ಹೆಗಡೆಯವರಿಗಂತೂ ಪ್ರವಾಸ ಅವರ ಜೀವಕಣಗಳಲ್ಲೇ ಬೆರೆತು ಹೋಗಿದೆ. ಅದರೊಂದಿಗೆ ಅವರದು ಅವಿನಾಭಾವ ಸಂಬಂಧ. ಅದರಲ್ಲೂ ಅವರು ಪ್ರವಾಸಿ ಸಂಸ್ಥೆಗಳು ಏರ್ಪಡಿಸುವ ನಿಗದಿತ ಅವಧಿಯಲ್ಲಿ ಹತ್ತು ಹಲವಾರು ಸ್ಥಳಗಳಿಗೆ ‘ನಾ ಹೋದೆ ನೋಡಿದೆ ಬಂದೆ’ ಎಂಬಂತೆ ನೋಡುವವರಲ್ಲ. ಸ್ವತಃ ತಾವೇ ಪ್ರವಾಸ ಕೈಗೊಂಡು, ಹೋದ ಸ್ಥಳದಲ್ಲಿ ಸಾಕಷ್ಟು ಸುದೀರ್ಘ ಸಮಯವೇ ತಂಗಿದ್ದು, ಅಲ್ಲಿನ ವೈಶಿಷ್ಟ್ಯತೆಗಳು, ಇತಿಹಾಸ, ಸಾಹಿತ್ಯ, ಪ್ರಕೃತಿ ಸೌಂದರ್ಯ, ಜನರು, ಅವರ ಜೀವನ ಶೈಲಿ, ಭಾಷೆ ಕೊನೆಗೆ ಅವರ ಆಹಾರ ಪದ್ಧತಿ ಎಲ್ಲವನ್ನೂ ಬೆರಗುಗಣ್ಣಿನಿಂದ ವೀಕ್ಷಿಸುವವರು. ಹಾಗೆ ವೀಕ್ಷಿಸಿದ್ದನ್ನು ಬರಹದ ಮೂಲಕ ಅಭಿವ್ಯಕ್ತಿಸಲು ಅವರು ಕಂಡುಕೊಂಡಿರುವುದು ಕೂಡ ಸ್ವಲ್ಪ ಮಟ್ಟಿಗೆ ವಿಭಿನ್ನವಾದ ರೀತಿ. + +(ಸುಚಿತ್ರಾ ಹೆಗಡೆ) + +ಎಲ್ಲರಂತೆ ಆಯಾ ಸ್ಥಳದ ವಿವರ ಕೊಡುವುದಕ್ಕಿಂತ ಆ ಸ್ಥಳ ತಮ್ಮ ಭಾವಕೋಶ ಮನೋಕೋಶ ತುಂಬಿದ ಬಗೆಯನ್ನು ಲಲಿತಪ್ರಬಂಧವೊಂದರ ರೀತಿಯಲ್ಲಿ ಅನಾವರಣಗೊಳಿಸುತ್ತಾರೆ, ಸುಚಿತ್ರಾ. ಹಾಗೆಂದು ಅವು ಬರಿಯ ಭಾವಪೂರ್ಣ ಲಹರಿಗಳಾಗಿ ಮಾತ್ರ ಉಳಿಯದೆ, ವಸ್ತುನಿಷ್ಠತೆಗೂ ಒತ್ತು ನೀಡಲು ಮರೆಯುವುದಿಲ್ಲ. ಹೀಗಾಗಿ ಇವರ ಪ್ರವಾಸ ಕಥನದ ಶೈಲಿ ಕೂಡ ಎಲ್ಲರೂ ತುಳಿದ ಹಾದಿಯಾಗಿರದೇ, ಯಾರೂ ತುಳಿಯದ ಹೊಸ ಹಾದಿಯಲ್ಲಿ ಇಷ್ಟಪಟ್ಟು ಹೆಜ್ಜೆಯಿಟ್ಟಿದ್ದಾರೆ ಎನ್ನಬಹುದು. + +“ಎಲ್ಲೆಗಳ ಮೀರಿದ ಎಲ್ಲೋರಾ” ಎಂಬ ಅಧ್ಯಾಯದಲ್ಲಿ ಎಲ್ಲೋರಾದ ಗುಹಾಂತರ್ದೇವಾಲಯಗಳ ಶಿಲ್ಪಕಲಾ ವೈಶಿಷ್ಟ್ಯತೆ ಲೇಖಕಿಯಲ್ಲಿ ಮೂಡಿಸಿರುವ ಬೆರಗು ಓದುಗರನ್ನೂ ಆವಾಹಿಸುತ್ತದೆ. ಕನ್ನಡನಾಡಿನ ರಾಷ್ಟ್ರಕೂಟರ ಈ ಸಾಂಸ್ಕೃತಿಕ ಲೋಕದ ಅಚ್ಚಳಿಯದ ಕೊಡುಗೆಯ ಕುರಿತು, ಅದರಲ್ಲೂ ಸುಪ್ರಸಿದ್ಧ ಕಲಾನಿರ್ಮಿತಿ ಕೈಲಾಸನಾಥ ದೇವಾಲಯದ ಕುರಿತು ಲೇಖಕಿ ತನ್ಮಯರಾಗಿ ನೀಡಿರುವ ವಿವರಣೆಗಳು ಓದುಗರನ್ನು ಅಲ್ಲೆಲ್ಲಾ ಓಡಿಯಾಡಿಸಿಬಿಡುವಷ್ಟು ಜೀವಂತಿಕೆಯಿಂದ ತುಂಬಿವೆ. ಹಾಗೆಯೇ ಕಾಶಿಯಲ್ಲಿ ಕೂಡ ಲೇಖಕಿ ಬಹುಶಃ ಅದುವರೆಗೆ ಯಾರೂ ಕಾಣದ ಲೋಕಕ್ಕೆ ಓದುಗರನ್ನು ಕರೆದೊಯ್ಯುತ್ತಾರೆ. ಅದೇ ಕಾಶಿಯ ಅತಿ ರುಚಿಕರ ಹಾಗೂ ವಿಶಿಷ್ಟವಾದ ಬೇರಿನ್ನೆಲ್ಲೂ ಸಿಗದ ಖಾದ್ಯ ಪ್ರಪಂಚ. ಬಂಗಾಳದ ಜಾನಪದ ಜಗತ್ತಿನ ಕುರಿತು, ಜೊರಾಸಂಕೋದ ಟಾಗೋರರ ಮನೆ ಬಿಂಬಿಸುವ ಬಂಗಾಲಿ ಸಂಸ್ಕೃತಿಯ ಕುರಿತ ಅಧ್ಯಾಯವಿದೆ. + +“ನದಿ ಹೇಳುವ ಕಥೆ” ಅಧ್ಯಾಯದಲ್ಲಿ ನಮ್ಮ ದೇಶ, ಯೂರೋಪ್, ಆಫ್ರಿಕಾಗಳ ನದಿಗಳು, ಅವುಗಳ ದಡದಲ್ಲಿ ಕುಳಿತು ಲೇಖಕಿ ಆಸ್ವಾದಿಸಿದ ಸೂರ್ಯೋದಯ ಸೂರ್ಯಾಸ್ತಗಳು, ನದಿಗಳ ಹರಿವು ಮನದ ಹಳಹಳಿಕೆಯನ್ನು ಕೊಚ್ಚಿಕೊಂಡು ಹೋಗುವ ಪರಿ, ನದಿಗಳು ಮೂಡಿಸುವ ಅನುಭಾವದ ಭಾವ, ಕವಿಗಳ ಕಣ್ಣಲ್ಲಿ ಕಂಡ ನದಿಗಳನ್ನು ಮುಂದಿಡುತ್ತಲೇ ನದಿಗಳು ಮಾಲಿನ್ಯಭರಿತವಾಗುತ್ತಿರುವುದರ ಕುರಿತು ಸಂಕಟವನ್ನನುಭವಿಸುತ್ತಾರೆ. + + + +ಜ್ವಾಜ್ವಲ್ಯಮಾನವಾಗಿ ಬೆಳಗುತ್ತಿರುವ ನಗರ ಪ್ಯಾರಿಸ್, ದ್ರಾಕ್ಷಿ ತೋಟದ ಬೋರ್ಡೋ ಎಂದು ಆರು ಅಧ್ಯಾಯಗಳಿವೆ. ಫ್ರೆಂಚ್ ಲಲನೆಯರ ಬೆಡಗು, ಫ್ಯಾಷನ್, ಮನಮೋಹಕ ಸೀಯೆನ್ ನದಿ, ಸುಂದರ ವಾಸ್ತುಶಿಲ್ಪ, ಮ್ಯೂಸಿಯಂಗಳು, ಇತಿಹಾಸ ಎಂದೆಲ್ಲಾ ಈ ಅಧ್ಯಾಯಗಳಲ್ಲಿ ಪ್ಯಾರಿಸ್ ವೈಶಿಷ್ಟ್ಯಗಳು ಅನಾವರಣಗೊಂಡಿವೆ. ಫ್ರೆಂಚರ ಜೀವನ ಪ್ರೀತಿ, ಅವರ ವಿಶಿಷ್ಟ ಆಹಾರ ಸೇವನೆಯ ಅಭ್ಯಾಸದ ಬಣ್ಣನೆಯಿದೆ. ಆರುನೂರು ಕಿ.ಮೀ. ದೂರದ ಬೋರ್ಡೋ ಪಟ್ಟಣದಲ್ಲಿ ಕೈಗೊಂಡ ವೈನ್ ಟೂರ್, ಅಲ್ಲಿನ ವೈನ್‌ನ ದಿವ್ಯಾನುಭವ ನೀಡಿತ್ತು. “ಫ್ರೆಂಚ್ ಮಹಾಕ್ರಾಂತಿಯ ಅಂಗಳದಲ್ಲಿ” ಅಧ್ಯಾಯದಲ್ಲಿ ಜಾಗತಿಕವಾಗಿ ರಾಜಕೀಯ ಚಟುವಟಿಕೆಗಳಿಗೆ ಪರಿವರ್ತನೆಗಳಿಗೆ ಪ್ರೇರಕವಾಗಿದ್ದ ಫ್ರೆಂಚ್ ಮಹಾಕ್ರಾಂತಿಯ ಕುರಿತು ಹೇಳುತ್ತಲೇ ಲೇಖಕಿ ಅಲ್ಲಿನ ವಸ್ಸಾಯ್ ಅರಮನೆಯನ್ನು ಪರಿಚಯಿಸುತ್ತಾರೆ. + +ಅರಮನೆಯ ಹಾಲ್ ಆಫ್ ಮಿರರ್ಸ್ ನೋಡುತ್ತಲೇ ಜೈಪುರದ ಶೀಷ್ ಮಹಲನ್ನು ನೆನೆಯುತ್ತಾರೆ. ಜಗದ್ವಂದ್ಯವಾದ ಐಫೆಲ್ ಟವರ್ ಕುರಿತು ಲೇಖಕಿಯದು ಮತ್ತೆ ವಿಭಿನ್ನವಾದ ವಾರೆ ನೋಟ. ಜೀವಂತಿಕೆ ಐತಿಹಾಸಿಕತೆ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ನಳನಳಿಸುವ ಪ್ಯಾರಿಸಿಗೆ ಈ ಕಬ್ಬಿಣದ ಕಟಕಟೆಯ ಗೋಪುರ ಹೊಂದುವುದಿಲ್ಲ ಎನ್ನುತ್ತಾರೆ. ಹಾಗೆಯೇ ಮೊನಾಲಿಸಾ ನೋಡಿಯೂ ಭ್ರಮನಿರಸನ ಹೊಂದಿದ ಲೇಖಕಿ ಆ ಅಧ್ಯಾಯಕ್ಕೆ ಕೊಟ್ಟಿರುವ ಶೀರ್ಷಿಕೆಯೇ “ನಾ ನೋಡಿದ ಮೋ (ನಾಲಿ)ಸಾ!” ಎಂದು! + +ಇಂಗ್ಲಿಷ್ ಸಾಹಿತ್ಯದ ಓದು ಪರಿಚಯಿಸಿದ್ದ ಇಂಗ್ಲೆಂಡ್ ನಿಂದಾಗಿ ಲಂಡನ್ ಲೇಖಕಿಗೆ ನೋಡುವ ಮೊದಲೇ ಚಿರಪರಿಚಿತವೆನಿಸಿತ್ತು. ಪ್ಯಾರಿಸ್ ಮತ್ತು ಲಂಡನ್‌ನ ವೈದೃಶ್ಯತೆಗಳನ್ನು ಹೇಳುತ್ತಾ “ಪ್ರಜಾಸತ್ತೆಯ ತೊಟ್ಟಿಲಲ್ಲಿ ಮಹಾರಾಣಿ ವೈಭವ” ಎಂಬ ಅಧ್ಯಾಯದಲ್ಲಿ ಬಕಿಂಗ್ ಹ್ಯಾಮ್ ಅರಮನೆ, ಇಂಗ್ಲಿಷರ ಪ್ರಭುತ್ವ ಪ್ರೀತಿಯ ಕುರಿತು ಹೇಳುತ್ತಾರೆ. ಇಂಗ್ಲಿಷರ ಚಹಾಪ್ರೀತಿಯ ಪ್ರಸ್ತಾಪವಿದೆ. ಅತಿಮುಖ್ಯ ಸ್ಥಳದಲ್ಲಿ ಪ್ರತಿಷ್ಠಾಪಿಸಿರುವ ಗಾಂಧೀಜಿ ಪ್ರತಿಮೆ ತಮ್ಮಲ್ಲಿ ಮೂಡಿಸಿದ ಭಾವ, ಕ್ರಿಕೆಟ್ ಕಾಶಿ ಲಾರ್ಡ್ ಸ್ಟೇಡಿಯಂ, ಷೇಕ್ಸ್‌ಪಿರಯನ ಹುಟ್ಟೂರು ಇವುಗಳ ಕುರಿತು ಸುಚಿತ್ರಾ ಮನದುಂಬಿ ತಮ್ಮ ಭಾವನಾ ಲಹರಿಯನ್ನು ಹರಿಯಬಿಡುತ್ತಾ ಅದರಲ್ಲಿ ಓದುಗರನ್ನು ಮುಳುಗೇಳಿಸುತ್ತಾರೆ. ಜರ್ಮನಿ, ವಿಯೆಟ್ನಾಂ ಪ್ರವಾಸದ ಕುರಿತೂ ಈ ಪುಸ್ತಕದಲ್ಲಿ ಅಧ್ಯಾಯಗಳಿವೆ. + + + +ಒಂದು ಪ್ರವಾಸ ಮಾಡುವಾಗ ಅಲ್ಲಿನ ಸಾಂಸ್ಕೃತಿಕತೆ ಐತಿಹಾಸಿಕತೆ ಭೌಗೋಳಿಕತೆ ಜನಜೀವನ ಇವೆಲ್ಲದರ ಕುರಿತು ಅರಿಯಬೇಕಾದುದನ್ನು ತಿಳಿಸುತ್ತಲೇ ಪ್ರವಾಸದಿಂದ ನಾವು ಹೇಗೆ ಆನಂದ ಪಡಬಹುದೆಂಬುದನ್ನೂ ಮನಗಾಣಿಸುವ ಈ ಕೃತಿ ಪ್ರವಾಸ ಹೋಗಬಯಸುವವರಿಗಂತೂ ಅತ್ಯಪಯುಕ್ತವಾದುದು. + +ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_19.txt b/Kenda Sampige/article_19.txt new file mode 100644 index 0000000000000000000000000000000000000000..173f8e180c261fb65257d396f9e1f3f2292d4627 --- /dev/null +++ b/Kenda Sampige/article_19.txt @@ -0,0 +1,69 @@ +ನಮ್ಮೂರು + +ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ನಮ್ಮೂರು. ತೆಲುಗು ಸೀಮೆ ನಮ್ದು. ಆದ್ರೂ ಸುತ ಕನ್ನಡವೂ ಚೆಂದಾಗಿ ಮಾತಾಡ್ತಾರೆ. ಮನ್ಯಾಗೆ, ಊರಾಗೆ ಮಂದಿ ನಡ್ವೆ ತೆಲುಗು ಮಾತು. ಇಸ್ಕೂಲ್‌ನಾಗೆ ಕನ್ನಡ ಮಾತು. ನಾನು ಮಾತ್ರ ಚಿಕ್ಕುದ್ರಿಂದಲೂವೇ ಎಲ್ಲಾ ಕಡೆ ಕನ್ನಡ. ಅದ್ಯಾಕೋ ಗೊತ್ತಿಲ್ಲ. ನನ್ ಜೊತೆ ಅಪ್ಪ, ಅಮ್ಮ, ನೆಂಟರು, ಇಷ್ಟರು, ಆಳು, ಕಾಳು, ಊರ ಮಂದಿ ಎಲ್ರೂನೂ ಸ್ಯಾನೆ ಓಪಗೆಯಿಂದ ಕನ್ನಡದಾಗೇ ಮಾತಾಡ್ತಿದ್ರು. + +ನಾಮಪದಗಳಿಗೂ ನಾಮ + +ಒಂದು ಸೋಜಿಗ ಅಂದ್ರೆ ಸಾಮಾನ್ಯವಾಗಿ ನಾಮಪದಗಳು ಯಾವ ಭಾಷೇನಾಗೆ ಮಾತಾಡಿದ್ರೂ ಬದಲಾಗೋಲ್ಲ. ಆದ್ರೆ ನಮ್ಮೂರು ಮತ್ತೆ ಸುತ್ತಾ ಕೆಲ್ವು ಊರುಗಳ ಹೆಸ್ರೂ ಸೈತ ತೆಲುಗು ಕನ್ನಡಕ್ಕೆ ಬದಲಾಗ್ತಿತ್ತು! ಚಿಕ್ಕಮಾಲೂರು ತೆಲುಗಿನಾಗೆ ಚಿನ್ಮಾಲೂರು ಆಗ್ತಿತ್ತು. ದೊಡ್ಡಮಾಲೂರು ಪೆದ್ಮಾಲೂರಾಗಿತ್ತು. ಗೊಂದಿ ಹಳ್ಳಿ ಗೊಂದಿಪಲ್ಲಿ. ವಿಮಡಗಾನಪಲ್ಲಿ, ಕಾಳೇಪಲ್ಲಿ, ಕಂಸಾನಳ್ಳಿ ಇವುಗಳಲ್ಲಿ ಹಳ್ಳಿ ಪಲ್ಲಿ ಆದ್ರೆ ಚಿಕ್ಕ ದೊಡ್ಡ, ಚಿನ್ನ ಪೆದ್ದ ಆಗ್ತಿತ್ತು. ಅಕರಾಂತ ಆದ್ರೆ ತೆಲುಗಿನ ದನಿ ಹೊಂಡ್ಸೋ ‘ಮು’ ಸೇರಿಸ್ತಿದ್ರು. ಪುರವಾರ – ಪುರವಾರಮು, ವೀರಾಪುರ – ವೀರಾಪುರಮು, ಕೆಂಪಾಪುರ – ಕೆಂಪಾಪುರಮು ಆಗ್ತಿತ್ತು. ಇಕಾರಾಂತ ಆದ್ರೆ ಪಾಪ ಏನೂ ಕಿಸಿಯೋಕಾಗ್ದೆ ಅಂಗೇ ಕರೀತಿದ್ರು. ಮಧುಗಿರಿ, ಕೊಂಡವಾಡಿ ಇವು ಬದಲಾಗ್ದೆ ಅಂಗೇ ಇದ್ವು. ಇಂತಾ ಇಚಿತ್ರವಾ ನೀವು ಎಲ್ಲಾನಾ ಕಂಡೀವ್ರಾ ಅಂಬೋದು ನನ್ ಕೊಸ್ಚನ್. ಇದು ಬರೀ ಊರುಗುಳ್ಗೆ ನಿಂತಿಲ್ಲ. ಮನುಸ್ಯರ ಹೆಸ್ರೂ ಬದಲಾಗ್ತಿತ್ತು. ಚಿಕ್ಕಲಿಂಗಪ್ಪ ಸನ್ನಿಂಗಪ್ಪ ಆದ್ರೆ ದೊಡ್ಡರಾಮಪ್ಪ ಪೆದ್ದರಾಮಪ್ಪ ಆಗ್ತಿತ್ತು. ಕರಿಯಣ್ಣ ನಲ್ಲನ್ನ ಆಗ್ದೆ ಕರಿಯನ್ನ ಮಾತ್ರ ಆಗ್ತಿದ್ದಿದ್ದು ನಮ್ ಪುಣ್ಯ. ಅದ್ಯಾಕೆ ಇಂಗೇತ ನಮ್ಮಪ್ಪುಂಗೆ ಕೇಳಿದ್ರೆ ಯಾರ್ಗೂ ಇದುವರ್ಗೆ ಇದು ಹೊಳ್ದೇ ಇರಲಿಲ್ಲ ಅಂತ ತಲೆ ಕೆರ್ಕೊಳ್ಳೋರು. + +ಅಗಸರ ಪುಟ್ಟಲಿಂಗಪ್ಪ, ನೀರಗಂಟಿ ಹನುಮಂತಪ್ಪ, ಬಡಗಿ ರಾಮಯ್ಯ, ಗಿರಪ್ಪಗಾರು ನಿಂಗಪ್ಪ, ಮಾರಪ್ಪಗಾರ ಗಂಗಪ್ಪ ಇಂಗೇ ಅವ್ರ ಕೆಲ್ಸಕ್ಕೆ ಸಮ್ಮನ್ಸಿದಂಗೆ, ಮನೆತನುಕ್ ಸೇರಿದಂಗೆ ಅಡ್ಡೆಸ್ರುಗಳೂ ಸಾಕಷ್ಟಿದ್ವು.‌ + +ಆವಾಗ ಊರ್ನಾಗೆ ಒಂದೂವರೆ ಸಾವ್ರ ಜನ ಇದ್ರು. ಹೆಚ್ಚೂಕಡ್ಮೆ ಮುಕ್ಕಾಲುವಾಸಿ ನಾಯಕರೇಯಾ. ಮಾದಿಗರೂ ಕಾಲುವಾಸಿ ಇದ್ರು. ಉಳಿದಂಗೆ ಗೌಡ್ರು, ಲಿಂಗಾಯಿತ್ರು, ಕುರುಬರು, ಬ್ರಾಮ್ಮರು, ಶೆಟ್ಟರು, ಆಚಾರ್ರು, ಅಗಸರು ಇಂಗೇ ಚಿಲ್ರೆ ಪಲ್ರೆ ಎಲ್ಲಾ ಒಂದು ರಾಸಿ ಜಾತಿಗಳೂ ಸೇರಿದ್ವು. + +ಊರು ತುಂಬಾ ದ್ಯಾವ್ರು ದಿಂಡ್ರು + +ಊರು ಚಿಕ್ಕದಾಗಿದ್ರೂ, ಜನ ಜಾಸ್ತಿ ಇರದಿದ್ರೂನೂವೇ ದೇವರ ಗುಡಿಗಳು ಮಾತ್ರಾ ಜಾಸ್ತೀನೇ ಇದ್ವು. ಆದ್ರೆ ನಮ್ಮೂರ್ನಾಗೆ ಅಂಗೇ ಸುತ್ತಾ ಊರುಗುಳಾಗೆ ಬ್ರಾಮ್ಮರು ಪೂಜಾರಿಕೆ ಮಾಡ್ತಿರಲಿಲ್ಲ. ಆಯಾ ದೇವ್ರಿಗೆ ನಡಕೊಳ್ಳೋ ಜಾತಿಯವ್ರಲ್ಲೆ ಯಾವ್ದೋ ಒಂದು ವಂಶದೋರು ಪೂಜಾರಿಕೆ ಮಾಡ್ಕೊಂಡು ಹೋಗ್ತಿದ್ರು. ಕೆರೆಕಟ್ಟೆ ಹತ್ರ ಇದ್ದ ಚೌಡಮ್ಮನ ಗುಡೀಲಿ ನಾಯಕರು, ಈಶ್ವರಮ್ಮೋರು ಮನೆ ಮುಂದ್ಲಿದ್ದ ರಾಮದೇವ್ರ ಗುಡ್ಯಾಗೆ ಕುರುಬರು, ಚಿಕ್ಕಪ್ಪನ ಮನೆ ಬದೀಗಿದ್ದ ಬ್ರಹ್ಮಯ್ಯನ ಗುಡೀನಾಗೆ, ವೀರಮಲ್ಲೇಶ್ವರನ ಗುಡೀನಾಗೆ ಮಡಿವಾಳರು, ಕೆಂಪಾಪುರುದ ಹಾದೀಗ್ಳ ನಾಡವಾರಮ್ಮ ಅಥವಾ ನಡುವಾರಮ್ಮನ‌ ಗುಡೀಲಿ, ಹೊಲದ ಕೆಳಗಿರೋ ಸತ್ಯಮ್ಮನ ಗುಡೀಲಿ ನಾಯಕರು, ಅಣ್ಣಯ್ಯನ ಗುಡೀಲಿ, ಬೀರಲಿಂಗೇಶ್ವರನ ಗುಡೀಲಿ ಕುರುಬರು, ವೀರಾಪುರದ ವೀರಭದ್ರಸ್ವಾಮಿ ಗುಡೀ ಪೂಜಾರಪ್ಪ ಲಿಂಗಾಯತರು, ಸನಿಮಾತ್ಮನ ಗುಡೀಲಿ ತಿಗಳರು, ಆಂಜನೇಯನ ಗುಡೀಲಿ, ನಮ್‌ ಹೊಲದಲ್ಲಿದ್ದ ಕದಿರಪ್ಪನ ಗುಡೀಲಿ ಉಪ್ಪಾರ್ರು, ಈಶ್ವರನ ಗುಡೀಲಿ ಲಿಂಗಾಯತರು, ಮಾದಿಗರ ಹಟ್ಟೀಲಿದ್ದ ನರಸಿಂಹ ಸೋಮಿ ಗುಡೀಲಿ ಮಾದಿಗರು ಪೂಜಾರಪ್ಪಗಳಾಗಿದ್ದರು. ಗುಡೀ ಅಂದ್ರೆ ಚಿಕ್ಕದಾಗಿ ನಾಲ್ಕು ಗೋಡೆ ಇರೋವೇ ಜಾಸ್ತಿ. + +ಕಾರ್ತೀಕ ಸೋಮವಾರ ಅಂದ್ರೆ ಈಶ್ವರನ ಗುಡೀಲಿ ವಿಶೇಷ ಪೂಜೆ. ಪ್ರತಿ ಶನಿವಾರ ವೀರಾಪುರದಲ್ಲಿರೋ ಶನಿಮಾತ್ಮನ ಗುಡೀಗೋಗೋದು. ಇದ್ರಾಗೆ ದೇವ್ರ ಮ್ಯಾಗೆ ಭಕ್ತಿಗಿಂತ ಅಲ್ಲಿ‌ ಕೊಡೋ ರಸಾಯನ, ತೆಂಗಿನ್ ಚೂರು, ಪುರಿ-ಬೆಲ್ಲ, ಬೆಲ್ಲದ ಕಡಲೆ ಹಿಟ್ಟಿನ ಚರ್ಪಿಗೆ ಆಸೆ ಪಟ್ಟು ಹೋಗ್ತಿದ್ದಿದ್ದೇ ನಿಜ. ಧನುರ್ಮಾಸದಾಗೆ ನಡುಗೋ ಚಳೀಲಿ ಮೂರು ದಿನ ನಮ್ ತಾತ, ಅಪ್ಪ ವೀರಾಪುರದ ವೀರಭದ್ರಸ್ವಾಮಿಗೆ ಕಾಯಿ ಒಡಿಸ್ಕೊಂಡು ಬರ್ತಿದ್ರು. + + + +ಚಾವಡಿ + +ಊರ ಮಧ್ಯದಲ್ಲಿ ಒಂದು ಚಾವಡಿ ಇತ್ತು. ಮಣ್ಣಿನ‌ಗೋಡೇದು. ಅಲ್ಲಿ ವರ್ಷಕ್ಕೊಂದು ದಪ ಮೊಹರಮ್ ಹಬ್ಬದಾಗೆ ಬಾಬಯ್ಯನ ಕುಣಿಸೋಕೆ‌ ಬಳಸ್ತಾ ಇದ್ದಿದ್ದು ಬಿಟ್ರೆ, ಒಂದಷ್ಟು ಜನ ಟೇಮ್‌ಪಾಸ್ ಮಾಡಾಕೆ, ಹರಟೆ ಹೊಡಿಯಾಕೆ, ಚಕ್ಕಾಬಾರ ಆಡಾಕೆ ಕುಂತ್ಕೊಂತಿದ್ರು. ಒನ್ನೊಂದು ಸತಿ ಮ್ಯಾದರವರು ಬಂದು ಆ ಜಾಗದಾಗೆ ಠಿಕಾಣಿ ಹಾಕ್ತಿದ್ರು. ಬಿದಿರು ತಕಾ ಬಂದು ಈ ಜಾಗದಾಗೆ ಕುಂತು ಚಾಪೆ, ಬುಟ್ಟಿ, ಕೇರೋ ಮರ, ಬೀಸಣಿಕೆ ಹೆಣಿಕೊಂಡು ಊರೆಲ್ಲಾ ತಿರುಗಿ ಮಾರಿಕೊಂಡು ಬರ್ತಿದ್ರು. + +ಊರಲ್ಲಿ ಪ್ರಾಣೇಶಪ್ಪ, ಸುಬ್ಬರಾಯ ಶೆಟ್ಟಿ, ಗಂಗಾಧರಪ್ಪಂದು ಒಂದು ಮೂರು ನಾಕು ಪೆಟ್ಟಿಗೆ ಅಂಗಡಿ ಇದ್ವು. ನಮ್ದೊಂದು, ಗೋವಿಂದಪ್ಪ, ಆದಿನಾರಾಯಣಪ್ಪಂದು ಚಿಲ್ರೆ ಅಂಗಡಿ ಇದ್ವು. ಸೀನಪ್ಪಂದು ಒಂದು ಜವಳಿ ಅಂಗಡಿ ಇತ್ತು. ಊರ್ನಾಗೆ ಸಣ್ಣವು ಎರ್ಡು ಗುಡ್ಲು ಹೋಟ್ಲು ಇದ್ವು. ಒಂದು ಉಪ್ಪಾರ್ರುದು, ಇನ್ನೊಂದು ಲಿಂಗಾಯ್ತ್ರುದು. ಅಲ್ಲಿ ಬರೇ ಕಾಪಿ ಮತ್ತೆ ಇಡ್ಲಿ ಸಿಗ್ತಿತ್ತು. ಆರೂ ಯಾರೋಗ್ತಿದ್ರೋ ನಾ ಕಾಣೆ. ನಮ್‌ ಮನ್ಯಾಗಂತೂ ಹೋಟ್ಲಿಂದ ಎಂದೂ ತಂದಿಲ್ಲ. + +ಕರೆಂಟ್ ರೂಮು + +ನಮ್ಮ ಮನೆ ನೇರಕ್ಕೆ ಕರೆಂಟ್ ರೂಮಿತ್ತು. ಇಡೀ ಊರಿಗೆ ಕೊಳಾಯಿ ನೀರು ಬಿಡೋಕೆ ಬೋರ್ ಕೊರೆಸಿ, ಪಂಪ್ ಸೆಟ್ ಮಡಗಿದ್ರು. ಅದರಿಂದ ಕರೆಂಟ್ ಕನೆಕ್ಸನ್ ಮಾಡಿ ನಲ್ಯಾಗೆ ನೀರು ಬಿಡಾಕೆ ಅಂತ ಒಂದು ರೂಮು ತರ ಕಟ್ಸಿದ್ರು. ರಾಮಪ್ಪಂಗೆ ಪಂಚಾಯ್ತಿಯಿಂದ ವಾಟರ್ ಮ್ಯಾನ್ ಕೆಲ್ಸ ಕೊಡ್ಸಿದ್ರು ಅಪ್ಪ. ದಿನಾ ಊರಿಗೆಲ್ಲಾ ನೀರು ಎತ್ತೋ ಕೆಲ್ಸ ಆಯಪ್ಪಂದೇ. ಅಲ್ಲೇ ಮನಿಕ್ಕೊಂತಿದ್ದ. ಪಂಚಾಯ್ತಿ ಜವಾನನ ತರ ನಾಕನೇ ಗಿರೇಡಿನ (ಗ್ರೇಡಿನ) ಸಂಬಳ ಸಿಕ್ತಿತ್ತು. ಈ ಕೆಲಸುಕ್ಕೆ ಯಾವ ಓದೂ ಬೇಕಿರ್ಲಿಲ್ಲ. ಹೆಬ್ಬೆಟ್ಟೂ ಸಾಕಿತ್ತು. ಆದ್ರೆ ತಿಂಗಳಾ ನಲವತ್ತು ಐವತ್ತು ರೂಪಾಯಿ ಸಿಗ್ತಿತ್ತಲ್ಲ. ಅದು ಆಗಿನ ಕಾಲಕ್ಕೆ ಬೋ ದೊಡ್ಡದು. ಬ್ಯಾರೆಯೋರ ಮುಂದೆ ರಾಮಪ್ಪ ದೊಡ್ಡ ಮನ್ಸಾ ಅನ್ನುಸ್ಕೊಂಡಿದ್ದ. ಅದ್ಕೇ ನಮ್ಮಪ್ಪನ ಮ್ಯಾಲೆ ಬೋ ಪಿರೂತಿ. ಬಿಡುವಿದ್ದಾಗಲೆಲ್ಲಾ ನಮ್ಮನ್ಯಾಗೇ ಕೆಲ್ಸ ಬೊಗಸೆ ಮಾಡ್ಕ್ಯಂಡು ಇರ್ತಿದ್ದ. + +ಮಿಡ್ ಪೈಪಿರೋ ಕೋಟ್ರಸ್ಸು + +ಅದ್ರ ಹಿಂದೆ ಒಂದು ಕೋಟ್ರಸ್ ಇತ್ತು.‌ ನಮ್ಮೂರಿನ್ ಮಿಡ್ ಪೈಪು( ಮಿಡ್ ವೈಫ಼್) ಇರಾಕೆ ಗೋರ್ಮೆಂಟ್ನೋರು ಕಟ್ಸಿದ್ರು. ನರಸಮ್ಮ ಅಂಬ್ತಾನೂ ಜನ ಇವ್ರುನ್ನ ಕರೀತಿದ್ರು. ಪುಟ್ಟಗೌರಮ್ಮನೋರು ಇದ್ದಾಗ ಬಾಡಿಗೆ ಮನ್ಯಾಗಿದ್ರು. ಗವಿಯಮ್ಮನ ಕಾಲಕ್ಕೆ ಸರ್ಕಾರ್ದೋರು ಕೋಟ್ರಸ್ ಕಟ್ಟಿಸ್ಕೊಟ್ಟರು. ಎರ್ಡೋ ಮೂರೋ ಪಂಚಾಯ್ತೀಗೆ ಸೇರ್ಸಿ ಒಬ್ಬರು ಮಿಡ್ ವೈಪು. ಊರೂರ್ಗೂ ಹೋಗಿ ಉಸಾರಿಲ್ದೋರ್ಗೆ ಅವ್ರು ಮಾತ್ರೆ ಗೀತ್ರೆ ಕೊಡೋರು. ಮನೆಮನೆಗೂ ಹೋಗಿ ಬಸಿರೀರವ್ರಾ ವಿಚಾರ್ಸಿ, ಅವ್ರು ಎಂಗಿರ್ಬೇಕು, ಏನ್ ತಿನ್ ಬೇಕು, ಡಾಕುಟ್ರ ತಾವ ಯಾವಾಗ ಹೋಗ್ಬೇಕು ಹೇಳ್ತಿದ್ರು. ಯಾರ್ಗಾನಾ ತಿಳೀದಿದ್ರೆ ಹೆರಿಗೆ ಸಮಯದಾಗೆ ಅವರುನ್ನ ಆಸ್ಪತ್ರೇಗಂಟ ಕರ್ಕೋ ಹೋಗೋರು. ಇವ್ರು ಸ್ಯಾನೆ ಹುಷಾರು. ಹೆರಿಗೆ ಮಾಡುಸ್ತಿರ್ಲಿಲ್ಲ. ಅಂಗೂ ಸ್ಯಾನೇ ಬಡುವ್ರಿದ್ರೆ, ಎಲ್ಗೂ ಕರ್ಕೋ ಹೋಗೋ ಶಕ್ತಿ ಇಲ್ದಿದ್ರೆ ಮಾತ್ರ ಇವ್ರೇ ಮಾಡ್ಸೋರು. ಆದ್ರೂ ಜನ ಇವುರ್ ತಾವ ಹೆರಿಗೇಗೆ ಬರೋದು ಕಡಿಮೇನೇ ಇತ್ತು. + +ಸೂಲಗಿತ್ತಿ ಬಾಲಮ್ಮ + +ನಮ್ಮೂರಿನ್ ಸೂಲಗಿತ್ತಿ ಬಾಲಮ್ಮ ಸುತ್ತೂರ್ಗ್ಳಾಗೆ ಪೇಮಸ್ಸು. ನೂರಾರು ಹೆರಿಗೆ ಮಾಡುಸ್ದೋಳು. ಕೈಗುಣಾ ಸೆಂದಾಗದೆ ಅಂತ ಎಸ್ರು ತಕಂಡಿದ್ಲು. ಆವಮ್ಮ ಸತ್ ಮ್ಯಾಗೆ ಪುಟ್ಟಮ್ಮ ಸೂಲಗಿತ್ತಿ ಕೆಲ್ಸ ಮಾಡೋಳು. ಮುದ್ದಮ್ಮನೂ ಹೆರಿಗೆ ಮಾಡುಸ್ತಿದ್ಲು. ಜನ ಮಿಡ್‌ಪೈಪಿಗಿಂತ ಇವ್ರುನ್ನೇ ನೆಚ್ಚ್ಕೊಂಡಿದ್ರು. + +ಸೊಳ್ಳೆ ಡಾಕುಟ್ರು + +ಇದ್ರ ಜೊತೀಗೆ ಆಗಾಗ ರಾಜಣ್ಣ ಅಂಬ್ತ ಕೊರಟಗೆರೇಯಿಂದ ಮಲೇರಿಯಾ ಇನ್ಸ್ ಪೆಕ್ ಟ್ರು ಬತ್ತಿದ್ರು. ಮಲೇರಿಯಾ ಜಾಸ್ತಿ ಆದಾಗ ಊರ ತುಂಬಾ ಔಸ್ದಿ ಎರಚ್ಕೊಂಡು ಹೋಗ್ತಿದ್ರು. ಚರಂಡಿ ಗಿರಂಡೀಗೆಲ್ಲಾ ಔಸ್ದ ಸಿಂಪಡಣೆ ಮಾಡ್ತಿದ್ರು. ಮಾತ್ರೆ ಗೀತ್ರೆ ಕೊಡ್ತಿದ್ರು. ಹಳ್ಳಿಗಳಲ್ಲಿ ಜನ್ರುಗೆ ಇವ್ರೂ ಡಾಕುಟ್ರ ತರಾನೇ ಇದ್ರು. ಜರಾ ಗಿರಾ ಇದ್ರೂನೆ ಇವ್ರ ತಾವೇನೇ ತೋರುಸ್ಕೊಂತಿದ್ರು. ಸೊಳ್ಳೆ ಡಾಕುಟ್ರು ಅಂತಾನೂ ಇವ್ರುಗೆ ಅಡ್ಡೆಸ್ರು ಇತ್ತು. + +ಹಾಲಿನ ಡೈರಿ + +ಸಹಕಾರಿ ಸಂಘದ ಅಡೀನಾಗೆ ನಮ್ಮೂರ್ನಾಗೆ ಹಾಲಿನ ಡೈರೀನೂ ಇತ್ತು.‌ ಸುತ್ತಾ ಮುತ್ತಾ ಊರುಗುಳಿಂದ ಇಲ್ಲಿಗೇ ಹಾಲು ತಂದು ಹಾಕ್ತಿದ್ರು.‌ ಬೆಳಿಗ್ಗೆ ಸಂಜೆ ಎರ್ಡು ದಪ ಹಾಲು ಹಾಕ್ತಿದ್ರು.‌ + +ಮಿಕ್ಕಿರೋ ಹಾಲು + +ನಮ್ ಮಗ್ಗುಲ‌ ಮನೇಲಿದ್ದ ನನ್ನ ಗೆಣೆಕಾರ್ತಿ ಇಂದ್ರಾ ಜೊತೆ ಸಂಜೆ ಹೊತ್ತು ಒನ್ನೊಂದು ಸಲ ಟೇಮ್ ಪಾಸಿಗೆ ಹಾಲಿನ ಡೈರೀ ತಾವ್ಕೆ ಹೋಗ್ತಿದ್ದೆ. ಅವರ ಮನೇಲಿ ಹಸ ಎಮ್ಮಿ ಇರಲಿಲ್ಲ. ಜನ ಜಾಸ್ತಿ. ಐದು ಜನ ಮಕ್ಕಳು, ಅಪ್ಪ ಅಮ್ಮ. ಜಾಸ್ತಿ ಹಾಲು ಬೇಕಿತ್ತು. ಕೊಂಡ್ಕೊಳ್ಳೋಕೆ ದುಡ್ಡು ಜಾಸ್ತಿ ಆಗ್ತಿತ್ತು. ಇವ್ಳು ಏನ್ ಮಾಡೋಳು, ಒಂದು ಚೊಂಬು ಇಡ್ಕೊಂಡು ಬರೋಳು. ಹಾಲು ಹಾಕುಸ್ಕೊಳ್ಳೋರು ಒಂದು ಲೀಟ್ರು, ಅರ್ಧ ಲೀಟ್ರು, ಕಾಲು ಹಿಂಗೇ ಒಂದು ಅಳತೆ ಹಾಕುಸ್ಕೊಳ್ತಿದ್ರು. ಕೊನೇಗೆ ಅರ್ಧ ಲೋಟ, ಕಾಲು ಲೋಟ ಪಾತ್ರೆ ತಳದಾಗೆ ಉಳ್ಕೊಂತಿತ್ತು. ಇವ್ಳು ಅಂತಾವ್ರ ತಾವ ಐದು ಪೈಸೆ, ಹತ್ತು ಪೈಸೇ ಕೊಟ್ಟು ಹಾಲು ಹಾಕುಸ್ಕೊಂತಿದ್ಲು. ಒಂದೇ ಚೊಂಬಿನಾಗೆ ನಾಟಿ ಹಸಿಂದು, ಸೀಮೆ ಹಸೀಂದು, ಎಮ್ಮೀದು ಎಲ್ಲ ಸೇರ್ಕಂತಿತ್ತು. ನಂಗೇ ತೆಲಿ ಕೆಟ್ಟೋಗ್ತಿತ್ತು. ಅಲ್ಲಾ ನಮ್ಮಮ್ಮ‌ ಹಾಲು ಸ್ಯಾನೆ ಸೂಕ್ಷ್ಮ ಅಂತಾರಲ್ಲ. ಇಲ್ಲಿ ಎಲ್ಲಾ ಸೇರ್ಕೋಂಡು ಬೆರಕಿ ಹಾಲಾದ್ರೂ ಕೆಟ್ಟೊಗಾಕಿಲ್ಲ, ಅದೆಂಗೆ? ದಿನಾ ಸಂಜೆ ಅವುಳ್ದು ಇದೇ ಕೆಲ್ಸ. ಡೈರೀ ತಾವ ಅಡ್ಡಾಡ್ಕೊಂಡು ಹಾಲು ತರಾದು. ವಸಿ ಜನ ಅವಳಂಗೇ ಬಂದು ಹಾಲು ಕೂಡಿಸ್ಕೊಂಡು ಹೋಗ್ತಿದ್ರು. ಹಾಲು ಹಾಕೋವ್ರಿಗೂ ಕೈಕರ್ಚಿಗೆ ಚಿಲ್ರೆ ಸಿಕ್ಕಿ ಕುಶೀಲಿ ಹೋಗ್ತಿದ್ರು. ಚೌಕಾಸೀನೂ ನಡೀತಿತ್ತು. ನಮ್ಮ ಮನೆ ಆಳು ಹಾಲು ಹಾಕೋಕೆ ಬಂದ್ರೆ ಅವುಳ್ಗೆ ಕೊಡ್ಸೋಣ ಅಂತ ಕಾಯ್ತಿದ್ದೆ. ಅವನು ನನ್ ಮಕ ನೋಡೀರೆ ಕಣ್ ತಪ್ಸಿ ಓಡೋಗ್ತಿದ್ದ. ಬ್ಯಾರೆಯೋರ್ಗೆ ಹಾಕಿದ್ರೆ ಚಿಲ್ರೆ ಸಿಕ್ಕುತ್ತೆ ಅಂತ. ಹಾಲು‌ ಹಿಂಡೋ ಮನೆಯೋರೇ ದೊಡ್ಡೋರು ಯಾರಾನ ಹಾಲಾಕಾಕೆ ಬಂದ್ರೆ ಕಾಸು ಸೀದಾ ಮನೇಗೆ ತಕಂಡೋಗೋರು. ಸಣ್ಣ ಹುಡುಗ್ರೋ, ಆಳುಗಳೋ ಬಂದ್ರೆ, ಬಂದಿದ್ದ ಕಾಸ್ನ ಅಲ್ಲೇ ಪೆಟ್ಟಿಗೆ ಅಂಗಡೀನಾಗೆ ಕೊಟ್ಟು ತಿಂಡಿ ತಿಂತಿದ್ರು. ಇಂದ್ರ ಮನೇವ್ರು ಜಕ್ಕೇನಳ್ಳಿಯಿಂದ ಬಂದಿದ್ರು. ಅವ್ರ್ನ ಜಕ್ಕೇನಳ್ಳಿಯವ್ರು ಅಂತಾನೆ ಕರೀತಿದ್ವಿ. ಹಾಲು ಕಮ್ಮಿ ಇರತಿತ್ತಲ್ಲ, ಊಟಕ್ಕೆ ನೀರು‌ ಮಜ್ಜಿಗೆ ಮಾಡ್ತಿದ್ರು. ನಮ್ಮನೇಲಿ ಯಾವಾಗ್ಲೂ ಗಟ್ಟಿ ಕೆನೆಮೊಸರು. ಅದೋ ತುಂಬಾ ಸೀ ಇರ್ತಿತ್ತ, ನಮ್ಗೋ ಅವರ ಮನೆ ನೀರು ‌ಮಜ್ಜಿಗೆನೇ ಅಮೃತ ಅನಿಸ್ತಿತ್ತು. ಅವ್ರು ನಮ್ಮನೇಲಿ ಮೊಸ್ರು ತಗಂಡೋದ್ರೆ ಖುಷೀಲಿ ಊಟ ಮಾಡೋರು. + +ಹಾಲಿನ ಡೈರಿ ಮಗ್ಗುಲಲ್ಲಿ ಪಂಚಾಯ್ತಿ ಹಾಲ್ ಇತ್ತು. ಊರಿನ್ ಕೆಲಸ ಕಾರ್ಯ ಅಲ್ಲಿಂದ್ಲೇ ನಡೀತಿದ್ವು. ಅಪ್ಪ ತುಂಬಾ ಹೊತ್ತು ಅಲ್ಲೇ ಇರ್ತಿದ್ರು. ಜನರ ಗುಂಪು ಅಲ್ಲೇ ಸೇರ್ತಿತ್ತು. ಊರಲ್ಲಿ ಪೇಪರ್ ಬರ್ತಿದ್ದಿದ್ದು ಮೂರೇ ಮನೆಗೆ. ನಮ್ಮನೆಗೆ, ಶಾನುಭೋಗರು ನಾಗೇಶರಾಯರ ಮನೆಗೆ, ಪಟೇಲರು ಸೋಮೇಗೌಡರ ಮನೆಗೆ. ಪೇಪರಲ್ಲಿ ಬಂದ ಸುದ್ದಿಗ್ಳನ್ನ ರಾತ್ರಿ ಹೊತ್ತು ನಮ್ಮನೇ ಅಂಗಳದಾಗೆ ಹರಟೇಗೆ ಕಲೀತಿದ್ರಲ್ಲ ಜನ, ಆವಾಗ ಅಪ್ಪ ಅವರಿಗೆ ಹೇಳ್ತಿದ್ರು. ಇಡೀ ದೇಶದ ರಾಜಕೀಯ ಇಲ್ಲಿ ಚರ್ಚೆಗೆ ಬರ್ತಿತ್ತು. ಅಕ್ಕಪಕ್ಕದ ಊರಾಗಳ ಸುದ್ದಿಗಳೂ ಇಲ್ಲಿ ಹರಿದಾಡ್ತಿದ್ವು. + +ಬೆಳಗಾದ್ರೆ ಚೊಂಬು ಹಿಡ್ಕೊಂಡು + +ಇದೊಂದು ದೊಡ್ಡ ಹಿಂಸೆ. ಬೆಳಗ್ಗೆ ಆದ್ರೆ ಸಾಕು ಬಯಲಿಗೋಗ್ಬೇಕು. ಯಾರ ಮನೇಲೂ ಲೆಟ್ರಿನ್ ಇರಲಿಲ್ಲ. ಬೆಳಗ್ಗೆ ಎದ್ದ ತಕ್ಷಣ ಓಟ. ಬಯಲಿದ್ದಿದ್ದು ಇಸ್ಕೂಲ್ ಹಿಂಭಾಗದಲ್ಲಿ. ದೊಡ್ಡ ಆಟದ ಮೈದಾನ ಆದ ಮೇಲೆ ಗಿಡ, ಮುಳ್ಳುಕಂಟಿ, ಜಾಲಿಮರ, ಹುಣಿಸೆಮರ ಬೆಳೆದಿದ್ದ ಭೂದಾನದ ಜಾಗ ಅದು. ಭೂದಾನದ ಚಳವಳಿ ಸಮಯದಾಗೆ ವಿನೋಬಾ ಬಾವೆಯವ್ರು ನಮ್ಮೂರ್ಗೂ ಬಂದಿದ್ರಂತೆ. ಇಸ್ಕೂಲ್ ಹಿಂಭಾಗದ ಜಾಗ ಯಾರ್ದೂ ಅಂತ ಕೇಳಿದ್ರಂತೆ. ಅದು ರುದ್ರೇಗೌಡರು ತಾವ ನಮ್ಮ ತಾತ ಭೋಗ್ಯಕ್ಕೆ ತಕಂಡಿದ್ರಂತೆ. ವಿನೋಬಾ ಅವ್ರು ಕೇಳ್ದೇಟ್ಗೆ ತಾತ, ಅಯ್ಯೋ ಸ್ವಾಮೇರ, ಇಂತಾ ಪುಣ್ಯ ಕಾರ್ಯಕ್ಕೆ ನೀವು ಕೇಳೋದು ಹೆಚ್ಚಾ, ನಾವು ಕೋಡೋದು ಹೆಚ್ಚಾ ಅಂತ ಇಸ್ಕೂಲಿಗೆ ಬರ್ಕೊಟ್ರಂತೆ. ಆಟದ ಮೈದಾನಕ್ಕೆ ಬಿಟ್ಟು ಉಳಿದಿದ್ದು ಹೆಣ್ಣುಮಕ್ಕಳು ಬಯಲಿಗೋಕೋಕೆ ಉಪಯೋಗ ಆಗ್ತಿತ್ತು. ಗಂಡಸರು ಹೊಲಗಳ ತಾವ ಹೋಗ್ತಿದ್ರು. ಇಲ್ಲಿ ಸಣ್ಣ ಗುಡ್ಡ, ಹಳ್ಳ ಇದ್ವು. ಅದರ ಮರೇಲಿ ಕೂತುಕೊಣೋದು. ಯಾರಾರೂ ಗಂಡಸರು ಹೊಲಗಳಿಗೆ ಹೋಗೋರು ಕಾಲುದಾರೀಲಿ ಬಂದ್ರೆ ಎದ್ದು ನಿಂತುಕೊಣೋದು. ಅವ್ರು ಹೋದ ಮೇಲೆ ಮತ್ತೆ ಕುಂತ್ಕಳಾದು. ಅವಸರ ಆದ್ರಂತೂ ದೇವ್ರೇ ಗತಿ. + +ಒಂದ್ಸಲ ತಮಾಷಿ ಆಯ್ತು. ಆದ್ರೆ ಆವಾಗ ನಂಗದು ಅಮಾಸಿ ಆಗಿತ್ತು. ಸಿಟೀಲಿಂದ ನಮ್ಮ ಸೋದರತ್ತೆ ಮೊಮ್ಮಗಳು ಬಂದಿದ್ಳು. ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ‌ ಹಠ. ದೇವ್ರೇ, ಬ್ಯಾಡ ನನ್ ಕತೆ. ಮನೇಗೆ ಹೋಗಿ ಸಣ್ಣ ಬಿಂದಿಗೆ ತಗೊಂಡು ಬರ್ತಿದ್ರೆ, ರಸ್ತೆನಾಗಿನ ಜನವೆಲ್ಲ ಬಿದ್ದು ಬಿದ್ದು ನಗಾಡಿದ್ರು. ಅವಮಾನಕ್ಕೆ ತಲೆ ಬಗ್ಗಿಸ್ಕೊಂಡು ಹೋದೋಳು, ಮತ್ತೆ ತಲೆ ಎತ್ತಲಿಲ್ಲ. ನನ್ ಗಾಚಾರಕ್ಕೆ ನನ್ ಗೆಳತೀ ನೋಡ್ ಬಿಟ್ಟೌಳೆ. ತಕೋ ಇಸ್ಕೂಲ್ ತುಂಬಾ ಇದೇ ಸುದ್ದಿ. ಎಲ್ರೂ ಕೇಳೋರೇಯಾ. ನಂಗೂ ಯೋಳಿ ಯೋಳಿ ಸಾಕಾಯ್ತು. + +ಕಟ್ಟಕಾಲುವೆ + +ಜಯಮಂಗಲಿ ನದೀ ನೀರು ಕಟ್ಟಕಾಲುವೇಲಿ ಹರೀತಿತ್ತು.‌ ಇದು ವೀರಾಪುರಕ್ಕೋಗೋ ದಾರೀಲಿತ್ತು. ಅಲ್ಲಾಸಿ ದೊಡ್ಡಮಾಲೂರು ಕೆರೆ ಸೇರ್ತಿತ್ತು. ಸನಿಮಾತ್ಮನ ಗುಡೀಗೆ ಕಾಲುವೆ ಮ್ಯಾಲೇ ಹೋಗ್ಬೇಕಿತ್ತು. ಕಾಲುವೇನಾಗೆ ನೀರು ತುಂಬಿದ್ರೆ ಮರವು ಬೀಳೋದು ಅಂತಿದ್ರು. ಆಗ ಊರವ್ರೆಲ್ಲಾ ಹೋಗಿ ಪೂಜೆ ಮಾಡೋರು, ಬಾಗನ ಕೊಡೋರು, ನೋಡಾಕೆ ಬರೋರು ಗುಂಪು ಗುಂಪಾಗಿ ಬುತ್ತಿ ಕಟ್ಕೊಂಡು ಹೋಗಿ ಪೂಜೆ ಮುಗ್ಸಿ, ಉಂಡು, ನೀರಲ್ಲಿ ಆಟ ಆಡ್ಕೊಂಡು ಬರ್ತಿದ್ರು. ಅಲ್ಲೇ ದಂಡಿಯಾಗಿ ಬಂಡೆಗಳೂ ಇದ್ವು. ಊರ ಜನ ಅಲ್ಲೇ ಬಟ್ಟೆ ಒಕ್ಕೊಂಡು ಬರ್ತಿದ್ರು. + +ಗೌರಿ ಗಣೇಶ ಹಬ್ಬದಲ್ಲಿ ಗಣೇಶನ್ನ ಊರ ಕೆರೇಲಿ ಬಿಡ್ತಿದ್ವಿ. ತಮಟೆ, ಡೋಲು ಹೊಡ್ಕೊಂಡು, ಕುಣ್ಕಂಡು ಮೆರವಣಿಗೇಲಿ ಹೋಗಿ ಅವ್ವ ಮಗನ್ನ‌ ಮುಳುಗಿಸ್ತಿದ್ವು. ಚಿತ್ರಾನ್ನ, ಮೊಸರನ್ನ ದೊಡ್ಡ ಕೊಳದಪ್ಪಲೆಗಳಲ್ಲಿ ತುಂಬ್ಕೊಂಡು ಬಂದಿರ್ತಿದ್ರು. ಇಸ್ತ್ರೆಲೆಗಳಲ್ಲಿ ಇಲ್ಲಾಂದ್ರೆ ಅಲ್ಲೇ ಮೋತುಗದ ಮರದ ಎಲೆ ಹರಿದು ಹಾಕ್ಕೊಡ್ತಿದ್ರು. ಊರ ಜನ ಚಂದಾ ಹಾಕ್ಕೊಂಡು ಬುತ್ತಿ ತಯಾರ್ಸೋರು. ಸುಮಾರು ಸತಿ ನಮ್ಮನೇಲೆ ಅಡುಗೆಭಟ್ರು ಬಂದು ರೆಡಿ ಮಾಡಿ ಕೊಡ್ತಿದ್ರು. + + + +ನಮ್ಮೂರಿನ ಜನ ಕತೆ ಕಟ್ಟೋದ್ರಾಗೆ ಪೇಮಸ್ಸು.‌ ಸುಳ್ನೂವೆ ನಿಜುದ್ ತಲೆ ಮ್ಯಾಲೆ ಹೊಡ್ದಂಗೇ ಹೇಳೋರು. ಬಣ್ಣ ಬಣ್ಣದ ಕಾಮನಬಿಲ್ಲು ತೋರ್ಸೋರು. + +ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_190.txt b/Kenda Sampige/article_190.txt new file mode 100644 index 0000000000000000000000000000000000000000..74e41f663499c2a0a14621ba56773c4c72dd8227 --- /dev/null +++ b/Kenda Sampige/article_190.txt @@ -0,0 +1,27 @@ +ಎನ್. ಎಸ್. ಶ್ರೀಧರ ಮೂರ್ತಿ ಕನ್ನಡ ಸಾಹಿತ್ಯ ಲೋಕ, ಸಂಗೀತ ಲೋಕ ಹಾಗೂ ಬೆಳ್ಳಿಪರದೆಯ ನಂಟು ಹೊಂದಿದವರು. ಈ ಮೂರು ಅವರ ನಿರಂತರ ಕರ್ಮಭೂಮಿಗಳು. ಈ ಮೂರು ಕ್ಷೇತ್ರಗಳ ಬಗ್ಗೆಯೂ ಮಾತನಾಡಬಲ್ಲ ಸಾರ್ಮರ್ಥ್ಯವಿದೆ. ಒಂದೇ ಚೂಯಿಂಗ ಗಮ್ ಬಾಯಲಿಟ್ಟುಕೊಂಡು ಅಗಿದುದ್ದನ್ನೆ ಅಗಿಯುವ ಜಾಯಮಾನ ಅವರದಲ್ಲ. 2020ರಲ್ಲಿ ಬರೆದ ‘ನಾದದ ನೆರಳು’ ಕಳೆದ ವರ್ಷ ಅವರು ಬರೆದ ‘ಪ್ರೊ. ಎಲ್.ಎಸ್. ಶೇಷಗಿರಿರಾವ್- ಬದುಕು ಬರಹ’ ಪುಸ್ತಕ ಮತ್ತು ಈ ವರ್ಷದ ‘ಅಂದದ ಹೆಣ್ಣಿನ ನಾಚಿಕೆ’, ಹೀಗೆ ವೈವಿಧ್ಯಮಯ ಬರೆಹಗಳ ಮೂಲಕ ಬಹುಮುಖ ವಿಷಯ ಜ್ಞಾನವನ್ನು ಹೊಂದಿದವರು. “ಅಂದದ ಹೆಣ್ಣಿನ ನಾಚಿಕೆ” ಪುಸ್ತಕದ ಹಲವು ಪ್ರಬಂಧಗಳನ್ನು ಅದಾಗಲೇ ಟಿವಿ9 ಪೋರ್ಟಲ್‌ನಲ್ಲಿ ಓದಿದ್ದೆ. ಪುಸ್ತಕ ಬಂದಾಗ ಓದಲು ವಿಶ್ವಾಸದಿಂದ ಕಳಿಸಿದ್ದರು. ಎನ್. ಎಸ್. ಶ್ರೀಧರ ಮೂರ್ತಿಯವರಲ್ಲಿ ಕಲಾ ಸೋಪಜ್ಞತೆ ಇದೆ. ಸಿನೇಮಾ ಜಗತ್ತಿನ ರೋಚಕ ಕಥೆಗಳ ಅಡಿಯಲ್ಲಿ ಉಸಿರುಗಟ್ಟಿ ನಿಂತ ತೀವ್ರ ನೋವಿನ ಹೃದಯದ ಮಿಡಿತವನ್ನು ಆ ಕಲೆ ಇಲ್ಲಿ ಅಕ್ಷರರೂಪಕ್ಕಿಳಿಸಿದೆ. ಹಾಗೆಂದು ಅವರು ಸಿನೆಮಾ ಜಗತ್ತಿಗೆ ಸೀಮಿತರಾದವರಲ್ಲ. ಅದವರ ಪೂರ್ಣ ಪ್ರಮಾಣದ ಕ್ರೇತ್ರವಲ್ಲ. ಒಂದು ಭಾಗ ಮಾತ್ರ. ಶಂಕರ್ ನಾಗ್ ಪರಿಚಯವಾದ ದಿನಗಳಲ್ಲಿ ಶ್ರೀಧರಮೂರ್ತಿಯವರಿಗೆ ಒಂದು ಮಾತು ಹೇಳಿದ್ದರಂತೆ “ನಿಮ್ಮಂತಹ ಸೂಕ್ಷ್ಮ ಮನಸ್ಸಿನವರಿಗೆ ಈ ಸಿನೆಮಾ ಜಗತ್ತು ಪೂರ್ಣವಾಗಿ ಅರ್ಥವಾಗಲಾರದು. ಹಾಗಾಗಿ ಇದು ನಿಮಗೆ ಪಕ್ಕದ ಮನೆಯಾಗಿಯೇ ಇರಲಿ, ಮನೆಯಾಗೋದು ಬೇಡ. ಯಾಕೆಂದರೆ ಆ ಜಗತ್ತು ಬಹಳ ಅನ್ ಸರ್ಟನ್” ಎಂದಿದ್ದರಂತೆ. + +(ಎನ್. ಎಸ್. ಶ್ರೀಧರ ಮೂರ್ತಿ) + +ಎನ್. ಎಸ್. ಶ್ರೀಧರ ಮೂರ್ತಿಯವರ ಪ್ರಬಂಧಗಳನ್ನು ಅಲ್ಲಲ್ಲಿ ಓದಿದ ನಾನು ಅವರ ಅದ್ಭುತ ನೆನಪಿನ ಶಕ್ತಿಯ ಬಗ್ಗೆ ‘ಇವುಗಳನ್ನೆಲ್ಲಾ ಟಿಪ್ಪಣಿ ಮಾಡಿಟ್ಟುಕೊಂಡು ಬರೆಯುವಿರೋʼ? ಎಂದು ಕೇಳಿದ್ದೆ. ಅದಕ್ಕವರು ‘ಹಾಗೇನೂ ಇಲ್ಲ, ನೆನಪಾದಾಗ ಇಂತಹವರ ಬಗ್ಗೆ ಬರೆಯಬೇಕೆಂದುಕೊಂಡಾಗ ಅವರೊಂದಿಗಿನ ಒಡನಾಟದ ಪ್ರಸಂಗಗಳು, ಘಟನೆಗಳು, ಕೇಳಿದ ಸಂಗತಿಗಳನ್ನು ನೆನಪಿಸಿಕೊಂಡರೆ ರೀಲಿನಂತೆ ಬಿಚ್ಚಿಕೊಳ್ಳುತ್ತವೆ, ಅವುಗಳನ್ನೆ ದಾಖಲಿಸುತ್ತಾ ಹೋಗುತ್ತೇನೆ, ಅಗತ್ಯದ ಮಾಹಿತಿಗಳು ಬೇಕೆನ್ನಿಸಿದಾಗ ಅವರನ್ನೋ ಅಥವಾ ಅವರ ಸ್ನೇಹಿತರನ್ನೋ ಕೇಳಿ ಪಡೆದು ದಾಖಲಿಸುತ್ತೇನೆʼ ಎಂದಿದ್ದರು. + +ಹಾಗಾಗಿ ಇಲ್ಲಿರುವ ಪ್ರಬಂಧಗಳು ಚಿತ್ರರಂಗದ ಒಟ್ಟಾರೆ ಒಳಹೊರಗನ್ನು ತೆರೆದಿಡುತ್ತವೆ. ಸಿನೆಮಾ ಸಾಹಿತ್ಯ ಎಂಬ ಕ್ಲುಪ್ತ ಅಭಿಪ್ರಾಯಕ್ಕೆ ಬೇರೆಯದೇ ಆದ ಆಯಾಮವೂ ಇದೆ ಎಂಬುದಕ್ಕೆ ‘ಸಿನೆಮಾ ಕ್ಷೇತ್ರದ ಗಾಸಿಪ್, ಗ್ಲಾಮರ್ ಪರದೆಯನ್ನು ಸರಿಸಿ ಕಲೆಯ ನೆಲೆಯಲ್ಲಿ ನೋಡುವ ಹಂಬಲ ನನ್ನದುʼ ಎಂದು ಸ್ವತಃ ಶ್ರೀಧರಮೂರ್ತಿ ಹೇಳಿಕೊಂಡಿದ್ದಾರೆ. ನಮ್ಮ ಕನಸಿನ ಹೀರೋ ಹೀರೋಯಿನ್‌ಗಳ, ಅಂದಕಾಲತ್ತಿಲ್ ನಟ ಭಯಂಕರರ, ಸಂಗೀತ ದಿಗ್ಗಜರ ಜೊತೆಗಿನ ಲೇಖಕರ ಒಟನಾಟ, ಅವರಿಂದಲೇ ಕೇಳಿ ತಿಳಿದ ಸಂಗತಿಗಳು, ಇವುಗಳೇ ಇಲ್ಲಿಯ ಪ್ರಬಂಧದ ವಿಷಯವಸ್ತುಗಳು. ಯಾವ ಇಸಂಗಳಿಲ್ಲದೇ, ಓಲೈಕೆಗಳ ಹಂಗಿಲ್ಲದೇ ಇಲ್ಲಿಯ ಪ್ರಬಂಧಗಳು ಮೂಡಿರುವುದು ಇವುಗಳ ಸತ್ವ. ಅವುಗಳಲ್ಲಿಯ ನಿರೂಪನಾ ಶೈಲಿ ವಿಧಾನದಲ್ಲಿ ಹೊಸತನವಿದೆ. ಕವಿತೆ, ಕಥೆ ಕಾದಂಬರಿಗಳು ಕೊಡುವ ಜೀವನ ಸಂದೇಶಗಳನ್ನು ಈ ಸಿನೆಮಾ ಜಗತ್ತಿನ ರೂಪಕಗಳಲ್ಲಿ ಹಿತವಾಗುವಂತೆ, ಮನಕ್ಕಿಳಿಯುವಂತೆ ಶ್ರೀಧರ ಮೂರ್ತಿಯವರು ಬರೆಯುತ್ತಾರೆ. + +ಗಾಸಿಪ್ ಗ್ಲಾಮರಗಳ ಹೊರತಾಗಿಯೂ ಆ ಕಲಾವಿದರೂ ಮನುಷ್ಯರು, ನಮ್ಮಂತಹುದೇ ಅಂತಃಕರಣ ಉಳ್ಳವರು ಎಂಬ ಕನಿಷ್ಠ ಪ್ರಜ್ಞೆಯಿಲ್ಲದೇ ಜನರು ಪ್ರತಿಕ್ರಿಯಿಸುತ್ತಾರೆ. ಸಿನೆಮಾದವರೆಂದರೆ ಕೇವಲ ಪರದೆಯ ಮೇಲಿನ ಪಾತ್ರಗಳು ಮಾತ್ರ ಎಂದು ಗ್ರಹಿಸುವ ಮನಸ್ಸುಗಳಿಂದ ಬೇರೆನನ್ನು ನಿರೀಕ್ಷಿಸಲು ಸಾಧ್ಯ? ಎಂಬುದನ್ನು “ಬ್ರೇಕಿಂಗ್ ನ್ಯೂಸ್‍ಗಿಂತ ಬದುಕು ದೊಡ್ಡದು” ಎಂಬ ಪ್ರಬಂಧದಲ್ಲಿ ಹೆಸರಾಂತ ಕಲಾವಿದರೇ ಅನುಭವಿಸಿದ ನೋವಿನ ಪ್ರಸಂಗಗಳನ್ನು ಕಟ್ಟಿಕೊಡುತ್ತಾರೆ ಲೇಖಕರು. + +ತಮ್ಮ ಬದುಕಿನ ಸರ್ವಸ್ವವೇ ಆಗಿದ್ದ ತಾಯಿ ನಿಧನರಾದಾಗ ಬಹುಭಾಷಾ ತಾರೆ ಜ್ಯೂಲಿಲಕ್ಷ್ಮೀ ವಿಪರೀತ ಅತ್ತು ಬಳಲಿದ್ದರಂತೆ. ಆಗ ನೆರೆದವರಲೊಬ್ಬರು “ಸಿನೆಮಾದವರಲ್ಲವೇ? ಅತ್ತು ಅತ್ತು ಅನುಭವ ಚೆನ್ನಾಗಿರುತ್ತದೆ” ಎಂದಿದ್ದರಂತೆ. ಅದಕ್ಕೆ ಲಕ್ಷ್ಮೀ “ನಾವು ಸಿನೆಮಾದವರು ನಿಜ. ಅದು ನಮ್ಮ ವೃತ್ತಿ. ಹಾಗೆಂದು ನಮಗೆ ಖಾಸಗಿ ಬದುಕು ಇರಲೇಬಾರದೇ? ನಮ್ಮ ಖಾಸಗಿ ಬದುಕನ್ನು ಕೆದಕಿ ಚ್ಯೂಯಿಂಗ್ ಗಂ ತರಹ ರೋಚಕ ಕಥೆಗಳನ್ನು ಮಾಡಬಹುದು. ಅದು ಮಾಧ್ಯಮದಲ್ಲಿ ಯಶಸ್ಸನ್ನು ತಂದುಕೊಡಬಹುದು. ಆದರೆ ನಮ್ಮ ಮೇಲೆ ಅದರಿಂದಾಗುವ ಪರಿಣಾಮಗಳ ಬಗ್ಗೆ ಚಿಂತಿಸಬೇಕಲ್ಲವೇ?” ಎಂದಿದ್ದರಂತೆ. + + + +ಕನ್ನಡ ಬೆಳ್ಳಿತೆರೆಯ ಮಿನುಗುತಾರೆ ಕಲ್ಪನಾರ ಜೀವನದ ಘಟನೆಗಳು, ಅವರ ಅತಿರೇಕದ ಕೆಲವು ವರ್ತನೆಗಳನ್ನು ಭಿನ್ನವಾಗಿ ಬರೆದು ಆಕೆಯೊಬ್ಬ ಅಸೆಂಟ್ರಿಕ್ ಆಗಿದ್ದಳು ಎಂಬಂತೆ ಬರೆದ ಸಿನೆಮಾ ಸಾಹಿತ್ಯ ಓದಿದ್ದ ನಮಗೆ ಆಕೆಯ ಪ್ರತಿ ವರ್ತನೆಯಲ್ಲೂ ಉದಾಹರಿಸುವುದಾದರೆ ಸಂಜೆ ಶೂಟಿಂಗ್‌ ಒಪ್ಪದ ಕಲ್ಪನಾ ಅವರ ನಿರ್ಧಾರದ ಹಿಂದೆ ಸಿನೆಮಾ ಜಗತ್ತಿನ ಕಪ್ಪುಮುಖಗಳ ನಿಯಂತ್ರಿಸುವ ಮತ್ತು ಅದರಿಂದಾಗಬಹುದಾದ ಎಡವಟ್ಟುಗಳಿಂದ ಬಚಾವಾಗುವ ಉದ್ದೇಶವಿತ್ತೆಂಬ ಕಲ್ಪನೆ ಇರಲಿಲ್ಲ. ಇಂತಹವುಗಳ ಬಗ್ಗೆ ದಾಖಲಾಗುವ ವಿಚಾರವೇನೆಂದರೆ ನಟಿ ಮಣಿಗಳ ಧಿಮಾಕು ಎಂತಲೇ ಚಿತ್ರಿಸಲಾಗುತ್ತದೆ. ಇಲ್ಲಿಯ ಕೆಲವು ಸೂಕ್ಷ್ಮಗಳು ಅದೆಷ್ಟೋ ಸಂದರ್ಭಗಳಲ್ಲಿ ಹೊರಜಗತ್ತಿಗೆ ತಿಳಿಯುವುದೇ ಇಲ್ಲ. ‘ಕಾಸ್ಟಿಂಗ್ ಕ್ಯಾಚ್ʼ ಕೂಡಾ ಈ ಕ್ಷೇತ್ರದಲ್ಲಿ ಕಲಾವಿದೆಯರ ದೋಚುವ ಇನ್ನೊಂದು ಮುಖವಾಡ. + +“ತನುವು ಮನವೂ ಇಂದು ನಿಂದಾಗಿದೆ” ಬರಹ ಬಾಡಿ ಶೇಮಿಂಗ್ ಬಗ್ಗೆ ಮಾತನಾಡುತ್ತದೆ. ಹುಡುಗರಿಗಿಂತ ಹುಡುಗಿಯರನ್ನು, ನಾಯಕರಿಗಿಂತ ನಾಯಕಿಯರನ್ನು ಕಾಡುವ ಬಾಡಿ ಶೇಮಿಂಗ್ ಆರತಿ, ಕಲ್ಪನಾರಂತಹ ಹಿರಿಯ ಕಲಾವಿದೆಯರಿಂದ ಹಿಡಿದು ಇಂದಿನ ದೀಪಿಕಾ ಪಡಕೋಣೆಯವರೆಗೂ ದಟ್ಟವಾಗಿ ಕಾಡುತ್ತವೆ. ಗಾಸಿಪ್‌ಗಳಿಗೆ ಕಾರಣವಾಗುತ್ತವೆ. ಇನ್ನು ರಿಯಾಲಿಟಿ ಶೋಗಳಲ್ಲಿ ಹಾಡುಗಾರ ಅಥವಾ ಹಾಡುಗಾರ್ತಿ ಸುಶ್ರಾವ್ಯವಾಗಿ ಹಾಡುತ್ತಿದ್ದರೆ ಸಾಲದು, ನೋಡಲು ಆಕರ್ಷಕವಾಗಿರಬೇಕು ಎಂಬ ಸಂಗತಿಯನ್ನು ಲೇಖಕರು ತಿಳಿಸುತ್ತಾರೆ. ಇದೊಂದು ಕಲೆ ಅನ್ನುವುದಕ್ಕಿಂತ ಕಲೆಯ ವ್ಯಾಪಾರ. + +ಪಂಪ ಭಾರತದಲ್ಲಿನ ರೂಪಕವೊಂದು ನಾಗರಹಾವು ಸಿನೆಮಾದ ಹಾಡಿನ ನುಡಿಯಾಗಿ ಪ್ರಸಿದ್ಧವಾದದ್ದನ್ನು ಉಲ್ಲೇಖಸುತ್ತಾ ಆ ರೂಪಕವನ್ನೆ ಪ್ರಬಂಧವಾಗಿಸಿ “ಅಂದದ ಹೆಣ್ಣಿನ ನಾಚಿಕೆ” ಬರೆದು ಆಶ್ಚರ್ಯ ಮೂಡಿಸುತ್ತಾರೆ. ಆತ್ಮ ಗೌರವಕ್ಕಿಂತ ಮಿಗಿಲಾದ್ದು ಯಾವುದು ಇಲ್ಲ ಎಂಬುದನ್ನು ಹೇಳಹೊರಟ ಶ್ರೀಧರ ಮೂರ್ತಿಯವರು ‘ಹಿಂಡ ಬಾರದು ದುಂಡು ಮಲ್ಲಿಗೆಯ ದಂಡೆಯನ್ನುʼ ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಪದಬಳಕೆಯಲ್ಲೂ ಕಾಣುವ ಅವರ ಕಲಾತ್ಮಕತೆ ಅನನ್ಯ. ಇದಕ್ಕೆ ಸಂವಾದಿಯಾಗಿ ಬರುವ ಇನ್ನೊಂದು ಲೇಖನ ‘ಬರೆದು ಜೀವಿಸಬಹುದೇ?’ ಬರೆದು ಜೀವಿಸುವವರು ಎಂದು ಕೊಂಕಾಡುವ ಜನರಿಗೆ ಪರೋಕ್ಷ ಸವಾಲಿನಂತಿದೆ ಈ ಪ್ರಬಂಧ. ಒಂದು ಬರಹ ಹಣ ಪಡೆದು ಬರೆದರೂ, ಇಲ್ಲ ಕೇವಲ ಆತ್ಮ ಸಂತೋಷಕ್ಕೆ ಬರೆದರೂ ಅದರ ಗುಣಮಟ್ಟದ ಮೇಲೆ ಯಾವ ಪರಿಣಾಮ ಬೀರದು ಎಂಬುದನ್ನು ಸುಂದರವಾಗಿ ನಿರೂಪಿಸುತ್ತಾರೆ. ‘ಏರಿ ಏರಿಯೊಳು ಅಂತರಂಗದ ಸಿರಿಯ ಜಗಕೆ ತೋರಿʼ ಆರ್ ಎನ್ ಜಯಗೋಪಾಲ, ಸಿ ಅಶ್ವತ್ಥ್, ನರೇಂದ್ರ ಬಾಬು ಮುಂತಾದ ಮಹನೀಯರ ಅಂತರಂಗದ ಸಿರಿಯನ್ನು ತೋರುವ ಪ್ರಸಂಗಗಳನ್ನು ಓದಿಯೇ ಆನಂದಿಸಬೇಕು. + +ಪರರ ಸಾವನ್ನೂ ಸಂಭ್ರಮಿಸುವ ಜನರ ಸ್ವಭಾವ ವಿಡಂಬನೆಯ ಜೊತೆ ಹೆಸರಾಂತ ವ್ಯಕ್ತಿಗಳ ಸಾವನ್ನೂ ದಾಖಲಿಸಬೇಕಾದ ತುರ್ತಿಗೆ ಒಳಗಾಗಿರುವ ಪತ್ರಕರ್ತನೊಬ್ಬ ಆ ಸಂದರ್ಭಗಳಲ್ಲಿ ಎದುರಿಸುವ ಮುಜುಗರಗಳು, ನೋವು ಹೇಗಿರುತ್ತದೆ ಎಂಬುದನ್ನು ‘ಸಾವು ತನ್ನ ತಣ್ಣಗಿನ ಕೈ ಸವರಿದಾಗ’ ಲೇಖನದಲ್ಲಿ ಎಸ್‍ಪಿಬಿ, ಪಿಬಿಎಸ್ ಡಾ. ರಾಜ್ ಮುಂತಾದವರ ಸಾವಿನ ಸಂದರ್ಭಗಳ ನೆನೆದು ಬರೆಯುತ್ತಾರೆ. ‘ಅಕಾಲದಲ್ಲಿ ಆರದಿರಲಿ ಬೆಳಕು’, ‘ಹೇಳಿ ಹೋಗಬಹುದಿತ್ತೇ ಕಾರಣ’ ಕಲಾ ಜಗತ್ತಿನ ಶ್ರೇಷ್ಠರ ಸಾವು ಮೂಡಿಸುವ ಶೂನ್ಯ ಮನಸ್ಥಿತಿಯನ್ನು ಸಾವಿನ ಘೋರಮುಖವನ್ನು ಪರಿಚಯಿಸುತ್ತದೆ. ಆದರೆ ಯಾವ ಬರಹವೂ ಭಾರವೆನಿಸುವುದಿಲ್ಲ. + + + +ಬರೆದ ಭಾರಕ್ಕೆ ಬರಹವೇ ಹೊರೆಯಾದಂತೆ ಎನ್ನಿಸುವ ಸೋ ಕಾಲ್ಡ್ ಅಕಾಡೆಮಿಕ್ ವಲಯದ ಬರಹಗಳು ಕೆಲವೊಮ್ಮೆ ಪಂಡಿತ ವರ್ಗಕ್ಕೂ ಹೊರೆ ಎನಿಸುವುದಿದೆ. ತಮ್ಮ ಮೂಗಿನ ನೇರಕ್ಕೆ ಬರೆದು ಅದರಾಚೆ ಒಂದಿಷ್ಟು ಜರುಗದ ವಿಮರ್ಶಕರು ನಮ್ಮಲ್ಲಿದ್ದಾರೆ. ಅಂತಹ ಬೋರಿಂಗ್ ಅಕಾಡೆಮಿಕ್ಸ್ ಜೊತೆಗೆ ಕವಿತೆಗಳ ಬರೆದು ಬರೆದು ಗೋಪುರ ಕಟ್ಟಿದ ಕವಿ ಪುಂಗವರಿದ್ದಾರೆ. ಸಿನೇಮಾ ಜಗತ್ತಿನ ಬಗ್ಗೆ ಕಲಾವಿದರ ಖಾಸಗಿ ಬದುಕಿನ ಕುರಿತು ಯದ್ವಾತದ್ವಾ ಬಣ್ಣಿಸಿ ಬರೆವ ಸಿನೆಮಾ ಸಾಹಿತಿಗಳಿದ್ದಾರೆ. ಆ ಎಲ್ಲ ಅತಿರೇಕದ ನಡುವೆ ಆ ಜಗತ್ತಿನ ಹಲವರ ಅನುಭವಗಳನ್ನು, ಘಟನೆಗಳನ್ನು ಶ್ರೀಧರ ಮೂರ್ತಿಯವರು ವಿಶಿಷ್ಟವಾಗಿ ಬರೆಯುತ್ತಾರೆ. ಸಿನೆಮಾ ಸಾಹಿತ್ಯ ಎಂದರೆ ‘ಔಟಕಾಸ್ಟ್‌ ಲಿಟರೇಚರ್’ ಎನ್ನುವ ಜಾಯಮಾನ ಬದಲಾಗುವ ಹಾಗೇ ಇಲ್ಲಿಯ ಬರಹಗಳು ಹೊಸದಾದ ಒಂದು ಪರಂಪರೆಯನ್ನು ಹಾಕಿಕೊಟ್ಟಿವೆ. ಹೆಸರಾಂತ ಕಥೆಗಾರರಾದ ಕೆ. ಸತ್ಯನಾರಾಯಣ ಅವರು ‘ಸೋಗಿನ ಬುದ್ಧಿಜೀವಿಗಳು ಸುಳ್ಳುಸುಳ್ಳೇ ಹಬ್ಬಿಸಿರುವ ಈ ಕೃತಕ ವಿಭಜನೆಯನ್ನು ಶ್ರೀಧರ ಮೂರ್ತಿ ಮಾನ್ಯ ಮಾಡದಿರುವುದು ನನಗೆ ತುಂಬಾ ಸಂತೋಷ ನೀಡಿತು’ ಎಂದಿದ್ದಾರೆ ಮುನ್ನುಡಿಯಲ್ಲಿ. ಬರವಣಿಗೆ ಎಂದರೆ ಬದುಕಿಗೆ ಮೂಲವಾಗಿರುವ ನಮ್ಮೆಲ್ಲರ ಅನುಭವಗಳ ಮೂರ್ತ ಅಥವಾ ಅಮೂರ್ತ ಪರಿಕಲ್ಪನೆ. ಸಾಹಿತ್ಯ ಯಾವುದೇ ಆಗಿರಲಿ ಅದರ ಮೂಲ ಗುರಿ ಜನರ ಶ್ರೇಯಸ್ಸನ್ನು ಸಾಧಿಸುವುದು ಮತ್ತು ಆಪೇಕ್ಷಿಸುವುದು. ಈ ನಿಟ್ಟಿನಲ್ಲಿ ಇಲ್ಲಿಯ ಪ್ರಬಂಧಗಳು ಬಹುಮುಖ್ಯವಾಗುತ್ತವೆ. + +ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ) \ No newline at end of file diff --git a/Kenda Sampige/article_191.txt b/Kenda Sampige/article_191.txt new file mode 100644 index 0000000000000000000000000000000000000000..0f165471d03a206874ae5a346af23c3bcc72a5ad --- /dev/null +++ b/Kenda Sampige/article_191.txt @@ -0,0 +1,49 @@ +ಬಾಲ್ಯದಲ್ಲಿ ಅಜ್ಜನ ಊರು ಮತ್ತು ಅಜ್ಜನ ಮನೆ ಎನ್ನುವ ಆ ಜಾಗ ಎಷ್ಟೊಂದು ಆಸ್ಥೆಯ ಆಕರ್ಷಣೆಯ ಜಾಗವಾಗಿತ್ತು… ಅದೆಷ್ಟು ಖುಷಿಯಿಂದ ಅಜ್ಜನ ಮನೆಗೆ ಬರುತ್ತಿದ್ದೆವು… ಅಜ್ಜನ ಮನೆಯ ಮಾಳಿಗೆ, ಪಡಸಾಲೆ, ನೆಲಾಗಾಣೆ, ಅಟ್ಟ, ಗಣಿಗೆ, ಬಾದಾಳ, ಸಗಣಿ ನೆಲ, ಮಣ ಗಾತ್ರದ ಒಂಟಿ ತಲೆ ಬಾಗಿಲು, ಪಡಸಾಲೆಯ ನಾಲ್ಕು ಕಂಬಗಳು, ಅಡುಗೆ ಮನೆಯ ಮಜ್ಜಿಗೆ ಕಡೆಯುವ ಕಂಬ, ದನಾಕ್ಕೆ, ತಿಪ್ಪೆ, ಬಾರುಕೋಲುಗೇವಿನ, ಸಗಣಿ, ಗಂಜಲ…. ಇನ್ನೂ ಅಸಂಖ್ಯ ಯಾವುದನ್ನೂ ಮರೆಯಲು ಸಾಧ್ಯವಾಗದೆ ಇನ್ನು ಮರೆತು ಹೋಗಿಬಿಟ್ಟರೆ?! ಎಂದು ಮನಸ್ಸು ಅತ್ತಿಂದಿತ್ತ ತೊನೆಯುತ್ತಿದ್ದಾಗ ಮತ್ತೆ ಮತ್ತೆ ಅಜ್ಜನೂರನ್ನು ಕಣ್ತುಂಬಿಕೊಳ್ಳಲು ಹೊರಟದ್ದಿದೆ. + +ಅಜ್ಜನ ಮನೆಯಲ್ಲಿ ನಾನು ಹುಟ್ಟಿದಾಗ ಮನೆಯಲ್ಲಿ ಮೂರು ಮೂರು ಬಾಣಂತನಗಳಂತೆ. ನನ್ನ ಅತ್ತೆಯ ಮಗ, ದೊಡ್ಡಪ್ಪನ ಮಗ ಮತ್ತು ನಾನು ಒಟ್ಟಿಗೆ ಒಂದೇ ಮನೆಯಲ್ಲಿ ಒಂದೇ ತಿಂಗಳಲ್ಲಿ ಹುಟ್ಟಿದ್ದೆವಂತೆ. ಪಡಸಾಲೆಯ ನಾಲ್ಕು ಕಂಬಗಳನ್ನು ಬಳಸಿ ಮೂರು ಜೋಲಿ ಕಟ್ಟಿದ್ದರಂತೆ. ಪರದೆಗಳನ್ನು ಇಳಿ ಬಿಟ್ಟು ಮೂರು ಬಾಣಂತಿ ಕೋಣೆಗಳನ್ನು ನಿರ್ಮಿಸಿದ್ದರಂತೆ. ಅತ್ತೆಯ ಮಗ ಮತ್ತು ದೊಡ್ಡಪ್ಪನ ಮಗ ಬೆಳ್ಳ ಬೆಳ್ಳಗೆ ಗುಂಡು ಗುಂಡಗೆ ಮುದ್ದು ಮುದ್ದಾಗಿದ್ದರಂತೆ. ಆದರೆ ನಾನು ಕಪ್ಪಗೆ, ತೆಳ್ಳಗೆ ಇಷ್ಟೇ ಇಷ್ಟು ಇದ್ದೆನಂತೆ. ಮನೆಗೆ ಯಾರೇ ಬರಲಿ ಅವರಿಬ್ಬರನ್ನೇ ಹೆಚ್ಚು ಮುದ್ದು ಮಾಡುತ್ತಿದ್ದರಂತೆ. ನನ್ನನ್ನು ಯಾರೂ ಎತ್ತಿಕೊಳ್ಳುತ್ತಿರಲಿಲ್ಲವಂತೆ. ನಾನು ನನ್ನಮ್ಮನಿಗೆ ಮೊದಲ ಮಗು. ಮೇಲಾಗಿ ಅಮ್ಮ ಹದಿನೈದಕ್ಕೆ ಹಸೆ ಏರಿದವರು, ಹದಿನೇಳಕ್ಕೆ ನನ್ನನ್ನು ಹೆತ್ತವರು. ಅವರಿಗೆ ಅದೇನೇನು ಕನಸುಗಳಿತ್ತೋ… ನನ್ನಿಂದಾಗಿ ಅದೆಷ್ಟು ನಿರಾಸೆಯಾಗಿತ್ತೋ ಅವರಿಗೆ… ಯಾರಾದರೂ ಮಗುವನ್ನು ಜರಿದರೆ ಸಾಕು ನನ್ನ ಮಗು ಹೀಗಿದೆಯಲ್ಲ ಎಂದು ಅಳುತ್ತಿದ್ದರಂತೆ. ಈಗಲೂ ಒಮ್ಮೊಮ್ಮೆ ನನಗೆ ಆ ಮನೆಯ ಜಂತೆಗಳು ಬಿಕ್ಕಳಿಸಿದಂತೆ ತೋರುತ್ತದೆ. + +ನಾನು ನಾಲ್ಕೂವರೆ ವರ್ಷದವಳಿದ್ದಾಗ ನನ್ನ ತಮ್ಮ ಹುಟ್ಟಿದ. ಅಜ್ಜನ ಮನೆಯಲ್ಲಿಯೇ ಅಮ್ಮನ ಹೆರಿಗೆಯಾದದ್ದು. ಆ ದಿನದ ಅಮ್ಮನ ನೋವು, ರಕ್ತಸ್ರಾವ, ನೆಲದ ಮೇಲೆ ಚೆಲ್ಲಿದ್ದ ರಕ್ತ, ತಮ್ಮ ಹುಟ್ಟಿದ ಸಂಭ್ರಮ ಎಲ್ಲವೂ ಇನ್ನೂ ನೆನಪಿದೆ ನನಗೆ. ಆಗ ಇಡೀ ಊರಿಗೇ ತತ್ತಕ್ಷಣದ ಸೂಲಗಿತ್ತಿ, ದಾದಿ, ಹೆರಿಗೆ ಮಾಡಿಸುವ ವೈದ್ಯೆ ಎಂದರೆ ಅದು ಕುಂಬಾರಜ್ಜಿ ಮಾತ್ರ. ಅವಳ ಹಸ್ತಗುಣದ ಮೇಲೆ ಇಡೀ ಊರಿಗೇ ನಂಬಿಕೆ ಇತ್ತು. ಮೇಲಾಗಿ ಯಾವ ದಿಕ್ಕಿನಿಂದ ಹೊರಟರು ಮುಖ್ಯ ರಸ್ತೆ ಸೇರಿಕೊಳ್ಳಲು ಎರೆಡು ಮೂರು ಕಿಲೋಮೀಟರ್ ನಡೆಯಬೇಕಿದ್ದ ಆ ಕುಗ್ರಾಮದ ಜನರಿಗೆ ಹೀಗೆ ಆಕೆಯನ್ನು ಅವಲಂಬಿಸದೆ ವಿಧಿಯೂ ಇರಲಿಲ್ಲ. ಅಂದೂ ಸಹ ಕುಂಬಾರಜ್ಜಿ ಬಂದು ಅಮ್ಮನ ನೋವಿನಲ್ಲಿ ಭಾಗಿಯಾಗಿದ್ದಳು. ಪಡಸಾಲೆಗೆ ಪಡಾಸಾಲೆಯೇ ನೋವಿನಿಂದ ಅನುರಣಿಸುತ್ತಿತ್ತು. ರಕ್ತಸ್ರಾವದ ನಡುವೆಯೇ ಅಮ್ಮನ ಉಪಚಾರ ಮಾಡುತ್ತಾ ಸಮಾಧಾನಿಸುತ್ತಾ ಮಗು ಹೊರಬರುವ ದಾರಿಯನ್ನು ಸಲೀಸುಗೊಳಿಸಲು ಕುಂಬಾರಜ್ಜಿ ತೊಡಗಿದ್ದಳು. ಆದರೆ ಯಾರ ನೋವನ್ನು ಯಾರೂ ಕಡ ಪಡೆಯಲು ಸಾಧ್ಯವಿಲ್ಲವಲ್ಲ. ಇದೆಲ್ಲವನ್ನೂ ಅಚ್ಚರಿಯಿಂದ ನೋಡುತ್ತಿದ್ದ ನನಗೆ ಅಮ್ಮನ ಅಳುವನ್ನು ಮಾತ್ರ ಸಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಮತ್ತೆ ಸರಹೊತ್ತಿನ ನಿದ್ದೆ ತಡೆಯಲಾಗದೆ ಮಲಗಿಬಿಟ್ಟಿದ್ದೆ. ಅಂತೂ ಇಂತೂ ರಾತ್ರಿ ಪೂರಾ ತ್ರಾಸು ಕೊಟ್ಟು ಬೆಳಗಿನ ಏಳರ ಹೊತ್ತಿಗೆ ಮಗು ಭೂಮಿಗೆ ಬಿದ್ದಿತ್ತು. ಆ ಮುದ್ದು ಮಗು ನನ್ನ ತಮ್ಮನಾಗಿದ್ದ. + +ಒಮ್ಮೆ ದೊಡ್ಡಮ್ಮನಿಗೆ ಅಪರಾತ್ರಿಯಲ್ಲಿ ಎಚ್ಚರ ತಪ್ಪಿಬಿಟ್ಟಿತ್ತು. ಮನೆಯಿಡೀ ಗದ್ದಲ… ದೊಡ್ಡಪ್ಪನ ಜೋರು ಅಳು… ಮನೆಮಂದಿಯೂ ಚಡಪಡಿಸುತ್ತಿದ್ದಾರೆ. ಐದಾರು ವರ್ಷದ ನನಗೆ ಏನು ಮಾಡಲೂ ತಿಳಿಯುತ್ತಿಲ್ಲ. ಕಾಲುಗಳು ನಡುಗುತ್ತಿವೆ. ಹೊಟ್ಟೆ ಚುಳ್ ಎನ್ನುತ್ತಿದೆ. ಅಳು ಗಂಟಲಲ್ಲೆ ಸಿಕ್ಕಿ ಹಾಕಿಕೊಂಡಂಥ ಅನುಭವ. ವಿಪರೀತ ಭಯದಿಂದ ಒಳಕ್ಕೆ ಹೊರಕ್ಕೆ ಕುಣಿಯುತ್ತಾ ಕೊನೆಗೆ ಗಣಿಗೆಯ ಸಂದಿಯಲ್ಲಿ ಹೋಗಿ ನಿಂತಿದ್ದೆ. ಎಷ್ಟು ಹೊತ್ತು ನಿಂತಿದ್ದೆನೋ.. ಮುಂದೆ ಏನಾಯಿತೋ.. ಒಂದೂ ನೆನಪಿಲ್ಲ. ಅಂದು ಕೆಂಪು ಫ್ರಾಕ್ ತೊಟ್ಟಿದ್ದೆ. ಎಲ್ಲ ಅಸ್ಪಷ್ಟ ನೆನಪುಗಳು. ಈಗ ಕೇಳಿದರೆ ನಿಜವೋ ಸುಳ್ಳೋ ಎನ್ನುವ ಗೊಂದಲವೇ ಹೆಚ್ಚು ಕಾಡುತ್ತದೆಯೇನೋ ಮತ್ತು ನಿಜವೆಂದು ಹೇಳಲಾರೆನೇನೋ… + +ಅಜ್ಜನ ಮನೆ ಅರಮನೆಯಂತದ್ದಲ್ಲದಿದ್ದರೂ ತೀರಾ ಚಿಕ್ಕದ್ದೇನೂ ಆಗಿರಲಿಲ್ಲ. ತಾನು ಮದುವೆಯಾಗಿ ಬೇರೆ ಸಂಸಾರವಂತ ಹೂಡಿಕೊಂಡು ಬಂದಾಗ ಅಜ್ಜಯ್ಯನಲ್ಲಿ ಸ್ವಂತ ಮನೆಯಾಗಲೀ ಎತ್ತಾಗಲೀ ಬಿತ್ತಿ ಬೆಳೆಯುವ ಅಂಗೈ ಅಗಲ ಭೂಮಿಯಾಗಲೀ ಇರಲಿಲ್ಲವಂತೆ. ಆದರೆ ಕಷ್ಟದಾರಿ ಅಜ್ಜಯ್ಯ ತನ್ನ ಸ್ವಂತ ಸಾಮರ್ಥ್ಯದಿಂದ ಮನೆ, ಜೋಡೆತ್ತು, ಹಸು, ದನ, ಕರ, ಮೂವತ್ತೆರೆಡು ಎಕರೆ ಹೊಲ ಅಂತ ಸಂಪಾದಿಸಿಕೊಂಡಿದ್ದ ಮತ್ತು ಅನುವು ಆಪತ್ತಿಗಿರಲೆಂದು ಒಂದಷ್ಟು ಹಣವನ್ನೂ ಕೂಡಿಟ್ಟುಕೊಂಡಿದ್ದನಂತೆ. ಅದನ್ನೇ ಅವನು ಸತ್ತಾಗ ಮೊಮ್ಮೊಕ್ಕಳ ಮದುವೆಗೆಂದು ವಿನಿಯೋಗಿಸಿದ್ದರು ಅಪ್ಪ, ದೊಡ್ಡಪ್ಪ. + +ಪೂರ್ವದಿಕ್ಕಿನ ಅಜ್ಜಯ್ಯನ ಆ ಮನೆಯೂ ಅಜ್ಜಯ್ಯನಂತೆಯೇ ಬೆಳಗ್ಗೆ ಐದರ ನಂತರ ಯಾರನ್ನೂ ಮಲಗಲು ಬಿಡುತ್ತಿರಲಿಲ್ಲ. ಬೆಳ್ಳಂಬೆಳಗಿನ ಎಲ್ಲ ಪ್ರಖರ ಪ್ರಭೆಯೂ ಮನೆ ಹೊಕ್ಕುತ್ತಿತ್ತು. ಅಜ್ಜನಿಗಂತೂ ನಾಲ್ಕರ ನಂತರ ಮಲಗಿ ಅಭ್ಯಾಸವೇ ಇರಲಿಲ್ಲ. ಮತ್ತೆ ಮನೆ ಮಂದಿಯೂ ಸಹ ಐದರ ನಂತರ ಮಲಗುವಂತಿರಲಿಲ್ಲ. ರಜೆಗೆ ಹೋದಾಗ ಹೊತ್ತು ಆರಾದರೂ ಕುಂಬಕರ್ಣರಂತೆ ಮಲಗಿರುತ್ತಿದ್ದ ನಮ್ಮನ್ನು ಬೈದು ಎಬ್ಬಿಸುತ್ತಿದ್ದ ಅಜ್ಜನ ಆಜ್ಞೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಬೇರೆ ಚಿಕ್ಕಪ್ಪ ದೊಡ್ಡಪ್ಪಂದಿರ ಮನೆಗಳನ್ನು ಹುಡುಕಿ ಹೋಗುತ್ತಿದ್ದದ್ದು ಇನ್ನು ಚೆನ್ನಾಗಿ ನೆನಪಿದೆ. ಆಗಲೂ ಕಳ್ಳಬೀಳುತ್ತಿದ್ದೇವೆಂದು ಅಜ್ಜ ಬೈಯ್ಯುತ್ತಿದ್ದರು ಅದು ಬೇರೆ ಮಾತು. + +ಚಿಕ್ಕವಳಿದ್ದಾಗ ನನಗೆ ಎಷ್ಟೋ ಬಾರಿ ಅಜ್ಜನ ಮನೆಯ ಪಡಸಾಲೆಯ ಕಂಬಗಳನ್ನು ನೋಡುತ್ತಾ ಇದರ ಮೇಲಿರುವ ಬೆವರಿನಂಟು, ಎಣ್ಣೆಯ ಕಮಟು, ಎಂಥದೋ ಜಿಡ್ಡು ಯಾರ್ಯಾರದಿರಬಹುದು… ವಾಸನೆಯಿಂದೇನಾದರೂ ಅವರ ಗುರುತು ಹತ್ತುತ್ತದಾ? ಯಾರ ಸ್ಪರ್ಷದ ವಾಸನೆ ಇಲ್ಲಿದೆ…. ಎಂದೆಲ್ಲ ಅನಿಸಿ ಹೊಟ್ಟೆ ಚುಳ್ ಎನ್ನುತ್ತಿತ್ತು. ನನ್ನಜ್ಜ ಅವುಗಳಲ್ಲೆ ಒಂದು ಕಂಬಕ್ಕೆ ತನ್ನ ಜಂಪರ್ ನೇತು ಹಾಕುತ್ತಿದ್ದರು. ಅದೇ ಕಂಬದ ಮೇಲ್ಭಾಗದಲ್ಲಿ ರೇಡಿಯೋ ಪೆಟ್ಟಿಗೆಯೊಂದನ್ನು ಇಡಲಾಗಿತ್ತು. ಬೆಳ್ಳಂ ಬೆಳಗ್ಗೆ ಅದು ಹೊರಡಿಸುತ್ತಿದ್ದ “ಟ್ಯೂ ಟ್ಯುಡುಡುಡೂ.. ಟ್ಯುಡುಡುಡೂ… ಟ್ಯುಡೂ…” ಎಂಬ ನಾದವೇ ನಮಗೆಲ್ಲ ಬೆಳಗಿನ ಸುಪ್ರಭಾತ. ಅಡುಗೆ ಮನೆಯ ಪುಟ್ಟ ಕಂಬಕ್ಕೆ ಹಗ್ಗ ಕಟ್ಟಿ ಅಜ್ಜಿ ಮಜ್ಜಿಗೆ ಕಡೆಯುತ್ತಿದ್ದರು. ಹೊರಗಿನ ಹಾಲಿನಲ್ಲಿದ್ದ ಕತ್ರಿ ಗೂಟ ಎನ್ನುವ ಕಂಬದಲ್ಲಿ ಜಾನುವಾರುಗಳಿಗಾಗಿ ಜೋಳದ ಸೊಪ್ಪೆ ಕತ್ತರಿಸಲಾಗುತ್ತಿತ್ತು. + +ಪಡಸಾಲೆಯ ಕಂಬಗಳನ್ನು ಬಳಸಿ ನಾವೆಲ್ಲ ಮನೆ ಮಕ್ಕಳು ಉಪ್ಪಿನಾಟ ಆಡಲು ಪ್ರಯತ್ನಿಸುತ್ತಿದ್ದೆವು. ಅಜ್ಜನ ಮನೆಯ ಕಂಬಗಳ ಮೇಲ್ಭಾಗದಲ್ಲಿ ನವಿಲಿನ ಚಿತ್ರಗಳಿದ್ದವು. ನವಿಲು ಹೆಣ್ಣೊಬ್ಬಳ ಅಂತರಂಗದ ಪ್ರತಿರೂಪವಾಗಿ ಕಾಣುತ್ತಲೇ ಅವಳ ಸ್ವಚ್ಛಂದತೆಯ ಸಂಕೇತವೂ ಆಗುತ್ತದೆ. ಅದೇ ವೇಳೆಗೆ ಮಿಥ್ಯಾಕರ್ಷಣೆಯ ಕೇಂದ್ರವೂ ಆಗಿಬಿಡುವುದೂ ದುರಂತವೇ. ಆದರೆ ಅಜ್ಜ ಮನೆಯೊಳಗೆ ಉಪ್ಪಿನಾಟ ಆಡಲು ಬಿಡುತ್ತಿರಲಿಲ್ಲ. ಮನೆಯೊಳಗೆ ಉಪ್ಪಿನಾಟ ಆಡಿದರೆ ಸಾಲ ಹೆಚ್ಚಾಗುತ್ತದೆ ಎನ್ನುತ್ತಿದ್ದರು ಅಜ್ಜ. ಹಾಗಾಗಿ ಮನೆಯ ಪಕ್ಕದಲ್ಲಿ ಮನೆಗೆ ಆತುಕೊಂಡಂತೆ ಇದ್ದ ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಉಪ್ಪಿನಾಟ ಆಡುತ್ತಿದ್ದೆವು. + +ಉಪ್ಪಿನಾಟ ಎಂದರೆ ಆಟವಾಡಲು ಎಷ್ಟು ಜನ ಆಟಗಾರರಿತ್ತೇವೋ ಅಷ್ಟು ಜನ ಒಂದೊಂದು ಕಂಬ ಹಿಡಿದಿಟ್ಟುಕೊಳ್ಳಬೇಕು. ಒಬ್ಬರು “ಉಪ್ಪಮ್ಮೊ ಉಪ್ಪು…..” ಎಂದು ರಾಗವಾಗಿ ಹಾಡುತ್ತಾ ಉಪ್ಪು ಮಾರುತ್ತಾ ಬರಬೇಕು. ರಾಗವಾಗಿ ಹಾಡಬೇಕೆನ್ನುವ ನಿಯಮವೇನೂ ಇಲ್ಲ. ಆದರೆ ಆಡುತ್ತಿದ್ದವರೆಲ್ಲರೂ ಹುಡುಗಿಯರೇ ಹೆಚ್ಚಾಗಿರುತ್ತಿದ್ದರಿಂದ ಅದು ಹಾಡಿನ ಒನಪು ವಯ್ಯಾರವನ್ನು ಪಡೆದುಕೊಳ್ಳುತ್ತಿದ್ದಿರಬೇಕು. ಉಪ್ಪಿನವಳು ಮುಂದೆ ಹೋದ ತಕ್ಷಣ ಕಂಬ ಹಿಡಿದುಕೊಂಡಿದ್ದ ಆಟಗಾರ್ತಿಯರು ಉಪ್ಪಿನವಳ ಹಿಂದೆ ಅದಲು ಬದಲಾಗಬೇಕು. ಹೀಗೆ ಅದಲು ಬದಲಾಗುವಾಗ ಅಚಾನಕ್ ಉಪ್ಪಿನವಳು ಕಂಬವನ್ನು ಆಕ್ರಮಿಸಿಕೊಂಡುಬಿಟ್ಟರೆ ಕಂಬವನ್ನು ಕಳೆದುಕೊಂಡವಳು ಔಟ್ ಎಂದು ಅರ್ಥ. ಈಗ ಅವಳು ಉಪ್ಪು ಮಾರುತ್ತಾ ಹೊರಡಬೇಕು. ಹೀಗೆ ಆಟ ಮುಂದುವರಿಯುತ್ತದೆ. + +ಬಸವಣ್ಣನ ಗುಡಿಯಲ್ಲಿ ನಾವೆಲ್ಲ ಸಮಯದ ಪರಿವೆಯಿಲ್ಲದೇ ಉಪ್ಪಾಟ ಆಡಿದ್ದಿದೆ. ಆದರೀಗ ಆ ಮರದ ಕಂಬಗಳು ಮತ್ತು ಮಣ್ಣಿನಿಂದ ನಿರ್ಮಿಸಿದ್ದ ಗುಡಿಯನ್ನು ಕೆಡವಿ ಹೊಸ ಕಾಂಕ್ರೀಟ್ ಕಟ್ಟಡವನ್ನು ಕಟ್ಟಲಾಗಿದೆ. ಕಂಬಗಳೆಲ್ಲ ಎಲ್ಲೋ ಮಾಯವಾಗಿವೆ. ಅಸಲಿಗೆ ಅದೊಂದು ಗುಡಿ ಅಂತಲೇ ಅನಿಸುತ್ತಿಲ್ಲ. ಹಿಂದೆಲ್ಲಾ ಗುಡಿಯಲ್ಲಿ ಸಣ್ಣ ಗೌರಿ ಮತ್ತು ದೊಡ್ಡ ಗೌರಿ ಹಬ್ಬಕ್ಕೆ ಗೌರಿ ಮಣ್ಣನ್ನು ತಂದು ಹಾಕಲಾಗುತ್ತಿತ್ತು. ಗುಡಿಯ ಪಕ್ಕದಲ್ಲಿದ್ದ ಬಡ್ಡೆ ಕಲ್ಲೂ ಸಹ ಗೌರಿ ಮಣ್ಣಿನೊಟ್ಟಿಗೆ ಕಾಡು ಹೂಗಳ ಪೂಜೆ ಪಡೆಯುತ್ತಿದ್ದ. ಆದರೀಗ ಗುಡಿಯೇ ಅನ್ನಿಸದ ನೆನಪುಗಳ ಸಮಾಧಿ ದಿಬ್ಬದ ಮೇಲೆ ಗೌರಿಯ ಗದ್ದುಗೆಯನ್ನು ಮಾಡಿ ಕೂರಿಸುತ್ತಾರೆ ಹೇಗೆ… ಅವಳನ್ನು ದೇವತೆ ಎಂದು ಕಲ್ಪಿಸಿಕೊಳ್ಳುತ್ತಾರೆ ಹೇಗೆ… ಎಂದು ಕಳವಳವಾಗುತ್ತದೆ. ಹಿಂದೆ ಆಚರಿಸಿದ್ದ ಗೌರಿ ಹಬ್ಬಗಳು, ದೀಪ ಹಿಡಿದು ಓಡಾಡಿದ್ದ ಹೆಜ್ಜೆ ಗುರುತುಗಳು, ಜೋಕಾಲಿ ಕಟ್ಟಿ ಜೀಕಿದ ಎಲ್ಲ ನೆನಪುಗಳೂ ಸುಮ್ಮನೇ ಕಾಡುತ್ತವೆ. + +ಬಿಳಿ ಪಂಚೆಯ ಕಚ್ಚೆ ಹಾಕಿ, ಮೇಲೊಂದು ತಾನೇ ಹೊಲೆಸಿಕೊಂಡಿರುತಿದ್ದ ದೊಡ್ಡ ಬೊಕ್ಕುಣದ ಜಂಪರ್ ತೊಟ್ಟು ಪೂರ್ಣ ಕತ್ತಲು ಕಳೆದು ಬೆಳ್ಳಗಾಗುವುದರೊಳಗೆ ತನ್ನ ಜೋಡೆತ್ತುಗಳನ್ನು ಬಿಟ್ಟುಕೊಂಡು ಹೊರಟು ಬಿಡುತ್ತಿದ್ದ ನನ್ನಜ್ಜ. + + + +ಅಜ್ಜಯ್ಯನೇ ಹಾಗೆ. ಬಲು ಶಿಸ್ತಿನವನು. ಮನೆಯಲ್ಲಿ ಯಾರೊಬ್ಬರೂ ಅವನ ಮುಂದೆ ಸುಮ್ಮನೆ ಕಾಲಾಯಾಪನೆ ಮಾಡುವುದು ಸಾಧ್ಯವಿರಲಿಲ್ಲ. ಅಸಲಿಗೆ ಅವನಾದರೂ ಎಲ್ಲರಿಗೂ ಮಾದರಿಯಂತಿರುತ್ತಿದ್ದ. ಎಂದೂ ಮೈಮುರಿದು ದುಡಿಯದೆ ಕೂತು ಉಂಡವನಲ್ಲ. ಭಾವುಕತೆಯನ್ನು ಕಳೆದುಕೊಂಡವನಂತೆ ವರ್ತಿಸುತ್ತಿದ್ದ ಅಜ್ಜಯ್ಯ, ಇಂದಿಗೂ ನಮ್ಮ ಮನಸ್ಸಿನಲ್ಲಿ ಹೇಗಿಷ್ಟು ಆಳದ ಬೇರಿನಂತೆ ನಾಟಿಕೊಂಡುಳಿದನೆಂಬುದು ನಿಜಕ್ಕೂ ಅಚ್ಚರಿಯೇ. + +ಜಾತಿಯ ವಿಷಯದಲ್ಲಿ ಅಜ್ಜನದೊಂದು ರೀತಿ ಸಂಪ್ರದಾಯದ ಪಾಲನೆ…. ಆದರೆ ಜಾತಿಯನ್ನು ಮುಂದಿಟ್ಟುಕೊಂಡು ಯಾರನ್ನಾದರೂ ಅವಮಾನಿಸಿದ್ದಾಗಲೀ ಅಲಕ್ಷಿಸಿದ್ದಾಗಲೀ ಇರಲಿಲ್ಲ. ಆದರೆ ಒಂದಷ್ಟು ಮಡಿ ಎನ್ನುವಂತಹ ಆಚರಣೆಗಳನ್ನು ತಾನೂ ಮತ್ತು ಮನೆಯವರಿಂದಲೂ ಮಾಡಿಸುತ್ತಿದ್ದ. ಮನೆಯ ಹಜಾರದ ಚಪ್ಪರದಲ್ಲಿ ಸದಾ ಒಂದು ಸಿಲ್ವರ್ ತಟ್ಟೆ, ಲೋಟ ಖಾಯಂ ಇರುತ್ತಿದ್ದವು. ಮತ್ತದನ್ನು ಮನೆ ಮಂದಿ ಯಾರೂ ಮುಟ್ಟುವಂತಿರಲಿಲ್ಲ. ಮಾದರ ಮಲ್ಲಣ್ಣನ ಖಾಸಾ ಸ್ವತ್ತಾಗಿದ್ದವವು… ಆದರೆ ಮಲ್ಲಣ್ಣನ ಪ್ರತಿಯೊಂದು ಕಷ್ಟ ಸುಖದಲ್ಲಿ ಅಜ್ಜನಿರುತ್ತಿದ್ದ… ಯಾವ ಹೊತ್ತಲ್ಲಾದರೂ ಅವನು ಮನೆಗೆ ಬರಬಹುದಿತ್ತು, ಹಸಿದಾಗ ಉಣ್ಣಬಹುದಿತ್ತು, ಕಷ್ಟ ಅಂತ ಹೇಳಿ ಸಹಾಯ ಯಾಚಿಸಬಹುದಿತ್ತು. ಮಲ್ಲಣ್ಣನಿಗೆಂದರೆ ತುತ್ತು ಅನ್ನ ಹೆಚ್ಚೇ…. ಹತ್ತು ಕೊಡುವ ಕಡೆ ಇಪ್ಪತ್ತು ಬೇಕಾದರೂ ಕೊಡುತ್ತಿದ್ದ. ಅಜ್ಜಯ್ಯನ ಶೀಲವಂತಿಕೆಗಿಂತ ಅವನ ಅಂತಃಕರಣ ದೊಡ್ಡದು. ಮನೆಗೆ ಬಂದ ಯಾರೇ ಆಗಿರಲಿ ಯಾವ ಜಾತಿಯವನೇ ಇರಲಿ ಅಜ್ಜಯ್ಯ ಉಣಿಸದೆ ಕಳಿಸುತ್ತಿರಲಿಲ್ಲ. ಹಸಿದವರು ನೇರಾ ಅಜ್ಜಯ್ಯನ ನಂಬಿ ಮನೆಗೆ ಬಂದುಬಿಡಬಹುದಿತ್ತು. + +ಚಿಕ್ಕಂದಿನಲ್ಲಿ ನಾ ನೋಡಿದಂತೆ ಅಜ್ಜಯ್ಯನ ಮನೆಯಲ್ಲಿ ಯಾವುದೇ ಕಾರ್ಯಕ್ರಮ ನಡೆಯಲಿ ಕೊನೆಯದೊಂದು ಪಂಕ್ತಿಗೆ ಹಳ್ಳಿಯ ಎಲ್ಲ ಇತರೆ ಕೋಮಿನವರು ಬಂದು ಸಂತೃಪ್ತಿಯಿಂದ ಉಂಡು ಹೋಗಲೇಬೇಕಿತ್ತು. ನಾವೇ ಮನೆ ಮಕ್ಕಳು ಅದೆಷ್ಟೋ ಬಾರಿ ಅವರಿಗೆಲ್ಲ ಕೈಯಾರೆ ಬಡಿಸಿರುವುದುಂಟು…. ಅದು ಅಜ್ಜಯ್ಯನ ವ್ರತ…. ಮತ್ತೆ ಅಡುಗೆ ಉಳಿದಿದ್ದರೆ ತಾನೇ ಮನೆಮನೆಗು ಕಳಿಸಿಕೊಡುತ್ತಿದ್ದ. ಇತರೆ ಕೋಮಿನವರಾದರೂ ನಮ್ಮ ಕುಟುಂಬದೊಂದಿಗೆ ಅವರದು ಅವಿನಾಭಾವ ಸಂಬಂಧ. ಹಿಂದಿನಿಂದಲೂ ಅಜ್ಜಯ್ಯನನ್ನು ಅಪ್ಪಯ್ಯನಂತಲೂ, ಅಪ್ಪ ದೊಡ್ಡಪ್ಪ, ಅತ್ತೆದಿರನ್ನು ಅಣ್ಣ ತಮ್ಮ ಅಕ್ಕ ತಂಗಿಯರಂತಲೂ ನಾವೆಲ್ಲ ಮಕ್ಕಳನ್ನು ಅವರ ಮಕ್ಕಳ ಅಕ್ಕ ತಂಗಿ ಅಣ್ಣ ತಮ್ಮಂದಿರಂತೆ ನಡೆದುಕೊಂಡು ಬಂದಿದ್ದರು. ಅಜ್ಜಯ್ಯ ಸತ್ತು ಇಷ್ಟು ವರ್ಷವಾದರೂ ಈಗಲೂ ಕೆಲವರು ಮನೆಗೆ ಬಂದು ನನ್ನ ಅಪ್ಪನನ್ನು ಅಣ್ಣಾ ಅಂತ ಮಾತನಾಡಿಸುವಾಗ ಅಜ್ಜಯ್ಯ ಹಾಕಿಕೊಟ್ಟ ಸಂಪ್ರದಾಯದ ಬುನಾದಿಯ ಆಳ ಮತ್ತು ಗಟ್ಟಿತನದ ಬಗ್ಗೆ ಸೋಜಿಗವೆನಿಸುತ್ತದೆ. + +ಅಜ್ಜಯ್ಯ ದಿನದಿಪತ್ನಾಲ್ಕು ತಾಸೂ ಕೃಷಿಯಲ್ಲೇ ಮುಳುಗಿರುವವನೆನಿಸಿದರೂ ಅವನ ಧಾರ್ಮಿಕ ಸ್ವಭಾವದ ಬಗ್ಗೆ ಅಪ್ಪ ಅತ್ತೆಯರಿಂದ ಸಾಕಷ್ಟು ಅರಿತಿದ್ದೆ. ಕೃಷಿಕನಾದರೂ ಅಕ್ಷರಸ್ತನಾಗಿದ್ದ ಅಜ್ಜಯ್ಯ ರಾಮಾಯಣವನ್ನು, ಶನಿ ಮಹಾತ್ಮೆ ಕಥನವನ್ನ ಬಹಳ ಇಷ್ಟ ಪಟ್ಟು ಓದುತ್ತಿದ್ದನಂತೆ. ತನ್ನ ಅಕ್ಷರ ಪ್ರೀತಿಯಿಂದಾಗಿಯೇ ಅಪ್ಪ ದೊಡ್ಡಪ್ಪಂದಿರನ್ನು ಅಕ್ಷರವಂತರನ್ನಾಗಿ ಮಾಡಿ ನೌಕರಿಗೆ ಸೇರುವಂತೆ ಮಾಡಿದ್ದ. ಅಜ್ಜಯ್ಯ ಸತ್ತಾಗ ನಾನು ಮಾಡಿದ ಮೊದಲ ಕೆಲಸವೇ ಅವನ ಖಾಸಗಿ ಪೆಟ್ಟಿಗೆಯನ್ನು ತೆರೆದು ನೋಡಿದ್ದು. ಅಲ್ಲಿಯವರೆಗೂ ಅದನ್ನು ಕಿರುಬೆರಳಿಂದ ಮುಟ್ಟಲೂ ಭಯಪಡುತ್ತಿದ್ದೆ. ಕಾರಣ ಅಜ್ಜಯ್ಯ ಎಂದೂ ಆ ಪೆಟ್ಟಿಗೆಯನ್ನು ಜನರಿರುವಾಗ ತೆರೆಯುತ್ತಿರಲಿಲ್ಲ. ಮತ್ತೆ ಯಾರಿಗೂ ಅದನ್ನು ಮುಟ್ಟಲೂ ಬಿಡುತ್ತಿರಲಿಲ್ಲ. ಯಾರಾದರೂ ಅಪ್ಪಿ ತಪ್ಪಿ ಮುಟ್ಟಲು ಪ್ರಯತ್ನಿಸಿಬಿಟ್ಟರೆ ಗುಡುಗಿಬಿಡುತ್ತಿದ್ದ. ಅದಕ್ಕೆ ಹೆದರಿ ನಾವೆಂದೂ ಅದರ ತಂಟೆಗೆ ಹೋಗುತ್ತಿರಲಿಲ್ಲ. ಬಹಳ ಗುಪ್ತವಾಗಿಟ್ಟುಕೊಂಡಿದ್ದ ಅದನ್ನು ಅವನ ಪ್ರಾಣವೆಂಬಂತೆ…. + +ಎಷ್ಟೊಂದು ಕುತೂಹಲ ಅದನ್ನು ನೋಡುವಾಗ. ಅದರೊಳಗೆ ಏನೇನೋ ಚಿತ್ರ ವಿಚಿತ್ರ ವಸ್ತುಗಳು, ಯಾವುದೋ ಬೀಗದ ಕೈಗಳು, ಒಂದಷ್ಟು ದೇವರ ಪಟಗಳು, ಶಿಥಿಲಾವಸ್ಥೆಯಲ್ಲಿದ್ದ ಪರ್ಸುಗಳು, ಜೊತೆಗೆ ಶನಿ ಮಹಾತ್ಮೆ, ರಾಮಾಯಣ, ಮಹಾಭಾರತದ ಅತ್ಯಂತ ಪುರಾತನ, ಬಣ್ಣ ಮಾಸಿದ, ಬ್ಯಾಗಡಿ ಕವರಿನ ಬೈಂಡ್ ಹಾಕಲಾಗಿದ್ದ ಪುಸ್ತಕಗಳು. ಧೂಳಿನ ಘಮದೊಟ್ಟಿಗೆ ಅಜ್ಜಯ್ಯನ ಬೆವರಿನ ಗಮಲು ಬೆರತಿದ್ದಿರಬೇಕು. ಎಂಥದೋ ಮಧುರಾನುಭೂತಿ. ನಾನು ಆ ಪುಸ್ತಕಗಳನ್ನು ಮನೆಗೆ ತಂದಿಟ್ಟುಕೊಂಡಿದ್ದೆ. ಅಜ್ಜಯ್ಯನ ಮೇಲಿನ ಪ್ರೀತಿಯಿಂದಾಗಿ. ಈಗಲೂ ಆ ಪುಸ್ತಕಗಳು ಅಜ್ಜಯ್ಯನನ್ನು ನೆನಪಿಸುತ್ತ ನನ್ನ ಬಳಿ ಇವೆ. + +ಅಜ್ಜ ಸತ್ತಾಗ ನಾವು ಬಹಳ ದೂರದಿಂದ ಮಣ್ಣಿಗೆ ಬಂದಿದ್ದೆವು. ಊರನ್ನು ಪ್ರವೇಶಿಸಲು ಎಂಥದೋ ಹಿಂಜರಿಕೆ. ಅಜ್ಜನನ್ನು ಆ ಸ್ಥಿತಿಯಲ್ಲಿ ನೋಡುವುದು ನನ್ನಿಂದ ಸಾಧ್ಯವಾ ಎನಿಸಿತ್ತು. ಮನೆ ಹತ್ತಿರವಾದಂತೆ ಮನೆ ಮುಂದಿನ ಹೊಗೆ, ಒಳಗಿನ ಅಳು, ಸುತ್ತುಗಟ್ಟಿದ್ದ ಜನ ನನ್ನನ್ನು ಅಧೀರಳಾಗಿಸಿದ್ದವು. ನಾನೀಗ ಬಾಗಿಲಿಗೆ ಬಂದು ನಿಂತಿದ್ದೆ. ಅಜ್ಜನನ್ನು ಅವನು ಸದಾ ಮಲಗುತ್ತಿದ್ದ ಕಟ್ಟೆಯ ಮೇಲೆ ಇಂಟು ಮಾರ್ಕಿನ ರೀತಿಯಲ್ಲಿ ಕೋಲುಗಳ ಆಧಾರ ಕೊಟ್ಟು ಕೂರಿಸಲಾಗಿತ್ತು. ಹಣೆ ತುಂಬ ಮೂರು ಪಟ್ಟೆ ವಿಭೂತಿ, ಕತ್ತಲ್ಲಿ ದೊಡ್ಡ ಕರಡಿಗೆ, ಅವನ ಇಷ್ಟದ ಬಿಳಿ ಪಂಚೆ ಮತ್ತು ಹೊಚ್ಚ ಹೊಸ ಬಿಳಿ ಜುಬ್ಬ… ಈ ಎಲ್ಲ ಪೋಷಾಕಿನಲ್ಲಿ ಅವ ಈಗಿನ್ನು ಸ್ನಾನ ಮಾಡಿ ಸಂತೆಗೆ ಹೊರಟವನಂತೆ ಕಾಣುತ್ತಿದ್ದ. ಅಜ್ಜ ಯಾವಾಗಲೂ ಸಂತೆಯಿಂದ ಬರುವಾಗ ಮೊಮ್ಮೊಕ್ಕಳಿಗಾಗಿ ಬಿಕ್ಕೆ ಹಣ್ಣು ಮತ್ತು ಬ್ರೆಡ್ಡನ್ನು ಮರೆಯದೆ ತರುತ್ತಿದ್ದ. ಅಜ್ಜ ಊರೊಳಗಿನ ಬೈತಲೆಯಂತಾ ರಸ್ತೆಯಲ್ಲಿ ಇನ್ನೂ ಅಷ್ಟು ದೂರದಲ್ಲಿ ಕಂಡಾಕ್ಷಣವೇ ನಮ್ಮೆಲ್ಲರ ನಾಲಗೆ ಮೇಲಿನ ರುಚಿಮೊಗ್ಗುಗಳು ಎದ್ದು ನಿಲ್ಲುತ್ತಿದ್ದವು. ಅವ ಮನೆ ತಲುಪುವಷ್ಟರಲ್ಲೇ ತಡೆಯಲಾರದಷ್ಟು ಹಸಿದ ಹದ್ದುಗಳಂತಾಗಿರುತ್ತಿದ್ದೆವು. ಆದರೆ ಅಜ್ಜನ ಗತ್ತು ಗಾಂಭೀರ್ಯ ಚೀಲಕ್ಕೆ ಕೈ ಹಾಕುವಷ್ಟು ಸಲುಗೆಯನ್ನು ಮಾಡಿಕೊಡುತ್ತಿರಲಿಲ್ಲ. ಆದರೆ ಅಜ್ಜಿಯ ಕೈಗೆ ಮಕ್ಕಳಿಗೆಲ್ಲ ಕೊಡು ಎಂದು ಹೇಳುತ್ತಿದ್ದ ಮುಚ್ಚಟೆ ಮಾತು ಈಗಲೂ ನೆನಪಿದೆ. ಆದರೀಗ ಹೊಸಬಟ್ಟೆ ತೊಟ್ಟು ಅಲುಗಾಡದೆ ಕುಂತುಬಿಟ್ಟಿದ್ದಾನೆ. ಹೊಲಿದಂತೆ ಅಂಟಿ ಹೋಗಿದ್ದ ತುಟಿ, ಕಂಗಳು, ಬೂದು ಬಣ್ಣಕ್ಕೆ ತಿರುಗುತ್ತಿದ್ದ ತ್ವಚೆ, ಏರಿಳಿಯದ ಮೂಗು, ಮೂಗನ್ನು ಮುಚ್ಚಿದ್ದ ಹತ್ತಿ…. ಇನ್ನು ನನ್ನಜ್ಜ ಮಾತನಾಡಲಾರ, ನಗಲಾರ, ತಮಾಷೆ ಮಾಡಲಾರ, ಮುದ್ದು ಮಾಡಲಾರ, ಬೈಯಲಾರ… ಕಣ್ಣು ತುಂಬಿದ್ದವು. ಅವನ ಅಂತ್ಯಕ್ರಿಯೆಯ ಎಲ್ಲ ವಿಧಿಗಳನ್ನೂ ಮೌನವಾಗಿ ನೋಡಿದ್ದೆ. + +ಈಗಲೂ ಅಪ್ಪ ತನ್ನ ಮನೆಯ ನಡುಮನೆಯಲ್ಲಿ ಅಜ್ಜಯ್ಯನ ಕಪ್ಪು ಬಿಳುಪಿನ ಛಾಯಾಚಿತ್ರವೊಂದನ್ನು ತೂಗುಹಾಕಿಕೊಂಡಿದ್ದಾರೆ. ಅದರಲ್ಲವನು ತನ್ನ ಎಂದಿನ ದೊಡ್ಡ ಬೊಕ್ಕುಣದ ಬಿಳಿ ಅಂಗಿ ತೊಟ್ಟಿದ್ದಾನೆ. ತಲೆಗೆ ಟವೆಲ್ಲನ್ನು ರುಮಾಲಿನಂತೆ ಸುತ್ತಿಕೊಂಡಿದ್ದಾನೆ. ಗಡ್ಡ ಮೀಸೆಗಳಿರದ ಅವನ ಕೆನ್ನೆಗಳ ನಡುವೆ ಕಂಡೂ ಕಾಣದ ಗುಳಿಗಳು ಅಚ್ಚೊತ್ತಿಕೊಂಡಿವೆ. ಅವ ಅಲ್ಲಿ ಸಣ್ಣಗೆ ನಗುತ್ತಿರುವಂತೆ ಕಾಣಿಸುತ್ತಾನೆ. ಅವನ ನಗುವಿನ ತುಂಬ ಮೋಸ ಕಪಟವರಿಯದ ಮುಗ್ಧತೆ, ಸಣ್ಣತನವಿಲ್ಲದ ಹೃದಯ ವೈಶಾಲ್ಯತೆ, ಒಳ್ಳೆಯತನ, ನ್ಯಾಯ ನೀತಿ ಎಂಬ ಅವನ ತತ್ವಗಳು ಮುದ್ರೆಯಂತೆ ಒತ್ತಿಕೊಂಡಿವೆ. + +ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ…. ಎನ್ನುವ ಹಾಗೆ ಅಜ್ಜನ ಹಿಂದೆಯೇ ಅಜ್ಜನ ಮನೆಯ ಎಲ್ಲ ಸೊಬಗೂ ಹೋಯಿತೆನಿಸುತ್ತದೆ. ಹಿಂದೆ ಅಜ್ಜ ಇದ್ದಾಗ ನಾವೆಲ್ಲ ದೊಡ್ಡಪ್ಪ ಮತ್ತು ಅವರ ಮಕ್ಕಳು, ಅತ್ತೆ ಮಾವ ಮತ್ತವರ ಮಕ್ಕಳು, ನಾನು ತಮ್ಮ ಅಪ್ಪ ಅಮ್ಮ… ಎಲ್ಲರೂ ಪ್ರತಿ ರಜೆಯಲ್ಲಿಯೂ ಒಟ್ಟಾಗಿ ಸೇರುತ್ತಿದ್ದೆವು. ಆದರೆ ಅಜ್ಜನಾನಂತರ ಎಲ್ಲವೂ ಕಡೆಮೆಯಾಗತೊಡಗಿತು. ಈಗಂತೂ ಎಲ್ಲರೂ ಒಂದೊಂದು ದಿಕ್ಕು. ಯಾರೂ ಯಾರ ಮುಖವನ್ನೂ ನೋಡಲಾಗುತ್ತಿಲ್ಲ. ಒಂದು ನಮೂನಿ ದಿಕ್ಕಾಪಾಲಾಗಿದ್ದೇವೆ. ಬಿಡಿ ಹೂಗಳನ್ನು ಬೆಸೆದಿದ್ದ ದಾರವೇ ಮಾಯವಾದಂತಾಗಿಬಿಟ್ಟಿದೆ. + +ಈಗೀಗಲಂತೂ ಊರಿಗೆ ಹೋಗಲು ಮನಸೇ ಬರುವುದಿಲ್ಲ. ಬದಲಾಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿ ಹೈರಾಣಾಗಿರುವ ಮುದುಕನಂತೆ ಕಾಣುವ ಊರು ಕರುಳು ಹಿಂಡುತ್ತದೆ. ಇದು ನನ್ನ ಗುಡಿಯೇ ಅಲ್ಲ ಅನಿಸುವ ಗುಡಿ, ಜೋರು ಮಳೆ ಬಂದರೆ ಬಿದ್ದೇ ಹೋಗುತ್ತದೆನ್ನಿಸುವ ಅಜ್ಜನ ಮನೆ, ನೆಲಕಚ್ಚಿರುವ ಕಣ, ಮರ ಮುಟ್ಟುಗಳಾಗಿರುವ ಮರಗಳು, ಸರಿಯಾಗಿ ಫಲ ನೀಡದ, ಸರಿಯಾದ ಬೇಸಾಯ ಕಾಣದ, ಶುಷ್ಕ ಖುಷ್ಕಿ ಭೂಮಿ, ಕಸಾಯಿಖಾನೆ ಪಾಲಾಗಿರುವ ಎತ್ತು ಹಸುಗಳು, ಬಾಂಧವ್ಯದ ಜೀವಂತಿಕೆ ಕಳೆದುಕೊಂಡು ಅಂಧಾನುಕರಣೆಯನ್ನೇ ಜೀವಿಸುತ್ತಿರುವ ಜನ…. ಎಲ್ಲವೂ ವಿಚಿತ್ರ ವಿಷಣ್ಣತೆಯನ್ನು ಅನುಭವಿಸುವಂತೆ ಮಾಡುತ್ತವೆ. + + + +ಆದರೆ ನೆಮ್ಮದಿ ಎನ್ನುವ ವಸ್ತುವೊಂದು ಅಜ್ಜನ ಬೊಕ್ಕುಣದಲ್ಲಿಯೇ ಉಳಿದು ಹೋಗಿಬಿಟ್ಟಿದೆ. + +ಬೇಗ ಹೋಗಿ ತಂದು ಬಿಡಲೇ….? + +ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.” \ No newline at end of file diff --git a/Kenda Sampige/article_192.txt b/Kenda Sampige/article_192.txt new file mode 100644 index 0000000000000000000000000000000000000000..c73bfc0749d636208e0377bbb6550e3df9a7ec6e --- /dev/null +++ b/Kenda Sampige/article_192.txt @@ -0,0 +1,39 @@ + + +ನಮ್ಮೂರಿನ ಬಸ್ಸುಗಳು:“ನಮ್ಮಲ್ಲೇ ಮೊದಲು”ಲಘು ಬರಹಗಳ ಸಂಕಲನದ ಒಂದು ಬರಹ + +90ರ ದಶಕದ ಅಥವಾ ಅದಕ್ಕೂ ಹಿಂದಿನ ತಲೆಮಾರಿನ ಯಾವುದೇ ಹುಡುಗರಿಗಾಗಲಿ ಬಸ್ಸು ಎಂದರೆ ಏನೋ ಒಂದು ತರದ ಪುಳಕ. ಆ ಕಾಲದಲ್ಲಿ ತುಂಬಾ ಬಸ್ಸುಗಳು ನಮ್ಮೂರಿನಲ್ಲಿ ಓಡಾಡುತ್ತಿದ್ದವು. ಅಲ್ಲಿ ಸಂಚರಿಸುವ ಬಣ್ಣ ಬಣ್ಣದ, ಬೇರೆ ಬೇರೆ ಹೆಸರುಗಳನ್ನು ಹೊಂದಿದ ಖಾಸಗಿ ಬಸ್ಸುಗಳನ್ನು ನೋಡುವುದೇ ನಮಗೆಲ್ಲ ಹಬ್ಬವಾಗಿತ್ತು. ಆ ಬಸ್ಸುಗಳು ಮಲೆನಾಡಿನ ಬೆಟ್ಟ ಗುಡ್ಡಗಳಲ್ಲಿ ಏರುತ್ತ, ಇಳಿಯುತ್ತ ಸಂಚರಿಸುವ ಬಗೆ ಇಷ್ಟವಾಗುತ್ತಿತ್ತು. ಕೇವಲ ಭೌತಿಕವಾದ ಬಸ್ಸುಗಳು ಮಾತ್ರ ಇಷ್ಟವಾಗುವುದಲ್ಲದೇ, ನಮ್ಮ ಕಲ್ಪನೆಯಲ್ಲಿಯೂ ಬಸ್ಸಿಗೆ ಪ್ರತ್ಯೇಕವಾದ ಸ್ಥಾನವಿತ್ತು. ನಾವು ಆಡುವ ಆಟಗಳಲ್ಲಿ ’ಬಸ್ ಆಟ’ ಎನ್ನುವುದೊಂದಿತ್ತು. ಅದಕ್ಕೆ ಮೂರು ನಾಲ್ಕು ಹುಡುಗರು ಬೇಕೆಂಬುದಿಲ್ಲ. ಒಬ್ಬರಿದ್ದರೂ ಈ ಆಟವನ್ನು ಆಡುವುದಕ್ಕೆ ಸಾಧ್ಯವಾಗುತ್ತದೆ. ಬಾಯಿಯಲ್ಲಿ ಬ್ರು.. ಬ್ರು ಎಂದು ಸೌಂಡ್ ಮಾಡುತ್ತ, ಗಲ್ಲದ ತುಂಬೆಲ್ಲ ಎಂಜಲಿನ ನೊರೆಯನ್ನು ಚೆಲ್ಲುತ್ತ, ಕೈಯನ್ನು ಸ್ಟೆರಿಂಗ್ ಎನ್ನುವಂತೆ ತಿರುಗಿಸುತ್ತ, ಪ್ಯೇ ಪ್ಯೇ ಎಂದು ಹಾರ್ನ್ ಮಾಡಿಕೊಳ್ಳುತ್ತ ನಮ್ಮ ಬಸ್ಸುಗಳು ನಮ್ಮ ಮನೆಯ ಅಂಗಳ, ತೋಟ, ಅಡುಗೆಮನೆ, ಜಗಲಿ ಎಲ್ಲ ಕಡೆಗಳಲ್ಲಿಯೂ ಚಲಿಸುತ್ತಿದ್ದವು. ಅಂತರಿಕ್ಷವನ್ನುಳಿದು ನಮ್ಮ ಬಸ್ಸುಗಳು ಚಲಿಸದ ಜಾಗವಿರುತ್ತಿರಲಿಲ್ಲ. + +(ರವಿ ಮಡೋಡಿ) + +ಆಗೆಲ್ಲ ತುಂಬಾ ಬಡತನ. ಎಲ್ಲರ ಕೈಯಲ್ಲಿ ಕಾಸು ಓಡಾಡುತ್ತಿರಲಿಲ್ಲ. ಹೀಗಾಗಿ ಬಸ್ಸುಗಳಿದ್ದರೂ ಐದರಿಂದ ಹತ್ತು ಕಿ.ಮಿ ವರೆಗೆ ಸಾಮಾನ್ಯ ಜನರು ಕಾಲು ನಡಿಗೆಯಲ್ಲಿಯೇ ಪಯಣವನ್ನು ಮಾಡುತ್ತಿದ್ದರು. ಅದಕ್ಕಿಂತಲೂ ಹೆಚ್ಚಿನ ದೂರ ಪ್ರಯಾಣ ಮಾಡುವುದಿದ್ದರೆ ಮಾತ್ರ ಬಸ್ಸುಗಳಿಗೆ ಹೋಗುತ್ತಿದ್ದರು. ನಮ್ಮಂತಹ ಎಳೆಯ ಹುಡುಗರಿಗೆ ಬಸ್ಸಿನಲ್ಲಿ ಹೋಗುವ ಸಂದರ್ಭಗಳು ಬಂತೆಂದರೆ ಎಲ್ಲಿಲ್ಲದ ಆನಂದ. ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಹೋಗುವ ಬಸ್ಸಿಗಾಗಿ ಬಸ್ ಸ್ಟ್ಯಾಂಡ್ ನಲ್ಲಿ ಒಂದರ್ಧ ಗಂಟೆ ಮುಂಚೆಯೇ ಬಂದು, ಅದಕ್ಕಾಗಿ ಕಾಯುತ್ತ ನಿಲ್ಲುತ್ತಿದ್ದೆವು. ಮಲೆನಾಡಿನ ದಾರಿಯಲ್ಲಿ ಬರುವ ಬಸ್ಸಿನ ಪ್ರತಿಧ್ವನಿಯನ್ನು ಆಲಿಸುತ್ತ ಕಾಯುತ್ತಿದ್ದೆವು. ಮೂರು ನಾಲ್ಕು ಕಿ.ಮಿ ಮೊದಲೇ ಇದು ಇಲ್ಲಿಬರುತ್ತಿದೆ ಎಂದು ರೆಡಾರ್ ನಂತೆ ಹೇಳುವುದಕ್ಕೆ ಸಾಧ್ಯವಾಗುವುದು ನಮಗೆ ಮಾತ್ರ. ಬಸ್ ನ್ನು ನೋಡಿದ ತಕ್ಷಣವೇ ಹಿರಿಹಿರಿ ಹಿಗ್ಗು. ಕೈಯನ್ನು ಅಗಲ ಮಾಡಿ ನಿಲ್ಲಿಸುವಾಗ ನಮ್ಮ ಶಕ್ತಿಯನ್ನು ಬಳಸಿ ಅದು ನಿಂತಿತು ಎಂಬಷ್ಟು ಆನಂದ. ಆ ಸಂತೋಷವನ್ನು ಬಣ್ಣಿಸುವುದಕ್ಕೆ ಸಾಧ್ಯವಿರುತ್ತಿರಲಿಲ್ಲ. ಅಲ್ಲಿ ಎಲ್ಲ ಪ್ರಯಾಣಿಕರಿಗಿಂತ ನಾವೇ ಮೊದಲು ಬಸ್ ನ್ನು ಹತ್ತಬೇಕು ಎಂಬಂತಹ ಪೈಪೋಟಿಯೂ ಇರುತಿತ್ತು. ಬಸ್ಸು ನಿಲ್ಲಿಸುತ್ತಿದ್ದಂತೆ ಓಡಿ ಹೋಗಿ ಹತ್ತುತ್ತಿದ್ದೆವು. ಯಾರಾದರೂ ಇಳಿಯುವವರು ಇದ್ದರೂ ಅದು ನಮಗೆ ಲೆಕ್ಕಕ್ಕೆ ಇರಲಿಲ್ಲ. ಅವರ ಮಧ್ಯದಲ್ಲಿ ನುಸುಳಿ ಮುನ್ನುಗುತ್ತಿದ್ದೆವು. ಮೇಲೇರಿದ ಮೇಲೆ ಯಾವುದಾದರೂ ಕಿಟಕಿ ಪಕ್ಕದ ಸೀಟಿಗಾಗಿ ಕಣ್ಣನ್ನು ಹರಿಸುತ್ತ, ಆ ಕ್ಷಣವೇ ಆಕ್ರಮಿಸಿ ಬಿಡುವುದು ನಮ್ಮ ಜಾಯಮಾನ. ಆಹ.. ಕಿಟಿಕಿ ಪಕ್ಕ ಸೀಟು ಸಿಕ್ಕರೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮಲೆನಾಡಿನ ತಂಗಾಳಿಗೆ ತಲೆಯನ್ನು ಒಡ್ಡಿ ತಲೆಕೂದಲನ್ನು ಹಾರಿಸಿಕೊಂಡರೆ ಅದರ ಮಜವೇ ಬೇರೆ. ಬಸ್ಸಿನಲ್ಲಿ ಜೊತೆಯಲ್ಲಿ ಹಿಂದೆ ಚಲಿಸುವ ಮರಗಿಡಗಳು, ಗಿಡಗೆಂಟೆಗಳ ಬಗ್ಗೆ ವಿಶೇಷ ಕುತೂಹಲ. ಆಗೆಲ್ಲ ಬಸ್ಸಿನಲ್ಲಿ ಧೂಮಪಾನಕ್ಕೆ ಅವಕಾಶವಿತ್ತು. ನಮ್ಮ ಹಿಂಬದಿಯಲ್ಲಿ ಕುಳಿತ ವ್ಯಕ್ತಿ ತಾನು ಸೇದುವ ಬೀಡಿ ಬೇಗ ಮುಗಿಯುತ್ತದೆ ಎಂದು ನಾವು ಕುಳಿತ ಸೀಟಿನ ಕಿಟಕಿಯನ್ನು ಮುಚ್ಚುವುದಕ್ಕೆ ಹೇಳುತ್ತಿದ್ದ. ಒಂದೆರೆಡು ಬಾರಿ ಹೇಳಿದರೂ ಕೇಳದವರಂತೆ ಕುಳಿತಾಗ, ನಮ್ಮನ್ನು ಗದರಿಸಿ ಕಿಟಕಿಯನ್ನು ಮುಚ್ಚಿಸಿದಾಗ ಆಗುವ ದುಃಖ ಹೇಳತೀರದಾಗಿತ್ತು. + +ಕಿಟಕಿ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುವುದು ನಮ್ಮ ಮೊದಲ ಆಯ್ಕೆಯಾಗಿರುತ್ತಿತ್ತು. ಒಂದೊಮ್ಮೆ ಅದು ಸಿಗದಿದ್ದರೆ ಡ್ರೈವರ್ ಸೀಟಿನ ಹಿಂಬದಿಯಲ್ಲಿ ನಿಲ್ಲುವುದು ಅಥವಾ ಅವರ ಎದುರಿನ ಉದ್ದ ಸೀಟ್ ನಲ್ಲಿ ಕೂರುವುದೆಂದರೆ ಎಲ್ಲಿಲ್ಲದ ಸಂತೋಷವೆಂದು ಹೇಳಬಹುದು. ಅಲ್ಲಿ ಕುಳಿತುಕೊಂಡು ಡ್ರೈವರ್ ಹೇಗೆ ಡ್ರೈವ್ ಮಾಡುತ್ತಾನೆ, ಎಷ್ಟು ಸ್ಪೀಡ್ ಆಗಿ ಓಡಿಸುತ್ತಾನೆ ಎಂದು ಸೂಕ್ಷ್ಮವಾಗಿ ನೋಡುತ್ತ, ನಮ್ಮ ಬೆಂಬಲವನ್ನು ಕೊಟ್ಟು ಅವನನ್ನು ಮನಸ್ಸಿನಲ್ಲಿಯೇ ಹುರಿದುಂಬಿಸುತ್ತಿದ್ದೆವು. ಇದರ ಜೊತೆಗೆ ಯಾರು ಎಲ್ಲಿ ಇಳಿಯುತ್ತಾರೆ ಎಂಬುದನ್ನು ಕಾಯುತ್ತ ಅಡ್ವಾನ್ಸ್ ಆಗಿ ಕಿಟಕಿ ಪಕ್ಕದ ಜಾಗಕ್ಕೆ ಹೊಂಚುಹಾಕುತ್ತಿದ್ದೆವು. ಅಂದಿನ ಹಳೆ ಬಸ್ಸುಗಳಲ್ಲಿ ಈಗಿನಂತೆ ಕಿಟಿಕಿಗೆ ಗಾಜುಗಳು ಇರಲಿಲ್ಲ. ಉದ್ದನೆಯ ಬಟ್ಟೆಯನ್ನು ಮಡಚಿ ಕಿಟಕಿ ಮೇಲೆ ಕಟ್ಟಿರುತ್ತಿದ್ದರು. ಒಂದೊಮ್ಮೆ ಮಳೆ ಬಂದರೆ ಆ ಬಟ್ಟೆಯನ್ನು ಕೆಳಕ್ಕೆ ಬಿಡಬೇಕಿತ್ತು. ಈ ವ್ಯವಸ್ಥೆಯಲ್ಲಿ ಅರ್ಧಕ್ಕೆ ಅರ್ಧ ಮಳೆಯ ನೀರು ಬಸ್ಸಿನೊಳಗೆ ಬಂದು ನಮ್ಮ ಬಟ್ಟೆಯನ್ನು ಒದ್ದೆಮಾಡುತ್ತಿತ್ತು. ಆದರೂ ಆ ಬಗ್ಗೆ ಆಕ್ಷೇಪಣೆಯನ್ನು ಮಾಡದೆ ಬೆಟ್ಟದ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದಡೆಂತಯ್ಯಾ ಎಂಬಂತೆ ಎಂತಹ ಚಳಿ, ಗಾಳಿ, ಮಳೆಗೂ ಹೆದರದೆ ಬಸ್ಸಿನಲ್ಲಿ ಕುಳಿತುಕೊಳ್ಳುತ್ತಿದ್ದರು. + +ಬಸ್ಸು ನಿಲ್ದಾಣಗಳಲ್ಲಿ ಕಂಡಕ್ಟರ್ ಗಳು ಒಂದೇ ಉಸಿರಿನಲ್ಲಿ ಶಂಕರ್ ಮಹದೇವನ್ ತರ ಊರಿನ ಹೆಸರನ್ನು ಹೇಳುವುದನ್ನು ಕಾಣುವಾಗ ಆಶ್ಚರ್ಯವಾಗದೇ ಉಳಿಯುತ್ತಿರಲಿಲ್ಲ. ಅವರ ಹೇಳುವಿಕೆಯಲ್ಲಿ ಒಂದು ಲಯವಿದೆ. ತಾರಕದಲ್ಲಿ ಕೂಗುತ್ತಿದ್ದರೆ ಪ್ರಯಾಣಿಕರು ಒಂದು ಕಿ.ಮಿ ದೂರದಲ್ಲಿದ್ದರೂ ಓಡಿ ಬಂದು ಬಸ್ ನ್ನು ಹತ್ತುವಂತೆ ಆ ಧ್ವನಿ ಮಾಡುತ್ತದೆ. “ತಲ್ಲೂರು, ಹೆಮ್ಮಾಡಿ, ತ್ರಾಸಿ, ಮರವಂತೆ, ನಾವುಂದ, ಕಂಬದಕೋಣೆ, ಕಿರಿಮಂಜೇಶ್ವರ, ನಾಗೂರು, ಉಪ್ಪುಂದ, ಬೈಂದೂರ್ ಬೈಂದೂರ್ ಎನ್ನುತ್ತ ಕೂಗಿದರೆ ಆಗುವ ಥ್ರೀಲ್ ಅಷ್ಟಿಷ್ಟಲ್ಲ. ನಾವು ಯಾವುದೋ ಊರಿಗೆ ಹೋಗಿ, ಅಲ್ಲಿ ನಮ್ಮೂರಿನ ಹೆಸರನ್ನು ಕೂಗಿದರೆ ಒಂದು ಸಲ ತಲೆ ಎತ್ತಿ ಬಸ್ಸನ್ನು ನೋಡುವುದು ಗ್ಯಾರಂಟಿಯಾಗಿತ್ತು. ನಾವು ಚಿಕ್ಕವರಿರುವಾಗ ನಮ್ಮೂರಿನಲ್ಲಿ ಸಂಚರಿಸುವ ಎಲ್ಲಾ ಬಸ್ಸುಗಳ ಡ್ರೈವರ್, ಕಂಡಕ್ಟರ್ ಗಳ ಹೆಸರುಗಳು ನಮಗೆ ಬಾಯಿಪಾಠ. ಜೊತೆಗೆ ಇದು ನನ್ನ ಬಸ್ಸು ಎಂದು ನಮ್ಮಷ್ಟಕ್ಕೆ ನಾವು ಬಾಯಿ ಮಾತಿನಲ್ಲಿ ಖರೀದಿ ಮಾಡಿಕೊಂಡು ಮತ್ತೊಬ್ಬ ಸ್ನೇಹಿತನೊಂದಿಗೆ ಜಗಳಕ್ಕೆ ನಿಲ್ಲುತ್ತಿದ್ದೆವು. ನಮ್ಮ ಬಸ್ಸುಗಳ ವರ್ಣನೆಯಲ್ಲಿ ಮೇಲಾಟಗಳು ಇರುತ್ತಿದ್ದವು. ನಾವು ಆ ಬಸ್ಸಿನ ಬಗ್ಗೆ, ಅಲ್ಲಿನ ಡ್ರೈವರ್, ಕಂಡಕ್ಟರ್ ಗಳ ಗುಣಗಾನವನ್ನು ಮಾಡುತ್ತ, ನಮ್ಮ ಬಸ್ಸಿನ ಡ್ರೈವರ್ ಸ್ಟೈಲ್ ಚೆಂದ, ಸ್ಪೀಡ್ ಆಗಿ ಓಡಿಸುತ್ತಾನೆ ಇತ್ಯಾದಿಗಳ ಬಗ್ಗೆ ಮಾತನಾಡುತ್ತ, ನಮ್ಮದೆ ಕಂತೆ ಪುರಾಣಗಳನ್ನು ಮಾತಾಡಿಕೊಳ್ಳುತ್ತಿದ್ದೆವು. ನಮ್ಮ ರೂಟ್ ನಲ್ಲಿ ಬರುವ ಡ್ರೈವರ್ ಗಳಿಗೆ ಪ್ರತಿದಿನ ಬರುವಾಗ ಹೋಗುವಾಗ ವಿಶ್ ಮಾಡೋದು ಆ ಕಾಲದ ನಮ್ಮ ಪದ್ಧತಿಯಾಗಿತ್ತು. ಪಾಪ ಅವರುಗಳು ತಪ್ಪದೇ ನಮಗೂ ವಿಶ್ ಮಾಡುತ್ತಿದ್ದರು. ಏನೋ ಹುಡುಗರು ಎನ್ನುವಂತೆ ಅಸಡ್ಡೆ ತೋರದೆ ಇರುವುದು ನಮಗೆಲ್ಲ ಇಷ್ಟವಾಗಿರುತ್ತಿತ್ತು . + + + +ನಮ್ಮ ರಸ್ತೆಯಲ್ಲಿ ಹೊಸದಾಗಿ ಕುಂದಾಪುರದಿಂದ ಹೈದ್ರಾಬಾದ್ ಗೆ ಹೋಗುವ ಸೂಪರ್ ಡಿಲಕ್ಸ್ ಬಸ್ಸು ಬಿಟ್ಟಿದ್ದರು. ಅದು ನಾವು ಶಾಲೆ ಬಿಡುವ ಸಮಯಕ್ಕೆ ಬರುತ್ತಿತ್ತು. ನಮ್ಮ ಸ್ನೇಹಿತರಿಗೆ ಏನೋ ಒಂದು ಹುಡುಗಾಟಿಕೆ. ಒಂದು ದಿನ ಬಸ್ಸು ಸಂಚರಿಸುತ್ತಿರುವಾಗ ಸ್ನೇಹಿತರಿಬ್ಬರು ಗುಡ್ಡದ ಮೇಲೆ ನಿಂತು, ಅಲ್ಲಿಂದಲೇ ಬಸ್ಸಿಗೆ ಕಲ್ಲನ್ನು ಎಸೆದರು. ಅದು ಬಸ್ಸಿನ ಮುಂಬದಿಯ ಗ್ಲಾಸ್ ಗೆ ತಾಗಿ, ನೋಡು ನೋಡುತ್ತಿದ್ದಂತೆ ಗ್ಲಾಸ್ ಪುಡಿ ಪುಡಿಯಾಯಿತು. ಬಸ್ಸಿನಲ್ಲಿದ್ದವರು ಗಾಬರಿಯಾಗಿ ಹೊರಕ್ಕೆ ಬಂದು ನೋಡಿದರೆ, ಈ ಹುಡುಗ ಗುಡ್ಡದ ಮೇಲೆ ಓಡುತ್ತಿದ್ದ. ಸದ್ಯ ಯಾರಿಗೂ ಏನು ಗಾಯಗಳಾಗಿರಲಿಲ್ಲ. ಆದರೆ ನಮಗೆಲ್ಲ ಹೆದರಿಕೆಯಾಯಿತು. ಬಸ್ಸಿನವರು ನಮ್ಮನ್ನು ಎತ್ತಿಹಾಕಿಕೊಂಡು ಹೋದರೆ ಎಂಬ ಭಯದಲ್ಲಿ ಆ ರಸ್ತೆಯಲ್ಲಿ ಒಂದು ವಾರ ಸಂಚಾರವನ್ನೇ ಮಾಡಿರಲಿಲ್ಲ! + +ನಾನೊಮ್ಮೆ ಕುಂದಾಪುರದಿಂದ ಊರಿಗೆ ಬರುತ್ತಿದ್ದೆ. ಮಧ್ಯ ಕೊಲ್ಲೂರಿನಲ್ಲಿ ಟೀ ಗೆಂದು ಬಸ್ ನವರು ಬಸ್ ಸ್ಟ್ಯಾಂಡ್ ನಲ್ಲಿ ನಿಲ್ಲಿಸಿದ್ದರು. ಪ್ರಯಾಣಿಕರೆಲ್ಲರು ಟೀ ಗೆಂದು ಬಸ್ಸಿನಿಂದ ಇಳಿದು ಹೊರಟರು. ಅವರ ಜೊತೆಗೆ ನಾನೂ ಹೊರಟೆ. ಟೀ ಕುಡಿದು ಮತ್ತೆ ಬಸ್ ನ್ನು ಏರಿದರೆ ನಾನು ಕುಳಿತಿದ್ದ ಜಾಗದಲ್ಲಿ ಮತ್ತೊಬ್ಬ ಬಂದು ಕುಳಿತಿದ್ದ. ನನಗೆ ನಖಶಿಖಾಂತ ಉರಿದುಹೋಯಿತು. ಅವರ ಬಗ್ಗೆ ಕೋಪವನ್ನು ತಳೆದು, ನನ್ನ ಜಾಗವನ್ನು ಆಕ್ರಮಿಸಿಕೊಂಡಿರುವುದಕ್ಕೆ ಆಕ್ಷೇಪವನ್ನು ಮಾಡಿ, ಯದ್ವಾತದ್ವ ಬೈಯುವುದಕ್ಕೆ ಪ್ರಾರಂಭಿಸಿದೆ. ಅವನಿಗೂ ಎಲ್ಲಿಲ್ಲಿದ ಕೋಪ ಬಂದಿರಬೇಕು. ತಾನು ಮೊದಲಿನಿಂದಲೂ ಇಲ್ಲಿ ಕುಳಿತಿರುವುದು. ಬೇಕಿದ್ದರೆ ಹಿಂದಿನ ಸೀಟ್ ನಲ್ಲಿ ಇರುವವರನ್ನು ಕೇಳಿ ಎಂದ. ಆತನು ಹೌದು ಎಂಬಂತೆ ಹೇಳಿದ. ಅಯ್ಯೋ ಇವರ ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿಯನ್ನು ನಾನು ನಂಬುದಕ್ಕೆ ಸಾಧ್ಯವಾಗದೇ ಕಂಡಕ್ಟರ್ ನ್ನು ಕರೆದೆ. ನೋಡಿದರೆ ಮತ್ತೊಬ್ಬರು ಯಾರೋ ಬಂದರು. ಆದರೂ ನಾನು ನನ್ನ ಸಮಸ್ಯೆಯನ್ನು ಹೇಳಿಕೊಂಡೆ. ಅವನು ಸಾವಕಾಶದಿಂದ “ರೀ ನೀವು ಎಲ್ಲಿಗೆ ಹೋಗ್ಬೇಕು. ಇದು ಕುಂದಾಪುರಕ್ಕೆ ಹೋಗುವ ಗಾಡಿ” ಎಂದ. ನಾನು ಊರಿಗೆ ಹೋಗುವ ವಿಚಾರವನ್ನು ತಿಳಿಸಿದೆ. ಅಲ್ಲಿಯವರೆಗೆ ತಾಳ್ಮೆಯಲ್ಲಿ ಕೇಳುತ್ತಿದ್ದ ಕಂಡಕ್ಟರ್ ಒಮ್ಮೆಲೇ ಕೋಪಗೊಂಡು “ರೀ..ನಿಮ್ಮ ಬಸ್ ಪಕ್ಕದಲ್ಲಿ ನಿಂತಿದೆಯಲ್ಲ. ಅಲ್ಲಿ ಹತ್ರಿ.. ಸುಮ್ಮನೆ ನೋಡಿಕೊಳ್ಳದೇ ಹತ್ತಿಬಿಟ್ಟು ಇಲ್ಲಿ ಬಂದು ಕೂಗಾಡುತ್ತಿರಾ ” ಎನ್ನುತ್ತ ಅವನೇ ಕೂಗಾಡಿದ. ನನಗೆ ಆಶ್ಚರ್ಯ. ಅರೇ ಹೌದಲ್ಲ. ಸೇಮ್ ಟು ಸೇಮ್ ಬಸ್ಸು. ಒಂದೇ ಖಾಸಗಿ ಕಂಪನಿಯ, ಒಂದೇ ಕಲ್ಲರಿನ ಬಸ್ಸು. ಬಸ್ಸಿನ ಬೋರ್ಡ್ ಮಾತ್ರ ಬೇರೆ ಎನ್ನುತ್ತ ವಿಧಿಯಿಲ್ಲದೇ ಅಂಡುಸುಟ್ಟ ಬೆಕ್ಕಿನಂತೆ ಕೆಳಗೆ ಇಳಿದೆ. ಇಳಿಯುವಾಗ ಮತ್ತೊಮ್ಮೆ ನನ್ನ ಸೀಟಿನಲ್ಲಿ ಕುಳಿತವನನ್ನು ಗುರಾಯಿಸುವುದನ್ನು ಮರೆಯಲಿಲ್ಲ! + +ಒಂದು ಕಾಲದಲ್ಲಿ ಬಸ್ ನಮಗೆ ಆಪ್ತಮಿತ್ರನಾಗಿದ್ದ. ಅದರಲ್ಲಿಯೇ ನಮ್ಮ ಆಟ-ಪಾಠಗಳು ನಡೆಯುತ್ತಿತ್ತು. ಮೊಬೈಲ್/ಕಂಪ್ಯೂಟರ್ ಬಿಟ್ಟುಬರದ ಇಂದಿನ ಮಕ್ಕಳಿಗೆ ನೀವು ಬಸ್ ಆಟ ಆಡಿ ಎಂದರೆ ಗೊಳ್ಳೆಂದು ನಗೆಯಾಡಬಹುದು. ಬಸ್ಸು ಸಂತೋಷಕೊಟ್ಟಿತ್ತು ಎಂದರೆ ಅಪಹಾಸ್ಯ ಮಾಡಬಹುದು ಎಂಬ ಹೆದರಿಕೆಯಲ್ಲಿ ಈಗ ಆ ನೆನಪುಗಳು ಅಲೆಯುತ್ತಿವೆ!ಗ್ಗೆ ಹೇಳುತ್ತಿದ್ದವು. + +***** + +ಸಾಯಂಕಾಲದಿಂದ ಮಳೆ ಒಂದೇ ಸಮನೆ ರಚ್ಚೆ ಹಿಡಿದ ಮಗುವಿನಂತೆ ಗುಡುಗು ಸಿಡಿಲುಗಳೊಂದಿಗೆ ಒಂದೇ ಸಮನೆ ಸುರಿಯುತ್ತಿತ್ತು. ಶಹರದ ಪ್ರತಿಷ್ಠಿತ ಬಡಾವಣೆಯಲ್ಲೂ ಸಹ ಗಮ್ಯ ಸ್ಥಾನ ಸೇರಲು ದಾರಿ ತೋರದೆ ಗೊಂದಲಗೊಂಡು ಮಳೆ ನೀರು ಅಲ್ಲಲ್ಲೇ ನಿಂತಿತ್ತು. ರಾತ್ರಿ ಆದಂತೆ ಮಳೆಯ ಆರ್ಭಟ ಇನ್ನೂ ಹೆಚ್ಚಿತು. ಎಷ್ಟು ಮರಗಳು ಧರೆಗುರುಳಲಿವೆಯೋ, ಇನ್ನೆಷ್ಟು ಮನೆಗಳಿಗೆ ನೀರು ನುಗ್ಗಲಿದೆಯೋ, ಇನ್ನೇನು ಅನಾಹುತ ನೋಡಬೇಕಾಗುವುದೋ ಎಂಬ ಬಗ್ಗೆ ಚಿಂತಿಸುತ್ತಾ ಬಡಾವಣೆವಾಸಿಗಳು ನಿಧಾನವಾಗಿ ನಿದ್ದೆಗೆ ಜಾರುತ್ತಿರುವ ಸಂದರ್ಭ. ಇಂತಹ ಸಮಯದಲ್ಲಿ ಆ ಬಡಾವಣೆಯ ಪ್ರತಿಷ್ಠಿತರ ಮನೆಯೊಂದರಲ್ಲಿ ತಣ್ಣಗೆ ಕ್ರೌರ್ಯವೊಂದು ನಡೆದಿತ್ತು. ಗರ್ಜಿಸುತ್ತಿದ್ದ ಗುಡುಗಿನ ಸದ್ದಿನೊಂದಿಗೆ ಜೀವವೊಂದರ ಚೀತ್ಕಾರ ವಿಲೀನಗೊಂಡು ಮಿಂಚಿನ ಬೆಳಕು ಆ ರುಂಡವು ಮುಂಡದಿಂದ ಬೇರೆ ಆಗುತ್ತಿರುವುದಕ್ಕೆ ಸಾಕ್ಷಿ ಆಗಿತ್ತು. + +(ಪೂರ್ಣಿಮಾ ಹೆಗಡೆ) + +ಎರಡು ದಿನ ಮನಸೋ ಇಚ್ಛೆ ಸುರಿದ ಮಳೆಯ ಸುದ್ದಿಗಳು ಮಾಧ್ಯಮಗಳಲ್ಲಿ ಮಸುಕಾಗುತ್ತಾ ಈ ಹತ್ಯೆಯ ವಿಚಾರ ಮುನ್ನಲೆಯನ್ನು ಪಡೆದುಕೊಂಡಿತು. ಪ್ರತಿ ಮಾಧ್ಯಮದಲ್ಲೂ ಆತನ ಮೌಲ್ಯಯುತ ಬದುಕಿನ ಚಿತ್ರಣ ಕಟ್ಟಿಕೊಡಲಾಗುತ್ತಿತ್ತು. ಹೇಗೆ ಒಬ್ಬ ಸಾಧಾರಣ ಮನುಷ್ಯ ತನ್ನ ಸತತ ಪ್ರಯತ್ನ ಪರಿಶ್ರಮದಿಂದ ಸಾಧಕನಾದ ಬಗ್ಗೆ ಹಾಗೂ ಪ್ರತಿಷ್ಠಿತ ಕಂಪೆನಿಯ ಒಡೆಯನಾದರೂ ಯಾವ ಹಮ್ಮು ಬಿಮ್ಮುಗಳಿಲ್ಲದೇ ಜನರಿಗೆ ಕೆಲಸವನ್ನು ನೀಡಿ ಸಾವಿರಾರು ಮನೆಗಳಿಗೆ ಅನ್ನದಾತನಾಗಿದ್ದರ ಬಗ್ಗೆ ತೋರಿಸಲಾಗುತ್ತಿತ್ತು. ಎಷ್ಟೋ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುತ್ತಾ, ಅನಾಥ ಮಕ್ಕಳ ರಕ್ಷಕನೂ ಆಗಿ ಸಮಾಜಮುಖಿ ಕಾರ್ಯಗಳಲ್ಲಿ ನಿರತನಾಗಿ ಆದರ್ಶಪ್ರಾಯನಾಗಿದ್ದರ ಬಗ್ಗೆ ಹೇಳುತ್ತಿದ್ದವು. ಸದಾ ಸತ್ಕರ್ಮವನ್ನೇ ನೆಚ್ಚಿಕೊಂಡವನನ್ನು ಯಾರೋ ದುಷ್ಕರ್ಮಿಗಳು ಅತ್ಯಂತ ಅಮಾನುಷವಾಗಿ ಬರ್ಬರವಾಗಿ ಹತ್ಯೆ ನಡೆಸಿದ್ದರ ಬಗ್ಗೆ ಕೆಲವು ವಾಹಿನಿಗಳು ಸುದ್ದಿ ತೋರಿಸುತ್ತಿದ್ದರೆ ಇನ್ನೂ ಕೆಲವು ವಾಹಿನಿಗಳು ಇಂತಾ ಸತ್ಕರ್ಮಿಗೆ ಈ ರೀತಿಯ ಸಾವು ನ್ಯಾಯವೇ ಎಂಬಂತೆ ಸುದ್ದಿಯನ್ನು ಪುಂಖಾನುಪುಂಖವಾಗಿ ಪ್ರಸಾರ ಮಾಡುತ್ತಿದ್ದವು. ಇತ್ತ ಈ ಸುದ್ದಿಯನ್ನು ನೋಡುತ್ತಿದ್ದವನೊಬ್ಬ ಮೀಸೆ ಅಡಿಯಲ್ಲಿ ನಗುತ್ತಿದ್ದ. + +” ‘ಅನಾಯಾಸೇನ ಮರಣಂ’ ಎಂದು ದಿನಾಲೂ ಬೇಡಿಕೊಳ್ಳುತ್ತಿದ್ದ ನಿನ್ನ ಪ್ರಾರ್ಥನೆ ಏನೂ ಫಲ ನೀಡಲಿಲ್ಲವೇ!? ನಾನು ಮಾಡುತ್ತಿರುವ ಸತ್ಕರ್ಮಗಳೇ ನನಗೆ ರಕ್ಷಣೆ ಎನ್ನುತ್ತಿದ್ದ ನೀನು ಅತೀ ಬರ್ಬರವಾಗಿ ಸಾಯುತ್ತಿದ್ದಾಗ ಆ ಸತ್ಕರ್ಮಗಳು ಯಾವವೂ ನಿನ್ನ ರಕ್ಷಣೆಗೆ ಬರಲೇ ಇಲ್ಲಾ ಅಲ್ಲವೇ? ಎರಡು ದಿನ ನಿನ್ನ ದೇಹ ಹುಳು ಹುಪ್ಪಟಿಗಳ ಆಹಾರವಾದ ಮೇಲೆ ನಿನ್ನ ಸಾವಿನ ಸುದ್ದಿ ಈ ಜಗತ್ತಿಗೆ ತಿಳಿಯಿತು. 46 ವರ್ಷ!! ಸಾಯುವ ವಯಸ್ಸು ಖಂಡಿತವಾಗಿಯೂ ಅಲ್ಲ. ನನ್ನನ್ನು ನೋಡು ನಿನಗಿಂತ ಹೆಚ್ಚು ಬೆಳೆದಿದ್ದೇನೆ, ಎಲ್ಲಾ ವಿಧದಲ್ಲೂ. ನಾವಿಬ್ಬರೂ ಒಂದೇ ಸಲ ಈ ಶಹರಕ್ಕೆ ಕಾಲಿಟ್ಟವರು. ಅಸೂಯೆ, ದ್ವೇಷ, ಅನ್ಯಾಯ, ಅಡ್ಡದಾರಿ ಯಾವುದೂ ಬೇಡ, ಒಳ್ಳೆಯ ಕೆಲಸದಿಂದ ಕೂಡ ಅತಿ ಎತ್ತರಕ್ಕೆ ಬೆಳೆಯಬಹುದು ಎಂದು ಹೇಳುತ್ತಿದ್ದ ನಿನ್ನ ನೈತಿಕ ಮೌಲ್ಯಗಳು ನಿನ್ನನ್ನು ಬದುಕಲು ಬಿಡಲಿಲ್ಲ ನೋಡು! ಸಾಯಿಸಲೇ ಬೇಕಾಯಿತು, ನನ್ನ ದಾರಿಗೆ ಅಡ್ಡ ಬಂದೆಯಲ್ಲ. ನಾನು ಬೆಳೆಯಬೇಕು ಯಾವ ದಾರಿ ಆದರೇನು, ಮರಣಕಾಲದಲ್ಲಿ ನಾವು ಮಾಡಿದ ದುಷ್ಕರ್ಮಗಳು ನಮ್ಮನ್ನು ಚುಚ್ಚುತ್ತವೆ ಎಂದು ಹೇಳುತ್ತಿದ್ದೆ ಈಗ ನೋಡು ನಿನ್ನ ಸತ್ಕರ್ಮಗಳು ಆರಾಮಾದಾಯಕ ಮರಣ ಕೊಡಲಿಲ್ಲ ” ಎಂದು ಮನಸ್ಸಲ್ಲೇ ಮಾತಾನಾಡಿಕೊಳ್ಳುತ್ತಾ ನಗುತ್ತಾ ಸುದ್ದಿಯನ್ನು ವೀಕ್ಷಿಸುತ್ತಿದ್ದನು. + +ತಟ್ಟನೇ ಅದೊಂದು ಹೊಸ ಸುದ್ದಿ ಅವನನ್ನು ಅಚ್ಚರಿಗೊಳಿಸಿತು. “ಹತ್ಯೆಗೊಳಗಾದ ಆ ಸಜ್ಜನ ಒಂದು ವಾರದ ಮೊದಲೇ ತನ್ನೆಲ್ಲಾ ಆಸ್ತಿಯನ್ನು ಎಲ್ಲಾ ಆಶ್ರಮಗಳಿಗೆ ಹಾಗೂ ಕಂಪನಿಯನ್ನು ತುಂಬಾ ವಿಶ್ವಾಸಾರ್ಹ, ದಕ್ಷ, ನಿಷ್ಠಾವಂತ ಅಧಿಕಾರಿಯ ಹೆಸರಿಗೆ ಬರೆದಿಟ್ಟಿದ್ದ. ತನ್ನ ಖಾಸಗಿ ಡೈರಿಯಲ್ಲಿ ಈ ವಿವರಗಳ ಉಲ್ಲೇಖ ಮಾಡಿ ತನ್ನ ಸಾವಿನ ದಿನವನ್ನು ಹಾಗೂ ಸಮಯವನ್ನು ನಿಖರವಾಗಿ ತಿಳಿಸಿದ್ದ. ಇದು ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಡುತ್ತಿದೆ ” ಎಂಬ ಸುದ್ದಿ ಬಿತ್ತರಗೊಳ್ಳುತ್ತಿರುವಾಗ ಈತನಿಗೆ ಪಾತಾಳಕ್ಕೆ ಇಳಿಯುತ್ತಿರುವ ಭಾವನೆ ಉಂಟಾಯಿತು. ಆ ಸಜ್ಜನ ತನ್ನ ಸತ್ಕರ್ಮದ ಫಲದಿಂದ ಅನಾಯಾಸವಾಗಿ ಮರಣವನ್ನು ಅಪ್ಪಿಕೊಳ್ಳುವ ಮನಸ್ಥಿತಿ ಹೊಂದಿದ್ದ. ದೇಹ ನೂರಾರು ಹಿಂಸೆ ಸಹಿಸಿದರೂ ಮನಸ್ಸು ತೃಪ್ತಿಯಿಂದ ಸಾವನ್ನು ಸಹಜವಾಗಿ ನಿರಾತಂಕವಾಗಿ ಒಪ್ಪಿಕೊಂಡಿತ್ತು.ಅನಾಯಾಸೇನ ಮರಣಂ ಎಂಬ ಪ್ರಾರ್ಥನೆ ಸಫಲವಾಗಿತ್ತು.ಕೊನೆಗೂ ಆತನ ಎತ್ತರ ಹಾಗೂ ಚಿಂತನೆ ಈತನಿಗೆ ಅರ್ಥವಾಯಿತು. + + + +ಇಂತಹ ಎಷ್ಟೋ ಸಜ್ಜನರು ನಮ್ಮ ನಡುವೆ ಆಗಿಹೋಗಿದ್ದಾರೆ. ರಾಮಕೃಷ್ಣ ಪರಮಹಂಸರ ಉದಾಹರಣೆಯನ್ನು ತೆಗೆದುಕೊಳ್ಳುವುದಾದರೆ, ಅವರು ಕ್ಯಾನ್ಸರ್ ನಿಂದ ಬಳಲಿ ನೋವುಂಡಿದ್ದರೂ ಅವರ ಮನಸ್ಸು ಸಾವಿಗೆ ಹೆದರಲಿಲ್ಲ. ಸಾವನ್ನು ಸಹಜವಾಗಿಯೇ ಸ್ವೀಕರಿಸಿ ಭಗವಂತನ ನಾಮ ಸ್ಮರಣೆಯಲ್ಲಿ ಕೊನೆಯುಸಿರೆಳೆದರು. ಮರಣ ಕಾಲದ ಅರಿವು ಎಲ್ಲರಿಗೂ ಆಗುವಂತಹದ್ದಲ್ಲ. ಅದಕ್ಕೆ ಅಂತಹ ಮೌಲ್ಯಯುತ ಬದುಕು ಬದುಕಿರಬೇಕು. ಕೊನೆಯ ಗಳಿಗೆಯ ಅರಿವಿರುವವನು ಮಾತ್ರ ಆ ನಂಬುವ ದೈವಿ ಶಕ್ತಿಯನ್ನು ಮನದಲ್ಲಿ ನೆನೆದು ಈ ದೇಹ ಬಿಡಲು ಸಾಧ್ಯ ಹಾಗೂ ಆ ದೈವಿ ಶಕ್ತಿಯನ್ನು ಸೇರಲು ಸಾಧ್ಯ. ಇದು ಜೀವನವನ್ನು ಸುಂದರವಾಗಿಸುತ್ತಾ ಮರಣವನ್ನೂ ಸುಂದರವಾಗಿಸುವ ಬಗೆ. ಏಕೆಂದರೆ ಹುಟ್ಟು ಹಾಗೂ ಸಾವು ಎರಡೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಜೀವನವೇ ನಮ್ಮ ಅರಿವಿಲ್ಲದೆ ಕಳೆದು ಹೋದರೆ ಮರಣದ ಅರಿವು ಹೇಗೆ ಉಂಟಾಗಲು ಸಾಧ್ಯ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_193.txt b/Kenda Sampige/article_193.txt new file mode 100644 index 0000000000000000000000000000000000000000..483198814f6fdf493c52795e01b310c65b9689cb --- /dev/null +++ b/Kenda Sampige/article_193.txt @@ -0,0 +1,33 @@ +ಶ್ರೀಮತಿ ಶೋಭಾ ಗುನ್ನಾಪೂರ ಅವರ ಕಥೆಗಳು ನನ್ನಲ್ಲಿ ಆಶ್ಚರ್ಯ ಮತ್ತು ಸಂತೋಷ ಎರಡನ್ನೂ ಕೊಟ್ಟಿವೆ. ಇವರ ವ್ಯಕ್ತಿತ್ವ ಮತ್ತು ಬದುಕು ಎರಡೂ ನಮ್ಮಲ್ಲಿ ಗೌರವವನ್ನು ಹುಟ್ಟಿಸುತ್ತವೆ ಎನ್ನುವುದು ನಿಜ. ಅದನ್ನು ಸಕಾರಣವಾಗಿ ಹೆಚ್ಚಿಸುವುದು ಇವರ ಈ ಹೊಚ್ಚ ಹೊಸ ಕಥೆಗಳು. + +ಯಾಕಾಗಿ ಬರೆಯುತ್ತೇವೆ? ಒಂದು ಕಥಾ ಸಂಕಲನಕ್ಕೂ, ಕವಿತಾ ಸಂಕಲನಕ್ಕೂ ಆಗುವಷ್ಟು ಸರಕು ಎಲ್ಲರಲ್ಲಿಯೂ ಇರುತ್ತದೆ ಎನ್ನುವ ಮಾತಿನ ಬಗೆಗೆ ನಮಗೆ ಅನುಮಾನಗಳು ಇರಬೇಕಿಲ್ಲ. ಆದರೆ ಪ್ರಶ್ನೆ ಇರುವುದು ಬರೆಯುವ ತುರ್ತು ಕಲೆಯ ಮಾಂತ್ರಿಕ ಸ್ಪರ್ಶವನ್ನು ಪಡೆಯುವುದರಲ್ಲಿ. ಹೊಸತನದಿಂದ ಓದುಗರನ್ನೆ ಸೆಳೆಯುವ ಪ್ರಕ್ರಿಯೆಗೆ ಪ್ರತಿಭೆಯ ಬಲವೂ ದಕ್ಕಿದರೆ ಆ ಭಾಷೆಗೆ ಹೊಸ ಲೇಖಕರು ಸಿಕ್ಕರೆಂದೇ ಅರ್ಥ. ಕಥಾ ವಸ್ತುವನ್ನು ತನ್ನೊಬ್ಬಳ/ನ ವ್ಯಕ್ತಿಗತ ತುರ್ತಿನಿಂದ ಹೊರತಂದು ಸಾರ್ವಜನಿಕಗೊಳಿಸುವ ಭಿತ್ತಿಯನ್ನು ಸೃಷ್ಟಿಸುವುದೇ ಕಲೆಯ ಮೂಲ ಸವಾಲು. ನನ್ನದು ನನ್ನದು ಮಾತ್ರವಲ್ಲ ಎನ್ನುವುದೇ ಯಾವುದೇ ಕಲಾಭಿವ್ಯಕ್ತಿಯ ಗುರಿ ಮತ್ತು ಸಾರ್ಥಕತೆಯ ನೆಲೆ. + +(ಶೋಭಾ ಗುನ್ನಾಪೂರ) + +ಶೋಭಾ ಅವರ ’ಭೂಮಿಯ ಋಣ’ ಸಂಕಲನವು ವ್ಯಕ್ತಿಗತ ಶೋಧ ಮತ್ತು ಸಾಮಾಜಿಕ ಶೋಧದ ಎರಡೂ ಆಯಾಮಗಳನ್ನು ಹೊಂದಿದೆ. ಮುಖ್ಯವಾದ ಮಾತೆಂದರೆ, ಎರಡನ್ನೂ ಅದು ತಳಸ್ತರದ ಬದುಕಿನಿಂದಲೇ ಮಾಡುತ್ತದೆ ಎನ್ನುವುದು. ಶೋಭಾ ಅವರು ನಿರಂತರವಾಗಿ ಜನಮುಖೀ ಕೆಲಸಗಳಲ್ಲಿ ಅವರನ್ನು ತೊಡಗಿಸಿದ ಕಾರಣದಿಂದಲೇ ಇರಬೇಕು, ಸಾಮಾನ್ಯವಾಗಿ ಈ ವಸ್ತುವನ್ನು ಆರಿಸಿಕೊಂಡ ಕಥೆಗಳಲ್ಲಿ ಇರುವ ವ್ಯಗ್ರತೆಯಾಗಲೀ ಆಕ್ರೋಶವಾಗಲೀ ಕಾಣಿಸುವುದಿಲ್ಲ. ಅದರೊಂದಿಗೆ ಇವರ ದೃಷ್ಟಿಕೋನ ಮತ್ತು ನಿಲುವುಗಳಲ್ಲಿನ ಸಂಯಮ, ಪ್ರಬುದ್ಧತೆಯೂ ಸೇರಿದೆ. ಸಂದರ್ಭ ಮತ್ತು ವಾಸ್ತವಕ್ಕೆ ನಾವು ಪ್ರತಿಕ್ರಿಯಿಸುವ ರೀತಿಯೇ ಸವಾಲುಗಳನ್ನು ನಾವು ನಿಭಾಯಿಸುವುದರ ದಿಕ್ಸೂಚಿಯಾಗಿರುತ್ತದೆ. ಬಡತನದ ಹಲವು ದಾರುಣ ಮಾದರಿಗಳನ್ನು ಚಿತ್ರಿಸುವಾಗಲೂ ಶೋಭಾ ಅವರು ಉಳಿಸಿಕೊಳ್ಳುವ ಸಂಯಮವೇ ಅವರ ಕತೆಗಳನ್ನು ಗೆಲ್ಲಿಸುತ್ತದೆ. ಶೋಭಾ ಅವರ ಮುಂದಿನ ಕತೆಗಳ ಬಗ್ಗೆ ಭರವಸೆ ಮತ್ತು ಕುತೂಹಲ ಮೂಡುವುದೂ ಇದೇ ಕಾರಣಕ್ಕಾಗಿ. + +ಬರೆಯಬೇಕೆನ್ನುವ ಆಸೆಯು ದುರ್ದಮ್ಯ ಒತ್ತಡವಾದಾಗ ಮಾತ್ರ ಕಲೆಯ ಉಗಮವಾಗುತ್ತದೆ. ಇದರಲ್ಲಿ ಅವಸರ ಸಲ್ಲದು. ಕತೆಯೋ ಕವಿತೆಯೋ ಅದು ತಾನಾಗಿ ಹೊರಬರಲು ಕಾಯಬೇಕು. ಇಲ್ಲಿನ ಹಲವಾರು ಕತೆಗಳಿಗೆ ಶೋಭಾ ಅವರು ಕಾದಿದ್ದಾರೆ. + +ಈ ಸಂಕಲನದ ಬಹುಪಾಲು ಕತೆಗಳು ಸ್ತ್ರೀಕೇಂದ್ರಿತವಾಗಿವೆ. ಇದು ಉದ್ದೇಶಪೂರ್ವಕವೋ ಸಹಜವೋ ಎನ್ನುವುದು ಮುಖ್ಯವಲ್ಲ. ಆ ವಸ್ತುವನು ಇವರು ಹೇಗೆ ನಿರ್ವಹಿಸಿದ್ದಾರೆ ಎನ್ನುವುದೇ ಮುಖ್ಯ. ಇವರ ಒಟ್ಟೂ ಕತೆಗಳನ್ನು ಒಂದು ಮೂಲಕೇಂದ್ರದ ಮೂಲಕ ಪ್ರವೇಶಿಸುವುದಾದರೆ ಹೆಣ್ಣಿನ ಧಾರಣ ಶಕ್ತಿಯನ್ನು ತನಗೂ ಲೋಕಕ್ಕೂ ಮನದಟ್ಟು ಮಾಡಿಕೊಳ್ಳುವ ಮತ್ತು ಮಾಡಿಸುವ ಆಶಯದವು. ಸ್ವತಃ ಹೆಣ್ಣಿಗೇ ತನ್ನ ಈ ಅಸಾಧಾರಣ ಗುಣ ಬೆರಗು ಹುಟ್ಟಿಸುತ್ತದೆ. ಬದುಕು ಮುಗಿದೇ ಹೋಯಿತು, ಅಥವಾ ಬದುಕಿನ ಬಿಕ್ಕಟ್ಟುಗಳು ತನ್ನನ್ನು ಮುಗಿಸಿಬಿಡುತ್ತವೆ ಎಂದು ಅವಳೇ ಹೆದರಿಕೊಳ್ಳುವಾಗಲೂ ಅದು ಯಾವ ಶಕ್ತಿ ತನ್ನನ್ನು ಮತ್ತೆ ಬದುಕಿನೊಂದಿಗೆ ಸೆಣಸುವಂತೆ ಮಾಡುತ್ತದೆ ಎನ್ನುವುದು ಎಷ್ಟೋ ಬಾರಿ ಅವಳಿಗೇ ತಿಳಿಯುವುದಿಲ್ಲ. ಅಮೂರ್ತ ನೆಲೆಯಲ್ಲಿ ಬದುಕು ಮತ್ತು ಅಮೂರ್ತ ನೆಲೆಯಲ್ಲಿ ಮೌಲ್ಯ ವ್ಯವಸ್ಥೆಗಳು ಹೆಣ್ಣನ್ನು ಹಣಿಯಲು ಏನೆಲ್ಲ ಸವಾಲುಗಳನ್ನು ಸತತವೆಂಬಂತೆ ಒಡ್ಡುತ್ತಲೇ ಇರುವಾಗ ಹೆಣ್ಣು ಬಹುತೇಕ ಸಂದರ್ಭಗಳಲ್ಲಿ ನಗು ನಗುತ್ತಲೇ ಲೀಲಾಜಾಲವಾಗಿ ಎಂಬಂತೆ ಎದುರಿಸುವ ಇಲ್ಲಿನ ಕಥೆಗಳು ನಮಗೆ ಪ್ರಿಯವಾಗುತ್ತಾ ಹೋಗುತ್ತವೆ. ಎರವಲು ತಂದ ಅಥವಾ ಸಾಮಾಜಿಕ ಆಕ್ರೋಶದ ಕಾರಣಕ್ಕಾಗಿ ಹೆಣ್ಣನ್ನು ವೈಭವೀಕರಿಸುವ ಯಾವ ಪ್ರಯತ್ನವನ್ನೂ ಕತೆಗಾರ್ತಿಮಾಡುವುದಿಲ್ಲ. ವಾಸ್ತವವಾದಿ ನೆಲೆಯಲ್ಲಿಯೇ ಈ ಕತೆಗಳು ಮೈತಳೆದಿವೆ. + +ಮೊದಲ ಕತೆ ಬೇಗೆಯ ಇಬ್ಬರು ನಾಯಕಿಯರನ್ನು ನೋಡಿದಾಗಲೇ ಈ ಅಂಶ ಸ್ಪಷ್ಟವಾಗುತ್ತದೆ. ದುಂಡವ್ವ ಮತ್ತು ಜೀಜಾಬಾಯಿ. ದೇವೇಂದ್ರನಂತಹ ತಿಳುವಳಿಕೆ ಸಾಲದ ಮಗನನ್ನು ಬೆಳೆಸಲು ಮತ್ತು ಅಂತಹ ಗಂಡನನ್ನು ಸಂಭಾಳಿಸಲು ಅವರು ನಡೆಸುವುದು ಭಗೀರಥ ಪ್ರಯತ್ನವನ್ನೇ, ಆದರೆ ಅದನ್ನು ಅವರು ತಮ್ಮ ಬದುಕಿನ ಸಹಜ ಗತಿಯ ಅಖಂಡತೆಯಲ್ಲಿಯೇ ನಿರ್ವಹಿಸುತ್ತಾರೆ. ಆ ಕಾರಣಕ್ಕಾಗಿ ಅವರಲ್ಲಿ ಸ್ವಮರುಕವೂ ಇಲ್ಲ, ಲೋಕದ ಮರುಕವನ್ನೂ ಅವರು ಬಯಸುವುದಿಲ್ಲ. ಹೆಣ್ಣಿನ ಹುಟ್ಟುಗುಣವಾದ ದೃಢತೆಯಿಂದ ಅವರು ದೇವೇಂದ್ರನನ್ನು ತಮ್ಮ ಬದುಕಿನ ಭಾಗದಂತೆ ನಡೆಸಿಕೊಂಡು ಹೋಗುತ್ತಾರೆ. + + + +ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ. ಆತ ಮಾಡಿದ ಏನೆಲ್ಲ ಅನಾಹುತಗಳನ್ನು ಜೀರ್ಣಿಸಿಕೊಂಡು ಬದುಕು ನಡೆಸಿದವರಿಗೆ ಆತನಿಗೆ ಜೀರ್ಣಿಸಿಕೊಳ್ಳಲಾಗದ ಸಿಹಿಯ ಕಾರಣಕ್ಕಾಗಿ ಕಳೆದುಕೊಳ್ಳುವುದೆಂದರೆ ಅದೆಂಥ ವ್ಯಂಗ್ಯ, ಅದೆಂಥ ದುರಂತ! ಇದನ್ನು ಹೀಗೂ ನೋಡಬಹುದು ಎನ್ನಿಸುತ್ತದೆ. ಹೆಣ್ಣಿನ ಅಸಾಧಾರಣ ಶಕ್ತಿಯ ಎದುರಿಗೆ ಪ್ರಕೃತಿಯೇ ತೀರಾ ಸಾಧಾರಣ ಎನ್ನಿಸಿ ಬಿಡುತ್ತದೆ. ಬದುಕಿನ ಅನೂಹ್ಯ ತಿರುವುಗಳೆದುರಿಗೆ ಮನುಷ್ಯರ ಅಸಹಾಯಕತೆಯನ್ನೂ ಈ ಅಂತ್ಯ ಹೇಳುತ್ತಿದೆ ನಿಜ. ಆದರೆ ಅಗ್ನಿಪರೀಕ್ಷೆಗಳನ್ನೇ ಹಾದ ಹೆಣ್ಣು ಮಕ್ಕಳನ್ನು ಸಾಧಾರಣ ಜಾಮೂನು ಸೋಲಿಸಿಬಿಡುವುದು ಮಾತ್ರ ಬದುಕಿನ ವಿಲಕ್ಷಣತೆಯನ್ನು, ಅನಿಶ್ಚಿತತೆಯನ್ನು ಘನವಾಗಿ ಧ್ವನಿಸುತ್ತದೆ. ಸ್ವಲ್ಪ ಉಚಾಯಿಸಿ ಹೇಳಬಹುದಾದರೆ, ಗಂಡಿನ ಮಿತಿಯನ್ನೂ ಇದು ಹೇಳಬಹುದೆ? ತುಸು ಕ್ರೌರ್ಯದಂತೆ ಇದು ಕಾಣಿಸುತ್ತದೆ ಎನ್ನುವುದರ ಅಂದಾಜಿದೆ ನನಗೆ. ಆದರೆ ಲಲಿತಾ ಸಿದ್ದಬಸವಯ್ಯನವರ ಲವಾಜಮೆ ಕವಿತೆಯನ್ನೊಮ್ಮೆ ನೆನಪಿಸಿಕೊಳ್ಳಿ, ರಾಗಿಯಲ್ಲಿನ ಮಣ್ಣು ಕಲ್ಲುಗಳನ್ನೂ ಅರಗಿಸಿಕೊಳ್ಳಬಲ್ಲ ಹೆಣ್ಣಿನ ಶಕ್ತಿಯನ್ನೂ ತುಸುವೇ ಹೆಚ್ಚು ಕಡಿಮೆಯಾದರೂ ಅರಗಿಸಿಕೊಳ್ಳಲಾಗದ ಗಂಡಿನ ಅಶಕ್ತಿಯನ್ನೂ ಆ ಕವಿತೆ ಹೇಳುತ್ತದೆಯಷ್ಟೇ. ಬದುಕಿನ ಬಿಕ್ಕಟ್ಟುಗಳಲ್ಲಾದರೂ ಅಷ್ಟೇ ಹೆಣ್ಣು ಎದುರಿಸುವಷ್ಟು ಸ್ಥೈರ್ಯದಿಂದ ಗಂಡು ಬದುಕಿನ ಸವಾಲುಗಳನ್ನು ಎದುರಿಸುವುದು ಕಷ್ಟ. + +ನನಗೆ ಪ್ರಿಯವಾದ ಇತರ ಕತೆಗಳೆಂದರೆ, ‘ಭೂಮಿಯ ಋಣ’, ’ತಿರುವು’ ಹಾಗೂ ’ಏಳು ಮಕ್ಕಳ ತಾಯಿ’ ’ನಮ್ಮೂರ ಗೊಲ್ಲಾಳ’ ಕತೆಯೂ ಒಳ್ಳೆಯ ಕತೆ. ಶತಮಾನಗಳಿಂದ ಮಾನವರನ್ನು ಪೊರೆದ ನಂಬಿಕೆಯೇ ಜೀವಕ್ಕೆ ಮುಳುವಾದಾಗ ಏಳುವ ಪ್ರಶ್ನೆ ಕೇವಲ ಅಂತಃಕರಣದ್ದು ಮತ್ತು ಭಾವುಕತೆಯದ್ದು ಮಾತ್ರವಲ್ಲ, ಅದು ಜೀವವನ್ನು ತೆಗೆಯುವ, ಜೀವನಗಳನ್ನೂ ತೆಗೆಯುವ ಸಾಧ್ಯತೆಯನ್ನೂ ಅದು ಧ್ವನಿಸುತ್ತದೆ. ಜಾತ್ರೆ ಎನ್ನುವುದು ಕೊನೆಗೂ ಸಾಮೂಹಿಕವಾದ ಶೋಷಣೆಯ ಒಂದು ಮಾದರಿಯಷ್ಟೇ. ಮಾನವೀಯವಾಗಬೇಕಾದ ಧರ್ಮವೇ ಅಮಾನವೀಯವಾದ ಎಲ್ಲ ವ್ಯವಸ್ಥೆಗಳ ಮೂಲವಾಗುವ ಮೂಲಕ ಮನುಷ್ಯರ ವ್ಯಕ್ತಿತ್ವಗಳನ್ನೇ ಅಮಾನ್ಯಗೊಳಿಸಿಬಿಡುವುದರ ಸ್ಪಷ್ಟ ಆಚರಣೆ ಇದು. ಪುರೋಹಿತಶಾಹಿಯು ತಾನೆಷ್ಟೇ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ್ದಾದರೂ ಬಹು ಸಂಖ್ಯಾತರನ್ನು, ಅಮಾಯಕರನ್ನು ತನ್ನ ಶೋಷಣೆಯ ಪರಿಧಿಯೊಳಗೆ ಸೇರಿಸಿಕೊಳ್ಳುವ, ಅವರನ್ನು ತನ್ನ ಕೈಗೊಂಬೆಯಂತೆ ಕುಣಿಸುವ ಎಲ್ಲದರ ಸಂಕೇತ ಜಾತ್ರೆ. ಯಾವುದು ನಿಜದಲ್ಲಿ ಸಾಂಸ್ಕೃತಿಕ ಆಚರಣೆಯಾಗಬಹುದೋ ಅದು ತನ್ನ ಆಶಯದಲ್ಲಿಯೇ ಇರುವ ಸ್ವಾರ್ಥ ಮತ್ತು ಪಟ್ಟಭದ್ರ ಗುಣಗಳಿಂದಾಗಿ ಅಮಾನವೀಯವಾಗುವುದನ್ನೇ ಸೂಚಿಸುತ್ತದೆ. ಇಲ್ಲಿ ಪ್ರಶ್ನೆ ಗೊಲ್ಲಾಳನ ಸಾವಿನ ಆಕಸ್ಮಿಕತೆಯದ್ದಲ್ಲ, ಬದಲಿಗೆ ಇದನ್ನೂ ಪಟ್ಟಭದ್ರರು ತಮ್ಮ ನಂಬಿಕೆಗೆ ಪೂರಕವಾಗಿಯೇ ಬಳಸಿಕೊಳ್ಳುವುದರಲ್ಲಿ ಪಡೆಯುವ ಯಶಸ್ಸಿನದ್ದು. ಮುಂದಿನ ವರ್ಷಗಳಲ್ಲಿ ಗೊಲ್ಲಾಳನ ಆಚರಣೆಯೂ ಸೇರುತ್ತದೆ ಎನ್ನುವುದು ಏನನ್ನು ಹೇಳುತ್ತದೆ? ಇನ್ನಷ್ಟು ಮತ್ತಷ್ಟು ಗೊಲ್ಲಾಳರು ಬರುತ್ತಲೇ ಇರಬೇಕೆಂದು. ಈ ಪಟ್ಟಿಯಲ್ಲಿ ತಪ್ಪಿಯೂ ಮೇಲ್ಜಾತಿಯವರು ಬರುವುದನ್ನು ಅದು ಒಪ್ಪುವುದಿಲ್ಲ. ತಳವರ್ಗದವರಾದರೂ ತಮ್ಮವರೊಬ್ಬರಿಗೆ ಸಿಕ್ಕ ಹುತಾತ್ಮ ಪಟ್ಟದಲ್ಲಿ ಬೀಗಿಯೇ ಬೀಗಿದ್ದು. + +(ಡಾ. ಎಂ.ಎಸ್. ಆಶಾದೇವಿ) + +ಭೂಮಿಯ ಋಣ ಕತೆಯಲ್ಲಿ ಮತ್ತೆ ಹಳಿ ತಪ್ಪಿದ ಬದುಕನ್ನ್ನು ಹಳಿಗೆ ತರುವ ಹೆಣ್ಣಿನ ಚಿತ್ರಣವೇ ಕಾಣಿಸುತ್ತದೆ. ಕಲಿತವನೆಂದು ಮದುವೆ ಮಾಡಿಕೊಂಡವನ ಸೋಮಾರಿತನವನ್ನು ಒಂದು ಹಂತದವರೆಗೆ ಮೌನವಾಗಿ ಸಹಿಸುವ ಸಕ್ಕೂಬಾಯಿ ನಿಧಾನವಾಗಿ ಸೂತ್ರಗಳನ್ನು ತನ್ನ ತೆಕ್ಕೆಗೆ ಎಳೆದುಕೊಳ್ಳುತ್ತಾಳೆ. ಮೈಬಗ್ಗಿಸಿ ದುಡಿದೇ ಗೊತ್ತಿಲ್ಲದವನನ್ನು ಮುಂಬೈನಂತಹ ಶಹರಿಗೆ ಕರೆದೊಯ್ಯುತ್ತಾಳೆ. ದುಡಿಮೆಯ ಮಹತ್ವವನ್ನು ಮಾತ್ರವಲ್ಲ ಅದರ ಸುಖವನ್ನೂ ಅವನಿಗೆ ತೋರಿಸುತ್ತಾಳೆ. ಆಕಸ್ಮಿಕ ದುರ್ಘಟನೆಯಲ್ಲಿ ಗಂಡನ ದೇಹ ಮನಸ್ಸುಗಳೆರಡೂ ಬಳಲಿದಾಗ ಮತ್ತೆ ಆತನನ್ನು ಬದುಕಿನ ಕಡೆಗೆ ತಿರುಗಿಸುತ್ತಾಳೆ. ತನ್ನ ಎಳೆಯ ಮಕ್ಕಳನ್ನು ಅತ್ತೆಯ ಬಳಿ ಬಿಟ್ಟಿರುವ ನೋವನ್ನು ನುಂಗಿಕೊಂಡು ತನ್ನಿಡೀ ಸಂಸಾರ ಘನತೆಯಿಂದ ಬದುಕಲು ಬೇಕಾದದ್ದೆಲ್ಲವನ್ನೂ ನಿರ್ವಂಚನೆಯಿಂದ ಮಾಡಿ ಅದರಲ್ಲಿ ಗೆಲ್ಲುತ್ತಾಳೆ. + +ತಿರುವ ಕತೆಯಲ್ಲಾದರೂ ಸುಮ ಮಾತ್ರವಲ್ಲ ಅವಳ ತಾಯಿ, ಅಜ್ಜಿಯರೂ ಅವಳಿಗೆ ಬೈಯ್ಯುತ್ತಲೆ ನೆರವಾಗುವ ಬಗೆಯಲ್ಲಿ ಪ್ರತಿರೋಧದ ಒಂದು ಮಾದರಿಯೇ ಹುಟ್ಟಿ ಬಿಡುತ್ತದೆ. ಮೇಲ್ನೋಟಕ್ಕೆ ಸುಮಾಳ ಆಯ್ಕೆಯ ಬದುಕಿನ ಸ್ವಾತಂತ್ರ‍್ಯವನ್ನು ವಿರೋಧಿಸಿದರೂ ಅವರು ಯಾರೂ ಸುಮಾಳ ಬದುಕು ಅಲ್ಲಿಗೆ ಮುಗಿಯಿತೆಂದು ತೀರ್ಮಾನಿಸುವುದಿಲ್ಲ. ಹೇಗಾದರೂ ಅವಳ ಬದುಕು ನೇರ್ಪುಗೊಳಿಸಲು ಅವಳ ಗೆಳತಿ ಕೊಟ್ಟ ಸಲಹೆಯನ್ನು ಒಪ್ಪಿ ಅವಳ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಕರಿಸುತ್ತಾರೆ. ಕೊನೆಗಾದರೂ ಅವಳ ಅಂತರ್ ಧರ್ಮೀಯ ಮದುವೆಯನ್ನೂ ಆ ಕುಟುಂಬದ ಹೆಣ್ಣು ಮಕ್ಕಳು ಜೀರ್ಣಿಸಿಕೊಳ್ಳುವಷ್ಟು ಬೇಗ ಗಂಡಸು ಜೀರ್ಣಿಸಿಕೊಳ್ಳುವುದಿಲ್ಲ. ಈ ತಿರುವನ್ನು ಕತೆಗಾರ್ತಿ ವ್ಯಕ್ತಿಗತ ಪಲ್ಲಟದಷ್ಟೇ ಸಾಮಜಿಕ ಪಲ್ಲಟದ್ದ್ದೂ ಹೌದೆನ್ನುವ ತೀವ್ರತೆಯಲ್ಲಿ ಮಂಡಿಸುತ್ತಾರೆ. ಆದ್ದರಿಂದಲೇ ಈ ಕತೆಗಳಿಗೆ ಪ್ರಸ್ತುತತೆ ತಾನೇ ತಾನಾಗಿ ಒದಗಿ ಬರುತ್ತದೆ. + +ಕೆಲವು ಕತೆಗಳು ತೀರಾ ಸರಳ ಹಾಗೂ ಸೂತ್ರಬದ್ಧ ಎನ್ನಿಸುತ್ತವೆ. ಇವುಗಳ ಕಡೆಗೆ ಕತೆಗಾರ್ತಿ ಹೆಚ್ಚಿನ ಗಮನ ಕೊಡುವುದು ಇವರ ಮುಂದಿನ ಸಾಹಿತ್ಯದ ಪ್ರಯಾಣದ ದೃಷ್ಟಿಯಿಂದ ತೀರಾ ಅಗತ್ಯ. ಶೋಭಾ ಅವರ ಶಕ್ತಿಯೆಂದರೆ ಅವರ ಸಮೃದ್ಧ ಜೀವನಾನುಭವ. ಆ ಜೀವನಾನುಭವಕ್ಕೆ ಶಕ್ತಿ ಬರಬೇಕಾದ್ದು ಅವರು ಬಿಗಿಯಾದ ಭಾಷಾ ಕಟ್ಟಡದಿಂದ ಮತ್ತು ಸೂತ್ರಬದ್ಧತೆಯಿಂದ ಹೊರಬರುವುದರಿಂದ. ಇದು ಸಲಹೆ, ವಿಮರ್ಶೆಯ ಜವಾಬ್ದಾರಿ ಎನ್ನುವ ದೃಷ್ಟಿಯಿಂದ ಹೇಳುತ್ತಿದ್ದೇನೆಯೇ ಹೊರತು, ಉಪದೇಶವೆಂದು ಖಂಡಿತಾ ಅಲ್ಲ. + + + +ಶೋಭಾ ಅವರಿಗೆ ಕಥಾ ಪ್ರಪಂಚದಲ್ಲಿ ಒಳ್ಳೆಯ ಸ್ವಾಗತ ಸಿಗಲಿ, ಈ ಶಕ್ತ ಕತೆಗಾರ್ತಿ ಕನ್ನಡಕ್ಕೆ ಅತ್ಯುತ್ತಮ ಕತೆಗಳನ್ನು ಕೊಡಲಿ ಎಂದು ಹೃತ್ಪೂರ್ವಕವಾಗಿ ಹಾರೈಸುತ್ತೇನೆ. ಕನ್ನಡಕ್ಕೆ ಒಳ್ಳೆಯ ಕತೆಗಳ ಮೂಲಕ ಪ್ರವೇಶ ಪಡೆಯುತ್ತಿರುವ ಈ ಸಮಾಜಮುಖಿ ಲೇಖಕಿಗೆ ಅಭಿನಂದನೆಗಳು ಹಾಗೂ ಸ್ವಾಗತ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_194.txt b/Kenda Sampige/article_194.txt new file mode 100644 index 0000000000000000000000000000000000000000..54880c08783bd786abcd01c71d572c1551863a0e --- /dev/null +++ b/Kenda Sampige/article_194.txt @@ -0,0 +1,35 @@ +byಕೆಂಡಸಂಪಿಗೆ|Sep 21, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು.ಬಿ. ಜನಾರ್ದನ ಭಟ್ ಹೊಸ ಕಾದಂಬರಿ “ಗಮ್ಯ”ದಿಂದ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Sep 19, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ.ಸೂರ್ಯಕೀರ್ತಿ ಬರೆದ “ಮೀನು ಕುಡಿದ ಕಡಲು” ಕವನ ಸಂಕಲನಕ್ಕೆ ಪ್ರೊ. ಪುರುಷೋತ್ತಮ ಬಿಳಿಮಲೆ ಬರೆದ ಮಾತುಗಳು + +byಕೆಂಡಸಂಪಿಗೆ|Sep 17, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ. ಎಂಟತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ.ನಟ ಮುಖ್ಯಮಂತ್ರಿ ಚಂದ್ರು ಬರೆದ “ರಂಗವನದ ಚಂದ್ರತಾರೆ” ಆತ್ಮಕಥನದ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Sep 10, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +‘ಆವರ್ತ’ ಈ ಬಗೆಯ ಆಕರ್ಷಕ ಶೈಲಿಯಲ್ಲಿದ್ದರೂ, ಇದೊಂದು ಸಾಂಕೇತಿಕ ಕಾದಂಬರಿ. ಮುಖ್ಯವಾಗಿ, ಮಾನವಾಂತರ್ಗತ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಪ್ರವೃತ್ತಿಗಳೇ ಇಲ್ಲಿ ಮಾನವರೂಪಿ ಪಾತ್ರಗಳಾಗಿ ಇಡೀ ಕಾದಂಬರಿಗೆ ಸಂತತ ಚಾಲನೆ ಕೊಡುತ್ತವೆ. ಆದರೆ ಇವುಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಚಿತ್ರಣ ಈ ಕಾದಂಬರಿಯ ಮೂಲಭೂತ ವಸ್ತು. ಪ್ರಸ್ತುತದಲ್ಲಿ ಪ್ರತೀಪನ ಬಾಳಿನಲ್ಲಿ ಈ ಆರು ಚಿತ್ರವೃತ್ತಿ ವಿಶೇಷಗಳೇ ಆರು ಮಂದಿ ಸ್ತ್ರೀಯರಾಗಿ ಪ್ರವೇಶಿಸಿ, ಒಬ್ಬೊಬ್ಬರೂ ಅವನಲ್ಲಿ ಒಂದೊಂದು ಭಾವವನ್ನು ಉದ್ದೀಪನಗೊಳಿಸುತ್ತಾರೆ.ಆಶಾ ರಘು ಬರೆದ “ಆವರ್ತ” ಕಾದಂಬರಿಯ ಕುರಿತು ಡಾ. ಸಾ.ಶಿ. ಮರುಳಯ್ಯನವರ ಬರಹ + +byಕೆಂಡಸಂಪಿಗೆ|Sep 1, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ಭರವಸೆ ಎಂತಹ ಹೋರಾಡುವ ಶಕ್ತಿ ತುಂಬುತ್ತದೆಯಂದರೆ ಫೇಸ್ಬುಕ್ಕಿನ ಒಂದು ಸಂದೇಶದಂತೆ ಎಷ್ಟೇ ಸೋತರೂ ಕುಸಿಯುವುದಿಲ್ಲ. ಹೆದರಿ ಓಡುವುದಿಲ್ಲ ಏಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ, ಸಾವಿರ ಬಾರಿ ಸೋತವನು ಈ ರೀತಿಯಾಗಿ ಸಕಾರಾತ್ಮಕ ಚಿಂತನೆಯ ಓಂಕಾರದ ದ್ಯೋತಕವಾಗಿರುವ ಕಾರಣದಿಂದ ಇನ್ನೇನು ಬದುಕು ಮುಗಿಯಿತು ಎಂದು. ಸುಳಿಗಾಳಿಗೆ ಸಿಕ್ಕು ತರೆಗೆಲೆಯಂತೆ ಕಷ್ಟದ ಕುಲುಮೆಯಲ್ಲಿ ಬೆಂದು ಬಸವಳಿದವರಿಗೆ ಫಿನಿಕ್ಸ್‌ನಂತೆ. ಆಕಾಶದೆತ್ತರಕೆ ಮೇಲೆರುವ ತಾಕತ್ತೆ ಭರವಸೆ.ಶಿವನಗೌಡ ಪೊಲೀಸ್ ಪಾಟೀಲ್ ಅವರ ಕವನ ಸಂಕಲನಕ್ಕೆ ಶರಣಬಸಪ್ಪ ಬಿಳೆಯಲಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Aug 29, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು.ವ್ಯಾಸರಾವ್‌ ನಿಂಜೂರ್‌ ಅವರ ಆತ್ಮಕಥನ “ಎಳೆದ ತೇರು” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ + +byಡಾ. ಸುಭಾಷ್ ಪಟ್ಟಾಜೆ|Aug 25, 2022|ಪುಸ್ತಕ ಸಂಪಿಗೆ| 0 Comments + +ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ.  ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದಂತೆ ಗೋಚರಿಸುತ್ತದೆ.  ಡಾ. ನಾ. ಮೊಗಸಾಲೆಯವರ ‘ಇದ್ದೂ ಇಲ್ಲದ್ದುʼ ಕಾದಂಬರಿಯ ಕುರಿತು ಡಾ. ಸುಭಾಷ್ ಪಟ್ಟಾಜೆ ಬರೆದ ಬರಹ ಇಲ್ಲಿದೆ. + +byಕೆಂಡಸಂಪಿಗೆ|Aug 25, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು.ಇತ್ತೀಚೆಗಷ್ಟೇ ಬಿಡುಗಡೆಯಾದ ಹೆಚ್.ಆರ್. ಸುಜಾತಾ ಅವರ ಕೃತಿ “ಮಣಿಬಾಲೆ” ಕೆಲವು ಪುಟಗಳು ನಿಮ್ಮ ಓದಿಗೆ + +byನಾದ ಮಣಿನಾಲ್ಕೂರು|Aug 20, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ.ಚನ್ನಬಸಪ್ಪ ಆಸ್ಪರಿಯವರ “ಸಂತೆಯೊಳಗಣ ಮೌನ” ಕವನ ಸಂಕಲನದ ಕುರಿತು ನಾದ ಮಣಿನಾಲ್ಕೂರು ಬರಹ \ No newline at end of file diff --git a/Kenda Sampige/article_195.txt b/Kenda Sampige/article_195.txt new file mode 100644 index 0000000000000000000000000000000000000000..074142798d0b1c2bdaa3831c80240578530ab874 --- /dev/null +++ b/Kenda Sampige/article_195.txt @@ -0,0 +1,19 @@ +ಮಿತ್ರಾ ವೆಂಕಟ್ರಾಜರ ಕಾದಂಬರಿ “ಪಾಚಿ ಕಟ್ಟಿದ ಪಾಗಾರ”ವು ಸುತ್ತಲೂ ಕಲ್ಲಿನ ಪಾಗಾರ ಹೊಂದಿರುವ ಸುಭದ್ರವಾದ ಕಟ್ಟೋಣದ ಒಂದು ಸುವ್ಯವಸ್ಥಿತ ಸಮೃದ್ಧತೆಯ ಮನೆಯೊಂದರಂತೆ, ಸ್ಪಷ್ಟವಾದ ಕಾಲದ ಚೌಕಟ್ಟಿನ ಪಾಗಾರ ಹೊಂದಿರುವ ಕಾದಂಬರಿ. ೧೯೨೦ರ ನೇತ್ರಾವತಿ ನದಿಯ ಭೀಕರ ನೆರೆಯ ಪ್ರಸ್ತಾಪ ಕಾದಂಬರಿಯ ಪ್ರಾರಂಭದಲ್ಲೇ ಬರುವಂತೆ ಮುಂದೆ ಎರಡನೇ ಮಹಾಯುದ್ಧದ ಸಂದರ್ಭದ ಬದುಕಿನ ಜಟಿಲ ಪರಿಸ್ಥಿತಿಗಳು, ಸ್ವಾತಂತ್ರ್ಯಕ್ಕಾಗಿ ಹೋರಾಟ ಹಾಗೂ ಸ್ವಾತಂತ್ರ್ಯ ಬಂದ ಪ್ರಾರಂಭದ ಜನರ ನಿರೀಕ್ಷೆ ಭರವಸೆಗಳು, ಮುಂದೆ ಆ ನಿರೀಕ್ಷೆ ಭರವಸೆಗಳು ಹುಸಿಯಾಗುವುದು, ಉಳ್ಳವರು ಇಲ್ಲದವರ ನಡುವಿನ ಆಳ ಕಂದರದ ಆಕ್ರೋಶ ಸೃಜಿಸಿದ ನಕ್ಸಲ್ ಸಂಘಟನೆಗಳು, ಸಮಾಜವಾದ, ಭೂ ಸುಧಾರಣಾ ಚಳುವಳಿ, ಮುಂದೆ ಚೀನಾದಿಂದ ಈಶಾನ್ಯ ಭಾರತದ ಆಕ್ರಮಣ, ನಂತರದಲ್ಲಿ ಎಪ್ಪತ್ತರ ದಶಕದವರೆಗೂ ಸ್ಪಷ್ಟ ಕಾಲ ನಿರ್ದೇಶನ ಕಾದಂಬರಿಯಲ್ಲಿದೆ. ಘಟನೆಗಳು, ಸನ್ನಿವೇಶಗಳು, ಪಾತ್ರಚಿತ್ರಣ, ಪಾತ್ರ ಪರಿಪೋಷಣೆ, ಸಂಭಾಷಣೆ, ಜೀವನಶೈಲಿ ಎಲ್ಲವುಗಳನ್ನೂ ಆಯಾ ಕಾಲಕ್ಕನುಗುಣವಾಗಿ ಲೇಖಕಿ ಸೂಕ್ಷ್ಮ ಕುಸುರಿಯ ನೇಯ್ಗೆಯಿಂದ ಕಲಾತ್ಮಕವಾಗಿ ನಿರ್ಮಿಸಿರುವ ಪರಿ ಓದುಗರನ್ನು ಕೈಯ್ಯಲ್ಲಿ ಹಿಡಿದ ಪುಸ್ತಕ ಕೆಳಗಿಡದಂತೆ ಸೆಳೆಯುತ್ತದೆ. + +(ಮಿತ್ರಾ ವೆಂಕಟ್ರಾಜ) + +ಕಾದಂಬರಿಯ ಘಟನೆಗಳ ಕಾಲಮಾನ, ಅದಕ್ಕನುಗುಣವಾಗಿ ಒಂದೊಂದೂ ಪಾತ್ರಗಳಲ್ಲಿ ಲೇಖಕಿ ಪರಕಾಯ ಪ್ರವೇಶ ಮಾಡಿದಂತೆ ಕಡೆದಿಟ್ಟ ಪಾತ್ರ ಚಿತ್ರಣವು ಓದುಗರ ಮನೋ ಭೂಮಿಕೆಯಲ್ಲೂ ಜೀವಂತವಾಗಿ ನೆಲೆಸಿ ಭಾವನೆಗಳೊಂದಿಗೆ ಸ್ಪಂದಿಸುತ್ತವೆ. ಮಳೆಗಾಲದಲ್ಲಿ ಪಾಚಿ ಕಟ್ಟಿಕೊಳ್ಳುವ ಮನೆಯ ಸುತ್ತಲಿನ ಕಲ್ಲಿನ ಪಾಗಾರವನ್ನು ಲೇಖಕಿ ಒಂದು ರೂಪಕದಂತೆ ಬಳಸಿಕೊಂಡಿದ್ದು ಪ್ರಮುಖವಾಗಿ ಮೂರು ಬಾರಿ ಕಾದಂಬರಿಯಲ್ಲಿ ಪಾಗಾರದ ಪ್ರಸ್ತಾಪ, ಅದರ ಪಾಚಿ ಕೂಡ ಅಷ್ಟೇ ಕಲಾತ್ಮಕವಾಗಿ ಮೂಡಿ ಬಂದಿದೆ. ಮನೋಹರ ಗ್ರಂಥಮಾಲೆಯ ಈ ಕೃತಿ ದ್ವಿತೀಯ ಮುದ್ರಣದ ಭಾಗ್ಯ ಕೂಡ ಕಂಡಿದೆಯಲ್ಲದೆ ಲೇಖಕಿಯ ಪತಿ ವೆಂಕಟ್ರಾಜರವರು ಇದನ್ನು “ದ ರ‍್ಯಾಪ್‌ಡ್ ಸ್ಪೇಸ್” ಎಂಬ ಶೀರ್ಷಿಕೆಯಲ್ಲಿ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. + +‘ದೊಡ್ಡಮನೆ’ ಎಂದೇ ಹೆಸರಾಗಿದ್ದ ಕೃಷ್ಣದೇವರಾಯರ ಕೆಮ್ಮಾಡಿ ಮನೆತನ ಊರಿನ ಪ್ರಮುಖ ವಹಿವಾಟುಗಳಲ್ಲಿ ಪ್ರಧಾನ ಪಾತ್ರ ವಹಿಸುತ್ತಿದ್ದ ಮನೆತನ. ಕೃಷ್ಣದೇವರಾಯರು ಲಕ್ಷ್ಮೀದೇವಮ್ಮನದು ಅನುರೂಪ ದಾಂಪತ್ಯ. ನ್ಯಾಯಪರತೆ ಸಾತ್ವಿಕ ಸ್ವಭಾವದ ರಾಯರು ಎಲ್ಲರ ಗೌರವಕ್ಕೆ ಪಾತ್ರರಾದವರು. ಇಂತಹವರ ಮಗ ಮಾಧವನದು ಸ್ವೇಚ್ಛಾಚಾರ ಅಧಿಕಾರಲಾಲಸೆ ಸರ್ವಾಧಿಕಾರಿ ಪ್ರವೃತ್ತಿ ಹಾಗೂ ತಾನು ನಡೆದದ್ದೇ ದಾರಿ ಎನ್ನುವ ಸ್ವಭಾವ. ಮಗನ ದುರ್ವರ್ತನೆಯಿಂದ ಘಾಸಿಗೊಂಡ ಮನಃಸ್ಥಿತಿಯ ರಾಯರು ಹಾಸಿಗೆ ಹಿಡಿದವರು ಅವಸಾನ ಹೊಂದುವುದು ಕಾದಂಬರಿಯ ಆರಂಭಲ್ಲೇ ಘಟಿಸಿದೆ. ಹೀಗಾಗಿ ಕಾದಂಬರಿಯಾದ್ಯಂತ ವಿಜೃಂಭಿಸುವವನು ವಿಶೃಂಖಲ ಮನೋವೃತ್ತಿಯ ಮಾಧವ. ಆದರೆ ಅವನಲ್ಲೂ ಎಲ್ಲೋ ಒಂದೆಡೆ ಸೂಕ್ಷ್ಮತೆ, ಮೃದುತ್ವ ಇದೆ ಎನ್ನುವುದು ಆತ ತನ್ನ ತಾಯಿಯನ್ನು ಗೌರವಿಸುವುದು, ತಮ್ಮನನ್ನು ಜೀವದಂತೆ ಪ್ರೀತಿಸುವುದು, ಅಸಹಾಯಕಿ ಪಾರಳ ನೆರವಿಗೆ ಒದಗಿ ಬರುವುದರಲ್ಲಿ ವ್ಯಕ್ತವಾಗುತ್ತದೆ. + +ಲಕ್ಷ್ಮೀದೇವಮ್ಮನ ಪಾತ್ರ ಕೂಡ ಕಾದಂಬರಿಯಾದ್ಯಂತ ಮೂಡಿಬಂದಿರುವ ಒಂದು ವಿಶಿಷ್ಟ ಪಾತ್ರ. ಮಗನ ಸ್ವೇಚ್ಛಾಚಾರದಿಂದಾಗಿ ಮನನೊಂದು ಪತಿ ಹಾಸಿಗೆ ಹಿಡಿದಾಗ ‘ಹರಕೆ ಹೇಳಿಕೋ’ ಎಂಬ ಸಲಹೆಗೆ ವಿಷಣ್ಣ ನಗುವಿನೊಂದಿಗೆ ಮಾತ್ರ ಪ್ರತಿಕ್ರಿಯಿಸುವ, ತಟಸ್ಥ ಧೋರಣೆಯಿಂದಾಗಿ ಪ್ರಾರ್ಥನೆಗೂ ನಾಲಗೆ ಏಳದಂತಾಗುವ ಅವರ ವೈಚಾರಿಕತೆ ಕಾದಂಬರಿಯಾದ್ಯಂತ ಹಲವು ಹಂತಗಳಲ್ಲಿ ವಿಕಸಿತವಾಗಿದೆ. ಬಾಲಕ ಕುಪ್ಪನಿಗೆ ಮನೆಯಲ್ಲಿ ಆಶ್ರಯ ನೀಡಿದಾಗ, ಬಾವಿಕಟ್ಟೆಗೆ ಸ್ನಾನಕ್ಕೆ ಹೋದ ಅವನು “ಬಾಮಿ ಮುಟ್ಟಲಕ್ಕ? ಯಾವ ಜಾತಿಯ ಏನ….?” ಎಂಬ ಪ್ರಶ್ನೆ ಎದುರಿಸಿದಾಗ ಲಕ್ಷ್ಮೀದೇವಿ “ಜಾತಿ ಮನುಷ್ಯ ಜಾತಿ. ನೀ ಸುಮ್ಮನೆ ಕುಳ್ಕ” ಎಂದು ಗದರಿ ಪ್ರಶ್ನೆ ಕೇಳಿದವರ ಬಾಯಿ ಮುಚ್ಚಿಸುತ್ತಾಳೆ. ಚೀಂಕ್ರನ ಮೇಲೆ ಮಾಧವನ ದೌರ್ಜನ್ಯ ಕಂಡು ಅವಳಿಗೆ ಪ್ರಾರಂಭವಾದ ಹೊಟ್ಟೆನೋವು ಕೊನೆಯುಸಿರಿರುವವರೆಗೂ ನಿಲ್ಲುವುದಿಲ್ಲ. ಮಗಳು ಶಂಕರಿ ಗಂಡನ ಮನೆಯಲ್ಲಿ ಕಷ್ಟ ಅನುಭವಿಸುವಾಗ ಪರದೇಶಗಳ ವಿಚ್ಛೇದನ, ತಮ್ಮಲ್ಲೇ ಒಕ್ಕಲು ಮಕ್ಕಳ ಕೂಡಿಕೆ ಬಗ್ಗೆ ಚಿಂತಿಸುವವಳು. ಕೆಮ್ಮಾಡಿ ಮನೆತನದಲ್ಲಿ ಹೆಂಗಸರಿಗೆ ಅದೆಂತಹ ದಿಗ್ಭಂದನದ ಬದುಕೆಂದರೆ ಅವರು ಮರಿ ಅರಮನೆಯಂತಹ ಮನೆಯಲ್ಲೇ ಒಳಭಾಗದಲ್ಲಿ ಮಾತ್ರ ಇರಬೇಕಾದವರು. ಹೊರಗೆ ಚಾವಡಿಗೂ ಪ್ರವೇಶವಿಲ್ಲದವರು. ಅಂತಹ ಪರಿಸರದಲ್ಲಿ ಲಕ್ಷ್ಮೀದೇವಿ ಹೊರಗೊಂದು ದೊಡ್ಡ ಜಗತ್ತಿದೆ, ಅಲ್ಲಿಯ ಆಗುಹೋಗುಗಳು ತಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತವೆ, ರಾಮಾಯಣ ಮಹಾಭಾರತಗಳು ಇನ್ನೂ ಜಗತ್ತಿನಲ್ಲಿ ನಡೆಯುತ್ತಲೇ ಇವೆ, ಬರೇ ಉಂಡು ತಿಂದು ದಿನ ಬೆಳಗ್ಗೆ ಮಾಡುವುದೇ ಬದುಕಲ್ಲ ಎಂಬ ಪಾಠಗಳನ್ನು ಕಲಿತವರು.ದೊಡ್ಡಮನೆ ಕೆಮ್ಮಾಡಿ ಮನೆತನದ ಕತೆಯೊಂದಿಗೆ ಹೆಣೆದುಕೊಂಡು ಬರುವ ಇನ್ನೊಂದು ಬದುಕಿನ ಕತೆ ಪಾರಳದು. ವಿಧವೆ ತಾಯಿ ತನ್ನದೇ ಹಕ್ಕಿನ ಮನೆಯಲ್ಲೇ ಆದರೂ ಅಸ್ಥಿರತೆಯ ಅಂಚಿನಲ್ಲಿದ್ದಂತೆ ಬದುಕು ದೂಡುವಾಗ, ಮಗಳು ಪಾರಳ ಹಿತಚಿಂತನೆಯ ಕುರಿತ ಒತ್ತಡದಿಂದಾಗಿ, ಅವಳ ಮಮತೆಯ ಸೆಲೆ ಗುಪ್ತಗಾಮಿನಿಯಾಗಿದ್ದು, ಬಾಹ್ಯದಲ್ಲಿ ಹೊಡೆತ ಬಡಿತ ಬೈಗುಳ ನಿಂದನೆಗಳ ಸುರಿಮಳೆಯಲ್ಲೇ ಬೆಳೆದು ದೊಡ್ಡವಳಾದವಳಾದರೂ, ಕೆಸುವಿನೆಲೆಯ ಮೇಲಿನ ನೀರ ಹನಿಯಂತೆ ಅವುಗಳನ್ನೆಲ್ಲಾ ಮನಸ್ಸಿಗೆ ಅಂಟಿಸಿಕೊಳ್ಳದೆ ಕೆಲಸ ಕಾರ್ಯ ಗುಣ ನಡತೆಯಲ್ಲಿ ಅಪರಂಜಿಯಂತೆ ರೂಪುಗೊಂಡವಳು, ಪಾರ. ಶಾಲಾ ಮಾಸ್ತರ ಗೋಪಾಲನ ಪತ್ನಿಯಾದಳು. ದೇಶದ ಸ್ವಾತಂತ್ರ್ಯ, ಸ್ವಾತಂತ್ರ್ಯಾನಂತರದ ಸುದಿನಗಳು, ಜಾತಿರಹಿತ ವರ್ಗರಹಿತ ಸಮಾಜದ ಬಗ್ಗೆ ಕನಸು ಕಾಣುವ ಗೆಳೆಯ ಸದಾನಂದನ ಹೋರಾಟದ ಬದುಕಿಗೆ ಒತ್ತಾಸೆಯಾಗಿರುವವನು ಗೋಪಾಲ. ವಿದ್ಯಾಭ್ಯಾಸ, ಬಡತನ ನಿರ್ಮೂಲನ, ಅನಾಥಾಶ್ರಮ ಎಂದು ತಾನು ದೇಶ ಕಟ್ಟುವ ಕೆಲಸದಲ್ಲಿ ತೊಡಗಬೇಕೆಂಬುವ ಸದಾನಂದ, ತಾನು ಮದುವೆಯಾಗದೆ ತನ್ನ ಪಾಲಿನ ಆಸ್ತಿಯನ್ನು ಅನಾಥಾಶ್ರಮಕ್ಕಾಗಿ ವಿನಿಯೋಗಿಸಿದ್ದವ. ಗೆಳೆಯನ ಈ ಕ್ರಿಯಾಶೀಲತೆಗೆ ಸ್ಪಂದಿಸುವ ಗೋಪಾಲ ಪಾರಳನ್ನೂ ತನ್ನ ಕನಸುಗಳಲ್ಲಿ ಸಹಭಾಗಿಯಾಗಿಸುತ್ತಾನೆ. ಹತ್ತು ವರ್ಷಗಳಲ್ಲಿ ನಾಲ್ಕು ಮಕ್ಕಳ ತಾಯಿಯಾಗುತ್ತಾಳೆ ಪಾರ. ಗೋಪಾಲ ಹಾವು ಕಡಿತದಿಂದ ಅಸುನೀಗಿದಾಗ ಅಕ್ಷರಶಃ ದಿಕ್ಕಿಲ್ಲದವಳಾಗುತ್ತಾಳೆ. ಮೂವರು ಮಕ್ಕಳನ್ನು ಸದಾನಂದನ ಅನಾಥಾಶ್ರಮಕ್ಕೆ ಸೇರಿಸಿ ಒಬ್ಬ ಮಗನೊಂದಿಗೆ ಲಕ್ಷೀ ದೇವಮ್ಮನ ಆತ್ಮಸಖಿಯಂತೆ ನೆಲೆಗೊಳ್ಳುವ ಪಾರಳ ಕರ್ತವ್ಯಪರತೆ, ಕಾರ್ಯಕ್ಷಮತೆ, ವಿವೇಚನಾಮಯ ವ್ಯಕ್ತಿತ್ವ ಕಾದಂಬರಿಯಾದ್ಯಂತ ರೂಪುಗೊಂಡಿದೆ. + +ಕೆಮ್ಮಾಡಿ ಮನೆತನದ ಮಾಧವನದು ವಿಕ್ಷಿಪ್ತ ವ್ಯಕ್ತಿತ್ವವಾದಂತೆ ಅದರ ಪ್ರಭಾವದಿಂದಾಗಿಯೋ, ಅವನ ಮಿತಿ ಮೀರಿದ ಮಮತೆಯಿಂದಾಗಿಯೋ ಮತ್ತೋರ್ವ ವಿಕ್ಷಿಪ್ತ ವ್ಯಕ್ತಿಯಾಗಿ ರೂಪುಗೊಂಡವನು ಅವನ ತಮ್ಮ ಸೀತಾರಾಮ. ಇವನ ಪತ್ನಿಯಾಗಿ ಬಂದ ಕಮಲಿನಿಯು ಹಲವು ರೀತಿಯ ಭ್ರಮ ನಿರಸನಕ್ಕೊಳಪಡಬೇಕಾಗುತ್ತದೆ. ಕಮಲಿನಿಯಲ್ಲಿ ಸುಪ್ತವಾಗಿದ್ದ ದಿಟ್ಟತನ ಧೈರ್ಯ ಮೆಲ್ಲನೆ ಪ್ರಕಾಶಮಾನವಾಗುತ್ತಿದೆ ಎಂದು ಲೇಖಕಿ ಒಂದೆಡೆ ಹೇಳಿರುವುದು ಓದುಗರಲ್ಲಿ ಕಮಲಿನಿಯ ಕುರಿತು ಕೌತುಕದ ನಿರೀಕ್ಷೆ ಮೂಡಿಸುತ್ತದಾದರೂ, ಮುಂದೆ ಪತಿಯು ಮಾಧವನ ಸಾವಿನ ನಂತರ ಚೈತನ್ಯಶೀಲತೆಯನ್ನೇ ಕಳೆದುಕೊಂಡವನಂತಾದಾಗ ಮನೆತನ ನಿರ್ವಹಣೆಯ ಹೊಣೆಗಾರಿಕೆಗೆ ಕಮಲಿನಿಯು ಭುಜ ಕೊಡುವುದು ಪರಿಸ್ಥಿತಿಯ ಅನಿವಾರ್ಯತೆಯಿಂದಾಗಿ ಎಂಬಂತೆ ಚಿತ್ರಿತವಾಗಿದ್ದು, ಅವಳ ಅಂತರಂಗದ ಸುಪ್ತ ಶಕ್ತಿಯ ಅನಾವರಣದ ಸನ್ನಿವೇಶವು ನಿರೀಕ್ಷೆಯಾಗಿಯೇ ಉಳಿಯಿತೇನೋ ಎನಿಸುತ್ತದಾದರೂ, ಅವಳ ಕರ್ತವ್ಯ ಶ್ರದ್ಧೆ ಓದುಗರ ಮನ ಮಿಡಿಯುತ್ತದೆ. + +ಭೂಮಾಲಿಕರು ತಮ್ಮ ಒಕ್ಕಲುಗಳು, ಊಳಿಗದವರನ್ನು ಹೀನಾಯವಾಗಿ ನಡೆಸಿಕೊಳ್ಳುವ ರೀತಿ, ಸಮಾಜದ ವರ್ಗಗಳು, ಸಮಾನತೆಯು ಒಂದು ಆದರ್ಶವಾಗಿರುವ ಸಮಾಜದ ನಿರ್ಮಾಣಕ್ಕಾಗಿ ಮಾಲಿಕರ ವರ್ಗವೇ ನಾಶವಾಗಬೇಕಾದ ಅನಿವಾರ್ಯತೆ- ಇದು ಸಾಧ್ಯವಾಗಲು ಕ್ರಾಂತಿಯೇ ಆಗಬೇಕಾಗಿರುವುದು ಅನಿವಾರ್ಯ ಎಂಬಂತಹ ವಿಚಾರಗಳತ್ತ ಒಲವು ಬೆಳೆಸಿಕೊಂಡ ಯುವಜನತೆಯು ಕೇರಳದ ಕುಟ್ಟಿಯ ನಾಯಕತ್ವದ ಕ್ರಾಂತಿಕೂಟದೆಡೆ ಆಕರ್ಷಿತರಾಗುತ್ತಾರೆ. ಕೇರಳದ ಸೆರಗಿನ ಈ ಭಾಗದಲ್ಲಿ ನಂಬೂದರಿಪಾದರ ಕಮ್ಯುನಿಸ್ಟ್ ಸರ್ಕಾರದ ಪ್ರಭಾವ ನಿಚ್ಚಳವಾಗಿತ್ತು. ಕ್ರಾಂತಿಯನ್ನು ನಡೆಸುವ ನಕ್ಸಲ್ ಚಟುವಟಿಕೆಗಳು, ‘ಉಳುವವನಿಗೇ ಭೂಮಿ’ ಎಂಬ ಶ್ರಮಿಕರ ಪರವಾದ ಧೋರಣೆಗಳು, ಭೂ ಹಿಡುವಳಿ ಕಾನೂನು, ಸಮಾನತೆಯ ಆಶಯದ ಸಮಾಜವಾದಿ ಸಿದ್ಧಾಂತ, ಸ್ವಾತಂತ್ರ್ಯಾನಂತರದ ಭ್ರಮ ನಿರಸನ ಎಂದು ಲೇಖಕಿ ಸಾಮಾಜಿಕ ಚಟುವಟಿಕೆಗಳು, ರಾಜಕೀಯ ತಲ್ಲಣಗಳು ಜನಜೀವನದ ಮೇಲೆ ಬೀರಿದ ಪ್ರಭಾವವನ್ನು ಕಾದಂಬರಿಯ ಹಂದರದಲ್ಲಿ ಸಮರ್ಥವಾಗಿ ಪ್ರತಿಪಾದಿಸಿದ್ದಾರೆ. + + + +ಕಾದಂಬರಿಯಲ್ಲಿ ತನ್ನ ಘಟನಾವಳಿಗಳ ರಂಗಸ್ಥಳವಾದ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ, ಪಾಣೆ ಮಂಗಳೂರಿನ ಕಡೆಯ ಪ್ರಾದೇಶಿಕ ಭಾಷೆಯನ್ನು ಸಾದ್ಯಂತವಾಗಿ ಬಳಸಲಾಗಿದೆ. ಕೊನೆಯಲ್ಲಿ ಅರ್ಥದ ಪಟ್ಟಿ ಕೂಡ ಇದೆ. ಕ್ವಚಿತ್ತಾಗಿ ತುಳುವಿನ ಬಳಕೆಯೂ ಇದೆ. ಒಂದು ಮನೆತನದ ಕಥೆಯೊಂದಿಗೆ ಒಂದು ಪ್ರದೇಶದ ನಿರ್ದಿಷ್ಟ ಕಾಲಮಾನದ ಜೀವನ ಶೈಲಿ, ಪ್ರಾದೇಶಿಕ ವಿವರಗಳ, ನೈಜ ಚಿತ್ರಣದ, ಚಿತ್ರಕ ಶಕ್ತಿಯಿಂದ ಸ್ಫುಟವಾಗಿ ರೂಪಿಸಿದ ಪಾತ್ರಗಳ, ಸಂಯಮಪೂರ್ಣ ನಿರೂಪಣೆಯ “ಪಾಚಿಗಟ್ಟಿದ ಪಾಗಾರ” ಕಾದಂಬರಿ ಓದುಗರ ಮನದಲ್ಲಿ ಬುದ್ಧಿ ಭಾವಗಳಿಗೆ ಮೀಟುಗೋಲು ಹಾಕುವ ಸತ್ವಪೂರ್ಣ ಕಾದಂಬರಿ. + +ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_196.txt b/Kenda Sampige/article_196.txt new file mode 100644 index 0000000000000000000000000000000000000000..22c7b33e226cdafc9914a87ea665aa122f84eb24 --- /dev/null +++ b/Kenda Sampige/article_196.txt @@ -0,0 +1,63 @@ + + +ಒಂದು ಭಾಷೆಯ ಜನ ಮತ್ತೊಂದು ಭಾಷೆಯ ಜನರೊಂದಿಗೆ ಅನಾಯಸವಾಗಿ ಬದುಕನ್ನು ಕಟ್ಟಿಕೊಂಡು ಬಾಳುವುದೆಂದರೆ ಇರುಸುಮುರುಸಾಗುವುದು. ಆದರೂ ಬದುಕಿ ತೋರಿಸಿದವರಿದ್ದಾರೆ. ಅಂತವರ ಸಾಲಿನಲ್ಲಿ ವ್ಯಾಸರಾಯ ಬಲ್ಲಾಳರೂ ಒಬ್ಬರು. ಮುಂಬೈಗೆ ಉದ್ಯೋಗ ಅರಸಿಕೊಂಡು ಹೋಗಿ, ನೆಲಸಿ ಅಲ್ಲಿ ಜನರೊಂದಿಗೆ ಬೆರೆತು ಮುಂಬೈ ಕನ್ನಡಿಗರೆಂದು ಕರೆಯಿಸಿಕೊಂಡಿದ್ದಾರೆ. ಮುಂಬೈಯಲ್ಲಿದ್ದರೂ ಕನ್ನಡದ ಸಂಸ್ಕೃತಿ, ಸಂಸ್ಕಾರ, ಭಾಷೆ, ಆತ್ಮೀಯತೆಯನ್ನು ಬಿಡದೇ ಅವುಗಳನ್ನು ತಮ್ಮ ಬರವಣಿಗೆಯಲ್ಲಿ ಮೂಡಿಸುತ್ತಾ ಬಂದಿದ್ದರು. ಹೀಗೆ ಮುಂಬೈಯಲ್ಲಿರುವಷ್ಟು ಐದು ದಶಕಗಳ ಕಾಲ ಕನ್ನಡ ಸಾಹಿತ್ಯದ ಕೃಷಿಯ ಜೊತೆಜೊತೆಗೆ ವೃತ್ತಿಯನ್ನೂ ನಿಭಾಯಿಸಿಕೊಂಡು ಬಂದರು. + +1958ರಲ್ಲಿ ಧಾರವಾಡದ ದ.ಬಾ. ಕುಲಕರ್ಣಿಯವರು ಲಲಿತ ಸಾಹಿತ್ಯ ಮಾಲೆಯ ಮೂಲಕ ‘ಸಂಪಿಗೆಯಹೂ’ ಎಂಬ ಕಥಾಸಂಕಲನ ಪ್ರಕಟಿಸಿದ್ದಾರೆ. ಇದರಲ್ಲಿ ಆರು ಕಥೆಗಳಿವೆ. ಕೊನೆಯ ಕಥೆಯೇ ‘ಅವಿವಾಹಿತೆ’ಯಾಗಿದೆ. + +ನಗರದ ಸಂಕೀರ್ಣತೆ ಮನುಷ್ಯನ ಮಾನಸಿಕ ಸಂರಚನೆಯ ಮೇಲೆ ಮಾಡುತ್ತಿರುವ ನಿರಂತರ ಪ್ರಭಾವ ಜೀವನ ಸ್ಥಿತ್ಯಂತರಕ್ಕೆ ಕಾರಣವಾಗಿರುತ್ತದೆ. ಮನುಷ್ಯನ ಆಂತರ್ಯದಲ್ಲಿರುವ ಅಂತಃಕರಣದ ಅಂತರ್ಜಲವನ್ನು ಜೀವನದಿಯಾಗಿ ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಬಲ್ಲಾಳರ ಕಥಾಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸುವ ಅಂಶ. ವ್ಯಕ್ತಿಯ ಭಾವನೆಗಳು ಸಂಸಾರದ ಮೇಲೂ, ಸಂಸಾರದ ಒತ್ತಡಗಳು ವ್ಯಕ್ತಿಯ ಮೇಲೂ ಪ್ರಭಾವ ಬೀರುತ್ತವೆ. ಔದ್ಯೋಗೀಕರಣ ಮತ್ತು ನಗರೀಕರಣದ ಹಲವು ಸಮಸ್ಯೆಗಳಿಂದ ಮನಷ್ಯನಲ್ಲಿ ವಿಚಾರಶೂನ್ಯ ಆವರಿಸಿಕೊಳ್ಳಬಹುದು. ಇದನ್ನು ಮುಂಬೈ ಪರಿಸರದ ಹಿನ್ನೆಲೆಯಲ್ಲಿ ಬಲ್ಲಾಳರು ವಿವರಿಸಿದ್ದಾರೆ. + +ಭಾರತೀಯ ಸ್ತ್ರೀಯ ಬದುಕು ವಿಶಿಷ್ಟವಾದುದು. ಎಷ್ಟೇ ಆಧುನಿಕತೆಗೆ ಮುಖ ಮಾಡಿದ್ದರೂ ಪರಂಪರೆ ಅಥವಾ ಸಂಪ್ರದಾಯದ ಚೌಕಟ್ಟನ್ನು ಸಂಪೂರ್ಣವಾಗಿ ಭೇದಿಸಲು ಇನ್ನೂ ಸಾಧ್ಯವಾಗಿಲ್ಲ. ಪುರುಷನಿಗೆ  ದಕ್ಕುವ ಮತ್ತು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯದಲ್ಲಿ ಓದು, ಉದ್ಯೋಗ, ವಿವಾಹ, ಆಸ್ತಿ, ಅಧಿಕಾರ ಮೊದಲಾದುವುಗಳು ಇವೆ. ಅದೇರೀತಿ ಸ್ತ್ರೀಗೆ ಬೇಕಾದ ಮುಕ್ತವಾದ ವಾತಾವರಣ ಹಾಗೂ ಅವಕಾಶಗಳ ಆಯ್ಕೆ ಒಂದು ಸವಾಲಿನ ಪ್ರಶ್ನೆಯಾಗಿರುತ್ತದೆ. ತನ್ನ ಅಸ್ತಿತ್ವವನ್ನು ಸ್ಥಾಪಿಸುವ ಛಲ ಅವಳಲ್ಲಿ ಜಾಗೃತಗೊಂಡಿದ್ದರೂ ಕೆಲವು ಕಟ್ಟಳೆಗಳಿಂದ ಹೆಣಗಾಡಬೇಕಾಗುತ್ತದೆ. ಕುಟುಂಬ ಪ್ರಧಾನವಾದ ನೆಲೆಯಲ್ಲಿ ಸ್ತ್ರೀ ಪಾತ್ರಗಳನ್ನು ಚಿತ್ರಿಸಿರುವ ಬಲ್ಲಾಳರು ಅವಳ ಬದುಕಿನ ಸೂಕ್ಷ್ಮತೆಗಳನ್ನು ಗುರುತಿಸಲು ಪ್ರಯತ್ನಿಸಿದ್ದಾರೆ. ಸ್ತ್ರೀಯ ಬದುಕಿನ ಹೋರಾಟ ಮತ್ತು ಸಹಾನುಭೂತಿ ಈ ಎರಡೂ ಒಂದು ನಾಣ್ಯದ ಮುಖಗಳಾಗಿವೆ. ಈ ಕಥೆಯಲ್ಲಿ ವೈಚಾರಿಕತೆಯ ಆಶಯಕ್ಕಿಂತಲೂ ಭಾವನಾವಿಹಾರವೇ ಗಮನಾರ್ಹವಾಗಿದೆ. + + + + + + + +ನಗರದ ಸಂಕೀರ್ಣತೆ ಮನುಷ್ಯನ ಮಾನಸಿಕ ಸಂರಚನೆಯ ಮೇಲೆ ಮಾಡುತ್ತಿರುವ ನಿರಂತರ ಪ್ರಭಾವ ಜೀವನ ಸ್ಥಿತ್ಯಂತರಕ್ಕೆ ಕಾರಣವಾಗಿರುತ್ತದೆ. ಮನುಷ್ಯನ ಆಂತರ್ಯದಲ್ಲಿರುವ ಅಂತಃಕರಣದ ಅಂತರ್ಜಲವನ್ನು ಜೀವನದಿಯಾಗಿ ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಬಲ್ಲಾಳರ ಕಥಾಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸುವ ಅಂಶ. ವ್ಯಕ್ತಿಯ ಭಾವನೆಗಳು ಸಂಸಾರದ ಮೇಲೂ, ಸಂಸಾರದ ಒತ್ತಡಗಳು ವ್ಯಕ್ತಿಯ ಮೇಲೂ ಪ್ರಭಾವ ಬೀರುತ್ತವೆ. ಔದ್ಯೋಗೀಕರಣ ಮತ್ತು ನಗರೀಕರಣದ ಹಲವು ಸಮಸ್ಯೆಗಳಿಂದ ಮನಷ್ಯನಲ್ಲಿ ವಿಚಾರಶೂನ್ಯ ಆವರಿಸಿಕೊಳ್ಳಬಹುದು. ಇದನ್ನು ಮುಂಬೈ ಪರಿಸರದ ಹಿನ್ನೆಲೆಯಲ್ಲಿ ಬಲ್ಲಾಳರು ವಿವರಿಸಿದ್ದಾರೆ. + + + +ಈ ಅಂಶಗಳ ಗಮನದಲ್ಲಿಟ್ಟುಕೊಂಡಂತೆಯೇ ಕಥೆಯ ಆರಂಭದಲ್ಲಿ ನಿರುಪಮ ಮುಂಬೈಯಿಯ ಕಂಪನಿಯೊಂದರಲ್ಲಿ ಉದ್ಯೋಗ ಮುಗಿಸಿಕೊಂಡು ವಾಪಾಸು ಮನೆಗೆ ಬರುವ ಸನ್ನಿವೇಶ ಬರುತ್ತದೆ. ನಿತ್ಯದಂತೆ ಬೆಳಿಗ್ಗೆ ಮತ್ತು ಸಂಜೆ ಬಸ್ ಮೂಲಕ ಪ್ರಯಾಣ ಮಾಡುವುದು, ಪ್ರಯಾಣಿರ ಮಧ್ಯೆ ಅಥವಾ ಆ ನೂಕು ನುಗ್ಗಲಿನಲ್ಲಿ ಸಿಕ್ಕಿಹಾಕಿಕೊಂಡು ಮನೆ ಸೇರುವುದು. ಮನೆಗೆ ಬಂದ ತಕ್ಷಣ ಯಥಾರೀತಿ ಮನೆಯ ಕೆಲಸಕಾರ್ಯಗಳಲ್ಲಿ ಭಾಗಿಯಾಗುವುದು, ತನ್ನ ಅಣ್ಣ ಅತ್ತಿಗೆಗೆ ಸಹಕರಿಸುವುದು, ಅವರ ಮಗು ಗೋಪಿಯನ್ನು ಆಡಿಸುವುದು ಹಾಗೂ ಸಮಾಧಾನಪಡಿಸುವುದು. ಗೋಪಿಯೂ ಸಹ ತನ್ನ ತಂದೆ ತಾಯಿಗಿಂತ ನಿರುಪಮಳನ್ನೇ ಹೆಚ್ಚಿನ ರೀತಿಯಲ್ಲಿ ಹಚ್ಚಿಕೊಂಡಿರುವುದುಂಟು. ಅತ್ಯಂತ ಪ್ರೀತಿಯಿಂದ ತನ್ನ ಬೇಸರಿಕೆಯನ್ನು ಮರೆತು ಮಗುವಿನ ಆಗು-ಹೋಗುಗಳನ್ನು ನಿರುಪಮ ಚೆನ್ನಾಗಿ ನಿಭಾಯಿಸುತ್ತಿದ್ದಳು. ಇದು ಅವಳಿಗೆ ನಿತ್ಯವೂ ಸಹಜ ಕ್ರಿಯೆಯಾಗಿತ್ತು. ಈ ಸಂದರ್ಭದಲ್ಲಿ ತನಗೆ ಇನ್ನೂ ಮದುವೆ ಆಗಿಲ್ಲವೆಂಬ ಯೋಚನೆ ಮನದಲ್ಲಡಗಿತ್ತು. ಅವಳ ಅಂತರಂಗದ ನಿರ್ಮಲ ಮನಸ್ಸು ಅವಳ ಸ್ನೇಹಿತೆ ಮೇರಿಡೇಸಾಳಿಗೆ ಮಾತ್ರ ಅರ್ಥವಾಗಿತ್ತು. ಹಾಗಾಗಿ ಅನೇಕಬಾರಿ ಈ ವಿಷಯದ ಬಗೆಗೆ ಸಮಾಧಾನ ಪಡಿಸುತ್ತಿದ್ದಳು. + +ನಿರುಪಮ ತನ್ನ ಕೊಠಡಿಯಲ್ಲಿದ್ದ ತನ್ನದೇ ಭಾವಚಿತ್ರವನ್ನು ಆಗಾಗ ನೋಡುತ್ತಾ ಖುಷಿಪಡುತ್ತಿದ್ದಳು. ಏಕೆಂದರೆ ಮುಖದಲ್ಲಿದ್ದ ತೊನ್ನಿನ ಕಲೆಗಳನ್ನು ತನ್ನ ಭಾವಚಿತ್ರದಲ್ಲಿ ತಿದ್ದಿದಂತೆ ಮಾಯವಾಗಿದ್ದವು. ತಾನೂ ಸಹ ಆ ಭಾವಚಿತ್ರದಂತೆ ಸುಂದರವಾಗಿ ತಿದ್ದಿತೀಡಿದಂತೆ ಕಾಣಲ್ಪಟ್ಟಿದ್ದರೆ…  ʻರೆʼ…ಗಳಷ್ಟೇ ಅವಳ ಮನದಲ್ಲಿ ಮೊಳಗುತ್ತಿದ್ದವು. ಒಂದು ವೇಳೆ ಈ ಕಲೆಗಳಿಲ್ಲದಿದ್ದರೆ ಈಗಾಗಲೇ ಡಾಕ್ಟರೋ, ಇಂಜಿನೀಯರೋ ಅವರೊಂದಿಗೆ ಮದುವೆ ನೆರವೇರಬಹುದಾಗಿತ್ತು. ನಿರುಪಮಳ ವಿವಾಹ ಕುರಿತಾಗಿ ಅವಳ ತಂದೆ ಆಗಾಗ ಹಳ್ಳಿಯಿಂದ ಪ್ರಭಾಕರನಿಗೆ ಪತ್ರ ಕುಶಲೋಪಚಾರದ ಬಗೆಗೆ ಬರೆಯುತ್ತಾ, ನಿರುಪಮಳ ಮದುವೆ ವಿಚಾರ ಮಾಡಿ ‘ಗಂಡು’ ನೋಡಿದೆಯಾ? ಎಂದು ಕೇಳುತ್ತಿದ್ದರು. ಎಷ್ಟಾದರೂ ಹೆತ್ತ ಕರುಳಲ್ಲವೆ!! + +ನಿರುಪಮೆಗೆ ವಿವಾಹವೆಂಬುದು ದಿನದಿನಕ್ಕೂ ಕನಸಿನ ಮಾತಾಗಿತ್ತು. ಇದನ್ನು ಅರಿತ ಅವಳಣ್ಣ ‘ನಿರುಪಮೆಯ ಮದುವೆ ಗಣಪತಿ ಮದುವೆಯೇ’ ಎಂದು ತಮಾಷೆ ಮಾಡುತ್ತಿದ್ದುದುಂಟು. ಅದು ಅವಳಿಗೆ ಅರಗಿಸಿಕೊಳ್ಳಲಾಗುತ್ತಿರಲಿಲ್ಲ. ತನ್ನ ಅಣ್ಣ ಪಟ್ಟಿರುವ ಸುಖ ನನಗೂ ಬೇಡವೆ! ಎಂಬ ಲೆಕ್ಕಾಚಾರ ನಿರುಪಮಳ ಮನದಲ್ಲಿ ಮೂಡಿ ಮರೆಯಾಗುತ್ತಿತ್ತು. ಕೆಲವೊಮ್ಮೆ ಹೆಣ್ಣಿನ ಮನಸ್ಸನ್ನು ಹೆಣ್ಣೇ ಅರಿಯಬಲ್ಲಳೆಂಬುದನ್ನು ಮೇಲೆ ತಿಳಿಸಿದಂತೆಯೇ ಅವಳಣ್ಣ ‘ನಿರುಪಮಳ ಮದುವೆ ಕನಸಾಗಬಹುದೆ?ʼ ಎಂದು ಹೇಳಿದಾಗ ಅವನ ಹೆಂಡತಿ ಪದ್ಮ ‘ಎಂಥ ಹುಚ್ಚು ಮಾತಾಡುತ್ತಿದ್ದೀರಿ? ಆಕೆಗೂ ಗಂಡನೊಬ್ಬನನ್ನು ಆ ಬ್ರಹ್ಮ ಸೃಷ್ಟಿಸಿರುತ್ತಾನೆ. ತೊನ್ನಿನ ಕಲೆಯಿರುವವರೆಲ್ಲ ಮದುವೆಯಾಗಬಾರದೇನು?ʼ ಎಂದು ಪ್ರಶ್ನಿಸುತ್ತಾಳೆ. ಮದುವೆಯಾಗಿ ಬಂದ ಅಣ್ಣನ ಹೆಂಡತಿಗೆ ನಿರುಪಮಳ ಮೇಲೆ ಎಲ್ಲಿಲ್ಲದ ಸ್ನೇಹ. ಮದುವೆಯಾಗಿ ಹತ್ತುವರ್ಷಗಳಾಗಿದ್ದರೂ ಒಂದು ದಿನವೂ ನಿರುಪಮಳಿಗೆ ಕೆಟ್ಟ ಮಾತಾಡಿರಲಿಲ್ಲ. ತನಗಿಂತ ಒಂದು ವರ್ಷ ಕಿರಿಯಳಾಗಿದ್ದ ನಿರುಪಮಳಿಗೆ ಧ್ವನಿ ಎತ್ತರಿಸಿ ಏನೂ ಹೇಳದೇ ಕೇಳದೇ ಇರುತ್ತಿದ್ದಳು. ಅವರಿಬ್ಬರಲ್ಲಿ ಹೊಂದಾಣಿಕೆ ಸಹಜವಾಗಿತ್ತು. + + + +ಸಾಮಾನ್ಯವಾಗಿ ತಂದೆ ತೀರಿಕೊಂಡ ಒಂದು ವರ್ಷದೊಳಗೆ ಮನೆಯಲ್ಲಿ ಶುಭಕಾರ್ಯ (ವಿವಾಹ) ನಡೆಯಬೇಕೆಂಬ ನಂಬಿಕೆಯಿದೆ. ಇಲ್ಲದಿದ್ದರೆ ಮೂರು ವರ್ಷ ಕಳೆದ ಮೇಲೆಯೇ. ಅದೇರೀತಿಯಾಗಿ ಬಲ್ಲಾಳರು ಈ ಸನ್ನಿವೇಶವನ್ನು ಕಥೆಯಲ್ಲಿ ತಂದು ನಿರುಪಮಳ ಅಣ್ಣ ಮನೆಯ ಹಿರಿಯವನಾಗಿ ತನ್ನ ತಂಗಿಯ ಮದುವೆಯನ್ನು ಮೂರುವರ್ಷದ ನಂತರ ಮಾಡಲು ಮುಂದಾಗಿರುತ್ತಾನೆ. ತನ್ನ ಹೆಂಡತಿಗೆ ಸದಾ ಮನೆ ಕೆಲಸದಲ್ಲಿ ನೆರವಿಗೆ ಬರುವಂತೆ ತನ್ನ ತಂಗಿ ಮನೆಯಲ್ಲಿರಬೇಕೆಂಬ ಮನಸ್ಥಿತಿಯನ್ನು ಪ್ರಭಾರಕರನಲ್ಲಿ ಕಾಣುತ್ತೇವೆ. ಹಾಗೆಯೇ ಮಾತಿನ ಮಧ್ಯದಲ್ಲಿ ‘ನಿರುಪಮ ಗಂಡಾಗಬೇಕಿತ್ತು. ಯಾಕಾದರೂ ಬ್ರಹ್ಮ ಆಕೆಯನ್ನು ಹೆಣ್ಣಾಗಿ ಸೃಷ್ಟಿಸಿದನೋ’ ಎಂಬ ಆತನ ಮಾತಿನಲ್ಲಿ ಸ್ವಾರ್ಥಬುದ್ಧಿ ಇಣುಕು ಹಾಕುತ್ತಿತ್ತು. + +ಸ್ವಭಾವತಃ ಮೃದು ವ್ಯಕ್ತಿತ್ವದ ನಿರುಪಮ ಅನಿವಾರ್ಯವಾಗಿ ದುಡಿಮೆಯನ್ನು ಪ್ರವೇಶಿಸಿರುತ್ತಾಳೆ. ತನಗೊಬ್ಬ ಬಾಳಸಂಗಾತಿ ಇಲ್ಲವೆಂಬ ಕೊರಗನ್ನು ನಿರೂಪಮ ಮರೆಯಲು ಪುಸ್ತಕಗಳನ್ನು ಓದುತ್ತಿದ್ದಳು. ಆ ಪುಸ್ತಕಗಳೇ ಅವಳ ಜೀವನ ಸಂಗಾತಿಯಾಗಿದ್ದವು. ‘ಹೆಣ್ಣಿಗೆ ವಿವಾಹವೆಂಬುದೇ ಬದುಕಿಗೆ ಆಧಾರವೆ?’ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಿರುಪಮ ಪ್ರಯತ್ನಿಸುತ್ತಿದ್ದಳು. ತನ್ನ ಮದುವೆ ವಿಚಾರದಲ್ಲಿ ಸೋತು ಸುಣ್ಣವಾಗಿದ್ದ ನಿರುಪಮಳನ್ನು ಕಂಡ ಗೆಳತಿ ಮೇರಿಡೇಸಾ ಬುದ್ಧಿವಾದ ಹೇಳುತ್ತಿದ್ದಳು. ತಾನು ಹೇಗೆ ಪತ್ರಿಕಾ ಜಾಹೀರಾತಿನ ಮೂಲಕ ‘ವರ’ನೊಬ್ಬನನ್ನು ಹುಡುಕಿಕೊಂಡೆ. ಹಾಗೆಯೇ ನೀನೂ ಸಹ ಈ ಪ್ರಯತ್ನ ಮಾಡಬಹುದೆಂದು ಸಲಹೆಯನ್ನು ನೀಡುತ್ತಾಳೆ. ಆಗ ತನ್ನ ಅಣ್ಣನಿಗೆ ಈ ವಿಷಯವನ್ನು ವಿವರಿಸಿ ಗಮನಕ್ಕೆ ತಂದಾಗ ಒಲ್ಲದ ಮನಸ್ಸಿನಿಂದ ಒಪ್ಪಿಗೆ ಸೂಚಿಸುತ್ತಾನೆ. + +ಅವಳಾಸೆಯಂತೆ ಪತ್ರಿಕೆಗೆ ಬರೆಯುತ್ತಾ: “28ವರ್ಷ ವಯಸ್ಸಿನ ದುಡಿಯುವ ಕುಲೀನ ಬ್ರಾಹ್ಮಣ ಯುವತಿಗೆ ಯೋಗ್ಯ ವರ ಬೇಕಾಗಿದ್ದಾನೆ. ಮುಖದಲ್ಲಿ ಕೆಲವು ತೊನ್ನಿನ ಕಲೆಗಳಿವೆ. ಇವುಗಳನ್ನು ಕಡೆಗಣಿಸಿ ಕೈಹಿಡಿಯುವ ಕರುಣಾಳು ಇದ್ದರೆ ಪ್ರತ್ಯುತ್ತರ ನೀಡಬಹುದು” ಎಂದು ಪತ್ರಿಕಾ ಜಾಹೀರಾತು ನೀಡುತ್ತಾನೆ. ಇದಕ್ಕೆ ಪ್ರತಿಕ್ರಿಯೆಯಾಗಿ ಹತ್ತು ದಿನಗಳ ನಂತರ ಮದುವೆಯಾಗುವ ಒಬ್ಬ ಗಂಡು ಪತ್ರ ಬರೆಯುತ್ತಾ: “ನಾನು ಯುದ್ಧವೊಂದರಲ್ಲಿ ಭಾಗವಹಿಸಿದಾಗ ಒಂದು ಕೈ-ಒಂದು ಕಾಲು ಕಳೆದುಕೊಂಡಿದ್ದೇನೆ. ನನಗೀಗ 40ವರ್ಷ. ಸ್ವಲ್ಪ ಪೆನ್ಶನ್ ಹಣ ಕೂಡಾ ನನಗೆ ಬರುತ್ತದೆ. ಹೇಗೂ ನಿಮ್ಮ ತಂಗಿ ದುಡಿಯುತ್ತಿರುವುದರಿಂದ ವಿವಾಹ ಸಂಬಂಧ ಬೆಳೆಸಲು ಇಚ್ಚಿಸಿದ್ದೇನೆ” ಎಂದು ತಿಳಿಯಪಡಿಸಿದ್ದನು. “ತಾನೊಂದು ಬಗೆದರೆ ವಿಧಿಯೊಂದು ಬಗೆದಿತ್ತು” ಎಂಬ ಮಾತು ನಿರುಪಮಳಿಗೆ ಅಕ್ಷರಶಃ ಸತ್ಯವಾಗಿತ್ತು. ಪತ್ರ ನೋಡಿದ ತಕ್ಷಣ ಚೂರುಚೂರಾಗಿ ಹರಿದು ಹಾಕುತ್ತಾಳೆ. ಇಂತಹ ಪತ್ರವನ್ನು ಬಹುಶಃ ತನ್ನ ಅಣ್ಣನೇ ಯಾಕೆ ಬರೆದು ನನಗೆ ಕೊಟ್ಟಿರಬಾರದೆಂಬ ಸಂದೇಹ ನಿರುಪಮಳ ತಲೆಯಲ್ಲಿ ಒಂದು ಬಾರಿ ಸುಳಿದು ಹೋಗದೇ ಇರಲಿಲ್ಲ. + +ಸಮಾಜ ʻಕುರೂಪಿʼ ಗುರುತಿಸಿದ,  ಹೆಣ್ಣೊಬ್ಬಳ ಮಾನಸಿಕ ತುಮುಲದ ಕಥೆಯೇ ‘ಅವಿವಾಹಿತೆ’. ಬಹಿರಂಗದ ಸೌಂದರ್ಯಕ್ಕಿಂತ ಆಂತರಿಕ ಸೌಂದರ್ಯವೇ ಮುಖ್ಯವೆಂಬ ಭಾವನೆ ಪ್ರತಿಯೊಬ್ಬರಲ್ಲಿ ತುಂಬಿರುತ್ತದೆ. ಆದರೆ ಅಂತರಂಗದ ನಿಷ್ಕಲ್ಮಷ ಹಾಗೂ ನಿರ್ಮಲವಾದ ಭಾವನೆ ಪರಿಗಣನೆಗೆ ಬಾರದ ಸಮಾಜದಲ್ಲಿ ನಿರುಪಮಾಳ ಭವಿಷ್ಯದ ಕನಸು ನುಚ್ಚು ನೂರಾಗುವ ಚಿತ್ರಣವನ್ನು ಬಲ್ಲಾಳರು ಸಮರ್ಪಕವಾಗಿ ಚಿತ್ರಿಸಿದ್ದಾರೆ. ಸಮಾಜದಲ್ಲಿ ‘ವಿವಾಹ’ವೆಂಬುದು ತುಂಬಾ ಅಗತ್ಯವೆಂಬ ಚೌಕಟ್ಟು ನಿರ್ಮಾಣವಾಗಿ ಹೋಗಿದೆ. ಬದ್ದ ಕಲ್ಪನೆಗಳ ನೆಲೆಯಲ್ಲಿ ನಿರುಪಮಾ ತನ್ನ ಆಸಕ್ತಿ ಮತ್ತು ಆಶಯಗಳತ್ತ ಗಮನ ಹರಿಸುತ್ತಾಳೆ. ಈ ಸಂದರ್ಭಗಳನ್ನು ಉಪಯೋಗಿಸಿಕೊಂಡು ಹೊಂಚು ಹಾಕುವ ಗಂಡಸೆಂಬ ಮೃಗೀಯ ಶಕ್ತಿಗಳು ಅವಳ ಆಸೆಯನ್ನು ಬೇಕಂತಲೇ ಕುಂದಿಸಲು ಮುಂದಾಗುತ್ತವೆ. ನಿರುಪಮಗೆ ಸಮಾಜದ ಈ ಕ್ರೌರ್ಯ ವ್ಯವಸ್ಥೆಯನ್ನು ಎದುರಿಸಲಾಗುವುದಿಲ್ಲ. ತಾನು ಉದ್ಯೋಗಿಯಾಗಿದ್ದರೂ ಸ್ವತಂತ್ರ ಬದುಕು ನಡೆಸಬಲ್ಲೆನೆಂಬ ಆತ್ಮವಿಶ್ವಾಸವಿಲ್ಲ. ಕಾರಣ ತನಗೆ ತಕ್ಕ ಬಾಳಸಂಗಾತಿಯೊಬ್ಬ ಬದುಕು ಕಟ್ಟಿಕೊಳ್ಳುವಲ್ಲಿ ಸಹಕರಿಸುವವರಿಲ್ಲ. ಇದರಿಂದ ವ್ಯವಸ್ಥೆಯ ಶೋಷಣೆಗೆ ಅವಳು ಸುಲಭವಾಗಿ ಒಳಗಾಗುತ್ತಾಳೆ. + +ಹೆಣ್ಣಿನ ಭಾವನೆಗಳಿಗೆ ಬೆಲೆ ಬರಬೇಕಾದರೆ ಅವಳ ಮಾನಸಿಕ ತುಮುಲಗಳಿಗೆ ವಿರಾಮ ಬೇಕೇಬೇಕು. ಅದನ್ನು ಮನಃಪೂರ್ವಕವಾಗಿ ಅರಿಯುವ ವಿಶಾಲವಾದ ಮನಸ್ಸು ಅಗತ್ಯವಾಗಿರುತ್ತದೆ. ಅಂತಹ ಮನಸ್ಸಿನ ಹುಡುಕಾಟವನ್ನು ನಿರುಪಮ ಇಲ್ಲಿ ಹುಡುಕುತ್ತಿದ್ದಾಳೆ. ಬದುಕನ್ನು ಕಟ್ಟಿಕೊಳ್ಳಲು ತಕ್ಕಮಟ್ಟಿಗೆ ಬೇಕಾದ ಹಣವನ್ನು ವೃತ್ತಿಯ ಮೂಲಕ ಸಂಪಾದಿಸಿದ್ದಾಳೆ. ಇದು ಬಹಿರಂಗದ ಆಗು ಹೋಗುಗಳಿಗೆ ಅನುಕೂಲವಾಯಿತಷ್ಟೆ. ಆದರೆ ಮಾನಸಿಕ ತುಮುಲಗಳ ನಿಯಂತ್ರಣದ ಆಗುಹೋಗುಗಳಿಗೆ ಸಂಗಾತಿಯೊಬ್ಬ ಅತ್ಯವಶ್ಯಕ. + +ಹೀಗೆ ಕತೆ ಸರಳವಾಗಿದ್ದರೂ ಅನೇಕ ಸೂಕ್ಷ್ಮಭಾವನೆಯ ಅಂಶಗಳನ್ನು ಒಳಗೊಂಡು ಒಂದು ಸಂಕೀರ್ಣ ಅನುಭವವನ್ನು ತಂದುಕೊಡುತ್ತದೆ. ಕೌಟುಂಬಿಕ ಬದುಕಿನಲ್ಲಿ ಪರಸ್ಪರ ಅವಲಂಬನೆಯ ಅಗತ್ಯ ತೀರಾ ಅನಿವಾರ್ಯವಾಗಿಬಿಡುತ್ತದೆ. ಹೆಣ್ಣಿನ ಅಸಹಾಯಕ ಪರಿಸ್ಥಿತಿ, ಬದಲಾಗುತ್ತಿರುವ ಸಾಮಾಜಿಕ ಸನ್ನಿವೇಶ, ದುಡಿಯುವ ಹೆಣ್ಣಿಗೆ ಕೆಲವೊಮ್ಮೆ ತಕ್ಕ ಗಂಡು ದೊರೆಯದಿರುವ ಸಮಸ್ಯೆ. ಕಥೆ ನಮಗೆ ಮುಖ್ಯವಾಗುವುದು ನಿರುಪಮೆಯನ್ನು ಯುದ್ಧದಲ್ಲಿ ಹೋರಾಡಿದ ಒಬ್ಬ ಯೋಧನ ಪತ್ರದ ಮುಂದೆ ತಂದು ನಿಲ್ಲಿಸುವುದು. + +ಪರಿಸ್ಥಿತಿಯ ಒತ್ತಡಗಳನ್ನು ನಿವಾರಿಸಲಾಗದೆ ತಹತಹಿಸುತ್ತಾ ಅಸಹಾಯಕತೆಯಿಂದ ಪರಿತಪಿಸುವ ಇಲ್ಲಿನ ಸ್ತ್ರೀ ಪಾತ್ರವು ಓದುಗರಿಂದ ಸಹಾನುಭೂತಿ ಪಡೆಯುತ್ತದೆ. ಪುರುಷ ಪಾತ್ರಗಳು ಪ್ರಧಾನ ನೆಲೆಯಲ್ಲಿ ನಿಂತು ಹೆಣ್ಣಿನ ಬದುಕನ್ನು ನಿರ್ಧರಿಸುವಂತೆ ಭಾಸವಾಗುತ್ತವೆ. ಪ್ರಭಾಕರ ನಿರುಪಮಳ ಮನಸ್ಸನ್ನು ಕದಡುವ ರೀತಿಯಿಂದ, ಅವಳಿಗೆ ಸಮಾಧಾನವನ್ನು ನೀಡುತ್ತಿದ್ದೇನೆಂಬ ಕಲ್ಪನೆಯಿಂದ ಆಕೆಯ ಸ್ವಭಾವವನ್ನು ಗಂಡು ನಿಯಂತ್ರಿತ ಶಕ್ತಿಯಂತೆ ಕಂಡುಬರುತ್ತಾನೆ. + +ಹೆಣ್ಣಿನ ಬದುಕು ಸ್ವಾತಂತ್ರ್ಯವನ್ನು ಅಪೇಕ್ಷಿಸಿದರೂ ಪುರುಷನ ಪರಿವೇಶವನ್ನು ಕಳಚಲಾಗದ, ಕುಟುಂಬದ ಸೀಮಿತ ಕ್ಷೇತ್ರದಿಂದ ಹೊರಬರಲಾರದ ಸಂದಿಗ್ಧತೆಯನ್ನು ಇಲ್ಲಿ ಗುರುತಿಸಬಹುದು. ಕೌಟುಂಬಿಕ ಬಂಧನ ಅಥವಾ ತನ್ನ ಅಣ್ಣನಿಂದ ದೊರೆಯದ ಸ್ವಾತಂತ್ರ್ಯ ತತ್ಪರಿಣಾಮವಾಗಿ ಮನದೊಳಗೆ ಅನುಭವಿಸುವ ಅತೃಪ್ತಿ, ಅಸಮಾಧಾನಗಳು ವ್ಯಕ್ತಿಯನ್ನು ಹೇಗೆ ಘಾಸಿಗೊಳಿಸುತ್ತವೆ ಎಂಬುದನ್ನು ಬಲ್ಲಾಳರು ʻನಿರುಪಮʼ ಪಾತ್ರದ ಮೂಲಕ ಸೂಕ್ಷ್ಮವಾಗಿ ನಿರೂಪಿಸಿದ್ದಾರೆ. ಒಟ್ಟಾರೆ ಈ ಕಥೆ ಮಧ್ಯಮ ವರ್ಗದ ಕೌಟುಂಬಿಕ ಚಿತ್ರಣವನ್ನು ಅನಾವರಣಗೊಳಿಸುತ್ತದೆ. + +ಬಲ್ಲಾಳರ ಕಥೆಗಳ ಹಿನ್ನಲೆಯಲ್ಲಿ ಮುಂಬೈ ಪ್ರದೇಶ ಇರುವುದನ್ನು ನಿರಾಕರಿಸಲಾಗುವುದಿಲ್ಲ. ನಗರದ ಸಂಕೀರ್ಣತೆ ಮನುಷ್ಯನ ಮನೋಭಾವದ ಮೇಲೆ ಬೀರುವ ಪರಿಣಾಮವನ್ನು ಅತ್ಯಂತ ನಯವಾಗಿ ಹಿಡಿದಿಟ್ಟಿರುವ ರೀತಿ ಅವರ ಮನೋಧರ್ಮವನ್ನು ಹಾಗೂ ಸ್ವೋಪಜ್ಞತೆಯನ್ನು ಪ್ರಸ್ತುತಪಡಿಸುತ್ತದೆ. ಹಾಗೆಯೇ ಅವರ ಕಥೆಗಳ ವಸ್ತುವಿನಲ್ಲಿ ವಸತಿಹೀನ, ನಿರುದ್ಯೋಗ, ಪ್ರೇಮಸಂಬಂಧ, ನೈತಿಕ ಅಧಃಪತನ, ನಿರಾಶೆ, ಬೇಸರ, ಆತಂಕ, ನೋವು ಮೊದಲಾದ ಅಂಶಗಳನ್ನು ಗುರುತಿಸಬಹುದು. + +ಬಲ್ಲಾಳರು ರಚಿಸಿರುವ ಕುಟುಂಬ ಕೇಂದ್ರಿತ ಸಾಮಾಜಿಕ ಸಹಜ ವಿಷಯಗಳುಳ್ಳ ಕಥೆಗಳು ಮಾನವೀಯತೆಯನ್ನು ಚಿತ್ರಿಸಿವೆ. ಸಮಸ್ಯೆಯನ್ನು ಸಹಾನುಭೂತಿಯಿಂದ ಚಿತ್ರಿಸಿರುವ ಜಾಣ್ಮೆ ಬಲ್ಲಾಳರಿಗೆ ಸಿದ್ಧಿಸಿದೆ. ಮನುಷ್ಯನ ಆಂತರ್ಯದಲ್ಲಿರುವ ಅಂತಃಕರಣದ ಅಂತರ್ಜಲವನ್ನು ಜೀವನದಿಯಾಗಿ ಉಕ್ಕಿಸಿ ಬದುಕನ್ನು ಹಸಿರಾಗಿಸುವ ಹಂಬಲ ಬಲ್ಲಾಳರ ಕಥಾಸಾಹಿತ್ಯದಲ್ಲಿ ಪ್ರಧಾನವಾಗಿ ಕಾಣಿಸುವ ಅಂಶವಾಗಿದೆ. ಇದನ್ನು ಅವಿವಾಹಿತೆಯ ನಿರುಪಮೆಯ ಪಾತ್ರದ ಮೂಲಕ ಚಿತ್ರಿಸಲು ಪ್ರಯತ್ನಿಸಿದ್ದಾರೆ. + +ಬಲ್ಲಾಳರು ತಮ್ಮ ಬರವಣಿಗೆಯನ್ನು ಆರಂಭಿಸಿದ್ದು ಕನ್ನಡದಲ್ಲಿ ಪ್ರಗತಿಶೀಲ ಚಳುವಳಿ ಪ್ರಖರವಾಗಿದ್ದ ಕಾಲದಲ್ಲಿ. ಹೀಗಾಗಿ ಸಹಜವಾಗಿ ಈ ಚಳುವಳಿಯ ಪ್ರಭಾವ ಅವರ ಮೇಲೆ ಗಾಢವಾಗಿದೆ. ಮುಂಬೈ ನಗರದ ಕಾರ್ಮಿಕ ಬಂಧುಗಳ ಬದುಕನ್ನು ಹತ್ತಿರದಿಂದ ಕಂಡ ಅನುಭವವನ್ನು ಕಥಾಪ್ರಪಂಚದಲ್ಲಿ ದಾಖಲಿಸಿದ್ದಾರೆ. ಇದು ಅವರ ಒಂದು ಮುಖವಾದರೆ ಇನ್ನೊಂದು ಮುಖ ‘ಸ್ತ್ರೀ ಜಗತ್ತು’ ಕಥಾಸಾಹಿತ್ಯದಲ್ಲಿ ಬಲ್ಲಾಳರಂತೆ ಹೆಣ್ಣಿನ ಪ್ರಪಂಚವನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿದ ಚಿಂತನೆ ಇತರರಲ್ಲಿ ಕಾಣಸಿಗುವುದಿಲ್ಲವೆಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ. + +ಬಲ್ಲಾಳರು ಚಿತ್ರಿಸಿರುವ ಇಂಥ ಕೆಲವು ಸ್ತ್ರೀ ಪಾತ್ರಗಳು ತಮ್ಮ ಬೌದ್ಧಿಕ ಉನ್ನತಿಯನ್ನು ಮಾತ್ರವಲ್ಲ ಹೃದಯವಂತಿಕೆಯನ್ನು ಉಳಿಸಿಕೊಂಡು ತಮ್ಮ ಬದುಕಿನ ಪರಿಪೂರ್ಣತೆಯನ್ನು ಸಾಧಿಸಿಕೊಂಡಿವೆ. ಕಥೆಯಲ್ಲಿ ದೈನ್ಯತೆ ಮತ್ತು ಕರುಣೆ ಅನಾಯಾಸವಾಗಿ ಮೂಡಿಬಂದಿವೆ. ಕಥಾನಾಯಕಿ ನಿರುಪಮ ತನ್ನ ಭಾವಪ್ರಪಂಚದ ಮೇಲೆ ಹಿಡಿತ ಕಳೆದುಕೊಳ್ಳುವಂಥ ಅನಿವಾರ್ಯ ಸ್ಥಿತಿ ಪ್ರಾಪ್ತವಾಗುತ್ತದೆ. ಆದರೂ ಅದನ್ನು ಸಹಿಸಿಕೊಂಡು ತನ್ನಲ್ಲಿಯೇ ಹತ್ತಿಟ್ಟುಕೊಳ್ಳುತ್ತಾಳೆ. ಕೈಯ್ಯಲ್ಲೊಂದು ಕೆಲಸವೆಂಬುದು ಗಟ್ಟಿಯಾಗಿದ್ದರೂ ತನಗೆ ವಿವಾಹ ಇಲ್ಲದಿರುವುದನ್ನು ಸಮಾಜ ಹೇಗೆ ನೋಡುತ್ತಿದೆ ಎಂಬ ಆಲೋಚನೆ ನಿರುಪಮಗೆ ನಿತ್ಯವೂ ಕಾಡುತ್ತಿರುತ್ತದೆ. + +ಮಾಧ್ಯಮವರ್ಗದ ಕೌಟುಂಬಿಕ ಚಿತ್ರಣ, ಉದ್ಯೋಗವಿದ್ದರೂ ಕುಟುಂಬದಲ್ಲಿ ಸಂಗಾತಿ ಇಲ್ಲದೇ ಚಡಪಡಿಸುವ ಸ್ತ್ರೀಯ ಅನುಭವವನ್ನು ಸಮರ್ಥವಾಗಿ ಈ ಕಥೆಯಲ್ಲಿ ನಿರೂಪಿಸಲಾಗಿದೆ. ವೈವಾಹಿಕ ಜೀವನದ ಅಪೇಕ್ಷೆಯ ತುಡಿತವಿದ್ದರೂ ನಿರುಪಮೆಗೆ ಯಾವುದೂ ಈಡೇರುವುದಿಲ್ಲ. ದುಡಿಯುವ ಮಹಿಳೆಯಾಗಿದ್ದರೂ ಒಂದಲ್ಲ ಒಂದು ರೀತಿಯಲ್ಲಿ ದೈಹಿಕ-ಮಾನಸಿಕ ಸಮಸ್ಯೆ, ತೊಳಲಾಟ, ಅಸಹ್ಯದಿಂದ ಸಮಾಜ ನೋಡುವ ದೃಷ್ಟಿಕೋನದಿಂದ ಮಹಿಳೆಗೆ ಹಲವು ರೀತಿಯಿಂದ ಶೋಷಣೆಗೊಳಪಡುವ ಚಿತ್ರಣವನ್ನು ಬಲ್ಲಾಳರು ಚಿತ್ರಿಸಿದ್ದಾರೆ. ದುಡಿಯುವ ಮಹಿಳೆಯರಲ್ಲಿ ಕಂಡೂ ಕಾಣದಂತಿರುವ ತಲ್ಲಣಗಳ ಮುಖಾಮುಖಿಯನ್ನು ಬಲ್ಲಾಳರು ಸೂಕ್ಷ್ಮವಾಗಿ ನಿದರ್ಶಿಸಿದ್ದಾರೆ. ಔದ್ಯೋಗಿಕ ಉನ್ನತಿಯನ್ನು ಸಾಧಿಸಿದ್ದರೂ ಜೀವನದಲ್ಲಿ ಸಂಗಾತಿ ಇಲ್ಲವೆಂಬ ಬೇಸರಿಕೆ ಹೇಗಿರುತ್ತದೆಂಬುದನ್ನು ಹಾಗೂ ಅತೃಪ್ತಿ ಹೇಗೆ ಕಾಡುತ್ತದೆಯೆಂಬುದನ್ನು ಪಾತ್ರದ ಒಳಹೊಕ್ಕು ಅನಾವರಣಗೊಳಿಸಿದ್ದಾರೆ. ಕಥೆಯಲ್ಲಿ ನಿರುಪಮಳ ಮನೋಭಾವಕ್ಕೆ ಪ್ರಾಧಾನ್ಯ ನೀಡುವ ಮೂಲಕ ಸ್ವಾಭಿಮಾನಿ ಹೆಣ್ಣಿನ ಅಂತಃಕರಣವನ್ನು ದಾಖಲಿಸಿದ್ದಾರೆ. + +ಅತಿಯಾದ ಸಂಕೀರ್ಣತೆಯ ಚಿತ್ರಣಕ್ಕೆಳಸುವ ಸಾಹಸ ಮಾಡದೆ, ಸ್ಥೂಲವಾಗಿ ಎಳೆದ ಗೆರೆಗಳಲ್ಲಷ್ಟೇ ಕಥೆ ಬೆಳೆಯಿಸಿಕೊಂಡು ಹೋಗುವುದು ಬಲ್ಲಾಳರ ಕ್ರಮ. ಕೆಲವೊಮ್ಮೆ ಸಂಪ್ರದಾಯಕ್ಕೆ ಹೆಚ್ಚು ಜೋತು ಬೀಳದೆ, ಹಳೆಯ ಆಚಾರ ವಿಚಾರಗಳನ್ನು ತೊರೆದೂ ತೊರೆಯದ, ನಗರಜೀವಿ ಮಧ್ಯಮ ವರ್ಗದ ಸಾಮಾಜಿಕ ಚಿತ್ರಣವನ್ನು ಇವರ ಕಥೆ ಕಾದಂಬರಿಗಳಲ್ಲಿ ಕಾಣಬಹುದು. ಎಂದಿನಂತೆ ಸಮಾಜದ ಹಾಗೂ ವ್ಯಕ್ತಿಯ ನಡುವಣ ಬದುಕಿನ ಹೋರಾಟ, ವಾಸ್ತವಿಕತೆ ಹಾಗು ಆದರ್ಶದ ತಾಕಲಾಟ. ಸಮಸ್ಯೆ ಹೆಚ್ಚು ತೊಡಕಾಗುವುದರೊಳಗೇ ಪರಿಸ್ಥಿತಿಯನ್ನು ಒಂದು ರೀತಿಯಲ್ಲಿ ಸರಳಗೊಳಿಸುವ ಪ್ರಯತ್ನ. ಪಾತ್ರಗಳಲ್ಲಿ ಶಿಥಿಲತೆ ಅಥವಾ ದೌರ್ಬಲ್ಯ ಕಂಡುಬಂದರೂ ನಿವಾರಿಸಲು ತಕ್ಕ ದಾರಿಯನ್ನು ಹುಡುಕಿಬಿಡುತ್ತಾರೆ. ಹಾಗಾಗಿ ಕೊನೆಗೆ ಓದುಗರಿಗೆ ಹೀಗಲ್ಲದೆ ಇನ್ನು ಹೇಗೆ ಇದು ಅಂತ್ಯಗೊಳಿಸುವುದು ಸಾಧ್ಯವಿದ್ದೀತು ಎನಿಸುತ್ತದೆ. + + + +ಐವತ್ತರ ದಶಕದಲ್ಲಿ ಬಲ್ಲಾಳರು ಬರೆದಿರುವ ಬಹಳಷ್ಟು ಕಥೆಗಳು ಕುಟುಂಬವು ಪ್ರಧಾನ ಸ್ಥಾನ ಪಡೆದಿದ್ದು, ಈ ಹಿನ್ನೆಲೆಯಲ್ಲಿ ಸ್ತ್ರೀ ಮನೋಭಾವದ ವಿವಿಧ ವಿನ್ಯಾಸಗಳ ಅನಾವರಣ ಕಾಣದೊರೆಯುತ್ತವೆ. ಒಟ್ಟಾರೆಯಾಗಿ ಐವತ್ತರ ದಶಕದಲ್ಲಿ ಬಲ್ಲಾಳರು ಬರೆದಿರುವ ಬಹಳಷ್ಟು ಕಥೆಗಳು ಕುಟುಂಬ ಕೇಂದ್ರಿತವಾದವುಗಳು. ಈ ಹಿನ್ನೆಲೆಯಲ್ಲಿ ಸ್ತ್ರೀಯ ಮನೋಭಾವದ ವಿವಿಧ ವಿನ್ಯಾಸಗಳ ಅನಾವರಣ ಕಾಣುತ್ತವೆ. + +(ಆಕರಗಳು:* ವ್ಯಾಸರಾಯ ಬಲ್ಲಾಳರ ಸಾಹಿತ್ಯ ಚಿಂತನೆ: ಡಾ. ಡಿ. ವಿಜಯಲಕ್ಷ್ಮಿ, ಜ್ಞಾನೋದಯ ಪ್ರಕಾಶನ, ಬೆಂಗಳೂರು. 1998* ವ್ಯಾಸರಾಯ ಬಲ್ಲಾಳ: ಡಾ. ಡಿ.ವಿಜಯಲಕ್ಷ್ಮಿ, ನವಕರ್ನಾಟಕ, ಬೆಂಗಳೂರು. 2001* ಸಂಪಿಗೆಯ ಹೂ: ವ್ಯಾಸರಾಯಬಲ್ಲಾಳ, ಲಲಿತ ಸಾಹಿತ್ಯಮಾಲಾ, ಧಾರವಾಡ. 1958.* ವ್ಯಾಸರಾಯ ಬಲ್ಲಾಳ ಒಂದು ಅಧ್ಯಯನ(ಅಪ್ರಕಟಿತ ಸಂಶೋಧನಾ ಪ್ರಬಂಧ): ಡಿ. ವಿಜಯಲಕ್ಷ್ಮಿ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ ಮೈಸೂರು. 1997) + +ಕನ್ನಡ ಸಾಹಿತ್ಯ, ಜಾನಪದ ಮತ್ತು ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿರುವ ಡಾ. ರಾಜಶೇಖರ ಜಮದಂಡಿ ಅವರು ಮೂಲತಃ ಜಮದಂಡಿಯವರು.  ಪಿಯು ಮತ್ತು ಪದವಿ ಕಾಲೇಜುಗಳಲ್ಲಿ ಉಪನ್ಯಾಸಕರಾಗಿದ್ದರು.  ಮೈಸೂರಿಗೆ ಶಾಸ್ತ್ರೀಯ  ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕೆಲಸ ಮಾಡಿದ್ದಾರೆ. ಅಂಗಳ, ಸರ್ವಜ್ಞನ ವಚನಗಳು ಒಂದು ಜಾನಪದೀಯ ಅಧ್ಯಯನ ,   ಚಿಂತನಾಂಜಲಿ, ಸಮರ್ಪಣೆ ಮುಂತಾಗಿ ಅನೇಕ ಕೃತಿಗಳನ್ನು ಪ್ರಕಟಿಸಿದ್ದಾರೆ.  ಸಂಶೋಧನಾ ಕ್ಷೇತ್ರದಲ್ಲಿ ಅವರ ಅಧ್ಯಯನವನ್ನು ಪರಿಗಣಿಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಅವರಿಗೆ ಸಂದಿವೆ. \ No newline at end of file diff --git a/Kenda Sampige/article_197.txt b/Kenda Sampige/article_197.txt new file mode 100644 index 0000000000000000000000000000000000000000..8df96c95812188f7ac131452d2b4aacbba835888 --- /dev/null +++ b/Kenda Sampige/article_197.txt @@ -0,0 +1,17 @@ +ಬೆಳೆಗಾತ ನಸುಕಲ್ಲೆ ಎದ್ದು ಪ್ರಾತಃವಿಧಿ ಮುಗಿಸುವ ಅಜ್ಜಿಯ ಮೊದಲ ಕೆಲಸವೆಂದರೆ ಕೊಟ್ಟಿಗೆಗೆ ಹೋಗಿ ಒಂದಿಷ್ಟು ಗೋಮೂತ್ರವ ಮೈಗೂ ಹೊಟ್ಟೆಗೂ ಸಿಂಪಡಿಸಿಕೊಂಡು, ಆಕಳಿಗೆಲ್ಲಾ ಮೈದಡವಿ ಮಾತನಾಡಿಸಿ, ಒಂದು ಕಟ್ಟು ಹುಲ್ಲು ಹಾಕಿ, ಗೋಮಯ ತೆಗೆದುಕೊಂಡು ಬರುವುದು. ಗೋಮಯದಿಂದ ಒಲೆಕಟ್ಟೆಯನ್ನೆಲ್ಲಾ ಸಾರಿಸಿ, ನಿನ್ನೆಯ ಮುಸುರೆ ಪಾತ್ರಗಳನ್ನೆಲ್ಲಾ ಹೊರಗೆ ಹಾಕಿ, ನಂತರ ಒಲೆಹಚ್ಚಿ ಹೊಗೆಕಂಪಿನ ತಲೆ ತಿರುಗುವಷ್ಟು ಕುದಿಸಿದ ಚಾ ಮಾಡಿ ಮಗ-ಸೊಸೆಗೂ ಚೂರು ಕೊಟ್ಟು, ಶಿವ ಶಿವ ಎಂದು ಬಾಗಿಲ ಬಳಿ ಸ್ವಲ್ಪ ಹೊತ್ತು ಕುಳಿತುಕೊಳ್ಳುವುದು. ಆಕಳೆಂದರೆ ದೇವರೆಂಬಂತೆ ಕಾಣುವ ಅಜ್ಜಿಗೆ ಉಳಿದ ಪ್ರಾಣಿಗಳೆಂದರೆ ಅಷ್ಟಕಷ್ಟೆ. ಅದರಲ್ಲೂ ನಾಯಿ ಬೆಕ್ಕು ಕಂಡರೆ ಚೊಂಬಲ್ಲಿ ನೀರು ಹಿಡಿದುಕೊಂಡೇ ತಿರುಗುವಷ್ಟು ಕೋಪ, ತನ್ನ ಮಡಿ ಹಾಳು ಮಾಡುತ್ತವೆ ಅವು ಎಂದು. ಅದಕ್ಕೆ ಸರಿಯಾಗಿ ಬರುವ ಕಳ್ಳಬೆಕ್ಕೊಂದು ಹಾಲಿನ ಪಾತ್ರೆ ಬೀಳಿಸಿ ಹಾಲು ನೆಕ್ಕುವುದು, ಗೋಗ್ರಾಸಕ್ಕೆ ತೆಗೆದಿಟ್ಟ ಅನ್ನವನ್ನು ತಿನ್ನುವುದನ್ನೆಲ್ಲಾ ಮಾಡಿ ಪರಾರಿಯಾಗುತ್ತಿತ್ತು. ಹೊಂಚು ಹಾಕಿ ಹಿಡಿಯಲು ಪ್ರಯತ್ನಿಸಿದರೂ ಕೈಗೆ ಸಿಗದ ಕಳ್ಳಬೆಕ್ಕಿನಿಂದ ಇಡೀ ನಾಯಿ-ಬೆಕ್ಕು ಸಂಕುಲವೇ ಅಜ್ಜಿಯ ಶಾಪವನ್ನು ಕೇಳಿಸಿಕೊಳ್ಳಬೇಕಾಗಿತ್ತು. ಬೆಕ್ಕಿನ ತಲೆ ಕಂಡರೂ ಕಾಲಪ್ಪಳಿಸಿ ‘ತಲೆ ಕುಟ್ಟುಲೇ ತಂದಿ’ ಎಂದು ಬೊಬ್ಬರಿಯುತ್ತಿದ್ದಳು. ಪೇಟೆಂಟ್ ಇದ್ದ ಈ ಡೈಲಾಗ್ನ್ನು ಯಾರಾದರೂ ಗೇಲಿ ಮಾಡಿದರೆ ಅವರ ಗ್ರಹಚಾರ ಬಿಡಿಸುತ್ತಿದ್ದಳು. + +(ಶುಭಶ್ರೀ ಭಟ್ಟ) + +ಹೀಗಿರುವಾಗ ಮಾರುಮನೆ ಹಿತ್ಲಿನ ನಾಗ್ರಜಣ್ಣ ನಾಯಿಮರಿಯೊಂದನ್ನು ಸಾಕತೊಡಗಿದ. ಮೊದಲೇ ಶ್ವಾನ ಪ್ರೇಮಿಗಳಾಗಿದ್ದ ನಾನು ತಂಗಿ ರಜೆಯಿದ್ದಾಗಲೆಲ್ಲ ಅವರ ಮನೆಗೆ ಹೋಗಿ ನಾಯಿಯೊಟ್ಟಿಗೆ ಆಡಿ ಬರುವುದು ಮಾಡುತ್ತಿದ್ದೆವು. ಚೂರು ಸಲಿಗೆ ಆದ ನಂತರ ಎರಡನೇ ಸುತ್ತಿನ ಊಟಕ್ಕೆ ನಮ್ಮನೆಗೆ ಬಂದು ಉಂಡು, ಚೂರು ಮಲಗಿ ಚಾ ಸಮಯದಲ್ಲಿ ಹಾಕುವ ಕುರುಕು ತಿಂದು ಮನೆಗೆ ಹೋಗುವುದು ಅವನಿಗೆ ರೂಢಿಯಾಯ್ತು. ನಾಗ್ರಾಜಣ್ಣ ಚಂದನೆಯ ಹೆಸರಿಟ್ಟಿದ್ದರೂ, ಸತೀಶಣ್ಣ ಕೊಟ್ಟ ಪೊಕ್ಕ ಎಂಬ ಹೆಸರು ನಮ್ಮ ಮಕ್ಕಳಿಗೆ ಬಹಳವೇ ಸೊಗಸೆನಿಸಿ, ಪೊಕ್ಕಣ್ಣನೆಂದು ಮರಳಿ ನಾಮಕರಣವಾಯ್ತು. ಇತ್ತ ಜಯರಾಮಜ್ಜನ ಮನೆಯಲ್ಲೊಂದು ಪಂಡು ಎಂಬ ಮುದಿಯನಿದ್ದ. ಅವನು ಬೆಳಗಿನ ದೋಸೆ ಪಾಳಿಗಷ್ಟೆ ಬರುವವನು. ಪರಮ ವೈರಿಗಳಾದ ಪಂಡು & ಪೊಕ್ಕಣ್ಣನಿಗೆ ನಮ್ಮ ಮನೆಯೇ ಗಡಿ. ಅವನು ಬಂದಾಗ ಇವನು ಬರನು, ಇವನು ಬಂದಾಗ ಅವನು ಬರ. ಅದು ಹೇಗೆ ಲಿಖಿತವಿಲ್ಲದೇ ಅದ್ಯಾವ ಪಂಚಾಯ್ತದಲ್ಲಿ ಒಪ್ಪಂದ ಮಾಡಿಕೊಂಡರೋ ನಮಗಿನ್ನೂ ಗೊತ್ತಾಗಲೇ ಇಲ್ಲ. + +ಈ ಪೊಕ್ಕಣ್ಣ ಶತ ತುಂಟ, ಕಣ್ಣಲ್ಲೇ ಅವನ ತುಂಟತನ ಇಣಕುತ್ತಿತ್ತು. ಒಂದು ಕಿವಿ ನೆಟ್ಟಗೆ ಮಾಡಿ, ಮತ್ತೊಂದನ್ನು ಮಡಿಸಿದ ಅಂದರೆ ಅವನೇನೋ ತರಲೆ ಮಾಡುತ್ತಾನೆಂದು ನಮಗೆ ಖಾತ್ರಿಯಾಗಿತ್ತು. ಮಟ ಮಟ ಮಧ್ಯಾಹ್ನ ಎಣ್ಣೆ ಪಳಚಿಕೊಂಡು ಹಂಡೆತುಂಬಾ ಬೀಸಿನೀರನ್ನು ಸ್ನಾನ ಮಾಡಿ, ಒದ್ದೆ ಸೀರೆಯನ್ನುಟ್ಟು ಬರುವ ಅಜ್ಜಿಗೆ ಅಡ್ಡಲಾಗಿಯೇ ಮಲಗುತ್ತಿದ್ದ ಪೊಕ್ಕಣ್ಣ. ಅವನು ಮಲಗಬಾರದೆಂದು ಕೊಡಪಾನಗಟ್ಟಲೆ ನೀರು ಹೊಯ್ದಿಟ್ಟು ಸ್ನಾನಕ್ಕೆ ಹೋಗುತ್ತಿದ್ದರು. ಆದರೂ ಕಾಲು ಒರೆಸುವ ಗೋಣಿಚೀಲವನ್ನೆಳೆದುಕೊಂಡು ಬೇಕಂತಲೇ ಬಚ್ಚಲಮನೆ ಬುಡದಿ ಮಲಗಿ ಸತಾಯಿಸುತ್ತಿದ್ದ ಅಂವ. ಅಜ್ಜಿ ಬಚ್ಚಲ ಮನೆ ಬಾಗಿಲು ತೆಗೆಯುವಷ್ಟರಲ್ಲಿ ಛಂಗನೆ ಜಿಗಿದು ನಾಲಗೆ ಅಣುಕಿಸಿ ಅವಳ ಕೋಪ ನೆತ್ತಿಗೇರುವಂತೆ ಮಾಡುತ್ತಿದ್ದ. ಒದ್ದೆ ಸೀರೆ ಕಳಚಿ ಮಡಿಸೀರೆಯನ್ನುಟ್ಟು ಮಡಿನೀರು ತೆಗೆದುಕೊಂಡು ಬರುವಾಗ ಗಿರಗುಟ್ಟುವ ಅವನ ಬಾಲವೇನಾದರೂ ಸೋಕಿತೋ, ಹಿಡಿಶಾಪ ಹಾಕುತ್ತ ಮತ್ತೆ ಸ್ನಾನ ಮಾಡಿ ಬರುತ್ತಿದ್ದಳು. ಮರುದಿನ ಪೊಕ್ಕಣ್ಣನ ಮೇಲಿನ ಸಿಟ್ಟೆಲ್ಲಾ ಪಂಡುವಿನ ಮೇಲಿನ ಪ್ರೀತಿಯಾಗಿ ಪರಿವರ್ತನೆಯಾಗುತ್ತಿದ್ದುದರ ಅರಿವು ಅವಳಿಗಿರಲೇ ಇಲ್ಲ. + + + +ನಾವು ಕ್ಕೋ ಕ್ಕೋ, ಕಬ್ಬಡಿ, ಕುಂಟಾಬಿಲ್ಲೆಯಾಡುವಾಗ ನಾನು ಒಬ್ಬ ಆಟಗಾರನೆಂದು ತೋರಿಸಿಕೊಳ್ಳಲು ಮಧ್ಯ ನುಗ್ಗಿ ನಮ್ಮನ್ನು ಬೀಳಿಸಿಯೇ ಬಿಡುತ್ತಿದ್ದ. ಕಣ್ಣಾ ಮುಚ್ಚಾಲೆಯಾಡುವಾಗಲಂತೂ ನಾವು ಅಡಗಿದ್ದಲ್ಲಿಯೇ ಶ್ವಾಸ ಬಿಡುತ್ತಾ ಕುಳಿತು ಬೇಗ ಸೋಲುವಂತೆ ಮಾಡುತ್ತಿದ್ದ. ಮುಟ್ಟಾಟ ಆಡುವಾಗ ಕಿವಿಗೆ ಗಾಳಿಹೊಕ್ಕಿದ ಮಳ್ಳು ಪ್ರೇತದ ತರಹ ಎಲ್ಲೆಂದರಲ್ಲಿ ಓಡಾಡಿ ದಾಂಧಲೆಯಬ್ಬಿಸುತ್ತಿದ್ದ. ಪರೀಕ್ಷೆಗೆ ಓದಲೆಂದು ತೋಟದ ಪಾಗಾರದಲ್ಲಿ ಕುಳಿತಾಗ ಬಂದವನ ನಿರ್ಲಕ್ಷಿಸಿದೆವೆಂದು, ಬೇಕಂತಲೇ ಓಡೋಡಿ ಬಂದು ಗಕ್ಕನೆ ನಿಂತು ಗಮನ ಸೆಳೆಯಲು ನೋಡಿದ್ದಿದೆ. ಚೂ, ಹಾ ಎಂದು ಮಂಗನ ಓಡಿಸಿದರೆ ಇವನೂ ನಿಂತು ಗರ್ರಂದಿದ್ದಿದೆ. ಮಳೆಗಾಲದಲ್ಲಿ ಒಮ್ಮೊಮ್ಮೆ ರಾತ್ರಿ ಮನೆಗೆ ಹಿಂತಿರುಗಲೂ ಆಗದೇ ನಮ್ಮನೆಯಲ್ಲಿ ಇದ್ದಾಗ ನಮಗಂತೂ ಅವನ ಹಾಸಿಗೆ ಮಾಡುವ ಸಂಭ್ರಮ. ಗೋಣಿಯ ಮೇಲೆ ಸಿಮೆಂಟ್ ಚೀಲ, ಅದರ ಮೇಲೆ ತಿರುಗಿ ತಿರುಗಿ ಮುದುಡಿಕೊಂಡು ಮಲಗಿದ ಮೇಲೆ ಅವನ ಮೇಲೆ ಮತ್ತೊಂದು ದಿನಪತ್ರಿಕೆ,ಗೋಣಿಯನ್ನು ಹೊದೆಸಿ ಮಲಗುತ್ತಿದ್ದೆವು. ಮೈಮೇಲಿನ ಹೊದಿಕೆ ಬೆಳಗಾಗುವಷ್ಟರಲ್ಲಿ ಕೆಳಗಡೆಗೆ ಹಾಸಾಗಿರುತ್ತಿತ್ತು. + + + +ನಾನು ಧಾರವಾಡದಿಂದ ಮನೆಗೆ ರಜೆಕ್ಕೆಂದು ಬಂದಾಗ ಕೈ ಕಾಲು ಮುಖ ತೊಳೆಯುವುದರಲ್ಲಿ ನಮ್ಮನೆಯಲ್ಲಿರುತ್ತಿದ್ದ. ತುಂಬಾ ದಿನಗಳ ನಂತರ ನೋಡಿದ ಖುಶಿಗೆ ಕುಸುಗುಟ್ಟುತ್ತಾ ಕಾಲು ಸುತ್ತಿ, ಮೈಮೇಲೆ ಹಾರಿ ಮುದ್ದಿಸುತ್ತಿದ್ದ. ಅವನಿಗೆ ನಾಮವಿಟ್ಟು ದುಪ್ಪಟ್ಟದ ಅಂಗಿ ಹಾಕಿ, ಎಲೆಯ ಕಿರೀಟ ಮಾಡಿ ಅಲಂಕರಿಸಿ ‘ರಾಜಾಧಿರಾಜ ಪೊಕ್ಕೇಶ್ವರ’ ಎಂದೆಲ್ಲಾ ನಾವು ನಗುವಾಗ ಅವನಿಗೂ ಖುಶಿಯಾಗಿ ಅಂಗಳದ ತುಂಬೆಲ್ಲಾ ಓಡಾಡಿ ದುಪ್ಪಟ್ಟಾವನ್ನು ಕೆಳಗೆ ಚೆಲ್ಲಿ ಕಚ್ಚಿಕೊಂಡು ಓಡುತ್ತಿದ್ದ. ಒಂದಿನ ಬೊಮ್ಮು ಬಂದು ‘ಪೊಕ್ಕಣ್ಣ ಹೋದ್ನಂತಲ್ರಾ’ ಎಂದಿದ್ದಾಗ ತಂಗಿ ಬಿಕ್ಕುತ್ತಾ ಫೋನ್ ಮಾಡಿದ್ದು ಎಲ್ಲವೂ ನಿನ್ನೆ ಮೊನ್ನೆಯ ಹಾಗಿದೆ. ಅವನಿಲ್ಲದೇ ಆರೇಳು ವರುಷವೀಗ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_198.txt b/Kenda Sampige/article_198.txt new file mode 100644 index 0000000000000000000000000000000000000000..0d5ef23a0a1e5982d546da306bd8f3a0ffd36442 --- /dev/null +++ b/Kenda Sampige/article_198.txt @@ -0,0 +1,33 @@ +ಪ್ರೀತಿಯ ಚೈತ್ರಾ, + +ನಿಮ್ಮ ತಾಳ್ಮೆಗೆ ಶರಣು. ನೀವು ಈ ವೇಗದ ಯುಗದ Hurry up, it’s time ಎನ್ನುವ ಆಮಿಷಕ್ಕೆ ಒಳಗಾಗದೆ ನಿಲ್ಲುವ ಧೋರಣೆ ಹೊಂದಿದ್ದೀರಿ ಎಂದರೆ ರೆಬೆಲ್ ಎಂದಲ್ಲ. ಹೂವು ಅರಳುವುದಕ್ಕೆ ಅದರದೇ ಸಮಯ ಇರುವಂತೆ ಸೃಜನಶೀಲತೆಯು ಅರಳುವುದಕ್ಕೆ ತಾಳ್ಮೆ ಬೇಕೆಂಬ ಒಳಗುಟ್ಟನ್ನು ನೀವು ಕಂಡುಕೊಂಡಿದ್ದೀರಿ ಎಂದು ಅನ್ನಿಸಿದೆ. ಇದು ನಿಮ್ಮ ಬದುಕಿನ ಪ್ರಾಥಮಿಕ ಪಾಠವೂ ಹೌದು; ಕಾವ್ಯದ ಕುರಿತಾದ ಪ್ರಾಥಮಿಕ ತಿಳಿವಳಿಕೆಯೂ ಹೌದು. ವಾಸ್ತವವಾಗಿ ನಿಮಗೆಂದು ಈ ಬರಹವನ್ನು ಬರೆಯುತ್ತಿದ್ದರೂ ನನಗೆ ನನ್ನೊಳಗೆ ಇರುವ ಸ್ವಗತವನ್ನೇ ನಿಮ್ಮ ಮುಂದೆ ಇಡುತ್ತಿದ್ದೇನೆಂಬ ಅಳುಕು ಇದೆ. ಕಾವ್ಯ ಎನ್ನುವ ತೀವ್ರ ವ್ಯಾಮೋಹದ ಸೆಳೆತಕ್ಕೆ ಒಳಗಾಗಿ ಕಾವ್ಯ ಬರೆಯಲು ತೊಡಗಿದವರೆಲ್ಲರಿಗೂ ಕಾವ್ಯದ ಕುರಿತ ಮೀಮಾಂಸೆಯ ನಿಯಮಗಳು, ಸಮಕಾಲೀನರ ಕಾವ್ಯದ ಒತ್ತಡಗಳು ಒಂದು ಬಗೆಯ ಆತಂಕವನ್ನೆ ಸೃಷ್ಟಿ ಮಾಡಿರುತ್ತವೆ. ‘ನಾನು ಒಲಿದಂತೆ ಹಾಡುವೆ’ ಎಂದು ಹೊರಟರೂ ಜಗತ್ತು ಸೃಷ್ಟಿಸುವ ಮಾನದಂಡಗಳನ್ನು ನನ್ನ ಕಾವ್ಯ ಎದುರಿಸುವುದೇ? ಎನ್ನುವ ಆತಂಕ, ಸಣ್ಣದಾದ ಭಯ ಇರುತ್ತದೆ. ಇದನ್ನು ನೀವೂ ಹೊಸದಾಗಿ ಬರೆಯುತ್ತಾ ಅನುಭವಿಸುತ್ತಿದ್ದೀರಿ ಎಂದು ಭಾವಿಸುವೆ. ಈಗಾಗಲೇ ಬರೆದು ಬರೆದು ಒಂದು ಹಾದಿ ನಿರ್ಮಾಣವಾಗಿರುವಾಗ ಎಲ್ಲರ ನೆರಳಿನ ಬೆರಳಿನಲ್ಲಿ ಬರೆಯಬೇಕಾದುದೇನು ಎಂದು ಕುಶಲಿಯಾದ ಕವಿ ಕೇಳಿಕೊಳ್ಳುವುದು ಸಹಜ. ಅಂತೆಯೇ ಈ ಒತ್ತಡಗಳ ನಡುವೆಯೇ ಒಂದಿಷ್ಟು ತಾಜಾಭಾವನೆಗಳೊಂದಿಗೆ ಸರಳ ಸುಂದರ ಬರವಣಿಗೆ ಮಾಡುವುದು ಸಾಧ್ಯವಿದೆ ಎನ್ನುವುದನ್ನು ನೀವು ಮುಗ್ಧವಾಗಿ ಒಪ್ಪಿಕೊಂಡು ಬರೆಯುತ್ತೀದ್ದೀರಿ. ನಿಮ್ಮ ಮುಗ್ಧತೆ, ಸರಳತೆ ನಿಮ್ಮ ಹೊಸ ಸಂಕಲನದ ಕವಿತೆಗಳಲ್ಲಿ ಕಾಣುತ್ತವೆ. + +ಮೊದಲನೆಯದಾಗಿ ನಿಮ್ಮ ಕವಿತೆಗಳು ಒಂದು ಪ್ರಾರ್ಥನೆಯಂತಿವೆ. ಹಾಗೆ ನೋಡಿದರೆ ಕವಿವಾಣಿಯಂತೆ ಪ್ರತಿ ಕವಿತೆಯೂ ಪ್ರಾರ್ಥನೆಯೇ. ನಿಮ್ಮ ಕವಿತೆಗಳು ಉದ್ದೇಶಪೂರ್ವಕವಾಗಿ ಮಾಡುವ ಪ್ರಾರ್ಥನೆಯಂತಲ್ಲ; ಅಥವಾ ಆಚರಣಾಮೂಲದ ಒಂದು ಯಾಂತ್ರಿಕ ಕ್ರಿಯೆಯೂ ಅಲ್ಲ. ಅವು ಒಂದು ಬಗೆಯ ಪ್ಯಾಶನ್‌ನಿಂದ ಕೂಡಿದ ಪ್ರಾರ್ಥನೆ. ಅದರಲ್ಲಿ ಆರ್ತತೆಯನ್ನು ಹದವಾಗಿ ಬಗ್ಗಿಸಿ ಒಂದು ಪ್ರಾರ್ಥನೆಯನ್ನು ಸಲ್ಲಿಸುತ್ತೀರಿ. ಪ್ರೀತಿಸುವವರೊಂದಿಗೆ ಎಲ್ಲವನ್ನೂ ಹಂಚಿಕೊಂಡು, ಎಲ್ಲವನ್ನೂ ನಿವೇದಿಸಿಕೊಂಡು ಹೋಗುವ ದಿಟ್ಟತೆ ಅಲ್ಲಿ ಕಾಣುತ್ತದೆ. ಆದರೆ ಅದು ಸಂಪೂರ್ಣ ವಿನಯದಿಂದ ತನ್ನನ್ನು ತಾನು ಮರೆಯುವಂತದ್ದಲ್ಲ. ನಿಮ್ಮತನವನ್ನು ಉಳಿಸಿಕೊಂಡು ಇತರರನ್ನು ಪ್ರೀತಿ ಜಗತ್ತಿನಲ್ಲಿ ನೋಡಲು ಬಯಸುತ್ತೀರಿ. ಹಾಗಾಗಿ ಇಲ್ಲಿ ನಿಮ್ಮ ಭಾವನೆಗಳು ತಣ್ಣಗೆ ಎನ್ನಿಸಿದರೂ ಶಕ್ತಿಶಾಲಿಯಾಗಿವೆ. ಝೆನ್ ಉಕ್ತಿಯೊಂದು ಹೇಳುತ್ತದೆ: “ನೀರು ತುಂಬ ಮೃದು ಆದರೆ ಬಲಶಾಲಿ”. ಚೈತ್ರಾ ಇಲ್ಲಿ ನೀವು ಹೆಣ್ಣಾಗಿದ್ದೀರಿ ಎಂದು ನನಗೆ ಅನ್ನಿಸಿದೆ. ನೀವು ಪ್ರೀತಿಯನ್ನೇ ಧ್ಯಾನಿಸಿದ್ದೀರಿ, ಶರಣಾಗತಿಯ ಭಾವವನ್ನು ವಿಜೃಂಭಿಸಿದ್ದೀರಿ. ಆದರೆ ಮಿಲನದ ಆತ್ಯಂತಿಕ ತುದಿಯಲ್ಲಿಯೂ ನಿಮ್ಮ ಅಸ್ಮಿತೆಯ ಕುರುಹು ಇರಬೇಕೆಂಬ ಅಪೇಕ್ಷೆಯನ್ನು ಹೊಂದಿದ್ದೀರಿ. ನಿಮ್ಮ ಕವಿತೆಗಳು ಮತ್ತೊಬ್ಬನನ್ನು ಕುರಿತು ಧ್ಯಾನಿಸುವ ಸ್ಥಾಯಿಭಾವದಲ್ಲಿ ನಿಂತಂತೆ ತೋರಿದರೂ ಅವು ಆಳದಲ್ಲಿ ಅನೇಕ ಸಂಚಾರಿ ಭಾವಗಳನ್ನು ಹೊಂದಿವೆ. ಇದು ನೀವು ಕವಿತೆ ಬರೆಯುವಾಗ ಕಂಡುಕೊಳ್ಳುವ ಸಣ್ಣ ಸಣ್ಣ ಶೃತಿಗಳು. + +ಧಗಧಗಿಸುವ ಕಿಡಿಯನುಕೊಳದ ನೀರಿನಲಿ ನೆನಸಿತೆಗೆಯುವ ಹುಚ್ಚುತನಕೆ ಏನೆನ್ನಲಿ?ಪ್ರತಿಫಲನದಲಿ ಕಂಡದ್ದೆಲ್ಲ ಎಟುಕುವಂತಿದ್ದರೆ?(ಪ್ರತಿಫಲನ) + +ಈ ವ್ಯಾಮೋಹವನ್ನು ಸದಾ ಅದರ ಬಿಸುಪಿನಲ್ಲಿಯೇ ಕಾದಿಟ್ಟುಕೊಳ್ಳುವ ಪ್ರಯತ್ನವನ್ನು ನೀವು ನಿಮ್ಮ ಬಹುತೇಕ ಕವಿತೆಗಳಲ್ಲಿ ಮಾಡುತ್ತಾ ಹೋಗಿದ್ದೀರಿ. ಅದು ಇಲ್ಲಿ ಎದ್ದು ಕಾಣುವಂತದ್ದು. + +ಸದಾ ಕಾಲವೂಸೋನೆಗೆ ಕಾಯುವಹಚ್ಚಹಸುರಾಗಿಯೇ ಇರಲು ಹವಣಿಸುವ ಈ ಭೂಮಿ(ಆತ್ಮಸಖ)– ಎನ್ನುವ ಸಾಲುಗಳು ಪ್ರಾಯಶಃ ಇವನ್ನು ಸಮರ್ಥಿಸುವಂತೆ ಇವೆ. ನಿಮ್ಮ ಕವಿತೆಗಳಲ್ಲಿ ಪ್ರೀತಿ, ವ್ಯಾಮೋಹಗಳ ಬಗೆಗೆ ಒಂದು ಸಣ್ಣ ಹಟ ಇದೆ. ಇದೇ ನಿಮ್ಮ ಪ್ರತಿ ಕವಿತೆಗಳ strength. + +ಸಲ್ಲಾಪದ ಸೂಳ್ನುಡಿಗಳನುಭರಪೂರಹೃದಯದೆಸಳುಗಳಿಗೆಚಿಮುಕಿಸಿರಬಹುದು ನೀನು + +ಆದರೆಸರಾಗ ನಿನ್ನ ಆಂತರ್ಯಕೆಇಳಿದು ಹೋದಮಿದುಮಾತು ನಾನು(ಬಯಲ ಹಕ್ಕಿ) + +ಹೀಗೆ ಉದ್ದಕ್ಕೆ ನಿಮ್ಮ ಕವಿತೆಗಳನ್ನು ನಿಮಗೇ ಒಪ್ಪಿಸುವ ಗೋಜಿಗೆ ಹೋದರೆ ಇಡೀ ಸಂಕಲನ ಕವಿತೆಗಳಿಗೇ ಕೈಹಾಕಬೇಕಾದೀತು. ಅದ ನಾ ಮಾಡಲೊಲ್ಲೆ. ನಾನು ನಿಮ್ಮ ಕವಿತೆಗಳ ಕುರಿತು ಧೇನಿಸುವಾಗ ಅನ್ನಿಸಿದ್ದ ಕೆಲವು ಮಾತುಗಳಿಗೆ ಸಮರ್ಥನೆ ನೀಡಬೇಕೆಂದು ಬಳಸಿದ ಕವಿತೆಗಳೇ ಈ ಸಂಕಲನದ ಒಳ್ಳೆಯ ಕವಿತೆಗಳು ಎಂದೇನೂ ಇಲ್ಲ. ನಿಮ್ಮ ಕವಿತೆಗಳಿಗೆ ಅವುಗಳದೇ ಆದ ಗತಿಯಿದೆ. ಅದು ಎಂತಹುದು ಎಂದು ನಾನು ಗ್ರಹಿಸಿದ ರೀತಿ ಇದು. + +(ಆರ್.ತಾರಿಣಿ ಶುಭದಾಯಿನಿ) + +ನಿಮ್ಮ ಕಾವ್ಯದಲ್ಲಿ ನೀವು ಬರೆಯಲೇಬೇಕೆಂಬ ಮಾತುಗಳು ಇರುವಂತೆಯೇ ನೀವು ಬರೆದೂ ಬರೆದೂ ಜಾಳಾಗಬಹುದಾದ ಕೆಲವು ಸಂವೇದನೆಗಳು ಸಹ ಜಾಗ ಪಡೆದಿವೆ. ಇದು ಪ್ರತಿ ಕವಿಗೂ ಇರುವ ತೊಡಕು. ನೀವು ಬರೆಯಲಾರಂಭಿಸಿದ ತಕ್ಷಣ ನಿಮಗೆ ಒಂದು ಶೈಲಿಯು ಸಿದ್ಧಿಸುತ್ತದೆ. ಅದನ್ನು ಬಳಕೆ ಮಾಡುತ್ತಾ ಹೋದಂತೆ ಅದರ ಸಾರ ಕಡಿಮೆಯಾದಂತೆ ಅನ್ನಿಸುತ್ತದೆ. ಪ್ರಾಯಶಃ ನೀವು ಆವಾಹಿಸಿಕೊಳ್ಳುವ ಪ್ರೀತಿಯ ವ್ಯಾಮೋಹ ಅನೇಕ ಕವಿತೆಗಳಲ್ಲಿ ಪುನಾರಾವರ್ತನೆ ಆಗುವ ಅಪಾಯದಲ್ಲಿವೆ. ಒಂದು ವಿಷಯವನ್ನು ವೃತ್ತಾಕಾರವಾಗಿ ನಿಧನಿಧಾನವಾಗಿ ಪ್ರವೇಶಿಸಿ ಅದರ ಗಾಢತೆಯನ್ನು ಅರಿಯುವುದು ಒಂದು ತಂತ್ರ. ಆದರೆ ಆ ಕಾವ್ಯತಂತ್ರ ಕೊಂಚ ಮುಗ್ಗರಿಸಿದರೆ ಕವಿಯ ಆಶಯವು ಒಂದೇ ತೆರನಾದದ್ದೆಂಬ ಸಂದೇಶವನ್ನು ಹೊಮ್ಮಿಸುತ್ತದೆ. ನಿಮ್ಮ ಕಾವ್ಯಯಾನದಲ್ಲಿ ಇನ್ನಷ್ಟು ಒಳಸುಳಿಗಳನ್ನು ಹಾಯುವ ಮೂಲಕವೇ ಇವನ್ನೆಲ್ಲ ಬಗೆಹರಿಸಿಕೊಳ್ಳಬೇಕಿದೆ. + +ನಿಮ್ಮ ಕವಿತೆಗಳನ್ನು ಓದುತ್ತಿದ್ದಾಗ ನನ್ನ ಗ್ರಹಿಕೆಯಲ್ಲಿ ಕಂಡುಕೊಂಡಿದ್ದೇನೆಂದರೆ ನೀವು ಉದ್ದೇಶಪೂರ್ವಕವಾಗಿ ಎಲ್ಲಿಯೂ ಸಾಮಾಜಿಕವಾಗಲು ಯತ್ನಿಸಿಲ್ಲ. ನಿಮ್ಮ ಸಮಕಾಲೀನರನೇಕರು ಸ್ತ್ರೀ ಎಂಬ ಅಸ್ಮಿತೆಯನ್ನು ಹಿಡಿದುಕೊಂಡು ಒಂದು ವಾದಕ್ಕೆ ಆನಿಸಿಕೊಂಡ ಕವಿತೆಗಳನ್ನು ಬರೆಯುತ್ತಿರುವಾಗ ನಿಮಗೆ ಅದರ ಕಡೆ ಗಮನ ಹೋಗದಿರುವುದು ಆಶ್ಚರ್ಯ ಎನ್ನಿಸಿತು. ಸ್ತ್ರೀಯಾಗಿ ಹುಟ್ಟಿದ ತಕ್ಷಣ ಆಕೆಗೆ ಒದಗಿ ಬರುವ ಹೆಣ್ತನದ ಸಾಮರ್ಥ್ಯ ಹಾಗೂ ಆಕೆಯನ್ನು ಬಾಧಿಸುವ ಸಾಮಾಜಿಕ ಪೀಡನೆಗಳು ಇವುಗಳ ನಡುವೆ ಇಟ್ಟು ನೋಡುವ ದ್ವಿತ್ವದ ಮಾರ್ಗವೊಂದು ನಮ್ಮ ಮುಂದು ಈಗಾಗಲೇ ತೆರೆದುಕೊಂಡಿದೆ. ಈ ದಿಸೆಯಲ್ಲಿ ಹೆಣ್ಣನ್ನು ಶೋಷಿತಳನ್ನಾಗಿ ನೋಡುವುದೊ ಅಥವಾ ದೇವಿಯನ್ನಾಗಿ ಪರಿಭಾವಿಸುವುದನ್ನೊ ಕನ್ನಡದ ಸ್ತ್ರೀ ಕವಿತೆಗಳು ಮಾಡುತ್ತಾ ಬಂದಿವೆ. ಇದನ್ನು ಮುಟ್ಟಿಯೂ ಮುಟ್ಟಿಕೊಳ್ಳದಂತೆ ನೀವು ಹೆಣ್ಣಾಗುವ ಹೊಸ ರೀತಿಯನ್ನು ನಿಮ್ಮ ಈ ಕವಿತೆಗಳಲ್ಲಿ ಕಾಣಿಸುತ್ತೀರಿ. ಅದು ಮೆಚ್ಚುಗೆಯ ಅಂಶ. ಒಂದು ಅಭಿವ್ಯಕ್ತಿಯ ಮಾರ್ಗ ಕ್ಲೀಷೆಯಾಗುವಾಗ ಸಹಜವಾಗಿ ಇನ್ನೊಂದು ಕಡೆ ಹೊರಳುವುದು ಸೃಜನಶೀಲತೆಯ ಲಕ್ಷಣವೇ. ಅದರ ಸೆಳಕು ನಿಮ್ಮಲ್ಲಿ ಕಾಣಿಸಿತು. + +ನಿಮ್ಮ ಕವಿತೆಗಳ ಅಚ್ಚು, ಮಾದರಿ ಹೆಚ್ಚಾಗಿ ಭಕ್ತಿ ಕವಿತೆಗಳಿಗೆ ಹತ್ತಿರವಾದಂತವು. ಭಕ್ತಿಯ ಆರ್ದ್ರತೆ, ವಿನಯ, ತನ್ನ ತಾನರಿವ ಹೊಯ್ದಾಟ ಇವೆಲ್ಲಾ ಭಾವಗಳು ನಿಮ್ಮ ಕವಿತೆಗಳಲ್ಲಿ ನಿರಂತರವಾಗಿ ಕಾಣುತ್ತವೆ. ಕೆಲವೊಮ್ಮೆ ಅವು ಗಾಢವಾಗಿದ್ದರೆ ಇನ್ನೂ ಕೆಲವೊಮ್ಮೆ ಅಳ್ಳಕವೂ ಆಗಿವೆ. ಆದರೆ ನಿಮ್ಮ ತುಡಿತ ನಿಮ್ಮನ್ನು ಕನ್ನಡದ ಭಕ್ತಿ ಪರಂಪರೆಯ ಚುಂಗಿಗೆ ಕಟ್ಟಿಹಾಕುವಂತಿದೆ. + + + +ಚೈತ್ರಾ ನಿಮ್ಮ ಕವಿತೆಗಳನ್ನು ಓದಲು ಹಿಡಿದು ಸರಿಸುಮಾರು ಆರೇಳು ತಿಂಗಳುಗಳೇ ಕಳೆದವು. ಈ ಅವಧಿಯಲ್ಲಿ ನನಗೆ ಕವಿತೆಗಳ ಬಗ್ಗೆ ಅನ್ನಿಸಿದನ್ನು ಬರೆಯುತ್ತಿದ್ದೇನೆ. ಗೊತ್ತಿಲ್ಲ, ಇತ್ತೀಚಿನ ಕವಿತೆಗಳ ಪ್ರವಾಹದಲ್ಲಿ ನೀವು ಬರೆದ ಕವಿತೆ, ನಾನು ಬರೆವ ಮುನ್ ಮಾತುಗಳು ನಮ್ಮನ್ನು ಎಲ್ಲಿ ನಿಲ್ಲಿಸುತ್ತವೆಯೋ ಎಂದು. ಆದರೆ ಪ್ರತಿ ಓಟಕ್ಕೂ ಉಸಿರ‍್ದಾಣವಿರುವಂತೆ ಮತ್ತೆ ಮತ್ತೆ ನಮ್ಮ ತಲೆಮಾರುಗಳು ಕವಿತೆಯ ಕಡೆಗೇ ಹೊರಳುತ್ತಿರುವುದನ್ನು ನೋಡಿದರೆ ಕವಿತೆಯ ಬಗ್ಗೆ ಆಶಾಭಾವ ಹುಟ್ಟುತ್ತದೆ. ನೀವು ಎಂಜಿನಿಯರಿಂಗ್ ಪದವೀಧರರಾಗಿ ಕುಶಲಕರ್ಮದ ಕಡೆ ಚಿತ್ತ ಹರಿಸದೆ ಮನಃಕ್ಷೇಶವ ನೀಗಿಸುವ ಅಮೃತಬಳ್ಳಿಯ ಕಷಾಯದತ್ತ ತಿರುಗಿದ್ದೀರಿ. ಈ ಋಜುಮಾರ್ಗ ನಿಮ್ಮನ್ನು ನಿಮ್ಮ ಬದುಕನ್ನು ನಡೆಯಿಸಲಿ. + +(ಕೃತಿ: ಪೆಟ್ರಿಕೋರ್‌ (ಕವನ ಸಂಕಲನ), ಲೇಖಕರು: ಚೈತ್ರ ಶಿವಯೋಗಿಮಠ, ಪ್ರಕಾಶಕರು: ಆತ್ಮಿಕಾ ಪುಸ್ತಕ, ಬೆಲೆ:120) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_199.txt b/Kenda Sampige/article_199.txt new file mode 100644 index 0000000000000000000000000000000000000000..bd22b2eca35c5c456dd70db374a255dde31a7849 --- /dev/null +++ b/Kenda Sampige/article_199.txt @@ -0,0 +1,35 @@ +ಕನ್ನಡದಲ್ಲಿ ಸಣ್ಣ ಕಥೆಗಳನ್ನು ಓದಬೇಕೆಂದರೆ ಪತ್ರಿಕೆಗಳನ್ನೇ ಕಾಯುವ ಕಾಲ ಒಂದಿತ್ತು. ಆದರೆ ಈಗ ಹಲವಾರು ರೀತಿಯಲ್ಲಿ ಸಮಗ್ರವಾಗಿ ನಮಗೆ ದೊರಕುವ ಕಥಾ ಸಂಕಲನಗಳು ಒಂದು ರೀತಿಯಲ್ಲಿ ಕಾದಂಬರಿಯ ನಂತರ ಜನಪ್ರಿಯ ಪ್ರಕಾರವೆಂದೆ ಹೇಳಬಹುದು. ಸಣ್ಣ ಕಥೆಗಳನ್ನು ಬರೆಯುವುದು ನನ್ನ ಮಟ್ಟಿಗೆ ಕಷ್ಟವೇ. ಏಕೆಂದರೆ ಲೇಖಕರು ಹೇಳ ಬಯಸುವುದನ್ನೆಲ್ಲಾ ಹೆಚ್ಚು ವಿಸ್ತರಿಸದೆ ನೇರವಾಗಿ ಕಥೆಯ ಮೂಲಕ್ಕೆ ಕೈ ಹಾಕಬೇಕು. ಹಾಗೆ ಓದುಗರಿಗೆ ತಲುಪಬೇಕಾದ ಭಾವನೆಗಳಾಗಲಿ, ವಿಚಾರಗಳಾಗಲಿ, ಲೋಪವಿಲ್ಲದಂತೆ ಕಥೆಯಲ್ಲಿ ಬರುವ ಎಲ್ಲಾ ಆಯಾಮಗಳನ್ನು ಬಿಡದೆಯೂ ಹೆಚ್ಚು ಎಳೆಯದೆಯೂ ಓದುಗರ ಮನಮುಟ್ಟುವಂತೆ, ಬರೆಯುವುದು ಸುಲಭದ ಮಾತಲ್ಲ. + +(ತೇಜಸ್ವಿನಿ ಹೆಗಡೆ) + +ನನಗೆ ಮಾಸ್ತಿಯವರ ಸಣ್ಣ ಕಥೆಗಳು ಬಹಳ ಇಷ್ಟ ಏಕೆಂದರೆ ಅವರ ಕಥೆಗಳಲ್ಲಿ ಯಾವ ಉತ್ಪ್ರೇಕ್ಷೆಯು ಇಲ್ಲದೇ ಜೀವನದಲ್ಲಿ ಎಲ್ಲರೂ ಸರಿಸಮ ಕಾಣುವುದನ್ನೇ, ಆ ಸಹಜತೆಯನ್ನೇ ತಿಳಿಹಾಸ್ಯದೊಂದಿಗೆ ಬೆರೆಸಿ ಮತ್ತೊಂದು ದೃಷ್ಟಿಕೋನದಿಂದ ಕಥೆ ಹೇಳುವ ರೀತಿ, ಮತ್ತು ಅವುಗಳಲ್ಲಿನ ಗ್ರಾಮೀಣ ಸೊಗಡು ಬಹಳ ಚೆನ್ನ. ಅಂತಹದ್ದೇ ಸಣ್ಣ ಕಥೆಗಳನ್ನು ಮತ್ತೆ ಓದಬೇಕೆಂಬ ಹಪಹಪಿಯನ್ನು ನೀಗಿಸುವಂತೆಯೇ ವಾರದ ಹಿಂದೆ ಯುವಕತೆಗಾರ್ತಿ ತೇಜಸ್ವಿನಿ ಹೆಗಡೆ ಬರೆದಂತಹ ಹೊಸ ಕಥಾ ಸಂಕಲನ ಜ್ಯೋತಯ್ಯನ ಬಿದಿರು ಬುಟ್ಟಿ ಕೈ ಸೇರಿತ್ತು. ಈ ಹಿಂದೆ ಅವರ ಕವನ ಸಂಕಲನ ಕಾದಂಬರಿಗಳನ್ನು ಓದಿ ಆನಂದಿಸಿ ಮೆಚ್ಚಿದ ನನಗೆ, ಈ ಕಥಾ ಸಂಕಲನ ಕೈ ಸೇರಿದ್ದೆ ತಡ ಅಂದೇ ಮೊದಲ ಎರಡು ಕಥೆಗಳನ್ನು ಓದಿ ಮುಗಿಸಿದೆ. ಆಗ ನನಗನ್ನಿಸಿದ್ದು= ಈ ಕಥೆಗಳನ್ನು ನಿಜವಾಗಲು ಆಸ್ವಾದಿಸಬೇಕಾದರೆ ದಿನಕ್ಕೊಂದು ಕಥೆಯನ್ನು ಮಾತ್ರ ಓದಬೇಕು ಮತ್ತು ಆ ಕಥೆಯನ್ನು ಮೆಲುಕು ಹಾಕುತ್ತಾ ಆ ಪಾತ್ರಗಳಲ್ಲಿ ನಾವು ಒಂದಾಗಬೇಕು. ಆಗ ಲೇಖಕಿ ನುರಿತ ಶಿಲ್ಪಿಯಂತೆ ಕೆತ್ತಿರುವ ಅದ್ಭುತ ಪಾತ್ರಗಳ ಮೂಲಕ ಜೀವನ ಒಡ್ಡುವ ಎಷ್ಟೇ ಕ್ಲಿಷ್ಟಕರವಾದ ಸವಾಲುಗಳನ್ನಾಗಲಿ ಎದುರಿಸಿ ಬದುಕನ್ನು ಕಟ್ಟುಕೊಳ್ಳುವ ರೀತಿ ಮನದಟ್ಟಾಗುತ್ತದೆ. + +ಕಥಾ ಸಂಕಲನದ ಬಗ್ಗೆ ಹೇಳುವುದಕ್ಕೆ ಮುನ್ನ ಕೊಂಚ ಲೇಖಕಿಯ ಕಥೆ ಹೇಳುವ ಪರಿ ಅಥವಾ ಈ ಕಥಾಸಂಕಲನ ಅಷ್ಟೇಕೆ ನನಗೆ ಆಪ್ತವಾಯಿತು ಎಂದು ಹೇಳಬಯಸುವೆ. ಸಣ್ಣ ಕಥೆಯಾಗಲಿ ಕಾದಂಬರಿಯಾಗಲಿ ಅಥವಾ ಸಾಹಿತ್ಯದ ಯಾವುದೇ ಪ್ರಕಾರಗಳಾಗಲಿ ಓದುಗರನ್ನು ಸಂಪಾದಿಸಬೇಕಾದರೆ ಕಥೆ ಹೇಳುವ ಅಥವಾ ಬರೆಯುವ ರೀತಿ ಬಹು ಮುಖ್ಯ. ಈ ಕಥಾ ಸಂಕಲನವನ್ನು ಓದಿ ಮೆಚ್ಚಿದ ನನಗೆ ಲೇಖಕಿಯ ಕಥೆ ಹೇಳುವ ವೈಖರಿಯಲ್ಲಿ ಮೂರು ಪ್ರಮುಖ ಅಂಶಗಳು ಕಂಡವು. ಅವೇ ನನಗೆ ಈ ಕಥಾ ಸಂಕಲನವನ್ನು ಬಹಳ ಆಪ್ತವಾಗಿಸಿ ಬಿಟ್ಟಿತು. + +ಮೊದಲನೆಯ ಅಂಶವೆಂದರೆ ಇಲ್ಲಿ ಬರುವ ಎಲ್ಲಾ ಕಥೆಗಳು ಕುತೂಹಲ ಕೆರಳಿಸಿ ಓದುಗರನ್ನು ಗಟ್ಟಿಯಾಗಿ ಹಿಡಿದುಕೊಂಡು ಹೋಗುತ್ತಾ ಅವರು ಊಹಿಸಲೂ ಆಗದ ಅಂತ್ಯವನ್ನು ಮುಟ್ಟಿಸಿ ಬಿಡುವ ಪರಿ ಲೇಖಕಿಯ ಕಥಾಹಂದರದ ಮೇಲಿನ ಹಿಡಿತವನ್ನು ಎತ್ತಿ ಹಿಡಿಯುತ್ತದೆ. + +ಎರಡನೆಯ ಅಂಶವೆಂದರೆ ಕಥೆಗಳಲ್ಲಿ ಬಳಸಿರುವ ಭಾಷೆ. ಕಥೆಗಳ ಕಾಲ, ನಡೆಯುವ ಸ್ಥಳಗಳನ್ನು ನಿರ್ಧರಿಸುವ, ಪಾತ್ರಗಳನ್ನು ಜೀವಂತಗೊಳಿಸುವ, ಕಥೆಗಳಿಗೆ ಬಲ ನೀಡುವ ಸಾಮರ್ಥ್ಯ ಇರುವುದೇ ಭಾಷೆಗೆ. ಅಂತೆಯೇ ಇಲ್ಲಿ ಬರುವ ಕಥೆಗಳಲ್ಲಿನ ಪ್ರಾಂತ್ಯಗಳನ್ನು ಬಿಂಬಿಸುವಲ್ಲಾಗಲಿ, ಗ್ರಾಮೀಣ ಕಥೆ ಹೇಳುವುದಕ್ಕಾಗಲಿ, ಐತಿಹಾಸಿಕ ಘಟನೆಯನ್ನು ಹೇಳುವುದಕ್ಕಾಗಲಿ, ಆಧುನಿಕ ಕಥೆಗಳನ್ನು ಹೇಳುವುದಕ್ಕಾಗಲಿ, ಬಳಸಿರುವ ಭಾಷೆ ಸರಳ ಹಾಗೂ ನಿರಾಡಂಬರವಾಗಿದ್ದರೂ ಪ್ರಾಂತ್ಯಕ್ಕೆ ತಕ್ಕಂತೆ ಸಮಯವನ್ನು ಸೂಚಿಸುವಂತೆ ಇರುವುದು ಗಮನಾರ್ಹ. + +ಇನ್ನು ಮೂರನೆಯ ಹಾಗೂ ಬಹು ಮುಖ್ಯ ಅಂಶವಾದ ಕಥಾ ವಸ್ತುಗಳು ಮತ್ತು ನಿರೂಪಣಾ ಶೈಲಿ. ಇಲ್ಲಿರುವ ಕಥೆಗಳ ಕಥಾವಸ್ತು ಬಹುತೇಕ ಮನುಷ್ಯರ ಕಷ್ಟ ಸುಖ ನೋವು ನಲಿವಿನದೇ ಆಗಿದ್ದರೂ, ಕಥೆಗಳ ಮೂಲಕ ಹೊರಬರುವ ವ್ಯಾಕುಲತೆ ಸ್ಪಂದನೆ ಲೇಖಕರಿಗೆ ಇರುವ ಬದುಕಿನ ಅನುಭವಗಳಿಂದಲೇ ಮೂಡಿರಬಹುದು, ಹಾಗಾಗಿ ಅವುಗಳು ಗಟ್ಟಿ ಕಥೆಗಳಾಗಿ ರೂಪುಗೊಂಡಿವೆ. ಇನ್ನು ನಿರೂಪಣೆಗೆ ಬಂದರೆ ಬಹುಶಃ ಮಾಸ್ತಿಯವರಂತೆ ಲೇಖಕಿಯು ಕವಯಿತ್ರಿಯೂ ಆಗಿರುವುದರಿಂದ ಇರಬೇಕು ಕಥೆಗಳನ್ನು ನಿರೂಪಿಸುವುದಕ್ಕೆ ಬಳಸುವ ಉಪಮೆಗಳು ಸಂದರ್ಭೋಚಿತವಾಗಿದ್ದು ಇವುಗಳಿಂದ ಹೊರಹೊಮ್ಮುವ ಭಾವನೆಗಳು ನೇರವಾಗಿ ಓದುಗರನ್ನು ತಟ್ಟುತ್ತವೆ. ಈ ಮೂರು ಅಂಶಗಳಿಂದ ಲೇಖಕಿಯು ಉತ್ತಮ ಕತೆಗಾರರ ಪಟ್ಟಿಯನ್ನೇರುವುದರಲ್ಲಿ ಸಂಶಯವೇ ಇಲ್ಲ. + + + +ಇನ್ನು ‘ಜ್ಯೋತಯ್ಯನ ಬಿದಿರು ಬುಟ್ಟಿ’ ಕಥಾಸಂಕಲನಕ್ಕೆ ಬರುವುದಾದರೆ ಇದು 10 ಕಥೆಗಳುಳ್ಳ ಪುಟ್ಟ ಸಂಕಲನ. ನನ್ನ ಅಂತರಂಗವನ್ನು ಕಲಕಿ ಭಾವುಕಳನ್ನಾಗಿಸಿದ್ದು ‘ನೂಪುರ’ ಮತ್ತು ‘ನೀಲಿನಕ್ಷತ್ರ’ ಕಥೆಗಳು. ನೂಪುರದಲ್ಲಿನ ನಾಯಕಿ ದೀಪ್ತಿಯ ನೋವು ನಿರಾಶೆ ಹೇಗೆ ಕಲೆಯಲ್ಲಿ ಅಂತ್ಯ ಕಂಡು, ಜೀವನದಲ್ಲಿ ನಡೆದ ದುರ್ಘಟನೆಯ ಮೂಲವನ್ನೇ ಆಧಾರವಾಗಿಟ್ಟುಕೊಂಡು ಜೀವನದ ಕನಸನ್ನು ನನಸಾಗಿಸಿ ಸಂತೋಷವನ್ನು ಕಂಡುಕೊಂಡರೆ, ನೀಲಿ ನಕ್ಷತ್ರದ ವಾರಿಜತ್ತೆಯ ದುರಾದೃಷ್ಟದ ನೀರಸ ಬದುಕು ದುಃಖ ಉಂಟು ಮಾಡಿದರೂ, ಅವರ ಮಡುಗಟ್ಟಿರುವ ನೋವನ್ನು ಒಮ್ಮೆಲೇ ಹೊರ ಹಾಕುವಂತೆ ಅವರನ್ನು ಪ್ರೇರೇಪಿಸಿ ಆ ಭಾರದಿಂದ ವಿಮುಕ್ತಿ ಮಾಡಿದ ಶಾರ್ವರಿ ಕಂಡದ್ದು ದುಗುಡದ ಬದುಕನ್ನು ಲೆಕ್ಕಿಸದೆ ಸಂತೋಷವನ್ನು ಜೀವನದ ಒಂದು ಚಿಕ್ಕ ಸಿಹಿ ಸಂಗತಿಯನ್ನೇ ಹಿಡಿದು ಬದುಕಿರುವ ತುಂಬು ಹೃದಯದ ಹಿರಿಜೀವವನ್ನು! + +ಸಂಕಲನದ ಹೆಸರೇ ಆದ ‘ಜೋತಯ್ಯನ ಬಿದುರು ಬುಟ್ಟಿ’ಯ ಜೋತಯ್ಯ ಓರ್ವಸಾಮಾನ್ಯ ಆಳಾದರೂ ಜೀವನದ ಬಹುಮುಖ್ಯ ಪಾಠವನ್ನು ಯಾರೂ ಎಂದೂ ಮರೆಯಲಾಗದಂತೆ ಕಲಿಸಿ ಬಿಡುವ. ಏನನ್ನು ಹೇಳದೆ ಬರೀ ತನ್ನ ತಂದೆಯಾದ ಕರ್ತವ್ಯವನ್ನು ನಿಭಾಯಿಸುವ ರೀತಿ ಎಂತಹ ಹೃದಯವನ್ನು ಸಹ ಕರಗಿಸಿ ಬಹುಕಾಲ ಅವನು ಮನದಲ್ಲಿ ಉಳಿದುಬಿಡುತ್ತಾನೆ. + +‘ಯಶವಂತಿ’ ಮನುಷ್ಯರಿಗಿಂತ ಪ್ರಾಣಿಗಳ ಸ್ವಾಮಿ ನಿಷ್ಠೆ ಎಷ್ಟರ ಪಟ್ಟು ಹೆಚ್ಚಿರುತ್ತದೆ ಎಂಬುದನ್ನು, ಪಾಲಕರ ಮೇಲಿನ ಪ್ರೀತಿ ಅವರ ಕ್ಷೇಮಕ್ಕಾಗಿ ಮಿಡಿಯುವ ಮನಸ್ಸನ್ನು ಬಿಂಬಿಸುತ್ತದೆ. + +‘ರತ್ನಗಂಧ’ದ ರತ್ನ ತನ್ನ ಜೀವನದ ಪ್ರಮುಖ ನಿರ್ಧಾರವನ್ನು ಹಳ್ಳಿಗರ, ಸಮಾಜದ ವಿರುದ್ಧವಾಗಿ ತೆಗೆದುಕೊಂಡು ಅದನ್ನು ಸಮರ್ಥಿಸಿಕೊಳ್ಳುವ ಪರಿ ಮತ್ತು ತನ್ನ ಸ್ವತಂತ್ರ ಮನೋಭಾವವನ್ನು ಪ್ರದರ್ಶಿಸುವ ರೀತಿ ಓದುಗರಿಂದ ಶಭಾಷ್ ರತ್ನ ಎಂಬ ಉದ್ಗಾರವನ್ನು ಅಪ್ರಯತ್ನಕವಾಗಿ ಹೊರಡಿಸಿಕೊಳ್ಳುತ್ತದೆ. ‘ಹಸಿರು ಪತ್ತಲ’ ಕತೆ ಸಂಬಂಧಗಳ ಮತ್ತು ಒಲವಿನ ತ್ರಾಣ ಬಹು ದೂರ ಸಾಗಬಲ್ಲವೂ ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಡುತ್ತದೆ. + +‘ತಿರುವಿನಾಚೆಯ ಸತ್ಯ’ ಈ ಕಥೆಯಲ್ಲಿನ ಸಂಬಂಧಗಳ ಬಳಕೆ ಬಹಳ ಆಶ್ಚರ್ಯಕರವಾದದ್ದು. ಸ್ವಾರ್ಥಕ್ಕಾಗಿ ತನ್ನ ಕೆಲಸಕ್ಕಾಗಿ ಸೀಮಾಳನ್ನು ಉಪಯೋಗಿಸಿಕೊಳ್ಳ ಬಯಸುವ ಹರೀಶ್ ಮಾವ ಒಂದು ಕಡೆಯಾದರೆ ಒಂದು ಕಾಲದಲ್ಲಿ ಸೀಮಾ ನನ್ನ ಸ್ನೇಹಿತೆ ಎಂದು ಪ್ರಾಣಾಪಾಯವನ್ನು ಲೆಕ್ಕಿಸದೆ ಅವಳ ಸಹಾಯಕ್ಕಾಗಿ ಬಂದು ನಿಲ್ಲುವ ವಾಣಿ ಇಬ್ಬರೂ ತಿರುವಿನಾಚೆಯ ಸತ್ಯಗಳೇ. + +‘ಬಾಳೆ ಮರ’ ಒಂದು ಗ್ರಾಮೀಣ ಸೊಗಡಿನ ಸಾಮಾಜಿಕ ಕಥೆಯಾದರೂ ಸಮಾಜದಲ್ಲಿನ ಒಳಿತು ಕೆಡುಕು ಪಾತ್ರಗಳ ಮೂಲಕ ಹೇಳುವ ಒಂದು ಚಂದದ ಕಥೆ. + +‘ತೀರದ ಯಾನ’ ದಾಂಪತ್ಯದಲ್ಲಿನ ಅಸಹಾಯಕತೆಗೆ ನಾಂದಿ ಹಾಡುವ ದಿಟ್ಟತನದಿಂದ ನಿರ್ಣಾಯಕವಾಗಿ ನಿಲ್ಲುವ ಸುಮಾ ಅವಳನ್ನು ಸಂತೈಸಿ ಹೋಗಲು ಬಂದ ವಸುಧ, ಈ ಇಬ್ಬರೂ ಹೆಂಗಳೆಯರ ನೆನಪಿನ ದೋಣಿಯಲ್ಲಿ ಬರುವ ಕಾಳಜಿ… ಮೂವರು ಸೇರಿ ಜೀವನದ ಪಾಠಗಳನ್ನು ಅಲೆ ಅಲೆಯಾಗಿ ಕಲಿಸುವರು. + + + +‘ಮುಸ್ಸಂಜೆ ಬೆಳಕು’ ನಿಜಕ್ಕೂ ವಿಷ್ಣು ಮಾಸ್ತರರ ಮೂಲಕ ಕಳೆದುಕೊಂಡದ್ದನ್ನು ಮತ್ತೆ ಪಡೆಯುವ ಒಂದು ವಿಶಿಷ್ಟವಾದ ಹಾಗೂ ಬೆಳಕಿನ ಮಾರ್ಗವನ್ನು ತೋರಿಸುವ ಸೊಗಸಾದ ಪುಟ್ಟ ಕಥೆ. ಪುಸ್ತಕ ಚಿಕ್ಕದಾದರೂ ಬದುಕಿನ ಬಹುದೊಡ್ಡ ಪಾಠಗಳನ್ನೇ ಕಲಿಸಿ ಬಿಡುವ ಅತ್ಯುತ್ತಮ ಕಥಾ ಸಂಕಲನ ಎಂಬುದು ನನ್ನ ಅಭಿಪ್ರಾಯ. + +ಸಿಂಧು ಜಗನ್ನಾಥ್ ಉದ್ಯಮಿ. ಪ್ರಸ್ತುತ DSCA ಯಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಕೆಲಸ ಮಾಡುತ್ತಿದ್ದಾರೆ, ಜೊತೆಗೆ ಅವರ ಆರಂಭಿಕ ಕಂಪನಿ “ಪ್ರಥಮ SRSTI” ಮತ್ತು ಆರ್ಕಿಟೆಕ್ಚರ್ ಸ್ಟುಡಿಯೊವನ್ನು ನಡೆಸುತ್ತಿದ್ದಾರೆ. ಕನ್ನಡ ಸಾಹಿತ್ಯದಲ್ಲಿ ವಿಶೇಷ ಒಲವಿದ್ದು, “ಕನ್ನಡ ಪುಸ್ತಕ ಪರಿಚಯ” ಎಂಬ ಪಾಡ್‌ಕಾಸ್ಟ್ ಆರಂಭಿಸಿದ್ದಾರೆ \ No newline at end of file diff --git a/Kenda Sampige/article_2.txt b/Kenda Sampige/article_2.txt new file mode 100644 index 0000000000000000000000000000000000000000..b339b468ddae4883b7fdc7398d2800df311838fc --- /dev/null +++ b/Kenda Sampige/article_2.txt @@ -0,0 +1,51 @@ +ಹೋದ ಸಂಚಿಕೆಯಲ್ಲಿ ಯಶವಂತಪುರದ ಕತೆ ಶುರು ಹಚ್ಚಿದ್ದೆ ಮತ್ತು ಅದಕ್ಕೆ ಹೆಸರು ಬಂದದ್ದು ಹೇಳಿದ್ದೆ. ನನ್ನ ಗೆಳೆಯ ವೆಂಕಟೇಶ್ ಪ್ರಸಾದ್ ಅವರು ಯಶವಂತಪುರ ಹೆಸರು ಯಶವಂತ ರಾವ್ ಘೋರ್ಪಡೆ (ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ಅವರ ಆಪ್ತರು)ಅವರ ನೆನಪಿಗೆ ಇರಬಹುದು ಅಂತ ವಿವರ ತಿಳಿಸಿದರು. ಆದರೆ ಯಶವಂತಪುರ ಪ್ರದೇಶಕ್ಕೆ ಸುಮಾರು ಮೂರೂವರೆ ಶತಮಾನದ ಇತಿಹಾಸ ಇದೆ. ಶ್ರೀ ಘೋರ್ಪಡೆ ಅವರು ಈಚಿನ ಪೀಳಿಗೆ(೧೯೦೮_೧೯೯೬)ಅದರಿಂದ ಅವರ ನೆನಪಿಗೆ ಈ ಹೆಸರು ಬಂದಿರಲಾರದು. + +ಅಂದಹಾಗೆ ನಾನು ಬೆಳೆದ ರಾಜಾಜಿನಗರ ಮತ್ತು ಯಶವಂತಪುರ ನಡುವೆ ಹತ್ತು ಕಿಮೀ ಅಂತರ ಅಷ್ಟೇ. ಅಂತಹ ಯಶವಂತಪುರ ನನ್ನ ಭೇಟಿ ಎಪ್ಪತ್ತರ ದಶಕದ ವರೆಗೆ ಒಂದೈದಾರು ಸಲ ಅಷ್ಟೇ. ಈ ಭೇಟಿ ಸಹ ಕೆಲವು ಇನ್ನೂ ಮಾಸಿಲ್ಲ. ಅದರ ಹಿನ್ನೆಲೆ ಅಂದರೆ ನಾನು ಮೊದಲು ಭೇಟಿ ಮಾಡಿದ್ದು ಇನ್ನೂ ಹಸಿರು ಹಸಿರು. + +ನಮ್ಮ ತಂದೆ ಕಂಟ್ರಾಕ್ಟರ್‌ಗೆ ಕಾಂಟ್ರಾಕ್ಟ್ ಕೆಲಸ(sub contractor to main contractor)ಮಾಡ್ತಾ ಇದ್ದರು ಅಂತಾ ಹೇಳಿದ್ದೆ. ಆಗ ಅಂದರೆ ಅರವತ್ತರ ದಶಕದ ಆರಂಭ, ಯಶವಂತಪುರದ ರೈಲ್ವೆ ಸ್ಟೇಷನ್ನಿನ ಒಂದು ಪ್ಲಾಟ್‌ಫಾರಂ ಕೆಲಸ ಆಗುತ್ತಿತ್ತು. ಅಲ್ಲಿ ಕೆಲಸ ಮಾಡುತ್ತಿದ್ದ ಕೆಲಸದವರನ್ನ ಮನೇಲಿ ಕೊಂಚ ರಿಪೇರಿ ಕೆಲಸ ಇದೆ ಅಂತ ನಮ್ಮಪ್ಪ ಕಳಿಸಿದ್ದರು. ಕೆಲಸಕ್ಕೆ ಬಂದವನು ಕೆಲಸ ಮುಗಿಸಿದ ನಂತರ ಮನೆಯಲ್ಲಿ ಇದ್ದ ಒಂದು ಹಳೆಯ ಆದರೆ ಚೆನ್ನಾಗಿದ್ದ ಒಂದು ಹತ್ತು ಅಡಿ ನಲ್ಲಿ ಪೈಪ್ ಕೈಲಿ ಹಿಡಕೊಂಡು ಹೋದ. ಅದು ಗಟ್ಟಿ ಮುಟ್ಟಾಗಿದ್ದ ಕಬ್ಬಿಣದ ಪೈಪ್, ಒಂದು ತುದಿಯಲ್ಲಿ ಒಂದೂವರೆ ಅಡಿಗೆ ಬಾಗಿಸಿದ್ದರು. ಆ ಪೈಪ್‌ನಿಂದ ತೊಟ್ಟಿಗೆ ನಲ್ಲಿಯಿಂದ ನೀರು ಬಿಡ್ತಾ ಇದ್ದೆವು. ನಲ್ಲಿ ತೊಟ್ಟಿ ಪಕ್ಕ ಒಂದು ಆರಡಿ ದೂರದಲ್ಲಿ ನಲ್ಲಿ ಕೊಂಚ ಮೇಲಿತ್ತು. ಇಂತಹ ಸರ್ವೀಸ್ ಕೊಡುತ್ತಿದ್ದ ಪೈಪ್ ಹೋದರೆ ನೀರು ಹಿಡಿಯೋದು ಹೇಗೆ? ನೀರು ಬಕೇಟ್‌ನಲ್ಲಿ ಹಿಡಿದು ಅದನ್ನ ತೊಟ್ಟಿಗೆ ಸುರಿಯುವ ಕೆಲಸ ನಾನು ಮಾಡಬೇಕಾಗುತ್ತೆ…. ಹೀಗೆ ನನ್ನ ತಲೆ ಓಡಿತು. + +ಸರಿ ಸೀದಾ ಅವರ ಹಿಂದೆ ಹೋದೆ ನಾ.. ಅವರಿಗೆ ನಾನು ಹಿಂದೆ ಹೋಗಿದ್ದು ಗೊತ್ತಿಲ್ಲ. ಸಂಜೆ ನಾಲ್ಕರ ಸಮಯ. ಸೀದಾ ಕೆಲಸದ ತಾಣಕ್ಕೆ ಹೋದರು. ಅದಕ್ಕೆ ಮೊದಲು ಪೈಪ್‌ನ ಅಲ್ಲೇ ಪಕ್ಕದಲ್ಲಿ ಮರಳು ಸರಿಸಿ ಅದರಲ್ಲಿ ಮುಚ್ಚಿಟ್ಟರು. ಅವರು ಅಪ್ಪನ ಮುಂದೆ ನಿಂತು ಮನೆ ರಿಪೇರಿ ವಿಷಯ ಹೇಳ್ತಿದ್ದಾರೆ. ಅಪ್ಪ ಅದನ್ನ ವಿಚಾರಿಸ್ತಾ ಪಕ್ಕಕ್ಕೆ ನೋಡಿದರೆ ನಾನು! ನಮ್ಮ ಅಪ್ಪಂಗೆ ಅವರ ಮಕ್ಕಳ ಪರಿಚಯವೇ ಇಲ್ಲ ಅಂತ ಅಮ್ಮ ಆಗಾಗ ಮನೆಗೆ ಬಂದವರೆಲ್ಲರ ಮುಂದೆ ಹೇಳುತ್ತಿದ್ದಳು. ಅಪ್ಪ ನನ್ನ ಗುರುತು ಹಿಡಿತಾನೋ ಇಲ್ಲವೋ ಅಂತ ನನ್ನ ತಲೆಗೆ ಆಗ ಹೊಳಿಬೇಕಾ..? ಅಪ್ಪ ನನ್ನನ್ನು ನೋಡಿದ್ರಾ, ಮುಂದೆ ಸರಿದೆ. ಅಪ್ಪಾ, ನಾನು ಗೋಪಿ ನಿಮ್ಮ ಕೊನೇ ಮಗ.. ಅಂತ ವಿವರಿಸಲು ಹೊರಟೆ. ಸುತ್ತಲೂ ನಿಂತಿದ್ದ ಕೆಲಸದವರು ಗೊಳ್ ಅಂತ ಖೋರಸ್ಸಿನಲ್ಲಿ ಕೇಕೆ ಹಾಕಿದರು. ಅಪ್ಪನ ಮುಖದಲ್ಲೂ ನಗು ಕಾಣಿಸಿತು. ಬಾ ಅಂತ ಕೈಹಿಡಿದು ಪಕ್ಕ ಕೂರಿಸಿಕೊಂಡರು. ತಲೆ ಸವರುತ್ತಾ ಅಷ್ಟು ದೂರದಿಂದ ಬಂದ್ಯಾ ಅದೂ ನಡಕೊಂಡು…. ಅಂತ ವಿಚಾರಿಸಿದರು. ಪಕ್ಕದಲ್ಲಿದ್ದ ಅವರ ಚೀಲದಿಂದ ಕಡ್ಲೆ ಪುರಿ ತಿನ್ನು ಅಂತ ಕೊಟ್ಟರು. ಅಪ್ಪನಿಗೆ ಕಡ್ಲೆ ಪುರಿ ಅಂದರೆ ಒಂದು ರೀತಿ ಅಡಿಕ್ಷನ್. ಅವರ ಬ್ಯಾಗ್‌ನಲ್ಲಿ ಕಡಲೆ ಪುರಿ ಕಾರಾಸೇವು, ಬೆಲ್ಲದುಂಡೆ ಯಾವಾಗಲೂ ಸ್ಟಾಕ್ ಇರ್ತಾ ಇತ್ತು. ಕಡಲೆ ಪುರಿ ಕಾರಾಸೇವೆ ಬೆಲ್ಲದುಂಡೆ ಇದರ ಕಾಂಬಿನೇಶನ್ ನೀವು ರುಚಿ ನೋಡಿಲ್ಲ ಅಂದರೆ ನೀವು ಜೀವನದಲ್ಲಿ ಅದೇನೋ ಕಳೆದುಕೊಂಡಿದ್ದೀರಿ ಅಂತ ನನ್ನ ಅಚಲವಾದ ನಂಬಿಕೆ. ಒಮ್ಮೆ ಈ ಕಾಂಬೋ ರುಚಿ ನೋಡಿ. ಹಾಗೆ ನೋಡಿದರೆ ನನಗೆ ಈ ಕಾಂಬೊ ಹೆಚ್ಚೆಚ್ಚು ಪ್ರಿಯ ಆಗಿದ್ದು ನಾನು ಕೆಲಸಕ್ಕೆ ಸೇರಿದ ಮೇಲೆ. ಅಲ್ಲಿ ಪ್ರತಿ ಶುಕ್ರವಾರ ಮತ್ತು ಆಯುಧ ಪೂಜೆ ದಿವಸ ಪೂಜೆ ಪ್ರಸಾದ ಅಂದರೆ ಈ ಕಾಂಬೋ..! ಸುಮಾರು ನಲವತ್ತು ವರ್ಷ ಇದರ ರುಚಿ ಸವೀದೋನು ನಾನು. ಈಗಲೂ ಮಧ್ಯರಾತ್ರಿ ಈ ನೆನಪು ಉಕ್ಕಿಬಂದು ಆಗ ಪೂರಿ ಕಾರಸೇವೆ ಬೆಲ್ಲ ಬೆರೆಸಿ ತಿನ್ನುತ್ತೇನೆ ಮತ್ತು ಈ ಕಾರಣದಿಂದ ಇಡೀ ಕುಟುಂಬದಲ್ಲಿ ಅದರಲ್ಲೂ ನನ್ನ ಅರ್ಧಾಂಗಿ ಬಂಧುಗಳಲ್ಲಿ ಒಂದು ನಗೆ ಪಾಟಲಿನ ವಿಷಯ ಆಗಿದ್ದೇನೆ. ನಮ್ಮನೇಲಿ ಇದೇ ಕಾರಣಕ್ಕೆ ಪುರಿ, ಕಾರಾಸೆವೆ ಮತ್ತು ಬೆಲ್ಲ ಸ್ಟಾಕ್ ಇರುತ್ತೆ. ಇದು ಹಾಗಿರಲಿ ಈ ಕಾಂಬೋ ಮುಗಿಸಬೇಕಾದರೆ ಮೆಲ್ಲಗೆ ಅಪ್ಪನಿಗೆ ಮಾತ್ರ ಕೇಳಿಸುವ ಹಾಗೆ ಪೈಪ್ ಕದ್ದು ತಂದಿರುವ ವಿಷಯ ತಿಳಿಸಿದೆ. ಮನೆ ಕೆಲಸಕ್ಕೆ ಬಂದಿದ್ದ ಕೂಲಿ ಅವರಿಗೆ ಅಪ್ಪ ಚೆನ್ನಾಗಿ ತಮಿಳು ತೆಲುಗಿನಲ್ಲಿ ಬೈದರು. ಅಂತಹ ಬೈಗುಳ ಅಪ್ಪನಿಗೆ ಬರುತ್ತೆ ಅಂತ ಅವತ್ತೇ ನನಗೆ ಗೊತ್ತಾಗಿದ್ದು. ಪೈಪ್ ಮರಳ ಅಡಿಯಿಂದ ಆಚೆ ತೆಗೆಸಿದರು. ಇದನ್ನ ಮನೆಗೆ ಕೊಟ್ಟು ಬಂದ ಮೇಲೇನೆ ನಿಮಗೆ ಬಟವಾಡೆ, ಪೈಪ್ ಮನೇಲಿ ಇಟ್ಟು ಚೀಟಿ ತಗೊಂಡು ಬಾ…. ಅಂತ ವಾರ್ನ್ ಮಾಡಿ ಪೈಪ್ ಮನೆಗೆ ಕಳಿಸಿದರು. ಆಗ ಫೋನು ಇರಲಿಲ್ಲ ಮತ್ತು ಮೊಬೈಲ್ ಹೆಸರೇ ಕೇಳಿರಲಿಲ್ಲ. ಅವರು ವಾಪಸ್‌ ಬಂದ ಮೇಲೆ ಚೀಟಿ ನೋಡಿ ಅವರಿಗೆ ಬಟವಾಡೆ ಮಾಡಿ ಜಟಕದಲ್ಲಿ ನನ್ನೂ ಕೂಡಿಸಿಕೊಂಡು ಮನೆ ಸೇರಿದರು. ಈ ಸುದ್ದಿ ವಾಯುವೇಗದಲ್ಲಿ ನಮ್ಮ ಬಳಗದವರಿಗೆ ಪ್ರಸಾರ ಆಯಿತು. ಅವತ್ತಿಂದ ಕೆಲವು ವರ್ಷ ನಮ್ಮ ವಂಶದಲ್ಲಿ ನನ್ನ ಪತ್ತೇದಾರ ಪುರುಷೋತ್ತಮ ಅಂತ ಕೂಗುತ್ತಾ ಇದ್ದರು… + +ಮತ್ತೊಂದು ಭೇಟಿ ಅಂದರೆ ಆಲ್ಲಿ ಆಯುಧಪೂಜೆ ದಿವಸ ಅಪ್ಪನ ಜತೆ ಹೋಗಿದ್ದು. ಹಾರೆ ಗುದ್ದಲಿ ಪಿಕಾಸಿ ಮಮ್ಮಟಿ ಮಂಕರಿ ಅಳೆಯೋ ಟೀಪು.. ಇನ್ನೂ ಏನೇನೋ ಹಂತ ಹಂತವಾಗಿ ಮೆಟ್ಟಿಲ ಮೇಲೆ ಜೋಡಿಸಿ ಅದಕ್ಕೆ ಅರಿಶಿನ ಕುಂಕುಮ ಧಾರಾಳವಾಗಿ ರಾಶಿ ರಾಶಿ ಹಾಕಿ ಅದರ ಮೇಲೆ ಶಾವಂತಿಗೆ ಚೆಂಡು ಹೂವು ಹಾರಗಳನ್ನು ಹಾಕಿದ್ದರು. ಮಂಟಪದಲ್ಲಿ ಇವೆಲ್ಲಾ ಇದ್ದು ಮಂಟಪಕ್ಕೆ ಬಾಳೆ ದಿಂಡು, ಮಾವಿನ ಸೊಪ್ಪಿನ ಅಲಂಕಾರ. ಧೂಪ ಊದಿನ ಕಡ್ಡಿ ಮತ್ತು ಕರ್ಪೂರ ಹಾಗೂ ಸಾಂಬ್ರಾಣಿ ಹೊಗೆ.. ಒಂದು ರೀತಿ ಬೇರೆಲೋಕದ ಅನುಭವ ಅದು. ವಿಶೇಷ ಅಂದರೆ ಅಪ್ಪನದ್ದೇ ಪೂಜೆ. ಮನೆಯಲ್ಲಿ ಪೂಜೆ ಮಾಡಿದ ಹಾಗೆ ಇಲ್ಲಿಲ್ಲ. ಇಲ್ಲಿ ಪಂಚೆ ಶರಟು ಧರಿಸಿ ಪೂಜೆ ಮತ್ತು ಮಂತ್ರಗಳೂ ಸಹ ಬೇರೆ. ಮಡಿ ಮತ್ತು ಮಡಿ ತುಂಬಾ ದೂರ. ಎಲ್ಲಾ ಕೆಲಸದವರು ಬಂದು ದೇವರಿಗೆ ಅಡ್ಡ ಬಿದ್ದು ಅಪ್ಪನಿಗೂ ಅಡ್ಡ ಬಿದ್ದು ಮೈ ಕೈ ಮುಟ್ಟಿಸಿಕೊಂಡು ಪ್ರಸಾದ ಸ್ವೀಕಾರ ಮಾಡುತ್ತಿದ್ದರು. ಎಷ್ಟೋ ದಿವಸ ಆದಮೇಲೆ ಈ ಆಯುಧ ಪೂಜೆ ಕೂಲಿ ಕಾರ್ಮಿಕರ ಹಬ್ಬ ಅಂತ ಅನಿಸಿತ್ತು. ನಿಧಾನಕ್ಕೆ ಈ ಪೂಜೆಗಳಿಗೂ ಒಬ್ಬರು ಪೂಜಾರಿ ಬರುತ್ತಿದ್ದರು. + +ನಮ್ಮ ಅಣ್ಣಂದಿರು ಇಬ್ಬರೂ ಯಶವಂತಪುರ ದಾಟಿ ಹೋದರೆ ಸಿಗುವ ಎಚ್ಎಂಟಿ ಕಾರ್ಖಾನೆಲಿ ಕೆಲಸದವರು. ದೊಡ್ಡಣ್ಣ ಮೊದಲು ಸೇರಿದ್ದು. ನಂತರ ಹತ್ತು ಹನ್ನೆರೆಡು ವರ್ಷದ ನಂತರ ಎರಡನೇ ಅಣ್ಣ ವಾಚ್ ಫ್ಯಾಕ್ಟರಿ ಸೇರಿದ್ದು. ಎಚ್ಎಂಟಿ ಕಾರ್ಖಾನೆ ಆಗಲಿ ವಾಚ್ ಫ್ಯಾಕ್ಟರಿ ಆಗಲಿ ನಾನು ನೋಡಿರಲಿಲ್ಲ. ಒಮ್ಮೆ ಮಾತ್ರ ಅದರ ಹತ್ತಿರ ಹೋಗಿದ್ದೆ ಅಷ್ಟೇ. ನಾವು ಎಚ್ಎಂಟಿ ಕ್ವಾರ್ಟರ್ಸ್‌ನಲ್ಲಿ ಇದ್ದೆವು. ನಮ್ಮ ಪಕ್ಕದಲ್ಲಿ ರಹೀಂ ಸಾಬ್ ಅಂತ ಡ್ರೈವರು, ಅವರ ಪಕ್ಕ ಚನ್ನಯ್ಯ ಅಂತ ಅವರೂ ಡ್ರೈವರು. ಇವರಿಬ್ಬರ ಮಕ್ಕಳು ನನಗಿಂತ ಸುಮಾರು ಚಿಕ್ಕವರು, ಆದರೂ ನನಗೆ ಸ್ನೇಹಿತರು. ಕೆಲವು ಸಲ ಎಚ್ಎಂಟಿ ಕಾರ್ಖಾನೆ ಬಸ್ಸನ್ನು ತಂದು ಮನೆ ಮುಂದೆ ನಿಲ್ಲಿಸುತ್ತಿದ್ದರು. ಬಸ್ಸಿನಲ್ಲಿ ಕೂತು ಅದರ ಡ್ರೈವರ್ ಆಗಿ ಅದರಲ್ಲಿನ ಪ್ರಯಾಣಿಕರಾಗಿ ಮತ್ತು bts ನಲ್ಲಿನ ಕಂಡಕ್ಟರ್ ತರಹ ನಮ್ಮ ಆಟ. ಫ್ಯಾಕ್ಟರಿ ಬಸ್ಸಿನಲ್ಲಿ ಕಂಡಕ್ಟರ್ ಇರೋಲ್ಲ. ಒಮ್ಮೆ ಹೀಗೆ ಆಡ್ತಾ ಇರಬೇಕಾದರೆ ರಹೀಂ ಸಾಹೇಬರು ನಮ್ಮನ್ನು ಫ್ಯಾಕ್ಟರಿ ತನಕ ಕರಕೊಂಡು ಹೋಗಿದ್ದರು! ನಾನು ಅದೇ ಜಾಲಹಳ್ಳಿ ವ್ಯಾಪ್ತಿಯಲ್ಲಿ ಬರುವ ಕೆಲಸಕ್ಕೆ ಸೇರಿದೆ ನೋಡಿ ಅಲ್ಲಿಂದ ನನ್ನ ಮತ್ತು ಯಶವಂತಪುರದ ನಂಟು ಇನ್ನೂ ಗಾಢವಾಯಿತು.ಹಿಂದಿನ ಸಂಚಿಕೆಗೆ ಹೀಗೆ ಮುಕ್ತಾಯ ಹಾಡಿದ್ದೆ…. + +ಇವತ್ತಿನ ಯಶವಂತಪುರ ಅಂದರೆ ಎಲ್ಲಾ ರೀತಿಯ ವಾಣಿಜ್ಯ, ವ್ಯವಹಾರ, ವಹಿವಾಟು ಮತ್ತು ಕೈಗಾರಿಕೆ ಹೊಂದಿರುವ ಜನ ಸಾಮಾನ್ಯರ ವಾಸಸ್ಥಳ ಸೇರಿದ ಪ್ರದೇಶ. ಇಲ್ಲಿನ ರೈಲ್ವೆ ಸ್ಟೇಶನ್ ನಗರದ ಒಂದು ದೊಡ್ಡ ರೈಲ್ವೆ ಟರ್ಮಿನಲ್. ಇನ್ನು ಕೆಲವೇ ವರ್ಷದಲ್ಲಿ ಇಲ್ಲಿನ ರೈಲ್ವೆ ಸ್ಟೇಶನ್ ದೇಶದ ಪ್ರಮುಖ ನಿಲ್ದಾಣ ಆಗುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಬಿರುಸಿನ ಕಾಮಗಾರಿ ನಡೆಯುತ್ತಿದೆ. + +ಇದೇ ರಸ್ತೆಯಲ್ಲಿ ಒಂದು ನೂರೈವತ್ತು ಮೀಟರ್ ಮುಂದೆ ಹೋಗಿ. ಇಲ್ಲೊಂದು ಸೈನಿಕರ ನೆಲೆ ಇದ್ದ ಸ್ಥಳ ಉಂಟು. ಅದೇ ಸುಬೇದಾರ್ ಪಾಳ್ಯ. ಸುಬೇದಾರ್ ಹೆಸರಿಗೆ ಲಿಂಕ್ ಇರುವ ಮತ್ತೊಂದು ಬೆಂಗಳೂರಿನ ಸ್ಥಳ ಮೆಜೆಸ್ಟಿಕ್ ಏರಿಯಾದ ಸುಬೇದಾರ್ ಛತ್ರ…. ಯಶವಂತಪುರದ ಈ ಜಾಗ ನನಗೆ ಹೆಚ್ಚು ಆಪ್ತವಾಗಿದ್ದು ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗೆ ಒಂದೈದು ಸಲ ಇಲ್ಲಿಗೆ ಬಂದಿರಬಹುದೇನೋ..ಇದರ ಕತೆಗೆ ಮುಂದಕ್ಕೆ ಬರುತ್ತೇನೆ. + + + +ಯಶವಂತಪುರದ ನಂಟು ಹೇಳಿದೆ ತಾನೇ. ಇನ್ನೂ ಸಾಕಷ್ಟು ಇದೆ. ಅದಕ್ಕೆ ಹಾಯುವ ಮುನ್ನ ಸುಬೇದಾರ ಪಾಳ್ಯದ ಬಗ್ಗೆ.. ಸೈನಿಕರಿಗೆ ನೆಲೆ ಒದಗಿಸಲು ಕುಂಪನಿ ಸರಕಾರ ಈ ಪ್ರದೇಶ ಆಯ್ಕೆ ಮಾಡಿತ್ತು. ಇಲ್ಲಿ ಸೈನಿಕರ ವಾಸಕ್ಕೆ ಎಂದೇ ಮನೆಗಳು ನಿರ್ಮಾಣವಾಗಿದ್ದವು. ವಾಸಕ್ಕೆ ಎಂದು ಸೈನಿಕರು ಬಂದಾಗ ಸಹಜವಾಗಿ ಅವರ ಸಂಸಾರಗಳು ಅವರ ಜತೆ ಬಂದವು. ಇದು ಹದಿನೆಂಟನೇ ಶತಮಾನದ ಅಂಚಿನಲ್ಲಿ. ವಸತಿ ಪ್ರಾರಂಭದ ನಂತರ ಅಲ್ಲಿ ಅಂಗಡಿ ಮುಂಗಟ್ಟು ಮಾರುಕಟ್ಟೆ ಮುಂತಾದ ಪ್ರತಿನಿತ್ಯದ ಅವಶ್ಯಕತೆಗಳು ಸಹ ಬೆಳೆದವು. ಎಪ್ಪತ್ತರ ದಶಕದ ಆರಂಭದಲ್ಲಿ ಇಲ್ಲಿ ಸುಮಾರು ಮಾಂಸ ಮಾರಾಟದ ಅಂಗಡಿ ಇದ್ದವು. ನಿಧಾನಕ್ಕೆ ಅವು ಯಶವಂತಪುರ ಮಾರುಕಟ್ಟೆಯ ಭಾಗ ಆಯಿತು. ಬೆಂಗಳೂರಿನಲ್ಲಿ ಸೈನಿಕರ ವಸತಿಗಾಗಿ ಎಂದೇ ಹಲವು ಸ್ಥಳಗಳು ಇವೆ. ನೇರ ಮಿಲಿಟರಿ ಅಧೀನದಲ್ಲಿರುವ ವಸತಿ ಮತ್ತು ಔದ್ಯೋಗಿಕ ಸ್ಥಳಗಳಿಗೆ ಸಾರ್ವಜನಿಕರ ಭೇಟಿಗೆ ಆಸ್ಪದ ಇಲ್ಲ. + +ಕಮ್ಯಾಂಡ್ ಆಸ್ಪತ್ರೆ, ಮಿಲಿಟರಿ ಎಂಜಿನಿಯರಿಂಗ್ ಅಕಾಡೆಮಿ , ಆರ್ಮಿ ಸರ್ವೀಸ್ ಕಾರ್ಪ್ಸ್, ಈ ಎಂ ಈ, ಎಂ ಈ ಜಿ, ಏರ್ ಫೋರ್ಸ್ ಸ್ಟೇಶನ್, ನೇವಲ್ ಬೇಸ್ ಮೊದಲಾದ ಕಡೆ ಮಿಲಿಟರಿ ವಸತಿ ಇದ್ದು ಅದು ನೇರ ಗೇಟೆಡ್ ಕಮ್ಯೂನಿಟಿ ತರಹ ಅಲ್ಲಿನವರದ್ದೇ ಅಲ್ಲಿನ ಆಡಳಿತ. ಇಲ್ಲಿ ಹೊರಗಿನವರಿಗೆ ಪ್ರವೇಶ ನಿಷಿದ್ಧ. ಅಪರೂಪಕ್ಕೆ ಕೆಲವು ಕೆಲಸಕ್ಕೆ ಅವರು ಕೆಲವರನ್ನು ಹೊರಗಿನಿಂದ ಕರೆಸಿಕೊಳ್ಳುತ್ತಾರೆ. ನಮ್ಮ ಒಬ್ಬ ಧೋಬಿ ಮಿಲಿಟರಿ ಕ್ಯಾಂಪ್‌ಗೆ ಬಟ್ಟೆ ಐರನ್ ಮಾಡಿಕೊಡಲು ಹೋಗುತ್ತಿದ್ದ, ಅವನ ಹೆಂಡತಿ ಮನೆ ಕೆಲಸಕ್ಕೆ ಹೋಗುತ್ತಿದ್ದಳು. ಹೀಗಾಗಿ ಅವನಿಗೆ ಅಲ್ಲಿನ ಸೋಲ್ಜರ್ ಪರಿಚಯ. ಮಿಲಿಟರಿ ಕ್ಯಾಂಟಿನ್‌ನಲ್ಲಿ ಎಲ್ಲಾ ಸಾಮಾನೂ ತುಂಬಾ ಕಡಿಮೆ ಬೆಲೆಗೆ ಸಿಗುತ್ತೆ. ಕೆಲಸದಾಕೆ ಮೂಲಕ ಟೂತ್ ಪೇಸ್ಟ್, ಸಾಬೂನು ಮೊದಲಾದವನ್ನು ಹೆಂಗಸರು ತರಿಸಿಕೊಳ್ಳುತ್ತಿದ್ದರು. ಅವಳ ಗಂಡನ ಮೂಲಕವೇ ಸಿವಿಲ್ ಜನರು (ಅಂದರೆ ನಮ್ಮಂತಹವರು)ರಮ್ಮು ಬ್ರಾಂದಿ ಮತ್ತಿತರ ನಿಶಾ ಪದಾರ್ಥಗಳನ್ನು ಅಲ್ಲಿಂದ ತರಿಸುತ್ತಿದ್ದರು, ಮಿಲಿಟರಿ ಕ್ಯಾಂಟಿನ್‌ನಲ್ಲಿ ಇದರ ಬೆಲೆ ತುಂಬಾ ಕಮ್ಮಿ ಅಂತೆ! + +ಮಿಕ್ಕಂತೆ ಸೈನಿಕರು ಮತ್ತು ಮಿಲಿಟರಿ ಅಧಿಕಾರಿಗಳಿಗೆ ಎಂದೇ ಕೆಲವು ಪ್ರದೇಶಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಇಂದಿರಾ ನಗರದ ಡಿಫೆನ್ಸ್ ಕಾಲನಿ, ಕೋರಮಂಗಲದ ಸೈನಿಕ ಪುರಿ, ಬನಶಂಕರಿಯ ಮಾಜಿ ಸೈನಿಕರ ಕಾಲೋನಿ ಮುಂತಾದ ಹಲವು ವಸತಿ ಏರಿಯ ನೆನಪಿಗೆ ಬರುತ್ತದೆ. + +ಸುಬೇದಾರ್ ಹೆಸರು ಬಂದಕೂಡಲೇ ನಿಮಗೆ ಥಟ್ ಅಂತ ಹೊಳೆಯುವುದು ಬೆoಗಳೂರಿನ ಹೃದಯ ಭಾಗದ ಸುಬೇದಾರ್ ಛತ್ರದ ರಸ್ತೆ. ಆನಂದ ರಾವ್ ಸರ್ಕಲ್‌ನಿಂದಾ ನೀವು ಮೆಜೆಸ್ಟಿಕ್ ಸರ್ಕಲ್ ಕಡೆ ನಡೆಯುವ ರಸ್ತೆ ಹೆಸರು ಸುಬೇದಾರ್ ಛತ್ರದ ರಸ್ತೆ. ನನ್ನ ಬಿಎಸ್ಸಿ, ಲಾ ದಿನಗಳು ಹಾಗೂ ಹಲವು ವರ್ಷ ಈ ರಸ್ತೆಯಲ್ಲಿ ಹಲವು ನೂರು ಚಪ್ಪಲಿ ಸವೆಸಿದ ಅನುಭವ ನನ್ನದು. ಈ ಛತ್ರದ ಹೆಸರು ಕೇಳಿದ್ದೇನೆಯೇ ಹೊರತು ಛತ್ರ ಕಣ್ಣಿಗೆ ಬಿದ್ದಿಲ್ಲ. ಅಲ್ಲಿನ ನಿವಾಸಿ ಒಬ್ಬರನ್ನು ತುಂಬಾ ಹಿಂದೆ ಈ ಬಗ್ಗೆ ಕೇಳಿದ್ದೆ. ಅವರು ಹೇಳಿದ್ದು ಟೀಪು ಸುಲ್ತಾನನ ಕಾಲದಲ್ಲಿ ಮಿಲಿಟರಿ ಅವರ ಊಟ ಮತ್ತು ತಾತ್ಕಾಲಿಕ ತಂಗುದಾಣವಾಗಿ ಇಲ್ಲಿ ಒಂದೋ ಎರಡೋ ಕಟ್ಟಡ ಇದ್ದವಂತೆ. ಅದು ಕಾಲ ಕ್ರಮೇಣ ನಿವಾಸಿಗಳ ತಹಬಂದಿಗೆ ಬಂತು ಮತ್ತು ನಿಧಾನಕ್ಕೆ ಅದರ ಮಾಲಿಕತ್ವ ಬದಲಾಯಿತು. ಆದರೆ ರಸ್ತೆ ಹೆಸರು ಅದೇ ಉಳಿದುಕೊಂಡಿದೆ.. ಈ ವಿವರಣೆ ನಿಜ ಇದ್ದರೂ ಇರಬಹುದು ಅಂತ ನನಗೆ ಗಾಢವಾಗಿ ಅನಿಸಿತು. ಇದಕ್ಕೆ ಕಾರಣ ನಮ್ಮದೇ (ನಿಮ್ಮದೂ ಸಹ) ಅನುಭವಗಳು. ಮೈಸೂರು ಬ್ಯಾಂಕ್ ಕಾಲೋನಿ, ಮೈಸೂರು ಬ್ಯಾಂಕ್ ರಸ್ತೆ ಈ ಹೆಸರಿನ ಬಡಾವಣೆಗಳು ಇನ್ನು ಐವತ್ತು ವರ್ಷ ಆದ ನಂತರ ಹೇಗೆ ನೆನಪಲ್ಲಿ ಇರುತ್ತೆ! ಮೈಸೂರು ಬ್ಯಾಂಕ್ ಸ್ಟೇಟ್ ಬ್ಯಾಂಕ್ ಜತೆ ಸೇರಿತು ಅವರ ಕಾಲೋನಿ ಹಳೇ ಹೆಸರಲ್ಲಿ ಮುಂದುವರಿದು ಮುಂದೆ ಏನಾಗುತ್ತೋ…! + + + +ಬೆಂಗಳೂರಿನಲ್ಲಿ ವಿಜಯ ಬ್ಯಾಂಕ್ ಕಾಲೋನಿ ಅಂತ ಸುಮಾರು ದೊಡ್ಡದು ಅನ್ನಬಹುದಾದ ಪ್ರತಿಷ್ಠಿತ ಬಡಾವಣೆಗಳು ಹಲವು ಇವೆ. ವಿಜಯ ಬ್ಯಾಂಕ್ ಗೃಹ ನಿರ್ಮಾಣ ಸಂಘಗಳು ಅಭಿವೃದ್ಧಿ ಪಡಿಸಿರುವ ಪ್ರದೇಶಗಳು ಇವು. ಬ್ಯಾಂಕ್ ಆಫ್ ಬರೋಡ ಸಂಗಡ ವಿಜಯ ಬ್ಯಾಂಕ್ ವಿಲೀನ ಆಗಿ ಸೇರಿಕೊಂಡು ಈಗ ಬರೋಡ ಬ್ಯಾಂಕ್ ಹೆಸರಲ್ಲಿ ಗುರುತಿಸಿಕೊಳ್ಳುತ್ತಿವೆ. ನಿಧಾನಕ್ಕೆ ವಿಜಯಾ ಎನ್ನುವ ಹೆಸರು ನೆನಪಿನ ಆಳಕ್ಕೆ ಜಾರುತ್ತೆ ಮತ್ತು ಈ ಹೆಸರಿನ ಕಾಲೋನಿ ಮುಂದುವರೆಯುತ್ತಾ..? ಆಗ ಒಬ್ಬ ಸಂಶೋಧಕ ಹಿಂದೆ ಇಲ್ಲಿ ವಿಜಯಾ ಬ್ಯಾಂಕ್ ಅಂತ ಇತ್ತು ಎಂದು ಪುರಾಣ ನೆನಪಿಸ ಬೇಕಾಗುತ್ತೆ…..! + +ಸುಬೇದಾರ್ ಪಾಳ್ಯ ದಾಟಿ ಮುಂದೆ ರಸ್ತೆ ಕವಲು ಒಡೆಯುತ್ತೆ. ಮುಂದೆ ಬಂದರೆ ಬಲ ತಿರುವು ಒಂದು ನೂರು ಗಜ ಮುನ್ನಡೆದರೆ ಅದೇ ಎಂ ಎಸ್ ರಾಮಯ್ಯ ಅವರ ಸಾಮ್ರಾಜ್ಯ. ಈ ಸಾಮ್ರಾಜ್ಯದ ವಿವರಣೆಗೆ ಬರುವ ಮೊದಲು ಒಂದು ಪುಟ್ಟ ನೆನಪು ಕಾಲೇಜಿಗೆ ಸಂಬಂಧ ಪಟ್ಟ ಹಾಗೆ. + + + +ಅರವತ್ತರ ಉತ್ತರಾರ್ಧದ ಹೊತ್ತಿಗೇ ಈ ಕಾಲೇಜು ಹೆಸರು ಜನಜನಿತವಾಗಿತ್ತು. ಬೆಂಗಳೂರಿನಲ್ಲಿ ಆಗ ಇದ್ದ ಕೆಲವೇ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಇದೂ ಒಂದು. ಆಗಿನ ಶೈಕ್ಷಣಿಕ ನೀತಿಗೆ ಅನುಗುಣವಾಗಿ ಖಾಸಗಿ ಕಾಲೇಜುಗಳಲ್ಲಿ ಡೊನೇಷನ್ ಮೂಲಕ ಪ್ರವೇಶ ಇತ್ತು. ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುದ್ಧಿವಂತರು ಅಂದರೆ ಮೆರಿಟ್‌ನವರು ಪ್ರವೇಶ ಪಡೆದರೆ ನಮ್ಮಂತಹ ದಡ್ಡರ ಗುಂಪು ಖಾಸಗಿ ಕಾಲೇಜು ನಂಬಿದ್ದೆವು , ಈಗಿನ ಹಾಗೆಯೇ. + +ದಡ್ಡರ ಗುಂಪಿನಲ್ಲಿ ಸಹ ಏರು ಪೇರು ಇದ್ದವು. ಡೊನೇಷನ್ ತೆತ್ತು ಇಂಜಿನಿಯರಿಂಗ್ ಅಥವಾ ಮೆಡಿಕಲ್ ಕಾಲೇಜಿಗೆ ಸೇರಿಸಲು ತಾಖತ್ ಇರುವ ತಂದೆ ತಾಯಿಗಳು ಒಂದು ಕಡೆ ಆದರೆ ಡೋನೇಷನ್ ಕೊಡಲು ತಾಖತ್ ಇಲ್ಲದ ಬಡ ತಂದೆತಾಯಿಗಳ ಮಕ್ಕಳು ಇನ್ನೊಂದು ಗುಂಪು. ಡೋನೇಷನ್ ಕೊಡಲು ತಾಖತ್ ಇದ್ದ ತಂದೆ ತಾಯಿಗಳು ಮಕ್ಕಳನ್ನು ಎಂಜಿನಿಯರಿಂಗ್ ಕೋರ್ಸ್‌ಗೆ ಸೇರಿಸುತ್ತಿದ್ದರು. ಮೇಜಾರಿಟಿ ವಿದ್ಯಾರ್ಥಿಗಳು ಡೊನೇಷನ್ ಕೊಡಲು ತಾಖತ್ ಇಲ್ಲದ ಎರಡನೇ ಗುಂಪಿನವು. ಅವರಿಗೆ ಮೂರು ವರ್ಷದ ಪದವಿ ತರಗತಿಗಳೇ ಗ್ಯಾರಂಟಿ. + +ಅದರಲ್ಲೂ ಕೆಲವರು ಆಗಿನ ಪ್ರತಿಷ್ಠಿತ ಕಾಲೇಜುಗಳು ಅನಿಸಿದ್ದ ಸೇಂಟ್ ಜೋಸೆಫ್‌ರ ಕಾಲೇಜಿಗೂ ಮತ್ತು ನ್ಯಾಷನಲ್ ಕಾಲೇಜಿಗೂ ಮೊಟ್ಟ ಮೊದಲ ಆದ್ಯತೆ ಕೊಡುತ್ತಿದ್ದರು. ಸೇಂಟ್ ಜೋಸೆಫ್‌ರ ಕಾಲೇಜಿನಲ್ಲಿ ಕೊಂಚ ಮಟ್ಟಿಗೆ ಪ್ರಭಾವ ಬೀರಬಹುದಿತ್ತು. ಅಲ್ಲಿ ಕಮ್ಯೂನಿಟಿ ಸೀಟು, ಪುಢಾರಿಗಳ ಕೋಟಾ ಮುಂತಾದವು ಇತ್ತು. ಸಹಜವಾಗಿ ಇದರ ಆಧಾರದ ಮೇಲೆ ಸೀಟು ಗಿಟ್ಟಿಸಲು ಬೆಂಗಳೂರಿನ ಈ ಕಡೆಯವರಿಗೆ ಸಾಧ್ಯ ಆಗುತ್ತಿರಲಿಲ್ಲ. ಹೀಗಾಗಿ ಸೇಂಟ್ ಜೋಸೆಫ್‌ರ ಕಾಲೇಜು ಅಂದರೆ ನಮಗೆ ಗಗನ ಕುಸುಮ. ಅಲ್ಲಿನ ಹುಡುಗರು ಇಂಗ್ಲಿಷ್ ಮತ್ತು ತಮಿಳು ಸೇರಿಸಿ ಮಾತಾಡೋವು. ಇಲ್ಲಿನವಕ್ಕೆ ಅದೊಂದು ರೀತಿ ಇನ್ಫಿರಿಯಾರಿಟಿ! ಕೆಲವು ಹುಡುಗರು ಹಟ ಹಿಡಿದು ಆಲ್ಲಿ ಸೇರಿ ಒಂದೆರೆಡು ತಿಂಗಳಿಗೆ ಕಾಲೇಜಿಗೆ ನಮಸ್ಕಾರ ಅನ್ನೋವು. + + + +ಇನ್ನು ನ್ಯಾಷನಲ್ ಕಾಲೇಜು ಅಂದರೆ ಒಳ್ಳೇ ಮಾರ್ಕ್ಸ್ ಇದ್ದರೆ ಮಾತ್ರ. ವಶೀಲಿ, ಪ್ರಭಾವ ಇವೆಲ್ಲಾ ಮೀರಿದ್ದು ಮತ್ತು ಅಲ್ಲಿನ ಪ್ರಿನ್ಸಿಪಾಲ್ ನರಸಿಂಹಯ್ಯ ಅವರು ಭಾರೀ ಸ್ಟ್ರಿಕ್ಟ್ ಅಂತ ಇಡೀ ಬೆಂಗಳೂರಿಗೆ, ಕರ್ನಾಟಕಕ್ಕೆ, ಇಂಡಿಯಾಗೆ, ಭೂ ಮಂಡಲಕ್ಕೆ ಹೆಸರುವಾಸಿ…! ಸೇಂಟ್ ಜೋಸೆಫ್‌ರ ಕಾಲೇಜಿಗೆ ಚೊಟ್ಟೆ ಕಾಲೇಜು ಅಂತ ನಿಕ್ ನೇಮ್ ಆಂಗ್ಲೋ ಇಂಡಿಯನ್ ಲೋಕಲ್ ತಮಿಳರು ಇರ್ತಾರೆ ಅಂತ. ಆಂಗ್ಲೋ ಇಂಡಿಯನ್‌ಗಳಿಗೆ ಚೊಟ್ಟೆಗಳು ಅಂತ ನಾಮಕರಣ ಆಗಿತ್ತು. ಹಾಗಾಗಿ ಅಲ್ಲಿನ ತಮಿಳರೂ ಸಹ ಚೊಟ್ಟೆ ಆಗಿಬಿಟ್ಟಿದ್ದರು. ನ್ಯಾಷನಲ್ ಕಾಲೇಜಿಗೆ ಕುಡುಮಿ ಕಾಲೇಜು ಅಂತ ಹೆಸರು. ಬರೀ ರಾಂಕು ಹೈ ಮಾರ್ಕ್ಸ್ ತಗೊಂಡೊರನ್ನು ಸೇರಿಸಿಕೊಂಡು ಕಾಲೇಜಿಗೆ ರಾಂಕೂ ಪಾಂಕೂ ಬರೆಸಿಕೊಳ್ತಾರೆ ಅಂತ ಅಲ್ಲಿ ಸೀಟು ಸಿಗದ ಮಕ್ಕಳ ಅಪ್ಪ ಅಮ್ಮಂದಿರ ಪ್ರಲಾಪ. ಕಾಲೇಜು ಈ ಪ್ರಲಾಪಕ್ಕೆ ತಕ್ಕ ಹಾಗಿತ್ತು. ಮಿಕ್ಕ ಖಾಸಗಿ ಕಾಲೇಜುಗಳು ತಮ್ಮ ತಮ್ಮ ಇತಿಮಿತಿಯಲ್ಲಿ ಅವಕಾಶ ಕೊಡುತ್ತಿದ್ದವು. ಇವೆಲ್ಲವನ್ನೂ ಸಾರಾ ಸಗಟಾಗಿ ನಿವಾಳಿಸಿ ಎಸೆಯೋ ಅಂತ ಒಂದು ಕಾಲೇಜು ಇತ್ತು ಮತ್ತು ಈಗಲೂ ಇದೆ. ಅದೇ ಗರ್ಣಮೆಂಟ್ ಆರ್ಟ್ಸ್ ಮತ್ತು ಸೈನ್ಸ್ ಕಾಲೇಜು. ಪುಟ್ಟದಾಗಿ ಇದಕ್ಕೆ GAS ಕಾಲೇಜು ಎಂದು ಹೆಸರು. ಎಷ್ಟೇ ಕಮ್ಮಿ ನಂಬರು ತಗೊಂಡಿರಲಿ, ಎಷ್ಟೇ ಅಟೆಂಪ್ಟ್ ಆಗಿರಲಿ, ಇಲ್ಲಿ ಸೀಟು ಸಿಗುವ ಗ್ಯಾರಂಟಿ ನೂರಕ್ಕೆ ನೂರರಷ್ಟು ಖಾತರಿ. ಜತೆಗೆ ಆಗ ನಮಗೆ ಇದ್ದ ಚಾಯ್ಸ್ ಕೂಡ ಸೀಮಿತ, ಈಗಿನ ಹಾಗೆ ವಿಸ್ತೃತ ಅಲ್ಲ. ಆರ್ಟ್ಸ್, ಸೈನ್ಸ್ ಅಥವಾ ಕಾಮರ್ಸ್ ಇಷ್ಟೇ. ಇದರಲ್ಲಿ ಒಂದು ಆರಿಸ್ಕೋ ಅಷ್ಟೇ. ಸುಮಾರಾಗಿ ಮಾರ್ಕ್ಸ್ ತಗೊಂಡಿರುವವರು ಸೈನ್ಸ್ ಅಪ್ಪಿಕೊಂಡರೆ ನಂತರ ಮಿಕ್ಕ ದ್ದು. ಅಂದರೆ puc ಯಲ್ಲಿ ಕಾಮರ್ಸ್ ಆಯ್ಕೆ ಆಗಿದ್ದರೆ bcom ಆರ್ಟ್ಸ್ ಆಯ್ಕೆ ಆಗಿದ್ದರೆ ba…. ಅಷ್ಟೇ. ಸರ್ಕಾರದ ಕಾಮರ್ಸ್ ಕಾಲೇಜು ಅಂದರೆ ಆರ್ ಸಿ.ಕಾಲೇಜು… ರಾಮನಾರಾಯಣ ಚೆಲ್ಲಾರಾಮ್ ಕಾಲೇಜು. ಒಂದು ಜನರಲ್ ನಂಬಿಕೆ ಆಗಿನ ನಮ್ಮಲ್ಲಿ ಹೂತು ಹೋಗಿದ್ದು ಅಂದರೆ ವಿಧಾನ ಸೌಧದಲ್ಲಿ ಕ್ಲರ್ಕ್ ಆಗೋಕ್ಕೆ ಯಾವುದು ಓದಿದರೆ ಏನು ಅಂತ. ವಿಧಾನ ಸೌಧದಲ್ಲಿ ಯಾರಿಗೂ ಕೆಲಸ ಸಿಕ್ತಾ ಇರ್ಲಿಲ್ಲ, ಆದರೆ ಹೇಳೋದಿಕ್ಕೆ ಏನು?ರಾಮಯ್ಯ ಕಾಲೇಜಿಂದ ಎಲ್ಲಿಗೋ ಹಾರಿಬಿಟ್ಟೆ ತಾನೇ? + +ಸುಬೇದಾರ್ ಪಾಳ್ಯ ದಾಟಿ ಮುಂದೆ ರಸ್ತೆ ಕವಲು ಒಡೆಯುತ್ತೆ. ಮುಂದೆ ಬಂದರೆ ಬಲ ತಿರುವು ಒಂದು ನೂರು ಗಜ ಮುನ್ನಡೆದರೆ ಅದೇ ಎಂ ಎಸ್ ರಾಮಯ್ಯ ಅವರ ಸಾಮ್ರಾಜ್ಯ…. ಅಂತ ಹೇಳಿದ್ದೆ ತಾನೇ. ಮೊದಲಿಗೆ ಆಗ ಅರವತ್ತರ ದಶಕದ ಮಧ್ಯ ಭಾಗದಲ್ಲಿ ರಾಮಯ್ಯ ಎಂಜಿನಿಯರಿಂಗ್ ಕಾಲೇಜು ಆಗ ತಾನೇ ಹುಟ್ಟಿ ಎರಡು ಮೂರು ವರ್ಷ ಆಗಿತ್ತು. ಆಗ ಎಂಜಿನಿಯರಿಂಗ್‌ನಲ್ಲಿ ಮೂರು ವಿಭಾಗ ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಸಿವಿಲ್ ಅಷ್ಟೇ. ಇನ್ನೂ ಈಗಿನ ಹಾಗೆ ಕೋರ್ಸುಗಳು ಇರುತ್ತವೆ ಎಂದು ಕಲ್ಪನೆಯೇ ಹುಟ್ಟಿರಲಿಲ್ಲ. ಆಗ ರಾಮಯ್ಯ ಕಾಲೇಜಿನಲ್ಲಿ BE ಗೆ ಮೂರು ಸಾವಿರ ಡೊನೇಷನ್ ಇತ್ತು. ಮೂರು ಸಾವಿರ ಅಂದರೆ ಆಗ ಆಗಿನ ಜೀವನದ ಮಟ್ಟಕ್ಕೆ ಮಧ್ಯಮ ವರ್ಗದವರ ಎರಡು ಎರಡೂವರೆ ತಿಂಗಳ ಸಂಬಳ! ಅದರಿಂದ ಕೆಳ ಮಧ್ಯಮ ವರ್ಗದ ಹುಡುಗರು BE ಓದುವ ಕನಸನ್ನೇ ಕಾಣುತ್ತಿರಲಿಲ್ಲ… + + + +ರಾಮಯ್ಯ ತಮ್ಮ ಉದ್ಯೋಗ ಆರಂಭಿಸಿದ್ದು ಮಲ್ಲೇಶ್ವರದ ಒಂದು ಸಣ್ಣ ಕೈಗಾರಿಕೆಯಲ್ಲಿ ಹೆಲ್ಪರ್ ಆಗಿ. ಅವರು ಇಷ್ಟು ಎತ್ತರಕ್ಕೆ ಬೆಳೆದು ಬಂದದ್ದು, ಅತ್ಯುತ್ತಮ ದರ್ಜೆಯ ಶೈಕ್ಷಣಿಕ ಸಂಸ್ಥೆಗಳ ಸಮೂಹ ಹುಟ್ಟುಹಾಕಿದ್ದು, ಅವರ ಜೀವನ, ಮನಸು ಒಂದಿದ್ದರೆ ಏನೆಲ್ಲಾ ಸಾಧಿಸ ಬಹುದು….. ಇದೆಲ್ಲವೂ ಜನಸಾಮಾನ್ಯರು ಊಹಿಸಲೂ ಸಹ ಸಾಧ್ಯವಿಲ್ಲದ ರೋಚಕ ಪ್ರಸಂಗಗಳ ರಸದೌತಣ.ಅದು ಮುಂದೆ ಹೇಳುತ್ತೇನೆ.. + +ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು. \ No newline at end of file diff --git a/Kenda Sampige/article_20.txt b/Kenda Sampige/article_20.txt new file mode 100644 index 0000000000000000000000000000000000000000..a40bbc316a700274f277fc48814745d4a63bbc84 --- /dev/null +++ b/Kenda Sampige/article_20.txt @@ -0,0 +1,125 @@ +ಐಸ್‌ಲ್ಯಾಂಡ್‌ ದೇಶದ ದೂರದ ವೆಸ್ಟ್‌ಫ್ಜೋರ್ಡ್ಸ್‌ (Westfjords) ಪ್ರಾಂತ್ಯದ ಒಂದು ಸಣ್ಣ ಮೀನುಗಾರಿಕಾ ಹಳ್ಳಿಯಲ್ಲಿ 1984-ರಲ್ಲಿ ಮಾಗ್ನುಸ್ ಸಿಗುರ್ದ್ಸನ್-ರ ಜನ್ಮವಾಯಿತು. 2007-ರಲ್ಲಿ ಯೂನಿವರ್ಸಿಟಿ ಆಫ್ ಐಸ್‌ಲ್ಯಾಂಡ್ ಪ್ರೆಸ್‌ನಿಂದ ಪ್ರಕಟಿಸಲಾದ ಎಜ್ರಾ ಪೌಂಡ್‌-ರವರ The Pisan Cantos ಕೃತಿಯ ಅನುವಾದ ಸಿಗುರ್ದ್ಸನ್-ರ ಮೊದಲನೆಯ ಪ್ರಕಟಿತ ಪುಸ್ತಕ. ಸಿಗುರ್ದ್ಸನ್-ರ ಮೊದಲ ಕವನಗಳ ಸಂಗ್ರಹಕ್ಕಾಗಿ (Fiðrildi, mynta og spörfuglar Lesbíu) 2008-ರಲ್ಲಿ ಟೊಮಾಸ್ ಗುದ್ಮಂಡ್ಸನ್ ಪ್ರಶಸ್ತಿಯನ್ನು (Tómas Guðmundsson Prize) ನೀಡಲಾಯಿತು. 2013-ರಲ್ಲಿ ಅವರು ಪ್ರತಿಷ್ಠಿತ ಜಾನ್ ಉರ್ ವೋರ್ ಕವನ ಪ್ರಶಸ್ತಿಯನ್ನು (Jón úr Vör Poetry Award) ಪಡೆದರು. ಅವರ ಮೂರನೇ ಕವನ ಸಂಕಲನದ (Tími kaldra mána, 2013) ಇಂಗ್ಲಿಷ್ ಅನುವಾದ, Cold Moons, 2017-ರಲ್ಲಿ ಪ್ರಕಟಿಸಲಾಯಿತು. ಐಸ್‌ಲ್ಯಾಂಡಿಕ್ ಸಾಹಿತ್ಯದಲ್ಲಿ ಎಮಿಲಿ ಡಿಕಿನ್ಸನ್-ರ ಸ್ಥಾನದ ಕುರಿತು ಸಲ್ಲಿಸಿದ ಮಹಾಪ್ರಬಂಧಕ್ಕಾಗಿ ಅವರು 2019-ರಲ್ಲಿ ಡಾಕ್ಟರೇಟ್ ಪದವಿ ಪಡೆದರು. ಸಿಗುರ್ದ್ಸನ್-ರವರು ಐಸ್‌ಲ್ಯಾಂಡಿಕ್ ಭಾಷೆಗೆ ಅನುವಾದಿಸಿದ ಎಮಿಲಿ ಡಿಕಿನ್ಸನ್ ಅವರ ಕವಿತೆಗಳ ಸಂಗ್ರಹ 2020-ರಲ್ಲಿ ಪ್ರಕಟವಾಯಿತು. ನಾರ್ವೇ ದೇಶದ ಕವಿ ಟೋರ್ ಉಲ್ವೆನ್ (Tor Ulven) ಹಾಗೂ ಅಮೇರಿಕಾ ದೇಶದ ಕವಿ ಆ್ಯಡಲೇಯ್ಡ್ ಕ್ರಾಪ್ಸಿ-ಯವರ (Adelaide Crapsey) ಕವನಗಳನ್ನು ಇವರು ಐಸ್‌ಲ್ಯಾಂಡಿಕ್ ಭಾಷೆಗೆ ಅನುವಾದಿಸಿದ್ದಾರೆ, ಹಾಗೂ ಐಸ್‌ಲ್ಯಾಂಡಿನ ಕವಿ ಇಂಗಿಬ್ಯೋರ್ಗ್ ಹ್ಯಾರಲ್ಡ್ಸ್‌ಡೊಟಿರ್-ರವರ (Ingibjörg Haraldsdóttir) ಕವನಗಳನ್ನು ಸ್ಪ್ಯಾನಿಷ್ ಭಾಷೆಗೆ ಅನುವಾದಿಸಿದ್ದಾರೆ. ಐದು ಕವನ ಸಂಗ್ರಹಗಳ ಕವಿ, ಎರಡು ಪ್ರಾಯೋಗಿಕ ಗದ್ಯ ಕಾದಂಬರಿಗಳ ಲೇಖಕ, ಹಾಗೆಯೇ ಐಸ್ಲ್ಯಾಂಡಿಕ್‌ ಭಾಷೆಗೆ ಅನುವಾದ ಮಾಡಿದ ಹಲವಾರು ಕವನ ಸಂಕಲನಗಳ ಅನುವಾದಕ … ಎಂದೇ, ಸಿಗುರ್ದ್ಸನ್ ಅವರನ್ನು “ಐಸ್‌ಲ್ಯಾಂಡ್‌ ದೇಶದ ಅತ್ಯಂತ ಗಮನಾರ್ಹ ಯುವ ಲೇಖಕರಲ್ಲಿ ಒಬ್ಬರು” ಎಂದು ಕರೆಯಲಾಗಿದೆ. + +ಮಾಗ್ನುಸ್ ಸಿಗುರ್ದ್ಸನ್-ರ ಕವನಗಳನ್ನು ಇಂಗ್ಲಿಷಿಗೆ ಅನುವಾದ ಮಾಡಿದ ಮೇಗನ್ ಅಲಿಸಾ ಮ್ಯಾಟಿಚ್-ರವರು (Megan Alyssa Matich – Meg Matich) ತಮ್ಮ ಅನುವಾದ ಅನುಭವದ ಬಗ್ಗೆ ಹಾಗೂ ಸಿಗುರ್ದ್ಸನ್-ರವರ ಕಾವ್ಯದ ಬಗ್ಗೆ ವಿಸ್ತೃತವಾಗಿ ಬರೆದಿದ್ದಾರೆ. ಮೆಗ್ ಮ್ಯಾಟಿಚ್-ರವರ ಅಭಿಪ್ರಾಯಗಳ, ಒಳನೋಟಗಳ ಆಯ್ದ ಭಾಗಗಳನ್ನು ಅನುವಾದಿಸಿ ಇಲ್ಲಿ ಕೊಟ್ಟಿರುವೆನು. ಇಲ್ಲಿಂದ ಮುಂದೆ ಮೆಗ್ ಮ್ಯಾಟಿಚ್-ರವರ ಮಾತುಗಳು: + +ಮಾಗ್ನುಸ್ ಸಿಗುರ್ದ್ಸನ್ ಅವರು ತಮ್ಮ ಕವಿತೆಗಳಲ್ಲಿ ತಮ್ಮ ಭಾಷೆಯಲ್ಲಿರುವ ಅತಿಶಯತೆಯನ್ನು ಕಳಚಿಹಾಕುತ್ತಾ “ಏಕಾಕ್ಷರಗಳ ಸಣಕಲಾದ ಸಂಗೀತ”-ವನ್ನು ಅಭ್ಯಾಸ ಮಾಡುವಲ್ಲಿ ಒಲವು ತೋರುತ್ತಾರೆ. ಹಾಗೆಯೇ, ಅವರು ಸಂಕೀರ್ಣವಾದ ನುಡಿಯಾಟ ಮತ್ತು ಪದರಚನೆಯತ್ತ ಗಮನಕೊಡುವ ಮೂಲಕ ತಮಗೆ ತಾವೇ ನೇಮಿಸಿಕೊಂಡ ಭಾಷಾ ಮಿತಿಗಳನ್ನು ಮೀರುತ್ತಾ, ಸರಳವಾದ ಪದಗಳನ್ನು ಆಸ್ವಾದಿಸುವ ಹಾಗೂ ಅನುಭವಿಸುವ ಹೊಸ ಮಾರ್ಗಗಳನ್ನು ಕಾಣುತ್ತಾರೆ. + +ಸಿಗುರ್ದ್ಸನ್ ಅವರ ಕಾವ್ಯಲೋಕವು ಸೂಕ್ಷ್ಮ ವಿವರಗಳಿಂದ ನಿರ್ಮಿಸಲ್ಪಟ್ಟಿದೆ. ಸಿಗುರ್ದ್ಸನ್-ರ ಅಡಕವಾದ, ಸಂಕೀರ್ಣ ಬರವಣಿಗೆಯ ಶೈಲಿಯನ್ನು ಅನುವಾದಿಸುವುದು ಲೇಖಕ ಮತ್ತು ಭಾಷಾಂತರಕಾರರ ನಡುವಿನ ನಿಕಟ ಸಹಯೋಗದ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತದೆ. ಅತಿ ತೆಳುವಾದ ವಸ್ತುಗಳಿಂದ ಪ್ರತಿಧ್ವನಿಸುವ, ಆಕರ್ಷಕ ಕವಿತೆಗಳನ್ನು ಸೃಷ್ಟಿಸುವ ಅವರ ಸಾಮರ್ಥ್ಯ ಅನುವಾದಕರಿಗೆ ರೋಮಾಂಚಕಾರಿ ಸವಾಲುಗಳನ್ನು ಒಡ್ಡುತ್ತದೆ, ಆದರೆ ಅದು ಅವರ ಮಾತೃಭಾಷೆಯನ್ನು ಮರುರೂಪಿಸುವ ಅವರ ಸೃಜನಶೀಲತೆ ಮತ್ತು ಯೋಗ್ಯತೆಗೆ ಕೂಡ ಸಾಕ್ಷಿಯಾಗಿದೆ. + +ಸಿಗುರ್ದ್ಸನ್-ರ ಕವನಗಳನ್ನು ಭಾಷಾಂತರಿಸುವಾಗ, ನಾನು ನನ್ನನ್ನು ಒಂದು ಸನ್ಯಾಸಿಯ ಗೂಡಿನೊಳಗಿದ್ದಂತೆ ಕಂಡುಕೊಂಡೆ, ಕೇಂದ್ರೀಕೃತ ಅಭ್ಯಾಸಕ್ಕೆ ವಿಶಿಷ್ಟವಾದಂತಹ “ಪ್ರತಿಧ್ವನಿಸುವ ಮೌನ”-ವನ್ನು ಎದುರಿಸಿದೆ. ನಾನು ಅವರ ಕಾವ್ಯದೊಳಗೆ ಆಳವಾಗಿ ಮುಳುಗಿದಾಗ, ಅವರ ಕವನಗಳಿಗೆ ಸರಳವಾದ ಮತ್ತು ಧ್ವನಿ ಅಥವಾ ಅರ್ಥದಲ್ಲಿ ಸಾಮರಸ್ಯವಿಲ್ಲದ ಇಂಗ್ಲಿಷ್ “ಪರಿಹಾರಗಳನ್ನು” ರೂಪಿಸಿದೆ. ಸಿಗುರ್ದ್ಸನ್ ಅವರ ಕಾವ್ಯ ಪಿಸುದನಿಯಲ್ಲಿ ಮಾತನಾಡುತ್ತೆ; ಇದು ನನ್ನ ಕಾವ್ಯಪ್ರವೃತ್ತಿಗಳಾದ ಆರೋಹಣ ಮತ್ತು ಅಸಂಬದ್ಧ ಶಬ್ದಜೋಡಣೆಗೆ ವ್ಯತಿರಿಕ್ತವಾದ ಕಾವ್ಯ. ಇಂಗ್ಲಿಷ್‌-ನಲ್ಲಿ ಅವರ ಕವಿತೆಗಳನ್ನು ಕಾಣುವುದು ಎಂದರೆ ಅದು ಹೊಂದಾಣಿಕೆ ಮಾಡಿಕೊಂಡಂತೆ ಅಲ್ಲ, ಒಂದು ಸಮತೋಲನವನ್ನು ತಂದಂತೆ. + +ನಾನು ಇಂಗ್ಲಿಷ್‌ಗೆ ಅನುವಾದಿಸಿದ ಅವರ ಕವನ ಸಂಕಲನ Cold Moons-ನಲ್ಲಿ, ಮಾಗ್ನುಸ್ ಸಿಗುರ್ದ್ಸನ್ ಅವರು ತಾನು ಬಯಸಿದ ಜಗತ್ತನ್ನು ವಿವರಿಸುತ್ತಾರೆ; ಇದು ಹಸಿರು ಪ್ರಪಂಚದಿಂದ ಕಲಿಯಲು ಒತ್ತು ನೀಡುವ ಜಗತ್ತಾಗಿರುತ್ತೆ ಹಾಗೂ ನಮ್ಮ ಭಾವನೆಗಳನ್ನು ಸದೆಬಡಿಯಲು ಯಂತ್ರಗಳಿಗೆ ಅನುಮತಿ ಕೊಡುವ ಬದಲು ಪ್ರಕೃತಿಯ ಸೂಕ್ಷ್ಮ ದರ್ಶನಗಳ ಕಡೆ ಗಮನ ಕೊಡುತ್ತದೆ. ಸಂಕೀರ್ಣವಾದ ನುಡಿಯಾಟ ಮತ್ತು ಅವರ ತಾಯಿನುಡಿಯಾದ ಐಸ್‌ಲ್ಯಾಂಡಿಕ್‌ ಭಾಷೆಯ ಅಗಾಧ ಅರವಿನ ಮೂಲಕ, ಸಿಗುರ್ದ್ಸನ್-ರು ಸಣ್ಣ ಸಣ್ಣ ಆದರೆ ಬಹು ಆಕರ್ಷಕವಾದ ಕಲಾಕೃತಿಗಳನ್ನು ರಚಿಸಲು ಸಮರ್ಥರಾಗಿದ್ದಾನೆ – ಒಂದು ಕ್ಷಣದಿಂದ ಒಂದು ಯುಗದವರೆಗೆ ಏರುವ ಮತ್ತು ಸಾವಿರ ಸಹಸ್ರಮಾನಗಳಿಂದ ಒಂದು ಸೆಕೆಂಡಿಗೆ ಇಳಿಯುವ ಕ್ಷಮತೆಯುಳ್ಳ ತುಣುಕುಗಳು. ಅವರು ತನ್ನ ಮಾತೃಭಾಷೆಯ ವಿಶ್ವವಿಜ್ಞಾನಿ. + + + +ಅವರ ಕವಿತೆಗಳು ನೈಸರ್ಗಿಕ ಪ್ರಪಂಚದ ಪರಿಶೋಧನೆಗಳಾಗಿ ಮತ್ತು “ಕಲ್ಪನೆಯ ನಿಸರ್ಗದೃಶ್ಯ”ವಾಗಿ ಕಾರ್ಯನಿರ್ವಹಿಸುವುದಲ್ಲದೆ, ಅವು ಐಸ್ಲ್ಯಾಂಡಿಕ್ ಭಾಷೆಯ ನಮ್ಯತೆ ಹಾಗೂ ಆ ದೇಶದ ನೆಲ ಮತ್ತು ಅದರ ಜನರ ನಡುವಿನ ಸಂಬಂಧದ ಇತಿಹಾಸವನ್ನು ಎತ್ತಿ ತೋರಿಸುತ್ತವೆ. ಉದಾಹರಣೆಗೆ, ’að ykrja’ ಎಂಬ ಐಸ್‌ಲ್ಯಾಂಡಿಕ್‌ ಪದವನ್ನು ತೆಗೆದುಕೊಳ್ಳಿ, ಇದನ್ನು ಕವಿ ಹಲವಾರು ಸಂದರ್ಭಗಳಲ್ಲಿ ಬಳಸುತ್ತಾರೆ… ಈ ಪದಕ್ಕೆ ಎರಡು ಅರ್ಥಗಳಿವೆ – “ಪದ್ಯ ರಚಿಸುವುದು” ಮತ್ತು “ಹೊಲವನ್ನು ಉಳುಮೆ ಮಾಡುವುದು.” ಇಂತಹ ಪದಗಳನ್ನು ಅವರು ಇರಿಸುವ ಸಂದರ್ಭದ ಕ್ರಿಯಾಶೀಲತೆಯು ಅವುಗಳ ಅರ್ಥದ ಪೂರ್ಣತೆಯನ್ನು ಸಾಕಾರಗೊಳಿಸಲು ಅನುವು ಮಾಡಿಕೊಡುತ್ತದೆ. + +ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್‌ಲ್ಯಾಂಡಿಕ್‌ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ. + +ಮಾಗ್ನುಸ್ ಸಿಗುರ್ದ್ಸನ್ ಅವರ ಕವಿತೆಗಳಲ್ಲಿ, ಒಂದು ಚಿಕ್ಕ ಜೀವಿ ಕೂಡ ಬಹು ದೊಡ್ಡದಾಗಿರುತ್ತೆ. ಉದಾಹರಣೆಗೆ, ಅವರ ಕವಿತೆ Evolution (1)-ನಲ್ಲಿ ಅವರು ವಿಕಾಸವನ್ನು ಮಾನವಕೇಂದ್ರಿತವಾಗಿ ವಿವರಿಸುವುದಿಲ್ಲ. ಕೇವಲ ಒಂದು ಮಿಲಿಮೀಟರ್ ವಿಸ್ತಾರದ ರೆಕ್ಕೆಗಳನ್ನು ಹೊಂದಿರುವ ಕುಬ್ಜ ಕಣಜ ನೊಣವನ್ನು (dwarf wasp) ಕವಿ ನಮ್ಮ ಮುಂದೆ ಇಡುತ್ತಾರೆ. ಅವರು ಆ ಕುಬ್ಜ ಕಣಜ ನೊಣವನ್ನು ಕ್ಯಾಮೆರಾ ಲೆನ್ಸ್‌-ನ ಎದುರು ಹಿಡಿಯುತ್ತಾ ತಂತ್ರಜ್ಞಾನ ಮತ್ತು ಪ್ರಕೃತಿಯನ್ನು ಅಕ್ಕಪಕ್ಕ ಇಟ್ಟು ತೋರಿಸುತ್ತಾರೆ. ಕುಬ್ಜ ಕಣಜದ ರೆಕ್ಕೆಗಳನ್ನು ನೋಡಿ ಅವರು ಆಶ್ಚರ್ಯಪಡುತ್ತಾರೆ, “ಒಂದು ಸೆಕೆಂಡಿಗೆ 350 ಬಾರಿ” ಬಡಿಯುತ್ತೆ ಅದರ ರೆಕ್ಕೆಗಳು. ಆದರೂ, ಈ ಚಿಕ್ಕ ಜೀವಿಯನ್ನು ಛಾಯಾಚಿತ್ರದಲ್ಲಿ ಸೆರೆಹಿಡಿಯುವಂತಹ ಕ್ಯಾಮರಾವನ್ನು ತಯಾರಿಸಲು ಅವಿರತವಾಗಿ ವಿಕಸನಗೊಳ್ಳುತ್ತಿರುವ ನಮ್ಮ ತಂತ್ರಜ್ಞಾನಕ್ಕೆ ಸಹಸ್ರಾರು ವರ್ಷಗಳು ಬೇಕಾಯಿತು ಎಂದು ಅವರು ಬರೆಯುತ್ತಾರೆ. ಏತನ್ಮಧ್ಯೆ, ಈ ಜೀವಿಯು ಅದನ್ನು ನೋಡುವ ನಮ್ಮ ಸಾಮರ್ಥ್ಯದ ಹೊರತಾಗಿಯೂ ಅಸ್ತಿತ್ವದಲ್ಲಿದೆ (“ಸೆರೆಹಿಡಿಯುವುದು” ಇಲ್ಲಿ ಅಪಶಕುನ ಸೂಚಿಸುವ ಪದವಾಗಿದೆ). ಅದು ನಮ್ಮ ಮಧ್ಯಸ್ತಿಕೆ ಅಥವಾ ಆವಿಷ್ಕರಣದ ಹೊರತಾಗಿಯೂ, ‘ಉಪಯುಕ್ತತೆ,’ ‘ಕುತಂತ್ರತೆ,’ ಅಥವಾ ‘ಚತುರತೆ’ ಇಲ್ಲದ ಜೀವಿಯಾಗಿ ಸ್ವಾಭಾವಿಕವಾಗಿ ವಿಕಸನಗೊಳ್ಳುತ್ತೆ, ಸಾಧನಗಳು ಅಥವಾ ರಚನೆಗಳಂತಲ್ಲ. + +ನಾನು ಮಾಗ್ನುಸ್ ಸಿಗುರ್ದ್ಸನ್ ಅವರ ಕವಿತೆಗಳಲ್ಲಿರುವ ಕಳಕಳಿಗೆ ಆಕರ್ಷಿತಳಾಗಿರುವೆ. ಕೇವಲ ಬೆರಳೆಣಿಕೆಯಷ್ಟು ಬೀಜಗಳನ್ನು ಮಾತ್ರ ಹೊಂದಿರುವ, ಅಗತ್ಯ ಬಿದ್ದಲ್ಲಿ ಮಾತ್ರ ಅವನ್ನು ಬಳಸುವ ರೈತನು ಆ ಬೀಜಗಳನ್ನು ಬಿತ್ತಿ, ಹೊಸದಾಗಿ ಉಳುಮೆ ಮಾಡಿದ ಗದ್ದೆಯ ವಿರಳತೆಯನ್ನು ಅವರ ಕವನಗಳು ಹೊಂದಿವೆ. ಅವು ಫಲವನ್ನು ನೀಡುತ್ತಿದ್ದಂತೆ, ಹಾಳೆಯಲ್ಲಿ ಜಾಗವನ್ನು ಸೃಷ್ಟಿಸುತ್ತವೆ – “ಬಿಳಿ ಬಯಲು” – ಮತ್ತು ಆ ಫಲದಿಂದ ಇನ್ನೂ ಹೆಚ್ಚು ಬೀಜಗಳು ಉತ್ಪನ್ನವಾಗುತ್ತವೆ – ನಂತರ ಅವುಗಳನ್ನು ಮುಂಬರುವ ಋತುವಿನಲ್ಲಿ ಮರು ನೆಡಲಾಗುತ್ತದೆ (ಅಥವಾ ಅವು ಸ್ವಂತವಾಗಿ ಬೆಳೆಯುತ್ತವೆ) – ಹೊಸ ಬೆಳೆ ತಯಾರಾಗುತ್ತದೆ. ಆದರೆ, ಸಿಗುರ್ದ್ಸನ್ ನಿಮ್ಮ ಗಮನವನ್ನು ಕವಿತೆಯ ಕಡೆಗೆ ತಳ್ಳುತ್ತಿದ್ದಂತೆ, ನಿಮ್ಮ ಗಮನವನ್ನು ಅಲ್ಲಿ ಏನಿಲ್ಲವೋ ಅದರ ಕಡೆಗೆ ಸೆಳೆಯುತ್ತಾರೆ. ಬಿಳಿ ಹಾಳೆಯನ್ನು ನೋಡುವುದು ಒಂದು ಆಶ್ಚರ್ಯಕರವಾದ ಅನುಭವ; ಇದು ಬಿಳಿಯ ಹರಹನ್ನು ನೋಡುವ, ನಿಜವಾಗಿಯೂ ನೋಡುವ, ಆಶ್ಚರ್ಯವಾಗಿದೆ; ಹಾಳೆಯ ಅಂಚುಗಳು ಅನಂತವಾಗಿ ವಿಸ್ತರಿಸುವ ಸಾಧ್ಯತೆಯನ್ನು ನೀಡುತ್ತದೆ. ಕೊಯ್ಲು ಮುಗಿದ ನಂತರ, ಬಂಜರು ಗದ್ದೆಯನ್ನು ಮತ್ತೆ ನಾಟಿ ಮಾಡಬೇಕು, ಹೊಸ ಪದಗಳಿಂದ. ಮತ್ತೆ “ಎಲೆಗಳು ಪ್ರಾಕ್ತನ ಮಳೆಯನ್ನು ಹನಿಸುತ್ತವೆ.” + +ಇಲ್ಲಿ ನಾನು ಕನ್ನಡಕ್ಕೆ ಅನುವಾದಿಸಿದ ಮಾಗ್ನುಸ್ ಸಿಗುರ್ದ್ಸನ್-ರ ಎಲ್ಲಾ ಕವನಗಳನ್ನು ಮೇಗನ್ ಅಲಿಸಾ ಮ್ಯಾಟಿಚ್-ರವರು (Megan Alyssa Matich – Meg Matich ) ಮೂಲ ಐಸ್‌ಲ್ಯಾಂಡಿಕ್ ಭಾಷೆಯಿಂದ ಇಂಗ್ಲಿಷಿಗೆ ಅನುವಾದಿಸಿರುವರು. + +***** + +೧ಹೊಸತಿರುವುಮೂಲ: Watershed + +ಆಲೋಚನೆಗಳ ಹುಚ್ಚುಹೊಳೆಯೊಂದುನನ್ನನ್ನು ಕಡಲತೀರಕ್ಕೆಒಗೆದುಬಿಟ್ಟಿದೆ. + +ಯಾರ ಕಿವಿಗೂ ಎಟುಕದಷ್ಟು ದೂರ. + +ಒಂದು ಹೊಸ ಆಗಸದ ಅಡಿಯಲ್ಲಿ. + +ನಾನೀಗ ಸಸಿಗಳ ನೆಡುವೆನುಒಂದು ಹೊಸ ಹೊಲದಲ್ಲಿ. + +೨ನೌಕಾಯಾನಮೂಲ: Sailing + +ನೈದಿಲೆಗಳ ಮಧ್ಯೆ ತೇಲಿಹೋಗುತ್ತಿದೆ ದೋಣಿ. + +ದಡದಲ್ಲಿ, ಮಲರಿದ ಚೆರಿಮರಗಳ ಸಾಲು. + +ವಿಲೋ ಮರಗಳ ಚಪ್ಪರದಡಿಯಲ್ಲಿಮಾವಿನ-ಹಕ್ಕಿಯೊಂದನ್ನು ಬಿಟ್ಟರೆಬೇರೇನೂ ಇಲ್ಲ. + +ಹುಟ್ಟುಗಳ ಒಂದೊಂದು ಎಳೆತಮತ್ತೂ ಹತ್ತಿರಕ್ಕೆ ತರುತ್ತೆ ನಮ್ಮನ್ನು. + +೩ಬೇಟೆಗಾರಮೂಲ: Hunter + +ನನಗೆ ಓದಲು ಬರುವುದಿಲ್ಲ,ಬರೆಯಲು ಸಹ. + +ನನ್ನ ಈಟಿಯೇ ನನ್ನ ಸೀಸದಕಡ್ಡಿ.ಈ ನೀರಿನ ಮೇಲ್ಪದರವೇನನ್ನ ಹಾಳೆ. + +ಮೀನಿನ ನೆರಳುಹೊಳೆದ ಕೂಡಲೆ,ನಾನು ನನ್ನ ಹೆಸರರುಜು ಹಾಕುವೆಪದರದ ಮೇಲೆ. + +೪ವಿಕಾಸ (೧)ಮೂಲ: Evolution (1) + +ಕುಬ್ಜ ಕಣಜದ ಉಡ್ಡಯನ, + +ಒಂದು ಮಿಲಿಮೀಟರ್ರೆಕ್ಕೆಯಳತೆ,ಒಂದು ಸೆಕೆಂಡಿಗೆ350 ಸಲ ಬಡಿಯುತ್ತೆ,ಕೊನೆಗೂ ಛಾಯಾಚಿತ್ರದಲ್ಲಿಸೆರೆಹಿಡಿಯಲ್ಪಟ್ಟಿದೆ.ಅವಿರತವಾಗಿ ವಿಕಸನಗೊಳ್ಳುತ್ತಿರುವತಂತ್ರಜ್ಞಾನಕ್ಕೆಸಹಸ್ರಾರು ವರ್ಷಗಳುಬೇಕಾಯಿತು. + +೫ಮಳೆಮೂಲ: Rain + +ನಾನು ಎಲ್ಲಕ್ಕಿಂತಹೆಚ್ಚಾಗಿ ಇಷ್ಟಪಡುವುದುಮಳೆಯನ್ನು, + +ಅದು ಎಲೆಗಳ ಮೇಲಿದ್ದಧೂಳನ್ನು ತೊಳೆಯುವಾಗ + +ಹಾಗೂ ಒಣಗಿದ ಹುಲ್ಲುನೀರನ್ನು ಹೀರುವಾಗ. + +ಈ ಲೋಕ ತನ್ನಬಣ್ಣಗಳ ಸೂಕ್ಷ್ಮತೆಯನ್ನುಮರುಪಡೆಯುವವರೆಗೂ. + +೬ಹಗಲು-ಲಿಲಿ ಹೂಗಳುಮೂಲ: Daylilies + +ಬೆಳಗ್ಗಿನ ಸೂರ್ಯಮಿನುಗುತ್ತಿದ್ದಾನೆ + +ಹಗಲು-ಲಿಲಿ ಹೂವೊಂದರಶಿರದ ಮೇಲೆ. + +ಪ್ರತಿ ದಿನತುಂಬುವ ಸೆಲೆಹಾಗೂಖಾಲಿಯಾಗುವ ಸೀಸೆಅದು. + +Daylily – ಹಗಲು ಲಿಲಿ (ಗಿಡ); ಹೆಮರಕ್ಯಾಲಿಸ್‍ ಕುಲದ, ಒಂದೆ ದಿನಕ್ಕೆ ಬಾಡಿ ಹೋಗುವ, ಹಳದಿ ಯಾ ಕಿತ್ತಳೆ ಬಣ್ಣದ, ಲಿಲಿಯಂಥ ಹೂಗಳನ್ನು ಬಿಡುವ ಗಿಡ. + +೭ಕಾಲ್ಪನಿಕ ನಾಡುಮೂಲ: Imaginary Land + +ಎಲೆಗಳ ಬಣ್ಣಈಗ ಕೆನ್ನೇರಳೆ, + +ಪ್ಲಮ್ ಹಣ್ಣುಗಳ ಹಾಗೆ.ಮತ್ತೆ ಆ ಆಕಾಶದ ಬಣ್ಣ + +ಗುಲಾಬಿ, ಅರಮನೆಯ ಹಾಗೆ. + +ಹೊರಲೋಕವೇ,ನಾನು ನಿನ್ನನ್ನು ಕುಡಿಯುವೆ. + +ನಾನು ನಿನ್ನನ್ನು ಹರಿಯಬಿಡುವೆನದಿಯ ಹಾಗೆ. + +ಒಂದು ಕಾಲ್ಪನಿಕ ನಾಡಿನಬಂಜರು ಹೊಲಗಳ ಮೇಲೆ. + +೮ಕರಾಳ ಕಾನನಮೂಲ: Dark forest + +ನಿನ್ನ ಪತ್ರಗಳನ್ನೆಲ್ಲಾಹಿತ್ತಲ ತೋಟದಲ್ಲಿಹುಗಿದೆ,ಎಲ್ಲಾ 79 ಪತ್ರಗಳನ್ನು. + +ಅವು ಚಿಗುರೊಡೆಯಲುಪ್ರಾರಂಭಿಸಿವೆಹಿಮಪದರದ ಅಡಿಯಲ್ಲಿ. + +ಮುಸ್ಸಂಜೆಯ ಬೆಳಕಿಗಾಗಿ ಹಾತೊರೆಯುತ್ತಾ,ಛಳಿಗಾಳಿಯನ್ನು ಅರಸುತ್ತಾ. + +ಒಂದು ಕರಾಳ ಕಾನನಉದ್ಭವಿಸುವುದುಅವುಗಳಿಂದ. + +೯ಬೇಸಾಯಮೂಲ: Agriculture + +ಈ ಹಾಳೆ ಒಂದು ಬಿಳಿ ಬಣ್ಣದಹೊಲ. + +ನಾನು ಬಿತ್ತುವ + +ಕಪ್ಪು ಬೀಜಗಳೇಪದಗಳು. + +೧೦ಬೆಳದಿಂಗಳುಮೂಲ: Moonlight + +ಸ್ಮರಣಾರ್ಥ + +ಸೂರ್ಯ ಅಡವಿಯ ಸಾಲಿನ ಕೆಳಗೆ ಮುಳುಗಿರುವ. + +ಒಬ್ಬರ ನಂತರ ಒಬ್ಬರುಗಣಿಕೆಲಸದವರು ಏರಿ ಬರುವರು ಹೊರಗೆಭೂಮಿಯ ಒಳಗಿನಿಂದ. + +ಮಸ್ಸಂಜೆಯ ಹೊತ್ತು ಅವರುನದಿದಡದಲ್ಲಿ ಕುಕ್ಕರಕೂರುವರು,ಅಂಗೈ ಬೊಗಸೆಯಿಂದ ನೀರು ಕುಡಿಯುವರು,ಹಣೆಗಳಿಂದ ಧೂಳು ತೊಳೆದುಕೊಳ್ಳುವರು. + +ಅವರ ಬಿಳಿಚಿದ ಮುಖಗಳು,ಹೊಸದಾಗಿ ಬೆಳಗಿಸಿದ 20,000 ಚಂದ್ರಗಳುಕಪ್ಪು ಆಕಾಶದ ಹಿನ್ನೆಲೆಯ ಮೇಲೆ. + +ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು.  ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ.  “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು”(ಪೋಲೀಷ್‌ ಕವಿತೆಗಳ ಕನ್ನಡಾನುವಾದಿತ ಸಂಕಲನ).  ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ.  ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ. \ No newline at end of file diff --git a/Kenda Sampige/article_200.txt b/Kenda Sampige/article_200.txt new file mode 100644 index 0000000000000000000000000000000000000000..b149946cfa3754c80481dcd64f1f59e3a1ad3dde --- /dev/null +++ b/Kenda Sampige/article_200.txt @@ -0,0 +1,17 @@ +ಭಾವನೌಕೆಯನೇರಿ, ಸೌಜನ್ಯ ದತ್ತರಾಜರ ಮೊದಲ ಕವನ ಸಂಕಲನ. ಇದರಲ್ಲಿ ಅವರು ತಮ್ಮ ಕವನಗಳನ್ನು ಮೂರು ವಿಭಾಗಗಳನ್ನಾಗಿ ವಿಂಗಡಿಸಿಕೊಂಡಿದ್ದಾರೆ. ಮೊದಲನೆಯ ಗುಂಪಿನವು ಒಲವಿನ ಪ್ರೇಮ ಕಾವ್ಯಗಳಾಗಿದ್ದು, ಎರಡನೆಯವು ವಿರಹದಲೆಗಳಾಗಿವೆ ಮತ್ತು ಕೊನೆಯವು ತಮ್ಮ ಸುತ್ತಲಿನ ಆಗುಹೋಗುಗಳಿಗೆ ಸಂಬಂಧಿಸಿದವುಗಳಾಗಿವೆ. + +ಪ್ರೇಮಶರಧಿಯ ವಿಭಾಗದಲ್ಲಿ ‘ರಾಮಸೀತೆಯರ ಒಲವಿನಂತೆ, ಶಿವಪಾರ್ವತಿಯರ ಅನುರಾಗದಂತೆ, ರಾಧಾಕೃಷ್ಣರ ಪ್ರೇಮದಂತೆ, ಈ ಕ್ಷಣವು ಹೀಗೆಯೇ ಇರಲಿ’ ಎನ್ನುತ್ತಾ ತನ್ನ ಪ್ರೇಮವೂ ಎಂದೆಂದಿಗೂ ಮುಗಿಯದ ಮಹಾಕಾವ್ಯವಾಗುವ ಹಂಬಲ ವ್ಯಕ್ತಪಡಿಸಿದ್ದಾರೆ. ‘ಕಾಮ ಮೋಹಗಳ ಮೀರಿದ ಹೊಸತೊಂದು ಪ್ರೇಮಪಲ್ಲವಿಯ ಹಾಡುವಾಸೆ’ ಎಂದೆನ್ನುವಾಗ ಅವರಲ್ಲಿ ತನ್ನ ನಿಷ್ಕಲ್ಮಷ ಪ್ರೇಮದೊಳಗಣ ಆಸೆಯ ಅಭಿವ್ಯಕ್ತಿಯನ್ನು ಕಾಣಬಹುದಾಗಿದೆ. ‘ಹೆಗಲಿಗೆ ಹೆಗಲು ಸೇರಿಸಿ ಅರಳುತ್ತಿದ್ದಾರೆ ಒಬ್ಬರೊಳಗೊಬ್ಬರು’ ಎನ್ನುತ್ತಾ ಭೌತಿಕ ಆಕರ್ಷಣೆಗಳನ್ನು ಗೆಲ್ಲುವಂತೆ ಕರೆನೀಡುತ್ತಾರೆ. ಈ ವಿಭಾಗದಲ್ಲಿನ ಪ್ರತೀ ಕವನದಲ್ಲೂ ದಾಂಪತ್ಯದೊಳಗಿನ ಪ್ರೇಮ ಪಲ್ಲವಿಯನ್ನು ಕಾಣಬಹುದಾಗಿದೆ. + +(ಸೌಜನ್ಯ ದತ್ತರಾಜ) + +ವಿರಹದಲೆಗಳ ಮೇಲೆ ನೆನಪುಗಳ ನೌಕೆಯನೇರಿ ವಿಭಾಗವು ಪ್ರೇಮದೊಳಗಣ ವಿರಹದ ಬೇಗೆಯನ್ನು ಅಭಿವ್ಯಕ್ತಪಡಿಸುವ ಕವನಗಳನ್ನು ಹೊಂದಿದ್ದು, ಇಲ್ಲಿ ಕೃಷ್ಣನ ಸಂಗದೊಳಿಂದ ದೂರವಿರುವ ರಾಧೆಯ ವಿರಹವಿದೆ. ಬರೀ ವಿರಹವನ್ನಷ್ಟೇ ತಿಳಿಸಿ ಸುಮ್ಮನಾಗದೇ ಅದರಿಂದ ಮುಕ್ತಿ ಹೊಂದುವ ಸಾಲುಗಳೂ ಇಲ್ಲಿವೆ, ಉದಾಹರಣೆಗೆ ‘ಹಳೇ ನೆನಪೆಂಬ ಪಳೆಯುಳಿಕೆಗಳ ಗೊಬ್ಬರದ ಮೇಲೆಯೇ ಹೊಸ ಹೂವೊಂದು ಅರಳೀತು..’ ಎಂಬ ಸಾಲುಗಳು ನನ್ನ ಮಾತನ್ನು ಪುಷ್ಠೀಕರಿಸುತ್ತವೆ. ‘ನಿನ್ನ ಮರೆತು ನಾನು ನಾನಾಗಿ ಉಳಿಯಲು ಸತತವಾಗಿ ಪ್ರಯತ್ನಿಸುತ್ತಲೇ ಇದ್ದೇನೆ’ ಎಂಬಲ್ಲಿ ಸೋಲೊಪ್ಪಿಕೊಳ್ಳದ ನೈಜ ಪ್ರೀತಿಯಿರುವುದು ಗೋಚರವಾಗುತ್ತದೆ. ‘ಮನಸ್ಸು ಪ್ರವಾಸಹೊರಡುತ್ತದೆ ಆತ್ಮಕ್ಕಂಟಿದ ನೆನಪಿನ ಧೂಳಿನಲಿ, ಹೊಸಚಿತ್ರ ಬಿಡಿಸುತ್ತಾ..’ ಎನ್ನುವ ಸಾಲುಗಳಲ್ಲಿ ವಿರಹದ ಬೇಗೆಯಿಂದ ಹೊರಬಂದು ಮಾನಸಿಕ ನೆಮ್ಮದಿಯತ್ತ ತೆರಳುವ ಮನಸ್ಸಿನ ತವಕವನ್ನು ಕಾಣಬಹುದು. + +ಸವೆದ ಸಾಲಿನಂಚಿನ ಸಾಲು ಕವನಗಳಂತೂ ತಮ್ಮ ಸುತ್ತಲಿನ ಆಗುಹೋಗುಗಳನ್ನೇ ಕೇಂದ್ರವಾಗಿಟ್ಟುಕೊಂಡು ರಚಿತವಾಗಿದ್ದು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತವೆ. ಅಪಾರ್ಟ್‌ಮೆಂಟೊಂದರ ಯಾಂತ್ರಿಕ ಜೀವನದ ಪರಿಯನ್ನು ‘ಅಪಾರ್ಟಮೆಂಟಿನ ಕಾಂಪೌಂಡು’ ಕವಿತೆ ಚೆನ್ನಾಗಿ ಕಟ್ಟಿಕೊಟ್ಟಿದೆ. ಹೊಸ ಹುಣಸೆಹಣ್ಣಿನ ರಸವನ್ನು ಒಗ್ಗರಣೆ ಹಾಕಿ ನಂತರ ನಾಲಿಗೆಯಿಂದ ರುಚಿಸಿ ನೋಡಿದಂತೆ ‘ಇನಿಯನ ಒಲವೂ ಒಂದು ಅಂದಾಜು’ ಎಂದಿದ್ದಾರೆ ಸೌಜನ್ಯರವರು. + +‘ಬೇಕಿತ್ತು ನಿಮ್ಮದೊಂದೆರೆಡು ಕವಿತೆಗಳು ಸಾಲವಾಗಿ ಯೋಚಿಸಬೇಡಿ ಹಿಂತಿರುಗಿಸುತ್ತೇನೆ, ಒಮ್ಮೆ ಕೊಟ್ಟು ನೋಡಿ ನನ್ನ ಕೈಚಳಕ ತೋರಿಸುತ್ತೇನೆ. ನಿಮ್ಮದೇ ಕವನಗಳಿಗೆ ಛಂದಸ್ಸು ಬದಲಿಸುತ್ತೇನೆ ನಗುವಿಗೆ ಅಳುವಿನ ಅಲಂಕಾರ ಮಾಡುತ್ತೇನೆ’ ಎಂಬ ಸಾಲುಗಳು ‘ಒಂಚೂರು ಸಾಲ ಬೇಕಿತ್ತು ‘ ಎಂಬ ಕವನದಿಂದ ಆಯ್ದದ್ದು. ಈ ಸಾಲುಗಳ ಮೂಲಕ ಸೌಜನ್ಯರವರು ಕೃತಿ ಚೋರರನ್ನು ವ್ಯಂಗ್ಯ ಮಾಡಿದ್ದಾರೆ. ಮೂಲ ಲೇಖಕರ ಒಪ್ಪಿಗೆಯಿರಲಿ, ಅವರ ಗಮನಕ್ಕೂ ತಾರದೇ ನೇರವಾಗಿ ಕವಿತೆಯ ಸಾಲುಗಳನ್ನು ನಕಲು ಮಾಡಿ ಅಲ್ಪ ಸ್ವಲ್ಪ ಬದಲಾವಣೆಯೊಂದಿಗೆ ತಾವೇ ರಚಿಸಿದ್ದೆಂದು ಪ್ರಚಾರ ಪಡೆಯುವ ಕಪಟ ಸಾಹಿತಿಗಳನ್ನು ಕೆಣಕಿದ್ದಾರೆ. ‘ಇರಬೇಕು, ಇದ್ದೇ ಇರುತ್ತಾರೆ, ಒಬ್ಬಿಬ್ಬರಲ್ಲ ಒಂದಷ್ಟು ಜನ, ಇರುವಿಕೆಯ ಅರಿವನ್ನಷ್ಟೇ ಉಳಿಸಿ, ಎಲ್ಲರೊಳಗೂ ಸಾಲವಾಗಿಯೇ ಉಳಿಯುವವರು..’ ಎಂದೆನ್ನುತ್ತಾ ಪ್ರತಿಯೊಂದರಲ್ಲೂ ಮೂಗು ತೋರಿಸುವವರ ಸಂಖ್ಯೆ ಈಗ ಅಧಿಕ. ಅದರ ಬಗ್ಗೆ ಪರಿಜ್ಞಾನ ಇದೆಯೋ ಇಲ್ಲವೋ ಗೊತ್ತಿಲ್ಲ ಆದರೆ ತನ್ನದೂ ಒಂದು ಅಭಿಪ್ರಾಯವಿರಲಿ ಎನ್ನುವವರೇ ಹೆಚ್ಚಾಗಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಬಳಸುವವರ ಸಂಖ್ಯೆ ಅಧಿಕವಾದಂತೆಲ್ಲ ಇಂತಹ ಪುಗಸಟ್ಟೆ ವಿಚಾರವಾದಿಗಳು ಅಧಿಕವಾಗಿದ್ದಾರೆ. ಅಂತಹವರ ಕುರಿತೇ ಬರೆದಿರುವ ಈ ಕವಿತೆ ಓದಿದೊಡನೆ ನಗು ಬರಿಸುತ್ತದೆಯಾದರೂ ತಾರ್ಕಿಕವಾಗಿ ಯೋಚಿಸಿದಾಗ ಗಂಭೀರ ವಿಷಯವನ್ನು ಪ್ರಸ್ತಾಪಿಸುವಂತೆ ಇದೆ. + + + +‘ಅಡುಗೆ ಕೋಣೆಗೆ ಬೇಕಾದ ಉಗುರು ಸ್ವಾವಲಂಬಿ ಜೀವನಕ್ಕೆ ಪೊಗರು, ಎರೆಡೂ ಇಂದಿನ ಸ್ತ್ರೀಗೆ ಅಗತ್ಯ’ ಎಂಬುದನ್ನು ‘ಉಗುರು-ಪೊಗರು’ ಕವಿತೆ ಬಹಳ ವಿಡಂಬನಾತ್ಮಕವಾಗಿ ಹೇಳುತ್ತದೆ. ‘ಮಾತನಾಡಬೇಕಿತ್ತು’ ಕವಿತೆಯು ಅಪ್ಪ ಅಮ್ಮನನ್ನು ಅವರಿದ್ದಾಗಲೇ ಆಧರಿಸಿ, ಹಾರೈಕೆ ಮಾಡಬೇಕೆಂದು ಹೇಳುತ್ತದೆ. ಈ ವಿಭಾಗದಲ್ಲಿನ ಕವಿತೆಗಳು ಯೋಧನ ಪತ್ನಿಯ ಸ್ವಗತವನ್ನು ಹೇಳುತ್ತವೆ. ಕಹಿ ನೆನಪುಗಳ ಮರೆತುಬಿಡುವುದರ ಸುಖವನ್ನು ಹೇಳುತ್ತವೆ. ಇಂತಹದ್ದೆ ನಮ್ಮವೇ ಆದ, ನಮ್ಮ ಸುತ್ತಲೂ ಕಂಡುಬರುವ, ಸನ್ನಿವೇಶ ಹಾಗೂ ವ್ಯವಸ್ಥೆಗಳ ಕುರಿತಾದ ೬೦ಕ್ಕೂ ಅಧಿಕ ಕವಿತೆಗಳು ಈ ಸಂಕಲನದ ಒಳಗಿದ್ದು ಮೇಲ್ನೋಟಕ್ಕೆ ಸುಲಭಕ್ಕೆ ದಕ್ಕಂತಹವುಗಳೆನ್ನಿಸಿದರು ಅಂತರಾಳದಲ್ಲಿ ಹೊಸ ಅರಿವುಗಳನ್ನು ನೀಡುವ ಕವಿತೆಗಳು ಇವಾಗಿವೆ. ಸೌಜನ್ಯಾರವರ ಮೊದಲ ಕವನ ಸಂಕಲನವಾದರೂ ಕವಿತೆಗಳನ್ನು ಓದಿದಾಗ ಹಾಗನ್ನಿಸುವುದಿಲ್ಲ, ಇಲ್ಲಿನ ಕವನಗಳಲ್ಲಿ ತೀವ್ರ ಪ್ರೇಮಾಲಾಪವಿದೆ, ಮರೆಯಲಾಗದ ವಿರಹವಿದೆ, ಬದುಕಿನ ಒಳತಿರುಳುಗಳ ನೆನಪುಗಳನ್ನು ಮೆಲುಕುಹಾಕುವ ವಿಡಂಬನೆಯ ಸಾಲುಗಳಿವೆ. ಕಾವ್ಯಕ್ರೇತ್ರದಲ್ಲಿ ವಿಹರಿಸಬೇಕೆಂಬ ಅಧಮ್ಯ ಉತ್ಸಾಹದಿಂದ ಭಾವನೌಕೆಯನ್ನೇರಿ ಪ್ರವಾಸ ಹೊರಟಿರುವ ಸೌಜನ್ಯರವರನ್ನು ಸಾಹಿತ್ಯ ಕ್ಷೇತ್ರ ಬಿಗಿದಪ್ಪಿ ಸತ್ಕರಿಸಲಿ ಎಂಬುದೇ ಕಾವ್ಯಾಸಕ್ತರ ಆಶಯ.. + +ಹರೀಶ್‌ ಕುಮಾರ್‌ ವೃತ್ತಿಯಲ್ಲಿ ವಿಜ್ಞಾನ ಶಿಕ್ಷಕರು. ಇವರ ಹಲವಾರು ಮಕ್ಕಳ ಕಥೆಗಳು, ಕವಿತೆಗಳು ಮತ್ತು ವೈಜ್ಞಾನಿಕ ಲೇಖನಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಬಾಲಮಂಗಳದಲ್ಲಿ ಅಂಕಣಕಾರರಾಗಿ ಸಾಕಷ್ಟು ಬರಹಗಳನ್ನು ಬರೆದಿದ್ದಾರೆ. ಮಕ್ಕಳ ಕಥಾ ಸಂಕಲನ ಹಾಗೂ ಶಿಶುಗೀತೆಗಳ ಸಂಕಲನಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_201.txt b/Kenda Sampige/article_201.txt new file mode 100644 index 0000000000000000000000000000000000000000..db569acbca1e6f9e6148983447c59b64dc234b7b --- /dev/null +++ b/Kenda Sampige/article_201.txt @@ -0,0 +1,265 @@ +ಐದು ಗಂಟೆಗೆ-ಸುಚಿತಾ ರಾಘವನ ಹಾದಿಯನ್ನು ಕಾಯುತ್ತ ಹಾಲ್ ಹೊರಗೆ ನಿಂತಿದ್ದಳು. ಅವನೇ ಅವಳಿಗೆ ಫೋನು ಮಾಡಿ, ಸಮಯವನ್ನು ನೀಡಿದ. ಕಾನ್ಫರೆನ್ಸ್ ಬಳಿಕ ಅಲ್ಲೇ ಭೇಟಿಯಾಗಲು ಕರೆಸಿಕೊಂಡನು. ಐದು ಹೊಡೆದು ಹೋಗಿತ್ತು. ಮೇಲೆ ಹತ್ತು ನಿಮಿಷ ಉರುಳಿತ್ತು. ಗಡಿಯಾರ ನೋಡುತ್ತ ಹಾದಿ ಕಾಯುವದು ಅವಳಿಗೆ ತೀರ ಕಷ್ಟವೆನಿಸಿತು. ಹೊರಟು ಬಿಡಬೇಕು ಎನ್ನುವಷ್ಟರಲ್ಲಿ ರಾಘವ ಬಂದ. ಅವಳ ಒಂದು ಕಡೆಯ ಮುಖ ಅವನಿಗೆ ಗೋಚರಿಸಿತು. ಸೂರ್ಯನ ಹೊಂಬಣ್ಣದ ಕಿರಣ ಅವಳ ಮುಖದ ಮೇಲೆ ಬಿದ್ದಿತ್ತು. ಗಾಳಿಗೆ ಹಾರುವ ಓಢನಿಯನ್ನು ಅವಳು ಸತತ ಸರಿ ಮಾಡಿಕೊಳ್ಳುತ್ತಿದ್ದಳು. ಅವಳ ಮೈಬಣ್ಣ ಬಿಳಿ, ಎತ್ತರ, ಗೋಣಿನವರೆಗೆ ಕತ್ತರಿಸಿದ ಕೂದಲು, ನಿನ್ನೆ ಗಮನಕ್ಕೆ ಬಂದ ಕಣ್ಣೊಳಗಿನ ಹಳದಿ ಗೆರೆ… ಅವಳಂತೂ ಡಾ. ನಿಯೋಗಿಯಂತೆ ಖಂಡಿತ ಕಾಣುತ್ತಿರಲಿಲ್ಲ. + +“ಬಹಳ ಹೊತ್ತು ಹಾದಿ ಕಾಯಬೇಕಾಯಿತೇ?’’ + +“ಹೆಚ್ಚೇನಿಲ್ಲ” ಎಂದು ಹೇಳುವದು ಕಷ್ಟವಾಗಿತ್ತು. + +“ಈಗ ಚಹಾ ಸಮಯ. ನೀವು ಬರುತ್ತೀರೋ, ಏನು ಹಾದಿ ಕಾಯುತ್ತೀರೋ? ಅದನ್ನು ತಪ್ಪಿಸಿ ಬರುವದು ಯೋಗ್ಯವೆನಿಸುವದಿಲ್ಲ”. + +“ನಾನೇ? ನಾನೇಕೆ ಬರಲಿ?’’ + +“ಬನ್ನಿ, ನಿಮ್ಮ ಪರಿಚಯ ಮಾಡಿಕೊಡುತ್ತೇನೆ. ಡಾ. ನಿಯೋಗಿಯವರ ಪರಿಚಯ ಎಲ್ಲರಿಗೂ ಇದೆ”. + +“ಡಾ. ನಿಯೋಗಿಯ ಮಗಳೆಂದು ಪರಿಚಯ ಮಾಡಿಕೊಡುವದಾಗಿದ್ದರೆ ಬೇಡವೇ ಬೇಡ”. ಅವಳು ನಗುತ್ತ ಹೇಳಿದಳು. + +“ಬೇರೆ ಹೇಗೆ ಪರಿಚಯ ಮಾಡಿಸಲಿ?’’ ಎಂದು ಚೇಷ್ಟೆಯಿಂದ ಅವನಿಗೆ ಕೇಳ ಬೇಕೆಂದೆನಿಸಿತು. ಆದರೂ ತಡೆದುಕೊಂಡ. + +“ನಾನಿಲ್ಲೇ ಹಾದಿ ಕಾಯುತ್ತೇನೆ” ಅವಳು ಹೇಳಿದಳು. + +“ಹಾಗಾದರೆ ನಾನು ಹೇಳಿ ಬರುತ್ತೇನೆ” ಅವನು ಎಂದ. + +ಅವರಿಬ್ಬರೂ ಹೊರಗೆ ಬಿದ್ದಾಗ ಸಾಕಷ್ಟು ಕತ್ತಲಾಗಿತ್ತು. ತನ್ನ ಸಿಟ್ಟನ್ನು ನೆನಪು ಮಾಡಿಕೊಡಲು ಅವಳು ಹೇಳಿದಳು, ‘‘ನೀವೇಕೆ ಐದು ಗಂಟೆ ಎಂದು ಹೇಳಿದಿರಿ? ಸ್ವಲ್ಪ ಹೊತ್ತು ಬಿಟ್ಟು ಬರಲು ಹೇಳಿದ್ದರೆ ಆಗುತ್ತಿತ್ತು”. + +“ಇಷ್ಟು ಹೊತ್ತು ಆಗಬಹುದೆಂದು ನಾನು ಭಾವಿಸಿರಲಿಲ್ಲ. ಹೊರ ಬರುವದು ಕಷ್ಟವಾಯಿತು. ಈ ಪರಿಸರ ಸುಂದರವಾಗಿದೆ. ಐದು ನಿಮಿಷ ಹಾದಿ ಕಾಯುವದೇನೂ ಕಷ್ಟವಾಗಲಾರದು ಎಂದೆನಿಸಿತು”. + +ಆಗವಳು ಮುದುಡಿ ಹೇಳಿದಳು, ‘‘ಬೇರೆ ಕಡೆ ಲಕ್ಷ್ಯವಿರಲಿಲ್ಲ”. + +(ಆಶಾ ಬಗೆ) + +“ನನಗೂ ಸಮಯವಿದ್ದಿದ್ದರೆ ಆ ದಿಕ್ಕಿಗೆ ಹೋಗುತ್ತಿದ್ದೆ. ಬೆಟ್ಟವಿದೆ, ಅದರಾಚೆ ಕೆರೆಯಿದೆ. ನಾನು ಬೆಳಿಗ್ಗೆ ತಿರುಗಾಡಲು ಹೋಗಿದ್ದೆ. ಆ ಸಮಯದಲ್ಲಿ ನಿಮ್ಮನ್ನು ಕರೆಯುವದು ಸರಿ ಕಾಣಲಿಲ್ಲ”. + +ಅವಳು ಸ್ವಲ್ಪ ಜೋರಾಗಿ ನಕ್ಕಳು. ಕೆಲ ಕ್ಷಣ ಯಾರೂ ಮಾತಾಡಲಿಲ್ಲ.“ಚಳಿ ಎಂದರೆ ನನಗೆ ಇಷ್ಟ” ಅವನು ಹೇಳಿದ. + +“ಇಷ್ಟವೇ? ದಿಲ್ಲಿಗೆ ಬಂದು ನೋಡಿ, ಹೆಪ್ಪುಗಟ್ಟಿದಂತೆ ಆಗುತ್ತದೆ”. + +“ನಾನು ಹಲವು ಸಲ ದಿಲ್ಲಿಗೆ ಹೋಗುತ್ತೇನೆ”.ಅವನು ಸ್ವಲ್ಪ ಸಮಯದ ನಂತರ ಸ್ನಿಗ್ಧತೆಯಿಂದ ನೋಡುತ್ತ ಮೆಲ್ಲಗೆ ಕೇಳಿದ- + +“ದಾದಾ ನಿಮಗೇನಾದರು ಹೇಳಿದರೆ?’’ + +“ಇಲ್ಲ” + +“ಸರಿ ಹಾಗಾದರೆ. ನಾನೇ ನಿಮ್ಮ ಜೊತೆ ಮಾತಾಡುತ್ತೇನೆ ಎಂದಿದ್ದೆ. ನಿಮಗೂ ಎಲ್ಲ ಗೊತ್ತಿದೆ ಎಂದೆ ಭಾವಿಸುತ್ತೇನೆ”. + +“ಗೊತ್ತಿದೆ” + +“ನನಗೆ ಒಪ್ಪಿಗೆಯಿದೆ. ದಾದಾ ನಿಮ್ಮ ಸ್ವತಂತ್ರ ಪ್ರವೃತ್ತಿಯ ಬಗೆಗೆ ಹೇಳಿದ್ದರು. ಹಳೇ ರೂಢಿಗಿಂತ ಬೇರೆ ಅಂತ. ಹಾಗೆ ಪ್ರತಿಯೊಬ್ಬನು ಸ್ವತಂತ್ರವಾಗೇ ಬದುಕುತ್ತಿರುತ್ತಾನೆ. ಒಬ್ಬ ಮತ್ತೊಬ್ಬನಿಗಿಂತ ಭಿನ್ನ. ಒಬ್ಬನ ಬದುಕು ಮತ್ತೊಬ್ಬನದು ಆಗಿರುವದಿಲ್ಲ. ಹೀಗಾಗಿ ನನಗೆ ನಿಮ್ಮ ಪ್ರತ್ಯೇಕ ಸ್ವಭಾವವನ್ನು ಸ್ವೀಕರಿಸುವದೇನೂ ಕಷ್ಟವಾಗಲಾರದು. ಯೋಚಿಸ ಬೇಕಾಗಿರುವದು ನೀವು”. + +“ನೀವು ನನ್ನ ಬಗೆಗೆ ಏಕೆ ಯೋಚಿಸುತ್ತಿದ್ದೀರಾ? ಡಾ. ನಿಯೋಗಿಯ ಮಗಳೆಂದೇ?’’ + +ಅವನು ಬೆಚ್ಚಿದ ಮತ್ತು ನಸುನಕ್ಕ, “ಡಾ. ನಿಯೋಗಿಯವರ ಸಂಬಂಧವನ್ನು ನಾನು ನಿರಾಕರಿಸುವದಿಲ್ಲ. ಆದರೆ ಅವರ ಕಾರಣದಿಂದಾಗಿ ನಾನು ನಿಮ್ಮ ಬಗ್ಗೆ ಯೋಚಿಸುತ್ತೇನೆ ಎನ್ನುವದು ತಪ್ಪು. ನೀವಾದರೂ ಈ ಸಂಬಂಧವನ್ನು ಅದು ಹೇಗೆ ನಿರಾಕರಿಸುತ್ತೀರಿ?” + +“ನಾನಂತೂ ಅವರ ಮಗಳೇ” + +“ನಾನು ಹೇಳುವದೂ ಅದನ್ನೇ. ಅವರ ದೊಡ್ಡಸ್ತಿಕೆ ನಿರ್ವಿವಾದ. ನೀವು ಅವರ ಮಗಳಾಗಿರುವುದೂ ಸತ್ಯವೇ. ಅವರ ಪತ್ರ ಬಂದ ಬಳಿಕವೇ ನಾನು ನಿಮ್ಮ ಬಗೆಗೆ ಯೋಚಿಸಿದೆ. ಆದರೆ ನಿಮ್ಮ ಭೇಟಿಯಾಗಬೇಕಾದರೆ ಈ ಸಂದರ್ಭಗಳೆಲ್ಲ ಬೇಕೇ ಬೇಕು ಎನ್ನುವುದನ್ನಾದರೂ ಒಪ್ಪುತ್ತೀರಾ?”ಅವಳಿಗೆ ನಗೆ ಬಂತು. + +“ಈಗ ಮಾತ್ರ ಡಾ. ನಿಯೋಗಿಯ ಸಂದರ್ಭದ ಹೊರತಾಗಿಯೂ ನಿಮ್ಮ ಬಗೆಗೆ ಸ್ವತಂತ್ರವಾಗಿ ಯೋಚಿಸಬಲ್ಲೆ”.ಸ್ವಲ್ಪ ಸಮಯ ನಡೆದ ಬಳಿಕ ಅವಳು ನಿಂತಳು. ಓಢನಿಯಿಂದ ಮೈ ಮುಚ್ಚಿ ಕೊಂಡಳು. + +“ನಿಮಗೆ ಚಳಿ ಎನಿಸುತ್ತಿದೆಯೇ?’’ + +“ಬರುವಾಗ ಸ್ವೆಟರು, ಶಾಲು ತರುವ ನೆನಪಾಗಲಿಲ್ಲ”.ಅವನು ಸ್ವಂತ ಕೋಟನ್ನು ಅವಳಿಗೆ ನೀಡಿದ. + +“ನಿಮಗೆ?’’ + +“ಸ್ವೆಟರ್ ಧರಿಸಿದ್ದೇನೆ?’’ + +“ನೀವು” + +“ನೀವು ತಪ್ಪು ಭಾವಿಸದಿದ್ದರೆ ಒಂದು ಮಾತು ಹೇಳುತ್ತೇನೆ”. ಅವಳು ನಡೆಯುತ್ತ ನಡೆಯುತ್ತ ಹೇಳಿದಳು. + +“ಪ್ರಯತ್ನಿಸುತ್ತೇನೆ” + +“ದಾದಾ ಒಮ್ಮೆಲೆ ಫೋನು ಮಾಡಿ ಕರೆಯಿಸಿಕೊಂಡರು. ಕಾರಣ ಏನೂ ಹೇಳಲಿಲ್ಲ. ಪತ್ರ ಸಹ ಬರೆಯಲಿಲ್ಲ. ಗಾಬರಿಯಿಂದ ನಾನು ಓಡಿ ಬಂದೆ. ಪತ್ರ ಕಳಿಸಿ, ವಿವರವಾಗಿ ಬರೆದಿದ್ದರೆ ನನಗೂ ಯೋಚಿಸಲು ಅವಕಾಶ ಸಿಗುತ್ತಿತ್ತು. ಸರಿಯಾಗಿ ನಾನು ಹೇಳಬಹುದಿತ್ತು. ನಿಮಗೂ ತೊಂದರೆ ಕೊಡುವ ಪ್ರಶ್ನೆ ಬರುತ್ತಿರಲಿಲ್ಲ”. + +ಅವನೂ ತನ್ನ ಉಸಿರು ಬಿಗಿ ಹಿಡಿದು, ಬಳಿಕ ಹೇಳಿದ – ‘‘ನಾನಂತೂ ಬರಲೇ ಬೇಕಿತ್ತು”. + +“ಅದು ನಿಮ್ಮ ಕೆಲಸಕ್ಕಾಗಿ” ಸ್ವಲ್ಪ ತಡವರಿಸಿ ಹೇಳಿದಳು, ‘‘ನಾನು ಮತ್ತು ಬ್ರಿಜ್ ಮೋಹನ ಸಿಂಗ್, ಅವರು ಇಲೆಕ್ಟ್ರಾನಿಕ್ಸ್ ಇಂಜಿನಿಯರ್, ದಿಲ್ಲಿಯಲ್ಲೇ ಸರ್ವಿಸ್ ಮಾಡುತ್ತಾರೆ. ಮೂರು ವರುಷಗಳ ಪರಿಚಯ ನಮ್ಮದು. ನಮ್ಮಿಬ್ಬರ ವಿಷಯಗಳಿಗೆ ವಿದೇಶದಲ್ಲಿ ತುಂಬ ಸ್ಕೋಪ್ ಇದೆ. ಇಷ್ಟೆಲ್ಲ ಲಭಿಸಿದ ಬಳಿಕ ಕೇವಲ ಲಗ್ನಕ್ಕಾಗಿಯೇ ಅದನ್ನೆಲ್ಲ ಬಿಡುವದು ಸರಿ ಕಾಣುವದಿಲ್ಲ. ನಾವು ಮದುವೆಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ. ನಾವು ಕೂಡಿಯೇ ಓಡಾಡುತ್ತಿದ್ದಾಗ, ಎಂದೂ ಈ ವಿಷಯ ಪ್ರಸ್ತಾಪಗೊಳ್ಳಲಿಲ್ಲ” ಅವಳು ಒಂದೇ ಉಸಿರಿಗೇ ಹೇಳಿದಳು. + +ಅವನು ನೋಡುತ್ತಲೇ ಇದ್ದ. + +“ನಿಮ್ಮ ಮನದೊಳಗೆ ಇದೆಯೇ?’’ + +“ಇರಬಹುದು. ನೀವು ತುಂಬ ಒಳ್ಳೆಯವರು, ಇದರಲ್ಲಿ ಶಂಕೆಯೇ ಇಲ್ಲ. ದಾದಾ ಅವರಿಗೆ ನೀವು ಇಷ್ಟವಾಗಿದ್ದೀರಿ. ಇಲ್ಲದಿದ್ದರೆ ನಮ್ಮ ದಾದಾ ನನ್ನ ಲಗ್ನದ ಬಗೆಗೆ ಯೋಚಿಸಿ, ನಿಮ್ಮನ್ನು ಕರೆಯಿಸಿ ಇಷ್ಟೆಲ್ಲ ಮಾಡಬಹುದೆಂದು ಯೋಚಿಸಿಯೂ ಇರಲಿಲ್ಲ. ನೀವು ಸಂತೋಷದ ಆಸೆ ನೀಡಿದಿರಿ ನನಗೆ. ಆದರೂ… ನನಗನಿಸುತ್ತದೆ ನಾನು ಸಾಕಷ್ಟು ಹೇಳಿದ್ದೇನೆ”. + +“ಹೌದು. ನನಗೆಲ್ಲ ಅರ್ಥವಾಯಿತು” ಅವನ ಮುಖದ ಮೇಲೆ ನಸುನಗೆ ಮೂಡಿತು… + +“ನಾನು ನಾಳೆಯೇ ಹೊರಡುತ್ತೇನೆ…’’ ಅವಳು ಅಲ್ಲಿಗೇ ವಿಷಯ ಮುಗಿಸಿದಳು. + +“ನಾಳೆಯೇ?’’ ಅವನು ಕೇಳಿದ. + +“ಹೌದು. ನಾನು ನನ್ನ ಕೆಲಸ ಬೇಗ ಮುಗಿಸಬೇಕಿದೆ” ಈಗವಳು ಮನೆಗೆ ಮರಳುವ ಯೋಚನೆಯಲ್ಲಿದ್ದಳು. + +“ನಿಮ್ಮ ಕೆಲಸದ ವಿಷಯದ ಬಗೆಗೆ ಹೇಳುತ್ತೀರಾ?” + +“ಕೆಲಸದ ಬಗೆಗೆ?’’ ಅವಳು ಅಚ್ಚರಿಯಿಂದ ಕೇಳಿದಳು. + +“ಹೌದು. ನಿಮ್ಮ ವಿಷಯ… ನಿಮ್ಮ ಥೀಸಿಸ್…” + +ಅವಳು ನಡಿಗೆಯ ವೇಗವನ್ನು ಕಡಿಮೆ ಮಾಡಿದಳು. ಅವನಿಗೆ ಹೇಳಲಾ ರಂಭಿಸಿದಳು. ಅವನು ಕೇಳಿದ್ದು ಕೇವಲ ಒಂದು ನಿಮಿತ್ತವಾಗಿತ್ತು.“ನನ್ನ ಪಿಎಚ್.ಡಿ.ಯ ವಿಷಯವು ರಿಪ್ರಾಡಕ್ಟಿವ್ ಇಮ್ಯುನಾಲಜಿ. ಆದರೆ ಈಗಲೇ ಈ ವಿಷಯದ ಅಂತಿಮ ಹಂತಕ್ಕೆ ಅನುಸರಿಸಿ ಮುಂದಿನ ಹಲವು ಸಾಧ್ಯತೆಗಳು ನನಗೆ ಗೋಚರಿಸುತ್ತಿವೆ. ಪ್ರಾಯಶಃ ನನ್ನ ಪಿಎಚ್.ಡಿ.ಗೆ ಇದು ಆರಂಭವಾಗಿರಲೂಬಹುದು. ನಿಜವಾದ ಆಳ, ಅನಂತವೀಗ ಮುಂದೆ ಇರಬಹುದು. ನಾನು ಈಗ ದಡದಲ್ಲಿ ನಿಂತಿರ ಬಹುದು. ಲ್ಯಾಬ್‍ನಲ್ಲಿ…” + +ಮಾತಿನ ನಡುವೆ ಅವಳು ನಿಂತಳು. ಒಬ್ಬ ಅಪರಿಚಿತನ ಎದುರಿಗೆ ತಾನೇಕೆ ತನ್ನ ವಿಷಯದ ಬಗೆಗೆ ಹೇಳಿಕೊಳ್ಳುತ್ತಿದ್ದೇನೆ ಎಂಬ ಅರಿವಿನಿಂದ ಮುದುಡಿದಳು. ಆದರೂ ಅವನು ಆಲಿಸುತ್ತಲೇ ಇದ್ದ. ಅವಳು ನಡುವೆ ನಿಲ್ಲಿಸಿದ್ದು ಅವನ ಅರಿವಿಗೆ ಬಂತು. + +“ಹೇಳಿ… ಹೇಳಿ…” + + + +“ತಾನು ರಾಚೆಸ್ಟರ್ ಯೂನಿವರ್ಸಿಟಿಯ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದೇನೆ. ನನಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಸಿಗಬಹುದು. ಡಾ. ಮಾರೀಸ್ ಝಾವೂಡರಸಿ, ಅಲ್ಲಿ ಕ್ಯಾನ್ಸರ್ ರಿಸರ್ಚ್ ಸೆಂಟರ್‌ನಲ್ಲಿದ್ದಾರೆ”. + +“ಕ್ಯಾನ್ಸರ್?’’ ಅವನು ಕೇಳಿದ. + +“ಹೌದು. ಕ್ಯಾನ್ಸರ್ ಇದ್ದಾಗ ದೇಹದ ಮೆಕೆನಿಝಂ ಹೇಗಿರುತ್ತದೆ, ಅದಕ್ಕೆ ಸಂಬಂಧಿಸಿದ ರಿಸರ್ಚ್… ಕ್ಯಾನ್ಸರಿನ ಮೂಲ ಕಾರಣದವರೆಗೂ ಅದು ತಲುಪ ಬಹುದು…’’ + +ಅವಳು ಮತ್ತೆ ತನ್ನ ಮಾತು ನಿಯಂತ್ರಿಸಿಕೊಂಡಳು. ತನ್ನ ವಿಷಯದ ಕುರಿತು ತನ್ಮಯಳಾಗಿ ಹೇಳುವ ಅವಳನ್ನು ಅವನು ನೋಡುತ್ತಲೇ ಇದ್ದ.ಕೆಲಕ್ಷಣ ಆ ಶಾಂತ ರಸ್ತೆಯಲ್ಲಿ ಅವರ ಹೆಜ್ಜೆಯ ಸದ್ದು ಕೇಳಿಬರುತ್ತಿತ್ತು. ಅದೇ ಕಾಲಕ್ಕೆ ಸ್ಕೂಟರ್ ಒಂದು ವೇಗದಿಂದ ಹಾದು ಹೋಯಿತು. ಅನಂತರ ಸುಚರಿತಾ ಹೇಳಿದಳು, + +“ಹೋಗುವ ಮೊದಲು ನೀವು ದಾದಾನಿಗೆ ಹೇಳಿ”. + +“ಅಗತ್ಯವಿದೆಯೆ? ನನ್ನ ಬಗೆಗೆ ನಿಮಗೆ ಎಲ್ಲ ಹೇಳುವ ಜವಾಬ್ದಾರಿಯನ್ನು ನಾನೇ ಹೊತ್ತಿದ್ದೇನೆ ಈಗ ಅವರ ಅಗತ್ಯವಿಲ್ಲ, ಆದ್ದರಿಂದ…’’ + +“ಜವಾಬ್ದಾರಿಯಂತ…’’ಅದಿರಲಿ, + +“ನಾನು ತುಂಬ ಕಠೋರವಾಗಿರುವದರಿಂದ, ದಾದಾ ಈ ಜವಾಬ್ದಾರಿಯನ್ನು ನಿಮ್ಮ ಮೇಲೆ ಹೊರಿಸಿರಬಹುದೇ?’’ + +“ಇದ್ದಿರಬಹುದು. ಆದರೆ ನನಗೆ ಮಾತ್ರ ನೀವು ತೀರ ಸುಲಭ ಮತ್ತು ನೇರ ವ್ಯಕ್ತಿ ಅನಿಸಿದಿರಿ” + +“ಸುಲಭ ವ್ಯಕ್ತಿಯೇ?’’ + +“ಹೌದು. ನೇರ ಮತ್ತು ಸಾದಾ. ಹಾಗಿರದೆ ಇದ್ದಿದ್ದರೆ ನನ್ನಂತಹ ಒಬ್ಬ ಪರಕೀಯ ಮನುಷ್ಯನ ಎದುರಿಗೆ ಹೀಗೆಲ್ಲ ನೇರವಾಗಿ ಹೇಳುವದು ಸಾಧ್ಯವಿರಲಿಲ್ಲ. ನೀವೆಷ್ಟೇ ನಿರಾಕರಿಸಿದರೂ ನೀವಂತೂ ಡಾ. ನಿಯೋಗಿಯವರ ಮಗಳೇ. ಅವರಂತೆ ನೇರ ಮತ್ತು ಸಾದಾ! ಸುತ್ತಲಿನ ಜಗತ್ತು ಹಾಗಿಲ್ಲ”.ಸ್ವಲ್ಪ ಹೊತ್ತಿನ ಬಳಿಕ ಮತ್ತೊಂದು ಮಾತು ಹೇಳಿದ ‘‘ನಿಮಗೊಂದು ಮಾತು ಹೇಳುವ ಮೋಹವಾಗುತ್ತಿದೆ” + +“ಏನದು?’’ + +“ನಿಮ್ಮ ಫಿಗರ್ ನೃತ್ಯಕ್ಕೆ ತುಂಬ ಅನುಕೂಲವಾಗಿದೆ”. + +(ಚಂದ್ರಕಾಂತ ಪೋಕಳೆ) + +“ನೃತ್ಯಕ್ಕೇ?’’ ಅವಳು ಬೆರಗಿನಿಂದ ಕೇಳಿದಳು. + +“ಹೌದು. ನೀವು ಮತ್ತು ನಮ್ಮ ಅಮ್ಮನ ನಡುವೆ ತುಂಬ ಸಾಮ್ಯವಿದೆ”.ಅವನ ಮಾತು ಮರ್ಮಾಂತಿಕವಾಗಿದೆ ಎಂದವಳಿಗನಿಸಿತು. ಅವನು ಮುಂದಕ್ಕೆ ಕೈಯೊಡ್ಡಿ ಹೇಳಿದ – + +“ಹೊರಡೋಣ. ನಿಮ್ಮನ್ನು ನಾನು ತಲುಪಿಸಿ ಮರಳುತ್ತೇನೆ” + +“ನಾನು ಹೋಗುತ್ತೇನೆ. ನಾನೊಬ್ಬಳೇ ಹೋಗಬಲ್ಲೆ.’’ ಅವನ ಕೈಯಲ್ಲಿದ್ದ ತನ್ನ ಕೈ ಬಿಡಿಸಿಕೊಂಡು ಹೇಳಿದಳು. + +“ಆಟೋ ನಿಲ್ಲಿಸುತ್ತೇನೆ. ಕತ್ತಲೆಯಾಗಿದೆ.’’ + +“ನಾನೇ ಕರೆಯುತ್ತೇನೆ. ಇದು ನನ್ನದೇ ನಗರ. ಥ್ಯಾಂಕ್ಸ್”. + +“ಆಲ್ ದಿ ಬೆಸ್ಟ್!’’ಅವಳು ಕೈ ಎತ್ತಿ ವಿದಾಯ ಹೇಳಿದಳು. + +ಅವಳು ಮುಂದೆ ಹೋದಳು. ಮತ್ತೆ ತಿರುಗಿ ನಿಂತಳು. ಅವನ ಕೋಟ್ ಮೈಯಲ್ಲಿತ್ತು. ಅದನ್ನು ಕಳಚಿ ಅವನ ಮುಂದೆ ಹಿಡಿದಳು. + +“ಕೋಟು ಇರಲಿ, ಚಳಿಯಿದೆ. ನೀವು ಮನೆಯಲ್ಲಿ ಇಟ್ಟು ಹೋಗಿ. ನಾನು ಡಾ. ನಿಯೋಗಿ ಅವರಿಂದ ಕೇಳಿ ಪಡೆಯುತ್ತೇನೆ. ನೀವು ಯಾವಾಗ ಹೊರಡುತ್ತೀರಿ?’’ + +“ನಾಳೆ” ಎಂದವಳು ಹೇಳಿ ಸರಸರ ನಡೆದು ಹೋದಳು.ಎಲ್ಲ ಮಾತಾಡಿ ಮುಗಿದರೂ ಮನದೊಳಗೆ ಎಂಥದೋ ಹೊರೆಯಿತ್ತು. + +***** + +ದಾದಾ ಬರೆಯುತ್ತ ಕೂತಿದ್ದರು. ಅವರ ಚಿಕ್ಕ-ಚಿಕ್ಕ ಡೊಂಕು ಅಕ್ಷರ ಸರಸರ ಮೂಡಲಾರಂಭಿಸಿತ್ತು. ವಿಷಯ ಟಿಬೇಟಿನ ಸಾಂಸ್ಕೃತಿಕ ಚರಿತ್ರೆಗೆ ಸಂಬಂಧಿಸಿದ್ದು. ಸುಚಿತಾ ಸಮೀಪ ನಿಂತು ಹಿಂಬದಿಯಿಂದ ಸರಸರ ಚಲಿಸುವ ದಾದಾ ಅವರ ಬೆರಳು ನೋಡಲಾರಂಭಿಸಿದಳು. ಬರೆದ ಕಾಗದಗಳ ಪುಟದ ದಪ್ಪವನ್ನು ನೋಡಿದಾಗ, ಅವರು ಬಹಳ ಹೊತ್ತಿನಿಂದ ಬರೆಯುತ್ತಿರಬೇಕೆಂದು ಅನಿಸಿತು. ಅವರನ್ನು ಕರೆಯಲೇ ಬೇಡವೇ? ಇಲ್ಲದಿದ್ದರೆ ತಾನಿಂದು ಹೋಗುತ್ತಿರುವ ವಿಷಯ ತಿಳಿಸುವುದು ಹೇಗೆ? ಕ್ಷಣ ಕಾಲ ನಿಂತು ಅವಳು ದಾದಾ ಬರೆಯುವ ವಿಷಯವನ್ನು ಓದಿದಳು. ದಾದಾ ಅವರಿಗೆ ಈ ಹಠವೇಕೆ ಎಂದೂ ಅನಿಸಿತು. ದಾದಾ ಒಬ್ಬರೇ ಅಲ್ಲ, ದಾದಾನಂತಹ ಹಲವು ಇತಿಹಾಸಕಾರರು, ಚರಿತ್ರೆ ನೀಡುವುದು ಏನು? ನಿನ್ನೆಯದು ಇಂದಿರುವದಿಲ್ಲ. ಇಂದಿನದು ನಾಳೆ ಇರುವುದಿಲ್ಲ. ಪ್ರತಿಕ್ಷಣ ಹೊಸದಾಗಿ ಬರುತ್ತದೆ. ದಾದಾ ಅವರ ಬೆರಳು ಸರಸರ ಸಾಗಿತ್ತು. + +“ದಾದಾ…’’ ಸುಚಿತಾ ಕರೆದಳು. + +ಬರೆಯುವದನ್ನು ನಿಲ್ಲಿಸದೆ ‘ಏನು?’ ಎಂಬಂತೆ ನೋಡಿದರು. + +“ಆಯಾಸವಾಗಲಿಲ್ಲವೇ? ಎಷ್ಟೋ ಹೊತ್ತಿನಿಂದ ಬರೆಯುತ್ತಿದ್ದೀರಿ!’’ + +“ಇಲ್ಲ. ಕೂತುಕೋ” ಎಂದರು. + +“ಬಿಸಿ-ಬಿಸಿ ಚಹಾ ತರಲೇ?’’ + +ಆಗವರು ಬರವಣಿಗೆಯನ್ನು ನಿಲ್ಲಿಸಿದರು. ಅವಳತ್ತ ನೋಡಿದರು. ಅವಳು ಏನೋ ಹೇಳಲು ನಿಂತಿರುವುದನ್ನು ಕಂಡು, ಕಾಗದಗಳನ್ನು ಎತ್ತಿಟ್ಟರು. ಅದರ ಮೇಲೆ ಭಾರವಿಟ್ಟರು. + +“ಇಂದು ತಿರುಗಾಡಲು ಹೋಗಲಿಲ್ಲವೇ?’’ + +“ಬೇಗ ಎದ್ದು ಹೋಗಿದ್ದೆ. ಬೇಗ ಮರಳಿದೆ.’’ + +“ದಾದಾ.. ನಾನಿಂದು ಹೊರಡಬೇಕೆಂದಿದ್ದೇನೆ.’’ + +“ಇಂದೇ?’’ + +“ಹೌದು, ಪ್ರಬಂಧವನ್ನು ಬರೆದು ಮುಗಿಸಬೇಕಿದೆ. ಅದನ್ನೆಲ್ಲ ಹಾಗೆ ಬಿಟ್ಟು ಬಂದಿದ್ದೇನೆ. ಇಂದು ಹೋದರೆ ಮುಗಿಸಬಹುದು.’’ + +“ರಿಝರ್ವೇಶನ್?’’ + +“ಆಫ್ ಸೀಝನ್ ಇದೆ. ಸಿಗುತ್ತದೆ.’’ + +“ಈಶ್ವರನಿಗೆ ಕಳಿಸು.’’ + +“ಸರಿ” + +“ರಾಘವನ ಜೊತೆ ಮಾತುಕತೆ ಆಯಿತೇ?’’ + +‘ಹೌದು’ ಅವಳು ತುಣುಕಾಗಿ ಉತ್ತರಿಸಿದಳು. ದಾದಾ ಸಹ ಹಿಂಜರಿಕೆಯಿಂದ ಏನು, ಹೇಗೆ ಎಂದೆಲ್ಲ ಕೇಳಲಿಲ್ಲ. ಆಗ ಅವಳೇ ಹೇಳಿದಳು, ‘‘ನೀವು ಯೋಚಿಸಿದಂತೆ ಏನೂ ಆಗಲಿಲ್ಲ”. + +ದಾದಾ ಸ್ವಲ್ಪ ಹೊತ್ತು ಯೋಚನೆಯಲ್ಲಿ ಮುಳುಗಿದರು. ಬಳಿಕ ನಸುನಕ್ಕರು. ಅವರು ಕುರ್ಚಿಯನ್ನು ಹೊರಳಿಸಿ ಸರಿಯಾಗಿ ಕೂತರು. ಆದರೆ ಏನೂ ಹೇಳಲಿಲ್ಲ. + +ಅವಳು ಒಮ್ಮೆಲೆ ಹೇಳಿದಳು, ರಾಘವನ ಜೊತೆಯಲ್ಲಿ ಮಾತಾಡಿದಂತೆ, ‘‘ದಾದಾ, ಆಕಸ್ಮಿಕವಾಗಿ ನಿಮ್ಮ ಫೋನ್ ಬಂತು…’’ ಇದನ್ನೆಲ್ಲ ಹೇಳುವಾಗ ರಾಘವನ ಜೊತೆ ಸುಲಭವಾಗಿದ್ದು ಈಗ ತುಂಬ ಕಷ್ಟಕರವೆನಿಸುತ್ತಿರುವದು ಅವಳ ಗಮನಕ್ಕೆ ಬಂತು. ಮುಖ್ಯವಾಗಿ ಬ್ರಿಜ್ ಮೋಹನನ ಬಗೆಗೆ ಹೇಳುವಾಗ ಮತ್ತೂ ಕಷ್ಟವಾಗುತ್ತಿತ್ತು. ತಾವಿಬ್ಬರೂ ಲಗ್ನದ ಬಗೆಗೆ ಏನೂ ಯೋಚಿಸದೆ ಇರುವಾಗ ತಾನು ಬ್ರಿಜ್ ಮೋಹನನ ಬಗೆಗೆ ಯೋಚಿಸುತ್ತಿದ್ದೇನೆ. ರಾಘವನನ್ನು ಹೋಲಿಸಿದಾಗ, ಈ ವಿಷಯವನ್ನು ದಾದಾರಿಗೆ ತಲುಪಿಸುವಾಗ ದಣಿದಂತಾಯಿತು. + +ದಾದಾ ಎಲ್ಲವನ್ನೂ ಆಲಿಸಿದರು. ಉಪನ್ಯಾಸ ನೀಡುವಾಗ ಶಾಂತವಾಗಿ ಕ್ರಮೇಣ ಧ್ವನಿಯನ್ನು ಏರಿಸಿ ಒಂದೊಂದೇ ಸಂಗತಿಯನ್ನು ಮಂಡಿಸುವ ರೀತಿಯಲ್ಲಿ ಹೇಳಿದರು, ‘‘ನನಗೆ ಡಾ. ಮೂರ್ತಿ ಹೈದರಾಬಾದಿನ ಒಂದು ವಿಚಾರ ಸಂಕಿರಣದಲ್ಲಿ ಭೇಟಿಯಾದರು. ಅಲ್ಲಿ ಅವರು ನನ್ನ ಭಾಷಣವನ್ನು ಆಲಿಸಲೆಂದೇ ಬಂದಿದ್ದರು. ಅನಂತರ ಪತ್ರ ವ್ಯವಹಾರ ಮುಂದುವರಿಯಿತು. ನನ್ನ ಎದುರಿಗೆ ಕೇವಲ ಅವರು ಮಾತ್ರ ಇದ್ದುದರಿಂದ ಅವರ ಬಗೆಗೆ ಯೋಚಿಸಿದ್ದೇನೆ ಎಂದೇನೂ ಭಾವಿಸಬೇಕಿಲ್ಲ. ನನಗೂ ಅವರ ವರ್ತನೆ ಒಪ್ಪಿಗೆ ಯಾಯಿತು. ಜೀವನದ ಬಗೆಗೆ ಅವರಿಗೆ ಆಳವಾದ ತಿಳುವಳಿಕೆಯಿರುವದು ಗೊತ್ತಾಯಿತು. ಆದರೆ ನಿನಗೆ ಬೇಡವೆಂದಾದರೆ ಮುಂದುವರಿಯುವ ಪ್ರಶ್ನೆಯೇ ಇಲ್ಲ. ನೀನೂ ಅವರಿಗೆ ಇದನ್ನೆಲ್ಲ ಹೇಳಿರಬೇಕಲ್ಲ”. + +“ಹೌದು, ಹೇಳಿದ್ದೇನೆ”. + +“ಈಗ ನನ್ನ ಪಾತ್ರವೇನು ಎನ್ನುವುದನ್ನು ಹೇಳು”. + +“ನಿಮ್ಮ ಪಾತ್ರ?’’ + +“ಸಂಪ್ರದಾಯವೆಂದು ನಾನು ಬನಾರಸ್‍ನಲ್ಲಿರುವ ಅವರ ಮನೆಗೆ ಅಪ್ರೋಚ್ ಮಾಡಬೇಕೆ?’’ + +“ದಾದಾ! ನೀವು?’’ ಅವಳು ಬೆರಗಾದಳು. + +“ಹಾಗೆ ನಾನು ಯಾವ ಸಂಪ್ರದಾಯವನ್ನೂ ಹೆಚ್ಚು ಒಪ್ಪಿಕೊಂಡವನಲ್ಲ. ಹಾಗೆ ನೀವಿಬ್ಬರೂ ಪರಸ್ಪರರು ಏನೂ ಪ್ರಶ್ನಿಸಲೇ ಇಲ್ಲ. ಹೀಗಾಗಿ ಶುರು ಮಾಡಿಕೊಡಲು ಈ ಪದ್ಧತಿಯೇನು ತಪ್ಪಲ್ಲ…’’ + +ಸುಚಿತಾ ದಿಙ್ಮೂಢಳಾದಳು. ತನಗೆ ಹೀಗೆ ವರ್ತಿಸುವುದು ಸಾಧ್ಯವಿತ್ತೇ? ತನ್ನೊಳಗೆ ಹೊತ್ತಿ ಉರಿದ ವಿಷಯವನ್ನು ತನ್ನ ಮಗಳು ನಿರಾಕರಿಸುತ್ತಿರುವುದು ತಮಗೆ ಸಹಿಸುವುದು ಸಾಧ್ಯವಿತ್ತೇ? ಅದರ ಬಗೆಗೆ ಇಷ್ಟೊಂದು ನಿರ್ವಿಕಾರವಾಗಿರುವದು ಸಾಧ್ಯವಿತ್ತೇ? ಇದು ದಾದಾನ ನಿರ್ವಿಕಾರವೇ ಅಥವಾ ಇದೇ ಜೀವನದ ಬಗೆಗಿರುವ ಸಮತೋಲವೇ? ಅಮ್ಮನ ಸಾವಿನ ಬಳಿಕ ಅವರು ಬಂದು ತಲುಪಿದರು, ಆಗವಳು ಭೇಟಿಯಾದಾಗ ಅವರೇನೂ ವ್ಯಕ್ತ ಮಾಡಿರಲಿಲ್ಲ. ಅವಳು ಮಲಗಿದ್ದಾಗ ಮಾತ್ರ ಹೊದಿಕೆಯನ್ನು ಸರಿಪಡಿಸಿದರು. ಹಣೆಯ ಮೇಲಿನ ತಲೆಗೂದಲನ್ನು ಸರಿಪಡಿಸಿ, ಎಲ್ಲರ ಎದುರಿಗೆ ಕೂದಲಲ್ಲಿ ಬೆರಳಾಡಿಸಿದರು… ಸುಚಿತಾಳ ಎದೆ ತುಂಬಿ ಬಂತು. ದಾದಾನ ಈ ಶಾಂತ ಸ್ವಭಾವವೇ ಅವಳನ್ನು ಚುಚ್ಚಿ ಘಾಸಿಗೊಳಿಸುತ್ತಿತ್ತು. ಅವರು ಸಿಟ್ಟಿಗೆದ್ದು ಫಡಫಡ ಬಯ್ದಿದ್ದರೆ, ತನಗೆ ಸಮಾಧಾನವಾಗುತ್ತಿತ್ತೇ? ಒಳಗಿನಿಂದ ದುಃಖವುಕ್ಕಿ ಬಂದವಳಂತೆ ‘ದಾದಾ!’ ಎಂದು ಗದ್ಗದಿಸಿದಳು. + +ದಾದಾ ಅವಳ ಬೆನ್ನ ಮೇಲೆ ಕೈಯಾಡಿಸಿದರು. ಏನೋ ಬಡಬಡಿಸಿದರು. ಆ ಕೈಯಲ್ಲಿ ಆಶೀರ್ವಾದವಿತ್ತು. ಅವರು ತನ್ನನ್ನು ಉದ್ದೇಶಿಸಿ ಏನಾದರೂ ಹೇಳಿದರೆ! ಬಡಬಡಿಸಿದರೆ? ಗೋ ಅಹೆಡ್ ಮೈ ಚೈಲ್ಡ್ – ಇದು ಅವರ ಮೊದಲಿನ ವಾಕ್ಯ. ತಾನು ಬಾಲ್ಯದಲ್ಲಿದ್ದಾಗಿನದು. ಅದನ್ನೇ ಅವರು ಹೇಳಿರಬಹುದೇ? + +“ದಾದಾ…’’ ಅರ್ಧಕ್ಕೇ ಮಾತು ನಿಲ್ಲಿಸಿದಳು. + +“ಏನಮ್ಮ?’’ + +“ಡಾ. ಮೂರ್ತಿಯವರ ಕೋಟನ್ನು ನಿಮ್ಮ ಕೋಣೆಯಲ್ಲಿರಿಸಿ ಹೋಗುತ್ತೇನೆ. ನಿನ್ನೆ ಅಲ್ಲಿಗೆ ಹೋಗುವಾಗ ಏನೂ ತೆಗೆದುಕೊಂಡು ಹೋಗಿರಲಿಲ್ಲ. ಅವರೇ ನೀಡಿದರು. ನಿಮ್ಮ ಹತ್ತಿರ ಇಟ್ಟು ಹೋಗುವುದಾಗಿ ಅವರಿಗೆ ತಿಳಿಸಿದ್ದೇನೆ”. + +“ನನಗೆ ಗೋಚರಿಸುವಂತೆ ಇಡು. ನೆನಪಾಗದಿದ್ದರೆ ಸಮಸ್ಯೆಯಾಗಬಾರದಲ್ಲ!’’ + +“ನಿಮಗೆ ನೆನಪಾಗದಿದ್ದರೂ, ಅವರಿಗೆ ಆಗೇ ಆಗುತ್ತದೆ. ಅವರೂ ಒಂದೇ ತಂದಿರಬೇಕು ಚಳಿಯಂತೂ ಇದ್ದೇ ಇದೆ” ಅವಳು ನಗುತ್ತ ಹೇಳಿದಳು. + +“ಹೌದು. ಹೋಗುವಾಗ ಮತ್ತೊಮ್ಮೆ ಹೇಳಿ ಹೋಗು. ಹಾಗೆಯೇ ಈ ವಿಷಯವನ್ನು ನಿನ್ನ ಮಾವಶಿಗೂ ಹೇಳಿ ಹೋಗು. ಅವಳೂ ಹಾದಿ ಕಾಯುತ್ತಿರಬೇಕು”.ಅವಳು ಬೇಬಿ ಮಾವಶಿಗೆ ಇಂದು ಹೊರಡುವುದಾಗಿ ತಿಳಿಸಿದಾಗ, ಅವಳು ಹತ್ತಾರು ಪ್ರಶ್ನೆಗಳನ್ನು ಕೇಳಿದಳು, ‘‘ಆ ವರನ ವಿಷಯ ಏನಾಯ್ತು? ಅವನು ಇಲ್ಲವೆಂದು ಹೇಳಿದನೆ? … ದಾದಾ ಅವರಿಗೆ ಒಪ್ಪಿಗೆಯಿತ್ತು. ಈಗ ನಿನ್ನ ವಯಸ್ಸೂ ಕಡಿಮೆಯಲ್ಲ. ಇಪ್ಪತೈದು ಮುಗಿಯುತ್ತದೆ. ಎಷ್ಟು ಒಳ್ಳೆಯ ಹುಡುಗ ಅವನು. ಇಂದೇ ಹೋಗುವ ನಿರ್ಣಯ ಮಾಡಿದ್ದೀಯಾ? ಮತ್ತೇನಾದರೂ ಒಯ್ಯುವ ವಸ್ತು ಉಳಿದಿದೆಯೇ… ಈಗೀಗ ವರ್ಷಕ್ಕೆ ಒಂದೋ ಎರಡೋ ಬಾರಿ ಮಾತ್ರ ಬರುತ್ತೀಯಾ…’’ಸುಚಿತಾ ಶಾಂತವಾಗಿ ಆಲಿಸಿದಳು. ಆದರೆ ಬ್ರಿಜ್ ಮೋಹನನ ವಿಷಯ ಮಾತ್ರ ಹೇಳಲಿಲ್ಲ. ಈ ಮೊದಲು ದಾದಾ ಹೇಳಿದ ವಿಷಯವನ್ನೇ ಸ್ವಲ್ಪ ಬದಲಾಯಿಸಿ, ಬೇಬಿ ಮಾವಶಿ ತನ್ನ ಪದ್ಧತಿಯಲ್ಲಿ ಹೇಳುತ್ತಿದ್ದಾಳೆ. ಭಾವನೆಯನ್ನು ವ್ಯಕ್ತ ಮಾಡಲು ಎಲ್ಲರಿಗೂ ಇರುವ ತೀರ ಸುಲಭದ ಸರಳ ಪದ್ಧತಿಯಿದು. ಅಧೈರ್ಯದ, ಅವಸರದ ಮತ್ತು ಉದ್ರೇಕದ ಪದ್ಧತಿ. ಅಪರೂಪಕ್ಕೆ ಅವಳ ದೌರ್ಬಲ್ಯ ಹೊರಬಿದ್ದಿತ್ತು… ಅಮ್ಮ + +ಹೀಗಿರಲಿಲ್ಲ… ದಾದಾ ಅವರಂತೂ ಇಲ್ಲವೇ ಇಲ್ಲ. ತಾನಾಗಲಿ, ಬ್ರಿಜ್ ಮೋಹನನಾಗಲಿ ಹೀಗಿರಲಿಲ್ಲ – ಆದರೂ ದಾದಾ? ವರ್ತನೆ ಸ್ವಲ್ಪ ಘಾಸಿಗೊಳಿಸುತ್ತಿದೆ. ಕಾಸಿದ ಹಾಲಿನ ಮೇಲಿನ ಕೆನೆಯಂಥ ಅವರ ಸ್ಥಿರವಾದ ತೊಗಲು… ಅನಂತರ ಬೇಬಿ ಮಾವಶಿ ಏನೇನೋ ಹೇಳುತ್ತ ಎದ್ದಳು. ಸುಭದ್ರಾಳಿಗೆ ಅಡುಗೆಯ ಬಗೆಗೆ ಹತ್ತಾರು ಸೂಚನೆ ನೀಡಿದಳು. ಕೆಲಸಕ್ಕೆ ವೇಗ ನೀಡಿದಳು. ಬಳಿಕ ಸ್ವತಃ ಸ್ಟೂಲಿನ ಮೇಲೆ ಕೂತು ಉಳಿದಳು. ಸುಚಿತಾ ಸಿದ್ಧಳಾಗಿ ಬಂದಾಗ ಬೇಬಿ ಮಾವಶಿಯ ಎಲ್ಲ ತಯಾರಿ ಯಾಗಿತ್ತು. ಈಶ್ವರನಿಗೂ ಎರಡನೇ ಸಲ ಸುದ್ದಿ ಕಳಿಸಿದಾಗ ಅವನು ಹಾಜರಾದ. ಬೇಬಿ ಮಾವಶಿಯ ಈ ಅವಸರವನ್ನು ಕಂಡು, ಅವಳಿಂದಾಗಿಯೇ ದಾದಾ ನಿಶ್ಚಿಂತರಾಗಿ ದ್ದಾರೆ ಎಂದೆನಿಸಿತು. ಈ ಕಡೆಯಂತೂ ಗಮನ ಹರಿಸಬೇಕಾದ ಅಗತ್ಯವೇ ಇಲ್ಲ. ಅಮ್ಮನ ಜೊತೆಗಿದ್ದಾಗ ದಾದಾ ಹೀಗಿರಲಿಲ್ಲ. ಅವರ ಊಟ-ತಿಂಡಿ ವಗೈರೆಯ ಬಗೆಗೆ ಅವಳು ಯೋಚಿಸುತ್ತಿರಲಿಲ್ಲ. ತನ್ನ ಶಾಲೆಯನ್ನು ಅವಳು ಬೆಳೆಸಿದಳು. ಅಡುಗೆ ಮಾಡಿಟ್ಟು ಅವಳು ಹೋಗಿ ಬಿಡುತ್ತಿದ್ದಳು. ದಾದಾನೇ ಊಟ ಬಡಿಸಿಕೊಳ್ಳುತ್ತಿದ್ದರು. ಇಬ್ಬರದು ಎರಡು ಸಂಸಾರವಾದರೂ ಏನೂ ತೊಂದರೆಯಾಗಲಿಲ್ಲ. ಬೇಬಿ ಮಾವಶಿಯಂತೆ ಅಮ್ಮ ಹೀಗೆ ಸಂಸಾರದೊಳಗೆ ಸಿಲುಕಿಕೊಂಡಿರಲಿಲ್ಲ. ಹಲವು ಸಲ ಬೇಬಿ ಮಾವಶಿಗೆ ತಾನು ಕೇಳಿದ ಪ್ರಶ್ನೆ ನೆನಪಾಯಿತು. ಹಾಗೆಯೇ ಅವಳು ನೀಡಿದ ಉತ್ತರವೂ ನೆನಪಾಯಿತು. + +“ಮಾವಶಿ, ನೀವೇಕೆ ದಾದಾನ ಸಂಸಾರವನ್ನು ನೋಡಿಕೊಳ್ಳುತ್ತಿದ್ದೀಯಾ? ಸ್ವಂತ ಸಂಸಾರ ಮಾಡೋದು ಬಿಟ್ಟು”. + +“ಅಕ್ಕ ಸ್ವಂತ ಸಂಸಾರ ಮಾಡುತ್ತಿರುವದರಿಂದ, ನಾನು ನಿನ್ನ ದಾದಾನ ಸಂಸಾರ ನೋಡಿಕೊಳ್ಳುತ್ತಿದ್ದೇನೆ” ಅವಳು ನಕ್ಕು ಹೇಳುತ್ತಿದ್ದಳು. + +“ಆದರೆ ಸ್ವಂತದ್ದೇಕೆ ಮಾಡಲಿಲ್ಲ? ಸ್ವಂತ ಸಂಸಾರ ಮಾಡಬೇಕೆಂದು ನಿನಗೆ ಅನಿಸಲಿಲ್ಲವೇ?’’ + +“ನನ್ನಲ್ಲಿ ಅಂಥ ಶಕ್ತಿ ಎಲ್ಲಿದೆ? ತಾರುಣ್ಯದಲ್ಲೇ ಸಂಧಿವಾತ ರೋಗಕ್ಕೆ ಬಲಿಯಾದೆ ನಾನು! -’’ ಅದೆಲ್ಲ ನೆನಪಾಯಿತು. ಮಾವಶಿಯ ಕೃಶವಾದ ದೇಹ ಸ್ಟೂಲ್ ಮೇಲೆ ಕುಳಿತು… ಸುಚಿತಾ ತನ್ನ ಮೈಮೇಲಿನ ಶಾಲನ್ನು ಮಾವಶಿಗೆ ಹೊದಿಸಿದಳು. ಅವಳು ಬೆಚ್ಚಿದಳು. + +“ಏನೇ ಇದು?’’ + +“ನಿನಗಾಗಿಯೇ ತಂದಿದ್ದೆ. ಒಂದೇ ತಂದಿರುವದರಿಂದ ಕೊಟ್ಟಿರಲಿಲ್ಲ.’’ + +“ನನಗಾಗಿ?’’ ಶಾಲನ್ನು ಮೈತುಂಬ ಸುತ್ತಿಕೊಂಡು ಸಂತೋಷದಿಂದ ಕೇಳಿದಳು. + +“ನನಗೇಕೆ ಬೇಕು?’’ ಎಂದವಳು ಔಪಚಾರಿಕವಾಗಿಯೂ ಹೇಳಲಿಲ್ಲ. + +“ನಿನಗೆ ಶಾಲು ಬೇಕಾಗಿದ್ದರೆ ನನ್ನದು ತೆಗೆದುಕೊಂಡು…’’ + +“ನನ್ನ ಹತ್ತಿರ ಸ್ವೆಟರ್ ಇದೆ” ಸುಚಿತಾ ಉತ್ತರಿಸಿದಳು.ಈಶ್ವರ ಗ್ಯಾರೇಜಿನಿಂದ ಕಾರು ಹೊರಗೆ ತಂದು ನಿಲ್ಲಿಸಿದಾಗ ಮಾವಶಿ ಹೇಳಿದಳು, + +“ದಾದಾ ಅವರಿಗೆ ಹೇಳಿಬಾ”. + +“ಈಗಾಗಲೇ ಹೇಳಿದ್ದೇನೆ”. + +“ಆದರೂ ಹೋಗಿ ಬರುವದಾಗಿ ಮತ್ತೊಮ್ಮೆ ಹೇಳು”. + +ಸುಚಿತಾಳಿಗೆ ಅನಿಸಿತು, ಇದೇನಿದು! ಐದು ನಿಮಿಷಗಳ ಹಿಂದಷ್ಟೇ ಭೇಟಿಯಾಗಿದ್ದೇನೆ. ಈಶ್ವರ ಗ್ಯಾರೇಜಿನಿಂದ ಕಾರು ಹೊರ ತಂದಾಗ, ಅದರ ಸದ್ದು ಅವರಿಗೆ ಕೇಳಿರುವದಿಲ್ಲವೇ? ತನ್ನ ಲಗ್ನದ ಬಗೆಗೆ ಇಷ್ಟೆಲ್ಲ ಸೂಕ್ಷ್ಮವಾಗಿ ಯೋಚಿಸುವ ದಾದಾನಿಗೆ, ತನ್ನ ಮಗಳು ಊರಿಗೆ ಹೊರಟಾಗ ಬೀಳ್ಕೊಡಬೇಕೆನ್ನುವ ಪರಿಜ್ಞಾನವೂ ಇಲ್ಲವೇ, ಸಮಯವೂ ಇಲ್ಲವೇ, ‘ಹೋಗುತ್ತೇನೆ’ ಎಂದು ತಾನೇ ಹೇಳಬೇಕು. + +ಸುಚಿತಾ ಮಾತ್ರ ಮರಳಿ ದಾದಾನ ಕೋಣೆಗೆ ಹೋಗಲಿಲ್ಲ. ಆಗ ಬೇಬಿ ಮಾವಶಿಯೇ ಗೋಡೆ ಹಿಡಿದು ಮುಂದಡಿಯಿಟ್ಟಳು. ಕೋಣೆಯ ಪರದೆಯನ್ನು ಸರಿಸಿ ‘ಸುಚೂ ಹೋಗುತ್ತಿದ್ದಾಳೆ ಹಾಂʼ ಹೇಳಿದಳು. + +ಆ ಬಳಿಕ ಸಹ ತಮ್ಮ ಸಮಯಕ್ಕೇ ಎದ್ದರು. ಸುಚಿತಾಳ ಗಮನಕ್ಕೆ ಬಂತು ಇದು. ಯಾರೋ ಬಲವಂತದಿಂದ ಎಳೆದು ತಂದವರಂತೆ ಕಾರಿನ ಹತ್ತಿರ ನಿಂತರು. + +‘‘ಜಾಗ್ರತೆಯಿಂದ ಹೋಗು. ಪತ್ರವನ್ನು ಬರೆ. ಬ್ರಿಜ್ ಮೋಹನನ ಬಗೆಗೆ ತಿಳಿಸು..’’ ಎಂದೂ ಅವರು ಹೇಳಲಿಲ್ಲ.ಎಂದಿನಂತೆ ಬೇಬಿ ಮಾವಶಿಯ ಕಣ್ಣುಗಳಲ್ಲಿ ನೀರು ಬಂತು. ಸುಚಿತಾ ಹೋಗುವಾಗ ಸಹ ಅವಳ ಕಂಗಳಲ್ಲಿ ನೀರು ಕಾಣಿಸುವದು, ಪ್ರಾಯಶಃ ಅವಳ ಒಂಟಿತನಕ್ಕಾಗಿ. ಸುಚಿತಾ ಇದ್ದಾಗ ಎರಡು ದಿನವಿರುವ ಗದ್ದಲ ಮುಗಿದದಕ್ಕೋ ಅಥವಾ ಚಿಕ್ಕ ಪುಟ್ಟ ಕಾರಣಕ್ಕಾಗಿ ಅಳುವುದು ಅವಳ ಸ್ವಭಾವವಾಗಿದ್ದಕ್ಕೋ, ಅಂತೂ ಅವಳ ಅಳು ಸಾಮಾನ್ಯವಾಗಿತ್ತು! + + + +ಈಶ್ವರ ಕಾರು ಚಾಲೂ ಮಾಡಿದ. ತಕ್ಷಣ ದಾದಾ ತಿರುಗಿ ಹೊರಟೇಬಿಟ್ಟರು. ಕಾರು ಪೂರ್ಣ ದಾಟಿಯೂ ಇರಲಿಲ್ಲ. ಬಂಗಲೆಯ ಸುತ್ತಲಿನ ಗಿಡಮರಗಳು ಹಿಂದೆ ಸರಿದವು. ಕಾರು ಹೊರಳಿತು. ಸುಚಿತಾ ಒಮ್ಮೆ ಹಿಂದಕ್ಕೆ ತಿರುಗಿ ನೋಡಿದಳು. ಹೊರಗಿನ ಗೇಟ್ ಹತ್ತಿರ ಕತ್ತಲೆಯಲ್ಲಿ ಮಾವಶಿ ಒಬ್ಬಳೇ ನಿಂತಿದ್ದಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_202.txt b/Kenda Sampige/article_202.txt new file mode 100644 index 0000000000000000000000000000000000000000..752c4c1ea51159107a09382a5a065b520d80da13 --- /dev/null +++ b/Kenda Sampige/article_202.txt @@ -0,0 +1,15 @@ +ದಯಾಗಂಗನಘಟ್ಟ ನಮ್ಮ ಸೀಮೆಯ ಕತೆಗಾರ್ತಿ, ನಮ್ಮ ತಿಪಟೂರು ಸೀಮೆಗೆ ಒಂದು ವಿಶಿಷ್ಟವಾದ ಘಮಲಿದೆ. ಬೆಳಗಿನ ಒಂಭತ್ತು ಗಂಟೆ ಹೊತ್ತಿಗೇನಾದರೂ ಊರೊಳಗಾಸಿ ಬಂದರೆ ಕಾಯಿಹಾಲಿನಲ್ಲಿ ಬೇಯುತ್ತಿರುವ ಚಿತ್ರಾನ್ನದ ವಗ್ಗರಣೆಯ ವಾಸನೆ ಅಲ್ಲಿಯೇ ಜೋತುಗಂಡು ನಿಲ್ಲುವಂತೆ ಮಾಡುತ್ತೆ. ಇನ್ನು ಸಂಜಿಗೆ ದನ ಬರೋ ಹೊತ್ತಿನಲ್ಲಿ ಊರಾಚೆಗೇ ಬರುತ್ತಿರುವ ಸ್ವಲ್ಪ ಸೀದ ಮುದ್ದೆಯ ಘಮಲು ಹಿಂದಿನ ಜಲುಮಗಳ ನೆನಪೂ ಬರುವಂತೆ ಮಾಡುತ್ತೆ. ಇವೆಲ್ಲ ದಾಟಲಾಗದ, ಇಷ್ಟವಾಗುವ ತಡೆಗಳು. ಇನ್ನೂ ಕೆಲವು ವಿಶೇಷಗಳಿವೆ. ನಮ್ಮ ಸೀಮೆಯ ಹುಣ್ಣಿಮೆ ಅಮಾಸೆಗಳಂತೂ ತತ್ವಪದಗಳು ಮತ್ತು ಏಕತಾರಿಯ ಝೇಂಕಾರದಲ್ಲಿ ಓಲಾಡುತ್ತಿರುತ್ತವೆ. ಹುಣ್ಣಿಮೆಗೆ ನಾನೂ ನನ್ನ ಹೆಂಡತಿ ಜೇನುಕಲ್ಲು ಬೆಟ್ಟಕ್ಕೆ ತತ್ವ ಕೇಳಲು ಹೋದರೆ ಭಕ್ತಾದಿಗಳು ಅಲ್ಲೇ ಮಿದ್ದು ಕಟ್ಟಿಕೊಡುವ ಹಸಿ ತಂಬಿಟ್ಟಿಗೆ ಜೋತುಗಂಡು ಕೂತಿದ್ದು ತಿಂದೇ ಬರುತ್ತೇವೆ. + +(ದಯಾ ಗಂಗನಘಟ್ಟ) + +ಈ ಸಂಕಲನ ನಮ್ಮ ಸೀಮೆಯ ಸುಗ್ಗಿ ಕಣಕ್ಕೆ ಬಂದಂತೆನ್ನಿಸಿದೆ. ಹದಿನೈದು ಬರಹಗಳಿರುವ ಈ ಸಂಕಲನವನ್ನು ಓದಿದೇಟಿಗೆ ಕೆಲವು ವಿಶೇಷಗಳು ತಾವಾಗಿ ಎದುರಿಗೆ ಬಂದು ನಿಲ್ಲುವಷ್ಟು ಸಶಕ್ತವಾಗಿವೆ. ಮೊದಲನೆಯದಾಗಿ ಹೆಣ್ಣು ಓದಿನ ಅತ್ಯುತ್ತಮ ಮಾದರಿಯನ್ನು ಈ ಕೃತಿ ಮುಂದಿಟ್ಟಿದೆ. ಲೋಕವನ್ನು ಹೆಣ್ಣಿನ ಓದಿಗೆ ಒಳಪಡಿಸಿದರೆ ಅಗಾಧವಾದ ಬದಲಾವಣೆಗಳು ಉಂಟಾಗುತ್ತವೆ. ಅದು ಬರೀ ಕತೆಗಳಲ್ಲಿ ಅಲ್ಲ; ಬದುಕಿನ ತುಂಬ ತುಂಬಿಕೊಂಡಿರುವ ಪೊಳ್ಳು, ಸುಳ್ಳು ಸೋಗಲಾಡಿತನಗಳೆಲ್ಲವನ್ನು ತೂರಿ, ಕೇರಿ, ಕೊಚ್ಚಿ, ಯಗ್ಗಲಿಸಿ ಬದುಕಿಗೆ ಬೇಕಾದ್ದು ಇಷ್ಟೇ ತಗಾ ಎಂದು ಗಟ್ಟಿಕಾಳನ್ನು ಕೊಡುತ್ತಾರೆ. ಮೂರ್ನಾಲ್ಕು ಹೆಣ್ಣುಮಕ್ಕಳು ರಾಗಿ ಮಾಡುವಾಗ ಮೊರದಲ್ಲಿ ಕುಣಿದಾಡುವ ಕತೆ ಕವನಗಳ ಲೆಕ್ಕ ಹಿಡಿಯುವುದು ಸುಲಭದ ಸಂಗತಿಯಲ್ಲ! ನಾಡಿಗೇ ರಾಗಿ ಮಾಡುವುದನ್ನು ಹೇಳಿಕೊಟ್ಟು ಉಘೇ ಉಘೇ ಅನ್ನಿಸಿಕೊಂಡ ಮಾಗಡವ್ವ ನಮ್ಮ ಸೀಮೆಯವಳೇ! + + + +ಉಪ್ಪಿನ ಮುಳ್ಳು ಕತೆಯನ್ನು ಮೊದಲು ಓದಿದೆ. ಆ ಇಸಪಾತಕ ಮುಳ್ಳಿನ ಕೈಲಿ ಅದೆಷ್ಟೋ ಸಲ ಚುಚ್ಚಿಸಿಕೊಂಡ ನೆನಪಿಗೆ. ಇದೀಗ ಅದೊಂದು ರೂಪಕದ ಮೆಳೆಯಾಗಿ ಕತೆಯನ್ನು ಆವರಿಸಿದೆ. ರಾಜಚಿಕ್ಕಪ್ಪನೆಂಬೋ ಅಪ್ಪಟ ಮನುಷ್ಯನನ್ನು ಬಾಳಗೊಡಿಸದ ಜಡ್ಡುಗಟ್ಟಿದ ಸಮೂಹದ ಕೇಡು ಅವನನ್ನು ಆಪೋಷನ ತೆಗೆದುಕೊಂಡ ಕತೆ. ನಮ್ಮ ಹಳ್ಳಿಗಳ ಕೇಡೇನು ಕಮ್ಮಿ ಇಲ್ಲ. ಊರಿಗೆ ಊರೇ ದುಷ್ಟ ಸಾಂಪ್ರದಾಯಿಕ ನಡೆಗಳ ಉಪ್ಪಿನಮುಳ್ಳಿನ ಬೇಲಿ ಹಾಕಿಕೊಂಡು ಅದರ ನಡುವೆ ಸಿಕ್ಕಾಕಿಕೊಂಡಿದೆ. ಮೆಳೆಯಲ್ಲಿ ಅಲ್ಲೊಂದು ಇಲ್ಲೊಂದು ಬಿಳಿಮುತ್ತಿನ ಹಣ್ಣುಗಳಂತೆ ಕೆಲವೇ ಕೆಲವು ಜೀವಗಳು ಮನುಷ್ಯತ್ವವನ್ನು ಮಿಡಿಯುತ್ತಿವೆ. ಮಾಮೇರಿ ಇಸದ ನಡುವೆ ಬಾಳುತ್ತಿರುವ ಅಂತಃಕರುಣಿ ಜೀವಗಳನ್ನು ಈ ಕತೆಗಳು ಎಳೆದೆಳೆದು ಮಾತನಾಡಿಸುತ್ತವೆ. ‘ಈ ಸಮಾಜ ತನಗಿಂತ ಭಿನ್ನವಾಗಿ ಬದುಕಿದ ಯಾರನ್ನೂ ಇದುವರೆಗೆ ಅಷ್ಟು ಸುಲಭವಾಗಿ ಒಪ್ಪಿಕೊಂಡ ಉದಾಹರಣೆಗಳಿಲ್ಲ. ಮೂಗಿಲ್ಲದ ಜನರ ನಡುವೆ ಮೂಗಿದ್ದವನ ಸಂಕಟದಂತೆ ಯಾರಿಗೆ ಹೇಳಬೇಕು?’ ಎಂದು ಓದುಗರನ್ನು ಜೊತೆಗೆ ಕೂರಿಸಿಕೊಂಡು ಕೇಳುತ್ತವೆ. + +(ನಟರಾಜ್‌ ಬೂದಾಳು) + +ಕೇವಲ ನಿರೂಪಕಿ ಆಗದೆ ಕತೆಗಳ ಒಳಗಿನಿಂದ ಬಂದು ಮಾತನಾಡುವ ಕತೆಗಾರ್ತಿಗೆ ಆ ಕಾರಣಕ್ಕೆ ಒಂದು ರೀತಿಯ ಸಹಜ ಯಜಮಾನಿಕೆ ಪ್ರಾಪ್ತವಾಗಿದೆ. ಭಾರತದ ಮಹಾವ್ಯಾಖ್ಯಾನಗಳನ್ನು ನೀಡಿದ ವಾಲ್ಮೀಕಿ ವ್ಯಾಸರು ಕತೆಯ ಒಳಗಿನವರು. ತಾವೂ ತಮ್ಮ ಕತೆಯಲ್ಲಿ ಪಾತ್ರಧಾರಿಗಳು ಅಥವಾ ತಮ್ಮಿಂದಲೇ ಕತೆಗಳನ್ನು ಆರಂಭಿಸಿದವರು. ಕತೆಗಾರಿಕೆಗೆ ಇದೊಂದು ಅತ್ಯುತ್ತಮ ಮಾದರಿ. ತಾನೇ ಊರಾಡಿ ಎತ್ತಿಕೊಂಡು ಬಂದ ಕತೆಗಳಂತಿರುವ ಸಮೂಹ ಪ್ರಜ್ಞೆ ಈ ಕತೆಗಳ ಸತ್ವ. ಕತೆಗಳು ಸಮೂಹದ ಸ್ವತ್ತು. ಸಮೂಹ ಕೊಡುತ್ತಿರುವ ಸಮಸ್ತ ಬೈಗುಳಗಳಾದಿಯಾಗಿ ಯಾವುದನ್ನೂ ಸೋಸದೆ ಇಡಿಯಾಗಿ ನಮಗೆ ತಲುಪಿಸಲಾಗಿದೆ. ನೀಡಿದ ಎಲ್ಲ ಹೆಣ್ಣುಮಕ್ಕಳೂ ತಪ್ಪದೇ ಜೋಳಿಗೆಗೆ ಹಾಕಿದ ನಮ್ಮ ಸೀಮೆಯ ಬೈಗುಳವೊಂದು ಗಂಡುಕುಲವನ್ನು ಒಂದೇ ಮಾತಿನಲ್ಲಿ ಹಿಡಿದಿಟ್ಟಿದೆ. ‘ಪಾಪ್ರು ನನ್ ಮಕ್ಕಳು’ ಎನ್ನುವ ಆ ಮಹಾವ್ಯಾಖ್ಯಾನ ಎಲ್ಲ ಕತೆಗಳನ್ನೂ ಆವರಿಸಿಕೊಂಡಿದೆ! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_203.txt b/Kenda Sampige/article_203.txt new file mode 100644 index 0000000000000000000000000000000000000000..627728806092043da67432c50812a54a105b5a77 --- /dev/null +++ b/Kenda Sampige/article_203.txt @@ -0,0 +1,31 @@ +ಲೇಖಕರಾದ ಶ್ರೀ ಶಿವನಗೌಡರು ಒಂದಡೆ ಉಪನ್ಯಾಸ, ಇನ್ನೊಂದೆಡೆ ಲೇಖನ ಹಾಗೂ ಸಮಾಜ ಸೇವಾ ಚಟುವಟಿಕೆಗಳಾದ ರಕ್ತದಾನ, ಪರಿಸರ ಕಾಳಜಿ, ವಿಕಲಚೇತನರ ಸೇವೆ, ವೈಚಾರಿಕ ಲೇಖನ ಬರೆಯುವುದು, ಉಪನ್ಯಾಸ, ಪ್ರವಾಸಗಳಂತಹ ಚಟುವಟಿಕೆಗಳಲ್ಲಿ ನಿರತರಾಗಿ ಜೀವನದ ವೈವಿಧ್ಯತೆ ಹಾಗೂ ಸೌಂದರ್ಯತೆಯನ್ನು ಸವಿಯುತ್ತಿದ್ದಾರೆ. + +(ಶಿವನಗೌಡ ಪೊಲೀಸ್ ಪಾಟೀಲ್) + +ಕವಿಗಳಾದ ಶಿವನಗೌಡರು ಮೂಲತಃ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನವಲಹಳ್ಳಿಯಲ್ಲಿ ಮುಗಿಸಿದ ನಂತರ ಶ್ರೀಗವಿಮಠದ ಶೈಕ್ಷಣಿಕ ಸಂಸ್ಥೆಗಳಾದ ಶ್ರೀ ಗವಿಸಿದ್ದೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದುಕೊಂಡರು. ತದನಂತರ ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಗುಳಗಣ್ಣವರ ಶಿಕ್ಷಣ ಸಂಸ್ಥೆಯಿಂದ ಪದವಿಯನ್ನು ಪಡೆದುಕೊಂಡರು, ಹತ್ತು ವರ್ಷಗಳ ಕಾಲ ಉಪನ್ಯಾಸಕರಾಗಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ತಮಗೆ ಅನ್ನ, ಅರಿವು, ಆಶ್ರಯ ಆಧಾರ ನೀಡಿದ ಶ್ರೀಗವಿಮಠದ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಅಳಿಲು ಸೇವೆಯ ಹಂಬಲದೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ, ಸ್ನೇಹಜೀವಿ, ಸ್ಫೂರ್ತಿ ಪ್ರೇರಣೆ, ಸಲಹೆಗಾರನಾಗುತ್ತಲೇ ಕಲ್ಯಾಣ ಕರ್ನಾಟಕದಲ್ಲಿಯೇ ಸುಮಾರು 450ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ ಪ್ರಮುಖ ಬರಹಗಾರರಾಗಿದ್ದಾರೆ. + +ಆಂತರ್ಯದ ಬೆಳಗು ಕೃತಿಯಲ್ಲಿ ಜೀವ ಬಂದ ಕ್ಷಣದಿಂದ ಜೀವ ಹಾರಿ ಹೋಗುವ ಕ್ಷಣದವರೆಗೆ ನಮ್ಮೊಂದಿಗಿರುವ ಜೀವನ ಒಬ್ಬೊಬ್ಬರದು ಒಂದೊಂದು ಅನುಭವ. ಇಂತಹ ಅನುಭವ ಮತ್ತೊಂದಿಲ್ಲ. ಎಲ್ಲರಿಗೂ ವಿಭಿನ್ನ ಅನುಭವ..ಜೀವನದ ಅನುಭವಗಳೆಲ್ಲವನ್ನು ಒಂದೇ ಹಿಡಿಯಲ್ಲಿ ಅನುಭವಿಸುವ ಸಂದರ್ಭದಲ್ಲಿ ಅವರವರ ಆಂತರ್ಯದಲ್ಲಿ ಬೆಳಗಿನ ಕಿರಣಗಳು ಹೊರಹೊಮ್ಮಿದಾಗ, ಜೀವನದ ದೃಷ್ಟಿ ಕೋನದೊಂದಿಗೆ ಅನುಭವ ಮೇಳೈಸಿದರೆ ಜೀವನ ಸಾರ್ಥಕ. + +“ಜೀವನವೆಂದರೆ ಬೊಗಸೆಯಲ್ಲಿನ ನೀರೆಂದ” ಸಾಕ್ರಟಿಸ್. ಬೊಗಸೆಯಲ್ಲಿನ ನೀರು ತೊಟ್ಟಿಕ್ಕಿ ಖಾಲಿಯಾಗುವ ಮುನ್ನ ಜೀವನವನ್ನು ಸವಿಯಬೇಕೆನ್ನುವದು ಕೆಲವರ ಅಭಿಲಾಷೆ. ಇಂಥಹ ಅಭಿಲಾಷೆಯಿರುವವರು ಜೀವನದ ಹಲವಾರು ಆಯಾಮಗಳಿಗೆ ತಮ್ಮ ಮಿತಿಯೊಳಗೆ ಸ್ಪರ್ಶಿಸಿ, ಅನುಭವಿಸಿ ಕ್ರಿಯಾಶೀಲರಾಗಿ ತಮ್ಮ ಕೊಡುಗೆಗಳನ್ನು ನೀಡಿ, ಜೀವನವನ್ನು ವೈವಿಧ್ಯಮಯವಾಗಿ ಸವಿಯುತ್ತಾರೆ. ಇಂತಹದೇ ಪ್ರಯತ್ನದಲ್ಲಿ ನಮ್ಮ ಶಿವನಗೌಡ ಪೊಲೀಸ ಪಾಟೀಲರಿದ್ದಾರೆ. + + + +ಜೀವನದ ಅಗಾಧತೆ, ವಿಸ್ತಾರತೆ, ವೈವಿಧ್ಯತೆಗಳ ಹತ್ತು ಹಲವಾರು ವಿಭಿನ್ನ ಅನುಭವಗಳನ್ನು ತಮ್ಮ ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ವ್ಯಕ್ತಪಡಿಸಲು ಪ್ರತಿಯೊಬ್ಬ ಸಾಹಿತಿಯು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂತಹದೇ ಪ್ರಯತ್ನವನ್ನು ಪಾಟೀಲ ಜೀವನದಲ್ಲಾದ ವೈವಿಧ್ಯಮಯ ಅನುಭವಗಳನ್ನು ಒಂದೆಡೆ ಸೇರಿಸಿ ಅರ್ಥಪೂರ್ಣವಾದ “ಆಂತರ್ಯದ ಬೆಳಗು” ಶೀರ್ಷಿಕೆಯಡಿ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ.ಕವನ ಸಂಕಲನದಲ್ಲಿನ ಕವನಗಳು ಜೀವನದ ಆಯಾಮಗಳಾದ, ಸೇವೆ ಸಾಧನೆ, ಹೋರಾಟ, ಪರದಾಟಗಳಲ್ಲದೆ, ತಾಯಿ, ಸಿದ್ಧಗಂಗಾಶ್ರೀ, ಶ್ರೀಮತಿ ಸಾವಿತ್ರಿಬಾಯಿ ಪುಲೆ, ಭಗತ್ ಸಿಂಗ್ ರವರಂತಹ ವ್ಯಕ್ತಿಗಳ ಹಾಗೂ ಸಹಬಾಳ್ವೆ, ಸಮಾನತೆ, ಸಮನ್ವಯತೆಯನ್ನು ಚಿತ್ರಿಸುತ್ತಲೇ, ರಕ್ತದಾನ, ದೇಹದಾನ, ನೇತ್ರದಾನಗಳ ಮಹತ್ವ ತಿಳಿಸುವ ಕವನಗಳಿವೆ. ಒಟ್ಟಾರೆ ಕವನಗಳು ಸಂಕ್ಷಿಪ್ತ ಹಾಗೂ ಸರಳವಾಗಿದ್ದು. ವೈವಿಧ್ಯಮಯ ವಿಷಯಗಳ ಆಯ್ಕೆಯೊಂದಿಗೆ ಸಮರ್ಥವಾಗಿ ಅಭಿವ್ಯಕ್ತಿಸಲು ಪ್ರಯತ್ನಿಸಿದ್ದಾರೆ. + +ಬದುಕಿನಲ್ಲಿ ಹಿಗ್ಗದೆ-ಜಗ್ಗದೆ ಮುನ್ನಡೆಸುವ ಶಕ್ತಿಯೆಂದರೆ ನಮ್ಮೊಳಗಿನ ಆಂತರ್ಯದ ಬೆಳಗನ್ನು ಪ್ರಜ್ವಲಿಸಿಕೊಂಡಾಗ ಅದುವೇ ಆತ್ಮವಿಶ್ವಾಸ ಹಾಗೂ ಪ್ರಯತ್ನಗಳಾಗಿ ಮಾರ್ಪಟ್ಟು ಜೀವನವೊಂದು ಸಾಧನೆಯೊಂದಿಗೆ ಸಾರ್ಥಕವಾಗುತ್ತದೆ. + +ಕವನ ಸಂಕಲನದಲ್ಲಿ ಪ್ರತಿಧ್ವನಿಸುವ ಧ್ವನಿ “ನಿಮಗೆ ನೀವೇ ದಾರಿದೀಪವೆಂದ” ಬುದ್ಧನ ಸಂದೇಶದಂತೆ. “ಅರಿವೇ ಗುರುವೆಂದ” ಬಸವೇಶ್ವರರವರ ವಚನದಂತೆ. ನಮ್ಮೊಳಗಿನ ಆಂತರ್ಯದ ಬೆಳಗೆ ನಮ್ಮೆಲ್ಲರ ದಾರಿದೀಪವಾಗಿದೆ. “ನೂರು ಗ್ರಂಥಗಳ ಪಠಣಗಿಂತ ಆಂತರ್ಯದ ಬೆಳಗಿನ ಅರಿವು, ಸಾಧನೆಗೆ ದಾರಿ ದೀಪವೆಂದ” ವಿವೇಕ ವಾಣಿಯಂತೆ. ಬಾಹ್ಯ ಬೆಳಗು ಸಿರಿವಂತಿಕೆಯಾದರೆ. ಆಂತರ್ಯದ ಬೆಳಗು ಸಾರ್ಥಕತೆಯಂತಹ ಬೆಳಗಿನ ಮಾರ್ಗದಲ್ಲಿ ಪ್ರೇರೇಪಿಸಿ. ಸಮಾಜಕ್ಕೆ ದಾರಿ ದೀಪವಾಗಿಸುತ್ತದೆ. + +ಆಂತರ್ಯದ ಬೆಳಗಿನ ಕವನ ಸಂಕಲನಕ್ಕೆ ಅರ್ಥಪೂರ್ಣವಾದ ಶೀರ್ಷಿಕೆ ವಾಕ್ಯವಾಗಿರುವ ಭರವಸೆಯೇ ಬದುಕು ನಿಜಕ್ಕೂ ಸಾಂದರ್ಭಿಕವಾಗಿದೆ. ಜಗವೆಲ್ಲ ಬೆಳಗಿದ ಸೂರ್ಯ ಸಂಜೆ ಕತ್ತಲಾವರಿಸಿದಾಗ ನನ್ನ ನಂತರ ಮುಂದೇನು ಎಂದು ಹುಡುಕುತ್ತಿರುವಾಗಲೆ ಮೂಲೆಯಲ್ಲಿದ್ದ ಮಿಣುಕು ದೀಪವೊಂದು ನಾನಿದ್ದೇನೆ ಎಂದು ಜಗಕೆ ಕೊಡುವ ಭರವಸೆ ಸೂರ್ಯನಷ್ಟು ಪ್ರಕಾಶಮಾನವಾಗಿ ಇರಲಿಕ್ಕಿಲ್ಲ. ಆದರೆ ದೀಪ ಹಚ್ಚುವವರಿಗೆ ಮಾತ್ರ ಬೆಳಕು ನೀಡುವಷ್ಟು ಬೆಳಕು ದೀಪದಲ್ಲಿರುತ್ತದೆ ಅದೇ ಭರವಸೆ. + +(ಶರಣಬಸಪ್ಪ ಬಿಳೆಯಲಿ) + +ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ಭರವಸೆ ಎಂತಹ ಹೋರಾಡುವ ಶಕ್ತಿ ತುಂಬುತ್ತದೆಯಂದರೆ ಫೇಸ್ಬುಕ್ಕಿನ ಒಂದು ಸಂದೇಶದಂತೆ ಎಷ್ಟೇ ಸೋತರೂ ಕುಸಿಯುವುದಿಲ್ಲ. ಹೆದರಿ ಓಡುವುದಿಲ್ಲ ಏಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ, ಸಾವಿರ ಬಾರಿ ಸೋತವನು ಈ ರೀತಿಯಾಗಿ ಸಕಾರಾತ್ಮಕ ಚಿಂತನೆಯ ಓಂಕಾರದ ದ್ಯೋತಕವಾಗಿರುವ ಕಾರಣದಿಂದ ಇನ್ನೇನು ಬದುಕು ಮುಗಿಯಿತು ಎಂದು. ಸುಳಿಗಾಳಿಗೆ ಸಿಕ್ಕು ತರೆಗೆಲೆಯಂತೆ ಕಷ್ಟದ ಕುಲುಮೆಯಲ್ಲಿ ಬೆಂದು ಬಸವಳಿದವರಿಗೆ ಫಿನಿಕ್ಸ್‌ನಂತೆ. ಆಕಾಶದೆತ್ತರಕೆ ಮೇಲೆರುವ ತಾಕತ್ತೆ ಭರವಸೆ. + +ಬದುಕು ಇತರರಿಗೆ ಬೆಳಕಾಗುವುದು ನಿಜವಾದ ಬದುಕಾಗಿದೆ. ಅಂತರ್ಯದಲ್ಲಿನ ಬೆಳಗನ್ನು ಬೆಳಗಿಸಿಕೊಂಡವರು ಇತರರ ಮನದಲ್ಲಿ ಭರವಸೆಯ ದೀಪ ಹೊತ್ತಿಸುತ್ತಾರೆ. + + + +ತಮ್ಮ ಆಂತರ್ಯದ ಬೆಳಗಿನಿಂದ ಹೊರಹೊಮ್ಮಿದ ಭಾವ ಕಿರಣಗಳನ್ನು ಪ್ರಥಮ ಕೃತಿಯಲ್ಲಿ, ಕವನದ ರೂಪದಲ್ಲಿ ಚಿತ್ರಿಸಲು ಪ್ರಯತ್ನಿಸಿರುವುದು ಸ್ತುತ್ಯಾರ್ಹವಾಗಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_204.txt b/Kenda Sampige/article_204.txt new file mode 100644 index 0000000000000000000000000000000000000000..41152bd1c9e1c6bf123794f7cf2bf550a0b31346 --- /dev/null +++ b/Kenda Sampige/article_204.txt @@ -0,0 +1,65 @@ +ವಸ್ತು ಮತ್ತು ತಂತ್ರಗಳ ದೃಷ್ಟಿಯಿಂದ ನಾ. ಮೊಗಸಾಲೆ ಅವರ ‘ಇದ್ದೂ ಇಲ್ಲದ್ದು’ ಎಂಬ ಕಾದಂಬರಿಯು ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಅತ್ಯಂತ ವಿಶಿಷ್ಟವಾಗಿದೆ. ಬದಲಾಗುತ್ತಿರುವ ಕಾಲದ ಲಯವನ್ನು ಹರಿದಾಸ ಮೇಷ್ಟ್ರು ಮತ್ತು ಅವರ ಮಗ ರಮಾನಂದನ ಪ್ರಜ್ಞೆಯಲ್ಲಿ ಸೆರೆ ಹಿಡಿಯುವ ಮಹತ್ವಾಕಾಂಕ್ಷೆ ಈ ಕಾದಂಬರಿಯದ್ದು. ಒಂದು ಕಾಲವನ್ನು ಹಲವು ನೆಲೆಗಳಿಂದ ಪ್ರವೇಶಿಸಿರುವುದರಿಂದ, ಅವುಗಳಿಂದ ಹುಟ್ಟುವ ಅರ್ಥಗಳಿಂದ ತುಂಬ ಬೇರೆಯಾದ ಅನುಭವ ಮತ್ತು ದರ್ಶನವು ದೊರಕುತ್ತದೆ. ಹಿರಿಯ ತಲೆಮಾರು ನಡೆಸಿದ ಬದುಕಿನ ಶೈಲಿಯ ಅರಿವು ಮತ್ತು ತಿಳುವಳಿಕೆಯನ್ನು, ಲೇಖಕರಾಗಿ ಗಳಿಸಿದ ಕಥನ ಕೌಶಲವನ್ನು ಏಕಕಾಲದಲ್ಲಿ ದುಡಿಸಿಕೊಂಡು ಶಿವಳ್ಳಿ ಬ್ರಾಹ್ಮಣರ ಬದುಕಿನ ಇತಿಹಾಸದ ದಾಖಲೆ ಮತ್ತು ರಚನೆಗಳ ಕುರಿತು ಹೊಸತಾಗಿ ಯೋಚಿಸುವಂತೆ ಮಾಡುವ ಕೃತಿಯನ್ನು ಲೇಖಕರು ನೀಡಿದ್ದಾರೆ. + +ನಿರ್ದಿಷ್ಟ ಜಾತಿ ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳನ್ನು ‘ಅವಶ್ಯಕ’ ಮತ್ತು ‘ಅನವಶ್ಯಕ’ ಎಂದು ವಿಂಗಡಿಸುವ ಕ್ರಮವು ಎರಡು ವರ್ಗಗಳ ನಡುವಿನ ಕಲಹಗಳಿಗೆ ಕಾರಣವಾಗಿರುವುದು ನಿಜವಾದರೂ ಈ ಕಾದಂಬರಿಯು ಒಂದು ದಳದ ಸಮರ್ಥನೆಯನ್ನಾಗಲೀ ಮತ್ತೊಂದು ದಳದ ಭರ್ತ್ಸನೆಯನ್ನಾಗಲೀ ಮಾಡುವುದಿಲ್ಲ. ಸಂಸ್ಕೃತಿಯ ಮೇಲಿರುವ ಗೌರವವನ್ನು ವ್ಯಕ್ತಪಡಿಸುವುದರೊಂದಿಗೆ ಪರಂಪರೆಯು ಕಳೆದುಹೋಗುತ್ತಿರುವ ವಿಷಾದ ಭಾವನೆಯು ಕೃತಿಯುದ್ದಕ್ಕೂ ವ್ಯಾಪಿಸಿಕೊಂಡಿದೆ. + +ಕರಾವಳಿಯ ಬ್ರಾಹ್ಮಣರ ಪೈಕಿ ಶಿವಳ್ಳಿ, ಹವ್ಯಕ ಅಥವಾ ಕರ್ಹಾಡ ಸಮುದಾಯದ ಮನೆದೇವರಿಗೆ ಆಸ್ತಿಯು ಇರುತ್ತದೆ. ಮನೆಯ ಹಿರಿಯರಾದವರು ತಲತಲಾಂತರದಿಂದ ಪೂಜೆ ಮಾಡಿಕೊಂಡು ಬರುವ ಸಂಪ್ರದಾಯವಿದೆ. ಆ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ. ಆದರೆ ಇತ್ತೀಚಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟದಿಂದಾಗಿ ಆ ಪರಂಪರೆಯು ನಾಶವಾಗುವ ಸ್ಥಿತಿಯಲ್ಲಿದೆ. ಎಲ್ಲ ಮನೆಯ ದೇವರ ಸ್ಥಿತಿಯೂ ಅತಂತ್ರವಾಗಿದೆ. ಪೂಜೆ ಪುನಸ್ಕಾರ ಮುಂತಾದ ಸಂಸ್ಕಾರಗಳು ನಿಂತುಹೋಗುವ ಭೀತಿಯಲ್ಲಿದೆ. ಯುವ ತಲೆಮಾರು ವಿದೇಶಗಳಲ್ಲಿ ನೆಲೆಗೊಳ್ಳುವಾಗ ಮನೆದೇವರ ಗೊಡವೆಯು ಯಾರಿಗೂ ಬೇಡವಾಗಿದೆ. ಆಧುನಿಕ ಯುಗವು ಬದಲಾವಣೆಯನ್ನು ಹೊಂದುತ್ತಿರುವ ಸಂದರ್ಭದಲ್ಲಿ ದೇವರು ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದಾನೆಯೇ ಎಂಬ ಪ್ರಶ್ನೆಯನ್ನು ಎತ್ತಿಕೊಂಡು ಈ ಕಾದಂಬರಿಯನ್ನು ರಚಿಸಲಾಗಿದೆ. ಈ ಸಮಸ್ಯೆಗೆ ಪರಿಹಾರವಿಲ್ಲ. ಹಾಗಿದ್ದರೆ ಮುಂದೇನು ಎಂಬ ಜಿಜ್ಞಾಸೆಯು ಇಲ್ಲಿ ವ್ಯಕ್ತವಾಗುತ್ತದೆ. + +ಇಪ್ಪತ್ತು ವರ್ಷಗಳ ಹಿಂದೆ ದೇವರಮನೆ ಎಂಬ ಊರನ್ನು ತೊರೆದುಹೋದ ರಮಾನಂದನನ್ನು ಆತನ ಅತ್ತೆಯ ಮಗನಾದ ಗೋವಿಂದಾಚಾರ್ಯರು ಊರಿಗೆ ಬರಲು ಆಹ್ವಾನಿಸುತ್ತಾರೆ. ರಮಾನಂದನ ಮನೆಯಲ್ಲಿ ಪೂಜೆಯನ್ನು ಮಾಡಿಕೊಂಡಿದ್ದ ಕುಪ್ಪಣಾಚಾರ್ಯರು ತಮ್ಮ ಮಗನು ಆತ್ಮಹತ್ಯೆಯಿಂದ ನೊಂದು ದೇವರ ಪೂಜೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದುದರಿಂದ ರಮಾನಂದನಾದರೂ ಮನೆ ದೇವರ ತಲೆಗೆ ನೀರನ್ನು ಹಾಕುವಂತಾಗಲಿ ಎಂಬ ಕಳಕಳಿ ಅವರಿಗೆ ಇರುತ್ತದೆ. ಬಾಲ್ಯದ ಗೆಳತಿಯೂ, ಕ್ರೈಸ್ತಮತಕ್ಕೆ ಸೇರಿದವಳೂ ಆದ ಮೇರಿಯನ್ನು ಪ್ರೀತಿಸಿ ಮದುವೆಯಾಗಿ ಮನೆಯವರ ವಿರೋಧವನ್ನು ಕಟ್ಟಿಕೊಂಡ ರಮಾನಂದನು ಕೃಷಿವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದು ವಿದೇಶದಲ್ಲಿ ಉನ್ನತ ಹುದ್ದೆಯನ್ನು ಪಡೆದು ಅಲ್ಲೇ ನೆಲೆಸಿದ್ದಾನೆ. ‘ನಾನು ಸತ್ತರೆ ನನ್ನ ಉತ್ತರಕ್ರಿಯೆಯನ್ನೂ ಮಾಡಬಾರದು’ ಎಂದು ತಂದೆಯಿಂದ ಬೈಯಿಸಿಕೊಂಡು ಊರು ಮತ್ತು ಮನೆದೇವರ ಸಹವಾಸವೇ ಬೇಡವೆಂದು ಮಡದಿಯೊಂದಿಗೆ ನಗರದಲ್ಲಿ ನೆಲೆಸಿದ ರಮಾನಂದನು ಆಧುನಿಕ ಶಿಕ್ಷಣದ ಮೂಲಕ ಪ್ರಗತಿಪರ ನಿಲುವುಗಳನ್ನು ರೂಢಿಸಿಕೊಂಡವನು. ಭಾರತಿ ಎಂದು ಹೆಸರನ್ನು ಬದಲಿಸಿಕೊಂಡ ಮೇರಿಯೂ ವೈಚಾರಿಕ ನಿಲುವನ್ನು ಹೊಂದಿದವಳು. ಇವರ ಸಂಸಾರವು ಯಾವ ಗೊಂದಲ ಗೋಜಲುಗಳಿಲ್ಲದೆ ಸುಖಮಯವಾಗಿ ಸಾಗುತ್ತಿರುತ್ತದೆ. ಅವನು ಗೋವಿಂದಾಚಾರ್ಯನ ಕರೆಗೆ ಓಗೊಟ್ಟು ಊರಿಗೆ ಬರುತ್ತಾನೆ. ಹೀಗೆ ರಮಾನಂದನು ಆಕಸ್ಮಿಕವಾಗಿ ಊರಿಗೆ ಬರುವ ವೇಳೆಯಲ್ಲಿ ಲಾಕ್‌ಡೌನ್ ಘೋಷಣೆಯಾದ್ದರಿಂದ ಅವನು ಊರಿನಲ್ಲೇ ಉಳಿದುಕೊಳ್ಳಬೇಕಾಗುತ್ತದೆ. ಆಧುನಿಕತೆ-ಪುರಾತನ ಮೌಲ್ಯಗಳು ಮತ್ತು ನಗರ ಜೀವನ-ಗ್ರಾಮ್ಯ ಬದುಕಿನ ವ್ಯತ್ಯಾಸಗಳನ್ನು ಅವಲೋಕಿಸುವ ಅವಕಾಶವು ಇಲ್ಲಿಂದ ಸೃಷ್ಟಿಯಾಗುತ್ತದೆ. ತನ್ನ ಪೂರ್ವಜರ ಬದುಕು ಮತ್ತು ನಂಬಿಕೆಗಳಿಗೆ ಸಂಬಂಧಿಸಿದ ಶೋಧಕ್ಕೆ ರಮಾನಂದನು ಮಾನದಂಡವಾಗುತ್ತಾನೆ. ಲಾಕ್ ಡೌನ್ ಸಂದರ್ಭದ ಬಿಡುವಿನ ವೇಳೆಯಲ್ಲಿ ಆತನು ತನ್ನ ತಂದೆಯಾದ ಹರಿದಾಸ ಭಟ್ಟರು ಬರೆದಿಟ್ಟಿದ್ದ ದಿನಚರಿಯನ್ನು ಆಧರಿಸಿ ಬರೆದ ಮೂರು ತಲೆಮಾರಿನ ಕಥನವು ಕಾದಂಬರಿಯ ರೂಪದಲ್ಲಿ ಓದುಗರ ಕಣ್ಣೆದುರು ಮೂಡಿ ಬರುತ್ತದೆ. + +ಈ ಕಾದಂಬರಿಯಲ್ಲಿ ಸಾಮಾನ್ಯವಾಗಿ ಮೂರು ರೀತಿಯ ಪಾತ್ರಗಳು ಇವೆ. ಮೊದಲನೆಯದ್ದು ಜಾತಿ, ಲಿಂಗ ಸಮಾಜದ ಆಚಾರ ವಿಚಾರಗಳನ್ನು ಪ್ರಶ್ನಿಸದೆ ಅವುಗಳು ಸಹಜವೆಂಬಂತೆ ಒಪ್ಪಿಕೊಂಡು ಬದುಕಿದ ದೊಡ್ಡ ರಮಾನಂದ ಭಟ್ಟ ಮತ್ತು ಅವರ ತಲೆಮಾರು. ಎರಡನೆಯದ್ದು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಒಪ್ಪಿಕೊಂಡು ಉದ್ಯೋಗಸ್ಥ ಬದುಕನ್ನು ನೆಚ್ಚಿಕೊಂಡು ಸಮಾಜಮುಖಿ ಚಟುವಟಿಗಳನ್ನು ಮಾಡಿದ ಹರಿದಾಸ ಮೇಷ್ಟ್ರ ತಲೆಮಾರು. ಮೂರನೇ ರೀತಿಯದ್ದು ಎಂದರೆ ಜಾತಿಧರ್ಮಗಳ ಗಡಿಯನ್ನು ಮೀರಿ, ಆದರ್ಶ ಮತ್ತು ವೈಚಾರಿಕತೆಯ ನೆಲೆಯಲ್ಲಿ, ಶಿಕ್ಷಣ ಮತ್ತು ಹೊಸ ರೀತಿಯ ಉದ್ಯೋಗದ ನೆರವಿನಿಂದ ದಾಟಲು ಯತ್ನಿಸುವ ರಮಾನಂದನ ತಲೆಮಾರು. ಈ ಕಾದಂಬರಿಯಲ್ಲಿ ಬರುವ ದೊಡ್ಡ ರಮಾನಂದರು ವರ್ತಮಾನದ ಪಾತ್ರವಲ್ಲ. ಅವರು ಸಂಸಾರಸ್ಥರಾಗಿದ್ದರೂ ತಮ್ಮ ಒಕ್ಕಲಿನವಳಾದ ಸುಂದರಿಯೊಂದಿಗೆ ಸಂಬಂಧವನ್ನು ಇಟ್ಟುಕೊಂಡವರು. ಸುಂದರಿಯ ಗಂಡನು ಆಕೆಯ ಬಯಕೆಗಳಿಗೆ ಸ್ಪಂದಿಸಲಾರದ, ಅವುಗಳನ್ನು ಈಡೇರಿಸಲಾರದ ವ್ಯಕ್ತಿ. ಹಾಗಾಗಿ ಸುಂದರಿಯೂ ಅತೃಪ್ತಳೇ. ದೊಡ್ಡ ರಮಾನಂದರ ಸಂಗವನ್ನು ತನ್ನ ಅನುಕೂಲ ಮತ್ತು ಲಾಭಕ್ಕಾಗಿ ಬಳಸಿಕೊಳ್ಳಬಲ್ಲ ಜಾಣೆ. ಆದರೆ ಕಾದಂಬರಿಯು ಇವರ ಪ್ರಣಯವನ್ನು ರಮ್ಯೀಕರಿಸದೆ ಅಥವಾ ವೈಭವೀಕರಿಸದೆ ಅದರ ಪರಿಣಾಮಗಳತ್ತ ಗಮನವನ್ನು ಹರಿಸಿದೆ. ಇಬ್ಬರು ಅತೃಪ್ತ ಜೀವಿಗಳ ಕಾಮದ ಅಭೀಪ್ಸೆಯನ್ನು ಶೋಧಿಸಿಕೊಂಡು ಹೋಗದೆ ಅದರ ಪರಿಣಾಮವನ್ನು ನಿರೂಪಿಸುತ್ತದೆ. ಆದ್ದರಿಂದ ಈ ಸಂಬಂಧದಿಂದ ಹುಟ್ಟಬಹುದಾದ ಸಾರ್ಥಕ್ಯ ಭಾವ ಅಥವಾ ಪಾಪಪ್ರಜ್ಞೆ ಈ ಕಾದಂಬರಿಯ ವಸ್ತುವಾಗುವುದಿಲ್ಲ. ಆದರೆ ಈ ಕಾದಂಬರಿಯು ರಮಾನಂದ ಮತ್ತು ಸುಂದರಿಯ ಸಂಬಂಧವನ್ನು ಮೀರಿ ಬೆಳೆಯುವುದರಿಂದ ಪ್ರತಿರೋಧವಲ್ಲದಿದ್ದರೂ ಪ್ರತಿಕ್ರಿಯೆಯ ಮಾದರಿಗಳನ್ನು ತರುವುದು ಲೇಖಕರಿಗೆ ಅನಿವಾರ್ಯವಾಗಿದೆ. ಆದ್ದರಿಂದ ಅವರ ನೋಟವು ಮನೆಯ ಆಚೆಗೂ ಹಾಯ್ದು ಒಟ್ಟು ವ್ಯವಸ್ಥೆಯ ಕಡೆಗೆ ವ್ಯಾಪಿಸುತ್ತದೆ. + +ಸುಂದರಿಯ ಮೋಹದಲ್ಲಿ ಮುಳುಗಿ ವಿವೇಚನೆಯನ್ನು ಕಳೆದುಕೊಂಡು ಜಮೀನಿನ ಭಾಗಗಳನ್ನು ಆಕೆಗೆ ನೀಡಿದ ತಪ್ಪಿಗಾಗಿ ಮಠದವರಿಂದ ಛೀಮಾರಿಗೊಳಗಾಗುವ ದೊಡ್ಡ ರಮಾನಂದರು ರಾಧಕ್ಕನ ಔದಾರ್ಯದಿಂದಾಗಿ ಪಾರಾಗುತ್ತಾರೆ. ವಿಧವೆಯಾದ ಆಕೆಯು ತಾನು ಕೂಡಿಟ್ಟ ಮತ್ತು ಮಠದ ಚಾಕರಿಯಿಂದ ಒಟ್ಟು ಮಾಡಿಟ್ಟ ಒಂಭೈನೂರು ರೂಪಾಯಿಗಳನ್ನು ದೊಡ್ಡ ರಮಾನಂದರಿಗೆ ಕೊಟ್ಟು ಬಿಡುತ್ತಾಳಲ್ಲದೆ ಮಠದ ಜಮೀನನ್ನು ಕೊಳ್ಳಲು ಸಹಾಯವನ್ನು ಮಾಡುತ್ತಾಳೆ. ಅವನು ಮಠಕ್ಕೆ ಗೇಣಿಯನ್ನು ಕೊಡುವ ಜಮೀನಿನ ಅರ್ಧವನ್ನು ಆಕೆಯು ಕ್ರಯ ಸಾಧನೆಯ ಮೂಲಕ ತೆಗೆಸಿಕೊಡುತ್ತಾಳೆ. ಒಂಭೈನೂರು ರೂಪಾಯಿಗಳಿಗೆ ಎಷ್ಟು ಜಮೀನನ್ನು ಮಠವು ವಿಕ್ರಯಿಸಬಹುದೋ ಅಷ್ಟನ್ನು ಅವನಿಗೆ ಸಿಗುವಂತೆ ಮಾಡಿ ಒಂದು ಕುಟುಂಬವನ್ನು ಉದ್ಧರಿಸುತ್ತಾಳೆ. + +ರಮಾನಂದನನ್ನು ಸುಂದರಿಯ ಮೋಹದಿಂದ ಬಿಡಿಸಿ ಆತನ ಸಂಸಾರವನ್ನು ಸರಿ ಮಾಡುವ ಸಂದರ್ಭದಲ್ಲಿ ಆತನ ಹೆಂಡತಿಯಾದ ಸೀತಮ್ಮನಿಗೆ ಹೇಳುವ ಕಿವಿಮಾತು ಗಮನಾರ್ಹವಾಗಿದೆ. “ಗಂಡ ಹೆಂಡತಿಯನ್ನು ಬಿಟ್ಟು ಹೊರಚಾಳಿಯನ್ನು ಬಯಸುವುದು ಹೆಂಡತಿಯಿಂದ ಅವನು ನಿರೀಕ್ಷಿಸದಿದ್ದ ಸುಖ ಸಿಕ್ಕದಿದ್ದಾಗ. ನಿನ್ನಂಥ ಹೆಣ್ಣು ಹಗಲಿಡೀ ದುಡಿದು ರಾತ್ರಿ ಚಾಪೆಗೆ ಬರುವಾಗ ತೀರಾ ಸುಸ್ತಾಗಿರುವುದು ಸಹಜ. ಆಗ ಗಂಡನೂ ಬೇಡ, ಮಕ್ಕಳೂ ಬೇಡ ಎಂದು ಹೆಣ್ಣಿಗೆ ಅನಿಸಿದರೆ ತಪ್ಪಿಲ್ಲ. ಆದರೆ ಗಂಡು ಹಾಗಿಲ್ಲ. ಅವನು ಸದಾ ಆಕ್ರಮಣ ಪ್ರವೃತ್ತಿಯವನು. ಅವನಿಗೆ ಹೆಣ್ಣಿನ ಮನಸ್ಸಿಗಿಂತ ದೇಹವೇ ಹೆಚ್ಚು ಇಷ್ಟ.”(ಪುಟ 119) ಎನ್ನುತ್ತಾ ತನ್ನ ಮಾತನ್ನು ಮುಂದುವರಿಸಿ “ಮನುಷ್ಯ ಭಾವಜೀವಿ. ಸಂತಾನದ ಉದ್ದೇಶಕ್ಕಿಂತ ಭಿನ್ನವಾದ ಸುಖ ಹೆಣ್ಣ ಗಂಡು ಸೇರುವಾಗ ಸಿಗುತ್ತದೆ ಎಂಬುದನ್ನು ಆತ ಕಂಡುಕೊಂಡಿದ್ದಾನೆ. ಆ ತಹತಹ ಅವನನ್ನು ಅವನ ಜೀವಮಾನವಿಡೀ ಆ ಸುಖಕ್ಕಾಗಿ ಕಾಡುತ್ತಿರುತ್ತದೆ. ಹಾಗಾಗಿ ಹೆಣ್ಣಾದವಳು ಗಂಡು ತನ್ನನ್ನು ಭೋಗಿಸುತ್ತಿದ್ದಾನೆ ಎಂದು ಸುಮ್ಮನೇ ಮಲಗಿ ಹೆಣದ ಹಾಗೆ ಬಿದ್ದುಕೊಂಡರೆ ಗಂಡಿಗೆ ನಿರೀಕ್ಷಿತ ಸುಖ ಸಿಗುವುದು ಕಷ್ಟ. ಅವನಿಗೆ ಸಂಭೋಗ ಸಮಯದಲ್ಲಿ ಹೆಣ್ಣಿನ ಸಹಭಾಗಿತ್ವ ಎಂದರೆ ಅವಳು ಗಂಡನ ಪಟ್ಟುಗಳಿಗೆ ಪ್ರತಿಯಾಗಿ ಅವನನ್ನು ಮೀರಿಸುವಂಥ ಪಟ್ಟುಗಳನ್ನು ನೀಡಬೇಕೆಂಬ ನಿರೀಕ್ಷೆ ಇರುತ್ತದೆ. ಆದರೆ ಅದನ್ನು ನಾವು ಬ್ರಾಹ್ಮಣರ ಹೆಂಗಸರು ನೀಡುವುದು ಕಡಿಮೆ ಎಂದೇ ನನ್ನ ಊಹೆ. ಪ್ರಾಯಶಃ ಬ್ರಾಹ್ಮಣೇತರ ಹೆಣ್ಣುಗಳು ಗಂಡುಗಳ ಜೊತೆ ಹೆಚ್ಚು ಸಹಕರಿಸುವುದರಿಂದ ಈ ಬ್ರಾಹ್ಮಣ ಮುಂಡೇವು ತಂತಮ್ಮ ಹೆಂಡಂದಿರನ್ನು ಬಿಟ್ಟು ಹೊರಚಾಳಿಗೆ ಒಳಗಾಗುತ್ತಾರೆ ಎಂದು ನನ್ನ ಯಜಮಾನರು ನನ್ನಲ್ಲಿ ಅನೇಕ ಬಾರಿ ಹೇಳಿದ್ದುಂಟು.” (ಪುಟ 120) ಎನ್ನುತ್ತಾಳೆ. ಲಿಂಗ ಮತ್ತು ಜಾತಿಯ ಆಧಾರದಲ್ಲಿ ಗಂಡಸರನ್ನು ಶೋಷಕರನ್ನಾಗಿಯೂ ಹೆಂಗಸರನ್ನು ಶೋಷಿತರನ್ನಾಗಿಯೂ, ಕಲ್ಪಿಸಿ ಅಭ್ಯಾಸವಾಗಿರುವ ಹೊತ್ತಿನಲ್ಲಿ ಲೇಖಕರು ವಸ್ತುಸ್ಥಿತಿಯ ಎರಡೂ ಮಗ್ಗುಲಿಗೆ ಕಣ್ಣುಹಾಯಿಸಿದ ವಿಚಾರವು ಮಖ್ಯವಾಗುತ್ತದೆ. + +ಈ ಕಾದಂಬರಿಯು ಶಿವಳ್ಳಿ ಬ್ರಾಹ್ಮಣರ ಬದುಕನ್ನು ಚಿತ್ರಿಸಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರವು ಸರಳವಾಗಿದೆ. ಬಂಟರ ಸಮುದಾಯದ ಬಗ್ಗೆ ‘ಉಲ್ಲಂಘನೆ’, ಹವ್ಯಕ ಬ್ರಾಹ್ಮಣರ ಬಗ್ಗೆ ‘ಮುಖಾಂತರ’ವನ್ನು ಬರೆದಂತೆ ಮೊಗಸಾಲೆಯವರು ಈ ಕಾದಂಬರಿಯ ಮೂಲಕ ಶಿವಳ್ಳಿ ಬ್ರಾಹ್ಮಣರ ಬದುಕಿನ ಕಥನವನ್ನು ಬರೆದಿದ್ದಾರೆ. ಆದರೆ ಇಲ್ಲಿ ಗಮನಿಸಬೇಕಾದ ಸೂಕ್ಷ್ಮಗಳು ಹಲವಾರು ಇವೆ. ಹವ್ಯಕ ಮತ್ತು ಕರ್ಹಾಡ ಬ್ರಾಹ್ಮಣರಲ್ಲಿ ಮಠ ಪರಂಪರೆಯಿಲ್ಲ. ಸ್ವಾಮೀಜಿಗಳು ಇದ್ದರೂ ಅವರು ಗೇಣಿಪದ್ಧತಿಯನ್ನು ಅನುಸರಿಸುತ್ತಿರಲಿಲ್ಲ. ಮಠದಲ್ಲಿ ಸೇವೆಯನ್ನು ಮಾಡುವ ರಾಧಕ್ಕನ ಪಾತ್ರವನ್ನು ತರುವುದಕ್ಕಾಗಿ ಶಿವಳ್ಳಿ ಬ್ರಾಹ್ಮಣರ ಬದುಕಿಗೆ ಒತ್ತು ನೀಡಲಾಗಿದೆ. ಶಿವಳ್ಳಿ ಬ್ರಾಹ್ಮಣರು ಕಾಮಸೂತ್ರವನ್ನು ಅಧ್ಯಯನ ಮಾಡಿದವರು. “ನನ್ನ ಗಂಡ ಗೋಪಾಲಾಚಾರ್ಯರು ಜ್ಯೋತಿಷ್ಯದಲ್ಲಿ ಎಷ್ಟು ದೊಡ್ಡ ವಿದ್ವಾಂಸರೋ ಅಷ್ಟೇ ಸಂಸ್ಕೃತದ ಅಭ್ಯಾಸಿಯೂ ಆಗಿದ್ದವರು. ಅವರಿಗೆ ಆಯುರ್ವೇದ ಶಾಸ್ತ್ರ, ಕಾಳಿದಾಸ, ಭವಭೂತಿ ಮೊದಲಾದ ಕವಿಗಳು ಬರೆದ ಕಾವ್ಯದ ಜೊತೆಗೆ ವಾತ್ಸ್ಯಾಯನ ಋಷಿಯ ಕಾಮಸೂತ್ರ ಇತ್ಯಾದಿಗಳ ಪರಿಚಯವೂ ಇತ್ತು” (ಪುಟ120) ಎಂಬ ಮಾತಿನೊಂದಿಗೆ ರಾಧಕ್ಕನು ಸೀತಕ್ಕನಿಗೆ ರತಿಕ್ರೀಡೆಯ ಸೂಕ್ಷ್ಮಗಳನ್ನು ವಿವರಿಸುವಲ್ಲಿ ಅದು ಸ್ಪಷ್ಟವಾಗುತ್ತದೆ. ಇದನ್ನು ಹೇಳಬೇಕಿದ್ದರೆ ಶಿವಳ್ಳಿ ಬ್ರಾಹ್ಮಣರ ಬದುಕನ್ನೇ ಆಯ್ದುಕೊಳ್ಳಬೇಕಾಗುತ್ತದೆ. + +ದೊಡ್ಡ ರಮಾನಂದನ ಮಗ ಹರಿದಾಸ ಭಟ್ಟರು ನಿಷ್ಠಾವಂತರಾಗಿದ್ದು ಸಂಪ್ರದಾಯಸ್ಥ ಬದುಕನ್ನು ರೂಢಿಸಿಕೊಂಡವರು. ನೈತಿಕತೆಯ ಗಡಿಯನ್ನು ಮೀರದ ಆದರ್ಶವಾದಿ ಮೇಷ್ಟ್ರಾಗಿದ್ದ ಅವರು ಮನೆಯ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರೊಂದಿಗೆ ಯುವಕಮಂಡಲವನ್ನು ಸ್ಥಾಪಿಸಿ ಅವರಲ್ಲಿ ಹೊಣೆಗಾರಿಕೆಯನ್ನು ತುಂಬುವ, ಭೂಮಸೂದೆಯ ಸಂದರ್ಭದಲ್ಲಿ ರೈತರ ಪರ ನಿಲ್ಲುವ ಸನ್ನಿವೇಶಗಳು ಬದಲಾಗುತ್ತಿರುವ ಕಾಲಗತಿಯ ಸೂಚನೆಯನ್ನು ಕೊಡುತ್ತವೆ. ಬದುಕಿನ ಬಗ್ಗೆ ಅಪಸ್ವರವನ್ನು ಎತ್ತದೆ, ತನ್ನ ಅನುಭವದ ಆಧಾರದಿಂದ ಕಂಡುಕೊಂಡ ಮೌಲ್ಯಗಳನ್ನು ಅಡಿಗಲ್ಲಾಗಿಟ್ಟುಕೊಂಡು ಗೌರವಯುತವಾಗಿ ಬಾಳುವ ಅವರು ಭೂಮಸೂದೆಯು ಜಾರಿಗೆ ಬಂದಾಗ ಯಾರನ್ನೂ ಒಕ್ಕಲೆಬ್ಬಿಸದೆ ಮಿಕ್ಕುಳಿದ ಜಾಗದಲ್ಲಿ ಕೃಷಿಯನ್ನು ಮಾಡಿ ತನ್ನ ಅಸ್ತಿತ್ವವನ್ನು ಗಟ್ಟಿಗೊಳಿಸುತ್ತಾರೆ. ತಾನು ಕಷ್ಟದಲ್ಲಿದ್ದರೂ ಜಾತಿಬೇಧವೆಣಿಸದೆ ಊರಿನವರಿಗೆ ಸಹಾಯ ಮಾಡಿ ಬದುಕಿದವನ ಹಿರಿಮೆಯು ಅವರ ಸಹಕಾರಿ ಮನೋಭಾವದ ಮೂಲಕ ವ್ಯಕ್ತವಾಗುತ್ತದೆ. “ಅನೇಕ ಜಮೀನುದಾರರು ತಮ್ಮ ಭೂಮಿಯನ್ನು ಗೇಣಿಗೆ ನೀಡುವಾಗ, ‘ಗೇಣಿ ಚೀಟು’ ಎಂಬ ದಾಖಲೆಯನ್ನು ಒಕ್ಕಲುಗಳಿಗೆ ನೀಡಿ ಒಕ್ಕಲುಗಳು ಗೇಣಿ ನೀಡಿದಾಗ, ರಶೀದಿಯನ್ನು ನೀಡುವುದನ್ನು ರೂಢಿಸಿಕೊಂಡಿದ್ದರು. ಆದರೆ ಇನ್ನು ಕೆಲವು ಜಮೀನುದಾರರು ತಮ್ಮ ಜಮೀನನ್ನು ಗೇಣಿಗೆ ನೀಡುವಾಗ ಗೇಣಿ ಚೀಟಿನಂಥ ಯಾವುದೇ ದಾಖಲೆ ನೀಡದೆ, ಬಾಯ್ದೆರೆಯಲ್ಲೇ ‘ಇಂತಿಷ್ಟು ಗೇಣಿ ಕೊಡು’ ಎನ್ನುತ್ತಿದ್ದರು. ಅಂಥವರು ಗೇಣಿದಾರರು ಗೇಣಿ ಪಾವತಿಸಿದಾಗ ತಪ್ಪಿಯೂ ಒಕ್ಕಲುಗಳಿಗೆ ರಶೀದಿ ನೀಡುತ್ತಿರಲಿಲ್ಲ. ಭೂಮಸೂದೆಯು ಜಾರಿಯಾದಾಗ ಸರಕಾರವು ಪ್ರತಿಯೊಬ್ಬ ಗೇಣಿದಾರನೂ ಸರಕಾರಕ್ಕೆ, ತಾವು ಇಂಥವರ ಇಷ್ಟು ಜಮೀನನ್ನು ಇಷ್ಟು ವರುಷಗಳಿಂದ ಅನುಭವಿಸುತ್ತಿದ್ದೇನೆ, ಆ ಸಂಬಂಧ ಇಷ್ಟು ಗೇಣಿಯನ್ನು ವರ್ಷಂಪ್ರತಿ ತನ್ನ ಧಣಿಗೆ ನೀಡುತ್ತಿದ್ದೇನೆ ಎಂಬ ಡಿಕ್ಲರೇಶನನ್ನು ಸರಕಾರಕ್ಕೆ ಸಲ್ಲಿಸಬೇಕೆನ್ನುವುದನ್ನು ನಿಯಮವಾಗಿಸಿತ್ತು. ಇಂಥ ದಾಖಲೆ ಇರುವ ಮತ್ತು ದಾಖಲೆ ಇಲ್ಲದ ಗೇಣಿದಾರರು ತಮ್ಮ ಸ್ವಾಧೀನವಿರುವ ಜಮೀನುಗಳ ದಾಖಲೆಗಳನ್ನು ಡಿಕ್ಲರೇಶನ್ ಮೂಲಕ ಸರಕಾರಕ್ಕೆ ಸಲ್ಲಿಸದಿದ್ದರೆ, ಆ ಜಮೀನು ಭೂ ಮಾಲಕರಿಗೆ ಸೇರದೆ, ಸರಕಾರಕ್ಕೇ ಸೇರಬೇಕು ಎನ್ನುವ ನಿಯಮ ಆ ಕಾನೂನಿನಲ್ಲಿತ್ತು. ಯಾರೇ ಆಗಲಿ ಗೇಣಿದಾರರಾಗಿದ್ದ ಪಕ್ಷದಲ್ಲಿ ಪರಿಪೂರ್ಣವಾದ ದಾಖಲೆಗಳು ಇಲ್ಲದೇ ಇದ್ದರೆ, ಅಂಥ ಜಮೀನನ್ನು ಅದರ ಒಡೆಯರು ಪರಸ್ಪರ ಒಪ್ಪಂದದ ಮೂಲಕ ಗೇಣಿದಾರರಿಂದ ಬಿಡಿಸಿಕೊಳ್ಳಬಹುದಿತ್ತು ಎನ್ನುವ ವಿಚಾರಕ್ಕೆ ಆ ಕಾನೂನಲ್ಲಿ ಅವಕಾಶವೂ ಇತ್ತು. + + + +ಸೀತಾಪುರದ ಗೇಣಿದಾರರಲ್ಲಿ ಒಂದಷ್ಟು ಮಂದಿಯಲ್ಲಿ ಮೂಲ ದಾಖಲೆಗಳು ಇದ್ದರೆ, ಅನೇಕರಲ್ಲಿ ಯಾವ ದಾಖಲೆಗಳು ಇಲ್ಲದೆ ಅವು ಅಂಥವರ ಆತಂಕ ಮತ್ತು ಗೊಂದಲಕ್ಕೆ ಈ ಕಾನೂನು ಕಾರಣವಾಯಿತು. ಗೇಣಿಚೀಟು ಇಲ್ಲದೆಯೂ ಹತ್ತಾರು ವರುಷಗಳಿಂದ ‘ಬಾಯ್ದೆರೆ’ಯ ಒಕ್ಕಲಾಗಿದ್ದವರು ಈಗ ಈ ಕಾನೂನಿನ ಆಶ್ರಯದಲ್ಲಿ ತಾವು ಹೇಗೆ ಭೂಮಾಲಕರಾಗುವುದು ಎಂದು ಚಿಂತಿಸತೊಡಗಿದರು.” ಎಂಬ ವಿವರಗಳು ಇಲ್ಲಿ ಮುಖ್ಯವಾಗುತ್ತವೆ. ಭೂಮಸೂದೆಯ ಕುರಿತು ಇತರ ಕಾದಂಬರಿಗಳು ಮೇಲುಮಟ್ಟದ ತೇಲುಗ್ರಹಿಕೆಯಲ್ಲಿ ವ್ಯಕ್ತಪಡಿಸುವ ವಿವರಗಳು ಇಲ್ಲಿ ಆಳ ಮತ್ತು ವಿಸ್ತಾರವನ್ನು ಪಡೆದಿವೆ. + +ಈ ಕಾದಂಬರಿಯು ಹಲವು ಕಾರಣಗಳಿಗಾಗಿ ಶಿವರಾಮ ಕಾರಂತರ ‘ಮರಳಿ ಮಣ್ಣಿಗೆ’, ‘ಚಿಗುರಿದ ಕನಸು’ ‘ಬೆಟ್ಟದ ಜೀವ’ ಮತ್ತು ‘ಮೈಮನಗಳ ಸುಳಿಯಲ್ಲಿ’ ಎಂಬ ಕಾದಂಬರಿಗಳನ್ನು ನೆನಪಿಗೆ ತರುತ್ತವೆ. ಕಥಾವಿನ್ಯಾಸ, ಪಾತ್ರಚಿತ್ರಣ, ಜೀವನದೃಷ್ಟಿ, ಸನ್ನಿವೇಶಗಳ ನಿರೂಪಣೆಗಳಲ್ಲಿ ಈ ಇಬ್ಬರು ಕಾದಂಬರಿಕಾರರ ನಡುವಿನ ಸಾಮ್ಯ ವ್ಯತ್ಯಾಸಗಳು ಗಾಢವಾಗಿವೆ. ಒಂದರ್ಥದಲ್ಲಿ ಮೊಗಸಾಲೆಯವರು ಶಿವರಾಮ ಕಾರಂತರ ಉತ್ತರಾಧಿಕಾರಿಯಾಗಿದ್ದಾರೆ. ಅವರ ಕಾದಂಬರಿಗಳಲ್ಲಿ ಕಾರಂತರ ವಾಸ್ತವವಾದದ ಪ್ರಭಾವವಿರುವುದು ನಿಜವಾದರೂ ಅವರಿಗೆ ತಮ್ಮದೇ ಅದ ಧೋರಣೆಗಳಿವೆ. ಕಾರಂತರು ನವೋದಯ ಕಾಲದವರಾದರೆ ಮೊಗಸಾಲೆಯವರು ನವ್ಯದಿಂದ ಅರಂಭಿಸಿ ದಲಿತ ಬಂಡಾಯದ ಹಾದಿಯನ್ನು ಹಾದು ಬಂದವರು. ಕಾರಂತರ ಆದರ್ಶವು ಈ ಕಾಲಕ್ಕೂ ಸಲ್ಲುವಂಥದ್ದೇ ಆದರೂ ಆ ಕಾಲದಲ್ಲಿದ್ದ ಆದರ್ಶದ ಪರಿಕಲ್ಪನೆಯು ಈಗ ಇಲ್ಲವಾಗುತ್ತಿದೆ. ಮನುಷ್ಯನಿಗೆ ಗುರಿ ಎನ್ನುವುದು ಹೇಗೆ ಬೇಕೋ ಹಾಗೆ ಬದುಕಿನಲ್ಲಿ ಒಂದು ಉದ್ದೇಶವೂ ಇರಬೇಕು ಎಂಬ ವಿಚಾರವನ್ನು ಓದುಗರಿಗೆ ಮತ್ತೆ ಮನದಟ್ಟು ಮಾಡಿಸುವ ಸಲುವಾಗಿ ‘ಚಿಗುರಿದ ಕನಸು’ ಕಾದಂಬರಿಯ ಪಾತ್ರಗಳ ಬಗ್ಗೆ ಚರ್ಚೆಯನ್ನು ಈ ಕಾದಂಬರಿಯಲ್ಲಿ ತರಲಾಗಿದೆ. ಶಂಕರನ ಪಾತ್ರದ ಮುಂದುವರಿಕೆಯಾಗಿ ಹರಿದಾಸ ಮೇಷ್ಟ್ರು ಕಾಣಿಸಿಕೊಳ್ಳುತ್ತಾರೆ. ಆದ್ದರಿಂದ ಕಾರಂತರ ಕಾದಂಬರಿಗಳಿಗಿಂತಲೂ ಅವರ ಧೋರಣೆಯ ಪ್ರಭಾವವಿದೆ ಎನ್ನುವುದು ಉಚಿತವಾಗಿದೆ. + +ಕಾರಂತರಂತೆ ಮೊಗಸಾಲೆಯವರು ಕೂಡ ಜೀವನಾನುಭವಗಳಿಗೆ ನಿಷ್ಠರಾಗಿ ಬರೆಯುವವರು. ಈ ಕಾದಂಬರಿಯಲ್ಲಿ ಬರುವ ಕುಟುಂಬ ಯೋಜನೆ ಮತ್ತು ಯುವಕಮಂಡಲದ ಚಟುವಟಿಕೆಗಳಿಗೆ ಸಂಬಂಧಿಸಿದ ವಿವರಗಳಿಗೆ ಲೇಖಕರ ಅನುಭವಗಳೇ ಆಧಾರವಾಗಿವೆ. + +ಈ ಕಾದಂಬರಿಯು ಏಕಕಾಲದಲ್ಲಿ ವ್ಯಕ್ತಿ, ಕುಟುಂಬ, ಸಮುದಾಯ ಮತ್ತು ಅವರು ಬದುಕುತ್ತಿರುವ ಒಟ್ಟೂ ಸಮಾಜದ ಕತೆಯನ್ನು ಹೇಳುತ್ತದೆ. ಕಾದಂಬರಿಯ ಒಟ್ಟು ಬಂಧದಲ್ಲಿ ಮೂರು ತಲೆಮಾರುಗಳ ಕತೆಯು ಒಂದಕ್ಕೊಂದು ಬೆಸೆದುಕೊಂಡು ನಿರ್ದಿಷ್ಟ ಕಾಲದೇಶಗಳ ಸ್ವರೂಪವೊಂದು ತನ್ನೆಲ್ಲ ಸಂಕೀರ್ಣತೆಯೊಂದಿಗೆ ನಮ್ಮೆದುರು ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಮೊದಲ ಭಾಗವು ಕೌಟುಂಬಿಕ ವ್ಯವಸ್ಥೆಯೊಳಗಿನ ಇಕ್ಕಟ್ಟುಗಳ ಬಗ್ಗೆ ಗಮನವನ್ನು ಹರಿಸಿದ್ದರೆ ಉಳಿದ ಭಾಗಗಳು ಕುಟುಂಬವನ್ನು ಮತ್ತು ಅದನ್ನು ಮೀರಿದ ಮಾನವ ಪ್ರಯತ್ನವು ಕೆಲಸ ಮಾಡುವ ಪರಿಯನ್ನು, ಅವುಗಳಲ್ಲಿ ಹಾಸುಹೊಕ್ಕಿರುವ ಬಿಕ್ಕಟ್ಟುಗಳನ್ನು ಶೋಧಿಸಲು ಯತ್ನಿಸುತ್ತವೆ. ವ್ಯವಸ್ಥೆಯನ್ನು ಅದರ ಒಟ್ಟಂದದಲ್ಲಿ ಗ್ರಹಿಸುವ ಸಾಧ್ಯತೆಯನ್ನು ತೋರುವ ಕೃತಿಯು ವೈಯಕ್ತಿಕ ಆವರಣವನ್ನು ದಾಟಿ ಸಾಂಸ್ಕೃತಿಕ ಪರಿಧಿಯನ್ನು ಪ್ರವೇಶಿಸುತ್ತವೆ. ಸೀತಾಪುರದ ಜನಸಮುದಾಯದ ದೈನಂದಿನ ಜೀವನದ ಬದುಕಿನ ವಿವರಗಳಿಗೆ ಹೆಚ್ಚಿನ ಒತ್ತನ್ನು ನೀಡಿದ್ದರೂ ಸ್ವಾತಂತ್ರ್ಯೋತ್ತರ ಭಾರತದ ಹೊಸ ಪೀಳಿಗೆಗಳ ಬದಲಾದ ಆದ್ಯತೆ ಮತ್ತು ಆಶೋತ್ತರಗಳು ಸೀತಾಪುರದಂಥ ಸಣ್ಣ ಊರಿನಲ್ಲೂ ಪ್ರತಿಫಲಿಸುವ ಬಗೆಯನ್ನು ವಿವರಿಸುವ ಈ ಕಾದಂಬರಿಯು ಅಖಿಲಭಾರತ ವಿದ್ಯಮಾನಗಳಿಗೆ ಕುರುಡಾಗಿಲ್ಲ. + +ಈ ಕಾದಂಬರಿಯಲ್ಲಿ ಶಿವಳ್ಳಿ ಬ್ರಾಹ್ಮಣರ ದೈನಂದಿನ ಬದುಕಿನ ಸುಖ ದುಃಖಗಳ, ಇಕ್ಕಟ್ಟು ಬಿಕ್ಕಟ್ಟುಗಳ ಚಿತ್ರಣವನ್ನು ನಿರೂಪಿಸಲಾಗಿದೆ. ಧರ್ಮವನ್ನು ನಿಷ್ಠೆಯಿಂದ ಅನುಸರಿಸುವವರತ್ತ ಲೇಖಕರ ದೃಷ್ಟಿಯು ಹರಿದಿದೆ. ಮನುಷ್ಯ ಪ್ರಯತ್ನ ಮತ್ತು ಸಾಧ್ಯತೆಗಳಲ್ಲಿ ಹೆಚ್ಚಿನ ನಂಬಿಕೆಯು ಬಂದಿದೆ. ಧರ್ಮವನ್ನು ಅರ್ಥ ಮಾಡಿಕೊಳ್ಳುವಲ್ಲಿ, ಮಾನವೀಯ ಮೌಲ್ಯಗಳ ಹುಡುಕಾಟದಲ್ಲಿ ಅವರ ಕಾದಂಬರಿಯು ತನ್ನ ಸ್ವರೂಪವನ್ನು ಕಂಡುಕೊಂಡಿದೆ. ಹುಳುಕುಗಳನ್ನು ಬಯಲಿಗೆಳೆಯುವುದಕ್ಕಿಂತ ಧರ್ಮಮೂಲದಲ್ಲಿರುವ ಇತ್ಯಾತ್ಮಕ ಮೌಲ್ಯಗಳನ್ನು ತಡವಿ ನೋಡುವ ಮನೋಭಾವವು ಎದ್ದು ಕಾಣುತ್ತವೆ. ಲೇಖಕರು ಶಿವಳ್ಳಿ ಬ್ರಾಹ್ಮಣರ ಕಷ್ಟನಷ್ಟಗಳನ್ನು ಚಿತ್ರಿಸುವಾಗ ಅವರ ಆಸೆಗಳನ್ನು, ಕನಸುಗಳನ್ನು, ಸಾಧ್ಯತೆಗಳನ್ನು ಅವರು ಅಲ್ಲಗೆಳೆಯುವುದಿಲ್ಲ. ಅವರ ಧರ್ಮಶ್ರದ್ಧೆ ಮತ್ತು ಅದು ಕೊಡುವ ಆತ್ಮವಿಶ್ವಾಸ, ಶಕ್ತಿಗಳನ್ನು ಸಿನಿಕತನದಿಂದ ನೋಡುವುದಿಲ್ಲ. ಒಂದು ಸಮುದಾಯದ ವಿರೋಧಾಭಾಸಗಳನ್ನು ಬಯಲಿಗೆಳೆಯುವುದಕ್ಕಿಂತ ಲೇಖಕರು ಆ ಸಮುದಾಯದ ದೈನಂದಿನ ಬದುಕಿಗೆ ಪ್ರಭೆಯನ್ನು ನೀಡುವಂಥ ಧಾರ್ಮಿಕ ಆಚರಣೆಗಳ ಅಗತ್ಯ ಮತ್ತು ಮಹತ್ವಗಳನ್ನು ನಿರೂಪಿಸುತ್ತಾರೆ. ಮಧ್ಯಮ ವರ್ಗದವರ ಕಷ್ಟಕಾರ್ಪಣ್ಯಗಳು ಮುಟ್ಟಬಹುದಾದ ಆಳಗಳನ್ನು ತೋರಿಸಿರುವ ಕಾದಂಬರಿಯು ದೈನ್ಯತೆಗಿಂತಲೂ ಬದುಕುವ ದಾರಿಗಳನ್ನು ಶೋಧಿಸುತ್ತದೆ. + +ಇಲ್ಲಿ ಚಿತ್ರಿಸಿದ ರಾಧಕ್ಕನ ಪಾತ್ರವು ಅನನ್ಯ ಮಾದರಿ. ಜಟಿಲವೂ, ಸಂಕೀರ್ಣವೂ ಆದ ಲೈಂಗಿಕ ವಿಚಾರಗಳನ್ನು ಇಂಥ ಸೂಕ್ಷ್ಮವಾದ, ಪ್ರಬುದ್ಧವಾದ ಪಾತ್ರದ ಅನುಭವ, ಅವಲೋಕನ, ವಿಶ್ಲೇಷಣೆ ಮತ್ತು ಸ್ವ ವಿಮರ್ಶೆಯ ಬೆಳಕಿನಲ್ಲಿ ಶೋಧಿಸುವ ಲೇಖಕರು ತಮ್ಮ ದರ್ಶನಕ್ಕೆ ಒಂದು ಬಗೆಯ ಸ್ಪಷ್ಟತೆಯನ್ನೂ ಅಧಿಕೃತತೆಯನ್ನೂ ಗಳಿಸಿಕೊಳ್ಳುತ್ತಾರೆ. + +ಶಿವಳ್ಳಿ ಬ್ರಾಹ್ಮಣರ ಒಳಜೀವನವನ್ನು ಸೂಕ್ಷ್ಮಾತಿಸೂಕ್ಷ್ಮಗಳಲ್ಲಿ ಹಿಡಿದಿಡುವ ‘ಇದ್ದೂ ಇಲ್ಲದ್ದು’ ಎಂಬ ಕಾದಂಬರಿಯ ಮೂಲಕ ಮೂರು ತಲೆಮಾರುಗಳ ಬದುಕು ಅದರ ಆಶೋತ್ತರಗಳೊಂದಿಗೆ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಇಲ್ಲಿನ ವಿವರಗಳು ಜೀವನ ವಿನ್ಯಾಸದ ಅವಿಭಾಜ್ಯ ನೇಯ್ಗೆಯಾಗಿ ಹೆಣೆದುಕೊಂಡಿವೆ. ತಮ್ಮ ಜೀವನದಲ್ಲಿ ಸಾಕಷ್ಟು ಕಷ್ಟ ಸುಖಗಳನ್ನುಂಡು ತಮ್ಮ ಸಾಧನೆಯಲ್ಲೂ ಏರಿಳಿತಗಳನ್ನು ಕಂಡು ಮಾಗುತ್ತಾ ಬೆಳೆಯುವ ವ್ಯಕ್ತಿಗಳು ಇಲ್ಲಿದ್ದಾರೆ. ಕಾದಂಬರಿಯ ಕೊನೆಗೆ ಬರುವಷ್ಟರಲ್ಲಿ ಅವರು ತಮ್ಮ ಸಾಧನೆ ಮತ್ತು ವ್ಯಕ್ತಿತ್ವದ ಪಕ್ವತೆಗಳಿಂದಾಗಿ ಸುತ್ತಲಿನವರ ಗಮನವನ್ನು ಸೆಳೆಯುತ್ತಾರೆ. ಅಪ್ಪ ಮಗನ ನಡುವಿನ ವೈದೃಶ್ಯವು ಕಾದಂಬರಿಯ ದರ್ಶನವನ್ನು ರೂಪಿಸುವ ಪ್ರಮುಖ ಅಂಶವಾಗುತ್ತದೆ. ಇಲ್ಲಿ ಭಾವುಕತೆಯ ಅಂಶ ಕಡಿಮೆಯಾಗಿದ್ದು ಪಾತ್ರಚಿತ್ರಣ, ಘಟನೆಗಳ ನಿರೂಪಣೆಯಲ್ಲಿ ಸರಳತೆಯು ಕಂಡು ಬರುತ್ತದೆ. ರಮಾನಂದನು ತನ್ನ ತಂದೆಯಾದ ದಾಸಮೇಷ್ಟ್ರ ದಿನಚರಿಯನ್ನು ಓದಿ ಅದಕ್ಕೆ ಕಥನದ ರೂಪವನ್ನು ಕೊಡುವಾಗ ಅವರ ಸಮಾಜಸೇವೆಯ ಬಗ್ಗೆ ಹೆಚ್ಚಿನ ಒತ್ತು ಕೊಟ್ಟಿದ್ದರಿಂದ ಆ ಕಥನಕ್ಕೆ ವೈಯಕ್ತಿಕ ವೃತ್ತಾಂತಕ್ಕಿಂತ ಹೆಚ್ಚಿನ ವ್ಯಾಪ್ತಿಯು ದೊರಕುತ್ತದೆ. ಮತ್ತೆ ವರ್ತಮಾನಕ್ಕೆ ಮರಳುವ ಕಾದಂಬರಿಯು ರಮಾನಂದನ ಮೇಲೆ ಮಾಡಿದ ಪರಿಣಾಮಗಳನ್ನು ಮತ್ತು ಅವುಗಳಿಂದ ಹುಟ್ಟಿದ ಜಿಜ್ಞಾಸೆಯನ್ನು ನಿರೂಪಿಸುತ್ತದೆ. ಕಾದಂಬರಿಯ ಕೊನೆಯಲ್ಲಿ ರಮಾನಂದನು ದೇವರಮನೆಯನ್ನು ಬಿಟ್ಟು ಹೋಗಲು ತಯಾರಾಗಿರುವ ಕುಪ್ಪಣ್ಣಾಚಾರ್ಯರಿಗೆ ಪತ್ರವನ್ನು ಬರೆಯುತ್ತಾನೆ. ಬೆಂಗಳೂರಿನಲ್ಲಿ ನೆಲೆಸಿರುವ ಆತನು ದೇವರಪೂಜೆಗೆ ಬದಲಿ ವ್ಯವಸ್ಥೆಯನ್ನು ಮಾಡಲು ಅಸಮರ್ಥನಾಗಿದ್ದಾನೆ. ಆದ್ದರಿಂದ ದೇವರ ಹೆಸರಿನಲ್ಲಿರುವ ಆ ಮನೆ ಮತ್ತು ಜಮೀನನ್ನು ಕಾನೂನು ಪ್ರಕಾರವಾಗಿ ಕುಪ್ಪಣ್ಣಾಚಾರ್ಯರಿಗೆ ಬರೆದುಕೊಡಲು ಆತನು ತಯಾರಾಗುತ್ತಾನೆ. ಒಂದುವೇಳೆ ಅವರು ಅದಕ್ಕೆ ಒಪ್ಪದೆ ವಿದಾಯವನ್ನು ಹೇಳುವುದಾದರೆ ಮನೆಯನ್ನು ಬಿಡುವ ಮೊದಲು ಮನೆದೇವರನ್ನು ಶಾಸ್ತ್ರದಲ್ಲಿ ಹೇಳಿದಂತೆ ಮನೆಯ ಬಾವಿ ಅಥವಾ ವಡಬಾಂಡೇಶ್ವರಕ್ಕೆ ಹೋಗಿ ಸಮುದ್ರಕ್ಕೆ ಹಾಕಬೇಕೆಂದು ಕೇಳಿಕೊಳ್ಳುತ್ತಾನೆ. ವಿದಾಯವನ್ನು ಹೇಳುತ್ತಿದ್ದರೆ ಮನೆಯ ಬೀಗದ ಕೈಯನ್ನು ಗೋವಿಂದಾಚಾರ್ಯರ ಮಗನಾದ ನರಸಿಂಹನಿಗೆ ಕೊಡಬೇಕು. ಮುಂದಿನ ನಿರ್ಧಾರ ಅವನಿಗೆ ಬಿಟ್ಟದ್ದು ಎನ್ನುವ ಮೂಲಕ ಯಾರ ಮೇಲೂ ಒತ್ತಡವನ್ನು ಹೇರದ ರಮಾನಂದನಂತೆ ಈ ಕಾದಂಬರಿಯು ಕೂಡ ತಾನಾಗಿ ಯಾವುದೇ ರೀತಿಯ ನಿರ್ಧಾರವನ್ನು ಕೈಗೊಳ್ಳದೆ ಎಲ್ಲ ತೀರ್ಮಾನಗಳನ್ನು ಓದುಗರ ಚಿಂತನೆಗೆ ಬಿಟ್ಟುಕೊಟ್ಟು ಸಂದಿಗ್ಧ ಪರಿಸ್ಥಿತಿಯಲ್ಲಿ ಮುಕ್ತಾಯಗೊಳ್ಳುತ್ತದೆ. + +ಇಲ್ಲಿ ಯಾರ ಬದುಕೂ ಸುಖದ ಸುಪ್ಪತ್ತಿಗೆಯಾಗಿಲ್ಲ. ಬದುಕು ಎಲ್ಲರ ಪ್ರಜ್ಞಾಪೂರ್ವಕ ಆಯ್ಕೆಯಾಗಿದೆ. ಅದಕ್ಕಾಗಿ ಹಲವು ಬಗೆಯ ಕಷ್ಟಕಾರ್ಪಣ್ಯಗಳನ್ನು ಎದುರಿಸಬೇಕಾಯಿತು. ಸಾಧನೆ ಮತ್ತು ಜೀವನಾನುಭವಗಳಿಂದ ಇವರ ವ್ಯಕ್ತಿತ್ವಗಳು ಹದಗೊಂಡವು. ಈ ದೃಷ್ಟಿಯಿಂದ ನೋಡಿದರೆ ದಾಸಮೇಷ್ಟ್ರ ಪಾತ್ರವು ವಿಸ್ತೃತವಾದ, ಸಮೃದ್ಧವಾದ ವಿವರ ವರ್ಣನೆಗಳಲ್ಲಿ ಮೂಡಿ ಬಂದ ಪಾತ್ರವಾಗಿದೆ. + +ಅವನಿಗೆ ಸಾರ್ಥಕ್ಯದ ಕ್ಷಣಗಳಿವೆ. ಆದರೆ ಇದು ಹರಿದಾಸ ಮೇಷ್ಟ್ರನ್ನು ಕುರಿತ ಕಾದಂಬರಿಯನ್ನಾಗಿ ಓದಬಾರದು. ಅವರು ಈ ಕಾದಂಬರಿಯ ಪ್ರಧಾನ ಪಾತ್ರ ಎಂಬುದು ನಿಜವಾದರೂ ಇವರೊಂದಿಗೆ ವೈದೃಶ್ಯದಲ್ಲಿ ನಿಲ್ಲುವ ಹಲವು ಪಾತ್ರಗಳು ಇವೆ. ಆ ಪಾತ್ರಗಳು ಸೂಚಿಸುವ ಬಹುಮುಖಿ ನೆಲೆಗಳ ಒಟ್ಟು ವಿನ್ಯಾಸದಲ್ಲಿ ಗ್ರಹಿಸಿದರೆ ಮಾತ್ರ ಈ ಕಾದಂಬರಿಯು ಇತರ ಕಾದಂಬರಿಗಳಿಗಿಂತ ಹೇಗೆ ಭಿನ್ನವಾಗಿದೆ ಎಂದು ತಿಳಿಯುತ್ತದೆ. ದಾಸಮೇಷ್ಟ್ರ ಚಿಂತೆ, ಚಿಂತನೆ ಮತ್ತು ಚಟುವಟಿಕೆಗಳು ಕಾದಂಬರಿಯ ಹೆಚ್ಚಿನ ಭಾಗವನ್ನು ಆವರಿಸಿಕೊಂಡಿದ್ದು ಅವರ ಸುತ್ತ ಜರಗುವ ವಿದ್ಯಮಾನಗಳು ಕೃತಿಯ ವಿನ್ಯಾಸವನ್ನು ರೂಪಿಸಿವೆ. ಅವರ ಆದರ್ಶ, ಕನಸು, ಶೋಧ ಮತ್ತು ಪ್ರಗತಿಪರ ಚಟುವಟಿಕೆಗಳನ್ನು ದಾಖಲಿಸುವುದರೊಂದಿಗೆ ಅವನಿಗಿಂತ ತೀರಾ ಭಿನ್ನ ನೆಲೆಗಳಲ್ಲಿರುವ ಪಾತ್ರಗಳನ್ನು ಅಷ್ಟೇ ಸಂಕೀರ್ಣವಾಗಿ ವಿವರಿಸುವ ಲೇಖಕರ ಕಥನ ಕೌಶಲವು ಗಮನವನ್ನು ಸೆಳೆಯುತ್ತದೆ. + +ದಾಸಮೇಷ್ಟ್ರ ಅನುಭವಗಳನ್ನು ವಿಸ್ತಾರದ ಚೌಕಟ್ಟಿನಲ್ಲಿ ಚಿತ್ರಿಸುವ ಕಾದಂಬರಿಯು ದಾಸಮೇಷ್ಟ್ರನ್ನು ತನ್ನ ನಾಯಕನೆಂಬಂತೆ ಬಿಂಬಿಸುವುದಿಲ್ಲ. ಏಕಪಾತ್ರ ಅಥವಾ ನಾಯಕಪಾತ್ರ ಪ್ರಧಾನ ಕಾದಂಬರಿಗಳಿಗಿಂತ ಈ ಕಾದಂಬರಿಯು ಭಿನ್ನವಾಗಿದೆ. ಸೀತಾಪುರದಲ್ಲಿ ಬದುಕುವವರು ಏಕಶಿಲಾಕೃತಿಯಲ್ಲೆಂಬಂತೆ ಚಿತ್ರಿತರಾಗಿಲ್ಲ. ಯಾವ ಪಾತ್ರವನ್ನೂ ಜಾತಿ, ವರ್ಗ ಮತ್ತು ಲಿಂಗಮಾದರಿ ಎನ್ನುವಂತಿಲ್ಲ. ನಿರ್ದಿಷ್ಟ ಜಾತಿಯವರು ಧಾರಣ ಮಾಡುವ ರೂಢಿಗತ ಲಕ್ಷಣಗಳು ಇದ್ದರೂ ಅವುಗಳನ್ನು ಮೀರಿ ಅಪ್ಪಟ ಮನುಷ್ಯತ್ವವನ್ನು ಅನಾವರಣಗೊಳಿಸುವ ಆಸ್ಥೆಯು ಕಂಡು ಬರುತ್ತದೆ. ಅವರುಗಳ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳು ಮನುಷ್ಯರ ನಡುವಿನ ಭಿನ್ನಾಭಿಪ್ರಾಯ ಮತ್ತು ಸಂಘರ್ಷಗಳೆಂಬಂತೆ ಚಿತ್ರಿತವಾಗಿವೆ. ಎಲ್ಲ ಬಗೆಯ ದ್ವಿದಳ ವರ್ಗೀಕರಣದ ಕಥನರೀತಿಯನ್ನು ಲೇಖಕರು ಉದ್ದೇಶಪೂರ್ವಕ ಕೈಬಿಟ್ಟಿದ್ದಾರೆ. ಆದ್ದರಿಂದ ಈ ಕಾದಂಬರಿಯು ಜಾತಿವಾದಿ ಕಥನವಾಗದೆ ಮಾನವೀಯ ಕಥನವಾಗುತ್ತದೆ. ಹಲವು ವ್ಯಕ್ತಿಗಳ, ಸಮುದಾಯದ ಸ್ಮೃತಿಗಳ, ಲೋಕಜ್ಞಾನದ ವಿಶಾಲವಾದ ಭಿತ್ತಿಯಲ್ಲಿ ಸೀತಾಪುರವೆಂಬ ಊರಿನ, ಸಮುದಾಯದ ಮೂರು ತಲೆಮಾರುಗಳಿಗೆ ಸಂಬಂಧಿಸಿದ ಅನುಭವಗಳನ್ನು ಆಧುನಿಕ ಬದುಕಿನ ಹಿನ್ನೆಲೆಯಲ್ಲಿ ನಿರೂಪಿಸುವ ಮಹತ್ವಾಕಾಂಕ್ಷೆಯು ಕಂಡುಬರುತ್ತದೆ. ಈ ಕಾದಂಬರಿಯು ಬ್ರಾಹ್ಮಣರ ಬದುಕಿನ ವೈವಿಧ್ಯಮಯ ಮುಖಗಳನ್ನು ಸಿನಿಕತನವಿಲ್ಲದ ಹದದಲ್ಲಿ ಅನಾವರಣಗೊಳಿಸುವ ಕಾದಂಬರಿಯು. ಅವರ ಬದುಕನ್ನು ಕೀಳಾಗಿ ಕಾಣುವುದಿಲ್ಲ. ಅವರ ಉದಾರವಾದಿ ಮನೋಭಾವವು ಕ್ರಿಯೆಯತ್ತಲೂ ಹೊರಳಿಕೊಳ್ಳುವುದು ಇತ್ಯಾತ್ಮಕ ಅಂಶವಾಗಿದೆ. ಕೊಂಚ ಒತ್ತಾಯ ಒತ್ತಡಗಳಿಲ್ಲದೆ ಬದಲಾವಣೆಯು ಉಂಟಾಗುವುದಿಲ್ಲ ಎಂಬ ವಿಚಾರವನ್ನು ಈ ಕೃತಿಯು ಮನಗಾಣಿಸುತ್ತದೆ. + +ಹಲವು ಬಗೆಯ ಜೀವನ ಕ್ರಮಗಳನ್ನು, ಮನಸ್ಥಿತಿಗಳನ್ನು, ಜೀವನದೃಷ್ಟಿಗಳನ್ನು ಮುಖಾಮುಖಿಯಾಗಿಸುವ ಕಾದಂಬರಿಯು ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುತ್ತದೆ. ಯಾವ ಬಗೆಯ ಬದುಕು ಹೆಚ್ಚು ಅರ್ಥಪೂರ್ಣವಾದದ್ದು? ಬದುಕಿನಲ್ಲಿ ತರತಮ ಎಂಬುದು ಇದೆಯೇ? ಜೀವನ ನಿಜಕ್ಕೂ ಸಫಲವಾಗುವುದು ಹೇಗೆ? ವ್ಯವಸ್ಥೆಯ ಒಳಗೆ ಇದ್ದುಕೊಂಡೇ ಹಳ್ಳಿಯನ್ನು ಉದ್ಧಾರ ಮಾಡಿದ ಆದರ್ಶ ದೊಡ್ಡದೋ? ದೇವರು ದಿಂಡಿರ ಬಗ್ಗೆ ಆಸಕ್ತಿಯನ್ನು ಗಮನಿಸದೆ ಮೇರಿಯ ಕೈಹಿಡಿದ ರಮಾನಂದನ ಆದರ್ಶ ದೊಡ್ಡದೋ? ಎಂಬ ಪ್ರಶ್ನೆಗಳು ಸರಳವಲ್ಲ. ಅವುಗಳಿಗೆ ಸರಳ ಉತ್ತರವೂ ಇಲ್ಲ. + +ಸಿದ್ಧ ಮಾನದಂಡವಿಲ್ಲದೆ ಆರಂಭಗೊಳ್ಳುವ ಇಲ್ಲಿನ ಕಾದಂಬರಿಯಲ್ಲಿ ಆತ್ಮಶೋಧನೆ, ದ್ವಂದ್ವಗಳಿದ್ದರೂ ಪ್ರತಿಮೆ ಸಂಕೇತಗಳಿಲ್ಲ. ಸಾಂಪ್ರದಾಯಿಕ ಶಿವಳ್ಳಿ ಸಂಸ್ಕೃತಿಯ ಹಿನ್ನೆಲೆಯಲ್ಲಿ ಬದುಕುತ್ತಿರುವ ಹಳ್ಳಿಯ ಜನರ ಸ್ಥಿತಿಗತಿಗಳನ್ನು ಆಪ್ತವಾಗಿ ಚಿತ್ರಿಸುವ ಕೃತಿಯಲ್ಲಿ ಸುಧಾರಣೆಯ ಆವೇಶವಾಗಲೀ ಸಮಾಜದ ಅಂಧಶ್ರದ್ಧೆಗಳ ಬಗ್ಗೆ ಆಕ್ರೋಶವಾಗಲೀ ಇಲ್ಲ. ಮಧ್ಯಂತರದಲ್ಲೇ ಆರಂಭಗೊಂಡು ಹಿನ್ನೋಟ ತಂತ್ರದ ಮೂಲಕ ವಿಷಯಗಳನ್ನು ನಿರೂಪಿಸುತ್ತಾ ಒಂದು ಕಾಲದ ಜೀವನಕ್ರಮವನ್ನು ಹಿಡಿದಿಡುವ ಕಾದಂಬರಿಯು ಮಾನವೀಯ ಸಂಬಂಧಗಳ ಸೂಕ್ಷ್ಮ ರೂಪವನ್ನು ವಿಶ್ಲೇಷಿಸುತ್ತದೆ. ಗಂಡು ಹೆಣ್ಣೆಂಬ ಭೇದವಿಲ್ಲದೆ ತಮಗೊದಗಿದ ಕಷ್ಟಕರ ಪರಿಸ್ಥಿತಿಯ ನಡುವೆ ಸಿಕ್ಕು ಅಸಹಾಯಕರಾದವರು ಸ್ವೀಕರಿಸುವ ದಿಟ್ಟ ನಿಲುವು, ಸಮಸ್ಯೆಗಳನ್ನು ಎದುರಿಸುವ ರೀತಿಯು ಮುಖ್ಯವಾಗುತ್ತದೆ. + +ಈ ಕಾದಂಬರಿಯು ಮಾನವ ಸಮುದಾಯದ ಅಸ್ತಿತ್ವದ ಆಧಾರವಾದ ಪ್ರೀತಿ ನಂಬುಗೆಗಳ ಕುರುಹುಗಳ ಪ್ರತೀಕವಾಗಿದೆ. ಬದುಕು ಅನುಭವವೇ ಹೊರತು ಸಿದ್ಧಾಂತವಲ್ಲ ಎಂದು ಸಾರುವ ಕೃತಿಯು ಔಪಚಾರಿಕ ಧೋರಣೆ, ವ್ಯವಸ್ಥೆಗಳನ್ನು ಬದಿಗೆ ಸರಿಸಿ ಬದುಕಿಗೆ ಕಣ್ಣಾಗುವ ಮೌಲ್ಯಗಳತ್ತ ತುಡಿಯುತ್ತವೆ. ಹಿಂದಿನ ತಲೆಮಾರಿನ ಬದುಕಿನ ಅಧ್ಯಯನದ ಮೂಲಕ ಶಾಶ್ವತವಾದ ಜೀವನಸೂತ್ರಗಳನ್ನು ಕಂಡುಕೊಂಡಿರುವ ಕಾದಂಬರಿಯು ಸಂಪ್ರದಾಯ ನಿಷ್ಠ ಬ್ರಾಹ್ಮಣ ಸಮಾಜವನ್ನು ಅತ್ಯಂತ ಕಾಳಜಿಯಿಂದ, ನಿಷ್ಠೆಯಿಂದ ಚಿತ್ರಿಸುತ್ತಾ ಅದರಲ್ಲಿನ ಒಳಿತನ್ನು ಸ್ವೀಕರಿಸುವುದರೊಂದಿಗೆ ಜಡತ್ವವನ್ನು ಪ್ರಶ್ನಿಸುತ್ತದೆ. + +ತನ್ನ ಮಗನಾದ ರಮಾನಂದನು ಕ್ರೈಸ್ತ ಮತಕ್ಕೆ ಸೇರಿದ ಹುಡುಗಿಯನ್ನು ಮದುವೆಯಾದಾಗ ದಾಸಮೇಷ್ಟ್ರ ಹೃದಯದಲ್ಲಿ ಸಂಕುಚಿತ ಮನಸ್ಸಿನ ಶೂನ್ಯವನ್ನು ಮೀರಿದ ಬದಲಾವಣೆಯು ಕಾಣಿಸಿಕೊಳ್ಳದಿರುವುದು ವಿಷಾದನೀಯವಾಗಿದೆ. ಏನೇ ಇದ್ದರೂ ಆಧುನಿಕ ಯುಗದಲ್ಲಿ ಹೆಣ್ಣು ತನ್ನ ಅಸ್ಮಿತೆಯ ಅರಿವು, ಸಾಧನೆಗಳಲ್ಲಿ ಸಾಧಿಸಿದ ಪ್ರಗತಿ ಮತ್ತು ಕ್ರಿಯಾಶಕ್ತಿಯನ್ನು ರೂಢಿಸಿಕೊಂಡ ನಿದರ್ಶನಗಳಿವೆ. ಅವಳ ಸಾಮಾಜಿಕ ಪರಿಸರಗಳಲ್ಲಿ ನಡೆದ ಶಿಕ್ಷಣದ ಪ್ರಸಾರ ಸಾಮಾಜಿಕ ಸಮಾನತೆಯ ಸ್ವೀಕಾರ ಮತ್ತು ಗಂಡಸಿನ ಪ್ರೋತ್ಸಾಹ ಈ ಬದಲಾವಣೆಯ ಹಿಂದಿನ ಪ್ರೇರಣೆಯಾಗಿದೆ. ತನ್ನ ಅಂತರಂಗದಲ್ಲಿ ನಡೆದ ಮಹತ್ವದ ಬದಲಾವಣೆಯಿಂದಾಗಿ ಅವಳು ತನ್ನ ವ್ಯಕ್ತಿತ್ವದ ವಿಕಾಸದೆಡೆಗೆ ಗಮನ ಕೊಡುವಂತಾಗಿದೆ. ಮೊದಲು ಮೂಕ ಸ್ವರೂಪವನ್ನು ಹೊಂದಿದ್ದ ಪ್ರತಿಕ್ರಿಯೆಯು ಈಗ ಕೃತಿಗಳ ಮೂಲಕ ಆಕಾರವನ್ನು ಪಡೆದಿರುವ ಸೂಚನೆ ಇದೆ. + +ಲೇಖಕರ ವಾಸ್ತವವಾದಿ ಶೈಲಿಯು ಕಠೋರವಾದ ನೋವು ಮತ್ತು ಮಿತಿಯಿಲ್ಲದ ದುಃಖಗಳಿಂದ ಕೂಡಿದ ಮನುಷ್ಯ ಪ್ರಪಂಚದ ಸ್ಥಿತಿಗಳನ್ನು ಕರಾರುವಾಕ್ಕಾಗಿ ಹಿಡಿದಿಡುತ್ತದೆ. ವ್ಯವಸ್ಥೆಯೊಳಗೆ ಜನರು ನಲುಗುವ ರೀತಿ, ಅದನ್ನು ಮೆಟ್ಟಿ ನಿಲ್ಲುವ ವ್ಯಕ್ತಿಯ ಘನತೆ, ಸ್ವಾಭಿಮಾನಗಳನ್ನು ವಿವೇಚಿಸುವ ಲೇಖಕರ ಮಾನವೀಯ ದೃಷ್ಟಿಕೋನವು ಮನುಷ್ಯರಲ್ಲಿನ ಉತ್ತಮಿಕೆಯ ಸಾಧ್ಯತೆಗಳೆಡೆಗೆ ಗಮನ ಹರಿಸುತ್ತದೆ. ಹಳೆಯ ಮತ್ತು ಹೊಸ ತಲೆಮಾರುಗಳನ್ನು ಪ್ರತಿನಿಧಿಸುವ ಪಾತ್ರಗಳು ವ್ಯವಸ್ಥೆಯನ್ನು ಸಮರ್ಥಿಸದೆ ಬದುಕಿನೊಡನೆ ಹೋರಾಡಿ ಗೆಲ್ಲುತ್ತಾರೆ. ಇಲ್ಲಿ ಒತ್ತು ಇರುವುದು ಅವರ ವಿವೇಕ, ವಾಸ್ತವ ಪ್ರಜ್ಞೆ, ಬದುಕುಳಿಯುವ ಸಾಹಸ, ಹೃದಯವಂತಿಕೆ ಮತ್ತು ವ್ಯಕ್ತಿತ್ವ ನಿರ್ಮಾಣದ ಮೇಲೆ. + +ಭಾಷೆಯನ್ನು ಸೂಕ್ಷ್ಮವಾಗಿ ಬಳಸುವ ಲೇಖಕರು ಸಮಾಜದ ಕ್ರೂರ ವಾಸ್ತವವನ್ನು ನಿರ್ಲಿಪ್ತವಾಗಿ, ಉರಿಯುವ ವಿಷಾದದ ನೆಲೆಯಲ್ಲಿ ಮಂಡಿಸುತ್ತಾ ಕೃತಿಗೆ ಹೊಸ ಅರ್ಥಗಳನ್ನು ಒದಗಿಸುತ್ತಾರೆ. ತಮ್ಮದೇ ರೀತಿಯಲ್ಲಿ ಕತೆಗಳನ್ನು ಹೇಳುತ್ತಾ ಬದುಕಿನ ವ್ಯಂಗ್ಯವೈರುಧ್ಯಗಳತ್ತ ಗಮನವನ್ನು ಸೆಳೆಯುತ್ತಾರೆ. ಒಡೆದ ಕನ್ನಡಿಯ ಚೌಕಟ್ಟಿನಲ್ಲಿ ಹಲವು ಬಿಂಬಗಳನ್ನು ಮೂಡಿಸುವ ಇವರ ನೈಪುಣ್ಯತೆ ಕಾದಂಬರಿಯ ಬಂಧಕ್ಕೆ ವಸ್ತುದ್ರವ್ಯವನ್ನು ಬೆಸೆಯಲು ಸಹಾಯ ಮಾಡುತ್ತದೆ. ಋಣಾತ್ಮಕ ನೆಲೆಯನ್ನು ಮೀರಿ ವಿಶೇಷ ಅರ್ಥವಂತಿಕೆಯನ್ನು ಪಡೆದುಕೊಳ್ಳುವ ಕೃತಿಯು ಮಾನವನ ವಿಚ್ಛಿದ್ರಕಾರಿ ಪ್ರವೃತ್ತಿಯನ್ನು, ಮೌಲ್ಯಗಳ ಕಡೆ ತೋರುವ ತಿರಸ್ಕಾರಗಳನ್ನು ವಿಷಾದ ಬೆರೆತ ಧಾಟಿಯಲ್ಲಿ ವಿವರಿಸುತ್ತಾ ಬದುಕಿನ ಕ್ರೂರ ವಾಸ್ತವಗಳನ್ನು ನಿರೂಪಿಸುತ್ತದೆ. ಚಿಕ್ಕಪುಟ್ಟ ಪದಗಳಲ್ಲೇ ಸನ್ನಿವೇಶವನ್ನು ಸೃಷ್ಟಿಸುವ ಕಾದಂಬರಿಯು ವ್ಯಕ್ತಿಗತ-ಸಾಮಾಜಿಕ ಅನುಭವಗಳನ್ನು ಹಿಡಿದಿಡುತ್ತದೆ. ಮೊದಲ ಓದಿಗೇ ಸುಲಭವಾಗಿ ತೆರೆದುಕೊಳ್ಳುವ ಕೃತಿಯು ಎಲ್ಲೂ ಉದ್ವೇಗಕ್ಕೊಳಗಾಗದಿರುವುದರಿಂದ ಸಂಯಮವನ್ನು ರೂಢಿಸಿಕೊಂಡಿದೆ. ಕಥನಕ್ಕೆ ತಕ್ಕಂತೆ ಅದರ ಸ್ತರ ಮತ್ತು ಕೇಂದ್ರವನ್ನು ಆಯ್ದುಕೊಳ್ಳುವ ಜಾಣ್ಮೆಯು ಲೇಖಕರಿಗೆ ಇರುವುದರಿಂದ ಕಾದಂಬರಿಯ ಓಟಕ್ಕೆ ತಡೆ ಉಂಟಾಗುವುದಿಲ್ಲ. ವಿಪುಲ ವಿವರಣೆಗಳಿಂದ ಕೂಡಿದ ಬರಹಗಳಲ್ಲಿ ಲೇಖಕರ ಒಲವು ನಿಲುವುಗಳು ಪ್ರತಿಫಲಿಸುತ್ತವೆ. ಜ್ವಲಂತ ವಿದ್ಯಮಾನವನ್ನು ಹಿನ್ನೆಲೆಯಾಗಿಟ್ಟುಕೊಂಡು ಬದುಕಿನ ದುರಂತದತ್ತ ಬೊಟ್ಟು ಮಾಡುವ ಕೃತಿಯು ಕುರೂಪಗೊಂಡ ಬದುಕಿನ ರೀತಿನೀತಿ, ಜೀವನದೃಷ್ಟಿ, ಮೌಲ್ಯ, ಭಾವನೆ, ಇಳಿಮುಖವಾಗುತ್ತಿರುವ ಮನುಷ್ಯನ ಮನಸ್ಸು, ಆಧುನಿಕ ಜನಾಂಗದ ವಿರೋಧಾಭಾಸಗಳನ್ನು ಅನಾವರಣಗೊಳಿಸುತ್ತದೆ. ದಾಂಪತ್ಯದ ಅರ್ಥ, ಕಷ್ಟ ನಿಷ್ಠುರದಿಂದ ಕೂಡಿದ ಬಾಳುವೆಯ ಚೆಲುವು, ವಾತ್ಸಲ್ಯದ ಹಿಂದಿನ ಜೀವನದರ್ಶನ, ಮತ್ತು ಜೀವನಪ್ರೀತಿಯನ್ನು ಜೀವದ್ರವ್ಯವಾಗಿಸಿಕೊಂಡ ಕಾದಂಬರಿಯು ಸಣ್ಣಪುಟ್ಟ ಸಂಗತಿಗಳ ಮೂಲಕ ಸತ್ಯದ ಸಾಕ್ಷಾತ್ಕಾರವನ್ನು ಮಾಡುತ್ತದೆ. + +ಪಾತ್ರದ ಅನುಭವ ಮತ್ತು ವಿಚಾರಗಳ ಚಿತ್ರಣ ಓದುಗನ ಮನಸ್ಸಿನಲ್ಲಿ ಮೂಡಿ ಕ್ರಮೇಣ ಕತೆಯ ರೂಪದಲ್ಲಿ ಬೆಳೆಯುವಾಗ ಅದರೊಳಗಿನ ಪದ ಸಂಪತ್ತು, ಧ್ವನಿ, ಸತ್ವಯುತವಾದ ಭಾಷೆ, ಖಚಿತವಾದ ನುಡಿಗಟ್ಟು, ನಿರೂಪಣೆಗಳು ವಿಶೇಷವಾಗಿ ಕಂಗೊಳಿಸುತ್ತವೆ. ಸುತ್ತಲಿನ ಜಗತ್ತನ್ನು ತೀವ್ರವಾಗಿ ನೋಡಿದ್ದರ, ಹಿಂದಿನ ತಲೆಮಾರಿನವರ ಬದುಕನ್ನು ಅರಿತುಕೊಂಡದ್ದರ ಫಲವಾಗಿ ಮೂಡಿದ ಕಾದಂಬರಿಯು ತನ್ನೆಲ್ಲ ಸ್ಪಷ್ಟತೆ ಮತ್ತು ಚೆಲುವಿನೊಂದಿಗೆ ಬದುಕಿನ ವಿವರಗಳನ್ನು ದಾಖಲಿಸುತ್ತದೆ. ಕೌಟುಂಬಿಕ ಸಮಸ್ಯೆ, ಗಂಡು ಹೆಣ್ಣಿನ ಸಂಬಂಧ, ಹೆಣ್ಣಿನ ದುಃಖ, ಮುಗ್ಧರ ವಂಚನೆ, ಸಮಾಜದ ದಬ್ಬಾಳಿಕೆಗೆ ಸಿಲುಕಿ ನೊಂದವರ, ತಿರಸ್ಕೃತರ ಯಾತನೆಗಳನ್ನು ಚಿತ್ರಿಸುತ್ತಾ ಅವುಗಳನ್ನು ಮೀರಲು ಅಗತ್ಯವಾದ ಮಾನವೀಯ ಸಾಧ್ಯತೆಗಳನ್ನು ಶೋಧಿಸುತ್ತದೆ. ಸಾಂಸಾರಿಕ ವಿರಸದಲ್ಲಿ ಹುಟ್ಟಿಕೊಳ್ಳುವ ನರಕದ ಅನುಭವಕ್ಕಿಂತ ಬೇರೆಯಾದ ಅನುಭವಗಳೂ ಸೇರಿಕೊಳ್ಳುವುದರಿಂದ ಕಾದಂಬರಿಯು ತನ್ನೆಲ್ಲ ಸಂಕೀರ್ಣತೆಯೊಂದಿಗೆ ಮನಸ್ಸನ್ನು ತಟ್ಟುತ್ತದೆ. + +ಇವುಗಳಲ್ಲಿ ಮುಖ್ಯವಾದದ್ದು ರಮಾನಂದ ಮತ್ತು ಮೇರಿಯ ಜಗತ್ತು. ಹಲವರು ಕಳೆದುಕೊಂಡಿರುವ ಪ್ರೀತಿ, ಮುಗ್ಧ ಪ್ರಪಂಚ ಅವರ ಮನಸ್ಸುಗಳಲ್ಲಿ ಇನ್ನೂ ಜೀವಂತವಾಗಿದೆ. ಮದುವೆಯಾದ ಹೊಸತರಲ್ಲಿ ಪ್ರೀತಿಸುವಷ್ಟೇ ತೀವ್ರವಾಗಿ ಮಧ್ಯವಯಸ್ಸಿನಲ್ಲೂ ತನ್ನ ಗಂಡನನ್ನು ಪ್ರೀತಿಸುವ ಆಕೆಯು ನಿರ್ವ್ಯಾಜ್ಯ ಪ್ರೇಮ ಅಂತಃಕರಣಗಳ ಪ್ರತೀಕವಾಗುತ್ತಾಳೆ. ಪ್ರೇಮ, ಮದುವೆ ಗೆಳೆತನಗಳ ಸುತ್ತ ಹೆಣೆದಿರುವ ವಿಚಾರಗಳಲ್ಲಿ ವ್ಯಕ್ತವಾಗುವ ಲಿಂಗಭೇದ, ಅಸಮಾನತೆಗಳು ತೋರಿಕೆಯ ತೆಳು ಸ್ವರೂಪದಲ್ಲೇ ತೀವ್ರ ಪರಿಣಾಮವನ್ನುಂಟು ಮಾಡುತ್ತವೆ. ಮಿತವಾದ ಹರಹಿನಲ್ಲೇ ಅರ್ಥಪೂರ್ಣವಾದ ವಿಚಾರಗಳನ್ನು ಗಾಢವಾಗಿ ಹೇಳಬಲ್ಲ ಲೇಖಕರ ಧಾಟಿಯಲ್ಲಿ ಅಬ್ಬರವಿಲ್ಲದಿದ್ದರೂ ವ್ಯಂಗ್ಯದಿಂದ ಚುಚ್ಚುವ ಸಾಮರ್ಥ್ಯವಿದೆ. ಸಾಮಾಜಿಕ ಸಮಸ್ಯೆಗಳಿಗೆ ಅರ್ಥಪೂರ್ಣ ಪರಿಹಾರಗಳನ್ನು ಶೋಧಿಸುವಲ್ಲಿ ಲೇಖಕರ ಕನಸು, ತಲ್ಲಣ ಮತ್ತು ಅಪೇಕ್ಷೆಗಳು ಸೂಚಿತವಾಗುತ್ತದೆ. ಒಂದೇ ಆಶಯಕ್ಕೆ ಬಂಧಿತರಾಗದೆ ಸಮಸ್ಯೆಯ ಹಲವು ಮಗ್ಗುಲುಗಳನ್ನು ಗಮನಿಸುವ ಲೇಖಕರು ಗಂಡಿನ ಬವಣೆಗೆ ಮಾತ್ರ ಮೀಸಲಾಗದೆ ಹೆಣ್ಣು ಮತ್ತು ಹಲವು ಜಾತಿಗೆ ಸೇರಿದ ಎಲ್ಲರ ಸಮಸ್ಯೆಗಳನ್ನು ಹಲವು ನೆಲೆಗಳಲ್ಲಿ ತೋರಿಸುತ್ತಾರೆ. ಹೆಣ್ಣಿನ ಸಂಕಷ್ಟಗಳ ಬಗ್ಗೆ ಮಾತ್ರ ಬರೆಯುತ್ತಾ ಸರಳೀಕೃತ, ಏಕಮುಖಿಯಾದ ಪುರುಷವಿರೋಧಿ ನೆಲೆಗಳನ್ನು ಮುಟ್ಟಲು ಹಾತೊರೆಯದೆ ಬದುಕಿನ ವಿರಸದ ಕ್ಷಣಗಳನ್ನು, ಸಂಪ್ರದಾಯದ ಸಂಕೋಲೆಗಳನ್ನು ಮೀರುವ ದಿಟ್ಟ ಗಂಡು ಹೆಣ್ಣುಗಳನ್ನು ಕಡೆದಿಡುತ್ತಾರೆ. + +ಈ ಕೃತಿಯ ಲೇಖಕರು ದೈನಂದಿನ ಬದುಕಿನಲ್ಲಿ ಘಟಿಸುವ ಅದೆಷ್ಟೋ ಸಂಗತಿಗಳನ್ನು ಕೇಳಿ ತಿಳಿದೋ ಅವಲೋಕಿಸಿಯೋ ಪರಕಾಯ ಪ್ರವೇಶ ಮಾಡಿಯೋ ಕತೆಗಳ ಮೂಲಕ ಸಹಜವಾಗಿ ನಿರೂಪಿಸಿದ್ದಾರೆ. ಕಂಡು ಅನುಭವಿಸಿದ ಸಂಗತಿಗಳನ್ನು ಪ್ರಾಮಾಣಿಕವಾಗಿ ವಿವರಿಸಿದ್ದಾರೆ. ಸ್ವಂತ ಬದುಕಿನ ಬಗ್ಗೆ ಹೊಸ ತಿಳಿವನ್ನು ಹುಟ್ಟಿಸುವ ಉದ್ದೇಶವು ಸಫಲವಾಗಿದೆ. ವರ್ತಮಾನದ ಬದುಕಿನ ತೆರೆಯ ಹಿಂದೆ ನೇತಾಡುತ್ತಿರುವ ಸುಖ ದುಃಖದ ಅದೃಶ್ಯ ಚಿತ್ರಗಳು ಲೇಖಕರ ಕೈಚಳಕದಿಂದ ಕಲಾತ್ಮಕ ರೂಪುತಳೆದು ಕಣ್ಣೆದುರು ಮೂಡಿಬಂದಿವೆ. ಜನಜೀವನದೊಂದಿಗೆ ನಿಕಟ ಸಂಬಂಧವನ್ನು ಹೊಂದಿದ ಲೇಖಕರು ಬದುಕಿನ ಕುರಿತು ಸಕಾರಾತ್ಮಕ ನೋಟದಿಂದ ಮನುಜವರ್ಗವನ್ನು ಕುರಿತ ಮುಖ್ಯ ಸೂತ್ರಗಳನ್ನು ಸಾಧಿಸುತ್ತಾರೆ. ಕಾದಂಬರಿಯ ವಸ್ತುವಿನಂತೆ ಕಥನಕ್ರಮವೂ ಜನರ ಬಾಳುವೆಯಿಂದ ಮೂಡಿಬಂದಿದೆ. ಸಂಪ್ರದಾಯಸ್ಥರಿಂದ ಆಧುನಿಕರವರೆಗೆ, ವಿವಾಹಿತೆಯರಿಂದ ವಿಧವೆಯರವರೆಗೆ ಈ ಜಗತ್ತು ಹರಡಿಕೊಂಡಿದೆ. ವ್ಯವಸ್ಥೆಯ ಹುಯಿಲಿನಲ್ಲಿ ಸಿಲುಕಿ ಪಡಿಪಾಟಲು ಪಡುತ್ತಿರುವ ಜೀವಗಳ ನಾಡಿಮಿಡಿತವನ್ನು ಸೂಕ್ಷ್ಮವಾಗಿ ಹಿಡಿದಿಡುತ್ತಾ ತಣ್ಣಗಿನ ಆದರೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ವ್ಯವಸ್ಥೆಯ ಒಳಗಿದ್ದುಕೊಂಡೇ ಯಾರ ಅರಿವಿಗೂ ಬಾರದೆ ಚೌಕಟ್ಟನ್ನು ಮೀರುತ್ತಾ ಪ್ರತಿರೋಧಗಳ ನಡುವೆಯೂ ತಮ್ಮತನವನ್ನು ಕಾಯ್ದುಕೊಳ್ಳುವ ಪಾತ್ರಗಳು ಇಲ್ಲಿವೆ. ಜೀವನವೆಂಬುದು ಅಸಂಖ್ಯ ಬಣ್ಣ, ವಾಸನೆಗಳಿಂದ ಕೂಡಿರುವುದೆಂಬ ಸಂಕೀರ್ಣಗ್ರಹಿಕೆಯೂ, ಮಾನವೀಯ ಸಂಬಂಧಗಳ ಹಿಂದೆ ಹಲವು ಬಗೆಯ ಒತ್ತಡಗಳಿರುತ್ತವೆ ಎಂಬ ತಿಳುವಳಿಕೆಯೂ, ಯಾವುದೇ ವ್ಯಕ್ತಿಯ ಬದುಕಿನ ಸಾಫಲ್ಯದ ಪ್ರಶ್ನೆಯು ಎಲ್ಲಾ ಜೀವಿಗಳ ಮತ್ತು ವರ್ಗಗಳ ಸಂಬಂಧಗಳ ಪ್ರಶ್ನೆಗಳೇ ಆಗಿರುತ್ತವೆ ಎಂಬ ಅರಿವೂ ಇಲ್ಲಿ ಕೆಲಸ ಮಾಡಿದೆ. + +ವೃತ್ತಿಯಲ್ಲಿ ವೈದ್ಯರಾಗಿರುವ ಲೇಖಕರಿಗೆ ಗ್ರಾಮೀಣ ಬದುಕಿನಲ್ಲಿ ಅಡಗಿರುವ ರೋಗ ರುಜಿನಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡುವ ಮೂಲಕ ಪಾತ್ರಗಳ ಅಂತರಂಗವನ್ನು ಹೊಕ್ಕು ಅವರ ನೋವಿಗೆ ಸ್ಪಂದಿಸಲು, ಬದುಕಿನ ಅರ್ಥವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ. ಪಾತ್ರಗಳಲ್ಲಿ ಉಕ್ಕುವ ಮಾನವೀಯ ಸಂವೇದನೆಗಳು ಲೇಖಕರೊಳಗಿನ ಜೀವನ ಪ್ರೀತಿಯಿಂದ ಮೂಡಿ ಬಂದಿವೆ. ಕೃತಿಯೊಳಗಿನಿಂದಲೇ ತತ್ವ ಅರಳಿ ಜೀವನದ ರೀತಿಯಾಗುವ ಕ್ರಮವು ಪರಿಣಾಮಕಾರಿಯಾಗಿದೆ. ಆವೇಶದಿಂದ ತೊಯ್ದ ಮಾತುಗಳ ಹಂಗುತೊರೆದ ಕೃತಿಯು ಮಾನವನ ಅಲ್ಪತನ, ಆಕ್ರಮಣಕಾರಿ ಪ್ರವೃತ್ತಿ, ವ್ಯಕ್ತಿತ್ವದ ಬಿರುಕುಗಳು, ಸ್ವಾರ್ಥಪ್ರೇರಿತ ಸುಲಿಗೆ, ಕ್ರೌರ್ಯಗಳ ಹಿಂದೆ ಅಡಗಿದ ಕೆಟ್ಟತನಗಳನ್ನು ಬಯಲಿಗೆಳೆಯುತ್ತವೆ. ವಾಸ್ತವದ ನೆಲೆಯಲ್ಲಿ ಬದುಕನ್ನು ವಿಶ್ಲೇಷಿಸುತ್ತಾ ಅದರೊಳಗಿನ ಜೀವನಿಷ್ಠೆ, ಮೌಲ್ಯಗಳನ್ನು ಗುರುತಿಸುತ್ತದೆ. ಓದುಗರನ್ನು ಚಿಂತನೆಯೆಡೆಗೆ ಕೊಂಡೊಯ್ಯುವುದರೊಂದಿಗೆ ಬದುಕಿನ ವಿಸ್ತಾರವನ್ನು ಅರಿಯುವಂತೆ ಮಾಡುತ್ತವೆ. + + + +ಬಾಂಧವ್ಯದ ಸುಖವು ಇಲ್ಲವಾಗುತ್ತಿರುವುದರ ಕುರಿತು ಗಾಢ ವಿಷಾದವನ್ನು ಕಟ್ಟಿಕೊಡುವ ಕಾದಂಬರಿಯು ಶಿವಳ್ಳಿ ಬ್ರಾಹ್ಮಣರ ಬದುಕನ್ನು ಇತ್ಯಾತ್ಮಕ-ಕ್ರಿಯಾತ್ಮಕ ರೂಪದಲ್ಲಿ ದಾಖಲಿಸುತ್ತದೆ. ಅನ್ಯಾಯಕ್ಕೊಳಗಾದವರು ಸಮಾಜಕ್ಕೆ ಕೊಡುವ ಪ್ರತಿಕ್ರಿಯೆ ಮತ್ತು ಸ್ವತಂತ್ರ ಅಸ್ತಿತ್ವವನ್ನು ಸ್ಥಾಪಿಸುವ ವಿಧಾನವು ಮುಖ್ಯವೆನಿಸುತ್ತದೆ. ಕೆಲವೊಂದು ಸಮಸ್ಯೆಗಳ ಪರಿಹಾರವು ಸರಳವೆನಿಸುತ್ತಿದ್ದರೂ ಅವರ ಅನುಭವ ಲೋಕವು ಆಧುನಿಕ ಸಮಾಜವು ಎದುರಿಸುತ್ತಿರುವ ದೈನಂದಿನ ಆಗುಹೋಗುಗಳು, ಭಾವನಾತ್ಮಕ ತಳಮಳಗಳನ್ನು ಸ್ಪರ್ಶಿಸುತ್ತದೆ. ನೈತಿಕ ಅಧಃಪತನದ ಕಡೆ ಬೊಟ್ಟು ಮಾಡುತ್ತದೆ. ಹಳ್ಳಿಯ ಬದುಕನ್ನು ವೈಭವೀಕರಿಸುವ ರಚನೆಗಳೇ ತುಂಬಿಕೊಳ್ಳುತ್ತಿರುವ ಸಂದರ್ಭದಲ್ಲಿ ಈ ಕೃತಿಯು ಅಲ್ಲಿನ ಶ್ರೀಮಂತರ ಆಷಾಢಭೂತಿತನ, ಮಧ್ಯಮ ವರ್ಗದವರ ತಲ್ಲಣ ಮತ್ತು ಬಡವರ ಸಂಕಷ್ಟಗಳನ್ನು ಚಿತ್ರಿಸುತ್ತಾ ಬದುಕಿನ ವಿವಿಧ ಮುಖಗಳನ್ನು ಪರಿಚಯಿಸುತ್ತದೆ. ಇದು ಶಿವಳ್ಳಿ ಸಮುದಾಯದ ಕತೆಯಾದರೂ ಇಡೀ ಸಮಾಜದ ಸಂವೇದನೆಯಾಗಿ ರೂಪುಗೊಂಡಿದ್ದು ಬದುಕಿನ ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ನೆಲೆಗಳನ್ನು ಗ್ರಹಿಸುವಲ್ಲಿ ಯಶಸ್ವಿಯಾಗಿವೆ. ಸರಳವಾದ ರಚನಾಕ್ರಮ, ನೇರವಾದ ನಿರೂಪಣೆಗಳ ಮೂಲಕ ರೂಢವಾಗಿರುವ ಭಾವನೆಗಳನ್ನು ಕಲಕಿ ಜೋಡಿಸುವ ಪ್ರಯತ್ನವಿದೆ. ಹಿತಮಿತವಾದ ಬರವಣಿಗೆ-ಆಡಂಬರವಿಲ್ಲದ ನಿರೂಪಣೆಯು ಗಮನವನ್ನು ಸೆಳೆಯುತ್ತದೆ. ಗಟ್ಟಿ ಪಾತ್ರಗಳು, ಸಾಂದ್ರ ಅನುಭವ, ಬದುಕಿನ ಸಮಸ್ಯೆಗಳು, ಹುರುಳಿಲ್ಲದ ವಿಚಾರಗಳ ವಿರುದ್ಧ ಎತ್ತುವ ಪ್ರಶ್ನೆಗಳು, ಬದುಕಿನ ತತ್ವಗಳು ಮುಖ್ಯವಾಗುತ್ತವೆ. ಪಳಗಿದ ಬರವಣಿಗೆಯಲ್ಲಿ ಪ್ರಬುದ್ಧ ಮನಸ್ಸನ್ನು ಕಾಣುತ್ತೇವೆ. ಚಮತ್ಕಾರಿಕ ತಿರುವಿಲ್ಲದ ನೇರ ಕಥನ, ಆರೋಗ್ಯಪೂರ್ಣ ಜೀವನ ದೃಷ್ಟಿ ಎಲ್ಲ ವರ್ಗದ ಓದುಗರಿಗೂ ಆಪ್ತವೆನಿಸುವಂತೆ ಮಾಡುತ್ತವೆ. ಪ್ರಚಲಿತ ಸಾಮಾಜಿಕ ವ್ಯವಸ್ಥೆಯ ಅನ್ಯಾಯಗಳನ್ನು ಧ್ವನಿಸುವ ಕಾದಂಬರಿಯು ಈ ಹೊತ್ತಿನಲ್ಲೂ ಅರ್ಥಪೂರ್ಣವೆನಿಸುತ್ತವೆ. + +ಡಾ. ಸುಭಾಷ್‌ ಪಟ್ಟಾಜೆ ‘ಕನ್ನಡ ಮತ್ತು ಮಲಯಾಳಂ ಸಣ್ಣಕತೆಗಳಲ್ಲಿ ಪರಕೀಯ ಪ್ರಜ್ಞೆಯ ನೆಲೆಗಳು: ಒಂದು ತೌಲನಿಕ ಅಧ್ಯಯನ’ ಎಂಬ ಸಂಶೋಧನ ಪ್ರಬಂಧಕ್ಕೆ ಕಣ್ಣೂರು ವಿಶ್ವವಿದ್ಯಾಲಯದಿಂದ  ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದು, ಪ್ರಸ್ತುತ ಶೇಣಿಯ ಶ್ರೀ ಶಾರದಾಂಬಾ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಕತೆಗಾರರಾದ ಇವರ ಕತೆ, ಕವಿತೆ, ಲೇಖನ ಮತ್ತು 200ಕ್ಕೂ ಮಿಕ್ಕಪುಸ್ತಕ ವಿಮರ್ಶೆಗಳು ಕನ್ನಡ ನಾಡಿನ ಪ್ರಸಿದ್ಧ ದಿನ ಪತ್ರಿಕೆ, ಮಾಸ ಪತ್ರಿಕೆ, ಮಂಗಳೂರು ಆಕಾಶವಾಣಿ ಮತ್ತು ಖಾಸಗಿ ಬಾನುಲಿ ಕೇಂದ್ರಗಳ ಮೂಲಕ ಬಿತ್ತರಗೊಂಡಿವೆ. ‘ಗೋಡೆ ಮೇಲಿನ ಗೆರೆಗಳು’  (ಕಥಾ ಸಂಕಲನ) ‘ಅನುಪಮ ಅಕ್ಷರೋಪಾಸಕ ಎ. ನರಸಿಂಹ ಭಟ್’ ಹಾಗೂ  ‘ಕಥನ ಕಾರಣ’ (ಸಂಶೋಧನ  ಕೃತಿ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_205.txt b/Kenda Sampige/article_205.txt new file mode 100644 index 0000000000000000000000000000000000000000..5dd9cb3e4929107558c70bedf0f1e1cd58bef382 --- /dev/null +++ b/Kenda Sampige/article_205.txt @@ -0,0 +1,17 @@ +ಪ್ರಾಚೀನ ಮಹಾಕಾವ್ಯ ರಚನೆಯಿಂದ ತೆರವಾದ ಸ್ಥಾನವನ್ನು ಈ ಆಧುನಿಕ ಯುಗದಲ್ಲಿ ಮಹಾಕಾದಂಬರಿಗಳು ತುಂಬಿವೆ. ಇಪ್ಪತ್ತನೆಯ ಶತಮಾನದಲ್ಲಂತೂ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಮನಶ್ಶಾಸ್ತ್ರೀಯ, ವೈಚಾರಿಕ, ವೈಜ್ಞಾನಿಕಾಧಾರಿತ ಕಾದಂಬರಿಗಳು ಕನ್ನಡ ಸಾಹಿತ್ಯಾಕಾಶದಲ್ಲಿ ಧ್ರುವತಾರೆಗಳಂತೆ ಪ್ರಕಾಶಿಸಿದವು. ಇಂತನೇಕ ವಸ್ತು ವಿಶೇಷಗಳನ್ನುಳ್ಳ ವೈವಿಧ್ಯಮಯ ಕಾದಂಬರಿಗಳು ಅಸಂಖ್ಯಾತವಿದ್ದರೂ ಪೌರಾಣಿಕ ವಸ್ತುವಾಧಾರಿತ ಕಾದಂಬರಿಗಳನ್ನು ಕೊಟ್ಟವರು ಒಬ್ಬರು ಮಾತ್ರ. ಅವರೇ ವೇದಾಂತ ಹಾಗೂ ಪೂರ್ವ ಮೀಮಾಂಸಾಶಾಸ್ತ್ರಗಳ ಪ್ರಕಾಂಡ ಪಂಡಿತರಾದ ಶ್ರೀ ದೇವುಡು ನರಸಿಂಹಶಾಸ್ತ್ರಿಗಳು. ಶ್ರೀಯುತರು ಇಂದಿಗೆ ಆರೇಳು ದಶಕಗಳ ಹಿಂದೆಯೇ ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ಬೃಹತ್ತು ಮಹತ್ತುಗಳಿಂದ ಕೂಡಿದ ಮೂರು ಮಹಾಕಾದಂಬರಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಮಾಡಿದವರು. ಇವು ಅನುಕ್ರಮವಾಗಿ, ‘ಮಹಾಬ್ರಾಹ್ಮಣ’ದಲ್ಲಿ ವಿಶ್ವಾಮಿತ್ರ ಮಹರ್ಷಿಯ ಮಹತ್ಸಾಧನೆ ಸಿದ್ಧಿಯನ್ನೂ, ‘ಮಹಾಕ್ಷತ್ರಿಯ’ದಲ್ಲಿ ನಹುಷನ ಕಥೆಯನ್ನೂ, ‘ಮಹಾದರ್ಶನ’ದಲ್ಲಿ ಯಾಜ್ಞವಲ್ಕ್ಯರ ಅಧಿಭೌತಿಕಾತೀತ ಅಪರೋಕ್ಷ ಜ್ಞಾನದ ಮಹದ್ದರ್ಶನವನ್ನೂ ಬಿತ್ತರಿಸಿವೆ. ದೇವುಡುನಂತರ ಅಪ್ರತಿಮ ಪ್ರತಿಭಾಶಾಲಿಗಳಾದ ಡಾ. ವಿ.ಕೃ.ಗೋಕಾಕರ ‘ಭಾರತ ಸಿಂಧು ರಶ್ಮಿ’ ಎಂಬ ಮಹಾಕಾವ್ಯ ಬಂತೇ ಹೊರತು, ಮಹಾಕಾದಂಬರಿ ಬರಲಿಲ್ಲ. ಆ ಕೊರತೆಯನ್ನು ನಿವಾರಿಸಲು ಶ್ರೀಮತಿ ಆಶಾರಘುರವರು ಬರಲಿ ಎಂದು ಕಾಲ ಕಾಯುತ್ತಿತ್ತೆಂದು ತೋರುತ್ತದೆ. ಕಾಲದ ಆಸೆ ಈಡೇರಿತು. ಶ್ರೀಮತಿ ಆಶಾರಘುರವರು ಕಂಕಣಕಟ್ಟಿ ಪ್ರಸ್ತುತ ‘ಆವರ್ತ’ ಎಂಬ ‘ಪೌರಾಣಿಕವಲ್ಲದ ಪೌರಾಣಿಕ’ ಕಾದಂಬರಿಯನ್ನು ರಚಿಸಿದರು! ಈ ವಿಚಿತ್ರ ವಿಶಿಷ್ಟ ರೂಪದ ಕಾದಂಬರಿಗೆ ಸಪ್ತಕೋಟಿ ಕನ್ನಡಿಗರ ಪರವಾಗಿ ಹಾರ್ದಿಕ ಸ್ವಾಗತ ಕೋರುತ್ತೇನೆ. + +‘ಆವರ್ತ’ ಕಾದಂಬರಿಯ ರಚನಾ ಶಿಲ್ಪ ‘ಬಾಣೋಚ್ಛಿಷ್ಟಂ ಜಗತ್‍ಸರ್ವಂ’ ಎಂಬ ಖ್ಯಾತಿಗೆ ಪಾತ್ರನಾಗಿದ್ದ ಸಂಸ್ಕೃತದ ಬಾಣಭಟ್ಟನ ‘ಕಾದಂಬರಿ’ ಎಂಬ ತುಂಬು ಮಹತ್ವದ ಗದ್ಯ ಕೃತಿಯನ್ನು, ಹತ್ತನೆಯ ಶತಮಾನದ ಕನ್ನಡ ಕವಿಪುಂಗವ ಮೊದಲನೆಯ ನಾಗವರ್ಮನು ಚಂಪೂಕಾವ್ಯವಾಗಿ ಪರಿವರ್ತಿಸಿ ರಚಿಸಿದ್ದಾನೆ. ಆ ‘ಕರ್ನಾಟಕ ಕಾದಂಬರಿ’ಯ ರಚನಾತಂತ್ರದಂತೆ ಕಥೆ ಅಂತ್ಯದಿಂದ ಆರಂಭಗೊಂಡು, ಪೂರ್ಣಗೊಳ್ಳುವೆಡೆಯಲ್ಲಿ ಮೊದಲಸ್ತರಕ್ಕೆ ಬಂದು ಮುಕ್ತಾಯಗೊಳ್ಳುವ ಹಿನ್ನೋಟ ನಿರೂಪಣೆಯ ತಂತ್ರ (Flashback Technique) ಅಚ್ಚರಿ ಮೂಡಿಸುತ್ತದೆ. ನಾಗವರ್ಮನ ಕಾವ್ಯಕಥೆ ಹಂತಹಂತವಾಗಿ ಸರಣಿಯ ರೂಪದಲ್ಲಿ ತೆರೆದುಕೊಳ್ಳುತ್ತಾ ಸಾಗಿ, ಅಂತ್ಯದಲ್ಲಿ ಪುಂಡರೀಕ ಮಹಾಶ್ವೇತೆ ಹಾಗೂ ಚಂದ್ರಾಪೀಡ ಕಾದಂಬರಿಯರ ಪ್ರಣಯ ಫಲಿಸಿದ ಕಥೆಯಾದರೆ, ಸೋದರಿ ಆಶಾರಘುರವರ ‘ಆವರ್ತ’ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳ ಸುಳಿಯಲ್ಲಿ ಓರ್ವ ವ್ಯಕ್ತಿ ತೊಳಲಿ, ಬಳಲಿ, ಅಂತ್ಯದಲ್ಲಿ ವಿಶೇಷಾನುಭೂತಿಯ ಅಪರೋಕ್ಷ ಜ್ಞಾನಿಯಾಗುವ ಚಿತ್ರಣ ಇಲ್ಲಿ ಬಿತ್ತರಗೊಂಡಿದೆ. + +‘ಆವರ್ತ’ದ ಕಥಾನಾಯಕ ಪ್ರತೀಪನ ಸುತ್ತಲೂ ಕಾದಂಬರಿಕಾರ್ತಿ ಒಂದು ಸುಂದರ, ಮನಮೋಹಕ ಕಲೆಯ ಬಲೆಯನ್ನು ನೇಯ್ದಿದ್ದಾರೆ. ಕಾದಂಬರಿಯ ಆರಂಭದ ಅವತಾರವೇ ರಮ್ಯ ರಂಜಕ Romanatic ಶೈಲಿಯದು. ಪ್ರತೀಪನಿಗೆ ಆರ್ತಳಾಗಿ ತನ್ನನ್ನೇ ನೋಡುತ್ತಾ ತೋಳುಗಳ ಚಾಚಿ ಕರೆಯುತ್ತಿದ್ದ ಅವಳ ಬಿಂಬವನ್ನು ನೀರಿನಲ್ಲಿ ಕಂಡು, ಅರೆಕ್ಷಣವೂ ಯೋಚಿಸದೆ, ಹರಿಯುವ ನೀರಿಗೆ ಧುಮುಕಿ, ಪ್ರವಾಹಕ್ಕೆ ವಿರುದ್ಧವಾಗಿ ಈಜುತ್ತಾ, ಅವಳಿಗಾಗಿ ಇನ್ನಿಲ್ಲದ ಹಾಗೆ ಹುಡುಕುತ್ತಾ, ಭೋರ್ಗರೆಯುವ ನೀರಿನ ರಭಸಕ್ಕೆ ಆಯತಪ್ಪಿ ನಿತ್ರಾಣನಾಗಿ, ನೀರಿನ ಸುಳಿಗೆ ಸಿಕ್ಕು, ಗಿರಗಿರನೆ ತಿರುಗುತ್ತಿರುವಂತಾಗಿ ಕಣ್ಣಿಗೆ ಕತ್ತಲು ಕವಿದದ್ದಷ್ಟೇ ನೆನಪು.. ಕಣ್ಣು ತೆರೆದಾಗ ದಟ್ಟ ಕಾನನದ ಒಣ ಎಲೆ ಬಳ್ಳಿ ಕಲ್ಲು ಮುಳ್ಳುಗಳ ಇಳುವಿನಲ್ಲಿ ಬಿದ್ದಿದ್ದ. ಅರಿವು ಮರಳಿದಾಗ ಪೂರ್ವಸ್ಮರಣೆಯ ಸುರುಳಿ ಬಿಚ್ಚಿಕೊಳ್ಳುತ್ತದೆ. + + + +‘ಆವರ್ತ’ ಈ ಬಗೆಯ ಆಕರ್ಷಕ ಶೈಲಿಯಲ್ಲಿದ್ದರೂ, ಇದೊಂದು ಸಾಂಕೇತಿಕ ಕಾದಂಬರಿ. ಮುಖ್ಯವಾಗಿ, ಮಾನವಾಂತರ್ಗತ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಪ್ರವೃತ್ತಿಗಳೇ ಇಲ್ಲಿ ಮಾನವರೂಪಿ ಪಾತ್ರಗಳಾಗಿ ಇಡೀ ಕಾದಂಬರಿಗೆ ಸಂತತ ಚಾಲನೆ ಕೊಡುತ್ತವೆ. ಆದರೆ ಇವುಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಚಿತ್ರಣ ಈ ಕಾದಂಬರಿಯ ಮೂಲಭೂತ ವಸ್ತು. ಪ್ರಸ್ತುತದಲ್ಲಿ ಪ್ರತೀಪನ ಬಾಳಿನಲ್ಲಿ ಈ ಆರು ಚಿತ್ರವೃತ್ತಿ ವಿಶೇಷಗಳೇ ಆರು ಮಂದಿ ಸ್ತ್ರೀಯರಾಗಿ ಪ್ರವೇಶಿಸಿ, ಒಬ್ಬೊಬ್ಬರೂ ಅವನಲ್ಲಿ ಒಂದೊಂದು ಭಾವವನ್ನು ಉದ್ದೀಪನಗೊಳಿಸುತ್ತಾರೆ. ಪ್ರತೀಪನನ್ನು ಬಿಡದ ‘ಮೋಹ’ದಲ್ಲಿ ಬಂಧಿಸಿದವಳು ‘ಪ್ರಮದ್ವರೆ’, ‘ಕಾಮ’ಜ್ವರವನ್ನು ಬೆಸೆದವಳು ‘ಮಧುವಂತಿ’, ‘ಕ್ರೋಧಾಗ್ನಿ’ಯನ್ನು ಜ್ವಲಿಸುವಂತೆಸಗಿದವಳು ‘ಲಾಕ್ಷಿ’, ಅವನ ‘ಲೋಭ’ಕ್ಕೊಂದು ಮೆಟ್ಟಿಲಾದವಳು ‘ಸತ್ಯವತಿ’, ‘ಮದ’ದ ಸಂಕೇತವೋ ಎಂಬಂತೆ ಅವನ ಕಿರೀಟದ ಗರಿಯಾಗಿ ಮೆರೆವವಳು ‘ಕಾಂತಲತೆ’, ತಾತ್ಸಾರಗೈಯದೆ ಪ್ರತೀಪನಲ್ಲಿ ‘ಮತ್ಸರ’ವನ್ನು ಮೆರೆಸಿದವಳು ‘ಶ್ಲಾಘ್ಯದೇವಿ’ – ಇವರುಗಳೇ ಈ ಕಾದಂಬರಿಯ ಚಾಲಕಶಕ್ತಿಗಳು. ಆದರೆ ಈ ಅರಿಷಡ್ವರ್ಗಗಳಲ್ಲಿ ‘ಮೋಹ’ ಸಮನ್ವಯ ಸಾಧಕ ಚಿರನೂತನ ಚೇತನ. ಆ ಕಾರಣದಿಂದಲೇ ಪ್ರತೀಪ ಮೋಹಳ ನಿತ್ಯ ಪಾರಾಯಣದಲ್ಲೇ ಜೀವನ ಸಾಗಿಸುತ್ತಾನೆ. ಪ್ರತೀಪನ ಪಾತ್ರ ಇಡೀ ಕಾದಂಬರಿಯ ಕೇಂದ್ರಬಿಂದುವೂ ಅಹುದು, ಅದರ ಪರಿಧಿಯೂ ಅಹುದು. ಅವನ ಪರಿವರ್ತನ ಪ್ರಭಾವಲಯದಲ್ಲಿ ಕಾದಂಬರಿ ತನ್ನ ಪರಿಪೂರ್ಣತೆಯ ವ್ಯಾಪ್ತಿ-ದೀಪ್ತಿಗಳೆರಡನ್ನೂ ಪಡೆದುಕೊಂಡಿದೆ. + +ವಿಶ್ವಸೃಷ್ಟಿಯ ಪ್ರಭಾವಲಯದಲ್ಲಿ ಬೆಳೆದು ಹೊಳೆಯುವ ಪ್ರಕೃತಿ ಸೌಂದರ್ಯದಂತೆ, ಕಾದಂಬರಿಯ ಕಥಾನಕದ ಪ್ರತಿ ಘಟ್ಟವೂ ಸ್ವಯಂ ಸುಂದರ. ಅಂತೆಯೇ ಅಲ್ಲಿನ ಪ್ರೀತಿ, ಪ್ರಣಯ, ವಾತ್ಸಲ್ಯಗಳು ಆಸ್ವಾದ್ಯವಾಗುವಂತೆ, ರಾಗ, ದ್ವೇಷ, ಶೋಕ, ಕ್ರೋಧ, ಭೀಭತ್ಸಗಳೂ ಕೂಡ ಸಹೃದಯ ಶ್ರೋತ್ರುವಿನ ಚಿತ್ತಚೇತೋಹಾರಿಯಾಗುವಂತೆಸಗುತ್ತವೆ. ಸಾಹಿತಿ ಆಶಾರಘುರವರ ‘ಆವರ್ತ’ ಒಂದು ಅಧ್ಯಾತ್ಮ ವಸ್ತುವಾಧಾರಿತ ಸಾಂಕೇತಿಕ ಕಾದಂಬರಿಯಾದರೂ ವಾಸ್ತವತೆಯ ನೆಲಗಟ್ಟಿನ ಮೇಲೆ ನಿಂತ ಸಹಜ ಜೀವನದ ಸತ್ಯಸಾಕ್ಷಾತ್ಕಾರ ಸ್ವರೂಪಿ ತಾನಾಗಿದೆ. ಏಕೆಂದರೆ ಕಲಾನುಭವ ನಿಂತಿರುವುದೇ ಲೋಕಾನುಭವದ ತಳಹದಿಯ ಮೇಲೆ. ಪ್ರಸಕ್ತ ಕೃತಿಯು ರಾಜಕೀಯ ರಂಗಿನಿಂದ ಕೂಡಿರುವುದರಿಂದ ಇದು ಶುದ್ಧ ಚದುರಂಗದಾಟದ ದಾಳವೂ ಆಗಿದೆ! + +ಪೌರಾಣಿಕ ಛಾಯೆಯ ಪರಿವರ್ತಿತ ರಚನೆಯಾದರೂ ಇದರಲ್ಲಿ ನಮ್ಮ ಆರ್ಷೇಯ ಸಂಸ್ಕೃತಿಯ ಸೊಗಡು ತುಂಬಿದ ಒಳನೋಟವೂ ಇದೆ. ಸೋದರಿ ಆಶಾರಘುರವರ ಪಾಂಡಿತ್ಯ ಪ್ರತಿಭೆ ದಿಗಂತ ವಿಶ್ರಾಂತವಾಗಿದೆ. ಕಥಾನುಸಂಧಾನದ ಪ್ರಗತಿಯ ಶಿಖರವನ್ನೇರಿದ ಪ್ರಸ್ತುತ ಕಾದಂಬರಿಕಾರ್ತಿ ಆಶಾರಘುರವರ ಕಥಾಸಂವಿಧಾನ ಕೌಶಲ, ಪಾತ್ರ ಪೋಷಣೆ, ಸಂಭಾಷಣೆಯ ಸೌಷ್ಠವ, ಭಾಷಾಶೈಲಿಯ ಶ್ರೀಮಂತಿಕೆ, ವರ್ಣನಾವೈಖರಿ, ಘಟನಾವಳಿಗಳ ಸಂಯೋಜನೆಯ ಸಹಜತೆ, ನೋವು-ನಲಿವು, ರಾಗ-ದ್ವೇಷ, ರೋಷಭೀಷಣತೆ, ಶ್ಲೀಲ-ಅಶ್ಲೀಲಗಳ ವಿಶೇಷಣೆಯಿಲ್ಲದೆ ಕಾದಂಬರಿಯ ಶ್ರೀಮಂತಿಕೆಗೆ ಪೂರಕ ಪೋಷಕಗಳಾಗಿ ರಾಚನಿಕ ಪರಿಣತಿಯ ಪ್ರಭಾವಲಯವನ್ನು ನಿರ್ಮಿಸಿವೆ. ಶ್ರೀಮತಿಯವರು ತಮ್ಮ ಪ್ರಾತಿಭ ಪರಂಜ್ಯೋತಿಯ ನೆರವಿನಿಂದ, ತಮ್ಮ ಪ್ರಾಂಜಲ ಜೀವನಾನುಭವ ಕಾವ್ಯನುಭವಗಳ ಬಳಕೆಯ ರಹಸ್ಯವರಿತಿರುವುದರಿಂದ, ಇವರು ಸಂವಹನ ಪ್ರಕ್ರಿಯೆಯ (Communication aspect) ಗುಟ್ಟರಿತ ಗಾರುಡಿಗರಾಗಿದ್ದಾರೆ. + +ಮಾನವಾಂತರ್ಗತ ಅರಿಷಡ್ವರ್ಗಗಳನ್ನು ನಿದರ್ಶನಗಳೊಂದಿಗೆ ಪ್ರದರ್ಶಿಸಿ, ಭಾರತೀಯ ಸನಾತನ ಸಂಸ್ಕೃತಿಯ ವೈಜಯಂತಿಯನ್ನು ಹಿಮಾಲಯದ ಉತ್ತುಂಗ ಶೃಂಗದ ಮೇಲೆ ಅನಾವರಣಗೊಳಿಸುವ ಮಹಾನ್ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿರುವ ಸೋದರಿ ಆಶಾರಘುರವರು ಎಲ್ಲ ಕನ್ನಡಿಗರ ಗೌರವಾದರಗಳಿಗೂ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ. ಅಂತಹ ಅಪ್ರತಿಮ ‘ಪ್ರತಿಭೆ’ಯನ್ನು ತಮ್ಮ ಪ್ರಿಯ ಪತ್ನಿಯನ್ನಾಗಿ ಪಡೆದಿರುವ ಶ್ರೀ ರಘುರವರು ನಿಜಕ್ಕೂ ಭಾಗ್ಯಶಾಲಿಗಳು. ಶ್ರೀಯುತರಿಗೆ ನನ್ನ ಅಭಿನಂದನೆಗಳು. ‘ಆವರ್ತ’ ಶ್ರೀಮತಿ ಆಶಾರಘುರವರ ಚೊಚ್ಚಲ ಕೃತಿ. ಈಗ ತಾನೆ ಪರ್ವತಾರೋಹಣ ಮಾಡಿರುವುದರಿಂದ ನನ್ನ ಈ ಅನಿಮಿತ್ತ ಸೋದರಿಯ ಶ್ರೀಮಂತ ಧೀಮಂತ ಲೇಖಣಿ, ಇದಕ್ಕಿಂತಲೂ ಇನ್ನೂ ಅತ್ಯುತ್ತಮ ಕೃತಿರತ್ನವನ್ನಿತ್ತು ಕನ್ನಡಮ್ಮನ ಮಡಿಲು ತುಂಬಲಿ, ಮುಡಿಯ ಸಿಂಗರಿಸಲಿ ಎಂದು ಹಾರ್ದಿಕವಾಗಿ ಹಾರೈಸಿ, ಸಕಲ ಶುಭಗಳನ್ನೂ ಕೋರಿ ವಿರಮಿಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_206.txt b/Kenda Sampige/article_206.txt new file mode 100644 index 0000000000000000000000000000000000000000..66d65ac05d6c7ab74d1d81eb62e91aa39d168f00 --- /dev/null +++ b/Kenda Sampige/article_206.txt @@ -0,0 +1,29 @@ +ನನ್ನನ್ನು ಇತ್ತೀಚಿಗೆ ತುಂಬಾ ಕಾಡಿ ಓದಿಸಿಕೊಂಡ ಕವಿತೆಗಳ ಸಂಕಲನವಿದು. ತುಂಬ ಸಮಯದ ನಂತರ ಒಂದು ಇಡೀ ಕವಿತಾ ಸಂಕಲನ ಈ ಪರಿ ನನ್ನನ್ನು ಕಾಡಿ ಓದಿಸಿಕೊಂಡಿದ್ದು. ನನಗಂತೂ ತುಂಬಾ ಸಲ ಸಂಕಲನಗಳಲ್ಲಿನ 20 ಕವಿತೆಗಳಲ್ಲಿ 5 /6 ಇಷ್ಟವಾಗುವುದಿದೆ. ಆದರೆ ಇಲ್ಲಿನ ಒಂದೊಂದೂ ಕವಿತೆಗಳು ಒಂದಕ್ಕಿಂತ ಇನ್ನೊಂದು ಭಿನ್ನ. ಕೆಲವು ಒಂದೇ ಸಂಗತಿಯನ್ನು ಭಿನ್ನ ನೋಟದಿಂದ ಮತ್ತೆ ಮಾತಾಡಿರುತ್ತವೆ. ಮೌನ, ಒಳನೋಟ, ಧ್ಯಾನ, ಒಲವು, ಕಾಳಜಿ, ದುಃಖ, ಸಂಬಂಧ… ಹೀಗೆ ಇಲ್ಲಿನ ಕವಿತೆಗಳು ನಮ್ಮನ್ನು ವಿಹರಿಸುತ್ತಲೇ ಒಳಗಿನ ಗೀರುಗಳಿಂದ ಹೊಸ ನೋಟ ಕಾಣಿಸುತ್ತವೆ. + +(ಚನ್ನಬಸಪ್ಪ ಆಸ್ಪರಿ) + +ತೇಪೆ ಕವಿತೆ ನನ್ನ ಟೈಲರ್ ಆಗಿದ್ದ ಕಾಲದ ನೆನಪುಗಳನ್ನು ಮರುಕಳಿಸಿದರೆ, ಇಲ್ಲಿ ಅನೇಕ ಕವಿತೆಗಳು ಮತ್ತು ನಾನು ಕತ್ತಲ ಹಾಡಿನ ಮಧ್ಯೆ ಸಂಭಾಷಿಸುವ ಮಾತು ನೋಟಗಳು ಬಹುತೇಕ ಒಂದೇ ಎಂಬಷ್ಟು ಹತ್ತಿರವಿದೆ. ಈ ಮೂಲಕ ಒಂದೇ ತರದ ಜೀವ ಸಂವೇದನೆಯು ವಿವಿಧ ರೂಪಗಳ ಮೂಲಕ ಪ್ರಕಟಗೊಳ್ಳುತ್ತವೆ ಎಂಬುದನ್ನು ಗಮನಿಸಬಹುದು. + +ನಂಜು ಕವಿತೆಯ ಒಳಗಿನ ಗಾಯಗಳನ್ನು ಕೆರೆದುಕೊಳ್ಳುವ ಪ್ರಕ್ರಿಯೆ, ಮತ್ತದರ ವಿಕೃತ ಫಲಾನುಭವ, ಫಲಾನುಭವಿಗಳು… ಸಂತೆಯೊಳಗಣ ಮೌನ ಕವಿತೆಯಲ್ಲಿ ಮಾತು ಹುಟ್ಟುವ ಬಗೆಯ ಮೂಲಕ ಕುಟುಂಬ ಮತ್ತು ಸಮಾಜ ಸ್ಥಾಪಿತವಾದ ಹಾದರ -ಆದರಗಳಿಗೆ ಇನ್ನೊಂದು ಕವಲು ನೋಟವನ್ನು ಆಸ್ಪರಿಯವರು ಕಾಣಿಸುತ್ತಾರೆ. ಜೀವದೊಳಗೊಂದು ಬ್ರೂಣಕಟ್ಟಿ, ಅದಕ್ಕೆ ನರ ಮೆದುಳು ಎಲುಬು ಹುಟ್ಟಿ ಇನ್ನೊಂದು ಜೀವವಾಗುವ ಅಚ್ಚರಿಯ ವಿಜ್ಞಾನವನ್ನು ಕವಿತೆ ಹಡೆವುದು ಹಗುರದ ಮಾತಲ್ಲ – ಕವಿತೆ ಮೂಲಕ ಹೇಳುವ ಆಸ್ಪರಿಯವರ ವಿಶಾಲ ಓದು ಮತ್ತು ಆಳದ ನೋಟಗಳು, ಓದುಗರನ್ನು ಭಾವ, ರಸದೊಂದಿಗೆ ಎಜುಕೇಟ್ ಕೂಡ ಮಾಡುತ್ತವೆ ಎಂದು ನಾನು ನಂಬುತ್ತೇನೆ. + +ಅವ್ವ ಎಂಬ ರೇಖಾ ಚಿತ್ರದ –‘ನೀರ ಮೇಲೆ ತೇಲಿ ಬಿಟ್ಟಬಾಗಿನಕ್ಕೆ ಮಾಡಿದ ಸಿಂಗಾರ’… ಮತ್ತು‘… ತೃಪ್ತಿಯಾಗದ್ದಕ್ಕೆಹಾಗೆಯೇ ಮುದ್ದೆ ಮಾಡಿಡಸ್ಟ್ ಬಿನ್ನಿಗೆ ಎಸೆದರೇಖಾಚಿತ್ರ ‘… ಸಾಲುಗಳು ಮನದಂಚನ್ನು ತೇವಗೊಳಿಸುತ್ತಲೇ ನಾವಿನ್ನೂ ಬರಡಾಗಿಲ್ಲ ಎಂಬುದನ್ನು ನೆನಪಿಸುತ್ತವೆ. + +ಬದುಕು ಶರಬು ಬಾಟಲಿ ಕವಿತೆಯಲ್ಲಿ, ತಕ್ಷಣದ ಸುಖದ ಹಪಹಪಿಗಳನ್ನು ಒಂದೆಡೆಸುರ್ ಎಂದು ಕಡ್ಡಿ ಗೀರಿದಂತೆ ಎನ್ನುತ್ತಾ ಇನ್ನೊಂದೆಡೆ ಶೀಘ್ರ ಸ್ಖಲನದ ಕ್ಷಣಿಕ ಸುಖಕ್ಕೆಸುಖಾ ಸುಮ್ಮನೆ ಒದ್ದೆಯಾಗುವ ಒಳಉಡುಪು ಎನ್ನುತ್ತಾರೆ. + +ಯಾರೋ ಹೇಳಿದರು, ನಕ್ಷತ್ರದ ಬಾಯಾರಿಕೆ, ನಾನು ಮನುಷ್ಯನಾಗುತ್ತಿರಲಿಲ್ಲ, ಬೇರೇನು ಬೇಕು ಬದುಕಿಗೆ ಮುಂತಾದ ಕವಿತೆಗಳಲ್ಲಿ ಮನುಷ್ಯ ಜೀವಿ ಸಿಕ್ಕಿಕೊಂಡ ಸಿಕ್ಕುಗಳ ಬಿಡಿಸುವ ತವಕವೂ ಇದೆ, ಸಿಕ್ಕು ಬಿಡಿಸಿಕೊಂಡು ದಾಟಿದ ಬಿಕ್ಕುವಿನ ದಕ್ಕುವಿಕೆಯೂ ಇದೆ ಅನಿಸುತ್ತದೆ. ಹೀಗೆ ಸಂಕಲನದ 42 ಕವಿತೆಗಳಲ್ಲಿ ಹಲವು ತೀವ್ರವಾಗಿ ಕಾಡಿದರೆ ಇನ್ನೂ ಕೆಲವು ಒಂದಲ್ಲ ಒಂದು ಸಂಗತಿಗಾಗಿ ನೆನಪಿಗೆ ಸಲ್ಲುತ್ತವೆ. ಬೆಳಗಾವಿಯ ರಾಣಿ ಚೆನ್ನಮ್ಮ ವಿವಿಯಲ್ಲಿ Indian literature in English ವಿಷಯದಲ್ಲಿ ಪಿ ಎಚ್ ಡಿ ಮಾಡುತ್ತಿರುವ ಚನ್ನಬಸವ ಆಸ್ಪರಿ ಅವರು ಪ್ರಸ್ತುತ ಗಂಗಾವತಿಯ ಶ್ರೀರಾಮನಗರದ ಪದವಿಪೂರ್ವ ಕಾಲೇಜಿನಲ್ಲಿ ಆಂಗ್ಲ ಭಾಷೆ ಉಪನ್ಯಾಸಕರಾಗಿದ್ದಾರೆ. ಸಂತೆಯೊಳಗಣ ಮೌನ ಇವರ ಮೊದಲ ಕೃತಿ. ಸಂಕಲನದ ಒಂದು ಕವಿತೆ ಇಲ್ಲಿದೆ. + + + +ನಾನು ಮನುಷ್ಯನಾಗುತ್ತಿರಲಿಲ್ಲ + +ಮುಡಿಗೇರಿದ ಗುಲಾಬಿಗಷ್ಟೇ ಅಲ್ಲರಕ್ತ ಬಸಿದ ಮುಳ್ಳು ಮೊನೆಗಳಿಗೂಮನಬಯಲು ಹಾಸಿದ್ದೇನೆಹಾಗಾಗದಿದ್ದರೆಪ್ರೀತಿ ಟಿಸಿಲೊಡೆಯುತ್ತಿರಲಿಲ್ಲ + +ಬೊಗಸಿಯಲ್ಲಿ ದಕ್ಕಿದ್ದಕಷ್ಟ ಅಲ್ಲಬೆರಳ ಸಂದಿಯಲ್ಲಿ ಸೋರಿಹೋದದಕ್ಕೂಎದೆ ಮಡಕೆಯಲ್ಲಿ ಜಾಗವಿದೆಹಾಗಿಲ್ಲದಿದ್ದರೆಭಾವ ತೊಟ್ಟಿಕ್ಕುತ್ತಿರಲಿಲ್ಲ + +ಗೂಡು ಕಟ್ಟುವ ವಸಂತದ ಹಾಡುಗಳಿಗಷ್ಟೇ ಅಲ್ಲಶಿಶಿರದ ಬೋಳು ಕಾಡುಗಳಿಗೂಒಳಕುಡಿಕೆಯಲ್ಲಿ ಹಸಿರಿದೆಅದಿರದಿದ್ದರೆಯುಗಳ ಗೀತೆ ಉಸಿರಾಡುತ್ತಿರಲಿಲ್ಲ + +ಬೆಳಕ ಬೆರಗ ಬರೆಯುವ ದೀಪಕ್ಕಷ್ಟೇ ಅಲ್ಲಸುಟ್ಟು ಕರಕಲಾಗಿಸುವ ಬೆಂಕಿಗೂಆತ್ಮದ ಪಣತಿಯಲ್ಲಿ ತೈಲವಿದೆಅದು ಬಸಿದು ಹೋಗಿದ್ದರೆಕಣ್ಣ ಹೊಳಪು ಕುಣಿದಾಡುತ್ತಿರಲಿಲ್ಲ + +ಭಿಕ್ಷೆಯಿತ್ತ ನಿಮ್ಮ ಪ್ರೀತಿಗಷ್ಟೇ ಅಲ್ಲಕರುಣೆಯಿಂದ ಕಕ್ಕಿದ ದ್ವೇಷಕ್ಕೂನಾನು ಋಣಿನೀವು ಹಾಗೆ ಮಾಡದಿದ್ದರೆಬಹುಶಃನಾನು ಮನುಷ್ಯನಾಗುತ್ತಿರಲಿಲ್ಲ + +ನಾದ ಮೂಲತಃ ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳದ ಮಣಿನಾಲ್ಕೂರಿನವರಾಗಿದ್ದು, ಸದ್ಯ ಶೃಂಗೇರಿ ತಾಲೂಕು ತೆಕ್ಕೂರು ಎಂಬಲ್ಲಿ ಅರಿವುಮನೆ ಸಾಮುದಾಯಿಕ ಬದುಕಿನಲ್ಲಿ ತೊಡಗಿಸಿಕೊಂಡಿದ್ದಾರೆ. ಓದಿದ್ದು ಸಮಾಜಶಾಸ್ತ್ರ ಎಂ. ಎ. ಹಾಗೂ ಮಕ್ಕಳ ಮನಶಾಸ್ತ್ರ ಮತ್ತು ಆಪ್ತಸಮಾಲೋಚನೆ. ತರಬೇತುದಾರ, ಪತ್ರಕರ್ತ, ಯೂತ್ ಮೆಂಟರ್ ಆಗಿದ್ದು ಕಳೆದ ನಾಲ್ಕು ವರ್ಷಗಳಿಂದ ಪೂರ್ಣಾವಧಿ ಏಕತಾರಿ ಹಾಡುಗಳು ಮತ್ತು ಜನ ಸಂವಾದದೊಂದಿಗೆ ಕರ್ನಾಟಕದಾದ್ಯಂತ ಓಡಾಟ ನಡೆಸುತ್ತಿದ್ದಾರೆ. \ No newline at end of file diff --git a/Kenda Sampige/article_207.txt b/Kenda Sampige/article_207.txt new file mode 100644 index 0000000000000000000000000000000000000000..3d35e98153e9f5ab203d22afd59c68e8fa031fa2 --- /dev/null +++ b/Kenda Sampige/article_207.txt @@ -0,0 +1,95 @@ +ಆಕಸ್ಮಿಕವಾಗಿ ಕೈ ಹಿಡಿದ `ಮುಖ್ಯಮಂತ್ರಿ’ ನಾಟಕ + +1980ರ ಡಿಸೆಂಬರ್ 4ರಿಂದ 10ರ ವರೆಗೆ `ಮುಖ್ಯಮಂತ್ರಿ’ ನಾಟಕದ ಸತತ ಪ್ರದರ್ಶನಗಳು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದ ಹಿಂಬದಿಯ ಸಂಸ ಬಯಲು ರಂಗಮಂದಿರದಲ್ಲಿ ನಿಗದಿಯಾಗಿದ್ದವು. + +1971ರಲ್ಲಿ ಆರಂಭವಾದ ಕಲಾಗಂಗೋತ್ರಿ ತಂಡದ ಪ್ರಮುಖ ನಾಟಕಗಳಲ್ಲಿ ಮುಖ್ಯಮಂತ್ರಿಯೂ ಒಂದು. ಇದರ ರೂವಾರಿ ಡಾ. ಬಿ.ವಿ. ರಾಜಾರಾಂ. ಈ ನಾಟಕವನ್ನು ಹುಡುಕಿ ತೆಗೆದುಕೊಂಡಿದ್ದಲ್ಲ. ಅದಾಗಲೇ ತಂಡ ಮೂರು ನಾಟಕಗಳನ್ನು ಮಾಡಿತ್ತು. ಗೆಳೆಯರೂ ಲೇಖಕರೂ ಆದ ಟಿ.ಎಸ್.ಲೋಹಿತಾಶ್ವ ಅವರು ಸಮುದಾಯ ತಂಡದಿಂದ ಜನಪ್ರಿಯ ನಟರಾಗಿದ್ದರು. ಆಗಾಗ ಸಮುದಾಯ ರಂಗತಂಡದಲ್ಲಿ ನಾನೂ ಪಾತ್ರ ಮಾಡುತ್ತಿದ್ದುದರಿಂದ ಲೋಹಿತಾಶ್ವ ಅವರೊಂದಿಗೆ ಗೆಳೆತನ ಬೆಳೆಯಿತು. + +ಲೋಹಿತಾಶ್ವ ಅವರಿಗೆ ಖ್ಯಾತ ನಾಟಕಕಾರ ರಣಜಿತ್ ಕಪೂರ್ ವಿರಚಿತ ಹಿಂದಿಯ ಮುಖ್ಯಮಂತ್ರಿ ನಾಟಕದ ಮಾಹಿತಿ ಸಿಕ್ಕಿತು. ಇದರ ಪ್ರತಿಯನ್ನು ತರಿಸಿಕೊಂಡು ಓದಿ, ಆಸಕ್ತಿ ಹೆಚ್ಚಿಸಿಕೊಂಡು ಕನ್ನಡಕ್ಕೆ ಅನುವಾದಿಸಿ ಕನ್ನಡದಲ್ಲಿ ಕಲಾಗಂಗೋತ್ರಿ ತಂಡಕ್ಕೆ ಮಾಡಿಸುವ ಆಸೆ ವ್ಯಕ್ತಪಡಿಸಿದರು. ರಾಜಾರಾಂ ಅವರಿಗೆ ವರ್ಷಕ್ಕೆ 3-4 ನಾಟಕ ಪ್ರದರ್ಶಿಸುವ ಹುಚ್ಚಿತ್ತು. ಇದಕ್ಕಾಗಿ ಲೋಹಿತಾಶ್ವ ಅವರನ್ನು ನಾಟಕ ಓದಲು ಆಹ್ವಾನಿಸಿದರು. + +ನಾನು, ರಾಜಾರಾಂ, ಶ್ರೀನಿವಾಸ ಮೇಷ್ಟ್ರು ಎದುರು ಲೋಹಿತಾಶ್ವ ಅವರು ನಾಟಕ ಓದಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ; ಲೋಹಿತಾಶ್ವ ಅವರು ಓದಿದ್ದು ಇಷ್ಟವಾಯಿತು. ಆದರೆ ನನಗೆ ನಾಟಕ ಅರ್ಥವಾಗಲಿಲ್ಲ. ಮೌನವಾಗಿದ್ದೆ. ರಾಜಾರಾಂ ಹಾಗೂ ಶ್ರೀನಿವಾಸ ಮೇಷ್ಟ್ರಿಗೆ ನಾಟಕ ಆಡುವ ಉಮೇದು ಬಂತು. ಅವರಿಬ್ಬರ ಸಹಮತಕ್ಕೆ ಒಪ್ಪಿದೆ. ಈ ನಾಟಕ ಹಿಂದಿಯಲ್ಲಿ ಅದಾಗಲೇ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಿಂದ ಪ್ರದರ್ಶನಗೊಂಡಿತ್ತು. + +ಲೋಹಿತಾಶ್ವ ಅವರು ಪ್ರೀತಿಯಿಂದ ಕರಾರು ಹಾಕಿದರು. ನಿಮ್ಮ ತಂಡದಿಂದಲೇ ನಾಟಕ ಪ್ರದರ್ಶನಗೊಳ್ಳಲಿ. ಆದರೆ ನಾನು ಮುಖ್ಯಮಂತ್ರಿ ಪಾತ್ರ ಮಾಡುವೆ ಎಂದರು. ಲೋಹಿತಾಶ್ವ ಅವರು ಮುಖ್ಯಮಂತ್ರಿ ಪಾತ್ರ ಹಾಗೂ ರಾಜಾರಾಂ ಅವರು ಪಕ್ಷದ ಅಧ್ಯಕ್ಷ ಪಾತ್ರ ಮಾಡಿದರೆ ಸೂಕ್ತ. ನಾನು ನಿರ್ದೇಶನ ಮಾಡುವೆ ಎಂದೆ. ಇದೆಲ್ಲ ನಡೆದುದು 1980ರ ಆಗಸ್ಟ್-ಸೆಪ್ಟೆಂಬರ್ ತಿಂಗಳಲ್ಲಿ. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಡಿಡಿಎಂ ವಿಭಾಗದ ಬಸ್ ಗ್ಯಾರೇಜಿನಲ್ಲಿ 45 ದಿನಗಳವರೆಗೆ ತಾಲೀಮು ನಡೆಯಿತು. ನಾಟಕದ ಪ್ರದರ್ಶನ ಇನ್ನು ಹತ್ತು ದಿನಗಳಿರುವಾಗ ನನಗೆ ಹಾಗೂ ಲೋಹಿತಾಶ್ವ ಅವರಿಗೆ ಜ್ವರ ಬಂತು. ಆಗ ಲೋಹಿತಾಶ್ವ ಅವರು ತುಮಕೂರಿನಿಂದ ನಿತ್ಯ ಬಂದು ಹೋಗುತ್ತಿದ್ದರು. ಜ್ವರ ಬಂದಾಗ ರಜೆ ಹಾಕಿ ಬೆಂಗಳೂರಿನ ಲಾಡ್ಜ್‍ನಲ್ಲಿ ಉಳಿದರು. ಅವರೊಂದಿಗೆ ನಾಟಕದ ಕುರಿತು ಚರ್ಚಿಸಲು ಅವರ ರೂಮಲ್ಲೇ ಉಳಿಯುತ್ತಿದ್ದೆ. 3-4 ದಿನಗಳಾದ ನಂತರ ನಾನು ವಾಸಿಯಾದೆ. ಆದರೆ ಲೋಹಿತಾಶ್ವ ಅವರಿಗೆ ಟೈಫಯ್ಡ್ ಆಗಿತ್ತು. ಈ ಸ್ಥಿತಿಯಲ್ಲಿ ಅವರು ಪಾತ್ರ ಮಾಡುವ ಹಾಗಿರಲಿಲ್ಲ. ರಾಜಾರಾಂ ಅವರೊಂದಿಗೆ ಚರ್ಚಿಸಿದ ನಂತರ ನಾಟಕದ ಪ್ರದರ್ಶನವನ್ನು ಮುಂದೂಡೋಣವೆಂದು ಲೋಹಿತಾಶ್ವ ಅವರಿಗೆ ಹೇಳಿದೆವು. ಅವರು ಒಪ್ಪದೆ, ಯಾರ ಕೈಲಾದರೂ ನನ್ನ ಪಾತ್ರ ಮಾಡಿಸಿ, ನಾಟಕ ನಿಲ್ಲುವುದು ಬೇಡ ಎಂದು ಹಟ ಹಿಡಿದರು. ಅಲ್ಲದೆ ಮುಂದೆ `ನಾನೇ ಮಾಡುವೆ’ ಎಂದರು. + +ಆಗ ಮುಖ್ಯಮಂತ್ರಿ ಪಾತ್ರದ ಕುರಿತು ಚರ್ಚೆ ಶುರುವಾಗಿ, ರಾಜಾರಾಂ ಅವರನ್ನು ಮುಖ್ಯಮಂತ್ರಿ ಪಾತ್ರ ಮಾಡಲು ಒತ್ತಾಯಿಸಿದಾಗ ಅವರು ಒಪ್ಪಲಿಲ್ಲ. ಬೇರೆ ತಂಡಗಳ ಪ್ರಮುಖ ಕಲಾವಿದರ ಕುರಿತು ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನನ್ನ ತಲೆಗೇ ಬಂತು. ನಾಟಕ ಕೆಟ್ಟರೂ ಚಿಂತೆಯಿಲ್ಲ, ಪ್ರದರ್ಶನ ನಿಲ್ಲಿಸುವುದು ಬೇಡವೆಂದಾಯಿತು. ಭಂಡ ಧೈರ್ಯ ನನಗಿದ್ದುದರಿಂದ ಒಪ್ಪಿದೆ. ಆದರೆ ನಿರ್ದೇಶನಕ್ಕೆ ಒಪ್ಪಲಿಲ್ಲ. ರಾಜಾರಾಂ ಅವರು ಇಬ್ಬರೂ ಸೇರಿ ನಿರ್ದೇಶಿಸೋಣವೆಂದರೂ ಬೇಡವೆಂದೆ. ಎಂಟತ್ತು ದಿನಗಳಲ್ಲಿ ನಾಟಕ ಪ್ರದರ್ಶನ ಇರುವುದರಿಂದ ನಾನು ಒಪ್ಪಲಿಲ್ಲ. ಆದರೆ ಕರಾರೊಂದು ಹಾಕಿದೆ. ಅದು ಲೋಹಿತಾಶ್ವ ಅವರ ಹಾಗೆ ನನಗೆ ಪಾತ್ರ ಮಾಡಲಾಗದು. ನನ್ನದೇ ಛಾಪು ಮೂಡಿಸುವೆ. ಸಂಭಾಷಣೆ ಮರೆತರೂ ಮತ್ತೇನೋ ಸೇರಿಸಿಕೊಂಡು ನಾಟಕ ಮುಗಿಸುವೆ. ಚೆನ್ನಾಗಿ ಬಂದರೆ ನನ್ನ ಅದೃಷ್ಟ, ಚೆನ್ನಾಗಿ ಬರದಿದ್ದರೆ ನಿಮ್ಮ ದುರದೃಷ್ಟ ಎಂದೆ. ಒಪ್ಪಿದರು. ಇದೆಲ್ಲವೂ ಲೋಹಿತಾಶ್ವ ಅವರ ಒಪ್ಪಿಗೆ ಮೇರೆಗೆ ನಡೆಯಿತು. + +ಹೇಗೋ ನಾಟಕ ಮುಗಿಸಬೇಕೆಂಬ ಆತುರದಲ್ಲಿದ್ದೆವು. ಪೋಸ್ಟರ್ ಹಂಚಲಾಗಿತ್ತು, ಪ್ರಚಾರ ಬಿರುಸಾಗಿತ್ತು. ರಂಗತಂಡಗಳಲ್ಲಿ ಕುತೂಹಲ ಹೆಚ್ಚಿತ್ತು. ಆದರೆ ಅನಿರೀಕ್ಷಿತವಾಗಿ ಆಗ ನಾಟಕ ನಿಲ್ಲಿಸುವಂಥ ಪರಿಸ್ಥಿತಿ ಬಂತು. ಹೇಗೆಂದರೆ ಪ್ರೇಮಾ ಕಾರಂತರು ಹೇಳಿಕೆಯೊಂದು ನೀಡಿದ್ದರು – ಈ ನಾಟಕವನ್ನು ನಾನು ಮಾಡಿಸುತ್ತಿರುವೆ. ಎನ್‍ಎಸ್‍ಡಿ ಸ್ಕ್ರಿಪ್ಟ್, ಎಲ್ಲವೂ ತೀರ್ಮಾನವಾಗಿದೆ ಎಂದು. ಜೊತೆಗೆ ನಾಟಕ ನಿಲ್ಲಿಸಲು ಕಾನೂನಿನ ಪ್ರಕಾರ ಯತ್ನಿಸುತ್ತಾರೆನ್ನುವ ಸುದ್ದಿ ಹರಡಿತು. ಆದರೆ ನಾಟಕ ಪ್ರದರ್ಶನಕ್ಕೆ ಎರಡು ದಿನಗಳು ಬಾಕಿ ಇತ್ತು. ಅತ್ತ ಲೋಹಿತಾಶ್ವ ಅವರಿಗೆ ಅನಾರೋಗ್ಯ. ಇತ್ತ ಪ್ರೇಮಾ ಕಾರಂತರ ಹೇಳಿಕೆ. ಅವರು ನಾಟಕಕ್ಕೆ ತಡೆಯಾಜ್ಞೆ ತರುತ್ತಾರೆಂಬ ಆತಂಕ. ಇದರೊಂದಿಗೆ ಡಿಸೆಂಬರ್ ಚಳಿ, ಮಳೆ ಬರಬಹುದೆಂಬ ಸೂಚನೆ ಇತ್ತು. ಜೊತೆಗೆ ನಾಟಕಕ್ಕೆ ನಾನು ಪೂರ್ತಿ ತಯಾರಾಗಿರಲಿಲ್ಲ. ಹೀಗಿದ್ದಾಗ ಯಾವುದೇ ರೀತಿಯಲ್ಲಿ ನಾಟಕ ಪ್ರದರ್ಶನ ನಿಂತರೆ ಒಳ್ಳೆಯದೆ, ನಾವೇ ನಿಲ್ಲಿಸಿದೆವೆಂಬ ಅಪವಾದದಿಂದ ತಪ್ಪಿಸಿಕೊಳ್ಳಬಹುದು. ಜೊತೆಗೆ ಅನುಕಂಪವೂ ಸಿಗಬಹುದು ಎಂದುಕೊಂಡು ಕೊನೆಯ ಪ್ರಯತ್ನವೆಂದು ರಾಜಾರಾಂ ಅವರೊಂದಿಗೆ ಬಿ.ವಿ.ಕಾರಂತರ ಮನೆಗೆ ಹೋದೆವು. ಅಲ್ಲಿ ಪ್ರೇಮಾ ಕಾರಂತರ ಭೇಟಿಯೂ ಆಯಿತು. ಆರಂಭದಲ್ಲಿ ಸೌಜನ್ಯದ ಮಾತಿನ ನಂತರ ಪ್ರೇಮಾ ಅವರು `ನಿಮಗೆ ಯಾರು ಪರವಾನಗಿ ಕೊಟ್ಟಿದ್ದು? ನಾನು ಎನ್‍ಎಸ್‍ಡಿಯವಳು. ಇದು ಎನ್‍ಎಸ್‍ಡಿ ನಾಟಕ. ನಿಮಗೆ ಯಾರು ಸ್ಕ್ರಿಪ್ಟ್ ಕೊಟ್ಟಿದ್ದು? ಇದರ ಪರಿಣಾಮ ಏನಾಗುತ್ತೆ ಗೊತ್ತಾ ನಿಮಗೆ?’ ಎಂದು ಗುಡುಗಿದರು. ನಾವು ಸೌಜನ್ಯದಿಂದ `ಸಿಟ್ಟು ಮಾಡಿಕೊಳ್ಳಬೇಡಿ ಮೇಡಮ್. ನೀವು ನಾಟಕ ಆಡಿಸುವ ಮಾಹಿತಿ ನಮಗೆ ಇರಲಿಲ್ಲ. ಸ್ವಲ್ಪ ಮುಂಚೆ ತಿಳಿಸಿದ್ದರೆ ನಿಲ್ಲಿಸುತ್ತಿದ್ದೆವು. ಎರಡೇ ದಿನದಲ್ಲಿ ಪ್ರದರ್ಶನವಿದೆ. ಈಗ ಹೇಗೆ ನಿಲ್ಲಿಸೋದು? ಈ ಪ್ರದರ್ಶನದ ನಂತರ ನೀವೂ ಮಾಡಿಸಿ’ ಎಂದೆವು. ಅವರು ಜಗ್ಗಲಿಲ್ಲ, ಬಗ್ಗಲಿಲ್ಲ. ರಾಜಾರಾಂ ಮನಸ್ಸಿನಲ್ಲಿ ಏನಾದರಾಗಲಿ ನಾಟಕ ಮಾಡೋಣವೆಂದು. ನನ್ನ ಮನದೊಳಗೆ ಏನೇ ಆಗಲಿ, ನಾಟಕ ನಿಲ್ಲಲಿ ಎನ್ನುವುದು. ಇಷ್ಟರಲ್ಲಿ ಬಿ.ವಿ.ಕಾರಂತರಿಗೆ ಗೊತ್ತಾಗಿ ಅವರೂ ಮಾತುಕತೆಯಲ್ಲಿ ಭಾಗಿಯಾದರು. `ನಾಟಕ ಆಡುವ ಕುರಿತು ತಿಳಿಸಬೇಕಿತ್ತು. ಥಿಯೇಟರ್ ಕುರಿತು ಎಥಿಕ್ಸ್ ಇರಬೇಕಿತ್ತು. ಪ್ರೇಮಾ ನಿನಗೂ ಬುದ್ಧಿಯಿಲ್ಲ. ಅವರು ನಾಟಕ ಆಡಲಿ. ನೀನೂ ನಾಟಕ ಮಾಡಿಸು. ಸದ್ಯ ಅವರು ನಾಟಕ ಪ್ರದರ್ಶಿಸಲಿ. ಇಬ್ಬರೂ ಕುಳಿತು ನಾಟಕ ನೋಡೋಣ’ ಎಂದು ಹಾರೈಸಿದರು. ಆಗ ದುಃಖವಾಗಿದ್ದು ನಂಗೆ. ನಾಟಕ ಆಡಬೇಕಾದ ಅನಿವಾರ್ಯತೆಗೆ. ನಂತರ ಹಗಲುರಾತ್ರಿ ಶ್ರೀನಿವಾಸ ಮೇಷ್ಟ್ರು, ರಾಜಾರಾಂ ಅವರು ವಿಶ್ವಾಸ ತುಂಬಿ, ನಾಟಕದ ಸಂಭಾಷಣೆ ಹೇಳಿಕೊಟ್ಟರು. + +ಆಶ್ಚರ್ಯವೆಂದರೆ ನಾಟಕ ಪ್ರದರ್ಶನದ ಏಳೂ ದಿನಗಳ ಟಿಕೆಟುಗಳು ಮಾರಾಟವಾಗಿದ್ದವು. ನಾಟಕದ ಶೀರ್ಷಿಕೆಯೇ ಆಕರ್ಷಕವಾಗಿತ್ತು. ಆದರೆ ನನಗಿನ್ನೂ ಆಸೆಯಿತ್ತು. ಮೋಡಕವಿದ ವಾತಾವರಣವಿದ್ದು, ನಾಟಕದ ದಿನ ಮಳೆ ಬರುತ್ತದೆನ್ನುವ ನಂಬಿಕೆ. ಆದರೆ ಎಲ್ಲವೂ ಸುಳ್ಳಾಯಿತು. ರಂಗಕ್ಕೆ ಹೋಗುವುದು ದಿಟವಾಯಿತು. ಆರಂಭದ ದೃಶ್ಯದಿಂದ ಹಿಡಿದು ಕೊನೆಯವರೆಗೂ ಬಹುತೇಕ ನಾಟಕದ ಮಾತುಗಳನ್ನು ಮರೆತು ಸಂದರ್ಭೋಚಿತವಾಗಿ ನನ್ನ ಮಾತುಗಳನ್ನು ಸೇರಿಸಿ, ಹಾಸ್ಯಲೇಪನ ಮಾಡಿ ನಾಟಕ ಮುಗಿಸಿದೆ. ಅಂತೂ ಕ್ಲಿಕ್ ಆಯಿತು. ಗಂಭೀರವಾದ, ರಾಜಕೀಯ ಕುರಿತ ನಾಟಕವು ನನ್ನ ತಪ್ಪಿನಿಂದ ಹಾಸ್ಯಭರಿತ ನಾಟಕವಾಗಿ ಪ್ರದರ್ಶನ ಕಂಡಿತು. ಇದರಿಂದ ನಾಟಕದ ನಡುವೆ ನಗುವಿನ ಅಲೆ. ಮುಗಿದ ಮೇಲೆ ಚಪ್ಪಾಳೆಗಳ ಸುರಿಮಳೆ. ಇದು ಒಂದು ಪ್ರಯೋಗಕ್ಕಲ್ಲ, ಎಲ್ಲ ಪ್ರದರ್ಶನಗಳಿಗೂ ಸಿಕ್ಕಿತು. + +ನಾಟಕದ ಕುರಿತು ಎಲ್ಲ ಪತ್ರಿಕೆಗಳಲ್ಲಿ ಒಳ್ಳೆಯ ಸದ್ದಾಯಿತು. ಪ್ರಶಂಸೆಯ ಸುರಿಮಳೆ. ಮೊದಲ ಪ್ರದರ್ಶನಕ್ಕೆ ಬಂದಿದ್ದ ಲೋಹಿತಾಶ್ವ ಅವರು ಬೆನ್ನು ತಟ್ಟಿದರು. ನಂತರ ಅವರು `ಒಂದು ಮಾತು’ ಎಂದರು. ಏನು ಎಂದು ಅವರತ್ತ ನೋಡಿದೆವು. `ಇದು ನಾನು ಬರೆದ ನಾಟಕವಲ್ಲ. ನಿಮ್ಮಿಷ್ಟದ ನಾಟಕ. ತುಂಬಾ ಗಂಭೀರವಾದ ನಾಟಕವನ್ನು ಕೊಂದಿದ್ದೀರಿ. ಆದರೆ ಪಂಚ್ ಡೈಲಾಗ್ ಮೂಲಕ ಚಪ್ಪಾಳೆ ಹೊಡೆಸಿಕೊಂಡಿದ್ದೀರಿ. ಜನ ಮೆಚ್ಚಿದ್ದು, ಮುಂದುವರಿಸಿಕೊಂಡು ಹೋಗಿ’ ಎಂದು ಹೇಳಿದರು. + +`ಮುಂದೆ ನೀವೇ ಮಾಡಬೇಕಲ್ಲ?’ ಎಂದೆ. `ಈ ರೀತಿ ಮಾಡಲು ನನ್ನಿಂದ ಸಾಧ್ಯವಿಲ್ಲ. ಮಾಡುವುದೂ ಇಲ್ಲ. ನೀವೆ ಮುಂದುವರಿಸಿ, ಒಳ್ಳೆಯದಾಗಲಿ’ ಎಂದು ಹಾರೈಸಿದರು. + + + +ಬಿ.ವಿ.ಕಾರಂತರು, ಪ್ರೇಮಾ ಕಾರಂತರು ನಾಟಕವನ್ನು ಪೂರ್ಣ ನೋಡಿ ರಂಗದ ಮೇಲೆ ಬಂದು ಮೆಚ್ಚುಗೆಯಾಡಿ ನಿಲ್ಲಿಸಬೇಡಿ, ಮುಂದುವರಿಸಿ ಎಂದರು. ಅಲ್ಲದೆ ಬಿ.ವಿ.ಕಾರಂತರು ಪ್ರೇಮಾ ಅವರಿಗೆ `ನಿಂದೇನಾದರೂ ತಕರಾರು ಇದೆಯಾ?’ ಎಂದು ಕೇಳಿದರು. ನಗುತ್ತ ಅವರು `ಚೆನ್ನಾಗಿದೆ. ಜನ ಮೆಚ್ಚಿದ್ದಾರೆ. ನೀವೇ ಮಾಡಿ’ ಎಂದು ಬೆನ್ನು ತಟ್ಟಿದರು. ಹವ್ಯಾಸಿ ತಂಡಗಳ ಕಲಾವಿದರು ವೀಕ್ಷಿಸಿ ಅನಿವಾರ್ಯವಾಗಿ ಸಂತೋಷಪಡುವಂತಾಯಿತು. + +1981ರ ಏಪ್ರಿಲ್ 1 ಹಾಗೂ 2ರಂದು ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯವರು ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ನಾಟಕೋತ್ಸವ ಏರ್ಪಡಿಸಿದ್ದರು. ಮುಖ್ಯವಾಗಿ ಹಿಂದಿಯ ಅದರಲ್ಲೂ ಎನ್‍ಎಸ್‍ಡಿಯ ಮುಖ್ಯಮಂತ್ರಿ ನಾಟಕ ನಮ್ಮ ನಾಟಕಕ್ಕಿಂತ ಚೆನ್ನಾಗಿತ್ತು. ನಮ್ಮದು ಎರಡು ಗಂಟೆಯ ಅವಧಿಯದ್ದಾದರೆ ಅವರದು ಮೂರು ಗಂಟೆಯದು. ರಾಜಕೀಯ ತಲ್ಲಣವನ್ನು ಗಂಭೀರವಾಗಿ ಕೊಂಡೊಯ್ದು ಮುಗಿಸಿದ್ದರು. ನಗುವುದಕ್ಕೆ ಎಲ್ಲೂ ಆಸ್ಪದವಿರಲಿಲ್ಲ. ನಮ್ಮ ಇಡೀ ತಂಡ ನಾಟಕ ನೋಡಿತು. ಅವರದು ರಿಯಲಿಸ್ಟಿಕ್ ರಂಗ ಪರಿಕರವಾದರೆ ನಮ್ಮದು ನಾಟಕೀಯ ರಂಗ ಪರಿಕರವಿತ್ತು. ಬಿ.ವಿ.ಕಾರಂತರು ದೆಹಲಿ ತಂಡಕ್ಕೆ ನಮ್ಮ ನಾಟಕ ತೋರಿಸಲು ಹೇಳಿದರು. ಹೇಗೂ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವನ್ನು ನಾಟಕವಾಡಲು ಕಾದಿರಿಸಿದ್ದೆವು. ಇದರಲ್ಲೇ ಅವರಿಗೆ ಬಿಟ್ಟುಕೊಟ್ಟೆವು. ಮಾರನೆಯ ಬೆಳಿಗ್ಗೆ ನಮ್ಮ ನಾಟಕ ಪ್ರದರ್ಶಿಸಿದೆವು. ನಾಟಕ ನೋಡಿದ ಆ ಇಡೀ ತಂಡ ಬೆರಗಾಯಿತು. ಅವರೊಂದಿಗೆ ನಮ್ಮ ಕನ್ನಡದ ಪ್ರೇಕ್ಷಕರು ನಾಟಕ ನೋಡಲು ಅವಕಾಶ ನೀಡಿದ್ದೆವು. ಯಾಕೆ ಇಷ್ಟೊಂದು ನಗುತ್ತಾರೆಂದು ಅವರಿಗೆ ಅಚ್ಚರಿ. ನಾಟಕದ ನಂತರ ನಮ್ಮದು ಗಂಭೀರ. ನಿಮ್ಮದು ಮನರಂಜನೀಯ ಎಂದು ನಕ್ಕರು. ರಂಗಕರ್ಮಿ ಜಿ.ವಿ.ಶಿವಾನಂದ್ ಅವರ ಪುತ್ರಿ ಪದ್ಮಶ್ರೀ, ಅವರ ಪತಿ ಜೋಸೆಲ್ಕರ್ ಅವರು ಕೈ ಮುಗಿದು, `ಮಾತು ಅರ್ಥವಾಗಲಿಲ್ಲ. ಆದರೆ ನಿಮ್ಮ ಅಭಿನಯ ಅಮೋಘ, ಅದ್ಭುತ’ ಎಂದರು. ಹಿಂದಿಯಲ್ಲಿ ಅವರು ಮುಖ್ಯಮಂತ್ರಿ ಪಾತ್ರ ಮಾಡಿದ್ದರು. + +ಈ ನಾಟಕದ ಮೂಲ ರಚನೆಕಾರ ರಣಜಿತ್ ಕಪೂರ್ ಅವರು ಬೆಂಗಳೂರಿಗೆ ಬಂದಿದ್ದರು. ಆಗ ಬಿ.ವಿ.ರಾಜಾರಾಂ, ನಾನು ಹಾಗೂ ಇತರರು ಭೇಟಿಯಾಗಿ ಪರವಾನಗಿ ಪಡೆಯದೆ ನಾಟಕ ಮಾಡಿದ್ದಕ್ಕೆ ಕ್ಷಮೆ ಕೇಳಿದೆವು. ನಂತರ ಗೌರವಧನ ನೀಡಿ ಮುಂದೆ ಪ್ರದರ್ಶಿಸಲು ಅವಕಾಶ ಕೇಳಿದೆವು. + +ಮುಖ್ಯಮಂತ್ರಿ ಪಾತ್ರವನ್ನು ನಾನೇ ಮಾಡಬೇಕೆಂದು ತೀರ್ಮಾನವಾದಾಗ ಉಳಿದ ಮುಂದಿನ ದಿನಗಳಲ್ಲಿ ಗೌರವ ಉಳಿಸಿಕೊಳ್ಳಲು ಗಂಭೀರವಾಗಿ ತೆಗೆದುಕೊಂಡೆ. ಪಾತ್ರಕ್ಕೆ ಒಂದು ರೂಪ ಕೊಡಲು ನಮ್ಮ ರಾಜ್ಯದ ಮುಖ್ಯಮಂತ್ರಿಗಳ ಪೈಕಿ ದೇವರಾಜ ಅರಸು ಅವರು ಈ ಪಾತ್ರಕ್ಕೆ ಹೆಚ್ಚು ಹೋಲಿಕೆಯಾಗುತ್ತಾರೆಂದು ಭಾವಿಸಿ ಅವರ ನಡೆ, ನುಡಿ ಅಳವಡಿಸಿಕೊಂಡೆ. ಕಚ್ಚೆ ಪಂಚೆ, ಉದ್ದನೆಯ ಜುಬ್ಬ, ಮೇಲೊಂದು ಶಾಲು, ಧೀಮಂತವಾಗಿ ನಿಲ್ಲುವ ಎದೆಗಾರಿಕೆ, ನಿಷ್ಠುರವಾದಿ, ಸಾಹಿತ್ಯಾಭಿಮಾನಿ – ಈ ಎಲ್ಲ ಗುಣಗಳು ಮುಖ್ಯಮಂತ್ರಿ ಪಾತ್ರಕ್ಕಿದ್ದವು. + +ಈ ಪಾತ್ರ ಗೆದ್ದ ನಂತರ ಅದುವರೆಗೆ ಬೆಂಗಳೂರಿನ ರಂಗತಂಡಗಳಲ್ಲಿ ಐದಾರು ಚಂದ್ರುಗಳಿದ್ದರು. ಗುರುತಿಸಲು ಮುಖ್ಯಮಂತ್ರಿ ಪಾತ್ರದ ಚಂದ್ರು ಎಂದು ಬರೆಯುತ್ತಿದ್ದ ಪತ್ರಿಕೆಗಳವರು ಮುಖ್ಯಮಂತ್ರಿ ಚಂದ್ರು ಎಂದು ಪ್ರಕಟಿಸಿದರು. ಅದೇ ಹೆಸರು ಉಳಿಯಿತು. ಈ ನಾಟಕದ ಬಲದಿಂದಲೇ ಶಾಸಕನಾಗಿದ್ದು ಇತಿಹಾಸ. + +ಶಾಲಾ ಕಟ್ಟಡಗಳಿಗೆ ನೆರವಾದ ನಾಟಕ + +ತುಂಬಾ ಸಂತೋಷ ಕೊಡುವ ವಿಷಯವೆಂದರೆ, ಮುಖ್ಯಮಂತ್ರಿ ನಾಟಕದಿಂದ ವಿವಿಧ ರೀತಿಯಲ್ಲಿ ಸಹಾಯ ಮಾಡಿದೆ. ಶಾಸಕನಾಗಿದ್ದಾಗ ಗೌರಿಬಿದನೂರು ತಾಲ್ಲೂಕಿನಲ್ಲಿ 26 ಸ್ಥಳಗಳಲ್ಲಿ ಕಟ್ಟಡರಹಿತ ಸರ್ಕಾರಿ ಪ್ರಾಥಮಿಕ ಶಾಲೆಗಳಿದ್ದವು. ಮರದಡಿ, ದೇವಸ್ಥಾನ, ಸಮುದಾಯ ಭವನಗಳಲ್ಲಿ ಶಾಲೆಗಳು ನಡೆಯುತ್ತಿದ್ದವು. ಇಂಥ ಕಡೆ ಕಟ್ಟಡಕ್ಕೆ ಒಂದೇ ಬಾರಿ ಮಂಜೂರಾತಿ ಕಷ್ಟವಿತ್ತು. ಇದನ್ನು ಮನಗಂಡ ನಾನಾಗ ಯುವಕ, ಉತ್ಸಾಹಿ. ರಾಜಕೀಯ ಪಟ್ಟುಗಳು ಗೊತ್ತಿಲ್ಲದಿದ್ದರೂ ನಟನೆಯ ಜನಪ್ರಿಯತೆಯನ್ನು ಬಳಸಿಕೊಂಡೆ. ಇದಕ್ಕಾಗಿ ಗೌರಿಬಿದನೂರಲ್ಲಿ ವಿಷ್ಣುವರ್ಧನ್, ಅಂಬರೀಷ್, ಶಿವರಾಜಕುಮಾರ್, ರವಿಚಂದ್ರನ್, ಅರವಿಂದ್ ರಮೇಶ್, ಶ್ರೀನಾಥ್, ತಾರಾ, ಪ್ರೇಮಾ, ಶ್ರುತಿ ಸೇರಿದಂತೆ ಮೂವತ್ತಕ್ಕೂ ಅಧಿಕ ಸಿನಿಮಾ ಕಲಾವಿದರನ್ನು ಕರೆದೊಯ್ದು ವಿವಿಧ ಮನರಂಜನೆಯ ಸ್ಟಾರ್ ನೈಟ್ ಎಂಬ ಟಿಕೆಟ್‍ಸಹಿತ ಕಾರ್ಯಕ್ರಮ ಏರ್ಪಡಿಸಿದೆವು. + +ಇನ್ನೊಂದು; ಬೆಂಗಳೂರಿನ ಚೌಡಯ್ಯ ಮೆಮೊರಿಯಲ್ ಹಾಲ್‍ನಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶಿಸಿ ಟಿಕೆಟ್‍ವೊಂದಕ್ಕೆ 500, ಒಂದು ಸಾವಿರ ರೂಪಾಯಿ ಮಾರಾಟ ಮಾಡಿ ಪ್ರದರ್ಶಿಸಿದೆವು. ಆಗ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರ ಅಧ್ಯಕ್ಷತೆಯಲ್ಲಿ, ಆಗ ಲೋಕೋಪಯೋಗಿ ಸಚಿವರಾಗಿದ್ದ ದೇವೇಗೌಡರು ಸೇರಿದಂತೆ ಅನೇಕ ಸಚಿವರು ಭಾಗವಹಿಸಿದ್ದರು. ಡಾ.ರಾಜಕುಮಾರ್ ದಂಪತಿಯೂ ಪಾಲ್ಗೊಂಡಿದ್ದರು. + +ಈ ಎರಡೂ ಕಾರ್ಯಕ್ರಮಗಳಿಂದ ಅಂದಿನ ಕಾಲಕ್ಕೆ ಸುಮಾರು ಏಳು ಲಕ್ಷ ರೂಪಾಯಿ ಸಂಗ್ರಹವಾಯಿತು. ಗಮನಾರ್ಹವಾದುದು; ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆಯವರು 25 ಸಾವಿರ ರೂಪಾಯಿಗಳ ಟಿಕೆಟುಗಳನ್ನು, ನಟ ಅಂಬರೀಷ್ ಅವರೂ 25 ಸಾವಿರ ರೂಪಾಯಿಯ ಟಿಕೆಟುಗಳನ್ನು ಕೊಂಡರು. ಅಲ್ಲದೆ ಅಂಬರೀಷ್ ಅವರು ಸ್ಟಾರ್ ನೈಟ್‍ಗೆ ಮೂವತ್ತು ಕಲಾವಿದರನ್ನು ತಮ್ಮ ವೆಚ್ಚದಲ್ಲೇ ಕರೆತಂದಿದ್ದರು. ಹೀಗೆ ಸಂಗ್ರಹವಾದ ಏಳು ಲಕ್ಷ ರೂಪಾಯಿ ದುಡ್ಡಿನಿಂದ ಗೌರಿಬಿದನೂರು ತಾಲ್ಲೂಕಿನಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಸಮಿತಿ ರಚಿಸಿ ನಿಗದಿತ ಅವಧಿಯಲ್ಲಿ 26 ಶಾಲೆಗಳ ಕಟ್ಟಡಗಳನ್ನು ಪೂರ್ಣಗೊಳಿಸಿದ ತೃಪ್ತಿಯಿದೆ. + +ಬೆಂಗಳೂರಿನ ರಾಜಾಜಿನಗರದಲ್ಲಿರುವ ನಮ್ಮ ಸಾದರ ಸಮಾಜದ ಸಂಘದ ಕಟ್ಟಡದ ಸಹಾಯಾರ್ಥ ಮುಖ್ಯಮಂತ್ರಿ ನಾಟಕವನ್ನು ಪ್ರದರ್ಶಿಸಿ ನೆರವಾದೆವು. ಆಮೇಲೆ ಬಡವರ ಮದುವೆಗಳಿಗೆ, ಕಲಾವಿದರ ಕಷ್ಟಕ್ಕೆ, ವೈದ್ಯಕೀಯ ಸೇವೆಗೆ, ರಂಗಭೂಮಿಯ ತಾಂತ್ರಿಕ ವರ್ಗದವರ ನೆರವಿಗೆ, ಶಿಕ್ಷಣ ಸಂಸ್ಥೆಗಳಿಗೆ, ಅತಿವೃಷ್ಟಿ, ಅನಾವೃಷ್ಟಿ ಪರಿಹಾರಕ್ಕೆ ಮುಖ್ಯಮಂತ್ರಿ ನಾಟಕ ಪ್ರದರ್ಶನ ನೀಡಿ, ಟಿಕೆಟ್ ಮೂಲಕ ದುಡ್ಡು ಸಂಗ್ರಹಿಸಿಕೊಟ್ಟಿದ್ದೇವೆ. ನಲವತ್ತಕ್ಕೂ ಹೆಚ್ಚು ಕಡೆ ಹೀಗೆ ನೆರವಾದ ಖುಷಿಯಿದೆ. + +ಒಂದೇ ದಿನ ಎರಡು ಪ್ರದರ್ಶನ + +ಬೆಳಗಾವಿಯಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನ ನಿಗದಿಯಾಗಿತ್ತು. ಇಷ್ಟೊತ್ತಿಗೆ ನಾನು ಶಾಸಕನಾಗಿ, ಜನಪ್ರಿಯ ನಟನಾಗಿ, ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸುತ್ತ ಹೀಗೆ ಒತ್ತಡದಲ್ಲಿ ಕೆಲಸ ಮಾಡುವಾಗಲೂ ರಂಗಭೂಮಿ ಮೇಲಿನ ಅಪಾರ ಪ್ರೀತಿಯಿಂದ ನಾಟಕ ಒಪ್ಪಿಕೊಂಡಿದ್ದೆ. ದೂರದಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದ್ದರೂ ನಾಟಕವಾಡುತ್ತಿದ್ದೆ. ಹೀಗೆ ಬೆಳಗಾವಿಯಲ್ಲಿನ ಪ್ರದರ್ಶನಕ್ಕೆ ಮುನ್ನಾದಿನ ಚಿಕ್ಕಮಗಳೂರಿನಲ್ಲಿ ಸಿನಿಮಾವೊಂದರ ಶೂಟಿಂಗ್‍ದಿಂದ ಬಿಡಿಸಿಕೊಂಡು ರಾತ್ರಿ ಪ್ರಯಾಣಿಸಿ ಬೆಳಗಾವಿ ತಲುಪಿದೆ. ನಾಟಕದ ನಂತರ ರಾತ್ರೋರಾತ್ರಿ ಚಿಕ್ಕಮಗಳೂರು ತಲುಪಬೇಕಿತ್ತು. ನಮ್ಮ ತಂಡ ಬೆಂಗಳೂರಿನಿಂದ ಪ್ರದರ್ಶನದ ಹಿಂದಿನ ದಿನ ಮೆಟಾಡೋರ್ ವಾಹನದಲ್ಲಿ ಹೊರಟು ಬೆಳಗಾವಿ ತಲುಪಿತ್ತು. ಬೆಳಿಗ್ಗೆ ತಂಡ ಸೇರಿಕೊಂಡೆ. ತಂಡದವರಿಗೆ ಮತ್ತು ನನಗೆ ಸರಿಯಾಗಿ ನಿದ್ದೆಯಿರಲಿಲ್ಲ. ಮೈಕೈ ನೋವು, ಸುಸ್ತು ಇತ್ತು. ಆದರೂ ನಿದ್ದೆ ಮಾಡದೆ ತಾಲೀಮು ನಡೆಸಿದೆವು. ಇದರ ಮಧ್ಯೆ ಕಾಯಂ ಆಗಿ ಪಾತ್ರ ಮಾಡುತ್ತಿದ್ದ ಕೆಲ ಕಲಾವಿದರು ಗೈರುಹಾಜರಿಯಿಂದಾಗಿ ಹೊಸ ಕಲಾವಿದರಿದ್ದರು. ಹೀಗಾಗಿ ತಾಲೀಮು ಅನಿವಾರ್ಯವಾಗಿತ್ತು. ಬೆಳಗಾವಿಯ ರಂಗಮಂದಿರದ ಅಷ್ಟೂ ಸೀಟುಗಳ ಟಿಕೆಟುಗಳು ಮಾರಾಟವಾಗಿದ್ದವು. ಸಂಜೆ ಆರೂವರೆಗೆ ಪ್ರದರ್ಶನ ಶುರುವಾಗಬೇಕಿತ್ತು. ಆದರೆ ಗಲಾಟೆಯೊ ಗಲಾಟೆ. ಕಾರಣ; ಇನ್ನೊಂದು ಪ್ರದರ್ಶನಕ್ಕಾಗುವಷ್ಟು ಪ್ರೇಕ್ಷಕರು ನೆರೆದು ಟಿಕೆಟುಗಳಿಗಾಗಿ ಕಾದಿದ್ದರು. ಸಂಘಟಕರಿಗೂ ಅವರಿಗೂ ವಾಗ್ವಾದ ನಡೆದಿತ್ತು. ಪೊಲೀಸರು ಮಧ್ಯ ಪ್ರವೇಶಿಸಿ ನನ್ನ, ರಾಜಾರಾಂ ಹಾಗೂ ಸಂಘಟಕರೊಂದಿಗೆ ಸಂಧಾನ ನಡೆಸಿದರು. ಇದರ ಪರಿಣಾಮ; ಇನ್ನೊಂದು ಪ್ರದರ್ಶನಕ್ಕೆ ಬೇಡಿಕೆ ಇಟ್ಟರು. ಜನರ ಅಭಿಮಾನಕ್ಕೆ ಸೋತು ಆಯೋಜಕರ ಮತ್ತು ರಾಜಾರಾಂ ಅವರ ಸಮಸ್ಯೆ ಬಗೆಹರಿಸಲು ಅನಿವಾರ್ಯವಾಗಿ ಒಪ್ಪಿಕೊಂಡೆ. + +ಸಂಜೆ ಆರೂವರೆಯಿಂದ ರಾತ್ರಿ ಒಂಬತ್ತೂವರೆಗೆ ಒಂದು ಪ್ರದರ್ಶನದ ನಂತರ ಒಂಬತ್ತೂವರೆಗೆ ಮತ್ತೊಂದು ಪ್ರದರ್ಶನವಿತ್ತು. ಅಭಿನಯಿಸಲು ಕಷ್ಟವಲ್ಲ. ಆದರೆ ಪ್ರಯಾಣದ ಆಯಾಸ, ಸರಿಯಾಗಿ ಸಿಗದ ವಿಶ್ರಾಂತಿ ಮರೆತು ಪ್ರೇಕ್ಷಕರ ಪ್ರೀತಿಗೆ ಸೋತೆ. ಮೊದಲ ಪ್ರದರ್ಶನದ ನಂತರ ಊಟ ಮಾಡಿ ಮತ್ತೊಂದು ಪ್ರದರ್ಶನ ನೀಡಿದೆ. ಸಿನಿಮಾದಲ್ಲಿ ದುಡ್ಡು ಸಿಗುತ್ತದೆ. ಆದರೆ ರಂಗಭೂಮಿಯಲ್ಲಿ ಶ್ರಮದೊಂದಿಗೆ ತೃಪ್ತಿ ಸಿಗುತ್ತದೆ. ಮರುದಿನ ಬೆಳಿಗ್ಗೆ ಚಿಕ್ಕಮಗಳೂರು ತಲುಪಿ ಚಿತ್ರೀಕರಣದಲ್ಲಿ ಪಾಲ್ಗೊಂಡೆ. + +ಹೆಂಡದ ಲಾರಿ ಏರಿ ಚಿಗಟೇರಿಗೆ ಪಯಣ… + +ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಹಾಗೂ ಚಿಗಟೇರಿ ನಂತರ ಬಾಗಲಕೋಟೆ ಜಿಲ್ಲೆಯ ಇಲಕಲ್ಲದಲ್ಲಿ `ಮುಖ್ಯಮಂತ್ರಿ’ ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ಯಥಾಪ್ರಕಾರ ಸುಸಜ್ಜಿತವಲ್ಲದ ಮೆಟಾಡೋರ್‍ನಲ್ಲಿ ಕಲಾವಿದರೊಂದಿಗೆ ನಾನೂ ಹೊರಟೆ. ಇಲಕಲ್ಲದಲ್ಲಿ ಪ್ರದರ್ಶನ ಯಶಸ್ವಿಯಾಗಿ ಅಲ್ಲಿಂದ ಹಗರಿಬೊಮ್ಮನಹಳ್ಳಿಗೆ ಹೊರಟೆವು. ಅಲ್ಲಿಯೂ ಹೌಸ್‍ಫುಲ್. ಅಲ್ಲಿಯೇ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಚಿಗಟೇರಿಗೆ ಹೊರಟೆವು. ಕಡಿಮೆ ಬಾಡಿಗೆಯ ಮೆಟಾಡೋರ್ ಇಪ್ಪತ್ತು ಕಲಾವಿದರನ್ನು ಹೊತ್ತುಕೊಂಡು ಹೊರಟಿತ್ತು. ಅದರ ಮೇಲೆ ನಾಟಕದ ಪರಿಕರಗಳಿದ್ದವು (ಸೌಂಡ್, ಲೈಟ್, ಹಾಸಿಗೆ, ದಿಂಬು ಇತ್ಯಾದಿ). ಇದು ಪ್ರತಿ ಪ್ರವಾಸದ ಪದ್ಧತಿ. ಸಂಜೆಯ ಹೊತ್ತು ತಿಂಡಿ ಮುಗಿಸಿಕೊಂಡು ಚಿಗಟೇರಿಯತ್ತ ಪ್ರಯಾಣಿಸುವಾಗ ಮೆಟಾಡೋರ್‍ನ ಬೆಲ್ಟ್ ಜಾಯಿಂಟ್ ಮುರಿದು ನಿಯಂತ್ರಣಕ್ಕೆ ಬಾರದೆ ಮೋರಿಗೆ ಗುದ್ದಿತು. ಗುದ್ದಿದ ರಭಸಕ್ಕೆ ಮೆಟಾಡೋರ್‍ನ ಅರ್ಧ ಭಾಗ ಮೋರಿ ಮೇಲೆ ನಿಂತಿತು. ನಮ್ಮ ಭಯ ಹೆಚ್ಚಿತು. ಗಾಡಿಯ ಒಳಗಿದ್ದೇವೆ. ಪರಿಕರಗಳೆಲ್ಲ ಗ್ರಿಲ್ ಸಮೇತ ಹಳ್ಳದಲ್ಲಿ ಬಿದ್ದಿದ್ದವು. ಅಲುಗಾಡಲೂ ಭಯ. ಅನುಭವಿ ಚಾಲಕ `ಹೆಂಗಿದ್ದೀರಿ ಹಾಗೆ ಕೂತೀರಿ. ಗಾಡಿ ಬೀಳದ ಹಾಗೆ ಪ್ರಯತ್ನಿಸುವೆ’ ಎಂದು ಭರವಸೆ ನೀಡಿದ. ಅಲ್ಲಾಡಿದರೆ ಗಾಡಿಯು ಯಾವ ಗಳಿಗೆಯಲ್ಲಾದರೂ ಹಳ್ಳಕ್ಕೆ ಬೀಳುವ ಸಂಭವವಿತ್ತು. ಖ್ಯಾತ ರಂಗನಟಿ ಭಾರ್ಗವಿ ನಾರಾಯಣ ಸೇರಿ ಇತರ ಕಲಾವಿದರು ತುಂಬಾ ಹೆದರಿದ್ದರು. ಮೆಟಾಡೋರ್‍ನ ಹಿಂದೆ ಹೋದ ಚಾಲಕ, ಅದನ್ನು ಹಿಡಿದುಕೊಂಡು `ಮೂವರು ಮಾತ್ರ ನಿಧಾನವಾಗಿ ಇಳಿದು ಬನ್ನಿ’ ಎಂದರು. ಮೂವರು ಇಳಿದು ಚಾಲಕನೊಂದಿಗೆ ಗಾಡಿ ಮುಂದಕ್ಕೆ ಬೀಳದ ಹಾಗೆ ಹಿಡಿದುಕೊಂಡರು. ನಂತರ ನಿಧಾನವಾಗಿ ಒಬ್ಬೊಬ್ಬರೆ ಇಳಿದೆವು. ಇಳಿದು ಕೆಳಗೆ ನೋಡಿದರೆ ಮೈ ಜುಮ್ಮೆಂದಿತು. ಹದಿನೈದು ಅಡಿಗೂ ಅಧಿಕ ಆಳವಾದ ಹಳ್ಳ. ಕಲ್ಲುಮುಳ್ಳುಗಳು ಬೇರೆ. ಬಿದ್ದಿದ್ದರೆ ನಾವು ಉಳಿಯುವುದು ಕಷ್ಟವಿತ್ತು. + +ಬಳಿಕ ಎಲ್ಲರೂ ಸುಧಾರಿಸಿಕೊಂಡೆವು. ಮುಂದೇನು ಮಾಡಬೇಕೆಂದು ತೋಚಲಿಲ್ಲ. ಕಲಾವಿದರೆಲ್ಲ ಸೇರಿ ಪರಿಕರಗಳನ್ನು ಹೊತ್ತು ತಂದರು. ಮೆಟಾಡೋರ್ ಬಿಟ್ಟು ಬೇರೆ ಗಾಡಿಯಲ್ಲಿ ಪ್ರಯಾಣಿಸಬೇಕಿತ್ತು. ಆಗ ಮೊಬೈಲು ಫೋನುಗಳೂ ಇರಲಿಲ್ಲ. ಅಷ್ಟೊತ್ತಿಗೆ ರಾತ್ರಿ ಹತ್ತಾಗಿತ್ತು. ಚಿಗಟೇರಿಯಲ್ಲಿ ಹನ್ನೊಂದು ಗಂಟೆಗೆ ನಾಟಕವಿತ್ತು. ಅದು ಜಾನಪದ ತಜ್ಞರಾಗಿದ್ದ ಮುದೇನೂರು ಸಂಗಣ್ಣ ಅವರ ಊರು. ನಮ್ಮ ಬಳಿಯಿದ್ದ ಕುಡಿಯುವ ನೀರೆಲ್ಲ ಖಾಲಿ. ತಿನ್ನಲು ಏನೂ ಇಲ್ಲ. ಯಾವುದಾದರೂ ವಾಹನ ಬರುತ್ತದೆಂದು ಕಾದೆವು. ದೂರದಲ್ಲಿ ವಾಹನವೊಂದರ ಲೈಟುಗಳು ಕಾಣಿಸಿದಾಗ ಸ್ವಲ್ಪ ಜೀವ ಬಂದ ಹಾಗಾಯಿತು. ಕಲಾವಿದೆಯರೊಂದಿಗೆ ನಾನು ಮುಂದೆ ನಿಂತು ಕೈ ಮಾಡಿದೆವು. ನಮ್ಮ ಪುಣ್ಯಕ್ಕೆ ಚಾಲಕ ನಿಲ್ಲಿಸಿದಾಗ ನಮ್ಮ ಕಷ್ಟ ವಿವರಿಸಿದೆವು. ಆತ ಕರೆದುಕೊಂಡು ಹೋಗಲು ಒಪ್ಪಿದ. ಅದು ಹೆಂಡ ಸಾಗಿಸುತ್ತಿದ್ದ ಲಾರಿಯಾಗಿತ್ತು. ಕಲಾವಿದೆಯರೆಲ್ಲ ಕ್ಯಾಬಿನ್ನಿನಲ್ಲಿ ಕೂತರು. ನಾವೆಲ್ಲ ಹಿಂದೆ ಲಾರಿ ಹತ್ತಿ ಹೆಂಡದ ಪಿಪಾಯಿಗಳ ಬಳಿ ನಿಂತೆವು. ಆದರೆ ಆಸರೆಗೆ ಪಿಪಾಯಿ ಬಾಯಿಗೆ ತುರುಕಿದ್ದ ಈಚಲು ಟೊಂಗೆಯನ್ನು ಹಿಡಿದುಕೊಂಡು ನಿಲ್ಲಬೇಕಾಯಿತು. ಲಾರಿ ಹೊರಟಾಗ ನಮ್ಮ ಮೈಮೇಲೆ ಹೆಂಡ ಚಿಮ್ಮುತ್ತಿತ್ತು. ವಾಸನೆ ಬೇರೆ. ಕಷ್ಟವಾದರೂ ಅನಿವಾರ್ಯ. ಹೀಗೆ ಹೊರಟಾಗ ಸಿಕ್ಕ ಹಳ್ಳಿಯೊಂದರಲ್ಲಿ ಚಾಲಕನ ಸಹಾಯದಿಂದ ಮತ್ತೊಂದು ವಾಹನ ಏರ್ಪಾಟು ಮಾಡಿ ಉಳಿದ ಕಲಾವಿದರನ್ನು ಹಾಗೂ ಪರಿಕರ ತರಲು ವ್ಯವಸ್ಥೆಯಾಯಿತು. + +ನಿಧಾನವಾಗಿ ಹೊರಟ ಲಾರಿ ಚಿಗಟೇರಿ ತಲುಪಿದಾಗ ರಾತ್ರಿ ಎರಡೂವರೆ. ಹೆಂಡದ ಲಾರಿಯಿಂದ ನಾವು ಇಳಿಯುವುದು ಕಂಡ ಅಲ್ಲಿನವರು ಅನುಮಾನ ಪಡಲಿಲ್ಲ. ಆದ ಘಟನೆಯನ್ನು ಮುದೇನೂರು ಸಂಗಣ್ಣ ಅವರಿಗೆ ವಿವರಿಸಿದೆವು. ಆಮೇಲೆ ಒಂದು ಗಂಟೆಯಾದ ಮೇಲೆ ಇನ್ನೊಂದು ವಾಹನದಲ್ಲಿ ಉಳಿದ ಕಲಾವಿದರು ಬಂದರು. ಆಗ ಮುದೇನೂರು ಸಂಗಣ್ಣ ಅವರು ನೆರೆದಿದ್ದ ಜನರಿಗೆ ನಡೆದ ಘಟನೆ ವಿವರಿಸಿ ಬೆಳಗಿನ ಜಾವ `ಮೂರೂವರೆಗೆ ನಾಟಕ ಶುರುವಾಗುತ್ತದೆ. ಶಾಂತವಾಗಿರಿ’ ಎಂದು ಹೇಳಿದರು. ಬಳಿಕ ಸ್ನಾನ ಮಾಡಿ ಸಿದ್ಧರಾದೆವು. ಮೂರೂಮುಕ್ಕಾಲಿಗೆ ನಾಟಕ ಶುರುವಾಗಿ ನಸುಕಿನ ಐದೂವರೆಗೆ ಮುಗಿಯಿತು. ಪ್ರೇಕ್ಷಕರ ಜೋರಾದ ಚಪ್ಪಾಳೆ, ಶಿಳ್ಳೆ, ಕೇಕೆ ಕೇಳಿ ಕಷ್ಟ ಮರೆತೆವು. + +ಆಮೇಲೆ ಬೆಳಗಿನ ಜಾವ ಬಿಸಿ ಬಿಸಿ ಒಬ್ಬಟ್ಟಿನ ಊಟ ಮಾಡಿ, ವಿಶ್ರಾಂತಿ ಪಡೆದು ಬೆಳಿಗ್ಗೆ ತಿಂಡಿ ತಿಂದು ಬೆಂಗಳೂರಿಗೆ ಬೇರೊಂದು ವಾಹನದಲ್ಲಿ ಹೊರಟೆವು. ಆದರೆ ಕೆಟ್ಟ ಮೆಟಾಡೋರ್ ಹಾಗೂ ಚಾಲಕನನ್ನು ಮರೆಯದೆ ಜೊತೆಯಲ್ಲೇ ಕರೆದುಕೊಂಡು ಬಂದೆವು. + +ಮೊದಲು ನಮ್ಮ ಕ್ಷಮೆ, ಆಮೇಲೆ ಪ್ರೇಕ್ಷಕರ ಕ್ಷಮೆ + +ದಾವಣಗೆರೆಯಲ್ಲಿ ವರ್ಷದ ಕೊನೆಯ ದಿನ ಅಂದರೆ ಡಿಸೆಂಬರ್ 30, 31ರಂದು ಮುಖ್ಯಮಂತ್ರಿ ನಾಟಕ ಪ್ರದರ್ಶನಕ್ಕೆ ಒಪ್ಪಿದ್ದೆವು. ಚಿತ್ರೀಕರಣದಿಂದ ಬಿಡಿಸಿಕೊಂಡು ಬರಬಹುದೆಂಬ ನಂಬಿಕೆಯಿಂದ ನಾಟಕಕ್ಕೆ ಒಪ್ಪಿಕೊಂಡಿದ್ದೆ. ಚಿತ್ರೀಕರಣವು ಗೋವಾದಲ್ಲಿತ್ತು. ಆದರೆ ಚಿತ್ರೀಕರಣದಿಂದ ಬಿಡಿಸಿಕೊಂಡು ಬರಲಾಗಲಿಲ್ಲ. ಅಷ್ಟರಲ್ಲಿ ತಂಡ ದಾವಣಗೆರೆ ತಲುಪಿತ್ತು. ಆದರೆ ನಾನಿಲ್ಲದೆ ಇರುವುದರಿಂದ ನಾಟಕ ಆಗುವುದಿಲ್ಲವೆಂದಾಗ ಪ್ರೇಕ್ಷಕರು ಗಲಾಟೆ ಮಾಡಿ ಹೇಗಾದರೂ ಮಾಡಿ ನಾಟಕ ಮಾಡಿ ಎಂದು ಒತ್ತಾಯಿಸಿದರು. ಕೊನೆಗೆ ರಾಜಕೀಯ ಪ್ರತಿನಿಧಿ, ಪೊಲೀಸರ ಮಧ್ಯ ಪ್ರವೇಶದಿಂದ ತಂಡದವರಿಗೆ ತೊಂದರೆಯಾಗದಂತೆ ನೋಡಿಕೊಂಡರು. ನಂತರ ಜನವರಿ 1 ಹಾಗೂ 2ರಂದು ನಾಟಕ ಮಾಡಿಸುತ್ತೇವೆಂದು ಭರವಸೆ ನೀಡಿತು ನಮ್ಮ ತಂಡ. ಇದಕ್ಕಾಗಿ ನನ್ನ ಮೇಲೆ ರಾಜಕೀಯ ಒತ್ತಡ ತಂದರು ದಾವಣಗೆರೆಯವರು. ಇದರಿಂದ ರಾತ್ರೋರಾತ್ರಿ ದಾವಣಗೆರೆಗೆ ಬರುವ ಹಾಗೆ ಮಾಡಿದರು ಅಲ್ಲಿನ ಸ್ಥಳೀಯರು. ನಾನಲ್ಲಿಗೆ ತಲುಪಿದ ಕೂಡಲೇ ಬಿಗುವಿನ ವಾತಾವರಣ ತಿಳಿಯಾಯಿತು. ತಂಡದಿಂದ ಕ್ಷಮೆ ಕೇಳಿ ನಾಟಕವಾಡಿದೆವು. ನಂತರ ಪ್ರೇಕ್ಷಕರು ನಮ್ಮಲ್ಲಿ ಕ್ಷಮೆ ಕೇಳಿದರು. + +ಪ್ರದರ್ಶನಗೊಳ್ಳದ ನಾಟಕ + +1989ರಲ್ಲಿ ಬೆನ್‍ಫಿಟ್ ಷೋಗಾಗಿ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನಕ್ಕೆ ಒಪ್ಪಿದ್ದೆ. ನಂತರ ಲೋಕಸಭಾ ಚುನಾವಣೆ ಘೋಷಣೆಯಾಯಿತು. ಆಗ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದೆ. ಹೀಗೆ ಚುನಾವಣೆಯಿಂದಾಗಿ ನಾಟಕ ಪ್ರದರ್ಶನದ ದಿನಾಂಕ ಬದಲು ಮಾಡಲು ಮನವಿ ಮಾಡಿಕೊಂಡೆವು. ಸಂಘಟಕರಾದ ಸುರೇಶ್ ಅವರು ಟಿಕೆಟ್ ಮಾರಾಟ ಮಾಡಿದ್ದರು. ಆದರೂ ನಮ್ಮ ಮಾತಿಗೆ ಒಪ್ಪಿ ಚುನಾವಣೆ ನಂತರ ಎರಡು ಪ್ರದರ್ಶನಗಳಿಗೆ ಸಜ್ಜಾಗಿದ್ದರು. ಇದರಿಂದ ಒಂದೇ ದಿನ ಎರಡು ಪ್ರದರ್ಶನಗಳಿಗೆ ಒಪ್ಪಿಕೊಂಡೆವು. ಆದರೆ ಬಿರುಗಾಳಿ, ಮಳೆಯಿಂದ ಟೂರಿಂಗ್ ಟಾಕೀಸಿನ ತಗಡುಗಳೆಲ್ಲ ಹಾರಿ ಹೋಗಿ ಬಯಲು ರಂಗಭೂಮಿಯಾಯಿತು. ಸುರಿಯುವ ಮಳೆಯಿಂದಾಗಿ ನಾಟಕ ಆಡಲಾಗಲಿಲ್ಲ. ಇದರಿಂದ ಕಂಗಾಲಾದ ಸುರೇಶ್ ಅವರು ಅಳುವುದು ಕಂಡು `ಅಳಬೇಡ, ಮತ್ತೆ ನಾಟಕ ಆಡುತ್ತೇವೆ. ನಷ್ಟವಾಗದ ಹಾಗೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ಕೊಟ್ಟೆವು. ಮತ್ತೊಮ್ಮೆ ಕೊಟ್ಟ ದಿನಾಂಕಗಳು ಬರುವ ಹೊತ್ತಿಗೆ ಸುರೇಶನೇ ತೀರಿಕೊಂಡರು. + +ಕೆಲದಿನಗಳ ನಂತರ ಭದ್ರಾವತಿಗೆ ಹೋಗಿ ಸುರೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಅಲ್ಪಸ್ವಲ್ಪ ಹಣಕಾಸಿನ ನೆರವಾದೆವು. ಈ ಘಟನೆ ನಮ್ಮನ್ನು ಅನೇಕ ಬಾರಿ ಕಾಡಿದೆ. + +ಮೂತಿ ನೋಡಲು ಮುಗಿಬಿದ್ದರು + +`ಮುಖ್ಯಮಂತ್ರಿ’ ನಾಟಕ 300 ಪ್ರೇಕ್ಷಕರಿಂದ ಹಿಡಿದು ಏಕಕಾಲದಲ್ಲಿ 20 ಸಾವಿರ ಪ್ರೇಕ್ಷಕರ ಎದುರು ನಾಟಕ ಆಡಿದ್ದೇವೆ. ಇಪ್ಪತ್ತು ಸಾವಿರ ಹೇಗೆಂದರೆ ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಉತ್ಸವಗಳಲ್ಲಿ. ಹೀಗೆ ಮಂಗಳೂರಿನಲ್ಲಿ ತರಂಗಿಣಿ ಎನ್ನುವ ಕಲಾಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಪ್ರತಿ ಶನಿವಾರ, ಭಾನುವಾರ ಮುಖ್ಯಮಂತ್ರಿ ನಾಟಕ ಪ್ರದರ್ಶಿಸಿದೆವು. ಇದು ಜಯಭೇರಿ ಬಾರಿಸಿತು. + +ಇನ್ನೊಮ್ಮೆ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಬಯಲಲ್ಲಿ ನಾಟಕ ಏರ್ಪಾಡಾಗಿತ್ತು. ಸುಮಾರು ಎರಡು ಸಾವಿರ ಪ್ರೇಕ್ಷಕರು ಸೇರಿದ್ದರು. ಜೋರು ಮಳೆಯಿಂದ ನಾಟಕದ ಸೆಟ್, ಮೈಕು ಹಾಳಾದವು. ಪ್ರೇಕ್ಷಕರ ಒಕ್ಕೊರಲಿನಿಂದ ಎಷ್ಟೊತ್ತಾದರೂ ಕಾಯುತ್ತೇವೆ, ಕಾಲೇಜಿನ ಕಾರಿಡಾರಿನಲ್ಲೇ ನಾಟಕವಾಡಿ ಎಂದು ಒತ್ತಾಯಿಸಿದರು. ಮತ್ತೊಮ್ಮೆ ನಾಟಕ ಪ್ರದರ್ಶಿಸುತ್ತೇವೆ, ಪರಿಕರ ಹಾಳಾಗಿದೆ, ಮೈಕು ಕೆಟ್ಟಿದೆ ಎಂದರೂ ಕೇಳಲಿಲ್ಲ. ಕೊನೆಗೆ ಪ್ರೇಕ್ಷಕರೇ ಮೈಕು, ಲೈಟು ತಂದರು. + +ಕಾರಿಡಾರಿನಲ್ಲಿ ಒಂದೇ ಮೈಕಿನೆದುರು ನಾಟಕ ಆಡಿದೆವು. ಇದೆಲ್ಲ ಮುಖ್ಯಮಂತ್ರಿ ನಾಟಕದ ಮೇಲಿನ ಅಭಿಮಾನ ಜೊತೆಗೆ ಆ ಪಾತ್ರದ ನಾನು ಜನಪ್ರಿಯ ನಟನಾಗಿರುವುದರೊಂದಿಗೆ ಮಾತು ಕೇಳಲು, ಮೂತಿ ನೋಡಲು ಮುಗಿಬಿದ್ದರು. ಅವರಿಗೆ ನಿರಾಸೆ ಮಾಡಲಿಲ್ಲ. + +ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಮುಖ್ಯಮಂತ್ರಿ ನಾಟಕ ಪ್ರದರ್ಶನಕ್ಕೆ ಏರ್ಪಾಡಾಯಿತು. ಆದರೆ ಜಗನ್ಮೋಹನ ಅರಮನೆ ಪ್ರತಿಧ್ವನಿಸುವುದರಿಂದ ನಾಟಕ ಆಡುವುದು ಕಷ್ಟ. ಅನಿವಾರ್ಯಕ್ಕಾಗಿ ಆಡಿದೆವು. ಅಂದು ನಾಟಕ ನೋಡಿದವರಿಗೆ ತೃಪ್ತಿಯಿಲ್ಲ, ನಮಗೆ ಸಮಾಧಾನವಿಲ್ಲ. ಬೇಸರದಿಂದಲೇ ಬೆಂಗಳೂರಿಗೆ ಬಂದೆವು. + +ಬಿಚ್ಚಿದ ಕಚ್ಚೆಪಂಚೆ, ಹರಿದ ಜುಬ್ಬ… + +ಬಳ್ಳಾರಿ ಜಿಲ್ಲೆಯ ಹೊಸಪೇಟೆಯ ಟೂರಿಂಗ್ ಟಾಕೀಸಿನಲ್ಲಿ `ಮುಖ್ಯಮಂತ್ರಿ’ ನಾಟಕದ ಪ್ರದರ್ಶನ ನಿಗದಿಯಾಗಿತ್ತು. ಆದರೆ ನಿಗದಿತ ಆಸನಕ್ಕಿಂತ ಹೆಚ್ಚು ಟಿಕೆಟುಗಳು ಮಾರಾಟವಾಗಿದ್ದವು. ಸಿನಿಮಾಕ್ಕಾಗಿ ಬೆಂಗಳೂರಿನಲ್ಲಿದ್ದ ನಾನು, ಅರ್ಧ ದಿನದ ಶೂಟಿಂಗ್ ಮುಗಿಸಿಕೊಂಡು ಹೊಸಪೇಟೆಗೆ ಹೊರಟೆ. ಅಲ್ಲಿಗೆ ತಲುಪಿದಾಗ ಪ್ರೇಕ್ಷಕರ ಹರ್ಷೋದ್ಗಾರ, ಉತ್ಸಾಹ ಹೆಚ್ಚಿ ನಾಟಕಕ್ಕೆ ಮುನ್ನ ನಮಗೆಲ್ಲ ಸನ್ಮಾನ ನಡೆಯಲಿತ್ತು. ಆದರೆ ಹೊರಗೆ ಗದ್ದಲ, ಕಿರುಚಾಟ ಹೆಚ್ಚಿತ್ತು. ಆಗಿದ್ದೇನೆಂದರೆ ಇನ್ನೊಂದು ಪ್ರದರ್ಶನಕ್ಕೆ ಆಗುವಷ್ಟು ಪ್ರೇಕ್ಷಕರು ಸೇರಿದ್ದಾರೆ. ಸಂಘಟಕರು ಅಸಹಾಯಕರಾಗಿದ್ದರು. ಸಮಾರಂಭ ನಡೆಯುವಾಗಲೇ ತಗಡಿನ ಟಾಕೀಸಿನ ಮೇಲೆ ಕಲ್ಲುಗಳ ಸುರಿಮಳೆಯಾಯಿತು. ನಂತರ ಸಂಘಟಕರನ್ನು, ಪೊಲೀಸರನ್ನು ಕರೆದು ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡೆ. ಈ ಪ್ರದರ್ಶನದ ನಂತರ ಸ್ವಲ್ಪ ಹೊತ್ತಿಗೆ ಮತ್ತೊಂದು ಪ್ರದರ್ಶನ ಕೊಡುವೆ ಎಂದೆ. ನೆರೆದಿದ್ದ ಪ್ರೇಕ್ಷಕರು ನಂಬಲಿಲ್ಲ. ನಾನೇ ಅವರ ಬಳಿ ಹೋಗಿ ಪೊಲೀಸರ ವಾಹನದ ಮೈಕಿನಲ್ಲಿ ನಿಮಗಾಗಿ ನಾಟಕ ಮಾಡುತ್ತೇವೆಂದು ಘೋಷಿಸಿದೆ. ಆಗ ಪ್ರೇಕ್ಷಕರು ಕೇಕೆ ಹಾಕಿ, ಸಿಳ್ಳೆ ಹೊಡೆದು ನನ್ನನ್ನು ಎತ್ತಿಕೊಂಡು ಒಬ್ಬರಿಂದ ಒಬ್ಬರಿಗೆ ಪಾಸ್ ಮಾಡಿದರು. ಹೀಗೆ ಏಳೆಂಟು ನಿಮಿಷಗಳಾಗಿರಬೇಕು. ಅಷ್ಟರಲ್ಲಿ ನೀರಿನ ಟ್ಯಾಂಕಿನ ಏಣಿ ಹತ್ತಲು ಪೊಲೀಸರು ಸಲಹೆ ನೀಡಿದರು. ಐದಾರು ಮೆಟ್ಟಿಲು ಹತ್ತಿದ ಮೇಲೆ ಮಾತನಾಡಿ, ಪ್ರೇಕ್ಷಕರನ್ನು ದೂರ ಸರಿಸುತ್ತೇವೆ ಎಂದರು. ಹಾಗೆ ಏಣಿ ಹತ್ತಿ ನಮಸ್ಕರಿಸಲು ಕೈ ಎತ್ತಿದೆ. ಹೋ ಎಂದು ಕಿರುಚಿದರು. ಸಾರ್ ಕಚ್ಚೆ ಎಂದು ಕೂಗಿದರು. ನಾಟಕದ ಜುಬ್ಬ ಹರಿದಿದೆ, ಕಚ್ಚೆ ಉದುರಿದೆ. ಅಂಡರ್‍ವೇರ್ ಮೇಲೆ ನಿಂತಿದ್ದೆ. ನಂತರ ಪೊಲೀಸರು, ಪ್ರೇಕ್ಷಕರನ್ನು ಸರಿಸಿದರು. ಬಳಿಕ ಯಾರದೋ ಪಂಚೆ, ಯಾರದೋ ಜುಬ್ಬ ಹಾಕಿಕೊಂಡು ಎರಡೂ ಪ್ರದರ್ಶನ ನೀಡಿದೆ. ನಾಟಕಕ್ಕೆಂದು ಹಾಕಿಕೊಂಡಿದ್ದ ಉಂಗುರ ಕೂಡಾ ಕಾಣೆಯಾಗಿತ್ತು. ಆದರೆ ಕದ್ದವರಿಗೆ ರೋಲ್ಡ್‍ಗೋಲ್ಡ್ ಎಂದು ಗೊತ್ತಿರಲಿಕ್ಕಿಲ್ಲ. + +ಹೀಗೆಯೇ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರು, ಬೆಂಗಳೂರಿನ ಮಲ್ಲೇಶ್ವರಂನ ರಾಮಮಂದಿರದಲ್ಲಿ 25ನೇ ಪ್ರಯೋಗಕ್ಕೆ ಹತ್ತು ಸಾವಿರಕ್ಕೂ ಅಧಿಕ ಪ್ರೇಕ್ಷಕರು, ಬೆಂಗಳೂರಿನ ರಾಜಾಜಿನಗರದ ರಾಮಮಂದಿರದಲ್ಲಿ ಪಿಜಿಆರ್ ಸಿಂಧ್ಯ ಹಾಗೂ ವೈಎಸ್‍ವಿ ದತ್ತ ಅವರ ಸಹಕಾರದೊಂದಿಗೆ ಸಾವಿರಾರು ಪ್ರೇಕ್ಷಕರು ನಾಟಕ ನೋಡಿದರು. + +ನಾಟಕ ಬ್ಯಾನ್ ಆಗುವ ಭಯ + +ಆರ್.ಗುಂಡೂರಾವ್ ಅವರು ಮುಖ್ಯಮಂತ್ರಿಯಾಗಿದ್ದ ಅವಧಿ. ಅದೇ ಕಾಲದಲ್ಲಿ ನಮ್ಮ ಮುಖ್ಯಮಂತ್ರಿ ನಾಟಕ ಪ್ರದರ್ಶನವಾಗುತ್ತಿತ್ತು. ಪತ್ರಿಕೆಗಳಲ್ಲಿ ಪ್ರಸ್ತುತ ರಾಜಕಾರಣಕ್ಕೆ ಆಪ್ತವಾಗಿದೆ ಎಂಬ ಮೆಚ್ಚುಗೆಯ ನುಡಿ ನೋಡಿದ ಗುಂಡೂರಾವ್ ಅವರಿಗೆ ಯಾರೋ ಕಿವಿ ಹಿಂಡಿ ಬೇರೆಯವರ ಹೆಸರಿರುವ, ನಿಮ್ಮನ್ನು ಉದ್ದೇಶಿಸಿದ ನಾಟಕ ಎಂದಿದ್ದಾರೆ. ತುರ್ತಾಗಿ ನಾಟಕ ನೋಡಬೇಕೆಂದು ಗುಂಡೂರಾವ್ ಹೇಳಿಕಳಿಸಿದರು. ಖರ್ಚನ್ನೆಲ್ಲ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿಗಳ ಆಪ್ತಕಾರ್ಯದರ್ಶಿಗಳು ಹೇಳಿದರು. ನಮಗೆ ಗಾಬರಿ. ನಾಟಕ ಬ್ಯಾನ್ ಆಗಬಹುದು, ನಮ್ಮನ್ನು ಬಂಧಿಸಬಹುದು ಎಂದುಕೊಂಡೆವು. ಬೆಂಗಳೂರಿನ ಮಲ್ಲೇಶ್ವರಂನ ಚೌಡಯ್ಯ ಮೆಮೊರಿಯಲ್ ಹಾಲ್‍ನಲ್ಲಿ ನಾಟಕದ ಪ್ರದರ್ಶನ ಆಯೋಜಿಸಲಾಯಿತು. ಮುಖ್ಯಮಂತ್ರಿಗಳು ಪತ್ನಿ ಸಮೇತ ಬಂದಿದ್ದರು. ಸಚಿವರೂ ಸೇರಿದ್ದರು. ಮುಖ್ಯಮಂತ್ರಿ ಸೇರಿದಂತೆ ಗಣ್ಯರಿಗೆ ಮುಂದಿನ ಸಾಲುಗಳಲ್ಲಿ ನೂರು ಸೀಟುಗಳನ್ನು ಬಿಟ್ಟುಕೊಟ್ಟೆವು. + + + +ನಾಟಕ ಮುಗಿದ ಮೇಲೆ ಭಯ ಶುರುವಾಯಿತು. ಸೈಡ್‍ವಿಂಗ್ ಕಡೆ ಮುಖ್ಯಮಂತ್ರಿ ಬರುತ್ತಾರೆಂದು ಗೊತ್ತಾಯಿತು. ಡಲ್ ಆಗಿ ನಿಂತಿದ್ದೆವು. ಪರಿಚಯವಾದ ನಂತರ `ಚೆನ್ನಾಗಿ ಮಾಡಿದ್ದೀರಿ. ಯಾಕೆ ಡಲ್ಲಾಗಿದ್ದೀರಿ? ಎಂದು ಕೇಳಿದರು. ಬಳಿಕ `ಯಾವುದೋ ಕೆಲಸದ ಮೇಲೆ ಹೋಗಬೇಕಿತ್ತು. ಆದರೂ ಇಡೀ ನಾಟಕ ನೋಡಿದೆ. ದೇವರಾಜ ಅರಸು ಅವರದೇ ಗೆಟ್ ಅಪ್, ಅವರನ್ನೇ ನೋಡಿದ ಹಾಗಾಯಿತು’ ಎಂದು ಮೆಚ್ಚುಗೆಯಾಡಿದರು. ಆಮೇಲೆ ಅವರು ನಾಟಕದ ಮುಂಚೆ ನನ್ನ ಬಳಿ ಬಂದಿದ್ದರೆ ಹೆಚ್ಚಿನ ಮಾಹಿತಿ ಕೊಡುತ್ತಿದ್ದೆ. ಈಗಿನದು ಸಪ್ಪೆ ಅನ್ನಿಸುತ್ತಿದೆ. ಮುಂದೆ ನಾಟಕ ಮಾಡುವಾಗ ವ್ಯವಸ್ಥೆ ಕುರಿತು ಇನ್ನಷ್ಟು ಲೋಪಗಳನ್ನು ಹೇಳುವೆ. ಅವುಗಳನ್ನು ಸೇರಿಸಿ ಜನರಿಗೆ ಕಿಕ್ ಕೊಡುತ್ತೆ. ಎಲ್ಲಾದರೂ ನಾಟಕವಾಡಿ. ತೊಂದರೆಯಾದರೆ ತಿಳಿಸಿ. ತೊಂದರೆಯಾಗದ ಹಾಗೆ ನೋಡಿಕೊಳ್ಳುತ್ತೇವೆ’ ಎಂದು ಭರವಸೆ ನೀಡಿ, ಸನ್ಮಾನಿಸಿದರು.ಆಗ ನಮಗಿದ್ದ ಭಯ ಕಡಿಮೆಯಾಯಿತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_208.txt b/Kenda Sampige/article_208.txt new file mode 100644 index 0000000000000000000000000000000000000000..4320c35495e40ba6e2be06d53a7e5b46eddfab97 --- /dev/null +++ b/Kenda Sampige/article_208.txt @@ -0,0 +1,69 @@ +ಮಲ್ಪೆಯಲ್ಲಿ ಭರ್ಜರಿ ವ್ಯಾಪಾರವಾಗುತ್ತಿದ್ದ ದೊಡ್ಡ ಅಣ್ಣನ ಹೊಟೇಲು ಕ್ರಮೇಣ ಕಳೆಗುಂದತೊಡಗಿತು. ಏನೋ ಭಿನ್ನಾಭಿಪ್ರಾಯ ಬಂದು ಕೃಷ್ಣಮೂರ್ತಿ ಅಣ್ಣ ಹೊಟೇಲು ತ್ಯಜಿಸಿ, ಚಿತ್ರದುರ್ಗಕ್ಕೆ ಹೋದ. ಎರಡು ಮೂರು ಇತರ ಹೊಟೇಲುಗಳೂ ಬಂದು ಸ್ಪರ್ಧೆಗಿಳಿದವು. ಜೊತೆಗೆ ಆತನ ರಸಿಕತನ, ಫನ್‍ಫೇರ್ ಹುಚ್ಚು. ದುಡ್ಡು ದುಪ್ಪಟ್ಟು ಮಾಡಿಕೊಡುತ್ತೇನೆ ಎಂದು ಗಿಲಿಗಿಟಿ ಮಾಡಿದ ತಮಿಳು ಮಾಂತ್ರಿಕನನ್ನು ನಂಬಿದ ಹುಂಬತನ ಇವೆಲ್ಲ ದಿನದಲ್ಲಿ ಆದ ವ್ಯಾಪಾರದ ಹಣವನ್ನು ಸ್ವಾಹಾ ಮಾಡುತ್ತಿದ್ದವು. ಮೈತುಂಬ ಸಾಲವಾಯಿತು. ಅತ್ತಿಗೆಯ ಬಳಿ ಇದ್ದ ಚೂರು ಪಾರು ಬಂಗಾರವನ್ನೂ ಮಾರಬೇಕಾಯಿತು. ಜೊತೆಗೆ ಕಾರ್ಪಣ್ಯದ ದಿನಗಳು ಬೇರೆ. ಸಕ್ಕರೆ ಸಿಗುತ್ತಿರಲಿಲ್ಲ. ಸಿಕ್ಕಿದರೂ ಗಗನಕ್ಕೇರಿದ ಬೆಲೆ. ಸಿಗಬೇಕಾದ ಸಾಮಾನುಗಳು ದುಡ್ಡು ಕೊಟ್ಟರೂ ಸಿಗುತ್ತಿರಲಿಲ್ಲ. ಹೀಗಾಗಿ ಹೊಟೇಲು ಮುಚ್ಚುವುದು ಅನಿವಾರ್ಯವಾಯಿತು. + +ಆದರೂ ಬೇರಾವ ಕೆಲಸವನ್ನು ಅರಿಯದ ಅಣ್ಣ ಯಾವ ಮಾಯಕದಲ್ಲೋ ಉಡುಪಿ, ತೆಂಕನಿಡಿಯೂರು, ಕೊಡವೂರಿನ ಮಲ್ಪೆ ರಸ್ತೆ ಮುಂತಾದೆಡೆ ಹೊಟೇಲು ಆರಂಭಿಸಿ ಎಲ್ಲೂ ಬರ್ಕತ್ತಾಗದೆ ಮುಚ್ಚಿ ಬಿಡುತ್ತಿದ್ದ. ಬಯಲಾಟ ನಡೆಯುವಲ್ಲಿ ಅವನ ಹೊಟೇಲು ಪ್ರತ್ಯಕ್ಷವಾಗುತ್ತಿತ್ತು. ಮೂರು ಬದಿ ಮಡಲಿನ ತಟ್ಟಿ, ಮೂರು ನಾಲ್ಕು ಬೆಂಚುಗಳು, ಕುದಿಯುವ ನೀರಿನಲ್ಲಿರುವ ಪಾವಾಣೆ ಸದ್ದು ಮಾಡುವ ಚರಿಗೆ, ಗ್ಲಾಸು, ಪ್ಲೇಟ್‍ಗಳು. ಟೆಂಪರರಿ ಹೊಟೇಲು ಸಿದ್ಧವಾಗುತ್ತಿತ್ತು. ಅವಲಕ್ಕಿ ಉಪ್ಪಿಟ್ಟು, ಈರುಳ್ಳಿ ಬಜೆ, ಚಟ್ಟಂಬಡೆ ಇವಷ್ಟೇ ತಿಂಡಿಗಳು. ಸಕ್ಕರೆಗೆ ಸ್ಯಾಕರಿನ್ಸ್, ಚಹಾಪುಡಿಗೆ ಕೇಸರಿ ಕಲರ್ ಮಿಶ್ರ ಮಾಡುವುದಂತೂ ಮಾಮೂಲು. ಆದರೆ ಯಾರದೂ ಕಂಪ್ಲೆಂಟ್ ಇರುತ್ತಿರಲಿಲ್ಲ. ಭಾರಿ ಮುನಾಫೆ ಇದ್ದರೂ ಸಿಕ್ಕಿದ ಹಣ ನಾಲ್ಕಾರು ದಿನಗಳಲ್ಲಿ ಖಾಲಿಯಾಗುತ್ತಿತ್ತು. + +ಅಣ್ಣ ಮಾಡಿದ ಎಲ್ಲ ಹೊಟೇಲುಗಳಲ್ಲೂ, ಬೆಳಿಗ್ಗೆ ಶಾಲೆಗೆ ಹೋಗುವವರೆಗೆ ಹಾಗೂ ಶಾಲೆಯಿಂದ ಬಂದ ಬಳಿಕ ಸಪ್ಲೈಗೊ, ಗಲ್ಲದಲ್ಲಿ ಕೂರುವುದಕ್ಕೋ, ಕ್ಲೀನರ್ ಕೈಕೊಟ್ಟರೆ ಗ್ಲಾಸು ಪ್ಲೇಟು ತೊಳೆಯುವುದಕ್ಕೋ ನಾವಿಬ್ಬರು (ನಾನು ಮತ್ತು ರಾಮಚಂದ್ರ ಅಣ್ಣ) ಇರುವುದು ಕಡ್ಡಾಯವಾಗಿತ್ತು. ಸ್ವಲ್ಪ ದೊಡ್ಡವನಾದ ಮೇಲೆ ನಾನು ತಿಂಡಿ ಮಾಡುವ, ಅಡುಗೆ ಮಾಡುವ ಭಟ್ಟನಾಗಿಯೂ ಪರಿವರ್ತಿತನಾಗಿದ್ದೆ. ಯಾಕೆಂದರೆ ನಮ್ಮ ಕಾಳು ನಿಂಜೂರು (ಅಣ್ಣ)ರಿಗೆ ಕೆಲವೊಮ್ಮೆ ಊಟದ ಹೊಟೇಲು ಮಾಡುವ ಖಯಾಲಿಯೂ ಇತ್ತು. `ಶಿವಳ್ಳಿ ಬ್ರಾಹ್ಮಣರ ಟೀ ಕಾಫಿ ಕ್ಲಬ್, ಊಟ ತಯಾರಿದೆ’ ಎನ್ನುವ ಬೋರ್ಡು ಆಗ ಹೊಟೇಲಿನ ಹೊರಗೆ ರಾರಾಜಿಸುತ್ತಿತ್ತು. ನನಗೆ ಈಗಲೂ ನೆನಪಿದೆ. ಇಡ್ಲಿ, ದೋಸೆ, ಉದ್ದಿನ ವಡೆಗಾಗಿ ಭೀಮಗಾತ್ರದ ರುಬ್ಬುಕಲ್ಲಿನಲ್ಲಿ ರುಬ್ಬಿ ರುಬ್ಬಿ ಬಲಗೈ ಹಸ್ತದಲ್ಲಿ ರಕ್ತ ಜಿನುಗುವುದೂ ಇತ್ತು. ಅದನ್ನು ಕಂಡ ಅತ್ತಿಗೆ ಅದಕ್ಕೆ ಕೊಬ್ಬರಿ ಎಣ್ಣೆ ಹಚ್ಚಿ ನನ್ನನ್ನು ರಮಿಸುತ್ತಿದ್ದರು. ತಗಣೆಗಳು ರಾಜಾರೋಷವಾಗಿ ರಾಜ್ಯಭಾರ ಮಾಡುತ್ತಿದ್ದ ಹೊಟೇಲಿನ ಬೆಂಚಿನಲ್ಲಿ ನನ್ನ ಶಯನ. ತಗಣೆ ಪೆಟ್ಟು ತಿನ್ನುವುದು ಅಭ್ಯಾಸವಾಗಿ ಹೋಗಿತ್ತು. + +ನನ್ನ ಅತ್ತಿಗೆಯಂತೂ ನನಗೆ ಹೆತ್ತಬ್ಬೆಯ ಸಮಾನ. ನಾನು ಹತ್ತು ತಿಂಗಳ ಮಗುವಿದ್ದಾಗ ಹಿರಿಯ ಸೊಸೆಯಾಗಿ ಮನೆ ಸೇರಿದ ಇವರಿಗೆ ನಾನೇ ಹೆಚ್ಚು ಕಡಿಮೆ ಹಿರಿ ಮಗು. ಹನ್ನೊಂದು ಮಕ್ಕಳಿಗೆ ಜನ್ಮವಿತ್ತ ಈಕೆ ನಿಜವಾಗಿಯೂ ಮಹಾತಾಯಿಯೇ ಸೈ. + +ನಮ್ಮ ಕುಟುಂಬದಲ್ಲಿ ಹೆಣ್ಣು ಮಕ್ಕಳಿಗೆ ಬರ. ಅಪ್ಪಯ್ಯನಿಗಾಗಲಿ, ಅವರ ಅಣ್ಣ ಮಂಜುನಾಥ ನಿಂಜೂರರಿಗಾಗಲಿ ಹೆಣ್ಣು ಸಂತಾನವಿಲ್ಲ. ಹೀಗಾಗಿಯೇ ನನಗೆ ಜಡೆ ಹೆಣೆದು ಅಮ್ಮ ಸಂಭ್ರಮಿಸುತ್ತಿದ್ದುದನ್ನು ಈಗಾಗಲೇ ಹೇಳಿದ್ದೇನೆ. ನನ್ನ ಅಣ್ಣ ಲಕ್ಷ್ಮೀನಾರಾಯಣ ಅಥವಾ ಕಾಳು ನಿಂಜೂರರಿಗೂ ಹೆಣ್ಣು ಮಕ್ಕಳಾಗಲಿಲ್ಲ. ಅದಕ್ಕೋಸ್ಕರ ಅದೆಷ್ಟು ಮಂತ್ರವಾದಿಗಳ ಮೊರೆ ಹೊಕ್ಕರೋ, ಎಷ್ಟು ತೀರ್ಥಯಾತ್ರೆ ಕೈಗೊಂಡರೊ ಅದರ ಲೆಕ್ಕವಿಲ್ಲ. ಏಳುಗಂಡು ಮಕ್ಕಳಾದ ಬಳಿಕ ಅಣ್ಣನಿಗೆ ಸಾಲು ಸಾಲಾಗಿ ನಾಲ್ಕು ಹೆಣ್ಣು ಮಕ್ಕಳು ಹುಟ್ಟಿದವು. ಎಲ್ಲ ಮಕ್ಕಳಿಗೂ ಮೊದಲಿನ ನಾಲ್ಕು ಮಕ್ಕಳನ್ನು ಹೊರತುಪಡಿಸಿ ಹೆಸರನ್ನು ನಾನೇ ಇಟ್ಟೆ. ಗಂಡು ಮಕ್ಕಳೆಲ್ಲ ರಾಜ, ಹೆಣ್ಣು ಮಕ್ಕಳೆಲ್ಲ ಶ್ರೀ ಅಂದರೆ ನಾಗರಾಜ, ರವಿರಾಜ, ಜಯರಾಜ, ಭಾಗ್ಯಶ್ರೀ, ಕಾವ್ಯಶ್ರೀ, ಜಯಶ್ರೀ, ಪೂರ್ಣಿಮಾಶ್ರೀ. ಇವರೆಲ್ಲ ನಾನು ಹೈಸ್ಕೂಲು ಹಾಗೂ ಕಾಲೇಜು ಅಭ್ಯಾಸ ಮಾಡುತ್ತಿರುವಾಗ ಹುಟ್ಟಿದವರು. ಆಗ ನನ್ನ ಅಣ್ಣ ನನ್ನ ಮಾತಿಗೆ ಬೆಲೆ ಕೊಡುವಷ್ಟರ ಮಟ್ಟಿಗೆ ಸುಧಾರಿಸಿದ್ದ ಎನ್ನಬೇಕು. + +ಮತ್ತೆ ಸ್ವಲ್ಪ ಪುನರಾವರ್ತನೆ ಆದರೂ ನನ್ನ ಅಣ್ಣನ ಹೊಟೇಲಿನ ವ್ಯವಹಾರಕ್ಕೆ ಬರೋಣ. ಏನಿದ್ದರೂ ನನ್ನ ಅಣ್ಣನ ಹೊಟೇಲ್ ಎಂದರೆ ಅದು ಹೆಚ್ಚು ಕಡಿಮೆ ಒನ್‍ಮ್ಯಾನ್ ಶೋ. ಜೊತೆಗೆ ಬ್ರಾಂಚು ಹೊಟೇಲುಗಳು ಬೇರೆ. ಅದರ ಒಳಗುಟ್ಟು ಬೇರಾರೂ ಅಲ್ಲಿ ಹೊಟೇಲು ತೆರೆಯಬಾರದು ಎಂಬುದಾಗಿತ್ತು ಎಂದು ಈಗ ನನಗನ್ನಿಸುತ್ತಿದೆ. ಪ್ರಧಾನ ಹೊಟೇಲು ಒಂದು ಕಡೆ ಇದ್ದರೆ ಒಂದೆರಡು ಬೆಂಚು ಟೇಬಲು ಹಾಕಿ ಯಾರಿಗಾದರೂ ಛಾರ್ಜು ಕೊಟ್ಟು ಬ್ರಾಂಚ್ ಹೊಟೇಲು ಅಣ್ಣ ನಡೆಸುತ್ತಿದ್ದ. ಇದಲ್ಲದೆ ಕೋಲ, ಬಯಲಾಟ, ಕಂಬಳ ಮುಂತಾದುವು ನಡೆಯುವಲ್ಲಿ ಕಣ್ಣು ಮುಚ್ಚಿ ತೆರೆಯುವುದರೊಳಗಾಗಿ ಬ್ರಾಂಚ್ ಹೊಟೇಲು ಮಡಲಿನ ತಟ್ಟಿಯ ಆವರಣದೊಳಗೆ ಸಿದ್ಧವಾಗಿ ಬಿಡುತ್ತಿತ್ತು. ಪ್ರಧಾನ ಹೊಟೇಲು ತೆರೆಯುವುದು ಬೇಗ, ಬೆಳ್ಳಿ ಮೂಡುವ ಹೊತ್ತಿಗೆ, ಮುಚ್ಚುವುದಕ್ಕೆ ಸಮಯ ಎಂಬುದಿಲ್ಲ. ಗಿರಾಕಿಗಳಿದ್ದರೆ ರಾತ್ರಿ ಒಂಭತ್ತು ಹತ್ತು ಗಂಟೆಯವರೆಗೂ ಪೆಟ್ರೋಮ್ಯಾಕ್ಸ್ ದೀಪ ಉರಿಯುತ್ತಿರುತ್ತದೆ. ಸಾಯಂಕಾಲ ಹೊಟೇಲು ಪ್ರೊಪ್ರೈಟರು ಸಾಮಾನ್ಯವಾಗಿ ಹೊಟೇಲಿನಲ್ಲಿ ಇರುವ ರಿವಾಜು ಇಲ್ಲ. ಆಗ ಅವರ ಕಾರುಬಾರು ಊರ ಹೊರಗೆ. ಬೆಳಿಗ್ಗೆ ಬಿಡಾರದಿಂದ ಬರುವಾಗಲೂ ತಡವಾಗುವುದುಂಟು. ಬೆಳಿಗ್ಗೆ ಹಾಗೂ ಸಂಜೆಯ ಪಾಳಿ ನನ್ನದು. ಸಪ್ಲಾಯಿಂದ ಹಿಡಿದು ಇಡ್ಲಿ ಬೇಯಿಸುವುದು, ಬಿಸ್ಕುಟಂಬೊಡೆ ಕರಿಯುವುದು, ಚಹಾ ಕಾಫಿ ತಯಾರಿಸುವುದಲ್ಲದೆ ಗ್ಲಾಸು, ತಟ್ಟೆ ತೊಳೆಯುವುದನ್ನೂ ನಾನು ಮಾಡಬೇಕಾಗುತ್ತಿತ್ತು. ಗ್ಲಾಸ್ ತಟ್ಟೆ ತೊಳೆಯುವುದರಿಂದ ಕೈಗಳಿಗೆ ಆಗಾಗ ನಂಜು ಆಗುವುದೂ ಇತ್ತು. ಅದಕ್ಕೂ ಅತ್ತಿಗೆ ಯಾವುದೋ ಬೇರನ್ನು ತಳೆದು ಹಚ್ಚುತ್ತಿದ್ದರು. ಆಗ ನಂಜು ಮಾಯವಾಗುತ್ತಿತ್ತು. + +ಹೊಟೇಲಿನಲ್ಲಿ ಬೇರೆ ಕೆಲಸದವರು ಇಲ್ಲವೆಂದಲ್ಲ. ಕೆಲವೊಮ್ಮೆ ಇರುತ್ತಿದ್ದರು. ಮದುವೆಯೋ, ಮುಂಜಿಯೋ, ತಿಥಿಯೋ, ಪೂಜೆಯೋ ಎಂದು ನೆಪ ಹೇಳಿ, ಸ್ವಲ್ಪ ಮುಂಗಡ ಪಡೆದು ಹೋದವರು ಮರಳಿ ಬರುತ್ತಿರಲಿಲ್ಲ. ಸ್ವಲ್ಪ ದೀರ್ಘಕಾಲ ಇದ್ದವರೂ ತಿಂಡಿ ಮಾಡುವವರಾಗಿದ್ದರೆ, ಸಪ್ಲೈ ಮಾಡಲು ಬಿಲ್‍ಕುಲ್ ಒಪ್ಪುತ್ತಿರಲಿಲ್ಲ. ಸಪಾ್ಲೈ ಗೆಂದು ಇದ್ದವರು ಇಡ್ಲಿ ಅಟ್ಟೆಯ ಬೆಂಕಿಯನ್ನು ಮಂದಗೊಳಿಸುವ ಉಸಾಬರಿಗೇ ಹೋಗುತ್ತಿರಲಿಲ್ಲ. ಹೀಗಾಗಿ ಹೊಟೇಲಿನ ಸಕಲ ಕಲಾ ಪಾರಂಗತ ನಾನೇ ಆಗಿಬಿಟ್ಟಿದ್ದೆ. ಅಡುಗೆಯಾದರೂ ಅಷ್ಟೇ. ಪಲ್ಯ, ಸಾರು, ಸಾಂಬಾರು ಎಲ್ಲ ಮಾಡುತ್ತಿದ್ದೆ. ಉಪ್ಪಿಟ್ಟಿನಿಂದ ಹಿಡಿದು ರವಾ ಹೋಳಿಗೆಯವರೆಗೆ ಎಲ್ಲ ತಿಂಡಿಗಳನ್ನು ತಯಾರಿಸುತ್ತಿದ್ದೆ. ನಾನು ಮಾಡುತ್ತಿದ್ದ ಮಸಾಲೆ ದೋಸೆಯಂತೂ ತುಂಬ ಖಾಯಿಶಿಯದಾಗಿತ್ತು. ಈ ಪಾಕಶಾಸ್ತ್ರ ಪ್ರಾವೀಣ್ಯತೆಯಿಂದ ಮುಂದೆ ಅಮೇರಿಕೆಯಲ್ಲಿ ಜನಪ್ರಿಯನಾಗಿ ಬಿಟ್ಟ ಕಥೆ ಅಲಾಯಿದ. + +ಸಲಿಂಗ ರತಿ ವಿಶ್ವದ ಹಲವೆಡೆ ಈಗ ಕಾನೂನು ಸಮ್ಮತಿ ಪಡೆದಿದೆ. ನನಗರಿ ವಿಲ್ಲದೆಯೇ ನಾನು ಏಕಪಕ್ಷೀಯವಾಗಿ ಒಮ್ಮೆ ಇದಕ್ಕೆ ಬಲಿಯಾಗಿ ಬಿಟ್ಟೆ. ಇದು ನಡೆದದ್ದು ನಮ್ಮ ಹೊಟೇಲಲ್ಲೆ. ಎಂ. ಜಿ. ಆರ್. ಮತ್ತು ವೀರಪ್ಪನ್‍ರ ತಲವಾರ್ ಫೈಟಿಂಗ್‍ನ ಕನಸು ಕಾಣುತ್ತ, ತಗಣೆಗಳ ಪೆಟ್ಟು ತಿನ್ನುತ್ತ ಮಲಗಿದವನಿಗೆ ಉಚ್ಚೆ ಮಾಡುವ ಜಾಗವನ್ನು ಯಾರೋ ಚೀಪುತ್ತಿರುವ ಅನುಭವವಾಯಿತು. ಸೇಂಕುತ್ತಿರುವ ಆ ವ್ಯಕ್ತಿ ಅಂಗಾತ ಮಲಗಿದ್ದ ನನ್ನನ್ನು ಕವುಚಿ ಮಲಗಿಸಲು ಯತ್ನಿಸಿದಾಗ, ನಿದ್ದೆಗಣ್ಣಲ್ಲೂ ವ್ಯಕ್ತಿಗೆ ಬಲವಾಗಿ ಒದ್ದುಬಿಟ್ಟೆ. ಕೆಟ್ಟ ದನಿ ತೆಗೆಯುತ್ತ ಆ ವ್ಯಕ್ತಿ, ತನ್ನ ಗೋಣಿತಟ್ಟಿನ ಸುಪ್ಪತ್ತಿಗೆಯತ್ತ ನಡೆಯಿತು. ಮರುದಿನ ತಿಂಡಿ ಭಟ್ಟ `ನನ್ನ ಸಂಬಳ ಚುಕ್ತಾ ಮಾಡಿ’ ಎಂದು ಅಣ್ಣನಿಂದ ಹಣ ಪಡೆದು ಗಾಡಿ ಬಿಟ್ಟಿತು. + +ಆ ಕಾಲದಲ್ಲಿ ಎಂಟನೆಯ ತರಗತಿಗೆ ಪಬ್ಲಿಕ್ ಪರೀಕ್ಷೆ ಇತ್ತು. ನನ್ನ ಬಳಿ ಪೆನ್ ಇರಲಿಲ್ಲ. ಹೀಗಾಗಿ ಜಾಂಬಳಿ ಶಾಯಿ ಇರುವ ಬುತ್ತಿಗೆ, ಹ್ಯಾಂಡಲ್‍ಗೆ ನಿಬ್ಬು ಜೋಡಿಸಿದ ಲೆಕ್ಕಣಿಕೆಯನ್ನು ಅದ್ದಿ, ಅದ್ದಿ, ಬ್ಲಾಟಿಂಗ್ ಪೇಪರ್‍ನಿಂದ ಬರೆದ ಅಕ್ಷರಗಳನ್ನು ಒತ್ತಿ ಒಳ್ಳೆಯ ಮಾರ್ಕು ಗಳಿಸಿ ಎಂಟನೇ ತರಗತಿ ಪಾಸಾಗಿ ಬಿಟ್ಟೆ. ಆದರೂ ಪೆನ್ನು ಇದ್ದಿದ್ದರೆ ಇನ್ನೂ ಹೆಚ್ಚು ಮಾಕ್ರ್ಸ್ ಗಳಿಸಬಹುದಾಗಿತ್ತು ಎನ್ನುವ ಚಿಂತೆ ನನ್ನನ್ನು ಕುಟುಕುತ್ತಿತ್ತು. ಆಗ ಪೆನ್ನು ಅಪರೂಪದ ವಸ್ತುವಾಗಿತ್ತು. ಒಂದು ಪೆನ್ನಂತೂ ಪ್ರತಿಷ್ಠೆಯ ಸಂಕೇತವಾಗಿತ್ತು. ಕೇವಲ ಜಿಲ್ಲಾ ಕಲೆಕ್ಟರರೋ, ತಾಲೂಕು ತಹಶೀಲ್ದಾರರೋ, ಮಣೆಗಾರರೋ ಎಲ್ಲರಿಗೂ ಕಾಣುವಂತೆ ಇದನ್ನು ಜೇಬಿನಲ್ಲಿರಿಸಿಕೊಳ್ಳುತ್ತಿದ್ದರು. ಸಾಮಾನ್ಯ ಪೆನ್ನುಗಳು ಲೀಕ್ ಆಗಿ ಜೇಬಿನಲ್ಲಿ ಕಲೆ ಮಾಡುತ್ತಿದ್ದುವು. ಇವುಗಳಿಗಿಂತ ಹ್ಯಾಂಡಲ್ ಲೆಕ್ಕಣಿಕೆಯಲ್ಲೇ ಬರೆಯುವುದು ವಾಸಿ ಎಂದು ನನ್ನನ್ನು ನಾನೇ ಸಮಾಧಾನಪಡಿಸಿ ಕೊಳ್ಳುತ್ತಿದ್ದೆ. ಇದಲ್ಲದೆ ಲೆಕ್ಕಣಿಕೆಯನ್ನು ಶಾಯಿಯಲ್ಲಿ ಅದ್ದಿ ಬರೆದರೆ ಅಕ್ಷರಗಳು ಮುದ್ದಾಗಿರುತ್ತವೆ ಎನ್ನುವ ಅಪ್ಪಯ್ಯನ ತಾಕೀತು ಬೇರೆ. + +ಕೊಡವೂರಿನಲ್ಲಿ ಎಂಟನೆಯ ದರ್ಜೆ ತೇರ್ಗಡೆಯಾದ ಬಳಿಕ, ನನ್ನ ಅಣ್ಣ ರಾಮಚಂದ್ರ ಕಲಿಯುತ್ತಿದ್ದ ಮಲ್ಪೆಯ ಫಿಶರೀಸ್ ಹೈಸ್ಕೂಲಿಗೆ ಸೇರಿಕೊಳ್ಳುವುದು ಎಂದು ಮನೆಮಂದಿಯ ಲೆಕ್ಕಾಚಾರವಿತ್ತು. ಅಲ್ಲಿ ಫೀಸಿನಲ್ಲೂ ರಿಯಾಯಿತಿ ಪಡೆಯುವ ಸಂಭವವಿತ್ತು. ಆದರೆ ಅಪ್ಪಯ್ಯನ ತರ್ಕವೇ ಬೇರೆ. `ದೂರ ನಡೆದುಕೊಂಡು ಹೋದರೆ ವಿದ್ಯೆ ತಲೆಗೆ ಹತ್ತುತ್ತದೆ. ಆದ್ದರಿಂದ ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲೇ ಸಮ’ ಎಂದುಬಿಟ್ಟರು. ಅವರ ಮಾತಿಗೆ ಅಪೀಲೇ ಇಲ್ಲ. ಬರಿಗಾಲಲ್ಲಿ ಕಲ್ಬಂಡೆ, ಅರ್ಕಾಳಬೆಟ್ಟು, ನೇಜಾರು ಮಾರ್ಗವಾಗಿ ಕಲ್ಯಾಣಪುರ ಮುಟ್ಟಲು ಕನಿಷ್ಠ ಒಂದು ಗಂಟೆಯಾದರೂ ಬೇಕು. ಕಲ್ಲಿನ ಹಾದಿಯಲ್ಲಿ ನಡೆದು ಕೆಲವೊಮ್ಮೆ ಹಿಮ್ಮಡಿಯಲ್ಲಿ ರಕ್ತ ಬರುವುದೂ ಇತ್ತು. ರಾಮಚಂದ್ರಣ್ಣ ಆಗಷ್ಟೇ ಶಂಕರ ವಿಠಲ್ ಮೋಟಾರು ಸರ್ವಿಸ್‍ನಲ್ಲಿ ಕೆಲಸಕ್ಕೆ ಸೇರಿ, ಕಂಪನಿಯ ಬಸ್ಸುಗಳು ಓಡುತ್ತಿದ್ದ ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಮುಂತಾದೆಡೆಯಲ್ಲಿ ಅಮ್ಮನ ಮುಗ್ಧ ಮಾತಿನಲ್ಲಿ `ಚಾಕಿಂಗ್ ಇನ್ಸ್‍ಪಟ್ಲೆರ್’ (ಚೆಕ್ಕಿಂಗ್ ಇನ್ಸ್‍ಪೆಕ್ಟರ್) ಎನ್ನುವ ದೊಡ್ಡ (!) ಹುದ್ದೆಯಲ್ಲಿ ದುಡಿಯುತ್ತಿದ್ದ. ಹೈಸ್ಕೂಲಿನ ಫೀ ತುಂಬುತ್ತಿದ್ದ ಆತ ನಾನು ಬರಿಗಾಲಲ್ಲಿ ನಡೆಯುವ ಕಷ್ಟ ನೋಡಲಾರದೆ, ತನ್ನ ಕೈ ಮೀರಿದ್ದಾದರೂ ಉಡುಪಿಯ ಫೇಮಸ್ ಶೂ ಮಾರ್ಟ್‍ನಲ್ಲಿ ಮಿರಿ ಮಿರಿ ಹೊಳೆಯುವ ಚಪ್ಪಲಿ ತೆಗೆಸಿಕೊಟ್ಟ. ಭರಾಮಿನಿಂದ ಅದನ್ನು ಹಾಕಿಕೊಂಡು `ದರಿದ್ರದ್ದು, ಅಪ್ಪಯ್ಯನ ಜೋಡಿನ ಹಾಗೆ ಸದ್ದು ಮಾಡುವುದಿಲ್ಲ’ ಎಂದು ಶಾಲೆಯಲ್ಲಿ ನಾಲ್ಕೊಪ್ಪತ್ತು ರೈಸಿದ್ದಾಯಿತು. ಮಡಿಗೆ ತೊಂದರೆಯಾಗುತ್ತದೆ ಹಾಗೂ ಹೊಸ ಚಪ್ಪಲಿ ಕಳ್ಳರ ಕಣ್ಣಿಗೆ ಬೀಳಬಾರದು ಎನ್ನುವ ಉದ್ದೇಶದಿಂದ ಚಪ್ಪಲಿಗಳನ್ನು ಶಾಲೆಯಿಂದ ಮರಳಿದೊಡನೆ ಮಳೆ ಮಾಡಿನ ತಟ್ಟಿಗೆ ಸಿಕ್ಕಿಸಿಡುತ್ತಿದ್ದೆ. ಹೀಗೆ ಸಿಕ್ಕಿಸಿದ ಹೊಸ ಚರ್ಮದ ಚಪ್ಪಲಿಯ ನಾಲಗೆ ನೀರೂರಿಸುವ ಮಧುರ ವಾಸನೆಯನ್ನು ತಡೆದುಕೊಳ್ಳಲು ತೀರ ಅಸಮರ್ಥವಾದ ಮನೆಯ ದಾಸುನಾಯಿ ಚಪ್ಪಲಿಯ ಗುರುತೇ ಸಿಗದಂತೆ ಅದನ್ನು ಚಂಪಣಚೂರು ಮಾಡಿಬಿಟ್ಟಿತು. ನನಗಾದರೋ ದುಃಖ ಹಾಗೂ ಸಿಟ್ಟಿನಿಂದ ದಾಸುವನ್ನು ಕೊಂದೇ ಬಿಡಬೇಕು ಎಂದನ್ನಿಸಿತು. ಅದನ್ನು ಅಟ್ಟಿಸಿಕೊಂಡು ಹೋದೆ. ದಾಸುವಿಗೆ ಧಿಮಾಕು ಸ್ವಲ್ಪ ಜಾಸ್ತಿ. ಈ ಪುಳಿಚಾರು ಮಾಣಿ ಏನೂ ಮಾಡಲಿಕ್ಕಿಲ್ಲ ಎಂದು ತನ್ನ ವಿಚಿತ್ರವಾದ ಮೋಹಕ ದನಿ ಬೀರುತ್ತಿತ್ತು. ಹೊಡೆಯಲು ಬಾರುಕೋಲು ಝಳಪಿಸಿದರೆ ಪೆಟ್ಟು ಬೀಳುವ ಮೊದಲೇ ತಾರಕ ಸ್ವರದಲ್ಲಿ `ಕುಂಯ್ಯೋ’ ಅನ್ನುತ್ತಿತ್ತು. ಅಂತೂ ಅದನ್ನು ಅಟ್ಟಿಸಿಕೊಂಡು ಹೋಗುವಾಗ ಆಯತಪ್ಪಿ ಕೆಸರುಗದ್ದೆಯಲ್ಲಿ ಬಿದ್ದುಬಿಟ್ಟೆ. ಹೈಲಾದ ನನ್ನ ಸ್ಥಿತಿಯನ್ನು ಕಂಡ ದಾಸು, ಹತ್ತಿರ ಬಂದು ತನ್ನ ಮೂಕ ಭಾಷೆಯಲ್ಲಿ `ಪೆಟ್ಟಾಯಿತಾ?’ `ಕ್ಷೇಮವಷ್ಟೇ’ ಎಂದು ವಿಚಾರಿಸಿದಾಗ ನನ್ನ ಕೋಪವೆಲ್ಲ ಇಳಿದುಹೋಯಿತು. ಆದರೇನು ಬಂದ ಹಾಗೆ? ಬರಿಗಾಲ ನಡಿಗೆ-ಅದೂ ಕಲ್ಲು ದಾರಿಯಲ್ಲಿ-ನನಗೆ ತಪ್ಪಲಿಲ್ಲ. + +ಇಷ್ಟರಲ್ಲಿ ಇನ್ನೊಂದು ರೌಂಡು ಸಂಚಾರ ಮುಗಿಸಿ, ಅಲ್ಲಲ್ಲೇ ಹೊಟೇಲು ತೆರೆದು ಅದನ್ನು ಮುಳುಗಿಸಿ, ನನ್ನ ಹಿರಿಯಣ್ಣ ಊರಿಗೇ ಬಿಜಯಂಗೈದು ಕೆಮ್ಮಣ್ಣಿನಲ್ಲಿ ಹೊಟೇಲು ಸ್ಥಾಪಿಸಿದ. ಅದು ಚೆನ್ನಾಗಿ ನಡೆಯುತ್ತಲೂ ಇತ್ತು. ಕೆಮ್ಮಣ್ಣಿನಿಂದ ಕಲ್ಯಾಣಪುರ ಶಾಲೆಗೆ ಹೋಗುವುದು ಸುಲಭ. ಕಲ್ಲು ಮುಳ್ಳುಗಳ ದಾರಿಯಲ್ಲ. ನಡೆಯುವಾಗ ತೆಂಗಿನಮರಗಳ ತುಯ್ದಾಟದ ತಂಪು, ಹುಣಿಯ ದಾರಿ. ನದಿಗುಂಟ ನಡೆದರಾಯಿತು, ಸರಿ. ಅಣ್ಣನನ್ನು ಸೇರಿಕೊಂಡೆ. ಯಥಾಪ್ರಕಾರ ನಾನು ಹೊಟೇಲ್‍ನಲ್ಲಿ ಗಲ್ಲದ ಚಾರ್ಜ್ ಮಾತ್ರವಲ್ಲದೆ, ಆಯಾ ಕೆಲಸಗಾರರು ಇಲ್ಲದಾಗ ಎಲ್ಲವನ್ನು ನಿಭಾಯಿಸಿಕೊಂಡು ಕಲ್ಯಾಣಪುರ ಶಾಲೆಗೆ ಹೋಗಿ ಬರುತ್ತಿದ್ದೆ. ಕೆಲವು ತಿಂಗಳುಗಳಲ್ಲಿ ರಾಮಚಂದ್ರಣ್ಣ ಕೆಲಸ ಮಾಡುವ ಕಂಪನಿಯ ಬಸ್ಸು ಕೆಮ್ಮಣ್ಣಿನಿಂದ ಉಡುಪಿಗೆ ಓಡಲಾರಂಭಿಸಿತು. ಅಣ್ಣ ಅದರಲ್ಲಿ ಪಯಣಿಸಲು ಪಾಸ್ ಮಾಡಿಕೊಟ್ಟ. ಅದರಲ್ಲಿ ನೇಜಾರಿನ ವರೆಗೆ ಹೋಗಿ ಅಲ್ಲಿ ಇಳಿದು ಹೆಚ್ಚು ದೂರವಿಲ್ಲದ ಕಲ್ಯಾಣಪುರ ಶಾಲೆಗೆ ಸುಲಭವಾಗಿ ನಡೆದು ಹೋಗುವ ಸೌಲಭ್ಯ ನನಗೆ ಪ್ರಾಪ್ತವಾಯಿತು. + +ನನ್ನ ಯಕ್ಷಗಾನ ಬಯಲಾಟದ ಗೀಳಿಗೆ ನೀರೆರೆದು ಪೋಷಿಸಿದವರು ಸಾಲಿಕೇರಿ ಮಾಸ್ತರರು. `ನಡೆದಾಡುವ ಯಕ್ಷಗಾನ ಭಂಡಾರ’ ಎಂದು ಖ್ಯಾತಿ ಗಳಿಸಿದ ತೋನ್ಸೆ ಕಾಂತಪ್ಪ ಮಾಸ್ತರರು. ನಮ್ಮ ಹೊಟೇಲಿನ ಖಾಯಮ್ ಗಿರಾಕಿ. ಯಕ್ಷಗಾನ ಬಯಲಾಟದ ಎಲ್ಲ ವಿಭಾಗಗಳಲ್ಲೂ ಪರಿಣತರಾದ ಇವರು ಸೊಗಸಾಗಿ ಅರ್ಥ ಹೇಳುವುದಲ್ಲದೆ ಒಳ್ಳೆಯ ಭಾಗವತಿಕೆ ಮಾಡುತ್ತಿದ್ದರು. ಚಂಡೆ, ಮದ್ದಳೆಗೂ ಸೈ. ಕೊಡವೂರಿನ ನಮ್ಮ ತರಬೇತಿ ಶಿಬಿರಕ್ಕೂ ಬಂದು ನಮಗೆ ಯಕ್ಷಗಾನದ ಹೆಜ್ಜೆಗಾರಿಕೆ ಕಲಿಸಿದ್ದರು. + + + +ಕಾಂತಪ್ಪ ಮಾಸ್ತರರ ಬಗಲಲ್ಲಿ ಒಂದು ತೂಗುಚೀಲ. ಅದರಲ್ಲಿ ಬಡಗುತಿಟ್ಟಿನ ಯಕ್ಷಗಾನದ ತಾಳಗಳ ಜೊತೆಗೆ ಗೆಜ್ಜೆ ಸದಾಕಾಲ ಇರುತ್ತಿತ್ತು. ನಾವು ಕೊಡವೂರಿನ ಶನಿವಾರ ಮೇಳ ಸುರು ಮಾಡಿದ್ದು, ಈಗ ವೃತ್ತಿಪರ ಮೇಳವಾಗಿತ್ತು. ಆ ಕುರಿತು ಕಾಂತಪ್ಪ ಮಾಸ್ತರರಿಗೆ ಕಿಂಚಿತ್ತು ಬೇಸರವೂ ಇತ್ತು ಎಂದು ನನ್ನೆಣಿಕೆ. + +ನಮ್ಮ ಹೊಟೇಲಲ್ಲಿ ಸಿಂಗಲ್ ಚಾ ಕುಡಿಯಲು ಕಾಂತಪ್ಪ ಮಾಸ್ಟರರು ಬಂದರೆಂದರೆ ನನಗೆ ಸಂಭ್ರಮವೋ ಸಂಭ್ರಮ. `ಏ ಮಾಣಿ, ಯುದ್ಧದ ಕುಣಿತ ಕಾಣಿಸು’ ಎಂದು ಅವರು ಹೇಳುತ್ತ ಯಾವುದೋ ಆಖ್ಯಾನದ ಪದ್ಯ ಹೇಳಬೇಕು. ನಾನು ಕುಣಿಯಬೇಕು. ಗಿರಾಕಿಗಳೇ ಪ್ರೇಕ್ಷಕರು. ಕುಣಿತ ಸರಿಯಾಗಿಲ್ಲದಿದ್ದರೆ ನನ್ನ ಕಾಲುಗಳಿಗೆ ತಾಳದಿಂದ ಸಣ್ಣ ಪೆಟ್ಟು ಕೊಟ್ಟಾರು. ಮತ್ತೆ ತಾನೇ ಕುಣಿದು ತೋರಿಸಿಯಾರು. + +ಯಾವುದಾದರೋ ಪ್ರಸಂಗದ ಪದ್ಯ ಹೇಳಿ ಅದಕ್ಕೆ ಹೇಗೆ ಹೆಜ್ಜೆ ಹಾಕಬೇಕು, ಎಲ್ಲಿ ಭಾಗವತರ ಪದ್ಯ ಎತ್ತುಗಡೆ ಮಾಡಿ ಅದೇ ಶ್ರುತಿಯಲ್ಲಿ ಹಾಡಬೇಕು, ಆಗ ಹೇಗೆ ಹೆಜ್ಜೆ ಹಾಕಬೇಕು ಎನ್ನುವ ಪ್ರಾತ್ಯಕ್ಷಿಕೆ ಕಾಂತಪ್ಪ ಮಾಸ್ತರರಿಂದ ನಮ್ಮ ಹೊಟೇಲಲ್ಲಿ ನಡೆಯುತ್ತಿತ್ತು. + +ಊರಿನ ಸುತ್ತಮುತ್ತ ನಡೆಯುತ್ತಿದ್ದ ಬಯಲಾಟಗಳ ಪ್ರಾಮಾಣಿಕ ವಿಮರ್ಶೆಯನ್ನೂ ಕಾಂತಪ್ಪ ಮಾಸ್ಟರರು ಮಾಡುತ್ತಿದ್ದರು. ಹನುಮಂತ ಎಂದರೆ ಮಾರ್ವಿ ಹೆಬ್ಬಾರರದು. ಅದಕ್ಕೆ ಸಮಕಟ್ಟುವ ವೇಷಧಾರಿ ಹುಟ್ಟಿಯೇ ಇಲ್ಲ. ಹಾರಾಡಿ ರಾಮನಿಗೆ ಸರಿಗಟ್ಟುವ ಮುಂಡಾಸಿನ ಕರ್ಣ ಮೂರು ಲೋಕದಲ್ಲೂ ಇಲ್ಲ. ಕೊಕ್ಕರ್ಣೆ ನರಸಿಂಹ ಕಮ್ತಿ ಬಿಟ್ಟರೆ `ಬಬ್ರುವಾಹನ’ದ ಸುಭದ್ರೆಗೆ ಹಾರಾಡಿ ನಾರಾಯಣನೇ ಸೈ. ವೀರಭದ್ರ ನಾಯ್ಕರ ಗತ್ತು ಗಾಂಭೀರ್ಯ ಯಾವ ಮಗನಿಗೂ ಇಲ್ಲ. ಎಂದೆಲ್ಲ ಅವರ ಟಿಪ್ಪಣಿಗಳು ಹೊರಬೀಳುತ್ತಿದ್ದವು. ಎಲ್ಲಿ ಯಾವ ಆಟ ಪುಸ್ಕಾಯಿತು ಎಂದು ಅವರು ನುಡಿದದ್ದು ಅಂತಿಮ ತೀರ್ಮಾನವಾಗುತ್ತಿತ್ತು. “ಮೂಗಿನವರೆಗೆ ಕುಡಿದು ಕುಣ್‍ಚಟ್ ಹಾಕಲು ಆಗುತ್ತದೆಯೇ? ಬಬ್ರುವಾಹನ ಎಂದರೆ ಬೆಳ್ಕಳೆ ಮಾಣಿಯದ್ದು (ಸುಬ್ಬಣ್ಣಯ್ಯ). ಅದು ಬಿಟ್ಟರೆ ಬೇರೆ ಉಂಟೆ’’ ಎಂದೆಲ್ಲ ಅವರು ಹೇಳುವಾಗ ಬೆರಗುಗಣ್ಣು ಬಿಟ್ಟುಕೊಂಡು ಅವರ ಮಾತು ಕೇಳುತ್ತಿದ್ದೆ. `ಏಯ್ ಮಾಣಿ, ಸಿಂಹಾಸನಾರೂಢನಾಗುವುದಕ್ಕೂ ಒಂದು ಕ್ರಮವುಂಟು. ಮುಖಭಾವ ಉಂಟು’ ಎನ್ನುತ್ತ ಗಕ್ಕನೆ ಟೇಬಲಿನ ಮೇಲೆ ಕೂತು ಬಿಲ್ಲು ಹಿಡಿದು ಕುಳಿತ ರಾಜನ ಪೋಸು ಕೊಡುತ್ತಿದ್ದರು. ಯಕ್ಷಗಾನದ ಕುರಿತು ಹಲವಾರು ವಿಷಯಗಳನ್ನು ಅರಿಯುವ ಸೌಭಾಗ್ಯ ನನ್ನದಾಯಿತು. + +***** + +ಕಲ್ಯಾಣಪುರದ ಮಿಲಾಗ್ರಿಸ್ ಹೈಸ್ಕೂಲು, ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲು ಹಾಗೂ ಬೋರ್ಡ್ ಹೈಸ್ಕೂಲುಗಳು ಉತ್ತಮ ಬೋಧನೆ, ಆಟೋಟ ಕ್ರೀಡೆಗಳು ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದವು. ನಮ್ಮ ಮಿಲಾಗ್ರಿಸ್ ಹೈಸ್ಕೂಲಿಗೆ ಬಾರ್ಕೂರು, ಸಾಲಿಗ್ರಾಮ, ಬ್ರಹ್ಮಾವರ, ಉಪ್ಪೂರು, ಹೇರೂರು, ಅರೂರುಗಳಿಂದ ವಿದ್ಯಾರ್ಥಿಗಳ ದಂಡು ಬರುತ್ತಿತ್ತು. ಉಡುಪಿಯ ಬೋರ್ಡ್ ಹೈಸ್ಕೂಲ್ ಮತ್ತು ಕ್ರಿಶ್ಚಿಯನ್ ಹೈಸ್ಕೂಲಿಗೆ ಕಟಪಾಡಿ, ಕಾಪು, ಪಡುಬಿದ್ರೆ, ಮೂಲ್ಕಿಗಳಿಂದಲೂ ವಿದ್ಯಾರ್ಥಿಗಳು ಬರುತ್ತಿದ್ದರು. ಕಾರಣ ಆ ಕಾಲದಲ್ಲಿ ಬೇರೆ ಹೈಸ್ಕೂಲುಗಳು ಇರಲಿಲ್ಲ. + +ನಮ್ಮ ಮಿಲಾಗ್ರಿಸ್ ಹೈಸ್ಕೂಲು ಚರ್ಚಿನ ಬದಿಗೇ ಇತ್ತು. ಫಾದರ್ ಟೆಲ್ಲಿಸ್ ಮುಖ್ಯೋಪಾಧ್ಯಾಯರು. ಫಾದರ್ ರೆಬೆಲ್ಲೋ ಉಪ ಮುಖ್ಯೋಪಾಧ್ಯಾಯರು. ಫಾದರ್ ಟೆಲ್ಲಿಸ್ ಕನ್ನಡ ಮಾತಾಡುವಾಗ ಟಿಪ್ಪು ಸುಲ್ತಾನ್ ನಾಟಕದ ಕಾರ್ನವಾಲಿಸ್ ಪಾತ್ರಧಾರಿಯಂತೆ ಮಾತಾಡುತ್ತಿದ್ದರು. ಕಾರಣ, ಕೊಂಕಣಿ ಮಾತೃಭಾಷೆಯಾಗುಳ್ಳ ಮಂಗಳೂರಿನ ಫಾದರ್ ಟೆಲ್ಲಿಸ್ ಭಾರತಕ್ಕಿಂತ ಇಟಲಿಯಲ್ಲಿದ್ದುದೇ ಹೆಚ್ಚು ಕಾಲ. ಫಾದರ್ ರೆಬೆಲ್ಲೋ ಮಾತ್ರ ಚೆನ್ನಾಗಿ ಕನ್ನಡ ಮಾತಾಡುತ್ತಿದ್ದರು. ಈ ಈರ್ವರು ಪಾದ್ರಿಗಳು ಹಾಗೂ ಮೊರಲ್ ಸಾಯನ್ಸ್ ಪಾಠ ಮಾಡುತ್ತಿದ್ದ ಸಿಸ್ಟರ್ ಮರಿಯಮ್‍ರನ್ನು ಹೊರತುಪಡಿಸಿ ಹೆಚ್ಚಿನ ಬೇರೆಲ್ಲ ಅಧ್ಯಾಪಕರೂ ಲೆಕ್ಕ ಹೇಳಿಕೊಡುತ್ತಿದ್ದ ಡೆನಿಸ್ ಡಿಸಿಲ್ವರನ್ನುಳಿದು ಕ್ರಿಶ್ಚಿಯನ್ ಮತಸ್ಥರಾಗಿರಲಿಲ್ಲ. ಕುಕ್ಕಿಲ್ಲಾಯ ಮಾಸ್ಟ್ರು, ಅನಂತ ರಾಮ ಉಪಾಧ್ಯರು, ಕೃಷ್ಣಮೂರ್ತಿ ಕೆದ್ಲಾಯರು, ನಾರಾಯಣ ಆಚಾರ್ರು, ಸೋಮನಾಥ ರಾಯರು. ಜಿ. ಶ್ರೀನಿವಾಸ ರಾಯರು, ತೌಡ ಶೆಟ್ಟರು, ವಾದಿರಾಜ ಶೆಟ್ಟರು, ಶ್ರೀನಿವಾಸ ಭಟ್ಟರು ಹೀಗೆ ಒಬ್ಬರಿಂದೊಬ್ಬ ಮಿಗಿಲೆನಿಸುವ ಶಿಕ್ಷಕ ವೃಂದವನ್ನು ಹೊಂದಿದ್ದ ಮಿಲಾಗ್ರಿಸ್ ಹೈಸ್ಕೂಲ್ ದೂರ ದೂರದ ಊರಿನ ವಿದ್ಯಾರ್ಥಿಗಳನ್ನು ಆಕರ್ಷಿಸುವ ವಿದ್ಯಾಕೇಂದ್ರ ವಾಗಿತ್ತು. ಸಮೀಪವೇ ಆಕರ್ಷಕ ಚರ್ಚ್. ಕ್ರಿಶ್ಚಿಯನ್ ವಿದ್ಯಾರ್ಥಿಗಳು ಚರ್ಚ್ ಅನ್ನು ವಾರದಲ್ಲಿ ಒಮ್ಮೆಯಾದರೂ ಸಂದರ್ಶಿಸಿ ಪ್ರಾರ್ಥನೆಯಲ್ಲಿ ಭಾಗಿಯಾಗಬೇಕೆಂಬ ನಿಯಮವಿತ್ತಾದರೂ, ಇತರರಿಗೆ ಈ ಕಟ್ಟಳೆ ಅನ್ವಯಿಸುತ್ತಿರಲಿಲ್ಲ. ಮಾರಲ್ ಸಾಯನ್ಸ್ ಐಚ್ಛಿಕ ಪಾಠವಾಗಿತ್ತು. ಇದರಲ್ಲಿ ಬೈಬಲ್ ಪಾಠವೂ ಇದ್ದುದರಿಂದ ಈ ಕ್ಲಾಸಿನ ಬದಲಾಗಿ ವಿದ್ಯಾರ್ಥಿಗಳು ತೌಡಪ್ಪ ಮಾಸ್ತರು ನಡೆಸುವ ತೋಟಗಾರಿಕೆ ಪಾಠವನ್ನು ಕಲಿಯಬಹುದಾಗಿತ್ತು. ತೌಡಪ್ಪ ಮಾಸ್ತರರ ತೋಟಗಾರಿಕೆಯ ಕ್ಲಾಸ್ ನಮಗೆಲ್ಲರಿಗೂ ಅಚ್ಚುಮೆಚ್ಚು. ಸಾಮಾನ್ಯವಾಗಿ ಕೃಷಿ ವಿಜ್ಞಾನದ ಒಳಹೊರಗನ್ನು ತಮ್ಮ ಅಪೂರ್ವ ಅನುಭವದೊಂದಿಗೆ ಅವರು ಹಂಚಿಕೊಳ್ಳುತ್ತಿದ್ದುದೇ ಅಲ್ಲದೆ ನಮ್ಮಿಂದಲೇ ಹೂಗಿಡಗಳು, ಸಣ್ಣಪುಟ್ಟ ತರಕಾರಿಗಳು, ಅಡುಗೆಗೆ ಬಳಸುವ ಸೊಪ್ಪು ತರಕಾರಿಗಳು ಇತ್ಯಾದಿಗಳನ್ನು ನಮ್ಮ ಕೈಯಾರೆ ಬೆಳೆಸುವಂತೆ ಮಾಡಿ ಶಾಲೆಯ ಆವರಣದಲ್ಲೇ ಸುಂದರ ತೋಟವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗುತ್ತಿದ್ದರು. ಒಮ್ಮೆ ನಮ್ಮ ಹೂದೋಟದಲ್ಲಿನ ಒಂದು ಗುಲಾಬಿ ಹೂವನ್ನು ಅದರ ಚೆಲುವಿಗಾಗಿ ನಾನು ಕೊಯ್ದಾಗ ಅದನ್ನು ಕಂಡ ನಮ್ಮ ಹೆಡ್‍ಮಾಸ್ಟರ್ ಫಾದರ್ ಟೆಲ್ಲಿಸ್ ಅವರು `ಹೂಕೀಳುವುದು ತಪ್ಪೆಂದು ನಿನಗೆ ಗೊತ್ತಿಲ್ಲವೆ’ ಎಂದು ಮೆತ್ತಗೆ ಗದರಿ ಫುಟ್‍ರೂಲರ್‍ನಲ್ಲಿ ನನಗೆ ನೋವಾಗದಂತೆ ಒಂದು ಪೆಟ್ಟು ಕೊಟ್ಟುದನ್ನು ನಾನು ಎಂದೂ ಮರೆಯಲಾರೆ. + +ಆಗ ಹೈಸ್ಕೂಲಿನಲ್ಲಿ ನಾಲ್ಕನೆ, ಐದನೇ ಹಾಗೂ ಆರನೇ ಫಾರ್ಮ್‍ಗಳಿದ್ದವು. ನಾಲ್ಕನೇ ಫಾರ್ಮ್ ಈಗಿನ ಒಂಭತ್ತನೇ ಕ್ಲಾಸಿಗೆ ಸಮ. ಹಾಗೆಯೇ ಫಿಪ್ತ್ ಫಾರ್ಮ್ ಎಂದರೆ ಹತ್ತನೆಯ ಕ್ಲಾಸಿಗೆ ಸಮ. ಆರನೆಯ ಫಾರ್ಮ್ ಅಂದರೆ ಹನ್ನೊಂದನೆಯ ಕ್ಲಾಸು ಅತ್ಯಂತ ಮಹತ್ವದ್ದು. ಸೆಕೆಂಡರಿ ಸ್ಕೂಲ್ ಲಿವಿಂಗ್ ಸರ್ಟಿಫಿಕೇಟ್ ಎನ್ನುವ ಪ್ರಮಾಣ ಪತ್ರವನ್ನು ಪಡೆಯಬೇಕಾದರೆ `ಎಸ್‍ಎಸ್‍ಎಲ್‍ಸಿ’ ಪಬ್ಲಿಕ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಬೇಕು. ಆಮೇಲಷ್ಟೇ ಕಾಲೇಜಿಗೆ ಪ್ರವೇಶಿಸಬಹುದಾಗಿತ್ತು. ನಾನು ಇರುವಾಗ ಎಸ್.ಎಸ್.ಎಲ್.ಸಿ ಬೋರ್ಡ್ ಮದ್ರಾಸಿನದಾಗಿತ್ತು. ಏಕೆಂದರೆ ಕಾಸರಗೋಡು ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮದರಾಸು ಪ್ರಾಂತ್ಯದ ಭಾಗವಾಗಿತ್ತು. + +ಒಂಭತ್ತನೆಯ ಕ್ಲಾಸಿನಲ್ಲೇ ನನ್ನ ಪ್ರತಿಭೆಯನ್ನು ಗುರುತಿಸಿದ ಕುಕ್ಕಿಲ್ಲಾಯ ಮಾಸ್ಟ್ರು ನನ್ನನ್ನು ಶಾಲಾ ದೈನಿಕದ ಸಂಪಾದಕನಾಗಿ ನಿಯುಕ್ತಿಗೊಳಿಸಿದರು. ಆಗ ಪ್ರಕಟವಾಗುತ್ತಿದ್ದ ಮಂಗಳೂರಿನ `ನವಭಾರತ’ ಪತ್ರಿಕೆಯ ಅತ್ಯಂತ ಮಹತ್ವದ ಸುದ್ದಿಗಳನ್ನು ದೊಡ್ಡ ಕರಿಹಲಗೆಯಲ್ಲಿ ಬರೆಯುವುದಲ್ಲದೆ, ದೇಶ ವಿದೇಶಗಳ ರಾಜಧಾನಿ, ಪ್ರಧಾನಿ, ಅಧ್ಯಕ್ಷ, ವಿದೇಶಾಂಗ ಸಚಿವ ಇವೆಲ್ಲ ಮಾಹಿತಿಯನ್ನು ನಾನು ಚಾಕ್ ಉಪಯೋಗಿಸಿ ಕರಿಹಲಗೆಯಲ್ಲಿ ಬರೆಯುತ್ತಿದ್ದೆ. ಪತ್ರಿಕೆ ಓದಲು ಪುರುಸೊತ್ತು ಇಲ್ಲದ ರೆಬೆಲ್ಲೋ, ವಾದಿರಾಜ ಮಾಸ್ಟರಿಗೆಲ್ಲ ಈ ಕರಿಹಲಗೆಯ ಪ್ರಕಟಣೆ ಅಚ್ಚುಮೆಚ್ಚಿನದಾಗಿತ್ತು. ಫಾದರ್ ಟೆಲ್ಲಿಸ್ ಕೂಡ ನನಗೆ ಪ್ರೋತ್ಸಾಹದ ನುಡಿಗಳನ್ನಾಡಿದ್ದರು. ನನ್ನ ಈ ಸಂಪಾದಕ ವೃತ್ತಿ ಹೈಸ್ಕೂಲ್ ಬಿಡುವವರೆಗೂ ಮುಂದುವರಿದು ವಿದ್ಯಾರ್ಥಿಗಳು, ಅಧ್ಯಾಪಕರುಗಳು ನನ್ನನ್ನು ಮೆಚ್ಚುವಂತಾಗಿತ್ತು. ಕೆಲವು ಹುಡುಗಿಯರು ನನ್ನತ್ತ ಬೆರಳು ಮಾಡಿ, ತಮ್ಮ ತಮ್ಮಲ್ಲೇ ಏನೋ ಮಾತಾಡಿಕೊಂಡಾಗ ಪುಳಕಿತಗೊಳ್ಳುತ್ತಿದ್ದೆ. ಆದರೆ ಕ್ಲಾಸಿನ ಅಥವಾ ಇತರ ಹೆಣ್ಣುಮಕ್ಕಳೊಂದಿಗೆ ಮಾತಾಡಲು ಬಿಲ್‍ಕುಲ್ ಸಾಧ್ಯವಾಗುತ್ತಿರಲಿಲ್ಲ. ಏನೋ ಭಯ, ಆಳುಕು, ನಾಚಿಕೆ ಎಲ್ಲ. + +ಕೆಮ್ಣಣ್ಣಿನ ಅಣ್ಣನ ಹೊಟೇಲಿನಲ್ಲಿ ಮುಂಜಾನೆ ಬೇಗ ಎದ್ದು, ಪೆಟ್ರೋಮ್ಯಾಕ್ಸ್ ಹೊತ್ತಿಸಿ ಹೊಟೇಲು ತೆರೆದು, ಎಂಟೂವರೆಯ ತನಕ ಹೊಟೇಲಲ್ಲಿ ದುಡಿದು, ಮಧ್ಯಾಹ್ನದ ಊಟಕ್ಕಾಗಿ ಬುತ್ತಿ ಹೊತ್ತು ಶಾಲೆಗೆ ಬರುವುದು ನನ್ನ ದಿನಚರಿಯಾಗಿತ್ತು. ಬುತ್ತಿಯಲ್ಲಿ ಹೆಚ್ಚಾಗಿ ಅವಲಕ್ಕಿ ಮೊಸರು ಅಥವಾ ಮೊಸರನ್ನ, ಒಂದು ಚೂರು ಉಪ್ಪಿನಕಾಯಿ ಇರುತ್ತಿತ್ತು. ಈ ಬುತ್ತಿಯನ್ನು ಶಾಲೆಯ ಸಮೀಪದ ರಂಗರಾಯರೆಂಬ ಸದ್ಗೃಹಸ್ಥರ ಹೊಟೇಲಿನಲ್ಲಿ ಇರಿಸುತ್ತಿದ್ದೆ. ಮಧ್ಯಾಹ್ನ ಊಟದ ಬಿಡುವಿನಲ್ಲಿ ನನ್ನ ಬುತ್ತಿ ಸೇವನೆ ಇಲ್ಲೇ ನಡೆಯುತ್ತಿತ್ತು. ಅಪರೂಪಕ್ಕೊಮ್ಮೊಮ್ಮೆ ಕಲ್ಯಾಣಪುರದ ಧನ್ವಂತರಿ ಎನಿಸಿದ ಡಾ. ಗೋವಿಂದ ಆಚಾರ್ಯರು ರಂಗರಾಯರ ಹೊಟೇಲಿಗೆ ಚಾ ಕುಡಿಯಲು ಬಂದಾಗ ಒತ್ತಾಯದಿಂದ ಅವರ ಲೆಕ್ಕದಲ್ಲೇ ನನಗೆ ಚಾ ಕುಡಿಸುವುದಿತ್ತು. + +ಸಾಯಂಕಾಲ ಹೊಟೇಲಿಗೆ ಹಿಂತಿರುಗಿದ ಬಳಿಕ ಹೊಟೇಲಿನ ಕೆಲಸ. ಅಣ್ಣನ ಸರ್ಕೀಟು ಇದ್ದಲ್ಲಿ ಕೆಮ್ಮಣ್ಣಿನ ಟೂರಿಂಗ್ ಟಾಕೀಸಿನ ಸೆಕೆಂಡ್ ಶೋ ಮುಗಿಯುವ ತನಕ ಹೊಟೇಲು ಚಾರ್ಜ್ ನಾನು ವಹಿಸಿಕೊಳ್ಳಬೇಕಿತ್ತು. ಅಣ್ಣ ಇದ್ದಲ್ಲಿ ರಾತ್ರಿ ಹತ್ತು ಗಂಟೆಗೆಲ್ಲ ಹೊಟೇಲು ಮುಚ್ಚುತ್ತಿದ್ದೆ. ಆ ಬಳಿಕ ನನ್ನ ಓದು. ಅದು ಕೂಡ ಬೀದಿ ದೀಪದ ಅಡಿಯಲ್ಲಿ. ಏಕೆಂದರೆ ಹೊಟೇಲು ಮುಚ್ಚಿದ ಬಳಿಕ ಪೆಟ್ರೊಮ್ಯಾಕ್ಸ್ ಕೂಡ ನಂದಿಸಲ್ಪಡುತ್ತಿತ್ತು. ಬೀದಿ ದೀಪದ ಕೆಳಗೆ ಓದುವಾಗ ನನಗೆ ಕಂಪನಿ ನೀಡುತ್ತಿದ್ದವನೆಂದರೆ ನನ್ನದೇ ತರಗತಿಯ ಪೀಟರ್ ಪೌಲ್ ಫೆರ್ನಾಂಡಿಸ್ ಎಂಬಾತ. ಆತ ಈಗ ಕೆನಡಾದ ಪ್ರಜೆಯಾಗಿದ್ದಾನೆ. ಆಗಾಗ ದಾಯ್ದ ನಾಯ್ಕನೂ ನಮಗೆ ಕಂಪನಿ ಕೊಡುತ್ತಿದ್ದ. ಅವನ ಕಂಪನಿ ನಮಗೆ ಕಣ್ಣು ಕೂರಿದಾಗ ತುಂಬ ಸಹಾಯಕವಾಗುತ್ತಿತ್ತು. ಅವನ ಗೊರಕೆಗೆ ಅಂತಹ ತಾಕತ್ತು ಇತ್ತು. + +ಈ ದಾಯ್ದ ಮಹಾಶಯನು ತೆಂಕನಿಡಿಯೂರು, ಬಡಾ ನಿಡಿಯೂರು, ತೊಟ್ಟಾಮು, ವಡಭಾಂಡೇಶ್ವರ ಮುಂತಾದ ಕಡೆಗಳಲ್ಲಿ ತೆಂಗಿನಮರದಿಂದ ತೆಂಗಿನಕಾಯಿ ಇಳಿಸುವುದೋ, ಅಕ್ಕಿ, ಉದ್ದು, ಹೆಸರುಗಳಂತಹ ಧಾನ್ಯಗಳನ್ನು ಮುಡಿಕಟ್ಟುವುದೋ, ಚಪ್ಪರಕ್ಕೆ ಮಡಲು ಏರಿಸುವುದೋ ಮುಂತಾದ ಕಾರ್ಯಗಳನ್ನು ಪೂರೈಸಿ ತನ್ನ ಮಧ್ಯಾಹ್ನದ ಪಾಲಿನ ಸೆರೆ ಇಳಿಸಿ, ವಡಭಾಂಡೇಶ್ವರದ ಕಡಲ ಕಿನಾರೆಯಲ್ಲಿ ಗಾಳಿಮರ ಹಾಗೂ ತೆಂಗಿನಮರಗಳು ಹೊಯ್ದಾಡುತ್ತ ಸೃಷ್ಟಿಸುವ ವಾಯುಗಾನದಲ್ಲಿ ಲೀನನಾಗಿ ಹೊಯ್‌ಗೆಯಲ್ಲೇ ಪವಡಿಸುತ್ತಿದ್ದ. ಒಂದೆರಡು ಗಂಟೆಗಳ ಶಯನೋತ್ಸವ ಮುಗಿಸಿ, ಊರಿನ ಯಾರ ಮನೆಗಾದರೂ ಬಂದು ಒಂದು ಒಣಕೆಮ್ಮು ಬಿಟ್ಟನೆಂದರೆ ದಾಯ್ದನ ಸವಾರಿ ಮನೆಬಾಗಿಲಿಗೆ ಐತಂದಿದೆ ಎಂದೇ ಅರ್ಥ. ಊರಿಗೆಲ್ಲ ಬೇಕಾದ ಈ ಪರ್ಬುವಿಗೆ ಅನ್ನ ನೀಡದವರು ಇಲ್ಲವೇ ಇಲ್ಲ. ನೇಸರು ಆಗಸದಲ್ಲಿ ವಾರೆಯಾಗಿದ್ದೇ ತಡ ದಾಯ್ದ ಕೆಮ್ಮಣ್ಣಿನತ್ತ ಗಾಡಿ ಬಿಡುತ್ತಾನೆ. ಅಲ್ಲಿ ಪೀಂತ ನಾಯ್ಕರ ಕಾನೂನು ಬಾಹಿರವಾದ ಕಳ್ಳಭಟ್ಟಿ ಗಡಂಗಿನಲ್ಲಿ ವಾಟೀಸು ಇಳಿಸಿ ನಮ್ಮ ಹೊಟೇಲಿನಲ್ಲಿ ನಾಲ್ಕಾಣೆಯ ಪ್ಲೇಟ್ ಮೀಲ್ಸ್ ಕತ್ತರಿಸಿ, ಮತ್ತೊಂದು ಗ್ಯಾಸ್ ವಾಟೀಸ್ ಹಾಕಿ ಹಬೆರುತ್ತ ಲೈಟು ಕಂಬದ ಬಳಿ ಮಲಗುವುದು ಅವನ ರೂಢಿ. + +ನಮ್ಮ ಶನಿವಾರ ಮೇಳದಲ್ಲಿ ಸ್ತ್ರೀ ವೇಷ ಮಾಡುವುದು ನಡೆದೇ ಇತ್ತು. ಹೈಸ್ಕೂಲಿನ ನಾಟಕಗಳಲ್ಲೂ ಪ್ರಧಾನ ಸ್ತ್ರೀ ಪಾತ್ರ ನನ್ನದೇ ಆಗಿರುತ್ತಿತ್ತು. ನಮ್ಮ ನಾಟಕಗಳ ನಿರ್ದೇಶಕರು ಕುಕ್ಕಿಲ್ಲಾಯ ಮಾಸ್ತರರು. ಅವರ ನಿರ್ದೇಶನದಲ್ಲಿ ಒಮ್ಮೆ ಬ್ಯಾಡ್ಮಿಂಟನ್ ಆಡುವ ಮಾಡರ್ನ್ ಬೆಡಗಿ ಪಾತ್ರ ನಾನು ಮಾಡಬೇಕಿತ್ತು. ಅದಕ್ಕೆ ಮೊಣಗಂಟಿನವರೆಗೆ ಬರುವ ಸ್ಕರ್ಟ್, ಬಿಳಿಯ ಶರ್ಟ್‍ನ ಅಗತ್ಯವಿತ್ತು. ಇದನ್ನು ಎಲ್ಲಿಂದ ತರಲಿ ಎಂದು ಪೇಚಾಡಿದೆ. ಆಗ ಫಾದರ್ ರೆಬೆಲ್ಲೋ ಸರ್ ನನ್ನ ಸಮಸ್ಯೆಯನ್ನು ಪರಿಹರಿಸಿದರು. ನಮ್ಮ ಹೈಸ್ಕೂಲಿನಲ್ಲೇ ಮಹಾ ಧಿಮಾಕಿನ ಹುಡುಗಿ ಎಂದೇ ಖ್ಯಾತಳಾದ ಹೆಲೆನ್‍ಳ ಡ್ರೆಸ್ಸನ್ನು ನನಗೆ ಕೊಡಿಸಿದರು. ನಾಟಕ ಯಶಸ್ವಿಯಾಯಿತು. ಡ್ರೆಸ್ ಹಿಂದಿರುಗಿಸುವಾಗ ನನ್ನ ಕ್ಲಾಸಿನವಳೇ ಆದ ಆಕೆಗೆ ಥ್ಯಾಂಕ್ಸ್ ಹೇಳುವಷ್ಟರಲ್ಲಿ ಬೆವತು ಹೋಗಿದ್ದೆ. ಆಕೆ ನನ್ನ ಅವಸ್ಥೆ ನೋಡಿ ನಕ್ಕದ್ದನ್ನು ಎಂದೂ ಮರೆಯಲಾರೆ. + +ಹೈಸ್ಕೂಲಿನಲ್ಲಿ ನಮ್ಮ ಶಾಲಾ ವಾರ್ಷಿಕೋತ್ಸವದಂದು ಏರ್ಪಡಿಸಲಾದ `ಮೇವಾಡ ಪತನ’ ಎನ್ನುವ ಐತಿಹಾಸಿಕ ನಾಟಕದಲ್ಲಿ ನನ್ನದು ಮಾನಸಿಯ ಪಾತ್ರ. ಡ್ರೆಸ್ ಸರಬರಾಜು, ಸ್ಟೇಜ್ ಪರಿಕರಗಳು, ಮೇಕ್ ಅಪ್ ಎಲ್ಲ ಆಗ ಖ್ಯಾತನಾಮರಾಗಿದ್ದ ಬುಡಾನ್ ಸಾಹೇಬರದ್ದು. ಈ ನಾಟಕ ಅದೆಷ್ಟು ಯಶಸ್ವಿಯಾಯಿತೆಂದರೆ ಟಿಕೆಟ್ ಇಟ್ಟು ಎರಡು ಮೂರು ಬೆನಿಫಿಟ್ ಶೋಗಳೂ ಆದುವು. ಆದರೆ ನಾಟಕಗಳಲ್ಲಿ ಹೀರೋ ಆಗಬೇಕು ಎನ್ನುವ ನನ್ನ ಮಹದಾಸೆ ಕೈಗೂಡಲೇ ಇಲ್ಲ. + +ಕೋಳಿ ಅಂಕ, ಕಂಬಳ, ಬಯಲಾಟ, ಚೆನ್ನೆಮಣೆ, ಪಗಡೆಯಾಟ ಇತ್ಯಾದಿಗಳನ್ನು ಹೊರತುಪಡಿಸಿ ಬೇರೆ ಮನರಂಜನೆ ಇಲ್ಲದ ಆ ಕಾಲದಲ್ಲಿ ಕುಕ್ಕಿಲ್ಲಾಯ ಮಾಸ್ಟ್ರು ಸಂಘಟಿಸುತ್ತಿದ್ದ ನಮ್ಮ ನಾಟಕಗಳನ್ನು ಜನ ಮುಗಿಬಿದ್ದು ನೋಡುತ್ತಿದ್ದರು. ಕೆಲ ಜವ್ವನಿಗರು ಮರಹತ್ತಿ ಕುಳಿತು ನಾಟಕ ವೀಕ್ಷಿಸುತ್ತಿದ್ದರು. + +ತರಗತಿಯಲ್ಲಿ ಕಲಿಯುವುದರಲ್ಲೂ ಮುಂದಿದ್ದ ನಾನು ಆರನೇ ಫಾರ್ಮ್‍ನಲ್ಲಿರುವಾಗ ಸ್ಕೂಲ್ ಪ್ಯುಪಿಲ್ ಲೀಡರ್ (SPL) ಆಗಿ ಆಯ್ಕೆಯಾಗಿದ್ದಲ್ಲದೆ, ಶಾಲಾ ವಿದ್ಯಾರ್ಥಿಗಳ ಪಾರ್ಲಿಮೆಂಟ್‍ನಲ್ಲಿ ಮಂತ್ರಿಯೂ ಆದೆ. ಪ್ರಖರ ವಾಗ್ಮಿಯಾಗಿದ್ದ ನಮ್ಮ ಶ್ರೀನಿವಾಸ ಭಟ್ ಮಾಸ್ಟರರ ಮಗ ಚಿತ್ತರಂಜನ್ ನಮ್ಮ ಪಾರ್ಲಿಮೆಂಟ್‍ನ ವಿಪಕ್ಷ ನಾಯಕನಾಗಿದ್ದ. ಶಾಲೆಯ ಸ್ವಚ್ಛತೆ, ಹಾಜರಿ (Attendance), ಶಿಸ್ತುಪಾಲನೆ, ಸಮಯ ಪಾಲನೆ, ಹೂದೋಟದ ಆರೈಕೆ ಇತ್ಯಾದಿ ಎಲ್ಲ ನಮ್ಮ ಅಣಕು ಪಾರ್ಲಿಮೆಂಟಿನಲ್ಲಿ ಚರ್ಚಿಸಲ್ಪಡು ತ್ತಿದ್ದವು. ಈ ಚಿತ್ತರಂಜನ್ ಮುಂದೆ ವೈದ್ಯನಾಗಿ ಭಟ್ಕಳದಲ್ಲಿ ಅತ್ಯಂತ ಜನಪ್ರಿಯನಾಗಿದ್ದಲ್ಲದೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಗೆದ್ದು ಶಾಸಕನಾದ. ಆದರೆ ಆತ ವಿದ್ರೋಹಿಗಳ ಗುಂಡಿಗೆ ಬಲಿಯಾದುದು ನಮ್ಮ ಕರಾವಳಿಯ ಒಂದು ದುರಂತ ಅಧ್ಯಾಯವಾಗಿದೆ. + +ನಮ್ಮ ಹೈಸ್ಕೂಲಿನ ಹಲವಾರು ಶಿಕ್ಷಕರು ನೆನಪಾಗುತ್ತಾರೆ. ಒಂಭತ್ತನೆಯ ಮತ್ತು ಹತ್ತನೆಯ ತರಗತಿಯ ನಮ್ಮ ಡಿವಿಜನಿಗೆ ಜಿ. ಶ್ರೀನಿವಾಸರಾಯರು ಸಾಯನ್ಸ್, ಶ್ರೀನಿವಾಸ ಭಟ್ಟರು ಗಣಿತ, ಪಾದರ್ ರೆಬೆಲ್ಲೋ ಇಂಗ್ಲಿಷ್, ಲಕ್ಷ್ಮೀನಾರಾಯಣ ಕುಕ್ಕಿಲ್ಲಾಯರು ಸೋಶಿಯಲ್ ಸ್ಟಡೀಸ್, ಕೃಷ್ಣಮೂರ್ತಿ ಕೆದ್ಲಾಯರು ಕನ್ನಡ ಬೋಧಿಸುತ್ತಿದ್ದರು. ನಾರಾಯಣ ಆಚಾರ್ಯರು ಇನ್ನೊಂದು ಡಿವಿಜನ್‍ಗೆ ಗಣಿತ ಕಲಿಸುತ್ತಿದ್ದರು. ಸಿಕ್ಸ್ತ್ ಫಾರ್ಮ್ (11ನೇ ಕ್ಲಾಸು)ಗೆ ಬಂದಾಗ ವಾದಿರಾಜ ಶೆಟ್ರು ಸೋಶಿಯಲ್ ಸ್ಟಡೀಸ್, ಡಿಸಿಲ್ವ ಮಾಸ್ಟ್ರು ಗಣಿತ, ಫಾದರ್ ಟೆಲ್ಲಿಸ್ ಇಂಗ್ಲಿಷ್, ಸೋಮನಾಥ ರಾಯರು ಸಾಯನ್ಸ್, ಅನಂತ ರಾಮ ಉಪಾಧ್ಯರು ಕನ್ನಡ ಪಾಠ ಮಾಡುತ್ತಿದ್ದರು. ಡಿಸಿಲ್ವ ಮಾಸ್ಟರರ ಗಣಿತ ಹಾಗೂ ಫಾದರ್ ಟೆಲ್ಲಿಸರ ಇಂಗ್ಲಿಷ್ ಹೊರತುಪಡಿಸಿದರೆ ಕಲಿಕೆಯ ಮಾಧ್ಯಮ ಕನ್ನಡವೇ ಆಗಿತ್ತು. ಡಿಸಿಲ್ವರು ಕೂಡ ಮಕ್ಕಳಿಗೆ ಅರ್ಥವಾಗದ ರೇಖಾಗಣಿತವನ್ನು ಕನ್ನಡದಲ್ಲಿ ವಿವರಿಸುತ್ತಿದ್ದರು. ಕೆದ್ಲಾಯರು, ಉಪಾಧ್ಯರು, ನಾರಾಯಣ ಆಚಾರ್ಯರು ಕಚ್ಚೆಪಂಚೆ, ತುಂಬು ತೋಳಿನ ಪೈರನ್, ಹೆಗಲ ಮೇಲೊಂದು ಮಡಿಚಿದ ಅಂಗವಸ್ತ್ರ ಭೂಷಿತರಾಗಿ ಬರುತ್ತಿದ್ದರೆ ಉಳಿದವರೆಲ್ಲ ಮುಂಡು, ಶರಟಿನಲ್ಲೇ ವಿರಾಜಮಾನರಾಗು ತ್ತಿದ್ದರು. ಇದಕ್ಕೆ ಅಪವಾದವೆಂದರೆ ಡಿಸಿಲ್ವ ಮಾಸ್ಟ್ರು ಮಾತ್ರ. ಅವರದು ಖಡಕ್ ಇಸ್ತ್ರಿಯ ಪ್ಯಾಂಟು ಶರಟು. + +ಈ ಎಲ್ಲ ಮಾಸ್ಟರರನ್ನು ಬಿಟ್ಟರೆ ಎಲ್ಲ ಡಿವಿಜನ್ನುಗಳಿಗೂ ಕ್ಲಾಸುಗಳಿಗೂ ಮಾಸ್ಟರ ರಾಗಿದ್ದವರು ತೋಟಗಾರಿಕೆಯ ಶಿಕ್ಷಕ ತೌಡ ಶೆಟ್ಟರು ಹಾಗೂ ಡ್ರಿಲ್ ಮಾಸ್ಟರ್ ಆಗಿದ್ದ ಅನಂತಕೃಷ್ಣ ರಾಯರು. ತೌಡ ಶೆಟ್ಟರದು ಖಾದಿಯ ಮುಂಡು, ಖಾದಿಯ ನಸು ಕೇಸರಿಯ ಪೈರನ್. ಸದಾ ಮುಗುಳು ನಗೆ ಮಾಸದ ಮೊಗವುಳ್ಳ ಈ ಮಾಸ್ತರರನ್ನು ಎಲ್ಲ ವಿದ್ಯಾರ್ಥಿಗಳೂ ಪ್ರೀತಿಸುತ್ತಿದ್ದರು ಹಾಗೂ ಗೌರವಿಸುತ್ತಿದ್ದರು. ಅನಂತಕೃಷ್ಣ ರಾಯರು ಮುಂಡು ಶರಟಿನೊಂದಿಗೆ ಶಾಲೆಗೆ ಬಂದರೂ ಡ್ರಿಲ್ ಮಾಡಿಸುವಾಗ ಮೊಣಕಾಲಿನ ಸ್ವಲ್ಪ ಕೆಳಗೆ ಬರುವ ದೊಗಳೆ ಶಾಟ್ರ್ಸ್ ಮತ್ತು ಬಿಳಿಯ ಅಂಗಿ ತೊಡುತ್ತಿದ್ದರು. ಅವರ ಶರಟಿನ ಕಿಸೆಯಲ್ಲಿ ವಿಶಲ್ ಸದಾ ಪವಡಿಸಿರುತ್ತಿತ್ತು. + +ಅನಂತಕೃಷ್ಣ ಮಾಸ್ತರರು ನಮ್ಮಿಂದ ಡ್ರಿಲ್ ಮಾಡಿಸುತ್ತಿದ್ದುದಲ್ಲದೆ, ಬೇಸ್ ಬಾಲ್, ಫುಟ್‍ಬಾಲ್ ಹಾಗೂ ಕ್ರಿಕೆಟ್ ಟೀಮನ್ನು ಸಿದ್ಧಪಡಿಸುವಲ್ಲಿ ಯಶಸ್ವಿಯಾಗಿದ್ದರು. ಅವರ ತರಬೇತಿಯಿಂದ ನಮ್ಮ ತರಗತಿಯ ಮಚಾದೊ ಎಂತಹ ವೇಗದ ಬೌಲರ್ ಆಗಿದ್ದನೆಂದರೆ ಉಡುಪಿಯ ಬೋರ್ಡ್ ಹೈಸ್ಕೂಲ್ ಹಾಗೂ ಕ್ರಿಶ್ಚನ್ ಹೈಸ್ಕೂಲ್‍ನ ಕ್ರಿಕೆಟ್ ಟೀಮ್‍ಗಳಿಗೆ ಸಿಂಹಸ್ವಪ್ನನಾಗಿದ್ದ. + + + +ಈ ಕ್ರೀಡೆಗಳಿಗೆ ತರಬೇತಿ ಎಲ್ಲ ಶಾಲಾ ಸಮಯದ ಬಳಿಕ ನಡೆಯುತ್ತಿದ್ದುದರಿಂದ, ನನಗೆ ತುಂಬ ಮನಸ್ಸಿದ್ದರೂ ಭಾಗವಹಿಸಲಾಗಲಿಲ್ಲ. ಏಕೆಂದರೆ ಶಾಲೆಯ ಪಾಠ ಮುಗಿದೊಡನೆ ನಾನು ಅಣ್ಣನ ಹೊಟೇಲಿನ ಛಾರ್ಜ್ ವಹಿಸಿಕೊಳ್ಳಬೇಕಾಗಿತ್ತು. ಆದರೂ ಒಮ್ಮೆ ಕ್ರಿಕೆಟ್‍ನಲ್ಲಿ ಫೀಲ್ಡಿಂಗ್ ಮಾಡಿ ದಾಂಡಿಗ ಬೀಸಿದ ಚೆಂಡಿನ ದಾಳಿಗೆ ಪಕ್ಕಾಗಿ ಹಣೆ ಊದಿಸಿಕೊಂಡ ಅನುಭವವಷ್ಟೇ ನನ್ನ ಕ್ರೀಡಾ ಹವ್ಯಾಸಕ್ಕೆ ಹಿಡಿದ ಕನ್ನಡಿಯಾಗಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_209.txt b/Kenda Sampige/article_209.txt new file mode 100644 index 0000000000000000000000000000000000000000..3bab610967d67afe2098d65ed3be2946a93728c6 --- /dev/null +++ b/Kenda Sampige/article_209.txt @@ -0,0 +1,51 @@ +ಹಿಂಗೆ ಮ್ಯಾರೆ ಮುರುದಾದ ಮೇಲೆ ಒಂದೇ ಸಲಕ್ಕೆ ವಡೆ ಆದ ಭತ್ತ ಆ ತುದಿಂದ ಈ ತುದಿವರ್ಗೂ ಹಾಸಿಗೆ ಹಾಸಿ, ವಣಗಿ ಗಾಳಿ ಬಂದಾಗ ಸರಸರನೆ ತೂರಾಡಿ, ವಾಲಾಡಿ ಗಾಳಿ ಬೀಸೋ ದಿಕ್ಕನೇ ತನ್ನ ಮೇಲೆ ಹಾಯಸ್ಕಂಡು ಹಾದು ಹೋಗ ಚಂದ, ಗದ್ದೆ ಬದಿನ ಮೇಲೆ ನಿಂತೋರ ಕಣ್ಣ ಅಳ್ಳಾಡದಂಗೆ ಹಿಡ್ದಿಡತಿತ್ತು. + +ಈ ಪಟು ಊರ ಗಟ್ಟಾಳುಗಳು ಅತ್ತಿಮರದ ಗದ್ದೆಗೆ ನುಗ್ಗದಾಗ ಆಚೀಚೆ ಗದ್ದೆ ಹೊಂಬಣ್ಣವಾಗಿ ಕಂಡ್ರೆ ಈ ಗದ್ದೆ ನಡುಮಧ್ಯಕ್ಕೆ ಕೆಂಚಗೆ ಕಾಣ್ತಿತ್ತು. ವಾರ ಮೊದಲೇ ನೀರು ಸೋರ ಹಾಕಿದ ಗದ್ದೆ ವಣಗಿದ್ರೂವೆ ಒಳಗಿದ್ದ ಹಸಿತೇವ ಕಾಲಿಗೆ ತಂಪಾಗಿತ್ತು. ಸುತ್ತಲೂ ಇರೊ ಹತ್ತಾರು ಮರದಲ್ಲಿ ಹಕ್ಕಿಹಿಂಡು ಕಾಳಾಸೆಗೆ ಬಂದು ಕೂತಿದ್ದವು ಈ ತುಂಡುಡ್ಲು ದಂಡು ಕಂಡು….‘ಓ… ಇನ್ನ ಇವತ್ತು ಕಾಳ ಆಯಾಕ್ಕಾಗಕ್ಕುಲ್ಲ, ಮನುಷ್ಯರು ಇರ ಕಡೆಲಿ ನಾವೆಲ್ಲಾರ ಬದುಕೋದು ಉಂಟಾ?’ ಅಂತವ ದೊಡ್ಡಕೆರೆ ಹಿಂದಿರೊ ಸದ್ದಿಲ್ಲದಿರ ಗದ್ದಿಗೆ ಪುರ್ರನೆ ಹಾರಕಂದು ಹೋಗೇಬುಟ್ಟು! ಬರ್ರನೆ…ಬೀಡ ಬಿಟ್ಕಂಡೇಬುಟ್ವು . + +ಬಾಲೆಯೀಗ ದೂರಕ್ಕೆ ಬೆಳ್ಳ ತೋರಿ, ಗುಂಪಲ್ಲಿದ್ದ ಅಮಲಿಗೆ ಹಾರಿ ಹೋದ ಹಕ್ಕಿ ದಂಡ ತೋರ್ದಾಗ ಅವಳು ನಕ್ಳು. ಅಮಲಿ ನಗದು ಎಷ್ಟು ಚಂದ ಅಂತ ಬಾಲೆ ಅವಳ ನೋಡ್ತಲೆ ಇತ್ತು. ಈ ಏಳಾಳು ಗುಂಪಲ್ಲಿ ಇವಳೇ ಚೆಂದ. + +ತಗಳಪ್ಪ ಶುರುವಾತು ನೋಡಿ ಹಬ್ಬ. ‘ಊರೂರನ್ನೇ ಪುಡಿ ಮಾಡ್ಬುಡ್ತೀವಿ ಬೇಕಾರೆ ನಾವು’ ಅನ್ನುವ ಹೊಸಳ್ಳಿಯ ಏಳಾಳು ಹೆಣ್ಣಾಳುವೆ ಗದ್ದಿಗಿಳ್ಕಂಡು, ಹಿಂದ್ಗುಟೆ ಬಂದ ಗಂಡ್ಗೆಲ್ಲ ಬಾಯಿನೀರ ಕುಡುಸ್ತಿದ್ರು. ಅವ್ರು ಗದ್ದೆ ವಳಗೆ ಒಡ್ಡಾಡದ ನೋಡಕ್ಕೊಂದು ಚಂದ. ಕೆಲ್ಸ ಅಂದ್ರೆ ಬುಡಿ ಅವ್ರಗೆ ಕೈಲಾಸ! ಅಂಥ ಗಟ್ಗಿತ್ತಿರು ಅವ್ರು. ನಾಕಾಳು ಮ್ಯಾಗಳಕೇರಿ ಹೆಣ್ಣು, ಇನ್ನು ಮೂರಾಳಿದ್ದೋರು ಹೊಸಳ್ಳಿ, ಹಳೆಮರಸಿನ ಹೊಲಗೇರಿಯರಾಗಿದ್ರು. ಅದ್ರಳೊಗಿದ್ದ ತಂಗ್ಯಮ್ಮ…ಅಮಲಿ, ಇಬ್ರೂವೆ ಎಂಥ ಗಟ್ಗಿತ್ತೀರು ಅಂದ್ರೆ….ತುಂಬಿದ ಗಾಡಿ ಮನೆ ಮುಂದೆ ಬಂದು ನಿಂತಕಂದ್ರೆ ಗಂಡಾಳಿರ್ನಿಲ್ಲ ಅಂದ್ರೂ ಸೈತ, ಪಲ್ಲ ಮೂಟೆಯ ನಿಸೂರಾಗಿ ಗಾಡಿಂದ ಇಳುಸಿ ಬೆನ್ನ ಮ್ಯಾಲೆ ಹೊತ್ಕಬಂದು ಮನೆ ವಳಕೆ ಇಳ್ಕೊ ಛತಾಮಿರಾಗಿದ್ರು. + +ಇವ್ರು ಏಳ ಜನವೂ ಮಾತ್ರವ ಒಂದಿಸಕ್ಕೂವೆ ಒಬ್ರನ್ನೊಬ್ರು ಬುಟ್ಟಿರ್ತಿರ್ನಿಲ್ಲ. ಕೊಳ್ಳ ಕಟ್ಕಂಡು ಒಟ್ಗೆ ಕೆಲ್ಸಕ್ಕೆ ಹೋಗರು, ಒಟ್ಗೆ ಬರರು. ಈ ಹುಡುಗೀರು ಎದ್ದ್ ಮೇಲೆ ಅವರ ಮನೆ ಕಷ್ಟಗಳು ಸೈತ ಕಟ್ಟೊಡದು ಹರದ್ಹೋಗಿದ್ವು. ಅವರ ಆಳ್ತನ, ಎಣ್ಣೆ ಹಾಕಿ ತಲೆ ಬಾಚಿ ಮುಡಿಯೋ ಮಲ್ಗೆ, ಜಾಲಾರಿ, ಸಂಪ್ಗೆ ಹುವಿನ ಘಮನ, ದುಡಿಮೆ ಮಾಡದಂಗೆಲ್ಲ ಕಳಗಟ್ಟೋ ಅವ್ರ ನೀಟಾದ ಮುಖ, ಅವ್ವೇ…. ಅವ್ರು ಬತ್ತರೆ ಕೆಲ್ಸಕ್ಕೆ ಅಂದ್ರೆ ಸಾಕು, ಊರಲ್ಲಿ ಯಾರೂ ಬೇಡ ಅನ್ನದೆ ಕರಕಳರು, ಅವರು ಕೆಲ್ಸ ನುರಿಯದ ನೋಡಿ ‘ ಅಯ್ಯವ್ವ ‘ ಆಂತಲೂ ಅನ್ಕಳರು. + +ಹಿಂದೆ… ಹಾಸನದಮ್ಮನ ಜೊತೆ ಹುಟ್ಟಿದ ಏಳು ಅಕ್ಕತಂಗೇರುವೆ ಒಟ್ಟೊಟ್ಗೆ ಹಾಸನದಲ್ಲಿ ನೆಲೆಸಿ ಈ ಪ್ರಾಂತ್ಯವಕಾಯೋ ದೇವತೆರಾಗವ್ರಲ್ಲ! ಹಂಗೆ…ಗುಂಪಾಗಿ ಅಡ್ಡಾಡೊ ಇವ್ರನ್ನ ಕಂಡು ಬಾಯಿನೀರ ಕುಡಿತಿದ್ದ ಪಕ್ಕದೂರ ಗಂಡುಡ್ಲು…ಒಳಗಡೆ ಆಸೆ ಇದ್ರೂವೆ… ‘ಅವ್ವೇ! ಮುಟ್ಟುದ್ರೆ ಉಳ್ಯೋದುಂಟಾ ಈ ತಾಯೀರ ಕೈಲಿ’ ಅಂತನ್ಕಳರು. ಆದ್ರೂ ಅವರಿದ್ ಕಡೆ ಕುಶಾಲಿಗೇನು ಕಡಿಮೆ ಇರನಿಲ್ಲ ಅನ್ನಿ, ಹಾಡು ಹಸೆ, ಪೋಲಿ ಬಯ್ಗಳ, ಪೋಲಿ ಕಥೆ, ಇವ್ರಿರೋ ಗದ್ದೆ ತುಂಬಾ ಅಡ್ಡಾಡದೂ ಅಲ್ಲದೆ ನಗು ಕೇಕೆ ದೂರದಲ್ಲಿದ್ದ ಊರ ಕಿವಿಗೆ ಹಾಕ್ಕಂಡು ಬಡಿಯೋ ಹಂಗೆ ಗದ್ದೇನೆ ಎದ್ದೆದ್ದು ಬೊಂಬಡ ಹೊಡಿತಿರದು. + +ಹರತ್ವಾಗಿರ ಕುಡ್ಲು ಕಣಿಕಣಿನೆ ಆಡುವಾಗ ಬಳೆ, ಬೆಳ್ಳಿ ಮುರಿಗೆ ತಾಗಿ ಆಗೊ ಸದ್ದಿಗೆ ಗಂಡುಡ್ಲು ‘ಸದ್ದು ಮಾಡದೆ ಆತ್ರವ್ವ, ನೀವು! ಬನ್ನಿ ,ಬನ್ನಿ, ಮುಂದ್ಕೆ’ ಅಂತ ಕೂಕ ಹಾಕರು. ಹಂಗೆ ಹೆಣ್ಣಾಳ ಕೈಲಿ ಬಯಸ್ಕಣರು. + +“ಹೂಂ ಹೋಗು, ಇವ್ನ ಪಕ್ಕಕ್ಕೆ ಬಗ್ಗದ್ರೆ ಸಾಕು ಚಡ್ಡಿಲಿ ಅಳ್ಳಾಡದ ಕಾಣುವಂತೆ ” ಅನ್ನೊ ಸವ್ವಾಸೇರಿನ ಮಾತಿಗೆ ‘ಹೋ..’ ಅಂತೆಲ್ಲರೂ ನಕ್ರೆ… ಮಲ್ಲ ಮಾತ್ರವ ಒಬ್ಬ…“ಹೋ… ನೀ ಬಗ್ಗದ್ರೂ ಹಂಗೆ ತಗಳವ್ವ, ನಮ್ಮ ಹೋರಿಕರ ಹಾಯದು ಕಾಣಸ್ತಿತೆ ನನ್ ಕಣ್ಣಿಗೆ ” ಅಂತಂದು ಹೀನಾಮಾನ ಆ ಏಳು ಹಕ್ಕಿಗಳ ಕೈಲಿ ಕಣಿಕಣಿನೆ ಉಗಸ್ಕಂಡು ಮೀಸೆ ಮರೆಲಿ ನಗೆ ಉಕ್ಸದ ಮಾತ್ರ ಅವ್ನು ತಪ್ಪುಸ್ತಿರನಿಲ್ಲ. ಆಮೇಲೆ“ಹೋಕ್ಕಳ್ಳಿ ಬುಡ್ರೆ ನಮ್ಮವ್ವದೀರ…ಹಾಸನದಮ್ಮರಂಗೆ ನಿಮ್ಮ ಒಬ್ಬೊಬ್ರುನೂ ಕರಕ ಹೋಗಿ ಒಂದೊಂದು ಬನದಲ್ಲಿ ಕೂರಸಿ ಪೂಜ್ಸನ” ಅನ್ನೋ ಮಲ್ಲನ ಮಾತ್ಗೆ…. ಅಮಲಿ ಇದ್ದೋಳು…. + +“ಏ.. ಇದೇಳಕ್ಕೆ ಬಂದಾ? ಕೊಡಗಳ್ಳಿಂದ ಇಲ್ಲಿವರಗೂವೆ! ಗದ್ದೆ ಕುಯ್ಲು ಮುಗ್ಯೊ ಹೊತ್ಗೆ ನಿನ್ನ ಉಳಸಕ್ಕುಲ್ಲ ನೋಡು” ಅಂತ ಬೆದರ್ಸದ್ದ ಕಂಡು ಎಲ್ಲರು ‘ಹೋ’ ಅಂತ ನಕ್ರು. + +“ಆತು ಬುಡ್ರವ್ವ…ಈ ಪಟು! ಬನದಲ್ಲಿ ಕೂರಸದಾಗ ನನ್ನೇ ನಿಮ್ ಮುಂದೆ ಬಲಿ ಹಾಕೂರಂತೆ ” ಅಂತ ಕಾಣದನಂಗೆ ಅಂದ ಮಾತ್ಗೆ…. + +“ನೀನು ಆ ಕಡೆ ನೋಡದೆ ಗದ್ದೆ ಕುಯ್ಯಪ್ಪ! ಎಲ್ಲಾರ ನಿಂದೇ ಕುಯ್ಕಂಡು ಹೊರೆ ಕಟ್ಟೀಯಾ? ” ದ್ಯಾವಣಿಯ ನಗೆಸಾರಿಕೆ ಮಾತಿಗೆ…“ಹೊಸಳ್ಳಿ ಊರೋರು ಬುಡ್ರಪ್ಪ, ಅಂಕೆಶಂಕೆ ಇಲ್ಲದಂಗೆ ಪೂರಾ ಹದಗೆಟ್ಟು ಹೋಗೀದೀರ ಕಣ. ಈ ಹೆಣ್ಣುಡ್ಲು ಜತೆಲಿ ನೀನು ಹಾಳಾಗಿ ಹೋಗಿದಿಯಲ್ಲೊ ದ್ಯಾವಣಿ ” ಅಂತ ಒಬ್ರುಗೊಬ್ರು ಪಂಥಕ್ಕಿಟ್ಟ ಮಾತಿನ ಹರಳ ಹುರಿತಿರುವಾಗಲೇ ಸೂರಪ್ಪ ನೆತ್ತಿ ಮ್ಯಾಕೆ ಬಂದು, ತ್ಯಾವದ ಗದ್ದೆ ಬಯಲ ಸೀಳಕಂಡು ಗದ್ದೆಬದಿನ ಮೇಲೆ ಗೌಡ್ರು ಮನೆಯ ಬಿಸ್ಬಿಸಿ ಊಟದ ಕುಕ್ಕೆ ವಾಲಾಡಕಂಡು ಬತ್ತಾ ಇತ್ತು. ಬಾಲೆ ಈಗ ತನ್ನವ್ವನತ್ರಕ್ಕೆ ವಾಟ ಬಿದ್ದು ಹೋಯ್ತು. + +ಅದ ಕಂಡು… ಆಸಾಳು ಹೆಣ್ಣುಡ್ಲುವೆ ಮಲ್ಲನ ಬಡ್ಡಿಗೋಗಿ ಕುಶಾಲಿಗೆ ಅವನ ಮೂತಿ ತಿವದು, ಬಿರಬಿರನೆ ಹೋಗಿ ನಗ್ತನಗ್ತ ಕೆಳಗಲ ಗದ್ದೆ ಕಾವ್ಲಿಲಿ ಹರದೋತಿದ್ದ ತಣ್ಣನೆ ನೀರಿಗೆ ಕೈಕಾಲ ವಡ್ಡಕಂಡು ತೊಳಕತಿದ್ರು. ಅವರ ಹಿಡತಕ್ಕೆ ಸಿಗ ಹಾಕ್ಕಂದು, ಕೂದು ಹಾಕ್ದ ಭತ್ತದ ತೆನೆ, ಈಗ ಈ ಹರೇದ ಹುಡುಗರ ನಗೆಗೆ ಮನಸೋತು ಗದ್ದೆನುಂಬಲ್ಲಿ ಸಾಲಾಗಿ ಒರಗಿದ್ವು. + +ನಗನಗ್ತಾ ಉಣ್ಣುವ ಆಳುಮಕ್ಳ ಹುಮ್ಮಸ್ಸು, ಕುಶಾಲು ನೋಡಿದ್ದೆ ಅವರವ್ವಾರ ಜೊತೆಲಿದ್ದ ಮಣಿಬಾಲೆನೂ ಹುರುಪಾಗೋಯ್ತು. ಹೋಗಿ ಹೋಗಿ ಸಾರನೂ, ಮಜ್ಜಿಗೇನೂ ಅವರ ಅಗಲಿಗೆ ಬುಟ್ಕೊಡ್ತ ಇತ್ತು. ಈರುಳ್ಳಿ ಚೂರು ಹಾಕ್ದ ಮಜ್ಜಿಗೆ ಕುಡಿವಾಗ ಅದರ ರುಚಿಗೆ ಮನಸೋತು ಬಾಲೆ ಇನ್ನೊಂದು ಜೊನ್ನೆ ಬಿಡ್ಸಕಂಡು ಕುಡಿತು. ದೊಡ್ಡ ಕೆರೆಲಿ ಕುಯ್ಕಬಂದ ತಾವರೆ ಎಲೆಲಿ ಉಂಡು, ಅಲ್ಲೇ ಹಂಚಿಕಡ್ಡಿ ಹೊಂಚಿ ಆಳುಮಕ್ಳು ಕಟ್ಟಿದ್ದ ಮುತ್ತುಗದೆಲೆ ಜೊನ್ನಿಯ ತಿರುಗ್ಸಿ ಮುರುಗ್ಸಿ ಈಗ ಬಾಲೆ ನೋಡತಾ ಇದ್ರೆ… ಹರೇದುಡ್ಲ ಮಾತ್ಗೆ ಅವ್ರವ್ವಾರು ಬಿದ್ದೂಬಿದ್ದೂ ನಗತಿದ್ರು. + + + +ಅತ್ತಿ ಮರದ ಪೊಟರೆಯ ಹಕ್ಕಿಪಾಡು + +ಮತ್ತೆ ಕೈಹಿಡದ ಕುಯ್ಲು ಮುಗಿವೊತ್ಗೆ ಸಂದಾತು, ಈ ಹರೇವಕ್ಕೆ ಮೈ ನೋವೇ ಕಾಣದಿರೋವಂಥ ಆ ಚೋಜಿಗದ ನಗೆಗೆ ಮನಸೋತ ಹಕ್ಕಿಪಕ್ಕಿ ಅನಾದಿ ಕಾಲದಿಂದಲೂ ಪೊರೆದಂಥ ಆ ಅತ್ತಿ ಮರದ ಪೊಟರೆಗೆ ಹಾರಕಂಬಂದು ಕಿಚಪಿಚನೆ ಮಾತಾಡ್ಕಂಡು ಕೂತ್ಕತಿದ್ವು. ಹಂಗೆ… ಕುಡುಗೋಲ ಹರಿತಕ್ಕೆ ಆಳುಗಳ ಹಿಡಿತಕ್ಕೆ ನೊಂದು ನೊಂದು… ತೆನೆ ಒಂದೇ ಸಮನೆ ನೆಲಕ್ಕೆ ಬಿದ್ದು ಚೆಲ್ಲಾಡಿಸಿದ ನಾಕಾರು ಕಾಳನ್ನ… ಮರದಿಂದ ರೊಯ್ಯನೆ ಕೆಳಗಿಳಿದು ಕುಪ್ಪಳಸ್ತ ಕುಪ್ಪಳಸ್ತ, ತಟಪಟನೆ ಹಕ್ಕಿ… ಬಾಯಿಗೆ ಎಸ್ಕಂತಿದ್ವು. + +ಅದ ನೋಡಿದ್ದೆ… ‘ಹೊಟ್ಟೆ ಹಸಿವು ಅನ್ನೋದು ನಮ್ಮ ಭೂಮಿ ಮ್ಯಾಲೆ ಏಷ್ಟು ದೊಡ್ಡದೋ ಶಿವನೇ’ ಅನ್ಕಂಡ ಸೂರ್ಯದೇವ ಮುಖವ ಅಳ್ಳಸಕಂಡು, ಮರದ ತುಂಬ ನ್ಯಾತು ಬಿದ್ದಿದ್ದ ತನ್ನ ಇಳಿಸಂದೆ ಬಣ್ಣದ ಜೊಂಪೆಜೊಂಪೆ ಅತ್ತಿಹಣ್ಣ ಬೆಳಕು ಬಿಟ್ಟು ತೋರಿದ್ದ ಕಂಡು… ‘ಹೊಟ್ಟಿಯಿಟ್ಟವನೇ ಶಿವ, ಕಾಳು ಕೊಟ್ಟವಳೇ ತಾಯಿ’ ಅಂತಂದು ಹಕ್ಕಿಗಳು ಮರದ ಗೂಡಲ್ಲಿದ್ದ ತಮ್ಮರಿಗಳಿಗೆ, ಹಣ್ಣ ಕಿತ್ತುತಂದು ಗುಕ್ಕಿಡುವ ಆ ಸಡಗರವ ಕಂಡ ಸೂರಪ್ಪನೂ ಒಂದು ನೆಮ್ಮದೀಲಿ ದೊಡ್ಡಕೆರೆ ನೀರಿಗೆ ಧುಮುಕ್ತಾ ಇದ್ದ. + +ಎಂದಿನಂಗೆ ತಣ್ಣನೆ ಗಾಳಿಜೋಲಿಯ ತೂಗುತ್ತ ಆ ಗಾಳಿರಾಯ ಈ ಸಂದೇಲೂ ಬಂದೋನೆ, ತನ್ನ ಬೀಡಲ್ಲಿ ಕೂದು ಮಲಗ್ಸಿದ್ದ…. ಗದ್ದೆಯ ಕಂಡೋನೆ…. ಅಯ್ಯೋ….ಅನ್ಕಂಡು, + +ತೆನೆಯ ಭಾರಕ್ಕೆ ತೂಗಿತೂಗಿ… ಬೀಳ್ತಿದ್ದ ಭತ್ತದ ಬೆಳಸೇ!ನನ್ನ ಹರಿವಿಗೆ ಹರವಾಗ್ತಿದ್ದ ಎನ್ನ ಮನಸೇ….ದೂರದೂರಕ್ಕೂ ಹೊತ್ತೊಯ್ಯತ್ತಿದ್ದ ಆಗಸದ ಕನಸೇ…” ಹಳೆ ಹಾಡೊಂದನ್ನ ಕನವರಿಸುತ್ತ… ಪಕ್ಕದ ಭತ್ತದ ಗದ್ದೆಯ ಹುಲುಸಾದ ಬೆಳೆಯ ಮೇಲೆ ಕಯ್ಯಾಡಿಸ್ತಿದ್ದ. + +ಈಗ… ಆ ಹಾಡಿಗೆ ತಣ್ಣಗೆ ಗೂಡಲ್ಲಿದ್ದ ಹಕ್ಕಿ, ಮಾತ ಮರೆತು ಕಿವಿಗೊಡತಿದ್ವು. ಮರಿಲಾರದಂಥ ಈ ಹೊಂಬಣ್ಣದ ಗದ್ದೆಹಾಸು, ಹಕ್ಕಿಮಾತು, ತಣ್ಣನೆ ಗಾಳಿಪದವ, ಮಣಿಮಗವೂ ತನ್ನ ಮನದ ತಿಜೋರಿಗಿಳಿಸಿ ಭರ್ತಿ ಮಾಡ್ಕಂತಿತ್ತು. + +ಒಂದೇ ಚಣ! ಆಗಲಾಗಲೇ… ಅಲಲಾ… ಇಂಥ ನೆಮ್ಮದಿಗೆ ಭಂಗ ತರುವಂಗೆ…. ಹಕ್ಕಿಕುಲ ಥರಗುಟ್ಟಿ…ಆ ದೈತ್ಯ ಅತ್ತಿಮರವೇ ಪರಪರನೆ…ಥರಗುಡುತ ಪರದಾಡಿ ಹೋಗುವಂಗೆ ಬೊಬ್ಬೆ ಹೊಡೀತು. ಕೆಲ್ಸ ಕೈಬುಟ್ಟು, ಮಖಮೈ ತೊಳಕಂಡು ವಲ್ಲೀಲಿ, ಸೆರಗಲ್ಲಿ ಮಖಮೈ ಸೀಟಕಂತಿದ್ದ ಆಳುಮಕ್ಕಳೆಲ್ಲ ಯಾಕೆ ಅಂತ ತಮ್ಮ ತಲೆಯೆತ್ತಿ ನೋಡದ್ರೆ…ಕಂಡದ್ದೇನು? ಆ ಸಂಜೆಗಪ್ಪಲ್ಲಿ ರೆಕ್ಕೆ ಮೀಟಿ ಆಕಾಶದ ಬಣ್ಣದಲ್ಲಿ, ಮಾಸಲು ಚಿತ್ರವಾಗಿ ಹಾರುತಿದ್ದ ಹದ್ದಿನ ಕಾಲಿಗೆ; ಅಯ್ಯೋ…ಒಂದು ಹಕ್ಕಿಮರಿ ಸಿಗಹಾಕ್ಕಂಡಿತ್ತು. + +ಅದಾಗಲೇ ಗೂಡುಸೇರಿ ಸುಮ್ಮಗಾಗ್ತಿದ್ದ ಹಕ್ಕಿಬಳಗ ಮತ್ತೆ ಕರ್ರನೆ, ದುಃಖದಲ್ಲಿ ಅರಚಿಕೊಳ್ಳೋದನ್ನ ಕೇಳಿಕೊಂಡ ಮಲ್ಲ ಇದ್ದೋನು…“ಥೋ… ರಾವ್ ಹೊಡ್ಯ… ಇದ್ರವ್ವಸಾಳಾಗ, ಇದ್ರ ನೆತ್ತಿ ಹೊಡೆಯ! ನಾವು ಈಸಾಳು ಇಲ್ಲೇ ಇದ್ದಂಗೇಯ…ಗರುಡಾಳ ಬಂದು ಆ ಮರಿಯ ಹಾರಸ್ಕಹೋಯ್ತಲ್ಲ… ಎಲ್ಲಿ ಕೂತಿತ್ತೋ…ಬಂದು ಸಾವು” ಆ ಸಣ್ಣ ಹಕ್ಕಿಮರಿಗೆ ಮಮ್ಮುಲ ಮರುಗುವ ಮಾತು ಗಾಳೀಲಿ ಕೊಡಗಳ್ಳಿ ಕಡೆಗೆ ಅವನ ಕಾಲ ಜತೇಲೆ ಹೋಯ್ತ ಇತ್ತು. + +ಹೆಣ್ಣಾಳ ಹಿಂದೆ ಮಣಿಮಗ ಮಾತು ಮರೆತು ಊರ ದಾರಿಯಲ್ಲಿತ್ತು. ಅರಗಿಸಿಕೊಳ್ಳಲಾರದ ಒಂದು ಬದುಕಿನ ಕಣ್ಕಟ್ಟು ಮನದಲ್ಲಿ ಗಟ್ಟಿಯಾಗಿ ನೆಲೆಯೂರಿತ್ತು. ಬೆಳಗ್ಗಿನಿಂದ ಲಗುಬಗೆಯಾಗಿದ್ದ ಬಾಲೆಗೆ ಅರಿಯದ ಕಾರ್ಮೋಡ ಕವಿದಿತ್ತು. + + + +ತೆನೆತುಂಬಿ ಒರಗಿದ್ದ ಗದ್ದೆ ಬಯಲಲ್ಲೀಗ ತೀರದ ದುಃಖ ಮಡುಗಟ್ಟಿತ್ತು. ಕೂದು ಹಾಕಿದ ಭತ್ತದ ಗದ್ದೆಯ ತೆನೆಗೀಗ ಇದರ ಯೋಚನೆಯೇ ಇರನಿಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_21.txt b/Kenda Sampige/article_21.txt new file mode 100644 index 0000000000000000000000000000000000000000..c8c7667ea379eeb72deb74c9ee62cff6fb38db67 --- /dev/null +++ b/Kenda Sampige/article_21.txt @@ -0,0 +1,43 @@ +ಫ್ರಾನ್ಸ್ ದೇಶ ಭೌಗೋಳಿಕವಾಗಿ ವಿಶಿಷ್ಟವಾದ ಆಕಾರವನ್ನು ಹೊಂದಿದೆ. ಇಡಿಯ ರಾಷ್ಟ್ರ ಷಡ್ಭುಜಾಕೃತಿಯಲ್ಲಿದೆ. ಈ ಕಾರಣದಿಂದಲೇ ಫ್ರಾನ್ಸ್‌ಗೆ ಹೆಕ್ಸಾಗೋನ್ ಎಂಬ ಅಡ್ಡಹೆಸರೂ ಇದೆ. ಹೆಕ್ಸಾಗೋನ್ ಎಂದರೆ ಷಡ್ಬುಜದ ಆಕಾರದಲ್ಲಿರುವುದು ಎಂದರ್ಥ. ಫ್ರೆಂಚರು ಬೇರೆ ದೇಶದವರೊಂದಿಗೆ ಮಾತನಾಡುವಾಗ ಈ ಅಡ್ಡಹೆಸರನ್ನೇ ಬಳಸುತ್ತಾರೆ. + +ಫ್ರಾನ್ಸ್ ಇತಿಹಾಸದ ಕಡೆಗೊಮ್ಮೆ ದೃಷ್ಟಿ ಹರಿಸಿದಾಗ ಅದು ಕೇವಲ ತನ್ನ ಸಂಸ್ಕೃತಿಯನ್ನಷ್ಟೇ ರೂಪಿಸಿಕೊಂಡಿಲ್ಲ, ಯುರೋಪ್‌ನ ಸಂಸ್ಕೃತಿಯನ್ನೂ ರೂಪಿಸಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಫ್ರಾನ್ಸ್‌ನ ಸಂಸ್ಕೃತಿಯು ಬೇರೆ ಬೇರೆ ದೇಶಗಳಿಗೆ ತಲುಪುವುದಕ್ಕೆ ಎರಡು ಕಾರಣಗಳಿವೆ. ಮೊದಲನೆಯದು ಫ್ರೆಂಚ್ ವಸಾಹತುಶಾಹಿತ್ವ. ಎರಡನೆಯದು ಜಾಗತೀಕರಣ ಪ್ರಕ್ರಿಯೆ. ವಸಾಹತುಶಾಹಿತ್ವದಿಂದಾಗಿ ಫ್ರೆಂಚ್ ಕಲೆಗಳು, ಆಹಾರ ಪದ್ಧತಿ, ಆಹಾರ ಧಾನ್ಯಗಳು ಇತರ ರಾಷ್ಟ್ರಗಳನ್ನು ತಲುಪಿತು. ಫ್ರಾನ್ಸ್‌ನಲ್ಲಿ ಉತ್ಪಾದನೆಯಾದ ವಸ್ತುಗಳು ಬೇರೆ ದೇಶಗಳನ್ನು ಮುಟ್ಟಿದ್ದು ಜಾಗತಿಕ ವ್ಯಾಪಾರದ ಮೂಲಕ. ಫ್ರೆಂಚ್ ಸಂಸ್ಕೃತಿಯಲ್ಲಿ ಸೆಲ್ಟಿಕ್, ಗ್ರೀಕೋ- ರೋಮನ್ ಮತ್ತು ಜರ್ಮನಿಕ್ ಅಂಶಗಳು ಹದವಾಗಿ ಬೆರೆತುಕೊಂಡಿವೆ. ಫ್ರಾನ್ಸ್ ಸಂಸ್ಕೃತಿ ಶ್ರೇಷ್ಠತೆಯನ್ನು ಗಳಿಸಿಕೊಂಡದ್ದು ಮಧ್ಯಯುಗದಲ್ಲಿ. ಕ್ರೈಸ್ತ ಸಂತರು, ರಾಜರು, ವಿದ್ವಾಂಸರು, ಧಾರ್ಮಿಕ ಸಂಸ್ಥೆಗಳು, ವಿಶ್ವವಿದ್ಯಾನಿಲಯಗಳು ಈ ದಿಶೆಯಲ್ಲಿ ಗಮನಾರ್ಹ ಕೊಡುಗೆ ನೀಡಿವೆ. ಇವರ ಪ್ರೋತ್ಸಾಹದ ಪರಿಣಾಮವಾಗಿ ಪ್ಯಾರಿಸ್, ನ್ಯಾನ್ಸಿ, ಸ್ಟ್ರಾಸ್‌ಬರ್ಗ್ ಮತ್ತು ಲಿಯಾನ್ ಮೊದಲಾದ ನಗರಗಳು ಫ್ರಾನ್ಸ್‌ನ ಸಾಂಸ್ಕೃತಿಕ ಕೇಂದ್ರಗಳೆನಿಸಿಕೊಂಡಿವೆ. + +ಫ್ರೆಂಚ್ ಸಂಸ್ಕೃತಿಯ ಮೇಲೆ ವಲಸಿಗರ ಸಂಸ್ಕೃತಿಯ ಪ್ರಭಾವವೂ ಇದೆ. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಉತ್ತರ ಆಫ್ರಿಕಾದಿಂದ ವಲಸೆ ಬಂದ ಮುಸ್ಲಿಂ ಸಮುದಾಯದ ಮಂದಿ ನೆಲೆನಿಂತದ್ದು ಪ್ಯಾರಿಸ್ ಮತ್ತು ಮಾರ್ಸಿಲ್ಲೆಯಲ್ಲಿ. ಹೀಗೆ ನೆಲೆನಿಂತವರನ್ನು ಫ್ರೆಂಚರು ಲೆಸ್ ಬ್ಯೂರ್, ಲೇಬರ್ ಬ್ಯೂರ್ ಎಂದೆಲ್ಲಾ ಕರೆದಿದ್ದಾರೆ. ಫ್ರೆಂಚ್ ನೃತ್ಯ, ಸಂಗೀತ, ಆಹಾರ ಪದ್ಧತಿ, ಚಿತ್ರಕಲೆ ಮತ್ತು ಸಾಹಿತ್ಯಕ್ಕೆ ಈ ವಲಸಿಗ ಮುಸ್ಲಿಮರ ಕೊಡುಗೆಯಿದೆ. ಹೊರಗಿನಿಂದ ಬಂದ ಇವರು ಫ್ರಾನ್ಸ್ ಸಂಸ್ಕೃತಿಯಲ್ಲಿ ಬೆರೆತುಹೋಗಿದ್ದಾರೆ. ಕಲಾವಿದರಾಗಿ, ಸಾಹಿತಿಗಳಾಗಿ ಗುರುತಿಸಿಕೊಂಡು ಫ್ರೆಂಚ್ ಸಂಸ್ಕೃತಿಯನ್ನು ಬೆಳೆಸುತ್ತಿದ್ದಾರೆ. + +ಹದಿನೆಂಟನೇ ಶತಮಾನವು ಫ್ರಾನ್ಸ್ ಪಾಲಿಗೆ ಪುನರುಜ್ಜೀವನದ ಕಾಲಘಟ್ಟ. ಈ ಅವಧಿಯಲ್ಲಿ ಅತ್ತ ಶ್ರೀಮಂತರೂ ಅಲ್ಲದ, ಇತ್ತ ಬಡವರೂ ಅಲ್ಲದ ಮಧ್ಯಮ ವರ್ಗದ ಉದಯವಾಯಿತು. ಈ ಮಧ್ಯಮ ವರ್ಗದ ಜನರ ಜೀವನವಿಧಾನಕ್ಕೆ ಮಹತ್ವ ನೀಡುವ ಬೂರ್ಜ್ವಾ ಸಂಸ್ಕೃತಿ ಬೆಳೆದುಬಂತು. ವ್ಯವಸ್ಥೆಯನ್ನು ಪ್ರಶ್ನಿಸುವ, ಸಮಾಜದ ವಿವಿಧ ಪ್ರಕ್ರಿಯೆಗಳ ಬಗ್ಗೆ ಚಿಂತಿಸುವ ಮನೋಭಾವ ಕ್ರಾಂತಿಕಾರಕವಾಗಿ ಬೆಳೆದದ್ದು ಈ ಅವಧಿಯಲ್ಲಿಯೇ. ಆದ್ದರಿಂದ ಇದು ಫ್ರಾನ್ಸ್ ಇತಿಹಾಸದಲ್ಲಿ ಜ್ಞಾನದ ಯುಗ ಎಂದು ಕರೆಸಿಕೊಂಡಿತು. ಬೆಳೆದ ವೈಚಾರಿಕತೆಯು ಪ್ರಭುತ್ವವನ್ನು ಪ್ರಶ್ನಿಸುವ ದಿಟ್ಟತನವನ್ನು ತೋರಿತು. ಆ ಕಾಲಕ್ಕೆ ಪ್ರಮುಖ ಸಾಂಸ್ಕೃತಿಕ ಚಟುವಟಿಕೆಗಳೆಲ್ಲವೂ ಪ್ಯಾರೀಸ್‌ನಲ್ಲಿ ಕೇಂದ್ರೀಕೃತವಾಗಿದ್ದವು. ಸಣ್ಣ ಪುಟ್ಟ ನಗರಗಳು ಇದರಿಂದ ವಂಚಿತವಾಗಿದ್ದವು. ಈ ಬಗೆಯ ತಾರತಮ್ಯ ನೀತಿಯನ್ನು ಗ್ರೆನೋಬಲ್, ಲಿಯಾನ್ ಮೊದಲಾದ ಚಿಕ್ಕ ಪಟ್ಟಣಗಳು ಒಪ್ಪಿಕೊಳ್ಳಲಿಲ್ಲ. ತಮ್ಮ ಸಾಂಸ್ಕೃತಿಕ ಹಕ್ಕುಗಳಿಗಾಗಿ ಪಟ್ಟು ಹಿಡಿದವು. ಇದರಿಂದಾಗಿ ಪ್ರಾದೇಶಿಕ ನೆಲೆಗಟ್ಟಿನಲ್ಲಿಯೂ ಸಂಸ್ಕೃತಿಯ ವಿಸ್ತರಣಾ ಕಾರ್ಯಗಳು ನಡೆದವು. ಹಣದ ಆಧಾರದಲ್ಲಿ ಮಾತ್ರವಲ್ಲದೆ ಜ್ಞಾನದ ಆಧಾರದಲ್ಲಿಯೂ ಶ್ರೀಮಂತಿಕೆಯನ್ನು ಗುರುತಿಸುವುದಕ್ಕೆ ಸಾಧ್ಯವಿದೆ ಎಂಬ ಪರಿಕಲ್ಪನೆಯನ್ನು ರೂಪಿಸಿದ್ದು ಈ ಜ್ಞಾನ ಯುಗದ ಸಾಧನೆಯಾಗಿದೆ. ಬುದ್ಧಿವಂತಿಕೆಯನ್ನು ಶ್ರೀಮಂತಿಕೆಯ ಮಾನದಂಡವಾಗಿಸುವ ತತ್ತ್ವವನ್ನು ಮೆರಿಟೋಕ್ರಸಿ ಎನ್ನಲಾಗುತ್ತದೆ. ಈ ತತ್ತ್ವದ ಪರಿಣಾಮವಾಗಿ ಫ್ರಾನ್ಸ್‌ನ ಸಾಮಾಜಿಕ ವ್ಯವಸ್ಥೆಯಲ್ಲಿ ಬುದ್ಧಿಜೀವಿಗಳು ಮುನ್ನೆಲೆಗೆ ಬಂದರು. ಹಣಕಾಸಿನ ಆಧಾರದಲ್ಲಿ ಶ್ರೀಮಂತರು- ಬಡವರು ಎಂದು ನಿರ್ಧರಿಸುವ ಪ್ರವೃತ್ತಿ ಕಡಿಮೆಯಾಯಿತು. ಉಚಿತ ಪ್ರಾಥಮಿಕ ಶಿಕ್ಷಣ ನೀಡಿಕೆ, ಪತ್ರಿಕೆಗಳ ಸಂಖ್ಯೆ ಹೆಚ್ಚಳ, ರೇಡಿಯೋ-ದೂರದರ್ಶನಗಳ ಬೆಳವಣಿಗೆ, ಗ್ರಂಥಾಲಯಗಳ ವೃದ್ಧಿ, ಪುಸ್ತಕಗಳ ಮುದ್ರಣ ತಂತ್ರಜ್ಞಾನ ಇಂತಹ ವಿಚಾರಗಳು ಫ್ರಾನ್ಸ್ ಸಮಾಜದಲ್ಲಿ ಜ್ಞಾನ ಕ್ರಾಂತಿಯನ್ನೇ ಉಂಟುಮಾಡಿದವು. ಹದಿನೆಂಟು ಮತ್ತು ಹತ್ತೊಂಬತ್ತನೇ ಶತಮಾನಗಳು ಅಲ್ಲಿನ ಜನರನ್ನು ಬೌದ್ಧಿಕವಾಗಿ ಜಾಗೃತಗೊಳಿಸಿದ ಕಾಲಘಟ್ಟಗಳು. + + + +ಫ್ರಾನ್ಸ್ ಚಲನಚಿತ್ರ ಕ್ಷೇತ್ರವು ಶತಮಾನಕ್ಕೂ ಮಿಗಿಲಾದ ಇತಿಹಾಸವನ್ನು ಹೊಂದಿದೆ. ಫ್ರಾನ್ಸ್‌ ಅನ್ನು ಉಲ್ಲೇಖಿಸದೆ ಚಲನಚಿತ್ರದ ಇತಿಹಾಸ ಪೂರ್ಣಗೊಳ್ಳುವುದಿಲ್ಲ. ಚಲನಚಿತ್ರ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿದ್ದೇ ಫ್ರೆಂಚರು. 1895ರ ಡಿಸೆಂಬರ್‌ನಲ್ಲಿ ಆಗಸ್ಟ್ ಲೂಮಿಯರ್ ಮತ್ತು ಲೂಯಿಸ್ ಲೂಮಿಯರ್ ಎಂಬ ಸಹೋದರು ಚಲನಚಿತ್ರ ತಂತ್ರಜ್ಞಾನವನ್ನು ಪರಿಚಯಿಸಿದರು. ಇವರು ಲೂಮಿಯರ್ ಸಹೋದರರು ಎಂದೇ ಪ್ರಸಿದ್ಧರು. ಇವರ ಈ ನೂತನ ಅನ್ವೇಷಣೆಗೆ ಆಲಿಸ್‌ಗೈ ಬ್ಲಾಚೆ ಮತ್ತು ಇತರ ಕೆಲವರು ಹಣಕಾಸಿನ ನೆರವನ್ನು ಒದಗಿಸಿಕೊಟ್ಟರು. ಇವರು ಚಲನಚಿತ್ರೋದ್ಯಮದ ಪ್ರವರ್ತಕರು. ಆರಂಭದ ಕಾಲಘಟ್ಟದ ಫ್ರೆಂಚ್ ಸಿನಿಮಾ ಎಂದರೆ ಸುಂದರವಾದ ಕಾವ್ಯಾತ್ಮಕ ಅಭಿವ್ಯಕ್ತಿ. ಜೊತೆಗೆ ವಾಸ್ತವಿಕವಾದ ಸಂಗತಿಗಳೂ ಅದರಲ್ಲಿದ್ದವು. ಪ್ರಸಿದ್ಧ ಸಾಹಿತ್ಯ ರಚನೆಗಳನ್ನು ಚಲನಚಿತ್ರಗಳ ರೂಪದಲ್ಲಿ ದೊಡ್ಡಪರದೆಯ ಮೇಲೆ ತರಲಾಯಿತು. ಬೇರೆ ಬೇರೆ ಕಾಲಘಟ್ಟಗಳಲ್ಲಿ ಫ್ರಾನ್ಸ್ ಚಲನಚಿತ್ರ ಕ್ಷೇತ್ರವು ಪರಿವರ್ತನೆಗಳಿಗೆ ಒಳಗಾಗಿದೆ; ಪರಿವರ್ತನೆಗಳಿಗೆ ತೆರೆದುಕೊಂಡಿದೆ. ಬೌದ್ಧಿಕ ವಿಚಾರಗಳು ಇದನ್ನು ನಿಯಂತ್ರಿಸಿವೆ. ಅಲ್ಲಿಯ ಸಿನಿಮಾ ಕ್ಷೇತ್ರದಲ್ಲಿ ನಿರ್ದೇಶಕರಿಗೆ ಹೆಚ್ಚು ಪ್ರಾಮುಖ್ಯತೆಯಿತ್ತು. ಜಾಕ್ವೆಸ್ ಟ್ಯಾಟಿ, ಅಲೈನ್ ರೆಸ್ನೈಸ್, ಎರಿಕ್ ರೋಹ್ಮರ್, ಜೀನ್ ರೆನೊಯಿರ್, ಲೂಯಿಸ್ ಮಲ್ಲೆ, ರಾಬರ್ಟ್ ಬ್ರೆಸನ್, ಜೀನ್ ಪಿಯರ್ ಮೆಲ್ವಿಲ್ಲೆ ಇವರೆಲ್ಲರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ನಿರ್ದೇಶಕರಾಗಿದ್ದಾರೆ. ಜೂಲಿಯೆಟ್ ಬಿನೋಚೆ, ವಿನ್ಸೆಂಟ್ ಕ್ಯಾಸೆಲ್, ಆಡ್ರೆ ಟೌಟೌ, ಮರಿಯನ್ ಕೊಟಿಲಾರ್ಡ್ ಇವರು ಇಪ್ಪತ್ತೊಂದನೇ ಶತಮಾನದ ಪ್ರಮುಖ ಸಿನಿಮಾ ತಾರೆಯರು. ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ಪ್ರತೀವರ್ಷವೂ ಜಾಗತಿಕ ಚಲನಚಿತ್ರ ಉತ್ಸವ ನಡೆಯುತ್ತದೆ. ಈ ಉತ್ಸವದಲ್ಲಿ ಅತ್ಯುತ್ತಮ ಚಲನಚಿತ್ರಕ್ಕೆ ಪಾಮ್ ಡಿ ಓರ್ ಎನ್ನುವ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಅಮೇರಿಕಾ ಮತ್ತು ಬ್ರಿಟನ್ ಚಲನಚಿತ್ರ ರಂಗಗಳು ಫ್ರಾನ್ಸ್ ಚಿತ್ರೋದ್ಯಮಕ್ಕೆ ಬಲವಾದ ಪೈಪೋಟಿ ನೀಡುತ್ತಿವೆ. + +ಫ್ರೆಂಚ್ ಸಂಗೀತ ವಿಶ್ವವನ್ನು ವ್ಯಾಪಿಸಿದ್ದು ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನದಲ್ಲಿ. ಹೆಕ್ಟರ್ ಬರ್ಲಿಯೋಜ್, ಕ್ಯಾಮಿಲ್ಲೆ ಸೇಂಟ್ ಸೇನ್ಸ್, ಮೌರಿಸ್ ರಾವೆಲ್, ಕ್ಲೌಡ್ ಡೆಬಸ್ಸಿ, ಫ್ರೆಡೆರಿಕ್ ಚಾಪಿನ್ ಮೊದಲಾದವರು ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಸಂಗೀತ ಶೈಲಿಯನ್ನು ರೂಪಿಸಿದರು. ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆಯಿಂದಾಗಿ ಹೊಸ ಪ್ರಯೋಗಗಳು ನಡೆದಿವೆ. ಇತ್ತೀಚಿನ ತಲೆಮಾರಿನ ಫ್ರೆಂಚ್ ಸಂಗೀತವು ಪ್ರಪಂಚದ ತುಂಬೆಲ್ಲಾ ಅಪಾರ ಜನಪ್ರಿಯತೆ ಗಳಿಸಿದೆ. ಫ್ರೆಂಚ್ ಸಂಗೀತ ಆಧುನೀಕರಣಗೊಂಡಿದೆ ನಿಜ. ಆದರೆ ಸಾಂಪ್ರದಾಯಿಕ ಶೈಲಿಯನ್ನು ಸಂಪೂರ್ಣವಾಗಿ ಕೈಬಿಟ್ಟಿಲ್ಲ. ಅಮೇರಿಕಾ, ಇಂಗ್ಲೆಂಡ್ ಮೊದಲಾದ ದೇಶಗಳ ಜನಪ್ರಿಯ ಸಂಗೀತವು ಫ್ರಾನ್ಸ್ ಯುವಜನತೆಯ ಮೇಲೆ ಅಗಾಧ ಪರಿಣಾಮ ಬೀರಿದೆ. ಇದರ ಹೊರತಾಗಿಯೂ ಫ್ರೆಂಚ್ ರೊಮ್ಯಾಂಟಿಕ್ ಬಲ್ಲಾಡ್, ಫ್ರೆಂಚ್ ಚಾನ್ಸನ್ ಮೊದಲಾದ ಸಾಂಪ್ರದಾಯಿಕ ಶೈಲಿಗಳು ಉಳಿದುಕೊಂಡಿವೆ. + +ಫ್ರಾನ್ಸ್‌ನ ನೃತ್ಯವೆಂದರೆ ಅದು ಬ್ಯಾಲೆ. ಇಟಲಿ ಮೂಲದ ಈ ನೃತ್ಯಪ್ರಕಾರ ಫ್ರಾನ್ಸ್‌ನಲ್ಲಿ ಮೊದಲು ಪ್ರದರ್ಶನಗೊಂಡದ್ದು ಕ್ರಿ.ಶ. 1581ರಲ್ಲಿ. ಮನರಂಜಕವಾದ ಈ ನೃತ್ಯ ಬಹಳ ಬೇಗ ಪ್ರಸಿದ್ಧಿ ಪಡೆಯಿತು. ಫ್ರಾನ್ಸಿನ ಅರಸ ಹದಿನಾಲ್ಕನೇ ಲೂಯಿಸ್ ಅವರು ಕ್ರಿ.ಶ. 1661ರಲ್ಲಿ ರಾಯಲ್ ಅಕಾಡೆಮಿ ಆಫ್ ಡ್ಯಾನ್ಸ್ ಎನ್ನುವ ಸಂಸ್ಥೆಯನ್ನು ಸ್ಥಾಪಿಸಿದರು. ಇದರಿಂದಾಗಿ ಆ ಬಳಿಕದ ಕಾಲಘಟ್ಟದಲ್ಲಿ ಬ್ಯಾಲೆ ನೃತ್ಯವು ಇನ್ನಷ್ಟು ಜನಪ್ರಿಯತೆ ಗಳಿಸಿಕೊಂಡಿತು. ಹಂತಹಂತವಾಗಿ ಬ್ಯಾಲೆ ನೃತ್ಯದಲ್ಲಿ ಕೆಲವು ಬದಲಾವಣೆಗಳು ನಡೆದವು. ನೃತ್ಯ ಪ್ರದರ್ಶನವನ್ನು ಮತ್ತಷ್ಟು ಆಕರ್ಷಕವಾಗಿಸುವ ಪ್ರಯತ್ನಗಳು ನಡೆದವು. ಹತ್ತೊಂಬತ್ತನೇ ಶತಮಾನದಲ್ಲಿ ರೊಮ್ಯಾಂಟಿಕ್ ಬ್ಯಾಲೆಗಳು ಪ್ರದರ್ಶನಗೊಂಡವು. ಇದಾದ ನಂತರ ಒಂದಷ್ಟು ಸಮಯ ಮಂಕಾಗಿದ್ದ ಫ್ರಾನ್ಸ್‌ನ ಬ್ಯಾಲೆ ಪ್ರದರ್ಶನವು ಮತ್ತೆ ಪುಟಿದೆದ್ದು ನಿಂತದ್ದು ರಷ್ಯನ್ನರ ಸಹಕಾರದಿಂದ. ಪ್ಯಾರಿಸ್‌ನಲ್ಲಿ ಅವಂತ್ ಗಾರ್ಡ್ ಬ್ಯಾಲೆಟ್ ರಸ್ಸೆಸ್ ಎನ್ನುವ ನೃತ್ಯತಂಡವನ್ನು ಆರಂಭಿಸಿದ ಡಯಾಘಿಲೆವ್ ಅವರು ರಷ್ಯಾದವರು. + +ಫ್ರೆಂಚ್ ಸಾಹಿತ್ಯಕ್ಕೆ ಸುದೀರ್ಘ ಇತಿಹಾಸವಿದೆ. ಓಥ್ ಆಫ್ ಸ್ಟ್ರಾಸ್‌ಬರ್ಗ್ ಎನ್ನುವುದು ಫ್ರೆಂಚ್ ಸಾಹಿತ್ಯದ ಮೊದಲ ದಾಖಲೆಯಾಗಿದೆ. ಇದು ರಚನೆಯಾದದ್ದು ಕ್ರಿ.ಶ. 842ರಲ್ಲಿ. ಚಾರ್ಲ್ಸ್ ದಿ ಬಾಲ್ಡ್ ಮತ್ತು ಲೂಯಿಸ್ ದಿ ಜರ್ಮನ್ ಇವರ ನಡುವಿನ ರಾಜಕೀಯ ಒಪ್ಪಂದವನ್ನು ಒಳಗೊಂಡಿರುವ ಪಠ್ಯವಿದು. ಇಲ್ಲಿ ಬಳಕೆಯಾಗಿರುವ ಭಾಷೆ ಹಳೆಯ ಫ್ರೆಂಚ್. ಫ್ರಾನ್ಸ್‌ನ ಮಧ್ಯಕಾಲೀನ ಸಾಹಿತ್ಯವು ಮಹಾಕಾವ್ಯಗಳು, ಪ್ರಣಯಕಾವ್ಯಗಳು ಮತ್ತು ಭಾವಗೀತೆಗಳಿಂದ ಸಮೃದ್ಧವಾಗಿದೆ. ಹದಿನಾರನೇ ಶತಮಾನ ನವೋದಯದ ಕಾಲಘಟ್ಟ. ಈ ಅವಧಿಯಲ್ಲಿ ಫ್ರೆಂಚ್ ಸಾಹಿತಿಗಳಲ್ಲಿ ಕೆಲವರು ಪ್ರಪಂಚದಾದ್ಯಂತ ಹೆಸರು ಗಳಿಸಿದರು. ಫ್ರಾಂಕೋಯಿಸ್ ರಾಬೆಲೈಸ್, ಪಿಯರೆ ಡಿ ರೊನ್ಸಾರ್ಡ್, ಮೈಕೆಲ್ ಡಿ ಮೊಂಟೇಗ್ನೆ ಮೊದಲಾದವರು ಜಾಗತಿಕ ಪ್ರಸಿದ್ಧಿ ಪಡೆದ ಕಾಲವದು. ಹದಿನೇಳನೇ ಶತಮಾನದಲ್ಲಿ ರಂಗಭೂಮಿ ಚಟುವಟಿಕೆಗಳು ತೀವ್ರಗೊಂಡವು. ಕಾದಂಬರಿಗಳು ರಚನೆಯಾದವು. ನವಶಾಸ್ತ್ರೀಯ(ನಿಯೋಕ್ಲಾಸಿಕಲ್) ಶೈಲಿಯ ನಾಟಕಗಳು ಜನಪ್ರಿಯಗೊಂಡವು. ಪಿಯರೆ ಕಾರ್ನಿಲ್ಲೆ, ಜೀನ್ ರೇಸಿನ್, ಮೊಲಿಯೆರ್, ಜೀನ್ ಡಿ ಲಾ ಫಾಂಟೈನ್, ಮೇಡಮ್ ಡಿ ಲಾ ಫಾಯೆಟ್ಟೆ ಮೊದಲಾದವರನ್ನು ಈ ಅವಧಿಯ ಯಶಸ್ವೀ ಬರಹಗಾರರಾಗಿ ಗುರುತಿಸಬಹುದು. ಹದಿನೆಂಟನೇ ಶತಮಾನವು ಇಡಿಯ ಫ್ರಾನ್ಸ್ ದೇಶಕ್ಕೆ ಪುನರುಜ್ಜೀವನದ ಕಾಲಘಟ್ಟವಾಗಿ, ಜ್ಞಾನದ ಯುಗವಾಗಿ ಮಹತ್ವಪೂರ್ಣದ್ದಾಗಿತ್ತು. ಸಾಹಿತ್ಯ ಕ್ಷೇತ್ರದಲ್ಲಿಯೂ ಸಹ ಇದೇ ಬಗೆಯ ಕಾಳಜಿ ವ್ಯಕ್ತಗೊಂಡಿದೆ. ತತ್ತ್ವವ- ಸಿದ್ಧಾಂತಗಳ ಆಧಾರದಲ್ಲಿ ಸಮಾಜವನ್ನು ಗುರುತಿಸುವ ಪ್ರಯತ್ನ ಈ ಕಾಲಘಟ್ಟದ ಚಿಂತಕರಿಂದ, ಬರಹಗಾರರಿಂದ ಸಾಕಾರಗೊಂಡಿತು. + +ರೂಸೋ, ವೋಲ್ಟೇರ್, ಡಿಡೆರೊಟ್, ಪಿಯರೆ ಆಗಸ್ಟಿನ್ ಮೊದಲಾದವರನ್ನು ಈ ನೆಲೆಯಲ್ಲಿ ಹೆಸರಿಸಬಹುದು. ಸ್ಟೆಂಡಾಲ್, ಸ್ಟೀಫನ್ ಮಲ್ಲರ್ಮ್, ಚಾರ್ಲ್ಸ್ ಬೌಡೆಲೇರ್, ಹೊನೊರೆ ಡಿ ಬಾಲ್ಜಾಕ್, ಗುಸ್ಟಾವ್ ಫ್ಲೌಬರ್ಟ್, ಎಮಿಲ್ ಜೊಲಾ ಮೊದಲಾದವರು ಹತ್ತೊಂಬತ್ತನೇ ಶತಮಾನದಲ್ಲಿ ಫ್ರೆಂಚ್ ಸಾಹಿತ್ಯಕ್ಕೆ ಜಾಗತಿಕ ಮೌಲ್ಯವನ್ನು ತಂದುಕೊಟ್ಟ ಬರಹಗಾರರಾಗಿದ್ದಾರೆ. ಇಪ್ಪತ್ತನೇ ಶತಮಾನದ ಹೊತ್ತಿಗೆ ಫ್ರೆಂಚ್ ಸಾಹಿತ್ಯ ವಲಯವು ಸಂಪ್ರದಾಯದ ಕಡೆಗೆ ಮತ್ತೆ ಹೊರಳಿಕೊಂಡಿತು. ಪಾರಂಪರಿಕ ಮೌಲ್ಯಗಳನ್ನು ಆಧುನಿಕತೆಗೆ ಹೊಂದಿಸುವ ರೀತಿಯ ಸಾಹಿತ್ಯ ಸೃಷ್ಟಿ ಈ ಅವಧಿಯಲ್ಲಿ ನಡೆಯಿತು. ಅಸ್ತಿತ್ವವಾದ, ಸ್ತ್ರೀವಾದ ಮೊದಲಾದ ಭಿನ್ನ ಭಿನ್ನ ಚಿಂತನಾ ವಿಧಾನಗಳು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದರಿಂದಾಗಿ ಫ್ರೆಂಚ್ ಸಾಹಿತ್ಯ ಮತ್ತಷ್ಟು ಬಲಗೊಂಡಿತು. ಫ್ರಾನ್ಸ್‌ನವರಷ್ಟೇ ಅಲ್ಲದೆ ಬೇರೆ ದೇಶಗಳ ಸಾಹಿತಿಗಳನ್ನೂ ದೇಶೀಯ ಸಾಹಿತ್ಯ ಪರಂಪರೆಯೊಳಗೆ ಬರಮಾಡಿಕೊಂಡದ್ದು ಈ ಅವಧಿಯ ವಿಶೇಷತೆಯಾಗಿದೆ. ಚೀನಾ, ಐರ್ಲೆಂಡ್, ಜೆಕ್ ರಿಪಬ್ಲಿಕ್, ರಷ್ಯಾ ಸೇರಿದಂತೆ ಬೇರೆ ಬೇರೆ ದೇಶಗಳ ಬರಹಗಾರರು ಫ್ರೆಂಚ್ ಭಾಷೆಯಲ್ಲಿ ಕೃತಿರಚನೆ ಮಾಡಿದ್ದಾರೆ. ಉತ್ತರ ಆಫ್ರಿಕಾದಿಂದ ವಲಸೆ ಬಂದು, ಫ್ರಾನ್ಸಿನಲ್ಲಿ ನೆಲೆನಿಂತು, ಸಾಂಸ್ಕೃತಿಕ ಅಸ್ಮಿತೆಗಾಗಿ ಹಂಬಲಿಸುತ್ತಿರುವ ಜನರ ಸಂವೇದನೆಗಳು ಇಪ್ಪತ್ತೊಂದನೇ ಶತಮಾನದ ಫ್ರಾನ್ಸ್ ಸಾಹಿತ್ಯ ರಚನೆಗಳಲ್ಲಿವೆ. + +ಫ್ರಾನ್ಸ್‌ನ ಚಿತ್ರಕಲೆಯು ಮಧ್ಯಯುಗ ಮತ್ತು ಪುನರುಜ್ಜೀವನ ಕಾಲದಲ್ಲಿ ವೈವಿಧ್ಯಪೂರ್ಣವಾಯಿತು. ಆದರೆ ಚಿತ್ರಕಲೆಯು ನಿಯಂತ್ರಣಕ್ಕೆ ಒಳಪಟ್ಟಿತ್ತು. ಅಕಾಡೆಮಿ ಆಫ್ ಫೈನ್ ಆರ್ಟ್ಸ್ ರೂಪಿಸಿದ ನಿಯಮಗಳನ್ನು ಚಿತ್ರ ಕಲಾವಿದರು ಪಾಲಿಸಬೇಕಿತ್ತು. ಧರ್ಮಕ್ಕೆ ಸಂಬಂಧಿಸಿದ ಹಲವು ವಿಚಾರಗಳನ್ನು ಚಿತ್ರಿಸಲಾಯಿತು. ನ್ಯಾಯಾಲಯದ ಭಾವಚಿತ್ರಗಳೂ ನಿರ್ಮಾಣಗೊಂಡವು. ಹದಿನೇಳನೇ ಶತಮಾನದಲ್ಲಿ ಗ್ರಾಮೀಣ ಜನಜೀವನವನ್ನು ಮತ್ತು ಪೌರಾಣಿಕ ಸಂಗತಿಗಳನ್ನು ಚಿತ್ರಿಸುವ ಸಂಪ್ರದಾಯ ಬೆಳವಣಿಗೆ ಕಂಡಿತು. ಹದಿನೆಂಟನೇ ಶತಮಾನದಲ್ಲಿ ಲೈಂಗಿಕತೆಗೆ ಸಂಬಂಧಪಟ್ಟ ಚಿತ್ರಗಳು ರಚನೆಯಾದವು. ಯಥಾವತ್ತಾಗಿ ಚಿತ್ರಗಳನ್ನು ರಚಿಸುವ ಬದಲು ನಿಗೂಢಾರ್ಥದಲ್ಲಿ, ಚಿಂತನೆಗೆ ಅವಕಾಶವಿರುವ ರೀತಿಯಲ್ಲಿ ಚಿತ್ರಗಳನ್ನು ಕಲಾವಿದರು ರಚಿಸಿದ್ದು ಇದೇ ಅವಧಿಯಲ್ಲಿ. ಹತ್ತೊಂಬತ್ತನೇ ಶತಮಾನವು ಫ್ರಾನ್ಸ್ ಚಿತ್ರಕಲಾ ಕ್ಷೇತ್ರದಲ್ಲಿ ಬಂಡಾಯದ ಕಾಲಘಟ್ಟವಾಗಿದೆ. ಕೆಲವು ಕಲಾವಿದರು ಅಕಾಡೆಮಿ ಆಫ್ ಫೈನ್ ಆರ್ಟ್ಸ್ ರೂಪಿಸಿದ್ದ ನಿಯಮಗಳನ್ನು ಪಾಲಿಸಲು ನಿರಾಕರಿಸಿದರು. ಇದರ ಪರಿಣಾಮವಾಗಿ ಅದುವರೆಗೂ ಫ್ರಾನ್ಸ್ ಚಿತ್ರಕಲೆಯಲ್ಲಿ ಕಾಣಿಸಿಕೊಳ್ಳದ ನೂತನ ಸಂಗತಿಗಳು ಪ್ರವೇಶಿಕೆಯನ್ನು ಪಡೆದುಕೊಂಡವು. ಪ್ಯಾರೀಸ್ ನವ್ಯ ಚಿತ್ರಕಲೆಯ ಕೇಂದ್ರವಾಗಿ ಗುರುತಿಸಿಕೊಂಡಿತು. ಈ ಸಂದರ್ಭದಲ್ಲಿ ಕಾಮಪ್ರಚೋದಕ ಚಿತ್ರಕಲೆಗಳು ರಚನೆಯಾದವು. ಇಂತಹ ಚಿತ್ರಕಲೆಗಳ ವಿರುದ್ಧ ಫೈನ್ ಆರ್ಟ್ಸ್ ಅಕಾಡೆಮಿ ತೀವ್ರ ಆಕ್ರೋಶವನ್ನೂ ವ್ಯಕ್ತಪಡಿಸಿತು. ವಿರೋಧದ ಹೊರತಾಗಿಯೂ ಈ ನವ್ಯ ಶೈಲಿ ಬೆಳವಣಿಗೆ ಕಂಡಿತು. + +ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ. ಶಿಲ್ಪಕಲಾ ಕೆತ್ತನೆಗಳ ಮೂಲಕ ಪರಿಣಾಮಕಾರಿಯಾಗಿ ಸಾಮಾಜಿಕ ಮೌಲ್ಯಗಳನ್ನು ಅಭಿವ್ಯಕ್ತಿಸಿದ ಕೀರ್ತಿ ಪಿಕಾಸೊ ಅವರಿಗೆ ಸಲ್ಲುತ್ತದೆ. + +ಇಪ್ಪತ್ತನೇ ಶತಮಾನದ ಮಧ್ಯಭಾಗದವರೆಗೂ ಫ್ರಾನ್ಸ್‌ನ ಪ್ಯಾರಿಸ್ ಪ್ರದೇಶವು ಸಾಂಸ್ಕೃತಿಕ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಎರಡು ಮಹಾಯುದ್ಧಗಳು ಸಂಭವಿಸಿದ ಕಾಲಘಟ್ಟದಲ್ಲಿಯೂ ಸಹ ಚಳುವಳಿಗಳ ಮೂಲಕ ಪ್ರತಿಕ್ರಿಯೆಯನ್ನು ನೀಡಿತ್ತು ಪ್ಯಾರಿಸ್. ಆದರೆ ಎರಡನೇ ಮಹಾಯುದ್ಧದ ನಂತರ ಅಮೇರಿಕಾದ ನ್ಯೂಯಾರ್ಕ್ ಈ ಸ್ಥಾನವನ್ನು ಆಕ್ರಮಿಸಿಕೊಂಡಿತು. ಪಾಶ್ಚಿಮಾತ್ಯ ಜಗತ್ತಿನ ಸಾಂಸ್ಕೃತಿಕ ವಿಚಾರಗಳನ್ನು ನಿರ್ವಹಿಸುವ ನೆಲೆಯಲ್ಲಿ ನ್ಯೂಯಾರ್ಕ್ ಬಲಾಢ್ಯವೆನಿಸಿಕೊಂಡಿತು. + +ಫ್ರೆಂಚ್ ಆಹಾರ ಪದ್ಧತಿಯು ವಿಶಿಷ್ಟವಾಗಿದೆ. ಪ್ರದೇಶಕ್ಕೆ ಅನುಸಾರವಾಗಿ ವ್ಯತ್ಯಾಸಗಳು ಕಂಡುಬರುತ್ತವೆ. ಇಲ್ಲಿನ ಕೆಲವು ಭಕ್ಷ್ಯಗಳು ಪ್ರಪಂಚದ ಬೇರೆ ಬೇರೆ ಭಾಗದ ಜನರ ಬಾಯಿಯಲ್ಲಿ ನೀರೂರಿಸುತ್ತವೆ. ಬೌಲ್ಲಾಬೈಸ್, ಚೌಕ್ರೌಟ್, ಮ್ಯಾಗ್ರೆಟ್ ಡಿ ಕ್ಯಾನಾರ್ಡ್, ಫ್ರೆಂಚ್ ಮ್ಯಾಕರೋನ್, ಸ್ಯಾಂಡ್‌ವಿಚ್ ಕುಕೀ ಮೊದಲಾದವುಗಳನ್ನು ಹೆಸರಿಸಬಹುದು. ಇಲ್ಲಿ ದೊರೆಯುವ ಚೀಸ್‌ಗಳು ಗುಣಮಟ್ಟಕ್ಕೆ ಪ್ರಸಿದ್ಧವಾಗಿವೆ. 1600ಕ್ಕೂ ಹೆಚ್ಚು ಬಗೆಯ ಚೀಸ್‌ಗಳಿವೆ ಇಲ್ಲಿ. ಕ್ಯಾಮೆಂಬರ್ಟ್, ಕಾಮ್ಟೆ, ಸೇಂಟ್ ನೆಕ್ಟೈರ್, ರೆಬ್ಲೋಚನ್ ಮೊದಲಾದ ಚೀಸ್‌ಗಳು ಉತ್ಪಾದನೆಯಾಗುವುದು ಹಸುವಿನ ಹಾಲಿನಿಂದ. ರೋಕ್ಫೋರ್ಟ್ ಎನ್ನುವುದು ಮೇಕೆ ಹಾಲಿನಿಂದ ತಯಾರಿಸಲಾದ ಚೀಸ್. ಫ್ರಾನ್ಸಿನ ಅನೇಕ ಪ್ರದೇಶಗಳು ತಮ್ಮದೇ ಆದ ಚೀಸ್ ಅನ್ನು ಉತ್ಪಾದಿಸುತ್ತವೆ. ಹೀಗೆ ತಯಾರಾದ ಚೀಸ್‌ಗಳನ್ನು ಹೆಮ್ಮೆಯಿಂದ ಮಾರಾಟ ಮಾಡುತ್ತಾರೆ. ಚೀಸ್ ಎನ್ನುವುದು ಫ್ರಾನ್ಸಿನ ಬೇರೆ ಬೇರೆ ಪ್ರದೇಶಗಳ ಜನರಿಗೆ ಆಹಾರ ಮಾತ್ರವಾಗಿರದೆ, ಭಾವನಾತ್ಮಕ ಸಂಗತಿಯಾಗಿದೆ. ಚೀಸ್ ತಯಾರಿಸುವುದರ ಜೊತೆಗೆ ಅದನ್ನು ತಿನ್ನುವುದರಲ್ಲಿಯೂ ಫ್ರೆಂಚರು ಮುಂದಿದ್ದಾರೆ. ವಿಶ್ವದಲ್ಲಿಯೇ ಅತೀ ಹೆಚ್ಚು ಪ್ರಮಾಣದಲ್ಲಿ ಚೀಸ್ ಸೇವಿಸುವವರು ಫ್ರೆಂಚರು. ಆಹಾರವನ್ನು ಉತ್ತಮವಾಗಿ ತಯಾರಿಸುವುದರ ಜೊತೆಗೆ ತಿನ್ನಲು ಆಕರ್ಷಣೆ ಹುಟ್ಟುವಂತೆ ಮಾಡುವುದು ನಿಜಕ್ಕೂ ಒಂದು ಕಲೆಯಾಗಿದೆ. ಕೆಲವೊಮ್ಮೆ ಆಹಾರ ಎಷ್ಟೇ ರುಚಿಗಟ್ಟಾಗಿದ್ದರೂ ನೋಡುವುದಕ್ಕೆ ಮೋಹಕವಾಗಿಲ್ಲದಿದ್ದರೆ ಜನರ ಗಮನ ಸೆಳೆಯುವುದಿಲ್ಲ. + +ಫ್ರಾನ್ಸ್ ರುಚಿಯಾಗಿ ಆಹಾರವನ್ನು ತಯಾರಿಸುವುದರಲ್ಲಿ ಮಾತ್ರವಲ್ಲದೆ, ತಿನ್ನುವವರ ಎದುರು ತೀರಾ ಆಕರ್ಷಕವಾಗಿ ಪ್ರಸ್ತುತಪಡಿಸುವುದರಲ್ಲಿಯೂ ಮುಂಚೂಣಿಯಲ್ಲಿದೆ. ಇದನ್ನು ಫ್ರೆಂಚ್ ಗ್ಯಾಸ್ಟ್ರೋನಮಿ ಎನ್ನಲಾಗುತ್ತದೆ. ಗ್ಯಾಸ್ಟ್ರೋನಮಿ ಎಂದರೆ ಆಹಾರವನ್ನು ಉತ್ತಮವಾಗಿ ತಯಾರಿಸುವ, ತಿನ್ನುವಂತೆ ಆಕರ್ಷಕವಾಗಿಸುವ ಕಲೆ. ಈ ಕಲೆಯಲ್ಲಿ ಫ್ರಾನ್ಸ್ ಅದೆಷ್ಟು ಪ್ರಸಿದ್ಧವಾಗಿದೆಯೆಂದರೆ, 2010ರಲ್ಲಿ ಫ್ರೆಂಚ್ ಗ್ಯಾಸ್ಟ್ರೋನಮಿಯು ಯುನೆಸ್ಕೋ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ. ಬಸವನ ಹುಳು ಅಥವಾ ಶಂಖದ ಹುಳುವನ್ನು ಸೇವಿಸುವುದೆಂದರೆ ಫ್ರೆಂಚರಿಗೆ ಬಹಳ ಇಷ್ಟ. ನಮ್ಮಲ್ಲಿ ಅಚ್ಚರಿ ಉಂಟುಮಾಡುವಷ್ಟರಮಟ್ಟಿಗೆ ಫ್ರೆಂಚರು ಈ ಹುಳಗಳನ್ನು ಭಕ್ಷಿಸುತ್ತಾರೆ. ವರ್ಷಕ್ಕೆ ಸುಮಾರು ಇಪ್ಪತ್ತೈದು ಸಾವಿರ ಟನ್‌ಗಳಷ್ಟು ಬಸವನ ಹುಳುಗಳು ಫ್ರೆಂಚರ ಹೊಟ್ಟೆ ಸೇರುತ್ತವೆ. ಬೆಣ್ಣೆ, ಬೆಳ್ಳುಳ್ಳಿ, ವೈನ್ ಇಲ್ಲವೇ ಕೋಳಿಮಾಂಸದ ಜೊತೆಗೆ ಬೇಯಿಸಿ ಇದನ್ನು ತಿನ್ನುವ ಪದ್ಧತಿಯಿದೆ. ವೈನ್ ಫ್ರೆಂಚರು ತೀರಾ ಇಷ್ಟಪಡುವ ಪಾನೀಯವಾಗಿದೆ. ಫ್ರಾನ್ಸಿನಲ್ಲಿ ವ್ಯಕ್ತಿಯೊಬ್ಬರು ಒಂದು ವರ್ಷದಲ್ಲಿ ಸುಮಾರು ನಲುವತ್ತು ಲೀಟರ್‌ಗಳಷ್ಟು ವೈನ್ ಸೇವಿಸುತ್ತಾರೆ. ಇಡೀ ದೇಶದಲ್ಲಿ ವರ್ಷಕ್ಕೆ ಸುಮಾರು 26.5 ಮಿಲಿಯನ್ ಲೀಟರ್ ವೈನ್ ಸೇವಿಸಲಾಗುತ್ತದೆ. + + + +ಆಹಾರ ತಯಾರಿಸುವುದನ್ನು ಮತ್ತು ಉಣಬಡಿಸುವುದನ್ನು ಕಲೆಯಾಗಿ ಪರಿಗಣಿಸಿರುವ ಫ್ರಾನ್ಸ್ ದೇಶದಲ್ಲಿ ಆಹಾರಕ್ಕೆ ಸಂಬಂಧಿಸಿದಂತೆ ಕಠಿಣವಾದ ಕಾನೂನಿದೆ. ಆಹಾರ ಎಸೆಯುವುದನ್ನು ಅಥವಾ ಬೆಂಕಿಗೆ ಹಾಕುವುದನ್ನು ಫ್ರೆಂಚ್ ಕಾನೂನು ಒಪ್ಪಿಕೊಳ್ಳುವುದಿಲ್ಲ. ತಿನ್ನಬಹುದಾದ ಆಹಾರವನ್ನು ಹಾಳುಮಾಡದಂತೆ ನಿಯಮವಿದೆ. ನಿಯಮ ಮೀರಿದರೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ. 2016ರಲ್ಲಿ ಈ ನಿಯಮ ಜಾರಿಗೆ ಬಂದಿದೆ. ಆಹಾರದ ವಿಷಯದಲ್ಲಿ ಫ್ರೆಂಚರು ರಾಜಿ ಮಾಡಿಕೊಳ್ಳುವುದೇ ಇಲ್ಲ. ಬ್ರೆಡ್ ಬ್ಯಾಗೆಟ್ ಎನ್ನುವುದು ವಿಶಿಷ್ಟ ಫ್ರೆಂಚ್ ಆಹಾರವಾಗಿದೆ. ಈ ಆಹಾರದ ಉದ್ದ ಎಷ್ಟಿರಬೇಕು ಎನ್ನುವುದಕ್ಕೆ ಕರಾರುವಕ್ಕಾದ ನಿಯಮ ಇದೆ. ಈ ನಿಯಮದ ಪ್ರಕಾರ ಬ್ಯಾಗೆಟ್ 65 ಸೆಂಟಿಮೀಟರ್ ಉದ್ದ ಇರಲೇಬೇಕು. ತಯಾರಕರು ನಿಯಮ ಮೀರಿದರೆ ಪರಿಣಾಮ ಎದುರಿಸಬೇಕಾಗುತ್ತದೆ. + +ಉಡುಗೆ ತೊಡುಗೆಗಳ ದೃಷ್ಟಿಯಿಂದ ಹೇಳುವುದಾದರೆ ಫ್ರಾನ್ಸ್ ಎಂದರೆ ಫ್ಯಾಶನ್; ಫ್ಯಾಶನ್ ಎಂದರೆ ಫ್ರಾನ್ಸ್. ಸಾಂಪ್ರದಾಯಿಕವಾದ ಫ್ರಾನ್ಸ್ ಉಡುಗೆ ಅಲ್ಲಲ್ಲಿ ಕಂಡುಬಂದರೂ ಸಹ ಆಧುನಿಕ ಶೈಲಿಯ ದಿರಿಸುಗಳೇ ಇಂದು ಹೆಚ್ಚು ಜನಪ್ರಿಯವಾಗಿವೆ. ಲೇಸ್ ವಿಂಪಲ್, ಒಣಹುಲ್ಲಿನ ಟೋಪಿ ಮೊದಲಾದವು ಇಲ್ಲಿನ ವಿಶೇಷ ಉಡುಗೆಗಳು. ಕೊಕೊ ಶನೆಲ್, ಕ್ರಿಶ್ಚಿಯನ್ ಡಿಯರ್, ಹಬರ್ಟ್ ಡಿ ಗಿವೆಂಚಿ, ಯೆವ್ಸ್ ಸೇಂಟ್ ಲಾರೆಂಟ್, ಜೀನ್ ಪಾಲ್ ಗೌಲ್ಟಿಯರ್, ಕ್ರಿಶ್ಚಿಯನ್ ಲ್ಯಾಕ್ರೊಯಿಕ್ಸ್ ಮೊದಲಾದವು ಆಧುನಿಕ ಶೈಲಿಯ ಫ್ರಾನ್ಸ್ ಉಡುಪುಗಳನ್ನು ಮಾರಾಟ ಮಾಡುವ ಜನಪ್ರಿಯ ಮಳಿಗೆಗಳಾಗಿವೆ. + +ಇಂಗ್ಲೀಷರು ಜಗತ್ತಿನ ಬಹುತೇಕ ದೇಶಗಳನ್ನು ಆಳಿದ್ದರು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಭಾಷೆಯ ವಿಚಾರದಲ್ಲಿ ಫ್ರಾನ್ಸ್ ಇಂಗ್ಲೆಂಡ್ ಮೇಲೆ ಪಾರಮ್ಯ ಮೆರೆದ ಒಂದು ಉತ್ತಮ ನಿದರ್ಶನವಿದೆ. ಮೂರು ಶತಮಾನಗಳಷ್ಟು ಕಾಲ ಫ್ರೆಂಚ್ ಇಂಗ್ಲೆಂಡಿನ ಅಧಿಕೃತ ಭಾಷೆಯಾಗಿತ್ತು. ಫ್ರಾನ್ಸ್‌ನಲ್ಲಿ ಫ್ರೆಂಚ್ ಏಕೈಕ ಅಧಿಕೃತ ಭಾಷೆಯಾಗಿದೆ. ಆ ದೇಶದ ಸಂವಿಧಾನದ ಎರಡನೇ ವಿಧಿಯು ಇದನ್ನು ಸ್ಪಷ್ಟಪಡಿಸಿದೆ. ಫ್ರೆಂಚ್ ಜೊತೆಗೆ ಇನ್ನೂ ಹಲವಾರು ಪ್ರಾದೇಶಿಕ ಭಾಷೆಗಳಿವೆ. ಅಲ್ಸೇಷಿಯನ್, ಬಾಸ್ಕ್, ಸೆಲ್ಟಿಕ್, ಕಾರ್ಸಿಕನ್ ಮೊದಲಾದವು ಈ ಬಗೆಯ ಭಾಷೆಗಳು. ಇಂತಹ ಪ್ರಾದೇಶಿಕ ಭಾಷೆಗಳಲ್ಲಿ ಕೆಲವು ಇತಿಹಾಸ ಸೇರಿಕೊಂಡಿದ್ದರೆ, ಕೆಲವು ಇನ್ನೂ ಅಸ್ತಿತ್ವದಲ್ಲಿವೆ. ಕೆಲವು ಭಾಷೆಗಳು ಸಾಹಿತ್ಯಾತ್ಮಕವಾಗಿ ಅಭಿವೃದ್ಧಿ ಹೊಂದುತ್ತಿವೆ. ಫ್ರಾನ್ಸ್ ಸರ್ಕಾರ ಭಾಷೆಯ ಕುರಿತಾಗಿ ಯಾವುದೇ ಬಗೆಯ ನಿರ್ಬಂಧಗಳನ್ನು ಹೇರಿಲ್ಲ. ಫ್ರೆಂಚ್ ಭಾಷೆಯಲ್ಲಿ ಹೆಚ್ಚು ಜನರು ಸಂವಹನ ನಡೆಸಬೇಕು ಎನ್ನುವುದು ಸರ್ಕಾರದ ಆದ್ಯತೆಯ ವಿಷಯವಾಗಿದೆ. ಆದರೆ ಇತರ ಭಾಷೆಗಳನ್ನು ದಮನಿಸುವ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಬದಲಿಗೆ ಪ್ರಾದೇಶಿಕ ಭಾಷೆಗಳನ್ನೂ ಸಹ ಗೌರವಿಸುವ ಮನೋಭಾವ ತೋರಿದೆ. ಈ ಭಾಷೆಗಳಿಗೆ ಅಧಿಕೃತ ಮನ್ನಣೆ ನೀಡುವುದಕ್ಕಾಗಿ 2008ರ ಜುಲೈನಲ್ಲಿ ಸಂವಿಧಾನ ತಿದ್ದುಪಡಿ ಮಾಡಲಾಗಿದೆ. + + + +ಇಂಗ್ಲಿಷ್, ಸ್ಪ್ಯಾನಿಷ್, ಇಟಾಲಿಯನ್, ಜರ್ಮನ್ ಮೊದಲಾದ ಭಾಷೆಗಳನ್ನೂ ಸಹ ಫ್ರೆಂಚ್ ವಿದ್ಯಾರ್ಥಿಗಳು ಶಾಲಾ- ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಾರೆ. ಫ್ರಾನ್ಸ್‌ನಲ್ಲಿ ಪ್ರಾದೇಶಿಕ ಭಾಷೆಗಳನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಅಭಿಪ್ರಾಯವನ್ನೂ ವ್ಯಕ್ತಪಡಿಸುವವರಿದ್ದಾರೆ. ಪ್ರಾದೇಶಿಕ ಭಾಷೆಗಳನ್ನು ಉಳಿಸುವುದಕ್ಕಾಗಿ ಸೈದ್ಧಾಂತಿಕ ನೆಲೆಯ ಹೋರಾಟಗಳು ನಡೆದಿವೆ; ನಡೆಯುತ್ತಿವೆ. ಪ್ರಾದೇಶಿಕ ಭಾಷೆಗಳನ್ನು ಫ್ರಾನ್ಸ್‌ನಲ್ಲಿ ಪಾಟೊಯಿಸ್ ಎನ್ನಲಾಗುತ್ತದೆ. ಸಾಮಾನ್ಯವಾಗಿ ಮೌಖಿಕ ಭಾಷೆಗಳನ್ನು ಸೂಚಿಸಲು ಪಾಟೊಯಿಸ್ ಪದ ಬಳಸಲಾಗುತ್ತದೆ. ಈ ಪದ ‘ಉಪಭಾಷೆಗಳು’ ಎಂಬ ಅರ್ಥವನ್ನು ಕೊಡುತ್ತದೆ. ಈ ಪದಬಳಕೆಯನ್ನು ಅವಹೇಳನಕಾರಿ ಎಂದು ಪರಿಗಣಿಸುವವರಿದ್ದಾರೆ. ಸರ್ಕಾರೀ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಲ್ಲಿ ಪ್ರಾದೇಶಿಕ ಭಾಷೆಗಳಲ್ಲಿ ಬೋಧಿಸಬೇಕು ಎನ್ನುವ ವಿಚಾರ ಫ್ರಾನ್ಸ್‌ನಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಆ ಭಾಷೆಗಳ ಅಸ್ತಿತ್ವ ಉಳಿಯಬೇಕಾದರೆ, ಪ್ರಾದೇಶಿಕವಾಗಿರುವ ಸಂಸ್ಕೃತಿಗೆ ಗೌರವ ದೊರಕಬೇಕಾದರೆ ಶೈಕ್ಷಣಿಕ ಹಂತದಲ್ಲಿ ಇದು ಸಾಧ್ಯವಾಗಬೇಕು ಎನ್ನುವ ವಾದವಿದೆ. ಈ ಭಾಷೆಗಳಿಗೆ ಸ್ಪಷ್ಟ ಸ್ವರೂಪ ಇಲ್ಲ, ವ್ಯಾವಹಾರಿಕ ಜಗತ್ತಿನಲ್ಲಿ ಪ್ರಯೋಜನಕ್ಕೆ ಬರುವುದಿಲ್ಲ, ಪಠ್ಯಕ್ರಮ ಸಿದ್ಧಪಡಿಸುವುದು ಅಸಾಧ್ಯ, ಧನಸಹಾಯದ ಕೊರತೆ ಮೊದಲಾದ ಕಾರಣಗಳನ್ನೊಡ್ಡಿ ಈ ವಾದವನ್ನು ನಿರಾಕರಿಸುವವರೂ ಇದ್ದಾರೆ. ಹೀಗೆ ಭಾಷೆಗೆ ಸಂಬಂಧಪಟ್ಟ ಸಂಘರ್ಷಗಳ ಹೊರತಾಗಿಯೂ ಅನೇಕ ಪ್ರಾದೇಶಿಕ ಭಾಷೆಗಳು ಫ್ರೆಂಚ್ ರೀತಿಯಲ್ಲಿಯೇ ಅಸ್ತಿತ್ವ ಉಳಿಸಿಕೊಂಡಿವೆ ಎನ್ನುವುದು ವಾಸ್ತವ. + +ವಿಶ್ವನಾಥ ನೇರಳಕಟ್ಟೆ ಮೂಲತಃ ದಕ್ಷಿಣ ಕನ್ನಡದ ಬಂಟ್ವಾಳದವರು. ಬಂಟ್ವಾಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೊದಲ ತೊದಲು (ಕವನ ಸಂಕಲನ), ಕಪ್ಪು-ಬಿಳುಪು (ಕಥಾ ಸಂಕಲನ), ಹರೆಯದ ಕೆರೆತಗಳು (ಚುಟುಕು ಸಂಕಲನ),  ಸಾವಿರದ ಮೇಲೆ (ನಾಟಕ) ಇವರ ಪ್ರಕಟಿತ ಕೃತಿಗಳು. “ಡಾ. ನಾ ಮೊಗಸಾಲೆಯವರ ಸಾಹಿತ್ಯದಲ್ಲಿ ಪ್ರಾದೇಶಿಕತೆ” ವಿಷಯದಲ್ಲಿ ಪಿಎಚ್.ಡಿ. ಸಂಶೋಧನೆ ಮಾಡಿದ್ದಾರೆ. \ No newline at end of file diff --git a/Kenda Sampige/article_210.txt b/Kenda Sampige/article_210.txt new file mode 100644 index 0000000000000000000000000000000000000000..47003aea85c39ca5eac4d61b5db26982fa31e3e5 --- /dev/null +++ b/Kenda Sampige/article_210.txt @@ -0,0 +1,79 @@ +ಭಾಗ: ಒಂದು + +ರಾಜೇಶ + +ಎಂದಿನಿಂದಲೋ ಏನೋ ಒಳಗೊಂದು ಸಖಜೀವ‘ಸಖಿ! ಬಾ~ರೆ ಬಾ!’ ಎಂದು ಕೂಗುತಿದೆ + +ಅಚ್ಯುತಣ್ಣ ಕ್ಯಾಂಟೀನ್ ವಹಿಸಿಕೊಂಡ ಸರಿಸುಮಾರಿನಲ್ಲಿಯೇ ಕ್ಯಾಂಟೀನಿನ ಆಕರ್ಷಣೆಯೂ ಕಡಿಮೆಯಾಗಲಾರಂಭಿಸಿದ್ದು ಅವರ ದುರದೃಷ್ಟ. ಅದಕ್ಕೆ ಕಾರಣವಾದುದು ಎರಡು ಐತಿಹಾಸಿಕ ಘಟನೆಗಳ ಮೂಲಕ ಆ ಊರು ಪಡೆದುಕೊಂಡ ಹೊಸ ಆಯಾಮ. + +ಅದು ಸಾವಿರದ ಒಂಬೈನೂರ ಎಪ್ಪತ್ತರ ದಶಕ. ಆಗ ಊರಿನ ಕಾರ್ಮಿಕರು, ರೈತರು ಮತ್ತು ಬಡಜನರೆಲ್ಲ ನಿಧಾನವಾಗಿ ಕ್ಯಾಂಟೀನಿನ ಆಕರ್ಷಣೆಯಿಂದ ತಪ್ಪಿಸಿಕೊಂಡು ಬೇರೊಂದು ಲೋಕಕ್ಕೆ ಪ್ರವೇಶಿಸುವ ಸನ್ನಿವೇಶವೊಂದು ಕಾರಂಗಳದಲ್ಲಿ ಉದ್ಭವಿಸಿತು. ಕ್ಯಾಂಟೀನಿನಲ್ಲಿ ವ್ಯಾಪಾರ ಕಡಿಮೆಯಾಗಿ ಅದರ ಆದಾಯ ಕುಟುಂಬಕ್ಕೆ ಸಾಲದಾಯಿತು. + +ಕಾಲ ಬದಲಾಗುತ್ತಲೇ ಇರುತ್ತದೆ. ಬಹುಶಃ ಏಳುಬೀಳುಗಳು ಚಕ್ರಾಕಾರವಾಗಿ ಬರುತ್ತವೋ ಏನೋ ಎಂದು ರಾಜೇಶ ಆಮೇಲೆ ಯೋಚಿಸಿದ್ದಿದೆ. ಅವರ ಕ್ಯಾಂಟೀನ್ ಅಚ್ಯುತಣ್ಣನ ಕಾಲಾನಂತರ ಮತ್ತೊಮ್ಮೆ ವೈಭವವನ್ನು ಕಂಡಿತು. ರಾಜೇಶ ಇಪ್ಪತ್ತು ವರ್ಷಗಳ ಮೇಲೆ ಒಂದು ತುಳು ನಾಟಕದಲ್ಲಿ ಅಭಿನಯಿಸಲು ಕಾರಂಗಳಕ್ಕೆ ಹೋಗಿದ್ದ. ಅಲ್ಲಿ ಅವನ ಬಾಲ್ಯದ ಗೆಳೆಯರು ಅವರಾಗಿಯೇ ಬಂದು ಪರಿಚಯ ಮಾಡಿಕೊಂಡು ಅವನನ್ನು ಆಗಿನ ಕಾರಂಗಳವನ್ನು ತೋರಿಸಲು ಕರೆದುಕೊಂಡು ಹೋಗಿ ಊರೆಲ್ಲ ತಿರುಗಾಡಿಸಿ ಸಂಭ್ರಮಿಸಿದ್ದರು. ರಾಜೇಶನ ಕೋರಿಕೆಯ ಮೇರೆಗೆ ಅವರ ಕ್ಯಾಂಟೀನ್ ಇದ್ದ ಜಾಗದಲ್ಲಿ ಇದ್ದ ಅದೇ ಕ್ಯಾಂಟೀನ್ ಅಥವಾ ಅದೇ ಜಾಗದಲ್ಲಿದ್ದ ಬೇರೆಯೇ ಕ್ಯಾಂಟೀನಿಗೆ ಗೆಳೆಯರು ಹೋದರು. ಅದು ವಲಸೆ ಕಾರ್ಮಿಕರು, ರಿಕ್ಷಾ, ಟೆಂಪೋ ಡ್ರೈವರುಗಳ ಹಸಿವು ಬಾಯಾರಿಕೆಗಳನ್ನು ತಣಿಸುತ್ತಾ ಗಿಜಿ ಗಿಜಿ ಅನ್ನುತ್ತಿದ್ದುದನ್ನು ಕಂಡು ರಾಜೇಶ ಆಶ್ಚರ್ಯಪಟ್ಟದ್ದುಂಟು. ಅದನ್ನು ನೋಡಿ ‘ದೆಸೆ’ ಎನ್ನುವುದು ಮನುಷ್ಯರಿಗಿದ್ದಂತೆ ಅಂಗಡಿಗಳಿಗೂ ಇರುತ್ತದೆ, ವ್ಯವಹಾರಗಳಿಗೂ ಏಳು ಬೀಳುಗಳಿರುತ್ತವೆ ಎಂದು ಅವನು ಅರ್ಥ ಮಾಡಿಕೊಂಡ. + +ರಾಜೇಶನ ಬಾಲ್ಯದಲ್ಲಿ, ಅಚ್ಯುತಣ್ಣನ ಕ್ಯಾಂಟೀನಿಗೆ ಹೊಡೆತ ಬಿದ್ದದ್ದು ಯಾದವಣ್ಣನ ಶರಾಬು ಅಂಗಡಿಯಿಂದ. ಅವರು ಶರಾಬನ್ನು ಜನಪ್ರಿಯಗೊಳಿಸಲು ಏರ್ಪಡಿಸಿದ ಎರಡು ದೊಡ್ಡ ಅಭಿಯಾನಗಳು ಊರಿನ ಜನರ ಮನಸ್ಥಿತಿಯನ್ನು ಮತ್ತು ಅಭಿರುಚಿಯನ್ನು ಬದಲಾಯಿಸಿಬಿಟ್ಟವು ಎಂದು ರಾಜೇಶ ತನ್ನ ಬಾಲ್ಯದ ಜೀವನವನ್ನು ವಿಶ್ಲೇಷಿಸುವಾಗ ಯೋಚಿಸಿದ್ದಾನೆ. ಅವನ ಅಪ್ಪ ಕೂಡ ಆ ದಿನಗಳಲ್ಲಿ, ‘ಯಾದವಣ್ಣನ ಗಡಂಗು ಬಂದು ಜನರಿಗೆ ಚಹಾ ಕುಡಿಯುವ ಆಸಕ್ತಿಯೇ ಹೊರಟುಹೋಯಿತು’ ಎಂದು ಹೇಳುತ್ತಿದ್ದುದು ಅವನಿಗೆ ನೆನಪಿದೆ. ಮೊದಲು ಹಳ್ಳಿಯ ಜನರು ಗದ್ದೆಗಳಲ್ಲಿ ದುಡಿದು ಸುಸ್ತಾಗಿ, ಸಮ್ಜೆಯ ಹೊತ್ತು ಪೇಟೆಗೆ ಬಂದು ಒಂದು ಪ್ಲೇಟು ಗೋಳಿಬಜೆ ಮತ್ತು ಒಂದು ಚಹಾ ಕುಡಿದು, ಊರಿನ ರೈತರ ಜತೆಗೆ ಹರಟೆ ಹೊಡೆದು, ಸುಖ ಕಷ್ಟ ಮಾತಾಡಿ, ಕತ್ತಲಾಗುತ್ತಿದ್ದಂತೆ ಮನೆಗೆ ಹಿಂದಿರುಗುತ್ತಿದ್ದರು. ಮನೆಗೆ ಹಿಂದಿರುಗುವಾಗ ಕೆಲವರು ಮಾತ್ರ ಗುಟ್ಟಿನಲ್ಲಿ ಸ್ವಲ್ಪ ಕಳ್ಳು ಅಥವಾ ಕಳ್ಳಭಟ್ಟಿ ಕಂಟ್ರಿ ಶರಾಬು ಸೇವಿಸುತ್ತಿದ್ದುದ್ದು ಉಂಟು ಎಂದು ರಾಜೇಶನ ಅಪ್ಪ ಹೇಳುತ್ತಿದ್ದರು. + +ಆ ಸಂದರ್ಭದಲ್ಲಿ ಯಾದವ ಶೆಟ್ಟಿ ಎಂಬವರು ಊರಿನಲ್ಲಿ ಶರಾಬು ಅಂಗಡಿಯನ್ನು ತೆರೆಯಲು ಅನುಮತಿ ಪಡೆದುಕೊಂಡು ಬಂದರು. ಅವರಿಗೆ ಆಗಲೇ ಹಲವು ಊರುಗಳಲ್ಲಿ ಗುತ್ತಿಗೆ (ಒಂದು ಊರಿನಲ್ಲಿ ಶರಾಬು ಮಾರುವ ಕಾಂಟ್ರಾಕ್ಟ್) ಇತ್ತು. ಅವರು ಪೇಟೆಗೆ ಸಮೀಪವಾಗಿ ತೆರೆದ ಅಂಗಡಿಗೆ ‘ಶರಾಬು ಅಂಗಡಿ’ ಎಂಬ ನಾಮಫಲಕವೇ ಇತ್ತಾದರೂ ಹಾಗೆ ಕರೆಯುವವರು ಯಾರೂ ಇರಲಿಲ್ಲ. ಅದಕ್ಕಿಂತ ಬಹಳ ಹಿಂದೆಯೇ ಒಂದು ಕಳ್ಳಂಗಡಿಯೂ ಊರಿನಲ್ಲಿ ಪ್ರಾರಂಭವಾಗಿ ಪೇಟೆಯಿದ ಸ್ವಲ್ಪ ದೂರವೇ ಇತ್ತು. ಊರಿನ ಜನರು ‘ಗಡಂಗು’ ಮತ್ತು ‘ಗುತ್ತಿಗೆ’ ಎಂಬ ಎರಡೂ ಶಬ್ದಗಳನ್ನು ಒಂದಕ್ಕೊಂದು ಪರ್ಯಾಯವಾಗಿ ಬಳಸುತ್ತಿದ್ದರು. ಶರಾಬು ಕುಡಿಯಲು ಹೋಗುವವರು ತಮ್ಮ ಬಗ್ಗೆಯೇ ಹೇಳುವುದಿದ್ದರೆ, “ನಾನು ಗುತ್ತಿಗೆಗೆ ಹೋಗಿ ಬರುತ್ತೇನೆ” ಎನ್ನುತ್ತಿದ್ದರು! ಸ್ವಲ್ಪ ತಿರಸ್ಕಾರಪೂರ್ವಕವಾಗಿ ಹೇಳುವುದಿದ್ದರೆ, “ಅವನು ದಿನಾ ಗಡಂಗಿಗೆ ಹೋಗುತ್ತಾನೆ!” ಎಂದು ಹೇಳುತ್ತಿದ್ದರು. ಇದರ ಹಿಂದೆ ಇನ್ನೂ ಒಂದು ಸೂಕ್ಷ್ಮ ಇತ್ತು. ಕಳ್ಳಿನ ಅಂಗಡಿಗೆ ‘ಕಳ್ಳಿನ ಗುತ್ತಿಗೆ’ ಎಂದು ಹೇಳುವುದು (ತುಳುವಿನಲ್ಲಿ ‘ಕಲಿ’- ತ ಗುತ್ತಿಗೆ), ಶರಾಬು ಅಥವಾ ‘ಗಂಗಸರ’ದ ಕೇಂದ್ರವಾದರೆ ‘ಗಡಂಗು’ ಎನ್ನುವುದು ಎಂಬ ವ್ಯತ್ಯಾಸವನ್ನು ಕೆಲವರು ಅನುಸರಿಸುತ್ತಿದ್ದರು. ಕಳ್ಳು ಕುಡಿಯುವುದು ರೈತಾಪಿ ಜನರಲ್ಲಿ ಸಹಜವಾದ ಆಹಾರ ಪಾನೀಯದ ವ್ಯಾಪ್ತಿಯೊಳಗೆ ಬರುತ್ತಿತ್ತು. ಹೆಂಗಸರೂ ಕಳ್ಳು ಕುಡಿಯುವುದಿತ್ತು. ಕೆಲವು ಗಂಡಸರು ಬೆಳಿಗ್ಗೆ ಕಳ್ಳು ಇಳಿಸುವ ಮರಗಳ ಬಳಿಗೆ ಹೋಗುವಾಗ ಯಾವಾಗಾದರೊಮ್ಮೆ ಉದಾರವಾಗಿ ಮಕ್ಕಳನ್ನೋ, ಮೊಮ್ಮಕ್ಕಳನ್ನೋ ಕರೆದುಕೊಂಡು ಹೋಗಿ ಕುಡಿಸುತ್ತಿದ್ದದ್ದೂ ಉಂಟು. ಹೀಗಿರುವಾಗ, ತಾನು ಕಳ್ಳು ಕುಡಿಯಲು ಹೋಗುವುದು ಎನ್ನುವುದು ಸಹಜ ಸಂಗತಿಯಾಗಿ ಪರಿಗಣಿತವಾಗುತ್ತಿತ್ತು; ಶರಾಬು ಕುಡಿಯಲು ಎಂದು ಸತ್ಯ ಹೇಳಿದರೆ ಅದು ಕೆಲವರ ಹುಬ್ಬನ್ನು ಮೇಲೇರಿಸಬಹುದು ಎನ್ನುವ ಚಿಂತನೆ ಈ ಪದಗಳ ಬಳಕೆಯ ಹಿಂದೆ ಇತ್ತು. ಒಟ್ಟಿನಲ್ಲಿ, ನಿಜವಾದ ಅರ್ಥ ಹೇಗಿದ್ದರೂ ಹಳ್ಳಿಗರಿಗೆ ತಮ್ಮದೇ ಆದ ಅರ್ಥ! + +ಅದುವರೆಗೆ ಊರಿನ ಹೆಚ್ಚಿನ ಜನರು ಈ ಬಗೆಯ ಸ್ಟ್ರಾಂಗ್ ಶರಾಬು ಸಿಗದೆ ಈಚಲು ಮರದ ಕಳ್ಳು ಕುಡಿದೇ ದಿನ ದೂಡುತ್ತಿದ್ದರು. ಅಲ್ಲಲ್ಲಿ ಕೆಲವರಿಗೆ ಕಳ್ಳಭಟ್ಟಿ ಸಾರಾಯಿ ‘ಗಂಗಸರ’ ಸಿಗುತ್ತಿತ್ತು. ಕೆಲವರು ಮಾತ್ರ ಗುಟ್ಟಿನಲ್ಲಿ ಕಳ್ಳಭಟ್ಟಿ ಸಾರಾಯಿಯನ್ನು ಮಾರುವ ತಾಣಗಳನ್ನು ಬಲ್ಲವರಾಗಿದ್ದರು. ಅದು ತೀರಾ ಪಬ್ಲಿಕ್ಕಾಗಿ ವಿಷಯ ಪೋಲೀಸರಿಗೆ ಮುಟ್ಟಿದರೆ ಸಾರಾಯಿ ತಯಾರಿಸುವವರನ್ನೂ, ಕುಡಿಯುವವರನ್ನೂ ಒಟ್ಟಿಗೆ ಹಿಡಿದುಕೊಂಡು ಹೋಗುತ್ತಿದ್ದರು! ಹಾಗಾಗಿ ಗುಟ್ಟಿನ ಗಿರಾಕಿಗಳು ಇಂತಹ ಮಾಹಿತಿಗಳನ್ನು ಸುಲಭವಾಗಿ ಇನ್ನೊಬ್ಬರಿಗೆ ಕೊಡುತ್ತಿರಲಿಲ್ಲ. ಗಂಗಸರ ಕುಡಿಯಲು ಸಿಗದ ಗಂಗಸರಪ್ರಿಯರಿಗೆ ಬದುಕಿನಲ್ಲಿ ಸ್ವಾರಸ್ಯವೇ ಹೊರಟುಹೋಗಿತ್ತು. ತಾವು ದುಡಿಯುವುದು ಯಾತಕ್ಕಾಗಿ ಎಂಬ ತಾತ್ವಿಕ ಜಿಜ್ಞಾಸೆಯೂ ಅಂತಹವರಲ್ಲಿ ಮೊಳಕೆಯೊಡೆಯತೊಡಗಿತ್ತು. ಅಂತಹ ಕಾಲದಲ್ಲಿ ಅಬಕಾರಿ ಇಲಾಖೆ ಕಾರಂಗಳದಲ್ಲಿಯೂ ಒಂದು ಅಧಿಕೃತ ಶರಾಬು ಅಂಗಡಿಯನ್ನು ತೆರೆಯಲು ಅನುಮತಿ ನೀಡಿತು. ಆಗ ಶರಾಬು ಮತ್ತು ಕಳ್ಳನ್ನು ಮಾರಾಟಮಾಡುವ ಗುತ್ತಿಗೆಗಳನ್ನು (ಕಾಂಟ್ರಾಕ್ಟ್) ಹರಾಜು (ಏಲಂ) ಹಾಕಲಾಗುತ್ತಿತ್ತು. + +ಕಾರಂಗಳದಲ್ಲಿ ಶರಾಬು ಅಂಗಡಿ ಪ್ರಾರಂಭವಾಗಿ ಎಲ್ಲ ಹಳ್ಳಿಯ ಕೃಷಿಕರನ್ನೂ ಸಂಜೆಯ ಹೊತ್ತು ಪೇಟೆಗೆ ಸೆಳೆಯಲಾರಂಭಿಸಿತು. ಟೀ ಕುಡಿಯುವವರು ಕಡಿಮೆಯಾದರು. ಸಂಜೆ ಟೀ ಕುಡಿದರೆ ನಿದ್ರೆ ಬರುವುದಿಲ್ಲ, ಅದರ ಬದಲಿಗೆ ಸ್ವಲ್ಪ ಶರಾಬು ಕುಡಿದರೆ ದುಡಿದ ಮೈಕೈ ನೋವೆಲ್ಲ ಪರಿಹಾರವಾಗಿ ಒಳ್ಳೆಯ ನಿದ್ದೆ ಬರುತ್ತದೆ, ಮರುದಿನ ಕೆಲಸ ಮಾಡಲು ಉಲ್ಲಾಸ ಇರುತ್ತದೆ ಎಂದು ಜನರೆಲ್ಲ ಮಾತಾಡಿಕೊಳ್ಳುತ್ತಿದ್ದರು. ಹಾಗಾಗಿ ಗಡಂಗಿನ ಜನಪ್ರಿಯತೆ ಹೆಚ್ಚಾಗುತ್ತಾ ಹೋಯಿತು. + +ಮೊದಲು ಕಾಫಿ ಟೀಗಳನ್ನು ಜನ ಕುಡಿಯುವಂತೆ ಮಾಡಲು ಬ್ರಿಟಿಷರು ಸಂತೆಗಳಲ್ಲಿ, ಜಾತ್ರೆಗಳಲ್ಲಿ ಅದರ ಪ್ರಾತ್ಯಕ್ಷಿಕೆ ಏರ್ಪಡಿಸಿ, ಪ್ರಚಾರ ಮಾಡಿಸುತ್ತಿದ್ದರು. ಈಗ ಅವುಗಳಿಂದ ಜನರನ್ನು ದೂರ ಮಾಡಿ ಶರಾಬಿನತ್ತ ಆಕರ್ಷಿಸುವ ಕೆಲಸವನ್ನು ಗಡಂಗುಗಳು ಮಾಡಿದವು. + +ತಮ್ಮ ಹೊಸ ಗಡಂಗನ್ನು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಯಾದವ ಶೆಟ್ಟರ ಎರಡು ಪ್ರಯತ್ನಗಳು ಇತಿಹಾಸದಲ್ಲಿ ದಾಖಲಾಗತಕ್ಕವೇ ಆಗಿವೆ. ಅವುಗಳಲ್ಲಿ ಮೊದಲನೆಯದು, ಒಂದು ನಿಗದಿತ ದಿನ ತಮ್ಮ ಗಡಂಗಿಗೆ ಯಾರೇ ಬಂದರೂ ಶರಾಬು ಕುಡಿಯುವವರಿಗೆ ಅವರು ಕುಡಿಯುವಷ್ಟು ಶರಾಬನ್ನು ಉಚಿತವಾಗಿ ಕೊಡಲಾಗುವುದೆಂದು ಯಾದವ ಶೆಟ್ಟಿಯವರು ಘೋಷಿಸಿದ್ದು. ಅದೊಂದು ಸ್ಮರಣೀಯ ಮದ್ಯಪಾನೋತ್ಸವವಾಗಿತ್ತು. + +ಶರಾಬು ಸಮಾರಾಧನೆಯ ದಿನ ಬೆಳಗಿನಿಂದಲೇ ಶರಾಬು ಅಂಗಡಿಗೆ ನುಗ್ಗಲಾರಂಭಿಸಿದ ಊರಿನ ಶರಾಬು ಪ್ರಿಯರು ಬಹಳ ಬೇಗನೇ ‘ಟೈಟ್’ ಆದರು (ಮತ್ತೇರಿಸಿಕೊಂಡರು). ಆಮೇಲೆ ಪರಸ್ಪರ ಬೈದಾಡುತ್ತಾ, ದೂಡಿಕೊಳ್ಳುತ್ತಾ, ಬಡಿದಾಡುತ್ತಾ ಮನಸ್ಸಿನಲ್ಲಿದ್ದ ಕಲ್ಮಶಗಳನ್ನೆಲ್ಲ ಹೊರಗೆ ಹಾಕುತ್ತಾ ಮೆರೆದಾಡಿದರು. ಕೆಲವರು ಎದುರಾಳಿಗಳನ್ನು ಹುಡುಕುತ್ತಾ ಮದ್ದಾನೆಗಳಂತೆ ಕುಡುಕರ ತಲೆ ಕಂಡತ್ತ ಧಾವಿಸಿ ಅವರೊಡನೆ ಕಾಲುಕೆರೆದು ಜಗಳ ಪ್ರಾರಂಭಿಸುತ್ತಿದ್ದರು. ತುಂಬಾ ಹಾಸ್ಯಾಸ್ಪದ ಮತ್ತು ಕ್ಷುಲ್ಲಕ ಕಾರಣಗಳನ್ನು ಎತ್ತಿಕೊಂಡು ಕುಡುಕರು ವಾದಿಸತೊಡಗುತ್ತಿದ್ದರು. ಅವರಿಗೆ ಹೊಡೆದಾಡಲು ಯಾವುದಾದರೂ ಒಂದು ಪೀಠಿಕೆ ಬೇಕಾಗಿತ್ತು ಅನ್ನುವಂತೆ ಹೊಡೆದಾಡಿಕೊಂಡು ಸೋತು ನೆಲಕ್ಕೆ ಒರಗಿ ನೆಮ್ಮದಿಯಿಂದ ಬಿದ್ದುಕೊಳ್ಳುತ್ತಿದ್ದರು. ಬಹುಶಃ ಒಂದಿಬ್ಬರು ಹಾಗೆ ಮಾಡಿದ್ದನ್ನು ನೋಡಿದ ಇತರ ಮುಗ್ಧ ಹಳ್ಳಿಗರಿಗೆ ಕುಡಿದು ಮಜಾ ಮಾಡುವುದೆಂದರೆ ಇದೇ ಮಾದರಿ ಎಂದು ಅನಿಸಿರಬೇಕು. + +ಸುಮಾರು ಹನ್ನೊಂದು ಹನ್ನೆರಡು ಗಂಟೆಯಿಂದ ಮರುದಿನ ಅಷ್ಟು ಹೊತ್ತಿನವರೆಗೆ ಕಾರಂಗಳದ ಇಡೀ ಪೇಟೆ ಒಂದು ಯುದ್ಧ ಮುಗಿದ ಮೇಲಿನ ಯುದ್ಧಭೂಮಿಯಂತೆ ಕಾಣಿಸುತ್ತಿತ್ತು. ಯಾಕೆಂದರೆ ಕುಡಿದು ಮತ್ತೇರಿಸಿಕೊಂಡು ಲೋಕದ ಪರಿವೆಯನ್ನು ಕಳೆದುಕೊಂಡವರು, ನಿದ್ರೆ ಹೋದವರು ಅಲ್ಲಲ್ಲಿ ಹೆಣಗಳಂತೆ ಬಿದ್ದುಕೊಂಡಿದ್ದರು. ಅಂತಹ ಹನ್ನೆರಡು ಜೀವಂತ ಹೆಣಗಳನ್ನು ರಾಜೇಶ ಮತ್ತು ಸಂಗಡಿಗರು ಕಾರಂಗಳ ಪೇಟೆಯಲ್ಲಿ ಆ ದಿನ ಲೆಕ್ಕ ಹಾಕಿದ್ದರು. + +ರಾಜೇಶ ಮತ್ತು ಅವನ ಜತೆಗಾರರಾದ ಕೆಲವು ಹುಡುಗರು ಇಡೀ ಊರಿನಲ್ಲಿ ಅತ್ತಿತ್ತ ಓಡಾಡುತ್ತಾ ಕುಡುಕರ ವಿವಿಧ ಅವಸ್ಥೆಗಳನ್ನು ಕಂಡು ಸಾಕಷ್ಟು ಮಜಾ ಅನುಭವಿಸಿದ್ದರು. ಮಹಾಭಾರತ ಯುದ್ಧದಲ್ಲಿ ಧರೆಗುರುಳಿದ ಸೈನಿಕರಂತೆ ಹೆಜ್ಜೆ ಹೆಜ್ಜೆಗೆ ಬಿದ್ದಿರುವ ಕುಡುಕವೀರರು! ಕೆಲವು ಕಡೆ ಇನ್ನೂ ಹೊಡೆದಾಟ ಸಾಗುತ್ತಿತ್ತು. ಅವರು ಇನ್ನು ಉರುಳಬೇಕಷ್ಟೆ. ಇನ್ನು ಕೆಲವರು ಪೂರ್ವಭಾವೀ ಬೈದಾಟಕ್ಕೆ ತೊಡಗಿದ್ದರು. ಅವನ್ನೆಲ್ಲ ಕಂಡು ಹುಡುಗರ ಗುಂಪಿಗೆ ಆ ಇಡೀ ದಿನ ಹೊಟ್ಟೆ ತುಂಬ ನಗು. + +ರಾಜೇಶನ ತಂಡ ಪೇಟೆ ಮತ್ತು ಅದರ ಹೊರ ವಲಯಗಳಲ್ಲಿ ಅಮಲು ಏರಿಸಿಕೊಂಡು ನೆಟ್ಟಗೆ ನಿಲ್ಲಲಾಗದೆ ಸ್ವಲ್ಪ ದೂರ ವಾಲುತ್ತಾ ಹೋಗಿ ಬಿದ್ದು, ಎದ್ದು, ಹೊರಳಾಡುತ್ತಿರುವ ಕುಡುಕ ಮಹಾತ್ಮರ ಬಳಿಗೆ ಹೋಗಿ, ಅವರು ಆಡುತ್ತಿದ್ದ ವ್ಯರ್ಥಾಲಾಪಗಳನ್ನು ಕೇಳಿಸಿಕೊಂಡು ಸಾಕಷ್ಟು ನಗಾಡಿದ್ದರು. ಆಗ ದಸರಾ ರಜೆಯಿದ್ದ ಕಾರಣ ಹುಡುಗರಿಗೂ ಬಿಡುವಿತ್ತು. + + + +ಗಡಂಗನ್ನು ಜನಪ್ರಿಯಗೊಳಿಸಲು ಯಾದವ ಶೆಟ್ಟಿಯವರು ಏರ್ಪಡಿಸಿದ ಇನ್ನೊಂದು ಕಾರ್ಯಕ್ರಮ ಒಂದು ‘ಅಹರ್ನಿಶಿ’ (‘day and night’) ಕೋಳಿ ಅಂಕ. ಈಗ ಅಹರ್ನಿಶಿ ಕ್ರಿಕೆಟ್ ಪಂದ್ಯಗಳು ಮೊದಲರ್ಧ ಹಗಲು ಹೊತ್ತು (ಸಾಯಂಕಾಲ) ಮತ್ತು ಇನ್ನರ್ಧ ರಾತ್ರಿ ಹೊತ್ತು ನಡೆಯುತ್ತವೆ. ಆದರೆ ಕ್ರಿಕೆಟಿಗಿಂತ ಬಹಳ ಮುಂಚೆ ಅಹರ್ನಿಶಿ ಕೋಳಿ ಅಂಕ ಕಾರಂಗಳದಲ್ಲಿ ನಡೆದಿತ್ತು. ದಕ್ಷಿಣ ಕನ್ನಡದಲ್ಲಿ ಇಡೀ ದಿನ ಆಡುವ ಕ್ರೀಡೆಗಳಾಗಲಿ, ಹಗಲು ಹೊತ್ತಿನ ಜಾತ್ರೆಗಳಾಗಲಿ ಜನರನ್ನು ಆಕರ್ಷಿಸುವುದಿಲ್ಲ. ರಾತ್ರಿ ನಡೆಯುವ ಜಾತ್ರೆ, ಯಕ್ಷಗಾನ, ಕೋಲಗಳೆಂದರೆ ಇಲ್ಲಿನವರಿಗೆ ಹೆಚ್ಚು ಇಷ್ಟ. ಹಾಗೆಯೇ ಎಪ್ಪತ್ತರ ದಶಕದಲ್ಲಿ ಶರಾಬು ಗುತ್ತಿಗೆದಾರರ ಮುತುವರ್ಜಿಯಿಂದಾಗಿ ರಾತ್ರಿಯ ಕೋಳಿ ಅಂಕಗಳು ಪ್ರಾರಂಭವಾದವು. ಮೊದಲು ಗ್ಯಾಸ್‍ಲೈಟ್‍ಗಳ ಬೆಳಕಿನಲ್ಲಿ ಮತ್ತು ನಂತರ ಟ್ಯೂಬ್ ಲೈಟಿನ ಬೆಳಕಿನಲ್ಲಿ ಕೋಳಿ ಅಂಕಗಳು ನಡೆಯತೊಡಗಿದವು. + +ಇದನ್ನು ಪ್ರಾರಂಭಿಸಿದ ಯಾದವ ಶೆಟ್ಟಿಯವರು ತಾವು ಕಾರಂಗಳದಲ್ಲಿ ಏರ್ಪಡಿಸಿದ್ದ ಏರ್ಪಡಿಸಿದ್ದ ಅಹರ್ನಿಶಿ ಕೋಳಿ ಅಂಕದ ಸಂದರ್ಭದಲ್ಲಿ, ಯಕ್ಷಗಾನದ ರಂಗಸ್ಥಳಕ್ಕೆ ಬಳಸುವ ಬಣ್ಣಬಣ್ಣದ ಕಂಬ ಮತ್ತು ಮೇಲ್ಕಟ್ಟುಗಳನ್ನೇ ತರಿಸಿ ಕೋಳಿ ಅಂಕಕ್ಕೂ ರಂಗಸ್ಥಳವನ್ನು ಕಟ್ಟಿಸಿದ್ದರು. ಆ ಇತಿಹಾಸ ಪ್ರಸಿದ್ಧ ಕೋಳಿ ಅಂಕ ಅವರ ಗಡಂಗಿನ ಪಕ್ಕದ ಮೈದಾನದಲ್ಲಿ ನಡೆದಿತ್ತು. ಮೊದಲು ಅಲ್ಲಿ ಒಂದು ಪದವು ಅಥವಾ ಪ್ರಸ್ಥಭೂಮಿಯಂತಹ ಖಾಲಿ ಜಾಗವಿತ್ತ್ತು. ಯಾದವ ಶೆಟ್ಟರ ಕೂಲಿಯಾಳುಗಳು ಒಂದು ವಾರ ಕೆಲಸ ಮಾಡಿ ಅಲ್ಲಲ್ಲಿ ಇದ್ದ ಗಿಡಗಳನ್ನೂ ಪೊದರುಗಳನ್ನೂ ಕಡಿದು, ಕಿತ್ತು ಕ್ರಿಕೆಟ್ ಆಡಬಹುದಾದಷ್ಟು ದೊಡ್ಡ ಮೈದಾನವನ್ನೇ ನಿರ್ಮಿಸಿದ್ದರು. ಅದರ ನಟ್ಟ ನಡುವೆ ಈ ಕೋಳಿ ಅಂಕದ ರಂಗಸ್ಥಳವಿತ್ತು. + +ಹೀಗೆ ಯಾದವ ಶೆಟ್ಟರು ಇತಿಹಾಸದಲ್ಲೇ ಮೊದಲ ಬಾರಿಗೆ ಕೋಳಿ ಅಂಕಕ್ಕೆ ರಂಗ ಪ್ರದರ್ಶನದ ಘನತೆಯನ್ನು ತಂದುಕೊಟ್ಟರು! ಅಂಕದಲ್ಲಿ ಹಲವು ವಿಭಾಗಗಳಿದ್ದವು. ಪ್ರತಿ ವಿಭಾಗದಲ್ಲಿ ಗೆದ್ದ ಕೋಳಿಗಳಿಗೆ ಬಂಗಾರದ ಮೆಡಲುಗಳ ಬಹುಮಾನವಿತ್ತು. ದೂರ ದೂರದ ಊರುಗಳಿಂದ ಸಾವಿರಗಟ್ಟಲೆ ಹಣವನ್ನು ಪಣವಾಗಿಟ್ಟು ಆಡುವ ಜುಗಾರಿಕೋರರು, ಶ್ರೀಮಂತರು ಆಗಮಿಸಿದ್ದರು. ಮಂಗಳೂರು ಸೀಮೆಯ ಮೂವರು ಶ್ರೀಮಂತರು ಕಾರಿನಲ್ಲಿ ಆಗಮಿಸಿದ್ದುದು ಊರಿನಲ್ಲಿ ವಿಶೇಷ ಸುದ್ದಿಯಾಗಿತ್ತು. ಆಗ ಕಾರಂಗಳದಲ್ಲಿ ಕಾರುಗಳು ನೋಡಲು ಸಿಗುವುದು ಅಪರೂಪವಾಗಿತ್ತು. ಕಾರಂಗಳ ಗುತ್ತಿನ ಮನೆಯವಲ್ಲಿ ಒಂದು ಅಂಬಾಸಡರ್ ಕಾರಿತ್ತು. ಅದನ್ನು ಕೂಡ ನಿರ್ವಹಣೆ ಮಾಡಲಾಗದೆ, ಅಗತ್ಯ ಇಲ್ಲ ಎಂದು ಮಾರಿಬಿಟ್ಟಿದ್ದರು. ಈಗ, ‘ಕೇವಲ ಒಂದು ಕೋಳಿ ಅಂಕಕ್ಕಾಗಿ ಕಾರಿನಲ್ಲಿ ಬಂದರಂತೆ!’ ಎನ್ನುವುದು ಊರಿನವರಿಗೆ ಆಶ್ಚರ್ಯ ಹುಟ್ಟಿಸಿದ ಸುದ್ದಿಯಾಗಿತ್ತು. + +“ಕಾರಿನಲ್ಲಿ ಬಂದವರು ಸುಮಾರು ಹತ್ತು ಸಾವಿರದವರೆಗೂ ಕ್ಯಾಶ್ ಹಿಡಿದುಕೊಂಡು ಬರುತ್ತಾರಂತೆ. ಒಂದೇ ಕೋಳಿಗೆ ಒಂದು ಸಾವಿರ ಕಟ್ಟುವಷ್ಟು ಧೈರ್ಯದವರೂ ಅವರಲ್ಲಿ ಇದ್ದಾರಂತೆ! ಕೆಲವೊಮ್ಮೆ ಅಷ್ಟನ್ನೂ ಕಳೆದುಕೊಂಡು ಹೋಗುತ್ತಾರಂತೆ. ಅವರಿಗೆ ಅದೆಲ್ಲ ಲೆಕ್ಕಕ್ಕೆ ಇಲ್ಲವಂತೆ!” + +ಜನ ಹೀಗೆ ಬೆರಗಾಗಿ ಕೋಳಿ ಅಂಕದ ಬಗ್ಗೆ ಮಾತಾಡುತ್ತಿದ್ದರು. ಅವರಿಗೆಲ್ಲ ಕೋಳಿ ಅಂಕದಲ್ಲಿ ಜೂಜು ಕಟ್ಟುತ್ತಾರೆ ಎಂಬ ಸುದ್ದಿ ಹೊಸದಲ್ಲವಾದರೂ, ಒಂದು ಸಾವಿರ ರೂಪಾಯಿ ಜೂಜನ್ನೂ ಕಟ್ಟಬಲ್ಲ ವ್ಯಕ್ತಿಗಳು ಕೋಳಿ ಅಂಕಕ್ಕೆ ಬಂದಿದ್ದಾರೆ ಎಂಬ ಸುದ್ದಿಯೇ ರೋಮಾಂಚನ ಹುಟ್ಟಿಸಿತ್ತು. ಆ ಮೂವರು ಕಾರಿನ ಶ್ರೀಮಂತರನ್ನು ಮತ್ತು ಅವರು ಜೂಜು ಕಟ್ಟುವುದನ್ನು ನೋಡಲೆಂದೇ ಹಲವರು ಕೋಳಿ ಅಂಕದ ಮೈದಾನಕ್ಕೆ ಬಂದಿದ್ದರು, ಆ ದಿನ. + +ಈ ಕೋಳಿ ಅಂಕ ಮೂರು ದಿನ ಮೂರು ರಾತ್ರಿ ನಡೆಯಿತು. ಕೋಳಿ ಅಂಕದ ತಜ್ಞರು, ಕೋಳಿಗಳ ಒಡೆಯರು, ಕ್ರೀಡಾಸಕ್ತರು ಮತ್ತು ಊರು ಪರವೂರುಗಳ ಜೂಜುಕೋರರು ಎರಡು ಮೂರು ದಿನ ಕಾರಂಗಳದಲ್ಲೇ ಬೀಡು ಬಿಟ್ಟಿದ್ದರು. ಆ ಮೂರು ದಿನಗಳಲ್ಲಿ ಶರಾಬಿನ ಮಾರಾಟವೂ ಒಂದು ದಾಖಲೆಯಾಗಿತ್ತು. ಯಾದವ ಶೆಟ್ಟರ ಬೇರೆ ಗಡಂಗುಗಳ ಶರಾಬನ್ನೆಲ್ಲ ಕಾರಂಗಳಕ್ಕೆ ತಂದರೂ ಅದೂ ಮುಗಿದುಹೋಗಿ, ದೂರ ದೂರದ ಊರುಗಳಿಂದ, ಅವರ ಗೆಳೆಯರ ಸಂಗ್ರಹದಿಂದಲೂ ತರಿಸಬೇಕಾಯಿತು. + +ಹಳ್ಳಿಯಾಗಿದ್ದ ಕಾರಂಗಳವು ಈ ಎರಡು ಘಟನೆಗಳ ನಂತರ ತನ್ನ ಚಹರೆಯನ್ನು ಬದಲಾಯಿಸಿಕೊಂಡು ಪೇಟೆ ಪಟ್ಟಣಗಳಿಗೆ ಹೊರಟಿದ್ದ ರಸ್ತೆಯ ಪಕ್ಕದಲ್ಲಿ ನೆಲೆಯಾಗಲು ಹಳ್ಳಿಯಿಂದ ಎದ್ದುಬಂದಂತೆ ಕಾಣತೊಡಗಿತು. ಹೊರಗಿನ ಲೋಕಕ್ಕೆ ಕಾರಂಗಳ ಎನ್ನುವ ಊರೊಂದು ಇದೆ ಎಂದು ತಿಳಿದುಹೋಯಿತು. ಅಲ್ಲಿಗೆ ಯಕ್ಷಗಾನ ಮೇಳಗಳೂ, ಸೈಕಲ್ ಸರ್ಕಸಿನವರೂ, ಡೊಂಬರಾಟದವರೂ ಬರತೊಡಗಿದರು. ಒಂದು ಸಲ ಒಂದು ಸಣ್ಣ ಸರ್ಕಸ್ ಕಂಪೆನಿಯೂ ಬಂದಿತ್ತು. + +ಆಮೇಲೆ ಕಾರಂಗಳದಲ್ಲಿ ಒಂದು ಬಾರ್ ಅಂಡ್ ರೆಸ್ಟೋರೆಂಟ್ ಪ್ರಾರಂಭವಾಯಿತು. ಅದರ ಆಚೆಗೆ ಇನ್ನೊಂದು ಗಾಡಿ ಕ್ಯಾಂಟೀನ್ ಪ್ರಾರಂಭವಾಯಿತು. ಹೀಗೆ ಅದು ಬದಲಾಗುತ್ತಾ ಹೋಗತೊಡಗಿತು. + +ಇವುಗಳನ್ನೆಲ್ಲ ಬೆರಗಿನಿಂದ ಗಮನಿಸುತ್ತಿದ್ದ ರಾಜೇಶನಿಗೆ ಈ ಬದಲಾವಣೆ ತಮಗೆ ಕೆಟ್ಟದ್ದನ್ನು ತರುತ್ತದೆ ಎಂದು ಅನಿಸತೊಡಗಿತು. ಅದಕ್ಕೆ ಕಾರಣ ರಾತ್ರಿಯ ಊಟದ ಹೊತ್ತಿಗೆ ಅವನ ಅಪ್ಪ ಮತ್ತು ಅಮ್ಮನ ನಡುವೆ ನಡೆಯುತ್ತಿದ್ದ ಚಿಂತೆಯ, ಆತಂಕದ ಮಾತುಕತೆಗಳು. ಯಾಕೆಂದರೆ ಈ ಬದಲಾವಣೆಗಳಾಗುತ್ತಿದ್ದಂತೆ ಅವರ ಕುಟುಂಬಕ್ಕೆ ಆರ್ಥಿಕ ತಾಪತ್ರಯದ ದಿನಗಳು ಎದುರಾದವು. ಕ್ಯಾಂಟೀನಿನಲ್ಲಿ ಹಿಂದಿನಂತೆ ವ್ಯಾಪಾರ ಇರಲಿಲ್ಲ. ಮಾಡಿಟ್ಟ ತಿಂಡಿಗಳು ಉಳಿಯತೊಡಗಿದವು. ರಾತ್ರಿ ಹೊತ್ತು ಅಪ್ಪ ಮನೆಗೆ ಹೊತ್ತು ತರುತ್ತಿದ್ದ ಉಳಿದ ತಿಂಡಿಗಳನ್ನು ರಾಜೇಶ ಮೊದಮೊದಲು ಆಸೆಯಿಂದ ಗಬಗಬನೆ ತಿನ್ನುತ್ತಿದ್ದರೂ, ಅಪ್ಪ ಅಮ್ಮನ ಕಣ್ಣುಗಳಲ್ಲಿದ್ದ ಭವಿಷ್ಯದ ಚಿಂತೆಯ ಕರಿಛಾಯೆಯನ್ನು ಕಂಡಮೇಲೆ ತಿನ್ನುವ ಉತ್ಸಾಹ ಕಡಿಮೆಯಾಯಿತು. ಅಚ್ಯುತಣ್ಣನ ಕುಟುಂಬ ಕೆಲವೊಮ್ಮೆ ರಾತ್ರಿ ಅನ್ನ ಮಾಡದೆ ಉಳಿದ ತಿಂಡಿಗಳನ್ನೇ ತಿಂದದ್ದೂ ಇತ್ತು. + +ಅಚ್ಯುತಣ್ಣ ಮತ್ತು ಕಾರ್ತಿಯಾನಮ್ಮನ ದುಡಿಮೆಗೆ ಸರಿಯಾಗಿ ಹಣ ಹುಟ್ಟುತ್ತಿರಲಿಲ್ಲ. ಶಶಿಕಲಳ ಮದುವೆಗಾಗಿ ಮಾಡಿದ ಸಾಲವೂ ತೀರಿರಲಿಲ್ಲ. ಹಾಗಾಗಿ ಬದುಕು ಸಾಗಿಸುವುದು ಸುಲಭವಾಗಿರಲಿಲ್ಲ. ಅದೃಷ್ಟ ಅಥವಾ ಕಣ್ಣಿಗೆ ಕಾಣದ ವಿಧಿ ಎನ್ನುವುದೊಂದು ವಿಚಿತ್ರ ಶಕ್ತಿ. ನಾವು ಒಂದೇ ಬಗೆಯ ಪ್ರಾಮಾಣಿಕತೆಯಿಂದ ದುಡಿಯುತ್ತಿದ್ದರೂ, ಅದು ಒಮ್ಮೆ ಅನಿರೀಕ್ಷಿತವಾದ ಏಳಿಗೆಯನ್ನೂ, ಒಮ್ಮೆ ಅನಿರೀಕ್ಷಿತವಾದ ಇಳಿಗಾಲವನ್ನೂ ಪ್ರತಿಫಲವಾಗಿ ಕೊಡುವುದು. ಹೀಗೆ ಅಚ್ಯುತಣ್ಣನ ಸಂಸಾರದ ಬದುಕು ಕಷ್ಟದಲ್ಲಿ ಸಾಗುತ್ತಿರುವಾಗ ಮತ್ತೊಂದು ಅಪಘಾತ ಸಂಭವಿಸಿತು! + +ಒಂದು ದಿನ ರಾತ್ರಿ ಅಚ್ಯುತಣ್ಣ ಕ್ಯಾಂಟೀನನ್ನು ಮುಚ್ಚಿ ಮನೆಗೆ ತಮ್ಮ ಸೈಕಲ್ ತುಳಿಯುತ್ತಾ ಬರುತ್ತಿದ್ದರು. ಯಾರೋ ಒಬ್ಬ ಸ್ಕೂಟರಿನವನು ಕತ್ತಲಲ್ಲಿ ಸರಿಯಾಗಿ ಕಾಣದೆ ಅಚ್ಯುತಣ್ಣನ ಸೈಕಲಿಗೆ ಡಿಕ್ಕಿ ಹೊಡೆದು ಅಚ್ಯುತಣ್ಣನನ್ನು ರಸ್ತೆ ಬೀಳಿಸಿ, ತಾನು ಸಿಕ್ಕಿಹಾಕಿಕೊಳ್ಳಬಾರದು ಎಂದು ಅಲ್ಲಿಂದ ಪರಾರಿಯಾದ. ಕತ್ತಲಿನಲ್ಲಿ ಅವನು ಯಾರು ಏನು ಎನ್ನುವುದು ಯಾರಿಗೂ ಗುರುತಾಗಲಿಲ್ಲ. + +ಅಚ್ಯುತಣ್ಣ ರಸ್ತೆಯಲ್ಲಿ ಬಿದ್ದಿದ್ದುದನ್ನು ಕಂಡವರು ಅವರನ್ನು ಎತ್ತಲು ಬಂದರು. ಅವರ ತಲೆ ಡಾಮಾರು ರಸ್ತೆಗೆ ಬಡಿದು ಅಲ್ಲೊಂದು ಬಾವು ಕಾಣಿಸಿಕೊಂಡಿತ್ತು. ಕೈಕಾಲುಗಳಿಗೆ ತರಚಿದ ಗಾಯವಾಗಿ ರಕ್ತ ಬರುತ್ತಿತ್ತು. ಅಚ್ಯುತಣ್ಣ ಏನೇನೋ ಮಾತಾಡಿದರು. ಒಂದಕ್ಕೊಂದು ಸಂಬಂಧವಿಲ್ಲದ ಮಾತುಗಳು. ಅವುಗಳನ್ನು ಕೇಳಿದಾಗ ಅಲ್ಲಿದ್ದ ಕೆಲವರಿಗೆ ಅವರ ಮಿದುಳಿಗೆ ಹಾನಿಯಾಗಿರಬಹುದು ಎಂದು ಅರಿವಾಯಿತು. ಅವರನ್ನು ಪಟ್ಟಣದ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿ ಒಂದು ವಾರ ಸಾವು ಬದುಕಿನ ಹೋರಾಟ ನಡೆಸಿದ ಅಚ್ಯುತಣ್ಣ ಕೊನೆಗೆ ಬದುಕಿನ ಹೋರಾಟ ಮುಗಿಸಿ ಅಸ್ತಂಗತರಾದರು. + +ಆಗ ಕಾರ್ತಿಯಾನಮ್ಮನನ್ನೂ ರಾಜೇಶನನ್ನೂ ತನ್ನ ಜತೆಗೆ ತೋರಣಪದವಿಗೆ ಕರೆದುಕೊಂಡು ಬಂದು ಆಶ್ರಯ ನೀಡಿದವರು ಕಾರ್ತಿಯಾನಮ್ಮನ ತಮ್ಮ, ಅಂದರೆ ರಾಜೇಶನ ಸೋದರ ಮಾವ ಸುಧಾಕರ ವರ್ಕಾಡಿ. + +ತೋರಣಪದವು ಕಾರಂಗಳದಿಂದ ಈಶಾನ್ಯಕ್ಕೆ ಇಪ್ಪತ್ತೈದು ಮೈಲು ದೂರದಲ್ಲಿದ್ದ, ಬಂಟವಾಳ ತಾಲೂಕಿನ ಒಂದು ಸುಂದರವಾದ ಊರು. ಅಲ್ಲಿಯೂ ಮುಖ್ಯ ರಸ್ತೆ ಮಂಗಳೂರಿನತ್ತ ಹೋಗುವುದೇ ಆಗಿದ್ದರೂ ಮಂಗಳೂರು ದೂರವಿದ್ದುದರಿಂದ ತೋರಣಪದವಿನಲ್ಲಿ ಬಹಳ ವೇಗವಾದ ಬದಲಾವಣೆಗಳು ಸಂಭವಿಸುತ್ತಲೇ ಇರಲಿಲ್ಲ! ಅದು ತುಂಬಾ ಶಾಂತಿಯಿಂದ ಬದುಕುತ್ತಿದ್ದ ಊರು. ಮುಖ್ಯ ರಸ್ತೆಯ ಎರಡೂ ಬದಿಗಳಲ್ಲಿ ಎರಡು ಫರ್ಲಾಂಗುಗಳಷ್ಟು ಉದ್ದಕ್ಕೆ ಅಂಗಡಿ ಮುಂಗಟ್ಟುಗಳು, ಬಸ್ ಸ್ಟ್ಯಾಂಡು, ಹೈಸ್ಕೂಲು, ಅಂಚೆ ಕಚೇರಿ, ಇಗರ್ಜಿ, ಪಂಚಾಯತು ಮತ್ತಿತರ ಹಳ್ಳಿಯ ಕಚೇರಿಗಳು ಹೀಗೆ ಸಣ್ಣ ಪೇಟೆಯೊಂದನ್ನು ಹೊಂದಿದ್ದ ಊರು. + +ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಏರುತಗ್ಗಾದ ಪ್ರಕೃತಿಯ ನಡುವೆ ಕೃಷಿಕರ ಬೈಲು, ಬಾಕಿಮಾರು ಮತ್ತು ಬೆಟ್ಟು ಗದ್ದೆಗಳು, ಅವರ ಮನೆಗಳು, ಕಾಲುದಾರಿಗಳು, ಕೆರೆ ಬಾವಿಗಳು ಇವೆ. ಈ ಪೇಟೆಯ ನಡುವಿನಿಂದ ದಕ್ಷಿಣಕ್ಕೆ ಊರಿನೊಳಗೆ ಹೊರಟು ಕಾಡು ಮೇಡು ಬೆಟ್ಟ ಗುಡ್ಡ ಬೈಲುಗಳನ್ನು ಹಾದು ಹೋಗುವ ಅಗಲ ಕಿರಿದಾದ ಡಾಮಾರು ರಸ್ತೆ ಇತಿಹಾಸ ಪ್ರಸಿದ್ಧವಾದ ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುತ್ತದೆ. ದೇವಸ್ಥಾನ ಪೇಟೆಯಿಂದ ಎರಡೂವರೆ ಮೈಲು ದೂರದಲ್ಲಿದೆ. ಉತ್ತರ ದಿಕ್ಕಿನಲ್ಲಿ ಒಂದು ಮೈಲು ದೂರದಲ್ಲಿ ಕಳೆದ ಎರಡು ಮೂರು ದಶಕಗಳಲ್ಲಿ ಆದ ವಸತಿ ಕಾಲನಿಯ ವಿಸ್ತರಣೆಯಿತ್ತು. + +ವಿಷ್ಣುಮೂರ್ತಿ ದೇವಸ್ಥಾನದ ಕಾರಣದಿಂದಾಗಿ ಈ ಊರು ಐತಿಹಾಸಿಕ ಹಿನ್ನೆಲೆ ಇರುವ ಊರು ಎಂದು ಕರೆಯಲ್ಪಟ್ಟಿದೆ. ದ್ವೈತ ಮತಾಚಾರ್ಯ ಮಧ್ವಾಚಾರ್ಯರು ಆ ಊರಿಗೆ ಬಂದಿದ್ದಾಗ ಈ ದೇವಸ್ಥಾನದಲ್ಲಿ ಪೂಜೆ ನಿಂತು ಹೋಗಿದ್ದುದನ್ನು ಕಂಡು ಪೂಜೆ ಮತ್ತೆ ಸಾಂಗವಾಗಿ ನಡೆಯುವಂತೆ ವ್ಯವಸ್ಥೆ ಮಾಡಿದ್ದರಂತೆ. ಅಭಿಷೇಕಕ್ಕೆಂದು ಅವರು ಕೊಟ್ಟಿದ್ದ ಸಣ್ಣ ವಿಗ್ರಹವು ಈಗಲೂ ಗರ್ಭಗುಡಿಯಲ್ಲಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ಬೈಲುಗದ್ದೆಗಳ ನಡುವೆ ಇರುವ ಗೋಪಾಲಕೃಷ್ಣ ಮಠದಲ್ಲಿ ಅವರು ಒಮ್ಮೆ ಚಾತುರ್ಮಾಸ್ಯ ಕುಳಿತಿದ್ದರು. ಚಾತುರ್ಮಾಸ್ಯ ಅಂದರೆ ಮಳೆಗಾಲದಲ್ಲಿ ಒಂದು ಪ್ರಶಾಂತ ಸನ್ನಿಧಾನದಲ್ಲಿ ನಾಲ್ಕು ತಿಂಗಳುಗಳ ಕಾಲ ಜಪತಪಾದಿಗಳನ್ನು ಮಾಡುತ್ತ ಇರುವುದು. + +ಊರಿನ ಇನ್ನೊಂದು ಐತಿಹ್ಯ ಬಂಗರಸರ ಕುರಿತಾಗಿ ಇದೆ. ಈ ಊರಿಗೆ ತೋರಣಪದವು ಎಂಬ ಹೆಸರು ಬರಲು ಕಾರಣ, ಬಂಗರಸರು ಪ್ರತಿವರ್ಷ ವಿಷ್ಣುಮೂರ್ತಿ ದೇವಸ್ಥಾನದ ಉತ್ಸವಕ್ಕೆ ಬರುತ್ತಿದ್ದರಂತೆ; ಅವರನ್ನು ಈಗ ಪೇಟೆ ಇರುವ ಪದವು (ಪ್ರಸ್ಥಭೂಮಿ) ಸ್ಥಳದಲ್ಲಿ ತೋರಣ ಕಟ್ಟಿ, ಊರವರೆಲ್ಲ ಎದುರುಗೊಂಡು ಸ್ವಾಗತಿಸುತ್ತಿದ್ದರಂತೆ. ತೋರಣ ಪದವು ಎನ್ನುವ ಹೆಸರು ಬಂದದ್ದು ಅದರಿಂದಾಗಿ. + +ತೋರಣಪದವಿನಲ್ಲಿ ಊರಿನ ಆದರ್ಶವಾದಿ ಮುಖಂಡರು ಸ್ವಾತಂತ್ರ್ಯಪೂರ್ವದಲ್ಲಿಯೇ ವಿದ್ಯಾವರ್ಧಕ ಸಂಘ ಎಂಬ ಒಂದು ಸಮಿತಿಯನ್ನು ರಚಿಸಿಕೊಂಡು ಸ್ಥಾಪಿಸಿದ್ದ ವಿದ್ಯಾವರ್ಧಕ ಹೈಸ್ಕೂಲು ಇತ್ತು, ವ್ಯವಸಾಯ ಸೇವಾ ಸಹಕಾರಿ ಸಂಘ ಇತ್ತು, ಆದರ್ಶ ಯುವಕ ಮಂಡಳಿ ಎನ್ನುವ ಸಂಘ ಇತ್ತು. ಒಟ್ಟಿನಲ್ಲಿ ತೋರಣಪದವು ಒಂದು ಆದರ್ಶ ಊರಾಗಿತ್ತು. + +ರಾಜೇಶ ತೋರಣಪದವಿಗೆ ಬಂದಾಗ ಸುಧಾಕರ ವರ್ಕಾಡಿಯವರು ವಿದ್ಯಾವರ್ಧಕ ಹೈಸ್ಕೂಲಿನ ಪರಿಚಾರಕ (ಅಟೆಂಡರ್) ಆಗಿದ್ದರು ಮತ್ತು ತೋರಣಪದವಿನಲ್ಲಿ ಹೆಚ್ಚಾಗಿ ಮುಚ್ಚಿಯೇ ಇರುತ್ತಿದ್ದ ‘ವರ್ಕಾಡಿ ಇಲೆಕ್ಟ್ರಿಕಲ್ಸ್’ ಎಂಬ ಆರಡಿ ಅಗಲ ಎಂಟಡಿ ಉದ್ದದ ಅಂಗಡಿಯ ಮಾಲಕರಾಗಿದ್ದರು. ಮಲಯಾಳಿಗಳ ಹಾಗೆ ತೆಂಗಿನೆಣ್ಣೆ ಹಾಕಿ ಮಿರಿಮಿರಿ ಮಿಂಚುವ ದಟ್ಟ ಕಪ್ಪುಕೂದಲ ರಾಶಿಯನ್ನು ಹಿಂದಕ್ಕೆ ಬಾಚಿಕೊಂಡಿದ್ದ, ದಪ್ಪ ಮೀಸೆಯ, ಹೊಳಪುಗಣ್ಣಿನ ಸುಧಾಕರ ವರ್ಕಾಡಿಯವರು ಬೆಳಿಗ್ಗೆ ಒಂಬತ್ತು ಗಂಟೆಯಿಂದ ಸಂಜೆ ಐದು ಗಂಟೆಯವರೆಗೆ ಹೈಸ್ಕೂಲಿನಲ್ಲಿ ಜವಾನನ ಕೆಲಸ ಮಾಡುತ್ತಲೂ, ಬಿಡುವಿನ ಸಮಯದಲ್ಲಿ ಊರಿನವರ ಮನೆಯ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸುತ್ತಲೂ, ಹಾಳಾದ ಪಂಪುಗಳನ್ನು ರಿಪೇರಿ ಮಾಡುತ್ತಲೂ ಇರುತ್ತಿದ್ದರು. ಅಪರೂಪಕ್ಕೊಮ್ಮೆ ಇಂತಹ ಯಾವ ಕೆಲಸಗಳೂ ಇಲ್ಲದೆ ಇದ್ದರೆ ಅಂಗಡಿ ತೆರೆದು ಅಲ್ಲಿದ್ದ ಮರದ ಕುರ್ಚಿಯಲ್ಲಿ ಕುಳಿತು ಬೀಡಿ ಸೇದಿಕೊಂಡು ಇರುತ್ತಿದ್ದರು. + +ಈಗ ಸುಧಾಕರ ವರ್ಕಾಡಿಯವರ ‘ವರ್ಕಾಡಿ ಇಲೆಕ್ಟ್ರಿಕಲ್ಸ್’ ದೊಡ್ಡ ಕಾಂಪ್ಲೆಕ್ಸ್ ಒಂದರಲ್ಲಿ ಎರಡು ಅಂಗಡಿ ಕೋಣೆಗಳನ್ನು ಬಾಡಿಗೆಗೆ ಪಡೆದು ಕಾರ್ಯಾಚರಿಸುತ್ತಿದೆ. ಒಂದು ಕೋಣೆ ವ್ಯವಹಾರಕ್ಕೆ ತೆರೆದುಕೊಂಡಿದ್ದರೆ ಇನ್ನೊಂದು ಅವರ ಉಪಕರಣಗಳನ್ನು ಇಡಲು ಗೋಡೌನಿನಂತೆ ಬಳಕೆಯಾಗುತ್ತಿದೆ. ವರ್ಕಾಡಿಯವರ ಕೈಕೆಳಗೆ ಸುಮಾರು ಹತ್ತು ಮಂದಿ ಯುವಕರು ದುಡಿಯುತ್ತಾರೆ. ಜವಾಬ್ದಾರಿಯಿರುವ ಒಬ್ಬ ಯುವಕ ಮೇಸ್ತ್ರಿಯಂತೆ ಎಲ್ಲವನ್ನೂ ನಡೆಸಿಕೊಂಡು ಹೋಗುತ್ತಿದ್ದಾನೆ. ಅವರ ಬಳಿ ಒಂದು ಹಳೆಯ ಜೀಪು ಕೂಡ ಇದ್ದು, ಅದು ಹುಡುಗರಿಗೆ ಸಾಮಾನು ಸಾಗಿಸಲು ನೆರವಾಗುತ್ತದೆ. ಈಗ ಯಜಮಾನನಾದ ಸುಧಾಕರ ವರ್ಕಾಡಿಯವರು ಸ್ವತಃ ದುಡಿಯಬೇಕಾಗಿಲ್ಲ. ಅವರು ಅಂಗಡಿಗೆ ಬಂದು, ಪೇಪರ್ ಓದಿ, ಹುಡುಗರ ಬಳಿ ಆ ದಿನ ಎಲ್ಲೆಲ್ಲಿ ಕೆಲಸ ನಡೆಯುತ್ತಿದೆ ಎಂದು ಕೇಳಿ, ವಯರಿಂಗ್ ನಡೆಯುತ್ತಿದ್ದ ಸೈಟುಗಳಿಗೆಲ್ಲ ತಮ್ಮ ಹಳೆಯ ಬೈಕಿನಲ್ಲಿ ಹೋಗಿ ಬರುತ್ತಾರೆ. ಮಧ್ಯಾಹ್ನ ಮನೆಯಲ್ಲಿಯೇ ಉಂಡು, ಮಲಗಿ ಸಂಜೆ ನಾಲ್ಕು ಗಂಟೆಯ ನಂತರ ಮತ್ತೆ ಅಂಗಡಿಗೆ ಹೋಗಿ ರಾತ್ರಿಯವರೆಗೆ ಕುಳಿತಿದ್ದು ಬರುತ್ತಾರೆ. + +ಆ ಕಾಲದಲ್ಲಿ ಆ ಸಣ್ಣ ಅಂಗಡಿ ಕೋಣೆಯನ್ನು ತಮ್ಮ ಗೋಡೌನ್ ಕಮ್ ಆಫೀಸ್ ಆಗಿ ಇಟ್ಟುಕೊಂಡು, ಸ್ವತಃ ಫೀಲ್ಡಿಗೆ ಹೋಗಿ ದುಡಿಯುತ್ತಿದ್ದ ವರ್ಕಾಡಿಯವರಿಗೆ ತೀರಾ ಅಗತ್ಯ ಬಿದ್ದಾಗ ನವೀನ ಎನ್ನುವವನು ಸಹಾಯಕನಾಗಿ ಹೋಗುತ್ತಿದ್ದ. ಆಗ ನವೀನನಿಗೆ ತಿಂಗಳ ಸಂಬಳ ಕೊಡುವಷ್ಟು ಕೆಲಸ ವರ್ಕಾಡಿಯವರಿಗೆ ಇರುತ್ತಿರಲಿಲ್ಲ. ನವೀನ ಸ್ವತಂತ್ರನಾಗಿಯೂ ಕರೆಂಟಿನ ಕೆಲಸ ಮಾಡುತ್ತಿದ್ದ. ಅದರಿಂದಲೇ ಜೀವನ ಸಾಗದೆ ಬೇರೆಯೂ ಏನೇನೋ ಕೆಲಸಗಳನ್ನು ಮಾಡಿಕೊಂಡಿರುತ್ತಿದ್ದ. + +ಸುಧಾಕರ ವರ್ಕಾಡಿಯವರು ಮೊದಲು ಒಂದು ಬಾಡಿಗೆ ಕೋಣೆಯಲ್ಲಿಯೂ, ಮದುವೆಯಾದಮೇಲೆ ಒಂದು ಹಳೆಯ ಮನೆಯಲ್ಲಿಯೂ ವಾಸಕ್ಕೆ ಏರ್ಪಾಡು ಮಾಡಿಕೊಂಡಿದ್ದರು. ರಾಜೇಶ ಮತ್ತು ಕಾರ್ತಿಯಾನಮ್ಮನನ್ನು ಕರೆದುಕೊಂಡು ಬಂದ ಕಾಲಕ್ಕೆ ಅವರಿಗೆ ಐದು ಸೆಂಟ್ಸ್ ಕಾಲನಿಯಲ್ಲಿ ಕಟ್ಟಿದ್ದ ಸ್ವಂತ ಮನೆಯಿತ್ತು. ಮನೆಯಲ್ಲಿ ಹೆಂಡತಿ ವತ್ಸಲ ಮತ್ತು ಮಗಳು ಕಲ್ಯಾಣಿ ಇದ್ದರು. ಕಲ್ಯಾಣಿ ರಾಜೇಶನಿಗಿಂತ ಐದು ವರ್ಷ ಸಣ್ಣವಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_211.txt b/Kenda Sampige/article_211.txt new file mode 100644 index 0000000000000000000000000000000000000000..53ea8a8a96baade52f414742657fc43b954f6a98 --- /dev/null +++ b/Kenda Sampige/article_211.txt @@ -0,0 +1,63 @@ +ಭಾಷೆ ತನ್ನನ್ನು ತಾನು ಛಿದ್ರಗೊಳಿಸಿಕೊಂಡು, ಹೊಸ ಲಯದಲ್ಲಿ ಮತ್ತೆ ಹುಟ್ಟಿಕೊಂಡರೆ ಮಾತ್ರ ಅತ್ಯುತ್ತಮ ಕವಿತೆ ಸೃಷ್ಟಿಯಾಗುತ್ತದೆ. ಅದೊಂದು ವಿಸ್ಮಯಕಾರೀ ಪುನರ್ ಸೃಷ್ಟಿ. ಸೂರ್ಯ ಕೀರ್ತಿಯವರು ಈ ಕವನ ಸಂಕಲದ ಉದ್ದಕ್ಕೂ ಮಾಡಿದ ಕೆಲಸ ಅದುವೇ. ಕಡಲು ಮೀನುಗಳನ್ನು ತಿಂದು ಹಾಕಿದರೆ, ಇಲ್ಲಿ ಮೀನೇ ಕಡಲ ನೀರನ್ನು ಕುಡಿದುಬಿಡುತ್ತದೆ. + +(ಸೂರ್ಯಕೀರ್ತಿ) + +ಲೋಕವನ್ನು ಕವಿತೆಯ ಮೂಲಕ ಅಸಾಮಾನ್ಯವಾಗಿ ಮರು ರೂಪಿಸುವ ಸೂರ್ಯಕೀರ್ತಿಯವರು, ಅದೇ ಹೊತ್ತಲ್ಲಿ ಸಾಂಪ್ರದಾಯಕ ಸಂಕೇತಗಳನ್ನು ನಿರ್ದಯವಾಗಿ ನಾಶಗೊಳಿಸುತ್ತಾರೆ. ಅವರು ಕಾಣುವ ಹಸಿವಿನ ಅನ್ನದ ಮುಂದೆ ಶಿವನ ಧ್ಯಾನ, ಮುದ್ರಿಕೆ, ನಾಥ ಪಟ್ಟಗಳೂ ಶೂನ್ಯವಾಗುತ್ತವೆ. ದೈವ ಕಲ್ಪನೆಯೇ ವ್ಯರ್ಥವಾಗುತ್ತದೆ. ಗಾಂಧಿಯ ಕನ್ನಡಕವು ಕೂಡಾ ಪಾಚಿಗಟ್ಟಿದ ಕಣ್ಣುಗಳಲ್ಲಿ ಮರೆಯಾಗುತ್ತದೆ. ಬಾಗಿಲ ಸಂದುಗೊಂದುಗಳಲ್ಲಿ ಚಂದ್ರಮತಿಯರು ನಡುಗುತ್ತಾರೆ, ಜನ್ನನ ಸುನಂದೆ, ಅಮೃತಮತಿಯರು ಪಿಸುಗುಡುತ್ತಾ ನರಳುತ್ತಾರೆ. ದ್ರೌಪದಿಯ ಮುಡಿಗೆ ಹೂವು ಏರುವುದೇ ಇಲ್ಲ. ಆದರೆ ಇವೆಲ್ಲದರ ನಡುವೆ ಮೂರ್ಖರಾಜನ ಸುತ್ತ ಕಾಗೆಗಳು ಪಲ್ಲಕ್ಕಿಯ ಮೆರವಣಿಗೆ ನಡೆಸುತ್ತವೆ, ಭಕ್ತರು ಹರಕೆಯ ಕುರಿಗಳಾಗಿ ಪ್ರಾಣಾರ್ಪಣೆಗೆ ಸಿದ್ಧರಾಗುತ್ತಾರೆ. + +ಇಂಥ ಅರ್ಥವಿಲ್ಲದ ಲೋಕದ ವಿರುದ್ಧ ನಿಲ್ಲುವ ರಾಮಪುರದ ಕೆಂಪಜ್ಜಿ, ಹೆಗಲ ಮೇಲೆ ಕೂರಿಸಿ ಜಾತ್ರೆತೋರಿಸುವ ಅಪ್ಪ, ಜೀನ್ಸ್ ತೊಡುವ ಮುದುಕಿಯರು, ಸಾಕಿಗೆ ಬರೆದ ಪ್ರೇಮ ಕವಿತೆಗಳು ಲೌಕಿಕವನ್ನು ಉಳಿಸುವ ದೊಡ್ಡ ಶಕ್ತಿಗಳಾಗಿ ಕವಿತೆಗಳಲ್ಲಿ ಮೂಡುತ್ತಾರೆ. ಇಂಥ ಮನೋಜ್ಞ ಕವಿತೆಗಳನ್ನು ಓದುವ ಸುಖದಿಂದ ಕನ್ನಡಿಗರು ವಂಚಿತರಾಗಬಾರದು. + +ಗಾಂಧೀಯ ಕನ್ನಡಕ + +ಈಗೀಗ ಗಾಂಧೀಯ ಕನ್ನಡಕವನ್ನುಎಲ್ಲರೂ ಹಾಕಿಕೊಂಡಿದ್ದಾರೆ;ಬ್ಯಾನರ್,ಪೋಸ್ಟರ್, ಟಿವಿ ರೇಡಿಯೋಎಲ್ಲೆಲ್ಲಿಯೂ ಗಾಂಧೀಯ ಕನ್ನಡಕವೇ!ಜಯಂತಿಯ ದಿನವಂತೂ ತಾವೇಧರಿಸಿಕೊಂಡು ಗಾಂಧೀ ಕೋಲು,ಗಾಂಧೀ ಟೊಪ್ಪಿ , ಗಾಂಧೀ ಚರಕಎಂದೆಲ್ಲ ಹಾಕಿಕೊಂಡು ಓಡಾಡುವವರೆ ಹೆಚ್ಚು! + +ಪಾಚಿಕಟ್ಟಿದ ಕಣ್ಣುಗಳಲ್ಲಿ ಗಾಂಧೀಯಕನ್ನಡಕವು ಕೂಡ ಬಣ್ಣ ಬಣ್ಣ!ಕೊಳೆಯ ಮನಸ್ಸಿನ ಮೃಗಗಳೆಲ್ಲಗಾಂಧೀಯ ಟೊಪ್ಪಿಯನೇರಿಸಿಕೊಂಡು;ಇದು ಚರಕ, ಅದು ಚಪ್ಪಲಿ ಇತ್ಯಾದಿ ಇತ್ಯಾದಿಗೋಡೆಗೆ ಮೊಳೆಯೊಡೆದ ಪೋಟೋನೇತು ಹಾಕಿ!ಇಲ್ಲೆಲ್ಲೋ ಹೋಗುತಿದ್ದಾರೆ! + +ಕಾಮಲೆಕಣ್ಣುಗಳಲ್ಲಿ ಗಾಂಧೀಯ ಕನ್ನಡಕವೂಸುಳ್ಳು-ಸುಳ್ಳು!ಗಾಂಧೀಯಿದ್ದನೆಂಬುದು ಕೂಡ ಸುಳ್ಳುಎಂಬೆಲ್ಲ ಡಂಗುರ ಹಾಕಿಸುವ ಮತ್ತೊಬ್ಬ ರಾಜ!ಇನ್ನೊಬ್ಬ ರಾಜ ರಸ್ತೆಯ ಬದಿಗಳಲ್ಲಿಮಾರುಕಟ್ಟೆಗಳಲ್ಲಿ ಗಾಂಧೀ ಚಿತ್ರವನ್ನಿಟ್ಟುಬೆಂಕಿ ಹಚ್ಚಿಸುವ ತರಾತುರಿ! + +ನಿತ್ಯಪುಷ್ಪದ ಗಾಂಧೀ ಕಣ್ಣುಗಳಿಗೆಸ್ವಚ್ಛ ಸ್ವಚ್ಛವೆಂದು ಅಸ್ವಚ್ಛತೆಯ ಕಾಣಿಸುವಹುನ್ಮಾರ!ಗಾಂಧೀ ಅಲ್ಲೆಲೋ ಕನ್ನಡಕವ ಯಾರಿಗೋಕೊಟ್ಟು ನೋಡುತಿದ್ದಾನೆಕಾಣುವ ಕಣ್ಣುಗಳ! + +*****ನಮ್ಮೂರಿನ ಚಂದ್ರಮತಿಯರು! + +ತಲೆತುಂಬಾ ತಾವರೆಮೊಗ್ಗುಗಳ ಮುಡಿದುಬಟ್ಟೆಯೊಗೆಯಲು ಕೆರೆಕೋಡಿಯ ಬಳಿ ಬಂದಾಗ,ಸತ್ಯಹರಿಶ್ಚಂದ್ರರ ಕತೆಗಳನೀವೊಮ್ಮೆ ಕೇಳಬೇಕು;ಮೂಗುತಿಗಳ ಮುರಿಸಿಕೊಂಡವರು;ಜುಟ್ಟು ಹಿಡಿದು ಗದ್ದವ ಕಿತ್ತಿಸಿಕೊಂಡವರು,ಕತ್ತಿನಶಿರಕ್ಕೆ ‘ಧುಮ್ಮನೇ’ ತಟ್ಟಿಸಿಕೊಂಡವರು,ಕುಡಿದ ಗಂಡನ ವಿಕೃತಕಾಮಕ್ಕೆ ಮೊಲೆಗಳಚಿವುಟಿಸಿಕೊಂಡವರು,ತುಟಿ ತುಟಿಗಳ ಕಚ್ಚಿ ಪರಚಿ ಮುಖ ಊದಿಸಿಕೊಂಡರ –ಒಮ್ಮೆ ಮಾತನಾಡಿಸಬೇಕು, ಅವರು ಹೇಳುವ ಮಾತುಗಳ ಕೇಳಬೇಕು;ಇವರೆ ನಮ್ಮೂರಿನ ಚಂದ್ರಮತಿಯರು.ಸೂರ್ಯಮತಿಯೆಂಬರು ಇದ್ದಾರೆಯೇ ಎಂದರೆಇರಬಹುದು ಬಿಡಿ ಎಂದು ನುಲಿಯುವಅಸಾಂಗತ್ಯವ ಹೇಳುವವರು!ಒಳಗೆ ನಾದಿನಿ ಅತ್ತಿಗೆ ಅತ್ತೆಯರು ಇದ್ದಾರೆಆಮೇಲೆ ಸಿಗುವೆನು,ಗದ್ದೆಯಿಂದ ಮೈದುನ ,ಮಾವಂದಿರು ಬಂದರೆಂದುಸೆರಗನ್ನು ಕವಚಿಕೊಂಡು ಕದದ ಹಿಂದೆನಡುಗುವವರು –ನಮ್ಮೂರಿನ ಚಂದ್ರಮತಿಯರು!ಕೆನ್ನೆಗೆ ಗೆಜ್ಜೆಮಾಟಿಗಳ ಜೋಡಿಸಿಕೊಂಡವರು,ಕಾಲ್ಗಡಗ ಕೈಗಡಗಗಳ ತೊಟ್ಟು ಗಂಡನ ಮುಂದೆತಕತಕಥೈ! ಎಂದು ಕುಣಿಯುವವರು,ಮುದ್ದೆಯ ನೊರೆ ಎಸರು ಉಕ್ಕುವಾಗಹೊರಗೆ ಗೆಳೆತಿಯರ ಜೊತೆ ಕೂಡಿ ನಗುವವರು,ಹೊಡೆದ ಮುದ್ದೆಮಡಕೆಗಳ ದಂಡಕ್ಕೆತವರಿನಮನೆ ಕಡೆ ಹೋಗುವವರು –ಇವರು ನಮ್ಮೂರಿನ ಚಂದ್ರಮತಿಯರು!ಎತ್ತುಗಳಿಗೆ ಹುಲ್ಲು ನೀರಿಟ್ಟುಅತ್ತೆಗೆ ಸ್ನಾನ ಮಾಡಿಸಿ ಮಾವನಿಗೆ ಬಿಸಿಮುದ್ದೆಕೊಟ್ಟು ಮಾರಿಗುಡಿಗೆ ಮೊಸರನ್ನ ಆರತಿಯೆತ್ತಿ –ಹೊಲಗದ್ದೆಗಳ ಕಡೆ ಹೊರಡುವವರುನಮ್ಮೂರಿನ ಚಂದ್ರಮತಿಯರು!‘ಹ್’ ‘ಹ್ಮು’ ಎಂದೆಲ್ಲ ಕ್ಯಾತೆ ತೆಗೆಯುವುದಿಲ್ಲಗಂಡ ಹೊಡೆದರು ‘ ಹೊಡೆಯಲಿ ಬಿಡಿ,ಗಂಡ ತಾನೇ, ಅವನು ಕುಡಿದು ಬಂದಾಗ ನಾನು ಇಕ್ಕಡಿಸುವೆ’ ಎಂದು ಗದ್ದಗಳರಳಿಸಿನಗುವವರು-ನಮ್ಮೂರಿನ ಚಂದ್ರಮತಿಯರು!*****ಜಂಗಮರ ಅಕ್ಕ + +ಹುಡುಕುತಿದ್ದಲ್ಲ ಇನ್ನೂ ಸಿಗಲಿಲ್ಲವೆ ಅಕ್ಕ!ಆ ಗುಡ್ಡ ಈ ಗುಡ್ಡ ಮಲ್ಲಿಕಾರ್ಜುನ ಗುಡ್ಡವನೆಲ್ಲತಡಕಾಡಿದ ಮೇಲೆ ಇನ್ನೂ ಸಿಗಲಿಲ್ಲವೆ ಅಕ್ಕ! + +ಗಂಡನ ಬಿಟ್ಟೆ,ಅರಮನೆಯ ಬಿಟ್ಟೆಅತ್ತೆ ಮಾವರ ಬಿಟ್ಟೆ ;ತವರು ಮನೆ ಬಿಟ್ಟು ಈ ಭೂತಾನಾಥನಹುಡುಕುವುದ ಇನ್ನೂ ಬಿಟ್ಟಿಲ್ಲವೆ ಅಕ್ಕ? + +ಮನಸ್ಸೆಂಬ ಮರ್ಕಟವ ಬಿಟ್ಟೆದೇಹದ ವಾಚಾಳಿ ಬಿಟ್ಟೆಪಂಚೇಂದ್ರಿಯಗಳ ರುಚಿಯ ಬಿಟ್ಟೆ;ಇನ್ನು ಕಪಾಲಿಯ ಹುಡುಕುವುದಬಿಟ್ಟಿಲ್ಲವೇ ಅಕ್ಕ ? + +ಮರಿ ಮಕ್ಕಳ ಆಸೆಯ ಬಿಟ್ಟೆ,ಹೊಲ ಗದ್ದೆ ತೋಟಗಳ ಬಯಕೆ ಬಿಟ್ಟೆ,ಮೈಯ ಬಟ್ಟೆಯನ್ನೇ ಬಿಟ್ಟೆಆದರೂ ಈ ಮಾಯಾವಿ ಸಿದ್ಧನಹುಡುಕುವುದ ಬಿಟ್ಟಿಲ್ಲವೆ ಅಕ್ಕ? + +ಅನುಭವದಲ್ಲಿ ಹುಡುಕಿದೆ;ಬಸವಣ್ಣನ ಕೇಳಿದೆ,ಅಲ್ಲಮನ ಪ್ರಶ್ನಿಸಿದೆಆದರೂಸಿಗಲಿಲ್ಲವೇ ಅಕ್ಕ;ಆ ಪಶುಪತಿನಾಥ? + +ಸಿಕ್ಕವರ ಕೇಳಿದೆ,ನದಿಯ ಮುಂದೆ ಅತ್ತು ಕರೆದೆ,ಕಾಡುಗಳ ನಡುವೆ ಹುಡುಕಿ ಹುಡುಕಿನಡೆದಾಡಿದೆ;ಸಮುದ್ರಗಳ ಜೊತೆ ಅಲೆಗಳಂತೆಆಯಾಸವ ಪಟ್ಟೆ ಆದರೂ;ಸಿಗಲಿಲ್ಲವೆ ಅಕ್ಕ;ಆ ರುಂಡಮಾಲ?***** + +ಗೌರಿ‌ ಉತ್ತ ನೆಲ! + +ಕೈಲಾಸದಲ್ಲಿ‌ ಬರಗಾಲವಂತೆಹಿಮಗಳೆಲ್ಲ ಬೆಂದು ಬೆವರಿ ಹಿಂಗಿವೆಯಂತೆಸುಟ್ಟ ಮರಗಳ ದಿಮ್ಮಿಎತ್ತ ನೋಡಿದರುಭೂತನಾಥನ ಸುಟ್ಟಭೂಮಿಯಂತೆ! + +ಗಣಪ ಇಲಿ ದಂಡುಗಳ ಕಟ್ಟಿಕೊಂಡುಆಡುತಿದ್ದಾನಂತೆ;ಷಣ್ಮುಗ ನವಿಲುಗಳ ಮೇಲೆ ಕುಳಿತುಕೊಂಡುಹಾರುತಿದ್ದಾನಂತೆ;ಸಿವಪ್ಪ ಕಣ್ಣು ಮುಚ್ಚಿ ಕೈ ಕಾಲುಗಳ ಜೋಡಿಸಿಪದ್ಮಾಸನದಲ್ಲಿ ಕುಳಿತು ಬಿಟ್ಟನಂತೆ! + +ಹರಿದ ರವಕೆಯಲ್ಲಿ ಗೌರಿಸೆಗಣಿಯಿಂದ ಮನೆ ತಾರಿಸಿ,ರಂಗೋಲಿ ಬಿಡಿಸಿಹಿತ್ತಲಲ್ಲಿ‌ದ್ದ ಸೌದೆಗಳ ತಂದುಒಲೆ ಮುಂದೆ ಕುಂತಳಂತೆ.ರಾಗಿ ಮಡಿಕೆಯಲ್ಲಿ ಹಿಟ್ಟಿಲ್ಲಅವಳ ಕೈ ಬಾಯಿಗಳಿಗೆಬೂದಿ ತುಂಬಿಕೊಂಡು,ಸೆರಗ ಮುಚ್ಚಿಕೊಂಡು ಅತ್ತಳಂತೆ! + +ಹಸಿದ ಗಣಪ‘ಅಮ್ಮ‌ಊಟ , ಅಮ್ಮ‌ಊಟ’ ಎಂದರೆಹಾರಿಕೊಂಡು ಬಂದ ಷಣ್ಮುಗ‘ಏನು ಬುವ್ವನಮ್ಮ‌’ ಅಂದನಂತೆ.ಹಸಿದ ಮಕ್ಕಳ‌ ನೋಡಿ‌ ಪೇಚಾಡುತ್ತಾಸಿವನ‌ ಬಳಿ ಸಿವೆ ಕೇಳಿದಳಂತೆ.ಧ್ಯಾನದಲ್ಲಿದ್ದ ಸಿವ ನೋಡಲಿಲ್ಲ;‘ಮುಂಡೇಗಂಡನ್ಗೆ ಹೆಂಡ್ರೂ, ಮಕ್ಳು ಯ್ಯಾಕೆ?’ಎಂದು ವಿರಾಗಿಯ ಮುಂದೆ ಜೋತು ಬಿದ್ದಳಂತೆ. + +ತೆರೆದ ಕಣ್ಗಳ ಮುಂದೆ ಅತ್ತು ಅತ್ತುಲೋಕದ ಹಸಿವು ಈ ಬೂದನಿಗೆಹೇಗೆ ಗೊತ್ತಾಗಬೇಕು ಎನ್ನುತ್ತಲೇಗಣಪನ ಮೂಗಿನ‌ ಗೊಣ್ಣೆಯ ವರೆಸಿ;ಎಚ್ಚರಾಗದ ರುದ್ರಮತ್ತೆ ಅಕ್ಕಿ ಬೇಳೆಗಳ ತಂದು ಕೊಡುವನೆ?ಭಂಗಿಯ ಸೇದಿದ ಈ ಮೂಳ ಭಂಗದಬದುಕನ್ನು‌ ನಿವಾರಿಸಬಲ್ಲನೇ?ಸೋಮರಸವ ಕುಡಿದ ಸಂಕರಎಣ್ಣೆ ಕಾಳುಗಳ ತರುವನೇ?ಎಂದು ಬಿಕ್ಕಿ ಬಿಕ್ಕಿ ಅತ್ತು ಕುಸಿದಳಂತೆ! + +ನೋಡಿದೊಡನೆ ಹೊಟ್ಟೆ ತುಂಬುವುದೇಹಸಿವು ಹೋಗುವುದೇ?ತ್ರಿನೇತ್ರನಾದ ತ್ರಿಶೂಲಧಾರಿಗೆಇವೆಲ್ಲ ಅರ್ಥವಾಗುವುದೇ?ಎಂದು ಕಣ್ಣೀರ ವರೆಸಿಕೊಂಡುಗಣಪ ಅಲ್ಲಲ್ಲಿ ಬಿದ್ದ ಅವರೇಕಾಳುಗಳಭೂಮಿಗೆ ಅದಿಯುವುದ ಕಂಡು;ಬಸವನಿಗೆ ನೊಗವೂಡಿ ಕಲ್ಲುನೆಲಗಳಉತ್ತಳಂತೆ, ಮುಗಿಲಿಗೆ ಬಾಯ್ಬುಟ್ಟುಕರೆದಳಂತೆ ಸವತಿಯ! + +ಉತ್ತ ಗೆರೆಗಳಿಗೆ ಗಣಪ, ಷಣ್ಮುಗಬಿತ್ತಿದರಂತೆ ರಾಗಿಯ, ಅವರೆಯ!ಹುಯ್ದಳಂತೆ ಗಂಗೆ ಮಳೆಯಾಗಿಸುಟ್ಟ ನೆಲವೆಲ್ಲ ಚಿಗುರಿ, ಎತ್ತ ನೋಡಿದರೂಹೂ-ಕಾಯಿಗಳ ಕಂಡು ಜಿಗಿದಳಂತೆ! + +ತುಂಬೆ ಸೊಪ್ಪಿನ ಸಾರು, ಅಂಬಲಿಯ ಮಾಡಿಅಣ್ಣೇಸೊಪ್ಪಿನ ಪಲ್ಯ ಬೇಯಿಸಿಕರೆದಳಂತೆ ಮಕ್ಕಳ ಗೌರಿತುಂಬೆ ಸೊಪ್ಪಿನ ವಾಸನೆಗೆಸಿವ ತೆರೆದನಂತೆ ಕಣ್ಣುಗಳಹಸಿದ ಹೊಟ್ಟೆಯ ಮುಂದೆಧ್ಯಾನ‌ ಒಗ್ಗುವುದೆ ಎಂದು ಶಪಿಸಿಕೊಂಡನಂತೆ!ಗೌರಿ, ಮಕ್ಕಳ ತಬ್ಬಿಕೊಂಡುಈ‌ ಹಸಿವಿನ ಅನ್ನ‌ದ ಮುಂದೆಧ್ಯಾನ,ಮುದ್ರಿಕೆ, ನಾಥ ಪಟ್ಟಇವೆಲ್ಲವೂ ಶೂನ್ಯ ಶೂನ್ಯ ಎಂದನಂತೆಕೊನೆಗೆ ಎಲ್ಲರು ಕೂಡಿಉಂಡರಂತೆ ತಣ್ಣಿಗೆಯೂಟವ.***** + +ಮೀನು ಕುಡಿದ ಕಡಲು! + +ಕುಡಿದಂತಹ ನೀರು ಪ್ರಮಾದವಾಗಿದೆನುಂಗಿದಂತಹ ಪ್ರವಾಹ ಆವಿಯಾಗಿದೆಈಜಾಡಿದಂತಹ ಸಮುದ್ರನೆರೆ ತಪ್ಪಿ ಉಲ್ಬಣಗೊಳ್ಳುತಿದೆ. + +ಕುಡಿಯುವುದು ಇದೆಯಲ್ಲಅದು ಕುಡಿಸುವ ತನಕ,ಕುಡಿದ ನೀರುಮತ್ತೆ ಕಣ್ಣು ಕಿವಿ ಮೂಗುಗಳಸವೆಸಿ ಕಡಲಿಗೆ ಬಿಡುವುದುಇದೆಯಲ್ಲ ಅದುಉಪ್ಪಾಗಿದೆ! + +ಅದೆಷ್ಟೋ ದಡಗಳ ದಾಟಿಅದೆಷ್ಟೋ ನಿಯಮಗಳ ಮೀರಿಇನ್ನೆಷ್ಟೋ ತೀರಗಳ ಮುಟ್ಟಿಸೇರುವುದು ಇದೆಯಲ್ಲಅದುಕುಡಿಯುವ , ಕುಡಿಸುವ ಕಡಲಾಗಿದೆ! + +ಈಜಾಡಿದ ದೇಹ ಮುಪ್ಪಾಗಿದೆರೆಕ್ಕೆಗಳು ಪುಕ್ಕಗಳ ಕಳೆದುಕೊಂಡಿವೆಒಡಲು ಕಡಲ ಸೇರಿ;ಅಲೆ ಅಲೆಯಾಗಿ ಮತ್ತೆಮತ್ತೆ ಕುಡಿಸುತಿದೆಆ ಕಡಲ ನೀರ! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_212.txt b/Kenda Sampige/article_212.txt new file mode 100644 index 0000000000000000000000000000000000000000..f5d04a7f05806a0c93b0bbd548d762dfc27beaa7 --- /dev/null +++ b/Kenda Sampige/article_212.txt @@ -0,0 +1,35 @@ +byಕೆಂಡಸಂಪಿಗೆ|Aug 17, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು.ಕಲಾವಿದ ಡಾ. ಎಂ.ಎಸ್. ಮೂರ್ತಿಯವರ “ಬೌಲ್” ಕಾದಂಬರಿ‌ಗೆ – ಪ್ರೊ. ಎನ್. ಮನು ಚಕ್ರವರ್ತಿಬರೆದ ಮುನ್ನುಡಿ + +byಕೆಂಡಸಂಪಿಗೆ|Aug 16, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು.ಶ್ರೀದೇವಿ ಕೆರೆಮನೆಯವರ ಗಝಲ್‌ಗಳ ವಿಶ್ಲೇಷಣೆ ಸಂಕಲನ “ತೀರದ ಧ್ಯಾನ” ಕೃತಿಗೆ ಡಾ. ಮಲ್ಲಿನಾಥ ಶಿ. ತಳವಾರ ಅವರು ಬರೆದ ಮುನ್ನುಡಿ + +byಕೆಂಡಸಂಪಿಗೆ|Aug 11, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ ಮೂಲಪುರುಷರಾಗಿದ್ದಾರೆ. `ಎ ಹಿಸ್ಟರಿ ಆಫ್ ರಷ್ಯನ್ ಲಿಟರೇಚರ್’ನಲ್ಲಿ ಮರ್‍ಸ್ಕೀ ಅನ್ನುವವನು ಹೇಳುವಂತೆ: ಬುನಿನ್ನನ ಭಾಷೆ `ಕ್ಲಾಸಿಕಲ್’, ಮಿತವಾದ್ದು, ಸಮಚಿತ್ತವಾದ್ದು, ಮೂರ್ತವಾದದ್ದು…ರಷ್ಯಾದ ಹೆಸರಾಂತ ಲೇಖಕ ಇವಾನ್‌ ಬುನಿನ್‌ನ ಒಂದಷ್ಟು ಕಥೆಗಳನ್ನು ಎಸ್. ಗಂಗಾಧರಯ್ಯ ಕನ್ನಡಕ್ಕೆ ತಂದದ್ದು, ಈ ಸಂಕಲನಕ್ಕೆ ಬುನಿನ್‌ ಕುರಿತಾಗಿ ಬರೆದ ಅವರ ಮಾತುಗಳು ಇಲ್ಲಿವೆ + +byನಾರಾಯಣ ಯಾಜಿ|Aug 9, 2022|ಪುಸ್ತಕ ಸಂಪಿಗೆ,ಸಂಪಿಗೆ ಸ್ಪೆಷಲ್| 0 Comments + +ಭಾಗವತದ ವಿಷಯ ಬಂದಾಗ ನೆನಪಾಗುವದು ಕೃಷ್ಣ ಮತ್ತು ಗೋಪಿಕೆಯರ ರಾಸಲೀಲೆ. ಯಮುನಾ ನದಿಯ ತಟದಲ್ಲಿರುವ ಬೃಂದಾವನ, ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣ ಇವೆಲ್ಲವೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತವು. ಇಲ್ಲಿ ದಾಸ ದಾಸಿಯ ಭೇದಗಳಿಲ್ಲ. ಯಾರದೋ ಮಗಳು, ಮತ್ಯಾರದೋ ಹೆಂಡತಿ, ಇನ್ಯಾರದೋ ಸಹೋದರಿಯೋ ಆಗಿರುವವರೆಲ್ಲ ತಮ್ಮ ಅಸ್ತಿತ್ವವನ್ನು ಮರೆತು ಕೃಷ್ಣನಲ್ಲಿ ಒಂದಾಗುವ ಅದ್ವೈತೀ ಭಾವ. ಕೃಷ್ಣನೂ ಸಹ ತಾನು ದೇವನೆನ್ನುವದನ್ನು ಮರೆತು ರಾಸಲೀಲೆಯಲ್ಲಿ ಮುಳುಗಿಬಿಡುತ್ತಾನೆ.ಪ್ರೊ. ಕೆ.ಇ. ರಾಧಾಕೃಷ್ಣ ಅವರ “ಗೋಪಿಕೋನ್ಮಾದ” ಕೃತಿಯ ಕುರಿತು ನಾರಾಯಣ ಯಾಜಿ ಬರಹ + +byಕೆಂಡಸಂಪಿಗೆ|Aug 8, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜಾಗತಿಕ ಮುಕ್ತ ಮಾರುಕಟ್ಟೆಯ ಕಬಂಧ ಬಾಹುಗಳು ದೇಶದ ಅಧಿಕಾರಶಾಹಿಗಳ ಸ್ವಾರ್ಥ ರಾಜಕಾರಣದ ಬೆಂಬಲದೊಂದಿಗೆ ಚಾಚಿಕೊಂಡದ್ದರಿಂದಾಗಿ ರೈತರ ಬದುಕು ಮೂರಾಬಟ್ಟೆಯಾದ ಕಥೆಯನ್ನು ಹೇಳುವ ‘ಕೈಗೊಂಬೆ’, ಬೆವರು ಸುರಿಸಿ ಪ್ರಾಮಾಣಿಕವಾಗಿ ದುಡಿಯುವ ಶ್ರಮಜೀವಿಗಳ ಕಷ್ಟದ ದುಡಿಮೆಯನ್ನು ಸೊಳ್ಳೆಗಳು ರಕ್ತ ಹೀರುವಂತೆ ದರೋಡೆಗೈದು ಅವರ ಬದುಕನ್ನು ನರಕಸದೃಶವಾಗಿಸುವ ಭ್ರಷ್ಟಾಚಾರಿ ಅಧಿಕಾರಿವರ್ಗದವರ ಅನ್ಯಾಯದ ಜಾಲವನ್ನೂ ಅಲ್ಲಿ ಸೃಷ್ಟಿಯಾಗುವ ಹೃದಯವಿದ್ರಾವಕ ಸನ್ನಿವೇಶಗಳನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥೆ ‘ನಿಗೂಢ ಹಸ್ತಗಳು’.ತೆಲುಗು ಕತೆಗಾರ ಪೆದ್ದಿಂಟಿ ಅಶೋಕ್‌ ಕುಮಾರ್‌ ಅವರ ಒಂದಷ್ಟು ಕತೆಗಳನ್ನು “ಜಾಲ” ಎಂಬ ಸಂಕಲನದ ಮೂಲಕ ಎಂ.ಜಿ. ಶುಭಮಂಗಳ ಕನ್ನಡಕ್ಕೆ ತಂದಿದ್ದು, ಅದಕ್ಕೆ ಡಾ. ಪಾರ್ವತಿ ಜಿ. ಐತಾಳರು ಬರೆದ ಮುನ್ನುಡಿ ಇಲ್ಲಿದೆ. + +byಕೋಡಿಬೆಟ್ಟು ರಾಜಲಕ್ಷ್ಮಿ|Aug 4, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮನುಷ್ಯರು ಒಳ್ಳೆಯ ವಿಚಾರಗಳನ್ನೇ ಆಯ್ಕೆ ಮಾಡಿ ಅದೇ ದಾರಿಯಲ್ಲಿ ನಡೆಯಲು ಸಾಯುಜ್ಯ, ಮೋಕ್ಷ ಎಂಬ ಪರಿಕಲ್ಪನೆಗಳನ್ನು ಹಿರಿಯರು ಪ್ರತಿಪಾದಿಸಿದ್ದಾರೆ. ದೇವರು ಎಂಬ ಪರಿಕಲ್ಪನೆಯೂ ಇದೇ ಮಾದರಿಯದು ಎಂದೇ ಇಟ್ಟುಕೊಳ್ಳುವುದಾರೆ, ದೇವರನ್ನು ತಲುಪಲು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಧಾನವಾಗಿ ತೋರುತ್ತದೆ. ತಪಸ್ಸು, ಅಧ್ಯಯನ ಅನುಶಾಸನದಂತಹ ವಿಧಾನಗಳು ಒಂದು ದಾರಿ. ಹಾಡು, ನೃತ್ಯ, ಚಿತ್ರ ಮುಂತಾದ ಲಲಿತಕಲೆಗಳ ಮೂಲಕ ನಡೆಯುವ ದೇವರ ಆರಾಧನೆಯು ಇನ್ನೊಂದು ದಾರಿ. ಎರಡೂ ದಾರಿಯನ್ನು ಸದೃಢಗೊಳಿಸಲು ಆಧಾರವಾಗಿ ನಿಲ್ಲುವುದು ಭಾರತ ಕತೆ. ಅದು ಸರಳವಾದ ಓದಿಗೆ ದಕ್ಕುವುದು ವಚನ ಭಾರತ ವೆಂಬ ಕೃತಿಯಲ್ಲಿ. ‘ವಚನ ಭಾರತ’ ಪುಸ್ತಕದ ಓದಿನ ನೆನಪುಗಳನ್ನು ಉಲ್ಲೇಖಿಸಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ + +byಗಿರಿಧರ್ ಗುಂಜಗೋಡು|Aug 3, 2022|ಪುಸ್ತಕ ಸಂಪಿಗೆ| 0 Comments + +ವಾರಿಸ್ ಜಿಬೂತಿಗೆ ಬಂದಾಗ ಸಫಾಳಿಗೆ ಅವಳ ಸಾಂಗತ್ಯ ಸ್ವರ್ಗವನ್ನೇ ಸಿಕ್ಕಿದ ಹಾಗೆ ಮಾಡುತ್ತದೆ. ಹೋಟೆಲಿನಲ್ಲಿ ಸಿಗುವ ಬರ್ಗರ್ ಮತ್ತು ಇತರೇ ಮಾಂಸದ ಅಡುಗೆಗಳು ಅವಳಿಗೆ ತೀರಾ ಕೈಗೆಟುಕದ ವಸ್ತುಗಳಾಗಿದ್ದ ಕಾರಣ ಅತ್ಯಂತ ಖುಷಿಯಿಂದ ಆಸ್ವಾದಿಸುತ್ತಾಳೆ. ಆದರೆ ಅವಳು ಹೋಟೆಲಿನ ಈಜುಕೊಳದಲ್ಲಿ ಈಜುಡುಗೆ ಧರಿಸಿ ಈಜುವುದನ್ನು ನೋಡಿದಾಗ ಅಚಾನಕ್ಕಾಗಿ ಬಂದ ಅವಳ ತಂದೆ ಕ್ರುದ್ಧನಾಗುತ್ತಾನೆ. ಆದರೆ ಹಣ ಅವನ ಬಾಯನ್ನು ಸುಲಭವಾಗಿ‌ ಮುಚ್ಚಿಸುತ್ತದೆ. ನಿಧಾನಕ್ಕೆ ಸಫಾಳ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದ ವಾರಿಸ್ ಸಫಾಳನ್ನು ಕರೆದೊಯ್ಯುವ ಪ್ರಯತ್ನ ಮುಂದುವರೆಸುತ್ತಾರೆ.ಗಿರಿಧರ್‌ ಗುಂಜಗೋಡು ಬರೆಯುವ “ಓದುವ ಸುಖ” ಅಂಕಣ + +byಕೆಂಡಸಂಪಿಗೆ|Aug 2, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್‍ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶ ವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಫಲ್ಯ. ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ.ತೆಲುಗು ಬರಹಗಾರ “ಚಲಂ” ಅವರ ಆತ್ಮಕತೆಯನ್ನು ಕನ್ನಡದ ಕವಿ ಲಕ್ಕೂರು ಆನಂದ್‌ ಕನ್ನಡಕ್ಕೆ ತಂದಿದ್ದು ಅದರ ಕೆಲವು ಪುಟಗಳು ನಿಮ್ಮ ಓದಿಗೆ ಇಲ್ಲಿವೆ. + +byರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು|Aug 1, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇದು ಮಾಯೆ, ಇದಕ್ಕೆ ಬಲಿಬೀಳಬಾರದು ಅನ್ನುವ ಎಚ್ಚರದಲ್ಲಿ ಲಕ್ಷ್ಮಣ ಇದ್ದ. ಹೇಳಿಯೂ ಹೇಳಿದ. ಆದರೆ ಸೀತೆಯನ್ನು ಆಗಲೇ ಮಾಯೆ ಮುಸುಕಿತ್ತು. ಸತ್ಯಾಸತ್ಯದ ವಿವೇಕ ಮರೆಯಾಗಿತ್ತು. ರಾಮನನ್ನು ಕಳುಹಿಸಿದಳು. ಇಬ್ಬರು ಮಾಯೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಅದರಿಂದ ಹೊರತಾಗಿ ಉಳಿದ ಲಕ್ಷ್ಮಣ ಅಸಹಾಯಕತೆ, ಆರ್ತತೆ, ಬಳಲಿಕೆಯನ್ನು ತೋರ್ಪಡಿಸುವ ಒಂದು ಪ್ರತಿಮೆಯಾಗಿ ಅದ್ಭುತ ಪದವಾಗಿ, ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಒಂದು ಕೂಗು ಈ ಇಡೀ ಪ್ರಸಂಗದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ಕಾಡುತ್ತದೆ.ಕುವೆಂಪುರವರ ಶ್ರೀ ರಾಮಾಯಣ ದರ್ಶನಂ ಕೃತಿಯ ಒಂದು ಭಾಗದ ಕುರಿತು ಬರೆದಿದ್ದಾರೆ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು \ No newline at end of file diff --git a/Kenda Sampige/article_213.txt b/Kenda Sampige/article_213.txt new file mode 100644 index 0000000000000000000000000000000000000000..9c8adaed1d6d80562cfbe3209ca613f140812e82 --- /dev/null +++ b/Kenda Sampige/article_213.txt @@ -0,0 +1,45 @@ +1891ರ ಜನವರಿ ತಿಂಗಳಿನ ಅದೊಂದು ದಿನ ರಷ್ಯಾದ ಹೆಸರಾಂತ ಲೇಖಕ ಆಂಟನ್ ಚೆಕಾಫ್‍ಗೆ ತನ್ನದೇ ಪ್ರಾಂತ್ಯದ ಯುವ ಪತ್ರಿಕೋದ್ಯಮಿಯೊಬ್ಬನಿಂದ ಪತ್ರವೊಂದು ಬರುತ್ತದೆ. ಅದರಲ್ಲಿ, `ನೀವು ನನ್ನ ಇಷ್ಟದ ಲೇಖಕರು. ನೇರ ನಡೆನುಡಿಯವರೂ ತುಂಬಾ ಒಳ್ಳೆಯವರೂ ಅಂತ ನನ್ನ ಕೆಲ ಸ್ನೇಹಿತರು ನಿಮ್ಮ ಬಗ್ಗೆ ಹೇಳಿದ್ದಾರೆ. ಹಾಗಾಗಿ ನನ್ನ ಆಯ್ಕೆ ನೀವಾಗಿದ್ದೀರಿ. ನಿಮಗೆ ಬಿಡುವಿದ್ದಲ್ಲಿ, ನನ್ನಂಥವನ ಕೆಲವು ಬರವಣಿಗೆಗಳನ್ನು ಕಣ್ಣಾಡಿಸಿ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುವ ಮನಸಿದ್ದಲ್ಲಿ ದಯಮಾಡಿ ತಿಳಿಸಿ. ನಾನು ನನ್ನ ಕೆಲವು ಕಥೆಗಳನ್ನು ನಿಮಗೆ ಕಳಿಸುತ್ತೇನೆ. ಹಾಗೆಯೇ ನಿಮ್ಮಂದ ಅವುಗಳ ಬಗ್ಗೆ ಒಂದೆರಡು ವಿಮರ್ಶಾತ್ಮಕ ಮಾತುಗಳನ್ನು ಕೇಳಲು ಇಚ್ಛಿಸುತ್ತೇನೆ. ಅಂತೆಯೇ ಇಂಥದ್ದೊಂದು ಒತ್ತಾಯಪೂರ್ವಕ ಅಂಗಲಾಚಿಕೆಗಾಗಿ ಕ್ಷಮೆ ಯಾಚಿಸುತ್ತೇನೆ,’ ಎಂಬುದಾಗಿ ಬರೆಯಲ್ಪಟಿರುತ್ತದೆ. ಆ ನಂತರ ಆ ಪತ್ರವನ್ನು ಬರೆದವನು ಹಾಗೂ ಬರೆಸಿಕೊಂಡವರು ಇಬ್ಬರೂ ಜೀವಮಾನವಿಡೀ ಒಳ್ಳೆಯ ಗೆಳೆಯರಾಗಿಬಿಡುತ್ತಾರೆ. ಅದೇರೀತಿ, ಚೆಕಾಫ್‌ನ ಪ್ರಭಾವದಿಂದಾಗಿ ಅವನು ಮುಂದೆ ಒಳ್ಳೆಯ ಲೇಖಕನಾಗಿ, ರಷ್ಯಾಕ್ಕೆ ಸಾಹಿತ್ಯಕ್ಕಾಗಿ ಮೊಟ್ಟ ಮೊದಲ ನೊಬೆಲ್ ಬಹುಮಾನವನ್ನೂ ತಂದುಕೊಡುತ್ತಾನೆ. ಆ ಲೇಖಕ ಬೇರಾರೂ ಅಲ್ಲ, ಅವನೇ ಇವಾನ್ ಅಲೆಕ್ಸಿವೀಚ್ ಬುನಿನ್. + +ಬುನಿನ್ 1870 ಅಕ್ಟೋಬರ್ 10ರಂದು ರಷ್ಯಾದ ವಾರೋನೆಶ್ ಎಂಬ ನಗರದಲ್ಲಿ ಹುಟ್ಟುತ್ತಾನೆ. ಅವನ ಅಪ್ಪ ಅಲೆಕ್ಸೀ ನಿಕೋಲಯೇವಿಚ್ ಒಬ್ಬ ಜಮೀನುದಾರ. ಶ್ರೀಮಂತ ಕುಟುಂಬದಿಂದ ಬಂದಿದ್ದ ಅವನಿಗೆ ತೂಲ ಮತ್ತು ಒರೇಲ್ ಪ್ರಾಂತ್ಯದಲ್ಲಿ ಹಲವು ಎಸ್ಟೇಟುಗಳಿದ್ದವು. ತನ್ನ ಕಾರ್ಯಸಾಧುವಲ್ಲದ ವ್ಯವಹಾರದಿಂದಾಗಿ, ಜೊತೆಗೆ ಜೂಜು ಮತ್ತು ಕುಡಿತದ ಹುಚ್ಚಿನಿಂದಾಗಿ ಒಂದಾದ ಮೇಲೊಂದರಂತೆ ಎಸ್ಟೇಟುಗಳನ್ನು ಕಳೆದುಕೊಂಡಿದ್ದಲ್ಲದೆ, ಬುನಿನ್ ಪ್ರಾಯಕ್ಕೆ ಬರುವ ಹೊತ್ತಿಗಾಗಲೇ ಅವನು ನಿರ್ಗತಿಕ ಸ್ಥಿತಿಗೆ ತಲುಪಿಬಿಟ್ಟಿದ್ದ. ಅಲೆಕ್ಸೀ ನಿಕೋಲಯೇವಿಚ್ ಹಾಗೂ ಅವನ ಹೆಂಡತಿ ಲೂದ್ಮೀಲಾ ಅಲೆಕ್ಸಾಂಡ್ರೋವ್ನಾ ದಂಪತಿಗಳಿಗೆ ಒಂಭತ್ತು ಮಂದಿ ಮಕ್ಕಳು. ಅವರಲ್ಲಿ ನಾಲ್ಕು ಮಾತ್ರ ಉಳಿದುಕೊಂಡಿದ್ದವು. ಬುನಿನ್‍ಗೆ ಯೂಲಿ ಹಾಗೂ ಇವ್ಗೇನಿ ಎಂಬ ಇಬ್ಬರು ಅಣ್ಣಂದಿರೂ ಮರಿಯಾ ಎಂಬ ತಂಗಿಯೂ ಇದ್ದಳು. + +ಅಲೆಕ್ಸೀ ನಿಕೋಲಯೇವಿಚ್‌ನನ್ನು ದುಶ್ಚಟಗಳಿಂದ ಬಿಡಿಸುವ ಸಲುವಾಗಿ ಹಾಗೂ ಸಂಸಾರದ ಖರ್ಚುಗಳನ್ನು ಕಡಿಮೆ ಮಾಡಿಕೊಳ್ಳುವ ಸಲುವಾಗಿ 1874ರಲ್ಲಿ ಇಡೀ ಕುಟುಂಬ ವಾರೋನೇಶ್‌ನಿಂದ ಸುಮಾರು ನೂರಾ ಮುವ್ವತ್ತು ಕಿಲೋಮೀಟರಿನಷ್ಟು ದೂರದಲ್ಲಿದ್ದ ಒರೇಲ್ ಪ್ರಾಂತ್ಯದ ಎಲ್ಯತ್ಸ್‌ನ ಬ್ಯೂಟಕಿಯಲ್ಲಿದ್ದ ತಮ್ಮ ಪುಟ್ಟ ಎಸ್ಟೇಟ್‌ನಲ್ಲಿ ಹೋಗಿ ನೆಲೆಸುತ್ತದೆ. ಬುನಿನ್ 1881 ರವರೆಗೂ ಇಲ್ಲಿಯೇ ಉಳಿಯತ್ತಾನೆ. ಆಗವನು ನಕೊಲೈ ಓಸಿಪೊವಿಚ್ ಅನ್ನುವ ಹವ್ಯಾಸಿ ವರ್ಣಚಿತ್ರಕಾರ ಹಾಗೂ ಸಂಗೀತಗಾರನಿಂದ ಖಾಸಗಿ ಶಿಕ್ಷಣ ಪಡೆದುಕೊಳ್ಳುತ್ತಾನೆ. ಅವನು ತನ್ನ ವಿದ್ಯಾರ್ಥಿಗಳಿಗೆ ರಷ್ಯನ್ ಭಾಷೆಗೆ ತರ್ಜುಮೆಗೊಂಡಿದ್ದ ಹೋಮರನ ಒಡಿಸ್ಸಿ ಮತ್ತು ಸರ್ವಾಂಟೇಸನ ಡಾನ್ ಕ್ವಿಕ್ಸೋಟನ್ನು ಓದಿಸುವ ಮೂಲಕ ಅವರನ್ನು ಓದಿನ ಗೀಳಿಗೆ ಬೀಳಿಸುತ್ತಾನೆ. ಚಾಸರ್‍ನಿಂದ ಟೆನ್ನೀಸನ್‍ವರೆಗೆ ಅನ್ನುವ ಕವಿತಾ ಸಂಕಲನ ಬುನಿನ್ ಮೊಟ್ಟ ಮೊದಲು ಓದಿದ ಪುಸ್ತಕವಾಗಿರುತ್ತದೆ. ಅದನ್ನು ಓದಿದ ಮೇಲೆ ಬುನಿನ್ ತಾನೂ ಕವಿಯಾಗಬೇಕುನ್ನುವ ತುಡಿತಕ್ಕೆ ಬೀಳುತ್ತಾನೆ. ಬುಹುಪಾಲು ಸಮಯವನ್ನು ಮನೆಯಿಂದ ಹೊರಗೇ ಕಳೆಯುತ್ತಿದ್ದ ಬುನಿನ್ ಸೇವಕರು, ರೈತರು ಮುಂತಾದವರ ನಿಕಟ ಸಂಪರ್ಕಕ್ಕೊಳಗಾಗಿ ನಿಜವಾದ ಹಳ್ಳಿಯ ಬದುಕಿನ ಬಗ್ಗೆ ಅವನಿಗೆ ಅಪಾರ ಅರಿವು ಉಂಟಾಗುತ್ತದೆ. ಅಂತೆಯೇ ಪಕೃತಿ ಬಗೆಗಿನ ಇನ್ನಿಲ್ಲದ ಪ್ರೀತಿಗೂ ಅದು ಕಾರಣವಾಗುತ್ತದೆ. + +1881ರ ಆಗಸ್ಟ್‌ನಲ್ಲಿ ಬುನಿನ್ ಎಲ್ಯತ್ಸ್‌ನಲ್ಲಿ ಸ್ಕೂಲಿಗೆ ಸೇರಿ ಅಲ್ಲಿನ ಹಾಸ್ಟೆಲಿನಲ್ಲಿಯೇ ಉಳಿಯುತ್ತಾನೆ. ರಜಾ ದಿನಗಳಲ್ಲಿ ತನ್ನ ಹಳ್ಳಿಗೆ ಬಂದು ಹೋಗುತ್ತಿದ್ದದ್ದು ಬಿಟ್ಟರೆ ಸುಮಾರು ನಾಲ್ಕೂವರೆ ವರ್ಷಗಳಷ್ಟು ಕಾಲ ಅಲ್ಲಿಯೇ ಇರುತ್ತಾನೆ. 1883ರಲ್ಲಿ ಬುನಿನ್ ಕುಟುಂಬ ಪಿತ್ರಾರ್ಜಿತ ಆಸ್ಥಿಯನ್ನು ಸ್ವಾಧೀನಪಡಿಸಿಕೊಳ್ಳುವ ಸಲುವಾಗಿ ಬ್ಯೂಟಕಿಯಿಂದ ಅದೇ ಪ್ರಾಂತ್ಯದಲ್ಲಿದ್ದ ಆಝಿರ್ಕಿ ಎಂಬ ಸಣ್ಣ ಸಣ್ಣ ಸರೋವರಗಳಿದ್ದ ಪುಟ್ಟ ಹಳ್ಳಿಯೊಂದಕ್ಕೆ ಸ್ಥಳಾಂತರಗೊಳ್ಳುತ್ತದೆ. ಬುನಿನ್ ಓದಿನಲ್ಲಿ ಅಷ್ಟು ಚುರುಕಾಗಿರಲಿಲ್ಲ. ಹಂಗಾಗಿ ಗಣಿತದಲ್ಲಿ ಫೇಲಾಗಿ ಮೂರನೆಯ ಕ್ಲಾಸನ್ನು ಮತ್ತೆ ಓದಬೇಕಾಗುತ್ತದೆ. ನಂತರ 1886ರಲ್ಲಿ ಹಾಜರಾತಿ ಇಲ್ಲದ ಕಾರಣಕ್ಕೆ ಅವನು ಆ ಸ್ಕೂಲಿನಿಂದ ಖಾಯಮ್ಮಾಗಿ ಹೊರದಬ್ಬಲ್ಪಡುತ್ತಾನೆ. ನಂತರ ಅಣ್ಣ ಯೂಲಿಯೊಂದಿಗೆ ಓದುವ ಇಚ್ಛೆ ವ್ಯಕ್ತಪಡಿಸುತ್ತಾನೆ. ಯೂಲಿಯೊಂದಿಗೆ ಖಾರ್ಕಾವ್‍ನಲ್ಲಿ ಕೆಲಕಾಲವಿದ್ದು ನಂತರ ಬುನಿನ್ ಒರೇಲ್‍ಗೆ ಹೋಗುತ್ತಾನೆ. ಅಲ್ಲಿ ಸುಮಾರು ನಾಲ್ಕು ವರ್ಷಗಳ ಲಿಬರಲ್ ಪಾಪ್ಯುಲಿಸ್ಟರು ನಡೆಸುತ್ತಿದ್ದ `ದ ಓರ್ಯಾಲ್ ಹೆರಾಲ್ಡ್’ ಅನ್ನುವ ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾನೆ. ಅಲ್ಲಿಂದಲೇ ಬುನಿನ್ ಚೆಕಾಫ್‍ಗೆ ಪತ್ರವನ್ನು ಬರೆದದ್ದು. ಅಲ್ಲಿ ಅವನೊಳಗಿನ ತಳಮಳ ಹಾಗೂ ಪ್ರವಾಸದ ಬಯಕೆಗಳು ದಾಖಲಾಗಲು ಪ್ರಾರಂಭಗೊಳ್ಳುತ್ತವೆ. ಅಲ್ಲಿಂದ ಈ ಯುವ ಲೇಖಕ ಯೂಕ್ರೇನಿನ ಪೋಲ್ಟವಾಕ್ಕೆ ಹೋಗುತ್ತಾನೆ. ಜೆಮ್ಸ್‍ತ್ವೋನಲ್ಲಿ ಮೊದಲು ಸಂಖ್ಯಾಶಾಸ್ತ್ರಜ್ಞನಾಗಿಯೂ, ನಂತರ ಲೈಬ್ರರಿಯನ್ ಆಗಿಯೂ ಕೆಲಸ ಮಾಡುತ್ತಾನೆ. ಈ ಸಂದರ್ಭಗಳು ಹಾಗೂ ಒರೇಲ್‍ನಲ್ಲಿನ ಸಂದರ್ಭಗಳು ಅವನ `ಲಿಕಾ’ ಅನ್ನುವ ಕಿರು ಕಾದಂಬರಿಯಲ್ಲಿ ಆತ್ಮಕಥಾನಕ ಮಾದರಿಯಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಲ್ಪಟ್ಟಿವೆ. `ದ ಓರ್ಯಾಲ್ ಹೆರಾಲ್ಡ್’ನಲ್ಲಿ ಕೆಲಸ ಮಾಡುತ್ತಿದ್ದಂಥ ಹೊತ್ತಲ್ಲಿ ಅಲ್ಲಿಯೇ ಪ್ರೂಫ್ ರೀಡರ್ ಆಗಿ ಕೆಲಸ ಮಾಡುತ್ತಿದ್ದ ಎಲ್ಯತ್ಸ್‍ನ ವೈದ್ಯನೊಬ್ಬನ ಮಗಳಾಗಿದ್ದ ವರ್ವಾರಾ ಪೆಷಾಂಕಳ ಪರಿಚಯವಾಗುತ್ತದೆ. ನಂತರ ಅವರಿಬ್ಬರೂ `ಲಿವಿಂಗ್ ಟುಗೆದರ್’ನಲ್ಲಿರುತ್ತಾರೆ. ಆದರದು ತುಂಬಾ ದಿನ ಬಾಳಿಕೆ ಬರುವುದಿಲ್ಲ. ವರ್ವಾರಾ ಪೆಷಾಂಕ ಬುನಿನ್‍ನೊಂದಿಗಿನ ಸಂಬಂಧವನ್ನು ಮುರಿದುಕೊಳ್ಳುತ್ತಾಳೆ. ನಂತರ ಬುನಿನ್‍ನ ಖಾಸಾ ಗೆಳೆಯ ಅರ್ಸೇನಿ ಬಿಬಿಕಾಫ್ ಅನ್ನುವ ಶ್ರೀಮಂತ ಯುವಕನನ್ನು ಮದುವೆಯಾಗುತ್ತಾಳೆ. ಬುನಿನ್ ಅಲ್ಲಿಂದ ಪೀಟರ್ಸ್‍ಬರ್ಗ್ ಮತ್ತು ಮಾಸ್ಕೋಗೆ ಹೋಗುತ್ತಾನೆ. + +ಬುನಿನ್ನನಿಗೆ ಖ್ಯಾತಿ ಎಂಬುದು ಬಹು ಬೇಗ ಬರುತ್ತದೆ. 1887ರಲ್ಲಿ ಪೀಟರ್ಸ್‍ಬರ್ಗ್‍ನ ನಿಯತಕಾಲಿಕೆ ಪತ್ರಿಕೆಯೊಂದರಲ್ಲಿ ಪದ್ಯಗಳು ಪ್ರಕಟವಾಗತೊಡಗಿದಂತೆ ಅವನ ಹೆಸರು ಸಾಹಿತ್ಯಲೋಕಕ್ಕೆ ಪರಿಚಿತವಾಗತೊಡಗಿತು. ಆಗ ಅವನಗಿನ್ನೂ ಹದಿನೇಳು ವರ್ಷ. ಅಲ್ಲಿಂದ ನಾಲ್ಕು ವರ್ಷಕ್ಕೆ ಬುನಿನ್ನನ ಮೊದಲ ಕವನ ಸಂಕಲನ ಪ್ರಕಟಗೊಳ್ಳುತ್ತದೆ. ಅದಾದ ಮೇಲೆ 1893ರಲ್ಲಿ ಅವನ ಮೊದಲ ಗದ್ಯ ಬರಹ `ಟಾಂಕಾ’ ಪ್ರಕಟಗೊಳ್ಳುತ್ತದೆ. 1895ರಲ್ಲಿ ಪೀಟರ್ಸ್‍ಬರ್ಗ್‍ಗೆ ಹೋದ ನಂತರ ಅಲ್ಲಿ ಬುನಿನ್‍ಗೆ ಹೆಸರಾಂತ ಪ್ರಕಾಶಕರು ಹಾಗೂ ಲೇಖಕರ ಒಡನಾಟ ಸಿಕ್ಕುತ್ತದೆ. ಅಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಇದ್ದು, ಅಲ್ಲಿಂದ ಮಾಸ್ಕೋಗೆ ಹೋಗುತ್ತಾನೆ. ಅಲ್ಲಿ 1897ರಲ್ಲಿ ಅವನ ಕಥಾ ಸಂಲನವೊಂದು ಪ್ರಕಟಗೊಂಡು ಎಲ್ಲರಿಂದಲೂ ಪ್ರಶಂಸೆಗೊಳ್ಳಲ್ಪಡುತ್ತದೆ. + +1903ರಲ್ಲಿ ಲಾಂಗ್‍ಮನ್ನನ `ಸಾಂಗ್ ಆಫ್ ಹಯವಾಥಾ’ ದ ಅದ್ಭುತ ಕಾವ್ಯಾತ್ಮಕ ಅನುವಾದಕ್ಕಾಗಿ ರಷ್ಯನ್ ಅಕಾಡೆಮಿ ಬುನಿನ್ನನಿಗೆ `ಪುಷ್ಕಿನ್ ಪ್ರಶಸ್ತಿ’ಯನ್ನು ನೀಡುತ್ತದೆ. ಆ ನಂತರ ಈ ಅನುವಾದಿತ ಕೃತಿ ಹಲವು ಸಲ ಮರು ಮುದ್ರಣಗೊಂಡು ತುಂಬಾ ಪ್ರಸಿದ್ಧಿಯಾಗುತ್ತದೆ. 1909ರಲ್ಲಿ ಅದೇ ಅಕಾಡೆಮಿ ಅವನನ್ನು ಸದಸ್ಯನನ್ನಾಗಿ ಆಯ್ಕೆ ಮಾಡುತ್ತದೆ. ಮಾಸ್ಕೋದಲ್ಲಿ ಬುನಿನ್ `ವೆಡ್ನೆಸ್‍ಡೇ’ ಅನ್ನುವ ಸಾಹಿತ್ಯ ಬಳಗವನ್ನು ಸೇರಿಕೊಳ್ಳುತ್ತಾನೆ. ಆ ಕಾಲದ ಹೆಸರಾಂತ ಲೇಖಕರಾದ ಮ್ಯಾಕ್ಸಿಂ ಗಾರ್ಕಿ, ಅಲೆಕ್ಸಾಂಡರ್ ಇವಾನೋವಿಚ್ ಕುಪ್ರಿನ್, ಲಿಯೋನಿಡ್ ಆಂಡ್ರೇವ್ ಮುಂತಾದವರೆಲ್ಲಾ ಆ ಬಳಗದ ಸದಸ್ಯರಾಗಿರುತ್ತಾರೆ. 1904ರಲ್ಲಿ ಸಾಯುವುದಕ್ಕೆ ಮುಂಚೆ ಚೆಕಾಫ್ ಕೂಡಾ ಅದರ ಸದಸ್ಯನಾಗಿದ್ದ. ಆ ಹೊತ್ತಲ್ಲಿ ಸಾಹಿತಿಕ ನಿಯತಕಾಲಿಕೆಗಳು ಮ್ಯಾಕ್ಸಿಂ ಗಾರ್ಕಿಯ ಸಂಪಾದಕತ್ವದಲ್ಲಿ ಬಹತೇಕ ಯುವ ಲೇಖಕರುಗಳ ಕೃತಿಗಳನ್ನು ಪ್ರಕಟಿಸಿದವು. + +ಪ್ರವಾಸ ಮಾಡುವುದು ಬುನಿನ್ನನ ಬಹುಕಾಲದ ಬಯಕೆ ಮಾತ್ರ ಆಗಿರಲಿಲ್ಲ, ಅದು ಅವನ ದರ್ದು ಕೂಡಾ ಆಗಿತ್ತು. ಅದನ್ನವನು ತುಂಬಾ ದೊಡ್ಡ ಪ್ರಮಾಣದಲ್ಲೇ ಮಾಡುತ್ತಾನೆ. ಹಂಗಾಗಿ, ಮೊದಲನೆಯ ಮಹಾಯುದ್ಧಕ್ಕೂ ಮುಂಚೆ ರಷ್ಯಾ, ಯೂರೋಪ್ ಹಾಗೂ ಏಷ್ಯಾಗಳನ್ನು ಸುತ್ತುತ್ತಾನೆ. ನಂತರ ಉಡೆಸ್ಸಾದಲ್ಲಿ ನೆಲೆಸಬೇಕೆಂಬುದಾಗಿ ಬಯಸುತ್ತಾನೆ. ಅಂತೆಯೇ 1898ರಲ್ಲಿ ಯನಾ ಸಕಾನಿ ಅನ್ನುವ ಹೆಸರಿನ `ಸದರ್ನ್ ರೆವ್ಯೂ’ ಅನ್ನುವ ಪತ್ರಿಕೆಯ ಪ್ರಕಾಶಕನ ಮಗಳನ್ನು ಮದುವೆಯಾಗುತ್ತಾನೆ. ಅದು 1900ರಲ್ಲಿ ಮುರಿದು ಬೀಳುತ್ತದೆ. ಆ ಹೊತ್ತಿಗೆ ಅವರಿಗೊಬ್ಬ ಮಗನಿರುತ್ತಾನೆ. ಆ ಮಗ ತನ್ನ ಐದನೆಯ ವಯಸ್ಸಿನಲ್ಲಿ ತೀರಿಹೋಗುತ್ತಾನೆ. ಮೊದಲ ಮದುವೆಯ ವಿಫಲತೆಯಿಂದ ಕಂಗಾಲಾದ ಬುನಿನ್ ಇನ್ನಿಲ್ಲದಂತೆ ಪ್ರವಾಸ ಮಾಡುತ್ತಾನೆ. 1905ರಲ್ಲಿ ಬುನಿನ್‍ಗೆ ವೆರಾ ನಿಕ್‍ಲಾಯೆನ್ನಾ ಎಂಬುವಳೊಂದಿಗೆ ಮತ್ತೊಂದು ಸಂಬಂಧ ಶುರವಾಗುತ್ತದೆ. ಅವಳೇ ಮುಂದೆ ಅವನ ಎರಡನೆಯ ಹೆಂಡತಿಯೂ ಆಗುತ್ತಾಳೆ. ತುಂಬಾ ದಿನ ಒಟ್ಟಿಗೇ ಇದ್ದು, ಮೊದಲನೆಯ ಹೆಂಡತಿಯಿಂದ ಕಾನೂನಿನ ಪ್ರಕಾರ ವಿಚ್ಛೇದನ ದೊರೆತ ಮೇಲೆ ಜೂನ್ 20,1922ರಲ್ಲಿ ಮದುವೆಯಗುತ್ತಾರೆ. ವೆರಾ ನಿಕ್‍ಲಾಯೆನ್ನಾ ಅವನ ಮುಂದಿನ ಎಲ್ಲಾ ಪ್ರವಾಸಗಳಲ್ಲೂ ಜೊತೆಗಿರುತ್ತಾಳೆ. + +ಏಷ್ಯಾದ ವಿಲಕ್ಷಣ ಅಪರಿಚಿತತೆ ಅವನ ಕಲ್ಪನಾಶಕ್ತಿಯನ್ನು ಇನ್ನಿಲ್ಲದಂತೆ ಸಮ್ಮೋಹನಗೊಳಿಸಿಬಿಡುತ್ತದೆ. ಪೌರಾಸ್ತ್ಯ ದೇಶಗಳೊಂದಿಗಿನ ಇಂಥ ತೀವ್ರ ಸಮ್ಮೋಹಕತೆಯ ಪ್ರಭಾವವನ್ನು ಪ್ರಧಾನವಾಗಿ ನಾವು ಬುನಿನ್ನನ ಕಾವ್ಯದಲ್ಲೂ, ಕೊಂಚ ಸಣ್ಣ ಪ್ರಮಾಣದಲ್ಲಿ ಅವನ ಗದ್ಯ ಬಹಗಳಲ್ಲೂ ಕಾಣಬಹುದು. ರಷ್ಯಾದ ಬಾಲ್ಶೇವಿಕ್ ಕ್ರಾಂತಿಯ ನಂತರ 1919ರಲ್ಲಿ ಬುನಿನ್ ಫ್ರ್ಯಾನ್ಸ್‍ಗೆ ವಲಸೆ ಹೋಗಿ ಪ್ಯಾರಿಸ್‍ನಲ್ಲಿ ವಾಸಿಸತೊಡಗುತ್ತಾನೆ. ತಾನೇ ವಿಧಿಸಿಕೊಂಡ ದೇಶಭ್ರಷ್ಟತೆಯ ಗಡೀಪಾರಿನ ಉದ್ದಕ್ಕೂ ಲೇಖಕ ತನ್ನ ತಾಯ್ನಾಡಿಗಾಗಿ ಇನ್ನಿಲ್ಲದಂತೆ ಹಂಬಲಿಸುತ್ತಾನೆ. ವಲಸೆಯ ದಿನಗಳಲ್ಲಿ ಕೂಡಾ ಬುನಿನ್ನನ ಬರಹಗಳು ಸಂಪೂರ್ಣವಾಗಿ ರಷ್ಯಾವನ್ನೇ ಧ್ಯಾನಿಸುತ್ತವೆ. ಅಲ್ಲಿನ ಬದುಕು, ಕಾಡು, ಮೇಡು ಮುಂತಾದವುಗಳೆಲ್ಲಾ ಬುನಿನ್ನನ ಬರಹಗಳಲ್ಲಿ ಅಜರಾಮರವಾಗಿ ಚಿತ್ರಿಸಲ್ಪಟ್ಟಿವೆ. ಸೋವಿಯತ್ ಪಬ್ಲಿಕೇಶನ್‍ಗಾಗಿ ಮೊದಲ ಬಾರಿಗೆ ತನ್ನ ಬರಹಗಳನ್ನೆಲ್ಲಾ ಒಂದೆಡೆ ಸಂಪಾದಿಸಿಕೊಟ್ಟ ಕೆಲವೇ ದಿನಗಳಲ್ಲಿ, ಅಂದರೆ ನವೆಂಬರ್8, 1953ರಲ್ಲಿ ಬುನಿನ್ ತೀರಿಕೊಳ್ಳುತ್ತಾನೆ. + + + +1917ರ ರಷ್ಯನ್ ಕ್ರಾಂತಿಗೂ ಎರಡು ದಶಕಗಳಿಗೂ ಮೊದಲು ವ್ಯಾಪಕವಾದ ವೈವಿಧ್ಯತೆಯಿಂದ ಕೂಡಿದ್ದ ಸಾಹಿತಿಕ ಚಳವಳಿಗಳು ಹಾಗೂ ಗುಂಪುಗಳು ರಷ್ಯಾದಲ್ಲಿ ಪ್ರವರ್ಧಮಾನದಲ್ಲಿದ್ದವು. ಸಂಕೇತವಾದಿಗಳ ಅತಿಯಾದ ಅತೀಂದ್ರೀಯ ಭಾವಗೀತಾತ್ಮಕತೆ, ಪರಿಪೂರ್ಣತಾವಾದಿಗಳ ನವಕ್ಲಾಸಿಕಲ್ ವಾದ, ಮ್ಯಾಕ್ಸಿಂ ಗಾರ್ಕಿಯ ನೇರ ರಾಜಕೀಯ ಹಾಗೂ ಸಾಮಾಜಿಕ ಪತ್ರಿಕೋದ್ಯಮ, ಮತ್ತವನ `ಝ್ನ್ಯಾನಿಯಾ’ ಗುಂಪು ಹಾಗೂ ಲಿಯೋನಿಡ್ ಆಂಡ್ರೇವ್ ಮತ್ತು ಮಿಹೈವೂ ಅರತ್ಸ್‍ಬಾಶೇವ್‍ನ ಜಡ ನಿರಾಶಾವಾದ ಮತ್ತು ಸಂವೇದನಾ ಸಿದ್ಧಾಂತಗಳ ನಡುವೆ ಬುನಿನ್ ಭಿನ್ನವಾಗಿ ನಿಲ್ಲುತ್ತಾನೆ. ಈ ಚಳುವಳಿಗಳೆಲ್ಲವೂ ಏಕ ಕಾಲದಲ್ಲಿ ಒಂದೆಡೆಯಲ್ಲೇ ಇದ್ದರೂ ಒಂದಕ್ಕೊಂದು ಸೋಕಿಸಿಕೊಳ್ಳದೆ, ಒಂದರಿಂದ ಒಂದು ಪ್ರಭಾವಕ್ಕೊಳಗಾಗದೆ ಹೇಗೆ ಸ್ವತಂತ್ರವಾಗಿದ್ದವೋ ಹಾಗೆ ತನ್ನ ಸುತ್ತಲೂ ನಡೆಯುತ್ತಿದ್ದ ಯಾವುದೇ ಸಾಹಿತಿಕ ಚರ್ಚೆಗಳಿಂದ ದೂರ ಉಳಿದ ಬುನಿನ್ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಬರೆಯುತ್ತಾ ಹೋಗುತ್ತಾನೆ. ನಿಜವಾಗಿಯೂ ಅವನು ಅವುಗಳಿಗೆಲ್ಲಾ ಸರಿ ಹೊಂದುತ್ತಲೂ ಇರಲಿಲ್ಲ. ಅಂತೆಯೇ ಆ ನಿಟ್ಟಿನಲ್ಲಿ ಅವನು ಪ್ರಯತ್ನಿಸಲೂ ಇಲ್ಲ. ಆದಾಗ್ಯೂ, ಅವನು ಸಮಕಾಲೀನ ಸಾಹಿತಿಕ ಹಾಗೂ ಇತರೆ ವಿದ್ಯಾಮಾನಗಳಿಂದ ಮತ್ತು ಸಾಹಿತಿಗಳಿಂದ ಪೂರಾ ವಿಮುಖನಾಗಿರಲಿಲ್ಲ. ಅಲೆಕ್ಸಾಂಡರ್ ಇವಾನೋವಿಚ್ ಕುಪ್ರಿನ್ ಮತ್ತು ಲಿಯೋನಿಡ್ ಆಂಡ್ರೇವ್‍ನ ಜೊತೆಗೂಡಿ `ಝ್ನ್ಯಾನಿಯಾ’ ನಿಯತಕಾಲಿಕೆಯೊಂದಿಗೆ ಗುರುತಿಸಿಕೊಂಡಿದ್ದಲ್ಲದೆ, ಅದರ ಸಂಪಾದಕ ಮ್ಯಾಕ್ಸಿಂ ಗಾರ್ಕಿಯ ಅತ್ಯಂತ ಆತ್ಮೀಯ ಗೆಳೆಯನೂ ಆಗಿದ್ದನು. ಗಾರ್ಕಿ ಹಾಗೂ ಬುನಿನ್ ಇಬ್ಬರಿಗೂ ಚೆಕಾಫ್‍ನ ಜೊತೆ ಗಾಢ ಗೆಳೆತನವಿದ್ದುದಲ್ಲದೆ, ಅವನ ಬರಹಗಳಿಂದ ಇಬ್ಬರೂ ತುಂಬಾ ಪ್ರಭಾವಿತರಾಗಿದ್ದರು. 1910ರಲ್ಲಿ ಪ್ರಕಟಗೊಂಡ ಅಂತೆಯೇ ಆ ಕಾಲದ ತುಂಬಾ ಪ್ರಧಾನ ಬರಹಗಾರರ ಸಾಲಿನಲ್ಲಿ ನಿಲ್ಲಿಸಿದ ಬುನಿನ್‍ನ `ದ ವಿಲೇಜ್’ ಕಾದಂಬರಿಯಲ್ಲಿ ನಿಸ್ಸಂಶಯವಾಗಿ ಗಾರ್ಕಿಯ ಪ್ರೇರಣೆಯನ್ನು ಗುರುತಿಸಬಹುದಾಗಿದೆ. ಆ ಮೂಲಕ ಬುನಿನ್‍ನನ್ನು ಗದ್ಯ ಮತ್ತು ಪದ್ಯಗಳಲ್ಲಿ ತನ್ನದೇ ಆದ `ದನಿ’ಯನ್ನು ಕಂಡುಕೊಳ್ಳುವುದರ ಮೂಲಕ ಕವಿಯಾಗಿ ಅಷ್ಟೇ ಅಲ್ಲದೆ ಕಥೆಗಾರನಾಗಿ ಭಾವಗೀತಾತ್ಮಕ ಕಥೆಗಳನ್ನು ಬರೆಯಬಲ್ಲನೆಂಬ ಖ್ಯಾತಿಗೆ ತಂದು ನಿಲ್ಲಿಸಿತ್ತು. ಆ ಕಾದಂಬರಿ ವ್ಯಾಪಕವಾಗಿ ಪ್ರಶಂಸೆಗೆ ಒಳಗಾಗಿದ್ದಲ್ಲದೆ, ಖುದ್ದು ಗಾರ್ಕಿಯೇ ಅದನ್ನು ಹೊಗಳುವುದರಲ್ಲಿ ಹಿಂದೆ ಬಿದ್ದಿರಲಿಲ್ಲ. + +`ದ ವಿಲೇಜ್’ ನಂತರ ಈಗಲೂ ಬುನಿನ್ನನ್ನ ಅತ್ಯುತ್ತಮ ಕೃತಿಗಳೆಂದು ಕರೆಯಲ್ಪಡುವ `ಸುಖ್ದೋಲ್’, `ಸ್ಯಾನ್‍ಫ್ರ್ಯಾನ್ಸಿಸ್ಕೊದ ಮಹನೀಯ’, `ದ ಕಪ್ ಆಫ್ ಲೈಫ್’, ಗಳು ಬಂದವು. `ದ ವಿಲೇಜ್’, ನಿಸ್ಸಂಶಯವಾಗಿ `ಸುಖ್ದೋಲ್’ಗೆ ಜೊತೆಯಾಗಿ, ಸರಿಸಮನಾಗಿ ನಿಲ್ಲುವಂಥ ಕೃತಿಯಾದರೂ, ಶೈಲಿ, ವಸ್ತು ಹಾಗೂ ಅದರ ಒಟ್ಟು ರಾಚನಿಕ ದೃಷ್ಟಿಯಿಂದ ಅದಕ್ಕಿಂತಲೂ ಹೆಚ್ಚು ಬಿಗಿಯಾಗಿ ಹಾಗೂ ಹೆಚ್ಚು ಹತೋಟಿಯಿಂದ ರೂಪುಗೊಂಡಿದೆ. ಇದೇ ವಸ್ತು ಬುನಿನ್ನನ `ಕಡೆಯ ಕೂಡುದಾಣ’ `ಸದ್ದಿಲ್ಲದ ಉಸಿರಾಟ’, `ಸ್ಯಾನ್‍ಫ್ರ್ಯಾನ್ಸಿಸ್ಕೋದ ಮಹನೀಯ’, ಕಥೆಗಳಲ್ಲಿ ಮುಂದುವರೆದಿದೆ. ಆದರೆ `ಸ್ಯಾನ್‍ಫ್ರ್ಯಾನ್ಸಿಸ್ಕೋದ ಮಹನೀಯ’ ಕಥೆಯ ಶೈಲಿ ಹಾಗೂ ಸಮನ್ವಯತೆಯಲ್ಲಿ ಬುನಿನ್ನನ ಭಾಷೆಗೆ ಸಂಪೂರ್ಣ ಪರಿಪೂರ್ಣತೆ ದಕ್ಕಿದೆ. ಇಲ್ಲಿ ಬುನಿನ್ನನ ಭಾಷೆ ನಿರಲಂಕೃತವಾದದ್ದು ಹಾಗೂ ಅಡಕವಾದದ್ದು. ಕಥೆ ಬಿಚ್ಚಿಕೊಳ್ಳುತ್ತಾ ಹೋದಂತೆ ಅದು ಆಗ್ರಹಪೂರ್ವಕವಾಗಿ ನಿರ್ದಯೆಯಿಂದಲೂ ಹಾಗೂ ಅಲೆಗಳಂತೆ ನಿರಂತರ ಅಪ್ಪಳಿಸತೊಡಗುತ್ತದೆ. ಇಲ್ಲಿ ಬಹು ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಅಂದರೆ, ಬುನಿನ್ ವಾಡಿಕೆಯ ವೈಯಕ್ತಿಕತೆಯಿಂದ ಆಧ್ಯಾತ್ಮಿಕ ಹಸಿವು ಮತ್ತು ಲೋಕದಲ್ಲಿರುವ ಕೃತ್ರಿಮತೆಯ ಮಾನದಂಡದತ್ತ ತನ್ನ ಗಮನವನ್ನು ತಿರುಗಿಸಿದ್ದಾನೆ. ಇದೊಂದು ನೀತಿಯೇ ಇಲ್ಲದ ನೀತಿ ನಾಟಕ. ಈ ಕಥೆಯ ಪರಿಣಾಮಕಾರಿತ್ವ ಅಡಗಿರುವುದು ಲೇಖಕನ ನಿರ್ಲಿಪ್ತೆಯಲ್ಲಿ. ಇದು ಕೊಂಚ ಮಟ್ಟಿಗೆ ನೀಳ್ಗತೆಗಿಂತ ದೊಡ್ಡ ಕಥೆಯಾದರೂ, ಅದರ ವರ್ಣನಾತ್ಮಕ ವಿವರದ ಸಾಂದ್ರತೆ, ಪಾತ್ರಗಳ ನಿರೂಪಣೆ ಹಾಗೂ ನಿಭಾಯಿಸುವಿಕೆಯ ದೃಷ್ಟಿಯಿಂದ ಇದನ್ನು ಕಾದಂಬರಿ ಅಂತಲೇ ಕರೆಯಬಹುದು. + +(ಎಸ್. ಗಂಗಾಧರಯ್ಯ) + +ಬುನಿನ್ನನ ಗದ್ಯ ಅವನನ್ನು ಹತ್ತೊಂಭತ್ತನೇ ಶತಮಾನದ ರಷ್ಯನ್ ಸಾಹಿತಿಕ ಸಂಪ್ರದಾಯದ ಮುಖ್ಯವಾಹಿನಿಯಲ್ಲಿ ಸ್ಪಷ್ಟವಾಗಿ ಎದ್ದು ಕಾಣುವಂತೆ ಮಾಡಿದೆ. ಟಾಲ್‍ಸ್ಟಾಯ್, ಟರ್ಜೆನೇವ್, ಚೆಕಾಫ್ ಮತ್ತು ಗಂಚರೋಫ್ ನಿಸ್ಸಂದೇಹವಾಗಿ ಇವನ ಮೂಲಪುರುಷರಾಗಿದ್ದಾರೆ. `ಎ ಹಿಸ್ಟರಿ ಆಫ್ ರಷ್ಯನ್ ಲಿಟರೇಚರ್’ನಲ್ಲಿ ಮರ್‍ಸ್ಕೀ ಅನ್ನುವವನು ಹೇಳುವಂತೆ: ಬುನಿನ್ನನ ಭಾಷೆ `ಕ್ಲಾಸಿಕಲ್’, ಮಿತವಾದ್ದು, ಸಮಚಿತ್ತವಾದ್ದು, ಮೂರ್ತವಾದದ್ದು… ಬಹುಶಃ ಆಧುನಿಕ ರಷ್ಯನ್ ಲೇಖಕರಲ್ಲಿ ಟರ್ಜನೇವ್, ಗಂಚರೋಫ್ `ಕ್ಲಾಸಿಕ್ಸ್’ಗಳಿಂದ ಪ್ರಶಂಸಿಲ್ಪಟ್ಟವನೆಂದರೆ, ಅದು ಬುನಿನ್ ಮಾತ್ರ.’ ಬುನಿನ್ 1903ಕ್ಕೂ ಮುಂಚೆ ಬರೆದ ಭಾವಗೀತಾತ್ಮಕ ಕಥೆಗಳು, ಅದರಲ್ಲೂ ವಿಶೇಷವಾಗಿ `ಆಂಟೆನೋಫ್ಕಾ ಸೇಬುಗಳು’, ಕಥೆಯ ಲಹರಿಯನ್ನು ಟರ್ಜೆನೇವ್‍ನ `ಹಂಟರ್ಸ್ ಸ್ಕೆಚಸ್’, ಗಂಚರೋಫ್‍ನ `ಆಬ್ಲಮೋಫ್ಸ್ ಡ್ರೀಮ್’, ಅಂತೆಯೆ ಚೆಕಾಫ್‍ನ ಪ್ರಬುದ್ಧ ಬರಹಗಳಲ್ಲಿನ ಭಾವಗೀತಾತ್ಮಕ ಭಾವಸ್ಥಿತಿ, ಅದರಲ್ಲೂ ಸ್ಪಷ್ಟವಾಗಿ ಪ್ರಕೃತಿಯನ್ನು ಆರಾಧಿಸುವ ವಿಸ್ತೃತ ಭಾವಗೀತಾತ್ಮಕ ಹಾಡಿನ `ಸ್ಟೆಪ್’ಗಳಲ್ಲಿ ಪತ್ತೆಹಚ್ಚಬಹುದಾಗಿದೆ. ಇಷ್ಟೇ ಅಲ್ಲದೆ, ಕೆಲವೊಮ್ಮೆ ಚೆಕಾಫ್ ಹಾಗೂ ಬುನಿನ್ನನ ವಸ್ತು ಹಾಗೂ ಶೀರ್ಷಿಕೆಗಳಲ್ಲಿ ಕೂಡಾ ಸಾದೃಶ್ಯಗಳಿರುವುದನ್ನೂ ಕಾಣಬಹುದು. ಖಚಿತವಾಗಿ ಹೇಳೋದಾದರೆ, ಕಥಾ ಸಾಹಿತ್ಯಕ್ಕೆ ಬುನಿನ್ನನ ಪ್ರವೇಶವಾಗುವ ಹೊತ್ತಿಗೆ ಆ ಪ್ರಕಾರವಾಗಲೇ ಪ್ರಸಿದ್ಧವಾಗಿತ್ತು. ಸಾಲದ್ದಕ್ಕೆ ಆ ಪ್ರಕಾರವನ್ನು ಬೆಳಸುವಲ್ಲಿ ಮತ್ತು ಅದಕ್ಕೊಂದು ಪರಿಪೂರ್ಣತೆ ತರುವಲ್ಲಿ ಚೆಕಾಫ್‍ನ ಕಾಣಿಕೆ ತುಂಬಾ ದೊಡ್ಡದಿತ್ತು. ಆದರೆ ಬುನಿನ್ ತನ್ನ ಜೀವನಪರ್ಯಂತ ಈ ಪ್ರಕಾರಕ್ಕೇ ಬರವಣಿಗೆಯನ್ನ ಮುಡುಪಾಗಿಟ್ಟ. ಪರಿಣಾಮವಾಗಿ 1930 ಮತ್ತು 1940 ನಡುವೆ ಅತಿ ಹೆಚ್ಚು ಕಥೆಗಳು ಬುನಿನ್‍ನಿಂದ ಬರೆಸಿಕೊಂಡಿವೆ. ಆಗ ಬರೆದವುಗಳಲ್ಲಿ `ಕತ್ತಲ ದಾರಿಗಳು’, `ಕೆಂಬೂತ’ ಕಥೆಗಳು ಅತ್ಯಂತ ಯಶಸ್ವಿ ಕಥೆಗಳಾಗಿವೆ. ಈ ನಿಟ್ಟಿನಲ್ಲಿ ಬುನಿನ್ ತನ್ನ ಭಾಷೆ ಮತ್ತು ಆಶಯಗಳ ದೃಷ್ಟಿಯಿಂದ ರಷ್ಯನ್ ಸಾಹಿತ್ಯ ಪರಂಪರೆಯಲ್ಲಿ ಕೊನೆಯ `ಕ್ಲಾಸಿಕಲ್’ ಲೇಖಕನೆಂದೇ ಹೇಳಬಹುದು. ಅವನ ಸಾವಿನೊಂದಿಗೆ ಅಂಥ ಪರಂಪರೆಯ ಕೊಂಡಿಯೂ ಕಳಚುತ್ತದೆ. + +ಕೈಗಾರಿಕಾ ಕ್ರಾಂತಿ ರಷ್ಯಾಕ್ಕೆ ಕೊಂಚ ತಡವಾಗಿ ಬಂತು. ಆದರೆ ಅದು ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಆಂತರಿಕ ಆಸಕ್ತಿ ಹಾಗೂ ವಿದೇಶಿ ಬಂಡವಾಳ ಹೂಡಿಕೆಯಿಂದ ಗಮನಾರ್ಹವಾದ ಅನೇಕ ಬೆಳವಣಿಗೆಗಳಿಗೆ ಕಾರಣವಾಯ್ತು. ಇಂಥ ಬದಲಾವಣೆಗಳು ಹಾಗೂ ಅದು ಸಾಂಪ್ರದಾಯಿಕ ರೈತಾಪಿ ಬದುಕಿನ ಮೇಲೆ ಬೀರಿದ ಪರಿಣಾಮಗಳು ಬುನಿನ್‍ನನ್ನು ತಟ್ಟಿದ್ದವು. ಬುನಿನ್‍ಗೆ ನೇರವಾಗಿ ಮಣ್ಣಿನೊಂದಿಗೆ ಗಾಢ ನಂಟನ್ನು ಹೊಂದಿದ್ದವರ ಬಗ್ಗೆ, ಪ್ರಕೃತಿಯನ್ನು ಅಪ್ಪಿಕೊಂಡವರ ಬಗ್ಗೆ, ಮೂಢನಂಬಿಕೆಗಳ ಬಗ್ಗೆ ಹಾಗೂ ತಲತಲಾಂತರದಿಂದ ನಡೆದು ಬಂದಿದ್ದ ಸಂಪ್ರದಾಯಗಳ ಬಗ್ಗೆ ಅಗಾಧವಾದ ಅರಿವಿತ್ತು. ಹಾಗೆಯೇ, ಭೂಸ್ವಾಮ್ಯವುಳ್ಳ ಕುಲೀನರು ಹಾಗೂ ರೈತಾಪಿವರ್ಗದ ನಡುವಿನ ನಿಕಟ ಆಧ್ಯಾತ್ಮಿಕ ಸಂಬಂಧಗಳ ಬಗ್ಗೆಯೂ ಸ್ಪಷ್ಟ ದೃಷ್ಟಿಕೋನವಿತ್ತು. ಆದರೆ ಬುನಿನ್ ಕಣ್ಣಾರೆ ಕಂಡಿದ್ದ ಇಂಥದ್ದೊಂದು ಬದುಕು ನಿಧಾನಕ್ಕೆ ವಿಘಟನೆಗೊಳ್ಳುತ್ತಾ, ಕಣ್ಮರೆಯಾಗುತ್ತಾ, ನೆಲದ ನಂಟನ್ನು ಕಳಕೊಂಡ, ಕೇವಲ ಹಣದ ದುರಾಸೆಯಿಂದ ಪ್ರೇರಣೆಗೊಂಡ, ವಿವೇಕ ಕಳೆದುಕೊಂಡ, ನಿರ್ದಯ ಮಧ್ಯಮ ವರ್ಗದಲ್ಲಿ ಅಸಂವೇದನಾ ಗುಣವೊಂದು ಮೆಲ್ಲಗೆ ಮೇಲೇಳುತ್ತಾ ಹೋಗುತ್ತದೆ. + +`ಸುಖ್ದೋಲ್’ ಕಿರು ಕಾದಂಬರಿಯಲ್ಲಿ ಮತ್ತು `ಆಂಟೆನೋಫ್ಕಾ ಸೇಬುಗಳು’ ಕಥೆಗಳಲ್ಲಿ ಕೈಗಾರಿಕರಣದಿಂದಾಗಿ ಊಹೆಗೂ ನಿಲುಕದ ಪರಣಾಮಗಳು ಮತ್ತು ರೈತಾಪಿ ಬದುಕಿನ ಆಂತರಿಕ ವಿನಾಶಗಳ ಚಿತ್ರಣವಿದ್ದರೆ, `ದ ವಿಲೇಜ್’, ಮತ್ತು `ದ ಗುಡ್ ಲೈಫ್’ಗಳು ರೈತಾಪಿ ವರ್ಗದ ಮೇಲಿನ ಪರಿಣಾಮಗಳ ಬಗ್ಗೆ ನೇರವಾಗಿ ಮಖಾಮುಖಿಯಾಗುತ್ತವೆ. + +ಆದಾಗ್ಯೂ, ಇಂಥ ನಿರಾತಂಕ ಬದುಕಿನ ಬಗ್ಗೆ ತನ್ನದೇ ಆದ ಆದರ್ಶನಿಷ್ಟ ದೃಷ್ಟಿಕೋನವಿದ್ದರೂ, ಅಲ್ಲಿದ್ದ ಬೇಜವಾಬ್ದಾರಿತನ, ಅಜ್ಞಾನ ಮತ್ತು ಸೋಂಬೇರಿತನಗಳ ಬಗ್ಗೆ ಕೂಡಾ ಬುನಿನ್ ಕುರುಡಾಗಿರಲಿಲ್ಲ. ಅವರುಗಳು ಕೈಗಾರೀಕರಣದಂಥ ಬದಲಾವಣೆಗೆ ಹೊಂದಿಕೊಳ್ಳುವಂಥಾದ್ದೇನನ್ನೂ ಮಾಡಲಿಲ್ಲ, ಅಂತೆಯೇ ಅಂಥ ಬದಲಾವಣೆಯ ಅನುಕೂಲ ಪಡೆದುಕೊಳ್ಳಲೂ ಯತ್ನಿಸಲಿಲ್ಲ ಅನ್ನುವುದು ಬುನಿನ್‍ನ ಆಕ್ಷೇಪಣೆಯಾಗಿತ್ತು. ಇದನ್ನು ನಾವು ಪ್ರಮುಖವಾಗಿ `ಆಂಟನೋಫ್ಕಾ ಸೇಬುಗಳು’ ಮತ್ತು `ಸುಖ್ದೋಲ್’ ಗಳಲ್ಲಿ ಕಾಣಬಹುದು. ಹಂಗಂತ ಅವನು ಕೇವಲ ಗತಕಾಲದ ವೈಭವಗಳಿಗೆ ಜೋತು ಬಿದ್ದಿರಲಿಲ್ಲ ಅಥವಾ ಮತ್ತೆ ಅತ್ತ ಮಖ ಮಾಡಬೇಕು ಅನ್ನುವ ಉದ್ಧೇಶವೂ ಬುನಿನ್‍ದಾಗಿರಲಿಲ್ಲ. ಆದರೆ, ಸ್ವಾಭಾವಿಕವಾಗಿದ್ದ ಮತ್ತು ನಿರಂತರವಾಗಿದ್ದ ನಿಜವಾದ ಮೌಲ್ಯಗಳನ್ನು ಪಕ್ಕಕ್ಕೆ ತಳ್ಳಲ್ಪಟ್ಟು ಅವುಗಳ ಜಾಗದಲ್ಲಿ ಕೃತಕತೆ ಮತ್ತು ಭ್ರಮೆಗಳು ರಾರಾಜಿಸುತ್ತಿರುವುದರ ಬಗ್ಗೆ ವಿಷಾದವಿತ್ತು. + +ಇವೆಲ್ಲದಕ್ಕಿಂತ ಮಖ್ಯವಾಗಿ ಬುನಿನ್ ಬರಹಗಳನ್ನು ಆವರಿಸಿಕೊಂಡಿರುವುದು `ಪ್ರೀತಿ’. ಇಲ್ಲಿನ ಕಥೆಗಳಲ್ಲಿ ಹಲವು ಬಗೆಯ ಪ್ರೀತಿಯ ಪಾತಿಗಳಿವೆ. `ಕೆಂಬೂತ’ದಲ್ಲಿ ಹುಡುಗನೊಬ್ಬನ ತಾರುಣ್ಯ ಸಹಜ ಪ್ರೀತಿಯೊಂದು ತನ್ನ ತಂದೆಯ ನಿರ್ದಯತೆಯಿಂದಾಗಿ ಭಂಗಗೊಳ್ಳುವುದು, `ಸುಖ್ದೋಲ್’ ನಲ್ಲಿ ಕೈಗೂಡದ ಪ್ರೀತಿಯಿಂದಾಗಿ ದೂರವಾಗಬೇಕಾದಂಥ ಸ್ಥಿತಿ, `ಕಡೆಯ ಕೂಡುದಾಣ’ದಲ್ಲಿ ತುಂಬಾ ತಡವಾಗಿ ನಿವೇದನೆಗೊಳ್ಳುವ ಪ್ರೀತಿ, `ಕತ್ತಲ ದಾರಿಗಳು’ ಕಥೆಯಲ್ಲಿ ಮತ್ತೊಮ್ಮೆ ಹಿಮ್ಮೊಗವಾಗಿ ಚಲಿಸದ ಪ್ರೀತಿ, ಹೀಗೆ ಪ್ರೀತಿಯ ಹಲವು ಮುಖಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಪಾತ್ರಗಳ ಆರಂಭಿಕ ತೊಡಕು ಅಥವಾ ಸ್ವವಿನಾಶಕಾರಿತನದಿಂದ ವಿಫಲತೆ ಮತ್ತು ಮೋಹ ವಿಮೋಚನೆಗಳು ಮೇಲುಗೈ ಸಾಧಿಸುತ್ತವೆ. + +ಆದಾಗ್ಯೂ ಈ ಎಲ್ಲಾ ಆಲೋಚನೆಗಳನ್ನು ಮೀರುವ ನೈತಿಕತೆ ಮತ್ತು ಪಾಪಪ್ರಜ್ಞೆ, ಕಳೆದು ಹೋದ ವಿವೇಕ ಮತ್ತು ಪರಿಶುದ್ಧತೆ, ಕಳೆದು ಹೋದ ಸಹಜತೆ ಮತ್ತು ಪ್ರೀತಿ ಇಲ್ಲಿನ ಕಥೆಗಳಲ್ಲಿ ಸ್ಥಾಯೀಭಾವವಾಗಿ ಅನುರಣಿಸುತ್ತದೆ.ವಿಶಿಷ್ಟವಾದ ಮನೋಸ್ಥಿತಿ ಮತ್ತು ಗದ್ಯದ ದ್ರವ್ಯ, ಅದರ ನಾವಿನ್ಯತೆ ಮತ್ತು ವೈಶಿಷ್ಟ್ಯತೆಗಳು ಬುನಿನ್‍ನನ್ನು ಅವನ ಸಮಕಾಲೀನ ಲೇಖಕರ ನಡುವೆ ಎದ್ದು ಕಾಣುವಂತೆ ಮಾಡಿವೆ. ಅವನ ಕಾವ್ಯಾತ್ಮಕ ನಿರೂಪಣೆ ಹಾಗೂ ಅದರೊಳಗೆ ಅನಾವರಣಗೊಳ್ಳುತ್ತಾ ಹೋಗುವ ಥರಾವರಿ ಪರಿಮಳಗಳು, ಬಣ್ಣಗಳು ಹಾಗೂ ಸದ್ದುಗಳು, ಕಾಡುಮೇಡು ಮತ್ತು ಅಲ್ಲಿನ ಗಿಡಮರ, ಪ್ರಾಣಿಪಕ್ಷಿ, ಹಳ್ಳಕೊಳ್ಳ, ಅಲ್ಲಿನ ಮಳೆ, ಸುರಿಯುವ ಹಿಮ, ಬೀಸುವ ಚಳಿಗಾಳಿ, ಮೂಡುವ ಮತ್ತು ಮುಳುಗುವ ಸೂರ್ಯ ಚಂದ್ರ, ಬೆಳೆದ ಬೆಳೆಗಳು, ಕಣಗಾಲ, ಬೇಟೆಗಾರನ ಸುತ್ತಾಟ ಹೀಗೆ ತಾನು ಕಂಡದ್ದು ಅಥವಾ ಚಿತ್ರಿಸಿದ್ದು ಎಲ್ಲದೂ ಸೀದಾ ಓದುಗನ ಎದೆಯೊಳಗೆ ನಡೆದುಬಿಡುವಂತೆ, ನೇರವಾಗಿ ಕಣ್ಣಿಗೆ ಕಟ್ಟುವಂತೆ, ಓದುಗನೊಳಗೆ ಅನುರಣಿಸುವಂತೆ ಮಾಡುವ, ಅದರೊಳಗೇ ಮುಳುಗಿ ಹೋದಂಥ ಅನುಭವವನ್ನು ನೀಡಬಲ್ಲಂಥ ಸರಿಸಾಟಿಯಿಲ್ಲದಂತ ನಿರೂಪಣಾ ತಂತ್ರ ಬುನಿನ್‍ದು. ಇಂಥ ಇಂದ್ರಿಯ ಜನ್ಯ ವರ್ಣನಾತ್ಮಕತೆ ಖಚಿತವಾಗಿ ಬುನಿನ್‍ನ ಶೈಲಿಗೆ ಕಾವ್ಯಾತ್ಮಕ ಸಾಂದ್ರತೆಯನ್ನು ತಂದುಕೊಟ್ಟಿದೆ. + +ಮೂಲತಃ ಬುನಿನ್ ಒಬ್ಬ ಕವಿ. ನಂತರ ಪದ್ಯ ಹಾಗೂ ಗದ್ಯ ಎರಡರಲ್ಲೂ ಮುಂದುವರೆಯುತ್ತಾ ಕಾವ್ಯದ ಮಿಂಚನ್ನು ಗದ್ಯದಲ್ಲಿ ಹೊಳೆಸಿ ಯಶಸ್ವಿಯಾದವನು. ಕಾವ್ಯದ ಅಚ್ಚುಕಟ್ಟನ್ನು ಹಾಗೂ ಕಾವ್ಯದಲ್ಲಿನ ಲಾಕ್ಷಣಿಕ ಪ್ರತಿಮೆಗಳನ್ನು ಗದ್ಯಕ್ಕೆ ವರ್ಗಾಯಿಸಿದವನು. ಬುನಿನ್‍ನ ಭಾಷೆ ಉತ್ಪ್ರೇಕ್ಷಮಯವಾದದ್ದೂ ಅಲ್ಲ, ಅಲಂಕಾರಿಕವೂ ಅಲ್ಲ. ತನ್ನ ಉದ್ದೇಶವನ್ನು ಅತ್ಯಂತ ಸ್ಪಷ್ಟವಾಗಿ ನಿಖರವಾಗಿ ಸ್ಪುರಿಸಬಲ್ಲಂಥ ಪದಗಳಿಗಾಗಿ ಹುಡುಕಿ ಅಂಥವುಗಳನ್ನು ಮಾತ್ರ ಬುನಿನ್ ಬಳಸುತ್ತಾನೆ. ನಿಕೋಲಯ್ ಸಿಯಸ್‍ನಿಕಾಫ್ ಅನ್ನುವವನೊಂದಿಗೆ ನಡೆಸಿದ ಮಾತುಕತೆಯೊಂದರಲ್ಲಿ, `ಒಂದು ಕಥೆ ಯಶಸ್ವಿಯಾಗುವಲ್ಲಿ ಇರುವ ಅತ್ಯಂತ ಪ್ರಮುಖ ಸಂಗತಿ ಅಂದರೆ, ಅದರ ನಿಜವಾದ ದನಿಯನ್ನು ಹುಡುಕಿಕೊಳ್ಳುವುದು. ಒಮ್ಮೆ ಅದು ಸಿಕ್ಕಿತು ಅಂದ್ರೆ ಕಥೆ ಅದರ ಪಾಡಿಗದು ಬರೆಸಿಕೊಳ್ಳುತ್ತಾ ಹೋಗುತ್ತದೆ… ಆದರೆ ನನ್ನಿಷ್ಟದಂತೆ ನಾನು ಬರಿತೀನಿ, ಅಂತ ಯಾವತ್ತೂ ಬರೆದಿಲ್ಲ. ಅಂಥ ಧೈರ್ಯವೂ ನನಗಿಲ್ಲ…’ ಎಂಬುದಾಗಿ ಬುನಿನ್ ಒಪ್ಪಿಕೊಳ್ಳುತ್ತಾನೆ. + +ಬುನಿನ್‍ನ ಬರಹಗಳಲ್ಲಿ ಮನಶ್ಯಾಸ್ತ್ರೀಯ ಪಾತ್ರಸೃಷ್ಟಿಗಳಾಗಲಿ ಅಥವಾ ಮನೋವಿಶ್ಲೇಷಣಾ ವಿಧಾನವಾಗಲಿ ಇರುವುದಿಲ್ಲ. ಬುನಿನ್‍ಗೆ ಆಸಕ್ತಿ ಇರುವುದು ವಸ್ತುಗಳ ಭೌತ ನೋಟ ಮತ್ತು ಅವುಗಳು ಸ್ಪುರಿಸುವ ಭಾವಾತ್ಮಕ ಜವಾಬುಗಳಲ್ಲಿ. ಅವನದು ಅಪ್ಪಟ ಭೌತ ಭಾವಗೀತಾತ್ಮಕತೆ, ಭೌತಿಕ ವಸ್ತುಗಳ ಭಾವಗೀತಾತ್ಮಕತೆ. ಹಾಗಾಗಿ ಅವನ ಭಾಷೆಗೆ ವೈಶಿಷ್ಟ್ಯ ಸೂಚಕ ಸಂಕ್ಷೇಪತೆಯೂ ಹಾಗೂ ಆತ್ಮಸಂಯಮದ ಗುಣವೂ ದಕ್ಕಿದೆ. ಇದು `ಸ್ಯಾನ್‍ಫ್ರ್ಯಾನ್ಸಿಕೋದ ಮಹನೀಯ’ದಲ್ಲಿ ಹಾಗೂ `ಬಿಸಿಲು ಮತ್ತು ಬುಯಕೆ’ಕಥೆಗಳಲ್ಲಿ ಬೇರೆಲ್ಲಾ ಕಥೆಗಳಿಗಿಂತ ಸ್ಪಷ್ಟವಾಗಿ ಗೋಚರಿಸುತ್ತದೆ. + + + +ಆದರೂ ಯಾರಿಗಾದರೂ ಅನ್ನಿಸಬಹುದು: ಬುನಿನ್‍ನ ದೀರ್ಘ ಬರಹಗಳು ಕಾದಂಬರಿಗಳೋ ಅಥವಾ ಕಥೆಗಳೋ? ಒಂದರ್ಥದಲ್ಲಿ ಅವು ಎರಡೂ ಹೌದು. ಅವೆರಡೂ ಪ್ರಕಾರಗಳನ್ನು ಏಕೀಕರಿಸುವ ಅವನ ಕಲಾತ್ಮಕ ಸೃಜನಶೀಲತೆಗೆ, ಅವನ ಉತ್ಕೃಷ್ಟ ಪ್ರತಿಭೆಗೆ, ಅದು ಬಲು ದೊಡ್ಡ ಸಾಕ್ಷಿಯಾಗಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_214.txt b/Kenda Sampige/article_214.txt new file mode 100644 index 0000000000000000000000000000000000000000..e72716af2b21283c1b6486837e3c70f5f16f5e49 --- /dev/null +++ b/Kenda Sampige/article_214.txt @@ -0,0 +1,51 @@ +ನಮ್ಮ ಕಣ್ಣುಗಳು ನಾವು ನಿಂತ ಕೇಂದ್ರದಿಂದ ಸುಮಾರು 180 ಡಿಗ್ರಿಯವರೆಗಿನ ವಸ್ತುಗಳನ್ನು ಸಾಧಾರಣವಾಗಿ ಗ್ರಹಿಸಬಲ್ಲುದು. ಈ ಭೂಮಿಯ ಮೇಲೆ ಎಲ್ಲ ವಸ್ತುಗಳ ಗ್ರಹಿಕೆಯ ಕ್ರಮವೂ ಏಕ ಕಾಲಕ್ಕೆ ಒಂದು ಪಾರ್ಶ್ವದಿಂದ ಮಾತ್ರ ಸಾಧ್ಯವಾಗುತ್ತದೆ. ಸೂರ್ಯದೇವನೂ ಒಂದು ಹೊತ್ತಿಗೆ ಭೂಮಿಯ ಒಂದು ಭಾಗವನ್ನಷ್ಟೇ ಬೆಳಗಬಲ್ಲನು ಅಲ್ಲವೇ. ಒಂದು ನಿರ್ದಿಷ್ಟ ಬಿಂದುವಿನಲ್ಲಿ , ನಿರ್ದಿಷ್ಟ ಕಾಲದಲ್ಲಿ ನಮ್ಮ ತಿಳಿವಳಿಕೆ ಕೂಡ ಸೀಮಿತವಾಗಿಯೇ ಇರುತ್ತದೆ ಎನಿಸುತ್ತದೆ. ನಮ್ಮ ತಿಳಿವಿನ ಇನ್ನೊಂದು ಆಯಾಮವನ್ನು ಅರಿಯಬೇಕಾದರೆ ನಾವು ಇನ್ನೊಂದು ಕೇಂದ್ರದಲ್ಲಿ ನಿಂತು ನೋಡಬೇಕಾಗುತ್ತದೆ. ಆದರೆ ಈ ಜಗತ್ತು ಪ್ರತಿಕ್ಷಣವೂ ಚಲಿಸುತ್ತಲೇ ಇರುವುದರಿಂದ ಇನ್ನೊಂದು ಕೇಂದ್ರಕ್ಕೆ ಸಾಗುವ ವೇಳೆಗೆ ಹಿಂದಿನ ಗ್ರಹಿಕೆ ದಕ್ಕುವುದಿಲ್ಲ. ಹಾಗಾಗಿ ಯಾವತ್ತೇ ಆಗಲಿ, ನಮ್ಮ ಗ್ರಹಿಕೆ ಪರಿಪೂರ್ಣ ಎನ್ನುವುದು ಅಥವ ಸಮಗ್ರ ಗ್ರಹಿಕೆಯನ್ನು ಹೊಂದುವುದು ಕಷ್ಟವೇ. ಕಾಲ, ಗತಿಶೀಲತೆ ಮತ್ತು ಮನುಷ್ಯನ ಗ್ರಹಿಕೆಯ ಸೀಮಿತತೆಯ ಬಗ್ಗೆ ತತ್ವಜ್ಞಾನಿಗಳೂ ವಿಜ್ಞಾನಿಗಳೂ ಎಷ್ಟೆಲ್ಲ ಚರ್ಚೆಯನ್ನು ಮಾಡಿದ್ದಾರೆ ! + +ಹೀಗೆ ನನ್ನ ತಿಳಿವಿನ ಪರಿಧಿಯನ್ನು ವಿಸ್ತರಿಸಲು ಸದಾ ಆಕರದಂತೆ ಭಾಸವಾಗುವ ಪುಸ್ತಕ ‘ವಚನ ಭಾರತ’. ಅದಕ್ಕಾಗಿಯೇ ನನ್ನ ಮೆಚ್ಚಿನ ಪುಸ್ತಕಗಳ ಸಾಲಿನಲ್ಲಿ ಈ ಪುಸ್ತಕ ಮೊದಲನೆಯದಾಗಿ ನಿಲ್ಲುತ್ತದೆ. ಪ್ರತಿಬಾರಿ ಈ ಪುಸ್ತಕದ ಕೆಲವೇ ಪುಟಗಳನ್ನು ತಿರುವಿದಾಗಲೂ ನನಗೆ ಹೊಸದೊಂದು ನೋಟವನ್ನು ಕೊಡಬಲ್ಲ, ಅಥವಾ ನನ್ನ ಗ್ರಹಿಕೆಯ ಸೀಮಿತತೆಯನ್ನು ನೆನಪಿಸಿಕೊಡಬಲ್ಲ ಪುಸ್ತಕ ಇದು. + +(ಎ. ಆರ್‌. ಕೃಷ್ಣಶಾಸ್ತ್ರಿ) + +ಮಹಾಭಾರತದ ಕತೆಯನ್ನು ಹೇಳುವ ಈ ವಚನ ಭಾರತ ಬರೆದವರು ಎ. ಆರ್‌. ಕೃಷ್ಣಶಾಸ್ತ್ರಿ. ಮಹಾಭಾರತದ ಸುದೀರ್ಘ ಕತೆಯಲ್ಲಿ ಕೆಲವು ಕತೆಗಳನ್ನಾದರೂ ಸಾಮಾನ್ಯವಾಗಿ ಬಾಲ್ಯದಲ್ಲಿ ಎಲ್ಲರೂ ಕೇಳಿಯೇ ಇರುತ್ತಾರೆ. ಚಂದಮಾಮ ಪುಸ್ತಕಗಳಲ್ಲಿ, ಯಕ್ಷಗಾನ ಪ್ರಸಂಗಗಳಲ್ಲಿ, ನಾಟಕ ಅಥವಾ ಮತ್ಯಾವುದೋ ನೃತ್ಯ ಕಾರ್ಯಕ್ರಮಗಳಲ್ಲಿ ಭಾರತ ಕತೆಯ ತುಣುಕುಗಳು ಕಾಣಸಿಗುತ್ತವೆ. ಲಲಿತಕಲೆಗಳು ಭಾರತ ಕತೆಯ ಪುಟ್ಟ ಪುಟ್ಟ ವಿಚಾರಗಳನ್ನು ಸದಾ ಹೇಳುತ್ತಲೇ ಇರುತ್ತವೆ. ಹಾಗೆಯೇ ಬೆಳೆದ ನಾನು ಪ್ರೌಢಶಾಲೆಯಲ್ಲಿ ವಚನ ಭಾರತದ ತುಣುಕೊಂದನ್ನು ಪಾಠವನ್ನಾಗಿಯೂ ಓದಿದ್ದುಂಟು. ಪದವಿ ಗಳಿಕೆಗಾಗಿ ನಡೆಸುವ ಓದು ಮುಗಿದ ನಂತರವೇ ವಚನ ಭಾರತ ಎನ್ನುವ ಈ ಪುಸ್ತಕ ಕೈಗೆ ಸಿಕ್ಕಿತು. ಇಷ್ಟರಲ್ಲಿ ಎಸ್‌.ಎಲ್‌. ಭೈರಪ್ಪ ಅವರ ’ಪರ್ವ’ ಪುಸ್ತಕವನ್ನೂ, ಯುಗಾಂತ, ಮಹಾಕ್ಷತ್ರಿಯ, ಯಯಾತಿ ಮುಂತಾದ ಅನೇಕ ಪುಸ್ತಕಗಳನ್ನು ಓದಿ ಖುಷಿಪಟ್ಟಿದ್ದಾಗಿತ್ತು. ಎಲ್ಲ ಪುಸ್ತಕಗಳೂ ಮಹಾಭಾರತದ ಮೂಲ ಕಥೆಯಿಂದಲೇ ಪ್ರೇರಪಣೆ ಪಡೆದು ಅದರ ಪರವಾಗಿ, ವಿರುದ್ಧವಾಗಿ, ಅಥವಾ ವಿಕಾಸ ರೂಪದಲ್ಲಿ ಅರಳುತ್ತ ಸಾಗುತ್ತವೆಯಲ್ಲ. ಹಾಗಾಗಿ ಮೂಲ ಮಹಾಭಾರತ ಓದಬೇಕು ಎಂದು ಆಗೀಗ ಅನಿಸುತ್ತಿತ್ತು. ಆದರೆ ಸಂಸ್ಕೃತ ಮಹಾಭಾರತವನ್ನು ಓದುವುದು ಕಷ್ಟ. ಯಾರದೇ ನೆರವಿಲ್ಲದೇ ಹಳೆಗನ್ನಡದ ಕಾವ್ಯಗಳನ್ನು ಓದುವುದು ದೂರದ ಮಾತು. ಇನ್ನು ಕುಮಾರವ್ಯಾಸ ಬರೆದ ಕಾವ್ಯವನ್ನು ಒಂದಿಷ್ಟು ಓದುವುದು ಸಾಧ್ಯವಾದರೂ, ಸ್ವತಂತ್ರವಾಗಿ ಹೆಚ್ಚು ಅರಿಯುವ ಪ್ರಯತ್ನ ಮಾಡುವುದು ಕಷ್ಟ ಎಂಬ ಸ್ಥಿತಿಯಲ್ಲಿದ್ದ ನನಗೆ ವಚನ ಭಾರತ ಎಂಬ ಗದ್ಯ ಕೃತಿಯನ್ನು ನೋಡಿ ತುಂಬ ಖುಷಿಯಾಯಿತು. + +ವಚನ ಭಾರತದ ಪೀಠಿಕೆಯ ಭಾಗವನ್ನೇ ಬಹು ನಿಧಾನವಾಗಿ ದೀರ್ಘಕಾಲ ಓದಬೇಕಾಗುತ್ತದೆ. ಈ ಮುನ್ನುಡಿಯೇ, ಯಾರಿಗೇ ಆದರೂ ಭಾರತೀಯ ದರ್ಶನ ವಿಚಾರದಲ್ಲಿ ಕುತೂಹಲ ಮೂಡಿಸುಂತೆ ಇದೆ. ಹೊಸ ಹೊಸ ಓದಿಗೆ ಪ್ರೇರೇಪಿಸುವ ರೀತಿಯಲ್ಲಿ ಇರುವ ಪೀಠಿಕೆಯು ಭಾರತ ಕತೆಯನ್ನು ಗ್ರಹಿಸಿಕೊಳ್ಳುವುದಕ್ಕೂ ಭಾರತೀಯ ಜ್ಞಾನ ಪರಂಪರೆಯನ್ನು ಅರ್ಥ ಮಾಡಿಕೊಳ್ಳುವುದಕ್ಕೂ ಒಂದು ಚಂದದ ಕಿಟಕಿಯಂತೆ ಸುಂದರವಾಗಿ ಮೂಡಿಬಂದಿದೆ. ಮಹಾಭಾರತದ ಕಥೆಯ ಸಂಗ್ರಹಿತ ಭಾಗವನ್ನು ಗದ್ಯರೂಪದಲ್ಲಿ ಕೊಟ್ಟಿದ್ದಾಗಿ ಇಲ್ಲಿ ಲೇಖಕರೇ ಹೇಳುತ್ತಾರೆ. + +***** + +ಚಿಕ್ಕಂದಿನಲ್ಲಿ ಫ್ರೆಂಡ್ಸ್‌ ಎಲ್ಲ ಸೇರಿ ಒಂದು ಎಕ್ಸರ್‌ಸೈಜ್‌ ಮಾಡುತ್ತಿದ್ದೆವು. ವಿಜ್ಞಾನದ ಶಿಕ್ಷಕರೊಬ್ಬರು ಇದನ್ನು ಹೇಳಿಕೊಟ್ಟಿದ್ದರು. ಕುಳಿತಲ್ಲಿಯೇ ಕಣ್ಣುಮುಚ್ಚಿ ಸುತ್ತಲಿನ ಪರಿಸರವನ್ನು ಮನಸ್ಸಿಗೆ ತಂದುಕೊಳ್ಳಿ. ತುಸು ಹೊತ್ತಿನ ಬಳಿಕ ನಿಮ್ಮನ್ನೇ ಕೇಂದ್ರವಾಗಿರಿಸಿಕೊಂಡು ಊರನ್ನು ಕಲ್ಪಿಸಿಕೊಳ್ಳಲು ಪ್ರಯತ್ನಿಸಿ. ಬಳಿಕ ಅದೇ ರೀತಿ ನಿಮ್ಮನ್ನೇ ಕೇಂದ್ರವಾಗಿಸಿಕೊಂಡು ಪರಿಧಿಯನ್ನು ವಿಸ್ತರಿಸುತ್ತಾ, ಜಗತ್ತನ್ನು ಗ್ರಹಿಸಬಹುದೇ? ಹೀಗೆಯೇ ದೇಶವನ್ನೋ, ಜಗತ್ತನ್ನೋ ಕಲ್ಪಿಸಿಕೊಂಡಾಗ ನಮ್ಮ ಅಸ್ತಿತ್ವ ಎಷ್ಟೊಂದು ಚಿಕ್ಕದಾಗಿಬಿಡುತ್ತದೆ. ಈ ಕಲ್ಪನೆಯ ಪರಿಧಿಯು ಈ ಭೂಮಿಯ ಅಂಚಿನವರೆಗೆ ವಿಸ್ತರಿಸಿದರೆ ನಾವೊಂದು ಬಿಂದುವೂ ಆಗಿರುವುದಿಲ್ಲ ಎಂದು ಮನಸ್ಸಿಗೆ ತೋರುತ್ತದೆ. ಅದೇ ರೀತಿ ಬ್ರಹ್ಮಾಂಡದ ಕಲ್ಪನೆ, ನಕ್ಷತ್ರ ಪುಂಜಗಳ ನಡುವೆ ನಮ್ಮ ಸೌರ ಮಂಡಲದ ಕಲ್ಪನೆ ಮಾಡಲು ಪ್ರಯತ್ನಿಸುವಷ್ಟರಲ್ಲಿ ‘ನಾನು’ ಎಂಬ ಅಸ್ತಿತ್ವ ವಾಸ್ತವವಾಗಿ ಎಷ್ಟು ಚಿಕ್ಕದು ಎನ್ನುವುದು ಗೊತ್ತಾಗುತ್ತದೆ. ಹೀಗೆ ಯೋಚಿಸಲು ಹೇಳಿಕೊಟ್ಟವರು ವಿಜ್ಞಾನದ ಮೇಷ್ಟರಾದರೂ, ನಿಜವಾಗಿಯೂ ಅವರು ತತ್ವಶಾಸ್ತ್ರವನ್ನೇ ತಿಳಿಸಿಕೊಟ್ಟಿದ್ದರು ಎನಿಸುತ್ತದೆಯೀಗ. + +ಹೀಗೆ ಯೋಚಿಸಿದಾಗ, ಅನೇಕ ಭ್ರಮೆಗಳು ಕಳಚಿಕೊಂಡು, ನಮ್ಮ ಗ್ರಹಿಕೆಯ ಹಂದರವೇ ಕುಸಿದು ಬೀಳುತ್ತದೆ. ಪರಿಧಿಯನ್ನು ವಿಸ್ತರಿಸಲಾರದೇ ಇದ್ದಾಗ ನಮ್ಮ ಅಸ್ತಿತ್ವದ ಸೀಮಿತತೆ ಸ್ಪಷ್ಟವಾಗಿ ಅರಿವಿಗೆ ಬರುತ್ತದೆ. ಈ ಉದಾಹರಣೆಯನ್ನೇ ಪುಸ್ತಕ ಲೋಕಕ್ಕೆ ಅನ್ವಯಿಸಬಹುದು. ಹಾಗಾಗಿ ಜಗತ್ತಿನ ಜ್ಞಾನಭಂಡಾರವು ಪುಸ್ತಕ ರೂಪದಲ್ಲಿ ನಮಗೆ ಸಿಗುತ್ತಿದೆ ಎನ್ನುವುದಕ್ಕೇ ನಾವು ಕೃತಜ್ಞರಾಗಿರಬೇಕು. ಅಷ್ಟಾದರೂ ಎಲ್ಲವನ್ನೂ ಓದುವಷ್ಟು ಕಾಲಾವಕಾಶವೂ, ಶಕ್ತಿಯೂ ನಮ್ಮಲ್ಲಿ ಇರುವುದಿಲ್ಲ. + +ಮಹಾಭಾರತ ಕೃತಿಯೇ ಬಹುದೊಡ್ಡ ಗ್ರಂಥ. ಕೃತಿಯ ಪೀಠಿಕೆಯಲ್ಲಿ ಇರುವಂತೆ, ಹರಿವಂಶವೂ ಸೇರಿದರೆ ಅದು ಒಂದು ಲಕ್ಷ ಶ್ಲೋಕಗಳಿಗಿಂತ ಹೆಚ್ಚಾಗುತ್ತದೆ. ಇಷ್ಟು ದೊಡ್ಡ ಗಾತ್ರದ ಗ್ರಂಥ ವಿಶ್ವ ಸಾಹಿತ್ಯದಲ್ಲಿಯೇ ಮತ್ತೊಂದಿಲ್ಲ. ಭಾರತದಲ್ಲಿ ರಾಮಾಯಣ, ಮಹಾಭಾರತಕ್ಕೆ ಮಹತ್ವ ಇರುವಂತೆ ಗ್ರೀಕ್‌ನಲ್ಲಿ ಇಲಿಯಡ್‌ ಮತ್ತು ಒಡೆಸ್ಸಿ ಗ್ರಂಥಗಳಿಗೆ ಮಹತ್ವ ಇದೆ. ಆದರೆ ಅವೆರಡೂ ಗ್ರಂಥಗಳನ್ನು ಒಟ್ಟು ಕೂಡಿಸಿದರೂ ಅದು ಮಹಾಭಾರತದ ಎಂಟರಲ್ಲಿ ಒಂದು ಭಾಗ ಮಾತ್ರವಾಗುತ್ತದೆ. + +ಮಹಾಭಾರತ ಕಥೆಯ ಕಾಲ ಯಾವುದು?, ಅದು ಇತಿಹಾಸವೇ, ನಾಗರಿಕತೆಯು ಬೆಳೆಯುತ್ತಿದ್ದಂತೆಯೇ ತಾನೂ ಬೆಳೆಯುತ್ತಾ ಬಂದ ಒಂದು ಸಂಸ್ಕೃತಿ ಕಥನವೇ ಎಂಬೆಲ್ಲ ಪ್ರಶ್ನೆಗಳನ್ನು ಮನಸ್ಸಿನಲ್ಲಿ ಹುಟ್ಟುಹಾಕುತ್ತಾ ಬಂದಿರುವ ಪುಸ್ತಕ ಇದು. ಈ ಪ್ರಶ್ನೆಗಳಿಗೆ ಸಾಧ್ಯವಾದಾಗಲೆಲ್ಲ ಉತ್ತರ ಕಂಡುಕೊಳ್ಳುವ ಕುತೂಹಲಕರ ದೃಷ್ಟಿಯೊಂದನ್ನು ಇದು ನನಗೆ ಒದಗಿಸಿಕೊಟ್ಟಿದೆ. ಈ ಕುತೂಹಲದ ಓದಿನಿಂದಾಗಿ ನನಗೆ ಇತರ ಓದು ಕೂಡ ಲಭ್ಯವಾಗಿದೆ. + +ಇಂಗ್ಲಿಷ್‌ನಲ್ಲಿ ‘ಸ್ನೋಬಾಲ್‌’ ಎಂಬ ಪದವಿದೆಯಲ್ಲ. ಮಂಜಿನ ಪುಟ್ಟ ಉಂಡೆಯೊಂದು ತನಗೆ ತಾನೇ ಸುತ್ತಿಕೊಂಡು ಸುತ್ತಿಕೊಂಡು ದೊಡ್ಡದಾಗುವ ಮಾದರಿಯಲ್ಲಿಯೇ ಮಹಾಭಾರತದ ಕತೆಯು ಎಷ್ಟೊಂದು ಕತೆಗಳನ್ನು ಸುತ್ತಿಕೊಂಡು ಸುತ್ತಿಕೋಡು ದೊಡ್ಡದಾಗಿಬಿಟ್ಟಿದೆ! ಅವೆಲ್ಲವೂ ನಮ್ಮ ಬದುಕಿನಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಇಣುಕುವ ಕತೆಗಳೇ ಆಗಿವೆ ಎನ್ನುವುದೇ ಅದರ ಸಮಕಾಲೀನ ಸಾಮರ್ಥ್ಯ. ಇತಿಹಾಸದ ಕತೆಗಳ ಛಾಯೆಯನ್ನು ಹೊತ್ತುಕೊಂಡವೂ ಹೌದು. + +ಈ ಪುಸ್ತಕದ ಓದುವಿಕೆಯು ಕಾಲದ ಗ್ರಹಿಕೆಯ ವಿಸ್ಮಯವನ್ನೂ ಮೊಗೆದು ಕೊಟ್ಟಿದೆ. ವಚನಭಾರತದಲ್ಲಿ ಮಹಾಭಾರತದ ಕತೆ ಆರಂಭವಾಗುವುದೇ ಶಂತನು ಚಕ್ರವರ್ತಿಯಿಂದ. ಮೂಲ ಮಹಾಭಾರತದಲ್ಲಿ ಶಂತನುವಿನ ಹುಟ್ಟಿಗೆ ಮುಂಚೆ ಏನೆಲ್ಲ ನಡೆಯಿತು ಎಂಬ ಇನ್ನಷ್ಟು ದೀರ್ಘ ಕತೆಗಳಿವೆಯಂತೆ. ಎ. ಆರ್‌. ಕೃಷ್ಣ ಶಾಸ್ತ್ರಿಗಳು ಈ ಕತೆಯನ್ನು ಶಂತನು ಮತ್ತು ಗಂಗೆಯ ಭೇಟಿಯೊಂದಿಗೆ ಆರಂಭಿಸುತ್ತಾರೆ. ನನ್ನ ಓದು ಇಲ್ಲಿಂದ ಶುರುವಾದುದರಿಂದಲೋ ಏನೋ, ಒಬ್ಬ ಶಂತನುವಿನಿಂದ ಆರಂಭವಾದ ಈ ಕತೆಯು ಬ್ರಹ್ಮಾಂಡ ಬೃಹತ್ತಾಗಿ ಬೆಳೆದು, ಭಾರತ ಯುದ್ಧ ಮುಕ್ತಾಯವಾಗುವ ವೇಳೆಗೆ ಉತ್ತರೆಯ ಗರ್ಭದಲ್ಲಿ ಹುಟ್ಟುವ ಒಬ್ಬ ಮಗು ಪರೀಕ್ಷಿತ ಎಂಬ ಒಬ್ಬನೇ ವ್ಯಕ್ತಿಯಲ್ಲಿಗೆ ಬಂದು ನಿಲ್ಲುತ್ತದಲ್ಲ ಎಂದು ಹಲವು ಬಾರಿ ಅನಿಸಿದ್ದಿದೆ. ಕಾಲದ ಚಕ್ರವು ಒಂದು ಸುತ್ತು ತಿರುಗುತ್ತದೆ ಎನ್ನುವುದು ಇದೇ ಕಾರಣಕ್ಕೇನು? ಇಂತಹ ಹತ್ತಾರು ಪ್ರಶ್ನೆ, ವಿಸ್ಮಯ, ಅನಿಸಿಕೆಗಳ ಕಾರಣದಿಂದ ಇದೊಂದು ತತ್ವಶಾಸ್ತ್ರದ ವಿಶ್ಲೇಷಣೆಗೆ ಆಕರವಾಗಿ ಒದಗಬಲ್ಲ ಕೃತಿಯೂ ಹೌದು. + + + +ಭಾರತ ಕೃತಿಕಾರ ವ್ಯಾಸ ಮಹರ್ಷಿ ಕಥೆಯೊಳಗೆ ಒಂದು ಪಾತ್ರವೂ ಹೌದು. ಸಣ್ಣಕತೆಯೊಂದನ್ನು ಬರೆಯಲು ಒದ್ದಾಡುವ ನನಗೆ ಇಡೀ ಕುರುವಂಶದ ಕತೆಯನ್ನು ಅಕ್ಷರಗಳಲ್ಲಿ ಸೆರೆ ಹಿಡಿದ ವ್ಯಾಸ ಮಹರ್ಷಿಯ ಬಗ್ಗೆ ಅಭಿಮಾನ ಮೂಡದೇ ಇದ್ದೀತೇ.. ಬದುಕಿನ ಏರಿಳಿತಗಳು, ಸೋಲು ಗೆಲುವುಗಳ ನಡುವೆ ಸಮಚಿತ್ತದಿಂದ ಸಾಗುವ ಸ್ರೋತವೊಂದರಂತೆ ವ್ಯಾಸ ಮಹರ್ಷಿಯ ಪಾತ್ರವು ಕಾಡುತ್ತದೆ. ಹಾಗೆಂದೇ ವ್ಯಾಸ ಮಹರ್ಷಿಯ ಜೀವನಚರಿತ್ರೆಯನ್ನು ಪ್ರತ್ಯೇಕವಾಗಿ ಹುಡುಕಿ ಓದಿದ್ದುಂಟು. + +ಹೀಗೆಯೇ ವಚನಭಾರತದ ಓದುವಿಕೆಯಲ್ಲಿ ಹಲವಾರು ಉಪಕತೆಗಳು ಆಕರ್ಷಿಸುತ್ತವೆ. ನಳದಮಯಂತಿ , ನಹುಶ ಮಹಾರಾಜನ ಕತೆಗಳನ್ನೆಲ್ಲ ಮೊದಲೇ ನೃತ್ಯ, ನಾಟಕ, ಯಕ್ಷಗಾನಗಳಲ್ಲಿ ನೋಡಿದ್ದುಂಟು. ಆದರೆ ಈ ಪುಸ್ತಕದಲ್ಲಿ ಬರುವ ನಿರ್ಲಿಪ್ತ ಧೋರಣೆಯ ಪುಟ್ಟ ಪುಟ್ಟ ಕತೆಗಳಲ್ಲಿ ಆ ಪಾತ್ರಗಳನ್ನು ಓದಿ ‘ಅರೆ ಇಷ್ಟೆಯಾ ವಿಚಾರ’ ಎಂದು ಅನಿಸಿ ಬಿಡುತ್ತದೆ. ಮರುಕ್ಷಣಕ್ಕೇ ಭಾರತ ಕತೆಯಲ್ಲಿ ಬರುವ ಇಷ್ಟೇ ಪುಟ್ಟ ಪ್ರಕರಣಗಳು ಎಷ್ಟೊಂದು ಸುಂದರ ರಸಕಾವ್ಯವಾಗಿ ಬೆಳೆದಿವೆಯೆಲ್ಲಾ ಎಂದು ಖುಷಿ , ವಿಸ್ಮಯಗಳು ಮನದಲ್ಲಿ ಮೂಡುತ್ತವೆ. + +ಇದೇ ಭಾರತ ಕತೆಯನ್ನು ಎಸ್‌.ಎಲ್‌. ಭೈರಪ್ಪ ಅವರು ‘ಪರ್ವ’ ಕಾದಂಬರಿಯನ್ನಾಗಿಸಿದ ಬಗೆ, ಇದೇ ಕತೆಯಲ್ಲಿ ಬರುವ ರಾಜರ ವಂಶ ‘ಕುರು’ವಿನ ಬಗ್ಗೆ ರಾಹುಲ ಸಾಂಕೃತ್ಯಾಯನರು ಬರೆದ ‘ಓಲ್ಗಾ ಗಂಗಾ’ ಕೃತಿಯಲ್ಲಿ ಮೂಡಿ ಬಂದ ವಿಚಾರಗಳು, ಅದೇ ಕೃತಿಯಲ್ಲಿ ಮಾದ್ರ ವಂಶ, ಗಾಂಧಾರ, ತಕ್ಷಶಿಲೆಗಳ ಕುರಿತೂ ಅವರು ಬರೆದ ವಿಚಾರಗಳೆಲ್ಲ ಇನ್ನಷ್ಟು ಓದಿನ ಲಹರಿಗೆ ಪುಷ್ಟಿ ನೀಡುತ್ತವೆ. ಉದ್ಯೋಗ ಪರ್ವದಲ್ಲಿ ದೇವೇಂದ್ರನಿಗೆ ನೆರವಾದ ನಹುಶನ ಕತೆಯೊಂದು ಹಾದು ಹೋಗುತ್ತದೆ. ಆದರೆ ಅದೇ ಕತೆಯು ದೇವುಡು ಅವರ ಕೈಯಲ್ಲಿ ‘ಮಹಾಕ್ಷತ್ರಿಯ’ ಎಂಬ ಕೃತಿಯಾಗಿ ಮತ್ತಷ್ಟು ತಾತ್ವಿಕ ಜಿಜ್ಞಾಸೆಗಳ ಚರ್ಚೆಗೆ ಅವಕಾಶ ಮಾಡಿಕೊಡುತ್ತದೆ. ನಿಯತಿಯ ಆಜ್ಞೆಯನ್ನು ಮೀರಿ ಈ ಲೋಕದಲ್ಲಿ ಒಂದು ಕಣವೂ ಅಲ್ಲಾಡುವುದು ಸಾಧ್ಯವಿಲ್ಲ ಎಂಬ ವಿಷಯವನ್ನು ಪ್ರತಿಪಾದಿಸುತ್ತಾ ದೇವುಡು ಕತೆಯನ್ನು ಸುಂದರವಾಗಿ ಹೆಣೆದಿದ್ದಾರೆ. + +ಇನ್ನೂ ಹೇಳಬೇಕೆಂದರೆ ಒಂದು ವಿಚಾರಕ್ಕೆ ಹತ್ತಾರು ಆಯಾಮಗಳಿರುತ್ತವೆ ಎಂದೂ, ನೋಡುವ ನೋಟದಲ್ಲೇ ಎಲ್ಲವೂ ಅಡಗಿರುತ್ತದೆ ಎಂದೂ ಈ ಕೃತಿಯು ಮತ್ತೆ ಮತ್ತೆ ವಿವರಿಸಿ ಹೇಳುವಂತಿದೆ. + +ಸಾಂಖ್ಯ ಮತ್ತು ಯೋಗ ದರ್ಶನ ವಿಚಾರಗಳನ್ನು ಮಹಾಭಾರತದಲ್ಲಿ ಕಾಣಬಹುದು ಎಂಬುದನ್ನು ಶಾಸ್ತ್ರಿಗಳು ಉಲ್ಲೇಖಿಸುತ್ತಾರೆ. ಹಾಗಾಗಿಯೇ ಸ್ವಕರ್ಮ ಅಥವಾ ಕಾಯಕ ಮಾಡುವುದಕ್ಕಿಂತ ಮಿಗಿಲಾದ ದೇವರ ಪೂಜೆ ಮತ್ತೊಂದಿಲ್ಲ ಎನ್ನುವ ವಿಚಾರಗಳು ಹಾದು ಹೋಗುತ್ತವೆ. ಯಜ್ಞಕ್ಕೆ ಪ್ರಾಧಾನ್ಯ ನೀಡುವ ಅನೇಕ ಉದಾಹರಣೆಗಳು ಕಾಣುತ್ತವಾದರೂ ದ್ರವ್ಯಯಜ್ಞವನ್ನೇ ಆರಾಧಿಸದೇ, ತಪಸ್ಸು, ಯೋಗ, ಅಧ್ಯಯನ ಮತ್ತು ಜ್ಞಾನ ಯಜ್ಞಗಳ ಮಹತ್ವವನ್ನು ಎತ್ತಿಹಿಡಿಯುವ ಉದಾಹರಣೆಗಳು ಅಲ್ಲಲ್ಲಿ ಸಿಗುತ್ತವೆ. ಪ್ರಾಕ್ಟಿಕಲ್ ಬದುಕಿಗೆ ಇದಕ್ಕಿಂತ ದೊಡ್ಡ ಪುಷ್ಟಿ ಮತ್ತೇನು ಬೇಕು. ಇದೇ ತಳಹದಿಯಲ್ಲಿ ಧರ್ಮ, ನೀತಿಯ ಬೋಧನೆಯೇ ಇಡಿ ಕತೆಯ ಮುಖ್ಯ ಆಶಯವಾಗಿ ಕಾಣುವುದು. + +ಮನುಷ್ಯನು ಕಾಯಕವನ್ನು ನಿರ್ವಹಿಸದೇ ಇರುವುದು ಸಾಧ್ಯವೇ ಇಲ್ಲ ಎನ್ನುವ ಬೋಧೆಯನ್ನು ಶ್ರೀಕೃಷ್ಣನು ಅರ್ಜುನನಿಗೆ ಹೇಳುವುದು ಕುತೂಹಲಕಾರಿಯಾಗಿದೆ. ಭೀಷ್ಮ ಪರ್ವದ ಆರಂಭದಲ್ಲಿ, ‘ತಾನು ಯುದ್ಧ ಮಾಡಲಾರೆ’ ಎಂದು ನಿರಾಕರಿಸುವ ಅರ್ಜುನನಿಗೆ ಗೀತೆಯನ್ನು ಬೋಧಿಸುವ ಶ್ರೀಕೃಷ್ಣನ ಮಾತುಗಳು ಇಲ್ಲಿ ಕೆಲವೇ ಪ್ಯಾರಾಗಳಲ್ಲಿ ಕಾಣಿಸುತ್ತದೆ. ಸರಳ ಓದಿಗೆ ದಕ್ಕುವ ಅಂಶವಿದು. ‘ಅಕರ್ಮಕ್ಕಿಂತ ಕರ್ಮ ದೊಡ್ಡದು. ಸುಮ್ಮನೇ ಕುಳಿತುಬಿಟ್ಟರೆ ಕೆಲಸ ಮಾಡದೇ ಇದ್ದ ಹಾಗಾಯಿತೇ ? ಯಾವನೂ ಒಂದು ಕ್ಷಣ ಕೂಡ ಕೆಲಸ ಮಾಡದೇ ಹಾಗೆಯೇ ಇರುವುದಕ್ಕಾಗುವುದಿಲ್ಲ. ಪ್ರಕೃತಿಯು ಕೆಲಸ ಮಾಡಿಸಿಯೇ ಮಾಡಿಸುತ್ತದೆ. ಎಂಥ ವಿದ್ವಾಂಸನೂ ಅದಕ್ಕೆ ಅಧೀನ. ಅದನ್ನು ತಡೆಯುವುದಕ್ಕಾಗುತ್ತದೆಯೇ? ನಾನು ಮಾಡುತ್ತೇನೆ ಎನ್ನುವುದು ಒಂದು ಬರಿಯ ಅಹಂಕಾರ..’ + +ಶ್ರೀಕೃಷ್ಣನನ್ನು ಪರಮಾತ್ಮನೆಂದು ಸ್ತುತಿಸುತ್ತ ಇಡಿಯ ಭಾರತ ಕತೆಯ ಕೇಂದ್ರ ಬಿಂದುವೇ ಶ್ರೀಕೃಷ್ಣನೆಂದು ಹಲವಾರು ವಿದ್ವಾಂಸರು ವಾದಿಸಿದ್ದಾರೆ. ಕತೆಯ ತಿರುವುಗಳಲ್ಲೆಲ್ಲ ಗೋಚರಿಸುವ ಶ್ರೀಕೃಷ್ಣನಂತೆಯೇ, ಬದುಕನ್ನು ಸಂಭಾಳಿಸುತ್ತ ಮುನ್ನೆಡೆಯುವ ಬಂಡಿಯೊಂದರ ಚಕ್ರಗಳಂತೆ ಗೋಚರಿಸುವವರು ಕುಂತಿ ಮತ್ತು ದ್ರೌಪದಿಯರು. ಈ ಎರಡೂ ಸ್ತ್ರೀ ಪಾತ್ರಗಳ ಬಗ್ಗೆ ಓದಿದಷ್ಟೂ ಕಡಿಮೆಯೇ. ಎರಡೂ ಪಾತ್ರಗಳ ಬಗ್ಗೆ ಎಷ್ಟೊಂದು ‌ಪ್ರಮಾಣದ ಸಾಹಿತ್ಯಗಳು ಸೃಷ್ಟಿಯಾಗಿವೆ ! ಯುಧಿಷ್ಟಿರನೂ, ಶ್ರೀಕೃಷ್ಣನೂ ಈ ಇಬ್ಬರೂ ಸ್ತ್ರೀಯರ ಬಗ್ಗೆ ಗೌರವದಿಂದ ನಡೆದುಕೊಳ್ಳುವ ಉಲ್ಲೇಖ ಕಾಣಸಿಗುತ್ತವೆ. ದ್ರೌಪದಿಯೂ ಘನತೆಯಿಂದ ನಡೆದುಕೊಳ್ಳುವ ಮಹಿಳೆಯಾಗಿ ಕಾಣಿಸುತ್ತಾಳೆ. ಇಡೀ ಕತೆಯ ಕೇಂದ್ರಬಿಂದುವಿನಂತೆ ಇರುವ ದ್ರೌಪದಿಯ ವಸ್ತ್ರಾಪರಹಣದ ಸಂದರ್ಭದಲ್ಲಿ ಶೋಕಿಸುತ್ತಿರುವ ದ್ರೌಪದಿಗೆ ದೃತರಾಷ್ಟ್ರ ವರವನ್ನು ಕೊಡುವ ಸಂದರ್ಭದಲ್ಲಿ ಅವಳು ಎರಡೇ ವರಗಳನ್ನು ಸ್ವೀಕರಿಸಿ, ಮೂರನೆಯ ವರವನ್ನು ನಿರಾಕರಿಸುತ್ತಾಳೆ. ‘ಅದು ಲೋಭವಾಗುತ್ತದೆ. ಲೋಭವು ಧರ್ಮವನ್ನು ನಾಶ ಮಾಡುತ್ತದೆ’ ಎಂದು ವಿನಯದಿಂದ ಆದರೆ ಆತ್ಮವಿಶ್ವಾಸದಿಂದ ಹೇಳುತ್ತಾಳೆ. + +ಮನುಷ್ಯರು ಅಧ್ಯಾತ್ಮದತ್ತ ಹೆಜ್ಜೆ ಹಾಕಲು, ಅಥವಾ ಒಳ್ಳೆಯ ವಿಚಾರಗಳನ್ನೇ ಆಯ್ಕೆ ಮಾಡಿ ಅದೇ ದಾರಿಯಲ್ಲಿ ನಡೆಯಲು ಸಾಯುಜ್ಯ, ಮೋಕ್ಷ ಎಂಬ ಪರಿಕಲ್ಪನೆಗಳನ್ನು ಹಿರಿಯರು ಪ್ರತಿಪಾದಿಸಿದ್ದಾರೆ. ದೇವರು ಎಂಬ ಪರಿಕಲ್ಪನೆಯೂ ಇದೇ ಮಾದರಿಯದು ಎಂದೇ ಇಟ್ಟುಕೊಳ್ಳುವುದಾರೆ, ದೇವರನ್ನು ತಲುಪಲು ಎರಡು ದಾರಿಗಳನ್ನು ಆಯ್ಕೆ ಮಾಡಿಕೊಂಡಿರುವುದು ಪ್ರಧಾನವಾಗಿ ತೋರುತ್ತದೆ. ತಪಸ್ಸು, ಅಧ್ಯಯನ ಅನುಶಾಸನದಂತಹ ವಿಧಾನಗಳು ಒಂದು ದಾರಿ. ಹಾಡು, ನೃತ್ಯ, ಚಿತ್ರ ಮುಂತಾದ ಲಲಿತಕಲೆಗಳ ಮೂಲಕ ನಡೆಯುವ ದೇವರ ಆರಾಧನೆಯು ಇನ್ನೊಂದು ಮಾರ್ಗ. ಎರಡೂ ದಾರಿಯಲ್ಲಿ ಸಾಗುವವರ ಆಶಯಒಂದೇ- ಅದು ಒಳಿತಿನೆಡೆಗೆ, ಜ್ಞಾನದೆಡೆಗೆ ಅಥವಾ ‘ದೇವರ’ ಕಡೆಗೆ ಸಾಗುವುದು. + +ವಚನಭಾರತ ಕತೆಯು ಮೊದಲನೆಯ ದಾರಿಯನ್ನು ಆಯ್ಕೆ ಮಾಡಿಕೊಂಡ ಅನೇಕ ವ್ಯಕ್ತಿಗಳ ಜೀವನ ಮಾರ್ಗವನ್ನು ವಿವರಿಸುತ್ತದೆ. ವಿದುರ, ಶ್ರೀಕೃಷ್ಣ, ಯುಧಿಷ್ಟಿರ, ವ್ಯಾಸ ಮುಂತಾಗಿ ಅನೇಕ ಆದರ್ಶಗಳನ್ನು ಈ ಕೃತಿಯು ಪ್ರತಿಪಾದಿಸುತ್ತದೆ. ಆ ಮೂಲಕ ಎರಡನೇ ದಾರಿಯಾದ ಕಲಾಪ್ರಕಾರಗಳ ವೈವಿಧ್ಯವನ್ನು ಹೆಚ್ಚಿಸಲು, ಅದನ್ನು ಶ್ರೀಮಂತಗೊಳಿಸಲು ಕಾರಣವಾಗಿವೆ. ನಮ್ಮ ದೇಶದ ಕಲಾಪ್ರಕಾರಗಳೆಲ್ಲವೂ ಒಂದಲ್ಲ ಒಂದು ಸಂದರ್ಭದಲ್ಲಿ ಮಹಾಭಾರತದ ಕತೆಗಳನ್ನು ವಿಶ್ಲೇಷಿಸುತ್ತ, ವಿಸ್ತರಿಸುತ್ತ ಅಥವಾ ವಿರೋಧಿಸುತ್ತ ಬೆಳೆಯುತ್ತ ಬಂದಿವೆ. ನೃತ್ಯ , ಸಂಗೀತ, ಶಿಲ್ಪ, ವಾಸ್ತು, ಚಿತ್ರ ಅಷ್ಟೇ ಏಕೆ, ಸಾಹಿತ್ಯ ಕ್ಷೇತ್ರದಲ್ಲಿಯೂ ಎಷ್ಟೋ ಸೃಜನಶೀಲತೆಗೆ ಪ್ರೇರಣೆಯಾಗಿದೆ. + +ಕಲೆಗಳು ಎಲ್ಲ ಜನರನ್ನೂ ಸೆಳೆಯುವಂತಹ ಪ್ರಕಾರ. ಮಹಾಭಾರತ ಕತೆಯೊಂದು ಗೊತ್ತಿದ್ದರೆ, ಪ್ರಕಾರವೊಂದನ್ನು ಆಯ್ಕೆ ಮಾಡಿಕೊಂಡು ಎಷ್ಟೆಲ್ಲ ಸಾಧನೆ ಮಾಡಬಹುದು ಎಂಬುದಕ್ಕೆ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. + + + +ಅದೇನೇ ಇರಲಿ, ಪ್ರತಿನಿತ್ಯವೂ ಹೊಸದನ್ನೇ ಪ್ರತಿಪಾದಿಸುವ, ಆದರೆ ಅತ್ಯಂತ ಪುರಾತನವಾದ ವಿಚಾರಗಳನ್ನು ಹೇಳುವ ಈ ಕೃತಿಯು ಎಷ್ಟೋ ಆಧುನಿಕ ವಿಶ್ಲೇಷಣೆಗಾಗಿ ಇಂದಿಗೂ ಬಳಸಲ್ಪಡುತ್ತದೆ. ಆದ್ದರಿಂದಲೇ ಮೆಚ್ಚಿನ ಪುಸ್ತಕಗಳ ಸಾಲಿನಲ್ಲಿ ಅದು ನಿಲ್ಲುತ್ತದೆ. + +ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ. \ No newline at end of file diff --git a/Kenda Sampige/article_215.txt b/Kenda Sampige/article_215.txt new file mode 100644 index 0000000000000000000000000000000000000000..2e611d79cd37abcaffd1664c85035290572f68af --- /dev/null +++ b/Kenda Sampige/article_215.txt @@ -0,0 +1,73 @@ +ಹಿರಿಯ ವಿದ್ವಾಂಸರಾದ ಪ್ರೊ. ಕೆ. ಇ. ರಾಧಾಕೃಷ್ಣರು ತಾವು ಅನುವಾದಿಸಿದ “ಗೋಪಿಕೋನ್ಮಾದ” ಎನ್ನುವ ಪುಸ್ತಕವೊಂದನ್ನುಕಳುಹಿಸಿದಾಗ ಈ ಕೃತಿಯ ತಲೆಬರಹವನ್ನು ನೋಡಿಯೇ ನಾನು ಅದರೆಡೆ ಆಸಕ್ತನಾದೆ. ಗೋಪಿಕೆಯರಿಗೆ ಕೃಷ್ಣ ಒಂದು ಹುಚ್ಚು, ಉನ್ಮಾದ, ಅದು ಸನ್ನಿಯೂ ಹೌದು. ಮುನ್ನುಡಿಯಲ್ಲಿ ಶ್ರೇಷ್ಠ ವಿದ್ವಾಂಸರಾದ ಜಿ. ವೆಂಕಟಸುಬ್ಬಯನವರಿಗೂ ಕಾಡಿದ ಶಬ್ಧವಂತೆ ಈ ಗೋಪಿಕೋನ್ಮಾದ. ಈ ಕೃತಿಯನ್ನು ಓದುತ್ತಾ ಹೋದಂತೆ ನಾವು ಈ ಉನ್ಮಾದದಲ್ಲಿ ಸಿಲುಕಿ ಕೊನೆಗೆ ನಾರದರ ಮೂಲಕ ಒಂದು ತಹಬಂದಿಗೆ ಬರುವ ಅವಸ್ಥೆ ತಲುಪುತ್ತೇವೆ. + +(ಪ್ರೊ. ಕೆ.ಇ. ರಾಧಾಕೃಷ್ಣ) + +ಭಾಗವತದ ವಿಷಯ ಬಂದಾಗ ನೆನಪಾಗುವದು ಕೃಷ್ಣ ಮತ್ತು ಗೋಪಿಕೆಯರ ರಾಸಲೀಲೆ. ಯಮುನಾ ನದಿಯ ತಟದಲ್ಲಿರುವ ಬೃಂದಾವನ, ಗೋಪಿಕಾ ಸ್ತ್ರೀಯರು ಮತ್ತು ಕೃಷ್ಣ ಇವೆಲ್ಲವೂ ಅವಿನಾಭಾವ ಸಂಬಂಧವನ್ನು ಹೊಂದಿರುವಂತವು. ಇಲ್ಲಿ ದಾಸ ದಾಸಿಯ ಭೇದಗಳಿಲ್ಲ. ಯಾರದೋ ಮಗಳು, ಮತ್ಯಾರದೋ ಹೆಂಡತಿ, ಇನ್ಯಾರದೋ ಸಹೋದರಿಯೋ ಆಗಿರುವವರೆಲ್ಲ ತಮ್ಮ ತಮ್ಮ ಅಸ್ತಿತ್ವವನ್ನು ಮರೆತು ಕೃಷ್ಣನಲ್ಲಿ ಒಂದಾಗುವ ಅದ್ವೈತೀ ಭಾವ. ಕೃಷ್ಣನೂ ಸಹ ತಾನು ದೇವನೆನ್ನುವದನ್ನು ಮರೆತು ಹಾಡು, ವೇಣುಗಾನ, ರಾಸಲೀಲೆಯಲ್ಲಿ ಮುಳುಗಿಬಿಡುತ್ತಾನೆ. ಭಾಗವತದ ದಶಮ ಸ್ಕಂದದಲ್ಲಿ ಬರುವ ಗೋಪಿಕಾ ಗೀತೆಯಂತೂ ಭಕ್ತಿ ಮತ್ತು ವಿಪ್ರಲಂಭ ಶೃಂಗಾರ ಎರಡರ ಅರ್ಥವನ್ನೂ ಕೊಡುತ್ತದೆ. + +ಸುರತವರ್ಧನಂ ಶೋಕನಾಶನಂಸ್ವರಿತವೇಣುನಾ ಸುಷ್ಠು ಚುಮ್ಬಿತಮ್ I + +ಇತರರಾಗವಿಸ್ಮಾರಣಂ ನೃಣಾಂವಿತರ ವೀರ ನಸ್ತೇsಧರಾಮೃತಮ್II ಭಾ. X-31-14 + +(ರತಿಕ್ರೀಡೆಯ ಅಭಿಲಾಷೆಯನ್ನು ಹೆಚ್ಚಿಸುವಂತೆಯೂ, ವಿರಹದುಃಖವನ್ನು ಕಳೆಯುವಂತೆಯೂ, ನುಡಿಸಲ್ಪಡುವ ಕೊಳಲಿನಿಂದ, ಚನ್ನಾಗಿ ಮುತ್ತಿಕ್ಕಲ್ಪಡುವ ಮತ್ತು ಒಮ್ಮೆ ಪಾನಮಾಡಿದ ಮನುಷ್ಯರಿಗೆ ಇತರ ಭೋಗವಸ್ತುಗಳ ಮೇಲಿನ ಆಸೆಯನ್ನು ತೊರೆಯುವಂತೆ ಮಾಡುವ ಸುಕೋಮಲವಾದ ಮಧುರವಾದ ನಿನ್ನ ಅಧರಾಮೃತದ ರಸವನ್ನು ನಮಗೆ ದಯಮಾಡು) + +ಗೋಪಿಕಾ ಸ್ತ್ರೀಯರು ಕೃಷ್ಣನ ಕುರಿತಾದ ಉನ್ಮಾದದಲ್ಲಿ ಮೈಮರೆತು ಆಡುವ ಮಾತುಗಳು ಹೃದಯಂಗಮವಾಗಿವೆ. ಇಲ್ಲಿ ಕೃಷ್ಣನೊಡನೆ ರಮಿಸಲು ಕಾತರರಾಗಿದ್ದಾರೆ; ಅದೇ ಕಾಲಕ್ಕೆ ಆತ ಸಿಗದಿರುವ ವಿರಹದಲ್ಲಿ ಬೇಯುತ್ತಿದ್ದಾರೆ. ಆತನ ಅಧರಾಮೃತದ ಸವಿಯನ್ನು ಸವಿದರೆ ಇತರ ಭೋಗವಸ್ತುಗಳ ಮೇಲಿನ ಮೋಹವೇ ಹೋಗಿಬಿಡುತ್ತದೆ ಎನ್ನುವಲ್ಲಿ ಅಭಿಸಾರಿಕೆಯ ಮನಸ್ಥಿತಿಯಿಂದ ನೇರವಾಗಿ ಯೋಗದ ತುರೀಯಕ್ಕೆ ಕೊಂಡೊಯ್ಯುವ ಸ್ಥಿತಿ ಇದು. “ನಾಹಂಕರ್ತಾ ಹರಿಕರ್ತಾ” ಎನ್ನುವದನ್ನು ಇಲ್ಲಿ ನೆನಪುಮಾಡಿಕೊಳ್ಳಬಹುದಾಗಿದೆ. + +ಗೋಕುಲದಲ್ಲಿ ಕೃಷ್ಣ ಮತ್ತು ಗೋಪಿಕೆಯರ ನಡುವಿನ ಸಂಬಂಧವೆನ್ನುವದು ಹೊರಗಡೆ ನೋಡಲು ಕಾಮವಾಗಿ ಕಾಣುತ್ತದೆ. ನಮ್ಮಲ್ಲಿ ಕಾಮವೆಂದರೆ ಅದು ಮಡಿಯಾಗಿ, ಮರೆಮಾಚುವ ವಸ್ತುವಾಗಿರುವದಕ್ಕೆ ಬಹುಶಃ ವೇದಾಂತದ ಪ್ರಭಾವ ಕಾರಣವಿರಬಹುದೆನಿಸುತ್ತದೆ. ಕಾಮವೆನ್ನುವದು ಬಯಕೆಗೆ ಮೂಲ ಹೇತು; ಹೀಗೆ ಅಮಿತವಾದ ಕಾಮವೆನ್ನುವದು ಆ ವಸ್ತುವಿನಲ್ಲಿ ಪ್ರೇಮವನ್ನುಂಟು ಮಾಡುತ್ತದೆ. ಪತಿ ಮತ್ತು ಪತ್ನಿಯಾಗಲಿ, ಭಕ್ತ ಮತ್ತು ಭಗವಂತನಾಗಲಿ ಎರಡನೇ ಹಂತವಾದ ಈ ಪ್ರೇಮ ಪರಸ್ಪರ ಬಿಡಲಾರದ ಸ್ಥಿತಿಗೆ ತರುತ್ತದೆ. ಅದು ಅಮೃತಸಮಾನವಾದದ್ದು. ಇದು ಸಂಪೂರ್ಣದೊರೆತ ಮೇಲೆ ಸಿಗುವ ಅನುಭೂತಿಯೇ ಪರಮಾನಂದ. ಅವಧೂತ ಮಾರ್ಗವೂ ಇದನ್ನೇ ಹೇಳುತ್ತದೆ. ಹಾಗಾಗಿ ವೇದಾಂತದ ಕಠಿಣ ಮಾರ್ಗಕ್ಕಿಂತ ಭಗವಂತನನ್ನು ಸೇರಲು ಭಕ್ತಿಮಾರ್ಗ ಸುಲಭ. ಕಾಮದ ಉನ್ಮಾದ ಇಳಿದ ಮೇಲೆ ಕಾಮಿಸಿದ ವಸ್ತುವಿನ ಮೇಲೆ ಮತ್ತೂ ಪ್ರೀತಿ ಉಳಿಯುವದಿದೆಯಲ್ಲ ಅದು ನಿಜವಾದ ಪ್ರೇಮ. ಇದು ಒಂದರ್ಥದಲ್ಲಿ ತತ್ತ್ವಮಸಿ ಅಥವಾ ಸೋಹಂಬಾವ. “ನಾನು ಅವನು, ಅವನು ನಾನು” ಎನ್ನುವ ತುರೀಯಾವಸ್ಥೆಯಲ್ಲಿ ಇರುತ್ತೇವೆ. ಈ ಭಾವವನ್ನು ಜಯದೇವ ಕವಿಯ “ಗೀತಗೋವಿಂದ” ದಲ್ಲಿ ಕಾಣಬಹುದಾಗಿದೆ. ಅದೇ ರಿತಿ ಪುತಿನ ಅವರ ಗೋಕುಲ ನಿರ್ಗಮನದ ವಿರಹ ಕನ್ನಡ ಸಾಹಿತ್ಯಚರಿತ್ರೆಯಲ್ಲಿಯೇ ಒಂದು ಅತ್ಯಪರೂಪದ ಕೃತಿ, ಇಲ್ಲಿ ಗೋಪಿಕೆಯರು ಕೃಷ್ಣನನ್ನು ತಡೆಯಲು ಪ್ರಯತ್ನಿಸಿದರೂ ಅವನ ಪ್ರೇಮಪಾಶದಲ್ಲಿ ಬಂಧಿತರಾದವರಿಗೆ ಅವನನ್ನು ತಡೆಯುವ ಶಕ್ತಿಯಿಲ್ಲ. ಆದರೆ ರಾಧೆ ಹಾಗಲ್ಲ, ತನ್ನ ಮಾಯೆಯಿಂದ ಭಗವಂತನನ್ನೇ ಬಂಧಿಸಿಬಿಟ್ಟಿದ್ದಾಳೆ. ಆಕಯೇನಾದರೂ ಬಂದರೆ ಕೃಷ್ಣ ಹೋಗಲಾರದಂತೆ ಮಾಡುವ ಸಾಧ್ಯತೆ ಇದೆ. ಆದರೆ ಕೃಷ್ಣನ ಅವತಾರವೇ ಲೋಕೋದ್ಧಾರಕ್ಕಾಗಿ ಆಗಿರುವ ಕಾರಣ ಮಾಯೆ ರಾಧೆಯನ್ನು ಆ ಹೊತ್ತಿಗೆ ಮರೆಮಾಚಿಟ್ಟಿದ್ದಾಳೆ. ರಾದೆಯೆಂದರೆ ಕೃಷ್ಣನ ಕೊಳಲಿನ ನಾದವೂ ಹೌದು. ಇನ್ನು ಮುಂದೆ ನಾದವಿಲ್ಲ; ಕೇವಲ ರಣೋನ್ಮಾದ ಎನ್ನುವ ಮೂಲಕ ಪುತಿನ ಅವರು ಈ ಮಾಯೆಯಿಂದ ಜಗದೋದ್ಧಾರನನ್ನು ಬಿಡಿಸಿಬಿಡುತ್ತಾರೆ. + +ಪ್ರಸಕ್ತ “ಗೋಪಿಕೋನ್ಮಾದ” ಎನ್ನುವ ಈ ಕೃತಿಯನ್ನು ಪ್ರೋ. ರಾಧಾಕೃಷ್ಣರಿಗೆ ಅನುವಾದ ಮಾಡಲು ಪ್ರೇರೇಪಿಸಿರುವದು ಕನ್ನಡದ ಶ್ರೇಷ್ಠ ವಿದ್ವಾಂಸರಾಗಿದ್ದ ಇಗೋ ಕನ್ನಡದ ಪ್ರೋ. ಜಿ. ವೆಂಕಟಸುಬ್ಬಯ್ಯನವರು. ಅವರಿಗೆ ಈ ಕೃತಿಯ ಹಸ್ತಪ್ರತಿ ತಿರುವನಂತಪುರದ ವಿಶ್ವವಿದ್ಯಾಲಯದಲ್ಲಿ ದೊರಕಿತ್ತು. ಮಂದಾಕ್ರಾಂತ ವೃತ್ತದಲ್ಲಿ ಮೂಲ ಕೃತಿ ರಚನೆಯಾಗಿದೆ. ಮಂದಾಕ್ರಾಂತ ಎಂದ ಕೂಡಲೇ ಕಾಳಿದಾಸನ ಮೇಘದೂತದ ಕಶ್ಚಿದ ಕಾಂತಾ ವಿರಹಗುರುಣಾ ಸ್ವಾಧಿಕಾರಾತ್ಪ್ರಮತ್ತಃ ನೆನಪಾಗುತ್ತದೆ. ವಿಪ್ರಲಂಭ ಶೃಂಗಾರದ ಅಪೂರ್ವವಾದ ರಚನೆ ಇದು. ಗೋಪಿಕೋನ್ಮಾದವೂ ವಿಪ್ರಲಂಭ ಶೃಂಗಾರದಲ್ಲಿಯೇ ಇದೆ. ವೆಂಕಟ ಸುಬ್ಬಯ್ಯನವರೇ ಹೇಳುವಂತೆ ಪಠಣ ಮಾಧುರ್ಯವನ್ನು ಹೊಂದಿದ ಕೃತಿ “ಗೋಪಿಕೋನ್ಮಾದ”. ಇಲ್ಲಿರುವದು ರಾಧೆಯಲ್ಲ, ಬದಲಿಗೆ ಭಾವನಾ ಎನ್ನುವ ಗೋಪಿಕಾ ಸ್ತ್ರೀ. ಆಕೆ ಕೃಷ್ಣನ ಸನ್ನಿಗೆ, ಅವನ ಪ್ರೀತಿಯ ಉನ್ಮಾದಕ್ಕೆ ಸಿಕ್ಕಿಬಿದ್ದಿದ್ದಾಳೆ. ಎರಡು ಭಾಗಗಳಲ್ಲಿ ಈ ಉನ್ಮಾದ ವ್ಯಕ್ತವಾಗಿವೆ. ಪ್ರಥಮ ಭಾಗದಲ್ಲಿ 68 ಶ್ಲೋಕಗಳು, ದ್ವಿತೀಯ ಭಾಗಗಳಲ್ಲಿ 57 ಶ್ಲೋಕಗಳಿವೆ. ಪ್ರೋ. ಕೆ. ಇ. ರಾಧಾಕೃಷ್ಣರು “ಮೂಲವನ್ನು ಅನುವಾದ ಮಾಡಲಿಲ್ಲ ಇದು ಅದರೆ ರೂಪಾಂತರ” ಎನ್ನುವ ಮಾತನ್ನು ಆಡುತ್ತಾರೆ. ಮೂಲದ ಮಂದಾಕ್ರಾಂತ ವೃತ್ತವನ್ನು ಅವರು ಚೌಪದಿಯಲ್ಲಿ ಬದಾಲಾಯಿಸಿದ ಕಾರಣಕ್ಕೆ ಹೀಗೆ ಹೇಳಿರಬಹುದೆನಿಸುತ್ತದೆ. ಕಾವ್ಯದ ಸೌಂದರ್ಯ ಇವರ ಲೇಖನಿಯಲ್ಲಿ ಮದನನ ಬಾಣದಂತೆ ಎದೆಗೆ ತಾಗುತ್ತದೆ. ವೃಂದಾವನದಲ್ಲಿ ಹೂವಾರಿಸಲು ಬಂದ ತರುಣಿ ಭಾವನಾ ಆಕಸ್ಮಿಕವಾಗಿ ಅಲ್ಲಿ ಬಂದ ಕೃಷ್ಣನನ್ನು ನೋಡಿದಳು. + +ಕಾಚಿದ್ ವೃಂದಾವನ ಪರಿಸರೇ ಗೋಕುಲಂ ಚಾರಯಂತಂಪಶ್ಚಾದೇತ್ಯ ಪ್ರಕೃತಿಮಧುರಂ ವಂಶಮಾಪೂರಯಂತಮ್ತನ್ನಾದೇನ ಶ್ರುತಿಸುರಭಿರಣಾ ತೀರ್ಯಗಾಕೃಷ್ಣಮಾಣಾಕೃಷ್ಣಂ ಕ್ರೀಡಾರಸಪರವಶಂ ಪುಷ್ಪಲಾವೀ ದದರ್ಶ + +ಮೂಲದ ಈ ಪದ್ಯವನ್ನು ಇಲ್ಲಿ ಅನುವಾದಿಸಿರುವದು ಹೀಗೆ; + +ಉದ್ಯಾನವನದಲ್ಲಿ ಹೂವಾರಿಸುವ ಹುಡುಗಿಕೃಷ್ಣ ಕೊಳಲಿನ ಗಾನ ಸವಿದಳು ಸುಭಗೆಕಿವಿಗಿಂಪು ಈ ಗಾನ ವೇದಸಾರದ ಜ್ಞಾನಕ್ರೀಡೆ ಪರವಶ ಕೃಷ್ಣ ದರ್ಶನದ ಭಾಗ್ಯ + + + +ವೇದದ ಸಾರವಾದ ಕೊಳಲ ಗಾನವನ್ನು ಕೇಳಿದ, ಆ ಮೂರ್ತಿಯನ್ನು ನೋಡಿದ ಗೋಪಿಕೆಗೆ ಕೃಷ್ಣನ ಮೇಲೆ ತಕ್ಷಣವೇ ಮೋಹವೆನ್ನುವದು ಆವರಿಸಿ ಕೃಷ್ಣ ತನ್ನವನು, ತನಗೆ ಮಾತ್ರ ಸೇರಿದವನೆನ್ನುವ ಮಹಾಕಾಮದ ಉನ್ಮಾದಕ್ಕೆ ಸಿಕ್ಕುಬಿದ್ದಳು. ಬಿದಿರಿಗೆ ರಂದ್ರಮಾಡಿದರೆ ಅದು ವೇಣು, ಉಸಿರು ತುಂಬಿದರೆ ವೇಣುಗಾನ. ಯಮನೂ ಸಹ ಕೊಳಲು ವಾದಕನೇ(ಋಗ್ವೇದದಲ್ಲಿ ಈ ಕುರಿತು ವಿವರಣೆ ಇದೆ). ದೇಹವೆನ್ನುವ ಕೊರಡಿಗೆ ಉಸಿರು ತುಂಬಿದಾಗ ಜೀವ. ಉಸಿರನ್ನು ಊದುವದನ್ನು ನಿಲ್ಲಿಸಿದರೆ ಅದೇ ಮರಣ. ವೇದದ ಪಾರಮಾರ್ಥವಾದ ಮೃತ್ಯು ರಹಸ್ಯವನ್ನು ತಿಳಿದವ ಯಮ ಮಾತ್ರ. ಇಲ್ಲಿ ಆಕೆಗೆ ಈ ವೇದದ ಸಾರದ ನಾದ ಮಾತ್ರ ಕೇಳಿಸಿದೆ. ಹಾಗಾಗಿ ಲೌಕಿಕ ಬದುಕಿನಲ್ಲಿ ಗೀಪಿಕೆಗೆ ಕೃಷ್ಣದರ್ಶನದಲ್ಲಿ ಆತನ ಬಾಹ್ಯ ವ್ಯಕ್ತಿತ್ವದ ಕುರಿತಾದ ಕಾಮಮಾತ್ರ ಉಂಟಾಗಿದೆ. ಕೃಷ್ಣನ ಸೌಂದರ್ಯವನ್ನು ವರ್ಣಿಸುವ ಪದ್ಯ ಹೀಗಿದೆ. + +ಪದ್ಮರಾಗದ ಪಾದ ಇಂದ್ರ ನೀಲದ ಕಾಂತಿಎದೆ ಮದ್ಯೆ ಶ್ರೀವತ್ಸ ಲಲಿತ ಭಿನ್ನಂಜನಾಭಿ + +ಇನ್ನೊಂದರಲ್ಲಿ + +ಇಂದ್ರ ಸಾವಿರಗಣ್ಣ ಅವಗಿಂತ ಇವ ಚಲುವಚಂದ್ರ ಕಲಂಕಿತನಯ್ಯ ಇವ ನಿಷ್ಕಳಂಕಕಾಮನೇ ಅನಂಗ ಇವ ಸುಂದರಾಂಗಭೂಭಾರ ಪರಿಹಾರ ನಾರಾಯಣ ಶ್ರೀಕೃಷ್ಣ + +ಮೂಲದ ಸೊಗಸಿನ ಭಿನ್ನಾಂಜನಾಭ ನೆನ್ನುವದನ್ನು ಅಷ್ಟೇ ಆಕರ್ಷಣೀಯವಾಗಿ ಕನ್ನಡೀಕರಿಸಿದ್ದಾರೆ. ಪ್ರತೀ ಪದ್ಯವೂ ಹೀಗೇ ಸುಂದರವಾಗಿ ಚಿತ್ರಿತವಾಗಿದೆ. ಇಂತಹ ದಿವ್ಯದೇಹಿಯನ್ನು ಕಂಡ ಮುನಿಗಳೇ ಆಕರ್ಷಿತರಾಗಿರುವಾಗ ಗೋಪಿಯ ಪಾಡೇನು; ಆಕೆಯೂ ಆಕರ್ಷಿತಳಾಗಿದ್ದಾಳೆ. ಕವಿ ʻಗೋಪಿಕೋನ್ಮಾದವಿದು ಯೌವನದ ಜೀವರಸ / ಅಭಿನವ ರಸಪೂರ್ಣ ಶೃಂಗಾರ ರಸಕಾವ್ಯ ʼ ವೆಂದು ಮೊದಲೇ ವರ್ಣಿಸಿಬಿಟ್ಟಿದ್ದಾರೆ. ಇಂತಹ ಕೃಷ್ಣನನ್ನು ತನ್ನೆಡೆಗೆ ಸೆಳೆಯಲು ಆಕೆ ಪ್ರಯತ್ನಿಸುತ್ತಾಳೆ. ಆ ಕಾಮ ಕೃಷ್ಣನ ಕುರಿತಾದ ಹುಚ್ಚಿಗೆ ತಿರುಗಿದೆ. ಸೊಂಟಕ್ಕೆ ಅಂಟಿದ್ದ ವಸನ ಜಾರಿದೆಯಂತೆ ಆಕೆಗೆ, ಉಬ್ಬಿದೆದೆ ಸೆರಗು ಸರಿದುಹೋಗಿತ್ತು. ತಾನ್ಯಾರು ಅವನ್ಯಾರು ಎನ್ನುವ ಅರಿವಿನ ಮೇರೆ ದಾಂಟಿ ಗೋಪಿ ವಿವಶಪರವಶಳಾಗಿ ಮದನಾಗ್ನಿಯಲ್ಲಿ ದಗ್ಧಳಾಗಿ ಹೋಗುತ್ತಾಳೆ. ಮಾಧವನ ನೋಟದಲಿ ಕರಗಿ ಹೋಗುತ್ತಾಳೆ. ಸ್ತಬ್ಧಳಾಗಿ ಬಿದ್ದವಳಿಗೆ ಕೃಷ್ಣನದೇ ಸ್ವಪ್ನ. ಈ ಸ್ವಪ್ನ ಕೃಷ್ಣನ ಕುರಿತಾದ ಧ್ಯಾನ, ಭಗವಂತನ ಧ್ಯಾನವೆಂದರೆ ಸ್ವಪ್ನದಾಚೆಗೆ ಸಿಗುವ ಸುಷುಪ್ತಿಲೋಕವಂತೆ. ಶೃಂಗಾರದ ವರ್ಣನೆ ಮಾಡುತ್ತಲೇ ಕೊಂಡೊಯ್ಯುವದು ವೇದಾಂತದ ಕಡೆಗೆ. ಸುಷುಪ್ತಿಯಂದರೆ ಸ್ವ ಅಪೀತಿ ತಾನಲ್ಲದ ಸ್ಥಿತಿ; ಈ ಸ್ಥಿತಿಯಲ್ಲಿ ಜೀವಾತ್ಮ ಪರಮಾತ್ಮನೊಡನೆ ರಮಿಸುತ್ತದೆ ಎಂದು ಉಪನಿಷತ್ತು ವಿವರಿಸುತ್ತದೆ. ಇಲ್ಲಿಯೂ ಸಹ ಭಾವನಾ ಎನ್ನುವದನ್ನು ಮನಸ್ಸು ಎಂದುಕೊಂಡರೆ ಈ ಮನಸ್ಸಿನ ಒಳಗಿರುವ ಜೀವಾತ್ಮ ಪರಮಾತ್ಮನಲ್ಲಿ ರಮಿಸಬೇಕೆನ್ನುವದನ್ನುʻಆತ್ಮಯೋನಿಗೆ ಬೇಕು ದೇವ ಮೈಥುನವುʼ ಎನ್ನುವ ಮೂಲಕ ತುಂಬಾ ಚನ್ನಾಗಿ ಪದ್ಯವನ್ನು ಕಟ್ಟಿಕೊಟ್ಟಿದ್ದಾರೆ. ಗೋಪಿಗೆ ಕೃಷ್ಣ ತನಗೊಬ್ಬನಿಗೆ ಬೇಕೆನ್ನುವ ಸ್ವಾರ್ಥವಿದೆ. ತಾನು ಸುಂದರಿಯೆನ್ನುವ ಅಹಮಿಕೆಯೂ ಇದೆ. ಈ ಅಹಮಿಕೆಯನ್ನು ತೊಲಗಿಸಲು ಕೃಷ್ಣ ಆಕೆಯೊಂದಿಗೆ ರಮಿಸಿ ಮಾಯವಾಗಿಬಿಡುತ್ತಾನೆ. + +ಎಚ್ಚರವಾದ ಗೋಪಿಕೆಗೆ ಕೃಷ್ಣನನ್ನು ಹಿಡಿದು ತನ್ನಲ್ಲಿಯೇ ಇರಿಸಿಕೊಳ್ಳುವ ಹಂಬಲ, ಆದರೆ ಕೃಷ್ಣ ಕಾಣಿಸಲೊಲ್ಲ, ಆತ ಇದ್ದಾನೆ ಎಂದು ಭ್ರಮಿಸಿ ಆತನೊಡನೆ ರಮಿಸಿದ ಭ್ರಮೆಯಲಿದ್ದವಳಿಗೆ ಈಗ ಕೃಷ್ಣ ಕಾಣದಾದ. ಸ್ವಪ್ನದಲ್ಲಿ ಮೈಮರೆತವರು ಎಚ್ಚೆತ್ತಾಗ ಅದು ಕ್ಷಣ ಭಂಗುರವೆಂದೆಣಿಸದೇ ಒದ್ದಾಡುವ ಹಾಗೆ. ಇಲ್ಲಿಂದ ಮುಂದಿನ ಎಲ್ಲಾ ಪದ್ಯಗಳು ಗೋಪಿಕೆಯ ವಿರಹವನ್ನು ಬಣ್ಣಿಸುತ್ತವೆ. ಗೊಲ್ಲ ಕೃಷ್ಣನ ವಿರಹವೇದನೆಯಲ್ಲಿ ಭಾವನಾ ಮೂರ್ಛಿತಾಗುತ್ತಾಳೆ. ಅಲ್ಲಿಯೇ ಹಾರಾಡುತ್ತಿರುವ ದುಂಬಿಯೊಂದು ಆಕೆಯ ಮುಖವನ್ನು ನೋಡಿ ಹೂವೆಂದು ಭ್ರಮಿಸಿ ಮಧುವನ್ನು ಹೀರಲು ಹಾರಾಡುತ್ತದೆ. ದುಂಬಿ ಕೃಷ್ಣನ ಕಡೆಯಿಂದ ಬಂದಿರುವದೆಂದು ಗೋಪಿಗೆ ಅನುಮಾನ. ಅವಳು ದುಂಬಿಯೊಡನೆ ಕೃಷ್ಣನ ಕುರಿತಾದ ವಿರಹವನ್ನು ವ್ಯಕ್ತಪಡಿಸುವದು ತುಂಬಾ ಸುಂದರವಾಗಿ ಚಿತ್ರಿತವಾಗಿದೆ. ಕಪಟಿ ಕೃಷ್ಣನ ವೇಣು ಆಕೆಯನ್ನು ಸೋಲಿಸಿತಂತೆ. ಕೃಷ್ಣ ತನ್ನನ್ನು ಹೇಗೆಲ್ಲ ರಮಿಸಿದ್ದ ಎನ್ನುವದನ್ನು ನೆನಪು ಮಾಡಿಕೊಂಡು ಅವನಿಗಾಗಿ ವ್ಯಥಿಸುತ್ತಾಳೆ. ಮೃದು ನಖದಿ ಚಿವುಟುತ್ತ ಸಂಗಸುಖ ಕೊಟ್ಟಿದ್ದ ಆ ಅಪ್ಪುಗೆಯ ಸುಖವನ್ನು ನೆನೆದು ಮತ್ತೊಮ್ಮೆ ಮೂರ್ಛಿತಳಾಗುತ್ತಾಳೆ. ಅವಳ ಈ ಸ್ಥಿತಿಯನ್ನು ನೋಡಲಾರದೇ ಅವಳ ಸಖಿಯರು ಅವಳನ್ನು ಉಪಚರಿಸತೊಡಗಿದರು. ಮೂರ್ಛೆಯಿಂದೆದ್ದರೂ ಆಕೆಗೆ ಕೃಷ್ಣನದೇ ಕನಸು. ಅವಳ ಈ ಭ್ರಮೆಯನ್ನು ಹೋಗಲಾಡಿಸಲು ಕೃಷ್ಣ ಯಾರು ಎನ್ನುವದನ್ನು ಹೇಳುವದನ್ನು ಮನೋಹರವಾಗಿ ಹೇಳಲಾಗಿದೆ. ಆಕೆಯ ಕಾಮಾಗ್ನಿಯನ್ನು ಭಸ್ಮಮಾಡಲು ಅವರು ಕೊಡುವ ಉದಾಹರಣೆಗಳು + +ಬಿಡುಗೆಳತಿ ಮನ ಬಂದ ನಿನಗೆಟುಕ ಅರವಿಂದಕ್ಷಣಕಾಲ ಅವನೊಡನೆ ಸುಖಿಪ ಪುಣ್ಯವ ಪಡೆದೆವೇದ ವಾಙ್ಮಯಗಳಲಿ ಶಾಸ್ತ್ರ ಸೂತ್ರಗಳಲ್ಲಿಕೃಷ್ಣನನು ಹುಡುಕಿದರು ಯೋಗಿ ಜನರು + +ಬದರಿಕಾಶ್ರಮದಲಿ ತಪಗೈಯುತ್ತಿರುವಾಗ ಇಂದ್ರ ಅಪ್ಸರೆಯರನ್ನು ಕಳುಹಿಸಿದರೆ ಊರ್ವಶಿಯನ್ನು ಸೃಷ್ಟಿಸಿದ ಕೃಷ್ಣನಲಿ ಪ್ರೇಮವೆಂದರೆ ಅದು ನಿನ್ನ ಮಂಕುಬುದ್ಧಿ ಎನ್ನುತ್ತಾರೆ. ಸ್ತನ್ಯಪಾನವನ್ನಿತ್ತ ಗೋಪಿಕೆಯರ ಸೀರೆಯನ್ನೇ ಕದ್ದ ಚೋರ, ಪೂತನಿಯ ಮೊಲೆಕುಡಿದು ಅವಳನ್ನೇ ಕೊಂದವ ಎನ್ನುತ್ತಾ ಕೃಷ್ಣನ ವಿಷಯದಲ್ಲಿ ಚಾಡಿ ಹೇಳುತ್ತಾರೆ. ಎಂತವರಿಗಾದರೂ ಮೂಲದ ಪದ್ಯದ ಭಾವವನ್ನು ಯಥಾವತ್ತಾಗಿ ತರುವದು ತುಂಬಾ ಸವಾಲುಗಳ ಸನ್ನಿವೇಶವನ್ನು ಪ್ರೊ. ರಾಧಕೃಷ್ಣರು ಸಹಜವಾಗಿ ರೂಪಾಂತರಿಸುತ್ತಾರೆ. + +ರಾಮೋ ಭೂತ್ವಾರನಭುವಿ ಪುರಾ ರಾವಣಂ ದಾರಯಿತ್ವಾಪ್ರತ್ಯಾನೀತಾಂ ಪ್ರಕೃತಿಕುಟಿಲಃ ಕಿಂ ವದಂತೀಂ ಪ್ರಮಾಣ್ಯ /ಅಗ್ನೌ ಶುದ್ಧಾಮುಖಿಲಜನಿನೀಂ ಜಾನಕೀಂ ಯಸ್ತ್ವಮುಂಚ-ನ್ನಿದ್ಯೆ ತಸ್ಮಿನ್ ರಮಯಸಿ ಮನ್ನೋ ನಿರ್ಘೃಣೇ ಹಂತ ಕೃಷ್ಣೇ //1- 35// + +ನಿಷ್ಕರುಣಿ ಈ ದೇವ ಪತ್ನಿ ತ್ಯಜಿಸಿದ ರಾಮರಾವಣನನು ಕೊಂದ ಸೀತೆಯನು ತಂದಹೃದಯ ಇಲ್ಲದ ದೇವ ಬೆಂಕಿಯಲಿ ಬೇಯಿಸಿದಪತ್ನಿಯನು ಬಿಟ್ಟವನು ನಿನಗಾವ ಸ್ನೇಹ// 1-38 // + +ಮೂಲದ ವಸ್ತುವಿಗೆ ಪುಟವಿಟ್ಟಂತೆ ಮನಮುಟ್ಟುವ ಭಾವಾನುವಾದದ ಇಂತಹ ಅನೇಕ ಪದ್ಯಗಳನ್ನು ಗಮನಿಸಬಹುದಾಗಿದೆ. ಈ ಯಾವ ದೂರುಗಳೂ ಕೃಷ್ಣ ನಿಂದನೆಗಳೂ ಗೋಪಿಕೆಗೆ ಕೃಷ್ಣನನ್ನು ಮರೆಸಲು ಸಾಧ್ಯವಾಗುವದಿಲ್ಲ. ಆಕೆ ಸಾಗರಕೆ ಸೀತುವೆಯ ರಾಮ ಸೀತೆಗಾಗಿ ಕಟ್ಟಿದ, ರಾಮ ಸೇತು ರಾಮ ಸೀತೆಯರ ಪ್ರೇಮದ ಪ್ರತೀಕ, ಪೂತನಿಯನ್ನು ಕೊಲ್ಲುವ ಮೂಲಕ ಹಲವು ಶಿಶುಗಳನುಳಿಸಿ ಲೋಕೊದ್ಧಾರವನ್ನು ಮಾಡಿದವ ಆತ. ಹೀಗಿರುತ್ತಾ ಆತನ ಮೇಲಿನ ಪ್ರೀತಿ ಕ್ಷಣಿಕ ಆಗುವದಾದರೂ ಹೇಗೆ ಎಂದು ಪ್ರಶ್ನಿಸುತ್ತಾಳೆ. ಇದೀಗ ಲಕ್ಷ್ಮಿಯನ್ನು ಆತ ಬಿಟ್ಟಿದ್ದಾನೆ, ಗೋಪಿಯರು ಜತೆಗಿಲ್ಲ ಏಕೆಂದರೆ ತನಾಗಾಗಿ ಆತ ಇವರೆಲ್ಲರನ್ನು ಬಿಟ್ಟಿದ್ದಾನೆ ಎಂದು ಹಲಬುತ್ತಾಳೆ. ಇಲ್ಲಿ ಕಾಳಿದಾಸನ ಮೇಘದೂತದಲ್ಲಿ ಅಲಾಕಾಪುರಿಯಲ್ಲಿ ಯಕ್ಷ ಮೇಘದೊಡನೆ ತನ್ನರಸಿ ತನ್ನ ವಿರಹವೇದನೆಯಲ್ಲಿ + +ಉತ್ಸಂಗೇ ವಾ ಮಲಿನ ವಸನೇ ಸೌಮ್ಯ ನಿಕ್ಷಿಪ್ಯ ವೀಣಾಂಮದ್ಗೋತ್ರಾಂಕಂ ವಿರಚಿತಪದಂ ಗೇಯ ಮುದ್ಗಾತು ಕಾಮಾತಂತ್ರೀಮಾರ್ದ್ರಾಂ ನಯನಸಲಿಲೈಃ ಸಾರಯಿತ್ವಾ ಕಥಂಚಿದ್ಭೂಯೊ ಭೂಯಃ ಸ್ವಯಮಪಿ ಕೃತ್ವಾಂ ಮೂರ್ಛನಾಂ ವಿಸ್ಮರಂತೀ + +ವಿರಹವೇದನಯಿಂದ ಮಲಿನವಸನೆಯಾದ ಆಕೆ ಸುಮ್ಮನೆ ಕುಳಿತಿದ್ದಾಳೆ. ತೊಡೆಯಮೇಲೆ ವೀಣೆ ಹಾಗೇ ಬಿದ್ದಿದೆ. ಇನಿಯನ ನೆನಪಿನಲ್ಲಿ ಹರಿಯುತ್ತಿರುವ ಕಣ್ಣೀರು ತಂತಿಯ ಮೇಲೆ ಹರಿದು ಶೃತಿ ಇಳಿದಿದೆ. ವೀಣೆಯ ಶೃತಿ ಮಾಡುತ್ತಾ ಆಕೆ ಹಾಡಲು ಬಯಸುತ್ತಿದ್ದಾಳೆ. ಆದರೆ ಹಾಡೇ ಮರೆತು ಹೋಗಿದೆ. ಕಾಳಿದಾಸನ ವೈದರ್ಭಿ ಶೈಲಿಯ ಈ ಮಟ್ಟದ ವಿರಹವನ್ನು ಸರಿಗಟ್ಟಲು ಸಾಧ್ಯವಾಗುವದಿಲ್ಲವಾದರೂ ಪರಿವಾರ ತ್ಯಕ್ತ ಜಿಂಕೆಯ ತೆರದಿ ಕಾಂತಾ ಕಾಂತಾ ಎಂದು ಹಂಬಲಿಸುವ ಭಾವ ವಿರಹದ ಉತ್ಕಂಟಿತ ಸ್ಥಿತಿಗೆ ಕೊಂಡೊಯ್ಯುವಲ್ಲಿ ಸಫಲವಾಗಿದೆ. + +ಹಾರಡುತ್ತಿರುವ ದುಂಬಿಯ ಕಡೆ ನೋಡಿ ನನ್ನನ್ನು ಮುಟ್ಟದಿರು “ಕಾಣುತಿದೆ ಸವತಿಯರ ಕುಂಕುಮದ ಕೆಂಪು” ಎನ್ನುತ್ತಾಳೆ. ದುಂಬಿ ಕೃಷ್ಣನ ದೂತ ಎನ್ನುವದು ಅವಳ ನಂಬುಗೆ. ಕೃಷ್ಣನ ಸವತಿಯರ ಸ್ತನದ ಮೇಲಿನ ಕುಂಕುಮ ಕೃಷ್ಣನ ಅಪ್ಪುಗೆಯಿಂದ ಆತ ಧರಿಸಿರುವ ಪುಷ್ಪ ಮಾಲೆಗೆ ಬಳಿದಿದೆ. ಆ ಹೂವಿನ ಮಧುವನ್ನು ಸವಿದಿರುವ ದುಂಬಿಯ ಮುಖಕ್ಕೆ ಅವರ ಕುಂಕುಮವು ಮೆತ್ತಿಕೊಂಡಿದೆ, ಹಾಗಾಗಿ ದುಂಬಿ ತನ್ನನ್ನು ಮುಟ್ಟಕೂಡದು. ಕೃಷ್ಣ ತನ್ನೊಬ್ಬನಿಗೇ ಸೇರಿರಬೇಕು ಎನ್ನುವದು ಗೋಪಿಕೆಯ ಬಯಕೆಯ ಉನ್ಮಾದ. ಈ ಖ್ಂಡಕಾವ್ಯದ ಎರಡನೆಯ ಉನ್ಮಾದದಲ್ಲಿಯೂ ಗೋಪಿಕೆಯ ಈ ವಿರಹ ವೇದನೆ ಮುಂದುವರಿಯುತ್ತದೆ. ಕೃಷ್ಣ ಅಕ್ರೂರನೊಂದಿಗೆ ಮಥುರೆಗೆ ಹೋಗಿದ್ದಾನೆ. ಅಕ್ರೂರ ಗೋಪಿಕೆಯ ಜಗದಲ್ಲಿ ಕ್ರೂರ ತಾನಾದನಂತೆ. ಎನ್ನೊಡನೆ ಕ್ರೀಡಿಸುತ ಸುರತವಾಡುವ ನೀನು/ ಮುಷ್ಟಿ ಕಾಳಗಕೆಂದು ಎನ್ನ ತ್ಯಜಿಸುವೆಯಾ// ಎಂದು ಹಲಬುತ್ತಾಳೆ. ಯಶೋಧೆಯೆ ನಿನ್ನ ಮಗ ಕದ್ದಿಹನು ತನ್ನ ಮನೆವೆನ್ನುವ ಶುದ್ಧ ಬೆಣ್ಣೆಯನು ಎಂದು ಬಿಕ್ಕುತ್ತಾಳೆ. ಅವನ ಹೆಜ್ಜೆಯ ಹಚ್ಚೆ ಈ ನೆಲದಲಿರಲಿ ಎಂದು ಬೇಡಿಕೊಳ್ಳುತ್ತಾಳೆ. ಕೃಷ್ಣ ಸನ್ನಿಯಿಂದ ಆಕೆ ಹುಚ್ಚಿಯಾಗಿ ವಿರಹಾಗ್ನಿಯಲ್ಲಿ ಇನ್ನೇನು ಬೆಂದುಹೋಗುವ ಸ್ಥಿತಿಯಲ್ಲಿ ಇರುವಾಗ ನಾರದರ ಪ್ರವೇಶವಾಗುತ್ತದೆ. ಭ್ರಮಿತ ಗೋಪಿಯನ್ನು ಕಂಡ ನಾರದರು ಕೃಷ್ಣ ಕಥೆಯನು ಹೇಳಿ ಗೋಪಿಯ ಮನವನ್ನು ತಣಿಸುತ್ತಾರೆ. ಮಥುರೆಯಲ್ಲಿನ ಕೃಷ್ಣ ಅಲ್ಲಿಂದ ದ್ವಾರಕೆಗೆ ಸ್ಥಳಾಂತರಗೊಂಡಿದ್ದಾನೆ. ಗೋಪಿಕೆಯನ್ನು ದ್ವಾರಕೆಗೆ ಕರೆದು ತರಲು ನಾರದನನ್ನು ಶ್ರೀಕೃಷ್ಣನೇ ಕಳುಹಿಸಿದ್ದಾನೆ. + +ಮೊದಲ ಉನ್ಮಾದದಲ್ಲಿ ವಿಪ್ರಲಂಭ ಶೃಂಗಾರ ವಿಜ್ರಂಭಿಸಿದೆ. ಈ ಕಾವ್ಯವನ್ನು ಮೇಘದೂತಕ್ಕೋ ಅಥವಾ ಗೋಕುಲ ನಿರ್ಗಮನಕ್ಕೋ ಹೋಲಿಸುವದಕ್ಕಿಂತ ವಿಭಿನ್ನವಾಗಿ ನೋಡಬಹುದಾಗಿದೆ. ಇಲ್ಲಿ ಕಾಮ ವಿರಹ ಭಗವಂತ ತನ್ನೊಬ್ಬಳಿಗೇ ಸೀಮಿತನಾಗಿರಬೇಕೆನ್ನುವ ಸ್ವಾರ್ಥದ ಭಾವ ಮಿಶ್ರಿತವಾಗಿದೆ. ಗೋಪಿಕೆಯ ಈ ಭಾವವನ್ನು ಕಳೆಯಲು ಕೃಷ್ಣ ಆಕೆಯೊಂದಿಗೆ ರಮಿಸಿದಂತೆ ಮಾಯವಾಗಿಬಿಡುವದನ್ನು ಜೀವಾತ್ಮ ಮತ್ತು ಪರಮಾತ್ಮರ ಸಂಬಂಧಕ್ಕೆ ಹೋಲಿಸಬಹುದಾಗಿದೆ. ಭಕ್ತಿಯೂ ಒಂದರ್ಥದಲ್ಲಿ ವಿಪ್ರಲಂಭ ಶೃಂಗಾರವೇ. ಅಲ್ಲಿ ಭಕ್ತ ತನ್ನನ್ನು ತಾನು ಪತ್ನಿಯಾಗಿ ಪರಮಾತ್ಮನನ್ನೇ ಗಂಡನನ್ನಾಗಿ ಭಾವಿಸಿ ಆತನನ್ನು ನೋಡುವ ಕೂಡುವ ವಿರಹವೇದನೆಯಲ್ಲಿ ಇರುತ್ತಾನೆ. ಭಕ್ತಿ ಪರಮಾತ್ಮನ ಕುರಿತಾದ ಕಾಮ, ಅದು ಬೆಳೆಯುತ್ತಿರುವಂತೆ ಭಗಂತನಲ್ಲಿ ಅಮಿತವಾದ ಪ್ರೇಮವಾಗಿ ಪಲ್ಲಟಗೊಳ್ಳುತ್ತದೆ. ಈ ಪ್ರೇಮದ ತುರೀಯಾವಸ್ಥೆಯಲ್ಲಿ ಪ್ರಪಂಚದ ಪ್ರತಿಯೊಂದು ವಸ್ತುವೂ ಭಗವಂತನ ಪ್ರತಿರೂಪವಾಗಿಯೇ ಕಾಣುತ್ತದೆ. ಆಗ ಭಗವಂತ ಕೇವಲ ತನ್ನೊಬ್ಬನಿಗೆ ಅಲ್ಲ, ಸಮಷ್ಟಿಯ ಸ್ವತ್ತು, ಸಮಷ್ಟಿಯೇ ಆತ; ಸಾಗರವನ್ನು ಸೇರಿದ ಗಂಗಾ ನದಿಯೂ ಸಾಗರವೇ ಆಗುವಂತೆ ನಾವೆಲ್ಲರೂ ಆತನ ಭಾಗವೇ. ಆತನನ್ನು ಸೇರಿ ನಮ್ಮ ತನವನ್ನು ಕಳೆದುಕೊಳ್ಳಬೇಕು ಎನ್ನುವದು ಇಲ್ಲಿನ ತಿರುಳು. ಹಾಗಾಗಿ ಉತ್ತರೋನ್ಮಾದದಲ್ಲಿ ವಿಪ್ರಲಂಭ ಮರೆಯಾಗಿ ಸಂಭೋಗ ಶೃಂಗಾರ ಮನಸ್ಸನ್ನು ಮುದಗೊಳಿಸುತ್ತದೆ. ಗೋಪಿಕೆಯನ್ನು ದ್ವಾರಕೆಗೆ ಕರೆದೊಯ್ಯುವ ನಾರದ ಯದುಪತಿಯ ರಮ್ಯಕಥೆಯನ್ನು ವರ್ಣಿಸುತ್ತಾ ಹೋಗುತ್ತಾನೆ. ಆತನ ಈ ಹಿಂದಿನ ಎಂಟು ಅವತಾರಗಳ ಪರಿಚಯ ಮಾಡಿಕೊಡುತ್ತಾನೆ. ಕಂಸ, ಕಾಲಯವನ, ಪೌಂಡ್ರಕ ಮುಂತಾದವರನ್ನು ಕೊಂದ, ರುಕ್ಮಿಣಿಗೆ ಒಲಿದ ಮುಚುಕುಂದನನ್ನುದ್ಧರಿಸಿದ ಕಥೆಗಳನ್ನೆಲ್ಲಾ ಕೇಳುತ್ತಾ ಗೋಪಿಗೆ ಶ್ರೀಕೃಷ್ಣನ ಸ್ಥಾನವೆನ್ನುವದು ಪರಮಹಂಸನ ತಾಣ ಎನ್ನುತ್ತಾನೆ. ಗೋಪಿಗೆ ಈಗ ಕೃಷ್ಣನ ಮೇಲಿರುವದು ವಿರಹವಲ್ಲ, ಅದು ಆಗಸದಿಂದ ಬೀಳುವ ಮಳೆಗಾಗಿ ಕಾತರಿಸುವ ಇಳೆಯ ನೋಟ. ಚಂದಿರನ ಬೆಳದಿಂಗಲಲ್ಲಿ ಮೈ ತುಂಬಿಕೊಳ್ಳುವ ವೃಕ್ಷರಾಜಿಗಳಂತೆ ಆಕೆಯ ಮನಸ್ಸು ತಣಿದಿದೆ. ಕೃಷ್ಣ ಆಕೆಯನ್ನು ಸಂತೈಸಿ + +ಚಲುವೆ ನನ್ನೊಳಗೆ ನೀನಿರುವೆ ನಿನ್ನೊಳಗೆ ನಾನಿರುವೆಭೇದವೆಲ್ಲಿದೆ ನಮಗೆ ದೇಹ ಜೀವಗಳೊಂದು ಐಕ್ಯವಾಗಿರಲುದೇವಿ ನಿನ್ನ ಮುಸುಕಿದ ಮಾಯೆಯನ್ನು ತೊಲಗಿಸಲುಆಟವಾಡಿದೆ ನಾನು ಎನ್ನ ನೀ ಕ್ಷಮಿಸು ಗೋಪಿ + +ಎಂದು ಸಂತೈಸುತ್ತಾನೆ. ಗೋಪಿಗೂ ರಾಮ ಪದತಲದಲ್ಲಿ ಕಲ್ಲು ಹೆಣ್ಣಾದ ತೆರದಿ ಕೃಷ್ಣ ಪದಸ್ಪರ್ಶದಲ್ಲಿ ತಾನು ಮತ್ತೊಮ್ಮೆ ಹೆಣ್ಣಾದೆ ಎಂದು ಕೊಳ್ಳುತ್ತಾಳೆ. ಆಕೆಗೆ ತಾನೊಬ್ಬಳೇ ಕೃಷ್ಣಪ್ರೇಮಿ ಎನ್ನುವ ಭ್ರಮೆಯಲ್ಲಿದ್ದ ಗೋಪಿಗೆ ದ್ವಾರಕೆಯಲ್ಲಿ + +ತಾನೇ ಕಂಡಳು ಈಗ ಮನೆಮನೆಯ ಗೋಡೆಗಳುಮಾಡುತಿದ್ದವು ಕೃಷ್ಣರಸಪೂರ್ಣ + +ಪುರಿಯಲ್ಲಿ ಜಗನ್ನಾಥನ ರಥವನ್ನು ಎಳೆಯುವ ದೃಶ್ಯ ಇಲ್ಲಿ ನೆನಪಾಗುತ್ತದೆ. ಯಾವ ಬೇಧವಿಲ್ಲದೇ ರಥಎಳೆಯುವಾಗ ತಾನ್ಯಾರೋ, ಅವರ್ಯಾರೋ, ಅಲ್ಲಿ ಕಾಣುವದು ಕೃಷ್ಣ ಬಲರಾಮರು ಮಾತ್ರ ಎನ್ನುವ ಭಾವ ಅಲ್ಲಿಗೆ ಹೋದವರಿಗೆ ಬರುವಂತೆ ಇಲ್ಲಿ ಗೋಪಿಗೆ ಆಗುತ್ತದೆ. ನಾಚಿಗೆಯಿಂದ ನಿಂತವಳನ್ನು ಕೃಷ್ಣ ತೆಕ್ಕೈಸಿ ಅಪ್ಪಿ ಮುದ್ದಡುತ್ತಾನೆ. ಗೋಕುಲದಲ್ಲಿ ಸೀರೆಯ ಸೆರಗು ಎಳೆದಿದ್ದ ಕೃಷ್ಣ ಇಲ್ಲಿ ಆಕೆಯ ಅಹಮಿಕೆಯ ಉನ್ಮಾದವನ್ನು ಕಳಚುತ್ತಾನೆ. ಈ ಭಾಗವನ್ನು ಪ್ರೋ. ರಾಧಾಕೃಷ್ಣರು ರೂಪಾಂತರಿಸಿರುವದನ್ನು ಓದುತ್ತಲೇ ಇರಬೇಕೆನಿಸುತ್ತಿದೆ. + +ಪ್ರೇಮಿಕೆಯ ಅಹಮಿಕೆಯ ನಿರ್ವಾಣಗೊಳಿಸಿಗೋಪಿಕೆಗೆ ಸಿರಿಕೃಷ್ಣ ಒಲಿದ ಸಹಜದಲಿ //ಕೃಷ್ಣಕೇಳಿಯ ಕಥೆಯ ಪೊಗಳುವಾ ಈ ಕಾವ್ಯವೇದಾಂತ ಗೂಡಾರ್ಥ ಹೊಂದಿರುವ ರಸಕಾವ್ಯ//60// + +ಗೋಪಿಕೋನ್ಮಾದವನ್ನು ಮೂಲದೊಂದಿಗೆ ತಮ್ಮದೆ ಆದ ಶೈಲಿಯಲ್ಲಿ ಖಂಡಕಾವ್ಯವನ್ನಾಗಿ ಕನ್ನಡ ಸಾಹಿತ್ಯಕ್ಕೆ ಪ್ರೋ. ಕೆ. ಇ. ರಾಧಾಕೃಷ್ಣ ಆವರು ನೀಡೀದ್ದಾರೆ. ಸರಳವಾದ ಶಬ್ಧಗಳಲ್ಲಿ ಕಾವ್ಯವನ್ನು ಕಟ್ಟಿಕೊಡುವ ಹೊತ್ತಿನಲ್ಲಿ ಶೃಂಗಾರವನ್ನು ಅಶ್ಲೀಲತೆಯ ಸೋಂಕಿಲ್ಲದೇ ಸಾ. ಶಿ. ಮರುಳಯ್ಯನವರು ಮುನ್ನುಡಿಯಲ್ಲಿ ಬರೆದಂತೆ ಸುಭಗತೆ ಇದೆ. ಮರುಳಯ್ಯನವರು ಇದನ್ನು ನಾರಿಕೇಳಪಾಕ ಎಂದು ವರ್ಣಿಸಿದ್ದಾರೆ. ಮೂಲದ ಮಂದಾಕ್ರಾಂತ ವೃತ್ತದಲ್ಲಿರುವ ಪದ್ಯಗಳು ಅನೇಕ ಸಲ ಶಬ್ಧಗಳ ಮದ್ಯದಲ್ಲಿ ಬರುವ ಯತಿಗಳಿಂದಾಗಿ ರಸಭಂಗವಾಗುವಂತೆ ಇದ್ದಂತೆ ತೋರುತ್ತದೆ. ಆದರೆ ಸರಳಗನ್ನಡದ ಚೌಪದಿಯಲ್ಲಿ ಇದ್ಯಾವ ಅಡೆತಡೆಗಳಿಲ್ಲದೇ ಕಾವ್ಯದ ಸೌಂದರ್ಯವನ್ನು ರಸಿಕರು ಸವಿಯಬಹುದು. ಗೋಪಿಕೋನ್ಮಾದವೆನ್ನುವದು ಕೃಷ್ಣಭ್ರಮೆಯನ್ನು ಕಳೆಯುವ ಸಾರೂಪ್ಯ ಸಿದ್ಧಿ ಎಂದು ಕವಿ ವರ್ಣಿಸುತ್ತಾರೆ. ಕೃಷ್ಣನೆಂದರೆ ಆಕರ್ಷಿಸುವನು, ಆತ ಭ್ರಮೆಯಾಗಕೂಡದು. ಸಿದ್ಧಿಯಲ್ಲಿ ಭ್ರಮೆ ಇರುವದಿಲ್ಲ. ಗೋಪಿಕೆಯಲ್ಲಿಯೂ ಈ ಕೃಷ್ಣನೆನ್ನುವ ಕಾಮನಯ್ಯನಲ್ಲ. ಅವ ಪದ್ಮಪತ್ರಮಿವಾಂಭಸಾ, ಎಲ್ಲರೊಳಗಿದ್ದೂ ಎಲ್ಲದಕ್ಕಿಂತಲೂ ಹೊರಗಿರುವವ ಎನ್ನುವದನ್ನು ತುಂಬಾ ಚನ್ನಾಗಿ ಇಲ್ಲಿ ಅಭಿವ್ಯಕ್ತಿಸಲಾಗಿದೆ. + + + +ಸಮಗ್ರ ಕಾವ್ಯದ ಪರಿಚಯವನ್ನು ಪ್ರೋ. ಜಿ. ವೆಂಕಟಸುಬ್ಬಯ್ಯನವರೇ ವಿವರಿಸಿದ್ದಾರೆ. ತಿಮ್ಮಪ್ಪದಾಸರೆನ್ನುವವರು “ಭ್ರಮರಗೀತ” ವೆನ್ನುವ ಇದೇ ರೀತಿ ಹೋಲುವ ಕೃತಿಯೊಂದನ್ನು ಕನ್ನಡದಲ್ಲಿಯೂ ಬರೆದಿದ್ದಾರೆ ಎನ್ನುವ ಹೊಸ ಸಂಗತಿಯನ್ನು ಹೊರಹಾಕಿದ್ದಾರೆ. ಒಂದು ಸುಂದರ ಕಾವ್ಯವನ್ನು ಕನ್ನಡದ್ದೇನೋ ಎನ್ನುವ ರೀತಿಯಲ್ಲಿ ರೂಪಾಂತರಿಸಿರುವ ಪ್ರೋ. ಕೆ. ಇ. ರಾಧಾಕೃಷ್ಣರನ್ನು ಅಭಿನಂದಿಸಲೇ ಬೇಕು. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_216.txt b/Kenda Sampige/article_216.txt new file mode 100644 index 0000000000000000000000000000000000000000..d79f6a6d065d94e88323eb07344d4f177c133741 --- /dev/null +++ b/Kenda Sampige/article_216.txt @@ -0,0 +1,63 @@ +“ಮಾಯೆಯನೆಂತು ಸಂಹರಿಸದೆಯೆ ಪಿಡಿವುದಯ್ ನನ್ನಿ…?” + +ಮಾಯಾಜಿಂಕೆಯ ಬೆನ್ನಟ್ಟಿದ ರಾಮ ಅದರ ಹಿಂದೆ ಓಡುತ್ತಾ ಓಡುತ್ತಾ ಈಗ ಸಿಗುತ್ತದೆ ಈಗ ಸಿಗುತ್ತದೆ ಇನ್ನೇನೂ ಸಿಕ್ಕಿಯೇ ಬಿಟ್ಟಿತು ಅನ್ನುವ ಭ್ರಮೆಯಿಂದ ಇಲ್ಲ, ಇನ್ನು ಇದು ಜೀವಂತ ಸಿಗುವುದಿಲ್ಲ ಬಾಣ ಹೂಡುವುದೊಂದೇ ಉಳಿದಿರುವ ಮಾರ್ಗ ಅನ್ನುವ ನಿರ್ಧಾರಕ್ಕೆ ಬರುವಾಗ ಬರುವ ಮಾತಿದು. ಅಂದರೆ ಅಲ್ಲಿಯವರೆಗೆ ರಾಮನಿಗೂ ಇದು ಮಾಯೆ, ನಿಜವಾದ ಜಿಂಕೆಯಲ್ಲ ಅನ್ನುವ ಸಂಗತಿ ಅರಿವಾಗದಂತಹ ಮಾಯೆ ಮುಸುಕಿತ್ತು. ಮಾಯೆಯನ್ನು ಕಳೆಯದೇ, ಅದನ್ನು ಸಂಹರಿಸದೇ ಸತ್ಯದರ್ಶನ ಸಾಧ್ಯವಿಲ್ಲ ಅನ್ನುವ ಅರಿವು ಮೂಡಿದಾಗ ಮಾಯೆಯ ಮುಸುಕು ಸರಿಯಿತು. + +“ವ್ಯಾಕರಣ ಛಂದಸ್ಸಲಂಕಾರ ಸೂತ್ರಂಗಳಿಂ ಕಬ್ಬವೆಣ್ಣಂ ಕಟ್ಟುವೆಗ್ಗತನಮಂ ಬಿಟ್ಟು ಹೃದಯದಾವೇಶಮನೆ ನೆಚ್ಚುವ ಮಹಾಕವಿಯ ಮಾರ್ಗದಿಂ…” + +ವ್ಯಾಕರಣ ಛಂದಸ್ಸು ಅಲಂಕಾರ ಜ್ಞಾನದಿಂದ ಕಾವ್ಯರಚಿಸಲು ಸಾಧ್ಯ ಅನ್ನುವ ದಡ್ಡತನವನ್ನು ಬಿಟ್ಟು ಕಾವ್ಯರಚಿಸಲು ತನ್ನ ಹೃದಯದ ಆವೇಶವನ್ನು ನೆಚ್ಚುವ ಕವಿಯ ಮಾರ್ಗದಂತೆ ಬಿಲ್ಲುಬಾಣಗಳನ್ನು ಹಿಡಿದು ಚಿನ್ನದ ಜಿಂಕೆಯನ್ನು ಹಿಡಿಯಲು ಸಾಧ್ಯವಿಲ್ಲ…. ಬಾಣ ಪ್ರಯೋಗಿಸುವುದೊಂದೇ ಮಾರ್ಗ ಅನ್ನುವ ಅರಿವಾಗಿ ರಾಮ ಬಾಣ ಪ್ರಯೋಗಕ್ಕೆ ಮುಂದಾಗುತ್ತಾನೆ. ಬಾಣ ಹೂಡಿದ. ಅಲ್ಲಿಗೆ ಚಿನ್ನದ ಜಿಂಕೆ ಅನ್ನುವ ಮಾಯೆ ಕಳೆದು ಮಾರೀಚನೆಂಬ ಸತ್ಯದ ಅನಾವರಣ! + +(ಕುವೆಂಪು) + +ಅರಣ್ಯವಾಸದ ಅಂತಿಮ ದಿನಗಳವು. ಅಯೋಧ್ಯೆಗೆ ಮರಳುವ ನಿರ್ಧಾರ ಮಾಡಿ ಸಡಗರದಿಂದ ತಯಾರಾಗುತ್ತಿದ್ದ ಘಳಿಗೆ. ಅದು ಅವರ ಗುರಿಯಾಗಬೇಕಿತ್ತು. ಅಂತಹ ಸಮಯದಲ್ಲಿಯೇ ಸೀತೆಯ ಕಣ್ಣುಗಳನ್ನು ಈ ಬಂಗಾರದ ಜಿಂಕೆ ಕೆಣಕಿತು. ಆ ಕ್ಷಣದ ಅವಳ ಗುರಿ ಬದಲಾಯಿತು. + +ಒಂದುಮೆಟುಕದು ಕೈಗೆ; ಏನೋ ಕಣ್ಕೆಣಕುವುದು;ಸಂದಿಯವೆ ನಮ್ಮ ಗತಿ! – ಮಂಕುತಿಮ್ಮ + +“ಕೋಳು ಹೋಹರೆ, ಅತ್ತಿಗೆ ಈ ಕಾಳ್ಮಿಗದ ಕಾಂಚನ ಕೈತವತೆಗೆ?” + +ಇದು ಮಾಯೆ, ಇದಕ್ಕೆ ಬಲಿಬೀಳಬಾರದು ಅನ್ನುವ ಎಚ್ಚರದಲ್ಲಿ ಲಕ್ಷ್ಮಣ ಇದ್ದ. ಹೇಳಿಯೂ ಹೇಳಿದ. ಆದರೆ ಸೀತೆಯನ್ನು ಆಗಲೇ ಮಾಯೆ ಮುಸುಕಿತ್ತು. ಸತ್ಯಾಸತ್ಯದ ವಿವೇಕ ಮರೆಯಾಗಿತ್ತು. ರಾಮನನ್ನು ಕಳುಹಿಸಿದಳು. ಇಬ್ಬರು ಮಾಯೆಯ ಪ್ರಭಾವಕ್ಕೆ ಒಳಗಾದ ವ್ಯಕ್ತಿಗಳ ನಡುವೆ ಅದರಿಂದ ಹೊರತಾಗಿ ಉಳಿದ ಲಕ್ಷ್ಮಣ ಅಸಹಾಯಕತೆ, ಆರ್ತತೆ, ಬಳಲಿಕೆಯನ್ನು ತೋರ್ಪಡಿಸುವ ಒಂದು ಪ್ರತಿಮೆಯಾಗಿ ಅದ್ಭುತ ಪದವಾಗಿ, ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಒಂದು ಕೂಗು ಈ ಇಡೀ ಪ್ರಸಂಗದಲ್ಲಿ ಮತ್ತೆ ಮತ್ತೆ ಅನುರಣಿಸುತ್ತದೆ. ಕಾಡುತ್ತದೆ. ಅಷ್ಟರಮಟ್ಟಿಗೆ ಈ ಪ್ರಕರಣವನ್ನು ಮತ್ತೆ ಹೊಸದಾಗಿ ಕಟ್ಟಿಕೊಟ್ಟಿದ್ದಾರೆ ಕವಿ ಕುವೆಂಪು. ಇಡಿಯ ಪ್ರಸಂಗದಲ್ಲಿ ಭರಿಸಲಾಗದ ದುಃಖಕ್ಕೆ ಒಳಗಾಗುವ ಪಾತ್ರ ಲಕ್ಷ್ಮಣ. + +ರಾಮಬಾಣಕ್ಕೆ ಸಿಕ್ಕಿ ಸಾಯುವ ಮುನ್ನ ಮಾರೀಚ ಓ ಲಕ್ಷ್ಮಣಾ ಓ ಲಕ್ಷ್ಮಣಾ ಅನ್ನುವ ಆರ್ತನಾದ ಮಾಡುತ್ತಾ ತನ್ನ ಪಾಲಿನ ಅಭಿನಯವನ್ನು ಸಾವಿನಲ್ಲೂ ಮೆರೆದ. ಅವನು ನೈಜ ಕಲಾವಿದ ಅನ್ನುತ್ತಾರೆ ಲಕ್ಷ್ಮೀಶ ತೋಳ್ಪಾಡಿ. ಜೀವ ಹೋಗುವ ಕಾಲಕ್ಕಾದರೂ ಸತ್ಯ ಹೇಳ್ಬೇಕಲ್ವಾ. ಆ ಸಮಯದಲ್ಲೂ ನಿಜವಾದ ಕಲಾವಿದನಿಗೆ ಬೇಕಾದ ಅದ್ಭುತ ಸಂಯಮವನ್ನು ತೋರಿ ತನ್ನ ಪಾಲಿನ ಪಾತ್ರವನ್ನು ಅಭಿನಯಿಸಿ ಕೃತಾರ್ಥನಾದ. + + + +“ಧಿಗಿಲೆಂದುದೆದೆ ರಾಮಂಗೆ…” ಅನ್ನುತ್ತಾರೆ ಕವಿ. ಕಲಾವಿದನಾಗಿ ಮಾರೀಚ ಗೆದ್ದ ಬಗೆ ಅದು. ರಾಮನಿಗೇ ಹಾಗೆ ಅನ್ನಿಸಿರಬೇಕಾದರೆ ಇನ್ನು ಕೇಳಿದ ಸೀತೆಯ ಗತಿ ಏನಾಗಿರಬೇಡ? ಅಂದುಕೊಂಡಂತೆ ವರ್ತಿಸಿದಳು ಸೀತೆ. + +ಮೊದಲೇ ಮಾಯೆ ಕವಿದ ಬುದ್ಧಿ. ಇದು ರಾಮನ ಕೂಗಲ್ಲ ಅನ್ನುವ ವಿವೇಕದ ಎಚ್ಚರಕ್ಕೆ ಬರಲು ಅವಳಿಗಾಗಲಿಲ್ಲ. ಆ ಕೂಗನ್ನು ಕೇಳಿಯೂ ಲಕ್ಷ್ಮಣನ ಧೃಡತೆ, ನಂಬಿಕೆ ಅಲುಗಾಡಲಿಲ್ಲ. + +“ತಾಳ್ಮೆ ತಾಯೀ, ತಾಳ್ಮೆ. ರಕ್ಕಸನಸುರ ಮಾಯೆ ಕೂಗುತಿದೆ. ಅಗ್ರಜನ ಧ್ವನಿ ಅದಲ್ತು. ಭ್ರಾಂತಿಯಿಂ ನಡೆಯದಿರಿತರೆಯಂತೆ”ಅಣ್ಣನ ಆಜ್ಞಾಪಾಲಕನಾಗಿ ನಿಶ್ಚಲನಾಗಿ ಧೃಢವಾಗಿ ನಿಂತ ಲಕ್ಷ್ಮಣ. ಇನ್ನೊಂದೆಡೆ ಮಾಯೆಯ ವಶವಾಗಿ ಗಾಬರಿಯಿಂದ ನೀರಿನಿಂದ ಹೊರಬಿದ್ದ ಮೀನಿನಂತೆ ಚಡಪಡಿಸುವ ಸೀತೆ. ನಡುವೆ ಮತ್ತೆ ಮತ್ತೆ ಅನುರಣಿಸುವ ಕೂಗು “ಓ ಲಕ್ಷ್ಮಣಾ ಓ ಲಕ್ಷ್ಮಣಾ…” + +ಪರಿಪರಿಯಿಂದ ಬೇಡಿಕೊಳ್ಳುತ್ತಾಳೆ ಸೀತೆ ಲಕ್ಷ್ಮಣನನ್ನು ಹೋಗಿ ನೋಡು, ನನ್ನ ರಾಮನಿಗೇನೋ ಆಗಿದೆ ಅನ್ನುವ ಕಳವಳದಲ್ಲಿ. + +“ನೀಮಣ್ಣನಂ ಪ್ರೀತಿಸುವ ಮೊದಲೆ ಪ್ರೀತಿಸಿದೆ ನಾನಾತನಂ” ಅನ್ನುವ ಲಕ್ಷ್ಮಣನಿಗೆ ಗೊತ್ತು ರಾಮಮಹಿಮೆ. ಅದಕ್ಕೇ ಇಂತಹ ಪರಿಸ್ಥಿತಿಯಲ್ಲೂ ಧೃತಿಗೆಡದೇ ಸೀತೆಗೆ ಹೇಳುತ್ತಾನೆ, “ತಮ್ಮ ನಿಧಿಯ ಬೆಲೆ ತಮಗರಿಯದವರವೋಲಾಡುವಿರಿ! ಸಾಲ್ಗುಮೀ ಕಳವಳಂ” ಅಂತ. + +ಲಕ್ಷ್ಮಣನ ಈ ನಿಶ್ಚಲತೆ ಸೀತೆಯನ್ನು ಕೆರಳಿಸುತ್ತದೆ. ಕಣ್ಕೆರಳಿ ವಿಕಟಮುಖಿಯಾಗಿ ಭೂತಿನಿಯಂತಾಗುತ್ತಾಳೆ. ಆದರೂ ಲಕ್ಷ್ಮಣನ ಚಿತ್ತ ಅಲುಗಾಡುವುದಿಲ್ಲ. ಅಣ್ಣನ ಮೇಲಿನ ಅಚಲ ನಂಬಿಕೆ, ಅಣ್ಣನ ಆಜ್ಞಾಧಾರಕನಾಗಿ ನಿಂತ ಲಕ್ಷ್ಮಣ. ತಮ್ಮ ನಿಧಿಯ ಬೆಲೆ ತಮಗೇ ಅರಿಯದ ಹಾಗೆ ಕಳವಳಿಸುವ ಸೀತೆಯ ಬಗಗೆ ಮರುಕದ ನೋಟ. ಅವನಿಗೆ ಗೊತ್ತು, “ರಾಮನಪ್ರಾಕೃತಂ! ರಾಮನಕ್ಷಯ ಮಹಿಮನಾತಂಗೆ ಪೇಳಣೆಯೆ ದೇವರ್ಕಳುಂ? ದನುಜರಾವ ಹೊಯಿಕೈ?” ದೇವತೆಗಳೇ ರಾಮನ ಪರಾಕ್ರಮದ ಮುಂದೆ ನಿಲ್ಲಲಾರರು. ಇನ್ನು ದಾನವರು ಯಾವ ಲೆಕ್ಕ? + +ಲಕ್ಷ್ಮಣ ಎಚ್ಚರದಲ್ಲಿಯೇ ಇದ್ದಾನೆ. ಮಾಯೆಗೆ ಬಲಿಬೀಳಬಾರದೆನ್ನುವ ನಿರಂತರ ಎಚ್ಚರ. ಈ ಎಚ್ಚರದಲ್ಲಿಯೇ ಅವನಿದ್ದ ಸೀತೆ ಅದೆಷ್ಟು ನಿಂದಿಸಿದರೂ. ಆದರೆ ಸೀತೆ ಕೆರಳಿದ ಭೂತಿನಿಯಾಗಿ ಬಾಯ್ಬಡಿದುಕೊಳ್ಳುತ್ತಾ ಮತಿವಿಕಲೆಯಾಗಿ ತನ್ನ ಬಾಯ್ಗತ್ತಿಯಿಂದ ಲಕ್ಷ್ಮಣನ ನಿಶ್ಚಲತೆಯ ಬೇರನ್ನೇ ಕೊಯ್ಯುವವರೆಗೂ… + +“ಎಳೆಯ ಕರು ಬೆಳೆದ ಮೇಲದರ ತಾಯನೆ ಬೆದೆಗೆ ಬಯಸಿದಪುದಯ್ಯೋ…!” + +ತತ್ತರಿಸಿದುದು ಬುದ್ಧಿ ರಾಮಾನುಜನಿಗೆ. ಪೆಣ್ತನದ ಕಲ್ತನಕೆಲ್ಲೆ ಮೇಣೆಣೆಯುಂಟೆ? ಮತ್ತೆ ಅಲ್ಲಿ ಕ್ಷಣ ನಿಲ್ಲಲು ಸಾಧ್ಯವಾಗಲಿಲ್ಲ ಲಕ್ಷ್ಮಣನಿಗೆ. + +ಅದೆಷ್ಟು ಅರ್ಥಗರ್ಭಿತ ಇಲ್ಲಿ ಕವಿ ಬಳಸುವ ರಾಮಾನುಜ ಅನ್ನುವ ಪದ. ರಾಮನ ತಮ್ಮ ಲಕ್ಷ್ಮಣ. ರಾಮನಿಗಾಗಿ ರಾಮನ ಪತ್ನಿಗಾಗಿ ಈ ದಂಪತಿಗಳ ಹಿತಕ್ಕಾಗಿ, ಅರಮನೆ ಊರ್ಮಿಳೆ ಎಲ್ಲವನ್ನೂ ಬಿಟ್ಟು ಬಂದಿದ್ದಾನೆ. ಅಂತಹ ಲಕ್ಷ್ಮಣನಿಗೆ ಸೀತೆ ಆಡುತ್ತಿರುವ ಪ್ರತಿಯೊಂದು‌ ಮಾತು ಕೂಡಾ ಎದೆಗೆ ಚುಚ್ಚುವ ಬಾಣ! + +“ಹಿಂದುಹಿಂದಕೆ ನೋಡುತೋಡಿದನ್…” ಬಹಳ ಇಕ್ಕಟ್ಟಿನ ಪ್ರಸಂಗ ಇದು ಲಕ್ಷ್ಮಣನಿಗೆ. ಇತ್ತ ಇರಲಾರದೇ ಅತ್ತ ಹೋಗಲಾರದೇ ಅನುಭವಿಸುವ ತಳಮಳವನ್ನು ಈ ಮಾತುಗಳಲ್ಲಿ ಕುವೆಂಪು ಅದೆಷ್ಟು ಶಕ್ತವಾಗಿ ಕಟ್ಟಿಕೊಡುತ್ತಾರೆ! ಅವನಿಗೆ ಗೊತ್ತು, ತನ್ನ ಅಗತ್ಯ ಇರುವುದು ಇಲ್ಲಿಯೇ ಅಂತ. ಇಲ್ಲಿ ಇಲ್ಲದಿದ್ದರೆ ಏನೋ ಕೇಡಾಗುವ ಶಂಕೆ ಇದೆ ಅವನಲ್ಲಿ. ಅಲ್ಲಿ ರಾಮನಿದ್ದಾನೆ. ಅಲ್ಲಿ ನನ್ನ ಅಗತ್ಯ ಇಲ್ಲ ಅನ್ನುವ ಅರಿವೂ ಅವನಿಗಿದೆ. ಆದರೂ ಬೇಕಾದ ಕಡೆಗೆ ಇರಲಾಗದ ಸಂದಿಗ್ಧತೆ. ಈಗ ಲಕ್ಷ್ಮಣನ ಮನದಲ್ಲೂ ಅದೇ ಕೂಗು… “ಓ‌ ಲಕ್ಷ್ಮಣಾ ಓ‌ ಲಕ್ಷ್ಮಣಾ…. ಇದೆಂಥ ಪರಿಸ್ಥಿತಿ ನಿನ್ನದು” + +ಇಲ್ಲಿ ಲಕ್ಷ್ಮಣರೇಖೆಯ ಪ್ರಸಂಗವನ್ನು ಕೈಬಿಟ್ಟಿದ್ದಾರೆ ಕುವೆಂಪು. ಕತೆಗೊಂದು ಸಹಜಗತಿಯನ್ನು ತರುವ ಕವಿಯ ಉದ್ದೇಶ ಸರಿ ಇರಬಹುದು. ಆದರೆ ಮೂಲ ರಾಮಾಯಣದಲ್ಲಿ ಬರುವಂತೆ ರಾವಣ ಯತಿಯ ವೇಷ ಹಾಕಿದ್ದು ಸೀತೆಯನ್ನು ಲಕ್ಷ್ಮಣರೇಖೆಯಿಂದ ಹೊರಗೆ ಬರುವಂತೆ ಮಾಡುವುದಕ್ಕಾಗಿ. ಇಲ್ಲಿ ಅಂತಹ ಪ್ರಸಂಗವೇ ಇಲ್ಲ. ರಾವಣನಾಗಿಯೇ ಪುಷ್ಪಕವಿಮಾನದಿಂದ ಕೆಳಗಿಳಿಯಬಹುದಿತ್ತು. ತಡೆಯಲು ಲಕ್ಷ್ಮಣನಾಗಲಿ ಲಕ್ಷ್ಮಣರೇಖೆಯಾಗಲಿ ಇರಲಿಲ್ಲ. ಹಾಗಾಗಿ ಲಕ್ಷ್ಮಣರೇಖೆಯನ್ನು ಕೈಬಿಟ್ಟು ಯತಿಯ ವೇಷವನ್ನು ಉಳಿಸಿಕೊಳ್ಳುವ ಅನಿವಾರ್ಯತೆಯೂ ಇರಲಿಲ್ಲ ಅಂತ ಫಕ್ಕನೆ ಅನ್ನಿಸಿತು. ಕಾವ್ಯಕ್ಕೆ ನಾಟಕೀಯತೆಯನ್ನು ತರುವ ಉದ್ದೇಶ ಇರಬಹುದೇನೋ. + +ಅರಸಿ ಅರಸಿ ಸಿಕ್ಕ ರಾಮ. ಮಾಯೆ ಕಳೆದು ಮಾರೀಚನೆಂಬ ಸತ್ಯದರ್ಶನ ಕಂಡ ರಾಮ. “ಓ ಲಕ್ಷ್ಮಣಾ. ಕೇಡಾಯ್ತಲಾ! ದೇವಿಯೋರ್ವಳಂ ಬಿಟ್ಟೇಕೆ ಬಂದೆ? ಕೊರಳಂ ಕೊಯ್ದೆ! ಹಾ ಕೊಂದೆ ನೀ ಕೊಂದೆ!” ಅಂತಂದು ಮತ್ತೆ ಲಕ್ಷ್ಮಣನ ಬೇಗುದಿಯನ್ನು ಹೆಚ್ಚಿಸುತ್ತಾನೆ. + +ಝಗಝಗಿಪ ಕೆಂಡದುರಿಚೆಲ್ವಿಗೆ “ಮರುಳುಗೊಳುತ್ತದನೋತು ಸೆರಗಿನೊಳಿರುಂಕಿ ಕದ್ದೋಡುವಣುಗಿಯ ತೆರದಿ ಹಾರಿದನು ಬಾನ್ದೇರನೇರಿ. ಓ ಲಕ್ಷ್ಮಣಾ! ಲಕ್ಷ್ಮಣಾ! ಲಕ್ಷ್ಮಣಾ! ಲಕ್ಷ್ಮಣಾ ಓ! ಎಂದೆಂದು ಬಗ್ಗನಿಂ ಪಿಡಿಗೊಂಡೆರಳೆವೆಣ್ಣೊರಲ್ವಂತೆವೋಲ್ ಹೊಮ್ಮಿತುಕ್ಕಿತು ಹರಿದು ಹಬ್ಬಿತಾಕ್ರಂದನಂ ದೇವಿಯ ಕೊರಲ್ ಬುಗ್ಗೆಯಿಂ ನೆತ್ತರೋಲಂತೆ ಚಿಮ್ಮಿ….” + +ಝಗಮಗನೆ ಹೊಳೆಯುವ ಕೆಂಡದ ಉರಿಯ ಚೆಲ್ವಿಗೆ ಮರುಳುಗೊಂಡು ಅದನ್ನು ತನ್ನ ಸೆರಗಿನಲ್ಲಿ ಬಚ್ಚಿಟ್ಟು ಕದ್ದೋಡುವ ಮಗಳಂತೆ ಸೀತೆಯನ್ನು ರಾವಣ ಅಪಹರಿಸಿದ ಅನ್ನುತ್ತಾರೆ ಕವಿ. ರಾವಣನ ಬಾಳ್ದಿಟ್ಟಿ ಮೈಥುಲಿಯ ಬೈತಲೆಯ ಬಟ್ಟೆಯೊಳ್ ಕಣ್ಗೆಟ್ಟವೋಲ್…! ಮೋಹವೆಂಬ ಮಾಯೆ ರಾವಣನಿಗೂ ಮುಸುಕಿತು. + +“ಎಲ್ಲರುಂ ಜಿತಮನಸ್ಕರೆ ದೈವ ವಿಧಿ ಮಾಯೆಚೆಲ್ವುರೂಪಿನಂ ಬಂದು ಕಣ್ಕುಕ್ಕುವನಕ” + +ಬಹುಶಃ ಮಂಕುತಿಮ್ಮನ ಈ ಸಾಲು ಸೀತೆಯ ಚಿನ್ನದಜಿಂಕೆಯ ಮೋಹಕ್ಕೂ ರಾವಣನ ಸೀತೆಯ ಮೋಹಕ್ಕೂ ಉತ್ತರ ಕೊಡುತ್ತದೆ. ಮನಸ್ಸನ್ನು ಗೆಲ್ಲುವುದು ಅಷ್ಟು ಸುಲಭವಲ್ಲ ಎಂಥವರಿಗೂ. + +ರಾಮನ ವಿನಾ ಏನನ್ನೂ ಬಯಸದಿದ್ದ ಭೂಮಿಯ ಮಗಳಾದ ಸೀತೆಯ ಮನಸ್ಸೇ ಚಂಚಲವಾಯ್ತು ಬಂಗಾರದ ಜಿಂಕೆ ಕಂಡಾಗ. ವಾರಿಧಿಯೊಳಡಗಿ ನಿದ್ರಿಪ ಬಾಡವವೋ ತೃಷ್ಣೆ; ಆರದನು ಕೆರಳಿಪರೊ? + + + +ಅತ್ಯಂತ ಉತ್ಕಟವಾದ ತೀವ್ರವಾದ ಭಾವಸಂಘರ್ಷವಿರುವ ರಾಮಾಯಣ ದರ್ಶನಂ ಮಹಾಕಾವ್ಯದ ಭಾಗ ಇದು. “ಓ ಲಕ್ಷ್ಮಣಾ ಓ ಲಕ್ಷ್ಮಣಾ..” ಅನ್ನುವ ಕೂಗು ಇಡೀ ಅಧ್ಯಾಯದೊಳಗೆ ಅನುರಣಿಸುತ್ತಾ ಹೋಗುತ್ತದೆ. ಹೊಸದಾಗಿ ಅಷ್ಟೇ ಅದ್ಭುತವಾಗಿ ಕಟ್ಟಿಕೊಟ್ಟ ರಾಮಾಯಣದ ಭಾಗ ಇದು. ಇದು ರಸ ಋಷಿ ಕಾಣ್ಕೆ! + +ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಮೂಲತಃ ಉಡುಪಿಯವರು. ಈಗ ಮಂಗಳೂರು ವಾಸಿ ಮುಸುಕು ತೆರೆದು, ತೂಗುದೀಪ, ಇರುವುದೆಲ್ಲವ ಬಿಟ್ಟು ಇವರ ಪ್ರಕಟಿತ ಕವನ ಸಂಕಲನಗಳು. ಪ್ರೇಮದ ಶರಧಿಗೆ, ಆಕಾಶಬುಟ್ಟಿ, ಒಲವ ಶ್ರಾವಣ ಇವರ ಭಾವಗೀತೆ ಸಿ ಡಿ ಗಳು \ No newline at end of file diff --git a/Kenda Sampige/article_217.txt b/Kenda Sampige/article_217.txt new file mode 100644 index 0000000000000000000000000000000000000000..51fd6de4879b17749702af1ba1d12ceaf789667b --- /dev/null +++ b/Kenda Sampige/article_217.txt @@ -0,0 +1,27 @@ +ನೀವು ‘ವಾರಿಸ್ ಡಯಿರಿ’ಯವರ ಆತ್ಮಕಥೆಯಾದ ‘ಡೆಸರ್ಟ್ ಫ್ಲವರ್ಸ್’ ಅಥವಾ “ಮರುಭೂಮಿಯ ಹೂ” ಕೃತಿಯ ಬಗ್ಗೆ ಕೇಳಿರಬಹುದು. ಆಫ್ರಿಕಾದ ಕೆಲ ಬುಡಕಟ್ಟು ಸಮುದಾಯಗಳಲ್ಲಿ ಚಾಲ್ತಿಯಲ್ಲಿರುವ ಅಮಾನುಷವಾದ ಯೋನಿಛೇಧನಕ್ಕೊಳಗಾದ ಹೆಣ್ಣುಮಗಳೊಬ್ಬಳು ಪ್ರಸಿದ್ಧ ಮಾಡೆಲ್ ಆಗುವ ಅವರ ಜೀವನದ ಕತೆ (ಇದನ್ನು ಡಾ. ಜಗದೀಶ್ ಕೊಪ್ಪ ಅವರು ಕನ್ನಡಾನುವಾದ ಮಾಡಿದ್ದಾರೆ). ಈ‌ ಕೃತಿ ವ್ಯಾಪಕ ಪ್ರಶಂಸೆಗೊಳಗಾಗಿ ಪ್ರಪಂಚದಾದ್ಯಂತ ಜನಪ್ರಿಯವಾಯಿತು. ಮುಂದೆ ಇದನ್ನು ಸಿನಿಮಾ ಮಾಡಿದಾಗ ಅದರಲ್ಲಿ ವಾರಿಸ್ ಡಯಿರಿಯ ಪಾತ್ರ ನಿರ್ವಹಿಸಿದ್ದು ‘ಸಫಾ’ ಅನ್ನುವ ಬಾಲಕಿ. ಆ ಬಾಲಕಿ ಯೋನಿಛೇದನಕ್ಕೆ ಒಳಗಾಗುವ ಅಪಾಯಕ್ಕೆ ಒಳಗಾಗಿ ವಾರಿಸ್ ಅವರಿಂದ ರಕ್ಷಿಸಲ್ಪಡುತ್ತಾಳೆ. ಅದರ ಕುರಿತು ವಾರಿಸ್ ಅವರು ‘Saving Safa’ ಅನ್ನೋ ಪುಸ್ತಕ ಬರೆದಿದ್ದು, ಅದನ್ನು ಪ್ರಸಾದ್ ನಾಯ್ಕ ಕನ್ನಡಾನುವಾದ ಮಾಡಿದ್ದಾರೆ. ಪುಸ್ತಕದ ಬಗ್ಗೆ ಹೇಳುವ ಮುನ್ನ ಯೋನಿಛೇದನ ಕುರಿತು ತಿಳಿದುಕೊಳ್ಳಬೇಕಾಗುತ್ತದೆ. + +ಸರ್ಕಮ್ನಿಶನ್ ಅಥವಾ ಕನ್ನಡದಲ್ಲಿ ಮುಂಜಿ ಎಂದು ಕರೆಯಲ್ಪಡುವ ಕ್ರಿಯೆ ಅಂದರೆ ಗಂಡುಮಕ್ಕಳ ಜನನಾಂಗದ ಮುಂದೊಗಲನ್ನು ಕತ್ತರಿಸಿ ಉಳಿದ ಚರ್ಮವನ್ನು ಹಿಂದೊತ್ತುವುದು. ಮುಸ್ಲಿಮರಿಗೆ ಮತ್ತು ಯಹೂದಿ ಧರ್ಮದವರಿಗೆ ಇದು ಒಂದು ಕಡ್ಡಾಯವಾದ ಧಾರ್ಮಿಕ ವಿಧಿ. ಅದನ್ನು ಮಾಡುವಾಗ ಸ್ವಚ್ಛತೆ ಕಾಪಾಡಬೇಕು, ಮಾಡಿದ ನಂತರ ಗಾಯಕ್ಕೆ ಸರಿಯಾದ ರೀತಿಯಲ್ಲಿ ಆರೈಕೆ ಮಾಡಬೇಕು ಅನ್ನೋ ಕೆಲ ಮುಂಜಾಗ್ರತಾ ಕ್ರಮಗಳನ್ನು ಬಿಟ್ಟರೆ ಎಂದಿಗೂ ಅಪಾಯಕಾರಿಯಲ್ಲದ ಪದ್ಧತಿ. ಅದೂ ಅಲ್ಲದೇ ಕೆಲವು ಸೋಂಕಿನ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯಕವೆಂದೂ ಹೇಳುತ್ತಾರೆ. ಕೆಲವೊಮ್ಮೆ ವೈದ್ಯರ ಸಲಹೆಯ ಮೇರೆಗೆ ಧಾರ್ಮಿಕ ನಿಬಂಧನೆಗಳಿಗೆ ಹೊರತಾದವರು ಕೂಡಾ ಈ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. + +(ವಾರಿಸ್‌ ಡಯರಿ ಮತ್ತು ಸಫಾ) + +ಆದರೆ ಹೆಣ್ಣುಮಕ್ಕಳಿಗೆ ಮಾಡುವ ಯೋನಿಛೇದನ ಆ ರೀತಿಯದ್ದಲ್ಲ. ಚಂದ್ರನಾಡಿ ಅಥವಾ ಕ್ಲಿಟರಸ್ ಅನ್ನು ಕತ್ತರಿಸುವ ಪದ್ಧತಿ ಅತ್ಯಂತ ಕ್ರೂರ ಮತ್ತು ಅಮಾನುಷವಾದುದು. ಇದರ ಹಿಂದೆ ಯಾವುದೇ ವೈಜ್ಞಾನಿಕ ಕಾರಣಗಳೂ ಇಲ್ಲ. ಕೆಲ ಸಮರ್ಥಕರು ಇದು ಮನೋನಿಗ್ರಹಕ್ಕೆ ಕಾರಣವಾಗುತ್ತದೆ ಎಂಬ ನೆಪ ಕೊಡುತ್ತಾರಷ್ಟೇ.  ಆಫ್ರಿಕಾದ ಜಿಬೂತಿ, ಸೊಮಾಲಿಯಾ, ಸುಡಾನ್ ಇತ್ಯಾದಿ ದೇಶಗಳ ಮತ್ತು ಇಂಡೋಶಿಯಾದ ಕೆಲ ಸಮುದಾಯಗಳ ಮತ್ತು ಇತರೇ ಕೆಲವೇ ಇಸ್ಲಾಮಿಕ್ ಧಾರ್ಮಿಕ ವಿದ್ವಾಂಸರ ಬಿಟ್ಟರೆ ಉಳಿದ ಇಸ್ಲಾಮಿಕ್ ಪಂಡಿತರು ಇದನ್ನು ಸ್ಪಷ್ಟವಾಗಿ ವಿರೋಧಿಸಿದ್ದಾರೆ. ಇದರ ವಿರೋಧಿ ನಿರ್ಷಯಗಳು ಕೂಡಾ ಧಾರ್ಮಿಕ ಸಭೆಗಳಲ್ಲಿ ತೆಗೆದುಕೊಳ್ಳಲ್ಪಟ್ಟಿವೆ. ಆಫ್ರಿಕದ ಕೆಲ ದೇಶಗಳಲ್ಲಿ, ಇಂಡೋನೇಶಿಯಾ ಮತ್ತು ಯೆಮೆನ್ನಿನ ಕೆಲವೆಡೆ ಬಿಟ್ಟು ಇದು ಚಾಲ್ತಿಯಲ್ಲಿ ಇಲ್ಲ ಕೂಡಾ. ಭಾರತದಲ್ಲಿ ಕೆಲವೆಡೆ ಈ ಪ್ರಕ್ರಿಯೆ ನಡೆಸೋ ಬಗ್ಗೆ ಸುದ್ದಿಗಳು ಬಂದರೂ ಸ್ಪಷ್ಟವಾದ ಸಾಕ್ಷಿ ಸಿಕ್ಕಿದ್ದನ್ನು ಓದಿಲ್ಲ. ಈ ಬಗ್ಗೆ ತಿಳುವಳಿಕೆಯುಳ್ಳವರ ವಿಚಾರಿಸಿದಾಗ ಭಾರತದ ಧಾರ್ಮಿಕ ವಿದ್ವಾಂಸರಲ್ಲಿ ಇದೊಂದು ಚರ್ಚೆಯ ವಿಷಯ ಕೂಡ ಆಗಿರಲಿಲ್ಲ ಎಂದು ತಿಳಿದು ಬಂದಿತು. ಈಗೀಗ ಆಫ್ರಿಕನ್ ದೇಶಗಳಲ್ಲಿ ಮತ್ತು ಇಂಡೀನೇಶಿಯಾದಲ್ಲಿ ಕೂಡಾ ಇದರ ನಿರ್ಮೂಲನೆಗೆ ವ್ಯಾಪಕ ಹೋರಾಟಗಳು ನಡೆಯುತ್ತಿವೆ. + +ಮೇಲೆ ಹೇಳಿದಂತೆ ಸ್ವತಃ ಯೋನಿಛೇದನಕ್ಕೆ ಒಳಗಾದವರು ವಾರಿಸ್ ಡಯಿರಿ. ಅವರ ಜೀವನ ಕಥೆ ಚಲನಚಿತ್ರವಾದಾಗ ಲೇಖಕಿ ಬಾಲಕಿಯಾಗಿದ್ದಾಗಿನ ಪಾತ್ರ ನಿರ್ವಹಿಸಿದ್ದು ಸಫಾ ಅನ್ನುವ ಜಿಬೂತಿ ದೇಶದ ಬಾಲಕಿ (ಜಿಬೂತಿ ಆಫ್ರಿಕಾದ ಪೂರ್ವ ಕರಾವಳಿಯ, ಆಫ್ರಿಕಾದ ಕೊಂಬು ಎಂದು ಕರೆಯಲ್ಪಡುವ ಪ್ರದೇಶದಲ್ಲಿದೆ. ಅತ್ಯಂತ ವ್ಯೂಹಾತ್ಮಕ ಜಾಗದಲ್ಲಿ ಇರುವ ಕಾರಣ ವಿಶ್ವದ ಅನೇಕ ರಾಜಕೀಯ ಶಕ್ತಿಗಳ ಮೇಲಾಟಕ್ಕೆ ಇದು ಒಳಗಾಗಿದೆ, ಸಮಯ ಸಿಕ್ಕರೆ ಈ ದೇಶದ ಬಗ್ಗೆ ತಡಕಾಡಿ. ಕುತೂಹಲಕರ ಅಂಶಗಳು ಸಿಗುತ್ತವೆ). ಅವಳು ಸಿನಿಮಾಗೆ ಆಯ್ಕೆಯಾಗಿದ್ದು ಕೂಡಾ ಒಂದು ಆಶ್ಚರ್ಯ. ಸಫಾಳ ತಾಯಿ ಅವಳ‌ ನೋಡಿಕೊಳ್ಳಲು ನೆರೆಮನೆಯಾಕೆಯ ಹತ್ತಿರ ಕೊಟ್ಟಾಗ ಅವಳು ತನ್ನ ಮಕ್ಕಳೊಟ್ಟಿಗೆ ಇವಳನ್ನೂ ಕರೆತರುತ್ತಾಳೆ. ಆದರೆ ಸಫಾ ಆಯ್ಕೆಯಾಗುತ್ತಾಳೆ. ಅವಳನ್ನು ಸಿನಿಮಾಕ್ಕೆ ತೆಗೆದುಕೊಳ್ಳುವಾಗ ಮನೆಯವರೊಟ್ಟಿಗೆ ಒಂದು ಒಪ್ಪಂದವಾಗಿರುತ್ತದೆ. ಅದರ ಪ್ರಕಾರ ಅವಳ ಕುಟುಂಬ ಯಾವುದೇ ಕಾರಣಕ್ಕೆ ಸಫಾಳನ್ನು ಎಫ್.ಜಿ.ಎಂ ( Female Genital Mutilation) ಪ್ರಕ್ರಿಯೆಗೆ ಒಳಪಡಿಸಬಾರದು ಮತ್ತು ಅದಕ್ಕೆ ಪ್ರತಿಯಾಗಿ ಸಫಾ ಒಂದು ಪ್ರಾಯಕ್ಕೆ ಬರುವವರೆಗೆ ಅವರ ಮನೆಯವರಿಗೆ ಪ್ರತಿ ತಿಂಗಳೂ ಒಪ್ಪಂದದಲ್ಲಿರುವಷ್ಟು ಆಹಾರ ಕೊಡಬೇಕು. ಅಂದರೆ ಅಕ್ಕಿ, ಪಾಸ್ತಾ, ಹಿಟ್ಟು, ಚಹಾಪುಡಿ, ಸಕ್ಕರೆ, ಬಿಸ್ಕತ್ತುಗಳು, ಮೀನು, ಇಂಧನ ಮೊದಲಾದ ವಸ್ತುಗಳು. ಅದಲ್ಲದೇ ಸಫಾಳ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳಬೇಕು. ಕೆಲ ಹಂತದ ಮಾತುಕತೆಯ ನಂತರ ಹಣದ ಆಸೆಗೆ ಅವಳ ಕುಟುಂಬ ಇದನ್ನು ಒಪ್ಪಿಕೊಂಡರೂ ಅದನ್ನು ವರ್ಷಾನುಗಟ್ಟಲೆ ಪಾಲಿಸುವ ಯಾವುದೇ ನಂಬಿಕೆ ವಾರಿಸ್ ಡಯಿರಿ ಅವರಿಗೆ ಇರುವುದಿಲ್ಲ. + + + +ಅದಕ್ಕೆ ಅವರಿಗೆ ತೋಚಿದ ಒಂದೇ ಉಪಾಯ ಜಿಬೂತಿಗೆ ಬಂದು ಸಫಾಳನ್ನು ಜೊತೆಗೆ ಕರೆದುಕೊಂಡು ಹೋಗಿ ಯುರೋಪಿನ ಸುರಕ್ಷಿತ ವಾತಾವರಣದಲ್ಲಿ ಬೆಳೆಸುವುದು. ಆದರೆ ಅದು ಸುಲಭದ ಕೆಲಸವಾಗಿರಲಿಲ್ಲ. ಅರಾಜಕತೆ, ಭ್ರಷ್ಟಾಚಾರ ತುಂಬಿದ ದೇಶ. ಅತಿಯಾದ ಪುರುಷ ಪ್ರಾಧಾನ್ಯದ ದೇಶ. ಅನೇಕ ಮೂಢನಂಬಿಕೆಗಳು. ಇಂತಹ ನಾಡಿನಿಂದ ಸಫಾಳನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವುದು ಸುಲಭದ ಕೆಲಸವಾಗಿರಲಿಲ್ಲ. ಇವೆಲ್ಲದರ ನಡುವೆ ಬೇಜವಾಬ್ದಾರಿ ನಡುವಳಿಕೆಯುಳ್ಳ ಅವಳ ತಂದೆ. + +ವಾರಿಸ್ ಜಿಬೂತಿಗೆ ಬಂದಾಗ ಸಫಾಳಿಗೆ ಅವಳ ಸಾಂಗತ್ಯ ಸ್ವರ್ಗವನ್ನೇ ಸಿಕ್ಕಿದ ಹಾಗೆ ಮಾಡುತ್ತದೆ. ಹೋಟೆಲಿನಲ್ಲಿ ಸಿಗುವ ಬರ್ಗರ್ ಮತ್ತು ಇತರೇ ಮಾಂಸದ ಅಡುಗೆಗಳು ಅವಳಿಗೆ ತೀರಾ ಕೈಗೆಟುಕದ ವಸ್ತುಗಳಾಗಿದ್ದ ಕಾರಣ ಅತ್ಯಂತ ಖುಷಿಯಿಂದ ಆಸ್ವಾದಿಸುತ್ತಾಳೆ. ಆದರೆ ಅವಳು ಹೋಟೆಲಿನ ಈಜುಕೊಳದಲ್ಲಿ ಈಜುಡುಗೆ ಧರಿಸಿ ಈಜುವುದನ್ನು ನೋಡಿದಾಗ ಅಚಾನಕ್ಕಾಗಿ ಬಂದ ಅವಳ ತಂದೆ ಕ್ರುದ್ಧನಾಗುತ್ತಾನೆ. ಆದರೆ ಹಣ ಅವನ ಬಾಯನ್ನು ಸುಲಭವಾಗಿ‌ ಮುಚ್ಚಿಸುತ್ತದೆ. ನಿಧಾನಕ್ಕೆ ಸಫಾಳ ಕುಟುಂಬದ ಮನವೊಲಿಸುವಲ್ಲಿ ಯಶಸ್ವಿಯಾದ ವಾರಿಸ್ ಸಫಾಳನ್ನು ಕರೆದೊಯ್ಯುವ ಪ್ರಯತ್ನ ಮುಂದುವರೆಸುತ್ತಾರೆ. ಶ್ರಮ ಹಾಕಿದ ನಂತರ ವಾರಿಸ್ಸರ ಡೆಸರ್ಟ್ ಫ್ಲವರ್ ಪ್ರತಿಷ್ಟಾನದ ಪ್ರತಿನಿಧಿ ಸೋಫಿ ವಾರಿಸ್, ಅವಳ ತಂದೆ ಇದ್ರಿಸ್ ಮತ್ತು ಯೋನಿಛೇದನಕ್ಕೊಳಗಾದ ಮತ್ತೊಬ್ಬ ಹೆಣ್ಣುಮಗಳು ಇನಾಬಳನ್ನು ಕರೆತರಲು ಯಶಸ್ವಿಯಾಗುತ್ತಾಳೆ. + +ಆದರೆ ಪರಮ ಮೊಂಡನಾಗಿದ್ದ ಇದ್ರಿಸನನ್ನು ನಿಭಾಯಿಸುವುದೇ ದೊಡ್ಡ ಕಷ್ಟದ ಕೆಲಸವಾಗಿರುತ್ತದೆ. ಆದರೆ ಸಮಯ ಕಳೆದಂತೆ ಇದ್ರಿಸ್ ಬದಲಾಗುವ ಪರಿ ಮಾತ್ರ ಆಶ್ಚರ್ಯಕರವಾದುದು. ಒಮ್ಮೆ ಹೊರಜಗತ್ತನ್ನು ನೋಡುವ ಅವಕಾಶ ಪಡೆದ ವಿಚಾರಗಳು ನಿಧಾನಕ್ಕೆ ಬದಲಾಗುತ್ತಾ ಸಾಗುತ್ತವೆ. ಮುಂದೆ ಅವನು ಯೋನಿಛೇದನದ ಪ್ರಬಲ ವಿರೋಧಿಯಾಗಿ ಬದಲಾಗುತ್ತಾನೆ.‌ + +(ಪ್ರಸಾದ್ ನಾಯ್ಕ್) + +ಹೀಗೆ ಎಲ್ಲಾ ಅಡೆತಡೆಗಳನ್ನು ಸಫಾ ಹೇಗೆ ದಾಟುತ್ತಾಳೆ ಅಥವಾ ವಾರಿಸ್ ಡಯಿರಿಯಿಂದ ದಾಟಿಸಲ್ಪಟ್ಟು ಹೇಗೆ ಸುರಕ್ಷಿತ ಸ್ಥಳಕ್ಕೆ ಬಂದು ತನ್ನ ವಿದ್ಯಾಭ್ಯಾಸ ಮುಂದುವರೆಸುತ್ತಾಳೆ ಅನ್ನುವುದನ್ನು ಅರಿಯಲು ನೀವು ಪುಸ್ತಕವನ್ನೇ ಓದಬೇಕು. ಇದು ನಿಮ್ಮನ್ನು ಒಂದು ಕ್ರೂರ ಸಂಪ್ರದಾಯದ ಬಗೆಗೆ ಆಳವಾದ ಚಿಂತನೆಗೆ ಹಚ್ಚುತ್ತದೆ. ಅದೇ ರೀತಿ ಜಿಬೂತಿ ಎಂಬ ದೇಶದ ಬಗ್ಗೆ ಒಂದು ಚಿಕ್ಕದಾದ ಚಿತ್ರಣವನ್ನೂ ಕೊಡುತ್ತದೆ. + +ಆದರೆ ಆ ದೇಶಗಳ ಎಲ್ಲಾ ಹೆಣ್ಣುಮಕ್ಕಳು ಸಫಾಳಷ್ಟು ಅದೃಷ್ಟವಂತರಲ್ಲ. ಲಕ್ಷಗಟ್ಟಲೆ ಹೆಣ್ಣುಮಕ್ಕಳ ಜೀವ ಈ ಪದ್ಧತಿಯಿಂದ ನಲುಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಡೆಸರ್ಟ್ ಫ್ಲವರ್ ಸೇರಿದಂತೆ ಅನೇಕ ಸಾಮಾಜಿಕ ಸೇವೆಯಲ್ಲಿ ನಿರತರಾಗಿರುವ ಸಂಘಟನೆಗಳು ಇದನ್ನು ತೊಲಗಿಸಲು ಹೋರಾಟ ಮಾಡುತ್ತಾ ಇದ್ದರೂ ಕೂಡಾ ಸಾಗಬೇಕಾದ ದಾರಿ ಇನ್ನೂ ದೂರವೇ ಇದೆ. ಅದೃಷ್ಟವಶಾತ್ ನಮ್ಮ ದೇಶದಲ್ಲಿ ಈ ಕ್ರೂರ ಪದ್ಧತಿ ಇಲ್ಲ. ಆದರೆ ಈ ರೀತಿಯ ಸಂಗತಿಗಳ ಅರಿವು ನಮ್ಮನ್ನು ಸಾಮಾಜಿಕ ಅನಿಷ್ಟಗಳೆಡೆಗೆ ಸೂಕ್ಷ್ಮವಾದ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಲು ಪ್ರೇರೇಪಿಸುತ್ತದೆ. ನಮ್ಮ ಸಮಾಜದಲ್ಲಿನ ಬೇರೆ ಕೆಡುಕುಗಳ ಬಗೆಗೆ ಸರಿಯಾದ ದೃಷ್ಟಿಕೋನದಲ್ಲಿ ಯೋಚನೆ ಮಾಡಲು ಪರೋಕ್ಷವಾಗಿ ಪ್ರೇರೇಪಣೆ ಕೊಡುತ್ತದೆ. + +ಪ್ರಸ್ತುತ ಪುಸ್ತಕವನ್ನು ಅನುವಾದಿಸಿದ ದಕ್ಷಿಣ ಕನ್ನಡದ ಕಿನ್ನಿಗೋಳಿಯ ಪ್ರಸಾದ್ ನಾಯ್ಕ್ ದೆಹಲಿಯಲ್ಲಿ ಕೇಂದ್ರ ಸರಕಾರದ ಉದ್ದಿಮೆಯೊಂದರಲ್ಲಿ ಇಂಜಿನಿಯರ್ ಆಗಿದ್ದಾರೆ. ಅವರಿಗೆ ಅಂಗೋಲಾದಲ್ಲಿ ಸೇವೆ ಸಲ್ಲಿಸೋ ಅವಕಾಶ ಸಿಕ್ಕಾಗ ಬರೆದ ವಿಶಿಷ್ಟ ಪ್ರವಾಸ ಕಥನ ‘ಹಾಯ್ ಅಂಗೋಲಾ’ ಮೂಲಕ ಪರಿಚಿತರು. ಅತ್ಯಂತ ಸರಳವಾಗಿ, ಸುಂದರವಾಗಿ ಮತ್ತು ಆಳವಾಗಿ ಬರೆಯಬಲ್ಲರು. ಅವರು ಇದನ್ನು  ಅನುವಾದ ಮಾಡುತ್ತಿದ್ದಾರೆ ಅಂದಾಗ ಕುತೂಹಲವಿತ್ತು. ಈ ಪುಸ್ತಕವನ್ನು ಓದುಗರಿಗೆ ಚೂರೂ ತೊಡಕಾಗದಂತೆ ಕನ್ನಡಕ್ಕೆ ತಂದಿದ್ದಾರೆ. ನನ್ನ ನಿರೀಕ್ಷೆಗಿಂತಲೂ ಚಂದದ ಅನುವಾದ ಮಾಡಿದ್ದಾರೆ. ಅವರಿಂದ ಇನ್ನೂ ಹೆಚ್ಚಿನ ಅಮೂಲ್ಯ ಕೃತಿಗಳು ಬರುವ ಮತ್ತು ಅನುವಾದಗೊಳ್ಳುವ ನಿರೀಕ್ಷೆಯಿದೆ. + +ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. \ No newline at end of file diff --git a/Kenda Sampige/article_218.txt b/Kenda Sampige/article_218.txt new file mode 100644 index 0000000000000000000000000000000000000000..960622486eeaa66868721df699cb924409827f40 --- /dev/null +++ b/Kenda Sampige/article_218.txt @@ -0,0 +1,45 @@ +ಒಬ್ಬ ಕಲಾವಿದನಿಗೆ ಅತ್ಯಂತ ಸವಾಲಾದ ಕೆಲಸವೆಂದರೆ ಅಮೂರ್ತ ವಿಚಾರಗಳನ್ನು, ತಾತ್ವಿಕ ಪರಿಕಲ್ಪನೆಗಳನ್ನು, ಅನುದಿನದ ಬದುಕಿನ ವಾಸ್ತವದ ಭೌತಿಕ ಆಯಾಮಗಳನ್ನು ಪ್ರತಿ ಧ್ವನಿಸುವ ಅನುಭವಗಳಾಗಿ ಪರಿವರ್ತಿಸುವುದು. ಕಲಾಕೃತಿಗಳನ್ನು ಗಟ್ಟಿ ಪ್ರತಿಮೆಗಳನ್ನು ಆಧರಿಸಿ ಸಂರಚಿತಗೊಳ್ಳುವಂತಹದು. ಅಸ್ಪಷ್ಟ ರೂಪ, ಆಕಾರಗಳಿಗೆ ದಕ್ಕದ ಅಂಶಗಳನ್ನು ನಿರಾಕರಿಸುವ ವ್ಯಕ್ತ ಪರಿಕಲ್ಪನೆಗಳೊಂದಿಗೆ ಕಲಾಕೃತಿಗಳು ಮುಖಾಮುಖಿಯಾಗುತ್ತವೆ. ಒಂದು ಪ್ರತಿಮೆಯ ಅವಲೋಕನವು ವ್ಯಕ್ತಿಯನ್ನು ಭೌತಿಕ ಸತ್ಯದ ಹಲವಾರು ಆಯಾಮಗಳಿಗೆ ತೆರೆದುಕೊಳ್ಳುವಂತೆ ಮಾಡುತ್ತದೆ. + +(ಡಾ. ಎಂ.ಎಸ್. ಮೂರ್ತಿ) + +ಅನೇಕ ಅನುಭಾವಿ, ಪರಿಣಿತ, ಶ್ರೇಷ್ಠ ಕಲಾವಿದರು ಎನಿಸಿಕೊಂಡವರು ಭೌತಿಕ ವಸ್ತುವಿನ ಅಗೋಚರ ಆಯಾಮಗಳನ್ನು ಪ್ರತಿಮೆಗಳ ಮೂಲಕ ಅನಾವರಣಗೊಳಿಸುತ್ತಾರೆ. ತನ್ಮೂಲಕ ವಸ್ತುಗಳೊಂದಿಗೆ ಉಂಟಾಗುವ ಭಾವನೆಗಳು ಮತ್ತು ಹೊಳಹುಗಳೊಂದಿಗೆ ಸಂಬಂಧ ಸೃಷ್ಟಿಸುತ್ತಾರೆ. ಈ ಮಾತಿನ ಮುಂದುವರಿಕೆಯಾಗಿ ಗಮನಿಸುವುದಾದರೆ, ಮಾನವ ಜನಾಂಗಕ್ಕೆ ಸಂಬಂಧಿಸಿದ ಸ್ವಪ್ರಜ್ಞೆಯು ಸುತ್ತಣ ಜಗತ್ತಿನಿಂದ ಸ್ವತಂತ್ರವಾದುದಲ್ಲ ಮತ್ತು ಖಚಿತವಾಗಿ ಮಾನವ ಪ್ರಜ್ಞೆಯು ಭೌತಿಕ ಅಸ್ತಿತ್ವದಲ್ಲಿ ಸಾಕಾರಗೊಳ್ಳುವಂತಹುದು ಎಂದು ಅರಿಯಬಹುದು. ಹಾಗಾಗಿ ಬದುಕಿನ ಅರ್ಥದ ಹುಡುಕಾಟಕ್ಕೆ ವೈಯಕ್ತಿಕ ವ್ಯಷ್ಠಿಯ ಮಹತ್ವವನ್ನು ಗ್ರಹಿಸಿಲು ನಮ್ಮ ಸುತ್ತಲ ಸಮಾಜದ ಬಹುತ್ವದ ಅವಿರ್ಭಾವವನ್ನು ಗ್ರಹಿಸುವುದು ಅತ್ಯಂತ ಅಗತ್ಯವಾದ ಅಂಶ. ಭೌತಿಕತೆಗೆ ಪ್ರಾಶಸ್ತ್ಯ ನೀಡದ, ಸಹಜತೆಗೆ ಹೊರತಾದ ಯಾವುದೇ ಅತೀಂದ್ರಿಯ, ಆಧ್ಯಾತ್ಮಿಕ ಹುಡುಕಾಟವೆಂಬುದಕ್ಕೆ ಅರ್ಥವಿಲ್ಲ. + +ಮಾನವನ ಅಸ್ತಿತ್ವದ ಅರ್ಥವಂತಿಗೆ, ಮೌಲ್ಯಗಳ ಕುರಿತ ಕೃತಿಗಳು, ಪ್ರತಿಪಾದನೆಗೆ ಸಕ್ರಿಯವಾಗಿ ತೊಡಗಿಸಿಕೊಂಡ, ಚಿಂತಕರು, ತತ್ವಜ್ಞಾನಿಗಳು ನಮ್ಮಲ್ಲಿ ಬಹಳ ಇದ್ದಾರೆ. ಇಂತಹ ತತ್ವಜ್ಞಾನಿಗಳ ವಿಚಾರ ಮತ್ತು ಅವರ ಕೃತಿಗಳು ಮಾನವನ ಬದುಕಿನ ಮೌಲ್ಯಗಳನ್ನು ಅರ್ಥೈಸುವ ಹಾಗೂ ತನಿಖೆ ಮಾಡುವ ಕ್ರಮಗಳು ವಿಭಿನ್ನವಾಗಿವೆ. ಇಂತಹ ಪರಿಕಲ್ಪನೆಗಳಲ್ಲಿ ಪಾರಮಾರ್ಥಿಕವಾದಿಗಳು, ಅಸ್ತಿತ್ವವಾದಿಗಳು ಹಾಗೂ ಐಹಿಕವಾದಿಗಳು, ಸಂದೇಹವಾದಿಗಳು, ವಿಚಾರವಾದಿಗಳು ಇತ್ಯಾದಿ ಚಿಂತಕರು ಬದುಕು ಅರ್ಥಗಳನ್ನು ಕುರಿತು ವಿಸ್ಮಯಕರವಾದ, ವಿಸ್ತೃತವಾದ ವಿವರಣೆಗಳನ್ನು ನೀಡುತ್ತಾ ಬಂದಿದ್ದಾರೆ. + +ಸಾಹಿತ್ಯಲೋಕ ಸೃಷ್ಟಿಸುವ ಉತ್ಕೃಷ್ಟ ಕೃತಿಗಳಲ್ಲಿ ಬದುಕಿನ ಸಂಕಟ, ಪ್ರಕ್ಷುಬ್ದತೆಗಳ ಅನುಭವ ತೀವ್ರತೆಗಳಿಗೆ ಈಡಾದ ನಿಗೂಢ ಸತ್ಯದ ಶೋಧನೆಯ ಹುಡುಕಾಟದ ಚಿತ್ರಣವನ್ನು ಕಾಣಬಹುದು. ಪೊಳ್ಳು ಸತ್ಯವನ್ನು ನಿರಾಕರಿಸುವ ಆತ್ಮವಿಶ್ವಾಸ ಸಹಿಸುವ ಶಕ್ತಿ ಸಂಕಟವನ್ನು ಮೌನವಾಗಿ ಬೇಗುದಿಗಳ ಅನುಭವದ ನಿಗೂಢತೆಯ ಲೋಕದ ಅಂತರಂಗದೊಳಗೆ ಪ್ರವೇಶಿಸುವ ಮುಕ್ತತೆ, ಈ ಎಲ್ಲವೂ ಸತ್ಯವನ್ನು ಹುಡುಕುವ ದಾರಿಯ ಭಾಗಗಳೇ ಆಗಿವೆ. ಅಂತಿಮವಾಗಿ ಈ ನಿಜಗಳನ್ನು ಅನ್ವೇಷಕರು ಕಾಣದೆಯೇ ಇರಬಹುದು. ಅನೂಹ್ಯ, ನೋವು, ಮುಗಿಯದ ಸಂಘರ್ಷ, ತಾಕಲಾಟಗಳನ್ನು ಸಹಿಸಿಕೊಳ್ಳುವ ಸಾಮಥ್ರ್ಯವು ಈಗಾಗಲೇ ಅನನ್ಯ ಸತ್ಯದ ಅನ್ವೇಷಣೆಗೆ ಬಳಸುತ್ತಿರುವ ಸ್ವಾನುಕೂಲ ಸಿದ್ದಮಾದರಿಗಳನ್ನು ವರ್ಜಿಸುವಾಗ ಸೃಷ್ಟಿಯಾಗುವಂತಹದು. ಇಂತಹದ ದೃಢ ನಿರಾಕರಣೆಗೆ ಕಾರಣವಾದ ವ್ಯಷ್ಟಿಗಳ ಚೈತನ್ಯವೇ ಸೃಜನಶೀಲ ಲೇಖಕನಿಗೆ ತನ್ನ ಅನ್ವೇಷಣೆಯ ಕೇಂದ್ರವಾಗುತ್ತದೆ. + +ಎಂ.ಎಸ್. ಮೂರ್ತಿಯವರ `ಬೌಲ್’ ಕಾದಂಬರಿಯು ವ್ಯಷ್ಟಿಗಳ ಸತ್ಯಾನ್ವೇಷಣೆಯ ವಿಭಿನ್ನ ಬಗೆಗಳ ನಿಗೂಢ ಲೋಕಗಳಿಗೆ ನಮ್ಮನ್ನು ಕರೆದೊಯ್ದು ನಮ್ಮ ವ್ಯಕ್ತಿತ್ವದ ವಾಸ್ತವ ಸತ್ಯವನ್ನು ವೈವಿಧ್ಯಮಯ ರೀತಿಯಲ್ಲಿ ಶೋಧಿಸಿಕೊಳ್ಳುವಂತೆ ಪ್ರೇರೇಪಿಸುತ್ತದೆ. ಈ ಕಾದಂಬರಿಯು ಸ್ಥಳೀಯ ಇಹಜೀವನದ ಸತ್ಯ ಕೇಂದ್ರಿತವಾಗಿದ್ದು ನಮ್ಮೆಲ್ಲರಿಗೆ ಪರಿಚಿತವಿರುವ ನಗರ ಸ್ಥಳಗಳಿಂದ ದೂರವಾಗಿರುವ ಹಾಗೂ ನಮಗೆ ಚಿರಪರಿಚಿತವಾದ ಮಹಾನಗರ ಕೇಂದ್ರಗಳಿಂದಲೂ ದೂರವಾದಂತಹ ಸ್ಥಳೀಯ – ಪ್ರಾಪಂಚಿಕ ವಾಸ್ತವದಲ್ಲಿ ನೆಲೆಗೊಂಡಿರುವ ಕಾದಂಬರಿಯಾಗಿದೆ. ಕಾದಂಬರಿಯ ಪಾತ್ರಗಳು ಕೂಡ, ನಾವು ತಲತಲಾಂತರದಿಂದ ಸಹಜವಾಗಿ ಬಾಳಿ ಬದುಕಿದ ಸಮಾಜ ಹಾಗೂ ಬೆಳೆದುಬಂದ ಸಂಸ್ಕೃತಿಗಿಂತಲೂ ಸಂಪೂರ್ಣವಾಗಿ ಭಿನ್ನವಾಗಿರುವ ಅನನ್ಯ ಹಾಗೂ ಅಪರಿಚಿತವಾಗಿರುವ ವ್ಯಕ್ತಿತ್ವಗಳಾಗಿವೆ. + +ಈ ಕಾದಂಬರಿಯ ಮೂಲಕ ಮೂರ್ತಿಯವರು ನಮ್ಮ ಅರಿವಿಗೆ ಬಂದಿರದ ಅನುಭಾವದ ಲೋಕವೊಂದನ್ನು ಸೃಷ್ಟಿಸಿದ್ದಾರೆ. ನಮ್ಮ ಅರಿವಿಗೆ ಬಂದಿರದ ಅನೇಕ ಅನುಭವಗಳನ್ನು ಎದುರುಗೊಳ್ಳುವ ಕುತೂಹಲದೊಂದಿಗೇ ನಾವು ಇಲ್ಲಿ ಪ್ರವೇಶಿಸಬೇಕಿದೆ. ಇಂಥ ಅನ್ಯತಾಭಾವದ ಗುಣಲಕ್ಷಣಗಳು ಈ ಕಾದಂಬರಿಯ ಅತ್ಯಂತ ಚೋದಕ ಗುಣಗಳಾಗಿವೆ. + +ನಮ್ಮ ಕಾಲದ ಪ್ರಮುಖ ಸಮಾಜೋ-ಸಾಂಸ್ಕೃತಿಕ, ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟುಗಳು ಹಾಗೂ ಸೃಜನಾತ್ಮಕ ಚೈತನ್ಯವನ್ನು ಹತ್ತಿಕ್ಕುವ ಸಂದರ್ಭದಲ್ಲಿ, ತಾತ್ವಿಕ, ಬೌದ್ಧಿಕ ದಿವಾಳಿತನದ ಸನ್ನಿವೇಶದಲ್ಲಿ, ಮೂರ್ತಿಯವರ `ಬೌಲ್’ ನಮ್ಮ ದೈನಂದಿನ ವಾಸ್ತವಗಳಿಂದ ದೂರವಿರುವ ವಿಶಾಲ ಜಗತ್ತೊಂದನ್ನು ನಮಗೆ ಪರಿಚಯಿಸುತ್ತದೆ. + +`ಬೌಲ್’ ಎಂತಹ ಕೃತಿಯೆಂದರೆ ಅದು `ಪ್ರಗತಿಪರ’ ವಿಮರ್ಶಕರು ಮತ್ತು ಚಿಂತಕರಿಂದ ಅಪ್ರಸ್ತುತ, ಅಸ್ಪಷ್ಟ, ಅಸಂಗತ ಎಂದೆಲ್ಲ ಕರೆಸಿಕೊಳ್ಳುವ ಅಪಾಯವನ್ನು ಎದುರಿಸುವಂತಹ ಪಾತ್ರಗಳನ್ನು ಮತ್ತು ಸನ್ನಿವೇಶಗಳ ಜಗತ್ನನ್ನು ಸೃಷ್ಟಿಸಿಕೊಂಡಿದೆ. ಕೃತಿಕಾರರ ಈ ಧೀಮಂತಿಕೆ ‘ಬೌಲ್’ ಕೃತಿಯಲ್ಲಿ ವ್ಯಕ್ತವಾಗುತ್ತವೆ. ಆಧುನಿ   ಕ ಜಗತ್ತಿನ ಎಲ್ಲ ಉದ್ವಿಗ್ನತೆಗಳನ್ನು, ದ್ವಂದ್ವಗಳನ್ನು ಮತ್ತು ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಚಿಂತನಾಕ್ರಮಗಳನ್ನು ಪ್ರಬಲ ರಚನಾತ್ಮಕ ಮೌಲ್ಯಗಳನ್ನು ‘ಬೌಲ್’ನಲ್ಲಿ ಚರ್ಚೆಗೆ ತರಲು ಸಾಧ್ಯವಿಲ್ಲ. ಇತಿಹಾಸದ ನೇರ ರೇಖೀಯ ಮತ್ತು ಕಾಲಾನುಕ್ರಮದ ಅಂಶಗಳನ್ನು ಬಲವಾಗಿ ನಂಬುವಂತಹವರು `ಬೌಲ್’ ಎಂಬ ಶಬ್ದವು ನಮ್ಮೆದುರಿಗೆ ಇರಿಸುವ ಅರ್ಥವನ್ನು ಮುನ್ನೆಲೆಗೆ ತರುವುದನ್ನು ತೀವ್ರವಾಗಿ ನಿರಾಕರಿಸಬಹುದು. ವಾಸ್ತವವಾಗಿ ಸಮಕಾಲೀನತೆಯ ಜೊತೆಗೆ ಸರಾಗವಾಗಿ ತಮ್ಮ ತಮ್ಮ ಕಲ್ಪನೆಗಳೊಂದಿಗೆ ಹೊಂದಿಕೊಂಡು ಬದುಕುವ ಜನ ಈ ಕೃತಿಯನ್ನು ಕುರಿತು ಆಧುನಿಕ ಜಗತ್ತಿನ ಮನೋಭಾವ ಮತ್ತು ಚೈತನ್ಯಗಳೊಂದಿಗೆ ಬೆರೆಯದ ಅ-ಐತಿಹಾಸಿಕ ಕಥನವೆಂದೂ, ಯಾವುದೇ ಅರ್ಥವಾಗಲಿ, ಪ್ರಾಮುಖ್ಯತೆಯಾಗಲಿ ಹೊಂದಿರದ ಕೃತಿ ಇದಾಗಿದೆ ಎಂದು ಜರೆಯಲೂಬಹುದು. ಇತಿಹಾಸವು ಹೇಗಿರುತ್ತದೆ ಮತ್ತು ನಾವು ಅದರಿಂದ ಏನನ್ನು ಪಡೆಯಬಹುದು ಎಂದು ಚಿಂತಿಸುತ್ತ ಈ ಕೃತಿಯ ಇತಿಹಾಸದ ಪ್ರಜ್ಞೆಯನ್ನು ವಿಸ್ತರಿಸುತ್ತಲೇ ನಮ್ಮ ವಿಶ್ಲೇಷಣೆ ಮುಂದುವರಿಯಬೇಕಾಗುತ್ತದೆ. ಇತಿಹಾಸದ ಅನಂತ ಸಾಧ್ಯತೆಗಳನ್ನು ಐತಿಹಾಸಿಕ ದೃಷ್ಟಿಕೋನದಲ್ಲಿಯೇ ನೋಡುವಂತೆ ‘ಬೌಲ್’ ನಮ್ಮನ್ನು ಒತ್ತಾಯಿಸುತ್ತದೆ. ಆದರೆ ಆಧುನಿಕ ಇತಿಹಾಸದ ನಮ್ಮ ರಚನೆಗಳನ್ನು ಮೀರಿ ಚಲಿಸುವುದು, ವಿಭಿನ್ನ ಇತಿಹಾಸಗಳನ್ನು ಅಳವಡಿಸಿಕೊಳ್ಳುವ ಕಲ್ಪನೆಯನ್ನು ಅಭಿವೃದ್ಧಿಪಡಿಸುವುದು ಹಾಗೂ ಇತಿಹಾಸದ ಬಗ್ಗೆ ನಮ್ಮ ಏಕರೂಪದ ದೃಷ್ಟಿಕೋನವನ್ನು ವಿಸ್ತರಿಸಿಕೊಳ್ಳುವುದು ನಮಗೆ ಬಿಟ್ಟದ್ದು. ‘ಬೌಲ್’ ಕಾದಂಬರಿಯ ಈ ಪ್ರಜ್ಞೆಯು ವೃತ್ತಾಕಾರವಾಗಿದ್ದು, ನಾಗರೀಕತೆಯ ಕಥನವಾಗಿದ್ದು ಸಮಕಾಲೀನ ವಿಚಾರಗಳಿಂದಾಗಿಲಿ, ರಾಜಕಾರಣದಿಂದಾಗಲಿ ನಿಯಂತ್ರಿಸಲ್ಪಡುವುದಿಲ್ಲ. + +‘ಬೌಲ್’ ಕಾದಂಬರಿಯ ಬಗ್ಗೆ ಮತ್ತೊಂದು ದೋಷಾರೋಪಣೆ ಏನಾಗಬಹುದೆಂದರೆ ಅದರ ಸೈದ್ಧಾಂತಿಕ ಸಮಸ್ಯೆಗಳು ಹಾಗೂ ಅತೀಂದ್ರಿಯ ಮತ್ತು ಆಧ್ಯಾತ್ಮಿಕ ಕಾಳಜಿಗಳೊಂದಿಗೆ ಲಕ್ಷಾಂತರ ಜನರ ಸಂಕಟಗಳು, ಅಧಿಕಾರ ಮತ್ತು ಅಧಿಕಾರ ಕೇಂದ್ರಿತ ವ್ಯವಸ್ಥೆಯ ಕ್ರೌರ್ಯ ಮತ್ತು ಅಮಾನವೀಯತೆಗಳು ಈ ಆಧುನಿಕ ಜಗತ್ತಿನ ಪ್ರಮುಖ ವಿಪತ್ತುಗಳು ಎಂದು ಭಾವಿಸಿದವರಿಂದಲೂ ಈ ಕೃತಿ ನಮ್ಮ ಕಾಲಕ್ಕೆ ಅಪ್ರಸ್ತುತವೆನಿಸಬಹುದು. ನಿರಾಶ್ರಿತರ, ವಲಸಿಗರ, ಕಾರ್ಮಿಕ ವರ್ಗಗಳ ದುಃಸ್ಥಿತಿ, ಬುಡಕಟ್ಟು ಮತ್ತು ವಿವಿಧ ಸ್ಥಳೀಯ ಸಮುದಾಯಗಳ ಉಳಿವಿಗಾಗಿ ನಡೆಯುವ ಹೋರಾಟ ನಿರಂತರವಾಗಿ ನಡೆಯುತ್ತಲೇ ಇವೆ. ‘ಬೌಲ್’ನ ತಳಹದಿ ನಗರ ಕೇಂದ್ರಗಳಲ್ಲಿನ ಸ್ವರೂಪವನ್ನು, ಬೃಹತ್ ಮಹಾನಗರಗಳ ಬದುಕನ್ನು ಮಾತ್ರ ಕೇಂದ್ರವಾಗಿಟ್ಟುಕೊಳ್ಳುವ ಕಲಾವಿದರಿಗೆ ಒಪ್ಪಿಕೊಳ್ಳಲು ಕಷ್ಟವಾಗಬಹುದು. ಆಧ್ಯಾತ್ಮಿಕ ಮತ್ತು ಅತೀಂದ್ರಿಯ ಅನುಭವಗಳಿಗೆ ತೆರೆದುಕೊಳ್ಳದ ಜನವರ್ಗಕ್ಕೆ ಈ ಕೃತಿ ತೊಡಕಾಗಬಹುದು. + + + +ಎಲ್ಲೆಲ್ಲಿ ಅನೈತಿಕ ರಾಜಕಾರಣವು ಶಕ್ತಿಮೀರಿ ತನ್ನ ಕಬಂಧಬಾಹುಗಳನ್ನು ಚಾಚಿಕೊಂಡು ಆಧುನಿಕ ನಾಗರಿಕತೆಯನ್ನು ಅರಾಜಕತೆಯತ್ತ ದೂಡುತ್ತಿದೆಯೋ `ಬೌಲ್’ ಅಂಥ ನಾಗರಿಕತೆಯನ್ನು ತನ್ನದೇ ವಿಶಿಷ್ಟವಾದ ರೀತಿಯಲ್ಲಿ ತೀಕ್ಷ್ಣವಾಗಿ ಟೀಕಿಸುತ್ತದೆ. ‘ಬೌಲ್’ ಯಾವುದೇ ದೃಷ್ಟಿಯಿಂದಲೂ ರಾಜಕೀಯ ಕಾದಂಬರಿಯಲ್ಲ, ಆದರೆ ಯಾವುದೇ ಸಂವೇದನಾಶೀಲ ಓದುಗರು ಇದರಲ್ಲಿ ಬರುವ ಪ್ರಭುತ್ವದ ಅಧಿಕಾರದ ಕಟುಟೀಕೆಗಳನ್ನು ಗ್ರಹಿಸದೆ ಇರಲಾರರು. ಹಾಗೆಯೇ ಈ ಕೃತಿಯು ವ್ಯಕ್ತಿಗಳು ಆಕ್ರಮಣಕಾರಿಯಾಗಿ, ಇತರರ ಬಗ್ಗೆ ಭಾವುಕರಾಗದೆ ಸ್ವಯಂಕೇಂದ್ರಿತರಾಗಿ ಮನಸೋಇಚ್ಛೆ ಬದುಕುವುದನ್ನು ರೂಢಿಸಿಕೊಂಡ ರೀತಿಯ ಸ್ವಾಧೀನ ಪ್ರಪಂಚವೊಂದರ ಸ್ವರೂಪದ ಬಗೆಗೆ ಗಹನವಾಗಿ ಚಿಂತಿಸುವಂತೆ ಮಾಡುತ್ತದೆ. ಈ ನಿಟ್ಟಿನಲ್ಲಿ `ಬೌಲ್’ ಬಂಡವಾಳದ ಶಕ್ತಿ ಕೇಂದ್ರದಂತೆ ನಿರ್ಮಿಸಲಾದ ಈ ಪ್ರಪಂಚದ ಸಂವೇದನಾಶೂನ್ಯ ಮಾರ್ಗಗಳ ಮೇಲೆ ದಾಳಿ ಮಾಡುತ್ತದೆ. ಇನ್ನೂ ವಿಸ್ತರಿಸಿ ಹೇಳುವುದಾದರೆ, ನಮ್ಮ ಸುತ್ತಲೂ ಅಸ್ತಿತ್ವದಲ್ಲಿರುವ ಈ ಸ್ಥಳೀಯ ಜಗತ್ತುಗಳನ್ನು ಈ ಕೃತಿ ಸ್ಥಾಪಿಸುತ್ತದೆ. + +ಕಾರ್ಪೋರೇಟ್ ಜಗತ್ತಿನ ಯೋಜನೆಗಳ ಆಳವಾದ ಉದ್ದೇಶಗಳನ್ನು ಪರೋಕ್ಷವಾಗಿ ಈ ಕೃತಿಯು ಸೂಕ್ಷ್ಮವಾಗಿ ಬಗೆದು ತೋರಿಸುತ್ತದೆ. ಬಲಶಾಲಿ ಕಾರ್ಪೋರೇಟ್ ಜಗತ್ತು ತನ್ನೆಲ್ಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಮೂಲಕ ಎಲ್ಲವನ್ನು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತದೆ ಎಂಬ ವಿಚಾರವೂ ಇಲ್ಲಿ ವ್ಯಕ್ತವಾಗುತ್ತದೆ. ಇವುಗಳಲ್ಲಿ ಯಾವುದನ್ನೂ ಈ ಕೃತಿಯಲ್ಲಿ ನೇರವಾಗಿ, ಸ್ಪಷ್ಟವಾಗಿ ಹೇಳಲಾಗಿಲ್ಲ. `ಬೌಲ್’ ಈ ಎಲ್ಲ ಅಂಶಗಳನ್ನು ಸೂಚ್ಯ ರೀತಿಯಲ್ಲಿ ಮುನ್ನೆಲೆಗೆ ತರುತ್ತದೆ. ಇಂಥ ರಚನಾತ್ಮಕ ನಿರೂಪಣೆಗೆ ಸಂವೇದನಾಶೀಲರಾಗುವ ಮೂಲಕ ಅಂತಹ ಚಿಂತನೆ ಮತ್ತು ಕಾಳಜಿಗಳ ಕಡೆಗೆ ಮುಖಮಾಡುವುದು ನಮಗೆ ಬಿಟ್ಟಿದ್ದು. ಇಡೀ ಕೃತಿಯಲ್ಲಿ ಯಾವುದನ್ನೂ ವಿವರವಾಗಿ ಹೇಳಲಾಗಿಲ್ಲ. ಪ್ರಾಸಂಗಿಕ ಘಟನೆಗಳಲ್ಲಿ ಮತ್ತು ನಿರ್ಣಾಯಕ ಕ್ಷಣಗಳಲ್ಲಿ ಪಾತ್ರಗಳು ಮಾಡುವ ನಿರ್ಧಾರಗಳ ಮೂಲಕ ಕಾದಂಬರಿಯು ತನ್ನ ಆಳದ ವಿಷಯಾಧಾರಿತ ಕಾಳಜಿಗಳನ್ನು ವಿಶದಪಡಿಸುತ್ತದೆ. ಮನುಷ್ಯರ ನಿರ್ಣಾಯಕ ನಿರ್ಧಾರಗಳು ಕೇವಲ ಅವರ ವೈಯಕ್ತಿಕ ಆದ್ಯತೆಗಳು ಮತ್ತು ವ್ಯಕ್ತಿಗಳ ಇಷ್ಟಾನಿಷ್ಟಗಳ ಬಗೆಗಷ್ಟೇ ಸೀಮಿತಗೊಂಡಿರುವುದಿಲ್ಲ. ಇಲ್ಲಿ ವ್ಯಕ್ತಿಗಳ ಅಸ್ತಿತ್ವವಾದದ ಆಯ್ಕೆಗಳು ಮತ್ತು ಆಘಾತಕಾರಿಯಾದ ಅನಿರೀಕ್ಷಿತ ಸಂದರ್ಭಗಳು ಮತ್ತು ವಿನಾಶಕಾರಿ ಅನುಭವಗಳನ್ನು ಅವರು ಹೇಗೆ ಎದುರಿಸುತ್ತಾರೆ ಎಂಬುದನ್ನು ಉದಾಹರಿಸಿ ಹೇಳಲಾಗಿದೆ. ಆಧುನಿಕ ಬದುಕು ಎಂತಹ ಗೊಂದಲ, ಆತಂಕ ಮತ್ತು ಅಸಹನೀಯತೆಯಿಂದ ಕೂಡಿದೆ ಎಂಬುದನ್ನು ಈ ಕಾದಂಬರಿಯ ಚಿಂತನೆಯ ಮೂಲಕವೂ ಗಮನಿಸಬಹುದು. + +‘ಬೌಲ್’ನ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಅದೊಂದು ಶುದ್ದತೆಯ ಕೃತಿಯಾಗಿಲ್ಲದಿರುವುದು. ಅಂದರೆ ಕೇವಲ ರೂಪಕಗಳ ಮೂಲಕ ಒಳಾರ್ಥಗಳನ್ನು ಹೇಳುವ ಪಠ್ಯವೂ ಅಲ್ಲದಿರುವುದು. ಸಾಂಕೇತಿಕ ಮತ್ತು ಒಳಾರ್ಥ ನೀಡುವ ಕೃತಿಗಳು ನೈಜ ಪ್ರಪಂಚದೊಂದಿಗೆ ಗಂಭೀರ ಮತ್ತು ತೀವ್ರವಾದ ಮಾತುಕತೆಗಳನ್ನು ಸ್ಥಾಪಿಸುವುದಿಲ್ಲ. ಜಗತ್ತಿನ ಪ್ರಕ್ಷುಬ್ಧತೆ ಮತ್ತು ಗದ್ದಲಗಳನ್ನು ತಮ್ಮ ಸಾಂಕೇತಿಕ ವಿಧಾನಗಳ ಮೂಲಕ ಸೆರೆಹಿಡಿಯಲು ಫ್ರಾನ್ಸ್ ಕಾಫ್ಕಾನಂತಹ ಅಸಾಮಾನ್ಯರಿಗೆ ಮಾತ್ರವೇ ಸಾಧ್ಯ. ವಾಸ್ತವಿಕತೆಯನ್ನು ನೋಡುವ ಪ್ರವೃತ್ತಿಯು ಆಲೋಚನೆ, ಭಾವನೆ ಮತ್ತು ಸೌಂದರ್ಯೋಪಾಸನೆಯ ವಿಷಯಗಳನ್ನು ಕೀಳು ಎನ್ನುವುದಲ್ಲದೇ ಆಡಂಬರದ ಮತ್ತು ನಿರರ್ಥಕವಾದ ವಿಚಾರವೆಂದು ಪರಿಗಣಿತವಾಗುತ್ತಿದೆ. ನಿಜ ಹೇಳಬೇಕೆಂದರೆ, ವಾಸ್ತವಿಕತೆಯ ಆಧುನಿಕ ಇತಿಹಾಸದ ಶಕ್ತಿಗಳ ದಟ್ಟವಾದ ಮತ್ತು ಸಂಕೀರ್ಣವಾದ ಚಲನೆಗಳನ್ನು ಈ ಕೃತಿ ಸೆರೆಹಿಡಿಯುತ್ತದೆ. ನೈಜತೆಯ ಶ್ರೇಷ್ಠ ಕೃತಿಗಳು ಸಾಂಕೇತಿಕ ನಡೆಯ ಎಲ್ಲಾ ಸೂಕ್ಷ್ಮ ವ್ಯತ್ಯಾಸಗಳನ್ನು ಎತ್ತಿ ತೋರಲು ಶಶಕ್ತವಾಗಿವೆ. ಈ ಅರ್ಥದಲ್ಲಿ ವಾಸ್ತವಿಕತೆ ಮತ್ತು ಸಾಂಕೇತಿಕತೆಯು ಪರಸ್ಪರ ವಿರುದ್ಧವಲ್ಲ. + +ಸಾಮಾನ್ಯ ಕೆಲಸ ಕಾರ್ಯಗಳ ರಚನೆಯನ್ನು ರೂಪಿಸುವಂಥ ಅಸಾಮಾನ್ಯ ಕಥೆ ಹೇಳುವ ‘ಬೌಲ್’ ನಮ್ಮ ಕಾಲದ ಅತ್ಯಂತ ಮಹತ್ವದ ಕೃತಿಯಾಗಿದೆ. ಇಡೀ ಕೃತಿಯು ಸನ್ಯಾಸಿಯಾದ ಭಿಕುವಿನ ಸುತ್ತ ಸುತ್ತುತ್ತದೆ. ತನ್ನ ಗುರು ಉಡುಗೊರೆಯಾಗಿ ನೀಡಿದ ಕೇವಲ ಒಂದು ಬಟ್ಟಲನ್ನೇ ಹಿಂಬಾಲಿಸುತ್ತ ಈ ಕೃತಿ ಸಾಗುತ್ತದೆ. ಸ್ವತಃ ಆತನೇ ಜೀವನವು ವಿಧಿಸಿದ ಮಿತಿ ಮತ್ತು ನಿರ್ಬಂಧಗಳಿಂದ ಪರಿಪೂರ್ಣವಾದ ಮೀರುವಿಕೆಯನ್ನು ಬಯಸುತ್ತಲೇ ಇರುತ್ತಾನೆ. ಆತ ಹುಡುಕುವ ಪರಿಪೂರ್ಣ ಶೂನ್ಯತೆಯು ಆತನ ನಿರ್ವಾಣವಾಗಿದೆ. ಜಗತ್ತಿಗೆ ಸೇರಿದ ಎಲ್ಲವನ್ನೂ ನಿರಾಕರಿಸುವುದು ಮತ್ತು ಬಿಡಿಸಿಕೊಳ್ಳುವುದು ಆತನಿಗೆ ಅನಿವಾರ್ಯವಾಗಿದೆ. + +ಆ ತಪಸ್ವಿಯು ಬಳಸುವ ದಾರಿಗಳು ಮತ್ತು ಆತನ ಭಿಕ್ಷಾಪಾತ್ರೆಯನ್ನು ಹೊರತುಪಡಿಸಿದರೆ ಬದುಕುಳಿಯಲು ಆತನಲ್ಲಿ ಬೇರೇನೂ ಇಲ್ಲ. ವಾಸ್ತವವಾಗಿ ತನ್ನ ಭೌತಿಕ ಉಳಿವಿಗಾಗಿ ಮೂಲಭೂತವಾಗಿ ಅಗತ್ಯವಿಲ್ಲದ ಎಲ್ಲವನ್ನೂ ಆತ ಬರಿದುಮಾಡಿಕೊಳ್ಳಬೇಕು. ಕಾದಂಬರಿಯ ನಿರೂಪಣಾ ರಚನೆಯಲ್ಲಿ ಮತ್ತು ಭಿಕುವಿನ ದಿನನಿತ್ಯದ ಅಸ್ತಿತ್ವದಲ್ಲಿ ಸಾಹಿತ್ಯಿಕ ಮತ್ತು ಶೂನ್ಯತೆಯ ರೂಪಕಗಳ ಅರ್ಥವನ್ನು ಒಟ್ಟಿಗೆ ಹೆಣೆಯಲಾಗಿದೆ. `ಬಿಕು’ ಎಂಬ ಹೆಸರೇ ಬೌದ್ಧ ಸನ್ಯಾಸಿಯ ಮಾರ್ಗಗಳನ್ನು ಸೂಚಿಸುತ್ತದೆ. ಭಿಕುವಿನ ಪರಿಪೂರ್ಣತೆ ಮತ್ತು ಅಂತಿಮ ಸ್ಥಿತಿಯು ಆತನ ಸಂಪೂರ್ಣ ಶೂನ್ಯತೆಯಲ್ಲಿಯೇ ಕಾಣಬಹುದು. ಪೂರ್ಣತೆ ಎಂಬುದು ಶೂನ್ಯತೆಯಲ್ಲಿಯೇ ಅಡಗಿರುವಂಥದ್ದು. ದುರಾಸೆ, ಅಸೂಯೆ, ಈರ್ಷ್ಯೆಗಳು ಹೇಗೆ ವ್ಯಕ್ತಿ ಮತ್ತು ಸಮಾಜಗಳ ಪ್ರಜ್ಞೆಯ ಮೇಲೆ ತಮ್ಮ ನಿಯಂತ್ರಣ ಸಾಧಿಸಿಕೊಂಡು ಆಧುನಿಕತೆಯ ಸೋಗಿನಲ್ಲಿ ಜಗತ್ತನ್ನು ಬಂಜರನ್ನಾಗಿಸುತ್ತವೆ ಎಂಬುದನ್ನು ಸೂಚ್ಯವಾಗಿ ಈ ಕೃತಿಯು ಸುಳಿವು ನೀಡುತ್ತದೆ. ಸ್ಪರ್ಧೆಯ ಹೆಸರಿನಲ್ಲಿ ಮನುಷ್ಯರು ಒಬ್ಬರನ್ನೊಬ್ಬರು ಮುಗಿಸಲು ಹವಣಿಸುವ ನಿರ್ದಯ, ಅನಾಗರಿಕ ಶಕ್ತಿ, ಅಂತಿಮವಾಗಿ ಮನುಕುಲದ ಸರ್ವನಾಶಕ್ಕೆ ಕಾರಣವಾಗುವುದನ್ನು ಕುರಿತು ಈ ಕೃತಿಯು ಗಂಭೀರವಾಗಿ ಧ್ಯಾನಿಸುತ್ತದೆ. ಶಕ್ತಿ ಮತ್ತು ಶೌರ್ಯದ ದೈತ್ಯ ನಿರ್ಮಾಣದ ಇತಿಹಾಸದ ಎದುರು ಭಿಕು ಮತ್ತು ಆತನ ಸುತ್ತಲ ಜಗತ್ತಿನ ಮೂಲಕ ಪರ್ಯಾಯ ಇತಿಹಾಸವೊಂದನ್ನು ಈ ಕೃತಿಯು ಕಾಣಿಸುತ್ತದೆ. ಇದು ಕೇವಲ ಅವಶ್ಯಕತೆಗಳ ಮೇಲೆ ನಿಂತಿರುವ ಜಗತ್ತು. ಇದು ಏನನ್ನೂ ಗಳಿಸದ ಮನುಷ್ಯರು ವಾಸಿಸುವ ಪ್ರದೇಶ. ಕೆಲವು ಸಂದರ್ಭಗಳಲ್ಲಿ ತಕ್ಕಮಟ್ಟಿಗೆ ಗಳಿಸಿದವರು ಅದೆಲ್ಲವನ್ನೂ ತ್ಯಜಿಸುತ್ತಾರೆ, ತಮ್ಮ ಗಳಿಕೆಗಿಂತ ದೂರವಿರುತ್ತಾರೆ; ಬಹುತೇಕ ಏನೂ ಇಲ್ಲದ ಬದುಕು ಸಾಗಿಸುತ್ತಾರೆ; ಮನುಕುಲದ ಬಗೆಗೆ ಒಂದಷ್ಟು ಕಾಳಜಿಯನ್ನೂ ವಹಿಸುತ್ತಾರೆ. ಒಂದು ದಿನದ ಕೂಳನ್ನು ಹೊಂದಿಸುವುದು ಹೇಗೆಂದು ಚಿಂತಿಸುತ್ತಾ ತಮ್ಮ ಉಳಿವಿಗಾಗಿ ಪ್ರತಿಕ್ಷಣವೂ ಹೆಣಗಾಡಬೇಕಾದವರ ಜೊತೆಗೆ ನಾವೂ ಮುಖಾಮುಖಿಯಾಗುತ್ತೇವೆ. ಎಲ್ಲಾ ತಾತ್ವಿಕ ಕಾಳಜಿಗಳು ಮತ್ತು ಆಧ್ಯಾತ್ಮಿಕ ಅನ್ವೇಷಣೆಗಳು, ಮೂರ್ತರೂಪದ ಭೌತಿಕ ವಿವರಗಳ ವಾಸ್ತವಿಕ ಸನ್ನಿವೇಶಗಳ ಮತ್ತು ದೈನಂದಿನ ಬದುಕಿನ ಮೂಲಕ ಈ ಕಾದಂಬರಿಯಲ್ಲಿ ಅಭಿವ್ಯಕ್ತಿ ಪಡೆಯುತ್ತವೆ. ಕೃತಿಗಳ ದೊಡ್ಡ ತಾತ್ವಿಕ ದೃಷ್ಟಿಕೋನಗಳನ್ನು ಸೃಷ್ಟಿಸಲು ಮಾನವ ಅಸ್ತಿತ್ವದ ವಾಸ್ತವಿಕ ಅಂಶಗಳು ಏಕತ್ರವಾಗಿ ಹೊರಹೊಮ್ಮುತ್ತವೆ. ಇಡೀ ಕೃತಿಯಲ್ಲಿ ಎಲ್ಲಿಯೂ ಪ್ರಯೋಗಾತ್ಮಕ ಸತ್ಯದ ಮೂಲಕ ಸ್ವತಂತ್ರವಾದ ಅಮೂರ್ತ ಚಿಂತನೆಯು ಗೋಚರವಾಗುವಂತೆ ಕಾಣುವುದಿಲ್ಲ. ಬದುಕಿನ ನೈಜ, ಭೌತಿಕ ಅನುಭವಗಳು ಕೃತಿಯ ವಿಶಾಲ ಬೌದ್ಧಿಕ ಆಯಾಮಗಳನ್ನು ತೋರುತ್ತವೆ. ಇತಿಹಾಸ ಮತ್ತು ಆಧ್ಯಾತ್ಮಿಕತೆಯು ಇಲ್ಲಿ ಪರಸ್ಪರ ಸಮಾಗಮಿಸಿವೆ. ಮೂರ್ತಿಯವರ ‘ಬೌಲ್’ ಕೃತಿಯು ಜಪಾನಿನ ಅತ್ಯಂತ ಶ್ರೇಷ್ಟ ಚಲನಚಿತ್ರ ನಿದೇರ್ಶನರಲ್ಲಿ ಒಬ್ಬರಾದ ‘ಕೆಂಜಿ ಮಿಝೋಗೋಚಿ’ಯ ((Kenji Mizoguchi)) ‘ಸಾಂಶೋ ದಿ ಬೈಲಿಫ್’ (Sansho The Bailiff) ಚಲನಚಿತ್ರವನ್ನು ನೆನಪಿಗೆ ತರುತ್ತದೆ. + +ಬದುಕಿನ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳು, ಪ್ರಜ್ಞಾಪೂರ್ವಕ ಆಯ್ಕೆಗಳಿಂದಾಗಲಿ ನಿರ್ದಿಷ್ಟ ವರ್ತನೆಗಳಿಂದಾಗಲಿ ಹೆಚ್ಚು ವಿಕಸನಗೊಂಡ ವಿಚಾರಗಳಿಂದಾಗಲಿ ಹೊರಹೊಮ್ಮುವುದಿಲ್ಲವೆಂದು ‘ಬೌಲ್’ ಧಾರಾಳವಾಗಿ ಸ್ಪಷ್ಟಪಡಿಸುತ್ತದೆ. ಬದುಕಿನ ವೈಪರೀತ್ಯಗಳು ನಮಗೆ ಸಂಪೂರ್ಣವಾಗಿ ಅನಿರೀಕ್ಷಿತ ಅಪರಿಚಿತವಾಗಿರುತ್ತವೆ; ಅಲ್ಲದೇ ಅವು ನಮ್ಮಲ್ಲಿ ಅದ್ಭುತ ಆಶ್ಚರ್ಯಗಳನ್ನು ಉಂಟುಮಾಡುತ್ತವೆ. ಜೀವನದ ಅನೇಕ ತಿರುವುಗಳು ನಮ್ಮನ್ನು ವಿಚಿತ್ರವಾದ ದಿಕ್ಕಿನಲ್ಲಿ ಎಳೆದೊಯುತ್ತವೆ ಹಾಗೂ ಬದುಕಿನ ಹಾದಿಯನ್ನೇ ಬದಲಾಯಿಸುತ್ತವೆ ಅಥವಾ ಬದಲಾಯಿಸುವಂತೆ ಒತ್ತಾಯಿಸುತ್ತವೆ. ಅಪರಿಚಿತ, ನಿಗೂಢ ಪಥಗಳನ್ನು ಅನುಸರಿಸಲು ನಮ್ಮನ್ನು ಬಲವಂತಪಡಿಸುತ್ತವೆ. ಇವುಗಳು ಬದುಕಿನ ಕರಾಳ ಮುಖಾಮುಖಿಗಳಾಗಿದ್ದು, ಇವುಗಳಿಂದಲೇ ನಾವು ನಮ್ಮ ಮಾರ್ಗಗಳನ್ನು ರೂಪಿಸಿಕೊಳ್ಳಬೇಕು. ಬೆಳಕನ್ನು ಹುಡುಕಿಕೊಳ್ಳಬೇಕು. ಕಗ್ಗತ್ತಲ ಕೂಪಗಳಿಂದಲೇ ನಾವು ಜೀವನದ ಪ್ರಕಾಶಮಾನ ಕಿರಣಗಳನ್ನು ಹಿಡಿದಿಟ್ಟುಕೊಳ್ಳಬೇಕು. ಭಿಕುವಿನ ಅನುಭವಕ್ಕೆ ಬರುವುದೂ ಇದೇ. ಯಾವುದೇ ಸಾಮಾನ್ಯ ಸಂಸಾರಸ್ಥನ ಅನುಭವಕ್ಕೆ ದಕ್ಕುವ ಕಷ್ಟಕಾರ್ಪಣ್ಯಗಳ ಪಯಣವನ್ನು `ಭಿಕು’ ಕೂಡ ಆಕಸ್ಮಿಕವಾಗಿ ಅನುಭವಿಸುತ್ತಲೇ ಬದುಕಿನ ಅನೇಕ ಘಟನೆಗಳಿಗೆ ಮುಖಾಮುಖಿಯಾಗಿ ಹೊಸ ಪಯಣವೊಂದನ್ನು ಆರಂಭಿಸಿಕೊಂಡು ಪರಿವರ್ತಿತನಾಗುತ್ತಾನೆ. ಈ ಅನುಭವಗಳು ಆತನನ್ನು ಹೊಸ ಮನುಷ್ಯನನ್ನಾಗಿ ರೂಪಿಸುತ್ತವೆ. ಸನ್ಯಾಸಿಗಳ ಲೋಕದ ಸಾನಿಧ್ಯ ಮತ್ತು ಗೃಹಸ್ಥನ ತತ್ಕಾಲದ ವಾಸ್ತವ ಬಲು ಸ್ಪಷ್ಟವಾಗಿ ಸಾಮಾನ್ಯ ಬದುಕಿನ ಸ್ವಭಾವ, ಸಾಮಾನ್ಯತೆಯ ವಾಸ್ತವತೆಯು ಸನ್ಯಾಸಿಯ ಅತೀಂದ್ರಿಯ ಸ್ಥಿತಿಗಿಂತ ಖಂಡಿತವಾಗಿಯೂ ಕೆಳಮಟ್ಟದಲ್ಲಿಲ್ಲ ಎಂದು ಈ ಕೃತಿ ಸ್ಪಷ್ಟವಾಗಿ ತೋರಿಸುತ್ತದೆ. + +ಸಾಮಾನ್ಯ ಬದುಕಿನ ಆಚೆಗೆ ವೈರಾಗ್ಯಕ್ಕೆ ವಿನಾಯಿತಿ ನೀಡುವ ಸಕಲ ಶ್ರೇಣೀಕೃತ ರಚನೆಗಳನ್ನು ‘ಬೌಲ್’ ಕೆಡವಿಹಾಕುತ್ತದೆ. ಇದು ದಿನನಿತ್ಯದ ಲೌಕಿಕ ವಿಷಯಗಳೊಂದಿಗೆ ಹೋರಾಡುವ ಸಾಮಾನ್ಯ ಮನುಷ್ಯನನ್ನು ಮೀರಿದುದು ಎಂಬ ಕಲ್ಪನೆಯನ್ನು ಛಿದ್ರಗೊಳಿಸುತ್ತದೆ. ಮಾನವ ಅಸ್ತಿತ್ವದ ಸಾಮಾನ್ಯ ಮತ್ತು ಪ್ರಾಪಂಚಿಕ ವಿವರಗಳಿಗೆ ಅಗಾಧವಾದ ಗೌರವ ಹೊಂದಿರುವವರು ಮಾತ್ರವೇ ಇದರ ಪವಿತ್ರವಾದ ಮತ್ತು ಅನಂತವಾದ ನೋಟವನ್ನು ಗ್ರಹಿಸಬಲ್ಲರು. `ಬೌಲ್’ ಅನನ್ಯವಾದ ಜಾತ್ಯಾತೀತತೆಯಲ್ಲಿ ನೆಲೆಗೊಂಡಿದ್ದು, ಶ್ರೇಷ್ಠ ಆಧ್ಯಾತ್ಮಿಕತೆಯು ಸದಾ ಪ್ರಾಪಂಚಿಕ ಮತ್ತು ಭೌತಿಕತೆಯು ತನ್ನ ಬಲವಾದ ಬುನಾದಿಯ ಮೇಲೆ ನಿಂತಿದೆ ಎಂಬುದನ್ನು ಮತ್ತೆ ಮತ್ತೆ ಮನದಟ್ಟು ಮಾಡುತ್ತದೆ. ಇದು ಬರಿದಾದ ಮತ್ತು ಟೊಳ್ಳಾದ ಅಮೂರ್ತ ತಳಹದಿಯ ಮೇಲೆ ಕಟ್ಟಲಾಗಿಲ್ಲ. ‘ಬೌಲ್’ ಕೃತಿಯ ದೊಡ್ಡ ಶಕ್ತಿಯೆಂದರೆ ಆಧ್ಯಾತ್ಮಿಕತೆ ಮತ್ತು ಆಧ್ಯಾತ್ಮಿಕ ಉತ್ಕೃಷ್ಟತೆಯ ಕುರಿತ ನಮ್ಮ ಸಂತೃಪ್ತ ಮತ್ತು ಜಡಕಲ್ಪನೆಗಳಿಗೆ ಇದು ಸವಾಲೆಸೆಯುತ್ತದೆ. ಆಧ್ಯಾತ್ಮಿಕತೆಯ ನಿಜಸ್ವರೂಪವೇನು ಎಂಬುದರ ಕುರಿತು ಮಂಥನ ಮಾಡುವುದಕ್ಕೆ ಈ ಕೃತಿಯೊಂದು ಅತ್ಯುತ್ತಮ ಸಾಕ್ಷಿಯಾಗಿದೆ. ಮನುಷ್ಯರ ಬದುಕಿನಲ್ಲಿ ಲೋಕ ರೂಪಾಂತರವು ಅತ್ಯಂತ ಭಯಾನಕ ಘಟನೆಗಳ ಮೂಲಕವೇ ಸಂಭವಿಸುತ್ತದೆ. ಭಿಕುವಿನ ಜೊತೆಗೆ ಸಂಭವಿಸುವುದೂ ಇದೇ. ಆ ತಪಸ್ವಿಯು ಕಾಡಿನ ಮೂಲಕ ಹಾದುಹೋಗುವಾಗ ಆತನ ಏಕೈಕ ಆಸ್ತಿಯಾದ ಭಿಕ್ಷಾಪಾತ್ರೆಯನ್ನು ಕಸಿದುಕೊಳ್ಳುವ ಕಳ್ಳನೊಬ್ಬ ಎದುರಾಗುತ್ತಾನೆ. ಕಳ್ಳನ ಸವಾಲುಗಳನ್ನು ಎದುರಿಸುತ್ತಾನೆ. ಈ ಸವಾಲುಗಳೂ ಹಲವು ಹಂತಗಳಲ್ಲಿ ನಡೆಯುತ್ತವೆ. ಹಿಂಸೆಯ ವಿರುದ್ಧ ಅಹಿಂಸೆ; ಆಕ್ರಮಣಶೀಲತೆಯ ವಿರುದ್ಧ ನಿಗ್ರಹ; ತ್ಯಜಿಸುವಿಕೆಯ ವಿರುದ್ಧ ಸ್ವಾಧೀನತೆ; ಗೃಹಸ್ತನ ಲೌಕಿಕ ಕರ್ತವ್ಯಗಳ ವಿರುದ್ಧ ಸನ್ಯಾಸಿ ಜೀವನ ಇತ್ಯಾದಿ. ಕಾಲ್ಪನಿಕ ಕತೆಯೊಂದರ ಸೌಂದರ್ಯದ ಲಕ್ಷಣಗಳಲ್ಲಿ ರಾಜಿ ಮಾಡಿಕೊಳ್ಳದೆ ‘ಬೌಲ್’ ಕಾದಂಬರಿಯು ತನ್ನ ನಿರೂಪಣಾ ರಚನೆಯಲ್ಲಿ ಯಾರನ್ನೂ ಮೌಲ್ಯೀಕರಿಸದೆ ಬಹುಮುಖ್ಯವಾದ ತಾತ್ವಿಕ ಪ್ರಶ್ನೆಗಳನ್ನು ಹೆಣೆಯುತ್ತದೆ. ಸೃಜನಶೀಲ ಮತ್ತು ತಾತ್ವಿಕತೆ ನಡುವಿನ ಸಮತೋಲನವೇ ‘ಬೌಲ್’ನ ಗಮನಾರ್ಹ ಗುಣವಾಗಿದೆ. ಕೃತಿಯ ಆರಂಭದಲ್ಲಿಯೇ ಭಿಕು ಆಕ್ರಮಣಕಾರಿ ಮಾಲಿಂಗನನ್ನು ಕೊಲ್ಲುತ್ತಾನೆ. ನಂತರ ಆ ಕೃತ್ಯಕ್ಕೆ ಮಾಲಿಂಗನನ್ನೇ ಬಹಿರಂಗವಾಗಿ ಹೊಣೆಗಾರನನ್ನಾಗಿ ಮಾಡಲು ನೈತಿಕವಾಗಿ ಬದ್ಧನಾಗುತ್ತಾನೆ. ವ್ಯಕ್ತಿಗತ ಇಚ್ಛೆ ಮತ್ತು ಸ್ವಾತಂತ್ರ್ಯಗಳನ್ನು ವಿಶೇಷವಾಗಿ ಅಲೆಮಾರಿ ಸನ್ಯಾಸಿಗೆ ಸಂಬಂಧಿಸಿದರೆ, ಅವು ಬದುಕಿನ ನಿರ್ಣಾಯಕ ರಚನೆಯಿಂದ ವಂಚಿತವಾಗುತ್ತವೆ. ನಿಜವಾದ ಅಸ್ತಿತ್ವವಾದದ ಪ್ರಜ್ಞೆಯಲ್ಲಿ ಗ್ರಹಿಸಿದರೆ ಕಾದಂಬರಿಯ ಮೂಲ ತಿರುಳಾದ ಸ್ವಾತಂತ್ರ್ಯ ಮತ್ತು ನಿರ್ಣಾಯಕತೆಯ ಈ ಗುಣವೇ ಕಾದಂಬರಿಗೆ ಅತ್ಯಂತ ಅಧಿಕೃತ ಕಲಾತ್ಮಕತೆಯನ್ನು ನೀಡುತ್ತದೆ. ಭಿಕು ತಾನು ಕೊಂದವನ ಮಡದಿ ಮತ್ತು ಮಗನನ್ನು ಸಂತೈಸುತ್ತಾನೆ. ನಂತರ ಆ ಕುಟುಂಬದ ಜವಾಬ್ದಾರಿಯನ್ನೂ ಹೊರುತ್ತಾನೆ. ತಾಯಿ ಮತ್ತು ಮಗು ಅನಾಥರಾಗದಂತೆ ನೋಡಿಕೊಳ್ಳುತ್ತಾನೆ. ಆಶ್ರಯದಾತನಾಗಿ ಆ ಸನ್ಯಾಸಿಯ ಪಾತ್ರವು ಸತ್ಯಶೋಧನೆಯ ಭಾಗವಾಗುತ್ತದೆ. ಸಂಸಾರವನ್ನು ಭದ್ರವಾಗಿಡಲು ಒಬ್ಬ ಗಂಡ ಮತ್ತು ತಂದೆಯಾದವನು ಮಾಡುವ ಎಲ್ಲವನ್ನು ಭಿಕು ನಿರ್ವಹಿಸುತ್ತಾನೆ. ಸನ್ಯಾಸಿಯ ತ್ಯಾಗಗಳು ಸುಮಲತೆ ಮತ್ತು ಆನಂದರ ಬದುಕಿನ ಮೇಲೆ ಬೀರುವ ಅಸಾಧಾರಣ, ಪರಿಣಾಮಕಾರಿ ವಿಧಾನಗಳು, ವಾಸ್ತವವಾಗಿ ಭಿಕು ನಡೆಸಿದ ಅನೈಚ್ಛಿಕ ಕ್ರಿಯೆಗೆ ವಿಮೋಚನೆಯ ಅಂಶಗಳಾಗಿವೆ. ಬುದ್ಧನು ಧಮ್ಮಪದದಲ್ಲಿ “ಶ್ರದ್ಧೆಯಿಂದ ನಿಮ್ಮ ಮೋಕ್ಷವನ್ನು ಸಾಧಿಸಿ” ಎಂದು ಹೇಳಿದಂತೆ, ಸನ್ಯಾಸಿಯ ಬದುಕಿನಲ್ಲಿ ಸ್ಥಾನವಿಲ್ಲದ ಎಲ್ಲಾ ಸಾಮಾನ್ಯ ಕೆಲಸಕಾರ್ಯಗಳನ್ನು ನಿರ್ವಹಿಸುವ ಮೂಲಕ ಭಿಕು ತನ್ನ ಮೋಕ್ಷವನ್ನು ಸಾಧಿಸುತ್ತಾನೆ. ಈ ನಿಟ್ಟಿನಲ್ಲಿ ಸೃಜನಶೀಲ ಬರವಣಿಗೆಯ ಆಯಾಮಗಳನ್ನು ತೆರೆಯುವ ಕಾಲ್ಪನಿಕ ರಚನೆಗಳನ್ನು ಹೊಸ ದಿಗಂತಗಳಿಗೆ ಕೊಂಡೊಯ್ಯುವ ಕಾದಂಬರಿ ‘ಬೌಲ್’. + +(ಪ್ರೊ. ಎನ್. ಮನು ಚಕ್ರವರ್ತಿ) + +ಈ ಕೃತಿಯು ‘ವಾಸ್ತವಿಕತೆ’, ‘ಸಾಮಾಜಿಕ ವಾಸ್ತವಿಕತೆ’ ‘ಸಾಂಕೇತಿಕತೆ’, ‘ರೂಪಕ’ ಮುಂತಾದ ಲೇಬಲ್‍ಗಳ ಮರು ವ್ಯಾಖ್ಯಾನಕ್ಕೆ ಆಹ್ವಾನಿಸುತ್ತ ಇವೆಲ್ಲವನ್ನೂ ಪ್ರತ್ಯೇಕವಾಗಿ ಮತ್ತು ಸ್ವತಂತ್ರವಾಗಿ ಅರ್ಥಮಾಡಿಕೊಳ್ಳಬಾರದು ಎಂದು ‘ಬೌಲ್’ ನಿರೂಪಿಸುತ್ತದೆ. ನಮಗೆ ಪರಿಚಯವಿಲ್ಲದ ಈ ಎಲ್ಲವೂ ಕಾಲ್ಪನಿಕ ಮತ್ತು ಅಲಂಕಾರಿಕವಲ್ಲದ ನಮ್ಮ ನಿಜದ ಜಗತ್ತಿನಲ್ಲಿ ನೆಲೆಗೊಂಡಿರುವುದು ಗಮನಾರ್ಹ ವಿಚಾರ. ಮಠಗಳು, ಸನ್ಯಾಸಿಗಳು, ವ್ಯಾಪಾರಸ್ಥರು, ಮಾರುಕಟ್ಟೆಗಳು, ಕಾರ್ಮಿಕರು, ಸ್ಥಳೀಯ ವಿಧಿವಿದಾನಗಳು, ಧ್ಯಾನಕೇಂದ್ರಗಳು, ಆಧ್ಯಾತ್ಮಿಕ ಪ್ರವಚನಗಳು, ದಿನನಿತ್ಯದ ಸಹಜ ಮಾತುಕತೆಗಳು, ನಾವು ವಾಸಿಸುವ ಜಗತ್ತಿನಲ್ಲಿ ನಡೆಯುತ್ತಲೇ ಇರುತ್ತವೆ. ಪಾತ್ರಗಳು, ಅವು ಪ್ರತಿಬಂಧಿಸುವ ಪ್ರದೇಶಗಳು ಮತ್ತು ಅವುಗಳ ನಿಜವಾದ ಭೌತಿಕ ವಾಸ್ತವಗಳು ನಮ್ಮೊಂದಿಗೆ ಹೊಂದಿಕೆಯಾಗದಿದ್ದರೂ ಸಹ ಆಧ್ಯಾತ್ಮಿಕತೆಯ ಸಾಮಾಜಿಕ ವಾಸ್ತವತೆ ಸಾಮಾನ್ಯವಾದ ‘ಬೌಲ್’ನ (ಬಟ್ಟಲಿನ) ಮೂಲಕ ನಮಗೆ ನಿಲುಕುತ್ತದೆ. ಪರಿಚಿತ ಮತ್ತು ಅಪರಿಚಿತತೆಗಳ ಸಹಯೋಗದಿಂದ ಇಂಥ ‘ನವ ವಾಸ್ತವ’ಗಳು ಹುಟ್ಟಿಕೊಳ್ಳುತ್ತವೆ. ‘ಬೌಲ್’ ಒಂದು ಅಸಾಧಾರಣ ಕೃತಿಯಾಗಿದ್ದು ಅದು ಪ್ರವಾದಿಯಂತೆ ಭವಿಷ್ಯತ್ತನ್ನು ಕಾಣಿಸುವ ದೂರದೃಷ್ಟಿಯನ್ನು ಹೊಂದಿದೆ. ಎಲ್ಲ ಸಾಕಾರಗಳ ಮೂಲಕ ಅಸ್ತಿತ್ವದ ಹೊಸ ವಿಧಾನಗಳನ್ನು ಮತ್ತು ವಿನಾಯಿತಿಗಳನ್ನು ಇದು ಸೂಚಿಸುತ್ತದೆ. ಕಥಾಹಂದರದ ಕೃತಿಯಾಗಿ ‘ಬೌಲ್’ ಭವಿಷ್ಯದ ಸಂವೇದನೆಗಳನ್ನು ನೈಜ ವರ್ತಮಾನದಲ್ಲಿ ಬೇರೂರಿಸುತ್ತದೆ. ಇದು ಅತ್ಯಂತ ಕಠಿಣ ಪರಿಶ್ರಮ ಮತ್ತು ದೈಹಿಕ ಶ್ರಮದ ಮೂಲಕ ಭಿಕುವಿನ ಎಲ್ಲಾ ತಪಸ್ವಿ ಗುಣಗಳನ್ನು ಅಭ್ಯಸಿಸುವ, ಗಮನಿಸುವ, ಅಳವಡಿಸಿಕೊಳ್ಳುವ ಚಿಕ್ಕ ಮಗು ಆನಂದನ ಮೂಲಕ ಚಿತ್ರಿತಗೊಂಡಿದೆ. ಭೌತಿಕ ದೇಹದ ವೈಭವವನ್ನು, ಭೌತಿಕ ಅಸ್ತತ್ವದ ಸಾರ ಮತ್ತು ದೈಹಿಕ ಶ್ರಮಕ್ಕೆ ಹಾಗೂ ತನ್ಮೂಲಕ ಅರಳುವ ಆಧ್ಯಾತ್ಮಿಕ, ಅಲೌಕಿಕ ಗುಣಗಳಿಗೆ `ಬೌಲ್’ ಅಪಾರ ಗೌರವವನ್ನು ತೋರುತ್ತದೆ. ಆನಂದ ಬುದ್ಧನ ಪ್ರಧಾನ ಶಿಷ್ಯನ ಗುಣಗಳನ್ನು ಭಿಕುವಿನ ಮೂಲಕ ಪಡೆದು ಬುದ್ಧನಂತೆಯೇ ಸನ್ಯಾಸದ ಕಡೆಗೆ ಸೆಳೆಯಲ್ಪಟ್ಟು ವಾಸ್ತವದ ನೆಲೆಯ ಮೂಲಕವೇ ಸನ್ಯಾಸತ್ವವನ್ನು ಒಪ್ಪಿಕೊಳ್ಳುತ್ತಾನೆ. + + + +‘ಬೌಲ್’ ಒಂದು ಅನನ್ಯ ಕೃತಿಯಾಗಿದ್ದು ಅದು ಪ್ರಾಚೀನ ವ್ಯಕ್ತಿತ್ವಗಳನ್ನು ಆಧುನಿಕ ಸಂವೇದನೆಯೊಂದಿಗೆ ಸುಂದರವಾಗಿ ಮರುಸೃಷ್ಟಿಸುತ್ತದೆ. ಬುದ್ಧ, ಆನಂದ, ಜಗತ್ತಿನ ಸಕಲ ತಾಯಂದಿರು ಇವರೆಲ್ಲ ಸಮಕಾಲೀನ ಪ್ರಪಂಚದ ಸಾಮಾನ್ಯ ಮನುಷ್ಯರೊಂದಿಗೆ ಪರಸ್ಪರ ಸಂಬಂಧ ಹೊಂದಿದ್ದಾರೆ. ಈ ಸಾಮಾನ್ಯ ಮನುಷ್ಯರು ಅಸಾಮಾನ್ಯ ಅನ್ವೇಷಕರಾಗಿ ವರ್ತಮಾನದ ಬುದ್ಧರಾಗುವವರು ಹಾಗೂ ಅಕಾಲಾತೀತ ಚೇತನದ ಅನಂತವಾದ ಮತ್ತು ಶಾಶ್ವತವಾದ ನವೀಕರಣದ ಮೂಲಕ ಮಾತ್ರವೇ ಈ ಪರಭಕ್ಷಕ ಪ್ರಪಂಚವು ತನ್ನ ಮೋಕ್ಷವನ್ನು ಹುಡುಕಿಕೊಳ್ಳಬಹುದು. ಇದರ ಅಗಾಧವಾದ ಪರಿಣಾಮ ಯಾವುದೆಂದರೆ ಅನಂತಕಾಲದ ಇರುವಿಕೆ; ಕಾದಂಬರಿಯಲ್ಲಿ ಬರುವ ಮುದುಕ – ಆತ ಭೂತ, ವರ್ತಮಾನ ಮತ್ತು ಭವಿಷ್ಯಕ್ಕೆ ನೇರ ಪೂರಕಸಾಕ್ಷಿಯಾಗಿದ್ದಾನೆ. ಮೂಲತಃ ‘ಬೌಲ್’ ಕೃತಿಯ ಪ್ರಧಾನ ಕೇಂದ್ರಬಿಂದುವೇ ವರ್ತಮಾನವನ್ನು ಅಭಿನಂದಿಸುತ್ತಲೇ ಭವಿಷ್ಯದೊಳಗೆ ಕೊಂಡೊಯ್ಯುವ ಈ ಗೌರವಾನ್ವಿತ ವಯೋವೃದ್ಧ ‘ಅಜ್ಜ’. ‘ಬೌಲ್’ ಒಂದು ಪ್ರಧಾನಧಾರೆಯ ಮಹತ್ವದ ಕೃತಿಯಾಗಿದ್ದು, ಇದು ವ್ಯರ್ಥವಾದ, ನಿರರ್ಥಕವಾದ, ಅಮೂರ್ತ ತಾತ್ವಿಕ ನಿರೂಪಣೆಯನ್ನೇನೂ ಹೊಂದಿಲ್ಲ. ಈ ಗುಣಗಳನ್ನು ಗ್ರಹಿಸಲಾಗದೆ ತಪ್ಪಿದಲ್ಲಿ ಇದರ ನಿರೂಪಣಾ ರಚನೆಯನ್ನು ಸಂಪೂರ್ಣ ತಪ್ಪಾಗಿ ಅರ್ಥೈಸಿಕೊಳ್ಳುವುದು ಮತ್ತು ಅದರ ವಿಷಯಾಧಾರಿತ ಆದ್ಯತೆಗಳನ್ನು ತಪ್ಪಾಗಿ ಗ್ರಹಿಸುವುದು ಎಂದರ್ಥ. ಕಾಲ್ಪನಿಕ ಅಂಶಗಳಿಂದ ಹಂತಹಂತವಾಗಿ ಹೊರಹೊಮ್ಮುವ ಈ ಕೃತಿಯು ಅತ್ಯಂತ ಅಧಿಕೃತವಾದ ತಾತ್ವಿಕ ಕಲ್ಪನೆಗಳನ್ನು ರೂಪಿಸುತ್ತದೆ. ಇದೊಂದು ಮೂಲಭೂತವಾದ ತಾತ್ವಿಕ ವಿಚಾರಗಳನ್ನು ಅಪ್ಪಿಕೊಳ್ಳುವ ಸುಂದರ ಕಲಾಕೃತಿಯಾಗಿದೆ. ತತ್ವಶಾಸ್ತ್ರವು ತನ್ನ ಸತ್ವ, ಆಹಾರ ಮತ್ತು ಪೋಷಣೆಯನ್ನು ಕಂಡುಕೊಳ್ಳುವುದು ಸರ್ವರ ಬದುಕಿನ ಸಾಮಾನ್ಯತೆಯಲ್ಲಿ. ‘ಬೌಲ್’ ಈ ಅಂಶವನ್ನೇ ಸಂಪೂರ್ಣ ಅನುಕರಣೀಯ ರೀತಿಯಲ್ಲಿ ಉದಾಹರಿಸಿ ನಮಗೆ ತೋರಿಸುತ್ತದೆ. ಈ ಕೃತಿಯ ಮೂಲಕ ಎಂ.ಎಸ್. ಮೂರ್ತಿಯವರು ಅತ್ಯಂತ ಸಮರ್ಥ ರೀತಿಯಲ್ಲಿ ನಮ್ಮ ಪ್ರಜ್ಞೆಯನ್ನು ಅರಳಿಸುವ ಕೆಲಸ ಮಾಡಿದ್ದಾರೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_219.txt b/Kenda Sampige/article_219.txt new file mode 100644 index 0000000000000000000000000000000000000000..f9605ccbce1f480654745f21cbeb703cc7c79438 --- /dev/null +++ b/Kenda Sampige/article_219.txt @@ -0,0 +1,23 @@ +ಜಾಗತೀಕರಣಗೊಂಡ ಈ ಜಗತ್ತಿನಲ್ಲಿ ಸಾವಿರಾರು ಭಾಷೆಗಳ ನಡುವೆ ಸಂವಹನದ ಅಗತ್ಯವು ಎಂದಿಗಿಂತ ಹೆಚ್ಚಾಗಿರುವ ಇಂದಿನ ಸಂದರ್ಭದಲ್ಲಿ ಪರಸ್ಪರ ಅನುವಾದದ ಕೆಲಸವೂ ದಿನೇ ದಿನೇ ಹೆಚ್ಚಾಗುತ್ತಿದೆ. ಅದರಲ್ಲೂ ಬಹುಭಾಷಾ ದೇಶವಾದ ಭಾರತದಲ್ಲಿ ಅಸ್ತಿತ್ವದಲ್ಲಿರುವ ನೂರಾರು ಭಾಷೆಗಳು ಮೂಲತಃ ಏಕಸಂಸ್ಕೃತಿಯನ್ನು ಹೊಂದಿದ್ದರೂ ಭಾಷಾ ಭಿನ್ನತೆಯ ಕಾರಣದಿಂದಾಗಿ ಅವುಗಳ ನಡುವೆಯೂ ಅನುವಾದ ನಡೆಯಬೇಕಾದ ಸಂದರ್ಭ ಸೃಷ್ಟಿಯಾಗಿದೆ. ಭಾರತೀಯ ಪ್ರಾದೇಶಿಕ ಭಾಷಾ ಸಾಹಿತ್ಯಗಳ ನಡುವೆ ಈಗಾಗಲೇ ಆಗಿರುವ ಅನುವಾದವನ್ನು ಗಮನಿಸಿ ನೋಡಿದರೆ ಕನ್ನಡಕ್ಕೆ ಸಂಸ್ಕೃತ, ಹಿಂದಿ, ಬಂಗಾಳಿ, ಮರಾಠಿ, ತಮಿಳು, ಮಲೆಯಾಳಗಳಿಂದ ಬಂದಷ್ಟು ಗಂಭೀರ ಸಾಹಿತ್ಯ ಕೃತಿಗಳ ಅನುವಾದ ತೆಲುಗಿನಿಂದ ಆಗಿಲ್ಲ. ತೆಲುಗು ಕಾದಂಬರಿಯೆಂದರೆ ಯಂಡಮೂರಿ ವೀರೇಂದ್ರನಾಥರೇನೋ ಅನ್ನಿಸುವಷ್ಟು ಸಂಖ್ಯೆಯಲ್ಲಿ ಅವರ ಕಾದಂಬರಿಗಳು ಕನ್ನಡಕ್ಕೆ ಹೊನಲಾಗಿ ಹರಿದಿವೆ. ಆದರೆ ಅವರದ್ದು ಜನಸಾಮಾನ್ಯರಿಗೆ ಖುಷಿ ನೀಡಬಲ್ಲ ಸಾಹಿತ್ಯವಷ್ಟೆ. ಇತ್ತೀಚೆಗೆ ಚಲಂ, ಕಾಳಿಪಟ್ನಂ ರಾಮರಾವ್, ಓಲ್ಗಾ, ಸಲೀಂ, ಆಯಿನಂಪೂಡಿ ಶ್ರೀಲಕ್ಷ್ಮಿ, ಮಧುರಾಂತಕಂ ನರೇಂದ್ರ ಮೊದಲಾದ ಮಹತ್ವದ ಕಥೆಗಾರರ ಕಥೆಗಳು ಕುಂ.ವೀ., ರೋಹಿಣಿ ಸತ್ಯ, ಚಿದಾನಂದ ಸಾಲಿ, ಅಜಯ ವರ್ಮಾ ಅಲ್ಲೂರಿ, ಕಾ.ಹು. ಚಾನ್ ಪಾಷಾ ಮೊದಲಾದವರ ಮೂಲಕ ಕನ್ನಡಕ್ಕೆ ಬಂದಿವೆ. ಈಗಾಗಲೇ ತಮ್ಮ ಉತ್ತಮ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಎಂ.ಜಿ. ಶುಭಮಂಗಳಾ ಅವರು ಈಗ ತೆಲುಗಿನ ಪ್ರಸಿದ್ಧ ಲೇಖಕರಾದ ಪೆದ್ದಿಂಟಿ ಅಶೋಕ್‌ಕುಮಾರ್ ಅವರ ಸಣ್ಣ ಕಥೆಗಳನ್ನು ತರುತ್ತಿರುವುದು ತುಂಬಾ ಸಂತೋಷ ಪಡಬೇಕಾದ ಸಂಗತಿ. + +(ಎಂ.ಜಿ. ಶುಭಮಂಗಳ) + +ಈ ಸಂಕಲನದಲ್ಲಿ ತಮ್ಮ ವಸ್ತು, ವಿನ್ಯಾಸ, ಕಥನ ಶೈಲಿಗಳಿಂದ ಓದುಗರ ಗಮನ ಸೆಳೆಯುವ ಹನ್ನೆರಡು ಸುಂದರ ಕಥೆಗಳಿವೆ. ಎಲ್ಲವೂ ತೆಲುಗು ಸಾಂಸ್ಕೃತಿಕ ಲೋಕವನ್ನು ತೆರೆದಿಟ್ಟು ಪರಿಚಯಿಸುವ ಸಾಮಾಜಿಕ ಮಹತ್ವವುಳ್ಳ ಕಥೆಗಳು. + +ಕೃಷಿಭೂಮಿಯನ್ನೇ ನೆಚ್ಚಿಕೊಂಡಿರುವ ಇಬ್ಬರು ಅಕ್ಕತಂಗಿಯರು ನಿಸರ್ಗದ ಅವಕೃಪೆಗೆ ತುತ್ತಾಗಿ ಹೇಗೆ ಹೆಜ್ಜೆ ಹೆಜ್ಜೆಗೂ ಸೋಲನನ್ನುಭವಿಸಿ ಹತಾಶರಾಗುತ್ತಾರೆ, ತಮ್ಮ ಸಂಕಟವನ್ನು ಹಂಚಿಕೊಳ್ಳಲು ಯಾರೂ ಸಿಗದೆ ಹೇಗೆ ತಬ್ಬಲಿಗಳಾಗುತ್ತಾರೆ ಎಂಬುದನ್ನು ಚಿತ್ರಿಸುವ ‘ತಬ್ಬಲಿಗಳು’ ಇಲ್ಲಿ ಮೊದಲ ಕಥೆ. ಮಕ್ಕಳಲ್ಲಿ ಜೀವನಮೌಲ್ಯಗಳ ಕುರಿತಾದ ಅರಿವನ್ನು ಮೂಡಿಸಬೇಕಾದ ಶಿಕ್ಷಣಕ್ಷೇತ್ರವು ಹೇಗೆ ವ್ಯಾಪಾರೀಕೃತವಾಗಿಬಿಟ್ಟಿದೆ ಮತ್ತು ಮಕ್ಕಳು ಪಡೆಯುವ ಅಂಕಗಳು ಹೇಗೆ ಪ್ರತಿಷ್ಠೆಯ ಪ್ರಶ್ನೆಯಾಗಿ ಬಿಟ್ಟಿವೆ ಅನ್ನುವುದನ್ನು ಚರ್ಚಿಸುವ ‘ಪ್ರೋಗ್ರೆಸ್’ ವ್ಯಂಗ್ಯ ಧ್ವನಿಯ ಶೀರ್ಷಿಕೆಯುಳ್ಳ ಕಥೆ. ಟಿ.ವಿ. ಚಾನೆಲ್ಲುಗಳು ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಲು ಏನೇನೆಲ್ಲ ಸರ್ಕಸ್ ಮಾಡುತ್ತಾರೆಂಬುದರ ಕುರಿತಾದ ವಿಡಂಬನಾತ್ಮಕ ಚಿತ್ರಣ ‘ಇರುವೆ ನೀನೇಕಿಲ್ಲಿರುವೆ?’ ನಕ್ಸಲ್ ಹೋರಾಟದಲ್ಲಿ ತಂದೆ-ಗಂಡ-ಮಕ್ಕಳನ್ನು ಕಳೆದುಕೊಳ್ಳಬೇಕಾಗಿ ಬಂದಾಗ ತಾಯಂದಿರು ಗೋಳಾಡುವ ಮತ್ತು ಅವರು ಪರಸ್ಪರರ ದುಃಖದಲ್ಲಿ ಪಾಲ್ಗೊಳ್ಳುವ ಹೃದಯ ವಿದ್ರಾವಕ ಚಿತ್ರಣವಿರುವ ಕಥೆ ‘ಪ್ರಾಣದ ಬೆಲೆ ನೂರು ಒಂಟೆಗಳು’. + +ಹಲವಾರು ಅಡೆತಡೆಗಳನ್ನು ಧೈರ್ಯದಿಂದ ಎದುರಿಸಿ ಸಾಯುತ್ತಿದ್ದವನನ್ನು ಬದುಕಿಸಿದ ಬೊಂದಯನಿಗೆ ಅದೇ ವ್ಯಕ್ತಿಯಿಂದ ಸಹಾಯ ಸಿಕ್ಕುವ ಆಕಸ್ಮಿಕ ಚಿತ್ರಣವಿರುವ ಕಥೆ ‘ಬೀಜ’. ಫೋಬಿಯಾದಿಂದ ರೋಗಿಯನ್ನು ಒಂದೊಮ್ಮೆ ಗುಣಪಡಿಸಿದ ಡಾಕ್ಟರೇ ಮುಂದೆ ಆಕೆಯ ಫೋಬಿಯಾಕ್ಕೆ ಕಾರಣರಾಗುವ ಕಥೆ ‘ಫೋಬಿಯಾ’. ಕಳ್ಳಭಟ್ಟಿ ಸಾರಾಯಿ ದಂಧೆಯ ಅಪಾಯಕಾರಿ ಸುಳಿಯನ್ನು ಪರಿಚಯಿಸುವ ಕಥೆ ‘ಜಾಲ’. ಬಾಡಿಗೆ ತಾಯಿಯ ಸಂಕಷ್ಟಗಳನ್ನು ಚಿತ್ರಿಸುವ ಕಥೆ ‘ಯಾರ ನೋವು ಯಾರ ಮುಡಿಗೋ’. ಈ ಎಲ್ಲ ಕಥೆಗಳೂ ಒಂದಿಲ್ಲೊಂದು ಕಾರಣಗಳಿಗೆ ಇಷ್ಟವಾಗುತ್ತವೆ. ಈ ಕಥೆಗಳಲ್ಲಿ ರೈತರ ಬವಣೆಗಳಿವೆ(ತಬ್ಬಲಿಗಳು), ಶಿಕ್ಷಣ ಕ್ಷೇತ್ರದ ಹುಳುಕುಗಳ ಬಗ್ಗೆ ವಿಷಾದವಿದೆ(ಪ್ರೋಗ್ರೆಸ್), ಸಾಮಾಜಿಕ ನ್ಯಾಯಕ್ಕಾಗಿ ಯಾರು ಎಷ್ಟೇ ಹೋರಾಡಿ ಕಾನೂನಿನಿಂದ ಶಿಕ್ಷಿಸಲ್ಪಟ್ಟು ಮರಣದಂಡನೆಗೊಳಗಾದರೂ, ಅಲ್ಲಿ ಮಾನಸಿಕ ಯಾತನೆಗೊಳಗಾಗುವವರು ತಾಯಂದಿರು ಎಂಬ ಸತ್ಯದ ಪ್ರತಿಪಾದನೆಯಿದೆ(ಪ್ರಾಣದ ಬೆಲೆ ನೂರು ಒಂಟೆಗಳು), ಊಳಿಗಮಾನ್ಯ ಪದ್ಧತಿಯಡಿ ನಲುಗುವ ಬಡವರ ದುಸ್ಥಿತಿಯ ಚಿತ್ರಣವಿದೆ(ಬೀಜ ಮತ್ತು ಜಾಲ), ಬಾಡಿಗೆ ತಾಯಂದಿರು ಹಣಕ್ಕಾಗಿ ಕೆಲಸ ಮಾಡುತ್ತಾರೆಂಬ ಸಾಮಾನ್ಯ ನಂಬಿಕೆಯನ್ನು ಮುರಿದು ಅವರ ಸಂವೇದನೆಗಳ ಸೂಕ್ಷ್ಮ ಅವಲೋಕನವಿದೆ(ಯಾರ ನೋವು ಯಾರ ಮುಡಿಗೋ). + + + +ಜಾಗತಿಕ ಮುಕ್ತ ಮಾರುಕಟ್ಟೆಯ ಕಬಂಧ ಬಾಹುಗಳು ದೇಶದ ಅಧಿಕಾರಶಾಹಿಗಳ ಸ್ವಾರ್ಥ ರಾಜಕಾರಣದ ಬೆಂಬಲದೊಂದಿಗೆ ಚಾಚಿಕೊಂಡದ್ದರಿಂದಾಗಿ ರೈತರ ಬದುಕು ಮೂರಾಬಟ್ಟೆಯಾದ ಕಥೆಯನ್ನು ಹೇಳುವ ‘ಕೈಗೊಂಬೆ’, ಬೆವರು ಸುರಿಸಿ ಪ್ರಾಮಾಣಿಕವಾಗಿ ದುಡಿಯುವ ಶ್ರಮಜೀವಿಗಳ ಕಷ್ಟದ ದುಡಿಮೆಯನ್ನು ಸೊಳ್ಳೆಗಳು ರಕ್ತ ಹೀರುವಂತೆ ದರೋಡೆಗೈದು ಅವರ ಬದುಕನ್ನು ನರಕಸದೃಶವಾಗಿಸುವ ಭ್ರಷ್ಟಾಚಾರಿ ಅಧಿಕಾರಿವರ್ಗದವರ ಅನ್ಯಾಯದ ಜಾವನ್ನೂ ಅಲ್ಲಿ ಸೃಷ್ಟಿಯಾಗುವ ಹೃದಯವಿದ್ರಾವಕ ಸನ್ನಿವೇಶಗಳನ್ನೂ ಕಣ್ಣಿಗೆ ಕಟ್ಟುವಂತೆ ಚಿತ್ರಿಸುವ ಕಥೆ ‘ನಿಗೂಢ ಹಸ್ತಗಳು’ – ಹೀಗೆ ಹಲವು ಸಾಮಾಜಿಕ ಸಮಸ್ಯೆಗಳ ಕುರಿತು ಕಥೆಗಳು ಓದುಗನನ್ನು ಚಿಂತನೆಗೊಳಪಡಿಸುತ್ತವೆ. + +(ಡಾ. ಪಾರ್ವತಿ ಜಿ. ಐತಾಳ) + +ಒಂದು ಅನುವಾದಿತ ಕೃತಿಯ ಯಶಸ್ಸು ನಿಂತಿರುವುದು 1. ಅನುವಾದಕ್ಕಾಗಿ ಆಯ್ಕೆ ಮಾಡುವಾಗ ತೆಗೆದುಕೊಳ್ಳುವ ಎಚ್ಚರಿಕೆಯ ಮೇಲೆ(ಇಲ್ಲಿ ಅನುವಾದಕರ ವಿಮರ್ಶಾ ಸಾಮರ್ಥ್ಯವು ಕೆಲಸ ಮಾಡುತ್ತದೆ). 2. ಅನುವಾದಕರು ತಮ್ಮ ಭಾಷೆಯನ್ನು ಪಳಗಿಸುವುದರಲ್ಲಿ ಎಷ್ಟು ನಿಸ್ಸೀಮರು ಎನ್ನುವುದರಲ್ಲಿ. ಅಂದರೆ ಮೂಲ ಕೃತಿಯಲ್ಲಿ ಬಳಕೆಯಾದ ಪದಗಳು, ಪದಪುಂಜಗಳು, ನುಡಿಗಟ್ಟುಗಳು, ಗಾದೆಮಾತುಗಳು ಮತ್ತು ಸಾಂಸ್ಕೃತಿಕ ವಿಶಿಷ್ಟ ಪದಗಳಿಗೆ ಸರಿಯಾದ ಪರ್ಯಾಯಗಳನ್ನು ಬಳಸುವುದರಲ್ಲಿ. 3. ಮೂಲ ಕೃತಿಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಮೂಲಕ್ಕೆ ನಿಷ್ಠವಾಗಿ ಅದರ ಸತ್ವವು ಸ್ವಲ್ಪವೂ ಸೋರಿ ಹೋಗದಂತೆ ಉದ್ದಿಷ್ಟ ಭಾಷೆಯಲ್ಲಿ ನಿರೂಪಿಸುವುದು. ಸಾಂಸ್ಕೃತಿಕ ವಿಶಿಷ್ಟ ಅಭಿವ್ಯಕ್ತಿಗಳಿಗೆ ಸರಿಹೊಂದುವ ಪರ್ಯಾಯ ಸಿಗದಿದ್ದಲ್ಲಿ ಅವುಗಳ ಬಗೆಗಿನ ವಿವರಣೆಯನ್ನು ಟಿಪ್ಪಣಿ ವಿಭಾಗದಲ್ಲಿ ಕೊಡಬೇಕಾಗುತ್ತದೆ. + + + +ಈ ಎಲ್ಲ ನೆಲೆಗಳಿಂದ ಅವಲೋಕಿಸಿದಾಗ ಎಂ.ಜಿ. ಶುಭಮಂಗಳಾ ಅವರು ತಮ್ಮ ಈ ಕೃತಿಯನ್ನು ಸಮರ್ಥವಾಗಿ ಅನುವಾದಿಸಿದ್ದಾರೆಂದು ಹೇಳಬಹುದು. ಒಂದು ಸುಂದರ ಕೃತಿಯನ್ನು ಕನ್ನಡದ ಓದುಗರಿಗೆ ನೀಡುವುದರಲ್ಲಿ ಯಶಸ್ವಿಯಾದ ಅವರಿಗೆ ಅಭಿನಂದನೆಗಳನ್ನು ಹೇಳುತ್ತ ಇನ್ನು ಮುಂದೆಯೂ ಇಂತಹ ಅನೇಕ ಕೃತಿಗಳು ಅವರಿಂದ ಬರಲಿ ಎಂದು ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_22.txt b/Kenda Sampige/article_22.txt new file mode 100644 index 0000000000000000000000000000000000000000..eddf935d30c43d1a9447a41452ed1c9baeb68c3a --- /dev/null +++ b/Kenda Sampige/article_22.txt @@ -0,0 +1,23 @@ +ನಮ್ ವಾಣಿ ಮದುವೆ ಮಿಸ್ ಮಾಡೋಕ್ಕಾಗತ್ತ? ನಮ್ ಮನೆ ಪಕ್ಕ ಅಲ್ಲಾ ಅದರ ಪಕ್ಕ ಅವರ ಮನೆ. ವಾಣಿ ಮದುವೆ ಗದ್ದಲ ಶುರು ಅದಾಗಿಂದ ಶಾಪಿಂಗ್, ಫೋಟೊ ಶೂಟಿಂಗ್ ಎಲ್ಲದ್ರು ಬಗ್ಗೆನು ಅಪ್ಡೇಟ್ಸ್ ಕೊಡ್ತನೆ ಇದ್ಲು. ಗೊತ್ತಲ್ಲ ಮದುವೆ ಅಂದರೆ ಮೊದ ಮೊದಲು‌ ಮಧು ಆಮ್ಯಾಲೆ ವ್ಯಾ ಅಂತ. ಇರಲಿ ಎಲ್ಲರಿಗೂ ಹಾಗಾಗ್ಬೇಕು ಅಂತಿಲ್ಲವಲ್ಲ. ನಮ್ ವಾಣಿ ಮದುವೆ ಅಲ್ವಾ ಅಂತ ನಾವೂ ಶಾಪಿಂಗ್, ಪಾರ್ಲರ್ ಅಂತ ಎಲ್ಲ ವ್ಯವಸ್ಥೆ ಮಾಡ್ಕೊಂಡ್ವಿ. ಚಪ್ರ, ಮೆಹೆಂದಿ, ಅರಿಶಿಣ ಶಾಸ್ತ್ರ ಎಲ್ಲದಕ್ಕೂ ಅಟೆಂಡ್ ಮಾಡಿದ್ವಿ. ಎಂಥಾ ಗೌಜಿನ್ ಮದುವೆ ಗೊತ್ತಾ? ಊಟೋಪಚಾರ ಎಲ್ಲಾ ಪರ್ಫೆಕ್ಟ್! ಮದುವೆ ದಿನ ಮದುವೆ ಹುಡುಗಿಗಿಂತ ಗ್ರ್ಯಾಂಡ್ ಆಗಿ ಡ್ರೆಸ್ ಮಾಡ್ಕೊಂಡು ಫೋಟೋಶೂಟ್ ಮಾಡಿಸಿಕೊಳ್ಳೋ ಹುಡುಗಿಯರಿಗೆ ಏನು ಕಮ್ಮಿನೆ ಎಲ್ಲರೂ ಅದಕ್ಕೆ ಅಂತ ಯೂನಿಕ್ ಆಗಿ ಮಾಡಿದ್ದ ಸೆಲ್ಫಿ ಸ್ಟ್ಯಾಂಡಲ್ಲಿ ಫೋಟೋ ತೆಗೆಸ್ಕೊಳ್ಳೋದೇ ತೆಗೆಸ್ಕೊಳೋದು. ಅಯ್ಯೋ ರಾಮ! ಇಷ್ಟೊಂದು ಹುಚ್ಚ….! ಫೋಟೋಕ್ಕೆ? ಮದುವೆ ರಿಸೆಪ್ಶನಲ್ ಮದುವೆ ಹುಡುಗ ಹುಡುಗಿ ಆಚೆ ನಿಲ್ಲಿಸಿ ಈಚೆ ನಲ್ಸಿ ಎಲ್ಲಾ ಫೋಟೋ ತೆಗೆಸ್ಕೊತಾ ಇದ್ರು, ಪಾಪ ವಯಸ್ಸಾದವರು ಒಬ್ಬರು ಬಂದು ಓದಿಸ್ಬೇಕಿತ್ತು. + +ಈ ಹುಡ್ಗೀರ್ ಫೋಟೋ ಹುಚ್ಚು ಆ ವೃದ್ಧನ್ನ ಕೆರಳಿಸಿ “ಏನು ಸಿನಿಮಾ ತಾರೆರ್ ಇದ್ದಂಗ್ ಇದ್ದೀನಿ ಅಂತ ಅಲ್ಲು ಇಲ್ಲು ಫೋಟೋ ತಗುಸ್ಕೊಳೋದೆ ತಗುಸ್ಕೊಳೋದು, ಬನ್ರಮ್ಮ ಈ ಕಡೆ… ನಾನೂ ಒಂಚೂರು ತಗುಸ್ಕೊತಿನಿ” ಅಂತ ಮೆಲ್ಲಗೆ ಗದರದ್ರು. ಒಂದಿಬ್ರು ಸುಮ್ನೆ ಇದ್ದರೂ ಇನ್ನೊಬ್ಬಳು “ಹೂ ತಾತ! ನಾವೇನೋ ಹೀರೋಯಿನ್ಸೆ!!! ಹಾಗೆ ತಿಳ್ಕೊಳಿ….. ನೀವು ಹೇಗಿದ್ದೀರಾ ತಾತ ನೀವೇನ್ ಹೀರೋನಾ? ನೀವು ನಮ್ ತರಾನೇ ಫೋಟೋ ತೆಗೆಸಿಕೊಳ್ಳೋಕೆ ಬಂದಿದ್ದೀರಾ…..? ನೀವು ಹೀರೋ ಇರಬೇಕು ಅಲ್ವಾ! ನಿಮ್ ಫ್ಯಾನ್ಸು ಎಲ್ಲ ಬಂದಿರಬೇಕು! ಅದಕ್ಕೆ ಪಾಪ ಅಜ್ಜಿ ಬಂದಿಲ್ಲ!” ಅಂತ ನಗ್ತಾನೆ ಉತ್ತರ ಕೊಟ್ಳು. ಪಾಪ.! ಆ ವೃದ್ಧರಿಗೆ ಒಂದ್ ಕ್ಷಣಕ್ಕೆ ಹಾಗೆ ಹೊರಟೋಗ್ಬಿಡ್ಲಾ ಅನ್ನಿಸ್ಬಿಡ್ತು, ಮುಜುಗರನ‌ ಅನುಭವಿಸಬಹುದು ಆದರೆ ಜನರೆದ್ರು ತೋರಿಸಿಕೊಳ್ಳಕಾಗುತ್ತಾ? ನನಗೇನು ಕೇಳ್ಸಿಲ್ಲ ಅಂತಾನೆ ಓದಿಸಿ ಎಲ್ ಹೋದ್ರು ಗೊತ್ತೇ ಆಗ್ಲಿಲ್ಲ? ಎಂದು ಒಂದೇ ಸಮನೆ ನಮ್ಮ ಪಕ್ಕದ ಮನೆಯವರು ಹೇಳುತ್ತಿದ್ದರು. ಸರಿ! ಇಲ್ಲಿ ‘ಓದಿಸೋದು’ ಅಂದ್ರೆ ಏನು ಅಂದ್ರೆ ನಮ್ಮಲ್ಲಿ ಪ್ರಸೆಂಟೇಶನ್ ಕೊಡೋದು ಗಿಫ್ಟ್ ಕೊಡುವುದು ಕವರ್ ಮಾಡುವುದು. ಮುಯ್ ಹಾಕುವುದು ಅಂತಾರಲ್ಲ ಹಾಗೆ. + +‘ಓದಿಸೋದು’ ಅಂದ್ರೆ ಉಡುಗೊರೆ ಕೊಡುವುದು ಎಂದರ್ಥ. ‘ಉಡುಗೊರೆ’ ಉಡುವ ಕೋರಿ ಅಥವಾ ಬಟ್ಟೆಯೇ ಉಡುಗೊರೆ. ‘ಕ’ಕಾರ ‘ಗ’ಕಾರ ಆಗಿದೆ ‘ಕೋರಿ’ ಎಂದರೆ ‘ಸೀರೆ ಎನ್ನುವ ಅರ್ಥವಿದೆ ಆದರೆ ಇಂದು ಬ್ಲೌಸ್ ಪೀಸ್ ಕೊಟ್ಟರೂ ಅಥವಾ ಇನ್ಯಾವುದೇ ವಸ್ತು ಕೊಟ್ಟರೂ ಉಡುಗೊರೆ ಇಲ್ಲವೆ ಗಿಫ್ಟ್ ಎನ್ನುತ್ತಾರೆ. ‘ಮುಯ್ಯಿ’ ಎಂದರೆ ಪ್ರೆಸೆಂಟಶನ್ ಕೊಡುವುದು ಎಂದರ್ಥ. ‘ನಾನು ಕವರಿಗೆ ಸಾವಿರದ ಒಂದು ರೂಪಾಯಿ ಹಾಕಿದ್ದೆ ಅವರು ನೋಡಿದರೆ ಐನೂರೇ ರುಪಾಯಿ’ ಎಂದು ಕವರ್ ತೆಗೆಯುವಾಗ ಆಡುವ ಮಾತುಗಳಿಗೇನು ಕಡಿಮೆಯಿಲ್ಲ! ಒಂಥರಾ ಡಿ… ಕೋಡಿಂಗ್ ಇದ್ದಹಾಗೆ ಈ ಕವರ್ ಲೆಕ್ಕಾಚಾರ. ನಮ್ಮೀ ಕೊಡುಕೊಳ್ಳುವಿಕೆ ಇದ್ದ ಹಾಗೆ ಹೊಲ-ಗದ್ದೆಗಳ ಕೆಲಸಕ್ಕೆ ಜನ ಸಿಗದೆ ಇದ್ದಾಗ ಅಥವಾ ಕೂಲಿ ದುಬಾರಿ ಕೊಟ್ಟು ಕೆಲಸಕ್ಕೆ ಕರೆಯುವುದಕ್ಕಿಂತ ಕೆಲಸಕ್ಕೆ ಕೆಲಸವನ್ನೇ ಮಾಡುವ ಪದ್ಧತಿಗೆ ಮುಯ್ಯಿಆಳು ಎನ್ನುವರು. ಹೀಗೆ ಮುಯ್ಯಿ ಆಳಿಗೆ ಒಪ್ಪಿದರೆ ಎಂಥ ಕೆಲಸವಿದ್ದರು ಬಿಟ್ಟು ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. + + + +ಗಿಫ್ಟಿಗೆ ಪ್ರತಿಯಾಗಿ ರಿಟರ್ನ್ ಗಿಫ್ಟ್ ಎನ್ನುವ ರೂಢಿ ಇದ್ದೇ ಇದೆ. ಇದು ಖಂಡಿತಾ ಹೊಸದಲ್ಲ. ನಮ್ಮಲ್ಲಿ ಮದುವೆ ಮೊದಲಾದ ಶುಭಕಾರ್ಯಗಳಲ್ಲಿ ಊಟದ ನಂತರ ಹೆಣ್ಣು ಮಕ್ಕಳಿಗೆ ಉಡುಗೊರೆಯನ್ನು ಗಂಡು ಮಕ್ಕಳಿಗೆ ಫಲತಾಂಬೂಲವನ್ನೂ ತೀರಾ ಹತ್ತಿರದವರಾದರೆ ವಸ್ತ್ರ ಇತರೆ ವಸ್ತುಗಳನ್ನು ಕೊಡುವ ಪದ್ಧತಿ ಇತ್ತು. ಈಗಲೂ ಇದೆ ಇಲ್ಲಿ. ಕುತೂಹಲ ಹೆಚ್ಚಿ ಎಂಜಿಲು ಕೈ ಸರಿಯಾಗಿ ತೊಳೆಯುತ್ತಾರೋ ಇಲ್ಲವೋ ಗಿಫ್ಟ್ ತೆರೆದು ನೋಡಿ ಅದಕ್ಕೆ ಕಮೆಂಟ್ ಕೊಟ್ಟು ಆನಂತರ ಬೀಡವೋ ಇಲ್ಲವೋ ಐಸ್ಕ್ರೀಮ್ ಸರತಿಗೆ ಹೋಗುವುದು ಇರಲಿ. ಆನಂತರ ಸೆಲ್ಫಿ ಸ್ಟ್ಯಾಂಡಲ್ಲಿ ದಂಪತಿಗಳು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು. + +ಈ ವರ್ಷ ಮಳೆ ಹೆಚ್ಚೇ ಇತ್ತು ನೋಡಿ! ಮಳೆ ಇನ್ನೂ ಕಡಿಮೆ ಆಗಿರಲಿಲ್ಲ. ಶ್ರಾವಣ ಬಂದಂತೆಯೇ ಮದುವೆ, ಗೃಹಪ್ರವೇಶ ಮೊದಲಾದ ಶುಭಕಾರ್ಯಗಳು ಪ್ರಾರಂಭವಾಗಿಬಿಟ್ಟವು. ನಾವು ಹೋಗಿದ್ದಲ್ಲಿಗೇ ಶೀತ- ನೆಗಡಿಯಿಂದ ಬಳಲುತ್ತಿದ್ದವರೊಬ್ಬರು ಕೆಮ್ಮುತ್ತಲೇ ಸೆಲ್ಫಿ ಸ್ಟ್ಯಾಂಡಿಗೆ ಬಂದು ನಿಂತರು. ಇನ್ನೇನು ಫೋಟೊ ತೆಗೆಯಬೇಕು ಎನ್ನುವಾಗಲೆ ಕೆಮ್ಮು ಬಂದೇ ಬಿಡುತ್ತಿತ್ತು. ಎರಡು ಮೂರು ಬಾರಿ ಹೀಗೆ ಆಯಿತು. ಕೆಮ್ಮಿದರೆ ಗೊರ ಗೊರ ಸದ್ದೂ ಬರುತ್ತಾ ಇತ್ತು. ಅಂದರೆ ಅಸ್ತಮಾ ಅಂತ ಅರ್ಥ ಅಲ್ವ! ಇರಲಿ ಕೆಮ್ಮು- ದಮ್ಮು ಹೆಚ್ಚಿದ್ದ ಕಾರಣ ಆ ದಿನ ನನಗೆ ಇವರೆ ನಿಜವಾದ ‘ದಂಪತಿ ‘ಅನ್ನಿಸಿತು. + +‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ. ‘ಹಿಡಿದ ಕಾರ್ಯವನ್ನು ಬೇಗನೆ’ ಸರಿಯಾಗಿ ಮಾಡಿಯೇ ಬಿಟ್ಟೆ’ ಎನ್ನುವ ಸಂದರ್ಭದಲ್ಲಿಯೂ ‘ಧಮ್ ಕಟ್ಟಿ ಮಾಡಿದೆ’ ಎನ್ನುವುದಿದೆ. ಇನ್ನು ಇಂಡಿಯಾ ಪಾಕಿಸ್ಥಾನ ಒನ್ ಡೇ ಮ್ಯಾಚ್ ಇದ್ದು ಸೆಕೆಂಡ್ ಬ್ಯಾಟಿಂಗ್ ಇಂಡಿಯಾ ಕಡೆಯ ಓವರ್….. ಎರಡು ಬಾಲ್ ಮೂರು ರನ್ ಬೇಕಾಗಿದೆ ಎನ್ನುವಾಗ ಉಸಿರು ಬಿಗಿ ಹಿಡಿದುನೋಡುವುದಕ್ಕೂ ‘ಧಂ ಕಟ್ಟಿ ಮ್ಯಾಚ್ ನೋಡಿದೆ’ ಎಂದೇ ಹೇಳುವುದು. ಹಾಗೆ ಸಿಗರೇಟ್ ಸೇದುವವರು ಇದ್ದಾರೆ. ಗೊತ್ತಿಲ್ಲದೆ ಇದ್ದವರಿಗೆ ಒಂದು ಧಂ ಎಳಿ ನೋಡೋಣ ಎಂದು ದುರಾಭ್ಯಾಸ ಮಾಡಿಸುವವರೂ ಇದ್ದಾರೆ. ಕೆಲವರಿಗೆ ಒಂದಾದರ ನಂತರ ಐದಾರು ಸಿಗರೇಟ್‌ಗಳನ್ನು ರೇಟ್ ಎಷ್ಟಾದರೂ ಎಳೆಯುವವರು ಇದ್ದಾರೆ. ಇವರೂ ನಿಜವಾದ ‘ಧಂ ಪತಿ’ಗಳು ಎನ್ನಬಹುದೆ. + +ಗಿಫ್ಟ್ ವಿಚಾರ ಹೇಳುವಾಗ ಎಂಜಿಲು ಕೈ ವಿಚಾರ ಬಂತು. ಜಿಪುಣರಿಗೆ ಹೇಳುವ ‘ಎಂಜಿಲು ಕೈಯಲ್ಲಿ ಕಾಗೆಯನ್ನೂ ಓಡಿಸುವುದಿಲ್ಲ’ ಎಂಬ ಗಾದೆ ಎಲ್ಲರಿಗೂ ತಿಳಿದಿರುವಂಥದ್ದೆ. ಜಾನಪದ ತ್ರಿಪದಿಗಳಲ್ಲಿಕಣ್ಣೆಂಜಲ ಕಾಡೀಗಿ ಬಾಯೆಂಜಲವೀಳ್ಯಾವ|ಯಾರೆಂಜಲುಂಡು ನನಮನವ| ಹಡೆದೌವ್ನ|ಬಾಯೆಂಜಲುಂಡು ಬೆಳೆದೇನ||… ಎಂಬ ಸಾಲುಗಳು ಇವೆ ‘ಎಂಜಿಲು’ ಎಂದರೆ ಬಳಸಿದ, ರುಚಿ ನೋಡಿದ ಅಥವಾ ಊಟ ಮಾಡಿದ ಕೈ ಎನ್ನುವ ಅರ್ಥ ಬರುತ್ತದೆ. ಕಾಡಿಗೆ ಎಂದರೆ ಅರಣ್ಯ, ಕಾನನ, ವನ ಎಂಬ ಪದಗಳು ಸುಳಿದು ತಕ್ಷಣ ಇದು ಕಾಡು ಅಲ್ಲ ಕಾಡಿಗೆ ಕಣ್ಣಿಗೆ ಹಚ್ಚುವ ಕಣ್ಣುಕಪ್ಪು ಎನ್ನುವ ಅರ್ಥ ಬರುತ್ತದೆ. + +ಇಂದಿಗೆ ಕಾಡಿಗೆ ಪೆನ್ಸಿಲ್, ಬ್ರಷ್‌ಗಳಲ್ಲಿ ಬಂದಿದೆ ನಮ್ಮ ಅಮ್ಮಂದಿರೆಲ್ಲ ಕಿರುಬೆರಳಲ್ಲೆ ಕಾಡಿಗೆಯನ್ನು ದೃಷ್ಟಿ ಬೊಟ್ಟನ್ನು ಇಡುತ್ತಿದ್ದವರು ಅಲ್ಲವೆ.. 1980ರ ದಶಕದ ಹಿಂದಿನ ಯಾವುದೇ ಮಕ್ಕಳ ಫೋಟೋಗಳನ್ನು ತೆಗೆದುಕೊಂಡರೂ ಕಾಡಿಗೆಯ ಕಡುಕಪ್ಪನ್ನು ನೋಡಬಹುದು. ನಂದಿಬಟ್ಟಲುಹೂ, ಹರಳೆಣ್ಣೆ ಉಪಯೋಗಿಸಿ ಕಾಡಿಗೆ ಮಾಡುತ್ತಿದ್ದರು. ಕಣ್ಣಿನ ಕಸ ತೆಗೆಯಲು ಕಾಡಿಗೆ ಉಪಯುಕ್ತ ಕೆಲವರು ಕಾಡಿಗೆ ಹಾಕಿಕೊಂಡರೆ ಸಂಜೆ ಆದರೂ ಹಾಗೆ ಇರುತ್ತಾರೆ. ಕೆಲವರಿಗೆ ಕಾಡಿಗೆ ಬೇಗ ಸ್ಪ್ರೆಡ್ ಆಗಿ ರಾರ ಡ್ಯಾನ್ಸರ್ಸ್ ಆಗಿ ತಕ್ಷಣಕ್ಕೆ ಕಂಡು ಬಿಡುತ್ತಾರೆ. ಅದಕ್ಕೆ ಈಗ ವಾಟರ್‌ಪ್ರೂಫ್ ಕಾಡಿಗೆ ಬಂದಿರುವುದು. ಈ ಕಾಡಿಗೆ ಹಚ್ಚುವುದರಿಂದ ಕಣ್ಣಿನ ಆರೋಗ್ಯ ಮತ್ತು ಸೌಂದರ್ಯ ವೃದ್ಧಿಸುವುದರಲ್ಲಿ ಸಂಶಯವಿಲ್ಲ. ಚಂದ್ರಹಾಸನ ಕತೆಯಲ್ಲಿ ದುಷ್ಟಬುದ್ಧಿ ತನ್ನ ಮಗನಿಗೆ ಈ ಯುವಕನಿಗೆ ಬೆಳಗಾಗುವುದರೊಳಗೆ ವಿಷವನ್ನು ಕೊಡತಕ್ಕದ್ದು ಎಂದು ಕಾಗದ ಬರೆದು ಅವನ ಕೈಯಲ್ಲೆ ಕೊಟ್ಟಿರುತ್ತಾನೆ. ಚಂದ್ರಹಾಸ ಕುದುರೆ ಏರಿ ಬಂದು ಸುಸ್ತಾಗಿ ಮಲಗಿಕೊಂಡಿರುತ್ತಾನೆ. ಅದನ್ನು ಕಂಡ ದುಷ್ಟಬುದ್ಧಿಯ ಮಗಳು ವಿಷಯೆ ಆ ಪತ್ರವನ್ನು ಅವನಿಗೆ ತಿಳಿಯದಂತೆ ಓದಿ ಇಷ್ಟು ಸುಂದರನಿಗೆ ವಿಷವನ್ನು ಕೊಡುವುದೆ ಖಂಡಿತಾ ಇಲ್ಲ ಎಂದು ತನ್ನ ಕಾಡಿಗೆಯಿಂದಲೆ ವಿಷವನ್ನು ಇದ್ದದ್ದನ್ನು ವಿಷಯೆಯನ್ನು ಎಂದು ತಿದ್ದಿಬಿಡುತ್ತಾಳೆ. ಅವನನ್ನು ಮದುವೆಯಾಗುತ್ತಾಳೆ. ಇದು ಕಾಡಿಗೆ ಮಾಡಿದ ಉಪಕಾರ ಅಲ್ವೆ! ಮಂತ್ರಿ ಚಂದ್ರಹಾಸನ ತಂದೆಯನ್ನು ಕೊಂದಿದ್ದ ಆದರೆ ಚಂದ್ರಹಾಸ ಅವನ ಮೇಲೆ ಸೇಡು ಇಲ್ಲವೆ ಮುಯ್ಯಿ ತೀರಿಸಿಕೊಳ್ಳಲೇ ಇಲ್ಲ.. ಎಲ್ಲಾ ಸುಖಾಂತ್ಯವಾಯಿತು. + + + +‘ಕಣ್ಣೆಂಜಲ ಕಾಡಿಗೆ’ ಎಂದರೆ ಅಮ್ಮ ಬಳಸಿದ ಕಾಡಿಗೆಯಲ್ಲಿ ಎಷ್ಟು ಜನರು ದೃಷ್ಟಿ ಬೊಟ್ಟು ಇರಿಸಿಕೊಂಡಿಲ್ಲ ಹೇಳಿ! ಕಾಡಿಗೆ ಅಷ್ಟೇ ಅಲ್ಲ… ಅಮ್ಮ ಬಳಸಿದ ಎಲ್ಲವನ್ನೂ ನಾವು ಬಳಸಿದ್ದೇವೆ ಮತ್ತು ಬಳಸುತ್ತಿದ್ದೇವೆ. ನನ್ನ ಮಗ ಆರೇಳು ತಿಂಗಳಿನವನು ಆಗಷ್ಟೆ ರಾಗಿ ಮಾಲ್ಟ್ ಕೊಡಲು ಪ್ರಾರಂಭಿಸಿದ್ದೆ. ಅವನಿಗೆ ಹೊಟ್ಟೆ ಉಬ್ಬರವಾಗಿ ಒಂದೇ ಸಮನೆ ಅಳಲು ಪ್ರಾರಂಭಿಸಿದ. ಅತ್ತು ಸುಸ್ತಾಗುತ್ತಾನೇನೋ ಅನ್ನುವ ಭಯದಿಂದ ಗೆಳತಿ ಡಾಕ್ಟರ್ ವಿಶಾಲಾಕ್ಷಿಗೆ ಫೋನ್ ಮಾಡಿದಾಗ ಆಕೆ ಅಜವೈನನ್ನು ನೀವು ಜಗಿದು ಅದರ ಗಾಳಿಯನ್ನು ಅವನ ಬಾಯಿಗೆ ಊದಿ ಎಂದರು. ಹಾಗೆ ಮಾಡಿದ್ದೇ ಕಟ್ಟಿದ ಮಗುವಿನ ಹೊಟ್ಟೆ ಭಾರೀ ಸದ್ದಿನೊಂದಿಗೇ ಬಿಟ್ಟಿತು. ಆರಾಮಾದ ಇಂಥ ರೆಮಿಡಿಗಳನ್ನು ಹಿರಿಯರು ಎಷ್ಟೋ ಮಾಡಿರುತ್ತಾರೆ. ‘ಹಡೆದೌವ್ನ ಬಾಯೆಂಜಲುಂಡು ಬೆಳೆದೇನ’’ ಎನ್ನುವ ತ್ರಿಪದಿಯ ಸಾಲು ಎಷ್ಟು ಸರಿ ಅಲ್ವ! ವಿಪರ್ಯಾಸ ಅಂದರೆ ತಿಳಿವಳಿಕೆ ಇದ್ದವರೂ ಕೆಲವೊಮ್ಮೆ ಎಷ್ಟು ವಯಸ್ಸಾದರೂ ಎಂಜಿಲು ಹಚ್ಚಿ ಪುಟ ತಿರುಗಿಸುವುದು, ನೋಟು ಎಣಿಸುತ್ತಾರೆ. ಹೀಗೆ ಮಾಡಬಾರದು ಅನ್ನುವುದಕ್ಕಿಂತ ಸಭ್ಯತೆ ಅಲ್ಲ ಅನ್ನಿಸುತ್ತದೆ. ಇನ್ನೂ ಅಸಭ್ಯ ಎಂದರೆ ಅಸಂಬದ್ಧ ಉತ್ತರಗಳನ್ನು ಬರೆದು ಉತ್ತರ ಪತ್ರಿಕೆಗಳಲ್ಲಿ ಪು.ತಿ.ನೋ ಎಂದು ಬರೆದಿರುತ್ತಾರೆ ಕೆಲ ವಿದ್ಯಾರ್ಥಿಗಳು. ಕೋಪ ನೆತ್ತಿಗೇರುತ್ತದೆ! ಉತ್ತರ ಪತ್ರಿಕೆಗಳ ಉತ್ತರವನ್ನೆ ಇರಿಸಿಕೊಂಡು ನಮ್ಮ ಪದ ಕ್ಯಾತೆ ಮುಂದಿನ ಕಂತು ಮುಂದುವರೆಯಲಿದೆ… + +ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_220.txt b/Kenda Sampige/article_220.txt new file mode 100644 index 0000000000000000000000000000000000000000..93891f8e1f0b7bd9e07afd05feef87d1b049ab1f --- /dev/null +++ b/Kenda Sampige/article_220.txt @@ -0,0 +1,49 @@ +ಮದ್ರಾಸಿನ ಬೀದಿಗಳ ಗುಂಟ ಇಬ್ಬರೂ ತಿರುಗುತ್ತಿದ್ದೇವೆ. ಆ ಜೂನ್ ತಿಂಗಳಿನಲ್ಲಿ ಸೂರ್ಯನು ಕಿಡಿಕಾರುತ್ತಿದ್ದಾನೆ. ಈಗ ನನಗೆ ಉದ್ಯೋಗ ಸಿಕ್ಕಿರುವುದರಿಂದ ನನ್ನ ಜೇಬಿನಲ್ಲಿ ಸ್ವಲ್ಪ ಹಣವಿದೆ. ಆದರೆ ಜಟಕಾ ಬಂಡಿಹತ್ತಿ ತಿರುಗುವಷ್ಟಿಲ್ಲ. ಆಗ ಮದ್ರಾಸಿನಲ್ಲಿ ಹೊರತು, ತೆಲುಗು ದೇಶದಲ್ಲಿ ಎಲ್ಲಿಯೂ ಮಹಿಳೆಯರ hostels ಇಲ್ಲ. ಯಾವ school ಆದರೂ ವೊಯ್ಯಿಯನ್ನು ಸೇರಿಸಿಕೊಂಡು ಸವಲತ್ತು ಕೊಡುವ hostel ಕಾಣಿಸುತ್ತವೆಯಾ ಎಂದು ಹುಡುಕುತ್ತಾ ತಿರುಗುತ್ತಿದ್ದೇವೆ. ದರಗಳು, ಮರ್ಯಾದೆಗಳು, ವಿದ್ಯೆಯ ಮಟ್ಟವು ಏನನ್ನು ತಿಳಿಯದವರು. ನಮ್ಮ ಧೂಳು ತುಂಬಿದ ಮುಖಗಳು, ಮಾಸಿ ಹೋದ ಬಟ್ಟೆಗಳನ್ನು ನೋಡಿದರೇನೆ ಯಾರಿಗೂ ನಂಬಿಕೆ ಬರುತ್ತಿಲ್ಲ. ನಮ್ಮ ದೇಹಿ ಮುಖಗಳನ್ನು ನೋಡಿ ಒಬ್ಬ ಕ್ರಿಶ್ಚಿಯನ್ ಆತ. “Can I be of any help” ಎಂದ. ಅದೇನು ಅದೃಷ್ಟವೂ ಏನೋ, ಕಾರಣವಿಲ್ಲದೆ ಸಹಾಯ ಮಾಡುತ್ತೇವೆಯೆಂದು ಯಾರು ಬಂದರೂ ಅವರು ಕ್ರಿಶ್ಚಿಯನ್ನರೇ. ಹಿಂದುಗಳು ಕಲ್ಪಿಸಿದ ಈಶ್ವರನೆಂದು ಹೇಳುವುದಕ್ಕೆ ನಾನು ನಂಬಿಕೆ ಪಡುತ್ತೇನೆ. ಆದರೂ ಮೊದಲು ಈಶ್ವರನ ಹೆಸರೆತ್ತಿದ್ದು ಯಹೂದಿಯರಂತೆ. ನಗುತ್ತ ನನ್ನ ಸ್ನೇಹ ಬಯಸಿ ನನ್ನ ಹತ್ತಿರಕ್ಕೆ ಸೇರಿದವರೆಲ್ಲಾ ಮುಸ್ಲಿಂರೇ. ನಾನು ಯಾರೋ ತಿಳಿಯದೆ ಇಷ್ಟರಲ್ಲಿ ಏನೂ ಹೋಗುತ್ತದೆಯೆಂದು ಕಲ್ಲೊಂದನ್ನು ನನ್ನ ಮೇಲೆ ಎಸೆದವರೆಲ್ಲಾ ಹಿಂದುಗಳೆ, ಅದರಲ್ಲೂ ಮುಖ್ಯವಾಗಿ ಬ್ರಾಹ್ಮಣರೇ.ನಮ್ಮ ಹೊಸ ಮಿತ್ರನೊಂದಿಗೆ ನಮ್ಮ ಸಮಸ್ಯೆಯನ್ನು ನಿವೇದಿಸಿಕೊಂಡೆವು. ಎರಡು ಮೂರು ಪ್ರಶ್ನೆಗಳನ್ನು ಕೇಳಿದ. ನಮ್ಮ ಬದುಕುಗಳ ದರಿದ್ರವನ್ನು ಗ್ರಹಿಸಿದ. ಕುಲವಿಲ್ಲದವರು ಆ ನಿಮಿಷದಲ್ಲಿ ದೇವರು ಎಷ್ಟು ಹತ್ತಿರದಲ್ಲಿದ್ದಾನೋ ನಮಗೆ ಗೊತ್ತಿಲ್ಲ. + +“ರಾಯಪುರ Girls High School ನಲ್ಲಿ Try ಮಾಡಿದಿರಾ?” ಎಂದು ಕೇಳಿದ.“That is the very Good place for you”ಸಂತೋಷವಾಗಿ ನಾವು ಹೋಗುತ್ತಿದ್ದರೆ,“God bless you” ಎಂದ. + +ಆ School ಗೆ ಹೋಗಿ, ಪ್ರಿನ್ಸಿಪಾಲ್‍ರನ್ನು ನೋಡುತ್ತೇನೆ ಎಂದೆ. ಮಹಡಿ ಮೇಲಿನ ಒಂದು ದೊಡ್ಡ ಕೋಣೆಯೊಳಗೆ ಪ್ರಶ್ನೆ ಮಾಡದೆ ಕರೆದುಕೊಂಡು ಹೋದರು. ಅಲ್ಲೊಬ್ಬ ಮುದುಕಿ ಇಂಗ್ಲಿಷ್ ಮಾತನಾಡುತ್ತ ಆಫೀಸಿನ ಮೇಜಿನ ಮೇಲೆ ಕುಳಿತುಕೊಂಡು ಬರೆಯುತ್ತಿದ್ದಾಳೆ. ಕಣ್ಣೆತ್ತಿ ನಮ್ಮ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದಳು. + +“ಈಕೆಯನ್ನು ಸೇರಿಸಿಕೊಳ್ಳುತ್ತೀರಾ?” ಎಂದು ಕೇಳಿದ.“of course” ಎಂದಳು. + +ರಿಜಿಸ್ಟರ್‍ಗಳು, ಕಾಗದಗಳನ್ನು ಮುಂದಿಟ್ಟೆ. ಅಷ್ಟರಲ್ಲಿ ಪೇಜ್‍ಗಳನ್ನು ತಿರುಗಿಸುತ್ತಾ ವೊಯ್ಯಿಯನ್ನು ಕರೆದು ಪಕ್ಕದಲ್ಲಿ ಕುಳ್ಳಿಸಿಕೊಂಡೆ. ಮತ್ತೆ ಬರೆಯಲು ತೊಡಗಿದಳು. ಒಂದೆರಡು ನಿಮಿಷಗಳ ನಂತರ, ತಲೆಯೆತ್ತಿ ನನ್ನೊಂದಿಗೆ. + +“All Right you can go” ಎಂದಳು. + +ನನಗೇನು ಅರ್ಥವಾಗಲಿಲ್ಲ. ಮಾರನೇಯ ದಿನ ಮತ್ತೆ ಹೋದೆ, ವೊಯ್ಯಿ ಬಟ್ಟೆಗಳ ಪೆಟ್ಟಿಗೆಯನ್ನು ತೆಗೆದುಕೊಂಡು, ಆಕೆ ನನ್ನನ್ನು ನೋಡುತ್ತಿರುವಂತೆ ಕುಳಿತುಕೊಳ್ಳಲು ಹೇಳಿದಳು. ವೊಯ್ಯಿ ಕುಣಿದಾಡುತ್ತ ಬಂದಳು. + +ಇಲ್ಲಿ ತುಂಬಾ ಚೆನ್ನಾಗಿದೆ. ಊಟಕ್ಕೆ ತೊಂದರೆ. ಆದರೆ ನಾನು ತೊಂದರೆಯೆಂದು ಭಾವಿಸುತ್ತಿಲ್ಲ. ನನಗೆ ನೀನು ತಿಂಗಳಿಗೆ 37 ರೂಪಾಯಿ ಕಳುಹಿಸಿದರೆ ಸಾಕು.“ನಾನಿನ್ನೂ ದಿಗ್ಭ್ರಮೆಯಿಂದ ಹೊರಗೆ ಬರಲಿಲ್ಲ” ಇವರು ಒಂದು ವೇಳೆ Christion ಧರ್ಮಕ್ಕೆ ಸೇರು ಎಂದರೆ ಸೇರಲಾ? ಇಲ್ಲಿ ಎಲ್ಲರೂ ಕ್ರಿಶ್ಚಿಯನ್ನರೆ” ಎಂದಳು. + +ನಿನ್ನ ಹಿಂದೆ ನಾನೂ ಆಗುತ್ತೇನೆ. ಹಿಂದೂ ಪೀಡೆ ತೊಲಗಿ ಹೋಗುತ್ತದೆ. + +ಹಿಂದೂ school ನಲ್ಲಿ, Government School ನಲ್ಲಿ ಅವರ ನೋಟಗಳು ಅವರ ಗರ್ವಗಳು, ಅವರ ಪ್ರಶ್ನೆಗಳು ನೆನಪಿಗೆ ಬಂದವು.ಆ ರಾತ್ರಿ ನಾನು ಸಂತೋಷದಿಂದ ರೈಲು ಹತ್ತಿ ನನ್ನ ಯುದ್ಧಭೂಮಿಗೆ; ಅಂದರೆ ನಾನು ಕೆಲಸ ಮಾಡುವ ಸ್ಕೂಲ್‍ಗೆ 60 ಮೈಲಿ ವೇಗದಲ್ಲಿ ಮರಳಿ ಹೋಗುತ್ತಿದ್ದಾನೆ. ಅಂತ್ಯವಿಲ್ಲದ ಈ ಕತ್ತಲಲ್ಲಿ. ಈ ಹೊಗೆಯ ಬಂಡಿ ಗಂಭೀರವಾಗಿ, ದೃಢವಾಗಿ, ನಿರ್ಭಯವಾಗಿ, ಯಾವ ಸಂದೇಹವೂ ಇಲ್ಲದೆ, ಮುಂದಕ್ಕೆ ಸಾಗುತ್ತಾ ಹೋಗುತ್ತಿದೆ. ನನ್ನ ಜೀವನ ಹಾಗೆ ಸಾಗಿ ಹೋಗಬಾರದಾ? ನನ್ನ ಪಕ್ಕದಲ್ಲಿ ಒಂದು 20 ಜನ ಕುಳಿತಿದ್ದಾರೆ. ಅವರ ಮುಖಗಳ ಕಡೆ ನೋಡುತ್ತ, ಹೀಗೆ ಭಾವಿಸಿಕೊಂಡೆ. + +“ನೀವೆಲ್ಲಾ ನಿರ್ವೀಚಾರವಾಗಿ, ನಿರ್ಭಯವಾಗಿ ಕುಳಿತಿರುವಿರಿ ಎಷ್ಟೊಂದು ತೃಪ್ತಿ ಸಂತೋಷವೊ ನಿಮ್ಮ ಮುಖಗಳಲ್ಲಿ. ಈ ಕತ್ತಲಿನಲ್ಲಿ ಇಷ್ಟೊಂದು ವೇಗವಾಗಿ ಚಲಿಸುವ ಈ ಯಂತ್ರದ ಕುರಿತು ನಿಮಗಷ್ಟು ವಿಶ್ವಾಸ, ನಿಮ್ಮನ್ನು ಸುರಕ್ಷಿತವಾಗಿ ಮನೆ ಸೇರಿಸುತ್ತದೆ. ಹಾಗೆಯೇ ನಿಮ್ಮ ಜೀವನಗಳ ಮೇಲೆಯೂ ಕೂಡಾ ಹಾಗೆಯೇ ವಿಶ್ವಾಸವಿರುತ್ತದೆ. ತಿಳಿದೋ, ತಿಳಿಯದೋ, ನಿಮ್ಮನ್ನು ಪ್ರೀತಿಸುವ ಈಶ್ವರನು ಸುರಕ್ಷಿತವಾಗಿ ಕಾಪಾಡುತ್ತಾ ಕರೆದುಕೊಂಡು ಹೋಗುತ್ತಿದ್ದಾನೆಂದು. ನಿಜವಾಗಿ ಹೇಳಿ, ಇದ್ದಾನಾ? ನಿಮಗೆ ಗೊತ್ತಾ? ನನ್ನ ಅನುಮಾನಗಳು ನಿಮಗೆ ಇಲ್ಲವಾ? ಈ ನಿರ್ಭಾಗ್ಯನಿಗೆ ನೀವು ಯಾವ ವಿಧವಾದ ತೃಪ್ತಿಯನ್ನು ಕೊಡುವುದಕ್ಕೆ ಆಗುವುದಿಲ್ಲ?” + + + +ಆ ಮಧ್ಯಾಹ್ನ ನಮಗೆ ಸಹಾಯ ಮಾಡಿದ ಕ್ರಿಶ್ಚಿಯನ್ ಆತ ನೆನಪಾದ. ನಾವು ಎಂತಹವರೆಂದು ತಿಳಿದು ಕೂಡಾ may god blessing ಎಂದ. ನಿಜವಾಗಲೂ ಒಂದು God bless ಮಾಡುತ್ತಾನಾ? ಅಂತಹ ಒಬ್ಬ ಸರ್ವ ರಕ್ಷಕನ ಮೇಲೆ, ದಯಾಮಯನ ಮೇಲೆ ಭಾರವಾಕಿ ಬದುಕಲಾದರೆ, ಬ್ರಹ್ಮ ಸಮಾಜದಲ್ಲಿ ಹಾಗೆಯೇ ಬದುಕುತ್ತಿದ್ದೆ. ನನಗೆ ಯಾಕೆ ಇದ್ದಾನಾ? ಇಲ್ಲವಾ? ಎಂದು ಅನುಮಾನಗಳು ಬರಬೇಕು? ಇದೆಲ್ಲಾ ನನ್ನ ಸ್ತ್ರೀ ವ್ಯಾಮೋಹದಿಂದ ತಾನೇ! ಆದರೆ ಸ್ತ್ರೀ ಶೃಂಗಾರ ವೆಂಬುದು ಇಲ್ಲದೆ ಹೋದರೆ ಯಾಕೆ ಬದುಕಿ! ಸಮಸ್ತವೂ ತಾನೇ ಆದ ಈಶ್ವರನು, ಈ ಸ್ತ್ರೀ ಶೃಂಗಾರ, ಇವೂ ಕೂಡಾ ತಾನೇ ಆಗಬಾರದಾ? ಇವುಗಳ ಕುರಿತು ನನಗೆ ಯಾಕೆ ವಿರೋಧ? ಈ ಮಾತುಗಳನ್ನು ನೆನೆಯುತ್ತಿರುವಂತೆ ಆ ಕೊಳಚೆ ಶಾಲೆಯಲ್ಲಿ ಒಂಟಿಯಾಗಿ ಓದಿಕೊಳ್ಳುವ ವೊಯ್ಯಿ, ಆಕೆಯ ಬೆರಳನ್ನೂ ಬಿಡದೆ ಮುತ್ತಿಟ್ಟುಕೊಳ್ಳಲು ಸಾಧ್ಯವಾಗದೆ ಬಿಟ್ಟುಬಿಟ್ಟ ಕೊನೆಯ ನಿಮಿಷದ ಮಾಧುರ್ಯ, ಮನೆಯ ಹತ್ತಿರ ಅಪ್ಪ ಯಾವಾಗ ಬರುತ್ತಾನೆಂದು ಎದುರು ನೋಡುವ ರವಿ, ಮೇಷ್ಟ್ರು ಮುಖ ಮತ್ತೆ ನಮಗೆ ಯಾವಾಗ ಕಾಣಿಸುತ್ತದೆಯೆಂದು ಎದುರು ನೋಡುವ ನನ್ನ ವಿದ್ಯಾರ್ಥಿಗಳ ಪ್ರೀತಿ, ಇವೆಲ್ಲಾ ನೆನಪಿಗೆ ಬಂದು ನನ್ನ ಹೃದಯ ಕೃತಜ್ಞತೆಯಿಂದ ತುಂಬಿ ಹೋಯಿತು. ಯಾರಿಗೂ ಕೃತಜ್ಞತೆ ಇಲ್ಲವಲ್ಲವೆ! ಎಷ್ಟು ಅನ್ಯಾಯ ಮಾಡಿದನೋ ನನ್ನನ್ನು ನಂಬಿಸಿ ನನ್ನ ಪ್ರೀತಿಯನ್ನು ತೆಗೆದುಕೊಂಡು. ನಾನು ಇದ್ದೇನೆ. ಇಷ್ಟೇ ಬೇಕು ಎಂದು….! ನಿದ್ದೆ ಹೋದೆ. + +* * * * * + +ಅಲ್ಲಿ Students, teachers ಎಲ್ಲರೂ ಕ್ರಿಶ್ಚಿಯನ್ನರು, ತನ್ನನ್ನು ಹೊರತುಪಡಿಸಿ, ಆದರೆ ತನ್ನನ್ನು ಬೇರೆಯಾಗಿ ನೋಡಲಿಲ್ಲ. ಕ್ರಿಶ್ಚಿಯನ್ ಧರ್ಮದಲ್ಲಿ ಸೇರುಯೆಂದು ತನ್ನನ್ನು ಕೇಳಲಿಲ್ಲ. ಎಲ್ಲರೂ ಎಷ್ಟೊಂದು ಒಳ್ಳೇಯವರೋ, ಊಟ ಮಾತ್ರ ತುಂಬಾ ಘೋರ. ವಾರಕ್ಕೊಂದು ಸಾರಿ ಎರಡು ಚೆಂಬು ನೀರು ಸ್ನಾನಕ್ಕೆ. ಆಕೆಯ ಬರುವಿಕೆಗಾಗಿಯೆ ನಾನು ರವಿ ಅಷ್ಟು ತಿಂಗಳು ಕನಸು ಕಾಣುತ್ತಿದ್ದೇವೆ. ಯಾವಾಗಲು ಬದುಕು ಕಡಿಮೆಯಾಗಿ ಕಾಣಿಸುತ್ತಿತ್ತು. ನೋವಿಂದ ಇರುತ್ತಿತ್ತು. ವೊಯ್ಯಿ ಬಂದು ನಮ್ಮೊಂದಿಗೆ ಇದ್ದರೆ ಸಾಕು. ಇನ್ನು ಕಾಲವೆಲ್ಲಾ ಆನಂದಮಯವಾಗುವುದಿಲ್ಲವಾ ಎಂದು ಕನಸು ಕಾಣುತ್ತಿದ್ದೇವೆ. + +ಅಧಿಕಾರಿಗಳೊಂದಿಗೆ ದೊಡ್ಡ ಸಮರ ಪ್ರಾರಂಭಿಸಿದೆ. ಅದರೊಂದಿಗೆ ಸರಿ ಹೋಗುತ್ತಿತ್ತು ನನ್ನ ಕಾಲವೆಲ್ಲಾ. ಆ ಕಾಲದಲ್ಲಿಯೇ ಪ್ರಕಾಶಂ ನನ್ನನ್ನು ನೋಡಲು ಬಂದದ್ದು ರಾಮೂರ್ತಿ, ರತ್ನಮ್ಮ, ಪ್ರಕಾಶಂ, ಸತ್ಯವತಿ ಬಂದು ಬೇರೆ ದಿಕ್ಕಿಲ್ಲದೆ ನಮ್ಮೊಂದಿಗೇನೆ ಇರುತ್ತಿದ್ದಾರೆ. ಯಾವಾಗ ಅವರು ಬಂದು ನಮ್ಮ ಶರಣಾಗತಿ ಎಂದರೋ, “T” ತನ್ನ ಹಳೆಯ ಕೋಪಗಳನ್ನು ಮರೆತು ಅವರನ್ನು ತನ್ನ ಹೃದಯಕ್ಕೆ ಹತ್ತಿರ ಮಾಡಿಕೊಂಡಳು. ಆಕೆ ಹೊಟ್ಟೆಯಿಂದ ಇದ್ದಾಳೆ. ಅವರ ಕಡೆಯವರು ಯಾರೂ ಸಹಾಯ ಮಾಡಲಿಲ್ಲ. ‘T’ ಎಲ್ಲರಿಗೆ ಅಡುಗೆ ಮಾಡುತ್ತಿದ್ದಳು. ಎಲ್ಲರೂ ಬೆರೆತು ಬರೀ ಕಥೆಗಳು, ಹಾಡುಗಳು, ನಗೆಗಳು, ತುಂಬಾ ಸುಂದರವಾಗಿ ಕಳೆದೆವು. ಆ ಕಾಲವನ್ನು ವೊಯ್ಯಿ ನಮ್ಮೊಂದಿಗೆ ಇಲ್ಲದಿರುವುದೊಂದೇ ಕೊರತೆ. ರಾಮೂರ್ತಿಗೆ ಪ್ರಕಾಶಂ ಇಬ್ಬರಿಗೂ ನಮ್ಮ ಸ್ಕೂಲ್‍ನಲ್ಲಿಯೇ ಕೆಲಸ ಕೊಡಿಸಿದೆ. + +ಬಂದಾಗಿನಿಂದ ಸತ್ಯವತಿ, ರತ್ನಮ್ಮ ನನ್ನನ್ನು ಹಿಡಿದುಕೊಂಡು ನೇತಾಡುತ್ತಿದ್ದಾರೆ. ಮದ್ರಾಸ್‍ನಲ್ಲಿರುವ ವೊಯ್ಯಿಯನ್ನು ನೆನಪಿಸಿಕೊಂಡ ಮಾತ್ರಕ್ಕೆ ನನ್ನ ಮನಸು ಪರವಶವಾಗುತ್ತಿತ್ತು. ನಾನು ದೈವವನ್ನು ಕಾಂಕ್ಷೆ ಮಾಡಿದಷ್ಟೂ ಕಾಲ, ಎಲ್ಲದಕ್ಕಿಂತ ಆತನೇ ವಾಂಚನಿಯ ನನಗೆ ಆತನೇ ಶರಣ್ಯ. ಆ ಈಶ್ವರನ ಕುರಿತು ಯಾವಾಗ ಅನುಮಾನಗಳು ಮೂಡಿದವೊ, ಅಂದಿನಿಂದ ಸ್ತ್ರೀಯೇ ನನ್ನ ದೈವವಾಯಿತು. ಆಕೆಯಲ್ಲಿಯೆ ನನ್ನ ಜೀವನಕ್ಕೆ ಸಾಪಲ್ಯ ಅದಕ್ಕಿಂತ ಈ ಲೋಕದಲ್ಲಿ ಬಯಸುವಂತಹದು ಏನೂ ಇಲ್ಲ. ಇದಕ್ಕಿಂತ ಯಾವುದೂ ತೃಪ್ತಿ ಕೊಡುವುದಿಲ್ಲ. ನನ್ನನ್ನು, ನನ್ನ ದುಃಖವನ್ನು, ನನ್ನ ಆಶಯಗಳನ್ನು, ಎಲ್ಲವನ್ನು ಆಕೆಯೊಬ್ಬಳೇ ತೀರಿಸಬಲ್ಲಳು. ಆಕೆಯ ಪ್ರೀತಿಯನ್ನು ಪಡೆದವನು ಧನ್ಯನು ಆದರೆ ನನ್ನ ಬುದ್ಧಿ ಚಂಚಲ. ನನ್ನ ಮನಸು ಹೃದಯ ಒಬ್ಬರ ಮೇಲೆ ನಿಂತಿದ್ದರೂ, ಅಷ್ಟರಲ್ಲಿ ಯಾರಾದರು ನನ್ನ ಕಡೆಗೆ ಕೈಚಾಚಿದರೂ, ನನ್ನನ್ನು ಕಣ್ಣಿನಿಂದ ಆಕರ್ಷಿಸಿದರೂ, ನಿಲ್ಲಲಾರದೆ ಆಕೆಯ ಕಡೆಗೆ ಓಡಿ ಹೋಗುತ್ತಿದ್ದೆ. ಈ ಚಂಚಲತೆಯಿಂದ ನನ್ನ ಆದರ್ಶ ಪ್ರೀತಿಗೆ ಯಾವ ಭಂಗವೂ ಉಂಟಾಗುತ್ತಿರಲಿಲ್ಲ. ಈ ಚಂಚಲತೆಯನ್ನು ನೋಡಿದರೆ, ನನಗೆ ತುಂಬಾ ಹೇಸಿಗೆ. ಈ ಗುಣದಿಂದ ನನ್ನ ಜೀವನವೆಲ್ಲಾ ಯುದ್ಧ ಮಾಡಿದೆ. ಆದರೆ ನನ್ನನ್ನು ಬಿಡುವುದಿಲ್ಲ. ಆ ದೋಷ ಅದರಿಂದ ಎಷ್ಟೊಂದು ಸಿಕ್ಕುಗಳಲ್ಲಿ ಇಳಿದೆನೋ! ಅಸಹ್ಯವಾದ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡೆ. + +ಚಿಕ್ಕಂದಿನಿಂದ ಸ್ತ್ರೀಯೊಬ್ಬಳು ಆದರ್ಶಮೂರ್ತಿ ನನ್ನ ಭಾವಗಳಲ್ಲಿ ನಿಂತಿದ್ದಾಳೆ. ನನಗೆ ಯಾವ ಸ್ತ್ರೀಯ ಮೇಲಾದರು ಪ್ರೀತಿಯುಂಟಾದಾಗ ಆಕೆಯನ್ನು ನನ್ನ ಆದರ್ಶದೊಂದಿಗೆ ಹೋಲಿಸಿಕೊಳ್ಳುತ್ತಿದ್ದೆ. ವೊಯ್ಯಿ ಸ್ಕೂಲ್‍ನಿಂದ ಮರಳಿ ಬಂದ ಮೇಲೆ ಎಷ್ಟೊಂದು ಚೆನ್ನಾಗಿ ಜೀವಿಸುತ್ತೇವೆಯೊ! ಕುಳಿತುಕೊಂಡು ಕಥೆಗಳನ್ನು ಹೇಳಿಕೊಳ್ಳುತ್ತಲೋ ಕನಸುಗಳನ್ನು ಕಾಣುತ್ತಿದ್ದೇವು ನಾನೂ, ರವಿ. ಆ ಆಸೆಗಳೆಲ್ಲಾ ಸಂತೋಷದಿಂದ ಇರುವ ಯಾವುದೋ ತಿಳಿಯದೆ ಇರುವುದಕ್ಕಾಗಿ, ಯಾವುದಕ್ಕಾಗಿಯೊ, ಮನಸಿನಲ್ಲಿ ಕದಲುತ್ತಿರುತ್ತದೆ. ಆ ಆಸೆಗಳೆಲ್ಲಾ ವೊಯ್ಯಿಯ ಮೇಲೆ center ಆಗಿರುತ್ತದೆ. ಹೊಸದಾಗಿ ಆಗಲೇ ಇಂಗ್ಲೀಷಿನಲ್ಲಿ ಹೊರಬಂದ ಠಾಕೂರ್‍ರವರ ಪುಸ್ತಕಗಳನ್ನು ಓದಿ ಕನಸು ಕಾಣುತ್ತಿದ್ದೇವು ರವಿ, ನಾನು ಇಬ್ಬರೇ. + +(ಲಕ್ಕೂರು ಆನಂದ್‌) + +ಈಶ್ವರನಲ್ಲಿ ವಿಶ್ವಾಸವಿಲ್ಲ. ಆದರೆ ಠಾಕೂರ್‍ರವರ ನಿತ್ಯಪಥಿಕನು, ಜನ್ಮ-ಜನ್ಮಗಳ ಸಹಚರನು ಎಷ್ಟು ಹತ್ತಿರವಾಗಿ ತೆಗೆದುಕೊಂಡು ಮಧುರ ಭಾವಗಳಿಂದ ಆರಾಧಿಸಿ ಕೊಳ್ಳುತ್ತಿದ್ದೇವೊ ರವಿ, ನಾನೂ. ಮನಸಿನಲ್ಲೂ, ಕತ್ತಲಲ್ಲೂ, ಇಕ್ಕಟ್ಟಾದ ಸ್ಥಿತಿಯನ್ನು ನೋಡಿದ ಸ್ವಲ್ಪ ಸಮಯದಲ್ಲಿ ಅವರಿಗಿಂತ ಅಧಿಕನೆಂಬ ಭಾವ ನನ್ನಲ್ಲಿ ಮೊದಲಿನಿಂದ ಇರುತ್ತಿತ್ತು. ಈ ಮಾಮೂಲು ನೀಚತ್ವದಿಂದ, ಸ್ವಾರ್ಥಗಳಿಂದ, ಉನ್ನತವಾಗಿ ಬದುಕುತ್ತಿದ್ದೆ. ಅವು ನನ್ನ ಸ್ವಭಾವದಲ್ಲಿ ಇಲ್ಲ. ಪೂರ್ತಿಯಾಗಿ ನನ್ನನ್ನು ನಾನು ತೆರೆದುಕೊಂಡು ಮನುಷ್ಯರೊಂದಿಗೆ ಸ್ನೇಹದಿಂದ ಬೆರೆಯಲಾರೆ. ಮನುಷ್ಯರಿಂದ ಬಹಿಷ್ಕಾರ, ಅವಹೇಳನ ವಿರೋಧ ನನ್ನನ್ನು ಆ ವಿಧವಾಗಿ ಮಾಡಿದವು. ಎಷ್ಟು ಬಾಧೆಯಲ್ಲಿದ್ದರೂ ನನಗೆ, ಪ್ರೀತಿಯಲ್ಲಿ ಹೊರತು ಸ್ನೇಹದಲ್ಲಿ ಅರಳುವುದಿಲ್ಲ. ಅಂದಿಗೂ ಇಂದಿಗೂ ಕೂಡಾ. ಅದಕ್ಕೆ ನಾನು ಒಬ್ಬನೆ ಇರುವೆ. ಎಲ್ಲರಲ್ಲಿದ್ದರೂ ಒಂಟಿ ಮನುಷ್ಯನು. ಅವರ ಮಾಮೂಲು ಮಾತುಗಳನ್ನು ನಾನು ಮಾತನಾಡಲಾಗದು. ಅವರ ಮಾಮೂಲು ಪ್ರವರ್ತನೆ ನನ್ನಿಂದ ಆಗುವುದಿಲ್ಲ. ನನ್ನ ಜೀವನದಲ್ಲಿ ರವಿ ನನಗೆ ದೊಡ್ಡ ಮಿತ್ರನು. + +* * * * * + +ಅಧಿಕಾರಿಗಳೊಂದಿಗೆ ನನ್ನ ಬಡಿದಾಟ ಹೆಚ್ಚಾಗಿ ಹೋಗಿವೆ. ಹೇಗಾದರು ಮಾಡಿ ನನ್ನನ್ನು ಬಿಡಿಸಬೇಕೆಂದು ಬ್ರಹ್ಮ ಪ್ರಯತ್ನ ಮಾಡುತ್ತಿದ್ದಾರೆ. students ಎಲ್ಲರೂ ಹಠ ಹಿಡಿದು ನನ್ನ ಕಡೆಗೆ ಇರುವುದರಿಂದ, ಅವರು ಏನು ಮಾಡಲು ಆಗದೆ ಹೋಗುತ್ತಿದ್ದಾರೆ. ಇನ್ನು ಮಾಡಲು ಏನೂ ಇಲ್ಲದೆ ನಾವಿರುವ ಮನೆಯಿಂದ ಹೊರ ಹೋಗಲು ಹೇಳಿದರು. ಅಸಲೇ ಅದು ಊರ ಹೊರಗಿನ ಮನೆ. ಇಷ್ಟರಲ್ಲಿ ಅಲ್ಲಿ ಸೌರಿಸ್ ಹುಟ್ಟಿದಳು. ನಮ್ಮ ಕುರಿತು ದಯೆಯುಂಟಾಗಿ ಆ ಊರಿನ agricultural officer ಪಾತ್ರೋ ಊರಿಗೆ ಮೂರು ಮೈಲಿ ದೂರದಲ್ಲಿ ದೊಡ್ಡ ಕಾಡಿನ ನಡುವೆ ಯಾವಾಗಲೋ Government ರವರು ಕಟ್ಟಿ ಬಿಟ್ಟಿರುವ ಬಂಗಳೆಯೊಂದಕ್ಕೆ ಹೋಗಿ ಇರುವಿರಾ ಎಂದು ನನ್ನನ್ನು ಕೇಳಿದರು. ತಕ್ಷಣ ಹೋದೆವು. ಅದು ನಿರ್ಜನವಾದ ದಂಡಕಾರಣ್ಯ! ದಿನಾ ಟಪಾಲು ತಂದುಕೊಡುವ ಜವಾನನ ಹೊರತು ಊರಿಗೂ ಮನೆಗೂ ಸಂಬಂಧವಿಲ್ಲ. ಸುತ್ತಾ ತಿರುಗುವ ಹಾವುಗಳೇ ನಮಗೆ ಸಹವಾಸ. ತುಂಗಭದ್ರ ನದಿಯ ಕಾಲುವೆ ನಮ್ಮ ಮನೆಯ ಪಕ್ಕದಿಂದ ಹೋಗುತ್ತಿತ್ತು. ಆ ಕಾಲುವೆಯಿಂದ ತುಂಗೆ ಬೆಳೆಗಳಿಗೆ, ಬೆಟ್ಟ ಕಲ್ಲುಗಳ ಮೇಲಿನಿಂದ ಉರುಳುತ್ತ ಅದು ಹೋಗುತ್ತಿರುತ್ತದೆ. ಆ ದೊಡ್ಡ ಕಾಲುವೆಯ ಮೇಲೆಯಿಂದ ಒಂದು ಹಗ್ಗ Spring ನ ಸೇತುವೆ ಇರುತ್ತಿತ್ತು. ಅದರ ಮೇಲೆ ತೂಗಾಡಿ, ಒಬ್ಬೊಬ್ಬರೆ ನೀರಿಗೆ ಧುಮುಕುತ್ತಿದ್ದೇವು. ನಾನೂ, ವೊಯ್ಯಿ, ರವಿ ಸ್ನಾನ ಮಾಡುತ್ತಿದ್ದೇವೆ ದಿನನಿತ್ಯ ಕಾಲುವೆಯಲ್ಲಿ. + + + +ಠಾಕೂರ್ ಪುಸ್ತಕಗಳು, Lawrance hope ನ ಮೊಗಲ್ ಕಾವ್ಯ ಜೈಬುನಿಸ್ಸಾ ದಿವಾನ್, ಇವೆಲ್ಲವನ್ನು ಗಿಡಗಳ ಕೆಳಗೆ ಕುಳಿತುಕೊಂಡು ಓದುತ್ತಿದ್ದೇವು. ಗಿಡಗಳ ಕೆಳಗೆ ಕುಳಿತುಕೊಂಡು ಆಕಾಶದಲ್ಲಿ ತೇಲಿ ಹೋಗುವ ಬಿಳಿಯ ಮೋಡಗಳನ್ನು ನೋಡುತ್ತಾ ವರಾಂಡದಲ್ಲಿ ಕಟ್ಟಿರುವ ಉಯ್ಯಾಲೆಯಲ್ಲಿ ಮಲಗಿಕೊಂಡು, ಗಾಳಿಯ ಅಲೆಗಳು ಮುಖವನ್ನು ತಾಕಿದಾಗಲೆಲ್ಲಾ ಗಲಗಲನೆ ನಗುತ್ತಿದ್ದಳು ಷೋ. ಆ ದಿನಗಳಲ್ಲಿ ತರಕಾರಿ ತಂದುಕೊಡುವವರಿಲ್ಲದೆ ಈರುಳ್ಳಿಯ ಚಟ್ನಿ, ಸಾರು, ಮಜ್ಜಿಗೆಯ ಮೇಲೆಯೆ ಬದುಕಿದೆವು. ನಿರ್ಜನ ಅರಣ್ಯದಲ್ಲಿ ಕಳ್ಳರ ಭಯವಿದ್ದರೂ ನಮಗೆ ಯಾಕೆ ಇರುತ್ತಿತ್ತೆಂದು ಇಂದಿಗೂ ಅರ್ಥವಾಗದು. ಅವು ಅಷ್ಟೊಂದು ಸಂತೋಷದ ದಿನಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_221.txt b/Kenda Sampige/article_221.txt new file mode 100644 index 0000000000000000000000000000000000000000..3b52375dfec9e634588cb082fa6e31a628b9989d --- /dev/null +++ b/Kenda Sampige/article_221.txt @@ -0,0 +1,47 @@ +“ಇಳಿ ಹೊತ್ತಿನಲ್ಲಿ ನಾನು ಖಾಲಿ ಕೈಲಿ ಮನೆಗೆ ಹೋಗುತ್ತೇನೆಮಕ್ಕಳ ಮುಗ್ಧ ನಗು ನೋಡಿ ನಾನು ಸತ್ತು ಹೋಗುತ್ತೇನೆ”-ರಾಜೇಶ್ ರೆಡ್ಡಿ + +ಮೂಗನಾಗಿದ್ದ ಮಾನವನು ತನ್ನ ಅವಿರತ ಪ್ರಯತ್ನದಿಂದ ಮಾತಾಡುವುದನ್ನು ಕಲಿತ ನಂತರ ಅದೆಷ್ಟೋ ಸಂವತ್ಸರಗಳ ತರುವಾಯ ಬರೆಯುವುದನ್ನು ರೂಢಿಸಿಕೊಂಡ. ಆ ಬರಹವೆ ಸಾಹಿತ್ಯದ ಸಸಿ ನೆಡಲು ಕಾರಣವಾಯಿತು. ತನ್ನ ಭಾವನೆಗಳನ್ನು ಇತರರೊಂದಿಗೆ ಹಂಚಿಕೊಳ್ಳಲು, ಇನ್ನಿತರರ ಭಾವದಲೆಗಳಲ್ಲಿ ಮಿಂದೇಳಲು ಸಾಧನವಾಯಿತು. ಸಾಹಿತ್ಯದ ಹರವು ವಿಶಾಲವಾದಾಗ ನಮ್ಮ ಅನುಕೂಲಕ್ಕಾಗಿ ವಿಷಯ, ರೂಪ, ಲಕ್ಷಣ… ಮುಂತಾದವುಗಳ ಆಧಾರದ ಮೇಲೆ ಅದರಲ್ಲಿ ಹಲವು ಪ್ರಕಾರಗಳನ್ನು ಮಾಡಿಕೊಂಡಿರುವುದು ಇವಾಗ ಒಂದು ಇತಿಹಾಸ!! ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವರ್ಧಮಾನಕ್ಕೆ ಬಂದಿರುವ, ಬರುತ್ತಿರುವ ಸಾಹಿತ್ಯದ ರೂಪವೆಂದರೆ ಅದೂ ‘ಅಂಕಣ ಬರಹ’. ಇದೊಂದು ವಿಶಿಷ್ಟ ಬಗೆಯ ಪತ್ರಿಕಾ ಸಾಹಿತ್ಯವಾಗಿದ್ದು ಜನಮಾನಸವನ್ನು ಸೂರೆಗೊಂಡಿದೆ. ಯಾವುದಾದರು ಒಂದು ಪತ್ರಿಕೆಯಲ್ಲಿ ನಿಯತವಾಗಿ ಬರೆಯುವ ನಿರ್ದಿಷ್ಟ ಲೇಖನವೆ “ಅಂಕಣ ಬರಹ”. ಕನ್ನಡದಲ್ಲಿ ಅಂಕಣ ಹಾಗೂ ಅಂಕಣ ಸಾಹಿತ್ಯದ ಪರಿಕಲ್ಪನೆ ಮೂಡಿದ್ದು ಪಾಶ್ಚಾತ್ಯ ಪತ್ರಿಕೋದ್ಯಮದಿಂದ. ಆಂಗ್ಲ ಭಾಷೆಯ ‘ಕಾಲಂ’ ಎಂಬ ಪದ ಹಾಗೂ ಪರಿಕಲ್ಪನೆಗೆ ಸಂವಾದಿಯಾಗಿ ನಮ್ಮ ಕನ್ನಡದಲ್ಲಿ ‘ಅಂಕಣ’ ಎಂಬ ಪದ ಬಳಕೆಯಾಗುತ್ತಿದೆ. ಯಾವುದೇ ಒಂದು ವಿಷಯವನ್ನು ಕುರಿತು ಒಂದು ನಿರ್ದಿಷ್ಟ ಪತ್ರಿಕೆ, ನಿಯತಕಾಲಿಕೆ, ವೆಬ್ ಪೇಜ್, ಆನ್ಲೈನ್ ಪತ್ರಿಕೆಗಳಿಗೆ ಔಚಿತ್ಯಪೂರ್ಣ ತಮ್ಮ ವೈಯಕ್ತಿಕ ಚಿಂತನೆಯನ್ನು ಸೇರಿಸಿ ನಿಯತವಾಗಿ, ನಿರಂತರವಾಗಿ ಬರೆಯುವವರೆ ಅಂಕಣಕಾರರು. ಈ ಅಂಕಣ ಬರಹಗಳು ಸಹೃದಯ ಓದುಗರಲ್ಲಿ ಸಾಹಿತ್ಯದ ಅಭಿರುಚಿಯನ್ನು ಮೂಡಿಸುತ್ತಿವೆ!! + +(ಶ್ರೀದೇವಿ ಕೆರೆಮನೆ) + +ಅರ್ವಾಚೀನ ಕನ್ನಡ ಸಾರಸ್ವತ ಲೋಕದ ಆರಂಭಿಕ ಹೆಜ್ಜೆ ಗುರುತುಗಳನ್ನು ಅವಲೋಕಿಸಿದಾಗ ಅವುಗಳ ಮೇಲೆ ಪಾಶ್ಚಾತ್ಯ ಸಾಹಿತ್ಯ, ಸಂಸ್ಕೃತಿಯ ದಟ್ಟವಾದ ಪ್ರಭಾವವನ್ನು ಕಾಣುತ್ತೇವೆ. ಈ ಹಿನ್ನೆಲೆಯಲ್ಲಿ ಪಾಶ್ಚಾತ್ಯ ಸಾಹಿತ್ಯದ ಇತಿಹಾಸವನ್ನೊಮ್ಮೆ ಗಮನಿಸಿದಾಗ ಅಲ್ಲಿ ಅಂಕಣ ಬರಹಕ್ಕೆ ಒಂದು ಸುದೀರ್ಘವಾದ ಪರಂಪರೆಯೇ ಇದೆ. ಬೆಂಜಮಿನ್ ಜೇಮ್ಸ್, ಜಾನ್ ಡಿಕಿನ್‍ಸನ್ಸ್ ಪೆನ್ಸಿಲ್‌ವೆನಿಯ ಕ್ರಾನಿಕಲ್, ಅಲೆಕ್ಸಾಂಡರ್ ಹ್ಯಾಮಿಲ್ಟನ್, ಜೆಮ್ಸ್ ಮ್ಯಾಡಿಸನ್, ಜಾನ್ ಡೇ… ಮೊದಲಾದ ಚಿಂತಕರು, ಲೇಖಕರು ಅಂಕಣ ಸಾಹಿತ್ಯದಲ್ಲಿ ತಮ್ಮದೆಯಾದ ಒಂದು ವಿಶಿಷ್ಟ ಛಾಪನ್ನು ಮೂಡಿಸಿದ್ದಾರೆ. ಸಹೃದಯ ಓದುಗರು ಪತ್ರಿಕಾ ಸಂಪಾದಕೀಯದ ಜೊತೆಗೆ ಅಂಕಣ ಬರಹಗಳನ್ನೂ ಬಯಸುತ್ತಿದ್ದರು. ಕಾರಣ, ಕೆಲವೊಮ್ಮೆ ಅಂಕಣ ಬರಹಗಳು ಜನಸಾಮಾನ್ಯರ ಅಭಿಪ್ರಾಯಗಳಿಗೆ ಧ್ವನಿಯಾಗಿರುತ್ತಿದ್ದವು, ಜೊತೆಗೆ ಅವರ ಸಂಘಟನೆಗೆ ಸಾಧನವಾಗುತ್ತಿದ್ದವು. ಹೀಗೆ ಬೆಳೆದ ಅಂಕಣ ಬರಹ ಪತ್ರಿಕೋದ್ಯಮದಲ್ಲಿ ಒಂದು ಚಿರಸ್ಥಾನವನ್ನು ಪಡೆಯಿತಲ್ಲದೆ ಅದಕ್ಕೆ ಒಂದು ಪರಂಪರೆಯೂ ಸೃಷ್ಟಿಯಾಯಿತು. ಅದರ ಪ್ರಭಾವ, ಪ್ರೇರಣೆಯಿಂದ ಕನ್ನಡದಲ್ಲಿಯೂ ‘ಅಂಕಣ ಬರಹಗಳು’ ಆರಂಭವಾದವು. + +ಸ್ವದೇಶಾಭಿಮಾನಿ, ಅಂತರಂಗ, ದೇಶಬಂಧು, ಛಾಯಾ, ಪ್ರಜಾಮತ, ಪ್ರಜಾವಾಣಿ, ಕನ್ನಡ ಪ್ರಭ, ಕರ್ಮವೀರ, ವಿಶ್ವಕರ್ನಾಟಕ, ಪ್ರಪಂಚ… ಮುಂತಾದ ಪತ್ರಿಕೆಗಳು ಅಂಕಣ ಬರಹಗಳಿಗೆ ವೇದಿಕೆಯನ್ನು ನೀಡಿದವಲ್ಲದೆ ಅಂಕಣ ಬರಹಕ್ಕೆ ಒಂದು ವಿನೂತನ ಆಯಾಮವನ್ನೂ ಕೊಟ್ಟವು. ಸಿದ್ಧವನಹಳ್ಳಿ ಕೃಷ್ಣಶರ್ಮ, ನಿರಂಜನ, ಎಚ್ಚೆಸ್ಕೆ, ಹಾ.ಮಾ. ನಾಯಕ, ಕು.ಶಿ. ಹರಿದಾಸಭಟ್ಟ, ಪಾ.ವೆಂ. ಆಚಾರ್ಯ, ತಿ.ತಾ. ಶರ್ಮ, ಎನ್ಕೆ, ಎಂ.ವಿ. ಕಾಮತ್, ಕಲ್ಲೆ ಶಿವೋತ್ತಮರಾವ್, ಕೀರ್ತಿನಾಥ ಕುರ್ತಕೋಟಿ, ಟಿ.ಎಸ್. ರಾಮ ಚಂದ್ರರಾವ್, ಬಿ.ವಿ. ವೈಕುಂಠರಾಜು, ಪಿ. ಲಂಕೇಶ್, ವೈಎನ್ಕೆ, ಜಿ. ವೆಂಕಟಸುಬ್ಬಯ್ಯ, ಸಿ.ವಿ. ರಾಜಗೋಪಾಲ ಬಿ.ಎ. ವಿವೇಕ ರೈ, ಎಸ್.ಎನ್. ಹೆಗಡೆ, ಸೋಮಶೇಖರ ಇಮ್ರಾಪುರ, ಲಿಂಗದೇವರು ಹಳೆಮನೆ… ಮೊದಲಾದವರ ಅಂಕಣ ಬರಹಗಳು ವಿಶಿಷ್ಟವಾಗಿದ್ದು, ಕನ್ನಡ ಸಾರಸ್ವತ ಲೋಕವನ್ನು ಶ್ರೀಮಂತಗೊಳಿಸಿವೆ. + +ಅಂಕಣ ಬರಹದ ಒಂದು ವೈಶಿಷ್ಟ್ಯವೆಂದರೆ ಸಾಮಾನ್ಯ ಓದುಗರಿಂದ ಹಿಡಿದು ವಿದ್ವಾಂಸರ ತನಕ ಎಲ್ಲರನ್ನೂ ಆಕರ್ಷಿಸುವ ಗುಣ. ಸಹೃದಯ ಓದುಗರಲ್ಲಿ ಸಾಹಿತ್ಯ ಅಭಿರುಚಿ ಮೂಡಿಸುವ ಕಾರ್ಯವನ್ನು ಅಂಕಣ ಬರಹಗಳು ಸದ್ದಿಲ್ಲದೆ ಮಾಡುತ್ತಿವೆ. ಅಂಕಣ ಬರೆಹಗಳು ಆತ್ಮಕೇಂದ್ರಿತವೆ, ಸಮಾಜ ಸಾಹಿತ್ಯ ಸಂಸ್ಕೃತಿ ಕೇಂದ್ರಿತವೆ ಎಂಬ ಜಿಜ್ಞಾಸೆಯೂ ನಮ್ಮ ಮಧ್ಯೆ ಇದೆ. ಸಾಮಾನ್ಯವಾಗಿ ಅಂಕಣ ಬರಹದಲ್ಲಿ ಲೇಖಕರಿಂದ ಬಳಸಲ್ಪಡುವ ‘ನಾನು’ ಎಂಬ ಪ್ರತ್ಯಯವು ಆತ್ಮಕೇಂದ್ರಿತ ಅಥವಾ ಅಹಮಿಕೆಯನ್ನು ಸೂಚಿಸುವ ಪದವಾಗಿ ಉಳಿಯದೆ ಬರಹಕ್ಕೆ ಸಂವಾದ ಸ್ವರೂಪವನ್ನು ನೀಡುತ್ತ ಜನಮಾನಸದಲ್ಲಿ ಬೇರೂರುವಂತೆ ಮಾಡುತ್ತದೆ. “ಅಂಕಣ ಬರಹಕ್ಕೆ ಸಮಕಾಲೀನ ಸಮಾಜದ ಯಾವ ಮುಖವಾದರೂ ವಸ್ತುವಾಗಬಹುದು” ಎಂಬ ಪ್ರಸಿದ್ಧ ಅಂಕಣಕಾರರಾದ ಹಾ.ಮಾ. ನಾಯಕ ಅವರ ಅಭಿಪ್ರಾಯ ಅದರ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಕನ್ನಡದಲ್ಲಿ ಹೆಚ್ಚು ನಿಯತಕಾಲಿಕೆಗಳಿಗೆ ದೀರ್ಘ ಕಾಲ ಸಾಹಿತ್ಯಕ ಅಂಕಣ ಬರೆದವರಲ್ಲಿ ಹಾ.ಮಾ. ನಾಯಕ ಮತ್ತು ಎಚ್ಚೆಸ್ಕೆ ಅವರು ಪ್ರಮುಖರು. ಎಚ್ಚೆಸ್ಕೆ ಅವರ ಅಂಕಣ ಬರಹ ಸಾಹಿತ್ಯಕ್ಕಷ್ಟೇ ಸೀಮಿತವಾಗಿರದೆ ಆರ್ಥಿಕ ವಿಚಾರ, ವ್ಯಕ್ತಿ ವಿಷಯ, ರಾಜಕೀಯ ಮುಂತಾದ ವಿಷಯಗಳತ್ತವೂ ವಾಲುತಿತ್ತು. ಎಚ್ಚೆಸ್ಕೆ ಅವರು ದೇಶಬಂಧು, ವಿಶ್ವಕರ್ನಾಟಕ, ಛಾಯಾ, ಕನ್ನಡನುಡಿ, ಪ್ರಜಾವಾಣಿ, ಸುಧಾ ಪತ್ರಿಕೆಗಳಲ್ಲಿ ಐದಾರು ದಶಕಗಳ ಕಾಲ ಅಂಕಣ ವ್ಯವಸಾಯದಲ್ಲಿ ನಿರತರಾಗಿ ಕೃಷಿ ಮಾಡಿದ್ದಾರೆ. ವಾರದಿಂದ ವಾರಕ್ಕೆ, ವಾರದ ವ್ಯಕ್ತಿ, ವ್ಯಕ್ತಿ, ವಿಷಯ, ಆರ್ಥಿಕ ನೋಟ, ದುರ್ಬೀನು ತರಂಗ…. ಮುಂತಾದವುಗಳು ಇವರ ಅಂಕಣ ಶೀರ್ಷಿಕೆಗಳು ಹೆಚ್ಚಿನ ಖ್ಯಾತಿಯನ್ನು ಗಳಿಸಿವೆ. ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯನ್ನೇ ಅಂಕಣದ ಧ್ಯೇಯ ಹಾಗೂ ಮೂಲವಸ್ತುವನ್ನಾಗಿಸಿಕೊಂಡು ಬಹು ಕಾಲ ಅಂಕಣ ಕೃಷಿಯನ್ನು ಹಾ.ಮಾ. ನಾಯಕರವರು ಮಾಡಿದ್ದಾರೆ. ಕನ್ನಡ ಸಾರಸ್ವತ ಲೋಕದಲ್ಲಿ ಅಂಕಣವೂ ಒಂದು ಸಾಹಿತ್ಯ ಪ್ರಕಾರ ಎಂದು ಸಾಧಿಸಿ ಅದಕ್ಕೊಂದು ಅನನ್ಯ ಸಿದ್ಧಿಯನ್ನು ದೊರಕಿಸಿಕೊಟ್ಟರು. + +ಇವರು 1951ರಲ್ಲಿ ‘ನಂದಿನಿ’ ಎಂಬ ಪತ್ರಿಕೆಗೆ ‘ಪೂರ್ಣಿಮೆಗೆ ಪತ್ರಗಳು’ ಎಂಬ ಶೀರ್ಷಿಕೆಯಲ್ಲಿ ಅಂಕಣ ಬರಹವನ್ನು ಆರಂಭಿಸಿದರು. ಅನಂತರ ‘ನಾ ಕಂಡ ಸಾಹಿತಿಗಳು’ ಎಂಬ ಅಂಕಣವನ್ನು ಬರೆದರು. ‘ಕನ್ನಡ ಪ್ರಭ’ದಲ್ಲಿ 1967 ರಿಂದ ‘ಸಾಹಿತ್ಯ ಸಲ್ಲಾಪ’ ಎಂಬ ಅಂಕಣ ಬರೆಯಲಾರಂಭಿಸಿದರು. ಅನಂತರದಲ್ಲಿ ಇವರಿಂದ ಹತ್ತು ಹಲವಾರು ಸಾಹಿತ್ಯಿಕ ಅಂಕಣಗಳು ಮೂಡಿ ಅಂಕಣ ಬರಹವನ್ನು ಶ್ರೀಮಂತಗೊಳಿಸಿವೆ. ಇವರು ಐದು ದಶಕಗಳ ಕಾಲ ನಿರಂತರವಾಗಿ ಒಂದಲ್ಲ ಒಂದು ಸಾಹಿತ್ಯಿಕ ಅಂಕಣವನ್ನು ಬರೆದಿದ್ದಾರೆ. ನಿರಂಜನರು ಆರಂಭಿಸಿದ ‘ಸಾಹಿತ್ಯಿಕ ಅಂಕಣ’ ಬರಹಗಳಿಗೆ ಸಾರ್ವಕಾಲಿಕತೆಯ ರೂಪಕೊಟ್ಟು ಅಂಕಣ ಬರಹವನ್ನು ಕೀರ್ತಿಶಿಖರಕ್ಕೆ ಏರಿಸಿ, ಅಂಕಣ ಬರಹಕ್ಕೆ ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನವನ್ನು ಕಲ್ಪಿಸಿಕೊಟ್ಟರು. ಈ ನೆಲೆಯಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಮೊದಲ ಅಂಕಣಕಾರರೆಂಬ ಖ್ಯಾತಿಗೂ ಇವರು ಪಾತ್ರರಾಗಿದ್ದಾರೆ. + +ಸಾಮಾನ್ಯವಾಗಿ ಹೆಚ್ಚಿನ ಅಂಕಣ ಬರಹಗಳು ಸಮಕಾಲೀನ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ವಿದ್ಯಮಾನಗಳನ್ನು ಕುರಿತಿರುತ್ತವೆ. ಇದರೊಂದಿಗೆ ವಿಜ್ಞಾನ, ಸಂಗೀತ, ಕಲೆ, ಶಿಕ್ಷಣ, ವೈದ್ಯಕೀಯ, ಕ್ರೀಡೆ ಮುಂತಾದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಂಕಣಗಳೂ ಲಭ್ಯ ಇವೆ. ಇತ್ತೀಚೆಗೆ ಸಾಹಿತ್ಯಿಕ ಪ್ರಸ್ತಾಪವುಳ್ಳ ಹಲವು ಅಂಕಣಗಳು ಕನ್ನಡದಲ್ಲಿ ಮೂಡಿಬರುತ್ತಿವೆ. ಇಂತಹ ಸಾಹಿತ್ಯ ವಿಚಾರ ಪ್ರಧಾನವಾದ ಅಂಕಣಗಳಲ್ಲಿ ಸಾಮಾನ್ಯವಾಗಿ ವ್ಯಕ್ತಿ, ಕೃತಿ, ಸಾಹಿತ್ಯ ಪ್ರಕಾರಗಳು, ಸಂಸ್ಕೃತಿ, ಶಿಕ್ಷಣ, ವೈಚಾರಿಕತೆ ಹಾಗೂ ಕಲೆಗಳನ್ನು ಕುರಿತ ಚಿಂತನೆಯನ್ನು ಕಾಣುತ್ತೇವೆ. ಅವುಗಳೊಂದಿಗೆ ಲಘು ಹರಟೆಗಳೂ, ಹಾಸ್ಯ, ವಿಡಂಬನೆಗಳು ಅಂಕಣ ಬರಹದಲ್ಲಿ ಸ್ಥಾನಪಡೆದಿವೆ. ಅಂಕಣ ಬರಹವು ಕಲೆ ಮತ್ತು ಶಾಸ್ತ್ರೀಯ ಆಯಾಮವನ್ನು ಹೊಂದಿದ್ದು, ವಿವಿಧ ವಿಷಯಗಳ ಅಂತರ್ ಶಿಸ್ತೀಯ ಅಧ್ಯಯನವನ್ನು ಬಯಸುತ್ತದೆ. ಈ ಬಗೆಯ ಕನ್ನಡ ಅಂಕಣ ಬರಹಗಾರಲ್ಲಿ ನಿರಂಜನರೇ ಆದ್ಯರು. ಜಿ.ಪಿ.ರಾಜರತ್ನಂ ಅವರ ‘ವಿಚಾರ ಸರಣಿ’, ವಿ.ಎಂ.ಇನಾಂದಾರರ ‘ಸಾಹಿತ್ಯ ವಿಹಾರ,’ ಕು.ಶಿ. ಹರಿದಾಸಭಟ್ಟರ ‘ಲೋಕಾಭಿರಾಮ,’…. ಮುಂತಾದವುಗಳು ಪ್ರಮುಖ ಸಾಹಿತ್ಯಿಕ ಅಂಕಣಗಳಾಗಿದ್ದವು. ಅಂಕಣ ಬರಹಗಳು ಹೆಚ್ಚು ಓದುಗರ ವಲಯವನ್ನು ಸೃಷ್ಟಿಸಿಕೊಂಡ ನಂತರ ಅವುಗಳು ಕೃತಿರೂಪಗಳನ್ನೂ ಪಡೆಯಲಾರಂಭಿಸಿದವು. + +ನಿರಂಜನರ ಅಂಕಣ (1972), ರಾಜಧಾನಿಯಿಂದ (1972) ಇಂಥ ಕೃತಿಗಳು ಪರಂಪರೆಗೆ ಮೂಲವಾಗಿ, ನಾಂದಿ ಹಾಡಿದವು. ಹಾಮಾನಾ ಅವರ ಸಾಹಿತ್ಯ ಸಲ್ಲಾಪ, ಸಂಪ್ರತಿ ಮುಂತಾದ ಹತ್ತೊಂಬತ್ತು ಅಂಕಣ ಗ್ರಂಥಗಳು, ಎಚ್ಚೆಸ್ಕೆ ಅವರ ಬೆಳಕು ಚೆಲ್ಲಿದ ಬದುಕು (1998), ಮಾನ್ಯರು-ಸಾಮಾನ್ಯರು (1999), ಗಗನಚುಕ್ಕಿ-ಭರಚುಕ್ಕಿ (2000), ಹೊನ್ನಾರು ಕಟ್ಟಿದವರು ಹೊನ್ನಬಿತ್ತಿಬೆಳೆದವರು (2004); ಕು.ಶಿ.ಹರಿದಾಸಭಟ್ಟರ ಲೋಕಾಭಿರಾಮ ಸಂಪುಟಗಳು…. ಹೆಸರಿಸಲೆಬೇಕಾದ ಪ್ರಮುಖ ಅಂಕಣ ಗ್ರಂಥಗಳು. + + + +ಇಂದು ಕನ್ನಡ ಅಂಕಣ ಸಾಹಿತ್ಯ ವೈವಿಧ್ಯಪೂರ್ಣವಾಗಿ ಬೆಳೆದಿದೆ. ಬೆಳೆಯುತ್ತಿದೆ. ಕೆಲವು ಪತ್ರಿಕೆಗಳು ನಿತ್ಯ ಅಂಕಣವನ್ನೂ ಪ್ರಕಟಿಸುತ್ತಿವೆ. ಇದು ಅಂಕಣ ಬರೆಹದ ಜನಪ್ರಿಯತೆಗೆ ಸಾಕ್ಷಿ. ಪ್ರಸ್ತುತ ಕನ್ನಡ ಪತ್ರಿಕೋದ್ಯಮದಲ್ಲಿ ಈಗ ಅಂಕಣ ಬರಹ ಇಲ್ಲದ ಒಂದೇ ಒಂದು ಪತ್ರಿಕೆಯೂ ಇಲ್ಲವೆಂದರೆ ಅತಿಶಯೋಕ್ತಿಯಾಗದು. ಈ ಪರಂಪರೆಯಲ್ಲಿ ಕಥೆಗಾರ್ತಿ, ಕವಯಿತ್ರಿ, ಗಜಲ್ ಗೋ, ಸಂಪನ್ಮೂಲ ವ್ಯಕ್ತಿ ಹಾಗೂ ಅಂಕಣ ಬರಹಗಾರರಾದ ಶ್ರೀಮತಿ ಶ್ರೀದೇವಿ ಕೆರೆಮನೆಯವರು ಹಲವು ಅಂಕಣ ಬರಹಗಳ ಕೃತಿಗಳನ್ನು ಪ್ರಕಟಿಸಿದ್ದು, ಪ್ರಸ್ತುತವಾಗಿ ಗಜಲ್ ಗಳ ವಿಶ್ಲೇಷಣೆ ಒಳಗೊಂಡ “ತೀರದ ಧ್ಯಾನ” ಕೃತಿಯೊಂದಿಗೆ ಮತ್ತೆ ಬರುತ್ತಿದ್ದಾರೆ. + +ಕಲೆ ಎಂಬುದು ನಿಸರ್ಗದ ಒಂದು ಅನುಪಮ ಅಭಿವ್ಯಕ್ತಿ. ಕಲೆಯ ಚಂದ್ರಚಾಪದ ಮುಖ್ಯ ಬಣ್ಣವೆಂದರೆ ಅದು ಸಾಹಿತ್ಯ. ಇದು ಓದು-ಬರಹಗಳ ಮಧುಚಂದ್ರ!! ಬರವಣಿಗೆ ಎನ್ನುವುದು ಖಾಲಿ ಹಾಳೆಯ ಮೇಲೆ ಬಿಡಿಸಿರುವ ಸುಂದರ ರಂಗೋಲಿ. ಆ ರಂಗೋಲಿಯೋ ಅನನ್ಯ ಭಾವನೆಗಳ ಕಾರವಾನ್. ಆ ಕಾರವಾನ್ ನ ಪ್ರವೇಶಿಸಿ ಓದುವುದೆಂದರೆ ಅದೊಂದು ರೀತಿಯ ಮಾಗಿದ ಕಾಯುವಿಕೆ. ಈ ಕಾಯುವಿಕೆ, ಕನವರಿಕೆ ಒಂದು ಸಾಲಿನಿಂದ ಮತ್ತೊಂದು ಸಾಲಿಗೆ ಸದಾ ಚಲಿಸುತ್ತಿರುತ್ತದೆ, ಚಲಿಸುತ್ತಿರಬೇಕು. ಆಗ ಮಾತ್ರ ಸಹೃದಯ ಓದುಗ ಒಂದು ಸಾಲನ್ನು ಓದಿ, ಮುಂದಿನ ಸಾಲಿಗಾಗಿ ಕಾಯುತ್ತಾನೆ. ಆ ಕಾಯುವಿಕೆಯಲ್ಲಿಯೆ ಓದು ಪರಿಪೂರ್ಣವೆನಿಸುವುದು. ಕಾಯದೆ ಓದಿದರೆ ಸಾಹಿತ್ಯದ ರಸಗ್ರಹಣ ಸಾಧ್ಯವಿಲ್ಲ. ಈ ದಿಸೆಯಲ್ಲಿ ಸದಾ ಅಧ್ಯಯನ, ಅಧ್ಯಾಪನದಲ್ಲಿ ತೊಡಗಿಸಿಕೊಂಡಿರುವ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮ ಭಾವನೆಗಳನ್ನು ಹೆಣೆದು ಪೋಣಿಸಿದ್ದಾರೆ, ಅದೂ ಹಲವು ಚೆಂದದ ಹೂಗುಚ್ಛಗಳ ರೂಪದಲ್ಲಿ. ಶ್ರೀಯುತರು ಕಾವ್ಯ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಹಾಗೂ ಅಂಕಣ ಬರಹಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಹಿತ್ಯ ಪ್ರೇಮಿಗಳಿಗೆ ಚಿರಪರಿಚಿತರಾಗಿದ್ದಾರೆ. + +ಇವರ ಸಾಹಿತ್ಯ ಕೃಷಿಯನ್ನು ಗಮನಿಸಿ ಹಲವಾರು ಸರಕಾರ-ಸರಕಾರೇತರ ಸಂಘ-ಸಂಸ್ಥೆಗಳು ಗೌರವಿಸಿ ಸತ್ಕರಿಸಿವೆ, ಪ್ರಶಸ್ತಿ ನೀಡಿ ಸಂಭ್ರಮಿಸಿವೆ. ಇಂದು ಹಲವು ದಿನಪತ್ರಿಕೆಗಳ ಅಂಕಣ ಬರಹಗಳೊಂದಿಗೆ ಹಲವಾರು ಆನ್ಲೈನ್ ಪತ್ರಿಕೆಗಳಲ್ಲಿಯೂ ಅಂಕಣ ಬರಹಗಳು ಮೂಡಿಬರುತ್ತಿವೆ. ಅವುಗಳಲ್ಲಿ ಕೆಂಡಸಂಪಿಗೆ, ಅವಧಿ, ಸಂಗಾತಿ, ನೀವ್ಸ್ ರೂಮ್ -೯, ಪಂಜು, e-ಸುದ್ಧಿ,…. ಪ್ರಮುಖವಾಗಿವೆ. ಉತ್ತಮ ಗಜಲ್ ಗೋ ಆದ ಶ್ರೀಮತಿ ಶ್ರೀದೇವಿ ಕೆರೆಮನೆ ಅವರು ಕನ್ನಡದ ಕೆಲ ಆಯ್ದ ಗಜಲ್ ಗಳ ಕುರಿತು ಪ್ರತಿ ರವಿವಾರದಂದು ‘ನೀವ್ಸ್ ರೂಮ್ -೯’ ಗೆ ಬರೆಯುತಿದ್ದ ಅಂಕಣಗಳ ಪುಸ್ತಕ ರೂಪವೇ ಈ “ತೀರದ ಧ್ಯಾನ”. ಗಜಲ್ ಪ್ರೇಮಿಗಳು ಈ ಅಂಕಣ ಬರಹಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಎಂಬುದು ಶ್ರೀಯುತರ ಬರವಣಿಗೆಯ ಸತ್ವವನ್ನು ಸಾರುತ್ತದೆ. ಇವರು ತಮ್ಮ ಬರವಣಿಗೆಗೆ ಸಾಣೆ ಹಿಡಿದು ಓದುಗರ ಹೃದಯದಲ್ಲಿ ಅಕ್ಷರಗಳನ್ನು ಬಿತ್ತಿ ಸಾಹಿತ್ಯದ ಫಸಲನ್ನು ಬೆಳೆಸಿದ್ದಾರೆ. ತಮಗೆ ದೊರೆತ ಗಜಲ್ ಸಂಕಲನಗಳಲ್ಲಿಯ ಗಜಲ್ ಒಂದರ ಮುಖಾಂತರ ಅನುಸಂಧಾನಗೈದಿದ್ದಾರೆ. ಸಾಹಿತ್ಯ ಸಂದರ್ಭದಲ್ಲಿ ಇವರ ಈ ಅಂಕಣ ಬರಹಗಳು ಶುದ್ಧ ಛಾಯಾಚಿತ್ರದಂತೆ ಕಂಗೊಳಿಸುತ್ತಿವೆ. ಇಲ್ಲಿಯ ಬರಹದಲ್ಲಿ ಗಜಲ್ ನ ಕೋಮಲತೆ ಇದ್ದು, ಸಹೃದಯ ಓದುಗರ ಮನವನ್ನು ಅಪಹರಿಸುವಲ್ಲಿ ಯಶಸ್ವಿಯಾಗುತ್ತಾರೆ. + +ಗಜಲ್ ಎಂದರೆ ಕಂಬನಿಯ ಲವಣಾಂಶದಲ್ಲಿ ಸಿದ್ಧಗೊಂಡ ರುಚಿಕರವಾದ ಅಡುಗೆ. ಇದು ಮನವನ್ನು ತಣಿಸುವುದರ ಜೊತೆಗೆ ಹೃದಯ ಸದಾ ಲವಲವಿಕೆಯಿಂದ ಕೂಡಿರುವಂತೆ ಮಾಡುತ್ತದೆ. ಇಲ್ಲೇನಿದ್ದರೂ ಹೃದಯ ಬಡಿತದ್ದೆ ಪಾರುಪತ್ಯ. ಈ ಕಾರಣಕ್ಕಾಗಿಯೇ ಗಜಲ್ ಅನ್ನು ಹೃದಯವಂತರ ಕಾವ್ಯ ಎನ್ನಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಜಲ್ ನ ಮಾದಕತೆ ಸವಿಯದ, ಸವಿಯಲು ಬಯಸದ ಬರಹಗಾರರು, ರಸಿಕರು; ಸಾಹಿತಿಗಳು ಇಲ್ಲವೆಂದರೂ ನಡೆದೀತು!! ಈ ಹಿನ್ನೆಲೆಯಲ್ಲಿ ಗಜಲ್ ಎಂದರೆ ಮತ್ತಿನ ಸೋಪಾನವೆ ಸರಿ. ‘ತೀರದ ಧ್ಯಾನ’ವು 39 ಗಜಲ್ ಗಳ 40 ಅಂಕಣಗಳನ್ನು ಹೊಂದಿದೆ. ಇಲ್ಲಿಯ ಪ್ರತಿ ಅಂಕಣಗಳು ಗಜಲ್ ಕೇಂದ್ರೀಕೃತವಾಗಿದ್ದು, ವ್ಯಕ್ತಿ ಪೂಜೆಗಿಂತ ವ್ಯಕ್ತಿತ್ವ, ವಿಚಾರಗಳು ಮುಖ್ಯ ಎಂಬುದನ್ನು ಸಾಕ್ಷಿಕರಿಸುತ್ತಿವೆ. ಪ್ರೀತಿ, ಪ್ರೇಮ, ಪ್ರಣಯ, ವಿರಹ, ಸರಸ, ಸಲ್ಲಾಪ, ಅಧ್ಯಾತ್ಮ, ಸ್ತ್ರೀ ಸಂವೇದನೆ, ದಲಿತ ಸಂವೇದನೆ, ಭಾವ ಸಂವೇದನೆ, ಬಂಧ ಸಂವೇದನೆ, ಸಾಮಾಜಿಕ ವ್ಯವಸ್ಥೆ, ಬಡತನ-ಸಿರಿತನ, ಧರ್ಮ, ರಾಜಕೀಯ, ವಿಡಂಬನೆ… ಮುಂತಾದ ಕಾಮನಬಿಲ್ಲನ್ನು ಮೀರಿಸುವ ವಸ್ತು ವಿಷಯಗಳಿಂದ ಈ ಕೃತಿ ಮುಪ್ಪರಿಗೊಂಡಿದೆ. ಅಂಕಣಕಾರರು ಇಲ್ಲಿ ಗಜಲ್ ಗೋ ಅವರ ಸಾಹಿತ್ಯದ ಹಿನ್ನೆಲೆಯ ಕುರಿತು ತಲೆ ಕೆಡಿಸಿಕೊಳ್ಳದೆ, ತಾವು ಆಯ್ದುಕೊಂಡ ಗಜಲ್ ಅನ್ನು ಹಲವು ಆಯಾಮಗಳ ನೆಲೆಯಲ್ಲಿ ಪರಿಚಯಿಸಿದ್ದಾರೆ, ವಿವರಿಸಿದ್ದಾರೆ, ಚರ್ಚಿಸಿದ್ದಾರೆ, ವಿಶ್ಲೇಷಿಸಿದ್ದಾರೆ; ಕೆಲವೆಡೆ ವಿಮರ್ಶಿಸಿದ್ದಾರೆ!! ಗಜಲ್ ನ ವಿಷಯವನ್ನು ಅಲಂಕಾರದ ಪರಿಧಿಯಲ್ಲಿ ಅದೂ ಲಾಕ್ಷಣಿಕರ ವ್ಯಾಖ್ಯಾನವನ್ನು ಉಪಯೋಗಿಸಿಕೊಂಡು ಸರಳವಾಗಿ ಎಲ್ಲರಿಗೂ ಅರ್ಥವಾಗುವಂತೆ ಕಟ್ಟಿಕೊಡುವ ಯತ್ನ ಮಾಡಿದ್ದಾರೆ. ವಿಷಯಕ್ಕೆ ಅನುಗುಣವಾಗಿ ಜಾನಪದ, ವಚನ, ದರ್ಶನ, ಆಂಗ್ಲ ಸಾಹಿತ್ಯ… ಮುಂತಾದ ಇತರ ವಿಷಯಗಳ ಕುಲುಮೆಯಲ್ಲಿ ಗಜಲ್ ಅನ್ನು ನೋಡುವ ಪ್ರಯತ್ನ ಅವರ ಓದಿನ ಪ್ರೀತಿಯನ್ನು ಪ್ರತಿನಿಧಿಸುತ್ತದೆ. ಅದಕ್ಕೆ ಪೂರಕವಾಗಿ ಎಂಬಂತೆ ಪ್ರತಿ ಗಜಲ್ ಬರಹಕ್ಕೂ ಒಂದೊಂದು ಸೂಕ್ತ ಶೀರ್ಷಿಕೆ ನೀಡಿ ಓದುಗರ ಚಿತ್ತವನ್ನು ಸೆಳೆಯುತ್ತಾರೆ. ಆ ಶೀರ್ಷಿಕೆಗಳಿಗೆ ತಕ್ಕಂತೆ ಕೆಲವೆಡೆ ಉತ್ತಮ ಪ್ರವೇಶಿಕೆಯನ್ನು ಹಾಗೂ ಪೂರ್ಣತೆಯ ಮುಕ್ತಾಯವನ್ನೂ ಒದಗಿಸಿದ್ದಾರೆ, ಅದೂ ವಿವಿಧ ಪರಿಕರಗಳೊಂದಿಗೆ. + +ಈ ದಿಸೆಯಲ್ಲಿ ಸ್ನೇಹಲತಾ ಗೌನಳ್ಳಿಯವರ ಗಜಲ್ ಕುರಿತು ಬರೆದ “ರಾತ್ರಿಯ ಒಡಲಲ್ಲಿ ಕೂಡಿಟ್ಟ ಕನಸುಗಳು” ಲೇಖನವು ತುಂಬಾ ಆಪ್ತವಾಗಿ ಓದುಗರನ್ನು ಸ್ವಾಗತಿಸುತ್ತದೆ. ಇದರಲ್ಲಿ ಇರುಳಿನ ಕುರಿತು ಹಗಲಿಗೂ ಮತ್ಸರವಾಗುವಂತೆ ಹೃದಯಂಗಮವಾಗಿ ಚಿತ್ರಿಸಿದ್ದಾರೆ. ಜೀವ ಸಂಕುಲದ ನೋವಿಗೆ ಮುಲಾಮು ಹಚ್ಚುವ ರಾತ್ರಿಯು ಎಲ್ಲರಿಗೂ ಅಪ್ಯಾಯಮಾನ ಎನಿಸುತ್ತದೆ. ಅಶೋಕ ಮಿಜಾಜ್ ರವರ ಹಿಂದಿ ಗಜಲ್ ನ ಕನ್ನಡ ಅವತರಣಿಕೆಯು ಇದರಲ್ಲಿರುವುದು ಒಂದು ವಿಶೇಷವೆನಿಸುತ್ತದೆ! ಕೆಲವೊಮ್ಮೆ ಬಿಡಿ ಗಜಲ್ ನ ಓದು, ಓದುಗರನ್ನು ಇಡೀ ಗಜಲ್ ಸಂಕಲನದತ್ತ ಹೊರಳಿಸಬಹುದು, ಹೊರಳಿಸಲಿ ಎಂಬ ಸದುದ್ದೇಶದಿಂದ ತಾವು ಆರಿಸಿಕೊಂಡ ಗಜಲ್ ನ ಮೂಲ ಆಕರವನ್ನು ಇಲ್ಲಿ ಒದಗಿಸಿದ್ದಾರೆ. ಈ ದಿಸೆಯಲ್ಲಿ ನಾವು “ತೀರದ ಧ್ಯಾನ” ವನ್ನು ಒಳಹೊಕ್ಕು ನೋಡಿದಾಗ ಅಲ್ಲಿಯ ಬರಹದ ಆತ್ಮೀಯತೆ ಮನಸ್ಸಿಗೆ ಮುದ ನೀಡುತ್ತದೆ. + +ಗಜಲ್ ಮುಕ್ತ ಛಂದಸ್ಸಿನ ಎತ್ತಿಕೊಂಡವರ ಕೂಸಲ್ಲ. ಅದಕ್ಕೆ ಅದರದೇ ಆದ ಛಂದೋಬದ್ಧ ನಿಯಮಗಳಿವೆ, ಹೃದಯದೊಂದಿಗೆ ಪಿಸುಗುಟ್ಟುವ ಲಾಲಿತ್ಯವಿದೆ. ಗಜಲ್ ಗೆ ತನ್ನದೇಯಾದ ಒಂದು ವಿಶೇಷ ಛಂದಸ್ಸಿದೆ. ಚೌಕಟ್ಟಿನ ನೆಲೆಯಲ್ಲಿಯೆ ಗಜಲ್ ಆಸ್ವಾದಿಸುವುದೂ ಒಂದು ಕಲೆ. ಹಲವು ವರುಷಗಳಿಂದ ಗಜಲ್ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಕೆರೆಮನೆ ಅವರು ಈ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಈ ಗಜಲ್ ನ ಮೂಲಭೂತ ಸ್ವರೂಪ, ಲಕ್ಷಣಗಳ ಕುರಿತು ಜ್ಞಾನವನ್ನು, ಪ್ರೀತಿಯನ್ನು ಹೊಂದಿದ್ದು ತಾವು ಆಯ್ದುಕೊಂಡ ಪ್ರತಿ ಗಜಲ್ ನ ರದೀಫ್, ಕಾಫಿಯಾ; ವಿಶೇಷವಾಗಿ ಕಾಫಿಯಾ ಹೊಂದಿರುವ, ಹೊಂದಿರಬೇಕಾದ ಪ್ರಮುಖ ಗುಣ-ವಿಶೇಷಣಗಳ ಕುರಿತು ಅಂದರೆ ರವಿ, ರವೀಶ್, ಏಕ ಅಲಾಮತ್, ಬಹು ಅಲಾಮತ್, ರೌಫ್, ಕೈದ್, ತಶೀಶ್…. ಕುರಿತು ಅನುಲಕ್ಷಿಸಿದ್ದಾರೆ. ಸಾಂದರ್ಭಿಕವಾಗಿ ಗಜಲ್ ನ ಪಾರಿಭಾಷಿಕ ಪದಗಳನ್ನು ಬಳಸಿದ್ದಾರೆ. ಒಂದು ಗಜಲ್ ಗೆ ಭಾವ ಎಷ್ಟು ಅಗತ್ಯವೋ ಅದರ ಜೊತೆಗೆ ರೂಪು-ರೇಷೆಗಳು ಕೂಡ ಅಷ್ಟೇ ಅಗತ್ಯ ಮತ್ತು ಅನಿವಾರ್ಯ ಎಂಬುದನ್ನು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಇವುಗಳೊಂದಿಗೆ ರದೀಫ್ ನ ಪ್ರಕಾರಗಳಾದ ಚೋಟಿ ರದೀಫ್, ಮಜಲುನ್ ರದೀಫ್ ಮತ್ತು ಗಜಲ್ ನ ಪ್ರಕಾರಗಳ ಕುರಿತೂ ಓದುಗರ ಗಮನವನ್ನು ಸೆಳೆಯುತ್ತಾರೆ. + +(ಡಾ. ಮಲ್ಲಿನಾಥ ಶಿ. ತಳವಾರ) + +ಬೆಹರ್ ಆಧಾರಿತ ಗಜಲ್ ಗಳು ಸಂಗೀತ ಲೋಕದಲ್ಲಿ ಬಹುಕಾಲ ಉಳಿಯುತ್ತವೆ. ಬೆ-ಬೆಹರ್ ಗಜಲ್ ಗಳು ಸಂಕಲನಗಳಲ್ಲಿಯೇ ಬಂಧಿಯಾಗುತ್ತವೆ. ಇದರ ಕುರಿತು ಅಲ್ಲಲ್ಲಿ ಮಾತ್ರೆಯಾಧಾರಿತ ಗಣಗಳ ಉಲ್ಲೇಖದೊಂದಿಗೆ ಈ ಹೊತ್ತಿಗೆಗೆ ಶಾಸ್ತ್ರೀಯ ಅಧ್ಯಯನದ ಲೇಪನವನ್ನು ಅಂಟಿಸಿದ್ದಾರೆ. ಈ ಕಿತಾಬ್ ಗೆ ಕಿತಾಬ್ ದಂತಿರುವ ಮತ್ತೊಂದು ಅಂಶವೆಂದರೆ ಗಜಲ್ ನೋಡುವ, ಓದುವ ದೃಷ್ಟಿಕೋನ. ಎಲೆ ಮರೆಯ ಕಾಯಿಯಂತೆ ನಮ್ಮ ಮಧ್ಯೆಯಿರುವ ಭಾವನಾತ್ಮಕ ಗಜಲ್ ಗೋ ಎಂದರೆ ಶ್ರೀ ಸಂಗು ಹುಂಡೇಕಾರ. ಇವರ ಗಜಲ್ ವೊಂದನ್ನು ಎರಡು ವಿಭಿನ್ನ ಶೇಡ್ ನಲ್ಲಿ ಅರ್ಥೈಸಿರುವುದು ಪ್ರಾಯೋಗಿಕ ನೆಲೆಯಲ್ಲಿ ಗಮನ ಸೆಳೆಯುತ್ತದೆ. + +“ಅವನು ಮೋಸ ಮಾಡಿದನೆಂದರೆ ಏನೋ ಕಾರಣವಿದ್ದೀತುನೋಡಿ ನೋಡದಂತಿದ್ದನೆಂದರೆ ಏನೋ ಕಾರಣವಿದ್ದೀತು” + +ಎನ್ನುವ ಈ ಷೇರ್ ನಲ್ಲಿ ಪ್ರೀತಿಯ ಒಂದು ಮುಖ ಕಂಡರೆ, ಮತ್ತೊಂದೆಡೆ ಗೆಳೆತನದ ಭಾವ ಕಾಡುತ್ತದೆ. ಇವೆರಡರ ಜೊತೆಯಲ್ಲಿ ವಿರಹದ, ವಿಷಾದದ ನಡುವೆಯೂ ಸಕಾರಾತ್ಮಕ ಧೋರಣೆಯ ಭಾವ ಮೊಳಕೆಯೊಡೆಯುವ ಬಗೆಯನ್ನು ಸೊಗಸಾಗಿ ರೂಪಿಸಿದ್ದಾರೆ. ಈ ಎರಡು ನೆಲೆಗಳಲ್ಲಿ ಗಜಲ್ ನ ಆಂತರ್ಯದೊಳಗೆ ಓದುಗರನ್ನು ಕರೆದೊಯ್ಯುವಲ್ಲಿ ಗಜಲ್ ಗೋ ಅವರು ಪ್ರಯತ್ನಿಸಿದ್ದಾರೆ. + + + +“ತೀರದ ಧ್ಯಾನ”ವು ಹಲವು ಒಳನೋಟಗಳ ಕ್ರೋಢಿಕರಣವಾಗಿದೆ. ಗಜಲ್ ಹೇಗೆ ಓದಿ ಅರ್ಥೈಸಿಕೊಳ್ಳಬಹುದು ಎಂಬುದರ ಜೊತೆಗೆ ಒಂದು ಸಶಕ್ತ ಗಜಲ್ ಹೇಗಿರಬೇಕು, ಹೇಗಿದ್ದರೆ ಚಂದ ಎಂಬುದರ ಮೇಲೂ ಬೆಳಕು ಚೆಲ್ಲುತ್ತದೆ. ಭಾವ ಮುನ್ನೆಲೆಗೆ ಬಂದು ಲಕ್ಷಣಗಳು ಹಿನ್ನೆಲೆಗೆ ಸರಿದರೆ ಅದು ಗಜಲ್ ರೂಪದಿಂದ ದೂರ ಸರಿಯುವ ಅಪಾಯವಿರುತ್ತದೆ. ಹಾಗೆಂದ ಮಾತ್ರಕ್ಕೆ ಬರಿ ಸ್ವರೂಪ-ಲಕ್ಷಣಕ್ಕೆ ಜೋತು ಬಿದ್ದರೆ ಜೀವವಿರದ ಹಿಟ್ಟಿನ ಹುಂಜ ಆಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇವೆರಡರ ಹದವಾದ ಮಿಶ್ರಣದಿಂದ ರಚನೆಯಾದ ಗಜಲ್ ಗಳು ಗಜಲ್ ಸಮಾದಲ್ಲಿ ಪ್ರಜ್ವಲಿಸುತ್ತವೆ. ಕೆಲವು ಪ್ರವೇಶಿಕೆಯ ಹಾಗೂ ಅಶಅರ್ ವಿವರಣೆಯ ಏರಿಳಿತಗಳ ಮಧ್ಯೆಯೂ “ತೀರದ ಧ್ಯಾನ” ಅಂಕಣ ಬರಹಗಳ ಮಾಲೆಯು ಓದುಗರನ್ನು ಓದಿಸಿಕೊಂಡು ಹೋಗುತ್ತದೆ. ಜೀವ ಸಂವೇದನೆಯ ಬರಹಗಾರರಾದ ಶ್ರೀಮತಿ ಶ್ರೀದೇವಿ ಕೆರೆಮನೆ ಅವರ ವಿಚಾರಧಾರೆಯು ಮುಸಲಧಾರೆಯಂತೆ ಸಾರಸ್ವತ ಲೋಕದಲ್ಲಿ ಸುರಿಯಲಿ ಎಂದು ಶುಭ ಕೋರುತ್ತೇನೆ. + +“ನಿಮ್ಮ ನೆನಪುಗಳ ಬೆಳಕು ನಮ್ಮೊಂದಿಗೆ ಇರಲಿಯಾವ ಬೀದಿಯಲ್ಲಿ ಬದುಕಿನ ಸಂಜೆಯಾಗುತ್ತೋ ಗೊತ್ತಿಲ್ಲ”-ಬಸೀರ್ ಬದ್ರ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_222.txt b/Kenda Sampige/article_222.txt new file mode 100644 index 0000000000000000000000000000000000000000..1ae90afcc91e8a530598b49e95cc3bfb251a62d4 --- /dev/null +++ b/Kenda Sampige/article_222.txt @@ -0,0 +1,35 @@ +byಕೆಂಡಸಂಪಿಗೆ|Jul 27, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕನಸಿನ ರೆಕ್ಕೆಗಳನ್ನು ಹಚ್ಚಿಕೊಂಡು ಅಮೆರಿಕಕ್ಕೆ ಹಾರುವ ಭಾರತೀಯರು ಅಲ್ಲಿನ ಅಪರಿಚಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ತಾವು ಹೊಸ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಅನಿವಾರ್ಯವಾಗಿ ರೂಢಿಸಿಕೊಂಡಿರುವ ಆಡಂಬರ, ಒಣಪ್ರತಿಷ್ಠೆಗಳ ಜೀವನಶೈಲಿ ಹಾಗೂ ಅವರ ಮಾನಸಿಕ ತುಮುಲಗಳನ್ನುಕಥೆಗಾರರು   ಸೆರೆಹಿಡಿದಿದ್ದಾರೆ. ಇತ್ತ ಭಾರತದ ತೆಲಂಗಾಣದಲ್ಲಿ ಕಂಡ ಸಾಮಾಜಿಕ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಮ್ಮ ನಾಡಿನ ಜನರ ಕಥೆಗಳೆಂಬಂತೆ ಶುಭಮಂಗಳ ಅವರು ಕನ್ನಡೀಕರಿಸಿದ್ದಾರೆ.ತೆಲುಗಿನ ಕಥೆಗಾರ ನಕ್ಷತ್ರಂ ವೇಣುಗೋಪಾಲ್‌ ಬರೆದ “ಮೌನಸಾಕ್ಷಿ” ಕಥಾಸಂಕಲನದ ಹನ್ನೊಂದು ಕತೆಗಳನ್ನು ಎಂ.ಜಿ. ಶುಭಮಂಗಳ ಕನ್ನಡಕ್ಕೆ ತಂದಿದ್ದು, ಈ ಸಂಕಲನಕ್ಕೆ ರೂಪದರ್ಶಿ ಜಿ. ವೆಂಕಟೇಶ್‌ ಬರೆದ ಮುನ್ನುಡಿ ಇಲ್ಲಿದೆ + +byಕೆಂಡಸಂಪಿಗೆ|Jul 26, 2022|ಪುಸ್ತಕ ಸಂಪಿಗೆ| 0 Comments + +ಮದುವೆಯಾಗುವಾಗ ಜಯಂತಿ ಕುಲಕರ್ಣಿ ರಾಂಪುರದ ಒಂದು ಹೈಸ್ಕೂಲಿನಲ್ಲಿ ಕನ್ನಡ ಟೀಚರಾಗಿದ್ದಳು. ಅದು ಖಾಸಗಿ ಹೈಸ್ಕೂಲಾಗಿದ್ದುದರಿಂದ ಸಂಬಳವೆನ್ನುವುದು ‘ನಾಮ್ಕಾವಸ್ಥೆ’ಯದಾಗಿತ್ತು. ಎಂ.ಎ ಓದಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳುವುದಕ್ಕಿಂತ ಹವ್ಯಾಸದ ಥರ ಪಾಠವನ್ನಾದರೂ ಮಾಡಿ ‘ಟೈಂಪಾಸ್’ ಮಾಡಬಹುದು ಎಂಬಂತೆ ಆಕೆ ಹೈಸ್ಕೂಲಲ್ಲಿ ದುಡಿಯುತ್ತಿದ್ದಳು. ಬಸವೇಶ್ವರ ಕಾಲೇಜಿನಲ್ಲಿರುವ ಸತೀಶ್ ಕುಲಕರ್ಣಿ ಇಂಗ್ಲೀಷ್ ಲೆಕ್ಚರರ್ ಆಗಿದ್ದಾರೆ ಎಂಬುದರಿಂದ ಮದುವೆಯ ಪೂರ್ವದಲ್ಲೇ ಆಕೆ ತಾನೂ ಆ ಕಾಲೇಜಿನಲ್ಲಿ ಸೇರಬೇಕೆಂಬ ಕನಸು ಕಂಡಿದ್ದಳು.ಡಾ. ನಾ. ಮೊಗಸಾಲೆಯವರ “ನೀರಿನೊಳಗಿನ ಮಂಜು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Jul 23, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ.ಕೀರ್ತಿನಾಥ ಕುರ್ತಕೋಟಿಯವರು ಬರೆದಿದ್ದ “ಕಂಬಾರರ ಕಾವ್ಯ ಮತ್ತು ನಾಟಕಗಳು” ವಿಮರ್ಶಾ ಸಂಕಲನ ನಾಳೆ ಬಿಡುಗಡೆಯಾಗಲಿದ್ದು ಆ ಕೃತಿಯ ಒಂದು ಲೇಖನ ನಿಮ್ಮ ಓದಿಗೆ + +byಸುಮಾವೀಣಾ|Jul 18, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬೆಕ್ಕಿನ ಮರಿ, ಗುಬ್ಬಿಯ ಧ್ವನಿ, ಮ್ಯಾಚಿಂಗ್ ರಿಬ್ಬನ್ ಎಂಬೆಲ್ಲಾ ಬಣ್ಣದ ಲೋಕದೊಂದಿಗೆ ಬದುಕಿನ ಸತ್ಯವನ್ನು ಪರಿಚಯಿಸುವ ಸರಳ ಕವಿತೆಗಳನ್ನು ಬರೆದಿರುವ ಕೆ.ವಿ. ತಿರುಮಲೇಶ್ ಅವರು ಮಕ್ಕಳ ಮನೋಲೋಕದೊಳಗೆ ಸದ್ದಿಲ್ಲದೆ ಹೆಜ್ಜೆಯಿರಿಸಿದ್ದಾರೆ.“ಚಿಕ್ಕಣಿ ರಾಜ” ಎಂಬ ಬಣ್ಣದ ಚಿತ್ರಗಳಿರುವ ಸುಂದರ ಕವಿತಾ ಸಂಕಲನದ ಅನನ್ಯತೆಯ ಕುರಿತು ಸುಮವೀಣಾ ಅವರು ಬರೆದ ಟಿಪ್ಪಣಿ ಇಲ್ಲಿದೆ. + +byಕೆಂಡಸಂಪಿಗೆ|Jul 16, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು.ಇಂದು ಬಿಡುಗಡೆಯಾಗಲಿರುವ ಡಾ. ಗೀತಾ ವಸಂತ ಅವರ “ಅವಳ ಅರಿವು” ಅಂಕಣ ಬರಹಗಳ ಸಂಕಲನದ ಒಂದು ಲೇಖನ ನಿಮ್ಮ ಓದಿಗೆ + +byಡಾ. ನಾ. ಮೊಗಸಾಲೆ|Jul 14, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಮೇರಿಯ ಮನೆಗೆ ಹೋಗಿದ್ದ.ಡಾ. ನಾ. ಮೊಗಸಾಲೆಯವರ “ಇದ್ದೂ ಇಲ್ಲದ್ದು” ಹೊಸ ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Jul 13, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕುಮಾರ ಬೇಂದ್ರೆ ಅವರ ಕತೆಗಳ ವಿಶೇಷತೆ ಎಂದರೆ ಬಹಳ ಸುಲಭವಾಗಿ ಓದಿಸಿಕೊಳ್ಳುವಂತಹ ಗುಣ. ಓದುಗನಿಗೆ ಸಂವಹನದ ದೃಷ್ಟಿಯಿಂದ ಹೆಚ್ಚು ಸರಾಗವಾಗಿ, ಹೆಚ್ಚು ತೊಂದರೆ ಕೊಡದೇ ಓದಿಸಿಕೊಳ್ಳುವ ಗುಣ ಅವರ ಎಲ್ಲ ಕತೆಗಳಲ್ಲೂ ಇದೆ. ಇದನ್ನು ಒಂದು ಗುಣ ಎಂದೇ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಸರಳತೆ ಎನ್ನುವಂಥದ್ದು ಸುಲಭವಲ್ಲ, ಅದನ್ನು ಎಟಕಿಸಿಕೊಳ್ಳುವುದೂ ಕೂಡ ಸುಲಭವಲ್ಲ. ಸರಳವಾಗಿ ಬರೆಯುವುದು ಮತ್ತು ಸರಳವಾಗಿ ಸಂವಹನ ಮಾಡುವುದು ಯಾವಾಗಲೂ ಒಂದು ಸವಾಲು.ಕುಮಾರ ಬೇಂದ್ರೆಯವರ “ಪರವಶ” ಕಥಾಸಂಕಲನದ ಕುರಿತು ರಘುನಾಥ ಚ.ಹ. ಅವರ ಮಾತುಗಳು + +byಡಾ. ಗೀತಾ ವಸಂತ|Jul 12, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹೊರಗಿನ ಮಾತುಗಳಿಗಿಂತ ಒಳಗಿನ ಅರಳುವಿಕೆ ಕವಿಗೆ ಮಹತ್ವದದ್ದೆನಿಸಿದೆ. ಆತ್ಮದ ಅರಳುವಿಕೆಯಲ್ಲಿ ಹಿಗ್ಗುತ್ತಿರುವ ವಿಕಾಸ ಭಾವವೊಂದು ಹೊರಲೋಕದ ಸುಳ್ಳುಸುಳ್ಳೇ ಚಹರೆಗಳನ್ನು ನೋಡಿ ವಿಹ್ವಲಗೊಳ್ಳುತ್ತದೆ. ಇಂದು ಜೊಳ್ಳುಗಳೇ ವಿಜೃಂಭಿಸುತ್ತಿರುವ ಕಾಲ. ವಿಚಾರ, ದರ್ಶನ, ಭಾವ ಬದುಕು ಎಲ್ಲವೂ ಜೊಳ್ಳು ಮಾದರಿಗಳ ಹಿಂದೆಬಿದ್ದಿದೆ. ಸ್ವರೂಪ ಮರೆಯಾಗಿ ನಾಮಫಲಕಗಳೇ ವಿಜೃಂಭಿಸುವುದು ನಮ್ಮ ಬದುಕಿನ ಅಂತಃಸತ್ವವೇ ತೀರಿಹೋಗಿರುವ ವ್ಯಂಗ್ಯವನ್ನು ಸೂಚಿಸುತ್ತದೆ. ಇಂಥ ಚಿತ್ರಗಳ ಮೂಲಕ ತಮ್ಮ ಹುಡುಕಾಟದ ನೆಲೆ ಏನೆಂಬುದನ್ನು ಅವರ ಕಾವ್ಯವು ನಮಗೆ ಕಾಣಿಸುತ್ತಿದೆ.ಅಶೋಕ ಹೊಸಮನಿ ಕವನ ಸಂಕಲನ “ಹರವಿದಷ್ಟು ರೆಕ್ಕೆಗಳು” ಕೃತಿಗೆ ಡಾ. ಗೀತಾ ವಸಂತ ಬರೆದ ಮುನ್ನುಡಿ + +byಕೆಂಡಸಂಪಿಗೆ|Jul 9, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸದ್ಯ ಬಹಳ ದಿನಗಳಿಂದ ನನ್ನ ಅಂತರಂಗಕ್ಕೆ ಸುರಿದುಕೊಂಡ ಕವಿತಾ ಅವರ ಕವಿತೆಗಳು ಕೊಟ್ಟ ಸಂವೇದನೆಗಳಿಗೆ ಇಲ್ಲಿ ಶಬ್ದ ರೂಪ ಕೊಡಲು ಕೂತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದ ಕೇವಲ ಕವಿತೆಗಳನ್ನೆ ನಚ್ಚಿಕೊಂಡು ಕೂತ ನನಗೆ ಚೆನ್ನಾಗಿ ಬರೆವ ಹೊಸಬರ ಪದ್ಯಗಳು ಅವು ಪಠ್ಯವಾಗೇ ಕಾಣಿಸುತ್ತದೆ. ಗೋಚರಿಸದ ಲೋಕವೊಂದು ನನಗೆ ನೀಡಬಹುದಾದ ಅಸೀಮ ಅನುಭವಗಳಿಗೆ ಕಾಯುತ್ತಲೇ ಓದುತ್ತೇನೆ. ಕವಿತಾ ಹೆಗಡೆ ಅವರ ಇಲ್ಲಿನ ರಚನೆಗಳು ನನಗೆ ಹೊಸ ಪಠ್ಯವಾಗೇ ಅನುಭವಕ್ಕೆ ಬಂದವು.ಕವಿತಾ ಹೆಗಡೆ ಅಭಯಂ ಅವರ “ಮಂಜಿನ ಮನೆ ಹೊಕ್ಕ ಮನ” ಕವನ ಸಂಕಲನಕ್ಕೆ ವಾಸುದೇವ ನಾಡಿಗ್‌ ಬರೆದ ಮುನ್ನುಡಿ \ No newline at end of file diff --git a/Kenda Sampige/article_223.txt b/Kenda Sampige/article_223.txt new file mode 100644 index 0000000000000000000000000000000000000000..f8cf0459551fd4cc0c376dc6d1b71a171c19a50c --- /dev/null +++ b/Kenda Sampige/article_223.txt @@ -0,0 +1,35 @@ +byಗಿರಿಧರ್ ಗುಂಜಗೋಡು|Jul 6, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮರುದಿನ ಬೆಳಗಾದರೂ ಆ ಚೀತ್ಕಾರ ನನ್ನ ಕಿವಿಯಲ್ಲಿ ಇನ್ನೂ‌ ಮೊರೆದಂತಾಗುತ್ತಿತ್ತು, ಜಿಎಸ್ಎಸ್ ಅವರ ಕಾಣದ ಕಡಲಿನಂತೆ. ಕಾಲು ಸಾವಕಾಶವಾಗಿ ಆ ರೂಮಿನತ್ತ ಚಲಿಸಿದವು. ಮೆಲ್ಲನೆ ಬಾಗಿಲು ಬಡಿದು ಒಳ ಸರಿದೆ. ಒಂದು ಬದಿಗೆ ಸರಿದು ಮಲಗಿದ್ದ ಅಜ್ಜಿ ಸದ್ದಿಗೆ ಬೆಚ್ಚಿ ಬಿದ್ದವರಂತೆ ತಿರುಗಲು ಪ್ರಯತ್ನಿಸಿದರು, ವಿಚಿತ್ರ ವಾಸನೆಗೆ ಹೊಟ್ಟೆ ತೊಳಸಿದಂತಾಯಿತು. ತುಂಬಾ ಕಷ್ಟದಿಂದ ವಾಂತಿಯಾಗದಂತೆ ತಡೆದುಕೊಂಡೆ. ಒಂದು ಅಪನಂಬಿಕೆಯ ಎಳೆಯನ್ನು ಮಾತಲ್ಲಿಟ್ಟುಕೊಂಡೇ ಅಜ್ಜಿ ಮೇಜಿನ‌ ಮೇಲಿದ್ದ ಮುಸಂಬಿ ಕಡೆ ಕೈ ತೋರಿಸಿ “ಅದರ ಸಿಪ್ಪೆ ಬಿಡಿಸಿ ಕೊಡುತ್ತೀಯಾ?” ಕೇಳಿದರು.ಓದುವ ಸುಖ ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ + +byಕೆಂಡಸಂಪಿಗೆ|Jul 5, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. ಪುರಾಣಪ್ರಿಯರಾದವರಿಗೆ “ಗಾಂಧಾರಿ “ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ “ಮಿಂಚದ ಮಿಂಚು ” ಮೂಡಿ ಬಂದಿದೆ. ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ. ದಿವ್ಯಾಶ್ರೀಧರ್  ರಾವ್ ಅವರ ಹೊಸ ಕಿರುಕಾದಂಬರಿಗೆ ಜಗದೀಶ್ ಶೆಟ್ಟಿ ಬರೆದ ಮುನ್ನುಡಿ ಇಲ್ಲಿದೆ. + +byಕೆಂಡಸಂಪಿಗೆ|Jul 4, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಚೀನಾದಲ್ಲಿ ಬಿಂಗ್ ಲಾಂಗ್ ಹುಡುಕುತ್ತಾ ಕ್ಷಿಯಾಂಗ್ಟನ್ ತಲುಪಿದ್ದೆ. ಆದರೆ ಅದು ಬಿಂಗ್‌ಲಾಂಗ್ ಮಾರಾಟದ ಪ್ರದೇಶ ಮಾತ್ರವಾಗಿತ್ತು. ಯಾರನ್ನು ಕೇಳಿದರೂ ‘ಅಡಿಕೆ ಬೆಳೆಯುವ ಪ್ರದೇಶ ಹೈನಾನ್; ಹೆಚ್ಚಿನ ಮಾಹಿತಿಗೆ ನೀವು ಅಲ್ಲಿಗೇ ಹೋಗಬೇಕು’ ಎನ್ನುತ್ತಿದ್ದರು. ಹಾಗಾಗಿ ಚೀನಾದಲ್ಲಿ ಅಡಿಕೆಯ ಮಾಹಿತಿ ಸಂಗ್ರಹದ ಸಾಹಸ ಅರ್ಧದಲ್ಲಿಯೇ ನಿಂತಿತ್ತು. ಪರಿಸ್ಥಿತಿ ಹೀಗಿದ್ದಾಗ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುವುದಿದೆಯೇ?ಬಾಲಚಂದ್ರ ಸಾಯಿಮನೆ ಬಿಂಗ್‌ಲಾಂಗ್‌ ಮತ್ತು ಲಂಬನಾಗ್‌’ ಕೃಷಿ ಪ್ರವಾಸ ಕಥನಗಳ ಪುಸ್ತಕದ ಒಂದು ಲೇಖನ ನಿಮ್ಮ ಓದಿಗೆ + +byನಾರಾಯಣ ಯಾಜಿ|Jul 2, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟುಗಳು ಇವೆಲ್ಲಾ ಆ ಕಾಲದ ಒಂದು ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತವೆ. ಇವುಗಳನ್ನೆಲ್ಲಾ ಅನುವಾದಿಸಿರುವಲ್ಲಿ ಮೂಲದ ಶಬ್ಧದ ಮಿತಿಯನ್ನು ದಾಟದಿರುವದನ್ನು ಕಾಣಬಹುದಾಗಿದೆ. ಡಾ. ಕಬ್ಬಿನಾಲೆ ವಸಂತ ಭಾರದ್ವಾಜರು ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಮನೋಜ್ಞವಾಗಿದೆ ಎನ್ನುತ್ತ ಸರಳ ವಡ್ಡಾರಧನೆ ಕುರಿತ ಅನಿಸಿಕೆಯನ್ನು ನಾರಾಯಣ ಯಾಜಿ ಅವರು ಇಲ್ಲಿ ಪ್ರಸ್ತುತಪಡಿಸಿದ್ದಾರೆ. + +byವ್ಯಾಸ ದೇಶಪಾಂಡೆ|Jun 30, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ..ಕಾವ್ಯಾ ಕಡಮೆ ಕಥಾ ಸಂಕಲನ “ಮಾಕೋನ ಏಕಾಂತ”ದ ಕುರಿತು ವಿಶ್ಲೇಷಣೆ ಬರೆದಿದ್ದಾರೆ ವ್ಯಾಸ ದೇಶಪಾಂಡೆ + +byಸುಮಾವೀಣಾ|Jun 27, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಈ ಕೃತಿಯು ಪ್ರಯತ್ನಿಸುತ್ತದೆ. ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷರಿಂದ ಶಿಕ್ಷೆಗೊಳಗಾಗಿ, ಆರು ತಿಂಗಳುಗಳನ್ನು ಹಿಂಡಲಗ ಸೆರೆಮನೆಯಲ್ಲಿ ಕಳೆದು, ಅಲ್ಲಿಂದ ತಿರುಗಿ ರೈಲಿನಲ್ಲಿ ತಮ್ಮೂರಿಗೆ ಬರುವ ಹಾದಿಯನ್ನೇ ಲೇಖಕರು ‘ಕಾರವಾನ್’ ಕಥನದ ಅನಾವರಣಕ್ಕೆ ಬಳಸಿಕೊಂಡಿದ್ದಾರೆ. ಬಸವರಾಜ ಕಟ್ಟೀಮನಿಯವರ ಕಾರವಾನ್ ಕತೆಯ ಕುರಿತು ಸುಮಾವೀಣಾ ಅವರ ಬರಹ ಇಲ್ಲಿದೆ. + +byಕೆಂಡಸಂಪಿಗೆ|Jun 25, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಜನಪದ ಸಾಹಿತ್ಯ ಅಧ್ಯಯನಗಳು ನಡೆದದ್ದು ಮೌಖಿಕ ಮೂಲದಲ್ಲಿದ್ದ ಜನಪದ ಸಾಹಿತ್ಯ ಬರವಣಿಗೆಯಲ್ಲಿ ಘನೀಕರಿಸಿದಾಗಿನಿಂದ, ಜನಪದ ಸಾಹಿತ್ಯವು ಹೀಗೆ ಬರವಣಿಗೆಯಲ್ಲಿ ಘನೀಕರಿಸುವಾಗ ಅದು ಅನೇಕ ಮಾರ್ಪಾಡುಗಳಿಗೆ ಒಳಗಾಗುತ್ತದೆ. ಜನಪದ ಸಾಹಿತ್ಯದಲ್ಲಿ ಉಂಟಾಗುವ ಇಂತಹ ಮಾರ್ಪಾಡುಗಳನ್ನು ನಾರಾಯಣ ಕೆ.ವಿ. ಅವರು ನಾಲ್ಕು ಮಾದರಿಗಳಲ್ಲಿ ಗುರುತಿಸುತ್ತಾರೆ. ಅವುಗಳಲ್ಲಿ ಮೊದಲನೆಯದು “ಇಲ್ಲದ ಮೌಖಿಕ ಸಂಕಥನವನ್ನು ಇದೆ ಎಂದು ಭ್ರಮೆ ಹುಟ್ಟಿಸುವ ರೀತಿಯಲ್ಲಿ ರಚಿಸಿಕೊಟ್ಟ ದಾಖಲೆಗಳು ನಮಗೆ ಸಿಗುತ್ತವೆ.ಡಾ.ಶೈಲಜ ಇಂ.ಹಿರೇಮಠ ಬರೆದ “ನಿರೂಪಣೆಯಾಚೆಗೆ (ಜನಪದ ಸಾಹಿತ್ಯ ಮತ್ತು ಮಹಿಳೆ)” ಪುಸ್ತಕದ ಒಂದು ಬರಹ ನಿಮ್ಮ ಓದಿಗೆ + +byದಯಾ ಗಂಗನಘಟ್ಟ|Jun 24, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಚಲಂ ಕವಿತೆಗಳ ಸಾಂಗತ್ಯ  ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ‌. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು.ಚಲಂ ಹಾಡ್ಲಹಳ್ಳಿಯವರ “ಈ ಮಳೆಗಾಲ ನಮ್ಮದಲ್ಲ” ಕವನ ಸಂಕಲನದ ಕುರಿತು ದಯಾ ಗಂಗನಘಟ್ಟ ಬರಹ + +byಕೋಡಿಬೆಟ್ಟು ರಾಜಲಕ್ಷ್ಮಿ|Jun 23, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ವೇಶ್ಯಾವಟಿಕೆ ಎಂಬ ನೋವಿನ ಲೋಕದ ಕತೆಗಳನ್ನು ಹೇಳಿದಷ್ಟೂ ಮುಗಿಯದು. ಕಂಡಷ್ಟೂ ಮುಗಿಯದು. ಅಂತಹ ಲೋಕದಲ್ಲಿ ಒಂದಿಷ್ಟು ಸಂಚರಿಸಿ ದೀರ್ಘವಾದ ಕ್ಷೇತ್ರಕಾರ್ಯವನ್ನು ಮಾಡಿದ ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಇತ್ತೀಚೆಗೆ ಪ್ರಕಟಿಸಿದ ಪುಸ್ತಕ ‘ವೇಶ್ಯಾವಟಿಕೆಯ ಕಥೆ-ವ್ಯಥೆ’. ವೇಶ್ಯೆಯರ ಪರಿಸ್ಥಿತಿಗಳಿಗೆ ಕಾರಣವಾಗುವ ಪುರುಷವರ್ಗದೆಡೆಗೆ ಪ್ರಖರವಾದ ಸಿಟ್ಟನ್ನು ಒಡಲಿನಲ್ಲಿಟ್ಟುಕೊಂಡು ಅವರು ಈ ಪುಸ್ತಕವನ್ನು ಸಣ್ಣದೊಂದು ವಿಸ್ಮಯ ಮತ್ತು ತುಂಬಾ ಆತಂಕದೊಂದಿಗೆ ಬರೆದಿದ್ದಾರೆ. ಈ ಪುಸ್ತಕದ ಕುರಿತು ತಮ್ಮ ಅನಿಸಿಕೆಯನ್ನು ಇಲ್ಲಿಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ. \ No newline at end of file diff --git a/Kenda Sampige/article_224.txt b/Kenda Sampige/article_224.txt new file mode 100644 index 0000000000000000000000000000000000000000..476e4d910ee2edc429d2c01063da62fad1230e6c --- /dev/null +++ b/Kenda Sampige/article_224.txt @@ -0,0 +1,45 @@ +‘ಚಿಕ್ಕಣಿ ರಾಜ’ ಎಂಬುದು ಕೆ.ವಿ. ತಿರುಮಲೇಶರು ಬರೆದ ಮಕ್ಕಳ ಕವನ ಸಂಕಲನ . ತಿರುಮಲೇಶರು ಮಕ್ಕಳ ಮನೋಲೋಕಕ್ಕೆ ತೆರಳಿ ಬರದಿರುವ ಈ ಕವನಗಳು ಅಕ್ಷರಶಃ ಮಕ್ಕಳ ಮನಸ್ಸಿನ ಕನ್ನಡಿಯಂತಿವೆ. ಆಡುಮಾತಿನ ಸೊಗಸಿನಲ್ಲಿ ಲಹರಿಯಾಗಿ ಬಂದಿರುವ ಒಂದೊಂದು ಕವಿತೆಗಳು ಓದುಗರನ್ನು ಅವರ ಬಾಲ್ಯಕ್ಕೆ ಕರೆದೊಯ್ಯುತ್ತವೆ. ಮನಸ್ಫೂರ್ತಿಯಾಗಿ ಕ್ಷಣ ಕಾಲ ನಕ್ಕು ಅದನ್ನೆ ಮತ್ತೆ ನೆನಪಿಸಿಕೊಳ್ಳುವಂತಾಗುತ್ತದೆ. ಒಂದು ಕವಿತೆಯ ಯಶಸ್ಸಿಗೆ, ಅದರ ಮಹತ್ವವನ್ನು ಹೇಳಲು ಇದಕ್ಕಿಂತ ಹೆಚ್ಚಿನದೇನು ಬೇಕು. + +ಮಕ್ಕಳ ಪ್ರಾರ್ಥನೆಯನ್ನು ಭಗವಂತ ಬೇಗನೆ ಆಲಿಸುತ್ತಾನೆ ಎನ್ನುತ್ತಾರೆ. ಅಂತೆಯೇ ಇಲ್ಲಿ ಮೊದಲೊಂದಿಪೆ ನಿನಗೆ ಗಜಾನಾನ ಎನ್ನುವಂತೆ ಗಣಪತಿಯನ್ನು, ಗುರುಗಳನ್ನು ಸ್ಮರಿಸಿ ನಾಡೋಜ ಪಂಪನನ್ನೂ ಸ್ಮರಿಸಿಕೊಂಡು ‘ವರ್ಣಮಾತ್ರಂ ಕಲಿಸಿದಾತಂ ಗುರು’ ಎನ್ನುವಂತೆ ಕವಿ ಹಿರಿಯನೊ ಕಿರಿಯನೋ ಅವನೂ ಸ್ತುತ್ಯರ್ಹ ಎನ್ನುತ್ತಾ ಸ್ಮರಿಸುವಿಕೆಯನ್ನು ಮಿಂಚುಹುಳದ ಮಿಂಚು ಬೆಳಕಿಗೆ ಹೋಲಿಸುತ್ತಾರೆ. + +(ಕೆ.ವಿ. ತಿರುಮಲೇಶ್) + +ಪುಟಾಣಿ ಲೋಕದ ಈ ಕವಿತೆಗಳು ಅಕ್ಷರಶಃ ಮಕ್ಕಳ ಮನೋಲೋಕವನ್ನು ತೆರೆದಿಡುತ್ತ ಅದಕ್ಕೆ ಪುರಕವಾದ ಚಿತ್ರಗಳು ಕವಿತೆಗಳ ಉದ್ದೇಶವನ್ನು ಇಮ್ಮಡಿಸಿಗೊಳಿಸಿವೆ. ಹೂತೋಟ, ಸುರಿಯುವ ಮಳೆ,ಹರಿಯುವ ಹೊಳೆ, ಜೋಕಾಲಿ, ಹಕ್ಕಿಗೂಡು,ಜೇನುಗೂಡು,ಅಣಬೆ, ಜೇಡರ ಬಲೆ ಇವುಗಳ ನಡುವೆ ಬೆಳೆಯುವ ಮಕ್ಕಳು ಅವುಗಳೊಂದಿಗೆ ಕಲೆತು ಜೀವನವನ್ನು ಕಲಿಯುವರು. ಇದನ್ನು ಕಂಡು ದೊಡ್ಡವರು, ನಿತ್ಯ ಬಾಲ್ಯ ಇರಲಿ ಎಂದು ಬಯಸುವ ಬಯಕೆ ಸಾಧುವಾದುದು ಎನ್ನಿಸುತ್ತದೆ. + +ತುಂಟತನಕ್ಕೆ ಇನ್ನೊಂದು ಹೆಸರು ಮಕ್ಕಳು ಎಂದೇ ‘ಪೋಲಿಕಿಟ್ಟ’ ಎನ್ನುವ ಕವಿತೆಯಲ್ಲಿ ಲಡ್ಡು,ಬೆಣ್ಣೆ ಕದ್ದು ಅಪ್ಪನ ಚದ್ದರ ಹೊದ್ದವರು ಕಿಟ್ಟನೋ ಪುಟ್ಟನೋ ಎನ್ನುವಾಗ ‘ಪುಟ್ಟ’ ಎನ್ನುವ ಉತ್ತರ ಬರುತ್ತದೆ. ಆದರೆ ಇಂದಿನ ಮಕ್ಕಳಿಗೆ ಲಡ್ಡು ಬೆಣ್ಣೆಗಳು ಹಿಡಿಸುವುದಿಲ್ಲ ಎಂಬುದು ನೆನಪಾಗಿ, ಅಪ್ಪನ ಚದ್ದರದೊಳಗೋ ಅಜ್ಜಿ ತಾತನ ಚದ್ದರದೊಳಹೊಕ್ಕು ಬೆಚ್ಚಗೆ ಸುಖಿಸುವ ಮನಃಸ್ಥತಿ ಈಗಿಲ್ಲ ಎಂಬುದು ನೆನಪಾಗಿ ಕ್ಷಣ ಕಾಲ ಬೇಸರ ಕಾಡುತ್ತದೆ. ಬುದ್ಧಿ ಬರುವುದಕ್ಕೂ ಮೊದಲೆ ಮಕ್ಕಳ ಹೆಸರಿನ ಪ್ರತ್ಯೇಕ ಕೊಠಡಿಗಳಿವೆ. ಅವರಿಗೆ ನಾವು ಕೊಡಿಸುವ ಆಧುನಿಕ ತಿಂಡಿಗಳ ಪಟ್ಟಿಯೇ ಬೇರೆ ಇದೆ. ನಮ್ಮ ಬಾಲ್ಯ ನಮ್ಮ ಮಕ್ಕಳಿಗೆ ಇಲ್ಲ ಎನ್ನುವ ಕೊರಗು ನಮ್ಮನ್ನು ಇಲ್ಲಿ ಕಾಡುತ್ತದೆ. ‘ ಆಡಿ ಬಾ ಎನ ಕಂದ ಅಂಗಾಲ ತೊಳೆದೇನ’ ಎನ್ನುವ ಜಾನಪದ ಅಮ್ಮಂದಿರು ಮಕ್ಕಳ ಆಟದ ಬಗ್ಗೆ ಹೇಳುವಂತೆ ಇಲ್ಲಿ ತಿರುಮಲೇಶರು ಮಕ್ಕಳ ಅಂಗಿ ಒದ್ದೆಯಾಗಿದೆ, ತಲೆಯ ಮೇಲೆ ಹುಲ್ಲಿನ ಕಡ್ಡಿಯಿದೆ, ತಲೆಯಲ್ಲಿ ರಕ್ತದ ಗುರುತಿದೆ, ಕೈ ಗೆ ಬೇಕಂತಲೆ ಮೆತ್ತಿಸಿಕೊಂಡ ಶಾಯಿಯ ಗುರುತಿದೆ , ಇವೆಲ್ಲಾ ಮಕ್ಕಳಾಟದ ವಿಭಿನ್ನ ಅವತಾರಗಳು ಎನ್ನುತ್ತಾರೆ. + +ಮಕ್ಕಳು ಅತ್ಯಂತ ಇಷ್ಟಪಡುವ ಸಾಕುಪ್ರಾಣಿ ಎಂದರೆ ಬೆಕ್ಕು. ಅದನ್ನು ಕವಿ ಬೆಕ್ಕಿನ ಕಣ್ಣುಗಳು ಎನ್ನುವ ಪದ್ಯದಲ್ಲಿ ಸೊಗಸಾಗಿ ಪ್ರಸ್ತುತಪಡಿಸಿದ್ದಾರೆ. ಕತ್ತಲಲ್ಲೆ ಬೆಕ್ಕಿದೆ ಎಂದು ಗೋಚರಿಸುವುದು ಅವುಗಳ ಹೊಳೆಯುವ ಕಣ್ಣುಗಳ ಮೂಲಕವೇ.. ಎನ್ನುವುದನ್ನು ಸುಲಲಿತ ಪದಗಳಲ್ಲಿ ಸೆರೆ ಹಿಡಿದಿದ್ದಾರೆ. ಬಾಲ,ಕಾಲು, ಕೈ,ಹೊಟ್ಟೆ,ಮೀಸೆ,ಮೂತಿಗಳು ಮಾಯವಾಗಿ ಕಡೆಗೆ ಉಳಿಯುವುದು ಕಣ್ಣುಗಳು ಮಾತ್ರ ಎನ್ನುತ್ತಾರೆ. + +ಮನೆಯ ಮುದ್ದು ಅಧ್ಯಕ್ಷೆ ಎಂದರೆ ಆ ಮನೆಯ ಪುಟ್ಟ ಹೆಣ್ಣು ಮಗು. ಆ ಮಗುವಿನ ಸಂಕೇತ ಮುದ್ದು ಮಾತು,ಬೊಂಬೆಗಳು ಬಣ್ಣದ ಲಂಗ ಅದಕ್ಕೆ ಮ್ಯಾಚಿಂಗ್ ರಿಬ್ಬನ್, ಹೆಜ್ಜೆ ಹೆಜ್ಜೆಗೂ ಸದ್ದು ಮಾಡುವ ಪೀಪಿ, ಶೂಗಳನ್ನು ಕವಿತೆಯೊಳಗೆ ತಿರುಮಲೇಶರು ಬಂಧಿಸಿದ್ದಾರೆ. + +ಶಿಶುವಿನಿಂದ ಮಕ್ಕಳ ಗುಂಪಿಗೆ ಸೇರುವ ಮಕ್ಕಳಿಗೆ ಸಾಮಾನ್ಯ ಜ್ಞಾನ ಬೆಳೆಸುವುದೂ ಹೊಣೆಗಾರಿಕೆ ವಾರಗಳ ಹೆಸರನ್ನು ಸೋಮ್ವಾರವೇನೋ ತಮ್ಮ ಎಂಬ ಪದ್ಯದ ಮೂಲಕ ಒಂದರಿಂದ ಹತ್ತರವರೆಗಿನ ಅಂಕಿಗಳ ಪರಿಚಯವನ್ನು ಏನುಬೇಕೋ ಪುಟ್ಟ ಎನ್ನುವ ಕವಿತೆಗಳ ಮೂಲಕ ಹೇಳಿದ್ದಾರೆ. ಹಾಗಾಗಿ ಈ ಪದ್ಯಗಳು ಮಕ್ಕಳ ಕಲಿಕೆಯ ಹಾದಿಯಲ್ಲಿ ಅವರಕೈ ಹಿಡಿಯುತ್ತವೆ. + +ಯಾರಿಗೆ ಏನಾಯ್ತು ಎನ್ನುವ ಪದ್ಯದಲ್ಲಿ ಪ್ರಾಣಿಗಳ ಜೈವಿಕ ರಚನೆಯ ಅಧಾರದಲ್ಲಿ ಅವುಗಳ ಪರಿಚಯ ಮಾಡಿಕೊಟ್ಟಿರುವುದು ವಿಶೇಷವೆನಿಸಿದೆ. ಊಟದ ಪಾಠಕವಿತೆಯಲ್ಲಿ ಮಕ್ಕಳು ಹೇಗೆ ಊಟಕ್ಕೆ ಕುಳಿತುಕೊಳ್ಳಬೇಕು ನಂತರ ಅಕ್ಷರಾಭ್ಯಾಸ, ಅಕ್ಷರಾಭ್ಯಾಸದಲ್ಲೂ ಆಲೂಪರಾಟ, ಶ್ಯಾವಿಗೆ ಪಾಯಿಸ, ಉಪ್ಪಿಟ್ಟು, ಊತಪ್ಪ ಹೋಳಿಗೆ ಇತ್ಯಾದಿಗಳ ಪರಿಚಯವನ್ನು ಮಾಡಿಕೊಡುತ್ತಾರೆ. + + + +ಏನೇ ಆಗಲಿ ಮಕ್ಕಳಿಗೆ ಹಿರಿಯರು ಕೊಟ್ಟಿದ್ದನ್ನು ತಿನ್ನುವುದಕ್ಕಿಂತ ಕದ್ದು ತಿನ್ನುವುದರಲ್ಲೇ ಅತ್ಯಂತ ಖುಷಿ. ಅದೇ ಇಲ್ಲಿ ಪುಟ್ಟನ ಮಾತಿನಲ್ಲಿ ಕವಿತೆಯಾಗಿದೆ. ಹಾಲು ಹಣ್ಣು, ಖರ್ಜೂರ, ಜೇನು ಇತ್ಯಾದಿ ಪೌಷ್ಟಿಕ ಆಹಾರಗಳ ಪರಿಚಯವೇ ಇದೆ. ಬೆಟ್ಟ ಪುಟ್ಟ ಬೇರೆಯಲ್ಲ ಪುಟ್ಟನೆ ಎಲ್ಲಾ ಅನ್ನುವಲ್ಲಿಗೆ ಈ ಕವಿತೆ ಸಮಾಪ್ತಿಯಾಗುತ್ತದೆ. + +‘ಬಿಟ್ಟರೆ ಸಿಕ್ಕ’ ಎನ್ನುವಂತೆ ಮಕ್ಕಳನ್ನು ಹಿಡಿಯುವುದು ಕಷ್ಟ ಅಂತೆ ಮಕ್ಕಳು ಮಾತು,ಸ್ನಾನ ಓದನ್ನು ಮರೆತರೂ ಆಟ,ಊಟ ಓಟವನ್ನು ಬಿಡುವುದಿಲ್ಲ. ಹಿರಿಯರು ಎಷ್ಟು ಮುದ್ದು ಮಾಡಿ ದರೂ ಮಕ್ಕಳ ಮುನಿಸನ್ನು ಕೆಲವೊಮ್ಮೆ ತಗ್ಗಿಸಲು ಸಾಧ್ಯವಾಗುವುದಿಲ್ಲ ಅದನ್ನೇ ಇಲ್ಲಿ ಆಟ ಆಡಿದ್ದು ಕಾಟ ಕೊಟ್ಟಿದ್ದು ಎಲ್ಲ ಮುಗಿದ ಮೇಲೆ ನಾಳೆಯಿಂದ ತೆಪ್ಪಗೆ ಶಾಲೆಗೆ ಹೊರಡು ಎನ್ನುವಂತೆ ‘ಸಿಟ್ಟು ಯಾತಕೋ’ ಎನ್ನುವ ಕವನ ರಚನೆಯಾಗಿದೆ. + +ನಾಟಕದ ಕಣ್ಣೀರಿಗೆ ಮೊಸಳೆ ಕಣ್ಣೀರು ಎನ್ನುವಂತೆಯೇ ಇಲ್ಲಿ ಹಾಸ್ಯ ಜೊತೆಗೆ ವಿಡಂಬನೆ ಎನ್ನುವಂತೆ ತಿರುಮಲೇಶರು ಮೊಸಳೆ ಮತ್ತು ಬೆಕ್ಕಿನ ಸಂಭಾಷಣೆಯನ್ನು ತಂದಿದ್ದಾರೆ. ‘ನಿನ್ನ ಸ್ನೇಹಿತ ನನ್ನ ಹೊಟ್ಟೆ ಸೇರಿದ್ದಾನೆ ನೀನು ಬಾ’ ಎಂದು ಬೇಟೆಯ ಸಂಚನ್ನು ತೋರಿಸಿದರೆ , ಬೆಕ್ಕು ಅಷ್ಟೇ ಲೀಲಾಜಾಲವಾಗಿ “ನಾನು ಬರಲ್ಲ ನಾವಿಬ್ರೂ ಈಗ ಜಗಳ ಮಾಡಿಕೊಂಡಿದ್ದೇವೆ” ಎಂದು ಹೇಳುತ್ತದೆ . ಶಕ್ತಯಿಂದಾಗದ್ದನ್ನು ಉಪಾಯದಿಂದ ಪಡೆಯಬೇಕು ಎನ್ನುವುದನ್ನು ಬೋಧಿಸುವ ಕವನಗಳು ಮಕ್ಕಳ ಪಾಲಿಗೆ ಓದುವುದಕ್ಕೆ ಸಂತೋಷ ಕೊಡುವಂತೆಯೂ ಇವೆ. + +ಏನೇ ಮಾಡಿದರೂ ಪರಂಪರೆಯೋ ರಕ್ತಗತವೋ ಎಂಬಂತೆ ನಾವು ಭಗವಂತನನ್ನು ನೆನೆಯುತ್ತೇವೆ. ಅದು ಮನದೊಳಗೆ ಶ್ರದ್ಧೆಯನ್ನು ಮೂಡಿಸುತ್ತದೆ. ಅಂತೆಯೇ ಸೂರ್ಯ ದೇವರ ಸ್ಮರಣೆಯೂ ‘ಹಣ್ಣು’ ಎನ್ನುವ ಕವಿತೆಯಲ್ಲಿ ಪುಟ್ಟಗಾಳಿ,ಮಂಗ, ಅಳಿಲು, ಪಕ್ಷಿಗಳಿಗೂ ಹಣ್ಣುಗಳನ್ನು ಕೊಟ್ಟಮೇಲೆ ಸೂರ್ಯನಿಗೂ ಕೊಡುವುದನ್ನು ಮರೆಯಲಾರ. + +ಭಾಷಾ ತಜ್ಞರಾಗಿಯೂ ಗುರುತಿಸಿಕೊಂಡಿರುವ ಕೆ.ವಿ. ತಿರುಮಲೇಶ ಅವರು ನಾವಾಡುವ ಅವಳಿ ಪದಗಳನ್ನು ಮಕ್ಕಳ ಪದ್ಯದಲ್ಲಿ ತಂದು, ಪದ್ಯ ಓದುವ ಖುಷಿಯನ್ನು ಹೆಚ್ಚಿಸಿದ್ದಾರೆ. ಉದಾಹರಣೆಗೆ ರೊಟ್ಟಿ-ಗಿಟ್ಟಿ ಹಾಲು-ಗೀಲು ಎನ್ನುತ್ತೇವೆ ಇಲ್ಲಿ ಮೊದಲ ಪದಕ್ಕೆ ಅರ್ಥವಿದ್ದರೆ ಎರಡನೆ ಪದಹಾಗೆ ವಿಶೇಷ ಅರ್ಥವಿಲ್ಲದೆಯೆ ಬಂದು ಬಿಡುತ್ತದೆ. ಅದನ್ನೆ ಇಲ್ಲಿ ಬೆಣ್ಣೆ-ಗಿಣ್ಣೆ,ತುಪ್ಪ -ಗಿಪ್ಪ, ಹಪ್ಪಳ-ಗಿಪ್ಪಳ ಅನ್ನುವುದನ್ನು ತಂದು ಖುಷಾಲಿಗೆ ಪುಟ್ಟನನ್ನು ಪೆಟ್ಟು ಬೇಕೋ ಗಿಟ್ಟುಬೇಕೋ ಎಂದರೆ ಜಾಣ ಪುಟ್ಟ ಗಿಟ್ಟು ಬೇಕು ಎನ್ನುತ್ತಾನೆ. ಹಾಸ್ಯದೊಂದಿಗೆ ಮಕ್ಕಳ ಬುದ್ಧಿವಂತಿಕೆ ಅರಳಲು ಬೇಕಾದ ಸೂಕ್ಷ್ಮತೆಯನ್ನು ಇಲ್ಲಿ ತಂದಿದ್ದಾರೆ .’ರೋಮತ್,’ ‘ನಾಪಾಸು’ ಪದ್ಯಗಳು ಪದಚಮತ್ಕಾರದಿಂದ ಕೂಡಿವೆ. ಕಣ್ಣಲ್ಲಿ ನೀರು ತರಿಸುವ ಈರುಳ್ಳಿ ಕುರಿತು ಎರಡು ಪದ್ಯಗಳು ಇವೆ. ಹಿರಿಯರಿಗೆ ಬೆಲೆ ಹೆಚ್ಚಾಗಿ ನೀರು ತರಿಸುವುದು ಬೇರೆ, ಅದರೆ ಇಲ್ಲಿ ಈರುಳ್ಳಿಯ ವಿಶೇಷತೆಯನ್ನು ಮಕ್ಕಳ ಧಾಟಿಯಲ್ಲಿಯೇ ಹೇಳಿದ್ದಾರೆ. + +ಮಕ್ಕಳ ಕತೆಗಳಲ್ಲಿ ಬರುವ ನರಿ,ಬೆಕ್ಕು , ಮಂಗ, ಆನೆ ಕಾಗೆ ಗಳು ಅವುಗಳಿಗೆ ಇಷ್ಟವಾದ ಬೆಣ್ಣೆ, ಬಾಳೆ , ಕಬ್ಬು, ಭತ್ತ, ಸೌತೆ … ಒಟ್ಟಿನಲ್ಲಿ ಬದುಕಿನ ಅವಶ್ಯಕತೆಗಳೆಲ್ಲ ಪದ್ಯದ ಲಯದಲ್ಲಿ ಸೇರಿಕೊಂಡಿವೆ. + +ಬಾಲ್ಯ ಕಳೆದು ಯೌವ್ವನ ಮುಪ್ಪು ಅನ್ನುತ್ತಿದ್ದಂತೆ ಮನುಷ್ಯ ಬೇಕಿಲ್ಲದಷ್ಟು ಗಂಭೀರವಾಗಿಬಿಡುತ್ತಾನೆ ಆದರೆ ಹಾಗೆ ಮಾಡಕೊಡದೆ ಮಕ್ಕಳು ಹಿರಿಯರು ಯೋಚಿಸದ್ದನ್ನು, ತಮ್ಮಿಂದ ಆಗದ ಕೆಲಸಗಳನ್ನು ಸಾಹಸ ಎಂಬಂತೆ ಮಾಡಹೊರಡುವ ಪರಿ ಇಲ್ಲಿ ಓದುಗರಲ್ಲಿ ಮತ್ತೆ ಜೀವನೋತ್ಸಾಹವನ್ನು ತುಂಬುತ್ತದೆ. ಹಾಗಾಗಿ ಮಕ್ಕಳ ಪದ್ಯಗಳೆಂದರೆ ಅದು ಬರೀ ಮಕ್ಕಳಿಗೆ ಸೀಮಿತವಾದ ಸಾಹಿತ್ಯವೆಂದರೆ ಸುಳ್ಳಾದೀತು. + +‘ದೋಸೆಯ ಕಣ್ಣುಗಳನ್ನು, ಗಿಡದ ಹೂವನ್ನು, ಆಗಸದ ತಾರೆಗಳನ್ನು ಎಣಿಸುವ ಕೆಲಸವನ್ನು ಪುಟ್ಟಿ ಮಾಡುತ್ತಾಳೆ ಸಾಹಸ ಕೆಲಸಗಳನ್ನು ಮಾಡಿ ಆಯಾಸಗೊಂಡು ಈಗ ವಿಶ್ರಾಂತಿ ಪಡೆದಿದ್ದಾಳೆ , ಹೀಗೆ ಕೆಲಸ ಮಾಡಿ ಆಯಾಸದಿಂದ ನಿದ್ದೆಗೆ ಜಾರುವ ಮಕ್ಕಳ ಪ್ರತಿನಿಧಿಯಾಗಿ ಪುಟ್ಟಿ ಇಲ್ಲಿದ್ದಾಳೆ. + +ಯಾವ ಮಾಮನನ್ನು ಬಿಟ್ಟರು ನಾವು ಮಕ್ಕಳಿಗೆ ಚಂದ ಮಾಮನನ್ನು ಪರಿಚಯಿಸದೆ ಬಿಡುವುದಿಲ್ಲ . ‘ಚಂದಮಾಮ’, ‘ಎಲ್ಲೆಲ್ಲೂ ಚಂದಿರ’, ‘ಚಂದಿರ 2’, ‘ಉತ್ತರ’ ಎನ್ನುವ ಕವಿತೆಗಳಲ್ಲಿ ಬಂದಿದೆ. ಮಕ್ಕಳಾಟವನ್ನು ಭಗವಂತ ಕೂಡ ಆಡಲಾರನು ಎಂಬಂತೆಯೆ ಕನ್ನಡಿಯ ಮುಂದೆ ಕುಳಿತ ಮಗು ತನ್ನನ್ನು ಕಂಡು ಅಚ್ಚರಿ ಪಡುವುದು, ಫೋಟೊದಲ್ಲಿ ತನ್ನನ್ನು ಕಂಡು ಹಿಗ್ಗುವುದು ಟಿವಿಯಲ್ಲಿ ಕಾಣುವ ದೃಶ್ಯಗಳಿಗೆ ಅಚ್ಚರಿ ವ್ಯಕ್ತಪಡಿಸುವುದು ಹಿರಿಯರ ಪಾಲಿಗೆ ಬೆರಗಿನ ಸಂಗತಿ.ಮಕ್ಕಳು ಯಾವ ರೀತಿಯ ಪುಸ್ತಕಗಳನ್ನು ಓದಬೇಕು ಎನ್ನುವ ಪಟ್ಟಿಯನ್ನು ಇಲ್ಲಿ ಮಾಡಿದ್ದಾರೆ. ಬೆಕ್ಕು ಕೂಡ ದಿನಕ್ಕೊಂದು ಬಣ್ಣವನ್ನು ಬದಲಿಸುತ್ತದೆ ಒಂದು ದಿನ ಹೆಬ್ಬುಲಿ ಬಣ್ಣ, ಇನ್ನೊಮ್ಮೆ ಚುಂಡಿಲಿ ಬಣ್ಣ ಮಂತ್ರಿ-ಕುತಂತ್ರಿ ಬಣ್ಣ ಎನ್ನುತ್ತಾ ಹಾಗೆ ಅದು ಬದಲಾಗುವುದಕ್ಕೆ ನಿಲ್ಲುವ ನೆಲ,ನೆಲೆ ಕಾರಣ ಹಾಗೆ ಮನುಷ್ಯ ಸಮಯ ಸಂದರ್ಭಕ್ಕೆ ಬದಲಾಗುತ್ತಾನೆ ಎನ್ನುತ್ತಾರೆ. ಕೋಳಿಗೆ ಬೆಳಗಾಯಿತು ಎಂದು ಹೇಗೆ ಗೊತ್ತಾಗುತ್ತದೆ ಎನ್ನುವುದನ್ನು ಆಧುನಿಕ ಪರಿಕ್ರಮಕ್ಕೆ ಅನ್ವಯಿಸಿ ಹೇಳಿರುವ ಕ್ರಮ ಅನನ್ಯವಾಗಿದೆ. + +‘ರಾಜ ಗೆಲ್ಲಲಿಲ್ಲ’ ಅನ್ನುವ ಪದ್ಯ ಗಂಭೀರ ಯೋಚನೆ ಮೂಡಿಸುವಂತದ್ದು. ರಾಜ ಗೆಲ್ಲಲು ಅವನಿಗೆ ಮಾತ್ರ ಮನಸ್ಸಿದ್ದರೆ ಸಾಲದು ಅವನ ಪರಿವಾರವೂ ಸಹಾಯ ಮಾಡಬೇಕು. ಅವರುಗಳಲ್ಲಿ ಕರ್ತವ್ಯ ಲೋಪವಾದರೆ ರಾಜನಿಗೆ ಸೋಲಾಗುತ್ತದೆ. ರಾಜ ಅಧಿಕಾರದ ಕೇಂದ್ರವಾದರೂ ಅವನ ಮಂತ್ರಿಗಳು,ಸೈನಿಕರಲ್ಲಿ ಒಗ್ಗಟ್ಟಿರಬೇಕು. ಒಗ್ಗಟ್ಟಿನಲ್ಲಿ ಬಲವಿರಬೇಕು ಎನ್ನುವುದನ್ನು ಈ ಪದ್ಯದಲ್ಲಿ ನೋಡಬಹುದು. + + + +‘ಕಟಾಣಿ ಇರುವೆ’ ಪದ್ಯ ಇರುವೆ ಎನ್ನುವುದು ಕೇವಲ ಸಾಲಿನ ಶಿಸ್ತಿಗೆ ಹೆಸರಾಗಿರುವ ಜೀವಿಯಲ್ಲ ಗೂಡಾರ್ಥವನ್ನು ಹೊಂದಿರುವ ಕವಿತೆಯಾಗಿದೆ ಪುರಂದರದಾಸರ ‘ರಾಗಿ ತಂದೀರಾ’. ಕನಕದಾಸರ ‘ಪರಮಪುರುಷ ನೀ ನೆಲ್ಲಿಕಾಯಿ’ ಎನ್ನುವ ಕೀರ್ತನೆಗಳು ಇಲ್ಲಿ ನೆನಪಾಗುತ್ತವೆ. ‘ನೃಪತಿಗೆ ಆತ್ಮವಿಚಾರವೂ ಬೇಕು ಭೋಗವಿಚಾರವೂ ಬೇಕು’ ಎಂದು ರತ್ನಾಕರವರ್ಣಿ ಹೇಳಿರುವಂತೆ ಮಕ್ಕಳ ಬೆಳವಣಿಗೆಗೆ ಬೇಕಾದ ಬಾಲ್ಯ ಹಾಸ್ಯ, ಸಾಮಾನ್ಯ ಜ್ಞಾನ , ಮೌಲ್ಯಗಳನ್ನು ತಿರುಮಲೇಶರು ‘ಚಿಕ್ಕಣಿ ರಾಜ’ ಎನ್ನುವ ಮಕ್ಕಳ ಕವನ ಸಂಕಲನದಲ್ಲಿ ಮಕ್ಕಳಿಗೆ ಅರ್ಥವಾಗುವ ಸರಳ ಧಾಟಿಯಲ್ಲಿ ಹೇಳಿದ್ದಾರೆ. ಓದಿದ ಹಿರಿಯರು ಒಂದಷ್ಟು ವರ್ಷ ಹಿಂದಕ್ಕೆ ಸರಿದು ಜೀವನೋತ್ಸಾಹ ಹೆಚ್ಚಿಸಿಕೊಳ್ಳುವ ರೀತಿ ಇಲ್ಲಿ ಲಹರಿಯಾಗಿದೆ. ಕೃತಿಯ ತುಂಬೆಲ್ಲಾ ಪುಟ್ಟ ಓಡಾಡುತ್ತ, ಪುಟ್ಟಿಯನ್ನು ಕಿಟ್ಟುವನ್ನು ತರುವುದು ಮನಸ್ಸಿಗೆ ಸಂತೋಷವನ್ನು ನೀಡುತ್ತದೆ. + +ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_225.txt b/Kenda Sampige/article_225.txt new file mode 100644 index 0000000000000000000000000000000000000000..f112dad86c7a171ac87e20523e40ad50e3738740 --- /dev/null +++ b/Kenda Sampige/article_225.txt @@ -0,0 +1,37 @@ +ಕನ್ನಡದಲ್ಲಿ ಸಣ್ಣಕಥೆಯ ಪರಂಪರೆಗೆ ನೂರು ವರ್ಷಗಳು ತುಂಬಿದೆ. ಹಿರಿಯ ಲೇಖಕರಾದ ದಿ. ಗಿರಡ್ಡಿಗೋವಿಂದರಾಜರವರು ತಮ್ಮ “ಸಾತತ್ಯ” (1992) ಪುಸ್ತಕದಲ್ಲಿ ‘ಕನ್ನಡ ಕಥಾಪರಂಪರೆ ಮತ್ತು ಮಾಸ್ತಿ’ ಎಂಬ ಅಧ್ಯಾಯದಲ್ಲಿ “1920ರಲ್ಲಿ ಪ್ರಕಟವಾದ ‘ಕೆಲವು ಸಣ್ಣ ಕತೆಗಳು’ ಎಂಬ ತಮ್ಮ ಮೊದಲ ಸಂಕಲನದ ಮೂಲಕ ಸಣ್ಣಕತೆಗಳಿಗೊಂದು ಗಟ್ಟಿ ತಳಪಾಯವನ್ನು ಒದಗಿಸಿ, ನಂತರದ ಕಥೆಗಳ ಮೂಲಕ ಅದನ್ನು ಭದ್ರಪಡಿಸುತ್ತ ಹೋದ ಶ್ರೇಯಸ್ಸು ಮಾಸ್ತಿಯವರಿಗೆ ಸಲ್ಲಬೇಕು. ಹೀಗೆ ಕನ್ನಡದಲ್ಲಿ ಹೊಸದಾಗಿ ಆರಂಭವಾದ ಸಣ್ಣಕತೆ ಪಶ್ಚಿಮದ ದೇಶಗಳಲ್ಲಿ ಆಗಲೇ ಸಿದ್ಧವಾಗಿದ್ದ ರೂಪದ ಪ್ರಭಾದಿಂದಾಗಿಯೇ ನಮ್ಮಲ್ಲಿ ಬಂದಿತೆಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಇಂದಿನ ಸಣ್ಣ ಕತೆ ನಮ್ಮ ಪ್ರಾಚೀನ ಕಥಾ ಪರಂಪರೆಯ ಸಹಜ ಬೆಳವಣಿಗೆಯ ಫಲವಲ್ಲ. ಪಶ್ಚಿಮದ ಆಧುನಿಕ ಸಣ್ಣಕತೆಯ ಸಂಪರ್ಕಕ್ಕೆ ನಾವು ಬಂದಿರದಿದ್ದರೆ ಈಗಿನ ರೂಪದ ಸಣ್ಣಕತೆ ನಮ್ಮಲ್ಲಿ ಹುಟ್ಟುತ್ತಿರಲಿಲ್ಲ ಎಂಬ ಅಂಶವನ್ನು ನಾವು ಮರೆಯಬಾರದು. ಆದರೆ ಪಶ್ಚಿಮದ ಸಣ್ಣಕತೆ ನಮ್ಮಲ್ಲಿಗೆ ಬಂದಾಗ ಅದು ಅಲ್ಲಿಯ ಪೂರ್ಣ ಅನುಕರಣೆಯಾಗಿ, ನಮ್ಮಲ್ಲಿ ಕತೆಗಳ ಒಂದು ಪರಂಪರೆಯೇ ಇರಲಿಲ್ಲವೆಂಬಂತೆ, ತೀರ ಹೊಸದಾಗಿಯೇ ಬರಲಿಲ್ಲವೆಂಬುದೂ ಕೂಡ ಅಷ್ಟೇ ಮುಖ್ಯವಾದ ಅಂಶವಾಗಿದೆ. ಹೊಸ ಸಾಹಿತ್ಯಪ್ರಕಾರವೊಂದನ್ನು ಆಮದು ಮಾಡಿಕೊಳ್ಳುವಾಗ ಅದರ ಕೆಲವೊಂದು ಗುಣಧರ್ಮಗಳನ್ನು ನಮ್ಮ ಕಥಾಪರಂಪರೆಯಲ್ಲಿ ಗುರುತಿಸುವ, ನಮ್ಮ ಕಥಾಪರಂಪರೆಗೆ ವಿಶಿಷ್ಟವಾದ ಕೆಲವು ಅಂಶಗಳನ್ನು ಹೊಸ ಕಥೆಯಲ್ಲಿ ಅಳವಡಿಸಿಕೊಳ್ಳುವ ಮಹತ್ವದ ಕೆಲಸವೂ ಆ ಕಾಲದಲ್ಲಿ ನಡೆಯಿತು. ಎಂದರೆ ಸಣ್ಣಕತೆಯ ಹೊಸ ಪ್ರಕಾರವನ್ನು ಭಾರತೀಯ ಕಥಾಪರಂಪರೆಯ ಮುಖ್ಯಪ್ರವಾಹಕ್ಕೆ ಜೋಡಿಸಿದ್ದು ಒಂದು ಮಹತ್ವದ ಬೆಳವಣಿಗೆಯಾಗಿತ್ತು. ಈ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದವರು ಮಾಸ್ತಿಯವರು” ಎಂದು ಪ್ರಸ್ತಾಪಿಸಿದ್ದಾರೆ. + +(ಎಂ.ಜಿ. ಶುಭಮಂಗಳ) + +ಈ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲು ಕಾರಣ ಈ ‘ಮೌನಸಾಕ್ಷಿ’ ಕಥಾಸಂಕಲನದ ಕಥೆಗಳು ಪೂರ್ವ ಮತ್ತು ಪಶ್ಚಿಮ ಸಂಸ್ಕೃತಿಯ ಪ್ರಭಾವದ ಸಂಗಮ. ಇಲ್ಲಿಯ ಕೆಲವು ಕಥೆಗಳು ಅಮೆರಿಕದ ನಗರಗಳಲ್ಲಿ ಜರುಗಿದರೆ, ಉಳಿದವು ನಮ್ಮ ತೆಲಂಗಾಣದ ಸೀಮೆಗಳಲ್ಲಿ ನಡೆಯುತ್ತವೆ. ಹಾಗಾಗಿ ಈ ಸಣ್ಣಕಥೆಗಳಲ್ಲಿ ಪಾಶ್ಚಿಮಾತ್ಯದ ಪ್ರಭಾವ ಇದೆ. ನಕ್ಷತ್ರಂ ವೇಣುಗೋಪಾಲ್ ಅವರ ‘ಮೌನಸಾಕ್ಷಿ’ ಸಂಕಲನದ ಹನ್ನೊಂದು ತೆಲುಗು ಕಥೆಗಳನ್ನು ಎಂ.ಜಿ. ಶುಭಮಂಗಳ ಅವರು ಕನ್ನಡಕ್ಕೆ ತಂದಿದ್ದಾರೆ. ಇಲ್ಲಿನ ಒಂದೊಂದು ಕಥೆಯೂ ಮೆಲ್ಲಮೆಲ್ಲನೆ ಮನಸನ್ನು ಆವರಿಸಿಕೊಳ್ಳುತ್ತಾ ಹೋಗುತ್ತದೆ. + +ಕನಸಿನ ರೆಕ್ಕೆಗಳನ್ನು ಹಚ್ಚಿಕೊಂಡು ಅಮೆರಿಕಕ್ಕೆ ಹಾರುವ ಭಾರತೀಯರು ಅಲ್ಲಿನ ಅಪರಿಚಿತ ಸಮಾಜವನ್ನು ಬೆರಗುಗಣ್ಣಿನಿಂದ ನೋಡುತ್ತಲೇ ತಾವು ಹೊಸ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಅನಿವಾರ್ಯವಾಗಿ ರೂಢಿಸಿಕೊಂಡಿರುವ ಆಡಂಬರ, ಒಣಪ್ರತಿಷ್ಠೆಗಳ ಜೀವನಶೈಲಿ ಹಾಗೂ ಅವರ ಮಾನಸಿಕ ತುಮುಲಗಳನ್ನು ಸೆರೆಹಿಡಿದಿರುವ ಕಥೆಗಾರರು, ಇತ್ತ ಭಾರತದ ತೆಲಂಗಾಣದಲ್ಲಿ ಕಂಡ ಸಾಮಾಜಿಕ ಬದುಕಿನ ಅನುಭವಗಳನ್ನು ಕಟ್ಟಿಕೊಟ್ಟಿದ್ದಾರೆ. ಅವುಗಳನ್ನು ನಮ್ಮ ನಾಡಿನ ಜನರ ಕಥೆಗಳೆಂಬಂತೆ ಶುಭಮಂಗಳರವರು ಕನ್ನಡೀಕರಿಸಿದ್ದಾರೆ. + +ಅಮೆರಿಕಾದ ಅನಿವಾಸಿ ಭಾರತೀಯರ ‘ನಾತಿಚರಾಮಿ’ ಕಥೆಯಲ್ಲಿ ಗಂಡನೊಂದಿಗೆ ಜೀವನ ಪಯಣದ ಹೊಸ ಕನಸು ಕಟ್ಟಿಕೊಂಡು ಅಮೆರಿಕಕ್ಕೆ ತೆರಳುವ ಮಧ್ಯಮವರ್ಗದ ನವವಿವಾಹಿತೆ ಕಥಾನಾಯಕಿ ಪಾವನಿ ತನ್ನ ಜೀವನದಲ್ಲಿ ಹಠಾತ್ತನೆ ಎದುರಾದ ಕ್ಲಿಷ್ಟ ಸನ್ನಿವೇಶದಲ್ಲಿ ಮೊದಲಿಗೆ ಕಂಗಾಲಾದರೂ ನಂತರ ಆತ್ಮಸ್ಥೈರ್ಯದಿಂದ ಸಮಸ್ಯೆಯನ್ನು ಮೆಟ್ಟಿನಿಲ್ಲುವ ರೀತಿ ಸಶಕ್ತವಾಗಿ ಮೂಡಿಬಂದಿದೆ. ವೈವಾಹಿಕ ಜೀವನದ ಆರಂಭದಲ್ಲಿ ನವಜೋಡಿಗಳು ಸುಮಧುರ ಕ್ಷಣಗಳನ್ನು ಸವಿಯುತ್ತ ಆನಂದದಲ್ಲಿ ತೇಲಾಡುತ್ತಾರೆ. ಇಂಥ ಸಮಯದಲ್ಲಿ ಪಾವನಿಗೆ ಗರ್ಭಧಾರಣೆ ಅಸಾಧ್ಯತೆಯ ಕಾರಣವಾಗಿ ಸುಖಸಂಸಾರದಲ್ಲಿ ಒಡಕು ಮೂಡುತ್ತದೆ. ಈ ಸಮಯದಲ್ಲಿ ಹೆಣ್ಣುಮಗಳೊಬ್ಬಳು ಅನುಭವಿಸುವ ಎಲ್ಲ ಮಾನಸಿಕ ಯಾತನೆ ಈಕೆ ಅನುಭವಿಸುತ್ತಾಳೆ. ರಮೇಶನಂಥ ಪಾತ್ರಗಳು ಎಲ್ಲೆಡೆ ಕಾಣುತ್ತಾರೆ. ಹೆಣ್ಣಿಗೆ ಹೆಣ್ಣು ಶತ್ರು ಎಂಬ ರೀತಿಯ ಅತ್ತೆ. ಮದುವೆಯಲ್ಲಿ “ಧರ್ಮೇಚ ಅರ್ಥೇಚ ಕಾಮೇಚ.. ನಾತಿಚರಾಮಿ” ಎಂದು ಪ್ರಮಾಣಿಸಿದ ಗಂಡನೇ ಎರಡನೆಯ ಮದುವೆಗೆ ಸಿದ್ಧನಾಗುತ್ತಾನೆ. ಎಲ್ಲ ಕ್ಷೇತ್ರದಲ್ಲಿ ಮುಂದುವರೆದ ಅಮೆರಿಕದಲ್ಲಿದ್ದರೂ ಮಾನಸಿಕವಾಗಿ ಬೆಳೆಯದ ಗಂಡ. ಆದರೆ ಕಥೆಯ ಅಂತ್ಯ ಆಶಾದಾಯಕ. ಪಾವನಿಯ ದೃಢಸಂಕಲ್ಪ ಮತ್ತು ತನ್ನಂತೆ ಇನ್ನೊಂದು ಹೆಣ್ಣು ಬಲಿಯಾಗದಂತೆ ತೆಗೆದುಕೊಳ್ಳುವ ನಿರ್ಧಾರದಿಂದ ಇಂದಿನ ಕಾಲಘಟ್ಟದಲ್ಲಿ ಅಬಲೆಯ ಸಬಲೀಕರಣಕ್ಕೆ ಇಂಬು ನೀಡುವ ಕಥೆ ‘ನಾತಿಚರಾಮಿ’. ಈ ಕಥೆಯ ನಾಯಕಿ ತೆಗೆದುಕೊಳ್ಳುವ ನಿರ್ಧಾರ ಇತ್ತೀಚೆಗೆ ಅಮೆರಿಕದ ಪ್ರಖ್ಯಾತ ನಟಿ ಅಂಜೆಲಿನಾ ಜೋಲಿಯ ಹೇಳಿಕೆ, “When men earn more money they need more women. But when women earn more money they need No Men” ನೆನಪಿಗೆ ಬರುತ್ತದೆ. + +ಅದೇ ರೀತಿ ಅಮೆರಿಕದ ಆಧುನಿಕ ಸಮಾಜದಲ್ಲಿ ನವದಂಪತಿಗಳ ಕೆಲಸದ ಒತ್ತಡ, ಮನೆ, ಕಾರುಗಳ ಮೇಲಿನ ಸಾಲ, ಅದನ್ನು ತೀರಿಸಲು ಅನಿವಾರ್ಯವಾಗಿ ದುಡಿಯಲೇಬೇಕಾದ ಪರಿಸ್ಥಿತಿ. ಅದಕ್ಕೆ ಹುಟ್ಟಲಿರುವ ಮಗುವನ್ನು ಭಾರತದಲ್ಲಿರುವ ಅಜ್ಜಿ ತಾತನ ಹತ್ತಿರ ಬಿಡುವ ಯೋಚನೆ. ಅಪ್ಪ ಅಮ್ಮ ಇದ್ದರೂ ಸಹ ಬರೀ ಗೊಂಬೆಗಳೊಂದಿಗೆ ಆಟವಾಡಿಕೊಳ್ಳುವ ಮಗು. ಈ ಚಿತ್ರಣ ನಿಜವಾಗಿಯೂ ಮನಕಲಕುತ್ತದೆ. ಸ್ವಯಂ ಅರಿವೇ ಇದಕ್ಕೆ ಪರಿಹಾರ. ಇದು ‘ವಾತ್ಸಲ್ಯ’ ಕಥೆಯಲ್ಲಿದೆ. + +ಅಮೆರಿಕದಲ್ಲಿ ಅಪ್ಪ ಅಮ್ಮನ ಪೊಳ್ಳು ಪ್ರತಿಷ್ಠೆಗಾಗಿ ಮತ್ತು ಭವಿಷ್ಯದ ಭ್ರಮೆಗಳ ಬೆನ್ನೇರಿ ಮಕ್ಕಳನ್ನು ಬಾಲ್ಯದ ಸಹಜ ಆಟೋಟಗಳಿಗೆ, ಹವ್ಯಾಸಗಳಿಗೆ ಬಿಡದೆ ಸದಾ ರ್ಯಾಂಕ್, ಕ್ರೆಡಿಟ್ ಅಂತ ಮಕ್ಕಳ ಮೇಲೆ ಹೇರುವ ಒತ್ತಡ ಮತ್ತು ಅದರಿಂದಾಗುವ ಮಕ್ಕಳ ಮೇಲಿನ ಮಾನಸಿಕ ಏರುಪೇರುಗಳು, ಅದರ ಪರಿಣಾಮಗಳನ್ನು ತಿಳಿಸುವ ಕಥೆ ‘ವೇಕ್ ಅಪ್’. ಕಥೆಯನ್ನು ಓದಿದ ನಂತರ ಶೀರ್ಷಿಕೆ ‘ವೇಕ್ ಅಪ್’ ನಮ್ಮನ್ನು ‘ಎಚ್ಚೆತ್ತುಕೊಳ್ಳಿ’ ಎನ್ನುತ್ತದೆ. + + + +ಡಿ.ವಿ.ಜಿ ರವರ “ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವುದೇ ಜೀವನ” ಎನ್ನುವ ಹಾಗೆ, ಅಮೆರಿಕದಲ್ಲಿ ಸಕಲಸೌಕರ್ಯಗಳನ್ನು ಹೊಂದಿದ್ದರೂ ಅಲ್ಲಿ ಸಿಗದಿರುವ ನೆಮ್ಮದಿಯ ಬದುಕನ್ನು ಹುಡುಕುವ ಕಥೆ ‘ಆಂತರ್ಯ’. ಅಮೆರಿಕದಲ್ಲಿರುವ ಕಥಾನಾಯಕ ಮೋಹನ ತನ್ನ ಬಾಲ್ಯ ಸ್ನೇಹಿತ ರಾಜು ತೆಲಂಗಾಣದಲ್ಲಿಯೇ ರೈತನಾಗಿ ಉಳಿದು, ತನ್ನ ಮಕ್ಕಳನ್ನು ಚೆನ್ನಾಗಿ ಓದಿಸಿ ನೆಮ್ಮದಿಯ ಬದುಕನ್ನು ಕಂಡುಕೊಂಡಿರುವುದನ್ನು ಕೇಳಿ ತಾನು ಸಹ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗುವುದು ಹಣ, ಕೀರ್ತಿ, ಪ್ರತಿಷ್ಠೆಗಳನ್ನು ಮೀರಿದ ನೆಮ್ಮದಿ ಅರಸುವ ದರ್ಶನವನ್ನು ನೀಡುತ್ತದೆ. ರಾಜು ರೈತನಾಗಿಯೇ ಉಳಿಯಲು ಉತ್ತೇಜನಗೊಳ್ಳುವ ಸಂದರ್ಭದಲ್ಲಿ ಡಾ. ರಾಜ್‍ಕುಮಾರ್ ರವರ ಬಂಗಾರದ ಮನುಷ್ಯ ಚಿತ್ರದ ‘ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ’ ಹಾಡನ್ನು ಬಳಸುವ ಮೂಲಕ ಶುಭಮಂಗಳರವರು ಅನುವಾದದಲ್ಲಿ ಭಾಷೆಯನ್ನು ಎಷ್ಟು ಆಪ್ತವಾಗಿ ಬಳಸಿಕೊಳ್ಳುತ್ತಾರೆ ಎಂಬುದು ಅರ್ಥವಾಗುತ್ತದೆ. + +‘ರೈಲ್ವೆ ಸತ್ಯಂ’ ಕಥೆಯಲ್ಲಿ ಪ್ರಾಮಾಣಿಕ ಕಾರ್ಮಿಕನ ದುಡಿಮೆ, ಆ ದುಡಿಮೆಗೆ ದೊರಕುವ ಪ್ರಶಸ್ತಿಗಳೆಲ್ಲ ಅಧಿಕಾರಿಗಳ ದರ್ಪ(ಈಗೋ) ದಲ್ಲಿ ಬೆಲೆ ಕಳೆದುಕೊಂಡು ನೀರಿನಲ್ಲಿ ಹೋಮವಾಗುವ, ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ, ಏಳಿಗೆಗೆ ಅಪ್ಪ ಮಾಡುವ ತ್ಯಾಗದ ಮನಕಲಕುವ ಚಿತ್ರಣವಿದೆ. ಈ ತ್ಯಾಗಕ್ಕೆ ಸಾಕ್ಷಿಯಾಗುವ ಕಥಾನಿರೂಪಕ ಕೃಷ್ಣ ಆಡುವ, “ಹೆತ್ತು ಬೆಳೆಸಿದ ತಂದೆ ತಾಯಿಯರನ್ನು ವೃದ್ಧಾಶ್ರಮಗಳಿಗೆ ದೂಡುತ್ತಾ, ಪ್ರಾಣ ಹೋದ ತಂದೆತಾಯಿಯರ ಶವಗಳನ್ನು ನೋಡಲು ಮಾತ್ರ ಬರುತ್ತಿರುವ ಮಕ್ಕಳಿರುವ ಈ ಸಮಾಜದಲ್ಲಿ ಇಂತಹ ತ್ಯಾಗವನ್ನು ಹೇಗೆ ಅರ್ಥೈಸುವುದು? ಹೆತ್ತವರಿಗೆ ಅವರ ಮಕ್ಕಳ ಮೇಲಿನ ಪ್ರೀತಿಯ ಮುಂದೆ, ಪ್ರಪಂಚದಲ್ಲಿ ಎಲ್ಲವೂ ತೃಣವೇ, ಕೊನೆಗೆ ತಮ್ಮ ಪ್ರಾಣವನ್ನೂ ಲೆಕ್ಕಮಾಡುವುದಿಲ್ಲ ಎನ್ನುವುದಕ್ಕೆ ನಗ್ನಸತ್ಯ ಈ ಸತ್ಯಂ ತ್ಯಾಗ” ಎನ್ನುವ ಮಾತು ಮಾರ್ಮಿಕವಾಗಿ ನಮ್ಮಲ್ಲಿ ಮಾರ್ದನಿಸುತ್ತದೆ. + +ಸಂಕಲನದ ಶೀರ್ಷಿಕೆ ‘ಮೌನಸಾಕ್ಷಿ’ ಕಥೆಯಲ್ಲಿ ಸಮಾಜದಲ್ಲಿ ಕೆಳಸ್ತರದ, ಅಸ್ಪøಶ್ಯರ, ಕೂಲಿಕಾರ್ಮಿಕರ, ಬಡವರ, ಭಿಕ್ಷುಕರ ಜೀವಕ್ಕೆ ಬೆಲೆಯಿಲ್ಲದಿರುವುದು ಅಭಿವ್ಯಕ್ತವಾಗಿದೆ. ‘ಸೂರಿಲ್ಲದ, ಹೊತ್ತಿನ ಕೂಳಿಲ್ಲದವರ ಮೇಲೆ ಕನಿಕರ ತೋರದ ಒರಟು ಲೋಕದಲ್ಲಿ ರೈಲು ಓಡುತ್ತಿದೆ ಅದರೊಂದಿಗೆ ಮನುಷ್ಯರೂ’ ಎನ್ನುವ ಮಾತುಗಳು ಅಸಮಾನತೆ, ಅನ್ಯಾಯಗಳನ್ನು ನೋಡಿಯೂ ಮೂಕಪ್ರೇಕ್ಷಕರಾಗಿರುವ ನಮ್ಮ ಕ್ರೂರ ಮನಸ್ಥಿತಿಗೆ ಹಿಡಿಯುವ ಕನ್ನಡಿಯಾಗಿದೆ. + +1992ರ ಡಿಸೆಂಬರ್ ನಲ್ಲಿ ನಡೆದ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಕೆಡವಿದ ಹಿನ್ನೆಲೆಯ ಕೋಮುಗಲಭೆಯ ಸಂದರ್ಭದಲ್ಲಿ ನಡೆಯುವ ಕಥೆ ‘ಮೃಗಗಳ ನಡುವೆ’. ಕಥಾನಾಯಕಿ ಕಾಂತಮ್ಮ. ಪಕ್ಷವಾತವಾಗಿ ಹಾಸಿಗೆ ಹಿಡಿದ ಗಂಡ, ಹೆಂಡತಿಯ ಮಾತಿಗೆ ಹೆದರಿ ಅಪ್ಪನನ್ನು ನೋಡಲು ಬಾರದ ಮಗ. ಅನ್ನ ನೀಡಿದ ಅನ್ಯಧರ್ಮೀಯರ ಮನೆಯಲ್ಲಿ ಕೆಲಸಮಾಡಿದ್ದಕ್ಕೆ ಧರ್ಮಭ್ರಷ್ಟತೆಯ ಕಾರಣವಾಗಿ ಸ್ವಜಾತಿಯವರಿಂದ ಅವಳಿಗೆ ಬಹಿಷ್ಕಾರ. “ಅಗತ್ಯ ಇದ್ದಾಗ ಒಂದಿಷ್ಟು ಕೂಳು ನೀರು ಕೊಡದವ್ರು, ಅವರ ಧರ್ಮ! ನಂಗ್ಯಾಕೆ? ಅಷ್ಟಕ್ಕೂ ಯಾವ ಜಾತಿ, ಧರ್ಮ ಯಾಕೆ ಸಾಮಿ? ಕಷ್ಟ ಬಂದಾಗ ಆ ಜಾತಿ ದ್ಯಾವ್ರನ್ನ ‘ದ್ಯಾವ್ರೇ ನೀನೇ ರಕ್ಷಿಸಬೇಕು’ ಅಂತ ಕೈ ಮುಗಿಯೋಕೆ ಅಲ್ವಾ? ಚೆನ್ನಾಗಿರೋವಾಗ ಎಷ್ಟು ಜನಕ್ಕೆ ದ್ವಾವ್ರು ಗ್ಯಾಪ್ನ ಬರ್ತಾನೆ? ನನಗೆ ದ್ಯಾವ್ರಂತೋರು ಅನ್ನ ಕೊಟ್ಟ ನೀವೇ ಇದ್ದೀರಲ್ವಾ! ಇನ್ನು ಬ್ಯಾರೆ ದ್ಯಾವ್ರು ಯಾಕೆ?” ಎನ್ನುವ ಸಮಾಜವನ್ನೇ ಪ್ರಶ್ನಿಸುವಂತ ಕಾಂತಮ್ಮನ ಮಾತು ಜೀವನ ತತ್ವದಂತೆ ಭಾಸವಾಗುತ್ತದೆ. ಅದಲ್ಲದೆ ಕೋಮುಗಲಭೆಯ ಸಂದರ್ಭದಲ್ಲಿ ಕಾಂತಮ್ಮನಿಗೆ ಕತ್ತಿ ತಿವಿಯುವ ಮುನ್ನ ಬಾಡಿಗೆ ಹಂತಕರು ಆಡುವ ‘ತೋ ಕ್ಯಾ.. ಓ ಔರತ್ ಹುಯೇ ತೋ ಕ್ಯಾ? ಹಿಂದು ಹುಯೇ ತೋ ಕ್ಯಾ? ಮುಸಲ್ಮಾನ್ ಹುಯೇ ತೋ ಕ್ಯಾ? ಹಮ್ ಕು ತೋ ಕೌಂಟ್ ಹೋನಾ ಪೈಸಾ ಹೋನಾ’ ಎನ್ನುವ ಮಾತು ಕೋಮುಗಲಭೆಗಳ ಹಿಂದಿರುವ ಶಕ್ತಿಗಳ ಬಗ್ಗೆ ಅನುಮಾನ ಮೂಡಿಸುವುದಲ್ಲದೆ ಅದರ ಹಿಂದಿರುವ ರಾಜಕೀಯ ಕ್ರೌರ್ಯಗಳನ್ನು ಅನಾವರಣಗೊಳಿಸಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಬೇರೊಬ್ಬರ ಸ್ವಾರ್ಥಸಾಧನೆಗೆ ಅಮಾಯಕರು ಈ ದಾರುಣ ಮಾರಣ ಹೋಮಕ್ಕೆ ಸಮಿತ್ತುಗಳಾಗದೆ ತಪ್ಪುವುದಿಲ್ಲವೇ? ಈ ರಾಜಕೀಯ ಘೋರಗಳಿಗೆ ಅಂತ್ಯವಿಲ್ಲವೇ ಎಂದು ಗಂಭೀರವಾಗಿ ಯೋಚಿಸುವ ಕಥಾನಾಯಕನ ಸ್ಥಿತಿ ನಮ್ಮದಾಗುತ್ತದೆ. + +ನಮ್ಮ ಪ್ರಜಾಪ್ರಭುತ್ವದಲ್ಲಿ ಸ್ವಸ್ಥ್ಯ ಸಮಾಜವನ್ನು, ಸಮಾನತೆಯನ್ನು ಎತ್ತಿಹಿಡಿಯುವ ಬದಲು ಸಾಮಾಜಿಕ ಹೋರಾಟಗಾರರನ್ನು ಹತ್ತಿಕ್ಕುವ ಕಥೆ ಪರ್ಯವಸಾನ. ಭೂಹೋರಾಟಗಾರ, ಸಮಾಜಸುಧಾರಕ, ಅನ್ಯಾಯದ ವಿರುದ್ಧ ಹೋರಾಡುವವರಿಗೆ ಅಜ್ಞಾತ ಆತಂಕವಾದಿ ಪಟ್ಟಿಕಟ್ಟಿ ಎನ್ ಕೌಂಟರ್ ನೆಪದಲ್ಲಿ ಬಲಿಪಡೆಯುವ ಮಾಫಿಯಾಗಳ ಕೃಪಾಪೋಷಿನ ಸರ್ಕಾರ. ಅದಕ್ಕೆ ಪೂರಕವಾದ ಪೊಲೀಸರ ದೌರ್ಜನ್ಯ. ಇದನ್ನು ಕಂಡು ಸಾಕ್ಷ್ಯನುಡಿದ ಶಿಕ್ಷಕಿಯನ್ನು ಸಹ ಸದೆಬಡಿಯಲು ಅಧಿಕಾರದ ದುರುಪಯೋಗವನ್ನು ಬಳಸಿ ಅಮಾನವೀಯವಾಗಿ ನಡೆಸಿಕೊಳ್ಳುವುದನ್ನು ನೋಡಿ ‘ರಕ್ಷಕರಾಗಿರಬೇಕಾದ ಪೊಲೀಸ್ ವ್ಯವಸ್ಥೆ ಮತ್ತು ಸರ್ಕಾರ’ದ ಮೇಲಿನ ನಂಬಿಕೆ ಹುಸಿಯಾಗುತ್ತದೆ. + +(ರೂಪದರ್ಶಿ ಜಿ. ವೆಂಕಟೇಶ್‌) + +ಒಂದು ಸರ್ಕಾರ ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ಅದಕ್ಕೆ ಸರಿಯಾದ ಪ್ರತಿಪಕ್ಷವಿರಬೇಕು. ಅದರ ಜೊತೆಗೆ ಇತರ ಸಂಘಟನೆಗಳು ಮುಖ್ಯ. ಭಾರತೀಯ ಸಂದರ್ಭದಲ್ಲಿ ಮಾಕ್ರ್ಸ್ ಮತ್ತು ಮಾವೋ ಪ್ರೇರಿತ ಕ್ರಾಂತಿಕಾರಿ ಸಂಘಟನೆಗಳು ಮುಖ್ಯವಾಗಿವೆ. ಇಂಥ ಒಂದು ಕ್ರಾಂತಿಕಾರಿ ಸಂಘಟನೆಯ ಒಳತೋಟಿಯ ಕಥೆ ಅಶ್ರುಬಿಂದು. ‘ಶತೃ’ ಎಂದರೆ ಪೊಲೀಸ್ ಅಥವಾ ತಮ್ಮದೇ ಇತರ ಬಣಗಳ ವಿರುದ್ಧ ಹೋರಾಡಲು ಸಂಘಕಟ್ಟುವ ಸಲುವಾಗಿ ಕಥಾನಾಯಕ ಪ್ರಕಾಶ್ ತನ್ನ ಐವತ್ತು ವರ್ಷಗಳ ಅನುಭವದಲ್ಲಿ ನಾನಾ ಪರಿಪಾಡಲು ಪಟ್ಟು ಕಾಡಿ ಬೇಡಿ ಸಂಗ್ರಹಿಸಿದ ಸಂಪನ್ಮೂಲಗಳನ್ನು ಸಂಘದ ಯುವ ಸದಸ್ಯರು ದುರುಪಯೋಗ ಪಡಿಸಿಕೊಳ್ಳುವುದು, ಸಂಘದ ಆಶಯ, ಧ್ಯೇಯ ಕಣ್ಣಮುಂದೆಯೇ ಮಣ್ಣುಪಾಲಾಗುತ್ತಿರುವುದು ಕಂಡು ಮರಗುವ ಕಥೆ, ವ್ಯಥೆ ಅಶ್ರುಬಿಂದು. ಇಲ್ಲಿ ‘ಶತೃ’ವಿಗೆ ಹೊಸ ವ್ಯಾಖ್ಯಾನ ಸಿಗುತ್ತದೆ. ಕೊನೆಯಲ್ಲಿ “ಇಪ್ಪತ್ತು ವರ್ಷಗಳಿಗಿಂತಲೂ ಹೆಚ್ಚಾಗಿ ಸಾಕಿಸಲಹಿದ ಹೆತ್ತವರನ್ನು ಬಿಟ್ಟಾಗ ಬಾರದ, ಬುಲೆಟ್ ಗಾಯಗಳಿಂದ ಬಿದ್ದಾಗ ಬಾರದ, ದಳದಲ್ಲಿ ನನ್ನ ತಂದೆ, ತಾಯಿ, ಗುರು ಎಲ್ಲವೂ ತಾನಾಗಿ ಕ್ರಾಂತಿಗೆ ಅರ್ಥಹೇಳಿದ ನಾಯಕ ಹೋದಾಗಲೂ ಬಾರದ ಅಶ್ರುಬಿಂದು, ಈಗ ತಂತಾನೆ ತುಂಬಿ ಬರುತ್ತಿದೆ ಅದಕ್ಕೆ ಮಾತ್ರ ತಿಳಿದಂತೆ ನನ್ನ ಆತ್ಮಘೋಷ!” ಎನ್ನುವ ಮಾತು ಕ್ರಾಂತಿಕಾರಿ ಸಂಘಟನೆಗಳ ಈ ಪರಿಸ್ಥಿತಿಯನ್ನು ತಿಳಿಸುತ್ತದೆ. + +ಒಟ್ಟಾರೆ, ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರ ಕಥೆಗಳಲ್ಲಿ ಮಾನಸಿಕ ತುಮುಲಗಳ ಅನಾವರಣ ಮಾಡುತ್ತಲೇ ಸುಖಾಂತ್ಯ ಕಾಣಿಸುವ ಕಥೆಗಾರರು, ನಮ್ಮ ದೇಶದಲ್ಲಿ ನಡೆಯುವ ಪ್ರಾದೇಶಿಕ ಕಥೆಗಳಲ್ಲಿ ಸಾಮಾಜಿಕ ಕ್ರೌರ್ಯವನ್ನು ಚಿತ್ರಿಸಿ ದುರಂತಗಳನ್ನು ಕಾಣಿಸುತ್ತಾರೆ. ಇದು ವಾಸ್ತವಕ್ಕೆ ಹಿಡಿದ ಕನ್ನಡಿಯಾದರೂ, ಅರಗಿಸಿಕೊಳ್ಳುವುದು ಕಷ್ಟವೇ ಆಗಿದೆ. + + + +ಕನ್ನಡದ ಗಜಲ್ ಕವಯಿತ್ರಿ ಮುಕ್ತಾಯಕ್ಕರವರು, “ಸಾಹಿತ್ಯದ ಯಾವುದೇ ಪ್ರಕಾರದಲ್ಲಿ ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅನುವಾದಗೊಳ್ಳಬೇಕಾದರೆ ಅನುವಾದಕರಿಗೆ ಎರಡೂ ಭಾಷೆಯ ಪ್ರೌಢಿಮೆ, ಪಾಂಡಿತ್ಯವಿರಬೇಕು. ಹಾಗಾದರೆ ಮಾತ್ರ ಅನುವಾದವು ಮೂಲಕ್ಕೆ ನ್ಯಾಯೊದಗಿಸುತ್ತವೆ” ಎನ್ನುತ್ತಾರೆ. ಅದಕ್ಕೆ ಪೂರಕವೆಂಬಂತೆ ಶುಭಮಂಗಳರವರು ಬಳಸಿರುವ ಶಬ್ದಭಂಡಾರ, ಆಡುಭಾಷೆ, ನಿರೂಪಣಾ ಶೈಲಿಯಿಂದ ಅನುವಾದದ ಕಥೆ ಎಂಬ ಕುರುಹೇ ಇಲ್ಲದೆ ಕಥೆಗಳು ಸಾರ್ವತ್ರಿಕವಾಗಿ ತಟ್ಟುತ್ತವೆ. ಇಲ್ಲಿ ಬಳಸಿರುವ ಭಾಷೆ, ಉಪಮೆಗಳು ಕಥೆಗಳ ಹೂರಣಕ್ಕೆ ಗಾಢತೆಯನ್ನು ನೀಡಿ ಅದರ ಪರಿಣಾಮವನ್ನು ಹೆಚ್ಚಿಸುತ್ತದೆ. ಮುಖ್ಯವಾಗಿ ಎಲ್ಲಾ ಕಥೆಗಳು ಮಾನವೀಯ ಮೌಲ್ಯಗಳಿಗೆ ಹಿಡಿದ ಕನ್ನಡಿಯಾಗಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_226.txt b/Kenda Sampige/article_226.txt new file mode 100644 index 0000000000000000000000000000000000000000..dcea5282609812c058e4b7d23b56e6d543447eee --- /dev/null +++ b/Kenda Sampige/article_226.txt @@ -0,0 +1,123 @@ +ಅಶೋಕ ಹೊಸಮನಿಯವರ ಕವಿತೆಗಳನ್ನು ಓದುತ್ತ ಹೋದಂತೆ ಅಂತರಂಗದ ಸುರಂಗದೊಳಗೆ ಒಂದು ಒಳಪಯಣ ಮಾಡಿ ಬಂದ ಅನುಭವವಾಯಿತು. ಜಗದ ನೋವಿನ ಮರ್ಮರಗಳನ್ನೆಲ್ಲ ಆಲಿಸುವ ಪುಟಾಣಿ ಹೃದಯವೊಂದರ ಪಿಸುಮಾತುಗಳಂತೆ ಇವು ಕೇಳುತ್ತ ಹೋದವು. ಕವಿಯಾದವ ಬರಿಯ ಶಬ್ದಗಳ ಶಿಲ್ಪಿಯಲ್ಲ, ಅಭಿಪ್ರಾಯಗಳನ್ನು ರೂಪಿಸುವ ರಾಜಕಾರಣಿಯೂ ಅಲ್ಲ. ಇತಿಹಾಸದ ಕ್ರೌರ್ಯಗಳ ಬರಿ ವರದಿಗಾರನಲ್ಲ. ಶಬ್ದ ಜಗತ್ತಿಗೆ ಕಾರುಣ್ಯವನ್ನು ಲೇಪಿಸುವ ತಾಯಿಯಂಥವನು ಅವನು. ತನ್ನೊಳಗೆ ಮಡುಗಟ್ಟಿದ್ದನ್ನು ಹರಿಯಗೊಡುವಾಗಲಾಗಲೀ, ತನ್ನ ಹೊರಗೆ ಮುಗಿಲೆತ್ತರ ನಿಂತ ದುಗುಡಗಳ ಬೆಟ್ಟವನ್ನು ಏರಿಳಿಯುವಾಗಲಾಗಲೀ ಅವನು ತನ್ನನ್ನೇ ತೆತ್ತುಕೊಳ್ಳುತ್ತಾನೆ. ಒಳಗಿನ ಕಂಪನದಿಂದಲೇ ಕವಿಯ ಶಬ್ದಗಳು ಧ್ವನಿಸುತ್ತವೆ. ಪದಗಳು ಅವನ ಬೆವರಿನಲ್ಲಿ ಒದ್ದೆಯಾಗುತ್ತವೆ. ಕಣ್ಣೀರಿನಲ್ಲಿ ಮಂಜಾಗುತ್ತಿರುತ್ತವೆ. ಅಂಥ ಸೂಕ್ಷ್ಮ ಭಾವ ಜಗತ್ತಿನ ಪ್ರತಿನಿಧಿ ಈ ಅಶೋಕ ಹೊಸಮನಿ. ಕಾವ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಯುವಕವಿ. + +(ಅಶೋಕ ಹೊಸಮನಿ) + +ಅಂತಃಸತ್ವವನ್ನು ಧಾರೆಯೆರೆಯದೇ ಒಣಮಾತುಗಳಲ್ಲಿ ಕಾವ್ಯವನ್ನು ಕಟ್ಟಲಾಗದು. ಲೋಕದ ಸಂಗತಿಗಳೆಲ್ಲ ನಮ್ಮನ್ನು ತೀವ್ರವಾಗಿ ಕದಲಿಸುತ್ತಾ ನಮ್ಮದೇ ಸಂವೇದನೆಯಲ್ಲಿ ಮರುಹುಟ್ಟು ಪಡೆಯಲು ಕಾವ್ಯ ಒಂದು ದಾರಿ. ಕಾವ್ಯವು ಕಾಲುದಾರಿಯ ಪಯಣ. ಅದು ಅಣುವಿನೊಳಗೆ ಮಹತ್ತನ್ನು ಕಾಣಿಸಬಲ್ಲ ಪ್ರಾತಿಭಶಕ್ತಿ. ಆದ್ದರಿಂದಲೇ ಸುತ್ತಲಿನ ಸಣ್ಣ ಸಣ್ಣ ಸಂಗತಿಗಳೂ ಕಾವ್ಯಕ್ಕೆ ಮುಖ್ಯವೆನಿಸುತ್ತವೆ. ಎಲ್ಲವನ್ನೂ ತೀವ್ರವಾಗಿ ಪರಿಭಾವಿಸುವ ಕ್ರಮದಿಂದಾಗಿ ಕಾವ್ಯಭಾಷೆಯು ಉಜ್ವಲವಾಗಿ ತೋರುತ್ತದೆ. ಹೆದ್ದಾರಿಯಲ್ಲಿ ಸಾಗುವಾಗ ಕಾಣದ ಸೂಕ್ಷ್ಮಸಂಗತಿಗಳನ್ನು ಕಾಣಲು ಕಾವ್ಯದ ಕಾಲುದಾರಿಯನ್ನು ನಿರ್ಮಿಸಿಕೊಳ್ಳಬೇಕಾಗಿರುವುದು ಈ ಕಾಲದ ತುರ್ತು ಕೂಡ ಹೌದು. ಬದುಕನ್ನು ಬೀಸುಹೇಳಿಕೆಗಳಲ್ಲಿ ಹಿಡಿದಿಡಲು ಸಾಧ್ಯವಿಲ್ಲ. ಅನುಭವಗಳ ನಿಕಷದಲ್ಲಿ ಮರಮರಳಿ ಬದುಕು ಅರಳಬೇಕಾಗುತ್ತದೆ. ತನ್ನ ಅನುಭವಗಳ ನಿಜವನ್ನು ತಾನೇ ಶೋಧಿಸಿಕೊಳ್ಳುವ ಪ್ರಕ್ರಿಯೆ ಇಲ್ಲಿ ಜರುಗುತ್ತದೆ. ಜೀವವೊಂದು ಅನುಭವಗಳನ್ನು ಅಂತಃಕರಣದಲ್ಲಿ ಸೋಸಿ ಲೋಕಕ್ಕೆ ನೀಡುವ ಜೀವಕಾರುಣ್ಯವು ಕಾವ್ಯ. ಇಂದು ಭಯ ಶಂಕೆ ಮನಸ್ತಾಪಗಳನ್ನೇ ಹುಟ್ಟಿಸುತ್ತಿರುವ ಮಾತುಗಳ ಜಗತ್ತಿನಲ್ಲಿ ನಾವು ಜೀವದ ಮಾತುಗಳನ್ನಾಡಲು ಒಂದು ಸ್ಪೇಸ್ ಬೇಕು. ಅದು ಕಾವ್ಯದ ಸ್ಪೇಸ್ ಕೂಡ ಹೌದು. + +ಅರಳಿತೊ ಎನ್ನಾತ್ಮದ ರೊಟ್ಟಿಹದವಾದ ಈ ಉರಿಯೊಳುಕಾಲಗರ್ಭದ ಹಿಡಿ ಹಿಟ್ಟ ತಟ್ಟಿ ತಟ್ಟಿಒಳ ಹೊರ ಹಸನಾಯಿತೊ + +ಇಂಥ ರಚನೆಗಳಲ್ಲಿ ಅಶೋಕರ ಕಾವ್ಯದ ಕಸುವು ಕಾಣಿಸುತ್ತದೆ. ದಿನದಿನದ ರೊಟ್ಟಿಗಾಗಿ ದುಡಿವ ಜೀವಗಳ ಶ್ರಮವನ್ನೂ ಬೆವರನ್ನೂ ಬಲ್ಲ ಈ ಕವಿತೆ ರೊಟ್ಟಿಯನ್ನು ಆತ್ಮವಿಕಾಸದ ಆಧ್ಯಾತ್ಮಿಕ ಹಂಬಲವಾಗಿಯೂ ಕಾಣಬಲ್ಲದು. ತತ್ವಪದಕಾರರ ಶ್ರಮಮೂಲದ ಸಮಾಜೋ ಆಧ್ಯಾತ್ಮದ ಮುಂದುವರಿಕೆಯಂತೆ ಸಂಕಲನದ ಅನೇಕ ಕವಿತೆಗಳಿವೆ. ಉತ್ತರಕರ್ನಾಟಕದ ಬಿರುಬಿಸಿಲು, ಬಡತನದ ಬವಣೆ, ಸಾಧಕರ ತತ್ವಪದಗಳ ಅಂತರ್ ದೃಷ್ಟಿ, ಸೂಫಿ ಪ್ರೇಮತತ್ವದ ಝಲಕು, ಪರಂಪರೆಯ ಈ ಎಲ್ಲ ಸತ್ವಗಳನ್ನು ಹೀರಿಕೊಂಡು ಅವರು ಬರೆಯುತ್ತಾರೆ. ಈ ಹೀರಿಕೊಳ್ಳುವಿಕೆಯ ನೈಜಶಕ್ತಿಯಿಂದಲೇ ಕಾವ್ಯ ಕಸುವುಗೊಳ್ಳುತ್ತದೆ ಹಾಗೂ ಹಸಿಯಾಗಿರುತ್ತದೆ. ಬೌದ್ಧಿಕ ವಜ್ಜೆಯಿಲ್ಲದೇ ಅಶೋಕ ಅವರು ಇದನ್ನು ‘ಆನು ಒಲಿದಂತೆ ಹಾಡುವೆ’ ಎಂಬ ಆತ್ಮವಿಶ್ವಾಸದಲ್ಲಿ ಸೃಷ್ಟಿಸುತ್ತಾರೆ. + +ಈ ಲೋಕದ ಜೊಳ್ಳೊಧರಿಸಿದೆ ರೊಟ್ಟಿಯ ಮೊಗನಾಮಫಲಕಗಳೇ ಝಗಮಗ + +ಹೊರಗಿನ ಮಾತುಗಳಿಗಿಂತ ಒಳಗಿನ ಅರಳುವಿಕೆ ಈ ಕವಿಗೆ ಮಹತ್ವದದ್ದೆನಿಸಿದೆ. ಆತ್ಮದ ಅರಳುವಿಕೆಯಲ್ಲಿ ಹಿಗ್ಗುತ್ತಿರುವ ವಿಕಾಸ ಭಾವವೊಂದು ಹೊರಲೋಕದ ಸುಳ್ಳುಸುಳ್ಳೇ ಚಹರೆಗಳನ್ನು ನೋಡಿ ವಿಹ್ವಲಗೊಳ್ಳುತ್ತದೆ. ಇಂದು ಜೊಳ್ಳುಗಳೇ ವಿಜೃಂಭಿಸುತ್ತಿರುವ ಕಾಲ. ವಿಚಾರ, ದರ್ಶನ, ಭಾವ ಬದುಕು ಎಲ್ಲವೂ ಜೊಳ್ಳು ಮಾದರಿಗಳ ಹಿಂದೆಬಿದ್ದಿದೆ. ಸ್ವರೂಪ ಮರೆಯಾಗಿ ನಾಮಫಲಕಗಳೇ ವಿಜೃಂಭಿಸುವುದು ನಮ್ಮ ಬದುಕಿನ ಅಂತಃಸತ್ವವೇ ತೀರಿಹೋಗಿರುವ ವ್ಯಂಗ್ಯವನ್ನು ಸೂಚಿಸುತ್ತದೆ. ಇಂಥ ಚಿತ್ರಗಳ ಮೂಲಕ ತಮ್ಮ ಹುಡುಕಾಟದ ನೆಲೆ ಏನೆಂಬುದನ್ನು ಅವರ ಕಾವ್ಯವು ನಮಗೆ ಕಾಣಿಸುತ್ತಿದೆ. + +ಮುರುಟಿಹ ಆತ್ಮವುಬೆಟ್ಟ ಬಿಂಬವುಮುಖಗಳ ಹಾಲ್ಗಂಭವುನೆಪ ಮಾತ್ರಉನ್ಮತ್ತ ಧರ್ಮದ ಬಾವುಟಗಳ ನಡುವೆಯೂ + + + +ಬದುಕಿನ ಎಲ್ಲ ಹಳವಂಡಗಳ ನಡುವೆಯೂ ಮುಕ್ಕಾಗದ ಪರಿಶುದ್ಧವಾದ ಕ್ಷಣಗಳನ್ನು ಸಾಕಾರಗೊಳಿಸಲು ಕಾವ್ಯವು ಶತಮಾನಗಳಿಂದಲೂ ಶ್ರಮಿಸುತ್ತಲೇ ಬಂದಿದೆ. ಧಾರ್ಮಿಕ ಕಾವ್ಯಗಳು, ಭಕ್ತಿ ಕಾವ್ಯ, ಅನುಭಾವ ಕಾವ್ಯ ಹೀಗೆ ಮನುಷ್ಯನ ಅಂತರಂಗದ ಹುಡುಕಾಟಕ್ಕೆ ಕಾವ್ಯವು ನಿರಂತರವಾಗಿ ಮೈಯಾಗಿದೆ. ಇಂದು ಧರ್ಮವು ಉನ್ಮತ್ತರ ಕೈಯ ಹತಾರವಾಗಿ ಬದಲಾದ ಸಂದರ್ಭದಲ್ಲಿ ವಾಸ್ತವದ ಅಪಾಯಗಳ ನಡುವೆಯೂ ಅಶೋಕರ ಕಾವ್ಯವು ಅಂಥ ಸತ್ಯದ ಕ್ಷಣಗಳನ್ನು ಧ್ಯಾನಿಸುತ್ತದೆ. ಮತ್ತು ಹಾಗೆ ಧ್ಯಾನಿಸುತ್ತಲೇ ತನ್ನ ನಿಜವನ್ನು ಮುಟ್ಟುತ್ತೇನೆಂಬ ಹಂಬಲವು ಅಳಿಸದಂತೆ ಉಳಿಸಿಕೊಳ್ಳುತ್ತದೆ. ವ್ಯಕ್ತಿಯ ಪ್ರಜ್ಞೆ ಹಾಗೂ ಪರಿಸರದ ನಡುವಿನ ಸಾವಯವ ಸಂಬಂಧದಲ್ಲಿ ಕವಿತೆಯು ಬೆಳೆಯುತ್ತ ಹೋಗುತ್ತದೆ. ಇದು ಒಂದು ಬಗೆಯ ಲೋಕಾಂತ ಹಾಗೂ ಏಕಾಂತಗಳ ಬೆಸುಗೆ. ಏಕಾಂತದ ಮೌನದಲ್ಲಿ ಆಲಿಸುವ ಸೂಕ್ಷ್ಮ ಸ್ವರಗಳಿಗೆ ಭಾಷೆಯ ಮೂಲಕ ಚಲನೆಯನ್ನು ಕಲ್ಪಿಸುತ್ತಾ ಕಾವ್ಯವು ಹರಿಯುತ್ತದೆ. ಇದೊಂದು ಹರಿವು ಏಕೆಂದರೆ ಸಿದ್ದಚೌಕಟ್ಟುಗಳಲ್ಲಿ ಕಾವ್ಯವು ಸಂಭವಿಸುವುದಿಲ್ಲ. ಅದು ನಿಶ್ಚಿಯ ನೋಟಕ್ರಮಗಳನ್ನು, ಸಿದ್ಧಗೊಂಡ ಹೆದ್ದಾರಿಯನ್ನು, ತರ್ಕದ ಲೆಕ್ಕಾಚಾರಗಳನ್ನು ಮೀರಿ ಇರುತ್ತದೆ. ಮೀರುವಿಕೆಯಿಲ್ಲದೇ ಕಾವ್ಯವಿಲ್ಲ. ಆದ್ದರಿಂದ ಚಲನಶೀಲ ಮನಸ್ಸಿಗೆ ಮಾತ್ರ ಕಾವ್ಯವು ಒಲಿಯುತ್ತದೆ. ಚಲನಶೀಲ ಮನಸ್ಸು ಮಾತ್ರ ಭಾಷೆಗಿರುವ ಅನಂತ ಸಾಧ್ಯತೆಗಳನ್ನು ಕಾಣಬಲ್ಲದು. + +ಓ ನನ್ನ ಕಿರೀಟವೇಎದೆ ತಟ್ಟುವ ಮುನ್ನಆತ್ಮಕ್ಕಂಟಿದ ಕೆಂಡದಮಾತುಗಳನ್ನೊಮ್ಮೆಆಲಿಸು + +*** + +ಬೀಸೊ ಕಲ್ಲ ಬಳೆಗಳ ಬವಣೆ ಬಲ್ಲವರ ನಾ ಕಾಣೆಹಿಡಿ ಧಾನ್ಯಕೆ ಬೆವರ ಬಸಿದು ಸೆರಗೊಡ್ಡಿಹಳುನನ್ನ ಹಡೆದವ್ವ + +ಬದುಕಿನ ಮೇಲುಮೇಲಿನ ನೆಲೆಯಲ್ಲಿ ಗೋಚರಿಸದ ಒಡಲ ಸಂಕಟಗಳಿಗೆ ಧ್ವನಿಯಾಗುವಲ್ಲಿ ಈ ಸಂಕಲನದ ಕವಿತೆಗಳು ಶ್ರಮಿಸಿವೆ. ‘ಆತ್ಮಕ್ಕಂಟಿದ ಕೆಂಡದ ಮಾತುಗಳು’ ಕಾಣದಂತೆ ಸುಡುತ್ತವೆ. ಇವು ಅಕ್ಕ ಹೇಳುವ ಕಿಚ್ಚಿಲ್ಲದ ಬೇಗೆಯಂಥವು. ಅಂತೆಯೇ ಹಿಟ್ಟು ಬೀಸುವಾಗ ಅವ್ವನ ಕೈಬಳೆಗಳ ಕಿಣಿಕಿಣಿ ಕೇಳಿಸುತ್ತದೆ. ಆದರೆ ಅವುಗಳ ಹಿಂದಿನ ಬವಣೆ ಕೇಳಿಸುವುದಿಲ್ಲ. ಯಾಕೆಂದರೆ ಇವೆಲ್ಲ ಭಾಷೆಯೇ ಇಲ್ಲದ ಚೀತ್ಕಾರಗಳು. ಅವ್ಯಕ್ತವನ್ನು ಆಲಿಸುವ ಹಾಗೂ ಗಮನಿಸುವ ಸೂಕ್ಷ್ಮ ಹಾಗೂ ಆರ್ದೃ ನೋಟ ಹೊಸಮನಿಯವರಿಗೆ ಒಲಿದಿದೆ. ಹಾಗಾಗಿಯೇ ಅವರು ತಮ್ಮ ಅನೇಕ ಸಮಕಾಲೀನ ಕವಿಗಳಂತೆ ವಾಚ್ಯ ಜಗತ್ತಿನಲ್ಲಿ ವಿಹರಿಸುವುದಿಲ್ಲ. ಧ್ವನಿಯಿಲ್ಲದ್ದನ್ನು ಧ್ವನಿಸುವ ನಿಜವಾದ ಕಾರುಣ್ಯದ ಪಸೆ ಅವರನ್ನು ಭಿನ್ನವಾಗಿಸಿದೆ. + +ಕಾವ್ಯವು ಎಷ್ಟು ಒಂಟಿಧ್ವನಿಯೋ ಅಷ್ಟೇ ಸಮೂಹಧ್ವನಿಯೂ ಹೌದು. ಕಾವ್ಯದ ಮೂಲಕ ಒಂದು ಸಮಾಜದ ಒಳದನಿಗಳನ್ನು ಆಲಿಸಲು ಸಾಧ್ಯವಿದೆ. ಸಂಸ್ಕೃತಿಯೊಂದರ ವಿನ್ಯಾಸವನ್ನು ಅರಿಯಲು ಸಾಧ್ಯವಿದೆ. ಹಾಗೆಯೇ ವರ್ತಮಾನದ ಸಂಕಟಗಳಿಗೆ ದನಿಯಾಗಲೂ ಸಾಧ್ಯವಿದೆ. ಕಾವ್ಯದ ಮೂಲಕ ಇತಿಹಾಸಕ್ಕೆ ಪ್ರಶ್ನೆಗಳನ್ನು ಕೇಳುವುದು ಹಾಗೂ ಭವಿಷ್ಯದ ಕನಸುಗಳಿಗೆ ಆಕಾರಕೊಡುವುದು ಎರಡೂ ಕ್ರಿಯೆಗಳು ಕಾವ್ಯಕ್ಕೆ ಮುಖ್ಯ. ಈ ಸಂಕಲನದ ಕವಿತೆಗಳಲ್ಲಿ ಇಂತಹ ಎಲ್ಲ ಪ್ರಯತ್ನಗಳೂ ಇವೆ. + +ಕೊಳಲಾದೆಕೇರಿಯ ಹಾಡು ಪಾಡಿಗೆದನಿಯಿರದ ಕೊರಳಿಗೆಕನ್ನಡಿಯಾದೆಬತ್ತಲ ಬಯಲ ಕಣ್ಣಿಗೆ + +ಸತ್ಯದ ಮೇಲಣಚೂರಿ ಇರಿತ ಎಗ್ಗಿಲ್ಲದೇ ಸಾಗಿದೆಕರುಣಾ ಸಾಗರ ಮೌನವಾದಂತಿದೆಭೂಪಟದ ಟೊಳ್ಳು ಟೊಳ್ಳಾದರಾಜದಂಡ + +ವಾಸ್ತವದ ಅಧಿಕಾರ ರಾಜಕಾರಣವನ್ನು ಪ್ರತಿಮಾತ್ಮಕವಾಗಿ ಚಿತ್ರಿಸುವ ಅಶೋಕ ಅವರು ಅದನ್ನು ಮೀರುವ ದಾರಿಗಳನ್ನೂ ಶೋಧಿಸುತ್ತಾರೆ. ದನಿಯೇ ಇಲ್ಲದ ಕೊರಳಿಗೆ ದನಿಯಾಗುವ ಸಾಮಾಜಿಕ ಬದ್ಧತೆಯೂ ಅವರಲ್ಲಿ ಇಲ್ಲದಿಲ್ಲ. ಆದರೆ ಆಕ್ರೋಶಕ್ಕಿಂತ ಅವರು ಶೋಧದ ಹಾದಿ ಹಿಡಿಯುತ್ತಾರೆ. ಪರಿವರ್ತನೆಯೊಂದು ಬರಿಯ ದೇಹದಿಂದಲ್ಲ ಆತ್ಮದಿಂದಲೇ ಸಂಭವಿಸಬೇಕೆಂಬ ಘನ ಹಂಬಲ ಅವರದು. ಅದು ಸಮಾಜದ ಆತ್ಮವೂ ಹೌದು. ಆತ್ಮಸಾಕ್ಷಿಯನ್ನು ಬಡಿದೆಬ್ಬಿಸುವ ಕೆಲಸ ಮಾಡಲೇಬೇಕಾದುದು ಕಾವ್ಯದ ಗುರಿ ಹಾಗೂ ಜವಾಬುದಾರಿ. ಅದನ್ನು ಧ್ಯಾನಶೀಲ ಏಕಾಗ್ರತೆಯಲ್ಲಿ ತಲುಪಲು ಅವರು ಬಯಸುತ್ತಾರೆ. + + + +ಕಣ್ಣ ಪಾಪೆಗಳು ನುಡಿದದ್ದು ಸತ್ಯ;ಅರಳಿತೊ ಪ್ರೇಮನಶಿಸಿತೊ ಕಡು ಕಾಯದಾರಿಯಾಯಿತೊ ಕಾವ್ಯಬೆಳಗಿತೊ ಬದುಕುಎನ್ನುವಲ್ಲಿ ಅವರ ಕಾವ್ಯದ ಮೀಮಾಂಸೆಯೊಂದು ರೂಪು ಗೊಂಡಿದೆ. ಪ್ರೇಮವರಳಲು, ಕಡುಕಾಯದ ಕುಬ್ಜ ಮಾನದಂಡ ಗಳಳಿದು ಆತ್ಮವಿಕಾಸ ಹೊಂದಲು, ಆ ಮೂಲಕ ಬದುಕು ಬೆಳಗಲು ಅವರಿಗೆ ಕಾವ್ಯ ಬೇಕು. ಕಾವ್ಯವು ಲೋಕಕ್ಕೆ ಕೊಡುವ ಬೆಳಕು ಇದಲ್ಲದೇ ಇನ್ನೇನು? + +ಅಶೋಕ ಹೊಸಮನಿಯವರ ಒಂದಷ್ಟು ಕವಿತೆಗಳು + +ರೆಕ್ಕೆಗಳ ಹರವಿದಷ್ಟು ಕಂಬನಿ + +ದೃಷ್ಟಿ ದೃಷ್ಟಿಯನೆದುರಿಸುವುದು ಸುಲಭದ ಮಾತಲ್ಲ ಸಖಾಎರಡೇ ಎರಡು ಹೆಜ್ಜೆಗಳ ಪ್ರೇಮಆತ್ಮಗಳ ಅನಂತ ಬಿಕ್ಕು + +ದೇವರು ದೇವರನೆದುರಿಸುವುದು ಸುಲಭದ ಮಾತಲ್ಲ ಸಖಾತೀರಿ ಹೋದವು ಅದೆಷ್ಟೋ ನದಿಗಳುಕಣ್ಮರೆಯಾದರು ಕಡು ತೀರದಷ್ಟು ಸೂರ್ಯ,ಚಂದ್ರರು + +ಮುಸ್ಸಂಜೆ ಮುಸ್ಸಂಜೆಯನೆದುರಿಸುವುದು ಸುಲಭದ ಮಾತಲ್ಲ ಸಖಾಸುಟ್ಟ ನೆತ್ತರಿನಲಿಬೆಂದ ಕನಸುಗಳ ಮೇಳವು + +ಖಡ್ಗ ಖಡ್ಗವನೆದುರಿಸುವುದು ಸುಲಭದ ಮಾತಲ್ಲ ಸಖಾಎತ್ತರಕ್ಕೇರಿಸುವಾಗಲೂ ಪ್ರೀತಿಉಕ್ಕೀತು ಶಾಂತಿಯ ಬಾವುಟವು + +ಸಖಾರೆಕ್ಕೆಗಳ ಹರವಿದಷ್ಟು ಕಂಬನಿತಾಕಿದಷ್ಟು ಒಡನಾಡಿ ನೋಟಗಳುಹಾದಿಗೊಂದಿಷ್ಟು ಕೋರಿಕೆಯೂ + +ಹಾಗೊಂದು ವೇಳೆ ಗೆಳೆಯನಾಗುವಂತಿದ್ದರೆಹಾಗೊಂದು ವೇಳೆ ಉಸಿರಾಡುವುದಾದರೆಗಳಿಗೆ ಗಳಿಗೆಗಳ ಲೆಕ್ಕವಿಡಬೇಕುರಾತ್ರಿಗಳ ಮಡಚಬೇಕುಹಗಲುಗಳ ನೇಯ್ದಿರಬೇಕು + +ಹಾಗೊಂದು ವೇಳೆ ಕೊಂಡಾಡಬೇಕೆಂದರೆಚಿತ್ರಗಳ ಪಟ್ಟಿಯಿಡಬೇಕುಅಂಗೀಕಾರದ ಮುದ್ರೆಯಿದ್ದರೆ + +ಹಾಗೊಂದು ವೇಳೆ ಪ್ರೇಮವ ಅಪ್ಪಿಕೊಳ್ಳುವಂತಿದ್ದರೆಕೀಳಿಸಿಕೊಳ್ಳಬೇಕು ಕಣ್ಣುಮಣ್ಣಿಗೂ ಹತ್ತಿರವಾಗಬೇಕು + +ಹಾಗೊಂದು ವೇಳೆ ಆಕಾಶಕಾಯವಾಗುವಂತಿದ್ದರೆಜೀವಕಾಯದ ಪೆಟ್ಟುಗಳಿಗೆ ಪಕ್ಕಾಗಬೇಕು + +ಹಾಗೊಂದು ವೇಳೆ ಹಾಜರಾತಿಗೆ ಹಪಾಹಪಿಸುವಂತಿದ್ದರೆಕತ್ತರಿಸಬೇಕು ದಾರಿಯನ್ನುಪ್ರೇಮವನ್ನೂ + +ಕಪ್ಪು ಬಣ್ಣಕ್ಕೂ ಉಸಿರ ತುಂಬಬೇಕುಹಾಗೊಂದು ವೇಳೆಗೆಳಯನಾಗುವಂತಿದ್ದರೆ + +ಬಿತ್ತಿ ಬಿಡು ನಕಾಶೆಯೊಳು + +ಹೃದಯದ ಚಿಗುರ ಕತ್ತರಿಸೊ ಖಯಾಲಿ ಏತಕೊ ದೊರೆಯೇ? + +ಕುಕ್ಕಲಿ ಹದ್ದುಗಳು ಆ ಗೋಡೆಯನ್ನಾದರೂನಿನ್ನ ಹಾಡ ಹಾಡು ಕವಿಯೇ + +ಹೊರಹೊಮ್ಮಿತಾದರೂ ಹೇಗೆ ರಾಗವುಕರ್ಕಶ ದನಿಗಳ ಆರ್ಭಟದಲಿ ರವಿಯೇ + +ಎದೆಯ ಹಕ್ಕಿಯನ್ನಾದರೂ ಹಿಂಡಿಪಂಜರವ ಕೊಂಡಾಡುವ ಅಣ್ಣಗಳಿರೇ + +ನಿಟ್ಟುಸಿರ ಆತ್ಮಗಳ ಎಡತಾಕಿನೆಲದ ಕಣ್ಣ ಬೊಂಬೆಯ ಮುರಿವಿರೇ? + +ದಾಸ್ಯದ ನೊಗದ ಹೆಗಲೇಸುರಿಯದಿರು ನೆತ್ತರು ಕಡು ಕರಂಡಿಕೆಯೊಳುಬಿತ್ತಿ ಬಿಡು ನಕಾಶೆಯೊಳು ಕೊಪ್ಪಡರಿಹ ಕರುಳು + +ಕಳಚಿಕೊ ಬಡಿವಾರದ ಬಾಳ್ವೆ + +ಯಾರನ್ನು ಕುರಿತು ಮಾತನಾಡಬೇಕೆಂದಿರುವೆಗಟ್ಟಿಗೊಳಿಸಿಕೊ ದನಿಯ + +ಯಾರ ಕರುಣೆಯ ಕಾಣಬೇಕೆಂದಿರುವೆಗಟ್ಟಿಗೊಳಿಸಿಕೊ ಮನವ + +ಯಾರನ್ನು ಕುರಿತು ಆಗ್ರಹವಾಗಬೇಕೆಂದಿರುವೆಗಟ್ಟಿಗೊಳಿಸಿಕೊ ದನಿಯ + +ಏನಿಲ್ಲವೆಂದರೂ ಪರಿತಪಿಸುತಿರುವೆಗಟ್ಟಿಗೊಳಿಸಿಕೊ ಮನವ + +ಯಾರನ್ನು ಕುರಿತು ವೃತ್ತವಾಗಿಸಿರುವೆತಿರುವುಗಳಲ್ಲೇ ತಿರುಗಣಿ ಬಾವಿಗಳುಗಟ್ಟಿಗೊಳಿಸಿಕೊ ದನಿಯ + +ಕಳಚಿಕೊ ಬಡಿವಾರದ ಬಾಳ್ವೆಗಟ್ಟಿಗೊಳಿಸಿಕೊ ಮನವ + +ಕನ್ನಡಿಯ ಅಮಾಯಕತೆ + +ಹೀರಬೇಕಿತ್ತು ಈ ಮೊಗವನ್ನಾದರೂನಗುವ ಪರದೆಯ ಚೂರಿಯನ್ನಾದರೂ + +ಕಲಿಸಬೇಕಿತ್ತು ಮುಖಗಳ ಹೂಳಲುಈ ನೇತ್ರಗಳಿಗಾದರೂ + +ಒಡೆಯಬೇಕಿತ್ತು ಈ ಮಡಿಕೆಯದಾರಿಗಳಿಗಾದರೂ + +ಆಲಿಸಬೇಕಿತ್ತು ಗಾಯಗಳಅಣುಕು ಗೋಷ್ಠಿಗಳಾದರೂ + +ಸಾಕಿತ್ತು ಚಂದಿರನ ನಗುಹೃದಯದ ಕಿರು ಬೆರಳಿಗಾದರೂ + +ನೀನಾಗಬೇಕಿತ್ತುಹಸ್ತಗನ್ನಡಿಯ ನಕ್ಷತ್ರವಾದರೂ + +ನುಡಿಬೇಕಿತ್ತು ಕನ್ನಡಿಯ ಅಮಾಯಕತೆಯನ್ನ ನೆತ್ತರಾದರೂ + +ಬೆನ್ನು ಹುರಿಗಳ ಜ್ವಾಲೆ + +ಬೆನ್ನು ಹುರಿಗಳ ಜ್ವಾಲೆಯ ಓದಿದ್ದೇನೆ ನಾನುಎದೆಯ ಪೀಠವ ಹೀರುತ್ತಲೇ ಭಿಕ್ಷೆಗಿಳಿದಿದ್ದೇನೆಕುರುಡು ಬೀದಿಯೂ ಚೀಮಾರಿ ಹಾಕಿದೆಕನಸುಗಳು ಅಮಾನತ್ತಿನಲ್ಲಿರುವಾಗ + +ಚಕ್ರದೊಂದು ಸುತ್ತಿನ ಪುಟವೂಸುತ್ತಿಗೆಗಳ ಕಾರ್ಖಾನೆಮೈಮರೆವಿನ ಮೊಗಗಳ ವಾಸನೆ + +ಮಸೆ ಮಸೆವ ಹತಾರಗಳ ತಾಕಿದ್ದೇನೆ ನಾನುಬಾಳ ದೋಣಿಯ ಹಿಸುಕುವುದನ್ನು + +ಸುರಿದಿದ್ದೇನೆ ಉಸಿರ ಉಬ್ಬು ತಗ್ಗುಗಳಲಿಆಲಿಸಿದ್ದೇನೆ ಬರಡು ಚರಿತೆಯ ಹಾಡು + +ಮತ್ತೆ ಹುಟ್ಟಿದ್ದಾನೆ ಕಡು ನೇಸರಜ್ವಾಲೆಯ ಏಣಿ ಏರುತ್ತಲೇಕಾಣದ ವೈರಾಗ್ಯಕ್ಕೂ ಅಣಿಯಾಗಿದ್ದಾನೆ + +ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ. \ No newline at end of file diff --git a/Kenda Sampige/article_227.txt b/Kenda Sampige/article_227.txt new file mode 100644 index 0000000000000000000000000000000000000000..77b8d3b4dc936f0b7f8f1642796fcbdf4c5ee41c --- /dev/null +++ b/Kenda Sampige/article_227.txt @@ -0,0 +1,71 @@ +ಜಯಂತಿ ಕುಲಕರ್ಣಿಯ ಪರಿಚಯ ಈಚೆಗಿನ ಸುಮಾರು ಇಪ್ಪತ್ತೈದು ವರುಷಗಳಿಂದ ರಾಯರಿಗಿದೆ. ಅವಳ ಗಂಡ ಸತೀಶ ಕುಲಕರ್ಣಿ ಅವರು ಇಂಗ್ಲೀಷ್ ವಿಭಾಗದಲ್ಲಿ ರಾಯರ ಕೈಕೆಳಗಿನ ಅಧ್ಯಾಪಕರಾಗಿದ್ದಾಗಿನಿಂದ ಅದು ಪ್ರಾರಂಭವಾಗಿತ್ತು. ಕುಲಕರ್ಣಿ ಅವರು ತನ್ನ ಮದುವೆಗೆ ಹುಡುಗಿ ನೋಡುವ ಶಾಸ್ತ್ರಕ್ಕೆ ರಾಯರನ್ನು ಕರೆಯುತ್ತಾ ಹೇಳಿದ ಮಾತನ್ನು ರಾಯರು ಈ ತನಕವೂ ಮರೆಯಲಿಲ್ಲ. ಅವರು ‘ಸರ್ ನಾನು ಬಾಲ್ಯದಲ್ಲೇ ತಂದೆಯನ್ನು ಕಳಕೊಂಡ ಹುಡುಗ. ನನ್ನನ್ನು ಓದಿಸಿ ಈ ಹಂತಕ್ಕೆ ತಂದವರು ನನ್ನ ಸೋದರ ಮಾವ. ಅವರೂ ಕಳೆದ ವರುಷ ತೀರಿಕೊಂಡಿದ್ದಾರೆ. ಹಾಗಾಗಿ ಇಂಥ ಶುಭಸಮಾರಂಭಗಳಲ್ಲಿ ನನ್ನ ತಂದೆಯಾಗಿ ಅಥವಾ ಮಾವನಾಗಿ ಬರುವವರು ಬೇರೆ ಯಾರೂ ಇಲ್ಲ. ಅದೆಲ್ಲ ನೀವೇ ಅಂದುಕೊಂಡಿದ್ದೇನೆ’ ಎಂದಿದ್ದರು. ಆಗ ರಾಯರು ‘ಛೆ!’ ಎಂದು ಕುಲಕರ್ಣಿಯವರ ಬಗ್ಗೆ ಕನಿಕರ ವ್ಯಕ್ತಪಡಿಸಿ ‘ಇಟ್ ಈಸ್ ಪ್ರೆಸ್ಟೀಜ್ ಟು ಮಿ’ ಎಂದು ನಿಶ್ಚಿತಾರ್ಥಕ್ಕೂ ಹೋಗಿದ್ದರು. ಅಲ್ಲಿ ಕುಲಕರ್ಣಿಯವರು ‘ಇವರೇ ನನ್ನ ಮಾವ’ ಎಂದೇ ಅಲ್ಲಿ ನೆರೆದಿದ್ದವರಿಗೆ ರಾಯರನ್ನು ಪರಿಚಯ ಮಾಡಿಸುವಾಗ, ರಾಯರಿಗೆ ಮುಜುಗರವಾದರೂ ಕೈ ಕುಲುಕಿದವರಿಗೆಲ್ಲ ರಾಯರು ‘ನೈಸ್ ಟು ಮೀಟ್ ಯು’ ಎಂದು ಹೇಳುತ್ತಾ ಮುಗುಳು ನಗುತ್ತಿದ್ದರು. ಮುಂದೆ ‘ಮದುವೆಗೂ ನೀವೇ ಧಾರೆ ಎರೆಸಿಕೊಳ್ಳಬೇಕು’ ಎಂದು ಕುಲಕರ್ಣಿ ಒತ್ತಾಯಿಸಿದಾಗ ‘ನೋ ನೋ ಅದು ಸರಿ ಅಲ್ಲ. ನಿಮ್ಮ ಆಪ್ತೇಷ್ಟರಲ್ಲಿ ಅಥವಾ ಕುಟುಂಬವರ್ಗದಲ್ಲಿ ಯಾರಿದ್ದಾರೆ ಎಂದು ನಿಮ್ಮ ತಾಯಿಯನ್ನು ಕೇಳಿ ಆಯ್ಕೆ ಮಾಡಿ’ ಎಂದು ರಾಯರು ಉಚಿತವಾಗಿ ಧಾರೆ ಎರೆಸಿಕೊಳ್ಳಲು ಬಂದ ಆಹ್ವಾನವನ್ನು ನಯವಾಗಿ ನಿರಾಕರಿಸಿದ್ದರು. ಕೊನೆಗೂ ಸತೀಶ ಕುಲಕರ್ಣಿಯವರು ತಮ್ಮ ದೂರದ ಬಂಧುಗಳನ್ನು ಮುಂದಿಟ್ಟುಕೊಂಡು ಧಾರೆ ಎರೆಸಿಕೊಂಡಿದ್ದರು. ಆದರೆ ರಾಯರು ಸತೀಶ್ ಕುಲಕರ್ಣಿಯ ಆ ಸಮಾರಂಭದಲ್ಲಿ ನಿಜವಾದ ಮಾವನಂಥ ಮಾವನಾಗಿ ಬಂದವರನ್ನೆಲ್ಲ ಎದುರ್ಗೊಂಡು ಸಂಭ್ರಮಿಸಿದ್ದರು ಮತ್ತು ಹತ್ತಾರು ಸಲ ಮದುವೆ ಮಂಟಪವನ್ನು ಏರಿ ಫೋಟೋಕ್ಕೆ ಬೇರೆ ಬೇರೆ ರೀತಿಯಲ್ಲಿ ಫೋಸು ಕೊಟ್ಟಿದ್ದರು. + +ಮದುವೆಯಾಗುವಾಗ ಜಯಂತಿ ಕುಲಕರ್ಣಿ ರಾಂಪುರದ ಒಂದು ಹೈಸ್ಕೂಲಿನಲ್ಲಿ ಕನ್ನಡ ಟೀಚರಾಗಿದ್ದಳು. ಅದು ಖಾಸಗಿ ಹೈಸ್ಕೂಲಾಗಿದ್ದುದರಿಂದ ಸಂಬಳವೆನ್ನುವುದು ‘ನಾಮ್ಕಾವಸ್ಥೆ’ಯದಾಗಿತ್ತು. ಎಂ.ಎ ಓದಿ ಮನೆಯಲ್ಲಿ ಸುಮ್ಮನೇ ಕುಳಿತುಕೊಳ್ಳುವುದಕ್ಕಿಂತ ಹವ್ಯಾಸದ ಥರ ಪಾಠವನ್ನಾದರೂ ಮಾಡಿ ‘ಟೈಂಪಾಸ್’ ಮಾಡಬಹುದು ಎಂಬಂತೆ ಆಕೆ ಹೈಸ್ಕೂಲಲ್ಲಿ ದುಡಿಯುತ್ತಿದ್ದಳು. ಬಸವೇಶ್ವರ ಕಾಲೇಜಿನಲ್ಲಿರುವ ಸತೀಶ್ ಕುಲಕರ್ಣಿ ಇಂಗ್ಲೀಷ್ ಲೆಕ್ಚರರ್ ಆಗಿದ್ದಾರೆ ಎಂಬುದರಿಂದ ಮದುವೆಯ ಪೂರ್ವದಲ್ಲೇ ಆಕೆ ತಾನೂ ಆ ಕಾಲೇಜಿನಲ್ಲಿ ಸೇರಬೇಕೆಂಬ ಕನಸು ಕಂಡಿದ್ದಳು. ಆ ಕನಸನ್ನು ಆಕೆ ಮದುವೆಯಾದ ಹೊಸದಿನಗಳಲ್ಲೇ ಗಂಡನ ಮುಂದಿಟ್ಟಾಗ ಆತ ‘ವೈ ನಾಟ್ ಮೈ ಡಿಯರ್?. ಲೆಟ್ ಅಸ್ ಟ್ರೈ’ ಎಂದು ಹೇಳಿ ‘ನಾನು ಶ್ರೀನಿವಾಸರಾಯರನ್ನು ಕೇಳುತ್ತೇನೆ. ಅವರು ‘ಎಸ್’ ಅಂದರೆ ಕೆಲಸ ಆದ ಹಾಗೇ ಎಂದು ಹೇಳಿದ್ದರು. ಆ ಮೇಲೆ, ಅದೇ ದಿನ ಸಂಜೆ ಕಾಲೇಜ್ ಮುಗಿಸಿ ರಾಯರು ಹೊರಟುನಿಂತಾಗ ಅವರ ಬಳಿ ಬಂದು ‘ಮಾವ ನೀವು ಈ ದಿನ ನಮ್ಮಲ್ಲಿಗೆ ಬರಬೇಕು ಮತ್ತು ಟೀ ಕುಡಿದು ಹೋಗಬೇಕು’ ಎಂದು ವಿನಂತಿಸಿದ್ದರು. + +(ಡಾ. ನಾ. ಮೊಗಸಾಲೆ) + +ಮದುವೆಯ ದಿನದ ತನಕ ಶ್ರೀನಿವಾಸರಾಯರನ್ನು ‘ಸರ್’ ಎಂದು ಕರೆಯುತ್ತಿದ್ದ ಸತೀಶ ಕುಲಕರ್ಣಿ ಮದುವೆಯ ಮರುದಿನದಿಂದ ಅವರನ್ನು ‘ಮಾವ’ ಎಂದೇ ಕರೆಯಹತ್ತಿದ್ದರು. ‘ಎಸ್, ಇದು ಯಾಕೆ?’ ಎಂದು ರಾಯರು ಪ್ರಶ್ನಿಸಿದಾಗ ಕುಲಕರ್ಣಿ ‘ಎಲ್ಲಾ ಅರ್ಥದಲ್ಲೂ ಈಗ ನೀವು ನನ್ನ ಮಾವ. ಸೋ, ಇನ್ನು ಮುಂದೆ ನಾನು ನಿಮ್ಮನ್ನು ಕರೆಯುವುದು ಹಾಗೇ!’ ಎಂದಿದ್ದರು. ರಾಯರು ನಕ್ಕು ಕುಲಕರ್ಣಿಯವರ ಹೆಗಲ ಮೇಲೆ ಕೈ ಇಟ್ಟು ‘ದೇಟೀಸ್ ಗುಡ್! ಓಕೆ’ ಎಂದು ಅದನ್ನು ಒಪ್ಪಿಕೊಂಡಿದ್ದರು. + +ಶ್ರೀನಿವಾಸರಾಯರು ಸತೀಶ್ ಕುಲಕರ್ಣಿ ಅವರ ಮನೆಗೆ ಹೋದಾಗ ಬಾಗಿಲು ತೆರೆದು ಸ್ವಾಗತಿಸಿದ ಜಯಂತಿ ಕುಲಕರ್ಣಿ ಶ್ರೀನಿವಾಸರಾಯರು ಸೋಫಾದಲ್ಲಿ ಕುಳಿತುಕೊಳ್ಳುತ್ತಿದ್ದ ಹಾಗೆ ಅವರ ಪಾದಮುಟ್ಟಿ ನಮಸ್ಕರಿಸಿ ‘ನಮ್ಮ ಮನೆಗೆ ಮೊತ್ತಮೊದಲು ಬರುತ್ತಿದ್ದೀರಿ. ನಾವು ಕೊಟ್ಟದ್ದನ್ನೆಲ್ಲ ಬೇಡ ಎನ್ನಬಾರದು’ ಎಂದು ಅವರು ಕುಳಿತ ಕುರ್ಚಿಯ ಇದಿರಿದ್ದ ಟೀಪಾಯಿಯಲ್ಲಿ ಎರಡು ತಟ್ಟೆಗಳಲ್ಲಿ ತುಂಬ ಸಿಹಿ ತಂದಿರಿಸಿ ‘ಈಗ ಈ ಎರಡೂ ಪ್ಲೇಟುಗಳನ್ನು ಮಾವ ಅಳಿಯ ಇಬ್ಬರೂ ಸೇರಿ ಖಾಲಿ ಮಾಡಬೇಕು. ಅಷ್ಟರಲ್ಲಿ ನಾನು ನಿಮ್ಮ ಆಯ್ಕೆ ಕಾಫಿಯೋ ಟೀಯೋ ಏನು ಹೇಳಿ, ಅದನ್ನು ಸಿದ್ಧಪಡಿಸುತ್ತೇನೆ’ ಎಂದು ಕೈ ಮುಗಿದಿದ್ದಳು. + +ರಾಯರಿಗೆ ಆ ಪ್ಲೇಟುಗಳಲ್ಲಿದ್ದ ಐಟಂಗಳನ್ನು ನೋಡಿಯೇ ಭಯವಾಯಿತು. ‘ಸಾರಿ ಜಯಂತಿ ನಾನು ಒಂದೇ ಒಂದು ಪೀಸ್ ಇದರಲ್ಲಿ ತೆಗೆಯುವುದು. ಈ ಧಾರವಾಡ ಪೇಡವನ್ನು ಮಾತ್ರ’ ಎಂದರು. ಜಯಂತಿ ‘ನೋ ಸರ್’ ಎಂದಳು. ಸತೀಶ್ ಕುಲಕರ್ಣಿಯವರೂ ‘ಇಲ್ಲ ಮಾವ’ ಎಂದು ಒತ್ತಾಯಿಸಿದರು. ರಾಯರು ‘ಇಷ್ಟನ್ನೆಲ್ಲ ತಿಂದರೆ ನಾನು ಸತ್ತೇ ಹೋದೇನು. ನನ್ನ ಹೆಂಡತಿಗೆ ಮಾತ್ರ ಏನೂ ಆಗದು’ ಎಂದು ಒಂದು ನಗೆ ಬಾಂಬು ಸಿಡಿಸಿ ಪೇಡವನ್ನು ಸವಿಯ ಹತ್ತಿದರು. ಇದರಿಂದ ಉತ್ತೇಜಿತರಾದ ಜಯಂತಿ ‘ಹಾಗಾದರೆ ಈ ಎರಡೂ ತಟ್ಟೆಗಳಲ್ಲಿದ್ದುದನ್ನು ಪ್ಯಾಕ್ ಮಾಡಿಕೊಡುತ್ತೇನೆ ಸರ್. ಮೇಡಂಗೆ ಕೊಡಿ’ ಎಂದಳು. ರಾಯರು ‘ಛೆ ಛೆ! ಹಾಗೆಲ್ಲ ಮಾಡಬೇಡಿ. ನನ್ನ ಹೆಂಡತಿಗೆ ಅದು ಇಷ್ಟವಾಗುವುದಿಲ್ಲ. ಶಿ ಈಸ್ ಫ್ರಮ್ ಗುತ್ತು ಫ್ಯಾಮಿಲಿ’ ಅಂದರೆ ಶ್ರೀಮಂತ ಬಂಟರ ಮನೆತನದಿಂದ ಬಂದವಳು. ಗುತ್ತು ಅಂದರೆ ಇಲ್ಲಿನ ವಾಡೆಯ ಹಾಗೆ. ಅವರಿಗೆಲ್ಲ ಮರ್ಯಾದೆಯದ್ದೇ ಒಂದು ಪ್ರಶ್ನೆ ಇರುತ್ತದೆ. ಇಂಥದ್ದನ್ನೆಲ್ಲ ಕೊಂಡು ಹೋದರೆ ‘ನೀವು ನಿಮ್ಮ ಬ್ರಾಹ್ಮಣ ಬುದ್ಧಿ ಬಿಡಲಿಲ್ಲ! ಎಲ್ಲಿ ಬಿಡುತ್ತೀರಿ, ಎಷ್ಟೇ ಓದಿದರೂ?’ ಎಂದು ಹಂಗಿಸುತ್ತಾಳೆ’ ಎಂದರು. ಸತೀಶ್ ಕುಲಕರ್ಣಿ ರಾಯರ ಮನೆಗೆ ಅನೇಕ ಬಾರಿ ಹೋಗಿದ್ದರೂ ಅವರ ಪತ್ನಿ ಬಂಟರ ಪಂಗಡದಿಂದ ಬಂದವರೆಂಬ ಸತ್ಯ ಅವರಿಗೆ ಗೊತ್ತಿರಲಿಲ್ಲ. ರಾಯರು ಬ್ರಾಹ್ಮಣರಾದ್ದರಿಂದ ಅವರ ಪತ್ನಿಯೂ ಬ್ರಾಹ್ಮಣರೇ ಎಂದುಕೊಂಡಿದ್ದ ಅವರಿಗೆ ಈ ಸುದ್ದಿ ‘ಶಾಕ್’ ನೀಡಿದರೂ ಅದು ವಿಶೇಷ ಅಂತ ಅನಿಸಲಿಲ್ಲ. ಆದರೆ ಬಂಟರು ಇಷ್ಟು ಸ್ವಾಭಿಮಾನಿಗಳು ಎಂದಿರುವಾಗ ಈ ಬ್ರಾಹ್ಮಣನನ್ನು ಆಕೆ ಹೇಗೆ ಮದುವೆಯಾದಳು ಎಂದು ಕುತೂಹಲ ಅವರಲ್ಲಿ ಹುಟ್ಟಿತ್ತು. ಆದರೆ ಈ ಕುತೂಹಲವನ್ನು ಬೇಧಿಸುವುದು ಎಷ್ಟು ಸರಿ ಎಂದು ಅವರಿಗೆ ಅನಿಸಿದರೂ ಅವರ ಮನಸ್ಸು ಸುಮ್ಮನಿರಲಿಲ್ಲ. ಸತೀಶ್ ಅಳುಕುತ್ತಾ ‘ಹಾಗಾದರೆ ನಿಮ್ಮದು ಪ್ರೇಮವಿವಾಹ ಇರಬೇಕಲ್ಲ ಮಾವ?’ ಎಂದಿದ್ದರು. ರಾಯರು ‘ಆಫ್‍ಕೋರ್ಸ್ ಲೌ ಮ್ಯಾರೇಜ್! ಅದು ಹೇಗಾಯಿತು ಏನಾಯಿತು ಎಂದೆಲ್ಲ ಕೇಳಬೇಡಿ. ನೌ ಇದೆಲ್ಲ ಏನೂ ಅಲ್ಲ ಅಥವಾ ವಿಶೇಷದ್ದಲ್ಲ’ ಎಂದರು. + +ಆ ಮಾತು ಅಲ್ಲಿಗೆ ನಿಂತಿತ್ತು. ಆಮೇಲೆ ರಾಯರ ಅಪೇಕ್ಷೆ ಮೇರೆಗೆ ಜಯಂತಿ ಬ್ರೂ ಕಾಫಿ ಸಿದ್ಧಪಡಿಸಿ ತಂದಿಟ್ಟಳು. ರಾಯರು ಒಂದೊಂದೇ ಸಿಪ್ ಕಾಫಿಯನ್ನು ಹೀರುವಾಗ ಸತೀಶರು ‘ಮಾವ ನಮ್ಮ ಕಾಲೇಜಿನಲ್ಲಿ ಇದೇ ತಿಂಗಳಲ್ಲಿ ಕನ್ನಡ ವಿಭಾಗದ ಮಂಜುನಾಥಯ್ಯ ನಿವೃತ್ತರಾಗುತ್ತಾರೆ ಎನ್ನುವುದು ನನಗೆ ಗೊತ್ತಾಗಿದೆ. ನನ್ನ ಹೆಂಡತಿಯನ್ನು ಆ ಪೋಸ್ಟಿಗೆ ಯಾಕೆ ಪ್ರಯತ್ನ ಮಾಡಬಾರದು ಎಂಬ ಆಸೆ ನನಗೆ ಹುಟ್ಟಿದೆ. ಏನೆನ್ನುತ್ತೀರಿ ನೀವು?’ ಎಂದು ಪ್ರಶ್ನಿಸಿದರು. + +‘ಆಫ್‍ಕೋರ್ಸ್, ಖಂಡಿತ ಮಾಡಬಹುದು’ + +‘ಆದರೆ ಅದು ಹೇಗೆ ಎಂಬುದೆಲ್ಲ ನನಗೆ ಗೊತ್ತಿಲ್ಲ ಮಾವ, ನನಗೇನೊ ಆಯಾಚಿತವಾಗಿ ಈಗಿರುವ ಪೋಸ್ಟ್ ಸಿಕ್ಕಿದೆ. ನಾನು ಓದಿದ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದವರ ದೂರದ ಸಂಬಂಧಿಯಂತೆ ಈ ನಮ್ಮ ಕಾಲೇಜಿನ ಪ್ರಾಂಶುಪಾಲರು. ನಾನು ನಮ್ಮ ಪ್ರಾಂಶುಪಾಲರಿಂದ ‘ಒಂದು ಮಾತು’ ಹೇಳಿಸಿದ್ದರಿಂದ ನನ್ನ ಅಪೊೈಂಟ್‍ಮೆಂಟ್ ಸುಲಭದಲ್ಲಿ ಆಯ್ತು. ಬಟ್ ಈಗ ನನ್ನ ಹೆಂಡತಿಗೆ ಅವರ ಪ್ರಭಾವ ಬಳಸುವುದು ಕಷ್ಟ ಸಾಧ್ಯ” + +‘ಎಸ್ ಹೌದು ಹೌದು! ಮತ್ತೆ ಮತ್ತೆ ಅವರನ್ನು ಕೇಳೋದು ಸರಿ ಅಲ್ಲ!’ + +‘ಹಾಗಾದರೆ ಏನೂ ದಾರಿಯೇ ಇಲ್ವಾ ಮಾವ’?” + +‘ಹಾಗೆಂದು ನಾನು ಹೇಳಿಲ್ಲ’ ಎಂದು ಕಾಫಿಯನ್ನು ಪೂರ್ತಿ ಹೀರಿದ ರಾಯರು ಕಾಫಿಯ ಕಪ್‍ನ್ನು ಟೀಪಾಯಿಯ ಮೇಲಿಟ್ಟು ಸಣ್ಣಗೆ ತಲೆಯನ್ನು ತುರಿಸುತ್ತಾ ‘ಎಸ್ ಎಸ್. ಅದೇ ಸರಿ’ ಎಂದು ತಮ್ಮಷ್ಟಕ್ಕೆ ತಾವು ಹೇಳುತ್ತಾ ‘ನೋಡಪ್ಪ ಸತೀಶ ನಾವು ನಮ್ಮ ಮ್ಯಾನೇಜ್‍ಮೆಂಟಿನ ಅಧ್ಯಕ್ಷರನ್ನು ನೋಡೋಣ. ಅವರು ಜಂಟ್ಲ್‍ಮೆನ್. ನಾನೆಂದರೆ ಅವರಿಗೆ ತುಂಬಾ ಇಷ್ಟ. ನಾನು ಅವರ ಭೇಟಿಗೆ ಹೋಗೋದೇ ಅಪರೂಪ. ಹೋದಷ್ಟು ಸಲ ‘ಏನು ಬರೆದಿರಿ ಮೇಸ್ಟ್ರೇ’ ಎನ್ನುವುದು ಅವರ ಮೊದಲಪ್ರಶ್ನೆ. ಆಗ ‘ಏನೂ ಇಲ್ಲ’ ಎಂದು ಅಂದರೆ ‘ಇನ್ನು ಯಾರು ಬರೆಯುತ್ತಾರೆ ನೀವು ಬರೆಯುವಂಥ ವಿಚಾರ? ನೀವು ವಚನಸಾಹಿತ್ಯವನ್ನು ತುಂಬಾ ಚೆನ್ನಾಗಿ ಓದಿದ್ದೀರಿ ಮತ್ತು ವಿಶಿಷ್ಟರೀತಿಯಲ್ಲಿ ವ್ಯಾಖ್ಯಾನಿಸುತ್ತೀರಿ. ನನಗೆ ನೀವು ಬಸವಣ್ಣನ ಬಗ್ಗೆ ಅಲ್ಲಮನ ಬಗ್ಗೆ ಈ ಹಿಂದೆ ಬರೆದ ಆ ಎರಡು ಲೇಖನಗಳು ತುಂಬ ಇಷ್ಟವಾಗಿದ್ದುವು. ಇಂದಿನ ಶರಣ ಚಿಂತಕರೆಲ್ಲ ನಿಮ್ಮ ಹಾಗೆ ಬರೆದಿಲ್ಲ! ಅದಕ್ಕೆ ನನಗೆ ನಿಮ್ಮ ಬಗ್ಗೆ ಏನೋ ಒಂದು ನಿರೀಕ್ಷೆ. ಬಟ್ ಆ ನಿರೀಕ್ಷೆಯನ್ನು ನೀವು ಇಗ್ನೋರ್ ಮಾಡಬಾರದು’ ಎಂದು ಪ್ರಾರಂಭಿಸಿ ‘ಈಗ ಏನು ಬಂದಿರಿ?’ ಎಂದು ನನ್ನನ್ನು ಕೇಳುತ್ತಲೇ ಇರುತ್ತಾರೆ. ನಾನು ‘ಥ್ಯಾಂಕ್ ಯು ಸರ್. ಖಂಡಿತ ಬರೆಯುತ್ತೇನೆ’ ಎಂದು ಹೇಳಿ ‘ನನ್ನದೇನಾದರೂ ಚಿಕ್ಕಪುಟ್ಟ ಅಹವಾಲುಗಳು ಇದ್ದಾಗ ಅವನ್ನು ಅವರ ಮುಂದೆ ಇಡುತ್ತಿದ್ದೆ. ಆಗ ಅವರು ‘ಎಸ್ ಡನ್’ ಎನ್ನುವರು’ ಎಂದ ರಾಯರು ತಮ್ಮ ಮತ್ತು ಟ್ರಸ್ಟಿನ ಅಧ್ಯಕ್ಷರ ಸಂಬಂಧವನ್ನು ವಿವರಿಸಿ ‘ನಿಮ್ಮ ಹೆಂಡತಿಯ ವಿಚಾರವನ್ನು ಅವರ ಮುಂದಿಟ್ಟರೆ ಪೊಸೆಟಿವ್ ಆನ್ಸರ್ ಬರಬಹುದು ಅಂತ ಅನಿಸುತ್ತದೆ’ ಎಂದರು. + +ಸತೀಶರಿಗೆ ಎದ್ದು ರಾಯರ ಕಾಲು ಹಿಡಿಯಬೇಕು ಎನ್ನುವಷ್ಟು ಉದ್ವೇಗ ಮತ್ತು ಸಂತೋಷವಾಯಿತು. ಜಯಂತಿಯ ಕಣ್ಣಲ್ಲಿ ಮಿಂಚುಮಿಂಚಿ ಅಲ್ಲಿ ಕಾಮನಬಿಲ್ಲು ಹುಟ್ಟಿ ಅದು ಅವಳ ಹುಬ್ಬುಗಳ ನಡುವೆ ಹಾದು ಹೋಯಿತು. + +ರಾಯರು ದಿಢೀರಾಗಿ ತನ್ನ ಕಾಲುಮುಟ್ಟಿ ನಮಸ್ಕರಿಸಿದ ಸತೀಶ್ ಕುಲಕರ್ಣಿಯವರನ್ನು ಹಿಡಿದೆತ್ತಿ ‘ಛೆ! ಛೆ! ಇಂತದ್ದೆಲ್ಲ ಮಾಡಬಾರದು. ಐ ಡೋಂಟ್ ಲೈಕ್ ದಿಸ್’ ಎಂದು ನಯವಾಗಿ ನಿರಾಕರಿಸಿ ‘ಅವಸರ ಬೇಡ ಸತೀಶ್. ತಿಂಗಳೊಪ್ಪತ್ತಿನಲ್ಲಿ ನಾನು ಅವರನ್ನು ಒಮ್ಮೆ ಕಾಲೇಜಿಗೆ ಕರೆಸುವ ಯೋಚನೆ ಹಾಕಿದ್ದೇನೆ. ಆ ಕಾರ್ಯಕ್ರಮ ಮುಗಿಯಲಿ. ಆ ಮೇಲೆ ಈ ವಿಷಯದ ಕುರಿತು ಮಾತನಾಡಲು ಹೋಗುತ್ತೇನೆ. ಆಗ ನೀವಿಬ್ಬರು ಬನ್ನಿ’ ಎಂದರು. + + + +ವಾರದ ಮೇಲೆ ಕಾಲೇಜಿನ ಸಾಹಿತ್ಯ ಸಂಘದಲ್ಲಿ ಮುಂದಿನ ತಿಂಗಳು ಹದಿನೆಂಟರಂದು ನಡೆಯುವ ಕಾರ್ಯಕ್ರಮದ ಆಮಂತ್ರಣವನ್ನು ಸತೀಶರ ಕೈಯಲ್ಲಿಟ್ಟ ರಾಯರು ‘ವೆರಿ ಇಂಟರೆಸ್ಟಿಂಗ್ ಪರ್ಸನಾಲಿಟಿ ಇರುವವರೊಬ್ಬರು ಈ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡುತ್ತಾರೆ ಸತೀಶ್. ನಿಮಗೆ ಇಂಥದ್ದರಲ್ಲಿ ಆಸಕ್ತಿ ಇಲ್ಲ ಎಂದು ನನಗೆ ಗೊತ್ತು. ಬಟ್ ಯು ಮಸ್ಟ್ ಡೆವಲಪ್ ಸಚ್ ಇಂಟರೆಸ್ಟ್’ ಎನ್ನುತ್ತಾ ಸತೀಶ ಕುಲಕರ್ಣಿಯವರ ಬೆನ್ನನ್ನು ಹೂಸಿ ‘ಕಳೆದ ಐದು ವರುಷಗಳಲ್ಲಿ ವರ್ಷಕ್ಕೆ ಒಬ್ಬರ ಹಾಗೆ ಅನಂತಮೂರ್ತಿ, ಗಿರೀಶ್ ಕಾರ್ನಾಡ್, ಗಿರೀಶ್ ಕಾಸರವಳ್ಳಿ ಇವರನ್ನೆಲ್ಲ ನಾನು ಕರೆಸಿದ್ದು ನಿಮಗೆ ಗೊತ್ತಿದೆ. ಈ ವರ್ಷ ವಿಶ್ವನಾಥ ಖೈರೆ ಎಂಬ ಮರಾಠಿ ಚಿಂತಕರೊಬ್ಬರನ್ನು ಕರೆಸುತ್ತಿದ್ದೇನೆ’ ಎಂದರು. + +ಸತೀಶ ಕುಲಕರ್ಣಿ ‘ವಿನಮ್ರವಾಗಿ ನಾನು ಖಂಡಿತ ಇರ್ತೇನೆ ಸರ್’ ಎಂದರು. + +ರಾಯರು ‘ಗುಡ್ ನಿಮ್ಮ ಮಾತನ್ನು ನೀವು ಎಷ್ಟು ಉಳಿಸಿಕೊಳ್ಳುತ್ತೀರಿ ಅಂತ ನೋಡುತ್ತೇನೆ’ ಎಂದು ನಗುತ್ತಾ ‘ಈ ಖೈರೆ ಅನ್ನುವವರು ಇದ್ದಾರಲ್ಲ, ಅದ್ಭುತ ವ್ಯಕ್ತಿ. ಅವರ ಹುಟ್ಟೂರು ಪುಣೆಯ ಸುಪೆ. ಸಿವಿಲ್ ಇಂಜಿನಿಯರ್ ಪದವೀಧರರಾಗಿ ಭಾರತ ಸರಕಾರದ ದೊಡ್ಡ ಇಲಾಖೆಯೊಂದರ ಚೀಫ್ ಇಂಜಿನಿಯರಾಗಿ ಸೇವೆ ಸಲ್ಲಿಸಿದ್ದ ಅವರು ಜಮ್ಮು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ, ಜವಾಹರ ಸುರಂಗ, ನೇಪಾಳದ ಸಿದ್ದಾರ್ಥ ರಾಷ್ಟ್ರೀಯ ಹೆದ್ದಾರಿ ಮೊದಲಾದವುಗಳ ನೇತೃತ್ವ ವಹಿಸಿದ್ದರು. ಮರಾಠಿಯಲ್ಲದೆ, ಇಂಗ್ಲೀಷ್, ಹಿಂದಿ, ಸಂಸ್ಕøತ, ನೇಪಾಳಿ, ತಮಿಳು ಭಾಷೆಗಳನ್ನು ಅವರು ಚೆನ್ನಾಗಿ ಬಲ್ಲವರಿದ್ದು ನಮ್ಮಲ್ಲಿನ ಶಂಬಾ ಜೋಶಿಯವರ ಹಾಗೇ ಇರುವ ಚಿಂತಕರು. ಅವರದ್ದು ಸಂಶೋಧನೆ ಮತ್ತು ಚಿಂತನೆಗೆ ಒತ್ತುಕೊಡುವ ಬರೆಹಗಳೇ ಹೆಚ್ಚು. ಅವರು ‘ಏಕಲವ್ಯ’, ‘ವಂಶಾಚಾ ವ್ಯಾಸ’ ‘ಯುರೇಕಾ’, ‘ಹಿರಕನಿ’, ‘ಘೋಡ್ಯಾ ಪುಡೇ ಗೀತಾ’ ಎನ್ನುವ ನಾಟಕಗಳನ್ನು ಬರೆದಿದ್ದಾರೆ. ಆದರೆ ಇವುಗಳಿಗಿಂತ ದೊಡ್ಡ ಹೆಸರು ಅವರಿಗೆ ಬಂದದ್ದು ಅವರ ಇತರ ಕೃತಿಗಳಿಗೆ. ‘ದ್ರವಿಡ ಮಹಾರಾಷ್ಟ್ರ’, ‘ಭಾರತೀಯ ಮಿಥ್ಯಾಂಚಾ ಮಾಗೋವಾ’ ‘ವೇದಾತಿಲ ಗಾಣೀ’ ‘ಜ್ಞಾನೇಶ್ವರಾಂಚೇ ಚಮತ್ಕಾರ’ ಮೊದಲಾದವುಗಳಿಂದ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಭಾಷಾ ಸನ್ಮಾನ್ ಪ್ರಶಸ್ತಿ, ಮಹಾರಾಷ್ಟ್ರ ಶಾಸನ ಪ್ರಶಸ್ತಿಗಳಂಥವು ಬಂದಿವೆ. ಅವರು ಉಪನ್ಯಾಸಕ್ಕೆ ಬರುತ್ತಾರೋ ಇಲ್ಲವೋ ಎಂಬ ಆತಂಕ ನನಗೆ ಇತ್ತು. ಈಗ ಅವರು ಒಪ್ಪಿದ್ದು ತುಂಬ ಸಂತೋಷ ನೀಡಿದೆ’ ಎಂದರು. + +ಸತೀಶ್ ಕುಲಕರ್ಣಿ ಎರಡೆರಡು ಬಾರಿ ಆ ಆಮಂತ್ರಣವನ್ನು ಹಿಂದೆ ಮುಂದೆ ತಿರುಗಿಸಿ ನೋಡಿ ‘ತುಂಬಾ ಚೆನ್ನಾಗಿ ಆಮಂತ್ರಣ ಪ್ರಿಂಟ್ ಮಾಡಿಸಿದ್ದೀರಿ ಸರ್ ಕಂಗ್ರಾಟ್ಸ್’ ಎಂದರು. + +ರಾಯರು ಸುಮ್ಮನೆ ಮುಗುಳುನಕ್ಕು ‘ನಾನು ಕಾಟಾಚಾರಕ್ಕೆ ಯಾವುದನ್ನೂ ಮಾಡುವುದಿಲ್ಲ ಕುಲಕರ್ಣಿ. ನಮ್ಮ ಬಸವೇಶ್ವರ ಕಾಲೇಜ್ ಟ್ರಸ್ಟಿನ ಅಧ್ಯಕ್ಷರಿದ್ದಾರಲ್ಲ ಎಂ.ಎಸ್.ಪಾಟೀಲರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ವಾರದ ಮೆಗಝಿನ್‍ನಲ್ಲಿ ಒಮ್ಮೆ ನಾನು ‘ಅಲ್ಲಮ ಮತ್ತು ಬುದ್ಧ’ ಎಂದು ಬರೆದ ಲೇಖನವೋದಿ ನನ್ನನ್ನು ಮನೆಗೆ ಕರೆಸಿ ‘ತುಂಬಾ ಚೆನ್ನಾಗಿ ಬರೆದಿದ್ದೀರಿ ಮಿ.ರಾವ್.ಐ ಆಮ್ ವೆರಿಮಚ್ ಇಂಪ್ರೆಸ್‍ಡ್ ಬೈದಟ್ ಆರ್ಟಿಕಲ್’ ಎಂದು ಅಭಿನಂದಿಸಿ ‘ಕನ್ನಡದಲ್ಲಿ ನೀವು ಹೆಚ್ಚು ಹೆಚ್ಚು ಬರೆಯಬೇಕು’ ಎಂಬ ಸಲಹೆ ನೀಡಿದ್ದರು. ಆದರೆ ಬರವಣಿಗೆ ಅನ್ನುವುದು ನನಗೆ ತುಂಬಾ ಉದಾಸೀನದ ಕೆಲಸ. ಬಟ್ ಸ್ಪೀಚ್ (Speech) ಕೊಡೋದು ಅಂದರೆ ತುಂಬಾ ಇಷ್ಟ. ನನ್ನ ಭಾಷಣಗಳನ್ನು ರೆಕಾರ್ಡ್ ಮಾಡಿಸಿಕೊಳ್ಳಿ ಅಂದವರೂ ಇದ್ದಾರೆ. ಅದೇನು ಮಹಾಘನಕಾರ್ಯ ಅಂತ ನಾನು ಸುಮ್ಮನಿದ್ದೇನೆ. ಒಟ್ಟು ಇಪ್ಪತ್ಮೂರು ಇಪ್ಪತ್ತನಾಲ್ಕು ಲೇಖನಗಳನ್ನು ಈ ತನಕ ನಾನು ಬರೆದಿರಬಹುದು. ಇಂಗ್ಲೀಷಿನಲ್ಲಿ ಸುಮಾರು ಹತ್ತರಷ್ಟು’ ಎಂದು ಗಂಭೀರವಾಗಿಯೇ ಹೇಳಿ ‘ಮತ್ತೊಮ್ಮೆ ಅದೇ ಡೆಕ್ಕನ್ ಹೆರಾಲ್ಡ್‍ನಲ್ಲಿ ನಾನು ಬರೆದ ‘ಬಸವಣ್ಣ ಮತ್ತು ಕಾರ್ಲ್‍ಮಾಕ್ರ್ಸ್’ ಲೇಖನವೋದಿದ ಪಾಟೀಲರು ಆ ಲೇಖನ ಪ್ರಕಟವಾದ ಸಂಜೆಯೇ ನನ್ನನ್ನು ಅವರ ಮನೆಗೆ ಖುಶಿಯಿಂದ ಆಹ್ವಾನಿಸಿದ್ದರು. ಅವರಲ್ಲಿಗೆ ನಾನು ಹೋದಾಗ ‘ಅದ್ಭುತವಾಗಿದೆ ನಿಮ್ಮ ಲೇಖನ. ಎಷ್ಟಿವೆ ಹೇಳಿ ನಿಮ್ಮ ಇಂಥ ಲೇಖನಗಳು?’ ಎಂದು ವಿಚಾರಿಸಿದ್ದ ಅವರು ‘ಇರಲಿ ಇನ್ನೂ ಒಂದಷ್ಟು ಬರೆಯಿರಿ. ನಾವೇ ಪ್ರಕಟಿಸೋಣವಂತೆ’ ಎಂದು ಹೇಳಿ ‘ಮಿ.ರಾವ್, ನಮ್ಮ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಕೆಲವು ಚಿಂತಕರ ಉಪನ್ಯಾಸಗಳನ್ನು ಯಾಕೆ ಏರ್ಪಡಿಸಬಾರದು ನಾವು? ಈಗಿರುವ ಕಾಲೇಜಿನ ಕನ್ನಡ ಸಂಘದಲ್ಲಿ ಇಂಥ ಕಾರ್ಯಕ್ರಮಗಳು ನಡೆಯುತ್ತಿಲ್ಲ ಅಂತ ಅಲ್ಲ. ಬಟ್ ಅವರಿಗೆ ಹೌ ಟು ಆರ್ಗನೈಸ್ ಅನ್ನೋದು ಗೊತ್ತಿದ್ದ ಹಾಗಿಲ್ಲ!’ ಎಂದಿದ್ದರು’ ಎಂದರು. + +ರಾಯರು ಪಾಟೀಲರ ಸಲಹೆಗೆ ಪ್ರತಿಕ್ರಿಯೆ ಕೊಟ್ಟಿರಲಿಲ್ಲ. ಆದರೆ ಪಾಟೀಲರೇ ಆಮೇಲೆ ‘ಡೋಂಟ್ ಮಿಸ್ ಅಂಡರ್‍ಸ್ಟೇಂಡ್ ಮಿ ರಾವ್. ನಮ್ಮ ಕನ್ನಡವಿಭಾಗ ಚೆನ್ನಾಗಿಲ್ಲ ಅಂತ ನಾನು ಹೇಳುತ್ತಿಲ್ಲ. ನಿಮ್ಮಂತಹ ಇಂಗ್ಲೀಷ್ ಪ್ರಾಧ್ಯಾಪಕರ ನೆರವು ಪಡೆದು ಅದನ್ನು ನಮ್ಮ ರಾಜ್ಯದ ಒಂದು ಪ್ರತಿಷ್ಠಿತ ಕನ್ನಡ ಸಂಘವಾಗಿ ಮಾಡಬೇಕು ಅಂತ ನನಗೆ ಅನಿಸಲಿಕ್ಕೆ ಹತ್ತಿದೆ. ಹಿಂದೆ ಜಿ.ಪಿ.ರಾಜರತ್ನಂ ಸೆಂಟ್ರಲ್ ಕಾಲೇಜಿನಲ್ಲಿ, ಚಿ. ಶ್ರೀನಿವಾಸರಾಜು ಕ್ರೈಸ್ತ ಕಾಲೇಜಿನಲ್ಲಿ ತುಂಬಾ ಚೆನ್ನಾಗಿ ಇಂಥದ್ದನ್ನು ನಡೆಸಿದ್ದಾರೆ ಎಂದು ಕೇಳಿಬಲ್ಲೆ. ಹಾಗೆ ರಾಂಪುರದ ಬಸವೇಶ್ವರ ಕಾಲೇಜಿನಲ್ಲೂ ಒಂದು ಒಳ್ಳೆ ಕನ್ನಡ ಸಂಘವೋ ಸಾಹಿತ್ಯ ಸಂಘವೋ ಇದೆ ಅಂತ ಜಗಜ್ಜಾಹೀರಾಗಲಿ ಎಂಬ ಕನಸು ನನ್ನದು!’ ಎಂದಿದ್ದರು. ಆಗ ರಾಯರು ಅದಕ್ಕೆ ‘ಆಗಬಹುದು ಸರ್’ ಎಂದು ಒಪ್ಪಿಗೆ ಸೂಚಿಸಿ ಬಂದಿದ್ದರು. + +ಆಮೇಲೆ ಪಾಟೀಲರ ಭೇಟಿಗೆ ಒಪ್ಪಿಗೆ ಪಡೆದ ರಾಯರು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಮುದಿಗೌಡರನ್ನು ಕೂಡಿಕೊಂಡು ಪಾಟೀಲರನ್ನು ಭೇಟಿಮಾಡಿ ‘ನಮ್ಮ ಮೇಟಿ ಮುದಿಗೌಡರು ನಿಮ್ಮ ಸೂಚನೆಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಸರ್, ಅದನ್ನು ಹೇಳೋಣ ಅಂತ ಬಂದಿದ್ದೇವೆ’ ಎಂದರು. + +‘ಎಸ್.ಮಿ ಮುದಿಗೌಡರ’ ಎಂದು ಬಸವೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರನ್ನು ಸಂಬೋಧಿಸಿದ ಪಾಟೀಲರು ‘ನಿಮ್ಮಿಬ್ಬರಿಗೂ ನನ್ನದೊಂದು ಸೂಚನೆ ಇದೆ. ನಮ್ಮ ಕಾಲೇಜಿನಲ್ಲಿ ವರುಷಕ್ಕೆ ಕನಿಷ್ಠ ಮೂರು ಸಲ ನಾಡಿನ ಪ್ರಖ್ಯಾತ ವ್ಯಕ್ತಿಗಳನ್ನು ಕರೆಸಿ ಅವರಿಂದ ಒಂದು ಅದ್ಭುತವಾದ ಉಪನ್ಯಾಸವನ್ನು ಈ ವರ್ಷದಿಂದಲೇ ನೀವು ಏರ್ಪಡಿಸಬೇಕು. ಅವರಿಗೆ ಬಂದು ಹೋಗುವ ಪ್ರಯಾಣವೆಚ್ಚ ಉಳಕೊಳ್ಳುವ ವ್ಯವಸ್ಥೆಯ ಎಲ್ಲಾ ಖರ್ಚನ್ನೂ ನಮ್ಮ ಟ್ರಸ್ಟ್ ನೋಡಿಕೊಳ್ಳುತ್ತದೆ. ನಿಮ್ಮ ಸಂಘದಲ್ಲಿ ಫಂಡ್ಸ್ ಇಲ್ಲವಾದರೆ ಅತಿಥಿಗಳ ಗೌರವ ಸಂಭಾವನೆಯನ್ನು ಕೂಡಾ ನಾವೇ ಕೊಡುತ್ತೇವೆ!’ ಎಂದು ಇಬ್ಬರ ಮುಖ ನೋಡಿದ್ದರು. + +ರಾಯರಿಗೆ ಖುಶಿಯಾಗಿತ್ತು. ‘ವೆರಿಗುಡ್ ಐಡಿಯಾ ಸರ್, ಮೆನಿ ಥ್ಯಾಂಕ್ಸ್’ ಎಂದು ಅವರು ತನ್ನ ಕೈಬೆರಳುಗಳ ನೆಟಿಕೆ ತೆಗೆದಿದ್ದರು. ಮುದಿಗೌಡರು ಎರಡೂ ಕೈಗಳನ್ನು ಜೋಡಿಸಿ ‘ತುಂಬಾ ಥ್ಯಾಂಕ್ಸ್ ಸರ್. ಖಂಡಿತ ಹಾಗೇ ಮಾಡ್ತೇವೆ. ಬಟ್ ಈ ವಿಶೇಷ ಕಾರ್ಯಕ್ರಮಕ್ಕೆ ಕನ್ವೀನರ್ ಆಗಿ ನಮ್ಮ ರಾಯರೇ ಇರಬೇಕು. ಅದನ್ನು ಅವರಿಗೆ ತಾವು ಹೇಳಬೇಕು’ ಎಂದಿದ್ದರು. + +ಪಾಟೀಲರು ‘ಇಲ್ಲ ಅಂತ ಎಲ್ಲಿ ಹೇಳುತ್ತಾರೆ ಅವರು? ಏನ್ರೀ ರಾಯರೇ’ ಎಂದು ಶ್ರೀನಿವಾಸ ರಾಯರ ಮುಖ ನೋಡಿದ್ದರು. + +‘ಖಂಡಿತ ಸರ್, ನಾನು ನಡೆಸಿಕೊಡುತ್ತೇನೆ. ಬಟ್ ಒಂದು ರಿಕ್ವೆಸ್ಟ್ ಇದೆ ಸರ್. ತಾವು ಅಂಥ ಕಾರ್ಯಕ್ರಮಗಳ ಅಧ್ಯಕ್ಷತೆ ವಹಿಸಬೇಕು’. + +‘ನೋಡೋಣ ನೋಡೋಣ. ನಿಮ್ಮ ಪ್ರಿನ್ಸಿಪಲ್ ಸಾಹೇಬರಿದ್ದಾರಲ್ಲ ಅವರಿಗೆ ಹೇಳಿ. ಅವಕಾಶ ಇದ್ದರೆ ನಾನು ಬಂದು ಕೇಳುಗನಾಗಿ ಇರುತ್ತೇನೆ’ ಎಂದಿದ್ದರು ಪಾಟೀಲರು. + +ಹೀಗೆ ಬಸವೇಶ್ವರ ಕಾಲೇಜಿನ ಕನ್ನಡಸಂಘದ ಆಶ್ರಯದಲ್ಲಿ ತಪ್ಪದೇ ವರುಷಕ್ಕೆ ಎರಡು ಮೂರು ಉಪನ್ಯಾಸಗಳು ನಡೆಯತೊಡಗಿದುವು. ಪಾಟೀಲರ ಒಪ್ಪಿಗೆ ಪಡೆದೇ ಈ ಕಾರ್ಯಕ್ರಮಗಳನ್ನು ರಾಯರು ಸಂಯೋಜಿಸುತ್ತಿದ್ದರು. ದೊಡ್ಡ ಉದ್ಯಮಿಯಾಗಿರುವ ಪಾಟೀಲರು ಕೆಲವೊಂದು ಸಂದರ್ಭದಲ್ಲಿ ಈ ಉಪನ್ಯಾಸ ಕಾರ್ಯಕ್ರಮಗಳ ಸಂದರ್ಭ ಇರುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ಆ ಭಾಷಣವನ್ನು ಅವರು ರೆಕಾರ್ಡ್ ಮಾಡಿಸಿ ಮನೆಗೆ ತರಿಸಿಕೊಂಡು ಮನೆಯ ಡ್ರಾಯಿಂಗ್ ರೂಮಿನಲ್ಲಿ ಕುಳಿತುಕೊಂಡು ಕೇಳುತ್ತಿದ್ದರು. ಆಮೇಲೆ ಖುಶಿಯಿಂದ ರಾಯರಿಗೆ ಫೋನು ಮಾಡಿ ‘ವೆಲ್‍ಡನ್ ವೆಲ್‍ಡನ್’ ಎಂದು ಹೇಳಲು ಮರೆಯುತ್ತಿದ್ದಿಲ್ಲ. ಇದರಿಂದಾಗಿ ಬಸವೇಶ್ವರ ಕಾಲೇಜಿನಲ್ಲಿ ರಾಯರ ಸ್ಥಾನಮಾನ ಏರಿತ್ತು ಮತ್ತು ಕಾಲೇಜ್ ಟ್ರಸ್ಟಿನ ಅಧ್ಯಕ್ಷರ ಜೊತೆ ರಾಯರ ಸಂಬಂಧ ಒಳ್ಳೆದಿದೆ ಎನ್ನುವುದು ರುಜುವಾತಾಗಿ ಅನೇಕರು ರಾಯರ ಬಗ್ಗೆ ಇನ್ನಿಲ್ಲದ ಗೌರವ ತೋರಿಸಹತ್ತಿದ್ದರು. ಸ್ವತ: ಪ್ರಾಂಶುಪಾಲರು ಸಹ ಕಾಲೇಜ್‍ಡೇ ಅಥವಾ ಇನ್ನಿತರ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ ರಾಯರನ್ನು ಕರೆಸಿ ‘ಹೀಗೆ ಮಾಡಿದರೆ ಹೇಗೆ?’ ಎಂದು ಕೇಳಹತ್ತಿದರು. ಅಥವಾ ‘ಇದು ನನ್ನ ಯೋಚನೆ. ನಿಮ್ಮದು ಇದ್ದರೆ ಹೇಳಿ ಸರ್’ ಎಂದು ಅಭಿಪ್ರಾಯ ಕೇಳಿ ‘ಎಸ್ ಹಾಗೇ ಮಾಡೋಣ’ ಎಂದು ಅದನ್ನೇ ನಡೆಸಿಕೊಡುತ್ತಿದ್ದರು. + +ಇದೆಲ್ಲ ಸತೀಶ ಕುಲಕರ್ಣಿಯವರಿಗೆ ಸ್ವಲ್ಪ ಸ್ವಲ್ಪ ಗೊತ್ತಿತ್ತು. ರಾಯರು ಸಾಂದರ್ಭಿಕವಾಗಿ ಈ ಕಾರ್ಯಕ್ರಮದ ಹಿನ್ನೆಲೆಯನ್ನು ವಿವರಿಸಿದಾಗ ‘ಹೌದಾ?’ ಎಂದು ಅಶ್ಚರ್ಯವ್ಯಕ್ತಪಡಿಸಿದ ಅವರು ಮನಸ್ಸಿನಲ್ಲೇ ಈ ಮನುಷ್ಯ ‘ಅದ್ಭುತ ವ್ಯಕ್ತಿ’ ಎಂದುಕೊಂಡರು. + +ಬಸವೇಶ್ವರ ಕಾಲೇಜಿನಲ್ಲಿ ಖೈರೆ ಅವರ ಉಪನ್ಯಾಸ ತುಂಬ ಚೆನ್ನಾಗಿ ನಡೆಯಿತು. ಖೈರೆಯವರು ‘ಬಯಲಿನ ಮ್ಹಾತು ಬಾ’ ಎಂದು ಬರೆದಿದ್ದ ಲೇಖನದ ಹಿನ್ನೆಲೆಯಲ್ಲಿ ಮಾತನಾಡಿದರು. ಅದು ಜನಪದ ಸಂಸ್ಕೃತಿ, ಮಹಾರಾಷ್ಟ್ರದ ಪರಿಸರ, ಮಿಸ್ರದ ದೈವಸ್ಥಾನ, ಮೊಹೆಂಜೊದಾರೋದ ಸಂಸ್ಕೃತಿ ವೈದಿಕ ಸಂಪ್ರದಾಯಗಳನ್ನೆಲ್ಲ ತನ್ನ ತೆಕ್ಕೆಗೆ ತೆಗೆದುಕೊಂಡ ಉಪನ್ಯಾಸವಾಗಿತ್ತು. ಆ ಲೇಖನ ಆಗಲೇ ಮರಾಠಿಯಲ್ಲಿ ಪ್ರಕಟವಾದಾಗ ಖೈರೆಯವರು ಒಬ್ಬ ಅಪರೂಪದ ಚಿಂತಕ ಮತ್ತು ಸಂಶೋಧಕರೆಂದು ಪ್ರಸಿದ್ಧಿಗೆ ಬಂದಿದ್ದರು. ಅದು ಇರಾವತಿ ಕರ್ವೆಯವರ ಸರ್ವೋತ್ತಮ ಲೇಖನಗಳ ಎತ್ತರವನ್ನು ತಲುಪಿದೆ ಅಥವಾ ಇದು ಕರ್ವೆಯವರ ಲೇಖನಕ್ಕಿಂತ ಎತ್ತರದಲ್ಲಿ ಇದೆ ಎಂದು ಮಹಾರಾಷ್ಟ್ರದ ಪ್ರಸಿದ್ಧ ಲೇಖಕ ಪ್ರೊ! ಲೀಲಾ ಅರ್ಜುನವಾಡಕರಂಥವರು ಹೇಳಿದ ಮಾತನ್ನು ಸಹ ಶ್ರೀನಿವಾಸರಾಯರು ಖೈರೆಯವರನ್ನು ಪರಿಚಯಿಸುವ ಸಂದರ್ಭದಲ್ಲಿ ಪ್ರಸ್ತುತಪಡಿಸಿದ್ದರು. + +ಖೈರೆಯವರು ತಮ್ಮ ಉಪನ್ಯಾಸದಲ್ಲಿ ಸಂಶೋಧನೆಗೆ ಸಂಬಂಧಿಸಿದ ಕೆಲವು ಮಹತ್ವದ ವಿಚಾರಗಳನ್ನು ಆಡಿದ್ದರು. + +ಮಿಥ್ಯೆಗಳ ಹಿನ್ನೋಟ ಹಾಗೂ ಮಿಥ್ಯೆಗಳ ಗ್ರಹಿಕೆ ಇವೆರಡರಲ್ಲೂ ಸಂಶೋಧನೆಯಿದೆ. ಸಂಕಲನವಿಲ್ಲ. ಮಿಥ್ಯೆ ಹಾಗೂ ಮಿಥ್ಯಕಥೆಗಳ ರೂಪುಗೊಳ್ಳುವಿಕೆಗೆ ನೆರವಾಗುವ ಮೆದುಳಿನ ಸಾಮಥ್ರ್ಯವು ಸಾಹಿತ್ಯಕ್ಕೂ ಪ್ರಯೋಜನಕಾರಿಯಾದುದು. ಇಂಥ ಸಂಶೋಧನೆಯು ಒಂದೆಡೆ ಸಂಸ್ಕೃತಿ ಹಾಗೂ ಸಾಹಿತ್ಯದೊಡನಾದರೆ ಇನ್ನೊಂದೆಡೆಗೆ ವಿಜ್ಞಾನ ಹಾಗೂ ವ್ಯವಹಾರಗಳ ಹುಟ್ಟು ವಿಕಾಸಗಳೊಡನೆ ನಂಟುಳ್ಳದ್ದು. ಹೀಗಾಗಿ ಈ ಸಂಶೋಧನೆಗಳು ಹಲವು ವಿಧವಾಗಿವೆ. ಶುರುವಿನಿಂದಲೇ ಇಂಥವು ‘ಸತ್ಯಕಥಾ’, ‘ಮೌಜ’ ಮೊದಲಾದ ರಸಿಕಮನ್ನಣೆ ಹಾಗೂ ವಿದ್ವಾಂಸಮನ್ನಣೆಯನ್ನು ಪಡೆದ ಸಂಚಿಕೆಗಳಲ್ಲಿ ಪ್ರಕಟವಾದ ಕಾರಣ ಅವು ಮರಾಠಿ ಅಧ್ಯಯನಶೀಲರ ಅರಿವಿನ ಮಟ್ಟವನ್ನು ತಲುಪಿತ್ತಾದರೂ ಅವರು ಅವನ್ನು ಕುರಿತು ಕೂಲಂಕಷವಾಗಿ ಪರ ವಿರೋಧದ ಯೋಚನೆಯನ್ನು ಮಾಡಿಲ್ಲ. ಅವು ವಿಶ್ವವಿದ್ಯಾಲಯಗಳ ಅಧ್ಯಯನಕ್ರಮ, ಸಂಶೋಧನೆ ಹಾಗೂ ಚರ್ಚೆಗಳೊಂದಿಗೆ ಬೌದ್ಧಿಕ ಹೆಣಗಾಟವನ್ನು ಮಾಡುವ ಮಟ್ಟಿಗೆ ತಲುಪಿಲ್ಲ. ಇದರಿಂದಾಗಿ ಈ ಸಂಶೋಧನೆಗಳ ಫಲಿತಾಂಶಗಳನ್ನು ಸ್ವೀಕರಿಸುವ ಮಾತಂತೂ ದೂರವೇ ಉಳಿಯಿತು. ಮಿಥ್ಯೆಗಳ ಈ ಸಾಹಿತ್ಯವು ಸಂಸ್ಕೃತಿಕಥೆ, ಅರ್ಥಾಂತರಗಳು, ಹೊಳಪಿನ ಕಲ್ಪನೆಗಳನ್ನೆಲ್ಲ ‘ಮಿಥಿಕ್’ ಎಂದುಕೊಂಡು, ಅವುಗಳ ಸಂಕಲನ, ರಸಗ್ರಹಣ ಅಥವಾ ಅಂಥವುಗಳ ಪರಿಧಿಯಲ್ಲಿ ತಡವರಿಸುತ್ತಿದೆ. ಸಾಹಿತ್ಯದ ದೇಶಿತನ ಅಥವಾ ಸಮಾಜ ಪರಿವರ್ತನೆಗಳನ್ನು ಮುಖ್ಯ ಶಬ್ದಗಳನ್ನಾಗಿ ಮಾಡಿಕೊಂಡು ಕಥೆಗಳ ಪಠ್ಯಗಳನ್ನು ಅರ್ಥೈಸುತ್ತ ಅವುಗಳನ್ನು ಬಳಸುವ ಯತ್ನ ನಡೆಯುತ್ತಿದೆ. ಈ ದೃಷ್ಟಿಯಿಂದ ಮೌಖಿಕ ಪಠ್ಯಗಳ ಹಿನ್ನೆಲೆ ಹಾಗೂ ಮೂಲವನ್ನು ತಲುಪಬಲ್ಲ ಗ್ರಹಿಕೆಯ ಬಗೆಗಿನ ಒತ್ತಾಯವನ್ನು ಒಂದು ಬಗೆಯ ತೊಡಕು ಎಂದು ಭಾವಿಸಲಾಗುತ್ತದೆ. + +ಇಂಥ ವಾತಾವರಣದಲ್ಲಿ ಬೆಳೆಯುತ್ತಿರುವ ಹೊಸತಲೆಮಾರು ಈ ಸಂಶೋಧನೆಯ ತೆರೆದ ಗಾಳಿಯ ಆರೋಗ್ಯಕರವಾದ ಉಸಿರನ್ನು ಹೀರಿಕೊಳ್ಳಲೆಂದು ಅದು ಇನ್ನೊಮ್ಮೆ ಅದರೆದುರು ಬರುತ್ತಿದೆ. ಇಂಗ್ಲೀಷ್ ಲೇಖಕರ ಆಧಾರ ಇಲ್ಲವೆ ಅವರ ಅವತರಣಿಕೆಗಳನ್ನು ತೆಗೆದುಕೊಂಡು ಅದನ್ನು ಸಿಂಗರಿಸಲಾಗಿಲ್ಲ. ಅದರ ಮಾದರಿ ಅಪ್ಪಟ ದೇಸಿಯಾದರೂ ಅದರ ಗುಣ ಮಾತ್ರ ಅಭಿಜಾತ ಸಂಶೋಧನೆಯದ್ದು. ಅದು ಭಾರತವಿದ್ಯೆಯ ಯುರೋಪುಕೇಂದ್ರದ ಸ್ವರೂಪವನ್ನು ಬದಲಾಯಿಸಿ ಹೊಸ ಭಾರತವಿದ್ಯೆಯನ್ನು ಕಟ್ಟಿ ನಿಲ್ಲಿಸುವ ಅಂತ:ಸಾಮಥ್ರ್ಯವನ್ನು ಹೊಂದಿದೆ. ಕಳೆದ ತಲೆಮಾರು ರಾಜಕೀಯ ಸ್ವಾತಂತ್ರ್ಯವನ್ನು ಪಡೆದದ್ದರಿಂದ ಈ ಶತಮಾನದ ತಲೆಮಾರು ಮಾನಸಿಕ ಸ್ವಾತಂತ್ರ್ಯವನ್ನು ವಶಪಡಿಸಿಕೊಳ್ಳಬೇಕು. ಅದಕ್ಕಾಗಿ ಸಮಾಜದ ಮನಸ್ಸಿನ ಮೇಲೆ ರಾಜ್ಯವನ್ನು ಆಳುತ್ತಿರುವ ಸಂಸ್ಕೃತಿ ಕಥೆಗಳನ್ನು ಬೇರುಸಹಿತ ಅರ್ಥಮಾಡಿಕೊಳ್ಳುವುದು ಅವಶ್ಯಕ. ಅದನ್ನು ಮಾಡಿಕೊಳ್ಳುವ ಕೆಲವು ದಿಕ್ಕುಗಳು, ಕೆಲವು ದಾರಿಗಳು ಹಾಗೂ ಕೆಲವು ಸಾಧನೆಗಳು ಈ ಸಂಶೋಧನೆಯಲ್ಲಿ ಖಂಡಿತ ದೊರೆಯುವುವು. ಹೊಸ ತಲೆಮಾರು ಅವುಗಳಿಂದ ಲಾಭ ಪಡೆಯಬೇಕು. ಭವಿಷ್ಯ ಕಾಲವು ಖಂಡಿತ ಹೊಸ ತಲೆಮಾರಿನದು.ಈ ರೀತಿಯ ಖೈರೆ ಅವರ ಉಪನ್ಯಾಸವು ಮುಗಿದ ತಕ್ಷಣ ವೇದಿಕೆಯ ಇದಿರಲ್ಲೇ ಕುಳಿತಿದ್ದ ಪಾಟೀಲರು ವೇದಿಕೆ ಹತ್ತಿ ಖೈರೆಯವರಿಗೆ ಹಸ್ತಲಾಘವ ನೀಡಿ ಅಭಿನಂದಿಸಿದರು. ‘ತುಂಬಾ ಮಹತ್ವದ ವಿಚಾರಗಳನ್ನು ತಾವು ಹೇಳಿದ್ದೀರಿ. ನನಗೆ ತುಂಬಾ ಖುಶಿಯಾಗಿದೆ’ ಎಂದವರೇ ವೇದಿಕೆಯಲ್ಲಿದ್ದ ಶ್ರೀನಿವಾಸರಾಯರ ಕೈಕುಲುಕಿ ‘ಒಳ್ಳೆ ವ್ಯಕ್ತಿಯನ್ನು ಆಯ್ಕೆ ಮಾಡಿದ್ದೀರಿ. ನಾನು ಬೆಳಗಾವಿಯವ. ನನಗೆ ಮರಾಠಿ ಸ್ವಲ್ಪ ಗೊತ್ತು. ನಾನು ಅವರನ್ನು ಮರಾಠಿಯಲ್ಲೇ ಅಭಿನಂದಿಸಿದೆ. ಭಾಷೆಗಳ ವಿಚಾರದಲ್ಲಿ ದುರಭಿಮಾನ ಇರಬಾರದು. ವಿಚಾರಗಳು ಯಾವ ಭಾಷೆಯದ್ದೇ ಆಗಿರಲಿ. ಅದರಲ್ಲಿ ಸತ್ವ ಮತ್ತು ಮಹತ್ವ ಇದ್ದರೆ ಅದನ್ನು ಸ್ವೀಕರಿಸಬೇಕು! ಇದೇ ಉದ್ದೇಶದಿಂದ ನಮ್ಮ ಬಸವಸಮಿತಿಯವರು ವಚನಕಾರರ ವಚನಗಳನ್ನು ಬೇರೆ ಬೇರೆ ಭಾಷೆಗಳಿಗೆ ಅನುವಾದಿಸಬೇಕು ಎಂದು ಆಗಲೇ ಯೋಚಿಸಿದ್ದಾರೆ. ಇದು ಒಂದು ಒಳ್ಳೆಯ ಯೋಚನೆ. ಕನ್ನಡದ ಯೋಚನೆಗಳು ದೇಶದಲ್ಲಿ ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಪ್ರಸಾರವಾಗಬೇಕು. ಅದರ ಮಹತ್ವ ಇಡೀ ಜಗತ್ತಿಗೆ ಗೊತ್ತಾಗಬೇಕು’ ಎಂದು ಹೇಳಿ ‘ನೀವು ನನ್ನ ಯೋಚನೆಯನ್ನು ಅದ್ಭುತವಾಗಿ ಕಾರ್ಯಗತಗೊಳಿಸುತ್ತಿದ್ದೀರಿ. ಐ ಆಮ್ ವೆರಿ ಪ್ರೌಡ್ ಆಫ್ ಯು’ ಎಂದು ಅಭಿನಂದಿಸಿದರು. + + + +ರಾಯರಿಗೆ ವೇದಿಕೆಯಲ್ಲೇ ಕಾಲೇಜ್ ಟ್ರಸ್ಟಿನ ಅಧ್ಯಕ್ಷರಿಂದ ಮೆಚ್ಚುಗೆ ಸಿಕ್ಕಿದ್ದು ತುಂಬ ಸಂತೋಷ ನೀಡಿತ್ತು. ಅವರು ‘ಥ್ಯಾಂಕ್ ಯೂ ಸರ್’ ‘ಥ್ಯಾಂಕ್ ಯೂ ಸರ್’ ಎಂದು ಎರಡೆರಡು ಸಲ ಕೃತಜ್ಞತೆ ಸೂಚಿಸಿ ಖೈರೆಯವರನ್ನು ಅವರು ಉಳಿದುಕೊಂಡಿದ್ದ ಹೋಟೇಲಿಗೆ ಕರೆದೊಯ್ದಿದ್ದರು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_228.txt b/Kenda Sampige/article_228.txt new file mode 100644 index 0000000000000000000000000000000000000000..23fb0ec80bb799426564dac10e522eeab164e897 --- /dev/null +++ b/Kenda Sampige/article_228.txt @@ -0,0 +1,43 @@ +‘ಅಹಂಕಾರವಿಲ್ಲ ಅಲಂಕಾರವಿಲ್ಲ ನಿಜಾಕಾರ ನನ್ನ ಕವಿತೆನನ್ನಾಸೆಗಣ್ಣ ಬಂದರಿಗೆ ಬಂದ ಶರನ್ನೌಕೆ ಈ ಕವಿತೆ’– ಕೆ ಎಸ್ ನರಸಿಂಹ ಸ್ವಾಮಿ + +ಹೀಗೆ ಫೇಸ್ ಬುಕ್ ನ ಅದಾವುದೋ ಪೋಸ್ಟ್ ಮೂಲಕ ಪರಿಚಿತವಾವರು ಕವಿತಾ ಹೆಗಡೆ. ಇದು ಹೀಗೆ ಆಕಸ್ಮಿಕಗಳ ಕಡಲು. ಹೋಗಿ ಬರುವ ಅಲೆಗಳು ಅನಂತ. ಆದರೆ ಕೆಲವು ಅಲೆಗಳು ತಮ್ಮದೇ ಆದ ಬಂದರನ್ನೇ ಎದೆಯೊಳಗೆ ಸೃಷ್ಟಿ ಮಾಡಿ ಬಿಡುತ್ತವೆ. ಗುರುತೊಂದನ್ನು ಉಳಿಸಿಬಿಡುವ ಅಲೆಯ ಚಲಿತದ ತರಹ. ಕವಿತಾ ಅವರು ಹೀಗೆ ತಮ್ಮ ಕ್ರಿಯಾಶೀಲ ಮತ್ತು ನಿರಂತರ ಓದು ಬರಹದ ಮೂಲಕ ಗುರುತು ಉಳಿಸಲು ಸದಾ ಉತ್ಸುಕರಾಗೇ ಇರುತ್ತಾರೆ. + +(ಕವಿತಾ ಹೆಗಡೆ ಅಭಯಂ) + +ಅದು ಅವರದ್ದೇ ಆದ್ಯತೆಯ ಓದು, ಅವರದೇ ಆದ್ಯತೆಯ ಬರಹ, ವಸ್ತುವಿನ ಆಯ್ಕೆ ಅವರದ್ದೇ ಅಭಿರುಚಿಯ ಗಾಢ ಸಜ್ಜನಿಕೆಗಳ ಮೂಲಕ ಉಳಿದುಬಿಡುತ್ತವೆ. ಅವರ ಅಪಾರ ಓದಿನ ಸಾತತ್ಯವೇ ಅವರ ಬರಹದ ಮೂಲ ಸೆಲೆಯೂ ಆಗಿದೆ. ತಮ್ಮನ್ನು ತಾವು ವ್ಯಕ್ತಿತ್ವ ವಿಕಸನ ಮತ್ತು ಮನೋವಿಕಾಸದ ಶೋಧದಲ್ಲಿ ತೊಡಗಿಸಿಕೊಂಡ ಹಾಗೆ ಕಾಣುವ ಕವಿತಾ ಅವರ ಮೂಲ ಅಕ್ಕರೆ ಕವಿತೆಗಳ ಕುರಿತೇ ಅನಿಸುತ್ತದೆ. ಅವರ ಅಂಕಣ ಬರಹ ಮತ್ತು ಫೇಸ್ ಬುಕ್ಕಿನ ಟಿಪ್ಪಣಿಗಳು ಅವರನ್ನು ಗದ್ಯದಲ್ಲಿ ಕಂಡರಿಸುವಂತೆ ಕಂಡರೆ ಒಳ ಮನದಾಳದಲ್ಲಿ ಪದ್ಯದ ತೊರೆಯೊಂದು ಹರಿಯುತ್ತಲೇ ಇರುತ್ತದೆ. ತಾವು ಓದಿದ ಕೃತಿಗಳ ಕುರಿತು ಬರೆವ ಟಿಪ್ಪಣಿಗಳ ಅವರ ಭಾಷೆಯನ್ನು ಗಮನಿಸಿದಾಗ ಅವರ ಭಾಷೆಯ ಪದ್ಯತನದ ದಟ್ಟ ಛಾಯೆ ಅನುಭವಕ್ಕೆ ಬರುತ್ತದೆ. + +ಸದ್ಯ ಬಹಳ ದಿನಗಳಿಂದ ನನ್ನ ಅಂತರಂಗಕ್ಕೆ ಸುರಿದುಕೊಂಡ ಕವಿತಾ ಅವರ ಕವಿತೆಗಳು ಕೊಟ್ಟ ಸಂವೇದನೆಗಳಿಗೆ ಇಲ್ಲಿ ಶಬ್ದ ರೂಪ ಕೊಡಲು ಕೂತಿದ್ದೇನೆ. ಕಳೆದ ಮೂವತ್ತು ವರ್ಷಗಳಿಂದ ಕೇವಲ ಕವಿತೆಗಳನ್ನೆ ನಚ್ಚಿಕೊಂಡು ಕೂತ ನನಗೆ ಚೆನ್ನಾಗಿ ಬರೆವ ಹೊಸಬರ ಪದ್ಯಗಳು ಅವು ಪಠ್ಯವಾಗೇ ಕಾಣಿಸುತ್ತದೆ. ಗೋಚರಿಸದ ಲೋಕವೊಂದು ನನಗೆ ನೀಡಬಹುದಾದ ಅಸೀಮ ಅನುಭವಗಳಿಗೆ ಕಾಯುತ್ತಲೇ ಓದುತ್ತೇನೆ. ಕವಿತಾ ಹೆಗಡೆ ಅವರ ಇಲ್ಲಿನ ರಚನೆಗಳು ನನಗೆ ಹೊಸ ಪಠ್ಯವಾಗೇ ಅನುಭವಕ್ಕೆ ಬಂದವು. ಈಗಾಗಲೇ ರಾಶಿಬಿದ್ದ ಕಾವ್ಯ ಲೋಕದ ಶಬ್ದರೂಪೀ ಸಂವೇದನೆಗಳ ನಡುವೆಯೇ ಇವರು ಎಲ್ಲಿ ಹೇಗೆ ಭಿನ್ನರಾಗಿ ನಿಲ್ಲಬಲ್ಲರು ಎಂಬ ಕುತೂಹಲ ನನ್ನದು. + +“ಉಪ್ಪು ನೀರಲ್ಲಿ ಹಾಕಿದಮಾವಿನ ಮಿಡಿ ಹೃದಯಮಾಯದು ಗಾಯಗಾಯವಾಗದು ಮಾಯ”ಎಂಬ ಸಾಲುಗಳಲ್ಲಿ ಕಾಣಿಸುವ ಹೊಸತನ ಕವಿತಾ ಅವರ ಚಿಂತನಾ ಕ್ರಮದ ನಿತ್ಯ ನೂತನತೆಯನ್ನು ಹಿಡಿದು ಕೊಡಬಲ್ಲದು. ನಿಜವಾದ ಕವಿತೆಗಳಿಗೆ ಪದಗಳ ಹಂಗು ಭಾರ ಖಂಡಿತ ಬೇಡ. ಶಬ್ದಾಡಂಬರ ಇರದೆಯೂ ಅದು ಚಿಮ್ಮಿಸುವ ಅರ್ಥದ ಆಯಾಮವೇ ಮುಖ್ಯ. ಚಿರಪರಿಚಿತ ಅಡುಗೆ ಮನೆಯ ಒಂದು ಖಾದ್ಯದ ಮೂಲಕವೇ ವಿಸ್ತರಿಸಿಕೊಳ್ಳುವ ಕಾವ್ಯದ ಗುಣ ಇಲ್ಲಿ ಚರ್ಚಾರ್ಹ. ಉಪ್ಪು ನೀರಿನ ಬಂಧವು ಅದು ಮುಕ್ತಿಯ ರೂಪಕವಾಗಿಯೂ ನಿಭಾಯಿಸಬಲ್ಲದು ಎಂಬ ಹೊಸ ಮಾತು ಈ ಪದ್ಯದಲ್ಲಿ ಇದೆ. + +ಹುಲಿಚರ್ಮವನ್ನು ಹಾಸಿಕೊಂಡು ಕೂತ ಸನ್ಯಾಸಿ ಕುರಿತ ಜಿಜ್ಞಾಸೆಯಂತೆ ಇಲ್ಲಿನ ಅನೇಕ ಕವಿತೆಗಳು ಮೈದಾಳಿವೆ. ಅವ ಕೂತ ಚರ್ಮದಲಿ ಜೀವ ತುಂಬಿದರೆ ಎನ್ನುವ ಪ್ರಶ್ನೆಗಳೆ ಇಡೀ ಸಂಕಲನವನ್ನು ರೂಪಿಸಿವೆ. ಕವಿಗೆ ಇದು ಅಗತ್ಯ ಕೂಡಾ. ಪ್ರಶ್ನೆಗಳನ್ನು ಕೇಳುವ ಕವಿತೆಗಳು ಯಾವತ್ತೂ ಗೆದ್ದಿವೆ. + +ಕವಿತೆಗಳು ಒಣ ವಿವರಗಳ ಭಾಷಣಗಳಾಗಬಾರದೆಂಬ ಎಚ್ಚರ ಕವಿತಾ ಅವರಿಗೆ ಇದೆ. ಈ ಕಾರಣಕ್ಕೆ ಅವರು ಆಯ್ದುಕೊಳ್ಳುವ ವಸ್ತು ಮತ್ತು ಸನ್ನಿವೇಶಗಳು ಹೊಸತನದ ಹುಡುಕಾಟದ ಹಾಗೆ ಗೋಚರಿಸುತ್ತವೆ. ಮಹಾ ಸಂಗಮದಂತಹ ಕವಿತೆಗಳ ವಿಸ್ತಾರಕ್ಕೂ ಈ ಹುಡುಕಾಟವೇ ಕಾರಣವಾಗಿದೆ. ಅವಳಲ್ಲಿ ಒಂದಾಗುವ ಮತ್ತು ಅವಳೇ ತಾನಾಗುವ ಈ ಕ್ರಿಯೆಯಲ್ಲಿ ಯಃಕಶ್ಚಿತ್ ಮನುಷ್ಯನ ಇರುವಿಕೆಯನ್ನು ಪ್ರಶ್ನಿಸಲಾಗಿದೆ. ಅವಳು ಎಂಬುದು ಇಲ್ಲಿ ವ್ಯೋಮವೋ ಭೂಮವೋ ಏನೇ ಇರಲಿ, ಅದು ವ್ಯಕ್ತಿತ್ವದ ಅಹಮಿಕೆಯನ್ನು ಕೆಣಕುತ್ತದೆ ಮತ್ತು ನಿರಸನಗೊಳಿಸುತ್ತದೆ. ಈ ಕಾರಣದಿಂದಲೇ ಕವಿತಾ ಹೆಗಡೆ ಅವರು ನಿಸರ್ಗದ ಧಾತುಗಳನ್ನು ಮೂಲವಾಗಿಟ್ಟುಕೊಂಡು ಮುನ್ನಡೆಯುವುದು. ಅವು ರವಿ, ಮುಂಗಾರಮ್ಮ, ಬೆಳಗು, ಗುಪ್ತಗಾಮಿನಿ, ಮರುಭೂಮಿಯ ಮಲ್ಲಿಗೆ ಇಲ್ಲೆಲ್ಲ ವೇದ್ಯ. + +“ಮಾತಿನರಮನೆಯಲಿ ಅರಗಿಣಿ ನಾನುಮೂಕಳಾಗಲೋ ಮಲ್ಲಿಗೆಯಾಗಲೋ + +ಅತಿ ವೈರುಧ್ಯವೂ ಅನಾಕರ್ಷಕವೆ?ಅತಿ ಸಮರ್ಪಣೆಯೂ ನಿರಾಕರಣೆಯೇ?” + +ಎಂಬಿತ್ಯಾದಿ ಅನೇಕ ನಮೂದಿಸಬಹುದಾದ ಸಾಲುಗಳಲ್ಲಿ ಕವಿತಾ ಅವರ ಕಾವ್ಯ ತತ್ವ ಸ್ಪಷ್ಟ ವಾಗುತ್ತದೆ. ಅದು ತಾವು ನಂಬಿಕೊಂಡ ಜೀವನ ಮೌಲ್ಯಗಳನ್ನು ಕವಿತೆಗಳ ಮೂಲಕ ಅಭಿವ್ಯಕ್ತಿಸುವುದು ಮತ್ತು ಸಮಾಜದ ಗತಿಶೀಲತೆಯ ಬಗೆಗಿನ ಎಚ್ಚರ ಇವರ ಮೂಲ ಆಶಯ. + + + +ಹಾಗಾಗಿಯೇ ಕವಿತಾ ಅವರು ಖಾಸಗಿತನ ಮತ್ತು ಲೋಕದ ಕುರಿತು ಒಟ್ಟಿಗೆ ಯೋಚಿಸುತ್ತಾರೆ. ವಸ್ತು ಅದು ವೈಯಕ್ತಿಕ ನೆಲೆಯಲ್ಲಿ ಮೂಡಿದರೂ ಅದರ ಅಭಿವ್ಯಕ್ತಿಯ ಚಲನೆ ಲೋಕದ ಕತೆಯ ಕಡೆಗೆ. ಕಟ್ಟು, ಬೆಳಕಿಲ್ಲದೂರಿನಿಂದ ಬಂದವರು, ಮತದಾನದ ದಿನ, ಕಂದೀಲು ನಾ, ಚಾಕು ಚೂರಿಯ ಸಹವಾಸ, ಮರ್ಯಾದೆ ಬಿಟ್ಟವರು, ಬುದ್ಧನಾಗಬೇಕಂತೆ ನಾ, ಧೀಶಕ್ತಿ, ನಾರಿಯೆಂದರೆ, ಮೀಸಲು ಇತ್ಯಾದಿ ಈ ಬಗೆಯ ಸಂವೇದನೆಗಳು. ಸಣ್ಣವರಾಗುವುದೆಂದರೆ, ಆ ಹಡಗು, ಆ ಅಲೆಗಳು, ಒಂದೇ ಅಥವಾ? ಒಂದು ಬೆಕ್ಕು, ಬುದ್ಧನಾಗಬೇಕಂತೆ ನಾ, ಎರಡು ಭಾವಗಳು, ಇನ್ನು ಕೆಲವು ಕವನಗಳು ಈ ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ. ಇಲ್ಲೆಲ್ಲ ಕವಿಯ ಭಾವದ ಸ್ಪುಟತ್ವ ಮತ್ತು ಅಭಿವ್ಯಕ್ತಿಯ ನೇರ ಮಾತುಗಾರಿಕೆ ಸಹಜವಾಗೇ ಮೂಡಿದೆ. ಕವಿತಾ ಹೆಗಡೆ ಅವರ ಕವನಗಳ ಅಂತಃಶಕ್ತಿಯೇ ಇದು. ಯಾವುದನ್ನೂ ಕೂಡಾ ಸಂಕೀರ್ಣಗೊಳಿಸದೆ ಅದು ಅನುಭವ ಮತ್ತು ನಂಬಿಕೆಗಳನ್ನು ದಾಟಿಸಬಲ್ಲರು. ‘ಐದು ವರ್ಷದ ಹಿಂದೆ ಬಂದವ’ ಎಂಬ ಕವಿತೆ ಅದು ಕುಟಿಲತೆ ಮತ್ತು ಲಾಭಕೋರತನದ ರೂಪಕವಾಗಿ ಬಂದರೂ ಕೂಡಾ ಅದರಾಚೆ ಇನ್ನೂ ಅನೇಕ ಅರ್ಥಗಳನ್ನು ಮೂಡಿಸಬಲ್ಲದು. ಸರಳವಾಗಿ ಹೇಳುತ್ತಲೂ ಅರ್ಥದ ಸಾಧ್ಯತೆಗಳನ್ನು ವಿಸ್ತರಿಸುವ ಈ ಗುಣವೇ ಸಂಕಲನವನ್ನು ಓದಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. + +“ಸಣ್ಣವರಾಗುವುದು ಎಂದರೆಸುಲಭವಲ್ಲಬೇಕು ಅಸಾಮಾನ್ಯ ಭಂಡತನಕುಳಿತಲ್ಲಿಂದ ಕೆಳಗಿಳಿಯಲುಎಲ್ಲ ಪೂರ್ವ ಸಿದ್ದತೆ”ಇಂತಹ ಸಾಲುಗಳು ಏಳಿಸಬಲ್ಲ ಆಲೋಚನಾ ತರಂಗಗಳ ಮಾತೇ ಭಿನ್ನ. ನನ್ನ ದೃಷ್ಟಿಯಲಿ ಕವಿತೆ ಎಂದರೆ ಕಾಡುವ ಅರ್ಥಪೂರ್ಣ ಕ್ರಿಯೆ. + +‘ಬಲು ಮೆಲ್ಲಗೆ ಅದೇ ಬರುವಿಕೆಅದೇ ಸ್ಪರ್ಷ, ಅದೇ ನಾದಅದೇ ತೆರಳುವಿಕೆಅದೇ ಅದೇ ಅದೇ ಲಯ’( ಅಲೆಗಳು)ಎಂಬಿತ್ಯಾದಿ ಸಾಲುಗಳು ಮಾಡುವ ಸಂಚಲನ ಇದೇನೆ. ಜೋಕಾಲಿ ನಿಲ್ಲುವುದೆಲ್ಲಿ? ಸೆಳೆತ ಯಾವುದಕೆ? ಬೇಕಿತ್ತೆ ಈ ಪ್ರಯತ್ನ? ಒಂದೇ ಅಥವಾ? ಇಂತಹ ಪ್ರಶ್ನಾರ್ಥಕ ಶೀರ್ಷಿಕೆಗಳ ಮೂಲಕವೇ ಮೂಡಿದ ಕವಿತೆಗಳಲ್ಲಿ ಅನೇಕ ಉತ್ತರದ ಶೋಧವಿದೆ. ಪ್ರಶ್ನೆಗಳ ಮೂಲಕ ಹುಟ್ಟುವ ಕವಿತೆ ಯಾವತ್ತೂ ವಿರಮಿಸದು, ಅದ್ದರಿಂದಲೇ ಕವಿತಾ ಹೆಗಡೆ ಅವರ ಪದ್ಯಗಳ ಓಘ ನಿಲ್ಲದು. ಪದ್ಯಗಳ ಚಾಚುವಿಕೆ ಇದು ಇದೆಲ್ಲದರ ಆಚೆಗಿನ ಬಾಳು ಯಾವತ್ತೂ ಒಗಟೇ. ಅಂತಹ ಒಗಟನ್ನು ಬಗೆಯಲಿಕ್ಕೆ ಕವಿತೆಗಳನ್ನು ಹಾಸುವುದು ಸೃಜನಶೀಲತೆಯ ಮೂಲಗುಣವೇ. ಅಂತಹ ದಟ್ಟವಾದ ಅನುಭವ ವಿಸ್ತಾರಕ್ಕೆ ಕವಿತಾ ಹೆಗಡೆ ಅವರು ಕವಿತೆಗಳನ್ನು ನೆಚ್ಚಿಕೊಂಡಿದ್ದಾರೆ. ಇಂತಹ ಪ್ರಾಮಾಣಿಕ ಪ್ರಯತ್ನ ಮತ್ತು ಪ್ರಯೋಗಗಳೂ ಈ ಸಂಕಲದಲ್ಲಿ ಕಾಣಿಸುತ್ತವೆ. ರೂಪಕಗಳ ಮೂಲಕ ಮಾತನಾಡುವ ಹಂಬಲ ಮತ್ತು ಹೊಸಪರಿಭಾಷೆಯ ಮೂಲಕ ಅನುಭವವನ್ನೂ ಕೂಡಾ ಹೊಸದಾಗಿ ಕಂಡರಿಸುವ ವಾಂಛೆ ಉದ್ದಕೂ ಕಾಣಿಸುತ್ತದೆ. ಇದು ನಿರಂತರವಾಗಿ ಇರಬೇಕು, ಉಳಿಸಿಕೊಳ್ಳಬೇಕಷ್ಟೆ. + +(ವಾಸುದೇವ ನಾಡಿಗ್‌) + +ಕವಿತಾ ಹೆಗಡೆ ಅವರು ಮೂಲತಃ ಇಂಗ್ಲೀಷ್ ಅಧ್ಯಾಪಕಿ, ಆದ್ದರಿಂದ ಅವರ ಕಾವ್ಯದ ವಿಸ್ತಾರಕ್ಕೆ ಆ ಭಾಷೆಯ ಅಪರೂಪದ ರೂಪಕ ನುಡಿಚಿತ್ರಗಳು ಇಂಬು ಕೊಡಬಲ್ಲವು. ಇದು ಅವರ ಪೊಯಟಿಕ್ ಜರ್ನಿಯ ಪ್ಲಸ್ ಪಾಯಿಂಟ್ ಕೂಡಾ ಆಗಬಲ್ಲದು. ಬಿ ಎಂ ಶ್ರೀ ಅವರು ಹಾಡಿದಂತೆ ನೋಡಿದಂತೆ ಅವಳ ಉಡುಗೆ ಇವಳಿಗಿಟ್ಟು, ಇವಳ ತೊಡುಗೆ ಅವಳಿಗಿಟ್ಟು ಕಾಣುವ ಅವಕಾಶಗಳು ಅವರಿಗೆ ವಿಪುಲ. ಅದನ್ನು ಇನ್ನಷ್ಟೂ ಸಾಧ್ಯವಾಗಿಸಿದಾಗ ಕನ್ನಡದ ಕಾವ್ಯ ಲೋಕಕ್ಕೆ ಹೊಸ ಮಿಂಚನ್ನು ಅಂಟಿಸಬಹುದು. ಅವರ ಆ ನಿಟ್ಟಿನ ಓದು ಮತ್ತು ಪಕ್ವವಾದ ಅನುಭವ ದಟ್ಟವಾದ ರೂಪಕಗಳಲ್ಲಿ ಮಾತಾಡುವಂತೆ ಮಾಡಬಲ್ಲದು. ಈ ಹೊತ್ತಿನ ಬಹುಶ್ರುತತ್ವದ ಕಾಲಮಾನದಲ್ಲಿ ಕವಿತೆ ತನ್ನ ಸಾಂಪ್ರದಾಯಿಕ ಜಡತ್ವವನ್ನು ಜಾಡಿಸಿಕೊಂಡು ಎದ್ದು ಕಂಗೊಳಿಸಿ, ಮುಂದಿನ ಹೊಸ ತಲೆಮಾರಿನವರಿಗೆ ಓದಲು ಹಚ್ಚಬೇಕು. + +ಇನ್ನು, ದ್ವಿತೀಯ ಪಿ ಯು ಸಿ ಓದುತ್ತಿರುವ ಕವಿತಾ ಹೆಗಡೆ ಅವರ ಮಗಳು ಸಾನಿಕಾ ಹೆಗಡೆಯ ಮಾತೇ ಭಿನ್ನ. Abandoned Friend ಎಂಬ ಅಚ್ಚರಿ ಹುಟ್ಟಿಸುವ ಇಂಗ್ಲೀಷ್ ಕವನ ಸಂಕಲನ ಪ್ರಕಟಿಸಿದ ಪ್ರತಿಭಾನ್ವಿತೆ. ಇಂತಹ ಅಚ್ಚರಿಯೊಂದರ ತಾಯಿ ಕವಿತಾ ಹೆಗಡೆ ತಮ್ಮ ಮುಂದಿನ ಬರಹಗಳ ಮೂಲಕ ಅಚ್ಚರಿಗಳ ತೊರೆಗಳನ್ನೇ ಹರಿಸಲಿ ಎಂಬ ಆಶಯದಿಂದ, ಅವರವರ ಕವಿತೆ ಎಂಬ ಶರನ್ನೌಕೆ ಎಲ್ಲರನ್ನೂ ಒಳಗೊಳ್ಳಲಿ. + + + +“ನೀಲಾಕಾಶದಲಿ ಮಿನುಗುವ ತಾರೆ ನಾನುನೋಡುವ ದೃಷ್ಟಿ ನಿನಗಿಲ್ಲದಿರೆ ನನ್ನ ತಪ್ಪೇನು” + +ಅಂತಹ ನೋಟದ ಒಂದು ಸ್ಪಂದನ ಈ ಮಾತುಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_229.txt b/Kenda Sampige/article_229.txt new file mode 100644 index 0000000000000000000000000000000000000000..aed229bc8f16bb24910a466892cc9cf9b06c6d36 --- /dev/null +++ b/Kenda Sampige/article_229.txt @@ -0,0 +1,21 @@ +ನಾನೇಕೆ ಬರೆಯುತ್ತೇನೆ? ಎಂಬುದು ಬಹು ಸೂಕ್ಷ್ಮ ಪ್ರಶ್ನೆ. ಎಲ್ಲ ಲೇಖಕರೂ ಆಂತರ್ಯದಲ್ಲಿ ಕೇಳಿಕೊಳ್ಳಬೇಕಾದ ಮುಖ್ಯ ಪ್ರಶ್ನೆಯೂ ಹೌದು. ಈ ಪ್ರಶ್ನೆಗೆ ಸಿಗುವ ಎಲ್ಲ ಉತ್ತರಗಳನ್ನು ಒಟ್ಟಾಗಿ ನೋಡಿದರೆ ಎಷ್ಟೋ ಸಲ ಅವು ಒಂದಕ್ಕೊಂದು ವಿರುದ್ಧ ದಿಕ್ಕುಗಳಲ್ಲಿ ಚಲಿಸುತ್ತಿರುತ್ತವೆ. ಕೆಲವೊಮ್ಮೆ ತೀರ ಹತ್ತಿರದಲ್ಲಿಯೂ ಹಾಯ್ದುಹೋಗಬಹುದು. ಅಂದರೆ, ಬರೆಯುವುದಕ್ಕೆ ಯುನಿವರ್ಸಲ್ ಆದ ಕಾರಣಗಳಿಲ್ಲ. ಒಂದೇ ಬಗೆಯ ಒತ್ತಡ-ಒತ್ತಾಸೆಗಳು ಇಲ್ಲ. ಕೆಲವರಿಗೆ ಬರವಣಿಗೆ ತೀರ ಖಾಸಗಿಯಾದ ಸಂಗತಿ. ಅದು ಮನಸ್ಸಿನ ಒಳಕೋಣೆಯ ಮುಲುಕಾಟ.ಬರವಣಿಗೆಯಲ್ಲಿ ಒಳಗಿನೊಳಗನ್ನು ಅಭಿವ್ಯಕ್ತಿಸುವುದೆಂದರೆ ಕನ್ನಡಿಯ ಮುಂದೆ ಬೆತ್ತಲಾಗಿ ನಿಂತಂತೆ. ಒಂದು ಬಗೆಯಲ್ಲಿ ಗಾಬರಿಯಾದರೆ, ಇನ್ನೊಂದು ಬಗೆಯಲ್ಲಿ ಬಿಡುಗಡೆಯ ನಿರಾಳತೆ ಹಾಗೆಯೇ ಗಾಬರಿ, ಮುಜುಗರ. ಏಕೆಂದರೆ ನಾವು ನಮ್ಮ ಬತ್ತಲೆಯನ್ನು ನೋಡಿಕೊಂಡೇ ಇಲ್ಲ! ಸದಾ ಒಂದಿಲ್ಲೊಂದು ಆವರಣಗಳನ್ನು ಹೊದ್ದುಹೊದ್ದು, ಕೊನೆಗೆ ಅವು ನಮ್ಮ ಚರ್ಮವೇ ಆಗಿಬಿಡುವಂಥ ಅನಿವಾರ್ಯತೆಯಲ್ಲಿ ಆ ನಿಜನೋಟವನ್ನು ಕಳೆದುಕೊಂಡಿದ್ದೇವೆ. ಒಂಟಿಯಾಗಿ ನಿಂತು ನಮ್ಮದೇ ಅಸಲಿ ಧ್ವನಿಯನ್ನು ಆಲಿಸುವ, ಅಸಲಿ ರೂಪವನ್ನು ಕಾಣುವ ಹಂಬಲದ ಅಭಿವ್ಯಕ್ತಿಯಾಗಿ ಬರವಣಿಗೆ ಒದಗುತ್ತದೆ; ಒದಗಬೇಕು. ಬರಹ ಬಿಡುಗಡೆಯ ಭಾವ ಹೇಗೆಂದರೆ, ಒಳಗೊಳಗೇ ಭಾರವಾಗಿ ಬಾಧಿಸುವ ಸಂಗತಿಗಳು ಅಕ್ಷರಗಳಲ್ಲಿ ಹರಿದು ಹಗುರಾಗುತ್ತವೆ. ನಿರಾಳಗೊಳಿಸುವ ಸಾಧ್ಯತೆಯಾಗಿ ಬರವಣಿಗೆ ಕೈಹಿಡಿಯುತ್ತದೆ. + + + +ಬರವಣಿಗೆಯೆಂಬುದು ಅನ್ವೇಷಣೆಯೂ ಹೌದು. ಬರೆಯುತ್ತ ಬರೆಯುತ್ತಲೇ ತೆರೆಯುವ ಅಸಂಖ್ಯ ದಾರಿಗಳ ಈ ಪಯಣ ಪೂರ್ವನಿಶ್ಚಿತವಲ್ಲ. ಅನುಭವದ ಸ್ವರೂಪವನ್ನು ಅರಿಯುತ್ತ, ಆಲೋಚನೆಗಳಿಗೆ ಆಕಾರ ಕೊಡುತ್ತ, ಅದನ್ನು ಹೇಗೆಲ್ಲ ಪರಿಣಾಮಕಾರಿಯಾಗಿ ಅಭಿವ್ಯಕ್ತಿಸಬಹುದೆಂದು ಯೋಚಿಸುವಾಗ ಅದು ಪಕ್ಕಾ ಸೃಜನಕ್ರಿಯೆ. ಈ ಕ್ರಿಯೆಯನ್ನು ಸೂಕ್ಷ್ಮಗೊಳಿಸುತ್ತ ನಡೆದಂತೆಲ್ಲ ಅದು ಕಲೆಗಾರಿಕೆ. ಕಲೆಯ ಮೂಲಕ ಅನುಭವ, ಆಲೋಚನೆಗಳು ದಾಟುವಾಗ, ದಾಟಿಸುವ ಬರಹಗಾರನೂ, ಸ್ವೀಕರಿಸುವ ಓದುಗನೂ ಏಕಕಾಲಕ್ಕೆ ಸೂಕ್ಷ್ಮಗೊಳ್ಳುತ್ತಾರೆ. + +ಬರಹಕ್ಕೆ ಬೇಕಾದ ಸೃಜನಶಕ್ತಿ ವೈಯಕ್ತಿಕವಾದುದು. ಬರಹಕ್ಕೆ ಕಾರಣವಾಗುವ ಲೋಕಗ್ರಹಿಕೆಯೂ ವೈಯಕ್ತಿಕವೇ. ಬರಹವೆಂಬುದು ಬರಿಯ ಪ್ರತಿಕ್ರಿಯೆಯಲ್ಲ. ಅದು ಸ್ವ-ಶೋಧದ ಪ್ರಕ್ರಿಯೆಯೂ ಹೌದು. ಆದರೆ, ಬರಹವು ‘ಸಾಹಿತ್ಯ’ ವೆಂಬ ಸಾಮೂಹಿಕ ಆಕೃತಿಯಲ್ಲಿ ಪ್ರವೇಶಿಸಿದಾಗ ಸಾಮುದಾಯಿಕ ಜವಾಬ್ದಾರಿಯಲ್ಲೂ ಪಾತ್ರವಹಿಸಬೇಕಾಗುತ್ತದೆ. ಆಗಲೇ ಬರಹಗಾರರು ಕವಲುದಾರಿಯ ಮುಂದೆ ನಿಲ್ಲುತ್ತಾರೆ. ತಾನು ಅಭಿವ್ಯಕ್ತಿಸಲು ಹಾತೊರೆಯುತ್ತಿರುವುದೇನನ್ನು? ತನಗನಿಸಿದ್ದನ್ನು ಬರೆಯಬೇಕೇ? ಅಥವಾ ಸಾಹಿತಿ ಏನು ಬರೆಯಬೇಕೆಂದು ಕಾಲ-ಸಂದರ್ಭ-ಸಮಾಜಗಳು ಅಪೇಕ್ಷಿಸುತ್ತವಲ್ಲ ಅದನ್ನು ಬರೆಯಬೇಕೇ ಎಂಬ ದ್ವಂದ್ವಕ್ಕೆ ಎದುರಾಗುತ್ತಾರೆ. ಈ ಪ್ರಶ್ನೆಯನ್ನು ಹದಿಹರೆಯದ ದಿನಗಳಲ್ಲಿ ಬರಹಗಾರರ ಕಮ್ಮಟವೊಂದರಲ್ಲಿ ನಾನು ಮುಗ್ಧವಾಗಿ ಕೇಳಿದ್ದೆ. ಅಲ್ಲಿ ಕನ್ನಡದ ಪ್ರಮುಖ ಲೇಖಕರ ಹಾಗೂ ವಿಮರ್ಶಕರ ಸಮೂಹವೇ ಇತ್ತು. ಇದೊಂದು ತುಂಬ ಮಹತ್ವದ ಪ್ರಶ್ನೆ… ಎಂದೇನೋ ಹೇಳಿದ್ದರು ಆಗ. ಸಮರ್ಪಕ ಉತ್ತರ ಮಾತ್ರ ಸಿಗಲಿಲ್ಲವೆಂದೆನಿಸಿತ್ತು. ಹಾಗೆ ಸಿದ್ಧ ಉತ್ತರಗಳು ಇರುವುದಿಲ್ಲ ಎಂದು ಆಗ ತಿಳಿದಿರಲಿಲ್ಲ. ಆದರೆ, ಈ ಪ್ರಶ್ನೆ ಈಗಲೂ ಎದುರಾಗುತ್ತಲೇ ಇರುವುದು ಸುಳ್ಳಲ್ಲ. + +ಆಯಾಕಾಲದ ಬರವಣಿಗೆಯನ್ನು ನಿರ್ದೇಶಿಸುವುದು ಸಾಹಿತ್ಯಕ ಕಾರಣಗಳಷ್ಟೇ ಆಗಿರುವುದಿಲ್ಲ ಎಂಬುದು ಗಮನಾರ್ಹ ಸಂಗತಿ. ಆಯಾ ಕಾಲದ ಸಾಮಾಜಿಕ ಸಂರಚನೆ, ಸಾಂಸ್ಕೃತಿಕ ಮಾದರಿಗಳು, ರಾಜಕೀಯ ಒತ್ತಡಗಳು, ಅಧಿಕಾರ ವಿನ್ಯಾಸಗಳು ಎಲ್ಲವೂ ಪರೋಕ್ಷವಾಗಿ ಬರವಣಿಗೆಯ ದಿಕ್ಕನ್ನು ಪ್ರಭಾವಿಸುತ್ತಿರುತ್ತವೆ. ವೈಯಕ್ತಿಕ ಸಂವೇದನೆಗಳು ನಿರ್ವಾತದಲ್ಲಿ ರೂಪುಗೊಳ್ಳುವುದಿಲ್ಲ. ಸಮೂಹ ಸ್ಮೃತಿಗಳು ಆಳದಲ್ಲೆಲ್ಲೋ ಅವುಗಳನ್ನು ರೂಪಿಸುತ್ತಿರುತ್ತವೆ. ವ್ಯಕ್ತಿಗೆ ಅರಿವಿಲ್ಲದೆಯೇ ವ್ಯಕ್ತಿಯೊಳಗೆ ಸಮೂಹವು ಧ್ವನಿಸುವುದು ಅಭಿವ್ಯಕ್ತಿಯ ಅಚ್ಚರಿ. ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ ಎಂಬ ಟಿ.ಎಸ್.ಎಲಿಯಟ್‍ನ ಪರಿಕಲ್ಪನೆಯನ್ನು ಈ ಸಂದರ್ಭದಲ್ಲಿ ಗಮನಿಸಬಹುದು. ಇದು ವ್ಯಕ್ತಿ ಪ್ರತಿಭೆಯ ಮಾತಾಯಿತು. ವ್ಯಕ್ತಿ ಪ್ರತಿಭೆಯಿಂದಲೇ ಜನಿಸಿದ ‘ಸಾಹಿತ್ಯ’ವೆಂಬ ಸಾಮೂಹಿಕ ಆಕೃತಿಯು ಸಮೂಹ ಸ್ಮೃತಿಯ ಭಾಗವಾಗುತ್ತ, ಮೌಲ್ಯ ಮಾದರಿಗಳನ್ನೂ, ಚಿಂತನ ಕ್ರಮಗಳನ್ನೂ ರೂಢಿಸುತ್ತ ಅರಿವಿನ ಭಾಗವಾಗುತ್ತದೆ. ಇದೊಂದು ಚಕ್ರವಿದ್ದಂತೆ. + +ಚರಿತ್ರೆಯನ್ನು ಗಮನಿಸಿದಾಗ, ಸಾಮೂಹಿಕ ಅರಿವಿನ ಎಚ್ಚೆತ್ತ ರೂಪವಾಗಿ ಸಾಹಿತ್ಯ ಕಾಣುತ್ತ ಬಂದಿದೆ. ಪಂಪಯುಗದ ಧಾರ್ಮಿಕ ಪ್ರಜ್ಞೆ ಪಂಪನೊಬ್ಬನದಲ್ಲ. ಅದು ಆ ಕಾಲದೊಂದಿಗೆ ರೂಪತಳೆದದ್ದು. ಹಾಗೆಯೇ ವಚನಕಾರ ಚಿಂತನ ಕ್ರಮ ಆ ಕಾಲದ ಸಾಮಾಜಿಕ ಸ್ಥಿತ್ಯಂತರಗಳನ್ನು ಒಳಗೊಂಡಂತೆ ರಚನೆಯಾದದ್ದು. ಇಂದಿನ ಸಂದರ್ಭಕ್ಕೆ ಬಂದರೆ, ಪ್ರಜಾಪ್ರಭುತ್ವದ ಮೌಲ್ಯಗಳು ನಮ್ಮ ಚಿಂತನ ವಿನ್ಯಾಸದ ಹಿಂದೆ ಕೆಲಸಮಾಡುತ್ತಿವೆ. ಕಾಲ-ದೇಶಗಳನ್ನು ಬಿಟ್ಟು ಬರೆಯಲಾರೆವು ಎಂಬುದು ನಿಜ. ಆದರೂ ಕಾಲದೇಶಗಳಲ್ಲಿ ಕಾಲೂರಿ ನಿಂತೇ ಕಾಲದೇಶಗಳನ್ನು ಮೀರುವ ಕ್ರಮವೊಂದಿದೆ. ಕುವೆಂಪು ಪ್ರತಿಪಾದಿಸುವ ವಿಶ್ವಮಾನವ ಪ್ರಜ್ಞೆ, ಬೇಂದ್ರೆ ಪ್ರತಿಪಾದಿಸುವ ವಿಶ್ವಮೈತ್ರಿಗಳು ನೆಲದ ವಾಸ್ತವವನ್ನು ನಿರಾಕರಿಸದೇ, ವಾಸ್ತವದ ಮಿತಿಗಳನ್ನು ಮೀರಿ ಹಾರುವ ಪ್ರಯತ್ನಗಳಾಗಿವೆ. ಇಂಥ ಮೀರುವ ಶಕ್ತಿ ಹಾಗೂ ಸ್ವಾತಂತ್ರ್ಯಗಳು ಸದಾ ನಮ್ಮನ್ನು ಮುಕ್ತ ಅರಿವಿಗೆ ತೆರೆದಿಡುತ್ತವೆ. + +ಸಿದ್ಧಾಂತ ಹಾಗೂ ಸಾಹಿತ್ಯವನ್ನು ಒಂದೇ ಆಗಿ ನೋಡಲು ಹೊರಟಾಗ ನಾವು ಮೀರಿ ಹಾರುವ ಬಲವನ್ನು ಕಳೆದುಕೊಳ್ಳುತ್ತೇವೆ. ಅದರಲ್ಲೂ ಸೈದ್ಧಾಂತಿಕ ಸ್ಪಷ್ಟತೆ ಬೇರೆ, ಸೈದ್ಧಾಂತಿಕ ಹಠಮಾರಿತನವೇ ಬೇರೆ. ಸೈದ್ಧಾಂತಿಕ ಹಠಮಾರಿತನವು ಚೌಕಟ್ಟುಗಳನ್ನು ನಿರ್ಮಿಸುತ್ತದೆ. ಆ ಚೌಕಟ್ಟಿನಾಚೆ ಯೋಚಿಸುವ ಸಹನೆಯನ್ನೇ ಅದು ಕಳೆದುಕೊಳ್ಳುತ್ತದೆ. ತನ್ನ ಚೌಕಟ್ಟಿಗೆ ಒಗ್ಗದವರನ್ನು ಅದು ‘ಅನ್ಯ’ವಾಗಿಸುತ್ತ ಆ ‘ಅನ್ಯ’ವನ್ನು ದ್ವೇಷಿಸುತ್ತ ನಡೆಯುತ್ತದೆ. ಬಲಪಂಥ, ಎಡಪಂಥಗಳೆಂಬ ಚೌಕಟ್ಟುಗಳೂ ಹಾಗೆಯೇ ಕಾಣಿಸುತ್ತಿವೆ. ಅನೇಕರು ಬರಹಗಾರರನ್ನು ನಿರ್ದೇಶಿಸುವ ಪರಿ ಹೇಗಿದೆಯೆಂದರೆ, “ನೀವು ಆ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ, ಈ ಚೌಕಟ್ಟಿನಲ್ಲಾದರೂ ಕುಳಿತುಕೊಳ್ಳಿ. ಸರಿಯಾಗಿ ನೀವದಕ್ಕೆ ಫಿಟ್ ಆಗದಿದ್ದರೆ ನಿಮ್ಮ ರೆಕ್ಕೆಗಳನ್ನು ಕತ್ತರಿಸಿಕೊಳ್ಳಿ. ಚೌಕಟ್ಟಿಗೆ ತಕ್ಕಂತೆ ಮುದುರಿಕೊಳ್ಳಿ. ಆದರೆ ಚೌಕಟ್ಟು ಮಾತ್ರ ಅಲುಗಾಡಬಾರದು!” ಮನುಷ್ಯರಿಗಿಂತ ಚೌಕಟ್ಟುಗಳೇ ಮುಖ್ಯವಾಗುವ ವಿಪರ್ಯಾಸವಿದು. ಸೈದ್ಧಾಂತಿಕ ಚೌಕಟ್ಟಿನಲ್ಲಿ ಹುದುಗಲಿಚ್ಛಿಸದವರನ್ನು ಇಂದು ಎಡಬಿಡಂಗಿಗಳು, ಅವಕಾಶವಾದಿಗಳು ಎಂದೆಲ್ಲ ಜರಿಯಲಾಗುತ್ತಿದೆ. ಎಲ್ಲಾದರೂ ಒಂದು ಕಡೆ ಇರಲೇಬೇಕೇಂಬ ಫರ್ಮಾನು ಹೊರಡಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಕುವೆಂಪು ಪ್ರತಿಪಾದಿಸಿದ ವಿಶ್ವಮಾನವತತ್ವ ನೆನಪಾಗುತ್ತದೆ. ವಿಶ್ವಮಾನವ ಗೀತೆಯಲ್ಲಿ ಕುವೆಂಪು ‘ಎಲ್ಲ ತತ್ವದೆಲ್ಲೆ ಮೀರಿ’ ನಿರ್ದಿಗಂತವಾಗಿ ಏರಬೇಕೆಂದು ಪ್ರತಿಪಾದಿಸುತ್ತಾರೆ. ಇದನ್ನು ಅವಕಾಶವಾದವೆನ್ನೋಣವೆ? ವಿಶ್ವಮಾನವತ್ವ ಎನ್ನುವುದು ಕೂಡ ಒಂದು ತತ್ವ-ಸಿದ್ಧಾಂತವಲ್ಲ. ಅದು ಅನಂತವಾಗಿ ವಿಕಸಿತವಾಗುತ್ತ ಚಲಿಸುತ್ತಲೇ ಇರುವ ಅದಮ್ಯ ಸಾಧ್ಯತೆ. ಹಾಗೆ ವಿಕಾಸವಾಗಲು ಬೇಕಾದದ್ದು ಸಾಮಾಜಿಕ, ರಾಜಕೀಯ ಸಿದ್ಧಾಂತಗಳೋ, ಸೋಕಾಲ್ಡ್ ಜ್ಞಾನಮಾದರಿಗಳೋ ಅಲ್ಲ. ಬದಲಿಗೆ, ಯಾವುದೂ ನಮ್ಮನ್ನು ಕಟ್ಟಿಹಾಕದಂತೆ ನೋಡಿಕೊಳ್ಳಲು ಬೇಕಾದ ಅಗಾಧ ಆಂತರಿಕ ಸ್ವಾತಂತ್ರ್ಯ ಹಾಗೂ ಹೊಸಹೊಸದಾಗಿ ಹುಟ್ಟಲು ಬೇಕಾದ ಅನನ್ಯ ಸೃಜನಶೀಲತೆ. ಚಲನೆಯೇ ಬೇಡ ಎನ್ನುವಲ್ಲಿ, ಮತ್ತೊಂದು ಅಭಿಪ್ರಾಯ ಇರಲೇಬಾರದು ಎನ್ನುವ ಹಠಮಾರಿತನದಲ್ಲಿ ಪರಿವರ್ತನಶೀಲತೆಯಿಂದಲೇ ಸಾಧ್ಯವಾಗುವ ವಿಕಾಸದ ನಡಿಗೆ ನಿಂತುಹೋಗುತ್ತದೆ. ವಿಕಾಸಗೊಳ್ಳಲು-ಹಿಗ್ಗಲು ಸ್ಪೇಸ್ ಬೇಕು. ಅದೇ ನಿರ್ದಿಗಂತಗೊಳ್ಳುವುದು. ಕುಬ್ಜತೆಯಿಂದ ಹೊಒರಬಂದು ಅನಂತ ತಾನ್ ಅನಂತವಾಗುವುದು ಹಾಗೆ. ಎಲ್ಲಿಯೂ ನಿಲ್ಲದ ಲೋಕಪ್ರವಾಹದಲ್ಲಿ ಒಂದಾಗುವುದು. ಇಂಥ ಚಲನಶೀಲತೆಯನ್ನು ಒಳ ಎಚ್ಚರದಲ್ಲಿ ಗಮನಿಸುತ್ತ ಅದಕ್ಕೆ ಆಕಾರ ಕೊಡುವಂಥ ಸಾಹಿತ್ಯ ನಮಗೆ ಬೇಕು. ಅಂಥ ಸಾಹಿತ್ಯ ರೂಪುಗೊಳ್ಳಲು ಅಂಥ ಘನ ಮನಸ್ಸುಗಳೂ ಬೇಕು. + +ಸಾಹಿತ್ಯವೆಂದರೆ ಕಟ್ಟುವುದು ಹಾಗೂ ಕಟ್ಟು ಬಿಚ್ಚುವುದು. ಅದು ಆವರಣಗಳನ್ನು ಕಳಚಿ ಬಯಲಾಗುವ ಅವಕಾಶವೇ ಹೊರತು ಆವರಣಗಳನ್ನು ಸೃಷ್ಟಿಸುವ ಅವಕಾಶವಾದಿತನವಲ್ಲ. ಬಯಲಾಗುವುದೆಂದರೆ ಅರಿವಿನ ಮಿತಿಗಳನ್ನು ಮೀರುವುದು. ಅಂಥ ಮೀರುವಿಕೆಗೆ ಬಹುದೊಡ್ಡ ಧಾರಣಶಕ್ತಿ ಬೇಕು. ಪೂರ್ವಗ್ರಹಗಳಿಂದ ಹೊರಬಂದು ಹೊಸದೊಂದು ಸ್ಪೇಸ್ ಸಾಧ್ಯವಾಗಿಸಿಕೊಳ್ಳಲು ಅಪಾರ ಸಹನೆ, ಸಮಗ್ರದೃಷ್ಟಿ ಹಾಗೂ ಜವಾಬ್ದಾರಿಯುತ ನಡೆ ಬೇಕು. ಜಾತ್ಯತೀತ, ಧರ್ಮನಿರಪೇಕ್ಷ, ಪ್ರಗತಿಪರ ಎಂಬ ಪದಗಳು ಇಂಥದೇ ದೃಷ್ಟಿ ಹಾಗೂ ಧ್ಯೇಯಗಳನ್ನುಳ್ಳ ಪರಿಕಲ್ಪನೆಗಳು. ಆದರೆ ಇಂಥ ಪದಗಳನ್ನು ಪುಂಖಾನುಪುಂಖವಾಗಿ ಬಳಸುವ ಇಂದಿನ ಕಾಲಮಾನದಲ್ಲಿ ಬಹುತೇಕರು ಅದನ್ನು ಬರಿಯ ರಾಜಕೀಯ ಸಂದರ್ಭದಲ್ಲಿಟ್ಟು ನೋಡುತ್ತಿರುವುದು ಗಮನಕ್ಕೆ ಬರುತ್ತದೆ. ಆ ಪದಗಳು ಕೆಲವರ ಸ್ವತ್ತು ಮಾತ್ರ ಎಂಬ ಧೋರಣೆಯೊಂದು ಮೈದಳೆಯುತ್ತಿದೆ. ನೈಜವಾದ ಜೀವಪರ ಕಳಕಳಿಯಿರುವ ಎಲ್ಲ ಬರಹಗಾರರ ಉದ್ದೇಶವೂ ಜಾತಿ, ಮತ ಹಾಗೂ ಸಿದ್ಧ ನಂಬಿಕೆ ಮತ್ತು ಆಲೋಚನಾ ಕ್ರಮಗಳ ಮಿತಿಯನ್ನು ಮೀರುವುದು ಹಾಗೂ ಅವುಗಳ ಹೆಸರಿನಲ್ಲಿ ಸ್ಥಾಪಿತವಾಗುವ ಅಧಿಕಾರ ಸಂಬಂಧಗಳನ್ನು, ಶ್ರೇಷ್ಠ-ಕನಿಷ್ಟ, ಮುಖ್ಯ-ಅಮುಖ್ಯವೆಂಬ ಕಲ್ಪನೆಗಳನ್ನು ದಾಟುವುದೇ ಆಗಿರುತ್ತದೆ. ಇಂಥ ‘ದಾಟು’ವಿಕೆಯನ್ನು, ಚಲನಶೀಲತೆಯನ್ನು, ಪರಿವರ್ತನಶೀಲತೆಯನ್ನು ಅನುಮಾನಿಸುವ, ಅವಮಾನಿಸುವ ಪೂರ್ವಗ್ರಹ ಪೀಡಿತ ದೃಷ್ಟಿಯೊಂದು ಸಾಹಿತ್ಯ ವಲಯದಲ್ಲಿ ಗಟ್ಟಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ. ಇದು ಪೂರ್ವಗ್ರಹವೇ ಆಗಿದ್ದರೆ ಎಂದಾದರೂ ಕಳಚಬಹುದೆಂಬ ಆಶಾಭಾವ ಹೊಂದಬಹುದು. ಆದರೆ, ಬೇಕೆಂತಲೇ ನಿರ್ಮಿಸಿಕೊಂಡಿರುವ ರಚನೆಗಳಲ್ಲಿ ನಿಂತು ಹೊರಗಿರುವವರನ್ನು ತಪ್ಪಿತಸ್ಥರನ್ನಾಗಿ ಕಾಣುವ ಕ್ರಮದಲ್ಲಿಯೇ ದೋಷವಿದೆಯೆನಿಸುತ್ತದೆ. ಇಂಥ ಅನುಕೂಲಸಿಂಧು ರಚನೆಗಳು ಮಹಾಕೋಟೆಗಳಾಗುತ್ತ ಯಾರನ್ನು ಒಳಸೆಳೆದುಕೊಳ್ಳಬೇಕು, ಯಾರನ್ನು ಹೊರಗಿಡಬೇಕು ಎಂಬ ಸ್ವಾರ್ಥ ರಾಜಕಾರಣದಲ್ಲಿ ಪರ್ಯವಸನಗೊಳ್ಳುತ್ತವೆ. ಲೇಖಕರಲ್ಲಿ ಇಂಥ ಮನಸ್ಥಿತಿ ಹೆಚ್ಚಾದಂತೆಲ್ಲ ಆವರಣಗಳು ರೂಪುಗೊಳ್ಳುತ್ತಲೇ ಹೋಗುತ್ತವೆ. ಅಸಹನೆ ಹೆಚ್ಚುತ್ತದೆ. ಬರಹವು ಆವರಣಗಳನ್ನು ಕಳಚಿಕೊಂಡು ಬಯಲಾಗುವ ಶಕ್ತಿಯನ್ನು ಕಳೆದುಕೊಳ್ಳುತ್ತದೆ. + + + +ವ್ಯಕ್ತಿತ್ವ, ಸಮಾಜ, ಸಂಸ್ಕೃತಿ, ಧರ್ಮ, ರಾಜಕಾರಣ…. ಇವೆಲ್ಲವೂ ಒಂದೊಂದು ರಚನೆಗಳೇ. ಈ ರಚನೆಗಳ ಹಿಂದಿನ ನೈಜಸ್ವರೂಪವನ್ನು ಶೋಧಿಸುವ ಸಾಹಿತ್ಯದ ಕಳಕಳಿಯನ್ನು ಮತ್ತೊಮ್ಮೆ ಧರಿಸದ ಹೊರತೂ ನಮ್ಮ ಬರಹಕ್ಕೆ ನೈತಿಕ ಶಕ್ತಿ ಒದಗುವುದಿಲ್ಲ. ಮಾತುಸೋತ ಪ್ರಸಕ್ತ ಸಂದರ್ಭದಲ್ಲಿ ಮತ್ತೆಮತ್ತೆ ಕನ್ನಡಿಯ ರೂಪಕ ಕಾಡುತ್ತದೆ. ಕನ್ನಡಿಗೆ ಈಗ ಜಿಡ್ಡುಹತ್ತಿದೆ. ಅದನ್ನು ಸರಿಯಾಗಿ ತೊಳೆಯದಿದ್ದರೆ ನಮ್ಮ ರೂಪ ವಿಕೃತವಾಗಿ ಕಾಣುತ್ತದೆ. ನಮ್ಮ ನುಡಿಗಳು ತಿರುಚಲ್ಪಟ್ಟಂತೆ ತೋರುತ್ತವೆ. ಕನ್ನಡಿಯ ಮುಂದೆ ಬೆತ್ತಲಾದಂತೆ ಅಂತಃಸಾಕ್ಷಿಯೆದುರು ನಾವು ಬರಹಗಾರರೆನಿಸಿಕೊಂಡವರು ಬೆತ್ತಲಾಗಬೇಕಿರುವುದು ಈ ಕ್ಷಣದ ತುರ್ತು. ಪ್ರಾಯಶಃ ಆಗ ಹೊರಗೆ ಬಯಲು ಕಾದಿರಬಹುದು. ಆವರಣಗಳನ್ನು ಕಳಚಿಕೊಳ್ಳಲು ಒಟ್ಟಿಗೆ ನಡೆಯುವ ನಡೆ ಸಹಾಯಕಾರಿಯಾದೀತು. ಅಲ್ಲವೇ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_23.txt b/Kenda Sampige/article_23.txt new file mode 100644 index 0000000000000000000000000000000000000000..bab816030db167ef682d9dc60ab9615963ff84ea --- /dev/null +++ b/Kenda Sampige/article_23.txt @@ -0,0 +1,17 @@ +ಕೆಲ ವರುಷಗಳ ಹಿಂದೆ ಒಂದು ವಿಡಿಯೋ ಸಾಕಷ್ಟು ವೈರಲ್ ಆಗಿ ನೆಟ್ಟಿಗರ ಮನಗೆದ್ದಿತ್ತು. ಒಂದು ಅಡುಗೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಒಬ್ಬಳು ಸ್ಪರ್ಧಿ, ಅಡುಗೆ ಮಾಡಲು ಬೇಕಾಗಿದ್ದ ಯಾವುದೋ ಪದಾರ್ಥದ ಡಬ್ಬಿಯ ಮುಚ್ಚಳ ತೆಗೆಯಲು ಹರಸಾಹಸಪಟ್ಟು, ಕೊನೆಗೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂತಿದ್ದ ತನ್ನ ತಂದೆಯ ಬಳಿ ಓಡಿ ಹೋಗಿ, ಆತ ಗಂಭೀರ ವದನನಾಗಿ ಮುಚ್ಚಳವನ್ನು ತೆರೆಯುವ ಆ ವಿಡಿಯೋ, ಅಪ್ಪ ಎಂಬ ಜೀವ, ಮಕ್ಕಳ ಜೀವನದಲ್ಲಿ ಎಷ್ಟೊಂದು ಪ್ರಮುಖವಾದದ್ದು ಎಂದು ಬಿಂಬಿಸಿತ್ತು. + +ಅಪ್ಪನೆಂದರೆ ಹಾಗೆಯೇ ಅಲ್ಲವೇ… ತನ್ನ ಮಕ್ಕಳು ಯಾವುದೇ ತೊಂದರೆಯಲ್ಲಿ ಸಿಲುಕಿದರೂ ಅದನ್ನು ಹೇಗಾದರೂ ಸರಿಪಡಿಸಬೇಕು, ಅವರನ್ನು ಹೆಗಲು ಕೊಟ್ಟು ಮುನ್ನಡೆಸಬೇಕು ಎಂಬುದು ಪ್ರತಿಯೊಬ್ಬ ತಂದೆಯ ಮನೋಭಾವನೆ. ಮಹಾಭಾರತದಲ್ಲಿ ಪಂಚ ಪಾಂಡವರ ಬೆವರಿಳಿಸಿದ ದ್ರೋಣಾಚಾರ್ಯ, ತನ್ನ ಪುತ್ರ ಅಶ್ವತ್ಥಾಮ ಹತನಾದ ಎಂಬ ಸುಳ್ಸುದ್ದಿಯನ್ನು ನಂಬಿ ಶಸ್ತ್ರತ್ಯಾಗ ಮಾಡಿ ತನ್ನ ಜೀವವನ್ನೇ ಕಳೆದುಕೊಂಡ. ಇಂದ್ರನ ವಜ್ರಾಸ್ತ್ರದ ಹೊಡೆತಕ್ಕ ಸಿಲುಕಿ ನೆಲಕ್ಕುರುಳುತ್ತಿದ್ದ ಆಂಜನೇಯನನ್ನು, ವಾಯುದೇವ ಕಾಪಾಡಿ, ಅವನೊಂದಿಗೆ ಗುಹೆಯಲ್ಲಿ ಕೂತು ಭೂಮಿಯ ಮೇಲೆ ಗಾಳಿಯ ಅಭಾವವನ್ನು ಸೃಷ್ಟಿಸಿದ… ಮಕ್ಕಳಿಗಾಗಿ ಮಿಡಿಯುವ ಹಲವಾರು ತಂದೆಯಂದಿರು ನಮ್ಮ ನಡುವೆ ಸಾಕಷ್ಟಿದ್ದಾರೆ. ಒಲಿಂಪಿಕ್ಸ್‌ನ ಸಮಯದಲ್ಲಿ ಕಂಡುಬಂದ ಇಂಥದೇ ತಂದೆ-ಮಗನ ಕಥೆಯನ್ನು ಹೇಳುತ್ತೇನೆ ಕೇಳಿ. + +1992ರ ಬಾರ್ಸಿಲೋನಾ ಒಲಿಂಪಿಕ್ಸ್ ಅನೇಕ ಗಮನಾರ್ಹ ಕ್ಷಣಗಳಿಗೆ ಸಾಕ್ಷಿಯಾಗಿದ್ದರೂ, ಡೆರೆಕ್ ರೆಡ್ಮಂಡ್‌ನ ಕಥೆಯಂತೆ ಇನ್ನೊಂದಿರಲು ಸಾಧ್ಯವಿಲ್ಲ. ಬ್ರಿಟಿಷ್ ಸ್ಪ್ರಿಂಟರ್ ಆಗಿದ್ದ ರೆಡ್ಮಂಡ್ 400 ಮೀಟರ್ ಓಟದಲ್ಲಿ ಪದಕ ಗೆಲ್ಲುವ ನೆಚ್ಚಿನ ಆಟಗಾರರಾಗಿದ್ದನು. ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಮುಂಚೆ ಗಾಯಗೊಂಡು ಅನೇಕ ಶಸ್ತ್ರಚಿಕಿತ್ಸೆಗಳು ನಡೆದ್ದಿದ್ದರಿಂದ, ಅವನ ಒಲಿಂಪಿಕ್ಸ್ ಪ್ರಯಾಣವು ಸಾಕಷ್ಟು ಸವಾಲುಗಳಿಂದ ಕೂಡಿತ್ತು. ಆದರೂ, ರಚ್ಚಿನಿಂದ ಓಡಿ ಸೆಮಿಫೈನಲ್‌ ತಲುಪಿ, ಪದಕ ಗೆಲ್ಲುವ ತವಕದಲ್ಲಿದ್ದನು. ಓಟದ ಆರಂಭದಲ್ಲಿ, ಫೈನಲ್ ತಲುಪುವ ಎಲ್ಲಾ ಲಕ್ಷಣಗಳಿಂದ ಮುನ್ನುಗ್ಗುತ್ತಿದ್ದ ರೆಡ್ಮಂಡ್, ಸಾವಿರಾರು ಜನರ ಚೀರಾಟದ ನಡುವೆ ಗುರಿಯತ್ತ ಲಕ್ಷ್ಯವಿಟ್ಟು ಓಡುತ್ತಾ, ಇದ್ದಕ್ಕಿದ್ದಂತೆ ಬಲಗಾಲಿನಲ್ಲಿ ತೀವ್ರವಾದ ನೋವೆದ್ದು ಟ್ರ್ಯಾಕ್‌ನಲ್ಲಿ ಕುಸಿದುಹೋದನು. ಅವನ ಮಂಡಿರಜ್ಜು ಹರಿದು, ಒಲಿಂಪಿಕ್ ಪದಕದ ಕನಸನ್ನು ಛಿದ್ರಗೊಳಿಸಿತ್ತು. ಕ್ರೀಡಾಂಗಣವು ಸ್ತಬ್ಧವಾಗಿತ್ತು, ಇಡೀ ಜಗತ್ತು ಆಘಾತ ಮತ್ತು ಸಹಾನುಭೂತಿಯಿಂದ ರೈಡ್ಮಂಡ್‌ನನ್ನು ನೋಡುತ್ತಿತ್ತು. + + + +ಆದರೆ ಡೆರೆಕ್ ರೆಡ್ಮಂಡ್ ಬಿಟ್ಟುಕೊಡುವ ಜಾಯಮಾನದವನಲ್ಲ ನೋಡಿ! ಅಸಾಧ್ಯ ನೋವಿನ ನಡುವೆಯೂ ರೆಡ್ಮಂಡ್ ಓಟವನ್ನು ಪೂರ್ತಿಗೊಳಿಸಲು ಸಜ್ಜಾಗಿ ನಿಂತ. ತನ್ನ ಪಾದಗಳಿಗೆ ಮತ್ತೊಮ್ಮೆ ಹೋರಾಡುವಂತೆ ಆದೇಶ ನೀಡಿ ಫಿನಿಷ್ ಲೈನಿನ ಕಡೆಗೆ ಓಡಲು ಪ್ರಾರಂಭಿಸಿದ. ಪ್ರತಿ ಹೆಜ್ಜೆಯೂ ಭಾರವಾಗಿ, ನೋವಿನಿಂದ ಓಡುತ್ತಿದ್ದ ರೆಡ್ಮಂಡ್‌ನನ್ನು ಕಂಡು ಕರುಣೆಯಿಂದ ಇಳೆಯು ಇನ್ನು ಓಡಬೇಡ ಎಂದು ತಡೆಯುತ್ತಿದ್ದರೂ, ಅಮ್ಮನ ಅಪ್ಪುಗೆಯಿಂದ ತಪ್ಪಿಸಿಕೊಂಡು ಓಡುವ ಮಗುವಿನಂತೆ ರೆಡ್ಮಂಡ್ ಗುರಿಯತ್ತಾ ಒಂದೊಂದೇ ಹೆಜ್ಜೆಯನ್ನಿಡತೊಡಗಿದ. ಅವನ ಧೈರ್ಯವನ್ನು ಬಿಟ್ಟಕಣ್ಣುಗಳಿಂದ ನೋಡುತ್ತಿದ್ದ ಪ್ರೇಕ್ಷಕರು ಅವನನ್ನು ಹುರಿದುಂಬಿಸಲು ಪ್ರಾರಂಭಿಸಿದರು. ರೆಡ್ಮಂಡ್‌ನ ಪ್ರತಿ ನೋವಿನ ಹೆಜ್ಜೆಗೂ ಅವರ ಬೆಂಬಲವು ಕಾಡ್ಗಿಚ್ಚಿನಂತೆ ಬೆಳೆದು, ಅವನು ಗುರಿಮುಟ್ಟುವುದನ್ನು ನೋಡುವುದೇ ತಮ್ಮ ಜೀವನದ ಆಶಯದಂತೆ ಕಾಯತೊಡಗಿದರು. + +ಆಗ ಇನ್ನೊಂದು ಘಟನೆ ಜರುಗಿತು ನೋಡಿ. ಒಲಿಂಪಿಕ್ ಇತಿಹಾಸದಲ್ಲಿ ಸುವರ್ಣಾಕ್ಷರದಲ್ಲಿ ಕೆತ್ತಿಡಬಹುದಾದ ಆ ಕ್ಷಣ… ಎಲ್ಲರೂ ನೋಡ ನೋಡುತ್ತಿದ್ದಂತೆ, ಒಬ್ಬ ವ್ಯಕ್ತಿ ಭದ್ರತೆಯನ್ನು ಭೇದಿಸಿ ಟ್ರ್ಯಾಕ್‌ಗೆ ಓಡತೊಡಗಿ, ಕುಂಟುತ್ತಿರುವ ರೆಡ್‌ಮಂಡ್‌ನ ಬಳಿ ಧಾವಿಸಿ, ಅವನನ್ನು ತನ್ನ ತೋಳಿನಿಂದ ಬಳಸಿ, ರೆಡ್ಮಂಡ್‌ನನ್ನು ಗುರಿಯತ್ತ ಕರೆದೊಯ್ಯತೊಡಗಿದ. ರೆಡ್ಮಂಡ್‌ನ ಕಣ್ಣಲ್ಲಿ ಜಿನುಗುತ್ತಿರುವ ಕಣ್ಣೀರು, ಪ್ರೇಕ್ಷಕರ ಚೀರಾಟ… ಕೆಲವೇ ನಿಮಿಷದಲ್ಲಿ ಅವರಿಬ್ಬರೂ ಒಟ್ಟಾಗಿ ಅಂತಿಮ ಗೆರೆಯನ್ನು ದಾಟುತ್ತಾರೆ. ಪ್ರೇಕ್ಷಕರ ನಿರಂತರ ಚಪ್ಪಾಳೆಯೊಂದಿಗೆ, ಆನಂದ ಭಾಷ್ಪದೊಂದಿಗೆ ಬಾರ್ಸಿಲೋನಾದ ಕ್ರೀಡಾಂಗಣ ಹುಚ್ಚೆದ್ದು ಕುಣಿಯತೊಡಗುತ್ತದೆ. ಹಾಗೆ ಓಡಿ ಬಂದು ರೆಡ್ಮಂಡ್‌ನ ಕೈ ಹಿಡಿದು ನಡೆಸಿದ್ದು ಬೇರೆ ಯಾರೂ ಅಲ್ಲ, ಅವನ ತಂದೆ ಜಿಮ್ ರೆಡ್ಮಂಡ್! + +ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು. ಡೆರೆಕ್ ಮತ್ತು ಜಿಮ್ ರೆಡ್ಮಂಡ್ ಒಟ್ಟಿಗೆ ಅಂತಿಮ ಗೆರೆಯನ್ನು ದಾಟುತ್ತಿರುವ ಚಿತ್ರವು ಒಲಿಂಪಿಕ್ ಇತಿಹಾಸದಲ್ಲೇ ಅತ್ಯಂತ ಶಕ್ತಿಶಾಲಿ ಮತ್ತು ಭಾವನಾತ್ಮಕ ಕ್ಷಣಗಳಲ್ಲಿ ಒಂದಾಗಿದೆ. ಡೆರೆಕ್ ರೆಡ್‌ಮಂಡ್‌ನ ಕಥೆಯು ಕ್ರೀಡಾಪಟುಗಳು ಮತ್ತು ಸಾಮಾನ್ಯ ಜನರನ್ನೂ ಸಮಾನವಾಗಿ ಪ್ರೇರೇಪಿಸುವಂಥದ್ದು. + + + +ನಾವು ಅಷ್ಟೇ, ನಮ್ಮ ಕನಸುಗಳ ಹಾದಿಯಲ್ಲಿ ಕೆಲವೊಮ್ಮೆ ಕುದುರೆಯಂತೆ ನಾಗಾಲೋಟದಂತೆ ಸಾಗುತ್ತಿರುತ್ತೇವೆ.. ಅನೇಕ ಬಾರಿ ಕುಂಟುತ್ತಾ ಸಾಗುತ್ತೇವೆ. ನಮ್ಮ ವೇಗವು ಹೇಗೆಯೇ ಇದ್ದರೂ ಪಯಣ ಸಾಗುತ್ತಿರಬೇಕು. ಗುರಿ ಮುಟ್ಟಿಯೇ ತೀರುತ್ತೇನೆ ಎಂಬ ಅಚಲವಾದ ನಂಬಿಕೆಯಿರಬೇಕು. ಇಂತಹ ನಂಬಿಕೆಯೊಂದಿಗೆ ನಾವು ಸಾಗಿದರೆ ರೆಡ್ಮಂಡ್‌ನಿಗೆ ತನ್ನ ತಂದೆಯ ಆಸರೆ ಸಿಕ್ಕಂತೆ ನಮಗೂ ಯಾರಾದರೂ ಆಸರೆಯಾಗುತ್ತಾರೆ! \ No newline at end of file diff --git a/Kenda Sampige/article_230.txt b/Kenda Sampige/article_230.txt new file mode 100644 index 0000000000000000000000000000000000000000..3c795627ec906144d4b48a189652339a86462afc --- /dev/null +++ b/Kenda Sampige/article_230.txt @@ -0,0 +1,47 @@ +ಚಂದ್ರಶೇಖರ ಕಂಬಾರರ ಮೊದಲ ಕವನ ಸಂಗ್ರಹ ‘ಮುಗುಳು’ ಪ್ರಕಟವಾದದ್ದು 1958ರಲ್ಲಿ. ಆದರೆ ಅವರ ಕಾವ್ಯದ ಅಧಿಕೃತ ಸ್ವರೂಪ ಅವರ ಎರಡನೆಯ ಸಂಕಲನ ‘ಹೇಳತೇನಿ ಕೇಳ’ದಲ್ಲಿ 1964ರಲ್ಲಿ ಕಾಣಿಸಿಕೊಳ್ಳುತ್ತದೆ. ಅಲ್ಲಿಂದೀಚೆಗೆ ಅವರ ಕಾವ್ಯ ಹಾಡು ಮತ್ತು ನಾಟಕಗಳ ಮೂಲಕವಾಗಿ ಅಭಿವ್ಯಕ್ತಿಯನ್ನು ಪಡೆಯುತ್ತ ಬಂದಿದೆ. ಅವರ ಶ್ರೇಷ್ಠ ಕವಿತೆಗಳೆಲ್ಲ ಕಥನಾತ್ಮಕವಾದವುಗಳು, ಅವರ ಕಥೆಗಳೆಲ್ಲ ಜಾನಪದ ಭೂಮಿಯಲ್ಲಿ ಬೇರು ಬಿಟ್ಟವುಗಳಾಗಿವೆ. ತಮ್ಮ ಬಾಲ್ಯ ಕಾಲದ ಜಗತ್ತನ್ನು ಕುರಿತು ಒಂದು ಭಾಷಣದಲ್ಲಿ ಅವರು ಹೇಳಿದ ಕೆಲವು ಮಾತುಗಳು ಉಲ್ಲೇಖನೀಯವಾಗಿವೆ. ಕೊಲೆಗೆ ಈಡಾದವರ ಹೆಣಗಳನ್ನು ಸಂಸ್ಕಾರ ಮಾಡಿ ಹುಗಿಯಲು ಒಬ್ಬ ಜಂಗಮನನ್ನು ಕಣ್ಣು ಕಟ್ಟಿ ಕರೆದುಕೊಂಡು ಹೋಗುತ್ತಿದ್ದರಂತೆ ಅವರ ಊರಿನಲ್ಲಿ. ಅಲಿಬಾಬಾನ ಜಗತ್ತನ್ನು ನೆನಪಿಗೆ ತರುವ ಇಂಥ ಜಗತ್ತಿನ ಸ್ಮೃತಿಗಳಿಂದ ಅವರ ಕಾವ್ಯ ತುಂಬಿಕೊಂಡಿದೆ. ಕಂಬಾರರಿಗಿಂತ ಮೊದಲೇ ಆ ನಾಡಿನಲ್ಲಿ ಖ್ವಾಜಾಸಾಹೇಬನ ಲಾವಣಿಗಳು ಮತ್ತು ‘ಕೃಷ್ಣ ಪಾರಿಜಾತ’, ‘ಸಂಗ್ಯಾ ಬಾಳ್ಯಾ’ನಂಥ ನಾಟಕಗಳು ಪ್ರಚಲಿತವಾಗಿದ್ದವು. ಈ ಸಾಹಿತ್ಯ ಅವರಿಗೆ ಒಂದು ಜಾನಪದ-ಪೌರಾಣಿಕ ಕತೆಯನ್ನು ಕೊಟ್ಟಿತ್ತು. + +ಕಂಬಾರರ ಕಾವ್ಯ ಈ ಕತೆಯ ಮೂಲಕ ಜೀವನವನ್ನು ಅರ್ಥವಿಸತೊಡಗಿತು. ಒಮ್ಮೊಮ್ಮೆ ಸ್ವಂತದ ಅನುಭೂತಿಯ ಉದ್ರೇಕ ಹೆಚ್ಚಾದಾಗ ಸುಶಿಕ್ಷಿತ ಕಾವ್ಯದ ಬಲದಿಂದ ಈ ಅನುಭೂತಿಯನ್ನು ಭೇದಿಸಬೇಕಾಯಿತು. ಒಂದು ಹಳೆಯ ಕವಿತೆಯ ಹೆಸರು ‘ಉಮರ ಮೈಯಲ್ಲಿ ಬಂದಾಗ’ ಎಂದಿದೆ. ಉಮರ ಖಯ್ಯಾಮನನ್ನು ತನ್ನಲ್ಲಿ ಆವಾಹಿಸಿ ಕೊಂಡು ಅರ್ಥ ಮಾಡಿಕೊಳ್ಳಬೇಕಾಯಿತು. ‘ನವಿರ ಸಾಲಿನ ಗುಂಟ ಸುಖದ ಮುಂಗಾರಿ ಬೀಜಗಳ ಬಿತ್ತು’ ಸ್ವಂತದ ಜೊತೆಗೆ ಇತರವಾದದ್ದು ಸೇರಿಕೊಂಡಿರುವ ಪ್ರತಿಮೆ ಇದಾಗಿದೆ. ‘ನಾನು-ನೀನು’ ಎಂಬ ಕವಿತೆಯಲ್ಲಿಯೂ ಸ್ವಂತ ಮತ್ತು ಇತರಗಳ ಮುಖಾಮುಖಿ ಪ್ರಣಯಕಾವ್ಯದ ಮೈಯಲ್ಲಿ ಸೇರಿ ಹೋಗಿದೆ. ತನಗಿಂತ ಭಿನ್ನವಾಗಿದ್ದರ ಬಗ್ಗೆ ಆಕರ್ಷಣೆ ಮತ್ತು ವಿಕರ್ಷಣೆ, ಸ್ನೇಹ ಮತ್ತು ಜಗಳಗಳೆರಡೂ ಕಂಬಾರರ ಮೊದಲಿನ ಕಾವ್ಯದಲ್ಲಿ ಕಾವ್ಯ ವಸ್ತುವನ್ನು ನಿರ್ಮಿಸುತ್ತವೆ, ತಾನು ‘ಬೆಳುವೊಲದ ಉಸುಬಿನ ಮಸಾರಿ’ಯಾದರೆ ತನಗಿಂತ ಭಿನ್ನವಾದದ್ದು ‘ಮಲೆನಾಡ ಮೊಗಸಿರಿಗೆ ಹಸಿರೊರಸಿ, ಹೂಮೆತ್ತಿ ಮುದ್ದಿಡುವ ಮನ್ಸೂನು ಮಳೆ’ಯಾಗುತ್ತದೆ. + +ಜಗತ್ತನ್ನು ಹುಡುಕ ಹೊರಟ ಕವಿಗೆ ಜಗತ್ತಿನ ಬದಲು ಸಿಗುವದು ಭಾಷೆ. ಈ ಭಾಷೆ ಜಗತ್ತಿನ ಹತ್ತಾರು ಸಂಘರ್ಷಗಳನ್ನು ಮೈಗೂಡಿಸಿಕೊಂಡಿರುತ್ತದೆ. ಜಗತ್ತಿನ ಬದಲಾಗಿ ಸಿಕ್ಕ ಭಾಷೆ-ಕಂಬಾರರ ಮಟ್ಟಿಗೆ ಹೇಳುವದಾದರೆ ಅವರಿಗೆ ದೊರೆತ ಜಾನಪದ ಕತೆ, ಕಾವ್ಯ, ಪುರಾಣಗಳು-ಅನೇಕ ಸಂಭಾವ್ಯತೆಗಳಿಂದ ಕೂಡಿರುತ್ತದೆ. ‘ಹೇಳತೇನ ಕೇಳ’ ಕವಿತೆಯ ಶಿವಾಪುರದಲ್ಲಿ ಹಳೆಯ ಗೌಡ ಗೌಡತಿಯರ ಆಳಿಕೆ ಮುಗಿಯುವಂತಾಗಿ ಹೊಸ ಜೀವನ ವ್ಯವಸ್ಥೆ ತಲೆಯೆತ್ತುತ್ತದೆ. ಹೊರಗಿನಿಂದ ಬಂದ ರಾಕ್ಷಸ ಗೌಡನನ್ನು ಕೊಂದು ತಾನೇ ಗೌಡನಾಗಿ ಊರಿನೊಳಗೆ ತಿರುಗಿ ಬರುತ್ತಾನೆ. ದೂರ ದೂರದವರೆಗೆ ಬೇರು ಬಿಳಲುಗಳನ್ನು ಚಾಚಿದ್ದ ಮರವನ್ನು ಕಡಿದು ಅದರ ಸ್ಥಳದಲ್ಲಿ ಹೊಸ ಶಾಲೆಯನ್ನು ಕಟ್ಟಿಸುತ್ತಾನೆ. ಗೌಡನ ಮಗ ರಾಮಗೊಂಡ ತಾಯಿಯ ವಿಚಿತ್ರ ಬಯಕೆಗಳನ್ನು ತೃಪ್ತಿ ಪಡಿಸಲು ಹುಲಿಯ ಹಾಲು ತರಲು ಹೋದವನಿಗೆ ತನ್ನ ತಂದೆಯ ಮರಣ ರಹಸ್ಯ ತಿಳಿದು ಬರುತ್ತದೆ. ತಾಯಿ ತನ್ನವಳಾದರೂ ತಂದೆ ತನ್ನ ತಂದೆಯಲ್ಲವೆಂದು ತಿಳಿದು ಬರುತ್ತದೆ. ಅವನ ತಮ್ಮ ಬಾಳಗೊಂಡನ ಕತೆ ಇನ್ನೊಂದು ರೀತಿಯದು, ಮುಂದೆ ‘ಋಷ್ಯಶೃಂಗ’ ನಾಟಕದಲ್ಲಿ ಹೊಸ ಅರ್ಥವನ್ನು ಪಡೆಯುತ್ತದೆ. ಆದರೆ ಈಗ ಇರುವಂತೆ ಈ ಜಾನಪದ-ಪೌರಾಣಿಕ ಕತೆ ನಿಬಿಡವಾದ ಅರ್ಥ ಪ್ರಪಂಚ ವನ್ನು ಒಳಗಿಟ್ಟುಕೊಂಡಿದೆ. ಕಂಬಾರರ ಕಾವ್ಯ ಹಳೆಯ ಜಗತ್ತಿನ ಪಕ್ಷಪಾತಿಯಾಗಿ ಹೊಸ ಜಗತ್ತನ್ನು ಸಂಶಯದಿಂದ ನೋಡುತ್ತಿದೆ ಎಂದು ಅರ್ಥವನ್ನು ಸರಳೀಕರಿಸಿದರೆ ಅಪಾಯ ತಪ್ಪಿದ್ದಲ್ಲ. + + + +ಯುರೋಪದಲ್ಲಿ ಎಡಿಪಸ್ ಮತ್ತು ಹ್ಯಾಮ್ಲೆಟ್‍ನಂಥವರು ಸಾಂಸ್ಕ ೃತಿಕ ಬಿಕ್ಕಟ್ಟು ಬಂದಾಗಲೆಲ್ಲ ಕಾಣಿಸಿಕೊಳ್ಳುವ ಕಾರಣ ಪಾತ್ರಗಳು. ಕಂಬಾರರ ರಾಮಗೊಂಡ ಬಾಳಗೊಂಡರು ಅಂಥ ಪಾತ್ರಗಳಾಗಿವೆ. ಬಾಳಗೊಂಡ ತಂದೆಯೊಂದಿಗೆ ಜಗಳವಾಡಿದರೆ ರಾಮಗೊಂಡನ ಜಗಳ ತಾಯಿಯೊಡನೆ. ರಾಮಗೊಂಡ ಮತ್ತು ಅವನ ತಂದೆ ತಾಯಿಗಳ ನಡುವೆ ಬಂದು ನಿಂತ ರಾಕ್ಷಸ ಆನುವಂಶಿಕ ಸಂಬಂಧವನ್ನು ಹರಿದು ಹಾಕುತ್ತಾನೆ. ಬಾಳಗೊಂಡ ಈ ಸಂಬಂಧವನ್ನು ಸಂಶಯದಿಂದ ನೋಡತೊಡ ಗುತ್ತಾನೆ. ಅವರಿಬ್ಬರಿಗೂ ಸಫಲವಾಗಬಲ್ಲ ಕಾಮಜೀವನವಿಲ್ಲ. ಅವರಿಬ್ಬರೂ ನಾಯಕರೂ ಹೌದು ಬಲಿಪಶುಗಳು ಹೌದು. ಕಾಮದ ಅನುಭವ ಅವರಿಗೆ ಎಲ್ಲರಿಗೂ ಹೇಗೋ ಹಾಗೆ ಅನುಭವವೂ ಹೌದು ತಿಳುವಳಿಕೆಯೂ ಹೌದು. ಆದರೆ ಇವೆರಡೂ ಒಂದನ್ನೊಂದು ಅಗಲುತ್ತಿರುವ ಕ್ಷಣದಲ್ಲಿ ಅವರು ಅನುಭವಕ್ಕಾಗಿ ಕಾತರರಾಗುತ್ತಾರೆ, ಭಾಷೆಯ ಕಲಬೆರಕೆಯಿಂದಾಗಿ ತಿಳುವಳಿಕೆ ಗೊಂದಲವಾಗುತ್ತದೆ, ಆದರೆ ಅನುಭವ ಮೋಸ ಮಾಡುವದಿಲ್ಲ. + +ನವೋದಯ ಕಾಲಕ್ಕಿಂತ ಮೊದಲೇ ನಮಗೆ ಪಾಶ್ಚಾತ್ಯ ನಾಗರಿಕತೆಯ ಸಂಪರ್ಕ ಬಂದಿತ್ತು. ಅದು ಮೊದಮೊದಲು ಹುಟ್ಟಿಸಿದ್ದ ಭಯ ಮತ್ತು ಬೆರಗುಗಳು ಹಿಮ್ಮೆಟ್ಟಿ ನವೋದಯ ಕಾಲಕ್ಕೆ ಒಂದು ಬಗೆಯ ಸ್ನೇಹ ಸಂಬಂಧ ಬೆಳೆಯಿತು. ಹಳೆಯದರಿಂದ ಬಿಡುಗಡೆ ಎಂಬ ಕಲ್ಪನೆಯೇ ರೋಮಾಂಚಕಾರಿಯಾಗಿತ್ತು. ನಾಡಿನ ರಾಜಕೀಯ ಸ್ವಾತಂತ್ರ್ಯಕ್ಕೂ ನವೋದಯದ ಸಾಂಸ್ಕೃತಿಕ ಬಿಡುಗಡೆಗೂ ಹತ್ತಿರದ ಸಂಬಂಧವಿದೆ. ಆದರೆ ಸಾಂಸ್ಕೃತಿಕತೆ ನಾಡಿನ ಪ್ರಜ್ಞೆಗೆ ಸಂಬಂಧಿಸಿರುವದರಿಂದ ಹಳೆ ಮತ್ತು ಹೊಸದು ಇವುಗಳ ಕಗ್ಗಂಟು ಬೇಗ ಬಿಚ್ಚುವಂಥದ್ದಲ್ಲ. ‘‘ಪುರೋಹಿತರ ನೆಚ್ಚಿ ಪಶ್ಚಿಮ ಬುದ್ಧಿಯಾದೆವೋ | ಇನ್ನಾದರೂ ಪೂರ್ವಮೀಮಾಂಸೆ ಕರ್ಮಕಾಂಡಗಳನ್ನು ಬಗೆಯಬೇಕು’’ ಗೋಪಾಲಕೃಷ್ಣ ಅಡಿಗರ ಈ ಹೇಳಿಕೆಯ ಅರ್ಥ ವ್ಯಂಗ್ಯದಿಂದ ಕೂಡಿಕೊಂಡಿರುವದರಿಂದ, ನಿರ್ಣಾಯಕ ವಾದ ಮಾತನ್ನು ಹೇಳುವದಿಲ್ಲ. ಈ ಹೇಳಿಕೆಯಲ್ಲಿಯ ಪಶ್ಚಿಮ ಪೂರ್ವಗಳ ಅರ್ಥ ತಿರುವುಮುರುವಾಗುತ್ತದೆ. ಮುಂದೆ ನೋಡಬೇಕಾದ ‘ಪುರೋಹಿತರು’ ಹಿಂದೆ ನೋಡಿದಾಗ ಮುಂದೆ ನೋಡಿದ್ದೇ ಪಶ್ಚಿಮ ಬುದ್ಧಿ’. ಬಹುಶಃ ‘ಪೂರ್ವದ ಕಡೆಗೆ ನೋಡುವದೇ ಮುನ್ನೋಟವಾಗಬಹುದು. ಇಂಥ ಬಿಕ್ಕಟ್ಟಿನಲ್ಲಿ ಕಂಬಾರರು ಅವೆರಡನ್ನೂ ಬಿಟ್ಟು ಕೊಟ್ಟು ಪಾತಾಳದ ಆಳದಲ್ಲಿ ಮತ್ತು ಮುಗಿಲಿನಾಚೆಗೆ ಮೇಲೆ ನೋಡಲು ಪ್ರಾರಂಭಿಸಿದರು. ‘‘ಹಿಂದೆ ಹಿತ್ತಲ ಮುಂದಿನಂಗಳ ನೆರಳ ವೈಭವಾ | ಹಳೆಯ ಬಾವಿಯಲ್ಲಿ ಹಸಿರು ಸ್ವಪ್ನ ಸಂಭವಾ |’’. + +‘ಹೇಳತೇನ ಕೇಳ’ ಕವಿತೆಯ ಕೊನೆಯಲ್ಲಿ ಕಣ್ಣು ಕಳೆದುಕೊಂಡ ರಾಮಗೊಂಡ ಪೂರ್ವದಿಕ್ಕನ್ನು ನೋಡುತ್ತ ಸೂರ್ಯನ ಬರವಿಗಾಗಿ ಕಾಯುತ್ತಾನೆ. ಒಂದಲ್ಲ ಹತ್ತು ಅರ್ಥಗಳನ್ನು ಒಳಗಿಟ್ಟುಕೊಂಡ ಪ್ರತಿಮೆ ಇದಾಗಿದೆ. ಮೂಡಣ ದಿಕ್ಕಿನಿಂದ ಬರುವ ಸಾಧು ಶರಣನೊಬ್ಬ ಮಂತ್ರಿಸಿದ ನೀರನ್ನು ಕೊಡಲಿದ್ದಾನೆ, ರಾಕ್ಷಸನ ಮೈಮೇಲೆ ಮಂತ್ರಿಸಿದ ನೀರನ್ನು ಸಿಂಪಡಿಸಬೇಕು. ಈ ಕಾಯುವಿಕೆಯೊಂದಿಗೆ ಕವಿತೆ ಮುಗಿಯುತ್ತದೆ. ಈ ಜಾನಪದ ಕತೆ ತಾತ್ಕಾಲಿಕ ಪರಿಹಾರವನ್ನು ಸೂಚಿಸುವದಿಲ್ಲ. ನಮ್ಮ ಎಲ್ಲ ಸಾಮಾಜಿಕ ಅನಿಷ್ಟಗಳಿಗೂ ರಾಜಕೀಯ ಪರಿಹಾರವಿದ್ದರೂ, ಅವೆಲ್ಲ ನಿರ್ಮೂಲವಾದ ಮೇಲೆ ಕೂಡ ನಮ್ಮ ಅಂತರಂಗದ ಸಮಸ್ಯೆ ಉಳಿದು ಬಿಡುತ್ತದೆ. ತನ್ನ ದೇಹ ಮತ್ತು ಮನಸ್ಸು ಗಳನ್ನು ತಾಯಿಯ ಬಯಕೆಗೆ ಬಲಿಯಾಗಿಸಿದ ರಾಮಗೊಂಡ ಒಂದು ವಿಶಿಷ್ಟ ಪ್ರತಿಮೆ ಯಾಗಿ ಉಳಿದು ಬಿಡುತ್ತಾನೆ. ಕಂಬಾರರ ಕಾವ್ಯದಲ್ಲಿ ಜನತೆ ಮತ್ತು ಜನ ನಾಯಕರ ಸಂಬಂಧ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತದೆ. ಕುರಿಗಳು ಕುರುಬನಿಗಾಗಿ ಅಲ್ಪರೆಯುತ್ತವೆ. ಆದರೆ ನಾಯಕ ನಾಯಕನಾಗಲು ಒಪ್ಪಿಕೊಳ್ಳುವದಿಲ್ಲ. ಪ್ರಜಾಪ್ರಭುತ್ವದ ಒಂದು ದೊಡ್ಡ ಬಿಕ್ಕಟ್ಟೆಂದರೆ ನಾಯಕನ ಮರಣ. ನಾಯಕ ಸಾಯದೆ ಪ್ರಜಾರಾಜ್ಯ ಹುಟ್ಟುವದಿಲ್ಲ. ಆದರೆ ರಾಜ್ಯ ವ್ಯವಸ್ಥೆಯ ಅರ್ಥವೆಲ್ಲ ನಾಯಕನಲ್ಲಿ ಕೇಂದ್ರೀಕೃತವಾಗಿರುತ್ತದೆ. ನಾಯಕ ಪಾತ್ರದ ಅನೇಕ ಮಗ್ಗುಲಗಳನ್ನು ಕಂಬಾರರ ನಾಟಕಗಳು ಹೆಚ್ಚು ವಿಶದವಾಗಿ, ಶಕ್ತಿ ಪೂರ್ಣವಾಗಿ ಚಿತ್ರಿಸುತ್ತವೆ. ನಾಯಕ ಮತ್ತು ಜನತೆ ಇವರ ಸಂಬಂಧದಲ್ಲಿರುವ ಸ್ನೇಹ, ಅವಲಂಬನ, ಮೋಸ ಮತ್ತು ದ್ರೋಹಗಳನ್ನು ಅವರ ನಾಟಕಗಳು ವಿವರವಾಗಿ, ಮೂರ್ತವಾಗಿ ನಿರೂಪಿಸುತ್ತವೆ. ಆದರೆ ರಾಮಗೊಂಡ ಮತ್ತು ಬಾಳಗೊಂಡರು ಕಾವ್ಯ ನಾಯಕರೂ ಹೌದು. + +ರಾಮಗೊಂಡನ ಕಣ್ಣಿಗೆ ಬಾಳಿನ ದುರಂತದ ರಹಸ್ಯವನ್ನೆಲ್ಲ ಬಲ್ಲ ‘ಜಕ್ಕ ಜಲದೇರು’ ಕಾಣುತ್ತಾರೆ. ಅವರ ಮುಂದೆ ನಿಂತು ದಾರಿಕಟ್ಟಿ ಒಡಪ ಒಡೆದು ಹೋಗಿರೆಂದು ಕೇಳಿ ಕೊಳ್ಳುತ್ತಾನೆ. ನಿರ್ದಯವಾಗಿ ಮನುಷ್ಯತ್ವವಿಲ್ಲದಂತಿದ್ದ ಕರಿಸಿದ್ದನಿಗೆ ಬಾವಾ ಬಂದು ಒಂದು ಕುದುರೆಯನ್ನು ಕೊಟ್ಟು ಹೋಗುತ್ತಾನೆ. ಸಿದ್ಧ ಕುದುರೆಯನ್ನು ಕದ್ದು ತಾನೇ ಇಟ್ಟುಕೊಂಡಾಗ ಬಾವಾ ಅವನನ್ನು ಶಪಿಸಿ ಕುದುರೆ ಅವನಿಗೆ ದಕ್ಕದಂತೆ ಮಾಡುತ್ತಾನೆ. ಈ ನಾಯಕರು ತಮ್ಮನ್ನು ಮೀರಿದ ಶಕ್ತಿಯೊಂದಿಗೆ ಸೆಣಸುವವರು. ಶಾಪ, ವರ, ಒಗಟು, ಸಮಯ, ಹರಕೆ ಮೊದಲಾದವುಗಳು ಸಾಮಾನ್ಯವಾದ ಭಾಷೆಯನ್ನು ಮೀರಿದ ಅತಿಭಾಷೆಯಾಗುತ್ತವೆ. ರಾಮಗೊಂಡ ಜಕ್ಕ ಜಲದೇರನ್ನು ತಡವದಿದ್ದರೆ, ಕರಿಸಿದ್ದ ಬಾವಾ ಕೊಟ್ಟಿದ್ದ ಕುದುರೆಯನ್ನು ತಿರುಗಿ ಕೊಟ್ಟಿದ್ದರೆ, ಬಹುಶಃ ಅವರು ಸಾಯುತ್ತಿರಲಿಲ್ಲ; ಆದರೆ ಸಾಮಾನ್ಯರಾಗಿ ಉಳಿಯುತ್ತಿದ್ದರು. ಇವರು ದೈವವನ್ನು ಕೆಣಕುವ ನಾಯಕರು, ಅಂತೆ ಅನುಯಾಯಿಗಳಿಲ್ಲದ ನಾಯಕರು. ಹೋದರೆ ನನ್ನ ಜೀವ, ಸಿಕ್ಕರೆ ಪರಮ ಸತ್ಯ ಇದು ಅವರ ಬಾಳಿನ ಅರ್ಥವಾಗುತ್ತದೆ. ಅವರಿಗೆ ದೊರೆತ ಸತ್ಯ ಯಾವದೆಂಬುದನ್ನು ಕಾವ್ಯ ಹೇಳುವದಿಲ್ಲ. ಪರಿಣಾಮವೆಲ್ಲ ಅಸ್ಪಷ್ಟ. ಹೋದವರು ಹಿಂದಿರುಗಿ ಬರಲಿಲ್ಲ. ಆಗೀಗ ಗೊರಸಿನ ದನಿ ಕೇಳಿ ಜನ ರಾತ್ರಿಯಲ್ಲಿ ಬೆಚ್ಚಿ ಬೀಳುವರು. ಪೇರಿಸಿಟ್ಟ ಅಡಕಲ ಗಡಿಗೆಗಳು ಕೆಳಗೆ ಬಿದ್ದರೆ, ಸಲಿಗೆಯ ಸಂಬಂಧದ ಬೆಸುಗೆ ಬಿಚ್ಚಿದರೆ ಕುದರೀಸಿದ್ದ ಮತ್ತು ಕುದುರೆಯ ಜೋಡಿ ತುಳಿದಾಡಿ ಹೋಗಿರಬೇಕೆಂದು ಜನರು ಆಡಿಕೊಳ್ಳುತ್ತಾರೆ. ಬಹುಶಃ ಅವರಿಗೆ ದೊರೆತ ಸತ್ಯವೆಂದರೆ ಪ್ರೊಮಿಥಿಯಸ್ ಸ್ವರ್ಗದಿಂದ ಕದ್ದು ತಂದ ಬೆಂಕಿ. + + + +ಇಂಥ ಜಾನಪದ-ಪೌರಾಣಿಕ ಕತೆಗಳ ಜಗತ್ತಿಗೆ ವಿರುದ್ಧವಾಗಿ ಇನ್ನೊಂದು ಲೋಕವೂ ಕಂಬಾರರ ಕಾವ್ಯದಲ್ಲಿ ಕಾಣಿಸಿಕೊಂಡಿದೆ. ಅದೆಂದರೆ ಸಿಟಿಯಲ್ಲಿ ಕಾಣುವ ಜಗತ್ತು, ಅವರ ಸಿಟಿ-ಕಾವ್ಯವೆಂದರೆ ವಿಡಂಬನದ ಬಹಿರ್ಮುಖ ಕಾವ್ಯ. ನಗರದ ನೂರೆಂಟು ವಿಕೃತಿಗಳನ್ನು ಈ ಕಾವ್ಯ ರಾವುಗನ್ನಡಿ ಹಿಡಿದು ತೋರಿಸುತ್ತದೆ. ಆದರೆ ಇಲ್ಲಿ ಹಳ್ಳಿ ಮತ್ತು ನಗರ ಎಂಬ ಸಾಮಾನ್ಯವಾದ, ಸರಳವಾದ ವಿರೋಧವಿಲ್ಲ. ಕಂಬಾರರ ಕಾವ್ಯ ವಿರೋಧಿಸುವದು ಜೀವನದ ವ್ಯಾಪಾರೀಕರಣವನ್ನು, ಸಿಟಿ ಒಂದು ಇಟ್ಟಿಗೆಯ ಪಟ್ಟಣವಾಗಿ ಅಲ್ಲಿ ಒಂದು ಆತ್ಮದ ಮಾರ್ಕೆಟ್ಟಿದೆ ಎಂದು ಅವರ ಒಂದು ಕವಿತೆ ಹೇಳುತ್ತದೆ. ಅದು ಯಾವ ಸಿಟಿಯಲ್ಲಿ ಅಥವಾ ಅದು ನಿಜವೇ ಎಂಬ ಮಾತು ಇಲ್ಲಿ ಪ್ರಸ್ತುತವಲ್ಲ. ಹಳೆಗೆಳತಿ ಭೆಟ್ಟಿಯಾಗಿ ಅವಳ ಜೊತೆಯಲ್ಲಿ ಕುಳಿತರೂ ಹಳೆಯ ರೋಮಾಂಚ ಸತ್ತು ಹೋಗಿದ್ದರೆ ಈ ಸಾವಿಗೇನು ಕಾರಣ ಎಂದು ಕೇಳಬೇಕಾಗುತ್ತದೆ. ಜೀವ ವಿರೋಧಿಯಾದ ಎಲ್ಲ ಸಂಗತಿಗಳನ್ನೂ ಕಂಬಾರರ ಕಾವ್ಯ ವಿರೋಧಿಸುತ್ತದೆ. ಇಲ್ಲಿ ವಿಡಂಬನದ್ದೇ ಮುಖ್ಯ ಪಾತ್ರ. + +ಇಷ್ಟಾಗಿಯೂ ಕಂಬಾರರ ಸಿಟಿ ಕಾವ್ಯ ತೃಪ್ತಿ ಕೊಡುವಂಥದ್ದಲ್ಲ. ಅವರ ಕಾವ್ಯ ತನಗೆ ವಿರುದ್ಧವಾದ ಕಾವ್ಯವನ್ನು ಹುಟ್ಟಿಸಿಕೊಂಡಂತಾಗಿದೆ. ಅವರ ಸಮಗ್ರ ಕಾವ್ಯದಲ್ಲಿ, ಅದರ ಸಂದರ್ಭದಲ್ಲಿ ಈ ಕಾವ್ಯವನ್ನಿಟ್ಟು ನೋಡಬೇಕು. ಸಿಟಿ ಕಾವ್ಯ ‘ಸೂಚಿಸುವ ವಾಸ್ತವತೆಗೂ ಅವರ ಉಳಿದ ಕಾವ್ಯ ಸೂಚಿಸುವ ಅವಾಸ್ತವಕ್ಕೂ ಬಹಳ ಅಂತರವಿದೆ. ಕಂಬಾರರ ಕಾವ್ಯಕ್ಕೆ ಬೇಕಾಗುವ ಕನಸುಗಳು ಸಿಟಿಯಲ್ಲಿ ಸಿಗುವದಿಲ್ಲ. ‘ಸ್ವಂತಚಿತ್ರ’ ಎಂಬ ಒಂದು ಕವಿತೆಯಲ್ಲಿ ಆಧುನಿಕ ಕಾವ್ಯ ಹುಡುಕುತ್ತಿರುವ ಕೇಂದ್ರ ಪ್ರಜ್ಞೆಯನ್ನು ಅವರು ವಿಡಂಬನಕ್ಕೀಡು ಮಾಡಿದ್ದಾರೆಂದು ತೋರುತ್ತದೆ. + +ಮಧ್ಯದ ಅಯೋಧ್ಯೆಯೊಂದಿದೆಯಲ್ಲ,ಅಲ್ಲೊಂದು ನರಮಂಡಲದ ತುದಿ ಮೊದಲುಹರಿಹರಿದು ಸೊರಗಿ ಮತ್ತೆ ಸೇರುವ ಹಾಗೆ :ಅದೊಂದುಬಗೆ ಕಾವ್ಯದ ಕೇಂದ್ರ ಪ್ರಜ್ಞೆಯ ಹಾಗೆ-ಕರಿಗೆರೆಯ ಕಬ್ಬಿಣಸಳಿಯ ಪಂಜರ ಬರೆ…….. + +ಕವಿ ಗೆಳೆಯನಿಗೆ ಸ್ವಂತ ಚಿತ್ರವನ್ನು ಬರೆಯುವದು ಹೇಗೆಂದು ಕಲಿಸುತ್ತಿದ್ದಾನೆ. ಅವನು ಹೇಳಿದಂತೆ ಬರೆದರೆ ಅದು ಭಾರತದ ಚಿತ್ರವಾಗುತ್ತದೆ. ಭಾರತದ ಕೇಂದ್ರದಲ್ಲಿಯ ಅಯೋಧ್ಯೆಯಲ್ಲಿ ಕಾವ್ಯದ ಕೇಂದ್ರ ಪ್ರಜ್ಞೆಯಂಥ ನರಮಂಡಲದ ಚಿತ್ರ ಪಂಜರದಂತೆ ಕಾಣಬೇಕು. ಸೂರ್ಯಾಸ್ತದ ಹೊತ್ತು ಈ ಪಂಜರದಲ್ಲಿ ಹಕ್ಕಿ ಬರಬಹುದು. ಪಂಜರದಲ್ಲಿ ಸೆರೆಗೊಂಡ ಹಕ್ಕಿ ಹಾಡಬಹುದು. ಭಾರತ ಒಂದು ಸನಾತನ ವೃಕ್ಷದಂತೆ ಕಾಣಬೇಕು; ಆ ವೃಕ್ಷದ ಮಧ್ಯದಲ್ಲಿ ಪಂಜರ ಗಿಡದೊಡನೆ ಸಾವಯವ ಸಂಬಂಧವನ್ನಿಟ್ಟುಕೊಳ್ಳ ಬೇಕು. ಪಂಜರದಲ್ಲಿ ಸೆರೆಯಾದ ಹಕ್ಕಿ ಹಾಡಬೇಕು. ಅದು ಹಾಡದಿದ್ದರೆ ಕುಂಚವನ್ನು ಬಣ್ಣದಲ್ಲಿ ಅದ್ದಿ ಅದರ ಚುಂಚನ್ನು ಬಿಡಿಸಿ ಅಲ್ಲೊಂದು ಹುಣ್ಣು ಬರೆಯಬೇಕು. ಆ ಹುಣ್ಣಿನ ಕೆಳಗೆ ಗೆರೆಯೆಳೆದು ನಿನ್ನ ಹೆಸರು ಬರೆಯಬೇಕು ಎಂದು ಕವಿತೆ ಹೇಳುತ್ತದೆ. ಆಧುನಿಕ ಕಾವ್ಯದ ಅನೇಕ ಸಾಂಸ್ಕೃತಿಕ ಹಾಗೂ ಕಲಾತ್ಮಕ ಪರಿಕಲ್ಪನೆಗಳನ್ನು ಈ ಕವಿತೆ ನಿರಾಕರಿಸುತ್ತದೆಯೆಂದು ತೋರುತ್ತದೆ. + +ಭಾರತದಲ್ಲಿ ವೃಕ್ಷ, ವೃಕ್ಷದಲ್ಲಿ ಪಂಜರ, ಪಂಜರದಲ್ಲಿ ಹಕ್ಕಿ, ಹಕ್ಕಿಯ ಹಾಡು ಇವೆಲ್ಲ ಒಟ್ಟುಗೂಡಿಕೊಂಡು ಒಂದು ಚಿತ್ರವಾಗಿ ಕವಿಯ ಹೆಸರೂ ಆ ಚಿತ್ರದಲ್ಲಿ ಸೇರಿ ಹೋಗುತ್ತದೆ. ಒಂದು ದೃಷ್ಟಿಯಿಂದ ಇದು ಐತಿಹಾಸಿಕ ಸಂಪ್ರದಾಯದ ನಿರಾಕರಣೆ, ಇನ್ನೊಂದು ದೃಷ್ಟಿಯಿಂದ ಇದು ಅಕ್ಷರ ಸಂಸ್ಕೃತಿಯ ನಿರಾಕರಣೆ. ‘ಕ್ಯಾಲೆಂಡರಿನಲ್ಲಿಯ ನಿಸರ್ಗ’ದಂತೆ ಈ ಚಿತ್ರವೂ ನಿರಾಕರಣೆಗೆ ಯೋಗ್ಯ ವಾದದ್ದು. ಅದಕ್ಕಾಗಿ ಕಂಬಾರರ ಕಾವ್ಯ ಜಾನಪದಕ್ಕೆ ತಿರುಗಿ ಹೋಗುತ್ತದೆ ಅಥವಾ ಅದು ಜಾನಪದದಿಂದ ಪ್ರಾರಂಭವಾಗುತ್ತದೆ. ಜಾನಪದವೇ ಅವರ ಕಾವ್ಯದ ಗಮ್ಯವಲ್ಲ, ಅದು ಅದರ ಪ್ರಾರಂಭ. ಅದು ನಿಲುಗಡೆಯ ಸ್ಥಿತಿಯೂ ಅಲ್ಲ, ಜಾನಪದ ಕಾವ್ಯದ ಉಪಯೋಗದ ಒಂದು ಸಾಧ್ಯತೆ ಬೇಂದ್ರೆಯವರಲ್ಲಿ ಕಾಣುತ್ತಿದ್ದರೆ ಕಂಬಾರರಲ್ಲಿ ಇನ್ನೊಂದು ಬಗೆಯ ಸಾಧ್ಯತೆ ಕಾಣುತ್ತದೆ. ಬೇಂದ್ರೆಯವರಿಗೆ ಭಾವಗೀತದ ವಾಕ್ಯ ಬೇಕಾಗಿತ್ತು. ಆ ಬಗೆಯ ವಾಕ್ಯ ಅವರಿಗೆ ಜಾನಪದ ಕಾವ್ಯದಲ್ಲಿ ದೊರೆಯಿತು. ಅವರ ಪ್ರಾರಂಭದ ಕವಿತೆಗಳಲ್ಲಿ ಮುಕ್ತವಾದ ವಾಕ್ಯರಚನೆ ಜಾನಪದ ಕಾವ್ಯದ್ದು. ಷಟ್ಪದಿಯ ವಾಕ್ಯ ರಚನೆಯಿಂದ ಅವರು ಜಾನಪದ ಕಾವ್ಯದ ವಾಕ್ಯರಚನೆಗೆ ಜಿಗಿದರು. ಅಲ್ಲಿಂದ ಮುಂದೆ ಅವರು ಅವೆರಡು ಸಂಸ್ಕಾರಗಳನ್ನೂ ಅಳವಡಿಸಿಕೊಂಡು ಆಧುನಿಕ ಕಾವ್ಯದ ವಾಕ್ಯವನ್ನು ನಿರ್ಮಿಸಿಕೊಂಡರು. + +ಚಂದ್ರಶೇಖರ ಕಂಬಾರರು ತಮ್ಮ ಮೊದಲ ಸಂಕಲನವಾದ ‘ಮುಗುಳು’ದಲ್ಲಿ ಆಧುನಿಕ ಕಾವ್ಯದ ಮುಖ್ಯವಾಗಿ ನವೋದಯ ಕಾವ್ಯದ ಭಾಷೆ ಮತ್ತು ಮೌಲ್ಯಗಳನ್ನು ಒಪ್ಪಿಕೊಂಡೇ ಮುಂದುವರಿದರು. ಆದರೆ ಅವರ ಎರಡನೆಯ ಸಂಗ್ರಹ ‘ಹೇಳತೇನ ಕೇಳ’ ಸಂಪೂರ್ಣವಾಗಿ ಅಕ್ಷರ ಸಂಸ್ಕೃತಿಯನ್ನು ನಿರಾಕರಿಸಿದ ಕಾವ್ಯವಾಗಿದೆ. ನವೋದಯ ಕಾವ್ಯದ ಛಂದೋಗತಿ ಎಂದರೆ ಮಾತ್ರಾಗಣಗಳನ್ನು ಆಧರಿಸಿದ ಛಂದೋ ಪದ್ಧತಿ. ಈ ತಾಳಗತಿಯಲ್ಲಿ ಹುಟ್ಟಿದ ಕವಿತೆಯನ್ನು ಹಾಡಬಹುದಾದರೂ ಆ ಹಾಡಿಗೆ ಅಂಶಗಣದ ಮುಕ್ತತೆ ಇರಲಾರದು. ಕಂಬಾರರ ‘ಹೇಳತೇನ ಕೇಳ’ದ ಛಂದೋಗತಿ ಲಾವಣಿಗಳ ಛಂದೋಗತಿಯನ್ನು ಅನುಸರಿಸಿರುವದರಿಂದ ಅದನ್ನು ಬೀಸಾಗಿ ಹಾಡಬಹುದು. ಈ ಹಾಡಿನ ಲಯದಲ್ಲಿ ಆದಿಮ ಜನಾಂಗದ ಕುಣಿತದ ನಾದ ಮತ್ತು ಶಕ್ತಿಗಳಿವೆ. ಇದನ್ನೇ ಬಳಸಿಕೊಂಡು ನಮ್ಮ ಸುಶಿಕ್ಷಿತ ಕಾವ್ಯ ಹುಟ್ಟಿ ಬಂದಿತು. ಮೌಖಿಕ ದನಿ ಬರೆವಣಿಗೆ ಯಲ್ಲಿ ಭಾಷಾಂತರಗೊಂಡು ಕೆಲವು ಗುಣಗಳನ್ನು ಕಳೆದುಕೊಂಡು ಮತ್ತೆ ಕೆಲವು ಹೊಸ ಗುಣಗಳನ್ನು ಪಡೆದುಕೊಂಡಿತು. ಶಬ್ದ ಅಕ್ಷರದಲ್ಲಿ ಪರಿವರ್ತಿತವಾದಾಗ ಅದರ ಅರ್ಥವಂತಿಕೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಲಕ್ಷ್ಮೀಶನ ‘‘ತಾಯೆನಗೆ ತಾಯೆ ನಗೆಗೂಡಿ ನೋಡಿ’’ ಎಂಬ ಸಾಲಿನಲ್ಲಿ ಶಬ್ದ ಮತ್ತು ಅಕ್ಷರಗಳ ಚತುರವಾದ ಹೊಂದಾಣಿಕೆಯಲ್ಲಿ ಅರ್ಥಗಳನ್ನು ಸೃಷ್ಟಿಸುತ್ತಾನೆ. ಕನ್ನಡ ಕಾವ್ಯ ಮೊದಲಿನಿಂದ ಆಡುಮಾತು ಮತ್ತು ಬರೆವಣಿಗೆಗಳ ನಡುವೆ ಸಮನ್ವಯವನ್ನು ಸಾಧಿಸುತ್ತಲೇ ಬಂದಿದೆ. ಬೇಂದ್ರೆಯವರು ಆಡುಮಾತನ್ನು ಗಂಭೀರ ಭಾವಗಳ ಅಭಿವ್ಯಕ್ತಿಗಾಗಿ ಕೂಡ ಉಪಯೋಗಿಸಿ ಅದಕ್ಕೆ ಕಾವ್ಯ ಗೌರವವನ್ನು ತಂದುಕೊಟ್ಟರು. ಕಂಬಾರರು ಅದಕ್ಕೂ ಮುಂದೆ ಹೋಗಿ ಕಾವ್ಯದ ದನಿಯನ್ನು ಸ್ಪಷ್ಟವಾಗಿ ಕೇಳಿಸುವಂತೆ ಮಾಡಿದರು. ಈ ದನಿಯ ನಿರಂತರವಾದ ಅನುರಣನದಿಂದ ಹೊಸಲೋಕ ಸೃಷ್ಟಿಯಾಗುತ್ತದೆ. ‘‘ಹೇಳತೇನ ಕೇಳೊ ಗೆಳೆಯಾ ಕತಿಯೊಂದ ನಿನ ಮುಂದ | ಹೀಂಗ ನನ್ನ ಮುಂದೆ ಕುಂಡ್ರೊ ತೆರದ ಮನಾ’’ ಕತೆಯನ್ನು ಹೇಳುವ ಕವಿ ಮತ್ತು ಅದನ್ನು ಕೇಳುವ ಗೆಳೆಯ ಇಬ್ಬರೂ ಕತೆಯಾಗಿ ಬಿಡುತ್ತಾರೆ. + +ಕಂಬಾರರ ಕಾವ್ಯವನ್ನು ತಿಳಿದುಕೊಳ್ಳುವದಕ್ಕಿಂತ ಅದನ್ನು ಅನುಭವಿಸಲು ಇದು ಸಹಾಯ ಮಾಡುತ್ತದೆ. ಗೇಯತೆ ಕವಿತೆಯ ಒಂದು ಅಲಂಕಾರವಾಗದೆ ಅದೇ ಕವಿತೆಯ ಮಾಧ್ಯಮವಾಗುತ್ತದೆ. ‘ಚಂದಿರನ ಬೇಟೆಗೆ ಹೋದಾ’ ಎಂಬ ಕವನದ ನಾಯಕ ಚಂದ್ರನ ಬೇಟೆಗೆ ಹೋಗುತ್ತಾನೆ. ಆದರೆ ಅವನು ಹೋಗುವ ದಾರಿ ವಿಶಿಷ್ಟವಾಗಿದೆ. ‘ಬಿಸಿಲ ಗುದುರೆಯನೇರಿ ಹೋದಾ’ ಅಂದಾಗ ಮೂರು ಬಗೆಯ ಸಂಭಾವ್ಯತೆಗಳು ಕಾಣಿಸಿಕೊಳ್ಳುತ್ತವೆ. ಬಿಸಿಲು ಗುದುರೆ ಅವನ ಮನಸ್ಸಿನ ಆಸೆಯನ್ನು ಸೂಚಿಸುವದರ ಜೊತೆಗೆ ಅವನ ಆಸೆ ವ್ಯರ್ಥವೆಂದೂ ಹೇಳುತ್ತದೆ. ಆದರೆ ಇದೂ ಶಬ್ದಾರ್ಥವಾಗಿದೆ. ‘ಬಿಸಿಲುಗುದುರೆ’ ಎಂಬ ಶಬ್ದದ ನಾದದ ಗತಿಯನ್ನು ಬದಲು ಮಾಡಿ ಹಾಡಿದರೆ ಬಿಸಿಲನ್ನು ಮೀರಿ ನಿಂತ ಚಂದ್ರ ಕಾಣತೊಡಗುತ್ತಾನೆ. ಈ ಅಸಂಭವದ ಸಂಭಾವ್ಯತೆ ಇಲ್ಲಿಯ ಕಾವ್ಯ ವಸ್ತುವಾಗಿದೆ. ‘ಕೈ ಮೀರಿದ ಚಂದಿರನ ಬೇಟೆ’ ಹೇಗಿರಬಹುದೆಂಬ ಕಲ್ಪನೆ ಬೇಟೆಗಾರನಿಗೂ ಇಲ್ಲ. ಗೊತ್ತಿರುವದನ್ನು ಕಾವ್ಯ ಭಾಷೆ ದಾಖಲಿಸಿದರೆ ಕಾವ್ಯದ ನಾದ ಇನ್ನೂ ಸಿಗದಿರುವದನ್ನು ಬೇಟೆಯಾಡುತ್ತದೆ. ಆದರೆ ಇಂಥ ಸಾಹಸವನ್ನು ಕೈಕೊಳ್ಳುವ ಅಪಾಯವೇ ಕಾವ್ಯ ಪ್ರತಿಭೆಗೆ ಆಹ್ವಾನವಾಗುತ್ತದೆ. ಅಂತಲೇ ಕವಿತೆಯಲ್ಲಿ ನಿರೂಪಕಿ ಚಂದಿರನ ಬೇಟೆಗೆ ಹೋದ ಹುಡುಗನಿಗಾಗಿ ಕಾತರದಿಂದ ಕಾಯುತ್ತಿದ್ದಾಳೆ. ಕನಸಿನ ಸತ್ಯವೆಂದರೆ ಲೋಕಾಂತರದ ಸತ್ಯ. ಕನಸಿಗೂ ಹಾಡಿಗೂ ಬಿಡಲಾರದ ಸಂಬಂಧವಿದೆ. ಬೆಳದಿಂಗಳಲ್ಲಿ ಈಜಾಡುವ ಬೆಳ್ಳಿ ಮೀನು-ಚಂದ್ರನೇ ಈ ಕನಸುಗಳನ್ನು ಹುಟ್ಟಿಸುವಾತ. ‘‘ಕನಸಿನಣುಗನೋ ಇವನ ಬಸಿರಿನಲೆ ಕನಸು ಬಂದವೇನೋ’’ ಬೇಂದ್ರೆಯವರ ‘ಅಪರೂಪರಾಗ’ ಎಂಬ ಕವಿತೆಯ ಸಾಲು ಈ ಸನ್ನಿವೇಶವನ್ನು ಸರಿಯಾದ ಶಬ್ದಗಳಲ್ಲಿ ಬಣ್ಣಿಸಿ ಹೇಳುತ್ತದೆ. ‘ಕಾಡು-ನಾಡು’ ಎಂಬ ಕವಿತೆಯಲ್ಲಿ ಕಂಬಾರರು ಈ ಸನ್ನಿವೇಶವನ್ನು ವಿಶದವಾಗಿ ತಿಳಿಸಿದ್ದಾರೆ. ಕಾಡಿನಲ್ಲಿ ಚಂದ್ರ ಬೆಳಗಿದರೆ ಆಟ ಕಳೆಗಟ್ಟುತ್ತದೆ. ಚಂದ್ರ ಗಿಡಕ್ಕೆ ಹೂವಿನ ಕನಸನ್ನು ಕೊಡುತ್ತಾನೆ. ಗಾಳಿಗೆ ಹಾಡಿನ ಕನಸನ್ನು ಕೊಡುತ್ತಾನೆ. ಅಂದರೆ ಸಚರಾಚರ ಜಗತ್ತಿಗೆ ಕನಸುಗಳ ವಾಸ್ತವ ಸತ್ತೆಯನ್ನು ಚಂದ್ರನ ಬೆಳಕಿನಲ್ಲಿ ಮಾತ್ರ ಗುರುತಿಸಬಹುದು. ಅಂಬಿಗರ ಹುಡುಗ ನದಿಯ ಮೈಯಲ್ಲಿ ಬೆಳ್ಳಿ ಮೀನಾಗಿ ತೇಲುವ ಚಂದ್ರನನ್ನು ಬಲೆ ಬೀಸಿ ಹಿಡಿಯಲು ಹೋಗುತ್ತಾನೆ. ಗೋರಿಯಿಂದ ಎದ್ದು ಬಂದ ಮುದುಕ ಕೂದಲ ಬಲೆಯನ್ನು ಹಾಕಲು ಸಲಹೆ ನೀಡುತ್ತಾನೆ. ಈ ಪ್ರಯತ್ನ ವ್ಯರ್ಥವಾದರೂ ಅಡ್ಡಿಯಿಲ್ಲ. + +ಕಂಬಾರರ ಒಂದು ಕವಿತೆ ಇದೇ ಸನ್ನಿವೇಶದ ಕತೆಯನ್ನು ಹಾಡು ಮಾಡಿ ಹೇಳುತ್ತದೆ. ಕವಿತೆಯ ಹೆಸರು ‘ನವಿಲೇ ನವಿಲೇ’ ಎಂದಿದೆ. ಶಿವಪುರದ ಗೌಡ ಶಿವದೇವನಾಯಕ ಅವನ ಹೆಂಡತಿ ಮಹಾದೇವಿ ಇವರದು ಅಪರೂಪದ ದಾಂಪತ್ಯ. ಅವರ ಪ್ರೀತಿ ಶಿವನಿಗೆ ಪ್ರಿಯವಾದದ್ದು, ಆದರೂ ಶಿವಪುರಕ್ಕೆ ನೀರಿಲ್ಲ, ಮಹಾದೇವಿ ಮುಟ್ಟಾದ ಮೈಲಿಗೆಯನ್ನು ಕಳೆದುಕೊಳ್ಳಲು ಕೊಡ ತೆಗೆದುಕೊಂಡು ನೀರಿಗೆ ಹೊರಡು ತ್ತಾಳೆ. ಆದರೆ ನವಿಲು ಕಂಡು ಮುಗ್ಧಳಾಗಿ ಹಾಗೆಯೇ ನೀರಿಲ್ಲದೆ ತಿರುಗಿ ಬರುತ್ತಾಳೆ. ಮಳೆಯಾದರೆ ಸಾವಳಗಿಯ ಮಠಕ್ಕೆ ಒದ್ದೆಯಲ್ಲಿ ಹೋಗಿ ಬರುವೆನೆಂದು ಹರಕೆ ಹೊತ್ತಿದ್ದಾಳೆ. ಅವಳ ಬಯಕೆ, ನವಿಲಿನ ಕರೆ ಸಫಲವಾಗುವಂತೆ ಮಳೆ ಬರುತ್ತದೆ. ಮಳೆ ‘ಸೂರ್ಯ ನಾರಾಯಣನ ವೀರ್ಯ ಹರದಾವೇನ’ ಎಂಬಂತೆ ಧಾರಾಕಾರವಾಗಿ ಬೀಳುತ್ತದೆ. ಮಳೆಯಲ್ಲಿ ತೋಯಿಸಿಕೊಂಡು ತಿರುಗಿ ಬಂದ ಮಡದಿಗೆ ಶಿವದೇವನಾಯ್ಕ ಹೊಸ ಸೀರೆಯೊಂದನ್ನು ಕೊಡುತ್ತಾನೆ. ಅದು ನವಿಲಿನ ಗರಿಗಳಿಂದ ನೇಯ್ದ ಸೀರೆ; ನವಿಲಿನ ರಕ್ತ ಚುಮುಕಿಸಿದ ಅಂಚಿನ ನವಿಲು ಬಣ್ಣದ ಸೀರೆ. ಮಹಾದೇವಿ ಆ ಸೀರೆಯ ನ್ನೊಲ್ಲದೆ ಒದ್ದೆ ಸೀರೆಯಲ್ಲಿಯೇ ಮನೆಬಿಟ್ಟು ಹೊರಟು ಕತ್ತಲೆಯಲ್ಲಿ ಮಾಯವಾಗುತ್ತಾಳೆ. + +ಈ ಕತೆ ಒಂದು ಜಾನಪದ-ಪೌರಾಣಿಕ ಕತೆಯೇ ಆಗಿದೆ. ಬರಗಾಲದಲ್ಲಿ ಮಹಾದೇವಿಯ ಹಂಬಲ ಮತ್ತು ನವಿಲಿನ ಉನ್ಮಾದದ ಕೂಗಿನಿಂದ ಮಳೆಯಾಗುತ್ತದೆ. ಸಂಯಮ ತುಸು ಸಡಲಿದರೆ ಇದೂ ಒಂದು ನೈತಿಕದ ಕತೆಯಾಗಿಬಿಡಬಹುದು. ಕತೆಯ ಬಂಧ ‘ಕೆರೆಗೆ ಹಾರ’ವನ್ನು ನೆನಪಿಗೆ ತಂದುಕೊಡುತ್ತದೆ. ಆದರೆ ಕಂಬಾರರ ಕಾವ್ಯ ಶಕ್ತಿ ಅದನ್ನು ಬೇರೆ ದಿಕ್ಕಿಗೆ ಕರೆದುಕೊಂಡು ಹೋಗುತ್ತದೆ. ‘ನೀರಿಲ್ಲ ಶಿವಪುರಿಗೆ’ ಇದು ಕತೆಯಲ್ಲಿಯ ವಸ್ತು ಸ್ಥಿತಿ. ಮೊದಲನೆಯ ನುಡಿಯಲ್ಲಿಯ ‘ಸತಿ ಪತಿಯರ ಪ್ರೀತಿ ಹಿತವಾದರೂ ಶಿವಗೆ | ನೀರಿಲ್ಲ ಶಿವಪುರಿಗೆ | ಎಂಬ ಹೇಳಿಕೆ ಯೋಚನೆ ಮಾಡಲು ಪ್ರೇರಿಸುತ್ತದೆ. ಪ್ರಾಚೀನ ಜಗತ್ತಿನಲ್ಲಿ ಇದ್ದದ್ದೇ ಹೀಗೆ. + +ಋಷ್ಯಶೃಂಗನಂಥ ಯುವಕ ಹೆಣ್ಣಿನ ಸಂಗದಿಂದ ದೂರವಿದ್ದರೆ ಬರಗಾಲ ಬೀಳುತ್ತದೆ. ಇದು ಕಂಬಾರರ ಮೊದಲ ನಾಟಕದಲ್ಲಿಯ ವಸ್ತು ಆಗಿದೆ. ಆದರೆ ಇಲ್ಲಿ ಶಿವದೇವನಾಯಕ ಮಹಾದೇವಿಯರ ದಾಂಪತ್ಯ ಪ್ರೀತಿಕರವಾಗಿದ್ದರೂ ಮಳೆಯಿಲ್ಲ. ಇಂಥ ದಾಂಪತ್ಯದಿಂದೇನು ಪ್ರಯೋಜನ ವೆಂದು ಮಹಾದೇವಿ ನವಿಲಿನೊಡನೆ ತನ್ನ ಪ್ರಣಯ ಪ್ರಸಂಗವನ್ನು, ತನ್ನ ಮುಟ್ಟಿನ ಅವಧಿಯಲ್ಲಿ, ನಡೆಸುತ್ತಾಳೆ ಅಥವಾ ಎರಡು ದಿನ ನವಿಲಿನ ಕರೆಯನ್ನು ತಿರಸ್ಕರಿಸಿ ಮೂರನೆಯ ದಿನ ಶರಣಾಗುತ್ತಾಳೆ. ಒಳ್ಳೆಯ ಅರ್ಥದಲ್ಲಿ ಅವಳು ಗರತಿ. ಅವರದು ಅನುರೂಪವಾದ ದಾಂಪತ್ಯ. ಆದರೂ ಶಿವಪುರಕ್ಕೆ ಕುಡಿಯಲು ನೀರಿಲ್ಲ. ನವಿಲಿನೊಡನೆ ಅವಳ ಪ್ರಣಯ ಪ್ರಸಂಗ ಊರಿಗೆ ಮಳೆಯನ್ನು ತರಿಸುತ್ತದೆಂಬ ಸಂಗತಿ ಈ ಸನ್ನಿವೇಶ ವನ್ನು ಕುರಿತು ಆಳವಾಗಿ ಪರ್ಯಲೋಚಿಸುವಂತೆ ಮಾಡುತ್ತದೆ. ನವಿಲಿನ ಕುಣಿತದಲ್ಲಿಯ ಉನ್ಮಾದ ಮತ್ತು ತನ್ಮಯತೆಗಳು ಅವಳ ದಾಂಪತ್ಯದಲ್ಲಿ ಇಲ್ಲ. ಅವರ ದಾಂಪತ್ಯಕ್ಕೆ ಸಾಮಾಜಿಕ ಮನ್ನಣೆಯಿದೆ, ನವಿಲಿನ ಕುಣಿತ ನಡೆಯುವದು ಕಾಡಿನಲ್ಲಿ. ಕಾಡೇ ಎದ್ದು ಕುಣಿಯುವಂತೆ ನವಿಲು ಕುಣಿಯುತ್ತದೆ. ಅದು ‘ಸೂರ್ಯನ ಥರ ಹೊಳೆವ ನವಿಲು’ – ಈ ಪ್ರಣಯ ಅಲೌಕಿಕವಾದರೂ ಅದು ಸಮಾಜಬಾಹಿರವಾದದ್ದು ಎಂಬ ಮಾತು ಇಲ್ಲಿ ಮಹತ್ವದ್ದಾಗಿದೆ. ಮಳೆ ಬಂದ ಮೇಲೆ ನವಿಲು ಉಳಿಯುವದಿಲ್ಲ. ಅದರ ಗರಿ, ತುರಾಯಿ, ನೆತ್ತರಗಳೆಲ್ಲ ಈಗ ಶಿವದೇವನಾಯ್ಕ ತಂದ ಸೀರೆಯಲ್ಲಿಯ ಅಲಂಕಾರದ ವಸ್ತುಗಳಾಗಿವೆ. ಈ ಘಟನೆಗಳೆಲ್ಲ ಸಾಂಕೇತಿಕವಾಗಿವೆ, ಕಾರಣವೆಂದರೆ ಒಂದು ಮಹತ್ವದ ಸಾಂಕೇತಿಕ ಕ್ರಿಯೆಯನ್ನು ಇವು ಧ್ವನಿಸುತ್ತವೆ. + +ಶಿವದೇವನಾಯ್ಕ ಮತ್ತು ಮಹಾದೇವಿಯರದು ಅನುರೂಪವಾದ ದಾಂಪತ್ಯವೆಂದು ಈಗಾಗಲೇ ಹೇಳಲಾಗಿದೆ. ಇಲ್ಲಿ ಯಾವ ವ್ಯಂಗ್ಯವನ್ನೂ ಕವಿತೆ ಉಪಯೋಗಿಸುವದಿಲ್ಲ ‘ಪತಿವರತಿ ಮಿಂದ ನೀರು’ ಎಂದು ಹೇಳುವಾಗ ಕೂಡ ವ್ಯಂಗ್ಯವಿಲ್ಲ. ವಾಗರ್ಥಗಳ ದಾಂಪತ್ಯ ಇಲ್ಲಿ ನೆನಪಾಗಬೇಕು. ಈ ಕವಿತೆಯ ಮೊದಲ ನುಡಿಯಲ್ಲಿಯ ಹಾರೈಕೆಯನ್ನು ಪರಿಶೀಲಿಸಬೇಕು. ‘ನಾದಗಳು ನುಡಿಯಾಗಲೆ | ಹಾಡಾದ ನುಡಿಯೊಳಗೆ ಬೆಳಕಾಡಿ ಹಾಡಿನ | ಆಚೆ ಸೀಮೆಯ ತೋರಲೇ’ ನಾದಗಳು ನುಡಿಯಾಗಬೇಕು, ಹಾಡಾದ ನುಡಿಯೊಳಗೆ ಬೆಳಕಾಡಿ ಆಚೆಯ ಸೀಮೆಯನ್ನು ತೋರಬೇಕು. ಈ ನುಡಿ ಕವಿತೆಯ ಕೊನೆಗೆ ಪುನರುಕ್ತವಾಗುವದರಿಂದ ಕವಿತೆಯ ವಸ್ತು ನಿರ್ದೇಶ ಇಲ್ಲಿದೆ ಎಂದು ತಿಳಿಯ ಬೇಕಾಗುತ್ತದೆ. ನಾದಗಳು ನುಡಿಯಾದರೆ ಆ ನುಡಿಗಳು ಅರ್ಥವನ್ನು ಬೀರುವದಿಲ್ಲ. ಅರ್ಥವೆಂದರೆ ಲೌಕಿಕದ ಪರಿಮಿತ ಪ್ರಪಂಚ. ಶಬ್ದ ಮತ್ತು ಅರ್ಥಗಳೆರಡೂ ಸೇರಿಕೊಂಡು ತಮ್ಮ ಪರಸ್ಪರ ಸಂಕೇತ ಕ್ರಿಯೆಯ ಮೂಲಕ ಪ್ರಪಂಚದ ತಿಳಿವನ್ನು ಪ್ರತಿಫಲಿಸುತ್ತ ಒಂದು ಸಾಂಸ್ಕ ೃತಿಕ ವ್ಯವಸ್ಥೆಯನ್ನು ಕಟ್ಟಿಕೊಳ್ಳುತ್ತವೆ. ಭಾಷೆಯ ಗುರಿ ಎಂದರೆ ಯಾವ ರೀತಿಯ ಗೊಂದಲಕ್ಕೂ ಆಸ್ಪದ ಕೊಡದ ವ್ಯವಸ್ಥೆಯ ನಿರ್ಮಾಣ. ದಾಂಪತ್ಯವೂ ಇಂಥದೇ ಒಂದು ವ್ಯವಸ್ಥೆ ಎಂದು ಬೇರೆ ಹೇಳಬೇಕಾಗಿಲ್ಲ. ಭಾಷೆಯಲ್ಲಿಯೇ ಆಗಲಿ ದಾಂಪತ್ಯದಲ್ಲಿಯೇ ಆಗಲಿ ಸಾಮಾಜಿಕ ಪ್ರೇರಣೆ ಹಾಗೂ ಮನ್ನಣೆಗಳು ಅವುಗಳ ಗಮ್ಯವಾಗಿರುತ್ತದೆ. ಅವುಗಳ ಸಾಂಕೇತಿಕ ಕ್ರಿಯೆ ಒಂದೇ ಆಗಿದೆ. ದಾಂಪತ್ಯದಂತೆ ಭಾಷೆಯೂ ತನ್ನ ಸಂಬಂಧಗಳನ್ನು ಸ್ವಾಯತ್ತವಾಗಿ ಬೆಳೆಸಿಕೊಳ್ಳಬಲ್ಲದು. ಇಷ್ಟೇ, ಪತಿ-ಪತ್ನಿಯರ ಪ್ರೀತಿಯಂತೆ ಶಬ್ದಾರ್ಥಗಳ ಸಾಂಗತ್ಯವೂ ಇಲ್ಲಿ ಅಗತ್ಯವಾಗಿದೆ. ಕಂಬಾರರ ಕವಿತೆ ಇಂಥ ಒಂದು ಸನ್ನಿವೇಶದಿಂದ ಪ್ರಾರಂಭವಾಗುತ್ತದೆ. ಆದರೆ ಇಂಥ ವ್ಯವಸ್ಥೆ ಇದ್ದರೂ ಮಳೆಯಾಗುವದಿಲ್ಲ. ಮಳೆಯಾಗುವದೆಂದರೆ ಅಲೌಕಿಕದ ಕರುಣೆಯ ಫಲ. ಮಳೆಯಾಗಲಿ ಎಂದು ಮಹಾದೇವಿ ಒದ್ದೆಯಲ್ಲಿ ಸಾವಳಗಿ ಮಠಕ್ಕೆ ಹೋಗಿ ಬರುವೆ ನೆಂದು ಹರಕೆ ಹೊತ್ತಿದ್ದಾಳೆ. ಹರಕೆಯೂ ಒಂದು ಭಾಷೆ. ಆದರೆ ಮಳೆಯಾಗುವದು ಮಾತ್ರ ನವಿಲಿನ ಮೂಲಕ. ನವಿಲಿಗೆ ಕುಣಿದು ಕೇಕೆ ಹಾಕುವದು ಗೊತ್ತೇ ಹೊರತು ಭಾಷೆ ಗೊತ್ತಿಲ್ಲ. ಮಹಾದೇವಿ ನವಿಲಿನ ಕುಣಿತದಿಂದ ಮುಗ್ಧಳಾಗಿದ್ದಾಳೆ. ಅದರ ಕುಣಿತಕ್ಕೆ ತನ್ನನ್ನು ಒಪ್ಪಿಸಿಕೊಂಡಿದ್ದಾಳೆ. ಒಂದು ದೃಷ್ಟಿಯಿಂದ ಅವಳ ಈ ‘ಹಾದರ’ ಅಲೌಕಿಕವಾದದ್ದು. ಅಕ್ಕಮಹಾದೇವಿಯ ‘ಚನ್ನಮಲ್ಲಿಕಾರ್ಜುನನೊಡನೆ ಹಾದರ’ವನ್ನು ನೆನಪಿಗೆ ತರುವಂಥದ್ದು. + +‘ಭಾಷೆಯ ಸೂತಕ’ವನ್ನು ಅನುಭವಿಸಿ ಅದರಿಂದ ಪಾರಾಗ ಬೇಕೆನ್ನುವ ಅಲ್ಲಮನ ಹಂಬಲವನ್ನು ನೆನಪಿಗೆ ತರುವಂಥದ್ದು. ನಾದಗಳು ನುಡಿಯಾದರೆ, ನುಡಿಗಳು ಹಾಡಾದರೆ ಅದೂ ಕೂಡ ಇಂಥ ಅಲೌಕಿಕದ ಜೊತೆಗಿನ ಹಾದರವಾಗಿದೆ. ಅರ್ಥವಿಲ್ಲದ ಶಬ್ದದೊಳಗಿನ ಶೂನ್ಯದ ಅವಕಾಶದಲ್ಲಿ ಅಲೌಕಿಕದ ಬೆಳಕು ಝಗ್ಗನೆ ಪ್ರಕಟವಾಗಬೇಕು. ಪ್ರಕಟವಾಗುತ್ತದೆಂಬ ನಂಬಿಕೆ ಗಟ್ಟಿಯಾಗಿದ್ದರೆ ಶಬ್ದದ ಮಣ್ಣಿನಲ್ಲಿ ಅಲೌಕಿಕದ ಮಿಂಚು ಹೊಳೆಯಬಹುದು. ಕಂಬಾರರು ತಮ್ಮ ‘ಪ್ರಭು’ ಕವಿತೆಯ ಕೊನೆಗೆ ಹೇಳುವಂತೆ, ‘ಮಣ್ಣ ಬಿಟ್ಟಿನ್ನೆಲ್ಲಿ ಹೊನ್ನು ಅಡಿಗಿದ್ದೀತು? ಮೀರಿ | ಹತ್ತಂಗುಲದ ಹಬ್ಬು ಅನಂತರ |’ ಈ ಕವಿತೆಯ ಭಾಷೆ ಕೂಡ ಅಲೌಕಿಕವಾದದ್ದು. ಅಲೌಕಿಕದ ಹಂಬಲವನ್ನು ಹೊತ್ತ ಲೌಕಿಕ ಭಾಷೆ ಇದಾಗಿದೆ. ಆದರೆ ‘ನವಿಲೇ ನವಿಲೇ’ ಇದು ಹಾಡು. ಲೌಕಿಕ ಮತ್ತು ಅಲೌಕಿಕಗಳ ಅಕ್ರಮ ಸಂಬಂಧದ, ಉನ್ಮಾದದ ಹಾಡು. ಶಬ್ದಾರ್ಥಗಳ ದಾಂಪತ್ಯದ ಪರಿಮಿತ ಸಂಬಂಧ-ಪರಿಮಿತವಾಗಿರಬೇಕೆಂಬುದು ಒಂದು ಅಗತ್ಯದ ನಿಯಮ-ಮೈ ಮನಸ್ಸುಗಳನ್ನು ಮುಟ್ಟಿ ತಣಿಸಬಹುದು. ಆದರೆ ಪ್ರಕೃತಿಯನ್ನೆಲ್ಲ ನೀರು ನೀರಾಗಿಸುವ ಅಲೌಕಿಕದ ಅದ್ಭುತ ಅದಕ್ಕಿಲ್ಲ. + + + +ಕಂಬಾರರ ಎಲ್ಲ ಕವಿತೆಗಳೂ ಹಾಡಾಗಿಲ್ಲ, ಆಗುವದೂ ಇಲ್ಲ. ಶಬ್ದಾರ್ಥಗಳ ಸಾಂಗತ್ಯದಲ್ಲಿಯ ಪರಮಸಿದ್ಧಿಯೆಂದರೆ ಧ್ವನ್ಯರ್ಥ. ಅದು ಕೂಡ ಪ್ರತಿಭೆಗೆ ಮಾತ್ರ ಗೋಚರವಾಗುವದು. ಅದು ವಾಚ್ಯಾರ್ಥವನ್ನು ಕೊಂದು ಹುಟ್ಟುವ ಚಿಗುರು. ಆದರೆ ಬೀಜ ಮತ್ತು ಚಿಗುರಿನ ಸಂಬಂಧ ಸಾವಯವವಾದದ್ದು. ಆದರೆ ಅದು ಕೂಡ ಅಲೌಕಿಕದ ಸಿಡಿಲು ಹೊಡೆದರೂ- ಅಥವಾ ಸಿಡಿಲು ಹೊಡೆದರೆ ಮಾತ್ರ, ಹತ್ತಂಗುಲ ಮೇಲೆದ್ದು ನಿಲ್ಲುವ ವೃಕ್ಷವಲ್ಲ. ಕಂಬಾರರ ಕಾವ್ಯಕ್ಕೆ ಅಂಥ ವಾಸನೆಯಿದೆ. ‘ಕೃಷ್ಣ ಪಾರಿಜಾತ’ದೊಳಗಿನ ಹಾಡುಗಳ ಧಾಟಿಗಳು ಈ ಅಲೌಕಿಕವನ್ನರಸಿ ಹೋದವು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_231.txt b/Kenda Sampige/article_231.txt new file mode 100644 index 0000000000000000000000000000000000000000..ce0f6b887a6ee4aec253179d1f9a5a8b71592702 --- /dev/null +++ b/Kenda Sampige/article_231.txt @@ -0,0 +1,61 @@ +ಉಡುಪಿಗೆ ಹೋಗುವ ರಾತ್ರೆ ಬಸ್ಸನ್ನು ರಮಾನಂದ ಹತ್ತಿದ. ಆದರೆ, ಎಷ್ಟೋ ವರುಷದ ಮೇಲೆ ತಾನು ಹುಟ್ಟಿದ ಊರಿಗೆ ಹೊರಡುತ್ತಿದ್ದೇನೆ ಎನ್ನುವ ಸಂಭ್ರಮ ಅವನಲ್ಲಿ ಇರಲಿಲ್ಲ. ಊರಲ್ಲಿ ಅಪ್ಪ ಅಮ್ಮ ಇಬ್ಬರೂ ಇಲ್ಲ. ಅಪ್ಪ ಇದ್ದಾಗ, ತಾನು ಭಾರತಿಯನ್ನು ರಿಜಿಸ್ಟರ್ಡ್ ವಿವಾಹವಾಗುವ ತನಕ, ತನ್ನನ್ನು ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದರೂ, ಆ ಮೇಲೆ ಮೊದಲು ಪ್ರೀತಿಸಿದ್ದಕ್ಕಿಂತ ನಾಲ್ಕುಪಟ್ಟು ದ್ವೇಷವನ್ನು ತನ್ನ ಮೇಲೆ ತೋರುತ್ತಿದ್ದರು ಎನ್ನುವುದು ಅವನ ಅನುಭವವಾಗಿತ್ತು. ಹಾಗೆ ನೋಡಿದರೆ, ಮದುವೆಯ ನಂತರ ಅವನು ಅಪ್ಪನನ್ನು ಇದಿರಿಸಲು ಹೋಗಲಿಲ್ಲ. ಇದಿರಿಸುವ ಧೈರ್ಯವೂ ಅವನಲ್ಲಿ ಇರಲಿಲ್ಲ. ಅವನ ಸ್ನೇಹಿತರಲ್ಲಿ ಅವನ ಅಪ್ಪ ನಂಜು ನಂಜಿನ ಮಾತುಗಳನ್ನು ಆಡುವುದಷ್ಟೇ ಅಲ್ಲದೆ, ಅಪ್ಪ ತನ್ನ ಪಾಲಿಗೆ ಮಗ ಸತ್ತು ಹೋಗಿದ್ದಾನೆ ಎಂದು ಹೇಳುವುದನ್ನು ಗೋವಿಂದ ಭಾವನೇ ಖುದ್ದು ತನಗೆ ಹೇಳಿದಾಗ, ರಮಾನಂದನ ಮನಸ್ಸಿಗೆ ನೋವಾದರೂ, ‘ಇರಲಿ’ ಎಂದು ಆತ ಯಾವ ಪ್ರತಿಕ್ರಿಯೆಯನ್ನೂ ಕೊಡದೆ ಸುಮ್ಮನಾಗುತ್ತಿದ್ದ. ಆದರೆ ಗೋವಿಂದ ಆಚಾರ್ಯರು ಮಾತ್ರ ಆಗೊಮ್ಮೆ ಈಗೊಮ್ಮೆ ‘ಹೇಗಿದ್ದಿ ರಮಾನಂದ?’ ಎಂದು ದೂರವಾಣಿಯಲ್ಲಿ ರಮಾನಂದನನ್ನು ಪ್ರಶ್ನಿಸುತ್ತಿರುವುದು ರಮಾನಂದನಿಗೆ ವಿಶೇಷ ಸುಖ ನೀಡುತ್ತಿತ್ತು. ಒಂದೆರಡು ಬಾರಿ ಸಂಬಂಧಿಕರ ಮದುವೆಗೆಂದು ಗೋವಿಂದಾಚಾರ್ಯರು ಬೆಂಗಳೂರಿಗೆ ಬಂದಿದ್ದಾಗ ಕಷ್ಟಪಟ್ಟು ರಮಾನಂದನ ಮನೆಯನ್ನು ಹುಡುಕಿ, ಅಲ್ಲಿ ಊಟ ತೀರಿಸಿ ಹರಟೆ ಹೊಡೆದು ಬಂದದ್ದೂ ಉಂಟು. ಅಂಥ ಸಂದರ್ಭದಲ್ಲಿ ಮಾತಿನ ನಡುವೆ ‘ನಿನಗೊಂದು ಮಗುವಾಗಲಿ ರಮಾನಂದ, ಆಮೇಲೆ ನಿನ್ನ ಅಪ್ಪ ಆ ಮಗುವನ್ನು ಹೇಗೆ ಒಪ್ಪಿಕೊಳ್ಳುತ್ತಾರೆ ನೋಡು!’ ಎಂದಿದ್ದರು. ಆದರೆ ಮದುವೆಯಾಗಿ ಎಂಟು ವರುಷವಾದರೂ ರಮಾನಂದನಿಗೆ ಮಗುವಾಗಿರಲಿಲ್ಲ. ಆ ಸಂದರ್ಭದಲ್ಲಿ ರಮಾನಂದನ ಅಪ್ಪ ದಾಸುಭಟ್ಟರು ‘ನೋಡಿದೆಯಾ ಗೋವಿಂದ. ಆ ಬಿಕನಾಸಿ ರಮಾನಂದನಿಗೆ ಮಕ್ಕಳಾಗುವುದಿಲ್ಲ ಖಂಡಿತ. ಅದು ನನ್ನನ್ನು ಅವನು ಹೊಟ್ಟೆ ಉರಿಸಿದ್ದರ ಶಾಪ!’ ಎಂದು ಆಡುವುದೂ ಇತ್ತು. ಗೋವಿಂದಾಚಾರ್ಯರಿಗೆ ಆಗ ಹೇಗೆ ಉತ್ತರಿಸಬೇಕೆಂದು ತೋಚುತ್ತಿದ್ದಿಲ್ಲ. ಮೌನದಲ್ಲೇ ಅವರು ಅದಕ್ಕೆ ಪ್ರತಿಕ್ರಿಯಿಸುತ್ತಿದ್ದರು. ಅಂಥ ಸಂದರ್ಭದಲ್ಲಿ ದಾಸುಭಟ್ಟರಿಗೆ ವಿಪರೀತ ಕೋಪ ಬಂದು ಬಾಯಿ ತುಂಬ ವೀಳ್ಯದೆಲೆ ಹಾಕಿದ್ದನ್ನು ಉಗುಳಲು ಅಂಗಳದ ತುದಿಗೆ ಹೋಗಿ, ‘ನೀನೂ ಅವನ ಜಾತಿಗೇ ಸೇರಿದವನು ಗೋವಿಂದ. ಊಟ ಕೌರವರಲ್ಲಿ ಕೂಟ ಪಾಂಡವರಲ್ಲಿ ಎಂಬ ಗಾದೆ ನಿನಗೆ ಚೆನ್ನಾಗಿ ಅನ್ವಯಿಸುತ್ತದೆ’ ಎಂದು ಹೇಳಿ, ‘ನನ್ನ ಮಗನ ರಿಜಿಸ್ಟ್ರಿ ಮದುವೆಗೆ ನೀನೇ ಕಾರಣ ಎಂದು ನನಗೆ ಗೊತ್ತುಂಟು. ನೀನು ‘ನಾನಲ್ಲ’, ‘ನಾನಲ್ಲ’ ಎಂದು ಹತ್ತು ಸಾವಿರ ಸಲ ಹೇಳಿದರೂ ನಾನು ಅದನ್ನು ಒಪ್ಪುವುದಿಲ್ಲ. ಯಾಕೆಂದರೆ, ನನ್ನ ಮಗನಿಗೆ ನೀನು ಧೈರ್ಯಕೊಡದಿದ್ದರೆ ಅವನು ಖಂಡಿತ ಆ ಕಿರಿಸ್ತಾನದ ಹುಡುಗಿಯನ್ನು ಮದುವೆಯಾಗಲು ಸಾಧ್ಯವಿರಲಿಲ್ಲ’ ಎಂದು ಸದಾ ಹಂಗಿಸುತ್ತಿದ್ದುನ್ನು ಗೋವಿಂದಾಚಾರ್ಯರು ಸಾಂದರ್ಭಿಕವಾಗಿ ರಮಾನಂದನಿಗೆ ಹೇಳುವುದಿತ್ತು. + +ಹಾಗೆ ನೋಡಿದರೆ, ಅಪ್ಪ ಹೇಳುವುದರಲ್ಲಿ ಸತ್ಯ ಇದೆ ಎನ್ನುವುದು ರಮಾನಂದನ ಆತ್ಮಕ್ಕೆ ಗೊತ್ತುಂಟು. ಅವನ ಮತ್ತು ಮೇರಿಯ(ಭಾರತಿಯ) ಪ್ರೇಮಪ್ರಕರಣವನ್ನು ತನ್ನ ಗೆಳೆಯರಲ್ಲೂ ಹಂಚಿಕೊಳ್ಳದಿದ್ದ ರಮಾನಂದ, ಒಂದು ಸಲ ಈ ವಿಷಯವನ್ನು ಗೋವಿಂದ ಭಾವನಲ್ಲಿ ಹೇಳಬೇಕೆಂದೇ ಬೆಂಗಳೂರಿನಿಂದ ಊರಿಗೆ ಬಂದಿದ್ದ. ಬಂದವನು ಸ್ವಲ್ಪ ಮಂಕಾಗಿ ಇದ್ದುದನ್ನು ಗಮನಿಸಿದ ದಾಸುಭಟ್ಟರು ‘ಏನೋ ಯಾಕೆ ಸಪ್ಪೆ ಮುಖ ಹಾಕಿಕೊಂಡ ಹಾಗಿದ್ದಿಯಲ್ಲ?’ ಎಂದು ಕೇಳಿದ್ದಕ್ಕೆ, ರಮಾನಂದ “ಏನಿಲ್ಲಪ್ಪ, ಆಫೀಸಿನ ಕೆಲಸದ ಒತ್ತಡ ಸಾಕು ಸಾಕಾಗಿದೆ. ರಾತ್ರೆ ಮಲಗಿದರೆ ನಿದ್ದೆ ಬರುವುದಿಲ್ಲ. ಅಷ್ಟೂ ಒತ್ತಡ’ ಎಂದು ಹಾರಿಕೆಯ ಉತ್ತರ ನೀಡಿದ್ದ. ಆದರೆ ದಾಸುಭಟ್ಟರೇನು ಸಾಮಾನ್ಯದವರೇ? ಅವರು ಗಂಭೀರವಾಗಿ ‘ಆಫೀಸಿನಲ್ಲಿ ಎಷ್ಟು ಜನ ಹೆಣ್ಮಕ್ಕಳಿದ್ದಾರೆ?’ ಎಂದು ಕೇಳಿದ್ದರು. ರಮಾನಂದನಿಗೆ ಅದರಿಂದ ವಿಪರೀತ ಸಿಟ್ಟು ಬಂದಿತ್ತು. ‘ನನ್ನನ್ನು ಯಾಕಪ್ಪ ಅಷ್ಟು ಸಣ್ಣವನಾಗಿ ಮಾಡುತ್ತೀರಿ? ನಮ್ಮ ಕಛೇರಿಯಲ್ಲಿ ಹುಡುಗರೇ ಇರಬೇಕೆಂದು ನಿಮ್ಮ ಅಭಿಪ್ರಾಯವೇ?’ ಎಂದು ಸ್ವಲ್ಪ ಅಸಮಾಧಾನದಿಂದಲೇ ಉತ್ತರಿಸಿದ್ದ. ದಾಸುಭಟ್ಟರಿಗೆ ಅದು ತೃಪ್ತಿ ನೀಡಿತ್ತು. ಅವರು ಮಾತನಾಡದೆ ಎದ್ದು ಹೋಗಿದ್ದರು. ಆದರೆ ಮಧ್ಯಾಹ್ನದ ಊಟದ ಪಂಕ್ತಿಯಲ್ಲಿ ರಮಾನಂದ ಇಲ್ಲದ್ದನ್ನು ಗಮನಿಸಿದ ಅವರು ‘ಎಲ್ಲಿದ್ದಾನೆ ನಿನ್ನ ಕುಮಾರ ಕಂಠೀರವ?’ ಎಂದು ಹೆಂಡತಿಯನ್ನು ಪ್ರಶ್ನಿಸಿದ್ದರು. ಅದಕ್ಕೆ ಆ ತಾಯಿ ‘ಇನ್ನೆಲ್ಲಿಗೆ ಹೋಗುತ್ತಾನೆ, ಆ ಗೋವಿಂದನಲ್ಲಿಗೆ ಹೋಗಿರುತ್ತಾನೆ. ಅಲ್ಲಿ ಅವರು ಊಟ ಮಾಡಿಸದೆ ಅವನನ್ನು ಕಳುಹಿಸುತ್ತಾರೆಯೇ?’ ಎಂದಿದ್ದರು. + +ದಾಸುಭಟ್ಟರು ಹೆಂಡತಿಗೆ ‘ನೀನು ನಿನ್ನ ಮಗನಿಗೆ ‘ಅದು ಇಷ್ಟ’ ‘ಇದು ಇಷ್ಟ ಎಂದು ಊರಲ್ಲಿ ಇಲ್ಲದ್ದೆಲ್ಲ ಮಾಡಿಟ್ಟಿದ್ದಿ. ಆದರೆ ಅಲ್ಲಿ ಆ ಗೋವಿಂದನಲ್ಲಿ ಏನಿರುತ್ತದೆ. ಮಣ್ಣು? ಕೆಸುವಿನ ಎಲೆಯ ಚಟ್ನಿ, ಹುರುಳಿ ಸಾರು ಅಷ್ಟೇ.’ ಎಂದಿದ್ದರು. + +ಭಟ್ಟರ ಪತ್ನಿ ಕೃಷ್ಣವೇಣಿಗೆ ಅದು ಇಷ್ಟವಾಗಲಿಲ್ಲ. “ನೀವು ಹಾಗೆಲ್ಲ ಆಡಬಾರದು ಇವರೇ. ಆ ಗೋವಿಂದನಿಗೂ ಅವನ ಹೆಂಡತಿ ಕಮಲಕ್ಕನಿಗೂ ನಮ್ಮ ರಮಾನಂದ ಅಂದರೆ ತಮ್ಮ ಮಕ್ಕಳಷ್ಟೇ ಪ್ರೀತಿ. ನಿಮ್ಮ ಮಗ ಅಲ್ಲಿ ಊಟ ತೀರಿಸಿ ಬಂದ ನಂತರ ‘ಊಟಕ್ಕೆ ಏನಿತ್ತು?’ ಎಂದು ಅವನನ್ನು ಕೇಳಿ ನೋಡಿ. ಆಗ ಆತ ಪೇರಡ್ಯೆ ಪಾಯಸ, ತೊವ್ವೆ, ಉದ್ದಿನ ಹಿಟ್ಟಿನ ಬಜ್ಜಿ, ಕುಂಬಳಕಾಯಿ ಕೊಟೆಕ್ಕನ ಎಲ್ಲಾ ಇತ್ತು ಎಂದು ಹೇಳದಿದ್ದರೆ, ನಾನು ನಿಮ್ಮ ಹೆಂಡತಿಯೇ ಅಲ್ಲ” ಎಂದ ನಕ್ಕಿದ್ದರು. + +ದೂರ್ವಾಸ ಋಷಿಯ ವಂಶಸ್ಥರಂತಿದ್ದ ದಾಸುಭಟ್ಟರಿಗೆ ಹೆಂಡತಿಯ ಮಾತಿನಿಂದ ಖುಶಿಯಾಯಿತು. ಆದರೆ ಅವರಿಗೆ ‘ನಾನು ನಿಮ್ಮ ಹೆಂಡತಿಯೇ ಅಲ್ಲ’ ಎಂದು ತನ್ನ ಹೆಂಡತಿ ಅಂದದ್ದು ಸ್ವಲ್ಪ ಜಾಸ್ತಿಯಾಯಿತು ಅನಿಸಿತು. ಅವರು ‘ಎಂಥ ಮಾತನಾಡುವುದು ಮಾರಾಯ್ತಿ ನೀನು? ನೀನು ನನ್ನ ಹೆಂಡ್ತಿ ಅಲ್ಲ ಅಂದರೂ, ನಾನು ಒಪ್ಪಬೇಕಲ್ಲ ಅದನ್ನು? ನಾನು ನಿನಗೆ ಈ ಜನ್ಮದಲ್ಲಿ ಗಂಡನೇ! ನೀನು ಈ ಜನ್ಮದಲ್ಲಿ ನನಗೆ ಹೆಂಡತಿಯೇ!’ ಎಂದರು. ಊಟ ತೀರಿಸಿ ಏಳುತ್ತಿದ್ದಂತೆ ‘ಆ ವೀಳ್ಯದೆಲೆ ಹರಿವಾಣದಲ್ಲಿ ಅಡಿಕೆ ಹೋಳು ಇಲ್ಲ ಅಂತ ಕಾಣುತ್ತದೆ. ಎರಡು ಅಡಿಕೆ ಒಡೆದು ಹೋಳು ಮಾಡಿ ಹಾಕು ಬೇಗ!’ ಎಂದಿದ್ದರು. + +ಕೃಷ್ಣವೇಣಿಗೆ ಸ್ವಲ್ಪ ಸಿಟ್ಟು ಬಂದಿತ್ತು. ಆಕೆ ‘ನಿಮಗೆಂಥ ಅವಸರ ವೀಳ್ಯದೆಲೆ ಹಾಕಲು? ನನ್ನ ಊಟ ಆಗುವ ತನಕ ಕಾಯಲಿಕ್ಕಾಗುವುದಿಲ್ಲವಾ ನಿಮಗೆ?’ ಎಂದ ಹೇಳಿಯೂ ಅಂಗಳಕ್ಕೆ ಇಳಿದು, ಅಲ್ಲಿದ್ದ ಹಣ್ಣಡಕೆ ರಾಶಿಯಿಂದ ಎರಡು ಹಣ್ಣಡಕೆ ತೆಗೆದು ಹೋಳು ಮಾಡಿ ತಾಂಬೂಲದ ಹರಿವಾಣಕ್ಕೆ ಹಾಕಿ ಊಟಕ್ಕೆ ಕುಳಿತಿದ್ದರು. + +ಸಂಜೆ ರಮಾನಂದ ಮನೆಗೆ ಬರುವಾಗ ಕೃಷ್ಣವೇಣಿ ತುಳಸಿಕಟ್ಟೆಯ ಮುಂದೆ ದೀಪ ಇಟ್ಟು ನಮಸ್ಕರಿಸುತ್ತಿದ್ದರು. ಅವರಿಗೆ ಮಗನ ಮೇಲೆ ಆಗಲೇ ಅಸಮಾಧಾನವಾಗಿತ್ತು. ‘ಯಾಕಿಷ್ಟು ತಡ? ಅಂಥಾದ್ದು ಎಂಥ ಪಟ್ಟಾಂಗ ನಿನಗೆ ಗೋವಿಂದನ ಮನೆಯಲ್ಲಿ?’ ಎಂದು ಪ್ರಶ್ನಿಸಿದರು. + +ರಮಾನಂದ ನಗುತ್ತಾ “ಭಾವ ಮಾತಿಗೆ ಕುಳಿತರೆ ಹೇಗೆ ಎಂದು ನಿನಗೆ ಗೊತ್ತಲ್ಲಮ್ಮ? ಅದು ಇದು ಅಂತ ಬಿಡಲೇ ಇಲ್ಲ. ಎರಡೆರಡು ಬಾರಿ ಕಾಫಿ ತಿಂಡಿ ಆಯಿತು. ಕೊನೆಗೆ ಕಮಲಕ್ಕನೇ ‘ಸಂಜೆಯಾಯಿತು ನೀನು ಈಗ ಹೋಗು ರಮಾನಂದ. ನಿನ್ನ ಅಪ್ಪ ಈಗ ಮುಖ ಊದಿಸಿಕೊಂಡಿರುತ್ತಾನೆ’ ಎಂದರು. ಆಗ ಗೋವಿಂದ ಭಾವ ‘ಆಯ್ತಪ್ಪ ಆಯ್ತು’, ಎಂದು ನನ್ನನ್ನು ಬಿಳ್ಕೊಟ್ಟರು” ಎಂದಿದ್ದ. + +ಹಾಗೆ ಆಡುವಾಗ ಅವನಲ್ಲಿ ಅಮ್ಮನಿಗೆ ತಾನು ಸುಳ್ಳು ಹೇಳುತ್ತಿದ್ದೇನೆ ಎಂಬ ಪಾಪಪ್ರಜ್ಞೆ ಇತ್ತು. ಅವನು ಆ ದಿನ ಮಧ್ಯಾಹ್ನ ಗೋವಿಂದಾಚಾರ್ಯರಲ್ಲಿ ಊಟ ಮುಗಿಸಿ ಒಂದರ್ಧ ಗಂಟೆ ಹರಟೆ ಹೊಡೆಯುತ್ತಾ ಕುಳಿತಾಗ ‘ಭಾವ, ನಾನು ಮಧ್ಯಾಹ್ನವೇ ಮನೆಗೆ ಊಟಕ್ಕೆ ಹೋಗಬೇಕಿತ್ತು. ಇನ್ನು ತಡಮಾಡಿದರೆ ಅಪ್ಪ ಅಮ್ಮನ ಮಾತು ಕೇಳುವುದು ಕಷ್ಟ’ ಎಂದು ಸುಮಾರು ಎರಡೂವರೆ ಗಂಟೆಯ ಸುಮಾರಿಗೇ ಗೋವಿಂದಾಚಾರ್ಯರ ಮನೆಯಿಂದ ಹೊರಟಿದ್ದ. ಹಾಗೆ ಹೊರಟವನು ನೇರವಾಗಿ ಮನೆಗೆ ಹೋಗದೆ ಗೋವಿಂದಾಚಾರ್ಯರ ಮನೆಯ ‘ಪಾಡಿ’ಯ ಹಿಂಬದಿಯಲ್ಲಿರುವ ಮೇರಿಯ ಮನೆಗೆ ಹೋಗಿದ್ದ. ಮೇರಿ ಬೆಳಿಗ್ಗೆಯಿಂದಲೇ ಅವನನ್ನು ಕಾಯುತ್ತಿದ್ದಳು. ಅವನನ್ನು ನೋಡಿದವಳೇ ಓಡಿ ಬಂದು ‘ಇಷ್ಟೂ ಕಾಯಿಸುವುದಾ ನೀನು?’ ಎಂದು ಆಕ್ಷೇಪ ಎತ್ತಿದ್ದಳು. + +ರಮಾನಂದ ‘ನೋಡು ಮೇರಿ, ನಿನಗೆ ನನ್ನ ಕಷ್ಟ ಅರ್ಥ ಆಗುವುದಿಲ್ಲ. ನಮ್ಮ ಮನೆಯಲ್ಲಿ ನಮ್ಮ ಪ್ರೇಮಪ್ರಕರಣ ಈ ತನಕ ಯಾರಿಗೂ ಗೊತ್ತಿಲ್ಲ. ನನ್ನ ಭಾವ ಗೋವಿಂದಾಚಾರ್ಯರ ಕಿವಿಗೆ ಈ ಸಲ ಹಾಕಿ ಹೋಗಬೇಕು, ಆ ನೆಲೆಯಲ್ಲಿ ನಿನ್ನನ್ನು ನೋಡಬೇಕು ಎಂದು ಬಂದವನು ನಾನು. ಆದರೆ ಗೋವಿಂದ ಭಾವನಲ್ಲಿ ಯಾಕೋ ನಮ್ಮ ಪ್ರಕರಣವನ್ನು ಪ್ರಸ್ತಾಪಿಸಲು ನನಗೆ ಧೈರ್ಯ ಬರಲಿಲ್ಲ. ಶುದ್ಧ ವೈದಿಕ ಬ್ರಾಹ್ಮಣರಾಗಿರುವ ನಮ್ಮ ಮನೆಯವರಾಗಲಿ, ಈ ಭಾವನ ಮನೆಯವರಾಗಲೀ ಖಂಡಿತ ನಮ್ಮ ಮದುವೆಗೆ ಒಪ್ಪುವವರಲ್ಲ ಎಂದು ನನಗೆ ಗೊತ್ತು. ಆದರೆ ಅವರು ಒಪ್ಪಲಿ ಬಿಡಲಿ, ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ. ಅದಾಗ್ಯೂ ಅವರ ಗಮನಕ್ಕೆ ತಂದೇ ನಮ್ಮ ಮದುವೆ ನಡೆಯಬೇಕು ಎಂದು ನನ್ನ ಕನಸು!’ ಎಂದಿದ್ದ. + +ಮೇರಿ ‘ಅದೆಲ್ಲ ನನಗೆ ಗೊತ್ತು ರಮಾನಂದ. ಈ ಮಾತನ್ನು ನೂರು ಸಾರಿ ನೀನು ನನಗೆ ಈಗಾಗಲೇ ಹೇಳಿರಬಹುದೇನೋ! ಆದರೆ ನೀನು ಗಟ್ಟಿ ನಿರ್ಧಾರ ಯಾವತ್ತೂ ತೆಗೆದುಕೊಳ್ಳಲಿಕ್ಕೇ ಇಲ್ಲ, ನಮ್ಮ ಮದುವೆ ಅಗಲಿಕ್ಕೂ ಇಲ್ಲ’ ಎಂದು ಹಂಗಿಸುತ್ತಾ ಆಡಿದ್ದಳು. + +ಮೇರಿಯ ಮನೆಯವರಿಗೆ-ಅವಳ ಅಪ್ಪ ಅಮ್ಮ ಮತ್ತು ಅಣ್ಣನಿಗೆ – ಈ ವಿಷಯ ಆಗಲೇ ತಿಳಿದಿತ್ತು. ಮೊದಮೊದಲು ಅವರು ‘ಇದು ಆಗುವುದೂ ಇಲ್ಲ, ಹೋಗುವುದೂ ಅಲ್ಲ’ ಎಂದುಕೊಂಡು ಮೇರಿಯ ನಿರ್ಧಾರವನ್ನು ಬದಲಿಸಲು ಪ್ರಯತ್ನಿಸಿದ್ದರು. ಆದರೆ ಮೇರಿ ‘ನೀವು ಹೆಚ್ಚು ಒತ್ತಡ ಹಾಕಿದರೆ ನಾನು ಬಾವಿಗೆ ಹಾರಿ ಸಾಯುತ್ತೇನೆ’ ಎಂದಿದ್ದಳು. ಅದಕ್ಕೆ ಮೇರಿಯ ಅಪ್ಪ ಅಮ್ಮ ಹೆದರಿದ್ದರೂ, ಅಣ್ಣ ಬಾವ್‍ತೀಸ ‘ಎಲ್ಲಾ ಪ್ರೇಮಿಗಳೂ ಆಡುವುದು ಹೀಗೇ! ನಿಂದೇನು ಮಹಾ?’ ಎಂದು ತಿರುಗೇಟು ನೀಡಿ, ಮೇರಿಯನ್ನು ಕೀಳಂದಾಜಿಸಿದ್ದ. ಆಗ ಮೇರಿ ಕನಲಿ ಕೆಂಡವಾಗಿದ್ದಳು. ‘ನಿನಗೆ ನನ್ನಲ್ಲಿ ನಂಬಿಕೆ ಇಲ್ಲವಾದರೆ ನೋಡು, ನಾನು ಕ್ರಿಸ್ತನ ಮೇಲೆ ಆಣೆ ಮಾಡುತ್ತೇನೆ. ನಾನು ಮದುವೆ ಆಗುವುದಾದರೆ ರಮಾನಂದನನ್ನೇ’ ಎಂದು ಕ್ಯಾಂಡ್ಲ್ ಹಚ್ಚಿ ಯೇಸು ಸ್ವಾಮಿಯ ಮೂರ್ತಿಯ ಇದಿರು ನಿಂತು ಆ ಮೂರ್ತಿಯನ್ನು ಮುಟ್ಟಿ ಪ್ರಮಾಣ ಮಾಡಿದ್ದಳು. + + + +ಆಗ ಮೇರಿಯ ಅಪ್ಪ ಗಾಬ್ರು ‘ನಿನಗೆ ತಲೆ ಸರಿಸಿ ಉಂಟಾ ಮಗ? ಯಾಕೆ ನಿನ್ನ ತಂಗಿಯನ್ನು ಗೋಳು ಹೊಯ್ದುಕೊಳ್ಳುತ್ತಿ?’ ಎಂದು ಬಾವ್‍ತೀಸನನ್ನು ಗದರಿದ್ದ. ಅದರಿಂದ ಸುಮ್ಮನಾದ ಬಾವ್‍ತೀಸ ‘ಆಯ್ತು, ನೀನು ಆ ರಮಾನಂದನನ್ನೇ ಮದುವೆಯಾಗು’ ಎಂದು ಸುಮ್ಮನಾಗಿದ್ದ. + +ರಮಾನಂದ ಖಾಸಗಿ ಬಸ್ಸಿನ ಸ್ಲೀಪಿಂಗ್ ಕೋಚಿನಲ್ಲಿ ಕಾಲು ಚಾಚಿ ಮಲಗಿ ಹಿಂದಿನದ್ದನ್ನೆಲ್ಲ ಹೀಗೆ ನೆನಪಿಸಿಕೊಳ್ಳುತ್ತಿದ್ದಾಗ ಅವನ ಸ್ಮಾರ್ಟ್‍ಪೋನು ರಿಂಗಣಿಸಿತು. ತಕ್ಷಣ ತಾನು ಬಸ್ ಹಿಡಿದದ್ದನ್ನು ಭಾರತಿಗೆ ಆಗಲೇ ಹೇಳಬೇಕಿತ್ತು ಎಂದುಕೊಂಡ. ಪೋನನ್ನು ಎತ್ತಿಕೊಂಡರೆ, ಅದು ಭಾರತಿಯದ್ದೇ ಆಗಿತ್ತು. ‘ಹಲೋ, ಸ್ಸಾರಿ ಭಾರತಿ ನಾನು ಈಗತಾನೇ ಬಸ್ ಹತ್ತಿದೆ’ ಎಂದು ಆತ ಹೇಳುತ್ತಿರುವಷ್ಟರಲ್ಲಿ ಭಾರತಿ ‘ರೀ ಈಗ ಒಂಭತ್ತು ಗಂಟೆಯ ನ್ಯೂಸಿನಲ್ಲಿ ಇಂದು ರಾತ್ರೆ ಹನ್ನೆರಡು ಗಂಟೆಯಿಂದ ಇಡೀ ದೇಶ ಲಾಕ್‍ಡೌನ್ ಆಗುತ್ತದ್ದಂತೆ ಎಂಬ ಸುದ್ದಿ ಪ್ರಸಾರವಾಗುತ್ತಿದೆ. ಆಗಲೇ ಎಂಟು ಗಂಟೆಗೆ ಪ್ರಧಾನಿ ಮೋದಿಯವರು ಇದನ್ನು ಘೋಷಿಸಿದ್ದರಂತೆ’ ಎಂದಳು.ರಮಾನಂದ ಆಶ್ಚರ್ಯ ಮತ್ತು ಕುತೂಹಲದಲ್ಲಿ ‘ಹೌದಾ?’ ಎಂದ. ಆಮೇಲೆ ‘ಎಷ್ಟು ದಿನದ್ದಂತೆ?’ ಎಂದು ಪ್ರಶ್ನಿಸಿದ. + +‘ಇಪ್ಪತ್ತೊಂದು ದಿನದ ಲಾಕ್‍ಡೌನ್. ಎಪ್ರಿಲ್ ಹದಿನಾಲ್ಕರ ತನಕ ಅಂತ ಈಗಿನ ನಿರ್ಧಾರ. ಆ ನಂತರ ಕೊರೊನಾದ ಪೀಡೆ ಹೇಗಿದೆ ಎಂದು ಪರಿಶೀಲಿಸಿ, ಅದನ್ನು ಮುಂದುವರಿಸಬಹುದಂತೆ, ಇಲ್ಲವೇ ಹಿಂದೆಗೆದುಕೊಳ್ಳಲೂಬಹುದಂತೆ ಎನ್ನುತ್ತಿದೆ ವಾರ್ತೆ’ ಎಂದಳು ಭಾರತಿ. + +‘ಓ ಅಷ್ಟೂ ದಿನದ ಲಾಕ್‍ಡೌನೇ’ ಎಂದು ದೊಡ್ಡದಾಗಿ ರಮಾನಂದ ಆತಂಕ ವ್ಯಕ್ತಪಡಿಸಿದಾಗ, ಬಸ್ಸಿನಲ್ಲಿರುವ ಸಹ ಪ್ರಯಾಣಿಕರು ಅದೇ ವಿಚಾರವನ್ನು ಚರ್ಚೆಗೆತ್ತಿಕೊಂಡವರಂತೆ ಮಾತನಾಡಲು ಹತ್ತಿದ್ದರು. ರಮಾನಂದನಿಗೆ ಸಹಪ್ರಯಾಣಿಕರ ಮಾತುಕತೆ ಮತ್ತು ಅಭಿಪ್ರಾಯದ ಬಗ್ಗೆ ಕುತೂಹಲ ಇತ್ತು. ಆತ ‘ಭಾರತಿ, ಇಲ್ಲಿ ಅಂದರೆ ಬಸ್ಸಿನಲ್ಲಿ ಎಲ್ಲರೂ ಅದರ ಬಗ್ಗೆ ಚರ್ಚಿಸುತ್ತಿದ್ದಾರೆ. ನಾನು ಅವರ ಮಾತುಗಳನ್ನು ತುಸು ಕೇಳಬೇಕಾಗಿದೆ’ ಎಂದು ಪೋನನ್ನು ಕಟ್ ಮಾಡಿ ಎದ್ದು ಕುಳಿತ, ಸೀಟಿನಿಂದ ಕೆಳಗಿಳಿದು ನಿಂತ. + +ರಮಾನಂದನ ಸಹ ಪ್ರಯಾಣಿಕರಲ್ಲಿ ಬಹುತೇಕ ಮಂದಿ ಗೊಂದಲದಲ್ಲಿರುವುದು ಕಂಡು ಬಂತು. ಅನೇಕರು ಬಸ್ ಏಜೆಂಟರಲ್ಲಿ ‘ಸ್ವಾಮಿ ನಾಳೆ ಈ ಬಸ್ಸು ಮರಳಿ ಬರುತ್ತದಲ್ಲ ಬೆಂಗಳೂರಿಗೆ?’ ಎಂದು ಪ್ರಶ್ನಿಸುತ್ತಿದ್ದರು ಇನ್ನು ಕೆಲವರು ‘ಛೆ!’ ನನಗೆ ಊರಿಗೆ ಹೋಗದೆ ಗೊತ್ತಿಲ್ಲ. ಹೋದರೆ ಮರಳಿ ಬರುವುದು ಹೇಗೆ?’ ಎಂಬ ಮಾತಿನಲ್ಲೇ ತಲೆ ಚಚ್ಚಿಕೊಳ್ಳತೊಡಗಿದ್ದರು. + +ಆದರೆ ಬಸ್ಸಿನ ಏಜೆಂಟರು ಎಲ್ಲರಿಗೂ ‘ಗೊತ್ತಿಲ್ಲ’, ‘ಗೊತ್ತಿಲ್ಲ’, ಎಂದಷ್ಟೇ ಉತ್ತರಿಸುವುದನ್ನು ನೋಡಿದ ರಮಾನಂದ ಮತ್ತೆ ಏಜೆಂಟರಲ್ಲಿ ತಾನೂ ಯಾಕೆ ಪ್ರಶ್ನಿಸಬೇಕೆಂದು ಸುಮ್ಮನಾದ. ಆದರೆ, ಬೆಂಗಳೂರಿನಿಂದ ಹೊರಟ ಬಸ್ಸು ನಾಳೆ ರಾತ್ರಿ ಖಂಡಿತ ಮರಳೀತು ಎಂದು ತರ್ಕಿಸಿದ. ಜೊತೆಗೆ ನಾಳೆಯಿಂದ ಅಂದರೆ(ದಿನಾಂಕ 26ರಿಂದ) ಎಲ್ಲಾ ರೆಗ್ಯುಲರ್ ಬಸ್ ಸರ್ವಿಸ್‍ಗಳು ನಿಲ್ಲಲೂಬಹುದು ಎಂದು ಊಹಿಸಿದ. ಆದರೂ ನಾಳೆ ರಾತ್ರೆ ಬಸ್ಸು ಇಲ್ಲ ಅಂದರೆ, ಬೆಂಗಳೂರಿಗೆ ಮರಳುವುದು ಹೇಗೆ? ಎಂದು ಯೋಚಿಸಿ, ಟ್ಯಾಕ್ಸಿ ಮಾಡಿಕೊಂಡು ಮರಳಿದರಾಯಿತು ಎಂದು ಸಮಾಧಾನ ತಂದುಕೊಂಡ. + +ಅಷ್ಟರಲ್ಲಿ ಬಸ್ಸು ಏಜೆಂಟರಿಗೆ ನಾಲ್ಕಾರು ಮಂದಿ ‘ನಾವು ಬಸ್ಸಿನಿಂದ ಇಳಿಯುತ್ತೇವೆ ಸ್ವಾಮಿ. ನಾಳೆ ಬಸ್ ಮರಳಿ ಬಾರದಿದ್ದರೆ ನಾವು ಬೆಂಗಳೂರಿಗೆ ಮರಳುವುದು ಹೇಗೆ?’ ಎಂದು ಪ್ರಶ್ನಿಸತೊಡಗಿದರು. ನಮ್ಮ ಟಿಕೇಟ್‍ನ ಫೇರ್ ಹಿಂದೆ ಕೊಡಿ’ ಎಂದು ಕೇಳಹತ್ತಿದರು. ಬಸ್‍ಏಜೆಂಟ್ ಮಾತ್ರ “ಅದು ಹೇಗಾಗುತ್ತದೆ ಸ್ವಾಮಿ? ನಮ್ಮ ಬಸ್ ಕೆಟ್ಟಿಲ್ಲ. ನಿಮಗೆ ಎಲ್ಲಿಗೆ ಟಿಕೇಟು ಕೊಟ್ಟಿದ್ದೇವೆಯೋ ಅಲ್ಲಿಗೆ ನಿಮ್ಮನ್ನು ನಾವು ಒಯ್ಯುವುದಿಲ್ಲ ಎಂದು ಹೇಳುತ್ತಿಲ್ಲ” ಎಂದ. ಅಂಥವರ ಬಾಯಿ ಮುಚ್ಚಿಸಲು ತೊಡಗಿದ. + +ರಮಾನಂದನಿಗೆ ಈ ಎಲ್ಲ ಅವಾಂತರಗಳನ್ನು ಭಾರತಿಗೆ ಹೇಳಬೇಕೆನಿಸಿತು. ಆತ ಪೋನನ್ನು ಎತ್ತಿಕೊಂಡು ರಿಂಗ್ ಕೊಟ್ಟ. ಭಾರತಿ ‘ಹೌದಯೇ (ಗಂಡನನ್ನು ಆಕೆ ಒಮ್ಮೊಮ್ಮೆ ಹಾಗೆ ಕರೆಯುವುದು ಇದೆ) ನಾಳೆ ನಿಮಗೆ ಮರಳಿ ಬರಲು ಬಸ್ಸಿಲ್ಲ ಅಂತ ಕಾಣುತ್ತದೆ’ ಎಂದಳು. ರಮಾನಂದ ‘ಹೌದು ಭಾರತಿ, ನನಗೂ ಆ ಸಂಶಯ ಇದೆ. ಈಗೇನು ಮಾಡಲಿ? ಮರಳಿ ಮನೆಗೆ ಬರಲೇ?’ ಎಂದು ಪ್ರಶ್ನಿಸಿದ. ಭಾರತಿ ‘ನಾನು ಏನೂಂತ ಹೇಳಲಿ? ನಿಮ್ಮಷ್ಟೇ ನನ್ನ ತರ್ಕವೂ’ ಎಂದವಳೇ ‘ನೀವು ನಮ್ಮ ಡ್ರೈವರ್‍ನನ್ನು ಕರಕೊಂಡು ನಮ್ಮ ಕಾರಲ್ಲೇ ಊರಿಗೆ ಹೋಗಬಹುದಿತ್ತು. ಈ ರಾದ್ಧಾಂತವೇ ಇದ್ದಿಲ್ಲ’ ಎಂದಳು. ರಮಾನಂದನಿಗೆ ಅದು ‘ಸರಿ’ ಅನಿಸಿತು. ಆತ “ಇಲ್ಲ ಭಾರತಿ ಹೇಗೂ ಹೊರಟಾಗಿದೆ. ಅಲ್ಲಿ ಗೋವಿಂದ ಭಾವ ಕಾಯುತ್ತಿದ್ದಾರೆ. ಅಕಸ್ಮಾತ್ ನಾಳೆ ಬಸ್ ಇಲ್ಲ ಅಂತ ಆದರೆ, ನಾಡಿದ್ದು ಟ್ಯಾಕ್ಸಿಮಾಡಿಕೊಂಡು ಹಿಂದೆ ಬರುತ್ತೇನೆ. ಪ್ರಾಯಃ ಕಾರುಗಳ ಸಂಚಾರಕ್ಕೆ ಅಡ್ಡಿ ಇರಲಿಕ್ಕಿಲ್ಲ ಎಂದು ಕಾಣುತ್ತದೆ” ಎಂದ. + +ಅಷ್ಟರಲ್ಲಿ ಬಸ್‍ಸ್ಟಾರ್ಟ್ ಆಯಿತು. ಬಸ್ ಏಜೆಂಟರು ಪ್ರಯಾಣಿಕರ ಲೆಕ್ಕ ತೆಗೆದ ಟ್ರೀಪ್‍ಶೀಟಿನಲ್ಲಿ ‘ನಲುವತ್ತೊಂಬತ್ತು ಮಂದಿಯಲ್ಲಿ ಎಂಟು ಜನ ಇಲ್ಲ. ನಲುವತ್ತೊಂದು ಮಂದಿ ಇದ್ದಾರೆ’ ಎಂದು ಡ್ರೈವರಿಗೆ ಹೇಳಿದ. ಟ್ರಪ್‍ಶೀಟ್‍ನ್ನು ಕೊಟ್ಟು ಕೆಳಗಿಳಿದ. + +ರಮಾನಂದ ಈಗ ಬಂದದ್ದನ್ನು ಧೈರ್ಯವಾಗಿ ಇದಿರಿಸುವುದು ಎಂದುಕೊಂಡ. ಸ್ಲೀಪಿಂಗ್ ಸೀಟಿನಲ್ಲಿ ಉದ್ದಕ್ಕೂ ಮಲಗಿ ಕಣ್ಣು ಮುಚ್ಚಿಕೊಂಡ. ಬಸ್ ನಿಧಾನವಾಗಿ ಬೆಂಗಳೂರಿನ ನಾಲ್ಕಾರು ಕಡೆಗಳಲ್ಲಿ ನಿಂತು ಆಮೇಲೆ ವೇಗವನ್ನು ವರ್ಧಿಸಿಕೊಂಡಿತು. ಉಡುಪಿಯಾಚೆ ರಭಸದಿಂದ ಸಾಗತೊಡಗಿತು. + +ಅಷ್ಟರಲ್ಲಿ ಸಹಪ್ರಯಾಣಿಕರಲ್ಲಿ ಕೆಲವರು ಪೋನಿನಲ್ಲಿ ಲಾಕ್‍ಡೌನ್‍ನ ಬಗ್ಗೆ ಮಾತನಾಡತೊಡಗಿದರು. ಹಲವರು ತಮ್ಮ ಪಕ್ಕದಲ್ಲಿ ಕುಳಿತವರಲ್ಲಿ ಕೊರೊನಾದ ಭೀಕರತೆಯ ಬಗ್ಗೆ ಚರ್ಚಿಸತೊಡಗಿದರು. ರಮಾನಂದನಲ್ಲಿ ಇನ್ನಷ್ಟು ಮಾಹಿತಿ ತಿಳಿದುಕೊಳ್ಳಬೇಕೆಂಬ ಕಾತರತೆ ಇತ್ತು. ಭಾರತಿಗೆ ಪೋನು ಮಾಡಿದರೆ ಟಿ.ವಿಯ ನ್ಯೂಸ್ ಚಾನೆಲ್‍ಗಳಲ್ಲಿ ಹೆಚ್ಚಿನ ಮಾಹಿತಿ ಈಗ ಬಿತ್ತರವಾಗಬಹುದೆಂದು ತರ್ಕಿಸಿದ. ಆದರೆ ಭಾರತಿ ಈಗ ಮಲಗಿದ್ದರೆ, ಅವಳನ್ನು ಎಬ್ಬಿಸಿ ಡಿಸ್ಟರ್ಬ್ ಮಾಡುವುದು ಯಾಕೆ ಎಂದು ಸುಮ್ಮನಾದ, ವಾಟ್ಸಪ್‍ನಲ್ಲಿ ಏನೇನು ಬಂದಿರಬಹುದು ಎಂಬ ಕುತೂಹಲದಲ್ಲಿ ಪೋನನ್ನು ಕೈಗೆತ್ತಿಕೊಂಡ. + +ವಾಟ್ಸಪ್‍ನಲ್ಲಿ ಲಾಕ್‍ಡೌನ್ ವಿಷಯಗಳು ಒಂದರ ಮೇಲೆ ಇನ್ನೊಂದು ಎಂಬಂತೆ ಬರುತ್ತಲೇ ಇತ್ತು. ನಾಳೆಯಿಂದ ‘ಏನೇನು ಇರುತ್ತವೆ’ ‘ಏನೇನು ಇರುವುದಿಲ್ಲ’ ಎಂಬಲ್ಲಿಂದ ತೊಡಗಿ, ಪ್ರಧಾನಿ ಮೋದಿಯವರ ನಿರ್ಧಾರವನ್ನು ಬೆಂಬಲಿಸುವ ಹೇಳಿಕೆಗಳ ಜೊತೆ, ಈ ನಿರ್ಧಾರವನ್ನು ಈಗಲ್ಲ ಹಿಂದೆಯೇ ಎತ್ತಿಕೋಳ್ಳಬೇಕಿತ್ತು, ಎಂಬ ಟೀಕೆಗಳೂ ಬರುತ್ತಲೇ ಇದ್ದುವು. ಸುಮಾರು ಒಂದು ತಾಸುಗಳ ತನಕ ಅವುಗಳನ್ನು ನೋಡಿದ ರಮಾನಂದನಿಗೆ ನಾಳೆ ಖಂಡಿತ ಈ ಬಸ್ಸು ಬೆಂಗಳೂರಿಗೆ ಮರಳುವುದಿಲ್ಲ ಎಂಬ ಅರಿವಾಯಿತು. ತಾನು ಇನ್ನು ಬೆಂಗಳೂರಿಗೆ ಹೇಗೆ ಮರಳುವುದು ಎಂಬ ಚಿಂತೆಯೇ ಅವನನ್ನು ಕಾಡಿ, ನಿದ್ದೆ ಅವನ ಕಡೆ ಸುಳಿಯಲಿಲ್ಲ. + +ಬಸ್ಸು ಶಿರಾಡಿ ಘಾಟಿ ಇಳಿಯುವ ಹೊತ್ತಿನಲ್ಲಿ ಅವನಿಗೆ ಜೊಂಪು ಹತ್ತತೊಡಗಿತು. ನಿಧಾನವಾಗಿ ನಿದ್ದೆಯಲ್ಲಿ ತಾನು ಮುಳುಗಬಹುದು ಎನ್ನುವಾಗ ರಸ್ತೆಯ ತಿರುವುಗಳಲ್ಲಿ ಬಸ್ಸು ತಿರುಗುವ ರಭಸಕ್ಕೆ ಆ ಜೊಂಪು ಎದ್ದು ಬಡಿತು. ಆತ ಸುಮ್ಮನೇ ಕಣ್ಣು ಬಿಡಿಸಿ ಮಲಗಿದ. ಅವನ ತಲೆಯೊಳಗೆ ಏನೂ ಸುಳಿಯಲಿಲ್ಲ. + +ಬಸ್ಸು ಧರ್ಮಸ್ಥಳ, ಕಾರ್ಕಳ, ಬೆಳ್ಮಣ್ ಪೇಟೆಯನ್ನು ದಾಟಿ ಮುಂದೆ ಮುಂದೆ ಹೋಯಿತು. ಕಂಡೆಕ್ಟರ್ ‘ಶಿರ್ವ’,’ಶಿರ್ವ’, ಎಂದು ಕೂಗಿದ. ರಮಾನಂದ ತಾನು ಇಳಿಯಬೇಕಾದ ಸುರಪುರ ಬಂತೆಂದು ಎದ್ದು ಕುಳಿತ. ಮೆಲ್ಲನೇ ಸೀಟಿನಿಂದ ಇಳಿದು ಕಂಡೆಕ್ಟರ್ ಬಳಿ ಸಾರಿ ‘ಸುರಪುರದ ಚರ್ಚ್‍ನ ಇದಿರು ಬಸ್ಸು ನಿಲ್ಲಿಸಿ’ ಎಂದು ವಿನಂತಿಸಿದ. ಕಂಡೆಕ್ಟರ್ ‘ಇಳಿಸುತ್ತೇವೆ, ಇನ್ನೇನು ಐದು ನಿಮಿಷದಲ್ಲಿ ಸುರಪುರ ಬರುತ್ತದೆ’ ಎನ್ನುವಷ್ಟರಲ್ಲಿ ಸುರಪುರವೂ ಬಂತು. + +ರಮಾನಂದ ಬಸ್ಸಿನಿಂದ ಇಳಿದು ಆಚೆ ಈಚೆ ಕಣ್ಣಾಡಿಸುವಷ್ಟರಲ್ಲಿ ಗೋವಿಂದಾಚಾರ್ಯರು ಕಾರಿನಿಂದ ಇಳಿದಿದ್ದರು. ‘ಹಲೋ ರಮಾನಂದ ನಾನು ಇಲ್ಲಿದ್ದೇನೆ’ ಎಂದು ಕೈ ಬೀಸಿದರು. ರಮಾನಂದ ಆ ಕಡೆ ಧಾವಿಸುವಷ್ಟರಲ್ಲಿ ಗೋವಿಂದಾಚಾರ್ಯರ ಮಗ ನರಸಿಂಹನು ರಮಾನಂದನ ಕೈಯಲ್ಲಿದ್ದ ಏರ್‍ಬ್ಯಾಗ್‍ನ್ನು ಎತ್ತಿಕೊಂಡು ‘ನಮಸ್ಕಾರ’ ಎಂದ. ರಮಾನಂದ ‘ಓ, ನರಸಿಂಹ, ಚೆನ್ನಾಗಿದ್ದಿ ತಾನೇ?’ ಎಂದು ಅವನನ್ನು ವಿಚಾರಿಸಿದ. ‘ಹೌದು’ ಎಂದ ನರಸಿಂಹ. + + + +ಕಾರಿಗೆ ಒರಗಿ ನಿಂತಿದ್ದ ಗೋವಿಂದಾಚಾರ್ಯರು ರಮಾನಂದನ ಬಳಿ ಬಂದು ಅವನ ಕೈ ಕುಲುಕಿ ಬೆನ್ನಿಗೆ ಮೆತ್ತಗೆ ಬಡಿಯಬೇಕು ಎನ್ನುವಷ್ಟರಲ್ಲಿ ರಮಾನಂದ ಬಾಗಿ ಆಚಾರ್ಯರ ಕಾಲು ಮುಟ್ಟಿದ. ‘ಛೆ ಛೆ ಈಗ ಇದೆಲ್ಲ ಬೇಡ ಇತ್ತಯ್ಯ’ ಎಂದು ಅಚಾರ್ಯರು ಹೇಳಿದ್ದಕ್ಕೆ ರಮಾನಂದ ‘ನೀವು ನನಗೆ ಭಾವ ಮಾತ್ರವಲ್ಲ, ನನ್ನ ಬದುಕಿಗೆ ಅರ್ಥಕೊಟ್ಟವರು’ ಎಂದ. ತನ್ನ ಮದುವೆಗೆ ಆಚಾರ್ಯರು ನೆರವಾದದ್ದನ್ನು ಸ್ಮರಿಸಿಕೊಂಡ. + +ಡಾ. ನಾ. ಮೊಗಸಾಲೆ ಕಾಸರಗೋಡು ತಾಲ್ಲೂಕಿನ ಕೋಳ್ಯೂರಿನ ಮೊಗಸಾಲೆಯವರು. ವೃತ್ತಿಯಲ್ಲಿ ಆಯುರ್ವೇದ ವೈದ್ಯರು. ಕಾವ್ಯದ ಜೊತೆ ಕಥೆ ಕಾದಂಬರಿಗಳನ್ನೂ ಬರೆದಿದ್ದಾರೆ. ವರ್ತಮಾನದ ಮುಖಗಳು, ಪಲ್ಲವಿ, ಪ್ರಭವ, ಕಾಮನ ಬೆಡಗು ಬೆಳಗು ಸೇರಿದಂತೆ ಹಲವು ಕವನ ಸಂಕಲನಗಳು, ಮಣ್ಣಿನ ಮಕ್ಕಳು, ಕನಸಿನ ಬಳ್ಳಿ, ಅನಂತ, ಧಾತು ಸೇರಿದಂತೆ ಹಲವು ಕಾದಂಬರಿಗಳು, ವ್ಯಕ್ತಿಚಿತ್ರಗಳ ಸಂಗ್ರಹ ಸೇರಿದಂತೆ ಇನ್ನೂ ಹಲವು ಕೃತಿಗಳನ್ನು ರಚಿಸಿದ್ದಾರೆ \ No newline at end of file diff --git a/Kenda Sampige/article_232.txt b/Kenda Sampige/article_232.txt new file mode 100644 index 0000000000000000000000000000000000000000..31eeda5c87c61a5600bfbe331728eeb14b7916c1 --- /dev/null +++ b/Kenda Sampige/article_232.txt @@ -0,0 +1,33 @@ +ʻಪರವಶʼ ಕುಮಾರ ಬೇಂದ್ರೆ ಅವರ ಐದನೇ ಕಥಾಸಂಕಲನ. ಐದನೇ ಸಂಕಲನ ಎಂಬುದು ಒಬ್ಬ ಕತೆಗಾರನ ಕಥನ ಜೀವನದ ಸಂದರ್ಭದಲ್ಲಿ ಒಂದು ದೊಡ್ಡ ಮೈಲಿಗಲ್ಲು. ಒಂದು ಕಥಾ ಸಂಕಲನದ ಕತೆಗಾರನಾದ ನನಗೆ ಐದನೇ ಸಂಕಲನ ಎಂಬುದು ಬೆರಗು ಹುಟ್ಟಿಸುವ ದೊಡ್ಡ ಸಾಧನೆಯಾಗಿ ಕಾಣುತ್ತದೆ. + +ಕುಮಾರ ಬೇಂದ್ರೆ ಅವರ ಕತೆಗಳ ವಿಶೇಷತೆ ಎಂದರೆ ಬಹಳ ಸುಲಭವಾಗಿ ಓದಿಸಿಕೊಳ್ಳುವಂತಹ ಗುಣ. ಓದುಗನಿಗೆ ಸಂವಹನದ ದೃಷ್ಟಿಯಿಂದ ಹೆಚ್ಚು ಸರಾಗವಾಗಿ, ಹೆಚ್ಚು ತೊಂದರೆ ಕೊಡದೇ ಓದಿಸಿಕೊಳ್ಳುವ ಗುಣ ಅವರ ಎಲ್ಲ ಕತೆಗಳಲ್ಲೂ ಇದೆ. ಇದನ್ನು ಒಂದು ಗುಣ ಎಂದೇ ಹೇಳಲು ನಾನು ಬಯಸುತ್ತೇನೆ. ಯಾಕೆಂದರೆ ಸರಳತೆ ಎನ್ನುವಂಥದ್ದು ಸುಲಭವಲ್ಲ, ಅದನ್ನು ಎಟಕಿಸಿಕೊಳ್ಳುವುದೂ ಕೂಡ ಸುಲಭವಲ್ಲ. ಸರಳವಾಗಿ ಬರೆಯುವುದು ಮತ್ತು ಸರಳವಾಗಿ ಸಂವಹನ ಮಾಡುವುದು ಯಾವಾಗಲೂ ಒಂದು ಸವಾಲು. ಅವರು ವೃತ್ತಿಯಿಂದ ಪತ್ರಕರ್ತರಾಗಿರುವುದರಿಂದ ಈ ಸುಲಭ ಸಂವಹನ ಅವರಿಗೆ ಸಾಧ್ಯವಾಗಿರಬಹುದು. + +(ಕುಮಾರ ಬೇಂದ್ರೆ) + +ಕುಮಾರ ಬೇಂದ್ರೆ ಅವರು ತಮ್ಮ ಕತೆಗಳಲ್ಲಿ ಬಹಳ ಸುಂದರವಾದ ಚಿತ್ರಕ ಶಕ್ತಿಯನ್ನು ಸಾಧಿಸಿದ್ದಾರೆ. ಘಟನೆಗಳನ್ನು ಕಣ್ಣಿಗೆ ಕಟ್ಟುವಂತೆ ಮೋಹಕವಾಗಿ ಚಿತ್ರಿಸುವಲ್ಲಿ ಅವರ ಎಲ್ಲ ಕತೆಗಳು ಯಶಸ್ವಿಯಾಗಿವೆ. ಈ ಕತೆಗಳ ಮತ್ತೊಂದು ವಿಶೇಷವೇನೆಂದರೆ ಅವುಗಳ ವಸ್ತು. ಸಾಮಾನ್ಯವಾಗಿ ಇಂದು ಕತೆಗಳನ್ನ ಬರೆಯುತ್ತಿರುವ ಕತೆಗಾರರಿಗೆ ಯಾವುದು ವರ್ಜವೋ ಅಥವಾ ಯಾವುದು ಮುಖ್ಯವಲ್ಲ ಎಂದು ಅವರು ಭಾವಿಸಿದ್ದಾರೋ ಅಂತಹ ವಸ್ತುಗಳನ್ನು ಕುಮಾರ ಬೇಂದ್ರೆ ಅವರು ಬಹಳ ಆಸಕ್ತಿಯಿಂದ ಮತ್ತು ಕುತೂಹಲದಿಂದ ಚಿತ್ರಿಸಿದ್ದಾರೆ. ಸಾಮಾನ್ಯವಾಗಿ ಕತೆಗಾರರು ಸಾಮಾಜಿಕ ತವಕ-ತಲ್ಲಣಗಳ ಬಗ್ಗೆ ಬರೆಯುವುದು ಅವರ ಪ್ರಧಾನ ಆಸಕ್ತಿ ಆಗಿರುತ್ತದೆ. ಅಂದರೆ ವರ್ತಮಾನದ ವಿದ್ಯಮಾನಗಳಿಗೆ ಸ್ಪಂದಿಸುವುದು ಒಬ್ಬ ಲೇಖಕನ ಕರ್ತವ್ಯ ಎಂದು ಲೇಖಕನೇ ಅಂದುಕೊಂಡಿರುವುದರಿಂದ; ಸಮಾಜ ಅದನ್ನು ಬಯಸುತ್ತದೋ ಇಲ್ಲವೊ ಅದು ಎರಡನೇ ವಿಷಯ. ಆದರೆ ಲೇಖಕನೇ ಅದನ್ನು ನಂಬಿಕೊಂಡಿರುವುದರಿಂದ ಅದು ತನ್ನ ಕರ್ತವ್ಯ ಎನ್ನುವ ನೆಲೆಗಟ್ಟಿನಲ್ಲಿ ಸ್ಪಂದಿಸುತ್ತ ಹೋಗುತ್ತಾನೆ. ಅಂದರೆ ಒಬ್ಬ ಲೇಖಕ ಸಮಾಜಮುಖಗಿಯಾಗಲು ಬಯಸುತ್ತಾನೆ. ಆದರೆ ಕುಮಾರ ಬೇಂದ್ರೆ ಅವರು ಸಮಾಜಮುಖಿಯೂ ಹೌದು, ಅದಕ್ಕಿಂತ ಮುಖ್ಯವಾಗಿ ಅವರ ಎಲ್ಲ ಕತೆಗಳ ಕೇಂದ್ರ ಇರುವುದು ವ್ಯಕ್ತಿ ಕೇಂದ್ರಿತವಾಗಿ. ಅಂದರೆ ವ್ಯಕ್ತಿಗತ ತವಕ-ತಲ್ಲಣಗಳ ಬಗ್ಗೆ ಅವರಿಗೆ ಹೆಚ್ಚು ಆಸಕ್ತಿ ಎಂದು ʻಪರವಶʼ ಸಂಕಲನದ ಕತೆಗಳನ್ನು ಓದಿದಾಗ ಅನಿಸುತ್ತದೆ. ಬರಹಗಾರರು ಸಾಮಾನ್ಯವಾಗಿ ಪ್ರಸ್ತಾಪ ಮಾಡಲು, ಬರೆಯಲು ಹಿಂಜರಿಯುವ ಪ್ರೀತಿ ಪ್ರೇಮ ಪ್ರಣಯಗಳ ವಿಷಯವಾಗಿ ಈ ಎಲ್ಲ ಕತೆಗಳು ಬೇರೇ ಬೇರೆ ರೀತಿಯಲ್ಲಿ ಶೋಧನೆ ನಡೆಸುತ್ತವೆ. ಪ್ರೇಮದ ಮೂಲಕವೇ ಜೀವನದ ದ್ರವ್ಯ, ಸೌಂದರ್ಯ ಮತ್ತು ಸಾಧ್ಯತೆಗಳ ಬಗ್ಗೆ ಹುಡುಕಾಟ ಮಾಡುವುದು ಈ ಎಲ್ಲ ಕತೆಗಳ ಭಿತ್ತಿಯಲ್ಲಿದೆ. + +ಪ್ರೇಮವನ್ನು ನಾವು ಜೀವನದ ಜೀವನಾಡಿಯ ರೂಪದಲ್ಲಿ ನೋಡುವುದಾದರೆ ಇವತ್ತಿಗೆ ಬಹಳ ಅಗತ್ಯವಾದ ಸಂಗತಿಯ ಬಗ್ಗೆಯೇ ಕುಮಾರ ಬೇಂದ್ರೆ ಅವರು ಮಾತನಾಡುತ್ತಿದ್ದಾರೆ ಎಂದು ಭಾವಿಸಬೇಕಾಗುತ್ತದೆ. ಆದರೆ ಈ ಜೀವನಾಡಿಯಾದ ಪ್ರೇಮವನ್ನು ಹಿಡಿದಿಡಲು ಈ ಕತೆಗಾರರು ಬಳಸಿಕೊಂಡಿರುವ ವೇದಿಕೆ ಭಿನ್ನವಾದದ್ದು. ಈ ಕತೆಗಳು ಘಟಿಸುವುದು ಸಾಮಾಜಿಕ ಜಾಲತಾಣಗಳ ಆಧುನಿಕ ಸಲಕರಣೆಗಳ ಮುಖಾಂತರ. ಬಹಳ ಹಿಂದೆ ಪತ್ರಗಳು ಮತ್ತು ದೂರವಾಣಿ ಮಾಡುತ್ತಿದ್ದ ಪ್ರೇಮಧೂತರ ಕೆಲಸವನ್ನು ಇಲ್ಲಿ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸ್‌ಆಪ್‌ಅಂತಹ ಮಾಧ್ಯಮಗಳು ಮಾಡುತ್ತವೆ. ದೇವಸ್ಥಾನ, ಕೆರೆಯ ಅಂಗಳ, ಸಂತೆ, ಜಾತ್ರೆ, ಉದ್ಯಾನವನಗಳ ಜಾಗದಲ್ಲಿ ಕುಮಾರ ಬೇಂದ್ರೆ ಅವರು ಮಾಲ್‌ಗಳನ್ನು ಮಲ್ಟಿಫ್ಲೆಕ್ಸ್‌‌ ರೆಸಾರ್ಟ್‌ಗಳನ್ನು ತಂದು ನಿಲ್ಲಿಸಿದ್ದಾರೆ. ಮೆಟ್ರೋ ರೈಲಿನ ನಿಲ್ದಾಣಗಳನ್ನು ಕೂಡ ಈ ಪ್ರೇಮದ ಪರವಶತೆ ಘಟಿಸುವಂತಹ ತಾಣವಾಗಿ ನಾವು ಈ ಕತೆಗಳಲ್ಲಿ ನೋಡಲು ಸಾಧ್ಯವಿದೆ. + +ಈ ಸಂಕಲನದ ಮುಖ್ಯ ಕತೆಗಳಲ್ಲಿ ಒಂದಾದ ʻಶೂನ್ಯʼ ಕತೆಯಲ್ಲಿ ಒಂದು ವಿಶೇಷ ತಂತ್ರವನ್ನು ಕುಮಾರ ಬೇಂದ್ರೆ ಬಳಸಿದ್ದಾರೆ. ಅಲ್ಲಿ ಒಬ್ಬ ಮನೋವೈದ್ಯ ಮತ್ತು ಒಬ್ಬಳು ಕತೆಗಾರ್ತಿ ಇಬ್ಬರೂ ಒಟ್ಟಿಗೇ ಕುಳಿತು, ಈಗಾಗಲೇ ಘಟಿಸಿರುವ ಒಂದು ಪ್ರೇಮ ಕತೆಯ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಪ್ರೇಮದ ಮನೋವ್ಯಾಪಾರದ ಬಗ್ಗೆ ಮನೋವಿಜ್ಞಾನದ ನೆಲೆಗಟ್ಟಿನಲ್ಲಿ ಮತ್ತು ಕಥನ ಪ್ರಜ್ಞೆಯ ಹಿನ್ನೆಲೆಯಲ್ಲಿ ಈ ಕತೆಯಲ್ಲಿ ಚರ್ಚೆಯಾಗುತ್ತದೆ. ಈ ಚರ್ಚೆಯನ್ನು ಅಥವಾ ತಂತ್ರವನ್ನು ಕತೆಗಾರರಾಗಿ ಕುಮಾರ ಬೇಂದ್ರೆ ಅವರಿಗೇ ನಾವು ಆರೋಪಿಸಲು ಸಾಧ್ಯವಿದೆ. ಹೀಗೆ ಇವರ ಎಲ್ಲ ಕತೆಗಳಲ್ಲಿ ಇವರೊಬ್ಬ ಮನೋವಿಶ್ಲೇಷಕರ ರೂಪದಲ್ಲಿ ಮತ್ತು ಕತೆಗಾರರ ರೂಪದಲ್ಲಿದ್ದು ವಿಶ್ಲೇಷಣೆಯನ್ನು ಮಾಡಿ ಈ ಎಲ್ಲ ಕತೆಗಳನ್ನು ಬರೆದಿದ್ದಾರೆ. ಏಕಕಾಲಕ್ಕೆ ಅವರು ಮನಃಶಾಸ್ತ್ರದ ವಿದ್ಯಾರ್ಥಿಯಾಗಿಯೂ ಮತ್ತು ಕತೆಗಾರರಾಗಿಯೂ ಎರಡೂ ಪಾತ್ರಗಳನ್ನು ಸಾಕಷ್ಟು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. + + + +ಪ್ರೇಮದ ವಿವಿಧ ಆಯಾಮಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ ಈ ಆಧುನಿಕ ಸಂದರ್ಭದಲ್ಲಿ ಪ್ರೇಮವೆಂಬುದು ಜೀವನಕ್ಕೆ ಎಷ್ಟು ಮುಖ್ಯ ಎಂಬುದರ ಬಗ್ಗೆ ಇಲ್ಲಿನ ಕತೆಗಳು ಚರ್ಚಿಸುತ್ತವೆ. ಪ್ರೇಮದ ಔನ್ನತ್ಯದ ಜೊತೆಗೆ ಅವನತಿಯ ಚಿತ್ರಗಳು ಕೂಡ ಈ ಕತೆಗಳಲ್ಲಿದೆ. ʻಬಣ್ಣಗಳಿಗೆ ನಿಲುಕದ ಸೌಂದರ್ಯʼ ಎನ್ನುವಂತಹ ಒಂದು ಕತೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ; ಸೌಂದರ್ಯವನ್ನು ಅದರ ಆತ್ಯಂತಿಕ ಸ್ಥಿತಿಯಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವಾಗದ ಒಬ್ಬ ಚಿತ್ರಕಲಾವಿದ ಇಲ್ಲಿನ ಕಥಾನಾಯಕ. ಅವನಿಗೆ ಅರ್ಥವಾಗದಿರುವಂತಹ ಸೌಂದರ್ಯದ ಔನ್ನತ್ಯವನ್ನು ಈ ಕಥಾನಾಯಕಿ ಅವನಿಗೆ ಮನದಟ್ಟು ಮಾಡಿಸುತ್ತಾಳೆ. ನಿಜವಾದ ಸೌಂದರ್ಯವೆಂದರೆ ಏನು? ಅದರ ಸಾಧ್ಯತೆಗಳು ಏನು ಎಂಬುದನ್ನು ಒಬ್ಬ ಕಲಾವಿದನಿಗೆ ಕಥಾನಾಯಕಿ ಮನದಟ್ಟು ಮಾಡಿಸುವಂತಹ ಕತೆ ಇದು. + +ʻಒಲವು ಅರಸಿ ಬಂದವಳುʼ ಹೆಸರಿನ ಕತೆಯೊಂದು ಇರದಲ್ಲಿದೆ. ಈ ಕತೆಯ ನಾಯಕಿ ರಮ್ಯ, ರಕ್ಷೀತ್‌ಎನ್ನುವಂತಹ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾಳೆ. ಎಷ್ಟರ ಮಟ್ಟಿಗೆ ಒಪ್ಪಿಕೊಳ್ಳುತ್ತಾಳೆಂದರೆ ಅವಳಿಗೆ ಆ ಕಥಾನಾಯಕನ ಸಾಮಾನ್ಯ ಹಿನ್ನೆಲೆ, ಸಾಧಾರಹಣ ರೂಪ ಯಾವುದೂ ಮುಖ್ಯ ಅನಿಸುವುದಿಲ್ಲ ಅವನ ಪ್ರಾಂಜನಲ ಪ್ರೀತಿಯ ಮುಂದೆ. ಅಷ್ಟೇ ಅಲ್ಲ ಅವರಿಬ್ಬರ ನಡುವಿನ ವಯಸ್ಸಿನ ಅಂತರ ಕೂಡ ರಮ್ಯಾಳಿಗೆ ಮುಖ್ಯ ಅನಿಸುವುದಿಲ್ಲ. ಪ್ರಾಮಾಣಿಕ ಪ್ರೀತಿಯ ಮುಂದೆ ಉಳಿದದ್ದೆಲ್ಲ ಕ್ಷುಲ್ಲಕ ಅನಿಸುತ್ತದೆ ಅವಳಿಗೆ. ʻಮನಸು ಮಾಯೆಯ ಬೆನ್ನೇರಿʼ ಎನ್ನುವ ಕತೆಯಲ್ಲಿ ಕೂಡ ಕಥಾ ನಾಯಕಿ ಮೇಧಿನಿ ಇದೇ ರೀತಿ ಮೋಹನ ಎನ್ನುವ ಕಥಾನಾಯಕನನ್ನು ಅವನ ಪ್ರಾಮಾಣಿಕ ಪ್ರೀತಿಯ ಕಾರಣಕ್ಕಾಗಿಯೇ ಒಪ್ಪಿಕೊಳ್ಳುತ್ತಾಳೆ. ಈ ಕತೆಯಲ್ಲಿ ಒಂದು ಮಾತು ಬರುತ್ತದೆ. ʻಸ್ನೇಹ ಅನ್ನೋದು ಒಂದು ನಿಷ್ಕಲ್ಮಶ ಪವಿತ್ರವಾದ ಸಂಬಂಧ. ಅದರಲ್ಲೂ ಗಂಡು ಹೆಣ್ಣಿನ ಸಂಬಂಧ ತುಂಬಾ ಸೂಕ್ಷ್ಮವಾದದ್ದು. ಅದನ್ನು ಎಷ್ಟು ವಿವೇಕದಿಂದ ನಿಭಾಯಿಸುತ್ತೇವೆಯೋ ಅಷ್ಟು ಸ್ವಸ್ಥವಾಗಿರುತ್ತದೆʼ ಎಂದು. ಈ ಮಾತು ಬೇರೆ ಬೇರೆ ರೂಪದಲ್ಲಿ ಅನೇಕ ಕತೆಗಳಲ್ಲಿ ಮತ್ತೆ ಮತ್ತೆ ಪುನರಾವರ್ತನೆಯಾಗುತ್ತದೆ. ಕುಮಾರ ಬೇಂದ್ರೆ ಅವರು ಪ್ರೇಮದ ನೆಪದಲ್ಲಿ ಒಂದೇ ಕತೆಯನ್ನು ಬೇರೆ ಬೇರೆ ಕತೆಗಳ ರೂಪದಲ್ಲಿ ಮತ್ತೆ ಮತ್ತೆ ಬರೆಯಲು ಪಯತ್ನಿಸಿದ್ದಾರೆ. + +ʻಪರವಶʼ ಎನ್ನುವ ಶೀರ್ಷಿಕೆಯ ಕತೆ ಕೂಡ ಪ್ರೇಮದ, ಸೌಂದರ್ಯದ ಔನ್ನತ್ಯವನ್ನು ಚಿತ್ರಿಸುವ ಕತೆಯಾಗಿದೆ. ಈ ಸಂಕಲನದ ಇನ್ನೊಂದು ತುದಿಯಲ್ಲಿ ಪ್ರೇಮದ ಅವನತಿಯನ್ನು ಕೂಡ ಇವರು ಚಿತ್ರಿಸಿದ್ದಾರೆ. ʻಶೂನ್ಯʼ ಎನ್ನುವ ಕತೆಯಲ್ಲಿ ರಂಜನಿ ಎಂಬ ಯುವತಿ ಪ್ರೇಮಿಸಿ ಮದುವೆಯಾದರೂ ಕೂಡ ತನ್ನ ಗಂಡನ ಗೆಳೆಯನಿಗೆ ಮನಸೋಲುತ್ತಾಳೆ. ಕೊನೆಗೆ ಪಾಪಪ್ರಜ್ಞೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ʻಸರ್ಪಸಹವಾಸʼ ಎನ್ನುವ ಕತೆಯಲ್ಲಿ ಬರುವ ರಂಜನಿಗೆ ಅದಾಗಲೇ ಮದುವೆಯಾಗಿದ್ದರೂ ಕೂಡ ಹಣದ ಮೋಹದಿಂದ ಬೇರೆ ಬೇರೆ ಸಂಬಂಧಗಳನ್ನು ಬೆಳೆಸುತ್ತಾಳೆ. ಹೀಗೆ ಇಲ್ಲಿನ ಎಲ್ಲ ಕತೆಗಳ ಬಗ್ಗೆ ಬಿಡಿಬಿಡಿಯಾಗಿ ಹೇಳುವುದು ಕಷ್ಟ; ಕಷ್ಟ ಎಂದು ಹೇಳುವ ಬದಲಾಗಿ ಈ ಸಂಕಲನದ ಕತೆಗಳನ್ನು ಹೆಚ್ಚು ವಿಶ್ಲೇಷಣೆ ಮಾಡುವುದಕ್ಕಿಂತ ಓದಿ ಸವಿಯಬೇಕು. ಅಥವಾ ಓದಿ ಅನುಭವಿಸಬೇಕು. + +(ರಘುನಾಥ ಚ.ಹ.) + +ಈ ಕತೆಗಳ ಮತ್ತೊಂದು ವಿಶೇಷ ಏನೆಂದರೆ, ಈ ಕತೆಗಳಲ್ಲಿ ಬರುವ ಪುರುಷ ಪಾತ್ರಗಳಿಗಿಂತ ಸ್ತ್ರೀ ಪಾತ್ರಗಳು ಹೆಚ್ಚು ಗಟ್ಟಿಯಾಗಿರುವಂತಹವು. ಸಾಮಾನ್ಯವಾಗಿ ಇಲ್ಲಿನ ಎಲ್ಲ ಕಥಾನಾಯಕರು ಬೋಳೇತನದಿಂದ ಕೂಡಿದವರಾಗಿದ್ದು, ಭಾವುಕತೆಗೆ ಜೋತುಬಿದ್ದು ವಸ್ತುಸ್ಥಿತಿಯಿಂದ ದೂರವಿರುವವರು. ಇಲ್ಲಿನ ನಾಯಕಿಯರು ಹೆಚ್ಚು ಗಟ್ಟಿಯಾದ ವ್ಯಕ್ತಿತ್ವವನ್ನು ಕೆಲವೊಮ್ಮೆ ದಿಟ್ಟತನವನ್ನು ಪ್ರದರ್ಶಿಸುವಂಥವರು ಆಗಿದ್ದಾರೆ. ಪುರುಷರು ಅವಕಾಶವಾದಿಗಳ ಹಾಗೆ ಇದ್ದರೆ ಸ್ತ್ರೀಯರು ತಮಗೆ ಯಾವುದು ಬೇಕು ಅಥವಾ ಯಾವುದು ಬೇಡ ಎನ್ನುವುದರ ಬಗ್ಗೆ ಸ್ಪಷ್ಟತೆ ಇರುವವರಾಗಿದ್ದಾರೆ. ʻಅಜ್ಞಾತ ಸೆಳೆದ ಸುತ್ತʼ ಕತೆಯ ನಂದಿನಿ ಪಾತ್ರವನ್ನು ಉದಾಹರಣೆಯಾಗಿ ತೆಗೆದುಕೊಳ್ಳುವುದಾದರೆ ಆಕೆ ಗಂಡನಿಂದ ಬೇರೆಯಾಗಿ ಬ್ಯೂಟಿ ಪಾರ್ಲರ್‌ನಡೆಸುವ ಮುಖಾಂತರ ಒಂದು ಸ್ವತಂತ್ರ ಬದುಕನ್ನು ಕಟ್ಟಿಕೊಂಡಿದ್ದಾಳೆ. ಈಗ ವೈದ್ಯರೊಬ್ಬರ ಮದುವೆ ಪ್ರಸ್ತಾಪವನ್ನು ಒಪ್ಪಿಕೊಂಡು ವಿದೇಶದಲ್ಲಿ ನೆಲೆಸುವ ಚಿಂತನೆ ಇರುತ್ತದೆ. ಅವಳಿಗೆ ಶಶಿ ಎನ್ನುವ ಒಬ್ಬ ಗೆಳೆಯ ಇದ್ದಾನೆ. ಅವರಿಬ್ಬರ ನಡುವೆ ಸಂಬಂಧ ಕೂಡ ಇದೆ. ಅವನು ಹೇಳುತ್ತಾನೆ ʻದುಡ್ಡಿನ ಹಿಂದೆ ಹೋಗಿ ಜೀವನ ಹಾಳು ಮಾಡಿಕೊಬೇಡʼ ಅಂತ. ಈ ಶಶಿಗೆ ತಾನು ತನ್ನ ಹೆಂಡತಿಗೆ ಮೋಸ ಮಾಡುತ್ತಿದ್ದೇನೆ ಎಂಬ ಸಣ್ಣ ಅಳುಕು ಕೂಡ ಇಲ್ಲ. ಪಾಪಪ್ರಜ್ಞೆ ಕೂಡ ಇಲ್ಲ. ಇವನು ತನ್ನ ಜೊತೆ ಇರುವ ಗೆಳತಿಗೆ ನೀತಿ ಬೋಧನೆ ಮಾಡುವಂತಹ ಒಂದು ವಿಪರ್ಯಾಸ ಇಲ್ಲಿದೆ. ಇಬ್ಬರೂ ಕೂಡ ಸಮಾಜದ ಒಪ್ಪಿತ ಸಂಬಂಧಗಳ ಆಚೆಯ ಇನ್ನೊಂದು ರೀತಿಯ ಸಂಬಂಧವನ್ನು ಹೊಂದಿದರುವವರು. ಆದರೆ ಪ್ರೇಮದ ಬಗೆಗೆ ಆಥವಾ ಗಂಡು ಹೆಣ್ಣಿನ ಸಂಬಂಧದ ಬಗೆಗೆ ನಂದಿನಿಗೆ ಇರುವಂತಹ ಸ್ಪಷ್ಟತೆ, ಜೀವನದ ಬಗೆಗಿನ ಪ್ರಾಮಾಣಿಕತೆ ಅವನಲ್ಲಿ ಇಲ್ಲ. + +ʻಕೆಂಪು ಚೇಳಿನ ನಿಗೂಢ ಹುತ್ತʼ ಕತೆಯಲ್ಲಿ ಕೂಡ ಸ್ವಪ್ನಾಳಿಗೆ ಇರುವಂತಹ ಜೀವನದ ಸ್ಪಷ್ಟ ಅರಿವು ಅಲ್ಲಿನ ಗಂಡು ಪಾತ್ರಕ್ಕೆ ಇಲ್ಲ. ಈ ಕತೆಗಾರರ ಬಗ್ಗೆ ನನ್ನದೊಂದು ಆಕ್ಷೇಪ ಏನೆಂದರೆ, ಕತೆಗಾರರಾಗಿ ಅವರು ಗಂಡು ಪಾತ್ರಗಳಿಗೆ ಹೆಚ್ಚಿನ ಸಹಾನುಭೂತಿ ವ್ಯಕ್ತಪಡಿಸುತ್ತಿದ್ದಾರೇನೊ ಅನಿಸುತ್ತದೆ. ಇಲ್ಲಿ ನೈತಿಕತೆಯ ರೇಖೆಯಿಂದ ಹೊರಗೆ ಬಂದ ಸ್ತ್ರೀಯರನ್ನು ಚೇಳಿನ ರೂಪದಲ್ಲಿ, ಸರ್ಪದ ರೂಪದಲ್ಲಿ ಅವರು ಚಿತ್ರಿಸಿದ್ದಾರೆ. ಅಥವಾ ಆ ಕತೆಗಳು ನಮಗೆ ಆ ರೀತಿಯ ಆ ಇಮೇಜ್‌ಗಳನ್ನು ಕಟ್ಟಿಕೊಡುತ್ತವೆ. ಆದರೆ ಇಲ್ಲಿ ಹೆಚ್ಚು ಸೋಗಲಾಡಿಗಳು ಆಗಿರುವುದು ಪುರುಷರೆ! ಸಂಬಂಧಗಳ ಬಗ್ಗೆ ಸ್ಪಷ್ಟತೆ ಇಲ್ಲದಿರುವುದು, ಅವಕಾಶವಾದಿಗಳಾಗಿರುವುದು ಪುರುಷರೆ. ನಿಜವಾದ ಸಹಾನುಭೂತಿ ಸಲ್ಲಬೇಕಾದದ್ದು ಸ್ತ್ರೀಯರಿಗೆ. ಆ ಕತೆಯಲ್ಲಿ ರಂಜನಿ ಎನ್ನುವ ಯುವತಿ ಹಣ ಕೇಳಿದ ತಕ್ಷಣ ಅವಳ ಬಗ್ಗೆ ಅವನಿಗೆ ಅಸಹ್ಯವಾಗುತ್ತದೆ. ಅವಳ ಗಂಡನಿಗೆ ತಾನು ಮೋಸ ಮಾಡುತ್ತಿದ್ದೇನೆ ಎನ್ನುವ ಪಾಪಪ್ರಜ್ಞೆ ಉಂಟಾಗುತ್ತದೆ. ಹಣ ಕೇಳದೇ ಇದ್ದಿದ್ದರೆ ಈ ಪಾಪಪ್ರಜ್ಞೆಯ ಪ್ರಶ್ನೆಯೇ ಬರುತ್ತಿರಲಿಲ್ಲ. + + + +ಒಟ್ಟಾರೆ ಕುಮಾರ ಬೇಂದ್ರೆ ಅವರ ಕತೆಗಳ ಚೌಕಟ್ಟು ತುಂಬಾ ವಿಸ್ತಾರವಾಗಲು ಸಾಧ್ಯವಿದೆ. ಈ ಕುರಿತು ಮುನ್ನುಡಿಯಲ್ಲಿ ಎಸ್‌. ದಿವಾಕರ್‌ಅವರು ಅರ್ಥವತ್ತಾಗಿ ಮತ್ತು ಮಾರ್ಮಿಕವಾಗಿ ಹೇಳಿದ್ದಾರೆ. ಪ್ರೇಮದ ಹಲವು ಸಾಧ್ಯತೆಗಳನ್ನು ಒಳಗೊಳ್ಳಲು ಸಾಧ್ಯವಿದೆ ಎಂದು ಮತ್ತು ಪ್ರೀತಿ, ಪ್ರೇಮ, ಪ್ರಣಯದ ಇನ್ನೊಂದು ಪ್ರೌಢ ಸಾಧ್ಯತೆಗಳ ಬಗ್ಗೆ, ದೈಹಿಕ ಸಂಬಂಧದ ಆಚೆಗಿನ ವಿಮರ್ಶೆಗಳ ಬಗ್ಗೆ ಕೂಡ ದಿವಾಕರ್‌ಅವರು ಹೇಳಿದ್ದಾರೆ. ಆ ಪ್ರಯತ್ನಗಳನ್ನು ಇಲ್ಲಿನ ಕತೆಗಳಲ್ಲಿ ಕೂಡ ಕತೆಗಾರರು ಮಾಡಿದ್ದಾರೆ. ಪ್ರೇಮದ ಆಚೆಗೆ ಪ್ರಕೃತಿ ಸೌಂದರ್ಯದ ಬಗ್ಗೆ; ಈ ಲೋಕದ ಸೌಂದರ್ಯದ ಆಚೆಗೆ ಇರುವಂತಹ ಇನ್ನೊಂದು ಸೆಳೆತವನ್ನು ಹುಡುಕಿಕೊಂಡು ಹೋಗುವುದರ ಬಗ್ಗೆ ಕೂಡ ಇಲ್ಲಿನ ಕತೆಗಳಲ್ಲಿದೆ. ಹಾಗಾಗಿ ಅದರ ಆಚೆಗೆ ಕೂಡ ಜೀವನದ ಅನೇಕ ಸಾಧ್ಯತೆ, ಸಂಕೀರ್ಣತೆ, ಸಂಘರ್ಷಗಳನ್ನು ಒಳಗೊಳ್ಳುವ ಶಕ್ತಿ ಈ ಕತೆಗಾರರಿಗೆ ಇದೆ ಎಂದು ನನಗನಿಸುತ್ತದೆ. ಐದು ಕಥಾಸಂಕಲನಗಳ ಮುಖಾಂತರ ಅವರು ಈಗಾಗಲೇ ಅನುಭವಿ ಕತೆಗಾರರಾಗಿ ಕನ್ನಡ ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಆರನೇ ಸಂಕಲನ ಹೊಸ ಸವಾಲುಗಳಿಗೆ ತೆರೆದುಕೊಳ್ಳುವಂತಹದಾಗಿರಲಿ. ಅಂದರೆ ಈವರೆಗಿನ ಜಾಡು ಅಥವಾ ನಮಗೆ ನಾವೇ ಹಾಕಿಕೊಳ್ಳುವ ಚೌಕಟ್ಟುಗಳನ್ನು ಮೀರಿ; ನಾವೇ ಕಂಡುಕೊಂಡಿರುವಂತಹ ಸುಲಭದ ಸೂತ್ರಗಳನ್ನು ಸಂಕಲನದಿಂದ ಸಂಕಲಕ್ಕೆ ಮೀರುವಂತಹದು ಪ್ರತಿಯೊಬ್ಬ ಕತೆಗಾರನೂ ಹಾಯಲೇಬೇಕಾದ ಅಗ್ನಿದಿವ್ಯ ಎಂದು ನಾನು ಅಂದುಕೊಂಡಿದ್ದೇನೆ. ಆ ಅಗ್ನಿದಿವ್ಯದಲ್ಲಿ ಗೆಳೆಯ ಕುಮಾರ ಬೇಂದ್ರೆ ಜಯಿಸಿ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚೆಚ್ಚು ಉತ್ತಮ ಕತೆಗಳನ್ನು ಬರೆಯಲಿ, ಯಶಸ್ಸು ಸಾಧಿಸಲಿ ಎಂದು ಆಶಿಸುತ್ತೇನೆ. + +(ʻಪರವಶʼ ಕಥಾಸಂಕಲನ ಬಿಡುಗಡೆ ಸಮಾರಂಭದಲ್ಲಿ ಹಿರಿಯ ಪತ್ರಕರ್ತರು ಹಾಗೂ ಕತೆಗಾರರಾದ ರಘುನಾಥ ಚ.ಹ. ಅವರು ಕೃತಿ ಪರಿಚಯಿಸಿದ ಉಪನ್ಯಾಸದ ಪಠ್ಯರೂಪ ಇಲ್ಲಿದೆ.) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_233.txt b/Kenda Sampige/article_233.txt new file mode 100644 index 0000000000000000000000000000000000000000..a1fb8f803212aec390522e51f3f1bfbc6e09a965 --- /dev/null +++ b/Kenda Sampige/article_233.txt @@ -0,0 +1,59 @@ +ಇತ್ತೀಚೆಗೆ ಕೆಲ ವರುಷಗಳಿಂದ ಪತ್ರಿಕೆಗಳಲ್ಲಿ ಫಾತಿಮಾ ರಲಿಯಾ ಹೆಜಮಾಡಿಯವರ ಬರಹಗಳನ್ನು ಗಮನಿಸುತ್ತಾ ಇದ್ದೇನೆ. ಅವರ ಕಥೆ ಮತ್ತು ಕವಿತೆಗಳನ್ನು ಓದಿರುವೆನಾದರೂ ನನಗೆ ಇಷ್ಟವಾಗಿದ್ದು ಅವರ ಪ್ರಬಂಧಗಳು. ಹಾಗಂತ ಅವರ ಕತೆಗಳೂ ಕೂಡಾ ಬಹಳ ಇಷ್ಟವೇ. ಕವಿತೆ ಮಾತ್ರ ಕೆಲವೊಂದು ತಕ್ಕಮಟ್ಟಿಗೆ ಅರ್ಥವಾಗಿದೆ ಅನ್ನಿಸಿದರೂ ಉಳಿದವು ಅರ್ಥವಾಗಿಲ್ಲ. ಒಟ್ಟಾರೆ ನನಗೆ ಕವಿತೆಯೇ ಅರ್ಥವಾಗದ ಕಾರಣ ಇದನ್ನು ನನ್ನ ಮಿತಿಯೆಂದೇ ಹೇಳಬಹುದು. + +ಮೊನ್ನೆ ಅವರ ಮೊದಲ ಲಲಿತ ಪ್ರಬಂಧಗಳ ಸಂಕಲನ ಹಾಗೂ ಪ್ರಥಮ ಕೃತಿಯಾದ ‘ಕಡಲು ನೋಡಲು ಹೋದವಳು’ ಓದುವ ಅವಕಾಶ ಸಿಕ್ಕಿತು. ಇವುಗಳಲ್ಲಿ ಕೆಲವನ್ನು ಈ ಮುಂಚೆಯೇ ಓದಿದ್ದೆನಾದರೂ ಪುಸ್ತಕ ರೂಪದಲ್ಲಿ ಇವುಗಳನ್ನು ಓದುವುದು ಹೊಸತಾದ ಅನುಭವ. ಇದು ಅವರ ಮೊದಲ ಕೃತಿ ಅಂತ ನಂಬಿಕೆ ಬಾರದಷ್ಟು ಚನ್ನಾಗಿ ಈ ಕೃತಿ ಮೂಡಿ ಬಂದಿದೆ. ಇಲ್ಲಿರುವ ಹದಿನೇಳೂ ಪ್ರಬಂಧಗಳು ಬಹಳ ಚನ್ನಾಗಿವೆ. + +(ಗಿರಿಧರ್ ಗುಂಜಗೋಡು) + +ವಿಶೇಷವಾಗಿ ಅವರ ಪ್ರಬಂಧಗಳ ಶೈಲಿ ಬಹಳ ಆಪ್ತವಾಗುವಂತಿದೆ. ಅತ್ತ ಹರಟೆಯೂ ಅಲ್ಲದ, ಇತ್ತ ಲಹರಿಯೂ ಅಲ್ಲದ, ಅಥವಾ ವೈಚಾರಿಕ ಲೇಖವೂ ಅಲ್ಲದ, ತಿಳಿಹಾಸ್ಯ, ಹದವಾದ ಭಾವನೆಗಳಿಂದ ಕೂಡಿದ ಅವರ ಬರಹಗಳನ್ನು ಓದುವುದು ಹಿತಕರ ಅನುಭವ. ಆದರೆ ಕೆಲವು ಬಹಳ ಕಾಡುವಂತಹ ಪ್ರಬಂಧಗಳೂ ಇವೆ. + +ಈ ಹದಿನೇಳೂ ಬರಹಗಳು ಬಹಳ ವಿಭಿನ್ನವಾಗಿವೆ. ಎಲ್ಲೂ ಏಕತಾನತೆ ಕಾಡುವುದಿಲ್ಲ. ಎಲ್ಲವೂ ಎರಡು ಮೂರು ಪುಟಗಳ ಬರಹವಾಗಿರುವುದರಿಂದ ಸಂಜೆಯ ಕಾಫಿಯೊಟ್ಟಿಗೆ ಒಳ್ಳೆಯ ಜೊತೆಯಾಗುತ್ತದೆ. ಒಂದೇ ಗುಕ್ಕಿಗೆ ಓದುವುದಾದರೆ ಸುಮಾರು ಒಂದುವರೆ ಎರಡುಗಂಟೆ ಸಾಕು. + +ಮೊದಲೇ ಚಿಕ್ಕ ಪ್ರಬಂಧಗಳು. ಅವುಗಳ ಕುರಿತು ಹೇಳಹೊರಟರೆ ಸ್ವಾರಸ್ಯವೇ ಹೋಗಿಬಿಡುತ್ತದೆ. ಅದಕ್ಕೇ ಒಂದನ್ನು ಇಲ್ಲಿ ಬರೆಯುತ್ತೇನೆ. ಉಳಿದ ಹದಿನಾರನ್ನು ನೀವೇ ಓದಿ. ನನಗಿಷ್ಟವಾದ ಒಂದು ಪ್ರಬಂಧ ಇಲ್ಲಿದೆ – + +ಚಾಂದಜ್ಜಿಯ ಕೋರಿ ರೊಟ್ಟಿ ಮತ್ತು ಸಾವಿನ ಖಾಲಿತನ – + +ಆಸ್ಪತ್ರೆಗಳು ಬದುಕು ಕಲಿಸುವ ಪಾಠಶಾಲೆಗಳು. ಕೇಳುವ ಹೃದಯವೊಂದಿದ್ದರೆ ಅಲ್ಲಿ ಕದಲುತ್ತಿರುವ ಪ್ರತಿ ಬಿಂಬಗಳಿಗೂ ಹೇಳಲು ಸಾವಿರದ ಕಥೆಗಳಿರುತ್ತವೆ. ಒಂದು ಸರಳರೇಖೆಯಲ್ಲಿ ಚಲಿಸುತ್ತಿರುವಂತೆ ಕಾಣುವ ಬದುಕಿನಲ್ಲಿ ಧುತ್ತನೆ ಒಂದು ತಿರುವು ಎದುರಾದರೆ ಅಥವಾ ದಾರಿ ಇದಕ್ಕಿದ್ದಂತೆ ಯಾವ ಸುಳಿವೂ ಇಲ್ಲದೆ ಮುಗಿದುಬಿಟ್ಟರೆ ಉಂಟಾಗುವ ಬಯಲೇ ಬದುಕು ಎನ್ನುವ ಖಾಲಿತನವನ್ನು ಆಸ್ಪತ್ರೆವಾಸ ಕ್ಷಣಕ್ಕೊಮ್ಮೆ ಮೆದುಳಲ್ಲಿ ಬಿತ್ತುತ್ತದೆ. ನನ್ನ ಬದುಕೂ ನಿಜದ ಅರ್ಥದಲ್ಲಿ ವಿಸ್ತಾರವಾದದ್ದು, ಬದುಕಿಗೊಂದು ಗಟ್ಟಿತನ ಲಭಿಸಿದ್ದು ಆಸ್ಪತ್ರೆಯ ಕಾರಿಡಾರಿನ ತಣ್ಣನೆಯ ಮೌನದಲ್ಲೇ. + +ಅಮ್ಮನ ಕ್ಯಾನ್ಸರ್ ಆಪರೇಶನ್ ಮುಗಿದು ರೂಮಿಗೆ ಶಿಫ್ಟ್ ಆಗಿ ಇಪ್ಪತ್ತ ನಾಲ್ಕು ಗಂಟೆಗಳೂ ಕಳೆದಿರಲಿಲ್ಲ. ನಿಧಾನಕ್ಕೆ ಇಷ್ಟಿಷ್ಟಾಗಿಯೇ ಸುರಿಯುತ್ತಿದ್ದ ನಿಶಬ್ಧ ಆ ಇರುಳನ್ನು ಮತ್ತಷ್ಟು ನಿಗೂಢವಾಗಿಸಿತ್ತು. ವಿಲಕ್ಷಣ, ಅಸಹಜ ಮೌನವೊಂದು ಇಡೀ ಪ್ರದೇಶವನ್ನು ಆವರಿಸಿದಂತಿತ್ತು. ಈ ಮೌನ ಮುಗಿಯುವುದೇ ಇಲ್ಲವೇನೋ ಎಂದು ಯೋಚಿಸುತ್ತಿರುವಾಗ ಪಕ್ಕದ ರೂಮಿನ ಗೋಡೆ ಸೀಳಿದ ಚೀತ್ಕಾರವೊಂದು ಇಡೀ ಆಸ್ಪತ್ರೆಯ ಮೌನವನ್ನು ಪಟ್ಟನೆ ಒಡೆದು ಹಾಕಿತು. ನಿದ್ರೆ ಬಾರದೆ ಹೊರಳಾಡುತ್ತಿದ್ದ ನಾನು ಎದ್ದು ಕೂತೆ. ಅರೆ ಮಂಪರಿನಲ್ಲೋ ಅಥವಾ ಅರೆ ನಿದ್ರೆಯಲ್ಲೋ ಇದ್ದ ಅಮ್ಮ ಒಮ್ಮೆ ಕಣ್ಣು ತೆರೆದು ಮತ್ತೆ ಮುಚ್ಚಿದರು. ಆ ಕೋಣೆಯಲ್ಲಿನ ಆರ್ತನಾದ, ಬಿಕ್ಕಳಿಗೆ‌ ಕೇಳಲಾಗದೆ ರೂಮಿನ ಬಾಗಿಲೆಳೆದು ಅತ್ತ ಕಡೆ ಹೋದೆ. ಅಲ್ಲೊಬ್ಬರು ಅಜ್ಜಿ ನೋವಿನಿಂದ ಮುಲುಗುಡುತ್ತಿದ್ದರು, ಬಲಗಾಲನ್ನು‌ ಮಂಡಿಯವರೆಗೆ ಮತ್ತು ಎಡಗಾಲಿನ ಎರಡು ಬೆರಳುಗಳನ್ನು ಕತ್ತರಿಸಿ ಹಾಕಿದ್ದರು. ಈಗಷ್ಟೇ ಹಾಕಿದಂತಿದ್ದ ಹಸಿ ಬ್ಯಾಂಡೇಜ್ ಅಲ್ಲೆಲ್ಲಾ ಒಂದು ವಿಚಿತ್ರ ವಾಸನೆಯನ್ನು ಹಬ್ಬಿಸಿತ್ತು. ಇಡೀ ಕೋಣೆಯನ್ನು ಅವಲೋಕಿಸಿದೆ. ಆ ಅಜ್ಜಿಯ ಜೊತೆ ತನ್ನವರು ಅಂತ ಯಾರೂ ಇರಲಿಲ್ಲ. ದಾದಿಯೊಬ್ಬರು ಅವರ ತಲೆಯ ಪಕ್ಕ ನಿಂತು ಇಂಜೆಕ್ಷನ್ ರೆಡಿ ಮಾಡಿಕೊಳ್ಳುತ್ತಿದ್ದರು. ಅಜ್ಜಿಯ ಮುಖ ನೋಡಲು ಪ್ರಯತ್ನಿಸಿದೆ, ಆಗಲಿಲ್ಲ. ಕ್ಷಣ ಹೊತ್ತು ಕಾದ ದಾದಿ ಒಂದು ಬಗೆಯ ನಿರ್ಲಿಪ್ತತೆಯಿಂದ ಬಗ್ಗಿ ಅವರ ಸೊಂಟಕ್ಕೆ ಚುಚ್ಚು ಮದ್ದು ಚುಚ್ಚಿದರು. ನೀರವ ಮೌನವನ್ನು ಸೀಳಿದ ಅಜ್ಜಿಯ ಆಕ್ರಂದನಕ್ಕೆ ಇಡೀ ಆಸ್ಪತ್ರೆ ಮತ್ತು ಆ ಪರಿಸರ ಅದುರಿಬಿದ್ದಂತಾಯಿತು. ನಾನಲ್ಲಿ ನಿಲ್ಲಲಾಗದೆ ಕೋಣೆಗೆ ಹಿಂದಿರುಗಿದೆ. + +ಆ ರಾತ್ರಿಯಿಡೀ ಜಾಗರಣೆ ನನಗೆ. ರೊಮ್ಯಾಂಟಿಕ್ ಅಲ್ಲದ ಬದುಕಿನ ಇನ್ನೊಂದು ಮಗ್ಗುಲನ್ನು ಪರಿಚಯಿಸಿದ್ದೇ ಕಣ್ಣೆವೆಗಳನ್ನು ಒಂದು ಕ್ಷಣಕ್ಕೂ ಮುಚ್ಚಲಾಗದ ರಾತ್ರಿಗಳು ಮತ್ತು ಅವೇಳೆಯ ಚೀತ್ಕಾರಗಳು. ಆಸ್ಪತ್ರೆಯ ಕಾರಿಡಾರು, ಕಿಟಕಿಗಳಿಗೆ ಇಳಿಬಿದ್ದ ಪರದೆಗಳು, ಜೇಡರ ಬಲೆಯಿಲ್ಲದ ಖಾಲಿ ಗೋಡೆಗಳು, ಎಲ್ಲಾ ಮುಗಿದು ಹೋಯಿತು ಅಂದುಕೊಳ್ಳುತ್ತಿರುವಾಗಲೇ ಇನ್ಯಾವುದೋ ಹೊಸತೊದು ಸಂಕೀರ್ಣತೆಯನ್ನು ಕಣ್ಣ ಮುಂದೆ ತಂದಿಟ್ಟು ಬದುಕೆಂದರೆ ಇಷ್ಟೇ ಅಲ್ಲ ಎಂದು ಕಿವಿ ಹಿಂಡಿ ಬುದ್ದಿ ಹೇಳುತ್ತಿದೆಯೇನೋ ಅನ್ನಿಸುತಿತ್ತು. ಎಷ್ಟು ಬದುಕುಗಳು ಅಲ್ಲಿ ಹೊಸದಾಗಿ ಆರಂಭಗೊಂಡಿರಬಹುದು? ಎಷ್ಟು ಬದುಕುಗಳು ಅನಿರೀಕ್ಷಿತ ಕಂಡಿರಬಹುದು? ಲೆಕ್ಕವಿಟ್ಟವರಾರು? + +ಮರುದಿನ ಬೆಳಗಾದರೂ ಆ ಚೀತ್ಕಾರ ನನ್ನ ಕಿವಿಯಲ್ಲಿ ಇನ್ನೂ‌ ಮೊರೆದಂತಾಗುತ್ತಿತ್ತು, ಜಿಎಸ್ಎಸ್ ಅವರ ಕಾಣದ ಕಡಲಿನಂತೆ. ಕಾಲು ಸಾವಕಾಶವಾಗಿ ಆ ರೂಮಿನತ್ತ ಚಲಿಸಿದವು. ಮೆಲ್ಲನೆ ಬಾಗಿಲು ಬಡಿದು ಒಳ ಸರಿದೆ. ಒಂದು ಬದಿಗೆ ಸರಿದು ಮಲಗಿದ್ದ ಅಜ್ಜಿ ಸದ್ದಿಗೆ ಬೆಚ್ಚಿ ಬಿದ್ದವರಂತೆ ತಿರುಗಲು ಪ್ರಯತ್ನಿಸಿದರು, ವಿಚಿತ್ರ ವಾಸನೆಗೆ ಹೊಟ್ಟೆ ತೊಳಸಿದಂತಾಯಿತು. ತುಂಬಾ ಕಷ್ಟದಿಂದ ವಾಂತಿಯಾಗದಂತೆ ತಡೆದುಕೊಂಡೆ. ಒಂದು ಅಪನಂಬಿಕೆಯ ಎಳೆಯನ್ನು ಮಾತಲ್ಲಿಟ್ಟುಕೊಂಡೇ ಅಜ್ಜಿ ಮೇಜಿನ‌ ಮೇಲಿದ್ದ ಮುಸಂಬಿ ಕಡೆ ಕೈ ತೋರಿಸಿ “ಅದರ ಸಿಪ್ಪೆ ಬಿಡಿಸಿ ಕೊಡುತ್ತೀಯಾ?” ಕೇಳಿದರು. ನಾನು ಹೂಂಗುಟ್ಟಿ ಬಿಡಿಸಿ ಕೊಟ್ಟೆ. ಮಲಗಿದ್ದಲ್ಲಿಂದಲೇ ತಿಂದು ನನ್ನನ್ನು ರೂಮಿನಿಂದ ಹೊರಹೋಗುವಂತೆ ತಿಳಿಸಿದರು. ಆ ಕ್ಷಣಕ್ಕೆ ನನಗೆ ಎಂಥಾ ಕೃತಘ್ನರಪ್ಪ ಇವರು! ಅಂತ ಅನಿಸದೇ ಇರಲಿಲ್ಲ. + +ಅದಾದ ಮೇಲೆ ಪ್ರತಿದಿನ ಬೆಳಗ್ಗೆ, ಸಂಜೆ ಅವರ ರೂಮಿಗೆ ಹೋಗಿ ಕೂರುತ್ತಿದ್ದೆ. ಮೊದ ಮೊದಲು ನನ್ನ ಕಂಡೊಡನೆ ಮುಖ ತಿರುಗಿಸುತ್ತಿದ್ದ, ಮಾತಾಡಲು ಒಲ್ಲೆ ಅನ್ನುತ್ತಿದ್ದ ಅಜ್ಜಿ ಆಮೇಲಾಮೇಲೆ ಮೆತ್ತಗಾದರು ಅಥವಾ ಅವರೊಳಗಿನ ಅಭದ್ರತೆಯಿಂದ ಕಳಚಿಕೊಂಡರು. + +ಹದಿನಾರರ ನಾನು ಮತ್ತು ಎಂಭತ್ತರ ಆಸುಪಾಸಿನ ಅಜ್ಜಿ… ಚಂದ್ರಕಲಾ ಶೆಟ್ಟಿ ಎನ್ನುವ ಚಂದದ ಹೆಸರಿನ ಅವರು ನನಗೆ ಚಾಂದಜ್ಜಿ ಆಗಿ ಬಿಟ್ಟಿದ್ದರು. ಅವರು ಮಾತಾಡುತ್ತಿದ್ದರೆ ಎಳೆಗರುವಿನಂತೆ ನಾನು ಅವರಿಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆ. + +ನಮ್ಮ ಕರಾವಳಿಯ ಅಳಿಯ ಕಟ್ಟು ಸಂಪ್ರದಾಯದ ಮನೆಯಲ್ಲಿ ನಾಲ್ವರು ಅಣ್ಣಂದಿರ ತಂಗಿಯಾಗಿ ಜನಿಸಿದ್ದರು ಚಾಂದಜ್ಜಿ. ಹದಿನಾರಂಕದ ಆ ಮನೆಗೆ ಅವರೇ ಅನಭಿಷಕ್ತ ರಾಜಕುಮಾರಿ. ಆರೆಕರೆ ತೆಂಗಿನ ತೋಟ, ನೂರು ಮುಡಿ ಭತ್ತ ಬೆಳೆಯುತ್ತಿದ್ದ ಗದ್ದೆ ಇದ್ದ ಅಪ್ಪ ಇವರು ಹುಟ್ಟಿದ ನಂತರ ಮರದ ಮಿಲ್ಲನ್ನೂ ಪ್ರಾರಂಭಿಸಿ ಯಶಸ್ವಿಯಾಗಿದ್ದರು. ಹಾಗೆಂದೇ ಮನೆಯಲ್ಲಿ ಅವರಿಗೆ ವಿಶೇಷ ಪ್ರಾಶಸ್ತ್ಯವಿದ್ದುದು. + +ಮಗಳು ಇನ್ಯಾರನ್ನೋ ಮದುವೆಯಾಗಿ ಆಸ್ತಿ ಕೈ ತಪ್ಪಿ ಹೋಗದಿರಲಿ ಎಂದು ಸ್ವಂತ ಸೋದರಳಿಯನಿಗೇ ಕೊಟ್ಟು ಹದಿನಾರು ವರ್ಷಕ್ಕೇ ಮಗಳ ಮದುವೆ ನೆರವೇರಿಸಿದ್ದರು. “ಇಪ್ಪತ್ತೊಂದು ದಿನಗಳ ಸಂಭ್ರಮದ‌ ನನ್ನ ಮದುವೆ ಊರ ಹಬ್ಬದಂತಾಗಿತ್ತು” ಎನ್ನುವಾಗ ಅವರ ಕಣ್ಣಲ್ಲಿ ಅಪ್ಪನ‌ ಬಗೆಗಿನ ಪ್ರೀತಿಯ, ಹೆಮ್ಮೆಯ ನೂರು ಅಗ್ಗಿಷ್ಟಿಕೆಯ ಬೆಳಕು‌ ಚಿಮ್ಮುತ್ತಿತ್ತು. + + + +ಆದರೆ ಅಷ್ಟೂ ದಿನಗಳಲ್ಲಿ ಅವರ ಗಂಡನಾಗಲೀ, ಮಕ್ಕಳಾಗಲೀ ಅವರನ್ನು ಭೇಟಿಯಾಗಲು ಬಂದದ್ದಾಗಲೀ, ಪಕ್ಕ ಕೂತು ಸಮಾಧಾನದ ಮಾತನ್ನಾಗಲೀ ಆಡಿದ್ದನ್ನು ಒಮ್ಮೆಯೂ ನೋಡಿರಲಿಲ್ಲ. ಪ್ರತಿಬಾರಿ ಅವರ ಮಾತುಗಳಲ್ಲಿ, ಅನುಭವದ ನುಡಿಗಳಲ್ಲಿ ಮುಳುಗಿ ಹೋಗುವಾಗೆಲ್ಲಾ ‘ಗಂಡ ಮಕ್ಕಳೆಲ್ಲಿ’ ಎನ್ನುವ ನಾಲಗೆಯ ತುದಿಯವರೆಗೆ ಬಂದ ಮಾತನ್ನು ಮತ್ತೆ ಗಂಟಲೊಳಗೆ ತಳ್ಳಿ ಸುಮ್ಮನಾಗುತ್ತಿದ್ದೆ. ಯಾವುದೋ ಕಾಣದ ನೋವೊಂದು ಅವರ ಎದೆಯಲ್ಲಿ ಕೋಲಾಹಲ ಎಬ್ಬಿಸುತ್ತಿದ್ದಂತೆ, ಗಂಟಲೊಳಗೆ ಮುಳ್ಳೊಂದು ಸಿಕ್ಕಿಹಾಕಿಕೊಂಡಂತೆ ನನಗೆ ಅನ್ನಿಸುತ್ತಿತ್ತು. + +ನನ್ನೆಲ್ಲಾ ಪ್ರಶ್ನೆಗಳಿಗೆ ಉತ್ತರವಾಗಿ ಒಂದು ದಿನ ಅವರ ಪತಿ ಆಸ್ಪತ್ರೆಗೆ ಬಂದರು. ದಾದಿಯರೇ ಕರೆ ಮಾಡಿ ಅವರನ್ನು ಕರೆಸಿದ್ದರು ಎಂದು ಆಮೇಲೆ ನನಗೆ ತಿಳಿಯಿತು. ಕತ್ತರಿಸಿದ ಬಲಗಾಲಿಗೆ ಬದಲಿಯಾಗಿ ಕೃತಕ ಕಾಲನ್ನು ಜೋಡಿಸಲಾಗಿತ್ತು. ನಡೆಯಲು ಅಭ್ಯಾಸ ಮಾಡಿಸಲೆಂದು‌ ಗಂಡನನ್ನು ಬರಹೇಳಿದ್ದರು. ಆಜಾನುಬಾಹು ವ್ಯಕ್ತಿತ್ವದ ಅವರ ಮುಂದೆ ನನ್ನ ಚಾಂದಜ್ಜಿ ಪುಟ್ಟ ಗುಬ್ಬಿ ಮರಿಯಂತೆ ಕಾಣಿಸುತ್ತಿದ್ದರು. + +ಹಾಸಿಗೆಯಿಂದ ಎಬ್ಬಿಸಿ ನಡೆಯಲು ಅನುಕೂಲವಾಗುವಂತೆ ವಾಕರ್ ಕೊಟ್ಟ ದಾದಿಯರು ಅವರನ್ನು ಗಂಡನ‌ ಕೈಗೊಪ್ಪಿಸಿ ನಡೆಸಲು ಹೇಳಿದರು. ಕುಂಟುತ್ತಾ ನಾಲ್ಕು ಹೆಜ್ಜೆ ನಡೆದ ಅಜ್ಜಿ ಇನ್ನು ಮುಂದೆ ಸಾಧ್ಯಾನೇ ಇಲ್ಲ ಎಂಬಂತೆ ಅಲ್ಲೇ ಇದ್ದ ಕಬ್ಬಿಣದ ಕುರ್ಚಿಯಲ್ಲಿ ಕೂತರು. ಅವರನ್ನು ಅನುನಯಿಸಿ, ರಮಿಸಿ ನಡೆಸುತ್ತಾರೆ ಅಂದುಕೊಂಡರೆ ಪತಿ ಬಲವಂತದಿಂದ ಎಬ್ಬಿಸಿ ಒಂದು ಮಾತೂ ಆಡದೆ ನಡೆಸತೊಡಗಿದರು. ಮತ್ತೆ ನಾಲ್ಕು ಹೆಜ್ಜೆ ಮುಂದೆ ಹೋದ ಅವರು ಸುಸ್ತಾಗಿ ಕುಸಿದರು. ಎಲ್ಲವನ್ನೂ ಓರೆ ಕಣ್ಣಲ್ಲಿ ನೋಡುತ್ತಿದ್ದ ನಾನು ಕಂಡೂ ಕಾಣದಂತೆ ಅಮ್ಮನ ರೂಮೊಳಗೆ ಹೋಗಿ ಕೂತಿದ್ದೆ. + +ಇದಾಗಿ ಐದೇ ನಿಮಿಷದಲ್ಲಿ ಚೀತ್ಕಾರವೊಂದು ಕೇಳಿತ್ತು. ಓಡಿ ಹೋಗಿ ನೋಡಿದರೆ ಅಜ್ಜಿ ನೆಲದ ಮೇಲೆ ಬಿದ್ದಿದ್ದರು, ವಾಕರ್ ನಾಲ್ಕು‌ ಸುತ್ತು ಉರುಳಿದಂತೆ ಇನ್ನೆಲ್ಲೋ ಬಿದ್ದಿತ್ತು, ಸುತ್ತ ನಿಂತ ದಾದಿಯರು ಅವರ ಕೈ ಹಿಡಿದು ಎಬ್ಬಿಸಲು ಪ್ರಯತ್ನಿಸುತ್ತಿದ್ದರೆ ಅವರ ಗಂಡ ಎತ್ತಲೋ ನೋಡುತ್ತಾ ನಿಂತಿದ್ದರು. + +ಅಲ್ಲಿ ನೆರೆದಿದ್ದ ಎಲ್ಲರ ಕಣ್ಣಲ್ಲೂ ಅವರ ಬಗ್ಗೆ ಒಂದು ಸ್ಪಷ್ಟ ತಿರಸ್ಕಾರವಿತ್ತು, ‘ಇವರೇನು ಮನುಷ್ಯರಾ’ ಎನ್ನುವ ಭಾವನೆಯಿತ್ತು. ಆದರೆ ಅಜ್ಜಿ‌ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲದಂತೆ ಒಂದು ನಿರ್ಲಿಪ್ತತೆಯನ್ನು ಧರಿಸಿಕೊಂಡು ಕೂತಿದ್ದರು. + +ಆ ಸಂಜೆ ನನ್ನನ್ನು ಅವರೇ ಕೋಣೆಗೆ ಕರೆಸಿಕೊಂಡಿದ್ದರು. ಐದೋ ಆರೋ ನಿಮಿಷಗಳ ಪುಟ್ಟ ಮೌನವನ್ನು ಛೇದಿಸಿ “ಇಷ್ಟೆಲ್ಲಾ ಆಸ್ತಿ-ಪಾಸ್ತಿ ಇರೋ ನೀವು ಆ ಮನುಷ್ಯನಿಗೇಕೆ ಹೆದರಬೇಕು?” ಎಂದು ಕೇಳಿದ್ದೆ. “ಹಾಗೆಲ್ಲಾ ಹೇಳಬಾರದು ಮಗೂ” ಎಂದು ಅವರ ಕೃಶ ಬೆರಳನ್ನು ನನ್ನ ತುಟಿಯ ಮೇಲಿಟ್ಟು ಸುಮ್ಮನಾಗಿ ತುಸು ಹೊತ್ತು ಕಳೆದು ಅವರೇ “ಇದೆಲ್ಲಾ ನಾನೇ ಮಾಡಿದ ಕರ್ಮ ಮಗಳೇ. ಸತ್ತ ನಂತರ ದೊಡ್ಡ ಹೊರೆಯಾಗಿ ಹೆಗಲ ಮೇಲೇರುವುದಕ್ಕಿಂತ ಬದುಕಿರುವಾಗಲೇ ತೀರಲಿ ಬಿಡು” ಎಂದಿದ್ದರು. + +ಸೋದರತ್ತೆಯ ಮಗನನ್ನೇ ಮದುವೆಯಾಗಿದ್ದ ಅವರು ಒಮ್ಮೆಯೂ ಗಂಡನೆಂಬ ಮಮಕಾರದಿಂದಾಗಲೀ, ಗೌರವದಿಂದಾಗಲೀ ಅವರನ್ನೆಂದೂ ನೋಡಿದವರಲ್ಲ. ಬಡತನವೇ ಮೈವೆತ್ತಿದಂತಿದ್ದ ಅವರ ನಾದಿನಿಯರು ಹಸಿವು ಎಂದು ಬಂದಾಗಲೂ ಕೈ ಎತ್ತಿ ಒಂದು ಹೊತ್ತಿನ ಊಟ ಕೊಡಿಸಿದವರಲ್ಲ. ಅವರದೇ ಮಾತಿನಲ್ಲಿ ಹೇಳುವುದಾದರೆ ‘ದುಡ್ಡಿನ‌ ಮದ ಮತ್ತು ತನ್ನನ್ನು ಯಾರೂ ಪ್ರಶ್ನಿಸಲಾರರು ಎನ್ನುವ ಅಹಂಕಾರ’ ಅವರ ಕಣ್ಣು ಮುಚ್ಚಿಸಿತ್ತು. ತನಗೆ ಮಕ್ಕಳಾಗದು ಎಂದು ಗೊತ್ತಾದಾಗಾದರೂ ಠೇಂಕಾರ ಇಳಿದು ಮನುಷ್ಯರಾಗುತ್ತಾರೆ, ಕನಿಷ್ಠ ಪಕ್ಷ ಕೊನೆಗಾಲದಲ್ಲಿ ಆಸರೆಗಾಗುವ ನಿರೀಕ್ಷೆಯಿಂದಾದರೂ ಅವರು ಬದಲಾಗುತ್ತಾರೆ ಎಂದು ಬಯಸಿದ್ದರಂತೆ ಪತಿ. ಆದರೆ ಚಾಂದಜ್ಜಿ ಬದುಕಿನ ಯಾವ ಪಟ್ಟುಗಳಿಗೂ ಜಗ್ಗದೆ ಯಾವುದೋ ಜನ್ಮದ ಸೇಡಿನಂತೆ ಬದುಕಿದ್ದರು. ರಾಶಿ ರಾಶಿ ತೆಂಗಿನ‌ಕಾಯಿ ಹಾಳಾಗಿ ಹೋಗುತ್ತಿದ್ದರೂ ಪತಿ ಮತ್ತವರ ಕುಟುಂಬ ಬೇಡಿದರೂ ಒಂದೇ ಒಂದು ಕಾಯಿಯನ್ನು ಕೈ ಎತ್ತಿ ಕೊಟ್ಟವರಲ್ಲ. + +“ಇದೆಲ್ಲಾ ನಾನೇ ಮಾಡಿದ ಕರ್ಮ, ಕೊನೆಗಾಲದಲ್ಲಿ ಅಚಾನಕ್ಕಾಗಿ ವಿಷ ಸರ್ಪದಂತೆ ಕಾಲಿಗೆ ಸುತ್ತಿಕೊಂಡಿದೆ. ಕತ್ತರಿಸಿ ತೆಗೆದ ಕಾಲಾಗಲೀ, ಬೆರಳಾಗಲೀ ನನ್ನ ನೋಯಿಸುತ್ತಿಲ್ಲ. ಆದರೆ ನನ್ನ ಭೂತಕಾಲ ಬೆನ್ನ ಮೇಲೆ ಕುಳಿತು ಮೂಳೆಯ ಸಾರವನ್ನೆಲ್ಲಾ ಹಿಂಡಿ ತೆಗೆಯುತ್ತಿರುವಂತೆ ಅನ್ನಿಸುತ್ತಿದೆ” ಎಂದು ಕಣ್ಣೀರಾದರು. + +ಇಂಥದ್ದೊಂದು ಬದುಕಿನ, ಕಠೋರತೆಯ ಕಲ್ಪನೆಯೂ‌ ಇಲ್ಲದ ನಾನು ದಿಗ್ಭ್ರಾಂತಳಾಗಿದ್ದೆ. ಒಂದಿಡೀ ಬದುಕನ್ನು ವಿನಾಕರಣ ಅವುಡುಗಚ್ಚಿದಂತೆ, ಯಾವುದೋ ಹಠ ಸಾಧಿಸುವಂತೆ ಬದುಕಿದವರು ಆಸ್ಪತ್ರೆಯ ನೂರಾರು ಮಂದಿ‌ ಮಲಗಿ ಎದ್ದು ಹೋದ ನೀಲಿ ಬೆಡ್‌ಶೀಟ್‌ನ ಮೇಲೆ ಮುದುರಿಕೊಂಡಂತೆ ಮಲಗಿದ್ದರು. ಇನ್ನಷ್ಟೇ ಬದುಕು ನೋಡಬೇಕಿದ್ದ ನಾನು ಅದು ತಂದೊಡ್ಡುವ ಅಚ್ಚರಿಗೂ, ಕಾಠಿಣ್ಯತೆಗೂ ಸಂಬಂಧ ಹುಡುಕುತ್ತಾ ಕಳೆದು‌ ಹೋಗಿದ್ದೆ. ಒಬ್ಬ ಮನುಷ್ಯ ‘ಹೀಗೂ ಇರಲು ಸಾಧ್ಯವೇ?’ ಎಂಬುವುದಕ್ಕೆ ಉದಾಹರಣೆಯಂತಿದ್ದರು ಚಾಂದಜ್ಜಿ. ಇರುವ ಒಂದು ಕಾಲಿನ‌ ಮೂರು ಬೆರಳುಗಳ ಮೇಲೆ ಕುಳಿತ ನೊಣವನ್ನೂ‌ ಓಡಿಸಲಾಗದ ಅಸಹಾಯಕ ಚಾಂದಜ್ಜಿ ನನಗೆ ಬದುಕಿನ ಅಸಂಗತತೆಗೆ ಬೆಲೆ ತೆತ್ತ ಅಮಾಯಕರಂತೆ ಕಾಣುತ್ತಿದ್ದರು. ಆದರೆ ಅವರ ಒಣ ಅಹಂಕಾರದಿಂದಾಗಿ ಜೀವನ ನರಕ ಮಾಡಿಕೊಂಡ ಅವರ ಮನೆಯವರ ಇಷ್ಟೂ ವರ್ಷಗಳ ಬದುಕಿಗೆ ಕಂದಾಯ ಕಟ್ಟುವವರು ಯಾರು? ಅದೆಲ್ಲಾ ಮರೆತು ಈಗ ಅವರನ್ನು ಕ್ಷಮಿಸಿ ದೊಡ್ಡವರಾಗಬಹುದೆಲ್ಲಾ ಎಂದೆಲ್ಲಾ ಹೇಳುವುದು, ಯೋಚಿಸುವುದು ಸುಲಭ. ಆದರೆ ಕ್ಷಣ ಕ್ಷಣವೂ ಹಳೆಯ ಬದುಕು ಕಣ್ಣ ಮುಂದೆ ಬರುವಾಗ ಆ ಸಂಕಟವನ್ನು, ಕ್ರೋಧವನ್ನು ಮೀರಿ ಕ್ಷಮಿಸುವುದಾದರೂ ಹೇಗೆ? ಯೋಚಿಸಿದಂತೆಲ್ಲಾ ಅವರ ಅಂಗೈಯ ಮೇಲೆ ಇಟ್ಟ ನನ್ನ ಕೈ ಮತ್ತಷ್ಟು ಬಿಗಿಯಾಗುತ್ತಿತ್ತು, ಬೆವರುತ್ತಿತ್ತು. + +ನನ್ನೊಳಗೆ ಹೊಯ್ದಾಡುತ್ತಿರುವ ಭಾವಗಳು ಅವರಿಗೆ ಗೊತ್ತಾಗದಿರಲಿ ಎಂದು ಮೆಲ್ಲ ಕೈ ಬಿಡಿಸಿದೆ. ಮತ್ತೆ ನನ್ನ ಕೈಯನ್ನು ಅಂಗೈಯೊಳಗೆ ತೆಗೆದುಕೊಂಡ ಅವರು “ಇವೆಲ್ಲಾ ಮುಗಿದು ಮನೆಗೆ ಮರಳಿದ ನಂತರ ನಾನೇ ನನ್ನ ಕೈಯಾರೆ ನಾಟಿ ಕೋಳಿ ಸಾರು, ಕೋರಿ ರೊಟ್ಟಿ ಮಾಡಿಕೊಡುತ್ತೇನೆ. ಉಂಡು ಎರಡು ದಿನ ನನ್ನ ಮನೆಯಲ್ಲಿ ಇದ್ದು ಹೋಗಬೇಕು. ನನ್ನ ದೊಡ್ಡ ತೋಟ, ಬಾವಿ ನಿನಗೆ ತೋರಿಸಲಿಕ್ಕಿದೆ. ಬರುತ್ತೀಯಲ್ಲವೇ?” ಕೇಳಿದರು. ನಾನು ಹೂಂಗುಟ್ಟಿದೆ. “ನೋಡು ಎಂಜಲು ಕೈಯಲ್ಲಿ ಕಾಗೆಯನ್ನೂ ಓಡಿಸದ ಈ ಚಂದ್ರಕಲಾ ನಿನ್ನನ್ನು ತಾನಾಗೇ ಮನೆಗೆ ಕರೆಯುತ್ತಿದ್ದಾಳೆ, ತಪ್ಪಿಸುವಂತಿಲ್ಲ” ಎಂದು ನೋವಿನ‌, ಶುಷ್ಕ ನಗೆ ನಕ್ಕರು. ನಾನು ಮತ್ತೆ ತಲೆಯಾಡಿಸಿದೆ. + +ಆ ರಾತ್ರಿ ನನಗೆ ಮತ್ತೆ ಜಾಗರಣೆ. ಚಾಂದಜ್ಜಿ ಮತ್ತವರ ಬದುಕು ಪದೇ ಪದೇ ನನ್ನ ಕಣ್ಣ ಮುಂದೆ ಬಂದಂತಾಗುತ್ತಿತ್ತು. ಅಷ್ಟರಲ್ಲಾಗಲೇ ನಮ್ಮಿಬ್ಬರ ಮಧ್ಯೆ ಯಾವುದೋ ಒಂದು ಅನೂಹ್ಯ ಸಂಬಂಧ ಬೆಳೆದು ಬಿಟ್ಟಿತ್ತು. ಬದುಕಿರುವಷ್ಟೂ ಕಾಲ ಅವರೊಂದಿಗಿನ‌ ಈ ಬಂಧ ಉಳಿಸಿಕೊಳ್ಳಬೇಕು ಎಂದೆಲ್ಲಾ ಯೋಚಿಸುತ್ತಾ ಮಲಗಿದವಳಿಗೆ ನಿದ್ರೆ ಯಾವಾಗ ಹತ್ತಿತೋ ಗೊತ್ತಿಲ್ಲ. ಮರುದಿನ ಬೆಳಗ್ಗೆ ಎಚ್ಚರವಾಗುವಾಗ ಆಸ್ಪತ್ರೆಯ ಪೂರ್ತಿ ಸರಭರ ಸದ್ದು, ಅಜ್ಜಿಯ ಕೋಣೆಗೆ ಬೀಗ ಜಡಿಯಲಾಗಿತ್ತು. ನನ್ನ ಗಲಿಬಿಲಿ‌ ಅರ್ಥ ಮಾಡಿಕೊಂಡ ಅಮ್ಮ “ಅಜ್ಜಿ ನಿನ್ನೆ ರಾತ್ರಿಯೇ ತೀರಿಕೊಂಡು ಬಿಟ್ಟರು” ಎಂದರು. + + + +ಹಿಂದಿನ ದಿನ ಸಂಜೆ ಹಲಾಲ್ ಹರಾಮ್‌ನ ಯಾವ ಗೊಡವೆಯೂ ಇಲ್ಲದೆ ನನ್ನಿಂದ ಭಾಷೆ ತೆಗೆದುಕೊಂಡ, ಅಷ್ಟುದ್ದದ ಬದುಕಿನ ಕಥೆ ಹೇಳಿದ್ದ ಅಜ್ಜಿ ಬೆಳಗ್ಗೆಯಾಗುವಷ್ಟರಲ್ಲಿ ತೀರಿಕೊಂಡಿದ್ದರು. ತನ್ನ ಸಾವಿನೊಂದಿಗೇ ಸಿಟ್ಟು, ಸೆಡವು ಮತ್ತು ನನ್ನೆದುರು ಪದೇ ಪದೇ ಪ್ರತ್ಯಕ್ಷಗೊಳ್ಳುತ್ತಿದ್ದ ಅವರ ಅಖಂಡ ಅಮಾಯಕತೆಯನ್ನೂ ಕೊಂಡೊಯ್ದಿದ್ದರು. ನಾನು ಹನಿಗಣ್ಣಾದೆ, ಅಂಗೈ ಮತ್ತೆ ಬೆವರಿತು. ಕಿಟಕಿಯ ಹೊರಗೆ ದಿಟ್ಟಿಸಿದೆ, ಹೊರಗಿನ ಖಾಲಿತನ ರಪ್ಪನೆ ಮುಖಕ್ಕೆ ರಾಚಿದಂತಾಯಿತು‌. ಕಿಟಕಿ ಬಾಗಿಲು ಮುಚ್ಚಿ ನನ್ನೊಳಗಿನ ಖಾಲಿತನವನ್ನು ಬರಿದುಗೊಳಿಸತೊಡಗಿದೆ. + +ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. \ No newline at end of file diff --git a/Kenda Sampige/article_234.txt b/Kenda Sampige/article_234.txt new file mode 100644 index 0000000000000000000000000000000000000000..1197e3015ab9a852d374c099ebde2d4e97f38a02 --- /dev/null +++ b/Kenda Sampige/article_234.txt @@ -0,0 +1,41 @@ +ನಾಕು ಅಕ್ಷರಗಳನ್ನು ಕೂಡಿಸಿ ಓದಲು ಕಲಿತ ವಯಸ್ಸಿನಿಂದಲೂ ಅದೇನೋ ಕಾಣೆ ಕಥೆಗಳ ಓದು ನನಗೆ ಖುಷಿ ಕೊಟ್ಟಷ್ಟು ಕವಿತೆಗಳು ಕೊಡುತ್ತಿರಲಿಲ್ಲ. ಹಳಗನ್ನಡ ಕಾವ್ಯಗಳಲ್ಲೂ ಕಂದ, ಪ್ರಾಸ, ಅಲಂಕಾರಗಳ ನಡುವೆಯೂ ಕಥೆಯನ್ನೇ ಹುಡುಕುತ್ತಿದ್ದೆ. ಹೊಸಗನ್ನಡ ಕವಿತೆಗಳು ಪ್ರೀತಿ ಪ್ರೇಮದಂತಾ ಸೂಕ್ಷ್ಮ ಭಾವನೆಗಳು ಎದೆಯಲ್ಲಿ ನವಿಲುಗರಿಯ ನವಿರು ಮೂಡಿಸುವ ವಯಸ್ಸಿನಲ್ಲಿ ನಿಧಾನಕ್ಕೆ ಎದೆಗೆ ಇಳಿಯತೊಡಗಿದ್ದವು. ಸಮ ವಯಸ್ಸಿನ ಕವಿಗಳಲ್ಲಿ ಹೀಗೆ ಇಷ್ಟವಾದ ಕವಿತೆಗಳಲ್ಲಿ ಚಲಂ ಹಾಡ್ಲಹಳ್ಳಿ ಅವರ ಕವಿತೆಗಳೂ ಇದ್ದವು. ಏನನ್ನಾದರೂ ಬರೆಯಲು ಕೂರುವ ಮೊದಲು ನನ್ನ ಅತ್ಯಂತ ಮೆಚ್ಚಿನ ಕಥೆಗಾರರ ಒಂದು ಕಥೆಯನ್ನೋ, ಕಾದಂಬರಿಯ ಕೆಲವು ಸಾಲುಗಳನ್ನೋ ಇಲ್ಲವೇ ಒಂದೆರಡು ಚಂದದ ಕವಿತೆಗಳನ್ನೋ ಓದುವುದು ನನ್ನ ರೂಢಿ. ಹೀಗೆ ಮೊನ್ನೆ ನಾನು ಓದಲು ಕೈಗಿತ್ತಿಕೊಂಡ ಪುಸ್ತಕಗಳಲ್ಲಿ ಚಲಂ ಇತ್ತೀಚೆಗೆ ಹೊರತಂದ ಕವನ ಸಂಕಲನವೂ ಇತ್ತು. + +ಮಳೆಯ ಸ್ಪರ್ಶಕ್ಕೆ ತಾನಾಗೇ ಹರಡುವ ಮಣ್ಣ ಘಮಲಿನಂತಹಾ ಈ ಕವಿತೆಗಳಿಗೆ ಚಲಂ ಅದ್ಯಾಕೆ “ಈ ಮಳೆಗಾಲ ನಮ್ಮದಲ್ಲ” ಅಂತ ಹೆಸರಿಟ್ಟರೋ ಕಾಣೆ. ಬರೆದು ವರ್ಷವಾದರೂ ಇವರ ಪದ್ಯಗಳು ಈ ಕ್ಷಣಕ್ಕೂ ಸಲ್ಲುವಂತವೇ. ಈ ಸಾಲುಗಳ ಕಸುವು ನೋಡಿ! + +(ದಯಾ ಗಂಗನಘಟ್ಟ) + +“ಎಲ್ಲರ ಕೈಯ್ಯಲ್ಲೂಖಡ್ಗ, ಬಡಿಗೆ, ಭರ್ಜಿ, ಬಂದೂಕ ತ್ರಿಶೂಲಗಳಿವೆಹೀಗೆ ಎಂತೆಂತವೋ ಆಯುಧಗಳನಿಡಿದುಕಟ್ಟುವ ಮಾತನಾಡುತ್ತೇವೆಆದರೆಒಡೆಯುವ ಕೆಲಸಗಳಾಗುತ್ತಿವೆಆ ಎಲ್ಲಾ ಕೈಗಳಿಗೂನೇಗಿಲು, ಪುಸ್ತಕ, ಚರಕ, ತಕ್ಕಡಿ,ಮಗ್ಗ, ಲೇಖನಿಗಳ ಕೊಡಬೇಕಾಗಿದೆ…..” + +ಇವರ ಕವನಗಳಲ್ಲಿ ಒಂದು ಕಿಚ್ಚಿದೆ ಅದು ದಹಿಸುವ ಕಿಚ್ಚಲ್ಲ, ತುಂತುರು ಮಳೆಯ ನಡುವೆ ಬೀಸುವ ಶೀತಗಾಳಿಯ ಜೊತೆ ಕಂಡೂ ಕಾಣದಂತೆ ತಾಕುವ ಕಿಚ್ಚದು. ಎದೆಯೊಳಗೆ ಚುಳ್ ಎನ್ನುವಂತೆ ಮಾಡುವ ಈ ಸಂಕಲನದ ಕವಿತೆಗಳು ಅದೇ ಕ್ಷಣದಲ್ಲಿ ಮೆದುಳಲ್ಲೂ ಮಿಳ್ ಎನ್ನುತ್ತವೆ. + +“ಈ ಮನೆ, ಈ ರಾತ್ರಿ, ಈ ಒಳಗುಯಾಕಿಷ್ಟು ಖಾಲಿ ಖಾಲಿಯಾಗಿವೆ..?ಎಲ್ಲಾ ಮಲಗಿರುವಾಗನಿಶ್ಯಬ್ದವಾಗಿ ಎಚ್ಚರವಿರುವ ನನ್ನನ್ನುಯಾಕೆ ಮಲಗಿಲ್ಲ ಎಂದುಇಲ್ಲಿ ಯಾರೂ ಕೇಳುವುದಿಲ್ಲಬಹುಶಃ + +ನಿನ್ನೂರಲ್ಲೂ ನಿಶ್ಯಬ್ದದ ಎಚ್ಚರವನ್ನುಯಾರೂ ಕೇಳದಿರಬಹುದು…” + +ಈ ಸಾಲುಗಳನ್ನ ಓದಿದಾಗ ಮಿಡಿವ ಯಾವ ಹೃದಯವಾದರೂ ಮೆತ್ತನೆಯ ಹತ್ತಿಯನ್ನು ಕಚ್ಚಿ ಹಿಡಿವ ‘ವೆಲ್ಕ್ರೋ’ ದ ಚೂಪು ಕೊಕ್ಕೆಗಳಂತೆ ಭಾವವನ್ನು ಹಿಡಿದಿಟ್ಟುಕೊಳ್ಳುತ್ತದೆ. + + + +ಮೇಲ್ನೋಟಕ್ಕೆ ಕೇವಲ‌ ಪ್ರೇಮ ಕವನಗಳೇನೋ ಎನಿಸುವ ಕೆಲ ಕವನಗಳು ಆಳದಲ್ಲಿ ತೀವ್ರ ಹತಾಷೆಯನ್ನೂ ಬಹುಶಃ ಅಸಹಾಯಕತೆಯನ್ನು ಧ್ವನಿಸುತ್ತವೆ ಎಂದು ನನಗೆ ಅನಿಸಿದ್ದಿದೆ. ಹೆಚ್ಚೆನಿಸಿದರೆ ನೀವೊಮ್ಮೆ ಓದಿಬಿಡಿ. + +“ನಾನು ನನ್ನೊಳಗೇ..ನೀನು ನಿನ್ನೊಳಗೇ..ಏನೂ ಸೋಕದಂತೆಇದೊಂದು ಮಳೆಗಾಲಕ್ಕೆಸುಮ್ಮನಿದ್ದುಬಿಡೋಣ ಗೆಳತಿಈ ಬಾರಿಮಳೆಗಾಲದಲ್ಲಿ ಬದುಕುವುದು ಬೇಡ “ + +Me and life ಕಾನ್ಸೆಪ್ಟಿಗೆ ಒತ್ತುಕೊಡುವ ಕೆಲ ಕವನಗಳಲ್ಲಿ“ಹೀಗೆ ಬಿಡುಗಡೆಯಿಂದಬಿಡುಬೀಸಾಗಿ ಓಡಾಡಿದರೆಯಾರೂಬೆಲೆ ಕೊಡಲ್ಲವೆಂದುಸರಪಳಿ ಖರೀದಿಸಿ ಬಿಗಿದುಕೊಂಡೆ…”ಎನ್ನುತ್ತಾ ನಮ್ಮನ್ನೂ ಅದೇ ಸರಪಳಿಯೊಳಕ್ಕೆ ಎಳೆದುಕೊಳ್ಳುತ್ತಾರೆ. + +ಲೋಕದ ಸಮಸ್ಯೆಗಳೆಲ್ಲಾ ನನ್ನ ಬೆನ್ನಿಗೇ ಏರಿಬಿಟ್ಟಿವೆ ಎಂದುಕೊಳ್ಳುತ್ತಾ ಸಾಧ್ಯವಾದಷ್ಟೂ ನೋವಿನೊಳಗೇ ಸುಖಿಸ ಬಯಸುವ ನನ್ನಂತಾ ಹಲವರಿಗೆ ನೆಮ್ಮದಿಯ ಒರಗು ತೋಳಾಗುತ್ತವೆ ಕೆಳಗಿನ ಸಾಲುಗಳು. + +“ಯಾರ ಸುಖವನ್ನಾದರೂಯಾರಾದರೂ ಅನುಭವಿಸುವಂತಿದ್ದರೆಯಾರ ದುಃಖಕ್ಕಾದರೂಯಾರಾದರೂ ಸಾಂತ್ವನ ಕೊಡುತ್ತಿದ್ದರೇನೋ….” + +ಕವನಗಳು ಹೀಗೇ ಇರಬೇಕೆಂಬ ಯಾವ ಸೈಂಟಿಫಿಕ್ ಫಾರ್ಮುಲಾ ವೂ ಇಲ್ಲ.Coleridge ಹೇಳುವಂತೆ “ Poetry is “the best words in the best order.” ಅಷ್ಟೇ. ಅಲ್ಲಲ್ಲಿ ontological ಅನ್ನಿಸುವ ಇವರ ಕವನಗಳಿಗೆ ಇಂತದೇ ಎಂಬ ಶೀರ್ಷಿಕೆಯೇ ಇಲ್ಲ! ನೀವೇನಾದರೂ rhyme, meter ಇತ್ಯಾದಿ Metrical composition ಗಳನ್ನು ಹುಡುಕಿ Tpcastt ವಿಮರ್ಶೆ ಮಾಡಹೊರಟರೆ + +ಅವ್ಯಾವೂ ನಿಮಗೆ ಸಿಕ್ಕರೆ ಕೇಳಿ! ಆದರೆ ಕೆಳಗಿನಂತಹಾ ಸಾಲುಗಳನ್ನು ಓದಿದಾಗ ಇದೇ ಪ್ರಕಾರಕ್ಕೆ ಸೇರಿದ rhythm, scansion ಗಳು ಭರಪೂರ ಸಿಗುತ್ತವೆ. + +“ಕಳ್ಳ ಮನಸಿನಹುಳ್ಳಹುಳ್ಳಗಿನ ಭಾವಗಳಹೊಂಚಿ ಹಿಡಿದವಳೇ….ಮಡಿಲಿಗೆ ಹಾಕಿ, ತಲೆ ನೇವರಿಸಿಹಣೆಗೊಂದು ಸಣ್ಣ ಮುತ್ತನಿಟ್ಟುಹುಣ್ಣಿಮೆಯ ಹೊದಿಸಿಅಮವಾಸ್ಯೆಗೆ ಬೆರಳದ್ದಿದೃಷ್ಟಿಬೊಟ್ಟಿಡುತ್ತೀಯಾ….”. + +ಚಲಂ ಕವಿತೆಗಳ ಸಂಗಾತ ಕಡಲ ಮೇಲಿನ ಹಾದಿ. ಅನುಭಾವವನ್ನು ಹುಟ್ಟುಹಾಕುವ ನೀರ ಮೇಲಿನ ಪಯಣ. ಒಮ್ಮೆ ಇದು ಆರಂಭವಾದರೆ ದಿಕ್ಸೂಚಿಯಿಂದ ದಿಕ್ಕನ್ನು ತಿಳಿಯಬೇಕೆ ಹೊರತು ಕಣ್ಣಳತೆಗೆ ನಮಗೆ ಯಾವ ಮಾಹಿತಿಯೂ ದಕ್ಕುವುದಿಲ್ಲ. ಸ್ವಭಾವತಃ ವಾಚಾಳಿಯಲ್ಲದ ಚಲಂ ಅಷ್ಟೇನೂ ಔಟ್ಗೋಯಿಂಗ್ ಅಲ್ಲದ ಅಂತರ್ಮುಖಿ‌. ಅಂತೆಯೇ ಅವರ ಕವಿತೆಗಳೂ.ಕಡಲು ದಡಕ್ಕನೆ ತಂದು ಅಪ್ಪಳಿಸಿದ ಕಪ್ಪೆಚಿಪ್ಪುಗಳಲ್ಲ ಇಲ್ಲಿನ ಕವಿತೆಗಳು. ತಣ್ಣಗೆ ಹರಿವ ನದಿಯೊಳಗೆ ನುರಿದು ಅವಾಗೇ ನುಣ್ಣಗಾದ ನಯಸ್ಸು ಕಲ್ಲಿನಂತವು. + + + +“ನನಗೆ ಪ್ರಾಮಾಣಿಕತೆಯ ಖಾಯಿಲೆಯಿದೆ. ಕತೆ, ಕವನ ಹಾಗು ಸಾಹಿತ್ಯದ ಯಾವ ಪ್ರಕಾರದಲ್ಲಿ ಕೃಷಿ ಮಾಡುವವನು ತುಂಬಾ ಪ್ರಾಮಾಣಿಕನಾಗಿರಬೇಕು ಎಂದು ತೀವ್ರವಾಗಿ ನಂಬಿರುವ ತೀವ್ರವಾದಿ ನಾನು” ಎಂದು ಸ್ವತಃ ಹೇಳಿಕೊಳ್ಳುವ ಇವರು ಅಕ್ಷರವೆಂಬ ವಜ್ರಗಲ್ಲುಗಳನ್ನು ಅನುಭವದಲ್ಲಿ ಕಡೆದು ಹೊಳೆಯುವ ಹರಳಾಗಿಸುವ ಕುಶಲ ಕವಿ. + +ದಯಾ ಗಂಗನಘಟ್ಟ ( ದಾಕ್ಷಾಯಿಣಿ ) ಬೆಂಗಳೂರು ನಿವಾಸಿ. ಪ್ರಸ್ತುತ ‘ಜೇನುಗಿರಿ ‘ ಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ \ No newline at end of file diff --git a/Kenda Sampige/article_235.txt b/Kenda Sampige/article_235.txt new file mode 100644 index 0000000000000000000000000000000000000000..cb8088b5fdb8b97bfa7f9f3872128fa424510644 --- /dev/null +++ b/Kenda Sampige/article_235.txt @@ -0,0 +1,125 @@ +ನಗರವನ್ನು ಬಿಟ್ಟು ಹಳ್ಳಿಗೆ ಮರಳಿ ಹೋಗಬಯಸುವವರಿಗೆ ಚೀನಾದಲ್ಲಿ ವಿಶೇಷ ಯೋಜನೆಗಳಿವೆ. ರಿಯಾಯತಿ ದರದಲ್ಲಿ ಸರಕಾರಿ ಜಮೀನು ಸಿಗುತ್ತದೆ. ಹೆಚ್ಚುವರಿ ಸವಲತ್ತು ಒದಗಿಸಲು ಅಧಿಕಾರಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. + +ಕಠ್ಮಾಂಡುವಿನಲ್ಲಿ ಸಹಪಾಠಿಗಳ ಜೊತೆಗಿದ್ದೆ. ಹರಟೆಯ ಮಧ್ಯೆ ಚೀನೀ ಹುಡುಗಿ ಹೆ ರಾನ್ ಗಾವೊ ಒಂದು ಸೂಚನೆ ಕೊಟ್ಟಳು:“ನಾನು ಸದ್ಯದಲ್ಲಿ ಚೀನಾದ ಹೈನಾನ್ ದ್ವೀಪದಲ್ಲಿ ಒಂದು ಪ್ರಾಜೆಕ್ಟ್ ಪ್ರಾರಂಭಿಸುತ್ತಿದ್ದೇನೆ. ಯಾರಾದರೂ ಸಹಾಯ ಮಾಡೋದಿದ್ರೆ ಮಾಡಿ” ಅಂದಳು. ಹೈನಾನ್ ಅಂದಾಕ್ಷಣ ಮನದಲ್ಲಿ ಮಿಂಚು. ಚೀನಾದ ಆ ದ್ವೀಪಕ್ಕೆ ಹೋಗುವುದು ಎಷ್ಟೊಂದು ವರ್ಷಗಳ ಕನಸು! + +ಇನ್ನಾರಾದಾರೂ ‘ಹೂಂ’ ಅನ್ನೋ ಮೊದಲು ಅವಕಾಶ ಗಟ್ಟಿ ಮಾಡಿಕೋ ಎಂದಿತು ಒಳಮನಸ್ಸು.“ನಾನಿದ್ದೇನಲ್ಲಾ” ಎಂದುತ್ತರಿಸಿದೆ. + +ಸೆಕೆಂಡುಗಳೊಳಗೆ ತನಗೊಬ್ಬ ಸಹಾಯಕ ಸಿಗುವುದು ಹೆ ರಾನ್ ಗೂ ಕಲ್ಪನೆ ಇರಲಿಲ್ಲ.“ನಿಜವಾಗ್ಲೂ? ಎಷ್ಟು ದಿನ?”“ಒಂದು ಇಪ್ಪತ್ತು ದಿವಸ!”ಅಷ್ಟೇ ಮಾತನಾಡಿದ್ದು. ಟೀ ಮುಗಿಯುವದರೊಳಗೆ ಚೀನಾ ಪ್ರವಾಸದ ಟಿಕೆಟ್ ನನ್ನ ಮಿಂಚಂಚೆಗೆ ಬಂದಿತ್ತು. ಈ ಬಾರಿ ಅತ್ಯಾಶ್ಚರ್ಯ ಪಡುವ ಸರದಿ ನನ್ನದಾಗಿತ್ತು! ಹೆ ರಾನಳದು ಮಿಂಚಿನ ವೇಗ! + +ಹೀಗೆ ಬದುಕಿನಲ್ಲೊಂದು ಮಹತ್ತಾದ ಅವಕಾಶದ ಬಾಗಿಲು ತೆರೆದದ್ದು ನಾವು ನೇಪಾಳದ ಕಠ್ಮಾಂಡುವಿನಲ್ಲಿದ್ದಾಗ. ಜರ್ಮನ್ ವಿಶ್ವವಿದ್ಯಾಲಯದ ಸಹಪಾಠಿಗಳೆಲ್ಲ ಅಲ್ಲಿ ಸೇರಿದ್ದೆವು. ಒಂದೆರಡಲ್ಲ, ಇಪ್ಪತ್ತೆರಡು ದೇಶದ ಸ್ನೇಹಿತರು ತುಂಬಾ ವರ್ಷದ ನಂತರ ಒಗ್ಗೂಡಿದರೆ ಹೇಗಿರುತ್ತದೆ ಗೊತ್ತಲ್ಲಾ? ಅದೇ ಹಳೇ ಸುದ್ದಿಗಳು, ಹಳೇ ಜೋಕುಗಳ ಮರುಮೆಲುಕು. ಮಾತಿನ ಮಧ್ಯೆ ಅದೇನೋ ಹೇಳ್ತಾರಲ್ಲಾ, ‘ಸುವರ್ಣಾವಕಾಶ ಬಿದ್ದು ಸಿಕ್ಕಿದ್ದು’ ಅಂತ, ಅದುವೇ ಘಟಿಸಿತ್ತು! + +ಸುತ್ತ ಇದ್ದ ಸ್ನೇಹಿತರು ಇನ್ನೂ ‘ವಿದೇಶ ಪ್ರವಾಸ ಇಷ್ಟು ಬೇಗ ನಿರ್ಣಯ ಮಾಡೋಕಾಗತ್ತಾ’ ಅಂತ ಯೋಚಿಸ್ತಾ ಇದ್ರು. ‘ನನಗೆ ಒಂದು ಲಿಪ್ ಸ್ಟಿಕ್ ಖರೀದಿಸಲೂ ಇನ್ನೂ ಹೆಚ್ಚು ಸಮಯ ಬೇಕು’ ಅಂತ ಇನ್ನೊಬ್ಬಳು ಚೀನಾದ ಸ್ನೇಹಿತೆ ಹೈಯಾನ್ ಉದ್ಗರಿಸಿದಳು. + +(ಬಾಲಚಂದ್ರ ಸಾಯಿಮನೆ) + +ಅಷ್ಟು ಬೇಗ ಚೀನಾ ಪ್ರವಾಸಕ್ಕೆ ನಿರ್ಣಯಿಸಲು ಕಾರಣ ಏನು ಗೊತ್ತೇ? ನನ್ನ ಹಿಂದಿನ ಚೀನಾ ಪ್ರವಾಸದಲ್ಲಿ ಹೈನಾನ್ ದ್ವೀಪ ನೋಡಲೇಬೇಕೆಂಬ ಕನಸು ಹುಟ್ಟಿತ್ತು. ಅದು ಹಾಗೆಯೇ ಮನದ ಮೂಲೆಯಲ್ಲಿ ಉಳಿದಿತ್ತು. + +ಚೀನಾದಲ್ಲಿ ಬಿಂಗ್ ಲಾಂಗ್ ಹುಡುಕುತ್ತಾ ಕ್ಷಿಯಾಂಗ್ಟನ್ ತಲುಪಿದ್ದೆ. ಆದರೆ ಅದು ಬಿಂಗ್‌ಲಾಂಗ್ ಮಾರಾಟದ ಪ್ರದೇಶ ಮಾತ್ರವಾಗಿತ್ತು. ಯಾರನ್ನು ಕೇಳಿದರೂ ‘ಅಡಿಕೆ ಬೆಳೆಯುವ ಪ್ರದೇಶ ಹೈನಾನ್; ಹೆಚ್ಚಿನ ಮಾಹಿತಿಗೆ ನೀವು ಅಲ್ಲಿಗೇ ಹೋಗಬೇಕು’ ಎನ್ನುತ್ತಿದ್ದರು. ಹಾಗಾಗಿ ಚೀನಾದಲ್ಲಿ ಅಡಿಕೆಯ ಮಾಹಿತಿ ಸಂಗ್ರಹದ ಸಾಹಸ ಅರ್ಧದಲ್ಲಿಯೇ ನಿಂತಿತ್ತು. ಪರಿಸ್ಥಿತಿ ಹೀಗಿದ್ದಾಗ ಅಚಾನಕ್ಕಾಗಿ ಸಿಕ್ಕ ಅವಕಾಶವನ್ನು ತಪ್ಪಿಸಿಕೊಳ್ಳುವುದಿದೆಯೇ? + +ನನ್ನ ಈ ಗೆಳತಿ, ಹೈನಾನ್ನಲ್ಲಿ ಎಲ್ಲಿಗೆ ಹೋಗುತ್ತಿದ್ದಾಳೆ, ನಾನು ಮಾಡಬೇಕಾದ ಕೆಲಸವೇನು ಇತ್ಯಾದಿ ವಿಚಾರಗಳನ್ನು ಏನೂ ಹೇಳಿರಲಿಲ್ಲ. ‘ಏನು ಕೆಲಸ?’ ಅಂತ ಸ್ವಲ್ಪ ಕೆದಕಿದ್ದೆ. ‘ಅಲ್ಲೊಬ್ಬ ಹೋಮ್ ರಿಟರ್ನ್ಡ್ ಇದ್ದಾನೆ. ಅವನಿಗೆ ಸಹಾಯ ಮಾಡಬೇಕು’ ಎಂದು ಅಷ್ಟೇ ಹೇಳಿದ್ದಳು. ‘ಹೋಮ್ ರಿಟರ್ನ್ಡ್’ ಅನ್ನೋ ಶಬ್ದ ನನಗಂತೂ ಹೊಸದು. ಅದೇ ಮೊದಲ ಸಲ ಕೇಳಿದ್ದೆ. ಹಾಗಂದರೇನು ಅಂತಲೂ ಗೊತ್ತಿರಲಿಲ್ಲ. ಬಹುಶಃ ಅದು ಒಂದು ಹುದ್ದೆ ಇರಬೇಕು ಅಂದುಕೊಂಡಿದ್ದೆ. + +ವಾರದಲ್ಲಿ ವೀಸಾ ಸಿಕ್ಕಿತ್ತು .ಮತ್ತೊಂದು ತಿಂಗಳಿನಲ್ಲಿ ನಾನು ಚೀನಾದ ಹೈನಾನ್ ದ್ವೀಪದ ರಾಜಧಾನಿ ಹೈಕೋವುನಲ್ಲಿ ವಿಮಾನದಿಂದಿಳಿದಿದ್ದೆ.ಸ್ವಾಗತಕ್ಕೆ ಹೇ ರಾನ್ ಬಂದಿದ್ದಳು. ಪಕ್ಕದಲ್ಲಿ ಇನ್ನೊಬ್ಬ ಯುವಕನೂ ಇದ್ದ. + +“ಇವನ ಹೆಸರು ಹು ಶಿಜೆ. ಫನ್ ಕ್ಷಿಯಾಂಗ್, ಅಂದರೆ ಹೋಮ್ ರಿಟರ್ನ್ಡ್, ನಿನ್ನ ಹಾಗೆ” ಅಂತ ಸೇರಿಸಿದಳು.ಮುಂದಿನ ಇಪ್ಪತ್ತು ದಿನ ನಾನು ಹೂ ಶಿಜೆಯ ಊರಿನಲ್ಲೇ ಇದ್ದೆ. + +ಊರು ಬದಲಿಸಿದ ಹೂ ಶಿ ಜೆ + +ಇಪ್ಪತ್ತು ವರ್ಷದ ಹಿಂದೆ ಒಂದು ದಿನ, ಇಡೀ ಊರು ಸಂಭ್ರಮದಿಂದ ಒಂದಾಗಿತ್ತು. ಅದೊಂದು ಬೀಳ್ಕೊಡುಗೆ ಸಮಾರಂಭ. ಊರಿನ ಎಲ್ಲ ಜನ ಸೇರಿ ಹಣ ಸಂಗ್ರಹಿಸಿ ಕೊಟ್ಟಿದ್ದರು.“ಅಂದು ಮದುವೆ ಸಂಭ್ರಮದ ಹಾಗೆ ಇತ್ತು”, ನೆನೆಯುತ್ತಾರೆ, ಊರಿನ ಹಿರಿಯ ಹೂ ಜೊ. ಆದರೆ ಬೀಳ್ಕೊಡುಗೆ ಮಾಡಿದ್ದು ಹುಡುಗಿಗೆ ಅಲ್ಲ, ಹುಡುಗನಿಗೆ. + +ಆತ, ಹೂ ಶಿ ಜೆ, ಶಾಂಘೈ ಗೆ ಹೊರಟಿದ್ದ. ಕಂಪ್ಯೂಟರ್ ವಿಜ್ಞಾನದಲ್ಲಿ ಶಿಕ್ಷಣ ಪಡೆಯಲು ಮೊದಲ ಬಾರಿ ಊರಿನ ಯುವಕ ಹೊರಟು ನಿಂತಾಗ ಊರಿಗೆ ಊರೇ ಸಂಭ್ರಮಿಸಿತ್ತು. + +ಚೀನಾ ಈಸ್ಟರ್ನ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ವಿಜ್ಞಾನದಲ್ಲಿ ಶಿಕ್ಷಣ, ಪದವಿ ಪಡೆದ ನಂತರ ಆ ಯುವಕ ಶಾಂಘೈನಲ್ಲಿ ಉದ್ಯೋಗ ಗಳಿಸಿದ. ಆದರೆ, ಊರನ್ನ, ಊರ ಜನರನ್ನ ಮರೆಯಲಿಲ್ಲ. “ಆವತ್ತೇ ನಾನು ಮಾತು ಕೊಟ್ಟಿದ್ದೆ, ಊರು ಮರೆಯುವುದಿಲ್ಲ”, ಹೂ ಶಿಜೆ ನೆನಪಿಸಿಕೊಳ್ಳುತ್ತಾನೆ. + +ಮರೆಯಲಿಲ್ಲ ಕೂಡ. 2003ರಲ್ಲಿ ಶಾಂಘೈ ನಲ್ಲಿ ಒಂದು ವಿದ್ಯಾರ್ಥಿ ಒಕ್ಕೂಟ ಮಾಡಿದರು. ‘ ಹಳ್ಳಿಗೆ ಹೋಗೋಣ ಬನ್ನಿ’ ಎಂದು. ಒಂದಷ್ಟು ಸಹಪಾಠಿಗಳೊಂದಿಗೆ ಪ್ರತಿ ವರ್ಷ ಊರಿಗೆ ಬಂದು, ಕೆಲಸ ಮಾಡಿ ಹೋಗುತ್ತಿದ್ದರು. ಕೆಲಸ ಅಂದರೆ ಊರಿನ ಬೀದಿ ಸ್ವಚ್ಛಗೊಳಿಸುವುದು, ವೃದ್ಧರಿಗೆ ಆರೋಗ್ಯ ಶಿಬಿರ, ಹೀಗೆ ಸಣ್ಣ ಪುಟ್ಟ ಕೆಲಸ ಎಂದು ನೆನಪಿಸಿಕೊಳ್ಳುತ್ತಾರೆ ಹೂ. ಮೊದಮೊದಲು, ಊರಿನಲ್ಲಿ ಎಲ್ಲರನ್ನೂ ಕರೆದು ಒಂದು ಕಾರ್ಯಕ್ರಮ ಮಾಡುವುದೇ ದೊಡ್ಡ ಕೆಲಸವಾಗಿತ್ತು. ಊರಿನ ಎಲ್ಲ ಕುಟುಂಬದ ಹೆಸರುಗಳೂ ಹೂ ಎಂದೇ, – ಶಿರಸಿಯ ಹೆಗಡೆ, ಭಟ್ಟರ ಹಾಗೆ. ಎಲ್ಲರನ್ನೂ ಎಲ್ಲ ಕಾಲಕ್ರಮದಲ್ಲಿ ಕೂಡಿಸಿ, ಊರಿನ ಸಮಸ್ಯೆಗಳಿಗೆ ಪರಿಹಾರ ಹುಡುಕುವತ್ತ ಸ್ವಯಂಸೇವೆ ವಿಸ್ತರಿಸಿತು. ಸರಕಾರಿ ಅಧಿಕಾರಿಗಳನ್ನು ಭೇಟಿಮಾಡಿ ಹೊಸ ಯೋಜನೆಗಳನ್ನು ಮಂಜೂರಿ ಮಾಡಿಸಿ ಕೊಡಲು ಆರಂಭಿಸಿದರು. ನಗರದ ಒಂದಷ್ಟು ಹಾಡುಗಾರರು, ಸಿನಿಮಾದವರು ಮೊದಲಾದವರನ್ನು ಕರೆಸಿ ಕಾರ್ಯಕ್ರಮ ಮಾಡಲು ಆರಂಭವಾಯಿತು.ಇವೆಲ್ಲವುಗಳ ಮುಖ್ಯ ಉದ್ದೇಶ ಊರು ಬಿಟ್ಟು ನಗರ ಸೇರಿದ ಎಲ್ಲರನ್ನೂ ಒಂದೆಡೆ ಸೇರಿಸುವುದೇ ಆಗಿತ್ತು. + +ಹೀಗೆ ಒಂದು ಕಡೆ ಊರನ್ನು ಸದೃಢಗೊಳಿಸುವ, ಹುಟ್ಟೂರಿನ ಅಭಿಮಾನ ಹೆಚ್ಚಿಸುವ ಏಕವ್ಯಕ್ತಿ ಯತ್ನ ಮುಂದುವರಿದಿತ್ತು. ಇನ್ನೊಂದೆಡೆ ಪ್ರತಿ ವರ್ಷ ಊರಿಗೆ ಬಂದಾಗ ಊರು ಮತ್ತಷ್ಟು ಖಾಲಿಯಾಗಿರುವುದು ಕಂಡುಬರುತ್ತಿತ್ತು. ಊರಿನ ಅರ್ಧದಷ್ಟು ಮನೆಗಳಲ್ಲಿ ಜನರೇ ಇರಲಿಲ್ಲ. ಮನೆಯ ಚಾವಣಿಗಳು ಕುಸಿದು ಬಿದ್ದು ನಿರಾಸೆಯ, ಅವನತಿಯ, ದುಃಖದ ಪ್ರತೀಕಗಳಾಗಿ ಉಳಿದಿದ್ದುವು. + +ಹೂ ಶಿ ಜೆ 2007 ರಿಂದ 2015 ರವರೆಗೆ ಪ್ರತಿ ವರ್ಷ , ಸಮಯವಿದ್ದಾಗಲೆಲ್ಲಾ ಊರಿಗೆ ಸ್ನೇಹಿತರೊಂದಿಗೆ ಬಂದು ಕೆಲಸ ಮಾಡಿ ಹೋಗುತ್ತಿದ್ದರು. ಒಂದಷ್ಟು ದಿನ ಹಳ್ಳಿಯಲ್ಲಿದ್ದು, ಬೀದಿ ಸ್ವಚ್ಛಗೊಳಿಸುವುದು, ಹಳ್ಳಿಯ ಜನರ ಕೃಷಿ ಸಂಬಂಧಿ ಸಮಸ್ಯೆಗಳನ್ನು ಮನದಲ್ಲಿ ಹೊತ್ತುಕೊಂಡು ವಿಜ್ಞಾನಿಗಳನ್ನು ಸಂಪರ್ಕಿಸುವುದು. ಅಲ್ಲಿಂದ ಪರಿಹಾರೋಪಾಯ ತಿಳಿದು, ಆ ಬಗ್ಗೆ ವಿವರವಾದ ಮಾಹಿತಿ ಸಂಗ್ರಹಿಸಿ ಊರಿಗೆ ತರುವುದು. ಈ ರೀತಿಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು. ಎಲ್ಲವೂ ಊರಿಗೆ ಉಪಕಾರವಾಗುವ ಕೆಲಸಗಳೇ. ಆದರೆ, ಇವ್ಯಾವುವೂ ಹೆಚ್ಚು ದಿನ ಉಳಿಯುವ ಕೆಲಸವಾಗಿರಲಿಲ್ಲ. + +ಈ ಮಧ್ಯೆ 2010ರಲ್ಲಿ ಹೈನಾನ್ ನ ವಿಶೇಷ ಯುವಕ ಪ್ರಶಸ್ತಿ, 2012ರಲ್ಲಿ ಚೀನಾದ ಬ್ರಿಲಿಯಂಟ್ ಸ್ವಯಂಸೇವಕ ಪ್ರಶಸ್ತಿ – ಇವರನ್ನು ಅರಸಿಕೊಂಡು ಬಂತು. + +ಏನು ಅಂಗೀಕಾರ ಸಿಕ್ಕರೇನು, ಹೂ ಶಿ ಜೆಗೆ ನೆಮ್ಮದಿಯೇ ಮೂಡಲಿಲ್ಲ. ಪ್ರತಿ ಬಾರಿ ಬಂದಾಗಲೂ ಊರು ಮತ್ತಷ್ಟು ಖಾಲಿಯಾಗಿರುತ್ತಿತ್ತು. ಊರಿನ ಅರ್ಧ ಭಾಗದಷ್ಟು ಮನೆಗಳು ಖಾಲಿಯಾಗಿದ್ದವು. ‘ಇನ್ನು ತಡ ಮಾಡುವುದು ಸರಿಯಲ್ಲ‘ ಎಂದವರೇ, 2015ರಲ್ಲಿ, ತಾನು ಮದುವೆಯಾದ ವರ್ಷವೇ ಊರಿಗೆ ಮರಳಲು ನಿರ್ಧರಿಸಿದರು. + +ಮರಳುವುದು ಸುಲಭದ ಕೆಲಸವಾಗಿರಲಿಲ್ಲ. ಆರ್ಥಿಕವಾಗಿಯೂ ಅದು ಎಷ್ಟು ದೊಡ್ಡ ರಿಸ್ಕ್ ಆಗಿತ್ತು ಗೊತ್ತೇ? ತಿಂಗಳಿಗೆ 12000 ಯುವಾನ್ (ಅಂದಾಜು ಒಂದು ಲಕ್ಷದ ಹತ್ತು ಸಾವಿರ ರೂಪಾಯಿ) ಆದಾಯಕ್ಕೆ ತಿಲಾಂಜಲಿ ಇತ್ತು ಊರಿಗೆ ಟಿಕೆಟ್ ತೆಗೆಯಬೇಕಿತ್ತು! + +ಶಾಂಘೈನಿಂದ ಹೂ ಶಿ ಜೆ ಹೈನಾನ್ ದ್ವೀಪಕ್ಕೆ ಮರಳಿದರು. ಆದರೆ ಹೆಂಡತಿ ಒಪ್ಪಬೇಕಲ್ಲ! ಆಗಷ್ಟೇ ಮದುವೆ ಆಗಿದ್ದು ಬೇರೆ! ಆಕೆ ಹೈಕೋವು ನಗರದಲ್ಲಿ ಒಂದು ಉದ್ಯೋಗ ಆರಂಭಿಸಿದರು. “ನಾವು ಮೊದಲೇ ನಿರ್ಧರಿಸಿದ್ದೆವು.ಒಂದಾದರೂ ನಿರಂತರ ಆದಾಯದ ಉದ್ಯೋಗ ಇರಲಿ ಎಂದು. ಆ ಕಾರಣಕ್ಕೇ ನಾನು ಈ ಉದ್ಯೋಗ ಪ್ರಾರಂಭಿಸಿದ್ದು” ನೆನೆಯುತ್ತಾರೆ ಪತ್ನಿ ಯೂ ಲಿಂಗ್. + + + +ಸಮೀಪದ ಡಿಂಗಾನ್ ನಗರದಲ್ಲಿ ನೆಲೆಸಿ, ಅಲ್ಲಿಂದಲೇ ಊರು ಕಟ್ಟುವ ಕೆಲಸ ಪ್ರಾರಂಭಿಸಿದರು.ಊರಿಗೆ ಬಂದಾಗ ಆದಾಯದ ಮೂಲ ಹುಡುಕಬೇಕಾಗಿತ್ತು. ಸರಕಾರದ ಸೌಲಭ್ಯಗಳೇನೋ ಇದ್ದವು. ಆದರೆ ಇವುಗಳನ್ನು ಪಡೆಯಲು ಒಂದಷ್ಟು ಅಡೆತಡೆಗಳೂ ಇದ್ದವು. ಆ ಭಾಗದಲ್ಲಿ ಒಬ್ಬರು ಪಾರ್ಟಿ ಲೀಡರ್ (ಇರೋದು ಕಮ್ಯುನಿಸ್ಟ್ ಪಾರ್ಟಿ ಮಾತ್ರ. ಅದೂ ಜನರಿಂದ ಆಯ್ಕೆ ಆದವರಲ್ಲ. ಸರಕಾರವೇ ಆಯ್ಕೆ ಮಾಡಿದ ಪ್ರತಿನಿಧಿ) ಇದ್ದರು. ಯಾವುದೇ ವಿಚಾರದಲ್ಲೂ ಅವರದೇ ಅಂತಿಮ ತೀರ್ಮಾನ. + +ಪ್ರತಿ ಹಳ್ಳಿಯ ವಿಲೇಜ್ ಕಾರ್ಪೊರೇಶನ್ನೇ ಜಮೀನಿನ ಒಡೆಯ. ಮನೆಯ ಜಮೀನು ಮಾತ್ರ ಹಿರಿಯರಿಂದ ಮಕ್ಕಳಿಗೆ ವರ್ಗಾವಣೆ. ಕೃಷಿ ಜಮೀನನ್ನು ಸರಕಾರದಿಂದ ಲೀಸಿಗೆ ಪಡೆಯಬೇಕು.ಒಮ್ಮೆ ಪಡೆದ ಲೀಸ್ 80 ವರ್ಷದವರೆಗೂ ಬಳಸಬಹುದು.ಆದರೆ ಕೃಷಿ ಮಾಡದೇ ಇದ್ದರೆ ಸರಕಾರಕ್ಕೆ ಹಿಂದಿರುಗಿಸಬೇಕು. ಇವರ ತಂದೆಯವರ ಸ್ವಲ್ಪ ಜಮೀನಿನಲ್ಲಿ ಅಡಿಕೆ ಕೃಷಿ ಇತ್ತು. ಆದರೆ ಈತ ಎಂದೂ ಕೆಲಸ ಮಾಡಿ ಗೊತ್ತಿದ್ದವನಲ್ಲ. ನನ್ನನ್ನೂ ಸೇರಿ, ನಮ್ಮ ಬಹುಪಾಲು ಅಡಿಕೆ ಕೃಷಿಕರ ಮಕ್ಕಳ ಹಾಗೆ! + +ತಿರುಗಿ ಊರಿಗೆ ಬಂದಾಗ ಏನು ಮಾಡಬೇಕೆಂಬ ಗೊಂದಲ ಹಾಗೇ ಇತ್ತು. ವಿಲೇಜ್ ಕಾರ್ಪೊರೇಶನ್ ಏನೋ ಒಂಬತ್ತು ಮೋವ್ (ಅಂದರೆ, ಒಂದೂವರೆ ಎಕ್ರೆ) ಜಮೀನನ್ನು ಉಚಿತವಾಗಿ ನೀಡಲು ತಯಾರಾಯಿತು. ಅಲ್ಲೇನು ಬೆಳೆಯ ಬೇಕು? ಅದನ್ನು ಹೇಗೆ ಉಪಯೋಗಿಸಬೇಕು ಎನ್ನುವುದರ ಬಗ್ಗೆ ಇನಿತೂ ಗೊತ್ತಿರಲಿಲ್ಲ. ‘ಕೃಷಿ ಮಾಡಿದರೆಏನೇನೂ ಲಾಭವಿಲ್ಲ’ ಎಂಬ ಬಿಟ್ಟಿ ಉಪದೇಶ ಕೊಡುವವರು ಸುತ್ತಲೂ ಇದ್ದರು ನಮ್ಮೂರಿನಂತೆ! + +ಪಾರ್ಟಿ ಸೆಕ್ರೆಟರಿ ಹೇಳಿದರು: “ಹಳ್ಳಿಯ ಬಡತನ ಕಡಿಮೆ ಮಾಡಲು ಯಾವುದಾದರೂ ಬಿಸಿನೆಸ್ ಪ್ಲಾನ್ ಮಾಡಿ ಕೊಡು. ಸರಕಾರದಿಂದ ಹಣ ಕೊಡಿಸುತ್ತೇನೆ” ಎಂದು. + +ಆಗ ಹೊಳೆದದ್ದೇ ನಗರದ ಜನತೆಗೆ ಕೃಷಿ ಅನುಭವ ನೀಡುವ ಕೇಂದ್ರ ಮಾಡುವ ಯೋಚನೆ. ಇದರ ಮೊದಲ ಹೆಜ್ಜೆಯಾಗಿ ‘ಸಿಟಾನ್ ನೇಚರ್ ಸ್ಕೂಲ್’ಎನ್ನುವ ಒಂದು ಸಂಸ್ಥೆಯನ್ನೂ ಹೂ ಶಿ ಜೆ ಹುಟ್ಟುಹಾಕಿದರು. ಸರಕಾರ, ಅದಕ್ಕೆ ಬೇಕಾದ ಜಮೀನನ್ನು ನೀಡಿತು. ಹಾಗೆ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳನ್ನೂ ಕಳುಹಿಸಿತು. ಊರಿನ ಹಿರಿಯರು, ಸಂಶೋಧನಾ ಕೇಂದ್ರದ ವಿಜ್ಞಾನಿಗಳು, ಕೃಷಿ ಅಧಿಕಾರಿಗಳು, ಪಾರ್ಟಿ ಸೆಕ್ರೆಟರಿ ಎಲ್ಲ ಸೇರಿ ಹಳ್ಳಿಗೆ ಹಣ ಹಿಂತಿರುಗಿ ಬರುವಂತಾಗಲು ಹಲವಾರು ಕಾರ್ಯಯೋಜನೆ ಸಿದ್ಧಪಡಿಸಿದರು. ಹಳ್ಳಿಯಲ್ಲಿದ್ದ ಎರಡು ಕೆರೆಗಳ ಪುನರುಜ್ಜೀವನವೇ ಇವರು ಮಾಡಿದ ಮೊಟ್ಟ ಮೊದಲ ಕೆಲಸ. + +ಕಾಡಿನ ಮಧ್ಯೆ ಇದ್ದ ಜಮೀನಿಗೆ ಸರಕಾರವೇ ಸಿಮೆಂಟ್ ರಸ್ತೆ ನಿರ್ಮಿಸಿಕೊಟ್ಟಿತು. ಹೋಮ್ ರಿಟರ್ನ್ಡ್ ಆಗಿದ್ದರಿಂದ ಜಮೀನು ನಿಃಶುಲ್ಕವಾಗಿಯೇ ಸಿಕ್ಕಿತ್ತು. ಇನ್ನುಳಿದಂತೆ ಧನ ಸಹಾಯ ಮಾಡಲು ನಗರದ ಒಂದಷ್ಟು ಉದ್ಯಮಿಗಳೂ ಮುಂದೆ ಬಂದರು. ಈಗಾಗಲೇ ಹೂ ಶಿ ಜೆ ದ್ವೀಪದ ಉದ್ದಗಲದಲ್ಲೆಲ್ಲಾ ಪ್ರಸಿದ್ಧರು. ಅವರ ಮಾದರಿಯಿಂದ ಪ್ರಭಾವಿತರಾಗಿಯೇ ಹಲವಾರು ಯುವಜನರು ಹಳ್ಳಿಗೆ ಮರಳಿದ್ದಾರೆ. ಹೋಮ್ ರಿಟರ್ನ್ಡ್ ಗಳ ಸಂಘ ತಲೆ ಎತ್ತಿದೆ. ಪ್ರತಿ ತಿಂಗಳು ಅವರೆಲ್ಲ ಸೇರಿ ಆಗಿರುವ ಅಭಿವೃದ್ಧಿ, ಎದುರಾಗುತ್ತಿರುವ ಸಮಸ್ಯೆ ಇತ್ಯಾದಿಗಳ ಬಗ್ಗೆ ಚರ್ಚಿಸುತ್ತಾರೆ. + +ಇಷ್ಟೆಲ್ಲ ತಿಳಿದ ನಂತರ, ಹೂ ಅವರ ತಂದೆ ಇದನ್ನು ಹೇಗೆ ಸ್ವೀಕರಿದ್ದಾರೆ ಎನ್ನುವುದನ್ನು ಅರಿತುಕೊಳ್ಳುವ ಕುತೂಹಲ ಮೂಡಿತು. ಅವರನ್ನೂ ಭೇಟಿಯಾದೆ. + +“ಅವನು ಓದಿದ್ದಾನೆ. ತಿಳಿವಳಿಕೆ ಇದೆ, ಆದರೂ ಹೆದರಿಕೆ ಇತ್ತು. ಏನಾಗುತ್ತದೆಯೋ ಏನೋ ಎಂದು. ಮೊದಲು ಜನರಿಗೆ ಹಳ್ಳಿ ತೋರಿಸಿ ತಾನು ಬದುಕುತ್ತೇನೆ ಎಂದಾಗ ನನಗೆ ಭಯವಿತ್ತು.ಈಗ ಸ್ವಲ್ಪ ಧೈರ್ಯ ಬಂದಿದೆ. ನಗರದ ಜನ ಬಂದು ಹಳ್ಳಿಯನ್ನು ನೋಡಿ ಖುಷಿ ಪಟ್ಟು ಹೋಗುವಾಗ, ಹಳ್ಳಿಯ ಜನ ಇವನ ಬಗ್ಗೆ ಅಭಿಮಾನ ಪಡುವಾಗ ಹೆಮ್ಮೆಯೆನಿಸುತ್ತದೆ” ಎನ್ನುತ್ತಾರೆ ತಂದೆ. + +ಹಳ್ಳಿಗೆ ಬಂದ ಹೂ ಶೂ ನನ್ನು ಹಲವರು ಪ್ರೋತ್ಸಾಹಿಸಿದ್ದಾರೆ. ಅದೇ ಊರಿನ ಉದ್ಯಮಿ ಜೋ ಶೂ ಅವರಿಗೆ ಹೈಕೋದಲ್ಲಿ ದೊಡ್ಡ ಉದ್ಯಮ ಇದೆ. ಊರಿಗಾಗಿ ಸಹಾಯ ಮಾಡಲು ಅವರೂ ಹೂನೊಡನೆ ಕೈ ಜೋಡಿಸಲು ಮುಂದೆ ಬಂದರು. + +ಬಾತುಕೋಳಿ ಸಾಕಣೆ + +ಹೂ ಶೂ ತಮ್ಮ ಅನುಭವನ್ನು ಹೇಳಿಕೊಳ್ಳುವುದು ಹೀಗೆ.“ಮೊದಲು ಹಣ ಇರಲಿಲ್ಲ. ಹಣ ಹುಡುಕಿ ಊರು ಬಿಟ್ಟು ಹೊರಟೆವು. ಹಣ ಮಾಡಿ ಹಿಂತಿರುಗಿ ಬಂದಾಗ ಊರಿಗೆ ಊರೇ ಖಾಲಿಯಾಗಿತ್ತು. ಖಾಲಿಯಾಗಿದ್ದು ಊರು ಮಾತ್ರ ಅಲ್ಲ. ಇಲ್ಲಿನ ಸಂಸ್ಕೃತಿ, ಸ್ಥಳೀಯ ಜ್ಞಾನ ಎಲ್ಲವೂ. ಈಗ ಆ ಅರಿವನ್ನು ಮೂಡಿಸುವುದು ಒಂದು ದೊಡ್ಡ ಚಾಲೆಂಜ್.” + +ಹೂ ಶೂ ಮಾಡಿದ ಮೊದಲ ಕೆಲಸ ರಸ್ತೆ ಮಾಡಿದ್ದು. ತಮ್ಮ ಸ್ವಂತ ಖರ್ಚಿನಲ್ಲಿ ಊರಿನ ರಸ್ತೆ ಅಭಿವೃದ್ಧಿ ಪಡಿಸಿದರು. ನಂತರ ಸರಕಾರದ ಸಹಾಯವೂ ದೊರೆತಿತು. ಇಡೀ ಊರಿಗೆ ಈಗ ಸಿಮೆಂಟ್ ರಸ್ತೆ ನಿರ್ಮಾಣವಾಗಿದೆ. + +ಊರಿನಲ್ಲೊಂದು ಅತಿಥಿಗೃಹ ಕಟ್ಟಿದ್ದಾರೆ. ಊರಿಗೆ ಯಾರೇ ಅತಿಥಿಗಳು ಬಂದರೂ ಅಲ್ಲಿ ಉಳಿದು ಹಳ್ಳಿಯ, ಮರೆತು ಹೋದ ಹಳ್ಳಿಯ ಬದುಕಿನ ನೆನಪು ಮಾಡಿಕೊಳ್ಳಬಹುದು. ಅಲ್ಲಿ ಇದ್ದಷ್ಟೂ ಕಾಲ ನಾನು ಉಳಕೊಂಡಿದ್ದು ಈ ‘ಹಳ್ಳಿ ಮರುದರ್ಶನ ಗೃಹ’ದಲ್ಲೇ! + +ಊರಿನ ಅಭಿವೃದ್ಧಿಗೆ ಇನ್ನೂ ಒಂದಷ್ಟು ಯೋಜನೆಗಳಿವೆ ಎನ್ನುತ್ತಾರೆ ಹೂ.ಶು.“ಚೀನೀ ಕ್ಯಾಲಿಗ್ರಫಿ ತರಬೇತಿ ಸಂಸ್ಥೆ ಪ್ರಾರಂಭಿಸಬೇಕು. ಯುವ ಜನರು ಚೀನಾದ ಸಂಸ್ಕೃತಿ ಅರಿಯಬೇಕು. ಮರೆತು ಹೋಗುತ್ತಿರುವ, ಮರೆತು ಹೋದ ಸ್ಥಳೀಯ ಜ್ಞಾನದ ದಾಖಲಾತಿ ಮಾಡಬೇಕು.” ಹೀಗೆ ಉದ್ದ ಪಟ್ಟಿಯನ್ನೇ ಕೊಡುತ್ತಾರೆ. + +ಇವರ ಯತ್ನ ಹುಮ್ಮಸ್ಸಿನಿಂದ ಊರಿನಲ್ಲಿ ಒಂದೊಂದೇ ಅಭಿವೃದ್ಧಿ ಕೆಲಸಗಳು ಪ್ರಾರಂಭವಾಗತೊಡಗಿತು. ಈ ಸುದ್ದಿ ಈ ಊರಿಂದ ಹೋದ ಯುವಕರ ಕಿವಿಗೂ ಬೀಳುತ್ತಲಿತ್ತು. ಮೆಲ್ಲಮೆಲ್ಲನೆ ಊರು ಬಿಟ್ಟು ಹೋದ ಹಲವಾರು ಕುಟುಂಬಗಳು ಒಂದೊಂದಾಗಿ ಹಿಂತಿರುಗತೊಡಗಿದುವು. ಕಳೆದ ಒಂದೇ ವರ್ಷದಲ್ಲಿ 30 ಕುಟುಂಬಗಳು ಊರಿಗೆ ಹಿಂತಿರುಗಿ ಬಂದಿವೆ ಎಂದರೆ ನಂಬುತ್ತೀರಾ? + +ಹಣ್ಣು ಬೆಳೆಗಾರ ಆಲಿಯಾಂಗ್ + +ಒಂದು ದಿನ ಏನೋ ಕೆಲಸ ಮಾಡುತ್ತ ಕುಳಿತಿದ್ದೆ. ಒಬ್ಬ ಮಧ್ಯ ವಯಸ್ಕರು ಬಂದು ‘ಹಾಯ್‘ ಎಂದು ಪರಿಚಯ ಮಾಡಿಕೊಂಡರು. ಅವರು ಕಾಲು ಗಂಟೆ ಮಾತಾಡಿದ್ದರಲ್ಲಿ ನನಗೆ ಹೆಸರು ಆಲಿಯಾಂಗ್ ಅಂತ ಅಷ್ಟೇ ಅರ್ಥವಾಯಿತು. ಮುಂದಿನದೇನೂ ತಿಳಿಯಲಿಲ್ಲ. ಮುಖ ನೋಡುತ್ತ ನಿಂತೆ. + +ಏನೋ ಹೊಳೆದವರಂತೆ ಅವರು ತನ್ನ ಕೈಯಲ್ಲಿದ್ದ ಮೊಬೈಲಿಲ್ಲಿ ‘ವೀ ಚಾಟ್’ ತೋರಿಸಿದರು. ಭಾಷೆ ಬರದಿದ್ದಾಗ ವೀ ಚಾಟ್ ಉಪಯೋಗಿಸಿ ಮಾತನಾಡುವುದನ್ನು ಆಗಲೇ ಕಲಿತಿದ್ದೆ. ವೀ ಚಾಟ್ ನಲ್ಲಿ ನಾವು ನಮ್ಮ ಭಾಷೆಯಲ್ಲಿ ಬರೆದರೂ ಅದನ್ನು ಅಲ್ಲೇ ಭಾಷಾಂತರಿಸಿ ತೋರಿಸಬಹುದು. ಅದನ್ನೇ ಉಪಯೋಗಿಸಿ ಮಾತನಾಡಲು ಪ್ರಾರಂಭಿಸಿದೆ. + +ಆತ ನಾನಿದ್ದ ದಿಂಗಾನ್ ಪ್ರಾಂತದಿಂದ ದಕ್ಷಿಣಕ್ಕಿರುವ ವಾನಿಂಗ್ ಪ್ರಾಂತದವರು. ಹೈಕೋವು ನಗರದಲ್ಲಿ ಕೆಲ ಕಾಲ ಕಂಪನಿಯೊಂದರಲ್ಲಿ ಉದ್ಯೋಗ ಮಾಡಿದ್ದರು. ನಂತರ ಈಗ ಊರಿಗೆ ಹೊರಟು ನಿಂತವರು. ಊರಿನಲ್ಲಿ ಈಗ ‘ನೂರೊಂದು ಸಸ್ಯಗಳು‘ ಎನ್ನುವ ನರ್ಸರಿ ಮತ್ತು ಹಣ್ಣು ಸಂಸ್ಕರಣಾ ಕಂಪನಿ ಪ್ರಾರಂಭಿಸುತ್ತಿದ್ದಾರೆ. + +ಇದರ ಜತೆಜತೆಗೆ ಚೀನಿ ಔಷಧಿ ಸಸ್ಯಗಳನ್ನು ಬೆಳೆಯುವುದು ಇವರ ಯೋಚನೆ. ಈಗಾಗಲೇ ಇವರ ಕುಟುಂಬದ 10 ಮೋವ್ ಜಮೀನು ಇವರ ಕೈ ವಶವಾಗಿದೆ. ಇದಲ್ಲದೆ ವಿಲೇಜ್ ಕಾರ್ಪೊರೇಶನಿನಿಂದ 200 ಮೋವ್ ಜಮೀನನ್ನೂ ಲೀಸಿನ ಮೇಲೆ ಪಡೆದಿದ್ದಾರೆ. ಅದೆಲ್ಲ ಪಾಳು ಬಿದ್ದ ಅಡಿಕೆ ತೋಟ. ಮಧ್ಯೆ ಹಣ್ಣಿನ ಬೆಳೆಗಳನ್ನು ಬೆಳೆಯಲು ಪ್ರಾರಂಭಿಸಿದ್ದಾರೆ. ಪ್ರವಾಸಿಗಳಿಗೆ ತಂಗಲು ಅತಿಥಿಗೃಹ ಈಗಾಗಲೇ ತಯಾರಾಗಿದೆ. ಸರಕಾರ ಇಡೀ ತೊಟದ ಸುತ್ತ ಸಿಮೆಂಟ್ ರಸ್ತೆ ನಿರ್ಮಿಸಿಕೊಟ್ಟಿದೆ. ತೋಟದ ಮಧ್ಯೆ ನೀರು ಸಂಗ್ರಹಿಸಲು ಚೆಕ್ ಡ್ಯಾಮ್, ಕೆರೆಗಳ ಆಭಿವೃದ್ಧಿ ಎಲ್ಲವೂ ಸರಕಾರಿ ಹಣದಿಂದಲೇ ಆಗಿದೆ. + +ಇನ್ನೊಬ್ಬ ಹೋಮ್ ರಿಟರ್ನ್ಡ್ ವಾಂಗ್. ಆತ ಆಯ್ದುಕೊಂಡಿದ್ದು ಜೇನು ಕೃಷಿ. ಕುಟುಂಬದ ಸಣ್ಣ ಅಡಿಕೆ ತೋಟದಲ್ಲೇ ಜೇನು ಕೃಷಿ ಆರಂಭಿಸಿದ್ದಾರೆ. ಜೇನಿನ ಸಂಸ್ಕರಣೆ ಮತ್ತು ಪ್ಯಾಕ್ ಮಾಡುವ ಕಂಪನಿ ತೆರೆದಿದ್ದಾರೆ. ಹೋಮ್ ರಿಟರ್ನ್ಡ್ ಯೋಜನೆಯಲ್ಲಿ ಸರಕಾರದಿಂದ ಸಹಾಯಧನವೂ ದೊರೆತಿದೆ. ಮಾರುಕಟ್ಟೆಗೆ ಕಷ್ಟವಿಲ್ಲ. ನಗರದ ವಸ್ತು ಪ್ರದರ್ಶನಗಳಲ್ಲಿ ಸರಕಾರವೇ ಉಚಿತವಾಗಿ ಸ್ಟಾಲ್ ಕೊಡುತ್ತದೆ. ಅಲ್ಲಿಂದಲೇ ಬೇಕಾದಷ್ಟು ಮಾರುಕಟ್ಟೆ ಕುದುರುತ್ತಿದೆ. + +ಪರ್ಮಾ ಕಲ್ಚರ್ ಕೇಂದ್ರ + +ಮೆಂಗ್ ದೂರದ ಗುವಾಂಗ್ ನಗರದಲ್ಲಿ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದವರು. 800 ಕ್ಕೂ ಹೆಚ್ಚು ಜನರಿದ್ದ ತನ್ನ ಊರು ಹಾಳುಬಿದ್ದುದನ್ನು ನೋಡಿ ಮರುಗಿದ ಮಹನೀಯ. ಊರಿಗೆ ಹಿಂತಿರುಗಲು ನಿರ್ಧರಿಸಿ ಈಗ ಮೂರು ವರ್ಷ ಕಳೆದಿದೆ. ಊರಿನ ಒಂದು ಸಾವಿರ ಮೋವ್ ಜಮೀನು ಪಾಳು ಬಿದ್ದಿತ್ತು. ಅಷ್ಟನ್ನೂ ಇವರೇ ಲೀಸಿಗೆ ಪಡೆದಿದ್ದಾರೆ. “ಹಿಂದೆ ಆಗಿದ್ದರೆ ಇಷ್ಟೊಂದು ಜಮೀನನ್ನು ಲೀಸಿಗೆ ಪಡೆಯಲು ಸಾಧ್ಯವೇ ಇರಲಿಲ್ಲ” ಎನ್ನುತ್ತಾರೆ. ‘ಈಗ ಪಾಳು ಬಿದ್ದಿದ್ದರಿಂದ ಬೇಕಾದಷ್ಟು ಜಮೀನನ್ನು ಸರಕಾರದಿಂದ ಪಡೆಯಬಹುದು.ʼ + +ಪಾಳು ಬಿದ್ದ ಸಾವಿರ ಮೋವ್ ಜಾಗದಲ್ಲಿ ಸಂಪೂರ್ಣ ಹಾಳಾದ ಅನಾನಸ್ ತೋಟವಿದೆ. ಕಾಡು ಬೆಳೆದ ಪ್ರದೇಶವೂ ಅಡಿಕೆ ತೋಟವೂ ಇದೆ. ಅವೆಲ್ಲವನ್ನೂ ಮೆಂಗ್ ಈಗ ಪರ್ಮಾಕಲ್ಚ್ರ್ ತರಬೇತಿ ಸಂಸ್ಥೆಯನ್ನಾಗಿಸ ಹೊರಟಿದ್ದಾರೆ. “ಇಡೀ ತೋಟವನ್ನು ಪರ್ಮಾಕಲ್ಚರ್ ವಿಧಾನದಲ್ಲಿ ಅಭಿವೃದ್ಧಿಪಡಿಸಿ ಮಾದರಿ ತೋಟ ಮಾಡಬೇಕೆಂಬುದು ನನ್ನ ಕನಸು” ಎನ್ನುತ್ತಾರೆ. ಇವರ ಇಡೀ ತೋಟ ಸುತ್ತಾಡಲು ನಮಗೆ ಒಂದು ದಿನ ಪೂರ್ತಿ ಬೇಕಾಯಿತು. + +ಸರಕಾರದ ಸಹಕಾರ + +ಇಷ್ಟೆಲ್ಲ ಯುವಕರು ತಿರುಗಿ ಊರಿಗೆ ಬಂದು ಕೆಲಸ ಮಾಡಲು ಪ್ರಾರಂಭಿಸಿದ ಕಾರಣ ಅಲ್ಲಿನ ಸರಕಾರವೂ ಸ್ಪಂದಿಸಿದೆ. ಹೋಮ್ ರಿಟರ್ನ್ಸ್ ಗಳಿಗಾಗಿಯೇ ವಿಶೇಷ ಯೋಜನೆಯನ್ನು ರೂಪಿಸಿದೆ. ಅವರಿಗೆ ರಿಯಾಯತಿ ದರದಲ್ಲಿ ಸರಕಾರಿ ಜಮೀನು ಸಿಗುತ್ತದೆ. ಕೃಷಿ ಪೂರಕ, ಗ್ರಾಮೀಣ ಬಡತನ ನಿರ್ಮೂಲನೆಗೆ ಪೂರಕವಾದ ಉದ್ಯೋಗ ಮಾಡುವವರಿಗಾಗಿಯೇ ವಿಶೇಷ ಯೋಜನೆಗಳಿವೆ. ಸರಕಾರಿ ಅಧಿಕಾರಿಗಳು ಹಳ್ಳಿಗೆ ಬಂದು ಆಸಕ್ತ ಯುವಕರೊಂದಿಗೆ ಕುಳಿತು ಯೋಜನೆ ಸಿದ್ಧಪಡಿಸುತ್ತಾರೆ. ತೆರಿಗೆ ವಿನಾಯತಿ ಸಿಗುತ್ತದೆ. + +ಸರಕಾರಿ ಯೋಜನೆಗಳಿಂದ ಧನಸಹಾಯ ಪಡೆಯಲು ‘ಹೋಮ್ ರಿಟರ್ನ್‘ ಟೈಟಲ್ ಸಹಾಯವಾಗುತ್ತದೆ ಎನ್ನುತ್ತಾರೆ ಈ ಮಂದಿ. ಆಲಿಯಾಂಗ್ ಇತ್ತೀಚೆಗೆ ಸರಕಾರದಿಂದ 1.5 ಮಿಲಿಯನ್ ಆರ್‌ಎಂಬಿ (ಸುಮಾರು ಒಂದೂವರೆ ಕೋಟಿ ರೂಪಾಯಿ) ಹಣ ಪಡೆದಿದ್ದಾರೆ. ತನ್ನ ತೋಟವನ್ನು ಒಂದು ಪರಿಸರ ಪ್ರವಾಸೋದ್ಯಮ ಕೇಂದ್ರವಾಗಿಸಲು ಇದನ್ನು ಉಪಯೋಗಿಸುತ್ತಿದ್ದಾರೆ. + +ಹಿಮ್ಮೊಗ ವಲಸೆ ಜಾಗತಿಕ + +2019ನೇ ವರ್ಷ ನಾನು ಮೂರು ದೇಶಗಳಿಗೆ ಪ್ರವಾಸ ಹೋಗಿದ್ದೆ. ಜರ್ಮನಿ, ನೇಪಾಳ ಮತ್ತು ಚೀನಾ. ಈ ಮೂರೂ ವಿದೇಶ ಪ್ರವಾಸಗಳಲ್ಲಿ ಪ್ರಮುಖವಾಗಿ ಕಂಡದ್ದು ನಗರದಿಂದ ಗ್ರಾಮೀಣ ವಲಸೆ. 2019ರ ಫೆಬ್ರುವರಿಯಲ್ಲಿ ಉತ್ತರ ಜರ್ಮನಿಯ ರೂಗನ್ ದ್ವೀಪದಲ್ಲಿದ್ದೆ. ನನ್ನ ಅಧ್ಯಯನದ ಭಾಗವಾಗಿ ಒಂದಿಷ್ಟು ಹಳ್ಳಿಗಳಿಗೆ ಹೋಗಬೇಕಾಗಿತ್ತು. ಹಳ್ಳಿಗಳಿಗೆ ಹೋಗುವ ಅವಕಾಶವಿದ್ದುದರಿಂದಲೇ ಆ ಅಧ್ಯಯನ ಪ್ರವಾಸಕ್ಕೆ ಹೋಗಿದ್ದೆ ಎನ್ನಿ. + +ನಾನು ಭೇಟಿಯಾದ ಮೊದಲ ಕುಟುಂಬದ ಗೃಹಿಣಿಯ ಇಂಗ್ಲಿಷ್ ಉಚ್ಚಾರ ಕೇಳಿದಾಗಲೇ ಅನ್ನಿಸಿತ್ತು. ಜರ್ಮನ್ ಭಾಷೆಯ ಉಚ್ಚಾರದ ಛಾಯೆಯೂ ಇರಲಿಲ್ಲ. ಮಲ್ಯಾಳಿಗಳನ್ನು ಇಂಗ್ಲೀಷ್ ಉಚ್ಚಾರದ ಧಾಟಿಯಲ್ಲೇ ಗುರುತಿಸುವ ಹಾಗೆ, ಜರ್ಮನ್ ಭಾಷಿಕರನ್ನೂ ಹಾಗೇ ಗುರುತಿಸಬಹುದು. ಆದರೆ ಈಕೆಯ ಭಾಷೆ ಅಮೇರಿಕನ್ ಇಂಗ್ಲೀಷಿನಂತಿತ್ತು. ನಂತರ ಗೊತ್ತಾಗಿದ್ದು ಆಕೆ, ಅಮೇರಿಕೆಯಲ್ಲಿ ಹಲವಾರು ವರ್ಷ ಕೆಲಸದಲ್ಲಿದ್ದು, ಈಗ ಜರ್ಮನಿಯ ಹಳ್ಳಿಗೆ ಬಂದು ನೆಲೆಸಿದ್ದು ಎಂದು. ಹಾಗೆ ಒಂದು ಮನೆಯಲ್ಲಿ ನಮ್ಮ ಪುಣೆ ಮೂಲದ ಮಹಿಳೆಯೂ ಸಿಕ್ಕಿದ್ದು ಆಶ್ಚರ್ಯವಾಗಿತ್ತು. ಆಕೆಯ ಪತಿ ಯಾವುದೋ ಕಂಪನಿಯಲ್ಲಿ ಹಲವಾರು ವರ್ಷ ಭಾರತದಲ್ಲಿ ಕೆಲಸ ಮಾಡಿದವ. ಈಗ ಜರ್ಮನಿಯ ಆ ಹಳ್ಳಿಯಲ್ಲಿ ಕೃಷಿಕ. + +ಅಲ್ಲಿಯ ಹಳ್ಳಿಗಳಲ್ಲಿರುವ ನಾವು ಭೇಟಿಯಾದ ಹದಿನೈದು ಕುಟುಂಬಗಳೂ ನಗರದಿಂದ ಹಿಂತಿರುಗಿ ಬಂದವೇ. ಕೆಲವರು ನಾಲ್ಕು ದಶಕದ ಹಿಂದೆ ಬಂದವರಾದರೆ, ಮತ್ತೆ ಕೆಲವರು ಕೇವಲ ನಾಲ್ಕಾರು ವರ್ಷದ ಹಿಂದೆ ಬಂದವರು. ಅಲ್ಲಿ ಹಳ್ಳಿಯ ಬದುಕು ಎಂದರೆ ಅಜ್ಜ ನೆಟ್ಟ ಆಲದ ಮರವಲ್ಲ. ಅದು ಅವರ ಆಸಕ್ತಿಯ ಆಯ್ಕೆ. + +ಉದ್ಯೋಗ ಕ್ರಾಂತಿಯ ಮೊದಲು ಜರ್ಮನಿಯ ಶೇ 80 ರಷ್ಟು ಗ್ರಾಮೀಣ ಪ್ರದೇಶದವರಾಗಿದ್ದರು ಎನ್ನುತ್ತಾರೆ, ಪ್ರೊಫೆಸರ್ ಕೊನ್ರಾಡ್ ಓಟ್. ಈಗ ಈ ಸಂಖ್ಯೆ ತೀರಾ ಕಡಿಮೆ.ಶೇ 10 ರ ಆಜು ಬಾಜು. + +ನಮ್ಮೂರ ನಗರ ವಲಸೆ + +ನಗರ ವಲಸೆ ಜಗತ್ತಿನೆಲ್ಲೆಡೆಯ ಸಮಸ್ಯೆ. ನನ್ನ ಜಿಲ್ಲೆ ಉತ್ತರ ಕನ್ನಡವೂ ಇದಕ್ಕೆ ಹೊರತಲ್ಲ. ಉತ್ತರ ಕನ್ನಡದ ಒಟ್ಟೂ ಜನಸಂಖ್ಯೆ 2001ರ ಜನಗಣತಿಯಿಂದ 2011 ಜನಗಣತಿಯ ಮಧ್ಯೆ ಹೆಚ್ಚಾಗಿದೆ. ಆದರೆ ಪ್ರತಿ ಗ್ರಾಮವಾರು ಜನಸಂಖ್ಯೆಯ ಅಧ್ಯಯನ ಮಾಡಿದರೆ ಬೇರೆಯದೇ ಚಿತ್ರ ಕಾಣುತ್ತದೆ. + +ಉತ್ತರ ಕನ್ನಡ ಜಿಲ್ಲೆಯ ಬಹುಪಾಲು ಹಳ್ಳಿಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಸಿದ್ದಾಪುರ ತಾಲೂಕಿನ ಶೇ 65 ಪ್ರತಿಶತ ಗ್ರಾಮದಲ್ಲಿ ಜನಸಂಖ್ಯೆ ಕಡಿಮೆ. ಆದರೆ ಶಿರಸಿ, ಯಲ್ಲಾಪುರ, ಕಾರವಾರಗಳಲ್ಲೂ ಸಹ ಶೇ. ನಲವತ್ತಕ್ಕಿಂತ ಹೆಚ್ಚಿನ ಗ್ರಾಮಗಳಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಎಷ್ಟು ಎಂದು ಬರೆಯಬಹುದೇ? + +ಬಹುಪಾಲು ಮಲೆನಾಡಿನ ಹಳ್ಳಿಗಳ ಹಾಗೆ ನಮ್ಮ ಊರೂ ವೃದ್ಧಾಶ್ರಮವಾಗುತ್ತಿದೆ. ಊರಿನಲ್ಲಿ ಹದಿನಾರು ವರ್ಷಕ್ಕಿಂತ ದೊಡ್ಡವರು, ನಲವತ್ತು ವರ್ಷಕ್ಕಿಂತ ಸಣ್ಣವರು ಇಲ್ಲವೇ ಇಲ್ಲವಾಗಿ 800ಕ್ಕೂ ಹೆಚ್ಚು ಇದ್ದ ಜನಸಂಖ್ಯೆ 650ಕ್ಕೆ ಬಂದು ನಿಂತಿದೆ.‌ + + + +ಚೀನಾ ಸರಕಾರ ಹಳ್ಳಿಗಳತ್ತ ಪುನರ್ವಲಸೆ ಪ್ರೋತ್ಸಾಹಿಸಲು ವಿಶೇಷ ಯೋಜನೆ ಹಮ್ಮಿಕೊಂಡಿದೆ. ಹಳ್ಳಿಗಳಲ್ಲೇ ಉದ್ಯೋಗ ಸೃಷ್ಟಿಸುವ ಈ ಉದ್ದೇಶ ಫಲ ಕೊಡಲೂ ಆರಂಭಿಸಿದೆ. ನಮ್ಮಲ್ಲಿ ಆಡಳಿತದ ಮಂದಿ, ಸರಕಾರದ ಪ್ರತಿನಿಧಿಗಳು ಈ ಸಮಸ್ಯೆಯನ್ನು ವೇದಿಕೆಯಿಂದ ಪ್ರಸ್ತಾಪಿಸುವುದಕ್ಕಿಂತ ಒಂದಿಂಚೂ ಮುಂದೆ ಹೋಗಿಲ್ಲ. ಸಮಸ್ಯೆಯ ಆಳ ಅರ್ಥ ಮಾಡುವ ಪ್ರಯತ್ನವನ್ನೇ ಮಾಡಿಲ್ಲ. ನಗರ ವಲಸೆಯ ಮೂಲ ಕಾರಣವನ್ನು ಹಳ್ಳಿಗರು ಮಾತ್ರವಲ್ಲ ದೇಶದ ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಏಕೆಂದರೆ ಇದು ಹಳ್ಳಿ, ನಗರ ಎರಡನ್ನೂ ಸಮಾನವಾಗಿ ಬಾಧಿಸುತ್ತದೆ! ಚಿಕಿತ್ಸೆಯೂ ಮೂಲದಿಂದಲೇ ಶುರು ಆಗಬೇಕು. ಇಂತಹ ನಗರ ವಲಸೆಯನ್ನೇ ತಿರುಗಿಸಿ ಗ್ರಾಮೀಣ ವಲಸೆಯನ್ನಾಗಿಸಿ, ಅದರ ಮೂಲಕವೇ ಗ್ರಾಮದ, ದೇಶದ ಅಭಿವೃದ್ಧಿಯನ್ನು ಮಾಡಿದ್ದು ಚೀನಾದ ಸಾಧನೆ. ಚೀನಾದಿಂದ ನಾವು ಇದನ್ನು ಕಲಿಯಬೇಕಾಗಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_236.txt b/Kenda Sampige/article_236.txt new file mode 100644 index 0000000000000000000000000000000000000000..a4507ee4dcc071ac9d4a3f004ec793674e6b0e40 --- /dev/null +++ b/Kenda Sampige/article_236.txt @@ -0,0 +1,47 @@ +ಒಂದು ಸಣ್ಣ ಅಮೇರಿಕನ್ ಬಡಾವಣೆಯ ಮಧ್ಯಮ ವರ್ಗದ ಕುಟುಂಬಗಳ ದೈನಂದಿನ ಜೀವನವನ್ನು ಹೇಳುತ್ತ ಹೇಳುತ್ತ ಕಥೆಗಾರ್ತಿ ಓದುಗನನ್ನು ಬೇರೆಯದೇ ಪ್ರಪಂಚಕ್ಕೆ ಒಯ್ದು ಬಿಡುತ್ತಾರೆ. ಕಥೆಗಾರ್ತಿಯ ಬರವಣಿಗೆಯ ಜಾದುಗಾರಿಕೆಯನ್ನು ಬಿಚ್ಚಿಡಲು ಈ ಸಂಕಲನದ ಕತೆಗಳನ್ನು ಕುರಿತು ನಾನು ಓದಿದ ಕ್ರಮದಲ್ಲಿಯೇ ಬರೆಯುತ್ತೇನೆ. + +ಕನ್ನಡ ನೆಲದಿಂದ ಮೈಗ್ರೇಟ್ ಆಗಿರುವ ಕೆಲವು ಕುಟುಂಬಗಳು ಒಂದು ಸಣ್ಣ ಅಮೇರಿಕನ್ ಬಡಾವಣೆಯಲ್ಲಿ ಒಟ್ಟುಗೂಡಿ ತಮ್ಮ ಧಾರ್ಮಿಕ ಸಾಂಸ್ಕೃತಿಕ ಉಳಿವಿಗಾಗಿ ಮಾಡಲು ಹೊರಟಿರುವ ‘ಮಗನ ಉಪನಯನ ಸಂಸ್ಕಾರ’ ಪದವಿ ಪ್ರದಾನದ ಕತೆಯಾಗಿದೆ. ಇವೆಲ್ಲವುಗಳಿಗೆ ಪರಕೀಯನಾಗಿ (ಅಲಿನೆಟೆಡ್) ಬೆಳೆದಿರುವ ಟೀನೇಜರ್ ಮಗನಿಗೆ ಇದು ‘ಉಪ್ಯಾನೋ’ ಎನ್ನುವ ಎಡಬಿಡಂಗಿತನವಾಗಿ ಕಾಣುತ್ತದೆ. ಕತೆ ಹಾಸ್ಯಪ್ರಹಸನದಂತೆ ಬೆಳೆಯುತ್ತ ಹೋಗುತ್ತದೆ. ಕಚಗುಳಿ ಇಡುವ ಬರವಣಿಗೆ, ಅರ್ಥಹೀನ ಆಚರಣೆಗಳು, ಎಳೆಯರಲ್ಲಿ ಅವು ಹುಟ್ಟಿಸುವ ದಿಗ್ಭ್ರಮೆಗಳು, ಹಿರಿಯರ ಪ್ರಪಂಚದಲ್ಲಿ ಎಳೆಯರ ಅಸಹಾಯಕತೆ ಎಲ್ಲವನ್ನೂ ಲೇಖಕಿ ಕಣ್ಣೆದುರಿಗೆ ತಂದು ನಿಲ್ಲಿಸಿದ್ದಾರೆ. ಕೊನೆಯಲ್ಲಿ ಹುಡುಗ ಮುಜುಗರದಿಂದ ಪಾರಾಗಲು ಮಿ.ಸ್ಟೀವನ್ಸ್ ನ ಮನೆಯಲ್ಲಿ ಅಡಗಿಕೊಳ್ಳಲು ನುಸುಳುತ್ತಾನೆ. ತಾಳೆಗರಿ ಸುರುಳಿಯಂತೆ ರೂಪಿಸಿದ್ದ ಉಪನಯನದ ಆಮಂತ್ರಣ ಪತ್ರಿಕೆ ಕೈಯಲ್ಲಿದೆ, ಯತಿಯಂತೆ ವೇಷತೊಟ್ಟಿದ್ದ ಆರುಷ್‌ನ ಕೈಯಲ್ಲಿದ್ದ ತಾಳೆಗರಿ ಸುರುಳಿಯನ್ನು ನೋಡಿದ ಮಿ.ಸ್ಟೀವನ್ಸ್ ಗೆ ಅದು ಸಂಸ್ಕೃತ ವಿಶ್ವವಿದ್ಯಾಲಯ ತನಗೆ ಸಂಸ್ಕೃತ ಭಾಷೆಯಲ್ಲಿ ವಿಶಿಷ್ಟ ಸಾಂಸ್ಕೃತಿಕ ಬಗೆಯಲ್ಲಿ ನೀಡುತ್ತಿರುವ ಪ್ರಮಾಣ ಪತ್ರವೆಂದೇ ಭಾಸವಾಗುತ್ತದೆ. ತನಗೆ ಸಿಗುತ್ತಿರುವ ೧೫೦ ನೇ ಪ್ರಮಾಣಪತ್ರವನ್ನು ತೂಗು ಹಾಕಲು ಸ್ಟೀವನ್ಸ್ ಗೋಡೆಯತ್ತ ನಡೆಯುವುದು ‘ಕಾಮಿಡಿ ಆಫ್ ಅಬ್ಸರ್ಡ’ ಆಗಿದೆ. ಕತೆಯ ಕ್ಲೈಮ್ಯಾಕ್ಸ್ ಕತೆಯನ್ನು ಒಂದು ಅಸಾಮಾನ್ಯ ಹಾಸ್ಯ ನಾಟಕದ ಮಟ್ಟಕ್ಕೇರಿಸಿದೆ.(ಅಸಂಬದ್ಧ ವಿನೋದಿನಿ) + +(ಕಾವ್ಯಾ ಕಡಮೆ) + +‘ಮಾಕೋನ ಏಕಾಂತ’ ಅಮೇರಿಕನ್ ಸಮಾಜದಲ್ಲಿ ಬದುಕುತ್ತಿರುವ ಇಂಡಿಯನ್ ಕುಟುಂಬದ ಒಡಕು ಬದುಕಿನ ಮಾಲಿನ್ಯದ ಕಥೆಯಾಗಿದೆ. ಮಲ್ಲಿಕಾರ್ಜುನ ಅಂದರೆ ಮಾಕೊ ತನ್ನ ತಾಯಿಯೊಂದಿಗೆ ಅಮೇರಿಕೆಯ ನ್ಯೂಜೆರ್ಸಿಯಲ್ಲಿ ವಾಸವಾಗಿದ್ದಾನೆ, ಇಲ್ಲಿ ಬೆಳೆಯುತ್ತಿರುವ ಟೀನೇಜ್ ಮಗ ಇಂಡಿಯನ್ ಟೀನೇಜಿನ ಮಾಡೆಲ್ಲಿನಂತಾಗದೇ ಎಲ್ಲಿ ಅಮೇರಿಕನ್ ಆಗಿಬಿಡುತ್ತಾನೋ ಎಂಬ ಆತಂಕ ತಾಯಿಯ ತಲೆಯನ್ನು ಕೆಡಿಸಿಬಿಟ್ಟಿದೆ. ಅಮೇರಿಕನ್ ಕುಟುಂಬ ಜೀವನದ (ನಾರ್ಮ) ನಾರ್ಮನಂತೆ ಮಗನ ಪ್ರೈವಸಿಯನ್ನು ಅವಳು ರೆಸ್ಪೆಕ್ಟ್ ಮಾಡಲೇಬೇಕು, ಆದರೆ ಮಾಕೋನೇನಾದರೂ ಮಾದಕ ದ್ರವ್ಯಗಳ ವ್ಯಸನಕ್ಕೆ ಬಿದ್ದುಬಿಟ್ಟರೇ?… ಹತ್ತಿಕ್ಕಿಕೊಳ್ಳಲಾಗದ ಇನ್ನೊಂದು ದೊಡ್ಡ ಭಯ, ಆತಂಕ ಅವಳನ್ನು ಕಾಡುತ್ತದೆ. ಮಧ್ಯರಾತ್ರಿಯ ನೀರವದಲ್ಲಿ ಮನೆಯ ಸ್ಟೇರ್‌ಕೇಸನ್ನು ಹತ್ತಿ ಮಹಡಿಯ ಮೇಲಿನ ಮಾಕೋನ ರೂಮನ್ನು ಕದ್ದು ಸೇರಿಕೊಳ್ಳುವ ಹುಡುಗಿಯರ ಹೈಹೀಲ್ಡ್‌ ಶೂಗಳ ಸದ್ದುಗಳು.. ಸತ್ಯವೋ?.. ಭ್ರಮೆಯೋ ?.. ಸತ್ಯ ಅನಿರೀಕ್ಷಿತವಾಗಿ ಸ್ಫೋಟಗೊಳ್ಳುತ್ತದೆ. ಕುಟುಂಬ ಜೀವನದ ಅಡಿಪಾಯ ಕುಸಿದು ಹೋಗಿದೆ. ಟೀನೇಜರ್ ಮಗನ ಸ್ವಚ್ಚಂದತೆಯಲ್ಲ, ತಾಯಿಯ ಸಡಿಲ ನೈತಿಕತೆಯೇ ಕಾರಣ… + +ಈ ಕತೆಯಲ್ಲಿ ಅಪರೂಪದ ಸ್ಫೋಟ ಗುಣವಿದೆ… ಮಾಕೋನಲ್ಲಿ ಮ್ಯಾಜಿಕಲ್ ಶಕ್ತಿಯಿದೆ. ಮಾನವನ ಸುಪ್ತ ಪ್ರಜ್ಞೆಯಾಚೆಯ ಅತೀಂದ್ರಿಯ ಲೇಸರ್ ಕಿರಣಕ್ಕೆ.. ಯಾವುದೂ ಅಗಮ್ಯವಲ್ಲ… ಈ ಕತೆಯ ಕಥನ ಕಲೆ ಅಂಥ ಕಿರಣದಿಂದಲೇ ಹರಿವಿದೆಯೆನಿಸುತ್ತದೆ. + +‘ತಂದೆ’ ಕತೆಯಲ್ಲಿ ತನ್ಮಯಿ ಗಂಡನಿಗಿಂತ ಮುಂದೆ ಹೋಗುತ್ತಾಳೆ. ಭಾವನಾತ್ಮಕ ಸಮತೋಲನ ಸಾಧಿಸುತ್ತಾಳೆ. ತನ್ನ ಗರ್ಭದಿಂದ ಹೊರಬಂದಿರುವುದು ಒಂದು ಜೀವವಿಲ್ಲದ ಮಾಂಸದ ಪಿಂಡವಷ್ಟೆ, ಆತ ಸಮನ್ವಯನಲ್ಲ, ಸಮನ್ವತ ತಮ್ಮಿಬ್ಬರ ಒಂದು ತನದಲ್ಲಿ ಆಕಾರಗೊಂಡಿದ್ದ ದಿವ್ಯ ಶಿಶು. ಈ ಮಾಂಸದ ಮುದ್ದೆ ತಮ್ಮ ‘ಸಮೂ’ ಅಲ್ಲ. ಈ ನಿಲುವು ಅವಳು ಸಾಧಿಸಿದ ‘ದಿವ್ಯ’ದಂತಿದೆ. + +‘ಮೀಲೊ’ ಕನ್ನಡ ಸಣ್ಣ ಕತೆಗಳ ಆಗಸದಲ್ಲಿ ಮಿನುಗಿ ಬಂದ ಮಿನುಗುತ್ತಿರುವ ‘ಫೆಂಟಾಸ್ಟಿಕ್’ ತಾರೆ. ಯಾಕೆಂದರೆ ‘ಫ್ಯಾಂಟಸಿ’ಯನ್ನು ಥೀಮ್ ಆಗಿಸಿಕೊಂಡು ಕಟ್ಟಿದ ಇನ್ನೊಂದು ಸಣ್ಣಕತೆ ಎಲ್ಲಿಯೂ ನನ್ನ ಗಮನಕ್ಕೆ ಬಂದಿಲ್ಲ, ಇದ್ದರೂ ಇರಬಹುದೇನೋ, ಜಾನಪದ-ಪೌರಾಣಿಕ ಕತೆಗಳಲ್ಲಿ ಈ ಕಾಲದ ನಮ್ಮ ಕಾಲದ ಕತೆಗಳಲ್ಲಿ ಮಾತ್ರ ಇಲ್ಲ. ಒಂದಡಿಗಿಂತ ಚಿಕ್ಕದಾದ, ಗೂಬೆಯನ್ನು ಹೋಲುವ ಅಚ್ಚಗೆಂಪು ಮೈಬಣ್ಣದ ಹಕ್ಕಿಯೋ ಹುಳವೋ ಒಂದು ಜೀವ, ಅದರ ಕಣ್ಣುಗಳು ಮಾತ್ರ ಅದರದೇ ಕಣ್ಣುಗಳು, ಆಸ್ಟ್ರೇಲಿಯಾದ ಯಾಲಿನ್ನಪ್ಪಿನ ಹೋಟೆಲ್ ಒಂದರಲ್ಲಿ ಕಣ್ಣಿಗೆ ಬಿದ್ದ ಈ ಹಕ್ಕಿ ತಿರುತಿರುಗಿ ಲೇಖಕಿಯನ್ನು ಸಂದಿಸುತ್ತದೆ, ಬೆಳವಣಿಗೆಯಂತೂ ಒಂದೇ ದಿನದಲ್ಲಿ ಐದು ಪಟ್ಟಿಗಿಂತ ಹೆಚ್ಚಿಗೆ ಬೆಳೆದಿದೆ. ನೆಗೆಟಿವ್ ಬೆಳವಣಿಗೆಯೂ ಅದಕ್ಕಿದೆ. ಅರ್ಧ ಅಡಿಗೂ ಇಳಿದು ಬಿಡುತ್ತದೆ. ತನ್ನ ಹೊರತಾಗಿ ಯಾರೂ ಅದನ್ನು ನೋಡಿಯೇ ಇಲ್ಲ, ತನಗಾಗಿ ಮಾತ್ರವಿರುವ ಈ ಹಕ್ಕಿ ಜೀವ ಸಂಕುಲದ ಹೊಸ ಸದಸ್ಯನೇ(ಳೇ) ಅಥವಾ ತನ್ನ ಫ್ಯಾಂಟಸಿಯ ತ್ರಿಶಂಕುವೇ? ಆ ಜೀವವನ್ನು ‘ಮೀಲೋ’ ಎಂದು ಹೆಸರಿಸುವಾಗ ಲೇಖಕಿ ಒಳಗಿದ್ದ ಫ್ಯಾಂಟಸಿ ಲೋಕವನ್ನು ಹೊರಗಿಟ್ಟಿದ್ದಾರೆ, ತನ್ನ ಪುಟ್ಟ ಕಂದಮ್ಮನಿಗಾಗಿ ತಾನೇ ಹೊಲಿದು ಸೃಷ್ಟಿಸಿದ್ದ ತಲೆದಿಂಬಿನ ಗೊಂಬೆಯೇ ಕಂದನ ಫ್ಯಾಂಟಸಿ ಲೋಕದಲ್ಲಿ ಅಗಲಿರಲಾಗದ ಸಖ ‘ಮೀಲೋ’ ಆಗಿಬಿಟ್ಟಿದ್ದ! + +‘ಸುನೇತ್ರಾ ಪಬ್ಲಿಷರ್’ ನಲ್ಲಿ ಸುನೇತ್ರಾ ಗಂಡ ಸುನೀಲನನ್ನು ಬಿಟ್ಟು ತಾನು ಮನೆ ಸೇರಿಕೊಂಡಿದ್ದಾಳೆ. ಅಣ್ಣ ಪಬ್ಲಿಷರ್, ಅಲ್ಲಿ ಇವಳು ಎಡಿಟರ್ ಆಗಿ ಕೆಲಸ ಮಾಡುತ್ತಿದ್ದಾಳೆ. ಗಂಡನ ಆಧಿಪತ್ಯ ಧಿಕ್ಕರಿಸಿ ತೌರುಮನೆಗೆ ಬಂದಳು. ಪಬ್ಲಿಷಿಂಗ್ ಹೌಸ್ ತೆಗೆದಿದ್ದು ಇವರಿಬ್ಬರ ಅಪ್ಪನ ಪ್ರಾವಿಡೆಂಟ್ ಫಂಡ್‌ನ ಹಣದಿಂದ, ಇಲ್ಲಿಯೂ ಇಬ್ಬರಿಗೂ ಓನರ್‌ಶಿಪ್ ಸಮಾನವೇ ಇದೆ, ಗಂಡನ ಆಧಿಪತ್ಯ ಧಿಕ್ಕರಿಸಿದಂತೆ ಇಲ್ಲಿಯೂ ಅಣ್ಣನೊಂದಿಗೆ ಜಗಳ ನಡೆದಿರುತ್ತದೆ. ಅಣ್ಣನಿಗೆ ಅನಿಸುತ್ತದೆ, ಬಾಯಿ ತೆರೆದರೆ ಸ್ತ್ರೀವಾದ, ಸ್ತ್ರೀ ಸ್ವಾತಂತ್ರ್ಯ, ಮಹಿಳೆಯರ ಹಕ್ಕುಗಳು, ಸೆಕ್ಷುಯಲ್ ಫ್ರೀಡಮ್, ಇಂಥವೇ ಅಧಿಕ ಪ್ರಸಂಗಗಳು, ಹೋಗಲಿ ಅಂದರೆ ಬರಹಗಾರರು ಹೋರಾಟಗಾರರು ಚಳುವಳಿಯವರು ಸ್ವಯಂಸೇವಾ ಸಂಘದವರು.. ಇಂಥ ಕೆಲಸಕ್ಕೆ ಬಾರದವರೆಂದರೆ ಇವಳಿಗೆ ಬಲು ಅಕ್ಕರೆ ‘ಕಲಾವಿದರು ಕಥೆಗಾರರು ಅಂದರೆ ಮನುಷ್ಯತ್ವದ ಮೂಲಕ್ಕೆ ಬಹಳ ಹತ್ತಿರವಿರುವರು ಅಂತ, ಅಣ್ಣಾ ದಯವಿಟ್ಟು ಅವರನ್ನು ಹಾಗೆಲ್ಲ ಆಡಿಕೊಳ್ಳಬೇಡ’ ಇದು ಅಣ್ಣನಿಗೆ ಅವಳು ಹೇಳುವ ಬುದ್ಧಿಮಾತು, ಪಬ್ಲಿಷಿಂಗ್ ಹೌಸಿನ ಎಡಿಟೋರಿಯಲ್ ಪಾಲಿಸಿ ಬಗ್ಗೆಯೇ ಇಬ್ಬರಲ್ಲಿಯೂ ಮೂಲಭೂತ ಭಿನ್ನಾಭಿಪ್ರಾಯ ಇದೆ. ‘ಬೀದಿ ಬದಿಯಲ್ಲಿ ಹಣ್ಣು ಮಾರುವವರು, ಕೈಮಗ್ಗ ನೇಯುವವರು, ಹೌಸ್ ವೈಫ್ ಗಳು, ಊರಿನ ಕೆರೆ ಸಂರಕ್ಷಿಸುವವರು, ಬತ್ತಿ ಹೊಸೆಯುವವರು, ಇಂಥವರ ಸಣ್ಣ ಪುಟ್ಟ ಜೀವನ ಚರಿತ್ರೆ ಪ್ರಕಟಿಸಿದರೆ ಹೇಗಿರುತ್ತದೆ?’ ಇವು ಸುನೇತ್ರಾಳನ್ನು ಇನ್ಸ್ಪೈರ್ ಮಾಡುವ ಥೀಮ್‌ಗಳು, ‘ಹಣ್ಣು ಮಾರುವವನ ಗೋಳಿನ ಕಥೆ ಯಾರಿಗೆ ಬೇಕಾಗಿದೆ, ಪುಸ್ತಕಗಳು ಧೂಳು ತಿನ್ನುತ್ತ ಬೀಳುತ್ತವೆ’ ಇದು ಅಣ್ಣನ ವ್ಯವಹಾರಿಕ ಯೋಚನೆಯ ದಾರಿ. + +ಅಣ್ಣನಿಗೆ ಇಬ್ಬರು ಮೂವರು ದಾದಾಗಳ ಪರಿಚಯ ಇದೆ, ಒಬ್ಬ ದಾದಾನ ಆತ್ಮ ಚರಿತ್ರೆಯನ್ನು ಪಬ್ಲಿಷ್ ಮಾಡಲು ಬರೆಸುತ್ತಿದ್ದಾನೆ. ಅದಕ್ಕೆ ಲಿಪಿಕಾರನನ್ನೂ ನಿಯಮಿಸಿದ್ದಾನೆ, ರಾಕೇಶ- ದಾದಾನ ಆತ್ಮ ಚರಿತ್ರೆಯ ಘೋಸ್ಟ್ ರೈಟರ್, ರೋಚಕವಾಗಿ ಕಥೆ ಬರೆದು ೨೫ ಸಾವಿರ ಕಾಪಿಗಳನ್ನು ಸುಲಭವಾಗಿ ಸೇಲ್ ಮಾಡಬಹುದು, ಪಬ್ಲಿಷಿಂಗ್ ಹೌಸ್ ತೆಗೆದುಕೊಂಡಿರುವ ಈ ಅಸೈನ್ಮೆಂಟ್‌ಗೆ ಸುನೇತ್ರಾ ಉರಿದುರಿದು ಬೀಳುತ್ತಾಳೆ. ‘ಇಂಥ ಪುಸ್ತಕಗಳಿಂದ ಯಾರಿಗೇನು ಲಾಭ? ಹಣ ಸಿಗುತ್ತೆಂತ ಕೊಳಚೆ ನೀರು ಕುಡಿಯೋದು ಎಷ್ಟು ಸರಿ?’ ಅಂತ ಅಪದ್ಧ ನುಡಿಯುತ್ತಾಳೆ. ಅವಳೂ ಕೂಡ ಸಂಸ್ಥೆಯ ಓನರ್ ಅಲ್ಲವೇ? + +ಈಗೇನು ಮಾಡುವುದು? ದಾದಾ ಅಣ್ಣನಿಗೆ ಮೊದಲೇ ಹೇಳಿಬಿಟ್ಟಿದ್ದಾನೆ, ಯಾರಿಂದಲಾದರೂ ನಿನಗೆ ತೊಂದರೆ ಬಂದರೆ ನನಗೆ ಫೋನ್ ಮಾಡಿ ‘ಗೋ ಅಹೆಡ್’ ಎಂದು ಹೇಳಿಬಿಡು ಸಾಕು, ಮುಂದಿನದನ್ನು ನಾನು ನೋಡಿಕೋತೇನೆ’ ಬೆಳ್ಳಂಬೆಳಿಗ್ಗೆ ಅಣ್ಣ ದಾದಾನಿಗೆ ಫೋನ್ ಮಾಡುತ್ತಾನೆ, ಕೆಲವೇ ದಿನಗಳಲ್ಲಿ ಕಾಡಿನಲ್ಲಿ ಚಾರಣಕ್ಕೆಂದು ಹೋಗಿದ್ದ ಸುನೇತ್ರಾ ಕಾಡಾನೆ ದಾಳಿ ತಪ್ಪಿಸಿಕೊಳ್ಳಲು ಕಾಡಿನೊಳಗೆ ಓಡುತ್ತ ನಾಪತ್ತೆಯಾಗಿದ್ದಾಳೆಂದು ಅವಳ ಫ್ರೆಂಡ್ ಮಾಲಿನಿ ಪೊಲೀಸರಿಗೆ ಕರೆ ಮಾಡುತ್ತಾಳೆ, ಲೇಟೆಸ್ಟ್ ೩ ದಿನಗಳ ಬಳಿಕ ಕಾಡಿನಲ್ಲಿ ಸುನೇತ್ರಾಳ ಹೆಣ ಪತ್ತೆಯಾಗಿದೆ, ಆನೆ ತಿರುಗಿಸಿ ಎಸೆದರೆ ಆಗುವಂಥ ಗಾಯಗಳು ದೇಹದ ಮೇಲಿವೆ, ಕಾಡಾನೆಯ ದಾಳಿಯಿಂದ ಸುನೇತ್ರಾ ಸತ್ತಳೆಂದು ಒಪ್ಪಲಿಕ್ಕೆ ಇವು ಸಾಕು, ಮಾಲಿನಿಯ ಹೇಳಿಕೆಯೂ ಇದೇ, ಕೊಲೆಯ ಹಳವಂಡ ಅಣ್ಣನ ಮನಸ್ಸಿನಿಂದ ಮಾಯವಾಗುವಂಥದ್ದಲ್ಲ, ಸುನೇತ್ರಾಳ ಸಾವು ಲಾಭಬಡಕ ಅರ್ಥ ಪ್ರಪಂಚದಲ್ಲಿ ಮನಸ್ಸಾಕ್ಷಿಯ ಸಾವು, ಒಡೆದುಹೋದ ಕೌಟುಂಬಿಕ ಒಂದುತನದೊಳಗಿದ್ದ ಅಂತಃಕರಣದ ಸಾವು…. + +‘ಕ್ಲಾರಾ ನನ್ನ ಗೆಳತಿ’ ಕತೆ ಪುರುಷ ಹೆಣ್ಣನ್ನೂ ನಡೆಸಿಕೊಳ್ಳುವ ಕ್ರೂರ ರೀತಿಯನ್ನೇ ತೋರಿಸುವ ಕತೆ, ಆದರೆ ಅಮೇರಿಕನ್ ಜೀವನ ವ್ಯವಸ್ಥೆಗಳ ಸರಿಯಾದ ಅನುಭವವಿರುವ ಕ್ಲಾರಾ ಅನನುಭವಿ ಇಂಡಿಯನ್ ಹೆಣ್ಣಿಗೆ ಫ್ರೆಂಡ್ ಆಗಿ, ಗೈಡ್ ಆಗಿ ಕಷ್ಟದ ದಿನಗಳಲ್ಲಿ ಜೊತೆಗಿದ್ದಾಳೆ, ಜೊತೆಗಿರಬೇಕಾಗಿದ್ದ ರೋಹಿತ್ ಅವಳನ್ನು ಬಿಟ್ಟು ಹೋಗಿದ್ದಾನೆ, ಅವಳನ್ನು ರೇಪ್ ಮಾಡಿದ ಬ್ರೂಟ್, ಕೈಕೊಟ್ಟು ಹೋದ ರೋಹಿತ್ ಇಬ್ಬರಲ್ಲಿ ಅವಳ ಜೀವನ ಹಾಳು ಮಾಡಿದವರು ಯಾರು? + +‘ಆ ಒಂದು ಥರಾ’ ಕಥೆಯು ಕೂಡ ಅಮೇರಿಕನ್ ಜೀವನ ಶೈಲಿಯಲ್ಲಿಯ ಹೆಂಡತಿಯ ಒಳಮನಸ್ಸಿನ ಅಭದ್ರತೆಯ ಸುತ್ತ ಇದೆ, ಕಾರ್ ಓಡಿಸುವ ಸ್ಕಿಲ್ಲು ಅವಳಿಗೆ ಎಟುಕದಷ್ಟು ಕ್ಲಿಷ್ಟವಾಗಲು ಅವನ ಓವರ್ ಪೊಸೆಸಿವ್ ನೇಚರೇ ಕಾರಣವೇ? ಅದು ಅವಳಿಗೆ ಎಟುಕಲಾರದ ವಿದ್ಯೆ, ಅವನೊಬ್ಬನೇ ಅದಕ್ಕೆ ಹಕ್ಕುದಾರನೇ? + + + +‘ಕೊನೇ ಊಟ’ ಈ ಸಂಕಲನದ ಅತ್ಯಂತ ಮುಖ್ಯವಾದ ಅಷ್ಟೇ ಹೃದಯಸ್ಪರ್ಶಿ ಕಥೆ. ಸಂಯುಕ್ತ ಸಂಸ್ಥಾನಗಳ ನೇವಾರ್ಡ ರಾಜ್ಯದಲ್ಲಿ ಪೂರ್ವಕ್ಕಿರುವ ಕುಪ್ರಸಿದ್ಧ ಕಾರಾಗೃಹ ಈಲಿಯ ಜೈಲು. ಜೈಲಿನ ಸುತ್ತಲಿನ ಗೋಡೆಯನ್ನು ಹರಿತವಾದ ರೇಜರ್ ಬ್ಲೇಡುಗಳಿಂದ ನಿರ್ಮಿಸಿದ್ದಾರೆಂದರೆ ಒಳಗಡೆ ಇನ್ನೆಷ್ಟು ಭಯಾನಕ ಯಾತನಾಮಯ ದಬ್ಬಾಳಿಕೆ ನಡೆದಿರುತ್ತದೆಯೆಂಬುದು ಕೇವಲ ಊಹೆಗೆ ಬಿಟ್ಟ ವಿಷಯ, ಯಾವ ಕೈದಿಯೂ ಇಲ್ಲಿಂದ ಜೀವಂತ ಬಿಡುಗಡೆಯಾಗಿ ಹೊರಗೆ ಬಂದಿಲ್ಲ ಅಥವಾ ಗೋಡೆ ಜಿಗಿದು ಪಾರಾಗಿ ಓಡಿಹೋಗಿಲ್ಲ, ೩೨ ವರ್ಷಗಳ ಕರಾಳ ಇತಿಹಾಸದಲ್ಲಿ ಕೇವಲ ಏಳೇ ಏಳು ಕೈದಿಗಳು ಆ ಪ್ರಯತ್ನ ಮಾಡಿದ್ದಾರಷ್ಟೇ, ಬೆರಳುಗಳನ್ನು ಕೈಕಾಲುಗಳನ್ನು ತುಂಡು ತುಂಡು ಮಾಡಿಕೊಂಡು ರಕ್ತ ಬಸಿಯುತ್ತ ತಮ್ಮ ತಮ್ಮ ಬ್ಯರಾಕ್ಕುಗಳಿಗೆ ಮರಳಿಸಲ್ಪಟ್ಟಿದ್ದೇ ಅವರಿಗೆ ಸಿಕ್ಕ ದೊಡ್ಡಸ್ತಿಕೆ, ಬೇರೆ ರಾಜ್ಯಗಳ ಬೇರೆ ಬೇರೆ ಜೈಲುಗಳ ದುರ್ದಮ್ಯ ಕೈದಿಗಳನ್ನು ಗೋಡೆ ಹಾರಿ ಓಡುವ ಪಲಾಯನವಾದಿಗಳನ್ನು ಇಲ್ಲಿಗೆ ಟ್ರಾನ್ಫರ್ ಮಾಡಿ ಕಳಿಸುತ್ತಾರೆ. ಪಾಪಿಗೆ ನರಕವೇ ಕಡೆಯ ಲೋಕವೆಂದ ಹಾಗೆ, ಒಮ್ಮೊಮ್ಮೆ ಬೇರೆ ಜೈಲುಗಳು ಪೂರ್ತಿ ಭರ್ತಿಯಾಗಿದ್ದಾಗಲೂ ಕೆಲವು ನತದೃಷ್ಟ ಪಾಪಿಗಳು ಇಲ್ಲಿಗೆ ತಳ್ಳಲ್ಪಡುತ್ತಾರೆ. ಹಾಗೆ ಬಂದವರಲ್ಲಿ ಒಬ್ಬ, ಪ್ರಪಂಚದಲ್ಲಿಯೇ ಸೌಮ್ಯಾತಿಸೌಮ್ಯ ಸ್ವಭಾವದವನೆಂದು ಪ್ರಸಿದ್ಧನಾಗಿರುವ ‘ಕನ್ನಡಮೆನಿಪ್ಪಾ ನಾಡಿನ ಸುಪುತ್ರ- ದತ್ತ’ ಎಲ್ಲ ಕನ್ನಡ ಕುಟುಂಬಿಗರ ಪುರುಷಾರ್ಥಗಳಂತೆ ಈತನೂ ಐಟಿ-ಬಿಟಿ ಎಂಜಿನಿಯರ್, ನಂತರ ಎಂ.ಎಸ್, ನಂತರ ಯು.ಎಸ್. ನಂತರ ಯೇಲ್ ಯೂನಿವರ್ಸಿಟಿಯ ಪಿ.ಹೆಚ್.ಡಿ, ನಂತರ ಡಾಲರುಗಳಲ್ಲಿ ಸಂಬಳ. ಈ ಹಾದಿಯಲ್ಲಿ ನಡೆಯುತ್ತಿರುವಾಗಲೇ ಎಡವಟ್ಟು ಮಾಡಿಕೊಂಡ, ಯಾವುದೋ ಒಂದು ಫ್ರಾಡ್ ಕೇಸಿನಲ್ಲಿ ತಗಲು ಹಾಕಿಕೊಂಡ, ೨೦೦ ಮಿಲಿಯನ್ ಡಾಲರುಗಳ ದೊಡ್ಡ ಕೇಸಾಗಿದ್ದರಿಂದ ಜೀವಾವಧಿ ಶಿಕ್ಷೆಯಾಯಿತು. ದತ್ತ ಈಗ ಕಿತ್ತಳೆ ಬಣ್ಣದ ದೊಗಳೆ ಜೇಲ್ ಯೂನಿಫಾರ್ಮ ತೊಟ್ಟು ಈಲಿ ಕಾರಾಗ್ರಹದಲ್ಲಿ ೩೭ ವರ್ಷಗಳ ಲೈಫ್ ಟರ್ಮ ಸರ್ವ ಮಾಡುತ್ತಿದ್ದಾನೆ. + +ಜೇಲ್ ಒಳಗಿನ ಅಪಾಯಗಳ ಕುರಿತು ದತ್ತನಿಗೆ ಆತನ ಜೇಲ್ ಮೇಟ್ ಫೆಡ್ರಿಕ್ ನಿಂದ ಮುನ್ನೆಚ್ಚರಿಕೆ ಸಿಗುತ್ತಿರುತ್ತದೆ. ಮೊದಲನೇ ಮುನ್ನೆಚ್ಚರಿಕೆ ಅಂದರೆ ‘ಡೋಂಟ್ ಡ್ರಾಫ್ ದಿ ಸೋಪ್’ ಈ ಜೈಲು ಒಂದು ಹೊಮೋ ಸೆಕ್ಷುಯಲ್ ರಾಜ್ಯ, ಹೋಮೋ ಸೆಕ್ಷುಯಲ್ ದಾಳಿಯಿಂದ ರಕ್ಷಿಸುವವರು ಯಾರೂ ಇಲ್ಲ, ಇಲ್ಲಿ ಎಲ್ಲರೂ ಬ್ರೂಟ್ಸ್‌ ಗಳೇ. ಒಂದು ಸಲ ಸೋಪನ್ನು ಡ್ರಾಪ್ ಮಾಡಿದರೆ ಆಯ್ತು, ಜೀವನದಲ್ಲಿ ಜಾರೋದೊಂದೇ ಉಳಿಯೋದು’ + +ಅಂತಹ ಒಂದು ಎನ್‌ಕೌಂಟರ್ ಎದುರಾದಾಗ ಫೆಡ್ರಿಕ್‌ನೇ ಹುಸಿ ಬಾಂಬು ಹಾರಿಸಿ ದತ್ತನನ್ನು ಬಚಾವು ಮಾಡುತ್ತಾನೆ. ‘ಲೀವ್ ಹಿಮ್ ಅಲೋನ್, ಅವನ್ಯಾರು ಗೊತ್ತಿಲ್ಲವೇ? ಡೇವ್ ಡ್ಯಾಡಿಯ ಮಗ ಅವನು’ ಇವನ ಮೇಲೆ ಎರಗಲು ಬಂದಿದ್ದ ಒಬ್ಬ ರೌಡಿ ಕೈದಿ ಹೋಸೆ ಅಲ್ಲಿಂದ ಕಾಲು ಕಿತ್ತುತ್ತಾನೆ. ಜೈಲಿನ ಆವರಣದಲ್ಲಿ ‘ಡೇವ್ ಡ್ಯಾಡಿ’ ಹೆಸರಿಗೆ ಎಂಥ ಭಯಮಿಶ್ರಿತ ಗೌರವವಿದೆಯೆಂದರೆ ಅಂದಿನಿಂದ ಯಾರೂ ದತ್ತನನ್ನು ಕೆಣಕುವ ಉಸಾಬರಿಗೆ ಹೋಗುವುದಿಲ್ಲ, ಈ ಡೇವ್ ಹೇಳಿಕೇಳಿ ಒಂದೇ ರಾತ್ರಿಯಲ್ಲಿ ಎಂಟು ಹೆಣಗಳನ್ನು ಉರುಳಿಸಿ ಮರಣ ದಂಡನೆಗಾಗಿ ಕಾಯುತ್ತಿರುವ ಕೈದಿ, ಡೇರ್ ಡೆವಿಲ್ ರೇಜರ್ ಗೋಡೆ ಹಾರಲು ಯತ್ನಿಸಿ ರಕ್ತ ಬಸಿದಿರುವ ರೆಪ್ಯುಟೇಷನ್ ಇವನಿಗಿದೆ. ದಿನಕ್ಕೆ ೨೩ ಗಂಟೆ ಮ್ಯಾಕ್ಸಿಮಮ್ ಸೆಕ್ಯುರಿಟಿ ಸೆಲ್ಲಿನಲ್ಲಿ ಕೂಡಿಟ್ಟಿರುತ್ತಾರೆ. + +ಈಗ ಇನ್ನೊಂದು ಯೋಚನೆ ದತ್ತನ ತಲೆ ತಿನ್ನತೊಡಗಿದೆ. ಡೇವ್ ತನ್ನ ತಂದೆಯೆಂದು ಎಲ್ಲರೂ ಹೇಗೆ ನಂಬುತ್ತಾರೆ? ತಾನು ಭಾರತೀಯನಂತೆ ಕಾಣುತ್ತೇನೆ, ಡೇವ್‌ನೂ ಹಾಗೆಯೇ ಕಾಣುತ್ತಾನಾ? ಹಾಗಾದರೆ ಡೇವ್ ಭಾರತೀಯನೇ ಇರಬಹುದೇ? ದತ್ತನಂತೂ ಡೇವ್‌ನನ್ನು ಎಂದೂ ನೋಡಿಯೇ ಇಲ್ಲ. ಇರಲಿಕ್ಕಿಲ್ಲ, ಮ್ಯಾಕ್ಸಿಕನ್ ಇರಬಹುದು, ಇಂಡಿಯನ್ ಎಂದು ಕಂದು ಚರ್ಮ ನೋಡಿ ಇವರು ತಿಳಿದಿರಬಹುದು. ಇಡೀ ಕಾರಾಗೃಹದ ಸಾವಿರಕ್ಕೂ ಹೆಚ್ಚು ಕೈದಿಗಳಲ್ಲಿ ಒಂದೇ ಒಂದು ಭಾರತೀಯ ಮುಖವೂ ದತ್ತನ ಕಣ್ಣಿಗೆ ಬಿದ್ದಿಲ್ಲ. ಫೆಡ್ರಿಕ್‌ನಿಂದ ಕಲಿತ ಇನ್ನೊಂದು ಪಾಠ ‘ಈ ಜಾಗದಲ್ಲಿ ಅವ ಬಿಳಿಯ ಇವ ಕರಿಯ ಇವ ಕಂದು ಇವ ಇಂಡಿಯನ್ ಹೀಗೆಲ್ಲ ಮಾತಾಡಬಾರದು, ಸಣ್ಣ ಮಾತುಗಳಿಗೂ ಹೆಣ ಬೀಳ್ತಾವೆ ಹೆಣ’ ಕೈದಿಗಳಲ್ಲಿ ಗುಂಪುಗಳಿವೆ, ಬಿಳಿಯ ಅಮೇರಿಕನ್ನರದೇ ಒಂದು ಗುಂಪು, ಕಪ್ಪು ಅಮೇರಿಕನ್ನರದು ಇನ್ನೊಂದು ಗುಂಪು, ಮೆಕ್ಸಿಕನ್ನರದು ಬೇರೆಯದೇ ಗುಂಪು, ೭೦ ವರ್ಷ ದಾಟಿದವರು ಮತ್ತೊಂದು ವರ್ಗದವರು, ತಮ್ಮದೇ ಕಾಲದ ಯಾವುದೋ ರಾಜಕೀಯ ಹರಟೆಯಲ್ಲಿರುತ್ತಾರೆ, ೨೦ ರ ತರುಣರು ತಮ್ಮಷ್ಟಕ್ಕೆ ಕುಪ್ಪಳಿಸುತ್ತಿರುತ್ತಾರೆ, ದತ್ತ ಎಲ್ಲರ ಬಾಯಲ್ಲಿ ನರ್ಡ್‌ ಅಂದರೆ ಕುಡುಮಿ. ಯಾವ ಗುಂಪಿನಲ್ಲಿಯೂ ಇವನಿಗೆ ಪ್ರವೇಶ ಇಲ್ಲ. ಎಲ್ಲರೂ ಇವನ ಡಿಗ್ರಿಗಳನ್ನು ಅಪಹಾಸ್ಯ ಮಾಡುವವರೇ. ಬೆಳಿಗ್ಗೆ ೮ ರಿಂದ ೯ ಗಂಟೆಯವರೆಗೆ ಕೈದಿಗಳಿಗೆ ಟೆಲಿಫೋನ್ ಮಾಡಲು ಸಿಗುತ್ತದೆ. ದತ್ತನಿಗೆ ಹಾಗೆ ಕರೆ ಮಾಡಿ ಮಾತನಾಡಲು ಯಾರೂ ಇಲ್ಲ. ತಾಯಿ ದೂರದ ಬೆಂಗಳೂರಿನಲ್ಲಿ ಒಂಟಿಯಾಗಿದ್ದಾಳೆ. ಡ್ಯಾಡಿ ತನ್ನ ಶಿಕ್ಷೆಯ ಸುದ್ದಿ ದಿನ ಪತ್ರಿಕೆಯಲ್ಲಿ ಓದಿ ಹೃದಯಾಘಾತದಿಂದ ಕುಸಿದು ಬಿದ್ದು ಅಲ್ಲಿಯೇ ಹೋಗಿಬಿಟ್ಟಿದ್ದಾನೆ, ಸ್ನೇಹಿತರು ಬಂಧುಗಳೆಲ್ಲ ಇವನಿಂದ ಅಂತರ ಕಾಯ್ದುಕೊಂಡಿದ್ದಾರೆ. ಹಿಂದೆ ಒಬ್ಬಳು ಗರ್ಲ್‌ಫ್ರೆಂಡ್ ಇದ್ದಳು. ಅವಳೊಂದಿಗೆ ಸಂಬಂಧ ಯಾವಾಗಲೋ ಕಡಿದು ಹೋಗಿದೆ. ಊಟ ತಿಂಡಿ ನಿದ್ದೆ ಎನ್ನುತ್ತ ಸಮಯ ಕಳೆದು ಹೋಗುತ್ತಿದೆ… ಒಮ್ಮೊಮ್ಮೆ ವೇಗವಾಗಿ.. ಒಮ್ಮೊಮ್ಮೆ ನಿಧಾನವಾಗಿ. ಆಯುಷ್ಯ ಸವೆದು ಹೋಗುತ್ತಿದ್ದು ದತ್ತ ಒಮ್ಮೊಮ್ಮೆ ಖಿನ್ನನಾಗುತ್ತಾನೆ, + +ಇಂತಹ ಖಾಲಿ ಖಾಲಿ ಜೈಲಿನ ಜೀವನದಲ್ಲಿ ಸಮ್ಮತಿಯ ಸಲಿಂಗ ಕಾಮ, ಹಸ್ತ ಮೈಥುನಗಳು ನಿತ್ಯ ಸತ್ಯಗಳಾಗಿವೆ. ಹೀಗಿದ್ದಾಗ ದತ್ತ ನೀರೀಕ್ಷಿಸುತ್ತಿದ್ದ ಆ ದಿನ ತನ್ನಷ್ಟಕ್ಕೆ ತಾನೇ ಬಂತು. ಅದು ಡೇವ್‌ನನ್ನು ನೋಡಿದ ವಿಶೇಷ ದಿನವೆಂದೇ ಹೇಳಬೇಕು, ಜೈಲಿನ ಆವರಣದ ಒಳಗಡೆ ಆಟದ ಬಯಲಿಗೆ ಹೋಗುವ ದಾರಿಯಲ್ಲಿದ್ದ ವಾಟರ್ ಫೌಂಟೇನಿನಲ್ಲಿ ಬಗ್ಗಿ ನೀರು ಕುಡಿಯುತ್ತಿದ್ದ ಡೇವ್ ಡ್ಯಾಡಿಯನ್ನು ದತ್ತ ನೋಡಿದ. ಡೇವ್ ಭಾರತೀಯನಂತೆ ಕಾಣುತ್ತಿದ್ದ, ದತ್ತ ಅಲ್ಲಿಗೆ ನಡೆದು ಡೇವ್ ಡ್ಯಾಡಿಯ ಕುರ್ಚಿಯ ಸಾಲಿನಲ್ಲಿದ್ದ ಕೊನೆಯ ಕುರ್ಚಿಯಲ್ಲಿ ಕೂತ. ಆತನೂ ದತ್ತನನ್ನು ಭಾರತೀಯನೆಂದು ಗುರುತಿಸಿದ್ದಕ್ಕೆ ಹೊರಬಂದ ಆತನ ಧ್ವನಿ ಸಾಕ್ಷಿಯಾಗಿತ್ತು. ‘ನಯಾ ಹೈ ಕ್ಯಾ?’ ಹಿಂದಿಯಲ್ಲಿ ಬಂದ ಪ್ರಶ್ನೆ. ಇಂಗ್ಲೀಷ್ ಸ್ಪ್ಯಾನಿಷ್‌ಗಳನ್ನು ಬಿಟ್ಟು ಬೇರೇನೂ ಕೇಳಿರದಿದ್ದ ಕಿವಿಯಲ್ಲಿ ನೀರು ಹೊಕ್ಕಂತಾಯಿತು. ದತ್ತ ಡೇವ್‌ನ ಎಡಗೈ ಮೇಲಿದ್ದ ರಬ್ಬರಿನ ನೀಲಿ ಬ್ಯಾಂಡ್ ಮೇಲೆ ಇಂಗ್ಲೀಷ್ ಅಕ್ಷರಗಳನ್ನು ನೋಡಿದ. ಡಿ-ಇ-ವಿ-ಎ ದೇವಾ ಈತನ ಹೆಸರು. ‘ಓಹ್’ ದತ್ತ ಕೇಳಿದ. ‘ಇಂಡಿಯಾ ಮೇ ಕಹಾ ಸೇ ಹೈ ಆಪ್ ?’ ನಿಮಿಷದ ಮೌನ. ‘ಸೌಥ್ ಮೇ ನಾಗಮಂಗಲ ಸೇ, ಓ ಥಾ ಹಮಾರಾ ಗಾಂವ್’ ‘ಅಯ್ಯೋ ನಮ್ಮ ಮಂಡ್ಯ ಜಿಲ್ಲೆ ನಾಗಮಂಗಲದವರಾ ಸಾರ್?’ ಅಚ್ಚ ಕನ್ನಡ ಪಲಕು ದತ್ತನ ನಾಲಿಗೆಯಿಂದ ಹರಿದಿತ್ತು. ದೂರದ ಪರದೇಶದಲ್ಲಿ ಇಬ್ಬರು ಒಂದೇ ಭಾಷೆಯ ದೇಶ ಬಾಂಧವರು ಎದುರು-ಬದುರಾದಾಗ ಅವರು ಬ್ಯಾಂಕ್ ಉದ್ಯೋಗಿ ಪ್ರಾಧ್ಯಾಪಕರಾಗಿರಲಿ, ಇಲ್ಲವೇ ಕಳ್ಳ ಕೊಲೆಗಡುಕರಾಗಿರಲಿ, ಆತ್ಮೀಯತೆಯ ಒಂದುತನದ ತಂತಿಗಳು ಹೇಗೆ ಮಿಡಿದು ಬಿಡುತ್ತದೆ! ಆ ಕಡೆಯಿಂದಲೂ ಅಚ್ಚಗನ್ನಡ ಪಲಕು ಬಂತು, ‘ಅದನ್ನೆಲ್ಲಾ ತೆಗೆದುಕೊಂಡು ಈಗ ಏನು ಮಾಡ್ತೀಯಾ ಬಿಡಪ್ಪ’ ಅನ್ನುತ್ತ ಎದ್ದು ನಡೆದ ದೇವಾ, ಕೆಲವು ದಿನಗಳಲ್ಲಿ ಗಲ್ಲುಗಂಬವನ್ನೇರಲಿದ್ದ ಕೈದಿ ಆತ. ಇನ್ನೇನು ನುಡಿದಾನು!… ಭಾನುವಾರ ಮುಂಜಾನೆ ವಾರ್ಡನ್‌ ದತ್ತನನ್ನು ಕರೆಸಿದರು, ಕೇಳಿದರು. ‘ಇಂಡಿಯನ್ ಕುಕಿಂಗ್ ಬರುತ್ತಿದೆಯೇನು ನಿನಗೆ?’ ನಾಳೆ ಒಬ್ಬ ಕೈದಿಗೆ ಮರಣದಂಡನೆಯಿದೆ. ನಮ್ಮ ನಿಯಮಗಳಂತೆ ಸಾಯುವ ಹಿಂದಿನ ದಿನ ಆತನ ಬಯಕೆಯಂತೆ ಅವನಿಷ್ಟದ ಲಾಸ್ಟ್ ಮೀಲ್ ಕೊಡಬೇಕು, ಈ ಖೈದಿಗೆ ಇಂಡಿಯನ್ ಊಟವೇ ಬೇಕಂತೆ, ಈ ದರಿದ್ರ ಊರಿನಲ್ಲಿ ಇಂಡಿಯನ್ ಊಟ ಎಲ್ಲಿ ಸಿಗುತ್ತದೆ? ಲಾಸ್ಟ್ ಊಟಕ್ಕಾಗಿ ಸ್ಯಾಂಕ್ಷನ್ ಇರುವುದು ೪೦ ಡಾಲರ್ ಮಾತ್ರ. ದೂರದೂರಿನಿಂದ ಏನಾದರೂ ತರಿಸಲು ಸಾಧ್ಯವಿಲ್ಲ, ನಮ್ಮನ್ನು ಪರೀಕ್ಷೆ ಮಾಡಲೆಂದೇ ವಕ್ಕರಿಸುತ್ತಾರೇನೋ ಇಂಥ ಬೋಳೀ ಮಕ್ಕಳು, ನಮ್ಮ ಕಿಚನ್ನಿನಲ್ಲಿ ಸಿಗುವ ಪದಾರ್ಥ ಉಪಯೋಗಿಸಿ ಏನಾದರೂ ಇಂಡಿಯನ್ ಫುಡ್ ಮಾಡಿಕೊಡಲು ನಿನ್ನಿಂದ ಆಗುತ್ತದೆಯೇನು? ಸಂಜೆ ನಾಲ್ಕಕ್ಕೆ ತಯಾರಿಸಬೇಕು ನೋಡು, ಇನ್ನೊಂದು ಕೆಲಸ ಮಾಡು, ಕಿಚನ್ನಿಗೆ ಹೋಗಿ ಅಡುಗೆಗೆ ಮತ್ತೇನೇನು ತರಿಸಬೇಕಾಗ್ತದೆ, ೨೦ ಡಾಲರ್ ಮಿಕ್ಕದಂತೆ ಐದು ಪದಾರ್ಥಗಳ ಲಿಸ್ಟು ಬರೆದು ಕೊಡು, ಪ್ರಿಸನ್ನಿನ ಗಾಡಿ ಸಿಟಿಗೆ ಹೊರಟಿದೆ, ಇಂಡಿಯನ್ ಸ್ಟೋರಿನಿಂದ ತರಿಸಿದರಾಯ್ತು’ + +ದತ್ತನಿಗೆ ಮರಣದಂಡನೆ ಕಡೆಗೆ ಹೆಜ್ಜೆಗಳನ್ನಿಡಲಿರುವ ಕೈದಿ ಯಾರೆಂದು ತಿಳಿದುಹೋಗಿತ್ತು. ಮಧ್ಯಾಹ್ನ ಎರಡೂವರೆಗೆ ದತ್ತ ಕಿಚನ್ನಿಗೆ ಹೊರಟ. ತಾನು ಬರೆದ ಲಿಸ್ಟಿನಲ್ಲಿ ಗೋಧಿ ಹಿಟ್ಟಿದ್ದರೆ ರಾಗಿ ಹಿಟ್ಟು ಬಂದಿತ್ತು… ತೊಗರಿ ಬೇಳೆಗೆ ಬದಲು ಹುರುಳಿ ಕಾಳು ಬಂದಿದ್ದವು. ಹರಿವೆ ಸೊಪ್ಪಿನ ಗೊಂಚಲು, ದತ್ತ ಒಂದು ಪಾತ್ರೆಯಲ್ಲಿ ಅಕ್ಕಿ ಬೇಯಲಿಟ್ಟು ಇನ್ನೊಂದು ಪಾತ್ರೆಯಲ್ಲಿ ಹುರುಳಿಕಾಳು ಕುದಿಯಲಿಟ್ಟ, ಶ್ಯಾವಿಗೆ ಹುರಿದ, ಹಾಲು ಬತ್ತಿಸಿ ಸಕ್ಕರೆ ಹಾಕಿದ, ಸೊಪ್ಪನ್ನು ತೊಳೆದು ಹೆಚ್ಚಿ ಈರುಳ್ಳಿಯ ಜೊತೆ ಎಣ್ಣೆಯಲ್ಲಿ ಒಗ್ಗರಣೆ ಹಾಕಿದ, ಹುರುಳಿ ಕಾಳು ಬೆಂದ ಮೇಲೆ ತಿಳಿ ಕಟ್ಟನ್ನು ಬೇರೆ ಬಸಿದಿಟ್ಟು ಬೆಂದ ಕಾಳನ್ನು ಪಲ್ಯಕ್ಕೆ ಸೇರಿಸಿದ, ಕಟ್ಟಿನ ಸಾರಿಗೆ ಸ್ವಲ್ಪ ಮಸಾಲೆ ಪೌಡರನ್ನು ಸೇರಿಸಿ ಬೆಳ್ಳುಳ್ಳಿಯ ವಗ್ಗರಣೆ ಹಾಕಿದ. ನುರಿತ ಅಡುಗೆ ಭಟ್ಟನಂತೆ ಅಂಗೈ ಮೇಲೆ ಸಾರಿನ ಹುಂಡು ಬೀಳಿಸಿಕೊಂಡು ರುಚಿ ನೋಡಿದ. ರಾಗಿ ಮುದ್ದೆ ತೊಳೆಸಿಟ್ಟ, ನೋಡ ನೋಡುತ್ತಲೇ ಇಂಡಿಯನ್ ಅಡುಗೆ ತಯಾರಾಗಿಬಿಟ್ಟಿತು. ಅಡುಗೆಯ ವಿಶಿಷ್ಟ ಪರಿಮಳ ಬಾಲ್ಯದ ಯೌವನದ ಯಾವು ಯಾವುದೋ ನೆನಪುಗಳನ್ನು ಹೊತ್ತು ತರುತ್ತಿತ್ತು. ಭಾರತೀಯ ತಿನಿಸೇಬೇಕೆಂದು ಹೇಳಿದ ದೇವ್ ಯಾವ ವಿಶಿಷ್ಟ ಪರಿಮಳದ ಯಾವ ನೆನಪನ್ನು ಬೇಡುತ್ತಿದ್ದಾನೆಂದು ಕಳವಳಗೊಂಡ, ಪ್ಲಾಸ್ಟಿಕ್ಕು ಪ್ಲೇಟು ಬಾಳೆಲೆಯಂತೆ ಅನಿಸಿತು. ಒಂದು ಮೂಲೆಯಲ್ಲಿ ಅನ್ನ ಬಡಿಸಿದ, ಪಕ್ಕಕ್ಕೆ ರಾಗಿ ಮುದ್ದೆಯಿಟ್ಟ. ಶ್ಯಾವಿಗೆ ಪಾಯಸ ಸುರಿದ, ಕೊನೆಯ ಖಾನೆಯಲ್ಲಿ ಬಟ್ಟಲಿಟ್ಟು ಅದರ ತುಂಬ ಸಾರು ಸುರಿದ.. + +ಕೊನೆಯ ಊಟದ ತಟ್ಟೆಯ ತಯಾರಿಯನ್ನು ಕತೆಗಾರ್ತಿ ವಿವರಿಸುತ್ತ ಹೋಗುವ ಶಬ್ದ ಶಬ್ದವೂ ಹೃದಯಸ್ಪರ್ಶಿಯಾಗುತ್ತ ಹೋಗುತ್ತದೆ, ದೇವಾ ನ ಜೀವನದಂತೆ ದತ್ತನ ಬದುಕೂ ಮುಗಿದಿದೆ. ಪರದೇಶದಲ್ಲಿ ಬಂಧಿಗಳಾಗಿದ್ದಾರೆ. ದೂರದ ತನ್ನೂರಿನ ಯಾವು ಯಾವುದೋ ಹಳೆಯ ನೆನಪುಗಳು ಮೂಗಿನಲ್ಲಿವೆ. ಹಿನ್ನೆಲೆಯಲ್ಲಿ ದೊಡ್ಡ ಜೈಲು, ಹಿನ್ನೆಲೆಯಲ್ಲಿ ಅನುಭವಿಸಲೇಬೇಕಾದ ಪ್ರಾರಬ್ಧ ಕರ್ಮ, ಶಿಕ್ಷೆ, ದೇವಾ-ದತ್ತರ ಸಂಬಂಧ ಖಂಡ ಖಂಡಗಳನ್ನು ಕಡಲುಗಳನ್ನು ಸುತ್ತಿ ಬಂದ ಸಂಬಂಧ.. ಒಂದು ದಿನದ ಒಂದು ಕ್ಷಣದ ಒಂದು ಊಟದ ಋಣ. + +ಈ ಸಂಕಲನದ ಎಲ್ಲ ಕತೆಗಳೂ ಮನುಷ್ಯ ಸಂಬಂಧಗಳನ್ನು ಪರಿಶೀಲನೆಗೆ ಒಡ್ಡುವ ಕಥೆಗಳಾಗಿವೆ. ಸಂಬಂಧಗಳು ಎಷ್ಟು ಗಟ್ಟಿಯಾಗಿವೆ? ಎಷ್ಟು ಸುಳ್ಳಾಗಿವೆ? ಸಾಮಾಜಿಕ ಸಾಂಸ್ಕೃತಿಕ ಮೌಲ್ಯಾಂತರಗಳಿಗೆ ಒಳಗಾದ ಭಾರತೀಯ ಹೆಣ್ಣು ಎದುರಿಸುವ ಅನುಭವಗಳು ಈ ಕತೆಗಳಲ್ಲಿ ಹಾಸು ಹೊಕ್ಕಾಗಿವೆ. ನಮ್ಮ ತಲೆಮಾರು ಸಮುದ್ರದಾಚೆಯ ಜೀವನವನ್ನು ಶ್ರೀ ಅನಂತಮೂರ್ತಿಯವರ, ಶ್ರೀ ಶಾಂತಿನಾಥ ದೇಸಾಯರ ಕಣ್ಣುಗಳಿಂದ ನೋಡಿತ್ತು. ಶ್ರೀಮತಿ ಕಾವ್ಯಾ ಕಡಮೆಯವರು ತಮ್ಮ ನೋಟದಲ್ಲಿ ಅಪೂರ್ವವಾದ ಸಮತೋಲನವನ್ನು ಸಾಧಿಸಿದ್ದಾರೆ. + + + +ಹೊಸ ಶತಮಾನದ ಹೊಸ ತಲೆಮಾರಿನ ಯುವ ಲೇಖಕರಿಂದ ಹೊಸ ಸಾಹಿತ್ಯ ಯುಗದ ಸೃಷ್ಟಿಯನ್ನು ನಿರೀಕ್ಷಿಸುತ್ತಿರುವ ಸಾಹಿತ್ಯಾಸಕ್ತರು ತಪ್ಪಿಸಿಕೊಳ್ಳದೇ ಓದಲೇಬೇಕಾದ ಕೃತಿ ಮಾಕೋನ ಏಕಾಂತ. + +ವ್ಯಾಸ ದೇಶಪಾಂಡೆ ಮೂಲತಃ ಧಾರವಾಡ ಜಿಲ್ಲೆ ನವಲಗುಂದದವರು. ಧಾರವಾಡದಲ್ಲಿ ವಿದ್ಯಾಭ್ಯಾಸ ಮುಗಿಸಿ, 1977 ರಲ್ಲಿ ಕೆ.ಎ.ಎಸ್. ಪರೀಕ್ಷೆ ತೇರ್ಗಡೆ ಹೊಂದಿ ನಂತರ ರಾಜ್ಯ ಸರ್ಕಾರದ ವಿವಿಧ ಹುದ್ದೆಗಳಲ್ಲಿ ಕಾರವಾರ, ಬೆಳಗಾವಿ, ಬೀದರ, ಚಿತ್ರದುರ್ಗ, ಮೈಸೂರ ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ಬಳಿಕ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. 1.ಮುಂದೇನ ಸಖಿ ಮುಂದೇನ 2.ಯಾರಿಗೂ ಹೇಳೋಣ ಬ್ಯಾಡ 3.ಮಂಡೋದರಿ ರಾವಣಾಯಣ 4. ಇವ ನಮ್ಮವ 5.ಆಲಯವು ಬಯಲೊಳಗೆ(ಗದುಗಿನ ಭಾಂಡಗೆ ಪ್ರಶಸ್ತಿ ಪಡೆದ ಕೃತಿ) 6.ಅಜ್ಜಾತಪರ್ವ 7.ಅಂಬಾ ವಿಜಯ ಇವರು ರಚಿಸಿದ ನಾಟಕ ಕೃತಿಗಳು. \ No newline at end of file diff --git a/Kenda Sampige/article_237.txt b/Kenda Sampige/article_237.txt new file mode 100644 index 0000000000000000000000000000000000000000..c2de95decd81b5c6fc44235b272b6c0068e6d5cc --- /dev/null +++ b/Kenda Sampige/article_237.txt @@ -0,0 +1,21 @@ + + +ಕನ್ನಡ ಸಾಹಿತ್ಯದಲ್ಲಿ ಶಿವಕೋಟ್ಯಾಚಾರ್ಯನಿಂದ ರಚಿತವಾದ ‘ವಡ್ಡಾರಾಧನೆ’ಗೆ ಒಂದು ವಿಶಿಷ್ಟ ಸ್ಥಾನವಿದೆ. ಇದು ಕನ್ನಡದಲ್ಲಿ ಇದುವರೆಗೆ ಲಭ್ಯವಾದ ಮೊತ್ತಮೊದಲ ಗದ್ಯ ಗ್ರಂಥವಾಗಿದೆ. ಜೈನ ಧರ್ಮದ ಗಹನ ತತ್ವವನ್ನುಹೇಳುವ ಹತ್ತೊಂಭತ್ತು ಕಥೆಗಳಿಂದ ಕೂಡಿದ ಈ ಕೃತಿಯನ್ನು ಕಾಲೇಜಿನ ಪಾಠವಾಗಿ ಇಲ್ಲವೇ ಕನ್ನಡ ಮಾಧ್ಯಮದಲ್ಲಿ ಸಿವಿಲ್ ಸರ್ವಿಸ್ ತೆಗೆದುಕೊಂಡವರಿಗೆ ಓದಲೇಬೇಕಾದದ್ದರಿಂದ ಇದು ಅಕಾಡೆಮಿಕ್ ಆಗಿಯೇ ಉಳಿದಿದೆಯೇ ಹೊರತು ಸಾಮಾನ್ಯ ಓದುಗನಿಗೆ ಕಬ್ಬಿಣದ ಕಡಲೆಯಾಗಿಬಿಟ್ಟಿದೆ. ಕಥೆಗಳ ಸಾರಾಂಶವನ್ನು ಓದುವುದು ಬೇರೆ, ಕಥೆಗಳ ಆಂತರ್ಯವನ್ನು ಕೆಡಿಸದಂತೆ ಓದಿ ರಸವನ್ನು ಆಸ್ವಾಧಿಸುವುದು ಬೇರೆ. ಬಿಡಿಬಿಡಿಯಾಗಿ ಇಲ್ಲಿರುವ ಕಥೆಗಳನ್ನು ಅಲ್ಲಲ್ಲಿ ಓದಿರಬಹುದಾದರೂ ಒಂದೇ ಕಡೆ ಈ ಕಥೆಗಳನ್ನು ಓದಿ ಅದರಲ್ಲಿರುವ ಪ್ರಾಕೃತದ ಗಾಹೆಗಳ ಅರ್ಥವನ್ನು ತಿಳಿದುಕೊಂಡು ಕಥಾ ಪ್ರವೇಶ ಮಾಡಿದಾಗ ಆಗುವ ಆನಂದದ ಅನುಭವ ವಿಶಿಷ್ಟವಾದುದು. ರಾಮಾಯಣ ಮಹಾಭಾರತಗಳಂತೆ ಮೂಲ ಮತ್ತು ಸರಳ ಕನ್ನಡದಲ್ಲಿ ಅನೇಕ ಕೃತಿಗಳು ಲಭ್ಯವಿದೆ. ಅದೇ ರೀತಿ ಕುಮಾರವ್ಯಾಸ ಭಾರತವನ್ನು ಪಂಡಿತ ಎ. ಆರ್. ಕೃಷ್ಣಶಾಸ್ತ್ರಿಗಳು ಕನ್ನಡಕ್ಕೆ ಕೊಟ್ಟಿದ್ದಾರೆ. ಇದರ ಗಮಕ ಮತ್ತು ಅರ್ಥವನ್ನು ಕನ್ನಡ ಗಣಕ ಪರಿಷತ್ತು ಸಿಡಿಯಲ್ಲಿ ಸುಂದರವಾಗಿ ತಂದಿದೆ. ಅದೇ ರೀತಿ ಜೈಮಿನಿಯ ಸರಳ ಕನ್ನಡ ಅನುವಾದವೂ ಲಭ್ಯವಿದೆ. ಕನ್ನಡ ಸಾಹಿತ್ಯದ ಅಭ್ಯಾಸಿ ಮತ್ತು ಅಸ್ವಾದಿಗಳಿಗೆ ವಡ್ಡಾರಾಧನೆಯ ಕುರಿತು ಅರಿಯಬೇಕಾದರೆ ಇಂತಹ ಕೊರತೆಯೊಂದಿತ್ತು. ಈ ಕೊರತೆಯನ್ನು ಕನ್ನಡದ ಪ್ರಮುಖ ಪ್ರಕಾಶನ ಸಂಸ್ಥೆಯಾದ ಹಂಪಿಯ ‘ಯಾಜಿ ಪ್ರಕಾಶನ’ ದವರು ಕಬ್ಬಿನಾಲೆ ಡಾ. ವಸಂತ ಭಾರದ್ವಾಜರಿಂದ ಸರಳ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. + +ಕನ್ನಡ ಸಾಹಿತ್ಯದಲ್ಲಿ ಇದೊಂದು ಮಹತ್ತರವಾದ ಸಂಗತಿಯಾಗುವುದು ಕೇವಲ ಅನುವಾದ ಎನ್ನುವ ಕಾರಣಕ್ಕಲ್ಲ. ಸುಮಾರು ಕ್ರಿ.ಶ. 940ರ ಕಾಲದ ಕನ್ನಡಭಾಷೆ ಮತ್ತು ಪ್ರಾಕೃತ ಗಾಹೆಗಳನ್ನು ಸರಳ ಗನ್ನಡದಲ್ಲಿ ಕವಿಯ ಮೂಲ ಆಶಯಕ್ಕೆ ಒಂದಿನಿತೂ ಊನಬರದ ರೀತಿಯಲ್ಲಿ ಅನುವಾದಿಸಿರುವುದಕ್ಕೆ. ಸನತ್ಕುಮಾರ ಚಕ್ರವರ್ತಿಯ ಕಥೆ ಎನ್ನುವಲ್ಲಿ ಬರುವ ಗಾಹೆ ಹೀಗಿದೆ:ಕಚ್ಚು ಜರ ಖಾಸ ಸೋಸೊಂ ಭತ್ತಚ್ಚದಿ ಅಚ್ಚಿಕುಚ್ಚಿದುಕ್ಖಾಣೆ/ಅ(ಧಿಯಾಸಿ)ದಾಣಿ ಸಮ್ಮಂ ಸಣಂಕುಮಾರೇಣ ವಾಸಸದಂ/ಇದನ್ನು ಭಾರದ್ವಾಜರು “ಚರ್ಮರೋಗ, ವೃದ್ಧಾಪ್ಯ, ಕೆಮ್ಮು, ವಾಂತಿ, ಭೇದಿ, ಕಣ್ಣುಬೇನೆ ಮೊದಲಾದ ವಿವಿಧ ಬೇನೆಗಳನ್ನು ನೂರುವರ್ಷ ಸಹಿಸಿಕೊಂಡು ಸನತ್ಕುಮಾರ ಚಕ್ರವರ್ತಿ ಋಷಿಯು ಉತ್ತಮವಾದ ಪದವಿಯನ್ನು ಪಡೆದನು” ಎಂದು ಅನುವಾದಿಸುವಾಗ ಮೂಲ ಸೊಗಡನ್ನು ಹೊಸಗನ್ನಡದ ತಿಳಿವನ್ನೂ ಶಬ್ದಗಳ ಮಿತಿಯ ನಡುವೆಯೇ ತೋರಿಸುವುದನ್ನು ಕಾಣಬಹುದು. ಹಳೆಗನ್ನಡದ ಮೂಲದಲ್ಲಿ ಬಂದಿರುವ ಸಂದಿಗಳನ್ನು ಸರಳವಾದ ಭಾಷೆಯಲ್ಲಿ ಅನುವಾದಿಸಿರುವದನ್ನು ಮೆಚ್ಚಲೇ ಬೇಕು. + + + +ಅಗತ್ಯವಿರುವಲೆಲ್ಲ ಅಡಿಟಿಪ್ಪಣಿಗಳ ಮೂಲಕ ಮೂಲದ ಸ್ವಾದವನ್ನೂ ಸವಿಯುವ ಅವಕಾಶವನ್ನೂ ಒದಗಿಸಿದ್ದಾರೆ. ಯಕ್ಷಗಾನ ಮತ್ತು ಅವಧಾನ, ಈ ಎರಡೂ ಪ್ರಕಾರಗಳಲ್ಲಿ ಮಹತ್ವದ ಸಾಧನೆಗೈದ ಲೇಖಕರ ಅನುಭವ ಇಲ್ಲಿ ಸುಂದರವಾಗಿ ಮೂಡಿಬಂದಿದೆ. ವಡ್ಡಾರಾಧನೆ ಪ್ರಾಚಿನ ದೃಷ್ಟಿಯಿಂದ ಮಾತ್ರವಲ್ಲ ಸಾಹಿತ್ಯಕ, ಸಾಂಸ್ಕೃತಿಕ, ಸಾಮಾಜಿಕ, ಐತಿಹಾಸಿಕ ಅಂಶಗಳಿಂದಲೂ ಮಹತ್ವದ ಗ್ರಂಥ. ಹತ್ತೊಂಬತ್ತು ಜೈನ ಮಹಾಮುನಿಗಳ ಅನುಸರಿಸಬೇಕಾದ ತತ್ವಗಳಾದ- ಉಪಸರ್ಗ, ಪರೀಷಹ, ತಪಶ್ಚರಣೆ, ಬಾಹ್ಯಾಭ್ಯಂತರ ಪರಿಗ್ರಹ, ಇಂದ್ರಿಯ ನಿಗ್ರಹ, ಚಿತ್ತಸ್ಥರ್ಯ, ಸಮತ್ವೀಭಾವ, ಕ್ಷಮಾಗುಣ, ಸಂನ್ಯಾಸ ದೀಕ್ಷೆ, ಕರ್ಮಕ್ಷಯಸಾಧನೆ, ಪ್ರಾಯೋಪಗಮನ ಮೋಕ್ಷಸಿದ್ಧಿ ಮುಂತಾದವುಗಳನ್ನು ವಿವಿಧ ಕಥೆಗಳಮೂಲಕ ಆಡುಭಾಷೆಯಲ್ಲಿ ಇಲ್ಲಿ ಓದಬಹುದಾಗಿದೆ. + +ವೈದಿಕ ಮತ್ತು ಜೈನ ಮತಗಳ ನಡುವಿನ ತಾತ್ವಿಕ ಸಂಘರ್ಷ, ಕರ್ಮ ಮತ್ತು ಪುನರ್ಜನ್ಮಗಳಿಗೆ ಈ ಎರಡೂ ಮತಗಳ ನಡುವಿನ ಮೂಲಭೂತವಾದ ಅಂತರಗಳನ್ನು ಅರಿಯುಲು ಈ ಗ್ರಂಥ ಸಹಕಾರಿ. ಸುಕುಮಾರ ಸ್ವಾಮಿಯ ಕಥೆಯಲ್ಲಿ ಬರುವ ಸೂರ್ಯಮಿತ್ರ ಭಟ್ಟಾರರು ಮತ್ತು ಸೋಮಶರ್ಮನ ನಡುವಿನ ಸಂವಾದದಲ್ಲಿ ಬರುವ ಸಂಭಾಷಣೆಯನ್ನು ಅಷ್ಟೇ ಸಹಜವಾಗಿ ಇಲ್ಲಿ ಅನುವಾದಿಸಲಾಗಿದೆ. ‘ಅಬ್ರಹ್ಮಣ್ಯಂ ಭೋ, ಅಬ್ರಹ್ಮಣ್ಯಂ ಭೋ’ ಎನ್ನುತ್ತಾ ಸೋಮಶರ್ಮ ಕೋಗುತ್ತಾ ರಾಜನಿಗೆ ದೂರುಕೊಡುವ ಸನ್ನಿವೇಶದಲ್ಲಿ ಮೂಲದ ಸೊಗಡನ್ನು ಬಿಗಿಯಾಗಿ ಆದರೆ ಅದರ ತಿಳಿವನ್ನು ಅದರ ಬನಿ ಕೆಡದಂತೆ ಕೊಡುವರೀತಿ ಅನುವಾದಕರಿಗೊಂದು ಪಾಠದಂತಿದೆ. ವಡ್ಡಾರಾಧನೆಯಲ್ಲಿ ಬರುವ ಜನಜೀವನ, ಜಾತಿವ್ಯವಸ್ಥೆ, ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ಗ್ರಾಮ ಮತ್ತು ಪಟ್ಟಣದ ವರ್ಣನೆ, ತಿಂಡಿತಿನಿಸುಗಳು, ಬಹು ಮಹಡಿ ಕಟ್ಟಡದ ಬೀದಿಗಳು, ವೇಶ್ಯೆಯರ ಬೀದಿಯವರ್ಣನೆ, ಅಂಗಡಿ ಮುಂಗಟ್ಟಿಗಳು ಇವೆಲ್ಲಾ ಆ ಕಾಲದ ಒಂದು ವ್ಯವಸ್ಥೆಯನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತದೆ. ಇವುಗಳನ್ನೆಲ್ಲಾ ಅನುವಾದಿಸಿರುವಲ್ಲಿ ಮೂಲದ ಶಬ್ಧದ ಮಿತಿಯನ್ನು ದಾಟದಿರುವದನ್ನು ಕಾಣಬಹುದಾಗಿದೆ. ಭಾರದ್ವಾಜರು ಇಲ್ಲಿ ಭಾಷೆಯನ್ನು ದುಡಿಸಿಕೊಳ್ಳುವ ರೀತಿ ಪ್ರಾಚೀನ ಕವಿ ದಂಡಿ ಹೇಳುವವಾಚಾಮೇವ ಪ್ರಸದೇನ ಲೋಕ ಯಾತ್ರಾ ಪ್ರವರ್ತತೆ(ಮಾತಿನ ಅನುಗ್ರಹದ ಮಾತ್ರದಿಂದಲೇ ಲೋಕದ ವ್ಯವಹಾರ ಸಾಗುತ್ತಿದೆ) ರೀತಿಗೆ ಅನುಗುಣವಾಗಿದೆ. + +ಕಾಲಘಟ್ಟಗಳಲ್ಲಿ ಶಾಸ್ತ್ರವೆನ್ನುವದು ಕೇವಲ ಶಬ್ದಗಳ ಅರ್ಥೈಸುವಿಕೆಯಲ್ಲಿ ತೊಡಗಿದಾಗ ಇದನ್ನು ಅದನ್ನೇ ತನ್ನ ಪ್ರತಿಭೆಗಳ ಮೂಲಕ ಕಾವ್ಯವನ್ನಾಗಿಸಿದ್ದು ಜೈನ ಸಾಹಿತ್ಯಗಳ ವೈಶಿಷ್ಟ್ಯವೆನ್ನಬಹುದು. ಶಾಸ್ತ್ರದ ಗುರಿ ತತ್ವ ಪ್ರತಿಪಾದನೆ, ಇದನ್ನ ಅನುಸರಿಸಲು ಪ್ರತ್ಯಕ್ಷ, ಅನುಮಾನ ಮುಂತಾದ ಪ್ರಮಾಣಗಳ ಮೂಲಕ ಒರೆಹಚ್ಚಿನೋಡುವ ಹೊತ್ತಿನಲ್ಲಿ ಇವೆಲ್ಲಾ ಜನಸಾಮಾನ್ಯರಿಂದ ದೂರವಾಗಿ ಪಂಡಿತವಲಯಗಳಲ್ಲಿ ಹರಳುಗಟ್ಟಿ ನಿಂತವು. ಇಂತಹ ಹೊತ್ತಿನಲ್ಲಿ ಇಲ್ಲೆಲ್ಲಾ ಅರಳಿದ್ದು ಕಾವ್ಯವೆಂಬ ರಸಾನುಭವಗಳು. ತೀ. ನಂ. ಶ್ರೀ.ಯವರು ಹೇಳುವಂತೆ ಇಲ್ಲಿ ಅನುಭವಕ್ಕೆ ಅನುಭವಒಂದೇ ಪ್ರಮಾಣ. ಕವಿರಾಜ ಮಾರ್ಗದಂತಹ ಎತ್ತರದ ಕೃತಿಯ ಅನಂತರದಲ್ಲಿ ಬಂದ ಮೊತ್ತ ಮೊದಲ ಗದ್ಯ ‘ವಡ್ಡಾರಾಧನೆ’ಯನ್ನು ಓದಬೇಕೆನ್ನುವವರಿಗೆ ಸಿಕ್ಕ ಅಮೂಲ್ಯ ಸಂಪತ್ತು ಸರಳ ವಡ್ಡಾರಾಧನೆ. + + + +ಬೆನ್ನುಡಿಯಲ್ಲಿ ಬಹುಶ್ರುತ ವಿದ್ವಾಂಸರಾದ ಡಾ. ಟಿ. ವಿ. ವೆಂಕಟಾಚಲ ಶಾಸ್ತ್ರಿಗಳು ಹೇಳಿರುವಂತೆ “ಹಳಗನ್ನಡದ ಗದ್ಯಕಥೆಯೊಂದರ ಬಗೆ ಭಾವಗಳ, ಭಾಷೆ ಶೈಲಿಗಳ, ವಸ್ತು ಪಾತ್ರಗಳ ಸೊಗಸು ತಿಳಿಯಬೇಕೆನ್ನುವವರಿಗೆ ಇದರಿಂದ ನಡೆಯುವ ದಾರಿ ಸುಲಭ ಎನ್ನುವಂತಾಗಿದೆ” ಎಂದು ಕೊಂಡಾಡಿರುವದು ಈ ಕೃತಿಗೆ ಕೊಟ್ಟ ಪಾರಿತೋಷಕವಾಗಿದೆ. ಈ ಮೂಲಕ ಯಾಜಿ ಪ್ರಕಾಶನ ಕನ್ನಡ ಸಾಹಿತ್ಯಕ್ಕೆ ಭಾರಾದ್ವಾಜರ ಮೂಲಕ ಕೊಟ್ಟ ಅಧ್ಯಯನಪೂರ್ಣ ಕೃತಿ ಎನ್ನುವದರಲ್ಲಿ ಯಾವ ಅನುಮಾನವೂ ಇಲ್ಲ. + + + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_238.txt b/Kenda Sampige/article_238.txt new file mode 100644 index 0000000000000000000000000000000000000000..de282a1dba08c4fa03fe97d903d1adb3253f835e --- /dev/null +++ b/Kenda Sampige/article_238.txt @@ -0,0 +1,51 @@ +ಚರಿತ್ರೆ ಎನ್ನುವುದು ದೊರೆತ ಆಕರ ಸಾಮಗ್ರಿಗಳಲ್ಲಿನ ಆಯ್ಕೆ ಮತ್ತು ನಿರಾಕರಣದ ಆಧಾರದ ಮೇಲೆ ಕಾಲಾನುಕ್ರಮಣಿಕೆಯಲ್ಲಿ ಮಂಡಿತಗೊಳ್ಳುವ ಕಥನವಾಗಿದೆ. ಇಂತಹ ಕಥನಗಳಲ್ಲಿ ಮೊದಲು ಬಳಕೆಗೊಂಡ ಆಕರ ಸಾಮಗ್ರಿಗಳು ಲಿಖಿತವಾದವು ಗಳಾಗಿರುತ್ತಿದ್ದವು. ಮೌಖಿಕ ಕಥನಗಳನ್ನು ಆಕರಗಳನ್ನಾಗಿಸಿಕೊಳ್ಳುವ ಆಡಿಯೋ, ವಿಡಿಯೋಗಳಂತಹ ತಂತ್ರಜ್ಞಾನದ ತಿಳುವಳಿಕೆ ಇಲ್ಲದೆ ಇದ್ದಾಗ ಮೌಖಿಕ ಕಥನಗಳು ಚರಿತ್ರೆ ರಚನಾಶಾಸ್ತ್ರದಲ್ಲಿ ಬಳಕೆಗೊಳ್ಳುತ್ತಿದ್ದಿಲ್ಲ. ಯಾವಾಗ ಆಡಿಯೋ, ವಿಡಿಯೋಗಳಂತಹ ತಂತ್ರಜ್ಞಾನದ ಸೌಲಭ್ಯಗಳು ದೊರೆಯಲು ಪ್ರಾರಂಭಿಸಿದವೋ ಅಂದಿನಿಂದ ಮೌಖಿಕ ಆಕರಗಳು ಚರಿತ್ರೆಯ ಬರವಣಿಗೆಯಲ್ಲಿ ಬಳಕೆಗೊಳ್ಳತೊಡಗಿದವು. ಆದರೆ ಲಿಖಿತ ಆಕರಗಳಿಗೆ ದೊರೆತ ಆದ್ಯತೆ ಮತ್ತು ಮಾನ್ಯತೆಗಳು ಮೌಖಿಕ ಆಕರಗಳಿಗೆ ದೊರೆಯಲಿಲ್ಲ. ಜನಪದ ಕಥನಗಳಲ್ಲಿ ಚರಿತ್ರೆಗಳು ಇರುವುದಿಲ್ಲ ಎಂದಲ್ಲ. ಜನಪದ ಕಥನಗಳು ಚರಿತ್ರೆಯನ್ನು ಕಟ್ಟಲು ಅನುಸರಿಸುವ ನಿಲುವುಗಳೇ ಬೇರೆ, ಚರಿತ್ರೆ ರಚನಾ ಶಾಸ್ತ್ರವು ಚರಿತ್ರೆಯನ್ನು ಕಟ್ಟಲು ಅನುಸರಿಸುವ ನಿಯಮಗಳೇ ಬೇರೆ. + +ಜನಪದ ಕಥನಗಳು ಚರಿತ್ರೆಯ ರಚನಾಶಾಸ್ತ್ರದ ನಿಯಮದಂತೆ ದಿನಾಂಕ, ಇಸ್ವಿಗನುಗುಣವಾಗಿ ಚರಿತ್ರೆಯನ್ನು ಹೇಳುವುದಿಲ್ಲ. ಬದಲಾಗಿ ಬಾಲ್ಯ, ಯೌವ್ವನ, ಮುಪ್ಪು, ಸಾವಿನಂತಹ ಘಟ್ಟಗಳ ಮೂಲಕವೋ ಹುಡುಗಿ, ಹೆಂಡತಿ, ಅಮ್ಮ, ಅಜ್ಜಿ ಎನ್ನುವ ಪಾತ್ರಗಳ ಬೆಳವಣಿಗೆಗಳ ಮೂಲಕವೋ, ಮಾಸಗಳ ಮೂಲಕವೋ, ಋತುಗಳ ಮೂಲಕವೋ ರಾತ್ರಿ-ಹಗಲುಗಳ ಮೂಲಕವೋ, ಇಲ್ಲವೇ ಮಳೆಗಾಲ, ಚಳಿಗಾಲಗಳ ಮೂಲಕವೋ ಜನಪದ ಕಥನಗಳು ಚರಿತ್ರೆಯನ್ನು – ಹೆಣೆಯುತ್ತಿರುತ್ತವೆ. ಮೊದಲು ಸಾವಿನ ಚಿತ್ರಣ ನೀಡಿ ನಂತರ ಹಿಮ್ಮಿಂಚಿನ ರೀತಿಯಲ್ಲಿ ಹುಟ್ಟು, ಬಾಲ್ಯ, ಯೌವ್ವನ, ಮುಪ್ಪು ಇವುಗಳ ಕಾಲಾನುಕ್ರಮಣಿಕೆಯಲ್ಲಿ ಜನಪದ ಕಥನಗಳು ರೂಪುಗೊಂಡಿರಬಹುದು. ಅಥವಾ ಹುಟ್ಟು, ಬಾಲ್ಯ, ಯೌವ್ವನ, ಮುಪ್ಪು ಈ ಸರಳ ರೇಖೆಯಲ್ಲಿ ಜನಪದ ಕಥನಗಳು ರೂಪುಗೊಂಡಿರಬಹುದು. ಒಟ್ಟಾರೆಯಾಗಿ ಜನಪದ ಕಥನಗಳ ನೇಯ್ಗೆಯಲ್ಲಿ ವ್ಯತ್ಯಾಸಗಳು ಕಂಡುಬಂದರೂ ಅವುಗಳು ಒಂದು ಕಾಲಾನುಕ್ರಮಣಿಕೆಯಲ್ಲಿ ಹೆಣೆದುಕೊಂಡಿರುತ್ತವೆ. ನಿರೂಪಕಿಯರು ಯಾವ, ಯಾವ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಂಡಿರುತ್ತಾರೆ ಎನ್ನುವುದರ ಮೇಲೆ ಚಾರಿತ್ರಿಕ ಕಥನಗಳು ನಿರೂಪಣಗೊಳ್ಳುತ್ತಿರುತ್ತವೆ. ಅವರ ಈ ನೆನಪು ಕೂಡ ಸತ್ಯ ಅಲ್ಲ. ಅದು ಕೂಡ ಸಮಯದ ಅಂತರ ಸಂದರ್ಭ, ಸಂಪ್ರದಾಯ, ಆಚರಣೆ, ಮನರಂಜನೆ ಮುಂತಾದ ಸನ್ನಿವೇಶಗಳಿಗೆ ಅನುಗುಣವಾಗಿ ನಿರೂಪಣೆಗೊಳ್ಳುತ್ತಿರುತ್ತದೆ. ಹಾಗೆಯೇ ಚರಿತ್ರೆ ರಚನಾಶಾಸ್ತ್ರವು ಕಥನವನ್ನು ಹೆಣೆಯಲು ಅನೇಕ ನಿಯಮಗಳನ್ನು ರೂಪಿಸಿರುತ್ತದೆ. ಈ ನಿಯಮಗಳ ಅನ್ವಯದಡಿಯಲ್ಲಿಯೇ ಚರಿತ್ರೆಯ ಬರಹಗಳು ರೂಪಗೊಳ್ಳುತ್ತವೆ. + +(ಡಾ. ಶೈಲಜ ಇಂ. ಹಿರೇಮಠ) + +ಹೀಗೆ ಚರಿತ್ರೆ ರಚನಾಶಾಸ್ತ್ರದ ನಿಯಮಗಳಡಿಯಲ್ಲಿ ಚಾರಿತ್ರಿಕ ಕಥನಗಳು ರೂಪುಗೊಳ್ಳುತ್ತಿದ್ದರೂ, ಅದು ದೊರೆತ ಆಕರ ಸಾಮಗ್ರಿಗಳ ಆಯ್ಕೆ ಮತ್ತು ನಿರಾಕರಣದ ರಾಜಕಾರಣವನ್ನು ಅವಲಂಬಿಸಿರುತ್ತದೆ. ದೊರೆತ ಆಕರ ಸಾಮಗ್ರಿಗಳು ವಸ್ತುಸ್ಥಿತಿಯನ್ನು ಹೇಳಬಹುದು, ಹೇಳದೇ ಹೋಗಬಹುದು. ಆದರೆ ಹೀಗೆ ನಡೆದಿದೆ ಎಂದು ಹೇಳಲ್ಪಟ್ಟ ಘಟನೆಗಳಿಗೆ ಉಲ್ಲೇಖಗಳಾಗಿ ನಿಂತುಕೊಂಡಿರುತ್ತವೆ. ಹೀಗಾಗಿ ಚರಿತ್ರೆಯ ಕುರಿತ ಬರಹಗಳಾಗಲಿ, ಜನಪದ ಕಥನಗಳಾಗಲಿ ನಡೆದುಹೋದ ಘಟನೆಗಳನ್ನು ಯಥಾವತ್ತಾಗಿ, ಸತ್ಯವಾಗಿ ದಾಖಲಿಸುತ್ತಿರುತ್ತವೆ ಅಥವಾ ನಿರೂಪಿಸುತ್ತಿರುತ್ತವೆ ಎಂದು ಹೇಳಲಾಗುವುದಿಲ್ಲ. ನಡೆದುಹೋದ ಘಟನೆಗಳಲ್ಲಿ ಅಥವಾ ಇವುಗಳನ್ನು ಕುರಿತು ದೊರೆಯುವ ಆಕರಗಳಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎನ್ನುವುದರ ಮೇಲೆ ಚರಿತ್ರೆಕಾರರ ಬರಹಗಳು, ಜನಪದ ಕಥನಗಳು ನಿರೂಪಣೆಗೊಳ್ಳುತ್ತಿರುತ್ತವೆ. ಇಂತಹ ಚಾರಿತ್ರಿಕ ಬರಹಗಳು, ಜನಪದ ಕಥನಗಳು ನಡೆದುಹೋದ ಘಟನೆಗಳ ಆಂಶಿಕ ಭಾಗವನ್ನು ಬರಹಗಾರರ ಇಲ್ಲವೆ ನಿರೂಪಕಿಯರ ನಿಲುಮೆಗನುಗುಣವಾಗಿ ಹೇಳುತ್ತಿರುತ್ತವೆ. ಬರಹಗಾರ್ತಿಯರ ಇಲ್ಲವೆ ನಿರೂಪಕಿಯರ ಆಯ್ಕೆ ಮತ್ತು ನಿರಾಕರಣದ ಮಧ್ಯದಲ್ಲಿ ರೂಪ ಪಡೆಯುವ ಬರಹಗಳು ಇಲ್ಲವೆ ಜನಪದ ಕಥನಗಳು ‘ವಾಸ್ತವ’ಗಳನ್ನು ಅಥವಾ ‘ಸತ್ಯ’ಗಳನ್ನು ಹೇಳದೆ ಹೋಗಬಹುದು. ಹೀಗಾಗಿ ಚರಿತ್ರೆಗಳಾಗಲಿ, ಜನಪದ ಕಥನಗಳಾಗಲಿ ಇವೆರಡೂ ಕಟ್ಟುವಿಕೆ ಆಗಿರುತ್ತವೆ. “ಇತಿಹಾಸಕಾರರು ತಾವು ನಿಜವನ್ನು ಕಟ್ಟುತ್ತಿದ್ದೇವೆ ಎಂದು ಭಾವಿಸಿಕೊಳ್ಳುತ್ತಾರೆ. ಕಥೆಗಾರರು ಹಾಗೇನೂ ಭಾವಿಸುವುದಿಲ್ಲ ಎಂಬುದಷ್ಟೇ ವ್ಯತ್ಯಾಸ, ಇಬ್ಬರೂ ತಮ್ಮ ಕಥನವನ್ನು ಒಂದೇ ರೀತಿಯಲ್ಲಿ ಸಾಧಿಸುತ್ತಾರೆ” (ರಾಜಾರಾಮ ಹೆಗಡೆ; 1999; ಸು. 20) ಹೀಗಾಗಿ ಚರಿತ್ರೆಗಳನ್ನಾಗಲಿ, ಜನಪದ ಕಥನಗಳನ್ನಾಗಲಿ ಇವುಗಳನ್ನು ಒಂದರ ವಿರುದ್ಧ ಇನ್ನೊಂದು ಎಂದು ಪರಿಭಾವಿಸಲಾಗದು. ಇವೆರಡೂ ಒಂದೇ ರೇಖೆಯಲ್ಲಿನ ಎರಡು ತುದಿಗಳು. ಒಂದೇ ಈ ರೇಖೆಯಲ್ಲಿನ ಎರಡು ತುದಿಗಳನ್ನು ಒಂದರ ವಿರುದ್ಧ ಮತ್ತೊಂದು ಎಂದು ಹೇಗೆ ಪರಿಭಾವಿಸಲು ಸಾಧ್ಯ? + +ಮಹಿಳಾ ಜನಪದ ಸಾಹಿತ್ಯವನ್ನು ಚರಿತ್ರೀಕರಿಸುವುದು ಹೇಗೆ, ಅದು ಸಾಧ್ಯವೇ ಎನ್ನುವ ಪ್ರಶ್ನೆಗಳೇ ನನಗೆ ಸವಾಲಾಗಿ ನಿಂತಿದ್ದವು. ಚರಿತ್ರೆಯಂತೆಯೇ ಕನ್ನಡ ಸಾಹಿತ್ಯ ಚರಿತ್ರೆಯು ಕಾಲಾನುಕ್ರಮಣಿಕೆಯಲ್ಲಿ ರೂಪ ಪಡೆದುಕೊಂಡಿದೆ. ಮಹಿಳಾ ಜನಪದ ಸಾಹಿತ್ಯವನ್ನು ಕಾಲಾನುಕ್ರಮಣಿಕೆಯಲ್ಲಿ ಕಟ್ಟಿಕೊಡಲು ಸಾಧ್ಯವೆ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳುವ ಅಗತ್ಯವಿತ್ತು. ಮಹಿಳಾ ಕನ್ನಡ ಸಾಹಿತ್ಯ ಚರಿತ್ರೆ ಯೋಜನೆಯ ಆಶಯಕ್ಕೆ ಅನುಗುಣವಾಗಿ ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ರೂಪಿಸಲು ಸಾಧ್ಯವೇ ಎಂಬುದನ್ನು ಸ್ಪಷ್ಪಪಡಿಸಿಕೊಳ್ಳುವುದಕ್ಕಾಗಿ ಮೂರು ಸಂಗತಿಗಳ ಕುರಿತು ಚಿಂತನೆ ನಡೆಸಲಾಯಿತು. ಅವುಗಳೆಂದರೆ 1. ಮಹಿಳಾ ಜನಪದ ಸಾಹಿತ್ಯದ ಸ್ವರೂಪ ಮತ್ತು ಸಂರಚನೆಯ ಪ್ರಶ್ನೆ 2. ಕೃತಿ, ಕರ್ತೃತ್ವ ಮತ್ತು ಅನುಭವದ ಪ್ರಶ್ನೆ 3. ಕಾಲದ ಪ್ರಶ್ನೆ. ಇವುಗಳ ಜೊತೆಗೆÉ ಲಠ್ಠೆ ಅವರ “ಬೆಳಗಾಂ ಜಿಲ್ಲೆಯ ಜನಪದ ಕವಿಗಳು” ಎನ್ನುವ ಲೇಖನವನ್ನು ವಿಶ್ಲೇಷಣೆಗೆ ಒಳಪಡಿಸಿ ಮಹಿಳಾ ಕನ್ನಡ ಸಾಹಿತ್ಯ ಚರಿತ್ರೆಯ ಭಾಗವಾಗಿ ಈ ಕೃತಿಯನ್ನು ರಚಿಸಲು ಸಾಧ್ಯವೆ ಎನ್ನುವ ಸಾಧ್ಯಾಸಾಧ್ಯತೆಗಳ ಬಗ್ಗೆ ವಿವೇಚನೆ ಮಾಡಲಾಗಿದೆ. + +ಜನಪದ ಸಾಹಿತ್ಯದ ಸ್ವರೂಪ ಮತ್ತು ಸಂರಚನೆಯ ಪ್ರಶ್ನೆ + +ಜನಪದ ಸಾಹಿತ್ಯ ಅಧ್ಯಯನಗಳು ನಡೆದದ್ದು ಮೌಖಿಕ ಮೂಲದಲ್ಲಿದ್ದ ಜನಪದ ಸಾಹಿತ್ಯ ಬರವಣಿಗೆಯಲ್ಲಿ ಘನೀಕರಿಸಿದಾಗಿನಿಂದ, ಜನಪದ ಸಾಹಿತ್ಯವು ಹೀಗೆ ಬರವಣಿಗೆಯಲ್ಲಿ ಘನೀಕರಿಸುವಾಗ ಅದು ಅನೇಕ ಮಾರ್ಪಾಡುಗಳಿಗೆ ಒಳಗಾಗುತ್ತದೆ. ಜನಪದ ಸಾಹಿತ್ಯದಲ್ಲಿ ಉಂಟಾಗುವ ಇಂತಹ ಮಾರ್ಪಾಡುಗಳನ್ನು ನಾರಾಯಣ ಕೆ.ವಿ. ಅವರು ನಾಲ್ಕು ಮಾದರಿಗಳಲ್ಲಿ ಗುರುತಿಸುತ್ತಾರೆ. ಅವುಗಳಲ್ಲಿ ಮೊದಲನೆಯದು “ಇಲ್ಲದ ಮೌಖಿಕ ಸಂಕಥನವನ್ನು ಇದೆ ಎಂದು ಭ್ರಮೆ ಹುಟ್ಟಿಸುವ ರೀತಿಯಲ್ಲಿ ರಚಿಸಿಕೊಟ್ಟ ದಾಖಲೆಗಳು ನಮಗೆ ಸಿಗುತ್ತವೆ. ಉದಾಹರಣೆಗೆ ತ್ರಿಪದಿಯ ದಾಟಿಯಲ್ಲಿ ಜಾಣರು ತಾವೇ ರಚನೆಯೊಂದನ್ನು ಮಾಡಿ ಅದು ಜನರ ಬಾಯಲ್ಲಿ ಲಭ್ಯವಿದ್ದುದೆಂದು ಹೇಳಿ ಮುದ್ರಿತ ರೂಪದಲ್ಲಿ ಒದಗಿಸುವುದು.. ಎರಡನೆಯದು ಒಂದೇ ಸಂಕಥನದ ಹಲವು ನಿರೂಪಣೆಗಳನ್ನು ಕೇಳಿ ದಾಖಲೆಕಾರರು ತಮಗೆ ಸರಿ ಎನಿಸಿದ ಪಾಠವನ್ನು ಲಿಖಿತಗೊಳಿಸುವುದು. ಮೂರನೆಯ ಮಾದರಿ ಸಂಕಥನಗಳನ್ನು ನಿರೂಪಕರ ನಿವೇದಕರ ಮಾತಿನ ರೀತಿಯಲ್ಲೇ ನಿರೂಪಿಸುವುದು… ನಾಲ್ಕನೆಯ ಮಾದರಿ ನಿರೂಪಣೆಯಲ್ಲಿ, ಸಂಕಥನಕಾರರು ಯಾವುದೇ ಉಪಭಾಷೆಯನ್ನು ಬಳಸಿದ್ದರೂ ಲಿಖಿತ ರೂಪಕ್ಕೆ ತರುವಾಗ ಅದನ್ನು ಪ್ರಮಾಣ ಕನ್ನಡಕ್ಕೆ ಪರಿವರ್ತಿಸುವುದು… (ನಾರಾಯಣ ಕೆ.ವಿ.; 2005; ಪು. 72-73) ಇಂತಹ ಮಾರ್ಪಾಡುಗಳನ್ನು ಜನಪದ ಸಾಹಿತ್ಯದ ನಿರೂಪಣೆಗಳಲ್ಲಾಗುವ ಬದಲಾವಣೆಗಳಷ್ಟೇ ಸಹಜ ಎಂದು ಭಾವಿಸುವೆ. ಯಾಕೆಂದರೆ ಮೌಖಿಕದಲ್ಲಿದ್ದಾಗಲೂ ಕೂಡ ಜನಪದ ಸಾಹಿತ್ಯಕ್ಕೆ ಮೂಲ ವಿನ್ಯಾಸವೊಂದಿರುತ್ತದೆ ಎಂದು ಹೇಳಲಾಗುವುದಿಲ್ಲ. ಮೌಖಿಕವಾಗಿದ್ದಾಗ ಮಹಿಳಾ ಜನಪದ ಸಾಹಿತ್ಯವು ಸಹಜ ಸ್ವಯಂ ಸ್ಫೂರ್ತವಾಗಿರುತ್ತದೆ. ಬರವಣಿಗೆಯಲ್ಲಿ ಘನೀಕರಿಸಿದಾಗ ಅದು ಸಹಜ ಸ್ವಯಂಸ್ಫೂರ್ತ ಗುಣವನ್ನು ಕಳೆದುಕೊಳ್ಳುತ್ತದೆ ಎಂದು ಹೇಳುವುದು ಸೂಕ್ತವಲ್ಲ. ಈ ವಿಷಯದ ಕುರಿತು ಎರಡನೆಯ ಅಧ್ಯಾಯದಲ್ಲಿ ಸುದೀರ್ಘವಾಗಿ ಚರ್ಚಿಸಲಾಗಿದೆ. ಮೌಖಿಕವಾಗಿದ್ದ ಜನಪದ ಸಾಹಿತ್ಯವು ಪುಸ್ತಕ ರೂಪದಲ್ಲಿ ಬಂದರೂ ಅದು ಜನಸಮುದಾಯಗಳಲ್ಲಿ ಮತ್ತೆ ಮತ್ತೆ ರೂಪಾಂತರಗಳಿಗೆ ಒಳಗಾಗುತ್ತಿರುತ್ತದೆ. ಇಂತಹ ಸಂಕೀರ್ಣ ಸ್ವರೂಪವನ್ನು ಹೊಂದಿದ ಜನಪದ ಸಾಹಿತ್ಯವನ್ನು ಇಟ್ಟುಕೊಂಡು ಕನ್ನಡ ಸಾಹಿತ್ಯ ಚರಿತ್ರೆಯ ಮಾದರಿಗಳಲ್ಲಿ ಚರಿತ್ರೆಯನ್ನು ಕಟ್ಟುವುದು ಹೇಗೆ ಸಾಧ್ಯ? + +ಮಹಿಳಾ ಜನಪದ ಸಾಹಿತ್ಯ : ಕರ್ತೃತ್ವದ ಪ್ರಶ್ನೆ + +ಕನ್ನಡ ಸಾಹಿತ್ಯ ಅಧ್ಯಯನಕಾರರು “ಸಾಹಿತ್ಯ ಕೃತಿಗಳ ಹಿಂದೆ ಕೃತಿಕಾರನ ವಾಸ್ತವ ಅನುಭವಗಳು ಒತ್ತಾಸೆಯಾಗಿ” (ನಾರಾಯಣ ಕೆ.ವಿ. 1997; ಪು.4) ನಿಂತಿರುತ್ತವೆ ಎಂದು ಪರಿಭಾವಿಸುತ್ತಾರೆ. “ಕೃತಿಯಲ್ಲಿ ಅಧಿಕೃತತೆ ಎಂದರೆ ಕೃತಿಕಾರರ ಅನುಭವಗಳ ಅಧಿಕೃತತೆ ಎಂದೇ ತಿಳಿಯಲಾಗುತ್ತದೆ” (ಪು. 4) ಈ ಹಿನ್ನೆಲೆಯಲ್ಲಿಯೇ ಮಹಿಳಾ ಜನಪದ ಸಾಹಿತ್ಯವನ್ನು ಅರ್ಥೈಸಲಾಗುತ್ತದೆ. ಮೌಖಿಕ ಹಿನ್ನೆಲೆಯುಳ್ಳ ಜನಪದ ಸಾಹಿತ್ಯವು ಕರ್ತೃ ಒಬ್ಬರಿಂದ ರಚಿಸಲ್ಪಟ್ಟರೂ ವ್ಯಕ್ತಿಯಿಂದ ವ್ಯಕ್ತಿಗೆ, ಸಮುದಾಯದಿಂದ ಸಮುದಾಯಕ್ಕೆ, ಪ್ರದೇಶದಿಂದ ಪ್ರದೇಶಕ್ಕೆ ಸಂಚರಿಸುವಾಗ, ಮೂಲ ಕರ್ತೃ ಮಾಯವಾಗಿ ಅದು ಸಮುದಾಯದ ಸ್ವತ್ತಾಗಿ ಬಿಟ್ಟಿರುತ್ತದೆ. ಹೀಗಾಗಿ ಮಹಿಳಾ ಜನಪದ ಸಾಹಿತ್ಯಕ್ಕೆ ಕರ್ತೃ ಇರುವುದಿಲ್ಲ. ನಿರೂಪಕಿಯರು ಇರುತ್ತಾರೆ. ಅದಕ್ಕಾಗಿ ಕನ್ನಡ ಸಾಹಿತ್ಯ ಚರಿತ್ರೆಯಂತೆ ಮಹಿಳಾ ಜನಪದ ಸಾಹಿತ್ಯವನ್ನು ಕರ್ತೃ, ಕೃತಿ ಪರಿಕಲ್ಪನೆಗಳಿಂದ ನೋಡಲಾಗುವುದಿಲ್ಲ. ಆ ಮೂಲಕ ಮಹಿಳಾ ಕನ್ನಡ ಜನಪದ ಸಾಹಿತ್ಯ ಚರಿತ್ರೆಯನ್ನು ಕಟ್ಟಲಾಗುವುದಿಲ್ಲ. + +ಕನ್ನಡ ಸಾಹಿತ್ಯದ ಸ್ತ್ರೀವಾದಿ ಸಾಹಿತ್ಯ ವಿಮರ್ಶಕರೂ ಜನಪದ ಸಾಹಿತ್ಯದ ನಿರೂಪಕಿಯರನ್ನೇ ಕವಿಗಳೆಂದು ಪರಿಭಾವಿಸುತ್ತಿದ್ದಾರೆ. ಈ ಪ್ರಕ್ರಿಯೆ ಕೂಡ ಕನ್ನಡ ಸಾಹಿತ್ಯ ಚರಿತ್ರೆಯ ಅಧ್ಯಯನದ ಪ್ರಭಾವದಿಂದಲೇ ಹುಟ್ಟಿಕೊಂಡದ್ದು. “ಬರಹದ ಮೇಲೆ ಬರಹಗಾರನಿಗೆ ಇರುವ ಹಕ್ಕನ್ನು ಸಾಧಿಸುವ ನಮ್ಮ ಆಧುನಿಕ ಚಿಂತನೆಗಳು ಬರಹಕ್ಕೂ, ಅದನ್ನು ಸೃಷ್ಟಿಸಿದವನಿಗೂ ಬಿಡಿಸಲಾಗದ ನಂಟನ್ನು ಕಟ್ಟಿಕೊಟ್ಟಿದೆ (ನಾರಾಯಣ ಕೆ.ವಿ.ವಿ. 1999; ಪು.4). ಇದನ್ನೇ ಮಹಿಳಾ ಕನ್ನಡ ಸಾಹಿತ್ಯ ಅಧ್ಯಯನಕಾರರು ತಮ್ಮ ಅಧ್ಯಯನಕ್ಕೂ ವಿಸ್ತರಿಸಿಕೊಂಡಿದ್ದಾರೆ. ಇದರಿಂದ ಪ್ರಭಾವಿತರಾದ ಮಹಿಳಾ ಜನಪದ ಸಾಹಿತ್ಯದ ಅಧ್ಯಯನಕಾರರೂ ನಿರೂಪಕಿಯರನ್ನೇ ಜನಪದ ಸಾಹಿತ್ಯದ ಕವಯತ್ರಿಯರೆಂದು ನಿರೂಪಿಸುತ್ತಿದ್ದಾರೆ. ಟಿಆರೆಸ್ ಶರ್ಮ ಅವರು ಹೇಳಿದ ಕನ್ನಡ ಸಾಹಿತ್ಯ ಚರಿತ್ರೆಯ ಮೂರನೆಯ ವಿಂಗಡನೆಯು ಚರಿತ್ರೆ ಕಲ್ಪಿಸಲಾದ ಘಟನೆಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತದೆ (ಗಮನಿಸಿ: ಟಿಆರ್‍ಸ್ ಶರ್ಮ, 2003, ಪು. 13). ಇದರಿಂದ ಪ್ರಭಾವಿತರಾದ ಮಹಿಳಾ ಜನಪದ ಸಾಹಿತ್ಯ ಅಧ್ಯಯನಕಾರರು ಮಹಿಳಾ ಜನಪದ ಸಾಹಿತ್ಯಕ್ಕೆ ಚರಿತ್ರೆಯನ್ನು ಕಲ್ಪಿಸಿ ಹೊರಟಿದ್ದಾರೆ. ಈ ಬಗೆಯ ಅಧ್ಯಯನದಲ್ಲಿ ‘ವಾಸ್ತವ’ ಎಂದು ಹೇಳಬಹುದಾದ ಸಂಗತಿಗಳನ್ನು ಹುಡುಕುವ ಹಾಗೂ ಪರಿಶೀಲಿಸುವ ಪ್ರಕ್ರಿಯೆಗಿಂತಲೂ ಹೆಚ್ಚಾಗಿ ಈಗಾಗಲೇ ‘ಕಲ್ಪಿಸಲ್ಪಟ್ಟ’ ಸಂಗತಿಗಳನ್ನು ‘ವಾಸ್ತವೀಕರಿಸುವ’ ಹಾಗೂ ಆ ಮೂಲಕ ತಮಗೆ ‘ಶ್ರೇಷ್ಠತೆ’ಯನ್ನು ಕಟ್ಟಿಕೊಳ್ಳುವ ಪ್ರಯತ್ನಗಳೇ ಢಾಳಾಗಿ ಕಂಡುಬರುತ್ತವೆ. + +ಪ್ರತಿಯೊಬ್ಬ ಅಧ್ಯಯನಕಾರರು ಈಗಾಗಲೆ ‘ಶ್ರೇಷ್ಠ’ ಎಂದು ಪರಿಭಾವಿಸಲ್ಪಟ್ಟ ಸಂಗತಿಗಳಿಗೆ ಪ್ರಾಮುಖ್ಯತೆಯನ್ನು ನೀಡುತ್ತಿರುತ್ತಾರೆ. ಇಂತಹ ಸಂಗತಿಗಳನ್ನೇ ತಮ್ಮ ಬರಹದ ಉದ್ದಕ್ಕೂ ಚರಿತ್ರೀಕರಿಸುವ ಪ್ರಯತ್ನದಲ್ಲಿ ತೊಡಗಿರುತ್ತಾರೆ. ಮಹಿಳಾ ಕನ್ನಡ ಸಾಹಿತ್ಯ ಅಧ್ಯಯನದಲ್ಲಾಗಲಿ, ಮಹಿಳಾ ಜನಪದ ಸಾಹಿತ್ಯದ ಅಧ್ಯಯನಗಳಲ್ಲಾಗಲಿ ಮಹಿಳೆಯರು ತಮ್ಮನ್ನು ತಾವು ಹೊಗಳಿಕೊಳ್ಳುವ ಪ್ರಕ್ರಿಯೆ ತೀವ್ರವಾಗಿ ಕಂಡುಬರುತ್ತಿದೆ. ಇಂತಹ ಆತ್ಮರತಿಯ ಪ್ರವೃತ್ತಿಯನ್ನು ಆತ್ಮರಕ್ಷಣೆಯ ಹೆಸರಿನಲ್ಲಿ ಜೋಪಾನವಾಗಿರಿಸಿಕೊಳ್ಳಲಾಗಿದೆ. ಮಹಿಳಾ ಸಾಹಿತ್ಯದ ಅಧ್ಯಯನಕಾರರಿಬಹುದು, ಮಹಿಳಾ ಜನಪದ ಸಾಹಿತ್ಯ ಚರಿತ್ರೆಯ ಅಧ್ಯಯನಕಾರರಿಬಹುದು-ಇವರಿಬ್ಬರೂ ಲಿಖಿತ ಹಾಗೂ ಅಲಿಖಿತದಲ್ಲಿ ದೊರೆಯುವ ಮಾಹಿತಿಗಳನ್ನು ತೀವ್ರ ವಿಮರ್ಶೆಗೆ ಒಳಪಡಿಸಬೇಕಿದೆ. ಇಂತಹ ವಿಮರ್ಶೆ ಮತ್ತು ವಿಶ್ಲೇಷಣೆ ಆಧಾರಿತ ಮಹಿಳಾ ಚರಿತ್ರೆಯಲ್ಲಿ, ಕನ್ನಡ ಮಹಿಳಾ ಸಾಹಿತ್ಯದಲ್ಲಿ ಕಟುವಾದ ಸ್ವವಿಮರ್ಶೆ ಹಾಗೂ ಅಂತರ್ ಶೋಧಗಳೆರಡೂ ಇರಬೇಕು. + + + +ಕನ್ನಡದ ಅನೇಕ ಸ್ತ್ರೀವಾದಿ ಅಧ್ಯಯನಕಾರರು ಮಹಿಳೆಯರ ಬರಹಕ್ಕೂ, ಅವರ ಜೀವನಕ್ಕೂ ತಾಳೆಹಾಕಿ ನೋಡಬಾರದು ಎಂದು ಹೇಳುತ್ತಾರೆ. ಆದರೆ ಸ್ತ್ರೀವಾದಿ ಅಧ್ಯಯನಕಾರರು ಮಹಿಳೆ ಹೇಳುವ ಜನಪದ ಸಾಹಿತ್ಯವನ್ನು ಮಹಿಳಾ ಸಾಹಿತ್ಯವೆಂದೂ, ಅವಳ ಈ ಸಾಹಿತ್ಯದಲ್ಲಿ ಮಹಿಳಾ ಬದುಕಿನ ಅನುಭವ ಇರುತ್ತದೆ ಎಂದು ಅರ್ಥೈಸುತ್ತಾರೆ. ಮಹಿಳಾ ಸಾಹಿತ್ಯ ಚರಿತ್ರೆಗೆ ಪ್ರಾಚೀನತೆಯನ್ನು, ಪರಂಪರೆಯನ್ನು ಕಟ್ಟಿಕೊಳ್ಳುವ ಅವಸರದಲ್ಲಿ ಕನ್ನಡ ಸಾಹಿತ್ಯ ವಿಮರ್ಶೆಯ ಸಂದರ್ಭದಲ್ಲಿ ಯಾವುದನ್ನು ಸೈದ್ಧಾಂತಿಕವಾಗಿ ವಿರೋಧಿಸುತ್ತಿರುತ್ತಾರೋ, ಅದೇ ಮಾನದಂಡವನ್ನು ಇಟ್ಟುಕೊಂಡು ಮಹಿಳಾ ಸಾಹಿತ್ಯ ಚರಿತ್ರೆಯನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಅವರ ಈ ಚಿಂತನೆಯಲ್ಲಿನ ವೈರುಧ್ಯಕ್ಕೆ ಕಾರಣ, ಅವರು ಮಾದರಿಯಾಗಿಟ್ಟುಕೊಂಡ ಸಾಹಿತ್ಯದ ವ್ಯಾಖ್ಯಾನ. ಅನುಭವದ ಅಭಿವ್ಯಕ್ತಿಯನ್ನೇ ಸಾಹಿತ್ಯವೆಂದು ಸೈದ್ಧಾಂತಿಕರಿಸಿದ ಸಿದ್ಧಾಂತವನ್ನೇ ಸ್ತ್ರೀವಾದಿ ಸಾಹಿತ್ಯ ವಿಮರ್ಶಕರೂ ಸ್ವೀಕರಿಸಿದ್ದಾರೆ. ಹೀಗಾಗಿ ಸ್ತ್ರೀವಾದಿ ಸಾಹಿತ್ಯ ವಿಮರ್ಶಕರು ಸ್ವೀಕರಿಸಿದ ವ್ಯಾಖ್ಯಾನದಲ್ಲಿಯೇ ಸಮಸ್ಯೆ ಇದೆ. + +ಮಹಿಳಾ ಜನಪದ ಸಾಹಿತ್ಯ: ಚರಿತ್ರೆ ರಚನೆಯ ಪ್ರಶ್ನೆ + +ಜನಪದ ಸಾಹಿತ್ಯದಲ್ಲಿನ ಸಾಹಿತ್ಯಿಕ ಪ್ರಕಾರಗಳನ್ನು ಆಧಾರವಾಗಿಟ್ಟುಕೊಂಡು ಅವುಗಳು ಎಂದು ಹುಟ್ಟಿಕೊಂಡವು, ಅವುಗಳ ಸ್ವರೂಪವೇನು, ಜನ ಸಮುದಾಯಗಳೊಂದಿಗೆ ಸೋಬಾನೆ ಹಾಡಗಳು ‘ಬೀಸುವ – ಕುಟ್ಟುವ ಹಾಡುಗಳು, ದೊಡ್ಡಾಟ-ಸಣ್ಣಾಟಗಳು’ ಮೊದಲಾದ ಜನಪದ ಸಾಹಿತ್ಯದ ಪ್ರಕಾರಗಳು ಯಾವ ಬಗೆಯ ಹಾಡುಗಳು ಸಂಬಂಧಗಳನ್ನು ಹೊಂದಿವೆ; ಇವುಗಳ ಉಲ್ಲೇಖಗಳು ಯಾವ ಯಾವ ಪ್ರಾಚೀನ ಕೃತಿಗಳಲ್ಲಿ, ಶಾಸನಗಳಲ್ಲಿ ದೊರೆಯುತ್ತವೆ; ಇವುಗಳು ಲಿಂಗ ಸಂಬಂಧಿ ಆಯಾಮಗಳ ಕುರಿತು ಏನು ಮಾತನಾಡುತ್ತವೆ ಎನ್ನುವ ವಿಷಯಗಳನ್ನು ಕುರಿತು ಚರ್ಚಿಸುವುದು ಆ ಮೂಲಕ ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ನಿರ್ಮಿಸುವುದು ಅಗತ್ಯವೆಂದು ಅನೇಕರು ಹೇಳಿದರು. ತ್ರಿಪದಿ, ದ್ವಿಪದಿಯಂತಹ ಹಾಡುಗಳ ಹೊರಗಿನ ರಚನೆಯನ್ನು ಇಟ್ಟುಕೊಂಡು ಇವುಗಳು ಯಾವ ಯಾವ ಪ್ರಾಚೀನ ಕೃತಿಗಳಲ್ಲಿ ಹಾಗೂ ಶಾಸನಗಳಲ್ಲಿ ಉಲ್ಲೇಖಿತವಾಗಿವೆ ಎನ್ನುವ ಮಾಹಿತಿಗಳನ್ನಿಟ್ಟುಕೊಂಡು ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ಕಟ್ಟುವುದು ಸರಿಯೆ? ಮಹಿಳಾ ಜನಪದ ಸಾಹಿತ್ಯದ ಸಾಹಿತ್ಯಿಕ ಸ್ವರೂಪವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ರೂಪಿಸಲು ಹೇಗೆ ಸಾಧ್ಯವಾಗುತ್ತದೆ? ಯಾವ ಪ್ರಾಚೀನ ಕೃತಿಗಳು, ಛಂದೋಗ್ರಂಥಗಳು ಹಾಗೂ ಶಾಸನಗಳು ಮಹಿಳೆ ಹೇಳುವ ಹಾಡುಗಳ ಕುರಿತು ಸಮಗ್ರವಾಗಿ, ಇಡಿಯಾಗಿ ಇಲ್ಲವೆ ಸುದೀರ್ಘವಾಗಿ ಚರ್ಚಿಸಿಲ್ಲ. ಎಲ್ಲ ಪ್ರಾಚೀನ ಕೃತಿಗಳು, ಛಂದೋಗ್ರಂಥಗಳು, ಶಾಸನಗಳು ಮಹಿಳೆ ಹೇಳುವ ಜನಪದ ಸಾಹಿತ್ಯದ ಕುರಿತು ಆಂಶಿಕವಾಗಿ ಮಾತನಾಡುತ್ತವೆ. ಇದು ವಸಾಹತುಶಾಹಿ ಪೂರ್ವದಲ್ಲಿನ ಜನಪದ ಸಾಹಿತ್ಯದ ಅಧ್ಯಯನಗಳ ಸ್ವರೂಪವಾದರೆ, ವಸಾಹತುಶಾಹಿ ಕಾಲದಲ್ಲಿನ ಜನಪದ ಸಾಹಿತ್ಯ ಅಧ್ಯಯನಗಳು ಜನಪದ ಸಾಹಿತ್ಯದ ಸಾಹಿತ್ಯಿಕ ಸ್ವರೂಪಕ್ಕಿಂತಲೂ ಅದರ ಸಾಂಸ್ಕೃತಿಕ ಸ್ವರೂಪಕ್ಕೆ ಹೆಚ್ಚು ಮಹತ್ವವನ್ನು ನೀಡಿವೆ. ಹೀಗೆ ಬಿಡಿ-ಬಿಡಿಯಾಗಿ, ಆಂಶಿಕವಾಗಿ ಬಂದ ಮಾಹಿತಿಯನ್ನು ಇಟ್ಟುಕೊಂಡು ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ರಚಿಸುವುದು ಹೇಗೆ ಎನ್ನುವ ಸವಾಲೇ ತೀವ್ರವಾಗಿ ಕಾಡಿತು. + +ಇನ್ನು ಕೆಲವರು ಮಹಿಳಾ ಜನಪದ ಸಾಹಿತ್ಯ ಕಾಲಾತೀತವಾದುದು. ಭಾಷೆಯ ಜೊತೆಯಲ್ಲಿಯೇ ಮಹಿಳಾ ಜನಪದ ಸಾಹಿತ್ಯ ಹುಟ್ಟಿಕೊಂಡಿದೆ. ಹೀಗಾಗಿ ಕಾಲದ ಚೌಕಟ್ಟಿನಲ್ಲಿ ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ಕಟ್ಟಲಾಗುವುದಿಲ್ಲ ಎಂದರು. ಕಾಲಮಾನದ ಕುರಿತು ಚರ್ಚೆ ನಡೆಯದೇ ಹೋದರೆ, ಅದು ಹೇಗೆ ಚರಿತ್ರೆ ಎನಿಸಿಕೊಳ್ಳುತ್ತದೆ? ಹಾಗಿದ್ದ ಮೇಲೆ ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ಬರೆಯಲಾಗುವುದಿಲ್ಲ. ಮತ್ತೆ ಕೆಲವರು ಸತಿ ಗೀತೆಗಳು, ಕೆರೆಗೆ ಹಾರದಂತಹ ಗೀತೆಗಳು, ಕಿತ್ತೂರು ರಾಣಿ ಚೆನ್ನಮ್ಮನನ್ನು ಕುರಿತ ಜನಪದ ಕಥನಗಳಲ್ಲಿ ಸ್ಥೂಲವಾದ ಕಾಲ ಕಲ್ಪನೆ ಇದೆಯಲ್ಲ. ಹೀಗಾಗಿ ಮಹಿಳಾ ಜನಪದ ಸಾಹಿತ್ಯವನ್ನು ಕಾಲಾತೀತ ಎಂದು ಹೇಳಲಾಗುವುದಿಲ್ಲ ಎಂದರು. ಮಹಿಳಾ ಜನಪದ ಸಾಹಿತ್ಯದಲ್ಲಿನ ಘಟನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ಹೇಗೆ ಬರೆಯಲು ಸಾಧ್ಯ? ಅದು ಮಹಿಳಾ ಜನಪದ ಸಾಹಿತ್ಯ ಚರಿತ್ರೆಯಾಗದೆ ಮಹಿಳಾ ಜನಪದ ಸಾಹಿತ್ಯದಲ್ಲಿನ ಚರಿತ್ರೆಯಾಗುವುದಿಲ್ಲವೆ? ಅದೂ ಅಲ್ಲದೆ ಚಾರಿತ್ರಿಕ ಸಂಗತಿಗಳನ್ನು ಒಳಗೊಂಡ ಜನಪದ ಕಥನಗಳು, ಘಟನೆಗಳು ಸಂಭವಿಸಿದ ಕಾಲಘಟ್ಟದಲ್ಲಿ ಹುಟ್ಟಿಕೊಂಡಿದ್ದರೂ, ಅವುಗಳು ತಾವು ಹುಟ್ಟಿಕೊಂಡ ಕಾಲಕ್ಕೆ ಮಾತ್ರ ಅಂಟಿಕೊಂಡಿರುವುದಿಲ್ಲ. + +ಜನಪದ ಸಾಹಿತ್ಯ ನಿರೂಪಿಸಲ್ಪಟ್ಟಾಗ ಲೊಮ್ಮೆ ಆಯಾ ಕಾಲದ ಮಾಹಿತಿಗಳನ್ನು ಮೈಗೂಡಿಸಿಕೊಳ್ಳುತ್ತಿರುತ್ತದೆ. ಮಹಿಳಾ ಜನಪದ ಸಾಹಿತ್ಯವು ಭೂತಕಾಲವನ್ನು ಸ್ಥಾವರವಾಗಿ ನೋಡುವುದಿಲ್ಲ. ಅದನ್ನು ಜಂಗಮ ಸ್ವರೂಪದಲ್ಲಿಯೇ ಪರಿಭಾವಿಸುತ್ತದೆ. ಹೀಗಾಗಿ ಸತಿ ಗೀತೆಗಳು ಯಾವುದೋ ಕಾಲ ಘಟ್ಟದಲ್ಲಿ ಸತಿಯಾದ ಹೆಂಗಸಿನ ಕಥನಗಳಿಗೆ ಮಾತ್ರ ಸೀಮಿತಗೊಳ್ಳುವುದಿಲ್ಲ. ಬದಲಾಗಿ ವೈಧವ್ಯದ ಪಟ್ಟದಲ್ಲಿ ನಿತ್ಯವೂ ಬೇಯುತ್ತಿರುವ ಎಲ್ಲ ಹೆಂಗಸರ ಬದುಕಿನ ಸುತ್ತ ಅನಾವರಣಗೊಳ್ಳುತ್ತವೆ. ಅದಕ್ಕಾಗಿಯೇ ಮಹಿಳೆಯರು ಇಂತಹ ಸತಿಗೀತೆಗಳನ್ನು ಭಾವುಕರಾಗಿ ಕಣ್ತುಂಬಿಕೊಂಡು ಹಾಡುತ್ತಿರುತ್ತಾರೆ. ಅದೇ ಭಾವುಕತೆಯಲ್ಲಿ ಕಣ್ಣೀರು ಹಾಕುತ್ತ ಮಹಿಳಾ ಶ್ರೋತೃಗಳು ಕೇಳುತ್ತಿರುತ್ತಾರೆ. ಹೀಗಾಗಿ ಚರಿತ್ರೆಯ ಘಟನಾವಳಿಗಳನ್ನು ಹೇಳುವ ಜನಪದ ಕಥೆಗಳು ಇಂದಿಗೂ ವಿನಾಕಾರಣವಾಗಿ ನಿರೂಪಿಸಲ್ಪಡುತ್ತಿಲ್ಲ. ಮಹಿಳಾ ಜನಪದ ಕಥನಗಳು ನಿರೂಪಿಸಲ್ಪಡುತ್ತಿರುವ ಪ್ರಕ್ರಿಯೆಯ ಹಿಂದೆ, ನಿರೂಪಿಸಲ್ಪಡುವವರ ರಾಜಕಾರಣಗಳು ಕೆಲಸ ಮಾಡುತ್ತಿರುತ್ತವೆ. ಮಹಿಳಾ ಜನಪದ ಕಥನಗಳನ್ನು ನಿರೂಪಿಸಲ್ಪಡುವವರಲ್ಲಿ ಹುಟ್ಟಿಕೊಳ್ಳುವ ರಾಜಕಾರಣವು ಪಿತೃಪ್ರಧಾನ ವ್ಯವಸ್ಥೆಯ ಒತ್ತಡದಿಂದ ಹುಟ್ಟಿಕೊಂಡಿದ್ದಿಬಹುದು; ವೈಯಕ್ತಿಕ ನೆಲೆಯಲ್ಲಿ ಹುಟ್ಟಿಕೊಂಡಿದ್ದಿರ ಬಹುದು. ಜನಪದ ಕಥನಗಳ ನಿರೂಪಣೆಯ ಹಿಂದಿರುವ ರಾಜಕಾರಣದ ಕುರಿತ ಚರ್ಚೆಯು ಅಧ್ಯಯನದ ಉದ್ದೇಶಕ್ಕೆ ಹೊರತಾದುದರಿಂದ, ಅದನ್ನು ಇಲ್ಲಿ ಕೈ ಬಿಡಲಾಗಿದೆ. ಮಹಿಳಾ ಜನಪದ ಸಾಹಿತ್ಯ ನಿರೂಪಣೆಗೊಂಡಾಗಲೊಮ್ಮೆ ಹೊಸರೂಪ ತಾಳುತ್ತ, ಭೂತಕಾಲದ ವಿವರಣೆಗಳ ಜೊತೆಗೆ, ಸಮಕಾಲೀನ ಸಂಗತಿಗಳನ್ನು ಮೈದುಂಬಿಸಿಕೊಳ್ಳುತ್ತಿರುತ್ತದೆ. ಅದರಿಂದ ಮಹಿಳಾ ಜನಪದ ಸಾಹಿತ್ಯದಲ್ಲಿನ ಘಟನಾವಳಿಗಳು ಒಂದು ನಿರ್ದಿಷ್ಟ ಕಾಲಘಟ್ಟಕ್ಕೆ ಸೇರಿದವುಗಳು ಎಂದು ಹೇಳಲಾಗುವುದಿಲ್ಲ. ಹೀಗಾಗಿ ಮಹಿಳಾ ಜನಪದ ಸಾಹಿತ್ಯದಲ್ಲಿನ ಚಾರಿತ್ರಿಕ ಘಟನಾವಳಿಗಳನ್ನು ಆಧಾರವಾಗಿಟ್ಟುಕೊಂಡು ಮಹಿಳಾ ಜನಪದ ಸಾಹಿತ್ಯದ ಚರಿತ್ರೆಯನ್ನು ಕಟ್ಟಲಾಗುವುದಿಲ್ಲ. + +ಮತ್ತೆ ಕೆಲವರು ಎಂ.ಎಸ್. ಲಠ್ಠೆ ಅವರ “ಜನಪದ ಕವಿ ಚರಿತೆ”ಯನ್ನು ಮಾದರಿಯಾಗಿಟ್ಟು ಕೊಂಡು ಭರಭರನೆ “ಮಹಿಳಾ ಜನಪದ ಸಾಹಿತ್ಯ ಚರಿತ್ರೆ”ಯನ್ನು ಬರೆದು ಮುಗಿಸಿರಿ ಎನ್ನುವ ಸಲಹೆಯನ್ನು ನೀಡಿದರು. ಲಠ್ಠೆ ಅವರು ಜನಪದ ಕವಿ ಚರಿತೆಯನ್ನು ಬರೆದಿರುವ ಮಾಹಿತಿ ದೊರೆತರೂ, ಈ ಕೃತಿ ಮಾತ್ರ ಸಿಗಲಿಲ್ಲ. ಆದರೆ ಅವರು ಬರೆದ ‘ಬೆಳಗಾಂ ಜಿಲ್ಲೆಯ ಜನಪದ ಕವಿಗಳು’ ಎನ್ನುವ ಲೇಖನ ದೊರೆಯಿತು. ಈ ಲೇಖನದಲ್ಲಿ ಲಠ್ಠೆ ಅವರು ಜನಪದ ಸಾಹಿತ್ಯ ನಿರೂಪಕರನ್ನು ಆಧಾರವಾಗಿಟ್ಟುಕೊಂಡು ಸಾಹಿತ್ಯ ಚರಿತ್ರೆಯಂತೆ ಜನಪದ ಸಾಹಿತ್ಯ ಚರಿತ್ರೆಯನ್ನು ರಚಿಸುವ ಪ್ರಯತ್ನವನ್ನು ಮಾಡಿದ್ದಾರೆ. ಅದಕ್ಕಾಗಿಯೇ ಅವರು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿನ ಕವಿ, ಕಾಲ, ಕೃತಿಗಳು ಈ ಮಾನದಂಡಗಳನ್ನು ಜನಪದ ಸಾಹಿತ್ಯಕ್ಕೂ ಎಳೆದು ತಂದು ಜನಪದ ಸಾಹಿತ್ಯಕ್ಕೆ ಚರಿತ್ರೆ ಕಲ್ಪಿಸಲು ಪ್ರಯತ್ನಿಸಿದ್ದಾರೆ. ಲಾವಣಿ, ಸಣ್ಣಾಟ, ದೊಡ್ಡಾಟ, ಹರದೇಶಿ, ನಾಗೇಶಿ, ಗೀಗೀ ಹಾಡು, ಡೊಳ್ಳಿನ ಹಾಡು, ಹಂತಿ ಪದಗಳು, ಸೋಬಾನೆ ಮುಂತಾದ ಹಾಡುಗಳನ್ನು ಜನಪದ ಸಾಹಿತ್ಯ ಚರಿತ್ರೆಯನ್ನು ಕಟ್ಟುವಾಗ ಗಮನಿಸಿದ್ದಾರೆ. ಈ ಸಾಹಿತ್ಯದ ಕೊನೆಯಲ್ಲಿ ಬರುವ ಕಾವ್ಯನಾಮವನ್ನು ಇಲ್ಲವೆ ಕವಿಯ ಹೆಸರನ್ನು, ಕವಿ ಹುಟ್ಟಿದ ಊರು, ಕವಿಯ ತಂದೆ-ತಾಯಿ ಹೆಸರು, ಕವಿ ಪಡೆದ ಶಿಕ್ಷಣ ಮೊದಲಾದವುಗಳನ್ನು ಗಮನಿಸಲಾಗಿದೆ. ಲಠ್ಠೆ ಅವರು ನಿರೂಪಕರು ಹೇಳಿದ ಸಾಹಿತ್ಯವು ಯಾವ ಕಾಲಾವಧಿಯಲ್ಲಿ ರಚಿತವಾಯಿತು ಎನ್ನುವುದನ್ನು ನಿಖರವಾಗಿ ಹೇಳುವುದಿಲ್ಲ. ಇದಕ್ಕೆ ಕಾರಣ ಬಹಳ ಸ್ಪಷ್ಟವಾಗಿಯೇ ಇದೆ. ಜನಪದ ಸಾಹಿತ್ಯವು ಇಂತಹ ಕಾಲಾವಧಿಯಲ್ಲಿಯೇ ರಚಿಸಲಾಯಿತು ಎಂದು ಹೇಳಲಾಗುವುದಿಲ್ಲ. ಅದಕ್ಕಾಗಿಯೇ ಕವಿಯು ಬದುಕಿದ ಕಾಲಾವಧಿಯನ್ನು ಅಂದಾಜಾಗಿ ನೀಡಿ, ಈ ಅವಧಿಯಲ್ಲಿ ಅವರಿಂದ ಸಾಹಿತ್ಯ ರಚಿತವಾಯಿತು ಎಂದು ಮೊಗುಮ್ಮಾಗಿ ಹೇಳುತ್ತಾರೆ. 1780 ರಿಂದ 1975ರ ಅವಧಿಯವರೆಗೆ ಬದುಕಿದ ಜನಪದ ಕವಿಗಳನ್ನು ಪರಿಚಯಿಸಿದ್ದಾರೆ. ಜನಪದ ಸಾಹಿತ್ಯವನ್ನು ಚರಿತ್ರೀಕರಿಸುವಂತಹ, ಲಠ್ಠೆ ಅವರ ಪ್ರಯತ್ನವು, ಅವರ ನಂತರದಲ್ಲಿ ಏಕೆ ಮುಂದುವರೆಯಲಿಲ್ಲ; ‘ಲಠ್ಠೆ ಅವರೊಂದಿಗೆ ಅದು ಯಾಕೆ ಕೊನೆಗೊಂಡಿತು.’ ಈ ಮೊದಲಾದ ಪ್ರಶ್ನೆಗಳನ್ನು ಕೇಳಿಕೊಳ್ಳಬೇಕಿದೆ. ಲಠ್ಠೆ ಅವರು ಒತ್ತಾಯಪೂರ್ವಕವಾಗಿ ಕನ್ನಡ ಸಾಹಿತ್ಯ ಚರಿತ್ರೆಯ ಚೌಕಟ್ಟಿಗೆ ಜನಪದ ಸಾಹಿತ್ಯವನ್ನು ಎಳೆದು ತಂದು ಕೂಡಿಸಿದರೂ ಕನ್ನಡ ಸಾಹಿತ್ಯದ ಸ್ವರೂಪ ಮತ್ತು ಜನಪದ ಸಾಹಿತ್ಯದ ಸ್ವರೂಪ ಇವುಗಳೇ ಲಠ್ಠೆ ಅವರ ಈ ಹೊಸ ಬಗೆಯ ಪ್ರಯತ್ನವನ್ನು ನಿರಾಕರಿಸಿದವು. + +ಮೇಲಿನ ಈ ಎಲ್ಲ ಚರ್ಚೆಗಳಿಂದ ತಿಳಿದು ಬರುವುದೇನೆಂದರೆ ಮಹಿಳಾ ಜನಪದ ಸಾಹಿತ್ಯವನ್ನು ಚಾರಿತ್ರಿಕ ಘಟ್ಟಗಳನ್ನಾಗಿ ವಿಂಗಡಿಸಿ, ವಿಶ್ಲೇಷಿಸಲಾಗುವುದಿಲ್ಲ. ಕನ್ನಡ ಸಾಹಿತ್ಯ ಅಧ್ಯಯನ ಮತ್ತು ಮಹಿಳಾ ಕನ್ನಡ ಸಾಹಿತ್ಯ ಅಧ್ಯಯನ ಇವುಗಳು ಸಾಹಿತ್ಯ ಚರಿತ್ರೆಯನ್ನು ಕಟ್ಟಲು ಅನುಸರಿಸಿದ ಅಧ್ಯಯನ ಮಾದರಿಗಳನ್ನು ನೇರವಾಗಿ ಜನಪದ ಸಾಹಿತ್ಯಕ್ಕೆ ಅನ್ವಯಿಸಲಾಗುವುದಿಲ್ಲ. ಹೀಗಾಗಿ ಮಹಿಳಾ ಜನಪದ ಸಾಹಿತ್ಯ ಚರಿತ್ರೆಯನ್ನು ಕಟ್ಟಲಾಗುವುದಿಲ್ಲ. ಹಾಗಿದ್ದರೆ ಏನು ಮಾಡಬೇಕು? ಮಹಿಳಾ ಜನಪದ ಸಾಹಿತ್ಯ ಚರಿತ್ರೆ ಎನ್ನುವ ಶೀರ್ಷಿಕೆಯನ್ನೇ ಬದಲಾಯಿಸಿದರೆ ಚರಿತ್ರೆಯನ್ನು ಕಟ್ಟಲಾದೀತೆ; ಶೀರ್ಷಿಕೆಯನ್ನು ಹೇಗೆ ಬದಲಾಯಿಸಬೇಕು ಎನ್ನುವ ಸಮಸ್ಯೆಗಳು ತೀವ್ರವಾಗಿ ಕಾಡತೊಡಗಿದವು. ಇದೆಲ್ಲದರ ಪ್ರಯತ್ನದ ಫಲವಾಗಿ ಈ ಸಂಶೋಧನಾ ಅಧ್ಯಯನ ರೂಪುಗೊಂಡಿದೆ. + +ಎರಡನೆಯ ಅಧ್ಯಾಯದಲ್ಲಿ ನನ್ನ ಒಟ್ಟು ಅಧ್ಯಯನ ಚೌಕಟ್ಟಿನ ಸ್ವರೂಪವನ್ನು ಕುರಿತು ಸ್ಪಷ್ಟೀಕರಿಸುವ ಪ್ರಯತ್ನವನ್ನು ಮಾಡಲಾಗಿದೆ. ಜನಪದ ಸಾಹಿತ್ಯದ ಕುರಿತಿರುವ ಎಲ್ಲ ನಿರ್ವಚನಗಳನ್ನು ವಿಶ್ಲೇಷಣೆಗೆ ಒಡ್ಡಲಾಗಿದೆ. ಲಿಖಿತ ಚರಿತ್ರೆಗಳನ್ನು, ಕನ್ನಡ ಸಾಹಿತ್ಯ ಚರಿತ್ರೆಯನ್ನು ಹಾಗೂ ಮಹಿಳಾ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೇಲ್ಜಾತಿ, ಮೇಲ್ವರ್ಗ ಪುರುಷ ಸಮುದಾಯಗಳೊಂದಿಗೆ ಹಾಗೂ ಮೇಲ್ಜಾತಿ, ಮೇಲ್ವರ್ಗದ ಮಹಿಳಾ ಸಮುದಾಯಗಳೊಂದಿಗೆ ನೋಡಲಾಗುತ್ತಿದೆ. ಹಾಗೆಯೇ ಮಹಿಳಾ ಜನಪದ ಸಾಹಿತ್ಯವನ್ನು ಕೆಳ ಜಾತಿ, ಕೆಳವರ್ಗದ ಮಹಿಳೆಯರೊಂದಿಗೆ ಇಟ್ಟು ನೋಡಲಾಗುತ್ತಿದೆ. ಆದರೆ ಈ ಬಗೆಯ ಪೂರ್ವಾಗ್ರಹಗಳೊಂದಿಗೆ ಜನಪದ ಸಾಹಿತ್ಯ ಸ್ವರೂಪವನ್ನು ಚರ್ಚಿಸುವುದು ಸೂಕ್ತವಲ್ಲ. ಯಾಕೆಂದರೆ ಸಾಕ್ಷರ ಸಂಸ್ಕøತಿಗಳಲ್ಲಿರುವವರು ಜನಪದ ಕಥನಗಳಿಂದ ಪ್ರಭಾವಿತರಾಗಿರುವಂತೆ, ಜನಪದ ಕಥನಗಳನ್ನೂ ಒಳಗೊಂಡಿರುತ್ತಾರೆ. ಆದ್ದರಿಂದ ಅಕ್ಷರ ಸಾಕ್ಷರತೆಗೆ ಒಳಗಾಗದವರಲ್ಲಿ ಮಾತ್ರ ಜನಪದ ಕಥನಗಳು ಇರುತ್ತವೆ ಎಂದು ಹೇಳಲಾಗುವುದಿಲ್ಲ. ಅದಕ್ಕಾಗಿ ನನ್ನ ಒಟ್ಟು ಅಧ್ಯಯನದಲ್ಲಿ ಜನಪದ ಸಾಹಿತ್ಯವನ್ನು ಕೆಳಜಾತಿ, ಕೆಳವರ್ಗ ಮತ್ತು ಮೇಲ್ಜಾತಿ, ಮೇಲ್ರ್ವಗದ ಮಹಿಳೆಯರೊಂದಿಗೆ ಸಮೀಕರಿಸಿಯೇ ನೋಡಲಾಗಿದೆ. ನಗರ ಜಾನಪದ, ಗ್ರಾಮೀಣ ಜಾನಪದ, ಸಾಕ್ಷರರ ಜಾನಪದ, ಸಾಕ್ಷರ ಅಲ್ಲದವರ ಜಾನಪದ ಎನ್ನುವ ವಿಂಗಡಣೆಗಳು ಒಟ್ಟು ಅಧ್ಯಯನದಲ್ಲಿ ಕಾಣಿಸಿಕೊಂಡಿಲ್ಲ. ಮೇಲ್ಜಾತಿಯ ಮಹಿಳೆಯರು ಇರಬಹುದು, ಕೆಳಜಾತಿಯ ಮಹಿಳೆಯರು ಇರಬಹುದು, ಸಾಕ್ಷರತೆಗೆ ಒಳಗಾದ ಮಹಿಳೆಯರು ಇರಬಹುದು, ಸಾಕ್ಷರತೆಗೆ ಒಳಗಾಗದ ಮಹಿಳೆಯರಿರಬಹುದು, ನಗರ ಮಹಿಳೆ ಇರಬಹುದು, ಗ್ರಾಮ ಮಹಿಳೆ ಇರಬಹುದು ಇವರು ನಿರೂಪಿಸುವ ಸಾಹಿತ್ಯವು ಮೌಖಿಕ ಪರಂಪರೆಯನ್ನು ಹೊಂದಿದ್ದು, ಅದು ಕರ್ತೃತ್ವ ರಹಿತವಾಗಿದ್ದರೆ ಅಂಥದನ್ನು ‘ಮಹಿಳಾ ಜನಪದ ಸಾಹಿತ್ಯ’ವೆಂದು ನಿರ್ವಚಿಸಿಕೊಳ್ಳಲಾಗಿದೆ. ಇದೇ ಅಧ್ಯಾಯದಲ್ಲಿ ಜನಪದ ಸಾಹಿತ್ಯದ ಅಧ್ಯಯನದ ಉದ್ದಕ್ಕೂ ಅಧ್ಯಯನಕಾರರು ಮಾಡಿಕೊಂಡ ‘ಮಹಿಳಾ ಜನಪದ ಸಾಹಿತ್ಯ’, ‘ಪುರುಷ ಜನಪದ ಸಾಹಿತ್ಯ’ ಎನ್ನುವ ವಿಂಗಡನೆಗಳ ಹಿಂದಿರುವ ರಾಜಕಾರಣವನ್ನು ಗುರುತಿಸಿ, ಅದನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಅದರ ಜೊತೆಯಲ್ಲಿಯೇ ಮಹಿಳಾ ಜನಪದ ಸಾಹಿತ್ಯ ಅಧ್ಯಯನದಲ್ಲಿ, ಮಹಿಳಾ ಸೃಜನಶೀಲತೆಯ ಕುರಿತು ನಡೆದುಕೊಂಡು ಬಂದ ಚರ್ಚೆಯನ್ನು ವಿವರವಾಗಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. + +ಮಹಿಳಾ ಜನಪದ ಸಾಹಿತ್ಯವನ್ನು ನಿರೂಪಣೆ ಮಾಡುವುದಕ್ಕೂ, ಅವಳ ಕಾಯಕಕ್ಕೂ ಇರುವ ಸಂಬಂಧವನ್ನು ಆಯಾ ಕಾಯಕಕ್ಕನುಸಾರವಾಗಿ, ಅವಳ ನಾದದಲ್ಲಿ ಕಾಣಿಸಿಕೊಳ್ಳುವ ಏರಿಳಿತದ ವ್ಯತ್ಯಾಸದ ಕುರಿತು ಚರ್ಚಿಸಲಾಗಿದೆ. ಇವುಗಳೆಲ್ಲದರ ಜೊತಗೆ ಮಹಿಳಾ ಜನಪದ ಸಾಹಿತ್ಯದ ಸಂಗ್ರಹ ಮತ್ತು ಅಧ್ಯಯನಗಳನ್ನು ಮರುಪರಿಶೀಲನೆಗೊಡ್ಡುವ ಅಗತ್ಯತೆಯನ್ನು, ಆ ಮೂಲಕ ಚರಿತ್ರೆಯನ್ನು ಕಟ್ಟಿಕೊಳ್ಳುವ ಅನಿವಾರ್ಯತೆಯ ಕುರಿತು ಚರ್ಚಿಸಲಾಗಿದೆ. + +ಮೂರು ಮತ್ತು ನಾಲ್ಕನೆಯ ಅಧ್ಯಾಯಗಳಲ್ಲಿ ಜನಪದ ಸಾಹಿತ್ಯ ಸಂಗ್ರಹಗಳು ಮತ್ತು ಅಧ್ಯಯನಗಳು ಎಂದು ಪ್ರಾರಂಭವಾದವು, ಯಾಕೆ ಪ್ರಾರಂಭವಾದವು, ಇವುಗಳು ಮಹಿಳಾ ಜನಪದ ಸಾಹಿತ್ಯದ ಕುರಿತು ಯಾವ ಯಾವ ಚರ್ಚೆಗಳನ್ನು ಬೆಳೆಸಿದವು. ಈ ಬಗೆಯ ಚರ್ಚೆಗಳ ಹಿಂದೆ ಯಾವ ಯಾವ ರಾಜಕಾರಣಗಳಿವೆ. ಮಹಿಳಾ ಜನಪದ ಸಂಗ್ರಹಗಳು ಅಧ್ಯಯನಗಳು ಯಾವ ಯಾವ ಕಾಲ ಘಟ್ಟದಲ್ಲಿ ಎಂತಹ ತಿರುವುಗಳನ್ನು ಪಡೆದುಕೊಂಡವು ಎನ್ನುವುದನ್ನು ಚರ್ಚಿಸಲಾಗಿದೆ. ಆರಂಭದ ಮಹಿಳಾ ಜನಪದ ಸಾಹಿತ್ಯದ ಅಧ್ಯಯನಕಾರರು ಯಾವ ಪರಿಕಲ್ಪನೆಗಳನ್ನು ಕಟ್ಟಿಕೊಟ್ಟರು, ಅವುಗಳು ಎಲ್ಲಿಯತನಕ ಮುಂದುವರೆದವು, ಯಾಕೆ ಮುಂದುವರೆದವು ಎನ್ನುವುದನ್ನು ಚರ್ಚಿಸಲಾಗಿದೆ. ಹಾಗೆಯೇ ಆರಂಭದ ಮಹಿಳಾ ಜನಪದ ಸಾಹಿತ್ಯದ ಸಂಗ್ರಹಕಾರರು ಮತ್ತು ಅಧ್ಯಯನಕಾರರು ಮಹಿಳೆಯ ಕುರಿತು ಕಟ್ಟಿಕೊಟ್ಟ ಪರಿಕಲ್ಪನೆಗಳು ಎಂದು ಬದಲಾದವು, ಯಾಕೆ ಬದಲಾದವು, ಇದರ ಹಿಂದಿರುವ ಚಾರಿತ್ರಿಕ ಒತ್ತಡಗಳೇನು, ಇವತ್ತು ಸಮಗ್ರ ಜಾನಪದವನ್ನೇ ಯಾಕೆ ಮಹಿಳೀಕರಣಗೊಳಿಸಲಾಗಿದೆ, ಈ ಹಿನ್ನೆಲೆಯಲ್ಲಿ ನಡೆಯುತ್ತಿರುವ ಇವತ್ತಿನ ಮಹಿಳಾ ಜನಪದ ಸಾಹಿತ್ಯದ ಸಂಗ್ರಹಗಳು ಮತ್ತು ಅಧ್ಯಯನಗಳ ಸ್ವರೂಪವೇನು, ಇವುಗಳಲ್ಲಿ ಯಾವ ಸಂಗತಿಗಳನ್ನು ಇಟ್ಟುಕೊಳ್ಳಬೇಕು, ಯಾವುದನ್ನು ಕೈ ಬಿಡಬೇಕು, ಏಕೆ ಕೈ ಬಿಡಬೇಕು ಎಂಬುದನ್ನು ಕೂಡ ಚರ್ಚಿಸಲಾಗಿದೆ. ವಸಾಹತುಶಾಹಿ ಕಾಲಘಟ್ಟದಿಂದ ಮಹಿಳೀಕರಣಗೊಂಡ ಇವತ್ತಿನ ಮಹಿಳಾ ಜಾನಪದ ಅಧ್ಯಯನಗಳು ಸಾಂಸ್ಕøತಿಕ ಸಂಸ್ಥೆಗಳನ್ನು ಹಾಗೂ ಅಧಿಕಾರದ ಸಂಬಂಧವನ್ನು ಹೇಗೆ ಪರಿಭಾವಿಸಿದೆ, ಇಲ್ಲೆಲ್ಲ ವರ್ಗ, ಲಿಂಗ, ಜಾತಿ ಆಧಾರಿತ ಕೌಟುಂಬಿಕ ಹಾಗೂ ಸಾಮಾಜಿಕ ಅಸಮಾನತೆಗಳನ್ನು ಗುರುತಿಸಲಾಗಿದೆಯೇ ಅಥವಾ ಮುಚ್ಚಿ ಹಾಕಲಾಗಿದೆಯೇ ಎನ್ನುವುದನ್ನು ವಿವರವಾಗಿ ಮೂರು ಮತ್ತು ನಾಲ್ಕನೆಯ ಅಧ್ಯಾಯದಲ್ಲಿ ಚರ್ಚಿಸಲಾಗಿದೆ. + +“ಭೂತವನ್ನು ಸ್ಥಾವರವಾಗಿ ನೋಡಬಹುದು. ಜಂಗಮ ಸ್ವರೂಪದಲ್ಲಿ ನೋಡಬಹುದು. ಅದನ್ನು ಜಂಗಮವಾಗಿ ನೋಡುವಲ್ಲಿ, ಅದರ ಒಳ ಚೈತನ್ಯ ಕ್ರಿಯಾಶೀಲವಾಗಿ ನಮ್ಮನ್ನು ಪ್ರಶ್ನೆಗೆ ಗುರಿ ಮಾಡುವ ಶಕ್ತಿಯನ್ನು ಪಡೆಯುತ್ತದೆ (ಟಿಆರೆಸ್ ಶರ್ಮ 2003, ಪು.17) ಅದಕ್ಕಾಗಿ ಐದನೆಯ ಅಧ್ಯಾಯವನ್ನು ಬರೆಯುವಾಗ ಮಹಿಳಾ ಜನಪದ ಕಥನಗಳನ್ನು ಸ್ಥಾವರ ಮತ್ತು ಜಂಗಮ ಸ್ವರೂಪ ಎರಡೂ ನೆಲೆಗಳಲ್ಲಿ ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಮಹಿಳಾ ಜನಪದ ಸಾಹಿತ್ಯದಲ್ಲಿನ ಚಾರಿತ್ರಿಕ ಕಥನಗಳು ಭೂತಕಾಲದ ಘಟನೆಗಳನ್ನು ನಿರೂಪಿಸುತ್ತಿರುವಂತೆ, ವರ್ತಮಾನದ ಸಂಗತಿಗಳನ್ನು ಮೇಳೈಸಿಕೊಂಡಿರುತ್ತವೆ. ಮಹಿಳಾ ಜನಪದ ಸಾಹಿತ್ಯದ ಸ್ವರೂಪಕ್ಕಿರುವ ಈ ಅನುಕೂಲವೇ ಮಹಿಳಾ ಜನಪದ ಸಾಹಿತ್ಯವನ್ನು ಇಟ್ಟುಕೊಂಡು ಜನಪದ ಕಥನಗಳ ಸ್ಥಾವರ ಮತ್ತು ಜಂಗಮ ಸ್ವರೂಪಗಳೆರಡನ್ನೂ ವಿಶ್ಲೇಷಿಸುವುದಕ್ಕೆ ಸಹಾಯಕವಾಯಿತು. ಮಹಿಳಾ ಜನಪದ ಸಾಹಿತ್ಯವನ್ನು ಇಟ್ಟುಕೊಂಡು ಭೂತಕಾಲವನ್ನು, ಅವುಗಳು ಇಂದಿಗೂ ನಿರೂಪಣೆಗೊಳ್ಳುತ್ತಿರುವ ವರ್ತಮಾನದ ಸಾಮಾಜಿಕ ಸಂರಚನೆಯನ್ನು ತಿಳಿದುಕೊಳ್ಳುವುದು ಕೇವಲ ತಿಳುವಳಿಕೆಗಾಗಿಯೇ ಅಥವಾ ಭೂತ ಮತ್ತು ವರ್ತಮಾನಗಳೆರಡರ ಮೂಲಕ ಕಟ್ಟಿಕೊಂಡ ತಿಳುವಳಿಕೆ ಮಹಿಳಾ ಬದುಕು ಮತ್ತು ಭಾವನೆಗಳ ಮೇಲೆ ಪ್ರಭಾವ ಬೀರಬೇಕೆ ಎನ್ನುವ ಪ್ರಶ್ನೆಗಳನ್ನು ಇಟ್ಟುಕೊಂಡು ಐದನೆಯ ಅಧ್ಯಾಯವನ್ನು ರಚಿಸಲಾಗಿದೆ. + + + +ಪ್ರಸ್ತುತ ಅಧ್ಯಯನದಲ್ಲಿ 1900 ರಿಂದ 2004ರ ವರೆಗಿನ ಮಹಿಳಾ ಜನಪದ ಸಾಹಿತ್ಯ ಸಂಗ್ರಹ ಮತ್ತು ಅಧ್ಯಯನಗಳೆರಡನ್ನು ಗಮನಿಸಲಾಗಿದೆ. ಮಹಿಳಾ ಜನಪದ ಸಾಹಿತ್ಯದಲ್ಲಿ ಮಹಿಳಾ ಅನನ್ಯತೆಯನ್ನು ಹುಡುಕುವುದು ಸೂಕ್ತವಲ್ಲ ಎನ್ನುವುದು ನನ್ನ ನಂಬಿಕೆ. ಯಾಕೆಂದರೆ ಮಹಿಳಾ ಜನಪದ ಸಾಹಿತ್ಯವು ಪುರುಷರಿಂದಲೂ ರಚಿತವಾಗಿರಬಹುದು, ಸ್ತ್ರೀಯರಿಂದಲೂ ರಚಿತವಾಗಿರಬಹುದು. ಸಮುದಾಯದ ಸ್ವತ್ತಾಗಿ ಪ್ರದೇಶದಿಂದ ಪ್ರದೇಶಕ್ಕೆ, ಸಮುದಾಯದಿಂದ ಸಮುದಾಯಕ್ಕೆ ವಿಸ್ತರಿಸಿಕೊಳ್ಳುವ ಜನಪದ ಸಾಹಿತ್ಯಕ್ಕೆ ಮಹಿಳಾ ಕರ್ತೃತ್ವವನ್ನು ಗುರುತಿಸಲಾಗುವುದಿಲ್ಲ. ಒಂದು ವೇಳೆ ಜನಪದ ಸಾಹಿತ್ಯ, ಅದನ್ನು ನಿರೂಪಣೆ ಮಾಡುವ ಮಹಿಳೆಯಿಂದಲೇ ರಚಿತವಾಗಿದ್ದರೂ ಅದು ಪಿತೃಪ್ರಧಾನ ವ್ಯವಸ್ಥೆಯ ಭಾಗವಾಗಿಯೇ ಮೂಡಿಕೊಂಡು ಬಂದಿರಬಹುದು. ಹೀಗಾಗಿ ಮೂರು ಮತ್ತು ನಾಲ್ಕನೆಯ ಅಧ್ಯಾಯಗಳಲ್ಲಿ ಮಹಿಳಾ ಜನಪದ ಸಾಹಿತ್ಯ ಸಂಗ್ರಹಗಳು ಮತ್ತು ಅಧ್ಯಯನಗಳ ಕುರಿತು ಚರ್ಚಿಸಿದ್ದರೆ, ಐದನೆಯ ಅಧ್ಯಾಯದಲ್ಲಿ ಮಹಿಳೆಯ ನಂಬಿಕೆಗಳನ್ನು, ಅವಳೆದುರಿಸುವ ಸವಾಲುಗಳನ್ನು ಕುರಿತು ಚರ್ಚಿಸಲಾಗಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_239.txt b/Kenda Sampige/article_239.txt new file mode 100644 index 0000000000000000000000000000000000000000..8545468f739b22e00f161066ee1eb693d14d0a69 --- /dev/null +++ b/Kenda Sampige/article_239.txt @@ -0,0 +1,47 @@ +ಬಸವರಾಜ ಕಟ್ಟೀಮನಿಯವರು ಸಾಮಾಜಿಕ ಸಮಸ್ಯೆಗಳನ್ನು ಅಕ್ಷರ ರೂಪದಲ್ಲಿ ಹಿಡಿದಿಟ್ಟಿದ್ದಾರೆ ಅನ್ನುವುದಕ್ಕಿಂತ ಅಕ್ಷರಗಳಲ್ಲಿ ಸಮಸ್ಯೆಗಳ ಚಿತ್ರಗಳನ್ನೇ ನಿರ್ಮಿಸಿದ್ದಾರೆ ಎನ್ನಬಹುದು. ಸಾಮಾಜಿಕ ಸಮಸ್ಯೆಗಳ ಗತಿಬಿಂಬ ‘ಕಾರವಾನ್’. ಈ ಕತೆ ಮನುಷ್ಯನ ಮೂಲಭೂತ ಅವಶ್ಯಕತೆಗಳಾದ ಅನ್ನ, ಅರಿವೆ,ಆಶ್ರಯ ಇತ್ಯಾದಿಗಳ ಸುತ್ತ ವಿಭ್ರಮಿಸುತ್ತದೆ. + +‘ಕೊಳೆ ಇರುವ ಕಡೆ ಬೆಂಕಿಯನ್ನು ಉಗುಳುವಂಥ ಕನ್ನಡದ ಜೀವಂತ ಜ್ವಾಲಾಮುಖಿ’ ಎಂದರೆ ಬಸವರಾಜ ಕಟ್ಟೀಮನಿಯವರು ಎನ್ನಬಹುದು. ದ್ವಿತೀಯ ಮಹಾಯುದ್ಧ ಪ್ರಗತಿಶೀಲ ಆಂದೋಲನದ ಪ್ರೇರಕ ಶಕ್ತಿಯಾಗಿರುತ್ತದೆ. ಭಾರತದ ಜೀವನವನ್ನು ಯಥಾವತ್ತಾಗಿ ಚಿತ್ರಿಸಬೇಕೆಂಬ ತುಡಿತ ಇವರಲ್ಲಿ ಅದಮ್ಯವಾಗಿತ್ತು. ಸ್ವಾತಂತ್ರ್ಯ ಚಳವಳಿಯ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಕ್ಕಾಗಿ ಬ್ರಿಟಿಷರಿಂದ ಶಿಕ್ಷೆಗೊಳಗಾಗಿ, ಆರು ತಿಂಗಳುಗಳನ್ನು ಹಿಂಡಲಗಿ ಸೆರೆಮನೆಯಲ್ಲಿ ಕಳೆದು, ಅಲ್ಲಿಂದ ತಿರುಗಿ ರೈಲಿನಲ್ಲಿ ತಮ್ಮೂರಿಗೆ ಬರುವ ಹಾದಿಯನ್ನೇ ‘ಕಾರವಾನ್’ ಕಥನದ ಅನಾವರಣಕ್ಕೆ ಬಳಸಿಕೊಂಡಿದ್ದಾರೆ. 1942 ರ ಭಾರತ ಸ್ವಾತಂತ್ರ್ಯ ಚಳವಳಿ ಮತ್ತು ಅದರೊಡನೆ ಇದ್ದ ಕ್ಷಾಮ ಪರಿಸ್ಥಿತಿಯ ದಾರುಣತೆಯನ್ನು ‘ಕಾರಾವಾನ್’ ಕತೆ ನಿರೂಪಿಸುತ್ತದೆ. + +(ಬಸವರಾಜ ಕಟ್ಟೀಮನಿ) + +‘ಕಾರವಾನ್’ ಎಂದರೆ ಗುಂಪಿನಲ್ಲಿ ಹೋಗುವ ಪ್ರಯಾಣಿಕರು, ಒಂದೇ ಸಾಲಿನಲ್ಲಿ ಹೋಗುವ ವಾಹನಗಳ ಗುಂಪು. 1943 ರಲ್ಲಿ ಬಿಜಾಪುರ ಜಿಲ್ಲೆಯಲ್ಲಿದ್ದ ಭೀಕರ ಬರಗಾಲದಿಂದ ಗುಳೆ ಹೋದ ಕತೆಯನ್ನು ಅವರು ಮರು ನಿರೂಪಿಸಿದಂತಿದೆ. + +‘ಮಂಗಳ ಪ್ರಭಾತ’ ಎಂಬ ಉದ್ಗಾರದಲ್ಲಿ ಕಥೆ ಅನಾವರಣಗೊಳ್ಳುತ್ತದೆ. ಆದರೆ ಮಂಗಳಕರವಾದ ದೃಶ್ಯವನ್ನು ನಿರೂಪಕರು ನೋಡುವುದಿಲ್ಲ! ನೋಡುವುದು ಅಮಂಗಳಕರವಾದ ದೃಶ್ಯವನ್ನೇ. ಪ್ರಸ್ತುತ ಕತೆಯಲ್ಲಿ ‘ಹಿಂದೂಸ್ಥಾನ, ಹಿಂದೂಸ್ಥಾನ’ ಎಂಬ ಧ್ವನಿ ಆಗಿನ ಭಾರತದಲ್ಲಿನ ಬಡತನವನ್ನು ಧ್ವನಿಸುತ್ತದೆ. ಆ ಧ್ವನಿಯಲ್ಲಿ ವಿಷಾದವಿದೆ, ಏನಾದರೂ ಮಾಡಬೇಕು ಅನ್ನುವ ತುಡಿತವನ್ನು ಅದು ವ್ಯಕ್ತಪಡಿಸುತ್ತದೆ. ಕಥೆಯ ನಿರೂಪಕನ ತಾಯಿ, ವೈದ್ಯರ ಪಾತ್ರದ ಮೂಲಕ ಕಿಂಚಿತ್ ಸುಧಾರಣೆ ಮಾಡಿಸುವ ಪ್ರಯತ್ನವನ್ನು ಕಟ್ಟೀಮನಿಯವರು ಮಾಡಿದ್ದಾರೆ. + +ರೈಲಿನಲ್ಲಿ ಪ್ರಯಾಣಿಸುವಾಗ ನಿರೂಪಕನ ಕಣ್ಣಿಗೆ ಬಿದ್ದ ಸಂಸಾರವನ್ನು ‘ಕಣ್ಣೀರ ಸಂಸಾರ’ ಎಂದೇ ಬಿಂಬಿಸುವುದರ ಮೂಲಕ ಅಂದಿನ ವಾಸ್ತವ ಪ್ರಪಂಚವನ್ನು ಓದುಗರಿಗೆ ಅರ್ಥೈಸಲು ಕಟ್ಟೀ ಮನಿಯವರು ಪ್ರಯತ್ನಿಸಿದ್ದಾರೆ. ಎಂಜಿನ್ನಿನ ಹತ್ತಿರ ತೆಳ್ಳನೆಯ ಮನುಷ್ಯನೊಬ್ಬ ತಲೆ ತಗ್ಗಿಸಿ ನಿಂತಿದ್ದರೆ ಡ್ರೈವರು ಹಿಂದೂಸ್ಥಾನಿಯಲ್ಲಿ ಬೈಗುಳದ ಮಳೆ ಸುರಿಸುತ್ತಿದ್ದ , ಗಾರ್ಡು ಬೂಟುಗಾಲಿನಿಂದ ಒದ್ದುಬಿಟ್ಟ -ಅನ್ನುವ ಮಾತುಗಳು ಅಂದಿನ ಅಧಿಕಾರ ಶಾಹಿಯಲ್ಲಿದ್ದ ದರ್ಪದ ಪರಮಾವಧಿಯನ್ನು ಸೂಚಿಸುತ್ತವೆ. + +ಗಿಡದ ಎಲೆಗಳೊಳಗಿನಿಂದ ಹಾಯ್ದು ವಕ್ರ ವಕ್ರವಾಗಿ ಮೇಲಕ್ಕೆರುತ್ತಿದ್ದ ಹೊಗೆ, ನೆಲದ ಮೇಲೆ ಒರಗಿಕೊಂಡು ನಿದ್ರಿಸುತ್ತಿದ್ದ ಕೂಸುಗಳು, ಮುನ್ನಾದಿನ ರೈಲಿಗೆ ಸಿಕ್ಕಿ ಬಿದ್ದಿದ್ದ ದುರ್ದೈವಿ, ಸ್ವಾಗತ ಹೇಳಿದ ಅವನ ಕೆಮ್ಮು ,ಆ ಮನುಷ್ಯ! ಏನು ಶರೀರ ಅದು.. ಮೂಳೆ ಮೂಳೆ! ಮುಂತಾದ ಮಾತುಗಳು ಬಡತನದ ಗಂಭೀರ ಚಿತ್ರಣವನ್ನು ಮೂಡಿಸುತ್ತವೆ. + +‘ಕಿವಿಗಳನ್ನು ಭೇದಿಸಿಕೊಂಡು ನುಗ್ಗಿ ಕರುಳು ಇರಿಯುವ ಕೆಮ್ಮು’ ಎಂಬ ಮಾತಂತೂ ಬದುಕಿನ ದಾರುಣತೆಗೆ ಹಿಡಿದ ಕನ್ನಡಿಯಂತಿದೆ. ‘ಏನಾದರೂ ಕೊಡಿಯಪ್ಪಾ ,ಸೇದಿ ಬಿಸಾಕಿದ ತುಂಡಾದರೂ ಅಡ್ಡಿಯಿಲ್ಲ’ ಎನ್ನುತ್ತಾ ನಿರೂಪಕರು ಕೊಟ್ಟ ಸಿಗರೇಟನ್ನು ತೆಗೆದುಕೊಂಡ ಮೇಲೆ ಅವನ ಕಳಾಹೀನ ಕಣ್ಣುಗಳಲ್ಲಿ ಪಕ್ಕನೆ ಆನಂದದ ಮಿಂಚು ಹೊಳೆದಂತಾಯಿತು- ಎನ್ನುವಲ್ಲಿ ಆತನ ಹೃದಯ ಬದಲಾವಣೆಯೊಂದಕ್ಕಾಗಿ ಎಷ್ಟೊಂದು ಮಿಡಿಯುತ್ತಿತ್ತು ಎಂಬುದನ್ನು ಸೂಚಿಸುತ್ತದೆ. + +ಗುಳೆ ಹೊರಟು ಬಂದಿರುವ ಅವನ ಊರಿನ ಬಗ್ಗೆ ಕೇಳಿದಾಗ, ‘ತನ್ನೂರು ಬಾದಾಮಿ ಹತ್ತಿರ’ ಎನ್ನುತ್ತಾನೆ. ಕಾರಣ ಕೇಳಿದರೆ “ಯಪ್ಪಾ ಸಂಸಾರದ ಹೊಟ್ಟೆ ನಡೀಬೇಕಲ್ಲ” ಎನ್ನುವುದು ಬರಗಾಲ ಹಸಿವಿನ ಭೀಕರತೆಯನ್ನೇ ಶ್ರುತಪಡಿಸುತ್ತದೆ. ‘ಬೆಳಗಾಗೊದೇ ತಡ, ಸುರುವಾಯಿತೇ ನಿನ್ನ ಕಾಟ. ತಿನ್ನೋಕೆ ರೊಟ್ಟೀನೇ ಇಲ್ಲದಿದ್ದರೆ ಮೊಲೆಯಲ್ಲಿ ಹಾಲಾದರೂ ಎಲ್ಲಿ ಬಂದೀತು? ನಿಮ್ಮನ್ನ ಮಣ್ಣಲ್ಲಿ ಹಾಕಲಿ! ನಿಮ್ಮ ರುಂಡಾ ಚಿವುಟಲಿ. ಸತ್ತಾದರೂ ಸಾಯಬಾರದೆ! ಪೀಡೆ ಹೋದೀತು’ ಎಂದು ಹಸಿವಿನ ಭರದಲ್ಲಿ ತಾಯಿ ಆಡುವ ಮಾತುಗಳು. ಪ್ರತಿ ನಿತ್ಯ ಹಸಿವಿನಿಂದ ಸಾಯುವುದರ ಬದಲು ಒಮ್ಮೆಗೇ ಮುಕ್ತಿ ಸಿಗಲಿ ಎನ್ನುವ ನೋವಿನ ನುಡಿಗಳವು. + +‘ಅವಳುಟ್ಟ ಸೀರೆಯನ್ನೊಮ್ಮೆ ನೋಡಿದರೆ ಅದು ಸೀರೆಯಲ್ಲ, ಅದನ್ನು ಸೀರೆಯೆಂದು ಕರೆಯಲು ಸಾಹಸ ಬೇಕು. ಅದು ನಾಲ್ಕಾರು ಮೊಳದ ತುಂಡು’ ಎನ್ನುತ್ತಾರೆ. ಸ್ವಾತಂತ್ರ್ಯ ಬಂದ ನಂತರವೂ ಈ ಪರಿಸ್ಥಿತಿ ಬದಲಾಗಿಲ್ಲ. + +ಸುಧಾ ಮೂರ್ತಿಯವರ ‘ಮನದ ಮಾತು’ ಎನ್ನುವ ಕೃತಿಯ ‘ತುಂಡು ಬಟ್ಟೆ’ ಅನ್ನುವ ಅಧ್ಯಾಯದಲ್ಲಿ ಇದೇ ಅಳಲನ್ನು ಕಾಣಬಹುದು. ಮನಃ ಕಲಕುವ ಸನ್ನಿವೇಶ ಕುಷ್ಟ ರೋಗಿಗಳ ಕಾಲೊನಿಯಲ್ಲಿ ಎದುರಾಗುತ್ತದೆ. ಸುಧಾ ಮೂರ್ತಿಯವರು ವೀರಮ್ಮ ಎನ್ನುವ ಹೆಸರಿನ ಮಹಿಳೆಯ ಗುಡಿಸಲಿನ ಬಳಿ ಹೋಗಿ ಆಕೆಯನ್ನು ಕರೆಯುತ್ತಾರೆ. ಆಕೆ ಬರುವುದಿಲ್ಲ. ಒಂದೆರಡು ಬಾರಿ ಕರೆದರೂ ಬಾರದೆ ಇದ್ದಾಗ ಸುಧಾಮೂರ್ತಿಯವರು ನೇರ ಗುಡಿಸಿಲೊಳಗೆ ಹೋಗಿ ಕರೆಯುತ್ತಾರೆ. ಬತ್ತಿದ ದನಿಯಿಂದಲೆ “ವೀರಮ್ಮ ಅವ್ವಾರೆ ನೀವ್ ಕಾನ್ಸಿಲಿಕ್ಕತೀರಿ ನೀವ್ ಹೆಂಗಸ್ ಆಗಿರಬಹುದು. ನನಗಿಂತ ಚಿಕ್ಕವರೆ ಇರಬಹುದು. ಆದರೆ ನಾನು… ಹೆಂಗಸು ಒಂದು ತುಂಡು ಬಟ್ಟೆಯಾದರು ಬೇಕಲ್ಲೇನ್ರಿ” ಎನ್ನುತ್ತಿದ್ದಂತೆ ಆ ನೋವಿನ ದೃಶ್ಯ ಕಾಣಿಸುತ್ತದೆ. ಆಕೆಯನ್ನು ಮೂಲೆಯಲ್ಲಿ ನೋಡಿದರೆ ಕಾಲುಗಳು ಮುದುಡಿಕೊಂಡಿರುತ್ತವೆ. ಎದೆಯನ್ನು ಕೈಗಳಿಂದ ಮುಚ್ಚಿಕೊಂಡಿರುವ ವೀರಮ್ಮ ಇದ್ದಾರೆ. ಇನ್ಫೋಸಿಸ್ ಪ್ರತಿಷ್ಠಾನದ ನಿಯಮದ ಪ್ರಕಾರ ವಸ್ತು ರೂಪದಲ್ಲಿ ದಾನವಿಲ್ಲವಾದರೂ ಸಿರೆಗಳನ್ನು ತರಿಸಿ ಕೊಡುತ್ತಾರೆ. + +‘ಬೆಳಗೂ ಬೈಗು ಛಿಟಿಛಿಳಿ ಬೆಂಕಿ, ಅನ್ನ ಬ್ರಹ್ಮದ ದೇಗುಲದಲ್ಲಿ ಬಾಯಂಗಳದಲಿ ಹುಟ್ಟಿದ ಮಾತು ಮುಗಿಲಿನ ಕಿವಿಯನ್ನು ಮುಟ್ಟ ಇಲ್ಲ’ ಎನ್ನುವ ಬೇಂದ್ರೆಯವರ ಮಾತು ಇಂದಿಗೂ ಸತ್ಯ ಅನ್ನಿಸುತ್ತದೆ. + +‘ಅದು ಸೀರೆಯಲ್ಲ ನಾಲ್ಕಾರು ಮೊಳದ ತುಂಡು,ಅದೂ ನೂರು ಕಡೆ ಹರಿದಿದೆ. ಎಲ್ಲ ಕಡೆಗಳಲ್ಲು ಬಟ್ಟೆಯಿಂದ ಮುಚ್ಚಿತು ಹೇಗೆ ಮರ್ಯಾದೆ” . ಎನ್ನುವ ಸಾಲುಗಳು ರೂಪಕದಂತಿದೆ. ಇದು ಸೀರೆಯ ವಿಷಯವಲ್ಲ, ಬಟ್ಟೆಯ ವಿಷಯ , ಅದೂ ಎಂಥ ಬಟ್ಟೆ..ಬಾಳ ಬಟ್ಟೆಯ ವಿಷಯ. ಬರಗಾಲ ಬಂದು ಇದ್ದ ಹಣ ಖರ್ಚಾಗಿ ಉದ್ಯೋಗಕ್ಕೆ ಮಾರ್ಗವಾಗಿದ್ದ ಜಮೀನು ಸಾಹುಕಾರರ ಪಾಲಾಗಿದೆ. ದುಡಿಯುವ ಜೀವ ಕ್ಷಯ ರೋಗಕ್ಕೆ ತುತ್ತಾಗಿದೆ. + +ತಿಂಗಳು ಗಟ್ಟಲೆ ಎಣ್ಣೆ ಕಾಣದೆ ಮುದುರಿ ಗಂಟಿಕ್ಕಿಕೊಂಡ ಕೂದಲು, ಮೂವತ್ತೈದು ದಾಟಿರದ ಹೆಂಗಸಾದರೂ ನಿತ್ಯ ವೇದನೆಯ ವಿಷ ಕುಡಿದು ಕುಡಿದು ಅಕಾಲ ವೃದ್ಧಾಪ್ಯ ಬಂದಿದೆ ಎನ್ನುವುದು ಆ ಹೆಣ್ಣಿನ ಒಳತೋಟಿಯನ್ನು ದರ್ಶಿಸುವಂತಿದೆ. + +ಯಾರೋ ಕೂಗಿದಂತೆ ಆಗುತ್ತದೆ , ಇದ್ಯಾರು ಅಂತ ತಿಳಿದಿದ್ದೀಯ ‘ತಾಯಿ ಭರತ ಮಾತೆ’ ಎನ್ನುವ ಉಲ್ಲೇಖ ಬರುತ್ತದೆ. ಅಂದರೆ ಇಂದಿನ ಸ್ಥಿತಿ ಗತಿ ಅರ್ಥವಾಗುತ್ತದೆ. ‘ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ’ ಎನ್ನುವ ದಾಸರ ನುಡಿಗಳು ನೆನಪಾಗಿ, ಕಾರಾವಾನ್ ನಿಜಕ್ಕೂ ದುಃಖಮುಖಿ ಅನ್ನಿಸುತ್ತದೆ.ಹಾಗಂತ ಮಕ್ಕಳು ಇಲ್ಲಿ ಸುಮ್ಮನೆ ಕೂರುವುದಿಲ್ಲ. ದಿನಾ ರೊಟ್ಟಿಗಳನ್ನು ಭಿಕ್ಷೆ ಬೇಡಿ ತರುತ್ತಿದ್ದರು. ಇದನ್ನೇನು ನಾವು ಅವಕಾಶಗಳ ಭಿಕ್ಷೆ ಎನ್ನಬೇಕೆ ಅನ್ನುವ ಆಲೋಚನೆ ಬಾರದೆ ಇರದು. ಹಾಗೆ ಬೇಡಿ ಬರುವಾಗ ಮಧ್ಯಾಹ್ನ ಕೈಲಾಗದ ಮುದುಕನಿಗೆ ಬೈಗುಳಗಳ ಜೊತೆಗೆ ರೊಟ್ಟಿಯ ಚೂರುಗಳನ್ನು ಎಸೆಯುವುದು. ಅದನ್ನು ತಿನ್ನುವುದೇ ಮನೆಯ ಯಜಮಾನನಿಗೆ ಆಭ್ಯಾಸವಾಗಿತ್ತು. + +ಮಗುವೊಂದು ಕಿಟಾರನೆ ಕಿರುಚಿಕೊಂಡ ಹಾಗನ್ನಿಸುತ್ತದೆ. ಯಾರಿರಬಹುದು ಎಂದು ನಿರೂಪಕರು ನೋಡಿದರೆ ಗುಳೆ ಸಂಸಾರದ ವ್ಯಕ್ತಿ, ‘ಹುಡುಗಾ ಸಾಯ್ತಾ ಅದೆ ಬನ್ನಿ ಬೇಗ’ ಎಂದು ಕರೆದರು. ನಿರೂಪಕರು ಗಮನಿಸಿದರೆ ತಾಯಿ ಮಗುವನ್ನು ಬಡಿಗೆ ತೆಗೆದುಕೊಂಡು ಹೊಡೆಯುತ್ತಿದ್ದಳು. + +‘ಸಾಯಿ!ಸಾಯಿ! ಎಷ್ಟು ಹೊಡೆದರೂ ಸಾಯೋದಿಲ್ಲ ನೀನು. ಒಬ್ಬೊಬ್ಬರಾಗಿ ಸತ್ತು ಹೋಗಬಾರದೆ ನೀವೆಲ್ಲಾ …ನನ್ನ ಗೋಳಾಟ ತಪ್ಪೀತು’ನಿರೂಪಕರ ತಾಯಿ ಆಕೆಯನ್ನು ತಡೆಯಲು ಹೋದಾಗ, ನೀವು ತಡೆಬಹುದು ಆದರೆ ಆ ಕೂಸಿನ ಹೊಟ್ಟೆಗೆ ಹಾಕುವುದು ಯಾರು ? ಎನ್ನುವ ಆಕೆಯ ಪ್ರಶ್ನೆಗಳಿಗೆ ಉತ್ತರವಿರುವುದಿಲ್ಲ. + +***** + +‘ಅದಕ್ಕೆಂತಲೆ ಮೊನ್ನೆ ಗಾಡಿಯ ಕೆಳಕ್ಕಾದರು ಬಿದ್ದು ಸಾಯಲಿ ಅಂತ ಕಳಿಸಿದ್ದೆ ರಾತ್ರಿ ಹಗಲು ಹಾಲಿಗಾಗಿ ಜೀವ ಹಿಂಡುತ್ತದೆ. ಇನ್ನೂ ನಾಲ್ಕು ಕುನ್ನಿ ಇವೆ’ ಎನ್ನುವ ಆಕೆಯ ಮಾತುಗಳು ಎಕ್ ಸ್ಟ್ರೀಮ್ ಅನ್ನಿಸಿದರೂ ವಿಕಟ ನಗು ನೋವನ್ನು ಧ್ವನಿಸುತ್ತದೆ. ‘ಗಂಡ ಮಕ್ಕಳನ್ನು ಕೊಂದು ಯಾವ ನರಕಕ್ಕೆ ಹೋಗುತ್ತಿ’ ಎಂದಾಗ , ‘ನರಕಕ್ಕಾದರೂ ಹೋಗಬಹುದು ಈ ಕೆಟ್ಟ ಜಗತ್ತಿನಲ್ಲಿ ಇರಲು ಸಾಧ್ಯವಾಗುವುದಿಲ್ಲ’ ಎನ್ನುತ್ತಾಳೆ. ಕಡೆಗೆ ಆಕ್ರೋಶದ ಭರದಲ್ಲಿ ಮಗುವನ್ನು ಎಸೆದು ಕೊಂದೇ ಬಿಡುತ್ತಾಳೆ. ಪೋಲಿಸರು ಬಂದು ಬಂಧಿಸಿದಾಗ ಸ್ತ್ರೀಯ ಕಣ್ಣುಗಳಲ್ಲಿ ಎಂಥ ಕಳೆ ಬಂದಿತ್ತು. ಜೀವದ ಛಾಯೆ ಎಷ್ಟು ಮಾತ್ರಕ್ಕೂ ಕಾಣಿಸುತ್ತಿರಲಿಲ್ಲ ಶವದ ಹಾಗೆ. + +ಈ ಸಂದರ್ಭದಲ್ಲಿ ಜನಪದ ಕಾವ್ಯದಲ್ಲಿ ಬರುವ ‘ಮುಕ್ಕಣ್ಣ ಮಳೆ ಕರುಣಿಸೋ’ ಎಂಬ ಸಾಲುಗಳು ನೆನಪಾಗುತ್ತವೆ. ‘ಕಾರವಾನ್’ ಕತೆಯಲ್ಲಿ ಬಡತನದಿಂದ ದಗ್ದ ಹೆಂಗಸೂ ಕೂಡ ನರಕಕ್ಕೆ ಹೋದೇವು , ಅದರೆ ಅದಕ್ಕಿಂತ ರೌರವವಾದದ್ದು ಈ ಭೂಮಿಯ ಮೇಲಿನ ಬದುಕು ಎನ್ನುವುದೂ ಇದೇ ಸಿಟ್ಟನ್ನು ಹೊಂದಿದೆ. ಹೊಟ್ಟೆಗೆ ಅನ್ನವಿಲ್ಲದೆ ನಾರಿಯರು ಉಟ್ಟ ಸೀರೆ ಸೊಂಟದಲ್ಲಿ ನಿಲ್ಲುತ್ತಿಲ್ಲ,ಹಡೆದ ಬಾಣಂತಿಗೆ ತಿನ್ನಲು ಹಿಡಿ ಅನ್ನವಿಲ್ಲದೆ ಏರುತಾವೆ ಮೊಳ ಕೈಗೆ ಬಳೆ, ಮಕ್ಕಳನು ಮಾರುಂಡು ದುಃಖವನ್ನು ಪಡುತಾರೆ, ಮುಕ್ಕಣ್ಣ ಮಳೆ ಕರುಣಿಸೋ ಅನ್ನುವ ನಿರೀಕ್ಷೆಯ ಕೂಗು ಇಲ್ಲಿ ಬಲವಾಗಿದೆ. + +‘ಮಕ್ಕಳಾ ಮಾರ್ಯಾರೆ ಮಳಿರಾಜ’ ಗೀತೆಯಲ್ಲಿ ಬರುವ ಸಾಲುಗಳನ್ನೂ ಇಲ್ಲಿ ಸೋದಾಹರಣವಾಗಿ ತೆಗೆದುಕೊಳ್ಳಬಹುದು.ರೊಟ್ಟಿ ಗುಗ್ಗುರಿ ಬೇಡಿ ಶಿವಶಿವಬೆಟ್ಟೊಂದು ಕಚ್ಚುತಾವೆಮಕ್ಕಳ ಗೋಳನ್ನು ನೋಡಲಾರೆನೊ ಶಿವನೆ.. + + + +ನಿರೂಪಕರು ಪುನಃ ರೈಲಿನಲ್ಲಿ ಸಂಚರಿಸುವಾಗ ಮತ್ತದೇ ಮುಖಗಳು ಎದುರಾದ ಹಾಗೆ ಅನ್ನಿಸಿದವು. ದಾರಿದ್ರ್ಯ ದುರ್ಗತಿ ಒಂದೇ ನಾಣ್ಯದ ಎರಡು ಮುಖಗಳು ಅಲ್ಲವೆ!“ಇದೋ! ಇಲ್ಲಿ ನಡೆದಿದೆಬಾಳಿನ ಕಾರವಾನ್!ಇಂದು ಇಲ್ಲಿ: ನಾಳೆ ಅಲ್ಲಿ!ಸಾಗಿದೆ ಕಾರವಾನ್”ಎಂಬ ಮಾತಿನೊಂದಿಗೆ ಕತೆಯನ್ನು ಮುಗಿಸುವ ಕಟ್ಟೀಮನಿಯವರು ದುಃಖದ ಕಾರವಾನ್ ಅನ್ನು ಕಟ್ಟಿದ್ದಾರೆ. + +ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’  ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_24.txt b/Kenda Sampige/article_24.txt new file mode 100644 index 0000000000000000000000000000000000000000..4ed7c729c70f21c86742406d62cf010d5f232b4b --- /dev/null +++ b/Kenda Sampige/article_24.txt @@ -0,0 +1,43 @@ +ಶತಾಯುಷಿ ಸಿದ್ಧಗಂಗಾ ಶ್ರೀಗಳ 102ನೇ ಜನ್ಮದಿನದ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸುವ ಸುಸಂದರ್ಭ ಬಂದೊದಗಿತ್ತು. ಸಿದ್ಧಗಂಗೆಯ ನಯನ ಮನೋಹರ ಪರಿಸರದಲ್ಲಿ ಹೃದಯಂಗಮವಾದ ಸಮಾರಂಭ ನಡೆದಿತ್ತು. ಅನೇಕ ರಾಜಕೀಯ ಧುರೀಣರು, ಐಎಎಸ್ ಅಧಿಕಾರಿಗಳು, ಉದ್ಯಮಿಗಳು ಮುಂತಾದ ಪ್ರತಿಷ್ಠಿತ ವ್ಯಕ್ತಿಗಳು ವೇದಿಕೆಯ ಮೇಲಿದ್ದರು. ಸಹಸ್ರ ಸಹಸ್ರ ಜನ ಸಭಿಕರು ಉತ್ಸಾಹದಿಂದ ಅತಿಥಿಗಳ ಮಾತುಗಳನ್ನು ಕೇಳುತ್ತಿದ್ದರು. ಆದರೆ ನಡು ನಡುವೆ ಸ್ವಾಮೀಜಿಯವರು ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಡುತ್ತ ವೇದಿಕೆಯಿಂದ ಕೆಳಗಿಳಿದು ಹೋಗುತ್ತಿದ್ದರು. ಹೀಗೆ ಅವರು ತಮ್ಮ ಬಗ್ಗೆಯೆ ಇರುವ ಸಮಾರಂಭ ಮುಗಿಯುವುದರೊಳಗೆ ಅನೇಕ ಬಾರಿ ಹೋಗಿ ಬರುವುದನ್ನು ಮಾಡಿದರು. ನನಗೋ ಆಶ್ಚರ್ಯವೆನಿಸಿತು. ವಯೋಸಹಜ ಪ್ರಕೃತಿ ಬಾಧೆಯಾಗುತ್ತಿದೆಯಾ ಎಂಬ ಅನುಮಾನ ಬಂದಿತು. ಸಂಘಟಕರೊಬ್ಬರನ್ನು ಕರೆದು ಪಿಸುಮಾತಿನಲ್ಲಿ ಕೇಳಿಯೆ ಬಿಟ್ಟೆ. ಅವರು ಕೊಟ್ಟ ಉತ್ತರದಿಂದ ದಂಗಾಗಿ ಹೋದೆ. + +“ಪೂಜ್ಯರು ತಮ್ಮ ಭೇಟಿಗಾಗಿ ಕಾಯುತ್ತಿರುವ ಭಕ್ತರಿಗೆ ದರ್ಶನ ಕೊಟ್ಟು ಬರುತ್ತಿದ್ದಾರೆ. ಅವರು ಎಂದಿಗೂ ಭಕ್ತರನ್ನು ಕಾಯಿಸುವವರಲ್ಲ. ಕಾರ್ಯಕ್ರಮ ತನ್ನ ಪಾಡಿಗೆ ನಡೆದೇ ಇರುತ್ತದೆ. ವಿವಿಧ ಕಡೆಗಳಿಂದ ಬರುವ ಭಕ್ತರ ಗುಂಪುಗಳಿಗೆ ಹೋಗಿ ಹೋಗಿ ಅವರು ದರ್ಶನ ಕೊಡುತ್ತಲೇ ಇರುತ್ತಾರೆ” ಎಂದು ಅವರು ತಿಳಿಸಿದರು. ಇಂಥ ಭಕ್ತವತ್ಸಲ ಸಿದ್ಧಗಂಗಾ ಶಿವಕುಮಾರ ಸ್ವಾಮೀಜಿಯವರನ್ನು ನಾನು ಮಹಾತ್ಮರ ಸ್ಥಾನದಲ್ಲಿಟ್ಟು ಒಳಗಿಂದಲೇ ಶರಣು ಶರಣಾರ್ಥಿ ಹೇಳಿದೆ. + +ನನ್ನ ಮತ್ತು ಅವರ ಆತ್ಮಸಂಬಂಧ ಎಷ್ಟೊಂದು ಗಾಢವಾಗಿತ್ತೆಂದರೆ ‘ಎತ್ತಣಿಂದೆತ್ತ ಸಂಬಂಧವಿದು’ ಎಂದು ನನಗೇ ಅನೇಕ ಬಾರಿ ಅನಿಸಿದೆ. + +ಸಿದ್ಧಗಂಗಾ ಮಠದಿಂದ ಹಿರಿಯರೊಬ್ಬರು ಒಂದು ಸಲ ದೂರವಾಣಿ ಮೂಲಕ ಸಿದ್ಧಗಂಗಾ ಪತ್ರಿಕೆಗೆ ಲೇಖನವೊಂದನ್ನು ಕೇಳಿದರು. ‘ಸ್ವಾಮೀಜಿಯವರು ತಮ್ಮ ಕಡೆಯಿಂದ ಬರೆಸಲು ತಿಳಿಸಿದ್ದಾರೆ’ ಎಂದರು. ‘ಅವರ ಕಡೆಯಿಂದ ಪತ್ರಿಕೆಗೆ ಸದಾ ಬರೆಸುತ್ತಿರಬೇಕು ಎಂದು ಸ್ವಾಮೀಜಿಯವರ ಅಪ್ಪಣೆಯಾಗಿದೆ. ತಾವು ಬರೆಯಬೇಕು’ ಎಂದು ಅವರು ಹೇಳಿದ್ದು ನನ್ನ ಮನದಲ್ಲಿ ಮನೆ ಮಾಡಿದೆ. + +ಸ್ವಾಮೀಜಿಯವರು ನನಗೆ ಅನೇಕ ಬಾರಿ ಮಠದ ಕಾರ್ಯಕ್ರಮಗಳಿಗೆ ಕರೆಸಿದ್ದರು. ಅನೇಕ ಸಲ ಬಸವ ಜಯಂತಿ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದೇನೆ. ಅವರು ತದೇಕಚಿತ್ತದಿಂದ ಮಾತುಗಳನ್ನು ಆಲಿಸುವುದನ್ನು ಮರೆಯಲು ಸಾಧ್ಯವಿಲ್ಲ. + +ಒಂದು ಸಲ ನಾನು ಪತ್ನೀ ಸಮೇತ ಹೋಗಿದ್ದೆ. ಅಂದು ನಾವಿಬ್ಬರೂ ಅವರ ಪಾದಸ್ಪರ್ಶ ಮಾಡಿದೆವು. ಬಾಗಿದ ಶಿರ ಮತ್ತು ಮುಗಿದ ಕೈಯೊಂದಿಗೆ ಶರಣು ಶರಣಾರ್ಥಿ ಹೇಳುವುದನ್ನು ಬಸವಣ್ಣನವರು ನಮಗೆ ಕಲಿಸಿದ್ದಾರೆ. ನಾನು ಎಲ್ಲ ಸ್ವಾಮೀಜಿಗಳಿಗೆ ಅದೇ ರೀತಿ ನಮಸ್ಕರಿಸುವುದನ್ನು ಕಲಿತಿದ್ದೇನೆ. ಆದರೆ ಸಿದ್ಧಗಂಗಾ ಸ್ವಾಮೀಜಿಯವರ ಪಾದಕ್ಕೆ ಎರಗುವುದರಲ್ಲಿ ಅಮಿತ ಆನಂದವನ್ನು ಅನುಭವಿಸಿದ್ದೇನೆ. ಕೊನೆಯ ಸಲದ ಭೇಟಿಯಲ್ಲೂ ಪಾದಸ್ಪರ್ಶಾನಂದವನ್ನು ಪಡೆದೆ. ಅವರು ನನ್ನ ಹೃದಯಾಂತರಾಳದಲ್ಲಿ ಇಳಿದಿದ್ದಾರೆ. ಅವರ ನೆನೆಪೇ ಒಂದು ಅನುಭಾವದ ಆನಂದ.ಅವರು ಬಸವಣ್ಣನವರ ಕುರಿತ ನಾಟಕವನ್ನು ನೂರಾರು ಸಲ ನೋಡಿರಬಹುದು. ಅದೇ ತಂಡದ ಅದೇ ನಾಟಕ ಎಷ್ಟು ನೋಡಿದರೂ ಅವರಿಗೆ ಮತ್ತೆ ಮತ್ತೆ ನೋಡುವ ಬಯಕೆ. ಬಸವಣ್ಣನವರೆಂದರೆ ಅವರಿಗೆ ಪಂಚಪ್ರಾಣ. ಅವರು ನನ್ನ ಕಣ್ಣ ಮುಂದಿನ ಬಸವಣ್ಣನವರು ಎಂದು ಪ್ರತಿಸಲ ಭೇಟಿಯಾದಾಗ ಅನಿಸಿದ್ದುಂಟು. + + + +ಬಹಳ ವರ್ಷಗಳ ಹಿಂದೆ ಮೊದಲ ಬಾರಿ ಪರಿಚಿತರ ಜೊತೆ ಅವರ ಭೇಟಿಗೆ ಹೋದಾಗ ಅವರು ಚೆಕ್ ಮೇಲೆ ಸಹಿ ಮಾಡುತ್ತಿದ್ದ ನೆನಪು. ಪಕ್ಕದಲ್ಲಿ ನನ್ನ ‘ಬಸವ ಪ್ರಜ್ಞೆ’ ಪುಸ್ತಕ ಇದ್ದದ್ದನ್ನು ನೋಡಿ ಚಕಿತಗೊಂಡೆ. ಪರಿಚಿತರು ನನ್ನ ಪರಿಚಯ ಮಾಡಿಸಿದರು. ಅವರು ನನ್ನ ಆ ಪುಸ್ತಕ ತೋರಿಸುತ್ತ “ಬಹಳ ಚೆನ್ನಾಗಿದೆ” ಎಂದರು. ಈ ಅನಿರೀಕ್ಷಿತ ಘಟನೆ ಸದಾ ನೆನಪು ಉಳಿಯುವಂಥದ್ದಾಗಿದೆ. ಅವರು ಕನ್ನಡಕ ಇಲ್ಲದೆ ಚಿಕ್ಕ ಕಣ್ಣುಗಳಿಂದ ಓದುವುದನ್ನು ನೋಡುವುದೇ ಒಂದು ವಿಸ್ಮಯ. ನಂತರ ಅವರಿಗೆ ಶೈಲಾ ನಾಗರಾಜ ಅವರ ಮೂಲಕ ಕೆಲ ಪುಸ್ತಕಗಳನ್ನು ಕಳುಹಿಸಿದ ನೆನಪು. + +ಶೈಲಾ ಯಾವ ಮಠಮಾನ್ಯಗಳಿಗೆ ಹೋಗದ ಹೆಣ್ಣುಮಗಳು. ನನ್ನ ಒತ್ತಾಯದಿಂದ ಅಲ್ಲಿಗೆ ಹೋದವಳು ಇಂದಿಗೂ ಹೋಗುತ್ತಲೇ ಇದ್ದಾಳೆ. ಇದುವೆ ಸಿದ್ಧಗಂಗಾ ಶ್ರೀಗಳ ಅನುಪಮ ವ್ಯಕ್ತಿತ್ವ. + +ನಾನು ಬೆಂಗಳೂರಿನ ಸಮಾರಂಭವೊಂದರಲ್ಲಿ ಶ್ರೀಗಳೊಂದಿಗೆ ಭಾಗವಹಿಸಿದಾಗ, ಉಪನ್ಯಾಸ ನೀಡುವ ಸಂದರ್ಭದಲ್ಲಿ ‘ಸಿದ್ಧಗಂಗಾ ಸ್ವಾಮೀಜಿಯವರ ಕಾಲದಲ್ಲಿ ನಾವು ಬದುಕಿದ್ದೇವೆ ಎಂಬುದೇ ಬಹುದೊಡ್ಡ ಹೆಮ್ಮೆಯ ವಿಚಾರ’ ಎಂದು ತಿಳಿಸಿದ್ದೆ.’ ಅದು ಬಹುಶಃ ನಾಗೇಂದ್ರ ಅವರು ಏರ್ಪಡಿಸಿದ್ದ ಸಮಾರಂಭವಿತ್ತು ಎಂಬ ನೆನಪು. ಅಂದು ಸ್ವಾಮೀಜಿಯವರು ಪ್ರಜಾಪ್ರಭುತ್ವದ ಮಹತ್ವದ ಕುರಿತು ಮಾತನಾಡಿದ್ದನ್ನು ರೆಕಾರ್ಡ್ ಮಾಡಿಕೊಂಡಿದ್ದರೆ ಇಂದಿನ ರಾಜಕಾರಣಿಗಳಿಗೆ ಕೇಳಿಸಬಹುದಿತ್ತು. + +ಸಿದ್ಧಗಂಗಾ ಶ್ರೀಗಳು ಎಂದೇ ಪ್ರಖ್ಯಾತರಾದ ಶಿವಕುಮಾರ ಸ್ವಾಮೀಜಿಯವರು (1.4.1907-21.1.2019) 111 ವರ್ಷ ಬದುಕಿ ಲಕ್ಷಾಂತರ ಮಕ್ಕಳಿಗೆ ಅನ್ನ, ವಸತಿ ಮತ್ತು ಜ್ಞಾನ ದಾಸೋಹ ಮಾಡಿದರು. ಭಕ್ತರು ಅವರಿಗೆ ಪ್ರೀತಿಯಿಂದ ನಡೆದಾಡುವ ದೇವರು, ತ್ರಿವಿಧ ದಾಸೋಹಿ, ಕಾಯಕಯೋಗಿ ಎಂದು ಮುಂತಾಗಿ ಕರೆಯುತ್ತಿದ್ದರು. ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಕೊಟ್ಟು ಗೌರವಿಸಿದೆ. ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಅವರ ಜನ್ಮದಿನವಾದ ಏಪ್ರಿಲ್ ಒಂದನ್ನು ದಾಸೋಹ ದಿನವಾಗಿ ಆಚರಿಸಲಾಗುತ್ತಿದೆ. + + + +ಇಂದಿನ ರಾಮನಗರ ಜಿಲ್ಲೆ, ಮಾಗಡಿ ತಾಲ್ಲೂಕು, ಸೋಲೂರು ಹೋಬಳಿ, ವೀರಾಪುರ ಗ್ರಾಮದಲ್ಲಿ ಹೊನ್ನೇಗೌಡ ಮತ್ತು ಗಂಗಮ್ಮನವರ ಪುತ್ರರಾಗಿ ಜನಿಸಿದ ಅವರು ವಿದ್ಯಾರ್ಥಿಯಾಗಿದ್ದಾಗ ಸಿದ್ಧಗಂಗಾ ಮಠದ ಉದ್ಧಾನ ಶಿವಯೋಗಿಗಳ ಆಶ್ರಯದಲ್ಲಿ ಬೆಳೆದರು. 1930ನೇ ಮಾರ್ಚ್ 3ರಂದು ಉದ್ಧಾನ ಶ್ರೀಗಳು ಅವರನ್ನು ಸಿದ್ಧಗಂಗಾ ಮಠದ ಕಿರಿಯ ಸ್ವಾಮಿಗಳಾಗಿ ಸ್ವೀಕರಿಸಿದರು. ಅವರು ಲಿಂಗ್ಯಕ್ಯವಾದ ನಂತರ ಶಿವಕುಮಾರ ಸ್ವಾಮೀಜಿಯವರು 1941ರಲ್ಲಿ ಸಿದ್ಧಗಂಗಾ ಮಠದ ಪೀಠಕ್ಕೆ ಬಂದರು. + +ಪದವೀಧರರಾದ ಅವರ ಚಿಂತನೆ ವೈಜ್ಞಾನಿಕ ಮನೋಭಾವನೆಯಿಂದ ಕೂಡಿತ್ತು. ಆದರೆ ಅದು ಶುಷ್ಕವಾದುದಲ್ಲ. ಅವರಿಗೆ ಅವರದೇ ಆತ ತರ್ಕವಿತ್ತು. ಭಕ್ತರ ಮೇಲಿನ ಅಪಾರ ಕಾಳಜಿಯಿಂದ ತಾಯತಕ್ಕಾಗಿ ಅವರು ತಾಮ್ರದ ಹಾಳೆಯಲ್ಲಿ ರಕ್ಷಾಮಂತ್ರ ಬರೆದು ಕೊಡುವುದನ್ನು ಗಮನಿಸಿದೆ. ಅವರು ಅದರಲ್ಲಿ ಬರೆದದ್ದಾದರೂ ಏನು? ಬಸವ ಗುರುವಿನ ಹೆಸರು ಮತ್ತು ಷಟ್‌ಸ್ಥಲದ ಚಿಹ್ನೆ! ವೈಜ್ಞಾನಿಕ ಮನೋಭಾವದ ಬಸವಣ್ಣನವರ ಹೆಸರನ್ನು ಅವರೇಕೆ ಬರೆದರು? ಎಂಬ ಪ್ರಶ್ನೆ ವಿಚಾರವಾದಿಗಳ ಮನದಲ್ಲಿ ಏಳುವುದು ಸಹಜ. ಅವರು ಹಾಗೆ ಬರೆಯದೆ ಹೋಗಿದ್ದರೆ ಜನರು ಮಂತ್ರವಾದಿಗಳ, ಭವಿಷ್ಯ ಹೇಳುವವರ ಮತ್ತು ಪಂಚಾಂಗ ಓದುವವರ ಕಡೆ ಹೋಗುತ್ತಿದ್ದರು. ಅಷ್ಟೇ ಅಲ್ಲದೆ ಮೂಢನಂಬಿಕೆಯ ಕ್ರೂರ ವ್ಯವಸ್ಥೆಯಲ್ಲಿ ಸಿಕ್ಕಿ ನರಳುತ್ತಿದ್ದರು. ಧನಕನಕಗಳನ್ನು ಕಳೆದುಕೊಳ್ಳುತ್ತಿದ್ದರು. ಆದರೆ ಸಿದ್ಧಗಂಗಾ ಶ್ರೀಗಳು ಅವರಿಗೆ ಫೇಥ್ ಹೀಲಿಂಗ್ (ನಂಬಿಕೆಯ ಚಿಕಿತ್ಸೆ) ನೀಡುವುದರ ಮೂಲಕ, ತಮ್ಮ ಭಕ್ತರು ಆರ್ಥಿಕವಾಗಿ ಮತ್ತು ಮಾನಸಿಕವಾಗಿ ಹಾಳಾಗದಂತೆ ಕಾಳಜಿ ವಹಿಸುವುದನ್ನು ಕಂಡುಕೊಂಡೆ. + +ನಮ್ಮ ಅನೇಕ ರಾಜಕಾರಣಿಗಳು ಅಧಿಕಾರದ ಆಸೆಗಾಗಿ ಎಂಥ ಮೂರ್ಖ ಭವಿಷ್ಯಗಾರರ ಕಾಲನ್ನೂ ಹಿಡಿಯಬಲ್ಲರು. ರಾಹು ಕಾಲ ಗುಳಿಕ ಕಾಲ ಎನ್ನುತ್ತಲೇ ದೈನಂದಿನ ಭವಿಷ್ಯ ಹೇಳುವವರು ಬದುಕನ್ನು ರೂಪಿಸಿಕೊಳ್ಳುತ್ತಾರೆ. ಬೆಳಗಾದ ಕೂಡಲೆ ಟಿ.ವಿ.ಗಳಲ್ಲಿ ಮೂಢನಂಬಿಕೆಗಳನ್ನು ಹರಡುವವರದೇ ಹಾವಳಿ. ಇಂಥ ವಿಚಿತ್ರ ಸ್ಥಿತಿಯಲ್ಲಿ ಜನಸಾಮಾನ್ಯರು ಮೂಢನಂಬಿಕೆಗಳಿಗೆ ಬಲಿಯಾಗುವುದು ಸಾಮಾನ್ಯವಾಗಿದೆ. ಈ ಕ್ರೂರ ವಾಸ್ತವದ ಹಿನ್ನೆಲೆಯಲ್ಲಿ ಶ್ರೀಗಳು ತಮ್ಮ ಭಕ್ತರ ರಕ್ಷಣೆ ಮಾಡುವ ಕ್ರಮಗಳಲ್ಲಿ ಇದೂ ಒಂದು ಎಂದು ಭಾವಿಸಿರುವೆ. + +ಅವರಿಗೆ ಜನಸಾಮಾನ್ಯರ ಬಗ್ಗೆ ಇರುವ ಕಾಳಜಿಯ ಕುರಿತು ಪ್ರಜಾವಣಿಯಲ್ಲಿ ನನ್ನ ಸಹೋದ್ಯೋಗಿಯಾಗಿದ್ದ ಮಿತ್ರ ಗಂಗಾಧರ ಮೊದಲಿಯಾರ ಅವರು ಹೇಳಿದ ಘಟನೆಯೊಂದು ನೆನಪಿಗೆ ಬರುತ್ತಿದೆ. ಮೊದಲಿಯಾರ 80ರ ದಶಕದಲ್ಲಿ ತುಮಕೂರಿನಲ್ಲಿ ಪ್ರಜಾವಾಣಿ ಬಾತ್ಮೀದಾರರಾಗಿದ್ದರು. ಆಗ ದೇಶಾದ್ಯಂತ ನಡೆದ ಪ್ರಖರ ಲಾರಿ ಮುಷ್ಕರದಿಂದಾಗಿ ಜನರಿಗೆ ಯಾವುದೇ ಜೀವನಾವಶ್ಯಕ ವಸ್ತುಗಳು ಸಿಗುತ್ತಿರಲಿಲ್ಲ. ಇಂಧನ ಕೂಡ ಸಿಗದಂಥ ಸ್ಥಿತಿ ನಿರ್ಮಾಣವಾಗಿತ್ತು. ಆಗ ಶ್ರೀಗಳು ವಿವಿಧ ಕ್ಷೇತ್ರಗಳ ಜನರನ್ನು ಮತ್ತು ತಜ್ಞರನ್ನು ಕರೆದು ಚರ್ಚೆ ನಡೆಸುವ ಮೂಲಕ ಪರಿಸ್ಥಿತಿಯ ಕಾರಣ ಮತ್ತು ಅದು ಜನಜೀವನದ ಮೇಲೆ ಆಗುವ ಪರಿಣಾಮದ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಯತ್ನ ಮಾಡಿದರು. ಹೀಗೆ ಅವರು ಬದುಕಿನ ಬಗ್ಗೆ ಅಪಾರವಾದ ಗೌರವವುಳ್ಳವರಾಗಿದ್ದು ಜನಪರ ಕಾಳಜಿಯನ್ನು ಹೊಂದಿದ್ದರು. + + + +ಎಲ್ಲ ಜಾತಿ ಜನಾಂಗಗಳ ಮಕ್ಕಳ ಶೈಕ್ಷಣಿಕ ಏಳ್ಗೆಯೆ ಅವರ ಬಹುದೊಡ್ಡ ಗುರಿಯಾಗಿತ್ತು. ಪ್ರತಿ ವರ್ಷ ಹತ್ತುಸಾವಿರ ಮಕ್ಕಳನ್ನು ಸಾಕುತ್ತ, ಅವರಿಗೆ ಯಾವುದೇ ರೀತಿಯ ಕೊರತೆಯಾಗದಂತೆ ನೋಡಿಕೊಳ್ಳುತ್ತ, ಶೈಕ್ಷಣಿಕವಾಗಿ ಅವರನ್ನು ಉನ್ನತ ಸ್ಥಾನಕ್ಕೇರಿಸುವುದು ಸಾಮಾನ್ಯ ಮಾತಲ್ಲ. ಅವರ ಮಠದ ಎಲ್ಲ ವಿಭಾಗಗಳಲ್ಲಿ ನಿಷ್ಠೆಯಿಂದ ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುವ ಪ್ರತಿಯೊಬ್ಬರೂ ಗೌರವಕ್ಕೆ ಅರ್ಹರಾಗಿದ್ದಾರೆ. ಅವರ ಮಠದ ಆವರಣವು ಪುಟ್ಟ ಭಾರತವೇ ಆಗಿದೆ. ಕುವೆಂಪು ಅವರ ಕನಸಿನ ಸರ್ವ ಜನಾಂಗಗಳ ಶಾಂತಿಯ ತೋಟ ಅದು. + +ಪ್ರತಿ ವರ್ಷವೂ ಇರುವ ಹತ್ತು ಸಾವಿರ ವಿದ್ಯಾರ್ಥಿಗಳ ದೈನಂದಿನ ವೆಚ್ಚಕ್ಕಾಗಿ ಅವರು ಎಂಥ ಶ್ರೀಮಂತ ಭಕ್ತರಿಂದ ಕೂಡ ಪಡೆಯುವುದಕ್ಕೆ ಹಿಂದೆ ಮುಂದೆ ನೋಡಲಿಲ್ಲ. ‘ಯಾರು ಏನೇ ಇರಲಿ, ಯಾರು ಏನೇ ಕೊಡಲಿ. ಅದೆಲ್ಲ ವಿದ್ಯಾರ್ಥಿಗಳಿಗಾಗಿ’ ಎಂಬ ಭಾವ ಅವರದು. ಇಲ್ಲಿ ಇದ್ದು ಕಲಿತ ಅನೇಕ ಬಡ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿದ್ದು ಮಠಕ್ಕೆ ಗೌರವ ತಂದದ್ದನ್ನು ನಾನು ವಿವಿಧ ದೇಶಗಳಲ್ಲಿ ನೋಡಿದ್ದೇನೆ. ‘ನಾನು ಸಿದ್ಧಗಂಗಾ ಮಠದ ವಿದ್ಯಾರ್ಥಿ’ ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. + + + +ಇಂಥ ಯುಗಪುರುಷ ಸಿದ್ಧಗಂಗಾ ಶ್ರೀಗಳ ಕಾಲದಲ್ಲಿ ಬದುಕಿದ ನಾವೇ ಧನ್ಯರು. ಅವರು ಲಿಂಗೈಕ್ಯರಾಗಿದ್ದಾರೆ. ಆದರೆ ಅವರ ಆದರ್ಶಗಳು ಅಮರವಾಗಿವೆ. ಅವರ ಆದರ್ಶಗಳ ಮಾರ್ಗದಲ್ಲಿ ಮುನ್ನಡೆಯೋಣ. + +ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ.  ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ. \ No newline at end of file diff --git a/Kenda Sampige/article_240.txt b/Kenda Sampige/article_240.txt new file mode 100644 index 0000000000000000000000000000000000000000..2c82555c586878c54e91bec4cb8be0092ffed12a --- /dev/null +++ b/Kenda Sampige/article_240.txt @@ -0,0 +1,35 @@ +byನಾರಾಯಣ ಯಾಜಿ|Jun 20, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಈ ಪುಸ್ತಕದಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಜೀವನದಲ್ಲಿಯೂ ಹಾಗೇ ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ. ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ.ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯ ಕುರಿತು ನಾರಾಯಣ ಯಾಜಿ ಬರಹ + +byಕೆಂಡಸಂಪಿಗೆ|Jun 18, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ.ಆಶಾ ಜಗದೀಶ್‌ ಹೊಸ ಪುಸ್ತಕ “ಕಾಣೆಯಾದವರು” ಪ್ರಬಂಧಗಳ ಸಂಕಲನಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ + +byಕೆಂಡಸಂಪಿಗೆ|Jun 13, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ ಗಾಂಧಿಯೊಂದಿಗೆ ಮಾತಾಡುವೆ ಮತ್ತು ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ.ಕೆ. ನಲ್ಲತಂಬಿ ಅನುವಾದಿಸಿದ ಮಹಾತ್ಮನ ಬದುಕಿನ ಕೆಲವು ಆಯ್ದ ಕತೆಗಳ ಸಂಕಲನ “ಮತ್ತೊಂದು ರಾತ್ರಿ” ಕೃತಿಗೆ ಕೆ.ಪಿ. ಸುರೇಶ ಬರೆದ ಮುನ್ನುಡಿ + +byಕೆಂಡಸಂಪಿಗೆ|Jun 11, 2022|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೇವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ‌ ಬರೆದ ಮುನ್ನುಡಿಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೆ ವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ.ಲಿಂಗರಾಜ ಸೊಟ್ಟಪ್ಪನವರ ಚೊಚ್ಚಲ ಕಥಾ ಸಂಕಲನ “ಮಾರ್ಗಿ”ಗೆ ಡಾ. ಪ್ರಹ್ಲಾದ ಅಗಸನಕಟ್ಟೆ‌ ಬರೆದ ಮುನ್ನುಡಿ + +byಕೆಂಡಸಂಪಿಗೆ|Jun 10, 2022|ಪುಸ್ತಕ ಸಂಪಿಗೆ| 0 Comments + +ಅಲ್ಲಿಂದ ಮುಂದೆ ದನದ ‘ಫ್ಯಾಕ್ಟರಿ’ ನೋಡುವ ಕಾರ್ಯಕ್ರಮ. ಅಂದರೆ ದನಗಳನ್ನು ಸಿದ್ಧಪಡಿಸುವ ಫ್ಯಾಕ್ಟರಿ. ನಮ್ಮ ಸಿನಿಮಾ ಮಂದಿರಗಳ ಟಿಕೆಟ್‌ ಕೌಂಟರ್‌ಗಳ ಎದುರು ಕ್ಯೂ ನಿಲ್ಲಲು ಎರಡೂ ಕಡೆ ಅಡ್ಡಗಟ್ಟೆ ಕಟ್ಟಿದ ಹಾಗೆ, ಅಮೆರಿಕದ ದನಗಳ ಫ್ಯಾಕ್ಟರಿಯ ಎದುರು ಆಳೆತ್ತರದ ಒಂದರ್ಧ ಕಿ.ಮೀ. ಉದ್ದದ ಬೇಲಿಯಂಥ ಕಟ್ಟೆ ಕಟ್ಟಿರುತ್ತಾರೆ. ಹುಟ್ಟಿ ಎರಡು ತಿಂಗಳುಗಳಷ್ಟೇ ಆದ ಮುದ್ದು ಎಳೆಗರುಗಳನ್ನು ಎಲ್ಲಿಂದಲೋ ಸಾವಿರ ಸಂಖ್ಯೆಯಲ್ಲಿ ಖರೀದಿಸಿ ತಂದು ಇಲ್ಲಿನ ಕಟ್ಟೆಗಳ ಮಧ್ಯೆ ಸಾಲಾಗಿ ಸಾಗಿಸುತ್ತಾರೆ.ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಮತ್ತೊಂದು ಅಧ್ಯಾಯ ಇಂದಿನ ಓದಿಗೆ. + +byಕೆಂಡಸಂಪಿಗೆ|Jun 9, 2022|ಪುಸ್ತಕ ಸಂಪಿಗೆ| 0 Comments + +ನಾನು ಇಲ್ಲಿ ಕುಳಿತು ಮಾತಾಡುತ್ತಿರುವ ನನ್ನ ‘ಈಗ’, ನೀವು ಕೇಳುತ್ತಿರುವ ನಿಮ್ಮ ‘ಈಗ’ ಒಂದೇ ಅಲ್ಲ. ಇಡೀ ಬ್ರಹ್ಮಾಂಡದ ಹೋಲಿಕೆಯಲ್ಲಿ ನಾವು ಸಣ್ಣವರಾದ್ದರಿಂದ ಈ ವಿಪರ್ಯಾಸ ಗೋಚರ ಆಗುತ್ತಿಲ್ಲ. ಹಾಟ್ ಬಲೂನಿನ ಮೇಲೆ ಇರುವ ಇರುವೆಗೆ ತನ್ನ ಜಾಗ ಮಟ್ಟಸ ಎಂದೇ ತೋರುತ್ತದೆ. ಮನುಷ್ಯನಿಗೆ ನಿಂತ ಜಾಗ ಮಟ್ಟಸ ಅನ್ನಿಸುವುದೂ ಹೀಗೆಯೇ. ನಾವು ಭೂಮಿಯ ಗಾತ್ರಕ್ಕೆ ಹೋಲಿಸಿ, ತುಂಬಾ ಗಾತ್ರ ಇದ್ದಿದ್ದರೆ ಅದು ದುಂಡು ಎಂದು ಕಣ್ಣಿಗೇ ಕಾಣಿಸುತ್ತಿತ್ತು. ಕರಣಂ ಪವನ್‌ ಪ್ರಸಾದ್‌ ಬರೆದ ‘ಸತ್ತು’  ಎಂಬ ಹೊಸ  ಕಾದಂಬರಿಯಿಂದ ಕೆಲವು ಪುಟಗಳು ನಿಮ್ಮ ಓದಿಗೆ + +byಸಹನಾ ಕಾಂತಬೈಲು|Jun 7, 2022|ಪುಸ್ತಕ ಸಂಪಿಗೆ| 2 Comments + +ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದೆ. `ಬೀಜ ರೆಡಿಯಾಗಿದೆ. ಯಾವಾಗ ಬರುತ್ತೀರಿ?’ ಅವರೂ ಉತ್ಸುಕತೆಯಲ್ಲಿದ್ದರು. `ನಾಳೆಯೇ ಬರುತ್ತೇವೆ’ ಎಂದರು. ಹೇಳಿದ ಮಾತಿನಂತೆ ಅವರು ಮರುದಿನ ಹತ್ತು ಗಂಟೆಗೆ ಸರಿಯಾಗಿ ಉಪವಲಯ ಅರಣ್ಯಾಧಿಕಾರಿ ಅಲ್ಲದೆ ಇತರ ಆರು ಮಂದಿ ಸಿಬ್ಬಂದಿಯವರೊಂದಿಗೆ ಮನೆಗೆ ಬಂದರು. ನಾನು ಎಲ್ಲರಿಗೂ ಟೀ ಮತ್ತು ಬಿಸಿಬಿಸಿ ಗೆಣಸಿನ ಪೋಡಿ ಮಾಡಿ ಕೊಟ್ಟೆ. ಕಾಡಿನಲ್ಲಿ ಬಾಯಾರಿಕೆಯಾದರೆ ಎಂದು 5 ಲೀಟರ್ ಕ್ಯಾನ್‌ನಲ್ಲಿ ಮಜ್ಜಿಗೆ ತುಂಬಿಸಿಕೊಂಡೆ. ನಂತರ ನಾವೆಲ್ಲರೂ ನಮ್ಮ ಮನೆಯಿಂದ ಮೇಲೆ ಇರುವ ರಕ್ಷಿತಾರಣ್ಯಕ್ಕೆ ಕತ್ತಿ, ಕೋಲು, ಬೀಜ ಹಿಡಿದು ಪ್ರವೇಶಿಸಿದೆವು.ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಮತ್ತೊಂದು ಬರಹ ಇಲ್ಲಿದೆ. + +byಕೆಂಡಸಂಪಿಗೆ|Jun 6, 2022|ಪುಸ್ತಕ ಸಂಪಿಗೆ| 0 Comments + +ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ.ಆನಂದ್‌ ಗೋಪಾಲ್‌ ಹೊಸ ಕಥಾಸಂಕಲನ “ಆಟಗಾಯಿ”ಗೆ ಕೆ. ಸತ್ಯನಾರಾಯಣ ಬರೆದ ಮುನ್ನುಡಿ + +byಕೆಂಡಸಂಪಿಗೆ|Jun 1, 2022|ಪುಸ್ತಕ ಸಂಪಿಗೆ| 0 Comments + +ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಯುದ್ಧದಲ್ಲಿ ಮಡಿದವರಿಗಾಗಿ ಅಮೆರಿಕದಲ್ಲಿ ನಿರ್ಮಿಸಿದ ಸ್ಮಾರಕಗಳಿಗೆ ಕೊಳ್ಳೇಗಾಲದ ‘ವೆರಿಸ್ಪೆಷಲ್’  ಕಲ್ಲುಚಪ್ಪಡಿಗಳನ್ನು ಅಂದರೆ ಗ್ರಾನೈಟನ್ನು ಬಳಸಲಾಗಿದೆ. ಈ ಕಲ್ಲುಚಪ್ಪಡಿಗಳನ್ನು ರೂಪಿಸಲು ಜೀವತೆತ್ತವರಿಗೆ ಸ್ಮಾರಕ ಬೇಡವೇ…ನಾಗೇಶ್ ಹೆಗಡೆ ಅವರು ಬರೆದ ಗಗನ ಸಖಿಯರ ಸೆರಗ ಹಿಡಿದು ಕೃತಿಯ ಒಂದು ಅಧ್ಯಾಯ ಇಂದಿನ ಓದಿಗೆ. \ No newline at end of file diff --git a/Kenda Sampige/article_241.txt b/Kenda Sampige/article_241.txt new file mode 100644 index 0000000000000000000000000000000000000000..a87afaf417298d095fbeff18b7c22a1baf0ec515 --- /dev/null +++ b/Kenda Sampige/article_241.txt @@ -0,0 +1,31 @@ +ದಿವ್ಯಾ ಶ್ರೀಧರ್ ರಾವ್ ಸದಾ ಕ್ರಿಯಾಶೀಲರಾಗಿ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಮದುವೆಯಾದ ನಂತರ ಸಂಸಾರ ನಿರ್ವಹಣೆ, ವೃತ್ತಿ ಮತ್ತು ಇನ್ನಿತರ ಕಾರಣಗಳಿಂದ ಸಮಾಜದ ಸೂಕ್ಷ್ಮಗಳಿಗೆ ಮಹಿಳೆಯರು ಸ್ಪಂದಿಸುವುದು ಬಲು ಅಪರೂಪ. ಆದರೆ ಈ ಎಲ್ಲ ಅಡೆತಡೆ- ಪ್ರತಿಕೂಲ ಸನ್ನಿವೇಶಗಳನ್ನು ಮೀರಿ ಸ್ತ್ರೀ ಸಂವೇದನೆಯನ್ನು ಅಳವಡಿಸಿಕೊಂಡು ಅನುದಿನವು ಸಾಹಿತ್ಯ ಕ್ಷೇತ್ರದಲ್ಲಿ ಕೃಷಿಯನ್ನು ಮಾಡುತ್ತಿರುವ ಬೆರಳೆಣಿಕೆಯ ಸಾಹಿತಿಗಳಲ್ಲಿ ದಿವ್ಯಾ ಶ್ರೀಧರ್ ರಾವ್ ರವರು ಒಬ್ಬರು. + +(ದಿವ್ಯಾ ಶ್ರೀಧರ್ ರಾವ್) + +ಸುಸಂಸ್ಕೃತ ಕೌಟುಂಬಿಕ ಮತ್ತು ಶಿಕ್ಷಣದ ಹಿನ್ನೆಲೆಯು ಇವರ ಸಾಹಿತ್ಯ ಯಾನದ ಆದಿ ಮೆಟ್ಟಿಲುಗಳು. ಕಾಲೇಜು ಶಿಕ್ಷಣ ಮುಗಿದ ನಂತರ ಬದುಕಿನಲ್ಲಿ ಆಗಾಗ ಬಂದ ಅನಿರೀಕ್ಷಿತ ಮತ್ತು ಪ್ರತಿಕೂಲ ಸನ್ನಿವೇಶಗಳನ್ನು ಮೀರಿ ನಿಂತು ದಿಟ್ಟ ಮಹಿಳೆಯಾಗಿ ಕಳೆದ ಒಂದು ದಶಕದಿಂದ ಸಾಹಿತ್ಯದ ವಿವಿಧ ಮಜಲುಗಳಲ್ಲಿ ದಿವ್ಯಾ ಮಾಡಿರುವ ಸಾಧನೆಯನ್ನು ಕಂಡು ನಾವೆಲ್ಲ ಆಶ್ಚರ್ಯ ಚಕಿತರಾಗಿದ್ದೇವೆ, ಜೊತೆಗೆ ನಮ್ಮ ಪಕ್ಕದೂರಿನ ಹೆಣ್ಣುಮಗಳೊಬ್ಬಳು ಸಾಹಿತ್ಯಾಸಕ್ತರು ಗಮನವಿಟ್ಟು ಓದುವ ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ ಎಂಬ ವಿಷಯಕವಾಗಿ ಹೆಮ್ಮೆ ಪಟ್ಟಿದ್ದೇವೆ. + +ಆರಂಭದಲ್ಲಿ ನಾಡಿನ ಗಂಡುಕಲೆ ಎಂದು ಪರಿಗಣಿತವಾದ ಯಕ್ಷಗಾನದಲ್ಲಿ ತೀರಾ ಅಪರೂಪವೆಂಬಂತೆ ಹೆಣ್ಣು ಮಗಳಾಗಿ “ಕರ್ಣ ವೃಷಾಲಿ” ಎಂಬ ಪ್ರಸಂಗ ರಚಿಸಿದ ಹಿರಿಮೆ ದಿವ್ಯಾರವರದ್ದು. ಬಾಹ್ಯ ಪ್ರಭಾವಗಳಿಂದ ಆಧಾರಿತವಾದ ಸಾಮಾಜಿಕ ಪ್ರಸಂಗಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದನ್ನು ನಾವಿಂದು ನೋಡುತ್ತಿದ್ದೇವೆ. ಇಂತಹ ವಿಲಕ್ಷಣ ಅನುಕರಣೆಯ ಭರಾಟೆಯ ನಡುವೆ ಪುರಾಣ ಸಾಹಿತ್ಯದಲ್ಲಿ ಪಾತ್ರಗಳನ್ನು ಸೃಷ್ಟಿಸಿಕೊಂಡು, ಅದಕ್ಕೆ ನವರೂಪ ವಿಚಾರಧಾರೆಗಳನ್ನು ಪೋಣಿಸಿಕೊಂಡು ವಿಭಿನ್ನ ರೀತಿಯಲ್ಲಿ ಪ್ರಸಂಗವನ್ನು ಬರೆದ ಹಿರಿಮೆ ದಿವ್ಯಾ ಶ್ರೀಧರ್ ರಾವ್ ಅವರಿಗೆ ಸಲ್ಲುತ್ತದೆ. ತದನಂತರ ಅವರು ಬರೆದ “ಆ ನೀಲಿ ಕಂಗಳ ಹುಡುಗಿ” ಎನ್ನುವ ಪುಸ್ತಕ ಸಾಹಿತ್ಯ ವಲಯದಲ್ಲಿ ವ್ಯಾಪಕ ಪ್ರಶಂಸೆ ಮತ್ತು ಪುರಸ್ಕಾರಗಳಿಗೆ ಪಾತ್ರವಾಗಿತ್ತು. ವೇಶ್ಯೆಯೊಬ್ಬಳ ಜೀವನ ಚರಿತ್ರೆಯನ್ನು ಕಥಾವಸ್ತುವಾಗಿ ಅವರು ಬರೆದ ಇನ್ನೊಂದು ಕೃತಿ “ಮೌನ ಧ್ವನಿಸಿತು” ಎಂಬುದು ಅವರ ಸಾಹಿತ್ಯ ಕ್ಷೇತ್ರದ ಇನ್ನೊಂದು ಮೈಲುಗಲ್ಲು. + + + +ಇನ್ನೂ ಪ್ರಸ್ತುತ ಈ ಕಾದಂಬರಿಯ ಕುರಿತಂತೆ ಹೇಳುವುದಿದ್ದರೇ, ದಿವ್ಯಾರವರು “ಮಿಂಚದ ಮಿಂಚು” ಎಂಬ ಈ ಕಾದಂಬರಿಯ ಮುಖೇನ ಮಹಾಭಾರತದ ಪ್ರಮುಖ ಪಾತ್ರವಾದ ಗಾಂಧಾರಿಯ ದುಗುಡ, ಯಾತನೆ, ಮನದ ಅಂತರಂಗವನ್ನು ಸುಂದರವಾಗಿ ಅಭಿವ್ಯಕ್ತಿಸುವ ಅದ್ಭುತ ಪುಸ್ತಕವನ್ನು ಹೊರತರುತ್ತಿದ್ದಾರೆ. + +ಪುರಾಣಪ್ರಿಯರಾದವರಿಗೆ “ಗಾಂಧಾರಿ “ಎಂಬ ಆ ವಿಶಿಷ್ಟ ಭೂಮಿಕೆಯನ್ನು ಲೇಖಕಿ ದಿವ್ಯಾ ಹೇಗೆ ಪ್ರಸ್ತುತಪಡಿಸಿರಬಹುದು ಎಂಬ ಕುತೂಹಲವಿದೆ. ಅವರ ಕುತೂಹಲಕ್ಕೆ ತಣ್ಣೀರೆರಚದೇ ಅದ್ಭುತವಾಗಿ “ಮಿಂಚದ ಮಿಂಚು ” ಮೂಡಿ ಬಂದಿದೆ. + +ಸಾಮಾನ್ಯವಾಗಿ ಗಾಂಧಾರಿ ಮಹಾಭಾರತದಲ್ಲಿ ದುರಂತ ನಾಯಕಿಯಾಗಿ, ನಿಸ್ಸಹಾಯಕ ಮತ್ತು ಹತಾಶ ವ್ಯಕ್ತಿತ್ವದವಳಾಗಿ ಕಾಣಸಿಗುತ್ತಾಳೆ. ಅದನ್ನು ದಿವ್ಯಾ ತೆರಿದಿರಿಸಿದ ಬಗೆ ಅನನ್ಯ. + +ಪಾಂಡವ ಪಂಚಕರಿಂದ ಕೌರವಾದಿಗಳ ಹನನದ ಪಶ್ಚಾತ್ ಕಂಪನವೇ “ಗಾಂಧಾರಿ ಶಾಪ” ಎಂಬ ಪ್ರಸಂಗ. ಕೃಷ್ಣಾವಾತಾರದ ಪರಿಸಮಾಪ್ತಿಗೆ ಗಾಂಧಾರಿಯ ಶಾಪವೇ ಹೇತುವಾಯಿತು ಎಂಬ ಮಾತಿದೆ. ಈ ಕಥೆಯ ಎಳೆಯನ್ನೇ ತಿರುಳಾಗಿಸಿಕೊಂಡು ರೂಪುಗೊಂಡದ್ದು “ಮಿಂಚದ ಮಿಂಚು” ಎಂಬ ಮಿನಿ ಕಾದಂಬರಿ. + +(ಜಗದೀಶ್ ಶೆಟ್ಟಿ) + +ಕೃಷ್ಣನಿಗೆ ಶಪಿಸಿದ ಬಳಿಕ ಉದ್ಭವಿಸುವ ಗಾಂಧಾರಿಯ ಮನದ ತುಮುಲಗಳು, ಅವುಗಳನ್ನು ಕುಂತಿಯೊಂದಿಗೆ ಹಂಚಿಕೊಳ್ಳುತ್ತಾ ಸಾಗುವ ಬಗೆಯಲ್ಲಿ ಗಾಂಧಾರಿಯ ಜೀವನದ ಸಮಗ್ರ ಚಿತ್ರಣವು ಓದುಗರಿಗೆ ಲಭ್ಯ ವಾಗುತ್ತದೆ. + +ಸ್ತ್ರೀ ಸಂವೇದನೆಯನ್ನು ತನ್ನ ಎಂದಿನ ಸರಳ ಸುಂದರ ಶೈಲಿಯೊಂದಿಗೆ ದಿವ್ಯಾ ಕಟ್ಟಿಕೊಡುವ ಬಗೆ ಅನನ್ಯ, ಅನುಪಮವಾದುದು. + +ಗಾಂಧಾರಿಯ ಬಾಲ್ಯ, ಬಾಲ್ಯದಲ್ಲಿ ಆಕೆಗೆ ಕತ್ತಲೆಯ ಕುರಿತಾಗಿ ಇದ್ದ ಅಪರಿಮಿತ ಭಯ, ನೀನು ಗಾಂಧಾರದ ಮಿಂಚು ಎಂದು ಅಣ್ಣ ಶಕುನಿಯಿಂದ ಹೇಳಿಸಿಕೊಂಡದ್ದೂ, ಕಣ್ಣಿದ್ದೂ ತನ್ನ ಗಂಡನಿಗಿರದ ಸೌಭಾಗ್ಯ ತನಗೆ ಬೇಡವೆಂದು ಕಣ್ಣಿಗೆ ಬಟ್ಟೆ ಕೊಂಡು ಕುರುಡಳಾಗುವ ಆಕೆಯ ನಿರ್ಧಾರ, ಮಕ್ಕಳಿಗೆ ಸಿಗಬೇಕಾದ ಪ್ರೀತಿ ಸಿಗದೇ ಹೋದಾಗ ಅವರು ಎಲ್ಲಿ ಪ್ರೀತಿ ಸಿಗುತ್ತದೊ ಎಂದು ಅರಸಿ ಅಲ್ಲಿ ಸಾಗುತ್ತಾರೆ ಎಂದು ಹೇಳುತ್ತಾ ಶಕುನಿಯಿಂದಾಗಿ ನನ್ನ ಮಗ ದಾರಿ ತಪ್ಪಿದ ಎಂದು ರೋಧಿಸುವ ಬಗೆ, ಕೃಷ್ಣನಿಂದ ಒದಗಲ್ಪಟ್ಟ ಅಕ್ಷಯಾಂಬರದಿಂದ ತನ್ನ ಮಗನಿಗೆ ಸೋಲಾದರೂ, ಮಗನ ಸೋಲನ್ನು ಸಂಭ್ರಮಿಸುವ ಪ್ರಥಮ ತಾಯಿ ತಾನು ಎಂದು ಹೇಳುವ ಗಾಂಧಾರಿಯ ಜೀವನ ಚರಿತ್ರೆಯನ್ನು ಎಳೆಎಳೆಯಾಗಿ ತೆರಿದಿರಿಸುತ್ತಾ ದಿವ್ಯಾ ತಾನೋರ್ವ ಮಾಗಿದ ಕತೆಗಾರ್ತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ.“ಪುತ್ರ ಶೋಕಂ ನಿರಂತರಂ” ಎಂಬಂತೆ ಪ್ರಾಯಪ್ರಬುದ್ದರಾದ ಮಕ್ಕಳು ಕಣ್ಣೆದುರೇ ಸತ್ತಾಗ ಮಾತೆಯಾದವಳು ಪಡುವ ನೋವು ವರ್ಣಿಸಲಸಾಧ್ಯವಾದದ್ದು. + + + +ಗಾಂಧಾರಿ ನೂರು ಮಕ್ಕಳ ಸಾವಿನ ಶೋಕಸಾಗರದಲ್ಲಿ ಮುಳುಗಿ ಜಗತ್ತಿನ ಯಾವ ತಾಯಿಯೂ ಅನುಭವಿಸದ ನೋವನ್ನು ಅನುಭವಿಸಿದವಳು. ಹೆಣ್ಣೊಬ್ಬಳಿಗೆ ಹೆರಿಗೆಯ ನೋವೇ ಮಹಾಯಾತನೆಯಂತೆ. ಆದರೆ ಗಾಂಧಾರಿ ಸರಣಿಯಾಗಿ ಸರಣಿಯಾಗಿ ಮಕ್ಕಳ ಸಾವಿನ ನೋವನ್ನು ಅನುಭವಿಸಿ ಜರ್ಜರಿತಳಾದವಳು. ಮಕ್ಕಳ ಶವಗಳ ಮುಂದೆ ಕಣ್ಣೀರು ಕರಗಿಸಿಕೊಂಡವಳು. ರಾಜಕುಮಾರಿಯಾಗಿ, ಮಡದಿಯಾಗಿ, ರಾಣಿಯಾಗಿ, ತಾಯಿಯಾಗಿ ಒಂದು ದಿನವೂ ಸುಖ ಕಾಣದ ನತದೃಷ್ಟೆ ಗಾಂಧಾರಿ. ಇಂತಹ ಪಾತ್ರದ ಒಳಮನಸ್ಸನ್ನು ಹೊರಜಗತ್ತಿಗೆ ತೋರಿಸುವ ಉತ್ತಮ ಪ್ರಯತ್ನವನ್ನು ಲೇಖಕಿ ದಿವ್ಯಾ ಶ್ರೀಧರ್ ರಾವ್ “ಮಿಂಚದ ಮಿಂಚು” ಎಂಬ ಕಾದಂಬರಿಯ ಮೂಲಕ ಮಾಡಿದ್ದಾರೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_242.txt b/Kenda Sampige/article_242.txt new file mode 100644 index 0000000000000000000000000000000000000000..3489c48c152634b977f951b0ce2f8a84cce83d65 --- /dev/null +++ b/Kenda Sampige/article_242.txt @@ -0,0 +1,37 @@ +ಬೆಂಗಳೂರಿನ ಹೊರವಲಯದ ಬಿಡದಿ ಸಮೀಪದ ಊರೊಂದರಲ್ಲಿ ಒಮ್ಮೆ ಮನೆಯೊಂದರ ಮೇಲೆ ಪೊಲೀಸ್ ರೈಡ್ ಆಯಿತು. ಸೋಫಾ, ಮಂಚ, ಅಡುಗೆ ಪಾತ್ರೆ ಸಾಮಾನುಗಳಿದ್ದ ಮನೆಯಲ್ಲಿ ಯಾರೂ ಕಾಣಲಿಲ್ಲ.ಏನೋ ಪತ್ತೆದಾರಿಕೆ ಮಾಡಲು ಮನೆಯೊಳಗೆ ನುಗ್ಗಿದ ಪೊಲೀಸರಿಗೆ ಅಲ್ಲಿ ಯಾರೂ ಕಾಣದೇ ಇದ್ದುದರಿಂದ ಸುಮ್ಮನೇ ಹಿಂತಿರುಗಬೇಕೆಂದುಕೊಂಡಿದ್ದರು. ಅಷ್ಟರಲ್ಲಿ ಪೊಲೀಸ್ ಒಬ್ಬರು ಕಪಾಟುಗಳನ್ನು ತೆರೆದು ನೋಡಲು ಶುರು ಮಾಡಿದರು. ಸಜ್ಜೆಯ ಮೇಲಿದ್ದ ಸಾಲು ಸಾಲು ಕಪಾಟುಗಳ ತುಂಬ ಮಕ್ಕಳು ಮತ್ತು ಹುಡುಗಿಯರನ್ನು ತುಂಬಿಡಲಾಗಿತ್ತು. ಪೊಲೀಸರು ಬರುವ ವೇಳೆಗೆ ಉಸಿರುಬಿಗಿಹಿಡಿದು ಅದರೊಳಗೆ ಕುಳಿತಿದ್ದ ಹತ್ತುಮಂದಿಯನ್ನೂ ಪೊಲೀಸರು ಮುಸುಕು ಹಾಕಿಸಿಕೊಂಡು ಕರೆದೊಯ್ದರು. + +ಮಹಾನಗರಗಳಲ್ಲಿ ಜನರ ಓಡಾಟ ತಪಾಸಣೆಯ ವ್ಯವಸ್ಥೆಗಳು ಹೆಚ್ಚಿರುವುದರಿಂದ, ಅಕ್ರಮ ಚಟುವಟಿಕೆಗಳೆಲ್ಲವನ್ನೂ ನಗರದ ಹೊರವಲಯಕ್ಕೆ ದಾಟಿಸುವುದು ಇತ್ತೀಚೆಗೆ ಕಾಣುತ್ತಿರುವ ಹೊಸ ಟ್ರೆಂಡ್. ಅದಲ್ಲದೇ, ಮಹಾನಗರಗಳಲ್ಲಿಯೇ ದುಡಿದು ಲಕ್ಷಗಟ್ಟಲೇ ಆದಾಯ ಗಳಿಸುವವರು ವಾರಾಂತ್ಯದಲ್ಲಿ ನಗರದ ಹೊರವಲಯಗಳಿಗೆ ತೆರಳಿ ವಿಶ್ರಾಂತಿ ಪಡೆಯುವುದು, ಅಥವಾ ಹಳ್ಳಿಗಳಿಗೆ ತೆರಳಿ ಅಲ್ಲಿನ ಜನಜೀವನದ ಸೊಗಸು ನೋಡುವುದು, ಹಸಿರು ಪ್ರಕೃತಿಯ ವಿವಿಧ ಶೈಲಿಯ ಫೋಟೊಗಳನ್ನು ಕ್ಲಿಕ್ಕಿಸಿಕೊಂಡು ಅಂತರಂಗದ ಸಂತೃಪ್ತಿ ಪಡೆಯುವ ಫ್ಯಾಶನ್ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚುತ್ತಿದೆ. ಈ ಪೈಕಿ ಅನೇಕರು ಗ್ರಾಹಕರಾಗಿ ದೊರೆಯಬಹುದು ಎಂಬ ನಿರೀಕ್ಷೆಯಿಂದ ಮಧ್ಯವರ್ತಿಗಳು, ದಲ್ಲಾಳಿಗಳು ತಮ್ಮ ಅಕ್ರಮ ಚಟುವಟಿಕೆಗಳನ್ನು ನಗರದ ಹೊರವಲಯದಲ್ಲಿ ನಡೆಸುತ್ತಾರೆ. ಹಾಗಾಗಿ ಇದೀಗ ನಗರದಂಚಿನ ಹಳ್ಳಿಗಳ ಮೇಲೆ ಹದ್ದಿನಕಣ್ಣಿಡುವುದು ಅನಿವಾರ್ಯವಾಗಿದೆ ಎಂದು ನಗರದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಪೊಲೀಸರು ಹೇಳುತ್ತಾರೆ. + +(ಬಿ.ಎಂ. ರೋಹಿಣಿ) + +ರೈಡ್ ಮಾಡುವುದು ಮತ್ತು ಅಲ್ಲಿ ಸಿಕ್ಕಿದ ಸಂತ್ರಸ್ತರನ್ನೇ ಆರೋಪಿಗಳಂತೆ ಠಾಣೆಗೆ ಕರೆದೊಯ್ದು ಅವರಿಂದ ಮಾಹಿತಿ ಪಡೆಯುವ ಪ್ರಕ್ರಿಯೆಗಳು ಒಂದು ರೂಢಿಯಂತೆ ಒಂದೇ ವಿಧಾನದಲ್ಲಿ ಎಷ್ಟೋಕಾಲದಿಂದ ನಡೆದು ಬಂದ ಪದ್ಧತಿ. ಆದರೆ ಈ ವೇಶ್ಯಾವಟಿಕೆಯ ಜಾಲದಲ್ಲಿ ಸಿಕ್ಕಿ ಹಾಕಿಕೊಂಡವರನ್ನು ಅಲ್ಲಿಂದ ಮುಕ್ತಗೊಳಿಸಲು ಎಷ್ಟೇ ಪ್ರಯತ್ನಪಟ್ಟರೂ ಅವರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ಇರುವ ಯೋಜನೆಗಳು ಬಹಳವೇ ಕಡಿಮೆ. ಅವರನ್ನು ವೃತ್ತಿಯಿಂದ ಮುಕ್ತಗೊಳಿಸಿದ್ದೇವೆ ಎಂಬ ಷರಾದೊಂದಿಗೆ ನಿರ್ದಿಷ್ಟ ಕೇಸು ಕ್ಲೋಸಾಗುತ್ತದೆಯೇ ವಿನಃ, ಆ ಬಳಿಕ ಅವರು ಜೀವನಾದಾಯಕ್ಕೆ ಏನು ಮಾಡಬೇಕು ಎಂಬ ನಿಟ್ಟಿನಲ್ಲಿ ಭದ್ರ ವ್ಯವಸ್ಥೆಗಳು ರೂಪುಗೊಂಡಿಲ್ಲ. ಅದರಲ್ಲಿಯೂ ಎಷ್ಟೋ ಸಂದರ್ಭಗಳಲ್ಲಿ ಈ ಜಾಲದಿಂದ ಬಚಾವ್ ಆಗಿ ಬರುವ ಮಹಿಳೆಯರು ಹೊರರಾಜ್ಯದವರಾಗಿದ್ದಾಗ, ಅವರಿಗೆ ನೂರಾರು ರೀತಿಯ ಕಾನೂನು ತೊಡಕುಗಳೇ ಬೃಹತ್ ಬಂಡೆಯಾಗಿ ನಿಂತುಬಿಡುತ್ತವೆ. ಅವರ ಪುನರ್ವಸತಿಗೆ ದಾಖಲೆ ಪತ್ರಗಳನ್ನು ಹೊಂದಿಸುವುದೇ ಸವಾಲಾಗಿಬಿಡುತ್ತದೆ. ಕೊನೆಗೆ ಬದುಕು ಸಾಗಿಸುವುದಕ್ಕಾಗಿ ಅವರು ತಾವಾಗಿಯೇ ಈ ಜಾಲದೊಳಗೆ ಸೇರಿಕೊಂಡು ಬಿಡುತ್ತಾರೆ ಎಂದು ಈ ಕ್ಷೇತ್ರದ ಸಂತ್ರಸ್ತರ ಪರವಾಗಿ ದುಡಿಯುತ್ತಿರುವ ಕಾರ್ಯಕರ್ತರು ಹೇಳುತ್ತಾರೆ. + +ಅಂದು ಬಿಡದಿ ಸಮೀಪ ಕಪಾಟಿನೊಳಗೆ ಬಂಧಿಯಾಗಿದ್ದವರಿಗೆ ಬಂಗಾಲಿ ಭಾಷೆಯಷ್ಟೇ ತಿಳಿದಿತ್ತು. ಅವರೆಲ್ಲರೂ ಪಶ್ಚಿಮ ಬಂಗಾಳ, ಅಥವಾ ಬಾಂಗ್ಲಾ ದೇಶದ ಮೂಲದವರಾಗಿರಬಹುದು. ಉದ್ಯೋಗ ಕೊಡಿಸುವುದಾಗಿ ನಂಬಿಸಿಯೇ ಅವರನ್ನು ಕರೆತಂದು, ಈ ದಂಧೆಗೆ ದೂಡಲಾಗಿತ್ತು. ಬೆಂಗಳೂರಿಗೆ ನೇರವಾಗಿ ಒರಿಸ್ಸಾ, ಪಶ್ಚಿಮ ಬಂಗಾಳ , ಜಾರ್ಖಂಡ್ ಮುಂತಾದ ರಾಜ್ಯಗಳ ಸಂಪರ್ಕ ಇರುವುದರಿಂದ ಎಷ್ಟೋ ಮಂದಿ ಮಕ್ಕಳು ಮತ್ತು ಮಹಿಳೆಯರು ರೈಲು ಹತ್ತಿ ಉದ್ಯೋಗ ಅರಸಿ ಮಹಾನಗರಕ್ಕೆ ಬರುತ್ತಾರೆ. ಆದರೆ ಅಂತಹ ಹುಡುಕಾಟವು ಎಲ್ಲರ ಪಾಲಿಗೆ ಸುಖಾಂತ್ಯವನ್ನು ಕೊಡುವುದಿಲ್ಲ. + +ಈ ಕಪಾಟುಗಳ ಕತೆಯು ಕೇವಲ ಮನೆಯೊಳಗಿನ ವಿಚಾರಕ್ಕೆ ಸೀಮಿತವಾದುದೂ ಅಲ್ಲ. ಮನೆ ಬದಲಾಯಿಸುವ ಸಂದರ್ಭದಲ್ಲಿ ಮೇಜು ಕುರ್ಚಿ ಕಪಾಟು ಸಿಲಿಂಡರ್ ಗಳನ್ನು ಸಾಗಿಸುವ ವಾಹನವೊಂದರಲ್ಲಿ ಕಪಾಟಿನೊಳಗೆ ಮಕ್ಕಳು ಮತ್ತು ಹುಡುಗಿಯರು ಸಿಕ್ಕಿದ ಉದಾಹರಣೆಗಳೂ ಇವೆ. ಅಂದಮೇಲೆ ಈ ಜಾಲವು ಎಷ್ಟೊಂದು ಕಟುವಾಗಿ ಬಿಗಿಯಲ್ಪಟ್ಟಿದೆ ಎಂದು ಅರ್ಥವಾಗಬಹುದು. + +ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಅವರು ಬರೆದ ‘ವೇಶ್ಯಾವಟಿಕೆಯ ಕಥೆ-ವ್ಯಥೆ’ ಎಂಬ ಪುಸ್ತಕವು ಕೂಡ ವೇಶ್ಯಾವಟಿಕೆಯ ಅನೇಕ ವಿಚಾರಗಳನ್ನು ಅನಾವರಣಗೊಳಿಸುವ ಕೃತಿ. ವೇಶ್ಯಾವಟಿಕೆ ಎಂಬ ವ್ಯವಸ್ಥೆಯು ಪುರುಷ ಪ್ರಧಾನ ಸಮಾಜವು ರೂಪಿಸಿದ ಒಂದು ಬಿಗಿಯಾದ ಜಾಲವೆಂದು ಪ್ರತಿಪಾದಿಸುವ ಈ ಪುಸ್ತಕದುದ್ದಕ್ಕೂ ಸಾತ್ವಿಕ ಸಿಟ್ಟೊಂದು ಪ್ರಖರವಾಗಿ ಪ್ರವಹಿಸಿದಂತಿದೆ. ಜೊತೆಗೆ ಈ ಲೋಕದ ಕತೆಗಳನ್ನು ಪ್ರಸ್ತುತಪಡಿಸುತ್ತಾ ವಿಸ್ಮಯಗೊಳ್ಳುತ್ತಾರೆ; ಇದೊಂದು ಸಮಸ್ಯೆಯನ್ನು ಯಾಕೋ ಮನುಕುಲವು ಬಗೆಹರಿಸಿಕೊಳ್ಳಲಾಗುತ್ತಿಲ್ಲವಲ್ಲಾ ಎಂದು ಹತಾಶೆಯಿಂದ ಬೇಸರಿಸಿಕೊಳ್ಳುತ್ತ ಬರವಣಿಗೆಯ ದಾಟಿಯು ಸಾಗುತ್ತದೆ. + + + +ವೇಶ್ಯಾವಟಿಕೆಯ ಪ್ರಾಚೀನ ಇತಿಹಾಸವನ್ನು ಹೇಳುವ ಮೂಲಕ ಕೃತಿ ತೆರೆದುಕೊಳ್ಳುತ್ತದೆ. ಯುದ್ಧಕಾಲದಲ್ಲಿ ಸೈನಿಕರಿಗಾಗಿ ಸ್ತ್ರೀಯರ ಬಳಕೆ, ಜಪಾನಿನ ಗೀಶಾ ವೃತ್ತಿ, ಬ್ಯಾಬಿಲೋನಿಯಾದ ದೇವರ ಸೇವೆಯ ವೇಶ್ಯೆಯರು, ಸಿರಿಯಾ, ಲೆಬನಾನ್ , ಪಶ್ಚಿಮ ಆಫ್ರಿಕಾ ಮುಂತಾದ ಅನೇಕ ರಾಷ್ಟ್ರಗಳಲ್ಲಿ ವೇಶ್ಯಾವಟಿಕೆಯ ಹಿಂದಿರುವ ನಂಬಿಕೆಗಳು, ಕತೆಗಳನ್ನು ವಿವರಿಸುವ ಪುಸ್ತಕವು ಭಾರತದಲ್ಲಿ ಇದ್ದ ನಂಬಿಕೆಗಳ ಬಗ್ಗೆಯೂ ವಿವರಗಳನ್ನು ನೀಡುತ್ತದೆ. + +ಶಾಸನಗಳಲ್ಲಿ ವೇಶ್ಯಾವಟಿಕೆಯ ಉಲ್ಲೇಖವನ್ನು ವಿವರಿಸುವ ಅಧ್ಯಾಯವು, ಈ ವೃತ್ತಿಯು ಎಷ್ಟು ಪುರಾತನ ಕಾಲದಿಂದ ಭದ್ರವಾಗಿ ಬೇರೂರಿದೆ ಎಂಬುದನ್ನೂ ಜೊತೆಗೆ ವೃತ್ತಿಗೆ ಸಲ್ಲುವ ಮರ್ಯಾದೆಗಳು ಕಾಲ ಕಾಲಕ್ಕೆ ಹೇಗೆ ಬದಲಾಗುತ್ತ ಸಾಗಿವೆ ಎಂಬುದನ್ನೂ ವಿವರಿಸುತ್ತವೆ. ಸಾಹಿತ್ಯ ಕೃತಿಗಳಲ್ಲಿ ವೇಶ್ಯಾವಟಿಕೆಯ ಉಲ್ಲೇಖ, ರಾಜಕೀಯ ಕ್ಷೇತ್ರದಲ್ಲಿ ವೇಶ್ಯೆಯರನ್ನು ಬಳಸಿಕೊಂಡ ಉದಾಹರಣೆಗಳನ್ನು ಉಲ್ಲೇಖಿಸಲಾಗಿದೆ. + +ಆದರೆ ಈ ದಂಧೆ ನಡೆಸುವವರು ಸುಖದ ಸುಪ್ಪತ್ತಿಗೆಯಲ್ಲಿದ್ದರೆ, ಅದಕ್ಕಾಗಿ ಜೀವ ತೇಯುವವರು ಎಲ್ಲಿಯೂ ಸಲ್ಲದೆ ಅರ್ಧದಾರಿಯಲ್ಲಿಯೇ ಜೀವನ ಮುಗಿಸುತ್ತಾರೆ ಎಂಬ ವಿಚಾರಗಳನ್ನು ಲೇಖಕಿ ಅತ್ಯಂತ ನೋವಿನಿಂದ ಮತ್ತೆ ಮತ್ತೆ ಹೇಳುತ್ತಾರೆ. ಪಾತರದವರು, ದೇವದಾಸಿಯರು, ವಾರಾಂಗನೆಯರು, ಬಾರ್ ಬಾಲೆಯರ ಕುರಿತು ವಿವರವಾದ ಅನೇಕ ಅಧ್ಯಾಯಗಳಿವೆ. ಕಾನೂನು ಅಧ್ಯಯನ, ಸಾಂಪ್ರದಾಯಿಕ ಸಮ್ಮತಿಯ ಕುರಿತೂ ಕೆಲವು ಅಧ್ಯಾಯಗಳಲ್ಲಿ ಚರ್ಚೆ ನಡೆದಿದೆ. ಕೆಲವೊಮ್ಮೆ ಕೃತಿಯಲ್ಲಿ ಮಾಹಿತಿಯ ದಟ್ಟಣೆಯ ನಡುವೆ, ವಿಷಯಧಾರಿತ ಚರ್ಚೆಯು ಮುಂದುವರೆದರೆ ಚೆನ್ನಾಗಿತ್ತು ಎಂದು ಓದುವ ಮನಸ್ಸು ಬಯಸುತ್ತದೆ. ಅಧ್ಯಾಯಗಳಲ್ಲಿ ಕೆಲವೊಮ್ಮೆ ಆಯ್ದುಕೊಂಡ ವಿಷಯದ ಕುರಿತು ಚರ್ಚೆಯು ಇನ್ನಷ್ಟು ದೃಷ್ಟಿಕೋನದಲ್ಲಿ ಸಾಗಬೇಕಿತ್ತು ಅನಿಸಿ, ಮಾಹಿತಿ ದಟ್ಟಣೆಯಾದಂತೆ ಭಾಸವಾಗುತ್ತದೆ. + +ಮಕ್ಕಳನ್ನು ಪಡೆಯಬೇಕೆಂಬ ಅದಮ್ಯ ಅಸೆಯಿದ್ದರೂ ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿಗೆ ಅದಕ್ಕಾಗಿ ಅವಕಾಶವಿಲ್ಲ. “ಬಸಿರು ಬಾಣಂತನಗಳು ಸಂಪಾದನೆಗೆ ತೊಡಕಾಗಿಬಿಡುತ್ತಿದ್ದವು. ಗರ್ಭಪಾತ ಮಾಡಿಸಲು ಬೇಕಾಗುಷ್ಟು ಹಣ ಹೊಂದಿಸಲು ಅಥವಾ ಸಮಯ ಹೊಂದಿಸಲು ಸಾಧ್ಯವಾಗದೇ ಕೆಲವಮ್ಮೆ ಬಸಿರು ಬೆಳೆಯುವುದುಂಟು. ಕಾಂಡೋಮ್ ಗಳನ್ನು ನಿರಾಕರಿಸುವ ಪುರುಷರೊಂದಿಗೆ ವ್ಯವಹರಿಸುವಾಗ ಬಸಿರು ಸಹಜವಾಗಿಯೇ ಬೆಳೆಯುತ್ತಿತ್ತು. ಕೆಲವರ್ಷಗಳ ಹಿಂದೆ ಪುರುಷರು ಕಾಂಡೊಮ್ ಬಳಕೆಯನ್ನು ನಿರಾಕರಿಸುತ್ತಿದ್ದರು. ಆದರೆ ಇತ್ತೀಚೆಗಿನ ವರ್ಷಗಳಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡಿದ್ದರಿಂದ ಕಾಂಡೋಮ್ ಬಳಕೆ ಮಾಡಲು ಒಪ್ಪುತ್ತಿದ್ದಾರೆ’’ ಎಂದು ಬರೆಯುವ ಲೇಖಕಿ, ಈ ದಂಧೆಯಲ್ಲಿದ್ದುಕೊಂಡು ಅಮ್ಮನಾದವಳ ಮತ್ತೊಂದು ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತಾರೆ. + +‘ಮಕ್ಕಳ ಭವಿಷ್ಯದ ಬಗ್ಗೆ ಯೋಚನೆಯಿದ್ದರೂ ಅದನ್ನು ಅವರಿಂದ ಪೂರೈಸಲಾಗದ್ದೇ ಹೆಚ್ಚು. ವೃತ್ತಿ ನಿರತ ವೇಶ್ಯೆಯರಲ್ಲಿ ಅವರ ಮಕ್ಕಳ ಬಗ್ಗೆ ಕೇಳಿದರೆ ಸಾಕು, ಕರುಳಲ್ಲಿ ಕತ್ತಿಯಾಡಿಸಿದಂತಹ ನೋವಿನಿಂದ ಬೇಯುತ್ತಾರೆ. ಇಂತಹ ಸ್ಥಿತಿಯಲ್ಲಿದ್ದವಳೊಬ್ಬಳಲ್ಲಿ ಮಗುವನ್ನು ಯಾರಿಗಾದರೂ ಕೊಡು ಎಂದು ಪದೇ ಪದೇ ಹೇಳಿದರೂ ಕೇಳದೇ ನಿಧಿಯಂತೆ ತನ್ನ ಜೊತೆಯಲ್ಲಿಯೇ ಒಯ್ಯುತ್ತಿದ್ದಳು. ಆದರೆ ಒಂದು ದಿನ ವಿಪರೀತ ಕುಡಿದು ತೂರಾಡುತ್ತಿದ್ದ ಆಕೆಯ ಕೈಯ್ಯಿಂದ ಮಗು ಜಾರಿ ಬಸ್ಸಿನಡಿಗೆ ಬಿದ್ದು ಸತ್ತ ಬಳಿಕ ಆಕೆ ಮತಿವಿಕಲೆಯಾಗಿಬಿಟ್ಟಿದ್ದಳು.’’ + +***** + +ಅಪಾರವಾದ ಕ್ಷೇತ್ರ ಕಾರ್ಯದ ಆಧಾರದಲ್ಲಿ ರೂಪುಗೊಂಡ ಈ ಕೃತಿಯಲ್ಲಿ ವೃತ್ತಿ ನಿರತರ ಸಂದರ್ಶನವನ್ನು ಆಧರಿಸಿ ಅನುಭವ ಕಥನಗಳನ್ನೂ ದಾಖಲಿಸಿದ್ದಾರೆ. ಆ ಕತೆಗಳಲ್ಲಿ ನಿರೂಪಕರ ಯಾವುದೇ ಅಭಿಪ್ರಾಯಗಳು ಸೇರಿಕೊಳ್ಳದೇ ನೇರವಾದ ದಾಖಲೀಕರಣವಾಗಿರುವುದರಿಂದ ,ಈ ಕ್ಷೇತ್ರಕ್ಕೆ ಬರುವವರ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ನೆರವಾಗುತ್ತದೆ. ಅಷ್ಟೇ ಅಲ್ಲ,  ಜೀವನದಲ್ಲಿ ಎಷ್ಟೋ ಸಂದರ್ಭಗಳಲ್ಲಿ ಮಾನಸಿಕವಾದ ಒತ್ತಡಗಳು ಎದುರಾದರೆ ಅಥವಾ ಬದುಕಿನ ವ್ಯವಸ್ಥೆಗೆ ಸಂಬಂಧಿಸಿದಂತೆ ಇಕ್ಕಟ್ಟಿನ ಪರಿಸ್ಥಿತಿಗಳು ಎದುರಾದಾಗ, ಒಂದಿಷ್ಟು ಸಾಂತ್ವನ ಅಥವಾ ನೇವರಿಕೆ ಮಾತುಗಳು ಸಿಕ್ಕರೂ ಸಾಕು, ಅನೇಕರು ಈ ದಾರಿಯ ತುಳಿಯುವುದನ್ನು ತಪ್ಪಿಸಬಹುದೇನೋ. ಮಾರ್ಗದರ್ಶನದ ಕೆಲವು ನುಡಿಗಳು, ನಡೆಗಳು ಎಷ್ಟೋ ಮಂದಿ ಮಕ್ಕಳು, ಮಹಿಳೆಯರು ಈ ದಾರಿ ತುಳಿಯದಂತೆ ಕಾಪಾಡಬಹುದೇನೋ. ಮಹಿಳೆಯರೊಡನೆ ಒಂದು ಹಾರ್ದಿಕವಾದ ನುಡಿಯಿಲ್ಲದ ಒಣ ಸಂಬಂಧಗಳು, ಜೀವನಾವಶ್ಯಕವಾದ ವಿಚಾರಗಳಿಗೇ ತಡೆಯೊಡ್ಡುವ ಮನಸ್ಥಿತಿಗಳು ಕೂಡ ಅವರು ವೇಶ್ಯಾವಟಿಕೆಯತ್ತ ಹೆಜ್ಜೆ ಇಡುವಂತೆ ಮಾಡುವುದುಂಟು. ಆದರೆ ತಾವು ಬಾಣಲೆಯಿಂದ ಜಾರಿ ಬೆಂಕಿಗೆ ಬೀಳುತ್ತಿದ್ದೇವೆ ಎಂಬ ಅರಿವು   ಆ ಕ್ಷಣದಲ್ಲಿ ಅವರ ಅರಿವಿಗೆ ಬಂದಿರುವುದಿಲ್ಲವಷ್ಟೇ – ಎಂಬ ನೋಟವನ್ನು ಈ ಕತೆಗಳು ಹೇಳುತ್ತವೆ. + + + +ಇತ್ತೀಚೆಗೆ ಪೊಲೀಸ್ ಅಧಿಕಾರಿಯೊಬ್ಬರು ‘ವೇಶ್ಯಾವಟಿಕೆಯಲ್ಲಿ ಸಿಕ್ಕಿ ಹಾಕಿಕೊಂಡ ಮಹಿಳೆಯರ ರಕ್ಷಣೆ ಪ್ರಮಾಣ ಹೆಚ್ಚಳವಾಗಿದೆ’ ಎಂದು ಹೇಳಿದ್ದು ವರದಿಯಾಗಿತ್ತು. ಆದರೆ ಇದು ಸಕಾರಾತ್ಮಕ ಸಂಗತಿಯೆಂದು ಖುಷಿಪಡಲು ಸಾಧ್ಯವಿಲ್ಲ. ಈ ಜಾಲದಿಂದ ರಕ್ಷಣೆಯಾದ ಬಳಿಕ ಅವರ ಬದುಕಿನ ಗತಿಯೇನು ಎಂಬುದನ್ನು ಗಮನಿಸಿದರೆ ಮತ್ತೆ ಬೇಸರವಾಗುತ್ತದೆ. ದೇಶದೊಳಗಿನ ಮಹಿಳೆಯರ ಪರಿಸ್ಥಿತಿ ಒಂದು ತೆರನಾಗಿದ್ದರೆ, ನೆರೆರಾಜ್ಯದಿಂದ ಕಳ್ಳಸಾಗಾಣಿಕೆಯ ಮೂಲಕ ಕರೆತಂದ ಮಹಿಳೆಯರ ಪರಿಸ್ಥಿತಿ ಇನ್ನೊಂದು ತರದ ದುಸ್ಥಿತಿ. ಅಲ್ಲದೆ ರಕ್ಷಣೆಯ ಪ್ರಮಾಣ ಹೆಚ್ಚಿದೆಯೆಂದರೆ, ಈ ಜಾಲದ ವಿಸ್ತಾರವೂ ಹೆಚ್ಚಿರಬಹುದೇ ಎಂಬ ಮತ್ತೊಂದು ಅನುಮಾನವೂ ಮೂಡುತ್ತದೆ. + +ಈ ಕರಾಳ ಲೋಕದಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರವು ಸರಳವಾಗಿಲ್ಲ ಎಂಬುದನ್ನು ಪುಸ್ತಕ ಹೇಳುತ್ತದೆ. + +ಮಂಗಳೂರಿನವರಾದ ಕೋಡಿಬೆಟ್ಟು ರಾಜಲಕ್ಷ್ಮಿ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ‘ಒಂದುಮುಷ್ಟಿ ನಕ್ಷತ್ರ’ ಅವರು ಬರೆದ ಕಥಾ ಸಂಕಲನ. ‘ಅಮ್ಮನ ಜೋಳಿಗೆ’ ಪ್ರಬಂಧ ಸಂಕಲನ. \ No newline at end of file diff --git a/Kenda Sampige/article_243.txt b/Kenda Sampige/article_243.txt new file mode 100644 index 0000000000000000000000000000000000000000..07dd451e65be4e8b55acf9164fb844a408c1b201 --- /dev/null +++ b/Kenda Sampige/article_243.txt @@ -0,0 +1,23 @@ +ವ್ಯಕ್ತಿ ಮತ್ತು ವ್ಯಕ್ತಿತ್ವ ಎರಡೂ ಸಂಕೀರ್ಣ ಸ್ವಭಾವದವುಗಳು. ಯಾವ ವ್ಯಕ್ತಿಯನ್ನೂ ನಾವು ಸಂಪೂರ್ಣವಾಗಿ ಅರಿತಿದ್ದೇವೆನ್ನುವ ಭಾವನೆಯೇ ಭ್ರಾಮಕ. ಸ್ವತಃ ನಮ್ಮ ನಮ್ಮ ವ್ಯಕ್ತಿತ್ವವನ್ನೇ ನಾವು ಅಳೆದಿಡಲಾರೆವು. ನಾವು ಅರಿಯದ ಅನೇಕ ವಿಷಯ ನಮ್ಮೊಳಗೇ ಇರುತ್ತದೆ. ಸ್ಪಷ್ಟವಾಗಿ ಹೇಳಬೇಕೆಂದರೆ ನಮ್ಮ ಮುಖವನ್ನೇ ನಾವು ಕಂಡಿಲ್ಲ. ನಾವೆಲ್ಲ ಕಂಡ ನಮ್ಮ ಮುಖಗಳೆಂದರೆ ಅದು ಕನ್ನಡಿಯೋ, ಫೋಟೋವೋ ಅಥವಾ ಇನ್ನಿತರ ಮಾಧ್ಯಮಗಳನ್ನು ಆಶ್ರಯಿಸಿಯೇ ಹೊರತು ಮತ್ತೇನೂ ಅಲ್ಲ. ಕನ್ನಡಿಯಲ್ಲಿ ಕಂಡ ಮುಖವೆಂದರೆ ಅದು ಎಡದ್ದು ಬಲ, ಬಲ ಬದಿ ಎಡಗಡೆಯದಾಗಿರುತ್ತದೆ. ಹಾಗಾಗಿ ನಮಗೇ ಅಪರಿಚರಾದ ನಾವು ಇನ್ನೊಬ್ಬರಿಂದ ತಿಳಿದಿರಲ್ಪಡುವ ಸಾಧ್ಯತೆಯೇ ಹೆಚ್ಚು ಮತ್ತು ಆ ಸಾಧ್ಯತೆಯ ಮೂಲಕ ತಿಳಿಯಲ್ಪಡುವ ಸಂಗತಿಯೇ ತುಂಬಾ ಮಹತ್ವದ್ದಾಗಿರುತ್ತದೆ. ಈ ಎಲ್ಲ ಸಂಗತಿಗಳು ರಾಜಶೇಖರ ಹೆಗಡೆ ಜೋಗಿನ್ಮನೆಯವರು ಬರೆದ “ಅಣ್ಣ ಮಹಾಬಲ – ಎಂ ಎ ಹೆಗಡೆಯವರ ಜೀವನ ಭಾವನ ಸಾಧನ” ಕೃತಿಯನ್ನು ಓದಿದಾಗ ಸುಮ್ಮನೆ ಹಾದುಹೋಯಿತು. + +ಕಳೆದ ವರ್ಷ ಕೋವಿಡ್ ಮಹಾಮಾರಿಯ ರೂಪದಲ್ಲಿ ನಾವು ಕಳೆದುಕೊಂಡ ವಿದ್ವಾಂಸ ಹಾಗು ವಿಶಿಷ್ಟ ವ್ಯಕ್ತಿತ್ವದ ಎಂ ಎ ಹೆಗಡೆಯವರನ್ನು ಹೀಗೇ ಎಂದು ಚೌಕಟ್ಟಿನಲ್ಲಿ ಹಿಡಿದಿಟ್ಟುಕೊಳ್ಳುವದು ತುಂಬಾ ಕಷ್ಟ. ಯಕ್ಷಗಾನಕ್ಕೆ ಬಂದರೆ ಅವರೋರ್ವ ಸಮರ್ಥ ಕಲಾವಿದರಾಗಿದ್ದರು. ಕೆರಮನೆ ಶಂಭು ಹೆಗಡೆಯವರ ಶಿಷ್ಯರಾಗಿ ತಮ್ಮ ಪ್ರಾಯದ ಕಾಲದಲ್ಲಿ ಚನ್ನಾಗಿ ಕುಣಿದು ಅಭಿನಯಿಸಬಲ್ಲ ರಂಗನಟ, ಪ್ರಸಂಗಕರ್ತ, ತಾಳಮದ್ದಳೆಯ ಅರ್ಥಧಾರಿ ಹೀಗೆ ಉತ್ತರಕನ್ನಡ ಮತ್ತು ಸಾಹಿತ್ಯವಲಯದಲ್ಲಿ ಇವರ ಕುರಿತು ತಿಳಿದಿಕೊಂಡವರೇ ಹೆಚ್ಚು. ಆದರೆ ಇದನ್ನೂ ಮೀರಿದ ಅವರ ಇನ್ನೊಂದು ಮಗ್ಗಲಿದೆ. ಅವರು ಕನ್ನಡದ ಸಾಹಿತ್ಯದ ಓರ್ವ ಸಮರ್ಥ ಆದರೆ ಅಲಂಕಾರಶಾಸ್ತ್ರ, ವೇದಾಂತ, ಭಾರತೀಯ ತತ್ವದರ್ಶನ, ಭಕ್ತಿರಸ, ಅಂಗ್ಲ ಭಾಷೆಯ ಸಮರ್ಥ ಅನುವಾದಕ ಈ ಮೊದಲಾದ ವಿಷಯಗಳ ಕುರಿತು ಕನ್ನಡ ಸಾರಸ್ವತ ಲೋಕಕ್ಕೆ ಅನೇಕ ಗ್ರಂಥಗಳನ್ನು ಬಳುವಳಿಯಾಗಿ ಕೊಟ್ಟಂತಹ ವಿದ್ವಾಂಸರು ಹೆಗಡೆಯವರು. ಕನ್ನಡ ಸಾಹಿತ್ಯ ಲೋಕದಲ್ಲಿ ಶಂಭಾ ಜೋಶಿ, ಗೌರೀಶ ಕಾಯ್ಕಿಣಿ, ವಿ. ಡಾ. ರಂಗನಾಥ ಶರ್ಮ, ಬಿ. ಎಚ್. ಶ್ರೀಧರ ಮುಂತಾದವರ ನಂತರ ಆ ಸಾಲಿನಲ್ಲಿ ಗಣಿಸಬೇಕಾದ ಕೆಲವೇ ವ್ಯಕ್ತಿಗಳಲ್ಲಿ ಇವರೂ ಒಬ್ಬರು. ಸಂಸ್ಕತ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಡಾ. ಈ. ಮಲ್ಲೇಪುರಂ ವೆಂಕಟೇಶರವರಂತೂ ಸಂಸ್ಕತ ಸಾಹಿತ್ಯದ ಕನ್ನಡ ಅನುವಾದಕರರಲ್ಲಿ ರಂಗನಾಥ ಶರ್ಮ, ಡಾ. ಎಚ್. ವಿ. ನಾಗರಾಜರಾವ್ ನಂತರ ಆ ಸಾಲಿನಲ್ಲಿ ಸೇರಬಲ್ಲ ವ್ಯಕ್ತಿ ಎಂದರೆ ಎಮ್. ಎ. ಹೆಗಡೆ ಎಂದಿದ್ದಾರೆ. ಇಂತಹ ಸದ್ಯೋಜಾತ ಪ್ರತಿಭೆಯ ವ್ಯಕ್ತಿ ಚಿತ್ರಣವನ್ನು ಅವರ ತಮ್ಮ “ಅಣ್ಣ ಮಹಾಬಲ” ದಲ್ಲಿ ಕಟ್ಟಿಕೊಡುವದು ಕನ್ನಡ ಸಾಹಿತ್ಯದಲ್ಲಿ ಒಂದು ಹೊಸರೀತಿಯದು. + +(ರಾಜಶೇಖರ ಹೆಗಡೆ ಜೋಗಿನ್ಮನೆ) + +ರಾಜಶೇಖರ ಹೆಗಡೆಯವರು ಈ ಹಿಂದೆ “ಬಿಸ್ಮಿಲ್ಲಾ ಖಾನ’ ಕುರಿತು ವ್ಯಕ್ತಿ ಚಿತ್ರಣವನ್ನು ಹೊರತಂದಿದ್ದಾರೆ. ಅವರ ಕಥಾಸಂಕಲನ “ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ” ಸಹ ವ್ಯಕ್ತಿ ಚಿತ್ರದ ಮಾದರಿಯಲ್ಲಿಯೇ ಇದೆ. ಆದರೆ ಇಲ್ಲಿ ಅವರು ನಮ್ಮೆದುರು ತಂದು ನಿಲ್ಲಿಸಿರುವದು ಯಕ್ಷಗಾನ ಅಕಾಡೆಮಿಯ ಅಧ್ಯಕ್ಷರು ತಾಳಮದ್ದಳೆಯ ಅರ್ಥದಾರಿ ಹಾಗೂ ಬಹುಶ್ರುತ ವಿದ್ವಾಂಸರಾಗಿದ್ದ ಅವರ ಅಣ್ಣ ಎಂ ಎ ಹೆಗಡೆಯವರನ್ನು. ಅಣ್ಣನ ಕುರಿತು ತಮ್ಮ ಬರೆಯುವದರಲ್ಲಿ ವಿಶೇಷವೇನೂ ಇಲ್ಲ. ಆದರೆ ಇಲ್ಲಿ ರಾಜಶೇಖರ ಹೆಗಡೆಯವರು ಈ ಹಿರಿಯಣ್ಣನಿಗಿಂತ ಸುಮಾರು ಇಪ್ಪತೈದು ವರ್ಷ ಚಿಕ್ಕವರು. ಎಂಟು ಮಕ್ಕಳ ದೊಡ್ಡ ಕುಟುಂಬದಲ್ಲಿ ಅವರು ಹಿರಿಯರಾದರೆ ರಾಜಶೇಖರ ಹೆಗಡೆಯವರು ಎಲ್ಲರಿಗಿಂತಲೂ ಕಿರಿಯರು. ಅಣ್ಣ ಬೆಳೆದಿರುವದು ಇವರ ಅಜ್ಜನಮನೆ ಸಿದ್ದಾಪುರದ ದಂಟ್ಕಲ್ಲಿನಲ್ಲಿಯಾದರೆ ಇವರು ಹುಟ್ಟಿ ಬೆಳೆದಿರುವದು ಜೋಗಿನ್ಮನೆಯಲ್ಲಿ. ಇವರಿಗೆ ಲೋಕದ ಅರಿವು ಬರುವ ವೇಳೆಗಾಗಲೇ ಎಂ ಎ ಹೆಗಡೆಯವರು ಸಮಾಜದಲ್ಲಿ ಒಂದು ಘಟ್ಟಿಯಾದ ಸ್ಥಾನಾಪನ್ನ ವ್ಯಕ್ತಿಯಾಗಿದ್ದರು. ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಯಕ್ಷಗಾನದಲ್ಲಿ ಶೇಣಿ ಸಾಮಗರಂತಹ ಘಟಾನುಗಟಿಗಳ ಸಂಗಡ ಅರ್ಥಹೇಳುವವರಾಗಿ, ಪ್ರಸಂಗಕರ್ತರಾಗಿ ಪ್ರಸಿದ್ಧರಾಗಿದ್ದರು. ಕೆರಮೆನೆ ಶಂಭು ಹೆಗಡೆಯವರ ಒಡನಾಡಿಗಳಾಗಿ ಅವರು ಸೀತಾವಿಯೋಗದಂತಹ ಪ್ರಸಂಗವನ್ನು ಅದಾಗಲೇ ರಚಿಸಿಯಾಗಿತ್ತು. + +ವಯಸ್ಸಿನ ಅಂತರ ಮತ್ತು ಅವರ ಪ್ರಖಾಂಡ ಪಾಂಡಿತ್ಯದ ಕಾರಣದಿಂದ ಇವರಿಗೆ ಅಣ್ಣನ ಹತ್ತಿರ ಅಷ್ಟೊಂದು ಸಲಿಗೆಯೂ ಇದ್ದಿರಲಿಲ್ಲ. ಎಂ ಎ ಹೆಗಡೆಯವರ ಕುರಿತು ಸುದ್ಧಿಯಲ್ಲಿರುವಂತೆ ಸ್ವಲ್ಪ ದುರಹಂಕಾರಿ ಎನ್ನುವ ಗುಮಾನಿಯೂ ಇವರಿಗೆ ಇತ್ತು. ಆದರೆ ಎಮ್ ಎ ಹೆಗಡೆಯವರು ವಾಸ್ತವದಲ್ಲಿ ಹಾಗಿರಲಿಲ್ಲ. ಇದಕ್ಕೆ ಕಾರಣ ಈ ಇಬ್ಬರೊಳಗಿರುವ ಒಂದು ತಲೆಮಾರಿನ ಅಂತರವಾಗಿತು ಎನ್ನುವದನ್ನು ಅವರು “ಅಕ್ಷರಾಂಜಲಿ” ಭಾಗದಲ್ಲಿ ವಿವರಿಸುತ್ತಾರೆ. ಆದರೆ ಅವರ ತಾಯಿ ತೀರಿಕೊಂಡ ಹೊತ್ತಿನಲ್ಲಿ ಸುಮಾರು ಇಪ್ಪತ್ತೊಂದು ದಿನ ಮನೆಯಲ್ಲಿ ಅಪರ ಕಾರ್ಯಕ್ರಮಗಳಿಗೆ ಈ ಅಣ್ಣತಮ್ಮ ಅಕ್ಕಂದಿರೆಲ್ಲ ಒಟ್ಟಿಗೇ ಇದ್ದರು. ಆಗ ಸಹೋದರರಲ್ಲಿ ಪರಸ್ಪರ ತೆರೆದುಕೊಳ್ಳುವಿಕೆಗಳು ನಡೆಯುತ್ತಾಹೋದಂತೆ ತಾನು ಅಂದು ಕೊಂಡ ಭಾವ ಸರಿಯಿಲ್ಲ. ಅಣ್ಣ ಎನ್ನುವವ ಶುದ್ಧ ಜೇನುತುಪ್ಪ ತುಂಬಿದ ಡಬ್ಬದ ಹಾಗೆ. ಮುಚ್ಚಳಮಾತ್ರ ಗಟ್ಟಿ, ತೆರೆದರೆ ಮನಸ್ಸೆಲ್ಲ ಸವಿಜೇನು. ಬೈದರೂ ಅದರ ಹಿಂದಿರುವದು ಹುಸಿಕೋಪ. ಮತ್ತರೆಕ್ಷಣ ಮಂದಹಾಸ (ಪು 148-149) ಎನ್ನುವದನ್ನು ಮನಗಾಣುತ್ತಾರೆ. ಇದು ಅವರ ಬದುಕಿನಲ್ಲಿಯೂ ಅಣ್ಣನ ಕುರಿತು ಇರುವ ಪರದೆ ತೆರೆಯಲು ಸಹಕಾರಿಯಾಗುತ್ತದೆ. ಈ ಭಾವ ಎಮ್ ಎ ಹೆಗಡೆಯವರನ್ನು ಹತ್ತಿರ ನೋಡಿದ ನನ್ನನ್ನೂ ಸೇರಿ ಎಲ್ಲರಿಗೂ ಆಗಿದೆ. ಸ್ವಲ್ಪ ಉಢಾಪೆ, ವ್ಯಂಗ್ಯ ಭರಿತ ನಗುವಿನಲ್ಲಿ ಎದುರಿನಲ್ಲಿರುವವರನ್ನು ಮಾತಾಡಿಸುತ್ತಲೇ ಇರುವ ಅವರ ಹತ್ತಿರ ಕುಳಿತು ಪ್ರಶ್ನೆಗಳನ್ನು ಕೇಳಿದರೆ, ಉತ್ತರಿಸುತ್ತ ಉತ್ತರಿಸುತ್ತಾ ನಮ್ಮ ಮನಸ್ಸಿನೊಳಗೊಂದಾಗುತ್ತಾರೆ. ನಂತರ ನಾವು ಅವರ ಹತ್ತಿರ ಹೇಗೆ ಬೇಕಾದರೂ ತಮಾಶೆ ಮಾಡಿಯೋ, ವಿನೋದದಿಂದಲೋ ಇರಬಹುದಾಗಿದೆ. ಈ ಅನುಭವವನ್ನು ಅವರು ಈ ಕೃತಿಯ ತುಂಬೆಲ್ಲಾ ಬಿಚ್ಚಿಡುತ್ತಲೇ ಹೋಗುತ್ತಾರೆ. ಅಣ್ನ ಎನ್ನುವವ ಇವರಿಗೆ ಮೊದಲು ಸಂಕೀರ್ಣ ವ್ಯಕ್ತಿತ್ವ, ನಂತರ ಅದು ಸರಿ ಇರಲಿಕ್ಕಿಲ್ಲ ಎನ್ನುವ ಗುಮಾನಿ, ಆ ಮೇಲೆ ಸ್ನೇಹಿತನಂತೆ ಮನಸ್ಸಿನೊಳಗೆ ಇಳಿದಾತ; ಜಗಳ, ಚರ್ಚೆ, ವಾದ ವಿವಾದಗಳ ನಡುವ ಬೆರೆತ ಮನಸ್ಸು ಇವೆಲ್ಲವೂ ಹದವಾಗಿ ಇಲ್ಲಿ ಸೇರಿದೆ. ಹೀಗೆ ಸೇರುವಾಗ ಇವರಿಗೆ ತಾನು ಕಂಡ ಈ ಮುಖಗಳೆಲ್ಲ ಸರಿ ಇರಬಹುದೇ ಎನ್ನುವದನ್ನು ಇನ್ನೊಬ್ಬರ ಹತ್ತಿರ ಕೇಳುವ ಕುತೂಹಲ. ಹಾಗಾಗಿ ಇಲ್ಲಿ ನಾಡಿನ ಪ್ರಸಿದ್ಧ ವಿಮರ್ಶಕರು, ಚಿಂತಕರು, ವಿದ್ವಾಂಸರುಗಳೆಲ್ಲ ಎಮ್. ಎ. ಹೆಗಡೆಯವರ ವ್ಯಕ್ತಿತ್ವವನ್ನು ಬಣ್ಣಿಸುತ್ತಿರುವಂತೆ ತಾನು ಕಂಡುಕೊಂಡ ತನ್ನ ಅಣ್ಣ ಪರಿಪೂರ್ಣನಾಗಿ ತನಗೆ ಸಿಕ್ಕಿದ್ದಾನೆ ಎನ್ನುವದನ್ನು ಅವರ ಬರಹದಲ್ಲಿ ಕಾಣಬಹುದು. + + + +ಕೆ. ವಿ. ಅಕ್ಷರ ಅವರು ಎಮ್. ಎ. ಹೆಗಡೆಯವರ ಜೊತೆ ತುಂಬಾ ಒಡನಾಡಿದವರು. ಅವರು ಪುಸ್ತಕದ ಪ್ರಾರಂಭದಲ್ಲಿಯೇ ಹೆಗಡೆಯವರ ಈ ಎಲ್ಲಾ ಗುಣಗಳನ್ನು ತೆರೆದಿಡಿಸುತ್ತಾರೆ. ಹೆಗಡೆಯವರ ಸಮಯ ಸ್ಪೂರ್ತಿಯ ಉತ್ತರದ ಕುರಿತು ಅವರು ಯಕ್ಷಗಾನದಲ್ಲಿ ಹನುಮಂತನಿಗೆ ಮಾತ್ರ ಬಾಲ ಏಕೆ ಇತರ ವಾನರಗಳಿಗೆ ಬಾಲವೇಕೆ ಇಲ್ಲ ಎನ್ನುವ ಪ್ರಶ್ನೆಯನ್ನು ಪೌಲಾ ರಿಚ್ಮನ್ ಎನ್ನುವವರು ಎತ್ತಿದಾಗ ಹೆಗಡೆಯವರು “ಹನುಮಂತನ ಬಾಲಕ್ಕೆ ರಂಗದಲ್ಲಿ ಕೆಲಸವುಂಟು, ಉಳಿದವರ ಬಾಲಕ್ಕೆ ಇಲ್ಲ” ಎನ್ನುವ ಉತ್ತರಕೊಟ್ಟ ಸನ್ನಿವೇಶವನ್ನು ನೆನಪಿಸಿಕೊಳ್ಳುತ್ತಾರೆ. ಅದೇರೀತಿ ಷೋಡಷ ಸಂಸ್ಕಾರಗಳ್ಳಲ್ಲೊಂದಾದ ಚೂಡಾಕರ್ಮದಲ್ಲಿ ಜುಟ್ಟು ಬಿಡುವ ಕ್ರಮದ ಕುರಿತು ಹೆಗಡೆಯವರು ನೀಡಿದ ಉತ್ತರ ನಮ್ಮಲ್ಲಿ ನಗು ಮತ್ತು ಅವರ ತರ್ಕಬದ್ಧ ಮಾತಿಗೆ ಬೆರಗು ಎರಡೂ ಆಗುತ್ತದೆ. ಇಂತಹುದೇ ಅನುಭವ ರಾಜಶೇಖರ ಹೆಗಡೆಯವರಿಗೆ ಜಯದ್ರಥನ ಸಂಹಾರದಲ್ಲಿ ಬರುತ್ತದೆ. ಇಲ್ಲಿ ಕೃಷ್ಣ ಚಕ್ರ ಹಿಡಿದದ್ದು ಭೀಷ್ಮಾದಿಗಳಿಗೆ ತಿಳಿದಿದಿಯೋ ಇಲ್ಲವೋ ಅಥವಾ ಅವನ ಮೋಸದ ಕುರಿತು ಯಾರೂ ಏಕೆ ಆಕ್ಷೇಪ ಮಾಡಿರಲಿಲ್ಲ ಎನ್ನುವ ಪ್ರಶ್ನೆಗಳಿಗೆ ಹೆಗಡೆಯರು ಕೊಡುವ ಇದೇ ರೀತಿಯ ತುಂಟತನದ ಉತ್ತರ ನಮ್ಮನ್ನು ನಗುವಿನಲ್ಲಿ ತೇಲಿಸಿಬಿಟ್ಟರೂ ಅದರೊಳಗಿರುವ ಅವರ ಚುರುಕುಮತಿತನಕ್ಕೆ ಬೆರಗಾಗುತ್ತೇವೆ. ತಾಳಮದ್ದಳೆ ಹೇಗಿರಬೇಕು ಎನ್ನುವದಕ್ಕೆ ಇಂತಹ ಚಾಟೋಕ್ತಿಗಳಿಂದಲೇ ಎಮ್ ಎ ಹೆಗಡೆಯವರು ರಂಗದ ಓರೆ ಕೋರೆಗಳನ್ನೆಲ್ಲ ಬಯಲಿಗೆಳೆಯುತ್ತಿದ್ದರು. ಕಥೆಗಳು ಪ್ರಸಂಗಕ್ಕೆ ನಿಷ್ಠವಾಗಿರಬೇಕೇ ಹೊರತೂ ಮೂಲಕಾವ್ಯಕ್ಕಲ್ಲ ಎನ್ನುವ ಸ್ಪಷ್ಟ ನಿಲುವು ಅವರದಾಗಿತ್ತು. + +ಎಮ್ ಎ ಹೆಗಡೆವರನ್ನು ಬಲ್ಲವರು ಕಂಡಂತೆ ಅವರಲ್ಲಿರುವ ಎರಡು ಕಂಪಾರ್ಟ್ ಮೆಂಟ್ ಗಳನ್ನು ಹೆಗಡೆಯವರು ತೆರೆದಿಡುಸುವಾಗ ಅವರ ವ್ಯಕ್ತಿತ್ವಕ್ಕೊಂದು ಮೆರಗು ಬರುತ್ತದೆ. ಅಲಂಕಾರ ತತ್ತ್ವಶಾಸ್ತ್ರ, ಸಂಸ್ಕೃತ ಕನ್ನಡದ ಅನುವಾದಕರಾಗಿ, ವಿದ್ವಾಂಸರಾಗಿ ವಿದ್ವತ್ ವಲಯದಲ್ಲಿ ಕಾಣಿಸಿಕೊಳ್ಳುವ ಹೆಗಡೆಯವರು ಒಂದುಕಡೆಯಾದರೆ ಇನ್ನೊಂದು ಯಕ್ಷಗಾನದ ಕುರಿತಾಗಿರುವ ಅವರಿಗಿರುವ ಪ್ರಧಾನವಾದ ಒಲವು. ಯಕ್ಷಗಾನದಲ್ಲಿನ ಅವರಿಗಿರುವ ಅಪರಿಮಿತ ಪ್ರೀತಿಯ ಕಾರಣದಿಂದಲೇ ಕನ್ನಡದ ಸಾಹಿತ್ಯವಲಯದಲ್ಲಿ ಅವರನ್ನು ಗುರುತಿಸಬೇಕಾದ ರೀತಿಯಲ್ಲಿ ಗುರುತಿಸಲಿಲ್ಲವೆನ್ನುವದನ್ನು ಈ ಕೃತಿಯನ್ನು ಓದಿದಾಗ ಅನಿಸುತ್ತದೆ. ಇವರು ಕನ್ನಡದಲ್ಲಿ ಅಲಂಕಾರ ಶಾಸ್ತ್ರದ ಮೇಲೆ ಬರೆದ “ಅಲಂಕಾರ ತತ್ವ” ಭಾರತೀಯ ಕಾವ್ಯಮೀಮಾಂಸೆಯ ಸಂಕ್ಷಿಪ್ತ ಪರಿಚಯಗಳೊಂದಿಗೆ ಉಪಮಾ ರೂಪಕ, ದೀಪಕ ಹೀಗೆ ಸುಮಾರು ನಲವತ್ತೈದು ಅರ್ಥಾಲಂಕಾರಗಳ ವಿಸ್ತೃತ ವಿವೇಚನೆಗಳನ್ನೊಳಗೊಂಡ ಗ್ರಂಥದ ಕುರಿತು ಚರ್ಚೆಯಾಗಲೇ ಇಲ್ಲ. ಹಳೆಗನ್ನಡ ಮತ್ತು ಹೊಸಗನ್ನಡ ಕಾವ್ಯಗಳಿಂದ ಉದಾಹರಣೆಗಳನ್ನೊಳಗೊಂಡ ಈ ಬಗೆಯ ಪುಸ್ತಕ ಕನ್ನಡದಲ್ಲಿ ಮತ್ತೊಂದಿಲ್ಲ. ಇಂತಹ ಹಲವು ಮುಖಗಳನ್ನು ನಾವು ಅಣ್ಣ ಮಹಾಬಲದಲ್ಲಿ ಓದಬಹುದಾಗಿದೆ. ತನ್ನ ಹರೆಯದ ಕಾಲದಲ್ಲಿ ಕುವೆಂಪುರೊಂದಿಗೆ ಸಂಯುಕ್ತ ಕರ್ನಾಟಕ ಪತ್ರಿಕೆಯಲ್ಲಿ ವಾಗ್ವಾದ ನಡೆಸಿದ ಘಟನೆಗಳೂ ಹೆಗಡೆಯವರ ನಿರ್ಭೀತ ಸ್ವಭಾವನ್ನು ಬಿಚ್ಚಿಡಿಸುತ್ತದೆ. + +ಎಮ್ ಎ ಹೆಗಡೆಯವರೆಂದೇ ಸಮಾಜದಲ್ಲಿ ಪ್ರಸಿದ್ಧರಾದ ಹೆಗಡೆಯವರಲ್ಲಿ ಮಹಾಬಲನೋರ್ವ ಇದ್ದಾನೆ ಎನ್ನುವದನ್ನು ಇಲ್ಲಿ ರಾಜಶೇಖರ ಹೆಗಡೆಯವರು ಗುರುತಿಸುತ್ತಾರೆ. ಎಂ ಎ ಹೆಗಡೆಯವರ ಜೀವನ ಕ್ರಮವನ್ನು ಹತ್ತಿರಿದಿಂದ ನೋಡಿದವರಿಗೆ ಅವರು ಅಪರಿಚಿತರಂತೇ ಕಾಣುತ್ತಾರೆ. ನಾಸ್ತಿಕರಂತೆ ತೋರುತ್ತಾರೆ.ಆದರೆ ಗರುಡ ಪುರಾಣವನ್ನು ವಾಚಿಸಿ ತಾಯಿಯ ಔರ್ಧದೈಹಿಕ ಕ್ರಿಯೆಗಳನ್ನು ನೆರವೇರಿಸುತ್ತಾರೆ. ಕುಟುಂಬ ಸಮೇತ ಕಾಶಿಯಾತ್ರೆಗೆ ಹೋಗುತ್ತಾರೆ. ಸಂಕೀರ್ಣವೆನಿಸಿಕೊಂಡ ವ್ಯಕ್ತಿತ್ವದೊಳಗೆ ತಮ್ಮವರೆನ್ನುವ ಭಾವನೆಯಿದೆ. ಸೀತಾವಿಯೋಗವನ್ನು ಬರೆಯಬಲ್ಲ ಅವರ ವಾಲ್ಮೀಕಿಯ ಮಾತೃ ಹೃದಯ ಹತ್ತಿರದಿಂದ ನೋಡಿದವರಿಗೆ ಮಾತ್ರ ಅರಿವಾಗುತ್ತದೆ. ಅಕಾಡೆಮಿಯ ಅಧ್ಯಕ್ಷರಾಗಿರುವಾಗ ನೊಂದವರಿಗೆ ತಮ್ಮ ಸ್ವಂತದ ಹಣವನ್ನು ನೆರವು ನೀಡಿ ತಣ್ಣಗೆ ಪ್ರಚಾರದಿಂದ ದೂರವಿರುವ ಗುಣ ಇವರಲ್ಲಿತ್ತು ಎನ್ನುವದನ್ನು ಸೋದಾಹರಣೆಯಾಗಿ ಇಲ್ಲಿ ವಿವರಿಸಲಾಗಿದೆ. ತನ್ನ ಅನುಭವಕ್ಕೆ ಬಂದಿರುವ ಈ ಎಲ್ಲಾ ಗುಣಗಳು ಇದೆಯೋ ಇಲ್ಲವೋ ಎನ್ನುವ ಅನುಮಾನ ಬಂದಾಗ ಅವರ ಈ ಎಲ್ಲಾ ಗುಣಗಳು ಸಮಾಜದ ಜನಸಾಮಾನ್ಯರಿಂದ ತೊಡಗಿ ಶತಾವಧಾನಿ ಗಣೇಶರು, ಎಚ್ ಎಸ್ ವಿ, ಡಾ. ಶ್ರೀರಾಮ ಭಟ್, ಡಾ. ಎಮ್ ಪ್ರಭಾಕರ ಜೋಷಿ ಸಹಿತವಾಗಿ ವಿದ್ವತ ವಲಯದಲ್ಲಿನ ಅಭಿಪ್ರಾಯವೂ ಅದಕ್ಕೆ ಸಹಮತ ವ್ಯಕ್ತಪಡಿಸುವದನ್ನು ಕಂಡಾಗ ಆ ಕುರಿತು ಮನಸ್ಸಿನಲ್ಲಿ ತೃಪ್ತಿ ಮೂಡಿದೆ. ಅಪರಿಚಿತ ಅಣ್ಣ ತನ್ನ ಹಿತೈಷಿಯಾಗಿ, ಗುರುವಾಗಿ, ಸ್ನೇಹಿತನಾಗಿ ಕೊನೆಗೆ ಮನಸ್ಸಿನಲ್ಲಿ ಶಾಶ್ವತವಾಗಿ ಮೂಡುವ ಭಾವನೆಯಾಗಿ ಕಂಡ ತನ್ನಣ್ಣನನ್ನು ಅವರ ತಮ್ಮ ರಾಜಶೇಖರ ಜೋಗಿನ್ಮನೆಯವರು ಸಾಹಿತ್ಯಲೋಕಕ್ಕೆ ಪರಿಚಯಿಸಿದ್ದಾರೆ. + + + +ಕನ್ನಡದಲ್ಲಿ ವ್ಯಕ್ತಿಚಿತ್ರದ ಸಾಹಿತ್ಯಕ್ಕೆ ಕೊರತೆಯಿಲ್ಲ. ಆದರೆ ಹಲ ಆಯಾಮಗಳಲ್ಲಿ ಅಣ್ಣನನ್ನು ಹುಡುಕುವ ಆ ಮೂಲಕ ಅಣ್ಣನ ಬಹುಶ್ರುತ ವ್ಯಕ್ತಿತ್ವವನ್ನು ಸಾಹಿತ್ಯ ವಲಯ ಮತ್ತು ಎಲ್ಲಾ ಸಹೃದಯರೊಟ್ಟಿಗೆ ಸಂವಾದಿಯಾಗುವಂತೆ ಕಂಡುಕೊಂಡ ವ್ಯಕ್ತಿಚಿತ್ರಣದ ಕೃತಿ ಇದು. ಬೆಂಗಳೂರಿನ ತೇಜು ಪಬ್ಲಿಕೇಷನ್ ಬಹು ಸುಂದರವಾಗಿ ಪುಸ್ತಕ ರೂಪದಲ್ಲಿ ಈ ಕೃತಿಯನ್ನು ಹೊರತಂದಿದೆ. ಜೊತೆಗೆ ಎಮ್ ಎ ಹೆಗಡೆಯವರ ನೆನಪಿನ ಬಹು ಆಯಾಮದ ಫೋಟೋಗಳು ಇದರಲ್ಲಿ ಇದೆ. ಗಟ್ಟಿ ಮುಚ್ಚಳವನ್ನು ತೆಗೆದು ಜೇನೆನ್ನು ಸಾರಸ್ವತಲೋಕಕ್ಕೆ ಹಂಚಿದ ಚಂದದ ಕೃತಿ ಇದು. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_244.txt b/Kenda Sampige/article_244.txt new file mode 100644 index 0000000000000000000000000000000000000000..8cd310bd64e5a42dd760ce93b20cd9d7952f18ee --- /dev/null +++ b/Kenda Sampige/article_244.txt @@ -0,0 +1,49 @@ +ಆನಂದ್ ಗೋಪಾಲ್ ರಂತಹ ಪ್ರತಿಭಾವಂತ ಕತೆಗಾರರ ಮೊದಲ ಕಥಾ ಸಂಕಲನಕ್ಕೆ ಮುನ್ನುಡಿ ಬರೆಯುವಂತಹ ಸಾಹಿತ್ಯ ಲೋಕದ ಕೇಂದ್ರ ಅಥವಾ ಪ್ರಭಾವಿ ಸ್ಥಾನದಲ್ಲಿ ನಾನಿಲ್ಲ. ಇದು ಆನಂದರಿಗೆ ಖಂಡಿತ ಗೊತ್ತಿರುತ್ತದೆ. ಆನಂದ್ ನನ್ನ ಒಟ್ಟು ಸಾಹಿತ್ಯದ ಬಗ್ಗೆ ಸಂಶೋಧನೆ ಮಾಡಿ ಮೈಸೂರು ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದವರು. ೧೯೭೨-೭೪ ರಲ್ಲಿ ಮಾನಸ ಗಂಗೋತ್ರಿಯಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನನಗೂ ಆ ಕಾಲಕ್ಕೆ ಡಾಕ್ಟರೇಟ್ ಪಡೆಯುವ, ಅರ್ಥಶಾಸ್ತ್ರಜ್ಞನಾಗುವ ಆಸೆ ಇತ್ತು. ಕೌಟುಂಬಿಕ ಹಿನ್ನೆಲೆ, ಔದ್ಯೋಗಿಕ ವಾತಾವರಣ ಈ ಆಸೆಯ ಪರವಾಗಿರಲಿಲ್ಲ. ಆದರೆ ಈಗ ನನ್ನ ಬರವಣಿಗೆ ಕುರಿತು ಆನಂದ್ ನಾನು ಓದಿದ ವಿಶ್ವವಿದ್ಯಾನಿಲಯದಿಂದಲೇ ಡಾಕ್ಟರೇಟ್ ಪಡೆದಿದ್ದಾರೆ. ಇದು ನನಗೆ ಸಂತೋಷದ ಮತ್ತು ಹೆಮ್ಮೆಯ ಸಂಗತಿ. ಇದಕ್ಕೆ ಕಾರಣ ಕೇವಲ ವೈಯಕ್ತಿಕವಲ್ಲ. ಆನಂದರಲ್ಲದೆ ಇನ್ನೂ ಮೂರು-ನಾಲ್ಕು ಸಂಶೋಧಕರು ಎಂ.ಫಿಲ್ ಸ್ತರದ ಸಂಶೋಧನಾ ಪ್ರಬಂಧಗಳನ್ನು ನನ್ನ ಸಾಹಿತ್ಯದ ಬಗ್ಗೆ ರಚಿಸಿದ್ದಾರೆ. ಇದೆಲ್ಲವಕ್ಕೂ ಹೋಲಿಸಿದರೆ ಆನಂದರ ಪ್ರಬಂಧ ಗುಣಮಟ್ಟ, ಒಳನೋಟ, ಬದ್ಧತೆಗಳ ದೃಷ್ಟಿಯಿಂದ ಉತ್ತಮವಾದದ್ದು. + +ಯಾವುದೇ, ಯಾರದೇ ಪ್ರಭಾವ, ಶಿಫಾರಸ್ಸು ಇಲ್ಲದೆ ಆನಂದ್ ಕಥನ ಪ್ರಕಾರದ ಬಗ್ಗೆ ತಮಗಿರುವ ಕುತೂಹಲ ಕಾಳಜಿಯಿಂದಾಗಿಯೆ ನನ್ನ ಕಥನ ಸಾಹಿತ್ಯವನ್ನು ಸಂಶೋಧನೆಗೆ ಆಯ್ಕೆ ಮಾಡಿಕೊಂಡಿದ್ದರು. + +(ಆನಂದ್‌ ಗೋಪಾಲ್‌ ) + +ಕತೆ, ಕಾದಂಬರಿ, ಕಿರುಗತೆ, ಪ್ರಬಂಧ,ಪ್ರವಾಸ ಸಾಹಿತ್ಯ, ಆತ್ಮಚರಿತ್ರೆ ಎಲ್ಲವನ್ನೂ ಕೂಡ ಕಥನವೆಂದೇ ಪರಿಗಣಿಸಿ ಸಂಶೋಧನೆಯ ವ್ಯಾಪ್ತಿಗೆ ತಂದದ್ದು ನನಗೆ ಖುಷಿಯಾಯಿತು. + +ಸಾಮಾನ್ಯವಾಗಿ ವಿಮರ್ಶೆ, ಸಮೀಕ್ಷೆ ಬರೆಯುವವರು ಕತೆಯೊಳಗಿನ ಅನುಭವ, ಆಶಯದ ಬಗ್ಗೆಯೇ ಹೆಚ್ಚಾಗಿ ಬರೆದು, ಪ್ರಕಾರ ಮೀಮಾಂಸೆಯ ಬಗ್ಗೆ ತಮಗೆ ತಿಳುವಳಿಕೆಯಿದೆಯೆಂದು ಪ್ರದರ್ಶಿಸಲು ಕತೆಯ ಸ್ವರೂಪದ ಬಗ್ಗೆ ಕೂಡ ಪ್ರಾಸಂಗಿಕವಾಗಿ ಕೆಲವು ಮಾತುಗಳನ್ನು ಬರೆಯುತ್ತಾರೆ. ಕಥನ ಕ್ರಿಯೆಯ ಸ್ವರೂಪದ ಬಗ್ಗೆ ಆನಂದ್ ಗೆ ಇರುವ ಆಸಕ್ತಿ ಕೇವಲ ಸಂಶೋಧನೆಗೆ ಮಾತ್ರ ಸೀಮಿತವಾದುದಲ್ಲ. ಅವರ ಸೃಜನಶೀಲ ಬರವಣಿಗೆಗೂ ಅದು ಹಬ್ಬಿಕೊಂಡಿದೆ. ಕಥನ ಪ್ರಕಾರದ ಬಗ್ಗೆ ಅವರಿಗಿರುವ ಆಸಕ್ತಿ, ಈ ಆಸಕ್ತಿಯಿಂದ ಮಾಡಿದ ಪ್ರಯೋಗಶೀಲತೆಯೇ ಇವರ ಸಂಕಲನವನ್ನು ಈಗ ದಿನವೂ ಹೊರಬರುತ್ತಿರುವ ಕತೆ-ಕಾದಂಬರಿಗಳ ಪ್ರವಾಹದಿಂದ ಬೇರ್ಪಡಿಸುತ್ತದೆ. + +ಆನಂದರ ಕತೆಗಳ ಬಗ್ಗೆ ಒಟ್ಟು ಮಾತುಗಳನ್ನು ಹೇಳಿ ನಂತರ ಕೆಲವು ಕತೆಗಳನ್ನು ವಿಶ್ಲೇಷಿಸುವುದು ಉಚಿತವಾದ ಕ್ರಮವಾಗುತ್ತದೆ ಎಂಬುದು ನನ್ನ ನಂಬಿಕೆ.( ೧) ಲೇಖಕರಿಗೆ ಬದುಕಿನ ನಾಡಿಮಿಡಿತ ಚೆನ್ನಾಗಿ ಗೊತ್ತಿದೆ. ಈ ತಿಳಿವಳಿಕೆ ಕೇವಲ ಬೌದ್ಧಿಕವಾದದ್ದಲ್ಲ. ಒಳನೋಟ ಮತ್ತು ಅಂತಃಸ್ಫೂರ್ತಿಯ ನೆಲೆಗಳಲ್ಲಿ ಇವರ ಸೃಜನಶೀಲತೆ ಹೆಚ್ಚು ಕ್ರಿಯಾಶೀಲವಾಗಿದೆ. + +(೨) ಪ್ರತಿನಿತ್ಯವೂ ಪ್ರತಿಕ್ಷಣವೂ ಜಗತ್ತು ಬದಲಾಯಿಸುತ್ತಿರುತ್ತದೆ. ಈ ಬದಲಾವಣೆಯನ್ನು ಗ್ರಹಿಸುವುದಕ್ಕೆ, ಅಭಿವ್ಯಕ್ತಿಗೊಳಿಸುವುದಕ್ಕೆ ಯಾವುದೇ ಸಿದ್ಧಮಾದರಿಗಳಿಲ್ಲ. ಹಾಗಾಗಿ ತೆರೆದ ಮನಸ್ಸಿನಿಂದ ಹೊರಡುವುದೇ ಬರಹಗಾರನಿಗಿರುವ ಶ್ರೀರಕ್ಷೆ. ತೆರೆದ ಮನಸ್ಸಿನಿಂದ ಹೊರಡುವುದೆಂದರೆ, ನೋಡುವುದು; ಹೊರಜಗತ್ತನ್ನು ಮಾತ್ರ ನೋಡುವುದಲ್ಲ; ತನ್ನನ್ನು ತಾನೆ ಪ್ರಶ್ನಿಸಿಕೊಳ್ಳುವುದು. ಯಾವುದೇ ನಿಲುವು, ವಿಚಾರಗಳಿಗೆ ಜಡವಾಗಿ ಅಂಟಿಕೊಳ್ಳದೆ ಇರುವುದು. ಆನಂದರ ಈ ಸ್ವಭಾವ ಕತೆಯೊಳಗೆ ಇರುವ ಚಲನಶೀಲತೆಯಲ್ಲಿ, ಕತೆ- ಪಾತ್ರಗಳು ಬೇರೆ ಬೇರೆ ದಿಕ್ಕಿಗೆ ಹೊರಳಿಕೊಳ್ಳುತ್ತಲೇ ಇರುವುದರಲ್ಲಿ ಓದುಗರ ಅನುಭವಕ್ಕೆ ಬರುತ್ತದೆ. ಮನುಷ್ಯರ ಬಗ್ಗೆ, ವಿಚಾರಗಳ ಬಗ್ಗೆ ‘ಇದಮಿತ್ಥಂ’ ಎಂಬ ನಿಲುವು ಇವರದಲ್ಲ. + +(೩) ಸಣ್ಣ ಕತೆಗಳನ್ನು ಬರೆಯುವವರು ಸಾಮಾನ್ಯವಾಗಿ ಕೇಂದ್ರ ಅಥವಾ Focus ಗೆ ಪ್ರಯತ್ನಿಸುತ್ತಾರೆ. ಆನಂದರದು ವಿಸ್ತಾರವನ್ನು ಹರಿಬಿಟ್ಟು, ವಿಸ್ತಾರದ ನೆಲೆ ಸ್ಥಾಪಿಸಿ ನಂತರ Focus ನೀಡುವ ಕ್ರಮ. ಹಾಗಾಗಿಯೇ ಒಂದು ಕತೆ, ಒಂದು ಪಾತ್ರ ಇನ್ನೊಂದು ಕತೆಗೆ, ಉಪಕತೆಗೆ ಅಥವಾ ಅನುಭವದ ಬೇರೆ ಸ್ತರಗಳಿಗೆ ಹೊರಡುವುದು; ಕತೆಗಳ ಪರಸ್ಪರ ನೋಡುವಿಕೆ ಕೂಡ ಕತೆಯ ಚೌಕಟ್ಟಿನೊಳಗೇ ನಡೆಯುತ್ತದೆ. ಇದರಿಂದಾಗಿ ಕೆಲವು ತೊಡಕುಗಳು ಆಗುತ್ತವೆ. ಪಾತ್ರ, ಘಟನೆಗಳು ಇಡಿಕಿರಿದು, ಎಲ್ಲ ಎಳೆಗಳನ್ನು ಜೋಡಿಸಿಕೊಳ್ಳುವುದು ಓದುಗರಿಗೆ ಕಷ್ಟವಾಗಬಹುದು ಅಥವಾ ಇಷ್ಟೆಲ್ಲಾ ಎಳೆಗಳು ಒಂದೇ ಕತೆಯ ವ್ಯಾಪ್ತಿಗೆ ಅನಗತ್ಯವಾಗಿರಬಹುದು. ‘ರಂಕುರಾಟ್ನ’, ‘ವ್ರಣ’ ಕತೆಗಳ ವಿನ್ಯಾಸವನ್ನು ಈ ಮಾತುಗಳ ಹಿನ್ನೆಲೆಯಲ್ಲಿ ನೋಡಬೇಕೆನೋ! + +(೪) ಬದುಕನ್ನು ಚಲನಶೀಲತೆಯಲ್ಲಿ ಗಮನಿಸುವುದರಿಂದ ಆನಂದರ ಕತೆಗಳನ್ನು ಒಂದೇ ಹಣೆಪಟ್ಟಿಗೆ ಗಂಟು ಹಾಕುವುದು ಕಷ್ಟ. ಗ್ರಾಮ, ಸಣ್ಣ ಪಟ್ಟಣ, ಮಹಾನಗರ, ಬೇರೆ ಬೇರೆ ಜಾತಿಗಳವರ ಅನುಭವ ನೋಡುವಿಕೆ ಎಲ್ಲವೂ ಇವರ ಮನಸ್ಸಿನ ಪ್ರಾಂತ್ಯದಲ್ಲಿದೆ. ಹೀಗಾಗಿ ಮುಂದೆ ಇವರು ನೀಳ್ಗತೆ, ಕಾದಂಬರಿ ರಚನೆಯ ಕಡೆ ಹೊರಳಿಕೊಳ್ಳುವ ಸಾಧ್ಯತೆಯ ಸೂಚನೆಗಳಾಗಿಯೂ ಈ ಕತೆಗಳನ್ನು ಗಮನಿಸಬಹುದು. + +(೫) ಬದಲಾವಣೆಯ ಒತ್ತಡಕ್ಕೆ ಒಳಗಾಗುತ್ತಿರುವ ದಾಂಪತ್ಯ ಪ್ರಪಂಚ, ಗಂಡು – ಹೆಣ್ಣಿನ ಸಂಬಂಧದ ಸ್ವರೂಪದ ವಿಶ್ಲೇಷಣೆ ಇವರ ಕತೆಗಳಲ್ಲಿ ಮತ್ತೆ ಮತ್ತೆ ಎದುರಾಗುತ್ತದೆ. ಈ ಬದಲಾವಣೆಗಳಿಂದ ಹೆಂಗಸು ಕಂಗಾಲಾಗುವುದರ ಜೊತೆಗೆ ಬಿಡುಗಡೆಯನ್ನು ಕೂಡ ಪಡೆಯುತ್ತಿರುತ್ತಾಳೆ. ಪಿತೃಪ್ರಧಾನ ವ್ಯವಸ್ಥೆಯಲ್ಲಿ ಗಂಡಿಗೆ ಹೆಚ್ಚು ಅನುಕೂಲ, ಅವಕಾಶಗಳಿರುವುದು ಸಹಜವಾದರೂ ಅವನು ಕೂಡ ತನ್ನ ಪ್ರೀತಿಸುವ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಸ್ವಾತಂತ್ರ್ಯವನ್ನು, ಬಿಡುಗಡೆಯನ್ನು ಪಡೆದ ಹೆಣ್ಣು ನೀಡುವ ಪ್ರೀತಿಯನ್ನು ಗಂಡು ಸ್ವೀಕರಿಸಿಸುವುದರಲ್ಲೂ ಇರುವ ತೊಡಕುಗಳನ್ನು ಕೂಡ ಆನಂದರ ಕತೆಗಳು ಗುರುತಿಸುತ್ತವೆ. + +(೬) ಸಮಕಾಲೀನ ಬದುಕಿನಲ್ಲಿ ಅಂತರ್ಗತವಾಗಿರುವ ಹಿಂಸೆಯ ಬೇರೆ ಬೇರೆ ಸ್ತರಗಳನ್ನು ಇವರ ಕತೆಗಳು ಗಮನಿಸುತ್ತವೆ. ಹೀಗೆಂದು ಎಲ್ಲೂ ಹೇಳದೆ ಗಮನಿಸುವುದು ಇವರ ಕತೆಗಳ ವೈಶಿಷ್ಟ್ಯ. ಇದನ್ನು ಕತೆಯ ಶಾರೀರದೊಳಗೆ ಹೇಗೆ ನಿರ್ವಹಿಸುತ್ತಾರೆ, ದೃಷ್ಟಿಕೋನ ಯಾವ ಸ್ವರೂಪದ್ದು ಎಂಬುದರ ಬಗ್ಗೆ ಇನ್ನೂ ಖಚಿತವಾಗಬೇಕಾಗಿದೆ. ‘ಬೇಬಿ’ ಕತೆಯಲ್ಲಿ ಕತೆಗಾರರು ಹಿನ್ನೆಲೆಗೆ ಸರಿದು ಸುಮ್ಮನೆ ಕೈ ಚೆಲ್ಲಿದ್ದಾರೆ ಅನಿಸುತ್ತದೆ. ಕತೆಗಾರ ಬಹುಪಾಲು ಕತೆಗಳಲ್ಲಿ ವೀಕ್ಷಕನ ಪಾತ್ರವನ್ನು ಮಾತ್ರ ಹೆಚ್ಚಾಗಿ ನಿರ್ವಹಿಸುವುದು ಕೂಡ ಕತೆಗಳಲ್ಲಿ ತೀವ್ರತೆಯನ್ನು ಕಡಿಮೆ ಮಾಡಬಹುದು. ವಸ್ತುನಿಷ್ಠತೆ, ಸಂಯಮ,ತೀವ್ರತೆ ಮತ್ತು ಸ್ಪಷ್ಟತೆಗಳ ನಡುವೆ ಕತೆಗಾರ ಆಯ್ಕೆ ಮಾಡಲೇಬೇಕಾಗುತ್ತದೆ. + + + +‘ರೂಪರೂಪಗಳನು ದಾಟಿ’ – ಆನಂದರ ಕತೆಗಾರಿಕೆಯ ಬಗ್ಗೆ ಹೇಳಬಹುದಾದ್ದನ್ನೆಲ್ಲ ಒಳಗೊಂಡಿದೆ. ಎರಡು ಮೂರು ತಲೆಮಾರುಗಳ ಅಂತರದಲ್ಲಿ ಆಗುವ ಬದಲಾವಣೆಯ ದಿಕ್ಕು, ಜಾತಿ ಸಡಿಲವಾಗುವಿಕೆ ಮತ್ತು ಪಾತ್ರಗಳಲ್ಲಿರುವ ಆತ್ಮಪರೀಕ್ಷೆಯ ಗುಣ, ಕತೆಯನ್ನು ನಿರೂಪಿಸುವ ತಂತ್ರ ಕೂಡ ಚೆನ್ನಾಗಿದೆ. ನಾಟಕವೊಂದನ್ನು ನೋಡಲು ಹೋದಾಗ, ನಿರೂಪಕ ತನ್ನ ಮನಸ್ಸಿನಲ್ಲಿ ಆಗುತ್ತಿರುವ ವಿಪ್ಲವವನ್ನು ಅಲ್ಲಿ ರಂಗಭೂಮಿಯ ಮೇಲೆ ನೋಡುತ್ತಾನೆ (ಅಂತರಂಗದ ರಂಗಭೂಮಿ). + +ಕತೆಯಲ್ಲಿ ಎರಡು ಎಳೆಗಳಿವೆ. ಎರಡು ಎಳೆಗಳಲ್ಲೂ ಹಿಂದಿನ ತಲೆಮಾರಿಗೆ ಸೇರಿದವರೇ ಸಕಾರಾತ್ಮಕವಾದ, ಜವಾಬ್ದಾರಿಯುತವಾದ ನಿಲುವುಗಳನ್ನು ತಳೆಯುತ್ತಾರೆ. (ಬಿಟ್ಟು ಹೋಗಿದ್ದ ಹೆಂಡತಿಯನ್ನು ಸ್ವೀಕರಿಸುವುದು, ಜಾತಿಯಿಂದ ಹೊರಗೆ ಮದುವೆಯಾಗಿರುವ ಮಗಳ ಸಂಸಾರದ ಬೆಳವಣಿಗೆಯನ್ನು ಒಪ್ಪಿಕೊಳ್ಳುವುದು). ಹೊಸ ತಲೆಮಾರಿನವರೇ ಇನ್ನೂ ಗೊಂದಲದಲ್ಲಿರುವಾಗ ಹಿಂದಿನ ತಲೆಮಾರಿನವರೇ ಈ ರೀತಿಯ ಮನೋಧರ್ಮ ತೋರುವುದು, ಹಾಗೆ ತೋರುವ ಮುನ್ನ ಮನುಷ್ಯ ಸಹಜವಾದ ಎಲ್ಲ ಗೊಂದಲ, ಹಿಂಜರಿಕೆಗಳನ್ನು ಅನುಭವಿಸುವುದನ್ನು ಕೂಡ ಕತೆ ತೆರೆದು ತೋರಿಸುತ್ತದೆ. ಈ ಗೊಂದಲ, ಹಿಂಜರಿಕೆಗಳನ್ನು ಹೇಳದೆ ಹೋಗಿದ್ದರೆ ಕತೆ ಕೇವಲ ಆಶಯಪ್ರಧಾನವಾಗಿರುತಿತ್ತು. ಯಾರದೋ, ಯಾವುದೋ ಕತೆಯೆಂದು ಪ್ರಾರಂಭವಾಗಿ, ಇನ್ಯಾವುದೋ, ಯಾರದೋ ಕತೆಯಾಗುವುದು. ಕೊನೆಗೆ ಎಲ್ಲರ ಕತೆಯೂ ಒಂದೇ ಆಗಿರುವುದು- ಈ ಮಾದರಿಯನ್ನು ಮತ್ತೆ ಮತ್ತೆ ಆನಂದ್ ಎಲ್ಲ ಕತೆಗಳಲ್ಲೂ ಬಳಸುತ್ತಾರೆ. ‘ಒಳತೋಟಿ’ – ಈ ಕತೆ ನೇರವಾಗಿ ಹೇಳುತ್ತದೆ. ಆದರೆ ಜೀವನ ನಿಷ್ಠುರವಾಗಿರುತ್ತದೆ ಎಂಬುದು ಕೂಡ ಕತೆಗಾರರಿಗೆ ಗೊತ್ತಿದೆ. ‘ಧರೆಗಿಳಿದ ನಕ್ಷತ್ರ’ದ ಸೌಭಾಗ್ಯ ಟೀಚರ್ ಬದುಕಿನಲ್ಲಿ ಎಲ್ಲ ಸಕಾರಾತ್ಮಕವಾದ ಆಯ್ಕೆಗಳನ್ನು ಮಾಡಿದ್ದರೂ ಬದುಕು ವಿನಾಕಾರಣ ಅವಳಿಗೆ ಕೈ ಕೊಡುತ್ತದೆ. ಇದೆಲ್ಲ ಬೇರೆ ಬೇರೆ ಕತೆಗಳೆಂದು ಓದುವ ಬದಲು ಬದುಕಿನ ಎಲ್ಲ ಸಂದರ್ಭ, ಸಾಧ್ಯತೆಗಳು ಕತೆಗಾರನಿಗೆ ತಿಳಿದಿದೆ ಎಂಬ ರೀತಿಯಲ್ಲಿ ಗಮನಿಸುವುದೇ ಹೆಚ್ಚು ಸೂಕ್ತ. ಆದರೆ ‘ಬೇಬಿ’ ಕತೆಯಲ್ಲಿ ಪಾತ್ರಗಳು ಮಾತ್ರವಲ್ಲ, ಕತೆಗಾರ ಕೂಡ ಸಂಕೀರ್ಣತೆಯನ್ನು ಎದುರಿಸಲು ಹಿಂಜರಿಯುತ್ತಾನೆ. ನಿರ್ವಹಣೆಗಿಂತ ಹೆಚ್ಚಾಗಿ ಕೈ ಚೆಲ್ಲುವ ಪ್ರವೃತ್ತಿಯೇ ಮುನ್ನೆಲೆಗೆ ಬರುತ್ತದೆ. ಹೀಗೆ ಬದುಕಿನ ಎಲ್ಲ ಸ್ತರಗಳನ್ನು ಗಮನಿಸುವ ಪ್ರಾಮಾಣಿಕತೆ ಕತೆಗಾರನಿಗಿದೆ ಎನ್ನುವುದು ಮುಖ್ಯ. ತಾನು ಒಂದು ನಿಲುವಿನ, ಸಾಧ್ಯತೆಯ ಪರ ಎಂದು ತೋರಿಸಿಕೊಳ್ಳುವ ಲೇಖಕ, ತನ್ನನ್ನು ತೆರೆದುಕೊಳ್ಳುವುದಿಲ್ಲ. ವಾಸ್ತವದ ಸಾಧ್ಯತೆಗಳನ್ನು ಕೂಡ ತೆರೆದು ತೋರಿಸುವುದಿಲ್ಲ. + +‘ಉಸುಬು’ ಕತೆಯನ್ನು ಗಮನವಿಟ್ಟು ಓದಬೇಕು. ಇಲ್ಲಿ ಹಲವು ಕತೆಗಳಿವೆ. ಹಲವು ಪಾತ್ರಗಳಿವೆ. ಸ್ವಾರಸ್ಯವೆಂದರೆ ಯಾರದೋ ಕತೆ ಇನ್ಯಾರದೋ ಕತೆ ಬೇಕಾದರೂ ಆಗಬಹುದು ಅಥವಾ ಕತೆಯ ಒಂದು ಭಾಗ ಒಂದು ಪಾತ್ರದಲ್ಲಿದ್ದು; ಇನ್ನೊಂದು ಭಾಗ ಮತ್ತೊಬ್ಬರಲ್ಲಿ ಮುಂದುವರಿಯಬಹುದು. ಒಂದು ಕಾಲಮಾನದಲ್ಲಿ ಬದುಕುವವರ ಎಲ್ಲರ ಕತೆಯೂ ಒಂದೇ ಆಗಿರುತ್ತದೆ ಅಥವಾ ಒಂದೇ ಕತೆಯ ಬೇರೆ ಬೇರೆ ಭಾಗಗಳು ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತದೆ. ಜೀವನದ ಗತಿ ಇರುವುದು ಹೀಗೆಯೇ! ಇಂತಹ ಒಂದು ಮಹತ್ವದ ಗುಟ್ಟನ್ನು ಪ್ರಥಮ ಸಂಕಲನದಲ್ಲೇ, ಮಧ್ಯವಯಸ್ಸನ್ನು ತಲುಪುವ ಮುಂಚೆಯೇ ಕಂಡುಕೊಂಡ ಆನಂದರಿಗೆ ಅಭಿನಂದನೆಗಳು. ಈ ಕತೆಯಲ್ಲಿರುವ ಎಲ್ಲ ಪಾತ್ರಗಳು ಒಟ್ಟಿಗೆ ಒಂದು ಮುಸ್ಸಂಜೆ ನಿಮ್ಮ ಮನೆಗೆ ಬಂದರೆ ಏನು ಮಾಡುತ್ತೀರಿ? + +ಏಕೋ ಈ ಕತೆಗಾರರಿಗೆ ದಾಂಪತ್ಯ-ಕೌಟುಂಬಿಕ ಜೀವನದ ಸಫಲತೆಯ ಬಗ್ಗೆ ಅಷ್ಟು ವಿಶ್ವಾಸವಿಲ್ಲ. ಇದು ಅವರ ಗ್ರಹಿಕೆಯೋ, ಇಲ್ಲ ನಮ್ಮ ಕಾಲದಲ್ಲಿ ದಾಂಪತ್ಯ-ಕೌಟುಂಬಿಕ ಸಂಸ್ಥೆಗಳು ಶಿಥಿಲಗೊಂಡು ಆನಂದರು ಸೂಚಿಸಿತ್ತಿರುವ ಹಾದಿಯನ್ನು ಹಿಡಿದಿವಿಯೋ? + +ನನಗಿಂತ ಮೂರು ನಾಲ್ಕು ತಲೆಮಾರು ಕಿರಿಯರಾದ ಕತೆಗಾರರ ಗ್ರಹಿಕೆಯೇ ಸರಿಯಿರಬೇಕು; ಸಮಕಾಲೀನವಾಗಿರಬೇಕು. ಇಲ್ಲ ನನ್ನ ಗ್ರಹಿಕೆ ಕೂಡ ಅದೇ ಆಗಿದ್ದು; ಅದನ್ನು ಒಪ್ಪಲು ನನಗೆ ಹಿಂಜರಿಕೆಯಿರಬೇಕು. ಒಂದು ಆಶಯವಾಗಿ, ಸಾಧ್ಯತೆಯಾಗಿ, ಕನಸಾಗಿ ಕೂಡ ದಾಂಪತ್ಯ-ಕೌಟುಂಬಿಕ ಜೀವನದ ಸಫಲತೆ ನಮಗೆ ಕಾಣಲಾರದೇ? ಈ ವಿನ್ಯಾಸ ಇವರ ಬಹುಪಾಲು ಕತೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ‘ದೀಪದ ಬುಡ’ ಕತೆಯಲ್ಲಿ ಹೊಸ ತಲೆಮಾರಿನ ಈ ಹೆಣ್ಣುಮಕ್ಕಳು ಇದನ್ನೆಲ್ಲ ಅರ್ಥಪೂರ್ಣವಾಗಿ ನಿರ್ವಹಿಸಬಲ್ಲರು ಎಂಬ ಸೂಚನೆಯಿದೆ. ‘ಗಣ್ಯಶ್ರೀ’ ಯಂತಹ ಹೆಣ್ಣು ಮಕ್ಕಳು ಎಲ್ಲರ ಮನೆಯಲ್ಲೂ ಇರಲಿ ಎಂದು ಆಸೆಯಾಗುತ್ತದೆ. + +(ಕೆ. ಸತ್ಯನಾರಾಯಣ) + +‘ಛದ್ಮ’ ಕತೆ, ಕತೆಯನ್ನು ಮೀರಿದ ಒಂದು ಪ್ರಶ್ನೆಯನ್ನು ಎತ್ತಿಕೊಳ್ಳುತ್ತದೆ. ಕತೆ – ನಾವು ಕೇಳುವುದರಿಂದ ತಿಳಿಯುತ್ತದೋ,ಇಲ್ಲ ನೋಡುವುದರಿಂದ ತಿಳಿಯುತ್ತದೋ, ಇಲ್ಲ ನಮ್ಮ ನೋಟದಲ್ಲಿರುವ ಪಾರ್ಶ್ವದೃಷ್ಟಿಕೋನದಿಂದ ತಿಳಿಯುತ್ತದೋ? ಸರಿ, ನಾವು ನೋಡಿದ ನೋಟವಷ್ಟೇ ಕತೆ; ಅದು ಮಾತ್ರ ನಿಜವೆಂದು ಜಗತ್ತಿಗೆ ಒಪ್ಪಿಸಲು ನಾವೆಲ್ಲಾ ಯಾಕೆ ಹವಣಿಸುತ್ತೇವೆ! ಮನುಷ್ಯರಾಗಿ ನಾವೆಲ್ಲರೂ ಹೀಗೆಯೇ ಇರುವುದರಿಂದ ಕತೆಗಾರರಿಗೆ ಒಂದು ಅನಿವಾರ್ಯತೆ ಮೂಡುತ್ತದೆ. ನಿರ್ಮಮವಾಗಿರಲು ಅವನಿಗಿರುವುದು ಒಂದೇ ಹಾದಿ – ಹಲವು ದೃಷ್ಟಿಕೋನಗಳಿಂದ, ಹಲವು ನೆಲೆಗಳಿಂದ ಒಂದು ಅನುಭವವನ್ನು, ಒಬ್ಬ ಮನುಷ್ಯನನ್ನು ನೋಡುವುದು, ನೋಡುತ್ತಲೇ ಇರುವುದು. + +ಕತೆಗಳ ಸಾರಾಂಶ ಹೇಳಿ ಮುನ್ನುಡಿ ಬರೆಯುವುದು ಸಾಮಾನ್ಯವಾದ ರೂಢಿ. ಇವರ ಕತೆಗಳಲ್ಲೂ ಸಾರಾಂಶವನ್ನು ಬಯಸುವ ಕತೆ, ಕತೆಯ ತಿರುವು ಎಲ್ಲ ಇದೆ. ಆದರೆ ಇವರ ಮುಖ್ಯ ಉದ್ದೇಶ ಕತೆ ಹೇಳುವುದಲ್ಲ. ಕತೆಯ ಮತ್ತು ಬದುಕಿನ ವಿನ್ಯಾಸಗಳ ಬಗ್ಗೆ ಓದುಗರನ್ನು ಒಪ್ಪಿಸುವುದು. ಇಂತಹ ಮಾದರಿಯ ಕತೆಗಳನ್ನು ಬರೆಯುತ್ತಿರುವವರು ಇವತ್ತು ವಿರಳ. ಆದರೆ ಇದು ಸುಲಭ ಯಶಸ್ಸಿನ ಜನಪ್ರಿಯ ಹಾದಿಯಲ್ಲ ಎಂಬುದನ್ನು ಹೇಳಬೇಕು. + +ಸಾಮಾನ್ಯವಾಗಿ ಮೊದಲ ಒಂದೆರೆಡು ಸಂಕಲನಗಳಲ್ಲಿ ಒಂದೋ ಎರಡೋ ಕತೆಗಳು ಚೆನ್ನಾಗಿದ್ದು, ಉಳಿದ ಕತೆಗಳು ತಯಾರಿ, ಪೂರ್ವಭಾವಿ ಬರಹಗಳಂತೆ ಇರುತ್ತವೆ. ಈ ಸಂಕಲನದಲ್ಲಿ ಹಾಗಲ್ಲ. ಎರಡು ಮೂರು ಕತೆಗಳನ್ನು ಬಿಟ್ಟರೆ ಉಳಿದ ಎಲ್ಲ ಕತೆಗಳು ಒಂದೇ ಮಟ್ಟದವು. ಸಂಶೋಧನೆ – ವಿಮರ್ಶೆ ಬರೆದ ನಂತರ ಕತೆಗಳನ್ನು ಬರೆಯುತ್ತಿರುವುದರಿಂದ ಹೀಗಾಗಿರಬಹುದು. ದೃಷ್ಟಿಕೋನದಲ್ಲಿ ಒಂದು ಮಟ್ಟದ ಪ್ರಬುದ್ಧತೆ ತಲುಪುವ ತನಕ ಕಾದು ಬರವಣಿಗೆಗೆ ಹೊರಟಿರುವುದರಿಂದಲೂ ಹೀಗಾಗಿರಬಹುದು. + +ಕಾರಣ ಏನೇ ಇರಲಿ ಲಾಭ ಮಾತ್ರ ಓದುಗನಿಗೇ. + + + +ಕತೆ ಹೇಳುವುದಕ್ಕಿಂತ ಹೆಚ್ಚಿನ ಉದ್ದೇಶವನ್ನುಳ್ಳ ಆನಂದರ ಕಥಾಕ್ರಮಕ್ಕೆ ಅವರ ಜೊತೆ ಕತೆಗಾರರು, ಓದುಗರು ಕುಮ್ಮಕ್ಕು ಕೊಡುವರೆಂದು ಆಶಿಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_245.txt b/Kenda Sampige/article_245.txt new file mode 100644 index 0000000000000000000000000000000000000000..55a20887f8463019870c20bec92b3460949f198f --- /dev/null +++ b/Kenda Sampige/article_245.txt @@ -0,0 +1,29 @@ +ಎಲ್ಲಿಂದಲೋ ತೇಲಿಬಂದ ಸೌಗಂಧಿಕಾ ಪುಷ್ಪದ ಪರಿಮಳಕ್ಕೆ ಸೋತು, ಗಿಡವನ್ನೇ ಹುಡುಕಿ ಹೊರಡುತ್ತಾನೆ ದ್ರೌಪದಿಯ ನಲ್ಲ ಬಲಭೀಮ. ಪ್ರಬಂಧಕಾರನೂ ಅಷ್ಟೇ. ಯಾವುದೋ ಕ್ಷಣದಲ್ಲಿ ಮನಸ್ಸಿಗೆ ತಾಕಿದ ಕಂಪಿನ ಕರೆಗೆ ಓಗೊಟ್ಟು, ಅದರ ಜಾಡು ಹಿಡಿದು ನಡೆಯುತ್ತಾನೆ. ಆ ನಡಿಗೆಯಲ್ಲಿ ಸೌಗಂಧಿಕಾ ಪುಷ್ಪಗಳ ಗೊಂಚಲು ದೊರೆಯಬಹುದು, ತುಂಬೆಗಷ್ಟೇ ತೃಪ್ತಿಪಡಬೇಕಾಗುವುದು, ಇಲ್ಲವೇ ಪರಿಮಳವಿಲ್ಲದ ಕಾಡುಹೂವೊಂದಷ್ಟೇ ಕೈಸೇರಬಹುದು. ಇಲ್ಲಿ ಗಮ್ಯವೆನ್ನುವುದು ಅದೃಷ್ಟ. ನಡಿಗೆಯ ಪ್ರಯತ್ನಕ್ಕೆ ಮಹತ್ವ. ಹೀಗೆ ಹೂಶಿಕಾರಿಗೆ ಹೊರಟು ಹಲವು ಬಗೆಯ ಹೂಗಳನ್ನು ಹೆಕ್ಕಿ ಪೋಣಿಸಿದ ಚಂದದ ಮಾಲೆ ‘ಕಾಣೆಯಾದವರು’. + +‘ಕಾಣೆಯಾದವರು’ ಆಶಾ ಜಗದೀಶ್ ಅವರ ಹದಿನೈದು ಪ್ರಬಂಧಗಳ ಸಂಕಲನ. ಈಗಾಗಲೇ ಕಥೆ ಮತ್ತು ಕವಿತೆಗಳ ಮೂಲಕ ಸಹೃದಯರಿಗೆ ಪರಿಚಿತರಾದ ಅವರು, ಈಗ ಪ್ರಬಂಧ ಪ್ರಕಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಬಂಧ ಹಾಗೂ ಕಥೆಯ ನಡುವಿನ ಗೆರೆ ತೆಳುವಾದುದು. ಪ್ರಬಂಧವೊಂದರಲ್ಲಿ ಅನೇಕ ಕಥೆಗಳ ಬೀಜಗಳು ಇರಲಿಕ್ಕೆ ಸಾಧ್ಯವಿದೆ. ಕೆಲವೊಮ್ಮೆ ಈ ಕಥನಗಳ ಪೋಣಿಸುವಿಕೆ ಪ್ರಬಂಧದ ಸ್ವರೂಪದಲ್ಲಿ ಅಭಿವ್ಯಕ್ತಗೊಳ್ಳುವುದೂ ಇದೆ. ಆಶಾ ಅವರ ಪ್ರಬಂಧಗಳೂ ಅಷ್ಟೇ. ಲೇಖಕಿಯ ಭಾವಲೋಕದ ಅನೇಕ ಸಂಗತಿಗಳು ಕಿರುಕಥೆಗಳ ರೂಪದಲ್ಲಿ ಅರಳಿ ಹೆಣೆದುಕೊಂಡು, ಆ ಹೆಣಿಗೆಗಳು ಪ್ರಬಂಧದ ಮೊಹರು ಹೊಡೆಸಿಕೊಂಡಿವೆ. ಕವಯಿತ್ರಿಯೂ ಆಗಿರುವುದು ಆಶಾ ಅವರ ಪ್ರಬಂಧಗಳಿಗೆ ಕಾವ್ಯಗಂಧಿ ಗುಣ ದೊರೆಯಲು ಸಾಧ್ಯವಾಗಿದೆ. ಈ ಸಂಕಲನದ ಮತ್ತೊಂದು ವಿಶೇಷ, ಇಲ್ಲಿನ ಬರಹಗಳಲ್ಲಿ ಒಬ್ಬ ವಿದ್ಯಾರ್ಥಿನಿಯಿರುವುದು ಹಾಗೆಯೇ ಆ ಬಾಲಕಿಯೇ ವರ್ತಮಾನದಲ್ಲಿ ಶಿಕ್ಷಕಿಯೂ ಆಗಿರುವುದು. ವಿದ್ಯಾರ್ಥಿನಿಯ ಕುತೂಹಲ ಹಾಗೂ ಮುಗ್ಧತೆಯ ಜೊತೆಗೆ ಶಿಕ್ಷಕಿಯ ಅನುಭವ, ಕಾಳಜಿ, ವಿಚಾರ, ವಿವೇಕಗಳು ಸೇರಿಕೊಂಡು ರೂಪುಗೊಂಡಿರುವ ಬರಹಗಳಿವು. ಗತ-ವರ್ತಮಾನಗಳು ಅರ್ಥಪೂರ್ಣವಾಗಿ ಸಂಧಿಸಲಿಕ್ಕೆ ಈ ದ್ವಿಪಾತ್ರಾಭಿನಯ ಪರಿಣಾಮಕಾರಿಯಾಗಿದೆ. + +(ಆಶಾ ಜಗದೀಶ್‌) + +ಇಲ್ಲಿನ ಎಲ್ಲ ಪ್ರಬಂಧಗಳಿಗೂ ಕಾವ್ಯಸಹಜವಾದ ಒಂದು ಲಯವಿದೆ. ಆ ನಾದಮಯತೆ ಶೀರ್ಷಿಕೆಗಳಲ್ಲೇ ಎದ್ದುಕಾಣುತ್ತದೆ. ‘ಹೂವ ಅರಸುವ ಕಾಲದ ನೆಲ’, ‘ಬಿಟ್ಟು ಹಿಡಿಯುವ ಬಿಡುಗಡೆಯ ನಿರಾಳ’, ‘ಸ್ಮೃತಿ ತಂತುಗಳ ತೂಗು’ – ಇಂಥ ಶೀರ್ಷಿಕೆಗಳು ಕಾವ್ಯದ ಸಾಲುಗಳಂತೆಯೂ ಗಮನಸೆಳೆಯುತ್ತವೆ. + +ಕರ್ತೃವಿನ ಮೂಗು ತೂರಿಸುವಿಕೆಗೆ ಹೆಚ್ಚು ಅವಕಾಶ ಇರುವ ಸಾಹಿತ್ಯ ಪ್ರಕಾರ ಪ್ರಬಂಧ. ಈ ಅವಕಾಶದ ಕಾರಣದಿಂದಲೇ ಪ್ರಬಂಧಕಾರರ ಆತ್ಮಕಥನದ ತುಣುಕುಗಳು ಕೂಡ ಪ್ರಬಂಧಗಳಲ್ಲಿ ಇಣುಕಿಬಿಡುತ್ತವೆ. ಆಶಾ ಅವರ ಪ್ರಸಕ್ತ ಸಂಕಲನದ ಮೊದಲ ಬರಹ ‘ಹೂವ ಅರಸುವ ಕಾಲದ ನೆಲ’ ಬರಹ ಕೂಡ ಆತ್ಮವೃತ್ತಾಂತದ ರೀತಿಯ ತುಣುಕೇ ಆಗಿದೆ. ಹೂವನ್ನೂ ಅಮ್ಮನನ್ನೂ ಒಟ್ಟಿಗೆ ನೋಡುವುದರೊಂದಿಗೆ ಆರಂಭವಾಗುವ ಈ ಪ್ರಬಂಧ, ಅಮ್ಮನ ವಾತ್ಸಲ್ಯದ ಮಕರಂದವನ್ನು ಕಾಣಿಸಲು ಹಂಬಲಿಸುತ್ತದೆ. ಗುಬ್ಬಚ್ಚಿ ಸಂಸಾರದಂಥ ಕುಟುಂಬದಲ್ಲಿ ಮಕ್ಕಳನ್ನು ಹೂಗಳಂತೆ ಮುಚ್ಚಟೆ ಮಾಡುವವಳು ಅಮ್ಮ. ಹಾಗೆ ಅರಳಿದ ಹೂವೊಂದು ಈಗ ತಾನೇ ಅಮ್ಮನಾಗಿ ರೂಪಾಂತರಗೊಂಡು, ತನ್ನದೇ ಹೂವುಗಳರಳಿಸಿದೆ. ಹೀಗೆ ಎರಡು ತಲೆಮಾರುಗಳನ್ನು – ಹೂದೋಟಗಳನ್ನು – ಮುಖಾಮುಖಿಯಾಗಿಸುವ ಪ್ರಬಂಧ ಕೊನೆಗೊಳ್ಳುವುದು ವಿಷಾದದೊಂದಿಗೆ; ಚೇತನ ಅಚೇತನವಾಗುವ ನೋವಿನೊಂದಿಗೆ. ‘ಹೂವ ಅರಸುವ ಕಾಲದ ನೆಲ’ ಉದ್ಗಾರದಲ್ಲಿನ ‘ಕಾಲ’ ಸಮಯವಷ್ಟೇ ಅಲ್ಲ, ಅದು ಸಾವೂ ಹೌದು. ಹೀಗೆ ರೂಪಕಭಾಷೆಯಲ್ಲಿ ಮಾತನಾಡುವ ಕಾರಣದಿಂದ ಗಮನಸೆಳೆಯುವ ಈ ಪ್ರಬಂಧ, ಸಹೃದಯರ ಬದುಕಿನ ಸುಮತಂತುಗಳನ್ನೂ ಮೀಟುವಷ್ಟು ಸೊಗಸಾಗಿದೆ. ಈ ಹೂಬಂಧದ ಜೊತೆಯಲ್ಲಿಯೇ, ಆತ್ಮಕಥನದ ಇನ್ನೊಂದು ಕಿರು ಅಧ್ಯಾಯದಂತಿರುವ, ಅಮ್ಮನೊಬ್ಬಳು ಮಗಳಿಗೆ ಬರೆದಿರುವ ಪತ್ರದ ರೂಪದಲ್ಲಿರುವ, ವಾತ್ಸಲ್ಯದಲ್ಲಿ ಅದ್ದಿ ತೆಗೆದಂತಿರುವ ‘ಚಿನ್ನಾರಿ ಮಗಳೇ’ ಪ್ರಬಂಧವನ್ನು ಓದಬೇಕು. + +‘ಊರೆಂಬ ಪ್ರಾಣಸಖ’ ಪ್ರಬಂಧ ಲಹರಿ ರೂಪದ ರಚನೆ. ಈ ಬರಹದಲ್ಲಿನ ಊರೇ ಹೆಣ್ಣಾಗುವ, ತಾಯಿಯಾಗುವ ಕ್ರಿಯೆ ಸೊಗಸಾಗಿದೆ. ‘ಸ್ಮೃತಿ ತಂತುಗಳ ತೂಗು’ ಬಾಲ್ಯದ ಹಿತವಾದ ನೆನಪಿನೆಳೆಗಳ ನೇಯ್ಗೆ. ಇದು ಕೇವಲ ಸಂದುಹೋದ ಬಾಲ್ಯದ ಚಿತ್ರಗಳ ಮೆರವಣಿಗೆಯಷ್ಟೇ ಅಲ್ಲ; ಆ ಸವಿಬಿಂಬಗಳ ಮೂಲಕ ಜೀವನಪದ್ಧತಿಯೊಂದು ಕಣ್ಮರೆಯಾಗಿರುವುದನ್ನೂ ಪ್ರಬಂಧಕಾರ್ತಿ ಸೂಕ್ಷ್ಮವಾಗಿ ನಮ್ಮ ಗಮನಕ್ಕೆ ತರುತ್ತಿದ್ದಾರೆ. ಹೀಗೆ ಸಾಧಾರಣವಾದ ಸಂಗತಿಯೊಂದನ್ನು ಹೇಳುತ್ತಲೇ ಗಹನವಾದ ಸಂಗತಿಯೊಂದನ್ನು ಅತ್ಯಂತ ಸಹಜವಾಗಿ ದಾಟಿಸಿಬಿಡುವ ಪ್ರಬಂಧಧ್ವನಿ ಇಲ್ಲಿ ಕಾಣಿಸುತ್ತದೆ. ಇಂಥ ಧ್ವನಿಗಳು ಅಲ್ಲಲ್ಲಿ ಮಿಂಚುವ ಮೂಲಕ ಈ ಸಂಕಲನಕ್ಕೆ ಚೇತೋಹಾರಿ ಗುಣ ಲಭ್ಯವಾಗಿದೆ. + +ಕೂದಲ ಚೆಲುವು ಹಾಗೂ ಆರೋಗ್ಯ ಮಾರುಕಟ್ಟೆಯ ರೂಪ ಪಡೆದಿರುವ ಸಂದರ್ಭವನ್ನು ವಿಡಂಬಿಸುವ ‘ಸುಕೇಶಿನಿಯಾಗಹೊರಟು…’ ಪ್ರಬಂಧ ಕೊನೆಗೊಳ್ಳುವುದು ಜಾಹೀರಾತೊಂದರ ಚಿತ್ರಣದ ಮೂಲಕ. ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿ ತಲೆಬೋಳಾದ ಯುವತಿಯೊಬ್ಬಳು ಕೊಂಚ ಹಿಂಜರಿಕೆಯಿಂದ ಕಚೇರಿಗೆ ಹೊರಟುನಿಂತಿದ್ದಾಳೆ. ಅವಳನ್ನು ಗಂಡ-ಮಗಳು ಹೆಮ್ಮೆಯಿಂದ ಕಳುಹಿಸಿಕೊಟ್ಟರೆ, ಕಚೇರಿಯಲ್ಲಿ ಗೆಳತಿಯೊಬ್ಬಳು ತಲೆಬೋಳಿಗೆ ದೃಷ್ಟಿಬೊಟ್ಟನ್ನಿಟ್ಟು ಬರಮಾಡಿಕೊಳ್ಳುತ್ತಾಳೆ. + +ಸಹೋದ್ಯೋಗಿಗಳೆಲ್ಲ ಸಂತಸದಿಂದ ಚಪ್ಪಾಳೆ ತಟ್ಟುತ್ತಾರೆ. ಈ ಪ್ರಸಂಗ ನೋಡಿ ಹನಿಗಣ್ಣಾಗುವ ಪ್ರಬಂಧಕಾರ್ತಿ – ‘ಎಷ್ಟೆಲ್ಲ ಬಾಹ್ಯ ಸೌಂದರ್ಯಕ್ಕೆ ಬೆಲೆ ಕೊಟ್ಟರೂ ಕೊನೆಗೆ ಬೆಲೆ ಕಟ್ಟಲಾಗದ್ದು ಎಂದು ನಮ್ಮೆದುರು ಬೃಹತ್ತಾಗಿ ಎದ್ದು ನಿಂತುಬಿಡುವುದು ಆಂತರಿಕ ಸೌಂದರ್ಯ ಮಾತ್ರವೇ’ ಎಂದು ಉದ್ಗರಿಸುವುದು ಗಮನಸೆಳೆಯುವ ಪ್ರಬಂಧಧ್ವನಿಯ ಜೊತೆಗೇ ಬರಹದ ಘನತೆಯನ್ನು ಹೆಚ್ಚಿಸುವ ವಿಶಿಷ್ಟ ಕ್ಷಣವೂ ಹೌದು. + +ಸಂಕಲನದ ಶೀರ್ಷಿಕೆಯಾದ ‘ಕಾಣೆಯಾದವರು’, ಈ ಸಂಕಲನದ ಒಳ್ಳೆಯ ಪ್ರಬಂಧವೂ ಪ್ರಬಂಧಕಾರ್ತಿಯ ಸಾಧ್ಯತೆಗಳ ಸೊಗಸಾದ ಅಭಿವ್ಯಕ್ತಿಯೂ ಹೌದು. ಬಾಲ್ಯದ ಅಮಾಯಕತೆಯ ಘಟ್ಟದಿಂದ ಋತುಮತಿಯಾದ ಕಾರಣಕ್ಕೆ ಒಮ್ಮೆಗೇ ಪ್ರೌಢತೆಯ ಆವರಣಕ್ಕೆ ಬಾಲಕಿಯೊಬ್ಬಳು ಜಿಗಿಯುವ ಕ್ಷಣದ ಹಲವು ಆಯಾಮಗಳನ್ನು ವಿಶ್ಲೇಷಿಸುವ ‘ಕಾಣೆಯಾದವರು’ ಬರಹ, ತಲೆಮಾರುಗಳು ಬದಲಾದರೂ ಸಮಾಜದ ಮನೋಧರ್ಮ ಬದಲಾಗದಿರುವ ಕಡೆಗೆ ಬೆರಳು ಮಾಡಿ ತೋರಿಸುತ್ತದೆ. ಪುಟ್ಟ ಬಾಲೆಯರ ಗುಂಪಿನಿಂದ ಹುಡುಗಿಯೊಬ್ಬಳು ಇದ್ದಕ್ಕಿದ್ದಂತೆ ಕಣ್ಮರೆಯಾಗಿಬಿಡುತ್ತಾಳೆ; ನಂತರದಲ್ಲಿ ಆಕೆ ಶಾಲೆಗೆ-ಗುಂಪಿಗೆ ಮರಳಿದರೂ ಹೊಸ ಹುಡುಗಿಯೇ ಆಗಿರುತ್ತಾಳೆ. ‘ನಿಜಕ್ಕೂ ಕಾಣೆಯಾದ ನಮ್ಮ ಹಿಂದಿನ ಗೆಳತಿಯರು ಮರಳಿಬಾರದಂತೆ ಕಳೆದೇಹೋಗಿರುತ್ತಿದ್ದರು’ ಎನ್ನುವ ಉದ್ಗಾರ ಪ್ರಬಂಧಕಾರ್ತಿಯ ಬಾಲ್ಯದ ದಿನಗಳದ್ದಷ್ಟೇ ಅಲ್ಲ; ಈಗ ಆ ಬಾಲಕಿ ಶಿಕ್ಷಕಿಯಾಗಿರುವ ಸಂದರ್ಭದಲ್ಲೂ ಅಂಥ ಉದ್ಗಾರಗಳಿಗೆ ದನಿಯಾಗಿರುವುದು ಹೆಣ್ಣಿನ ಬದುಕಿಗೆ ಸಂಬಂಧಿಸಿದಂತೆ ನಮ್ಮ ಸಾಮಾಜಿಕ ಚಲನೆಯ ಜಡತೆಯನ್ನು ಸೂಚಿಸುವಂತಿದೆ. ‘ಯಾಕೆ ಅಮ್ಮಂದಿರೆಲ್ಲ ತಮ್ಮ ಹೆಣ್ಣುಮಕ್ಕಳು ಋತುಮತಿಯರಾದಾಗ ಅಳುತ್ತಾರೆ?’ ಎನ್ನುವ ಪ್ರಶ್ನೆಯ ಹಿಂದಿರುವುದು, ಇಡೀ ಪುರುಷಸಮುದಾಯದ ಆತ್ಮವಿಮರ್ಶೆಗೆ ಒತ್ತಾಯಿಸುವಂತಿದೆ. ಹೆಣ್ಣುಮಕ್ಕಳನ್ನು ಸರಕಿನಂತೆ, ಗಂಡಿನ ಭೋಗಕ್ಕಾಗಿ ಇರುವ ಮಿಕಗಳಂತೆ ಭಾವಿಸುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಿರುವುದಕ್ಕೆ ಉದಾಹರಣೆಗಳು ಪ್ರತಿದಿನ ಕಣ್ಣಿಗೆ ರಾಚುತ್ತಿರುವ ಸಂದರ್ಭದಲ್ಲಿ, ಅಮ್ಮಂದಿರ ಅಳುವಿನ ಕುರಿತ ಪ್ರಶ್ನೆಗೆ ಇಡೀ ಸಮಾಜ ಉತ್ತರದಾಯಿಯಾಗಿದೆ. ಈ ಪ್ರಶ್ನೆಯ ಮುಂದುವರಿದ ರೂಪದಲ್ಲಿ – ‘ಹಲವಾರು ಟ್ಯಾಬ್ಲೆಟ್ಟುಗಳು, ಸ್ಯಾನಿಟರಿ ನ್ಯಾಪ್ಕಿನ್ನುಗಳು, ಎಷ್ಟೆಲ್ಲಾ ಬದಲಾವಣೆಯ ಹೊಸಗಾಳಿ. ಆದರೆ ಹೆಣ್ಣೇಕೆ ಈ ಕಾರಣಕ್ಕೇ ನೋಯುತ್ತಾಳೆ? ಕುಟುಂಬ ಮತ್ತು ಸಮಾಜವೆರಡೂ ಯಾಕೆ ಅವಳಿಗೊಂದು ನಿರಾಂತಕ ಭಯಮುಕ್ತ ವಾತಾವರಣವನ್ನು ಕಲ್ಪಿಸಿಕೊಡುವಲ್ಲಿ ಸೋಲುತ್ತಿವೆ?’ ಎನ್ನುವ ಉಪಪ್ರಶ್ನೆಗಳನ್ನೂ ಇಲ್ಲಿನ ಹೆಣ್ಣು ನಮ್ಮ ಮುಂದಿಡುತ್ತಾಳೆ. ಸರಳವಾದ ಉದಾಹರಣೆಗಳ ಮೂಲಕ ಗಹನವಾದ ಸಂಗತಿಗಳನ್ನು ಚರ್ಚಿಸುತ್ತ, ವೈಯಕ್ತಿನ ಅನುಭವಗಳನ್ನು ಸಾರ್ವತ್ರಿಕವೂ ಆಗಿಸುವ ಮೂಲಕ ಸಹೃದಯರನ್ನು ಯೋಚನೆಗೆ ಹಚ್ಚುವ ‘ಕಾಣೆಯಾದವರು’ ಲೇಖಕಿ ಸಾಗಬೇಕಾದ ಪ್ರಬಂಧಮಾರ್ಗವನ್ನು ಸೂಚಿಸುವ ರಚನೆಯಾಗಿದೆ. + +ಹಕ್ಕಿ ಗರಿಗಳ ರಮ್ಯಲೋಕವನ್ನು ಚಿತ್ರಿಸುವ ‘ಹಕ್ಕಿಪುಚ್ಚವೆನ್ನುವ ಬೆಚ್ಚಾನೆ ತಾವು’ ಪ್ರಬಂಧ ಹಕ್ಕಿಪುಕ್ಕವೊಂದು ಹಾರಿಬಂದು, ಪ್ರಾರ್ಥನೆಗೆ ನಿಂತಿರುವ ಮಗುವಿನ ಕೈ ಸೇರಿ, ಆ ಮಗುವಿನ ಮುಖದಲ್ಲಿ ಮಂದಹಾಸ ಮೂಡಿಸುವ ಪ್ರಸನ್ನಚಿತ್ರದೊಂದಿಗೆ ಆರಂಭವಾಗುತ್ತದೆ. ಪುಕ್ಕ ಹಿಡಿದ ನಗುಮುಖದ ಮಗುವಿನ ಚಿತ್ರದೊಂದಿಗೆ ದ.ರಾ. ಬೇಂದ್ರೆ ಅವರ ‘ಗರಿ’ ಕವಿತೆಯನ್ನು ನೆನಪಿಸಿಕೊಳ್ಳಬೇಕು. ‘ಹಾರಲೆಂದು ಹುಟ್ಟಿದ ಹಕ್ಕಿ ಮೈಯ ಬದುಕು’ ಎಂದು ಕವಿ ಉದ್ಗರಿಸುವ, ಪುಕ್ಕದ ಮೂಲಕ ಹಕ್ಕಿಯ ಬದುಕಿನ ಘನತೆಯನ್ನು ಸೂಚಿಸುವ ‘ಗರಿ’ ಬೇಂದ್ರೆಯವರ ಅದ್ಭುತ ಕವಿತೆಗಳಲ್ಲೊಂದು. ಆ ಕವಿತೆ ಕಾಣಿಸುವ ಹಕ್ಕಿಯ ಬದುಕಿನ ಘನತೆ, ಆಶಾ ಅವರ ಪ್ರಬಂಧದಲ್ಲಿ ಹಲವು ರೂಪಗಳಲ್ಲಿ ಚಿತ್ರಣಗೊಳ್ಳುತ್ತದೆ. ‘ಪುಕ್ಕವೆನ್ನುವ ಪುಕ್ಕದಂತಹ ತೃಣ ಮಾತ್ರದ, ಮನುಷ್ಯನ ವ್ಯಾವಹಾರಿಕ ದೃಷ್ಟಿಯಲ್ಲಿ ಯಾವ ಬೆಲೆಯನ್ನೂ ಹೊಂದಿಲ್ಲದ ವಸ್ತುವೊಂದು ಹೀಗೆಲ್ಲಾ ನನ್ನನ್ನು ಕಾಡುವಾಗ ಅದೆಷ್ಟೊ ಭಾರ ಅನಿಸುತ್ತದೆ, ನಮ್ಮ ನಾಣ್ಯ ನೋಟುಗಳನ್ನು ಮೀರಿದ್ದೊಂದು ಜಗತ್ತಿನಲ್ಲಿದೆ, ಮತ್ತದು ಸದಾ ಬದುಕಿನ ನಿಜ ಅರ್ಥವನ್ನು ಕಾಣಿಸಲಿಕ್ಕೆ ತುಡಿಯುತ್ತಿರುತ್ತದೆ’ ಎನ್ನುವ ಮಾತು, ವ್ಯಾವಹಾರಿಕ ಜಗತ್ತಿಗೆ ನಿಲುಕದ ಭಾವನಿಧಿಯ ಪ್ರಾಮುಖ್ಯವನ್ನು ಎತ್ತಿಹಿಡಿಯುತ್ತದೆ. ‘ರಾತ್ರಿಯ ಕತ್ತಲ ಪರದೆಯ ಮೇಲೆ ಆಕಾಶದ ನಕ್ಷತ್ರಗಳಿಗೆಲ್ಲ ರೆಕ್ಕೆ ಮೂಡಿ ಹಾರಲು ಶುರುವಿಟ್ಟುಕೊಂಡರೆ…’ – ಹೀಗೆ ಗರಿವಿಲಾಸವನ್ನು ಕಾಣಿಸುವ ಬರಹ ಪ್ರಬಂಧಕಾರ್ತಿಯ ಕಲ್ಪನಾಶೀಲತೆಗೆ ಕನ್ನಡಿಯಂತಿದೆ. ಈ ಪ್ರಬಂಧದ ಜೊತೆಗೆ, ಓದಿನಸುಖದ ರೂಪದಲ್ಲಿ ‘ಬಿಟ್ಟು ಹಿಡಿಯುವ ಬಿಡುಗಡೆಯ ನಿರಾಳ’ ರಚನೆಯನ್ನು ಓದಿಕೊಳ್ಳಬೇಕು. ಮೂತ್ರ ವಿಸರ್ಜನೆಯ ಹಗುರ ಕ್ಷಣವನ್ನು ಬಿಡುಗಡೆಯ ರೂಪದಲ್ಲಿ ಚಿತ್ರಿಸುವ ಪ್ರಬಂಧ, ಚಿತ್ರಕಶಕ್ತಿಯ ಕಾರಣದಿಂದಲೂ ವಿನೋದದ ಸ್ಪರ್ಶದಿಂದಲೂ ಗಮನಸೆಳೆಯುತ್ತದೆ. ಆಂಜನೇಯನಿಗೆ ಗುಡಿ ಕಟ್ಟಲಿಕ್ಕೆಂದು ತಂದು ಸುರಿದಿದ್ದ ಸೈಜುಗಲ್ಲುಗಳ ಮರೆಯಲ್ಲಿ ಮಹಿಳೆಯೊಬ್ಬಳು ‘ಸುತ್ತ ಮುತ್ತ ಕಳ್ಳ ಕಣ್ಣು ಹಾಯಿಸಿ, ಮಂಡಿಯವರೆಗೆ ಸೀರೆ ಎತ್ತಿ ಕುಳಿತು ನಿರಾಳವಾಗಿಬಿಟ್ಟಳು. ಬ್ರಹ್ಮಚಾರಿ ಆಂಜನೇಯ ಎಂತ ನೋಡಿದನೋ, ಹೇಗೆ ಕಣ್ಣು ಮುಚ್ಚಿಕೊಂಡನೋ ಗೊತ್ತಿಲ್ಲ’ – ಹೀಗೆ ಮಹಿಳೆಯ ಮುಖದ ತುಂಬ ಸುಖದ ಎಳೆಯೊಂದು ಹರಡಿಕೊಂಡ ಕ್ಷಣಗಳನ್ನು ರಸವತ್ತಾಗಿ ಕಟ್ಟಿಕೊಡುವ ಈ ಚಿತ್ರಣ, ಓದುಗರ ಮುಖದ ಮೇಲೂ ನಸುನಗೆಯನ್ನು ಮೂಡಿಸಿಬಿಡುತ್ತದೆ. ಶೌಚಾಲಯದ ಗೋಡೆಬಾಗಿಲುಗಳ ಮೇಲಿನ ಅಜ್ಞಾತ ಲೇಖಕನ ಹಸ್ತಮುದ್ರಿಕೆಗಳನ್ನು, ಆ ಲೇಖಕನ ಮನೋವೈಕಲ್ಯಗಳಿಗೆ ಕನ್ನಡಿಯ ರೂಪದಲ್ಲೂ, ಆ ವೈಕಲ್ಯಗಳ ಬಿಡುಗಡೆಯ ರೂಪದಲ್ಲೂ ಲೇಖಕಿಗೆ ಕಾಣಿಸುತ್ತವೆ. ಲಘು ಅಧ್ಯಾತ್ಮ, ಚಿಂತನ ಶಕ್ತಿ, ಚಿತ್ರಕ ಶಕ್ತಿ, ವೈಚಾರಿಕತೆ – ಹೀಗೆ ಹಲವು ಕಾರಣಗಳಿಂದಾಗಿ ಗಮನಸೆಳೆಯುವ ಪ್ರಬಂಧವಿದು. + +(ರಘುನಾಥ ಚ.ಹ.) + +ಅರ್ಥ ವಿಸ್ತಾರದ ಪ್ರಬಂಧಗಳ ಜೊತೆಗೆ, ಹರಟೆಯ ರೂಪದ ಕೆಲವು ರಚನೆಗಳೂ ಸಂಕಲನದಲ್ಲಿವೆ. ‘ಬಾಲ್ಯದ ಆಟ ಆ ಹುಡುಗಾಟ’, ‘ಶ್ವಾನೋಪಖ್ಯಾನ’ ‘ಮೀಸೆ ಮೀಮಾಂಸೆ’ – ಇವುಗಳೆಲ್ಲ ಹೆಸರೇ ಸೂಚಿಸುವ, ಲಹರಿಯ ಚೌಕಟ್ಟಿನ, ಲಘು ವಿನೋದವನ್ನು ಒಳಗೊಂಡಿರುವ ಬರಹಗಳು. ಸರಾಗವಾಗಿ ಓದಿಸಿಕೊಳ್ಳುವ ಗುಣವಿದ್ದರೂ, ಇವುಗಳಲ್ಲಿನ ಪ್ರಬಂಧಧ್ವನಿ ತೆಳುವಾದುದು ಹಾಗೂ ಪ್ರಬಂಧಕಾರ್ತಿಗೆ ಅಷ್ಟೇನೂ ಕಠಿಣ ಸವಾಲು ಒಡ್ಡದ ರಚನೆಗಳಿವು. + +ಒಂದು ಕೃತಿಯ ಯಶಸ್ಸಿನ ಲಕ್ಷಣಗಳಲ್ಲಿ ಆ ಪುಸ್ತಕದ ಕರ್ತೃವಿನ ಮುಂದಿನ ರಚನೆಗಳ ಬಗ್ಗೆ ಓದುಗನಲ್ಲಿ ಹುಟ್ಟುವ ಕುತೂಹಲ ಮುಖ್ಯವಾದುದು. ಆಶಾ ಅವರು ತಮ್ಮ ಚೊಚ್ಚಿಲ ಸಂಕಲನದ ಕೆಲವು ಪ್ರಬಂಧಗಳಲ್ಲಿ ಪಡೆದಿರುವ ಯಶಸ್ಸು, ಅವರಿಂದ ಮತ್ತಷ್ಟು ಸಶಕ್ತ ಪ್ರಬಂಧಗಳ ನಿರೀಕ್ಷೆಯನ್ನು ಹುಟ್ಟಿಸುತ್ತದೆ. ಕಥೆ, ಕಾವ್ಯ, ಕಾದಂಬರಿಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಪ್ರಬಂಧ ಪ್ರಕಾರ ಅಷ್ಟೇನೂ ಸುಪುಷ್ಟವಾದುದಲ್ಲ. ಈ ಹಿನ್ನೆಲೆಯಲ್ಲಿ ಪ್ರಬಂಧಕಾರ್ತಿಯಾಗಿ ಸಾಮು ಮಾಡಲು ಆಶಾ ಅವರೆದುದು ದೊಡ್ಡದೊಂದು ಬಯಲೇ ತೆರೆದುಕೊಂಡಿದೆ. ಆ ಬಯಲಿನಲ್ಲಿ ವಿಹರಿಸುವ ಹಾಗೂ ಸೌಗಂಧಿಕಾ ಪುಷ್ಪಯಾತ್ರೆ ಕೈಗೊಳ್ಳುವ ಸಾಮರ್ಥ್ಯ ಅವರಿಗಿದೆ ಎನ್ನುವುದಕ್ಕೆ ಪ್ರಸಕ್ತ ಸಂಕಲನದ ಬರಹಗಳು ಸಾಕ್ಷ್ಯ ನುಡಿಯುವಂತಿವೆ. + +ವೈಯಕ್ತಿಕವಾಗಿ ನನಗೆ ಪರಿಚಿತರಲ್ಲದೆ ಹೋದರೂ, ಬರಹಗಳ ಮೂಲಕ ಪರಿಚಿತರಾಗಿರುವ ಆಶಾ ಅವರು ಈ ಕೃತಿಗೆ ಮುನ್ನುಡಿ ಅಪೇಕ್ಷಿಸುವ ಮೂಲಕ ನನ್ನ ಬಗ್ಗೆ ವ್ಯಕ್ತಪಡಿಸಿರುವ ಸ್ನೇಹ-ವಿಶ್ವಾಸಕ್ಕೆ ಕೃತಜ್ಞತೆ ವ್ಯಕ್ತಪಡಿಸುತ್ತ, ಈ ಸಂಕಲನ ಓದುಗರಿಗೆ ಪ್ರಿಯವಾಗಲಿ ಎಂದು ಹಾರೈಸುವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_246.txt b/Kenda Sampige/article_246.txt new file mode 100644 index 0000000000000000000000000000000000000000..7ce55136dd6a6938f198ca65f15b896d6ed358c8 --- /dev/null +++ b/Kenda Sampige/article_246.txt @@ -0,0 +1,43 @@ +ಅವನಿಗೆ ತಲೆಯಾಡಿಸುತ್ತಲೇ ಸುದಿಪ್ತೋ “ಭ್ರಮೆಯಲ್ಲೂ ಕೂಡ ನಾವು ನಮಗೆ ಬೇಕಾದ ಧೋರಣೆಯ ಭ್ರಮೆಯನ್ನೇ ಕಟ್ಟಿಕೊಳ್ತೇವೆ ದೇಬ್”. ಸುಪರ್ಣಾ ಸುದಿಪ್ತೋ ಹೇಳಿದ ಮಾತನ್ನು ಮಥಿಸಿಕೊಳ್ಳುತ್ತಲೇ, ದ್ರವವನ್ನು ಚಪ್ಪರಿಸಿ ಗಂಟಲಿನ ಶಾಖವನ್ನು ಅನುಭವಿಸುತ್ತಿದ್ದಳು. ಸುದಿಪ್ತೋ ಮಾತನ್ನು ಮುಂದುವರೆಸಿದ್ದ “… ಹಾಗೇ ಸಮಯ ಅನ್ನೋದು ಕೂಡ ಭ್ರಮೆ. ಸಮಯ ಅನ್ನೋದೆ ಇಲ್ಲ. ನಿಮಗೆ ಹೇಳಿದ್ದನಲ್ಲ ದೇಬ್ ನಾನು ಕೆಲಸ ಮಾಡುತ್ತಿರುವ ಡಾಕ್ಯುಮೆಂಟರಿಯ ಬಗ್ಗೆ. ಇದು ನನ್ನ ಮಾತಲ್ಲ. ಹಲವು ಪ್ರಯೋಗಗಳ ಮೂಲಕ ವಿಜ್ಞಾನಿಗಳು ಈಗ ಒಪ್ಪುತ್ತಿರುವ ಸಂಗತಿ” ಎಂದ. ಗೋಡೆಗೆ ನೇತು ಹಾಕಿದ್ದ ದ ಲಾಸ್ಟ್ ಡೇ ಆಫ್ ಪೊಂಪೆ ಚಿತ್ರವನ್ನು ಗಮನಿಸುತ್ತಾ ದೇಬಶೀಷ ತೀರಾ ಕೆಳದನಿಯಲ್ಲಿ ನಿಧಾನವಾಗಿ… + +“ಅಲ್ಲಯ್ಯಾ ಈಗ ಸೌಂದರ್ಯ ಇಲ್ಲ ಅಂದೆ, ಆಗ ಸಮಯ ಇಲ್ಲ ಅಂದೆ, ನಾಳೆ ನಾವೇ ಇಲ್ಲ ಅಂತೀಯಾ, ಹಂಗಾರೆ ಏನಯ್ಯಾ ಇದೆ? ಈ ಕೋಳಿ ಎದೆ ಕಾಣಿಸ್ತಾ ಇದ್ಯಾ ಹೇಳು? ನೋಡು ನಾನು ತಿಂತಾ ಇದೀನಿ. ಸರಿಯಾಗಿ ನೋಡು. ಆಮೇಲೆ ಇಲ್ಲ ಅನ್ನಬೇಡ. ಇದು ಗ್ಲಾಸ್ ಕುಡಿತಾ ಇದ್ದೀನಿ ನೋಡು, ಈ ಮೀನು ಸಖತ್ ಆಗಿದೆ ತಿಂದೆ ನೋಡ್ತಾ ಇದೆಯಾ” ಎಂದು ಹೇಳಿ ಗೊಣಗಿದ. ಅವನ ವರಸೆಯನ್ನ ಸುಪರ್ಣಾ ಬಾಗಿಕೊಂಡು ಅಭ್ಯಾಸವಿದ್ದ ನೋಟದಲ್ಲಿ ನೋಡಿದಳು. + +(ಕರಣಂ ಪವನ್‌ ಪ್ರಸಾದ್‌) + +“ಇಲ್ಲ ಅಂದರೆ ಇದೆ ಅಂತಲೂ ಹೌದು…” + +“ಸುಪರ್ಣಾ ಇವನ್ನ ರೂಮಿಗೆ ಕಳಿಸು, ಔಟ್ ಫುಲ್ ಔಟ್. ಒಂದೇ ಲೋಟಕ್ಕೆ ಸತ್ಯನಾಶ. ಹೋಗೋ ಮಲ್ಕೋ ಹೋಗು. ನನ್ನ ಕೈಯಲ್ಲಿ ಇನ್ನ ಆಗಲ್ಲ. ಯಾರೋ ನೀನು ತಂದೆ. ಇಲ್ಲ ಅಂದರೆ ಇದೆ ಅಂತೆ!” + +ಸುಪರ್ಣಾ ಸೋಫಾದ ಮೇಲೆ ಉರುಳಿ ನಗಾಡುತ್ತಿದ್ದಳು. ಅವಳು ಕಣ್ಣು ಕೆಂಪಾಗಿ ಬಿಕ್ಕಿದಳು, ಸುದಿಪ್ತೋ ಕೂಡ ಹೊಟ್ಟೆ ಹಿಡಿದು ನಗತೊಡಗಿದ. ದೇಬಶೀಷ ಗಂಭೀರವಾಗಿ “ಹೌದು ಕಣೋ ಸುದಿಪ್ತೋ. ನೋಡು ಮೀನು ಇಲ್ಲ, ಮೂಳೆ ಇದೆ. ಇಲ್ಲ ಅಂದರೆ ಇದೆ ಎಂದರ್ಥ ವ್ಹಾ!” ತಟ್ಟೆಯನ್ನು ಮೇಲೆತ್ತಿ ತೋರಿಸಿದ. ನಗುವನ್ನು ಹತೋಟಿಗೆ ತಂದುಕೊಂಡ ಸುದಿಪ್ತೋ… + +“ದೇಬ್ ನಾನು ಗಂಭೀರವಾಗಿ ಹೇಳ್ತಾ ಇದೀನಿ. ಈಗ ಸಮಯ ಇಲ್ಲ ಅಂದರೆ ನಾವು ಮಾಡಿಕೊಂಡ ಮಾಪನ ಇದೆ. ಇಲ್ಲ ಅಂತ ಸಾಧಿಸಲು ಕೂಡ ಕ್ಲಾಕ್ಸ್ ಇವೆ. ಅದು ಸೌಂದರ್ಯಕ್ಕೆ ಹೇಳಿದಂತೆ ಒಂದು ಕಿಂಚಿತ್ ಅವಧಿಯನ್ನು ಗುರುತಿಸಲು ಬಳಸುವುದು. ನಾನು ಮತ್ತು ನೀವು ಹೀಗೆ ಕೂತಿರುವುದನ್ನು ನಾವೇ ಸೆಕೆಂಡ್, ನಿಮಿಷ ಎಂಬ ಮಾಪನ ಬಿಟ್ಟು ಹೊಸದು ಮಾಡಿಕೊಂಡು ಹೀಗೆ ಹೇಳಬಹುದು… ಒಂದು ಸಿಪ್ ಕುಡಿಯಲು ಬೇಕಾದ ಅವಧಿ ಎನ್ನಬಹುದು, ಮಳೆ ಬರುತ್ತಿದ್ದರೆ ಇಷ್ಟು ಹನಿ ಬಿದ್ದ ಅವಧಿ ಎನ್ನಬಹುದು, ಚಂದ್ರನ ಚಲನೆ, ಭೂಮಿಯ ಚಲನೆ ನೋಡೋದು ಕೂಡ ಈ ತರಹವೇ ಆದರೆ ಅದು ಒಂದೇ ಗತಿ ಮತ್ತು ಮಧ್ಯಂತರ ಹೊಂದಿರಬೇಕಾಗುತ್ತದೆ. + +ಹಾಗಾಗಿಯೇ ಪೆಂಡುಲಮ್ ಸರಿಯಾದ ಉಪಕರಣ. ಅರ್ಥಾತ್ ನಿಲ್ಲಿಸದೇ ಒಂದೇ ಗತಿಯಲ್ಲಿ ಇಷ್ಟು ಸಲ ಹೀಗೆ ಹೋಗಿ ಹೀಗೆ ಬಂದರೆ ಇಷ್ಟು ಕ್ಷಣ. ಒಟ್ಟಿನಲ್ಲಿ ಚಲನೆಯ ಧೋರಣೆಗೆ ಕಟ್ಟಿಕೊಂಡ ಭ್ರಮೆ ಇದು. ಈಗ ನಮ್ಮ ಮನೆಯಲ್ಲಿ ಒಂದು ನಿಮಿಷಕ್ಕೆ ಇಷ್ಟು ಸಲ ಪೆಂಡುಲಮ್ ಆ ಕಡೆಯಿಂದ ಈ ಕಡೆ ಓಡಾಡಿದ್ದು ಇನ್ನೆಲ್ಲೋ ಬ್ಲಾಕ್ ಹೋಲಿನಲ್ಲಿ ಅದಕ್ಕೆ ಅರ್ಥವೇ ಇಲ್ಲ. ಈ ಅವಧಿಯಲ್ಲಿ ಇನ್ನೇನೋ ಆಗಿರುತ್ತದೆ. ಗುರುತ್ವ, ಚಲನೆ, ಗಾತ್ರ ಹೀಗೆ ಭಿನ್ನವಾದಂತೆ ಮಾಪನ ಬೇರೆ ಆಗುವಾಗ ಸಮಯ ಅಥವಾ ನೌ-ಈಗ ಎಂಬುದು ಇಲ್ಲವೇ ಇಲ್ಲ. ಅವತ್ತು ನಾನು ನಿಮಗೆ ವಿವರಿಸಿದ್ದೆ. ನಾನು ಇಲ್ಲಿ ಕುಳಿತು ಮಾತಾಡುತ್ತಿರುವ ನನ್ನ ‘ಈಗ’, ನೀವು ಕೇಳುತ್ತಿರುವ ನಿಮ್ಮ ‘ಈಗ’ ಒಂದೇ ಅಲ್ಲ. ಇಡೀ ಬ್ರಹ್ಮಾಂಡದ ಹೋಲಿಕೆಯಲ್ಲಿ ನಾವು ಸಣ್ಣವರಾದ್ದರಿಂದ ಈ ವಿಪರ್ಯಾಸ ಗೋಚರ ಆಗುತ್ತಿಲ್ಲ. ಹಾಟ್ ಬಲೂನಿನ ಮೇಲೆ ಇರುವ ಇರುವೆಗೆ ತನ್ನ ಜಾಗ ಮಟ್ಟಸ ಎಂದೇ ತೋರುತ್ತದೆ. ಮನುಷ್ಯನಿಗೆ ನಿಂತ ಜಾಗ ಮಟ್ಟಸ ಅನ್ನಿಸುವುದೂ ಹೀಗೆಯೇ. ನಾವು ಭೂಮಿಯ ಗಾತ್ರಕ್ಕೆ ಹೋಲಿಸಿ ತುಂಬಾ ಗಾತ್ರ ಇದ್ದಿದ್ದರೆ ಅದು ದುಂಡು ಎಂದು ಕಣ್ಣಿಗೇ ಕಾಣಿಸುತ್ತಿತ್ತು.” + +“ಸುದಿಪ್ತೋ ನೋಡಿಲ್ಲಿ ಈ ಬಾಟಲ್ ಯಾವ ಬಣ್ಣವಿದೆ ಹೇಳು…” + +“ಯಾಕೆ?” + +“ನಿನ್ನ ಆರೋಗ್ಯ ಸರಿ ಇದ್ದೀಯಾ ಪರೀಕ್ಷೆ ಮಾಡ್ತಾ ಇದೀನಿ…” ದೇಬಶೀಷ್ ಕುಹಕದ ನಗುವಲ್ಲಿ ಹೇಳಿ ಸುಪರ್ಣಾಳ ಕಡೆ ನೋಡಿದ. ಲೋಟವನ್ನು ಪಕ್ಕಕ್ಕಿಟ್ಟ ಅವಳು ಸೋಫಾಕ್ಕೆ ತಲೆ ಕೊಟ್ಟಿದ್ದಳು. “ನೋಡು ಇವಳು ಮಲಗೇಬಿಟ್ಟಳು. ಇದರಲ್ಲಿ ಇವಳಿಗೆ ಆಸಕ್ತಿಯೇ ಇಲ್ಲ. ಈಗ ಹೇಳು… ಕಪ್ಪು ತುಳಿತಕ್ಕೆ ಒಳಗಾದವರ ಸಂಕೇತ, ಬಿಳಿ ತುಳಿದವರ ಸಂಕೇತ ಅಂತ, ಧಗ್ ಅಂತ ಎದ್ದು ಭಾಷಣ ಮಾಡ್ತಾಳೆ.” + + + +“ಕೇಳಿಸಿಕೊಳ್ತಾ ಇದೀನಿ” ಬೆಳಕಿಗೆ ಕೈ ಅಡ್ಡ ಇಟ್ಟು ಕಣ್ಣನ್ನು ಮುಚ್ಚಿಕೊಂಡಿದ್ದ ಸುಪರ್ಣಾ ಹೇಳಿದಳು. ಸುದಿಪ್ತೋ ಮಾತಿನ ಲಹರಿಯಲ್ಲಿದ್ದ, ಅವನು ದೇಬಶೀಷನನ್ನು ಉದ್ದೇಶಿಸಿ “ಬಣ್ಣ ಅನ್ನೋದು ಕೂಡ…” ಎನ್ನುವ ಹೊತ್ತಿಗೆ…. + +“ಅದನ್ನೂ ಇಲ್ಲ ಅನ್ನಬೇಡ, ಇಲ್ಲೇ ಬಾಟಲಿಯಿಂದ ತಲೆಗೆ ಹೊಡೆದುಕೊಂಡು ಪ್ರಾಣಾರ್ಪಣೆ ಮಾಡಿಬಿಡ್ತೀನಿ…” ದೇಬಶೀಷ್ ಗಂಭೀರದ ನಗುವಲ್ಲಿ ಹೇಳಿದ.ಸೋಫಾದ ಮೇಲಿಂದ ಉರುಳಿ ಕೆಳಗೆ ಬಿದ್ದು ಸುಪರ್ಣಾ ನಕ್ಕಳು. ಸುದಿಪ್ತೋ ಕೆಳದುಟಿಯನ್ನು ಕಚ್ಚಿಕೊಂಡು ನಗುವನ್ನು ನುಂಗಿಕೊಂಡ. + +“ಬಣ್ಣ ಅಂದರೆ ಬೆಳಕಿನ ಫ್ರಿಕ್ವೆನ್ಸಿ. ಬೆಳಕಿನ ತೂಗಾಡುವಿಕೆಯ ವೇಗ. ತರಂಗ ವೇಗವಾಗಿ ಅಲ್ಲಾಡಿದರೆ ನೀಲಿಯಾಗುತ್ತೆ, ಸ್ವಲ್ಪ ನಿಧಾನವಾದರೆ ಕೆಂಪು ಆಗುತ್ತೆ. ನಮ್ಮ ಕಣ್ಣಿನ ಮೇಲೆ ಅವಲಂಬಿತ, ನಮ್ಮ ಕಣ್ಣಿನ ನರಗಳ ಸೈಕೋ ಫಿಸಿಕಲ್ ರಿಯಾಕ್ಷನ್ ಅದು.” + +“ಹಾಗೇನಿಲ್ಲ, ಡೆಹ್ರಾಡೂನಿನಲ್ಲಿ ಅಂದರೆ ನಮ್ಮ ದೇವಭೂಮಿಗೆ ಹೋದಾಗ ಹಿಮಾಲಯದ ಪವಿತ್ರ ಸಸ್ಯಗಳನ್ನು ಆಸ್ವಾದಿಸಿದಾಗ ನನ್ನ ಕಣ್ಣಿಗೆ ಇಡೀ ಬ್ರಹ್ಮಾಂಡ ಕಲರ್ ಕಲರ್ ಕಾಣುತ್ತೆ!” ಎಂದು ಗಹಗಹಿಸಿ ಸೋಫಾಗೆ ಬಿದ್ದು ದೇಬಶೀಷ್ ಹೇಳಿದ. ಪುನಃ ಸುದಿಪ್ತೋ ಕಡೆ ನೋಡಿ “ಕ್ಷಮಿಸು ನಾನು ಅಡಚಣೆ ಮಾಡಿದೆ, ನೀನು ಹೇಳು” + +“ಹಾಗೇ ಈ ಬ್ರಹ್ಮಾಂಡಕ್ಕೆ ಕೇಂದ್ರ ಅನ್ನೋದೆ ಇಲ್ಲ ದೇಬ್” + +“ಏಯ್ ನೀನು ಇಲ್ಲ ಇಲ್ಲ ಇಲ್ಲ ಅನ್ನೋ ವಿಚಾರ ಬಿಟ್ಟು ಇರೋದು ಹೇಳಪ್ಪಾ…” ನಗುವನ್ನು ಹತೋಟಿಗೆ ತಂದುಕೊಂಡಿದ್ದ ಸುಪರ್ಣಾ ದೇಬಶೀಷನನ್ನು ನೂಕುತ್ತಾ“ನನ್ನ ಕೈಯಲ್ಲಿ ಇನ್ನೂ ಎದ್ದು ಕುಳಿತಿರೋಕೆ ಆಗಲ್ಲ. ಮಲಗ್ತೀನಿ. ನೋಡಿ ಈ ಪೇಂಟಿಂಗ್ ರೂಮಿಗೆ ತಂದರೆ ಬಿಸಾಕ್ತೀನಿ. ಬೇಕಾದರೆ ಗ್ಯಾರೇಜಿಗೆ ಹಾಕ್ಕೊಳ್ಳಿ, ದುಡ್ಡು ತಗೊಳೋ ಇದಕ್ಕೆ ಸುದಿಪ್ತೋ… ಬಿಡಬೇಡ. ಬಿಟ್ಟಿ ಮಾಡಿಸಿಕೊಳ್ತಾರೆ, ವ್ಯವಹಾರಸ್ಥ ಅವರು” ಎಂದವಳೇ ಮೆಟ್ಟಿಲು ಹತ್ತಿ ಮೇಲಕ್ಕೆ ಹೊರಟಳು. + +ರಾತ್ರಿ ಎರಡಾದರೂ ಸುದಿಪ್ತೋ ಮತ್ತು ದೇಬಶೀಷನ ಮಾತಿನ ತಟಾಪುಟಿ ನಿಂತಿರಲಿಲ್ಲ. ಗಾಜಿನ ಟೇಬಲ್ಲಿನ ಮೇಲೆ ತಿನಿಸೆಲ್ಲಾ ಹರಡಿಬಿದ್ದಿತ್ತು. ಇದು ಕೊನೆಯದು ಎಂದು ನಿರ್ಧಾರವನ್ನು ಘೋಷಿಸಿದ್ದ ದೇಬಶೀಷ ಲೋಟವನ್ನು ಹಿಡಿದೆತ್ತಿ ತೋರಿಸಿದ. “ನೀನು ಹೇಳ್ತಿಯಾ ನಿನ್ನ ಊರು ಯಾವುದು ಎಂದರೆ ಬೆಂಗಳೂರು ಅಂತ. ಆದರೆ ಇದು ನನ್ನ ಊರು ಆಗೋಲ್ಲ. ನಮ್ಮ ಬಾಲ್ಯ ಎಲ್ಲಿ ನಡೆದಿರುತ್ತೋ ಅದು ಮಾತ್ರ ನಮ್ಮ ಊರು. ನನ್ನ ಬಾಲ್ಯ ಕೊಲ್ಕತ್ತಾದಲ್ಲಿ ಮತ್ತು ಡೆಹ್ರಾಡೂನಿನಲ್ಲಿ ನಡೆಯಿತು. ಹಾಗಾಗಿ ಅದು ಮಾತ್ರ ನನ್ನದು ಎನ್ನಿಸುತ್ತೆ. ನಂತರದ ಜೀವನದಲ್ಲಿ ಯಾವೆಲ್ಲಾ ಊರಲ್ಲಿ ನಾವು ವಾಸ ಮಾಡಿದರೂ, ಮೂಸಿದರೂ, ಅದು ನಮ್ಮದಲ್ಲ. ಏಕೆ ಈ ಬಾಲ್ಯದ ನೆನಪು ಅಷ್ಟು ಪ್ರಬಲ? ಅದು ನಮ್ಮನ್ನು ಯಾಕಷ್ಟು ಡ್ರೈವ್ ಮಾಡುತ್ತೆ, ಮತ್ತೆ ಬಾಲ್ಯ ತುಂಬಾ ದೀರ್ಘ ಅನ್ನಿಸುತ್ತೆ. ಆದರೆ ನೋಡು ಸುಪರ್ಣಾಳನ್ನು ಮದುವೆ ಆಗಿ ಎಂಟು-ಒಂಬತ್ತು ವರ್ಷ ಆದರೂ ಮೊನ್ನೆ ಮೊನ್ನೆ ಆದಂತಿದೆ. ಅಷ್ಟು ಬೇಗ ಸಮಯ ಓಡುತ್ತೆ…” ಅರ್ಧಗಂಟೆಯ ಮುಂಚೆ ಕುಡಿಯುವುದನ್ನು ನಿಲ್ಲಿಸಿ ಕುಳಿತಿದ್ದ ಸುದಿಪ್ತೋ ದೇಬಶೀಷನ ಮಾತಿಗೆ ಪರಿಹಾರ ನೀಡುವ ದನಿಯಲ್ಲಿ “ನಿಮಗೆ ಹತ್ತು ವರ್ಷ ವಯಸ್ಸು ಅಂದುಕೊಳ್ಳಿ, ನಿಮ್ಮ ಈ ಹಿಂದಿನ ಐದು ವರ್ಷದ ನೆನಪು ಏನಿರುತ್ತೆ ಅದು ನಿಮ್ಮ ಇಡೀ ಜೀವನ ಅನುಭವದ ಶೇ. 50ರಷ್ಟು ಆಗುತ್ತದೆ. ಅದೇ ನಿಮಗೆ ಈಗ ಐವತ್ತು. ಕಳೆದ ಐದು ವರ್ಷದ ನೆನಪು ನಿಮ್ಮ ಇಡೀ ಜೀವನದ ಒಟ್ಟು ಅನುಭವದ ಶೇ. 5ರಷ್ಟು ಅಷ್ಟೇ. ಮತ್ತು ಅದರಲ್ಲಿ ಹೊಸದಾದ ಎನ್ಕೌಂಟರ್ ತೀರಾ ಕಡಿಮೆ. ನೀವೇನು ಹೊಸತಾಗಿ ರೈಲು ನೋಡಿಲ್ಲ, ಬೆಟ್ಟದ ತುದಿ ನೋಡಿಲ್ಲ, ಹೊಸತಾಗಿ ಉಪ್ಪು, ಹುಳಿ, ಖಾರದ ರುಚಿ ಕಂಡಿಲ್ಲ. ಗಾಡಿಯನ್ನು ಹೊಸದಾಗಿ ಕಲಿತಿಲ್ಲ, ಹೆಣ್ಣನ್ನು ಮೊದಲ ಬಾರಿ ಪ್ರೀತಿಸಿಲ್ಲ, ಪ್ರಣಯ ಮಾಡಿಲ್ಲ, ಹೀಗೆ ಅದೇನು ಪ್ರಥಮವಾಗಿ ಈ ಹಿಂದಿನ 5 ವರ್ಷದಲ್ಲಿ ಆಗಿರೋಲ್ಲ. ಜಗತ್ತಿನ ಪ್ರಾಥಮಿಕ ಎನ್ಕೌಂಟರ್ಗಳು ಇಪ್ಪತ್ತೈದು ವರ್ಷಕ್ಕೆ ಬಹುಪಾಲು ಆಗಿಹೋಗಿರುತ್ತೆ. ಅದು ಬಾಲ್ಯದ ಕೊನೇ ಹಂತ. ಇನ್ನೆಲ್ಲ ಪುನರಾವರ್ತನೆ, ಹಾಗಾಗಿ ಅದು ಸಲೀಸು ಆಗಿಬಿಟ್ಟಿರುತ್ತದೆ. ಜೀವನದ ಒಟ್ಟು ಅನುಭವದ ಶೇ.50ರಷ್ಟು ನಮ್ಮ ನಿಕಟಪೂರ್ವ ನೆನಪಿನಲ್ಲಿ ಇದ್ದಾಗ ಅದು ದೀರ್ಘ ಅನ್ನಿಸುತ್ತೆ. ಜನ ಆತ್ಮಚರಿತ್ರೆ ಬರೀತಾರಲ್ಲ ಅವರು ತಮ್ಮ ಬಾಲ್ಯವನ್ನ ವಿವರಿಸಿದಷ್ಟು ವಿವರವಾಗಿ ನಂತರದ ದಿನಗಳನ್ನ ವಿವರಿಸಲ್ಲ ಗಮನಿಸಿದ್ದೀರಾ? ಏಕೆಂದರೆ ವಿವರಗಳು ಸಲೀಸಾಗಿ ಮಂಕಾಗಿಹೋಗುತ್ತೆ. ಮತ್ತು ಬಾಲ್ಯದ ಬಗ್ಗೆ ಬರೆಯುವಾಗ ಇರುವಷ್ಟು ಪ್ರಾಮಾಣಿಕತೆ, ನಂತರದ ದಿನಗಳ ಬಗ್ಗೆ ಬರೆದದ್ದರಲ್ಲಿ ಇರೋಲ್ಲ…” + +ಲೋಟ ಕೆಳಗಿಟ್ಟ ದೇಬಶೀಷ “ನೀನು ಹೇಳೋದು ಸರಿ, ನನ್ನ ಹೈಸ್ಕೂಲು ದಿನಗಳು ತುಂಬಾ ದೊಡ್ಡದು ಅನ್ನಿಸುತ್ತೆ. ಅದು ಹೆಚ್ಚೆಂದರೆ ಮೂರು ವರ್ಷ ಆಮೇಲೆ ಹನ್ನೊಂದು ಹನ್ನೆರೆಡು. ಈಗ ಮೂರು ವರ್ಷ ಹೋಗುವುದೇ ತಿಳಿಯಲ್ಲ. ಹಾಗೇ ಪ್ರಮುಖವಾಗಿ ವಿವರವಾಗಿ ಹೇಳಲು ಆಗೋಲ್ಲ. ಇನ್ನೊಂದು ಮಾತು, ನಾನು ಬಾಲ್ಯದ ಬಗ್ಗೆ ಪ್ರಾಮಾಣಿಕವಾಗಿ ಮಾತನಾಡಬಲ್ಲೆ, ಏಕೆಂದರೆ ಚಿಕ್ಕವನು ಎಂಬ ವಿನಾಯಿತಿ ಇರುತ್ತೆ. ದೊಡ್ಡವರಾದ ಮೇಲೆ ಆದ ಅನುಭವ ಬರೆಯೋಕೆ ಹೋದಾಗ ಆ ವಿನಾಯಿತಿ ಸಿಕ್ಕೋಲ್ಲ, ನಮ್ಮನ್ನ ಜಡ್ಜ್ ಮಾಡಲಿಕ್ಕೆ ಶುರು ಮಾಡುತ್ತಾರೆ, ಹಾಗಾಗಿ ಲೇಖಕ ಕರಪ್ಟ್ ಆಗುತ್ತಾನೆ. ಆತ್ಮಕತೆಗಳಲ್ಲಿ ಎಲ್ಲರೂ ಸುಭಗರೇ, ಅದರಲ್ಲೂ ಈ ಲಿಟ್ರೇಚರಿನವರು ಬರೆಯಕ್ಕೆ ಬರುತ್ತೆ ಅಂತ ತಾನು ಎಷ್ಟು ಸುಭಗ ಎಂದು ಕೊಚ್ಚಿಕೊಳ್ಳುತ್ತಾರೆ. ಓದಿದರೆ ಇವನು ದೈವಾಂಶ ಸಂಭೂತ ಅನ್ನಿಸಬೇಕು ಹಾಗೆ, ಠಕ್ಕರು ಅವರು. ಅದಕ್ಕೆ ನಾನು ನಾನ್ ಫಿಕ್ಷನ್ ಮಾತ್ರ ಓದೋದು. ನಾನೂ ನನ್ನ ಆತ್ಮಕತೆಯ ಡೈರಿ ರೀತಿ ಅನ್ನಿಸಿದ್ದು ಹೇಳಿ ರೆಕಾರ್ಡ್ ಮಾಡುತ್ತೇನೆ. ಅಲ್ಲೂ ಕೂಡ ನನ್ನ ಬಗ್ಗೆ ಅನುಕಂಪ ಗಿಟ್ಟಿಸಿಕೊಳ್ಳೊ ತರಾನೆ ಮಾತಾಡಿರ್ತೀನಿ ಅದು ಬೇರೆ ವಿಚಾರ, ಹ್ಹ ಹ್ಹ ಹ್ಹ ಹ್ಹ” ಹೀಗೆನ್ನುತ್ತಿರುವಂತೆ ಈಚೆ “ದೊಬ್ಬ್…” ಎಂದು ಶಬ್ದವಾಯಿತು. ತುಂಬಾ ಜೋರಾದ ಸದ್ದು. + +ದಡಗುಟ್ಟುಕೊಂಡು ಬಾಗಿಲು ತೆರೆದು ತನ್ನ ಪೈಜಾಮವನ್ನು ನಡುವಲ್ಲಿ ಸರಿಮಾಡಿಕೊಂಡು ದೇಬಶೀಷ್ ಮಂದೆ ಬಂದರೆ, ಸುದಿಪ್ತೋ ಕೂಡ ಹೊರಗೆ ನಡೆದು ಬಂದ. ಮನೆಯ ಬಲಭಾಗದಲ್ಲಿ ನಿಂತು ನೋಡಿದರೆ, ಸಂಜೆ ಅಂಗಡಿಗೆ ಹೋಗಿ ಬಾಟಲಿಗಳನ್ನು ತಂದು ಗ್ಯಾರೇಜಿಗೆ ಹಾಕದೇ… ಗೇಟಿನ ಒಳಗೆ, ಗ್ಯಾರೇಜಿನ ಹೊರಭಾಗಕ್ಕೆ, ಸುಪರ್ಣಾಳ ಕಾರಿನ ಮುಂದೆ ನಿಲ್ಲಿಸಿದ್ದ ವೋಲ್ವೋ ಎಕ್ಸಿ90 ಕಾರಿನ ಗಾಜಿನ ಮೇಲೆ ದಪ್ಪ ಕಲ್ಲು ಬಿದ್ದಿದೆ. ಕಾರಿನ ಗಾಜು ಪುಡಿಪುಡಿಯಾಗಿ ಉದುರಿಹೋಗದೇ ಪದರಪದರವಾಗಿ, ಬಿದ್ದಜಾಗದಲ್ಲಿ ಗಾಢವಾಗಿ ಬಿರುಕು ಬಿಟ್ಟಿದ್ದರೆ, ವೃತ್ತಾಕಾರವಾಗಿ ಪೂರ್ಣಗಾಜಿನಲ್ಲಿ ಜೇಡರಬಲೆಯಂತೆ ಬಿರುಕು ಬಿಟ್ಟಿದೆ. ಆ ಹಳ್ಳಬಿದ್ದ ಗಾಜಿನಲ್ಲಿ ಕಲ್ಲು ಸ್ತಬ್ಧವಾಗಿ ಕುಳಿತಿತ್ತು. ಮುಖ ಮಾಂಸವನ್ನೆಲ್ಲಾ ಹಿಂಜಿ ಕ್ಯಾಕರಿಸಿದ ದೇಬಶೀಷ್ ಬೇರೆ ಕಡೆ ಏಟಾಗಿದೆಯಾ? ಎಂದು ಪರೀಕ್ಷಿಸುತ್ತಿದ್ದರೆ, ಸುಪರ್ಣಾ ಕೂಡ ಶಬ್ದವನ್ನು ಕೇಳಿ ಕೆಳಗಿಳಿದು ಬಂದಿದ್ದಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_247.txt b/Kenda Sampige/article_247.txt new file mode 100644 index 0000000000000000000000000000000000000000..70063d8d3c13dd951bef37d5278a74a839155b35 --- /dev/null +++ b/Kenda Sampige/article_247.txt @@ -0,0 +1,75 @@ +ಅರ್ಧ ಅಮೆರಿಕವೇ ಅಂದು ಬೀದಿಗೆ ಇಳಿದಂತಿತ್ತು. ರಾಜಧಾನಿ ವಾಷಿಂಗ್ಟನ್ ನಗರದ ರಸ್ತೆ ತುಂಬ ಜನ. ಆಟದ ಮೈದಾನಗಳ ತುಂಬ ಜನ. ಪೊಟೊಮ್ಯಾಕ್ ನದಿಗುಂಟ ನಾವೆಗಳ ತುಂಬ ಜನ. ಉದ್ಯಾನ-ಉಪವನಗಳ ತುಂಬ ಜನ. + +ಅಂದು ಅಕ್ಟೋಬರ್ 8, ‘ಕೊಲಂಬಸ್ ಡೇ’. + +ಅಮೆರಿಕಾ ಖಂಡವನ್ನು ಶೋಧಿಸಿದ ನಾವಿಕ ಕೊಲಂಬಸ್ನ ನೆನಪಿಗಾಗಿ ಇಡೀ ಅಮೆರಿಕಕ್ಕೆ ರಾಷ್ಟ್ರೀಯ ರಜೆ. ಸರಕಾರ ಮಾತ್ರ ಸಮರ ಸಿದ್ಧತೆ ನಡೆಸಿತ್ತು. + +ಟಿವಿಯಲ್ಲಿ ದಿನಕ್ಕೆ ಹತ್ತು ಬಾರಿ ಯುದ್ಧ ಸಿದ್ಧತೆಯ ಸುದ್ದಿ. ಸೌದಿ ಅರೇಬಿಯಾದ ರಣ ರಣ ಬಿಸಿಲಿನಲ್ಲಿ ಬೇಯುತ್ತಿರುವ ಅಮೆರಿಕನ್ ಯುವ ಯೋಧರ ಸುದ್ದಿ. ದಾಳಿಯ ತಾಲೀಮು ಮಾಡುತ್ತಲೇ ಮಡಿದ ಹದಿ ಯುವಕರ ಸುದ್ದಿ. ಅವರ ದೇಶಪ್ರೇಮ, ಅವರ ಧೈರ್ಯ ಶೌರ್ಯ, ಅವರ ಅಪ್ಪ ಅಮ್ಮನ ತ್ಯಾಗದ ಶೋಕದ ವಿದ್ರಾವಕ ದೃಶ್ಯಗಳ ವರ್ಣನೆ. ಮೀಸೆ ಚಿಗುರುವ ಮೊದಲೇ ಫೈಟರ್ ಜೆಟ್ ಪೈಲಟ್ಗಳಾದ ವೀರರ ಸಂದರ್ಶನ. ಅವರ ಗರ್ಲ್ ಫ್ರೆಂಡ್ಗಳ ಸಂದರ್ಶನ. + +ಇಷ್ಟೆಲ್ಲ ಲವಲವಿಕೆ ತುಂಬಿದ, ಬಣ್ಣದ ಟಿವಿ ಪೆಟ್ಟಿಗೆಯ ಎದುರು ಈ ಅಮೆರಿಕದ ಜನರು ನಮ್ಮ ಹಾಗೆ ಅಂಟಿ ಕೂರುವ ಬದಲು ರಜಾ ದಿನಗಳಲ್ಲೂ ಯಾಕೆ ಬೀದಿಗೆ ಬಿಸಿಲಿಗೆ ನುಗ್ಗುತ್ತಾರೊ ? + +ಹೊರಗಡೆ ರಣಘೋಷ ಮೊಳಗುತ್ತಿತ್ತು: “ಯುದ್ಧ ಬೇಡ, ಶಾಂತಿ ಬೇಕು!” ನಮ್ಮ ಎಳೆ ಯುವಕರನ್ನು ಬಲಿ ಹಾಕಬೇಡಿ”, “ಅರಬರ ಜಗಳದಲ್ಲಿ ತಲೆ ತೂರಿಸಬೇಡಿ” ಎಂದೆಲ್ಲ ಘೋಷಣೆ ಪತ್ರ ಹಿಡಿದ ಜನರು ಚಿತ್ರವಿಚಿತ್ರ ಮುಖವಾಡ ಹೊತ್ತು ಮೆರವಣಿಗೆ ನಡೆಸುತ್ತಿದ್ದರು. ಅವರಷ್ಟೇ ಸಂಖ್ಯೆಯ ಪೊಲೀಸರು, ಅವರಷ್ಟೇ ಸಂಖ್ಯೆಯ ಟಿವಿ ಕ್ಯಾಮರಾಗಳು, ಅವರಷ್ಟೇ ಸಂಖ್ಯೆಯ ಟ್ರಾಫಿಕ್ ವಾರ್ಡನ್ಗಳು. + +ಅವರೊಂದಿಗೆ ಬೆರೆಯುತ್ತ ಅವರಿಂದ ಬೇರೆಯಾಗುತ್ತ ಅವರು ನೀಡಿದ ಪೋಸ್ಟರ್ಗಳನ್ನೂ ಅಂಟುಚೀಟಿಗಳ ಹೊರೆಯನ್ನೂ ಕಂಕುಳಲ್ಲಿ ಪೇರಿಸುತ್ತ, ಅವನ್ನೇ ಕಂಡವರಿಗೆ ದಾನ ಕೊಡುತ್ತ ನಾವು ಶ್ವೇತಭವನದ ಎದುರು ಬಂದೆವು. ಅಲ್ಲಿ ಸುಣ್ಣ ಬಳಿಯುವ ಕೆಲಸ ನಡೆಯುತ್ತಿತ್ತು. ಶಾಂತಿ ಸಂಕೇತದ ಪಾರಿವಾಳಗಳು ಅಲ್ಲೆಲ್ಲೂ ಕಪ್ಪು ಚುಕ್ಕಿ ಇಡದಂತೆ ಬಿಳಿ ಬಳಿಯುವ ಕೆಲಸ ಅಲ್ಲಿ ಸದಾ ನಡೆದೇ ಇರುತ್ತದೇನೋ. ಎದುರು ವಿಶಾಲ ಹಾಸಿನಲ್ಲಿ ಅನೇಕರು, ಕಾವಲು ಪಡೆಯವರೇ ಇರಬೇಕು, ಬಿಸಿಲಿಗೆ ಮೈಯೊಡ್ಡಿ ಕಾಯಕ್ಕೆ ಕಾವು ಕೊಡುತ್ತ ಅಡ್ಡಾಡುತ್ತಿದ್ದರು. + +‘ಲೆಟಸ್ ಗೋ ಟು ಪೊಟೊಮ್ಯಾಕ್’ ಎಂದಳು, ಜತೆಗಾರ್ತಿ ಶಾನನ್. ಪೊಟೊಮ್ಯಾಕ್ ನದಿಯ ದಂಡೆಯಲ್ಲಿ ಕಣ್ಣ ಹಾಯಿಸಿದಷ್ಟು ದೂರವೂ ಹಸಿರೇ ಹಸಿರು. ಕಾಲು ಸೋಲುವಷ್ಟು ಸುತ್ತಿದರೂ ನೋಡಿ ಮುಗಿಯದಷ್ಟು ಸುಂದರ ಸ್ಮಾರಕಗಳು. ಗಗನಚುಂಬಿ ವಾಷಿಂಗ್ಟನ್ ಮೆಮೋರಿಯಲ್; ಅರವತ್ತಾಳೆತ್ತರ ಲಿಂಕನ್ ಮೈಮೋರಿಯಲ್; ಹೆಡಿಗೆ ಗಾತ್ರದ ತಲೆ ಹೊತ್ತ ಐನ್ಸ್ಟೀನ್ ಪ್ರತಿಮೆ. + +‘ಕತ್ತು ನೋಯುತ್ತದೆಯೆ? ಎತ್ತರ ಸ್ಮಾರಕ ನೋಡಿದ್ದು ಸಾಕು. ತಗ್ಗಿನ ಸ್ಮಾರಕ ನೋಡೋಣ ಬನ್ನಿ’ ಎಂದಳು ಶಾನನ್. + +ಅಮೆರಿಕದ ಜನ ಈಗಲೂ ತಲೆ ತಗ್ಗಿಸಿ ಕತೆ ಹೇಳುವ ತಗ್ಗಿನ ಸ್ಮಾರಕ ‘ವಿಯೆಟ್ನಾಂ ಮೆಮೋರಿಯಲ್’. ವಿಯೆಟ್ನಾಂನಲ್ಲಿ 1955ರಿಂದ 75ರವರೆಗೆ ಸತತ ಇಪ್ಪತ್ತು ವರ್ಷಗಳ ಕಾಲ ಹೋರಾಟ ನಡೆಸಿ ಅಮೆರಿಕ ಕೊನೆಗೂ ಯಶ ಗಳಿಸಲಾಗದೇ ಸೋತು ಹಿಮ್ಮೆಟ್ಟಿದ್ದು ಈ ಮಹಾನ್ ದೇಶಕ್ಕೆ ಎಂದೂ ಮರೆಯಲಾಗದ ಮುಖಭಂಗ. ಆ ಸತತ ಯುದ್ಧದಲ್ಲಿ ಅಂದಾಜು 20 ಸಾವಿರ ಕೋಟಿ (200,000,000,000) ಡಾಲರ್ ವೆಚ್ಚವಾಯಿತು. ಅಮೆರಿಕದ ಸುಮಾರು ಅರವತ್ತು ಸಾವಿರ ಯೋಧರು ಮಡಿದರು. ಚುರುಕು ಬುದ್ದಿಯ, ಅನುಕೂಲಸ್ಥ ಕುಟುಂಬದ ಹುಡುಗರು ಕಾಲೇಜಿನಲ್ಲಿ ಓದಲು ಹೋದರೆ, ದಡ್ಡರನ್ನೂ ದನಿ ಇಲ್ಲದವರನ್ನೂ ಹುಂಬರನ್ನೂ ಹುರಿದುಂಬಿಸಿ ವಿಯೆಟ್ನಾಂ ರಣಭೂಮಿಗೆ ಕಳಿಸಲಾಯಿತು. ಯುದ್ಧ ಕೊನೆಗೂ ಕೊನೆಗೊಂಡಾಗ ಅಮೆರಿಕದ ಪ್ರಜೆಗಳ ಪಾಲಿಗೆ ಕಹಿ ನೆನಪು ಮಾತ್ರ ಉಳಿಯಿತು. + +ಅಮೆರಿಕ ಸರಕಾರ ಈ ಕರಾಳ ಚರಿತ್ರೆಯ ಸ್ಮಾರಕ ನಿರ್ಮಿಸಲು ಇಷ್ಟಪಡಲಿಲ್ಲ. ಆದರೆ ಬದುಕಿ ಬಂದ ಮಾಜಿ ಯೋಧರು ಬಿಡಲಿಲ್ಲ. ಅವರ ಒತ್ತಾಯಕ್ಕೆ ಕಟ್ಟುಬಿದ್ದು ಸರಕಾರ ಕೊನೆಗೂ ಸ್ಮಾರಕಕ್ಕೆ ಸಮ್ಮತಿ ನೀಡಿತು. ಅತ್ಯಂತ ವಿಶಿಷ್ಟವಾದ ಸ್ಮಾರಕ ನಿರ್ಮಿಸಲೆಂದು ಮಾಜಿ ಯೋಧರು ರಾಷ್ಟ್ರೀಯ ಸ್ಪರ್ಧೆ ಏರ್ಪಡಿಸಿದರು. ಸಹಸ್ರಾರು ಹಿರಿಕಿರಿಯ ತಜ್ಞರೂ ವಾಸ್ತುಶಿಲ್ಪಿಗಳೂ ತಮ್ಮ ತಮ್ಮ ವಿನ್ಯಾಸ ಸಲ್ಲಿಸಿದರು. + +ಮಾಯಾ ಯಿಂಗ್ ಲಿನ್ ಎಂಬ ಚೀನೀ ಮೂಲದ 21ರ ಹರಯದ ವಾಸ್ತುಶಿಲ್ಪ ವಿದ್ಯಾರ್ಥಿನಿ ಕೂಡಾ ಈ ಸ್ಫರ್ಧೆಯಲ್ಲಿ ಭಾಗವಹಿಸಲು ನಿರ್ಧರಿಸಿದಳು. ಯೇಲ್ ವಿಶ್ವವಿದ್ಯಾನಿಲಯದಿಂದ ಹೀಗೇ ಪೊಟೋಮ್ಯಾಕ್ ನದಿ ತೀರದ ಗಿಡಮರಗಳ ಮಧ್ಯೆ ಹುಲ್ಲು ಹಾಸಿನ ಮೇಲೆ ನಮ್ಮ ಹಾಗೇ ಕಾಲ್ನಡಿಗೆಯಲ್ಲಿ ಬಂದಳು – ಸ್ಥಾರಕಕ್ಕೆ ಮೀಸಲಾದ ಸ್ಥಳ ನೋಡಿದ ನಂತರವೇ ಸ್ಮಾರಕದ ವಿನ್ಯಾಸ ರೂಪಿಸುವ ಉದ್ದೇಶ ಅವಳದ್ದಾಗಿತ್ತು. + + + +ಆಕೆ ಬಂದಳು, ಸ್ಥಳ ನೋಡಿದಳು, ಗೆರೆ ಎಳೆದಳು, ಬಹುಮಾನ ಗೆದ್ದೇಬಿಟ್ಟಳು.“ಇದೇ ನೋಡಿ ಆ ಸ್ಮಾರಕ !” ಎಂದು ಹಠಾತ್ತಾಗಿ ಶಾನನ್ ಉದ್ಗರಿಸಿ ನಮ್ಮ ಕಾಲ ಬಳಿ ಕೈ ಬೆರಳು ತೋರಿದಾಗ ನಾನು ಹಿಮ್ಮೆಟ್ಟಿದೆ. ಇನ್ನೂ ಮೈಲುಗಟ್ಟಲೆ ನಡೆಯಬೇಕೆಂದು ಊಹಿಸಿದವನಿಗೆ, ಸಮೀಪದಲ್ಲೇ ಯಾವ ಮುನ್ಸೂಚನೆ ಇಲ್ಲದೇ ಧಿಗ್ಗನೆ ವಿಯೆಟ್ನಾಂ ಸ್ಮಾರಕ ಎದುರಾಗಿತ್ತು. ನಮ್ಮ ಬಾಯಿ ಕಟ್ಟಿತ್ತು. + +ಪ್ರಾಯಶಃ ವಿಯೆಟ್ನಾಂ ಯೋಧರು ಹೀಗೇ ಅನಿರೀಕ್ಷಿತವಾಗಿ ಧುತ್ತೆಂದು ಎರಗಿ ಅಮೆರಿಕದ ಸೈನಿಕರನ್ನು ಹಣ್ಣುಗಾಯಿ ನೀರುಗಾಯಿ ಮಾಡಿದ್ದಿರಬೇಕು. ಅದಕ್ಕೇ ಈ ಬಗೆಯ ಸ್ಮಾರಕವೆ ? + +ಹಾಗಲ್ಲ; ವಿಯೆಟ್ನಾಂ ಯುದ್ಧವೆಂದರೆ ಅಮೆರಿಕನ್ ಪ್ರಜೆಗಳ ಪಾಲಿಗೆ ಎಂದೂ ಮಾಸದ ಗಾಯ. ಎದೆಯಾಳದಲ್ಲಿ ಸದಾ ನೋವಿರುವ ತಿವಿತ. ಅದರ ಪ್ರತಿರೂಪವಾಗಿ ಇಲ್ಲಿ ಈ ಸಮತಟ್ಟು ನೆಲದಲ್ಲಿ ಆಳವಾದ ‘ಗಾಯ’ ಮಾಡಿ ಸ್ಮಾರಕ ಸೂಚಿಸಿದ್ದಾಳೆ. ಮಾಯಾ ಯಿಂಗ್ ಲಿನ್. + +ಈ ಹೊಂಡ ಹೇಗಿದೆ ಎಂದರೆ, ಭಾರೀ ಗಾತ್ರದ ತ್ರಿಕೋನಾಕೃತಿಯ ಗುದ್ದಲಿಯನ್ನು ಹಸಿ ನೆಲಕ್ಕೆ ಇಳಿಸಿ ಬಲವೊತ್ತಿ ಒಮ್ಮೆಲೇ ಮಣ್ಣನ್ನು ದೂರ ಚಿಮ್ಮಿದಾಗ ಉಂಟಾಗುವ ತಗ್ಗಿನಂತಿದೆ. ಹೀಗೆ ನಿರ್ಮಿತವಾದ ಕಡಿದಾದ ಗೋಡೆಗೆ ಕನ್ನಡಿ ಜೋಡಿಸಿದ ಹಾಗೆ ಕಪ್ಪು ಗ್ರಾನೈಟ್ ಹಲಗೆಗಳನ್ನು ನಿಲ್ಲಿಸಲಾಗಿದೆ. ಅವುಗಳ ಪಕ್ಕದಲ್ಲಿ ಇಳಿಜಾರು ಹಾದಿಗುಂಟ ಈ ತಗ್ಗಿನಲ್ಲಿ ಸಾಗುತ್ತ ಹೋದ ಹಾಗೆ ನಮ್ಮ ಬಲಗಡೆಗೆ ಒಂದರ ಪಕ್ಕ ಒಂದರಂತೆ ಜೋಡಿಸಿ ನಿಲ್ಲಿಸಿದ ಶಿಲಾ ಹಲಗೆಗಳು ಕಾಣುತ್ತವೆ. ಇಳಿದು, ತಗ್ಗಿನ ಮಧ್ಯಭಾಗಕ್ಕೆ ಬಂದಂತೆ ಗ್ರಾನೈಟ್ ಹಲಗೆಗಳು ಉದ್ದವಾಗುತ್ತ ಆಗುತ್ತ ಹದಿಮೂರಡಿ ಆಳದಲ್ಲಿ ನಿಂತಿರುವುದನ್ನು ಕಾಣುತ್ತೇವೆ. ಹಾಗೆಯೇ ಮುಂದುವರೆದು ತ್ರಿಕೋನದ ಇನ್ನೊಂದು ಭುಜದಗುಂಟ ಸಾಗಿದರೆ ಕಲ್ಲು ಹಲಗೆಗಳು ಗಿಡ್ಡವಾಗುತ್ತ ಆಗುತ್ತ ಬಂದಂತೆ ನಾವು ತಗ್ಗಿನಿಂದ ಮೇಲೆದ್ದು ನಮಗರಿವಿಲ್ಲದೇ ನೆಲಮಟ್ಟ ತಲುಪಿರುತ್ತೇವೆ. + +ನಮಗರಿವಿಲ್ಲದೇ ತಲುಪಿರುತ್ತೇವೆ. ಏಕೆಂದರೆ ಈ ಕರಿ ಕಲ್ಲು ಹಲಗೆಗಳು ಅಷ್ಟು ಮೋಹಕವಾಗಿವೆ. ಕನ್ನಡಿಯಂತೆ, ನಿಚ್ಚಳ ಪ್ರತಿಬಿಂಬ ಮೂಡಿಸುವ ಈ ಹಲಗೆಗಳ ಮೇಲೆ ಸಾಲಾಗಿ ಎಲ್ಲ 57,692 ಮೃತ ಯೋಧರ ಹೆಸರುಗಳನ್ನು ಮುದ್ದಾಗಿ ಕೊರೆಯಲಾಗಿದೆ.ಆ ಅಷ್ಟೂ ಸಾವಿರ ಹೆಸರುಗಳ ಮಧ್ಯೆ ತಮ್ಮ ಬಿಂಬವನ್ನೇ ನೋಡುತ್ತ ಕಂಬನಿ ಮಿಡಿಯುತ್ತ ಬಂಧು ಬಾಂಧವರ ಹೆಸರು ಹುಡುಕುತ್ತ, ತಡವುತ್ತ ಹೂ ಗುಚ್ಚ ಏರಿಸುತ್ತ, ಶಾಂತಿಗಾಗಿ ಪ್ರಾರ್ಥಿಸುತ್ತ ನಿಂತ ನೂರಿನ್ನೂರು ಮಂದಿ ಅಲ್ಲಿ ಎಂದೆಂದೂ ಕಾಣ ಸಿಗುತ್ತಾರೆ. ದೇಶದ ಗೌರವ ಕಾಪಾಡಲೆಂದು ದೂರ ದೇಶದಲ್ಲಿ ಪ್ರಾಣ ತೆತ್ತ ಮಗನನ್ನೋ, ಅಣ್ಣನನ್ನೋ, ತಂಗಿಯನ್ನೋ, ನೆನೆಸಿಕೊಂಡು, ಹುಟ್ಟು ಹಬ್ಬದ ದಿನ ಎರಡು ಹನಿ ಕಣ್ಣೀರು ಸುರಿಸಿ ಹೋಗಲು ಬಂದವರು ಹೆಜ್ಜೆ ಹೆಜ್ಜೆಗೆ ಎಡತಾಕುತ್ತಾರೆ. + +ಪ್ರಾಣತೆತ್ತ ಯೋಧರ ಹೆಸರುಗಳನ್ನು ಇಲ್ಲಿ ಅಕಾರಾದಿಯಾಗಿ ಬರೆದಿಲ್ಲ. ಹಾಗೆ ಬರೆದಿದ್ದಿದ್ದರೆ ಐದು ನೂರು ಜಾನ್ ರಾಬರ್ಟ್ಗಳೂ, ಆರೆಂಟು ನೂರು ಬಿಲ್ ಹ್ಯಾರಿಸನ್ಗಳೂ, ಮೂರು ನಾಲ್ಕು ನೂರು ಎಡ್ವರ್ಡ್ಗಳೂ ಒಂದೇ ಕಡೆ ಬಂದು ಇನ್ನಷ್ಟು ಗೊಂದಲ ಆಗುತ್ತಿತ್ತು. ಹೂಗುಚ್ಛ ಏರಿಸ ಬಂದವರು, ಕೈಪಿಡಿಯಲ್ಲಿ ಸೂಚಿಸಿದ ಸೂತ್ರದ ಪ್ರಕಾರ ತಮ್ಮ ಬಂಧುವಿನ ಹೆಸರು ಎಲ್ಲಿದೆ ಎಂದು ಪತ್ತೆ ಮಾಡುತ್ತಾರೆ. ಕಣ್ಣು ಮಂಜು ಮಾಡಿಕೊಂಡು ಬ್ರೇಲ್ಲಿಪಿ ಓದುವವರ ಹಾಗೆ ಅಲ್ಲಿ ಕೊರೆದ ಅಕ್ಷರಗಳನ್ನು ತಡವುತ್ತಾರೆ. + +‘ವಿಯೆಟ್ನಾಂನಲ್ಲಿ ಮಡಿದ ಯೋಧರ ಸರಾಸರಿ ವಯಸ್ಸು ಎಷ್ಟಿತ್ತು ಗೊತ್ತೆ? ಹದಿನೆಂಟು ವರ್ಷ, ಎಂಟು ತಿಂಗಳು. ಕೇವಲ ಹದಿನೆಂಟು ವರ್ಷ ಎಂಟು ತಿಂಗಳು!’ ಶಾನನ್ ಒತ್ತಿ ಹೇಳುತ್ತಾಳೆ. + +“ಜಗತ್ತನ್ನೇ ಸರಿಯಾಗಿ ಕಣ್ಣುಬಿಟ್ಟು ನೋಡಿರದ ಈ ಎಳೆಯರನ್ನು ನಮ್ಮ ದೇಶ ಬಲಿ ಕೊಟ್ಟಿದೆ. ಇವರ ಶವ ಪೆಟ್ಟಿಗೆಗಳನ್ನು ಒಂದರ ಪಕ್ಕ ಒಂದರಂತೆ ಇಡುತ್ತ ಹೋಗಿದ್ದಿದ್ದರೆ ಮೂವತ್ತು ಮೈಲ್ ಉದ್ದದ ಸಾಲು ಆಗುತ್ತಿತ್ತು” ಎನ್ನುತ್ತಾಳೆ. + +ಇವಳಿಗೆ ಅಂದಾಜೇ ಇಲ್ಲ. ಅದೇ ಯುದ್ಧದಲ್ಲಿ ತಮ್ಮ ಮಾತೃಭೂಮಿಯ ರಕ್ಷಣೆಗೆಂದು ಹೋರಾಡಿ ಮಡಿದ ವಿಯೆಟ್ನಾಮೀ ಯುವ ಯೋಧರ ಶವಗಳನ್ನೆಲ್ಲ ಭುಜಕ್ಕೆ ಭುಜ ತಾಗಿಸಿ ಮಲಗಿಸಿದರೆ ನೂರ ಎಂಭತ್ತು ಮೈಲ್ ಉದ್ದದ ಸಾಲು ಕಾಣುತ್ತಿತ್ತು. + +“ಇಷ್ಟೇ ಅಲ್ಲ ಇವರೇ, ಈ ಯುದ್ಧ ಸಂದರ್ಭದಲ್ಲಿ ಪ್ರಾಣತೆತ್ತ ವೈದ್ಯರು, ದಾದಿಯರು, ಅಡುಗೆಯವರು, ಸರಂಜಾಮು ವಾಹಕರು, ರೆಡ್ಕ್ರಾಸ್ ಸೇವಕರು ಇವರನ್ನೆಲ್ಲ ಈ ಸ್ಮಾರಕದಲ್ಲಿ ಪ್ರತ್ಯೇಕವಾಗಿ ಹೆಸರಿಸಿಯೇ ಇಲ್ಲ ಅವರೆಲ್ಲರ ಪರವಾಗಿ ಈ ಒಂದು ಪುಟ್ಟ ಕಲ್ಲು ನೆಟ್ಟಿದ್ದಾರೆ ನೋಡಿ” ಎಂದು ತೋರಿಸುತ್ತಾಳೆ. ಅಷ್ಟು ಹೊತ್ತಿಗೆ ನಾವೆಲ್ಲ ತಗ್ಗಿನಿಂದ ಮೇಲೆದ್ದು ನೆಲಮಟ್ಟಕ್ಕೆ ಬಂದಿದ್ದೆವು. + +“ಹಾಗಿದ್ದರೆ ಇನ್ನೂ ಒಂದು ಪುಟ್ಟ ಕಲ್ಲು ನೆಡಬೇಕಿತ್ತು ಇಲ್ಲೇ” ಎಂದು ನಾನು ಮಧ್ಯೆ ಬಾಯಿ ಹಾಕಿದೆ. ಆಚೀಚಿನ ಜನ ನನ್ನತ್ತ ನೋಡಿದರು. + +“ಯಾಕೆ ?” ಎಂದಳು ಈಕೆ. + +“ಯಾಕೆಂದರೆ ಈ ‘ವೆರಿ ಸ್ಪೆಶಲ್’ ಗ್ರಾನೈಟ್ ಕಲ್ಲುಗಳನ್ನು ನನ್ನ ತಾಯ್ನಾಡಿನಿಂದ ಒಡೆದು ಸಾಗಿಸಿ ತರಿಸಿ ನೆಟ್ಟಿದ್ದೀರಿ ನೀವು. ಈ ಕಲ್ಲುಗಳಿಗಾಗಿ ಜೀವ ತೆತ್ತವರಿಗೂ ಒಂದು ಸ್ಮಾರಕ ಬೇಡವೆ?” ಕೇಳಿದೆ. + +ತೆಳ್ಳನ್ನ ಬೆಳ್ಳನ್ನ ಕೋಲುಮುಖದ ಈ ಯುವತಿ ಒಂದು ಕ್ಷಣದ ಮಟ್ಟಿಗೆ ಟ್ಯೂಬ್ಲೈಟ್ ಆದಳು. ಬೆಪ್ಪಾಗಿ, ಪಕಪಕ ನಕ್ಕು ಮಿಂಚು ಹೊಳೆದಂತೆ ಛಕ್ಕೆಂದು ಪ್ರಭೆ ಹೊಮ್ಮಿದಳು. + +“ಹೌದು, ನಾನು ಹೇಳಲು ಮರೆತೇಬಿಟ್ಟಿದ್ದೆ; ಈ ಸುಂದರ ಕಲ್ಲುಗಳನ್ನು ಇಂಡಿಯಾದಿಂದ ತರಿಸಿದ್ದು. ಅವುಗಳ ಹೊಳಪು, ಗಾಂಭೀರ್ಯ ನೋಡಿ. ಶೋಕತಪ್ತರ ಭಾವನೆಗಳನ್ನು ಹೇಗೆ ಪ್ರತಿಫಲಿಸುತ್ತವೆ ನೋಡಿ” ಅಂದಳು ಲಲನೆ. + +“ಹಾಗಲ್ಲ ಮೇಡಂ”, ಸೌಂದರ್ಯ, ಗಾಂಭೀರ್ಯ ಎಲ್ಲ ಬದಿಗೊತ್ತಿ ಹೇಳಿದೆ: “ಈ ಕಲ್ಲು ಚಪ್ಪಡಿಗಳನ್ನು ಕೊಳ್ಳೇಗಾಲದ ಕಾಡಿನಿಂದ ಎತ್ತಿ ತಂದಿದ್ದಾರೆ. ನನ್ನೂರಿನ ಕಾಡನ್ನು ಇದಕ್ಕೆಂದೇ ಧ್ವಂಸ ಮಾಡಿದ್ದಾರೆ. ಡೈನಮೈಟ್ ಸಿಡಿಸಿ, ವನ್ಯಜೀವಿಗಳನ್ನು ಓಡಿಸಿ, ನೀರಿನ ಸೆಲೆಯನ್ನು ಬತ್ತಿಸಿ, ಕಲ್ಲಿನ ಚಕ್ಕೆ ಚೂರುಗಳನ್ನು ಅಲ್ಲೇ ಚಲ್ಲಾಪಿಲ್ಲಿ ಮಾಡಿ, ಇಲ್ಲಿ ತಂದು ಪಾಲಿಶ್ ಮಾಡಿದ್ದಾರೆ. ಅಲ್ಲಿ ನಮ್ಮೂರಿನಲ್ಲಿ ಬಂಡೆಯಡಿ ಸಿಕ್ಕಿ ಸತ್ತ ಕೂಲಿನಾಲಿಗಳ ಲೆಕ್ಕ ಯಾರೂ ಇಟ್ಟಿಲ್ಲ. ದೂಳು, ಕೆಮ್ಮು ದಮ್ಮು ಕ್ಷಯರೋಗಕ್ಕೆ ಬಲಿಯಾದವರ ಲೆಕ್ಕ ಇಟ್ಟಿಲ್ಲ. ಬಾಂಬ್ ದಾಳಿಗೆ ತುತ್ತಾದ ವಿಯೆಟ್ನಾಮಿನ ಅರಣ್ಯಗಳ ಹಾಗೆ ನಮ್ಮ ಊರಿನ ಅರಣ್ಯಗಳೂ ಈ ಸ್ಮಾರಕಗಳಿಗಾಗಿ ಭಗ್ನಗೊಂಡಿವೆ. ಅಸಂಖ್ಯ ಜೀವಜಂತುಗಳ ಬಲಿದಾನ ಆಗಿದೆ. ಅವುಗಳ ಸ್ಮರಣೆಗೆ ಒಂದು ಪುಟ್ಟ ಕಲ್ಲನ್ನು ಇಲ್ಲೇ ನೆಡಬೇಕಿತ್ತು” ಎಂದೆ. + +ಕೊಂಚಕಾಲ ಸ್ಮಶಾನ ಮೌನ. + +“ನಮಗೆ ಗೊತ್ತೇ ಇರಲಿಲ್ಲ ಇವೆಲ್ಲ” – ಎಂದಳು, ತಗ್ಗಿದ ದನಿಯಲ್ಲಿ ಶಾನನ್. ಮರುಕ್ಷಣವೇ ಅವಳಿಗೆ ಅಮೆರಿಕನ್ ಪ್ರಜ್ಞೆ ಮರಳಿತು.ʼನಾವು ತುಂಬ ಹಣಕೊಟ್ಟು ಈ ಚಪ್ಪಡಿಗಳನ್ನು ಖರೀದಿಸಿದ್ದೇವೆʼ, “ಆ ಹಣ ಏನಾಯಿತು?” ಎಂಬಂತೆ ನೋಡಿದಳು.ಅದೂ ನಿಜವೇ. ಅಮೆರಿಕದ ಗಣಿಗಳಿ೦ದಲೇ ಈ ಗ್ರಾನೈಟ್ ಎತ್ತಿದ್ದಿದ್ದರೆ ಪ್ರಾಯಶಃ ಅದರಿಂದ ದೊರೆತ ಹಣದ ದೊಡ್ಡ ಪಾಲು ಗಣಿ ಪರಿಸರದ ಪುನರುತ್ಥಾನಕ್ಕೆ ಹಾಗೂ ಗಣಿ ಕಾರ್ಮಿಕರ ಕಲ್ಯಾಣಕ್ಕೆ ಹಿಮ್ಮುಳುಮೆ ಆಗುತ್ತಿತ್ತು. ಭಾರತದಲ್ಲಿ ಅದೆಲ್ಲಿ ಸಾಧ್ಯ? ಡಾಲರ್ ಹಣದ ಬಹುಪಾಲು ಬೆಂಗಳೂರಿಗೆ ಬಂತು ನಿಜ. ಆದರೆ ಭ್ರಷ್ಟ ಅಧಿಕಾರಿಗಳಿಗೆ ಬೆನ್ನುಲುಬಾಗಿ ನಿಂತ ರಾಜಕಾರಣಿಗಳಿಗೆ, ಅವರ ಪಾರ್ಟಿ ನಿಧಿಗೆ, ಮಧ್ಯವರ್ತಿ ದಲ್ಲಾಳಿಗೆ ಹಣದ ಹಲವು ಪಾಲು ಹರಿಯುತ್ತಲೇ ಹೋಯಿತು. ಗಣಿ ಇನ್ನಷ್ಟು ಆಳ, ಅಗಲವಾಗುತ್ತಲೇ ಹೋಯಿತು. ಈಗ ಕೊಲ್ಲಿ ಯುದ್ಧದಲ್ಲಿ ಮಡಿದವರಿಗಾಗಿ ಇನ್ನೊಂದು ಸ್ಮಾರಕ ತಲೆ ಎತ್ತಿದರೆ ಕೊಳ್ಳೇಗಾಲದ ಗಣಿ ಇನ್ನಷ್ಟು ಆಳವಾಗುತ್ತವೆ. + +ಕೊಳ್ಳೇಗಾಲದ ನಿಸರ್ಗ ಸಂಪತ್ತೂ ಪೂರ್ತಿ ಕೊಳ್ಳೆ ಹೋಗುತ್ತದೆ. ಶ್ರೀಗಂಧ, ಆನೆ ದಂತಗಳಂತೂ ವೀರಪ್ಪನ್ ಕೃಪೆಯಿಂದಾಗಿ ಕೈಬಿಟ್ಟು ಹೋದವು. ಹಿಟ್ಲರ್ನ ಕಾಲದಲ್ಲಿ ಯಹೂದ್ಯರಿಗೆ ಒದಗಿದ ಸ್ಥಿತಿಯ ಹಾಗೆ ಇಲ್ಲಿನ ವನ್ಯಜೀವಿಗಳೆಲ್ಲ ದಂತ, ಕೊಂಬು, ಗೊರಸು, ತೊಗಲುಗಳಾಗಿ ಬಿಡಿಬಿಡಿಯಾಗಿ ಪೆಟ್ಟಿಗೆ ಸೇರಿ ದೂರ ಸಾಗಿದವು. + +ಕರ್ನಾಟಕದ ಅತ್ಯಂತ ಸಮೃದ್ಧ ವನ್ಯ ಸಂಪತ್ತಿದ್ದ ಈ ಪ್ರದೇಶ ಈಗ ಭಣಗುಡುತ್ತಿದೆ. ಜನವರಿಯಲ್ಲೇ ಹಳ್ಳಕೊಳ್ಳ ಹಾಗಿರಲಿ, ಪಾಲಾರ್ ನದಿ ಕೂಡಾ ಬತ್ತಿ ಹೋಗಿದೆ. ಮಳೆ ಸುರಿಯುತ್ತಿಲ್ಲ. ಆದರೆ ಪೊಲೀಸರ ಏಕೆ-47 ರೈಫಲ್ಗಳಿಂದ ಗುಂಡಿನ ಮಳೆ ಅಲ್ಲಲ್ಲಿ ಸುರಿಯುತ್ತಿದೆ –ವೀರಪ್ಪನ್ ತಂಡವನ್ನು ಬೇಟೆಯಾಡಲು ಒಣ ಅರಣ್ಯವನ್ನು ಜಾಲಾಡಲಾಗುತ್ತಿದೆ. + +ಅಳಿದುಳಿದ ವನ್ಯಪ್ರಾಣಿಗಳು ಎಲ್ಲಿ ಹೋಗಬೇಕು? ಹನ್ನೆರಡು ಗಣಿ ಕಂಪನಿಗಳು ಅದೇ ರಕ್ಷಿತ ಅರಣ್ಯದಲ್ಲಿ ಗ್ರಾನೈಟ್ ಬಂಡೆ ಒಡೆದು ಸಾಗಿಸಲು ಗುತ್ತಿಗೆ ಪಡೆದಿವೆ. ಮೊದಲು ಸರಕಾರಿ ಸ್ವಾಮ್ಯದ ‘ಮೈಸೂರು ಮಿನರಲ್ಸ್’ ಕಂಪನಿ ಸೇರಿದಂತೆ ಮೂರು ಕಂಪನಿಗಳು ಇಲ್ಲಿ ಗುಡ್ಡ ಸೀಳುತ್ತಿದ್ದವು. ಈಗ ಅಮೆರಿಕ ಜಪಾನ್ಗಳಿಗೆ ಗ್ರಾನೈಟ್ ರಫ್ತು ಮಾಡಲೆಂದು ಹೊಸ ಹೊಸ ಕಂಪನಿಗಳು ಅರಣ್ಯಕ್ಕೆ ದಾಳಿ ಇಕ್ಕುತ್ತಿವೆ. ಅವುಗಳ ಒಂದೊಂದು ಡೈನಮೈಟ್ ಸಿಡಿತ ಮೂವತ್ತು ಕಿಲೊಮೀಟರ್ ದೂರದವರೆಗಿನ ಪರ್ವತ ಶ್ರೇಣಿಯಲ್ಲಿ ಪ್ರತಿಧ್ವನಿಸುತ್ತದೆ. ಅಹೋರಾತ್ರಿ ಭಾರೀ ಲಾರಿಗಳು ಕಾಡಿನ ಮಧ್ಯೆ ಡೊಂಕು ಘಟ್ಟಗಳಲ್ಲಿ ಗಂವ್ಗುಡುತ್ತ ಸಾಗುತ್ತವೆ. ಜಿಂಕೆ, ಕಡವೆಗಳು ಬಾಯಾರಿಕೆಗೆಂದು ಅತ್ತ ಹೋದರೆ ಲಾರಿ, ಇತ್ತ ಹೋದರೆ ಗಣಿ, ಪೂರ್ವಕ್ಕೆ ಹೋದರೆ ಪೊಲೀಸರ ಹಾವಳಿ; ಪಶ್ಚಿಮಕ್ಕೆ ಹೋದರೆ ಗಣಿ ಕಾರ್ಮಿಕರ ಬೇಟೆ ನಾಯಿಗಳ ಹಾವಳಿ. + +ವಿಯೆಟ್ನಾಂ ಸ್ಮಾರಕಕ್ಕೆ ನಿಲ್ಲಿಸಿದ ಒಂದೊಂದು ಕಲ್ಲಿಗೂ ಅದರ ಒಂಬತ್ತು ಸಾವಿರ ಪಾಲು ಕಲ್ಲುಗಳು ಇಲ್ಲಿ ನುಚ್ಚು ನೂರಾಗಿ ವಿಕಾರವಾಗಿ ರಾಶಿ ಬಿದ್ದಿವೆ. ನೀರಿನ ಸೆಲೆಯನ್ನು ಬತ್ತಿಸಿ, ಗಿಡಮರಗಳಿಗೆ ದೂಳಿನ ಚಾದರ ಸುತ್ತಿಸಿ, ಬೆಂಗಳೂರಿನ ಗಣಿಧನಿಗಳ ಮನೆಯಲ್ಲಿ ರತ್ನಗಂಬಳಿ ಹಾಸಿವೆ. + + + +ಇವುಗಳಿಗೆ ಸ್ಮಾರಕ ಬೇಕಿಲ್ಲ ನಿಜ. ಇವುಗಳಿಗೆ ಇವೇ ಸ್ಮಾರಕ. ಮುಂದಿನ ಐದುನೂರು ವರ್ಷಗಳವರೆಗೆ ಕೊಳ್ಳೇಗಾಲದ ಕಲ್ಲು ಬಂಡೆಗಳು ದುರಂತ ಕತೆ ಸಾರುತ್ತಿರುತ್ತವೆ. ಅದಕ್ಕೆಂದು ನೆಲ ಅಗೆದು ಉತ್ಖನನ ಕೂಡ ಮಾಡಬೇಕಿಲ್ಲ. ಎಲ್ಲವೂ ನೆಲದ ಮೇಲೆಯೇ ಬಿದ್ದಿರುತ್ತವೆ. ಆದರೂ ವಾಷಿಂಗ್ಟನ್ನ ನೆಲದ ಕೆಳಗಿನ ಆ ಶೋಕಭಿತ್ತಿಗೆ ನಮ್ಮ ಈ ದಾಖಲೆ ಸೇರ್ಪಡೆಯಾಗಬೇಕು. ಅಲ್ಲಿ ಆ ಛಪ್ಪನ್ನೇಳು ಸಾವಿರ ಮೃತಯೋಧರ ಪಟ್ಟಿಯಲ್ಲಿ ಛಪ್ಪನ್ನಾರು ದೇಶಗಳ ಹೆಸರು ಹುದುಗಿದೆ. ಅಂದರೆ, ಅಮೆರಿಕಕ್ಕೆ ವಲಸೆ ಹೋಗಿ, ಪ್ರಜೆಗಳಾಗಿ, ಮಕ್ಕಳು ಮರಿ ಯುವ ಯೋಧರಾಗಿ ವಿಯೆಟ್ನಾಂನಲ್ಲಿ ಪ್ರಾಣಬಿಟ್ಟ ಸ್ಪ್ಯಾನಿಶ್ ಜನ, ಮೆಕ್ಸಿಕನ್ ಜನ, ಚೀನೀ ಜನ, ಆಫ್ರಿಕನ್ ಮೂಲದ ನಿಗ್ರೊ ಜನ, ದಕ್ಷಿಣ ಅಮೆರಿಕದ ರೆಡ್ಇಂಡಿಯನ್ ಜನ, ಜರ್ಮನ್ ಜನ – ಹೀಗೆ ಪ್ರಪಂಚದ ಎಲ್ಲ ಮೂಲೆಗಳ ಜನರ ಹೆಸರಿದೆ. ಚೆನ್ನಾಗಿ ಹುಡುಕಿದ್ದರೆ ಭಾರತೀಯ ಹೆಸರುಗಳೂ ಕಾಣ ಬರುತ್ತಿದ್ದುವೇನೋ, ನನಗೆ ಸಿಗಲಿಲ್ಲ. ಆದರೆ ಆ ಇಡೀ ಸ್ಮಾರಕ ನಮ್ಮದು. ಜಗತ್ತಿನ ದುರ್ಬಲರ ಮೇಲೆ ಸಾರಿದ ಮಹಾ ಸಮರದ ಆ ಸಂಕೇತದಲ್ಲಿ ನಮ್ಮ ಕೊಳ್ಳೇಗಾಲದ ಹೆಸರೇ ಇಲ್ಲವೆಂದರೆ ?ಇಲ್ಲಿನ ದುರ್ಬಲ ಜೀವ ಜಂತುಗಳನ್ನು ಮೆಟ್ಟಿ ತುಳಿದದ್ದೆಲ್ಲ ವ್ಯರ್ಥವೇ ಆದಂತಲ್ಲವೇ ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_248.txt b/Kenda Sampige/article_248.txt new file mode 100644 index 0000000000000000000000000000000000000000..6db7cd33a116366bc33886d34b5c941042925e3d --- /dev/null +++ b/Kenda Sampige/article_248.txt @@ -0,0 +1,109 @@ +ಹಾಂಗ್‌ಕಾಂಗ್‌ನ ಜನನಿಬಿಡ ಕೌಲೂನ್‌ ಪ್ರದೇಶದ ಗೇಟ್‌ವೇ ಹೊಟೆಲ್‌ನಲ್ಲಿ ನಮ್ಮ ಎಂಟು ಜನರ ತಂಡಕ್ಕೆ ಊಟದ ಏರ್ಪಾಟಾಗಿತ್ತು. ಅದು ಭಾರೀ ಜನಪ್ರಿಯ ಹೊಟೆಲ್‌ ಆಗಿದ್ದರಿಂದ ಎರಡು ದಿನ ಮೊದಲೇ ನಮ್ಮ ಟೇಬಲ್‌ ಬುಕ್‌ ಮಾಡಿಟ್ಟಿದ್ದರು. ನಾನೊಬ್ಬನೇ ಭಾರತೀಯ ಆ ತಂಡದಲ್ಲಿ ಇದ್ದುದರಿಂದ, ಈತ ಗೋಮಾಂಸ ತಿನ್ನುವುದಿಲ್ಲ ಎಂಬುದು ನನ್ನ ಬಯೋಡೇಟಾ ಮೂಲಕ ಗೊತ್ತಾಗಿದ್ದರಿಂದ, ಇಡೀ ತಂಡಕ್ಕೆ ಬದಲೀ ಊಟದ ವ್ಯವಸ್ಥೆಯಾಗಿತ್ತು. ಭಾರೀ ಪ್ರತಿಷ್ಠಿತ ಹೊಟೆಲ್‌ ಆಗಿದ್ದರಿಂದ ನಾವು ಕೂತ ಕೇವಲ ನಾಲ್ವತ್ತು ನಿಮಿಷಗಳಲ್ಲಿ ಊಟದ ಟ್ರಾಲಿ (ಥಾಲಿ ಅಲ್ಲ ಟ್ರಾಲಿ) ಬಂತು. + +ಮಬ್ಬು ಬೆಳಕು. ಟ್ರಾಲಿಯ ಮೇಲೆ ಏನೋ ಮೊಳಕೈ ಎತ್ತರದ ಮುದ್ದೆ ಕೂತಂತಿತ್ತು. ರಾಗಿ ಮುದ್ದೆ ಇರಬಹುದೆ? ಬಣ್ಣವೇನೋ ಅದೇ ಥರಾ ಇತ್ತು. ಸಮೀಪ ಬಂದಾಗ ಅದಕ್ಕೆ ಕಾಲು, ಬಾಲ, ಮೂತಿ ಎಲ್ಲ ಇರುವುದು ಅಸ್ಪಷ್ಟವಾಗಿ ಗೋಚರಿಸಿತು. ದಿಲ್ಲಿಯ ಗಣತಂತ್ರದ ಪರೇಡಿನಲ್ಲಿ ಟ್ಯಾಬ್ಲೊ ಮೇಲೆ ಕಾಲು ಮುದುರಿ ಕೂತ ಕಾಝಿರಂಗಾ ಘೇಂಡಾ ಥರಾ ಕಂಡಿತು. ಅದೊಂದು ವಿನೂತನ ವಿನ್ಯಾಸದ ಮಧುಪಾತ್ರೆ ಇರಬಹುದೆ? ಆಗಲೇ ಒಂದೊಂದು ರೌಂಡ್‌ ಮುಗಿಸಿದ್ದರಿಂದ, ಅದೇನೆಂಬುದು ಸ್ಪಷ್ಟವಾಗಿ ಕಾಣಲೇ ಇಲ್ಲ. + +ಟ್ರಾಲಿ ಬಂದು ನನ್ನ ಬಳಿಯೇ ನಿಂತಿತು. ಕಕ್ಕಾವಿಕ್ಕಿಯಾಗಿ ನಾನು ನೋಡುತ್ತಿದ್ದ ಹಾಗೆ ಅದನ್ನು ತಳ್ಳಿ ತಂದ ಚೀನೀ ಮಾಣಿ ಎಂಥದೋ ಮಣಮಣಮಣ ಮಂತ್ರ ಹೇಳಿದಂತೆ ಮಾಡಿ, ಹಠಾತ್‌ ದನಿಯೇರಿಸಿ ಕುಂಗ್‌ಫೂ ಯೋಧನ ಹಾಗೆ ಮೈಕೈ ಬಗ್ಗಿಸಿ ‘ಹಿಚೀಕಿಸ್ತ್‌’ ಎಂದೇನೋ ಕೂಗಿ ಕುಪ್ಪಳಿಸಿ, ಕಡ್ಡಿ ಗೀರಿ ಆ ಮುದ್ದೆಗೆ ತಾಕಿಸಿದ್ದೇ ತಡ – ಭುಗ್ಗೆಂದು ಜ್ವಾಲೆ ಆವರಿಸಿ, ಮುದುರಿ ಕೂತಿದ್ದ ಆ ದೇಹ ಕರ್ಪೂರವಾಗಿ ಹತ್ತು ಸೆಕೆಂಡ್‌ಗಳಲ್ಲಿ ಜ್ವಾಲೆ ಆರಿತು. + +ನಾನು ಶಾಕ್‌ ಹೊಡೆಸಿಕೊಂಡವನ ಹಾಗೆ ಛಂಗನೆ ದೂರ ಚಿಮ್ಮಿ ನೋಡುತ್ತಿದ್ದಂತೆ ಮಾಣಿ ಮತ್ತೊಂದು ಪಟ್ಟು ಕುಂಗ್‌ಫೂ ಕುಣಿತ ಮಾಡಿ ಕಿಸೆಯಿಂದ ಎರಡು ಪುಟ್ಟ ಖಡ್ಗಗಳನ್ನು ಹೊರತೆಗೆದು ಕಿಚಿಕ್‌ ಪಿಚಿಕ್‌ ಎಂದು ಒಂದರ ಮೇಲೊಂದನ್ನು ಉಜ್ಜಿದ. ನಂತರ ಕಛಾಕ್‌ ಕಛಾಕ್‌ ಎಂದು ಕೇಕ್‌ ಕತ್ತರಿಸುವಂತೆ ಅದರ ಬೆನ್ನಿನ ಮೇಲೆ ಎಂಟು ಗೀರು ಹಾಕಿದ. ಕಲ್ಲಂಗಡಿ ಹೋಳುಗಳನ್ನು ಎತ್ತುವ ಹಾಗೆ ಸಲೀಸಾಗಿ ಒಂದೊಂದು ಹೋಳನ್ನು ಖಡ್ಗದ ಮೊನೆಯಲ್ಲಿ ತಿವಿದು ಹಿಡಿದೆತ್ತಿ ನಮ್ಮ ನಮ್ಮ ಪ್ಲೇಟ್‌ಗಳಲ್ಲಿಟ್ಟ. ಮತ್ತೆ ಅತ್ತ ತಿರುಗಿ ಇನ್ನೆಂಥದೋ ಚಿತ್ರ ವಿಚಿತ್ರ ಆಕೃತಿಯ ಹೋಳುಗಳನ್ನು ಆ ಪ್ರಾಣಿಯ ಬೆನ್ನು, ತೊಡೆ, ಕಿಬ್ಬೊಟ್ಟೆ ಕುತ್ತಿಗೆಗಳಿಂದ ಕೊರೆ ಕೊರೆದು ತೆಗೆದು ಎಲ್ಲರ ಪ್ಲೇಟಿಗೆ ಹಂಚಿ ಕೆಚಪ್‌ ಸುರಿದ. ಎಲ್ಲ ಏಳೂ ಮಂದಿ ಬಲಗೈಯಲ್ಲಿ ಚಾಕು, ಎಡಗೈಯಲ್ಲಿ ಮುಳ್ಳು ಚಮಚ ಹಿಡಿದು ‘ಸಹನೌ ಭುನಕ್ತು’ ಮಾಡುವಷ್ಟರಲ್ಲಿ ಟ್ರಾಲಿಯ ಮೇಲೆ ಹಂದಿಯ ಬರೀ ಅಸ್ಥಿಪಂಜರ ಮಾತ್ರ ಉಳಿದಿತ್ತು. + +ಹಂದಿಯ ಇಡೀ ದೇಹವನ್ನು ಅಡುಗೆ ಮನೆಯ ಅಗ್ಗಿಷ್ಟಿಕೆಯಲ್ಲಿ ಬೇಯಿಸಿ ಮೇಲೆ ಬೆಣ್ಣೆ ಲೇಪಿಸಿ ಅದನ್ನು ಇಡಿದಾಗಿ ತಂದು ಗಿರಾಕಿಯ ಎದುರೇ ಒಗ್ಗರಣೆ (Saute) ಕೊಟ್ಟು ಬಡಿಸುವ ಬ್ರಿಟಿಷ್‌ ಸಂಪ್ರದಾಯ ಇಲ್ಲಿ ಯಥಾವತ್ತಾಗಿ ಜಾರಿಗೆ ಬಂದಿತ್ತು. ಸೌಟ್‌ ಎಂದರೆ ಲ್ಯಾಟನ್ನಿನಲ್ಲಿ ‘ಕುಣಿ’, ‘ಕುಪ್ಪಳಿಸು’ ಎಂಬ ಅರ್ಥವಿದ್ದುದರಿಂದ, ಕುಣಿಯುತ್ತಲೇ ಮಾಣಿ ರೋಸ್ಟ್‌ಪೋರ್ಕ್‌ ಒಗ್ಗರಣೆ ಹಾಕಿದನೇನೊ. + +ಗೋಮಾಂಸವನ್ನಷ್ಟೇ ಅಲ್ಲ ನಾಲ್ಕು ಕಾಲಿನ ಏನನ್ನೂ ತಿನ್ನುವುದಿಲ್ಲವೆಂದು ಹೇಳಿ ನಾನು ಆ ಕ್ಷಣದಲ್ಲಿ ಬಚಾವಾದೆ. ‘ಸೀ ಫುಡ್‌ ತಗೊಳ್ಳಿ ಚೆನ್ನಾಗಿರುತ್ತದೆ’ ಎಂದು ಒಂದಿಬ್ಬರು ಅನುಕಂಪದಿಂದ ಅದೆಂಥದೋ ಚೌ ಮೀನ್‌ಗೆ ಆರ್ಡರ್‌ ಮಾಡಿದರು. ಅದರಲ್ಲಿ ನಾಲ್ಕು ಕಾಲುಗಳ ಪ್ರಾಣಿ ಇರಲಿಲ್ಲ. ಬದಲಿಗೆ ಎಂಟು ಕಾಲುಗಳ ಅಷ್ಟಪಾದಿ ( ಒಕ್ಟೊಪಸ್‌) ಇದ್ದವು. ಚಮಚದಲ್ಲಿ ಆವುಗಳನ್ನು ದೂರ ಸರಿಸಿ, ಅನ್ನ ಕೆದಕಿದರೆ 38 ಕಾಲುಗಳ ಸೀಗಡಿ ಕೂಡಾ ಇತ್ತು! + +ಊಟ ಮುಗಿಸಿ, ಪರಸ್ಪರ ಬೀಳ್ಕೊಡುವಾಗ ಅವರೆಲ್ಲ (ನಾನೇ ಕಲಿಸಿದ್ದ) ‘ಶುಭ ರಾತ್ರಿ !’ ಎಂದು ಹಾರೈಸಿ ಹೊರಟರು. ಅವರಿಗೆಲ್ಲ ಶುಭರಾತ್ರಿಯಾದದ್ದು ನನ್ನ ಪಾಲಿಗೆ ಶಿವರಾತ್ರಿಯಾಗಿತ್ತು. + +ಈ ನಾಲ್ಕು ಕಾಲು, ಎಂಟು ಕಾಲು, ಮೂವತ್ತೆಂಟು ಕಾಲುಗಳ ಸಂಬಂಧ ನಾನು ಹೋದ ದೇಶಗಳಲ್ಲೆಲ್ಲ ನನ್ನ ಬೆನ್ನಿಗೆ ಅಂಟಿಕೊಂಡೇ ಬರುತಿತ್ತು. ಅಮೆರಿಕದ ಡಿಮಾಯ್ನ್‌ ನಗರದ ಆಚೆ ಜೋಳ ಬೆಳೆಯುವ ವೈಖರಿಯನ್ನು ನೋಡುವ ಭಾಗ್ಯ ಬಂದಿತ್ತು. ಎಂಟು, ಹತ್ತು ಹನ್ನೆರಡು ಕಿಲೊ ಮೀಟರ್‌ ಹೋದರೂ ದಾರಿಯುದ್ದಕ್ಕೂ ಒಂದೇ ವ್ಯಕ್ತಿಯ ಜೋಳದ ಹೊಲ ಕಾಣುತ್ತಿತ್ತು. ಕೊನೆಗೂ ಆತನ ಹೊಲದ ಕೇಂದ್ರ ಭಾಗವನ್ನು ತಲುಪಿ, ಆತನ ಫಾರ್ಮ್‌ ಹೌಸ್‌ ತಲುಪಿದಾಗ ಅದೊಂದು ಕಾರ್ಖಾನೆಯ ಥರಾ ಕಾಣುತ್ತಿತ್ತು. ಜೀಪ್‌, ಟ್ರಾಕ್ಟರ್‌, ಟಿಲ್ಲರ್‌, ಅರ್ಥ್‌ ಮೂವರ್‌ಗಳ ಫ್ಯಾಕ್ಟರಿ ಇರಬಹುದೇನೋ ನೋಡಿದರೆ, ಅಲ್ಲ. ಅದರ ಪಕ್ಕದಲ್ಲಿ ಜೋಳದ ತೆನೆ ಬಿಡಿಸಿ ಒಣಗಿಸಿ ಹಿಟ್ಟು ಮಾಡಿ, ಪ್ಯಾಕ್‌ ಮಾಡುವ ಕಾರ್ಖಾನೆಯೂ ಇತ್ತು. ಮತ್ತೆ ಚಪಾತಿ, ಪೀಟ್ಸಾ, ಬ್ರೆಡ್‌ ಫ್ಯಾಕ್ಟರಿ ಇಲ್ಲವೆ? ಜೋಳದ ಹಿಟ್ಟಿನಿಂದ ‘ಗ್ಯಾಸೊಹಾಲ್‌’ (ಪೆಟ್ರೋಲಿನಂಥ ಇಂಧನ) ತಯಾರಿಸುವ ಫ್ಯಾಕ್ಟರಿ ಇಲ್ಲವೇ ಎಂದು ಕೇಳಿದಾಗ – ‘ಇಲ್ಲ ಈ ಎಲ್ಲ ಜೋಳವೂ ಪಶು ಆಹಾರ ತಯಾರಿಕೆಗೇ ಹೋಗುತ್ತದೆ’ ಎಂದು ಜಾನ್‌ ಹೇಳಿದ್ದ. ಅಮೆರಿಕದಲ್ಲಿ ಉತ್ಪಾದನೆಯಾಗುವ ಆಹಾರ ಧಾನ್ಯಗಳಲ್ಲಿ ಶೇಕಡಾ 80 ಭಾಗ ದನಗಳ ಹೊಟ್ಟೆಗೇ ಹೋಗುತ್ತದೆ. ದನದ ಮಾಂಸದ ಮೂಲಕ ಅದು ಮನುಷ್ಯರ ಹೊಟ್ಟೆಗೆ ಬರುತ್ತದೆ. + +ಅಲ್ಲಿಂದ ಮುಂದೆ ದನದ ‘ಫ್ಯಾಕ್ಟರಿ’ ನೋಡುವ ಕಾರ್ಯಕ್ರಮ. ಅಂದರೆ ದನಗಳನ್ನು ಸಿದ್ಧಪಡಿಸುವ ಫ್ಯಾಕ್ಟರಿ. ನಮ್ಮ ಸಿನಿಮಾ ಮಂದಿರಗಳ ಟಿಕೆಟ್‌ ಕೌಂಟರ್‌ಗಳ ಎದುರು ಕ್ಯೂ ನಿಲ್ಲಲು ಎರಡೂ ಕಡೆ ಅಡ್ಡಗಟ್ಟೆ ಕಟ್ಟಿದ ಹಾಗೆ, ಅಮೆರಿಕದ ದನಗಳ ಫ್ಯಾಕ್ಟರಿಯ ಎದುರು ಆಳೆತ್ತರದ ಒಂದರ್ಧ ಕಿ.ಮೀ. ಉದ್ದದ ಬೇಲಿಯಂಥ ಕಟ್ಟೆ ಕಟ್ಟಿರುತ್ತಾರೆ. ಹುಟ್ಟಿ ಎರಡು ತಿಂಗಳುಗಳಷ್ಟೇ ಆದ ಮುದ್ದು ಎಳೆಗರುಗಳನ್ನು ಎಲ್ಲಿಂದಲೋ ಸಾವಿರ ಸಂಖ್ಯೆಯಲ್ಲಿ ಖರೀದಿಸಿ ತಂದು ಇಲ್ಲಿನ ಕಟ್ಟೆಗಳ ಮಧ್ಯೆ ಸಾಲಾಗಿ ಸಾಗಿಸುತ್ತಾರೆ. ಸರಸರ ಓಡಿ ಬರುವ ಈ ಎಳೆಗರುಗಳ ಮಂದೆಯಲ್ಲಿ ಕೊಂಚ ನಿಧಾನ ಸಾಗುವ ಕರು ಇದ್ದರೆ, ಅದಕ್ಕೆ ಇಲೆಕ್ಟ್ರಿಕ್‌ ಬಾರುಕೋಲಿನಿಂದ ಚುರುಕು ಮುಟ್ಟಿಸುತ್ತಾರೆ. ಅವೆಲ್ಲವೂ ಮಿಲಿಟರಿ ಶಿಸ್ತಿನಲ್ಲಿ ಬಂದ ಮೇಲೆ ಒಂದು ತಾಣದಲ್ಲಿ ಇಲೆಕ್ಟ್ರಿಕ್‌ ಅಚ್ಚಿನಿಂದ ಐಎಸ್‌ಐ ಮುದ್ರೆ ಥರಾ ತಮ್ಮ ಕಂಪನಿಯ ಚಿಹ್ನೆಯನ್ನು ಅಚ್ಚೊತ್ತುತ್ತಾರೆ. ಕಾದ ಕಬ್ಬಿಣದ ಛಾಪು ಹೊಡೆಸಿಕೊಂಡ ಕರುಗಳು ಉರಿ ಹತ್ತಿ, ಬಾಲ ನಿಮಿರಿಸಿ, ಅದೇ ಇಕ್ಕಟ್ಟಿನ ಓಣಿಯಲ್ಲಿ ನಾಗಾಲೋಟ ಕೀಳುವಾಗ ತಗೋ ಮತ್ತೊಂದು ದಣಪೆ (ಗೇಟ್‌) ಬರುತ್ತದೆ. ಅಲ್ಲಿ ಈ ಬಾರಿ ರೋಗ ನಿರೋಧಕ ವ್ಯಾಕ್ಸಿನಿನ ದಬ್ಬಳ. ಬರೆಯ ಮೇಲೆ ಗಾಯವಾದಂತೆ ಕರುಗಳು ಕುಟ್ಟೆದ್ದು ಮತ್ತೆ ಅದೇ ಓಣಿಯಲ್ಲಿ ಓಡುತ್ತಿರುವಾಗ ಇನ್ನೊಂದು ದಣಪೆಯ ಎದುರು ಮತ್ತೊಂದು ಯಾಂತ್ರಿಕ ತೋಳು ಬರುತ್ತದೆ: ಈ ಬಾರಿ ಅದೆಂಥದೋ ಹಾರ್ಮೋನಿನ ಚುಚ್ಚುಮದ್ದು. ಕರು ಶೀಘ್ರವಾಗಿ ದಷ್ಟಪುಷ್ಟವಾಗಿ ಬೆಳೆಯುವಂತಹ ಚೋದಕ ಇಂಜೆಕ್ಷನ್‌. + +ಸುಸ್ತಾಗಿ ತಲೆ ಸುತ್ತಿದಂತಾಗಿ, ಈ ಯಾಂತ್ರಿಕ ಪಶು ಸಂಗೋಪನೆಯನ್ನು ನೋಡಲಾಗದೆ ನಾವು ಹೊರಟು ಡಿಮಾಯ್ನ್ ನಗರದ ಹೊರ ವಲಯದಲ್ಲಿನ ಒಂದು ಹೊಟೆಲ್‌ಗೆ ಬಂದೆವು. ಹೊಟ್ಟೆ ಚುರುಗುಡುತ್ತಿತ್ತು. ಒಳಹೊಕ್ಕು ಊಟಕ್ಕೆ ಆರ್ಡರ್‌ ಮಾಡಿದಾಗ ಮಾಣಿ ತಂದ ಮೊದಲ ಐಟಮ್‌ ಏನು ಗೊತ್ತೆ ?ಖಾಲಿ ಥಾಲಿ, ಒಂದು ಚಾಕು, ಜತೆಗೆ ಒಂದು ಸುತ್ತಿಗೆ ! + +ನಾನು ಬೆಚ್ಚಿದೆ. ಈ ಜನರು ಮೊದಲು ಜೋಳ ತೋರಿಸಿದರು; ನಂತರ ಜೋಳವನ್ನು ತಿಂದು ದಷ್ಟಪುಷ್ಟ ಬೆಳೆಯುವ ದನಗಳನ್ನು ತಿಂದು ದಷ್ಟಪುಷ್ಟವಾಗುವ ಜನಗಳನ್ನು ತೋರಿಸಿದರು. ಈ ಜನರೋ ನಮಗೆ ಊಟಕ್ಕೆ ಸುತ್ತಿಗೆ ಬಡಿಸುತ್ತಾರೆಯೆ ? ಬಡಿಯುತ್ತಾರೆಯೆ? + +ಮೆಲ್ಲಗೆ ಸುತ್ತಿಗೆ ಎತ್ತಿ ಪಿಂಗಾಣಿ ತಾಟಿನ ಅಂಚಿಗೆ ಠಣ್ಣೆಂದು ಬಡಿದೆ. ಹಗುರು ಕಟ್ಟಿಗೆಯಿಂದ ಮಾಡಿದ ಅಪ್ಪಟ ಸುತ್ತಿಗೆ ಅದಾಗಿತ್ತು. ನ್ಯಾಯಾಲಯಗಳಲ್ಲಿ ಜಡ್ಜ್‌ಗಳು ಬಳಸುವಂಥ ಹತ್ಯಾರ, ಸಂಶಯವಿಲ್ಲ. ಆದರೆ ಈವರೆಗೆ ಲಟ್ಟಣಿಗೆಯ ರುಚಿಯನ್ನೂ ನೋಡಿರದ ನನಗೆ ಈ ಹ್ಯಾಮರನ್ನು ನೋಡಿ ಮೆಲ್ಲಗೆ ಕೈಕಾಲು ಕಂಪಿಸತೊಡಗಿತ್ತು.ಬೇರಾಮಾಣಿ ಇನ್ನೊಂದು ದೊಡ್ಡ ಬಾಣಲೆಯನ್ನೇ ಹೊತ್ತು ತಂದ. ಅದರೊಳಗಿಂದ ಒಂದೊಂದಾಗಿ ಕೆಂಪು ಹಳದಿ ಮಿರುಗುವ ಭಯಾನಕ ಕಣ್ಣುಗಳ ಲಾಬ್‌ಸ್ಟರ್‌ಗಳನ್ನು ಎರಡೆರಡು ಕೈಗಳಿಂದ ಎತ್ತಿ ತಟ್ಟೆಯ ಮೇಲಿಟ್ಟ. ಲಾಬ್‌ಸ್ಟರ್ ಗೊತ್ತಲ್ಲ? ಎಂಟು ಕಾಲುಗಳ, ಬೃಹತ್‌ ಗಾತ್ರದ ಕಡಲ ಏಡಿಗಳು? ಅರ್ಥ್‌ ಮೂವರ್‌ನ ಯಾಂತ್ರಿಕ ತೋಳುಗಳಂಥ ಬಲಿಷ್ಠ ಎರಡೆರಡು ಕೊಂಬುಗಳು; ಕಾಲು, ತೊಡೆಗಳ ಸುತ್ತ ದಪ್ಪ ಕವಚ. + +ಈ ಕೊಂಬುಗಳ ಮೇಲೆ ಚಾಕು ಇಟ್ಟು ಅದರ ಮೇಲೆ ಸುತ್ತಿಗೆಯಿಂದ ಹೊಡೆಯಬೇಕು! ನಾನು ಅತ್ತ ಇತ್ತ ನೋಡಿದೆ. ಎಲ್ಲರೂ ಕೊಂಬು ಕವಚಗಳ ಮೇಲೆ ಹೊಡೆತ ಹಾಕುವುದರಲ್ಲಿ ತಲ್ಲೀನರಾಗಿದ್ದರು. ಕಲ್ಲುಗಣಿಗಳ ಸುತ್ತ ಲಂಬಾಣಿ ಹೆಣ್ಣುಮಕ್ಕಳು ಸಾಲಾಗಿ ಕೂತು ಜಲ್ಲಿ ಕಲ್ಲುಗಳನ್ನು ಒಡೆಯುವ ದೃಶ್ಯ ನೆನಪಾಯಿತು. ಸೀಳು ಬಿಟ್ಟ ಕವಚದ ಮಧ್ಯೆ ಉಕ್ಕಿನ ಮುಳ್ಳು ತೂರಿಸಿ, ಆಗಲೇ ಕೆಲವರು ಏಡಿಯ ಬಾಡಿಯ ಒಳಗಿನ ಮಿದು ಮಾಂಸವನ್ನು ಕಿತ್ತು ತಿನ್ನಲು ತೊಡಗಿದ್ದರು. ಡೋಲು ಬಾರಿಸಲು ಈ ಸುತ್ತಿಗೆ ಉತ್ತಮವೆಂದು ನಾನು ಯೋಚಿಸುತ್ತಿದ್ದಾಗ ಹೊಟ್ಟೆ ತಾಳ ಹಾಕುತ್ತಿತ್ತು.. + +ನಮ್ಮ ತಂಡದ ಮಾರ್ಗದರ್ಶಿ ಐಲೀನ್‌ ನನ್ನತ್ತ ನೋಡಿದಳು. ನಾನು ‘ಈ ಸುತ್ತಿಗೆಯನ್ನು ಮನೆಗೆ ಒಯ್ಯಬಹುದೇ’ ಕೇಳಿದೆ. ‘ವೈ ನಾಟ್‌? ಬೇಕಿದ್ದರೆ ನಾವೆಲ್ಲರೂ ಒಂದೊಂದು ಕೊಡುತ್ತೇವೆ’ ಎನ್ನುತ್ತ ಆಕೆ ಮಾಣಿಯನ್ನು ಕರೆದು ಊಟದ ನಂತರ ನನ್ನ ಸುತ್ತಿಗೆಯನ್ನು ಪ್ಯಾಕ್‌ ಮಾಡಲು ಹೇಳಿದಳು. ತರಿಸಿದ್ದ ಊಟವನ್ನು ಪೂರ್ತಿ ಮುಗಿಸಲಾಗದಿದ್ದರೆ, ಉಳಿದ ಎಂಜಲನ್ನು ಪ್ಯಾಕ್‌ ಮಾಡಿಸಿ ಒಯ್ಯುವ ಸೌಲಭ್ಯ ಅಮೆರಿಕದ ಹೊಟೆಲ್‌ಗಳಲ್ಲಿ ಇದೆ. ಮೊರದಗಲದ ಲಾಬ್‌ಸ್ಟರಗಳನ್ನು ಪೂರ್ತಿ ಮುಗಿಸಲಾಗದೆ ಮಿಕ್ಕಿದ್ದನ್ನು ಪಾರ್ಸಲ್‌ ಒಯ್ಯುವುದಂತೂ ಇಲ್ಲಿ ತೀರಾ ಸಾಮಾನ್ಯವಂತೆ. ಮೊದಲ ಬಾರಿಗೆ ಏಡಿ ಕಾಲುಗಳ ಬದಲಿಗೆ, ಕಸದ ತೊಟ್ಟಿಗೆ ಹೋಗಬೇಕಿದ್ದ ಸುತ್ತಿಗೆಯನ್ನು ಪ್ಯಾಕ್‌ ಮಾಡುವ ಕೆಲಸ ಈ ಹೊಟೆಲ್ಲಿನ ಮಾಣಿಗೆ ಬಂದಿತ್ತು. + + + +ಸ್ವಿತ್ಸರ್ಲೆಂಡಿನಲ್ಲಿ ಆಲ್ಪ್ಸ್‌ ಪರ್ವತದ ಹಾದಿಯಲ್ಲಿದ್ದ ‘ಫಾನಾಸ್‌’ ಎಂಬ ಹಳ್ಳಿಗೆ ಹೋಗಿದ್ದಾಗ ಕೂಡಾ ಇದೇ ಬಗೆಯ ಪಾರ್ಸೆಲ್‌ ಫಜೀತಿ ಕಾಲಿಗೆ ಸುತ್ತಿಕೊಂಡಿತ್ತು. ಫಾನಾಸ್‌ ಹಳ್ಳಿಯಲ್ಲಿ ಕರಗಿಸಿದ ಗಿಣ್ಣದ (ಚೀಸ್‌) ‘ಫೋಂಡ್ಯೂ’ ಎಂಬ ತಿಂಡಿ ತುಂಬಾ ವಿಶಿಷ್ಟವಾಗಿರುತ್ತದೆಂದು ಸೂಸಾನ್‌ ಹೇಳಿ ನನ್ನ ಬಾಯಲ್ಲಿ ನೀರೂರಿಸಿದ್ದಳು. ನಾವು ಅಲ್ಲಿನ ಪಂಚಾಯ್ತಿ ‘ಹಿತ್ಸ್’ ಹುಉಸ್‌ (Hitsch-huus)ನ ಅಧ್ಯಕ್ಷರ ಮನೆಗೆ ಆ ದಿನ ಊಟಕ್ಕೆ ಹೋಗುವ ಪ್ರೋಗ್ರಾಮು ಒಂದು ವಾರದ ಮೊದಲೇ ನಿಶ್ಚಿತವಾಗಿತ್ತು. ಸ್ವಿತ್ಸರ್ಲೆಂಡಿನಲ್ಲಿ ಹೇಗೆ ಹಳ್ಳಿ ಮಟ್ಟದಲ್ಲೇ ಇಡೀ ರಾಷ್ಟ್ರದ ವಿದೇಶಾಂಗ ನೀತಿ ಕೂಡಾ ನಿರ್ಧರಿತವಾಗುತ್ತದೆ ಎಂಬುದನ್ನು ವಿವರಿಸುತ್ತ, ಅಲ್ಲಿನ ಪಂಚಾಯ್ತಿ (ಕ್ಯಾಂಟನ್‌) ಪದ್ಧತಿಯ ಗುಣ ವಿಶೇಷಗಳನ್ನು ಹಿರಿಯರು ಚರ್ಚಿಸುತ್ತ ಕೂತಾಗ, ಒಳಗೆ ಅಡುಗೆ ಮನೆಯಿಂದ ಎಂಥದೋ ಕಟುವಾದ ವಾಸನೆ ಬರತೊಡಗಿತ್ತು. ಬೆಣ್ಣೆ ಕಾಯಿಸುವ ಪರಿಮಳದೊಂದಿಗೆ ಕರಗಿದ ಪ್ಲಾಸ್ಟಿಕ್ಕಿನ ಕಮಟು ವಾಸನೆಯೂ ಸೇರಿ ಅವರ್ಣನೀಯ ಘಮಲು. ಎಲ್ಲರೂ ಮೂಗರಳಿಸಿ ‘ಮಮ್‌’ ಎಂದು ಖುಷಿಪಡುತ್ತ ಫಾಂಡ್ಯೂ ಪರಿಮಳ ಆಘ್ರಾಣಿಸುತ್ತ ಬಾಯಲ್ಲಿ ನಿರೂರಿಸಿಕೊಂಡು ಊಟದ ಆಹ್ವಾನಕ್ಕೆ ಕಾಯತೊಡಗಿದರು. + +ಊಟದ ಮೇಜಿಗೆ ಬಂದ ತಟ್ಟೆಗಳ ಮಧ್ಯೆ ಪುಟ್ಟ ಪುಟ್ಟ ಒಂದೊಂದು ಕಪ್‌ ಇತ್ತು. ದಪ್ಪ ಅಂಚಿನ ಆ ಪಿಂಗಾಣಿ ಕಪ್ಪಿನಲ್ಲಿ ಎಂಥದೊ ಇತ್ತು. ಕಪ್ಪಿನ ಪಕ್ಕದಲ್ಲಿ ಕಡ್ಡಿಯಂಥ ಇನ್ನೇನನ್ನೋ ಇಟ್ಟಿದ್ದರು. ಊಟಕ್ಕೆ ಮತ್ತೇನೂ ಇರಲಿಲ್ಲ. ಇತರರು ಹೇಗೆ ಆರಂಭಿಸುತ್ತಾರೆಂದು ಕುತೂಹಲದಿಂದ ನಾನು ಕಾಯುತ್ತ ಕೂತೆ. ಎಂದಿನಂತೆ ವೈನಿನ ಸ್ವಸ್ತಿಪಾನ ಮುಗಿದ ನಂತರ ಎಲ್ಲರೂ ಕಡ್ಡಿಯನ್ನು ಕಪ್ಪಿನಲ್ಲಿ ಅದ್ದಿ ಎತ್ತಿದರು. ನಾನೂ ಯತ್ನಿಸಿದೆ. + +ಕಡ್ಡಿಯನ್ನು ಎತ್ತಿದಾಗ ರಬ್ಬರಿನ ರಸದಂತೆ ಅಂಟು ದ್ರವವೊಂದು ದಾರದಂತೆ ಬಂತು. ಅದನ್ನು ಹಾಗೆಯೇ ಅದೇ ಕಡ್ಡಿಗೆ ಸುತ್ತಿ ಸುತ್ತಿ ಅವರೆಲ್ಲನಾಜೂಕಾಗಿ ಬಾಯಿಗೆ ಇಡುತ್ತಿದ್ದರು. ನಾನು ಅದನ್ನೆತ್ತಿ ಬಾಯಿಗೆ ಇಡಲು ಹೊರಟರೆ, ದಾರ ಕೊನೆಗೂ ತುಂಡಾಗದೆ ತುಟಿ, ಗಲ್ಲ, ಎದೆ, ಮೇಜು, ತಟ್ಟೆ, ಕಪ್ಪಿನವರೆಗೂ ಮುಂದುವರೆಯುತ್ತಿತ್ತು. ದಾರವನ್ನು ಕತ್ತರಿಸಲೆಂದು ಇನ್ನೊಂದು ಕಡ್ಡಿಯನ್ನು ಕಪ್ಪಿನ ಅಂಚಿಗೆ ಒತ್ತಿ ಎತ್ತಿದರೆ ಇನ್ನೂ ಫಜೀತಿ : ದಾರ ಈಗ ಡಬಲ್‌ ಎಳೆಗಳ ಸರವಾಗಿ ಬರುತ್ತಿತ್ತು. ಹಾಗೂ ಹೀಗೂ ಬಾಗಿ ಬಾಯಿಯನ್ನೇ ತಟ್ಟೆಯವರೆಗೆ ಒಯ್ದು ತುಟಿಯನ್ನು ತಗಲಿಸಿದರೋ, ಹತ್ತಿಪ್ಪತ್ತು ಎಳೆಗಳು ಒಟ್ಟಾಗಿ ಹೊರಬರುತ್ತ, ತಲೆ ಎತ್ತಿದರೆ ಮುಖ, ಮೈ ಕೈ, ಕುತ್ತಿಗೆ, ಟೈಗೆಲ್ಲ ದಾರಗಳು. + +ಮತ್ಸ್ಯ, ಕೂರ್ಮ, ವರಾಹಗಳನ್ನೆಲ್ಲ ಡೈನಿಂಗ್‌ ಟೇಬಲ್ಲುಗಳ ಮೇಲೆ ನೋಡಿದ್ದ ನಾಗೇಶ ಹೆಗಡೆ ಈಗ ಸ್ವತಃ ನಾರಸಿಂಹ ಅವತಾರ ತಳೆದಿದ್ದ. ಕಪ್ಪಿನಲ್ಲಿದ್ದ ಮೆಲ್ಟೆಡ್‌ ಚೀಸ್‌ (ಕರಗಿದ ಗಿಣ್ಣ) ಸುತ್ತೆಲ್ಲ ದಾರದ ಎಳೆಗಳಾಗಿ ಕಪ್ಪು ಖಾಲಿಯಾಗಿತ್ತು. ಇತರರು ಕಪ್ಪಿನ ತಳಭಾಗವನ್ನು ಆಗಲೇ ಕಡ್ಡಿಯಿಂದ ಕೆರೆಸಿ ಕೆರೆಸಿ ಮೇಲೆತ್ತಿ ನೆಕ್ಕುತ್ತಿದ್ದರು. + +ನೋಡಲು ಪಿಂಗಾಣಿಯಂತೆ ಕಾಣುವ ಆ ಪುಟ್ಟ ಕಪ್ಪಿನ ಅಂಚು ಕೊಂಚ ಅಂಕುಡೊಂಕಾಗಿ ವಿಶಿಷ್ಟ ರೂಪದ್ದಾಗಿತ್ತು. ‘ಏನಿದು ?’ ಕೇಳಿದೆ. ‘ಓ ಅದಾ? ವಿಶೇಷ ಅತಿಥಿಗಳು ಬಂದಾಗ, ನಾವೇ ತಯಾರಿಸುವ ಅಪರೂಪದ ಐಟಮ್‌ ಅದು. ಎಳೆಗರುವಿನ ಮೊಣಕಾಲಿನ ಮೂಳೆಯನ್ನು ಉಂಗುರದಂತೆ ಕಲಾತ್ಮಕವಾಗಿ ಕತ್ತರಿಸಿ ತಯಾರಿಸಿದ್ದು’ ಎಂದು ಅತಿಥೇಯ ಪಟೇಲ, ರಿಯೂಡಿ ಅಲ್ಟೊನಿಕೊ ವಿವರಿಸಿದ. + +ನನಗೆ ಉಸಿರು ಕಟ್ಟಿತ್ತು. ಇವೊತ್ತಿನ ಮೇಜುವಾನಿಗೆಂದೇ ಒಂದು ಎಳೆಗರುವನ್ನು ಕತ್ತರಿಸಿ, ಅದರ ಮೊಣಕಾಲುಗಳನ್ನು ಪುಟ್ಟ ಪಾತ್ರೆಯನ್ನಾಗಿ ಮಾಡಿ, ಅದನ್ನೇ ಬೇಯಿಸಿ, ಅದರೂಳಕ್ಕೆ ಮೆಲ್ಟೆಡ್‌ ಚೀಸ್‌ ತುಂಬಿಸಿ, ಅತ್ಯಂತ ಶ್ರಮದಿಂದ ಅತಿಥಿಗಳಿಗೆ ಉಣ ಬಡಿಸಿದ ಈ ಗ್ರಾಮೀಣ ಪ್ರಜೆಗಳ ಬಗ್ಗೆ ಹೃದಯ ತುಂಬಿ ಬರಬೇಕಿತ್ತು. ಆದರೆ ನನಗೆ ಹೊಟ್ಟೆ ತೊಳೆಸಿ ಬರುವಂತಾಗಿತ್ತು. + +‘ತೊಳೆದು ಪಾರ್ಸೆಲ್‌ ಮಾಡಿ ಕೊಡಲೆ? ಅನೇಕರು ಈ ಉಂಗುರವನ್ನು ಫಾನಾಸ್‌ ಹಳ್ಳಿಯ ಸ್ಮರಣಾರ್ಥ ತಮ್ಮ ಜತೆಗೆ ಒಯ್ಯುತ್ತಾರೆ’ ಎಂದು ಪಂಚಾಯ್ತಿ ಅಧ್ಯಕ್ಷ ಕೇಳಿದ.ಗೋಪೂಜೆಯ ದಿನ ಎಳೆಗರುವಿನ ಕಾಲಿಗೆ ಗೆಜ್ಜೆ ಕಟ್ಟಿ ಅದರ ಮುಂಗಾಲುಗಳಿಗೆ ಗೋಟಡಿಕೆಯ ಹೂ ಮಾಲೆ ಕಟ್ಟಿ ಸಿಂಗರಿಸಿ ಖುಷಿ ಪಡುತ್ತಿದ್ದ ಬಾಲ್ಯದ ದಿನಗಳು ನೆನಪಾದವು. + +ಸ್ವಿಸ್‌ ಜನರೆಂದರೆ ಕೊಡುಗೈ ದೊರೆಗಳು. ಹಿತ್ಸ್-ಹುಉಸ್‌ ಹಳ್ಳಿಯಲ್ಲಿ ‘ಮೊಣಕಾಲುಂಗರ’ವನ್ನು ದಾನವಾಗಿ ಪಡೆದ ನಾನು, ಝೂರಿಕ್‌ ನಗರಕ್ಕೆ ಮರಳಿ ಅಲ್ಲಿನ ಪೀಟರ್‌ ಮುಲ್ಲರ್‌ ಎಂಬವರ ಮನೆಗೆ ಅತಿಥಿಯಾಗಿ ಹೋದೆ. ಆತ ಕಟ್ಟಾ ಪರಿಸರವಾದಿ ಹಾಗೂ ಭಾರತದ ಅಭಿಮಾನಿ. ನಮ್ಮ ಹಳ್ಳಿಗಳಲ್ಲಿ ಗೋಬರ್‌ ಗ್ಯಾಸ್‌ ಪ್ಲಾಂಟ್‌ನ ಜಾದೂಶಕ್ತಿಯ ಬಗ್ಗೆ ಅಪಾರ ಕುತೂಹಲ ತಾಳಿದ್ದ. ಅದರ ವಿವರಗಳನ್ನೆಲ್ಲ ಕೇಳಿ ತಿಳಿದ ಆತ ‘ಪ್ರತಿ ಹಳ್ಳಿಯಲ್ಲೂ ಯಾಕೆ ಅದನ್ನು ಸ್ಥಾಪಿಸಬಾರದು?’ ಕೇಳಿದ. ಒಂದೊಂದಕ್ಕೆ ಸುಮಾರು ಒಂದು ಸಾವಿರ ಸ್ವಿಸ್‌ ಫ್ರಾಂಕ್‌ ಆದೀತೆಂದೂ ಅಷ್ಟು ಹಣ ನಮ್ಮ ಹಳ್ಳಿಗರ ಬಳಿ ಇಲ್ಲವೆಂದೂ ಹೆಳಿದೆ. + +‘ಓ! ಅಷ್ಟೇನಾ ? ಒಂದು ಸಾವಿರ ಫ್ರಾಂಕ್‌ ? ತಗೋ ನಾನು ಐದು ಗ್ಯಾಸ್‌ ಪ್ಲಾಂಟ್‌ಗೆ ಹಣ ಈಗಲೇ ಕೊಡುತ್ತೇನೆ’ ಎಂದು ಚೆಕ್‌ಬುಕ್‌ ತರಲು ಎದ್ದು ಹೊರಟ. ನಾನು ತಡೆದೆ. ‘ಮೊದಲನೆಯದಾಗಿ ಸ್ವಿಸ್‌ ಬ್ಯಾಂಕ್‌ ಎಂದರೆ ನನಗೆ ಅಲರ್ಜಿ. ಎರಡನೆಯದಾಗಿ, ಹೀಗೆ ನಗದು ಹಣವನ್ನು ಹಳ್ಳಿಯ ಜನಕ್ಕೆ ಕೊಟ್ಟರೆ ಅವರು ಅಂದೇ ಮಗಳ ವರದಕ್ಷಿಣೆಗೆಂದು ಖರ್ಚು ಮಾಡಿಬಿಡುತ್ತಾರೆ. ಮೂರನೆಯದಾಗಿ ಇಷ್ಟೆಲ್ಲ ಹಣ ಒಯ್ದರೆ ಇನ್‌ಕಮ್‌ ಟ್ಯಾಕ್ಸಿನವರು ನನ್ನ ಮನೆಗೆ ದಾಳಿ ಮಾಡುತ್ತಾರೆ’ ಎಂದು ಹೇಳಿ ಹಣ ನಿರಾಕರಿಸಿದೆ. + +ಅಡುಗೆ ಅನಿಲದ ಮಾತುಕತೆ ನಡೆಸುತ್ತಲೇ ಬ್ರಹ್ಮಚಾರಿ ಪೀಟರ್‌ ಅಡುಗೆ ಮಾಡಿ ಮುಗಿಸಿದ್ದ. ʼನೀನು ಬೀಫ್‌ (ಗೋಮಾಂಸ) ತಿನ್ನುವುದಿಲ್ಲವೆಂದೇ ವಿಶೇಷ ಅಡುಗೆ ಮಾಡ್ದಿದೇನೆʼ ಎಂದ. ತುತ್ತು ಎತ್ತಿ ಬಾಯಿಗೆ ಇಡುವವರೆಗೂ ಅಡುಗೆಯ ಗುಟ್ಟು ಬಿಟ್ಟಿರಲಿಲ್ಲ. + +ಅದು ಮೌಂಟನ್‌ ಗೋಟ್‌. ಅಂದರೆ ಗುಡ್ಡದ ಮೇಕೆ ಎಂಬ ವನ್ಯಪ್ರಾಣಿ. ಆಲ್ಫ್ಸ್‌ ಪರ್ವತಗಳ ಇಳಿಜಾರಿನಲ್ಲಿ ಕಡಿದಾದ ಬೆಟ್ಟಗಳಲ್ಲಿ ಇವು ಮೇಯುತ್ತವೆ. ವರ್ಷಕ್ಕೆ ಎರಡು ತಿಂಗಳ ಕಾಲ, ಕೆಲವರಿಗೆ ಮಾತ್ರ ಕೆಲವು ಮೇಕೆಗಳನ್ನು ಬೇಟೆಯಾಡುವ ‘ಪರ್ಮಿಟ್‌’ ಸಿಗುತ್ತವೆ. ಈ ಪರ್ಮಿಟ್ಟನ್ನು ದಕ್ಕಿಸುವುದೇ ಭಾರೀ ಸಾಹಸದ ಕೆಲಸ (ಸ್ವಿಸ್‌ ಜನ ಏನೆಲ್ಲ ತಿನ್ನುತ್ತಾರೆ, ಆದರೆ ಲಂಚ ಮಾತ್ರ ತಿನ್ನುವುದಿಲ್ಲ). ಪರ್ಮಿಟ್‌ ಸಿಕ್ಕ ಮೇಲೆ ಈ ಚಾಣಾಕ್ಷ ಪ್ರಾಣಿಯನ್ನು ಬೇಟೆಯಾಡುವುದು ಇನ್ನೂ ದೊಡ್ಡ ಸಾಹಸದ ಕೆಲಸ. ಅದರ ಮಾಂಸ ತುಂಬಾ ರುಚಿಕಟ್ಟೆಂಬ ಪ್ರತೀತಿ ಇರುವುದರಿಂದ ಮನೆಗೆ ಊಟಕ್ಕೆ ಬರುವ ಅತಿಥಿಗಳನ್ನು ನಿಯಂತ್ರಿಸುವುದು ಮತ್ತೂ ದೊಡ್ಡ ಸಾಹಸದ ಕೆಲಸ. + +ಊಟ ಮುಗಿದ ಮೇಲೆ ಪೀಟರ್‌ ಎಂಥದೋ ಸುರುಳಿ ಸುತ್ತಿ ತಂದ. ‘ಇದು ನನ್ನ ಪುಟ್ಟ ಕಾಣಿಕೆ, ನಿರಾಕರಿಸಬಾರದು; ಇದನ್ನು ಬಿಟ್ಟರೆ ಬೇರೆ ಯಾವ ಅಮೂಲ್ಯ ವಸ್ತುವೂ ನನ್ನಲ್ಲಿಲ್ಲ’ ಎಂದ. + +ತೆರೆದು ನೋಡಿದರೆ ಅದೇ ಕಾಡುಕುರಿಯ ಚರ್ಮ; ಮಂದ ಬೆಳಕಿನಲ್ಲಿ ಅದರ ನವಿರಾದ ಉಣ್ಣೆ ಮಿರಿ ಮಿರಿ ಮಿಂಚುತ್ತಿತ್ತು. ‘ಮೈ ಗಾಡ್‌!’ ಎಂದೆ.‘ಇಷ್ಟವಾಯಿತು ತಾನೆ ? ಇನ್ನೂ ಚೆನ್ನಾಗಿ ಪ್ಯಾಕ್‌ ಮಾಡಿ ಕೊಡುತ್ತೇನೆ’ ಎಂದು ಉತ್ಸಾಹದಿಂದ ಪೀಟರ್‌ ಹಗ್ಗ ತರಲು ಹೊರಟ. ನಾನು ತಡೆದೆ. ‘ಭಾರತಕ್ಕೆ ಇದನ್ನು ಒಯ್ದರೆ ವನ್ಯ ರಕ್ಷಣಾ ಕಾನೂನಿನ ಪ್ರಕಾರ ನಾನು ಜೈಲಿಗೆ ಹೋಗುತ್ತೇನೆ. ಅವರ ಕಣ್ಣು ತಪ್ಪಿಸಿ ಇದನ್ನು ಊರಿಗೆ ಒಯ್ದರೂ ನಮ್ಮಪ್ಪ ನನ್ನದೇ ಚರ್ಮ ಸುಲಿದು ಬಿಡುತ್ತಾರೆ’ ಎಂದು ಪೀಟರ್‌ನ ಉಡುಗೊರೆಯನ್ನು ಆದಷ್ಟು ನಯವಾಗಿ ನಿರಾಕರಿಸಿ ಕೈ ತೊಳೆಯಲೆಂದು ವಾಶ್‌ಬೇಸಿನ್‌ಗೆ ಹೋದೆ. + +ವಾಶ್‌ಬೇಸಿನ್ನಿನಲ್ಲಿ ಕೈ ತೊಳೆಯುವಾಗ ಅದೇ ದೇಶದ ಗಾಸ್ಗೆನ್‌ ಪಟ್ಟಣದಲ್ಲಿನ ಪರಮಾಣು ಸ್ಥಾವರದ ಕೆಫೆಟೇರಿಯಾದಲ್ಲಿ ಕಂಡ ವಾಶ್‌ಬೇಸಿನ್‌ ನೆನಪಾಗುತ್ತದೆ. ಅಲ್ಲಿನ ಎಂದೂ ಮರೆಯಲಾಗದ ಊಟ ನೆನಪಾಗುತ್ತದೆ. + +ಸ್ವಿತ್ಸರ್ಲೆಂಡಿನ ಏಕೈಕ ಪರಮಾಣು ಸ್ಥಾವರದ ಕೆಫೆಟೇರಿಯಾದಲ್ಲಿ ವಿಶೇಷ ಅತಿಥಿಗಳಿಗೆ ವಿಶೇಷ ಊಟದ ಏರ್ಪಾಡು ಮಾಡುತ್ತಾರೆ. ನಾಲ್ಕು ಗಂಟೆಗಳ ಕಾಲ ನನಗೆ ಇಡೀ ಪರಮಾಣು ಸ್ಥಾವರನ್ನು ತೋರಿಸಿ, ನನಗೆ ಅವರೇ ತೊಡಿಸಿದ್ದ ಬೂಟು, ಕೋಟು, ಹ್ಯಾಟು, ಮುಖವಾಡ ಎಲ್ಲ ಕಳಚಿ ತೆಗೆಸಿ, ಮತ್ತೆ ಮನುಷ್ಯನನ್ನಾಗಿ ಮಾಡಿ, ನಾಲ್ಕು ಅಧಿಕಾರಿಗಳು ಊಟಕ್ಕೆ ಕರೆದೊಯ್ದರು. ಊಟಕ್ಕೆ ಮುಂಚೆ ಕೈ ತೊಳೆಯಬೇಕು. ಅದೂ ಪರಮಾಣು ಕೊಳೆಯ ಲವಲೇಶವೂ ಇಲ್ಲದಂತೆ. + +ಆದರೆ ವಾಶ್‌ಬೇಸಿನ್‌ ಬಳಿ ಹೋದರೆ ನಲ್ಲಿಗೆ ‘ಕಿವಿ’ಯೇ ನಾಪತ್ತೆ! ಕಕ್ಕಾಬಿಕ್ಕಿಯಾಗಿ ನೋಡುತ್ತಿದ್ದ ನನಗೆ ಅಲ್ಲಿನ ಆಡಳಿತ ನಿರ್ದೇಶಕ ಶಾಂಕೆಲ್‌ ಹೇಳಿದರು: ‘ನಲ್ಲಿಗೆ ಕೈ ತಾಕಿಸಿದರೆ ನಮ್ಮ ಕೈಯ ಕೊಳೆ ನಲ್ಲಿಗೆ ತಾಗಬಹುದು. ಹಾಗಾಗಿ ಇಲ್ಲಿ ಬದಲೀ ಆಟೊಮ್ಯಾಟಿಕ್‌ ವ್ಯವಸ್ಥೆ ಇದೆ; ನಲ್ಲಿಯ ಎದುರು ಕೈ ಮುಂದು ಮಾಡಿ’ ಎಂದರು. ತಮ್ಮ ಬೇಸಿನ್‌ ಎದುರು ತಾನೂ ಕೈ ಚಾಚಿದರು. + +ನಲ್ಲಿಯಲ್ಲಿ ನೀರು ಬಂತು. ಮೊದಲು ಬಿಸಿ ನೀರು. ಆಮೇಲೆ ತಣ್ಣೀರು. ನಂತರ ಅದರ ವೇಗ ಕಮ್ಮಿಯಾಗಿ, ಸಾಬೂನು ದ್ರವ ಬಂತು. ಕೈ ತಿಕ್ಕಿ ನೊರೆ ತೊಳೆಯುತ್ತಿದ್ದಾಗ ಮತ್ತೆ ಬೆಚ್ಚಗಿನ ನೀರು. ಜತೆ ಜತೆಗೇ ಯೂವಿ ಕಿರಣಗಳೂ ಬರುತ್ತಿರಬೇಕು; ಮಂದ ನೀಲಿ ಬೆಳಕು ಬಂತು. ಇದು ಮುಗಿಯುತ್ತ ಬಂದಾಗ ಗ್ಲಿಸರಿನ್‌ ಬಂತು. ಇನ್ನು ಸ್ವಲ್ಪ ಹೊತ್ತು ಕೈ ಇಟ್ಟಿದ್ದರೆ ಅಲ್ಲೇ ಊಟದ ಮುಂಚಿನ ತೀರ್ಥವೂ, ನಂತರ ಊಟವೂ ಬಂದೀತೇ ಎಂದು ಯೋಚಿಸುವಾಗ ನೀರು ನಿಂತು, ಕೈ ಒಣಗಿಸುವ ಬಿಸಿಗಾಳಿ ಬಂತು. + +ಊಟದ ದುಂಡು ಮೇಜಿಗೆ ನಾವು ಐದೇ ಜನ. ಮೊದಲು ವೈನ್‌ ಬಂತು. ಅದು ಶಾಂಪೇನ್‌ ಇರಬೇಕು. ಎತ್ತರದ ಗ್ಲಾಸಿನಲ್ಲಿ ಒಂದೊಂದು ಗುಟುಕು ಮುಗಿಸಿದಾಗ ಚಿಕ್ಕ ತಟ್ಟೆಗಳಲ್ಲಿ ಬ್ರೆಡ್‌ ಮತ್ತು ಚೀಸ್‌ ಬಂತು. ಅದನ್ನು ತಂದಿಟ್ಟ ಭೂಪತಿ ಶಾಂಪೇನ್‌ ಗ್ಲಾಸನ್ನು (ಅದಿನ್ನೂ ಅರ್ಧ ಖಾಲಿಯಾಗಿರಲಿಲ್ಲ) ಎತ್ತಿ ಒಯ್ದು ಬಿಟ್ಟ. ‘ಮಹಾ ಕ್ರೂರಿ’ ಎಂದುಕೊಳ್ಳುವಾಗ, ಇನ್ನೊಬ್ಬ ಮತ್ತೊಂದು ಹಸಿರು ಬಾಟಲಿಯನ್ನು ಸುಂದರ ಪ್ಲೇಟಿನ ಮೇಲೆ ನಾಜೂಕಾಗಿ ನಿಲ್ಲಿಸಿಕೊಂಡು ಬಂದ. + +ಸರದಿಯಂತೆ ಎಲ್ಲ ನಾಲ್ಕೂ ಮಂದಿ ಎಳೇ ಶಿಶುವನ್ನು ಎತ್ತಿ ಹಿಡಿದು ನೋಡುವಂತೆ ಆ ಬಾಟಲಿಯನ್ನು ಕೈಗೆತ್ತಿ ನೋಡಿ, ಅದರ ಮೇಲೆ ಬರೆದಿದ್ದ ಜರ್ಮನ್‌ ಭಾಷೆಯ ಏನನ್ನೋ ಓದಿ ‘ಅಮ್‌!’ ಎಂದು ಹುಬ್ಬೇರಿಸಿ ಮತ್ತೊಬ್ಬನಿಗೆ ದಾಟಿಸುತ್ತ ಬಂದರು. ತಮ್ಮೆದುರು ಬಂದಿದ್ದು ಎಂಥ ಅಪರೂಪದ ವೈನ್‌ ಎಂದು ಎಲ್ಲರೂ ಹೀಗೆ ನೋಡುವ ಸಂಪ್ರದಾಯವನ್ನು ನಾನು ಆವರೆಗೆ ನಾಲ್ಕಾರು ಬಾರಿ ನೋಡಿದ್ದೆ. + +ನಂತರ ಬೇರಾಮಾಣಿ ಶಾಸ್ತ್ರೋಕ್ತವಾಗಿ ಬಾಟಲಿಯ ಮುಚ್ಚಳ ತೆರೆದ. ಮತ್ತೊಮ್ಮೆ ಎಲ್ಲರೂ ಶಾಸ್ತ್ರೋಕ್ತವಾಗಿ ಸರದಿಯಂತೆ ಆ ಬಾಟಲಿಯ ಮೂತಿಯನ್ನು ಮೂಗಿನ ಬಳಿ ಒಯ್ದು ‘ಆ ! ಮ್ಮ್‌ !’ ಎಂದು ಪರಿಮಳ ಆಘ್ರಾಣಿಸಿದರು. ಬೇರೊಂದು ಸೆಟ್‌ ಸುಂದರ ಗ್ಲಾಸುಗಳಲ್ಲಿ ಒಂದೊಂದು ಚಮಚೆಯಷ್ಟು ವೈನ್‌ ಸುರುವಿ ಬೇರಾ ಮಾಣಿ ಬ್ರೆಡ್‌ ಚೀಸ್‌ಗಳ ಪ್ಲೇಟನ್ನು ಎತ್ತಿ ಹೊರಟೇ ಹೋದ. ಎಲಾ ಇವನ ! + +ಈ ಬಾರಿ ಇನ್ನೊಂದಿಷ್ಟು ಪ್ಲೇಟ್‌ಗಳಲ್ಲಿ ಕೆನೆ (ಕ್ರೀಮ್‌) ಚಟ್ನಿ ಜೊತೆ ಚಿನ್ನದ ವರ್ಣದ ಟೋಸ್ಟ್‌ ಬಂದವು. ಜತೆಗೆ ಎಳೆ ನಿಂಬೆಯ ಎಲೆಯ ಮೇಲೆ ಕಟ್ಲೆಟ್‌ ಥರಾ ಇನ್ನೆಂಥದೋ ಇತ್ತು. ಮೀನು ಇರಬಹುದೆ ? + +ಈಗ ವೈನ್‌ ಗ್ಲಾಸನ್ನೆತ್ತಿ ‘ಟೋಸ್ಟ್‌’ ಮಾಡಿದ್ದಾಯಿತು. ಅಂದರೆ ಚೀಯರ್ಸ್‌ – ಸ್ವಸ್ತಿಪಾನ. ನನಗೆ ಜಠರಾಗ್ನಿ ಕೆರಳಿತ್ತು. ಆದರೆ ತಟ್ಟೆಯಲ್ಲಿ ಬರೀ ಒಂದು ಟೋಸ್ಟ್‌, ಒಂದು ಕಟ್ಲೆಟ್‌.. ಇಷ್ಟೇನಾ? + +ಯೋಚಿಸುವಷ್ಟರಲ್ಲಿ ಸೂಪ್‌ ಬಂತು. ಒಂದಿಬ್ಬರು ಸೂಪ್‌ ಬದಲು ಬಿಯರ್‌ ಬೇಕೆಂದರು. ಅದೂ ಬಂತು. + +ಸೂಪ್‌ ಸುರಿದು ಮುಗಿದ ಮೇಲೆ ಸಲಾಡ್‌ ಬಂತು. ಅಂದರೆ ಹಸಿರು ಎಲೆಗಳು, ಈರುಳ್ಳಿಯ ಚಿಗುರು, ಬ್ರೆಡ್‌ ತುಣುಕು, ಬೇಯಿಸಿದ ಮೊಟ್ಟೆಯ ಚೂರು ಇವೆಲ್ಲವುಗಳ ರಾಶಿಯ ಮೇಲೆ ಕೆನೆಯ ಬಿಳಿ ರಂಗೋಲಿ ಚಿತ್ತಾರ. + +ಈಗ ಜಠಾರಾಗ್ನಿಗೆ ತಂಪೆರಚಿದಂತಾಯಿತು. ಎಂದೋ ಖಾಲಿಯಾಗಿದ್ದ ಗ್ಲಾಸುಗಳಿಗೆ ಬಂತು, ಬೇಕೆಂದಷ್ಟು ವೈನ್‌ ಅಥವಾ ಬಿಯರ್‌. + +ಎಲ್ಲ ಮುಗಿಯಿತು. ಇನ್ನೇನು ಕೈ ಒರಸಿಕೊಳ್ಳಬೇಕು ಎನ್ನುವಷ್ಟರಲ್ಲಿ ದೊಡ್ಡ ಅಗಲವಾದ ತಟ್ಟೆಗಳಲ್ಲಿ ಬೀಫ್‌ (ನನಗೆ ಚಿಕನ್‌) ಜತೆಗೆ ಹದವಾಗಿ ಬೇಯಿಸಿದ ಅನ್ನ ಬಂತು. ಅರೆ, ಹೊಟ್ಟೆಯಲ್ಲಿ ಸ್ಥಳವೆಲ್ಲಿ? ಇದು ‘ಮೇಯ್ನ್‌ ಕೋರ್ಸ್‌’. ಬಿಡುವ ಹಾಗೂ ಇಲ್ಲ. ಈಗ ಅರ್ಥವಾಗಿತ್ತು – ಇತರ ನಾಲ್ವರು ಯಾಕೆ ಬ್ರೆಡ್ಡು ಸಲಾಡ್‌ಗಳನ್ನೆಲ್ಲ ಚೂರು ಪಾರು ತಿಂದು ಅರ್ಧಕ್ಕರ್ಧ ಹಾಗೇ ಬಿಡುತ್ತಿದ್ದರು ಅಂತ. + +ಇದನ್ನು ಮುಗಿಸಲು ನೆರವಾಗುವಂತೆ ಪ್ರತ್ಯೇಕ ಫ್ರೆಂಚ್‌ ವೈನ್‌ ಬಂತು. ಮತ್ತೆ ಎಲ್ಲರೂ ಸರದಿಯಂತೆ ಲೇಬಲ್‌ ನೋಡುತ್ತಾರೇನೋ ಎಂದುಕೊಂಡಿದ್ದೆ ಜರ್ಮನ್‌ ಭಾಷೆಯಲ್ಲಿ ಬೇರಾಮಾಣಿ ಎಲ್ಲ ವಿವರ ಕೊಟ್ಟನೆಂದು ಕಾಣುತ್ತದೆ. ಹಾಗಾಗಲಿಲ್ಲ. + +ನಾವು ಕೂತಿದ್ದು ಒಂದು, ಒಂದೂ ಕಾಲು ಗಂಟೆ ಆಗಿರಬಹುದು. ಆವರೆಗೆ ಒಬ್ಬೊಬ್ಬರ ಎದುರೂ ಎಂಟೋ ಹತ್ತೋ ಪ್ಲೇಟುಗಳು, ನಾಲ್ಕೋ ಐದೋ ಗ್ಲಾಸುಗಳೂ ಇದ್ದವು. ಒಳಗೂ ಹೌಸ್‌ಫುಲ್‌, ಊಟದ ಮೇಜೂ ಹೌಸ್‌ಫುಲ್‌. ಇಬ್ಬರು ಸಮವಸ್ತ್ರಧಾರಿಗಳು ಶಿಸ್ತಾಗಿ ಬಂದು ಎಲ್ಲರ ತಟ್ಟೆ ಲೋಟಗಳನ್ನು ಖಾಲಿ ಮಾಡಿದರು. + +ಈಗ ಡೆಸರ್ಟ್‌ (ಸಿಹಿ ತಿಂಡಿಯ) ಸರದಿ. ಕೆರಾಮೆಲ್‌ ಕಜ್ಜಾಯ; ಜತೆಗೆ ಅಗೋ! ಇನ್ನೊಂದು ಬಾಟಲಿ. ಈ ಬಾರಿ ವೈನಲ್ಲ, ವೋಡ್ಕಾ. + +ನನಗೆ ಆಟೊಮ್ಯಾಟಿಕ್‌ ವಾಶ್‌ಬೇಸಿನ್ನಿನ ನೆನಪಾಯಿತು. ಅಲ್ಲಿ ಒಮ್ಮೆ ನೀರು, ಒಮ್ಮೆ ಸೋಪು, ಒಮ್ಮೆ ತಣ್ಣೀರು, ಒಮ್ಮೆ ಕ್ರೀಮು, ಒಮ್ಮೆ ಬಿಸಿಗಾಳಿ ಬರುತ್ತಿದ್ದ ಮಾದರಿಯಲ್ಲೇ ಇಲ್ಲಿ ಊಟ ಬಡಿಸುವ ಕೆಲಸ ಸಾಗಿತ್ತು. ನನಗೆ ಈಗ ಗಾಳಿ ಬೇಕಾಗಿತ್ತು. ಅದಕ್ಕಿಂತ ಹೆಚ್ಚಾಗಿ ಒಂದು ಹಾಸಿಗೆ ಬೇಕಾಗಿತ್ತು. ವಿಮಾನದ ಊಟದ ನೆನಪಾಯಿತು. ಅಲ್ಲಿ ಉಂಡವರು ಹಾಗೇ ಕೂತಲ್ಲೇ ಒರಗಿ ನಿದ್ದೆ ಮಾಡಬಹುದು. + +ಪ್ರಧಾನ ಮಂತ್ರಿ ನರಸಿಂಹರಾಯರ ಜತೆ ಅವರ ‘ಏ-ವನ್‌’ ಉಡ್ಡಾಣದಲ್ಲಿ ರಿಯೋಕ್ಕೆ ಹೋಗುವಾಗ, ಬರುವಾಗ ಇಂಥದ್ದೇ ‘ಟೆನ್‌ ಕೋರ್ಸ್‌’ ಊಟ ಮಾಡುವ ಭಾಗ್ಯ ನಮಗೆ ಸಿಕ್ಕಿತ್ತು. (ಪ್ರಧಾನಿಗೆ ಮಾತ್ರ ಉಪ್ಪಿಲ್ಲದ ಹೆಸರು ಕಾಳು ಪಲ್ಲೆ ಮತ್ತು ಒಣ ರೊಟ್ಟಿಯ ವ್ಯವಸ್ಥೆ ಮಾಡಲು ವಿಶೇಷ ಅಡುಗೆ ಭಟ್ಟನ ನೇಮಕವಾಗಿತ್ತು). ಆದರೆ ವಿಮಾನಲ್ಲಿ ಪ್ಯಾಂಟು ಶರ್ಟಿನ ಬೇರಾಮಾಣಿಗಳಿರಲಿಲ್ಲ. ಅಥವಾ ಝೂರಿಕ್‌ನ ಸೆವಾಯ್‌ ಹೊಟೆಲ್‌ನಲ್ಲಿದ್ದಂತೆ ಸ್ಕರ್ಟ್‌ ತೊಟ್ಟ ಗಂಡು ಮಾಣಿಗಳಿರಲಿಲ್ಲ. ಇಲ್ಲಿ ಮಾಣಿಕ್ಯದಂಥ ಅಂಬರ್‌ ಇದ್ದಳು. + +ಮಿಸ್‌ ಅಂಬರ್‌ ಶಂಕರ್‌ ನಾನು ನೋಡಿದ ಗಗನ ಸಖಿಯರಲ್ಲೇ ಅತ್ಯಂತ ರೂಪವತಿ (ನನ್ನ ಪತ್ನಿಯ ಅಭಿಪ್ರಾಯ ಬೇರೆ, ಆ ಮಾತು ಬೇರೆ); Ambar (ಆಕಾಶ) ಅನ್ನಿ Ember (ಬೆಚ್ಚನ್ನ, ಬೆಂಕಿ) ಅನ್ನಿ Amber (ತೈಲಸ್ಫಟಿಕ) ಅನ್ನಿ ಹೇಗೆ ಕರೆವರೂ ಅವಳು ಮಲ್ಲಿಗೆಯ ನಗೆ ಸೂಸಿ, ಹಂಸ ನಡಿಗೆಯಲ್ಲಿ ಬಳುಕಿ ಬರುವವಳು. (ವಿಮಾನ ಕೊಂಚ ಹೊಯ್ದಾಡುತ್ತಿದ್ದರೆ ಎಲ್ಲ ಸಖಿಯರ ನಡಿಗೆಯೂ ಹಂಸ ನಡಿಗೆಯಾಗುತ್ತದೆ; ಜೋರಾಗಿ ಹೊಯ್ದಾಡಿದರೆ ಪೆಂಗ್ವಿನ್‌ ನಡಿಗೆಯಾಗುತ್ತದೆ.) + +ನನ್ನ ಪಕ್ಕದ ಸೀಟಿನ ಪಯಣಿಗ, ಪಿಟಿಐನ ದಢೂತಿ ಲಾಲ್‌ ಮೊದಲ ಊಟದಲ್ಲಿ ಎಲ್ಲವನ್ನೂ ಗಬಗಬ ಮುಗಿಸಿ, ತಟ್ಟೆಯ ಮೂಲೆಯಲ್ಲಿ ಪಪಾಯಾ ಬೀಜದ ಮುದ್ದೆಯಂತಿದ್ದ ‘ಕೇವಿಯರ್‌’ ಎಂಬ ಉಪ್ಪಿನಕಾಯಿಯನ್ನು ಮಾತ್ರ ಹಾಗೇ ಬಿಟ್ಟಿದ್ದ. ‘ಯಾಕೆ ಬಿಟ್ಟೆ?’ ಕೇಳಿದೆ. ‘ಅದು ಎಂಥದೋ ಗೊತ್ತಿಲ್ಲ’ ಅಂದ. ಆತ ಜೇಮ್ಸ್‌ಬಾಂಡ್‌ನ ‘ಗೋಲ್ಡ್‌ ಫಿಂಗರ್‌’ ಚಿತ್ರ ನೋಡಿರಲಿಲ್ಲವೆಂದು ಕಾಣುತ್ತದೆ. ಅದರಲ್ಲಿ ಜೇಮ್ಸ್ ಬಾಂಡ್ ಯಾವುದೋ ಕೋಟ್ಯಧೀಶನ ಮನೆಗೆ ರಾತ್ರಿ ವೇಳೆ ಕಳ್ಳನಂತೆ ನುಗ್ಗುತ್ತಾನೆ. ತಿಜೋರಿ ತೆಗೆದು, ಅದರಲ್ಲಿನ ನೋಟಿನ ಕಂತೆ, ವಜ್ರವೈಢೂರ್ಯ ಎಲ್ಲವನ್ನೂ ಕಡೆಗಣಿಸಿ ತನಗೆ ಬೇಕಿದ್ದ ರಹಸ್ಯ ಸುಳಿವಿಗಾಗಿ ಹುಡುಕುತ್ತಾನೆ, ಕೊನೆಗೆ ಫ್ರಿಜ್‌ ಬಾಗಿಲು ತೆಗೆದು, ಅಲ್ಲೂ ಏನೇನೋ ಹುಡುಕಿ ನಿರಾಶನಾಗಿ ಅಲ್ಲಿನ ಒಂದು ಪಾತ್ರೆಯಲ್ಲಿ ಏನನ್ನೋ ನೋಡಿ ‘ಆಹ್‌ ಕೇವಿಯರ್‌ !’ ಎನ್ನುತ್ತ ಒಂದೇ ಒಂದು ಚಮಚದಷ್ಟನ್ನ ಎತ್ತಿ ಬಾಯಿ ಚಪ್ಪರಿಸ್ತುತ ಮತ್ತೆ ತನ್ನ ಶೋಧ ಮುಂದುವರೆಸುತ್ತಾನೆ. + +‘ಕೇವಿಯರ್‌’ ಎಂಬುದು ಭೂಮಧ್ಯ ಸಮುದ್ರದಲ್ಲಿ ಹೆಚ್ಚಾಗಿ ಕಾಣಸಿಗುವ ಸ್ಟರ್ಜನ್‌ ಎಂಬ ಮೀನಿನ ಮೊಟ್ಟೆ. ಭಾರೀ ಬೆಲೆ ಬಾಳುವ ಇದನ್ನು ಕಷ್ಟಪಟ್ಟು ಸಂಗ್ರಹಿಸಿ ಉಪ್ಪಿನಲ್ಲಿಟ್ಟು ಡಬ್ಬೀಕರಿಸುತ್ತಾರೆ. ಮೊದಲ ಬಾರಿ ಇದನ್ನು ತಿಂದರೆ, ಕೊಂಚ ಲೋಳೆಯುಳ್ಳ ಇದು ಅಷ್ಟೇನೂ ಸವಿ ಎನಿಸುವುದಿಲ್ಲ. ಆದರೆ ಲಂಡನ್‌ನಲ್ಲಿ ನಾಲ್ಕು ಗಗನಸಖಿಯರ ಜೊತೆಗೆ ಒಂದೇ ಮನೆಯಲ್ಲಿ ಮೂರು ತಿಂಗಳ ಕಾಲ ವಾಸ ಮಾಡಿದ ಏಕೈಕ ಗಂಡು ಎನ್ನಿಸಿಕೊಂಡ ನನಗೆ, ಹುಡುಗಿಯರು ತಾವು ಕೊಡುವ ಎಲ್ಲ ಕಷ್ಟ ಕೀಟಲೆಗಳನ್ನೂ ನಗುನಗುತ್ತಲೇ ನುಂಗಿಕೊಳ್ಳುವುದನ್ನು ಕಲಿಸಿದ್ದರು. ಜತೆಗೆ ಕೇವಿಯರ್‌ ಸ್ವಾದವನ್ನೂ. + +‘ನಾಗೇಶ್‌ ! ಇವೊತ್ತು ನಿಮಗೆ ಡಿನ್ನರ್‌ ಇಲ್ಲ’ ಎಂದು ಕತ್ತು ಕೊಂಕಿಸುತ್ತ ಬಂದ ಅಂಬರ್‌ ಕಿಲಕಿಲ ನಕ್ಕಳು. + +‘ಯಾಕೆ ಮಿಸ್‌ ? ನಾನೇನು ತಪ್ಪು ಮಾಡಿದೆ ?’ ಕೇಳಿದೆ. + +‘ಮತ್ತೆ, ಕೇವಿಯರ್‌ ಎಷ್ಟು ಸ್ವಾದಿಷ್ಟ ಅನ್ನೋದನ್ನ ವಿಮಾನದಲ್ಲಿದ್ದ ಎಲ್ಲರಿಗೂ ಹೇಳಿಬಿಟ್ರಾ ? ನಿಮ್ಮ ಪತ್ರಕರ್ತ ಸಹೋದ್ಯೋಗಿಗಳು ಒಬ್ಬೊಬ್ಬರಾಗಿ ಪ್ಯಾಂಟ್ರಿಗೆ ಬಂದು ಒಂದೊಂದೇ ಚಮಚ ರುಚಿ ನೋಡಿ ಎಲ್ಲವನ್ನೂ ಖಾಲಿ ಮಾಡಿಬಿಟ್ಟಿದ್ದಾರೆ. ನಿಮಗೆ ಶಿಕ್ಷೆ ಆಗಲೇಬೇಕು. ನೋ ಡಿನ್ನರ್‌ ಫಾರ್‌ ಯೂ !’ ಎಂದು ಹುಸಿಕೋಪ ನಟಿಸಿದಳು. + + + +ನಾನು ಕಿಸೆಯಿಂದ ಒಂದು ಪೆನ್‌ ತೆಗೆದೆ. ‘ನೀನು ಊಟ ಕೊಡದಿದ್ದರೆ ಇದನ್ನೇ ತಿಂದು ಬದುಕಿಕೊಳ್ಳುತ್ತೇನೆ!’ ಎಂದೆ. ರಿಯೋದಲ್ಲಿ ನೆನಪಿನ ಕಾಣಿಕೆಯಾಗಿ ಪಡೆದ ಜೋಳದ ಹಿಟ್ಟಿನಿಂದ ತಯಾರಾದ ಬಯೊಡಿಗ್ರೇಡಬಲ್‌ ಪೆನ್ ಅದು.ಪತ್ರಕರ್ತನ ಹೊಟ್ಟೆ ತುಂಬಿಸುವುದೇ ಪೆನ್ನು ತಾನೆ ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_249.txt b/Kenda Sampige/article_249.txt new file mode 100644 index 0000000000000000000000000000000000000000..51b2b183aca73118e6b1e881926c5f59d88bf40f --- /dev/null +++ b/Kenda Sampige/article_249.txt @@ -0,0 +1,37 @@ +ಗಾಂಧಿ ಎಂಬ ಕಾಡುವ ನೆನಪನ್ನೇ ಕೇಂದ್ರವಾಗಿರಿಸಿಕೊಂಡ ತಮಿಳಿನ ಹಲವಾರು ಕತೆಗಳಲ್ಲಿ ಹತ್ತು ಕತೆಗಳನ್ನು ಆಯ್ದು ಶ್ರೀ ನಲ್ಲತಂಬಿಯವರು ನಮ್ಮ ಕೈಯಲ್ಲಿ ಇಟ್ಟಿದ್ದಾರೆ. + +ಗಾಂಧಿ ಕುರಿತ ನೆನಪು ಮತ್ತು ಗಾಂಧಿ ಪ್ರಜ್ಞೆ ಎರಡೂ ಹಾಸುಹೊಕ್ಕಾಗಿರುವ ಈ ಕತೆಗಳು ಇಂದು ನಾವು ಎದುರಿಸಬೇಕಾದ ಗಾಂಧಿಯನ್ನು ನಮ್ಮ ಮುಂದೆ ಕಡೆದು ನಿಲ್ಲಿಸುತ್ತವೆ. ಈ ಹಂದರವು ಇಲ್ಲಿನ ಕತೆಗಳ ವಸ್ತು ಮತ್ತು ಶೈಲಿಗಳೆರಡನ್ನೂ ರೂಪಿಸಿವೆ. + +(ಕೆ. ನಲ್ಲತಂಬಿ) + +ತಮಿಳಿನ ಪ್ರಜ್ಞೆಯು ʼಗಾಂಧಿʼ ಎಂಬ ಒಂದು ʼಕಾಲದ ಘಟನೆಗೆʼ ಸ್ಪಂದಿಸಿದ ರೀತಿಯನ್ನು ಈ ಕತೆಗಳಲ್ಲಿ ಕಾಣಬಹುದಾದರೂ, ಅದು ತಮಿಳಿಗೇ ಪ್ರತ್ಯೇಕವಾದದ್ದಲ್ಲ. ಈ ದೇಶದ ಎಲ್ಲ ದೇಶ ಭಾಷೆಗಳನ್ನೂ ಗಾಂಧಿ ಕಾಲಕಾಲಕ್ಕೆ ಕಾಡಿದ್ದಾರೆ. ಗಾಂಧಿ ಜೀವಂತ ಇದ್ದಾಗ ಅವರ ಪ್ರಭಾವಕ್ಕೆ ಒಳಗಾಗಿ ಆದ್ಯಂತ ಬದಲಾದ ಸಾವಿರಾರು ವ್ಯಕ್ತಿಗಳು ದೇಶದ ಉದ್ದಗಲಕ್ಕೂ ಹರಡಿಕೊಂಡಿರುವ ಪರಿ ಅಚ್ಚರಿಯ ಸಂಗತಿ. ಗಾಂಧಿ ತೀರಿಕೊಂಡ ಮೇಲೆ ಅವರು ಕಾಡಿದ ಬಗೆ ಇನ್ನೊಂದು ಬಗೆಯದು. ಅಲ್ಲಿ ಒಂದು ಪಾಪಪ್ರಜ್ಞೆ ಇದೆ, ಒಂದು ಆರ್ತತೆ ಇದೆ, ಆಳವಾದ ವಿಷಾದವೂ ಇದೆ. ನೈತಿಕ ಲಂಗರಾಗಿ ಮತ್ತು ಕೈಮರವಾಗಿ ಗಾಂಧಿ ಕಾಡಿರುವುದು ವಿಸ್ಮಯ ತರುತ್ತದೆ. ಬಹುತೇಕ ಸಂವೇದನಾಶೀಲರು ಗಾಂಧಿಯ ನೈತಿಕ ಹುಡುಕಾಟ, ಆಳವಾದ ಸಂಕಟ, ನೋವುಗಳ ಸುತ್ತ ಭ್ರಮಣ ನಡೆಸಿದ್ದಾರೆ. ಈ ಕತೆಗಳಲ್ಲಿ ಈ ಹುಡುಕಾಟದ ಕೆಲವು ಮಜಲುಗಳನ್ನು ಕಾಣಬಹುದು. ಗಾಂಧಿಯ ಕಾಡುವ ನೆನಪು ಮತ್ತು ಅದು ಉಳಿಸಿಹೋದ ಪ್ರಜ್ಞೆಯೇ ಥೀಮ್‌ ಆಗಿರುವ ಈ ಕತೆಗಳಲ್ಲಿ ಮೂರು ಸ್ಪಷ್ಠ ಆಯಾಮಗಳಿವೆ. + +ಗಾಂಧಿಯ ಆಶ್ರಮದಲ್ಲಿ ಜರುಗುವ ಗಾಂಧಿಯೇ ಕೇಂದ್ರಪಾತ್ರವಾದ ಅನುಸಂಧಾನವನ್ನು ಬಿಡಿಸಿಡುವ ಹವಣಿಕೆಯ ಕತೆಗಳು (ನಂತರ ಒಂದು ರಾತ್ರಿ ಮತ್ತು ನೀರೂ ಬೆಂಕಿಯೂ). ಗಾಂಧಿಯ ಅನುಯಾಯಿಗಳೊಂದಿಗೆ ನಡೆಸುವ ಆತ್ಮಾನುಸಂಧಾನದ ಮೂಲಕ ಹೆಣೆಯಲಾದ ಕತೆಗಳು (ಗಾಂಧಿಯೊಂದಿಗೆ ಮಾತಾಡುವೆ; ಆಲದ ಮರದಲ್ಲಿ ಒಂದು ಹಕ್ಕಿ; ಮತ್ತು ಉಪವಾಸ ಸತ್ಯಾಗ್ರಹ). ಮೂರನೆಯದು ಸ್ವಪ್ನೋಪಮ ವಿವರಗಳಿಂದ ಕೂಡಿದ ಸರ್‌ರಿಯಲ್‌ ಆದ ಕಾಣ್ಕೆಯ ಕತೆಗಳು (ಮುದುಕನ ಬರವು). + +ನಂತರ ಒಂದು ರಾತ್ರಿ ಕತೆ ದೇಶವಿಭಜನೆಯ ವಿಷಾದದ ದಿನಗಳಲ್ಲಿ ಗಾಂಧಿಯ ನಿರೀಕ್ಷೆಯನ್ನು ವಾಸ್ತವ ನೆಲೆಯಲ್ಲಿ ಮುಂದಿಡುತ್ತಾ ನಿಧಾನಕ್ಕೆ ಅವಾಸ್ತವದ ಲಹರಿಯ ವಿವರಗಳಿಗೆ ಹೊರಳಿಕೊಂಡರೆ, ಮುದುಕನ ಬರವು ಕತೆ ಭೀಭತ್ಸ ಲೋಕವೊಂದರೊಂದಿಗೆ ಮುಖಾಮುಖಿಯಾಗುವ ಫ್ಯಾಂಟಸಿಯೊಂದರ ಮೂಲಕ ಗಾಂಧಿಯೋತ್ತರ ಕಾಲದ ಭವಿಷ್ಯವನ್ನು ತೆರೆದಿಡುತ್ತದೆ. ಸುನಿಲ್‌ ಕೃಷ್ಣನ್‌ ಅವರ ಆರೋಹಣ ಕತೆ ಗಾಂಧಿಯ ಆಯ್ಕೆಯನ್ನು ಪೌರಾಣಿಕ ಸಾಮ್ಯದೊಂದಿಗೆ ಮುಂದಿಡುತ್ತದೆ. ಸ್ವರ್ಗವನ್ನು ತಿರಸ್ಕರಿಸಿ ನರಕವನ್ನೇ ಆಯ್ಕೆಮಾಡುವ ಗಾಂಧಿಗೆ ಅಲ್ಲೆಲ್ಲಾ ತನ್ನ ಪ್ರತಿರೂಪಗಳೇ ಕಾಣಿಸುತ್ತವೆ. + +ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ ಗಾಂಧಿಯೊಂದಿಗೆ ಮಾತಾಡುವೆ ಮತ್ತು ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ. ʼಉಪವಾಸ ಸತ್ಯಾಗ್ರಹʼ ಕತೆಯೂ ಇಂಥಾ ಗಾಂಧಿ ಅನುಯಾಯಿಯ ಕುಟುಂಬದ ವೈರುಧ್ಯವನ್ನು ಮುಂದಿಟ್ಟು ಅದರೊಳಗೇ ಮಹಿಳೆಯರ ಮೂಲಕ ಗಾಂಧಿಯನ್ನು ಮತ್ತೆ ಸೃಷ್ಟಿಸುವ ಮೆಲು ನಾಟಕೀಯ ವಿವರಗಳನ್ನು ಮುಂದಿಡುತ್ತದೆ. + + + +ಈ ಕತೆ ಮುಗಿಯುವ ಬಗೆ ಚೆಕಾವನ ಕತೆಗಳ ರೀತಿಯನ್ನು ನೆನಪಿಸುವಂತಿದೆ. ಸೂಚಿಗಳೂ ಬಲು ಸೂಕ್ಷ್ಮ. ನಾಲ್ಕನೆಯ ಗುಂಡು ಗಾಂಧಿ ಹತ್ಯೆಯ ಪ್ರಕರಣದ ಮರು ತನಿಖೆಯ ನೆಪದಲ್ಲಿ ಆ ಗಳಿಗೆಗಳ ವಿವರಗಳನ್ನು ವಿಶಿಷ್ಟ ಚಿತ್ರಗಳ ಮೂಲಕ ಮುಂದಿಡಲು ನೋಡುತ್ತದೆ. ಇವೆಲ್ಲಾ ಕತೆಗಳ ನಡುವೆ ಭಿನ್ನವಾಗಿರುವ ಕಲೈ ಸೆಲ್ವಿ ಅವರ ಕತೆ ಬಾಪೂ ಮತ್ತು ಕಸ್ತೂರ್‌ ಬಾ ನಡುವಿನ ಸಂವಾದದ ಮೂಲಕ ಅವರ ಸಂಬಂಧವನ್ನೂ ಗಾಂಧಿಯ ಕನಸು, ವಿಷಾದವನ್ನೂ ಕಟ್ಟಿಕೊಡುತ್ತದೆ. ಇಲ್ಲಿನ ಕತೆಗಳ ಪೈಕಿ, ಅಶೋಕ ಮಿತ್ರನ್‌ ಅವರ ಗಾಂಧಿ ಆಧುನಿಕ ಬೌದ್ಧಿಕತೆಯ ತಾಕಲಾಟವನ್ನು ಮುಂದಿಡುವ ಕತೆ. ಸೈದ್ಧಾಂತಿಕ ಬಿರುಕುಗಳ ಬಗ್ಗೆ ಶಠ ಸಿದ್ಧಾಂತದ ಹಠಮಾರಿತನದಲ್ಲಿ ಕಳೆದು ಹೋಗುವ ಸೂಕ್ಷ್ಮಗಳ ಬಗ್ಗೆ ನಿರೂಪಕ ಹೇಳುತ್ತಾ ಹೋಗುತ್ತಾನೆ. + +ಇವಿಷ್ಟು ಕತೆಗಳನ್ನು ಹಿಡಿಯಲು ನೋಡುವ ಯತ್ನ. ಆದರೆ ಇದಕ್ಕಿಂತ ಮುಖ್ಯವಾಗುವುದು ಈ ಕತೆಗಳನ್ನು ಯಾಕೆ ಹೀಗೆ ಕಟ್ಟಿದರು ಎಂಬ ಪ್ರಶ್ನೆ.ಕನ್ನಡದ ಕವಿಗಳು ಸತತವಾಗಿ, ಗಾಂಧಿ ಮರೆಯಾದ ಬಳಿಕ ಗಾಂಧಿಯ ಗೈರು ಹಾಜರಿಯನ್ನೇ ಒಂದು ನೈತಿಕ ಮಾನದಂಡವಾಗಿ ವರ್ತಮಾನವನ್ನು ವ್ಯಾಖ್ಯಾನಿಸುವ ಕವನಗಳನ್ನು ಬರೆದಿದ್ದಾರೆ. ಆದರೆ ಗಾಂಧಿಯ ಆಯಾಮಗಳು ಟ್ರಿಗರ್‌ ಮಾಡಿದ ಕತೆಗಳು ಕಡಿಮೆ ಎಂದು ನನಗನ್ನಿಸುತ್ತದೆ. ನನ್ನ ಸೀಮಿತ ಓದಿನ ಮಿತಿಯ ಅಭಿಪ್ರಾಯ ಎಂದು ಇದನ್ನು ಬಗೆಯಬಹುದು. + +ಗಾಂಧಿಯ ಕೊನೆಯ ದಿನಗಳೆಂದರೆ ಮಾನವ ಸಂಬಂಧಗಳನ್ನು ನಾಶಮಾಡುವ ಭೀಭತ್ಸ ಹವಣಿಕೆಗಳ ತಾಂಡವ ನೃತ್ಯವೇ ಸರಿ. ಗಾಂಧಿ ಅದನ್ನು ಎದುರಿಸಿದ ಬಗೆ, ಅವರು ಅನುಭವಿಸಿದ ತಲ್ಲಣ, ಅವರು ಮುಖಾಮುಖಿಯಾದ ಮಾನವನ ಆಳದ ಕೇಡು ಇವೆಲ್ಲಾ ಆಯಾ ಕಾಲಘಟ್ಟದಲ್ಲಿ ಸಂವೇದನೆಯನ್ನು ಕೆಣಕುವ ರೂಪಕಗಳಾಗಿ ಬಿಟ್ಟಿವೆ. ಗಾಂಧಿ ಒಡನಾಡಿದ, ಅವರು ಅನುಸಂಧಾನ ನಡೆಸಿದ ಸಮಾಜ, ಸಮದಾಯಗಳು ಇಷ್ಟಿಷ್ಟೇ ಕೊಳೆತ ರೀತಿ ಆಯಾ ಕಾಲಘಟ್ಟದಲ್ಲಿ ಜನರನ್ನು ಕಾಡಿದೆ. ೬೦ರ ದಶಕದಲ್ಲಿ ನೈತಿಕ ಜಾರುವಿಕೆ, ೭೦ರ ದಶಕದಲ್ಲಿ ಪ್ರಭುತ್ವದ ದರ್ಪ, ಕಳೆದೆರಡು ದಶಕಗಳಲ್ಲಿ ಕೋಮು ದ್ವೇಶ – ಹೀಗೆ. + +ಗಾಂಧಿಯ ಅಂತಿಮ ಘಟ್ಟದ ಬದುಕು ಮತ್ತು ಅವರ ಅನುಯಾಯಿಗಳ ಬದುಕು ಯಾಕೆ ಇಲ್ಲಿನ ಕತೆಗಳ ಕೇಂದ್ರ ವಸ್ತುವಾಗಿವೆ ಎಂಬುದನ್ನು ಮೇಲಿನ ವಿವರಣೆಯ ಹಿನ್ನೆಲೆಯಲ್ಲಿ ನೋಡಬೇಕು. ಪೋಸ್ಟ್-ಗಾಂಧಿ ಸ್ಪಂದನ ಎಂಬುದನ್ನು ನಾವೇನಾದರೂ ಒಂದು ಪ್ರಮೇಯವಾಗಿ ಕಟ್ಟಿದರೆ ಈ ಕತೆಗಳ ಧ್ಯಾನದ ತಾತ್ವಿಕ ಎಳೆಯನ್ನು ಹಿಡಿಯಬಹುದು. + +ಇಲ್ಲಿ ಗಾಂಧಿಗೆ ಎದುರಾಗಿ ದೇಶ ಕಂಡ ದುರಂತ, ಹಿಂಸೆ, ಹಳವಂಡದ ಮೆಲುಕುಗಳಿವೆ. ಗಾಂಧಿಯನ್ನು ಅಪ್ರಸ್ತುತಗೊಳಿಸಲು ನೋಡಿದ ಮನೋ ಭೂಮಿಕೆಯ ಚಿತ್ರಗಳಿವೆ. ಅಯ್ಯಂಕಾಳೀ ಅವರಂಥಾ ತಾತ್ವಿಕ ಎದುರಾಳಿಗಳು ಮುಖಾಮುಖಿಯಾಗುವ ವಿವರಗಳಿವೆ. ಗಾಂಧೀ ಇವರನ್ನೆಲ್ಲಾ ಕಾಡಿದ ಬಗೆ ಒಂದಾದರೆ ಇವರನ್ನು ಗಾಂಧೀ ಕಾಡಿದ ಬಗೆಯೇ ನಮ್ಮನ್ನು ಕಾಡುತ್ತದೆ. + +(ಕೆ.ಪಿ. ಸುರೇಶ) + +ಬಹುತೇಕ ಕತೆಗಳಲ್ಲಿ ಬಾಪೂ ಬದುಕಿನ ದಟ್ಟ ವಿವರಗಳಿವೆ. ಈ ವಿವರಗಳ ಕುಸುರಿಯ ತಂತ್ರವೂ ಕುತೂಹಲಕಾರಿ. ಗಾಂಧಿಯ ಬಗ್ಗೆ ಈ ಕತೆಗಾರರು ನಡೆಸಿದ ಅಧ್ಯಯನದ ಕುರುಹು ಇದು. ಈ ನಿಜ ಎನ್ನಿಸುವ ಈ ತಂತ್ರವೇ ಗಾಂಧಿ ಕುರಿತ ಈ ಧ್ಯಾನವನ್ನು ಇರಿವ ಮುಳ್ಳಿನ ರೀತಿಯಲ್ಲಿ ನಮ್ಮನ್ನು ಬಾಧಿಸುವಂತೆ ಮಾಡುತ್ತದೆ. + +ಒಬ್ಬ ಸೃಜನಶೀಲ ಲೇಖಕರನ್ನು ಗಾಂಧೀ ಕಾಡುವ ಬಗೆ ಮುಖ್ಯವೇ. ಆದರೆ ಅದಕ್ಕಿಂತ ಮುಖ್ಯವಾಗಬೇಕಾದದ್ದು ಸೃಜನಶೀಲ ಲೇಖಕರು ತಮ್ಮ ಧ್ಯಾನವಾಗಿ ಆರಿಸುವ ವಿಷಯ. ಇದರ ಮೂಲಕವೇ ಅವರು ಹೊಸ ಕಾಣ್ಕೆಯನ್ನು ಓದುಗ ವಲಯಕ್ಕೆ ತಲುಪಿಸುತ್ತಾ, ಅವರೊಳಗೆ ಈ ಕ್ರೈಸಿಸ್‌ ಮರುಹುಟ್ಟು ಪಡೆಯುವಂತೆ ಮಾಡುತ್ತಾರೆ. ಕತೆಯೊಂದು ಅದರ ಕಥಾ ಸಾರಾಂಶದಿಂದ ಒಳ್ಳೆಯ ಕತೆಯಾಗುವುದಿಲ್ಲ. ಕಥನ ಶೈಲಿ, ತಾಂತ್ರಿಕ ಸೂಕ್ಷ್ಮಗಳು; ಅದು ಸಾದರಪಡಿಸುವ ಕಾಣ್ಕೆಯ ಮೂಲಕವಷ್ಟೇ ಕತೆಯೊಂದು ಅಸಾಧಾರಣವನ್ನಿಸುವುದು. ಈ ಕತೆಗಳು ಈ ದೃಷ್ಟಿಯಿಂದಲೂ ಪ್ರಭಾವಿಯಾಗಿವೆ. ಒಂದೆರಡು ಕತೆಗಳ ಕೆಲವು ಭಾಗ ಬಿಟ್ಟರೆ ವಿವರಗಳಲ್ಲಿ ಲೋಲುಪತೆ ಇಲ್ಲ. ನಿರೂಪಣೆಯಲ್ಲಿ ಒಂದು ದುರಂತ ವಿಷಾದವನ್ನು ಕಟ್ಟಿಕೊಡುವ ಮಂದ್ರ ಧಾಟಿ ಇದೆ. ಆದ್ದರಿಂದಲೇ ಈ ಕತೆಗಳು ಇದು ಗಾಂಧಿಯ ಶಕ್ತಿಯೂ ಹೌದು ಎನ್ನಿಸುವಾಗಲೇ, ಇದು ಕತೆಗಾರನ ಶಕ್ತಿಯೂ ಹೌದು ಎಂಬುದನ್ನು ಮನಗಾಣಿಸುತ್ತವೆ. ಸಾಹಿತ್ಯದ ಸೋಜಿಗ ಇದು. + + + +ಇಂಥಾ ಅಪರೂಪದ ಕಾಡುವ ಕತೆಗಳನ್ನು ಕನ್ನಡಕ್ಕೆ ನೀಡಿದ ನಲ್ಲತಂಬಿಯವರ ಶ್ರಮ- ಆಯ್ಕೆ ಮತ್ತು ಅನುವಾದಕ್ಕೆ ಕನ್ನಡ ಕೃತಜ್ಞವಾಗಿರಬೇಕು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_25.txt b/Kenda Sampige/article_25.txt new file mode 100644 index 0000000000000000000000000000000000000000..82f514aad85167bd7a555b2e8bf57bb34726f5eb --- /dev/null +++ b/Kenda Sampige/article_25.txt @@ -0,0 +1,29 @@ +ನಾವಿದ್ದ ಓಮಾಹಾದಲ್ಲಿ ಏನಾದರೂ ಬೇಕಾದರೆ ಅಲ್ಲಿಯೇ ಹತ್ತಿರದಲ್ಲೇ ಹಲವಾರು ಅಂಗಡಿಗಳು ಇದ್ದವು. ಅಲ್ಲಿ ಅಂಗಡಿಗಳು ಅಂದರೆ ದೊಡ್ಡವು ಇಲ್ಲವೇ ಮಧ್ಯಮ ಗಾತ್ರದವು. ನಮ್ಮಲ್ಲಿ ಇರುವಂತೆ ಚಿಕ್ಕ ಚಿಕ್ಕ ಅಂಗಡಿಗಳು ನನಗಂತೂ ಎಲ್ಲೂ ಕಾಣಲಿಲ್ಲ. ಆ ದೊಡ್ಡ ಅಂಗಡಿ ಅಥವಾ ಡಿಪಾರ್ಟ್ಮೆಂಟಲ್ ಸ್ಟೋರ್‌ಗಳಲ್ಲಿ ಎಲ್ಲವೂ ಯಾಂತ್ರಿಕ.. ಕೌಂಟರ್‌ನಲ್ಲಿರುವ ಸಹಾಯಕಿಯ ನಗುವೂ ಕೂಡ! ಅಮೆರಿಕನ್ನರ ನಗುವು ಎಷ್ಟು ಔಪಚಾರಿಕವಾಗಿ ಇರುತ್ತದೆ ಅಂದರೆ, ಅದರಲ್ಲಿ ಜೀವಂತಿಕೆಯನ್ನು ಭೂತಗನ್ನಡಿ ಇಟ್ಟು ಹುಡುಕಬೇಕು. ಅಂತಹ ಜೀವಂತ ನಗುವುಳ್ಳವರೂ ಇದ್ದರಾದರೂ ಅಂಗಡಿಯಲ್ಲಂತೂ ಆ ನಗುವು ತುಂಬಾ ವ್ಯವಹಾರಿಕವಾಗಿರುತ್ತಿತ್ತು. ಆಗ ನನಗೆ ಮತ್ತೆ ನಮ್ಮ ದೇಶ ನೆನಪಾಗುತ್ತಿತ್ತು! + +ನಾವೆಲ್ಲ ಸಣ್ಣ ಊರಿನಲ್ಲಿ ಬೆಳೆದವರು. ಅಲ್ಲಿನ ಸಣ್ಣ ಸಣ್ಣ ಅಂಗಡಿಗಳು, ಅದರೊಳಗೆ ಬೆಸೆದಿದ್ದ ಆ ಅಂಗಡಿಗೆ ಅನನ್ಯವಾಗಿ, ಮೂಗಿಗೆ ಅಡರುತ್ತಿದ್ದ ಸುವಾಸನೆ, ಅಂಗಡಿ ಮಾಲೀಕರ ಜೊತೆಗಿನ ಆಪ್ಯಾಯಮಾನ ಹರಟೆ ಇವೆಲ್ಲ ನೆನಪಾಗುತ್ತಿತ್ತು. ಲಕ್ಷ್ಮೇಶ್ವರದಲ್ಲಿ ನನ್ನ ಸೋದರ ಮಾವನ ಅಂಗಡಿ ಇತ್ತು. 40 ವರ್ಷಗಳಿಗಿಂತಲೂ ಹಳೆಯ ಅಂಗಡಿ ಅದು. ಇನ್ನೂ ಇದೆ. ಅದೊಂದು ಸಾಂಸ್ಕೃತಿಕ ಕೇಂದ್ರ ಆಗಿತ್ತು. ಅಲ್ಲಿ ಎಲ್ಲರೂ ಬರುತ್ತಿದ್ದರು. ಸೋಷಲ್ ಮೀಡಿಯಾ ಇಲ್ಲದ ದಿನಗಳಲ್ಲಿ ಅಲ್ಲಿ ಹಲವಾರು ವಿಷಯಗಳ ಕುರಿತು ಚರ್ಚೆ ನಡೆಯುತ್ತಿತ್ತು. ನನ್ನ ಇನ್ನೊಬ್ಬ ಮಾವ, ಅಲ್ಲಿಗೆ ಬಂದವರ ಕಾಲು ಎಳೆಯುತ್ತಿದ್ದುದನ್ನು ನೋಡಲೆ ಅಂತಲೇ ಒಂದಿಷ್ಟು ಜನ ಬರುತ್ತಿದ್ದರು. ಸಣ್ಣ ಪುಟ್ಟ ವಾಗ್ವಾದಗಳೂ ನಡೆಯುತ್ತಿದ್ದವು. ಚಹಾ, ಗಿರಿಮಿಟ್ಟು, ದಾಣಿ ಚುರುಮರಿ, ಮಿರ್ಚಿ-ಭಜಿಗಳ ಸೇವನೆ ನಿರಂತರವಾಗಿ ನಡೆಯುತ್ತಿದ್ದವು. ಸಂತೆ, ಹಬ್ಬದ ದಿನಗಳಲ್ಲಿ ಅಂತೂ ಗಿರಾಕಿಗಳಿಂದ ಅಂಗಡಿ ಗಿಜಿಗಿಜಿಗುಡುತ್ತಿತ್ತು. ಅಲ್ಲಿಗೆ ಹೋಗುವುದೇ ಒಂದು ಸಂಭ್ರಮ ನನಗೆ. ಅಂತಹ ಒಂದು “ಆಪ್ತ ಅಂಗಡಿಯನ್ನು” ಅಮೆರಿಕೆಯಲ್ಲಿ ಹುಡುಕುತ್ತಿದ್ದ ನನಗೆ ಅಲ್ಲಿಗೆ ಹೋದಾಗ ಸಿಕ್ಕಿದ್ದು, ಭಾರತೀಯ ಕಿರಾಣಿ ಅಂಗಡಿ ತುಳಸಿ ಒಂದೇ. ಸ್ವಲ್ಪ ಮಟ್ಟಿಗೆ ನಮ್ಮವರು ಬಂದು ಸೇರುತ್ತಿದ್ದರು, ಅಲ್ಲಿಗೆ ಆಗಾಗ ಹೋಗಬಹುದು ಅಂತ ಮೊದಮೊದಲು ಅನಿಸಿತ್ತಾದರೂ ಹಾಗೆ ಹೋಗಲು ಸಾಧ್ಯ ಆಗುತ್ತಿರಲಿಲ್ಲ. ಅದನ್ನು ನಡೆಸುತ್ತಿರುವವರು ಕನ್ನಡಿಗರೇ ಹಾಗೂ ನಮಗೆ ಪರಿಚಯದವರೆ ಆಗಿದ್ದರೂ ಅವರು ಯಾವಾಗಲೂ ಅಂಗಡಿಯಲ್ಲಿ ಇರುತ್ತಿರಲಿಲ್ಲ. ಆಂಧ್ರದ ಒಬ್ಬ ಹುಡುಗ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ. ಹೀಗಾಗಿ ಏನಾದರೂ ದಿನಸಿ ಬೇಕಾದಾಗ, ಇಲ್ಲವೇ ದೇವಸ್ಥಾನಕ್ಕೆ ಹೋದಾಗ ಮಾತ್ರ ಅಲ್ಲಿ ಹೋಗುತ್ತಿದ್ದೆವು. + + + +ಇದನ್ನು ಬಿಟ್ಟರೆ ಮನೆಗೆ ಬೇಕಾಗುವ ಇತರ ಸಾಮಾನು ಖರೀದಿಸಲು ಅಲ್ಲಿ ಹಲವಾರು ಆಯ್ಕೆಗಳು ಇದ್ದವು. ಅದರಲ್ಲಿ ಒಂದು ವಾಲ್ ಮಾರ್ಟ್. ಅದೊಂದು ದೊಡ್ಡ ಅಂಗಡಿ. ಈಗ ಅಂತಹ ಹಲವಾರು ಅಂಗಡಿಗಳು ಭಾರತದ ಪ್ರಮುಖ ನಗರಗಳಲ್ಲಿ ಹೆಚ್ಚೇ ಅನ್ನುವಷ್ಟು ಇವೆ. ಅದನ್ನು ಸ್ಥಾಪಿಸಿದವರ ಹೆಸರು ಸ್ಯಾಮ್ ವಾಲ್ಟನ್. ತುಂಬಾ ಕಡಿಮೆ ಬೆಲೆಗೆ ಕೊಡುತ್ತೇವೆ ಎಂಬ ಧ್ಯೇಯದೊಂದಿಗೆ ಶುರುವಾದ, ಅಮೆರಿಕೆಯಲ್ಲಿ ಬಹಳ ಪ್ರಸಿದ್ಧಿ ಪಡೆದ ಕಂಪೆನಿಗಳಲ್ಲಿ ಒಂದು ಅದು. ಅಲ್ಲಿ ತುಂಬಾ ಒಳ್ಳೆಯ ಬೆಲೆಗೆ ಎಲ್ಲವೂ ಸಿಗುತ್ತಿತ್ತು. ಅಲ್ಲಿ ನನಗೆ ಇಷ್ಟವಾದ ಒಂದು ಪದ್ಧತಿ ಎಂದರೆ, ಯಾವುದೇ ಖರಿದಿಸಿದ ವಸ್ತುವನ್ನು ಮನೆಗೆ ತೆಗೆದುಕೊಂಡು ಹೋದ ಹೋದ ನಂತರ ಬೇಡ ಅನಿಸಿದರೆ ಅಂಗಡಿಗೆ ಮರಳಿಸಬಹುದಿತ್ತು. ಅವರು ಯಾವುದೇ ಪ್ರಶ್ನೆಯನ್ನೂ ಕೇಳುತ್ತಿರಲಿಲ್ಲ. ಅಲ್ಲಿನ ಬಹುತೇಕ ಅಂಗಡಿಗಳಲ್ಲಿ ಅದನ್ನು ಪಾಲಿಸುತ್ತಿದ್ದರು. ಈಗೀಗ ಭಾರತದಲ್ಲೂ ಕೂಡ ಆ ಪದ್ಧತಿ, ವಿಶೇಷವಾಗಿ ಆನ್ಲೈನ್ ಖರೀದಿಗಳಲ್ಲಿ ಕಾಣುತ್ತಿದ್ದೇವೆ. ಆದರೆ ಅಲ್ಲಿನ ರಿಟರ್ನ್ ಪಾಲಿಸಿ ತುಂಬಾ ಸುಲಲಿತವಾಗಿತ್ತು. ಮೊದಮೊದಲು ಹಾಗೆ ಮರಳಿಸಲು ಸಂಕೋಚ ಮಾಡಿಕೊಳ್ಳುತ್ತಿದ್ದ ನಾವು, ನಮಗೆ ಬೇಡ ಅನಿಸಿದ್ದನ್ನು ನಿರ್ಭಯವಾಗಿ ವಾಪಸ್ಸು ಕೊಡುವುದನ್ನು ಕಲಿತೆವು. ಹಾಗೆ ಎಲ್ಲರೂ ಕೊಂಡ ವಸ್ತುಗಳನ್ನು ಮರಳಿ ಕೊಟ್ಟರೆ ಅವರಿಗೆ ನಷ್ಟವಾಗೋದಿಲ್ಲವೇ ಅಂತ ನನಗೆ ಅನಿಸುತ್ತಿತ್ತು. ಅದಕ್ಕೆ ಮೂಲ ಅನಿವಾಸಿ ಚಂದ್ರು ತುಂಬಾ ಅದ್ಭುತ ವಿಶ್ಲೇಷಣೆ ಮಾಡಿ ಹೇಳಿದ್ದ ಮಾತು ನಿಜ ಅನಿಸಿತು. ಹಾಗೆ ವಾಪಸ್ಸು ಕೊಡಬಹುದು ಅಂತ ನಮ್ಮ ಮನಸ್ಸಿನಲ್ಲಿ ಇದ್ದಾಗ ಅವಶ್ಯಕತೆಗಿಂತ ಜಾಸ್ತಿನೇ ನಾವು ಕೊಂಡುಕೊಳ್ಳುತ್ತೇವೆ. ಹಾಗೆ ಕೊಂಡುಕೊಂಡ ಎಷ್ಟೋ ಜನರಲ್ಲಿ ಬರಿ ಕೆಲವೇ ಪ್ರತಿಶತ ಜನರು ವಸ್ತುಗಳನ್ನು ವಾಪಸ್ಸು ಕೊಡಬಹುದು. ಆದರೆ ಮಿಕ್ಕವರು ಬೇಡವಾಗಿದ್ದನ್ನು ಕೂಡ ತಮ್ಮ ಬಳಿಯೇ ಇಟ್ಟುಕೊಳ್ಳುತ್ತಾರೆ! ಅವರಲ್ಲಿ ಮೈಗಳ್ಳರು, ದುಡ್ಡು ಹೆಚ್ಚು ಇರುವವರೂ ಇರುತ್ತಾರೋ ಏನೋ. ಹೀಗಾಗಿ ಅದೊಂದು ರೀತಿಯಲ್ಲಿ ಅಂಗಡಿಗಳಿಗೆ ಲಾಭವನ್ನೇ ಮಾಡಿಕೊಡುತ್ತದೆಯಂತೆ. + +ಇದು ನನಗೆ ಅನುಭವಕ್ಕೆ ಬಂದಿದ್ದು ಕೋಲ್ಸ (Kohls) ಎಂಬ ಬಟ್ಟೆ ಅಂಗಡಿಯಲ್ಲಿ. ಅಲ್ಲಿ ಎಲ್ಲ ನಮೂನೆಯ ಬಟ್ಟೆಗಳು ಸಿಗುತ್ತಿದ್ದವು. ಅಲ್ಲಿಗೆ ಹೋದರೆ ನನ್ನ ಹೆಂಡತಿಯನ್ನು ಆ ಅಂಗಡಿಯೊಳಗೆ ಬಿಟ್ಟು ನಾನು ಅಲ್ಲಿ ಇಲ್ಲಿ ಅಡ್ಡಾಡಿಕೊಂಡು 3 ಗಂಟೆಯ ನಂತರ ಹೆಂಡತಿಯನ್ನು ಕರೆದುಕೊಂಡು ಹೋಗಲು ಬರುತ್ತಿದ್ದೆ. ಅಷ್ಟು ದೊಡ್ಡ ಅಂಗಡಿಯದು. ಕೆಲವು ಸಲ ಸಿನೆಮಾ ನೋಡಿಕೊಂಡು ಬಂದಿದ್ದೂ ಇದೆ! ಒಳ್ಳೆಯ ಡೀಲ್ ಇದೆ ಅಂತ ಕೆಜಿಗಟ್ಟಲೆ ಬಟ್ಟೆ ಖರೀದಿಸಿ ಇಟ್ಟಿರುತ್ತಿದ್ದಳು. ಪುಣ್ಯ ನನ್ನ ಹೆಂಡತಿಗೆ ಬಂಗಾರದ ಹುಚ್ಚು ಇಲ್ಲ! ಅಲ್ಲಿ ಒಳ್ಳೆಯ ಗುಣಮಟ್ಟದ ಜೊತೆಗೆ ಬೆಲೆ ಕೂಡ ಕಡಿಮೆಯೇ ಇರುತ್ತಿತ್ತು. ಅವುಗಳಲ್ಲಿ, ಆಮೇಲೆ ಬೇಡವಾದರೆ ಕೊಟ್ಟರಾಯ್ತು ಅಂತ ತಂದ ಬಟ್ಟೆಗಳೆ ಜಾಸ್ತಿಯಿರುತ್ತಿದ್ದವು. ಕೆಲವನ್ನು ವಾಪಸ್ಸು ಮಾಡೋಕೆ ಅಂತಲೇ ಮತ್ತೊಮ್ಮೆ ಹೋಗುತ್ತಿದ್ದೆವು! ಆ ಅಂಗಡಿಯಲ್ಲಿ ಇನ್ನೊಂದು ಮಾರಾಟದ ವಿಶೇಷ ತಂತ್ರವನ್ನು ಗಮನಿಸಿದೆ. ಗ್ರಾಹಕರು ಬಟ್ಟೆ ತೆಗೆದುಕೊಂಡು ಬಿಲ್ ಮಾಡಿಸುವಾಗ ಕೊನೆಗೆ ನಮ್ಮ ಒಟ್ಟು ಮೊತ್ತದ ಮೇಲೆ ಇಂತಿಷ್ಟು ಡಾಲರ್ ಕೋಲ್ಸ್ ಕ್ಯಾಷ್ ಅಂತ ಒಂದು ಮುದ್ರಿತ ರಸೀದಿ ಬರುತ್ತಿತ್ತು. ಆದರೆ ಆ ಮೊತ್ತವನ್ನು ಕೂಡಲೇ ಬಳಸಲು ಬರುತ್ತಿರಲಿಲ್ಲ. ಅದು ಕೆಲವು ದಿನಗಳಾದ ಬಳಿಕ ಅದೇ ಅಂಗಡಿಗೆ ಬಂದು ಆ ಮೊತ್ತದ ಯಾವುದೇ ಬಟ್ಟೆಯನ್ನು ಖರೀದಿ ಮಾಡಬಹುದಿತ್ತು. ಅದೇ ನೋಡಿ ಟ್ರಿಕ್ಕು! ಕೋಲ್ಸ್ ಕ್ಯಾಷ್ ಅನ್ನು ಖಾಲಿ ಮಾಡಲು ಬಂದ ಗ್ರಾಹಕ ಮತ್ತೆ ಒಂದಿಷ್ಟು ಬಟ್ಟೆಗಳನ್ನು ಖರೀದಿಸುತ್ತಿದ್ದ/ಳು. ಅದಕ್ಕೆ ಮತ್ತೊಂದಿಷ್ಟು ಕೋಲ್ಸ್ ಕ್ಯಾಷ್ ಸಿಗುತ್ತಿತ್ತು. ಹೀಗೆ ಗ್ರಾಹಕ ಕೋಲ್ಸ್ ಬಲೆಗೆ ಸಿಕ್ಕಿಕೊಂಡು ನಿರಂತರವಾಗಿ ಆ ಅಂಗಡಿಗೆ ಬರುವಂತೆ ಅವರು ಮಾಡುತ್ತಿದ್ದರು! + +ಇದೆ ತರಹದ ಇನ್ನೊಂದು ಅಂಗಡಿಯಲ್ಲಿನ ತಂತ್ರವನ್ನು ನಾನು ಗಮನಿಸಿದ್ದೆ. ಆ ಅಂಗಡಿಯ ಹೆಸರು ಡಾಲರ್ ಟ್ರೀ ಅಂತ. ಅಲ್ಲಿ ಯಾವುದೇ ಸಾಮಾನು ಕೊಂಡರೂ ಅದಕ್ಕೆ ಒಂದು ಡಾಲರ್ ಮಾತ್ರ ಬೆಲೆ. ಪೆನ್ನು, ನೋಟ್ ಬುಕ್, ಆಟಿಗೆ ಸಾಮಾನು ಹೀಗೆ ಎಲ್ಲವೂ ಒಂದೇ ಡಾಲರ್. ಯಾರಿಗುಂಟು ಯಾರಿಗಿಲ್ಲ ಅಂತ ಜನರೂ ಕೂಡ ಸಿಕ್ಕಿದ್ದನ್ನೆಲ್ಲ ಬಾಚಿಕೊಂಡು ಹೋಗುತ್ತಿದ್ದರು. ಎಷ್ಟೋ ಸಾಮಾನುಗಳು ಒಂದೇ ಡಾಲರಿಗೆ ಇಷ್ಟೆಲ್ಲಾ!? ಅನ್ನಿಸುವಷ್ಟು ಇದ್ದವಾದರೂ, ಅದರ ಜೊತೆಗೆ ತೆಗೆದುಕೊಳ್ಳುವ ಎಷ್ಟೋ ಇನ್ನಿತರ ವಸ್ತುಗಳು ಡಾಲರಗಿಂತ ಕಡಿಮೆ ಬೆಲೆಯವೇ ಆಗಿದ್ದವು. ಆದರೂ ಅವಕ್ಕೆ ಕೂಡ ಒಂದು ಡಾಲರ್ ಕೊಡಲೆ ಬೇಕಿತ್ತು! ಹೀಗೆ ಆ ಅಂಗಡಿಯಲ್ಲಿ ಆಮೇಲಾಮೇಲೆ ತುಂಬಾ ತಲೆ ಓಡಿಸಿ ಖರೀದಿ ಮಾಡುತ್ತಿದ್ದೆವು! + +ಇವುಗಳ ಜೊತೆಗೆ ನಾನು ಹೋಗಿದ್ದ ಇತರ ಅಂಗಡಿಗಳಲ್ಲಿ ಕೊಸ್ಟಕೋ (Costco) ಎಂಬ ಅಂಗಡಿ ತುಂಬಾ ಆಕರ್ಷಿಸಿತ್ತು. ಅದೊಂದು ಸಗಟು ವ್ಯಾಪಾರದ ಅಂಗಡಿ. ವರ್ಷಕ್ಕೆ ಇಷ್ಟು ಡಾಲರ್ ಅಂತ ಕೊಟ್ಟು ಅದರ ಸದಸ್ಯರಾದರೆ ಅಲ್ಲಿ ತುಂಬಾ ಕಡಿಮೆ / wholesale ಬೆಲೆಗೆ ವಸ್ತುಗಳು ಸಿಗುತ್ತಿದ್ದವು. ಬೆಂಗಳೂರಿನಲ್ಲಿ ಇರುವ Metro Wholesale ಕೂಡ ಇದೆ ಮಾದರಿಯದು. ಕಡಿಮೆ ಬೆಲೆಗೆ ಅಲ್ಲಿ ಎಲ್ಲವೂ ಸಿಗುತ್ತಿತ್ತು. ಎಣ್ಣೆ ಕೂಡ! ಅಲ್ಲಿಗೆ ಹೋದವರು ಸಗಟು ಬೆಲೆ ಅಂತ ಹೇಳಿ ಡಬ್ಬಗಟ್ಟಲೆ ಬಿಯರು ಹೊತ್ತುಕೊಂಡು ಬರುತ್ತಿದ್ದರು. ಕುಡಿದು ಲಿವರ್ ಕೆಡಿಸಿಕೊಳ್ಳಬೇಕು ಅನ್ನುವವರಿಗಂತೂ ಅಮೆರಿಕೆಯು ಒಂದು ಸ್ವರ್ಗ! + + + +ಇಲೆಕ್ಟ್ರಾನಿಕ್ ವಸ್ತುಗಳ ಖರೀದಿಯಲ್ಲಂತೂ ತುಂಬಾ ಸ್ಪರ್ಧೆ ನಡೆಯುತ್ತಿತ್ತು. ಇಲೆಕ್ಟ್ರಾನಿಕ್ ಗ್ಯಾಜೆಟ್ಟುಗಳನ್ನು ಕೊಳ್ಳುವವರಲ್ಲೂ ಸ್ಪರ್ಧೆ, ಮಾರಾಟ ಮಾಡುವವರಲ್ಲೂ ಸ್ಪರ್ಧೆ. ಉದಾಹರಣೆಗೆ, ನೀವೊಂದು ಕ್ಯಾಮೆರಾ ನೋಡಿದ್ದೀರಿ. ಒಂದು ಅಂಗಡಿಯಲ್ಲಿ ನೂರು ಡಾಲರ್ ಇದೆ ಅಂತ ಅಂದುಕೊಳ್ಳೋಣ. ಬೇರೆ ಅಂಗಡಿಯಲ್ಲಿ 90 ಡಾಲರ್ ಇದೆ ಅಂತ ನೀವು ಆನ್ಲೈನ್‌ನಲ್ಲಿ ಸಾಕ್ಷಿ ತೋರಿಸಿದರೆ, ಈ ಅಂಗಡಿಯವನು ಅದೇ ಬೆಲೆಗೆ ಕೊಡುತ್ತಾನೆ. ಅದಕ್ಕೆ ಬೆಲೆ ಹೊಂದಿಸುವುದು (price matching) ಅಂತ ಹೇಳೋರು. ಅದು ಬೆಸ್ಟ್ ಬಯ್ (Best Buy) ಎಂಬ ಅಂಗಡಿಯಲ್ಲಿ ಗಮನಿಸಿದ್ದೆ. ಇದರ ಜೊತೆಗೆ ಇನ್ನೊಂದು ಆಕರ್ಷಕ ಯೋಜನೆ, ಬೋಗೋ (BOGO – Buy One Get One) offer! ಒಂದು ಕೊಂಡರೆ ಇನ್ನೊಂದು ಉಚಿತ! ಅದರ ಬಲೆಗೆ ನಾವೂ ಒಂದು ಸಲ ಬಿದ್ದು ಸ್ವಲ್ಪದರಲ್ಲೇ ಹೊರಗೆ ಬಂದಿದ್ದೆವು. ನನಗೆ Iphone ಗಳ ಹುಚ್ಚು ಅಷ್ಟೆಲ್ಲಾ ಇರಲಿಲ್ಲ. ಆದರೂ ಒಂದು ಕಡೆ ಬೋಗೋ ಆಫರ್ ಇದೆ ಅಂತ ಗೊತ್ತಾಯ್ತು. ಬರಿ 200 ಡಾಲರಿಗೊ ಏನೋ ಒಂದು ಐಫೋನ್‌ಗೆ ಇನ್ನೊಂದು ಐಫೋನ್ ಉಚಿತ ಅಂತ ಇತ್ತು. ಆಯ್ತು ನನಗೊಂದು ಅಶಾಗೊಂದು ಅಂತ ಸರತಿಯಲ್ಲಿ ನಿಂತಿದ್ದೆವು. ಅದರ ವಿಶೇಷವೆಂದರೆ ಅದನ್ನು ಅಲ್ಲಿ ಮಾತ್ರ ಬಳಸಬಹುದು. ಭಾರತಕ್ಕೆ ವಾಪಸ್ಸು ಬರಲು ತುದಿಗಾಲಲ್ಲಿ ನಿಂತಿದ್ದ ನನಗೆ ಈ ಐಫೋನು ಅಲ್ಲೇ ಇರುವಂತೆ ಮಾಡಿಬಿಟ್ಟರೆ ಎಂಬ ಭಯ ಶುರುವಾಯ್ತು. ಸರತಿಯಲ್ಲಿ ನಿಂತುಕೊಂಡೆ ಚಿಂತನ ಮಂಥನ ಶುರುವಾಯ್ತು. ಇನ್ನೇನು ದುಡ್ಡು ಕೊಟ್ಟು ಅದನ್ನು ಪಡೆಯಬೇಕು ಎಂಬುವಷ್ಟರಲ್ಲಿ ನಾನು ಮನಸ್ಸು ಬದಲಾಯಿಸಿ ಬೇಡ ಅಂತ ನಿರ್ಧರಿಸಿದೆ. ನನ್ನ ಬದಲು ನನ್ನ ಇನ್ನೊಬ್ಬ ದೇಸಿ ಗೆಳೆಯನಿಗೆ ಆ ಆಫರ್ ಅನ್ನು ಬಿಟ್ಟು ಕೊಟ್ಟೆ. ಅವನು ತನಗೆ ಸಿಗಲೇ ಇಲ್ಲ ಎಂಬ ನಿರಾಸೆಯಿಂದ ಇದ್ದವನು, ಜಗತ್ತಿನಲ್ಲೇ ಅಮೂಲ್ಯವಾದ ಐಫೋನು ಪಡೆದು ಕೃತಾರ್ಥನಾದ! ನನಗೆ ಪದೇ ಪದೇ ಕೃತಜ್ಞತೆಯನ್ನು ಅರ್ಪಿಸಿದ. ಜನ ಮರುಳೋ ಜಾತ್ರೆ ಮರುಳೋ… + +ಇವುಗಳನ್ನು ಹೊರತುಪಡಿಸಿ ಇದ್ದ ಇನ್ನಿತರ ಅಂಗಡಿಗಳಲ್ಲಿ ಒಂದು ನೆಬ್ರಾಸ್ಕ ಫರ್ನೀಚರ್ ಮಾರ್ಟ್. ಅದು ಜಗತ್ತಿನ ಕುಬೇರರಲ್ಲಿ ಒಬ್ಬರಾದ್ದ ವಾರೆನ್ ಬಫೆಟ್ ಅವರದ್ದು. ಅದು ಎಷ್ಟೋ ಏಕರೆಗಳಷ್ಟು ವಿಸ್ತೀರ್ಣ ಹೊಂದಿದೆ. ಅದು ಪೀಠೋಪಕರಣಗಳಿಗೆ ಅಂತಲೇ ಮೀಸಲಾದ ರಾಕ್ಷಸ ಗಾತ್ರದ ಅಂಗಡಿ. + + + +ಅಲ್ಲಿ ಇನ್ನೊಂದು ವಿಶೇಷ ಅಂಗಡಿಗೆ ಒಮ್ಮೆ ಆಕಸ್ಮಿಕವಾಗಿ ಹೋಗಿದ್ದೆವು. ಅದರಲ್ಲಿ ನಮ್ಮ ಆಯುರ್ವೇದದ ಅಂಗಡಿಯಲ್ಲಿನ ತರಹದ ಸುವಾಸನೆ ನನಗೆ ತುಂಬಾ ಖುಷಿ ಕೊಟ್ಟಿತು. ಅಲ್ಲಿ ಭಾರತದ ಹಲವಾರು ಆಯುರ್ವೇದದ ಉತ್ಪನ್ನಗಳು ಕೂಡ ಇದ್ದವು. ಅಲ್ಲಿ ಇದ್ದ ಪರಿಚಾರಕನ ಭುಜದ ಮೇಲೆ ಅವನು ಹಾಕಿಸಿಕೊಂಡ ದೊಡ್ಡದಾದ ಗಣಪತಿಯ ಬಣ್ಣದ ಹಚ್ಚೆಯನ್ನು (tattoo) ನೋಡಿ ಬೆರಗಾದೆ. ಅವನ ಜೊತೆಗೆ ಮಾತನಾಡಿ ನಾನು ಭಾರತದವನು ಅಂತ ಹೆಮ್ಮೆಯಿಂದ ಹೇಳಿಕೊಂಡೆ. ಅವನಿಗೂ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ತುಂಬಾ ತಿಳುವಳಿಕೆ ಹಾಗೂ ಅಭಿಮಾನ ಇದ್ದದ್ದನ್ನು ಅವನ ಮಾತಿನ ಮೂಲಕ ತಿಳಿದುಕೊಂಡೆ. + + + +ಹೀಗೆ ಅಲ್ಲಿನ ಹಲವಾರು ಅಂಗಡಿಗಳನ್ನು ಸುತ್ತಿದರೂ ಅಲ್ಲಿ ಇರುವತನಕ ಆ ಒಂದು ಅಂಗಡಿಗೆ ಮಾತ್ರ ಹೋಗುವ ಧೈರ್ಯ ಮಾಡಲೇ ಇಲ್ಲ..! + +ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_250.txt b/Kenda Sampige/article_250.txt new file mode 100644 index 0000000000000000000000000000000000000000..f24369cb00d777126b8403b3b85708a3aac15b31 --- /dev/null +++ b/Kenda Sampige/article_250.txt @@ -0,0 +1,11 @@ +byಸಹನಾ ಕಾಂತಬೈಲು|May 31, 2022|ಪುಸ್ತಕ ಸಂಪಿಗೆ| 1 Comment + +ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ?ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಇನ್ನೊಂದು ಪ್ರಬಂಧ ಇಲ್ಲಿದೆ. + +byಸಹನಾ ಕಾಂತಬೈಲು|May 24, 2022|ಪುಸ್ತಕ ಸಂಪಿಗೆ| 0 Comments + +ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ.  ಏಳು-ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. `ಇದರಿಂದ ನನಗೆ ಬಿಡುಗಡೆ ಯಾವಾಗ? ಎಂದು ಯೋಚಿಸುವಾಗ ವಿದ್ಯುತ್ ತಯಾರಿಸುವ ಯೋಚನೆ ಮನಸ್ಸಿಗೆ ಬಂತು. ಸಹನಾ ಕಾಂತಬೈಲು ಅವರ ‘ಆನೆ ಸಾಕಲು ಹೊರಟವಳು’ ಪುಸ್ತಕದ ಪ್ರಬಂಧ  ಇಲ್ಲಿದೆ. + +byಸುಧಾ ಆಡುಕಳ|May 23, 2022|ಪುಸ್ತಕ ಸಂಪಿಗೆ| 0 Comments + +ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ.ದೇವನೂರ ಮಹಾದೇವ ಬರೆದ “ಎದೆಗೆ ಬಿದ್ದ ಅಕ್ಷರ” ಕೃತಿಯ ಕುರಿತು ಸುಧಾ ಆಡುಕಳ ಬರಹ \ No newline at end of file diff --git a/Kenda Sampige/article_251.txt b/Kenda Sampige/article_251.txt new file mode 100644 index 0000000000000000000000000000000000000000..75a1e65dd1915e1e27c98b9eafdf862e42fd22c8 --- /dev/null +++ b/Kenda Sampige/article_251.txt @@ -0,0 +1,21 @@ +ಆನೆ ಸಾಕಲು ಹೊರಟದ್ದು ಯಾರು ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಮೂಡುವುದು ಸಹಜ. ಬೇರೆ ಯಾರೂ ಅಲ್ಲ ನಾನೇ ಆನೆ ಸಾಕಲು ಹೊರಟವಳು. ಅದು ಹೇಗೆ ಅಂತೀರಾ? ಕಾಡಿನಲ್ಲಿರುವ ಆನೆಗೆ ಮೇವು ಬೆಳೆಸುವ ಕಾರ್ಯ ಆರಂಭಿಸುವ ಮೂಲಕ. ನನ್ನ ಆ ಪ್ರಯತ್ನವನ್ನು ಕೆಳಗೆ ವಿವರಿಸಿದ್ದೇನೆ. + +ನಾನು ಕಳೆದ ವಾರ `ಕಲ್ಲುಬಾಳೆ ಬೆಳೆಸಿ ಆನೆ ಉಳಿಸಿ’ ಅಂಕಣ ಬರೆದಾಗ ಪತ್ರಿಕೆಯೊಂದರಲ್ಲಿ ವಿರಾಜಪೇಟೆಯ ಸಮೀಪ ಕೇರಳದಿಂದ ಬೆಂಗಳೂರಿಗೆ ಹೋಗುವ ಪ್ರೈವೇಟ್ ಬಸ್ಸೊಂದು ರಸ್ತೆಗಿಳಿದ ಆನೆಗೆ ಡಿಕ್ಕಿ ಹೊಡೆದು ಆ ಆನೆ ಬೆನ್ನು ಮೂಳೆ ಮುರಿದು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಯನ್ನು ಓದಿದೆ. ಅದು ಕಾಡಲ್ಲಿ ಮೇವು ಇದ್ದಿದ್ದರೆ ರಸ್ತೆಗೆ ಏಕೆ ಇಳಿಯುತ್ತಿತ್ತು? ಆನೆ ಉಳಿಸಲು ನನ್ನ ಮನೆ ಸುತ್ತಮುತ್ತಲಿನ ಕಾಡಲ್ಲಾದರೂ ಮೇವು ಬೆಳೆಸಲೇಬೇಕು ಎಂಬ ದೃಢ ನಿರ್ಧಾರ ಮಾಡಿದೆ. ಇನ್ನು ತಡ ಮಾಡಬಾರದು ಎಂದು ಮನೆಯಿಂದ 15 ಕಿ.ಮೀ. ದೂರದ ಸಂಪಾಜೆಯಲ್ಲಿರುವ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಹೋದೆ. ಅವರನ್ನು ಕಂಡು ನಾನೊಬ್ಬ ಕೃಷಿಕ ಮಹಿಳೆ ಎಂದು ನನ್ನ ಪರಿಚಯ ಹೇಳಿ ಆಮೇಲೆ ಕೇಳಿದೆ- `ಆನೆಗಳು ನಾಡಿಗೆ ಯಾಕೆ ಬರುತ್ತವೆ?’ ಅವರು ಹೇಳಿದರು-`ಈಗ ಕಾಡಲ್ಲಿ ಆನೆಗಳಿಗೆ ತಿನ್ನಲಿಕ್ಕೆ ಏನುಂಟು? ಆಹಾರ ಹುಡುಕಿಕೊಂಡು ಅವು ಊರಿಗೆ ಬರುತ್ತವೆ’. ಇದೇ ಉತ್ತರಕ್ಕೆ ಕಾಯುತ್ತಿದ್ದ ನಾನು ಹೇಳಿದೆ – `ಈಗ ಆನೆಗಳಿಗೆ ಆಹಾರದ ಅಭಾವ ಕಾಡುತ್ತಿದೆ ಎಂದು ನೀವು ಹೇಳುತ್ತೀರಿ. ಅದಕ್ಕೆ ಆನೆಗಳಿಗೆ ನಾವು ಕಾಡಿನಲ್ಲಿ ಮೇವು ಬೆಳೆಸುವ ಪ್ರಯತ್ನ ಮಾಡಿದರೆ ಹೇಗೆ? ಕಲ್ಲುಬಾಳೆ ಆನೆಗಳಿಗೆ ಪ್ರಿಯವಾಗಿರುವುದರಿಂದ ಅದನ್ನು ಕಾಡಿನಲ್ಲಿ ಬೆಳೆಸಬೇಕೆಂದು ನನ್ನ ಸಲಹೆ. ಏಕೆಂದರೆ ಇದನ್ನು ಬೆಳೆಸಲು ಉಳಿದ ಗಿಡಮರ ಬೆಳೆಸುವಂತೆ ಕಷ್ಟ ಇಲ್ಲ. ಅರಣ್ಯ ಇಲಾಖೆಗೆ ಗಿಡಗಳ ನರ್ಸರಿ ಮಾಡುವ ಖರ್ಚೂ ಇಲ್ಲ. ಕಾಡಿನಲ್ಲಿ ನೇರವಾಗಿ ಕಲ್ಲುಬಾಳೆಯ ಬೀಜಗಳನ್ನು ಬಿತ್ತಿದರಾಯಿತು. ಕಲ್ಲುಬಾಳೆ ನೆಲದ ತೇವಾಂಶವನ್ನು ಕಾಪಾಡುತ್ತದೆ. ಕಾಡಿನಲ್ಲಿ ಕಲ್ಲುಬಾಳೆ ಬೆಳೆಸಿದರೆ ನಾಡು ಉಳಿಸಿದಂತೆ ಆಗುತ್ತದೆ. ಈ ಬಗ್ಗೆ ನೀವು ಗಂಭೀರವಾಗಿ ಚಿಂತಿಸಿ ನಿರ್ಧಾರ ಕೈಗೊಳ್ಳಬೇಕು. + +(ಬಸ್ಸಿನ ವೇಗಕ್ಕೆ ಸಿಲುಕಿ ಸತ್ತ ರೌಡಿ ರಂಗ ಆನೆ) + +ಆನೆ ಹಾವಳಿ ತಪ್ಪಿಸಲು ಸರ್ಕಾರ ಕಾಡಿನಲ್ಲಿ ಕಲ್ಲುಬಾಳೆ ಬೀಜ ಬಿತ್ತುವ ಕೆಲಸವನ್ನೂ ಮಾಡಲಿ. ಇದರ ಆರಂಭವನ್ನು ಮೊದಲಿಗೆ ನಾವೇ ಮಾಡೋಣ’. ನನ್ನ ಮಾತುಗಳನ್ನು ಸಾವಧಾನದಿಂದ ಕೇಳಿದ ವಲಯ ಅರಣ್ಯ ಅಧಿಕಾರಿಗಳು ಉತ್ತರಿಸಿದರು-`ನಿಮ್ಮ ಸಲಹೆ ಸ್ವಾಗತಾರ್ಹ. ಜೂನ್, ಜುಲೈ ತಿಂಗಳಿನಲ್ಲಿಯಾದರೆ ಕಾಡಿನಲ್ಲಿ ಬೀಜ ಬಿತ್ತುವ ಕಾರ್ಯಕ್ರಮ ಸರ್ಕಾರದ ವತಿಯಿಂದ ನಡೆಯುತ್ತದೆ. ಆದರೂ ಪರ್ವಾಗಿಲ್ಲ. ನೀವು ಬೀಜ ಸಂಗ್ರಹಿಸಿ ಕೊಟ್ಟರೆ ಸದ್ಯದಲ್ಲೇ ನಾನು ನಮ್ಮ ಸಿಬ್ಬಂದಿಯವರೊಡಗೂಡಿ ನಿಮ್ಮ ಊರಿಗೆ ಬರುತ್ತೇವೆ. ಕಾಡಿನಲ್ಲಿ ಆನೆಗಳು ಊರಿಗೆ ನುಗ್ಗುವ ದಾರಿ ನೋಡಿಕೊಂಡು ಅಂಥ ಜಾಗದಲ್ಲಿ ಬೀಜ ಬಿತ್ತೋಣ’. ನನ್ನ ಮಾತನ್ನು ಅವರು ಇಷ್ಟು ಸುಲಭವಾಗಿ ಒಪ್ಪಬಹುದು ಎಂದು ನಾನಂದುಕೊಂಡಿರಲಿಲ್ಲ. + +ಅವರು ಒಪ್ಪಿದ್ದು ನನಗೆ ಹೇಳತೀರದಷ್ಟು ಖುಷಿ ಕೊಟ್ಟರೂ ಬೀಜ ಎಲ್ಲಿಂದ ಸಂಪಾದನೆ ಮಾಡುವುದು ಎಂಬ ಸಮಸ್ಯೆ ಎದುರಾಯಿತು. ನನ್ನ ಮನೆಯಲ್ಲಿರುವ ಕಲ್ಲುಬಾಳೆ ಗೊನೆ ಎಳೆಯದು. ಅದು ಹಣ್ಣಾಗುವಾಗ ಕಡು ಬೇಸಿಗೆ ಬರುತ್ತದೆ. ಆ ಸಮಯದಲ್ಲಿ ಬೀಜ ಬಿತ್ತಿಯೂ ಪ್ರಯೋಜನವಿಲ್ಲ. ಈಗಾದರೆ ಮಳೆ ಆಗೊಂದು ಈಗೊಂದು ಬರುತ್ತಿರುವುದರಿಂದ ನೆಲ ಹಸಿಯಾಗಿದೆ. ಈಗಲೇ ಬೀಜ ಬಿತ್ತಬೇಕು. ಹೀಗೆ ಚಿಂತಿಸುತ್ತಿರುವಾಗ ಪಕ್ಕನೆ ಆ ಕಂಪ್ಯೂಟರ್ ಶಿಕ್ಷಕಿಯ ನೆನಪಾಯಿತು. ಅವರ ಮನೆಯೂ ಸಂಪಾಜೆಯಲ್ಲೇ ಇರುವುದು. ವಲಯ ಅರಣ್ಯಾಧಿಕಾರಿಗಳ ಕಚೇರಿಯಿಂದ ಸೀದಾ ಅವರ ಮನೆಗೆ ಹೋದೆ. `ಕಲ್ಲುಬಾಳೆ ಬೀಜ ಇದೆಯಾ?’ ವಿಚಾರಿಸಿದೆ. `ಕೇಜಿಗೆ 200 ರೂಪಾಯಿ ಕೊಟ್ಟರೆ ಕೊಡುತ್ತೇವೆ’ ಎಂದು ಅವರ ತಂದೆ ಹೇಳಿದರು. `ಸರಿ’ ಎಂದು ನಾನು 400 ರೂಪಾಯಿ ಕೊಟ್ಟು 2 ಕೇಜಿ ಬೀಜ ಮನೆಗೆ ತಂದೆ. + +(ಕಲ್ಲು ಬಾಳೆ) + +ವಲಯ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಹೇಳಿದೆ. `ಬೀಜ ರೆಡಿಯಾಗಿದೆ. ಯಾವಾಗ ಬರುತ್ತೀರಿ?’ ಅವರೂ ಉತ್ಸುಕತೆಯಲ್ಲಿದ್ದರು. `ನಾಳೆಯೇ ಬರುತ್ತೇವೆ’ ಎಂದರು. ಹೇಳಿದ ಮಾತಿನಂತೆ ಅವರು ಮರುದಿನ ಹತ್ತು ಗಂಟೆಗೆ ಸರಿಯಾಗಿ ಉಪವಲಯ ಅರಣ್ಯಾಧಿಕಾರಿ ಅಲ್ಲದೆ ಇತರ ಆರು ಮಂದಿ ಸಿಬ್ಬಂದಿಯವರೊಂದಿಗೆ ಮನೆಗೆ ಬಂದರು. ನಾನು ಎಲ್ಲರಿಗೂ ಟೀ ಮತ್ತು ಬಿಸಿಬಿಸಿ ಗೆಣಸಿನ ಪೋಡಿ ಮಾಡಿ ಕೊಟ್ಟೆ. ಕಾಡಿನಲ್ಲಿ ಬಾಯಾರಿಕೆಯಾದರೆ ಎಂದು 5 ಲೀಟರ್ ಕ್ಯಾನ್‌ನಲ್ಲಿ ಮಜ್ಜಿಗೆ ತುಂಬಿಸಿಕೊಂಡೆ. ನಂತರ ನಾವೆಲ್ಲರೂ ನಮ್ಮ ಮನೆಯಿಂದ ಮೇಲೆ ಇರುವ ರಕ್ಷಿತಾರಣ್ಯಕ್ಕೆ ಕತ್ತಿ, ಕೋಲು, ಬೀಜ ಹಿಡಿದು ಪ್ರವೇಶಿಸಿದೆವು. ಆಗ ತಾನೆ ಹಾಕಿ ಹೋದ ಆನೆಯ ಲದ್ದಿ ನಮ್ಮನ್ನು ಸ್ವಾಗತಿಸಿತು. ಅಲ್ಲಿ ಎಲ್ಲಾ ಕಡೆ ಮುಗಿಲಿಗೆ ಮುಟ್ಟುವ ದಪ್ಪ ದಪ್ಪ ಮರಗಳಿದ್ದವು ವಿನಾ ಆನೆಗಳು ತಿನ್ನುವ ಬಿದಿರು ಇತ್ಯಾದಿ ಮೇವು ಕೆಲವು ಕಡೆಗಳಲ್ಲಷ್ಟೇ ಇತ್ತು. + +ನಮ್ಮ ಜೊತೆ ಯಾವುದೇ ಹಮ್ಮುಬಿಮ್ಮು ಇಲ್ಲದೆ, ಇಂಬಳ ಕಚ್ಚಿದರೂ ಲೆಕ್ಕಿಸದೆ ವಲಯ ಅರಣ್ಯಾಧಿಕಾರಿ ಅವರೂ ಬೀಜ ಬಿತ್ತಿದರು. ಮಧ್ಯಾಹ್ನ ಸುಮಾರು ಎರಡು ಗಂಟೆಯಷ್ಟು ಹೊತ್ತಿಗೆ ನಮ್ಮ ಕೆಲಸ ಮುಗಿಯಿತು. ಹೊರಡುವಾಗ ಅವರು ಹೇಳಿದರು- `ಬೀಜ ರೆಡಿ ಮಾಡಿ ಇಡಿ. ಮಳೆಗಾಲ ಆರಂಭವಾಗುವಾಗ ಬೇರೆ ಕಾಡುಗಳಲ್ಲಿ ಬೀಜ ಬಿತ್ತೋಣ. ಇದರ ಫಲಿತಾಂಶ ಏನಾಗುವುದು ಎಂದು ಕಾದು ನೋಡೋಣ’. ನಾನು ಆಗಲಿ ಎಂಬಂತೆ ತಲೆಯಾಡಿಸಿದೆ. ಇದು ಯಶಸ್ಸು ಆದರೆ ಆನೆ ಉಳಿಸುವಲ್ಲಿ ನನ್ನ ಅಳಿಲುಸೇವೆ ಎಂದು ಮನದಲ್ಲಿ ಅಂದುಕೊಂಡೆ. + + + +ನಾನು ಈಗ ನಾವು ಬಿತ್ತಿದ ಆ ಕಲ್ಲುಬಾಳೆಯ ಬೀಜಗಳು ಮೊಳಕೆ ಒಡೆದು, ಗಿಡಗಳಾಗಿ ಬೆಳೆದು ಆನೆಗಳಿಗೆ ಆಹಾರವಾಗುವುದನ್ನು ಕಾಯುತ್ತಿದ್ದೇನೆ. + +ಲೇಖಕಿ ಸಹನಾ ಕಾಂತಬೈಲು ಸಂಪಾಜೆಯ ದಬ್ಬಡ್ಕದವರು. ಕೃಷಿ ಮಹಿಳೆ.  ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ. \ No newline at end of file diff --git a/Kenda Sampige/article_252.txt b/Kenda Sampige/article_252.txt new file mode 100644 index 0000000000000000000000000000000000000000..be13b8877c500ca1a922ba1f858bf50749a5f2e7 --- /dev/null +++ b/Kenda Sampige/article_252.txt @@ -0,0 +1,29 @@ +ಲಿಂಗರಾಜ ಸೊಟ್ಟಪ್ಪನವರು ಮೂಲತಃ ವಿಜ್ಞಾನ ಶಿಕ್ಷಕರು. ಅವರ ಮೊದಲ ಸಂಕಲನವಿದು. ಇಂಥವರೆ ಕತೆಗಾರರಾಗಬೇಕೆಂಬ ಗಡಿಗಳೇನೂ ಇಲ್ಲ. ಈಗ ಎಲ್ಲ ಗಡಿಗಳೂ ಮುರಿದು ಬಿದ್ದಿವೆ. ಹಾಗೆಯೇ ಸಾಹಿತ್ಯವನ್ನು ನಿರ್ದೇಶಿಸುತ್ತಿದ್ದ ವಾದ ಪಂಥ ಚಳವಳಿಗಳೂ ಕೂಡ ಈಗ ಇಲ್ಲ. ಒಂದು ರೀತಿಯ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಈ ಮುಕ್ತತೆಯ ಕಾರಣದಿಂದಾಗಿಯೇ ಲಿಂಗರಾಜ ತಮ್ಮ ಕತೆಗಳಿಗೆ ವಸ್ತುಗಳನ್ನು ಮುಕ್ತವಾಗಿ ನಿರ್ಭಿಡೆಯಿಂದ, ತೀರಾ ಅಲಕ್ಷಿಸಬಹುದಾದದ್ದು ಎನ್ನುವಂತಹ ತಾಣಗಳಿಂದಲೂ ಎತ್ತಿಕೊಳ್ಳುತ್ತಾರೆ. ಅವರ ಬಹುಪಾಲು ಕತೆಗಳ ಜಗತ್ತು ಎದ್ದು ಬರುವದು ನಮ್ಮ ಊರು ಕೇರಿಗಳಿಂದ, ಲಂಬಾಣಿ ತಾಂಡಾಗಳಿಂದ. ಅಂಚಿಗೆ ತಳ್ಳಲ್ಪಟ್ಟ ಸಮುದಾಯಗಳಿಂದ. ಇಲ್ಲಿನ ಕತೆಗಳನ್ನು ಪ್ರವೇಶಿಸುತ್ತಿದ್ದಂತೆ ಲಿಂಗರಾಜ ಅವರಿಗೆ ಗ್ರಾಮ್ಯಾನುಭವ ಎಷ್ಟೊಂದು ಗಾಢವಾಗಿ ಪ್ರಭಾವಿಸಿದೆ ಎಂಬುದು ತಟ್ಟನೆ ನಮ್ಮ ಮನಸ್ಸಿಗೆ ತಾಗುತ್ತದೆ. + +(ಲಿಂಗರಾಜ ಸೊಟ್ಟಪ್ಪನವರ) + +ಇಲ್ಲಿನ ಬಹುಪಾಲು ಕತೆಗಳು ಈಗಾಗಲೆ ನಾಡಿನ ಪ್ರತಿಷ್ಠಿತ ಪತ್ರಿಕೆಗಳಲ್ಲಿ ಬೆಳಕು ಕಂಡಿವೆ. ಹಲವು ಬಹುಮಾನ ಗಳಿಸಿವೆ. ಓದುಗರ ಮೆಚ್ಚುಗೆ ಗಳಿಸಿವೆ. ಲಿಂಗರಾಜರ ಒಟ್ಟು ಕತೆಗಳ ತಾತ್ವಿಕ ವಿನ್ಯಾಸವನ್ನು ರೂಪಿಸಿರುವದು ದಲಿತ-ಬಂಡಾಯದ ಆಶಯಗಳಾಗಿವೆ. ದಲಿತ ಬಂಡಾಯದ ಆಶಯಗಳು ಈ ಹಿಂದೆ ಕತೆಗಳನ್ನು ನಿಯಂತ್ರಿಸುತ್ತಿದ್ದಂತೆ ಅಥವಾ ಅನುಭವವೊಂದನ್ನು ವಾದಗಳಿಗೆ ಒಗ್ಗಿಸಲು ಬಗ್ಗಿಸಲು ಒತ್ತಾಯಿಸುವಂತೆ ಇಲ್ಲಿ ಆಗಿಲ್ಲ. ಲಿಂಗರಾಜ ಈ ತಾತ್ವಿಕ ವಿನ್ಯಾಸಗಳನ್ನು ವಿಸ್ತರಿಸಿಕೊಂಡಿದ್ದಾರೆ ಹಾಗೂ ಇಲ್ಲಿನ ಕತೆಗಳಲ್ಲಿ ಕಾಣಬರುವ ಶೋಷಣೆ-ಅಸಹಾಯಕತೆ ಹಾಗೂ ಅವಮಾನಗಳನ್ನು ಮತ್ತು ಗಂಡು ಹೆಣ್ಣುಗಳ ನಡುವೆ ಹುಟ್ಟುವ ಸಂಬಂಧಗಳನ್ನು ವಿವರಿಸಲು ಒಂದು ನವಿರಾದ ಶೈಲಿಯನ್ನು ರೂಢಿಸಿಕೊಂಡಿದ್ದಾರೆ. ಹೀಗಾಗಿ ಈ ಕತೆಗಳ ಪ್ರವೇಶ ಓದುಗನಿಗೆ ವಿವಂಚನೆಯನ್ನೋ ಕ್ಲಿಷ್ಟತೆಯನ್ನೊ ಸೃಷ್ಟಿಸುವುದಿಲ್ಲ. ಗಾಢವಾದ ಅನುಭವವನ್ನು ಒಂದು ಸುಭಗ ಪಾರದರ್ಶಕ ಶೈಲಿಯಲ್ಲಿ ಕಟ್ಟುವ ಕಲೆಯಲ್ಲಿ ಲಿಂಗರಾಜ ಯಶಸ್ವಿಯಾಗಿದ್ದಾರೆ. ಇದು ಅವ್ವ ಮತ್ತು ರೊಟ್ಟಿ, ಮಾರ್ಗೀ ಅಂಗಿ, ಮಠ, ಅಮ್ಮ ಸಿಕ್ಕಿದ್ದಳು, ದ್ಯಾಮಿ, ಕರ್ಮಣ್ಯೆ ವಾಧಿಕಾರಸ್ಥೆ ಕತೆಗಳಲ್ಲಿ ಕಂಡುಬರುತ್ತದೆ. + +ಈ ಸಂಕಲನದಲ್ಲಿ ಎರಡು ಬಗೆಯ ಕತೆಗಳಿವೆ; ಒಂದು ಜನಪ್ರಿಯ ಪತ್ರಿಕೆಗಳಿಗಾಗಿ ಬರೆದ ಕತೆಗಳು. ಇವುಗಳ ವಸ್ತು ಗಾಢವೂ ಗಂಭೀರವೂ ಮತ್ತು ಸಾಕಷ್ಟು ಶೋಧನೆಗೆ ಅವಕಾಶವಿದ್ದರೂ ಸ್ಥಳ ಮಿತಿ, ಕಾಲ ಮಿತಿಗಳಿಂದ ಅವು ಧಿಡೀರನೆ ಮುಕ್ತಾಯವಾಗಿ ಬಿಡುತ್ತವೆ. ಅದು ಈ ಕಾಲದ ಸಂವಹನ ಮಾದ್ಯಮಗಳು ಹುಟ್ಟಿಸಿರುವ ಲಾಲಸೆ ಮತ್ತು ಸವಾಲು. ಹೊಸ ಕತೆಗಾರರಿಗೆ ತಮ್ಮನ್ನು ತಾವು ಓದುವ ವರ್ಗಕ್ಕೆ ಪರಿಚಯಿಸಿಕೊಳ್ಳಲು ಇರುವ ಏಕೈಕ ದಾರಿ. ಮತ್ತು ಅದು ಅವರಿಗೆ ಅನಿವಾರ್ಯವೂ ಹೌದು. + +ಇಂಥ ಜನಪ್ರಿಯ ಮಾಧ್ಯಮಗಳ ಕರೆಗೆ ಓಗೊಟ್ಟು ಲಿಂಗರಾಜ ಸಾಕಷ್ಟು ಕತೆಗಳನ್ನು- ಒಂದು ರೀತಿಯಲ್ಲಿ ನಿರಂತರವಾಗಿ ಬರೆದಿದ್ದಾರೆ. ಷರತ್ತುಗಳು ಅನ್ವಯಿಸುತ್ತವೆ.. ಖಾಲಿ ಬಾಟ್ಲೀ. ಬೇಲಿ ಮತ್ತು ಹೂವು, ಮನೆ ಬೇಕಾಗಿದೆ ಇಂತಹ ಕತೆಗಳನ್ನು ಹೆಸರಿಸುತ್ತ ಹೋಗಬಹುದು. ಈ ಎಲ್ಲ ಕತೆಗಳು ಸಮಕಾಲೀನ ಜಗತ್ತಿನಲ್ಲಿ ನಾವು ದಿನನಿತ್ಯ ಕಾಣುತ್ತಿರುವ ಹಲವು ಸಮಸ್ಯೆಗಳನ್ನು ವೈರುಧ್ಯಗಳನ್ನು ವಸ್ತುವಾಗಿ ಸ್ವೀಕರಿಸಿವೆ, ಗ್ರಾಮಾಂತರ ಜಗತ್ತಿನಲ್ಲಿ ಕಾಣಬರುವ ದಾಂಪತ್ಯ ನಡುವಣ ಬಿಕ್ಕಟ್ಟುಗಳು, ವಿವಾಹೇತರ ಸಂಬಂಧಗಳು, ನಪುಂಸಕತೆ, ಜಾತಿಯತೆಗಳು ಮತ್ತು ಆಧುನಿಕತೆ ಹಳ್ಳಿಗಳನ್ನು ಪ್ರವೇಶಿಸಿ ಸೃಷ್ಟಿಸಿರುವ ಬಿಕ್ಕಟ್ಟುಗಳ ಕುರಿತು ಈ ಕತೆಗಳು ಪ್ರಶ್ನೆ ಎತ್ತುತ್ತವೆ. + +ಗ್ರಾಮಾಂತರ ಜಗತ್ತಿನಲ್ಲಿ ವಲಸೆ ಉಂಟು ಮಾಡುವ ತಳಮಳಗಳನ್ನು ‘ದೂರ ತೀರದ ಮೋಹ’ ಕಲಾತ್ಮಕವಾಗಿ ಕಟ್ಟಿಕೊಟ್ಟಿದೆ. ‘ಖಾಲಿ ಬಾಟ್ಲೀ’ ಕತೆಯಲ್ಲಿ ಬರುವ ಬಿಲ್ಲಪ್ಪನ ವ್ಯಕ್ತಿ ಚಿತ್ರಣ, ಅವನ ಸ್ವಭಾವ, ಅವನ ಬೋಧನೆ-ಒಬ್ಬ ಸಾಮಾನ್ಯ ಮನುಷ್ಯನಲ್ಲಿ ಅಡಗಿರಬಹುದಾದ ಅಸಾಮಾನ್ಯ ಗುಣವನ್ನು ಅನಾವರಣ ಮಾಡುತ್ತದೆ. ‘ಸುಡು ಬೇಸಿಗೆಯ ಹಗಲುಗನಸು’ ಕತೆಯಲ್ಲಿ ‘ನಪುಂಸಕತೆ’ ಎಂಬ ಹಳೆಯ ಕ್ಲೀಷೆಯ ವಿಷಯವನ್ನು ಒಂದು ಹೊಸ ಪರಿಸರದಲ್ಲಿ ಹೊಸ ಜನಾಂಗ (ಲಂಬಾಣಿ)ದ ನಡುವೆ ಇಟ್ಟು ಪರೀಕ್ಷಿಸುವ ಪ್ರಯತ್ನ ಶ್ಲಾಘನೀಯ ಎನ್ನಲೆಬೇಕು. + +ಇವತ್ತು ಯಾವುದೆ ಹೊಸ ಕಾಲದ ಕತೆಗಾರ- ಮಠ, ಪೀಠ, ಸನ್ಯಾಸಿ-ಮತ್ತು ಆ ವ್ಯವಸ್ಥೆಯೊಳಗೆ ನಡೆಯುವ ಹಲವಾರು ಕರಾಳ ವಿದ್ಯಮಾನಗಳ ಕುರಿತು ಬರೆಯದೆ ಇರಲಾರ. ಇವತ್ತು ಮಠಗಳು ಹಿಂದಿನಂತಿಲ್ಲ. ಅವು ಅಧಿಕಾರದ ಕೇಂದ್ರಗಳಾಗಿವೆ. ಅಲ್ಲಿ ಹಲವು ಕಾಮ ಕಾಂಚನಗಳ ಅವ್ಯವಹಾರಗಳು ನಡೆಯುತ್ತವೆ. ಇಂತಹ ವಿಷಯಗಳು ಇಲ್ಲಿ ಪರೀಕ್ಷೆಗೆ ಒಡ್ಡಿಕೊಂಡಿವೆ. ‘ಮಠ’ ಅಂತದ್ದೊಂದು ಕತೆ. + +ನಗರೀಕರಣ, ಔದ್ಯೋಗಿಕರಣ, ಆಧುನಿಕರಣಗಳು ಜಾತಿಯನ್ನು ದೂರಗೊಳಿಸಬಲ್ಲವು ಎಂಬ ನಮ್ಮ ಸಿದ್ಧ ನಂಬಿಕೆ ಇಂದು ಹುಸಿಯಾಗಿದೆ. ನಗರಗಳಲ್ಲಿ ಅಸ್ಪೃಶ್ಯನೊಬ್ಬ ಬಾಡಿಗೆ ಮನೆ ಹಿಡಿಯುವ ಕಷ್ಟವನ್ನು ‘ಮನೆ ಬೇಕಾಗಿದೆ’ ಕತೆ ಬಿಚ್ಚಿಡುತ್ತದೆ. + +ಬಹಳ ನಿರಾಳವಾಗಿ, ಯಾವ ಆಯಾಸವೂ ಇಲ್ಲದೆ ಬರೆಯುವ ಲಿಂಗರಾಜ ಸಣ್ಣ ಅನುಭವ, ಘಟನೆಗಳ ಸುತ್ತ ಕತೆ ಹೆಣೆಯುತ್ತಾರೆ. ಅವರಿಗೆ ಭಾಷಾ ಹಿಡಿತ, ಮತ್ತು ಗ್ರಾಮಾನುಭವ ಕತೆ ಕಟ್ಟಲು ನೆರವಾಗಿವೆ. ಅವರು ಭಾಷೆಯನ್ನು ಕಾವ್ಯದಂತೆ ಮಣಿಸಬಲ್ಲರು.. ಅವರು ಬನಿ, ಲಯ, ಪ್ರಾಸಗಳನ್ನು ಚೆನ್ನಾಗಿ ಅರಿತಿದ್ದಾರೆ. ಸಣ್ಣ ಅನುಭವವನ್ನೂ ಅವರು ಕತೆ ಮಾಡಬಲ್ಲೆನೆಂಬ ಛಲದಿಂದ ಮುನ್ನುಗ್ಗುತ್ತಾರೆ. ಮತ್ತು ಹೀಗೆ ಬರೆಯುವಾಗ ಜನಪ್ರಿಯ ಪತ್ರಿಕೆಯೊಂದಕ್ಕೆ ಕಳಿಸಬೇಕೆಂಬ ನಿಯಂತ್ರಣವನ್ನು ತಮ್ಮ ಮೇಲೆ ತಾವೇ ಹೇರಿಕೊಳ್ಳುತ್ತಾರೆ. ಈ ಕಟ್ಟುಪಾಡುಗಳ ನಡುವೆಯೂ ಮನಸ್ಸನ್ನು ಹಿಡಿದಿಡುವ ಕಾರಣದಿಂದಾಗಿ ಇಲ್ಲಿನ ಕತೆಗಳು ಫ್ರೆಶ್ ಎನಿಸುತ್ತವೆ. ತಾಜಾ ಆಗಿವೆ. ಎಲ್ಲೂ ಬೋರ್ ಹೊಡೆಸುವದಿಲ್ಲ. ಕತೆಯೊಳಗೆ ಒಂದು ಜೀವಂತಿಕೆ ಲವಲವಿಕೆಯಿಂದ ಹರಿದಾಡುತ್ತದೆ. ಹಾಗಾಗಿ ಈ ಕತೆಗಾರನ ಕುರಿತು ಭರವಸೆ ಮೂಡಿಸುತ್ತದೆ. + +ಇಡೀ ಸಂಕಲನ ಜನಪ್ರಿಯತೆಯ ಮಾರ್ಗ ಹಾಗೂ ಮಹತ್ವಾಕಾಂಕ್ಷಿ ರಚನಾ ಸೆಳೆತ.. ನಡುವೆ ತುಯ್ಯುತ್ತಿದೆ. ‘ಮಾರ್ಗೀ ಅಂಗಿ’ ‘ಕರ್ಮಣ್ಯೆ ವಾಧಿಕಾರಸ್ಥೆ..’ ‘ಅವ್ವ ಮತ್ತು ರೊಟ್ಟಿ’ ಹಾಗೂ ‘ದ್ಯಾಮಿ’ ಈ ನಾಲ್ಕು ಮಹತ್ವಾಕಾಂಕ್ಷಿ ಕತೆಗಳು ಸಂಕಲನದ ತೂಕ ಹೆಚ್ಚಿಸಿವೆ. ಎಲ್ಲರಿಗೂ ಬೇಕಾದ ಮನುಷ್ಯನಾದರೂ ಸಹ ಅಲ್ಪಸಂಖ್ಯಾತ ಸಿಂಪಿಗನೊಬ್ಬ ಹೇಗೆ ಗ್ರಾಮ ರಾಜಕಾರಣಕ್ಕೆ ಈಡಾಗಿ ಬೇಡವಾಗುತ್ತಾನೆ ಎಂಬುದನ್ನು ಮಾರ್ಗೀ ಅಂಗಿ-ಕತೆ ಮನೋಜ್ಞವಾಗಿ ನಿರೂಪಿಸುತ್ತದೆ. ವೈದ್ಯಲೋಕದ ವೈರುಧ್ಯಗಳ ಚಿತ್ರಣದ ‘ಕರ್ಮಣ್ಯೆ ವಾಧಿಕಾರಸ್ಥೆ’ ಕತೆ ಮಾನವೀಯ ಸೂಕ್ಷ್ಮ ಎಳೆಯೊಂದರ ಮೂಲಕ ನಮ್ಮೆದೆಯನ್ನು ತಟ್ಟುತ್ತದೆ. ಈ ಎಳೆ ಇಲ್ಲದೆ ಹೋಗಿದ್ದರೆ ಈ ಕತೆ ಒಂದು ವರದಿಯಂತೆ ಭಾಸವಾಗುತ್ತಿತ್ತು. ‘ಅವ್ವ ಮತ್ತು ರೊಟ್ಟಿ’ ಸ್ವಾತಂತ್ರ್ಯೊತ್ತರ ಕಾಲಗಟ್ಟದಲ್ಲಿ ತೆರೆದುಕೊಳ್ಳುವ ಕತೆ ದಟ್ಟ ಅನುಭವವನ್ನು ಕಟ್ಟಿಕೊಡುತ್ತದೆ. ಇಲ್ಲಿನ ಕಟ್ಟುವಿಕೆ ಮತ್ತು ಹೃದಯಸ್ಪರ್ಶಿ ಎಳೆಗಳು ಕಾಡುತ್ತವೆ. ಇನ್ನೂ ‘ದ್ಯಾಮಿ’ ಕತೆ ಸಂಬಂಧಗಳ ಹೆಚ್ಚುಗಾರಿಕೆ.. ಆಶಯದ ದೃಷ್ಟಿಯಿಂದ ಹಾಗೂ ಅದರ ಓಟ ಮತ್ತು ಲಯದ ಕಾರಣದಿಂದ ಗಮನ ಸೆಳೆಯುತ್ತದೆ. ಇಲ್ಲಿ ಸೈಕಲ್ ಒಂದು ಸಂಕೇತದಂತೆಯೂ ಪ್ರೇಮ ಸ್ಮಾರಕದಂತೆಯೂ ಬಳಕೆಯಾಗಿದೆ. + +(ಡಾ. ಪ್ರಹ್ಲಾದ ಅಗಸನಕಟ್ಟೆ‌) + +ಒಟ್ಟಾರೆ ಲಿಂಗರಾಜ ಅವರಿಗೆ ಕಥನ ಶಕ್ತಿ ಒಲಿದಿದೆ. ಕನ್ನಡದ ಕಥಾಲೋಕ ಇವೊತ್ತು ಬಹು ಸಮರ್ಥ-ಸೃಜನಶೀಲ ಕ್ಷೇತ್ರವಾಗಿ ಬೆಳೆದಿದೆ. ಹೊಸ ಕತೆಗಾರ ಇವುಗಳನ್ನೆಲ್ಲ ಜೀರ್ಣಿಸಿಕೊಂಡು ತನ್ನದೆ ಆದ ದನಿಯೊಂದನ್ನು ಸ್ಥಪಿಸುವುದು ಒಂದು ಸವಾಲಿನ ಕೆಲಸ. ಆರಂಭದಲ್ಲಿನ ಬರವಣಿಗೆ ಖುಷಿಯನ್ನು, ಬಿಡುಗಡೆಯನ್ನೊ ತಂದುಕೊಡುತ್ತದೆ. ಬಹಳ ಜನ ಹೊಸ ಹುಡುಗರು ಅಲ್ಲಿಗೆ ಬಂದು ನಿಂತುಬಿಡುತ್ತಾರೆ. ಲಿಂಗರಾಜ ತಮ್ಮ ಮುಂದಿರುವ ಸವಾಲನ್ನು ಸ್ವೀಕರಿಸಿ ಮುನ್ನಡೆಯಬೇಕಿದೆ. + + + +ಸಣ್ಣ ಕತೆ ಕಾವ್ಯದಂತೆ. ಅತಿ ಚಿಕ್ಕ ಗಾತ್ರದಲ್ಲಿ ಅತಿ ಕ್ಷೀಪ್ರವಾಗಿ-ಹಲವು ರೂಪಕ-ಪ್ರತಿಮೆಗಳನ್ನು ಒಂದು ಕೇಂದ್ರಕ್ಕೆ ತಂದು ಅರ್ಥವನ್ನು ಆಸ್ಪೋಟಿಸಬೇಕಾಗುತ್ತದೆ. ‘ದ್ಯಾಮಿ’ ‘ಮಾರ್ಗೀ ಅಂಗಿ’ ‘ಕರ್ಮಣ್ಯೇ…’ ಹಾಗೂ ‘ಅವ್ವ ಮತ್ತು ರೊಟ್ಟಿ’ ಕತೆಗಳಲ್ಲಿ ಈ ಲಕ್ಷಣಗಳಿವೆಯೆಂದೆ ಲಿಂಗರಾಜ ಬಗ್ಗೆ ನನಗೆ ಭರವಸೆ. ಇವೊತ್ತು ಕತೆಗಾರರಿಗೆ ದಟ್ಟ ಅನುಭವ-ಜೀವನ ನಿಕಟ ಸಾಮೀಪ್ಯ-ಭಾಷೆಯ ಶ್ರೀಮಂತಿಕೆ-ಕಡಿಮೆಯಾಗುತ್ತಿದೆ. ಲಿಂಗರಾಜ ಅವರಿಗೆ ಇವೆಲ್ಲ ಸಮೃದ್ಧವಾಗಿ ದಕ್ಕಿವೆ. ಹೀಗಾಗಿ ಅವರು ಇವುಗಳನ್ನೆಲ್ಲ ಬಳಸಿಕೊಂಡು ಮುಂದುವರೆಯಲಿ.. ಕನ್ನಡ ಕಥಾಕ್ಷೇತ್ರವನ್ನು ತಮ್ಮ ಕತೆಗಳಿಂದ ವಿಸ್ತರಿಸಲಿ ಎಂದು ಆಶಿಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_253.txt b/Kenda Sampige/article_253.txt new file mode 100644 index 0000000000000000000000000000000000000000..27907b848764e0ceb16f042c5153a6d107e98014 --- /dev/null +++ b/Kenda Sampige/article_253.txt @@ -0,0 +1,21 @@ +ಹೆಣ್ಣಿನ ನಿಜಜೀವನ ಆರಂಭವಾಗುವುದು ಗಂಡನ ಮನೆ ಸೇರಿದ ಮೇಲೆ ಎಂದು ಹೇಳುತ್ತಾರೆ ಬಲ್ಲವರು. ಈ ಮಾತು ನಿಜವೂ ಹೌದು. ಹೆಣ್ಣು ಎಷ್ಟೇ ಪ್ರತಿಭಾವಂತಳಾಗಿದ್ದರೂ ಕೂಡ ಗಂಡನ ಪ್ರೋತ್ಸಾಹವಿದ್ದರೆ ಮಾತ್ರ ಆ ಪ್ರತಿಭೆ ಬೆಳಕಿಗೆ ಬರುತ್ತದೆ ಹಾಗೂ ಬೆಳಗುತ್ತದೆ. ಹೆಣ್ಣಿನ ಪ್ರತಿಭೆಗೆ ಸಮಾಜದ ಪ್ರೋತ್ಸಾಹ ಇದ್ದೂ ಗಂಡನ ಪ್ರೋತ್ಸಾಹ ಇಲ್ಲದಿದ್ದರೆ ಆ ಪ್ರತಿಭೆ ಕಮರಿ ಹೋಗುವುದರಲ್ಲಿ ಸಂಶಯವಿಲ್ಲ. ಕೃಷಿಕನ ಕೈ ಹಿಡಿದರಂತೂ ಅವಳ ಎಲ್ಲಾ ಕಲೆ ಮೂಲೆಗುಂಪಾಗಿ ಹಟ್ಟಿ ತೊಳೆಯುವುದು, ಸೆಗಣಿ ಎತ್ತುವುದು, ಹಾಲು ಕರೆಯುವುದು, ಅಡಿಕೆ ಹೆಕ್ಕುವುದು, ಕೂಲಿಯಾಳುಗಳಿಗೆ ಬೇಯಿಸಿ ಹಾಕುವುದು ಇದೇ ಬದುಕು ಆಗಿಬಿಡುತ್ತದೆ. ಇದಕ್ಕೆ ನನ್ನ ಗೆಳತಿಯರಿಬ್ಬರ ಉದಾಹರಣೆ ಕೊಡುತ್ತೇನೆ. + +ಈ ನನ್ನ ಗೆಳತಿಗೆ ಚಿಕ್ಕಂದಿನಿಂದಲೂ ಬರೆಯುವ ಗೀಳು. ಅವಳ ವಿವಾಹ ಎಂಎ ಮಾಡಿದ ಕೃಷಿಕನೊಂದಿಗೆ ಆದಾಗ ವಿದ್ಯಾವಂತನಾಗಿರುವ ತನ್ನ ಪತಿ ತನ್ನ ಬರೆಯುವ ಪ್ರತಿಭೆಗೆ ಪ್ರೋತ್ಸಾಹ ಕೊಡಬಹುದೆಂದು ಎಣಿಸಿದ್ದಳು. + +ಮದುವೆಯಾದ ಹೊಸದರಲ್ಲಿ ಅವಳು ತಾನು ಬರೆದ ಲೇಖನ, ಕವನ ಇತ್ಯಾದಿಗಳು ಪತ್ರಿಕೆಗಳಲ್ಲಿ ಪ್ರಕಟವಾದಾಗ ಅದನ್ನು ಗಂಡನಿಗೆ ತೋರಿಸಿ ತನ್ನ ಸಂತೋಷವನ್ನು ಹಂಚಿಕೊಳ್ಳುತ್ತಿದ್ದಳು. ಮೊದಮೊದಲು ಅವನು `ಚೆನ್ನಾಗಿ ಬರೆದಿದ್ದೀ. ಅಭಿನಂದನೆಗಳು’ ಎಂದು ಹೇಳುತ್ತಿದ್ದ. ಆದರೆ, ಕ್ರಮೇಣ ಅವಳಿಗೆ ಈ ಮಾತನ್ನು ಗಂಡ ಕೇವಲ ತೋರಿಕೆಗಾಗಿ ಹೇಳುವುದು ಎಂಬುದು ಗೊತ್ತಾಯಿತು. ಆದ್ದರಿಂದ ಅವಳು ತನ್ನ ಬರಹಗಳನ್ನು ಗಂಡನಿಗೆ ಓದಲು ಕೊಡುವುದನ್ನೇ ಬಿಟ್ಟುಬಿಟ್ಟಳು. + +ಒಂದು ಮಧ್ಯಾಹ್ನ ಊಟವಾದ ಮೇಲೆ ಅವಳು ಏನನ್ನೋ ಬರೆಯುತ್ತಾ ಕುಳಿತಿದ್ದಳು. ಆಗ ನೆನೆಸದೆ ಮಳೆ ಬಂತು. ಅಂದು ಬೆಳಿಗ್ಗೆ ಅಂಗಳದಲ್ಲಿ ಒಣಗಲೆಂದು ಕೊಬ್ಬರಿಯನ್ನು ಅವಳ ಗಂಡ ಹರಡಿದ್ದ. ಬರೆಯುವುದರಲ್ಲೇ ಮಗ್ನಳಾಗಿದ್ದ ಅವಳಿಗೆ ಮಳೆ ಬಂದದ್ದು ಗೊತ್ತೇ ಆಗಲಿಲ್ಲ. ತೋಟಕ್ಕೆ ಹೋಗಿದ್ದ ಅವಳ ಗಂಡ ಮಳೆ ಬಂತೆಂದು ಓಡಿ ಮನೆಗೆ ಬರುವಾಗ ಅಂಗಳದಲ್ಲಿ ಕೊಬ್ಬರಿ ನೆನೆದು ಒದ್ದೆಯಾಗಿರುವುದನ್ನು ನೋಡಿದ. ಇದರಿಂದ ಸಿಟ್ಟುಗೊಂಡ ಅವನು ಕೂಡಲೇ ಮನೆಯ ಒಳಗೆ ಧಾವಿಸಿದ. ಅವಳು ಬರೆಯುತ್ತಲೇ ಇದ್ದಳು. ತಕ್ಷಣ ಅವನು ಅವಳ ಕೈಯಿಂದ ಪೆನ್ನು ತೆಗೆದು ಬಿಸಾಡಿದ. ಮಾತ್ರವಲ್ಲ, ಬರೆಯುತ್ತಿದ್ದ ಹಾಳೆಯನ್ನು ಪರಪರನೇ ಹರಿದ. ಅವಳ ಬರಹಗಳನ್ನೆಲ್ಲ ಒಯ್ದು ಉರಿಯುತ್ತಿರುವ ಬಚ್ಚಲ ಒಲೆಗೆ ಹಾಕಿ ಅವಳಿಗೆ ಹೀಗೆ ತಾಕೀತು ಮಾಡಿದ- `ಬರವಣಿಗೆ ಊಟ ಕೊಡುವುದಿಲ್ಲ. ಬರೆಯುವುದರಿಂದ ಏನೂ ಪ್ರಯೋಜನವಿಲ್ಲ. ಸುಮ್ಮನೇ ಸಮಯ ಹಾಳು. ತೋಟಕ್ಕೆ ಹೋಗಿ ಅಡಿಕೆ ಹೆಕ್ಕಿದರೆ ನಾಲ್ಕು ಅಡಿಕೆಯಾದರೂ ಮನೆ ಬಾಗಿಲಿಗೆ ಬಂದೀತು. ಕೃಷಿಕನ ಪತ್ನಿಯಾಗಿ ನಿನ್ನ ಲಕ್ಷ್ಯವೆಲ್ಲ ತೋಟ ಮತ್ತು ಮನೆಯ ಕಡೆಗೆ ಇರಬೇಕೇ ಹೊರತು ಬರವಣಿಗೆಯಲ್ಲಿ ಅಲ್ಲ. ಇನ್ನು ಮುಂದೆ ನೀನು ಏನನ್ನೂ ಬರೆಯಕೂಡದು. ಇದಕ್ಕೆ ಒಪ್ಪಿದರೆ ನೀನಿಲ್ಲಿ ಇರಬಹುದು. ಇಲ್ಲವಾದರೆ ಕಾಗದ ಮತ್ತು ಪೆನ್ನು ತೆಗೆದುಕೊಂಡು ಒಂದು ರೂಮನ್ನು ಬಾಡಿಗೆಗೆ ಪಡೆದು, ಹೊರಗಡೆ ಎಲ್ಲಿಯಾದರೂ ಬರೆಯುತ್ತಾ ಕುಳಿತಿರು ಅಥವಾ ನಿನ್ನ ತವರು ಮನೆಗೆ ನಡಿ’. ಅಂದೇ ಕೊನೆ. ಮತ್ತೆಂದೂ ಅವಳು ಬರೆಯುವ ಸಾಹಸಕ್ಕೆ ಇಳಿಯಲಿಲ್ಲ. + + + +ಇನ್ನೊಬ್ಬ ಗೆಳತಿ ನನ್ನ ಜೊತೆಯಲ್ಲಿ ಒಂದರಿಂದ ಪಿಯುಸಿ ತನಕ ಕಲಿತವಳು ಸುಶ್ರಾವ್ಯವಾಗಿ ಹಾಡುತ್ತಿದ್ದಳು. ಶಾಲಾದಿನಗಳಲ್ಲಿ, ಕಾಲೇಜು ಡೇನಲ್ಲಿ ಭಕ್ತಿಗೀತೆ, ಭಾವಗೀತೆ, ಜಾನಪದಗೀತೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಪಡೆಯುತ್ತಿದ್ದಳು. ತಕ್ಕಮಟ್ಟಿಗೆ ಸಂಗೀತವನ್ನೂ ಕಲಿತು ಗಣೇಶ ಚತುರ್ಥಿ ದಿನ, ಊರ ಜಾತ್ರೆಯಂದು, ಮದುವೆ ಮುಂತಾದ ಶುಭ ಸಮಾರಂಭಗಳಲ್ಲಿ ಕಚೇರಿ ಕೂಡ ಕೊಡುತ್ತಿದ್ದಳು. ನನ್ನ ಮದುವೆಯಾಗಿ ಕೆಲವು ವರ್ಷಗಳ ನಂತರ ದೊಡ್ಡ ಜಮೀನ್ದಾರನೊಂದಿಗೆ ಅವಳ ಮದುವೆಯಾಯ್ತು. ಅವಳ ಗಂಡನಿಗೆ ಅವಳು ಹೊರಗೆ ಹೋಗಿ ಹಾಡುವುದು ಇಷ್ಟವಿರಲಿಲ್ಲ. `ನೀನು ನಮ್ಮ ಮಕ್ಕಳಿಗೆ ಹಾಡು ಕಲಿಸಿದರೆ ಬೇಕಾದಷ್ಟಾಯಿತು. ಸಾರ್ವಜನಿಕ ಪ್ರದರ್ಶನ ಬೇಡ. ಹೊರಗೆ ಹೋದರೆ ತೋಟದ ಉಸ್ತುವಾರಿ, ಮನೆ ವಾರ್ತೆ ನೋಡಿಕೊಳ್ಳುವವರು ಯಾರು? ಊರ ಜನರಿಗೆ ಸಂಗೀತ ಹೇಳಲಿಕ್ಕೆ ಅಲ್ಲ ನಾನು ನಿನ್ನನ್ನು ಮದುವೆಯಾದದ್ದು’ ಎಂದಿದ್ದ. ಹಾಡುಹಕ್ಕಿಯ ರೆಕ್ಕೆ ಅಲ್ಲಿಗೆ ಮುರಿಯಿತು ಎಂದು ಬೇರೆ ಹೇಳಬೇಕಾಗಿಲ್ಲ ತಾನೆ? + +ತಾನು ಸಾಧನೆ ಮಾಡದಿದ್ದರೂ ಪತ್ನಿಯ ಕಲೆಗೆ ಖುಷಿ ಪಟ್ಟು ಅದನ್ನು ಬೆಳೆಸುವ ಗಂಡಂದಿರೂ ಇಲ್ಲದಿಲ್ಲ. `ಪತಿ ಗೋವಿಂದ ಭಟ್ಟರ ಪ್ರೋತ್ಸಾಹದಿಂದಲೇ ಸಾಹಿತ್ಯದಲ್ಲಿ ನನ್ನ ಹೆಜ್ಜೆ ಗುರುತು ಮೂಡಿಸಲು ಸಾಧ್ಯವಾಯ್ತು’ ಎನ್ನುತ್ತಾರೆ ನಮ್ಮ ನಡುವಿನ ಖ್ಯಾತ ಕತೆಗಾರ್ತಿ ಎ.ಪಿ. ಮಾಲತಿ. ಅವರು ಸುಮಾರು 10 ಕಾದಂಬರಿ, 2 ಸಣ್ಣ ಕಥಾ ಸಂಕಲನ, 3 ಜೀವನ ಚರಿತ್ರೆ, 8 ಇತರ ಕೃತಿಗಳು ಹಾಗೂ ಇತ್ತೀಚೆಗೆ ಸ್ಮೃತಿಯಾನ ಎಂಬ ಆತ್ಮಕತೆಯನ್ನೂ ಬರೆದಿದ್ದಾರೆ. ಈಗಲೂ ಅವರು ಬರೆಯುತ್ತಿದ್ದಾರೆ. ವಿಶೇಷ ಎಂದರೆ, ಎ.ಪಿ. ಮಾಲತಿ ಅವರು ಕೃಷಿಕ ಮಹಿಳೆ. ಒಬ್ಬ ಮಹಿಳೆ ಕೃಷಿಕಳಾಗಿದ್ದುಕೊಂಡು ಸುಮಾರು 24 ಕೃತಿಗಳನ್ನು ಬರೆದಿದ್ದಾರೆಂದರೆ ಅದು ಸಾಮಾನ್ಯ ಸಂಗತಿಯಲ್ಲ. ಅವರು ಪಿಯುಸಿ ಮುಗಿಸಿದ ಕೂಡಲೇ ಮದುವೆಯಾಗಿ ತೋಟದ ಮನೆಗೆ ಕಾಲಿಟ್ಟವರು. ನಮ್ಮ ನಡುವೆ ಗೃಹಿಣಿಯರು, ವೈದ್ಯೆಯರು, ಉಪನ್ಯಾಸಕಿಯರು, ಅಧ್ಯಾಪಕಿಯರು, ಎಂಜಿನಿಯರುಗಳು, ಉದ್ಯಮಿ ಇತ್ಯಾದಿ ವೃತ್ತಿಗಳಲ್ಲಿರುವವರು ಬಹಳ ಸಂಖ್ಯೆಯಲ್ಲಿ ಲೇಖಕಿಯರಾಗಿ ಇದ್ದಾರೆ. ಆದರೆ, ಕೃಷಿಕ ಮಹಿಳೆಯರು ಬರಹಗಾರ್ತಿಯರಾಗಿ ಇರುವುದು ತುಂಬ ಕಡಿಮೆ. ಒಬ್ಬ ಗೃಹಿಣಿಗೂ, ಕೃಷಿಕ ಮಹಿಳೆಗೂ ವ್ಯತ್ಯಾಸ ಇದೆ. ಗೃಹಿಣಿಗೆ ಮನೆವಾರ್ತೆ ನೋಡಿಕೊಳ್ಳುವ ಕೆಲಸ ಮಾತ್ರವಾದರೆ ರೈತ ಮಹಿಳೆಗೆ ಮನೆಕೆಲಸದ ಜೊತೆಗೆ ಹಟ್ಟಿ-ತೋಟದ ಕೆಲಸವೂ ಇರುತ್ತದೆ. ಉಳಿದ ವೃತ್ತಿಗಳಲ್ಲಿರುವಂತೆ ಕೃಷಿ ಕೆಲಸಕ್ಕೆ ವಾರದ ರಜೆ ಎಂದು ಇರುವುದಿಲ್ಲ. ಇಡೀ ದಿನ ದುಡಿತವೊಂದೇ. ಅಂತಹದರಲ್ಲಿ ಎ.ಪಿ. ಮಾಲತಿ ಒಬ್ಬ ಉಪನ್ಯಾಸಕಿ ಮಾಡುವ ಸಾಧನೆಯನ್ನು ಕೃಷಿಕ ಮಹಿಳೆಯಾಗಿ ಮಾಡಿದ್ದಾರೆಂದರೆ ಅವರ ಗಂಡನ ಸಹಕಾರವನ್ನು ಅರ್ಥ ಮಾಡಿಕೊಳ್ಳಬಹುದು. ಅಂದಿನ ದಿನಗಳನ್ನು ನೆನೆಸುತ್ತಾ ಗದ್ಗದಿತರಾಗಿ ಎ.ಪಿ. ಮಾಲತಿ ಹೇಳುತ್ತಾರೆ- `ನಾನು ಇಷ್ಟು ಬರೆಯಲು ಸಾಧ್ಯವಾದದ್ದು ಗಂಡನ ಉತ್ತೇಜನದಿಂದ. ಅವರು ಈಗ ಇಲ್ಲ. ನಾನು ನನ್ನ ಸಾಹಿತ್ಯಸಂಗಾತಿಯನ್ನು ಕಳಕೊಂಡೆ. ನಾನು ಬರೆಯಲು ಕುಳಿತೆನೆಂದರೆ ಗಂಡ ತಾನೇ ಕೆಲಸದವರಿಗೆ ತಿಂಡಿ ತಯಾರಿಸಿ ಕೊಡುತ್ತಿದ್ದರು. ನನಗೆ ಟೀ ಮಾಡಲೂ ಹೇಳುತ್ತಿರಲಿಲ್ಲ. ಅವರೇ ಮಾಡಿ ಕುಡಿಯುತ್ತಿದ್ದರು. ನನಗೂ ಕೊಡುತ್ತಿದ್ದರು. ಯಾವುದೇ ಕಾರಣಕ್ಕೂ ನನ್ನನ್ನು ಎಬ್ಬಿಸುತ್ತಿರಲಿಲ್ಲ. `ನೀನು ಬರೆ’ ಎಂದೇ ಹೇಳುತ್ತಿದ್ದರು. ನನಗೆ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಭಾಷಣ ಮಾಡಲು ಇದ್ದರೆ ಅಥವಾ ಬಹುಮಾನ-ಸನ್ಮಾನ ಸ್ವೀಕರಿಸಲು ಇದ್ದರೆ ಕರೆದುಕೊಂಡು ಹೋಗುತ್ತಿದ್ದರು. ಮಾತ್ರವಲ್ಲ, ಮುಂದಿನ ಆಸನದಲ್ಲಿ ಕುಳಿತು ನನ್ನ ಕಾರ್ಯಕ್ರಮ ಕೇಳಿ ಚಪ್ಪಾಳೆ ತಟ್ಟುತ್ತಿದ್ದರು. ಈಗ ಬರೆಯುತ್ತಿರಬೇಕಾದರೆ ಅವರ ಸಹಕಾರ ನೆನಪಿಗೆ ಬಂದು ಸಂಕಟವೆನಿಸುತ್ತದೆ. ಬರವಣಿಗೆ ಸಾಗುವುದಿಲ್ಲ’. + +ಗಂಡನ ಪ್ರೋತ್ಸಾಹದಿಂದ ಯಶಸ್ಸಿನ ಉತ್ತುಂಗಕ್ಕೆ ಏರಿದ ಇನ್ನೊಬ್ಬ ಗೆಳತಿ ಬಾಳಿಲ ಶಂಕರಿ ಮೂರ್ತಿ ಅವರು. ಅವರು ಇಂದು ಕರ್ನಾಟಕ ಶಾಸ್ತ್ರೀಯ ಸಂಗೀತದ ಮೇರು ಕಲಾವಿದೆಯಾಗುವಲ್ಲಿ ಅವರ ಗಂಡ ಸತ್ಯಮೂರ್ತಿ ಅವರ ಪರಿಶ್ರಮವೂ ಇದೆ. ಸತ್ಯಮೂರ್ತಿ ಹಾಡುಗಾರರಲ್ಲ. ಕೃಷಿಕರು. ಆದರೆ ಪತ್ನಿಯ ಹಾಡುಗಾರಿಕೆಗೆ ಎಷ್ಟು ಪ್ರೋತ್ಸಾಹ ಕೊಡುತ್ತಾರೆಂದರೆ, ಪತ್ನಿಯ ಸಂಗೀತ ಕಚೇರಿ ಎಲ್ಲಿಯೇ ಇರಲಿ, ತೋಟದ ಕೆಲಸವನ್ನು ಬದಿಗೊತ್ತಿ ಅವರೂ ಜೊತೆಯಲ್ಲಿ ಬಂದು ಇಡೀ ಕಾರ್ಯಕ್ರಮದ ನಿರೂಪಣೆಯನ್ನು ಮಾಡುತ್ತಾರೆ. + + + +ನಾನು ಕೇವಲ ಬರೆಯುವ ಹಾಗೂ ಹಾಡುವ ಪ್ರತಿಭೆ ಗಂಡನ ಪ್ರೋತ್ಸಾಹ ಸಿಗದಿದ್ದರೆ ಹೇಗೆ ಕಮರಿಹೋಗುತ್ತದೆ ಮತ್ತು ಸಿಕ್ಕಿದರೆ ಹೇಗೆ ಚಿಗುರುತ್ತದೆ ಎಂಬುದನ್ನು ಮಾತ್ರ ಬರೆದೆ. ಇನ್ನೂ ಹಲವು ರೀತಿಯ ಪ್ರತಿಭೆಗಳು ಗಂಡನ ಪ್ರೋತ್ಸಾಹವಿಲ್ಲದೆ ಮುದುಡಿ ಹೋದುದನ್ನು ನೀವು ನೋಡಿರಬಹುದು ಅಥವಾ ನೀವೂ ಅಂತವರಲ್ಲಿ ಒಬ್ಬರಾಗಿರಬಹುದು. ಮುಂದಾದರೂ ಪತ್ನಿಯ ಪ್ರತಿಭಾ ವಿಕಸನಕ್ಕೆ ಪತಿ ಪ್ರೋತ್ಸಾಹ ಕೊಡುವ ಹಾಗೆ ಆಗಲಿ. ಗಂಡ-ಮಕ್ಕಳು ಎಂದು ಸಂಸಾರದ ಏಳಿಗೆಗೆ ತನ್ನನ್ನೇ ತೇಯುವ ಹೆಂಡತಿಗಾಗಿ ಗಂಡ ಅಷ್ಟೂ ಮಾಡದಿದ್ದರೆ ಹೇಗೆ?– + +ಲೇಖಕಿ ಸಹನಾ ಕಾಂತಬೈಲು ಸಂಪಾಜೆಯ ದಬ್ಬಡ್ಕದವರು. ಕೃಷಿ ಮಹಿಳೆ.  ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ. \ No newline at end of file diff --git a/Kenda Sampige/article_254.txt b/Kenda Sampige/article_254.txt new file mode 100644 index 0000000000000000000000000000000000000000..4e6028d704fe7397292a7ac7406a9417527d5322 --- /dev/null +++ b/Kenda Sampige/article_254.txt @@ -0,0 +1,35 @@ +ಅಕ್ಷರಗಳ ಕಲಿಕೆ ನಮ್ಮಲ್ಲಿ ಅರಿವಿನ ವಿಸ್ತಾರವನ್ನು ಮಾಡುತ್ತದೆ, ತಿಳಿದುಕೊಳ್ಳುವ ಮಾರ್ಗಗಳನ್ನು ತೆರೆದಿಡುತ್ತದೆ. ಇತರರ ಅನುಭವಗಳನ್ನು ಅರ್ಥಮಾಡಿಕೊಳ್ಳುವ ವಿಧಾನಗಳನ್ನು ತಿಳಿಸುತ್ತದೆ. ಆದರೆ ಅಕ್ಷರಗಳು ಎದೆಗಿಳಿದಾಗ ಏನಾಗುತ್ತದೆ? ಅದು ಅನುಭವಗಳನ್ನು ದರ್ಶನವಾಗಿಸುತ್ತದೆ. ದೇವನೂರು ಮಹಾದೇವ ಅವರು ಬರೆದ ‘ಎದೆಗೆ ಬಿದ್ದ ಅಕ್ಷರ’ ಪುಸ್ತಕವನ್ನು ಓದುತ್ತಲೇ ನಾನು ಕಂಡುಕೊಂಡದ್ದು ಇಲ್ಲಿರುವ ಅಕ್ಷರಗಳು ಕೇವಲ ಅನುಭವಗಳಲ್ಲ, ಅವು ಸಮಾನತೆಯನ್ನು ನಮ್ಮೆದುರು ತೆರೆದಿಡುವ ದರ್ಶನಗಳು ಎಂಬ ಸತ್ಯವನ್ನು. + +(ದೇವನೂರ ಮಹಾದೇವ) + +ಸಮಾಜದ ಶ್ರೇಣಿಯಲ್ಲಿ ಮೇಲಿನ ಸ್ಥರದಲ್ಲಿ ನಿಂತ ನಮಗೆ ಕೆಳಗೆ ಕಣ್ಣುಹಾಯಿಸಿದಾಗ ಕಂಡುದಷ್ಟೇ ಸತ್ಯ ಎಂಬ ನಮ್ಮ ಭ್ರಮೆಯನ್ನು ಇಲ್ಲಿನ ಪ್ರತಿಯೊಂದು ಸಾಲುಗಳೂ ‘ಚಿತ್’ ಮಾಡುತ್ತಲೇ ಹೋಗುತ್ತವೆ. ನಮ್ಮ ಭ್ರಮಾಲೋಕ ಕಳಚಿದೊಡನೆ ‘ವಾಸ್ತವದ ಕಹಿಸತ್ಯ’ವನ್ನು ಒಂದಿನಿತೂ ಉತ್ಪ್ರೇಕ್ಷೆಯಿಲ್ಲದೆ ನಮ್ಮೆದುರು ತೆರೆದಿಡುತ್ತದೆ. ‘ಇದು ಸತ್ಯ, ಇದು ವಾಸ್ತವ. ನೀನು ಗ್ರಹಿಸಬೇಕಾದುದು ಹೀಗೆ. ಈ ಗ್ರಹಿಕೆಯೊಂದೇ ಸಮಾನತೆಯೆಡೆಗೆ ನಿನ್ನನ್ನೂ, ನನ್ನನ್ನೂ ಕರೆದೊಯ್ಯಬಲ್ಲುದು. ಸಾಧ್ಯವೇನು ನಿನಗೆ?’ ಎಂಬಂತೆ ತಣ್ಣಗೆ ಪ್ರಶ್ನಿಸುತ್ತವೆ. ಹಾಗೆ ಹೇಳುವ ಸಿದ್ಧಿ ಲೇಖಕರಿಗೆ ಅನುಭವಗಳನ್ನು ಅನುಭಾವವಾಗಿಸಿದ ಶರಣರ ನಡೆಯಿಂದ ಬಂದದ್ದು, ವಿಷವನ್ನು ನುಂಗಿ ನಗುವ ಶಿವನಿಂದ ಎರವಲು ಪಡೆದದ್ದು ಮತ್ತು ಜೀವಕಾರುಣ್ಯದ ಮೂರ್ತಿ ಬುದ್ಧನ ಪ್ರಜ್ಞೆಯಿಂದ ಮರಳಿದ್ದು. ಇಲ್ಲವಾದಲ್ಲಿ ಈ ಪುಸ್ತಕದ ಪ್ರಕಾಶಕರು ತಮ್ಮ ನುಡಿಯಲ್ಲಿ ಹೇಳಿದಂತೆ, ‘ಎಂದೋ ಬರೆದ ಇಲ್ಲಿಯ ಬರಹ, ಭಾಷಣಗಳನ್ನು ತಿದ್ದುವಾಗಲೂ ಲೇಖಕರು ಯಾಕೆ ಅಷ್ಟೊಂದು ಬಳಲಬೇಕು? ಹಿಂಸೆ ಪಟ್ಟುಕೊಳ್ಳಬೇಕು? ಹಿಂಸೆಯ ಕುರಿತು ಬರೆಯುವಾಗಲೆಲ್ಲ ಅವರು ಅದನ್ನು ಮತ್ತೆ, ಮತ್ತೆ ಅನುಭವಿಸುವ ಕಾರಣವಲ್ಲದೇ ಬೇರೇನನ್ನು ಹೇಳಲಾದೀತು?’ ದೇವನೂರರ ಪುಸ್ತಕದ ಅಕ್ಷರಗಳನ್ನು ಧಾವಂತವಿಲ್ಲದೇ ಓದುತ್ತಲೇ ಅದು ತೆರೆದಿಡುವ ಕೆಲವು ದರ್ಶನಗಳನ್ನಷ್ಟೇ ನಾನು ನಿಮ್ಮೆದುರು ತೆರೆದಿಡಲು ಸಾಧ್ಯ. ನನ್ನ ಕಣ್ಣು ತೆರೆಸಿದ ಬೆಳಕು ನಿಮ್ಮೊಳಗೂ ಇಳಿದೀತೆಂಬ ಆಶಯದಿಂದ. + +ಎದೆಗೆ ಅಕ್ಷರ ಬಿದ್ದರೆ ಏನಾಗುತ್ತದೆ? ಅಕ್ಷರ ನೀಡುವ ಅರಿವಿನಿಂದ ಸುತ್ತಲಿನ ವಿದ್ಯಮಾನಗಳೊಳಗಿನ ಸತ್ಯ ಅನಾವರಣಗೊಳ್ಳುತ್ತ ಹೋಗುತ್ತದೆ. ವ್ಯಕ್ತಿ ಸಂವೇದನಾಶೀಲನಾಗುತ್ತ ಸಾಗುತ್ತಾನೆ. ಸಾಮಾನ್ಯರಿಗೇನೋ ಇದು ಸಹಕಾರಿಯೆ. ಆದರೆ ಒಬ್ಬ ಆದಿಜನಾಂಗದವನು ಸಂವೇದನಾಶೀಲನಾದರೆ? ದೇವನೂರು ಹೇಳುತ್ತಾರೆ, ‘ಅದೊಂದು ರೌರವ ನರಕ. ಹಿಂಸೆಯೆಂದರೆ ದೈಹಿಕವಾದುದು ಮಾತ್ರ ಎಂಬ ಪರಿಧಿಯನ್ನು ಅದು ದಾಟಿಸಿಬಿಡುತ್ತದೆ. ಅವನಿಗೆ ಕಾಣುತ್ತೆ- ತನ್ನ ಸಂಬಂಧಿಗಳು ಹಸಿವಿನಿಂದ ಸಾಯ್ತ ಇರೋದು, ಬೀದೀಲಿ ಭಿಕ್ಷೆ ಬೇಡೋದು, ಜೀವಂತ ಸುಡಿಸಿಕೊಳ್ಳೋದು, ಪಶು ಥರ ದುಡಿಯೋದು, ಅವ ದುಡಿಯೋದು ಅವಗೆ ದಕ್ಕದೇ ಇರೋದು, ಇದರ ಜೊತೆಗೇನೆ ಹುಟ್ಟಿದ ತಪ್ಪಿಗೆ ಥೂ ಛೀ ಅನಿಸಿಕೊಳ್ಳೋದು ಕೂಡ. ಅಸ್ಪೃಷ್ಯತೆಯ ತಾರತಮ್ಯಕ್ಕೆ ಒಳಗಾದವರು ಆ ನೋವನ್ನು ‘ಬದುಕುವ ರೀತಿ’ ಎಂದುಕೊಂಡರೆ ಅದು ಸ್ಥೂಲವಾಗಿ ದೈಹಿಕವಾಗಿರುತ್ತದೆ. ಅದೇ ಆ ನೋವು ತಾರತಮ್ಯಗಳು ‘ಗಾಯ’ ಎಂದು ಅರಿವಿಗೆ ಬಂದರೆ ಅವು ಸೂಕ್ಷ್ಮವಾಗಿ ಮನೋಮಯವಾಗಿ ಕ್ಷಣಕ್ಷಣವೂ ಹಿಂಸಿಸುತ್ತದೆ.’ ಎದೆಯ ನೋವಿಗೆ ಬಿಡುಗಡೆಯಾಗಿ ಒದಗಬೇಕಾದ ಅಕ್ಷರಗಳ ಅರಿವು ಶೋಷಿತ ಜನಾಂಗದ ಸಂವೇದನಾಶೀಲನೊಬ್ಬನಿಗೆ ಅನುದಿನದ ನೋವಾಗಿ ಕಾಡುವ ಪರಿಯಿದು. + +ಪ್ರಸಿದ್ಧ ಮನಶಾಸ್ರ್ತಜ್ಞರೊಬ್ಬರ ಮಾತನ್ನು ಉಲ್ಲೇಖಿಸುತ್ತಾ ದೇವನೂರು ಹೇಳುತ್ತಾರೆ, ‘ನಾವು ಪ್ರತ್ಯಕ್ಷವಾಗಿ ನೋಡದಿದ್ದಾಗ್ಯೂ ಕೂಡ ನಮ್ಮ ಸುತ್ತಲಿನ ಜೀವಿಗೆ ಉಂಟಾಗುವ ದುಃಖ, ಸುಖದ ಭಾವಗಳೆಲ್ಲ ಪರಿಸರದಲ್ಲಿ ಉಸಿರಾಡುತ್ತ ಸುತ್ತಲಿರುವ ಸಹಜೀವಿಗಳಲ್ಲಿ ಕಂಪನವನ್ನು ಉಂಟುಮಾಡುತ್ತದೆ. ಈ ಅನುಕಂಪನದ ನಿಜವು ಇಡಿಯ ಜೀವಸಂಕುಲವನ್ನೇ ಒಂದು ಎಂದು ಸಾರುತ್ತದೆ.’ ಹಾಗಾದರೆ ಶತಮಾನಗಳಿಂದ ನಮ್ಮ ಸಹಜೀವಿಗಳು ಉಸಿರಾಡುವ ಅಸಮಾನತೆಯ ನೋವು ನಮ್ಮನ್ನು ತಟ್ಟಲಿಲ್ಲವೇಕೆ? ಅಥವಾ ನಾವೆಲ್ಲರೂ ಅಷ್ಟು ಸಂವೇದನಾರಹಿತರಾದೆವೆ? ಹೀಗೆ ನಮ್ಮನ್ನು ಕಾಡದಿರಲೆಂದೇ ಅವರನ್ನು ಊರಾಚೆಗೆ ತಳ್ಳಿ ನಿರಾಳರಾದೆವೆ? ಇದನ್ನೇ ದೇವನೂರು ಕಾರುಣ್ಯವು ಮೂರ್ಛಾವಸ್ಥೆಯಲ್ಲಿದೆ ಎನ್ನುತ್ತಾರೆ. + +‘ಪ್ರಸಿದ್ಧ ಕಾದಂಬರಿಕಾರ ದಾಸ್ತೋವೆಸ್ಕಿಯ ಕಾದಂಬರಿಯ ನಾಯಕ ಅತಿದುಷ್ಟೆಯಾದ ಮುದಿಹೆಂಗಸೊಬ್ಬಳನ್ನು ಉದ್ಧೇಶಪೂರ್ವಕವಾಗಿ ಕೊಲೆಗೈಯ್ಯುತ್ತಾನೆ. ಅದನ್ನು ನೋಡಿದಳೆಂಬ ಕಾರಣಕ್ಕೆ ಕರುಣಾಮಯಿಯಾದ ಅವಳ ತಂಗಿಯನ್ನೂ ಕೊಲೆಗೈಯ್ಯುತ್ತಾನೆ. ಆದರೆ ಅವನಿಗೆ ಆ ಮುದುಕಿಯನ್ನು ಕೊಂದ ಪಾಪಪ್ರಜ್ಞೆಯೇ ಎಡೆಬಿಡದೇ ಕಾಡುತ್ತದೆ. ಏಕೆಂದರೆ ಮೊದಲ ಕೊಲೆ ಉದ್ದೇಶಪೂರ್ವಕವಾಗಿ ಆಯೋಜಿಸಲ್ಪಟ್ಟದ್ದು. ಮನಸ್ಸಿನೊಳಗಿನ ಹಿಂಸೆ ಅದನ್ನು ಪ್ರಚೋದಿಸಿದ್ದು. ಎರಡನೆಯ ಕೊಲೆ ಅಚಾನಕ್ಕಾಗಿ ನಡೆದುಹೋದದ್ದು. ಹಿಂಸೆಯನ್ನು ತಾತ್ವಿಕಗೊಳಿಸಿದ ಈ ಒಂದು ಕೊಲೆ ಉದ್ದೇಶರಹಿತವಾದ ನೂರಾರು ಕೊಲೆಗಳಿಗೆ ಸಮ.’ ಇದನ್ನು ಓದುತ್ತಿರುವಾಗ ನನಗನಿಸಿದ್ದು ನಮ್ಮ ನಮ್ಮೊಳಗೆ ಎಷ್ಟೊಂದು ಅಸಮಾನತೆಗಳಿವೆಯಲ್ಲವೆ? ಎಂದು ಬೊಟ್ಟು ತೋರಿಸುವ ಮೊದಲು ನಮಗೆ ಅರಿವಿರಬೇಕಾದುದು ಅಸ್ಪೃಶ್ಯತೆಯೆಂಬುದು ಅನೇಕ ಶತಮಾನಗಳಿಂದ ನಾವು ತಾತ್ವಿಕಗೊಳಿಸಿದ ಅಸಮಾನತೆ. ಉಳಿದವುಗಳೆಲ್ಲ ಆಯಾ ಕಾಲದ ಯೋಜಿತವಲ್ಲದ ತರತಮಗಳು ಮಾತ್ರ. ಇದು ನಮಗೆ ಅರ್ಥವಾದ ದಿನ ಮಾತ್ರವೇ ಉದ್ಧೇಶಿತ ಕೊಲೆಯಂತೆ ಅದು ನಮ್ಮನ್ನು ಕಾಡಬಲ್ಲುದು. + +ಎಷ್ಟು ಯೋಚಿಸಿದರೂ ನಾವು ಬದುಕಿಲ್ಲದ ಸಂಕಟವನ್ನು ನಮ್ಮದಾಗಿಸಿಕೊಳ್ಳಲಾರವೇನೊ? ಮನಸ್ಸಿನಿಂದ ಜಾತೀಯತೆಯ ವಿಷಬೀಜವನ್ನು ಕಿತ್ತೆಸೆದ ಆಲನಹಳ್ಳಿಯಂತಹ ಅಪ್ಪಟ ಸ್ನೇಹಿತರಿಗೂ ಅರ್ಥವಾಗಬೇಕಾದ ಸತ್ಯಗಳು ಇನ್ನೂ ಇವೆಯೇ? ‘ಹೌದು’ ಎನ್ನುತ್ತಾರೆ ದೇವನೂರು. ತಮ್ಮ ತೋಟದಲ್ಲಿ ಕೆಲಸ ಮಾಡುವ ಹಳ್ಳಿಯ ಜನರನ್ನು ಅವರಿಗೆ ಬೇಸರವಾಗಬಾರದೆಂಬ ಕಾರಣಕ್ಕಾಗಿ ಸಲಿಗೆಯಿಂದ “ಲೋ ಬಾರ್ಲಾ”, “ಲೇ ಬಾರಮ್ಮಿ” ಅಂತಾ ಕರೆದು ಖುಶಿಗೊಳಿಸುತ್ತಿದ್ದರು ಆಲನಹಳ್ಳಿ. ಅಂಥವರಿಗೆ ದೇವರಾಜು ಅರಸು ಅವರ ಮಡದಿ, “ನೀನೇನು ಎತ್ತೇಗೌಡ್ನ ಮೊಮ್ಮಗನೇನ್ಲಾ?” ಅಂತ ಪರಿಚಯ ಕೇಳಿದ ಕೂಡಲೇ ಅವಳು ‘ಅನ್‍ಕಲ್ಚರ್ಡ್ ಲೇಡಿ’ ಅನಿಸಿಬಿಡುತ್ತದೆ. ಬದಲಾಗಿ ತನಗೆ ಬೇಸರವಾಗದಿರಲೆಂದು ಅವರು ಹಾಗೆ ಪರಿಚಯ ಕೇಳಿರಬಹುದು ಅನಿಸುವುದಿಲ್ಲ. ಬಹುಶಃ ಗುರುದೇವ ರವೀಂದ್ರನಾಥ ಟ್ಯಾಗೋರರು ಹೇಳುವ ‘ಒಂದು ಇನ್ನೊಂದಾಗುವ’ ರೂಪಾಂತರವಾಗದ ಹೊರತು ಈ ತಳಮಳಗಳನ್ನು ಅರ್ಥೈಸಲಾಗದು ಅನಿಸುತ್ತದೆ. ಇಲ್ಲವಾದಲ್ಲಿ ಎಂಥಹ ವಿಚಾರವಾದಿಯಾದರೂ ಅವರ ಯೋಚನಾಧಾರೆ ಪರಿವರ್ತನೆಯ ಪರಿಧಿಯ ಈಚೆಗೆ ನಿಂತುಬಿಡುತ್ತದೆ. ಇದಕ್ಕೊಂದು ಉತ್ತಮ ನಿದರ್ಶನವನ್ನು ದೇವನೂರು ಇಲ್ಲಿ ಚಿತ್ರಿಸಿದ್ದಾರೆ. + + + +ಅನಾರೋಗ್ಯದಿಂದ ಆಸ್ಪತ್ರೆ ಸೇರಿ, ಅರೆಪ್ರಜ್ಞಾವಸ್ಥೆಯಲ್ಲಿರುವ ಅನಂತಮೂರ್ತಿಯವರಿಗೆ ತಾನು ದೇವನೂರು ಅವರಿಗೆ ಗಾಯತ್ರಿ ಮಂತ್ರ ಹೇಳಿಕೊಟ್ಟಂತೆ ಬೋಧೆಯಾಯಿತಂತೆ. ಅದಕ್ಕೆ ದೇವನೂರರ ಪ್ರತಿಕ್ರಿಯೆ, “ಸಾರ್ ಇದು ಮಾಮೂಲಿ ನಡಿಗೆ. ಅರೆಪ್ರಜ್ಞಾವಸ್ಥೆಯಲ್ಲಿಯಾದರೂ ನಾನು ನಿಮಗೆ ಗಾಯತ್ರಿಮಂತ್ರ ಹೇಳಿಕೊಟ್ಟಂತೆ ಬೋಧೆಯಾಗಿದ್ದರೆ ಭಾರತದ ಮನಸ್ಸಿಗೆ ಚಲನೆ ಬರುತ್ತಿತ್ತಲ್ಲವೆ?” ಹಾಗಾದರೆ ಅರೆಪ್ರಜ್ಞಾವಸ್ಥೆಯಲ್ಲಿಯೂ ನಮ್ಮನ್ನು ದಾಟದಂತೆ ಬಂಧಿಸಿಟ್ಟ ಚೌಕಟ್ಟಾದರೂ ಯಾವುದು? ಮತ್ತು “ನಾನು ಮಡಿ ಬಿಟ್ಟೆ, ಮೈಲಿಗೆಯಾದೆ. ಹಾಗಾಗಿ ಲೇಖಕನಾದೆ” ಎಂದು ಹೇಳಿದ ಅನಂತಮೂರ್ತಿಯವರಿಗೂ ಚಾಲನೆ ನೀಡಲಾಗದಷ್ಟು ಜಡವಾಗಿದೆಯೆ ಅಸಮಾನತೆಯೆಂಬ ನಡಿಗೆ? ನಾವೆಲ್ಲರೂ ಎದೆಗಿಳಿಸಿಕೊಳ್ಳಬೇಕಾದ ಪ್ರಶ್ನೆಗಳಿವು. + +ಸ್ಪರ್ಶ ಅಥವಾ ಮುಟ್ಟುವಿಕೆಯೆಂಬುದು ಏನು ಎಂಬುದನ್ನು ಅರ್ಥಮಾಡಿಸುವ ಅನೇಕ ದರ್ಶನಗಳನ್ನು ನಮ್ಮೆದುರು ಈ ಕೃತಿ ತೆರೆದಿಡುತ್ತದೆ. ಮಹಾನ್ ಚಿತ್ರ ಕಲಾವಿದ ವ್ಯಾನ್‌ಗೋ ಒಂದು ಕಡೆಯಲ್ಲಿ ಹೇಳುತ್ತಾನೆ, “ನೀನೊಬ್ಬ ಕಲಾವಿದನಲ್ಲ ಅನಿಸಿದಾಗ ನೀನು ಕಲಾಸೃಷ್ಟಿಯನ್ನು ಆರಂಭಿಸು. ಆಗ ನಿನ್ನೊಳಗೊಬ್ಬ ಕಲಾವಿದ ಹುಟ್ಟಿಕೊಳ್ಳುತ್ತಾನೆ.” ಇಲ್ಲವಾದಲ್ಲಿ ನಡೆದು ರೂಢಿಯಾದ ಜಾಡಿನಲ್ಲಿ ಕಣ್ಮುಚ್ಚಿ ನಡೆದುಬಿಡುವಂತೆ ಅದೇ ದಾರಿಯಲ್ಲಿ ನಡೆಯುತ್ತಲೇ ಇರುತ್ತೇವೆ. ಜಾಡಿನಿಂದ ತಪ್ಪಿಸಿಕೊಂಡು ಕಕ್ಕಾಬಿಕ್ಕಿಯಾದಾಗಲೇ ಹೊಸಹುಟ್ಟು ಸಾಧ್ಯವಾಗುವುದು. ಎಲ್ಲ ಕಲೆಗಳ ಹುಟ್ಟು ಕೂಡ ಹೀಗೆಯೇ ಸಾಗುತ್ತದೆ. ಇದು ಲೇಖಕನ ವಿಷಯದಲ್ಲಿಯೂ ಸತ್ಯ. ಲೇಖಕ ತನ್ನ ಆಳಕ್ಕೆ ಇಳಿದಂತೆಲ್ಲ ತನ್ನ ಹೊರಗಿನ ಪೊರೆಯನ್ನು ಕಳಚಿಕೊಳ್ಳುತ್ತಾ, ಮಾನವೀಯವಾಗಿ ಜೀವಸಂಕುಲದ ಸ್ಪಂದನವಾಗಿ ನಿಲ್ಲಬಹುದು. ಆಗ ಇರುವುದೆಲ್ಲ ಒಂದೇ ಜೀವ ಎನಿಸಿಬಿಡಬಹುದು. ಅಥವಾ ಕೃತಿಯ ಸೃಷ್ಟಿಕ್ರಿಯೆಯಲ್ಲಿ ತನ್ನೊಳಗೆ ಇನ್ನೊಂದು ಜೀವವನ್ನು ಕಾಣುತ್ತ, ಬದಲಾಗುತ್ತ, ಊರಾಚೆಯ ದಲಿತನನ್ನೂ ತನ್ನೊಳಗೆ ಬಿಟ್ಟುಕೊಳ್ಳಬಹುದು. ಇಲ್ಲವಾದಲ್ಲಿ ಅಲ್ಲಿ ಹುಟ್ಟು ಇರುವುದಿಲ್ಲ. ಮಡಿಯಿದ್ದಾಗ ಮಡಿದ ಸ್ಥಿತಿಯಾಗಿಬಿಡುತ್ತದೆ. ಹೀಗೆ ಸತ್ಯದ ಆಳಕ್ಕೆ ಇಳಿಯುವ ಕ್ರಿಯೆ ಮಾತ್ರವೇ ಮುಟ್ಟಿಸಿಕೊಳ್ಳುವುದಾಗುತ್ತದೆ. ಬಸ್ಸು, ರೈಲುಗಳಲ್ಲಿ ಪ್ರಯಾಣಿಸುವ ಮಾತ್ರಕ್ಕೆ ಅಕ್ಕಪಕ್ಕದಲ್ಲಿ ಕುಳಿತರೆ, ಸಹಭೋಜನವೆಂಬುದು ಹೋಟೆಲ್ಲಿಗೆ ಮಾತ್ರ ಸೀಮಿತವಾದರೆ, ನೌಕರಿಯ ಕಾರಣಕ್ಕಾಗಿ ಮಾತ್ರ ಒಟ್ಟಿಗೆ ಒಡನಾಡಿದರೆ ಅದು ಕೇವಲ ಬಹಿರಂಗದ ಕ್ರಿಯೆ ಮಾತ್ರ. ಅಂತರಂಗದ ಕತ್ತಲು ಹಾಗೆಯೇ ಇರುವುದು ಎನ್ನುತ್ತಾರೆ ದೇವನೂರು. ಒಡಲಾಳದ ಸಾಕವ್ವನ ಬಗ್ಗೆ ಬ್ರಾಹ್ಮಣ ಉಪನ್ಯಾಸಕರೊಬ್ಬರ ಹೇಳುತ್ತಾರೆ, “ನಾನು ತುಂಬ ಸಂಪ್ರದಾಯಸ್ಥ. ಯಾರೊಬ್ಬ ಅಸ್ಪೃಶ್ಯನನ್ನೂ ಮುಟ್ಟಿಸಿಕೊಂಡಂಥವನಲ್ಲ. ಒಡಲಾಳ ಓದಿದೆ. ಈ ಸಾಕವ್ವ ನನ್ನ ಅಜ್ಜಿ ಅನಿಸಿಬಿಟ್ಟಳು. ನನ್ನೊಳಗೆ ನೆಲಸಿಬಿಟ್ಟಳು.” ಮುಟ್ಟುವುದೆಂದರೆ ಬಹುಶಃ ಹೀಗೆ ಅಲ್ಲವೆ? ಎನ್ನುತ್ತಾರೆ ದೇವನೂರು. ಸಮಾನತೆಯ ಬಗ್ಗೆ ಪುಟಗಟ್ಟಲೆ ಭಾಷಣ ಮಾಡಿ, ಮನೆಯೊಳಗೆ ಬರುತ್ತಲೇ, “ಯಾರ್ಯಾರು ಎಲ್ಲೆಲ್ಲಿರಬೇಕೋ ಅಲ್ಲಲ್ಲಿದ್ದರೆ ಚಂದ” ಎನ್ನುವವರ ಎದೆಯೊಳಗೆ ಈ ಮಾತುಗಳು ತುರ್ತಾಗಿ ಇಳಿಯಬೇಕಿದೆ. + +ಮುಟ್ಟಿಸುಕೊಳ್ಳುವಿಕೆಯ ಆ ನೇವರಿಕೆಯ ಸುಖವಾದರೂ ಎಂಥದ್ದು? ಅಂಥ ಕ್ಷಣಗಳನ್ನೆಲ್ಲ ಫಳಕ್ಕನೆ ಮಿಂಚುವ ಮಿಂಚುಹುಳದ ಬೆಳಕಿನ ದಿವ್ಯತೆಯಂತೆ ಸೆರೆಹಿಡಿದಿದ್ದಾರೆ ದೇವನೂರು. ಕುವೆಂಪು ಅವರ ಯಾವುದೋ ಮಾತಿಗೆ ಕುಪಿತಗೊಂಡ ಬ್ರಾಹ್ಮಣರು ಮೈಸೂರಿನ ಶಂಕರ ಮಠದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುತ್ತಾರೆ. ಅವರಿಗೆ ಸತ್ಯಸಂಗತಿಯನ್ನು ತಿಳಿಸಿಕೊಡಲು ಆಲನಹಳ್ಳಿಯವರೊಂದಿಗೆ ದೇವನೂರು ಕೂಡ ಹೋಗಿರುತ್ತಾರೆ. ನಿರೀಕ್ಷೆಯಂತೆ ಇವರ ಸಮಜಾಯಿಸಿ ಅವರಿಗೆ ವಿರೋಧವೆನಿಸಿ ದೊಡ್ಡ ಗಲಾಟೆಯೇ ನಡೆಯುತ್ತದೆ. ಹಿರಿಯರೊಬ್ಬರು ಇವರನ್ನು ರಕ್ಷಿಸುವ ಸಲುವಾಗಿ ಮಠದ ಒಳಗೆ ಇವರನ್ನು ಸೇರಿಸಿ ಬಾಗಿಲು ಮುಚ್ಚುತ್ತಾರೆ. ಹೊರಗೆ ಇವರ ಕ್ಷಮಾಪಣೆಗಾಗಿ ಗಲಾಟೆ ನಡೆಯುತ್ತಿರುವಂತೆಯೇ ವ್ಯಕ್ತಿಯೊಬ್ಬರು ಬಂದು ಕಿಟಕಿಯಲ್ಲಿ ಕೈತೂರಿಸಿ, “ನಾನು ನಿಮ್ಮ ತಮ್ಮ ಶಂಕರನ ಕ್ಲಾಸ್‌ಮೇಟ್” ಎಂದು ಪ್ರೀತಿಯಿಂದ ಕೈಕುಲುಕುತ್ತಾರೆ. ಆಗ ದೇವನೂರರ ಪ್ರತಿಕ್ರಿಯೆ, “ನನಗಾಗ ಅವರ ಕೈಗೆ ಮುತ್ತಿಕ್ಕಬೇಕು ಅನಿಸಿತು!” ಎಂಥಹ ಕಹಿ ಸನ್ನಿವೇಶದಲ್ಲೂ ಒಂದು ಪ್ರೀತಿಯ ಸ್ಪರ್ಶ ತಂದ ಪುಲಕ ಅದು. + +80ರ ದಶಕದಲ್ಲಿ ನಡೆದ ಮೀಸಲಾತಿ ಸೆಮಿನಾರ್‌ನಲ್ಲಿ ಮಾತನಾಡುತ್ತಾ ಲಂಕೇಶ್ ಹೇಳುತ್ತಾರೆ, “ದಲಿತರು ಈ ಸಮಾಜದ ಕಡೆಗೆ ನೋಡುತ್ತಿರುವುದು ಪ್ರೀತಿಗಾಗಿ ಕೂಡ. ಇದಕ್ಕೆ ಒಂದು ಮುಗುಳ್ನಗೆ ಸಾಕು” ಲಂಕೇಶರ ಮುಗುಳ್ನಗೆ ದೇವನೂರರ ಕಣ್ಣಲ್ಲಿ ಶಾಶ್ವತ ದಾಖಲೆಯಾಗಿ ಉಳಿದುಬಿಡುತ್ತದೆ. ಇವೆಲ್ಲವೂ ಆಗಬೇಕು ಎಂದಾದರೆ ಕುವೆಂಪು ಹೇಳುವಂತೆ, ‘ಎದೆಯ ಗೂಡಿನೊಳಗೊಂದು ತೊಟ್ಟಿಲ ಕಟ್ಟಿ ಅದರೊಳಗೆ ಪುಟ್ಟ ಮಗುವೊಂದನ್ನಿಟ್ಟು ತೂಗುತ್ತಿರಬೇಕು.’ ಬಿದ್ದ ಗೆಳೆಯನ ಗಾಯದಿಂದ ಸುರಿದ ರಕ್ತ ಕತೆಯಾಗಬೇಕೆಂದರೆ ಅವನ ಗಾಯ, ನೋವು ಎಲ್ಲವೂ ನಮ್ಮದೂ ಆಗಬೇಕು. ಬೇಡ ಕ್ರೌಂಚ ಪಕ್ಷಿಗೆ ಬಾಣ ಬಿಟ್ಟ. ಒಂದು ಸತ್ತು ಇನ್ನೊಂದು ರೋಧಿಸಿತು. ಈ ಅಗಲಿಕೆಯ ಅನುಭವವನ್ನಷ್ಟೇ ವಾಲ್ಮೀಕಿ ಬರೆದರೆ ಅದೊಂದು ಭಾವಗೀತೆಯೋ, ಶೋಕಗೀತೆಯೋ ಆಗಬಲ್ಲುದಷ್ಟೆ. ಆ ಅಗಲುವಿಕೆಯ ಭಾವವನ್ನು ಭೂಮಿ ಒಳಗೆ ಹರಿಯುವ ಅಂತರಗಂಗೆಯಾಗಿಸಿ ಅದಕ್ಕೆ ಭೂಮಿ ಮೇಲಿನ ಅಗಲಿಕೆಯ ವಿದ್ಯಮಾನಗಳನ್ನು ಕೂಡಿಸಿದಾಗ ಅದು ಮಹಾಕಾವ್ಯವಾಯ್ತು. ಬೇಂದ್ರೆ ತಾವು ತಮ್ಮ ಬಾಲ್ಯವನ್ನು ಕಳೆದ ಜಾಗವನ್ನು, ಘಟನೆಗಳನ್ನು ಅತೀವ ಉತ್ಸಾಹದಿಂದ ಗೆಳೆಯನಿಗೆ ವಿವರಿಸುವಾಗ ಗೆಳೆಯ ಕೇಳದನಂತೆ, “ಇವೆಲ್ಲಾ ನಿಮ್ಮ ಪದ್ಯಗಳಲ್ಲಿ ಇಲ್ಲವಲ್ಲ” ಅದಕ್ಕೆ ಬೇಂದ್ರೆ ಹೇಳಿದ ಮಾತು, “ಆ ವಿವರಗಳನ್ನೆಲ್ಲ ಸುಟ್ಟು ಎನರ್ಜಿ ಮಾಡಿ ಕಾವ್ಯ ಮಾಡಿದ್ದು” ಈ ಅಕ್ಷರಗಳನ್ನು ಓದುತ್ತಾ ಹೋದಂತೆ ನನಗನಿಸಿದ್ದು ದೇವನೂರು ಕೂಡ ಅದನ್ನೇ ಮಾಡುತ್ತಿದ್ದಾರೆ! + +ರೇಗೆಯವರ ಕಾದಂಬರಿ ಸಾವಿತ್ರಿಯಲ್ಲಿ ಒಂದು ಮಾತು ಬರುತ್ತದೆ. “ಯಾವಾಗಲೂ ನೀನು ಸಂತೋಷವಾಗಿರುವಿಯಲ್ಲ, ನಿನಗೆ ಯಾರೂ ಕೆಟ್ಟವರು ಸಿಕ್ಕೇ ಇಲ್ಲವೇನು?” ಇದಕ್ಕೆ ಉತ್ತರವಾಗಿ ಸಾವಿತ್ರಿ ಹೇಳುತ್ತಾಳೆ, “ನನ್ನ ಜೀವನದಲ್ಲಿ ನಾನು ‘ಬರಿಯ ಕೆಟ್ಟವರ’ನ್ನು ನೋಡಲೇ ಇಲ್ಲ.” ನಾನು ಮತ್ತು ಅನ್ಯ ಎಂಬ ಬೇಧವಳಿದ ಜಗತ್ತಿನಲ್ಲಿ ಮಾತ್ರವೇ ಕಂಡುಕೊಳ್ಳಬಹುದಾದ ದರ್ಶನವಿದು. ಕೆಳವರ್ಗದ ಹುಡುಗನೊಬ್ಬ ತನಗಿಂತಲೂ ಕೆಳಜಾತಿಯ ಹುಡುಗನಿಗೆ ಬೊಗಸೆಯಲ್ಲಿ ನೀರೆರೆಯುವುದನ್ನು ನೋಡಿ ನೊಂದ ದೇವನೂರು ಈ ಘಟನೆಯ ಹಿಂದಿನ ತಾತ್ವಿಕತೆಯನ್ನು ಹುಡುಕುತ್ತಾ ಹೋಗುತ್ತಾರೆ. ಸವರ್ಣೀಯರು ತನ್ನ ಕೈಗೆ ನೀರೆರೆಯುವಾಗ ಅವಮಾನ ಅನುಭವಿಸಿದವನೊಬ್ಬ ಅದನ್ನೇ ತಾನು ಇನ್ನೊಬ್ಬನಿಗೆ ಮಾಡುವುದಾದರೂ ಹೇಗೆ? ಆ ಕ್ರಿಯೆಯನ್ನು ಪ್ರಾಣಿಸಹಜವಾದ ಕೋಪದಿಂದ ವಿರೋಧಿಸಿದಾಗ ಮಾತ್ರ ಇಂಥದ್ದನ್ನು ತಾನೇ ಮಾಡಲು ಸಾಧ್ಯ. ಅದೊಂದು ತಾತ್ವಿಕ ಕೋಪವಾಗಿ ಬದಲಾದಾಗ ಕೆಳವರ್ಗದ ಹುಡುಗನೊಬ್ಬ ಸವರ್ಣೀಯನ ಕೈಗೆ ನೀರೆರೆದಾಗಲೂ ಆ ಘಟನೆ ನಮ್ಮ ಧೃತಿಗೆಡಿಸುತ್ತದೆ. ಪ್ರಾಣಿ ಸಹಜವಾದ ಕೋಪ ತಾತ್ವಿಕ ಕೋಪವಾಗಿ ಪರಿವರ್ತನೆಯಾದಾಗ ನಡೆಯುವ ಪವಾಡವಿದು. ಯಾವುದೇ ಐಡೆಂಟಿಟಿಯ ನಡಿಗೆ, ತಾನೊಂದು ಅಸಮಾನತೆಗೆ ಒಳಗಾದ ಝರಿ, ತಾನು ಇರುವುದೇ ಸಮಾನತೆಯ ನದಿಗೆ ಕೂಡುವುದಕ್ಕಾಗಿ ಎಂಬಂತೆ ತನ್ನ ಆಶಯಗಳ ಇತರ ಝರಿಗಳ ಜೊತೆಗೆ ಕೂಡಿಕೊಳ್ಳುತ್ತಾ, ಸಮಾನತೆಯ ನದಿಯ ಕಡೆ ಚಲಿಸಬೇಕಾಗುತ್ತದೆ ಎನ್ನುತ್ತಾರೆ ದೇವನೂರು. ಎಲ್ಲ ಚಳುವಳಿಗಳು ಸಾಗಬೇಕಾದ ದಾರಿಯನ್ನು ಇದಕ್ಕಿಂತ ಭಿನ್ನವಾಗಿ ಮತ್ತು ಮಾನವೀಯವಾಗಿ ಯಾರು ತಾನೆ ವ್ಯಾಖ್ಯಾನಿಸಲು ಸಾಧ್ಯ? + +ಅಂಬೇಡ್ಕರ್ ಮತ್ತು ಗಾಂಧಿ ಇಲ್ಲಿ ಸಂಧಿಸುವ ರೀತಿಯೇ ಭಿನ್ನಬಗೆಯದು, ಮತ್ತದು ಇಂದಿಗೆ ಬೇಕಾದ ರೀತಿಯದ್ದು. ‘ಸಾಯಲು ಮಾನಸಿಕವಾಗಿ ದೃಢವಾಗಿ ಸಿದ್ಧನಾದವನು ಮಾತ್ರ ಗಾಂಧಿಯಾಗಬಲ್ಲ. ಹೇಡಿಯಾದವನು ಅಹಿಂಸಾವಾದಿಯಾಗಲು ಖಂಡಿತ ಸಾಧ್ಯವಿಲ್ಲ. ಗಾಂಧಿಯನ್ನು ಅಪಮೌಲ್ಯಗೊಳಿಸಿದದ್ದು ಅಹಿಂಸಾವಾದಿಯಾಗಲು ಸಾಧ್ಯವಾಗದ ನಮ್ಮೊಳಗಿನ ಹೇಡಿತನ. ಗಾಂಧೀಜಿಯವರ ನಡಿಗೆಯ ಪ್ರತಿಹೆಜ್ಜೆಯೂ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳುವವನೊಬ್ಬ ಮಾಡುವ ಪ್ರಯತ್ನ. ಹೀಗೆ ನಡೆಯುವವನಿಗೆ ಐಕ್ಯತೆ ದೈವದಂತೆ, ಭಿನ್ನತೆ ದೆವ್ವದಂತೆ ಕಾಣುತ್ತದೆ. ಹೀಗೆ ಭಾವಿಸಿದಾಗ ಮಾತ್ರವೇ ಉಪವಾಸ ಸತ್ಯಾಗ್ರಹವಾಗುತ್ತದೆ. ಹಾಗಾಗಲು ಎದುರಾಳಿ ತನ್ನವನೆಂಬ ಭಾವನೆ ಅಗತ್ಯ. ತಾನು ಇನ್ನೊಬ್ಬನಾಗಿಬಿಡುವ ರೂಪಾಂತರದ ಜರೂರಿಯಿದೆ. ದಲಿತರ ನವಪೀಳಿಗೆ ಅಂಬೇಡ್ಕರ್ ಫೋಟೋವನ್ನು ಮಾತ್ರ ಇಟ್ಟುಕೊಂಡರೆ ದಲಿತರ ಹಿಂದಿನ ತಲೆಮಾರು ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರ ಫೋಟೋಗಳನ್ನೂ ಇಟ್ಟುಕೊಂಡಿತ್ತು. ಅವರಿಬ್ಬರೂ ಮಕ್ಕಳ ಹಿತಕ್ಕಾಗಿ ಜಗಳವಾಡುವ ಅಪ್ಪ ಅಮ್ಮಂದಿರಂತೆ. ಹೀಗೆ ಅರ್ಥೈಸಿಕೊಂಡಾಗ ಪೂನಾ ಒಪ್ಪಂದವೂ ಕೂಡ, “ನನ್ನಲ್ಲಿ ತಪ್ಪಿದೆ ನಿಜ. ಹಾಗಂತ ಡೈವೋರ್ಸ ಕೊಡಬೇಡ” ಎಂಬಂತಿದೆ. ಗಾಂಧಿ ಅಸಮಾನತೆಯ ಹಿಂದೂ ಧರ್ಮ ಎಂಬ ಬಚ್ಚಲ ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಇದು ಚಿಟ್ಟೆಯಾಗಲಾರದ ಬಚ್ಚಲು ಹುಳಗಳಿಗೆ ಉಸಿರು ಕಟ್ಟಿಸುತ್ತಿತ್ತು. ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವವನಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾನತೆಯ ಮನೆಗೆ ಕಲ್ಲೆಸೆಯುವವನಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಗಾಂಧಿಗೂ ಬಿದ್ದು ರಕ್ತ ಚೆಲ್ಲಿರಬಹದು. ಇದನ್ನು ಕಂಡು ಹೊರಲೋಕವು ಅಂಬೇಡ್ಕರ್ ಅವರಿಗೂ, ಗಾಂಧಿಗೂ ಮಾರಾಮಾರಿ ಹೊಡೆದಾಟ ಎನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಹೆಚ್ಚೂಕಮ್ಮಿ ಒಂದೇ ಕೆಲಸವನ್ನಲ್ಲವೆ?’ ದೇವನೂರು ಬರೆದ ಮೇಲಿನ ಸಾಲುಗಳನ್ನು ಓದುವಾಗ ಚರಿತ್ರೆಯನ್ನು ನಾವು ಓದಬೇಕಾದ ರೀತಿ ಇದೇ ಅಲ್ಲವೆ ಎಂದು ಯಾರಿಗಾದರೂ ಅನಿಸದಿರದು. + +ಇಷ್ಟಾಗಿಯೂ ಗಾಂಧಿ ಅಪಾರ್ಥಕ್ಕೆ ಒಳಗಾಗಿದ್ದೇಕೆ? ದೇವನೂರರ ಸೂಕ್ಷ್ಮತೆ ಕೆಲಸ ಮಾಡುವುದೇ ಇಲ್ಲಿ. ‘ಗಾಂಧಿ ಅಸ್ಪೃಶ್ಯರನ್ನು ಮಕ್ಕಳು ಎಂಬಂತೆ ಭಾವಿಸಿ ವರ್ತಿಸುತ್ತಿದ್ದರು. ಈ ವರ್ತನೆಯನ್ನು ಉಲ್ಟಾ ಮಾಡಿದರೆ, ಅಂದರೆ ಗಾಂಧಿ ಅಸ್ಪೃಶ್ಯರನ್ನು ಪಿತೃಗಳೆಂಬಂತೆ ಭಾವಿಸಿ ವರ್ತಿಸಿದ್ದರೆ ಈ ಅಪಾರ್ಥದಿಂದ ತಪ್ಪಿಸಿಕೊಳ್ಳಬಹುದಿತ್ತು. ಇದು ಮೇಲ್ನೋಟಕ್ಕೆ ಒಂದೇ ಎಂಬಂತೆ ಕಂಡರೂ ಈ ನೋಟವು ನಡಾವಳಿಯನ್ನೇ ಬದಲಿಸಿಬಿಡುತ್ತದೆ. ಉದಾಹರಣೆಗೆ ಅಸ್ಪೃಷ್ಯರಿಗೂ ಸವರ್ಣೀಯರಿಗೂ ಸ್ಪರ್ಧೆ ಸವಾಲು ಬಂದಾಗ –ಮಕ್ಕಳಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ಎಲಾ, ನಾನು ಸಾಕಿದವನ ಕೊಬ್ಬೆ’ ಎಂದು ಕ್ರೋಧ, ಅಸಹನೆ ಉಂಟಾಗುತ್ತದೆ. ಅದೇ ತಂದೆ ತಾಯಿಯರಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ನನ್ನನ್ನು ಸಾಕಿದವನು; ನಾನೆ ಸೋತರೆ ಏನಾಯ್ತು?’ ಎಂಬ ಭಾವನೆ ಉಂಟಾಗುತ್ತದೆ. ದಲಿತರು ಆದಿಮ ಜನಾಂಗವಾದ್ದರಿಂದ ಈ ಪಿತೃ ಭಾವನೆಯೇ ಚಾರಿತ್ರಿಕವಾಗಿಯೂ ಸರಿ ಅನಿಸುತ್ತದೆ. ಗಾಂಧಿಯನ್ನು ಇಂದಿಗೆ ಅರ್ಥೈಸುವ ಬಗೆಯೆಂತು? ನಿನ್ನೆಯ ಗಾಂಧಿ ಇಂದಿಗೆ ಬದಲಾಯಿಸಿರುತ್ತಾನೆ, ಇಂದಿನ ಗಾಂಧಿ ನಾಳೆಗೆ ಬದಲಾಯಿಸಿರುತ್ತಾನೆ. ಈ ನಡಿಗೆಯ ಕ್ರಮದಲ್ಲೇ ಗಾಂಧಿಯ ಆಸೆ-ಚಿಂತನೆಗಳಿಗೂ ನಡಿಗೆ ಇದೆ. ತನ್ನ ಜತೆಯಲ್ಲೇ ಕರೆಕೊಯ್ಯುವವನ ಕಷ್ಟ ಇದಾಗಿರಬಹುದು. ಇಂದಿನ ಗಾಂಧಿಯನ್ನು ನಿರೂಪಿಸಿಕೊಳ್ಳಲು ಲೋಹಿಯಾರ ಚಿಂತನೆ ಸಹಕಾರಿಯಾಗಿದೆ. ಗಾಂಧಿ ಮುಂದಿನ ಜನ್ಮದಲ್ಲಿ ಹರಿಜನನಾಗಿ ಹುಟ್ಟಲು ಬಯಸಿದವರಾದ್ದರಿಂದ ಅವರನ್ನು ಸಂಪಾದಿಸಿ ಇಟ್ಟುಕೊಳ್ಳಬೇಕಾದ್ದು ಜಗತ್ತಿನ ಹಿತವೂ ಕೂಡ. ಹೀಗೆ ಗಾಂಧಿ, ಲೋಹಿಯಾ ಮತ್ತು ಅಂಬೇಡ್ಕರ್ ಅವರನ್ನು ಒಂದುಗೂಡಿಸಿ ಒಂದು ಸಾಮರಸ್ಯ ಪಡೆಯಬಹದು.’ ಯಾರನ್ನೂ, ಯಾವುದನ್ನೂ ನಿರಾಕರಿಸದೇ, ಒಳಿತನ್ನು ಎಲ್ಲ ಕಡೆಯಿಂದಲೂ ಜೊತೆಗೂಡಿಸಿ ನಡೆಯಬೇಕಾದ ಬಗೆಯನ್ನು ಇದಕ್ಕಿಂತ ಸರಳವಾಗಿ ಹೇಗೆ ವ್ಯಾಖ್ಯಾನಿಸುವುದು? + + + +ಒಂದು ಸಭೆಯಲ್ಲಿ ನಡೆದ ಎರಡು ದಿನಗಳ ಭಾಷಣದಲ್ಲಿ ಎಲ್ಲವೂ ಚರ್ಚೆಗಳೇ ಆಗಿ, ಏನೂ ತೀರ್ಮಾನವಾಗದೇ ಹತಾಶೆಯ ಹಂತ ತಲುಪಿದ ಸ್ಥಿತಿಯಲ್ಲಿ ದೇವನೂರು ಒಂದ ಸಮಾರೋಪ ಭಾಷಣವನ್ನು ಮಾಡುತ್ತಾರೆ. ‘ಗಾಂಧಿ- ಕಾಠಿಣ್ಯದ ತಂದೆಯಂತೆ, ಜೆ.ಪಿ.- ಅಸಹಾಯಕ ತಾಯಿ, ವಿನೋಭಾ-ಮದುವೆಯಾಗದ ವೃತನಿಷ್ಟ ಅಕ್ಕನಂತೆ, ಲೋಹಿಯಾ- ಊರೂರು ಅಲೆಯುವ ಮನೆಸೇರದ ಅಲೆಮಾರಿ ಮಗ, ಅಂಬೇಡ್ಕರ್- ತಾರತಮ್ಯಕ್ಕೆ ಒಳಗಾಗಿ ಮುನಿಸಿಕೊಂಡು ಮನೆಯ ಹೊರಗೆ ಇರುವ ಮಗ. ಇದು ನಮ್ಮ ಕುಟುಂಬ, ನಾವು ಇಲ್ಲಿ ಸಂತಾನ. ಹೇಳಿ, ನಾವೀಗ ಏನು ಮಾಡಬೇಕು?’ ಸಮಾರೋಪದ ನಂತರ ಕಾರ್ಯಕ್ರಮ ಮುಗಿಯಲಿಲ್ಲ. ಇದನ್ನು ಹೇಳುತ್ತಲೇ ದೇವನೂರು ಯುವಜನರಿಗೆ ಈ ಎಲ್ಲ ನಾಯಕರು ಅನುಸರಿಸುತ್ತಿದ್ದ ಮೇಲ್ಪಂಕ್ತಿಯ ಬಗ್ಗೆ ಎಚ್ಚರಿಸುವುದು ಹೀಗೆ. ‘ಬುದ್ಧ, ಬಸವ, ಅಲ್ಲಮ, ಗಾಂಧಿಯಂತವರು ತಮ್ಮ ಶತ್ರು ತಮ್ಮ ಒಳಗೂ ಇದ್ದಾನೆ ಎಂದು ಭಾವಿಸಿ ಹೆಣಗುತ್ತಿದ್ದರು. ಆಸೆ, ದ್ವೇಷ, ಅಸೂಯೆ, ನಾನತ್ವ ಇಂಥವು ತಮ್ಮ ಒಳಗಿನ ಶತ್ರು ಎಂದು ಭಾವಿಸುತ್ತಿದ್ದರು. ಈ ಅರಿವಿಲ್ಲವಾದಲ್ಲಿ ಇಂದಿನ ಭ್ರಷ್ಟಾಚಾರ ವಿರೋಧಿಯೇ ನಾಳೆ ಭ್ರಷ್ಟ ಎಂಬಲ್ಲಿಗೆ ನಾವು ಬಂದು ನಿಲ್ಲುತ್ತೇವೆ.’ ನಾವೆಲ್ಲರೂ ಇಂದು ಅಲ್ಲಿಗೇ ಹೊರಟಿದ್ದೇವೆಯೆ ಎಂಬ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕಾಗಿದೆ. + +ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_255.txt b/Kenda Sampige/article_255.txt new file mode 100644 index 0000000000000000000000000000000000000000..0b7b7aaae3140878b187e7c787091472ab1eca54 --- /dev/null +++ b/Kenda Sampige/article_255.txt @@ -0,0 +1,21 @@ +ಈಚೆಗೆ ಕೊಡಗಿನಲ್ಲಿ ಸುರಿದ ಭಾರೀ ಮಳೆ ಹಾಗೂ ಭೂಕುಸಿತದಿಂದ ಆದ ಹಾನಿ ಎಲ್ಲರಿಗೂ ತಿಳಿದಿರುವಂಥದ್ದೇ. ಎಲ್ಲೆಡೆ ವಿದ್ಯುತ್ ಕಂಬಗಳು ಉರುಳಿ ಬಿದ್ದು ನಾನಿರುವ ಚೆಂಬು ಗ್ರಾಮವೂ ಸೇರಿದಂತೆ ನೂರಾರು ಗ್ರಾಮಗಳು ಕತ್ತಲಲ್ಲಿ ಮುಳುಗಿದವು. ಊರಿಗೆ ಊರೇ ಹಳೆ ಕಾಲಕ್ಕೆ ಹಿಂದಿರುಗಿತು. ಆಗಾಗ ರಿಂಗಣಿಸುವ ಮೊಬೈಲ್‌ಗಳು ಸ್ತಬ್ಧ. ಮಿಕ್ಸಿ- ಗ್ರೈಂಡರ್‌ಗಳಿಗೂ ವಿಶ್ರಾಂತಿ. ಸಂತ್ರಸ್ತರಲ್ಲದ ಹೆಣ್ಣುಮಕ್ಕಳು ಒಂದು ದಿನ ಉಪ್ಪಿಟ್ಟು ಮಾಡಿದರು. ಮರುದಿನ ಚಿತ್ರಾನ್ನ ಮಾಡಿದರು. ಊಟಕ್ಕೆ ಬೇಳೆ ಸಾರು ಮಾಡಿದರು. ಎಷ್ಟು ದಿನ ಅಂತ ಇವುಗಳನ್ನೇ ಮಾಡುವುದು? ದೋಸೆ, ಇಡ್ಲಿ, ತೆಂಗಿನಕಾಯಿ ಹಾಕಿ ಸಾಂಬಾರ್ ಮಾಡಬೇಕಾದರೆ ರುಬ್ಬಲೇ ಬೇಕು. ಈಗ ಎಲ್ಲರ ಮನೆಯ ಮೂಲೆಯಲ್ಲಿದ್ದ ಕಡೆಯುವ ಕಲ್ಲುಗಳೂ ಹೊರಬಂತು. ಆಧುನಿಕ ಸ್ತ್ರೀಯರೂ ರುಬ್ಬುವ ಕಲ್ಲಿಗೆ ಶರಣಾಗದೆ ಬೇರೆ ದಾರಿ ಇರಲಿಲ್ಲ. ಪರಿಸ್ಥಿತಿ ಹೀಗಿದ್ದರೂ, ವಿದ್ಯುತ್ ಕಂಬ ಧರಾಶಾಯಿಯಾಗಿದ್ದರೂ ನನ್ನ ಮನೆಯಲ್ಲಿ ಮಾತ್ರ ವಿದ್ಯುತ್ ದೀಪ ಇರುಳೂ, ಹಗಲೂ ಉರಿಯುತ್ತಿತ್ತು. ಮಿಕ್ಸಿ ಓಡುತ್ತಿತ್ತು. ಇದು ಹೇಗೆ ಸಾಧ್ಯ ಎಂದು ಆಶ್ಚರ್ಯವೇ? ಹೇಳುತ್ತೇನೆ ಕೇಳಿ. + +ನನ್ನ ಮನೆಯಲ್ಲಿ ಮೊದಲು ಅಂದರೆ ೨೦೧೦ನೇ ಇಸವಿಯವರೆಗೂ ಕರೆಂಟ್ ಇರಲಿಲ್ಲ. ತೊಂಬತ್ತರ ದಶಕದ ಕೊನೆಯವರೆಗೂ ಚಿಮಣಿ ದೀಪವೊಂದೇ ಬೆಳಕಿಗೆ ಆಧಾರವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಲ್ಯಾಂಪ್ ಉರಿಸುವ ಮೊದಲು ಅದರ ಮಸಿ ಹಿಡಿದ ಗಾಜಿನ ಬುರುಡೆಯನ್ನು ತೊಳೆಯಲು ನಾನೂ, ಗಂಡನೂ ಜಗಳವಾಡುತ್ತಿದ್ದೆವು. `ನೀನು ತೊಳೆ’ ಎಂದು ಅವರು, `ದಿನಾ ನಾನೇ ತೊಳೆಯಬೇಕು. ಇಂದು ನೀವು ತೊಳೆಯಿರಿ’ ಎಂದು ನಾನು ವಾದ ಮಾಡುತ್ತಿದ್ದೆವು. ಅದರ ಮಿಣಿಮಿಣಿ ಮಂದ ಬೆಳಕಲ್ಲಿ ರಾತ್ರಿ ಓದುವುದು, ಬರೆಯುವುದು ಬಿಡಿ ಪೇಪರ್, ಪುಸ್ತಕ ಹಿಡಿದ ತಕ್ಷಣ ನಿದ್ರಾದೇವಿ ಆವರಿಸುತ್ತಿದ್ದಳು. ೧೯೯೮ರಲ್ಲಿ ನನ್ನ ಮನೆಗೆ ಸೋಲಾರ್ ಲೈಟ್ ಬಂತು. ಮಳೆಗಾಲದಲ್ಲಿ ನಮ್ಮೂರಲ್ಲಿ ಸೂರ್ಯನ ಬೆಳಕು ಕಡಿಮೆ ಇರುವುದರಿಂದ ಆ ಸಮಯದಲ್ಲಿ ಸೀಮೆ ಎಣ್ಣೆ ದೀಪ ಉರಿಸಲೇ ಬೇಕಾಗಿತ್ತು. ನನ್ನ ಮಕ್ಕಳು ದೀಪದ ಹೊಗೆಯಲ್ಲೇ ಓದಿ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದರು. + + + +ನನ್ನ ಮನೆಯಲ್ಲಿ ಮೊದಲು ಅಂದರೆ ೨೦೧೦ನೇ ಇಸವಿಯವರೆಗೂ ಕರೆಂಟ್ ಇರಲಿಲ್ಲ. ತೊಂಬತ್ತರ ದಶಕದ ಕೊನೆಯವರೆಗೂ ಚಿಮಣಿ ದೀಪವೊಂದೇ ಬೆಳಕಿಗೆ ಆಧಾರವಾಗಿತ್ತು. ಸಾಯಂಕಾಲವಾಗುತ್ತಿದ್ದಂತೆ ಲ್ಯಾಂಪ್ ಉರಿಸುವ ಮೊದಲು ಅದರ ಮಸಿ ಹಿಡಿದ ಗಾಜಿನ ಬುರುಡೆಯನ್ನು ತೊಳೆಯಲು ನಾನೂ, ಗಂಡನೂ ಜಗಳವಾಡುತ್ತಿದ್ದೆವು. + +ನನಗೆ ಆಗ ನನಗಿಂತ ದೊಡ್ಡದಾದ ರುಬ್ಬುವ ಕಲ್ಲಿನ ಮುಂದೆ ಕುಳಿತು ಬೆಳಗಿನ ಉಪಾಹಾರಕ್ಕೆ, ಮಧ್ಯಾಹ್ನದ ಭೋಜನಕ್ಕೆ ಮತ್ತೆ ರಾತ್ರಿಯ ಊಟಕ್ಕೆ ರುಬ್ಬುವ ಕೆಲಸ. ಏಳು-ಎಂಟು ಕೂಲಿಯಾಳುಗಳು ದಿನಾ ಊಟಕ್ಕೆ. ಅಷ್ಟು ಮಾತ್ರವಲ್ಲ ನನ್ನ ತವರಿನ ಕಡೆಯಿಂದ ಬಂದ ಇಬ್ಬರು ಕೆಲಸಗಾರರು ಮನೆಯಲ್ಲೇ ಇರುತ್ತಿದ್ದರು. ಅವರಿಗೆ ರಾತ್ರಿಯೂ ಬೇಯಿಸಿ ಹಾಕುವ ಕೆಲಸ ನನ್ನದಾಗಿತ್ತು. ನೆಂಟರು ಬಂದರೆ ಕೇಳುವುದೇ ಬೇಡ. ಒಟ್ಟಿನಲ್ಲಿ ನನ್ನ ಬದುಕೇ ರುಬ್ಬುವುದರಲ್ಲಿ ಕಳೆದುಹೋಗುತ್ತಿತ್ತು. `ಇದರಿಂದ ನನಗೆ ಬಿಡುಗಡೆ ಯಾವಾಗ? ಎಲ್ಲರ ಮನೆಯಲ್ಲಿ ಇರುವಂತೆ ನನ್ನ ಮನೆಯಲ್ಲೂ ಕರೆಂಟ್ ಇರುತ್ತಿದ್ದರೆ…’ ಎಂದು ಅನಿಸಿ ದು:ಖವೆನಿಸುತ್ತಿತ್ತು. ನಮ್ಮ ಊರಿಗೆ ಸುಮಾರು ಐದು ಕಿ.ಮೀ. ದೂರದಿಂದ ವಿದ್ಯುತ್ ಕಂಬಗಳನ್ನು ನೆಟ್ಟು ಲೈನ್ ಎಳೆಯಬೇಕಿತ್ತು. ದಟ್ಟ ಅರಣ್ಯ ಪ್ರದೇಶದಲ್ಲಿ ನಮ್ಮ ಊರು ಇರುವುದರಿಂದಲೋ ಏನೋ ನಾವು ಹಲವು ಬಾರಿ ಬೇಡಿಕೆ ಸಲ್ಲಿಸಿದರೂ ಸರ್ಕಾರ ನಮಗೆ ವಿದ್ಯುಚ್ಛಕ್ತಿ ಒದಗಿಸಲಿಲ್ಲ. ಇದಕ್ಕೆ ಪರ್ಯಾಯ ಏನು ಎಂದು ನಾನು ಚಿಂತಿಸತೊಡಗಿದೆ. ಆಗ ನಮ್ಮೂರಿನ ಸಮೀಪ ಇರುವ ಉಂಬಳೆ ಸದಾಶಿವ ಭಟ್ ಎಂಬವರು ತನ್ನ ಮನೆ ಸಮೀಪ ಹರಿಯುವ ಹಳ್ಳದ ನೀರಿನಿಂದ ಸ್ವತ: ಕರೆಂಟ್ ತಯಾರಿಸಿ ಬಳಸಲು ಶುರುಮಾಡಿದ್ದರು. + +ನಾನು ಮತ್ತು ಗಂಡ ಅದನ್ನು ನೋಡಿ ಬಂದೆವು. ಆದರೆ, ಅದು ತುಂಬ ಖರ್ಚಿನ ಬಾಬತ್ತಾಗಿತ್ತು. ನೀರಿನ ರಭಸಕ್ಕೆ ಚಕ್ರ ತಿರುಗುವಾಗ ಅದಕ್ಕೆ ಅಳವಡಿಸಿದ ಬೆಲ್ಟ್ ಆಗಾಗ ತುಂಡಾಗುತ್ತಿತ್ತು. ಯಂತ್ರವೂ ಕೆಡುತ್ತಿತ್ತು. ಅದನ್ನು ರಿಪೇರಿ ಮಾಡಬೇಕಾದರೆ, ಬಿಡಿ ಭಾಗಗಳನ್ನು ತರಬೇಕಾದರೆ ತಮಿಳುನಾಡಿನ ಕೊಯಂಬತ್ತೂರಿಗೆ ಹೋಗಬೇಕಿತ್ತು. ಇದೆಲ್ಲ ಆಗುವ ಕೆಲಸವಲ್ಲ ಎಂದು ನಮಗೆ ಅನಿಸಿತು. ಆದರೆ ಮನೆಗೆ ವಿದ್ಯುತ್ ತರಿಸಲೇಬೇಕು ಎಂಬ ಹಠವಂತೂ ಇತ್ತು. ಅದೇ ಸಮಯದಲ್ಲಿ ಶಿವಮೊಗ್ಗದ `ನಿಸರ್ಗ ಎನ್ವಿರಾನ್‌ಮೆಂಟ್ ಟೆಕ್ನಾಲಜೀಸ್’ನವರು ಹರಿಯುವ ನೀರು ಇರುವ ಕಡೆ ಕಿರು ಜಲ ವಿದ್ಯುತ್ ಘಟಕ ಸ್ಥಾಪಿಸಿ ಕೊಡುತ್ತಾರೆ. ಇದಕ್ಕೆ ಕೇಂದ್ರ ಸರ್ಕಾರದ ನವೀಕರಿಸಬಹುದಾದ ಇಂಧನ ಸಚಿವಾಲಯ (ಎಂಎನ್‌ಆರ್‌ಇ) ಧನ ಸಹಾಯವನ್ನೂ ಒದಗಿಸಿಕೊಡುತ್ತದೆ ಎಂಬ ಮಾಹಿತಿ ಸಿಕ್ಕಿತು. ನಮ್ಮ ಮನೆ ಸಮೀಪವೇ ಎತ್ತರದಿಂದ ಧುಮುಕುವ ಜಲಪಾತ ಇದೆ. ಬೇಸಿಗೆಯಲ್ಲಿ ನೀರು ಬತ್ತಿದರೂ ಮಳೆಗಾಲದಲ್ಲಾದರು ಕರೆಂಟು ಉತ್ಪಾದಿಸಬಹುದಲ್ಲ ಎಂದು ಅವರನ್ನು ಸಂಪರ್ಕಿಸಿದೆವು. ಅವರು ವಿದ್ಯುತ್ ಉತ್ಪಾದಿಸುವ ಯಂತ್ರವನ್ನು ತಂದು ಅಳವಡಿಸಿಕೊಟ್ಟರು. + +ಸುಮಾರು ೪೦ ಮೀಟರ್ ಎತ್ತರದಿಂದ ಬೀಳುವ ನೀರನ್ನು ೫೦೦ ಮೀಟರ್ ಉದ್ದದ ಎರಡೂವರೆ ಇಂಚಿನ ಪಿವಿಸಿ ಪೈಪ್ ಮೂಲಕ ಜಲವಿದ್ಯುತ್ ಘಟಕಕ್ಕೆ ಹರಿಸಿದ್ದೇವೆ. ಆಗ ಮೋಟಾರು ತಿರುಗಿ ವಿದ್ಯುತ್ ಉತ್ಪಾದನೆಯಾಗುತ್ತದೆ. ಇದರ ಸಾಮರ್ಥ್ಯ ಒಂದು ಕಿಲೋವಾಟ್. ಹೀಗೆ ಉತ್ಪಾದನೆ ಆದ ವಿದ್ಯುತ್‌ಅನ್ನು ೬೦ ಮೀಟರ್ ಉದ್ದದ ಎರಡು ಕೇಬಲ್‌ಗಳ ಮೂಲಕ ಅಡಿಕೆ ತೋಟದ ನಡುವೆ ಸಾಗಿಸಿ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ. ೨೦೧೦ರಲ್ಲಿ ಇದಕ್ಕೆ ಆದ ಖರ್ಚು ಒಂದು ಲಕ್ಷದ ಹತ್ತು ಸಾವಿರ. ಇದರ ಮುಕ್ಕಾಲು ಭಾಗ ಹಣವನ್ನು ಕೇಂದ್ರ ಸರ್ಕಾರ ಭರಿಸಿದೆ. ಈಗ ಈ ಸ್ವಂತ ವಿದ್ಯುತ್‌ನಿಂದಲೇ ನಮ್ಮ ಮನೆಯ ಲೈಟ್, ಫ್ರಿಜ್, ಟೀವಿ, ಮಿಕ್ಸಿ, ಫ್ಯಾನ್, ಮೊಬೈಲ್ ಚಾರ್ಜ್, ಇಸ್ತ್ರಿ ಪೆಟ್ಟಿಗೆ ನಡೆಯುತ್ತದೆ. + +ಇದು ಪರಿಸರಸ್ನೇಹಿ ವಿದ್ಯುತ್. ಈ ಘಟಕ ಸ್ಥಾಪಿಸಲು ಮರ ಕಡಿಯಬೇಕಾಗಿಲ್ಲ. ಹರಿದು ಹೊರ ಹೋಗುವ ನೀರನ್ನು ಬಳಸುವುದರಿಂದ ನೀರಿನ ಅಪವ್ಯಯ ಇಲ್ಲ. ಜಲವಿದ್ಯುತ್ ಘಟಕಕ್ಕೆ ಹರಿಸಿದ ನೀರೂ ವ್ಯರ್ಥವಾಗುವುದಿಲ್ಲ. ಅದನ್ನು ತೋಟಕ್ಕೆ, ಗದ್ದೆಗೆ ಬಳಸಬಹುದು. ತಿಂಗಳು ತಿಂಗಳು ಬಿಲ್ ಕಟ್ಟಲು ಇಲ್ಲ. ನಿರ್ವಹಣೆ ಅಂತ ಏನೂ ಇರುವುದಿಲ್ಲ. ಆದರೆ, ಜೋರು ಮಳೆ ಬರುವಾಗ ಪೈಪ್‌ನ ಫಿಲ್ಟರ್‌ನಲ್ಲಿ ಕಸಕಡ್ಡಿ ನಿಲ್ಲುತ್ತದೆ. ಅದನ್ನು ತೆಗೆಯಬೇಕು. ಫೆಬ್ರವರಿಯಿಂದ ಮೇ ತನಕ ಜಲಪಾತ ಬತ್ತುವುದರಿಂದಂ ಈ ಸಮಯದಲ್ಲಿ ನಮಗೆ ನೀರಿನ ಕರೆಂಟ್ ಇರುವುದಿಲ್ಲ. + +೨೦೧೪ರಲ್ಲಿ ಸರ್ಕಾರದ ಕರೆಂಟೂ ಬಂತು. ಆದರೇನು? ಮಳೆಗಾಲದಲ್ಲಿ ನಮ್ಮೂರಲ್ಲಿ ಮರ ಮತ್ತು ಅದರ ಕೊಂಬೆಗಳು ವಿದ್ಯುತ್ ತಂತಿಯ ಮೇಲೆ ಆಗಾಗ ಬೀಳುತ್ತಲೇ ಇರುವುದರಿಂದ ಸರ್ಕಾರದ ಕರೆಂಟ್ ಕೈಕೊಡುವುದೇ ಹೆಚ್ಚು. ಬೇಸಿಗೆಯನ್ನು ಹೊರತು ಪಡಿಸಿ ಉಳಿದ ಸಮಯದಲ್ಲಿ ನಮ್ಮದೇ ನೀರಿನಿಂದ ಉತ್ಪಾದಿಸುವ ಕರೆಂಟ್ ನಮ್ಮ ಮನೆಯನ್ನು ಬೆಳಗುತ್ತದೆ. ಅದೂ ಯಾವುದೇ ಖರ್ಚಿಲ್ಲದೆ! ಆಗೆಲ್ಲಾ ಸರ್ಕಾರಕ್ಕೆ ಮಿನಿಮಮ್ ಬಿಲ್ ಕಟ್ಟುತ್ತೇವೆ. + +ಮಲೆನಾಡು ಹಾಗೂ ಕರಾವಳಿಯಲ್ಲಿ ಗುಡ್ಡದಿಂದ ಹರಿದು ಬರುವ ತೊರೆಗಳು ಸಾಕಷ್ಟಿವೆ. ಸರಕಾರ ಕಿರು ಜಲ ವಿದ್ಯುತ್ ಘಟಕಕ್ಕೆ ಸಬ್ಸಿಡಿ ಕೊಡುವುದರಿಂದ ಹರಿಯುವ ನೀರು ಹೊಂದಿರುವ ರೈತರು ಈ ಘಟಕ ಸ್ಥಾಪಿಸಿ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಬಹುದು. + +ಲೇಖಕಿ ಸಹನಾ ಕಾಂತಬೈಲು ಸಂಪಾಜೆಯ ದಬ್ಬಡ್ಕದವರು. ಕೃಷಿ ಮಹಿಳೆ.  ಇವರ ಮತ್ತೊಂದು ಕೃತಿ ‘ಇದು ಬರಿ ಮಣ್ಣಲ್ಲ’ ಲಲಿತ ಪ್ರಬಂಧಗಳ ಸಂಕಲನ ಅಹರ್ನಿಶಿ ಪ್ರಕಾಶನದಿಂದ ಪ್ರಕಟವಾಗಿದೆ. \ No newline at end of file diff --git a/Kenda Sampige/article_256.txt b/Kenda Sampige/article_256.txt new file mode 100644 index 0000000000000000000000000000000000000000..454cc8c749a6d9329d0b287731e60a120b694b1e --- /dev/null +++ b/Kenda Sampige/article_256.txt @@ -0,0 +1,95 @@ + + +ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್. ಈ ಕತೆಯ ನಾಯಕ ಈಗ ಬದ್ಕಿತ್ಲೆ. ಕತೆ ಹೇಳ್ದವೂ ಬದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬದುಕ್ಯೊಳೋ. + +ನಮ್ಮದ್ ಮಲೆನಾಡ್. ಕೊಡಗಿಗೆ ಅಂಟಿಕೊಂಡೇ ಇರುವ ಊರ್. ಇಲ್ಲಿ ಒಂದ್ ಗುಡಿ ಉಟ್ಟು. ಅದ್ ಬೈನಾಟಿ ಭೂತದ್ದ್. ವರ್ಷಕ್ಕೊಮ್ಮೆ ಬೈನಾಟಿ ಭೂತದ ಜಾತ್ರೆ ಆದೆ. ಬೈನಾಟಿ ಭೂತ ಅಂದ್ರೆ ಅರ್ಜುನ್ನ ಪರೀಕ್ಷೆ ಮಾಡಿಕೆ ಹೊರಟ ಈಸರ ದೇವ್ರ್, ಬೈನಾಟಿ ಜಾತ್ರೆಯಂದ್ ಊರವೆಲ್ಲಾ ಸೇರಿ ಕೂಡು ಬೇಟೆ ಆಡುವೆ. ಈಗ ಕಾಡ್ ಇಲ್ಲೆ, ಮೃಗನೂ ಇಲ್ಲೆ. ಆದ್ರೂ ನಾವೆಲ್ಲಾ ಬೆಡಿ ಹಿಡ್ದ್ ಗುಡ್ಡ ಸುತ್ತಿ ಕಾಲಿ ಕೈಲಿ ಬಂದವೆ. ಸಂಪ್ರದಾಯ ಬುಡಿಕೆ ಬೊತ್ತಲೆ? + +ಅಂತಾ ಒಂದ್ ದಿನ ಅಪ್ಪಯ್ಯ ಗೌಡ್ರ್ ಬೂತಕಲ್ ಗುಡ್ಡೆ ಮೇಲೆ ಹೇಳ್ದ ಕತೆ. “ಈ ಗುಡ್ಡೇಲಿ ನಾ ನೂರಾದರೂ ಹುಲಿಗಳ ಕೊಂದಿರುವೆ. ಉಳ್ದ ಚಿಲ್ರೆ ಪಲ್ರೆ ಬುಡಿ. ಆದ್ರೆ ಕೂಸಪ್ಪ ಗೌಡ್ರ ಹಾಂಗೆ ನಮ್ಮಿಂದ ಯಾರಿಂದ್ಲೂ ಮಾಡಿಕ್ಕೆ ಆತ್ಲೆ ಬುಡಿ.” + +“ಯಾವ ಕೂಸಪ್ಪ ಗೌಡ್ರ್?” + +ಅಪ್ಪಯ್ಯ ಗೌಡ್ರ್ ನಮ್ಮ ಪ್ರಶ್ನೆಗೆ ನೆಗಾಡ್ದೊ. ಹಕ್ಕಲೆ ಇದ್ದ ದೊಡ್ಡ ಬಂಡೆಗಲ್ನ ಮೇಲೆ ಕುದ್ದೋ. ನಾವು ಕೂಡಾ ಸುತ್ತಮುತ್ತ ಕುದ್ದೊ. ತಮ್ಮ ಸಡನ್ನ್ಡೆತ್ತ್ ಬೆಡೀನ ಬಂಡೆ ಮೇಲೆ ಇಸಿ ಗೌಡ್ರ್ ಚೋಯಂಬುನ ಹಕ್ಕಲೆ ಒಂದ್ ಬೀಡಿ ಕೇಳ್ದೊ. ಬೀಡಿ ಎಳ್ಕಂಡ್ ಅದ್ರ ಹೊಗೇನೇ ನೋಡ್ತಾ ಹಳೇದ್ರ ನೆಂಪು ಮಾಡೀಕ್ಕೆ ಸುರುಮಾಡ್ದೊ. + +“ಆಗ ಈ ಸೀಮೆಗೆ ಅಮರ ಸುಳ್ಯಾಂತ ಹೆಸ್ರ್. ಕೊಡಗಿನ ಚಿಕ್ಕವೀರ ರಾಜೇಂದ್ರ ದೊರೆಗಳ ಆಡಳ್ತಕ್ಕೆ ಇದ್ ಒಳಪಟ್ಟಿತ್ತ್. ಅವು ಲಿಂಗಾಯತ್ರ್. ಈ ಸೀಮೇಲಿ ಲಿಂಗಾಯಿತ್ರೆ ಇತ್ಲೆ. ಆದ್ರೂ ಜನ ಅವ್ರ ಪ್ರೀತಿಸ್ತಿದ್ದೊ.” + +ನಮ್ಮ ಕೋಲ್ಚಾರ್ ಕೂಸಪ್ಪ ರಾಜರ ಸೈನ್ಯಲಿ ಇತ್ತ್. ಬರ್ಜರಿ ಆಳಂಗದ ಸೀಪಾಯಿ. ಆರೂವರೆ ಅಡಿಯಸ್ಟ್ ಎತ್ತ್ರ ಇತ್ತ್. ಅಗಲ ಮುಖ, ದೊಡ್ಡ ಮೂಗು, ಬರ್ಜರಿ ಹುರಿ ಮೀಸೆ, ಮತ್ತೆ ಹೆದ್ರಿಕೆ ಹುಟ್ಟುಸ್ವ ಕೆಂಪು ಕಣ್ಣುಗ! ಅವ್ರ ಬಲವಾದ ತೋಳುಗ, ದೃಢವಾದ ಕಾಲ್ಗ, ಮಾಸಲವಾದ ಗಟ್ಟಿ ಸರೀರ ಅವ್ರ ನಾಯಕನಾಗಿ ಮಾಡಿತ್ತ್. ಅವ್ರ ಸೇನಾ ನಾಯಕ ಕುಳ್ಳ ಕುಂಡೋಚ್ಚ. ಕೂಸಪ್ಪ ಗೌಡ್ರೀಗೆ ಏನಾದ್ರೂ ಹೇಳೋಕೂಂತಾದ್ರೆ ಅವ್ನಿಗೆ ತುಂಬಾ ಕಸಿವಿಸಿ ಆತಿತ್ತ್. ಈ ಕೂಸಪ್ಪ ಎಂತಾ ವ್ಯಕ್ತಿಯೆಂದ್ರೆ, ಮೊದುವೆಗೆ ಹೋದ್ರೆ ಪಂತ ಹಾಕಿ ನಾಲ್ಕ್ ಕವಂಗ ಪಾಯ್ಸ ಕುಡೀತೀತ್ಗಡ. ಹಲ್ಲಿಂದ ಅಕ್ಕಿ ಮುಡೀ ಎತ್ತ್ತೀತ್ ಗಡ! + +ಒಂದ್ ಸರ್ತಿ ರಜಾ ತಗಂಡ್ ಊರಿಗೆ ಬಂದ ಕೂಸಪ್ಪ ಗೌಡ್ರೀಗೆ ಬೇಟೆ ಆಡ್ವ ಮನಸ್ಸಾತ್. ಬಾಳ್ ಕತ್ತಿ ಸೊಂಟಕ್ಕೆ ಸಿಗ್ಸಿ, ಕೇಪಿನ ಬೆಡಿಗೆ ಮೊದ್ದ್ ಜಡ್ದ್ ಅವು ಬಂದದ್ದ್ ಇದೇ ಭೂತಕಲ್ ಗುಡ್ಡೆಗೆ. ಹೆದ್ರಿಕೆ ಅಂತ ಹೇಳ್ರೆ ಏನ್ತ ಗೊತ್ತೆ ಇರ್ದ ಅವು ಒಬ್ಬುರೇ ಬೇಟೆಗೆ ಬಂದಿದ್ದೊ ಗಡ. + +ಆಗ ಈ ಗುಡ್ಡೆ ಹೀಂಗೆ ಇತ್ಲೆ. ಗಿಡ ಮೊರಂದ ತುಂಬಿ ಎಲ್ಲೆಲ್ಲೂ ಹಸ್ರ್. ಒಳಗಡೆ ಸಂಕಪಾಲ, ಕಾಟಿ, ಹಂದಿ, ಹುಲಿಗೊ ತುಂಬಿಕೊಂಡಿತ್ತ್ ಗಡ. ಆದ್ರೆ ಕೂಸಪ್ಪ ಗೌಡ್ರ್ ಸ್ವಲ್ಪಾನೂ ಹೆದ್ರಿಕೆ ಇಲ್ಲದೆ ಬರುತ್ತಿದ್ದೊ ಗಡ. ಮರದ ಮೇಲಿದ್ದ ಒಂದು ಮುಚ್ಚ ಇವ್ರ ನೋಡಿ ‘ಕೀಚ್ ಕೀಚ್’ ಅಂತೇಳಿ ಮತ್ತೊಂದ್ ಮರಕ್ಕೆ ಹಾರಿತ್ಗಡ. ಮುಚ್ಚನ ಮಾಸ ಬಾರಿ ರುಚಿ. ಕೂಸಪ್ಪ ಗೌಡ್ರ್ ಬೆಡಿ ಎತ್ತಿದೊ. “ಬೇಡ. ಇದ್ಕಿಂತ ಒಳ್ಳೇದ್ ಸಿಕ್ಕುದು. ಹಾಳಾದ್ದ್ ಮತ್ತೆ ಯಾರ್ ಮೊದ್ದು ಜಡಿಯುದು” ಎಂದು ಕೆಳಗಿಳಿಸಿದೊ. ಮುಚ್ಚ ಮತ್ತೊಂದು ಮರಕ್ಕೆ ಹಾರಿ ಕಾಣೆಯಾತ್. + +ಆಗ ಆ ಮರದ ಬುಡದತ್ತ ಅವ್ರ ದೃಷ್ಟಿ ಹೋತ್. ಒಂದು ಕ್ಷಣ ಅವು ಮರಗಟ್ಟಿ ಹೋದೊ. ಅಲ್ಲಿ ಎರಡ್ ಹಡೀ ಗಾತ್ರದ ಕಾಟಿಗೊ ಇವ್ರುನನೇ ನೋಡ್ತಿತ್! ಯಾದಕ್ಕೆ ಗುಂಡು ಹೊಡಿಯೋದು? ಈ ಗುಡ್ಡೆಲಿ ಕಾಟಿಗಿಂತ ಜೋರಾಗಿ ಓಡಿಕೆ ಸಾಧ್ಯ ಇಲ್ಲೆ. ಮಳೆಗಾಲ ಆದ್ರಿಂದ ಮರ ಹತ್ತಿ ಬೊದ್ಕೊಕೂ ಸಾಧ್ಯ ಇಲ್ಲೆ. + +ಅವು ಆಲೋಚ್ನೆ ಮಾಡಿಕೊಂಡು ಇದ್ದಾಂಗೆ ಸಣ್ಣ ಕಾಟಿ ಹಾಯಿಕೆ ಬಾತ್. ಕೂಸಪ್ಪ ಗೌಡ್ರ್ ನೋಟ ನೋಡಿ ಕುದ್ರೆ ಅದುಮಿದೊ. ಕಾಟಿ ಬೀತ್, ನೋಡಿ ಓ ಅಲ್ಲಿ ದೊಡ್ಡ ಗುಂಡಿ ಕಂಡದೆಯಲ್ಲಾ…. ಅದಕ್ಕೆ ಕಾಟಿ ಹೊರಳ್ತಾ ಹೋಗಿ ಬೀತ್. + +ಈಗ ದೊಡ್ಡ ಕಾಟಿ ಕೊಂಬು ಚಾಚಿ ಮುಂದೆ ಬಾತ್. ಮೊದ್ದ್ ಜಡೀಕೆ ಸಮಯ ಇಲ್ಲೆ. ಸಿಟ್ಟಿಂದ ಸುಳುಂಪುತ್ತಾ ಬಾವ ಕಾಟಿನ ನೋಡಿ ಗೌಡ್ರಿಗೆ ಎಲ್ಲಾ ದೇವ್ರ, ಬೂತೊಗಳ ನೆಂಪಾಗಿರ್ದ್. ಮೈಸಾಸುರ್ನ ಅವ್ತಾರದಂಗೆ ಕಾಣ್ವ ಕಾಟಿ ಅವ್ರ ಕುತ್ತೋಕ್ ಅಂತೇಳುವಷ್ಟರಲ್ಲಿ ಅವುಕೆ ಸೈನ್ಯಲಿ ದಿನಾ ಮಾಡುವ ಕವಾಯಿತು ನೆಂಪಾಗಿ ಅವು ಕಾಲ್ ಅಗ್ಲಿಸಿ ಮೇಲೆ ಹಾರ್ದೊ, ಕಾಟಿ ತಲೆ ಬೊಗ್ಸಿದ್ರಿಂದ ಅವು ಸರ್ತಾಗಿ ಬೆನ್ನ್ ಮೇಲಕ್ಕೆ ಕುಳಿತಿದ್ದೊ. ಕಾಟಿ ಗಾಬ್ರೀಲಿ ಅತ್ತಿತ್ತ ಓಡೀಕೆ ಸುರು ಮಾಡ್ತ್. + +ಹೆಂಗೋ ಸರಿ ಮಾಡಿಕೊಂಡ ಅವು ತಿರ್ಗಿ ಕಾಟಿನ ಬೆನ್ನ ಮೇಲೆ ಸರಿಯಾಗಿ ಕುದ್ದೊ. ಕಾಟಿನ ದೊಡ್ಡ ಕೊಂಬುಗ ಅವ್ರ ಕೈಗೆ ಸರ್ಯಾಗಿ ಸಿಗ್ತಿತ್. ಕೊಂಬ್ ಹಿಡ್ಕಂಡ್ ಜೋರಾಗಿ ಅಲ್ಗಾಡ್ಸಿಕೆ ಅವು ಸುರು ಮಾಡ್ದೊ. ಕಾಟಿ ತಲೆನ ಅತ್ತಿತ್ತ ಆಡ್ಸಿಕೆ ಸುರು ಮಾಡ್ತ್. ಅವು ಹಿಡ್ದ ಪಟ್ಟ್ ಬುಟ್ಟತ್ತಿಲ್ಲೆ. ಬಲವಾಗಿ ಹಿಡ್ದ್ ಕುತ್ತಿಗೇನ ಎಡಕ್ಕೆ ತಿರ್ಗಿಸ್ದೊ. ಲಟಕ್ಕ್ ಸಬುದ ದೊಟ್ಟಿಗೆ ಕುತ್ತಿಗೆ ಮುರೀತ್. ಅವು ಕೆಳಕ್ಕೆ ಬಿದ್ರೂ ಕೊಂಬುನ ಬುಟ್ಟತ್ಲೆ. ಕಾಟಿ ಅಡ್ಡ ಬಿದ್ದು ಹೊರಳ್ಲಿಕ್ಕೆ ಸುರು ಮಾಡ್ತ್. ಆಗ ಅವು ಕೊಂಬುನ ಬುಟ್ಟೊ. ಅವುಕೆ ಬಾಳ್ ಕತ್ತಿ ನೆಂಪಾತ್. ಅದ್ ಉರ್ಡಾಟ ಮಾಡಕನ ಸ್ವಲ್ಪ ದೂರಲೇ ಬಿದ್ದೀತ್. ಅವು ಓಡಿ ಹೋಗಿ ಕತ್ತೀನ ತಂದೊ. ಎರಡ್ ಕಡಿಯಾಟಲಿ ತಲೆ ಬೇರೆ ಆತ್. ಕಾಟೀನ ಸರೀರ ಹೊರ್ಳಿ ಹೊರ್ಳಿ ಅಲ್ಲೇ ಆ ಹೊಂಡಕ್ಕೆ ಬೀತ್.” + +****** + +ಅಪ್ಪಯ್ಯ ಗೌಡ್ರ್ ಚೋಯಂಬುನ ಹಕ್ಕಲೆ ಇನ್ನೊಂದ್ ಬೀಡಿ ಕೇಳ್ದೊ. ನಾವು ಆಸ್ಚರ್ಯಪಟ್ಟ್ ಕೂತಿದ್ದೊ. ಬೀಡಿ ಎಳ್ಕೊಂಡ್ ಇದ್ದಂಗೆ ಅಪ್ಪಯ್ಯ ಗೌಡ್ರ್ “ಆತಲ್ಲಾ ಇನ್ನ್ ಎದ್ರಿ. ಅಂದಿನೋ ಮೊಲನೋ ಸಿಕ್ಕಿದೆನೋ ನೋಡಮಾ” ಎಂತೇಳಿ ಎದ್ರಿಕೆ ನೋಡ್ದೊ. ನಾವು ಬುಡೋಕಲೆ? “ಕುದ್ರಿ ಕುದ್ರಿ. ಕೂಸಪ್ಪ ಗೌಡ್ರ ಕತೆ ಹೇಳಿ” ಎಂದ್ ನಾವ್ ಅವುರ ಕುದ್ರಿಸಿದೋ. ಅಪ್ಪಯ್ಯ ಗೌಡ್ರ್ “ಬೇಡ ಬುಡಿ. ಅದ್ ದೊಡ್ಡ ರಾಮಾಯಣನೇ ಆದೆ” ಎಂದೋ. ನಾವ್ ಕೇಳೊಕಲೆ? “ಆತ್ ಇಲ್ಲಿ ಮುರ್ಗಗೊ ಇಲ್ಲೆ. ಇಂದ್ `ನಾವ್ ಬೇಟೆ ಆಡ್ದಂಗೆ” ಎಂದ್ ಅವು ಕುದ್ರಿದೊ. ಬೀಡಿ ಎಳಿತಾ ಮೊತ್ತೆ ನೆಂಪು ಮಾಡೀಕೆ ಸುರು ಮಾಡ್ದೊ. + +****** + +ಆಗ ಇಂಗ್ಲೀಸರ ಆರ್ವಾಡ ಜೋರಿದ್ದ ಕಾಲ. ಮೈಸೂರ್ನ ಸ್ವಾಧೀನ ಮಾಡ್ಕೊಂಡ ಮೇಲೆ ಅವ್ರ ಕಣ್ಣ್ ಕೊಡಗಿನ ಮೇಲೆ ಬೀತ್. ಅವ್ರ ಯಜಮಾನಿಕೆ ಒಪ್ಪಿಕೊಣೊಕು ಅಂತೇಳಿ ರಾಜಂಗೆ ಕರೆ ಬಾತ್. ರಾಜನ ಸೇನಾಪತಿಗೊ ಯುದ್ಧ ಮಾಡೋಮಾ ಅಂತ ಹೇಳ್ದೊ ಗಡ. ಸೇನೆಲಿ ಬರಿಕೈಲಿ ಹುಲಿಕೊಂದ ನಂಜಯ್ಯ ಎಂಬ ಸುಬೇದಾರ ಇತ್ತ್. ನಮ್ಮಲ್ಲಿ ಕೋಟಿ ಚೆನ್ನಯ್ಯರ್ ಒಳೊಲ್ಲ. ಹಾಂಗೆ ಸೇನೆಲಿ ಕರ್ತು ಮತ್ತು ಚೆಟ್ಟಿ ಅಂತ್ ಇಬ್ರ್ ಮಲೆಕುಡೀರು ಇದ್ದೊಗಡ. ಬಾಳ ಧೈರ್ಯವಂತೊಗಡ. ಕೂಸಪ್ಪ ಗೌಡ್ರ್ ಕೇಳ್ದೇ ಬೇಡ. ಇವು ಎಲ್ಲಾ ಯುದ್ಧಕ್ಕೆ ತಯಾರಾಕನ ದಿವಾನ ಬೋಪು ಅಡ್ಡಿ ಮಾಡ್ದೊಗಡ. ರಾಜಿ ಮಾಡ್ದೇ ಒಳ್ಳೇದ್ ಅಂತ ರಾಜನ್ನ ಒಪ್ಪಿಸಿದೊಗಡ. ಯುದ್ಧನೇ ಇಲ್ಲ್ದೆ ಕೊಡಗು ಇಂಗ್ಲೀಷರ ಕೈಗೆ ಹೋತ್. ಅವು ರಾಜನ ಬಲಾತ್ಕಾರಲಿ ಕಾಸಿಗೆ ಓಡ್ಸಿದೊ ಗಡ. + +ಆಗ ರಾಜನಿಸ್ಟ್ರು ಅಮರ ಸುಳ್ಯಕ್ಕೆ ಬಂದೊ. ಅವುಕ್ಕೆ ಆಸ್ರಯ ಸಿಕ್ಕಿದ್ದ್ ಕೆದುಂಬಾಡಿ ರಾಮಗೌಡ್ರಲ್ಲಿ. ಇಂಗ್ಲೀಷರು ಹೊಗೆಸೊಪ್ಪು ಮತ್ತು ಉಪ್ಪಿಗೆ ತೆರಿಗೆ ಹಾಕಿದ್ದೊ. ಕಂದಾಯ ಹಣ ರೂಪಲೇ ಕೊಡೊಕುಂತೇಳಿ ಸಾಸ್ನ ಮಾಡಿದ್ದೊ. ಅದ್ ಇಲ್ಲಿನ ಬೇಸಾಯಗಾರ್ರ ಕೆರಳಿಸೀತ್. ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ. ಇಂಗ್ಲೀಸ್ರ ಕಂದಾಯ ತೆಗೆದು ಹಾಕಿ ಮೂರು ವರ್ಸ ಕಂದಾಯ ಮಾಪಿ ಅಂತೇಳಿ ಇಸ್ತಿಯಾರು ಹೊರಡಿಸಿದೊ. + +ಕೇಳ್ದೇನ್? ಅಮರ ಸುಳ್ಯದ ಬೇಸಯಗಾರ್ರೆಲ್ಲಾ ಜಾತಿ ಮರ್ತು ಒಂದಾದೊ. ರಾಜ್ರ ಸೈನ್ಯದ ಸೈನಿಕರ್ ಈ ಸುದ್ದಿನ ಕೇಳಿ ತುಂಬ ಮಂದಿ ಒಂದಾಗಿ ಅಮರ ಸುಳ್ಯಕ್ಕೆ ಬಂದೊ. ಜನವೋ ಜನ. ಸಿಕ್ಕಿದ್ದೇ ಆಯುಧ. ಬೆಳ್ಳಾರೆ, ಪಂಜ, ಪುತ್ತೂರು, ವಿಟ್ಲ, ಪಾಣೆಮಂಗಳೂರು ಆಗಿ ದೊಡ್ಡ ಪಡೆ ಮಂಗಳೂರಿಗೆ ಹೋತ್. ಅಲ್ಲಲ್ಲಿ ತುಂಡರಸ್ರ್ ಸೈನ್ಯನ ಸೇರಿಕೊಂಡೊ. ಈ ದೊಡ್ಡ ಸೈನ್ಯದ ಎದ್ರ್ ನಿಲ್ಲೀಕೆ ಆಗ್ದೆ ಇಂಗ್ಲೀಸ್ರ್ ಕಣ್ಣಾನೂರ್ಗೆ ಓಡ್ದೊ. + +“ಕಲ್ಯಾಣಪ್ಪ ರಾಜ್ಯಪಾಲ ಆತ್. ಹದಿಮೂರ್ ದಿನ ರಾಜ್ರ ಹೆಸ್ರೀಲಿ ಆಡಳ್ತೆ ನಡೆಸ್ತ್. ಹದಿಮೂರ್ನೆ ರಾತ್ರೆ ಕಲ್ಯಾಣಪ್ಪನ ಪಡೆ ನಿದ್ರೆ ಮಾಡಿಕೊಂಡಿರಕನ ಇಂಗ್ಲೀಸ್ರ ದೊಡ್ಡ ಪಡೆ ಬೆಡಿ, ಫಿರಂಗಿ ಒಟ್ಟಿಗೆ ಧಾಳಿ ಮಾಡ್ತ್. ಕಲ್ಯಾಣಪ್ಪ ಮತ್ತು ಅವುನ ಬಂಟ್ರ್ಗಳ ಇಂಗ್ಲೀಸ್ರು ಗಲ್ಲಿಗೇರಿಸಿದೊ”. + +ಅಪ್ಪಯ್ಯ ಗೌಡ್ರ್ ಕತೆ ನಿಲ್ಸಿದೊ. ನಾವು ಕಲ್ಲಿನಂತೆ ಕುದ್ದಿದೊ. ಬಾಡು ನಾಯ್ಕ ಲೊಚಗುಟ್ಟಿತ್. “ಅಯ್ಯೋ ಪಾಪ. ಕೂಸಪ್ಪ ಗೌಡ್ರ್ ಹಂಗಾರೆ ಮಂಗ್ಳೂರ್ಲೇ ಸತ್ತ್ ಹೋತ್” ಎಂದ ಬೇಜಾರಿಲಿ ಹೇಳ್ತ್. + + + +“ಇಲ್ಲೆ ಇಲ್ಲೆ” ಅಪ್ಪಯ್ಯ ಗೌಡ್ರ್ ಹೇಳ್ದೊ. “ಕಲ್ಯಾಣಪ್ಪ ಮಂಗ್ಳೂರ್ನ ವಸ ಮಾಡಿದ್ದ್ ಗೊತ್ತಾಕನ ಮಡ್ಕೇರಿಲಿ ಇಂಗ್ಲೀಸರ ಸೈನ್ಯಾಧಿಕಾರಿ ಲೀಹಾರ್ಡಿ ಅಮರ ಸುಳ್ಯಕ್ಕೆ ಸೇನೆಯೊಟ್ಟಿಗೆ ಬಾತ್. ಇದ್ ಗೊತ್ತಾಗಿ ಕಲ್ಯಾಣಪ್ಪ ಕುಡಿಯ ಸೋದರ್ರು ಕೂಸಪ್ಪ ಗೌಡ್ರೊಟ್ಟಿಗೆ ಅಮರ ಸುಳ್ಯಕ್ಕೆ ಸೇನೆನ ಕಳಿಸಿಕೊಟ್ಟತ್ತ್. ಕುಡಿಯ ಸೋದರ್ರು ಲೀಹಾರ್ಡಿಗೆ ಸಿಕ್ಕಿ ಬಿದ್ದೊ. ಕೂಸಪ್ಪ ಗೌಡ್ರು ತಪ್ಪಿಸಿಕೊಂಡು ಓಡ್ದೊ”. + +“ಓ ಅಸ್ಟೇನಾ ಮತ್ತೆ ಎಂಥದ್ ಅವರ ಧೈರ್ಯ?” ಚೊಯಂಬ್ ಕೇಳಕನ ಅಪ್ಪಯ್ಯ ಗೌಡ್ರಿಗೆ ನಗೆ ಬಾತ್. + +“ಅಂದ್ ನೀ ಮಾಡ್ದ್ ಎಂತದ್ದ್? ಹುಲಿನ ಕಂಡಾಕನ ಹೆದ್ರಿ ಓಡಿ ಮರ ಹತ್ತಿತ್ಲೆನಾ? ಹುಲಿನ ಕೊಂದ ಮೇಲೆ ನಾನೆ ಅಲ್ಲೆನ ನಿನ್ನ ಮರಂದ ಇಳ್ಸಿದ್? ಮತ್ತೆ ಹುಲಿ ಜೊರ ಬಂದ್ ನೀ ಒಂದ್ ತಿಂಗೊ ಮಲಗಿತ್ಲೆನಾ? ಬಾರಿ ಧೈರ್ಯವಂತ ನೀ”. ನಾವ್ ಎಲ್ಲಾ ನೆಗಾಡ್ದೊ. ಚೋಯಂಬು ಕೂಡಾ ನೆಗಾಡಿತ್. + +ಅಪ್ಪಯ್ಯ ಗೌಡ್ರ್ ಇನ್ನೊಂದ್ ಬೀಡಿ ತಗೊಂಡೊ. ಹೊಗೆ ಬುಡ್ತಾ ಮತ್ತೆ ಕತೆ ಮುಂದುವರ್ಸಿದೊ. “ಕೂಸಪ್ಪ ಗೌಡ್ರ್ ಓಡಿದ್ದ್ ಇಂಗ್ಲೀಸ್ರಿಗೆ ಹೆದ್ರಿ ಅಲ್ಲ. ಜನ್ರ ವಾಪಸ್ ಒಟ್ಟು ಮಾಡಿ ಇಂಗ್ಲೀಸ್ರ ಓಡ್ಸಿಕೆ. ಈ ಪೆರಮುಂಡ, ಕರಿಕ್ಕೆ, ಕೋಲ್ಚಾರು, ಆಲೆಟ್ಟಿ, ಅಜ್ಜಾವರ, ಉಳುವಾರು, ಪೆರಾಜೆ, ನಿಡ್ಯಮಲೆ, ಅರಂತೊಡು, ಕಾಂತಮಂಗ್ಲ, ಮಂಡೆಕೋಲ್, ಸುಳ್ಯ, ತೊಡಿಕ್ಕಾನ ಸುತ್ತಿ ಬೇಸಾಯಗಾರ್ರ ಒಟ್ಟ್ ಸೇರ್ಸಿಕೆ ಸುರು ಮಾಡ್ದೊ. ಕಲ್ಯಾಣಪ್ಪನ ಗಲ್ಲಿಗೇರಿಸಿದ್ದಕ್ಕೆ ಕಂದಾಯ ಕಟ್ಬೇಡಿ ಎಂದು ಎಲ್ಲವುಕ್ಕೆ ಹೇಳ್ದೊ. ಅಮರ ಸುಳ್ಯ ಮಾಗಣೆಂದ ಒಂದು ಕಾಸೂ ಕಂದಾಯ ಸಿಕ್ದೇ ಹೋಕನ ಲೀಹಾರ್ಡಿ ಗೂಢಚಾರ್ರ ಅಟ್ಟಿತ್. ಕೂಸಪ್ಪ ಗೌಡ್ರ ಕಾರ್ಬಾರ್ ತಿಳ್ದ್ ಸಿಟ್ಟ್ ಬಾತ್. ಗೌಡ್ರ ತಲೆಗೆ ಐದ್ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡ್ತ್. ಲೀಹಾರ್ಡಿನ ಪರ್ಮಾನು ಹೊರಟ ಮೇಲೆ ಕೂಸಪ್ಪ ಗೌಡ್ರ್ ಅಡಗಿಕೊಂಡ್ ತಿರ್ಗಾಡಿಕೆ ಸುರು ಮಾಡ್ದೊ. ಸಾವಿನ ಬಯಂದ ಅಲ್ಲ. ಸಿಕ್ಕಿ ಬಿದ್ರೆ ಇಂಗ್ಲೀಸ್ರ ವಿರುದ್ಧ ಹೋರಾಡೊವು ಇಲ್ಲೇಂತ ಆದೆ ಎಂದ್ ಅವುಕೆ ಗೊತ್ತಿತ್ತ್”. + +ಸ್ವಲ್ಪ ಹೊತ್ತ್ ಅಪ್ಪಯ್ಯ ಗೌಡ್ರ್ ನಿಲ್ಸಿದೊ. ನವುಗೆ ತುಂಬಾ ಕುತೂಹಲ ಆಗಿತ್ತ್. ತಡೀಕೆ ಆಗ್ದೆ ಕೇಳ್ದೊ. + +“ಮುಂದೇನಾತ್?” + +ಅಪ್ಪಯ್ಯ ಗೌಡ್ರ್ ನಿಟ್ಟುಸಿರ್ ಬುಟ್ಟೊ. “ಆದ್ ಏನ್? ದುಡ್ಡಿನ ಆಸೆ ಯಾರಿಗೆ ಇರ್ದುಲೆ ಹೇಳಿ? ಕೂಸಪ್ಪ ಗೌಡ್ರು ಅಡಂಗುವ ಜಾಗೆನ ಯಾರೋ ಒಬ್ಬ ಲೀಹಾಡಿಯ ಸೈನಿಕರಿಗೆ ತೋರ್ಸಿತ್.” + +“ಅದ್ ಇದೇ ಕೋಲ್ಚಾರಿನ ಒಬ್ಬ ಮಧ್ಯಮ ವರ್ಗದ ಬೇಸಾಯಗಾರ್ನ ಮನೆಲಿ. ಮಳೆಗಾಲದ ಕರ್ಚಿಗೇಂತೇಳಿ ಅಟ್ಟದ ಮೇಲೆ ಅವ ಮುಡೀನ ಸರ್ಯಾಗಿ ಜೋಡ್ಸಿ ಇಟ್ಟಿತ್. ಸೈನಿಕ್ರ ನೋಡ್ದ ಕೂಸಪ್ಪ ಗೌಡ್ರು ಅಟ್ಟಹತ್ತಿ ಮುಡಿಗಳ ಹಿಂದೆ ಅಡಗಿ ಕುದ್ದತ್. ಸೈನಿಕರು ಎಂಟು ಜನ ಇದ್ದೊ. ಆದ್ರೂ ಅಟ್ಟಕ್ಕೆ ಹತ್ತಿಕೆ ಸುರುವಿಗೆ ಅವಿಕೆ ಧೈರ್ಯ ಬಾತ್ಲೆ. ಕಡೇಗೆ ಹಣದ ಆಸೆ ಗೆದ್ದತ್ತ್. ಇಬ್ರು ಧೈರ್ಯ ಮಾಡಿ ಮೊದ್ಲು ಅಟ್ಟ ಹತ್ತಿದೊ. ಉಳ್ದವು ಹಿಂದಿಂದ ಹತ್ತಿದೊ. ಕತ್ತಿ ಹಿಡ್ಕೊಂಡ್ ನಿಧಾನವಾಗಿ ಮುಂದೆ ಹೋದೊ. + +ಕೂಸಪ್ಪ ಗೌಡ್ರ್ ಆಗ್ಲೂ ಹೆದರ್ತ್ಲೆ. ತನ್ನಕಲೆ ಇದ್ದ ಅಕ್ಕಿ ಮುಡಿನ ಎತ್ತಿ ಒಬ್ಬ ಸೈನಿಕನ ಮೇಲೆ ಬಿಸಾಡ್ದೊ. ಅಂವ ನೋವಿಲಿ ಅಯ್ಯಯ್ಯೋ ಎಂತೇಳಿ ಬೊಬ್ಬೆ ಹಾಕಿತ್. ಕೂಸಪ್ಪ ಗೌಡ್ರ್ ಇನ್ನೊಂದ್ ಅಕ್ಕಿ ಮುಡಿ ತೆಗ್ದ್ ಬಿಸಾಡ್ದೊ. ತಪ್ಪಿಸಿಕೊಂಡ್ ಸೈನಿಕ್ರು ಅವುರ ಸುತ್ತು ಹಾಕ್ದೊ. ಸಿಟ್ಟಿಲಿ ಕೂಸಪ್ಪ ಗೌಡ್ರ್ ಒಂದೆ ಸಮನೆ ಅಕ್ಕಿ ಮುಡೀನ ಎತ್ತಿ ಬಿಸಾಡಿಕೆ ಸುರು ಮಾಡ್ದೊ. ಆಗ ಒಬ್ಬ ಸೈನಿಕ ಅವ್ರ ಎಡ ಬಾಗಲಿ ಕತ್ತೀನ ಸರ್ಯಾಗಿ ಬೀಸಿತ್. ಅವ್ರ ಎಡಕೈ ತುಂಡಾಗಿ ಕೆಳಕ್ಕೆ ಬೀತ್. ಆಗ ಬಲಬಾಗಲಿ ಸೈನಿಕ ಕೊರ್ಳಿಗೆ ಸರ್ಯಾಗಿ ಕತ್ತಿ ಬೀಸಿತ್. ಛಿಲ್ಲೆಂತ ರಕ್ತ ಚಿಮ್ಮಿ ಅವ್ರ ರುಂಡ ಮುಂಡಂದ ಬೇರ್ಪಟ್ಟ್ ಕೆಳಕ್ಕೆ ಬೀತ್. ಸೈನಿಕ್ರ ಮುಖಕ್ಕೆ ರಕ್ತದ ಓಕುಳಿ ಆತ್. ತಲೆಕಡ್ದ ಸೈನಿಕ ಬಿದ್ದ ರುಂಡನ ಎತ್ತಿಕೊಂಡ್ ಅಟ್ಟಾಸ ಹಾಕ್ತ್.” + +****** + +ಅಪ್ಪಯ್ಯ ಗೌಡ್ರ ಮುಖಲಿ ನೋವು ಹೆಪ್ಪುಗಟ್ಟಿತ್ತ್. ನಾವ್ ಏನ್ ಮಾಡಿಕಾಗದೆ ತುಂಬಾ ಬೇಜಾರಿಲಿ ಇದ್ದೊ. ಸೊಲ್ಪ ಹೊತ್ತಾದ ಮೇಲೆ ಚೋಯಂಬು ಮಾತಾಡಿತ್. “ಅಂತೂ ಎಂಟ್ ಜನ ಸೇರಿ ಆಯ್ದ ಇಲ್ಲದ ಒಬ್ಬನ ಕೊಂದುಬುಟ್ಟೊ! ಅವುಕೆ ಬಹುಮಾನ ಸಿಕ್ಕಿರೊಕ್ಕಲ್ಲಾ? ಅವ್ರ ಕುಟುಂಬದವಿಕೆ ಭೂಮಿ ಕೊಟ್ಟಿರುವೊ.” + +“ಅದೋ” ಅಪ್ಪಯ್ಯ ಗೌಡ್ರ್ ಕತೆ ಮತ್ತೆ ಮುಂದುವರ್ಸಿದೊ. “ಆ ಕತೆ ಬಾಳ ಲಾಯಿಕುಟ್ಟು. ಈ ಸೈನಿಕ್ರು ಕೂಸಪ್ಪ ಗೌಡ್ರ ರುಂಡ ತಕಂಡ್ ಲೀ ಹಾರ್ಡಿನ ನೋಡೀಕೆ ಹೋದೊ. ಕೂಸಪ್ಪ ಗೌಡ್ರ ತಲೆ ಹಾರ್ಸಿದೋನೇ ಅದ್ರ ಹಿಡ್ಕೊಂಡಿತ್ತ್. ಲೀಹಾರ್ಡಿಗೆ ವಿಸ್ಯ ಗೊತ್ತಾಗಿ ಕ್ಯಾಪ್ಟನ್ ಡ್ರೆಸ್ಸಲ್ಲೇ ಹೊರಗೆ ಬಾತ್. + +ಸೈನಿಕ್ರು ಲೀ ಹಾರ್ಡಿನ ಕಂಡ್ ಮಿಲಿಟ್ರಿ ಗತ್ತಿಲಿ ಸೆಲ್ಯೂಟ್ ಹೊಡ್ದೊ. ರುಂಡ ಹಿಡ್ದವ ಅದ್ರ ಲೀ ಹಾರ್ಡಿನ ಮುಂದೆ ಇಸಿತ್. ಅದ್ರ ನೋಡ್ದ ಲೀ ಹಾರ್ಡಿನ ಹುಬ್ಬುಗೊ ಮೇಲೆ ಹೋತ್. “ದೇವ್ರೇ ….. ಇದು ಎಂತಾ ಭವ್ಯತೆ” ಎಂದ್ ಅವ ಉದ್ಗರಿಸಿತ್. + +ಮಾಮೂಲು ಸ್ಥಿತಿಗೆ ಬಂದ ಲೀ ಹಾರ್ಡಿ ಮತ್ತೆ ಕೇಳ್ತ್, “ಇವನ್ನ್ ಕೊಂದದ್ದ್ ಯಾರ್?” + +ಕೊಂದ ಸೈನಿಕ ಒಂದು ಹೆಜ್ಜೆ ಎದ್ರ್ ಬಂದ್ ಎದೆ ಮುಂದೆ ಮಾಡಿ ಹೇಳ್ತ್, “ನಾನ್.” ಉಳಿದೋವ್ಕೆಲ್ಲಾ ಬಹುಮಾನಲಿ ಪಾಲ್ ತಪ್ಪಿ ಹೋಕೆ ಬತ್ತ್ತೇಳಿ ಗಾಬ್ರಿಂದ, “ನಾವ್ ಎಲ್ಲಾ ಇದ್ರಿಂದ ಇವ್ನ ಕೊಲ್ಲಿಕೆ ಸಾಧ್ಯ ಆದ್ದ್” ಎಂತ ಹೇಳ್ದೊ. + +ಲೀ ಹಾರ್ಡಿಗೆ ನೆಗೆ ಬಾತ್. “ಆತ್…. ಆತ್ …… ಬಹುಮಾನ ಎಲ್ರಿಗೂ ಕೊಡೊಮಾ. ಮೊದ್ಲು ಇವಂಗೆ. ಮತ್ತೆ ನಿವುಗೆಲ್ಲಾ. ನೀ ಬಾ, ಹಕ್ಕಲೆ ಬಾ.” + +ಕೂಸಪ್ಪ ಗೌಡ್ರ ಕೊಂದವ ಉಳ್ದವ್ರೆಲ್ಲಾ ನೋಡಿ ಕುಸಿಲಿ ನಗೆಯಾಡಿ ಲೀಹಾರ್ಡಿ ಹಕ್ಕಲೆ ಬಂದ್ ನಿಂತತ್. ಈ ಮಾತ್ ಕತೆನೆಲ್ಲಾ ಕೇಳಿ ಅಲ್ಲೇ ಒಂದ್ ಕೋಣೇಲಿ ಬರ್ಕೊಂಡು ಕುದ್ದಿದ್ದ ಬೋಪು ದಿವಾನ ಹೊರಗೆ ಬಂದ್ ನೋಡ್ತ್. + +ಲೀ ಹಾರ್ಡಿ ಹಕ್ಕಲೆ ಬಂದ್ ನಿಂತ ಸೈನಿಕನ ಒಂದ್ ಸರ್ತಿ ಸರ್ಯಾಗಿ ನೋಡ್ತ್. ಮಿಂಚಿನಾಂಗೆ ಅವನ ಒರೆಲಿದ್ದ ಕತ್ತಿನ ತೆಗ್ದ್ ಅವನ ತಲೆನ ಕಚ್ಕಂತೇಳಿ ಕತ್ತರಿಸಿತ್. ಇದ್ರ ನೋಡಿ ಹೆದ್ರಿಹೋದ ಬೋಪು ‘ಇಗ್ಗುತಪ್ಪಾ’ ಎಂತೇಳಿ ಬೊಬ್ಬೆ ಹಾಕಿತ್. ಹೆದ್ರಿಹೋದ ಸೈನಿಕರ್ ಜೀವ ಉಳಿಸಿಕೊಂಬಿಕೆ ಬೇಕಾಗಿ ಮರ್ಲರಂಗೆ ಓಡ್ದೊ. + +ಲೀಹಾರ್ಡಿ ಕೂಸಪ್ಪ ಗೌಡ್ರ ತಲೆನ ಕೈಲಿ ಹಿಡ್ಕೊಂಡ್ತ್. ಹೆಣವಾಗಿ ಬಿದ್ದ ಸೈನಿಕನ ಕುತ್ತಿಗೆಂದ ಉಕ್ಕಿ ಹರಿಯುತ್ತಿದ್ದ ರಕ್ತಲಿ ತನ್ನ ಬಲಗೈ ತೋರುಬೆರಳ್ನ ಮುಳ್ಗಿಸಿತ್. ಆ ರಕ್ತಲಿ ಗೌಡ್ರ ಹಣೆಗೆ ಬೊಟ್ಟು ಇಸುತ್ತಾ ನಡ್ಗಿಕೊಂಡ್ ಹೇಳ್ತ್. “ಓ ವೀರಯೋಧ! ನನ್ನ ಕ್ಷಮಿಸ್. ಇದ್ಕಿಂತ ಹೆಚ್ಚಿಗೆ ನಿಂಗೆ ನಾ ಏನೂ ಕೊಡೀಕೆ ಆದುಲೆ.” + +“ಬೋಪು ದಿವಾನ ಹೆದ್ರ್ಕಂಡ್ ನಡ್ಗುತ್ತಾ ಇದರ ನೋಡ್ತಿತ್ತ್”. + +ಕತೆ ಮುಗೀಕನ ಎಲ್ರ ಕಣ್ಣಿಲಿ ನೀರ್ ತುಂಬಿತ್ತ್. ಅಪ್ಪಯ್ಯ ಗೌಡ್ರ್ ಎದ್ದೊ. “ನಿವುಗೆ ಅಂದಿಗೈಪು ಅಪ್ಪದಿಟ್ಟು ತಿಂಬ ಯೋಗ ಇಲ್ಲೆ, ನಡಿನಿ” ಎಂತ ಹೇಳ್ದೊ. + +ಅಂದಿ ಕಾಂಬುಕೆ ಸಿಕ್ಕರೂ ಅವಿಕೆ ಅಂದ್ ಅದ್ರ ಕೊಲ್ಲಿಕೆ ಮನಸ್ಸ್ ಬಾತಿತ್ತೊ ಇಲ್ಲೆನೋ! + +(1996) + +****** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_257.txt b/Kenda Sampige/article_257.txt new file mode 100644 index 0000000000000000000000000000000000000000..45e25cdd209b54080cf54c0fb680dfdc45ce61dc --- /dev/null +++ b/Kenda Sampige/article_257.txt @@ -0,0 +1,47 @@ + + +ಕಿರಣ ಭಟ್ ಯಾವತ್ತಿಗೂ ನೆನಪಾಗುವದೂ ಕಾಲೇಜು ದಿನಗಳಲ್ಲಿ ತಲೆತುಂಬಾ ಗುಂಗುರು ಕೂದಲು ಬೆಳೆಸಿಕೊಂಡು ಕನ್ನಡಕದೊಳಗಿಂದ ಮುಗುಳುನಗುವ ಕೈಗೆ ಸಿಕ್ಕ ಡಬ್ಬಿ ಡೆಸ್ಕುಗಳನ್ನೆಲ್ಲಾ ಡ್ರಮ್ಮನ್ನಾಗಿಸಿಕೊಂಡು ಬಡಿಯುತ್ತಾ ಸಂಗೀತವನ್ನು ಗುನುಗುನಿಸುವ ಅಂದಿನ ಕಾಲೇಜು ದಿನಗಳ ತರುಣನಾಗಿಯೇ. ಒಂದು ಕೈಯಲ್ಲಿ ಪುಸ್ತಕಗಳನ್ನು ಹಿಡಿದು ಲ್ಯಾಬ್ ಮತ್ತು ಕ್ಲಾಸುಗಳಿಗೆ ಓಡಾತ್ತಾ ಮತ್ತೆ ನಮ್ಮಂತಹ ಕಿರಿಯರು ಸಿಕ್ಕಾಗ ನಗುತ್ತಾ ಹರಟುವ ಕಿರಣನಿಗೆ ಮೊದಲಿನ ಗೀಳಿದ್ದದ್ದು ಹಿಂದೀ ಸಂಗೀತ ಮತ್ತು ಡ್ರಮ್ಮರ್ ಗಳು, ಕೃಷ್ಣಮೂರ್ತಿ ಹೆಬ್ಬಾರ ಮತ್ತು ನಾವೆಲ್ಲಾ ಕಾಲೇಜಿನಲ್ಲಿ ಆಡಿದ “ಕಲಿತ ಹುಡುಗಿ” ನಾಟಕಕ್ಕೆ ಹಿನ್ನೆಲೆ ಸಂಗೀತ ಇವರದ್ದೇ ಆಗಿತ್ತು. ಆ ಸಂಗೀತ ನಾಟಕ ಆ ದಿನ ವಿಜೃಂಭಿಸಿದ್ದು ಅದರ ಹಿನ್ನೆಲೆ ಸಂಗೀತದಿಂದಾಗಿಯೇ. + +ಕಲಿಯಲು ತುಂಬಾ ಹುಶಾರಿಯಾಗಿರುವ ಕಾರಣ ಅಂದಿನ ಟೆಲಿಫೋನ್ ಇಲಾಖೆಯಲ್ಲಿ ನೇರವಾಗಿ ಜ್ಯೂನಿಯರ್ ಎಂಜಿನಿಯರ್ ಆಗಿ ಆಯ್ಕೆಗೊಂಡು ಕೇರಳ ಮಂಗಳೂರು ಕಡೆ ಇದ್ದರೂ ಆಗೆಲ್ಲಾ ಇವರು ತನ್ನ ನಿರ್ವಚನೆಯಲ್ಲಿ ಚಲನಚಿತ್ರಗಳನ್ನು ಹಿಂದಿಕ್ಕಿ ಆರಿಸಿಕೊಂಡಿದ್ದು ನಾಟಕಗಳನ್ನು. ನಾಟಕವೆಂದರೆ ಎಲ್ಲವನ್ನೂ ಬಿಟ್ಟು ಓಡುತ್ತಿದ್ದ ಕಿರಣ ಆ ನಂತರದಲ್ಲಿ ಸಿರಸಿಗೆ ಬಂದಾಗ ಉತ್ತರಕನ್ನಡ ಜಿಲ್ಲೆಯಲ್ಲಿ ಮತ್ತೆ ನಾಟಕವನ್ನು ಪುನರುಜ್ಜೀವನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಕಾಲಕ್ರಮೇಣ ಉದ್ಯೋಗದಲ್ಲಿ ಪಡೆದ ಪದೋನ್ನತಿಯ ಕಾರಣದಿಂದ ಕೇರಳಕ್ಕೆ ಹೋದ ಸಂದರ್ಭದಲ್ಲಿ ಕೇರಳದಲ್ಲಿ ಅನುಭವಿಸಿದ ನಾಟಕಗಳು ಅನೇಕ. ಹೀಗೆ ಪಡೆದ ಅನುಭವವವೇ ಪುಸ್ತಕ ರೂಪದಲ್ಲಿ ಹೊರಬಂದ ಕೃತಿ “ರಂಗ ಕೈರಳಿ”. + +(ಕಿರಣ ಭಟ್) + +ಹೊನ್ನಾವರದ ಆರ್. ಆರ್. ಸ್ಟುಡಿಯೋದ ಮಾಧವನ್ ರಿಂದ ಪ್ರಾರಂಭಿಸಿ ಎರಡು ಮೀಟರ್ ಚಾಯ್ ನ ನಾಯರ್, ಉಣ್ಣಿ, ಬಾಬು ಈ ನಡುವೆ ಆಪರೇಷನ್ ಅಜ್ಜಿ ಮನೆಯ ಪಾರ್ವತಿ ಅವರ ಅಣ್ಣ ದಾಮೋದರ ಭಟ್ರು ಹೀಗೆ ಸಾಗುವ ಈ ಪುಸ್ತಕವನ್ನು ಓದಲು ಪ್ರಾರಂಭಿದರೆ ಮುಗಿದಮೇಲೆಯೇ ತಲೆ ಎತ್ತುವದು. ಕನ್ನಡದಲ್ಲಿ ಪ್ರವಾಸ ಕಥನದ ಅನೇಕ ಕೃತಿಗಳು ಬಂದಿವೆ. ಅವುಗಳೆಲ್ಲಲ್ಲಾ ಈ ರೀತಿ ರಂಗಭೂಮಿಯ ಮೂಲಕ ಒಂದು ರಾಜ್ಯದ ಸಾಂಕೃತಿಕ ಲೋಕವನ್ನು ಅನಾವರಣಗೊಳಿಸುವ ಕ್ರಿಯೆ ಹೊಸತು. ಅದನ್ನು ನಾವು ‘ರಂಗ ಕೈರಳಿ’ಯಲ್ಲಿ ಕಾಣಬಹುದಾಗಿದೆ. + +ಕೈರಳಿಯ ಜನರ ಜೀವನ ವಿಧಾನವೇ ವಿಶಿಷ್ಟವಾದುದು. ಬಿಳೀ ಪಂಚೆ, ಶ್ವೇತ ಅಂಗಿ ತೊಟ್ಟು ತಲೆಗೆ ತೆಂಗಿನೆಣ್ಣೆ ಪೂಸಿ ಮಿರ ಮಿರನೆ ಮಿಂಚುತ್ತಾ ಜಗತ್ತಿನ ಎಲ್ಲಿಗೆ ಬೇಕಾದರೂ ಹೊರಡುವ; ಓಣಂ ಬಂತೆಂದರೆ ಸಾಕು ಎಲ್ಲಿದ್ದರೂ ಊರಿಗೆ ಬರುವ ಇವರ ಲೋಕದಲ್ಲಿ ಕಲಾ ಬದುಕಿನಷ್ಟು ಪ್ರಭಾವ ಬೀರುವದು ಮತ್ತೆ ಯಾವುದೂ ಅಲ್ಲ. ‘ಓಣಮ್ ಸಾಧ್ಯ’ದ ಊಟಕ್ಕಾಗಿಯೇ ಕಾಂಙಿಂಗಾಡಿನವರೆಗೂ ಓಡಾಡಿದ ನನಗೆ ಈ ಕೈರಳಿ ಮತ್ತೊಮ್ಮೆ ಅದೇ ರೀತಿಯ ಸಾಧ್ಯತೆಯ ಹರವನ್ನು ತಿಳಿಸಿತು. + +ಇಲ್ಲಿನ ವಿಷ್ಣುಮೂರ್ತಿ ಕೋಲ, ಕಥಕಳಿ, ಶರಣಂ ಅಯ್ಯಪ್ಪ, ವಿಶಿಷ್ಟ ಆಚರಣೆಯ ದೇವಾಲಯಗಳು, ಅಲ್ಲಿನ ಆನೆ, ರಾಜಕೀಯ ಪಕ್ಷಗಳು ಆಗಾಗ ಕರೆ ಕೊಡುವ ಹರತಾಳ ಇವೆಲ್ಲ ಹೊರಗಿನವರಿಗೆ ಒಂದು ನಮೂನೆಯ ಗೂಢತೆಯನ್ನೂ ಅಲ್ಲಿನವರಿಗೆ ಬದುಕಿನ ಒಂದು ಭಾಗವಾಗಿಯೋ ಇರುವ ಸಂಗತಿ. ನಾಟಕವನ್ನೇ ತನ್ನ ಬದುಕಿನ ಮತ್ತೊಂದು ಜೀವನವನ್ನಾಗಿ ಅಂಗೀಕರಿಸಿದ ಕಿರಣ ಈ ಎಲ್ಲಾ ಕೌತುಕಗಳ ಮಧ್ಯೆಯೇ ಕೇವಲ ಎರಡು ವರುಷಗಳಲ್ಲಿ ನೋಡಿದ ನಾಟಕಗಳ ಸಂಖ್ಯೆ ಬೆರಗುಗೊಳಿಸುತ್ತದೆ. ಆ ಕುರಿತಾದ ವಿವರಣೆ ಓದುವಾಗ ನಮ್ಮನ್ನು ನೇರವಾಗಿ ರಂಗಭೂಮಿಯ ನಡುವೆಯೇ ಕುಳ್ಳಿರಿಸಿಬಿಡುತ್ತಾರೆ. + +ಹಗಲು ಬಿಡುವಿಲ್ಲದ ಕಛೇರಿಯ ಕೆಲಸಗಳ ನಡುವೆಯೇ ದಣಿವು ಕಳೆಯಲು ಅವರು ಆಯ್ದುಕೊಂಡಿದ್ದು ನಾಟಕಗಳ ಲೋಕವನ್ನು. ನಾಟಕವೆಂದಕೂಡಲೇ ಭವಭೂತಿಯ ಮಾಲತಿ ಮಾಧವ ನೆನಪಾಗುತ್ತದೆ. ಪಂಡಿತ ಮಾತ್ರರಿಗಾಗಿ ತನ್ನ ನಾಟಕ ಎನ್ನುವ ಭವಭೂತಿಗೆ ತನ್ನೊಳಗಿನ ಕಲಾವಿದ ಕೊನೆಗೊಮ್ಮೆ ಎಚ್ಚರಿಸುತ್ತಾನೆ. ಆಗ ಆತ ತನ್ನ ನಾಟಕ “ಮಾಲತಿ ಮಾಧವ” ವನ್ನು ಮೊದಲು ಜಾತ್ರೆಯಲ್ಲಿ ಆಡಿ ಜನಸಾಮಾನ್ಯರಲ್ಲಿ ಒಂದಾಗಿ ಕುಳಿತು ನೋಡಿ ಆನಂದಿಸುತ್ತಾನೆ. ಇದು ನಾಟಕದ ಶಕ್ತಿ. ಇಲ್ಲಿ ಬರುವ ‘ಚವಿಟ್ಟು ನಾಡಕಂ’ದ ಕುರಿತು ಓದುವಾಗ ಈ ಅನುಭವ ನಮಗಾಗುತ್ತದೆ. ಯುರೋಪಿಯನ್ನಿನ ಪ್ರಭಾವಕ್ಕೊಳಗಾದ ‘ನಾಡಕಂ’ ಅದರಲ್ಲಿ ಬರುವ ಹೆಜ್ಜೆಗಳ ಮತ್ತು ‘ಡ್ರಂ’ನ ಗತ್ತು ಅದರೊಂದಿಗೆ ತಾನೇ ಕ್ಲಿಕ್ಕಿಸಿದ ಕಪ್ಪು ಬಿಳುಪು ಫೋಟೋಗಳೂ, ಧಾರ್ಮಿಕ ವಾತಾವರಣದ ಆವರಣ ಇವೆಲ್ಲ ಹೇಗೆ ಮಿಳಿತಗೊಂಡಿದೆಯೆಂದರೆ ಧಾರ್ಮಿಕ ಬೋಧನೆಯಾಗಬಹುದಾದದ್ದು ರಂಗ ಚಳುವಳಿಯಾದದ್ದರ ಕುರಿತು ವಿವರಿಸುತ್ತಾ ಸಾಗುತ್ತದೆ. ಅಲ್ಲಿಂದ ಶಿವರಾತ್ರಿಯಲ್ಲಿ ನಡೆಯುವ ‘ವೈಶಾಲಿ’ಯೂ ಇದೇ ಪ್ರಕಾರದ್ದು. ಅಲ್ಲಿನ ನಾಟಕ ನೋಡುತ್ತಲೇ ಸಿರಸಿ ಜಾತ್ರೆಯ ಕಂಪನಿ ನಾಟಕದ ನೆನಪಾಗುತ್ತಾ ಇಲ್ಲಿನ ರಂಗಭೂಮಿಯ ಚಟುವಟಿಕೆಗಳಿಗೂ ಅಲ್ಲಿನ ಹರವಿಗೂ ಒಂದು ತೌಲನಿಕ ಅಧ್ಯಯನವನ್ನೇ ನಡೆಸಿಬಿಡುತ್ತಾರೆ. + + + +ಇಡೀ ಕೃತಿಯಲ್ಲಿ ಕರ್ನಾಟಕದ ರಂಗಭೂಮಿ ಇವರನ್ನು ಕಾಡುತ್ತಲೇ ಇದೆ. ಕನ್ನಡದ ರಂಗ ನಟರು ಯಾರಿಗೂ ಕಡಿಮೆ ಏನಿಲ್ಲ, ಗುಬ್ಬೀ ವೀರಣ್ಣ, ಏಣಗೀ ಬಾಳಪ್ಪ, ಹಿರಣ್ಣಯ್ಯರಿಂದ ಹಿಡಿದು ಇಂದಿನ ರಂಗಾಯಣ, ನೀನಾಸಂವರೆಗಿನ ಎಲ್ಲಾ ಪ್ರಕಾರಗಳಿದ್ದೂ ಇವು ಸಮಗ್ರವಾಗಿ ಒಂದಕ್ಕೊಂದು ಬೆಸೆದುಕೊಳ್ಳಲು ಯಾವುದೋ ತೊಡಕಿದೆ ಅನಿಸುತ್ತಿದೆ. ಇದಕ್ಕೆ ಕಾರಣ ಕೇರಳದಂತೆ ಕರ್ನಾಟಕದ ಜನಜೀವನದ ಮೇಲೆ ಕನ್ನಡ ಭಾಷೆಯ ಬಂಧ ಸಮಗ್ರವಾಗಿಲ್ಲ. ಅಲ್ಲಿ ಯಾವ ಧರ್ಮ, ಜನಾಂಗವೇ ಇರಲಿ ಅವರ ಮಾತು ಮಾತ್ರ ಮಲೆಯಾಳಂ. ಈ ಏಕತಾನತೆಯೇ ದಕ್ಷಿಣದ ಪುಟ್ಟರಾಜ್ಯವನ್ನು ಸಮನಾಗಿ ಬೆಸೆದಿದೆ. + +ಇಲ್ಲಿ ನಂಬೂದ್ರಿಗಳ ಅನಿಷ್ಟ ಪದ್ಧತಿಯ ವಿರುದ್ಧ ಬಂಡೇಳುವ ಭಟ್ಟಾದ್ರಿಪಾಡ್ ರನ್ನು ಕನ್ನಡದ ಮೊದಲ ಪ್ರಕಟಿತ ನಾಟಕ ‘ಇಗ್ಗಪ್ಪ ಹೆಗಡೆಯ ವಿವಾಹ ಪ್ರಸಂಗ’ ದೊಟ್ಟಿಗೆ ಹೋಲಿಸಿ ಇಲ್ಲಿಯ ಸಾಧನೆಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ಕೇವಲ ಕೇರಳದ ನಾಟಕದ ವೈಭವ ಇದಲ್ಲ, ನಮ್ಮಲ್ಲೂ ಇಂತಹ ವಸ್ತುಗಳಿವೆ, ಅವು ಜನಸಾಮಾನ್ಯರ ರಂಗಚಳವಳಿಯಾಗಬೇಕು ಎನ್ನುವದನ್ನು ಸೂಚ್ಯವಾಗಿಯೇ ಧ್ವನಿಸುತ್ತಾರೆ. + +ಹೆಮ್ಮಿಂಗ್ವೆಯ ‘Old man and the Sea’ ರೂಪಾಂತರ ‘ಕಿಳವನುಂ ಕಡಲುಂ’ ಮತು ‘ಮ್ಯಾಕ್ ಬೆತ್’ ನಂಥ ನಾಟಕಗಳನ್ನು ಅರ್ಧ ಕೋಟಿ ರೂಪಾಯಿಯವರೆಗಿನ ವೆಚ್ಚದಲ್ಲಿ ಮಾಡಿ ಅದನ್ನು ಯಶಸ್ವಿ ಪ್ರಯೋಗವನ್ನಾಗಿಸುವುದರ ವಿವರ ತಿಳಿದಾಗ ಬಾಯಿಬಿಟ್ಟು ನಾವು ಹೆಬ್ಬೇರಿಸಿ ನೋಡಬೇಕಾಗುತ್ತದೆ. ತ್ರಿಶ್ಶೂರಿನ ನಾಟಕದ ಹಬ್ಬ, ನಾಟಕಕ್ಕೆ ಆನೆಗಳನ್ನು ತರುವ ಪರಿ, ಇವನ್ನೆಲ್ಲ ಓದುವಾಗ ನಮ್ಮಲ್ಲಿ ತಂಕಿನ ಯಕ್ಷಗಾನ “ಸಮುದ್ರ ಮಥನ” ಪ್ರಸಂಗದಲ್ಲಿ ಆನೆಯ ಮೇಲೆ ಶಂಕರನಾರಾಯಣ ಸಾಮಗರು ದೇವೇಂದ್ರನಾಗಿ ಬಂದ ಘಟನೆ ನೆನಪಾಗುತ್ತದೆ. + + + +ಹಿಂದಿಯ ಧುವಿದಾ ನಾಟಕ ಮನಸ್ಸನ್ನು ಸೆರೆ ಹಿಡಿಯುತ್ತದೆ. ಈ ನಾಟಕವನ್ನು ನಾವು ಕವಿ ಜಿ.ಎಸ್. ಅವಧಾನಿಯವರ ನಿರ್ದೇಶನದಲ್ಲಿ “ಒಂದು ಲೋಕ ಕಥೆ” ಎಂಬ ಕನ್ನಡ ಅನುವಾದದೊಂದಿಗೆ ಹೊನ್ನಾವರದ ಕಾಲೇಜಿನಲ್ಲಿ ಆಡಿದ್ದೆವು. ಕನ್ನಡದ “ನಾಗಮಂಡಲ” ವನ್ನು ಹೋಲುವ ಈ ನಾಟಕ ಆಡುವದು ಒಂದು ಸವಾಲು ಹೌದು. ಮಣಿಕೌಲ್ ನಿರ್ದೇಶನದಲ್ಲಿ 1973 ರಲ್ಲಿ ಚಲನಚಿತ್ರವಾಗಿಯೂ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ರವಿ ಮೆನನ್ ಮತ್ತು ರೈಸಾ ಪದಮ್ಸೀಯವರ ನಟನೆ ಬಹುಕಾಲ ನೆನಪಿನಲ್ಲುಳಿಯುವಂತಹದ್ದು. 2005 ರಲ್ಲಿ ಮತ್ತೊಮ್ಮೆ ಶಾರುಖ್ ಖಾನ್ ಮತ್ತು ರಾಣಿ ಮುಖರ್ಜಿಯ ಅಭಿನಯದಲ್ಲಿ “ಪಹೇಲಿ” ಎನ್ನುವ ಹೆಸರಿನಲ್ಲಿ ಮತ್ತೆಮ್ಮೆ ಬೆಳ್ಳಿತೆರೆಗೆ ಬಂದಿದೆ. ಜಾನಪದ ಸೊಗಡಿನ ಅದ್ಭುತ ನಾಟಕ ಇದು. ಕಿರಣ ಇದನ್ನು ನಮ್ಮ ಮುಂದೆ ಕಣ್ಣಿಗೆ ಕಟ್ಟುವಂತೆ ವರ್ಣಿಸಿದ್ದಾರೆ. + +ಕಥಕ್ಕಳಿಯಿಲ್ಲದೇ ಕೇರಳದ ರಂಗಭೂಮಿ ಅಪೂರ್ಣ. ಕಥಕ್ಕಳಿಯ ಕಲಾವಿದರ, ‘ಕಲಾ ಮಂಡಲಂ’ನಲ್ಲಿ ಕಲಾವಿದರನ್ನು ತಯಾರು ಮಾಡುವ ಮತ್ತು ಹತ್ತು ಹದಿನೈದು ವರ್ಷಗಳವರೆಗೆ ಈ ಕಲೆಯನ್ನು ಕಲಿಯುವ ಕಲಾವಿದರ ಅರ್ಪಣಾ ಮನೋಭಾವ ಇವೆಲ್ಲವನ್ನು ವಿವರವಾಗಿ ಬರೆದದ್ದನ್ನು ಓದುವಾಗ ಈ ಕಾಲದಲ್ಲಿಯೂ ಇದು ಸತ್ಯವಾ ಎನಿಸದಿರದು. + +ಕಥಕ್ಕಳಿ ನಮ್ಮ ಯಕ್ಷಗಾನವನ್ನು ಹೋಲುತ್ತಿದ್ದರೂ ಇದು ಯಕ್ಷಗಾನದಂತೆ ಒರಟು ಕಲೆಯಲ್ಲ. ಮುಖದ ದಟ್ಟ ವರ್ಣಗಳ ನಡುವೆಯೇ ಈ ಮಾಧ್ಯಮದ ಪದ್ಯದ ಸೂಕ್ಷ್ಮ ಭಾವವನ್ನು ಅಭಿನಯಿಸುವ ಈ ಕಲಾವಿದರ ಅಭಿನಯವಿಸ್ತಾರ ಅನಂತದವರೆಗೂ ಸಾಗುತ್ತದೆ. ಮುಖದ ಪ್ರತಿಯೊಂದು ಭಾಗವೂ ಅಭಿನಯದ ಕ್ಯಾನ್ವಾಸ್ ಆಗುವ ಈ ಪ್ರಕಾರವನ್ನು ನೋಡುವಾಗ ಯಕ್ಷಗಾನದ ಅಭಿನಯವೂ ನೆನಪಿಗೆ ಬರುತ್ತದೆ. + +ಯಕ್ಷಗಾನದಲ್ಲಿ ಅದರ ಬಣ್ಣಗಾರಿಕೆಯೇ ಅಲ್ಲಿನ ಸೂಕ್ಷ್ಮ ಅಭಿನಯನ್ನು ತಿಂದು ಹಾಕುತ್ತದೆ ಎನ್ನುವ ಇಲ್ಲಿನ ಕೆಲ ಕಲಾವಿದರು ಮತ್ತು ಅಭಿಮಾನಿಗಳ ಮಾತನ್ನು ಕಥಕ್ಕಳಿಯನ್ನು ಗಮನಿಸಿದವರಿಗೆ ಆ ಅಭಿಪ್ರಾಯ ಸರಿಯಲ್ಲವೆನಿಸುತ್ತದೆ. ಈ ನಡುವೆ ಕೇರಳದಲ್ಲಿ ಕರಳು ಹಿಂಡುವದು ‘ದೇವರ ನಾಡಿನಲ್ಲಿ ಎಲ್ಲವೂ ಸರಿಯಾಗಿ ಇದ್ದರೆ’ ಎನ್ನುವ ಲೇಖನ. ಭೀಕರ ಪ್ರವಾಹ ಕೇರಳದ ಕಲಾ ಬದುಕಿಗೆ ಮಾಡಿದ ಹಾನಿಯನ್ನು ತಿಳಿದು ವಿಷಾದವಾಗುತ್ತದೆ. ಹಾಗೆಯೇ ‘ಆಪರೇಷನ್ ಅಜ್ಜಿ’ ಒಂದು ಎಪ್ಪತ್ತೈದು ವರುಷಗಳ ಹುಡುಕಾಟದ ಸುಖಾಂತ್ಯ. ಪಾರ್ವತೀ ಅಜ್ಜಿಯಂತಹ ಅನೇಕ ಜೀವಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಇದ್ದಾರೆ. ಸುಮಾರು ಐವತ್ತರ ದಶಕದಲ್ಲಿ ಇಲ್ಲಿನ ವಿಧುರರಿಗೆ ಹೆಣ್ಣುಗಳ ಬರವಿತ್ತು. ಆಗೆಲ್ಲಾ ತೆಂಕಿಗೆ (ಕೇರಳ) ಹೋಗಿ ವಧು ದಕ್ಷಿಣೆಯನ್ನು ಕೊಟ್ಟು ಹೆಣ್ಣುಗಳನ್ನು ಮದುವೆಯಾಗಿ ಬರುತ್ತಿದ್ದರು. ಅಲ್ಲಿಂದ ಬಂದಮೇಲೆ ಮತ್ತೆ ಆ ಜೀವಿಗಳಿಗೆ ತವರು ಎನ್ನುವದು ಶಾಶ್ವತವಾಗಿ ನೆನಪೇ. ದಾಂಡೇಲಿಯ ದಟ್ಟಾರಣ್ಯದೊಳಗಿನ ಗುಂದದಿಂದ ಹಿಡಿದು ಕುಮಟಾ ಹೊನ್ನಾವರದ ಹಳ್ಳಿಗಳಲ್ಲೆಲ್ಲ ಪಾರ್ವತಿಯಮ್ಮನಂತವರು ತಮ್ಮ ತವರು ಮನೆಯನ್ನು ನೆನೆದು ನಿಟ್ಟುಸಿರು ಬಿಡುತ್ತಿದ್ದಾರೆ. ಅವರಿಗೆಲ್ಲಾ ಕಿರಣನಂತವರು ಸಿಕ್ಕಿಲ್ಲ ಅಷ್ಟೇ. + + + +ರಂಗಭೂಮಿಯ ಮೂಲಕ ಕೇರಳದ ವೈವಿದ್ಯದ ಪರಿಚಯ ಆಗುವ ಜೊತೆಗೆ ಉತ್ತರಕನ್ನಡ ಇಲ್ಲಿನ ಹಲಸಿನ ಬೇಳೆ, ಮಳೆ, ದೇವರುಗಳೆಲ್ಲ ಇಲ್ಲಿ ಹಾಸುಹೊಕ್ಕುವ ಪರಿ ಅಚ್ಚರಿ ಹುಟ್ಟಿಸುವದು. ಮಕ್ಕಳೊಂದಿಗೆ ಮಕ್ಕಳಾಗಿ ಮಕ್ಕಳ ರಂಗಭೂಮಿಯಲ್ಲಿ ಮೌನವಾಗಿ ತೊಡಗಿಕೊಂಡ ಸಂಕೋಚದ ಮುದ್ದೆಯಾಗಿ ಕಾಣುವ ಕಿರಣ ಇಲ್ಲಿ ಕೇರಳದ ರಂಗಭೂಮಿಯ ಭಾಗವಾಗಿ ಮತ್ತು ಸಾಂಸ್ಕೃತಿಕ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಾರೆ. ನಾಟಕವೆನ್ನುವದು ಜನಪದದ ಭಾಗವೆನ್ನುವ ನಂಬಿಕೆ ಮತ್ತು ಆ ರಂಗಸ್ಥಳದ ಮೂಲಕವೇ ಸಮಗ್ರ ಕೇರಳದ ರಂಗಚಳವಳಿಯ ದೋಣಿ ವಿಹಾರ ನಮಗಾಗುತ್ತದೆ. + +ಇಡೀ ಪುಸ್ತಕದಲ್ಲಿ ಕಿರಣ್ ಕ್ಲಿಕ್ಕಿಸಿದ ಕಪ್ಪು ಬಿಳುಪು ಫೋಟೋಗಳು ತನ್ನದೇ ಆದ ವಿವರವನ್ನು ಮುಂದಿಡುತ್ತವೆ. ಕಿರಣ ಮಾಡಾಳುರವರ ಆಕರ್ಷಕ ಮುಖಪುಟ ಮತ್ತು ಅಚ್ಚುಕಟ್ಟಾದ ಮುದ್ರಣದ ಈ ಕೃತಿಯ ಆಕರ್ಷಣೆಯಿಂದ ತಪ್ಪಿಸಿಕೊಳ್ಳುವ ಹಾಗಿಲ್ಲ. + + + +ನಾಟಕದ ಟೆಂಟಿನೊಳಗೆ ಬದುಕು ಕತ್ತಲಿನಲ್ಲಿರುತ್ತದೆ, ಕನಸು ಬಣ್ಣದ ರಂಗಿನಲ್ಲಿ ಜಗಮಗಿಸುತ್ತಿರುತ್ತದೆ. ‘ರಂಗ ಕೈರಳಿ’ಯಲ್ಲಿ ಈ ಜಗಮಗಿಸುವ ಬೆಳಕು ಕತ್ತಲಿನಲ್ಲಿ ಕುಳಿತವರನ್ನು ಎಚ್ಚರಿಸುವ ಪ್ರಯತ್ನ ಮಾಡುತ್ತದೆ. + + + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_258.txt b/Kenda Sampige/article_258.txt new file mode 100644 index 0000000000000000000000000000000000000000..bb054279be2af6276fd5596c40843687b92563ea --- /dev/null +++ b/Kenda Sampige/article_258.txt @@ -0,0 +1,157 @@ + + +ಗಾಂಧಿ ಹುಡುಗಿ, ಸಾವಿತ್ರಿಯ ಮರದ ಪೆಟಾರಿಯ ಮೇಲಿದ್ದುದು ಗಾಂಧೀಜಿಯ ಒಂದು ಭಾವಚಿತ್ರ. ಮೂಗಿನ ತುದಿಗೆ ಇಳಿಬಿದ್ದ ಕನ್ನಡಕದಿಂದ ಇದಿರಿಗಿದ್ದ ಚರಕಾವನ್ನೆ ತದೇಕಚಿತ್ತರಾಗಿ ನೋಡುತ್ತ ನೂಲು ತೆಗೆಯುತ್ತಿದ್ದ ಚಿತ್ರ. ಮದುವಣಗಿತ್ತಿಯಾಗಿ ಸಾವಿತ್ರಿ ಬಂದಾಗ ಅದು ಎಲ್ಲಿ ಅಡಗಿತ್ತೋ, ಪೆಟಾರಿಯ ಮೇಲೆ ಕಾಣಿಸಿಕೊಂಡದ್ದು ತುಂಬಾ ಸಮಯವಾದ ಮೇಲೆ – ವಿದ್ಯಾಧರನ ಸಲುಗೆ ಸ್ಪಷ್ಟವಾಗಿ ತನಗೆ ಅರಿವಾಗುತ್ತಿದೆ ಎಂಬ ಪ್ರಜ್ಞೆ ಆಕೆಯಲ್ಲಿ ಮೂಡಿದಾಗ. “ಸುವ್ವೀ…” ಎಂದಿದ್ದ ವಿದ್ಯಾಧರ, ತನ್ನ ಪ್ರೀತಿಯ ಹೆಸರಿನ ಹ್ರಸ್ವದಿಂದ ಕರೆದು. “ಅದನ್ನು ಒಳಗಿಡೇ, ಅಪ್ಪಯ್ಯ ನೋಡಿಯಾರು. ಎಂದಾದರೊಮ್ಮೆ ಅವರು ಗಸ್ತು ಹೊಡೆಯುವುದಿದೆ…. ಆಗ!” “ನೋಡಲಿ” ಎಂದಿದ್ದಳು ಸಾವಿತ್ರಿ. “ದಿನಾ ಬೆಳಿಗ್ಗೆ ಎದ್ದ ಕೂಡಲೇ ನೋಡಬೇಕಾದ ಮುಖ ಅದು. ಅಪರೂಪಕ್ಕೊಮ್ಮೆಯಾದರೂ ನೋಡಲಿ” ಎಂದು ನಗುತ್ತಲೇ ಹೇಳಿದ್ದಳು. “ಹಾಗಲ್ಲವೇ… ನಮ್ಮ ಅಪ್ಪಯ್ಯನಿಗೋ ಗಾಂಧಿ ಕಲಿಪುರುಷ. ಕರ್ಮಚಾಂಡಾಲ. ನಮ್ಮ ಧರ್ಮವನ್ನು ಹಾಳುಮಾಡಲು ಬಂದ ರಾಕ್ಷಸ. ನಿನ್ನಂತ ಗಾಂಧಿ ಹುಡುಗಿಯನ್ನು ನಾನು ಮದುವೆಯಾಗಲು ಬಿಟ್ಟದ್ದೇ ಒಂದು ದೊಡ್ಡ ಆಶ್ಚರ್ಯ… ಹೀಗಿರುವಾಗ ಇನ್ನು ಮನೆಯಲ್ಲಿ ಗಾಂಧಿಗೆ ಪ್ರತ್ಯೇಕ ಗೌರವದ ಸ್ಥಾನ ತನ್ನ ಸೊಸೆಯ ಪೆಟ್ಟಿಗೆಯ ಮೇಲೇ ಸಿಕ್ಕಿದೆಯೆಂದರೆ ಅವರು…”, “ಏನು ಮಾಡ್ತಾರೆ, ನನ್ನನ್ನ ತಿಂತಾರೆಯೇ…” ಎಂದು ಸಾವಿತ್ರಿ ನಕ್ಕಾಗ ಆ ಕುಳಿ ಕಾಣಿಸಿಕೊಂಡ ಹಾಲುಗೆನ್ನೆಗಳ ಮೇಲೆಯೆ ವಿದ್ಯಾಧರನ ಕಣ್ಣು. “ಸುವ್ವೀ, ಗಾಂಧಿ ಹುಡುಗೀ, ನಿನ್ನನ್ನ ಮಾತಿನಲ್ಲಿ ಸೋಲಿಸೋಕಾಗಲ್ಲ, ನಾನೆ ತಿಂತೀನಿ ನಿನ್ನನ್ನ” ಎಂದಿದ್ದ. ಗಾಂಧಿಯ ಫೋಟೊ ಸಾವಿತ್ರಿಯ ಕೋಣೆಯ ವೈಶಿಷ್ಟ್ಯವಾಗಿತ್ತು … + +ಒಮ್ಮೆ ಸಾವಿತ್ರಿಯ ಹಿರಿಯ ಭಾವ – ಗಂಗಾಧರ – ಗಾಂಧಿ ಚಿತ್ರವನ್ನು ನೋಡಿಯೇ ಬಿಟ್ಟ. ಅದನ್ನು ನೋಡಿದವನೇ ದುಡುದುಡು ಎಂದು ಉಪ್ಪರಿಗೆಯ ಮೆಟ್ಟಿಲಿಳಿದು ಹೋಗಿ, ಮಧ್ಯಾಹ್ನದ ನಿದ್ದೆ ಕಳೆದು ಪಾಠ ಹೇಳುವ ಮೊದಲು ವೀಳ್ಯದೆಲೆ ಮೆಲ್ಲುತ್ತಿದ್ದ ತಂದೆಯನ್ನುದ್ದೇಶಿಸಿ “ಅಪ್ಪಯ್ಯಾ… ವಿದ್ಯಾ ಕಟ್ಟಿಕೊಂಡ ಹುಡುಗಿ ಏನು ಮಾಡ್ತಿದ್ದಾಳೆ ಗೊತ್ತೇ! ತನ್ನ ಕೋಣೆಯಲ್ಲಿ ಗಾಂಧಿ ಪೂಜೆ. ದೊಡ್ಡ ಫೋಟೊ ಬಂದಿದೆ. ಮುಂದೆ ಊದುಬತ್ತಿ (ಸುಳ್ಳು), ಇದಿರಿಗೆ ರಂಗೋಲಿ (ಸುಳ್ಳು), ಫೋಟೋದ ಮೇಲೆ ಮಲ್ಲಿಗೆಯಹಾರ…(ಸುಳ್ಳು)…. ಇನ್ನು ಆರತಿ ಮಾತ್ರ ಬಾಕಿ… ಹೋಮ ಕೂಡ ಆಗುತ್ತೋ ಏನೋ! ಆ ಮಂಕ ವಿದ್ಯಾ ಹೆಂಡತಿಯ ಚಂದ ನೋಡಿ ಎಲ್ಲದಕ್ಕೂ ತಯಾರಿರ್ತಾನೆ… ಈ ಮನೆಯಲ್ಲಿ, ಸುಗ್ಗಿಪದವು ಶ್ರೀಕಂಠಶಾಸ್ತ್ರಿಗಳ ಮನೆಯಲ್ಲಿ, ಗಾಂಧಿ ಪೂಜೆ… ಒಂಬತ್ತು ದಿನ ನವರಾತ್ರಿ ಸಪ್ತಶತಿ ಪಾರಾಯಣ, ಚಂಡಿಕಾ ಹೋಮ ನಡೆಯುವ ಮನೆಯಲ್ಲಿ ಗಾಂಧಿ ಪೂಜೆ… ಹೊಲೆಯರನ್ನೆಲ್ಲ ದೇವಸ್ಥಾನಕ್ಕೆ ಹೋಗೋ ಹಾಗೆ ಏನೇನೋ ಕುತಂತ್ರ ಮಾಡುವ ಗಾಂಧಿಗೆ ನಮ್ಮ ಮನೆಯಲ್ಲಿ….” ಆಗ ಎಲ್ಲಿಂದಲೋ ಓಡಿ ಬಂದ ಗಂಗಾಧರನ ಹೆಂಡತಿ ಶ್ರೀದೇವಿ “ಅಷ್ಟೆಯೇ ಮಾವಯ್ಯಾ… ಮೊನ್ನೆ ಬಾವಿಕಟ್ಟೆಯಲ್ಲಿ ಪಾತ್ರೆ ತೊಳೀತಾ ತೊಳೀತಾ ಇದ್ದ ರುಕ್ಕುಗೂ ಸಾವಿತ್ರಿ ಲೆಚ್ಚರ್ ಕೊಡ್ತಾ ಇದ್ಳು ಗಾಂಧಿ ಬಗ್ಗೆ… ಅವನು ದೇವತಾ ಮನುಷ್ಯ ಅನ್ನೋ ರೀತೀಲಿ…. ರುಕ್ಕು ತೊಳೆದ ದೇವರಮನೆಯ ಪಾತ್ರೆ ಇನ್ನೊಮ್ಮೆ ತೊಳೆದುಕೊಂಡು ಬಾ ಅಂತ ನಾನಂದ್ರೆ `ಯಾಕೆ? ದೇವರಿಗೆ ರುಕ್ಕು ತೊಳೆದ ಪಾತ್ರೆ ಆಗೋಲ್ವಾ?’ ಅಂತ ನನಗೇ ತಕರಾರು. ಶುದ್ಧ ಗಾಂಧೀ ಹುಡುಗೀನೇ ಅದು ಮಾವಯ್ಯಾ…” + +****** + +ಇಷ್ಟರತನಕವೂ ಮಾತನಾಡದೆ ಕುಳಿತಿದ್ದ ಶಾಸ್ತ್ರಿಗಳು ಆಗ “ಸಾವಿತ್ರೀ” ಅಂತ ಕರೆದಾಗ ಆಕೆ ಪಡಸಾಲೆಯ ಬಾಗಿಲಲ್ಲೆ ಪ್ರತ್ಯಕ್ಷ. ಕೈಯಲ್ಲೊಂದು ಶರಬತ್ ತುಂಬಿದ ಲೋಟೆ. “ಕರೆದಿರಾ ಮಾವಯ್ಯಾ” ಎಂದು ನಗುತ್ತಲೇ ಕೇಳಿದ ಸಾವಿತ್ರಿ “ಗಣೇಶ ಏಕೋ ವಾಂತಿ ಮಾಡಿ ಸುಸ್ತಾಗಿ ಬಿದ್ದು ಬಿಟ್ಟಿದ್ದ. ಏನು ತಿಂದಿದ್ದನೋ… ಮಲಗಿಸಿ ಶರಬತ್ ತರ್ತೇನೇಂತ ಹೇಳಿ ಬಂದಿದ್ದೇನೆ. ಕೊಟ್ಟು ಬರ್ತೇನೆ. ಒಂದೇ ನಿಮಿಷ” ಎಂದವಳು ಹೇಳಿದಂತೆ ಶರಬತ್ ಲೋಟೆಯನ್ನು ಗಣೇಶನಿಗೆ ಒಪ್ಪಿಸಿ ಮಾವನ ಮುಂದೆ ಬಂದಾಗ, ಶಾಸ್ತ್ರಿಗಳ ಮಡದಿ ಹೇಳಿದ್ದಂತೆ ಆಕೆಯ ಮುಖದಲ್ಲಿ ನಗು – ಮಲ್ಲಿಗೆಯಂತೆ. + +“ಸಾವಿತ್ರೀ, ಏನಮ್ಮಾ ನೀನು ಈ ಮನೆ ತುಂಬ ಸಂಪ್ರದಾಯಸ್ಥರ ಮನೇಂತ ತಿಳಿದಿದ್ದೂ ಆ ಕಲಿಪುರುಷ ಗಾಂಧೀನ್ನ ಪೂಜೆ ಮಾಡೋದಿಕ್ಕೆ ಶುರು ಮಾಡಿದ್ದೀಯಂತಲ್ಲಾ. ನಮ್ಮ ಮನೆಯಲ್ಲಿ ಗಾಂಧಿಗೆ ಸ್ಥಾನ ಇಲ್ಲ ಅನ್ನೋದು ನಿನಗೆ ತಿಳಿಯದಿದ್ದರೆ ಇನ್ನಾದರೂ ತಿಳ್ಕೊಳ್ಕೋದು ಒಳ್ಳೇದು… ನನಗೆ ಗೊತ್ತು, ನಿನ್ನ ಆ ಪಚ್ಚೆ ಚಿಕ್ಕಪ್ಪ ಗಾಂಧಿ ಜತೆ ಸೇರ್ಕೊಂಡು ದಾಂಡಿ ಗೀಂಡೀ ಎಂತ ಉಪ್ಪು ಮಾಡೋದಿಕ್ಕೆ ಹೋಗಿ ಚೆನ್ನಾಗಿ ಪೋಲೀಸಿನವರ ಕೈಯಲ್ಲಿ ಏಟು ತಿಂದು, ಕಡೆಗೆ ಕಣ್ಣಾನೂರಿನ ಜೈಲಿನಲ್ಲಿದ್ದು ಜಾತಿ ಕೆಡಿಸ್ಕೊಂಡು ಬಂದಿದ್ದಾಂತ… ಆ ಸಂಸ್ಕಾರಾನ್ನೆಲ್ಲ ನಮ್ಮಲ್ಲಿಗೆ ತರಬಾರದು ಸಾವಿತ್ರೀ….. ಏನೋ ಋಣಾನುಬಂಧ ಕೂಡಿತ್ತೂಂತ ವಿದ್ಯಾಧರನಿಗೆ ನಿನ್ನನ್ನು ತಂದುಕೊಂಡೆ. ಈ ಮನೆಯ ಜವಾಬ್ದಾರಿ ಉಳಿಸೋ ಹೊಣೆ ನಿನ್ನ ಮೇಲೇನೂ ಇದೇಂತ ತಿಳ್ಕೊಳ್ಳಬೇಕಮ್ಮಾ… ನೋಡು, ನಾನು ನಮ್ಮ ಮಹಾಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ. ಈ ಊರಲ್ಲಿ ಧರ್ಮಶಾಸ್ತ್ರಕ್ಕೆ ಸಂಬಂಧಿಸಿದ ಏನು ಸಮಸ್ಯೆಯಿದ್ದರೂ ಪರಿಹಾರ ಹೇಳಬೇಕಾದವನು. + +ಇಲ್ಲಿ ಬ್ರಾಹ್ಮಣ ಸಮಾಜವೆಲ್ಲ ನಾನು ಯಾವ ಹಾದಿಯಲ್ಲಿ ಹೋಗ್ತೇನೇಂತ ಕಣ್ಣಿಟ್ಟು ನೋಡ್ತ ಇರುವಾಗ ನೀನು ತುಂಬ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಮ್ಮಾ … ಧರ್ಮ, ಸಂಪ್ರದಾಯಾನೆಲ್ಲ ಮನ ಬಂದಂತೆ ತಿರುಚೋದಕ್ಕಾಗಲ್ಲ. ಎಲ್ಲಿಂದ ಬಂದನೋ ಈ ಗಾಂಧಿ ನಮ್ಮ ಸಂಸ್ಕಾರಗಳನ್ನೆಲ್ಲ ಹಾಳುಗೆಡವೋದಕ್ಕೆ …. ಸತ್ಯಾಗ್ರಹಾಂತೆ…. ಸತ್ಯ ಇವನಿಗೊಬ್ಬನಿಗೇ ತಿಳಿದಿರೋ ಹಾಗೆ. ಇದೆಲ್ಲ ದುರಾಗ್ರಹ… ಗುರುವಾಯೂರು ದೇವಸ್ಥಾನಕ್ಕೂ ಹೊಲೆಯರು ಹೋಗಬೇಕು, ಇಲ್ಲವಾದರೆ ಉಪವಾಸ ಅಂತ ಇದಕ್ಕೆ ಬೆದರಿಕೆ ಬೇರೆ… ತಿರುವಾಂಕೂರಿನ ಅನಂತಶಯನ ದೇವಸ್ಥಾನಕ್ಕೂ ಹಾಗೇ ಅಂತೆ. ನಮ್ಮ ಏಕಾದಶಿ ವ್ರತ ಇವನಿಗೆ ಹಟದ ಒಂದು ಅಸ್ತ್ರವಾಗಿದೆ. ಅದಕ್ಕೆ ಉಪವಾಸ. ಇದಕ್ಕೆ ಉಪವಾಸ. ಇಲೆಕ್ಶನ್ ಅಂತೆ, ಪಿಲೆಕ್ಶನ್ ಅಂತೆ. ಅದಕ್ಕೂ ಉಪವಾಸ, ಸರಕಾರದ ವಿರುದ್ಧ ಉಪವಾಸ…. ಆ ಪರಂಗಿ ಜನ ಇದಕ್ಕೆಲ್ಲ ಹೆದರ್ಕೋತಾರೆಯೆ? ಈ ಕಾಂಗ್ರೆಸ್ ಕಾಂಗ್ರೆಸ್ ಅಂತ ಧರ್ಮಲಂಡರೇ ಮೇಲೆ ಬರೋ ಹಾಗಾಗಿದೆ. ನಮ್ಮದು ಸಂಪ್ರದಾಯಸ್ಥರ ಮನೆ ಸಾವಿತ್ರೀ. ನಿನ್ನ ಗಾಂಧಿ ಪೂಜೆ ಹುಚ್ಚೆಲ್ಲ ಇಲ್ಲಿ ಬೇಡ.” + +ಸಾವಿತ್ರಿ ಮಾವನ ಮುಂದೆ ನಿಂತೇ ಇದ್ದಳು. ಅವಳ ಮುಖದಲ್ಲಿ ಸ್ಥಾಯಿ ರೂಪ ಪಡೆದಂತೆ ಮೂಡಿದ್ದ ನಗು ಹಾಗೆಯೇ ಇತ್ತು. ಗಂಗಮ್ಮನಿಗೋ ಆಶ್ಚರ್ಯ. ತನ್ನ ಗಂಡ ಸಿಟ್ಟಾಗುತ್ತಿದ್ದುದು ತೀರಾ ಕಡಿಮೆ. ಆದರೆ ಧರ್ಮಕ್ಕೆ ಅಪಚಾರವಾಗಿದೆಯೆಂದ ಸಂರ್ಭಗಳಲ್ಲಿ ತುಸು ದನಿಯೇರಿಸಿ ಮಾತನಾಡುತ್ತಿದ್ದುದಿದೆ. ತನ್ನ ಗಂಡ ಈ ಸೊಸೆಯೊಡನೆ ಹೀಗೇಕೆ ಇಷ್ಟು ಸಮಾಧಾನದಿಂದ ತಿಳಿವಳಿಕೆ ಕೊಡುವಂತೆ ಮಾಡನಾಡುತ್ತಿದ್ದಾರೆ ಎಂದೇ ಅವರ ಆಶ್ಚರ್ಯ… ಸಾವಿತ್ರಿಯ ಮುಖದ ನಗು ತುಸು ಅರಳಿ, “ಮಾವಯ್ಯಾ, ಯಾರು ಹೇಳಿದ್ದು ನಿಮಗೆ, ನಾನು ಗಾಂಧಿ ಪೂಜೆ ಮಾಡ್ತ ಇದ್ದೇನೇಂತ. ದೊಡ್ಡ ಭಾವನೇ?” ಎಂದಳು. + +ಶಾಸ್ತ್ರಿಗಳು ಆ ಮಾತಿಗೆ ಉತ್ತರಿಸಲಿಲ್ಲ. + +“ಮಾವಯ್ಯಾ, ಯಾರು ಏನೇ ಹೇಳಲಿ, ನಾನು ಪೂಜೆಯನ್ನೇನೂ ಮಾಡ್ತಾ ಇಲ್ಲ. ನನ್ನ ಪೆಟ್ಟಿಗೆಯ ಮೇಲೆ ಗಾಂಧೀಜೀಯ ಚಿತ್ರ ಇರೋದು ನಿಜ. ಅದೂ ತಪ್ಪೇ ಮಾವಯ್ಯ.” + +“ಅಲ್ಲ ಸಾವಿತ್ರೀ, ನಮ್ಮ ಮನೆಯಲ್ಲಿ….?” + +“ಮಾವಯ್ಯಾ, ನೋಡಿ, ಪಡಸಾಲೆಯ ಹೊಸ್ತಿಲ ಹತ್ತಿರ ನಿಮ್ಮ ತಂದೆತಾಯಿಯರ ಫೋಟೋ ಇದೆ, ತುಂಬ ಹಳೆಯ ಕಾಲದ ಫೋಟೊ ಆದರೂ ಚೆನ್ನಾಗಿ ಬಂದಿದೆ. ಅದಕ್ಕೇನೂ ನೀವು ದಿನಾ ಪೂಜೆ ಮಾಡ್ತಾ ಇಲ್ಲ – ದೇವರ ಪೂಜೆ ಮಾಡೋ ಹಾಗೆ. ಶ್ರಾದ್ಧದ ದಿನ ನೆನಸ್ಕೋತೀರಿ. ಅವರ ಕುರಿತು ಇರುವ ಪ್ರೀತಿ, ಗೌರವ ತೋರಿಸೋದಕ್ಕೆ ನೆನಪಿಸೋದಕ್ಕೆ ಅವುಗಳಿಗೆ ಆ ಸ್ಥಾನ. ನನಗೆ ಗಾಂಧೀಜೀಯೆಂತಂದರೆ ತುಂಬ ಇಷ್ಟ ಮಾವಯ್ಯಾ, ಅವರು ಉಡುಪಿಗೆ ಬಂದಿದ್ರಲ್ಲಾ ಮಾವಯ್ಯಾ, ಕೆಲವು ವರ್ಷಗಳ ಹಿಂದೆ. ನೀವು ಹೇಳಿದ್ರಲ್ಲಾ ನನ್ನ ಪಚ್ಚೆ ಚಿಕ್ಕಪ್ಪಾಂತ – ಅವರ ಜತೆಯಲ್ಲೇ ಅವರನ್ನು ನೋಡೋದಿಕ್ಕೇಂತ ಹೋಗಿದ್ದೆ. ಚಿಕ್ಕಪ್ಪನ ಜತೆ ಹೋಗಿದ್ದು ನನ್ನ ಪುಣ್ಯ. ಅವರಿಗೆ ಒಂದು ಮಾಲೆ ಹಾಕೋ ಅವಕಾಶಾನೂ ನನಗೆ ಸಿಕ್ಕಿತ್ತು. ಏಕೋ ಅಂದಿನಿಂದ ಅವರನ್ನ ನೊಡ್ತಾನೇ ಇರಬೇಕು ಅಂತ ಅನ್ನಿಸೋದ್ರಿಂದ ಅವರ ಫೋಟೊ ನನ್ನ ಬಳಿ ಇರತ್ತೆ … ಆ ಫೋಟೊ ಕೂಡ ಚಿಕ್ಕಪ್ಪನೇ ತಂದುಕೊಟ್ಟಿದ್ದು…” + +“ಎಂದರೆ ಸಾವಿತ್ರೀ, ನೀನು ಆ ಧರ್ಮಲಂಡ ಗಾಂಧಿಯ ವಿಚಾರಗಳನ್ನೆಲ್ಲ ಈ ಮನೆಗೂ ತರಬೇಕೂಂತಿದ್ದೀಯೇನು, ನಮ್ಮ ಸಂಪ್ರದಾಯಗಳನ್ನೆಲ್ಲ…” + +“ಇಲ್ಲ ಮಾವಯ್ಯಾ. ನಾನು ಏನೂ ಮಾಡೋಲ್ಲ…. ನಾನು ಈ ಮನೆಗೆ ಬಂದವಳು, ಮನೆಯ ಸಂಪ್ರದಾಯಗಳನ್ನೆಲ್ಲ ಮರ್ಯಾದೆ ಕೊಟ್ಟು ಪಾಲಿಸಿಕೊಂಡು ಬರಬೇಕಾದವಳು. ನನ್ನ ಅಪ್ಪ ಹಾಗೆ ಹೇಳಿದ್ದಾರೆ. ನಿಮಗೆ ಬೇಸರ ಬರೋ ಹಾಗೆ ನಾನು ಏನೂ ಮಾಡೋಲ್ಲ ಮಾವಯ್ಯ… ಆದರೆ ನನ್ನ ವಿಚಾರಗಳನ್ನ ನಾನು ಇಟ್ಕೊಳ್ಳೋದಿಕ್ಕೆ ನಿಮ್ಮ ಆಕ್ಷೇಪ ಇದೆಯೇ ಮಾವಯ್ಯಾ…. ನನಗೆ ಗಾಂಧೀಜಿ ಹೇಳ್ತಾ ಇರೋ ಸತ್ಯ, ಅಹಿಂಸೆ, ಅನುಕಂಪ, ಪ್ರೀತಿ ಎಲ್ಲ ತುಂಬ ಒಳ್ಳೇದೂಂತ ಕಾಣತ್ತೆ. ನನಗೇಕೋ ಅವರ ಮೇಲೆ ತುಂಬ ಗೌರವ ಮಾವಯ್ಯಾ… ನನ್ನ ಕೋಣೆಯಲ್ಲಿರೋ ಗಾಂಧಿ ಫೋಟೊ ನಿಮಗೆ ಏನು ತೊಂದರೆ ಕೊಡೋಲ್ಲ…. ಯಾರಿಗೂ ತೊಂದರೆ ಕೊಡೋಲ್ಲ… ಧರ್ಮ ಸಂಪ್ರದಾಯ ಎಲ್ಲ ಏನೂಂತ ನನಗಿನ್ನೂ ತಿಳಿದಿಲ್ಲ ಮಾವಯ್ಯಾ, ಆದರೆ ಯಾಕೋ…” + +ತನ್ನ ಮುಂದೆ ನಿಂತಿರುವುದು, ಮಾತನಾಡುತ್ತಿರುವುದು ಬರೇ ಹತ್ತೊಂಬತ್ತು ವಯಸ್ಸಿನ ಸೊಸೆಯೇ ಎಂಬ ಸಂದೇಹ ತಂದುಕೊಂಡ ಶಾಸ್ತ್ರಿಗಳು ಸಾವಿತ್ರಿಯನ್ನೇ ನೋಡುತ್ತಿದ್ದರು. ಆಗಲೂ ತಾನು ಆಡಿಸಿದ್ದ ಮುದ್ದು ಹುಡುಗಿ ಶಾಂಭವಿಯದೇ ನೆನಪು. ಗಂಗಮ್ಮನ ಆಶ್ಚರ್ಯಕ್ಕಂತೂ ಪಾರವೆ ಇರಲಿಲ್ಲ. ಏನಾದರೂ ಒಂದು ಮಾತು ಆಡಿ ಓಡಿ ಹೋಗುತ್ತಿದ್ದ ತನ್ನ ಹಿರಿಯ ಸೊಸೆಯರನ್ನು ನೆನೆಸಿಕೊಂಡ ಗಂಗಮ್ಮ ಸಾವಿತ್ರಿ ತುಂಬ ಧೈರ್ಯದಿಂದ ಮಾವನನೊಡನೆ ತರ್ಕ ಮಾಡ್ತ ನಿಂತಿದ್ದುದನ್ನು ನೋಡಿದಾಗ ಅವರಿಗೂ ತುಸು ಭಯವೇ… ತನ್ನ ಗಂಡನ ನಡತೆಯೂ ವಿಚಿತ್ರವೆಂದೆ ತೋರತೊಡಗಿತ್ತು. ಯಾವಾಗಲೂ ಇಂತಹ ಮಾತುಗಳಿಗೆಲ್ಲ ತುಸು ಅಸಮಧಾನದ ಪ್ರತಿಕ್ರಿಯೆಯನ್ನೆ ತೋರಿಸುತ್ತಿದ್ದ ಗಂಡ ಇಂದು ಸಾವಿತ್ರಿಯ ಮುಂದೆ ಇಷ್ಟು ಮೆತ್ತಗಾಗಿ ಮಾತನಾಡುತ್ತಿರುವುದರ ಅರ್ಥ ಏನು ಎಂದು ಯೋಚಿಸುತ್ತಿದ್ದರು. + +ಗಂಗಮ್ಮ ಸಾವಿತ್ರಿಯನ್ನು ಕುರಿತು “ಹೋಗು ಸಾವಿತ್ರೀ… ವಿದ್ಯಾ ಬರುವ ಹೊತ್ತಾಯಿತು. ಒಲಗೆ ಚಹಾಕ್ಕೆ ನೀರಿಡು. ನೀನು ಇನ್ನು ಗಾಂಧಿ ಗೀಂಧೀಂತ ಹೊಲೆಯರನ್ನೆಲ್ಲ ಮನೆಯೊಳಗೆ ಕರೆಸಬೇಡ. ಅಂತ ವಿಚಾರವೆಲ್ಲ ಇಲ್ಲಿ ಬೇಡ”. + +– 2 – + +ಗಾಂಧಿ ಹುಡುಗಿ ಸಾವಿತ್ರಿ. ಉಪ್ಪಿನ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಆಕೆಯ ಚಿಕ್ಕಪ್ಪನಿಂದಲೇ ಸಾವಿತ್ರಿಗೆ ಆ ರೀತಿಯ ವಿಶೇಷಣ ಬಂದದ್ದೆಂದು ವಿದ್ಯಾಧರನಿಗೆ ಗೊತ್ತು. ತನ್ನ ಮಡದಿಯಾಗಿ ಬರುವತನಕವೂ ವಿದ್ಯಾಧರನಿಗೆ ಗಾಂಧಿಯ ಕುರಿತ ಆಸಕ್ತಿ ಅಷ್ಟಾಗಿ ಇರಲಿಲ್ಲ. ಆತ ಆಕೆಯನ್ನು ಮೊದಲು ಕಂಡು ಸಂಭಾಷಿಸಿದಾಗ ಬಂಕಿಂ ಅವರ `ಆನಂದಮಠ’ದ ಪ್ರಸ್ತಾಪ ಬಂದಿದ್ದರೂ ಆತ ಆ ಕೃತಿಯನ್ನು ಆಗ ಓದಿರಲಿಲ್ಲ; ಅದನ್ನು ಓದಿದ್ದು ಸಾವಿತ್ರಿಯ ಪೆಟಾರಿಯೊಳಗಿದ್ದ ಪುಸ್ತಕಗಳ ಗಂಟಿನಿಂದಲೆ ಪಡೆದು. ಆತ ಉಡುಪಿಯ ರಥಬೀದಿಯಲ್ಲಿ ಪ್ರಭಾತಫೇರಿಯ ಮೆರವಣಿಗೆಯನ್ನು ಒಮ್ಮೆ ಕಂಡಿದ್ದ. ಆಗಲೇ `ವಂದೇ ಮಾತರಂ’ ಎಂಬ ಎರಡು ಶಬ್ದಗಳಿಗೆ ಮೆರವಣಿಗೆಯಲ್ಲಿ ದೊರಕುತ್ತಿದ್ದ ಸಾರ್ವತ್ರಿಕ ಉತ್ಸಾಹದ ದನಿಗೂಡಿಸುವಿಕೆಯನ್ನು ಕಂಡದ್ದು… ಅವೆರಡು ಶಬ್ದಗಳ ಅರ್ಥ ತಿಳಿಯುವ ಸಂಸ್ಕೃತದ ಸಂಸ್ಕಾರ ಆತನಿಗಿತ್ತು. ಆದರೆ ಹಾಗೆ ಸಾಗುತ್ತಿದ್ದವರು `ವಿಜಯೇ ವಿಶ್ವ ತಿರಂಗಾ ಪ್ಯಾರಾ…. ಝೆಂಡಾ ಊಂಚಾ ರಹೇ ಹಮಾರಾ…’ ಎಂದಾಗ ಹಿಂದಿಯ ಜ್ಞಾನ ಅಷ್ಟಕ್ಕಷ್ಟೆ ಇದ್ದ ವಿದ್ಯಾನಿಗೆ ಅದರ ಅರ್ಥ ಹೊಳೆದಿರಲಿಲ್ಲ; ನಾದ ಮಾತ್ರ ತುಂಬಾ ಹಿತವಾಗಿತ್ತು. ಆ ಮೇಲೆ ಒಮ್ಮೆ ಸಾವಿತ್ರಿಯೊಡನೆ ಸಂಬಂಧಿಕರ ಒಂದು ಮದುವೆಗೆಂದು ಮಂಗಳೂರಿನ ತನಕ ಹೋದವನು ಸಂಜೆ, ಸಾವಿತ್ರಿಯ ಖುಷಿಗೆಂದೇ, ಚಿತ್ರಾ ಟಾಕೀಸ್ ನಲ್ಲಿ ಒಂದು ಸಿನೆಮಾ ನೊಡಲು ಹೋಗಿ ಅಲ್ಲಿ ಸಿನೆಮಾ ಆರಂಭವಾಗುವುದಕ್ಕೂ ಮೊದಲೇ ಅವರು ತೋರಿಸಿದ `ವಂದೇ ಮಾತರಂ’ ಹಾಡಿನ ಆರಂಭದ ಕೆಲವು ಚರಣಗಳ ದೃಶ್ಯವನ್ನು ನೋಡುತ್ತಿದ್ದಂತೆ ಪಕ್ಕದಲ್ಲೆ ಕುಳಿತಿದ್ದ ಸಾವಿತ್ರಿಯ ರೋಮಾಂಚನದ ಪುಳಕವನ್ನು ಗಮನಿಸಿದ ಆತ ಆಕೆಯ ಭುಜವನ್ನು ಮೃದುವಾಗಿ ತಟ್ಟಿ `ಏನಾಯಿತೇ?’ ಎಂದು ಕೇಳಿದ್ದ. ಆದರೆ ಆಕೆ ಯಾವ ಉತ್ತರವನ್ನೂ ಕೊಟ್ಟಿರಲಿಲ್ಲ. ತದೇಕಚಿತ್ತಳಾಗಿ `ಸುಜಲಾಂ ಸುಫಲಾಂ, ಮಲಯಜ ಶೀತಲಾಂ’ ಎಂದು ಗೀತೆ ಮುಂದುವರಿಯುತ್ತಿದ್ದಂತೆ ತೋರಿಸಲಾಗುತ್ತಿದ್ದ ಭಾರತದ ನಿಸರ್ಗದ ಸಿರಿಯನ್ನೆ ನೋಡುತ್ತಿದ್ದಳು… ಅಂದು ಅವರು ಉಡುಪಿಯ ದಾರಿ ಹಿಡಿದು ಎರಡು ಹೊಳೆಗಳನ್ನು ದಾಟಿ ಕೊಡದೂರು ಸೇರುವತನಕವೂ ಆಕೆ `ವಂದೇ ಮಾತರಂ’ ವಿಚಾರ ಒಂದು ಮಾತೂ ಆಡಿರಲಿಲ್ಲ … ಆದರೆ ಆ ಹಾಡು ಪ್ರತಿಧ್ವನಿಸತೊಡಗಿದ್ದು ವಿದ್ಯಾಧರನ ಎದೆಯಲ್ಲೆ. + +ಆದರೆ ವಿದ್ಯಾಧರನಿಗೆ ತನಗೂ ತನ್ನ ಆವರಣಕ್ಕೂ ಒಂದು ಕಂದಕ ಉಂಟಾಗುತ್ತಿದೆಯೇ ಎಂಬ ಸಂದೇಹ ಬರತೊಡಗಿದ್ದು ಮನೆಯ ಸಂಪ್ರದಾಯಗಳ ಕಠಿಣ ಶಿಸ್ತಿನಲ್ಲಿ… ತನ್ನ ತಂದೆಯದು ಅನುಕಂಪ ತುಂಬಿದ, ಯಾರನ್ನೂ ಅರ್ಥಮಾಡಿಕೊಳ್ಳುವ ಹೃದಯವೆಂದು ಆತನಿಗೆ ತಿಳಿದಿತ್ತು… ಆದರೆ ಸಂಪ್ರದಾಯದ ಭದ್ರಕೋಟೆಯೊಳಗೇ ಇರಬೇಕು ಎನ್ನುವ ಅವರ ನಿಶ್ಚಯದ ಕಾಠಿಣ್ಯವೂ ಆತನಿಗೆ ತಿಳಿದಿತ್ತು… ಅವರ ಮಿದುವಾದ ಹೃದಯದಲ್ಲೂ ಗಾಂಧಿ ತಮ್ಮ ಸಂಪ್ರದಾಯಗಳನ್ನೆಲ್ಲ ಹಾಳುಗೆಡವಲು ಬಂದವನೆಂಬ ತಿರಸ್ಕಾರದ ಭಾವನೆಯೂ ಬೆರೆತಿತ್ತು. ಮನೆಯ ಸಂಸ್ಕಾರದ ವಿಧಿವಿಧಾನಗಳೆಲ್ಲ ತಾನು ಯೋಜಿಸಿಕೊಂಡಿದ್ದಂತೆಯೇ ನಡೆಯಬೇಕು. ತನ್ನ ಕರ್ತವ್ಯಕ್ಷೇತ್ರದಲ್ಲಿ ನೆಚ್ಚಿಕೊಂಡ ಸಂಪ್ರದಾಯಗಳಿಗೆ ಯಾವ ರೀತಿಯ ಅಪಚಾರವೂ ಆಗಬಾರದು ಎಂಬ ಅವರ ಮಡಿವಂತಿಕೆಯನ್ನು ತಿಳಿಯದವರಿಲ್ಲ. ಇದರಿಂದಾಗಿಯೇ ವಿದ್ಯಾಧರ ತನ್ನ ಮನೆ ಪೋಷಿಸಿಕೊಂಡು ಬಂದಿದ್ದ ಸಂಸ್ಕೃತದ ಆವರಣದಲ್ಲಿ, ತಾನು ಗಳಿಸಲೇಬೇಕಾಗಿದ್ದ ಸಂಸ್ಕೃತದ ಜ್ಞಾನದಿಂದಲೂ, ದಿನದ ಹೆಚ್ಚಿನ ಕಾಲದಲ್ಲಿ ಕೇಳುತ್ತಲೇ ಇದ್ದ ಮಂತ್ರಘೋಷದಿಂದ ಕೆಲವೊಮ್ಮೆ ಅಧೀರನಾಗುತ್ತಿದ್ದ…. ವೇದಪಠಣದ ಕಾಲದಲ್ಲೆಲ್ಲ ಯಾವುದೋ ಒಂದು ಅಜ್ಞಾತ ನಾಡಿನೆಡೆ ಹೋಗುತ್ತಿದ್ದಂತೆ ಒಮ್ಮೊಮ್ಮೆ ಭಾಸವಾಗುತ್ತಿದ್ದರೂ, ಸಾಮವೇದ ಪಠಣದ ಕಾಲಕ್ಕೆ ಆ ನಾದ ತನ್ನನ್ನು ಹಿಂದೆ ಹಿಂದೆ ಎಲ್ಲಿಗೋ ಕೊಂಡೊಯ್ಯುತ್ತಿದೆಯೆಂದು ಕೆಲವೊಮ್ಮೆ ತೋರಿದರೂ, ಈಗ ಅಂತ ಸಮಯದಲ್ಲಿ ಮನೆಯಿಂದ ಎಲ್ಲಾದರೂ ಹೊರಗೋಡುವ ಬಯಕೆ ಯಾಕೆ ಉಂಟಾಗುತ್ತಿದೆಯೆಂಬ ಯೋಚನೆ ಮಿಂಚುತ್ತಿದ್ದುದೂ ಇದೆ. + +****** + +ತಂದೆ ತನ್ನನ್ನು ಕರೆದು ಸಾವಿತ್ರಿಗೆ ಬುದ್ಧಿ ಹೇಳೆಂದ ಮೇಲೆ ಒಂದೋ ಎರಡೋ ತಿಂಗಳು ಕಳೆದಿರಬೇಕು. ಆಕೆ ಫಾಟೆ ಮಾಮಾನ ಕಡೆಯಿಂದ ವಿದ್ಯಾಧರನಿಗಾಗಿಯೇ ಒಂದು ಒಳ್ಳೆಯ ಖಾದಿ ಟೊಪ್ಪಿ ತರಿಸಿದ್ದಳು… “ಯಾರಿಗೇ ಇದು?” ಎಂದು ಸಾವಿತ್ರಿಯ ತಾಯಿ ಅವರ ಮನೆಯಲ್ಲಿ ಕೇಳಿದಾಗ, “ಬೇರೆ ಯಾರಿಗೆ, ನಿನ್ನ ಅಳಿಯನಿಗೇ” ಎಂದು ಸಾವಿತ್ರಿ ನಗೆಯಾಡಿದ್ದಳು… “ಅಲ್ಲಿಯವರೆಗೆ ಬಂತೇ?” ಎಂದು ತಾಯಿ ತುಸು ಸಂತೋಷದಿಂದಲೇ ಕೇಳಿದ್ದರೂ ಸಾವಿತ್ರಿ ನಗುತ್ತಲೇ ಕಣ್ಣು ಮಿಟುಕಿಸಿದ್ದಳಷ್ಟೆ. + +ಹೆಂಡತಿ ತರಿಸಿಕೊಟ್ಟಿದ್ದ ಟೊಪ್ಪಿಯನ್ನು ವಿದ್ಯಾ ಕೈಯಿಂದ ತಿರುಗಿಸಿ ತಿರುಗಿಸಿ ನೋಡಿ, ತನ್ನ ತಲೆಯ ಮೇಲೆ ಇರಿಸಿಕೊಂಡು ಹಿಂದೆ ಮುಂದೆ ಇಟ್ಟುಕೊಂಡು ಆಮೇಲೆ ಅದನ್ನು ಸಾವಿತ್ರಿಯ ಪೆಟಾರಿಯ ಮೇಲಿರಿಸಿದ. ಆತನ ಮುಖದಲ್ಲಿ ಯಾವ ಭಾವವನ್ನೂ ಗುರುತಿಸುವಂತಿರಲಿಲ್ಲ. ಸಾವಿತ್ರಿ “ಧೈರ್ಯ ಇದೇಂತ ಹೇಳಿದ್ದಿರಿ, ನೆನಪಿದೆಯಷ್ಟೆ?” ಎಂದಿದ್ದಳು. ಅದಕ್ಕೂ ವಿದ್ಯಾ ಯಾವ ಉತ್ತರವನ್ನು ಹೇಳಲಿಲ್ಲ. + +ಮರುದಿನ ಶಾಲೆಯಿಂದ ಒಂದು ದಿನದ ರಜೆ ಪಡೆದು ನಸುಕು ಹರಿಯುವ ಹೊತ್ತಿಗೇ ಏನೋ ಕೆಲಸವಿದೆಯೆಂದು ವಿದ್ಯಾದರ ಮಂಗಳೂರಿಗೆ ಹೋಗಿದ್ದ. ಮಧ್ಯಾಹ್ನ ಒಂದು ಗಂಟೆಯ ಹೊತ್ತಿಗೆ ಮರಳಿ ಬಂದಾಗ ಆತನ ತಲೆಯಲ್ಲಿ ಗಾಂಧಿ ಟೊಪ್ಪಿಯಿತ್ತು. ಬಾಲ್ಯದಿಂದ ಮನೆಯ ಸಂಪ್ರದಾಯದ ಚಿಹ್ನೆಯೆಂದು ಆತ ಪೋಷಿಸಿಕೊಂಡು ಬಂದಿದ್ದ ಜುಟ್ಟು ಮಾತ್ರ ಮಾಯವಾಗಿತ್ತು… ಮನೆಗೆ ಬಂದ ಮಗನನ್ನು ಆಗಷ್ಟೆ ಪೂಜೆ ತೀರಿಸಿ ಹೊರಗೆ ಬಂದು ನೋಡಿದ ಶಾಸ್ತ್ರಿಗಳು ಒಂದು ಕ್ಷಣ ಸ್ತಬ್ಧರಂತೆ ನಿಂತಿದ್ದರು. ಆಮೇಲೆ “ಏನೋ ಇದು? ಇದೇ ನಿನ್ನ ಮಂಗಳೂರಿನ ಕೆಲಸವೇ?” ಎಂದು ಕೇಳಿದಾಗ ವಿದ್ಯಾ ತುಸು ಅಳುಕುತ್ತಲೇ “ಅಲ್ಲ ಅಪ್ಪಯ್ಯ… ಬೇರೆ ಕೆಲಸವೂ ಇತ್ತು… ಎಜುಕೇಶನ್ ಆಫೀಸಿನಲ್ಲಿ… ನನ್ನ ವೃತ್ತಿಗೆ ಇದು ಅನುಕೂಲವಾಗತ್ತೇಂತ ಅನಿಸಿದ್ದರಿಂದ ಹೀಗೆ ಮಾಡಬೇಕಾಯಿತು.” + +“ಯಾವ ವೃತ್ತಿಯೋ?” + +“ನಿಮಗೇ ಗೊತ್ತಿದೆಯಲ್ಲ. ಶಾಲೆಯಲ್ಲಿ ಅಧ್ಯಾಪನ ವೃತ್ತಿ.” + +“ಹಾಗೆ ಆಗಲೇಬೇಕೆಂಬ ನಿರ್ಬಂಧವೇನಾದರೂ ಇದೆಯೇನೋ?” + +“ನಿರ್ಬಂಧವಿಲ್ಲ. ಆದರೆ ಶಾಲೆಯ ವ್ಯವಹಾರದಲ್ಲಿ ಅದು ಬೇಕೆನಿಸುತ್ತೆ”. + +“ಅಥವಾ ಸಾವಿತ್ರಿಯ ಒತ್ತಾಯವೋ?” ಶಾಸ್ತ್ರಿಗಳು ಕಷ್ಟದಿಂದಲೇ ಈ ಮಾತನ್ನು ಹೇಳಿದ್ದು. + +“ಇಲ್ಲ ಅಪ್ಪಯ್ಯ, ಅವಳ ಒತ್ತಾಯವೇನೂ ಇಲ್ಲ….. ಅಲ್ಲದೆ ಒಂದು ಗಾಂಧಿ ಟೊಪ್ಪಿ ಇರಿಸಿಕೊಂಡಾಕ್ಷಣ ನಾನು ತುಂಬ ಬದಲಾಗಿದ್ದೇನೆ ಎಂದು ತಿಳಿಯಬೇಕಾಗಿಯೂ ಇಲ್ಲ…..” + +“ಈಗ ಕೆಂಚನಿಗೂ ಗಾಂಧಿ ಟೊಪ್ಪಿ ಬಂದಿದೆಯಂತಲ್ಲ!” + +“ನಿಮ್ಮ ಸ್ನೇಹಿತರಾದ ವೆಂಕಟೇಶ ಕಮ್ತಿಯವರಿಗೂ ಅದು ಇದೆ ಅಪ್ಪಯ್ಯ… ಹಾಗೆಂದು ನೀವೇನಾದರೂ ಅವರನ್ನು ಟೀಕಿಸಿದ್ದಿದಯೆ?”ಈ ಮಾತಿಗೆ ಉತ್ತರ ಹೇಳುವುದು ಶಾಸ್ತ್ರಿಗಳಿಗೆ ಕಷ್ಟದ ಮಾತಾಗಿತ್ತು. + +“ಇದರ ಪರಿಣಾಮ ಊರೆಲ್ಲ ಏನು ಮಾತಾಡಿಕೊಳ್ಳಬಹುದು ಎಂದು ನಿನಗೆ ಗೊತ್ತೇ?” + +“ನಾನು ಸರಿಯಾಗಿ ಇದ್ದರೆ ಊರವರು ಏನು ಮಾತನಾಡಿದರೆ ನನಗೇನು?” + +“ಅಲ್ಲ ವಿದ್ಯಾ… ನೀನು ಸಾವಿತ್ರಿಯನ್ನು ಮದುವೆಯಾದಂದೇ ನಾನು ಗುಸುಗುಸು ಮಾತೆಲ್ಲ ಕೇಳಬೇಕಾಗಿತ್ತು… ಈಗ ಒಂದೊಂದೇ ರೀತಿಯಲ್ಲಿ…. ನಮ್ಮ ಮನೆತನದ…”ಶಾಸ್ತ್ರಿಗಳಿಗೆ ಮಾತು ಮುಂದುವರಿಸುವುದು ಸಾಧ್ಯವಾಗಲಿಲ್ಲ. ಆಗ ಅವರಿಗೆ ಇನ್ನೊಂದು ಆಘಾತ ಕಾದಿದ್ದಂತೆ ಗಂಗಾಧರ ತನ್ನ ಮಗ ಗಣೇಶನನ್ನು ದರದರ ಎಂದು ಎಳೆದುಕೊಂಡು ಬಂದು ಬೊಬ್ಬಿಡಲಾರಂಭಿಸಿದ. + +“ಕಾಂಗ್ರೆಸ್ ಅಂತೆ ಕಾಂಗ್ರೆಸ್…. ನಮ್ಮ ಎಲ್ಲ ರೀತಿ ನೀತಿಗಳನ್ನು ಹಾಳುಗೆಡವಲು ಬಂದ ಮಾರಿ…. ಅಪ್ಪಯ್ಯಾ, ನಾನು ಗಣೇಶನನ್ನು ಇನ್ನು ಆ ಶಾಲೆಗೆ ಕಳುಹಿಸುವುದಿಲ್ಲ… ಖಂಡಿತ ಕಳುಹಿಸುವುದಿಲ್ಲ…. ಈಗ ಏನಾಗಿದೆ ಗೊತ್ತೇ…. ಆ ಕೆಂಚನೂ ಶಾಲೆಗೆ ಬರತೊಡಗಿದ್ದಾನೆ… ಹರಿಜನ ಮಕ್ಕಳಿಗೂ ಶಾಲೆಯಲ್ಲಿ ಪ್ರವೇಶ ಬೇಕೂಂತ ಆ ಹಾಳಾದ ಸುಧಾಕರ ಮಾಷ್ಟ್ರು ಕೆಂಚನನ್ನೂ ಶಾಲೆಗೆ ಕರೆದು ತಂದು ಕೂರಿಸಿದ್ದಾರೆ. ಅವನಿಗೆ ಗಾಂಧಿ ಟೊಪ್ಪಿ ಮೊದಲು ಕೊಟ್ಟವಳೇ ನಿಮ್ಮ ಮುದ್ದಿನ ಸೊಸೆ. ಈಗ ಅವನಿಗೆ ಶಾಲೆಯ ಸಂಸ್ಕಾರ ಬೇರೆ…. ನನ್ನ ಗಣೇಶನೂ ಅದೇ ಶಾಲೆಯಲ್ಲಿ ಅವನ ಜತೆಗೆ ಕುಳಿತುಕೊಂಡು ಕಲಿಯಬೇಕೇ? ಅಪ್ಪಯ್ಯಾ, ನಿಮ್ಮ ಗಾಂಧಿ ಸೊಸೆ ಬಂದ ಗಳಿಗೆ ತುಂಬ ಚೆನ್ನಾಗಿದೆ. ಇನ್ನೇನು ಉಳಿದಿದೆ… ನಾನು ಆ ಹೊಲೆಯರು ಬರುವ ಶಾಲೆಗೆ ನನ್ನ ಮಗನನ್ನು ಕಳುಹಿಸಲು ತಯಾರಿಲ್ಲ… ಈವತ್ತೇ ಶಾಲೆಗೆ ಕೊನೆ… ದಿನಾ ಶಾಲೆಯಿಂದ ಬಂದವನಿಗೆ ಸೆಗಣಿ ಮೆತ್ತಿಸಿ ಸ್ನಾನ ಮಾಡಿಸಿ ಜನಿವಾರ ಬದಲಾಯಿಸುವ ಕೆಲಸ ನನ್ನಿಂದಾಗದು. ಆ ಹಾಳು ಕಾಂಗ್ರೆಸ್ ಸರಕಾರ ಬಂದದ್ದಕ್ಕೆ ಸಾರ್ಥಕವಾಯಿತು.” ಆತ ಹಾಗೆ ಹೇಳುತ್ತಿದ್ದವನು ತನ್ನ ಲಕ್ಷ್ಯ ವಿದ್ಯಾಧರನ ಕಡೆಗೆ ಹರಿಸಿದ್ದು ಆಗಲೇ. ಜುಟ್ಟು ತೆಗೆಸಿ ಗಾಂಧಿ ಟೊಪ್ಪಿ ಧರಿಸಿದ ಅವನನ್ನು ನೋಡಿದವನೇ ಎರಡು ಕ್ಷಣ ಆಶ್ಚರ್ಯದಿಂದ ನಿಂತು, ಆಮೇಲೆ, + +“ಹೊ ಹೊ ಹೋ ಹೊ ಹೊ ಹೋ” ಎಂದು ನಗುತ್ತಲೇ ಗಂಗಾಧರ ಅಲ್ಲಿಂದ ಒಳಕೋಣೆಗೆ ಓಡಿದಾಗ ಇದೇನೆಲ್ಲ ಗಲಾಟೆಯೆಂದು ಗಂಗಮ್ಮ ಬಾಗಿಲಿಗೆ ಬಂದು ನಿಂತಿದ್ದರು. + +****** + +“ಇದೇನಿದು… ನೀವು ಕಮ್ಯೂನಿಸ್ಟ್ ಥರಾ ಮಾತನಾಡ್ತೀರ! ಎಲ್ಲಿಂದ ಕಲಿತಿರಿ ಆ ವಿಚಾರವನ್ನೆಲ್ಲ… ನೀವು ಎಫ್.ಎ. ಪರೀಕ್ಷೆಗೆ ಕಟ್ತೇನೇಂತ ಹೇಳ್ತಾ ಓದ್ತಾ ಇದ್ದದ್ದು ಇದೇನೇ…”ವಿದ್ಯಾ ನಕ್ಕ….. + +“ಇದೆಲ್ಲ ನನ್ನ ಓದಿನಿಂದ ಬಂದಿದ್ದಲ್ಲಮ್ಮಾ, ವಿಚಾರದಿಂದ. ಹಾಗೆಯೇ ನನಗಿಂತ ಹೆಚ್ಚು ತಿಳಕೊಂಡವರ ಹತ್ತಿರ ಮಾತನಾಡಿದ ಅನುಭವದಿಂದ..” + +“ಯಾರಪ್ಪಾ ಆ ಮಹಾನುಭಾವ… ನನ್ನ ಗಂಡನಿಗೆ ಬುದ್ಧಿ ಹೇಳೋರು, ಅದೂ ಇತಿಹಾಸದಲ್ಲಿ! ನೀವು ಲೆಕ್ಕದಲ್ಲಿ ಮಾತ್ರ ತುಂಬ ಹುಶಾರು ಅಂತ ತಿಳಕೊಂಡಿದ್ದೆ.” + +“ಯಾರೂಂತ ಹೇಳೋ ಸ್ವಾತಂತ್ರ್ಯ ಈಗ ನನಗಿಲ್ಲ. ಸಮಯ ಬಂದಾಗ ಹೇಳ್ತೇನೆ…” + +“ಓ… ಅದರಲ್ಲೂ ಗುಟ್ಟೇ, ನನ್ನ ಕೂಡಾನೂ… ಇದಕ್ಕೇನೇ ನೀವು ವಾರಕ್ಕೊಮ್ಮೆ ಮಂಗಳೂರಿಗೆ ಓಡ್ತಾ ಇರೋದು, ಶಾಲೆ ಕೆಲಸಾಂತ ಸುಳ್ಳು ಹೇಳಿ…” + + + +ವಿದ್ಯಾ ನಗುತ್ತಲೆ….“ಸುವ್ವೀ… ನಾನು ನನಗೆ ತಿಳಿಯದ ಕೆಲವೊಂದು ವಿಚಾರ ಒಬ್ಬರಿಂದ ಕಲೀತಾ ಇರೋದು ನಿಜ. ಸುಧಾಕರರಾಯರೇ ಅವರ ವಿಚಾರ ನನಗೆ ಮೊದಲು ತಿಳಿಸಿದ್ದು. ಅದು ಯಾರೂಂತ ಮಾತ್ರ ಕೇಳಬೇಡ, ಸಮಯ ಬಂದಾಗ ಹೇಳ್ತೇನೆ. ಈಗ ಯುದ್ಧದ ವಾತಾವರಣ. ರಾಜ್ಯದಲ್ಲಿ ಕಾಂಗ್ರೆಸ್ ಇದ್ದರೂ ದಿಲ್ಲೀ ದರ್ಬಾರು ಬ್ರಿಟಿಷರ ಕೈಯಲ್ಲೇ ಇದೆ… ಅವರು ಕಣ್ಣಲ್ಲಿ ಕಣ್ಣಿಟ್ಟು ನೋಡ್ತಾ ಇರ್ತಾರೆ – ಅದಕ್ಕೆ ಬೇಕಾದ ಜನಾನೂ ಇದ್ದಾರೆ ಅವರ ಬಳಿ, ಯಾರು ತಮ್ಮ ಸ್ವಾರ್ಥವನ್ನ ವಿರೋಧಿಸ್ತಾರೇಂತ…” + +“ನನಗೆ ಅಷ್ಟೆಲ್ಲ ಪುರಾಣ ಬೇಡ. ಈಗ ಕಾಂಗ್ರೆಸ್ ಕೂಡ ಯೋಚನೆ ಮಾಡ್ತಾ ಇದೆಯಂತಲ್ಲ ಈ ಯುದ್ಧದಿಂದ ನಮಗೇನು ಪ್ರಯೋಜನ ಇದೇಂತ; ಸರಕಾರ ಏನೂ ಹೇಳಲ್ಲ. ಯುದ್ಧ ಮುಗಿದಮೇಲೆ ನೋಡೋಣಾಂತ. ಗಣಪತಿ ಮದುವೆ – ಹೀಗಿದ್ದು ಕಾಂಗ್ರೆಸ್ ಕೂಡ ರಾಜಿ ಕೊಟ್ಟು ಪುನಃ ಎಲ್ಲ ಜೇಲಿಗೆ ಹೊಗುವಂತಾದರೆ…” + +ವಿದ್ಯಾ ಪತ್ನಿಯ ಮಾತನ್ನು ಕೇಳದವನಂತೆ ಆಕಾಶ ನೋಡುತ್ತಿದ್ದ… + +ಆಗ ದೋಣಿಯಲ್ಲಿದ್ದ ಪ್ರಯಾಣಿಕರೊಬ್ಬರು ಇವರ ಸಂಭಾಷಣೆಯನ್ನೆ ಆಲಿಸುತ್ತಿದ್ದವರು- + +“ಅಲ್ಲ ಮಹಾರಾಯರೆ, ಈ ಯುದ್ಧದಿಂದ ಚಿಮಿಣಿ ಎಣ್ಣೆಗೂ ಬರ ಬಂದಿದೆಯಲ್ಲ… ಇಲ್ಲಿ ದೀಪ ಉರಿಸೋದು ಹೇಗೇಂತ…”ವಿದ್ಯಾ ಅವರನ್ನೆ ನೊಡಿ, “ನಮ್ಮ ದೇಶಕ್ಕೆ ಹೊರಗಿನಿಂದ ಬರೋದೆಲ್ಲ ಇನ್ನು ಕಷ್ಟದಿಂದ ಬರಬೇಕಾಗುತ್ತೆ. ಬೆಲೆ ದುಬಾರಿಯಾಗತ್ತೆ, ಸಿಗೋದು ಕಡಿಮೆಯಾಗತ್ತೆ.” + +“ಆಮೇಲೆ ಹೊನ್ನೆ ಎಣ್ಣೆ ದೀಪಾನೇ ಬರಬೇಕಾಗುತ್ತೆ” ಎಂದಳು ಸಾವಿತ್ರಿ, ನಗುತ್ತಾ. ಅಷ್ಟರಲ್ಲಿ ಹೊಳೆಯ ಆಚೆಯ ದಡ ಬಂದಿತ್ತು… ಇಬ್ಬರೂ ಕೊಡದೂರಿನಾಚೆ ಹೋಗಲು ಕಾಯುತ್ತಿದ್ದ ಬಸ್ಸನ್ನೇರಲು ಮುಂದಾದರು. + +****** + +ಮಗಳು ಅಳಿಯನನ್ನು ಕಂಡೊಡನೆ “ಇಬ್ಬರೂ ಬಂದಿರಾ. ಒಳ್ಳೆಯದೇ ಆಯಿತು. ಚೆನ್ನಾಗಿದ್ದೀಯಲ್ಲ ಸಾವಿತ್ರೀ… ವಿದ್ಯಾ… ನಿನ್ನೊಡನೆ ಮಾತನಾಡಬೇಕೆಂದೇ ಕಾಯುತ್ತಿದ್ದೆ…. ಮದರಾಸಿನ ಕಾಂಗ್ರೆಸ್ ಸರಕಾರ ರಾಜಿ ಕೊಟ್ಟಿದೆಯಂತಲ್ಲ. ಕಾಂಗ್ರೆಸ್ ಆಡಳಿತ ಮುಗಿಯಿತಂತಲ್ಲ ಅಕ್ಟೋಬರ್ 21ಕ್ಕೆ. ಈಗ ಮಂಗಳೂರಿಗೆ ಮತ್ತೆ ಗಾನ್ ಸಾಹೇಬರೇ ಕಲೆಕ್ಟರರಾಗಿ ಬಂದಿದ್ದಾರಂತಲ್ಲ….” + +ವಿದ್ಯಾ ಸಾವಿತ್ರಿಯರಿಬ್ಬರಿಗೂ ಒಮ್ಮೆಗೇ ಅವರು ಕಾಂಗ್ರೆಸ್ಸಿನ ಬಗೆಗೆ ಏಕೆ ಮಾತನಾಡತೊಡಗಿದ್ದಾರೆಂದು ಅರ್ಥವಾಗಲಿಲ್ಲ. + +ಸಾವಿತ್ರಿ “ಅಪ್ಪಾ… ಶಂಕರ ಚಿಕ್ಕಪ್ಪ ಬಂದಿದ್ದರೇ ಎಲ್ಲಾದರೂ?” ಎಂದು ತನ್ನ ಆಸಕ್ತಿಯ ಪ್ರಶ್ನೆಯನ್ನೇ ಕೇಳಿದಳು. + +“ಇಲ್ಲಮ್ಮಾ. ಅವನ ಸುದ್ದಿಯೇ ಇಲ್ಲ, ನಿನ್ನ ಮದುವೆಯಾದ ಮೇಲೆ. ವರ್ಷಕ್ಕೆ ಒಮ್ಮೆಯಾದರೂ ಬರುತ್ತಿದ್ದವನು ಈಗ ಎಲ್ಲಿ ಗಾಂಧಿ ಸೇವೆಗೆ ಹೋಗಿದ್ದಾನೋ ದೇವರಿಗೆ ಗೊತ್ತು” ಎಂದರು. + +“ಹಾಗಿದ್ದರೆ ನಿಮಗೆ ಈ ಕಾಂಗ್ರೆಸ್ನ ವಿಚಾರ ಈಗ ಒಮ್ಮೆಗೇ ಇಷ್ಟೇಕೆ ಆಸಕ್ತಿ…? ಮೊನ್ನೆ 22 ಕ್ಕೆ ಕಾಂಗ್ರೆಸ್ ರಾಜಿ ಕೊಡಲು ನಿರ್ಧರಿಸಿದ್ದು ಪೇಪರ್ನಲ್ಲಿ ಬಂದದ್ದು ನಿಜ…. ಇನ್ನು ಬ್ರಿಟಿಷ್ ಸರಕಾರದ್ದೆ ಕಾರುಭಾರು… ಯಾರು ಕಲೆಕ್ಟರರಾಗಿ ಬಂದರೇನು ನಮ್ಮ ದೇಶ ಉದ್ಧಾರವಾಗತ್ತೆಯೇ… ಅಷ್ಟಕ್ಕೆಯೇ ಕಾಂಗ್ರೆಸ್ ನ ಹೋರಾಟ ನಿಲ್ಲತ್ತೆಯೇ?” + +“ಅದು ನನಗೂ ಗೊತ್ತು ಸುವ್ವೀ… ಹೋರಾಟ ನಿಲ್ಲೋಲ್ಲ. ಆದರೆ ಇನ್ನೂ ಎಷ್ಟು ಜನ ಜೈಲಿಗೆ ಹೋಗಬೇಕಾಗತ್ತೋ ನೋಡಬೇಕು…” + +“ಬರೇ ಜೈಲಿಗೆ ಹೋಗೋದರಿಂದ ಹೋರಾಟ ಮುಗಿಯೋಲ್ಲ ಮಾವಾ. ಅಲ್ಲದೆ ಬ್ರಿಟಿಷರಿಗೆ ಬಿಸಿ ತಟ್ಟೋ ಹಾಗೆ ಹೋರಾಟ ನಡೆಯೋದಿಕ್ಕೆ ಇನ್ನೂ ದೇಶ ಸಿದ್ಧವಾಗಿಲ್ಲ. ಈ ಗಾಂಧಿ ಅಹಿಂಸೆಯಿಂದ ಮಾತ್ರ ನಮಗೆ ಸ್ವಾತಂತ್ರ್ಯ ಸಿಗತ್ತೇಂತ ನಾವು ತಿಳಕೊಂಡಿದ್ದರೆ…” ವಿದ್ಯಾ ಮಾತನಾಡಿದ. + +ವಿದ್ಯಾ ಮಾತು ನಿಲ್ಲಿಸಿದ್ದು ಸಾವಿತ್ರಿಯ ಮುಖ ನೋಡಿದಾಗ ಅಲ್ಲಿ ಆತ ಒಂದು ವಿಚಿತ್ರ ರೀತಿಯ, ತಾನು ಹಿಂದೆಂದೂ ಕಾಣದ ಕಳವಳದ ಛಾಯೆಯನ್ನು ಗುರುತಿಸಿದಾಗ, ಆತನ ಮಾತು ಅರ್ಧಕ್ಕೆಯೇ ನಿಂತಿತು. + +ಸಾವಿತ್ರಿ ಗಂಡನನ್ನೇ ನೋಡುತ್ತ –“ಅಲ್ಲಾ…” ಎಂದಳು. + +ಈಗ ಮಾತನಾಡಿದ್ದು ಸೋಮಯಾಜಿಗಳು. + +“ವಿದ್ಯಾ… ನಾನೇ ನಿನ್ನನ್ನು ಕೇಳಬೇಕೂಂತ ಇದ್ದೆ… ಹೇಗೆ ಕೇಳೋದು ಅಂತ ಸ್ವಲ್ಪ ಸಂಕೋಚ ಕೂಡ ಇತ್ತು… ನಮ್ಮ ಸಾವಿತ್ರಿಗೆ ಗಾಂಧಿ ಸಂಸ್ಕಾರ ಅವಳ ಚಿಕ್ಕಪ್ಪನಿಂದಲೇ ಬಂದದ್ದು ಚಿಕ್ಕಂದಿನಿಂದ. ಆದರೆ ನಿನಗೆ ಈ ವಿಚಾರ, ಅದೂ ಸರಕಾರದ ವಿರುದ್ಧ ಮಾತನಾಡುವ ಹುಚ್ಚು, ಯಾವಾಗಿನಿಂದ ಬಂತೂಂತ ಕೇಳಬೇಕೂಂತ ಯೋಚಿಸಿಕೊಂಡಿದ್ದೆ…. ಅದಕ್ಕೂ ಕಾರಣ ಇದೆ….” + +ಸಾವಿತ್ರಿ ಗಂಡನ ಹಾಗೂ ತಂದೆಯ ಮುಖಗಳನ್ನೆ ನೋಡುತ್ತಿದ್ದಳು. + +“ಸಾವಿತ್ರೀ…” ಎಂದರು ಸೋಮಯಾಜಿಗಳು ಈಗ ಮಗಳನ್ನು ಉದ್ದೇಶಿಸಿ. “ಆ ರಿಟೈರ್ಡ್ ತಹಶೀಲ್ದಾರ ಇದ್ದಾರಲ್ಲ ಬಿಡದೂರಿನ ಗುಡ್ಡೆಯ ಮೇಲೆ…. ಬಂಗಲೆ ಕಟ್ಟಿಕೊಂಡಿರುವ ಅವರು ಒಂದು ವಾರದ ಹಿಂದೆ ಬಂದಿದ್ದರು ನಮ್ಮ ಅಂಗಡಿಗೆ – ಫೋಟೊ ತೆಗೆಸಿಕೊಳ್ಳುವ ಕೆಲಸವೇನೂ ಇರಲಿಲ್ಲ, ಬರೇ ಲೋಕಾಭಿರಾಮ ಮಾತನಾಡಲು. ಆದರೆ ಈ ಲೋಕಾಭಿರಾಮ ಉದ್ದೇಶಪೂರ್ವಕವಾಗಿಯೇ ಎಂದು ನನಗೆ ತಿಳಿದದ್ದು ಅವರು ವಿದ್ಯಾನ ಕುರಿತು ಮಾತನಾಡಿದಾಗ…” + +ಈಗ ವಿದ್ಯಾನ ಕುತೂಹಲವೂ ಚಿಗುರಿತ್ತು. + +“ಈಗ ಯುದ್ಧ ನಡೀತಿದೆಯಲ್ಲ… ಸರಕಾರ ನಮ್ಮನ್ನೂ ಯುದ್ಧಕ್ಕೆ ನೂಕಿದೆ. ಕಾಂಗ್ರೆಸ್ ಏನೇ ಹೇಳಲಿ… ಯುದ್ಧ ಬೇಡಾಂತ ಯಾರೂ ಮಾತನಾಡೋ ಹಾಗಿಲ್ಲ. ನಮ್ಮ ದೇಶದಲ್ಲಿದ್ದ ಜರ್ಮನರನ್ನೆಲ್ಲ ಹಿಡಿದಿಟ್ಟಿದ್ದಾರೆ. ಹಾಗೆಯೇ ಈಗ ಬಂದಿದೆಯಂತಲ್ಲ ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ ಅಂತ, ಯುದ್ಧವನ್ನ ಅಥವಾ ಸರಕಾರವನ್ನ ವಿರೋಧಿಸುವವರನ್ನೆಲ್ಲ ಜೈಲಿಗೆ ತುರುಕೋದಿಕ್ಕೆ ಅಭ್ಯಂತರವೇನೂ ಇಲ್ಲ ಅಂತ. ಹೀಗಾಗಿ ಯಾರ ಮೇಲೆ ಗುಮಾನಿ ಬಂದರೂ ಅವರನ್ನ ಜೈಲಿಗೆ ತಳ್ಳೋದಿಕ್ಕೆ ಸರಕಾರ ಯಾರನ್ನೂ ಕೇಳೋಲ್ಲ.” + +“ಇದಕ್ಕೂ ನನಗೂ ಏನು ಸಂಬಂಧ ಮಾವಾ…” + +“ಅದನ್ನೇ ಹೇಳ್ತೇನೆ…. ನಿನ್ನ ಹೆಸರೂ ಅವರ ಬಾಯಿಯಿಂದ ಬಂದಾಗ ನನಗೆ ಆಶ್ಚರ್ಯ. ನೀನು ಶಾಲೆಯ ಕೊರಗರ ಹುಡುಗನಿಗೆ ಪಾಠ ಹೇಳ್ತೀಂತ ಯಾರೂ ಆಕ್ಷೇಪಣೆ ಮಾಡೋಲ್ಲ. ಆದರೆ ನೀನು ಸರಕಾರಕ್ಕೆ ಬೇಡವಾದವರ ಜತೆ ತಿರುಗುತ್ತೀಂತ ಸೈಮನ್ ಪರೇರಾಗೆ ಗೊತ್ತೋ ಅಥವಾ ಅವರು ಬೇಕೂಂತಲೇ ಏನೇನೋ ಹೇಳ್ತಾರೋ ನನಗೆ ತಿಳಿದಿಲ್ಲ. ಆದರೆ ಅವರು ನನ್ನ ಹತ್ತಿರ ಹೇಳಿದ್ದು, ನಿಮ್ಮ ಅಳಿಯನಿಗೆ ಸ್ವಲ್ಪ ಎಚ್ಚರದಿಂದಿರುವ ಹಾಗೆ ಹೇಳಿ, ಸರಕಾರಕ್ಕೆ ಬೇಡವಾದವರ ಜತೆ ಅವರ ಸಂಪರ್ಕ ಇದೆ, ಇದರಿಂದ ಅವರಿಗೇ ಕೇಡಾಗುವ ಸಂಭವ ಇದೆ ಅಂತ…. ನೀನು ಆಗಾಗ ಮಂಗಳೂರಿಗೆ ಹೋಗ್ತಾ ಇರ್ತೀಯಂತೆ. ಯಾರು ಯಾರನ್ನೋ ನೋಡ್ತೀಯಂತೆ. ಇದೆಲ್ಲ ಅವರಿಗೆ ಗೊತ್ತಾದದ್ದು ಹೇಗೇಂತ ನನಗೆ ಆಶ್ಚರ್ಯ…” + +ಸಾವಿತ್ರಿ ಕೂಡ ಗಂಡನನ್ನೇ ನೋಡುತ್ತಿದ್ದಳು. ಅವಳ ಮುಖದಲ್ಲೂ ಕಳವಳ ವ್ಯಕ್ತವಾಗುತ್ತಿತ್ತು. + +“ಮಾವಾ…. ನಾನು ಕೆಲವೊಮ್ಮೆ ಮಂಗಳೂರಿಗೆ ಹೋಗಿ ಬರ್ತಾ ಇರೋದು ನಿಜ. ಆದರೆ ಹೆಚ್ಚಾಗಿ ಶಾಲೆಗೆ ಸಂಬಂಧಿಸಿದ ಕೆಲಸದ ಸಲುವಾಗಿಯೇ… ಜಿಲ್ಲಾ ಬೋರ್ಡು ಕಛೇರಿಯಲ್ಲಿ ಶಾಲೆಗೆ ಸಂಬಂಧಿಸಿದ ಕೆಲಸ ಇದ್ದಾಗ ಸುಧಾಕರ ರಾಯರು ನನ್ನನ್ನೇ ಕಳುಹಿಸುತ್ತಾರೆ. ಹಾಗೆ ಹೋದಾಗ ನಾನು ಯಾರನ್ನು ನೋಡ್ತೇನೆ, ಏನು ವಿಚಾರ ಮಾಡ್ತೇನೇಂತ ತಿಳಕೊಳ್ಳುವ ಅಧಿಕಪ್ರಸಂಗ ಸೈಮನ್ ಪರೇರಾಗೆ ಅಗತ್ಯವಿಲ್ಲ. ಡಿಫೆನ್ಸ್ ಆಫ್ ಇಂಡಿಯಾ ರೂಲ್ಸ್ ಇದೆ, ನಮ್ಮ ಘನ ಸರಕಾರ ನಮಗೆ ಬೇಡವಾದ ಯುದ್ಧಕ್ಕೆ ನಮ್ಮನ್ನು ಸೇರಿಸಿಕೊಂಡಿದೆ ಅಂತ ನನಗೆ ಗೊತ್ತು. ಆದರೆ ನಾನೇನೂ ದೇಶದ್ರೋಹದ ಕೆಲಸ ಈ ತನಕ ಮಾಡಿಲ್ಲ…. ಒಂದು ವೇಳೆ… ಮಾಡಬೇಕೂಂತ ಅನಿಸಿದರೂ ಸೈಮನ್ ಪರೇರಾನ್ನ ಕೇಳಿ ಮಾಡೋಲ್ಲ…” + +ವಿದ್ಯಾನ ಮಾತು ಕೇಳಿ ಸೋಮಯಾಜಿಗಳಿಗಿಂತಲೂ ಹೆಚ್ಚು ಆಶ್ಚರ್ಯವಾದದ್ದು ಸಾವಿತ್ರಿಗೆ…. ತನಗೆ ಅರ್ಥವಾಗದ ದಿಕ್ಕಿನಲ್ಲಿ ವಿದ್ಯಾ ಹೋಗುತ್ತಿದ್ದಾನೆಯೇ, ತಾನು `ಹಿಂದೂ’ ಪತ್ರಿಕೆ ಓದಿ ದೊರಕಿಸಿಕೊಂಡ ಜ್ಞಾನಕ್ಕಿಂತಲೂ ಹೆಚ್ಚಾದ ಜಿಜ್ಞಾಸೆಗೆ ಗಂಡ ತೊಡಗಿದ್ದಾನೆಯೇ ಎಂಬ ಸಂದೇಹ ಬಲವಾಗತೊಡಗಿತ್ತು. + +ಇದು ಸಾಧ್ಯವಾದದ್ದಾದರೂ ಹೇಗೆ? ಆತನ ಓದಿನಿಂದಲೇ, ಈ ಸುಧಾಕರರಾಯರ ಸಂಪರ್ಕದಿಂದಲೇ… ಅಥವಾ ಬೇರೆ ಯಾರಾದರೂ ಅವನ ವಿಚಾರಗತಿಯನ್ನು ನಿರ್ಧರಿಸುವಷ್ಟು ಮುಂದುವರಿದಿದ್ದಾರೆಯೇ? + +ಸೋಮಯಾಜಿಗಳು ಕೆಲವು ಕ್ಷಣ ಮೌನವಾಗಿದ್ದರೂ ಕೊನೆಗೆ –“ವಿದ್ಯಾ…. ಪರೇರಾ ಅಂತಹ ಉಪದ್ರ ಕೊಡುವ ವ್ಯಕ್ತಿ ಅಂತ ನನಗೆ ಅನಿಸೋಲ್ಲ, ಆದರೆ ನೀನು ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು… ನೋಡು. ಸಾವಿತ್ರಿಯೂ ತಿಂಗಳು ತುಂಬುತ್ತಿರುವ ಬಸುರಿ. ಚಿಂತೆಗೆ ಕಾರಣವಾಗುವ ಸಂದರ್ಭ ಬರಬಾರದು, ನೋಡು…” + +ಆದರೆ ಸಾವಿತ್ರಿಯ ಮನಸ್ಸೆಲ್ಲ ವಿದ್ಯಾನ ವಿಚಾರವೇ ಚಿಂತಿಸುತ್ತಿತ್ತು… ಆತನಲ್ಲಿ ಬಂದಿರುವ ಬದಲಾವಣೆಗೆ ಹೇಗೆ ಅರ್ಥ ಹಚ್ಚಬೇಕು… ಮನೆಗೆ ಮರಳುತ್ತಿದ್ದಾಗ ದಾರಿಯಲ್ಲಿ ಮೌನವಾಗಿಯೇ ನಡೆಯುತ್ತಿದ್ದ ಗಂಡನೊಡನೆ ಮಾತು ಬೆಳೆಸಿದ್ದು ಸಾವಿತ್ರಿಯೇ… + +“ಇದೇನಿದು, ನೀವು ಮಂಗಳೂರಿಗೆ ಹೋಗಿ ಏನೋ ಕಿತಾಪತಿ ನಡೆಸ್ತೀರ. ನಿಮಗೆ ಓದುವ ಹುಚ್ಚು ತಲೆಗೆ ಅಂಟಿಕೊಂಡಿದೆ ಅಂತ ನನಗೆ ಗೊತ್ತು… ನನಗೆ ಸಂತೋಷವೇ, ಆದರೆ ನೀವು ಬೇಡವಾದವರ ಜತೆ ಸೇರಿಕೊಳ್ತೀರಿ ಅಂತ ಪರೇರಾ ಹೇಳೋದಿಕ್ಕೆ ಏನಾದರೂ ಕಾರಣ ಇರಬೇಕಲ್ಲ. ಬೆಂಕಿ ಇರದೆಯೇ ಹೊಗೆ ಏಳುತ್ತೆಯೇ. ನನ್ನ ಹತ್ರಾನೂ ಹೇಳದೆ ಇರೋ ಕೆಲಸ ನೀವು ಏನು ಮಾಡ್ತಿದ್ದೀರ?” + + + +ತುಸು ಹೊತ್ತು ಮೌನವಾಗಿಯೇ ನಡೆಯುತ್ತಿದ್ದ ವಿದ್ಯಾ ಮನೆ ಸಮೀಪಿಸುತ್ತಿದ್ದಂತೆ, “ಸುವ್ವೀ… ನನಗೆ ಓದುವ ಹುಚ್ಚು ಹಿಡಿಸಿದ್ದು ನೀನೆ ಅಲ್ಲವೇನೆ?.. ಆದರೆ ತಿಳಿವಳಿಕೆ ಯಾವಾಗಲೂ ಹೆಚ್ಚಿನ ತಿಳಿವಳಿಕೆಯನ್ನೆ ಅಪೇಕ್ಷಿಸುತ್ತದೆಯೇ… ಓದು ಹೆಚ್ಚಾದಾಗ ಕಳವಳವೂ ಹೆಚ್ಚಾಗುತ್ತೆ – ಯಾಕೆ ಹೀಗೆಲ್ಲ ಇದೇಂತ… ಯಾಕೆ ನಮ್ಮ ತಿಳಿವಳಿಕೆ ವಿಚಾರಾನ ಬೆಳೆಸಿಕೊಳ್ಳೋದಿಲ್ಲ ಅಂತ… ನಮ್ಮ ಬ್ರಿಟಿಷ್ ಸರಕಾರಕ್ಕೆ ಭಾರತೀಯರೆಲ್ಲ ದೇಶ ದ್ರೋಹಿಗಳೇ – ಅವರು ಕೊಳ್ಳೆ ಹೊಡೆಯುತ್ತಿರುವ ಸಂಪತ್ತನ್ನು ನ್ಯಾಯವಾಗಿ ತಿನ್ನಬೇಕಾದವರು… ಪರೇರಾ ನನ್ನ ವಿಚಾರ ನಿನ್ನ ಅಪ್ಪನೊಡನೆ ಏನೋ ಹೇಳಿದ್ದಕ್ಕೂ ಅವನಿಗೆ ತಿಳಿದ ಕಾರಣ ಇರಬಹುದು… ನಾನು ಬರೇ ಹಳ್ಳಿ ಶಾಲೆಯ ಮಾಸ್ತರ್, ಹಾಗೆಯೇ ನಡೆದುಕೊಳ್ಳಬೇಕೂಂತ ಅವನಿಗೂ ಅವನಂಥವರಿಗೂ ಅಪೇಕ್ಷೆ ಇರೋದು ಸರಿಯೇ… ಆದರೆ ಸುವ್ವೀ, ನನಗೆ ಈಗ ಯಾವುದೂ ಸರಿ ಕಾಣ್ತ ಇಲ್ಲ…. ಯಾವುದೂ… ಒಮ್ಮೊಮ್ಮೆ ತಲೆಯಲ್ಲಿ ಏನೇನೋ ವಿಚಾರ ಹೊಳೆಯತ್ತೆ… ಏನೇನೋ… ಎಲ್ಲಾದರೂ ಓಡಿಹೋಗೋಣಾಂತಲೂ ಅನಿಸತ್ತೆ…. ನಾನು ಮಂಗಳೂರಲ್ಲಿ ಒಬ್ಬರ ಜತೆ ಸಂಪರ್ಕ ಇಟ್ಟುಕೊಂಡಿರೋದು ನಿಜ. ನಾನು ಹಿಂದೆಯೇ ಹೇಳಿದ್ದೆನಲ್ಲ… ಅವರ ಮೇಲೆ ಸರಕಾರದ ಕಣ್ಣಿರೋದೂ ನಿಜ. ಆದರೆ ಅವರು ಲಾಯರ್ ಕೂಡ. ನನಗೆ ಅವರ ವಿಚಾರ ತಿಳಿಸಿದ್ದು ನಮ್ಮ ಸುಧಾಕರ ರಾಯರೇ… ಅದು ಅವರು ಮಾಡಿದ ದೊಡ್ಡ ಉಪಕಾರಾಂತಲೂ ನಾನು ತಿಳಿದುಕೊಂಡಿದ್ದೇನೆ. ಆದರೆ ಅವರ ಮೇಲೆ ಸರಕಾರದ ಕಣ್ಣಿದೇಂತ ನಾನೇನೂ ದುಡುಕಿ ಕೆಲಸ ಮಾಡುವ ಯೋಚನೆ ಮಾಡ್ತಾ ಇಲ್ಲ ಸದ್ಯ… ಹಾಗೆ ನಾನು ಒಬ್ಬನಿಂದಲೇ ಏನಾದರೂ ಮಹತ್ತರ ಫಿತೂರಿ ಸಾಧ್ಯವಾಗತ್ತೇಂತಾನೂ ತಿಳಿದಿಲ್ಲ… ಪರೇರಾ ಏನೇ ಹೇಳಲಿ, ಸದ್ಯ ನಿನಗೆ ನಿಶ್ಚಿಂತೆ ಸುವ್ವೀ. ಈಗ ನಿನ್ನಂತೆ ನನಗೂ ಪಾಪಾನದ್ದೇ ಯೋಚನೆ…” + +ಮನೆ ತಲುಪುವಾಗ ಸಾವಿತ್ರಿಯ ಮುಖದಲ್ಲಿ ನಗು ಅರಳಿತ್ತು. + +****** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_259.txt b/Kenda Sampige/article_259.txt new file mode 100644 index 0000000000000000000000000000000000000000..6cf7729b0561dad3cf50d314f43bdcdf6a0f6dd6 --- /dev/null +++ b/Kenda Sampige/article_259.txt @@ -0,0 +1,35 @@ +byಶ್ರೀದೇವಿ ಕೆರೆಮನೆ|Jul 6, 2020|ದಿನದ ಪುಸ್ತಕ,ಸಾಹಿತ್ಯ| 2 Comments + +“ಕಥಾವಸ್ತುವೇನೋ ತೀರಾ ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ ನಿರ್ಭಿಡೆಯಿಂದ….” + +byಆರ್. ವಿಜಯರಾಘವನ್|Jul 5, 2020|ವಾರದ ಕಥೆ,ಸಾಹಿತ್ಯ| 0 Comments + +“ಮಂಗಿಯಾರೊಟ್ಟಿ ಮುದುಕನಿಗೆ ಕೈ ಚಾಚಿ ಕಂದಕದಿಂದ ಹೊರಗೆಳೆದು, ಒಣಹುಲ್ಲಿನ ಗೊಂಬೆಯಂತೆ ಅವನನ್ನ ಕ್ಷಣ ಎತ್ತಿ ಹಿಡಿದು ಕಾಲು ಗಾಳಿಯಲ್ಲಿ ತೇಲಿಸಿ ಕೆಳಕ್ಕಿಳಿಸಿದ. ಮುದುಕ ಒಂದು ಮೀಟರ್ ಎತ್ತರಕ್ಕಿಂತ ಹೆಚ್ಚಿಲ್ಲ ಎಂದು ನಾನು ಕಂಡುಕೊಂಡೆ. ಅವನು ತನ್ನ ತೋಳಿನ ಕೆಳಗೆ ಬೃಹತ್ ಬ್ರೀಫ್ ಕೇಸ್ ಅನ್ನು ಹಿಡಿದಿದ್ದ…” + +byಕೆಂಡಸಂಪಿಗೆ|Jun 29, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ ಏನೇನು ಅನುಕೂಲ…” + +byಡಾ. ಬಿ. ಜನಾರ್ದನ ಭಟ್|Jun 28, 2020|ವಾರದ ಕಥೆ,ಸಾಹಿತ್ಯ| 0 Comments + +“ಬೆಳಗ್ಗಿನಿಂದ ಸಾಯಂಕಾಲದ ತನಕ ಕಛೇರಿಯ ಜಗಲಿಯಲ್ಲಿ, ವಕೀಲರ ಬೈಠಾಕಿನಲ್ಲಿ, ಜಮೀನ್ದಾರರ ಸಭೆಯಲ್ಲಿ ಕಾಲಕಳೆಯುತ್ತಿದ್ದ ರಾಯರು ಅಂದು ಬೇಗನೆ ಹಿಂದಿರುಗಿದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ಅಧಿಕಾರಿಗಳು ತಮ್ಮಂಥವರ ಮಾಳಿಗೆ ಮನೆಗಳನ್ನು ಮಾತ್ರ ಜಡ್ತಿ ಮಾಡುವರಲ್ಲದೆ…” + +byಶ್ರೀದೇವಿ ಕೆರೆಮನೆ|Jun 22, 2020|ದಿನದ ಪುಸ್ತಕ,ಸಾಹಿತ್ಯ| 1 Comment + +“ದೇಶಪ್ರೇಮವೆಂದರೆ ಈಗ ನಾವು ತಿಳಿದಿರುವಂತಹ ಯುದ್ಧೋನ್ಮಾದವಲ್ಲ. ಹಾಗೆಂದು ನಮ್ಮನ್ನು ನಾವು ಅಡವಿಟ್ಟುಕೊಳ್ಳುವ ಹೇಡಿತನವೂ ಅಲ್ಲ. ಒಂದು ಮನೆಯನ್ನು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಲಾಗುವುದಿಲ್ಲ. ಹಾಗೆ ನಿರ್ಮಿಸಿದರೆ ಅದು ಕೇವಲ ಕಟ್ಟಡವಾಗುತ್ತದೆಯೇ ಹೊರತು…” + +byಶರಣಬಸವ ಕೆ ಗುಡದಿನ್ನಿ|Jun 21, 2020|ವಾರದ ಕಥೆ,ಸಾಹಿತ್ಯ| 0 Comments + +“ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು…” + +byಕೆಂಡಸಂಪಿಗೆ|Jun 15, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಮನೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿದ್ದರಿಂದ ಎಲ್ಲ ವಸ್ತುಗಳು ಅಸ್ಪಷ್ಟವಾಗಿದ್ದರೂ ಪತ್ತೆ ಹಚ್ಚುವಷ್ಟು ಚುರುಕಾಗಿತ್ತು ಅಜ್ಜಿ. ಕೊನೆಗೆ ಅಜ್ಜಿಗೆ ಕಣ್ಣು ಕಾಣುತ್ತೋ ಇಲ್ಲವೋ ಅಂತ ಪತ್ತೆ ಹಚ್ಚಲು ನಮ್ಮ ತಂದೆ ಒಂದು ಉಪಾಯ ಮಾಡಿದ್ದರು. ಅಜ್ಜಿಯನ್ನು ಸಿನೆಮಾಕ್ಕೆ ಕರೆದುಕೊಂಡುಹೋಗಿ ಪರದೆಯ ಮುಂದೆ ಕೂರಿಸದೆ, ಹಿಂದು ಮುಂದಾಗಿ ಕೂರಿಸಿದ್ದರು. ಪ್ರೊಜೆಕ್ಟರ್ ರೂಮಿನಿಂದ…” + +byಡಾ. ಬಿ. ಜನಾರ್ದನ ಭಟ್|Jun 14, 2020|ವಾರದ ಕಥೆ,ಸಾಹಿತ್ಯ| 0 Comments + +“ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು…” + +byಶ್ರೀದೇವಿ ಕೆರೆಮನೆ|Jun 8, 2020|ದಿನದ ಪುಸ್ತಕ,ಸಾಹಿತ್ಯ| 2 Comments + +“ಅಕಾರಣದಿಂದಾಗಿಯೇ ಅವರ ಕಣ್ಣನ್ನು ಹೊಡೆದು ಕೀಳಿಸುವ ಪ್ರಯತ್ನವೂ ನಡೆದಿತ್ತು. ಬಹುಶಃ ಕಥೆಗಾರನ ಕಥಾಶಕ್ತಿಯ ದೈತ್ಯತೆ ಅರಿವಾಗುವುದೇ ಈ ಹಂತದಲ್ಲಿ. ಉಪಕಾರ ಪಡೆದುಕೊಂಡು ರೈತನಾದವನ ಮಕ್ಕಳನ್ನೆ ಕರೆದುಕೊಂಡು ಬಂದಿದ್ದ ಪಟೇಲ ಬುಜಂಗ, ಭಟ್ಟರು ಅತ್ತ ಕಂಪ್ಲೇಂಟನ್ನೂ ಕೊಡಲಾಗದ..” \ No newline at end of file diff --git a/Kenda Sampige/article_26.txt b/Kenda Sampige/article_26.txt new file mode 100644 index 0000000000000000000000000000000000000000..6ac113541be910171f23b8cf14482c527776f418 --- /dev/null +++ b/Kenda Sampige/article_26.txt @@ -0,0 +1,15 @@ +ಅಷ್ಟಕ್ಕೆ ಮುಗಿಯಲಿಲ್ಲ ವ್ಯಾಕ್ಸಿನ್ ಕಥೆ.. ವ್ಯಾಕ್ಸಿನ್ನುಗಳನ್ನು ಹಾಕಿಸಿಕೊಂಡು ಮನೆಗೆ ಬಂದ ಮೇಲೆ ಕೂರಾ ಹುಷಾರಾಗಿಯೇ ಇದ್ದ. ವಾಂತಿಯೇನಾದರು ಆದರೆ ಕರೆದುಕೊಂಡು ಬನ್ನಿ ಎಂದು ಆಸ್ಪತ್ರೆಯವರು ಹೇಳಿದ್ದರಾದರು ಅಂತಹದ್ದೇನು ಆಗಲಿಲ್ಲ. ಅವನ ಕಕ್ಕ ತೆಗೆದುಕೊಂಡು ಬನ್ನಿ ಎಂತಲೂ ಹೇಳಿದ್ದರು. ಮಾರನೇ ದಿನ ಅದನ್ನು ತೆಗೆದುಕೊಂಡು ಹೋಗಿ ಆಸ್ಪತ್ರೆಗೆ ಕೊಟ್ಟು ಬಂದದ್ದು ಆಯಿತು. ಅದರ ಪರೀಕ್ಷೆಯೂ ನಡೆದು ಅವನು ಸಂಪೂರ್ಣವಾಗಿ ಆರೋಗ್ಯವಾಗಿದ್ದಾನೆ ಎಂದು ಹೇಳಿದಾಗ ನಮಗೂ ಸಮಾಧಾನ. ಅದಾದ ಮೇಲೆ ಕೂರಾನಿಗೆ ಒಂದು ವರ್ಷವಾಗುವವರೆಗು ಪ್ರತಿ ಮೂರು ತಿಂಗಳಿಗೊಮ್ಮೆ ವ್ಯಾಕ್ಸಿನ್ ಶ್ಕೆಡ್ಯೂಲ್ ಇದ್ದಿದ್ದರಿಂದ ಮೂರು ತಿಂಗಳಿನ ನಂತರ ಮತ್ತೆ ಅದೇ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ತೂಕ ನೋಡುವ, ಅವನ ಹೊಟ್ಟೆ, ಕಿವಿ ಇತ್ಯಾದಿಗಳ ಬೇಸಿಕ್ ಪರೀಕ್ಷೆ ಆದ ಮೇಲೆ ವ್ಯಾಕ್ಸಿನ್ ಹಾಕಿಸುವ ಸರದಿ ಬಂತು. ಆದರೆ ಈ ಬಾರಿ ನಮ್ಮ ಮುಂದೆ ಕೊಡಲಿಲ್ಲ. ಬದಲಾಗಿ ಕೂರಾನನ್ನು ಒಳಗಡೆ ಕರೆದುಕೊಂಡು ಹೋಗಿ ವ್ಯಾಕ್ಸಿನ್ ಕೊಡುವುದಾಗಿ ಹೇಳಿದಳು. ಅದು ಯಾಕೆ ಹಾಗೆ ಹೇಳಿದಳೋ.. ಮೊದಲ ಸಲ ಅವಳು ನಯವಾಗಿ, ಕೂರಾನಿಗೆ ನೋವಾಗದ ಹಾಗೆ ಕೊಟ್ಟಿದ್ದನ್ನು ನೋಡಿ ನಮಗೆ ಅವಳ ಮೇಲೆ ಧೈರ್ಯ ಬಂದಿದ್ದರಿಂದ ಆಗಲಿ ಎಂದೆವು. ಒಳಗೆ ಕರೆದುಕೊಂಡು ಹೋದಾಗ ಕೂರಾ ನಮ್ಮತ್ತ ತಿರುಗಿ ನೋಡುವನೇನೋ ಎಂದು ನಾವು ಕಾಯುತ್ತಿದ್ದರೆ ಅವನು ಮಾತ್ರ ತಾನು ಬರಿ ಟ್ರೀಟ್‌ಗಳು ತುಂಬಿಕೊಂಡಿರುವ ಜಗತ್ತಿಗೆ ಹೋಗುತ್ತಿದ್ದೇನೆ ಎಂಬಂತೆ ಆಸೆಯಿಂದ ಅವಳ ಜೊತೆಯಲ್ಲಿ ಹೋದ. ಇತ್ತ ನಾವು ಅವನಿಗಾಗಿ ಕಾಯುತ್ತ ಕೂತೆವು. ಸ್ವಲ್ಪ ಹೊತ್ತಿನಲ್ಲಿ ಒಳಗಡೆಯಿಂದ ಜೋರಾದ ಕುಂಯ್ಯ ಕುಂಯ್ಯ ಸದ್ದು ಕೇಳಿಸಿತು. ಅದು ಕೂರಾನೇ ಎಂದು ಗೊತ್ತಾಗಿ ಅದೇನು ಮಾಡುತ್ತಿದ್ದಾರೋ ಎಂದು ಚಿಂತೆಯಾಯಿತು. ಹೊರಗಡೆ ಬಂದಾಗ ಅವನ ಕತ್ತಿನಲ್ಲಿ ನಾವು ಹಾಕಿದ ನೀಲಿಯ ಹಗ್ಗದ (ಲೀಶ್) ಬದಲಾಗಿ ಆಸ್ಪತ್ರೆಯವರ ಹಳದಿ ಬಣ್ಣದ ಲೀಶ್ ಇತ್ತು. ಬಾಲ ಮುದುರಿಸಿಕೊಂಡು ನಮ್ಮತ್ತ ಬಂದ ಅವನನ್ನು ನೋಡಿ ಅವನು ಹೆದರಿಕೊಂಡಿದ್ದಾನೆಂದು ಅರ್ಥವಾಗಿತ್ತು. + +ಅದಾದ ಮೇಲೆ ಮನೆಗೆ ಬಂದು ಅವನ ಲೀಶ್ ತೆಗೆದು ಮಾಮೂಲಿಯಂತೆ ಮನೆಯ ತುಂಬ ಓಡಾಡಲು ಬಿಟ್ಟೆವು. ಸಂಜೆಯ ವಾಕಿಂಗ್ ಸಮಯಕ್ಕೆ ಲೀಶ್ ಹಾಕಲು ಹೋದರೆ ಮೊದಲಿನ ಹಾಗೆ ಸುಮ್ಮನೆ ಕತ್ತು ಬಗ್ಗಿಸಿ ಹಾಕಿಸಿಕೊಳ್ಳಲೇ ಇಲ್ಲ! ಲೀಶ್ ಕಂಡರೆ ಸಾಕು ಓಡಿ ಹೋಗುವುದು, ನಾವು ಹಿಂದೆಯಿಂದ ಹೋದರೆ ಮೂಲೆಗೆ ಹೋಗಿ ಹೆದರಿಕೊಂಡವರ ಹಾಗೆ ನಿಲ್ಲುವುದು, ಕಚ್ಚುತ್ತೇನೆ ಎಂದು ಸಕ್ಕರೆ ಹಲ್ಲುಗಳನ್ನು ತೆಗೆದು ಹೆದರಿಸುವುದು ಎಲ್ಲ ನಡೆಯಿತು. ಆಸ್ಪತ್ರೆಯಿಂದ ಬಂದ ಮೇಲೆ ಹೀಗೆ ಆಡುತ್ತಿದ್ದಾನೆ ಎಂಬುದು ಗಮನಕ್ಕೆ ಬಂತು. ಅಲ್ಲಿ ಅವರು ಒಳಗೆ ಕರೆದುಕೊಂಡು ಹೋದಾಗ ಅದೇನು ನಡೆದಿತ್ತೋ.. ಪ್ರತಿ ಸಲ ಲೀಶ್ ಹಾಕಬೇಕಾದಾಗ ಅವನ ಜೊತೆ ಒಂದು ಸಣ್ಣ ಯುದ್ಧವನ್ನು ಮಾಡಿದಂತಾಗುತ್ತಿತ್ತು. ಹೊರಗಡೆ ಹೋದರೆ ಕಡ್ಡಾಯವಾಗಿ ಲೀಶ್ ಹಾಕಲೇಬೇಕು ಎಂಬ ನಿಯಮವಿರುವಾಗ ಇವನು ಲೀಶ್ ಹಾಕಿಸಿಕೊಳ್ಳಲು ಇಷ್ಟು ಹೆದರಿಕೊಂಡರೆ ಹೇಗೆ ಎಂದು ಚಿಂತೆ ನಮಗೆ. ಕುಕಿ ಎಂದ ಕೂಡಲೇ ಎಲ್ಲಿದ್ದರು ಓಡಿ ಬಂದು ಕಾಲಡಿಯಲ್ಲಿ ಕೂತು ಮಿಕ ಮಿಕ ನೋಡುತ್ತ ಇನ್ನೇನು ಕೊಡುತ್ತಾರೆ ಎಂಬ ಆಸೆಯಲ್ಲಿ ಜೊಲ್ಲು ಸೋರಿಸುತ್ತ ಕೂತು ಬಿಡುತ್ತಿದ್ದ ಕೂಸಿಗೆ ಈಗ ಕೈಯ್ಯಲ್ಲಿ ಲೀಶ್ ಇದ್ದದ್ದನ್ನು ನೋಡಿದರೆ ಓಡಿ ಹೋಗಿ ಬಿಡುವಷ್ಟು ಭಯ ತುಂಬಿಕೊಂಡು ಬಿಟ್ಟಿತ್ತು. + + + +ಲೀಶ್ ಹಾಕಿ ಸೂಜಿ ಚುಚ್ಚುವುದಿಲ್ಲ ಎಂದು ಅವನಿಗೆ ತಿಳಿಯುವ ಹಾಗೆ ನಯವಾಗಿ ವರ್ತಿಸುತ್ತ ನಿಧಾನವಾಗಿ ಲೀಶ್ ಅಭ್ಯಾಸ ಮಾಡಿಸಲು ಸುಮಾರು ಮೂರು ತಿಂಗಳುಗಳೇ ಹಿಡಿಯಿತು. ನಾಯಿಗಳ ಮನಸ್ಸಿನಲ್ಲಿ ಯಾವುದರ ಬಗ್ಗೆಯಾದರು ಭಯ ಕೂತು ಬಿಟ್ಟರೆ ಅವುಗಳಿಗೆ ಆ ವಿಷಯದ ಬಗ್ಗೆ ಅದೆಷ್ಟು ಭಯವಿರುತ್ತದೆ ಎಂದು ಗೊತ್ತಾಗಿದ್ದು ಆಗಲೇ. ಚಿಕ್ಕವರಿದ್ದಾಗ ನಾಯಿಯ ಬಾಲಕ್ಕೆ ಹುಡುಗರು ಪಟಾಕಿ ಕಟ್ಟಿ ಅದು ಸಿಡಿದಾಗ ಕುಂಯ್ಯ ಕುಂಯ್ಯ ಎಂದು ಓಡಿ ಹೋದದ್ದು, ಅದನ್ನು ನೋಡಿ ನಾವು ನಕ್ಕಿದ್ದನ್ನೆಲ್ಲ ನೆನೆದು ಅದೆಷ್ಟು ಪ್ರಾಣಿಗಳು ನಮ್ಮಿಂದ ಹಿಂಸೆ ಪಟ್ಟಿವೆಯೋ ಎನ್ನಿಸುತ್ತದೆ. ಪ್ರತಿಯೊಂದು ಜೀವದಲ್ಲಿ ದೇವರಿದ್ದಾನೆ ಎಂದು ಹೇಳುತ್ತಾರಲ್ಲ.. ಅದು ನಾವು ಇನ್ನೊಂದು ಜೀವಿಯನ್ನು ಗೌರವ ಮತ್ತು ಪ್ರೀತಿಯಿಂದ ಕಾಣಲಿ ಎಂಬ ಕಾರಣಕ್ಕೆ. ದೇವರ ಹಾಗೆ ನೋಡದೇ ಇದ್ದರೂ ಕನಿಷ್ಟ ಇನ್ನೊಬ್ಬ ಮನುಷ್ಯನಿಗೆ ಕೊಡುವಂತಹ ಬೇಸಿಕ್ ಕಾಳಜಿಯನ್ನು ಈ ಪ್ರಾಣಿಗಳಿಗೆ ತೋರಿಸಿದರೆ ಸಾಕು. ಈಗೀಗ ಯಾರು ಹೀಗೆ ಮಾಡುವುದಿಲ್ಲವಾದರು, ಮನುಷ್ಯರನ್ನೇ ಪ್ರಾಣಿಗಳ ಹಾಗೆ ನಡೆಸಿಕೊಳ್ಳುವ ಕೆಲವು ಮೃಗಗಳಿಗೆ ಪ್ರಾಣಿಗಳು ಯಾವ ಲೆಕ್ಕ. + +ಹೀಗೆ ವ್ಯಾಕ್ಸಿನೇಷನ್ ನಂತರ ನಾಯಿಗಳ ವರ್ತನೆಯಲ್ಲಿ ಬದಲಾವಣೆಗಳಾಗುವುದು ಸಹಜ. ಅದು ಮನಸ್ಸಿನಲ್ಲಿ ಕಟ್ಟಿಕೊಂಡ ಭಯದ ಕಾರಣಕ್ಕು ಇರಬಹುದು ಅಥವಾ ಹಾಕಿರುವ ವ್ಯಾಕ್ಸಿನ್‌ನಿಂದ ಆದ ಪರಿಣಾಮವು ಇರಬಹುದು. ಬಹಳಷ್ಟು ನಾಯಿ ಪೋಷಕರು ವ್ಯಾಕ್ಸಿನ್ ಹಾಕಿಸುವುದೆಂದರೆ ಜೀವ ಕೈಯ್ಯಲ್ಲಿ ಹಿಡಿದುಕೊಂಡೇ ತಮ್ಮ ಪುಟಾಣಿಗಳನ್ನು ಕರೆದುಕೊಂಡು ಹೋಗುತ್ತಾರೆ. ನಾಯಿಗಳು ಅಷ್ಟೇ.. ವೆಟ್ ಎಂದರೆ ಸಾಕು ಓಡಿ ಹೋಗುತ್ತವೆ. ಇಂಟರನೆಟ್‌ನಲ್ಲಿ ವ್ಯಾಕ್ಸಿನೇಶನ್ Dos Don’ts ಎಂಬ ಪುಟಗಟ್ಟಲೇ ಬರೆದ ಮಾಹಿತಿಗಳು ಸಿಕ್ಕುತ್ತವೆ. ಯಾವ ವ್ಯಾಕ್ಸಿನ್ ಹಾಕಿಸದೇ ತಮ್ಮ ನಾಯಿಗಳ ಆರೋಗ್ಯವನ್ನು ಕಡೆಗಣಿಸುವ ಜನರೂ ಇರುತ್ತಾರೆ. ಆದರೆ ವ್ಯಾಕ್ಸಿನ್ ಹಾಕಿಸಿ ಸರಿಯಾಗಿ ನೋಡಿಕೊಂಡರೆ ನಾಯಿಗಳು ದೀರ್ಘಕಾಲ ಬದುಕುತ್ತವೆ. + + + +ಅದಾದ ಮೇಲೆ ಒಂದು ವರ್ಷದ ನಂತರ ಮತ್ತೊಮ್ಮೆ ರೇಬಿಸ್ ವ್ಯಾಕ್ಸಿನ್ ಹಾಕಿಸುವ ಸಮಯ ಬಂದಾಗ ಮತ್ತೊಂದು ಆಸ್ಪತ್ರೆಗೆ ಹೋದೆವು. ಬೇಸಿಗೆಕಾಲದ ಸುಡು ಬಿಸಿಲಿನ ದಿನವದು. ಚಿಕ್ಕ ಆಸ್ಪತ್ರೆಯಾದ್ದರಿಂದ ಎಲ್ಲರು ಹೊರಗೆ ಬಿಸಿಲಿನಲ್ಲಿಯೇ ಕಾಯಬೇಕಿತ್ತು. ನಮ್ಮ ಸರದಿ ಬಂದಾಗ ಒಳಗೆ ಹೋದರೆ ಇಬ್ಬರು ಹುಡುಗಿಯರಿದ್ದರು. ಕೂರಾನನ್ನು ಒಂದು ಮಾತು ಸಹ ಮಾತನಾಡಿಸದೇ ಆಕೆ ನೇರವಾಗಿ ಸೂಜಿ ಚುಚ್ಚಲು ಬಂದಳು. ಇವನು ಎಷ್ಟು ಬಿಗಿಯಾಗಿ ಹಿಡಿದುಕೊಂಡರು ಜಿಗಿದಾಡಲು ಶುರು ಮಾಡಿದಾಗ ಆಕೆ ತನಗೆ ಆಗುವುದಿಲ್ಲ ಎಂದು ನಮ್ಮ ಹಣವನ್ನು ರಿಫಂಡ್ ಮಾಡಿ ಕಳುಹಿಸಿ ಬಿಟ್ಟಳು! ಸಾಮಾನ್ಯವಾಗಿ ನಾಯಿಗಳ ಆಸ್ಪತ್ರೆಯವರು ನಾಯಿಗಳನ್ನು ಪ್ರೀತಿಯಿಂದ ಮಾತನಾಡಿಸುತ್ತ, ಒಂದೆರಡು ಟ್ರೀಟ್ ಕೊಟ್ಟು ಮನವೊಲಿಸಿಕೊಂಡು ನಂತರ ಅವುಗಳಿಗೆ ಗೊತ್ತಾಗದ ಹಾಗೆ ಸೂಜಿ ಚುಚ್ಚುತ್ತಾರೆ. ಆದರೆ ಈ ಹುಡುಗಿಯರು ಹಾಗೆ ಮಾಡದೇ ಕೂರಾನದೇ ತಪ್ಪು ಎಂಬಂತೆ ನಡೆಸಿಕೊಂಡಿದ್ದನ್ನು ನೋಡಿ ನಮಗಂತು ಬಹಳ ಸಿಟ್ಟು ಬಂದಿತ್ತು. ನಂತರ ಮತ್ತೊಂದು ಆಸ್ಪತ್ರೆಗೆ ಹೋದೆವು. ಅಲ್ಲಿದ್ದ ಪಂಜಾಬಿ ಡಾಕ್ಟರನ್ನು ನೋಡಿ ಅಚ್ಚರಿಯಾಗಿತ್ತು. ನಮ್ಮ ದೇಸಿ ಡಾಕ್ಟರುಗಳು ಇಲ್ಲಿ ಗಲ್ಲಿಗೊಬ್ಬರಂತೆ ಇದ್ದಾರಾದರು ನಾಯಿಗಳ ಡಾಕ್ಟರ್ ಅಂದರೆ ವೆಟ್ ನಮ್ಮ ದೇಸಿ ಇದ್ದದ್ದನ್ನು ನಾವು ನೋಡಿದ್ದು ಇದೇ ಮೊದಲು. ವೆಟ್ ಮತ್ತು ಅಲ್ಲಿನ ಸ್ಟಾಫ್ ಬಹಳ ಪ್ರೀತಿಯಿಂದ ಕೂರಾನನ್ನು ಮಾತನಾಡಿಸುತ್ತ ಅವನು ಬಾಲ ಅಲುಗಾಡಿಸಿದಾಗಲೆಲ್ಲ ಮತ್ತಷ್ಟು ತಲೆ ನೇವರಿಸುತ್ತ ಅವನ ನಂಬಿಕೆಯನ್ನು ಸಂಪಾದಿಸಿಕೊಂಡು ನಂತರ ವ್ಯಾಕ್ಸಿನ್ನಿಗೆಂದು ಒಳಗೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿನಲ್ಲಿ ಜೋರಾಗಿ ಕೂಗುವ ಸದ್ದು ಕೇಳಿ ಬಂದಾಗ ಅದು ಕೂರಾ ಎಂದು ಗೊತ್ತಾಯಿತು. ಆದರೆ ಈ ಸಲ ಅವನು ಹಾಗೆ ಕುಂಯ್ಯಗುಡುತ್ತಿದ್ದ ಕಾರಣ ವ್ಯಾಕ್ಸಿನ್ ಆಗಿರದೇ ಮತ್ತೊಂದು ವಿಷಯವಾಗಿತ್ತು. ಅದು ಮುಂದಿನ ಸಂಚಿಕೆಯಲ್ಲಿ…. + +ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ. \ No newline at end of file diff --git a/Kenda Sampige/article_260.txt b/Kenda Sampige/article_260.txt new file mode 100644 index 0000000000000000000000000000000000000000..e2d3428c6625a8d88f46f86f244dd949c50dd77f --- /dev/null +++ b/Kenda Sampige/article_260.txt @@ -0,0 +1,75 @@ + + +I am constantly trying to communicate something incommunicable, to explain something inexplicable, to tell about something I only feel in my bones and which can only be experienced in those bones. – Franz Kafka + +ಮೊನ್ನೆ ತಾನೆ ಮೊದಲ ಬಾರಿಗೆ ಶೇವ್ ಮಾಡಿಕೊಂಡಿರುವ ರಾಜು ತುಂಬ ಸೂಕ್ಷ್ಮ ಹುಡುಗ. ಇದುವರೆಗೆ ಒಂದೂ ಕೆಟ್ಟ ಪದ ಬಳಸಿ ಮಾತನಾಡಿದವನಲ್ಲ. ಪರೋಕ್ಷವಾಗಿಯೂ ಮತ್ತೊಬ್ಬರಿಗೆ ಹರ್ಟ್ ಮಾಡಲು ಇಷ್ಟ ಪಡುವವನಲ್ಲ. ಪ್ರತಿ ಕೆಲಸವನ್ನೂ ಹೋಂವರ್ಕ್ ನಂತೆ ನೀಟಾಗಿ ನಿರ್ವಹಿಸುತ್ತಾನೆ. ಕ್ಲಾಸಿನಲ್ಲಾಗಲಿ ಮನೆಯಲ್ಲಾಗಲಿ ಬೈಸಿಕೊಂಡ ಉದಾಹರಣೆ ವಿರಳ. ಬೇರೆಯವರೊಂದಿಗೆ ಬೆರೆಯೋದು ಕಮ್ಮಿ. ಮಾತು ತೀರಾ ಕಮ್ಮಿ. ಜಗಳ ಇಲ್ಲವೇ ಇಲ್ಲ. ಅಗತ್ಯಕ್ಕಿಂತ ಹೆಚ್ಚಿಗೆ ಮಾತಾಡುವುದು ಸ್ವತಃ ಅವನಿಗೇ ಆಗಿಬರೋದಿಲ್ಲ. ಅವನನ್ನ ಕಂಡರಾಗದವರು ಅಂತ ಯಾರೂ ಇಲ್ಲ. ಹಾಗಂತ ಆತ್ಮೀಯ ಸ್ನೇಹಿತರೂ ಯಾರೂ ಇಲ್ಲ. + +ಅವನು ಅದೊಂದು ಭಾನುವಾರ ಮಧ್ಯಾಹ್ನ ಖಾಲಿ ಖಾಲಿ ಹೊಡೆಯುತ್ತಿದ್ದ ತನ್ನ ಏರಿಯಾದ ಪಾರ್ಕಿನ ಮರವೊಂದರ ಕೆಳಗಿನ ಬೆಂಚಿನ ಮೇಲೆ ಕುಳಿತುಕೊಂಡಿದ್ದ. ಆ ಪಾರ್ಕು ನೋಡಿಕೊಳ್ಳುವ ಕೆಲಸಗಾರರ ಮಗು ಸ್ವಲ್ಪ ಹೊತ್ತಿಗೆ ಮುಂಚೆ ತಳ್ಳಿಹೋದ ಜೋಕಾಲಿ ತೂಗಾಡುತ್ತಿರುವುದನ್ನ ತದೇಕಚಿತ್ತದಿಂದ ನೋಡುತ್ತಿದ್ದ. ಆ ಜೋಕಾಲಿ ಇನ್ನೇನು ಸುಸ್ತಾಗಿ ನಿಲ್ಲಬೇಕು ಎನ್ನುವಷ್ಟರಲ್ಲಿ ಅವನ ಪಾದದ ಮೇಲೆ ಏನೋ ಬಿತ್ತು. ಅದರ ಕಡೆ ಅವನ ಗಮನ ಹರಿಯಿತು. + +ಅದೊಂದು ಕೆಂಜಿರುವೆ. ನೋಡಿದ ತಕ್ಷಣ ಅವನಿಗೆ ಕಸಿವಿಸಿಯಾಯಿತು. ಕಾಲು ಜಾಡಿಸಿ ಅದನ್ನ ಕೆಳಗೆ ಬೀಳಿಸಲು ಪ್ರಯತ್ನಿಸಿದ. ಆದರದು ಅವನ ಪಾದಕ್ಕೆ ಗಟ್ಟಿಯಾಗಿ ಅಂಟಿಕೊಂಡಿತ್ತು. ಎದ್ದು ನಿಂತು ಕಾಲನ್ನು ಒಂಚೂರು ಜೋರಾಗಿ ಜಾಡಿಸಿದ. ಆಗಲೂ ಅದು ಕೆಳಕ್ಕೆ ಬೀಳಲಿಲ್ಲ. ಮತ್ತೆ ಮತ್ತೆ ಜಾಡಿಸಿದಾಗಲೂ ಅದು ಬೀಳಲಿಲ್ಲ. ಈಗ ಅವನು ಅಲ್ಲೇ ಇದ್ದ ಅರೆಬರೆ ಒಣಗಿದ ಎಲೆಯೊಂದನ್ನು ತೆಗೆದುಕೊಂಡು ಅದರ ತುದಿಯಿಂದ ದಬ್ಬಿ ಆ ಇರುವೆಯನ್ನು ಕೆಳಕ್ಕೆ ಬೀಳಿಸಲು ನೋಡಿದ. ಎಲೆಯ ತಿವಿತಕ್ಕೆ ಅದು ಕೆಳಕ್ಕೆ ಬಿತ್ತಾದರೂ ಮತ್ತೆ ವಾಪಸ್ ಸರಸರ ಅಂತ ಅವನ ಪಾದ ಏರಿ ಕುಳಿತುಕೊಂಡಿತು. ಅವನಿಗೆ ಕೋಪ ಬಂತು. ಮತ್ತೆ ತಿವಿದು ಅದನ್ನ ಕೆಳಕ್ಕೆ ಬೀಳಿಸಿದ. ಅದು ಮತ್ತೆ ವಾಪಸ್ ಏರಿ ಕುಳಿತುಕೊಂಡಿತು. + +ಹೀಗೇ ಹತ್ತಾರು ಸಲ ನಡೆಯಿತು. ಅವನು ತಿವಿದು ಬೀಳಿಸುವುದು ಅದು ಮತ್ತೆ ಏರುವುದು. ಅವನ ಸೈರಣೆ ಮೀರಿತು. ಇದೊಳ್ಳೆ ರಾಮಾಯಣ ಆಯ್ತಲ್ಲ ಎನಿಸಿತು. ಯಾಕೆ ಇದು ಹೀಗೆ ಮಾಡುತ್ತಿದೆ ಎಂಬುದೇ ಹೊಳೆಯದಾಯಿತು. ಅದನ್ನು ನೋಡಿದಷ್ಟೂ ಕಿರಿಕಿರಿ ಆಗತೊಡಗಿತು. ಯೋಚಿಸಿಯೇ ಯೋಚಿಸಿದ. ‘ಹ್ಮ್’ ಅಂತ ಇದೇ ತನಗುಳಿದಿರುವ ಕೊನೆಯ ಉಪಾಯ ಎಂಬಂತೆ ಇನ್ನೇನು ಆ ಹಠಮಾರಿ ಇರುವೆಯ ಮೇಲೆ ತನ್ನ ಇನ್ನೊಂದು ಕಾಲಿನ ಚಪ್ಪಲಿಯಿಟ್ಟು ಹೊಸಕಬೇಕು – ಅಷ್ಟರಲ್ಲಿ ಅವನಿಗೊಂದು ಪ್ರಶ್ನೆ ಹೊಳೆದು ಸುಮ್ಮನಾದ. ಇಷ್ಟೊತ್ತಾದರೂ ಯಾಕೆ ಇದು ತನ್ನನ್ನು ಕಚ್ಚದೆ ಸುಮ್ಮನೆ ಬಿಟ್ಟಿದೆ ಎಂಬ ಪ್ರಶ್ನೆ ಅವನಿಗೆ ಆಶ್ಚರ್ಯಉಂಟು ಮಾಡಿತು. ಕಚ್ಚದ ನಾಯಿಗಳನ್ನು ನೋಡಿದ್ದ ಅವನು. ಆದರೆ ಕಚ್ಚದ ಇರುವೆಗಳನ್ನು ಅವನೆಲ್ಲೂ ನೋಡಿರಲಿಲ್ಲ. ಅದರಲ್ಲೂ ಈ ಕೆಂಜಿರುವೆ?! ಅವನಿಗೆ ಮತ್ತಷ್ಟು ಆಶ್ಚರ್ಯವಾಯಿತು. + +ಇದ್ಯಾವುದೋ ಸಂಭಾವಿತ ಇರುವೆ ಇರಬೇಕು ಎಂಬ ತೀರ್ಮಾನಕ್ಕೆ ಬಂದ ರಾಜು. ಹಾಗಾಗಿ ಅದನ್ನು ಹೊಸಕಿಹಾಕುವ ಯೋಚನೆ ಅಲ್ಲಿಗೇ ಕೈಬಿಟ್ಟ. ಆ ಇರುವೆಯನ್ನು ಬಲಗೈಯ ತೋರುಬೆರಳು ಹೆಬ್ಬೆರಳುಗಳ ಸಹಾಯದಿಂದ ಹಿಡಿದು ಎಡ ಅಂಗೈಯ ಮೇಲೆ ಹಾಕಿಕೊಂಡ. ತೋರುಬೆರಳಿನಿಂದ ಅದನ್ನು ಚೂರು ಮುಂದಕ್ಕೆ ದಬ್ಬಿ ನೋಡಿದ. ಆಗಲೂ ಅದು ಕಚ್ಚುವುದಿರಲಿ ಸಣ್ಣ ಪ್ರತಿಭಟನೆಯನ್ನೂ ತೋರದೆ ಅವನಲ್ಲಿ ಮತ್ತಷ್ಟು ಆಸಕ್ತಿ ಕೆರಳಿಸಿತು. ಅವನು ‘ನೋಡುವ ಇದು ಏನು ಮಾಡುತ್ತದೆ’ ಎಂದು ಅದೇ ಬೆಂಚಿನ ಮೇಲೆ ವಾಪಸ್ ಕುಳಿತುಕೊಂಡು ತನ್ನ ಅಂಗೈ ಮೈದಾನದ ಮೇಲೆ ವಿಶ್ರಮಿಸುತ್ತಿರುವ ಆ ಇರುವೆಯ ಚಲನವಲನ ಗಮನಿಸತೊಡಗಿದ. ಅದು ಅವನ ಅಂಗೈ ತನ್ನ ಮನೆಯೇನೋ ಎಂಬಂತೆ ಎಷ್ಟೊತ್ತಾದಾರೂ ಆರಾಮಾಗಿ ಕುಳಿತುಕೊಂಡಿತು. ಅವನೂ ಪಟ್ಟು ಹಿಡಿದು ಅದು ತನ್ನನ್ನ ಕಚ್ಚುವವರೆಗೆ ಕೊಲ್ಲಬಾರದು, ಓಡಲು ಪ್ರಯತ್ನಿಸುವವರೆಗೆ ಕೈ ಜಾಡಿಸಿ ಬೀಳಿಸಬಾರದು ಎಂದು ತೀರ್ಮಾನಿಸಿ ಅದನ್ನು ಮಗ್ನನಾಗಿ ನೋಡುತ್ತ ಕುಳಿತ. + +ಅದರ ಪುಟ್ಟತಲೆ, ಅದಕ್ಕಿಂತ ಚಿಕ್ಕ ಗಾತ್ರದ ಮೂರು ಹೊಟ್ಟೆಗಳು. ಅವಕ್ಕೆ ಅಂಟಿಕೊಂಡ ಅವಕ್ಕಿಂತ ಚೂರು ದೊಡ್ಡದೆನ್ನಬಹುದಾದ, ಸ್ವಲ್ಪ ಕಪ್ಪು ಬಣ್ಣಕ್ಕೆ ತಿರುಗಿದ ಹಿಂಭಾಗ, ತುಸು ಜೋರಾಗಿ ಊದಿದರೆ ಮುರಿದು ಹೋಗುವಷ್ಟು ಸೂಕ್ಷ್ಮವಾದ ಆರು ಕಾಲುಗಳು, ತಲೆಗೆ ಬೆಳೆದಿದ್ದ ಕೊಂಬಿನಂಥಆಂಟೆನಾಗಳು, ಚುಕ್ಕಿಯಂಥ ಕಣ್ಣುಗಳು, ಎರಡು ಸಣ್ಣ ಹಲ್ಲುಗಳ ಇಕ್ಕಳ – ಇವನ್ನೆಲ್ಲಾ ಗಮನಿಸುತ್ತ ಗಮನಿಸುತ್ತ ಹೊತ್ತು ಹೋದದ್ದೇ ಗೊತ್ತಾಗಲಿಲ್ಲ ಅವನಿಗೆ. ಇಷ್ಟೆಲ್ಲಾ ಸಂಗತಿಗಳಿರುತ್ತವೆ ಒಂದು ಕೆಂಜಿರುವೆಯ ದೇಹದಲ್ಲಿ ಎನ್ನುವುದು ಅವನ ಗಮನಕ್ಕೆ ಬಂದಿದ್ದು ಇದೇ ಮೊದಲು. + +ಹೀಗೇ ಸ್ವಲ್ಪ ಸಮಯ ಕಳೆಯಿತು. ಇರುವೆಯಂತೂ ಅಲ್ಲಿಂದ ಹೋಗುವ ಯೋಚನೆಯೇ ಇಲ್ಲವೆಂಬಂತೆ ಆರಾಮಾಗಿ ಅವನ ಅಂಗೈ ಮೇಲೆ ವಿಶ್ರಮಿಸುತ್ತಿತ್ತು. ಅವನಿಗೋ ನೋಡುತ್ತ ನೋಡುತ್ತ ಅದರ ಮೇಲೆ ಕುತೂಹಲ ಹೆಚ್ಚಾಯಿತು. ಆಕರ್ಷಣೆ ಮೊಳಕೆಯೊಡೆದು ಬೆಳೆಯತೊಡಗಿತು. ಇಷ್ಟೊತ್ತಾದರೂ ತನ್ನನ್ನು ಕಚ್ಚುವ ಯಾವ ಯೋಚನೆಯೂ ಇಲ್ಲದಂತೆ ಕಾಲ ಕಳೆಯುತ್ತಿರುವ ಅದರ ಮೇಲೆ ಏನೋ ವಿಶ್ವಾಸ ಮೂಡಿತು. ಇಂಥ ಎಷ್ಟೋ ಇರುವೆಗಳನ್ನು ವಿನಾಕಾರಣ ಹೊಸಕಿ ಹಾಕಿರುವ ತನ್ನ ಮೇಲೆ ಇಷ್ಟೊಂದು ನಂಬಿಕೆಯಿಟ್ಟು ಆರಾಮಾಗಿ ತಾಚಿ ಮಾಡುತ್ತಿದೆಯಲ್ಲಾ ಇದು ಎಂದು ಅಚ್ಚರಿಯಾಯಿತು. ಅದನ್ನ ನೋಡುತ್ತ ಯೋಚಿಸುತ್ತ ಯೋಚಿಸುತ್ತ ನೋಡುತ್ತ ಅದರ ಮೇಲೆ ಅವನಿಗೆ ಒಂಥರದ ಸ್ನೇಹ ಬೆಳೆಯಿತು. ಮುದ್ದು ಮೂಡಿತು. ಮುದ್ದು ಹೆಚ್ಚಾಗಿ ಅದನ್ನು ತನ್ನ ಮನೆಗೆ ಕರೆದುಕೊಂಡು ಹೋಗುವ, ತನ್ನ ರೂಮಿನಲ್ಲಿಟ್ಟುಕೊಂಡು ಸಾಕುವ ಮನಸ್ಸಾಯಿತು. ತಲೆಯಲ್ಲಿ ಆ ಯೋಚನೆ ಮೂಡಿದ್ದೇ ಅವನಿಗೆ ಒಂಥರ ಪುಳಕ. ಆದರೆ ಅದರ ಹಿಂದೆಯೇ ಮೂಡಿದ ಪ್ರಶ್ನೆ ಅವನನ್ನ ಕಂಗಾಲು ಮಾಡಿತು. + +‘ಯಾರಾದ್ರು ಇರುವೆ ಸಾಕ್ತಾರಾ?’ + +ರಾಜು ತನ್ನ ಅಪಾರ್ಟ್ಮೆಂಟಿನಲ್ಲಿ ನಾಯಿ ಸಾಕಿದವರನ್ನ, ಬೆಕ್ಕು ಸಾಕಿದವರನ್ನ ನೋಡಿದ್ದ. ಅಜ್ಜಿ ಊರಲ್ಲಿ ದನ ಕರು, ಕುರಿ ಮೇಕೆ, ಕತ್ತೆ ಕುದುರೆ ಸಾಕುವವರನ್ನ ಕಂಡಿದ್ದ. ಸರ್ಕಸ್ ಗಳಲ್ಲಿ ಆನೆ ಕೋತಿ ಮುಂತಾದ ದೊಡ್ಡ ದೊಡ್ಡ ಪ್ರಾಣಿಗಳನ್ನೂ ನೋಡಿದ್ದ. ಅಷ್ಟೇ ಅಲ್ಲದೆ ತನ್ನ ಸಿಲೆಬೆಸ್ ಗಿದ್ದ ರಸ್ಕಿನ್ಬಾಂಡ್ ರ ಬರಹವೊಂದರಲ್ಲಿ ಬಾಂಡ್ ರ ತಾತ ತಿಮೋತಿ ಎಂಬ ಹುಲಿ ಸಾಕಿದ್ದ ವಿವರ ಇನ್ನೂ ಅವನಿಗೆ ನೆನಪಿನಲ್ಲಿದೆ. ಆದರೆ ಇರುವೆ ಸಾಕಿದ್ದು? ಅವನೆಲ್ಲೂ ನೋಡಿರಲಿಲ್ಲ, ಕೇಳಿರಲಿಲ್ಲ, ಓದಿಯೂ ಇರಲಿಲ್ಲ. ಯಾಕೆ ಯಾರೂ ಇರುವೆ ಸಾಕುವುದಿಲ್ಲ ಎಂಬ ಪ್ರಶ್ನೆ ಅವನಿಗೆ ಕಾಡತೊಡಗಿತು. ಎಷ್ಟುಯೋಚಿಸಿದರೂ ಅದಕ್ಕೊಂದು ಸಮರ್ಪಕ ಉತ್ತರ ಹೊಳೆಯಲಿಲ್ಲ. ಯೋಚಿಸಿದಷ್ಟೂ ತಲೆ ಭಾರ ಆಗಿ ಚಿಟ್ಟುಹಿಡಿಯತೊಡಗಿತು. ಕೊನೆಗವನು ‘ಯಾಕಾದ್ರು ಇರ್ಲಿ, ಯಾರೂ ಸಾಕದಿದ್ದರೇನಂತೆ, ನಾನಿದನ್ನ ಸಾಕ್ತೇನೆ’ ಎಂದು ನಿರ್ಧರಿಸಿದ. ಅಷ್ಟು ನಿರ್ಧರಿಸಿದ್ದೇ, ಇಷ್ಟರವರೆಗೆ ಕಾಡುತ್ತಿದ್ದ ಪ್ರಶ್ನೆಗಳೆಲ್ಲ ಹಿಂದೆ ಸರಿದವು. ತಲೆಭಾರ ಕೊಂಚ ಕಮ್ಮಿ ಆಯಿತು. ಆದರೆ ಮತ್ತೊಂದು ಪ್ರಶ್ನೆ ಎದುರಾಗಿ ಅವನನ್ನು ಕಂಗೆಡಿಸಿತು. + +‘ಅಪ್ಪ ಅಮ್ಮ ಒಪ್ತಾರಾ ಇದಕ್ಕೆ?’ + +ಈಗಂತೂ ರಾಜು ನಿಜಕ್ಕೂ ಕಂಗಾಲಾದ. ಹಾಗೆ ನೋಡಿದರೆ ಎಷ್ಟೋ ದಿನಗಳಿಂದ ಅವನಿಗೆ ನಾಯಿಯನ್ನೋ ಬೆಕ್ಕನ್ನೋ ಸಾಕುವ ಆಸೆ. ಆದರೆ ನಾಯಿ ಸಾಕುತ್ತೇನೆ ಎಂದಾಗ ಅಮ್ಮ, ‘ಬೇಡ ಬೇಡ. ಅದು ಯಾವಾಗಲೂ ನಿನ್ನ ಅಪ್ಪನಂತೆ ಬೊಗಳ್ತಾನೇ ಇರತ್ತೆ’ ಎಂದು ಸುಮ್ಮನಾಗಿಸಿದ್ದಳು. ಬೆಕ್ಕುಸಾಕುತ್ತೇನೆ ಎಂದಾಗ ಅಪ್ಪ, ‘ನೋ ವೇ ಚಾನ್ಸೇ ಇಲ್ಲ, ಅದು ನಿಮಮ್ಮನ್ ಥರ, ಕಕ್ಕ ಮಾಡಿ ಮುಚ್ ಹಾಕತ್ತೆ’ ಎಂದು ಕಡ್ಡಿಮುರಿದಂತೆ ನಿರಾಕರಿಸಿದ್ದ. ಹಾಗಾಗಿ ರಾಜುವಿಗೆ ತಾನು ಇರುವೆ ಸಾಕುತ್ತೇನೆ ಎಂದರೆ ಇವರು ಮತ್ತೇನಾದರು ಕಾರಣ ಒಡ್ಡಿ ಬೇಡ ಎಂದರೆ ಹೇಗೆ ಎಂದು ಚಿಂತೆಯಾಯಿತು.ಹಾಗಾದರೆ ಏನು ಮಾಡುವುದು? ಯೋಚಿಸಿಯೇ ಯೋಚಿಸಿದ. ತಲೆ ಮತ್ತಿಷ್ಟು ಭಾರ ಆಗತೊಡಗಿತು. ಕಡೆಗವನು ಒಂದು ನಿರ್ಧಾರಕ್ಕೆ ಬರಲೇಬೇಕಾಯಿತು. + +‘ಅಪ್ಪ ಅಮ್ಮಂಗ್ ಇದನ್ ಹೇಳೋದೇ ಬೇಡ’ + +ಈ ನಿರ್ಧಾರ ಅವನಲ್ಲಿ ಒಟ್ಟೊಟ್ಟಿಗೆ ರೋಮಾಂಚನವನ್ನೂ ನಡುಕವನ್ನೂ ಹುಟ್ಟಿಸಿತು. + +ಅಪ್ಪ ಅಮ್ಮನಿಗೆ ಹೇಳದೆ ಇರುವೆಯನ್ನು ತನ್ನ ರೂಮಿಗೆ ಒಯ್ದು ಸಾಕುವುದು ಎಂಬ ನಿರ್ಧಾರಕ್ಕೇನೋ ಬಂದುಬಿಟ್ಟ. ಆದರೆ ಅದನ್ನು ಹೇಗೆ ಸಾಕುವುದು? ನಾಯಿ ಬೆಕ್ಕುಗಳನ್ನೇನೋ ಸಾಕಿ ಗೊತ್ತು. ಆದರೆ ಇಷ್ಟೇ ಇಷ್ಟು ಇರುವ ಈ ಇರುವೆಯನ್ನು ಹೇಗೆ ಸಾಕುವುದು? ಇದಕ್ಕಂತೂ ಅವನಿಗೆ ತಕ್ಷಣಕ್ಕೆ ಯಾವುದೇ ಉತ್ತರ ಹೊಳೆಯಲಿಲ್ಲ. ಯಾರನ್ನಾದರು ಕೇಳೋಣ ಎಂದುಕೊಂಡ. ಆದರೆ ಅವರೇನಾದರು ತನ್ನನ್ನ ಹುಚ್ಚ ಎಂದುಕೊಂಡುಬಿಟ್ಟರೆ ಹೇಗೆ? ಎಂಬ ಭಯ ಮೂಡಿ ಆ ವಿಚಾರ ಅಲ್ಲಿಗೇ ಕೈಬಿಟ್ಟ. ಮತ್ತೇನು ಮಾಡುವುದು? ಯೋಚಿಸಿಯೇ ಯೋಚಿಸಿದ. ‘ಮನೇಗ್ ಹೋದ್ಮೇಲ್ ಥಿಂಕ್ ಮಾಡಿದ್ರಾಯ್ತು… ಫಸ್ಟು ಇದ್ನಾ ಮನೇಗ್ ಕರ್ಕೊಂಡ್ ಹೋಗ್ತೀನಿ’ ಎಂದು ಸಮಾಧಾನಕರ ಉತ್ತರ ಕೊಟ್ಟುಕೊಂಡ. ‘ಓಕೇ… ಇದ್ನಿವಾಗ ಅಪ್ಪ ಅಮ್ಮಂಗ್ ಗೊತ್ತಾಗ್ದಿರೋ ಹಾಗ್ ಹೇಗ್ ತಗೊಂಡ್ ಹೋಗೋದು? ಹಿಂಗೇನಾದ್ರು ಅಂಗೈಯಲ್ ಹಿಡ್ಕೊಂಡ್ ಹೋದ್ರೆ ಗ್ಯಾರಂಟಿ ಅವ್ರಿಗ್ ಗೊತ್ತಾಗತ್ತೆ’ ಎಂದು ಹೆದರಿಕೆ ಆಯಿತು. + +‘ಹಾಗಂತ ಪಾಕೇಟ್ನಲ್ ಇಟ್ಕೊಂಡ್ ಹೋಗೋ ಹಾಗೂ ಇಲ್ಲ. ಮೊದಲೇ ಡೆಲಿಕೇಟ್ ಪ್ರಾಣಿ. ಏನಾದ್ರು ಹೆಚ್ಕಮ್ಮಿ ಹರ್ಟ್ ಆದ್ರೆ ಹೆಂಗೆ? ಮತ್ತೆ ಏನ್ ಮಾಡೋದು? ಹೇಗ್ ಇದ್ನಾ ಅಪ್ಪ ಅಮ್ಮಂಗ್ ಕಾಣ್ದಿರೋ ಹಾಗ್ ನನ್ ರೂಮಿಗ್ ಕರ್ಕೊಂಡ್ ಹೋಗೋದು?’ ಯೋಚಿಸಿಯೇ ಯೋಚಿಸಿದ. ಹೀಗೇಯೋಚಿಸುತ್ತಿರಬೇಕಾದ್ರೆ ಅವನಿಗೆ ತನ್ನ ಅಜ್ಜಿ ಊರಿನ ದ್ಯಾಮ ನೆನಪಾಗಿ ಸ್ವಲ್ಪ ತಲೆಭಾರ ಕಮ್ಮಿ ಮಾಡಿದ. + +ದ್ಯಾಮ ಅಜ್ಜಿ ಮನೆಯ ಕೆಲಸದಾಳುವಿನ ಮಗ. ತನ್ನೊಂದಿಗೆ ರಾಜೂನ ಅಡವಿ ತಿರುಗಲು ಕರೆದುಕೊಂಡು ಹೋಗುತ್ತಿದ್ದ. ಅವನು ಈಗ ನೆನಪಾಗಲಿಕ್ಕೆ ಕಾರಣ ಅವನು ಬೆಂಕಿಪಟ್ನದಲ್ಲಿ ಬಣ್ಣಬಣ್ಣದ ಬೋರಾಣಿ ಹಿಡಿದು ಸಾಕುತ್ತಾ ಇದ್ದಿದ್ದು. ಅದು ನೆನಪಾಗಿದ್ದೇ ಈಗ ತನ್ನ ಇರುವೆಗೆ ತಕ್ಕ ಗೂಡು ಬೆಂಕಿಪಟ್ನವೇ ಎಂದು ತೀರ್ಮಾನಿಸಿದ ರಾಜು. ಆದರೆ ಬೆಂಕಿಪಟ್ನ ಎಲ್ಲಿಂದ ತರುವುದು? ಸುತ್ತಮುತ್ತ ನೋಡಿದ. ಮೊದಲೇ ಪಾರ್ಕು. ಅಲ್ಲಿ ಬೆಂಕಿಪಟ್ನ ಎಲ್ಲ ಬಿದ್ದಿರಲು ಸಾಧ್ಯವೇ? ಅಂಗಡಿಗೆ ಹೋಗಿ ತರುವಂತೆಯೂ ಇಲ್ಲ. ಅವರು ಅಪ್ಪನಿಗೆ ಹೇಳಿದರೆ ಮುಗೀತು. ಬೂಟುಗಾಲಿನ ಒದೆತ ಗ್ಯಾರಂಟಿ. ಮತ್ತೇನು ಮಾಡುವುದು? ಯೋಚಿಸಿಯೇ ಯೋಚಿಸಿದ. ಹಾಗೆ ಯೋಚಿಸುತ್ತಿರಬೇಕಾದರೆ ತಾನು ಕೂತ ಬೆಂಚಿನ ಕಾಲಬಳಿ ಯಾರೋ ಎಸೆದುಹೋಗಿರುವ ನ್ಯೂಸ್ ಪೇಪರ್ ತುಣುಕಿನ ಕಡೆ ಅವನ ಗಮನ ಹೋಯಿತು. ಅದು ಕಂಡದ್ದೇ ಅವನಿಗೆ ಖುಷಿಯಾಯಿತು. ಗಡಿಬಿಡಿಯಿಂದ ಆ ಪೇಪರ್ ಕೈಗೆತ್ತಿಕೊಂಡ. + +ಇರುವೆಯನ್ನು ನಿಧಾನವಾಗಿ ಬೆಂಚಿನ ಮೇಲೆ ಬಿಟ್ಟ. ಅದು ಈಗ ಅವನ ಮಾತು ಕೇಳುತ್ತಿರುವಂತೆ, ಅವನ ಮನಸು ಅರಿತಿರುವಂತೆ ಮತ್ತೇನೂ ಗಾಂಚಾಲಿ ಮಾಡದೆ ಸುಮ್ಮನೆ ಕುಳಿತಿತು. ಅವನಿಗೆ ಒಂಥರ ಪುಳಕವಾಯಿತು. ರಾಜು ಈಗ ಆ ಪೇಪರ್ ತುಣುಕಿನಿಂದ ಒಂದು ಪುಟ್ಟ ದೋಣಿ ಮಾಡಿದ. ಆ ದೋಣಿಯೊಳಕ್ಕೆ ಇರುವೆಯನ್ನು ಕೂರಿಸಿದ. ಆ ದೋಣಿಯನ್ನು ಸಾವಕಾಶವಾಗಿ ತನ್ನ ಅಂಗಿಯ ಜೇಬಿನಲ್ಲಿಟ್ಟುಕೊಂಡ. ಈಗ ಇರುವೆಗೆ ಹರ್ಟ್ ಆಗುವುದಿಲ್ಲ, ಯಾರ ಕಣ್ಣಿಗೂ ಬೀಳುವುದಿಲ್ಲ ಎಂದು ಸಮಾಧಾನವಾಯಿತು. ಅಲ್ಲಿಂದ ಕಾಲ್ಕಿತ್ತು ನಿಧಾನಕ್ಕೆ ಮನೆದಾರಿ ಹಿಡಿದ. + +ತನ್ನ ಅಪಾರ್ಟ್ಮೆಂಟು ಬಂತು. ಲಿಫ್ಟ್ ಏರಿ ತನ್ನ ಮನೆಯಿರುವ ಮಹಡಿಗೆ ಬಂದ. ಬೆಲ್ ಮಾಡಿದ. ನಾಯಿ ಬಾಗಿಲು ತೆಗೆದು ಕನ್ನಡಕದೊಳಗಿನಿಂದ ದುರುಗುಟ್ಟಿಕೊಂಡು ನೋಡಿತು. ಇವನು ತಲೆತಗ್ಗಿಸಿದ. ಅದು ಏನೇನೋ ಬೊಗಳಿತು. ಬೊಗಳುವಷ್ಟು ಬೊಗಳಿ, ‘ಬಾ ಒಳಗೆ… ಅಲ್ಲೇ ನಿಂತ್ಕೊಂಡ್ಏನ್ ಕತ್ತೆ ಕಾಯ್ತೀಯ? ನಾನ್ ವಾಕ್ ಹೊಗ್ ಬರ್ತೀನಿ’ ಎಂದು ಅವನನ್ನ ಒಳದಬ್ಬಿ ತಾನು ಹೊರಹೋಯಿತು. ರಾಜು ತಲೆತಗ್ಗಿಸಿಕೊಂಡೇ ಒಳಪ್ರವೇಶಿಸಿದ. ಅಷ್ಟರಲ್ಲಿ ಬೆಕ್ಕು ಒಂದು ಕೈಯಲ್ಲಿ ಕಾಫಿ ಹೀರುತ್ತ ಇನ್ನೊಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಕುಂಡಿ ಅಲುಗಾಡಿಸುತ್ತ ಬಂತು.‘ಬೂಸ್ಟ್ ಮಾಡ್ ಕೊಡ್ಲಾ ರಾಜು’ ಎಂದು ಕೇಳಿತು. ಇವನು ‘ಉಹ್ಞೂ’ ಎಂದು ತನ್ನ ರೂಮು ಪ್ರವೇಶಿಸಿ ಬಾಗಿಲು ಹಾಕಿಕೊಂಡ. + +ಜಾಗರೂಕತೆಯಿಂದ ಜೇಬಿನಲ್ಲಿನ ದೋಣಿ ತೆಗೆದು ತನ್ನ ಓದಿನ ಟೇಬಲ್ ಮೇಲಿಟ್ಟ. ನಿಧಾನಕ್ಕೆ ಹಾಳೆ ಬಿಡಿಸಿ ಇರುವೆಯನ್ನು ಎತ್ತಿಕೊಂಡು ಅಂಗೈಗೆ ಹಾಕಿಕೊಂಡ. ಅದು ಇವನನ್ನೇ ನೋಡುತ್ತಿತ್ತು. ಅದರ ಪುಟ್ಟ ಕಣ್ಣುಗಳನ್ನು ನೋಡಿ ಅವನ ಮುಖ ಅರಳಿತು. ಆದರೆ ಈಗ ಇದಕ್ಕೊಂದು ಜಾಗಮಾಡಬೇಕಲ್ಲ ಎಂಬುದು ತಲೆಗೆ ಬಂತು. ದೋಣಿಯನ್ನು ಎಡಗೈಯಿಂದ ಹಿಗ್ಗಿಸಿ ನೀಟಾಗಿ ನಿಲ್ಲಿಸಿ ಮತ್ತೆ ಅದರೊಳಕ್ಕೆ ಇರುವೆಯನ್ನು ಬಿಟ್ಟ. ಈಗ ತನ್ನ ಟೇಬಲ್ ನ ಡ್ರಾಯರ್ ತೆಗೆದು ಅದರೊಳಗಿನಿಂದ ಒಂದು ಹಳೆಯ ಜಾಮಿಟ್ರಿ ಪೆಟ್ಟಿಗೆ ತೆಗೆದ. ಅದರೊಳಗಿರುವ ಸ್ಕೇಲು ಪೆನ್ಸೀಲು ತ್ರಿಜ್ಯ ಮುಂತಾದ ಸಾಮಗ್ರಿಗಳನ್ನ ಹೊರತೆಗೆದು ಖಾಲಿ ಮಾಡಿದ. ಒಂದು ಹಾಳೆಯನ್ನು ನೀಟಾಗಿ ಕತ್ತರಿಸಿ ಪೆಟ್ಟಿಗೆಯಲ್ಲಿ ಹಾಸಿದ. ಈಗ ಇರುವೆಯನ್ನು ಅದರೊಳಕ್ಕೆ ಕೂರಿಸಿದ. ‘ಇದೇ ಇನ್ಮೆಲ್ ನಿನ್ ಮನೆ. ನೀನ್ ಇಲ್ಲೇ ಇರ್ತೀಯ ಇನ್ಮೇಲಿಂದ. ಸರಿನಾ?’ ಎಂದು ಕೇಳಿದ. ಅದು ತಲೆ ಅಲ್ಲಾಡಿಸಿದಂತಾಗಿ ಅವನಿಗೆ ಹಿಗ್ಗಾಯಿತು. ‘ಓಕೆ ಓಕೆ. ಎಷ್ಟೊತ್ತಾಯ್ತು ನೀನ್ ಏನೂ ತಿಂದೇ ಇಲ್ಲ ಅಲ್ವಾ? ಇರು ಏನಾದ್ರು ತರ್ತೀನಿ. ಒನ್ ಮಿನಿಟ್… ಓನ್ಲಿ ಒನ್ ಮಿನಿಟ್.. ಓಕೆ?’ ಎಂದು ಆ ಇರುವೆಯನ್ನು ಅಲ್ಲೇ ಬಿಟ್ಟು ರೂಮ್ ಬಾಗಿಲು ಹಾಕಿಕೊಂಡು ಅಡುಗೆ ಮನೆ ಕಡೆಗೆ ಉತ್ಸಾಹದಿಂದ ಓಡಿದ. ಟೀವಿ ಹಾಲ್ ನಲ್ಲಿನ ಸೋಫಾದ ಮೇಲೆ ಅಸ್ತವ್ಯಸ್ಥವಾಗಿ ಬಿದ್ದುಕೊಂಡು ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದ ಬೆಕ್ಕಿಗೆ ಇವನು ಇಷ್ಟು ಉತ್ಸಾಹದಲ್ಲಿ ಅಡುಗೆಮನೆ ಕಡೆ ಓಡಿದ್ದು ನೋಡಿ ಆಶ್ಚರ್ಯವಾಯಿತು. ಆದರೂ ಏನೂ ಕೇಳುವ ಗೋಜಿಗೆ ಹೋಗದೆ ‘ಮತ್ತೆ? ಇನ್ನೇನು?’ ಎಂದು ಮೊಬೈಲ್ ನಲ್ಲಿ ತನ್ನ ಮಾತುಕತೆ ಮುಂದುವರಿಸಿತು. + +ರಾಜು ಕೈಲೊಂದಿಷ್ಟು ಸಕ್ಕರೆ ಹಿಡಿದುಕೊಂಡು ರೂಮಿಗೆ ಬಂದು ಬಾಗಿಲು ಹಾಕಿದ. ತನ್ನ ಟೇಬಲ್ ಹತ್ತಿರ ಬಂದು ‘ಇರುವೆ… ನಿನ್ ಊಟ ಬಂತೂ’ ಎಂದು ಅಕ್ಕರೆಯಿಂದ ಇನ್ನೇನು ಜಾಮಿಟ್ರಿ ಪೆಟ್ಟಿಗೆಯಲ್ಲಿರುವ ಇರುವೆಗೆ ಕಾಳು ಹಾಕಬೇಕು, ಅವನ ಎದೆ ಧಸಕ್ ಎಂದಿತು. ಅಲ್ಲಿ ಇರುವೆ ಇರಲಿಲ್ಲ. ‘ಅಯ್ಯೋ ಎಲ್ ಹೋಯ್ತಿದು?!’ ಎಂದು ಗಾಬರಿ ಆದ. ಎಡಗೈಯಿಂದ ಜಾಮಿಟ್ರಿ ಪೆಟ್ಟಿಗೆಯೊಳಗೆ ಹಾಸಿದ್ದ ಹಾಳೆಯನ್ನ ಮೇಲಕ್ಕೆತ್ತಿ ನೋಡಿದ. ಕಾಣಿಸಲಿಲ್ಲ ಅದು. ಪೆಟ್ಟಿಗೆ ಸುತ್ತಮುತ್ತ ಕಣ್ಣಾಡಿಸಿದ. ಅಲ್ಲೂ ಕಾಣಿಸಲಿಲ್ಲ. ಟೇಬಲ್ ಮೇಲೆಲ್ಲ ನೋಟ್ಬುಕ್ಕು ಟೆಕ್ಸ್ಟ್ ಬುಕ್ಕು, ಗೈಡುಗಳು ಒಟ್ಟಿದ್ದವು. ಅದು ಯಾವ ಮೂಲೆಗೆ ಹೋಗಿ ಕುಳಿತುಕೊಂಡಿದೆಯೋ ಎಂದು ಚಿಂತೆಯಾಯಿತು. ಪೆಟ್ಟಿಗೆ ಮುಚ್ಚಿ ಹೋಗಿದ್ದರೆ ಚೆನ್ನಾಗಿರ್ತಿತ್ತು ಎನ್ನಿಸಿತು. ‘ಆದ್ರೆ ಏನ್ ಮಾಡೋದು? ಮುಚ್ಚಿದ್ರೆ ಅದಕ್ ಹಿಂಸೆ ಆಗ್ಬೋದ್ ಅಂತ ಹಾಗೇ ಹೋದೆ… ಅಷ್ಟಕ್ಕೂ ಇಷ್ಟೊತ್ತು ನಾನ್ ಹೇಳಿದ್ ಎಲ್ಲಾ ಕೇಳ್ತಿತ್ತಲ್ಲ. ನಾನ್ಬರೋವರ್ಗೂ ಎಲ್ಲಿಗೂ ಹೋಗಲ್ಲ ಅಂದ್ಕೊಂಡಿದ್ದೆ. ಆದ್ರೆ ಎಲ್ಲಿಗ್ ಹೋಯ್ತಿದು?’ ಎಂದು ತಲೆಕೆಡಿಸಿಕೊಂಡ. ನಿಂತ ಜಾಗದಿಂದ ಸ್ವಲ್ಪವೂ ಅತ್ತಿತ್ತ ಕದಲಲು ಅವನಿಗೆ ಆತಂಕ. ಇಲ್ಲೆಲ್ಲೋ ಇದ್ದು ತಾನದನ್ನ ತುಳಿದುಬಿಟ್ಟರೆ ಎಂಬ ಭಯ. ‘ಅಥ್ವಾ ಓಡ್ಕೊಂಡ್ ಬಂದ್ನಲ್ಲ? ಅಲ್ಲೇನಾದ್ರು ತುಳುದ್ಬಿಟ್ಟಿದೀನಾ? ಅಯ್ಯೋ!!! ಇಲ್ಲಾ ಇಲ್ಲಾ ಹಾಗೇನೂ ಆಗಿರೋದಿಲ್ಲ. ಇಲ್ಲೇ ಎಲ್ಲೋ ಇದೆ ಅದು. ಅಷ್ಟು ದೂರ ಎಲ್ಲ ಬಂದಿರೋದಿಲ್ಲ. ಆಕಸ್ಮಾತ್ ಬಂದಿದ್ರೆ? ಓಹ್ ಗಾಡ್! ಹಾಗ್ ಮಾತ್ರ ಆಗಿರ್ಬಾದಪ್ಪಾ… ಹಾಗ್ ಮಾತ್ರ ಆಗಿರ್ಬಾದು’ ಅವನ ಕೈಯಲ್ಲಿನ ಸಕ್ಕರೆ ಮೆತ್ತಗಾಗತೊಡಗಿತು. + +ಕಾಲು ಕೀಳದೆ ನಿಂತಲ್ಲೇ ನಿಂತು ಎಲ್ಲ ಕಡೆಗೂ ಕಣ್ಣು ಅಗಲಿಸಿ ತಪಾಸಣೆ ಮಾಡತೊಡಗಿದ. ಟೇಬಲ್ ಮೇಲೆ ಕೆಳಗೆ ಬಗ್ಗಿ ಬಗ್ಗಿ ನೋಡಿದ. ಅದರ ಬಲಕ್ಕಿದ್ದ ಕಿಟಕಿಯನ್ನೂ ಎಡಕ್ಕಿದ್ದ ಮಂಚವನ್ನೂ ಕಣ್ಣಲ್ಲೇ ಸೂಕ್ಷ್ಮವಾಗಿ ತಪಾಸಣೆ ಮಾಡಿದ. ಇರುವೆ ಎಲ್ಲೂ ಕಾಣಿಸಲಿಲ್ಲ. ಮೆತ್ತಗೆ ಡ್ರಾಯರ್ ತೆಗೆದು ಹುಡುಕಾಡಿದ. ಗೋಡೆಗೇನಾದರು ಏರಿರಬಹುದಾ ಎಂದು ಸುತ್ತ ನೋಡಿದ. ಕಾಣಿಸಲಿಲ್ಲ. ತಾನು ನಿಂತಿರೋ ಜಾಗದಿಂದ ಯಾವ್ಯಾವ ಜಾಗ, ಮೂಲೆಗಳನ್ನ ಪರೀಕ್ಷಿಸಬಹುದೋ ಅವೆಲ್ಲಾ ಕಡೆಗೂ ಕಣ್ಣು ನೆಟ್ಟು ನೆಟ್ಟು ನೋಡಿದ. ಇರುವೆ ಎಲ್ಲೂ ಕಾಣಿಸಲಿಲ್ಲ. ಅಳು ಬಂದ ಹಾಗಾಯಿತು ಅವನಿಗೆ. ಕೈಲಿದ್ದ ಸಕ್ಕರೆಯನ್ನ ಕಿಟಕಿಯ ಅಂಚಿನ ಜಾಗದಲ್ಲೊಂದು ಕಡೆ ಸುರುವಿದ. ಈ ಪುಸ್ತಕಗಳಲ್ಲೆಲ್ಲೋ ಅದು ಹೋಗಿ ಕೂತಿರಬಹುದು, ಇಲ್ಲಾ ಸಿಕ್ಕಾಕ್ಕೊಂಡಿರಬಹುದು ಎಂದು ಅವನಿಗೆ ಬಲವಾಗಿ ಅನ್ನಿಸತೊಡಗಿತು. ಮತ್ತೊಂದು ಸಲ ಮಂಚವನ್ನು ಅಲ್ಲಿಂದಲೇ ಸೂಕ್ಷ್ಮವಾಗಿ ಪರಿಶೀಲಿಸಿದ. ಈಗ ನಿಧಾನಕ್ಕೆ ಒಂದೊಂದೇ ಬುಕ್ ತೆಗೆದು ಅವನ್ನು ಚೆಕ್ ಮಾಡಿ ಆಮೇಲೆ ಆ ಬೆಡ್ ಮೇಲೆ ಇಡುವುದು ಎಂದು ನಿರ್ಧರಿಸಿದ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಅದರಂತೆ ಮೊದಲಿಗೆ ಒಂದು ಪುಸ್ತಕವನ್ನು ಅದರ ಮೂಲೆ ಹಿಡಿದು ಜಾಗ್ರತೆಯಿಂದ ತೆಗೆದುಕೊಂಡ. ಸಾವಕಾಶವಾಗಿ ಅದನ್ನ ಆಕಡೆ ಈಕಡೆ ತಿರುಗಿಸಿ ಎಲ್ಲಕಡೆ ನೋಡಿದ. ಇರುವೆ ಎಲ್ಲಾದರು ಅಂಟಿಕೊಂಡಿರಬಹುದಾ ಎಂದು. ಕಾಣಿಸಲಿಲ್ಲ ಅದು. ಮತ್ತೆ ಮತ್ತೆ ನೋಡಿ ಖಾತ್ರಿ ಆದ ಮೇಲೆ ನಿಧಾನಕ್ಕೆ ಆ ಪುಸ್ತಕದ ಪೇಜುಗಳನ್ನ ತಿರುವತೊಡಗಿದ. ಒಂದೊಂದನ್ನೇ ಹಗೂರಕ್ಕೆ ತಿರುವಿ ತಿರುವಿ ಅವನ ಕೈ ಸೋತಂತಾದವು. ಆದರೂ ಪಟ್ಟು ಬಿಡದೆ ಎಲ್ಲ ಪೇಜುಗಳನ್ನೂ ತಿರುವಿ ಹಾಕಿದ. ಆ ಪುಸ್ತಕದಲ್ಲೆಲ್ಲೂ ಅದು ಕಾಣಿಸಲಿಲ್ಲ. ಈಗ ಅದನ್ನು ಬೆಡ್ ಮೇಲೆ ಇಡಬೇಕು ಎಂದು ಹೊರಟವನಿಗೆ ‘ಅಯ್ಯೋ ಈ ಇರುವೆ ಈ ಬೆಡ್ ಕೆಳಗ್ ಏನಾದ್ರು ಇದ್ರೆ ಹೆಂಗೆ?’ ಎಂದು ಗಾಬರಿ ಆಯಿತು. ಹಾಗಾದ್ರೆ ಇಲ್ ಇಡೋದ್ ಬೇಡಾ ಪುಸ್ತಕಾನ’ ಎಂದು ಸುತ್ತ ನೋಡಿದ. ಸಕ್ಕರೆ ಹಾಕಿದ್ದ ಕಿಟಕಿಯ ಜಾಗದ ಪಕ್ಕ ಖಾಲಿ ಖಾಲಿ ಇತ್ತು. ‘ಇಲ್ಲೇ ಇಡೋದ್ ಬೆಟರ್’ ಎಂದು ಆ ಪುಸ್ತಕವನ್ನ ಅಲ್ಲಿಡಬೇಕು ಅಷ್ಟರಲ್ಲಿ ಅವನ ಕಣ್ಣು ಕೆಂಪಾದವು. ಇರುವೆ ಅಲ್ಲೇ ಸಕ್ಕರೆ ತಿನ್ನುತ್ತಿತ್ತು. + +‘ಇಲ್ ಇದ್ಯಾ ನೀನು… ಇಷ್ಟೊತ್ತು ಎಲ್ಲೋ ಹೋಗಿದ್ದೆ ಸ್ಟುಪಿಡ್’ ಎಂದು ಬೈದ. ಅದು ಇವನ ಕಡೆ ನೋಡಿದಂತೆ ಮಾಡಿ ಸಕ್ಕರೆ ತಿನ್ನುವುದನ್ನು ನಿಲ್ಲಿಸಿತು. ಇವನಿಗೆ ಪಾಪ ಎನ್ನಿಸಿತು. ಈಗ ಚೂರು ದನಿ ತಗ್ಗಿಸಿ ‘ಹ್ಮ… ಎಷ್ಟ್ ಗಾಬರಿ ಆಗೋಗಿತ್ ಗೊತ್ತಾ ನಂಗೆ? ಸಖತ್ ಟೆನ್ಷನ್ ಆಗೋಗಿತ್ತು… ಹೀಗ್ ಹೇಳ್ದೆ ಕೇಳ್ದೆ ಹೋಗ್ಬಿಟ್ರೆ ಹೆಂಗೆ? ಇನ್ನೊಂದ್ಸಲ ಹೀಗ್ ಮಾಡಿದ್ರೆ ಸರಿ ಇರಲ್ಲ ನೋಡು… ಸರಿ ಸರಿ… ತಿನ್ನು ತಿನ್ನು’ ಎಂದ. ಅದು ಇವನತ್ತ ಒಮ್ಮೆ ನೋಡಿತು. ಅವನು, ‘ಏನ್ ಮುಖ ನೋಡ್ತೀಯ? ತಿನ್ನು’ ಎಂದು ಗದರಿಸಿದ. ಅದು ತಿನ್ನುವುದನ್ನು ಮುಂದುವರಿಸಿತು. ಇವನು ಕೋಪಕಂಟ್ರೋಲ್ ಮಾಡಿಕೊಂಡು ಅದು ತಿನ್ನುವುದನ್ನು ನೋಡತೊಡಗಿದ. ಅದು ಒಂದೆರಡು ಕಾಳು ತಿಂದು ತನ್ನ ಹೊಟ್ಟೆ ತುಂಬಿತು ಎಂಬಂತೆ ರಾಜುವಿನ ಕಡೆ ನೋಡಿತು. ಅವನು ಅದನ್ನ ಅಂಗೈ ಮೇಲೆ ಹಾಕಿಕೊಂಡ. + +ಅಷ್ಟೊತ್ತಿಂದ ಕಾಲುಕಿತ್ತದೆ ಒಂದೆ ಕಡೆ ನಿಂತು, ಕಣ್ಣನ್ನು ಅಗಲಿಸಿ ನೋಡಿ ನೋಡಿ ಅವನಿಗೂ ಸುಸ್ತಾಗಿತ್ತು. ಅಂಗೈಲಿರುವ ಇರುವೆಯನ್ನ ನೋಡುತ್ತ ಅಲ್ಲೇ ಖುರ್ಚಿ ಮೇಲೆ ಕೂತುಕೊಂಡ. ಅದು ನಿದ್ದೆ ಹೋಗತೊಡಗಿತು. ಅವನಿಗೆ ಅದರ ಮೇಲೆ ಮತ್ತಷ್ಟು ಮುದ್ದು ಮೂಡಿತು. ಅದಕ್ಕೆ ನಿದ್ದೆ ಹತ್ತಿದ್ದುದುಖಾತ್ರಿಯಾದದ್ದೇ ನಿಧಾನಕ್ಕೆ ಅದನ್ನು ಜಾಮಿಟ್ರಿ ಪೆಟ್ಟಿಗೆಯಲ್ಲಿ ಮಲಗಿಸಿದ. ಮಲಗಿಸಿದವನೇ ಆಕಳಿಸುತ್ತ ತಾನೂ ನಿದ್ದೆ ಮಾಡಲು ಬೆಡ್ ಮೇಲೆ ಜಾರಬೇಕು ಎಂದು ಹೊರಟವನು ವಾಪಸ್ ಎದ್ದು ಜಾಮಿಟ್ರಿ ಪೆಟ್ಟಿಗೆ ಕಡೆಗೆ ನೋಡಿದ. ಇರುವೆ ಆರಾಮಾಗಿ ನಿದ್ದೆ ಮಾಡುತ್ತಿತ್ತು. ಇವನು ಅದನ್ನ ಮತ್ತೊಮ್ಮೆ ಅಕ್ಕರೆಯಿಂದ ನೋಡಿ ಆ ಜಾಮಿಟ್ರಿ ಪೆಟ್ಟಿಗೆ ಮುಚ್ಚಿ ಅದರ ಮೇಲೆ ತನ್ನ ಕೆಮಿಸ್ಟ್ರಿ ಪುಸ್ತಕ ಇಟ್ಟ. ಇಟ್ಟವನೇ ವಾಪಸ್ ಬಂದು ಬೆಡ್ ಮೇಲೆ ಮಲಗಿಕೊಂಡ. ನಿದ್ದೆ ಹತ್ತಲಿಲ್ಲ. ಮತ್ತೆ ಎದ್ದು ಜಾಮಿಟ್ರಿ ಪೆಟ್ಟಿಗೆ ಓಪನ್ ಮಾಡಿದ. ಮಾಡಿ ಇರುವೆಯನ್ನು ನೋಡಿದ. ಅದು ಹಾಗೇ ಮಲಗಿತ್ತು. ಏನೋ ಹೊಳೆದಂತಾಗಿ ಪೆಟ್ಟಿಗೆ ಮುಚ್ಚಿ ಅದರ ಮೇಲೆ ಬುಕ್ ಇಟ್ಟು ಬೆಕ್ಕಿನ ರೂಮ್ಗೆ ಹೋದ. ಅದು ಯಾವುದೋ ವಿಡಿಯೋ ನೋಡುತ್ತ ಮಲಗಿತ್ತು. ಇವನು ಒಂದು ಕಬೋರ್ಡ್ ತೆಗೆದು ತನ್ನ ಅಜ್ಜಿ ಇಲ್ಲಿಗೆ ಬಂದಾಗ ಬಳಸುತ್ತಿದ್ದ ಹಳೆಯ ಸೊಳ್ಳೆಪರದೆಯೊಂದನ್ನು ತೆಗೆದುಕೊಂಡು ಅಲ್ಲಿಂದ ಹೊರಟ. ಬೆಕ್ಕು ಒಂದು ಸಲ ಇವನ ಕಡೆ ತಿರುಗಿ ನೋಡಿತಷ್ಟೆ. + +ರಾಜು ರೂಮಿಗೆ ಬಂದವನೇ ಆ ಸೊಳ್ಳೆ ಪರದೆಯಿಂದ ಒಂದು ನೀಟಾದ ಚಚ್ಚೌಕ ತುಂಡು ಕತ್ತರಿಸಿಕೊಂಡ. ಜಾಮಿಟ್ರಿ ಪೆಟ್ಟಿಗೆ ತೆಗೆದು ನಿದ್ದೆಯಲ್ಲಿದ್ದ ಇರುವೆಯನ್ನು ಅದರ ನಿದ್ರೆಗೆ ಭಂಗವಾಗದಂತೆ ಎತ್ತಿ ಪುಸ್ತಕದ ಮೇಲಿಟ್ಟ. ಜಾಮಿಟ್ರಿ ಪೆಟ್ಟಿಗೆಯ ಮೇಲ್ಮುಚ್ಚಳವನ್ನು ಅದರಿಂದ ಬೇರ್ಪಡಿಸಿದ. ನಂತರ ಇರುವೆಯನ್ನು ಮತ್ತೆ ಪೆಟ್ಟಿಗೆಗೆ ಸ್ಥಳಾಂತರಿಸಿದ. ಈಗ ಆ ಸೊಳ್ಳೆಪರದೆ ತುಂಡನ್ನು ಅದರ ಸುತ್ತ ಒಂದು ಸುತ್ತು ಸುತ್ತಿ ಗಂಟು ಹಾಕಿದ. ಈಗ ಇರುವೆಗೆ ಗಾಳಿ ಬೆಳಕು ಸರಿಯಾಗಿ ಬೀಳುವಂಥ ವ್ಯವಸ್ಥೆ ಆಯಿತು. ಅದು ಆಕಸ್ಮಾತ್ ಎಲ್ಲಿಗೂ ಹೋಗಲಿಕ್ಕೂ ಆಗದಂತೆ ಬಂದೋಬಸ್ತ್ ಕೂಡ ಆಯಿತು. ಅವನ ಮನಸ್ಸು ನಿರಾಳ ಆಯಿತು. ಇರುವೆ ಇದ್ಯಾವುದರ ಪರಿವೆಯೇ ಇಲ್ಲದಂತೆ ಮಲಗಿತ್ತು. ರಾಜು ಅದರ ಕಡೆ ಮಗದೊಮ್ಮೆ ಅಕ್ಕರೆಯಿಂದ ನೋಡಿ ಪಪ್ಪಿ ಕೊಟ್ಟ ಹಾಗೆ ಮಾಡಿ ಆ ಪೆಟ್ಟಿಗೆಯನ್ನು ಅಲ್ಲೇ ಟೇಬಲ್ ಮೇಲಿಟ್ಟು ಮಲಗಿಕೊಂಡ. ಮಲಗಿ ನಿಮಿಷವಾಗಿರಲಿಲ್ಲ ಮತ್ತೆ ಎದ್ದ. ಪೆಟ್ಟಿಗೆಯನ್ನು ನೋಡಿದ. ಇರುವೆ ಹಾಗೇ ಮಲಗಿತ್ತು. ಇವನು, ‘ಸ್ಟುಪಿಡ್….ಇನ್ನೊಂದ್ ಸಲ ಹಾಗ್ ಎಲ್ಲಾದ್ರು ಹೋದ್ರೆ ನಾನ್ ಸುಮ್ನೆ ಇರೋದಿಲ್ಲ ನೋಡು’ ಎಂದು ಮತ್ತೊಮ್ಮೆ ಬೈದ. ಬೈದು ಮಲಗಲು ಅನುವಾದವನು ಇದ್ದಕ್ಕಿದ್ದ ಹಾಗೆ ಎದ್ದು ಪೆಟ್ಟಿಗೆ ಕೈಗೆತ್ತಿಕೊಂಡು ಪಕ್ಕದಲ್ಲಿಟ್ಟುಕೊಂಡು ಕಣ್ಮುಚ್ಚಿದ. ನಿಧಾನಕ್ಕೆ ನಿದ್ದೆ ಹತ್ತಿತು. ನಿದ್ದೆ ಹತ್ತಿದ್ದೇ ತಡ ಕನಸೊಂದು ಬಿತ್ತು. + +ಅಜ್ಜಿ ರಾಜುವಿನ ಟೇಬಲ್ ಮೇಲೆ ಚಕ್ಕಳಮಕ್ಕಳ ಹಾಕಿ ಕೂತು ಕುಟ್ಟಣಿಗೆಯಲ್ಲಿ ಅಡಕೆ ಕುಟ್ಟುತ್ತಿದ್ದಾಳೆ. ಅವನು ನೆಲದ ಮೇಲೆ ತುದಿಗುಂಡಿಯಲ್ಲಿ ಕೂತುಕೊಂಡು ಅವಳನ್ನೇ ನೋಡುತ್ತಿದ್ದಾನೆ. ಅವನಿಗೋ ಆಕೆಗೆ ಆದಷ್ಟು ಬೇಗ ತನ್ನ ಇರುವೆಯನ್ನು ತೋರಿಸುವ ಆತುರ. ಆದರೆ ಅಜ್ಜಿ ಆರಾಮಾಗಿನೋಡಿದರಾಯಿತು ಎಂಬಂತೆ ಅಡಕೆ ಕುಟ್ಟುವುದರಲ್ಲಿ ಮಗ್ನಳಾಗಿದ್ದಾಳೆ. ರಾಜುವಿಗೆ ಕಾದು ಕಾದು ಸಾಕಾಯ್ತು, ‘ಅಜ್ಜೀ?’ ಎಂದು ಮತ್ತೊಮ್ಮೆ ಬಾಯಿಬಿಟ್ಟ. ಅಜ್ಜಿ, ‘ಇರು ಇರು’ ಎಂಬಂತೆ ಸನ್ನೆ ಮಾಡಿ ಕುಟ್ಟಿ ಪುಡಿಮಾಡಿಕೊಂಡ ಅಡಕೆಯನ್ನ ಬಾಯಿಗೆ ಹಾಕಿಕೊಂಡಳು. ನಂತರ ತನ್ನ ಚೀಲದಿಂದ ಎಲೆಯ ಚೂರು ತೆಗೆದು ಅದಕ್ಕೆ ಸುಣ್ಣ ಸವರಿ ಬಾಯಿಗಿಟ್ಟುಕೊಂಡಳು. ನಂತರ ಅವನ ಪುಸ್ತಕವೊಂದನ್ನು ತೆಗೆದುಕೊಂಡು ಅದರಲ್ಲೇನೋ ನೋಡುತ್ತ ಎಲೆಅಡಕೆ ಜಗಿಯತೊಡಗಿದಳು. ಅವಳ ಅಪ್ಪಣೆಗಾಗಿ ಬಾಯಿ ತೆರೆದುಕೊಂಡು ಕಾಯುತ್ತಲೇ ಇರುವ ರಾಜು, ‘ಅಜ್ಜೀ…’ ಎಂದು ಮಗದೊಮ್ಮೆಗೋಗರೆದ. ಅಜ್ಜಿ, ಬಾಯಿ ತುಂಬಾ ತುಂಬಿಕೊಂಡಿರುವ ಜೊಲ್ಲನ್ನು ಅಲ್ಲೇ ತಾನು ಕೂತಿರುವ ಟೇಬಲ್ನ ಪಕ್ಕದ ಮೂಲೆಗೆ ಉಗಿದು, ‘ಬಾ ತೋರ್ಸು ನಿನ್ ರಾಣೀನಾ’ ಎಂದು ಅಪ್ಪಣೆ ಕೊಟ್ಟಳು. ಅವನು ಉತ್ಸಾಹದಿಂದ ಎದ್ದವನೇ ತನ್ನ ಟೇಬಲ್ನ ಡ್ರಾಯರ್ ಹಿಂದಕ್ಕೆ ಜಗ್ಗಿದ. ಅವನು ಹಾಗೆ ಜಗ್ಗಿದ್ದೇ ಸೈನ್ಯೋಪಾದಿಯಲ್ಲಿ ಇರುವೆಗಳು ಜುಳುಜುಳುಜುಳು ಎಂದು ಹೊರಗೆ ಬರತೊಡಗಿದವು. ಅವನಿಗೆ ಗಾಬರಿ ಆಯಿತು. ಇದ್ರಲ್ಲಿ ಯಾವ್ದು ತನ್ನ ಇರುವೆ ಎಂದು ಗುರುತಿಸಲಾಗಷ್ಟು ಇರುವೆಗಳು!! ಅವನು ಆ ಗಾಬರಿ ಅರಗಿಸಿಕೊಳ್ಳುವಷ್ಟರಲ್ಲಿ ಆ ಇರುವೆಗಳು ಶರವೇಗದಲ್ಲಿ ಅಜ್ಜಿಯ ಇಡೀ ದೇಹವನ್ನು ಮುತ್ತಿ ಕಚಕಚಕಚಕಚಕಚಕಚ ಎಂದು ಅವಳ ಮಾಂಸವನ್ನೆಲ್ಲ ತಿಂದುಹಾಕಿ ಕಿಟಕಿ ಮೂಲಕ ಮಾಯವಾದವು. ಅರ್ಧ ನಿಮಿಷದ ಮುಂಚೆ ಇವನ ಕಣ್ಮುಂದೆ ಇದ್ದ ಅಜ್ಜಿ ಹೋಗಿ ಬರಿ ಅಸ್ತಿಪಂಜರ ಉಳಿಯಿತು. ಅದು ದೊಪ್ಪೆಂದು ಒಂದು ಕಡೆ ವಾಲಿ ಬಿತ್ತು. ಇವನು ಚಿಟ್ ಎಂದು ಚೀರಿಕೊಂಡ. + +ಕನಸಿನಿಂದ ಎದ್ದಾಗ ಅವನ ಮುಖ ಹಸಿಹಸಿ ಆಗಿತ್ತು. ಮೈಯೆಲ್ಲಾ ಗದಗದ ನಡುಗುತ್ತಿತ್ತು. ಕೈಯಿಂದ ಮುಖದ ಬೆವರು ಒರೆಸಿಕೊಂಡ. ದಿಡಗ್ಗನೆ ಎದ್ದು ಬಾಕ್ಸ್ ಕಡೆ ನೋಡಿದ. ಇರುವೆ ಹಾಗೇ ಮಲಗಿತ್ತು. ಅದನ್ನು ತೆಗೆದು ಟೇಬಲ್ ಮೇಲಿಟ್ಟ. ತನ್ನ ಬ್ಯಾಗ್ ತೆಗೆದು ಅದರಿಂದ ನೀಲಿಮಸಿ ಪೆನ್ನು ತೆಗೆದ. ಅದರ ರಿಫೀಲ್ ಬೇರ್ಪಡಿಸಿದ. ಅದರ ನಿಬ್ ಅನ್ನು ಬಾಯಲ್ಲಿ ಕಚ್ಚಿ ತೆಗೆದ. ಬಾಯಿತುಂಬಾ ಮಸಿ ಆಗಿ ಒಂಥರ ಎನಿಸಿತು. ತ್ಪು ಎಂದು ಉಗುಳಲು ಹೋದವನು ಇರುವೆಗೆ ಎಚ್ಚರವಾಗುತ್ತೆ ಎಂಬ ಯೋಚನೆ ಬಂದಿದ್ದೇ ತಡೆಹಿಡಿದು ನಿಬ್ ಅನ್ನು ಬಾಯಲ್ಲೇ ಇಟ್ಟುಕೊಂಡ. ಮತ್ತಷ್ಟು ಮಸಿ ಬಾಯಿ ತುಂಬಿತು. + +ನಂತರ ರಿಫಿಲ್ ಅನ್ನು ಸಾವಕಾಶವಾಗಿ ಅದರೊಳಗಿನ ಮಸಿ ಕೆಳಗೆ ಚೆಲ್ಲದಂತೆ ಕಿಟಕಿಗೆ ಆನಿಸಿ ಇಟ್ಟ. ಜಾಮಿಟ್ರಿ ಪೆಟ್ಟಿಗೆ ಕೈಗೆತ್ತಿಕೊಂಡು ಪರದೆ ಬಿಚ್ಚಿದ. ಮಲಗಿದ್ದ ಇರುವೆಯನ್ನು ನಿಧಾನಕ್ಕೆ ಹೊರಕ್ಕೆ ತೆಗೆದ.ಟೇಬಲ್ ಮೇಲಿಟ್ಟ.ಕಣ್ಮುಚ್ಚಿ, ‘ಫಾರ್ಗಿವ್ ಮಿ ಇರುವೆ… ಪ್ಲೀಸ್’ ಎಂದು ಪ್ರಾರ್ಥಿಸಿದ.ಗಟ್ಟಿಮನಸು ಮಾಡಿ ರಿಫಿಲ್ ಕೈಗೆತ್ತಿಕೊಂಡ.ಅವನ ಕೈ ನಡುಗತೊಡಗಿತು. ನಿಶ್ಚಿಂತೆಯಿಂದ ಮಲಗಿದ್ದ ಇರುವೆಯ ಕಡೆಗೊಮ್ಮೆ ನೋಡಿದ. ಕೈ ಮತ್ತಷ್ಟು ನಡುಗತೊಡಗಿತು. ರಿಫಿಲ್ ಅನ್ನು ಇರುವೆ ಹತ್ತಿರಕ್ಕೆ ತಂದ. ಕೈ ಮಗದಷ್ಟು ಜೋರಾಗಿ ನಡುಗಿ ಒಂದು ಹನಿ ಅವನ ಹಣೆಗೆ ಸಿಡಿಯಿತು. ಎಡಗೈಯಿಂದ ಅದನ್ನೊರೆಸಿಕೊಂಡು ರಿಫಿಲ್ ಅನ್ನು ಮತ್ತಷ್ಟು ಬಲವಾಗಿ ಹಿಡಿದ. ಗುರಿಯಿಟ್ಟು ಇರುವೆ ಮೇಲೆ ಒಂದು ಹನಿ ಮಸಿ ಹಾಕಲುಹೋದ. ಆದರೆ ಕಡೆ ಕ್ಷಣದಲ್ಲಿ ಕೈ ನಡುಗಿ ಆ ಹನಿ ಅದರ ಪಕ್ಕಕ್ಕೆ ಬಿತ್ತು. ಈಗ ಅವನು ನಡುಗುವ ಕೈಯನ್ನು ತಹಬದಿಗೆ ತರಲು ಇನ್ನೊಂದು ಕೈಯಿಂದ ಆ ಕೈಯನ್ನು ಬಲವಾಗಿ ಹಿಡಿದುಕೊಂಡು ಹೇಗೋ ತ್ರಾಸುಪಟ್ಟು ಇರುವೆ ಮೇಲೆ ಒಂದು ಹನಿ ಮಸಿ ಹಾಕುವುದರಲ್ಲಿ ಯಶಸ್ವಿಯಾದ. ಆದರೆ ಮಸಿ ಮೈಮೇಲೆ ಬಿದ್ದದ್ದೇ ಇರುವೆ ಎಚ್ಚರಗೊಂಡು ವಿಲವಿಲ ಒದ್ದಾಡತೊಡಗಿತು. ಅದನ್ನು ನೋಡಿ ಅವನಿಗೆ ಗಾಬರಿ ಆಯಿತು. ಕಣ್ಣಲ್ಲಿ ರಕ್ತ ಜಿಲ್ಲೆಂದಿತು. ಕಣ್ಗುಡ್ಡೆ ತುಂಬಾ ನರ ಮೂಡಿದವು. + +ರಿಫಿಲ್ ಕೈಬಿಟ್ಟು ‘ಅಯ್ಯೋ! ಸಾರಿ ಸಾರಿ ಐ ಯಾಮ್ ರಿಯಲಿ ಸಾರಿ ಐ ಯಾಮ್ ರಿಯಲಿ ಸಾರಿ’ ಎಂದು ಅಳತೊಡಗಿದ. ಬಾಯೊಳಗೆ ತುಂಬಿಕೊಂಡಿದ್ದ ಮಸಿಮಿಶ್ರಿತ ಜೊಲ್ಲು ಹೊರಗೆ ಬಂದು ಗದ್ದದ ಮೇಲಿಂದ ಕೊರಳ ಕೆಳಗೆ ಹರಿಯತೊಡಗಿತು. ಜೊಲ್ಲಿನೊಂದಿಗೆ ನಿಬ್ಬೂಹೊರಗೆಬಂದಿತು.ಅಷ್ಟರಲ್ಲಿ ಇರುವೆ ಸಾವರಿಸಿಕೊಂಡು ನಿಂತಿತು. ಅದನ್ನ ನೋಡಿ ಅವನಿಗೆ ಸ್ವಲ್ಪ ಸಮಾಧಾನವಾಯಿತು. ಕಣ್ಣೀರು ಜೊಲ್ಲು ಒರೆಸಿಕೊಂಡ. ಇರುವೆ ಹಾಗೆಯೇ ನಿಂತಿತ್ತು. ‘ಐ ಯಾಮ್ ಸಾರಿ ಐ ಯಾಮ್ ರಿಯಲಿ ಸಾರಿ…’ ಎಂದು ಅದನ್ನು ಮುಟ್ಟಲು ಹೋದ. ಅದು ಅವನ ಮಸಿಯಂಟಿದ ಬೆರಳು ಕಂಡಿದ್ದೇ ಸರ್ರ ಅಂತ ಅಲ್ಲಿಂದ ಕೊಂಚ ದೂರ ಹೋಯಿತು. ಅವನಿಗೆ ಆತಂಕವಾಯಿತು. ಸಟ್ ಅಂತ ಕೈ ಹಿಂದಕ್ಕೆ ತೆಗೆದುಕೊಂಡ. ಅವನು ನೋಡನೋಡುತ್ತಲೇ ಅದು ಕಿಟಕಿ ಕಡೆಗೆ ಓಡತೊಡಗಿತು. ಅವನಿಗೆ ಮತ್ತಷ್ಟು ಆತಂಕವಾಯಿತು. ‘ನಿಲ್ಲು… ಆ ಯಾಮ್ ರಿಯಲಿ ಸಾರಿ’ ಎಂದು ಬೇಡಿಕೊಂಡ. ಅವನು ಎಷ್ಟು ಕೇಳಿಕೊಂಡರೂ ಅದು ಅವನತ್ತ ನೋಡಲೂ ಇಲ್ಲ. ಅವನಿಗೆಏನು ಮಾಡಬೇಕು ತೋಚದಾಯಿತು. ಸಿಟ್ಟು ಅಳು ಒಟ್ಟೊಟ್ಟಿಗೆ ಬರತೊಡಗಿತು. + +ಏನೇನೋ ಮಾತಾಡಿ,ಸನ್ನೆ ಮಾಡಿ, ಸಾರಿ ಕೇಳಿ, ಜಬರಿಸಿ ಅದನ್ನು ನಿಲ್ಲಿಸಲು ನೋಡಿದ. ಆದರೆ ಅದು ನಿಲ್ಲಲಿಲ್ಲ. ಕಿಟಕಿ ಕಡೆ ಮುಖ ಮಾಡಿ ಒಂದೇ ಸಮ ಓಡತೊಡಗಿತು. ಬಿಟ್ಟರಿದು ಹೋಗೇಬಿಡುತ್ತದೆ ಎಂಬ ಭಯದಲ್ಲಿಅವನು ಅದನ್ನು ಹಿಡಿದು ಜಾಮಿಟ್ರಿ ಪೆಟ್ಟಿಯೊಳಗೆ ಕೂರಿಸಿದ. ಈಗ ಅವನ ಬೆರಳುಗಳಿಂದ ರಕ್ತ ಸೋರಿತು. ಅಲ್ಲೇ ಇದ್ದ ಸೊಳ್ಳೆ ಪರದೆಯನ್ನು ಕೈಗೆತ್ತಿಕೊಂಡು ಹಲ್ಲಿನಿಂದ ಹರಿಯತೊಡಗಿದ. ಅದರಿಂದ ಒಂದು ತುಂಡು ಮಾಡಿಕೊಂಡು ಅದನ್ನು ಮತ್ತೆ ಜಾಮಿಟ್ರಿ ಪೆಟ್ಟಿಗೆಗೆ ಸುತ್ತಲು ಅನುವಾದ. ಆದರೆ ಅಷ್ಟರಲ್ಲಿ ಇರುವೆ ಮತ್ತೆ ಆ ಪೆಟ್ಟಿಗೆಯಿಂದ ತಪ್ಪಿಸಿಕೊಂಡು ಕಿಟಕಿಕಡೆಗೆ ಹೊರಟಿತು. ಅವನ ಮುಖ ಗಂಟಿಕ್ಕಿತು. ಕೈಲಿದ್ದ ಪರದೆತುಂಡು ಕೆಳಗಿಟ್ಟು ಇರುವೆಯನ್ನು ಹಿಡಿದು ಮತ್ತೆ ಪೆಟ್ಟಿಗೆಯೊಳಕ್ಕೆ ಕೂರಿಸಿದ. ಅದು ಮತ್ತೆ ಓಡತೊಡಗಿತು. ಮತ್ತೆ ಹಿಡಿದು ಕೂರಿಸಿದ. ಅದು ಮತ್ತೆ ಅಲ್ಲಿಂದ ಹೊರಟಿತು.ಅವನು ಹಿಡಿದು ಕೂರಿಸುವುದು, ಅದು ಓಡುವುದು – ಹೀಗೇ ನಡೆಯತೊಡಗಿತು. ಪ್ರತಿ ಸಲ ಹಿಡಿದಾಗಲೂ ಅವನ ಕೈಯಿಂದ ರಕ್ತ ಸೋರುವುದು ಜಾಸ್ತಿಯಾಗತೊಡಗಿತು. ಕಡೆಗೊಮ್ಮೆ ಅವನು ಇರುವೆಯನ್ನು ಬಲವಾಗಿ ಹಿಡಿದು ಪೆಟ್ಟಿಗೆಯೊಳಕ್ಕೆ ಜೋರಾಗಿ ಎಸೆದ. + +ಅದು ಕಾಲು ಮೇಲಾಗಿ ದೇಹ ಕೆಳಗಾಗಿ ಬಿದ್ದು ಒದ್ದಾಡತೊಡಗಿತು. ಅವನು ನಾಲಿಗೆಯಲ್ಲಿ ಉಳಿದಿದ್ದ ಮಸಿ ನುಂಗಿಕೊಂಡ. ಪಟ ಪಟ ಬಡಿಯುತ್ತಿರುವ ಅದರ ಆರು ಕಾಲುಗಳನ್ನೇ ನೋಡತೊಡಗಿದ. ಇರುವೆ ಸ್ವಲ್ಪ ಸಮಯ ಶತಾಯಗತಾಯ ಪ್ರಯತ್ನ ಮಾಡಿ ಮತ್ತೆ ಎದ್ದು ಕೂತಿತು. ಎದ್ದು ಕೂತದ್ದೇ ಮತ್ತೆ ಕಿಟಕಿ ಕಡೆಗೆ ಹೊರಟಿತು. ಇವನಿಗೆ ಪಿತ್ತ ನೆತ್ತಿಗೇರಿತು. ಅದನ್ನು ರಪ್ ಅಂತ ಹಿಡಿದುಕೊಂಡ. ಅವನ ಕೈಯಿಂದ ಈಗ ರಕ್ತ ಮತ್ತಷ್ಟು ಧಾರೆಯಾಗಿ ಸುರಿಯತೊಡಗಿತು. ಇರುವೆಯನ್ನು ಹಾಗೇ ಗಟ್ಟಿಹಿಡಿದುಕೊಂಡು ತನ್ನ ಡ್ರಾಯರ್ ತೆಗೆದು ಅದರೊಳಗಿದ್ದ ನೇಲ್ ಕಟರ್ ಹೊರತೆಗೆದ. ತೆಗೆದು ಇರುವೆಯ ಇಕ್ಕಳದಂಥ ಹಲ್ಲುಗಳನ್ನೂ ಅದರ ಮುಂದಿನೆರಡು ಕಾಲುಗಳನ್ನೂ ಕತ್ತರಿಸಿದ. ಆಮೇಲೆ ಅದನ್ನು ಜಾಮಿಟ್ರಿ ಪೆಟ್ಟಿಗೆ ಒಳಗೆ ಕೂರಿಸಿ, ‘ಈಗ ಹೇಗ್ ಹೋಗ್ತೀಯ ನಾನೂ ನೋಡ್ತೀನಿ’ ಅನ್ನೋ ಥರ ನೋಡತೊಡಗಿದ. ಆದರೆ ಅದು ಅವನು ಶಾಕ್ ಆಗುವಂತೆ ಉಳಿದ ನಾಲ್ಕು ಕಾಲುಗಳಿಂದಲೇ ಓಡತೊಡಗಿತು. ಇವನು ಮತ್ತೆ ರಪ್ ಎಂದು ಹಿಡಿದುಕೊಂಡ. ಈಗ ಇನ್ನೆರಡು ಕಾಲು ಕಿತ್ತಿ ಕೂರಿಸಿದ. ಈಗಲೂ ಅದು ಸ್ವಲ್ಪ ಹೊತ್ತು ಒದ್ದಾಡಿ ಸುಧಾರಿಸಿಕೊಂಡು ನಂತರ ತೆವಳಿಕೊಂಡು ಕಿಟಕಿ ಕಡೆಗೆ ಹೊರಟಿತು. ಅವನು ಉಳಿದ ಇನ್ನೆರಡು ಕಾಲುಗಳನ್ನೂ ಕಿತ್ತುಹಾಕಿ ಅದನ್ನ ಜಾಮಿಟ್ರಿ ಪೆಟ್ಟಿಗೆಯೊಳಗೆ ಮಲಗಿಸಿದ. ಅದರ ಪುಟ್ಟ ಕಣ್ಣುಗಳು ಕಿಟಕಿ ಕಡೆಗೆ ನೋಡತೊಡಗಿದವು. ಇವನು ಅದರ ಕಣ್ಣುಗಳನ್ನು ದಿಟ್ಟಿಸಿ ನೋಡತೊಡಗಿದ. ಅದರ ಚಿಕ್ಕ ಕಣ್ಣುಗಳಲ್ಲಿ ತನ್ನ ಮಸಿಮಸಿಯಾದ ಬಿಂಬ ಕಂಡಂತಾಯಿತು. ಹಾಗೇ ಇರುವೆಯ ಕಣ್ಣುಗಳಲ್ಲಿ ತನ್ನನ್ನು ನೋಡಿಕೊಳ್ಳತೊಡಗಿದ. + +ನೋಡನೋಡುತ್ತಿದ್ದಂತೆ ಇರುವೆಯ ಕಣ್ಣುಗಳು ಹಿಗ್ಗಿ ಹಿಗ್ಗಿ ದೊಡ್ಡವಾದವು.ಅವುಗಳ ಕೆಳಗೆ ತಾನು ಕಿತ್ತುಹಾಕಿದ್ದ ಹಲ್ಲುಗಳು ಮೆಲ್ಲಗೆಮೂಡತೊಗಿದವು. ಕಿತ್ತುಹಾಕಿದ್ದ ಕಾಲುಗಳ ಜಾಗದಲ್ಲಿ ಏನೋ ಚಲನೆ ಕಾಣಿಸಿಕೊಳ್ಳತೊಡಗಿತು. ನೋಡ ನೋಡುತ್ತಿದ್ದಂತೆ ಅಲ್ಲೆರಡು ಚಿಕ್ಕ ರೆಕ್ಕೆ ಮೂಡಿದವು. ಇವನಿಗೆ ಆಶ್ಚರ್ಯವಾಯಿತು. ಆದರೆ ಇರುವೆಗೆ ಅವನ್ನಿಟ್ಟುಕೊಂಡು ಏನು ಮಾಡಬೇಕು ತೋಚದಾಯಿತು. ಅವುಗಳನ್ನು ಊರುಗೋಲಿನಂತೆ ಬಳಸಿಕೊಂಡು ತೆವಳಲು ಪ್ರಯತ್ನಿಸಿ ಸೋತಿತು. ಇವನ ಮುಖದಲ್ಲೊಂದು ವಿಕೃತ ಮುಗುಳುನಗೆ ಮೂಡಿತು. ಖುಷಿಯಿಂದ ಇರುವೆಯನ್ನೊಮ್ಮೆ ಮುಟ್ಟಲು ಹೋದ. ಆದರೆ ಅದು ಅವನ ಕೈ ಹತ್ತಿರಕ್ಕೆ ಬಂದಿದ್ದೇ ಪಟಪಟ ರೆಕ್ಕೆ ಬಡಿದುಅಲ್ಲಿಂದ ಮೇಲಕ್ಕೆ ಹಾರಿತು. ಅವನು ಟಪ್ ಎಂದು ಬಲವಾಗಿ ಹೊಡೆದು ಅದನ್ನು ಬೀಳಿಸಿದ. ಅದು ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಅದನ್ನು ಹಿಡಿದುಕೊಳ್ಳಲು ಹೋದ. ಅದು ಮತ್ತೆ ಮೇಲೆದ್ದು ಕಿಟಕಿ ಕಡೆಗೆ ಹಾರಿತು. ಅವನು ಮತ್ತೆ ಅದನ್ನು ಹೊಡೆದು ಬೀಳಿಸಿದ. ಸುಮಾರು ಹೊತ್ತು ಅವನು ಬೀಳಿಸುವುದು ಅದು ಹಾರುವುದು – ಹೀಗೇ ನಡೆಯಿತು. ಅವನಿಗೆ ಅದು ಹಾರಲು ಪ್ರಯತ್ನಿಸಿದಷ್ಟು ರೋಷ ಉಕ್ಕತೊಡಗಿತು. ಅದಕ್ಕೆ ಇವನು ಬೀಳಿಸಿದಷ್ಟು ಮೇಲಕ್ಕೆ ಹಾರುವ ರೊಚ್ಚು ಏರತೊಡಗಿತು. + + + +ಕಡೆಗೊಮ್ಮೆ ಅವನು ಅದನ್ನು ಕೈಯಲ್ಲಿ ಗಟ್ಟಿಯಾಗಿ ಹಿಡಿದುಕೊಂಡು ಅದರ ರೆಕ್ಕೆಗಳನ್ನು ಬೇರು ಸಮೇತ ಕೀಳಲು ತಯಾರಾದ. ಅದು ಅವನಿಂದ ತಪ್ಪಿಸಿಕೊಂಡು ಹಾರಿ ಮೇಲೆ ಫ್ಯಾನಿನ ರೆಕ್ಕೆಯೊಂದರ ಮೇಲೆ ಕುಳಿತಿತು. ಇವನು ತಲೆಯೆತ್ತಿ ನೋಡಿದ. ಅವನಿಗೆ ನಿಲುಕದಷ್ಟು ದೂರದಲ್ಲಿ ಅದು ಹೋಗಿ ಕುಳಿತಿತ್ತು. ಅದನ್ನು ನೋಡಿದ್ದೇ ಮೈಯಲ್ಲಿ ಏನೋ ಆವೇಗ ಬಂದಂತಾಗಿ ಅಲ್ಲಿಂದಲೇ ಅದರ ಕಡೆಗೆ ಜೋರಾಗಿ ಹಾರಿದ. ನಿಲುಕಲಿಲ್ಲ. ಮತ್ತೆ ಹಾರಿದ. ನಿಲುಕಲಿಲ್ಲ. ಮಗದೊಮ್ಮೆ ಹಾರಿದ. ನಿಲುಕಲಿಲ್ಲ. ಅವನು ಹಾಗೆ ಎಡೆಬಿಡದೆ ಹಾರುತ್ತ ಬೀಳುತ್ತ ಹಾರುತ್ತ ಬೀಳುತ್ತ ಕೊನೆಗೊಮ್ಮೆಮಿಡತೆಯಾದ. ಈಗ ಟಪ್ ಎಂದು ನೆಗೆದು ಫ್ಯಾನಿನ ಇನ್ನೊಂದು ರೆಕ್ಕೆಯ ಮೇಲೆ ಮೇಲೆ ಕುಳಿತ. ಇರುವೆಗೆ ಗಾಬರಿಯಾಯಿತು. ತಪ್ಪಿಸಿಕೊಳ್ಳಲು ಅಲ್ಲಿಂದ ಪಕ್ಕದ ಗೋಡೆಗೆ ಹಾರಿತು. ಮಿಡತೆ ಅದನ್ನು ಹಿಡಿದು ತಿನ್ನುವ ರೊಚ್ಚಿನಲ್ಲಿ ಹಿಂದೆಯೇ ಹಾರಿತು. ಇರುವೆ ಮತ್ತೊಂದು ಗೋಡೆಗೆ ಹಾರಿತು. ಮಿಡತೆಯೂ ಹಾರಿತು. ತನ್ನಿಂದ ತಪ್ಪಿಸಿಕೊಳ್ಳುವ ಹಠದಲ್ಲಿ ಇರುವೆ ಅಲ್ಲಿಂದಿಲ್ಲಿಗೆ ಹಾರಿದಷ್ಟೂಮಿಡತೆಗೆ ರೊಚ್ಚು ಹೆಚ್ಚಾಗಿ ಅದನ್ನ ಅಟ್ಟಿಸಿಕೊಂಡು ಹಾರತೊಡಗಿತು. + +ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ. “ಫೂ” ಇವರ ಪ್ರಕಟಿತ ಕಥಾ ಸಂಕಲನ. \ No newline at end of file diff --git a/Kenda Sampige/article_261.txt b/Kenda Sampige/article_261.txt new file mode 100644 index 0000000000000000000000000000000000000000..3a542134781b35ae324b8fdc0de44dc3ae0dd32e --- /dev/null +++ b/Kenda Sampige/article_261.txt @@ -0,0 +1,95 @@ + + +ನಾವೀಗ ಚಯಾಂಗ್ ವಿಮಾನ ನಿಲ್ದಾಣವನ್ನು ತಲುಪಿದ್ದೇವೆ. ಹೊರಗಿನ ತಾಪಮಾನವು ಮೂವತ್ತೆರಡು ಡಿಗ್ರಿ ಸೆಲ್ಸಿಯಸ್ ನಷ್ಟಿದ್ದು ಬಿಸಿಲು ಹಿತವಾಗಿದೆ. ದೇವರ ದೇಶವೂ, ಧರ್ಮದ ದೇಶವೂ ಆಗಿರುವ ಸಂಭಾವ್ಯ ನಿಮಗೆ ಸುಸ್ವಾಗತವನ್ನು ಕೋರುತ್ತಿದೆ ಎಂದು ಘೋಷಣೆಯಾದ ಕೆಲ ಕ್ಷಣಗಳಲ್ಲೇ ಡಾ. ಬಂಕೋ ಸಂಭಾವ್ಯದ ನೆಲಕ್ಕೆ ಕಾಲಿಟ್ಟಿದ್ದ. ರಾಜಧಾನಿಯ ಮುಖ್ಯ ಕೇಂದ್ರವಾಗಿದ್ದ ಚಯಾಂಗ್ ವಿಮಾನ ನಿಲ್ದಾಣವು ನೋಡಲು ಭವ್ಯ ಅರಮನೆಯಂತೆ ಝಗಮಗಿಸುತ್ತಿತ್ತು. ಇತ್ತ ಹಿತವಾಗಿ ಮೈಮುರಿಯುವಂತಿದ್ದ ಬಿಸಿಲು ಆಪ್ತಸ್ವಾಗತವನ್ನು ಕೋರುವ ಗೆಳೆಯನಂತೆ ಅವನಲ್ಲಿ ಲವಲವಿಕೆಯನ್ನು ತರುತ್ತಿತ್ತು. ಮನುಷ್ಯನೊಬ್ಬ ಮನಸ್ಸು ಮಾಡಿದರೆ ನೂರು ದೇಶ ಸುತ್ತಬಹುದು. ಆದರೆ ತಾಯ್ನಾಡಿಗಿಂತ ಚಂದ ಇನ್ನೇನಿದೆ? ಉನ್ನತ ವಿದ್ಯಾಭ್ಯಾಸಕ್ಕೆಂದು ದೇಶವನ್ನು ಬಿಟ್ಟು ಹಾರಿದ್ದ ಬಂಕೋ ಬರೋಬ್ಬರಿ ಹದಿನೈದು ವರ್ಷಗಳ ನಂತರ ಮರಳಿ ಬಂದಿದ್ದ. ಇದರ ಪರಿಣಾಮವೋ ಏನೋ! ಬಂಕೋನ ಸಂತಸವು ಇಂದು ಪದಗಳಿಗೆ ನಿಲುಕದ ಸಂಗತಿಯಾಗಿತ್ತು. + +ಸಂಭಾವ್ಯ ದೇಶದ ಸಾಮಾನ್ಯ ದೃಷ್ಟಿಕೋನದಿಂದ ನೋಡಿದರೆ ಬಂಕೋ ನಿಜಕ್ಕೂ ಓರ್ವ ಅದೃಷ್ಟಶಾಲಿ ಯುವಕನಾಗಿದ್ದ. ಏಕೆಂದರೆ ಬಂಕೋನ ಚುರುಕುಬುದ್ಧಿಯನ್ನು ಎಂಟರ ವಯಸ್ಸಿನಲ್ಲೇ ಗುರುತಿಸಿದ್ದ ಸಂಭಾವ್ಯದ ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ, ಈ ಇದ್ದಿಲನ್ನು ವಜ್ರವನ್ನಾಗಿಸಲು ಯೂರೋಪ್, ಅಮೆರಿಕಾಗಳಿಗೆ ಕಳಿಸಿದ್ದ. ಬಂಕೋನ ಪ್ರತಿಭೆಯನ್ನು ಸಂಭಾವ್ಯದ ಉನ್ನತಿಗಾಗಿ ಬಳಸಬೇಕೆಂಬ ಮಹತ್ತರವಾದ ಗುರಿಯು ಮಾರ್ತಾಂಡ ಸಿಂಹನಾಯಕನಲ್ಲಿ ಅದೆಂತೋ ಮೂಡಿತ್ತು. ಆದರೆ ಪ್ರಭುತ್ವದ ಖರ್ಚಿನಲ್ಲಿ ಹೀಗೆ ಹೋಗುವವರು, ತರಹೇವಾರಿ ಸೌಲಭ್ಯಗಳನ್ನು ಪಡೆಯುವವರು ತಾಯ್ನಾಡಿಗೆ ಮರಳಿ ತಮ್ಮಿಂದಾಗುವ ರೂಪದಲ್ಲಿ ದೇಶಸೇವೆ ಮಾಡುವುದು ಸಂಭಾವ್ಯದ ನೆಲದಲ್ಲಿ ಕಡ್ಡಾಯವಾಗಿತ್ತು. ಹೀಗೆ ವೈರಾಲಜಿಯಲ್ಲಿ ಉನ್ನತ ಪದವಿಯನ್ನು ಪಡೆದು ಸಂಭಾವ್ಯಕ್ಕೆ ಮರಳಿದ್ದ ಡಾ. ಬಂಕೋಗೆ ತಾಯ್ನಾಡಿನ ಋಣವನ್ನು ತೀರಿಸುವ ಕಾಲವು ಈಗ ಕೂಡಿಬಂದಾಗಿತ್ತು. + +ಸಂಭಾವ್ಯದ ಬಗ್ಗೆ ಹೇಳುವಾಗ ಮಾರ್ತಾಂಡ ಸಿಂಹನಾಯಕನ ಬಗ್ಗೆ ವಿವರವಾಗಿ ಹೇಳದೆ ವಿಧಿಯಿಲ್ಲ. ‘ತಾನೆಂದರೆ ದೇಶ, ದೇಶವೆಂದರೆ ತಾನು’, ಎಂಬಂತೆ ಮೂರು ದಶಕಗಳ ಕಾಲ ಸಂಭಾವ್ಯದ ಆಡಳಿತವನ್ನು ಚಲಾಯಿಸಿದ ಕುಖ್ಯಾತ ಮಿಲಿಟರಿ ನಾಯಕನೀತ. ತನ್ನ ಬರೋಬ್ಬರಿ ಮೂವತ್ತು ವರ್ಷಗಳ ಆಡಳಿತದಲ್ಲಿ ಆತ ಹೇಳಿದ್ದು ಬಹುತೇಕ ಕಾಯಕದ ಮಾತುಗಳೇ ಆಗಿದ್ದವು. ಸಂಭಾವ್ಯದ ನಾಗರಿಕರು ವಾರದ ಆರು ದಿನಗಳ ಕಾಲ ಕೆಲಸ ಮಾಡಬೇಕು, ದಿನಕ್ಕೆ ಹತ್ತು ತಾಸುಗಳ ಕಾಲ ದುಡಿಯಬೇಕು, ಇಂತಿಪ್ಪ ವಿಧಾನಗಳಲ್ಲಿ ದೇಶದ ಆರ್ಥಿಕತೆಯನ್ನು ಬೆಳೆಸಬೇಕು ಎಂಬಿತ್ಯಾದಿ ಕಾನೂನುಗಳು ಜನರ ಬದುಕನ್ನು ವಿನಾಕಾರಣ ಸಂಕೀರ್ಣಗೊಳಿಸಿದ್ದವು. + +ಮಾರ್ತಾಂಡ ಸಿಂಹನಾಯಕನು ಸೃಷ್ಟಿಸಿದ್ದ ಸಂಭಾವ್ಯದ ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯು ಹೊರಜಗತ್ತಿಗೆ ತನ್ನನ್ನು ತಾನು ಮುಕ್ತವಾಗಿ ತೆರೆದುಕೊಳ್ಳುವುದಕ್ಕಿಂತ ಹೆಚ್ಚಾಗಿ ದೇಶೀಯತೆಯ ನೆಲೆಯಲ್ಲೇ ಅಭಿವೃದ್ಧಿಯನ್ನು ಕಾಣುವ ಪರಿಕಲ್ಪನೆಯದ್ದಾಗಿತ್ತು. ಅಂದಹಾಗೆ ಈ ಅಭಿವೃದ್ಧಿಯು ಸಂಭಾವ್ಯದ ನೈಜ ಜನಜೀವನಕ್ಕಿಂತ ಸರ್ವಾಧಿಕಾರಿಯ ಅಬ್ಬರದ ಪ್ರಚಾರದ ವೀಡಿಯೋಗಳಲ್ಲಿ ಕಾಣಸಿಕ್ಕಿದ್ದೇ ಹೆಚ್ಚು. + +ಅಸಲಿಗೆ ಹೊರಜಗತ್ತಿಗೆ ಮುಕ್ತವಾಗಿರದಿದ್ದ ಸಂಭಾವ್ಯದ ಮಾರುಕಟ್ಟೆಗಳು ಸಿಂಹನಾಯಕನ ಹಿಡಿತದಲ್ಲಿದ್ದ ಕೆಲವೇ ಕೆಲವು ದೈತ್ಯಸಂಸ್ಥೆಗಳಿಂದ ಸಕ್ರಿಯವಾಗಿದ್ದವು. ಹೀಗಾಗಿ ಸಿಂಹನಾಯಕನಿಗೆ ಉದ್ಯಮದಲ್ಲಿ ಸ್ಪರ್ಧೆಯನ್ನು ನೀಡಬಯಸುವ ಜಾಗತಿಕ ಸಂಸ್ಥೆಗಳಿಗೆ ಅಲ್ಲಿ ಅವಕಾಶವೇ ಇರಲಿಲ್ಲ. ಇನ್ನು ಸರಕಾರಿ ಖರ್ಚಿನಲ್ಲಿ ಬಿಟ್ಟಿಯಾಗಿ ನೀಡಲಾಗುತ್ತಿದ್ದ ಶಿಕ್ಷಣ, ಆರೋಗ್ಯ, ಆಹಾರದಂತಹ ಸೌಲಭ್ಯಗಳ ಬದಲಾಗಿ ನಾಗರಿಕರು ತಮ್ಮ ಜೀವನದ ಸಿಂಹಪಾಲನ್ನು ದೇಶಸೇವೆಗಾಗಿ ಮುಡಿಪಾಗಿಡಬೇಕಿತ್ತು. ಕಡ್ಡಾಯ ಮಿಲಿಟರಿ ಸೇವೆಯನ್ನೂ ಸೇರಿದಂತೆ ನಾಗರಿಕರನ್ನು ಸದಾ ಪ್ರಭುತ್ವದ ನಿಯಂತ್ರಣದಲ್ಲಿರುವಂತೆ ಮಾಡುವ ಎಲ್ಲಾ ಕಾನೂನುಗಳನ್ನು ಸರ್ವಾಧಿಕಾರಿ ಜಾರಿಗೊಳಿಸಿದ್ದ. ಇವೆಲ್ಲದರಿಂದಾಗಿ ಸಂಭಾವ್ಯದ ನಾಗರಿಕರು ತಮ್ಮ ನೆಲದಲ್ಲೇ, ದೊಡ್ಡದೊಂದು ಅಗೋಚರ ಜೈಲಿನಲ್ಲಿ ಬಂಧಿತರಾಗಿರುವಂತೆ ಅವ್ಯಕ್ತ ಆತಂಕದೊಂದಿಗೆ ಬದುಕುತ್ತಿದ್ದರು. + +ಇನ್ನು ಸಂಭಾವ್ಯದ ಸಾಮಾನ್ಯ ಪ್ರಜೆಯೊಬ್ಬನ ಪರಿಸ್ಥಿತಿಯು ಹೀಗಿದ್ದರೆ ದೇಶದ ಶಕ್ತಿಕೇಂದ್ರಗಳ ಸಾಮೀಪ್ಯವನ್ನು ಹೊಂದಿರುವ ಮಂದಿಯ ಬದುಕು ಇದಕ್ಕಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಈ ಮೇಲ್ಮಧ್ಯಮ ಮತ್ತು ಗಣ್ಯಾತಿಗಣ್ಯರ ವರ್ಗಕ್ಕೆ ಸೇರುವ ಬಹಳಷ್ಟು ಮಂದಿಯ ಮಕ್ಕಳು ಹೊರದೇಶಗಳಿಗೆ ವಿದ್ಯಾಭ್ಯಾಸಕ್ಕೆಂದು ತೆರಳಿ, ಇನ್ಯಾವುದೋ ದೇಶದಲ್ಲಿ ವಾಸ್ತವ್ಯವನ್ನು ಹೂಡಿದ್ದರೆ ಮತ್ತೆ ಕೆಲವರು ಅಲ್ಲೇ ಸಂಸಾರ ಸಮೇತ ನೆಲೆಯೂರಿ, ಹೊಸ ಪೌರತ್ವವನ್ನು ಪಡೆದುಕೊಂಡು ತಮ್ಮ ಮಾತೃದೇಶದ ನಂಟನ್ನು ಕಳೆದುಕೊಳ್ಳುತ್ತಿದ್ದರು. + +ಹೀಗೆ ರಾಷ್ಟ್ರೀಯತೆಯ ಮತ್ತು ದೇಶಸೇವೆಯ ಸೋಗಿನಲ್ಲಿ ಸರ್ವಾಧಿಕಾರಿಯ ಪ್ರಭುತ್ವವು ತನ್ನ ಪ್ರಜೆಗಳಿಂದ ವಿಪರೀತವೆಂಬಷ್ಟು ದುಡಿಸಿಕೊಳ್ಳುವುದು ಸಂಭಾವ್ಯದಲ್ಲಿ ಸಾಮಾನ್ಯ ಸಂಗತಿಯಾಗಿತ್ತು. ಅಂಥದ್ದೇ ಹಿನ್ನೆಲೆಯ ಒಂದು ಮಹಾತ್ವಾಕಾಂಕ್ಷೆಯ ಗುರಿಯನ್ನಿಟ್ಟುಕೊಂಡು ಬಂಕೋನಿಗೀಗ ಮಹತ್ತರವಾದ ಜವಾಬ್ದಾರಿಯನ್ನು ವಹಿಸಲಾಗಿತ್ತು. ಆದರೆ ಆ ಗುರಿಯು ಮಾತ್ರ ಸರ್ವಾಧಿಕಾರಿಯದ್ದಾಗಿತ್ತು ಎಂಬುದು ಬೇರೆ ವಿಷಯ. + +ಜಗತ್ತನ್ನು ತನ್ನ ತೆಕ್ಕೆಗೆ ಸಂಪೂರ್ಣವಾಗಿ ಎಳೆದುಕೊಳ್ಳುವ ದುರಾಸೆಯು ಮಾರ್ತಾಂಡ ಸಿಂಹನಾಯಕನ ಪುತ್ರನಾದ ಮಾಝ್ ನಿಗೆ ಅದ್ಯಾವಾಗ ಮೂಡಿತ್ತೋ ಗೊತ್ತಿಲ್ಲ. ಆದರೆ ಕಾಲಾನುಕ್ರಮದಲ್ಲಿ ಬಂಕೋನ ಬೆಳವಣಿಗೆಯೊಂದಿಗೆ, ಆತನ ದೈತ್ಯ ಕನಸುಗಳಿಗೂ ಆಕಾರ ಸಿಕ್ಕಿತ್ತು. ಅಂದು ವಿಶ್ವದ ಕೆಲ ರಾಷ್ಟ್ರಗಳ ನಕಾಶೆಯ ಮೇಲೆ ತನ್ನ ಬಣ್ಣಗಳನ್ನು ಹರಡಿಸುತ್ತಾ ಜೂನಿಯರ್ ಮಾರ್ತಾಂಡ ಸಿಂಹನಾಯಕ ಅಲಿಯಾಸ್ ಮಾಝ್ ತನ್ನ ಕನಸನ್ನು ಬಂಕೋನೆದುರು ಎಳೆಎಳೆಯಾಗಿ ಬಿಚ್ಚಿಡುತ್ತಿದ್ದ. ಹೀಗೆ ತನ್ನ ದಿಗ್ವಿಜಯದ ಮಹಾತ್ವಾಕಾಂಕ್ಷೆಗಳನ್ನು ಬಣ್ಣಿಸುವಾಗ ಅವನ ಬೂದುಬಣ್ಣದ ಕಣ್ಣುಗಳು, ಆತ ಕುಳಿತಿದ್ದ ವಜ್ರಖಚಿತ ಸಿಂಹಾಸನಕ್ಕಿಂತಲೂ ಹೆಚ್ಚಿನ ಕಾಂತಿಯಿಂದ ಕಂಗೊಳಿಸುತ್ತಿದ್ದವು. + +ಬಂಕೋ ಮತ್ತು ಮಾಝ್ ಬಾಲ್ಯದಿಂದಲೂ ಒಬ್ಬರನ್ನೊಬ್ಬರು ಬಲ್ಲವರು. ಇನ್ನು ದೇಶದ ಯುವ ಅಧಿಪತಿಯಾಗಿದ್ದರ ಹೊರತಾಗಿ, ಮಾಝ್ ನ ಕುಟುಂಬದ ಋಣವು ತನ್ನ ಮೇಲಿದ್ದರಿಂದ ಅವನ ಎಲ್ಲಾ ಮಾತುಗಳಿಗೂ ಕಿವಿಯಾಗಬೇಕಾದ ಅನಿವಾರ್ಯತೆಯು ಈಗ ಬಂಕೋನಿಗಿತ್ತು. ತನ್ನ ಸಾಮ್ರಾಜ್ಯವನ್ನು ವಿಸ್ತರಿಸುವ ಬಗ್ಗೆ ಮಾಝ್ ಗಿದ್ದ ನಿಲುವು ಅವನ ತಂದೆಯಾಗಿದ್ದ ಮಾರ್ತಾಂಡ ಸಿಂಹನಾಯಕನಿಗಿಂತ ಸಂಪೂರ್ಣ ಭಿನ್ನವಾಗಿತ್ತು. ಅಧಿಕಾರದ ಸೀಮೆಯನ್ನು ಸಂಭಾವ್ಯದ ಗಡಿಯಾಚೆಗೂ ವಿಸ್ತರಿಸುವಲ್ಲಿ ಮಾರ್ತಾಂಡ ನಾಯಕನು ತಕ್ಕಮಟ್ಟಿಗೆ ಆಸಕ್ತನಾಗಿದ್ದರೂ, ಮಾಝ್ ಈ ನಿಟ್ಟಿನಲ್ಲಿ ಹಲವು ಹೆಜ್ಜೆಗಳನ್ನು ಮುಂದೆ ನಡೆದಿದ್ದ. ಇದಕ್ಕಾಗಿ ಯಾವ ದುಸ್ಸಾಹಸಕ್ಕೂ ಕೈಹಾಕುವ ಬಗ್ಗೆ ಆತನಿಗೆ ಅಳುಕು-ಅಂಜಿಕೆಗಳಿರಲಿಲ್ಲ. “ಇನ್ನು ನಮ್ಮ ಯುದ್ಧಗಳಲ್ಲಿ ರಕ್ತಪಾತವಾಗುವುದಿಲ್ಲ ಬಂಕೋ. ಆದರೂ ಕೋಟ್ಯಾಂತರ ಪ್ರಾಣಗಳ ಆಹುತಿಯಾಗುತ್ತದೆ. ಏನಾಯಿತೆಂಬ ಜ್ಞಾನೋದಯವಾಗುವಷ್ಟರಲ್ಲಿ ಕಾಲಕೆಳಗಿನ ನೆಲವೇ ಕುಸಿದಿರುತ್ತದೆ”, ಎಂದು ಬಂಕೋನಲ್ಲಿ ಹೇಳಿದ್ದ ಮಾಝ್. + +ಅಷ್ಟಕ್ಕೂ ಮಾಝ್ ತನ್ನ ಕನಸುಗಳ ಬಗ್ಗೆ ಅದೆಷ್ಟು ಗಂಭೀರವಾಗಿದ್ದ ಎಂಬುದು ಬಂಕೋನಿಗೆ ಅರಿವಾಗಿದ್ದು ಆ ರಹಸ್ಯ ಪ್ರಯೋಗಾಲಯವನ್ನು ನೋಡಿದ ನಂತರವೇ. “ನೋಡಿಲ್ಲಿ, ನಿನಗಾಗಿ ಏನನ್ನು ಸೃಷ್ಟಿಸಿದ್ದೇನೆ. ನೀನೀಗ ಸೃಷ್ಟಿಕರ್ತನಾಗುತ್ತೀಯಾ ಬಂಕೋ”, ಎಂದು ಮಾಝ್ ಉದ್ಗರಿಸಿದ್ದ. ನೆಲಮಾಳಿಗೆಯಲ್ಲಿದ್ದ ಆ ರಹಸ್ಯ ಸ್ಥಳವು ಐಷಾರಾಮಿ ಬಂಗಲೆಯನ್ನೂ, ಸುಸಜ್ಜಿತ ಪ್ರಯೋಗಾಲಯವನ್ನೂ ಹೊಂದಿದ್ದು ಬಂಕೋನ ಹೊಸ ಕರ್ಮಭೂಮಿಯಾಗಲಿತ್ತು. ಮಾಝ್ ಆಣತಿಯಂತೆ ಈ ರಹಸ್ಯ ಪ್ರಯೋಗಾಲಯದಲ್ಲಿ ಬಂಕೋ ತಿಂಗಳುಗಳ ಕಾಲ ತೊಡಗಿಸಿಕೊಂಡು ಹೊಸದೊಂದು ಅಪಾಯಕಾರಿ ಸೂಕ್ಷ್ಮಾಣು ಜೀವಿಯನ್ನು ಸೃಷ್ಟಿಸಲಿದ್ದ. ಬರಿಗಣ್ಣಿಗೆ ಕಾಣದ ಈ ಜಂತು ದೇಶಗಳ ಸೀಮೆಗಳನ್ನು ಒಂದೊಂದಾಗಿಯೇ ಕರಗಿಸಿ, ಸಂಭಾವ್ಯದ ಇತಿಹಾಸವು ಹಿಂದೆಂದೂ ಕಾಣದಿದ್ದ ಹೊಸ ವಿಶಾಲವಾದ ಭೂಭಾಗವನ್ನು ತನ್ನದಾಗಿಸಿಕೊಳ್ಳಲಿತ್ತು. ಹೀಗೆ ಎಲ್ಲವೂ ಅಂದುಕೊಂಡಿದ್ದಂತೆ ಆಗಿದ್ದೇ ಆದರೆ ಮುಂದಿನ ಏಳೆಂಟು ತಿಂಗಳುಗಳ ಅವಧಿಯಲ್ಲಿ ಮಾಝ್ ಈ ಹೊಸ ಜಗತ್ತಿನ ಅಧಿಪತಿಯಾಗಲಿದ್ದ. ಹೀಗಾಗಿಯೇ ಮಾಝ್ ಆತನನ್ನು ಐತಿಹಾಸಿಕ ಸೃಷ್ಟಿಕರ್ತನೆಂದು ಕರೆದಿದ್ದು. + +ಹಾಗೆ ನೋಡಿದರೆ ಬಂಕೋನಿಗೆ ಮಾಝ್ ನೀಡಿದ್ದ ಆಫರ್ ಚೆನ್ನಾಗಿಯೇ ಇತ್ತು. ಹತ್ತಾರು ತಂತ್ರಜ್ಞರು, ಸಹಾಯಕರು ಮತ್ತು ಸಿಬ್ಬಂದಿಗಳನ್ನು ಸೇರಿದಂತೆ ಎಲ್ಲಾ ಸೌಕರ್ಯಗಳನ್ನೂ ಪ್ರಯೋಗಾಲಯದಲ್ಲಿ ಬಂಕೋನಿಗಾಗಿ ಒದಗಿಸಲಾಗಿತ್ತು. ಆದರೆ ಪ್ರಯೋಗಾಲಯದಲ್ಲಿ ಕೃತಕವಾಗಿ ಸೃಷ್ಟಿಯಾಗುತ್ತಿದ್ದ ಸೂಕ್ಷ್ಮಾಣುಜೀವಿಯ ಮತ್ತು ಯೋಜನಾ ಸಂಬಂಧಿ ರೂಪುರೇಷೆಗಳ ಸಂಪೂರ್ಣ ವಿವರಗಳು ಇವರಿಬ್ಬರಿಗಷ್ಟೇ ಗೊತ್ತಿರಲಿದ್ದವು. ಬಂಕೋನ ದೈನಂದಿನ ಬದುಕನ್ನು ಸಲೀಸಾಗಿಸಲು ಸಹಾಯಕರನ್ನೂ, ರಕ್ಷಣೆಗಾಗಿ ಅಂಗರಕ್ಷಕರನ್ನೂ ಮಾಝ್ ಆಡಳಿತವು ಒದಗಿಸಿತ್ತು. ತನ್ನ ಮಹಾತ್ವಾಕಾಂಕ್ಷೆಯ ಯೋಜನೆಗಾಗಿ ಬೇಕಿದ್ದಷ್ಟು ಕಾಸು ಚೆಲ್ಲಲು ಮಾಝ್ ಸಿದ್ಧನಿದ್ದ. ಇನ್ನು ಸಂಭಾವ್ಯದ ಹೊಸ ಪ್ರಾಂತ್ಯವೊಂದಕ್ಕೆ ಬಂಕೋನ ಹೆಸರನ್ನು ಅಧಿಕೃತವಾಗಿ ಇಡುವ ಮತ್ತು ಹೊಸ ಪ್ರಾಂತ್ಯವೊಂದರ ಮುಖ್ಯಸ್ಥನನ್ನಾಗಿ ನೇಮಿಸುವ ಆಮಿಷವನ್ನೂ ಆತನಿಗೆ ನೀಡಲಾಗಿತ್ತು. + +“ಮನುಷ್ಯನಿಗೆ ಮಹಾತ್ವಾಕಾಂಕ್ಷೆಗಳಿರುವುದು ಸಹಜ. ಆದರೆ ವಿನಾಶದ ಪರಮಾವಧಿಯಂತಿರುವ ಇಂಥಾ ಯುದ್ಧಗಳು ನಮಗಿನ್ನು ಬೇಕೇ? ಜಗತ್ತಿನಲ್ಲಿ ಸದ್ಯಕ್ಕಿರುವ ಸಮಸ್ಯೆಗಳು ಸಾಲದೇ?”, ಬಂಕೋ ಸಹಜ ಧಾಟಿಯಲ್ಲೇ ಮಾಝ್ ನನ್ನು ಪ್ರಶ್ನಿಸಿದ್ದ. ತಾನು ಜಾಗತಿಕ ಮಟ್ಟದಲ್ಲಿ ಹೊಸ ಇತಿಹಾಸವನ್ನು ಬರೆಯಲಿರುವ ಬಗ್ಗೆ ಖುಷಿಯಾಗಬೇಕೇ ಅಥವಾ ಸ್ಮಶಾನವೊಂದರ ಮೇಲೆ ಹೊಸದೊಂದು ಲೋಕವನ್ನು ಸೃಷ್ಟಿಸುವ ಬಗ್ಗೆ ಗಾಬರಿಯಾಗಬೇಕೇ ಎಂಬ ವಿಚಿತ್ರ ಗೊಂದಲದಲ್ಲಿ ಒದ್ದಾಡುವ ಸ್ಥಿತಿಯು ಈಗ ಬಂಕೋನದ್ದಾಗಿತ್ತು. + +“ಅದು ಹಾಗಲ್ಲ. ಶಕ್ತಿವಂತರಷ್ಟೇ ಬದುಕಲು ಯೋಗ್ಯವಾಗಿರುವ ಜಗತ್ತಿದು”, ಎಂದಿದ್ದ ಮಾಝ್. + +“ಹಾಗಿದ್ದರೆ ಬಲಹೀನರಿಗೂ ಸಮಾನ ಹಕ್ಕುಳ್ಳ ಜಗತ್ತು ಇರಬಾರದೇ?” + +“ಬಲವಂತರೂ, ಬಲಹೀನರೂ ಸಮಾನರಾಗಿ ಬಾಳುವುದು ಕಥೆಗಳಲ್ಲಿ ಮಾತ್ರ, ನೈಜಜೀವನದಲ್ಲಲ್ಲ”, ಎಂದ ಮಾಝ್. + +ಮಾಝ್ ತೀರ್ಪು ಕೊಟ್ಟಾಗಿತ್ತು. ಬಂಕೋನಿಗೆ ವೇದಿಕೆ ಸಿದ್ಧವಾಗಿತ್ತು. ಮಾತುಮಾತಿಗೆ ಮಹಾತ್ವಾಕಾಂಕ್ಷೆ ಅನ್ನುತ್ತಿದ್ದ ಆತನ ಮಾತುಗಳು ಬಂಕೋನಿಗೆ ದುರಾಸೆಯೆಂಬಂತೆ ಕಾಣುತ್ತಿದ್ದಿದ್ದೇನೋ ಸರಿ. ಆದರೆ ಅದನ್ನು ವಿರೋಧಿಸುವ ಸ್ಥಾನದಲ್ಲಂತೂ ಬಂಕೋ ಇರಲಿಲ್ಲ. ಬಂಕೋ ಮತ್ತು ಮಾಝ್ ಚರ್ಚಿಸುತ್ತಿದ್ದ ಐಷಾರಾಮಿ ಕೋಣೆಯ ಎಡಭಾಗದಲ್ಲಿ ಸಂಭಾವ್ಯದ ದೊಡ್ಡ ಧ್ವಜವೊಂದನ್ನು ಅದ್ಧೂರಿಯಾಗಿ ಕಾಣುವಂತೆ ಇರಿಸಲಾಗಿತ್ತು. + +ಸಮಾಲೋಚನೆಯನ್ನು ಮುಗಿಸಿ ಹೊರಡುವ ಹೊತ್ತಿನಲ್ಲಿ ಬಂಕೋ ತನ್ನ ಬಲಗೈಯನ್ನು ಎದೆಯ ಮೇಲಿಟ್ಟು ರಾಷ್ಟ್ರಧ್ವಜವನ್ನು ಹೆಮ್ಮೆಯಿಂದ ನೋಡಿದ. ತಾನು ದೇಶ ಬಿಟ್ಟು ಹೊರಡುವ ಮುನ್ನದ ಶಾಲಾದಿನಗಳಲ್ಲಿ, ಇದೇ ಭಂಗಿಯಲ್ಲಿ ರಾಷ್ಟ್ರಗೀತೆಯನ್ನು ಹಾಡುತ್ತಾ ರೋಮಾಂಚನಕ್ಕೊಳಗಾಗುತ್ತಿದ್ದ ದೃಶ್ಯವು ಅವನ ಕಣ್ಣಮುಂದೆ ಮಿಂಚಿ ಮರೆಯಾದಂತಾಯಿತು. ದೇಶಪ್ರೇಮವೇ ಎಲ್ಲಕ್ಕಿಂತ ಮಿಗಿಲೆಂಬ ಭಾವುಕ, ಪರಿಚಿತ ಒಳದನಿಯೊಂದು ಅಂದು ಮನದ ಮೂಲೆಯಿಂದ ಹೊರಹೊಮ್ಮಿದಂತಾಯಿತು. + +“ನಾಳೆಯಿಂದಲೇ ಬಂದು ಕರ್ತವ್ಯಕ್ಕೆ ಹಾಜರಾಗುತ್ತೇನೆ ಜನರಲ್”, ಎಂದು ಸರ್ವಾಧಿಕಾರಿಯೆದುರು ಗೌರವದಿಂದ ತಲೆಬಾಗಿದ ಬಂಕೋ. ಮಾಝ್ ನ ಕಣ್ಣಿನಲ್ಲಿ ಮತ್ತೊಮ್ಮೆ ಗೆಲುವಿನ ಬೆಳಕು ಪ್ರತಿಫಲಿಸಿತ್ತು. + +****** + +ಹೀಗೆ ಬಂಕೋ ಸಂಭಾವ್ಯಕ್ಕೆ ಬಂದಿಳಿದ ಕೆಲವೇ ದಿನಗಳಲ್ಲಿ ಮಾಝ್ ನ ರಹಸ್ಯ ಯೋಜನೆಗಳು ತ್ವರಿತಗತಿಯಲ್ಲಿ ಕಾರ್ಯರೂಪಕ್ಕೆ ಬರಲಾರಂಭಿಸಿದ್ದವು. ಡಾ. ಬಂಕೋನ ನೇತೃತ್ವದಲ್ಲಿ ಪ್ರಯೋಗಾಲಯದ ಕೆಲಸಗಳು ದಿನಕ್ಕೆ ಹತ್ತರಿಂದ ಹನ್ನೆರಡು ತಾಸುಗಳ ಕಾಲ ನಿರಂತರವಾಗಿ ನಡೆಯುತ್ತಿದ್ದವು. ಇನ್ನು ಮಾಝ್ ವಾರಕ್ಕೊಮ್ಮೆಯಾದರೂ ಈ ರಹಸ್ಯ ಸ್ಥಳಕ್ಕೆ ಸ್ವತಃ ಭೇಟಿ ನೀಡಿ, ನಡೆಯುತ್ತಿದ್ದ ಬೆಳವಣಿಗೆಗಳ ಬಗ್ಗೆ ವರ್ತಮಾನಗಳನ್ನು ಪಡೆಯುತ್ತಿದ್ದ. ಬಂಕೋ ಅಹೋರಾತ್ರಿ ಕೆಲಸ ಮಾಡುತ್ತಿದ್ದ ಪ್ರಯೋಗಾಲಯದ ಗೋಡೆಯೊಂದರಲ್ಲಿ ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ ಮತ್ತು ಮಾಝ್ ರ ಫ್ರೇಮ್ ಹಾಕಿದ್ದ ದೊಡ್ಡ ತೈಲಚಿತ್ರಗಳನ್ನು ಇರಿಸಲಾಗಿತ್ತು. ಚಿನ್ನದ ಬಣ್ಣದ ಫ್ರೇಮಿನೊಂದಿಗೆ, ಸಂಭಾವ್ಯದ ರಾಷ್ಟ್ರಧ್ವಜದೊಂದಿಗೆ ಬೀಗುತ್ತಿದ್ದ ಆ ಚಿತ್ರಗಳನ್ನು ಕಂಡು ಮಾಝ್ ಮತ್ತಷ್ಟು ಸಂತುಷ್ಟನಾಗುತ್ತಿದ್ದ. ಹೀಗಾದಾಗಲೆಲ್ಲಾ ಬಂಕೋನ ಬಗೆಗಿದ್ದ ಆತನ ಅಭಿಮಾನವು ಮತ್ತಷ್ಟು ಹೆಚ್ಚುತ್ತಿತ್ತು. + +ಅತ್ತ ಸಂಭಾವ್ಯದ ರಾಜಧಾನಿಯ ಹೃದಯಭಾಗದಲ್ಲಿದ್ದ ದೈತ್ಯ ಅರಮನೆಯೂ ಕೂಡ ಹಲವು ಬದಲಾವಣೆಗಳಿಗೆ ಸಾಕ್ಷಿಯಾಗುತ್ತಿತ್ತು. ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ ಈಗ ತನ್ನ ಪುತ್ರನಾದ ಮಾಝ್ ಗಾಗಿ ಆಡಳಿತದ ವೇದಿಕೆಯನ್ನು ಸಿದ್ಧಪಡಿಸುತ್ತಿದ್ದ. ತನ್ನ ಮೂರು ದಶಕಗಳ ಆಡಳಿತವು ಆತನಿಗೆ ತೃಪ್ತಿಯನ್ನು ನೀಡಿತ್ತು. ಅಲ್ಲದೆ ಈಗ ಸಂಭಾವ್ಯದ ಆಡಳಿತಕ್ಕೀಗ ಯುವ ನಾಯಕನೊಬ್ಬನ ಅವಶ್ಯಕತೆಯೂ ಸಾಕಷ್ಟಿತ್ತು. ಎಲ್ಲದಕ್ಕಿಂತಲೂ ಮೇಲಾಗಿ ಮಾಝ್ ಸಂಭಾವ್ಯದ ಹೊಸ ಅಧಿಪತಿಯಾದಲ್ಲಿ ತಂದೆಯ ಆಣತಿಯ ಮೇರೆಗೆ ಪುತ್ರನು ದೇಶವನ್ನು ಚಲಾಯಿಸುವುದು ಸಿಂಹನಾಯಕನಿಗೆ ಅನುಕೂಲವಾಗುವ ಸಂಗತಿಯಾಗಿತ್ತು. + +ಆ ವರ್ಷ ಸಂಭಾವ್ಯದ ವಾರ್ಷಿಕ ಸಾಂಸ್ಕೃತಿಕ ಮಹೋತ್ಸವವು ಅದ್ಧೂರಿಯಿಂದ ನೆರವೇರಿತ್ತು. ರಾಜಧಾನಿಯಲ್ಲಿ ‘ಜನರಲ್ ಸ್ಕ್ವೇರ್’ ಎಂದು ಕರೆಯಲಾಗುತ್ತಿದ್ದ ಪ್ರತಿಷ್ಠಿತ ಸ್ಥಳವೊಂದರಲ್ಲಿ ಮಹೋತ್ಸವದ ಆಚರಣೆಗೆ ಅಧಿಕೃತವಾಗಿ, ದೊಡ್ಡ ಮಟ್ಟಿನಲ್ಲಿ ಚಾಲನೆಯನ್ನು ನೀಡಲಾಗಿತ್ತು. ಅಂದು ಮಾರ್ತಾಂಡ ಸಿಂಹನಾಯಕನೂ ಸೇರಿದಂತೆ ಆತನ ಮನೆತನ, ಮಿಲಿಟರಿ ಆಡಳಿತದ ಹಲವು ವಿಭಾಗಗಳ ಮುಖ್ಯಸ್ಥರು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಹಲವು ಕಾರ್ಯಕ್ರಮಗಳು ಸಂಭ್ರಮದಲ್ಲಿ ನೆರವೇರಿದ್ದವು. ಈ ಬಾರಿ ಗಣ್ಯಾತಿಗಣ್ಯರ ಸಾಲಿನಲ್ಲಿ ಬಂಕೋನಿಗೂ ಕೂಡ ಒಂದು ಆಸನವನ್ನು ಮೀಸಲಿಡಲಾಗಿತ್ತು. ಬಂಕೋನ ವಿಚಾರದಲ್ಲಿ ಮಾಝ್ ವಿಶೇಷವಾದ ಮುತುವರ್ಜಿಯನ್ನು ವಹಿಸಿ ಇವೆಲ್ಲವನ್ನು ಸಜ್ಜುಗೊಳಿಸಿದ್ದ. ಮಾಧ್ಯಮ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಗಳು ಅಷ್ಟಕ್ಕಷ್ಟೇ ಇದ್ದ ಸಂಭಾವ್ಯದ ದಿನಪತ್ರಿಕೆಗಳು ಗಣ್ಯರ ಸಾಲಿನಲ್ಲಿ ಬಂಕೋನ ಉಪಸ್ಥಿತಿಯನ್ನು ನೋಡಿಯೂ ನೋಡದಂತೆ ತೆಪ್ಪಗಿದ್ದವು. ಆದರೆ ಇತರ ಕೆಲ ದೇಶಗಳ ಟ್ಯಾಬ್ಲಾಯ್ಡುಗಳಲ್ಲಿ ಈ ಸುದ್ದಿಯು ಪ್ರಕಟವಾಯಿತೆಂದು ವಿದೇಶದಲ್ಲಿರುವ ತನ್ನ ಕೆಲ ಮಿತ್ರರಿಂದ ಬಂಕೋನಿಗೆ ವರ್ತಮಾನ ಸಿಕ್ಕಿತ್ತು. + +ಬಂಕೋ ಸಂಭಾವ್ಯದ ರಾಜಾಶ್ರಯದಲ್ಲಿರುವ ಓರ್ವ ಖಾಸಾ ವ್ಯಕ್ತಿಯಾಗಿರಬಹುದೇ ಎಂಬ ದೊಡ್ಡ ಪ್ರಶ್ನಾರ್ಥಕ ಚಿಹ್ನೆಯೊಂದು ಈ ಮಸಾಲೆಭರಿತ ರೋಚಕ ಸುದ್ದಿಗಳಲ್ಲಿರುತ್ತಿತ್ತೇ ಹೊರತು ಗಾಬರಿಯಾಗುವಂಥದ್ದೇನಿರಲಿಲ್ಲ. ಆದರೆ ಒಂದಂತೂ ನಿಜವಾಗಿತ್ತು. ಬಂಕೋನನ್ನು ಈಗ ಜನರು ಸಾರ್ವಜನಿಕವಾಗಿ ಗುರುತಿಸಲಾರಂಭಿಸಿದ್ದರು. ಪ್ರತಿಭಾವಂತ ವೈದ್ಯ ಮತ್ತು ಯುವವಿಜ್ಞಾನಿಯೆಂಬ ಆತನಿಗಿದ್ದ ಸ್ಥಾನಮಾನಗಳು ಈಗ ಸಂಭಾವ್ಯದಲ್ಲಿ ಮತ್ತಷ್ಟು ಹೆಚ್ಚಾಗಿದ್ದವು. ಬಂಕೋನಿಗೆ ವಹಿಸಲಾಗಿದ್ದ ನಿಜವಾದ ಜವಾಬ್ದಾರಿಗಳ ಬಗ್ಗೆ ಯಾರೊಬ್ಬರಿಗೂ ಸುಳಿವಿಲ್ಲದಿದ್ದರೂ, ಆತ ರಾಜಾಶ್ರಯದಲ್ಲಿರುವ ವಿಶೇಷ ಗಣ್ಯವ್ಯಕ್ತಿಯೆಂಬ ಸಂಗತಿಯು ಕ್ರಮೇಣ ಎಲ್ಲರ ಅರಿವಿಗೂ ನಿಲುಕತೊಡಗಿತ್ತು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಆದರೆ ಈ ಸಾಮಾಜಿಕ ಸ್ಥಾನಮಾನಗಳು ಬಂಕೋನಲ್ಲಿ ಆತ್ಮಸಂತೃಪ್ತಿಯನ್ನು ತಂದಿದ್ದವೇ ಎಂಬುದು ಮಾತ್ರ ಬೇರೆ ಪ್ರಶ್ನೆ. ಕರ್ತವ್ಯಪಾಲನೆಗಾಗಿ ತನಗೆ ನೀಡಲಾಗುತ್ತಿದ್ದ ಸೌಲಭ್ಯ ಮತ್ತು ವಿಲಾಸಗಳು ಆಹಾ ಎನ್ನುವಂತಿದ್ದರೂ ತನ್ನ ಪ್ರತಿಭೆಯನ್ನು ಕುಟಿಲ ರಾಜಕೀಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂಬ ಭಾವನೆಗಳು ಅವನಲ್ಲಿ ಕ್ರಮೇಣ ಅಸಮಾಧಾನವನ್ನು ಹುಟ್ಟಿಸಿದ್ದವು. ಏಕೆಂದರೆ ತನ್ನ ಬೆಲೆಕಟ್ಟಲಾಗದ ಪ್ರತಿಭೆಯನ್ನು ಆಡಳಿತವು ನೀಡುತ್ತಿದ್ದ ಆಮಿಷದ ಜುಜುಬಿ ವಿಲಾಸಗಳಿಗೆ ತಾನು ಮಾರಿಕೊಂಡಂತೆ ಬಂಕೋನಿಗೆ ಅನ್ನಿಸುತ್ತಿತ್ತು. ಅಂದು ಸಂಭಾವ್ಯದ ಸಾಂಸ್ಕೃತಿಕ ಮಹೋತ್ಸವದಲ್ಲಿ ಕೀ ಕೊಟ್ಟ ಗೊಂಬೆಗಳಂತೆ ಪರೇಡ್ ನಡೆಸುತ್ತಿದ್ದ ಸೈನ್ಯದ ತುಕಡಿಗಳಿಗೂ, ತನಗೂ ವ್ಯತ್ಯಾಸಗಳಿಲ್ಲವೆಂಬ ಕಟುಸತ್ಯವು ಆತನಿಗೆ ನಿಧಾನವಾಗಿ ಅರಿವಾಗತೊಡಗಿತ್ತು. + +ಸರ್ವಾಧಿಕಾರಿ ಸರ್ವವೂ ಆಗಿದ್ದಾನೆ ಎಂಬ ಭ್ರಮೆಯಲ್ಲಿ ಅಂದು ನಾಗರಿಕರು ತೊಡಗಿದ್ದಂತೆ ಕಂಡರೆ, ಅದನ್ನು ನಂಬಿರುವಂತೆ ಮತ್ತು ಇಂಥದ್ದೊಂದು ಭ್ರಮೆಯು ಸದಾಕಾಲ ಉಳಿಯುವಂತೆ ಆಡಳಿತದ ಶಕ್ತಿಗಳು ಕೆಲಸ ಮಾಡುತ್ತಿದ್ದಂತೆ ಭಾಸವಾಗುತ್ತಿತ್ತು. ತಾನೂ ಕೂಡ ಅಂತಹ ಒಂದು ಯಾಂತ್ರಿಕ ಗೊಂಬೆಯೇ ಎಂದು ಬಂಕೋ ಹಲವು ಬಾರಿ ತನ್ನನ್ನು ತಾನೇ ಕೇಳಿಕೊಂಡಿದ್ದ. “ಈ ಸ್ವಗತದ ಪ್ರಶ್ನೆಗೆ ಆತ್ಮಸಾಕ್ಷಿಯಿಂದ ಸಿಕ್ಕ ಉತ್ತರವು ತನಗೆ ರುಚಿಸಲಿಲ್ಲ”, ಎಂದು ತನ್ನ ಖಾಸಗಿ ಡೈರಿಯಲ್ಲಿ ಬರೆದಿಟ್ಟು ಬಂಕೋ ನಿಟ್ಟುಸಿರಿಡುವ ದಿನಗಳೂ ಇರುತ್ತಿದ್ದವು. + +ಒಟ್ಟಿನಲ್ಲಿ ದಿನಗಳು ಉರುಳುತ್ತಾ ಹೋದಂತೆ ತಾನು ಮಾಝ್ ನ ಗುರಿಯತ್ತ ಮತ್ತಷ್ಟು ಹತ್ತಿರವಾಗುತ್ತಿದ್ದೇನೆ ಎಂಬ ಸತ್ಯವು ಮನದಟ್ಟಾದಾಗಲೆಲ್ಲಾ ಬಂಕೋ ಮತ್ತಷ್ಟು ಹತಾಶನಾಗುತ್ತಿದ್ದ. ಇಂತಹ ಅಪಾಯಕಾರಿ ಪ್ರಯೋಗಗಳು ಜಗತ್ತಿನೆಲ್ಲೆಡೆ ಯಾವ ರೀತಿಯ ವಿನಾಶವನ್ನು ತರಬಹುದು ಎಂಬುದರ ಬಗ್ಗೆ ಊಹಿಸಿಕೊಳ್ಳಲೂ ಆತನಿಗೆ ಹಿಂಸೆಯಾಗುತ್ತಿತ್ತು. ಹಾಗೆಂದು ಈ ಹಂತದಲ್ಲಿ ಹಿಮ್ಮೆಟ್ಟುವಂತೆಯೂ ಇರಲಿಲ್ಲ. ಸಂಭಾವ್ಯದ ಗೂಢಚರ ವಿಭಾಗವು ಭದ್ರತೆಯ ನೆಪದಲ್ಲಿ ಬಂಕೋನಿಗೆ ನೀಡಲಾಗಿದ್ದ ಸಹಾಯಕ ಸಿಬ್ಬಂದಿಗಳ ಮೇಲೆ ನಿರಂತರವಾಗಿ ತನ್ನ ಕಣ್ಣಿಟ್ಟಿತ್ತು. ತನ್ನನ್ನು ತಾನು ದೇಶಪ್ರೇಮಿಯೆಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಿದ್ದ ಬಂಕೋ ಈಗ ಹೆಚ್ಚೇ ಎಂಬಷ್ಟಿನ ರಾಜರಹಸ್ಯಗಳನ್ನು ತಿಳಿದುಕೊಂಡಿದ್ದ. ಆದರೆ ಉಸಿರುಗಟ್ಟುವಂತಿದ್ದ ಈ ಸತ್ಯಗಳೊಂದಿಗೆ ಬಾಳುವುದೇ ಆತನಿಗೊಂದು ಹೊಸ ಸವಾಲಾಗಿ ಪರಿಣಮಿಸಿತ್ತು. + +ಇವೆಲ್ಲದರ ಹಿನ್ನೆಲೆಯೇ ಆತ್ಮಾವಲೋಕನವನ್ನು ಮಾಡಬೇಕಿದ್ದ ಅನಿವಾರ್ಯ ಸ್ಥಿತಿಗೆ ಬಂಕೋನನ್ನು ತಳ್ಳಿದ್ದು. ಕ್ರಮೇಣ ಸರ್ವಾಧಿಕಾರಿ ಮಾರ್ತಾಂಡ ಸಿಂಹನಾಯಕ ಮತ್ತು ಅವನ ಪುತ್ರನಾಗಿದ್ದ ಮಾಝ್ ಆತನಿಗೆ ದುರಾಸೆಯೇ ಮೈವೆತ್ತಂತಹ ರಾಕ್ಷಸರಂತೆ ಕಾಣತೊಡಗಿದ್ದರು. ಈಚೆಗಂತೂ ಸಂಭಾವ್ಯದ ಆಡಳಿತವು ತನ್ನ ಆದ್ಯತೆಗಳನ್ನು ಮರೆತಂತಿದ್ದು, ಭಿನ್ನವಾದ ಮಾರ್ಗದಲ್ಲಿ ರಾಜಕೀಯ ಹೆಜ್ಜೆಗಳನ್ನಿಡುತ್ತಿತ್ತು. ಸಂಭಾವ್ಯದ ಗಡಿಭಾಗಗಳಲ್ಲಿ ದಂಗೆಗಳನ್ನು ಕೃತಕವಾಗಿ ಸೃಷ್ಟಿಸಿ, ನಂತರ ಅವುಗಳನ್ನು ಮಟ್ಟಹಾಕಲಾಗುತ್ತಿತ್ತು. ಹೀಗೆ ತನ್ನೊಳಗಿನಿಂದ ಮಂದವಾಗಿ ಕೇಳಿಬರುತ್ತಿದ್ದ ನೈತಿಕತೆಯ ಮತ್ತು ಮಾನವೀಯತೆಯ ದನಿಗಳು ಬಂಕೋನನ್ನು ಈಗ ಅಗ್ನಿಪರೀಕ್ಷೆಗೊಡ್ಡಿದ್ದವು. + +ಡಾ. ಬಂಕೋನ ಬದುಕು ಮಗ್ಗುಲು ಬದಲಾಯಿಸಲು ಆರಂಭವಾಗಿದ್ದೇ ಬಹುಷಃ ಈ ಹಂತದಿಂದ. + +****** + +ಡಾ. ಬಂಕೋನ ಉಭಯಸಂಕಟವು ಸಹಜವೇ ಆಗಿತ್ತು. ಇಂತಹ ಯೋಚನೆಗಳಿಂದ ತಕ್ಷಣಕ್ಕೇನೂ ಆಗದಿದ್ದರೂ ಬಂಕೋ ದಿನಗಳೆದಂತೆ ತನ್ನದೇ ದೃಷ್ಟಿಯಲ್ಲಿ ಮತ್ತಷ್ಟು ಬೆತ್ತಲಾಗುತ್ತಿದ್ದ. ತನ್ನೊಳಗೆ ನಡೆಯುತ್ತಿದ್ದ ನೈತಿಕತೆ ಮತ್ತು ದೇಶಸೇವೆಯ ನಡುವಿನ ಯುದ್ಧಗಳು ಆತನನ್ನು ನಿರಂತರವಾಗಿ ಕಂಗೆಡಿಸುತ್ತಿದ್ದವು. ‘ಅಧಿಕಾರ, ಯಶಸ್ಸಿನತ್ತ ನಡೆಯಲು ನಿನಗಾಗಿ ಕೆಂಪು ರತ್ನಗಂಬಳಿಯನ್ನು ಹಾಸಿದ್ದೇನೆ’ ಎಂದು ಮಾಝ್ ಆಗಾಗ ಹುರಿದುಂಬಿಸುತ್ತಿದ್ದ. ಆದರೆ ನೈಜಸ್ಥಿತಿಯೇನೆಂದರೆ ಹಾಸಿದಂತೆ ಕಾಣುತ್ತಿರುವ ರತ್ನಗಂಬಳಿಯುದ್ದಕ್ಕೂ ಚೆಲ್ಲಿರುವುದು ನೆತ್ತರು ಮಾತ್ರ ಎಂಬುದು ಬಂಕೋನಿಗೆ ತಿಳಿದಿತ್ತು. + +ಮಾಝ್ ಎಂದಿನಂತೆ ಗತ್ತಿನಿಂದ ತನ್ನ ಗುರಿಯನ್ನಿಡುತ್ತಿದ್ದರೂ, ಬಂದೂಕು ಬಂಕೋನ ಹೆಗಲ ಮೇಲಿತ್ತು. ಸರ್ವಾಧಿಕಾರಿ ವ್ಯವಸ್ಥೆಯು ಎಲ್ಲರಿಂದ ವಿಧೇಯತೆಯನ್ನು ಬಯಸುತ್ತಿತ್ತೇ ಹೊರತು ಅಲ್ಲಿ ವಿರೋಧಕ್ಕೆ ಅವಕಾಶವಿರಲಿಲ್ಲ. ಸಂಭಾವ್ಯದಲ್ಲಿರುವ ಎಲ್ಲರಂತೆ ಬಂಕೋ ಕೂಡ ವ್ಯವಸ್ಥೆಯ ಕೀಲಿಗೊಂಬೆಯಷ್ಟೇ ಆಗಿದ್ದ. + +ಸರ್ವಾಧಿಕಾರಿಯೊಬ್ಬ ರಾಜನಾಗುವುದೂ, ರಾಜನೊಬ್ಬ ನಾಗರಿಕರ ದೃಷ್ಟಿಯಲ್ಲಿ ದೇವರಾಗುವುದೂ ಸುಲಭ. ಇದು ಸ್ವಾಭಾವಿಕವಾಗಿ ಆಗದಿದ್ದರೆ ವ್ಯವಸ್ಥೆಯು ಒತ್ತಾಯಪೂರ್ವಕವಾಗಿಯಾದರೂ ತನ್ನ ನಾಗರಿಕರಿಂದ ಇದನ್ನು ಮಾಡಿಸುತ್ತದೆ. ಇಂತಿಪ್ಪ ಮಾನವರೂಪಿ ಭಗವಂತನ ಹಿಡಿತದಲ್ಲಿ ದೇಶದ ಭವಿಷ್ಯವು ನಿರ್ಭರವಾಗುವುದು ಹೀಗೆ. ಹೀಗಾಗಿ ಒಂದು ದೃಷ್ಟಿಕೋನದಿಂದ ನೋಡಿದರೆ ರಾಜನೊಬ್ಬ ಸೃಷ್ಟಿಕರ್ತನೂ ಹೌದು, ದಮನಕಾರಿ ಶಕ್ತಿಯೂ ಹೌದು. ಆತ ತನ್ನ ಪ್ರಾಂತ್ಯವನ್ನು ಸ್ವರ್ಗವಾಗಿಸಲೂಬಲ್ಲ, ನರಕವಾಗಿಸಲೂ ಕೂಡ ಶಕ್ತ. ಸಾಮ್ರಾಜ್ಯಗಳು ಸಾಮಾನ್ಯವಾಗಿ ರಕ್ತದಿಂದ ತೊಯ್ದ ನೆಲದ ಮೇಲೆ ಸ್ಥಾಪನೆಯಾಗಿ, ಬಹುತೇಕ ಅದೇ ಸ್ಥಿತಿಯಲ್ಲಿ ಅವಸಾನಗೊಳ್ಳುತ್ತವೆ. ವಿಚಿತ್ರವೆಂದರೆ ಇತಿಹಾಸವು ಈ ಸತ್ಯವನ್ನು ಅದೆಷ್ಟು ಬಾರಿ ಸಾಬೀತುಪಡಿಸಿದರೂ ರಾಜಕೀಯ ಶಕ್ತಿಗಳು ವಿನಾಶವನ್ನು ಬಿಟ್ಟು ಬೇರೆ ಮಾರ್ಗಗಳತ್ತ ನೋಡುವ ಯಾವ ಪ್ರಯತ್ನವನ್ನೂ ಮಾಡುವುದಿಲ್ಲ. + +ಈ ನಿಟ್ಟಿನಲ್ಲಿ ಮತ್ತಷ್ಟು ಆಳವಾಗಿ ಯೋಚಿಸಿದರೆ, ಓರ್ವ ವೈದ್ಯನಾಗಿ ಮತ್ತು ವಿಜ್ಞಾನಿಯಾಗಿ ತಾನೂ ಕೂಡ ಸರ್ವಾಧಿಕಾರಿಯಷ್ಟೇ ಸರ್ವಶಕ್ತನೆಂಬಂತೆ ಬಂಕೋನಿಗೆ ಭಾಸವಾಗುತ್ತಿತ್ತು. ಏಕೆಂದರೆ ಜೀವದಾನವನ್ನು ಮಾಡಬಲ್ಲ ವೈದ್ಯನೊಬ್ಬ, ಪ್ರಾಣವನ್ನು ಕಿತ್ತುಕೊಳ್ಳಲೂಬಲ್ಲ. ಸರ್ವಾಧಿಕಾರಿಯೊಬ್ಬನ ದುರಾಸೆಗಾಗಿ ಕೋಟ್ಯಾಂತರ ಮಂದಿಯ ಬದುಕನ್ನು ಸದ್ದಿಲ್ಲದೆ ಹೊಸಕಿಹಾಕಬಲ್ಲ ಬಂಕೋ, ಮನಸ್ಸು ಮಾಡಿದರೆ ಪಾತ್ರಗಳನ್ನು ಅದಲುಬದಲಾಗಿಸಿಯೂ ಸಂದರ್ಭವನ್ನು ಅಡಿಮೇಲಾಗಿಸಬಲ್ಲ ಚಾಣಾಕ್ಷನಾಗಿದ್ದ. ಅದೃಷ್ಟವಶಾತ್ ಈ ಒಂದು ಅಂಶವು ಆತನಲ್ಲಿ ತಕ್ಕಮಟ್ಟಿನ ಧೈರ್ಯವನ್ನು ತುಂಬಿತ್ತು. + +ಹೀಗೆ ದೇಶಪ್ರೇಮದ ಹೆಸರಿನಲ್ಲಿ ಮಾಝ್ ನ ಮಹಾತ್ವಾಕಾಂಕ್ಷೆಯನ್ನು ಪೊರೆಯಬಲ್ಲ ಬಂಕೋ, ತನ್ನ ವೃತ್ತಿಧರ್ಮದ ನೈತಿಕತೆ ಮತ್ತು ಒಟ್ಟಾರೆ ಮಾನವತೆಯ ಉಳಿವಿಗಾಗಿ ಓರ್ವ ರಹಸ್ಯ ಕ್ರಾಂತಿಕಾರಿಯಾಗಿಯೂ ಬದಲಾಗಬಲ್ಲವನಾಗಿದ್ದ. ಆದರೆ ಬಂಕೋನ ಕ್ರಾಂತಿಕಾರಿ ಮುಖವನ್ನು ಇತಿಹಾಸವು ವೈಭವೀಕರಿಸುವುದು ಹಾಗಿರಲಿ, ಅದರ ಚಿಕ್ಕ ಸುಳಿವೂ ಕೂಡ ಇತಿಹಾಸಕ್ಕೆ ಸಿಗುವಂತಿರಲಿಲ್ಲ. ಆತನ ಈ ಅಪರೂಪದ ಕಥೆಯು ಸಂಭಾವ್ಯದ ಮುಂದಿನ ಪೀಳಿಗೆಯ ಮಕ್ಕಳ ಪಠ್ಯದಲ್ಲಿ ಸೇರಿಕೊಳ್ಳುವ ಸಾಧ್ಯತೆಗಳಿರಲಿಲ್ಲ. ಸಂಭಾವ್ಯದ ಹಿನ್ನೆಲೆಯು ವರ್ಷಾನುಗಟ್ಟಲೆ ಆತನಿಗೆ ರಾಷ್ಟ್ರೀಯತೆಯ ಅಮಲನ್ನಷ್ಟೇ ಕಲಿಸಿತ್ತು. ಆದರೆ ಮಾನವೀಯ ಜೀವನಾನುಭವಗಳು ಅವನಲ್ಲಿ ತನಗರಿವಿಲ್ಲದಂತೆಯೇ ಕ್ರಾಂತಿಯ ಬೀಜವನ್ನು ಬಿತ್ತಿದ್ದವು. + +ತನ್ನ ಹೆಗಲ ಮೇಲಿರಿಸಲಾಗಿದ್ದ ಬಂದೂಕನ್ನು ಸರಿಸಿ ಮೈಕೊಡವಿಕೊಳ್ಳಲು ಬಂಕೋ ಕೊನೆಗೂ ತಯಾರಾಗಿದ್ದ. + +****** + +ಬಂಕೋನೊಂದಿಗೆ ಸಮಾಲೋಚನೆಯನ್ನು ನಡೆಸಲು ಈ ಬಾರಿ ಪ್ರಯೋಗಾಲಯಕ್ಕೆ ಬಂದಿದ್ದ ಮಾಝ್ ನ ಭೇಟಿಯು ಆತನ ಬದುಕಿನ ಕೊನೆಯ ಪಯಣವಾಗಿತ್ತು. ಗೌಜುಗದ್ದಲವಿಲ್ಲದೆ ಲಕ್ಷಾಂತರ ಜೀವಗಳನ್ನು ನಾಶಪಡಿಸಲು ಯಾವ ಮಾಝ್ ಬಯಸಿದ್ದನೋ, ಅದೇ ಶೈಲಿಯಲ್ಲಿ ಆತನ ನಿಗೂಢ ಅಂತ್ಯವಾಗಿತ್ತು. ಸಂಭಾವ್ಯದ ರಾಜವೈದ್ಯರು ಈ ಆಕಸ್ಮಿಕ ಸಾವನ್ನು ಹೃದಯಾಘಾತವೆಂದು ಷರಾ ಬರೆದಿದ್ದರು. ಇತ್ತ ಪುತ್ರನ ಅನಿರೀಕ್ಷಿತ ಸಾವಿನಿಂದಾಗಿ ವೃದ್ಧ ಮಾರ್ತಾಂಡ ಸಿಂಹನಾಯಕ ಕುಸಿದುಹೋಗಿದ್ದ. ಆಡಳಿತ ವರ್ಗದಲ್ಲಿ ತನ್ನ ಸ್ಥಾನವನ್ನು ತುಂಬಲು ಸಮರ್ಥ ನಾಯಕರಿದ್ದರೂ ತನ್ನ ವಂಶದ ಕುಡಿಯೇ ಸಿಂಹಾಸನವನ್ನು ಅಲಂಕರಿಸಬೇಕೆಂಬ ಬಯಕೆ ಆತನದಾಗಿತ್ತು. ಮಾಝ್ ನ ನಿಗೂಢ ಸಾವು ಆತನ ಎಲ್ಲಾ ಕನಸುಗಳಿಗೂ ಕೊಳ್ಳಿಯಿಟ್ಟಿತ್ತು. + +ರಾಜಧಾನಿಯ ಹೊರವಲಯದಲ್ಲಿ ಮಾಝ್ ಸೃಷ್ಟಿಸಿದ್ದ ದೈತ್ಯ ಪ್ರಯೋಗಾಲಯದ ಅಸಲಿ ಸಂಗತಿಗಳು ಆಂತರಿಕ ಗೌಪ್ಯತೆ ಮತ್ತು ರಾಜರಹಸ್ಯಗಳ ಕಾಯಿದೆಯಡಿಯಲ್ಲಿ ಎಲ್ಲೂ ಲಿಖಿತರೂಪದಲ್ಲಿ ದಾಖಲಾಗಿರಲಿಲ್ಲ. ಅದು ಬಂಕೋ ಮತ್ತು ಮಾಝ್ ರಿಗಷ್ಟೇ ಸಂಪೂರ್ಣವಾಗಿ ತಿಳಿದಿದ್ದ ಮಹಾತ್ವಾಕಾಂಕ್ಷೆಯ ಯೋಜನೆಯಾಗಿತ್ತು. ಸೂಕ್ಷ್ಮಾಣುಜೀವಿಗಳನ್ನು ಭವಿಷ್ಯದ ದಿನಗಳಲ್ಲಿ ಶಸ್ತ್ರಗಳಾಗಿ ಹೇಗೆ ಬಳಸಬಹುದು ಎಂಬುದನ್ನು ಪ್ರಯೋಗಾರ್ಥವಾಗಿ ಪರೀಕ್ಷಿಸಲಾಗುತ್ತಿದೆ ಎಂಬ ಮಾಹಿತಿಯನ್ನಷ್ಟೇ ಪ್ರಯೋಗಾಲಯದ ಸಿಬ್ಬಂದಿಗಳಿಗೆ ನೀಡಲಾಗಿತ್ತು. ಆದರೆ ತಮ್ಮ ದೇಶದ ಸರ್ವಾಧಿಕಾರಿ ಪ್ರಭುತ್ವವು ಇದನ್ನು ಪ್ರಾಯೋಗಿಕವಾಗಿ ಬಳಸಲಿದೆ ಎಂಬ ಯಾವ ಕಲ್ಪನೆಯೂ ಈ ತಂತ್ರಜ್ಞರಿಗಿರಲಿಲ್ಲ. + +ಅಸಲಿಗೆ ಸಂಭಾವ್ಯದ ವೈರಾಲಜಿ ಕ್ಷೇತ್ರದಲ್ಲಿ ಇಂಥದ್ದೊಂದು ಐತಿಹಾಸಿಕ ಮೈಲುಗಲ್ಲು ಸಾಧ್ಯವಾಗಲಿದೆಯೆಂಬ ಭರವಸೆಯೂ ಬಂಕೋನ ತಂಡದಲ್ಲಿದ್ದ ತಂತ್ರಜ್ಞರಿಗಿರಲಿಲ್ಲ. ಮಾಝ್ ಕಂಡ ಕನಸು ನಿಜಕ್ಕೂ ದೈತ್ಯಾಕಾರದ್ದಾಗಿತ್ತು. ಆದರೆ ಸಂಭಾವ್ಯದ ನಾಗರಿಕರು ಆ ಮಟ್ಟಿನ ಕನಸುಗಳನ್ನೆಂದೂ ಕಂಡಿರಲಿಲ್ಲ. ಅವರ ಪ್ರಾಥಮಿಕ ಆದ್ಯತೆಗಳು ಬೇರೆಯದೇ ಆಗಿದ್ದವು. ತಮ್ಮ ದೇಶದ ತಂತ್ರಜ್ಞಾನಗಳ ಬಗ್ಗೆ ಹೇಳಿಕೊಳ್ಳುವಂತಹ ನಿರೀಕ್ಷೆಗಳೂ ಅವರಲ್ಲಿರಲಿಲ್ಲ. ಹೀಗಾಗಿ ಮಾಝ್ ಒಮ್ಮೆ ಕಂಡಿದ್ದ ಇಂಥದ್ದೊಂದು ಕನಸೂ, ನೆಲಮಹಡಿಯಲ್ಲಿ ನಿರ್ಮಿಸಲ್ಪಟ್ಟಿದ್ದ ಸುಸಜ್ಜಿತ ಪ್ರಯೋಗಾಲಯದ ಅಸಲಿ ರಹಸ್ಯವೂ ಆತನ ಮರಣದೊಂದಿಗೆ ಶಾಶ್ವತವಾಗಿ ಸಮಾಧಿಯಾಗಿತ್ತು. ಮುಂದೆ ಡಾ. ಬಂಕೋನ ರಾಜೀನಾಮೆಯ ಬೆಳವಣಿಗೆಯ ನಂತರ, ಒಂದು ಹಂತಕ್ಕೆ ಬಂದು ನಿಂತಿದ್ದ ಯೋಜನೆಯನ್ನು ಸೂಕ್ತ ವಾರಸುದಾರರಿಲ್ಲದಿದ್ದ ಕಾರಣದಿಂದಾಗಿ ಅರ್ಧದಲ್ಲೇ ಕೈಬಿಡಲಾಯಿತು. + +ಮಾಝ್ ನ ಅಂತ್ಯವಾಗಿ ಸುಮಾರು ಒಂದು ವರ್ಷದಷ್ಟು ಸಮಯವು ಕಳೆದ ನಂತರವೂ ಸಂಭಾವ್ಯದ ಮುಂದಿನ ನಾಯಕನನ್ನು ಆರಿಸಿಕೊಳ್ಳುವ ಬಗ್ಗೆ ಮಾರ್ತಾಂಡ ಸಿಂಹನಾಯಕ ಪರದಾಡುತ್ತಿದ್ದಾನೆ. ವೃದ್ಧ ಸರ್ವಾಧಿಕಾರಿಯನ್ನು ಮಟ್ಟಹಾಕಲು ಆಡಳಿತ ವರ್ಗದಲ್ಲೇ ಒಳಸಂಚುಗಳು ನಡೆಯುತ್ತಿವೆ. ಭಿನ್ನಮತಗಳು ಆಗಾಗ ಸ್ಫೋಟಗೊಂಡು ತಣ್ಣಗಾಗುತ್ತಿವೆ. ಸಂಭಾವ್ಯದಲ್ಲಿ ನಿಧಾನವಾಗಿ ಸೃಷ್ಟಿಯಾಗುತ್ತಿರುವ ಅರಾಜಕತೆ ಮತ್ತು ಮುಂದೆ ನಡೆಯಲಿರುವ ಆಂತರಿಕ ಯುದ್ಧಗಳ ಸಾಧ್ಯತೆಗಳನ್ನು ಊಹಿಸುತ್ತಾ, ತಾವು ಈ ಪರಿಸ್ಥಿತಿಯ ಲಾಭವನ್ನು ಹೇಗೆ ಪಡೆಯಬಹುದೆಂದು ಮುಂದುವರಿದ ಕೆಲ ರಾಷ್ಟ್ರಗಳ ನಾಯಕರು ಗಂಭೀರ ಲೆಕ್ಕಾಚಾರಗಳಲ್ಲಿ ತೊಡಗಿದ್ದಾರೆ. + +ಡಾ. ಬಂಕೋ ಲ್ಯಾಟಿನ್ ಅಮೆರಿಕಾದ ಮೂಲೆಯೊಂದರಲ್ಲಿ ಸದ್ದಿಲ್ಲದೆ ತನ್ನ ಪಾಡಿಗೆ ಬದುಕುತ್ತಿದ್ದಾನೆ. ಪ್ರಸ್ತುತ ಆತನ ಸೇವೆಯು ಅಲ್ಲಿಯ ಹಿಂದುಳಿದ ಸಮುದಾಯಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಾಗಿದೆ. ತನ್ನದೇ ಸಮಸ್ಯೆಗಳ ಸುಳಿಯಲ್ಲಿ ವ್ಯಸ್ತರಾಗಿರುವ ಸಂಭಾವ್ಯದ ಗಣ್ಯರ ವಲಯಕ್ಕೆ ಇಂದು ಬಂಕೋನ ನೆನಪಿಲ್ಲ. ಬೆರಳೆಣಿಕೆಯ ಮಂದಿಗೆ ಒಂದು ಪಕ್ಷ ನೆನಪಿದ್ದರೂ ಅಧಿಕಾರಕ್ಕಾಗಿ ಹುಟ್ಟಿದ್ದ ಆಂತರಿಕ ಕಲಹದಲ್ಲಿ, ಆಕಾಂಕ್ಷಿಯಾಗಬಹುದಾಗಿದ್ದ ಅಭ್ಯರ್ಥಿಯೊಬ್ಬ ತಾನಾಗಿಯೇ ಜಾಗ ಖಾಲಿ ಮಾಡಿದ್ದು ಒಳ್ಳೆಯದೇ ಆಯಿತೆಂದು ಕೆಲವರು ನಿರಾಳರಾಗಿರಲೂಬಹುದು. + + + +ಚಯಾಂಗ್ ವಿಮಾನ ನಿಲ್ದಾಣದ ಪಕ್ಕದಲ್ಲಿರುವ ವಿಶಾಲ ಮೈದಾನವೊಂದರಲ್ಲಿ ಇಂದು ನೂರಡಿ ಎತ್ತರದ ಭವ್ಯ ಮೂರ್ತಿಯೊಂದನ್ನು ನೀವು ನೋಡಬಹುದು. ಜನರಲ್ ಮಾಝ್ ನ ಆ ಮೂರ್ತಿಯ ಕಣ್ಣುಗಳು ಇಂದಿಗೂ ಜಗತ್ತಿನ ಮೇಲೆ ತನ್ನದೊಂದು ಕಣ್ಣಿಟ್ಟಿರುವಂತೆ ನಿಮಗೆ ಕಂಡರೆ ಅದು ಅತಿಶಯೋಕ್ತಿಯೇನಲ್ಲ ಬಿಡಿ. + +****** + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_262.txt b/Kenda Sampige/article_262.txt new file mode 100644 index 0000000000000000000000000000000000000000..7603e1a95994d75de26aa2557330f01dc62b22ba --- /dev/null +++ b/Kenda Sampige/article_262.txt @@ -0,0 +1,51 @@ + + +ನಮ್ಮ ತಂದೆಯವರು ಮೊದಲು ಬೆಳ್ತಂಗಡಿ ತಾಲೂಕಿನ ಬಂಗಾಡಿಯ ಬಳಿ ಇರುವ ನಾವೂರ ಗ್ರಾಮದಲ್ಲಿ ವಾಸವಾಗಿದ್ದರಂತೆ. ನಾವೂರ ಗ್ರಾಮದ ಉತ್ತರಕ್ಕೆ ಕಾಡಿನ ಮಧ್ಯೆ ಮಲವಂತಿಗೆ ಎಂಬ ಗ್ರಾಮ ಇದೆ. ಈ ಮಲವಂತಿಗೆ ಗ್ರಾಮದಲ್ಲಿ ಬ್ರಿಟಿಷ್ ಕಾಲದಲ್ಲಿ ಒಂದು ಬಂಗ್ಲೆ ಇತ್ತು. ಬ್ರಿಟಿಷರ ಬಂಗ್ಲೆಗಳು ಗುಡ್ಡ ಮತ್ತು ಕಾಡಿನ ಮಧ್ಯೆ ಇರುತ್ತಿದ್ದವು. ಬೇಸಿಗೆಯ ಸೆಕೆಯನ್ನು ತಡೆಯುವುದಕ್ಕೆ ಇಂತಹ ಸ್ಥಳವನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಮಲವಂತಿಗೆಗೆ ಬಂಗಾಡಿಯಿಂದ ಕಾಲು ದಾರಿ ಮಾತ್ರ ಇತ್ತು. ಇತ್ತೀಚೆಗೆ ಉದಯವಾಣಿ ಕುಗ್ರಾಮವೆಂದು ಈ ಗ್ರಾಮವನ್ನು ಆಯ್ಕೆ ಮಾಡಿತ್ತು. ಸಂಸೆಯ ಮೂಲಕ ಇಲ್ಲಿಗೆ ರಸ್ತೆ ಇತ್ತು. + +ನಾವೂರ ಗ್ರಾಮದ ಮನೆಯಲ್ಲಿ ಪ್ರತಿದಿನ ಹಾಳೆಯ ಬುತ್ತಿ ಕಟ್ಟಿ ಮನೆ ಮುಂದೆ ತೂಗುಹಾಕುತ್ತಿದ್ದರಂತೆ. ಪಟೇಲರಿಂದ ಕರೆ ಬಂದಾಕ್ಷಣ ಮನೆಯ ಯುವಕನೋರ್ವ ಈ ಬುತ್ತಿ ಹಿಡಿದುಕೊಂಡು ಹೋಗಬೇಕು. ಪಟೇಲರ ಮನೆಗೆ ಬಂದ ದೊರೆಗಳನ್ನು ಮೇಣೆಯಲ್ಲಿ ಹೊತ್ತು ಮಲವಂತಿಗೆಗೆ ಸಾಗಿಸುತ್ತಿದ್ದರಂತೆ. ಕೆಲವರು ದೊರೆಗಳನ್ನು ಹೊರುವುದಕ್ಕಾದರೆ ಇನ್ನು ಕೆಲವರು ಅವರ ಸಾಮಾನು ಸರಂಜಾಮುಗಳನ್ನು ಕೊಂಡುಹೋಗುವುದಕ್ಕೆ. ಅಂತೂ ದೊರೆಗಳನ್ನು ಅಲ್ಲಿ ಬಿಟ್ಟು, ತಾವು ಒಯ್ದ ಬುತ್ತಿಯಿಂದ ಊಟಮಾಡಿ ವಾಪಾಸು ಬರಬೇಕು. ಮತ್ತೆ ಅವರು ಹೇಳಿದ ದಿನ ಹೋಗಿ ಅವರನ್ನು ಹೊತ್ತು ತರಬೇಕಿತ್ತಂತೆ. ಇದು ಈ ಜನರ ಸಂಬಳ ರಹಿತ ಸೇವೆ. ದೊರೆಗಳು ಮಲವಂತಿಗೆಯಲ್ಲಿ ಬೇಟೆಯಾಡಿ ಮಾಂಸದ ಊಟ, ಕುಡಿತ ಇತ್ಯಾದಿಗಳಿಂದ ತೃಪ್ತಿಗೊಂಡು ಹಿಂತಿರುಗುತ್ತಿದ್ದರಂತೆ. + +ನಾವೂರದಿಂದ ತಂದೆಯವರು ತೋಟತ್ತಾಡಿ ಗ್ರಾಮಕ್ಕೆ, ಅಲ್ಲಿಂದ ನೆರಿಯ ಗ್ರಾಮದ ಬಯಲುಪಾದೆ ಮನೆಗೆ ಬಂದರು. ತಂದೆಯವರು ಒಳ್ಳೆಯ ಕೃಷಿಕರು ಮತ್ತು ಒಳ್ಳೆಯ ಮೂರ್ತೆದಾರರಾಗಿದ್ದರು. ಅವರು ಕೃಷಿ ಮಾಡುವ ಗದ್ದೆ, ಹುಣಿಗಳನ್ನು ನೋಡಿದರೆ ಅವರ ಶಿಸ್ತುಬದ್ಧ ಕೃಷಿ ಕೆಲಸದ ಪರಿಚಯವಾಗುತ್ತಿತ್ತು. ಗದ್ದೆಯು ಎತ್ತರ ತಗ್ಗು ಇಲ್ಲದೆ ಸಮತಟ್ಟಾಗಿರುತ್ತಿತ್ತು. ಹುಣಿಯು ಅಗಲವಾಗಿ ಹುಲ್ಲುಗಳನ್ನು ಕತ್ತರಿಸಿ ನಡೆದಾಡಲು ಅನುಕೂಲವಾಗಿತ್ತು. ಸುಗ್ಗಿಯಲ್ಲಿ ಎಲ್ಲಾ ಹುಣಿಗಳಿಗೆ ಗದ್ದೆಯ ಮಣ್ಣು ಹಾಕಿ ಹಾರೆಯಿಂದ ಒತ್ತಿ ಚಂದಗೊಳಿಸುತ್ತಿದ್ದರು. ಹಾರೆಗಳಾಗಲಿ, ಪಿಕ್ಕಾಸು, ಸಬ್ಬಲು, ಕತ್ತಿ ಎಲ್ಲವೂ ಒಪ್ಪ ಓರಣವಾಗಿರಬೇಕು. ಅವರು ಮೂರ್ತೆ ಮಾಡುವ ಕತ್ತಿಯ ಹಿಡಿಗೆ ಬೆಳ್ಳಿಯ ಕವಚ ಇತ್ತು. ಮೂರ್ತೆಗೆ ಉಪಯೋಗಿಸುವ ಎರಡು ತುಂಡು ಕೋಲು – ಇದು ತಾಳೆ ಮರದ ತಿರುಳಿನಿಂದ ಮಾಡಿದ್ದು – ಇದರ ತುದಿಗೆ ಬೆಳ್ಳಿಯ ಕವಚ ಇತ್ತು. ಕೈಲುಗುದ್ದುವ ಕಲ್ಲು – ಅದರ ತುದಿಗೆ ಮುಗುಳಿನಂತೆ ಕುಸುರಿ ಕೆಲಸದ ಬೆಳ್ಳಿ ಕವಚ ಇತ್ತು. ಅವರು ಹಿಂದೆ ನಶ್ಯ ಹಾಕುತ್ತಿದ್ದರಂತೆ. ಅವರ ನಶ್ಯದ ಬುರುಡೆಗಳೂ ಬೆಳ್ಳಿಯಿಂದ ಮುಚ್ಚಿರುತ್ತಿದ್ದವು. ನಮಗೆ ಬುದ್ದಿ ತಿಳಿಯುವಾಗ ಅವರು ನಶ್ಯದಿಂದ ಎಲೆ ಅಡಿಕೆಗೆ ಬದಲಾಗಿದ್ದರು. ಅವರ ಬೆಳ್ಳಿಯ ಈ ಸೊತ್ತುಗಳು ಅವರ ನೆನಪಿಗಾಗಿ ಈಗಲೂ ನನ್ನ ಹತ್ತಿರ ಇವೆ. + +ಅವರ ಶಿಕಾರಿಯ ನೆನಪಿಗಾಗಿ ಹಂದಿಯ ದಾಡೆಗಳು ಬೆಳ್ಳಿಯಿಂದ ಕಟ್ಟಿದ್ದು – ತುಂಬಾ ದೊಡ್ಡ ದಾಡೆಗಳು – ನನ್ನ ‘ಶೋ’ ಕಪಾಟಿನಲ್ಲಿ ಈಗಲೂ ಇವೆ. ಅಂದರೆ ಅವರು ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದರು; ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಅಲ್ಲದೇ ಅವರಿಗೆ ಎಲ್ಲವೂ ಸೊಗಸಾಗಿರಬೇಕಿತ್ತು, ಶ್ರೀಮಂತವಾಗಿರಬೇಕಿತ್ತು! + +ನನ್ನ ತಂದೆಯವರು ಬ್ರಿಟಿಷರ ಕಾಲದಲ್ಲಿ ಶೇಂದಿ, ಶರಾಬು ಅಂಗಡಿಗಳ ಗುತ್ತಿಗೆದಾರರಾಗಿದ್ದರು ಎಂದು ಆಗಲೇ ಹೇಳಿದ್ದೇನೆ. ಅವರ ಕಲೆಂಬಿಯಲ್ಲಿ (ಹಿಂದೆ ಮರದ ದೊಡ್ಡ ಪೆಟ್ಟಿಗೆಯನ್ನು ಕಲೆಂಬಿ ಎನ್ನುತ್ತಿದ್ದರು.) ಗುತ್ತಿಗೆಯ ಲೆಕ್ಕ ಪತ್ರಗಳು ಇತ್ತೀಚಿನವರೆಗೂ ಇದ್ದವು. ಓದು ಬರಹ ಇಲ್ಲದೇ ಇದ್ದರೂ ಗುತ್ತಿಗೆಗೆ ಸಂಬಂಧಿಸಿದ ದಾಖಲೆ ಪತ್ರಗಳನ್ನು ವ್ಯವಸ್ಥಿತವಾಗಿ ಬರೆಯಿಸಿ ಜೋಪಾನವಾಗಿ ಇಟ್ಟಿದ್ದರು. + +ಕೊರುಂಗೆಜಾಲು ಎಂಬಲ್ಲಿ ನಾಡು ಪೂಜಾರಿ ಎಂಬವರು ಇದ್ದರು. ಇವರು ಕೂಡ ಗುತ್ತಿಗೆದಾರರಾಗಿದ್ದರು. ತಂದೆಯವರು ಮತ್ತು ಇವರು ಪ್ರತಿಸ್ಪರ್ಧಿಗಳಾಗಿದ್ದರು. ತಂದೆಗೆ ಶೇಂದಿ ಅಂಗಡಿ ಸಿಕ್ಕಿದರೆ ಅವರಿಗೆ ಶರಾಬು ಅಂಗಡಿ. ಇವರಿಗೆ ಶರಾಬು ಅಂಗಡಿ ಸಿಕ್ಕಿದರೆ ಅವರಿಗೆ ಶೇಂದಿ ಅಂಗಡಿ. ಹೀಗೆ ಒಂದಲ್ಲ ಒಂದನ್ನು ಇಬ್ಬರೂ ಸ್ವಾದೀನ ಮಾಡಿಕೊಳ್ಳುತ್ತಿದ್ದರು. + +ಶರಾಬನ್ನು ತಾಲೂಕು ಕೇಂದ್ರದಿಂದ ಹೊತ್ತು ತರಬೇಕು. ಆಗ ಬೆಳ್ತಂಗಡಿ ತಾಲೂಕು ಇರಲಿಲ್ಲ. ಮೊದಲಿಗೆ ಉಪ್ಪಿನಂಗಡಿ ತಾಲೂಕು; 1883ರ ಅನಂತರ ಪುತ್ತೂರು ತಾಲೂಕು; 1954ರಲ್ಲಿ ಬೆಳ್ತಂಗಡಿ ತಾಲೂಕು ಆಯಿತು. ನೆರಿಯದಿಂದ ಉಪ್ಪಿನಂಗಡಿಗೆ ಅಥವಾ ಪುತ್ತೂರಿಗೆ ನಡೆದೇ ಹೋಗಿ ಕಿಸ್ತು ಕಟ್ಟಿ ಬರಬೇಕು. ಆಗ ಇದ್ದುದು ಶಂಕರವಿಠಲ್ ಬಸ್ಸು. ಅದು ಬೆಳಿಗ್ಗೆ ಚಾರ್ಮಾಡಿಯಿಂದ ಮಂಗಳೂರಿಗೆ ಹೋಗಿ ಸಂಜೆ ವಾಪಾಸು ಬರುತ್ತಿತ್ತು. ಈ ಬಸ್ಸಿನ ಡ್ರೈವರ್ ಬಾಬು ಶೆಟ್ಟಿ ಎಂಬವರು ಸಜ್ಜನರು. ಎಲ್ಲರಿಗೂ ಒದಗುವವರು. ಹಾಗಾಗಿ ಇವರೆಂದರೆ ಎಲ್ಲರಿಗೂ ಅಭಿಮಾನ. ಎಲ್ಲಾ ಮದುವೆಗಳಿಗೂ ಇವರೇ ಮಂಗಳೂರು ಮಲ್ಲಿಗೆ ತಂದು ಕೊಡುವವರು. ಆಗ ಬಸ್ಸಲ್ಲಿ ಶರಾಬು ಇಡುವುದಕ್ಕೆ ಅನುಮತಿ ಇರಲಿಲ್ಲ. ಆದರೆ ತಂದೆಯವರು ಸಂಜೆ ಶರಾಬು ಹೊತ್ತು ಬರುತ್ತಿದ್ದರೆ ಬಸ್ಸು ನಿಲ್ಲಿಸಿ, ಕಂಡಕ್ಟರೇ ‘ಹಾಲಿನ ಪಾತ್ರೆ’ ಸ್ವಲ್ಪ ಒಳಗಿಡಿ ಎಂದು ಹೇಳುತ್ತಿದ್ದರಂತೆ. ಹೀಗೆ ಅವರು ಎಲ್ಲರಿಗೂ ಬೇಕಾಗಿದ್ದರಂತೆ. ಅದರಲ್ಲೂ ಅವರು ತಂದೆಯವರ ಮೇಲೆ ಹೆಚ್ಚೇ ಪ್ರೀತಿ ಇಟ್ಟಿದ್ದರಂತೆ. + +ತಂದೆಯವರು ಗುತ್ತಿಗೆಯ ಕಿಸ್ತು ಕಟ್ಟಲು ಟ್ರಜರಿಗೆ ಹೋಗುತ್ತಿದ್ದರಲ್ಲ! ಅಲ್ಲಿಯ ಲಂಚಾವತಾರವನ್ನು ಕಂಡು ಹೇಸುತ್ತಿದ್ದರು ಅವರು. ಮನೆಗೆ ಬಂದವರಲ್ಲಿ ಹೇಳಿಕೊಂಡು ಅಸಮಾಧಾನ ವ್ಯಕ್ತಪಡಿಸುತ್ತಿದ್ದರು. ಆ ದಿನಗಳಲ್ಲಿ ಸರಕಾರಿ ನೌಕರರು ಇಡೀ ಕೈಯ ಬಿಳಿ ಅಂಗಿ ಹಾಕಿ ಪ್ಯಾಂಟು ತೊಡಬೇಕು, ಶರ್ಟು ಒಳಹಾಕಬೇಕು. ಇಲ್ಲವಾದರೆ ಅಂಗಿಯ ಮೇಲೆ ಕಚ್ಚೆ ಹಾಕಿ ಅದರ ಮೇಲೆ ಕೋಟು ಹಾಕಿ ಕಚೇರಿಗೆ ಬರಬೇಕು. ಟ್ರಜರಿಯ ನಗದು ಗುಮಾಸ್ತ ಬೆಳ್ಳಿಯ ಪಾವಲಿಗಳನ್ನು, ಲೆಕ್ಕ ಮಾಡಲು ಮೇಜಿನ ಮೇಲೆ ಹರಡಬೇಕು. ಹರಡುತ್ತಾನೆ. ಹಾಗೆ ಎರಡೂ ಕೈಗಳನ್ನು ಮುಂದಕ್ಕೆ ತಂದು ಹರಡುವಾಗ ಅಂಗಿಯ ಕೈಯ ಸಂದಿನಲ್ಲಿ ಕೆಲವಾದರೂ ಬೆಳ್ಳಿ ಪಾವಲಿಗಳು ಸೇರಬೇಕಲ್ಲ? ಸೇರುತ್ತವೆ. ಸೇರಿದ ಮೇಲೆ ಎರಡೂ ಕೈ ಮೇಲೆತ್ತಿ ರಿಲ್ಯಾಕ್ಸ್ ಮಾಡಿದಂತೆ ಮಾಡುವಾಗ ಆ ಬೆಳ್ಳಿ ಪಾವಲಿಗಳು ಮೇಲಕ್ಕೆ ಬಂದು ಕೆಳಗಿಳಿದು ಸೊಂಟದಲ್ಲಿ ಶೇಖರಗೊಳ್ಳುತ್ತವೆ. ಎಷ್ಟು ಪಾವಲಿ ಒಳಸೇರಿತೋ ಅಷ್ಟು ಪಾವಲಿ ಕಡಿಮೆ ಇದೆ ಎಂದು ಹೇಳಿ ಅಷ್ಟನ್ನು ಕೊಟ್ಟ ಮೇಲೇ ಚಲನ್ ಕೊಡಲಾಗುತ್ತಿತ್ತಂತೆ. ಆದರೆ ತಂದೆಯವರು ಎಷ್ಟು ಕಿಸ್ತು ಕಟ್ಟಬೇಕೋ ಅಷ್ಟನ್ನು ಮೊದಲು ಇಟ್ಟು, ಅವನಿಗೆ ಇನಾಮು ಎಂದು ಒಂದೆರಡು ಪಾವಲಿ ಬೇರೆ ಇಡುತ್ತಿದ್ದರಂತೆ. ಆಗ ನಗದು ಗುಮಾಸ್ತನು ಈ ಟ್ರಿಕ್ ಮಾಡುತ್ತಿರಲಿಲ್ಲ. + +ಕೋವಿಯ ಪರವಾನಿಗೆ ನವೀಕರಿಸುವಾಗಲೂ ಬೆಳಗ್ಗಿನಿಂದ ಸಂಜೆವರೆಗೂ ತಾಲೂಕು ಕಚೇರಿ ಹೊರಗೆ ದೊಡ್ಡ ದೊಡ್ಡ ಜನ ಕಾಯುತ್ತಿದ್ದರಂತೆ. ಆದರೆ ತಂದೆಯವರು ಒಂದೆರಡು ಬೆಳ್ಳಿ ಪಾವಲಿಗಳನ್ನು ಲೈಸನ್ಸ್ ಪುಸ್ತಕದಲ್ಲಿ ಸೇರಿಸಿಕೊಟ್ಟು ಬೇಗ ಕೆಲಸ ಮುಗಿಸಿಕೊಂಡು ಬರುತ್ತಿದ್ದರಂತೆ. ಇದನ್ನು ನೋಡಿ ಆ ದೊಡ್ಡ ಮನುಷ್ಯರು ನಿಮಗೆ ಎಷ್ಟು ಸಾವಿರ ಮುಡಿಗೇಣಿ ಬರುತ್ತದೆ ಮಾರಾಯ್ರೇ ಎಂದು ಕೇಳುತ್ತಿದ್ದರಂತೆ. ತಂದೆಯವರು ನಾನು ಗೇಣಿ ಒಕ್ಕಲು ಎಂದು ಹೇಳಿ ನಗುತ್ತಿದ್ದರಂತೆ. ಬ್ರಿಟಿಷ್ ಕಾಲದ ಲಂಚದ ಪ್ರಕರಣಗಳನ್ನು ಹೀಗೆ ತಂದೆಯವರು ಬಹಳ ರಸವತ್ತಾಗಿ ಹೇಳುತ್ತಿದ್ದರು. + +ವರ್ಷಕ್ಕೊಮ್ಮೆ ಶರಾಬು, ಶೇಂದಿ ಅಂಗಡಿಗಳ ಏಲಂ ನಡೆಯುತ್ತಿತ್ತು. ಆಗ ಪತ್ರಿಕೆಗಳು, ರೇಡಿಯೋ ಯಾವುದೂ ಇರಲಿಲ್ಲ. ಬರೇ ಟಂಕಿನಿಶಿ ಮಾಡುತ್ತಿದ್ದರು ಅಥವಾ ಪಟೇಲರ ಚಾವಡಿಗೆ ನೋಟೀಸು ಹೋಗುತ್ತಿತ್ತು. ಅಬಕಾರಿ ಇಲಾಖೆಯವರು ಗುತ್ತಿಗೆದಾರರಿಗೆ ತಿಳಿಸುತ್ತಿದ್ದರು. ಆದರೆ ನೆರಿಯದಂತಹ ಮೂಲೆಯ ಗ್ರಾಮಕ್ಕೆ ಸುದ್ದಿ ಮುಟ್ಟಿಸುವುದು ಅಬಕಾರಿ ಇಲಾಖೆಗೆ ಸಮಸ್ಯೆಯೇ ಆಗುತ್ತಿತ್ತು. ಆದುದರಿಂದ ಈ ಭಾಗದ ಜನರಲ್ಲಿ ಬಾಯ್ದೆರೆ ಹೇಳಿ ಕಳುಹಿಸಲಾಗುತ್ತಿತ್ತು. ಆದರೆ ಗ್ರಾಮದಲ್ಲಿ ಪ್ರತಿಸ್ಪರ್ಧಿಗಳಿದ್ದರೆ ಎದುರಿನವರಿಗೆ ಏಲಂನ ವಿಚಾರ ತಿಳಿಸದೆ ಕಮ್ಮಿಗೆ ಬಿಡ್ಡು ಮಾಡುವ ಅನ್ಯಾಯವೂ ನಡೆಯುತ್ತಿತ್ತು. + +ಒಮ್ಮೆ ಅಬಕಾರಿ ಇನ್ಸ್ಪೆಕ್ಟರ್ ಏಲಂ ದಿನಾಂಕ ನಿಗದಿ ಮಾಡಿದರು. ಅದನ್ನು ಅವರು ತಂದೆಯವರಿಗೆ ತಿಳಿಸಬೇಕು. ಆದರೆ ತಂದೆಯವರ ಭೇಟಿ ಆಗಲಿಲ್ಲ. ಅದೇ ಹೊತ್ತಿಗೆ ನಾಡು ಪೂಜಾರಿ ಕಚೇರಿಗೆ ಹೋದರಂತೆ. ಅವರೊಡನೆ ಗುಮ್ಮ ಪೂಜಾರಿಗೆ (ನಮ್ಮ ತಂದೆಯವರ ಹೆಸರು) ಬರಲು ಹೇಳಿ ಎಂದರು ಇನ್ಸ್ಪೆಕ್ಟರು. ನಾಡು ಪೂಜಾರಿ ಆಯಿತು ಎಂದರು. ಆದರೂ ಅವರು ಹೇಳಲಾರರು ಎಂಬ ಸಂಶಯ ಇನ್ಸ್ಪೆಕ್ಟರ್ ಅವರಿಗೆ. ಅದಕ್ಕೆ ಅವರೊಂದು ಉಪಾಯ ಮಾಡಿದರು. “ಅವನು ಕೈಬೀಸಿ ಬರುವುದು ಬೇಡ. ಒಂದು ಸತ್ತ ಪ್ರಾಣಿ, ಒಂದು ಜೀವದ ಪ್ರಾಣಿ ಸಹಿತ ಬರಲಿ. ಇಲ್ಲದಿದ್ದರೆ ಬರುವುದೇ ಬೇಡ” ಎಂದು ಕೊಂಚ ಏರು ಸ್ವರದಲ್ಲಿ ಬಿರುಸಾಗಿಯೇ ಹೇಳಿದರು. ಇದರಿಂದಾಗಿ ನಾಡು ಪೂಜಾರಿ ಮನಸ್ಸಿನಲ್ಲೇ ಇನ್ಸ್ಪೆಕ್ಟರು ಹೇಗೂ ಗುಮ್ಮ ಪೂಜಾರಿ ಕಡೆಗಿಲ್ಲ ಎಂದುಕೊಂಡು ಖುಷಿ ಪಟ್ಟರು. ಹಾಗಾಗಿ ತಂದೆಗೆ ವಿಷಯ ಮುಟ್ಟಿಸಿದರು. ತಂದೆಯಾದರೂ, ಸತ್ತ ಪ್ರಾಣಿ ಸಿಗಬಹುದು. ಜೀವ ಸಹಿತ ಪ್ರಾಣಿ ಹಿಡಿಯುವುದು ಹೇಗೆ ಎಂದು ನಿದ್ದೆ ಕೆಡಿಸಿಕೊಂಡರು. ಆದರೂ ಇನ್ಸ್ಪೆಕ್ಟರಿಗೆ ಎರಡನ್ನೂ ತಲಪಿಸಬೇಕು. ಇದು ತಂದೆಯವರ ಪ್ರೀತಿ, ಹಠ. ಇನ್ಸ್ಪೆಕ್ಟರೆಂದರೆ ತಂದೆಯವರಿಗೆ ಅಷ್ಟು ವಿಶ್ವಾಸ. ಅದಕ್ಕಾಗಿ ಬಲೆ ಬಿಟ್ಟು ಪ್ರಾಣಿ ಹಿಡಿಯುವವರನ್ನು ಕಂಡು ಮಾತನಾಡಿದರು. ಅವರೆಲ್ಲ ಎಷ್ಟೇ ಪ್ರಯತ್ನಿಸಿದರೂ ಬಲೆಗೆ ಪ್ರಾಣಿ ಬೀಳಲಿಲ್ಲ. + +ಓಬಯ್ಯ ಭಂಡಾರಿಯವರ ಬಗ್ಗೆ ಹಿಂದೆ ನಾನು ಬರೆದಿದ್ದೆನಲ್ಲ. ಅವರ ತಂದೆ ನನ್ನ ತಂದೆಯ ಶಿಕಾರಿಯ ಸಾಥಿಯಾಗಿದ್ದರಂತೆ. ಬೇರೆ ದಾರಿ ಕಾಣದೇ ಇವರಿಬ್ಬರೂ ಶಿಕಾರಿಗೆ ಹೋಗಿ ಕಡವೆಯೊಂದನ್ನು ಗುಂಡು ಇಟ್ಟು ಕೊಂದರು. ಮೊಲವೊಂದರ ಕಾಲಿಗೆ ಗುರಿ ಇಟ್ಟು ಹೊಡೆದರು. ಅದು ಕುಂಟು ಕಾಲಿನಿಂದ ಓಡುವಾಗ ಇಬ್ಬರೂ ಅದರ ಹಿಂದೆಯೇ ಓಡಿ ಅದನ್ನು ಹಿಡಿದು ತಂದರು. ತಂದೆಯವರು ಅದನ್ನು ಬೆಳಿಗ್ಗೆ ಗೋಣಿಯಲ್ಲಿ ತುಂಬಿಸಿ, ಬಾಬು ಶೆಟ್ಟರ ಬಸ್ಸು ಹತ್ತಿದರು. ಅಬಕಾರಿ ಇನ್ಸ್ಪೆಕ್ಟರ ಮನೆ ಸೇರಿದರು. ಇನ್ಸ್ಪೆಕ್ಟರ್ ಇನ್ನೂ ಎದ್ದಿರಲಿಲ್ಲ. ಅವರ ಪತ್ನಿ ಬಾಗಿಲು ತೆರೆದು ಕೂತುಕೊಳ್ಳಲು ಹೇಳಿದರು. ಇನ್ಸ್ಪೆಕ್ಟರ್ ಎದ್ದು ಹೊರ ಬಂದಾಗ ತಂದೆಯವರನ್ನು ನೋಡಿ `ಓ! ಬಂದು ಬಹಳ ಹೊತ್ತಾಯಿತಾ? ನಾಡು ಪೂಜಾರಿ ಹೇಳಿದನಾ?’ ಎಂದರು. ತಂದೆಯವರು ಹೌದು ಎಂದು ಹೇಳಿ ನೀವು ಹೇಳಿದ್ದು ತಂದಿದ್ದೇನೆ ಎಂದರು. ಅಯ್ಯೋ, ನಾಡು ಪೂಜಾರಿ ಏಲಂ ವಿಚಾರ ಹೇಳಲಾರ ಎಂದುಕೊಂಡು ಹಾಗೊಂದು ನಾಟಕ ಮಾಡಿದ್ದೆ. ನೀನು ನಂಬಿ ಬಿಡುವುದೇ ಮಾರಾಯಾ? ಎನ್ನುತ್ತಾ ಗೋಣಿ ಬಾಯಿ ಬಿಚ್ಚುವುದಕ್ಕೆ ಹೋದರು. ಆಗ ತಂದೆಯವರು ಜಗಲಿಯ ಬಾಗಿಲು ಹಾಕಿದರು. ಹಾರಿದ ಮೊಲ ಓಡಿ ಹೋಗಲು ಹೆಣಗಾಡಿತು. ಅದನ್ನು ನೋಡಿ ಮಕ್ಕಳಿಗೆ ತುಂಬಾ ಖುಷಿಯಾಯಿತು. ‘ಅಲ್ಲಾ, ನಾನು ಸುಮ್ಮನೆ ಹೇಳಿದ್ದನ್ನು ನೀನು ಸಾಧಿಸಿ ತೋರಿಸಿದಿಯಲ್ಲ’ ಎಂದು ಮೆಚ್ಚಿಗೆ ಸೂಚಿಸಿ, ಗುತ್ತಿಗೆ ಏಲಂನ ಮಾಹಿತಿ ಕೊಟ್ಟು ಕಳುಹಿಸಿದರಂತೆ. ತಂದೆಯವರು ಈ ಕಾಲದ ಇಂತಹ ನಂಬಿಕೆಯ ಅಧಿಕಾರಿಗಳನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿದ್ದರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ತಂದೆಯವರಿಗೆ ಶೇಂದಿ ಅಂಗಡಿಯೇ ಹೆಚ್ಚಾಗಿ ಸಿಗುತ್ತಿತ್ತು. ಅವರೊಂದಿಗೆ ಖಾಯಂ ಮೂರ್ತೆ ಮಾಡಲು ಒಂದೆರಡು ಜನ ಇದ್ದೇ ಇರುತ್ತಿದ್ದರು. ಆಗ ಪರ್ಲದಲ್ಲಿ ಮುದರ ಗೌಡ ಎಂಬವರು ವಾಸವಾಗಿದ್ದರು. ಅಲ್ಲಿ ತುಂಬಾ ತಾಳೆಮರಗಳು. ತಂದೆಯವರಿಗೆ ಈ ಮರಗಳನ್ನು ಮೂರ್ತೆಗೆ ಕೊಡುತ್ತಿದ್ದ ಮುದರ ಗೌಡರು ವರ್ಗದಾರರಾಗಿದ್ದರು. ಆಗ ಈಗಿನಂತೆ ಬೆಳಿಗ್ಗೆಯಿಂದಲೇ ಕುಡಿಯುವ ಅಭ್ಯಾಸ ಇರಲಿಲ್ಲ. ವರ್ಗದಾರರೆಲ್ಲಾ ಆಗ ಗುತ್ತಯೆಗೆ ಖಾಯಂ ಕಳ್ಳು ಕುಡಿಯುವುದು ವಾಡಿಕೆ. ಅದರಂತೆ ಮುದರ ಗೌಡರೂ ಖಾಯಂ ಗಿರಾಕಿಯಾಗಿದ್ದರು. ಇಷ್ಟು ಅನುಕೂಲದ ಗೌಡರು ಮಾರ್ಚ್ ತಿಂಗಳಲ್ಲಿ ತೀರ್ವೆ ಕಟ್ಟಲು ಪರದಾಡುತ್ತಿದ್ದರು. ಎರಡು ರೂಪಾೈಗೆ ಒಂದು ಮುಡಿ ಅಕ್ಕಿ ಸಿಕ್ಕುವ ಕಾಲವದು. ತೀರ್ವೆ ಕಟ್ಟಲು ದುಡ್ಡು ಇಲ್ಲದೆ ಉಗ್ರಾಣಿ ಕಂಡಾಗೆಲ್ಲ ತಲೆ ಮರೆಸಿಕೊಳ್ಳುವುದು ಸಾಕಾಗಿ ಹೋಯಿತು. ಅವರು ತಂದೆಯವರಲ್ಲಿ ನೀನು ಈ ಭೂಮಿ ತೆಗೆದುಕೋ ಎಂದು ಒತ್ತಾಯ ಮಾಡತೊಡಗಿದರು. + +ತಂದೆಯವರು ಮಾತ್ರ ನಿಮ್ಮ ಜಾಗ ನಿಮ್ಮಲ್ಲೇ ಇರಬೇಕು. ಕೊಡುವ ಮಾತಾಡಬೇಡಿ. ಆದರೆ ನಿಮ್ಮ ತಾಳೆ ಮರಗಳನ್ನು ನನಗಲ್ಲದೇ ಬೇರೆ ಯಾರಿಗೂ ಕೊಡಬೇಡಿ ಎಂದು ಪ್ರೀತಿ, ಮಮತೆಗಳಿಂದ ಹೇಳಿ ತೀರ್ವೆ ಕಟ್ಟಲು ತಾವೇ ದುಡ್ಡು ಕೊಡುತ್ತಿದ್ದರು. ಕೊನೆಗೂ ತಂದೆಯವರು ಮುದರ ಗೌಡರ ಒತ್ತಾಯ ಹೆಚ್ಚುತ್ತಾ ಹೋದಾಗ ಈ ಪರ್ಲದ ಸ್ಥಳ ತೆಗೆದುಕೊಳ್ಳುವುದಕ್ಕೆ ಮನಸ್ಸು ಮಾಡಿದರು. ಈ ವಿಚಾರ ತಿಳಿದ ನಾಡು ಪೂಜಾರಿ ನಾನು ಕೊರುಂಗೆಜಾಲು ಬಿಡುತ್ತೇನೆ. ನನಗೆ ಪರ್ಲದ ಸ್ಥಳ ಬೇಕು. ನೀನು ಹೇಳದೆ ಮುದರ ಗೌಡರು ನನಗೆ ಕೊಡುವುದಿಲ್ಲ ಎಂದು ನನ್ನ ತಂದೆಯವರಲ್ಲಿ ದುಂಬಾಲು ಬಿದ್ದರು. ಕೊನೆಗೆ ತಂದೆಯವರು ನಾಡು ಪೂಜಾರಿಗೆ ಈ ಸ್ಥಳ ಮಾರಲು ಹೇಳಿ, ತಾಳೆ ಮರ ಮೂರ್ತೆಗೆ ತನಗೆ ಕೊಡಬೇಕೆಂದು ಶರ್ತ ವಿಧಿಸಿದರು. + +ಹಾಗೆ ನಾಡು ಪೂಜಾರಿ ಪರ್ಲದ ಭೂಮಾಲೀಕರಾದರು. ಅಣಿಯೂರು ನೆರಿಯ ಹೊಳೆಯ ದಡದಲ್ಲಿರುವ ಈ ಸ್ಥಳ ಈಗ ಕೊಚ್ಚಿ ಕ್ರಿಶ್ಚನರಲ್ಲಿದೆ. ಕೋಟಿ ರೂಪಾೈ ಮೌಲ್ಯ ಹೊಂದಬಹುದಾದ ಈ ಸ್ಥಳ ಋಣ ಇಲ್ಲದೆ ಕೈಜಾರಿತೆಂದು ತಂದೆಯವರು ಆಗಾಗ ಹೇಳುತ್ತಿದ್ದರು. ಈ ಕಾರಣದಿಂದಲೇ ಋಣವಂತ ಪರ್ಲ ಕೊಚ್ಚಿ ಕ್ರಿಶ್ಚನ್ ಕುಟುಂಬವನ್ನು ತಂದೆಯವರು ತುಂಬಾ ಪ್ರೀತಿಸುತ್ತಿದ್ದರು. ಯಾವುದಕ್ಕೂ ಋಣ ಬೇಕು ಎಂದು ಪದೇ ಪದೇ ಅಭಿಪ್ರಾಯ ಪಡುತ್ತಿದ್ದರು. + +ತಂದೆಯವರಿಗೆ ಐತು ಪೂಜಾರಿ ಎಂಬ ಅಳಿಯ ಮತ್ತು ಅಕ್ಕಮ್ಮ ಎಂಬ ಸೊಸೆ ಇದ್ದರು. ಐತು ಪೂಜಾರಿಯನ್ನು ದೆಯ್ಯಕ್ಕು ಎಂಬವರೊಂದಿಗೆ, ಅಕ್ಕಮ್ಮ ಸೊಸೆಯನ್ನು ಬೊಮ್ಮಯ್ಯ ಪೂಜಾರಿ ಎಂಬವರೊಡನೆ ತಂದೆಯವರು ಮದುವೆ ಮಾಡಿಸಿದ್ದರು. ಮದುವೆ ಮನೆಯಲ್ಲಿ ಯಾರೂ ಕುಡಿದು ಗಲಾಟೆ ಮಾಡದಿರಲಿ ಎಂಬ ಕಾರಣಕ್ಕೆ ತಂದೆಯವರು ನೆರಿಯದಲ್ಲಿ ಶರಾಬು ಮತ್ತು ಶೇಂದಿ ಅಂಗಡಿಗಳನ್ನು ಆ ದಿನದ ಮಟ್ಟಿಗೆ ಮುಚ್ಚಿಸಿದ್ದರಂತೆ. ಶೇಂದಿ ಅಂಗಡಿ ತಂದೆಯವರ ಕೈಯ್ಯಲ್ಲೇ ಇತ್ತು. ಬಿಲ್ಲವರು ಹಿಂದೆ ಶೇಂದಿ ತಯಾರಿಸುತ್ತಿದ್ದರು. ಆದರೆ ಅದನ್ನು ಅವರು ಕುಡಿಯುತ್ತಿರಲಿಲ್ಲ. ಅದವರಿಗೆ ನಿಷಿದ್ಧವಾಗಿತ್ತು. ಹಾಗೊಮ್ಮೆ ಕುಡಿದರೆ ಜಾತಿಯಿಂದ ಬಹಿಷ್ಕರಿಸಲ್ಪಡುತ್ತಿದ್ದರು. ಆದರೂ ತಂದೆಯವರು ಶೇಂದಿ ಅಂಗಡಿ ಬಾಗಿಲು ತೆರೆದಿರಲಿಲ್ಲ. + +ಆದರೆ ಬಿಲ್ಲವರಲ್ಲಿ ಶರಾಬು ಕುಡಿಯುವವರು ಇದ್ದರು. ಹಾಗಾಗಿ ಶರಾಬು ಅಂಗಡಿ ಬಂದ್ ಮಾಡಿಸುವುದು ಮುಖ್ಯವಾಗಿತ್ತು. ಶರಾಬು ಅಂಗಡಿ ನಾಡು ಪೂಜಾರಿಯವರ ಸ್ವಾಧೀನವಿತ್ತು. ಅವರ ಬಳಿಗೆ ಹೋದ ತಂದೆಯವರು ದಿನಕ್ಕೆ ಎಷ್ಟು ಶರಾಬು ಮಾರಾಟವಾಗುತ್ತದೆ ಎಂದು ವಿಚಾರಿಸಿದರು. ಇಷ್ಟು ಅಂತ ಲೆಕ್ಕ ಕೊಟ್ಟರು ನಾಡು ಪೂಜಾರಿಯವರು. ನಾಡು ಪೂಜಾರಿಯವರಿಗೆ ಆಶ್ಚರ್ಯ. ಯಾಕೆ ಲೆಕ್ಕ ಕೇಳುತ್ತಿರುವುದು? ‘ನನ್ನ ಅಳಿಯ – ಸೊಸೆಯಂದಿರ ಮದುವೆ. ಆ ದಿನ ಶರಾಬು ಅಂಗಡಿ ಬಂದ್ ಮಾಡಿ ಸಹಕರಿಸಬೇಕು. ಶರಾಬಿನ ದುಡ್ಡು ನಾನು ಕೊಡುತ್ತೇನೆ. ಈಗಲೇ ತೆಗೆದುಕೊ’ ಎಂದು ತಂದೆಯವರು ಅಷ್ಟು ಹಣ ಕೊಟ್ಟು ಬಿಟ್ಟರು. ನಾಡು ಪೂಜಾರಿಯವರಿಗೆ ಶರಾಬೂ ಉಳಿಯಿತು; ದುಡ್ಡೂ ಬಂತು ಎಂದು ಖುಷಿ ಪಟ್ಟು ಆ ದಿನದ ಮಟ್ಟಿಗೆ ಶರಾಬು ಅಂಗಡಿಗೆ ರಜೆ ಕೊಟ್ಟು ಉಪಕರಿಸಿದರು. ಆದ್ದರಿಂದ ಮದುವೆ ಮನೆಯಲ್ಲಿ ಕುಡಿದವರ ಗಲಾಟೆಗೆ ಆಸ್ಪದವಿರಲಿಲ್ಲ. + +ಆದರೆ ಆ ಕಾಲದಲ್ಲಿ ಗುರಿಕಾರರ ದರ್ಪ ಇತ್ತು. ತಾನು ದೊಡ್ಡವ, ತಾನು ದೊಡ್ಡವ ಎಂದು ಅವರು ಒಬ್ಬರ ಮೇಲೆ ಒಬ್ಬರು ಪೈಪೋಟಿ ಮಾಡುವುದಿತ್ತು. ನಮ್ಮ ಮನೆಯಲ್ಲಿ ಗುರಿಕಾರರು ಮಾವ. ಆದರೆ ದೆಯ್ಯಕ್ಕು ಮದುಮಗಳ ಕಡೆಯ ಗುರಿಕಾರ ಅಳಿಯ ಅಂತೆ. ದಿಬ್ಬಣ ಬಂದು ಹೊರಗೆ ಕೂತಿದ್ದಾರೆ. ನಮ್ಮ ಮನೆಯ ಗುರಿಕಾರರನ್ನು ಹುಡುಕಿದರೆ ಅವರು ಮಂದ್ರಿ (ಬೆಡ್ಶೀಟ್) ಹೊದೆದು ಮಲಗಿ ಬಿಟ್ಟಿದ್ದಾರೆ! ಎಬ್ಬಿಸಿದರೆ ಸ್ವಲ್ಪ ಹೊತ್ತು ಗುಡ್ಡೆಯಲ್ಲಿ ಕೂತುಕೊಳ್ಳಲಿ ಎಂದು ಅವರು. ಹೀಗೆ ತಂದೆಯವರು ಮಲಗಿದ ಗುರಿಕಾರ ಮತ್ತು ಗುಡ್ಡೆಯಲ್ಲಿ ಕೂತ ಗುರಿಕಾರರ ಮಧ್ಯೆ ಓಡಾಡಿ, ಹೊಂದಾಣಿಕೆ ಮಾಡಿಸಿದರು. ಮದುಮಗಳನ್ನು ಚಪ್ಪರಕ್ಕೆ ಬರಮಾಡಿಕೊಂಡರು. ಗುರಿಕಾರರ ಇಂಥ ಅತಿರೇಕ ವರ್ತನೆಗಳನ್ನು ತಂದೆಯವರು ನೆನಪಿಸಿಕೊಳ್ಳುತ್ತಿದ್ದರು. ಈಗ ಗುರಿಕಾರರು ಅಮುಖ್ಯವಾಗಿರುವುದನ್ನು ಬೆಂಬಲಿಸಿ ಮಾತಾಡುತ್ತಿದ್ದರು. ಈ ಘಟನೆ ಆಗಿನ ಸಾಮಾಜಿಕ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲುತ್ತದೆ. + +****** + +1947 ಅಗೋಸ್ತು 15ರಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಮಹಾತ್ಮ ಗಾಂಧೀಜಿಯವರ ಸಲಹೆಯಂತೆ ದೇಶದಲ್ಲಿ ಮದ್ಯ ನಿಷೇಧ ಕಾನೂನು ಜಾರಿಯಾಯಿತು. ಮದ್ಯ ನಿಷೇಧದ ಹಿಂದಿನ ದಿನ ಎಲ್ಲಾ ಶರಾಬು, ಶೇಂದಿ ಅಂಗಡಿಗಳಲ್ಲಿ ಮಾನವನ ಮೂರ್ತಿ ಮಾಡಿ ಅದಕ್ಕೆ ಬೆಂಕಿ ಕೊಟ್ಟು ಸುಟ್ಟು ಹಾಕಿದರಂತೆ. ಆಗ ಎಲ್ಲಾ ಶರಾಬು, ಶೇಂದಿ ಅಂಗಡಿಗಳು ಬಿಲ್ಲವರ ಕೈಯಲ್ಲೇ ಇತ್ತು. ಬೇರೆಯವರು ಈಗಿನಂತೆ ಆಗ ಈ ಉದ್ಯೋಗ ಹಿಡಿದಿರಲಿಲ್ಲ. ತನ್ನ ಮೂರ್ತಿ ತಾನೇ ಮಾಡಿ ಸುಟ್ಟ ಪ್ರಸಂಗ ಈ ದೇಶದಲ್ಲಿ ಇದು ಮಾತ್ರ. ತಮ್ಮ ವಿರೋಧಿಗಳ ಮೂರ್ತಿ ಮಾಡಿ ಸುಡುವ ಪರಿಪಾಠ ಇವತ್ತಿನ ದಿನಗಳಲ್ಲಿ ಬೇಕಾದಷ್ಟು ಇದೆ. ಆದರೆ ಅಂತಹ ಪ್ರಕರಣ ಅದೇ ಮೊದಲು, ಅದೇ ಕೊನೆಯದೂ ಆಯಿತು. + + + +ಶೇಂದಿ ಹಾಗೂ ಶರಾಬು ಮಾರಾಟ ನಿಲ್ಲಿಸಿದ್ದರಿಂದ ಅದನ್ನೇ ನಂಬಿದ್ದವರಿಗೆ ಪರ್ಯಾಯ ಉದ್ಯೋಗ ಇರಲಿಲ್ಲ! ಆದರೂ ಅಧೀರರಾಗದೇ ವೃತ್ತಿಗೆ ವಿದಾಯ ಹೇಳಿದ್ದು ಸಣ್ಣ ಸಂಗತಿ ಆಗಿರಲಿಲ್ಲ. ಅದೂ ಅಲ್ಲದೇ ಇದೇ ಶೇಂದಿ, ಶರಾಬು ಅಂಗಡಿಗಳಿಗೆ ಕುಡಿಯಲು ಬರುತ್ತಿದ್ದವರು ನಿತ್ಯದಂತೆ ಅಲ್ಲಿಗೆ ಬಂದು ಶಿಸ್ತಿನಲ್ಲಿ ಕೂತು ಭಕ್ತಿ ಭಾವ ಪರವಶರಾಗಿ ದೇವರ ಭಜನೆ ಮಾಡಿದ್ದೂ ಉದಾತ್ತ ಚರಿತ್ರೆಯೇ ಆಗಿದೆ. ಹಳ್ಳಿಗಳಲ್ಲಿ ಅಲ್ಲಲ್ಲಿ ಕಾಣಸಿಗುವ ಕೆಲವು ಭಜನಾ ಮಂದಿರಗಳ ಹಿಂದೆ ಅಂತಹ ಇತಿಹಾಸವಿದೆ. ನನ್ನ ತಂದೆಯವರಂತೂ ತನ್ನ ಮೂರ್ತಿಯನ್ನು ತಾನೇ ಮಾಡಿ ಸುಟ್ಟು ಹಾಕಿದ ಪ್ರಸಂಗವನ್ನು ಆಗಾಗ ಹೆಮ್ಮೆಯಿಂದ ಕೇಳಿಕೊಳ್ಳುತ್ತಿದ್ದುದು ನಾನೆಂದೂ ಮರೆಯುವಂತಿಲ್ಲ. + +****** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_263.txt b/Kenda Sampige/article_263.txt new file mode 100644 index 0000000000000000000000000000000000000000..13dceb164bea0c516bd2fa870be728e861b5a92e --- /dev/null +++ b/Kenda Sampige/article_263.txt @@ -0,0 +1,113 @@ + + +ಗುರಾಣಿಯಂತೆ ರಕ್ಷಣಾತ್ಮಕ ಕಾರ್ಯನಿರ್ವಹಿಸುವ ಗಾಳಿಯ ಹೊದಿಕೆಯಿಂದ ಚಂದ್ರ ವಂಚಿತವಾಗಿತ್ತು. ಹಾಗಾಗಿ ಪ್ರಾರಂಭದಿಂದಲೇ ನಿರಂತರ ಉಲ್ಕಾಪಾತಕ್ಕೆ, ಸೂರ್ಯ ಕಿರಣಗಳ ವಿನಾಶಕಾರಿ ಕೊರೆವ ಕ್ರಿಯೆಗೆ ಅದು ತನ್ನನ್ನು ಒಡ್ಡಿಕೊಂಡಿತ್ತು. ಕಾರ್ನೆಲ್ ವಿಶ್ವವಿದ್ಯಾಲಯದ ಥಾಮಸ್ ಗೋಲ್ಡ್ ಪ್ರಕಾರ, ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಳು ಪುಡಿಯಾಗಿದ್ದು ಉಲ್ಕಾಶಿಲೆಯ ಕಣಗಳು ನಿರಂತರವಾಗಿ ಚಂದ್ರನ ಮೇಲೆ ಸುರಿದಿದ್ದರಿಂದಲೆ. ಚಿಕಾಗೊ ವಿಶ್ವವಿದ್ಯಾನಿಲಯದ ಗೆರಾರ್ಡ್ ಕ್ಯೂಪರ್ ಪ್ರಕಾರ, ಚಂದ್ರನ ಶಿಲಾಪಾಕದಿಂದ ಅನಿಲಗಳು ಹೊರಬಿದ್ದ ಕಾರಣ ಉಪಗ್ರಹವು ಪ್ಯೂಮಿಸ್ ಕಲ್ಲಿನಂತೆ ಹಗುರವಾದ, ಸರಂಧ್ರ ಸ್ಥಿತಿಯನ್ನು ಪಡೆದುಕೊಂಡಿರಬಹುದು. + +ಮೈತುಂಬ ಕುಳಿಗಳೇ ತುಂಬಿದ, ನವೆದ ಚಂದ್ರ ಹಳೆಯದು ಎನ್ನುವುದನ್ನು ‘Qfwfq’ ಒಪ್ಪಿದ. ಆಕಾಶದಲ್ಲಿ ಬೆತ್ತಲೆಯಾಗಿ ಉರುಳುತ್ತಿರುವ ಅದು ಸವೆದು ಸವೆದು ಘಾಸಿಗೊಂಡ ಮೂಳೆಯಂತೆ ತನ್ನ ಮೈಮಾಂಸವನ್ನು ಇಷ್ಟಿಷ್ಟೇ ಕಳೆದುಕೊಳ್ಳುತ್ತಲಿದೆ. ಇಂತಹ ವಿಷಯ ನಡೆದಿರುವುದು ಇದೇ ಮೊದಲಲ್ಲ. ಇದಕ್ಕಿಂತಲೂ ಹಳೆಯದಾದ, ಹೆಚ್ಚು ಜರ್ಝರಿತವಾದ ಚಂದ್ರಗಳು ನನ್ನ ನೆನಪಿನಲ್ಲಿವೆ. ಈ ಚಂದ್ರಗಳನ್ನು ನಾನು ಬಹಳ ಅಂದರೆ ಬಹಳವೇ ನೋಡಿದ್ದೇನೆ: ಅವು ಹುಟ್ಟಿ ಆಕಾಶದಾದ್ಯಂತ ಗುರಿಯಿರದೆ ಹೋಗಿ ಉಲ್ಕೆಗಳ ತುಣುಕುಗಳಿಂದ ಬಡಿಸಿಕೊಂಡು ಸಾಯುತ್ತಿರುವುದನ್ನು, ಅವುಗಳ ಎಲ್ಲ ಕುಳಿಗಳೂ ಸ್ಫೋಟಗೊಳ್ಳುವುದನ್ನು, ಥಟ್ಟನೆ ಆವಿಯಾಗುವ ನೀಲಮಣಿಯ ಬಣ್ಣದ ಬೆವರಿನ ಧಾರೆ ಸುರಿಸುತ್ತಾ ಅವು ನಂತರ ಹಸಿರು ಮೋಡಗಳಿಂದ ಆವೃತವಾಗಿ ಒಣಗಿ ಒಣಸ್ಪಂಜಿನಂಥ ಚಿಪ್ಪಾಗಿ ಹೋಗುತ್ತದೆ. + +ಒಂದು ಚಂದ್ರ ಸತ್ತರೆ ಭೂಮಿಯ ಮೇಲೆ ಏನಾಗುತ್ತದೆ ಎಂಬುದನ್ನು ವಿವರಿಸುವುದು ಅಷ್ಟು ಸುಲಭವಲ್ಲ. ಆದರೂ ನಾನು ನೆನಪಿರುವ ಇತ್ತೀಚಿನ ಸಂಗತಿಯನ್ನು ಉಲ್ಲೇಖಿಸುವ ಮೂಲಕ ಅದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ವಿಕಾಸದ ಸುದೀರ್ಘ ಅವಧಿಯಲ್ಲಿ ಕ್ರಮಿಸಿ ಕ್ರಮಿಸಿ ಭೂಮಿಯು ತುಸು ಹೆಚ್ಚು ಕಡಿಮೆ ನಾವು ಈಗ ಇರುವ ಹಂತಕ್ಕೆ ತಲುಪಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಕಾರುಗಳು ಶೂಗಳ ಅಟ್ಟೆಗಳಿಗಿಂತ ಬೇಗನೆ ಸವೆಯುತ್ತವೆ. ಕೇವಲ ಮಾನವ ಜೀವಿಗಳು ತಯಾರಿಸಿದ, ಖರೀದಿಸಿ ಮಾರಾಟ ಮಾಡಿದ ವಸ್ತುಗಳು ಮತ್ತು ನಗರಗಳು ಭೂ ಖಂಡಗಳನ್ನು ಪ್ರಕಾಶಮಾನವಾದ ಬಣ್ಣಗಳಿಂದ ಆವರಿಸಿವೆ. ಈ ನಗರಗಳು ನಮ್ಮ ನಗರಗಳು ಈಗ ಬೆಳೆಯುತ್ತಿರುವಂತೆಯೇ, ಸರಿಸುಮಾರು ಅದೇ ಸ್ಥಳಗಳಲ್ಲಿ, ಭೂ ಖಂಡಗಳ ಆಕಾರವು ಎಷ್ಟೇ ಭಿನ್ನವಾಗಿದ್ದರೂ, ಅದೇ ಬಗೆಯಲ್ಲಿ ಬೆಳೆದವು. ನಿಮ್ಮೆಲ್ಲರಿಗೂ ಪರಿಚಿತವಾಗಿರುವ ನ್ಯೂಯಾರ್ಕ್ ಅನ್ನು ಹೋಲುವ ಒಂದು ನ್ಯೂಯಾರ್ಕ್ ಸಹ ಇದೆ, ಆದರೆ ಅದುತೀರಾ ಹೊಸದು. ಅಲ್ಲಿ ಹೊಸ ಉತ್ಪನ್ನಗಳು, ಹೊಸ ಹಲ್ಲುಜ್ಜುವ ಬ್ರಷ್‌ಗಳು, ಎಲ್ಲವೂ ಹೊಸತು. ತನ್ನದೇ ಆದ ಹೊಸ ಮ್ಯಾನ್‌ ಹಟನ್‌ ನೊಂದಿಗೆ ಇನ್ನೊಂದು ನ್ಯೂಯಾರ್ಕ್ ದಟ್ಟವಾಗಿ ಗಗನಚುಂಬಿಸುವಂತೆ ಬೆಳೆದಿದೆ. ಹೊಚ್ಚಹೊಸ ಹಲ್ಲುಜ್ಜುವ ಬ್ರಷ್‌ ನ ನೈಲಾನ್ ಬಿರುಗೂದಲುಗಳಂತೆ ಆ ಗಗನಚುಂಬಿ ಕಟ್ಟಡಗಳು ಮಿಂಚುತ್ತಿವೆ. + +ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನು ತುಸುವೇ ಮುಕ್ಕಾದರೆ ಸಾಕು, ಅಥವಾ ಸ್ವಲ್ಪ ಹಳತಾದರೆ, ಸಣ್ಣನೆ ನೆಗ್ಗಾದರೆ, ಅಥವಾ ಒಂದಿಷ್ಟು ಕಲೆಯಾದರೆ ಸಾಕು ಅದನ್ನು ಎಸೆದುಬಿಡುವ, ಬದಲಿಗೆ ಹೊಸತು ಮತ್ತು ಪರಿಪೂರ್ಣ ಪರ್ಯಾಯವಾದುದನ್ನು ಕೊಂಡುತರುವ ಮನಸ್ಸು ಬೆಳೆದಿದೆ. ಇದರ ನಡುವೆ ಒಂದೇ ಒಂದು ಸುಳ್ಳು ಟಿಪ್ಪಣಿ, ಒಂದು ನೆರಳು ಕೂಡ ಇದೆ. ಅದು ಚಂದ್ರ. ಅದು ಆಕಾಶದಲ್ಲಿ ಬೆತ್ತಲೆಯಾಗಿ, ಸಮೆಯುತ್ತ, ಬೂದು ಬಣ್ಣದಲ್ಲಿ ಅಲೆಯುತ್ತಿದೆ. ಇಲ್ಲಿನ ಬದುಕಿನ ಬಗ್ಗೆ ಹೆಚ್ಚು ಹೆಚ್ಚು ಅನ್ಯಭಾವ ತಾಳಿ ವಿಮುಖವಾಗಿದೆ ಎಂದರೂ ಸರಿಯೆ, ಇದು ತಾನು ಈ ಮೊದಲು ಏನಾಗಿದ್ದೆನೆಂಬ ಒಂದು ಹ್ಯಾಂಗೊವರ್. ಅದೊಂದು ಬಗೆಯಲ್ಲಿ ಹಳೆಯ ಕಾಲದ ಹಳಹಳಿಕೆ. + +“ಹುಣ್ಣಿಮೆ”, “ಅರ್ಧ ಚಂದ್ರ”, “ಕೊನೆಯ ಕಾಲು ಚಂದ್ರ” ನಂತಹ ಪ್ರಾಚೀನ ಅಭಿವ್ಯಕ್ತಿಗಳು ಇನ್ನೂ ಬಳಕೆಯಾಗುತ್ತಲೇ ಇವೆ. ಆದರೆ ಅವು ಕೇವಲ ವರ್ಣನೆಗಳು ಮಾತ್ರ. ಮೈಯೆಲ್ಲಾ ಬಿರುಕುಗಳು, ರಂಧ್ರಗಳು ಇರುವ ಆಕಾರವನ್ನು, ಅದು ನಮ್ಮ ತಲೆಯ ಮೇಲೆ ಕಲ್ಲುಮಣ್ಣುಗಳ ಮಳೆಯನ್ನು ಅಪ್ಪಳಿಸುವ ಹಾಗೆ ಸುರಿಸುತ್ತಾ, ಈಗಲೋ ಆಗಲೋ ಕೂಲಿಹೋಗುವ ಹಾಗೆ ಕಾಣಿಸುತ್ತಾ ಇರುವಾಗ ನಾವು ಹೇಗೆ ತಾನೆ ಅದನ್ನು “ಪೂರ್ಣ”ವೆಂದು ಕರೆಯಬಹುದು? ಕ್ಷೀಣಿಸುತ್ತಿರುವ ಕೃಷ್ಣಪಕ್ಷದ ಚಂದ್ರನಾಗಿದ್ದಾಗಲಂತೂ ಅದನ್ನು ಉಲ್ಲೇಖಿಸಲು ಸಹ ಬರುವುದಿಲ್ಲ! ಒಂದು ರೀತಿಯಲ್ಲಿ ಅದನ್ನು ಜಗಿದು ಜಗಿದು ಬಾಯಲ್ಲಿ ಉಳಿದ ಚೀಸ್ ಚರಟದ ಮಟ್ಟಕ್ಕೆ ಇಳಿಸಲಾಯಿತು. ನಾವು ಮರೆಯಾಗುವುದೆಂದು ನಿರೀಕ್ಷಿಸುವ ಮೊದಲೇ ಅದು, ಯಾವಾಗಲೂ, ಕಣ್ಮರೆಯಾಗುತ್ತದೆ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿಯೂ ನಾವು ಅದು ಮತ್ತೆ ಕಾಣಿಸಿಕೊಳ್ಳುತ್ತದೆಯೇ ಎಂದು ಸಂಶಯಪಟ್ಟಿದ್ದೇವೆ (ಅದು ಸುಮ್ಮನೆ ಕಣ್ಮರೆಯಾಗುತ್ತದೆ ಎಂದು ನಾವು ಭಾವಿಸುತ್ತಿದ್ದೇವೆಯೇ?). ಅದು ಮತ್ತೆ ಕಾಣಿಸಿಕೊಂಡಾಗ, ಹಲ್ಲುಗಳನ್ನು ಕಳೆದುಕೊಂಡಿರುವ ಬಾಚಣಿಗೆಯಂತೆ ಹೆಚ್ಚು ಹೆಚ್ಚು ಕಾಣುವಾಗ, ನಾವು ನಮ್ಮ ದೃಷ್ಟಿ ತಪ್ಪಿಸಿದ್ದೇವೆ, ಒಬ್ಬಗೆಯ ನಡುಕದಲ್ಲಿ. + +ಅದು ಮನಸ್ಸು ಕುಗ್ಗಿಸುವ ನೋಟವಾಗಿತ್ತು. ನಾವು ಜನಸಂದಣಿಯಲ್ಲಿಯೇ ಹೊರಟೆವು. ನಮ್ಮ ಕೈಗಳು ಕೊಂಡ ಪಾರ್ಸೆಲ್‌ ಗಳಿಂದ ತುಂಬಿದ್ದವು. ಹಗಲು-ರಾತ್ರಿ ತೆರೆದಿರುತ್ತಿದ್ದ ದೊಡ್ಡ ದೊಡ್ಡ ಡಿಪಾರ್ಟ್‌ಮೆಂಟ್ ಸ್ಟೋರ್‌ ಗಳ ಒಳಗೆ ಹೋಗುತ್ತಿದ್ದೆವು, ಅಲ್ಲಿಂದ ಹೊರಗೆ ಬರುತ್ತಿದ್ದೆವು. ಗಗನಚುಂಬಿ ಕಟ್ಟಡಗಳ ಮೇಲೆ ಎತ್ತರಕ್ಕೆ ಏರಿದ್ದ ನಿಯಾನ್ ಸೈನ್ ಗಳನ್ನು ಕಣ್ಣಲ್ಲೆ ಸ್ಕ್ಯಾನ್ ಮಾಡುವಾಗ ಅವು ಹೊಸದಾಗಿ ಮಾರುಕಟ್ಟೆಗೆ ಬಂದ ಉತ್ಪನ್ನಗಳ ವಿವರಗಳನ್ನು ನಿರಂತರವಾಗಿ ತಿಳಿಸುತ್ತಿದ್ದವು. ಹಾಗೆ ಮಾಡುವಾಗಲೇ ಥಟ್ಟನೆ ಒಂದು ವಸ್ತು ಮೇಲೆ ಸರಿಯುತ್ತಿರುವುದನ್ನು ನಾವು ಕಂಡೆವು. ಆ ಬೆರಗುಗೊಳಿಸುವ ದೀಪಗಳ ಮಧ್ಯೆ ನಿಧಾನವಾಗಿ ಚಲಿಸುವಂತೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವಂತೆ ಅದು ಕಾಣಿಸಿತು. ನಾವು ಖರೀದಿಸಿದ ಪ್ರತಿಯೊಂದು ಉತ್ಪನ್ನವೂ ಇದೇ ರೀತಿ ನವೆದುಹೋಗಬಹುದು, ಹಾಳಾಗಬಹುದು, ಹದಗೆಡಬಹುದು, ಮಸುಕಾಗಬಹುದು ಎಂಬುದನ್ನು ನಮ್ಮ ತಲೆಯಿಂದ ಹೊರಗೆ ಹಾಕಲು ನಮಗೆ ಸಾಧ್ಯವಾಗಲೇ ಇಲ್ಲ. ಪ್ರತಿಯೊಂದು ಹೊಸ ವಸ್ತುವನ್ನು ಖರೀದಿಸಲು ಮತ್ತು ಹುಚ್ಚರಂತೆ ಕೆಲಸ ಮಾಡಲುತೊಡಗಿ ನಾವು ನಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಇದು ಉದ್ಯಮ ಮತ್ತು ವಾಣಿಜ್ಯಕ್ಕೆ ದೊಡ್ಡ ನಷ್ಟವಾಗಿದೆ. + +ಈ ಅನುತ್ಪಾದಕ ಉಪಗ್ರಹವನ್ನು ಏನು ಮಾಡಬೇಕೆಂಬುದರ ಸಮಸ್ಯೆಯನ್ನು ನಾವು ಪರಿಗಣಿಸಲು ಪ್ರಾರಂಭಿಸಿದೆವು. ಅದು ಯಾವುದೇ ಪ್ರಯೋಜನಕ್ಕೂ ಬರಲಿಲ್ಲ. ಒಂದುಮಾತಲ್ಲಿ ಆ ಕಾರ್ಯನಿಷ್ಪ್ರಯೋಜಕವಾಗಿತ್ತು. ತನ್ನ ತೂಕವನ್ನು ಅದು ಕಳೆದುಕೊಂಡ ಹಾಗೆಲ್ಲ ಅದು ತನ್ನ ಕಕ್ಷೆಯನ್ನು ಭೂಮಿಯ ಕಡೆಗೆ ತಿರುಗಿಸಲು ಪ್ರಾರಂಭಿಸಿತು. ಅದು ನಿಜವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಭೂಮಿಗೆ ಹತ್ತಿರವಾದಾಗ ಅದು ತನ್ನ ವೇಗವನ್ನು ನಿಧಾನಗೊಳಿಸಿತು. ನಾವು ಇನ್ನು ಮುಂದೆ ಅದರ ಶುಕ್ಲಪಕ್ಷ ಕೃಷ್ಣಪಕ್ಷ, ಏಕಾದಶೀ ಮುಂತಾದಹಂತಗಳನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ಕ್ಯಾಲೆಂಡರ್, ತಿಂಗಳುಗಳ ಲಯ ಇವೆಲ್ಲ ಕೇವಲ ಔಪಚಾರಿಕ ವಿಧಿಯಾಗಿ ಮಾರ್ಪಟ್ಟಿದ್ದವು. ಚಂದ್ರ ಪದೇ ಪದೇ ಅದೇ ಮಾಡುತ್ತ ಮುಂದೆ ಹೋಗುತ್ತಿತ್ತು. ಅದು ಕುಸಿಯಲು ಹೊರಟಂತೆ ತೋರುತ್ತಿತ್ತು. + +ಚಂದ್ರನು ಕೆಳಗೆ ಬಂದ ಈ ರಾತ್ರಿಗಳಲ್ಲಿ, ಹೆಚ್ಚು ಅಸ್ಥಿರ ಮನಸ್ಸಿನ ಜನರು ವಿಲಕ್ಷಣವಾದ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಗಗನಚುಂಬಿ ಕಟ್ಟಡದ ಪ್ಯಾರಾಪೆಟ್ಟಿನ ಅಂಚಿನ ಉದ್ದಕ್ಕೂ ನಿದ್ದೆಯಲ್ಲಿ ನಡೆವ ವ್ಯಕ್ತಿಯೊಬ್ಬ ತನ್ನ ತೋಳುಗಳನ್ನು ಚಂದ್ರನ ಕಡೆಗೆ ಚಾಚುತ್ತ ಓಡಾಡುತ್ತಿದ್ದ. ಟೈಮ್ಸ್ ಸ್ಕ್ವೇರ್ ಮಧ್ಯದಲ್ಲಿ ತೋಳವಾಗುವ ಮನುಷ್ಯ ಅಥವಾ ಮನುಷ್ಯನಾಗುವ ತೋಳ – ವೀರ್ವುಲ್ಫ್ – ಊಳಿಡುತ್ತಿತ್ತು. ಬಂದರು ಗೋದಾಮುಗಳಿಗೆ ಬೆಂಕಿ ಹಚ್ಚುವ ಪೈರೋಮೇನಿಯಾಕ್ – ಕಂಡಕಂಡದ್ದಕ್ಕೆ ಬೆಂಕಿ ಹಚ್ಚುವ ಹುಚ್ಚು ಹತ್ತಿದ ಮನುಷ್ಯನಂತೂ ಯಾವಾಗಲೂ ಇದ್ದ. ಈಗ ಇವು ಸಾಮಾನ್ಯ ಘಟನೆಗಳಾಗಿದ್ದು, ಸದಾ ಕುತೂಹಲಿಯಂತೆ ಹೊಸತನ್ನೇ ನಿರುಕಿಸುವ ಸಾಮಾನ್ಯ ಗುಂಪನ್ನು ಅದು ಹೆಚ್ಚು ಆಕರ್ಷಿಸಲಿಲ್ಲ. ಆದರೆ ಸೆಂಟ್ರಲ್ ಪಾರ್ಕ್‌ ನ ಬೆಂಚಿನ ಮೇಲೆ ಸಂಪೂರ್ಣವಾಗಿ ಬೆತ್ತಲೆಯಾಗಿ ಕುಳಿತಿದ್ದ ಹುಡುಗಿಯನ್ನು ನೋಡಿದಾಗ ಮಾತ್ರ ನಾನು ನಿಲ್ಲಬೇಕಾಯಿತು. + +ನಾನು ಅವಳನ್ನು ನೋಡುವ ಮೊದಲೇ ನಿಗೂಢವಾದದ್ದು ಏನಾದರೂ ಸಂಭವಿಸಲಿದೆ ಎಂಬ ಭಾವನೆ ಅವಳಲ್ಲಿತ್ತು. ನನ್ನ ಕನ್ವರ್ಟಿಬಲ್ ಅನ್ನು ಓಡಿಸಿಕೊಂಡು ನಾನು ಸೆಂಟ್ರಲ್ ಪಾರ್ಕ್ ಮೂಲಕ ಸಾಗುತ್ತಿದ್ದಾಗ, ಮಿನುಗುವ ಬೆಳಕಿನಲ್ಲಿ ಸ್ನಾನ ಮಾಡಿದ್ದೇನೆ ಅನಿಸುತ್ತಿತ್ತು. ಅದು ಫ್ಲೋರಸೆಂಟ್ ಬಲ್ಬಿನಂತೆ ಸಂಪೂರ್ಣವಾಗಿ ಚಾಲೂ ಆಗುವ ಮೊದಲು ಪ್ರಕಾಶಮಾನವಾದ, ಮಿಟುಕಿಸುವ ಬೆಳಕಿನ ಸರಣಿಯನ್ನು ಹೊರಸೂಸುತ್ತದೆ. ನನ್ನ ಸುತ್ತಲಿನ ನೋಟವು ಚಂದ್ರನ ಕುಳಿಯಲ್ಲಿ ಮುಳುಗಿದ ಉದ್ಯಾನ ವನದಂತೆಯೇ ಇತ್ತು. ಬೆತ್ತಲೆ ಹುಡುಗಿ ಚಂದ್ರನ ತುಂಡನ್ನು ಪ್ರತಿಬಿಂಬಿಸುವ ಕೊಳದ ಪಕ್ಕದಲ್ಲಿ ಕುಳಿತಳು. ನಾನು ಬ್ರೇಕ್ ಹಾಕಿದೆ. ಒಂದು ಸೆಕೆಂಡು ನಾನು ಅವಳನ್ನು ಗುರುತಿಸಿದೆ ಎಂದು ಭಾವಿಸಿದೆನೇನೋ, ನಾನು ಕಾರಿನಿಂದ ಇಳಿದು ಅವಳ ಕಡೆಗೆ ಓಡಿಹೋದೆ. ಆದರೆ ನಂತರ ನಾನು ಹೆಪ್ಪುಗಟ್ಟಿದೆ. ಅವಳು ಯಾರೆಂದು ನನಗೆ ತಿಳಿದಿರಲಿಲ್ಲ. ಆದರೂ ತುರ್ತಾಗಿ ಅವಳಿಗೆ ಏನಾದರೂ ಮಾಡಬೇಕಾಗಿದೆ ಎಂದು ಮಾತ್ರ ನಾನು ಭಾವಿಸಿದೆ. + +ಅವಳದೆನ್ನುವ ಎಲ್ಲವೂ ಬೆಂಚ್‌ ನ ಸುತ್ತಲ ಹುಲ್ಲಿನ ಮೇಲೆ ಹರಡಿಕೊಂಡಿದ್ದವು. ಅವಳ ಬಟ್ಟೆ, ಒಳ ಉಡುಪು ಮತ್ತು ಶೂ ಇಲ್ಲಿದ್ದರೆ ಅಲ್ಲಿ ಇತರೆ ವಸ್ತುಗಳು. ಅವಳ ಕಿವಿಯೋಲೆಗಳು, ಕೊರಳಹಾರ, ಕಡಗಗಳು, ಪರ್ಸ್ ಮತ್ತು ಶಾಪಿಂಗ್ ಬ್ಯಾಗ್. ಅಷ್ಟಗಲ ಚೆಲ್ಲಿದ ವಸ್ತುಗಳು. ಅಸಂಖ್ಯಾತ ಪೊಟ್ಟಣಗಳು, ಸರಕುಗಳು. ಪ್ರಾಯಶಃ ಅವಳು ಅದ್ದೂರಿ ಶಾಪಿಂಗ್ ವಿನೋದದಿಂದ ಹಿಂದಿರುಗುವಾಗ ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳಬೇಕೆಂದು ಅರಿತು ಎಲ್ಲವನ್ನೂ ಚೆಲ್ಲಿಬಿಟ್ಟಿದ್ದಾಳೆ. ಅವು ಅವಳನ್ನು ಈ ಭೂಮಿಗೆ ಬಂಧಿಸಲ್ಪಟ್ಟಿರುವ ವಸ್ತುಗಳು ಮತ್ತು ಚಿಹ್ನೆಗಳು. ಅವಳು ಚಂದ್ರನ ಗೋಳಕ್ಕೆ ಸೇರಿಕೊಳ್ಳಲು ಕಾಯುತ್ತಿದ್ದಳು ಎಂದು ಈಗ ಊಹಿಸಲಾಗಿದೆ. + +“ಏನಾಗುತ್ತಿದೆ?” ನಾನು ದಿಗ್ಭ್ರಮೆಗೊಂಡೆ, “ನಿಮಗೆ ನಾನು ಸಹಾಯಮಾಡಲೆ?” + +“ಸಹಾಯ?” ಅವಳು ಕೇಳಿದಳು. ಅವಳ ಕಣ್ಣುಗಳು ಮೇಲೆ ಆಗಸದತ್ತ ನೋಡುತ್ತಿದ್ದವು. ಅವಳು ಮುಂದುವರಿದು “ಯಾರೂ ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದಳು. ಈಗಮಾತ್ರ ಅವಳು ಮಾತನಾಡುತ್ತಿರುವುದು ತನ್ನ ಬಗ್ಗೆ ಅಲ್ಲ, ಚಂದ್ರನ ಬಗ್ಗೆ ಎಂಬುದು ಸ್ಪಷ್ಟವಾಗಿತ್ತು. + +ಚಂದ್ರನು ನಮ್ಮ ಮೇಲಿದ್ದ. ಒಂದು ಪೀನ ಆಕಾರವು ಉರುಳಿ ನಮ್ಮನ್ನು ಬಹುತೇಕ ಪುಡಿಮಾಡುತ್ತದೆ. ಪಾಳುಬಿದ್ದ ಮೇಲ್ಛಾವಣಿ, ಚೀಸ್ ತುರಿಯುವ ತುರಿಯೋಮಣೆಯ ತೂತುಗಳಂತಹ ರಂಧ್ರಗಳಿಂದ ಕೂಡಿದೆ. ಆ ಕ್ಷಣವೇ ಮೃಗಾಲಯದಲ್ಲಿನ ಪ್ರಾಣಿಗಳು ಕೂಗಲಾರಂಭಿಸಿದವು. + +“ಇದು ಅಂತ್ಯವೇ?” ನಾನು ಯಾಂತ್ರಿಕವಾಗಿ ಕೇಳಿದೆ. ನನ್ನ ಪ್ರಶ್ನೆಯ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ. + +ಅವಳು ಉತ್ತರಿಸಿದಳು, “ಇದು ಪ್ರಾರಂಭ, ಅಥವಾ ಅಂತಹದ್ದೇ ಏನಾದರೂ ಒಂದು”. (ಅವಳು ಬಹುತೇಕ ತುಟಿ ಬಿಚ್ಚದೆಯೇ ಮಾತನಾಡಿದ್ದಳು.)“ನಿನ್ನ ಮಾತಿನ ಅರ್ಥವೇನು? ಇದು ಅಂತ್ಯದ ಪ್ರಾರಂಭವೋ ಅಥವಾ ಇನ್ನೇನಾದರೂ ಪ್ರಾರಂಭವಾಗಿದೆಯೇ?” + +ಅವಳು ಎದ್ದು ಹುಲ್ಲಿನ ಮೇಲೆ ಅಡ್ಡಲಾಗಿ ನಡೆದಳು. ಅವಳ ಉದ್ದವಾದ ತಾಮ್ರವರ್ಣದ ಕೂದಲು ಅವಳ ಹೆಗಲ ಮೇಲೆ ಇಳಿಬಿದ್ದಿತ್ತು. ಅವಳು ತುಂಬಾ ದುರ್ಬಲಳಾಗಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಅವಳನ್ನು ರಕ್ಷಿಸುವ ಅತ್ಯವಶ್ಯಕತೆಯಿದೆ ಎಂದು ನಾನು ಭಾವಿಸಿದೆ. ಅವಳನ್ನು ರಕ್ಷಿಸುವುದಕ್ಕೆ, ಅವಳು ಬೀಳುವಂತಾದರೆ ಅವಳನ್ನು ಹಿಡಿಯಲು ಅಥವಾ ಅವಳಿಗೆ ಹಾನಿಯುಂಟುಮಾಡುವ ಯಾವುದನ್ನಾದರೂ ನಿವಾರಿಸಲು ನಾನು ಸಿದ್ಧನಾಗಿರುವಂತೆ ನನ್ನ ಕೈಗಳನ್ನು ಅವಳ ಕಡೆಗೆ ಚಾಚಿದೆ. ಆದರೆ ನನ್ನ ಕೈಗಳು ಅವಳನ್ನು ಸೋಕಲು ಸಹ ಧೈರ್ಯ ಮಾಡಲಿಲ್ಲ. ಸದಾ ಅವು ಅವಳ ಚರ್ಮದಿಂದ ಕೆಲವು ಸೆಂಟಿಮೀಟರ್ ದೂರವೇ ಉಳಿದವು. ಹೂವಿನ ತೋಟಗಳ ಹಿಂದೆ ಈ ರೀತಿಯಾಗಿ ನಾನು ಅವಳನ್ನು ಹಿಂಬಾಲಿಸುತ್ತಿರುವಾಗ ಅವಳ ಚಲನೆಗಳು ಸಹ ನನ್ನಂತೆಯೇ ಇವೆ ಎಂದು ನಾನು ಅರಿತುಕೊಂಡೆ. ಅವಳು ಕೂಡ ದುರ್ಬಲವಾದ ಯಾವುದನ್ನಾದರೂ ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಅದು ಬೀಳಬಹುದು, ಚೂರುಚೂರಾಗಬಹುದು. ಆಗ ಅದನ್ನು ರಕ್ಷಿಸುವುದು ಅಗತ್ಯವಾಗಿರುತ್ತದೆ. ಅದನ್ನು ನಿಧಾನವಾಗಿ ನೆಲೆಗೊಳ್ಳಲು ಸಾಧ್ಯವಾಗುವ ಸ್ಥಳದ ಕಡೆಗೆ ಕೊಂಡೊಯ್ಯುವುದು ಅವಳ ಇರಾದೆಯಾಗಿದ್ದಂತೆ. ಅವಳು ಸ್ಪರ್ಶಿಸಲಾಗದ್ದದು. ಅವಳು ತನ್ನ ಸನ್ನೆಗಳ ಮೂಲಕ ಮಾತ್ರ ಮಾರ್ಗದರ್ಶನ ನೀಡಬಲ್ಲಳು. ಹೌದು, ಅದು ಚಂದ್ರ. + +ಚಂದ್ರ ಕಳೆದುಹೋದಂತೆ ಕಾಣುತ್ತಿತ್ತು. ತನ್ನ ಕಕ್ಷೆಯನ್ನು ತ್ಯಜಿಸಿದ ನಂತರ, ಎಲ್ಲಿಗೆ ಹೋಗಬೇಕೆಂದು ಅದಕ್ಕೆ ತಿಳಿದಿರಲಿಲ್ಲ. ಅದು ತನ್ನ ತಾನು ಒಂದು ಗಾಳಿಯಲ್ಲಿನ ತರಗೆಲೆಯಂತೆ ಸಾಗಿಸಲ್ಪಡಲು ಬಿಟ್ಟುಕೊಟ್ಟಿತ್ತು. ಕೆಲವೊಮ್ಮೆ ಇದು ಭೂಮಿಯ ಕಡೆಗೆ ಕುಸಿದು ಬೀಳುತ್ತಿರುವಂತೆ ಕಂಡುಬಂತು. ಬೇರೆ ಸಮಯದಲ್ಲಿ ಸುರುಳಿಯಾಕಾರದ ಚಲನೆಯಲ್ಲಿ ತಿರುತಿರುಗುತ್ತಾ ಇಳಿಯುತ್ತಿತ್ತು. ಇನ್ನೂ ಕೆಲವು ಬಾರಿ ಅದು ಕೇವಲ ತೇಲುತ್ತಿರುವಂತೆ ಕಾಣುತ್ತಲಿತ್ತು. ಅದು ತನ್ನ ಎತ್ತರವನ್ನು ಕಳೆದುಕೊಳ್ಳುತ್ತಿತ್ತು. ನಿಶ್ಚಿತವಾಗಿಯೂ ಹಾಗೆಯೇ. ಇನ್ನು ಒಂದು ಸೆಕೆಂಡಿನಲ್ಲಿ ಅದು ಪ್ಲಾಜಾ ಹೋಟೆಲ್‌ ಗೆ ಅಪ್ಪಳಿಸುತ್ತದೆ ಎಂದು ತೋರುತ್ತಿತ್ತು. ಆದರೆ ಅದು ಎರಡು ಗಗನಚುಂಬಿ ಕಟ್ಟಡಗಳ ನಡುವಿನ ಕಾರಿಡಾರ್‌ ಗೆ ಜಾರಿಬಿದ್ದು ಹಡ್ಸನ್‌ ನ ದಿಕ್ಕಿನಲ್ಲಿ ಕಣ್ಮರೆಯಾಯಿತು. ಸ್ವಲ್ಪ ಸಮಯದ ನಂತರ ಅದು ಮೋಡದ ಹಿಂದಿನಿಂದ ಹೊರಬಂದು ನಗರದ ಎದುರು ಭಾಗದಲ್ಲಿ, ಬಾತಿಂಗ್ ಹಾರ್ಲೆಮ್ ಮತ್ತು ಈಸ್ಟ್ರಿವರ್ ನದಿಯನ್ನು ಮಂದಬೆಳಕಿನಲ್ಲಿ ದಾಟಿ ಬೀಸುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ, ಬ್ರಾಂಕ್ಸ್ ಕಡೆಗೆ ಉರುಳಿತು. + +“ಅದು ಅಲ್ಲಿದೆ!” ನಾನು ಕೂಗಿದೆ. “ಅಲ್ಲಿ – ಅದು ನಿಂತುಬಿಟ್ಟಿದೆ!” + +“ಅದು ನಿಲ್ಲಲು ಸಾಧ್ಯವಿಲ್ಲ!” ಹುಡುಗಿ ಅಚ್ಚರಿಯಿಂದ ಕೂಗಿದಳು. ಅವಳು ಅತ್ತ ಬೆತ್ತಲೆಯಾಗಿಯೇ ಹುಲ್ಲಿನ ಮೇಲೆ ಬರಿಗಾಲಿನಲ್ಲಿಯೇ ಓಡಿಹೋದಳು.“ಎಲ್ಲಿಗೆ ಹೋಗುತ್ತಿದ್ದೀಯ? ನೀನು ಹಾಗೆಲ್ಲ ಸುತ್ತಾಡಲು ಸಾಧ್ಯವಿಲ್ಲ! ನಿಲ್ಲು! ಹೇ, ನಾನು ನಿನ್ನೊಂದಿಗೇನೆ ಮಾತನಾಡುತ್ತಿದ್ದೇನೆ! ನಿನ್ನ ಹೆಸರು ಏನು?”ಅವಳು ‘ಡಯಾನಾ’ ಅಥವಾ ‘ಡೀನಾ’ ಎಂದೇನೋ ಒಂದು ಹೆಸರನ್ನು ಕೂಗಿಹೇಳಿದಳು. ಅದು ಅವಳ ಪ್ರಾರ್ಥನೆಯೂ ಆಗಿರಬಹುದು. ಬಳಿಕ ಅವಳು ಕಣ್ಮರೆಯಾದಳು. ಅವಳನ್ನು ಹಿಂಬಾಲಿಸುವ ಸಲುವಾಗಿ ನಾನು ಮತ್ತೆ ನನ್ನ ಕಾರಿಗೆ ಹಾರಿ ಚಲಾಯಿಸಿದೆ; ಸೆಂಟ್ರಲ್ ಪಾರ್ಕ್‌ ಡ್ರೈವ್‌ ಗಳನ್ನು ಹುಡುಕಲು ಪ್ರಾರಂಭಿಸಿದೆ. + +ನನ್ನ ಕಾರಿನ ಹೆಡ್‌ ಲೈಟ್‌ ಗಳ ಬೆಳಕು ಪೊದೆಗಳು, ಗುಡ್ಡಗಳು, ಪಿರಾಮಿಡ್ಡಿನಂತಹ ಒಬೆಲಿಸ್ಕ್‌ ಗಳನ್ನು ಬೆಳಗಿಸಿದವು. ಆದರೆ ಡಯಾನಾ ಎಂಬ ಹುಡುಗಿ ಎಲ್ಲಿಯೂ ಕಾಣಿಸಲಿಲ್ಲ. ನಾನು ತುಂಬಾ ದೂರ ಹೋಗಿಬಿಟ್ಟಿದ್ದೆ. ನಾನು ಅವಳನ್ನು ಹಿಂದೆ ಬಿಟ್ಟು ಬಂದಿರಬೇಕು. ಬಂದ ದಾರಿಯಲ್ಲಿ ಹಿಂತಿರುಗಲು ನಾನು ಕಾರು ತಿರುಗಿದೆ. ನನ್ನ ಹಿಂದೆ ಒಂದು ಧ್ವನಿ, “ಇಲ್ಲ, ಅದು ಇದೆ, ಮುಂದುವರಿಯಿರಿ!” + +ನನ್ನ ಕಾರಿನ ಡಿಕ್ಕಿಯ ಮೇಲೆ ನನ್ನ ಹಿಂದೆ ಕುಳಿತದ್ದು ಅದೇ ಬೆತ್ತಲೆ ಹುಡುಗಿ. ಅವಳೇ ಚಂದ್ರನ ಕಡೆಗೆ ಕೈ ತೋರುತ್ತಾ ಮಾತಾಡಿದ್ದು. + +ನಾನು ಅವಳಿಗೆ ‘ಕೆಳಗಿಳಿ’ ಎಂದು ಹೇಳಲು, ಮುಖ್ಯವಾಗಿ ಆ ಸ್ಥಿತಿಯಲ್ಲಿ ನಾನು ಅವಳೊಂದಿಗೆ ‘ನಗರದಾದ್ಯಂತ ಪ್ರಯಾಣಿಸಲು ಸಾಧ್ಯವಿಲ್ಲ’ ಎಂದು ವಿವರಿಸಲು ಬಯಸಿದ್ದೆ. ಆದರೆ ನಾನು ಅವಳ ಗಮನವನ್ನು ಬೇರೆಡೆಗೆ ತಿರುಗಿಸಲು ಧೈರ್ಯ ಮಾಡಲಿಲ್ಲ. ಅವಳು ಡ್ರೈವ್‌ ನ ಕೊನೆಯಲ್ಲಿ ಕಣ್ಮರೆಯಾಗುತ್ತ ಮತ್ತೆ ಕಾಣಿಸಿಕೊಳ್ಳುತ್ತ ಇದ್ದ ಪ್ರಕಾಶಮಾನವಾದ ಹೊಳಪನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎನ್ನುವುದು ನನಗೆ ಖಚಿತವಾಗಿತ್ತು. ಇನ್ನೂ ವಿಚಿತ್ರವೆಂದರೆ ಯಾವುದೇ ಸಂದರ್ಭದಲ್ಲಿಯೂ ನನ್ನ ಕಾರಿನ ಡಿಕ್ಕಿಯ ಮೇಲೆ ಕುಳಿತಿರುವ ಈ ಹೆಣ್ಣ ನೋಟವನ್ನು ದಾರಿಹೋಕರು ಯಾರೂ ಗಮನಿಸಲಿಲ್ಲ. + +ಮ್ಯಾನ್‌ಹಟನ್‌ ಅನ್ನು ನಗರದ ಮುಖ್ಯಭಾಗಕ್ಕೆ ಕೂಡಿಸುವ ಸೇತುವೆಗಳ ಪೈಕಿ ಒಂದನ್ನು ನಾವು ದಾಟಿ ಈಗ ನಾವು ಮಲ್ಟಿಲೇನ್ ಹೆದ್ದಾರಿಯಲ್ಲಿ ಇತರ ಕಾರುಗಳೊಂದಿಗೆ ಹೋಗುತ್ತಿದ್ದೆವು. ನಾನು ಹೆದರಿ ನೇರವಾಗಿ ರಸ್ತೆ ನೋಡುತ್ತಿದ್ದೆ. ನಮ್ಮಿಬ್ಬರ ನೋಟ ನಮ್ಮ ಸುತ್ತಲಿನ ಕಾರುಗಳಲ್ಲಿನ ಜನರಲ್ಲಿ ಹೇಸಿಗೆಯ ನಗು ಮತ್ತು ರೂಕ್ಷ ಕಾಮೆಂಟ್‌ ಗಳನ್ನು ಪ್ರೇರೇಪಿಸುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೆ ಸೆಡಾನ್ ಒಂದು ನಮ್ಮನ್ನು ಹಿಂದಿಕ್ಕಿದಾಗ ಮಾತ್ರ ನಾನು ಆಶ್ಚರ್ಯದಿಂದ ರಸ್ತೆಯಿಂದ ಆಚೆಗೇ ಬಂದುಬಿಟ್ಟಿದ್ದೆ. ಅದರ ಛಾವಣಿಯ ಮೇಲೆ ಕವುಚಿ ಮಲಗಿದ ಬೆತ್ತಲೆ ಹುಡುಗಿ. ಅವಳ ಕೂದಲು ಗಾಳಿಯಲ್ಲಿ ಕೆದರಿ ಹೊಯ್ದಾಡುತ್ತಿತ್ತು. ಒಂದು ಸೆಕೆಂಡು. ಆ ನನ್ನ ಸಹಪ್ರಯಾಣಿಕಳು ಒಂದು ವೇಗದ ಕಾರಿನಿಂದ ಇನ್ನೊಂದಕ್ಕೆ ಜಿಗಿಯುತ್ತಿದ್ದಾಳೆ. ಆದರೆ ನನ್ನಿಂದ ಮಾಡಬಹುದಾದದ್ದು ನನ್ನ ತಲೆಯನ್ನು ಸ್ವಲ್ಪಮಟ್ಟಿಗೆ ತಿರುಗಿಸಿ, ನನ್ನ ಮೂಗಿನ ನೇರಕ್ಕೆ ದೃಷ್ಟಿ ಹರಿಸಿ ಡಯಾನಾಳ ಮೊಣಕಾಲುಗಳು ಇನ್ನೂ ಅಲ್ಲಿಯೇ ಇರುವುದನ್ನು ನೋಡುವುದು ಮಾತ್ರ. ಅವಳ ದೇಹ ಮಾತ್ರವೇ ನನ್ನ ಕಣ್ಣಮುಂದೆ ಹೊಳೆಯುತ್ತಿರಲಿಲ್ಲ. + +ಈಗ ನಾನು ಎಲ್ಲೆಡೆ ಹೊಳೆಯುವ ಹುಡುಗಿಯರನ್ನೇ ಕಾಣುತ್ತಿದ್ದೆ. ವಿಚಿತ್ರವಾದ ಭಂಗಿಗಳಲ್ಲಿ ಚಾಚಿದ ಮೈಗಳು. ವೇಗದಲ್ಲಿ ಚಲಿಸುವ ಕಾರುಗಳ ರೇಡಿಯೇಟರ್‌ ಗಳು, ಬಾಗಿಲುಗಳು ಮತ್ತು ಫೆಂಡರ್‌ ಗಳಿಗೆ ಅಂಟಿಕೊಂಡಿದ್ದ ಹೆಣ್ಣುಗಳು. ಅವರ ಕೂದಲಿನ ಹೊಂಬಣ್ಣ ಅಥವಾ ಕಡುಕಪ್ಪು, ಅವರ ಬೆತ್ತಲೆ ಚರ್ಮದ ಗುಲಾಬಿ ಅಥವಾ ಗಾಢವಾದ ಮಿನುಗು ಒಂದಕ್ಕೊಂದು ಮಿಗಿಲಾಗಿದ್ದವು. ಪ್ರತಿ ಕಾರಿನಲ್ಲೂ ಒಬ್ಬರಾದರೂ ಇಂಥ ನಿಗೂಢ ಮಹಿಳಾ ಪ್ರಯಾಣಿಕರು ಇದ್ದರು. ಎಲ್ಲರೂ ಮುಂದೆ ಮುಂದೆ ನೋಡಿಕೊಂಡು ಸಾಗುತ್ತಿದ್ದರು. ತಮ್ಮ ಚಾಲಕರಿಗೆ ಚಂದ್ರನನ್ನು ಹಿಂಬಾಲಿಸುವಂತೆ ಒತ್ತಾಯಿಸುತ್ತಿದ್ದರು. + +ಅಳಿವಿನಂಚಿನಲ್ಲಿರುವ ಚಂದ್ರನಿಂದ ಅವರಿಗೆ ಕರೆ ಕಳುಹಿಸಲಾಗಿತ್ತು. ನನಗೆ ಅದು ಖಚಿತವಾಗಿತ್ತು. ಅವರಲ್ಲಿ ಎಷ್ಟು ಮಂದಿ ಇದ್ದರು? ಚಂದ್ರನ ಹುಡುಗಿಯರನ್ನು ಹೊತ್ತೊಯ್ಯುವ ಹೆಚ್ಚಿನ ಕಾರುಗಳು ಪ್ರತಿ ಅಡ್ಡರಸ್ತೆ ಮತ್ತು ಜಂಕ್ಷನ್‌ ಗಳಲ್ಲಿ ಒಟ್ಟುಗೂಡುತ್ತಲಿದ್ದವು. ನಗರದ ಎಲ್ಲಾ ಭಾಗಗಳಿಂದಲೂ ಅವು ಚಂದ್ರನು ನಿಂತುಬಿಟ್ಟಿರುವಂತೆ ಕಾಣುತ್ತಿದ್ದ ಸ್ಥಳಕ್ಕೆ ಸೇರುತ್ತಿದ್ದವು. ನಗರದ ಕೊನೆ ತಲುಪಿದ ನಾವು ಆಟೋಮೊಬೈಲ್ ಸ್ಕ್ರ್ಯಾಪ್ ಯಾರ್ಡಿನ ಮುಂದೆ ನಿಂತಿದ್ದೆವು. + +ಸಣ್ಣ ಸಣ್ಣ ಕಣಿವೆಗಳು, ಕಣಿವೆಯಂಚುಗಳು, ಬೆಟ್ಟಗಳು ಮತ್ತು ಗಿರಿಶಿಖರಗಳನ್ನು ಹೊಂದಿರುವ ಆ ಪ್ರದೇಶದಲ್ಲಿ ರಸ್ತೆ ಕೊನೆಯಾಗಿದೆ. ಆದರೆ ಇದು ಅಸಮವಾದ ಮೇಲ್ಮೈಯನ್ನು ಸೃಷ್ಟಿಸಿದ ಭೂಮಿಯ ಬಾಹ್ಯರೇಖೆಗಳಲ್ಲ, ಬದಲಾಗಿ, ಬಿಸಾಕಿದ ವಸ್ತುಗಳ ಪದರಗಳು. ಎಲ್ಲವೂ ಮಹಾನ್ ಗ್ರಾಹಕ ನಗರವು ಬಳಸಿ ಬಿಸಾಡಲ್ಪಟ್ಟ ವಸ್ತುಗಳು. ಇದರಿಂದಾಗಿ ಹೊಸ ಆಮಿಶಗಳನ್ನು ನಿಭಾಯಿಸುವ ಆನಂದವನ್ನು ತಕ್ಷಣವೇ ಒದಗಿಸಬಹುದು. ಈ ಹೊಲಸು ನೆರೆಹೊರೆಯಲ್ಲಿ ಅವೆಲ್ಲವೂ ಕೊನೆಗಾಣುತ್ತಿದ್ದವು. + +ಅನೇಕ ವರ್ಷಗಳ ಅವಧಿಯಲ್ಲಿ, ಕೆಟ್ಟ ಫ್ರಿಡ್ಜ್‌ ಗಳ ರಾಶಿಗಳು, ಲೈಫ್ ನಿಯತಕಾಲಿಕದ ಹಳದಿಯಾಗುತ್ತಿದ್ದ ಸಂಚಿಕೆಗಳು, ಸುಟ್ಟುಹೋದ ಬಲ್ಬ್‌ ಗಳು ಅಗಾಧವಾದ ಒಡೆಯುವ-ಜಜ್ಜುವ ಅಂಗಳದಲ್ಲಿ ಸಂಗ್ರಹವಾಗಿದ್ದವು. ಚೂಪುಚೂಪಾದ, ತುಕ್ಕು ಹಿಡಿದ ಭೂಪ್ರದೇಶದ ಮೇಲೆ ಈಗ ಚಂದ್ರ ಜೋತಾಡುತ್ತಿತ್ತು. ಜಜ್ಜಿದ ಲೋಹದ ರಾಶಿಗಳು ಕಡಲ ಉಬ್ಬರದ ಅಲೆಗಳಂತೆಯೇ ಉಬ್ಬಿಕೊಂಡಿದ್ದ, ಕ್ಷೀಣಿಸಿದ ಪಾಳು ಚಂದ್ರ ಮತ್ತು ಭೂಮಿಯ ಹೊರಪದರವನ್ನು ಭಗ್ನಾವಶೇಷಗಳ ಮಿಶ್ರಣವಾಗಿ ಬೆಸುಗೆ ಹಾಕಲಾಗಿರುವುದು ಇವು ಒಂದನ್ನೊಂದು ಹೋಲುತ್ತವೆ. ಸ್ಕ್ರ್ಯಾಪ್ ಲೋಹದ ಪರ್ವತಗಳು ಒಂದು ಸರಪಣಿಯನ್ನು ರೂಪಿಸಿವೆ. ಅದು ಆಂಫಿಥಿಯೇಟರಿನಂತೆ ಸುತ್ತ ಮೇಲೆದ್ದಿದೆ. ಅದರ ಆಕಾರವು ನಿಖರವಾಗಿ ಜ್ವಾಲಾಮುಖಿಯ ಕುಳಿ ಅಥವಾ ಚಂದ್ರನ ಸಮುದ್ರದ ಆಕಾರದಲ್ಲಿತ್ತು. ಚಂದ್ರ ಈ ಜಾಗದ ಮೇಲೆ ತೂಗಾಡುತ್ತಿತ್ತು. ಈ ಗ್ರಹ ಮತ್ತು ಅದರ ಉಪಗ್ರಹ ಪರಸ್ಪರರ ಕನ್ನಡಿಯ ಚಿತ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದಂತೆ ಇತ್ತು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಎಲ್ಲ ಕಾರ್ ಎಂಜಿನ್ನುಗಳು ಸ್ತಬ್ದವಾಗಿವೆ. ಕಾರುಗಳನ್ನು ತಮ್ಮದೇ ಆಗಿರುವ ಸ್ಮಶಾನಗಳಂತೆ ಬೇರೆ ಯಾವುದೂ ಬೆದರಿಸುವುದಿಲ್ಲ. ಡಯಾನಾ ಕೆಳಗಿಳಿದಳು. ಉಳಿದ ಎಲ್ಲಾ ಡಯಾನಾಗಳು ಅವಳನ್ನು ಹಿಂಬಾಲಿಸಿದರು. ಆದರೆ ಅವರ ಶಕ್ತಿ ಕುಂದಿಹೋಗಿರುವಂತೆ ತೋರುತ್ತಿತ್ತು. ಸ್ಕ್ರ್ಯಾಪ್ ಕಬ್ಬಿಣದ ಚೂರುಗಳ ಮಧ್ಯೆ ತಮ್ಮನ್ನು ತಾವು ಕಂಡುಕೊಂಡ ಅವರು ಅನಿಶ್ಚಿತ ಹೆಜ್ಜೆ ಹಾಕುತ್ತ ನಡೆದರು. ತಮ್ಮ ಬೆತ್ತಲೆತನ ಕುರಿತು ಅವರಿಗೆ ಥಟ್ಟನೆ ಉಂಟಾದ ಅರಿವಿನಿಂದ ಅವರು ಕಂಗೆಟ್ಟಂತಾಯಿತು. ಅವರಲ್ಲಿ ಹಲವರು ಶೀತದಿಂದ ನಡುಗುವಂತೆ ತಮ್ಮ ಸ್ತನಗಳನ್ನು ತೋಳುಗಳಿಂದ ಮುಚ್ಚಿಕೊಂಡರು. ಅವರು ಹೀಗೆ ಮಾಡುತ್ತಿದ್ದಂತೆಯೇ ಅಲ್ಲಿಂದ ಚದುರಿದರು, ಅನುಪಯುಕ್ತ ಗುಜರಿ ವಸ್ತುಗಳ ಪರ್ವತಗಳ ಮೇಲೆ ಹತ್ತಿ ಆಂಫಿಥಿಯೇಟರಿಗೆ ಇಳಿದುಹೋದರು. ಅಲ್ಲಿ ಮಧ್ಯದಲ್ಲಿ ಅವರು ತಾವು ನಿಂತೆಡೆಯೇ ಒಂದು ದೊಡ್ಡ ವೃತ್ತವನ್ನು ರಚಿಸಿಕೊಂಡಿರುವುದನ್ನು ಅರಿತುಕೊಂಡರು. ನಂತರ ಅವರೆಲ್ಲರೂ ಒಟ್ಟಿಗೆ ತಮ್ಮ ಕೈಗಳನ್ನು ಮೇಲೆತ್ತಿದರು. + +ಅವರ ಆ ಸೂಚನೆಯಿಂದ ಪ್ರಭಾವಿತವಾದಂತೆ ಚಂದ್ರನಲ್ಲಿ ಚಲನೆಯುಂಟಾಯಿತು. ಕ್ಷಣಾರ್ಧದಲ್ಲಿ ಚೇತರಿಸಿಕೊಳ್ಳಲು ತನ್ನ ಶಕ್ತಿಯನ್ನು ಸಂಚಯಿಸಿಕೊಂಡು ಮತ್ತೆ ಮೇಲೇರಲು ಅದು ಉದ್ಯುಕ್ತವಾದಂತೆ ತೋರುತ್ತಿತ್ತು. ವೃತ್ತಾಕಾರದಲ್ಲಿ ನಿಂತು ತೋಳುಗಳನ್ನು ಮೇಲೆಚಾಚಿಕೊಂಡು ಮುಖ ಮತ್ತು ಸ್ತನಗಳನ್ನು ಚಂದ್ರನ ಕಡೆಗೆ ತಿರುಗಿಸಿದ ಹೆಣ್ಣುಗಳು. ಚಂದ್ರ ಅವರನ್ನು ಕೇಳಿದ್ದೇನು? ಆಕಾಶದಲ್ಲಿ ಅದಕ್ಕೆ ಅವರ ಸಹಾಯದ ಅಗತ್ಯವಿದೆಯೇ? ಈ ಪ್ರಶ್ನೆಯ ಕುರಿತು ವಿಚಾರಮಾಡಲು ನನಗೆ ಸಮಯವಿರಲಿಲ್ಲ. ಅದೇ ಕ್ಷಣದಲ್ಲಿ ಆ ಕ್ರೇನ್ ಅಲ್ಲಿಗೆ ಪ್ರವೇಶಿಸಿತು. + +ಆ ಕ್ರೇನನ್ನು ಅಧಿಕಾರಿಗಳು ವಿನ್ಯಾಸಗೊಳಿಸಿ ನಿರ್ಮಿಸಿದ್ದಾರೆ. ಅವರು ಅದರ ಅನಾಗರಿಕ ಹಾಗೂ ಋಣಭಾರದ ಆಕಾಶವನ್ನು ಶುದ್ಧೀಕರಿಸಲು ನಿರ್ಧರಿಸಿದ್ದರು. ಅದೊಂದು ಬುಲ್ಡೋಜರ್. ಅದರಿಂದ ಒಂದು ರೀತಿಯಲ್ಲಿ ಏಡಿಯ ಆಕಾರದ ಪಂಜವು ಮೇಲೆದ್ದಿತು. ಅದರ ಚಕ್ರಕ್ಕೆ ಕ್ಯಾಟರ್ ಪಿಲ್ಲರಿನ ಹೊರಮೈ ಇತ್ತು. ಗಟ್ಟಿಮುಟ್ಟಾಗಿದ್ದ ಅದು ಏಡಿಯಂತೆ ಮುಂದೆ ಬಂದಿತು. ಕಾರ್ಯಾಚರಣೆಗೆ ಸಿದ್ಧಪಡಿಸಿದ ಸ್ಥಳಕ್ಕೆ ಬಂದಾಗ ಅದು ಇನ್ನಷ್ಟು ಗಟ್ಟಿಮುಟ್ಟಾಗಿ, ಒರಟಾಗಿ ಕಾಣುತ್ತಿತ್ತು. ಅದು ತನ್ನ ದೇಹವನ್ನು ಭೂಮಿಗೆ ಅಂಟಿಸಿಕೊಂಡಿತು. ಅದರ ತೋಳು ತ್ವರಿತವಾಗಿ ತಿರುಗಿತು. ಕ್ರೇನ್ ತೋಳನ್ನು ಆಕಾಶಕ್ಕೆ ಏರಿಸಿತು. ಅಷ್ಟು ಉದ್ದದ ತೋಳನ್ನು ಹೊಂದಿರುವ ಕ್ರೇನನ್ನು ಮನುಷ್ಯರು ನಿರ್ಮಿಸಬಹುದೆಂದು ಯಾರೂ ನಂಬಲಿಕ್ಕಿಲ್ಲ. ಅದರ ಬಕೆಟ್ ತೆರೆಯಿತು. ತನ್ನ ಎಲ್ಲಾ ಹಲ್ಲುಗಳನ್ನು ಬಹಿರಂಗಪಡಿಸಿತು. + +ಈಗ ಏಡಿಪಂಜಕ್ಕಿಂತ ಹೆಚ್ಚಾಗಿ ಅದು ಶಾರ್ಕ್ ನ ಬಾಯಿಯನ್ನು ಹೋಲುತ್ತದೆ. ಚಂದ್ರ ಅಲ್ಲಿಯೇ ಇತ್ತು. ಅದು ತಪ್ಪಿಸಿಕೊಳ್ಳಲು ಬಯಸಿದಂತೆ ಅತ್ತಿತ್ತ ಅಲೆಯಿತು, ಆದರೆ ಕ್ರೇನ್ ಕಾಂತೀಯವಾಗಿದೆಯೆಂದು ತೋರುತ್ತಿದೆ. ನಾವು ನೋಡುತ್ತಿದ್ದಂತೆಯೇ ಚಂದ್ರ ನಿರ್ವಾತಗೊಂಡಿತು. ಅದು ಇದ್ದಂತೆಯೇ ಕ್ರೇನ್‌ ನ ದವಡೆಗಳಲ್ಲಿ ಇಳಿಯಿತು. ಒಂದು ಒಣ ಕೊಂಬೆ ಮುರಿಯುವ ಶಬ್ದ. ಕರ್…! ಒಂದೇ ಒಂದು ಕ್ಷಣ. ಚಂದ್ರನು ಹುಡಿಯಾದಂತೆ ಕುಸಿಯಿತು ಎಂದು ತೋರುತ್ತಿತ್ತು. ಆದರೆ ಅದು ಅಲ್ಲಿಯೇ ನಿಂತು ವಿಶ್ರಾಂತಿ ಪಡೆಯಿತು, ಬಕೆಟ್ಟಿನ ದವಡೆಯಲ್ಲಿ ಅದರ ಅರ್ಧಭಾಗ ಮತ್ತು ಹೊರಗೆ ಇನ್ನರ್ಧದಷ್ಟು. ಅದನ್ನು ಉದ್ದುದ್ದವಾಗಿ ಚಪ್ಪಟೆಗೊಳಿಸಲಾಗಿತ್ತು. ಬಕೆಟ್‌ ನ ಹಲ್ಲುಗಳ ನಡುವೆ ಒಂದು ರೀತಿಯ ದಪ್ಪ ಸಿಗಾರ್ ಇಟ್ಟಂತಿತ್ತು. ಕೆಳಕ್ಕೆ ಒಂದು ಚಿತಾಭಸ್ಮದ ಬಣ್ಣದ ಧೂಳಿನ ಮೋಡ ಇಳಿದುಬಂದಿತು. + +ಕ್ರೇನ್ ಈಗ ಚಂದ್ರನನ್ನು ಅವನ ಕಕ್ಷೆಯಿಂದ ಹೊರಗೆ ಎಳೆಯಲು ಪ್ರಯತ್ನಿಸಿತು. ವಿಂಚ್ ಹಿಂದಕ್ಕೆ ಬರಲು ಪ್ರಾರಂಭಿಸಿತ್ತು. ಈ ಸಮಯದಲ್ಲಿ ವೈಂಡಿಂಗ್ ಮಾಡಲು ಒಂದು ದೊಡ್ಡ ಪ್ರಯತ್ನದ ಅಗತ್ಯವಿತ್ತು. ಡಯಾನಾ ಮತ್ತವಳ ಸ್ನೇಹಿತೆಯರು ಈ ಪ್ರಕ್ರಿಯೆಯ ಉದ್ದಕ್ಕೂ ತಮ್ಮ ತೋಳುಗಳನ್ನು ಮೇಲೆತ್ತಿ ನಿಶ್ಚಲರಾಗಿ ನಿಂತಿದ್ದರು. ಅದು ಶತ್ರುಗಳ ಆಕ್ರಮಣವನ್ನು ತಮ್ಮ ಸಮುದಾಯದ ಬಲದಿಂದ ನಿವಾರಿಸಬೇಕೆಂದು ಆಶಿಸುತ್ತಿದ್ದಂತಿತ್ತು. ಕರಗುತ್ತಿರುವ ಚಂದ್ರನಿಂದ ಬೂದಿ ಅವರ ಮುಖ ಮತ್ತು ಸ್ತನಗಳ ಮೇಲೆ ಮಳೆಗರೆದಂತೆ ಬೀಳಲು ಶುರುವಾದಾಗ ಮಾತ್ರ ಅವರು ಚದುರಲು ಪ್ರಾರಂಭಿಸಿದರು. ಡಯಾನಾಳ ಬಾಯಿಂದ ತೀವ್ರ ವಿಷಾದದ ತೀಕ್ಷ್ಣವಾದ ಕೂಗೊಂದು ಹೊರಬಂತು. + +ಆ ಸಮಯಕ್ಕೆ ಬಂಧಿಯಾಗಿದ್ದ ಚಂದ್ರ ಉಳಿದಿದ್ದ ಅಲ್ಪಸ್ವಲ್ಪ ಬೆಳಕನ್ನೂ ಕಳೆದುಕೊಂಡಿತು: ಅದು ಆಕಾರವಿಲ್ಲದ ಕಪ್ಪು ಬಂಡೆಯಾಗಿ ಮಾರ್ಪಟ್ಟಿತು. ಅದನ್ನು ಕ್ರೇನ್ ಯಂತ್ರ ಬಕೆಟ್‌ ನ ಹಲ್ಲುಗಳಿಂದ ಹಿಡಿದಿರದಿದ್ದರೆ ಅದು ಭೂಮಿಯ ಮೇಲೆ ಅಪ್ಪಳಿಸುತ್ತಿತ್ತು. ಕೆಳಗೆ, ಕೆಲಸಗಾರರು ಕ್ರೇನ್ ನಿಧಾನವಾಗಿ ಅದರ ಹೊರೆ ಇಳಿಸುತ್ತಿದ್ದ ಜಾಗದ ಸುತ್ತಲೂ ಲೋಹದ ಬಲೆ ಸಿದ್ಧಪಡಿಸಿದ್ದರು. ಅದನ್ನು ಉದ್ದನೆಯ ಮೊಳೆಗಳಿಂದ ನೆಲಕ್ಕೆ ಬಿಗಿಸಲಾಗಿತ್ತು. + +ಅದು ನೆಲದ ಮೇಲೆ ಬಂತು. ಚಂದ್ರ ಈಗ ಸಿಡುಬಿನ ಮುಖದ, ಮರಳಿನ ಬಂಡೆಯಾಗಿತ್ತು. ತುಂಬಾ ಮಂಕಾಗಿ ಅಪಾರದರ್ಶಕವಾಗಿದ್ದ ಅದು ಒಮ್ಮೆ ಆಕಾಶವನ್ನು ತನ್ನ ಹೊಳೆಯುವ ಪ್ರತಿಫಲನದಿಂದ ಬೆಳಗಿಸಿದೆ ಎಂದು ಯೋಚಿಸುವುದು ನಂಬಲಸಾಧ್ಯವಾಗಿತ್ತು. ಬಕೆಟ್ ದವಡೆ ತೆರೆಯಿತು. ಬುಲ್ಡೋಜರ್ ಅದರ ಚಕ್ರದ ಕ್ಯಾಟರ್ ಪಿಲ್ಲರ್ ಹೊರಮೈಯಲ್ಲಿ ಹಿಂದೆ ಸರಿಯಿತು. ಅದರ ಹೊರೆ ಕಳಚಿ ಹಗುರವಾಗಿದ್ದರಿಂದ ಅದು ಇದ್ದಕ್ಕಿದ್ದಂತೆ ಬಹುತೇಕ ಪಲ್ಟಿ ಹೊಡೆಯಿತು. ಕೆಲಸಗಾರರು ಬಲೆಯೊಂದಿಗೆ ಸಿದ್ಧರಾಗಿದ್ದರು: ಅವರು ಅದನ್ನು ಚಂದ್ರನ ಸುತ್ತಲೂ ಸುತ್ತಿ, ಅದನ್ನು ಬಲೆ ಮತ್ತು ನೆಲದ ನಡುವೆ ಗಾಳದಲ್ಲಿ ಕೆಡವಿದರು. ಚಂದ್ರ ತನ್ನ ಬಂಧನದಲ್ಲೇ ಹೆಣಗಾಡಿತು. ಭೂಕಂಪದಂತಹ ನಡುಕವುಂಟಾಗಿ ಖಾಲಿ ಡಬ್ಬಿಗಳ ಹಿಮಪಾತವು ಕಸದ ಪರ್ವತದಿಂದ ಕೆಳಕ್ಕೆ ಇಳಿಯಲು ಶುರುವಾಯಿತು. ನಂತರ ಎಲ್ಲವೂ ಶಾಂತವಾಯಿತು. ಈಗ ಚಂದ್ರನಿಲ್ಲದ ಆಕಾಶವು ದೊಡ್ಡ ದೀಪಗಳ ಬೆಳಕಿನ ಸ್ಫೋಟಗಳಲ್ಲಿ ಅದ್ದಿದಂತಿತ್ತು. ಆದರೆ ಕತ್ತಲೆ ಆಗಲೇ ಮರೆಯಾಗುತ್ತಿತ್ತು, ಹೇಗಾದರೂ. + +ಆ ಬೆಳಗು ಕಾರುಗಳ ಸ್ಮಶಾನ ಇನ್ನೂ ಒಂದು ಧ್ವಂಸಗೊಂಡುದನ್ನು ಹಿಡಿದಿಟ್ಟುಕೊಂಡಿರುವುದನ್ನು ಎಲ್ಲರೂ ಕಂಡುಕೊಂಡರು. ಅದರ ಕೇಂದ್ರದಲ್ಲಿ ಬಿದ್ದಿದ್ದ ಚಂದ್ರನನ್ನು ಇತರ ತ್ಯಾಜ್ಯ ವಸ್ತುಗಳಿಂದ ಪ್ರತ್ಯೇಕಿಸಲಾಗುವುದಿಲ್ಲ. ಅವು ಒಂದೇ ಬಣ್ಣದ್ದಾಗಿದ್ದವು. ಅದು ಹೊಸ ಸೇರ್ಪಡೆಯಾಗಿರುವುದನ್ನು ನೀವು ಊಹಿಸಲಾಗದಷ್ಟು ಕೆಟ್ಟದ್ದನ್ನು ನೋಡಿದ್ದೀರಿ. ಗೊಣಗಾಟದ ಕ್ಷೀಣ ಸದ್ದು ಭೂಮಿಯ ಕಸದ ಕುಳಿಯ ಮೂಲಕ ಮರುಕಳಿಸಿತು: ಮುಂಜಾನೆಯ ಬೆಳಕಿನಲ್ಲಿ ನಿಧಾನವಾಗಿ ಎಚ್ಚರಗೊಳ್ಳುವ ಜೀವಿಗಳ ಸಮೂಹ ಬೆಳಕಿಗೆ ಬಂದಿತು. ಟ್ರಕ್‌ ಗಳ ಒಡಲಿಂದ ಹೊರಸುರಿದ ಶವಗಳು, ಚೂರುಚೂರಾದ ಚಕ್ರಗಳು, ಪುಡಿಮಾಡಿದ ಲೋಹದ ರಾಶಿಯ ನಡುವೆ ರೋಮಾಚ್ಛಾದಿತ ಜೀವಿಗಳು ಮುನ್ನಡೆಯುತ್ತಿದ್ದವು. + +ತ್ಯಾಜ್ಯವಸ್ತುಗಳ ನಡುವೆ ಪರಿತ್ಯಜಿಸಲ್ಪಟ್ಟ ಜನರ ಸಮುದಾಯ-ಅಂಚಿನಲ್ಲಿರಿಸಿರುವ ಜನರು ಅಥವಾ ಸ್ವಇಚ್ಛೆಯಿಂದ ತ್ಯಜಿಸಲ್ಪಟ್ಟಂತೆ ಇರಬಯಸುವ ಜನರು ವಾಸಿಸುತ್ತಿದ್ದರು. ನಗರದಾದ್ಯಂತ ಓಡಿಓಡಿ ಆಯಾಸಗೊಂಡ ಜನರು ಹೊಸ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಹೊಸದನ್ನು ಖರೀದಿಸಲು ಧಾವಂತಪಡುತ್ತಿದ್ದರು. ಅವರು ಖರೀದಿಸಿದ ವಸ್ತುಗಳು ಕ್ಷಣಗಳಲ್ಲೇ ಅವಧಿ ಮೀರಿ ಹೋಗಿರುತ್ತಿದ್ದವು. ಅವರು, ಮತ್ತೆ ಎಸೆಯಲ್ಪಟ್ಟ ವಸ್ತುಗಳೇ ಪ್ರಪಂಚದ ನಿಜವಾದ ಸಂಪತ್ತು ಎಂದು ನಿರ್ಧರಿಸಿದ ಜನರು ಚಂದ್ರನನ್ನು ಸುತ್ತುವರೆದಿದ್ದರು, ಆಂಫಿಥಿಯೇಟರಿನ ಆದ್ಯಂತ ಈ ತೆಳುವಾದ ವ್ಯಕ್ತಿಗಳು ನಿಂತಿದ್ದರು, ಕುಳಿತುಕೊಂಡಿದ್ದರು. ಅವರ ಮುಖಗಳು ಗಡ್ಡದಿಂದ ಅಥವಾ ಬಾಚಿರದ ಕೂದಲಿನಿಂದ ಆವರಿಸಲ್ಪಟ್ಟಿದ್ದವು. ಅದು ಹರಿದ ಅಥವಾ ವಿಲಕ್ಷಣವಾಗಿ ಬಟ್ಟೆ ಧರಿಸಿದ್ದ ಜನಸಮೂಹವಾಗಿತ್ತು. ಅದರ ಮಧ್ಯೆ ನನ್ನ ಬೆತ್ತಲೆ ಡಯಾನಾ ಮತ್ತು ಹಿಂದಿನ ರಾತ್ರಿಯಿಂದ ಕಂಡ ಎಲ್ಲ ಹುಡುಗಿಯರೂ ಇದ್ದರು. ಅವರು ಮುಂದೆ ಬಂದರು. ನೆಲಕ್ಕೆ ಬಿಗಿಸಿದ್ದ ಮೊಳೆಗಳಿಂದ ಬಲೆಯ ಉಕ್ಕಿನ ತಂತಿಗಳನ್ನು ಬಿಡಿಸಲು ಪ್ರಾರಂಭಿಸಿದರು. + +ತಕ್ಷಣವೇ ಲಂಗರುಗಳಿಂದ ಬಿಡುಗಡೆಯಾದ ವಿಮಾನದಂತೆ ಚಂದ್ರ ಮೇಲೆದ್ದಿತು. ಹುಡುಗಿಯರ ತಲೆಯ ಮೇಲೆ ಸುಳಿದಾಡುತ್ತಾ ಸರಿದು ಪಯಣಿಗರು ತುಂಬಿದ್ದ ಗ್ರ್ಯಾಂಡ್‌ ಸ್ಟ್ಯಾಂಡ್ ಮೇಲೆ ತೂಗಲು ಶುರುಮಾಡಿತು. ಸ್ಟೀಲ್ ಬಲೆ ಅದನ್ನು ಹಿಡಿದಿತ್ತು. ಅದರ ತಂತಿಗಳನ್ನು ಡಯಾನಾ ಮತ್ತು ಅವಳ ಸ್ನೇಹಿತರು ಬಿಡಿಸುತ್ತಿದ್ದರು. ಕೆಲವೊಮ್ಮೆ ಅವುಗಳನ್ನು ಎಳೆಯುತ್ತಾ, ಕೆಲವೊಮ್ಮೆ ಹೊರಗೆ ಬಿಡುತ್ತಾ ಮಾಡಿ ಹುಡುಗಿಯರು ತಂತಿಗಳ ತುದಿಗಳನ್ನು ಹಿಡಿದು ಓಡಲು ಪ್ರಾರಂಭಿಸಿದರು. ಚಂದ್ರ ಅವರನ್ನು ಹಿಂಬಾಲಿಸಿತು. + +ಚಂದ್ರ ಚಲಿಸಿದ ತಕ್ಷಣ, ಭಗ್ನಾವಶೇಷದ ಕಣಿವೆಗಳಿಂದ ಒಂದು ಬಗೆಯ ಅಲೆಗಳು ಏಳಲು ಪ್ರಾರಂಭಿಸಿದವು. ಅಕಾರ್ಡಿಯನ್‌ ಮಣೆಗಳಂತೆ ಜಜ್ಜಿದ ಹಳೆಯ ಕಾರುಗಳ ಮೃತದೇಹಗಳು ಕವಾಯತು ಮಾಡಲು ಪ್ರಾರಂಭಿಸಿದವು. ಹಾಗೆ ಮಾಡುತ್ತಲೇ ತಮ್ಮನ್ನು ಯಾವುದಕ್ಕೋ ಸಜ್ಜುಗೊಳಿಸಿಕೊಳ್ಳುತ್ತಿದ್ದವು. ಚಚ್ಚಿದ ಕ್ಯಾನ್‌ ಗಳು ಗುಡುಗಿನಂಥಾ ಸದ್ದುಮಾಡುತ್ತಾ ಉರುಳಿದವು. ಅವುಗಳನ್ನು ಯಾರಾದರೂ ಎಳೆಯುತ್ತಿರುವರೋ ಅಥವಾ ಉಳಿದ ಎಲ್ಲವೂ ಸೇರಿ ಎಳೆಯುತ್ತಿವೆಯೋ ಹೇಳಲಾಗದ ಸ್ಥಿತಿ. ಗುಜರಿಯ ರಾಶಿಯಿಂದ ರಕ್ಷಿಸಲ್ಪಟ್ಟ ಆ ಚಂದ್ರನನ್ನು ಅನುಸರಿಸಿ ಎಲ್ಲಾ ವಸ್ತುಗಳು ಮತ್ತು ಒಂದು ಮೂಲೆಯಲ್ಲಿ ಎಸೆಯಲ್ಪಟ್ಟಿದ್ದಕ್ಕಾಗಿ ಹತಾಶರಾಗಿದ್ದ ಎಲ್ಲಾ ಜನರು ಮತ್ತೆ ರಸ್ತೆಯಲ್ಲಿ ಚಲಿಸಲು ಪ್ರಾರಂಭಿಸಿದರು ಮತ್ತು ನಗರದ ಶ್ರೀಮಂತ ನೆರೆಹೊರೆಗಳ ಕಡೆಗೆ ದಾಂಗುಡಿಯಿಟ್ಟರು. + +ಆ ಬೆಳಿಗ್ಗೆ ನಗರವು ಗ್ರಾಹಕರಿಗೆ ಧನ್ಯವಾದ ಅರ್ಪಿಸುವ ದಿನವನ್ನು ಆಚರಿಸುತ್ತಿತ್ತು. ಈ ಹಬ್ಬವನ್ನು ಪ್ರತಿವರ್ಷ ನವೆಂಬರ್‌ ನಲ್ಲಿ ಒಂದು ದಿನದಂದು ಆಚರಿಸಲಾಗುತ್ತಿತ್ತು. ಆ ದಿನ ಗಿರಾಕಿಗಳು ತಮ್ಮ ಪ್ರತಿಯೊಂದು ಆಸೆಯನ್ನು ದಣಿವರಿವಿಲ್ಲದೆ ತೃಪ್ತಿಪಡಿಸಿದ ಉತ್ಪಾದನಾ ಭಗವಂತನಿಗೆ ಕೃತಜ್ಞತೆಯನ್ನು ಪ್ರದರ್ಶಿಸುವರು. ಗ್ರಾಹಕರಿಗೆ ಇದಕ್ಕೆ ಅವಕಾಶ ಮಾಡಿಕೊಡಲು ಈ ಪದ್ಧತಿಯನ್ನು ಪ್ರಾರಂಭಿಸಲಾಯಿತು. ಪಟ್ಟಣದ ಅತಿದೊಡ್ಡ ಡಿಪಾರ್ಟ್ಮೆಂಟ್ ಸ್ಟೋರ್ ಪ್ರತಿವರ್ಷ ಈ ಮೆರವಣಿಗೆಯನ್ನು ಆಯೋಜಿಸುತ್ತಿತ್ತು. ಅಲಂಕಾರಿಕವಾದ ರಾಡಿ ಬಣ್ಣದ ಗೊಂಬೆಯ ಆಕಾರದಲ್ಲಿ ತಯಾರಿಸಿದ ಅಗಾಧವಾದ ಬಲೂನನ್ನು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಅದಕ್ಕೆ ರಿಬ್ಬನ್ನುಗಳನ್ನ ಕಟ್ಟಿ ಎಳೆಯಲಾಗುತ್ತಿತ್ತು. ಮಣಿಗಳ ಹೊದಿಕೆಯ ಬಟ್ಟೆ ತೊಟ್ಟ ಬಾಲೆಯರು ಸಂಗೀತದ ಬ್ಯಾಂಡಿನ ಹಿಂದೆ ಸಾಗುತ್ತ ಆ ರಿಬ್ಬನ್ನುಗಳನ್ನು ಹಿಡಿದಿದ್ದರು. ಆ ದಿನದ ಮೆರವಣಿಗೆ ಫಿಫ್ತ್ ಅವೆನ್ಯೂದಿಂದ ಬರುತ್ತಿತ್ತು. ಬ್ಯಾಂಡಿನ ಹೆಣ್ಣು ಮೇಜೊರೆಟ್ ತನ್ನ ಕೈನ ಲಾಠಿಯನ್ನು ಗಾಳಿಯಲ್ಲಿ ತಿರುಗಿಸಿದಳು. ದೊಡ್ಡ ಡ್ರಮ್‌ ಗಳನ್ನು ಬಡಿಯಲಾಯಿತು. ತೃಪ್ತಿಕರ ಗ್ರಾಹಕರನ್ನು ಪ್ರತಿನಿಧಿಸುವ ಬಲೂನ್ ದೈತ್ಯ ಗಗನಚುಂಬಿ ಕಟ್ಟಡಗಳ ನಡುವೆ ಹಾರಿ, ವಿಧೇಯತೆಯಿಂದ ಮುಖವಾಡ ಹಾಕಿದ್ದ ಹುಡುಗಿಯರು, ಬಾಚಣಿಗೆ, ಜಡೆಗಳು, ಅಂಚುಪಟ್ಟಿಗಳು ಮುಂತಾದವನ್ನು ಆಡಿಸುತ್ತ ಅಲಂಕರಿಸಿದ ಮೋಟರ್‌ ಸೈಕಲ್‌ಗಳ ಮೇಲೆ ಸವಾರಿ ಮಾಡುತ್ತದೆ. + +ಅದೇ ಸಮಯದಲ್ಲಿ ಮತ್ತೊಂದು ಮೆರವಣಿಗೆ ಮ್ಯಾನ್ಹಟನ್ ಅನ್ನು ದಾಟುತ್ತಿತ್ತು. ಚಪ್ಪಟೆಯಾದ, ಹಳಸಿದ ಚಂದ್ರ ಸಹ ಗಗನಚುಂಬಿ ಕಟ್ಟಡಗಳ ನಡುವೆ ನೌಕಾಯಾನ ಮಾಡುತ್ತ ಮುನ್ನಡೆಯುತ್ತಿತ್ತು. ಬೆತ್ತಲೆ ಹುಡುಗಿಯರು ಅದನ್ನು ಎಳೆಯುತ್ತಿದ್ದರು. ಅದರ ಹಿಂದೆ ಕ್ರಮೇಣ ಗಾತ್ರದಲ್ಲಿ ದೊಡ್ಡದಾಗುತ್ತಿದ್ದ ಜಜ್ಜಿದ ಕಾರುಗಳು ಮತ್ತು ಟ್ರಕ್‌ ಗಳ ಅಸ್ಥಿಪಂಜರಗಳು ಬರುತ್ತಿದ್ದವು. ಬೆಳಗಿನ ಜಾವದಿಂದಲೂ ಚಂದ್ರನನ್ನು ಹಿಂಬಾಲಿಸುತ್ತಿದ್ದ ಜನಸಮೂಹದ ಜೊತೆ ಸಾವಿರಾರು ಜನ ಸೇರಿಕೊಂಡರು. ಎಲ್ಲಾ ಬಣ್ಣದ ಜನ. ಇಡೀ ಕುಟುಂಬಗಳು ಎಲ್ಲ ವಯಸ್ಸಿನ ಮಕ್ಕಳೊಂದಿಗೆ. ಮೆರವಣಿಗೆ ವಿಶೇಷವಾಗಿ ಮ್ಯಾನ್ಹಟನ್ ನ ಹಾರ್ಲೆಮ್‌ ನ ಅಪಾರ ಜನಜಂಗುಳಿಯ ಕಪ್ಪುಜನರ ಮತ್ತು ಪೋರ್ಟೊರಿಕನ್ ಪ್ರದೇಶಗಳನ್ನು ದಾಟಿ ಹೋಯಿತು. + +ಚಂದ್ರನ ಮೆರವಣಿಗೆ ಅತ್ತ ಇತ್ತ ಸುತ್ತುತ್ತ ಬ್ರಾಡ್‌ ವೇ ನಿಂದ ಮುಂದಕ್ಕೆ ಇನ್ನೊಂದು ಮೆರವಣಿಗೆಯೊಂದಿಗೆ ಸೇರಿಕೊಳ್ಳಲು ತ್ವರಿತವಾಗಿ, ಮೌನವಾಗಿ ಸಾಗಿತು. ಅದು ತನ್ನ ದೈತ್ಯ ಬಲೂನನ್ನು ಫಿಫ್ತ್ ಅವೆನ್ಯೂದ ಉದ್ದಕ್ಕೂ ಎಳೆಯುತ್ತಿತ್ತು. + +ಮ್ಯಾಡಿಸನ್ ಸ್ಕ್ವೇರಿನಲ್ಲಿ ಎರಡೂ ಮೆರವಣಿಗೆಗಳು ಒಂದನ್ನೊಂದು ಬೆರೆತುಕೊಂಡವು. ಅಥವಾ, ಹೆಚ್ಚು ನಿಖರವಾಗಿ, ಎರಡೂ ಒಂದೇ ಮೆರವಣಿಗೆಯಾದವು. ತೃಪ್ತಿಪಡೆದ ಗ್ರಾಹಕರು ಬಹುಶಃ ಚಂದ್ರನ ಗೊರಜು ಮೇಲ್ಮೈಯೊಂದಿಗಿನ ಘರ್ಷಣೆಯಿಂದಾಗಿ ಹರಿದ ರಬ್ಬರಿನಂತೆ ಚಿಂದಿಚಿಂದಿಯಾದರು. ಮೋಟರ್ ಸೈಕಲ್ಲುಗಳ ಮೇಲೆ ಈಗ ಡಯಾನಾಗಳು ಪೂರ್ಣವಾಗಿ ಬಹುವರ್ಣದ ರಿಬ್ಬನ್‌ ಗಳೊಂದಿಗೆ ಚಂದ್ರನನ್ನು ಸೆಳೆಯುತ್ತ ಸಾಗುತ್ತಿದ್ದರು. ಬೆತ್ತಲೆ ಮಹಿಳೆಯರ ಸಂಖ್ಯೆ ಕನಿಷ್ಠ ದ್ವಿಗುಣಗೊಂಡಿದ್ದರಿಂದ, ಮಹಿಳಾ ಮೋಟರ್ ಸೈಕ್ಲಿಸ್ಟ್‌ ಗಳು ತಮ್ಮ ಸಮವಸ್ತ್ರ ಮತ್ತು ಕೆಪಿಸ್‌ ಗಳನ್ನು ಎಸೆದಿರಬೇಕು ಎನಿಸುತ್ತಿತ್ತು. + +ಇಂಥ ರೂಪಾಂತರ ಹಲವು ಮೋಟರ್ ಸೈಕಲ್ ಮತ್ತು ಕಾರುಗಳನ್ನು ಮೆರವಣಿಗೆಯಲ್ಲಿ ಹಿಂದಿಕ್ಕಿದೆ. ಹಳೆಯ ಕಾರುಗಳು ಯಾವುವು, ಹೊಸದು ಯಾವುದು ಎಂದು ನಿಮಗೆ ಇನ್ನು ಮುಂದೆ ಹೇಳಲಾಗುವುದಿಲ್ಲ. ತಿರುಚಿದ ಚಕ್ರಗಳು, ತುಕ್ಕು ಹಿಡಿದ ಫೆಂಡರ್‌ ಗಳು ಇರುವ ಕಾರುಗಳು ಬಾಡಿವರ್ಕ್ ಮಾಡಿಸಿಕೊಂಡಂತೆ ಕನ್ನಡಿಯಂತೆ ಹೊಳೆಯುತ್ತಿದ್ದವು. ಎನಾಮೆಲ್ ಬಳಿದಂತೆ ಹೊಳೆಯುವ ಬಣ್ಣದಲ್ಲಿ ಫಳಫಳಿಸಿದವು. + +ಮೆರವಣಿಗೆಯ ಹಿಂದೆ, ಅಂಗಡಿಯ ಕಿಟಕಿಗಳನ್ನು ಜೇಡರಬಲೆಗಳು ಮತ್ತು ಹಾವಸೆ ಮುಚ್ಚಿಬಿಟ್ಟಿದ್ದವು. ಗಗನಚುಂಬಿ ಕಟ್ಟಡಗಳ ಎಲಿವೇಟರ್‌ಗಳು ಕಿರುಗುಟ್ಟಲು, ನರಳಲು ಪ್ರಾರಂಭಿಸಿದವು. ಜಾಹೀರಾತು ಪೋಸ್ಟರ್‌ ಗಳು ಹಳದಿ ಬಣ್ಣಕ್ಕೆ ತಿರುಗಿದವು. ರೆಫ್ರಿಜರೇಟರ್‌ ಗಳಲ್ಲಿ ತುಂಬಿದ ಮೊಟ್ಟೆಗಳು ಮರಿಗಳಾಗಿ ಅವನ್ನು ಇನ್ಕ್ಯುಬೇಟರ್‌ ಗಳಂತೆ ಮಾಡಿದ್ದವು. ಟೆಲಿವಿಷನ್‌ ಗಳು ವಾತಾವರಣದಲ್ಲಿ ಬೀಸುವ ಬಿರುಗಾಳಿಗಳನ್ನು ವರದಿ ಮಾಡಿದವು. ನಗರವು ಒಂದೇ ಹೊಡೆತದಲ್ಲಿ ತನ್ನನ್ನು ತಾನೇ ನುಂಗಿತ್ತು. ಅದು ತ್ಯಜಿಸಬಹುದಾದ ನಗರವಾಗಿತ್ತು. ಈಗ ತನ್ನ ಕೊನೆಯ ಯಾನದಲ್ಲಿ ಚಂದ್ರನನ್ನು ಅನುಸರಿಸಿತು. + +ಖಾಲಿ ಅನಿಲದ ಡಬ್ಬಗಳಲ್ಲಿ ಬ್ಯಾಂಡಿನ ಡ್ರಮ್ಮಿಂಗ್ ಶಬ್ದ ಮಾಡುತ್ತ ಮೆರವಣಿಗೆ ಬ್ರೂಕ್ಲಿನ್ ಸೇತುವೆಗೆ ಬಂದಿತು. ಡಯಾನಾ ತನ್ನ ಹೆಣ್ಣಿನ ಮೇಜೊರೆಟ್‌ ದಂಡವನ್ನು ಎತ್ತಿದಳು. ಅವಳ ಸ್ನೇಹಿತರು ತಮ್ಮ ರಿಬ್ಬನ್‌ ಗಳನ್ನು ಗಾಳಿಯಲ್ಲಿ ತಿರುಗಿಸಿದರು. ಚಂದ್ರ ಕೊನೆಯ ಓಟದಲ್ಲಿ ತೊಡಗಿತು. ಸೇತುವೆಯ ಬಾಗಿದ ಕಟಕಟೆ ದಾಟಿಸಮುದ್ರದ ಕಡೆಗೆ ಓಡಿತು. ಬಳಿಕ ಇಟ್ಟಿಗೆಯಂತೆ ನೀರಿಗೆ ಅಪ್ಪಳಿಸಿ ಮುಳುಗಿತು. ಸಾವಿರಾರು ಪುಟ್ಟ ಗಾಳಿ ಗುಳ್ಳೆಗಳನ್ನು ನೀರ ಮೇಲ್ಮೈಗೆ ಕಳುಹಿಸಿತು. + +(ಇಟಾಲೊ ಕ್ಯಾಲ್ವಿನೊ) + +ಏತನ್ಮಧ್ಯೆ, ರಿಬ್ಬನ್ನುಗಳನ್ನು ಹೋಗಲು ಬಿಡದೆ ಹುಡುಗಿಯರು ಅವುಗಳಿಗೆ ಅಂಟಿಕೊಂಡಿದ್ದರು. ಚಂದ್ರ ಅವರನ್ನು ಮೇಲಕ್ಕೆತ್ತಿ, ಪ್ಯಾರಪೆಟ್ ಮೇಲೆ ಇಳಿಸಿ ಸೇತುವೆಯಿಂದ ಹೊರಗೆ ಕಳುಹಿಸಿತ್ತು. ಅವರು ಗಾಳಿಯಲ್ಲಿನ ಕಮಾನುಗಳನ್ನು ಡೈವರ್ ಗಳಂತೆ ವಿವರಿಸಿ ನೀರಿನಲ್ಲಿ ಕಣ್ಮರೆಯಾದರು.ನಾವು ಆಶ್ಚರ್ಯದಿಂದ ನಿಂತು ನೋಡುತ್ತಿದ್ದೆವು. ನಮ್ಮಲ್ಲಿ ಕೆಲವರು ಬ್ರೂಕ್ಲಿನ್ ಸೇತುವೆಯ ಮೇಲೆ, ಇತರರು ತೀರದಲ್ಲಿರುವ ಜೆಟ್ಟಿಗಳ ಮೇಲೆ. ಕೆಲವರಿಗೆ ನೀರಲ್ಲಿ ಧುಮುಕುವ ಹಂಬಲವಿತ್ತು. ನಾವು ಮತ್ತೆ ಮೊದಲಿನಂತೆಯೇ ಅವರನ್ನು ನೋಡುತ್ತೇವೆ, ಅವರು ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂಬ ನಿಶ್ಚಿತತೆಯಲ್ಲಿ ನಾವು ನೋಡುತ್ತಿದ್ದೆವು. + +ನಾವು ಹೆಚ್ಚು ಹೊತ್ತು ಕಾಯಬೇಕಾಗಿರಲಿಲ್ಲ. ವೃತ್ತಾಕಾರದಲ್ಲಿ ಹರಡಿದ ಅಲೆಗಳೊಂದಿಗೆ ಸಮುದ್ರ ಕಂಪಿಸಲು ಪ್ರಾರಂಭಿಸಿತು. ಈ ವೃತ್ತದ ಮಧ್ಯದಲ್ಲಿ ಒಂದು ದ್ವೀಪ ಕಾಣಿಸಿಕೊಂಡಿತು, ಅದು ಪರ್ವತದಂತೆ, ಗೋಳಾರ್ಧದಂತೆ, ನೀರಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭೂಗೋಳದಂತೆ ಅಥವಾ ಅದರ ಮೇಲೆ ಸ್ವಲ್ಪ ಮೇಲಕ್ಕೆ ಬೆಳೆದಿರುವಂತೆ ಕಂಡಿತು. ಇಲ್ಲ, ಆಕಾಶದಲ್ಲಿ ಉದಯಿಸುತ್ತಿರುವ ಚಂದ್ರನಂತೆ. ಅದು ಚಂದ್ರನನ್ನು ಹೋಲುವಂತಿಲ್ಲವಾದರೂ ನಾನು ಅದಕ್ಕೆ ಚಂದ್ರನೆಂದೇ ಹೇಳುತ್ತೇನೆ. ಕೆಲವು ಕ್ಷಣಗಳ ಮೊದಲು ನಾವದನ್ನು ಆಳಕ್ಕೆ ಧುಮುಕುವುದನ್ನು ನೋಡಿದ್ದೇವೆಯಾದರೂ, ಈ ಅಮಾವಾಸ್ಯೆಯು ವಿಭಿನ್ನವಾಗಿ ವಿಭಿನ್ನವಾಗಿತ್ತು. ಇದು ಹಸಿರು ಬಣ್ಣದ, ಹೊಳೆಯುವ ಕಡಲಕಳೆಯ ಹಾದಿಯ ತೊಟ್ಟಿಕ್ಕುವ ಸಮುದ್ರದಿಂದ ಹೊರಹೊಮ್ಮಿತ್ತು. ಹೊಲಗಳಿಂದ ಕಾರಂಜಿಗಳಲ್ಲಿ ಹರಿಯುವ ನೀರು ಪಚ್ಚೆಯ ಹೊಳಪನ್ನು ನೀಡಿತು. ಒಂದು ಹಬೆಹಬೇ ಕಾಡು ಅದನ್ನು ಆವರಿಸಿದೆ. ಆದರೆ ಸಸ್ಯಗಳಿಂದ ಅಲ್ಲ. ಈ ಹೊದಿಕೆಯು ನವಿಲು ಗರಿಗಳಿಂದ ಮಾಡಲ್ಪಟ್ಟಿರುವಂತೆ ತೋರುತ್ತದೆ. ಅವುಗಳ ತುಂಬಾ ಕಣ್ಣುಗಳು ಮತ್ತು ಹೊಳೆಯುವ ಬಣ್ಣಗಳು. + +ಆ ಗೋಳವು ಆಕಾಶಕ್ಕೆ ವೇಗವಾಗಿ ಹಿಂತಿರುಗುವ ಮೊದಲು ನಾವು ಕಷ್ಟಪಟ್ಟು ನೋಡಲು ಸಾಧ್ಯವಾದ ಭೂದೃಶ್ಯ ಇದು. ತಾಜಾತನದ ಮತ್ತು ಸೊಂಪಾಗಿರುವುದರ ಕುರಿತ ಸಾಮಾನ್ಯ ಅನಿಸಿಕೆಯಲ್ಲಿ ಹೆಚ್ಚಿನ ಸೂಕ್ಷ್ಮ ವಿವರಗಳು ಕಳೆದುಹೋಗಿವೆ. ಅದು ಮುಸ್ಸಂಜೆಯಾಗಿತ್ತು. ಬಣ್ಣಗಳ ಹೋಲಿಕೆಯು ರೋಮಾಂಚಕ ಏಕವರ್ಣಾತ್ಮಕತೆಗೆ ಸೆರೆಯಾಗುತ್ತಿತ್ತು. ಹೊಳೆಯುವ ಜಗತ್ತಿನ ಬಿಗಿಯಾದ ಮೇಲ್ಮೈಯಲ್ಲಿ ಚಂದ್ರನ ವೃತ್ತಗಳು. ಕಾಡುಗಳು ಈಗ ಕೇವಲ ಬಾಹ್ಯರೇಖೆಗಳ ಹಾಗೆ ಗೋಚರಿಸುತ್ತಿವೆ. ಆದರೆ ನಾವು ಕೆಲವು ಹ್ಯಾಮಕ್ ಗಳನ್ನು ಕೊಂಬೆಗಳಿಗೆ ನೇತುಹಾಕಿರುವುದನ್ನು ನೋಡಿದೆವು. ಅವು ಗಾಳಿಯಲ್ಲಿ ಹೊಯ್ದಾಡುತ್ತಿದ್ದವು. ಅವುಗಳಲ್ಲಿ ನಮ್ಮನ್ನು ಆ ಸ್ಥಳಕ್ಕೆ ಕರೆದೊಯ್ದ ಹುಡುಗಿಯರು ಗೂಡುಕಟ್ಟುತ್ತಿರುವುದನ್ನು ನಾನು ಗಮನಿಸಿದೆ. + +ನಾನು ಕೊನೆಗೂ ಸಮಾಧಾನದಿಂದ ಇರುವ ಡಯಾನಾಳನ್ನು ಗುರುತಿಸಿದೆ. ಅವಳು ಹಕ್ಕಿಗರಿಯ ಬೀಸಣಿಗೆಯಿಂದ ಬೀಸಿಕೊಳ್ಳುತ್ತಾ ಇದ್ದಳು. ಬಹುಶಃ ನನಗೆ ಗುರುತಿಸಿದ ಸಂಕೇತವನ್ನು ಕಳುಹಿಸಿದ್ದಳು. + +“ಓ ಅವರು ಅಲ್ಲಿದ್ದಾರೆ! ಅಲ್ಲಿ ಅವಳು!” ನಾನು ಕೂಗಿಕೊಂಡೆ. ನಾವೆಲ್ಲರೂ ಕೂಗಿಕೊಂಡೆವು. ಅವರನ್ನು ಮತ್ತೆ ಕಂಡುಕೊಂಡ ಸಂತೋಷ ಈಗಾಗಲೇ ಅವರನ್ನು ಶಾಶ್ವತವಾಗಿ ಕಳೆದುಕೊಂಡಿರುವ ನೋವಿನಿಂದ ತುಂಬಿತ್ತು. ಏಕೆಂದರೆ ಕತ್ತಲ ಆಕಾಶದಲ್ಲಿ ಉದಯಿಸುತ್ತಿರುವ ಚಂದ್ರನು ತನ್ನ ಸರೋವರಗಳು ಮತ್ತು ಬಯಲುಗಳ ಸೂರ್ಯನ ಪ್ರತಿಫಲನಗಳನ್ನು ಮಾತ್ರ ಕಳುಹಿಸಿದ್ದ. + + + +ನಮ್ಮನ್ನು ಒಂದು ಬಗೆಯ ಉನ್ಮಾದ ವಶಪಡಿಸಿಕೊಂಡಿತ್ತು. ನಾವು ನಮ್ಮ ಈ ನೆಲವನ್ನು ಮರಳಿ ಪಡಕೊಂಡ ಖಂಡಗಳಲ್ಲಿ ನಗರಗಳು ಮತ್ತು ರಸ್ತೆಗಳನ್ನು ಹೂತುಹಾಕುತ್ತ, ಇದ್ದದ್ದರ ಎಲ್ಲಾ ಕುರುಹುಗಳನ್ನು ಅಳಿಸಿಹಾಕುತ್ತ, ಸವನ್ನಾಗಳು ಮತ್ತು ಕಾಡುಗಳ ಮೂಲಕ ನಾಗಾಲೋಟದಲ್ಲಿ ಓಡಲು ಆರಂಭಿಸಿದೆವು. ನಮ್ಮೆದೆಗಳನ್ನು, ನಮ್ಮ ನೀಳ ಮತ್ತು ತೆಳುವಾದ ದಂತಗಳನ್ನು ಆಕಾಶಕ್ಕೆ ಎತ್ತಿ ಹಿಂಸಾತ್ಮಕ ದುಃಖದಿಂದ ನಮ್ಮ ಒಪ್ಪಗೊಳಿಸದ ಕೂದಲನ್ನು ಅಲುಗಾಡಿಸುತ್ತ ನಾವು ಕಹಳೆಯೂದಿದೆವು. ಅದು ಯುವ ಮಹಾಗಜಗಳಾದ ನಮ್ಮೆಲ್ಲರನ್ನು ಹಿಡಿದಿಟ್ಟುಕೊಳ್ಳುತ್ತದೆ, ಅದು ಈಗ ಜೀವನ ಪ್ರಾರಂಭವಾಗುವುದೆಂದು ನಾವರಿತಾಗ ಮತ್ತು ಇನ್ನೂ ನಾವು ಬಯಸುವುದು ನಮಗೆ ಎಂದಿಗೂ ಸಿಗುವುದಿಲ್ಲ ಎಂದು ಸ್ಪಷ್ಟವಾದಾಗ. + +****** + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_264.txt b/Kenda Sampige/article_264.txt new file mode 100644 index 0000000000000000000000000000000000000000..1d10bbe837d41474a135ba496d58edea3174db65 --- /dev/null +++ b/Kenda Sampige/article_264.txt @@ -0,0 +1,45 @@ + + +ಕವಿತೆಯೆಂದರೆ ನವಿರು ಪಲುಕಿನ ಹಾಗೆ, ಭಾವ ಪ್ರದೀಪನಗೊಳಿಸಬೇಕು ಎನ್ನುವ ಸಿದ್ಧ ಮಾದರಿಯನ್ನು ಹೊರತುಪಡಿಸಿ ಹೊಸತೇ ಆದ ಕಟ್ಟುವಿಕೆ ಇತ್ತೀಚೆಗೆ ಕನ್ನಡದಲ್ಲಿ ಕಾಣಿಸಿಕೊಂಡಿದೆ. ಹಾಗೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ, ಅನಿಸಿದ್ದನ್ನು ನೇರಾನೇರಾ ಬರೆಯುವ ಹವಣಿಕೆಯಲ್ಲಿದ್ದಂತೆ ತೋರುವ ಸೈಫ್ ಜಾನ್ಸೆ ಕೊಟ್ಟೂರು ಅವರ ‘ಹುಲ್ಲಿಗೆ ಹುಟ್ಟಿದ ಬೀದಿ’ ಸಂಕಲನದ ಕವನಗಳು ಇಂತಹ ವಿಕ್ಷಿಪ್ತತೆಗೊಂದು ಮಾದರಿಯಾಗಿ ನಿಲ್ಲುತ್ತದೆ. + +ದಾನದ ಹೆಸರಿನಿಂದ ಸಿಗುವ ಪಾರದರ್ಶಕಬಟ್ಟೆಗಳಿಂದ ಗುಪ್ತಾಂಗಗಳನ್ನು ಅಪಮಾನಗೊಳಿಸದಿರಿ + +ಈ ಸಾಲುಗಳು ಇದಕ್ಕೊಂದು ಚಂದದ ನಿದರ್ಶನವಾಗಿ ನಮ್ಮೆದುರಿಗೆ ನಿಲ್ಲುತ್ತವೆ. ಮೊದಲ ಕವನ ‘ದಮನಿತರಿಗಾಗಿ ಡಿಕ್ಲೇಶನ್’ ಗಳು ಇಂತಹ ಹಲವಾರು ಸಾಲುಗಳನ್ನು ತನ್ನೊಳಗೆ ಇಟ್ಟುಕೊಂಡು ಕವನಕ್ಕೊಂದು ಹೊಸ ಸ್ವರೂಪವನ್ನು ನೀಡಲು ಯಶಸ್ವಿಯಾಗಿದೆ. ದಮನಿತರ ನೋವುಗಳನ್ನು ತನ್ನೆದೆಯಾಳದಲ್ಲಿ ಚುಚ್ಚುವ ಮುಳ್ಳುಗಳೆಂದೇ ಭಾವಿಸಿರುವ ಕವಿ ಕಾರುವ ಅಷ್ಟೂ ವಿಷವನ್ನು ಜೀರ್ಣಿಸುವಷ್ಟು ಕರಳುಗಳನ್ನು ಗಟ್ಟಿಗೊಳಿಸಬೇಕೆಂದು ತನ್ನ ಶೋಷಿತ ಸಂಗಾತಿಗಳಿಗೆ ಕರೆ ನೀಡುವ ಜೊತೆಜೊತೆಗೇ ಅಸಹನೆಯ ಕಡ್ಡಿಗಳನ್ನೇ ಕಸಬರಿಗೆಯಂತೆ ಕಟ್ಟಿ ಬಯಲನ್ನು ಸ್ವಚ್ಛಗೊಳಿಸುವ ಸಲಹೆ ನೀಡುತ್ತಾರೆ. ನಮ್ಮ ಸಮಾಜವೇ ಹಾಗೆ, ಶೋಷಿತರನ್ನು ರೊಚ್ಚಿಗೆಬ್ಬಿಸಿ ಅವರ ನೋವಿನ ಕಿಚ್ಚಿನಲ್ಲಿ ಆಹಾರ ಬೇಯಿಸಿಕೊಳ್ಳುವ ಹುನ್ನಾರ ಮಾಡುತ್ತದೆ. ಹೀಗಾಗಿಯೇ ದಮನಿತರ ಹೆಜ್ಜೆಯ ಲಯಗಳು ತಪ್ಪಿ ಹೋಗುತ್ತವೆ ಎನ್ನುತ್ತಾರೆ. + +ಲಯ ತಪ್ಪಿದ ಹೆಜ್ಜೆಗಳಹುಡುಕಾಟಕ್ಕಿಳಿದ ನಾವುಜರಡಿಯಲಿ ಪೋಣಿಸಿ ಸೋಸುತ್ತೇವೆಅವರಂಗಿಯ ತೊಟ್ಟು ಹೇಳುವುದಾದರೆಅದು ನೈತಿಕ ಅನೈತಿಕತೆಗಳ ಕವಲುಗಳಲ್ಲ….ಎನ್ನುವ ಸಾಲುಗಳಲ್ಲಿ ಕಾಣದ ಆಳದ ನೋವಿದೆ. ಹೆಜ್ಜೆಯ ಲಯವಿಲ್ಲದೇ ಅವರ ಅಂಗಿಯನ್ನು ತೊಟ್ಟುಕೊಂಡು ನೈತಿಕ ಅನೈತಿಕತೆಗಳನ್ನು ಜರಡಿಯಲ್ಲಿ ಸೋಸಿ ಹುಡುಕುವ ಸಂಕಟದ ಕುರಿತಾಗಿ ಇಲ್ಲಿ ಮಾತುಗಳಿವೆ. + +(ಸೈಫ್ ಜಾನ್ಸೆ ಕೊಟ್ಟೂರು) + +ನಾವು ನಮ್ಮ ದಾರಿಯಲ್ಲಿ ನಡೆಯುವುದಕ್ಕಿಂತ ಅನ್ಯರ ಮನೆಯ ಬಾಗಿಲನ್ನು ಇಣುಕುವುದೇ ಹೆಚ್ಚು. ಯಾವುದು ನೈತಿಕ? ಯಾವುದು ಅನೈತಿಕ? ಅದನ್ನು ಒರೆ ಹಚ್ಚಿ ನೋಡುವ ಅಳತೆಗೋಲಾದರೂ ಎಲ್ಲಿದೆ ಹೇಳಿ? ಆದರೂ ನಾವು ನಮ್ಮದೇ ಗೆರೆಗಳನ್ನೆಳೆದು ನಮ್ಮನ್ನೇ ನಾವು ಮಿತಿಗೊಳಿಸಿಕೊಂಡಿದ್ದೇವೆ. ಸಾಮಾಜಿಕವಾಗಿ ದೂರ ಇಟ್ಟೂ ಇಟ್ಟೂ ದಮನಿತರ ಮೈಯ್ಯಲ್ಲಿಯೇ ಅಂತರ ಕಾಯ್ದುಕೊಳ್ಳುವ ಗುಣವನ್ನು ಬೆಳೆಸಿಬಿಟ್ಟಿದ್ದೇವೆ. ನಗುವುದಕ್ಕೂ ನಿರ್ಬಂಧ ಹೇರಿಕೊಂಡಿದ್ದೇವೆ. ಅತ್ಯುತ್ತಮ ಎನ್ನಬಹುದಾದದ್ದನ್ನು ಯಾವುದನ್ನೂ ಮಾಡಲಾಗದ ಸ್ಥಿತಿ ತಂದುಕೊಂಡಿದ್ದೇವೆ. ಮುಕ್ತವಾಗಿ ಭಾವನೆಗಳನ್ನು ಹೇಳಿಕೊಳ್ಳುವುದಕ್ಕೂ ಆಗದ ಸ್ಥಿತಿಯಿದೆ ಈಗ. ಹೀಗಾಗಿಯೇ,ನಾವು ನಗಲೇಬೇಕುನಗುವಾಗಲೆಲ್ಲಾ ಮೈಮರೆಯಬೇಕುಬಿಗಿದ ಹುಬ್ಬುಗಳು ಸಡಿಲಗೊಳ್ಳುವಂತೆ ಎಚ್ಚರವಹಿಸಬೇಕುಎನ್ನುತ್ತಲೇ ಮನದುಂಬಿ ನಗಬೇಕಾದ ಅನಿವಾರ್ಯತೆಯನ್ನು ಹಾಗೂ ನಗುವುದನ್ನೂ ನಿರ್ಬಂಧಗೊಳಿಸುವ ಶೋಷಕರ ಹುನ್ನಾರದ ಬಗ್ಗೆಯೂ ಕವಿ ಮಾತನಾಡುತ್ತಾರೆ. + +ನಗುವಾಗಲೆಲ್ಲ ಭಟ್ಟಿಯ ನೀರಾಗುತ್ತೇವೆಯಾರದೋ ಪಾಪದ ಪಾತ್ರಗಳಿಗೆಕಾಲು ಒತ್ತೆ ಇಟ್ಟ ಅನಾಥ ಪ್ರಜ್ಞೆಯಿಂದ ನರಳುತ್ತೇವೆಆದರೂ ನಗಬೇಕುನಗುವಿನ ನೆಪಗಳಿಗೆ ಒಂದು ಸಾಕ್ಷಿ ಉಳಿಸಲು….ಎನ್ನುವ ಮಾತುಗಳಲ್ಲಿ ಹೆಪ್ಪುಗಟ್ಟಿದ ನೋವನ್ನು ಕಾಣಬಹುದು. + +ನಗುವನ್ನೂ ಕೂಡ ಅಡವಿಟ್ಟ ಬದುಕಿಗೆ ನಕ್ಕಿದ್ದೇವೆ ಅಥವಾ ನಗಲಿಲ್ಲ ಎಂದು ಹೇಳಲೂ ಸಾಕ್ಷ್ಯ ಒದಗಿಸಬೇಕಾದ ಅನಿವಾರ್ಯತೆಯಿದೆ. ಪುಸ್ತಕದ ಬಹುತೇಕ ಕವಿತೆಗಳು ಶೋಷಿತರ ಅಸಹಾಯಕತೆಯನ್ನು ಬಿಂಬಿಸುತ್ತಲೇ ಶೋಷಕರ ಕುರಿತಾದ ಆಕ್ರೋಶವನ್ನು ವ್ಯಕ್ತಪಡಿಸುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹಾಗೆಂದು ಸಂಕಲನದಲ್ಲಿ ಪ್ರೇಮಕ್ಕೆ, ವಿರಹಕ್ಕೆ ಜಾಗ ಇಲ್ಲ ಎಂದು ಯೋಚಿಸಬೇಕಾಗಿಲ್ಲ. + +ಬದುಕಿನ ಅರೆಸುಟ್ಟ ಸ್ಥಿತಿಯನ್ನು ತಡೆಯಲಾಗುತ್ತಿಲ್ಲಇನ್ನು ನಿನ್ನೊಂದಿಗೆ ಮಾತ್ರ ಉಳಿದುಬಿಡುವಛಲವಾದರೂ ಯಾವುದು?ಕೂಡುವಿಕೆಯ ಒಡಂಬಡಿಕೆನನ್ನ ನಿನ್ನ ಹುಟ್ಟು ಅವುಗಳ ಲಾಡಿಯಂತಿದೆ + +ಎನ್ನುವ ಸಾಲುಗಳು ಅದೆಂತಹ ವಿರಹದ ತೀವ್ರತೆಯನ್ನು ಉಣಬಡಿಸುತ್ತವೆಯೆಂದರೆ ದೂರವಾದ ಪ್ರೇಮಿಯಿಂದಾಗಿ ಬದುಕು ಅರ್ಧಮರ್ಧ ಸುಟ್ಟುಹೋದ ಬಗೆಯನ್ನು ವಿವರಿಸುತ್ತದೆ. + +ಪ್ರೇಮ ಕೈ ತಪ್ಪಿ ಹೋಗಿದೆ. ಪ್ರೇಮಿ ದೂರವಾಗಿಯೂ ಆಗಿದೆ. ಆದರೂ ಮತ್ತದೇ ಪ್ರೇಮಿಯೊಂದಿಗೆ ಇರಬೇಕೆನ್ನುವ ಮನಸ್ಥಿತಿಯನ್ನು ಕಳಚಿಕೊಳ್ಳಲಾಗುತ್ತಿಲ್ಲ. ಮೊದಲ ಪ್ರೇಮದ ತೀವ್ರತೆಯೇ ಹಾಗೆ. ಬಿಟ್ಟೇನೆಂದರು ಬಿಡದ ಮಾಯೆ ಅದು. ಮತ್ತೆ ಮತ್ತೆ ತನ್ನೆಡೆಗೆ ಸೆಳೆದುಕೊಳ್ಳುವ ಸುಳಿ. ಅದು ಮುಗಿದ ಪ್ರೇಮ ಎನ್ನಿಸಿದರೂ ಮನದೊಳಗೆ ಕಲ್ಲುಸಕ್ಕರೆಯ ಸಿಹಿಯನ್ನು ಒಸರಿಸುವ ಸಾಮರ್ಥ್ಯ ಹೊಂದಿರುವಂತಹುದ್ದು. + +ಸಂಕಲನವನ್ನು ಬೆಂಕಿಯ ಕುಲುಮೆಯಲ್ಲಿ ಕುದಿಸಿ, ಬಿಸಿಯಿರುವಾಗಲೇ ತಂದು ಎದುರಿಗಿಟ್ಟ ಮಾಂಸದ ಅಡುಗೆಯಂತಿದೆ. ಅಷ್ಟು ಖಾರ ಮತ್ತು ಅಷ್ಟೊಂದು ಸ್ಪೈಸಿ. ಇದನ್ನು ನಾನು ಸಿಯಾದ ಪಾಯಸದ ಅಡುಗೆಗೆ ಅಥವಾ ಉಳ್ಳವರ ಮೃಷ್ಟಾನ್ನ ಭೋಜನಕ್ಕೆ ಎಂದೂ ಹೋಲಿಸಲಾರೆ. ಇದು ಕುದಿ ಮಡಿಕೆಯಲ್ಲಿನ ಮಾಂಸದ ಕುದಿಲಾ. ಹೀಗಾಗಿಯೇ ಕವಿತೆಯ ಒಳಗಿನ ತಲ್ಲಣಗಳಿಗೆ ಭೂಮಿಯ ಆಸರೆ ಇರದು. + +ಹುಗಿದಿಟ್ಟ ತಲ್ಲಣಗಳಿಗೆಕುಲುಮೆಯಾಗದಿರಲಿ ಭೂಮಿ…ಎನ್ನುತ್ತಾರೆ ಕವಿ. ನಮ್ಮೆಲ್ಲ ತಲ್ಲಣಗಳನ್ನು ನಾವು ಎದೆಯಲ್ಲಿಯೇ ಅಡಗಿಸಿಟ್ಟುಕೊಳ್ಳಬೇಕೆ ಹೊರತೂ ಭೂಮಿಯನ್ನು ಹೊಣೆಯಾಗಿಸಬಾರದು. ಹೀಗಾಗಿಯೇ ಕವಿಗೆ ಬದುಕಿನ ವ್ಯತಿರಿಕ್ತತೆಯ ಅರಿವಿದೆ. ಶೋಷಿತರ ಕುರಿತಾಗಿ ಕವಿಯ ಹೃದಯದಲ್ಲಿರುವ ದಯೆ ಮತ್ತು ಶೋಷಣೆಯ ವಿರುದ್ಧವಾದ ಮಾತನ್ನು ತೀಕ್ಷ್ಣವಾಗಿ ಹೇಳುತ್ತಾರೆ. + +ಭೂಮಿಯ ಕಟ್ಟಕಡೆಯ ಹುಲ್ಲು ಕಡ್ಡಿಗೂಪ್ರತಿರೋಧದ ಪುಟ್ಟ ಗುರಾಣಿ ಇದ್ದಿದ್ದರೆಉಣ್ಣುವ ಬಾಯಿಂದಲೇ ಹೇಲುವಕುಚೋದ್ಯ ತಪ್ಪಿಸಬಹುದಿತ್ತುಎಂದು ಸಮಾಜದ ತಾರತಮ್ಯವನ್ನು ವಿರೋಧಿಸುತ್ತ ಬಲಾಢ್ಯರ ಕುತಂತ್ರವನ್ನು ಧಿಕ್ಕರಿಸುತ್ತಾರೆ. ಇದು ಕೇವಲ ಅನಾದಿಕಾಲದ ಧೋರಣೆಯಲ್ಲ. ಇದು ಈಗಿನ ಧೋರಣೆಯೂ ಹೌದು. ಶೋಷಿತರು ಈಗಲೂ ಶೋಷಣೆಗೆ ಒಳಗಾಗುತ್ತಿದ್ದಾರೆ. + +ಸಮುದ್ರದ ಮರ್ಜಿ ಹಿಡಿದುಜೀವಿಸಿರುವ ನಡುಗಡ್ಡೆಗಳಿಗೆಹಣೆ ಬರಹದೆದುರು ಈಜುವಎದೆಗಾರಿಕೆ ಎಲ್ಲಿಯದುದೇಶವೆಂದರೆ ಸುಟ್ಟ ಇಟ್ಟಿಗೆಯ ತುಣುಕುಗಳಲ್ಲ + +ದೇಶಪ್ರೇಮವೆಂದರೆ ಈಗ ನಾವು ತಿಳಿದಿರುವಂತಹ ಯುದ್ಧೋನ್ಮಾದವಲ್ಲ. ಹಾಗೆಂದು ನಮ್ಮನ್ನು ನಾವು ಅಡವಿಟ್ಟುಕೊಳ್ಳುವ ಹೇಡಿತನವೂ ಅಲ್ಲ. ಒಂದು ಮನೆಯನ್ನು ಕೇವಲ ಕಲ್ಲು ಮಣ್ಣಿನಿಂದ ನಿರ್ಮಿಸಲಾಗುವುದಿಲ್ಲ. ಹಾಗೆ ನಿರ್ಮಿಸಿದರೆ ಅದು ಕೇವಲ ಕಟ್ಟಡವಾಗುತ್ತದೆಯೇ ಹೊರತು, ಅದು ಸಂತಸದ ಗೂಡಾಗುವುದಿಲ್ಲ. ಅಂತೆಯೇ ಒಂದು ದೇಶವೂ ಅಷ್ಟೆ. ಇಟ್ಟಿಗೆಯಿಂದ ಕೂಡಿದ ದೊಡ್ಡ ದೊಡ್ಡ ಕಟ್ಟಡಗಳು ಅದರ ಸಮೃದ್ಧಿಯ ಲಕ್ಷಣವಲ್ಲ. ಪರಸ್ಪರ ಸಹಕಾರದಿಂದ ಕುಡಿದ ಮಾನವೀಯತೆಯ ಗುಣ ಹೊಂದಿದ ಜನರು ಒಂದು ದೇಶದ ಆಸ್ತಿ. ಸಮುದ್ರದ ನಡುಗಡ್ಡೆಗಳು ದೂರದಿಂದ ನೋಡುವವರಿಗೆ ಸಮುದ್ರದ ಅಲೆಗೆ ಸಿಕ್ಕಿ ಅಲುಗಾಡಿದಂತೆ ಕಾಣುತ್ತವೆಯೇ ಹೊರತೂ ಅವು ವಾಸ್ತವದಲ್ಲಿ ಸ್ಥಿರವಾಗಿರುತ್ತವೆ. ಅದಕ್ಕೆಂದೇ ಕವಿ ಹುಲ್ಲುಕಡ್ಡಿ ಹಾಗು ನಡುಗಡ್ಡೆಯ ಉಪಮೆಯನ್ನು ಧಾರಾಳವಾಗಿ ಬಳಸುತ್ತಾರೆ. + +ಈ ಎಲ್ಲ ಉಪಮೆ, ರೂಪಕಗಳ ಹೊರತಾಗಿಯೂ ಕವಿತೆಗಳಲ್ಲಿ ಬಹುವಾಗಿ ಇಣುಕುವ ಆಕ್ರೋಶ ಕೆಲವೊಮ್ಮೆ ಕವನದ ಓಘಕ್ಕೆ ತಡೆಯೊಡ್ಡುತ್ತದೆ. ಹೇಳಬೇಕಾದುದನ್ನು ಕವಿತೆಯ ಧರ್ಮ ಮೀರಿಯಾದರೂ ಹೇಳಿಯೇ ಬಿಡಬೇಕೆನ್ನುವ ಧಾವಂತದಿಂದಾಗಿ ಕೆಲವೊಮ್ಮೆ ಕಾವ್ಯದ ಲಯವು ಲಯವಾಗಿ ಗದ್ಯದ ಸುಲಲಿತೆ ಮೂಡುತ್ತದೆ. ಹರಿತ ಮಾತುಗಳಿಂದಾದರೂ ತಿವಿದು ಜಗತ್ತನ್ನು ಎಚ್ಚರಗೊಳಿಸಬೇಕೆಂಬ ಧಾವಂತ ಇಲ್ಲಿ ಎದ್ದು ಕಾಣುವ ಅಂಶ. ಇದು ಕವಿತೆಗೆ ಶಕ್ತಿಯನ್ನು ನೀಡಿದಂತೆ ಮಿತಿಯೂ ಆಗಿದೆ ಎಂಬುದನ್ನು ಗಮನಿಸಬೇಕು. ಹೇಳಬೇಕಾದುದನ್ನು ನವಿರಾದ ರೂಪಕಗಳ ಮೂಲಕವೂ ಹೇಳುವುದೂ ಒಂದು ಕಲೆ ಎಂಬುದನ್ನು ತುಸು ನೆನಪಿನಲ್ಲಿಟ್ಟುಕೊಂಡರೆ ಇಲ್ಲಿಯ ಕವಿತೆಗಳು ಇನ್ನಷ್ಟು ಆತ್ಮೀಯವಾಗಿ ಎದೆಗಿಳಿಯುತ್ತಿದ್ದವೇನೋ ಎಂದು ಅನ್ನಿಸದೇ ಇರದು. + +ಇಷ್ಟಾದರೂ ಈ ಎಲ್ಲ ದುರಿತಗಳ ನಡುವೆಯೂ ಕವಿ ಪ್ರೇಮವನ್ನೇ ನೆಚ್ಚಿಕೊಳ್ಳುವುದು ಪ್ರಸ್ತುತ ಮುಖ್ಯವೆನಿಸುತ್ತದೆ. ಮನುಷ್ಯನೊಬ್ಬನಿಗೆ ಮನುಷ್ಯನ ಮೇಲಿರುವ ಪ್ರೇಮ ಹಾಗೂ ತನ್ನ ಸಹ ಜೀವಿಗಳ ಮೇಲಿರುವ ಪ್ರೇಮದಿಂದಾಗಿಯೇ ಈ ಪ್ರಪಂಚ ಇನ್ನೂ ನಿಂತಿದೆ. ಅಂತೆಯೇ ಪ್ರೇಮ ಕವಿತೆಗಳೂ ಕೂಡ ಸೋತರೂ ಗೆಲ್ಲುವ ಜಿದ್ದಿನಿಂದ ತಲೆಯೆತ್ತಿ ನಾಶವಾಗುವ ಭಯವನ್ನು ಮೆಟ್ಟಿ ತಲೆ ಎತ್ತಿ ನಿಂತಿದೆ. + +ಜಗದ ಪ್ರೇಮ ಕವಿತೆಗಳಿಗೆ ಸಾವಿನ ಭಯವಿಲ್ಲಅದಕ್ಕೆ ಸೋತು ಗೆಲ್ಲುವ ಉಮೇದು + + + +ಕನ್ನಡ ಕಾವ್ಯ ಲೋಕದಲ್ಲಿ ಹೊಸ ನೀರಿನ ನದಿ ಪ್ರವಾಹದೋಪಾದಿಯಲ್ಲಿ ಹರಿಯುತ್ತಿರುವಾಗಲೆ ಹಲವಾರು ಕವಿಗಳು ತಮ್ಮ ಅಸಂಗತ ಕಾವ್ಯಗಳ ಮೂಲಕ ಈ ಹೊಸ ನೀರಿಗೆ ಮತ್ತೊಂದು ಹರವನ್ನು ತೋರಿಸಿಕೊಟ್ಟಿದ್ದಾರೆ. ಅಂತಹ ಅಸಂಗತ ಕವಿಗಳ ಸಾಲಿನಲ್ಲಿ ಸೈಫ್ ಕೂಡ ಒಂದು ಗುರುತರವಾದ ಸ್ಥಾನ ಪಡೆದಿದ್ದಾರೆ. ಕವಿತೆಗಳ ಹರಿವಿಗೆ ಹೊಸ ಹೊಸ ದಾರಿಗಳು ಗೋಚರವಾಗಲಿ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_265.txt b/Kenda Sampige/article_265.txt new file mode 100644 index 0000000000000000000000000000000000000000..c261236d9390987b24a1dc5297f728a7db000578 --- /dev/null +++ b/Kenda Sampige/article_265.txt @@ -0,0 +1,25 @@ + + +ಮೊನ್ನೆ ಸೌರ ಕನ್ನಡಕ ಹಾಕ್ಕೊಂಡು ಸೂರ್ಯಗ್ರಹಣವನ್ನು ಕಾಳ ನೋಡಿದ ಅಂತ ಒಂದು ಫೋಟೋ ಹಾಕಿದ್ದೆ. ನೀವೆಲ್ಲ ಮೆಚ್ಚಿ ಕೊಂಡಾಡಿದಿರಿ. ಆ ಬಡ್ಡಿಮಗ ಯಾವ ಕಡೆ ತಿರುಗಿಕೊಂಡಿದ್ದ ಅಂತ ಒಂಚೂರಾದರೂ ಗಮನಿಸಿದಿರಾ? ಅವನು ನಮ್ಮ ಮನೆಯ ಕಡೆ ತಿರುಗಿಕೊಂಡು ನಾನು ತೋರಿಸೋ ಬಿಸ್ಕತ್ತು ನೋಡಿಕೊಂಡು ನಿಂತು ನಿಮಗೆಲ್ಲ ಬಿಸ್ಕತ್ತು ಹಾಕಿದ ಅಷ್ಟೇ! ಸೂರ್ಯಗ್ರಹಣ ತೋರಿಸೋದಕ್ಕೆ ಟೆರೇಸ್ ಮೇಲೆ ಕರ್ಕೊಂಡು ಹೋಗಿದ್ದೆ. ಈ ಮಹರಾಯ ಕತ್ತೆತ್ತಿ ಕೂಡ ನೋಡಲಿಲ್ಲ. ಅಲ್ಲೆಲ್ಲೋ ಹರಿದಾಡ್ತಿದ್ದ ಇರುವೆ, ಗೊದ್ದ ಹುಡುಕಿಕೊಂಡು, ಕಂಡ ಕಂಡಿದ್ದನ್ನೆಲ್ಲ ಮೂಸಿಕೊಂಡು ಓಡಾಡ್ತಿದ್ದ ಅಷ್ಟೇ. ಇವನಿಗಾಗಿ ಪ್ಲಾನಿಟೇರಿಯಂನಿಂದ ದುಡ್ಡು ಕೊಟ್ಟು ತಂದಿದ್ದ ಕನ್ನಡಕ ವೇಸ್ಟ್ ಆಯ್ತು ಅಷ್ಟೇ. + +(ಎಂ. ಆರ್. ಕಮಲ) + +ಆದರೆ ಕನ್ನಡಕ ಹಾಕಿಕೊಂಡು ನಿಂತಿದ್ದ ಇವನ ಪೋಸ್ ನೋಡಿದರೆ ಯಾರಾದರೂ ಇವನು ಸೂರ್ಯಗ್ರಹಣ ನೋಡೇಬಿಟ್ಟ ಅಂದುಕೋಬೇಕು ಹಾಗಿತ್ತು. ನನಗೆ ನಮ್ಮಜ್ಜಿಯ ನೆನಪು ಬಂತು. ಅಜ್ಜಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಅಭ್ಯಾಸಬಲದ ಮೇಲೆ ಮನೆಯಲ್ಲಿ ಓಡಾಡಿಕೊಂಡಿತ್ತು. `ನಿನಗೆ ಕಣ್ಣು ಕಾಣಿಸಲ್ಲ’ ಅಂದರೆ ವಿಪರೀತ ಸಿಟ್ಟು ಬರ್ತಿತ್ತು. ಅದು ಕಾಣುತ್ತೆ, ಇದು ಕಾಣುತ್ತೆ ಅಂತ ಸುಳ್ಳು ಹೇಳ್ತಿತ್ತು. ಹೀಗೆ ಸುಳ್ಳು ಹೇಳ್ಕೊಂಡು ಕೊನೆಗೆ ಗ್ಲಾಕೋಮದಿಂದ ಕುರುಡೇ ಆಯ್ತು. ಮನೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿದ್ದರಿಂದ ಎಲ್ಲ ವಸ್ತುಗಳು ಅಸ್ಪಷ್ಟವಾಗಿದ್ದರೂ ಪತ್ತೆ ಹಚ್ಚುವಷ್ಟು ಚುರುಕಾಗಿತ್ತು ಅಜ್ಜಿ. ಕೊನೆಗೆ ಅಜ್ಜಿಗೆ ಕಣ್ಣು ಕಾಣುತ್ತೋ ಇಲ್ಲವೋ ಅಂತ ಪತ್ತೆ ಹಚ್ಚಲು ನಮ್ಮ ತಂದೆ ಒಂದು ಉಪಾಯ ಮಾಡಿದ್ದರು. ಅಜ್ಜಿಯನ್ನು ಸಿನೆಮಾಕ್ಕೆ ಕರೆದುಕೊಂಡುಹೋಗಿ ಪರದೆಯ ಮುಂದೆ ಕೂರಿಸದೆ, ಹಿಂದು ಮುಂದಾಗಿ ಕೂರಿಸಿದ್ದರು. ಪ್ರೊಜೆಕ್ಟರ್ ರೂಮಿನಿಂದ ಬೆಳಕು ಬರುತ್ತಲ್ಲ, ಅದು ಅಜ್ಜಿಯ ಕಣ್ಣಿಗೆ ಕುಕ್ಕುತ್ತಿತ್ತು. ಸಂಭಾಷಣೆಗಳನ್ನು ಕೇಳಿಕೊಂಡು, `ರಾಮು, ಎಷ್ಟು ಚೆನ್ನಾಗಿ ಕಾಣ್ತಿದ್ದೀಯೋ, ಸಿನೆಮಾ ತುಂಬಾ ಚೆನ್ನಾಗಿದೆ’ ಅಂತು. ನಮ್ಮ ತಂದೆಗೆ ಅಜ್ಜಿಯ ಕಣ್ಣಿಗೆ ಏನೋ ಆಗಿದೆ ಅಂತ ಖಾತ್ರಿಯಾಗಿ ನಮ್ಮ ಡಾಕ್ಟರ್ ಚಿಕ್ಕಪ್ಪನ ಹತ್ತಿರ ಕಳಿಸಿದ್ದರು. ಆರು ತಿಂಗಳು ಅಲ್ಲಿದ್ದು ಬಂದರು, ಆದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಜ್ಜಿ ಸಿನೆಮಾನೇ ನೋಡದೆ ನೋಡಿದೆ ಅಂತ ಹೇಳಿಕೊಂಡ ಹಾಗೆ ನಮ್ಮ ಕಾಳ ಗ್ರಹಣ ನೋಡದೆ ನೋಡಿದೆ ಅಂದ! ನೀವವನನ್ನು ಕ್ಷಮಿಸಬೇಕು ಅಷ್ಟೇ. + +ಇವತ್ತು ಬೆಳಗ್ಗೆ ಕಾಳನನ್ನು ವಾಕ್ ಕರೆದೊಯ್ಯುವಾಗ ನಿನ್ನೆ ನೋಡಿದ `ಬೆಂಗಳೂರು ನಾಗರತ್ನಮ್ಮ’ ನಾಟಕದ ಬಗ್ಗೆ ಹೇಳಿದೆ. ಎರಡು ಕಾರಣಕ್ಕೆ ಅದರ ಬಗ್ಗೆ ಕುತೂಹಲ ಇತ್ತು. ಒಂದು: ಬೆಂಗಳೂರು ನಾಗರತ್ನಮ್ಮನ ಬಗ್ಗೆ ಚಿಕ್ಕಂದಿನಿಂದ ಕೇಳಿರುವ ವಿಷಯಗಳು. ಎರಡು: ನಾಟಕ ರೂಪಕ್ಕೆ ತರುವ ಕೆಲಸವನ್ನು ಪ್ರತಿಭಾ ಮಾಡಿದ್ದಾರೆ ಎನ್ನುವುದು. ಊರಿನಲ್ಲಿದ್ದಾಗ ಅಣ್ಣ ನನಗೆ ಈ ವಿಷಯವನ್ನೆಲ್ಲ ಹೇಳಿದ್ದರು. ಅಣ್ಣನಿಗೆ ತುಂಬಾ ಮೆಚ್ಚುಗೆಯಾಗಿದ್ದ ಜಾವಳಿ ಅಂದರೆ ಬೆಂಗಳೂರು ನಾಗರತ್ನಮ್ಮ ನರಹರಿರಾಯರ ಮೇಲೆ ಬರೆದಿದ್ದ `ಮಾತಾಡಬಾರದೇನೋ ಮಾರಮಣನೇ’ . ಅದನ್ನಂತೂ ಅಣ್ಣ ಸೊಗಸಾಗಿ ಹಾಡ್ತಿದ್ದರು. ನಾನು ನೃತ್ಯ ಕಲಿಯುವಾಗ ಮೇಷ್ಟ್ರಿಗೆ ಈ ಜಾವಳಿಯನ್ನು ಹೇಳಿಕೊಡಿ ಅಂತ ಹೇಳಿದ್ದೆ. ನಮ್ಮ ಮೇಷ್ಟ್ರು ಕೋಲಾರ ಕಿಟ್ಟಣ್ಣನವರ ಪರಂಪರೆಯವರು. ಬೆಂಗಳೂರು ನಾಗರತ್ನಮ್ಮ ಕೂಡ ಅದೇ ನೃತ್ಯ ಪರಂಪರೆಯವರು ಅಂತ ಹೇಳ್ತಿದ್ದರು. ಹಾಗೆ ನೋಡಿದರೆ ನಮ್ಮ ಮೀನಾಕ್ಷಿ ಮೇಡಂ (ಮೇಷ್ಟ್ರು ಹೆಂಡತಿ) ನಾಗರತ್ನಮ್ಮನವರ ಮನೆಯಲ್ಲಿಯೇ ಇದ್ದು ಅವರ ಮಗಳ ಹತ್ತಿರ ಸಂಗೀತ ಕಲಿಯುತ್ತಿದ್ದೆ ಎಂದು ತರಗತಿಯಲ್ಲಿ ಹೇಳಿದ ನೆನಪು. ಒಟ್ಟಿನಲ್ಲಿ ಕಮಾಚ್ ರಾಗದಲ್ಲಿ ಆ ಜಾವಳಿಯನ್ನು ಮೇಷ್ಟ್ರು ಆರಂಭಿಸಿದ್ದರು. ಅದು ಪೂರ್ತಿ ಮಾಡಿದೆನೋ ಇಲ್ಲವೋ ನೆನಪಿಲ್ಲ. `ನನ್ನ ಕಾಲೇಜಿನ ಕೆಲಸ, ಬಸಿರು, ಬಾಣಂತನ ಇತ್ಯಾದಿಗಳಲ್ಲಿ ಒಂದನ್ನು ನೆಟ್ಟಗೆ ಮಾಡಲಿಲ್ಲ ಕಾಳ’ ಎಂದು ಗೋಳು ಹೇಳ್ಕೊಂಡೆ. + +ಇವತ್ತು ವಾಕಿಂಗ್ ನಲ್ಲಿ ಬರೀ `ಕನ್ನಡ ಜಾವಳಿ’ಗಳ ನೆನಪೇ! ಅಷ್ಟು ಹೊತ್ತಿಗೆ ದಾರಿಯಲ್ಲಿ ಸುಂದರಿ `ಜುಮ್ಮಿ’ ಸಿಕ್ಕಿದ್ದಳು. ಕಾಳ ಅದ್ಯಾಕೋ ಅವಳನ್ನು ಕ್ಯಾರೇ ಅನ್ನಲಿಲ್ಲ. ಹಿಂದೆ ಹಿಂದೆ ತಿರುಗಿ ಇವನನ್ನು ನೋಡಿಕೊಂಡು ಹೋಗುತ್ತಿದ್ದರೆ ಜಾವಳಿಗಳ ಲೋಕದಲ್ಲಿ ಸಿಲುಕಿದ್ದ ನಾನು, `ಪ್ರೀತಿ ತೋರಿದ ಪ್ರಾಣ ಕಾಂತೆಯೊಡನೆ ಬಂದು ಮಾತಾಡಬಾರದೇನೋ ಮಾರಮಣನೇ’ ಎಂದು ಕಾಳನನ್ನು ಬೈದೆ. `ಜಾಣ ನಿನ್ನಯ ಮುಖವನು ಕಾಣದೆ ಪ್ರಾಣವು ನಿಲ್ಲದು ಅರಗಳಿಗೆ’ ಎನ್ನುತ್ತಾ ಪಾಪ ಅವಳು ಹೋದಳು. `ನೋಡ್ತಾ ಇರು, ಪ್ರಾಣನಾಥ ಬಾರದೆ ಹೋದ, ಪ್ರಿಯ ಸಖನ ಕರತಾರೆ’ ಅಂತ ಈಗ ಯಾವುದಾದರೂ ನಾಯಿಯನ್ನು ಜುಮ್ಮಿ ಕಳಿಸ್ತಾಳೆ ಅಥವಾ `ಸಾಕೋ ನಿನ್ನ ಸ್ನೇಹ-ಸರಸ ಇನ್ಯಾತಕೆ’ ಎಂದು ನಿನ್ನನ್ನು ಉಗಿದು ಅಟ್ಟುತ್ತಾಳೆ ಅಂತ ಕಾಳನಿಗೆ ಹೇಳಿದೆ. `ನಿನಗೆ ಜಾವಳಿ ಹುಚ್ಚು ಹಿಡಿದಿದೆ ಅಂತ ನನ್ನ ಹತ್ತಿರ ನಿನ್ನ ಪಾಂಡಿತ್ಯ ತೋರಿಸಬೇಡ’ ಅಂತ ಕಾಳ ದುರುಗುಟ್ಟಿ ನಡೆದ. + + + +ನಾವಿಬ್ಬರೂ ಹೀಗೆ ಮೈಮರೆತು ರಸ್ತೆಯ ಎಡಬದಿಯಲ್ಲಿ ಹೋಗಬೇಕಾದರೆ ಬಲಬದಿಯಲ್ಲಿದ್ದ ಇಬ್ಬರು ವಯಸ್ಸಾದ ಹೆಂಗಸರು ಕಿರುಚಿಕೊಂಡರು. ತಿರುಗಿ ನೋಡಿದರೆ ಅಲ್ಲೊಬ್ಬ ಸರಿಯಾಗಿ ಸ್ಕೂಟರ್ ಹೊಡೆಯಲು ಬಾರದವನು ಅವರ ಮೇಲೆ ಹೆಚ್ಚೂ ಕಡಿಮೆ ಬಿದ್ದೇ ಹೋಗಿದ್ದ ಸ್ಕೂಟರ್ ಮೇಲೆ ಎತ್ತುತ್ತಿದ್ದ. ಆ ಚಾಲಾಕಿ ಹೆಣ್ಣುಮಕ್ಕಳು ಅವನನ್ನು ಬೈಯದೆ, `ಹೋಗಲಿ ಬಿಡಪ್ಪ, ನಿಂದೇನು ತಪ್ಪಿಲ್ಲ. ಆ ಕಡೆ ನಿಂತಿದ್ದ ಕರಿನಾಯಿ ನೋಡಿ ಹೆದರಿಬಿಟ್ಟೆ ಪಾಪ’ ಎಂದು ಅವನ ತಪ್ಪನ್ನು ಎತ್ತಿ ಕಾಳನ ಮೇಲೆ ಹಾಕಲು ನೋಡಿದರು. ನನಗೆ ನಖಶಿಖಾಂತ ಉರಿದುಹೋಯಿತು. ತೇಜಸ್ವಿಯವರ `ಕೃಷ್ಣೇ ಗೌಡನ ಆನೆ’ ಯಲ್ಲಿ ಇದ್ದಬದ್ದವರೆಲ್ಲ ಆನೆಯ ಮೇಲೆ ತಪ್ಪು ಹೊರಿಸೋ ಹಾಗೆ ಕಾಳನ ಮೇಲೆ ಹೊರಿಸೋದಕ್ಕೆ ಬರ್ತಿದ್ದಾರೆ. `ವಯಸ್ಸಾಗಿದೆ ನಿಮಗೆ ಪಾಪ, (ನಾನು ಬಹಳ ಚಿಕ್ಕವಳು ಅನ್ನುವ ಹಾಗೆ) ಸ್ವಲ್ಪ ನೋಡಿಕೊಂಡು ನಡೀರಿ. ಇವತ್ತು ಸ್ಕೂಟರ್ ಮೈಮೇಲೆ ಬೀಳ್ತಿತ್ತು. ನಾಳೆ ಲಾರಿಯೇ ಮೈಮೇಲೆ ಬಿದ್ದರೆ ಏನ್ಮಾಡ್ತೀರಾ’ ಎಂದು ನಗುತ್ತಲೇ ಅಪಹಾಸ್ಯ ಮಾಡಿದೆ. + +ಅಷ್ಟು ಹೊತ್ತಿಗೆ ನಮ್ಮ ಪ್ರಸಾರ ಕೀರ್ತಿ, `ಸಾರಸಾಕ್ಷಿ ಸಖನು ಎಲ್ಲಿ? ಸರಸದಿಂದೆಲ್ಲಿರುವನೋ?’ ಎಂದು ಕಾಳನನ್ನು ಹುಡುಕಿಕೊಂಡು ಬಂದಳು. ಅಂಡಾವುಂಡಿ ನಾಯಿಗಂತೂ ಕಾಳನ ಮೇಲೆ ವಿಪರೀತ ಪ್ರೇಮ. `ವಿರಹವು ಹೆಚ್ಚಿ ಪ್ರಾಯವು ವ್ಯರ್ಥವಾಗಿ ಹೋಯಿತಲ್ಲೇ’ ಎಂದು ಹಾಡಿಕೊಂಡೇ ಬಂದಳು. ಈ ಅಂಡಾವುಂಡಿ ಒಂದು ತಿಂಗಳ ಹಿಂದೆ ಹತ್ತು ಮರಿಗಳನ್ನು ಅದೆಲ್ಲೋ ಹಾಕಿ, ಓಡಾಡುತ್ತಿದ್ದಳು. ಸದ್ಯ, ಹೋದ ಸಲದ ತರಹ ನಮ್ಮ ಮನೆಯ ಮುಂದೆ ತಂದು `ರೋದನೆ’ ಕೊಡಲಿಲ್ಲ ಅಂತ ಸಂತೋಷವಾಗಿದ್ದೆ. ಆದರೆ ನಿನ್ನೆ ರಾತ್ರಿ `ಅವನೇ ಶ್ರೀಮನ್ನಾರಾಯಣ’ ಸಿನೆಮಾ ನೋಡ್ಕೊಂಡು ರಾತ್ರಿ ಒಂದು ಗಂಟೆಗೆ ಮನೆಗೆ ಬಂದರೆ ನಮ್ಮ ಮನೆಯ ಮುಂದಿನ ಚರಂಡಿಯಲ್ಲಿ ಎರಡು ನಾಯಿಮರಿಗಳು ಕುಯ್ಯೋ ಮರ್ರೋ ಎನ್ನುತ್ತಿವೆ. ಒಂದು ಚಿಪ್ಪಿನಲ್ಲಿ ಹಾಲಿಟ್ಟು `ದರಿದ್ರದವಳು, ನಮ್ಮ ಮನೆಯ ಮುಂದೆ ನಾಯಿ ಮರಿ ತಂದಿಟ್ಟರೆ ಊಟ ಹಾಕ್ತಾರೆ ಅಂತ ಕಂಡುಕೊಂಡಿದ್ದಾಳೆ. ನಾಳೆಯಿಂದ ಇವು ಸತ್ತರೂ ಹಾಲು ಹಾಕೋದಿಲ್ಲ’ ಅಂತ ಬೈಕೊಂಡು ನಿದ್ದೆ ಮಾಡಿದೆ. + + + +ಬೆಳಗ್ಗೆ ಎದ್ದು ನೋಡಿದರೆ ನಾಯಿಮರಿಗಳು ಕಾಣಲಿಲ್ಲ. ನಿಟ್ಟುಸಿರು ಬಿಟ್ಟು ಕಾಳನನ್ನು ವಾಕಿಂಗ್ ಕರೆದುಕೊಂಡು ಬಂದರೆ ಬಾಲ ಅಲ್ಲಾಡಿಸಿಕೊಂಡು ಬಂದು ಜಾವಳಿಯ ಅಭಿನಯ ಮಾಡ್ತಿದ್ದಾಳೆ! ‘ನಿನ್ನ ಮಾರಮಣ ಮಾತಾಡೋದಿಲ್ಲ ತೊಲಗೆ’ ಎಂದು ಉಗಿದು ಬಂದೆ. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_266.txt b/Kenda Sampige/article_266.txt new file mode 100644 index 0000000000000000000000000000000000000000..801a11359d3ca6fae9923b5c8d7677b7cdfb39b7 --- /dev/null +++ b/Kenda Sampige/article_266.txt @@ -0,0 +1,35 @@ +byಕಾ.ಹು. ಚಾನ್ ಪಾಷ|Jun 7, 2020|ವಾರದ ಕಥೆ,ಸಾಹಿತ್ಯ| 4 Comments + +“ಮೇಕೆಗಳ ಮೇಲೆ, ಜಂತುಗಳ ಮೇಲೆ, ಮನುಷ್ಯರ ಮೇಲೆ ಮೊದಲಿನಿಂದಲೂ ಯಾವುದರ ಮೇಲೂ ಪ್ರೀತಿಯಿಲ್ಲ ಯಾಖುಬ್ ಮಿಯಾನಿಗೆ. ಗಂಡಸೆಂಬ ಒಂದೇ ಒಂದು ಅಹಂ. ಯಾವುದೇ ಬದಲಾವಣೆಯಿಲ್ಲದ ತನ್ನ ವೃತ್ತಿಯ ಹಾಗೆ ಮನೆ ಸಹ ನಡೆಯುತ್ತದೆ ಎಂದುಕೊಳ್ಳುತ್ತಾನೆ ಅವನು..” + +byಕೆಂಡಸಂಪಿಗೆ|Jun 1, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಅಷ್ಟೆಲ್ಲ ನಡೆದಿದ್ದರೂ ಇಷ್ಟು ದಿನ ಕಷ್ಟವೋ ಸುಖವೋ ಅವನನ್ನೇ ಮದುವೆಯಾಗೋದು ಅನಿಸುತ್ತಿತ್ತು, ಆದರೆ ಈ ಕ್ಷಣ ಯಾಕೋ ಇನ್ನೊಮ್ಮೆ ನನ್ನೊಳಗನ್ನೇ ನಾನು ಕೆದಕಿಕೊಂಡಾಗ ಏನಿದು ಅರ್ಥವಾಗದ ಮಿಸುಗಾಟ? ನೆನಪುಗಳಿಗೆಲ್ಲ ಯಾಕೆ ಮುಳ್ಳುಗಳೇ ಏಳುತ್ತಿವೆ?” + +byಡಾ. ಬಿ. ಜನಾರ್ದನ ಭಟ್|May 31, 2020|ವಾರದ ಕಥೆ,ಸಾಹಿತ್ಯ| 0 Comments + +“ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು…” + +byಕೆಂಡಸಂಪಿಗೆ|May 25, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ – ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ..” + +byಸಚೇತನ ಭಟ್|May 24, 2020|ವಾರದ ಕಥೆ,ಸಾಹಿತ್ಯ| 0 Comments + +“ಕತೆಯನ್ನು ಬರೆದು ಮುಗಿಸಿದ ತಕ್ಷಣ ಅವನು ‘ಕೀರಿ’ಗೆ ಫೋನಾಯಿಸಿದ. ಬಹುಶಃ ಕತೆಯನ್ನು ಅವಳು ಕೇಳಲು ಉತ್ಸುಕಳಾಗಿರಬಹುದು. ಹಾಗೆ ನೋಡಿದರೆ ಕತೆ ಈ ರೀತಿ ತಿರುವು ಪಡೆಯಲು ಒಂದು ರೀತಿಯಲ್ಲಿ ಅವಳೇ ಪ್ರೇರಣೆಯಾಗಿದ್ದಳು. ಆದರೆ ಅವನ ಕರೆ ಅವಳಿಗೆ ತಲುಪಲಿಲ್ಲ. ಪ್ರತಿ ಬಾರಿ ಕರೆ ಮಾಡಿದಾಗಲೂ…” + +byಶ್ರೀದೇವಿ ಕೆರೆಮನೆ|May 18, 2020|ದಿನದ ಪುಸ್ತಕ,ಸಾಹಿತ್ಯ| 4 Comments + +“ಕನ್ನಡದ ಮಕ್ಕಳ ಕಥೆಗಳು ಇನ್ನೂ ವಿಚಿತ್ರ ಹಂತದಲ್ಲೇ ನಿಂತುಬಿಟ್ಟಿದೆ. ಬಹುತೇಕ ಮಕ್ಕಳ ಕಥೆಗಳು ಎಂದು ಸಾರ್ವಜನಿಕ ಗ್ರಂಥಾಲಯವನ್ನು ತುಂಬುವ ಪುಸ್ತಕಗಳಲ್ಲಿ ಅದೇ ಹಳೆಯ ಸಿದ್ಧ ಮಾದರಿಯ ಏಳು ಸುತ್ತಿನ ಮಲ್ಲಿಗೆಯ ತೂಕದ ರಾಜಕುಮಾರಿ, ಏಳು ಕೋಟೆಯ ರಾಜಕುಮಾರರ ವಿವರಣೆಗಳೇ ತುಂಬಿರುತ್ತವೆ. ಆದರೆ ಉಳಿದ ಭಾಷೆಗಳಲ್ಲಿ ಮಕ್ಕಳ ಕಥೆಗಳ ಆಯಾಮ ಬದಲಾಗಿ ದಶಕಗಳ ಸನಿಹಕ್ಕೆ ಬಂದಿದೆ…” + +byಡಾ. ಬಿ. ಜನಾರ್ದನ ಭಟ್|May 17, 2020|ವಾರದ ಕಥೆ,ಸಾಹಿತ್ಯ| 0 Comments + +“ರಕ್ತದ ಒಣ ಹುಡಿಯ ಬೊಟ್ಟನ್ನಿಟ್ಟುಕೊಳ್ಳುವ ಆಪತ್ತಿನ ವೇಳೆ ಢಾಕಿನಿ ಗಾಂಧಿಯವರ ಮೇಲೆ ನಂಜು ಕಾರಿದುದು ವಿಶೇಷವಿಲ್ಲ . ಅಹಿಂಸಾ ಪರಮೋ ಧರ್ಮ ಮಂತ್ರೋಪಾಸಕಾರದ ಗಾಂಧೀಜಿಯವರ ಮಾಟದಿಂದಾಗಿ ಭಾರತವೂ ರಕ್ತ ಶೂನ್ಯವಾಯಿತೆಂದೇ ಹೇಳಬೇಕು. ಆದರೂ ವರುಷಕ್ಕೊಮ್ಮೆ ನವರಾತ್ರಿಯಲ್ಲಿ ಆಯುಧಪೂಜೆಯೆಂಬುದೊಂದು ನಡೆಯುತ್ತಿದೆ.” + +byಕಲ್ಲೇಶ್ ಕುಂಬಾರ್|May 11, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಒಂದು ಚಿಟಿಕೆ ಮಣ್ಣು’ ಕಥೆ, ಇಡಿಯಾಗಿ ಭೂಮಿಯನ್ನು ಕಾಂಕ್ರೀಟ್ ಕಾಡಾಗಿಸುವುದರ ಮೂಲಕ ಅದರ ಸ್ವರೂಪವನ್ನು ವಿಕಾರಗೊಳಿಸುತ್ತಿರುವ ಮನುಷ್ಯನ ಸ್ವಾರ್ಥ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿ ಬರುವ ಕಲ್ಲಪ್ಪನಿಗಿರುವ ಮಣ್ಣು ತಿನ್ನುವ ಹವ್ಯಾಸದ ಮೂಲಕ ಅನ್ನ ಬೆಳೆಯುವ ಭೂಮಿಯ ಮಹತ್ವವನ್ನು ಕಥೆಗಾರ ಸಾರುತ್ತಾನೆ. ಇಂಚಿಂಚೂ..” + +byಎಚ್ ಆರ್ ರಮೇಶ್|May 10, 2020|ವಾರದ ಕಥೆ,ಸಾಹಿತ್ಯ| 0 Comments + +“ಅಂಗಳದಲ್ಲಿ ಒಬ್ಬನೇ ಕೂತು ಆಕಾಶ ನೋಡುತ್ತಿದ್ದ ಅವನ ಮುಖದಮೇಲೆ ನಿಧಾನವಾಗಿ ಹಾಲು ಮತ್ತು ಜೇನುಗಳ ಮಿಶ್ರ ಬಣ್ಣದಂತ ಕಾಂತಿ ಹರಡಿಕೊಂಡಿತು. ಅವನೂ ಸಹ ಇದ್ದಕ್ಕಿದ್ದಹಾಗೆ ತಣ್ಣನೆ ರಣಗಳು ಸೋಕಿದುದಕೆ ರೋಮಾಂಚಿತನಾಗಿ ಬಲಗಡೆ ತಿರುಗಿದ. ಅಂದು ಬುದ್ಧ ಪೂರ್ಣಿಮೆಯಾಗಿದ್ದುದರಿಂದ ಚಂದ್ರ ಹೊಳೆಯುತ್ತಿದ್ದ. ಆ ಕಡೆ ಮುಖ ಮಾಡಿ…” \ No newline at end of file diff --git a/Kenda Sampige/article_267.txt b/Kenda Sampige/article_267.txt new file mode 100644 index 0000000000000000000000000000000000000000..5d62d4e95c7951e6abdcca861fde2cc016b475ab --- /dev/null +++ b/Kenda Sampige/article_267.txt @@ -0,0 +1,45 @@ + + +ಗಿರಿಜೆಯದು ಚಿಕ್ಕ ಸಂಸಾರ. ಅವಳ ಗಂಡ ಗಿರಿಯನು ಸಾಯುವ ಕಾಲಕ್ಕೆ ಇಪ್ಪತ್ತು ವರುಷ ಪ್ರಾಯದ ತನಗೊಪ್ಪಿಸಿ ಹೋಗಿದ್ದ ಒಂದು ವರುಷದ ಕರಿಯನನ್ನು ಐದು ವರುಷಗಳವರೆಗೆ ಸಾಕಿ ಆರು ವರುಷಕ್ಕೆ ತಂದಿಟ್ಟಿದ್ದಳು. ಚಿಕ್ಕ ಸಂಸಾರವಾದರೂ ಚೊಕ್ಕವಾಗಿ ಸಾಗುತ್ತಿತ್ತು. ಗಿರಿಜೆಯದು ಸರಳ ಮನಸ್ಸು. ಅವಳಂತಹ ವಿಧವೆಯರು ಸಮಾಜದ ಕಟ್ಟಳೆಗೆ ಬೆದರಿ ವಿವಾಹವಾಗದೆ ಉಳಿಯುತ್ತಿದ್ದರೆ ಅವಳು ಸತ್ತು ಸ್ವರ್ಗದಲ್ಲಿರುವ ಗಿರಿಯನು ಎಲ್ಲಿ ತನ್ನ ಮೇಲೆ ಸಿಟ್ಟುಗೊಳ್ಳುವನೋ ಎಂದು ಹೆದರಿ ಮದುವೆಯಾಗದೆ ಉಳಿದಿದ್ದಳು. + +ಸನ್ನಿವೇಶವು ಹಲವು ಬಾರಿ ಕದಡಿಸುವುದಿತ್ತು ಅವಳ ನಿರ್ಧಾರವನ್ನು. ಆದರೆ ಅದೊಂದು ಕ್ಷಣ ಮಾತ್ರ. ‘ನೀರೆಳೆಯಲು ಹೋಗುವ, ಬಾ ಗಿರಿಜಾ’ ಎಂದು ಗಿರಿಯನಾಡುತ್ತಿದ್ದ ತುಂಬ ಪ್ರೇಮದ ಮಾತನ್ನು ಜ್ಞಾಪಿಸಿಕೊಂಡೊಡನೆ ಅದು ಮಾಯವಾಗುತ್ತಿತ್ತು; ನಿರ್ಧಾರವು ಮತ್ತಷ್ಟು ಗಟ್ಟಿಯಾಗುತ್ತಿತ್ತು. ‘ಗಿರಿಜಾ… ನನ್ನ ಕುಡಿಯನ್ನು ನೀರೆರೆದು ಕಾಪಾಡು’ ಎಂದು ಪ್ರಾಣೋತ್ಕೃಮಣ ಕಾಲದಲ್ಲಿ ಗಿರಿಯನಾಡಿದ್ದ ಅಂತಿಮೋಕ್ತಿಯನ್ನೂ ಅದರ ಭಾವಾರ್ಥವನ್ನೂ ಅವಳು ಸಾಯುವ ತನಕ ಮರೆಯಲಾರದವಳಾಗಿದ್ದಳು. ಗಿರಿಜೆಗೆ ಅವಳ ತಾಯಿ ಗಳಿಸಿಟ್ಟಿದ್ದ ಆಸ್ತಿಯೆಂದರೆ ಗಂಡ – ಗಿರಿಯ. ಗಂಡನು ಮಾಡಿಕೊಟ್ಟಿದ್ದ ಬದುಕೆಂದರೆ ಮಗ – ಕರಿಯ. ತನ್ನ ಧನಿಯಾದ ರಾಯರ ಮನೆಯಲ್ಲಿ ಕೂಲಿ ಕೆಲಸ ಮಾಡಿ ಮುಸುರೆ ತೊಳೆದು ದಿನಕ್ಕೆರಡು ಪಾವು ಅಕ್ಕಿ, ರಾಯರ ಮನೆಯವರುಂಡುಳಿದ ಒಂದು ಮುಷ್ಟಿ ಅನ್ನ, ಇದಿಷ್ಟರಿಂದ ಸುಖವಾಗಿ ಸಂಸಾರ ಸಾಗಿಸುತ್ತಿದ್ದಳು. + +****** + +ವಿಶ್ವದೆಲ್ಲೆಡೆಯಲ್ಲೂ ಯುದ್ಧ – ಯುದ್ಧವೆಂಬ ಭಯಂಕರ ಕೂಗು ಹಬ್ಬಿತ್ತು. ಮುಡಿಗಳ ಮೇಲೆ ಮುಡಿಗಳನ್ನು ಕಟ್ಟಿ ಹಾಕಿ ಕಾಳಸಂತೆ ಮಾಡುತ್ತಾ ತನಿಖೆಗೆ ಬಂದಲ್ಲಿ ಕಾಡುಪೊದೆಗಳಲ್ಲಿ ಅಡಗಿಸಿಟ್ಟು ಬಡಜನರ ಗೋಣ್ಮುರಿಯುವ ಬಂಡವಾಳಶಾಹಿಗಳ ಬಾಯಿಯಿಂದಲೂ, ಬಂಗಾಲದಂತಹ ಬರಗಾಲವು ಬಂದು ಕಂಗಾಲು ಮಾಡಬಹುದಾದ ದುಸ್ಥಿತಿಯಿಂದಲೂ ಬಡಜನರನ್ನು ತಪ್ಪಿಸಲಿಕ್ಕೋಸುಗ ಎಲ್ಲೆಲ್ಲೂ ದೇಶರಕ್ಷಣಾ ಕಾನೂನುಗಳು ಹೊರಬಿದ್ದಿದ್ದುವು; ಹಸುಗೆ ಕಾರ್ಡುಗಳು ಹೊರಟ್ಟಿದ್ದುವು. ಈ ಕ್ರಮದಿಂದ ಗಿರಿಜೆಗೆ ರಾಯರ ಮನೆಯಲ್ಲಿ ದೊರೆಯುತ್ತಿದ್ದ ಪಾವಕ್ಕಿ – ಮುಷ್ಟಿ ಅನ್ನಕ್ಕೆ ಧಕ್ಕೆ ತಗಲಿತು. ಎಲ್ಲಾ ಬಡವರಂತೆ ಅವಳಿಗೂ ಹಸುಗೆಯ ಕಾರ್ಡು ಸಿಕ್ಕಿತ್ತು. ಸಿಕ್ಕಿದುದನ್ನು ಕುದಿಸಿ ತಿಳಿಯನ್ನು ತಾನು ಕುಡಿದು ಅನ್ನವನ್ನು ಕರಿಯನಿಗಿಕ್ಕಿ ತೃಪ್ತಳಾಗಿದ್ದಳು. ಯುದ್ಧ, ಹಿಟ್ಲರ್, ಜರ್ಮನಿ, ರೇಶನ್, ಕಂಟ್ರೋಲು ಮೊದಲಾದ ನವಪದಗಳನ್ನು ಅವಳೂ ಕೇಳಿದ್ದಳು. + +****** + +ಅವಳ ಧನಿರಾಯರು ಗ್ರಾಮದ ಆಢ್ಯ ಸದ್ಗೃಹಸ್ಥರು. ಮೊನ್ನೆ ತಾನೇ ಅವರನ್ನು ಗ್ರಾಮದ ‘ಫುಡ್ ರಿಲೀಫ್ ಕಮಿಟಿ’ಯ ಕಾರ್ಯದರ್ಶಿಯನ್ನಾಗಿ ಅಧಿಕಾರಿಗಳು ಆರಿಸಿದ್ದರು. ರಾಯರಿಗೆ ಗಿರಿಜೆಯಂತಹ ಬಿಡುಒಕ್ಕಲುಗಳು ಮಾತ್ರವಲ್ಲದೆ ಎರಡೂವರೆ ಕೋರ್ಜಿವರೆಗೆ ಗೇಣಿ ಕೊಡುವ ಚಾಲಗೇಣಿ ಒಕ್ಕಲುಗಳು ಇದ್ದರು. ಗೇಣಿಯನ್ನು ಆದಷ್ಟು ಬೇಗನೆ ವಸೂಲು ಮಾಡಿ, ಕಾರ್ತಿ ತಿಂಗಳಾರಂಭದಿಂದ ಕನ್ಯಾ ತಿಂಗಳಾಂತ್ಯದವರೆಗೂ ಒಕ್ಕಲುಗಳಿಗೆ ಅಕ್ಕಿಯನ್ನು ಸಾಲ ಕೊಟ್ಟು, ಒಂದಕ್ಕೆ ಎರಡರಂತೆ ವಸೂಲು ಮಾಡುತ್ತಿದ್ದ ರಾಯರು, ಕೇಳಿದರೆ ಕುಬೇರನಿಗೂ ಕೈಕಡ ಕೊಡಲು ಶಕ್ತರಿದ್ದರು. ಅವರ ಪತ್ನಿ ಶ್ರೀಮತಿಯವರು ಮಾಳಿಗೆ ಮೆಟ್ಟಲುಗಳಿಂದ ಕೆಳಗಿಳಿಯುವುದು, ಗಿರಿಜೆಯು ಮಾಳಿಗೆ ಮೆಟ್ಟಿಲುಗಳನ್ನು ಹತ್ತುವಷ್ಟೇ ಅಪರೂಪವಾಗಿ. ಒಮ್ಮೊಮ್ಮೆ ‘ಅಮ್ಮನವರು ಬಿಸಿಲನ್ನು ಕಾಣಬಾರದು ತಾನು ನೆರಳನ್ನು ನೋಡಬಾರದು. ಇದಾವ ನ್ಯಾಯ?’ ಎಂದು ಗಾಳಿ ಬಿಸಿಲೆನ್ನದೆ ಗೇಯುವಾಗ ಅವಳೆಣಿಸುವುದಿತ್ತು. ‘ಛೆ, ಇದು ಬರಿಯ ಭ್ರಮೆ; ಹೀಗೆ ಯೋಚಿಸುತ್ತಾ ಕುಳಿತರೆ ತಾನೇನಾದರೂ ಅವರಂತಾಗಬಹುದೇ’ ಎಂದು ಅವಳೇ ಅವಳಷ್ಟಕ್ಕೆ ಸಮಜಾಯಿಸಿಕೊಳ್ಳುವುದೂ ಇತ್ತು. + +****** + +ಎಂದಿನಂತೆ ಅಂದು ಕೂಡಾ ಗಿರಿಜೆಯು ರಾಯರಲ್ಲಿ ಕೆಲಸಕ್ಕೆ ಹೋಗಿದ್ದಳು. ಬೆಳಗ್ಗಿನಿಂದ ಸಾಯಂಕಾಲದ ತನಕ ಕಛೇರಿಯ ಜಗಲಿಯಲ್ಲಿ, ವಕೀಲರ ಬೈಠಾಕಿನಲ್ಲಿ, ಜಮೀನ್ದಾರರ ಸಭೆಯಲ್ಲಿ ಕಾಲಕಳೆಯುತ್ತಿದ್ದ ರಾಯರು ಅಂದು ಬೇಗನೆ ಹಿಂದಿರುಗಿದುದನ್ನು ಕಂಡು ಎಲ್ಲರಿಗೂ ಆಶ್ಚರ್ಯವಾಯಿತು. ರಿಕ್ವಿಜಿಶನ್ ಅಧಿಕಾರಿಗಳು ನಾಳೆ ಗ್ರಾಮಕ್ಕೆ ತನಿಖೆಗೆ ಬರುವರೆಂಬ ಗುಪ್ತವಾರ್ತೆಯೇ ಅವರ ಬರೋಣಕ್ಕೆ ಕಾರಣವಾಗಿತ್ತು. ಅಧಿಕಾರಿಗಳು ತಮ್ಮಂಥವರ ಮಾಳಿಗೆ ಮನೆಗಳನ್ನು ಮಾತ್ರ ಜಡ್ತಿ ಮಾಡುವರಲ್ಲದೆ ಗಿರಿಜೆಯರಂತಹ ಜೋಪಡಿಗಳಿಗೆ ಬಗ್ಗಿಕೊಂಡು ನುಗ್ಗಲಾರರೆಂದು ಅವರು ತಿಳಿದಿದ್ದರು. ತಮ್ಮಲ್ಲಿರುವ ಅಕ್ಕಿಯು ಅಧಿಕಾರಿಗಳ ಕಣ್ಣಿಗೆ ಬಿದ್ದರೆ ತಾನು ಕಷ್ಟನಷ್ಟಗಳಿಗೆ ಗುರಿಯಾಗಬೇಕಾದೀತೆಂದೂಹಿಸಿ, ಇದನ್ನು ತಪ್ಪಿಸಲು ಗಿರಿಜೆಯ ಜೋಪಡಿಯಲ್ಲಿ ಕೆಲವು ಮುಡಿಗಳನ್ನು ಬಚ್ಚಿಡುವುದೆಂದು ವಕೀಲರ ಹಾಗೂ ಕೆಲವು ಅನುಭವಶಾಲಿಗಳ ಸೂಚನೆ ಮೇರೆಗೆ ರಾಯರು ನಿರ್ಣಯಿಸಿದ್ದರು. + +ಪಾಪ, ಹಳ್ಳಿಯ ಹೆಂಗಸಿಗೆ ರೇಶನ್ ಕಾರ್ಡನ್ನು ಉಪಯೋಗಿಸುವವರ ಮನೆಯಲ್ಲಿ ಅಕ್ಕಿ ದಾಸ್ತಾನಿರಬಾರದೆಂಬ ಕಾನೂನೇನು ಗೊತ್ತು? ಗಿರಿಜೆಯು ಒಪ್ಪಿದಳು. ಧನಿಯು ಹೇಳುವಾಗ ಅಲ್ಲವೆನ್ನಲಾಗುವುದೆ? ಒಕ್ಕಲು ಹೋಗು ಎಂದರೆ? ರಾಯರು ಮಾತು ಮುಂದುವರಿಸಿ ‘ಒಂದು ವೇಳೆ ಮುಡಿಗಳು ಅಧಿಕಾರಿಗಳ ಕಣ್ಣಿಗೆ ಬಿದ್ದರೆ ನಿನ್ನವೇ ಎಂದು ಹೇಳಿಬಿಡು’ ಎಂದು ಬುದ್ಧಿವಾದ ಹೇಳಿದರು. ಗಿರಿಜೆಯು ಒಪ್ಪಿಕೊಂಡು ಗಿರಿಯನಾಣೆ ಹಾಕಿ ಮಾತುಕೊಟ್ಟಳು. + + + +ಸುಮಾರು ಅರ್ಧರಾತ್ರಿಯ ಸಮಯ, ಜನರಿಗಿರುವಂತೆ ನಿದ್ದೆ – ಚಳಿಗಳಿಗೆ ಬಡವ ಬಲ್ಲಿದರೆಂಬ ಭೇದವಿದೆಯೇ? ಹಗಲುಟ್ಟಿದ್ದನ್ನೇ ರಾತ್ರಿಯಲ್ಲಿ ಹೊದೆದುಕೊಂಡು ಮಲಗಿದ್ದರು, ಗಿರಿಜೆ – ಕರಿಯರು. ಗಿರಿಜೆಯ ಜೋಪಡಿಗೆ ಬಾಗಿಲಿರಲಿಲ್ಲ. ಇತ್ತ ರಾಯರು ಇದುವೇ ತಕ್ಕ ಸಮಯವೆಂದು ತನ್ನ – ಒಕ್ಕಲುಗಳಿಂದ ಹತ್ತು ಮುಡಿ ಅಕ್ಕಿಯನ್ನು ಹೊರಿಸಿಕೊಂಡು ಗಿರಿಜೆಯ ಜೋಪಡಿಗೆ ಬಂದು ಕರೆದರೆ ಸದ್ದಾಗುವುದೆಂದು ಟೋರ್ಚ್ ಹಾಕಿದರು ಒಳಗೆ. ಹಗಲೆಲ್ಲಾ ದುಡಿದು ನಿದ್ದೆಯಲ್ಲಿ ಮೈಮರೆತು ಅರ್ಧ ಬತ್ತಲೆಯಾಗಿ ಬಿದ್ದುಕೊಂಡಿದ್ದ ಗಿರಿಜೆಯನ್ನು ಕಂಡು ರಾಯರ ಮನಸ್ಸಿನ ಒಳದನಿಯೊಂದು ಏನೋ ಉಸಿರಿತು ಅವರೊಡನೆ. + +ಫಕ್ಕನೆ ಬೆಳಕು ಬೆಳಗಿದ್ದನ್ನು ಕಂಡು ಎಚ್ಚೆತ್ತು ಗಿರಿಜೆಯು ರಾಯರಾಡಿದ್ದ ಮಾತುಗಳನ್ನು ಸ್ಮರಣೆಗೆ ತಂದುಕೊಂಡು ಹಣತೆ ಹೊತ್ತಿಸಿ ಹೊರಗೆ ತಂದಿಟ್ಟಳು. ರಾಯರು ಮುಡಿಗಳನ್ನು ಜೋಪಡಿಯೊಳಗಿರಿಸಿ ಹೊರಟು ಹೋದರು. ಗಿರಿಜೆಯು ತನ್ನ ಜೋಪಡಿಯು ಮುಡಿಗಳಿಂದ ತುಂಬಿರುವುದನ್ನು ಕಂಡು ಹಿಗ್ಗಿದಳು ಆನಂದದಿಂದ. ತನ್ನ ಜೀವಮಾನದಲ್ಲಿ ಇಷ್ಟೊಂದು ಮುಡಿಗಳನ್ನು ಕೂಡಿ ಹಾಕಬಹುದೇ, ಎಂದಾಲೋಚಿಸತೊಡಗಿದಳು. ಕರಿಯನನ್ನೆಬ್ಬಿಸಿ ‘ನೋಡು ಮಗು, ನಮ್ಮ ಮನೆಯಲ್ಲಿ ಇಂದು ಎಷ್ಟು ಮುಡಿಗಳಿವೆ ನೋಡು, ನೀನು ದೊಡ್ಡವನಾದ ಮೇಲೆ ಹೀಗೆಯೇ ಮುಡಿಗಳನ್ನು ಕೂಡಿಹಾಕುವಿಯಾ?’ ಎಂದು ಕೇಳಿದಳು. ಕರಿಯನು ನಿದ್ದೆಗಣ್ಣಿನಲ್ಲಿ ಹೂಂಗುಟ್ಟಿದನು. ಗಿರಿಜೆಗೆ ಅಂಗೈಯಲ್ಲಿ ಅಮೃತವಿದ್ದಂತೆ ತೋರಿತು ಕರಿಯನ ಉತ್ತರ ಕೇಳಿ. ಮಗನನ್ನು ಮುದ್ದಿಟ್ಟುಕೊಂಡು ಹಾಗೆಯೇ ಮಲಗಿಕೊಂಡಳು. + +****** + +ಮರುದಿನ ಊರಲ್ಲೆಲ್ಲಾ ಗಲಾಟೆಯೇ ಗಲಾಟೆ! ರಿಕ್ವಿಜಿಶನ್ ಅಧಿಕಾರಿಯು ಗ್ರಾಮಾಧಿಕಾರಿಗಳೊಡನೆ ತನಿಖೆ ಮಾಡುತ್ತಾ ರಾಯರ ಮನೆಗೂ ಬಂದು ಅಲ್ಲಿಯೂ ತನಿಖೆ ನಡೆಸಿ ಅವರಲ್ಲಿದ್ದ ಎಂಟು ಮುಡಿ ಅಕ್ಕಿಯನ್ನು ಅವರ ಖರ್ಚಿಗೆಂದಿರಿಸಿ ಕಾಫಿ ಟಿಫಿನು ಮುಗಿಸಿ ಹೊರಡಲನುವಾಗಿ ಅಂಗಳಕ್ಕಿಳಿದರು. ಹಠಾತ್ತಾಗಿ ಅವರ ದೃಷ್ಟಿಯು ಜೋಪಡಿಯ ಬಳಿಯಲ್ಲಿ ನಿಂತುಕೊಂಡಿದ್ದ ಗಿರಿಜೆಯತ್ತ ಕಡೆ ತಿರುಗಿತು. ‘ಛೆ, ಅವಳೆದುರಿನಲ್ಲಿ ತನ್ನ ಅಧಿಕಾರವನ್ನು ಪ್ರದರ್ಶಿಸದಿದ್ದರೆ ತಾನು ಅಧಿಕಾರಿಯಾಗಿ ಫಲವೇನು ಬಂತು?’ ಎಂದೆಣಿಸಿ ಗ್ರಾಮಾಧಿಕಾರಿಗಳೊಡನೆ ಗಿರಿಜೆಯ ಜೋಪಡಿಯನ್ನು ಹೊಕ್ಕರು. ನೋಡುವುದೇನಿದೆ? ನಂಬಲಾರದ ನೋಟ! ಹತ್ತು ಮುಡಿಗಳು. ಗ್ರಾಮಾಧಿಕಾರಿಗಳಿಂದ ಗಿರಿಜೆಯು ಕಾರ್ಡನ್ನು ಉಪಯೋಗಿಸುತ್ತಿರುವಳೆಂದು ತಿಳಿದು ಇವಾರ ಮುಡಿಗಳೆಂದು ಕೇಳಿದರು. ಗಿರಿಜೆಗೆ ಹೆದರಿಕೆಯಿಂದ ದೇಹವು ಕಂಪಿಸತೊಡಗಿತಾದರೂ ಗಿರಿಯನಾಣೆ ಹಾಕಿದ ಬಳಿಕ ಮಾತು ತಪ್ಪುವಳೆ? ತನ್ನವೇ ಎಂದಳು. ಅಧಿಕಾರಿಯು ಮುಡಿಗಳನ್ನು ರಿಕ್ವಿಜಿಶನ್ ಮಾಡಿಸಿ, ರಾಯರ ಮನೆಯಲ್ಲಿ ಅಮಾನತಿಡಿಸಿ, ಗಿರಿಜೆಯ ಹಸುಗೆಯ ಕಾರ್ಡಿನ ನಂಬರನ್ನು ಬರೆದುಕೊಂಡು ಹೊರಟುಹೋದರು. ಇತ್ತ ರಾಯರು ಗಿರಿಜೆಗೆ ಹೆದರಬೇಡ ನಾನಿದ್ದೇನೆ ಎಂದು ಮಾತು ಕೊಟ್ಟರು. + +****** + +ಹಸುರು ಕಾರ್ಡನ್ನು ಉಪಯೋಗಿಸುತ್ತಿದ್ದು ಮನೆಯಲ್ಲಿ ಹತ್ತು ಮುಡಿ ಅಕ್ಕಿಯನ್ನು ದಾಸ್ತಾನು ಮಾಡಿದ ತಪ್ಪಿಗಾಗಿ ಗಿರಿಜೆಗೆ ನೂರೈವತ್ತು ರೂಪಾಯಿ ಜುಲುಮಾನೆ; ಜುಲುಮಾನೆ ತೆರಲು ತಪ್ಪಿದ್ದಲ್ಲಿ ಎರಡು ತಿಂಗಳ ಕಠಿಣ ಸಜೆಯೆಂದು ವಿಧಿಸಲಾಯಿತು. ಕಾಸಿಗೂ ಗತಿಯಿಲ್ಲದಾಕೆ ನೂರೈವತ್ತು ರೂಪಾಯಿಗಳನ್ನು ಎಲ್ಲಿಂದ ಕೊಡಬಲ್ಲಳು? ಅಪೀಲು ಮಾಡುವ ಸಾಮರ್ಥ್ಯ ಅವಳಲ್ಲಿದೆಯೆ? ಆದರೆ ರಾಯರು ಮಾತು ಕೊಟ್ಟಿದ್ದಾರಲ್ಲವೇ? ಅವರಿಗೋಸುಗವಲ್ಲವೇ ಅವಳು ಈ ಜುಲುಮಾನೆಗೆ ಗುರಿಯಾದುದು. ರಾಯರು ತನ್ನನ್ನು ಜೈಲು ಸೇರಲು ಬಿಡರೆಂದು ಅವಳು ನಂಬಿದ್ದಳು. ದಾರಿಯಲ್ಲಿ ಹೋಗುತ್ತಿದ್ದ ಮಾರಿಗೆ ಅವಳ ಜೋಪಡಿಯನ್ನು ತೋರಿಸಿದವರು ರಾಯರಲ್ಲವೇ? + +****** + +ರಾತ್ರಿಯ ಊಟದ ಹೊತ್ತಾಗಬಹುದು. ಶ್ರೀಮತಿಯವರು ತವರಿಗೆ ಹೋಗಿದ್ದುದರಿಂದ ರಾಯರು ಮಧ್ಯಾಹ್ನ ಮಾಡಿದ ಅಡುಗೆಯನ್ನೇ ರಾತ್ರಿಗೆ ಇಟ್ಟು ಉಂಡು ಗಿರಿಜೆಯ ಜೋಪಡಿಯತ್ತ ಬಂದರು. ರಾಯರ ಆಗಮನವು ರಾತ್ರಿ ಕಾಲದಲ್ಲಾದುದನ್ನು ಕಂಡು ಗಿರಿಜೆಯು ಶಂಕಿಸಿದಳು. ಅಂದಿನ ರಾತ್ರಿ ರಾಯರು ಟೋರ್ಚನ್ನು ಬೆಳಗಿಸಿ ಕಂಡ ದೃಶ್ಯವನ್ನು ಮರೆತಿರಲಿಲ್ಲ. ರಾಯರು ರೂಪಾಯಿಗಳನ್ನು ಕಟ್ಟಲು ಒಪ್ಪಿದರು. ಆದರೆ… ಆದರೆ ಎಂದೂ ಇಲ್ಲದ ಆ ಕಡೆಗಣ್ಣೋಟ ಆ ಹಾವಭಾವಗಳ ಅರ್ಥವೇನು? ರಾಯರ ಮಾತುಗಳು ಮೇರೆ ಮೀರಿದುವು. ಗಿರಿಜೆಯು ಅವರ ಆಶಾಂಕುರವು ಮುರಿಯುವಂತಹ ಉತ್ತರವನ್ನಿತ್ತಳು. ರಾಯರು ಅವಮಾನವನ್ನು ಸೈರಿಸಲಾರದೆ ರೂಪಾಯಿಗಳನ್ನು ಕೊಡಲಾರೆನೆಂದರು. ಗಿರಿಜೆಯು ರಾಯರ ಕಾಲುಗಳನ್ನು ಹಿಡಿದು ಬೇಡಿಕೊಂಡಳು. ನಿಷ್ಪಲ. ರಾಯರು ಎದ್ದು ಹೊರಟುಹೋದರು. + + + +ಗಿರಿಜೆಗೆ ಆಕಾಶವೇ ಕಳಚಿ ಬಿದ್ದಂತಾಯಿತು. ರಾಯರ ಮಾತಿಗೊಡಂಬಡಲೇ? ಪಾಪಕಾರ್ಯ! ಗಿರಿಯನಿಗೆ ದ್ರೋಹ!! ಅದಾಗದು. ಕಾರಾಗೃಹ ಸೇರಲೆ? ಛೆ! ಅವಮಾನ. ಅವಮಾನವನ್ನೂ ಲೆಕ್ಕಿಸದೆ ಇದ್ದರೂ ಕರಿಯನ ಗತಿ? ಗಿರಿಯನ ಅಂತಿಮೋಕ್ತಿ? ಕೋಪಗೊಂಡ ರಾಯರು ಅವಳನ್ನು ಇನ್ನು – ಜೋಪಡಿಯಲ್ಲಿರಿಸಲು ಬಿಡುವರೆ? ಪ್ರಪಂಚವೇ ಶೂನ್ಯವೆನಿಸಿತವಳಿಗೆ. ಧನಿಕರೆನಿಸಿಕೊಂಡವರು ಮಳೆ ಬಂದತ್ತ ಕೊಡೆ ಹಿಡಿವರೆಂದು ಅವಳು ತಿಳಿದಿರಲಿಲ್ಲ. ರಾಯರ ಮಾತಿಗೆ ಸಮ್ಮತಿಸಿ ಬಾಳುವ ಆ ಹಾಳು ಬಾಳಿನ ಗೋಳಿಗಿಂತಲೂ ಮರಣದ ಮೌನವೇ ಲೇಸೆಂದೆನಿಸಿತವಳಿಗೆ. ನಿರ್ಗತಿಕಳಾದ ಗಿರಿಜೆಗೂ ಕರಿಯನಿಗೂ ಈಗ ಉಳಿದ ಗತಿಯೆಂದರೆ – ರಾಯರ ಬಾವಿ ಮಾತ್ರ. + +****** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_268.txt b/Kenda Sampige/article_268.txt new file mode 100644 index 0000000000000000000000000000000000000000..7d891c9353320c127efe9598a45c9e80228d6de1 --- /dev/null +++ b/Kenda Sampige/article_268.txt @@ -0,0 +1,29 @@ + + +ಒಂದು ಕ್ಷಣ ನನ್ನ ಕರಾವಳಿಯ ಸುತ್ತಲಿನ ಎಲ್ಲ ಹಳ್ಳಿಗಳನ್ನು ಕಣ್ಣೆದುರಿಗೆ ನಿಲ್ಲಿಸುವ ಮಂಜುನಾಥ ಚಾಂದ್ ರ ‘ಕದ ತೆರೆದ ಆಕಾಶ’ ಹಳ್ಳಿಯ ಸೊಗಡನ್ನು ಮೈ ತುಂಬ ಹೊದ್ದುಕೊಂಡಂತೆ ಕಾಣುತ್ತದೆಯಾದರೂ ಆಧುನಿಕತೆಯ ತಲ್ಲಣಗಳನ್ನು ನಮ್ಮೆದುರು ತೆರೆದಿಡಲು ಹಿಂದೆಮುಂದೆ ನೋಡುವುದಿಲ್ಲ. ಗ್ರಾಮೀಣ ಮತ್ತು ಪಟ್ಟಣ ಎರಡೂ ಕಡೆಯ ಕಥೆಗಳನ್ನು ಲೀಲಾಜಾಲವಾಗಿ ಕಟ್ಟಿಕೊಡುತ್ತಲೇ ಕಥೆಯೊಳಗೊಂದು ತಾರ್ಕಿಕತೆಯನ್ನು ನಮ್ಮೆದುರು ತೆರೆದಿಡುವ ಕಸಬುದಾರಿಕೆಯಿಂದಲೇ ಈ ಸಂಕಲನ ಆಪ್ತವಾಗುತ್ತದೆ. + +ಒಟ್ಟೂ ಒಂಬತ್ತು ಕಥೆಗಳಿರುವ ಈ ಪುಸ್ತಕದ ಸತ್ವ ಅಡಗಿರುವುದು ಅದರ ಭಾಷೆಯಲ್ಲಿ. ಅಚ್ಚ ಕುಂದಾಪುರದ ಕನ್ನಡವು ಇದೇನು ಇದೇನು ಎನ್ನುತ್ತಲೇ ಓದುಗರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತದೆ. ಮೊದಲ ಕಥೆ ‘ತಿಮಿರ’ ಹೀಗೆ ಗ್ರಾಮೀಣ ಮತ್ತು ಕುಂದಗನ್ನಡದ ಮಿಶ್ರಣವಾಗಿ ನಮ್ಮನ್ನು ಪ್ರಾರಂಭದಲ್ಲಿಯೇ ಕಥೆಯ ಓದಿಗೆ ಪಕ್ಕಾಗುವಂತೆ ಮಾಡುತ್ತದೆ. ತಿಮ್ರ ಎಂದು ಕರೆಯಿಸಿಕೊಳ್ಳುವ ತಿಮ್ಮರಾಯ ಎಂಬ ಪುಟ್ಟ ಹುಡುಗನ ಸುತ್ತ ಇರುವ ಈ ಕಥೆಯಲ್ಲಿ ಕಥೆಗಾರ ಭೂತ ವರ್ತಮಾನವನ್ನೆಲ್ಲ ಎರಕ ಹೊಯ್ದಿದ್ದಾರೆ. ಧೋ ಎಂದು ಸುರಿಯುವ ಮಳೆಯಲ್ಲಿ ಕಾಲು ಸಂದಿಯಿಂದ ನುಗ್ಗಿ ಆತನನ್ನು ಎರಡು ಸಲ ಬೀಳಿಸಿದ ಹೆಗ್ಗಣ ಮತ್ತು ಆ ಹೆಗ್ಗಣದ ದೆಸೆಯಿಂದ ಮನೆಮಂದಿಯಿಂದೆಲ್ಲ ಬಾಯಿಗೆ ಬಂದಂತೆ ತಮಾಷೆ ಮಾಡಿಸಿಕೊಂಡ ತಿಮಿರ, ಮಳೆಗೂ ಹೆಗ್ಗಣಕ್ಕೂ ಸಂಬಂಧ ಕಲ್ಪಿಸಿ ಮಾರಮ್ಮನ ಶಾಪದಿಂದಾಗಿ ಏನೋ ಕೆಟ್ಟದಾಗುತ್ತೆ ಎಂದು ಭಯಭೀತರಾದ ಮನೆಮಂದಿಯಷ್ಟೇ ಅಲ್ಲ, ಊರಜನ. ಮತ್ತು ಶಾಪವನ್ನು ನಿರಾಕರಿಸುತ್ತಲೇ ಕೆಟ್ಟದಾಗುತ್ತೆ ಎಂದು ನಂಬಿರುವ ತಿಮಿರನ ಅಕ್ಕ ಶರವಂತಿಯ ಹೆದರಿಕೆಗೆ ತಕ್ಕಂತೆ ಊರನ್ನು ಆವರಿಸಿದ ಪ್ಲೇಗ್, ಹೀಗೆ ಹಂತಹಂತವಾಗಿ ಸಾಗುವ ಕಥೆ ಎಲ್ಲೂ ಅಡೆತಡೆಯಿಲ್ಲದೇ ಓದಿಸಿಕೊಳ್ಳುತ್ತದೆ. + +(ಮಂಜುನಾಥ ಚಾಂದ್) + +ಎರಡನೆಯ ಕಥೆ ಸವೆದ ಹಾದಿಯ ಉಸಿರು ಕೂಡ ಹಳ್ಳಿ ಸೊಗಡು ತುಂಬಿಕೊಂಡಿರುವ ಕಥೆ. ಹಳ್ಳಿಯ ಹಿರಿಯರಾದ ಅನಂತಪದ್ಮನಾಭ ಭಟ್ಟರು ಉಳುವವನೇ ರೈತ ಎನ್ನುವ ಸಿದ್ಧಾಂತಕ್ಕೆ ಬದ್ಧರಾಗಿ ಸುತ್ತಲಿನ ರೈತರಿಗೆ ಭೂಮಿ ಕೊಡಿಸಿದ್ದರು. ಈ ಅಕಾರಣದಿಂದಾಗಿಯೇ ಅವರ ಕಣ್ಣನ್ನು ಹೊಡೆದು ಕೀಳಿಸುವ ಪ್ರಯತ್ನವೂ ನಡೆದಿತ್ತು. ಬಹುಶಃ ಕಥೆಗಾರನ ಕಥಾಶಕ್ತಿಯ ದೈತ್ಯತೆ ಅರಿವಾಗುವುದೇ ಈ ಹಂತದಲ್ಲಿ. ಉಪಕಾರ ಪಡೆದುಕೊಂಡು ರೈತನಾದವನ ಮಕ್ಕಳನ್ನೆ ಕರೆದುಕೊಂಡು ಬಂದಿದ್ದ ಪಟೇಲ ಬುಜಂಗ, ಭಟ್ಟರು ಅತ್ತ ಕಂಪ್ಲೇಂಟನ್ನೂ ಕೊಡಲಾಗದ, ಇತ್ತ ನೋವನ್ನು ಒಡಲಲ್ಲೂ ಇಟ್ಟುಕೊಳ್ಳಲಾಗದ ಸಂಕಟವನ್ನು ತಂದೊಡ್ಡಿದ್ದ. ಆದರೆ ಅವರ ಮಗ ವಸುದೇವ ಅಪ್ಪ ಪೋಲಿಸ್ ಕಂಪ್ಲೆಂಟ್ ಕೊಡದಿರುವುದಕ್ಕೆ ಕಾರಣ ಹುಡುಕುತ್ತಿದ್ದವನು ಸತ್ಯ ತಿಳಿದ ನಂತರ ತನ್ನ ಯುನಿವರ್ಸಿಟಿಯ ಕೈ ತುಂಬ ಸಂಬಳ ತರುವ ಕೆಲಸ ತ್ಯಜಿಸಿ ನಕ್ಸಲ್ ಆಗುವ ಕಥೆಯ ತಿರುವು ಓದುಗರಲ್ಲೊಂದು ವೇದನೆಯ ನಿಟ್ಟುಸಿರನ್ನು ಹೊಮ್ಮಿಸದೇ ಇರಲಾರದು. + +ಮೂರನೆ ಕಥೆ ಸಂತೆಯಿಂದ ಬಂದವನು ಕೂಡ ನಮ್ಮ ಸುತ್ತಲಿನಲ್ಲಿ ಆಗುವ ಘಟನೆಗಳನ್ನೆ ಎಳೆಎಳೆಯಾಗಿ ನಮ್ಮೆದುರು ತೆರೆದಿಡುತ್ತ ಹೋಗುತ್ತದೆ. ಬಸ್ಲಿಂಗ ಎಂಬ ಹುಡುಗ ತನ್ನ ಕೋಳಿಯೊಂದನ್ನು ಹಿಡಿದುಕೊಂಡು ಸಂತೆಗೆ ಹೋಗಿ ಮಾರುವ ಸಮಯದಲ್ಲಿ ಅಜಾನಕ್ ಆಗಿ ಹಿಡಿತ ಸಡಿಲಿಕೆಯಾಗಿ ಹಾರಿಹೋದ ಹುಂಜ ಕಾರಿಗೆ ಬಡಿದು, ಬಸ್ಲಿಂಗನ ಅಜ್ಜಿ ತನ್ನೆಲ್ಲ ಪ್ರತಿಭೆಯನ್ನು ಎರೆದು ಕಾರಿನವನಿಂದ ಸಾವಿರಗಟ್ಟಲೆ ಹಣವನ್ನು ವಸೂಲಿ ಮಾಡುವ ನಾಟಕದಲ್ಲಿ ನಡೆದ ಅವಾಂತರ ಈ ಕಥೆ ಎಂದು ಮೊದಲಿಗೆ ಅನ್ನಿಸುತ್ತದೆಯಾದರೂ ಅದೇ ಕಾರೊಳಗೆ ಹತ್ತಿ ಕುಳಿತ ಬಸ್ಲಿಂಗ, ತನ್ನ ಅಜ್ಜಿ ಪ್ರತಿ ಸಂತೆಯಲ್ಲೂ ಅದೇ ರಿತಿ ಕೋಳಿ ಸಾಯಿಸಿ ಹಣ ಮಾಡುವ ಹಕೀಕತ್ತನ್ನು ಹೇಳುತ್ತ, ತನ್ನ ಹಾಗೆ ತನ್ನ ಅಣ್ಣನೂ ಇದರಿಂದ ಬೇಸತ್ತು ಓಡಿ ಬಂದು ಬೆಂಗಳೂರು ಸೇರಿದ್ದನ್ನು ಹೇಳುತ್ತಾನೆ. ಹಾಗೆ ಹುಡುಕಿಕೊಂಡು ಹೊರಟ ಫ್ಯಾಕ್ಟರಿಯಿಂದ ಕಪ್ಪನೆಯ ಬೂಟು, ಗ್ಲೌಸು ಹಾಕಿಕೊಂಡು ಬಂದ ಚಂದ್ರಣ್ಣನ ಕೈ ಕಾಲುಗಳ ಮೇಲೂ ಇರುವ ರಕ್ತದ ಕಲೆ ಕಂಡು ಹೌಹಾರುವ ಬಸ್ಲಿಂಗ ಇಡೀ ಹಳ್ಳಿ ಜಗತ್ತಿನ ಪ್ರತಿರೂಪವಾಗಿ ನಮ್ಮೆದುರಿಗೆ ನಿಲ್ಲುತ್ತಾನೆ. ತಣ್ಣಗಿರುವ ಊರನ್ನು ಬಿಟ್ಟು ಸುಡುಬಿಸಿಲನ್ನು ಆಯ್ದುಕೊಂಡು ಬೆಂಗಳೂರಿಗೆ ಬರುವ ಬಡ ಮಕ್ಕಳ ವ್ಯಥೆಯನ್ನು ಈ ಕಥೆ ಹೇಳುತ್ತದೆ. + + + +‘ಹೊಳೆದಂಡೆಯ ಆಚೆ’ ಎನ್ನುವ ನಾಲ್ಕನೆಯ ಕಥೆ ಹಳ್ಳಿ ಪಟ್ಟಣವಾಗುವ ಹೊತ್ತಿನಲ್ಲಿ ತೆಗೆದುಕೊಳ್ಳುವ ವಿಚಿತ್ರ ತಿರುವುಗಳ ಬಗ್ಗೆ ಹೇಳುತ್ತಲೇ ಭಾಗವತಿಕೆ ಮಾಡುತ್ತ ಲಾಟರಿ ಟಿಕೆಟ್ ಮಾರುವ ಗಜರಾಜ ಎಂಬ ಹುಡುಗನ ಕಥೆಯನ್ನೂ ತಿಳಿಸುತ್ತದೆ. ಭಾಗವತಿಕೆ ಮಾಡುತ್ತ, ಲಾಟರಿ ಟಿಕೇಟು, ಜ್ಯೋತಿ ಬೀಡಿಯನ್ನು ಪ್ರಚಾರ ಮಾಡಿ ಸುತ್ತಲಿನವರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕೋರ್ಟ್ ದಂಡ ವಿಧಿಸುತ್ತದೆಯಾದರೂ ಆತನಿಗೆ ಆ ಕೆಲಸ ಮಾಡಲು ಹೇಳಿದ ಮಾವ ಪ್ರಭಾಕರ ರೈಗಳು ಏನೊಂದೂ ಮಾತನಾಡದೇ ಹೊಳೆದಂಡೆಯ ಆಚೆ ಕರೆದೊಯ್ದು ಭಾಗವತಿಕೆ ಶಿಕ್ಷಣ ಕೊಡಿಸುವಲ್ಲಿ ಕಥೆ ಮುಗಿಯುತ್ತದಾದರೂ ಓದುಗರನ್ನು ಅಲ್ಲಿಯೇ ವಿರಮಿಸಲು ಸುತಾರಾಂ ಬಿಡುವುದಿಲ್ಲ. + +‘ಗೋಡೆಗಳನು ದಾಟಿ’ ಎನ್ನುವ ಕತೆ ಆಧುನಿಕ ಜಗತ್ತಿನ ತಣ್ಣಗಿನ ಕ್ರೌರ್ಯವನ್ನು ಮತ್ತು ಅದನ್ನು ಎದುರಿಸುವ ಪಡಿಪಾಟಲನ್ನು ಜಿಜ್ಞಾಸೆಗೆ ಒಳಪಡಿಸುತ್ತದೆ. ಅಪ್ಪ ಮದುವೆ ಮಾಡಿ ತನ್ನ ಮುಂದೆ ಓದುವ ಆಸೆಗೆ ಕಲ್ಲು ಹಾಕುತ್ತಾನೆಂದು ಚಿದಾನಂದ ತಾನು ಇಷ್ಟಪಟ್ಟವಳನ್ನು ಎದುರಿಗೆ ನಿಲ್ಲಿದಾಗಲೂ ಲಕ್ಷಿಸದೇ ಹೇಳದೆ ಕೇಳದೆ ಮನೆ ಬಿಟ್ಟಿದ್ದ. ಆದರೆ ಸೆಕ್ಯುರಿಟಿ ಕೆಲಸಕ್ಕೆ ಸೇರಿಕೊಂಡ ನಂತರ ಅಲ್ಲಿಯ ಮ್ಯಾನೆಜರ್ ಅರವಿಂದ ಅಟವಡೆಯ ತೊಂದರೆಗಳ ವಿರಾಟ್ ದರ್ಶನವಾಗಿತ್ತು. ಸಂಬಳ್ ಕಟ್ ಮಾಡಿ ತನ್ನ ಎಂ.ಎ. ಓದುವ ಕನಸಿಗೆ ಕೊಳ್ಳಿ ಇಡುವ ಅರವಿಂದ ಅಟವಾಳೆಯನ್ನೇ ಮುಗಿಸಲು ಹೊರಡುವ ಮತ್ತು ಅದೇ ಸಮಯಕ್ಕೆ ಎಂ.ಎ.ಗೆ ಸೀಟು ಸಿಗುವುದರೊಂದಿಗೆ ಸಾವಿಗಿಂತ ಜೀವನ ದೊಡ್ಡದು ಎನ್ನುವ ಮಾತು ಓದುಗರಿಗೆ ಅವರವರ ಬದುಕನ್ನು ಎದುರಿಗೆ ತಂದು ನಿಲ್ಲಿಸುತ್ತದೆ. + +ಕುಬೇರ ಶಿಕಾರಿ ಎನ್ನುವ ಕಥೆಯಲ್ಲಿ ಪತ್ರಕರ್ತರ ಪಡಿಪಾಟಲಿದೆ. ತಿಂಗಳ ಕೊನೆಯಲ್ಲಿ ಜೇಬಿನಲ್ಲಿ ಚಿಕ್ಕಾಸೂ ಇರದಿದ್ದಾಗ ಮೋಹನದಾಸ ಎಂಬ ಸ್ನೇಹಿತನೊಬ್ಬನಿಗೆ ಸಿಗುತ್ತಿದ್ದ ಹಣ ಅಥವಾ ವಸ್ತುಗಳು, ಕೊನೆಗೊಂದು ದಿನ ಒಳ್ಳೆಯ ಕಡೆ ಕೆಲಸಕ್ಕೆ ಸೇರಿದ ನಂತರ ಹಾಗೆ ಸಿಗುವ ಕುಬೇರನ ಹಣ ನಿಂತು ಹೋಗುವುದು ಒಂದು ರೀತಿ ಫ್ಯಾಂಟಿಸಿ ಅನ್ನಿಸಿದರೂ ಇಡಿ ಜಗತ್ತನ್ನು ಗಿರಕಿ ಹೊಡೆಯುವಂತೆ ಭಾಸವಾಗುತ್ತದೆ. ಊರಿಗೆ ಬಂದ ದೇವರು ಕಥೆಯಲ್ಲಿ ಹೊಳೆದಂಡೆಯಲ್ಲಿ ಕಾಣಿಸಿದ ದೇವಿಯ ಮೂರ್ತಿಯೊಂದು ಕಾಣಿಸಿಕೊಂಡಿದೆ. ಆ ದೇವಿಗೊಂದು ಗುಡಿ ಕಟ್ಟಿ ಪೂಜಿಸುವ ಸಮಯದಲ್ಲಿ ಅಲಂಕಾರಕ್ಕೆಂದು ತಂದಿದ್ದ ಮೂರ್ತಿಯೊಂದನ್ನು ಕಳೆದುಕೊಂಡಿದ್ದ ರಮಾನಂದ ಕಾಮತರು ಅದು ತಾನು ತರಿಸಿದ ಮೂರ್ತಿ ಎಂದು ಹೇಳಲಾಗದೇ ತಾವು ಅಕ್ಷತೆ ಎಸೆದು ಸಾಷ್ಟಾಂಗ ನಮಸ್ಕಾರ ಮಾಡಿ ಪುನೀತರಾಗುತ್ತಾರೆ ಎಂಬುದನ್ನು ಕಥೆ ಹೇಳುತ್ತದೆ. ಊರಿನ ಹೊಳೆ ದಂಡೆಗೆ ಬಂದು ಬಿದ್ದ ಮೂರ್ತಿಯೊಂದು ಎಷ್ಟೆಲ್ಲ ಭ್ರಮೆಗಳನ್ನು ಸೃಷ್ಟಿಸಿ, ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ ತಾವೇ ಕೊಂಡು ತಂದ ಮೂರ್ತಿಯೆದುರು ಉದ್ದಂಡ ನಮಸ್ಕಾರ ಹಾಕುವ ಕಾಮತರ ಅಸಹಾಯಕತೆಯನ್ನು ತೋರಿಸುತ್ತದೆ. + +‘ಕದ ತೆರೆದ ಆಕಾಶ’ ವಿಶಿಷ್ಟ ಉನ್ಮಾದಗಳನ್ನು ಹೊತ್ತುಕೊಂಡಂತಹ ಕಥೆ. ಬಾಂಬ್ ಬ್ಲಾಸ್ಟ್ ಆಗಿ, ಮಳೆ ನೀರು ಕಾರಿನಲ್ಲಿ ತುಂಬಿ ಅದು ಹೇಗೋ ಬಚಾವಾದ ಜಾಹ್ನವಿ, ತ್ಯಾಗರಾಜ್, ಜನಾರ್ಧನ, ಪ್ರಸನ್ನಮೂರ್ತಿಯರ ಬದುಕಿನ ಕಥೆಗಳನ್ನು ಹೇಳುತ್ತಲೇ ಬದುಕಿನ ವೈರುಧ್ಯಗಳನ್ನೂ ತೋರಿಸುತ್ತದೆ. ಬಿಟ್ಟು ಬಂದ ಪ್ರೀತಿಯನ್ನು ಎದುರು ನಿಲ್ಲಿಸಿ ಕೊರಳಪಟ್ಟಿ ಹಿಡಿದಂತೆ ಜಗ್ಗಿಸಿ ಕೇಳುವ ಬದುಕಿನ ಧಾರ್ಷ್ಟ್ಯ ಇಲ್ಲಿದೆ. ಓದುತ್ತಲೇ ಎದೆ ಭಾರವಾಗಿ ವಿಷಾದದ ಮನಸ್ಥಿತಿಯನ್ನು ಮತ್ತು ಸಂಬಂಧದ ಚಿತ್ರಣವನ್ನು ಯಥಾವತ್ತಾಗಿ ತೋರಿಸುವ ಈ ಕಥೆ ಸಂಕಲನದ ಹೈಲೈಟ್. + +ಕೊನೆಯ ಕಥೆ ಕಂಚಿಮಳ್ಳು ಸಂಬಂಧಗಳ ತಾಕಲಾಟವನ್ನು ಉಣಬಡಿಸುತ್ತದೆ. ತಾನು ಮದುವೆ ಆಗಬೇಕಾಗಿದ್ದ ಹುಡುಗಿ ಸತ್ತು ಹೋದಳು ಎಂದು ತಾನೇ ಹೇಳುತ್ತ ಮಾನಸಿಕ ರೋಗಿಯಂತಾಗಿದ್ದ ದೇವ್ರು ಭಟ್ಟ, ದೇವರನ್ನೆಲ್ಲ ತಿರಸ್ಕರಿಸುತ್ತಾನೆ. ಆತನ ಹುಚ್ಚು ವರ್ತನೆಗೆ ಊರೆಲ್ಲ ಕಂಚಿಮಳ್ಳು ಎಂದು ಕರೆದರೂ ಬೇಸರಿಸದ ಆತನನ್ನು ಮದುವೆ ಆಗಬೇಕಿದ್ದ ಇಂದ್ರಾಣಿಯನ್ನು ಕರೆತರುವ ಮಾತನಾಡಿದಾಗ ಒಪ್ಪಿಕೊಳ್ಳದಿದ್ದರೂ ನಾಲ್ಕಾರು ಊರುಗಳ ನಡುವಿರುವ ಶಾಲೆಯ ಮೇಲೆ ಅವಳ ಚಿತ್ರ ಬರೆದು ತನ್ನೆದೆಯೊಳಗೆ ಇರುವ ಅವಳ ಚಿತ್ರವನ್ನು ತೋರಿಸಿಕೊಳ್ಳುತ್ತಾನೆ. ಪ್ರವಾಹದಿಂದ ಉಕ್ಕೇರಿದ ಅಘನಾಶಿನಿ ನದಿಯ ತೂಗುಸೇತುವೆ ತುಂಡಾಗಿ ಬಿದ್ದಾಗ ಅದರಾಚೆ ದೇವ್ರೂ ಭಟ್ಟ ಮತ್ತು ಇಂದ್ರಾಣಿ ಗೋವಿಂದಪ್ಪನ ಮನೆಯ ಬಚ್ಚಲಲ್ಲಿ ಉರಿವ ಒಲೆಯ ಮುಂದೆ ಕುಳಿತಿರುವ ಚಿತ್ರಣ ಬರುತ್ತದೆ. ‘ಎಲ್ಲ ಸಂಬಜಕ್ಕೂ ಮನ್ಸು ಹೇಳಿ ಇರ್ತಿಲ್ಲೆ. ಮತ್ತೆ ಮತ್ತೆ ನೀರ್ ಹಾಕಿ ಜೀಂವಾ ತರಾ ಕೆಲ್ಸ ಫಲ ಕೊಡ್ತಿಲ್ಲೆ’ ಎನ್ನುತ್ತಾನಾದರೂ ಆತನ ಮಾತಿನ ನಿಗೂಢತೆ ಕಥೆಯ ಕೊನೆಯಲ್ಲಿ ಆತನೇ ಇಂದ್ರಾಣಿ ಮುಂದೆ ಓದಲೆಂದು ನದಿ ದಾಟಿಸಿದ್ದ ವಿಷಯ ತಿಳಿದಾಗ ನಿಚ್ಚಳವಾಗುತ್ತದೆ. + + + +ಗ್ರಾಮೀಣ ಬದುಕನ್ನು ಇದ್ದದ್ದು ಇದ್ದ ಹಾಗೆ ಕಟ್ಟಿಕೊಡುತ್ತಲೇ ಆಕಾಶಕ್ಕೆ ಮುಖ ಮಾಡಿದಂತೆ ಆಧುನಿಕ ಬದುಕನ್ನೂ ವಿವರಿಸುವ ಇಲ್ಲಿನ ಕಥೆಗಳು ಗೆಲ್ಲುವುದೇ ಇಲ್ಲಿನ ಭಾಷೆಯ ಕಾರಣಕ್ಕೆ. ಒಬ್ಬ ಕಥೆಗಾರನಿಗೆ ಇರಬೇಕಾದ ಭಾಷೆಯ ಮೇಲಿನ ಹಿಡಿತವನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಕುಂದಗನ್ನಡದ ಸೊಗಸಿನ ಜೊತೆಯಲ್ಲಿ, ಹವ್ಯಕ ಕನ್ನಡವೂ ಅಷ್ಟೇ ಸುಲಲಿತವಾಗಿ ಬಳಕೆಯಾಗಿದೆ. ಪ್ರಾದೇಶಿಕತೆಯ ನೆಲಗಟ್ಟಿನಲ್ಲಿಯೇ ಹೇಳುತ್ತಿರುವ ಕಥೆ ಒಮ್ಮೆಲೆ ಅದರಾಚೆಗೂ ಚಿಮ್ಮಿನಿಂತು ವಿಸ್ಮಯ ಮೂಡಿಸುತ್ತದೆ. ಕಥೆಕಟ್ಟುವ ಕಾಯಕದಲ್ಲಿ ಕುತೂಹಲವಿರುವ ಪ್ರತಿಯೊಬ್ಬರೂ ಓದಬೇಕಾದ ಕಥೆಗಳು ಇಲ್ಲಿವೆ. ತನ್ನ ವೈವಿಧ್ಯತೆಯಿಂದಲೇ ಓದುಗರನ್ನು ಹಿಡಿದಿಟ್ಟುಕೊಳ್ಳುವ ಈ ಕಥೆಗಳ ಮುಂದುವರಿದ ಭಾಗದ ಬಗ್ಗೆ ಕುತೂಹಲಿಯಾಗಿದ್ದೇನೆ. ಕಥೆಗಳು ಹೇಗಿರಬೇಕು ಎಂದು ಯಾರಾದರೂ ನನ್ನನ್ನು ಕೇಳಿದರೆ ಖಂಡಿತವಾಗಿಯೂ ನಾನು ಓದಲು ಸೂಚಿಸುವ ಹತ್ತು ಪುಸ್ತಕಗಳಲ್ಲಿ ಮಂಜುನಾಥ ಚಾಂದ್ ರ ‘ಕದ ತೆರೆದ ಆಕಾಶ’ ಕೂಡ ಒಂದಾಗಿರುತ್ತದೆ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_269.txt b/Kenda Sampige/article_269.txt new file mode 100644 index 0000000000000000000000000000000000000000..2599199ade5b67cadcadaded560d53f0b7081b03 --- /dev/null +++ b/Kenda Sampige/article_269.txt @@ -0,0 +1,85 @@ + + +ಒಂದು ದಿನ, ನಾನು ಅವನ ಬಳಿ ಕೆಲಸ ಮಾಡಲು ಪ್ರಾರಂಭಿಸಿದ ಸ್ವಲ್ಪ ದಿನಗಳ ನಂತರ, ಮಂಗಿಯಾರೊಟ್ಟಿ ಹೇಳಿದ: ‘ಇವತ್ತಿಗೆ ಕೆಲಸ ಸಾಕು. ಎಲ್ಲ ಎತ್ತಿಡು. ಎತ್ತಿಡುತ್ತೀ ತಾನೇ. ಹತ್ತು ನಿಮಿಷಗಳಲ್ಲಿ ಹಿಂತಿರುಗಬೇಕು.’ ಸೂಚನೆ ಅಥವಾ ವಿವರಣೆಯಿಲ್ಲದೆ ಕೆಲಸಗಳನ್ನು ಮಾಡುವುದು, ಹಾಗೆ ಮಾಡಿ ಜನರಿಗೆ ಆಶ್ಚರ್ಯವನ್ನುಂಟುಮಾಡುವುದು ಅವನಿಗೆ ವಿಶಿಷ್ಟವಾದ ನಡೆಯಾಗಿತ್ತು. ನಾನು ಪೇಂಟ್ಬ್ರಷ್ ಗಳನ್ನು ಎಚ್ಚರಿಕೆಯಿಂದ ಸ್ವಚ್ಚಗೊಳಿಸಿದೆ. ಒಂದು ಸಣ್ಣ ಕಣದಷ್ಟು ಪೇಂಟ್ ಸಹ ಅವುಗಳ ಮೇಲೆ ಉಳಿಯಬಾರದು, ಉಳಿದರೆ ಮಂಗಿಯಾರೊಟ್ಟಿ ಕೋಪಗೊಳ್ಳುತ್ತಾನೆಂದು ನಾನು ತಿಳಿದಿದ್ದೆ. ನಾನು ಅವನಿಗೆ ನಿಜವಾಗಲೂ ಹೆದರುತ್ತಿರಲಿಲ್ಲ. ಆದರೆ ಅವನು ಹರಿತವಾದ ನಾಲಿಗೆಯ ವ್ಯಕ್ತಿ. ಹಾಗಾಗಿ ನಾನು ಅವನನ್ನು ಯಾವುದಕ್ಕೂ ಅಸಮಾಧಾನಗೊಳಿಸದಿರಲು ಪ್ರಯತ್ನಿಸುತ್ತಿದ್ದೆ. ನಾನು ಎಲ್ಲವನ್ನೂ ಸರಿಯಾದ, ಮಂಗಿಯಾರೊಟ್ಟಿಯು ಬಯಸುವ ಕ್ರಮದಲ್ಲಿಯೇ ಪ್ಯಾಕ್ ಮಾಡಿದೆ: ಎಡಭಾಗದಲ್ಲಿ ಏಣಿ, ಬಲಭಾಗದಲ್ಲಿ ಬಕೆಟ್ ಹೀಗೆ. + +ಸುಮಾರು ಕಾಲು ಗಂಟೆಯ ನಂತರ ಒಂದು ಕಾರು ಬಂದು ನಿಂತಿತು. ಹಳೆಯ ಕಪ್ಪು ಸಿಟ್ರೊಯೆನ್ ನ ಸ್ಟೀರಿಂಗ್ ವೀಲ್ ನಲ್ಲಿ ಮಂಗಿಯಾರೊಟ್ಟಿ ಇದ್ದ. ಅವನ ಮುಖ ಎಂದಿನಂತೆ ಮಂಕಾಗಿತ್ತು. ‘ಒಳಗೆ ಬಾ!’ ಅವನು ಹೇಳಿದ. ನಾನು ಬಾಗಿಲು ಮುಚ್ಚುವ ಮೊದಲೇ ಟೈರ್ ಗಳ ಕಿರ್ ಸದ್ದಿನೊಂದಿಗೆ ಕಾರು ಮುಂದಕ್ಕೆ ಎಳೆಯಿತು. `ನಾವು ಎಲ್ಲಿಗೆ ಹೋಗುತ್ತಿದ್ದೇವೆ?’ ನಾನು ಕೇಳಿದೆ. ಅವನು ಉತ್ತರಿಸಲಿಲ್ಲ. ಅದು ನಿನ್ನ ವ್ಯವಹಾರವಲ್ಲ ಎನ್ನುವುದನ್ನು ನೆನಪಿಸುವ ಅವನ ವಿಧಾನವಾಗಿತ್ತು. ನಾನು ಮತ್ತೆ ಸರಿಯಾಗಿ ಕೂತು, ಕುತೂಹಲ ತೊರೆದು ಈ ಕಾರು ಸವಾರಿಯಿಂದ ನನಗೆ ಸಾಧ್ಯವಾದಷ್ಟು ನಾನು ಆನಂದಿಸುತ್ತೇನೆ ಎಂದು ಮನದಲ್ಲೇ ನಿರ್ಧರಿಸಿದೆ. ಹೇಗೂ ಇದು ಏಣಿಯನ್ನೇರಿ ಪೇಂಟ್ ಅಂಗಡಿ ಮುಂಭಾಗಗಳಲ್ಲಿ ನಿಲ್ಲುವುದಕ್ಕಿಂತ ಉತ್ತಮವಾಗಿತ್ತು. + +ನಾವು ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಸಣ್ಣ ಕಲ್ಪನೆಯೂ ನನಗೆ ಇರಲಿಲ್ಲ. ಆದರೆ ಶೀಘ್ರದಲ್ಲೇ ನಾವು ಪ್ಯಾರಿಸ್ ನಿಂದ ಹೊರಗಡೆ ಗ್ರಾಮಾಂತರ ಪ್ರದೇಶದಲ್ಲಿದ್ದೆವು. ಮಂಗಿಯಾರೊಟ್ಟಿ ರಸ್ತೆಬದಿಯಲ್ಲಿ ಟಯರ್ ಕಿರುಚುವಂತೆ ಬ್ರೇಕ್ ಒತ್ತಿ ಎಂಜಿನ್ ಆಫ್ ಮಾಡಿದ. ನಾನು ಅವನತ್ತ ನೋಡಿದೆ. ಅವನು ನೇರವಾಗಿ ಮುಂದೆ ನೋಡುತ್ತಿದ್ದ. ನಾನು ಅವನ ನೋಟವನ್ನು ಹಿಂಬಾಲಿಸಿ ನೋಡಿದೆ. ಆದರೆ ನನಗೆ ಕಂಡದ್ದು ಒಂದು ಹಳ್ಳಿಗಾಡಿನ ರಸ್ತೆ ಮತ್ತು ಅದರ ಅಕ್ಕಪಕ್ಕದಲ್ಲಿ ಬೆಳೆದಿದ್ದ ಪೊದೆಗಳು ಮಾತ್ರ. + +ಹುಲ್ಲಿನ ಅಂಚಿನ ಮೇಲೆ ಏನೋ ಒಂದು ಚಲನೆ ನನ್ನ ಗಮನ ಸೆಳೆಯಿತು. ಅದು ಟೋಪಿ, ಹಳೆಯ ಕಪ್ಪು ಹೊಂಬರ್ಗ್, ಸಾಮಾನ್ಯ ಉದ್ಯಮಿಗಳು ಧರಿಸುತ್ತಿದ್ದ ರೀತಿಯದು. ಒಂದು ಕ್ಷಣ ಅದು ಜೀವಂತವಾದ ಆಕೃತಿಯಂತೆ ಕಾಣಿಸಿಕೊಂಡಿತು. ಮುಂದೆ ಸಾಗಿತು, ನಿಂತುಕೊಂಡಿತು, ಕಣ್ಮರೆಯಾಯಿತು, ಮತ್ತೆ ಒಂದು ಸೆಕೆಂಡಿಗೆ ಎದ್ದು ಬಂದಂತೆ ಕಂಡಿತು, ನಂತರ ಮುಂದೆ ಸಾಗಿ ಮತ್ತೆ ಕಣ್ಮರೆಯಾಯಿತು. ಎಂತಹ ಹಾಸ್ಯಾಸ್ಪದ ದೃಶ್ಯವೆಂದರೆ ನಾನು ನಗುವುದನ್ನು ತಡೆಯಲಾರದೆ ನಗುವಿನ ಅಲೆಯನ್ನು ಸ್ಫೋಟಿಸಿಬಿಟ್ಟೆ. ಆದರೆ ಟೋಪಿ ನೋಡುತ್ತಿದ್ದ ಮಂಗಿಯಾರೊಟ್ಟಿ ಗಂಭೀರ ಮುಖದಲ್ಲಿಯೇ ಇದ್ದ. ನಾನು ಮತ್ತೆ ಟೋಪಿ ನೋಡಲು ತಿರುಗಿದಾಗ ಅದು ಒಂದೆರಡು ಇಂಚುಗಳಷ್ಟು ಮೇಲೇರಿ ಅದರ ಕೆಳಗೆ ಒಂದು ತಲೆ ಇದೆ ಎಂಬುದನ್ನು ಬಹಿರಂಗಪಡಿಸಿತು. ಹುಲ್ಲಿನ ಅಂಚು ಮತ್ತು ಪೊದೆಗಳ ನಡುವೆ ಒಂದು ಕಂದಕವಿದೆ ಮತ್ತು ಟೋಪಿ ಧರಿಸಿದವರು ಕಂದಕದಲ್ಲಿ ಇಳಿದಿದ್ದಾರೆ ಎಂದು ನನಗೆ ತಿಳಿಯಿತು. ಮಂಗಿಯಾರೊಟ್ಟಿ ಕಾರಿನಿಂದ ಇಳಿದು ಆ ನಿಗೂಢ ಟೋಪಿಯ ಕಡೆಗೆ ನಡೆದ. ಅವನನ್ನು ಹಿಂಬಾಲಿಸಬೇಕೇ ಅಥವಾ ಕಾರಿನಲ್ಲಿಯೇ ಇರಬೇಕೇ ಎಂದು ನನಗೆ ತಿಳಿದಿರಲಿಲ್ಲ. + +ನನ್ನ ಕುತೂಹಲ ಜಾಸ್ತಿಯಾಯಿತು. ಕಾರಿಂದ ಸರ್ರನೆ ಹೊರಬಂದು ಅವನನ್ನು ಸೇರಿಕೊಳ್ಳಲು ಅವಸರದಿಂದ ನಡೆದೆ. ಅವನು ರಸ್ತೆಬದಿಯಲ್ಲಿ ನಿಂತು, ಟೋಪಿಯನ್ನು ದಿಟ್ಟಿಸಿ ನೋಡುತ್ತಿದ್ದ; ಅಲ್ಲದೆ ನನಗೆ ಅರ್ಥವಾಗದ ಇಟಾಲಿಯನ್ ಉಪಭಾಷೆಯಲ್ಲಿ ಮಾತನಾಡುತ್ತಿದ್ದ. ನಾನು ಕೂಡ ಕೆಳಗೆ ನೋಡಿದೆ. ಟೋಪಿಯ ಕೆಳಗೆ ಒಬ್ಬ ಮುದುಕನ ಕೆಂಪು ಕೆಂಪಾದ ಸುಕ್ಕುಗಟ್ಟಿದ ಮುಖ ಕಂಡುಬಂತು. ಬೇಸಿಗೆಯ ಮಧ್ಯಾಹ್ನದ ಹೊರತಾಗಿಯೂ ಅವನು ಕಪ್ಪು ತುಪ್ಪಳದ ಕಾಲರ್ ಇದ್ದ ಓವರ್ ಕೋಟ್ ಧರಿಸಿದ್ದ. ಅದು ಅವನ ಹಳೆಯ ಹೊಂಬರ್ಗ್ ಗೆ ಸಂಪೂರ್ಣವಾಗಿ ಹೊಂದಿಕೆಯಾತ್ತಿತ್ತು. ಆಶ್ಚರ್ಯಕರ ಸಂಗತಿಯೆಂದರೆ, ಅವನು ನೇರವಾಗಿ ನಿಂತಿದ್ದರೂ, ಅವನ ತಲೆಯು ಕಂದಕದ ಮೇಲ್ಭಾಗವನ್ನು ಮೀರುತ್ತಿತ್ತು. ಅವನು ಕುಬ್ಜ ಮನುಷ್ಯನಾಗಿದ್ದ. ವೃದ್ಧಾಪ್ಯದಿಂದ ಬಾಗಿದ ದೇಹ ಅವನ ಸಣ್ಣ ನಿಲುವನ್ನು ಉತ್ಪ್ರೇಕ್ಷಿಸುತ್ತಿತ್ತು. + +ಮಂಗಿಯಾರೊಟ್ಟಿ ಮುದುಕನಿಗೆ ಕೈ ಚಾಚಿ ಕಂದಕದಿಂದ ಹೊರಗೆಳೆದು, ಒಣಹುಲ್ಲಿನ ಗೊಂಬೆಯಂತೆ ಅವನನ್ನ ಕ್ಷಣ ಎತ್ತಿ ಹಿಡಿದು ಕಾಲು ಗಾಳಿಯಲ್ಲಿ ತೇಲಿಸಿ ಕೆಳಕ್ಕಿಳಿಸಿದ. ಮುದುಕ ಒಂದು ಮೀಟರ್ ಎತ್ತರಕ್ಕಿಂತ ಹೆಚ್ಚಿಲ್ಲ ಎಂದು ನಾನು ಕಂಡುಕೊಂಡೆ. ಅವನು ತನ್ನ ತೋಳಿನ ಕೆಳಗೆ ಬೃಹತ್ ಬ್ರೀಫ್ ಕೇಸ್ ಅನ್ನು ಹಿಡಿದಿದ್ದ. ಅದು ಅವನನ್ನು ಇನ್ನಷ್ಟು ಚಿಕ್ಕದಾಗಿ ಕಾಣುವಂತೆ ಮಾಡಿತ್ತು. ಅವನ ಟೋಪಿ ಮತ್ತು ಅವನ ಮೇಲಂಗಿಯಂತೆಯೇ ಅವನ ಬ್ರೀಫ್ ಕೇಸ್ ಸಹ ಕಪ್ಪು ಬಣ್ಣದ್ದಾಗಿತ್ತು. ಅದು ಕೂಡಾ ತನ್ನ ಉತ್ತಮ ದಿನಗಳನ್ನು ಆಗಲೇ ಕಂಡುಬಿಟ್ಟಿತ್ತು. ಅವನು ಯಾರು, ಅವನು ಈ ಕಂದಕದಲ್ಲಿ ಏನು ಮಾಡುತ್ತಿದ್ದಾನೆ ಎಂದು ನಾನು ಆಶ್ಚರ್ಯಪಟ್ಟೆ. + +ಮಾಂಗಿಯಾರೊಟ್ಟಿ, ಸಾಮಾನ್ಯವಾಗಿ ಮಾಡುವಂತೆಯೇ, ನನಗೆ ಯಾವುದೇ ವಿವರಣೆಯನ್ನು ಕೊಡಲಿಲ್ಲ. ಅವನು ನಿಜಕ್ಕೂ ನನ್ನನ್ನು ಮುದುಕನಿಗೆ ಪರಿಚಯಿಸಲಿಲ್ಲ. ಮುದುಕ ಸದಾ ಮೂಗಿನ ಬದಿಗೆ ಬೆರಳಿಂದ ಮುಟ್ಟಿಕೊಳ್ಳುತ್ತಾ ಇದ್ದ. ನಾವು ಮತ್ತೆ ಕಾರಿಗೆ ಮರಳುತ್ತಿದ್ದಾಗ ಮುದುಕ ಒಂದೆರಡು ಬಾರಿ ನನ್ನತ್ತ ಕಣ್ಣು ಮಿಟುಕಿಸಿದ. ಅವನು ಮತ್ತು ನಾನು ಯಾವುದೋ ರಹಸ್ಯವನ್ನು ಹಂಚಿಕೊಂಡಂತೆ ಆ ಭಾವವಿತ್ತು. ಮಂಗಿಯಾರೊಟ್ಟಿ ಅವನ ತೋಳನ್ನು ಹಿಡಿದುಕೊಂಡಿದ್ದ. ಆದರೆ ಆ ಹಿಡಿತದಲ್ಲಿ ಪ್ರೀತಿಯಿರಲಿಲ್ಲ. ತಪ್ಪಿತಸ್ಥನನ್ನು ಬಂಧಿಸುವಾಗ ಪೋಲೀಸರು ಹಿಡಿವ ಹಿಡಿತದಂತೆ ಇದು ತೋರುತ್ತಿತ್ತು. ಅವನನ್ನು ಕಾರಿನ ಹಿಂಭಾಗಕ್ಕೆ ದೂಡಿ, ಒಳಗೆ ಬಾರೆಂದು ನನಗೆ ಮಂಗಿಯಾರೊಟ್ಟಿ ಸೂಚಿಸುವ ಹಾಗೆ ತಲೆಯಾಡಿಸಿದ. + +ನಾವು ಎಂದಿನಂತೆ ಟೈರ್ ಗಳನ್ನು ಕಿರುಗುಟ್ಟಿಸಿ ಮುಂದೆ ಸಾಗುತ್ತಿದ್ದೆವು. ಮುದುಕ ಮೊದಲಿಗೆ ಮೌನವಾಗಿದ್ದ. ನಂತರ ನನ್ನೊಂದಿಗೆ ಮಾತನಾಡಿದ: ‘ಮೊರಾ, ಜಿಯೋವಾನೊಟ್ಟೊ. ಸರಿ, ಯಂಗ್ ಮ್ಯಾನ್’- ಅವನು ನನ್ನನ್ನು ಉದ್ದೇಶಿಸಿ ಉತ್ತಮ ಇಟಾಲಿಯನ್ ಭಾಷೆಯಲ್ಲಿ ಹೇಳಿದ. ಉಳಿದ ವಾಕ್ಯಕ್ಕಾಗಿ ನಾನು ಕಾಯುತ್ತಿದ್ದೆ. ಆದರೆ ಅವನಿಂದ ಏನೂ ಮಾಹಿತಿ ಬರಲಿಲ್ಲ. ಆದ್ದರಿಂದ ನಾನು ಅವನನ್ನು ನೋಡಲು ಹಿಂದೆ ತಿರುಗಿದೆ. ಮತ್ತೊಮ್ಮೆ, ಅವನು ನನ್ನತ್ತ ಕಣ್ಣು ಮಿಟುಕಿಸಿ ಮೂಗಿನ ಬದಿಯನ್ನು ತನ್ನ ತೋರುಬೆರಳಿನಿಂದ ತಟ್ಟಿಕೊಂಡ. ‘ಹಾಗಾದರೆ, ಜಿಯೋವಾನೊಟ್ಟೊ, ನಿಮ್ಮ ಅಭಿಪ್ರಾಯವೇನು?’ ಈ ಅಚ್ಚರಿಯ ಪ್ರಶ್ನೆಗೆ ಸೂಕ್ತವಾದ ಉತ್ತರವನ್ನು ನಾನು ಯೋಚಿಸುವ ಮೊದಲೇ, ಮಂಗಿಯಾರೊಟ್ಟಿ ಸಣ್ಣದಾಗಿ ನುಡಿದ. ‘ಸ್ಟಾ ಜಿಟ್ಟೋ, ಬಫೋನ್! ಎಪ್ಪತ್ತೈದು ವರ್ಷದ ಮುದಿ ಮೂರ್ಖ, ಬಾಯಿ ಮುಚ್ಚು!’ ಮುದುಕ ಮಾಂಗಿಯಾರೊಟ್ಟಿಯ ತಲೆಯ ಹಿಂದೆ ನಾಲಿಗೆಯನ್ನು ಹೊರಹಾಕಿ ಅಣಕಿಸಿದಂತೆ ಮಾಡಿದ. ನಂತರ ಅವನು ತನ್ನ ಬ್ರೀಫ್ಕೇಸ್ ಅನ್ನು ತಟ್ಟಿದ. ಹಾಗೇ ಕಿರುನಗೆ ಬೀರುವುದನ್ನೂ, ಕಣ್ಣು ಮಿಟುಕಿಸುವುದನ್ನೂ ಮುಂದುವರೆಸಿದ. ಅವನ ಮುಖದ ಮೇಲಿನ ಅಭಿವ್ಯಕ್ತಿ ಅವನ ಸೂಟ್ ಕೇಸಿನಲ್ಲಿ ರಾಣಿಯ ಆಭರಣಗಳಿವೆ ಎಂದು ಸೂಚಿಸುವಂತಿತ್ತು. + +ಒಂದು ಕ್ಷಣ, ಒಂದು ಆಲೋಚನೆ ನನ್ನ ಮನಸ್ಸನ್ನು ಆವರಿಸಿತು: ಅವನು ನಿಜಕ್ಕೂ ಅದೇ ರೀತಿಯ ಅಪರಾಧಿಯಾಗಿರಬಹುದೇ? ಅವನೊಬ್ಬ ಕಳ್ಳನಾಗಿರಬಹುದೇ. ಅವನ ಸಣ್ಣ ನಿಲುವಿನಿಂದ, ಅವನು ಸುಲಭವಾಗಿ ಕಿಟಕಿಗಳ ಮೂಲಕ ಮನೆಗಳ ಒಳಗೆ ನುಗ್ಗಲು, ಹೊರಗೆ ಬರಲು ಸಾಧ್ಯವಾದೀತು. ಅವನು ತನ್ನ ವಯಸ್ಸಿನ ಹೊರತಾಗಿಯೂ ದೇಹರಚನೆಯಲ್ಲಿ ತುಂಬಾ ಚುರುಕಾಗಿ ಕಾಣುತ್ತಿದ್ದ. ಬಹುಶಃ ಅವನ ಬ್ರೀಫ್ ಕೇಸ್ ಕದ್ದ ಸರಕುಗಳಿಂದ ತುಂಬಿರಬಹುದು ಎಂದು ಭಾವಿಸಿದೆ. + +ನಾವು ಮತ್ತೆ ರೂ ಬ್ಲಾಂಚೆಯಲ್ಲಿರುವ ಮಂಗಿಯಾರೊಟ್ಟಿಯ ಫ್ಲ್ಯಾಟ್ ಗೆ ಮುಸ್ಸಂಜೆಯ ವೇಳೆಗೆ ಬಂದೆವು. ಅವನು ನನ್ನನ್ನು ಮತ್ತು ಮುದುಕನನ್ನು ಕೆಳಗಿಳಿಸಿ ಕಾರನ್ನು ಪಾರ್ಕ್ ಮಾಡಲು ಹೋದ. + +ಮುದುಕ ಸಾಕಷ್ಟು ಆಕ್ರೋಶಗೊಂಡಂತೆ ಕಂಡ. ಉತ್ಸಾಹ ಮತ್ತು ಆತಂಕಗಳೆರಡೂ ಮಿಶ್ರವಾದ ಮುಖಭಾವ ಅಲ್ಲಿತ್ತು. `ನೀನು ಯಾರು?’ ಅವನು ಇದ್ದಕ್ಕಿದ್ದಂತೆ ನನ್ನನ್ನು ಕೇಳಿದ. ಅದು ಸರಿಯಾದ ಪ್ರಶ್ನೆಯಾಗಿತ್ತು. ಅದೇ ಪ್ರಶ್ನೆ ನಾನು ಅವನನ್ನು ಕೇಳಲು ಒದ್ದಾಡಿ ಸಾಯುತ್ತಿದ್ದೆ. ‘ಸಿನೊಯೋರ್ ಮಂಗಿಯಾರೊಟ್ಟಿಗೆ ಕೆಲಸ.’ ಅವನು ಜೋರಾಗಿ ನಕ್ಕ. ‘ಸಿನೊಯೋರ್ ಮಂಗಿಯರೋಟ್ಟಿ ಸಿನೊಯೋರ್ ಮಂಗಿಯರೋಟ್ಟಿ!’ ಅವನು ಕಿರುಚಿದ. ‘ಅದು -! ಅವನು ಸಿನೊಯೋರ್ ಅಲ್ಲ. ಅವನು ಸಿನೊಯೋರ್ ಅಲ್ಲ-!’ ಅವನು ಬಳಸಿದ ಪದಗಳು ನನಗೆ ತಿಳಿದಿರಲಿಲ್ಲ, ಆದರೆ ಅವುಗಳ ಅರ್ಥವು ಸ್ಪಷ್ಟವಾಗಿತ್ತು: ನನ್ನ ಉದ್ಯೋಗದಾತನ ಬಗ್ಗೆ ಅವನಿಗೆ ಬಹಳ ಕೀಳಾದ ಅಭಿಪ್ರಾಯವಿತ್ತು. ‘ಆದರೆ, ನೀನು ಚಿಂತಿಸಬೇಡ, ಜಿಯೋವಾನೊಟ್ಟೊ. ಬೇಗನೇ ಸಿದ್ಧನಾಗು. ತದನಂತರ ‘ಸಿನೊಯೋರ್ ಮಂಗಿಯಾರೋಟ್ಟಿಗೆ ಒಂದು ಅಥವಾ ಎರಡು ವಿಷಯ ತಿಳಿಸು. ಆದರೆ ಎಂದೆಂದಿಗೂ ಅವನಿಂದ ದೂರಹೋಗು.’ ಅವನು ಮತ್ತೆ ತನ್ನ ಬ್ರೀಫ್ ಕೇಸನ್ನು ತಟ್ಟಿದ. + +‘ನೀನು ಏಂಜೆಲ್ ಅಥವಾ ಯಕ್ಷಿಣಿಯರೊಂದಿಗೆ ಜೋಡಿಸುವ ವಸಂತಕಾಲದ ಸಂಭ್ರಮದಂತೆ.’ ಅವನು ಆ ಕ್ಷಣದಲ್ಲಿ ವಿಶ್ವವೆಲ್ಲವನ್ನು ಮೃಗಾಲಯದಲ್ಲಿ ಬಂಧಿಯಾದ ಯಕ್ಷಿಣಿಗಳಂತೆ ಕಾಣುತ್ತಿದ್ದ. ಅವನು ಮಾಯಾವಿತನ ಮತ್ತು ಕಿಡಿಗೇಡಿತನ ತುಂಬಿದ ಒಂದು ಸಣ್ಣ ಪ್ರಾಣಿಯಂತೆ. ಅವನು ಹ್ಯಾಟ್ ತಯಾರಿಸುವ ಹುಚ್ಚನಾಗಿದ್ದಾನೆ ಎಂದು ನನಗೆ ಸಾಕಷ್ಟು ಖಚಿತವಾಗಿದ್ದರೂ ನಾನು ಅವನನ್ನು ಇಷ್ಟಪಟ್ಟಿದ್ದೇನೆ ಎಂದು ನಾನು ನಿರ್ಧರಿಸಿದ್ದೆ. + +‘ನಾನು ನಿನಗೆ ನಂತರ ತೋರಿಸುತ್ತೇನೆ,’ ಅವನು ಪಿಸುಗುಟ್ಟಿದ, `ಅವನು ಇಲ್ಲೆಲ್ಲೂ ಇಲ್ಲದಿದ್ದಾಗ. ನಮ್ಮ ರಹಸ್ಯ, ಜಿಯೋವಾನೊಟ್ಟೊ. ವ್ಯಾಟೋಬೀನ್? ಸರಿಯಲ್ಲವಾ?’ ಅವನು ಕಣ್ಣು ಮಿಟುಕಿಸಿ ಮತ್ತೆ ಮೂಗಿನ ಬದಿಯನ್ನು ತಟ್ಟಿಕೊಂಡ. + +‘ತಬ್ಬೆನ್’, ನಾನು ಅವನನ್ನು ತಮಾಷೆ ಮಾಡುತ್ತಾ ಉತ್ತರಿಸಿದೆ. + +ಮಂಗಿಯಾರೊಟ್ಟಿ ಸ್ವಲ್ಪ ಸಮಯದ ನಂತರ ಹಿಂತಿರುಗಿದ. ಅವನ ಮುಖವು ಎಂದಿಗಿಂತಲೂ ಕಪ್ಪಾಗಿತ್ತು, ಬಹುಶಃ ಪಾರ್ಕಿಂಗ್ ಸ್ಥಳವನ್ನು ಹುಡುಕುವಲ್ಲಿ ಅವನಿಗೆ ಕಷ್ಟವಾಗಿತ್ತು ಅನಿಸಿತು. + +ನಾವೆಲ್ಲರೂ ಫ್ಲ್ಯಾಟ್ ಗೆ ಹೋದೆವು, ಮಂಗಿಯಾರೊಟ್ಟಿ ಮುದುಕನನ್ನ ತನ್ನ ಮುಂದೆ ಮೆಟ್ಟಿಲುಗಳ ಮೇಲೆ ತಳ್ಳಿಕೊಂಡು ನಡೆದ. ಮುದುಕ ತನ್ನ ಕೋಟ್ ಮತ್ತು ಟೋಪಿ ತೆಗೆದು ಮ್ಯಾಂಗಿಯಾರೊಟ್ಟಿ ತೆರೆದ ಕೆಂಪು ವೈನ್ ಬಾಟಲಿ ಮತ್ತು ಮೂರು ಗ್ಲಾಸ್ ಇಟ್ಟಿದ್ದ ಟೇಬಲ್ ಬಳಿ ಕುಳಿತುಕೊಳ್ಳಲು ಬಂದ. ಮುದುಕ ಬ್ರೀಫ್ ಕೇಸ್ ಕೊಡಲು ನಿರಾಕರಿಸಿದ. ಅದನ್ನು ಎಚ್ಚರಿಕೆಯಿಂದ ತನ್ನ ತೊಡೆಯ ಮೇಲೆ ಇಟ್ಟುಕೊಂಡ. ಅವನು ಮತ್ತು ಮಂಗಿಯಾರೊಟ್ಟಿ ತಮ್ಮ ಉಪಭಾಷೆಯಲ್ಲಿ ಸ್ವಲ್ಪ ಹೊತ್ತು ಮಾತಾಡಿದರು. ಆಗ ಅವರು ನನ್ನನ್ನು ಸಂಪೂರ್ಣವಾಗಿ ಕಡೆಗಣಿಸಿದಂತೆ ಅನಿಸಿತು. + +ಅವರು ಮಾತನಾಡುತ್ತಿರುವಾಗ ಮಂಗಿಯಾರೊಟ್ಟಿಯ ಧ್ವನಿಯು ಮೃದುವಾಯಿತು, ಎದುರು ಕುಳಿತ ಸುಕ್ಕುಗಟ್ಟಿದ ಪುಟ್ಟ ಮನುಷ್ಯನನ್ನು ಅವನು ನೋಡಿದ ರೀತಿಯಿಂದ ನಾನು ಹೇಳಬಲ್ಲೆ, ಆಳದಲ್ಲಿ ನಿಜವಾಗಿಯೂ ಅವನಿಗೆ ಅವನ ಬಗ್ಗೆ ಮೆಚ್ಚುಗೆಯಿತ್ತು. ಮಂಗಿಯಾರೊಟ್ಟಿಯ ಸಮಸ್ಯೆ ಎಂದರೆ ಅದನ್ನು ತೋರಿಸಲು ಅವನಿಗೆ ಅವನ ಮನಸ್ಸು ಅನುಮತಿ ಕೊಟ್ಟಿರಲಿಲ್ಲ. ನನ್ನ ಸಿದ್ಧಾಂತವೆಂದರೆ ಆ ಮುದುಕ ಮಂಗಿಯಾರೊಟ್ಟಿಗೆ ಒಂದು ರೀತಿಯ ಸಂಬಂಧಿ- ಬಹುಶಃ ಚಿಕ್ಕಪ್ಪ. ಇದು ನನಗೆ ಆಘಾತದ ಸಂಗತಿಯಾಗಿತ್ತು. ಮಂಗಿಯಾರೊಟ್ಟಿ ಅಡುಗೆಮನೆಯಲ್ಲಿ ನಮ್ಮ ಊಟಕ್ಕೆ ಸ್ವಲ್ಪ ಪಾಸ್ತಾ ಸಿದ್ಧಪಡಿಸುತ್ತಾ ಇದ್ದಾಗ ಮುದುಕ ನನ್ನೊಂದಿಗೆ ಹೇಳಿದ: ‘ನಿನಗೆ ಗೊತ್ತಾ, ಜಿಯೋವಾನೊಟ್ಟೊ, ನನ್ನ ಮಗ ಅಡುಗೆ ಮಾಡುವುದನ್ನ ನನ್ನಿಂದ ಸಹಿಸಲು ಸಾಧ್ಯವಿಲ್ಲ! ಅವನಿಗೆ ಮೊಟ್ಟೆ ಬೇಯಿಸಲೂ ಬರುವುದಿಲ್ಲ, ಈಡಿಯಟ್. ಪಾಸ್ತಾ ಬೇಯಿಸಲು ಅವನಿಂದ ಹೇಗೆ ಸಾಧ್ಯ? + +‘ನಿಮ್ಮ ಮಗ? ಸಿಯೊನರ್ ಮಂಗಿಯಾರೊಟ್ಟಿ ನಿಮ್ಮ ಮಗನಾ?’ + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +‘ಅದು ತನ್ನ ನಿಯಂತ್ರಣದಲ್ಲಿದ್ದ ವಿಷಯ, ಪ್ರಕೃತಿಯ ದುರದೃಷ್ಟಕರ ಆಕಸ್ಮಿಕ’ ಎಂದು ಹೇಳುವ ಹಾಗೆ ಮುದುಕ ತನ್ನ ಭುಜಗಳನ್ನು ಕುಣಿಸಿದ.`ಈಗ, ನೀವು ನಿಜಕ್ಕೂ ಒಳ್ಳೆಯ ಪಾಸ್ತಾ ತಿನ್ನಲು ಬಯಸಿದರೆ, ಸ್ವಲ್ಪ ಸಮಯ ನನ್ನ ಅಡುಗೆ ಮಾಡಲು ಬಿಡಬೇಕು. ನೀವು ಎಂದಿಗೂ ಮರೆಯಲಾಗದ ಘಂ ಎನ್ನುವ ಅಡುಗೆ ನಾನು ನಿಮಗಾಗಿ ಮಾಡುತ್ತೇನೆ. ನನ್ನ ಆ ಮೂರ್ಖ ಮಗನಿಗೆ ಗಿಡಮೂಲಿಕೆಗಳು ಮತ್ತು ಸುವಾಸನೆಗಳ ಬಗ್ಗೆ ಏನು ಗೊತ್ತು? ಅವನಿಗೆ ತಿಳಿದಿರುವುದು ಬೆಳ್ಳುಳ್ಳಿ ಮತ್ತು ಟೊಮೆಟೊ ಪೇಸ್ಟ್ ಮಾತ್ರ’ ಎಂದ. ಆದರೆ ನಾನು- ಈ ಸಮಯ ಅವನು ಮತ್ತೆ ತನ್ನ ಮೂಗಿನ ಬದಿಯನ್ನು ತಟ್ಟಿಕೊಂಡ. ಅವನ ತೊಡೆಯ ಮೇಲಿದ್ದ ಬ್ರೀಫ್ ಕೇಸ್ ಕಡೆಗೆ ನೋಡಿ ತಲೆಯಾಡಿಸಿದ. ‘ಶ್! ಒಂದು ಮಾತೂ ಆಡಬೇಡ’ ಅವನು ಪಿಸುಗುಟ್ಟಿದ. + +ನಾನು ಅವನನ್ನು ಖಾಲಿಯಾಗಿ ನೋಡುತ್ತಿದ್ದೆ. ನಂತರ ನಗುತ್ತ ಮಾತಿನ ಕರಾರಿಗೆ ಒಪ್ಪಿಕೊಳ್ಳಲು ನಿರ್ಧರಿಸಿದೆ. ನನ್ನ ಬಾಲ್ಯದ ಮಸಕಾದ ಸ್ಮರಣೆ ಯಕ್ಷಿಣಿಯನ್ನು ಅಸಮಾಧಾನಗೊಳಿಸುವುದು ಬುದ್ಧಿವಂತಿಕೆಯಲ್ಲ ಎಂದು ನನಗೆ ಎಚ್ಚರಿಕೆ ನೀಡಿತು. ಆಗ ಮಂಗಿಯಾರೊಟ್ಟಿ ಬಂದು ತಾನು ತಯಾರಿಸಿದ ಆಹಾರವನ್ನು ಮೇಜಿನ ಮೇಲೆ ಇಳಿಸಿದ. ಅದು ಕೆಟ್ಟದ್ದಾಗಿರಲಿಲ್ಲ, ಆದರೆ ತುಂಬಾ ರುಚಿಯಾಗಿ ಏನೂ ಇರಲಿಲ್ಲ. ಮುದುಕ ಹೇಳಿದ್ದು ಸರಿ: ಇದಕ್ಕೆ ಇನ್ನಷ್ಟು ಪರಿಮಳ, ರುಚಿ ಹೊಂದಿಸಬಹುದಿತ್ತು, ಸರಿಯಾದ ಪ್ರಮಾಣದಲ್ಲಿ ಗಿಡಮೂಲಿಕೆಗಳ ಸಂಯೋಜನೆಯನ್ನು ಮಾಡುವುದರಿಂದ ಬರುವ ಪರಿಮಳ ಮಾತ್ರ ಅದ್ಭುತ. + +ನಾವು ಬಾಟಲಿಯನ್ನು ಮುಗಿಸಿ ಎರಡನೆಯದನ್ನು ಪ್ರಾರಂಭಿಸಿದೆವು. ವೈನ್ ನಾಲಿಗೆಯನ್ನು ಸಡಿಲಗೊಳಿಸುತ್ತದೆ ಎಂದು ಹೇಳುತ್ತಾರೆ. ಆದರೆ ಸಂಭಾಷಣೆ ಏನೇನೂ ಸುಲಭವಾಗಲಿಲ್ಲ. ಮಂಗಿಯಾರೊಟ್ಟಿ ಇನ್ನಷ್ಟು ವೈನ್ ತರಲು ಅಂಗಡಿಗೆ ಹೋಗುವುದಾಗಿ ಹೇಳಿದಾಗ ನನಗೆ ಬಹಳ ನಿರಾಳ ಮತ್ತೆ ಸಮಾಧಾನವಾಯಿತು. + +ಅವನು ಹೊರಡುವಾಗ, ನನ್ನತ್ತ ತಿರುಗಿ ಇಂಗ್ಲಿಷ್ ನನಲ್ಲಿ ತನ್ನ ತಂದೆಗೆ ಅರ್ಥವಾಗದಂತೆ ಹೇಳಿದ: ‘ಆ ಮುದಿಮೂರ್ಖನ ಮಾತಿಗೆ ಗಮನ ಕೊಡಬೇಡ. ಅವನ ತಲೆ ತುಂಬ ಅಸಂಬದ್ಧತೆ ತುಂಬಿದೆ. ನಿಜಕ್ಕೂ ನಾನು ನೀನಾಗಿದ್ದರೆ, ನಾನು ಅವನೊಂದಿಗೆ ಮಾತನಾಡಲು ಸಹ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.’ನನಗೆ ಸ್ವಂತ ತಂದೆಯ ಬಗ್ಗೆ ಹಾಗೆ ಹೇಳುವುದು ಕ್ರೂರ ವಿಷಯ ಎನ್ನಿಸಿತು. ಅವನು ಕೊಠಡಿಯನ್ನು ಬಿಟ್ಟ ಕೂಡಲೇ, ಮುದುಕ ಮತ್ತೆ ನನ್ನ ಕಡೆಗೆ ತಿರುಗಿ ಕೇಳಿದ, `ಜಿಯೋವಾನೊಟ್ಟೊ, ನಿನ್ನ ಅಭಿಪ್ರಾಯವೇನು?’ + +ಅದೇ ಉತ್ತರಿಸಲಾಗದ ಪ್ರಶ್ನೆ. ಆದರೆ ಈ ಬಾರಿ ನಾನು ಅದಕ್ಕೆ ಸಿದ್ಧನಾಗಿದ್ದೆ. ‘ತೀರಾ ಕೆಟ್ಟದ್ದಲ್ಲ’ ಎಂದೆ. ಅದು ಅವನಿಗೆ ಬೇಕಾದ ಉತ್ತರವೇ ಎಂದು ಅನಿಸಿತು. ‘ಕೆಟ್ಟದ್ದಲ್ಲವೇ? ಕೆಟ್ಟದ್ದಲ್ಲವೇ?? ಎಂತಹ ಶೋಚನೀಯ ಅಭಿವ್ಯಕ್ತಿ. ಓಹ್! ಅದು ಅವನು ಹೇಳುವಂತಹ ಅತ್ಯಂತ ಕೆಟ್ಟ ವಿಷಯ,’ + +ಅವನು ಮಂಗಿಯಾರೊಟ್ಟಿ ಒಂದು ನಿಮಿಷದ ಮೊದಲು ಹೋಗಿದ್ದ ಬಾಗಿಲಿನ ಕಡೆಗೆ ನೋಡಿ ತಲೆಯಾಡಿಸಿ ಹೇಳಿದ. ‘ಇಲ್ಲ, ಜಿಯೋವಾನೊಟ್ಟೊ, ಇದು ಕೇವಲ ಕೆಟ್ಟದ್ದಲ್ಲ ಅನ್ನುವುದಷ್ಟೇ ಅಲ್ಲ; ಇದು ಅದ್ಭುತವಾಗಿದೆ. ಅದ್ಭುತ. ಅದು ಸರಿಯಾದ ಪದ!’ + +ಅವನು ತನ್ನ ಲೋಟವನ್ನು ಎತ್ತಿಕೊಂಡು ಒಂದೇ ಗುಟುಕಲ್ಲಿ ಖಾಲಿ ಮಾಡಿದ. ನಾನು ಅದನ್ನು ಪುನಃ ತುಂಬಿಸಿದೆ. ಅದೇ ಸಮಯದಲ್ಲಿ ಈ ಪದವನ್ನು ಮತ್ತೆ ಹೇಳಿದೆ: ‘ಅದ್ಭುತ. ಹೌದು ನೀವು ಹೇಳಿದ್ದು ಸರಿ. ಇದು ಅದ್ಭುತವಾಗಿದೆ.’ + +ಅದು ಅವನನ್ನು ತೃಪ್ತಿಪಡಿಸಿದಂತೆ ಕಂಡಿತು. ಅವನ ಕಣ್ಣುಗಳು ಕಿರಿದಾದವು ಮತ್ತು ಅವನು ಮುಂದಕ್ಕೆ ಬಾಗಲು ನನಗೆ ಸೂಚಿಸಿದ. ಕೋಣೆಯಲ್ಲಿ ನಾವಿಬ್ಬರು ಮಾತ್ರ ಇದ್ದರೂ ಅವನು ತುರ್ತಿನ ಪಿಸುಮಾತನ್ನ ಪ್ರಾರಂಭಿಸಿದ. `ಇದು ಪರಿಪೂರ್ಣ ಅಪರಾಧ, ನೀನು ಯೋಚಿಸುವುದಿಲ್ಲವೇ?’ ಅವನು ಹೇಳಿದ. + +‘ಹೌದು,’ ನಾನು ಉತ್ತರಿಸಿದೆ. + +`ಹೌದು, ಜಿಯೋವಾನೊಟ್ಟೊ, ನಾನು ಶ್ರೀಮಂತನಾಗುತ್ತೇನೆ! ಶ್ರೀಮಂತ!’ + +`ಎಷ್ಟು ನಿಖರವಾಗಿ ದೃಢವಾಗಿ ಹೇಳುತ್ತೀರಿ’ ನಾನು ಪ್ರಾರಂಭಿಸಿದೆ. ಆದರೆ ಅವನ ಮಾತಿಗೆ ನಾನು ಅಡ್ಡಿಯಾಗುವಂತಿರಲಿಲ್ಲ.`ಸ್ವಲ್ಪ ಯೋಚಿಸು! ಪ್ಯಾರಿಸ್ ನ ಅತಿದೊಡ್ಡ ಬ್ಯಾಂಕ್! ನಾನು ಅದನ್ನು ದೋಚುತ್ತೇನೆ!’ + +‘ಅಂದರೆ… ನೀವು… ಎಫ್ ಅನ್ನು? ಆದರೆ ಯಾವುದೇ ಪ್ರಶ್ನೆಯ ಅಗತ್ಯವಿರಲಿಲ್ಲ. ಈಗ ನಾನು ಹೇಳುವುದನ್ನು ಹೇಳದಂತೆ ಯಾವುದೂ ತಡೆಯಲಾರದು.’ ಅವನ ಕಣ್ಣುಗಳು ಸಂಭ್ರಮದಿಂದ ಹೊಳೆಯುತ್ತಿದ್ದವು. + +“ಹೌದು, ಪ್ರಿಯ ಹುಡುಗ, ನಾನು ಸುಮ್ಮನೆ ಅದರೊಳಕ್ಕೆ ಕಾಲಿಡುತ್ತೇನೆ, ನನ್ನ ಬ್ರೀಫ್ ಕೇಸ್ ಅನ್ನು ಹಣದಿಂದ ತುಂಬಿಸಿ ಮತ್ತೆ ಹೊರನಡೆಯುತ್ತೇನೆ” ಎಂದು ಅವನು ಹೇಳಿದ. ಬಳಿಕ ಅವನು ಹಿಂದೆ ಸರಿದು ಕುಳಿತ. ಅವನ ಸುಕ್ಕುಗಟ್ಟಿದ ಚಿಕ್ಕ ಮುಖ ಆತ್ಮವಿಶ್ವಾಸವನ್ನು ತುಂಬಿಕೊಂಡಿತ್ತು. ಅವನು ಸಂಪೂರ್ಣವಾಗಿ ಅವನ ಬುದ್ಧಿಯಿಂದ ಆಚೆ ಹೋಗಿದ್ದ ಎಂದು ನನಗೆ ಈಗ ಖಚಿತವಾಗಿತ್ತು. + +`ಆದರೆ, ಯಾರಾದರೂ ನಿಮ್ಮನ್ನು ತಡೆಯಲು ಪ್ರಯತ್ನಿಸುವುದಿಲ್ಲವೇ?’ ನಾನು ಸಾಧ್ಯವಾದಷ್ಟು ನಿಧಾನವಾಗಿ ಕೇಳಿದೆ. + +‘ಆಹಾ, ಅದರ ಸೌಂದರ್ಯ ಅಂದರೆ ಅದೇ, ನನ್ನ ದಡ್ಡ ಯುವ ಸ್ನೇಹಿತ. ಅದು ಅದರ ಸೌಂದರ್ಯ: ನಾನು ಅಗೋಚರವಾಗಿರುತ್ತೇನೆ!’ ಕೊನೆಯ ನಾಲ್ಕು ಪದಗಳು ಬ್ಯಾನರ್ ಒಂದರ ಶೀರ್ಷಿಕೆಯಂತೆ ಹೊರಬಂದವು. ಮಾತು ಮುಂದುವರಿಸುವ ಮೊದಲು ಅವನು ಬಾಗಿಲಿನ ಕಡೆಗೆ ಆತಂಕದಿಂದ ನೋಡುತ್ತಿದ್ದ. ‘ನೋಡು!’ ಅವನು ತನ್ನ ಬ್ರೀಫ್ ಕೇಸ್ ತೆರೆದ. ನನಗೆ ಇಣುಕಿ ನೋಡಲು ಅವಕಾಶ ಮಾಡಿಕೊಟ್ಟ. ಸತ್ತ ಸಸ್ಯಗಳು, ಎಲೆ ಮತ್ತು ಹುಲ್ಲಿನ ಗರಿಗಳಂತೆ ಕಾಣಿಸುತ್ತಿದ್ದ ವಸ್ತುಗಳಿಂದ ಆ ಬ್ರೀಫ್ ಕೇಸ್ ತುಂಬಿತ್ತು. ‘ಅವೆಲ್ಲ ಗಿಡಮೂಲಿಕೆಗಳು, ಜಿಯೋವನೊಟ್ಟೊ, ಗಿಡಮೂಲಿಕೆಗಳು. ಅದೇ ಅದರ ರಹಸ್ಯ. ನಾನು ಅದೃಶ್ಯವಾಗುವಂತೆ ಒಂದು ಪಾಕವನ್ನು ಪರಿಪೂರ್ಣವಾಗಿ ಸಿದ್ಧಗೊಳಿಸಿದ್ದೇನೆ. ಅದರ ಬಗ್ಗೆ ನಿನ್ನ ಅಭಿಪ್ರಾಯವೇನು?’ + +`ತುಂಬಾ ಒಳ್ಳೆಯದು, ಅದ್ಭುತ!’ ನಾನು ಪ್ರೋತ್ಸಾಹದ ಮಾತಿಂದ ಉತ್ತರಿಸಿದೆ. ಅವನು ಹುಚ್ಚನಾಗಿದ್ದ. ಆದರೆ ಅವನು ನಿರುಪದ್ರವಿಯೆಂದು ನಾನು ಭಾವಿಸಿದೆ. ಅವನ ಕಣ್ಣುಗಳು ಆ ಕ್ಷಣದಲ್ಲಿ ಉತ್ಸಾಹ ಮತ್ತು ಹೆಮ್ಮೆಯಿಂದ ಉರಿಯುತ್ತಿದ್ದವು. ಅವನು ‘ಅದ್ಭುತ’ ಎಂಬ ಪದವನ್ನು ತನಗೆ ತಾನೇ ಮತ್ತೆ ಮತ್ತೆ ಹೇಳಿಕೊಂಡ. ನಂತರ ಅಚ್ಚರಿಯೆಂಬಂತೆ, ತನ್ನ ಕುರ್ಚಿಯಲ್ಲಿ ಹಿಂದೆ ಸರಿದ. ಇದ್ದಕ್ಕಿದ್ದಂತೆ ಅವನ ಕಣ್ಣುಗಳು ತಮ್ಮ ಹೊಳಪನ್ನು ಕಳೆದುಕೊಂಡವು. ಅವನ ಮುಖ ಆಳವಾದ ದುಃಖದ ಅಭಿವ್ಯಕ್ತಿಯನ್ನು ಪಡೆದುಕೊಂಡಿತು. ಅವನ ದೇಹವು ತೂತಾದ ಬಲೂನಿನಂತೆ ಇನ್ನಷ್ಟು ಕುಗ್ಗುವಂತೆ ಕಂಡುಬಂತು. + +‘ಯಾಕೆ? ಏನು ವಿಷಯ?’ ತುಂಬಾ ವೈನ್ ಕುಡಿಯುವುದರಿಂದ ಅನಾರೋಗ್ಯಕ್ಕೆ ಅವನು ಒಳಗಾಗಬಹುದೆಂದು ಭಾವಿಸಿ ನಾನು ನಿಧಾನವಾಗಿ ಕೇಳಿದೆ.ನಾನು ಅವನ ಕಣ್ಣಲ್ಲಿ ಕಣ್ಣೀರು ಕಂಡಿದ್ದೇನೆ ಎಂದು ನಾನು ಆಣೆ ಮಾಡಿ ಹೇಳುತ್ತೇನೆ. ‘ನನ್ನನ್ನು ನಾನೇ ಅಗೋಚರವಾಗಿ ಮಾಡಿಕೊಳ್ಳಬಲ್ಲೆ, ಆದರೆ ನನ್ನ ಬ್ರೀಫ್ ಕೇಸ್ ಅನ್ನು ಅಗೋಚರವಾಗಿ ಮಾಡುವುದು ಹೇಗೆ ಎಂದು ನನಗೆ ತಿಳಿದಿಲ್ಲ!’ + +ನನ್ನ ಮುಖವನ್ನು ನಿರ್ಭಾವುಕವಾಗಿ ಇಟ್ಟುಕೊಳ್ಳುವುದು ನನಗೆ ತುಂಬಾ ಕಷ್ಟಕರವಾಗಿತ್ತು, ಅಲ್ಲದೆ ಮಂಗಿಯಾರೊಟ್ಟಿ ವೈನ್ ನೊಂದಿಗೆ ಹಿಂದಿರುಗಿ\ದ್ದನ್ನು ಕೇಳಿ ನನಗೆ ತುಂಬಾ ಸಂತೋಷವಾಯಿತು. + +‘ನನ್ನ ಬೆನ್ನು ತಿರುಗಿದ ತಕ್ಷಣ ಮುದುಕ ಆ ಕಿತ್ತುಹೋದ ಹಳ್ಳಕ್ಕೆ ಗಿಡಮೂಲಿಕೆಗಳನ್ನು ಸಂಗ್ರಹಿಸಲು ಹೋಗುತ್ತಾನೆ. ಪ್ರತಿ ಬಾರಿಯೂ ಅವನನ್ನು ಮರಳಿ ಕರೆದುಕೊಂಡು ಬರಬೇಕಾದವನು ನಾನು. ಅವನು ತನಗೂ ಮತ್ತು ಎಲ್ಲರಿಗೂ ದೊಡ್ಡ ಉಪದ್ರವ.’ + + + +ಮಂಗಿಯಾರೊಟ್ಟಿ ಕಾರ್ಕ್ ಸ್ಕ್ರೂ ತರಲು ಅಡುಗೆಮನೆಗೆ ಹೋದ. ಮುದುಕ ನನ್ನ ಕಡೆಗೆ ನೋಡಿದ, ಅವನ ಕಣ್ಣುಗಳು ಮೌನವಾಗಿ ಅವನ ರಹಸ್ಯ ಇನ್ನೂ ಸುರಕ್ಷಿತವಾಗಿದೆಯೇ ಎಂದು ಕೇಳುತ್ತಲಿದ್ದವು. ನಾನು ಇನ್ನೇನು ಮಾಡಬಹುದು? ಅವನತ್ತ ಕಣ್ಣು ಹಾಯಿಸಿ ನನ್ನ ಮೂಗಿನ ಬದಿಗೆ ತಟ್ಟಿಕೊಂಡೆ. ಆ ಕ್ಷಣದಲ್ಲಿ ಅವನ ಮುಖದಾದ್ಯಂತ ಒಂದು ಯಕ್ಷಿಣಿಯ ನಗುವಿನ ಚಿತ್ರ ಹರಡಿಕೊಂಡಿತು. + + + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_27.txt b/Kenda Sampige/article_27.txt new file mode 100644 index 0000000000000000000000000000000000000000..63f81b266fbd4805a3324cd7a4c4a6cc7d3e208c --- /dev/null +++ b/Kenda Sampige/article_27.txt @@ -0,0 +1,23 @@ +ಒಂಬತ್ತನೇ ತರಗತಿಯಲ್ಲಿದ್ದಾಗ ಕೆಲವರು‌ ಬೇರೆ ಶಾಲೆಯಿಂದ ಬಂದು ನಮ್ಮ ಶಾಲೆಗೆ ಸೇರಿದರು. ಅದರಲ್ಲಿ ರಮೇಶ(ಹೆಸರು ಬದಲಿಸಲಾಗಿದೆ) ಅನ್ನೋ ಒಬ್ಬ ಹುಡುಗ ಸೇರಿದ್ದ. ಇರೋ ವಿದ್ಯಾರ್ಥಿಗಳಲ್ಲಿ ತುಂಬಾ ಶ್ರೀಮಂತ ಮನೆತನದಿಂದ ಬಂದವನು ಅಂತಾ ಅವನನ್ನು ನೋಡಿದ್ರೆ ಅನಿಸೋದು. ಕೆಲವೊಮ್ಮೆ ಅವರ ಮನೆಯಿಂದ ಅವನನ್ನು ನೋಡೋಕೆ ಬಂದಾಗ ಅವರು ಧರಿಸುತ್ತಿದ್ದ ಮಾಡರ್ನ್ ಡ್ರೆಸ್‌ಗಳು, ಬರುತ್ತಿದ್ದ ಕಾರನ್ನು ನೋಡಿ ಅವನಿಗೆ ತುಂಬಾ ಗೌರವ ಕೊಡುತ್ತಿದ್ದರು. ಅವನು ಇಂಗ್ಲೀಷ್‌ನಲ್ಲಿಯೇ ಮಾತಾಡುತ್ತಿದ್ದನು. ನಮ್ ಮೇಷ್ಟ್ರುಗಳು ಅವನ ಜೊತೆ ಕನ್ನಡದಲ್ಲಿ ಮಾತನಾಡಿಸುತ್ತಿರಲಿಲ್ಲ. ಅದರಲ್ಲೂ ನಮ್ಮ ಇಂಗ್ಲೀಷ್ ಮೇಷ್ಟ್ರು ಕೆ.ಆರ್.ಎಸ್. ಅವನ ಜೊತೆ ಹಾಗೂ ಅವರ ಪೋಷಕರ ಜೊತೆ ಇಂಗ್ಲೀಷ್‌ನಲ್ಲಿ ಮಾತನಾಡುತ್ತಿದ್ದಾಗ ನಾನಂತೂ ಅತ್ಯಾಶ್ಚರ್ಯ ಪಡುತ್ತಿದ್ದೆ. ನೀವೇನೇ ಹೇಳಿ, ಯಾರೇನೇ ಹೇಳಲಿ. ಇಂಗ್ಲೀಷ್ ಭಾಷೆಗೆ ತುಂಬಾನೆ ಗೌರವ ಇಂದಿಗೂ ಇದೆ. ಇಂಗ್ಲೀಷ್ ಮಾತನಾಡೋಕೆ ಬರುವವರನ್ನು ತುಂಬಾ ಇಂಟಲಿಜೆಂಟ್ ರೀತಿ ನೋಡೋದು, ಮಕ್ಕಳನ್ನು ಇದೇ ಮೀಡಿಯಂನಲ್ಲಿಯೇ ಓದಿಸಬೇಕು ಎಂಬ ಆಸೆ ತೋರುವುದು ಜಾಸ್ತಿಯಾಗುತ್ತಿದೆ. ಆದರೆ ಯಾವುದೇ ಮಾತೃಭಾಷೆಯಾಗಿರಲಿ ಮೊದಲು ಅದರಲ್ಲಿ ಪ್ರಾವೀಣ್ಯತೆ ಪಡೆಯದಿದ್ದರೆ ಬೇರೆ ಯಾವ ಭಾಷೆಯಲ್ಲಿ ಪ್ರಭುತ್ವ ಸಾಧಿಸಲೂ ಸಾಧ್ಯವಿಲ್ಲ ಎಂಬ ಮಾತಂತೂ ಸತ್ಯ. ಆದ್ದರಿಂದ ಮೊದಲು ನಾವು ನಮ್ಮ ಮಾತೃಭಾಷೆಗೆ ಹೆಚ್ಚು ಆದ್ಯತೆ ಕೊಡೋಣ. ಅಯ್ಯೋ ವಿಷಯ ಎಲ್ಲೆಲ್ಲಿಗೋ ಹೋಯ್ತಲ್ಲ. ರಮೇಶನ ವಿಷಯಕ್ಕೆ ವಾಪಸ್ ಬರೋಣ. + +ಅವನ ಬಗ್ಗೆ ನಾವು ಇವನು ಭಾರೀ ಬುದ್ಧಿವಂತ, ಕ್ಲಾಸಲ್ಲಿ ನಮ್ಮನ್ನೆಲ್ಲಾ ಮೀರಿಸಿ ಬಿಡ್ತಾನೆ, ಇವನೇ ಫಸ್ಟ್ ರ್ಯಾಂಕ್ ಬರ್ತಾನೆ ಹಾಗೇ ಹೀಗೆ ಅಂತಾ ನಾವು ಅಂದ್ಕೊಂಡಿದ್ವಿ. ಆದರೆ ಕಾಲಕ್ರಮೇಣ ನಮಗೆ ಗೊತ್ತಾಯ್ತು; ಇವನಿಗೆ ಬರೀ ಇಂಗ್ಲೀಷಿನಲ್ಲಿ ಮಾತಾಡೋಕೆ ಬರುತ್ತೆ, ಬೇರೆ ಸಬ್ಜೆಕ್ಟ್ ನಾಲೆಡ್ಜ್ ಇಲ್ಲ ಅಂತಾ ಇವನ ಸಿಂಗಲ್ ಡಿಜಿಟ್ ಟೆಸ್ಟ್ ಮಾರ್ಕ್ಸ್ ನೋಡಿ ನಾವು ತಿಳ್ಕೊಂಡ್ವಿ. + +ಇನ್ನು ಇವನು ಒಂದು ವಾಚ್ ಕಟ್ಟಿಕೊಂಡಿರುತ್ತಿದ್ದ. ಅದು ಟೈಮು ಮನುಷ್ಯರಂತೆ ಶಬ್ದದ ರೂಪದಿ ಹೇಳ್ತಾ ಇತ್ತು. ಅದರಲ್ಲಿ ಅಲಾರಾಂ ಬೇರೆ ಇತ್ತು. ಇದನ್ನು ನೋಡಿ ನಾವು ತುಂಬಾ ಆಶ್ಚರ್ಯ ಪಟ್ಟಿದ್ದೆವು!! ಒಮ್ಮೆ ಗಣಿತ ಕ್ಲಾಸಲ್ಲಿ ಅಲಾರಾಂ ಶಬ್ದ ಕೇಳಿ ನಮ್ಮ ಮೇಷ್ಟ್ರೂ ಸಹ ಶಬ್ದದ ಮೂಲ ಹುಡುಕಿ ಅವನ ಕೈಯಲ್ಲಿನ ವಾಚಿನ ಮಹಿಮೆ ತಿಳಿದು ಅವರೂ ಅಚ್ಚರಿಗೊಂಡಿದ್ದರು. ಇವನು ಹಾಸ್ಟೆಲ್ಲಿನಲ್ಲಿ‌ ಇದ್ದಾಗಲೂ ಬೇಕರಿ ತಿಂಡಿ ತಿನಿಸುಗಳನ್ನು ಸಾಕಷ್ಟು ತರುತ್ತಿದ್ದ. ಇವನ ರೂಂ ಮೇಟ್‌ಗಳೆಲ್ಲರೂ ಸೊಂಪಾಗಿ ಇದ್ದರು. ನಾವೂ ಸಹ ಇವನ ರೂಂ‌ಮೇಟ್ ಆಗಿರಬಾರದಿತ್ತ? ಎಂದು ಅಂದುಕೊಂಡಿದ್ದೆವು. ಒಮ್ಮೆ ಕೆಲ ಹುಡುಗರು ಇವನ ಜೊತೆ ರೂಮಿನಲ್ಲಿ ಕೇಕ್, ಪೆಪ್ಸಿ ಕೋಕೋ ಕೋಲಾ ತಂದು ಪಾರ್ಟಿ ಮಾಡಿದ್ದರು ಎಂಬ ಸುದ್ದಿ ಹರಡಿ ವಾರ್ಡನ್ನಿಗೂ ತಿಳಿದು ಅವರಿಗೆ ವಾರ್ನ್ ಮಾಡಿ ಸುಮ್ಮನಾದರು. ನಾವು ಆಗ ಒಂದೊಮ್ಮೆ ಪ್ರತಿಷ್ಟಿತರು ಅಲ್ಲದೇ ಬೇರೆ ಯಾರಾದ್ರೂ ಈ ರೀತಿ ಮಾಡಿದ್ರೆ ಹಾಸ್ಟೆಲ್ ಬಿಟ್ಟು ಕಳಿಸುತ್ತಿದ್ದರು ಎಂದು ನಾವು ಮಾತನಾಡಿಕೊಂಡಿದ್ವಿ. ಇಂತಿಪ್ಪ ರಮೇಶ ಮೊದಲು ಬಂದಾಗ ಅವನು ಗಳಿಸಿದ್ದ ಬೆಲೆ ಕಾಲಕ್ರಮೇಣ ಕಡಿಮೆಯಾಗುತ್ತಾ ಹೋಗಿತ್ತು. + +ಒಮ್ಮೆ ವಿಜ್ಞಾನ ಟೆಸ್ಟ್ ಬರೆಯುವಾಗ ನಾವು ನೋಟ್ಸ್‌ಗಳನ್ನೆಲ್ಲಾ ಹೊರಗಡೆ ಇಟ್ಟು ಬಂದಿದ್ವಿ. ಆಗ ನಮಗೆ ವಿಜ್ಞಾನ ಬೋಧಿಸುತ್ತಿದ್ದ ಡಿ.ಎಸ್ (ಡಿ.ಸತೀಶ್) ಸರ್ ನೋಟ್ಸ್‌ಗಳನ್ನೆಲ್ಲಾ ಚೆಕ್ ಮಾಡಿದ್ದಾರೆ. ಆಗ ಅವರಿಗೆ ರಮೇಶನ ನೋಟ್ಸಿನಲ್ಲಿ ಒಂದು ಲೆಟರ್ ಸಿಕ್ಕಿದೆ. ಅದರಲ್ಲಿ ಏನಿದೆ ಅಂತಾ ಓದಿದಾಗ ಅವರಿಗೆ ತುಂಬಾ ಸಿಟ್ಟು ಬಂದಿದೆ. ಯಾಕೆಂದರೆ ಅದು ರಮೇಶನಿಗೆ ನಮ್ಮದೇ ಕ್ಲಾಸಿನಲ್ಲಿದ್ದ ಒಬ್ಬಾಕೆ ಬರೆದ ಲವ್ ಲೆಟರ್ ಅದಾಗಿತ್ತು! ಅವರು ತಕ್ಷಣ ಒಳಗೆ ಬಂದು ಆ ಹುಡುಗಿಯ ಬಗ್ಗೆ ಕಚೇರಿಗೆ ತಿಳಿಸಿ ಕೊನೆಗೆ ಹಾಸ್ಟೆಲ್ ವಾರ್ಡನ್‌ಗೆ ತಿಳಿಸಿದ್ದಾರೆ. ಈ ಸುದ್ದಿಯು ಇಡೀ ಹಾಸ್ಟೆಲ್ಲಿನ ತುಂಬೆಲ್ಲಾ ಕಾಡ್ಗಿಚ್ಚಿನಂತೆ ಹರಡಿತ್ತು. ತಕ್ಷಣ ಆ ಹುಡುಗಿಯ ಪೋಷಕರನ್ನು ಕರೆಸಿ ಅವಳ ಟಿಸಿ ಕೊಟ್ಟು ಶಾಲೆಯಿಂದ ಬಿಟ್ಟು ಕಳಿಸಿದರು. ಈ ಘಟನೆಯಿಂದ ನಮ್ಮ ಹಾಸ್ಟೆಲ್ ಹುಡುಗರಾಗಲಿ, ಹುಡುಗಿಯರಾಗಲಿ ಈ ರೀತಿ ಮಾಡುವ ಸಹವಾಸ ಬೇಡಪ್ಪ ಅನ್ನೋ ರೀತಿ ಆಗಿದ್ದಂತೂ ಸುಳ್ಳಲ್ಲ. ಅಲ್ಲಲ್ಲಿ ಕೆಲವರು ಕೆಲ ಹುಡುಗಿಯರ ಹೆಸರ ಜೊತೆ ಗಾಸಿಪ್ ಮಾಡಿಕೊಂಡಿದ್ದರೇ ಹೊರತು ಲವ್ ಲೆಟರ್ ಬರೆಯುವ ದುಸ್ಸಾಹಸಕ್ಕೆ ಯಾರೂ ಕೈಹಾಕಲಿಲ್ಲ. ನಾನು ಈಗಲೂ ‘ಅವಳು ಮಾಡಿದ್ದ ಅಂತಾ ಮಹಾನ್ ತಪ್ಪೇನು? ಅವಳಿಗೆ ವಾರ್ನ್ ಮಾಡಿ ಬಿಡಬಹುದಿತ್ತಲ್ಲವಾ?’ ಅಂದ್ಕೊಳ್ತೇನೆ.. ಇಲ್ಲಿ ರಮೇಶ ಮಾತ್ರ ಏನೂ ಆಗದ ರೀತಿಯಲ್ಲಿ‌ ಇದೇ ಶಾಲೆಯಲ್ಲಿ ಮುಂದುವರೆದಿದ್ದ!! ಆದರೆ ಮೇಷ್ಟ್ರುಗಳು ಅವನ ಬಗ್ಗೆ ಮೊದಲಿನಷ್ಟು ಆಸಕ್ತಿ ತೋರಲಿಲ್ಲ. ಆದರೆ ಇವನು ಹತ್ತನೇ ತರಗತಿಗೆ ಸೇರಲಿಲ್ಲ. ಒಂಬತ್ತನೇ ತರಗತಿಯನ್ನು ಪಾಸ್ ಆದನೋ ಫೇಲ್ ಆದನೋ ಗೊತ್ತಾಗಲಿಲ್ಲ. ಆದರೆ ಹಲವು ವರ್ಷಗಳು‌ ಕಳೆದ ನಂತರ ಇವನೂ ಸಹ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಮನಸ್ಸಿಗೆ ಗರ ಬಡಿದಂತಾಯಿತು. ಏಕೆಂದರೆ ಹಾಸ್ಟೆಲ್ಲಿನಲ್ಲಿ ಇದ್ದ ಆ ಒಂದು ವರ್ಷ ತಾನು ಸಿರಿವಂತ ಎಂದು ಒಮ್ಮೆಯೂ ಗತ್ತು ತೋರಿಸಿರಲಿಲ್ಲ. ಎಂದೂ ಅಹಂಕಾರ ಪಡಲಿಲ್ಲ. ಎಲ್ಲರೊಡನೆ ಬೆರೆಯುತ್ತಿದ್ದ. ಸಾಕಷ್ಟು ಸ್ಥಿತಿವಂತರಾಗಿದ್ದರೂ ಕೆಲವರು ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳೋದನ್ನು ನೋಡಿ ಬೇಸರವೆನಿಸುತ್ತದೆ. ‘ಈಸಬೇಕು ಇದ್ದು ಜಯಿಸಬೇಕು’, ‘ಮಾನವ ಜನ್ಮ ದೊಡ್ಡದು ಇದನು ಹಾಳು ಮಾಡಿಕೊಳ್ಳಬೇಡಿರಿ ಹುಚ್ಚಪ್ಪಗಳಿರಾ’ ಎಂಬ ಮಾತುಗಳು ಬದುಕಲು ಮಾಡುವ ಹೋರಾಟದ ಬಗ್ಗೆ ತಿಳಿಸುತ್ತವೆ. ಇಂತಹ ಮಾತುಗಳಿಂದ ಯಾರೇ ಆದರೂ ಪ್ರೇರೇಪಣೆ ಪಡೆಯಬೇಕು. + + + +ಒಂಬತ್ತನೇ ಕ್ಲಾಸಲ್ಲಿ ನಾನು ಸಾಕಷ್ಟು ಓದುತ್ತಿದ್ದೆ. ಈ ಓದಿನ ಫಲ ನನಗೆ ಫಲಿತಾಂಶದಲ್ಲಿ ಸಿಕ್ಕಿತ್ತು. ಮೂರೂ ಸೆಕ್ಷನ್‌ಗಳಿಗೂ ಸೇರಿ ಕೊಡುತ್ತಿದ್ದ ರ್ಯಾಂಕಿನಲ್ಲಿ ನನಗೆ ಎರಡನೇ ರ್ಯಾಂಕ್ ಲಭಿಸಿತ್ತು. ಕನ್ನಡ ಮೀಡಿಯಂನ ಶಿವಶಂಕರ್ ಪ್ರಥಮ ರ್ಯಾಂಕ್ ಪಡೆದಿದ್ದ. ನನಗೆ ಎರಡು ಅಂಕಗಳಲ್ಲಿ‌ ಪ್ರಥಮ ರ್ಯಾಂಕ್ ಮಿಸ್ಸಾಗಿತ್ತು. ಇದರ ಬಗ್ಗೆ ಅಷ್ಟು ಫೀಲ್ ಆಗಿರಲಿಲ್ಲ. ಆದರೆ ಯಾವಾಗ ಗಣೇಶನ‌ ಹಬ್ಬದಲ್ಲಿ‌ ಮೊದಲ ರ್ಯಾಂಕ್ ಬಂದವರಿಗೆ ಬಹುಮಾನವಾಗಿ ನೂರು ರೂಪಾಯಿ ಕೊಟ್ಟಾಗ ತುಂಬಾ ಬೇಸರವಾಗಿದ್ದೆ. ನಮಗೆ ದುಡ್ಡಿನ ಸಮಸ್ಯೆ ತುಂಬಾ ಇತ್ತು. ಹಾಸ್ಟೆಲ್ಲಿನ ಶುಲ್ಕಕ್ಕಾಗಿ ಕಟ್ಟಬೇಕಾಗಿದ್ದ ಮೊತ್ತವನ್ನು ಶಿವಕುಮಾರ್ ವಾರ್ಡನ್ ಯಾವುದೋ ಒಂದು ಸರ್ಕಾರಿ ಸ್ಕೀಮ್ ಕೊಡಿಸಿ ಬರೀ ಮುನ್ನೂರು ರೂಪಾಯಿ ಕಟ್ಟುವಂತೆ ಮಾಡಿದ್ದರು. + +ನಮ್ಮ ಆಶ್ರಮದಲ್ಲಿ ಗಣೇಶನ ಹಬ್ಬವನ್ನು ತುಂಬಾ ಅದ್ಧೂರಿಯಾಗಿ ಮಾಡುತ್ತಿದ್ದರು. ವ್ಯಾಸಪೀಠದಲ್ಲಿ ಗಣೇಶನನ್ನು ಕೂರಿಸಿ ಪ್ರತಿದಿನವೂ ವಿಧ ವಿಧದ ಕಾರ್ಯಕ್ರಮಗಳನ್ನು ಮಾಡುತ್ತಿದ್ದರು. ಕವಿಗಳು, ಚಿತ್ರಕಲಾವಿದರು, ರಾಜಕಾರಣಿಗಳನ್ನು ಕರೆಸಿ ಅವರಿಂದ ಉಪನ್ಯಾಸ ಕೊಡಿಸುತ್ತಿದ್ದರು. ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳನ್ನು ಕರೆಸಿ ಅವರಿಂದ ಭಾಷಣ ಮಾಡಿಸುತ್ತಿದ್ದರು. ಮಕ್ಕಳಿಂದ ಮಾಡಿಸುತ್ತಿದ್ದ ಸಾಮೂಹಿಕ ಕವಾಯತು, ಡಂಬಲ್ಸ್, ಲೇಜಿಮ್ ಡ್ಯಾನ್ಸ್, ಬಾವುಟ ಹಿಡಿದುಕೊಂಡು ಮಾಡುತ್ತಿದ್ದ ಡ್ಯಾನ್ಸ್‌ಗಳು ಸರ್ವರಿಗೂ ಪ್ರಿಯವಾಗುತ್ತಿದ್ದವು. ಕಾರ್ಯಕ್ರಮಗಳು, ಭಾಷಣಗಳು ಮುಂತಾದವುಗಳು ನಮ್ಮಲ್ಲಿ ಸೃಜನಶೀಲ ಚಿಂತನೆಯನ್ನು ಬೆಳೆಸಲು ಸಹಕಾರಿಯಾಗಿದ್ದವು. ಈ ಸಮಯದಲ್ಲಿ ಶಾಲೆಯಲ್ಲಿ ಬರೀ ಬೆಳಗಿನ ಪಾಠಗಳು ಮಾತ್ರ ನಡೆಯುತ್ತಿದ್ದವು. + +ಇನ್ನು ವಿಜ್ಞಾನ ಬೋಧಿಸುತ್ತಿದ್ದ ಸತೀಶ್ ಸರ್‌ರವರ ಪಾಠ ತುಂಬಾ ಸ್ಟಾಂಡರ್ಡ್ ಆಗಿ ಇತ್ತು. ವೇಗವಾಗಿ ಬರೀ ಇಂಗ್ಲೀಷಿನಲ್ಲಿಯೇ ಪಾಠ ಮಾಡುತ್ತಿದ್ದುದರಿಂದ ಅವರ ವೇಗಕ್ಕೆ ನನಗೆ ಪಾಠ ಅರ್ಥ ಆಗುತ್ತಿರಲಿಲ್ಲ. ಹಾಗಂತ ರೂಮಿಗೆ ಹೋಗಿ ಅದನ್ನು ಕಲಿಯೋವರೆಗೂ ಬಿಡ್ತಾ ಇರಲಿಲ್ಲ. ಮಾಸಿಕವಾರು ನಡೆಯುತ್ತಿದ್ದ ಕಿರುಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆಯುತ್ತಿದ್ದೆ. ಆಗ ಓದಿದ್ದ ಎಷ್ಟೋ ಕಾನ್ಸೆಪ್ಟ್‌ಗಳು ಈಗ ಶಿಕ್ಷಕನಾಗಿ ನಾನು ಪಾಠ ಮಾಡುವ ಸಮಯದಲ್ಲಿ ನೆನಪಾಗುತ್ತವೆ. ನಾನು ಓದುವಾಗ ನನಗೆ ಹೆಚ್ಚು ಕಷ್ಟವಾಗುತ್ತಿದ್ದ ವಿಷಯ ಸಮಾಜ ವಿಜ್ಞಾನ. ಬೋಧಕರು ಆ ವಿಷಯವನ್ನು ಕಷ್ಟ ಮಾಡಿದ್ದರೋ, ಇಂಗ್ಲೀಷ್ ಮೀಡಿಯಂ ಪ್ರಭಾವವೇನೋ ಗೊತ್ತಿಲ್ಲ. ಸಮಾಜ ವಿಷಯವು ಕಬ್ಬಿಣದ ಕಡಲೆಯಂತಿತ್ತು. ಯಾವುದೇ ವಿಷಯವು ಮಕ್ಕಳಿಗೆ ಇಷ್ಟವಾಗುವುದು, ಬಿಡುವುದು ಆ ವಿಷಯ ಶಿಕ್ಷಕರ ಮೇಲೆ ನಿಂತಿರುತ್ತದೆ. ಈ ಕಾರಣಕ್ಕಾಗಿ‌ ಮಕ್ಕಳು ಶಿಕ್ಷಕರನ್ನು ಮೊದಲು ಇಷ್ಟಪಟ್ಟು ಗೌರವಿಸುವುದನ್ನು ಕಲಿಯಬೇಕು. ಇದೇ ರೀತಿ ಶಿಕ್ಷಕರೂ ಆಸಕ್ತಿದಾಯಕವಾಗಿ ಮಕ್ಕಳಿಗೆ ಕಲಿಸಬೇಕು. + +ಕಲಿಕೆ ವಿಷಯವನ್ನು ಹೊರತುಪಡಿಸಿ ‌ನನ್ನ ಬಳಿಯಿದ್ದ ವಸ್ತುಗಳ ವಿಷಯದಲ್ಲಿ ನನಗೆ ತುಂಬಾ ಕೊರತೆಯಿತ್ತು. ನನ್ನ ಬಳಿ ಇದ್ದದ್ದು ಒಂದೇ ಒಂದು ಪ್ಯಾಂಟು!! ಅದೂ ನನ್ನ ದೊಡ್ಡಮ್ಮನ ಮಗ ಕೊಟ್ಟಿದ್ದು. ನನ್ನ ಅದೃಷ್ಟಕ್ಕೆ ವಾರಕ್ಕೊಂದು ದಿನ ಮಾತ್ರ ಕಲರ್ ಬಟ್ಟೆ ಹಾಕುವ ಅವಕಾಶ ನಮಗಿದ್ದಿದ್ದರಿಂದ ಅದನ್ನೇ ಹಾಕಿಕೊಳ್ಖುತ್ತಿದ್ದೆ. ಪ್ಯಾರಾಗಾನ್ ಹವಾಯಿ ಚಪ್ಪಲಿಯೇ ನನ್ನ ಪಾದಗಳಿಗೆ ರಕ್ಷಣೆ ಕೊಡುತ್ತಿತ್ತು. ಇದನ್ನು ಗಮನಿಸಿದ ನನ್ನ ಸೀನಿಯರ್ ಒಬ್ಬನು ಇದರ ಬಗ್ಗೆ ಅಣಕಿಸಿದ. ಆಗ ನನಗೆ ತುಂಬಾ ಫೀಲ್ ಆಗ್ತಿತ್ತು. ಜಗತ್ತಲ್ಲಿ ನಾವು ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಚಿಂತೆಯಿಲ್ಲ ಜುಟ್ಟಿಗೆ ಮಲ್ಲಿಗೆ ಹೂವು’ ಅನ್ನೋ ರೀತಿ ತೋರಿಸಿಕೊಳ್ಳಬೇಕು‌. ಬಾಹ್ಯ ನೋಟಕ್ಕೆ ಬೆರಗಾಗುವರೇ ಬಹಳ. ಇದರ ಅನುಭವ ನನಗೆ ಹಲವಾರು ಬಾರಿ ಆಗಿದೆ. ಮುಂದೆ ಇದರ ಬಗ್ಗೆಯೇ ನನಗಾದ ಅನುಭವಗಳನ್ನು ಹಂಚಿಕೊಳ್ಳುತ್ತೇನೆ. ನಾನು ಹೈಸ್ಕೂಲನ್ನು ಈ ಒಂದೇ ಪ್ಯಾಂಟಿನಲ್ಲಿ ಮುಗಿಸಿದೆ ಎಂಬ ಅಂಶವನ್ನು ತಿಳಿಸುತ್ತೇನೆ. + + + +ಓದೋ ಸಮಯದಲ್ಲಿ ಹಲವರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರಬಹುದು. ಈ ಸಮಸ್ಯೆಗಳನ್ನು ಸಾಧನೆಯ ಮೆಟ್ಟಿಲಾಗಿ ಮಾಡಿಕೊಳ್ಳಬೇಕು. ಆಗ ಮಾತ್ರ ನಾವು ಸಾಧಿಸಲು ಸಾಧ್ಯ. ಇದನ್ನು ಬಿಟ್ಟು ಈ ಸಮಸ್ಯೆಗಳನ್ನೇ ನೆವವಾಗಿ ಮಾಡಿಕೊಂಡು ಹಾಗೆಯೇ ಇದ್ದರೆ ಇದೇ ರೀತಿ ಜೀವನವನ್ನು ಕಳೆಯಬೇಕಾಗುತ್ತದೆ ಎಂಬುದನ್ನು ನಾವು ಮನಗಾಣಬೇಕು. + +ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ. \ No newline at end of file diff --git a/Kenda Sampige/article_270.txt b/Kenda Sampige/article_270.txt new file mode 100644 index 0000000000000000000000000000000000000000..76904bef3abef527d9dfaea9462824fb50787582 --- /dev/null +++ b/Kenda Sampige/article_270.txt @@ -0,0 +1,63 @@ + + +ಬಾಡಿಗೆ ಮನೆಗಳ ಈ ರಾಜಚರಿತ್ರೆಯ ಮೊದಲ ಅಧ್ಯಾಯವನ್ನು ನಮ್ಮ ತಂದೆಗೆ ಆಸ್ತಿ ಮತ್ತು ಮನೆಯನ್ನು ಕುರಿತು ಇದ್ದ ನಿಲುವುಗಳನ್ನು ಚರ್ಚಿಸುತ್ತಾ ಪ್ರಾರಂಭಿಸುವುದೇ ಸರಿಯಾದದ್ದು ಮತ್ತು ಅನಿವಾರ್ಯವಾದದ್ದು ಕೂಡ. + +ನಮ್ಮ ತಂದೆ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು ಎಂದು ಹಿಂದೆಯೇ ಹೇಳಿದ್ದೇನೆ. ನಿವೃತ್ತಿಯಾಗುವ ಹೊತ್ತಿಗೆ ಗೆಜೆಟಡ್ ಅಲ್ಲದ ಕ್ಲಾಸ್ ಟು ಹಂತವನ್ನು ತಲುಪಿ ಜಿಲ್ಲಾ ಕೇಂದ್ರಗಳಲ್ಲಿ, ಆರೋಗ್ಯ ನಿರೀಕ್ಷಕರು ಮತ್ತು ಪ್ರಾಥಮಿಕ ಆರೋಗ್ಯ ಕಾರ್ಯಕರ್ತರ ಕೆಲಸಗಳನ್ನು ಮೇಲುಸ್ತುವಾರಿ ಮಾಡುವ ಕೆಲಸದಲ್ಲಿದ್ದರು. + +ಅವರು ಒಂದು ಸ್ವಂತ ಮನೆ ಮಾಡಲಿಲ್ಲ. ಸೈಟು ಕೂಡ ಮಾಡಲಿಲ್ಲ. ಅದೊಂದು ಅವಶ್ಯಕತೆ ಎಂದು ಅವರಿಗೆ ಯಾವತ್ತೂ ಅನಿಸಲೇ ಇಲ್ಲ. ಹಾಗೆಂದು ಮಕ್ಕಳಾದ ನಮಗೆ ಕೂಡ ಅನಿಸದಂತೆ ನೋಡಿಕೊಂಡರು. ಆಸ್ತಿವಂತರ ಮನೆತನದ ಹಿನ್ನೆಲೆಯಿಂದ ಬಂದ ನನ್ನ ಹೆಂಡತಿಗೆ ವೈವಾಹಿಕ ಜೀವನದ ಪ್ರಾರಂಭದಲ್ಲಿ ನನಗೆ ಮನೆ, ಸೈಟು ಮಾಡುವುದರ ಬಗ್ಗೆ ಇದ್ದ ಉದಾಸೀನ, ನಿರ್ಲಕ್ಷ್ಯ ಕುರಿತಂತೆ ಮೊದಲು ಆಶ್ಚರ್ಯವೂ, ನಂತರ ಬೇಸರವೂ ಆಗಿತ್ತು. ನಾನು ಮೂವತ್ತೈದನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಿದಾಗಲೂ ನಮ್ಮ ತಂದೆಗೆ ಅದರ ಬಗ್ಗೆ ವಿಶೇಷವಾದ ಉತ್ಸಾಹವಾಗಲೀ, ಹೆಮ್ಮೆಯಾಗಲೀ ಇರಲಿಲ್ಲ. ಜಮೀನ್ದಾರಿ ಹಿನ್ನೆಲೆಯಿಂದ ಬಂದ ನನ್ನ ತಾಯಿಗೇ ಇದೆಲ್ಲದರ ಬಗ್ಗೆ ಹೆಚ್ಚು ಆಸಕ್ತಿ, ಕುತೂಹಲಗಳಿದ್ದವು. + +ನಮ್ಮ ತಂದೆಗೆ ಮನೆ ಕಟ್ಟಲು, ಸೈಟು ಕೊಳ್ಳಲು ಬೇಕಾದ ಆರ್ಥಿಕ ಸಂಪನ್ಮೂಲಗಳಿರಲಿಲ್ಲ. ಸರಕಾರಿ ನೌಕರಿಯಲ್ಲಿದ್ದರೂ ಬರುವ ಸಂಬಳ ಬೆಳೆಯುತ್ತಿದ್ದ, ಓದುತ್ತಿದ್ದ ನಾಲ್ಕು ಮಕ್ಕಳನ್ನು ನಿರ್ವಹಿಸಲು, ಪ್ರೋತ್ಸಾಹಿಸಲು ಸಾಕಾಗುತ್ತಿರಲಿಲ್ಲ. ಈ ಜವಾಬ್ದಾರಿಯೇ ಅವರಿಗೆ ವಿಪರೀತವೆನಿಸಿತ್ತು ಮತ್ತು ಇಷ್ಟಕ್ಕೇ ಅವರು ಪ್ರಾಮಾಣಿಕವಾಗಿ ಕಂಗಾಲಾಗಿದ್ದರು. ಆದರೆ ಸಂಪನ್ಮೂಲದ ಕೊರತೆಯ ಕಾರಣವನ್ನು ನಮ್ಮ ತಂದೆ ಮುಂದೆ ಮಾಡುತ್ತಿರಲಿಲ್ಲ. ಆಸ್ತಿ, ಭೂಮಿ, ಕಾಣಿ, ಇದೆಲ್ಲ ಇದ್ದರೆ ಮುಂದೆ ಮಕ್ಕಳಲ್ಲಿ ಒಡಕು-ಮನಃಸ್ತಾಪ ಬಂದೇ ಬರುತ್ತದೆ; ಅದೆಲ್ಲ ಬೇಡವೆಂದೇ ನಾನು ಇದಕ್ಕೆಲ್ಲ ಕೈ ಹಾಕಲಿಲ್ಲ ಎಂದು ನನಗೆ ಒಮ್ಮೆ ಗಂಭೀರವಾಗಿಯೇ ಹೇಳಿದ್ದರು. ಈ ಕಾರಣಕ್ಕಾಗಿ ಅವರಿಗೆ ಯಾವ ರೀತಿಯ ಕೀಳರಿಮೆಯಿಲ್ಲದೆ ಹೋದರೂ ಬಂಧುಗಳ ನಡುವೆ ನಡೆಯುತ್ತಿದ್ದ ಆಸ್ತಿಪಾಸ್ತಿ ಜಗಳಗಳು, ಕ್ಯಾತೆಗಳು ಮತ್ತು ಪಾಲುದಾರಿಕೆಯ ವಿವಾದಗಳ ಬಗ್ಗೆ ಮಾತ್ರ ತುಂಬಾ ಆಸಕ್ತಿಯಿತ್ತು. ಕೆಲವೊಮ್ಮೆ ಇಂತಹ ವಿವಾದಗಳನ್ನು ಅವರೇ ಚಿತಾವಣೆ ಮಾಡಿ ಎಬ್ಬಿಸುತ್ತಿದ್ದರು. + +(ಕೆ. ಸತ್ಯನಾರಾಯಣ) + +ನಾನು ಬಿ.ಎ. ಓದುತ್ತಿದ್ದಾಗ, ಸರ್ಕಾರಿ ನೌಕರರಿಗೆ ನಗರದ ಹೊರಗೆ ಒಂದು ಬಡಾವಣೆಯಲ್ಲಿ ನಿವೇಶನಗಳನ್ನು ಆದ್ಯತೆಯ ಮೇಲೆ ಕೊಡುವುದಾಗಿ ಒಂದು ಗೃಹನಿರ್ಮಾಣ ಸೊಸೈಟಿಯವರು ಘೋಷಿಸಿದಾಗ, ನನ್ನ ಸಹಪಾಠಿಗಳನೇಕರು ಇದರ ಬಗ್ಗೆ ಕಾಲೇಜಿನಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದರಿಂದ ಪ್ರೇರಣೆ ಪಡೆದ ನಾನು ತಂದೆಯ ಹತ್ತಿರ ಈ ವಿಷಯ ಪ್ರಸ್ತಾಪಿಸಿದೆ. ಸರಿ, ದಿನನಿತ್ಯದ ಜೀವನ ನಡೆಸುವುದೇ ಕಷ್ಟ. ಇನ್ನು ಸೈಟು ಕೊಳ್ಳುವುದೆಲ್ಲಿ ಬಂತು ಎಂದು ಹತಾಶೆಯ ಮಾತುಗಳನ್ನಾಡಿದ್ದರು. ಮಂಡ್ಯದಲ್ಲಿ ಓದುತ್ತಿದ್ದಾಗ ನನ್ನ ಬಹುಪಾಲು ಗೆಳೆಯರು, ಸಹಪಾಠಿಗಳು ಅನುಕೂಲಸ್ಥ ಒಕ್ಕಲಿಗರ ಕುಟುಂಬಕ್ಕೆ ಸೇರಿರುತ್ತಿದ್ದುದರಿಂದ, ನಾನು ಕೂಡ ಬದುಕುತ್ತಿದ್ದ ಕೆಳ ಮಧ್ಯಮ ವರ್ಗದ ಜೀವನ ಮತ್ತು ಕಲ್ಪಿತ ಬಡತನ ಇವೆರಡರಿಂದಾಗಿ ಮೂಡಿದ ಕೀಳರಿಮೆಯ ಭಾವನೆಗಳನ್ನು ಅನುಭವಿಸುತ್ತಿದ್ದೆ. ಇದೊಂದೇ ಸಲ ಎಂದು ಕಾಣುತ್ತದೆ ನಾನು ತಂದೆಯ ಹತ್ತಿರ ಸೈಟು-ಮನೆ ಕೊಳ್ಳುವುದನ್ನು ಚರ್ಚಿಸಿದ್ದು. ಅವರ ಮಾತಿನಲ್ಲಿದ್ದ ಹತಾಶೆಯಿಂದಾಗಿ ನನ್ನ ಕೀಳರಿಮೆಯ ಭಾವನೆ ಇನ್ನೂ ಹೆಚ್ಚಾಗಿತ್ತು. + +ಬಾಡಿಗೆ ಮನೆಗಳು ಕೂಡ ಇಂತಹದೇ ಇರಬೇಕು. ಇಷ್ಟೇ ಅನುಕೂಲಗಳಿರಬೇಕು ಎಂದು ಕೂಡ ನಮ್ಮ ತಂದೆ ನಂಬಿರಲಿಲ್ಲವೆಂದು ಕಾಣುತ್ತದೆ. ಇದು ನಾವು ವಾಸಿಸಿದ ಬಾಡಿಗೆ ಮನೆಗಳ ಸಂಖ್ಯೆ ಮತ್ತು ಸ್ವರೂಪದಿಂದ ಗೊತ್ತಾಗುತ್ತದೆ. ಮಂಡ್ಯ ಮತ್ತು ಗುತ್ತಲಿನಲ್ಲಿ ನಾವು ಸುಮಾರು ಆರು ಮನೆಗಳಲ್ಲಿ ಇದ್ದೆವು; ಎರಡು-ಮೂರು ಮೈಲಿ ಅಂತರದಲ್ಲಿದ್ದವು. ಬೆಂಗಳೂರಿನಲ್ಲಿ ನಮ್ಮ ತಂದೆ-ತಾಯಿ ವಾಸ ಮಾಡಿದ ಮನೆಗಳ ಸಂಖ್ಯೆಗೆ ಲೆಕ್ಕವೇ ಇಲ್ಲ. ಕಾಮಗೆರೆಯಂತಹ ಗ್ರಾಮದಲ್ಲಿ ಕೂಡ ನಾವು ಮೂರು ಸಲ ಮನೆ ಬದಲಾಯಿಸಿದ್ದೆವು. ಒಂದು ಸಲ ಮಂಡ್ಯದಲ್ಲಿ ಮನೆಯೊಂದನ್ನು ಬಾಡಿಗೆಗೆ ಗೊತ್ತುಮಾಡಿಕೊಳ್ಳುವಾಗ, ಮನೆ ಒಳಗಿನ ವಿನ್ಯಾಸ ಎಂತಹುದು, ಅದರೊಳಗೆ ಏನೇನು ಅನುಕೂಲ, ಅನಾನುಕೂಲಗಳಿವೆ ಎಂದು ನೋಡಲು ಕೂಡ ಹೋಗದೆ ಮನೆ ಹೊರಗಿನಿಂದ ಕಿಟಕಿಯ ಸಂದಿಯ ಮೂಲಕ ಕಂಡಷ್ಟನ್ನು ನೋಡಿಕೊಂಡು ನಮ್ಮ ತಂದೆ ಮನೆಯನ್ನು ಒಪ್ಪಿಕೊಂಡು ಬಂದಿದ್ದರು. ಆ ಮನೆಯಲ್ಲಿ ನಾವು ನಾನಾ ರೀತಿಯ ಅನಾನುಕೂಲಗಳನ್ನು ಎದುರಿಸಬೇಕಾಯಿತು. ಇದರ ಬಗ್ಗೆ ನಮ್ಮ ತಾಯಿ ಯಾವಾಗಲೂ ಗೊಣಗುತ್ತಿದ್ದರು. ಅದಕ್ಕೆ ನಮ್ಮ ತಂದೆ ಸೊಪ್ಪು ಹಾಕುತ್ತಿರಲಿಲ್ಲ. + +ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋಗುವುದರಲ್ಲಿ ಒಂದು ರೀತಿಯ ಸಲೀಸುತನವಿತ್ತು. ಈಗ ನಾನು ಹಾಗೆಂದುಕೊಳ್ಳುತ್ತಿರಬಹುದು. ಆ ಸಲೀಸುತನದ ಹಿಂದೆ ಒಂದು ರೀತಿಯ ಒತ್ತಡವೂ ಇದ್ದಿರಬಹುದೇನೋ? ಜೊತೆಗೆ ಅಭದ್ರತೆಯ ಭಾವನೆಯೂ ಕೂಡ. ಕುಟುಂಬದ ಸದಸ್ಯರಿಗೆ ಯಾವ ರೀತಿಯ ಅನುಕೂಲಗಳು, ಅನಾನುಕೂಲಗಳು ಆಗಬಹುದೆಂದು ನಮ್ಮ ತಂದೆ ಯಾಕೆ ಯೋಚಿಸುವುದಿಲ್ಲ ಎಂದು ಎಷ್ಟೋ ಮನೆಗಳನ್ನು ಬದಲಾಯಿಸಿದ ನಂತರ ನನಗೆ ಅನಿಸಿದರೂ ಅಥವಾ ಈಗ ಬರೆಯುವಾಗ ಅನಿಸುತ್ತಿದ್ದರೂ, ಕುಟುಂಬದ ಮುಖ್ಯಸ್ಥರಾಗಿ ಅವರ ಆದ್ಯತೆಗಳೇ ಬೇರೆ ಇದ್ದಿರಬೇಕು. ನಮ್ಮ ಜೊತೆ ಕೂಡ ಕೆಲವು ವರ್ಷ ಇದ್ದರು, ಬೆಂಗಳೂರು-ಮದ್ರಾಸುಗಳಲ್ಲಿ. ನಮ್ಮ ವಿಶಾಲವಾದ ಕ್ವಾರ್ಟರ್ಸ್‍ ಗಳನ್ನು ಕೂಡ ನೋಡಿದರು, ನಮ್ಮೊಡನೆ ಬಂದು ಇದ್ದರೂ ಕೂಡ. ಇದೆಲ್ಲದರಲ್ಲಿ ಅವರಿಗೆ ಏನಾದರೂ ವಿಶೇಷವಿದೆಯೆಂದು ಅನಿಸಲೇ ಇಲ್ಲವೆಂದು ಕಾಣುತ್ತದೆ. + +ಒಂದು ಬಾಡಿಗೆ ಮನೆಯಿಂದ ಇನ್ನೊಂದು ಬಾಡಿಗೆ ಮನೆಗೆ ಹೋದಾಗ, ಮೊಳೆ ಹೊಡೆಯುವುದರಿಂದ ಹಿಡಿದು, ತಂತಿ ಕಟ್ಟುವತನಕ ನಾನಾ ರೀತಿಯ ಕೆಲಸಗಳು ಇರುತ್ತವೆ. ಮತ್ತೆ ಮತ್ತೆ ಇದನ್ನೆಲ್ಲ ಮಾಡುತ್ತಲೇ ಇರಬೇಕಾಗುತ್ತದೆ. ಇದು ತುಂಬಾ ರೇಜಿಗೆಯ ಕೆಲಸ. ಆದರೆ ಈ ರೇಜಿಗೆಗಾಗಿ ನಮ್ಮ ತಂದೆ ಎಂದೂ ಬೇಸರ ಪಟ್ಟುಕೊಳ್ಳುತ್ತಿರಲಿಲ್ಲ. ಬೆಳಿಗ್ಗೆ ನಾನು ಏಳುವ ಹೊತ್ತಿಗೆ ರೇಡಿಯೋದಲ್ಲಿ ಗೀತಾರಾಧನೆ, ರೈತರಿಗೆ ಸಲಹೆ, ಪ್ರದೇಶ ಸಮಾಚಾರ ಕೇಳಿಬರುತ್ತಿತ್ತು. ನಮ್ಮ ತಂದೆ ಅಷ್ಟು ಹೊತ್ತಿಗೇ ಎದ್ದು ಯಾವುದಾದರೂ ಜಾಯಿಕಾಯಿ ಪೆಟ್ಟಿಗೆಯ ರಿಪೇರಿ ಮಾಡುತ್ತಿರುತ್ತಿದ್ದರು. ಇಲ್ಲ ಗೋಡೆಗೆ ಮೊಳೆ ಹೊಡೆಯುತ್ತಿರುತ್ತಿದ್ದರು. ಅದರ ಮಧ್ಯೆಯೂ ಆಗತಾನೇ ಏಳುತ್ತಿದ್ದ ಎಲ್ಲ ಮಕ್ಕಳನ್ನು ಅಡ್ಡ ಹೆಸರಿನಿಂದ ಕರೆದು ಪ್ರೀತಿಯಿಂದ ಏಳಿಸುತ್ತಿದ್ದರು. ಒಳಗಡೆ ಅಡುಗೆ ಮನೆಯಲ್ಲಿ, ಏಳುತ್ತಿರುವ ಮಕ್ಕಳಿಗೆ ಕೊಡಬೇಕಾದ ಕಾಫಿ, ತಿಂಡಿಯನ್ನು ನಮ್ಮ ತಾಯಿ ತಯಾರು ಮಾಡುತ್ತಿದ್ದರು. ಹೊಸ ದಿನವೊಂದಕ್ಕೆ ಪ್ರವೇಶಿಸಲು ನಮ್ಮ ಕುಟುಂಬ ತನ್ನೆಲ್ಲ ಸಾಧಾರಣತೆಯ ದಿವ್ಯ ಕ್ಷಣಗಳಲ್ಲಿ ಗರಿಗೆದರಿಕೊಳ್ಳುತ್ತಿದ್ದ ಸಮಯವದಿರಬೇಕು. ನಿಜವಾಗಿಯೂ ನಮಗೆ ದಕ್ಕಿದ ಆ ಕ್ಷಣಗಳೇ, ಆಗ ಗೊತ್ತಾಗದೇಹೋದ, ಆದರೂ ಸುಪ್ತಪ್ರಜ್ಞೆಯ ಭಾಗವಾಗಿರುವ ನಮ್ಮ ಕುಟುಂಬದ Spiritual Movements ಇರಬೇಕು. + +ಬೆಳೆಯುವ ಮಕ್ಕಳಿಗೆ ಆ ವಯಸ್ಸಿನಲ್ಲಿ ಬೇಕಾದ ಏಕಾಂತ, ಅಧ್ಯಯನಕ್ಕಾಗಿ ಪ್ರತ್ಯೇಕ ಕೋಣೆ-ಅನುಕೂಲಗಳ ಬಗ್ಗೆ ನಮ್ಮ ತಂದೆ ಯೋಚಿಸಬೇಕಿತ್ತು, ಅನುಕೂಲ ಮಾಡಿಕೊಡಬೇಕಿತ್ತು ಎಂದು ಈಗ ನಾನು ವಾದಿಸುವುದು ಸರಿಯಲ್ಲ. ಅವರ ಬಾಲ್ಯವೇ ಆ ರೀತಿ ಇದ್ದಿರಲಿಲ್ಲ. ಹಾಗಾಗಿ, ಇದೆಲ್ಲ ಬೆಳೆಯುವ ಮಕ್ಕಳಿಗೆ ಅವಶ್ಯ ಎಂದು ಅವರಿಗೆ ಅನಿಸದೆ ಇರಲೂಬಹುದು. ಇದೆಲ್ಲ ತೀರಾ ಅವಶ್ಯಕತೆಯೇ ಅಲ್ಲವೇನೋ ಎಂಬ ಮನೋಧರ್ಮ ನನ್ನಲ್ಲು ಕೂಡ ಮೂಡಲು ಈ ಹಿನ್ನೆಲೆಯಲ್ಲೇ ರೂಪುಗೊಂಡಿರಬೇಕು. ಇವತ್ತು ಕೂಡ ನಮ್ಮ ಮನೆ ಅಥವಾ ನನ್ನ ಕೋಣೆ ಅಸ್ತವ್ಯಸ್ತಗೊಂಡಿದ್ದಾಗ, ಮನೆಯೊಳಗೆ ಸಣ್ಣಪುಟ್ಟ ಗಲಾಟೆ, ಮಾತುಕತೆ ನಡೆಯುತ್ತಿರುವಾಗ, ಮನೆಗೆ ನಿರಂತರವಾಗಿ ಯಾರಾದರೂ ಬಂದು ಹೋಗುತ್ತಲೇ ಇರುವಾಗಲೂ ನನಗೆ ಓದಲು ಬರೆಯಲು ಅಷ್ಟೊಂದು ಕಷ್ಟವಾಗುವುದಿಲ್ಲ. ನನ್ನ ಏಕಾಗ್ರತೆಗೆ ಕೊಂಚವೂ ಭಂಗ ಬರುವುದಿಲ್ಲ. `ಸಂತೆಯೊಳಗೊಂದು ಮನೆಯ ಮಾಡಿ’ ವಚನದ ಸಾಲುಗಳು ನನಗೆ ಅನ್ವಯಿಸುವುದಿಲ್ಲ. ಇದೆಲ್ಲ ವಾತಾವರಣದಲ್ಲಿ ಇಲ್ಲದೇ ಹೋದಾಗ ಜೀವಂತಿಕೆಯ ಕೊರತೆ ಮನಸ್ಸಿಗೆ ರಾಚುತ್ತಿರುತ್ತದೆ. ಒಂದು ರೀತಿಯ ಮಂಕು ಮೂಡುತ್ತದೆ. + +ಇಷ್ಟೊಂದು ಊರುಗಳು, ಇಷ್ಟೊಂದು ಬಾಡಿಗೆ ಮನೆಗಳಲ್ಲಿ ವಾಸಿಸಿದ ನಮ್ಮ ತಂದೆಗೆ, ಸಹಜವಾಗಿಯೇ ಆಜೀವ ಗೆಳೆಯರು, ಒಡನಾಡಿಗಳು ಎನ್ನುವವರು ರೂಪುಗೊಳ್ಳಲೇ ಇಲ್ಲ. ಪ್ರತಿ ಊರಿನಲ್ಲೂ, ಹೊಸ ಬಾಡಿಗೆ ಮನೆಯಲ್ಲೂ ಇದ್ದಾಗ, ಯಾರು ಯಾರು ಅವರಿಗೆ ಆ ತತ್ಕಾಲಕ್ಕೆ ಆಪ್ತರಾಗಿದ್ದರು, ಯಾವ ಯಾವ ದಿನಸಿ ಅಂಗಡಿಯ ಶೆಟ್ಟರೊಡನೆ ಯಾವ ರೀತಿಯ ಒಡನಾಟವಿತ್ತು ಎಂಬುದೆಲ್ಲ ನನಗೆ ಈಗಲೂ ಚೆನ್ನಾಗಿ ನೆನಪಿದೆ. ಆದರೆ ಯಾವ ಸಂಬಂಧಗಳೂ ದೀರ್ಘಕಾಲ ಉಳಿಯುತ್ತಿರಲಿಲ್ಲ. ಕಾಲಕ್ರಮೇಣ ಕರಗಿಹೋಗುತ್ತಿತ್ತು. ಇದೇ ಸಂಬಂಧಗಳು ಇದೇ ಮಾದರಿ ಮಕ್ಕಳಾದ ನಮ್ಮ ಜೀವನದಲ್ಲೂ ಬೇರೆ ಬೇರೆ ರೀತಿಯಲ್ಲಿ ಮುಂದುವರಿದಿದೆ. + +ಒಂದು ಮನೆಯಿತ್ತು. ನಮ್ಮ ತಂದೆಗೆ ಕೂಡ ಪೂರ್ವಜರಿಂದ ಬಂದ ಒಂದು ಮನೆಯಿತ್ತು. ಮದ್ದೂರು ತಾಲ್ಲೂಕು ಕೊಪ್ಪ ಗ್ರಾಮದಲ್ಲಿ. ಜಗುಲಿ, ಮನೆ, ಹಿತ್ತಲು ಎಲ್ಲವೂ ಸೇರಿದರೆ ಸುಮಾರು ಅರ್ಧ ಎಕರೆಗೆ ಹತ್ತಿರವಾಗುವಷ್ಟು ವಿಸ್ತೀರ್ಣ. ನಮ್ಮ ತಂದೆ ಇಡೀ ಬಾಲ್ಯವನ್ನು ಕಳೆದದ್ದು ಇಲ್ಲಿ. ನನ್ನ ಬಾಲ್ಯದ ಸಾಕಷ್ಟು ಭಾಗವು ಕೂಡ ಇಲ್ಲೇ ಕಳೆಯಿತು. ಆದರೆ ನಮ್ಮ ತಂದೆಗೆ ಈ ಮನೆಯ ಬಗ್ಗೆ ಯಾವ ವಿಶೇಷವಾದ ಭಾವನೆಗಳೂ ಇರಲಿಲ್ಲ. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು, ಬಡತನದಲ್ಲಿ ಜಗಳಗಂಟ ಮತ್ತು ಅನುಕೂಲಸ್ಥ ದಾಯಾದಿಗಳ ಮಧ್ಯೆಯೇ ಬದುಕಿದ್ದರಿಂದ ನಮ್ಮ ತಂದೆಗೆ ಆ ದಿನಗಳು, ಆ ಮನೆ, ಆ ಕಾಲವೆಲ್ಲ ಮರೆಯಬೇಕಾದ, ಮೀರಬೇಕಾದ ನೆನಪುಗಳು ಕೂಡ ಆಗಿರಬಹುದು. ಈ ಮನೆಯನ್ನು ಮಾರಬೇಕಾಗಿ ಬಂದಾಗ, ನಮ್ಮ ತಂದೆಗೆ ಯಾವ ರೀತಿಯ ಭಾವನೆಗಳ ಒತ್ತಡವೂ ಕಿಂಚಿತ್ತೂ ಇರಲಿಲ್ಲ. ಅಷ್ಟು ಹೊತ್ತಿಗೆ, ನಮ್ಮ ಕುಟುಂಬ ಬೆಂಗಳೂರಿಗೆ ಸೇರಿಯಾಗಿತ್ತು. ಅಣ್ಣ-ತಮ್ಮಂದಿರೆಲ್ಲ ನಮ್ಮ ನಮ್ಮ ನೆಲೆಗಳನ್ನು ಕಂಡುಕೊಳ್ಳುತ್ತಿದ್ದೆವು. ಊರಲ್ಲಿರುವ ಆ ಗತಕಾಲದ ಮನೆಯನ್ನು ಯಾರು ನೋಡಿಕೊಳ್ಳುತ್ತಾರೆ? ಅದರಿಂದ ಏನಾಗಬೇಕು? ಎಂಬುದು ನಮ್ಮ ತಂದೆಯ ನಿಲುವಾಗಿತ್ತು. ಒಬ್ಬ ದಾಯಾದಿ ಬಂಧುವಿನ ಮೂಲಕ ಆ ಮನೆ ಬಿಕರಿಯಾಯಿತು. ಒಂದು ದಿನ ನಮ್ಮ ತಂದೆ ಮದ್ದೂರಿಗೆ ಹೋಗಿ ಮಾರಾಟದ ಒಪ್ಪಂದಕ್ಕೆ ಸಹಿ ಮಾಡಿ ಬಂದರು. ಮುಂದೆ ಯಾವತ್ತೂ ಅವರು ಆ ಮನೆಯ ಬಗ್ಗೆ ಪ್ರಸ್ತಾಪಿಸಲೇ ಇಲ್ಲ. ಹಾಗೆ ನೋಡಿದರೆ, ಅವರು ಬಾಲ್ಯಕಾಲದ ನೆನಪು, ಬದುಕಿನ ವಿವರಗಳ ಬಗ್ಗೆ ಹೆಚ್ಚು ಮಾತನಾಡಿದವರೇ ಅಲ್ಲ. + +ನಮ್ಮ ತಂದೆಯೇನೋ ಪೂರ್ವಜರ ಆ ಮನೆಯನ್ನು ಸುಲಭವಾಗಿ ಮಾರಿಬಿಟ್ಟರು. ನನಗೆ ಮಾತ್ರ ಇನ್ನೂ ಆ ಮನೆ, ಆ ಮನೆಯಲ್ಲಿ ವಾಸಿಸಿದ ದಿನಗಳ ನೆನಪಿನಿಂದ ಬಿಡುಗಡೆಯೇ ಆಗಿಲ್ಲ. ಸಾವಿರಾರು ಮೈಲಿ ದೂರವಿರುವ ಪರ್ವತದ ತಪ್ಪಲಿನಲ್ಲಿ, ಖಂಡಾಂತರ ದಾಟಿ ಸ್ಟೇಡಿಯಂಗಳಲ್ಲಿ ಕುಳಿತು ಪಂದ್ಯಗಳನ್ನು ನೋಡುವಾಗ ಇದ್ದಕ್ಕಿದ್ದಂತೆ, ನಿನ್ನೆ-ಮೊನ್ನೆ ಕೂಡ ನೀರವ ರಾತ್ರಿಯಲ್ಲಿ, ಜೀವನದಿಂದ ಕಂಗೆಟ್ಟು ಭಯದಿಂದ ಎಚ್ಚರವಾದಾಗ, ಆ ಮನೆಯ ಆಕಾರ, ಸಂದಿ-ಗೊಂದಿಗಳು, ಅಲ್ಲಿಯ ನೆನಪುಗಳು `ಇಗೋ ನಾವು’ ಎಂದು ಎದುರಾಗುತ್ತವೆ, ಕಾಡುತ್ತವೆ. ಪಕ್ಕದ ಹಳ್ಳಿಯ ರೈತ ಕುಟುಂಬವೊಂದಕ್ಕೆ ಮಾರಾಟವಾಗಿ, ಈಗ ಅವರು ಕೂಡ ಉಪಯೋಗಿಸದೆ, ಪಾಳು ಬಿದ್ದಿರುವ, ಆ ಮನೆಯ ಜಾಗವನ್ನು ನಾನು ಬೇರೆ ಬೇರೆ ಕಾರಣಗಳಿಗಾಗಿ, ಬೇರೆ ಬೇರೆ ಸಂದರ್ಭದಲ್ಲಿ ಒಂಟಿಯಾಗಿ, ಮಕ್ಕಳು-ಕುಟುಂಬದ ಸಮೇತ ಆಗಾಗ್ಗೆ ಹೋಗಿ ನೋಡಿ ಬರುವುದುಂಟು. ಸ್ವಲ್ಪ ಮನಸ್ಸು ಮಾಡಿದ್ದಿದ್ದರೆ, ಆ ಮನೆಯನ್ನು ನಾನು ಉಳಿಸಿಕೊಳ್ಳಬಹುದಿತ್ತು ಅಥವಾ ಮತ್ತೆ ಕೊಂಡು ರೂಢಿಸಬಹುದಿತ್ತು. ಹಾಗೆ ಮಾಡಲಿಲ್ಲ. ಇನ್ನು ಮುಂದೆಯೂ ಅದು ಸಾಧ್ಯವಿಲ್ಲವೆಂದು ಕಾಣುತ್ತದೆ; ನನ್ನ ಜೀವನದಲ್ಲಿ ಮಾತ್ರವಲ್ಲ, ಬೇರೆ ಬೇರೆ ದೇಶಗಳಲ್ಲಿ ಜೀವನಾವಕಾಶಗಳನ್ನು ಹುಡುಕಿಕೊಳ್ಳುತ್ತಿರುವ ಮಕ್ಕಳುಗಳ ತಲೆಮಾರಿನಲ್ಲಿ ಕೂಡ. + + + +ಆಸ್ತಿ-ಪಾಸ್ತಿ, ಮನೆ, ಸೈಟುಗಳ ಬಗ್ಗೆ ನಮ್ಮ ತಂದೆಗಿದ್ದ ನಿಲುವು ನನ್ನ ಮೇಲೂ, ಉಳಿದ ತಮ್ಮಂದಿರ ಮೇಲೂ ಪ್ರಭಾವ ಬೀರಿದೆ. ನಮಗೆಲ್ಲರಿಗೂ ಈಗ ಸ್ವಂತ ಮನೆಗಳಿವೆ, ನಿವೇಶನಗಳಿವೆ. ಆದರೆ ಅದರ ಬಗ್ಗೆ ವಿಶೇಷ ಆಸ್ಥೆಯಿಲ್ಲ. ಮನೆ-ನಿವೇಶನಗಳನ್ನು ಕೊಳ್ಳುವಾಗಲೂ ಅದೆಲ್ಲ ಆಗಲೇಬೇಕೆಂಬ ಹಠವೂ ಇರಲಿಲ್ಲ. ಹಾಗೆ ಹಠ ಮಾಡದೆ ಕೂಡ ಸಹಜವಾಗಿ ಈ ಅನುಕೂಲಗಳನ್ನೆಲ್ಲ ಮಾಡಿಕೊಳ್ಳುವಷ್ಟು ನಾವು ಕೊಂಚ ಆರ್ಥಿಕವಾಗಿ ಸಂಪನ್ನರಾಗಿದ್ದುದು ಕೂಡ ಇದಕ್ಕೆ ಕಾರಣವಿರಬೇಕು. ನನ್ನ ಹೆಂಡತಿಯ ಪ್ರಕಾರ ಈ ನಿಲುವು ಆಳವಾದದ್ದಲ್ಲ, ಮೇಲುಸ್ತರದ್ದು. ಏಕೆಂದರೆ, ಏನೇ ಆದರೂ ನನ್ನ ಉದಾಸೀನವಿರುವುದು ಇದನ್ನೆಲ್ಲ ಮಾಡಿಕೊಳ್ಳಲು ಬೇಕಾದ ಪರಿಶ್ರಮದ ಬಗ್ಗೆ. ಆದರೆ ಅದರ ಫಲಾನುಭವವನ್ನು ಅನುಭವಿಸುವಾಗಲೆಲ್ಲ ನಾನೂ ಕೂಡ ಮಧ್ಯಮವರ್ಗದ ದುರಾಸೆಯ ಮನುಷ್ಯನೇ! ಈ ಕಾರಣವನ್ನು ಮೀರಿ ಕೂಡ ನನಗೆ ಇವುಗಳೆಲ್ಲದರ ನಿರ್ವಹಣೆಯ ಬಗ್ಗೆ, ಇದನ್ನು ಆಧಾರ ಮಾಡಿಕೊಂಡು ಮುಂದುವರೆಸುವ ಬಗ್ಗೆ ಅಂತಹ ವಿಶೇಷ ಕಾಳಜಿಯೂ ಇಲ್ಲ. + +ಬಂಧು-ಮಿತ್ರರಲ್ಲಿ, ಪರಿಚಯಸ್ಥರಲ್ಲಿ ಯಾರಿಗಾದರೂ ತುಂಬಾ ಆಸ್ತಿ, ಮನೆ, ನಿವೇಶನಗಳಿದೆಯೆಂದು ತಿಳಿದಾಗ ನನಗೆ ಸ್ಪರ್ಧೆ-ಅಸೂಯೆಯ ಭಾವನೆಗಳೂ ಬರುವುದಿಲ್ಲ. ಆಸ್ತಿ-ಪಾಸ್ತಿಯೆಲ್ಲ ಪೊಗದಸ್ತಾಗಿ ಇರುವ ಜನರ ಬಗ್ಗೆ ಅದೊಂದೇ ಕಾರಣಕ್ಕೆ ಅಸೂಯೆಯೂ ಇಲ್ಲ. ಇನ್ನೊಬ್ಬರೊಡನೆ ಸಂಬಂಧ ಬೆಳೆಸುವಾಗ, ಅವರ ವ್ಯಕ್ತಿತ್ವದ ಬೆಲೆ ಕಟ್ಟುವಾಗ, ಅದೆಲ್ಲ ಒಂದು ಮಾನದಂಡವೂ ಅಲ್ಲ. ಇದೆಲ್ಲದಕ್ಕೂ ನಾವು ನಮ್ಮ ತಂದೆಗೆ, ಅವರ ನಿಲುವು, ಒಲುಮೆಗಳಿಗೆ ಕೃತಜ್ಞರಾಗಿರಬೇಕೆಂದೆನಿಸುತ್ತದೆ. + +****** + +ಜಮೀನ್ದಾರಿಕೆ, ಶ್ಯಾನುಭೋಗಿಕೆ ಎರಡರ ಹಿನ್ನೆಲೆಯಿಂದಲೂ ಬಂದಿದ್ದ ನಮ್ಮ ತಾಯಿಗೆ ಇದ್ದ ನಿಲುವುಗಳು ಕೊಂಚ ಭಿನ್ನವಾಗಿದ್ದವು. ನಮ್ಮ ತಂದೆ ವಿದ್ಯಾವಂತರು ಮತ್ತು ಸರಕಾರಿ ನೌಕರಿಯಲ್ಲಿದ್ದವರು ಎಂಬ ಹಿನ್ನೆಲೆಯಲ್ಲಿ ಅವರನ್ನು `ತಂದುಕೊಂಡಿರುವುದಾಗಿ’ ತಾಯಿ ಮನೆಯ ಕಡೆಯವರು ಮಾತನಾಡಿಕೊಳ್ಳುತ್ತಿದ್ದನ್ನು ಬಾಲ್ಯದಲ್ಲಿ ಕೇಳಿಸಿಕೊಂಡಿದ್ದೇನೆ. ದಾಂಪತ್ಯದ ಒಂದು ಮುಖ್ಯ ಆಯಾಮವೆಂದರೆ, ದಂಪತಿಗಳಿಗೆ ವಯಸ್ಸಾಗುತ್ತಾ ಆಗುತ್ತಾ, ಗಂಡ-ಹೆಂಡತಿ ಇಬ್ಬರೂ ಎಲ್ಲ ಸಂಗತಿ-ವಿದ್ಯಮಾನಗಳನ್ನು ಕುರಿತಂತೆ ಒಂದೇ ಅಭಿಪ್ರಾಯಕ್ಕೆ ಬಂದುಬಿಡುತ್ತಾರೆ. ಕೆಲವು ಮನಃಶಾಸ್ತ್ರಜ್ಞರು ಮುಂದುವರಿದು ಹೇಳುವ ಹಾಗೆ, ಇಬ್ಬರೂ ಒಂದೇ ರೀತಿ ಕಾಣಲು ಪ್ರಾರಂಭಿಸುತ್ತಾರೆ. ಅವರ ಆಂಗಿಕ ಭಾಷೆ, ಮಾತನಾಡುವ ಶೈಲಿಯಲ್ಲಿ ಕೂಡ `ತದ್ರೂಪಿ’ ಆಯಾಮವೇ ಮುಂದೆ ಬರುತ್ತವಂತೆ. ಮಕ್ಕಳಾದ ನಾವೆಲ್ಲ ವಿದ್ಯಾವಂತರಾದಂತೆ, ಸರ್ಕಾರಿ ಕೆಲಸಗಳನ್ನು ಹಿಡಿದಂತೆ, ನಮ್ಮ ತಾಯಿಗೂ ಕೂಡ ಆಸ್ತಿ, ಭೂಮಿ, ಕಾಣಿಗಳಿಗಿಂತ, ಉದ್ಯೋಗ, ಶಿಕ್ಷಣ, ಪಟ್ಟಣದ ವಾಸವೇ ಮುಖ್ಯವೆನಿಸಿತು. ಈ ಸಾಧನೆಯನ್ನೇ ಮುಂದೆ ಮಾಡಿ ಅವರು ಇತರರೊಡನೆ ಹೋಲಿಸಿಕೊಂಡು ಹೆಮ್ಮೆಪಡುತ್ತಿದ್ದರು. ಹೀಗಿದ್ದರೂ ಅವರಿಗೆ ಆಸ್ತಿವಂತರು, ಸ್ಥಿತಿವಂತರುಗಳ ಬಗ್ಗೆ ಕುತೂಹಲ-ಗೌರವಗಳಿದ್ದವು. ವಿಶೇಷವಾಗಿ ಅವರ ಒಬ್ಬನೇ ಅಣ್ಣ ಸಾಕಷ್ಟು ಸ್ಥಿತಿವಂತರಾಗಿದ್ದು, ತರಿ ಭೂಮಿಯನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿದ್ದುದು ಅವರಿಗೆ ಯಾವಾಗಲೂ ಹೆಮ್ಮೆಯ ವಿಷಯವಾಗಿತ್ತು. ಇದರಿಂದಲೇ ಒಂದು ರೀತಿಯ ಕರ್ಷಣವೂ ಮೂಡಿ ಬರುತ್ತಿತ್ತು. + +ನಮ್ಮ ತಾಯಿಯ ಹತ್ತಿರವಿದ್ದುದು ಒಂದೇ ಒಂದು ಎರಡೆಳೆಯ ಚಿನ್ನದ ಸರ. ಕಷ್ಟ ಬಂದಾಗಲೆಲ್ಲ ಅದನ್ನೇ ಮತ್ತೆ ಮತ್ತೆ ಅಡವಿಟ್ಟು ಸಾಲ ಪಡೆಯುತ್ತಿದ್ದೆವು. ಮೊದಮೊದಲು ಸಾಹುಕಾರರಿಂದ, ನಂತರ ರಾಷ್ಟ್ರೀಕೃತ ಬ್ಯಾಂಕುಗಳಿಂದ. ಹೀಗೆ ಅಡವಿಡುವುದು ಅವರ ಅಣ್ಣನ ಮನೆಯವರಿಗೆ ಗೊತ್ತಾಗಬಾರದೆಂದು, ಸರವನ್ನು ಬಿಡಿಸಿಕೊಳ್ಳುವತನಕ ಯಾವ ಧಾರ್ಮಿಕ-ಸಾಮಾಜಿಕ ಸಮಾರಂಭಗಳು ತವರುಮನೆಯ ಕಡೆ ನಡೆಯಬಾರದೆಂದು ಯಾವಾಗಲೂ ಪರಿತಪಿಸುತ್ತಿದ್ದರು. ಒಂದು ಸಲ ಸರವನ್ನು ಸಾಹುಕಾರರ ಹತ್ತಿರ ಅಡವಿಡಲು ಹೋದಾಗ ನಮ್ಮ ಮಾವ ಕೂಡ ಸಾಹುಕಾರರ ಹತ್ತಿರ ಮತ್ತೆ ಯಾವುದೋ ವ್ಯವಹಾರಕ್ಕೆ ಬಂದಿದ್ದು, ಆವತ್ತು ಅಡವಿಟ್ಟು ಸಾಲ ಪಡೆಯಲಾಗದೆ ತುಂಬಾ ತೊಂದರೆಯಾಯಿತು. ನಮ್ಮ ಮನೆಯವರು ಅನುಕೂಲಸ್ಥರು. ಕಷ್ಟ ಬಂದಾಗ ಆಗಿ ಬರುತ್ತಾರೆ ಎಂಬ ಹೆಮ್ಮೆ; ಆದರೆ ಅವರನ್ನು ಏನೂ ಕೇಳಬಾರದೆಂಬ ಸ್ವಾಭಿಮಾನ, ಇವೆರಡನ್ನೂ ಸಮತೋಲನಗೊಳಿಸುವುದು ನಮ್ಮ ತಾಯಿಗೆ ತುಂಬಾ ಕಷ್ಟವಾಗುತ್ತಿತ್ತು. ಆದರೂ ಅಣ್ಣ, ತವರುಮನೆಯವರು ಎಷ್ಟು ಪ್ರೀತಿಸುತ್ತಾರೆ ಎಂಬುದನ್ನು ಮತ್ತೆ ಮತ್ತೆ ಪರೀಕ್ಷಿಸುವ, ಸಕಾರಾತ್ಮಕ ಫಲಿತಾಂಶವನ್ನು ಸಾಬೀತುಪಡಿಸುವ ಪ್ರವೃತ್ತಿಯೂ ಇತ್ತು. + +ಊರೊಳಗೆ ದೊಡ್ಡ ತೊಟ್ಟಿಯ ಹಲವಾರು ಕಂಭಗಳ ಮನೆಯಿದ್ದರೂ ನಮ್ಮ ಮಾವ ಊರ ಹೊರಗಿದ್ದ ನಿವೇಶನದಲ್ಲಿ ಎರಡು ಮನೆಗಳನ್ನು ಕಟ್ಟುತ್ತಿದ್ದರು. ನಾವು ಕೂಡ ಹತ್ತಿರದಲ್ಲೇ ವಿಶಾಲವಾದ ಒಂದು ಮನೆಯಲ್ಲಿ ಬಾಡಿಗೆಗಿದ್ದೆವು. ಆದರೂ ಅಣ್ಣ ಕಟ್ಟಿದ ಮನೆಯನ್ನು ಬಾಡಿಗೆಗೆ ಪಡೆಯಲೇಬೇಕು, ಬಾಡಿಗೆಗೆ ಕೊಡುತ್ತಾರೋ ಇಲ್ಲವೋ ಎಂದು ಪರೀಕ್ಷಿಸಬೇಕು ಎಂದು ನಮ್ಮ ತಾಯಿ ಪರೀಕ್ಷೆ ಮಾಡಿ, ಗೃಹಪ್ರವೇಶವಾದ ತಕ್ಷಣ ಮನೆಯನ್ನು ಬಾಡಿಗೆಗೆ ಪಡೆದು, ತುಂಬಾ ದೊಡ್ಡದಾಗಿದ್ದ ಮನೆಗೆ ಹೋಗಿಯೂ ಆಯಿತು. + +ನಾನು ಬೆಂಗಳೂರಿನಲ್ಲಿ ನಿವೇಶನವನ್ನು ಕೊಂಡಾಗ, ಮನೆ ಕಟ್ಟಿದಾಗ, ಹೆಚ್ಚು ಖುಷಿಪಟ್ಟವರು ನಮ್ಮ ತಾಯಿಯೇ. ಅವರಿಗೆ ಸ್ವಂತ ಮನೆಯಲ್ಲಿ ವಾಸಿಸುವ ಆಸೆಯೂ ಇತ್ತು. ಆದರೆ ನಾನು ಕಟ್ಟಿದ ಮನೆ ಬೆಂಗಳೂರು ನಗರದ ಹೊರವಲಯದಲ್ಲಿ ಇದ್ದುದರಿಂದ ಆ ಮನೆಗೆ ಹೋಗುವುದು ಸಾಧ್ಯವಾಗಲಿಲ್ಲ. ನನ್ನ ತಂಗಿ ಮದುವೆ ಆಗಿದ್ದುದು ಬೆಂಗಳೂರಿನಲ್ಲಿ ಎರಡು-ಮೂರು ತಲೆಮಾರುಗಳಿಂದ ವಾಸವಾಗಿದ್ದ ಒಂದು ಕುಟುಂಬಕ್ಕೆ. ಆ ಕುಟುಂಬಕ್ಕೆ ಬೆಂಗಳೂರಿನ ಹಳೆಯ ಮತ್ತು ಪ್ರತಿಷ್ಠಿತ ಬಡಾವಣೆಯೊಂದರಲ್ಲಿ ಸಾಕಷ್ಟು ದೊಡ್ಡದಾದ ನಿವೇಶನವಿತ್ತು. ಆ ನಿವೇಶನದಲ್ಲಿ ನಮ್ಮ ತಂಗಿಯ ಪರವಾಗಿ ಪಾಲು ಪಡೆದು ಸ್ವಂತ ಮನೆ ಕಟ್ಟಿಕೊಳ್ಳಲು ನಾನು, ನನ್ನ ಸೋದರರು, ನಮ್ಮ ತಂದೆ ಎಲ್ಲರೂ ಬೆಂಬಲವಾಗಿ ನಿಲ್ಲಲು ಕಾರಣರಾದವರು ಕೂಡ ನಮ್ಮ ತಾಯಿಯೇ. + +ಒಂದು ಮನೆ ಕಟ್ಟಿದ ಮೇಲೆ, ಒಂದು ಆಸ್ತಿ ನಮ್ಮ ಒಡೆತನಕ್ಕೆ ಬಂದ ಮೇಲೆ, ಅದರ ಒಡೆತನ, ಯಜಮಾನಿಕೆಯ ಭಾವವನ್ನು ಮೊದಲು ಮತ್ತು ಹೆಚ್ಚಾಗಿ ಅನುಭವಿಸುವವರು ಗಂಡಸರೇ. ಅದರ ಹಿಂದೆ ಇರುವ ಹೆಂಗಸರ ಆಸೆ, ಪರಿಶ್ರಮ, ತ್ಯಾಗಗಳನ್ನು ಹಿನ್ನೆಲೆಗೆ ಸರಿಸಿ, ಬದಲಿಗೆ ಅವರಿಗೆ ಮಾತ್ರ ಆಸ್ತಿ, ಅಧಿಕಾರ, ಹಣದ ಬಗ್ಗೆ ಒಂದು ದೌರ್ಬಲ್ಯವಿದೆ ಎಂದು ಹೇಳುವುದು ಪುರುಷ ಸಮಾಜದ ಒಂದು ಚಟ ಎಂಬ ಸಮಾಜಶಾಸ್ತ್ರಜ್ಞರ ಅಭಿಪ್ರಾಯ ಇಲ್ಲಿ ನೆನಪಾಗುತ್ತದೆ. + +ನಾನು ಬೆಂಗಳೂರಿನಲ್ಲಿ ಮೊದಲ ನಿವೇಶನವನ್ನು ಕೊಳ್ಳುವಾಗ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಲು ರೂ. 5,000ಗಳನ್ನು ಠೇವಣಿಯಾಗಿ ಇಡಬೇಕಿತ್ತು. ಆಗ ನಮ್ಮ ಮುಂದೆ ಇನ್ನೂ ಒಂದು ಆಯ್ಕೆಯೂ ಇತ್ತು. ಹೊಸದೊಂದು ಮೋಟರ್ ಸೈಕಲ್ಲನ್ನು ಕೊಳ್ಳಲು ಅದೇ ಮೊಬಲಗನ್ನು ಉಪಯೋಗಿಸಕೊಳ್ಳಬಹುದಾಗಿತ್ತು. ಎರಡರ ನಡುವೆ ಒಂದನ್ನು ನೀನೇ ಆಯ್ಕೆ ಮಾಡಿಕೊ ಎಂದಾಗ, ನನ್ನ ಹೆಂಡತಿಯ ಆಯ್ಕೆ ಸೈಟ್ ಪರವಾಗೇ ಇತ್ತು. ಈ ಆಯ್ಕೆಯ ಹಿಂದೆ ಇದ್ದ ದೂರದೃಷ್ಟಿಯ ಬಗ್ಗೆ ಯಾವಾಗಲೂ ಅವಳಿಗೆ ಹೆಮ್ಮೆ. ಆಗ ಆ ಸೈಟಿನ ಬೆಲೆ ನಲವತ್ತು ಸಾವಿರ ರೂಪಾಯಿಗಳು. ಸರ್ಕಾರದ ಸಾಲದ ನೆರವಿನಿಂದ ಅಲ್ಲೇ ಮನೆ ಕಟ್ಟಿ ಬಾಡಿಗೆಗೆ ಕೂಡ ಕೊಟ್ಟೆವು. ಆ ಮನೆ ಅತ್ತುಕೊಂಡು, ಕರೆದುಕೊಂಡು ಸುಮಾರಾದ ಬಾಡಿಗೆ ದುಡಿಯುತ್ತಿತ್ತು. ಮುಂದೆ ಆ ಮನೆಯನ್ನು ಹದಿನೈದು ವರ್ಷಗಳ ನಂತರ ಇಪ್ಪತ್ತಮೂರು ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿ, ಆ ಮೊಬಲಗನ್ನೇ ಮುಂದೆ ಮಾಡಿಕೊಂಡು ಪದ್ಮನಾಭನಗರದಲ್ಲಿ ಈಗ ನಾವಿರುವ ಮನೆಯನ್ನು ಕೊಳ್ಳುವುದಕ್ಕೆ ಸಾಧ್ಯವಾಯಿತು. + +ಅರ್ಥಶಾಸ್ತ್ರದಲ್ಲಿ ಒಂದು ಸೂತ್ರವಿದೆ. ಆಸ್ತಿಯಿರುವವರು ಮಾತ್ರವೇ ಶ್ರೀಮಂತರಾಗಲು ಸಾಧ್ಯ; ಸಂಬಳದಾರರು, ವೃತ್ತಿಪರರು ಶ್ರೀಮಂತರಾಗುವುದು ಕಷ್ಟವೇ ಎಂದು; ಭೂಮಿ, ಚಿನ್ನ, ಬೆಳ್ಳಿ, ಮನೆ, ಶೇರುಗಳು ಇವುಗಳ ಬೆಳವಣಿಗೆಯ ದರ ಸಾಮಾನ್ಯವಾಗಿ ಪ್ರತಿ ವರ್ಷವೂ ದೇಶದ ಆರ್ಥಿಕ ಅಭಿವೃದ್ಧಿಯ ದರಕ್ಕಿಂತ ಹೆಚ್ಚಾಗಿರುತ್ತದೆ ಎಂದು. ಈ ಕಾರಣಕ್ಕೆ ಜಗತ್ತಿನ ಎಲ್ಲ ಭಾಗಗಳಲ್ಲೂ, ಎಲ್ಲ ರೀತಿಯ ಸಾಮಾಜಿಕ, ಆರ್ಥಿಕ ವ್ಯವಸ್ಥೆಗಳಲ್ಲೂ, ಆರ್ಥಿಕ, ಸಾಮಾಜಿಕ ವಿಕಾಸವಾದ ನಂತರ ಮಧ್ಯಮವರ್ಗದವರ ಸಂಖ್ಯೆಯಲ್ಲಿ ಹೆಚ್ಚಳವಾದರೂ, ಆರ್ಥಿಕ ಅಸಮಾನತೆಯ ಪ್ರಮಾಣವೂ ಕೂಡ ಹೆಚ್ಚಾಗುತ್ತಾ ಹೋಗುತ್ತದೆಂದು. ಈ ಒಳನೋಟವನ್ನೇ ಈಚಿನ ವರ್ಷಗಳಲ್ಲಿ ಹೆಚ್ಚು ಪ್ರಸಿದ್ಧವಾದ Thomas Piketty ಅವರ capital in 21st century ಕೃತಿ ಬೇರೆ ಬೇರೆ ದೇಶಗಳ ಆರ್ಥಿಕ-ಸಾಮಾಜಿಕ ಅಸಮಾನತೆಯನ್ನು, ಆಸ್ತಿವಂತರ ವರ್ಗದ ಬೆಳವಣಿಗೆಯನ್ನು ಕುರಿತು ಅಧ್ಯಯನ ಮಾಡಿ ಪ್ರಕಟಿಸಿತು. + +ಇಂತಹದೊಂದು ಕೃತಿಯ ಬಗ್ಗೆ ಕನ್ನಡದಲ್ಲಿ ಸಮೀಕ್ಷೆ ಬರೆದರೆ ತುಂಬಾ ಪ್ರಸ್ತುತವಾಗಿರುತ್ತದೆ ಪ್ರಕಟಿಸುವಿರಾ? ಎಂದು ನನಗೆ ಪರಿಚಯವಿರುವ ಪತ್ರಕರ್ತರನ್ನೆಲ್ಲಾ ಕೇಳಿದೆ. ಯಾರೊಬ್ಬರೂ ಪ್ರತಿಕ್ರಿಯಿಸಲಿಲ್ಲ. ನಾನು ಈಗ ಇದನ್ನೆಲ್ಲ ಇಲ್ಲಿ ಏಕೆ ಹೇಳುತ್ತಿದ್ದೇನೆಂದರೆ, ಒಂದು ಆಸ್ತಿ, ನಿವೇಶನವನ್ನು ಕೊಂಡ ನಂತರ, ಇದರ ಬೆಂಬಲದ ಆಧಾರದ ಮೇಲೆಯೇ ಇನ್ನೂ ದೊಡ್ಡದಾದ ಆಸ್ತಿಯನ್ನು ಕೊಳ್ಳಲು ಸಾಧ್ಯವಾಗುತ್ತದೆ; ಅದರಿಂದಾಗಿಯೇ ನಮ್ಮ ಮತ್ತು ಕುಟುಂಬದ ಆತ್ಮವಿಶ್ವಾಸ, ಸಾಮಾಜಿಕ ಸ್ಥಾನಮಾನ ಹೆಚ್ಚಾಗುತ್ತದೆ ಎಂಬುದನ್ನು ಸೂಚಿಸಲು. + +ನನ್ನ ಹೆಂಡತಿಗೆ ನಾಲ್ಕು ಜನ ಒಡಹುಟ್ಟಿದವರು, ಒಬ್ಬ ಸೋದರಿಯೂ ಸೇರಿದಂತೆ. ಅವರ ತಾಯಿ-ತಂದೆ ಲಿಂಗಭೇದ ಮಾಡದೆ ಆಸ್ತಿ, ಒಡವೆಗಳನ್ನು ಎಲ್ಲ ಮಕ್ಕಳಿಗೂ ಹಂಚಿದ್ದರು. ಆದರೂ ಎಲ್ಲ ಆಸ್ತಿ ವ್ಯವಹಾರಗಳಲ್ಲೂ ಆಗುವಂತೆ, ತಂದೆ-ತಾಯಿ ಗತಿಸಿದ ಮೇಲೆ ಮತ್ತು ಅವರ ಕೊನೆಯ ದಿನಗಳಲ್ಲಿ ಭಿನ್ನಾಭಿಪ್ರಾಯಗಳು, ಮನಃಸ್ತಾಪವೂ ಬಂತು. ನಾನು ಯಾರ ಪರ-ವಿರೋಧವೂ ನಿಲ್ಲದೆ ದೂರ ಉಳಿದೆ. ನನ್ನ ಹೆಂಡತಿ ಕೂಡ ನನ್ನ ಈ ನಿಲುವನ್ನು ಒಪ್ಪಿದಳು, ಮಾತ್ರವಲ್ಲ; ಆಕೆಯ ಸೋದರರು ಕೂಡ ನಾನು ಯಾವ ರೀತಿಯಲ್ಲೂ ಮಧ್ಯ ಪ್ರವೇಶ ಮಾಡದೆ ಹೋದದ್ದು ತುಂಬಾ ಗೌರವಪೂರ್ಣವಾಗಿತ್ತೆಂದು ಈಗಲೂ ಹೇಳುತ್ತಾರೆ. ಯಾವುದೇ ಆಸ್ತಿ ವ್ಯವಹಾರದಲ್ಲೂ ಕೆಲವರಿಗೆ ನಷ್ಟವಾಗುತ್ತದೆ, ಇನ್ನು ಕೆಲವರಿಗೆ ಲಾಭವಾಗುತ್ತದೆ, ತಾತ್ಕಾಲಿಕವಾಗಿ. ಆದರೆ ಆಗ ಸಿಗುವ ಸಣ್ಣಪುಟ್ಟ ಲಾಭಗಳಿಗೋಸ್ಕರ ಸಂಬಂಧಗಳನ್ನೇ ಬಿಗಡಾಯಿಸಿಕೊಳ್ಳಬಾರದು. + + + +ಭೂಮಿ, ಒಡವೆ, ವಸ್ತುಗಳ ಮೂಲಕ ನಮ್ಮ ವರ್ಗವನ್ನು ನಾವು ಮೀರಬಹುದೇ? ಈ ಹಂಬಲ ಎಲ್ಲರಲ್ಲೂ ಇದೆ. ಹಾಗಾಗಿಯೇ ನಾವು ಶ್ರೀಮಂತರು ಮತ್ತು ಮೇಲುವರ್ಗದವರ ಬಗ್ಗೆ ಎಷ್ಟೇ ಅಸೂಯೆಪಟ್ಟರೂ ಅಂತರಂಗದಲ್ಲಿ ಅವರ ಸ್ಥಾನವನ್ನು ತಲುಪುವ, ಇಲ್ಲ, ಅವರನ್ನೂ ಮೀರಿಸುವ ಬಯಕೆಯಿರುತ್ತದೆ. ಒಂದಲ್ಲ ಒಂದು ದಿನ ಮುಂದೆ ಎಂದಾದರೂ ನಾವು ಆ ಸ್ಥಿತಿ ತಲುಪಬಹುದೆಂಬ ಆಸೆಯಲ್ಲಿ ಮೇಲು ವರ್ಗದವರ ಹಕ್ಕು, ಜೀವನಶೈಲಿ, ಆಯ್ಕೆಗಳನ್ನು ಸಮರ್ಥಿಸುತ್ತೇವೆ, ಅನುಕರಿಸುತ್ತೇವೆ. ಪ್ರತಿ ತಲೆಮಾರಿನಲ್ಲೂ ಪಯಣ ಈ ದಿಕ್ಕಿನಲ್ಲಿ ನಡೆದೂ ನಡೆಯುತ್ತದೆ. ಆದರೆ ಮೇಲುವರ್ಗಕ್ಕೆ ಸೇರಲು ಆಸ್ತಿ ಒಂದೇ ಸಾಲದು. ಅಲ್ಲದೆ ನಾಲ್ಕಾರು ತಲೆಮಾರುಗಳ ಕಾಲ ಆಸ್ತಿ-ಪಾಸ್ತಿ ಒಡೆತನವನ್ನು ಅನುಭವಿಸಿದ ಕುಟುಂಬಗಳಲ್ಲಿ ಕಂಡುಬರುವ ಸೊಗಸುಗಾರಿಕೆ, ಆತ್ಮಪ್ರತ್ಯಯ, ಯಾವಾಗಲೂ ಇನ್ನೊಬ್ಬರ ಅಭಿಪ್ರಾಯಕ್ಕಾಗಿ ಹಾತೊರೆಯುವ, ಕಾತರಿಸುವ ಪ್ರವೃತ್ತಿ ಮೊದಮೊದಲ ತಲೆಮಾರುಗಳಲ್ಲಿ ಇದ್ದಷ್ಟು ಇರುವುದಿಲ್ಲ. ಇನ್ನೂ ಅವರು victim modeನಲ್ಲೇ ಇರುತ್ತಾರೆ. ಆಸಕ್ತರು ಓದಬಹುದಾದ ಪುಸ್ತಕ Veblen ಎಂಬ ಸಮಾಜಶಾಸ್ತ್ರಜ್ಞನ the theory ofleisure class. + +ನಮ್ಮ ತಂದೆ ಪ್ರಾಮಾಣಿಕವಾಗಿ, ಸ್ವಾಭಾವಿಕವಾಗಿ ಈ ಎಲ್ಲ ವಿಶ್ಲೇಷಣೆಗಳಿಂದ ಹೊರಗಿದ್ದರು. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_271.txt b/Kenda Sampige/article_271.txt new file mode 100644 index 0000000000000000000000000000000000000000..120ad23757b94a99b68ef494cc6917238228313c --- /dev/null +++ b/Kenda Sampige/article_271.txt @@ -0,0 +1,141 @@ + + +ಅದು ಎರಡನೆಯ ಮಹಾಯುದ್ಧದ ಕಾಲ. ನಮ್ಮ ದೇಶವನ್ನು ಬ್ರಿಟಿಷರು ಆಳುತ್ತಿದ್ದರು. ಅವರು ಯುದ್ಧದಲ್ಲಿ ತೊಡಗಿಕೊಂಡಿದ್ದ ಕಾರಣ ಯುದ್ಧದ ಬಿಸಿ ನೇರವಾಗಿ ನಮ್ಮ ಜನತೆಗೆ ತಟ್ಟಿತು. + +ಎಲ್ಲ ಊರುಗಳಂತೆ ದಕ್ಷಿಣ ಕನ್ನಡದ ನಡುಕಣಿ ಎಂಬ ಹಳ್ಳಿಯ ಜನತೆ ಕೂಡಾ ಇನ್ನಿಲ್ಲದಂತೆ ಪಾಡುಪಡುತ್ತಿದ್ದರು. ಜನ ಊಟಕ್ಕೆ ಅಕ್ಕಿಯಿಲ್ಲದೆ ಒದ್ದಾಡುತ್ತಿದ್ದರು. ದೊಡ್ಡ ದೊಡ್ಡ ಜಮೀನುದಾರರು ಕೂಡಾ ತಮ್ಮ ಮನೆ ಖರ್ಚಿಗೆ ಬೇಕಾದಷ್ಟು ಅಕ್ಕಿ ಮುಡಿಗಳನ್ನು ಇಟ್ಟುಕೊಂಡು ಉಳಿದ ಅಕ್ಕಿಗಳನ್ನು ಬ್ರಿಟಿಷರ ಸರಕಾರಕ್ಕೆ ಲೆವಿ ಅಂತ ಕೊಡಬೇಕಿತ್ತು. ಅದಕ್ಕೆ ಸರಕಾರ ನಿಗದಿಪಡಿಸಿದಷ್ಟೇ ಬೆಲೆ. ಸರಕಾರದ ಅನುಮತಿಯಿಲ್ಲದೆ ಜನರು ಔತಣ ಕೂಟಗಳನ್ನು ನಡೆಸುವಂತಿರಲಿಲ್ಲ. ಮದುವೆ, ಉಪನಯನಗಳಿಗೆ ಇಪ್ಪತ್ತೈದು ಮಂದಿಗಿಂತ ಹೆಚ್ಚಿನವರಿಗೆ ಊಟ ಹಾಕುವಂತಿರಲಿಲ್ಲ. ದೇವಸ್ಥಾನಗಳ ಜಾತ್ರೆಗಳಲ್ಲಿ ಸಾರ್ವಜನಿಕ ಅನ್ನ ಸಂತರ್ಪಣೆ ನಿಂತುಹೋಯಿತು. + +ಬ್ರಿಟಿಷ್ ಸರಕಾರ ನಮ್ಮ ದೇಶದ ಪ್ರಜೆಗಳನ್ನು ಈ ರೀತಿಯ ಕಷ್ಟಗಳಿಗೆ ಗುರಿಮಾಡಿದ್ದು ಒಂದುಕಡೆ ಇದ್ದೇ ಇತ್ತು. ಅದರ ಜತೆಗೆ ಯುದ್ಧ ಫಂಡಿಗೆ ಎಲ್ಲಾ ಜನರು ಸಹಾಯ ಮಾಡಬೇಕೆಂದು ಸೂಚನೆ ಹೊರಡಿಸಿ ಪಟೇಲರುಗಳಿಗೆ ಫಂಡಿಗೆ ಹಣ ಸಂಗ್ರಹಿಸುವ ಜವಾಬ್ದಾರಿ ನೀಡಿದರು. ಯುದ್ಧ ಫಂಡಿಗೆ ಹಣ ಸಂಗ್ರಹಿಸಲು ಲಾಟರಿ ಟಿಕೆಟುಗಳನ್ನು ಕೂಡಾ ಮುದ್ರಿಸಿದ್ದರು. ಅವುಗಳನ್ನು ಪಟೇಲರು ತಮ್ಮ ತಮ್ಮ ಊರುಗಳಲ್ಲಿ ಮಾರಾಟ ಮಾಡಿ ಸರಕಾರಕ್ಕೆ ಹಣ ಕಟ್ಟಬೇಕಾಗಿತ್ತು. + +ನಡುಕಣಿಯ ಪಟೇಲ ವೆಂಕಟರಮಣಯ್ಯನವರು ಬ್ರಿಟಿಷ್ ಸರಕಾರದ ನೌಕರರಾಗಿದ್ದರೂ ಗಾಂಧೀಜಿಯವರ ಅಭಿಮಾನಿಯಾಗಿದ್ದರು. ಶ್ರೀಮಂತರಾಗಿದ್ದ ಅವರು ತಮ್ಮ ಊರಿನ ಬಡವರಿಗೆ ಹಲವು ವಿಧದಿಂದ ಸಹಾಯ ಮಾಡುತ್ತಿದ್ದರು. ತಹಸೀಲ್ದಾರರ ಕಛೇರಿಯಲ್ಲಿ ಮಾರಾಟಕ್ಕೆ ಕೊಟ್ಟಿದ್ದ ಲಾಟರಿ ಟಿಕೇಟುಗಳನ್ನು ಅವರು ತಮ್ಮ ಊರಿನವರಿಗೆ ಮಾರಾಟ ಮಾಡುವ ಗೋಜಿಗೆ ಹೋಗದೆ ಒಳಗೆ ತೆಗೆದಿಟ್ಟಿದ್ದರು. ಊಟಕ್ಕಿಲ್ಲದ ಜನರಿಗೆ ಲಾಟರಿ ಟಿಕೇಟು ಮಾರುವುದು ಹೇಗೆ? ಅಲ್ಲದೆ ಅವರು ಬ್ರಿಟಿಷರ ಯುದ್ಧಕ್ಕೆ ನಾವೇಕೆ ಹಣ ಕೊಡಬೇಕು ಎಂಬ ಮನೋಭಾವದವರು. ಬ್ರಿಟಿಷರ ಯುದ್ಧದ ಫಂಡಿಗೆ ಊರಿನ ಬಡವರಿಂದ ಹಣ ಸಂಗ್ರಹಿಸುವುದು ಅನೈತಿಕವೆಂದೇ ಭಾವಿಸಿದ್ದರು. + +ಬೇರೆ ಕೆಲವು ಊರಿನ ಪಟೇಲರಂತೆ ಅವರೇ ಆ ಟಿಕೇಟುಗಳ ಹಣವನ್ನು ಸರಕಾರಕ್ಕೆ ಕಟ್ಟಿಬಿಟ್ಟು ಸುಮ್ಮನಿರಬಹುದಿತ್ತು. ಆದರೆ ಆ ದಾರಿ ಹಿಡಿಯಲು ಅವರ ಮನಸ್ಸು ಒಪ್ಪಲಿಲ್ಲ. ಊಳಿಗದ ಚಾಕರಿ ಇನ್ನು ಸಾಕು ಎಂದು ನಿರ್ಧರಿಸಿಯೇ ಅವರು ತಾಲೂಕ್ ಕಛೇರಿಯ ಅಧಿಕಾರಿಗಳೊಂದಿಗೆ ಯುದ್ಧವನ್ನು ವಿರೋಧಿಸಿ ಬಿಸಿಬಿಸಿ ಚರ್ಚೆ ಮಾಡಿಯೂ ಇದ್ದರು. ಅದರ ಪರಿಣಾಮವಾಗಿ ಅವರಿಗೆ ಒಂದು ದಿನ ಒಂದು ನೋಟೀಸು ಬಂತು. ಅದರಲ್ಲಿ ಹೀಗಿತ್ತು : + +“ನಡುಕಣಿ ಗ್ರಾಮದ ಪಠೇಲ ಶ್ರೀ ಎನ್. ವೆಂಕಟರಮಣಯ್ಯನವರ ಮೇಲೆ ಉಡುಪಿ ತಾಲ್ಕು ತಹಸಿಲದಾರ್ರವರು ಏರ್ಪಡಿಸಿದ ಚಾರ್ಜು. + +ಅ) ನೀವು ಪಠೇಲರಾಗಿ ಯುದ್ಧದ ಸಂಬಂಧ ಗವರ್ಮೆಂಟಿಗೆ ಸಹಾಯ ಮಾಡುವುದರ ಬದಲಿಗೆ ಈ ಕೆಳಗಿನ ರೀತಿಯಲ್ಲಿ ಅಸಹಕಾರ ತೋರಿಸಿದ್ದರಿಂದ ನೀವು ಪಠೇಲಿಕೆ ಕೆಲಸ ನೋಡಲಿಕ್ಕೆ ಅಯೋಗ್ಯರಾಗಿರುತ್ತೀರಿ. + +ಆ) ಗ್ರಾಮದಲ್ಲಿ ಪ್ರಚುರಗೊಳಿಸುವರೆ ಮದ್ರಾಸ್ ಗವರ್ಮೆಂಟಿನವರು ಹೊರಡಿಸಿದ ಪೋಸ್ಟರ್ಸ್ ಮತ್ತು ಕರಪತ್ರ ವಗೈರೆ ಪ್ರಕಟಣೆಗಳನ್ನು ನಿಮ್ಮ ಗ್ರಾಮಗಳಲ್ಲಿ ಪ್ರಚುರಗೊಳಿಸುವಗೋಸ್ಕರ ನಾವು ನಿಮಗೆ ಆಗಿಂದಾಗ್ಗೆ ಕಳುಹಿಸಿಕೊಟ್ಟಿರುತ್ತಾ ನೀವು ಗ್ರಾಮದಲ್ಲಿ ಅವುಗಳನ್ನು ಪ್ರಚಾರ ಮಾಡದೆ ಕಟ್ಟಿ ಇಟ್ಟಿರುತ್ತೀರಿ. ಮತ್ತು ಹಾಗೆ ಕಟ್ಟಿ ಇಟ್ಟುಕೊಂಡದ್ದಾಗಿ ಜಮಾಬಂದಿ ಆಫೀಸರ್ರ ಮುಂದೆ ಒಪ್ಪಿಕೊಂಡಿರುತ್ತೀರಿ. + +ಇ) ನಿಮಗೆ ಮಾರಾಟ ಮಾಡಬೇಕೆಂಬ ಆದೇಶದೊಂದಿಗೆ ಕೊಟ್ಟಿದ್ದ ಟಿಕೇಟು ಬುಕ್ಕುಗಳನ್ನು ವಾಪಾಸು ಮಾಡಿದ್ದೀರಿ. + +ಈ) ಯುದ್ಧಕ್ಕೆ ಯಾವ ರೀತಿಯಿಂದಲೂ ಸಹಾಯ ಮಾಡಬಾರದಾಗಿ ಕುಂದಾಪುರ ರೆವೆನ್ಯೂ ಡಿವಿಜನಲ್ ಆಫೀಸರ್ರ ಕೂಡೆ ಚರ್ಚಿಸಿ ಯುದ್ಧ ನಿಷೇಧಕ ಅಭಿಪ್ರಾಯವನ್ನು ಪ್ರಚಾರ ಮಾಡಿರುತ್ತೀರಿ. + +ಈ ಚಾರ್ಜುಗಳನ್ನು ನಿಮ್ಮ ಮೇಲೆ ಸಾಬೀತು ಮಾಡಿ ನಿಮ್ಮನ್ನು ಪಠೇಲಿಕೆ ಕೆಲಸದಿಂದ ಯಾಕೆ ಡಿಸ್ಮಿಸ್ ಮಾಡಬಾರದೆಂಬುದಕ್ಕೆ ನೀವು ಬರಹ ಮೂಲಕ ಉದಾಹರಣೆಯನ್ನು ನಮ್ಮ ಮುಂದೆ ದಾಕ್ಲು ಮಾಡತಕ್ಕದ್ದು. ಮತ್ತು ಈ ಚಾರ್ಜು ನಾಮೆ ನಿಮಗೆ ಜಾರಿಯಾದಂದಿನಿಂದ ಎರಡನೇ ಹೇಳಿಕೆ ಕೊಡುವವರೆಗೆ ನಿಮ್ಮನ್ನು ಪಠೇಲಿಕೆ ಕೆಲಸದಿಂದ ಅಮಾನತು ಮಾಡಲಾಗಿದೆ. + +ನಡುಕಣಿ ಗ್ರಾಮದ ಪಟೇಲರಾಗಿ ಕುದರಾಡಿಯ ಗ್ರಾಮ ಪಟೇಲರಾದ ರಾಮದಾಸ ಪ್ರಭುಗಳನ್ನು ನೇಮಿಸಿರುವುದರಿಂದ ಅವರಿಗೆ ಚಾರ್ಜು ಕೊಡಲು ನಿಮಗೆ ತಿಳಿಸಲಾಗಿದೆ.” + +ಈ ಪತ್ರವನ್ನು ಕುದರಾಡಿಯ ಉಗ್ರಾಣಿ ಪಟೇಲರಿಗೆ ತಂದು ಕೊಟ್ಟು, ಪತ್ರ ಬಟವಾಡೆ ಆಗಿದೆ ಎಂದು ಅವರ ಸಹಿ ಪಡೆದುಕೊಂಡು ಹೊರಟುಹೋದ. ಪಟೇಲರು ಆದೇಶವನ್ನು ಓದಿ ನಸುನಕ್ಕು ಚಾವಡಿಯಲ್ಲಿ ಕುಳಿತು ವಿರಾಮವಾಗಿ ಎಲೆಯಡಿಕೆ ಹಾಕಿಕೊಂಡರು. ಬ್ರಿಟಿಷರು ಈ ದೇಶದಿಂದ ಹೊರಟುಹೋಗಿ, ನಮ್ಮದೇ ಆದ ಗಾಂಧೀರಾಜ್ಯ ಸ್ಥಾಪನೆಯಾಗುವುದಕ್ಕೆ ಹೆಚ್ಚು ಸಮಯ ಬೇಡ ಎನ್ನುವ ಭರವಸೆ ಅವರಿಗೆ ಇತ್ತು. + +****** + +ಯುದ್ಧ ಮುಂದುವರಿಯಿತು. ಹಣ ಕೊಟ್ಟರೂ ಅಕ್ಕಿ ಸಿಗದ ಪರಿಸ್ಥಿತಿ ತಲೆದೋರಿತು. ಬಂಡಸಾಲೆಯ ವ್ಯಾಪಾರಿಗಳು ಕಳ್ಳಕೈಯಲ್ಲಿ ಅಕ್ಕಿ ಮುಡಿಗಳನ್ನು ಕೊಂಡುಕೊಂಡು ದಾಸ್ತಾನು ಮಾಡಿ ಭಾರೀ ಬೆಲೆಗೆ ಅಕ್ಕಿಯನ್ನು ಮಾರುತ್ತಿದ್ದರು. ಅಂಥ ವ್ಯಾಪಾರಿಗಳ ಬಂಡಸಾಲೆಗಳು ಮಂಗಳೂರು, ಮೂಲ್ಕಿ, ಕಟಪಾಡಿ ಮತ್ತು ಉಡುಪಿ ಮುಂತಾದ ದೊಡ್ಡ ಪಟ್ಟಣಗಳಲ್ಲಿದ್ದವು. ಶ್ರೀಮಂತರು ಲೆವಿ ಅಧಿಕಾರಿಗಳ ಕಣ್ಣು ತಪ್ಪಿಸಿ ಅಕ್ಕಿ ಮುಡಿಗಳನ್ನು ಬೇರೆ ಕಡೆಗಳಲ್ಲಿ ಅಡಗಿಸಿಟ್ಟು ಆಮೇಲೆ ಗುಟ್ಟಿನಲ್ಲಿ ಬಂಡಸಾಲೆಯವರಿಗೆ ಮಾರುತ್ತಿದ್ದರು. + +ನಡುಕಣಿಯ ಮಾಜಿ ಪಟೇಲ ವೆಂಕಟರಮಣಯ್ಯನವರು ತಮ್ಮ ಮನೆಯ ಹಿಂದಿನ ಹಾಡಿಯಲ್ಲಿದ್ದ ಒಂದು ಹಳು ಮುಚ್ಚಿದ್ದ ಹೊಂಡದಲ್ಲಿ ಐವತ್ತು ಅಕ್ಕಿಮುಡಿಗಳನ್ನು ರಹಸ್ಯವಾಗಿ ಇಡಿಸಿದ್ದರು. ಆ ಹೊಂಡವನ್ನು ಕಂಡುಹುಡುಕಿದ್ದವನು ಅವರ ನಂಬಿಗಸ್ಥ ಬಂಟ ಬೂದ ಪೂಜಾರಿ. + +ಲೆವಿ ಅಧಿಕಾರಿಗಳು ಊರೂರಿಗೆ ತಿರುಗಿ ಅಕ್ಕಿಮುಡಿ ಲೆಕ್ಕ ಹಾಕಿ ಲೆವಿ ನಿಗದಿ ಮಾಡುತ್ತಾರೆ ಎಂದು ತಿಳಿದ ಮೇಲೆ ವೆಂಕಟರಮಣಯ್ಯನವರು ತಮ್ಮ ಕೆಲವು ಅಕ್ಕಿಮುಡಿಗಳನ್ನು ಅಡಗಿಸಿಡಲು ತೀರ್ಮಾನಿಸಿದರು. ಅವರಿಗೆ ಅವುಗಳನ್ನು ಕಳ್ಳಕೈಯಲ್ಲಿ ಮಾರಿ ಹಣ ಸಂಪಾದನೆ ಮಾಡುವ ಉದ್ದೇಶ ಇರಲಿಲ್ಲ. ಅವರಿಗೆ ಮನೆಯಲ್ಲಿ ಸಮಾರಾಧನೆಗಳನ್ನು ಮಾಡಿ ಊಟ ಹಾಕುವುದೆಂದರೆ ಖುಷಿ. ಈಗ ಅದಕ್ಕೆ ಸರಕಾರ ಕಡಿವಾಣ ಹಾಕಿತ್ತು. ವೆಂಕಟರಮಣಯ್ಯನವರು ಅದರ ಬದಲು ಊಟಕ್ಕಿಲ್ಲದವರಿಗೆ ಅಕ್ಕಿಯನ್ನು ದಾನ ನೀಡುತ್ತಿದ್ದರು. ಅಕ್ಕಿ ಬೇಡಿಕೊಂಡು ಬರುವ ಯಾರಿಗೂ ಇಲ್ಲ ಅಂತ ಹೇಳಬಾರದು ಎನ್ನುವುದು ಅವರು ತಮ್ಮ ಮನೆಯಲ್ಲಿ ಮಾಡಿಕೊಂಡಿದ್ದ ನಿಯಮ. + +ವೆಂಕಟರಮಣಯ್ಯನವರ ಬಳಿ ಊಟಕ್ಕೆ ಅಕ್ಕಿಯಿಲ್ಲ ಎಂದು ಕೇಳಿಕೊಂಡು ಬರುವವರಿಗೆಲ್ಲ ಅವರು ಒಂದು ಪಾವು ಎರಡು ಪಾವು ಅಕ್ಕಿ ಕೊಟ್ಟು ಕಳಿಸುತ್ತಿದ್ದರು. ಜನರು ಕೂಡಾ ಸತ್ಯವಂತರೂ ಧರ್ಮನಿಷ್ಠರೂ ಆಗಿದ್ದ ಕಾಲವದು. ಅವರೆಲ್ಲ ಪಟೇಲರ ಮನೆ, ತೋಟ, ಗದ್ದೆಗಳಲ್ಲಿ ಏನಾದರೂ ಕೆಲಸವಿದ್ದರೆ ತಾವೇ ಹುಡುಕಿ ಸ್ವಲ್ಪ ಹೊತ್ತು ಮಾಡಿಹೋಗುತ್ತಿದ್ದರು. ಉದಾಹರಣೆಗೆ ತೋಟದಲ್ಲಿ ತೆಂಗಿನ ಸೋಗೆಗಳು ಬಿದ್ದಿದ್ದರೆ ಅವುಗಳನ್ನು ಎಳೆದುಕೊಂಡು ಬಂದು ಪಟೇಲರ ಅಂಗಳಕ್ಕೆ ಹಾಕುವುದು, ಹಸಿ ಮಡಲುಗಳನ್ನು ಹೆಣೆದು ಚಪ್ಪರಕ್ಕಾಗುವ ತಡಿಕೆಗಳನ್ನು ತಯಾರಿಸುವುದು, ಒಣಗಿದ ಮಡಲುಗಳನ್ನು ಕಡಿದು ಸೂಟೆಗಳನ್ನು ತಯಾರಿಸುವುದು, ಬಿಸಿನೀರ ಒಲೆಗೆ ಇಡಲು ಅನುಕೂಲವಾಗುವಂತೆ ಸೋಗೆಗಳನ್ನು ತುಂಡುಮಾಡಿ ಕೊತ್ತಳಿಗೆಗಳನ್ನು ತಯಾರಿಸಿ ಬಚ್ಚಲು ಮನೆಯಲ್ಲಿ ಪೇರಿಸಿಡುವುದು ಇತ್ಯಾದಿ ಕೆಲಸಗಳನ್ನು ಪಟೇಲರ ಮನೆಗೆ ಸಹಾಯ ಕೇಳಿ ಬರುವ ಹಳ್ಳಿಗರು ಅವರಾಗಿಯೇ ಮಾಡುತ್ತಿದ್ದರು. + +ಈಗ ಲೆವಿಯವರಿಗೆ ಅಕ್ಕಿ ಮುಡಿ ಸಿಕ್ಕಬಾರದೆಂದು ನಿರ್ಧರಿಸಿದ ಪಟೇಲರು ತಮ್ಮ ನಂಬಿಗೆಯ ಬಂಟನಾದ ಬೂದನನ್ನು ಕರೆದು ಅವನ ಜತೆ ಅಕ್ಕಿ ಮುಡಿಗಳನ್ನು ಎಲ್ಲಿ ಅಡಗಿಸಿಡಬಹುದೆಂದು ಕೇಳಿದರು. ಆಗ ಅವನು ಕಾಡು ಹಂದಿಗಳು ಅಡಗಿಕೊಳ್ಳುವ ಹೊಂಡವೊಂದು ಮೇಲಿನ ಕಾಡಿನಲ್ಲಿದೆ ಎಂದು ತಿಳಿಸಿದ್ದ. ಆ ಹೊಂಡದಲ್ಲಿ ಐವತ್ತು ಅಕ್ಕಿಮುಡಿಗಳನ್ನು ಯಾರಿಗೂ ತಿಳಿಯದಂತೆ ಹೊತ್ತುಕೊಂಡು ಹೋಗಿ ಹಾಕುವ ಕೆಲಸವನ್ನು ಪಟೇಲರು ಬೂದನಿಗೇ ಒಪ್ಪಿಸಿದರು. ಎರಡು ಮೂರು ದಿನಗಳ ಒಳಗೆ ಯಾರೂ ಇಲ್ಲದ ಹೊತ್ತಿನಲ್ಲಿ ಅವನು ಆ ಕೆಲಸವನ್ನು ಮಾಡಿ ಮುಗಿಸಿದ. + +“ಇನ್ನು ಮುಡಿಗಳನ್ನು ತೆಗೆಯಬೇಕಾದರೆ ಪೊದರುಗಳನ್ನು ಕಡಿದೇ ತೆಗೆಯಬೇಕಾದೀತು” ಎಂದ ಬೂದ. + +“ತೆಗೆಯಲಿಕ್ಕೆ ಕಷ್ಟವಾದಷ್ಟು ನಮಗೆ ಒಳ್ಳೆಯದು. ಈಗ ಆ ಕಳ್ಳರಿಗೆ ಸಿಗದಿದ್ದರೆ ಸಾಕು. ನಾವು ತೆಗೆಯುವಾಗ ರಾಜಾರೋಷವಾಗಿ ತೆಗೆಯುವ” ಎಂದರು ಪಟೇಲರು. + +ಅದಾದ ಒಂದೇ ವಾರದಲ್ಲಿ ಲೆವಿ ಅಧಿಕಾರಿಗಳು ಬಂದೇ ಬಿಟ್ಟರು. ಉಳಿದವರೆಲ್ಲ ಚಾವಡಿಯಲ್ಲಿ ಕುಳಿತಿದ್ದಾಗ, ಅವರಲ್ಲಿ ಒಬ್ಬ ‘ನಾನು ಬ್ರಾಹ್ಮಣ, ಒಳಗೆ ಬರಬಹುದಲ್ಲವೇ’ ಎನ್ನುತ್ತ ಸೀದಾ ಒಳಗೆ ಹೋಗಿ ಕುತ್ತಟ್ಟದಲ್ಲಿದ್ದ ಅಕ್ಕಿ ಮುಡಿಗಳನ್ನು ಲೆಕ್ಕ ಹಾಕಿಕೊಂಡು ಬಂದ. ಅವರ ಮುಖ್ಯಸ್ಥ ಆ ಲೆಕ್ಕವನ್ನು ಕೇಳಿ,“ಏನು, ಇಷ್ಟು ದೊಡ್ಡ ಆಸ್ತಿಯಲ್ಲಿ ಇಷ್ಟೇ ಹುಟ್ಟುವಳಿಯಾ?” ಎಂದು ಗಟ್ಟಿಯಾಗಿ ಆಶ್ಚರ್ಯ ವ್ಯಕ್ತಪಡಿಸಿದ. + +ಈಗ ಪಟೇಲರಾಗಿದ್ದ ರಾಮದಾಸ ಪ್ರಭುಗಳು ಲೆವಿ ಅಧಿಕಾರಿಗಳಿಗೆ ಮೊದಲೇ ಸೂಚನೆ ಕೊಟ್ಟಿದ್ದರು – ವೆಂಕಟರಮಣಯ್ಯನವರಿಗೆ ಬಹಳ ಹುಟ್ಟುವಳಿ ಇದೆ, ಅವರಿಗೆ ದೊಡ್ಡ ಮಟ್ಟದಲ್ಲಿ ಲೆವಿ ಹಾಕಿ ಎಂದು. ಹಾಗಾಗಿ ಲೆವಿ ಅಧಿಕಾರಿಗಳು ವೆಂಕಟರಮಣಯ್ಯನವರ ಅಕ್ಕಿ ದಾಸ್ತಾನಿನ ಬಗ್ಗೆ ದೊಡ್ಡ ನಿರೀಕ್ಷೆ ಇಟ್ಟುಕೊಂಡು ಬಂದಿದ್ದರು. ಇಲ್ಲಿ ನೋಡಿದರೆ ಪರಿಸ್ಥಿತಿ ತದ್ವಿರುದ್ಧ! + +“ಉಳಿದ ಅಕ್ಕಿಯೇನಾಯಿತು ಸ್ವಾಮೀ?” ಎಂದು ಲೆವಿ ಆಫೀಸರು ಕೇಳಿದ. + +“ಯಾವ ಉಳಿದ ಅಕ್ಕಿ? ನೀವು ಕೊಟ್ಟಿಟ್ಟಿರುವ ಅಕ್ಕಿಯೇನಾದರೂ ಉಂಟಾ?” ಎಂದು ಪಟೇಲರು ಕಣ್ಣುಕೆಂಪಗಾಗಿಸಿಕೊಂಡು ಕೇಳಿದಾಗ ಆಫೀಸರು ಒಳಗಿಂದೊಳಗೆ ಬೆವರಿದ್ದ. + +“ಹಾಗಲ್ಲ ಸ್ವಾಮೀ, ನಮ್ಮ ಬಳಿ ಇಷ್ಟು ದೊಡ್ಡ ಹಿಡುವಳಿಗೆ ಇಷ್ಟೇ ಅಕ್ಕಿ ಬರಬೇಕು ಅಂತ ಲೆಕ್ಕವಿರುತ್ತದಲ್ಲ. ಆ ಲೆಕ್ಕದಲ್ಲಿ ನಿಮ್ಮ ಆಸ್ತಿಗೆ ಇಲ್ಲಿರುವ ಅಕ್ಕಿ ಕಡಿಮೆಯಾಯಿತು ಎಂದು ಹೇಳಿದೆ ಅಷ್ಟೆ” ಎಂದ. + +“ನಮ್ಮಲ್ಲಿ ಉತ್ಪತ್ತಿಗಿಂತ ಹೆಚ್ಚು ಖರ್ಚೂ ಇರುತ್ತದೆ. ಇಲ್ಲಿ ಒಂದು ದಿನ ಇದ್ದು ನೋಡಿ. ನಮ್ಮ ಮನೆಯಲ್ಲಿ ನಿತ್ಯ ಹೊರಗಿನ ಅತಿಥಿಗಳು ಊಟಕ್ಕೆ ಇರುತ್ತಾರೆ. ನೀವು ಕೂಡಾ ಮಧ್ಯಾಹ್ನದ ಮುಂಚೆ ಬಂದರೆ ಇಲ್ಲಿಂದ ಊಟಮಾಡದೆ ಹೋಗುವಂತಿಲ್ಲ. ಇದು ನಮ್ಮ ಪದ್ಧತಿ. ಇದನ್ನು ನಾವು ಅಂಗ್ರೇಜಿಯವರ ಮರ್ಜಿಗನುಸಾರವಾಗಿ ಬದಲಾಯಿಸಲಿಕ್ಕೆ ಆಗುತ್ತದಾ? ನಮ್ಮ ನಮ್ಮ ಮನೆಗಳಲ್ಲಿ ನಮ್ಮ ನಮ್ಮ ಮನೆದೇವರಿದ್ದಾರಲ್ಲ ಸ್ವಾಮೀ? ನಮ್ಮ ಮನೆಯ ಕುತ್ತಟ್ಟ ಮಾತ್ರ ನೋಡುವುದಲ್ಲ ನೀವು, ಭಟ್ರೇ, ನೀವು ಒಳಗೆ ಹೋಗಿ ನಮ್ಮ ದೇವರಕೋಣೆಯನ್ನೂ ನೋಡಿ ಬನ್ನಿ. ಅಲ್ಲಿದ್ದಾನಲ್ಲ ಗಣಪತಿ, ಅವನು ಸಾಮಾನ್ಯದವನಲ್ಲ. ನಿತ್ಯ ನೈವೇದ್ಯ ಆಗಬೇಕು ಅವನಿಗೆ. ಮತ್ತೆ ಅಲ್ಲಿ ಇನ್ನೊಂದು ಸಣ್ಣ ದೇವಿಯ ವಿಗ್ರಹವಿದೆ. ಅವಳ ಕೈಯಲ್ಲಿರುವುದು ಸೌಟು. ಅನ್ನಪೂರ್ಣೇಶ್ವರಿಯ ವಿಗ್ರಹವದು. ಅದಕ್ಕಾಗಿಯೇ ನಮ್ಮ ಮನೆಯಲ್ಲಿ ಯಾರಾದರೂ ಹೊರಗಿನ ಅತಿಥಿಗಳು ಊಟಕ್ಕೆ ಇದ್ದರೆ ಮಾತ್ರ ನಮಗೆ ಸಮಾಧಾನ. ಇದೆಲ್ಲ ನಿಮ್ಮ ಸರಕಾರಕ್ಕೆ ಗೊತ್ತುಂಟಾ? ನೀವೆಲ್ಲ ಇರುವುದು ಯಾಕೆ ಹೇಳಿ? ನಮ್ಮ ಜನರ ರೀತಿ ನೀತಿಗಳನ್ನು ಅರಿತುಕೊಂಡು ಸರಕಾರಕ್ಕೆ ಹೀಗೆ ಹೀಗೆ ಎಂದು ತಿಳಿವಳಿಕೆ ಕೊಡಬೇಕು. ಅದು ಬಿಟ್ಟು ನೀವೇ ಬ್ರಿಟಿಷರಂತೆ ಜರ್ಬು ತೋರಿಸಿದರೆ ಹೇಗೆ? ಏನಂತ ಎಣಿಸಿದ್ದೀರಿ?” ಎಂದು ಬಿಸಿಮಾತಾಡಿದಾಗ ಲೆವಿ ಅಧಿಕಾರಿಗಳು ಬೆದರಿ ಪೆಚ್ಚಾಗಿ ಹೋದರು. + +ಲೆವಿ ಅಧಿಕಾರಿಗಳು ಯೋಚಿಸಿದಂತೆ ವೆಂಕಟರಮಣಯ್ಯನವರ ಮನೆಯಲ್ಲಿ ಲೆವಿ ಸಂಗ್ರಹವಾಗಲಿಲ್ಲ. + +****** + +ಯುದ್ಧ ಮತ್ತೂ ಮುಂದುವರಿಯುತ್ತಲೇ ಇತ್ತು. ಎಲ್ಲರಿಗೂ ಕಷ್ಟ! ಕಷ್ಟ! ಕಷ್ಟ! ಆಗ ನಡುಕಣಿಯಲ್ಲಿ ಒಂದು ಘಟನೆ ನಡೆಯಿತು.ಕಟಪಾಡಿಯ ಸಾಹುಕಾರರೊಬ್ಬರು ನಡುಕಣಿಯ ಮೂಲಕ ಕಳ್ಳಕೈಯ ಅಕ್ಕಿಮುಡಿಗಳನ್ನು ಎತ್ತಿನಗಾಡಿಯಲ್ಲಿ ಹೇರಿಕೊಂಡು ಹೋಗಲಿದ್ದಾರೆ ಎನ್ನುವ ಸುದ್ದಿ ನಡುಕಣಿಯ ಜನರಿಗೆ ತಲುಪಿತು. + +ತಕ್ಷಣ ರಂಗ ಮೂಲ್ಯ ಎಂಬ ಬುಡುಒಕ್ಕಲಿನವನ ನೇತೃತ್ವದಲ್ಲಿ ನಡುಕಣಿಯ ಕೆಲವರು ಬಡವರು ರಹಸ್ಯವಾಗಿ ಒಂದು ಕೂಟ ಕಟ್ಟಿದರು. ಸಾಹುಕಾರ ಅಕ್ಕಿಯ ಗಾಡಿಯನ್ನು ನಡುಕಣಿಯ ಹೊರವಲಯದಲ್ಲಿರುವ ಪುಂಡಗೋಳಿಯ ಬಳಿ ತಡೆದು ಲೂಟಿ ಮಾಡಬೇಕೆನ್ನುವುದೇ ಅವರ ಸಂಕಲ್ಪ. + +ಅಕ್ಕಿ ಮುಡಿಗಳನ್ನು ಲೂಟಿ ಮಾಡಲು ಅಲ್ಲಿ ಸೇರಿದ್ದವರ ಪೈಕಿ ಎಲ್ಲ ಜಾತಿಯ ಬಡವರೂ ಇದ್ದರು. ವಿಶೇಷವೆಂದರೆ ಅವರ ಜತೆಗೆ ಸುಬ್ರಾಯ ಸರಳಾಯರು ಎಂಬ ವೇದ ಓದಿದ ಸಾತ್ವಿಕ ಮನುಷ್ಯನೂ ಇದ್ದರು. ಅವರು ಆ ಊರಿನ ದೇವಸ್ಥಾನದ ಪೂಜೆಯ ಹಕ್ಕಿನ ವಂಶದವರು. ಈಗ ಮಾತ್ರ ಕಾರಣಾಂತರದಿಂದ ಅಡಿಗೆಯವರಾಗಿ ದುಡಿಯುತ್ತಿದ್ದರು. ಊರಿನಲ್ಲಿ ಯಾವ ಸಮಾರಾಧನೆಯೂ ನಡೆಯದ ಕಾರಣ ಅವರಿಗೆ ಅಡಿಗೆಯ ಕೆಲಸವೇ ಸಿಕ್ಕಲಿಲ್ಲ. ಹಾಗಾಗಿ ಅವರ ಮನೆಯಲ್ಲಿಯೂ ನಿತ್ಯ ಒಲೆ ಉರಿಯದ ಸ್ಥಿತಿ ಬಂದಿತ್ತು. + +ಸುಬ್ರಾಯರು ಅಕ್ಕಿ ಲೂಟಿ ಮಾಡಿಕೊಳ್ಳುವವರ ಜತೆ ಸೇರಿಕೊಳ್ಳಲು ರಂಗ ಮೂಲ್ಯನೇ ಕಾರಣ. ಅವನಿಗೆ ಸುಬ್ರಾಯರ ಸಂಸಾರದ ಪಾಡು ತಿಳಿಯದ್ದೇನಲ್ಲ. ಹಿಂದಿನ ದಿನ ಸಂಜೆಯ ಹೊತ್ತು ಅವನು ಸುಬ್ರಾಯರ ಮನೆಗೆ ಬಂದು ಅವರನ್ನು ಆಚೆಗೆ ಕರೆದು ಹೇಳಿದ್ದ : “ಭಟ್ರೇ, ನಾನೊಂದು ಹೇಳುತ್ತೇನೆ. ನಿಮಗೆ ಕೂಡಾ ಕಷ್ಟ ಅನ್ನುವುದು ನನಗೆ ಗೊತ್ತಾಗುತ್ತದೆ. ನಾವು ನಾಳೆ ಕಳ್ಳಕೈಯ ಅಕ್ಕಿ ಮುಡಿ ಲೂಟಿ ಮಾಡಲು ಹೋಗುತ್ತಿದ್ದೇವೆ. ನಮ್ಮ ಊರಿನಲ್ಲಿ ನಾವು ಬೆವರು ಸುರಿಸಿ ಬೆಳೆಸಿದ ಅಕ್ಕಿ ಪರೆಂಗಿಯವರಿಗೆ ಸೇರುವುದನ್ನು ನಾವು ಸಹಿಸುವುದಿಲ್ಲ. ಏನು ಬೇಕಾದರೂ ಆಗಲಿ. ನೀವು ಕೂಡಾ ನಾಳೆ ಬೆಳಗ್ಗೆ ಪುಂಡಗೋಳಿಯ ಬಳಿ ಬನ್ನಿ.” + +ಸುಬ್ರಾಯರು ಬಹಳಷ್ಟು ಯೋಚಿಸಿ ಕೊನೆಗೆ ತಾನು ಕೂಡಾ ರಂಗ ಮೂಲ್ಯನ ಜತೆಗೆ ಹೋಗುವುದೇ ಸೂಕ್ತ ಅಂತ ತೀರ್ಮಾನಿಸಿದ್ದರು. ಸುಬ್ರಾಯರಿಗಿಂತಲೂ ಕಷ್ಟದಲ್ಲಿ ನಡುಕಣಿಯ ಇತರ ಬಡವರಿದ್ದರು. ಅಂತಹ ಹಲವಾರು ಜನ ಅಲ್ಲಿ ಸೇರಿದ್ದರು. ಸುಬ್ರಾಯರಂತೆ ಯಾರ ಸುದ್ದಿಗೂ ಹೋಗದ ಕೊಡಪಟ್ಟೆ ಶೇಷಪ್ಪ ಎಂಬ ಬಡ ಯುವಕನೂ ಅವರ ಜತೆಗೆ ಬಂದಿದ್ದ. ಶೇಷಪ್ಪ ಮತ್ತು ಅವನ ವೃದ್ಧೆ ತಾಯಿ ಒಂದು ಕಮ್ಮಾರಸಾಲೆ ನಡೆಸುತ್ತಿದ್ದರು. + +ಕಟಪಾಡಿಯ ಸಾಹುಕಾರರ ಗಾಡಿ ನಡುಕಣಿ ಊರಿನ ಮೂಲಕ ಹಾದು ಹೋಗುತ್ತದೆ ಎಂದು ಗೊತ್ತಾಗಿದ್ದ ದಿನ ಹದಿನೆಂಟು ಜನ ಬೆಳಗ್ಗಿನಿಂದಲೇ ಪುಂಡಗೋಳಿ ಎಂಬ ಸ್ಥಳದಲ್ಲಿ ಮರಗಳ ಮರೆಯಲ್ಲಿ ಸದ್ದು ಮಾಡದೆ ಕಾದು ಕುಳಿತಿದ್ದರು. ಸುಬ್ರಾಯರು ತಮ್ಮ ಜತೆಗೆ ಇದ್ದುದು ಅವರಿಗೆಲ್ಲ ನೂರಾನೆಯ ಬಲ ಬಂದಂತಾಗಿತ್ತು. ಸುಬ್ರಾಯರು ಕೂಡಾ ತಮ್ಮ ಕೃತ್ಯವನ್ನು ಒಪ್ಪಿ ತಾವೂ ಸೇರಿಕೊಳ್ಳುವುದೆಂದರೆ ತಮ್ಮದು ನ್ಯಾಯೋಚಿತ ಹೋರಾಟ ಎಂದೇ ಜನರಿಗೆ ಅನಿಸಿಬಿಟ್ಟಿತು. + +ಪುಂಡಗೋಳಿ ಸಾಮಾನ್ಯವಾಗಿ ಜನ ಓಡಾಡುವ ಸ್ಥಳವಲ್ಲ. ನಡುಕಣಿಯ ಪೇಟೆ ಅನ್ನಬಹುದಾದ ಮಂಜನ ಗೂಡಂಗಡಿ, ಮತ್ತು ಇತ್ತೀಚೆಗೆ ಪ್ರಾರಂಭವಾದ ಮುಕುಂದ ಕಮ್ತಿಯ ದಿನಸಿ ಅಂಗಡಿಯಿದ್ದ ಪದವು ಸ್ಥಳದಿಂದ ಉತ್ತರಕ್ಕೆ ಹೋಗುವ ರಸ್ತೆ ಮುಂದೆ ಇಪ್ಪತ್ತು ಮೈಲು ದೂರದ ಕಟಪಾಡಿಯಲ್ಲಿ ಮುಖ್ಯ ರಸ್ತೆಯನ್ನು ಸೇರುತ್ತದೆ. ಆ ರಸ್ತೆಯಲ್ಲಿ ಒಂದು ಮೈಲು ದೂರದಲ್ಲಿ ಸಿಗುವ ಸ್ಥಳವೇ ಪುಂಡಗೋಳಿ. ಅಲ್ಲಿ ಮಾರ್ಗದ ಬದಿಯಲ್ಲಿ ಒತ್ತೊತ್ತಾಗಿ ನಿಂತಿದ್ದ ಮರಗಳ ನಡುವೆ ಬೆಟ್ಟದಂತೆ ಮೇಲೆದ್ದು ನಿಂತಿದ್ದ ಬೃಹದಾಕಾರದ ಗೋಳಿ ಮರವೇ ಪುಂಡಗೋಳಿ. ನಡುಕಣಿಯ ಹೆಚ್ಚಿನ ಭೂತ, ಪ್ರೇತ, ಪಿಶಾಚಿಗಳು ಅದರಲ್ಲಿ ಅಥವಾ ಸುತ್ತುಮುತ್ತಲಿನ ಮರಗಳಲ್ಲಿ ವಾಸವಾಗಿದ್ದವು. ಅವುಗಳಿಗೆಲ್ಲ ನಾಯಕನಾಗಿ ಒಂದು ಬಬ್ಬರ್ಯ ಉಂಟೆಂದು ಜನ ಹೇಳುತ್ತಿದ್ದರು. + +ಬಬ್ಬರ್ಯ ಭಾರೀ ಕಾರಣಿಕದ ದೈವ. ತನ್ನನ್ನು ರಕ್ಷಿಸು ಎಂದು ಭಯಭಕ್ತಿಯಿಂದ ಪ್ರಾರ್ಥಿಸಿಕೊಂಡರೆ ಎಂತಹ ಕಷ್ಟವನ್ನಾದರೂ ಪರಿಹರಿಸಬಲ್ಲ ಶಕ್ತಿ ಬಬ್ಬರ್ಯನಿಗಿತ್ತು. + +ಪುಂಡಗೋಳಿಯ ಬಳಿ ರಾತ್ರಿ ಹೊತ್ತು ಹೋಗುವ ಜನರಿಗೆ ಸಾಲು ಸಾಲು ಸೂಟೆಗಳು ಕಾಣಿಸಿಕೊಂಡುದಿದೆ. ಅವುಗಳು ಭೂತ ಪರಿವಾರ ಸ್ನಾನಕ್ಕೆ ಹೋಗುವಾಗ ಹಿಡಿದುಕೊಳ್ಳುವ ಸೂಟೆಗಳು. ಯಾರಾದರೂ ಧೈರ್ಯ ಮಾಡಿ ಆ ಸೂಟೆಗಳನ್ನು ದೂರದಿಂದಲೇ ಹಿಂಬಾಲಿಸಿದರೆ ಅವುಗಳು ಒಂದು ಮೈಲು ದೂರದ ಮಜ್ಜಲ ಕೆರೆಯವರೆಗೆ ಹೋಗಿ ಆ ಕೆರೆಯೊಳಗೆ ಇಳಿಯುವುದನ್ನು ಕಾಣಬಹುದಿತ್ತು. ನಂತರ ಆ ಸೂಟೆಗಳು ಕಾಣುತ್ತಿರಲಿಲ್ಲ. ಆಗ ಭೂತಗಳು ಸ್ನಾನದಲ್ಲಿ ತೊಡಗಿವೆ ಅಂತ ಅರ್ಥ. ಮತ್ತೊಂದೋ ಎರಡೋ ಗಂಟೆಯ ನಂತರ ಮತ್ತೆ ಸೂಟೆಗಳು ಜಗ್ಗನೆ ಬೆಳಗುತ್ತವೆ. ಭೂತಗಳು ಹೋದ ದಾರಿಯಲ್ಲೇ ಹಿಂದೆ ಬಂದು ಪುಂಡಗೋಳಿಯನ್ನು ಸೇರಿಕೊಳ್ಳುತ್ತವೆ. ಹಾಗೆ ಹೋಗುವ ಭೂತಗಳ ಮೆರವಣಿಗೆಯ ಎದುರು ಬರಬಾರದು. ಅದಕ್ಕಾಗಿ ಜನ ರಾತ್ರಿ ಹೊತ್ತು ಪುಂಡಗೋಳಿಯ ಕಡೆಗೆ ಸುಳಿಯುತ್ತಿರಲಿಲ್ಲ. + +ಹಗಲು ಹೊತ್ತು ಕೂಡಾ ಆ ದಾರಿಯಲ್ಲಿ ನಡೆದುಕೊಂಡು ಹೋಗುವವರ ಮೇಲೆ ಕುಲೆಗಳು ಹೊಯಿಗೆ ಬೀಸಾಡುತ್ತಿದ್ದವು. ಬಬ್ಬರ್ಯನನ್ನು ಪ್ರಾರ್ಥಿಸಿಕೊಂಡು ಹೋದರೆ ಕುಲೆಗಳು ಹೊಯಿಗೆಯನ್ನು ಕೂಡಾ ಬೀಸಾಡುವುದಿಲ್ಲ ಎಂಬ ನಂಬಿಕೆಯೂ ಇತ್ತು. + + + +ಇಂತಹ ಪುಂಡಗೋಳಿಯ ಮರಗಳ ಮರೆಯಲ್ಲಿ ನಿಂತ ರಂಗಮೂಲ್ಯ ಮತ್ತು ಅವನ ಗುಂಪಿನವರು ಮೊದಲು ಬಬ್ಬರ್ಯ ದೈವವನ್ನು ಭಕ್ತಿಯಿಂದ ಪ್ರಾರ್ಥಿಸಿಕೊಂಡು ತಮ್ಮ ಕೆಲಸ ಸರಿಯಾಗಿ ನಡೆಯಲಿ, ಮುಂದೆ ಇದರಿಂದ ನಮಗಾಗಲೀ ನಮ್ಮ ಹೆಂಡತಿ ಮಕ್ಕಳಿಗಾಗಲೀ ತೊಂದರೆ ಬಾರದಿರಲಿ ಎಂದು ಪ್ರಾರ್ಥಿಸಿಕೊಂಡರು. + +ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಗಾಡಿಯೊಂದು ನಡುಕಣಿಯ ಕಡೆಯಿಂದ ಬರುತ್ತಿರುವ ಶಬ್ದ ಕೇಳಿ ಬರತೊಡಗಿತು. ನಡುಕಣಿಯ ಅಂಗಡಿಗಳಿದ್ದ ಪದವಿನಿಂದ ಗಾಡಿ ಇಳಿಜಾರಿನಲ್ಲಿ ಬರುತ್ತಿದ್ದಾಗ ವೇಗವನ್ನು ತಡೆಯಲು ಚಕ್ರಗಳ ಹಿಂದೆ ಕಟ್ಟಿದ್ದ ಮರದ ಕೊರಡು ಚಕ್ರಗಳು ವೇಗವಾಗಿ ತಿರುಗದಂತೆ ಹಿಡಿದಿಡುವಾಗ ಉಂಟಾಗುತ್ತಿದ್ದ ಕಿರೀಂ ಕಿರೀಂ ಶಬ್ದದಿಂದ ರಂಗ ಮೂಲ್ಯನ ಕಡೆಯವರಿಗೆ ಗಾಡಿ ಬರುತ್ತಿದೆ ಎಂಬ ಸೂಚನೆ ಸಿಕ್ಕಿತು. ನಂತರ ಗಾಡಿಗೆ ಕಟ್ಟಿದ್ದ ಗೆಜ್ಜೆಯ ಘಲ್ ಘಲ್ ಶಬ್ದ ಮತ್ತು ಎತ್ತುಗಳ ಕುತ್ತಿಗೆಯ ಗೆಜ್ಜೆಯ ಕಿಣಿಕಿಣಿ ಶಬ್ದಗಳು ಗಾಡಿ ಸಮೀಪಕ್ಕೆ ಬಂದಿರುವುದನ್ನು ಸೂಚಿಸಿದವು.ರಂಗ ಮೂಲ್ಯ ಕೈಯಲ್ಲಿದ್ದ ದೊಣ್ಣೆಯನ್ನು ಗಾಳಿಯಲ್ಲಿ ಆಡಿಸಿ “ಗೋವಿಂದಾನ್ ಗೋವಿಂದಾ” ಎಂದು ಕೂಗಿದ. ಉಳಿದವರೂ “ಗೋವಿಂದಾನ್ ಗೋವಿಂದಾ” ಎಂದು ಕೂಗಿಕೊಂಡು ರಸ್ತೆಯತ್ತ ಓಡಿದರು. ಎಲ್ಲರ ಹಿಂದಿನಿಂದ ಸುಬ್ರಾಯರೂ ಹೋದರು. ರಂಗ ಮೂಲ್ಯ ರಸ್ತೆಯಲ್ಲಿದ್ದ ಗಾಡಿಯ ಎದುರಿಗೆ ಹೋಗಿ ಎತ್ತುಗಳ ಕೊರಳ ಮೇಲಿದ್ದ ಅಡ್ಡಪಟ್ಟಿಗೆ ಕೈಹಾಕಿದಾಗ ಎತ್ತುಗಳು ನಿಂತವು. ರಂಗ ಮೂಲ್ಯ ಗಾಡಿಯವನಿಗೆ ಹೊಡೆಯಲು ದೊಣ್ಣೆಯನ್ನು ಎತ್ತಿದೊಡನೆ ಅವನು ಗಡಗಡ ನಡುಗಿ ಕೈಮುಗಿಯುತ್ತಾ “ದಮ್ಮಯ್ಯ” ಎಂದನು. “ಹಾಗಾದರೆ ಇಳಿದು ಓಡಿ” ಎಂದು ರಂಗ ಮೂಲ್ಯ ಗಾಡಿಯವನಿಗೂ ಗಾಡಿಯ ಪಕ್ಕದಲ್ಲಿ ನಡೆದುಕೊಂಡು ಬರುತ್ತಿದ್ದ ಅವನ ಸಹಾಯಕನಿಗೂ ಗದರಿಸಿದಾಗ ಅವರಿಬ್ಬರೂ ಗಾಡಿಯನ್ನು ಬಿಟ್ಟು ಓಡಿ ಹೋದರು. ಅವರಿಬ್ಬರೂ ದೂರದಲ್ಲಿ ಮರೆಯಲ್ಲಿ ನಿಂತು ಮುಂದಾಗುವುದನ್ನು ನೋಡುತ್ತಿದ್ದರು. + +ರಂಗ ಮೂಲ್ಯ ಅಬ್ಬರಿಸಿದ, “ನೋಡುವುದೇನು? ಎಲ್ಲರೂ ಒಂದೊಂದು ಅಕ್ಕಿ ಮುಡಿಯನ್ನು ಹೊತ್ತುಕೊಂಡು ಹೋಗಿ. ಎಲ್ಲಿಯಾದರೂ ಅಡಗಿಸಿಡಿ.”ನಡುಕಣಿಯ ವೀರರು ಒಬ್ಬರ ತಲೆಗೆ ಇನ್ನೊಬ್ಬರಂತೆ ಅಕ್ಕಿ ಮುಡಿಗಳನ್ನು ಏರಿಸಿಕೊಂಡು ಬೇಗಬೇಗನೇ ನಡೆದುಕೊಂಡು ತಮ್ಮ ತಮ್ಮ ಮನೆಗಳತ್ತ ಹೆಜ್ಜೆ ಹಾಕಿದರು. ಸುಬ್ರಾಯರು ಸ್ವಲ್ಪ ದೂರದಲ್ಲಿ ಏನು ಮಾಡುವುದೆಂದು ತಿಳಿಯದೆ ನಿಂತಿದ್ದರು. ರಂಗ ಮೂಲ್ಯ ಅವರನ್ನು ನೋಡಿ, “ಏನು ಭಟ್ರೇ, ಉತ್ಸವ ನೋಡುವುದಾ? ಬನ್ನಿ ಇಲ್ಲಿ” ಎಂದು ಅವರನ್ನು ಬಳಿಗೆ ಕರೆದು ಅವರ ತಲೆಗೂ ಒಂದು ಮುಡಿಯನ್ನು ಹೇರಿಯೇ ಬಿಟ್ಟ. ಕೊನೆಗೆ ತಾನೊಬ್ಬನೇ ಉಳಿದಾಗ ಒಂದು ಅಕ್ಕಿ ಮುಡಿಯನ್ನು ಲೀಲಾಜಾಲವಾಗಿ ಎರಡೂ ಕೈಗಳಿಂದ ಮೇಲೆತ್ತಿ ತನ್ನ ಮುಂಡಾಸು ಕಟ್ಟಿದ್ದ ತಲೆಯ ಮೇಲಿರಿಸಿಕೊಂಡು ದೊಣ್ಣೆ ಬೀಸಿಕೊಂಡು ಸುಬ್ರಾಯರ ಹಿಂದಿನಿಂದ ಹೆಜ್ಜೆ ಹಾಕಿದ. + +ರಂಗ ಮೂಲ್ಯನ ಆಜಾನುಬಾಹು ದೇಹ ಮತ್ತು ದೊಡ್ಡ ಮೀಸೆ ನೋಡಿಯೇ ಹೆದರಿದ್ದ ಗಾಡಿಯವರು ಎಲ್ಲರೂ ಹೋದರೆಂದು ಖಾತ್ರಿಯಾದ ಮೇಲೆ ತಮ್ಮ ಗಾಡಿಯ ಬಳಿಗೆ ಹಿಂದಿರುಗಿದರು. ಅದರಲ್ಲಿದ್ದ ಇಪ್ಪತ್ತು ಅಕ್ಕಿ ಮುಡಿಗಳಲ್ಲಿ ಎರಡು ಹಾಗೆಯೇ ಉಳಿದಿದ್ದವು. ಹಾಗಾದರೆ ಲೂಟಿಯವರು ಹದಿನೆಂಟು ಜನ ಇರಬೇಕು. ಗಾಡಿಯವರು, ತಾವು ಪ್ರತಿಭಟಿಸದೆ ಸುಮ್ಮನೆ ಓಡಿ ಹೋದದ್ದು ಒಳ್ಳೆಯದಾಯಿತು ಅಂತ ಎಣಿಸಿ ಬೇಗಬೇಗನೆ ಗಾಡಿಯನ್ನು ಕಟಪಾಡಿಯ ಕಡೆಗೆ ಹೊಡೆದುಕೊಂಡು ಹೋಗಿ ಬಂಡಸಾಲೆಯ ಧನಿಗಳಿಗೆ ನಡೆದ ಸಂಗತಿಯನ್ನು ವರದಿ ಮಾಡಿದರು. ಹದಿನೆಂಟು ಮಂದಿಯೂ ಮೀಸೆ ಬಿಟ್ಟುಕೊಂಡು, ಮುಂಡಾಸು ಕಟ್ಟಿಕೊಂಡು, ದೊಣ್ಣೆ ಹಿಡಿದುಕೊಂಡಿದ್ದರು, ತಮ್ಮನ್ನು ಕೊಲ್ಲಲು ಬಂದರು ಎಂದು ಅವರು ಹೇಳಿದ್ದರಿಂದ ಬಂಡಸಾಲೆಯವರು ಇವರನ್ನು ಹೆಚ್ಚು ಗದರದೆ ಬಿಟ್ಟರು. + +ಇತ್ತ ಅಕ್ಕಿ ಮುಡಿಗಳನ್ನು ಹೊತ್ತುಕೊಂಡು ಬಂದವರು ರಂಗಮೂಲ್ಯನ ಸೂಚನೆಯಂತೆ ಅಕ್ಕಿ ಮುಡಿಗಳನ್ನು ಎಲ್ಲೆಲ್ಲಿಯೋ ಪೋಲೀಸರಿಗೆ ಸಿಕ್ಕದ ಹಾಗೆ ಅಡಗಿಸಿಟ್ಟು ಸ್ವಲ್ಪ ದಿನಗಳ ಕಾಲ ಊರುಬಿಟ್ಟು ಓಡಿಹೋದರು. ಅಕ್ಕಪಕ್ಕದ ಊರುಗಳಲ್ಲಿದ್ದ ತಮ್ಮ ತಮ್ಮ ಸಂಬಂಧಿಕರ ಮನೆಗಳಿಗೆ ಹೋಗಿ ಅಡಗಿಕೊಂಡರು. ಅವರ ಪೈಕಿ ಸಾತ್ವಿಕ ಸ್ವಭಾವದವರಾದ ಸುಬ್ರಾಯರು ಮತ್ತು ಶೇಷಪ್ಪ ಬಹಳ ಕಾಲ ಊರು ಬಿಟ್ಟು ದೇಶಾಂತರ ಹೋಗಬೇಕಾಗಿ ಬಂದುದು ಒಂದು ದುರಂತ. + +ಸುಬ್ರಾಯರು ಅಕ್ಕಿ ಮುಡಿಯನ್ನು ತಮ್ಮ ಮನೆಯವರೆಗೆ ಬಹಳ ಕಷ್ಟದಿಂದ ಹೊತ್ತುಕೊಂಡು ಬಂದು ತಮ್ಮ ಮಡದಿ ಸರಸ್ವತಕ್ಕನ ಸಹಾಯದಿಂದ ಅದನ್ನು ಇಳಿಸಿದರು. ಅದನ್ನು ಎಲ್ಲಿ ಅಡಗಿಸಿಡುವುದೆಂದು ಯೋಚಿಸಿ ತಮ್ಮ ಅಡಿಗೆ ಮನೆಯ ಕಣಕೋಡಿಯಲ್ಲಿ ಇಟ್ಟು ಅದು ಕಾಣದಂತೆ ಅದರ ಮೇಲೆ ಕಟ್ಟಿಗೆ ಮತ್ತು ಅಡರಿನ ರೆಂಬೆಗಳನ್ನು ಜಾಣತನದಿಂದ ಪೇರಿಸಿದರು. ಆದರೂ ಅವರಿಗೆ ಧೈರ್ಯ ಬರಲಿಲ್ಲ. ಪೋಲೀಸರು ಮನೆಗೆ ಬಂದು ಒಳಗೆ ಹುಡುಕಿದರೆ ಅಕ್ಕಿ ಮುಡಿಯನ್ನು ಹುಡುಕಿ ತೆಗೆಯುವುದು ಎಷ್ಟು ಹೊತ್ತಿನ ಕೆಲಸ? ಆದರೆ ಗಂಡಸರು ಮನೆಯಲ್ಲಿಲ್ಲದಿದ್ದರೆ ಒಂದು ವೇಳೆ ಪೋಲೀಸರು ಸುಮ್ಮನೆ ಹೋದರೂ ಹೋಗಬಹುದು. + +ಸುಬ್ರಾಯರು ಹೇಳಿದರು, “ನಾಳೆ ನಾಡಿದ್ದರಲ್ಲಿ ಪೋಲೀಸರು ಊರಿಗೆ ಬಂದು ಮನೆ ಮನೆಯನ್ನು ಹುಡುಕುವುದು ಖಂಡಿತ. ನಮ್ಮ ಮನೆಗೂ ಬಂದು ಹುಡುಕಿದಾಗ ನಾನು ಸಿಕ್ಕಿಬಿದ್ದರೆ ಜೈಲು ಶಿಕ್ಷೆಯಾಗಬಹುದು. ಆದ್ದರಿಂದ ನಾನು ಊರು ಬಿಟ್ಟು ಒಂದೆರಡು ತಿಂಗಳು ಎಲ್ಲಾದರೂ ಹೋಗಿ ಬರಬೇಕೆಂದು ಇದ್ದೇನೆ. ಮಂತ್ರಾಲಯಕ್ಕೆ ಹೋದರೂ ಆದೀತು ಅಂತ ಉಂಟು. ಅಲ್ಲಿ ಸ್ವಲ್ಪ ಸಮಯ ರಾಯರನ್ನು ಕುರಿತು ತಪಸ್ಸು ಮಾಡಿಕೊಂಡಿದ್ದರೆ ನಮ್ಮ ಕಷ್ಟಗಳೂ ಪರಿಹಾರ ಆದಾವು. ನೀನು ಇಲ್ಲೇ ಇರುತ್ತೀಯಾ ಹೇಗೆ?” + +“ನಾನೊಬ್ಬಳೇ ಇಲ್ಲಿ ಹೇಗಿರಲಿ? ಪೋಲೀಸರು ಬಂದರೆ ನಾನು ಹೆಣ್ಣು ಹೆಂಗಸು ಏನು ಉತ್ತರ ಕೊಡುವುದು ಅವರಿಗೆ? ನಾನು ಅಲೆವೂರಿಗೆ ಅಣ್ಣನ ಮನೆಗೆ ಹೋಗುತ್ತೇನೆ” ಎಂದು ಸರಸ್ವತಕ್ಕ ಹೇಳಿದರು. + +ಸುಬ್ರಾಯರು, “ಹಾಗಾದರೆ ನಾನು ನಿನ್ನನ್ನು ಅಲೆವೂರಿನಲ್ಲಿ ಬಿಟ್ಟು ಮಂತ್ರಾಲಯದ ಕಡೆಗೆ ಹೋಗುತ್ತೇನೆ” ಎಂದು ಹೇಳಿದರು. + +“ನೀವು ನಿಮ್ಮ ಗೆಳೆಯ ಶಂಕರರಾಯನ ಹತ್ತಿರ ಗುಟ್ಟಿನಲ್ಲಿ ವಿಷಯ ತಿಳಿಸಿ ಬನ್ನಿ. ಅವನು ನಂಬಿಗಸ್ಥ. ಅವನು ಅಕ್ಕಿಯನ್ನು ಕೊಂಡುಹೋಗಿ ನಾವು ಬರುವವರೆಗೆ ಜಾಗ್ರತೆಯಾಗಿ ಅಡಗಿಸಿಡಲಿ, ಸ್ವಲ್ಪ ಅವನೂ ಉಪಯೋಗಿಸಲಿ” ಎಂದು ಸರಸ್ವತಕ್ಕ ಹೇಳಿದರು. + +ಸುಬ್ರಾಯರು ತಕ್ಷಣ ಊರಿನ ದೇವಸ್ಥಾನದಲ್ಲಿ ಶಾಂತಿಯ ಕೆಲಸ ಮಾಡುತ್ತಿದ್ದ ಶಂಕರ ರಾಯನ ಮನೆಗೆ ಹೋಗಿ ಅವನಿಗೆ ವಿಷಯವನ್ನು ತಿಳಿಸಿದರು. ನಡೆದುದೆಲ್ಲವನ್ನೂ ವಿವರಿಸಿ, “ಶಂಕರಾ, ನಮ್ಮ ಮನೆಯ ಕಣಕೋಡಿಯಲ್ಲಿ ಆ ಅಕ್ಕಿ ಮುಡಿ ಉಂಟು. ನಾವು ಬರುವವರೆಗೆ ಅದು ಉಳಿಯಲಿಕ್ಕಿಲ್ಲ. ಹೆಗ್ಗಣಗಳು ತಿಂದು ಮುಗಿಸಿಯಾವು. ನೀನು ಅದನ್ನು ಇಲ್ಲಿನ ಗಲಾಟೆ ಎಲ್ಲ ತಣ್ಣಗಾದ ಮೇಲೆ ನಿನ್ನ ಮನೆಗೆ ತೆಗೆದುಕೊಂಡು ಹೋಗಿ ಉಪಯೋಗಿಸು. ನಿನಗೆ ಕೂಡಾ ಕಷ್ಟವಲ್ಲವೇ. ನಾಳೆ ಬೆಳಿಗ್ಗೆ ನಾಲ್ಕೈದು ಗಂಟೆಯ ಹೊತ್ತಿಗೆ ನಮ್ಮ ಮನೆಯ ಬಳಿಗೆ ಬರುತ್ತೀಯಾ? ನಿನ್ನ ಕೈಯಲ್ಲಿ ಬೀಗದ ಕೈ ಕೊಟ್ಟು ಹೋಗುತ್ತೇವೆ” ಎಂದರು. + +ಶಂಕರರಾಯ ಕೆಲವು ದಿನಗಳ ನಂತರ ಬಂದು ಅವರು ಇಟ್ಟಿದ್ದ ಅಕ್ಕಿಮುಡಿಯನ್ನು ತನ್ನ ಮನೆಗೆ ಸಾಗಿಸಲು ಒಪ್ಪಿಕೊಂಡ. + +ಮರುದಿನ ಬೆಳಗ್ಗೆ ಸೂರ್ಯೋದಯವಾಗುವ ಮುನ್ನವೇ ಸುಬ್ರಾಯರೂ, ಸರಸ್ವತಕ್ಕನೂ ತಮಗೆ ಬೇಕಾದ ಬಟ್ಟೆ ಬರೆಗಳನ್ನು ಚೀಲಗಳಲ್ಲಿ ತುಂಬಿಸಿಕೊಂಡು, ಮನೆಗೆ ಬೀಗ ಹಾಕಿದರು. ಶಂಕರರಾಯ ಅಷ್ಟು ಹೊತ್ತಿಗಾಗಲೇ ಅವರ ಮನೆಯ ಬಳಿಗೆ ಬಂದಿದ್ದ. ಬೀಗದ ಕೈಯನ್ನು ಅವನ ಕೈಯಲ್ಲಿಟ್ಟು ಗಂಡ ಹೆಂಡತಿ ಉಡುಪಿಯ ಕಡೆಗೆ ನಡೆಯತೊಡಗಿದರು. + +ಸುಬ್ರಾಯರು ಮಡದಿಯನ್ನು ಅವಳ ತವರು ಮನೆಯಲ್ಲಿ ಅಂದರೆ ತಮ್ಮ ಭಾವ ಅಲೆವೂರಿನ ಮುದ್ದು ಭಟ್ಟರ ಮುಳಿಹುಲ್ಲು ಹೊದಿಸಿದ ಬಡ ಮನೆಯಲ್ಲಿ ಬಿಟ್ಟವರು ಅಲ್ಲಿ ಒಂದು ದಿನ ವಿಶ್ರಾಂತಿ ತೆಗೆದುಕೊಂಡರು. + +ಮರುದಿನ ಸೂರ್ಯೋದಯಕ್ಕಿಂತ ಮೊದಲೇ ಸ್ನಾನ ಮುಗಿಸಿ, ಜಪ ಮಾಡಿದ ಸುಬ್ರಾಯರಿಗೆ ಮುದ್ದು ಭಟ್ಟರ ಹೆಂಡತಿ ದೋಸೆ ಮಾಡಿ ಹಾಕಿದರು. ಅಂತಹ ಬಡತನದಲ್ಲೂ ಅವರು ದೋಸೆಗೆ ಅಕ್ಕಿ ಮತ್ತು ಉದ್ದನ್ನು ಹೇಗೆ ಹೊಂದಿಸಿಕೊಂಡರು ಎಂದು ಸುಬ್ರಾಯರಿಗೆ ಆಶ್ಚರ್ಯವಾಯಿತು. ನಂತರ ಸುಬ್ರಾಯರು ಕಾಲ್ನಡಿಗೆಯಲ್ಲೇ ಮಂತ್ರಾಲಯಕ್ಕೆ ಹೊರಟಾಗ ಸರಸ್ವತಕ್ಕನ ಕಣ್ಣುಗಳಿಂದ ಎರಡು ಹನಿ ಕಣ್ಣೀರು ಫಳಕ್ಕನೆ ಜಾರಿದವು. ಮಂತ್ರಾಲಯದ ರಾಯರು ಕಣ್ಣು ತೆರೆದರೆ ತಮ್ಮ ಕಷ್ಟಗಳೆಲ್ಲ ಕರಗಿ ಕಾಲ ಮೇಲೆ ಕಾಲು ಹಾಕಿ ಕುಳಿತು ತಿನ್ನುವ ಕಾಲ ಬಂದೀತು. + +ವೆಂಕಟರಮಣಯ್ಯನವರಿಗೆ ಕಳ್ಳ ಕೈಯ ಅಕ್ಕಿಯನ್ನು ತಮ್ಮ ಊರಿನವರು ದೋಚಿದ ವಿಷಯ ತಿಳಿದು ಆಶ್ಚರ್ಯ ಆಯಿತು. ಆ ತಂಡದಲ್ಲಿ ಅಡಿಗೆಯ ಸುಬ್ರಾಯರೂ ಇದ್ದರೆಂದು ಕೇಳಿ ಅವರಿಗೆ ಪಾಪ ಅಂತ ಕಂಡಿತು. ಅವರಿಗೆ ಅಷ್ಟು ಕಷ್ಟ ಇದೆ ಎನ್ನುವುದು ತನಗೆ ತಿಳಿಯಲಿಲ್ಲವಲ್ಲ ಎಂದು ಮರುಗಿದರು. + +ನಡುಕಣಿಯಲ್ಲಿ ಅಕ್ಕಿ ಲೂಟಿ ಮಾಡಿದ ವಿಷಯದಲ್ಲಿ ಕಟಪಾಡಿಯ ಸಾಹುಕಾರರು ಪೋಲೀಸರಿಗೆ ದೂರು ಕೊಟ್ಟಿರಲಿಲ್ಲ. ಯಾಕೆಂದರೆ ಅವರದೇ ಕಳ್ಳ ವ್ಯವಹಾರ. ಅವರು ಲೂಟಿಯಾದ ಅಕ್ಕಿ ಮುಡಿಗಳನ್ನು ಮರು ಸಂಪಾದಿಸಲು ಒಂದು ಉಪಾಯ ಮಾಡಿದರು. ನಾಟಕದ ಕಂಪೆನಿಯಿಂದ ಪೋಲೀಸ್ ವೇಷ ತರಿಸಿ, ನಾಲ್ಕು ಜನ ಗಟ್ಟಿಮುಟ್ಟಾದ ಆಳುಗಳಿಗೆ ಪೋಲೀಸ್ ವೇಷ ಹಾಕಿಸಿ ನಡುಕಣಿಗೆ ಅಕ್ಕಿ ತಲಾಷ್ ಮಾಡಲು ಕಳಿಸಿಕೊಟ್ಟರು. ಹಾಗೆ ವೇಷ ಧರಿಸಿ ನಡುಕಣಿಗೆ ಬಂದವರಲ್ಲಿ ಇಬ್ಬರು ಗಾಡಿಯ ಆಳುಗಳೇ ಆಗಿದ್ದರು! + +ಆ ಪೋಲೀಸ್ ಆಳುಗಳು ನಡುಕಣಿಗೆ ಬಂದು ಜನರನ್ನು ಬೆದರಿಸಿ ಅಕ್ಕಿಲೂಟಿ ಮಾಡಿದವರ ಹೆಸರುಗಳನ್ನು ಹಾಗೂ ಅವರ ಮನೆಗಳೆಲ್ಲಿವೆಯೆಂದು ಕೇಳುತ್ತಾ ಹುಡುಕಾಡಿದರು. ಅವರಿಗೆ ತಿಮ್ಮಪ್ಪ ಕುಲಾಲ್ ಎಂಬವನ ಮನೆಯ ಹಿಂದಿನ ಹಾಡಿಯಲ್ಲಿ ಒಂದು ಮುಡಿ ಅಕ್ಕಿ ಸಿಕ್ಕಿತು.ತಿಮ್ಮಪ್ಪ ಇತರರಂತೆ ಊರುಬಿಟ್ಟು ಹೋಗಿರಲಿಲ್ಲ. ಅವನ ಮನೆಗೆ ಯಾರಾದರೂ ಬರಬೇಕಾದರೆ ಎದುರಿನ ಬೈಲಿನಲ್ಲಿ ನಡೆದುಕೊಂಡು ಬರಬೇಕು. ಹಾಗೆ ಬರುವವರು ಒಂದು ಫರ್ಲಾಂಗ್ ದೂರದಲ್ಲಿ ಬೈಲು ಇಳಿಯುವಾಗಲೇ ತಿಮ್ಮಪ್ಪನ ಮನೆಗೆ ಕಾಣಿಸುತ್ತಾರೆ. ಹಾಗೆ ಕಾಣಿಸಿದ ಕೂಡಲೇ ಅವನು ಮನೆಯ ಹಿಂದಿನ ಕಾಡಿಗೆ ಓಡಿಹೋಗಿ ಅಡಗಿಕೊಳ್ಳುವುದು ಅಂತ ಅವನ ಯೋಜನೆಯಾಗಿತ್ತು. + +ಯೋಜನೆಯಂತೆ ತಿಮ್ಮಪ್ಪ ‘ಪೋಲೀಸರು’ ಬಂದಾಗ ಓಡಿಹೋಗಿ ಮನೆಯ ಹಿಂದಿನ ಕಾಡಿನಲ್ಲಿ ಅಡಗಿಕೊಂಡ. ಆದರೆ ಪೋಲೀಸರು ಬಂದು ಗದರಿದಾಗ ಮನೆಯ ಹೆಂಗಸರು ಗಡಗಡ ನಡುಗುತ್ತಾ ಬಾಯಿಬಿಟ್ಟರು. ಅವರು ಪಾಪ ಅದುವರೆಗೆ ನಿಜ ಪೋಲೀಸರನ್ನಾಗಲೀ ಸುಳ್ಳು ಪೋಲೀಸರನ್ನಾಗಲಿ ಕಂಡಿರಲಿಲ್ಲ. ಮನೆಯ ಅಜ್ಜಿಯೇ, “ಬಲೆ ಮಗಾ” (ಬನ್ನಿ ಮಕ್ಕಳೆ) ಎಂದು ದಂಟೆ ಊರುತ್ತಾ ‘ಪೋಲೀಸರನ್ನು’ ಕರೆದುಕೊಂಡು ಹೋಗಿ ಮನೆಯ ಹಿಂದೆ ಕಾಡಿನ ಅಂಚಿನಲ್ಲಿ ದೊಡ್ಡ ಬಲ್ಲೆಯೊಂದರಲ್ಲಿ ಅಡಗಿಸಿಟ್ಟಿದ್ದ ಅಕ್ಕಿ ಮುಡಿಯನ್ನು ತೋರಿಸಿಕೊಟ್ಟಿತು. ಆ ಕಳ್ಳ ಪೋಲೀಸಿನವರು ಗೆದ್ದವರಂತೆ ಆ ಒಂದು ಅಕ್ಕಿ ಮುಡಿಯನ್ನು ಎತ್ತಿಕೊಂಡು ಹೋದರು. + +ಮತ್ತೆ ಹೆಚ್ಚು ಹೊತ್ತು ನಿಲ್ಲದೆ, ಬಂದದ್ದಕ್ಕೆ ಒಂದು ಮುಡಿಯಾದರೂ ಸಿಕ್ಕಿತಲ್ಲ ಎಂದು ಆದಷ್ಟು ಬೇಗನೆ ಕಟಪಾಡಿಯ ಕಡೆಗೆ ಗಾಡಿಬಿಟ್ಟರು! + +ಈ ಕತೆಯ ಕೊನೆ ಮಾತ್ರ ದುರಂತವೋ, ಹಾಸ್ಯವೋ ತಿಳಿಯದ ಹಾಗೆ ಇದೆ. + +ನಡುಕಣಿಯ ಪುಂಡಗೋಳಿಯ ಬಳಿ ಕಳ್ಳ ಸಂತೆಯ ಅಕ್ಕಿ ಮುಡಿ ಎಳೆದೊಯ್ದ ವೀರರ ಪೈಕಿ ಒಬ್ಬನಾದ ಕೊಡಪಟ್ಟೆ ಶೇಷಪ್ಪ ಕೂಡಾ ಪೋಲೀಸ್ ದಾಳಿಯಿಂದ ತಪ್ಪಿಸಿಕೊಂಡು ಅಡಗಲೆಂದು, ಸುಬ್ರಾಯರ ಹಾಗೆ, ಬಹಳ ದೂರ ಹೋದ. + +ಅವನು ಮೊದಲು ಪಕ್ಕದ ಊರಾದ ಕುದರಾಡಿಯಲ್ಲಿದ್ದ ತನ್ನ ಭಾವನ ಮನೆಯ ಅಟ್ಟದಲ್ಲಿ ಎರಡು ದಿನ ಕಳೆದ. ಆಗ ಅಲ್ಲಿಗೆ ಒಂದು ಸುದ್ದಿ ಬಂತು – ಪೋಲೀಸರು ನಡುಕಣಿಗೆ ಬಂದು ಮನೆ ಮನೆಗಳಲ್ಲಿ ವಿಚಾರಣೆ ನಡೆಸುತ್ತಿದ್ದಾರೆ ಎಂದು. ಇನ್ನು ಆ ಪೋಲೀಸರು ಓಡಿಹೋದವರ ಸಂಬಂಧಿಕರ ಮನೆಗೆ ಬಾರದೆ ಇರಲಿಕ್ಕಿಲ್ಲ ಎಂದು ಅವನಿಗೆ ಖಚಿತವಾಯಿತು. ಅವನು ಅಲ್ಲಿಂದಲೇ ಘಟ್ಟಕ್ಕೆ ಹೋಗಿ ಅಡಗಿಕೊಳ್ಳುವ ನಿರ್ಧಾರ ಮಾಡಿ ಭಾವನಿಗೆ ಹಾಗೆ ಹೇಳಿದ. + +“ನೀನು ಘಟ್ಟಕ್ಕೆ ಹೋದರೆ ಅಲ್ಲಿ ನಿನ್ನ ತಾಯಿಗೆ ಯಾರು ಮಾರಾಯ?” ಎಂದು ಭಾವ ಕೇಳಿದ. + +“ಅವಳು ಹೇಗಾದರೂ ಸ್ವಲ್ಪ ದಿನ ಸುಧಾರಿಸಿಯಾಳು. ಅವಳಿಗೆ ಕಬ್ಬಿಣದ ಕೆಲಸ ಎಲ್ಲ ಗೊತ್ತಿದೆ. ನಾನು ಇದ್ದರೂ ನಮಗೆ ಸಿಗುವ ಉತ್ಪತ್ತಿ ಅಷ್ಟೇ. ನಾನು ಘಟ್ಟಕ್ಕೆ ಹೋಗಿ ಸ್ವಲ್ಪ ದಿನ ಎಲ್ಲಾದರೂ ಗೌಡರ ತೋಟದಲ್ಲಿ ಕೆಲಸ ಮಾಡಿ ನಾಲ್ಕು ಕಾಸು ಸಂಪಾದನೆ ಮಾಡಿಕೊಂಡು ಬರುತ್ತೇನೆ. ಅಷ್ಟು ಹೊತ್ತಿಗೆ ಊರಿನ ಗಲಾಟೆ ತಣ್ಣಗಾಗುತ್ತದೆ. ಅಮ್ಮನಿಗೆ ನಾನು ಹಾಡಿಯಲ್ಲಿ ಅಕ್ಕಿ ಮುಡಿ ಅಡಗಿಸಿಟ್ಟಿರುವ ಜಾಗ ಗೊತ್ತುಂಟು. ಗಲಾಟೆ ಕಡಿಮೆಯಾದ ಮೇಲೆ ಅವಳು ಅದನ್ನು ತರಿಸಲಿ. ನೀವು ಅವಳಿಗೆ ನಾನು ಘಟ್ಟಕ್ಕೆ ಹೋದ ವಿಷಯ ಹೇಳುವಾಗ ಅದನ್ನೂ ಹೇಳಿ” ಎಂದು ಶೇಷಪ್ಪ ಭಾವನನ್ನು ಒಪ್ಪಿಸಿದ. + +ಮರುದಿನ ಬೆಳಗ್ಗೆ ಶೇಷಪ್ಪ ಕಡಂದಲೆಯ ದಾರಿಯಾಗಿ ಮೂಡುಬಿದರೆಗೆ ಹೋದ. ಅಲ್ಲಿನ ಪೋಲೀಸ್ ಸ್ಟೇಶನಿನ ಎದುರಿನಿಂದಲೇ ಅವನು ಹಾದುಹೋಗಬೇಕಿತ್ತು. ಆಗ ಅವನಿಗೆ ಎದೆ ಡವಡವ ಅನ್ನುತ್ತಿತ್ತು. ತಲೆಗೆ ಮುಂಡಾಸು ಕಟ್ಟಿಕೊಂಡು ಬೇಗಬೇಗನೆ ನಡೆದು ಅಲ್ಲಿಂದ ಪಾರಾಗಿ ವೇಣೂರಿನತ್ತ ನಡೆದ. ಸಂಜೆ ವೇಣೂರು ತಲುಪಿ ಅಲ್ಲಿ ತನ್ನ ತಾಯಿಯ ತಂಗಿಯ ಮನೆಯನ್ನು ಹುಡುಕಿ ಅಲ್ಲಿ ವಿಶ್ರಾಂತಿ ತೆಗೆದುಕೊಂಡ. ಊರಿನ ಲಪಡಾ ಯಾವುದನ್ನೂ ಹೇಳದೆ ತಾನು ಘಟ್ಟಕ್ಕೆ ಕೆಲಸ ಹುಡುಕಿಕೊಂಡು ಹೊರಟದ್ದು ಎಂದು ಅವರ ಬಳಿ ಹೇಳಿದ. ಅವನ ಚಿಕ್ಕಮ್ಮ “ನಮ್ಮ ಭಾವನವರ ಮಗ ಶಿವರಾಮ ಮೂಡಿಗೆರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ನೀನು ಅವನ ಜತೆಗೆಯೇ ಕೆಲಸಕ್ಕೆ ಸೇರು, ನಿಲ್ಲಲು ಮನೆ ಕೂಡಾ ಉಂಟು ಅಲ್ಲಿ” ಎಂದಾಗ ಶೇಷಪ್ಪನಿಗೆ ತನ್ನ ಗುರಿ ಸ್ಪಷ್ಟವಾಯಿತು. “ನಾನು ಮೂಡಿಗೆರೆಯಲ್ಲಿ ಶಿವರಾಮಣ್ಣನ ಜತೆಗೆ ಕೆಲಸಕ್ಕೆ ಸೇರಿದ್ದೇನೆ ಎಂಬ ವಿಷಯವನ್ನು ಯಾವಾಗಾದರೂ ಅಮ್ಮನಿಗೆ ಹೇಳಿಕಳಿಸಿ” ಎಂದು ಚಿಕ್ಕಮ್ಮನಿಗೆ ಹೇಳಿದ. ಮತ್ತೆ ಎರಡು ದಿನದ ಬಳಿಕ ಅವನು ಮೂಡಿಗೆರೆಯ ಶಿವರಾಮನ ಆಶ್ರಯಕ್ಕೆ ಹೋಗಿಬಿದ್ದ. ಅವನು ಮತ್ತೆ ಊರಿಗೆ ಬಂದದ್ದು ಎರಡು ವರ್ಷಗಳ ನಂತರ – ಎರಡನೆಯ ಮಹಾಯುದ್ಧ ಮುಗಿದ ಮೇಲೆಯೇ! + + + +ಮತ್ತೂ ಎರಡು ವರ್ಷ ಕಳೆದಿದ್ದರೆ ಭಾರತಕ್ಕೆ ಸ್ವಾತಂತ್ರ್ಯವೇ ಸಿಕ್ಕಿಬಿಡುತ್ತಿತ್ತು! ಕೊಡಪಟ್ಟೆ ಶೇಷಪ್ಪ ಬುದ್ಧಿವಂತನಾಗಿದ್ದರೆ ‘ಸ್ವಾತಂತ್ರ್ಯ ಯೋಧ’ ಎಂದು ಸರ್ಟಿಫಿಕೇಟ್ ಮಾಡಿಸಿಕೊಂಡು ಜೀವನಪೂರ್ತಿ ಆರಾಮವಾಗಿ ಕಾಲ ಕಳೆಯಬಹುದಿತ್ತು. ಆಗ ‘ಪುಂಡಗೋಳಿಯ ಕ್ರಾಂತಿ’ಯೂ ನಮ್ಮ ಮಕ್ಕಳ ಪಾಠಪುಸ್ತಕಗಳಲ್ಲಿ ಸೇರಿಕೊಳ್ಳುತ್ತಿತ್ತು! + +****** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_272.txt b/Kenda Sampige/article_272.txt new file mode 100644 index 0000000000000000000000000000000000000000..bb87a7122ecfa163e1bf7ebc84e83d1a6d411a36 --- /dev/null +++ b/Kenda Sampige/article_272.txt @@ -0,0 +1,35 @@ + + +ಕನ್ನಡ ಸಾಹಿತ್ಯದಲ್ಲಿ ಪ್ರೇಮದ ವಿಷಯದ ನಂತರ ವೇಶ್ಯಾವೃತ್ತಿಗೆ ಸಂಬಂಧಿಸಿದಂತೆ ಬಂದಷ್ಟು ಕಥೆ ಕಾದಂಬರಿಗಳು ಇನ್ಯಾವ ವಿಷಯದಲ್ಲೂ ಬಂದಿರಲಿಕ್ಕಿಲ್ಲವೇನೋ. ಪ್ರೀತಿ ಪ್ರೇಮ ವಿರಹದ ಹಳಹಳಿಕೆಯ ನಂತರದ ಸ್ಥಾನ ಈ ವೇಶ್ಯೆಯರಿಗೆ ಸಂಬಂಧಿಸಿದ ವಿಷಯವೇ ಆಗಿರಬಹುದು. ಪ್ರತಿ ಲೇಖಕನಿಗೂ ಈ ವಿಷಯದ ಮೇಲೆ ಬರೆಯಬೇಕೆನ್ನುವ ಒಳತುಡಿತವೊಂದು ಇರುವುದನ್ನು ನಾನು ಗಮನಿಸಿದ್ದೇನೆ. ಗಿರಿಜಾ ಕಲ್ಯಾಣದಲ್ಲಿಯೂ ಹರಿಹರ ಬ್ರಹ್ಮಚಾರಿ ನಾರದನನ್ನು ವೇಶ್ಯಾಗೃಹಗಳಲ್ಲಿ ಓಡಾಡಿಸಿ ಅವನ ಬಾಯಿಂದಲೇ ವಾರಾಂಗನೆಯರ ವೈಭವವನ್ನು ವರ್ಣನೆ ಮಾಡಿಸಿರುವ ಅಧ್ಯಾಯವೊಂದಿದೆ. ಚಂಪೂ ಕಾವ್ಯಗಳಲ್ಲಿ ಹದಿನೆಂಟು ವರ್ಣನೆಗಳು ಬರಲೇಬೇಕು ಎಂಬ ನಿಯಮಕ್ಕೆ ಒಳಗಾಗಿ ಈ ವರ್ಣನೆಯಿದೆ ಎಂಬ ಮಾತುಗಳಿದ್ದರೂ ಚಂಪೂ ಕಾವ್ಯದಲ್ಲಿ ಹದಿನೆಂಟು ವರ್ಣನೆಗಳಲ್ಲಿ ಕಾಮಕನ್ನಿಕೆಯರ ವರ್ಣನೆ ಇರಲೇಬೇಕೆಂದು ಸೇರಿಸಿದ ಕುರಿತಾಗಿಯೇ ನನ್ನ ಅಸಮ್ಮತಿಯಿದೆ. ಅಂದರೆ ಚಂಪೂ ಕಾವ್ಯ ಬರೆದವರೆಲ್ಲರೂ ವೇಶ್ಯೆಯರ ಬಗ್ಗೆ ಮಾತಾಡಲೇಬೇಕು. ಯಾಕೆಂದರೆ ತಮ್ಮ ಕಾವ್ಯವನ್ನು ಚಪ್ಪರಿಸುವಂತೆ ಮಾಡಲು ಹೆಣ್ಣಿನ ಅಂಗಾಂಗಗಳ ವರ್ಣನೆ ಕಡ್ಡಾಯ ಎಂಬುದೊಂದು ನಿಯಮವಾಗಿಯೇ ರೂಪುಗೊಂಡಿದೆ ಎನ್ನಬಹುದೇನೋ. + +ಇಷ್ಟಾಗಿಯೂ ಈ ಸೂಳೆಗಾರಿಕೆಯ ಕುರಿತಾಗಿ ಅಷ್ಟೊಂದು ಆಸಕ್ತಿ ನಮ್ಮೊಳಗೆ ಹೇಗೆ ಮೂಡುತ್ತದೆ? ಸಹಜವಾದ ಕಾಮವನ್ನು ವೈಭವಿಕರಿಸುತ್ತ ಸಾಗುವ ಪ್ರಕ್ರಿಯೆಯೊಂದರ ಮುಂದುವರಿದ ಭಾಗ ಇದು. ಅಷ್ಟಕ್ಕೂ ಈ ಕಾಮವನ್ನು ನೈಸರ್ಗಿಕ ಎಂದು ನೋಡದೇ ಅದನ್ನು ಹೆಚ್ಚುಗಾರಿಕೆ ಎಂದು ನೋಡುವುದಾದರೂ ಏಕೆ ಎಂಬ ಪ್ರಶ್ನೆಗೆ ಉತ್ತರವನ್ನು ಹುಡುಕುತ್ತ ಹೋದರೆ ಮತ್ತೆ ಬಂದು ನಿಲ್ಲುವುದು ಗಂಡಸಿನ ದೌರ್ಬಲ್ಯದತ್ತಲೇ. ತನಗೆ ಬೇಕಾದ ಅತಿಕಾಮಕ್ಕಾಗಿ ಹೆಣ್ಣಿಗೆ ಗಂಡಿಗಿಂತ ಏಳುಪಟ್ಟು ಹೆಚ್ಚಿನ ಕಾಮವನ್ನು ಆರೋಪಿಸಿ ಅವಳನ್ನು ಸಂತೃಪ್ತಿಪಡಿಸುವ ಜವಾಬ್ದಾರಿ ಹೊತ್ತಂತೆ ವರ್ತಿಸುವ ಗಂಡಸರಿಗೆ, ಹೆಚ್ಚಿನ ಕಾಮದಿಂದಷ್ಟೇ ತಮ್ಮ ಪೌರುಷವನ್ನು ಸಾಬೀತುಪಡಿಸಬಹುದು ಎಂಬ ಮೂಢನಂಬಿಕೆಯಲ್ಲಿ ಮುಳುಗಿ ಹೋದವರಿಗೆ ವೇಶ್ಯಾವಾಟಿಕೆ ಎಂಬುದು ಆಟದ ಮೈದಾನವಷ್ಟೇ. ಈ ಕಾರಣಕ್ಕಾಗಿಯೇ ಹಲವಾರು ಹೆಸರುಗಳಿಂದ ಹಲವಾರು ವಿಧದಲ್ಲಿ ಹೆಣ್ಣನ್ನು ಬಳಸಿಕೊಳ್ಳುತ್ತಲೇ ಇರುವುದು ಲಾಗಾಯತ್ತಿನಿಂದಲೂ ಬಂದ ರೂಢಿಯೇ ಆಗಿದೆ. + +(ಸೋಮು ರೆಡ್ಡಿ) + +ಹೆಣ್ಣನ್ನು ಅನುಭವಿಸಲು ಇರುವ ಮೊದಲ ಹೆಸರು ಪ್ರೇಮವಾದರೆ ಕೊನೆಯ ಅಸ್ತ್ರ ಬಲಾತ್ಕಾರ. ಇದರ ನಡುವೆ ಆಕೆಯನ್ನು ವಿವಿಧ ಹಂತಗಳಲ್ಲಿ ದಂಡಿಸಿ ದೂಷಿಸಲಾಗುತ್ತದೆ. ವಿನಾ ಕಾರಣ ಜಾರಿಣಿಯ ಪಟ್ಟ ಹೊರೆಸಲಾಗುತ್ತದೆ. ನಂತರ ತಮಗೆ ಬೇಕಾದಂತೆ ಆಕೆಯ ಮನಸ್ಥಿತಿಯನ್ನು ತಿದ್ದಲಾಗುತ್ತದೆ. ಇಲ್ಲಿ ಕಂದೀಲು ಕಾದಂಬರಿಯ ಕಥಾ ಹೂರಣವೂ ಇದೇ ಆಗಿದೆ. + +ಯುವ ಕಾದಂಬರಿಕಾರ ಸೋಮು ತಮ್ಮ ಹೊಸ ಕಾದಂಬರಿಯಲ್ಲಿ ಹೀಗೆ ಅಸಹಾಯಕಳಾಗಿ ನೀತಿಗೆಟ್ಟವಳೆಂದು ಆಪಾದನೆ ಹೊತ್ತು, ಯಾರಿಂದಲೂ ಸಹಾಯ ಸಿಗದೇ ಹಸಿವೆಯಿಂದ ನರಳಿ, ಹೊಟ್ಟೆ ಪಾಡಿಗಾಗಿ ಊರಿನ ಸದ್ಗೃಹಸ್ತನ ಕುತಂತ್ರಕ್ಕೆ ಬಲಿಯಾಗಿ ನಂತರ ಮುಂಬೈನ ಕೆಂಪು ದೀಪದಲ್ಲಿ ನರಳಿ, ಹುಬ್ಬಳ್ಳಿಯಲ್ಲೂ ವೃತ್ತಿ ನಡೆಸಿದ ಹೆಣ್ಣೊಬ್ಬಳ ಕಥೆಯನ್ನು ಹೇಳುತ್ತಲೇ ವೇಶ್ಯಾವೃತ್ತಿಯ ಆಳ ಅಗಲಗಳನ್ನೂ ನಮ್ಮೆದುರು ಬೆತ್ತಲೆ ನಿಲ್ಲಿಸುತ್ತಾರೆ. ಈಗಾಗಲೇ ಕನ್ನಡದ ಬಹಳಷ್ಟು ಯುವ ಕಥೆಗಾರರು, ಕಾದಂಬರಿಕಾರರು ಈ ವಿಷಯವನ್ನು ಚರ್ವಿತಚರ್ವಣವನ್ನಾಗಿಸಿದರೂ ಮತ್ತೆ ಮತ್ತೆ ಆ ವಿಷಯ ಒಂದಿಲ್ಲೊಂದು ರೂಪದಲ್ಲಿ ನಮ್ಮೆದುರು ಕಾಣಿಸಿಕೊಳ್ಳುತ್ತದೆ. + +ಒಂದು ವಿಷಯ ಈಗಾಗಲೇ ಸಾಕಷ್ಟು ಸಲ ಚರ್ಚೆ ಆಗಿದೆ ಎಂಬುದು ಅರಿವಾದ ನಂತರವೂ ಅದೇ ವಿಷಯದ ಮೇಲೆ ಮತ್ತೊಂದು ಕಾದಂಬರಿಯನ್ನು ಬರೆದು ಗೆಲ್ಲಬಲ್ಲೆ ಎಂದು ಯೋಚಿಸುವುದಿದೆಯಲ್ಲ ಅದೇ ಬರಹಗಾರನಿಗಿರಬೇಕಾದ ಮೂಲಗುಣ ಎಂದು ನನಗನ್ನಿಸುತ್ತದೆ. ಹಾಗೆ ನೋಡಿದರೆ ಯಾವ ಹೆಣ್ಣೂ ಸ್ವತಃ ವೇಶ್ಯೆಯಾಗಲು ಬಯಸುವುದಿಲ್ಲ. ಪರಪುರುಷನ ಸಂಗ ಮಾಡಬೇಕಾದರೆ ಆಕೆಗಿರಬೇಕಾದ ಮಜಬೂರಿ ಅಥವಾ ಒತ್ತಡಗಳು ಹಲವಿರಬಹುದು. ಆ ವ್ಯಕ್ತಿಯ ಮೇಲೆ ಅಪಾರವಾದ ಪ್ರೀತಿ ಗೌರವಗಳಿರಬೇಕು ಅಥವಾ ಇನ್ನೇನು ಬದುಕಲು ಬೇರೆ ದಾರಿಯೇ ಇಲ್ಲದಂತಹ ಸಂದರ್ಭ ಎದುರಾಗಬೇಕು. + +ಈ ಕಾದಂಬರಿಯ ಕುಸುಮಿಯ ಸ್ಥಿತಿಯೂ ಅದೇ. ಕಟ್ಟಿಕೊಂಡ ಗಂಡ ರಂಗಪ್ಪ ಊರ ಗಣ್ಯ ದೇಸಾಯಿಯವರ ಮನೆಯಲ್ಲಿ ಕಂದೀಲು ಕೆಲಸ ಮಾಡುವವನು. ದೇಸಾಯಿಯವರ ವಾಡೆಯ ಸುತ್ತಲೂ ಕಂದೀಲನ್ನು ಬೆಳಗಿಸಿ ಮನೆ ಸುತ್ತ ಗಸ್ತು ತಿರುಗುತ್ತ ರಾತ್ರಿಯಿಡೀ ವಾಡೆಯನ್ನು ಕಾಯುವ ಕಾಯಕ ಅವನದ್ದು. ಹೀಗಾಗಿ ಚೆಂದುಳ್ಳಿ ಚಲುವೆ ಹೆಂಡತಿಯಿದ್ದರೂ ರಾತ್ರಿ ಮನೆಯಲ್ಲಿ ಮಲಗುವ ಅದೃಷ್ಟ ಅವನಿಗಿಲ್ಲ. ದೇಸಾಯಿ ಮನೆಯವರ ಸಂಕಟ ಕಳೆಯಲು ನಟ್ಟನಡುರಾತ್ರಿ ಸುಡುಗಾಡಿಗೆ ಮಂತ್ರಿಸಿದ್ದನ್ನು ಹುಗಿದಿಡಲು ಹೋದವನು ಅಲ್ಲೇ ಹೆಣವಾಗುತ್ತಾನೆ. ಆಗ ಪ್ರಾರಂಭವಾಗುತ್ತದೆ ಅವನ ಹೆಂಡತಿ ಕುಸುಮಿಯ ಬಾಳಿನ ಹೊಯ್ದಾಟ. + + + +ಕುಲವೃತ್ತಿ ಮುಂದುವರೆಸಲು ಮಕ್ಕಳಿಲ್ಲ. ಗಂಡ ಸತ್ತಾಗ ಅನುಕಂಪ ತೋರಿ ಆಹಾರ ನೀಡಿದವರು ಎಷ್ಟು ದಿನವೆಂದು ಹಾಗೆ ಮಾಡಿಯಾರು? ಅದೆಲ್ಲಕ್ಕಿಂತ ಹೆಚ್ಚಾಗಿ ಯೌವ್ವನದಲ್ಲಿರುವ ಸುಂದರ ಹೆಣ್ಣು ಒಂಟಿಯಾಗಿದ್ದರೆ ಆಕೆ ಅದೆಷ್ಟು ಸಂಯಮ ತೋರಿದರೂ ಸೆರಗು ಜಾರಿಸಿದ ಅಪವಾದ ತಪ್ಪುವುದಿಲ್ಲ. ಮಗನನ್ನು ಪಡೆದು ಕುಲವೃತ್ತಿಯನ್ನು ಮುಂದುವರೆಸುವ ಆಸೆ, ಹೊಟ್ಟೆಗಿಲ್ಲದ ಸಂಕಟ ಎಲ್ಲವೂ ಸೇರಿ ಅನಿವಾರ್ಯವಾಗಿ ಮನೆಯ ಮುಂದೆ ಕಂದೀಲು ಹೊತ್ತಿಸಿ ದಂದೆಗಿಳಿದ ಕುಸುಮಿಯ ಬಾಳಿನ ಕಥೆ ಇಲ್ಲಿದೆ. + +ಕಥಾವಸ್ತುವೇನೋ ತೀರಾ ಸರಳ ಎಂದೆನಿಸಿದರೂ ಅದನ್ನು ನಿರೂಪಿಸುವ ಭಿನ್ನತೆಯಲ್ಲಿಯೇ ಕಥೆಗಾರ ಸೋಮುರೆಡ್ಡಿ ಗೆಲ್ಲುತ್ತಾರೆ. ಉತ್ತರ ಕರ್ನಾಟಕದ ಜವಾರಿ ಭಾಷೆ ಅದರ ಗಟ್ಟಿತನವನ್ನು ಕಾದಂಬರಿಗೂ ನೀಡಿದೆ. ಹೀಗಾಗಿ ಭಾಷೆಯ ಆಯ್ಕೆಯಲ್ಲಿ ಸೋಮು ಗೆಲ್ಲುತ್ತಾರೆ ಎನ್ನುವುದಕ್ಕಿಂತ ಅದು ಅವರ ಆಡುಭಾಷೆಯೇ ಆಗಿರುವುದರಿಂದ ತೀರಾ ನಿರ್ಭಿಡೆಯಿಂದ, ಎಲ್ಲಿಯೂ ಭಾಷೆ ಮುಕ್ಕಾಗದಂತೆ ಧ್ವನಿಪೂರ್ಣವಾಗಿ ಮೂಡಿಬಂದಿದೆ. ಈ ಭಾಷೆಗೆ ಇರುವ ಸತ್ವವೇ ಅಂತಹದ್ದು. ಒಬ್ಬ ಕರಾವಳಿ ಪ್ರದೇಶದ ಲೇಖಕ ಈ ವಿಷಯವನ್ನಿಟ್ಟುಕೊಂಡು ತಮ್ಮ ಭಾಷೆಯಲ್ಲಿ ಈ ಕಥೆಯನ್ನು ನಿರೂಪಿಸಲು ಹೊರಟಿದ್ದರೆ ಖಂಡಿತಾ ಸೋತುಹೋಗಬಹುದಾಗಿದ್ದ ವಿಷಯ ಇಲ್ಲಿ ಅವರ ಭಾಷೆಯಿಂದಾಗಿಯೇ ಗೆಲ್ಲುತ್ತದೆ ಎಂದರೆ ಅದು ಅತಿಶಯೋಕ್ತಿ ಏನಲ್ಲ. + +ಕಾದಂಬರಿ ಎಂದರೆ ಎಷ್ಟೋ ಸಲ ಏಕತಾನತೆ ಹೊಮ್ಮುತ್ತದೆ. ಅದು ಸಹಜವೇ, ಆದರೆ ಇಲ್ಲಿ ಕಥೆಯನ್ನು ಹೇಳಲು ಹೊರಟಿರುವ ಮಾರ್ಗ ಭಿನ್ನವಾಗಿದೆ. ಒಂದಿಷ್ಟು ಕಥೆಯನ್ನು ಪ್ರಸ್ತುತ ಪಡಿಸಿ ನಂತರ ಅವಲೋಕನ ಕ್ರಮದಿಂದ ಹಿಂದಿನದ್ದನ್ನೆಲ್ಲ ನೆನಪಿಸಿಕೊಳ್ಳುತ್ತ, ನಂತರ ಹಠಾತ್ತನೆ ವರ್ತಮಾನದೊಂದಿಗೆ ಬೆಸೆದುಕೊಂಡು ಕಥೆ ಸಾಗುವ ಈ ಪರಿಕ್ರಮವೇ ಕಾದಂಬರಿಯನ್ನು ಎಲ್ಲೂ ಬಣ್ಣ ಕಳೆದುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಪ್ರತಿ ಘಟನೆಯ ನಿರೂಪಣೆಯ ಅಂತ್ಯದೊಂದಿಗೆ ಹೊಸದೊಂದು ಎಳೆಯನ್ನು ಎತ್ತಿಕೊಳ್ಳುವ ಚಾಕಚಕ್ಯತೆಯಲ್ಲಿ ಒಬ್ಬ ನುರಿತ ನಾಟಕಕಾರನ ನಟನೆಯ ಕಲೆಯಿದೆ. ಒಂದೊಂದು ಘಟನೆಯೂ ಹೊಸತೇ ಆದ ಒಂದು ಗುಟ್ಟನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆಯೇನೋ ಎಂದು ಭಾಸವಾಗುತ್ತ, ಆ ಗುಟ್ಟೇನಿರಬಹುದು ಎಂದು ಮುಂದಿನ ಓದಿಗೆ ಓದುಗ ತಕ್ಷಣ ಸಿದ್ಧವಾಗಿ ನಿಲ್ಲುವಂತೆ ಮಾಡುತ್ತದೆ. ಪ್ರತಿಯೊಂದು ವಿವರಣೆಯೂ ಮುಂದಿನ ಕಥೆಗಾಗಿ ತುದಿಗಾಲಲ್ಲಿ ನಿಂತು ಓದುಗನನ್ನು ಹಿಡಿದಿಟ್ಟುಕೊಳ್ಳುವಂತೆ ಮಾಡಲು ಯಶಸ್ವಿಯಾಗಿದೆ. + +ಎಲ್ಲಕ್ಕಿಂತಲೂ ಅಚ್ಚರಿಯೆಂದರೆ ಕಥೆಯೊಳಗಿನ ತಿರುವುಗಳು ಅನಿರೀಕ್ಷಿತವಾಗಿ ಎದ್ದು ನಿಂತು ನಾವು ಒಂದಿಷ್ಟೂ ಊಹಿಸದ ರೀತಿಯಲ್ಲಿಯೇ ವರ್ತಿಸಲಾರಂಭಿಸಿ ಒಂದು ಕ್ಷಣ ಕಕ್ಕಾಬಿಕ್ಕಿಗೊಳಿಸುತ್ತದೆ. ಉದಾಹರಣೆಗೆ ಕುಸುಮಿಗೆ ತನ್ನ ಮಾವ ಅನಂತ ದೇಸಾಯಿ ಕೊಡುವುದಾಗಿ ಹೇಳಿದ್ದ ಹಳ್ಳದಂಚಿನ ಆಸ್ತಿಯನ್ನು ಕೊಡಿಸಲು ಬದ್ಧನಾಗಿದ್ದ ಶ್ರೀಪಾದ ಏಕಾಏಕಿ ಮನಸ್ಸು ಬದಲಾಯಿಸಿ ಆ ಕೆಲಸ ತನ್ನಿಂದಾಗದು ಎಂದು ಕೈಚೆಲ್ಲಿ ಬಿಡುತ್ತಾನೆ. ‘ಥೂ ಈ ಗಂಡಸರೇ ಇಷ್ಟು. ಬೇಕಾದಾಗ ಮೈಯ್ಯ ಸುಖ ಉಣ್ಣಲು ಬೇಕಾದಷ್ಟು ಆಶ್ವಾಸನೆ ನೀಡುತ್ತಾರೆ. ಆದರೆ ಅದ್ಯಾವಾಗ ಮನಸ್ಸು ಬದಲಾಯಿಸಿ ಕೈಕೊಡುತ್ತಾರೋ ಹೇಳಲಾಗದು’ ಎಂದು ಓದುಗ ಶಪಿಸಿಕೊಳ್ಳುತ್ತಿರುವಾಗಲೇ ತನ್ನ ಪಾಲಿಗೆ ಬರಬೇಕಾಗಿದ್ದ ಗದ್ದೆ ಬರಲಾರದು ಎಂದುಕೊಂಡ ಕುಸುಮಿ ಎಚ್ಚರ ತಪ್ಪಿ ಬಿದ್ದಾಗ ಹಗಲಲ್ಲಿ ಮುಟ್ಟಿಸಿಕೊಳ್ಳಬಾರದ ಜಾತಿಯಲ್ಲಿ ಹುಟ್ಟಿದ ಅವಳಿಗೆ ಯಾರನ್ನೂ ಲೆಕ್ಕಿಸದೇ ನೀರು ಕುಡಿಸಿ, ತಲೆಗೆ ನೀರು ತಟ್ಟಿ ಎಚ್ಚರಗೊಳಿಸುತ್ತಾನೆ. + +ಕುಸುಮಿಯಂತಹ ಹೆಣ್ಣುಗಳ ಸ್ಥಿತಿಯೇ ಇಷ್ಟು. ರಾತ್ರಿಯೆಲ್ಲ ರಮಿಸಿ ಮುದ್ದಾಡಿದ ಗಂಡು ಹಗಲಲ್ಲಿ ಮುಟ್ಟಿಸಿಕೊಳ್ಳುವುದಿಲ್ಲ. ಮನೆಯೊಳಗೆ ಸೇರಿಸುವುದಿಲ್ಲ. ರಾತ್ರಿ ದೇಹದ ಕಣಕಣವನ್ನೂ ಆಸ್ವಾದಿಸಿದಾತನಿಗೆ ಹಗಲಲ್ಲಿ ಅವಳು ಹನಿ ನೀರಿಗಾಗಿ ಗೋಗರೆಯುತ್ತ ಸಾಯುತ್ತ ಬಿದ್ದರೂ ಕನಿಕರವಾಗುವುದಿಲ್ಲ. ಇಷ್ಟಕ್ಕೂ ಇಲ್ಲಿ ಇಂತಹ ಸೂಳೆಗಾರಿಕೆಗೆ ಇಳಿಯುವವರು ಸಾಮಾಜಿಕವಾಗಿ ಕೆಳವರ್ಗದವರು ಎಂದು ನಾವೇನು ಬಹಿಷ್ಕರಿಸಿದ್ದೇವೋ ಅವರೇ. ಯಾವ ಉನ್ನತ ಕುಲದ ಸ್ತ್ರೀಯರೂ ವೇಶ್ಯೆಯರಾಗುವುದಿಲ್ಲ ಎಂಬುದನ್ನು ನಾವು ಗಮನಿಸಬೇಕಿದೆ. ಅಂದಹಾಗೆ ವೇಶ್ಯೆ ಎನ್ನುವ ಬದಲು ದೇವದಾಸಿ ಎನ್ನುವ ಹೆಸರಿಟ್ಟು ಮುತ್ತನ್ನು ಕಟ್ಟಿಸಿಕೊಳ್ಳುವ ಸ್ತ್ರೀಯರದ್ದೂ ಬೇರೇನಿಲ್ಲ. ದೇವರ ಹೆಸರಿನಲ್ಲಿ ಬಯಸಿ ಬಂದ ವಟುಗಳಿಗೆ ದೇಹವನ್ನೊಪ್ಪಿಸಬೇಕು. ಇಂತಹ ಅವಮಾನಗಳು ಕೇವಲ ಕೆಳ ವರ್ಗದ ಮಹಿಳೆಯರಿಗೆ ಮಾತ್ರ ಆಗುವಂತಹುದ್ದು ಎಂಬುದನ್ನು ಗಮನಿಸಬೇಕು. + +ಅನಂತ ದೇಸಾಯಿಯವರು ತನ್ನ ಗಂಡನ ಸಾವಿಗಾಗಿ ಕೊಡುತ್ತೇನೆ ಎಂದಿದ್ದ ಹೊಲವನ್ನು ತೆಗೆದುಕೊಂಡು ಬೆಳೆ ತೆಗೆದು ಚಂದದ ಬಾಳುವೆ ಮಾಡಬೇಕು, ತನ್ನ ಕುಲ ಕಸುಬಾದ ಕಂದೀಲು ಹಿಡಿಯುವ ಕಾಯಕವನ್ನು ಮುಂದುವರೆಸಿ ಒಂದು ಗೌರವಯುತವಾದ ಬಾಳನ್ನು ಕಟ್ಟಿಕೊಳ್ಳಬೇಕು, ಮಗನನ್ನು ಓದಿಸಿ ದೊಡ್ಡವನ್ನಾಗಿ ಮಾಡಬೇಕು ಎಂದೆಲ್ಲ ಕನಸು ಕಟ್ಟಿಕೊಂಡು ಹೋರಾಟದ ಬಾಳೇವು ಮಾಡುತ್ತಲೇ ಬಂದ ಕುಸುಮಿಯನ್ನು ಕಾದಂಬರಿಕಾರ ಕೊನೆಯಲ್ಲಿ ಸಾಯಿಸುವುದರ ಬದಲಾಗಿ ಅವಳ ಹೋರಾಟಕ್ಕೊಂದು ಜಯ ದೊರಕಿಸಿಕೊಟ್ಟಿದ್ದರೆ ಅತ್ಯಂತ ತಾರ್ಕಿಕ ಅಂತ್ಯವಾಗುತ್ತಿತ್ತು ಎಂದು ಓದಿದಾಗಲೆಲ್ಲ ಅನ್ನಿಸಿದ್ದಿದೆ. + + + +ಸೋಮುವಿನಂತಹ ದೃಢ ಮನಸ್ಸಿನ ಯುವಕರು ತಮ್ಮ ಕಥೆ, ಕಾದಂಬರಿಗಳಲ್ಲಾದರೂ ಇಂತಹ ಅಸಹಾಯಕ, ಅಸ್ಪೃಶ್ಯ ಹೆಣ್ಣುಗಳ ಬದುಕಿನ ಹೋರಾಟಕ್ಕೆ ಜಯ ದೊರಕಿಸಿ ಕೊಟ್ಟರೆ ಇದೇ ದಾರಿಯಲ್ಲಿ ನರಳುತ್ತಿರುವ ಅದೆಷ್ಟೋ ಅಸಹಾಯಕ ಮಹಿಳೆಯರಿಗೆ ನೈತಿಕ ಬೆಂಬಲ ದೊರಕಿಸಿ, ಹೊಸದೊಂದು ಬದುಕುವ ಛಲವನ್ನು ಮೂಡಿಸಿ, ಅವರ ಬಾಳಿನಲ್ಲೂ ಕಂದೀಲು ಬೆಳಗುವ ಸಾಧ್ಯತೆಗಳುಂಟು ಎನ್ನುವ ನಂಬಿಕೆ ಹುಟ್ಟಿಸಿ ಬದುಕುವ ಭರವಸೆ ಕೊಡುವ ಮನಸ್ಸು ಮಾಡಿದ್ದರೆ ಅದೊಂದು ಉತ್ತಮ ಅಂತ್ಯವಾಗುತ್ತಿತ್ತು. ಒಂದಿನಿತೂ ಭಾವನೆಗಳು ಬೆನ್ನಿಗೆ ಅಂಟಬಾರದ ವೃತ್ತಿಯಲ್ಲಿದ್ದರೂ ಅತ್ಯಂತ ಸೂಕ್ಷ್ಮ ಸಂವೇದನೆಯ ಕಾದಂಬರಿ, ನಾಟಕಗಳನ್ನು ಬರೆಯುತ್ತಿರುವ ಸೋಮುವಿನಿಂದ ಇನ್ನೂ ಹೆಚ್ಚಿನ ನಿರೀಕ್ಷೆಯಿದೆ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_273.txt b/Kenda Sampige/article_273.txt new file mode 100644 index 0000000000000000000000000000000000000000..735416afd91ff3730b30aecfe5c486877fcbe7d8 --- /dev/null +++ b/Kenda Sampige/article_273.txt @@ -0,0 +1,123 @@ + + +“ನಿಮಪ್ಪನ ಪೋಲೀಸರು ಹಿಡಕೊಂಡೋಗ್ಯಾರಪೋ, ಆವಾಗ್ಲಿಂದ ಫೋನು ಹಚ್ಯಾಕತ್ತೀನಿ, ಈಗ ಹತ್ತೀತಿ” ಅಂತ ಅವ್ವ ಹೇಳುತ್ತಿದ್ದರೆ ನನಗೆ ತಲೆಯ ಮೇಲೆ ಗುಡ್ಡ ಬಿದ್ದ ಹಾಗಾಯ್ತು. ಆಕಿ ನನ್ನ ಕೂಡೇ ಮಾತಾಡೋದೆ ಕಡಿಮೆ. ಹಡದವ್ವ ಸತ್ತ ನಾಕು ವರ್ಸಕ್ಕೆ ಅಪ್ಪನ್ನ ಕೈಹಿಡ್ದು ನಮ್ಮ ಮನೀಗೆ ಬಂದಾಕಿ. ನಾನಾದರೂ, ತಂಗಿಯಾದರೂ ಅವ್ವನೆಂದೇ ಕರೆಯುತ್ತಿದ್ದೆವಾದರೂ ನನಗೆ ಕಳ್ಳು ಕಡಿಮೆ. + +ಪೋಲೀಸರು ಯಾಕ ಕರ್ಕೊಂಡು ಹೋದರು ಅಂತ ಕೇಳಲೋಗಲಿಲ್ಲ. ಬೇರೆ ಕಾರಣವಾದರೂ ಏನಿದೆ ಅನಿಸಿ ಮನೆಯೊಳೊಕ್ಕು ಪ್ಯಾಂಟಂಗಿ ಹಾಕೊಂಡು ಹೆಂಡ್ತಿಗೊಂದು ಸುಳ್ಳು ಹೇಳಿ, ಬೈಕಿನ ಪಕ್ಕೆಗೊದ್ದು ಊರದಾರಿ ಹಿಡಿದೆ. ಒಂದು ತಾಸಿನ ಹಾದಿ, ಮೊದಲು ಮನೆಗೆ ಹೋಗಿ ವಿಚಾರಿಸಿ ಸ್ಥಳೀಯ ಗೆಳೆಯರನ್ಯಾರದರೂ ಕರೆದುಕೊಂಡು ಹೋದರಾಯಿತೆಂದು ಮನಸು ಲೆಕ್ಕ ಹಾಕುತ್ತಿತ್ತು. + +ಜೇಬು ಮುಟ್ಟಿಕೊಂಡರೆ ಎರಡು ಮೂರು ಸಾವಿರ ರೂಪಾಯಿ ಇರಬೇಕು ಎನಿಸಿತು. + +ಪೋಲೀಸರು ಸಣ್ಣದಕ್ಕೆ ಕೇಳುವವರಲ್ಲ. ಆಗಲೇ ಕೇಸು ಮಾಡಿದ್ದಾರೆಯೋ ಹೇಗೊ… ಕೇಸಾಗಿದ್ದರೆ ಮತ್ತೂ ಪಜೀತಿ ಎನಿಸಿತು. ಊರು ಸಮೀಪವಾದರೆ ಸಾಕು. ಹೃದಯ ಬೇಕೂ ಅಂತಲೇ ಹೆಚ್ಚು ಹೊಡೆದುಕೊಳ್ಳುತ್ತದೆ.ಕಳ್ಳಿಸಾಲುಗಳು ಕಾಣಿಸಿದರೆ ಸಾಕು, ಊರು ಬಂದಂತೆ. + +ಕಳ್ಳಿ ಮರಗಳೊಂದಿಗೆ ಬೆರೆತು ಹೋಗಿರುವ ಇಂಗಳದ ಮರಗಳೂ ಕೂಡ ಬರುವವರನ್ನ ಸ್ವಾಗತಿಸಲೇ ಎಂಬಂತೆ ಮುಳ್ಳು ತುಂಬಿದ ತಮ್ಮ ಎಳಚು ಕೊಂಬೆಗಳನ್ನ ಚೂರು ರಸ್ತೆಯಂಚಿಗೆ ಚಾಚಿರುತ್ತವೆ. ಆ ಇಂಗಳದ ಗಿಡದ ದಟ್ಟ ಪೊದೆಯೊಳಗೆ ‘ಕುಲ್ಡ ಪಂಜರ’ ಅಂತೊಂದು ಹಾವಿದೆಯೆಂದು ಅದು ಮೂರಾಮುಂಜಾನೆ ರಸ್ತೆಯ ಆ ಬದಿಯಿಂದ ಈ ಗಿಡದ ಸಾಲೊಳಗೆ ನುಸುಳಿ ಹೋಗಿ ಮತ್ತೆ ಸಂಜೆಗೆ ಬೀಳುವ ಹೂಬಿಸಿಲ ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬಾ ಮೇಯ್ದು ನಿಧಾನಕ್ಕೆ ತೆವಳುತ್ತ ರಸ್ತೆ ದಾಟಿ, ಆ ಕಡೆ ಹೋಗುತ್ತದೆಂದು ನಾ ಚಿಕ್ಕವನು ಇರುವಾಗಿಲಿನಿಂದಲೂ ಒಂದು ದಂತಕತೆ ಊರಲಿ ಅಡ್ಡಾಡುತ್ತಿತ್ತು. + +ಆದರೆ ಚಿಕ್ಕವನಿದ್ದಾಗ ಅದ್ಯಾವುದನ್ನ ಲೆಕ್ಕಕ್ಕೆ ತೆಗೆದುಕೊಳ್ಳದೇ ನಾನು ಮತ್ತು ಬಡಿಗೀತನ ಮಾಡುತ್ತಿದ್ದ ರಜ್ಜಬಲಿ ಸಾಬನ ಮಗ ಕಾಸೀಮಾ ಬುಗುರಿ ಮಾಡಲು ಮೆತ್ತಗಿರುವ ಇಂಗಳದ ಬಡ್ಡೆ ಹುಡುಕಲು ಹೋಗುತ್ತಿದ್ದೆವು. ಸಪಾಟಾದ ನಾಕಾರು ಬುಗುರಿ ಕೆತ್ತಬಹುದಾದ ಗಿಡ ಕಂಡರೆ ಸಾಕು ಕೊಡಲಿ ಏರಿಸಿ ಕಡಿದು ರೋಡಿಗೆ ಎಳೆದು ತಂದು ಸಾಫ್ ಮಾಡಿ ಟವೆಲ್ಲನ್ನ ಇಬ್ಬರೂ ಹೆಗಲಿಗಾಕಿ ಬೇಟೆಯಂತೆ ಇಬ್ಬರೂ ಸೇರಿ ಹೊತ್ತು ತರುತ್ತಿದ್ದೆವು. ಅಷ್ಟು ದಪ್ಪದ ಬೊಡ್ಡೆ ಕಡೆಯುವಾಗ ಮನುಷ್ಯರನ್ನೇ ನುಂಗಬಹುದಾದ ಕುಲ್ಡ ಪಂಜರ ಹಾವೆಲ್ಲಿ ಬರುವದೊ ಅಂತ ಇಬ್ಬರ ಕುಂಡಿ ಪುಕಪುಕ ಅಂತಿದ್ದವು. + +ಅಪ್ಪ ಆ ಕಾಲಕ್ಕಾಗಲೇ ಮಟ್ಕಾ ಬರೆಯುತ್ತಿದ್ದ. ಬರೀ ಕುರಿ ಕಾಯ್ದೇ ಬದುಕಿದ್ದ ಆತನಿಗೆ ಅವುಗಳನ್ನ ಮಾರಿದ ಮೇಲೆ ಹೊಲ-ಗದ್ದೆಗಳಲಿ ಹೋಗಿ ಬಗ್ಗಿ ಕೆಲಸ ಮಾಡಲು ಸೈರಣೆ ಆಗುತ್ತಿರಲಿಲ್ಲವೆನಿಸುತ್ತದೆ. ಅಲ್ಲದೇ ಹುಡುಕಿಕೊಂಡು ಕೈಯಲ್ಲಿ ಕಾಸಿಡಿದುಕೊಂಡು ಬರುವವರು ಹೇಳುವ ಅಂಕಿಗಳನ್ನ ಒಂದು ಹಾಳೆಯಲ್ಲಿ ನೀಟಾಗಿ ಒಂದು ಕಡೆ ನಂಬರ್ರು ಅದರ ಮುಂದೆ ಅವರು ಕಟ್ಟಿದ ಹಣದ ಮೊತ್ತ ಬರೆದು ಸಂಜೆ ಹತ್ತು ಘಂಟೆಯೊಳಗೆ ಆ ‘ಪಟ್ಟಿ’ ಎಂದು ಕರೆಯುತ್ತಿದ್ದ ಲಿಸ್ಟನ್ನ ತೆಗೆದುಕೊಳ್ಳುವವರಿಗೆ ಕೊಟ್ಟರೆ ಆಗಿನ ಕಾಲಕ್ಕೆ ಕೈತುಂಬಾ ಕಮೀಷನ್ನು ಸಿಗುತ್ತಿತ್ತು. ಜನರಾದರೂ ಹೆಚ್ಚು ಹಣ ಕಟ್ಟುತ್ತಿರಲಿಲ್ಲ, ಆದ್ರೆ ಇದ್ದಿದ್ದೆಲ್ಲ ಮಟ್ಕಾ ಆಡಿ ಮನೆಯಲ್ಲಿ ಉಗುಳಿಸಿಕೊಳ್ತಿದ್ದರು. ಇನ್ನೂ ಕೆಲವರು ಜೂಜಾಡಲೆಂದೇ ಹಣ ಸಾಲ ಮಾಡುತ್ತಿದ್ದರು. ಸಾಲಕ್ಕೆ ಜಾಗವನ್ನೋ, ಹೊಲವನ್ನೋ, ಇಲ್ಲ ಮನೆಯ ಬೆಳ್ಳಿ ಬಂಗಾರವನ್ನೋ ಒತ್ತಿ ಇಟ್ಟು ತಮ್ಮ ಆಡುವ ಚಟವನ್ನ ತಮಣಿ ಮಾಡಿಕೊಳ್ಳುತ್ತಿದ್ದರು. ದೊಡ್ಡವರು ಎನಿಸಿಕೊಂಡ ಕೆಲವರು ಬರೀ ನಂಬರು ಬರೆಸಿ ವಾರಕ್ಕೊ, ತಿಂಗಳಿಗೋ ಒಟ್ಟು ಹಣ ಕೊಡುತ್ತಿದ್ದರು. + +ಅಷ್ಟರೊಳಗೆ ಅವರು ಬರೆಸಿದ ನಂಬರು ಬಂದರೆ ಅಪ್ಪ ಅವರ ಉದ್ರಿಯ ರೊಕ್ಕ ಮುರಿದು ಉಳಿದದ್ದು ಕೊಡುತ್ತಿದ್ದ. ಕೆಲವರು ಒಂದೇ ನಂಬರನ್ನ ವರ್ಷಾನುಗಟ್ಟಲೇ ಫಾಲೋ ಮಾಡುತ್ತಿದ್ದರು. ಹಾಗೇ ಮಾಡುವವರು ದಿನದಿಂದ ದಿನಕ್ಕೆ ಹಣದ ಮೊತ್ತವನ್ನು ದುಪ್ಪಟ್ಟು ಮಾಡುತ್ತಲೇ ಹೋಗುತ್ತಿದ್ದರು. ಹೀಗಾಗಿಯೇ ಕೆಲವು ಸಂಸಾರಗಳು ಬೀದಿಗೆ ಬಂದು, ಹೊಲಗಳನ್ನೆಲ್ಲ ಮಾರಿಕೊಂಡು ಅವರ ಮನೆಯವರು ಅಪ್ಪನಿಗೆ ಶಾಪ ಹಾಕುತ್ತಿದ್ದರು. ಕೆಲವೊಮ್ಮೆ ಕೋಪವನ್ನ ನಿಯಂತ್ರಿಸಲಾಗದ ಹೆಂಗಸರು ನಮ್ಮ ಮನೀವರೆಗೂ ಬಂದು ಬಾಯಿಗೆ ಬಂದಂತೆ ಒದರಾಡಿ, ಮಣ್ಣು ತೂರಿ ಹೋಗುತ್ತಿದ್ದರು. ಅಪ್ಪ ಹಾದಿಯಲ್ಲಿ ನಡೆದು ಹೋಗುತ್ತಿದ್ದರೆ ನೆಟಿಗೆ ಮುರಿದು ನೆಪ ಮಾಡಿ ಉಗುಳಿ ಅವಮಾನ ಮಾಡುತ್ತಿದ್ದರು. + +ಏಳೆಂಟನೆಯತ್ತು ಇದ್ದ ನನಗೆ ಇದೆಲ್ಲ ಅರ್ಥವಾಗುತ್ತಿತ್ತಾದರೂ ಅಪ್ಪನಿಗೆ ಆ ಅನಿಷ್ಟ ಮಟ್ಕಾ ಸಾವಾಸ ಬಿಟ್ಬಿಡು ಎನ್ನಲು ಬಿಡೆಯಾಗುತ್ತಿತ್ತು. ಅಲ್ಲದೇ ಉಬ್ಬಸದ ಖಾಯಿಲೆಯಿದ್ದ ಅವ್ವ ದುಡಿಯಲೋಗಿ ಯಾವ್ದೊ ಕಾಲವಾಗಿತ್ತು. ಆಕೆಯ ಔಷಧಿಗೆ ತಿಂಗಳಿಗೆ ನೂರಾರು ರೂಪಾಯಿಯಷ್ಟು ಖರ್ಚಾಗುತ್ತಿತ್ತು. ಅದರ ಮೇಲೆ ಮನೆಯದು, ತಂಗೀದು ನಂದೂ ಸೇರಿಕೆಂಡು ಬಾಳ ಖರ್ಚುಗಳಿದ್ದವು. + +ಹಾಗೆ ಆ ನಂಬರ್ರು ಬರೆಯುವದನ್ನು ಬಿಟ್ಟರೆ ನಾವು ಬೀದಿಗೆ ಬೀಳುವದು ಖಾಯಂ ಇತ್ತು. ಆವಾಗೆಲ್ಲ ನಾನು ಓದಿ ಒಂದು ಸಣ್ಣ ನೌಕರಿ ಹಿಡಿದರೂ ಸೈ, ಅಪ್ಪ ಬರೆಯುವದ್ನ ಬಿಡಿಸಿಬಿಡಬೇಕೆಂದು ಕನಸು ಕಾಣುತಿದ್ದೆ. ಹಾಗೆ ಬಿಡಿಸಿದರೆ ಸ್ವಲ್ಪ ದಿನಕ್ಕೆ ಅಪ್ಪನ ಹೆಸರಿನೊಂದಿಗೆ ಅಂಟಿಕೊಂಡಿದ್ದ ‘ಮಟ್ಕಾ’ ಎಂಬು ಉಪನಾಮ ಬಿಟ್ಟೋಗುವುದೆಂದು ಭಾವಿಸುತ್ತಿದ್ದೆ. ಆದ್ರೆ ತುಂಬಾ ಮಂದಿ ಮಟ್ಕಾದ ಹುಚ್ಚಿಗೆ ಯಾವ ಪರಿ ಬಿದ್ದಿದ್ದರೆಂದರೆ ಅವರಿಗೆ ಎದ್ದರೆ ಬಿದ್ದರೆ ಅದರದೇ ಚಿಂತಿಯಾಗಿರುತ್ತಿತ್ತು. ನಾನು ಸಾಲಿಗೆ ಹೊರಟಾಗ, ಆಟ ಆಡುವಾಗ ಕೆಲವರು ನನ್ನನ್ನ ನಿಲ್ಸಿ ‘ಮನ್ಯಾಗ ನಿಮಪ್ಪ ಅದ್ಯಾನೇನು?’ ಅಂತ ಕೇಳೋರು. + +‘ನಾ ನೋಡಿಲ್ಲಪೋ ಮಾಮ ಅದ್ಯಾನೇನು?’ ಅಂದು ತಪ್ಪಿಸಿಕೊಳ್ಳುತ್ತಿದ್ದೆನಾದರೂ,“ತಗಾ ಈ ನಂಬರ್ರು ಬರೆಸಿ ಬಾ, ಆರು ಮನೀ ಅದ್ಯಾವ. ಎಲ್ಲವಕ್ಕೂ ಎಲ್ಡೆಲ್ಡು ರೂಪಾಯಿ ಅಂತೇಳು, ತಾತಾಗ ಕನಸಿನ್ಯಾಗ ಬಂದಾವಂತ ನಂಬರ್” ಅನ್ನೋರು, ನನಗೆ ಅಚ್ಚರಿ ಆಗೋದು ಸಿರವಾರದಾಗ ನಮಪ್ಪಗ ನಾಳೇಕ ತಿಳೀತಿದ್ದ ನಂಬರು ಇವರಿಗೆ ಇವತ್ತು ಕನಸಿನಲ್ಲಿ ಕಾಣೋದು ಹೇಗೆ ಅಂತ. ಯಾಕೆಂದರೆ ಅದನ್ನ ನಂಬಲಾರದಂತಹ ಸ್ಥಿತಿಯಲ್ಲೂ ನಾನು ಇರಲಿಲ್ಲ. ಊರ ಹೊರಗಿರುವ ದರಗಾದಲ್ಲಿ ಕೆಲವು ವಾರಗಳಂದು ಕಡ್ಡಾಯವಾಗಿ ಕೆಲವರು ಮಲಗಿ ಕನಸು ಕಂಡು ಮುಂಜಾನೆ ಬಂದು ‘ನಂಬರ್ರು ಆಡುತ್ತಿದ್ದರು’ ಯಾವಾಗಾದರೊಮ್ಮೆ ಅಂತಹ ನಂಬರು ಬಿದ್ದರೆ ಅದು ಊರಿಡೀ ‘ಸೆನ್ಸೇಷನಲ್ ಸುದ್ದಿ’ ಆಗುತ್ತಿತ್ತು. + +ಒಂದು ಸಲ ಏನಾಯ್ತು ಅಂದರೆ ಝಾಂಡ ಇದ್ದ ಕಾರಣಕ್ಕೆ ಮಾಸ್ತರರು ಸಾಲಿಯಲ್ಲಿ ಚೂರು ಹುಷಾರಿದ್ದ ಹುಡುಗರಾದ ನಮಗೆ ಊರಿನ ಕೆಲವರ ಸಹಿ ಮಾಡಿಸಲು ದೊಡ್ಡದಾದ ‘ದಪ್ತರಿನಂತಹ’ ರಿಜಿಸ್ಟರ್ ಕೊಟ್ಟು ಕಳುಹಿಸಿದ್ದರು. ಕೈಯಲ್ಲೊಂದು ಪೆನ್ನಿನ ಜೊತೆ ಒಂದು ಹೆಬ್ಬಳ್ಳು ಒತ್ತುವ ‘ಇಂಕ್ ಪ್ಯಾಡ್’ ಇಟ್ಕೊಂಡು ಸಾಲಿಗೆ ಸದಸ್ಯರು, ಅಧ್ಯಕ್ಷರು ಆಗಿದ್ದವರ ಮನೆಗೆ ಹೋಗಿ ಸಹಿ ಮಾಡಿಸಿಕೊಂಡು,“ಝಾಂಡಕ್ಕೆ ಬರಬೇಕಂತ, ಸಾರು ಹೇಳ್ಯಾರ” ಸಂತ ಮಾತು ಒಪ್ಸೋದು ಆವತ್ತಿನ ಕೆಲಸ. + +ಓಣಿ ಓಣಿ ತಿರುಗಿ ನಾಲ್ಕೈದು ಜನರ ಸಹಿ ಮಾಡಿಸಿ ನಡು ಮಧ್ಯಾಹ್ನ ಆಗೋವೊತ್ತಿಗೆ ಗೊಲ್ಲರ ಪಕೀರಮ್ಮನ ಮನೆಯ ಮುಂದೆ ಇದ್ದೆವು. ಕೊರಳಲ್ಲಿ ಎಲ್ಲಮ್ಮನ ಪಾದ ಕಟ್ಟಿ ದೊಡ್ಡ ಜುಂಪರು ಜುಂಪುರು ಕೂದಲು ಬಿಟ್ಟು, ಹಣೆಯಿಡೀ ಬಂಢಾರ ಬಡೆದುಕೊಂಡಿರುತ್ತಿದ್ದ ಪಕೀರಮ್ಮನಿಗೆ ಅಮಾಸಿಗೊಮ್ಮೆ ಮೈಯಲ್ಲಿ ದೇವರು ಬರುತ್ತಿತ್ತು. ಮಧ್ಯಾನ ಯಾರರ ಡೊಳ್ಳಿನ ಶಬ್ದ ಮಾಡಿದರೆ ತಿನ್ನುವ ಗಂಗಾಳ ಬಿಟ್ಟು ಕುಣಿಯುತ್ತ ಉನ್ಮಾದದಲ್ಲಿ ಬರುತ್ತಿದ್ದಳು. + +ಅಂತಾಕೆಯ ಮನೆಯ ಬಾಗಿಲಲಿ ನಿಂತು “ದೊಡ್ಡಮ್ಮ, ದೊಡ್ಡಮ್ಮಂಗೇss..” ಅಂತ ಒದರುತ್ತಿದ್ದಂತೆ ಅಂಕಣದ ಕಟ್ಟಿ ಮ್ಯಾಲೆ ಮೈಮರೆತು ಮಲಗಿದ್ದಾಕೆ ದಡಕ್ಕನೇ ಎದ್ದು ಕೂತು,‘ಏನ್ ಏನಪೋ ಯಾರು’ ಅಂತೆಲ್ಲ ಕನವರಿಸಿದಂತೆ ಎದ್ದು ಕುಳಿತಳು. ಮೊದಲೇ ಆಕೆಯ ಮೈಯಲ್ಲಿ ದೇವರು ಬರುವದಾ ಗೊತ್ತಿದ್ದ ನಾವು ‘ಸತ್ವೆಪಾ’ ಅನಕೊಂಡು,‘ಝಾಂಡಾ ಐತೆಂಗೇ, ಸೈ ಮಾಡು’ ಅಂತ ರಿಜಿಸ್ಟರ್ ಮುಂದೆ ಹಿಡದ್ರಾ,“ಯಪ್ಪಾ ಮುದೇತಾ ತೊಟಗು ತಡಾಗ್ಯಾದ್ರ ಬರಬಾರದೇನಪ, ಕನಸಿನ್ಯಾಗ ಉಟಗನೂರು ತಾತ ಬಂದಿದ್ದ. ಆತನ ಕಾಲಿಗಿ ನಮಗಸ್ಗಾರ ಮಾಡಿ ಯಪ್ಪಾ ಬಾಳ ತ್ರಾಸಾಗ್ಯಾದ ಒಂದು ನಂಬರರ ಹೇಳಂತ ಕೇಳಕತ್ತಿದ್ಯಾ, ನಮಪ್ಪ ಹೇಳಕತ್ತಿದ್ದ, ನೀವು ಬಂದು ಎಬ್ಬಿಸಿದ್ರಪ” ಅಂದು ಇಂಕ್ ಪ್ಯಾಡಿಗೆ ಬಳ್ಳೊತ್ತಿ ಹಾಳೆಗೆ ಒತ್ತಿ ಕಳುಹಿಸಿದಳು. ಆಕೆಯ ಮುಖವೆಷ್ಟು ಮ್ಲಾನವಾಗಿತ್ತೆಂದರೆ ನಾವು ಬಾಗಿಲು ದಾಟೋವರೆಗೂ ಆಕೆ ನಂಬರು ಕೇಳದೆ ಕನಸು ಒಡೆದುದ್ದಕ್ಕೆ ಮಿಡುಕುತ್ತಲೇ ಇದ್ದಳು. + +ಇಂತಹವು ಒಂದೆರಡಲ್ಲ ರಾತ್ರಿಯಾದರೆ ಕಂದೀಲಿನ ಗಾಜು ಒರೆಸಿ ದೀಪ ಮುಡಿಸಿ ಅದರ ಮುಂದೆ ಓದಲು ಕೂಡುತ್ತಿದ್ದ ನಾನು ತಂಗಿ ಊಟಕ್ಕಾಗಿ ಅಪ್ಪನ ದಾರಿ ಕಾಯುತ್ತಿದ್ದೆವು. ಊರಿನಿಂದ ಹೋಗುವ ಏಳರ ಕೊನೆಯ ಬಸ್ಸಿಗೆ ಸಿರವಾರಕ್ಕೆ ಪಟ್ಟಿಯನ್ನು ಕಳಿಸಿ ಮನೆಗೆ ಬಂದು ಅನ್ನವನ್ನ ಮಾಡಿ, ಅದಕ್ಕೆ ಐನೇರು ಅಂಬ್ರಮ್ಮನ ಮನೆಯಿಂದ ತಂದ ಅಚ್ಚೇರು ಹಾಲನ್ನೋ ಇಲ್ಲ ಬಳ್ಳೊಳ್ಳಿ ಕಾರವನ್ನೋ ಹಾಕ್ಯಂಡು ಉಣ್ಣುತ್ತಿದ್ದೆವು. + +ಅಮ್ಮನಿಗೆ ರಾತ್ರಿಗೆ ಬಹುತೇಕ ಅನ್ನದ ಗಂಜಿಯೇ ಸಾಕಾಗುತ್ತಿತ್ತು. ಅವ್ವಗ ಹೊರಸಿನ ಮೇಲೆ ಹಾಸಿ ನಾವು ಅಂಗಳದಲ್ಲಿ ಈಚಲ ಚಾಪೆಯಲ್ಲಿ ಅಡ್ಡಾದರೆ ಅಪ್ಪ ಆಕಾಶ ನೋಡುತ್ತ ತನ್ನ ಹಳೆಯ ನೆನಪುಗಳನ್ನ ಹಂಚಿಕೊಳ್ಳುತ್ತಿದ್ದ. + +ಹಣಕ್ಕೂ ಆತ್ಮಾ, ಜೀವಾ ಇರ್ತಾದಾ? ನನಗ ಮೊದ್ಲಿಂದ ಅನುಮಾನಾನ ಅಂತಿದ್ದ ಅಪ್ಪ ತನ್ನಲ್ಲೇ ಸ್ವಗತ ಹೇಳಿಕ್ಯಾಂತ ಗ್ವಾಡಿಗೊರಗಿ ಕುಂತು ದೀಪದ ಕಡ್ಡೀನ ಕಿವ್ಯಾಗ ಹಾಕ್ಕೊಂತ ಹಳೀ ನೆನಪು ತೆಗೀತಿದ್ದ. ನಾನು ಮಲಗದೇ ಅಪ್ಪ ಹೇಳುವ ಕತೆಗಾಗಿ ಕಾಯುತ್ತಿದ್ದೆ. + +“ಹಣಕ್ಕೆ ಆತ್ಮ, ಹೃದಯ ಇಲ್ದೇ ಹೋದ್ರೇ ಅದು ಬರೀ ಹಣವನ್ನ ಪ್ರೀತ್ಸೋರಾ, ಹಣವೆಂದರೆ ಹಪಾಹಪ್ಸೋರ, ಹಣವೆಂದರೆ ಸಾಕು ಮಣ್ಣೊಳಗೆ ಒಂದು ಕಣವಾಗಲು ತಯಾರಿರೋರ ಬಳಿಯಲ್ಲಿಯೇ ಏಕೆ ಕಾಲು ಮುರ್ಕಂಡು ಬಿದ್ದಿರುತ್ತಿತ್ತು ಹೌದಿಲ್ಲ ಶಾಣ” ಅಂತ ನನ್ ಮಾರಿ ನೋಡ್ತಿದ್ದ. ನನಗ ಹೌದು ಅನಿಸ್ತಿತ್ತು. ಕ್ವಾಂಮ್ಟರ ವಿಟೋಬಯ್ಯನಂತೋರು ಗೌಡ್ರ ಶಂಕರ ಗೌಡ್ನಂತೋರು ಏಟು ಖರ್ಚು ಮಾಡಿದ್ರೂ ಅವ್ರು ಹಂಗಾ ಇದ್ರು.ಅಪ್ಪ ಮಾತಾಡುತ್ತ ಹೋಗುತ್ತಿದ್ದ… + +“ಚಿಕ್ಕೋನಿದ್ದಾಗಿನಿಂದ್ಲೂ ಈ ರೊಕ್ಕಾಂಬುದು ನನ ಅಂಗೈ ಮ್ಯಾಲೆ ಸೊಲಪು ಹೊತ್ತು ನಿಲ್ಲಲಿಲ್ಲ. ಪುಟಿಗೆರೆದು ಓಡುವ ಗಲಗೀನ ತಾತನ ಕುದುರೀಯಂಗ, ಕೈ ಬಿಡಿಸಿದರೆ ಪುರ್ರೆಂದು ಹಾರುವ ಜಾಲಿಗಿಡದಾಗೀನ ಗುಬ್ಬಿಯಂಗ ಓಡಿ ಹೋತಿತ್ತು. ಅದು ಹಂಗೆ ತಪ್ಪಿಸಿಕೆಂಡು ಪರಾರಿ ಆತಿದ್ರೆ ನಾ ಅದಕ್ಕ ಗಂಟು ಬಿದ್ನೇ ಹೊರ್ತು ಅದನ್ನು ಜತನದಿಂದ ಉಳಿಸಿಕೊಳ್ಯಾದು, ಉಗುಳು ನುಂಗಿಕ್ಯಾಂತ ಒಂದಾಣೆಗೆ ಎರ್ಡು ಮಾಡೋದು ಈ ಜನ್ಮದಾಗ ಆಗಲಿಲ್ಲ! + +ಗೆದ್ದರೆ ಓಪನ್ನಿಗೆ ಅದು ಹೋದ್ರೆ ಕ್ಲೋಜಿಗೆ ಅಂತ ನಂಬರಿಗೆ ರೊಕ್ಕ ಕಟ್ಟಿ ಮೂಸಿ ನೋಡಿದ್ದೆ ಬಂತು. ರೊಕ್ಕ ಒಂದಿನಾನು ಕೈಯಾಗ ಇದ್ದು ಖುಷೀಲೇ ಹೋಳ್ಗೀ ಉಣ್ಲಿಲ್ಲ” ಅಂತೇಳಿ ಸುದೀರ್ಘವಾದೊಂದು ನಿಟ್ಟಸಿರು ಬಿಡ್ತಿದ್ದ. + +ಆಮೇಲೆ ಏನೋ ಪಕ್ಕನೆ ನೆನಪಾದಂತೆ ದಡಗ್ಗನೆ ಎದ್ದು ಕೂತು.“ಶಾಣಪ್ಪ ಒಂದ್ಸಲ ಹೆಂಗಾತಿ ಗೊತ್ತಾ ಯಪ್ಪಾ ಬೀರ್ಲಿಂಗ.. ಆ ದಿವ್ಸಾನ ಇವತ್ತೀನತನ ಮರ್ತಿಲ್ಲ ನಾನು. ನಟ್ಟನಡಾ ರಾತ್ರ್ಯಾಗ ಸಿರವಾರ ಬಸ್ಟ್ಯಾಂಡಿನಾಗ ಹೊಟ್ಯಾಗ ಚೂರು ಕೂಳು ಇರಲಾರದ ಮಕ್ಕಂಡು ಚಿಂತೀ ಮಾಡ್ತಿದ್ದೆ.ತಲೀ ದಿಮ್ಮಂದು ನಿದ್ದೀನ ಹತ್ತವಲ್ದು. ಕಣ್ತೆರದ್ರ ಕತ್ಲು ಗಂವನ್ತಿತ್ತು. + +ಹಸಗಂಡು ಬೆನ್ನಿಗಂಟಿಗೆಂಡ ಹೊಟ್ಟೀನಾ ಮೊಣಕಾಲಾಗ ಒತ್ತಿ ಚಳಿ ಆಗಲಾರದ್ಹಂಗ ಮಾಡಿ ಸಾಕಾಗಿತ್ತು. ನಾನು ಮಲಗಿದ್ದ ಜಾಗಾನರ ಎಂತಾದಪೋ? ಸಿರುವಾರದ ಬಸ್ಟಾಂಡಿನ ಕತ್ಲು ಮೂಲ್ಯಾಗಿನ ಗಾಲಿ ಮುರುದು ಸರಿಲಾರದ ನಿಂತಿದ್ದ ಮುರುಕು ದೊಬ್ಬ ಬಂಡ್ಯಾಗ! + +ಸ್ವಲಪು ಜಲ್ದಿ ಬಂದಿದ್ರ ಸಟಲ್ ಬಸ್ಸಿಗೆ ವಳ್ಳಿ ಊರು ಸೇರಬೌದಿತ್ತು. ಆದ್ರೆ ಕಾಲೊಳಗಿನ ಉಂಗುಟ ಕಿತ್ಗೆಂಡ ಚಪ್ಲೀ ಎಳಕೋಂತ ಆ ಕ್ರಾಸೀಗಿ ಮುಟ್ಟದ್ರಾಗ ಬಸ್ಸು ಪಾಸ್ ಆಗಿತ್ತು. ಎದೀ ಡಬ್ ಅಂತೂ, ಬೊಕ್ಕಣ್ದೊಳಗಿದ್ದ ಮಟ್ಕಾದ ಚೀಟಿ ಮತ್ತು ಅದರ ಬಾಬತ್ತು ಆರು ನೂರು ರೂಪಾಯೀನ ಗೌಡಗ ರಾತ್ರಿ ಹನ್ನೆರಡನದ್ರಾಗ ಮುಟ್ಟಸಾಕಬೇಕು, ಅವಾಗೇನು ಈಗೀನಂಗ ಪೋನಾ ಸುಡಗಾಡ್ಯಾ… ತಡ ಮಾಡಿ ರಾತ್ರಿ ಮುಗಿತಂದ್ರ ರತನಲಾಲ ಕತ್ತರಿಯ ಕೈ ಬಾಳ ಸುಮಾರು.. ಪಟ್ಯಾಗಿನ ಯಾವ್ದರಾ ದೊಡ್ಡ ರಕ್ಕದ ನಂಬರೀಗಿ ‘ಜೇಂಟ್’ ಹತ್ತಿದ್ರೆ ಮುಗೀತಿ! + +ಅದಕ್ಕಂತ್ಲಾ ಆ ಕತ್ತಲಿನ್ಯಾಗೂ ಹನ್ನೆಲ್ಡು ಕಿಲೋಮೀಟ್ರ ನಡ್ದು ಬಂದು ಪಟ್ಟೀನ ಗೌಡ್ರ ವಿರುಪಣ್ಣಗ ಕೊಟ್ಟೆ. ಕೈಗೆ ಅರವತ್ತು ರೂಪಾಯಿ ಕಮೀಷನ್ನು ಬರಬೇಕು, ಗೌಡ ರೊಕ್ಕ ಎಣಿಸಾಕತ್ತಿದ್ದ. + +ಬೆಳಗ್ಗೆದ್ರೆ ದೀಪಾವಳಿ, ಮನೆಯಲ್ಲೊಂದು ಕಾಳು ಅಕ್ಕಿಯಿಲ್ಲ, ಬ್ಯಾಳೀದು ಬಿಡು… ನಾವು ಹಬ್ಬಕ ಕಾಣೋರು. ನೀನು ಆವಾಗ ನಡಿಯಾದು ಕಲ್ಯಾಕತ್ತಿದ್ದ ಕೂಸು. ನಿನಗ ಬಟ್ಟೆ, ಸತ್ತ ಅವ್ವನಿಗೆ ಅಂದ್ರ ನಿಮ್ಮಜ್ಜಿಗೆ ಏರುಸಲೊಂದು ಸೀರೆ ಏನು ತಗಳಾಕ ಒಂದ್ರುಪಾಯಿ ಇಲ್ಲ. + +ಹಂಗಂತನ ವಾರದಿಂದ ತಲಿಕಟ್ಟಿಕೊಂಡು ನಂಬರ್ ಹುಡುಕಿದ್ದೆ. ಓಪನ್ ಸಿಕ್ಕಿತ್ತೆ ಹೊರತು ಕ್ಲೋಜು ಕೈತಪ್ಪಿಸಿಕೊಳ್ತಿತ್ತು! ಬೇರೀಜು ಮತ್ತು ಕೊನೆಯ ಮನೆಯಲ್ಲಿ ಪಾಸಾದ ನಂಬರಿಗೆ ಹೊಂದಾಣಿಕೆಯಾಗದೆ ಗದಗಿನಿಂದ ಮೂರು ರೂಪಾಯಿ ಕೊಟ್ಟು ತರಿಸಿದ ಮುಂಬೈ ಮೇಲ್ ಎಂಬೋ ಅಸಂಖ್ಯಾತ ನಂಬರುಗಳನ್ನ ತನ್ನ ಚಚ್ಚೌಕದಲ್ಲಿ ಹೊಂದಿದ್ದ ಚಾರ್ಟ ತೋರಸಲಾರದ ಮೂರುದಿನ ಕಾಡಿಸಿತ್ತು! + +ಮತ್ತ ಹುಡುಕಿದ್ರ ನಾಕು ದಿನದ ಹಿಂದೆ ಬಿದ್ದ ನಂಬರಿಗೆ ಐದೆಚ್ಚು ಮುಂದಿನ ಮನೆಗೆ ಮೂರು ಕಮ್ಮಿ ಮಾಡಿ ಲೆಕ್ಕ ಹಾಕಿದರೆ ಮಧ್ಯರಾತ್ರಿಗೆ ಅವತ್ತು ಮುಂಬಯಿಯ ಮೂಲೆಯಲ್ಲಿ ಕುಳಿತು ಅದುಮಬಹುದಾದ ನಂಬರು ಸಿಕ್ಕುಬುಡ್ತು. ಅದು ಬಿದ್ದೇ ಬೀಳೋದು ಯಾಕೋ ಬಾಳ ಗ್ಯಾರಂಟಿ ಅನಿಸಿ ಬರಬಹುದಾದ ಅರವತ್ತರ ಕಮೀಷನ್ನಿನಲಿ ಐವತ್ತನು ಆ ‘ನಂಬರಿಗೆ’ ಬರೆದು ಉಳಿದ ಹತ್ತು ರೂಪಾಯಿ ಅಷ್ಟೆ ಇಸಗೊಂಡು ಐದರ ಎರಡು ನೋಟು ಮಡಚಿ ಎದೆಯೊಳಗಿದ್ದ ಕಳ್ಳ ಜೇಬಲ್ಲಿಟ್ಟು ಮಲಗಿದರೆ ಹಾಳು ಬಾಳೆಹಣ್ಣಿನ ಬಂಡಿಯಲಿ ನಿದ್ದೆಯೇ ಮೂಡುತ್ತಿಲ್ಲ! + +ಮಲಗಿದ ಸ್ವಲ್ಪ ಹೊತ್ತಿಗೆ ಸಮೀಪದಲ್ಲೇ ತಳ್ಳುವ ಬಂಡಿಯವನೊಬ್ಬ ಕಾದ ಖಡಾಯಿಯ ಒಡಲೊಳಗೆ ಅಂಗೈ ಗಾತ್ರದ ಹಪ್ಪಳ ಹಾಕಿ ಕೈಯ ಚಮಚೆಯಿಂದ ತೆಗೀತಿದ್ದ. ದಾರಿಯಾಗ ಹೋಗೋರು ಬರೋರು ಆಟೋತ್ನ್ಯಾಗ ಎಂಟಾಣೆ ಕೊಟ್ಟು ತೆಗೆದುಕೊಂಡು ತಿನ್ನುತ್ತಿದ್ದರು. + +ತಿನ್ನುವವರನ್ನ ನೋಡಿ ನನಗೂ ತಿನಬೇಕು ಅಂತ ಅಸೀಯಾಗಿ ಬೊಕ್ಕಣಕ ಕೈ ಇಟ್ರ ಮನಸು ಮುಂಜಾನೆಯ ಹಬ್ಬ-ಬಟ್ಟೀ ನೆನಿಸಿ ಕೈ ಹಿಂದೆ ಸರಿಸ್ತಿತ್ತು. + +ಮುಂಜಾನಿ ಏಳುಕ್ಕ ಬರಾ ಬಸ್ಸಿಗಿ ಹೋದ್ರ ಮತ್ತದಕ ದೀಡ್ರುಪಾಯ್ ಬಡೀಬೇಕು ರಾತ್ರಿ ಬಂದಂಗ ನವಲಕಲ್ ಕಾಲೇವು ಮ್ಯಾಲ ನೆಡಕಂಡು ಅಡ್ಡದಾರಿಯಾಗ ಹೋದ್ರ ಉಂಬೊತ್ತಿಗಿ ಮನೀ ಮುಟ್ಟುಬೋದು. ಉಳದ ಹತ್ರುಪಾಯ್ದಾಗ ಕಡ್ಲೀ ಬ್ಯಾಳಿ ತಂದು ಹೋಳ್ಗ್ಯಾರ ಮಾಡಬೌದು. ಹಬ್ಬ ಅಂತಲ್ಲ, ಮನ್ಯಾಗಿರ ಕೂಸು ಉಣ್ಣಾದನ್ನ ಕಣ್ತುಂಬ ನೋಡೋ ಆಶಾ ಅಷ್ಟಪಾ. ಬಾಜು ಗುಡಿಸಿಲ್ಯಾಗಿನ ವಾಸಿನಕ್ಕ ನೀ ಓಡ್ಯಾಡದ ನೋಡಾಕಾತಿದ್ದಿಲ್ಲ ನನಗ. ಆ ಸಿವಾ ನಮ್ಮಂತವರೀಗಿ ಅದೇಟು ಲೆಕ್ಕದ ಮ್ಯಾಲ ಜೀವ್ನ ಕೊಡ್ತಾನಪ ಯಪ್ಪ, ಅಗಲ ಮಾಡಿದ್ರ ಹರಿಯುವಂಗ ಗಿಡ್ಡ ಮಾಡಿದ್ರ ಮುರಿಯುವಂಗ ಮಾಡಿ ಎಷ್ಟು ಹೈರಾಣ ಮಾಡ್ತಾನ…” + +ಅಪ್ಪ ಹಾಗೆ ಹಳೆಯ ನೆನಪಿಗೆ ಮರಳಿ ಭಾವುಕನಾಗಿ ಹೇಳುತ್ತಿದ್ದರೆ ನನಗೆ ಕುತೂಹಲ ಹೆಚ್ಚಾಗಿ ಮಲಗಿದಲ್ಲೇ ಎದ್ದು ಕೂತು ಅಪ್ಪನ ಮುಖದ ಸಮೀಪ ಮುಖ ತಂದು ಕೇಳುತ್ತಿದ್ದೆ. + +ಮಕ್ಕಂಡ ಜಾಗದಾಗ ಒದ್ಯಾಡಿದ್ರ ಹಳೆಯ ಬಾಳೆಣ್ಣು ಬಂಡಿ ಅಳ್ಳಾಡಿ ಉಟಗಂಡುವು ಬಟ್ಟಿ ಬಂಡೀಗಿದ್ದ ಯಾವ್ದರ ಮಳೀಗಿ ಸಿಕ್ಕಿ ಅಂಗ್ಯನ ದೋತ್ರನ ಹರದ್ರ ಹೆಂಗಪ ಅನಿಸಿ ಕೋಳಿ ಮುದುರಿದೆಂಗ ಮುದುರಿ ಮಲಗಿದ್ದೆ. ಉಳಿಸಿಗೆಂಡ್ರ ಇರಾ ಅರವತ್ತರಾಗ ಹಬ್ಬ ಮಾಡಬೌದಿತ್ತು, ಆದರ ಸಿಕ್ಕ ನಂಬರು ಬಿಡಾಂಗಿರಲಿಲ್ಲ. ಯಾವಾಗರ ಒಮ್ಮೀ ಮಾತ್ರ ಇಂತವು ರೂಟು ಕಣ್ಣೀಗಿ ಬೀಳತಾವು. ಇರ ನೂರು ಮನ್ಯಾಗ ಅವ ತಿಳಿದದ್ದು ಹೊಡೆದು ಬಡವ್ರು ರೊಕ್ಕ ಬಾಯಿಗೀ ಹಾಕ್ಯಾಂತಾನ ಅಂತ ಜನ ಮಾತಾಡಿಕೆಂತಾರ. ಆದ್ರ ಅದು ತಪ್ಪು. ಜಗತ್ತಿನ್ಯಾಗ ಲೆಕ್ಕಚಾರ ಇಲ್ದ ಯಾವದೂ ಆಗಂಗಿಲ್ಲ. ಅವನೂ ಯಾವ್ದರ ಒಂದು ರೂಟೀನ್ಯಾಗ ನಂಬರ್ ಹೊಡಿಯಾದೂ ಅಂತ ನಂಬೀನೇ ನಾ ದಿನಾ ರಾತ್ರೀ ಹನ್ನೆಲ್ಡರ ಮ್ಯಾಲಾದ್ರೂ ಟಾಣಿಕ್ಕ ಡಬ್ಯಾಗ ಚಿಮಿಣೆಣ್ಣಿ ಹಾಕಿ ಮಾಡಿದ ದೀಗಿ ಬೆಳಕಿನಾಗ ಚಾಟ ನೋಡಿಕ್ಯಾಂತ ರೂಟ್ ಹುಡಕೋದು ಜಗತ್ತಿನ ಬೌದೊಡ್ಡ ಕೆಲಸ ಅನುವಂಗ. + + + +ನಾ ಹಂಗ ಕತ್ಲ್ಯಾಗ ಕಣ್ಣು ಬುಟಗಂಡು ಕುಂತ್ರ ನಿಮ್ಮಜ್ಜಿ ಅಂದ್ರ ನಮ್ಮವ್ವ ಅಕ್ಕಮ್ಮ ಟಿಬಿ ಏಟಿಗೆ ನುಗ್ಗಿ ಬರಾ ಕೆಮ್ಮು ತಡ್ದು ಬೈಯ್ದು ಕಫಾ ಉಗುಳಿ ಓಣಿ ಒಂದ್ ಮಾಡ್ತಿದ್ಲು. + +“ಇರೋ ನೂರು ಕುರೀನಾ ಸರೀಗಿ ಕಾಯ್ಲಾರದ ಸರಿಪಾಲೀಗಿ ಕೊಟ್ಟು ಹಿಂಗ್ಮನೀ ಹಾಳು ಮಾಡ ಕೆಲಸಕ್ಯಾಕ ನಿಂತಗಂಡೀ.. ಇದ್ರ ಉಣಾಮು ಇಲ್ಲಂದ್ರ ಹಂಗ ಬುಳಾಮು ಮಂದಿ ಹೊಟ್ಟೀ ಮ್ಯಾಲಿ ಹೊಡೀ ಕೆಲಸ ಮಾಡಬ್ಯಾಡಲೋ ಬೀರ” ಅಂತಿದ್ಲು. ಬರೀ ಇಂತವ ಯೋಚಿನಿ ಮಾಡಿಕ್ಯಾಂತ ಮಕ್ಕಂಡು ಒಮ್ಮಿಗೀ ಬಂಡಿ ಅಳ್ಳ್ಯಾಡಿದಾಗ ಎದ್ದು ಕಣ್ತೆರೆದ್ರ ಸಿರವಾರ ಬಸ್ಯ್ಟಾಂಡ್ ಆಗಲೇ ಗಿಜಿಗಿಜಿ ಅನ್ನುತ್ತಿತ್ತು. + +ಮೂಲ್ಯಾಗಿದ್ದ ನಳ್ದಾಗ ಮುಖ ತೊಳ್ದು ದೋತರದ ಚುಂಗಿನ್ಯಾಗ ಮುಖ ಒರೆಸಿಕೊಂಡು ಹೊರಗ ಬಂದು ಗೌಡ ಎದ್ರು ಬಂದ್ರ,“ಯಾಕ್ ಬೀರ ಹೋಗ್ಲೀಲ್ಲೇನು ರಾತ್ರೀ? ಹೇಳಿದ್ರೆ ಅಲ್ಲೇ ನಮ್ ಅಂಗಡೀ ಮುಂದ ಶೆಡ್ ಇತ್ತಲ್ಲ” ಅಂದು,“ನಿನ್ನೇ ನಿನ್ನ ಪಟ್ಯಾಗ ಇದ್ದ ನಂಬರೀಗಿ ಐವತ್ರದ ಜೇಂಟ್ ಹತ್ಯಾದ. ರೊಕ್ಕ ತಗಂಡೋಗು, ಅದೊಂದ ಮನೀ ನೋಡು ನೀ ತಂದ ಆರನೂರರ ಪಟ್ಟ್ಯಾಗ” ಅಂದು ಇಪ್ಪತ್ತರ ಗರಿ ಗರಿ ನೋಟು ಎಣಿಸಿಕೊಟ್ಟ. + +ಸರಿಯಾಗಿ ಮೂರು ಸಾವಿರದ ಐದು ನೂರು ಮತ್ತು ಬರದ ಕಮೀಷನ್ನು ಮೂವತ್ತೈದು,“ತಗೊ” ಅಂತ ಕೊಟ್ಟವರೇ ಹೊರಟು ಹೋದರು. ಕಣ್ಣಾಗ ಎಣ್ಣೀಬುಟುಗಂಡು ಹಿಡಿದ ಮನೀ ಬಿದ್ದಿತ್ತು. ಕಣ್ಣೊಳಗೆ ನೀರು ಹಾಗೆ ಹರಿದು ಬಂದವು! ಹಸಿವಿನಿಂದ ಚುರುಗುಟ್ಟುತ್ತಿದ್ದ ಹೊಟ್ಟೆ ಹಿಡಿದು ಕೈಯೊಳಗಿನ ನೋಟನ್ನೆಲ್ಲ ದೋತರದ ಒಳಗಿನ ಚೆಣ್ಣದ ಬೊಕ್ಕಣದೊಳಗೆ ತೂರಿಸಿಟ್ಟು ಅಂಗೈ ಅಗಲದ ಹಪ್ಪಳದವನ್ನ ಹುಡುಕ ತೊಡಗಿದ್ದೆ. ಆವತ್ತು ಏಟು ಹಪ್ಪಳ ತಿಂದ್ನೀ ಅಂದ್ರ ಜೀವನ್ದಾಗ ಮತ್ಯಾವತ್ತು ಹಪ್ಳ ತಿನಬೇಕು ಅಂತ ಅನಿಸಿಲ್ನೋಡು ಅಂತ ಅಪ್ಪ ಮಾತು ಮುಗಿಸಿದ. ಆತನ ಕಣ್ಣೊಳಗೆ ನೀರು ಚಕ್ರವಾಗಿ ತಿರುಗುತ್ತಿದ್ದವು. ನನಗೆ ಏನೇಳಬೇಕೊ ತಿಳಿಯದೇ ಹಾಗೆ ಹೊದ್ದುಕೊಂಡ ಕೌದಿಯಲಿ ಮುಖ ಹುದುಗಿಸಿಕೊಂಡೆ, ನನ್ನ ಕಣ್ಣಲ್ಲೂ ನೀರಿದ್ದವು. + +ಸಾಲಿಯಲ್ಲಿ, ಹುಡುಗರಾಡುವ ಗೋಲಿ ಆಟದಲ್ಲಿ ನಮ್ಮುನ್ನ ಗುರುತ್ಸಾದೆ ಮಟ್ಕಾದ ಹೆಸರಿಂದ. ಕೆಲವೊಮ್ಮೆ ಹೀಯಾಳಿಸೋ ಜೊತೆಯ ಹುಡುಗ್ರಿಗೆ‘ಹೌದಲೇ ನಿಮೌನ, ನಮಪ್ಪ ಮಟ್ಗಾ ಬರದ ನಮ್ಮನ್ನ ಬದಕ್ಸ್ಯಾರ’ ಅಂತ ಖಡಾಮುಡಿಯಾಗಿ ಹೇಳಿ ಕಣ್ಣೀರಾಗಿ ಅಲ್ಲಿಂದ ಕಾಲ್ಕೀಳುತ್ತಿದ್ದೆ.ಇದನ್ನೆಲ್ಲ ಯೋಚಿಸುತ್ತಲೇ ಊರೊಳಗೆ ಬಂದಿದ್ದೆ. ದುರುಗಮ್ಮನ ಗುಡಿಯ ಮುಂದೆ ಬೈಕು ಸೈಡಿಗಿಟ್ಟು ಕ್ವಾಟಿ ಎಂದು ಕರೆಯುವ ಮೆಟ್ಟಿಲುಗಳೇ ಆಗಿಹೋಗಿದ್ದ, ಇಟ್ಟ ಅಸಂಖ್ಯಾತ ಹೆಜ್ಜೆಗಳ ಕಾರಣದಿಂದ ನುಣುಪಾದ ಬಂಡೆಗಳ ಮೇಲೆ ಕಾಲಿಟ್ಟು ಕಾಲುದಾರಿಯಲಿ ಮನೆಯ ಕಡೆ ನಡೆದು ತಲುಪಿದರೆ ಅವ್ವ ಪ್ಯಾಂಟಿಗೀ ಮುಂದೆಯೇ ಕಾಯುತ್ತಿದ್ದಳು. + +“ಇನ್ನಾ ಬೆಳಕರದಿದ್ದಿಲ್ಲಪೋ ಆವಾಗಲೇ ಆತ ಕರ್ರಗ ಅದಾನಲ ಪೋಲೀಸ ಬಂದು ಎಬಿಸಿಗೆಂಡು ಮಾರೀಸತ ತೊಳೀಲಾರದ್ಹಂಗ ಕರಕೊಂಡೋದ್ರು ಜಲ್ದೀ ಹೋಗಪೋ” ಅಂತ ಕೈಯ ಮುಷ್ಟಿಯಲ್ಲಿಡಿದಿದ್ದ ಕಿವಿಯ ಓಲೆಗಳನ್ನ ಕೊಡಬೇಕೋ ಬೇಡವೋ ಎಂಬಂತೆ ಕೈಗಿಟ್ಳು. ‘ರೊಕ್ಕ ಬೇಕಾದರ ಇವ್ನ ಒತ್ತಿಡು’ ಅಂದು ಸೀರೆಯ ಸೆರಗಿನಿಂದ ಕಣ್ಣೊರೆಸಿಕೊಂಡಳು. ಜೇಬಲಿ ಎರಡು ಮೂರು ಸಾವಿರ ಇದ್ದವಾದರೂ ಇರಲಿ ಎಂದು ಅವನ್ನ ಒಂದು ಕಾಗದದಲ್ಲಾಕಿಕೊಂಡು ಬೊಕ್ಕಣದಲ್ಲಿಟ್ಕೊಂಡು ನಡೆದೆ. ಅವ್ವನ ಖಾಲಿ ಕಿವಿಗಳು ನನ್ನ ದಾರಿಯುದ್ದಕ್ಕೂ ಕಾಡುತ್ತಿದ್ದವು.ಊರಿನ ದಳಪತಿ ಆಗಿದ್ದ ಹಳೆ ಗೆಳ್ಯಾ ಬಸ್ವನ್ನ ಕರಕೊಂಡು ಸಿರವಾರ ಪೋಲೀಸ್ ಸ್ಟೇಷನಕ ಬಂದಾಗ ಅಪ್ಪಹೊರಗೆ ಕಟ್ಟೆಯ ಮೇಲೆಯೇ ಕಾಣಿಸಿದ. + +ಹತಾಶೆ ಆತನ ಮುಖದ ಮೇಲೆ ತಾಂಡವವಾಡ್ತಿತ್ತು. ಕುಗ್ಗಿದಂತಾಗಿ, ಮುದುರಿ ಕುಳಿತ ಆತನ ಮುಂದೋಗಿ ಚಪ್ಪಲಿ ಆಚೆ ಸರಿಸಿ ಕುಳಿತೆ. ಸ್ವಲ್ಪ ಹೊತ್ತು ಯಾರಲ್ಲಿಯೂ ಮಾತುಗಳಿರಲಿಲ್ಲ. ಅಪ್ಪ ನುಗ್ಗಿಬರುವ ಕಣ್ಣೀರನ್ನ ಇಂಗಿಸಲೆಂದೇ ಆಕಾಶ ನೋಡುತ್ತಿರುವಂತೆ ಅನಿಸಿತು. + +‘ಏ ಬೀರಪ್ಪ ಸಾಹೇಬ್ರು ಕರೀತಾರ ಬಾ’ ಅಂತ ಪೋಲೀಸೊಬ್ಬಾತ ಅಪ್ಪನನ್ನ ಎಬ್ಬಿಸಿಕೊಂಡೋದು.ಆತನ ಹಿಂದೆಯೇ ಎದ್ದ ನನಗೆ ನೀವು ಇಲ್ಲೇ ಇರ್ರೀ ಎಂಬಂತೆ ಸನ್ನೆ ಮಾಡಿದ. ಬಸುವ ಸಡಗ್ಗನ ಎದ್ದು ಅವ್ರಿಂದೋದ. + +‘ಒಂದಕ ಎಂಟು ಕೊಡ್ತೀವಂತ ಏಟು ಮಂದೀ ಮನೀ ಹಾಳ ಮಾಡ್ತ್ರಲೇ ಲಂಗಸೂಳ್ಯಮಕ್ಳೇ. ಹಾಕಿ ಒದ್ರ ಸೀದಾತೀರಿ ನಾಚಿಗಿ ಇಲ್ಲ ನಿಮಗ, ಏಟ ಸಲ ಉಗುಳಿದ್ರು ಯಾವನಲೇ ಅವ ಪಟ್ಟಿ ತಗಳಾವ ಏಳಿಬುಡು ನಿನ್ನ ಬುಡತೀವಿ’ ಅಂತ ಒದರಾಡೋದು ಕುಳಿತಲ್ಲೀಗಿ ಕೇಳುತ್ತಿತ್ತು. ಮಾತಿಗೊಮ್ಮೇ ಸಾಬರು ಸಾಬರು ಅಂತಿದ್ದ ಮುಖ್ಯಾಧಿಕಾರಿ ಮಹಿಳೆ ಇದ್ದಂಗಿತ್ತು. + +‘ಇಲ್ರೀ ಈಗ ಬರಿಯಾದು ಬಿಟ್ಟೀನ್ರೀ ನನಗೊತ್ತಿಲ್ರೀ’ ಅಂತ ಅಪ್ಪ ಅಂಗಲಾಚುತ್ತಿದ್ದ. ‘ದಳಪತಿ’ ಬಸುವ “ಮ್ಯಾಡಮ್ಮೋರ ಈಗ ಬರಿಯಾದ ಬುಟ್ಟಾನ್ರೀ, ನಾನ ನೋಡೀನಿ.. ಇದೊಂದ್ಸಲ ಬುಡ್ರೀ.. ಇನಮುಂದ ನಾನ ತಿಳಿಸಿ ಹೇಳ್ತೀನಿ. ನಿಮಗ ಮುಟ್ಟಸಾದ ಮುಟ್ಟಿಸ್ತಾನ್ರೀ. ಅದ್ಕ ನಾ ಜಮಾನತು ಕಳಿಸಿಬುಡ್ರೀ ಪಾಪ ಮಗಾ ಬಂದಾನ ನೌಕ್ರೀ ಮಾಡ್ತಾನ” ಅಂತ ಗೋಗರೆಯುತ್ತಿದ್ದ. + +‘ಆಯ್ತು ಇಲ್ಲಿ ಬಗೀ ಹರದದ್ದು ಊರೋವ್ರ ಮುಂದ ಒದ್ರಬ್ಯಾಡ. ನಾಳಿಗೀ ಮುಟ್ಸು. ಮತ್ತಾವ್ದಾರ ವಾಟ್ಸಪ್ಪು, ಪೇಸ್ಬುಕ್ಕು ಅಂತ ನಿನ ಮಗ ಬರದು ಕುಂತಾನು, ತಿಳ್ಸೀ ಹೇಳು ಮತ್ಯಾ.. ಇಲ್ಲಂದ್ರ ಗಡೀಪಾರಾ ಮಾಡ್ತೀನಿ, ಹೇ ಬಸ್ಸಪ್ಪ ನಾ ಸ್ಟೇಷನ್ನದಾಗ ಇರೋದ್ರಳಗ ನೀವು ಇಲ್ಲಿಂದ ಹೋಗ್ರೀ ಇಲ್ಲಾಂದ್ರ ನಮ್ಮೊವ್ರು ಹರಕಂಡು ತಿಂತಾರ ನೋಡು” ಅಂತೇಳಿ ಕಳಿಸಿದ್ರು .ಅಪ್ಪನ ಜೊತಿ ಹೊರಗ ಬಂದ ಬಸುವ,‘ಏನಿಲ್ಲ, ನಾ ಎಲ್ಲ ಹೇಳೀನಿ, ಎಲ್ಲಾ ಸರಿಯಾಗ್ಯಾದ ಹೆಸರು ಸಮತ್ಯಾಕ ತೆಗಿಸೀನಿ, ನಡ್ರೀ ಇಲ್ಲೀ ನಿಂದ್ರಾದ ಬ್ಯಾಡ” ಅಂತ ಅವಸರ ಮಾಡಿದ. ಹೆಗಲ ಮ್ಯಾಲಿದ್ದ ಟವಲ್ಲು ಬಾಯಿಗಿ ಕಚ್ಚಿ ಇಟಗಂಡು ಅಪ್ಪ ಬೈಯ್ಕ್ಯಾಂತ ಬಂದು ಗಾಡಿ ಮ್ಯಾಲ ಕುಂತ “ಖಬರ್ ಇಲ್ದ ಸೂಳೀಮಕ್ಳು ಊರು ಕಡೇ ಬಂದಾಂಗೆಲ್ಲ ಐನೂರು ಕೊಟ್ಟೀನಿ, ಪೆಟ್ರೋಲು ಹಾಕಿಸೀನಿ ಮುಂಜಾನಿ ಗೌಡಗ ಒಂದು ಪೋನಚ್ಚಾಕ ಬುಡ್ಲಿಲ್ಲ. ಬರಲೀ ಈ ಸಲ ಸಾಬಗ ಮಾತಾಡಿಕೆಂಡು ಕೊಡಾದು ತಗಳಾದು ಇವ್ರೇನು ಶಂಟ ಹರಕ್ಕಾಂತರ” ಅಂತ ಗೊಣಗುತ್ತಿದ್ದ. + +ನೌಕರಿ ಹಿಡಿದು ಹತ್ತು ವರ್ಷವಾದರೂ ನಾ ಮಾಡಿದ್ದೇನು? ಎನ್ನುವ ಪ್ರಶ್ನೆ ತುಂಬಾ ಸಲ ಚುಚ್ಚುತ್ತಿತ್ತಾದರೂ ಈಗ ಅದು ಎದೆಯನ್ನು ಒರೆಗತ್ತಿಯಿಂದ ತಿವಿದಂತಾಯಿತು. + +ಬರುವ ಸಂಬಳವೆಲ್ಲ ಮಾಡಿಕೊಂಡ ಸಾಲಕ್ಕೆ ಸರಿಹೋಗಿ ಅಪ್ಪ ಪೋನ್ ಮಾಡಿದಾಗ ಎಲ್ಲಿ ದುಡ್ಡು ಕೇಳುತ್ತಾನೋ ಅಂತ ಆತಂಕವಾಗುತ್ತಿತ್ತು. ಅಪರೂಪಕ್ಕೆ ಎತ್ತಿದರೆ “ಇದ್ದೊಬ್ಬ ಮಗನಿದ್ದೀ, ನಿನ ಬಿಟ್ರ ನಮ್ಗರ ಯಾರದಾರ.. ನೀ ಏನು ಕೊಡಾದು ಬ್ಯಾಡಪೋ, ಪೋನೆತ್ತು ಸಾಕು” ಅಂತ ನೋವಿನಿಂದ ಹೇಳೋರು ಆವಾಗೆಲ್ಲ ನನ್ನ ಕುರಿತೇ ನನಗೆ ಅಸಹ್ಯ ಅನ್ಸೋದು. ಹತ್ತು ನಿಮಿಷಕ್ಕೆ ಮನೆ ಸೇರಿ ನಾನು ಕಟ್ಟೇ ಮ್ಯಾಲೆ ಕೂಡುತ್ತಿದ್ದಂತೆ‘ಹೋಗಪ ಕಾಲು-ಕೈ ಮುಖ ತೊಳ್ಕೋಗು, ನೀರು ಕೊಡಂಗೇ ಅಣ್ಣಗ’ ಅಂತ ಹೇಳಿ ಅಪ್ಪ ಎದ್ದು ಮನೆಯೊಳಗೆ ಹೋದ. + +ಸಿಲವಾರದ ತಂಬಿಗೆಯಲ್ಲಿ ನೀರು ತಂದ ತಂಗೀ ಜೊತೆ ಹೆಚ್ಚು ಮಾತಾಡ್ಲಾರದೆ ನಾಮಾಕಾವಸ್ಥೆಗೆ ಮುಖಕ್ಕೆ ನೀರಾಕಿ ಉಳಿದೆಲ್ಲ ನೀರನು ಪುರ್ರನೇ ಕಾಲಿಗೆ ಸುರುವಿಕೊಂಡು ಒಳ ಹೋದರೆ ಅಪ್ಪ ಒಟ್ಟಿದ್ದ ನೆಲ್ಲಿನ ಚೀಲಗಳಿಗೆ ಬೆನ್ನುಕೊಟ್ಟು ಕುಳಿತಿದ್ದ. + +“ಏನ್ ಪೋಲೀಸ್ರು ಜರಕೊಂಡು ಹೋದ್ರೇನಪ ಏನ ಸಾಬು ಬಂದಿದ್ನಾ” ಮೌನ ಮುರಿದೆ. + +“ಯಾರ ಬಂದ್ರ ಏನಪ ರೊಕ್ಕ ಸುಲ್ಯಾ ಸೂಳಿಮಕ್ಳು ಸಾವ್ರ ಕೊಡು ಐದು ಸಾವ್ರ ಕೊಡು ಅಂದ್ರ ಎಲ್ಲಿಂದ ತರಾದು”ಅಂತ ನಿಟ್ಟುಸಿರು ಬಿಟ್ಟ. + +“ಅದಕ್ಕ ಅಂತೀನೆಪ, ನೀ ಆಡಂಗಿದ್ರ ಆಡು.. ಆದ್ರೆ ಬರಿಯಾದು ಬುಟ್ಟುಬುಡು ಅಂತ ನೀ ಕೇಳಂಗಿಲ್ಲ. ಆ ಸ್ಟೇಷನ್ನಿನಾಗ ನೋಡಿದಿಲ್ಲ ಹೆಂಗ್ ಮಾತಾಡತಾರ. ಮರಿಯಾದಿ ಇಲ್ದ.. ನನಕೈಯಾಗ ಕಲ್ತು ಹುಡುಗ್ರು ಪಿ.ಸಿ ಆಗ್ಯಾವ. ಏನ ಹೇಳಬೇಕು ಅವುಟ್ರು ಮುಂದ” ಅಂತ ನಾನು ಅನುವತ್ತಿಗೆ“ಏನ ಮಾಡಂದೆಪ? ನಾನೇನು ಕುಡ್ದು ತಿಂದು ಮಜಾ ಮಾಡಾಕ ಬರೀತೀನೇನು, ತಂಗಿ ಮದುವೀಗಿ ನೀ ಕೊಡತೀನಿ ಅಂತೇಳಿ ಕೈ ಎತ್ತೀದಿ. ಆ ಸಾಲ ಹಂಗಾ ಕುಂತಾದ. ಪಟ್ಟಿ ತಗಳಾ ಗೌಡಂತಾಕ ಎಲ್ಡ್ ಆದ ಬರಿಯಾದ ಬುಟ್ರ ಕೊಡು ಅಂತಾರ. ಅದ್ರಾಗ ಮುಟ್ಟಸಬೋಕು. ನಮಗೇನು ಬರತಾದ ಮಾಡಾಕ, ಕೂಲಿ ಕೆಲಸಕ ಹೋಗಾಮು ಅಂದ್ರ ಮಗ ಮಾಸ್ಟ್ರದಾನ, ಇವ್ರು ನೋಡು ಅಂತಾ ಜನ ಆಡಿಕೆಂತಾರ. ಇರ ದೀಡೆಕ್ರೇ ಹೊಲ್ದಾಗ ನಾವು ಮಾಡಿವೆಷ್ಟು, ಬುಟ್ಟೀವೆಷ್ಟು. ಅದಕ ಸಣ್ಣಕೀ ತಂಗೀದು ಪರೀಕ್ಷಾ ಮುಗುದ್ರಾ ಬೆಂಗ್ಳೂರು ಹೋಗಾಮು ಅಂತ ಮಾಡೀವಿ ದುಡ್ಯಾಕ” ಅಂತಂದು ಕುಳಿತ ಮುಖದಲ್ಲಿ ಮುಗಿಯದ ವೇದನೆಯಿತ್ತು. ಅಸಲು ದಾರಿಗಳಾದರೂ ಏನಿದ್ದಿಲ್ಲ ಅಪ್ಪನ ಮುಂದೆ. + +‘ಎಷ್ಟೈತಿ ಸಾಲ ಹೇಳು ಸಂಬ್ಳದ ಮ್ಯಾಲ ಲೋನೆತ್ತಿ ಕೊಡತೀನಿ. ಅದು ಮುಟ್ಸೀ ಹೆಂಗಾರ ಇಲ್ಲಿರು. ಇಲ್ಲ ನಮ ಜೆತೀಗಿ ಬರ್ರೀ ಅಲ್ಯಾ ಇರವಂತ್ರೀ’ ಅಂದೆ. ನಾ ಆಡಿದ ಮಾತು ಅಪ್ಪಗ ತುಸು ಸಮಾಧಾನ ಕೊಡ್ತು ಅಂತ ಕಾಣ್ತದ ಮುಖದಲಿ ಚೂರು ಗೆಲುವು ಕಾಣಿಸಿದಂತಾಗಿ ಮಾತಿನ ಮೋಡ್ ಗೆ ಬಂದ. + +“ಸುಮ್ನ ರಕ್ಕಕ ಮಾಡ್ತಾವಪ ಎಲ್ಯಾ ಮುಟ್ಟದ ಮುಟ್ಟಿರ್ತಾದ ಬೆಟ್ಯಾದಂಗೆಲ್ಲ ನನ್ನ ಚೆಕ್ ಮಾಡ್ಯಾರ. ಒಂದು ಪೆನ್ನು ಒಂದು ಹಾಳ್ಯಾ ಸಿಕ್ರು ಹಿಡಕೊಂಡು ಹೋಗಬೋಕು ಅಂತಾರ. ಇವತ್ತಿನ ತನ ನಾನು ಪೆನ್ನು ಇಡಂಗಿಲ್ಲ ಬಕ್ಕಣದಾಗ ಒಂದು ಹಾಳಿ ಇಡಂಗಿಲ್ಲ ಶಾಣಪ್ಪ. ಗೌಡಾಗ ಹೇಳೀನಿ ಕೊಡಾದ ಕೊಡ್ತಾನ ಇವು ಹಿಂಗಾ ನಡ್ಯಾವ, ನೋಡು ನೀ ಅಷ್ಟು ಸಾಲ ಮುಟ್ಸು. ನಾನರ ಯಾಕ ಬರೀಲಿ ತಣ್ಣಗ ಮನ್ಯಾಗ ಇರತೀನಿ” ಅಂದು ನನ್ನ ಮುಖ ನೋಡಿದ. ಆಯ್ತು ಎಂಬಂತೆ ಮುಖ ಮಾಡಿದ ನಾನು ಚೂರು ಹೊರಗೆ ಹೋಗಿ ಬರ್ತೀನಿ ಎಂಬಂತೆ ಎದ್ದು ಹೊರಗೆ ಬಂದರೆ, ಓದಿದ ಶಾಲೆ ಕಣ್ಣಿಗೆ ಬಿತ್ತು. ಒಳಗೆ ಹೋದರೆ ಶಿಕ್ಷಕರೆಲ್ಲ ಪ್ರೀತಿಯಿಂದ ಕರೆದು ಮಾತಾಡಿಸಿದರು. + +ಹೊಸದಾಗಿ ಅಪಾಯಿಂಟ್ ಆಗಿದ್ದ ಶಿಕ್ಷಕರೊಬ್ಬರು ನನ್ನ ಹೆಸರು ಕೇಳುತ್ತಿದ್ದಂತೆ “ಹೋ ನೀವಾ ಮೈ ಗಾಡ್ ಎಷ್ಟು ಚಂದ ಕತೆ ಬರೀತೀರಿ ಸೂಪರ್ ಸರ್” ಅಂದು ಕೈ ಕುಲುಕಿದರು. + +“ಸರ್ ನಿಮ್ದು ಪುಸ್ತಕ ಬರತಾದ ಅಂದ್ರು, ಇನ್ನೂ ಮಾಡಿಲ್ಲೇನು” ಅಂತ ಇನ್ಚಾರ್ಜ್ ಇದ್ದ ಮಾಸ್ತರು ಕಾಳಜಿ ತೋರಿಸಿದರು. ಅವರು ಹಾಗೆ ಮಾತಾಡುತ್ತಿದ್ದರೆ ನನಗೆ ನಮ್ಮೂರ ಮಕ್ಕಳು ಹೇಗಿದಾರೆ.. ಈಗಿನ ಅವರ ಭಾವನೆಗಳು, ಬೆಳವಣಿಗೆ, ಕಲಿಕೆ ಹೇಗಿದೆ ನೋಡಬೇಕೆನಿಸುವ ಕಾತುರವಾಗಿ‘ಸರ್ ಕ್ಲಾಸೊಳಗ ಹೋಗಲಾ’ ಅಂದೆ.. + +‘ಅಯ್ಯೋ ಎಂತವರ್ರೀ ಸರ್ ನೀವು, ನಿಮ್ಮಂತೋರು ಮಾತು ಕೇಳಾದ ಪುಣ್ಯ, ಎಂತೆಂತ ಕಾರ್ಯಕ್ರಮದಾಗ ಮಾತಾಡೀರಿ.. ಬರ್ರೀ’ ಅಂತೇಳಿ ಚೂರು ದೊಡ್ಡ ಮಕ್ಕಳಿದ್ದ ಕ್ಲಾಸಿಗೆ ಕರೆದುಕೊಂಡು ಹೋದರು. + +“ನಮ್ಮ ಊರಿನವರೇ ಆದ ಶ್ರೀಯುತರು ಅತ್ಯುತ್ತಮ ಬರಹಗಾರರು, ಚಿಂತಕರು.. ಅವರು ನಿಮ್ಮನ್ನೆಲ್ಲನ್ನ ಉದ್ದೇಶಿಸಿ ಎಲ್ಡು ಮಾತಾಡ್ತಾರ ಗಲಾಟಿ ಮಾಡಬ್ಯಾಡ್ರೀ” ಅಂದು ಹೆಂಗ್ ಮಾತಾಡಿದೆ ಎಂಬಂತೆ ನನ್ನೆಡೆ ನೋಡಿದರು. ಸುಮಾರು ಮೂವತ್ತು ಮಕ್ಕಳಿರುವ ಕ್ಲಾಸದು. ಮಟ್ಟಸವಾಗಿ ಯೂನಿಫಾರ್ಮಲೀ ಬೆಂಚಿಗೆ ಕೂತಿದ್ದವು. ನಾವು ಓದುವ ಕಾಲಕ್ಕೆ ಶಹಬಾದ್ ಬಂಡೆಯೇ ನಮಗೆ ಎಲ್ಲವೂ ಕೂಡಲು ಬರೆಯಲು… ಎಲ್ಲಾ ಮಕ್ಕಳ ಕಡೆ ಕಣ್ಣಾಯಿಸಿ ಗಂಟಲು ಸರಿ ಮಾಡಿಕೊಂಡು ಏನೋ ಹೇಳಲು ಬಾಯಿತೆರೆಯುತ್ತಿದ್ದಂತೆ ಸಣ್ಣಗೆ ಕರ್ರಗೆ ಇದ್ದ ಹುಡುಗಿಯೊಂದು ಗುಂಪಿನೊಳಗಿಂದ ಎದ್ದು,“ಇತಾ ಮಟ್ಗಾ ಬೀರಪ್ಪನ ಮಗಾ ಅಲ್ರೀ?” ಅಂತ ಕೇಳಿಬಿಟ್ಟಳು. + +ತರಗತಿಯಿಡೀ ಗುಸು ಗುಸು ಚಾಲೂ ಆಯ್ತು. ಪರಿಚಯಿಸಿದ ಮಾಸ್ತರಿಗೆ ದಿಕ್ಕು ತಪ್ಪಿ ಪರಸ್ಥಿತಿಯನ್ನ ಹೇಗೆ ಹತೋಟಿಗೆ ತರುವದು.. ಆ ಮಗು ಅಂದ ಮಾತಿಗೆ ನನ್ನ ಪ್ರತಿಕ್ರಿಯೆ ಹೇಗಿರುವದೊ ಎಂಬ ಆತಂಕವೆನಿಸಿ ತಡಬಡಾಯಿಸತೊಡಗಿದ. + +“ಹೌದು ಕೂಸೇ, ನಾ ಅವರ ಮಗಾನೇ” ಅಂತಷ್ಟೇ ಹೇಳಿ ಹೊರಗೆ ಬಂದರ. ನನಗೆ ಅಲ್ಲಿ ನಿಲ್ಲಲಾಗಲಿಲ್ಲ. ನೇರ ಗುಡಿಯ ಮುಂದೆ ಬೈಕಿದ್ದಲ್ಲಿಗೆ ಹೋಗಿ ಸ್ಟಾರ್ಟ್ ಮಾಡಿ ತಿರುಗಿಸಿದೆ. + + + +ಹೇಗಾದರೂ ಅಪ್ಪನ ಸಾಲ ತೀರಿಸಿ ಇದೆಲ್ಲ ಬಿಡಿಸಬೇಕು. ಮುಂದಿನ ಸಲ ಬರೊವತ್ತಿಗೆ ಅಪ್ಪನ ಹೆಸರಿನ ಜೊತೆಯಿದ್ದ ಆ ಉಪನಾಮವಿರಕೂಡದು ಎಂಬುದನ್ನ ಯೋಚಿಸುತ್ತ ಬೈಕಿನ ವೇಗ ಹೆಚ್ಚಿಸಿದೆ.. + +ಶರಣಬಸವ ಕೆ ಗುಡದಿನ್ನಿ ರಾಯಚೂರು ಜಿಲ್ಲೆಯ ವೃತ್ತಿಯಲ್ಲಿ ಪ್ರಾಥಮಿಕ ಶಿಕ್ಷಕ. ಕತೆ ಇವರ ಆಸಕ್ತಿಯ ಕ್ಷೇತ್ರ. ಸತತ ಎರಡು ವರ್ಷ ವಿಜಯ ಕರ್ನಾಟಕ ಯುಗಾದಿ ಕಥಾ ಸ್ಪರ್ದೆಯ ಟಾಪ್-25 ಕತೆಗಳಲ್ಲಿ ಇವರ ಕಥೆಗಳು ಆಯ್ಕೆಯಾಗಿವೆ. \ No newline at end of file diff --git a/Kenda Sampige/article_274.txt b/Kenda Sampige/article_274.txt new file mode 100644 index 0000000000000000000000000000000000000000..df365f4257bca15d13a2ca4d87ba4a849f7217de --- /dev/null +++ b/Kenda Sampige/article_274.txt @@ -0,0 +1,445 @@ + + +ಜುಂಪೇಯ ಅಪ್ಪ ಆ ಮಾತನ್ನು ಸ್ಪಷ್ಟವಾಗಿ ನುಡಿದಾಗ ಜುಂಪೆ ಹದಿನಾರು ವರ್ಷದವನಾಗಿದ್ದ. ಅವರಿಬ್ಬರಲ್ಲಿಯೂ ಒಂದೇ ರಕ್ತ ಪ್ರವಹಿಸುತ್ತಿದ್ದರೂ ಪರಸ್ಪರರು ಒಟ್ಟಿಗೆ ಕುಳಿತು ಮನಸ್ಸು ಬಿಚ್ಚಿ ಮುಕ್ತವಾಗಿ ಮಾತನಾಡುವಷ್ಟು ಆತ್ಮೀಯತೆ ಅವರಲ್ಲಿ ಇರಲಿಲ್ಲ. ಇಷ್ಟಕ್ಕೂ ಜುಂಪೇಯ ಅಪ್ಪ ಯಾವತ್ತಿಗೂ ತನ್ನ ಜೀವನದ ಅನುಭವಗಳನ್ನು ಮಗನಿಗೆ ಹೇಳಿದವನಲ್ಲ. ಹೀಗಾಗಿಯೇ ಅವತ್ತು ಅಪ್ಪ ಯಾವುದೋ ಸಂಭಾಷಣೆಯ ಮಧ್ಯೆ ಇದ್ದಕ್ಕಿದ್ದ ಹಾಗೆ ಹೇಳಿದ ಮಾತುಗಳು ಇವತ್ತಿಗೂ ಜುಂಪೇಗೆ ಸ್ಪಷ್ಟವಾಗಿ ಜ್ಞಾಪಕದಲ್ಲಿದೆ. + +“ಒಬ್ಬ ಪುರುಷನ ಜೀವನದಲ್ಲಿ ಬಂದು ಹೋಗುವ ಮಹಿಳೆಯರಲ್ಲಿ, ಕೇವಲ ಮೂರು ಮಹಿಳೆಯರು ಮಾತ್ರ ಅವನ ಬದುಕಿಗೊಂದು ನಿಜವಾದ ಅರ್ಥವನ್ನು ಕಲ್ಪಿಸುತ್ತಾರೆ. ಮೂರು ಮಾತ್ರ. ಅದಕ್ಕಿಂತ ಹೆಚ್ಚಿಲ್ಲ, ಕಡಿಮೆಯಿಲ್ಲ.” ಅಪ್ಪ ಹೇಳಿದ್ದ ಅಥವಾ ಘೋಷಿಸಿದ್ದ. ಅಪ್ಪ ಯಾವುದೇ ಉದ್ವೇಗವಿಲ್ಲದೆ ಅದೆಷ್ಟು ಖಚಿತವಾಗಿ ಈ ಮಾತನ್ನು ಆಡಿದ್ದನೆಂದರೆ, ಭೂಮಿ ಸೂರ್ಯನ ಸುತ್ತ ಸುತ್ತುವದು ಹೇಗೆ ಸಾರ್ವಕಾಲಿಕ ಸತ್ಯವೋ ಹಾಗೆಯೆ ಅಪ್ಪನ ಮಾತು ಸಹ ಅಷ್ಟೇ ಸತ್ಯವೆನಿಸಿತ್ತು. ಯಾವುದೋ ಸಂಭಾಷಣೆಯ ನಡುವೆ ಅನಿರೀಕ್ಷಿತವಾಗಿ ಅಪ್ಪ ಹೇಳಿದ್ದ ಈ ಮಾತಿಗೆ ಪ್ರತಿಕ್ರಿಯಿಸುವದು ಹೇಗೆಂದು ಗೊತ್ತಾಗದೆ ಅವನು ಮೌನವಾಗಿ ತಲೆಯಾಡಿಸಿದ್ದ. “ಬಹುಶಃ ಮುಂದೆ ನಿನ್ನ ಜೀವನದಲ್ಲಿ ಬಹಳಷ್ಟು ಹುಡುಗಿಯರು ಬಂದು ಹೋಗಬಹುದು…” ಅಪ್ಪ ಮುಂದುವರೆಸಿದ್ದ.. “ಆದರೆ ಒಂದು ಮಾತು ನೆನಪಿನಲ್ಲಿರಲಿ, ನಿನಗೆ ತಾಳೆಯಾಗದ ಹುಡುಗಿಯೊಟ್ಟಿಗೆ ಸಮಯ ಕಳೆಯುವದು ವ್ಯರ್ಥ…” + +ಅಪ್ಪ ಹೇಳಿದ್ದ ಆ ಮಾತು ಜುಂಪೆಯ ಮನಸ್ಸಿನಲ್ಲಿ ಹಲವಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿತ್ತು . “ಅಪ್ಪನ ಬದುಕಿನಲ್ಲಿ ಈಗಾಗಲೇ ಆ ಮೂರೂ ಮಹಿಳೆಯರು ಬಂದು ಹೋಗಿದ್ದಾರೆಯೇ? ಅಮ್ಮ ಆ ಮೂರು ಜನರಲ್ಲಿ ಒಬ್ಬಳೇ? ಹೌದು ಎಂದಾಗಿದ್ದರೆ ಉಳಿದ ಇಬ್ಬರು ಯಾರಿರಬಹುದು?” ಇವೆಲ್ಲ ಸಲಿಗೆಯಿಲ್ಲದ ಅಪ್ಪನಲ್ಲಿ ಯಾವತ್ತಿಗೂ ಕೇಳದ, ಉತ್ತರ ಸಿಗದ, ಪ್ರಶ್ನೆಗಳಾಗಿಯೇ ಕೊನೆಯವರೆಗೂ ಉಳಿದುಕೊಂಡಿದ್ದವು. + +ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ಜುಂಪೇ ಮನೆಯನ್ನು ಬಿಟ್ಟು ಮುಂದಿನ ಓದಿಗೆ ಟೋಕಿಯೋ ವಿಶ್ವವಿದ್ಯಾಲಯಕ್ಕೆ ಸೇರಿದ್ದ. ಅಲ್ಲಿ ಹುಡುಗಿಯೊಬ್ಬಳೊಟ್ಟಿಗೆ ಸಂಬಂಧ ಬೆಳೆದಾಗ, ತನ್ನ ಜೀವನಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಬಲ್ಲ ಆ ಮೂರು ಹುಡುಗಿಯರಲ್ಲಿ ಇವಳೊಬ್ಬಳು ಎಂದು ಅವನಿಗೆ ಅನಿಸಿತ್ತು. ಅವಳನ್ನು ನೋಡಿದಾಗಲೇ ಅವನಿಗೆ ಈ ವಿಷಯ ಖಚಿತವಾಗಿತ್ತು. ಆದರೆ ಜುಂಪೇ ತನ್ನ ಮನಸ್ಸಿನಲ್ಲಿದ್ದ ಭಾವನೆಗಳಿಗೆ ಶಬ್ದದ ರೂಪವನ್ನು ನೀಡಿ ಅವಳ ಮುಂದೆ ನಿವೇದಿಸುವದರೊಳಗಾಗಿ, ಅವಳು ಅವನ ಆಪ್ತ ಸ್ನೇಹಿತನೊಟ್ಟಿಗೆ ಮದುವೆಯಾಗಿ ಒಂದು ಮಗುವಿಗೆ ತಾಯಿಯಾಗಿದ್ದಳು. ಹೀಗಾಗಿ ಜುಂಪೇ ಬಲವಂತದಿಂದ ಅವಳನ್ನು ತನ್ನ ಜೀವನದ ಭಾಗವಾಗಿ “ನಿಜವಾದ ಅರ್ಥವನ್ನು ಕಲ್ಪಿಸಬಲ್ಲ” ಆ ಮೂರು ಜನ ಹುಡುಗಿಯರ ಯಾದಿಯಿಂದ ಹೊರಹಾಕಬೇಕಾಯಿತು. ಜುಂಪೇ ಹೃದಯವನ್ನು ಕಲ್ಲು ಮಾಡಿಕೊಂಡು ತನ್ನ ಮನಸ್ಸಿನಿಂದ ಅವಳನ್ನು ಅಳಿಸಿ ಹಾಕಿದ್ದ. ಇದಾದ ಮೇಲೆ ಅಪ್ಪನ ಸೂತ್ರದ ಪ್ರಕಾರ ಅವನ ಜೀವನಕ್ಕೆ ನಿಜವಾದ ಅರ್ಥವನ್ನು ಕಲ್ಪಿಸಬಲ್ಲ ಹುಡುಗಿಯರ ಸಂಖ್ಯೆ ಮೂರರಿಂದ ಎರಡಕ್ಕೆ ಇಳಿದಿತ್ತು. + +ಪ್ರತಿ ಬಾರಿ ಹುಡುಗಿಯೊಬ್ಬಳನ್ನು ಭೇಟಿಯಾದಾಗಲೆಲ್ಲ ಜುಂಪೇಯ ಮನಸ್ಸಿನಲ್ಲಿ ಮೂಡುತ್ತಿದ್ದ ಪ್ರಶ್ನೆಯೇನೆಂದರೆ “ಇವಳು ನನ್ನ ಜೀವನಕ್ಕೆ ನೈಜ ಅರ್ಥವನ್ನು ಕೊಡಬಲ್ಲಳೇ?”. ಈ ಪ್ರಶ್ನೆ ಅವನಲ್ಲಿ ಅಸಾಧ್ಯ ಸಂದಿಗ್ಧತೆಯನ್ನು ಹುಟ್ಟುಹಾಕುತಿತ್ತು. ಮುಂದೊಂದು ದಿನ ತನ್ನ ಬದುಕಿಗೆ ಅರ್ಥ ಕೊಡಬಲ್ಲ ಹುಡುಗಿಯೊಬ್ಬಳು ಸಿಕ್ಕೇ ಸಿಗುತ್ತಾಳೆ ಎನ್ನುವ ಭರವಸೆಯಿದ್ದರೂ, ಈಗಾಗಲೇ ಒಬ್ಬಳನ್ನು ಕಳೆದುಕೊಂಡಿದ್ದರಿಂದ ಉಳಿದ ಇಬ್ಬರನ್ನು ಪತ್ತೆ ಮಾಡುವದರ ಬಗ್ಗೆ ಅವನು ಅತ್ಯ೦ತ ಜಾಗರೂಕನಾಗಿದ್ದ. ಈಗಾಗಲೇ ಒಂದು ಸಲ ತನ್ನ ಪ್ರಯತ್ನದಲ್ಲಿ ವಿಫಲನಾಗಿದ್ದರಿಂದ ಇನ್ನಿಬ್ಬರನ್ನು ಹುಡುಕಿ, ಸರಿಯಾದ ಸಮಯದಲ್ಲಿ, ಸರಿಯಾದ ರೀತಿಯಲ್ಲಿ ಅವರಿಗೆ ತನ್ನ ಭಾವನೆಗಳನ್ನು ನಿವೇದಿಸುವ ತನ್ನ ಸಾಮರ್ಥ್ಯದ ಬಗೆಗೆ ಜುಂಪೇಗೆ ಆತ್ಮವಿಶ್ವಾಸ ಕಡಿಮೆಯಾಗತೊಡಗಿತ್ತು. + +“ಬಹುಶ: ನಾನು ಜೀವನದಲ್ಲಿ ಅಷ್ಟೇನೂ ಮಹತ್ವವಿರದ ಸಂಗತಿಗಳನ್ನೆಲ್ಲ ಸರಿಯಾಗಿ ನಿಭಾಯಿಸಿಕೊಂಡು ಹೋದರೂ, ಯಾವುದು ಅತ್ಯಂತ ಮಹತ್ವದ್ದೋ ಅದರಲ್ಲಿ ಸೋಲುತ್ತೇನೆ” ಎನ್ನುವ ಯೋಚನೆ ಆಗಾಗ ಸುಳಿದು ಕಳವಳಗೊಳ್ಳುತ್ತಿದ್ದ. + +ಪ್ರತಿ ಹೊಸ ಸಂಬಂಧದಲ್ಲೂ ಜುಂಪೆ ತನ್ನಿಂದ ತಾನೇ ಸಂಬಂಧ ಮುರಿದುಬೀಳಬಹುದಾದ ಯಾವುದೋ ಒಂದು ದಿನಕ್ಕಾಗಿ ಕಾದು ಕುಳಿತಿರುತ್ತಿದ್ದ. ಸಬಂಧವೊಂದನ್ನು ಮುರಿದುಕೊಳ್ಳುವದು ಜುಂಪೆಗೆ ಅಂತಹ ಕಠಿಣ ವಿಷಯವಾಗಿರಲಿಲ್ಲ. ಜಗಳ, ಕೂಗಾಟ, ಕಿರುಚಾಟ ಯಾವುದೊಂದೂ ಇಲ್ಲದೆ ನಯವಾಗಿ ಜಾರಿಕೊಳ್ಳುವದು ಅವನಿಗೆ ಕರಗತವಾಗಿತ್ತು. ಹಾಗೆ ನೋಡಿದರೆ ಮುಂದೊಂದು ದಿನ ಜಗಳ ಕಾಯಬಹುದೆಂದು ಅನಿಸುವ ಹುಡುಗಿಯೊಟ್ಟಿಗೆ ಅವನು ಯಾವತ್ತೂ ಸಂಬಂಧ ಬೆಳೆಸುತ್ತಿರಲಿಲ್ಲ. ತನ್ನಲ್ಲಿ ಕರಗತವಾಗಿದ್ದ ಈ ಕೌಶಲ್ಯ ತನಗೆ ಜನ್ಮದತ್ತವಾಗಿ ಬಂದಿದ್ದೆ ಅಥವಾ ತಾನು ಬೆಳೆದ ವಾತಾರಣದ ಪ್ರಭಾವವೇ ಎನ್ನುವದರ ಬಗ್ಗೆ ಅವನಿಗೆ ಯಾವಾಗಲೂ ಸಂಶಯವಿತ್ತು. ವಾತಾವರಣವೇ ಕಾರಣವೆಂದಾದರೆ ಅದಕ್ಕೆ ಅವನಪ್ಪನ ಮಾತುಗಳು ಅವನ ತಲೆಯಲ್ಲಿ ಅಚ್ಚಳಿಯದೆ ಉಳಿದಿದ್ದೆ ಕಾರಣ. + +ಕಾಲೇಜಿನ ಕೊನೆಯ ವರ್ಷದಲ್ಲಿದ್ದಾಗ ಜು೦ಪೇ ಮತ್ತವನ ಅಪ್ಪನಿಗಾದ ಭಯಂಕರ ಜಗಳದ ನಂತರ, ಅವನು ಅಪ್ಪನೊಟ್ಟಿಗಿನ ಸಂಪರ್ಕವನ್ನು ಕ್ರಮೇಣ ಕಡಿಮೆ ಮಾಡುತ್ತಾ ಬಂದು ಕೊನೆಗೆ ಸಂಪೂರ್ಣವಾಗಿ ಕಡಿದುಕೊಂಡಿದ್ದ. ಅಪ್ಪನ ಜೊತೆಗಿನ ಸಂಪರ್ಕ ಪೂರ್ತಿಯಾಗಿ ಮುಚ್ಚಿಹೋಗಿದ್ದರೂ, ಅಪ್ಪ ಹೇಳಿದ್ದ ‘ಮೂರು ಮಹಿಳೆಯರ’ ಸಿದ್ಧಾಂತ ಮಾತ್ರ ಅವನ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿತ್ತು. ಕೆಲವೊಮ್ಮೆ ತಾನು ಸಲಿಂಗಕಾಮಿಯಾದರೂ ಆಗಿದಿದ್ದರೆ ಈ ಸಿದ್ಧಾಂತದಿಂದ ಮುಕ್ತಿ ಸಿಗುತ್ತಿತ್ತೇನೋ ಎಂದು ತನ್ನಷ್ಟಕ್ಕೆ ತಾನೇ ಕುಚೋದ್ಯ ಮಾಡಿಕೊಂಡಿದ್ದು ಇದೆ. ಒಳಿತೋ ಕೇಡುಕೊ ಒಟ್ಟಿನಲ್ಲಿ ಅವನ ಲೈ೦ಗಿಕ ಆಸಕ್ತಿ ಹೆಣ್ಣು ಮಾತ್ರವಾಗಿತ್ತು. + +ಜುಂಪೇ ಭೇಟಿಯಾದ ಮುಂದಿನ ಮಹಿಳೆ ಅವನಿಗಿಂತ ವಯಸ್ಸಿನಲ್ಲಿ ದೊಡ್ಡವಳು ಎನ್ನುವದನ್ನು ತಿಳಿಯಲು ಬಹಳಷ್ಟು ದಿನ ಬೇಕಾಗಲಿಲ್ಲ. ಅವಳಿಗೆ ಮೂವತ್ತಾರು. ಅವನಿಗೆ ಮೂವತ್ತೆರಡು. ಜುಂಪೇಯ ಪರಿಚಯದವರೊಬ್ಬರು ಟೋಕಿಯೋದ ಮುಖ್ಯ ಬೀದಿಯೊಂದರಲ್ಲಿ ಫ್ರೆಂಚ್ ಹೋಟೆಲ್ ವೊಂದನ್ನು ತೆರೆದಿದ್ದರು ಹಾಗೂ ಅದರ ಪ್ರಾರಂಭೋತ್ಸವದ ಔತಣಕೂಟಕ್ಕೆ ಜುಂಪೇಯನ್ನು ಆಹ್ವಾನಿಸಿದ್ದರು. ಔತಣಕೂಟದಲ್ಲಿ ಜು೦ಪೇ ಹಳೆಯ ಮಿತ್ರನೊಬ್ಬನನ್ನು ಭೇಟಿ ಮಾಡುವವನಿದ್ದ. ಆದರೆ ಕೊನೆಯ ಕ್ಷಣದಲ್ಲಿ ಅವನ ಮಿತ್ರ ಕೈಕೊಟ್ಟಿದ್ದರಿಂದ ಔತಣಕೂಟದಲ್ಲಿ ಜು೦ಪೇ ಏಕಾಂಗಿಯಾಗಿ ಮೂಲೆಯಲ್ಲಿ ನಿಂತು ವೈನನ್ನು ಹೀರುವದು ಅನಿವಾರ್ಯವಾಯಿತು. ಸ್ವಲ್ಪ ಸಮಯದ ನಂತರ ಆತಿಥೇಯರಿಗೆ ಹಾರೈಸಿ ಇನ್ನೇನು ಮನೆಗೆ ಹೊರಡಬೇಕು ಅನ್ನುವಷ್ಟರಲ್ಲಿ, ಕೈಯಲ್ಲಿ ಕಾಕ್ ಟೈಲ್ ಹಿಡಿದ ನೀಳಕಾಯದ ಮಹಿಳೆಯೊಬ್ಬಳು ಅವನನ್ನು ಸಮೀಪಿಸಿದಳು. ಅವಳನ್ನು ನೋಡಿದಾಗ ಅವನ ಮನಸ್ಸಿನಲ್ಲಿ ಸುಳಿದ ಮೊದಲ ವಿಚಾರವೆಂದರೆ “ಈ ಹೆಂಗಸಿನದು ಚಿತ್ತಾಕರ್ಷಕ ಭಂಗಿ” + +“ಅಲ್ಲಿ ಮಾತನಾಡುತ್ತಿದ್ದವರಾರೋ ನೀವೊಬ್ಬ ಬರಹಗಾರರೆಂದು ಹೇಳಿದರು. ನಿಜವೇ?” ಅವಳು ಟೇಬಲಿನ ಮೇಲೆ ಕೈಯನ್ನು ಇಡುತ್ತ ಕೇಳಿದಳು. + +“ಹ್ಮ್! ಒಂದರ್ಥದಲ್ಲಿ ಹೌದು” ಜುಂಪೆ ಉತ್ತರಿಸಿದ. + +“ಒಂದರ್ಥದಲ್ಲಿ ಬರಹಗಾರ”ಜುಂಪೆ ತಲೆಯಾಡಿಸಿದ. + +“ಎಷ್ಟು ಪುಸ್ತಕಗಳು ಪ್ರಕಟವಾಗಿವೆ?” + +“ಎರಡು ಕಥಾ ಸಂಕಲನಗಳು. ಒಂದು ಅನುವಾದಿತ ಪುಸ್ತಕ. ಹೇಳಿಕೊಳ್ಳುವಂತಹ ಜನಪ್ರಿಯ ಪುಸ್ತಕಗಳೇನು ಅಲ್ಲ.”ಅವಳು ಒಂದು ಕ್ಷಣ ಅಡಿಯಿಂದ ಮುಡಿಯವರೆಗೆ ಅವನನ್ನು ದಿಟ್ಟಿಸಿ ತುಟಿಯಂಚಿನಲ್ಲಿ ಸಂತೃಪ್ತಿಯ ಕಿರುನಗೆಯನ್ನು ಬೀರಿದಳು. + +“ಅದು ಏನೇ ಇರಲಿ, ನಾನು ಭೇಟಿ ಮಾಡಿದ ಮೊದಲ ಬರಹಗಾರರು ನೀವು…” + +“ನಿಮಗೆ ನಿರಾಶೆಯಾಯಿತೇನೋ..” ಜುಂಪೇ ನುಡಿದ “ಬೇರೆಯವರ ಮುಂದೆ ತೋರಿಸಬಲ್ಲ ಯಾವ ಕೌಶಲ್ಯವೂ ಬರಹಗಾರರಿಗೆ ಇರುವದಿಲ್ಲ.ಪಿಯಾನೋ ನುಡಿಸುವವನಾಗಿದ್ದರೆ ಒಂದು ಒಳ್ಳೆಯ ರಾಗವನ್ನು ನಿಮಗಾಗಿ ನುಡಿಸಬಲ್ಲ. ಚಿತ್ರಗಾರನಾಗಿದ್ದರೆ ಒಂದು ಸುಂದರ ಚಿತ್ರ ಬಿಡಿಸಿಕೊಡಬಲ್ಲ. ಜಾದೂಗಾರನಾಗಿದ್ದರೆ ಕ್ಷಣಾರ್ಧದಲ್ಲಿ ಒಂದು ಜಾದೂ ಮಾಡಬಲ್ಲ. ಬರೆಯುವವರು ಮಾಡುವಂತಹದ್ದು ಅಂಥದ್ದೇನು ಇಲ್ಲ.” + +“ಓಹ್! ಹಾಗೇನು ಇಲ್ಲ. ಬಹುಶಃ ನಾನು ನಿಮ್ಮಲ್ಲಿನ ಕಲಾತ್ಮಕ ಸೆಳೆತವನ್ನು ಆನಂದಿಸಬಹುದೇನೋ.” + +“ಕಲಾತ್ಮಕ ಸೆಳೆತ?” + +“ಮಾತಿನಲ್ಲಿ ಹೇಳಲಿಕ್ಕೆ ಆಗದ ವಿಶೇಷತೆ. ಸಾಮಾನ್ಯ ಜನರಲ್ಲಿ ಕಾಣಲಿಕ್ಕೆ ಸಿಗುವಂತಹದ್ದಲ್ಲ.” + +“ಹೌದೇ? ಪ್ರತಿ ದಿನ ದಾಡಿ ಮಾಡುವಾಗ ನನ್ನ ಮುಖವನ್ನು ಕನ್ನಡಿಯಲ್ಲಿ ನೋಡಿಕೊಳ್ಳುತ್ತೇನೆ. ಇಲ್ಲಿಯವರೆಗೆ ನನಗೆ ಅಂಥ ವಿಶೇಷತೆಯೇನೂ ಕಾಣಿಸಿಲ್ಲ.” + +ಅವಳು ನಸುನಕ್ಕಳು. “ಯಾವ ರೀತಿಯ ಕತೆಗಳನ್ನು ನೀವು ಬರೆಯುತ್ತಿರಿ?” + +“ಪ್ರತಿಯೊಬ್ಬರೂ ನನಗೆ ಈ ಪ್ರಶ್ನೆ ಕೇಳುತ್ತಾರೆ. ನಿಜ ಹೇಳಬೇಕು ಅಂದರೆ ನಾನು ಬರೆಯುವ ಕತೆಗಳನ್ನು ಇಂತದ್ದೆ ಒಂದು ಪ್ರಕಾರ ಎನ್ನುವ ಹಾಗಿಲ್ಲ. ಅವು ಒಂದು ಚೌಕಟ್ಟಿನಲ್ಲಿ ಸಿಕ್ಕಿಬೀಳುವ ಕತೆಗಳಲ್ಲ.” + +ಅವಳು ಕಾಕ್ಟೇಲ್ ಗ್ಲಾಸಿನ ಮೇಲೆ ನಿಧಾನವಾಗಿ ಬೆರಳಾಡಿಸಿದಳು. “ಹಾಗಾದರೆ ನಿಮ್ಮ ಕತೆಗಳನ್ನು ಕಲ್ಪನಾ ಸಾಹಿತ್ಯ ಅನ್ನಬಹುದೇ?” + +“ಅನ್ನಬಹುದೇನೋ.” + +ಅವಳು ಮತ್ತೆ ಕಿರುನಗೆಯನ್ನು ಬೀರಿದಳು. “ನಿಮ್ಮ ಹೆಸರನ್ನು ನಾನು ಕೇಳಿರುವ ಸಂಭವವಿದೆಯೇ?” + +“ನೀವು ಸಾಹಿತ್ಯದ ಪತ್ರಿಕೆಗಳನ್ನು ಓದುತ್ತೀರಾ?”ಅವಳು ಇಲ್ಲವೆಂದು ತಲೆಯಾಡಿಸಿದಳು. + +“ಹಾಗಾದರೆ ನನ್ನ ಹೆಸರನ್ನು ನೀವು ಕೇಳಿರಲಿಕ್ಕಿಲ್ಲ. ನಾನು ಅಂತಹ ಪ್ರಸಿದ್ಧ ಕತೆಗಾರನಲ್ಲ”. + +“ಯಾವತ್ತಾದರೂ ನಿಮ್ಮ ಹೆಸರನ್ನು ಅಕೂಟಾಗಾವ ಪ್ರಶಸ್ತಿಗೆ ಶಿಫಾರಸ್ಸು ಮಾಡಲಾಗಿತ್ತೆ?” + +“ಕಳೆದ ಐದು ವರ್ಷಗಳಲ್ಲಿ ಎರಡು ಸಲ…” + +“ಆದರೆ ಪ್ರಶಸ್ತಿ ಗೆದ್ದಿಲ್ಲ?” + +ಜುಂಪೇ ಉತ್ತರಿಸದೆ ನಸುನಕ್ಕ. ಅವನ ಅನುಮತಿಗೆ ಕಾಯದೆ ಅವಳು ತಾನು ಕುಳಿತಿದ್ದ ಸ್ಟೂಲ್ ನ್ನು ಅವನ ಪಕ್ಕಕ್ಕೆ ಎಳೆದು ಹಾಕಿಕೊಂಡಳು ಮತ್ತು ಒಂದೇ ಗುಟುಕಿಗೆ ಗ್ಲಾಸಿನಲ್ಲಿ ಉಳಿದಿದ್ದನ್ನು ಕುಡಿದು ಮುಗಿಸಿದಳು. + +“ವ್ಯತಾಸವೇನಿದೆ? ಈ ಪ್ರಶಸ್ತಿಗಳೆಲ್ಲ ಕೇವಲ ಉದ್ಯಮ ಬೆಳೆಸುವ ತಂತ್ರಗಳು ಅಷ್ಟೇ.” + +“ಬಹುಶಃ ಪ್ರಶಸ್ತಿ ಗೆದ್ದವರು ಯಾರಾದರೂ ಈ ಮಾತನ್ನು ಹೇಳಿದಿದ್ದರೆ ನಾನು ತಕ್ಷಣಕ್ಕೆ ಒಪ್ಪುತ್ತಿದ್ದೆ.” + +ಅವಳು ತನ್ನ ಹೆಸರು ಕೀರಿ ಎಂದು ಅವನಿಗೆ ಹೇಳಿದಳು. + +“ಹ್ಮ್! ಇಲ್ಲಿಯವರೆಗೂ ನಾನು ಕೇಳಿಲ್ಲದ ಹೆಸರು.” + +ಜುಂಪೆಗೆ ಅವಳು ತನಗಿಂತ ಒಂದಿಂಚು ಜಾಸ್ತಿ ಎತ್ತರವಿದ್ದಂತೆ ತೋರಿತು. ನಸು ಕಂದು ಬಣ್ಣದ ಅವಳು ಕೂದಲನ್ನು ಕುತ್ತಿಗೆಯವರೆಗೆ ಸಣ್ಣಗೆ ಕತ್ತರಿಸಿದ್ದಳು. ಅವಳ ತಲೆ ಅತ್ಯಂತ ಸುಂದರವಾದ ಆಕಾರದಲ್ಲಿತ್ತು. ಅವಳು ತೆಳು ಹಸಿರು ಬಣ್ಣದ ಜಾಕೆಟ್ ಮತ್ತು ಮೊಣಕಾಲಿನವರೆಗೆ ಸ್ಕರ್ಟ್ ತೊಟ್ಟಿದ್ದಳು. ಜಾಕೆಟಿನ ತೋಳುಗಳನ್ನು ಮೊಣಕೈವರೆಗೆ ಮಡಚಿದ್ದಳು. ಜಾಕೆಟಿನ ಅಡಿಯಲ್ಲಿ ಸರಳವಾದ ಕಾಲರ್ ನ ಮೇಲುಡುಗೆ. ಎಲ್ಲಿಯೂ ಹೆಚ್ಚುಕಡಿಮೆ ಅನಿಸದ ಅವಳ ಸರಳವಾದ ಆದರೆ ಅವಳಿಗಷ್ಟೇ ವೈಯಕ್ತಿಕ ಅನಿಸುವ ಉಡುಪು. ಅವಳ ತುಂಬು ತುಟಿ ಅವಳ ಪ್ರತಿ ಮಾತಿನ ಕೊನೆಗೆ ತೆರೆದುಕೊಂಡು ಅಥವಾ ಮುಚ್ಚಿಕೊಂಡು ಮಾತಿನ ಅಂತ್ಯವನ್ನು ಸೂಚಿಸುತ್ತಿದ್ದವು. ಅದು ಅವಳ ಸಂಪೂರ್ಣ ವ್ಯಕ್ತಿತ್ವಕ್ಕೆ ಒಂದು ತೆರನಾದ ಜೀವಂತಿಕೆಯನ್ನೂ, ಲವಲವಿಕೆಯನ್ನು ತುಂಬಿಕೊಟ್ಟಿತ್ತು. + +ಅವಳು ಯಾವುದಾದರೂ ವಿಷಯದ ಬಗ್ಗೆ ಯೋಚಿಸಲು ಪ್ರಾರಂಭಿಸಿದಾಗೆಲ್ಲ ಅವಳ ಹಣೆಯಲ್ಲಿ ಪರಸ್ಪರ ಸಮಾನಾ೦ತರವಾದ ಮೂರು ನೆರಿಗೆಗಳು ಕಾಣಿಸಿಕೊಳ್ಳುತ್ತಿದ್ದವು ಮತ್ತು ಅವಳ ಯೋಚನಾ ಲಹರಿ ಮುಗಿದ ತಕ್ಷಣ ಆ ನೆರಿಗೆಗಳು ಮಾಯವಾಗುತ್ತಿದ್ದವು. + +ಜುಂಪೇಗೆ ತಾನು ಅವಳತ್ತ ಆಕರ್ಷಿತನಾಗುತ್ತಿದ್ದೇನೆ ಅನಿಸುತ್ತಿತ್ತು. ಶಬ್ದಗಳಲ್ಲಿ ವಿವರಿಸಲು ಆಗದ ಅವಳ ಒಟ್ಟು ವ್ಯಕ್ತಿತ್ವದ ಯಾವುದೋ ರಹಸ್ಯ ಆಕರ್ಷಣೆ ಸತತವಾಗಿ ಅವನನ್ನು ಅವಳೆಡೆಗೆ ಸೆಳೆಯುತ್ತ, ಶಬ್ದದ ರೂಪದಲ್ಲಿ ಅವನ ಹೃದಯದಿಂದ ಹೊರಬರುತ್ತಿರುವದು ಅವನಿಗೆ ಅರಿವಾಗುತ್ತಿತ್ತು. ಇದ್ದಕ್ಕಿದ್ದಂತೆ ಪ್ರಾರಂಭವಾದ ಈ ಸೆಳೆತದಿಂದ ಆರಿಹೋಗುತ್ತಿರುವ ಗಂಟಲನ್ನು ಒದ್ದೆ ಮಾಡಿ ತನ್ನನ್ನು ತಾನು ಸಹಜ ಸ್ಥಿತಿಗೆ ತರಲು ಜುಂಪೇ ಪಕ್ಕದಲ್ಲಿ ಹಾದು ಹೋಗುತ್ತಿದ್ದ ವೈಟರನ್ನು ಕರೆದು ಒಂದು ಗ್ಲಾಸ್ ವೈನ್ ತರಲು ಹೇಳಿದ ಮತ್ತು ಯಾವತ್ತಿನಂತೆ ತನಗೆ ತಾನೇ ಪ್ರಶ್ನೆ ಮಾಡಿಕೊಳ್ಳಲು ಪ್ರಾರಂಭಿಸಿದ “ಇವಳು ನನ್ನ ಜೀವನಕ್ಕೆ ನೈಜ ಅರ್ಥವನ್ನು ಕೊಡಬಲ್ಲಳೇ? ಇವಳು ಉಳಿದೆರಡು ಹುಡುಗಿಯರಲ್ಲೊಬ್ಬಳೆ? ಇವಳನ್ನು ಹಾಗೆ ಹೋಗಕೊಡಲೇ ಅಥವಾ ಇವಳೊಟ್ಟಿಗೆ ಸಂಬಂಧ ಬೆಳೆಸಲೇ?” + +“ಬರಹಗಾರನಾಗಬೇಕು ಎನ್ನುವ ಬಯಕೆ ಮೊದಲಿನಿಂದಲೂ ಇತ್ತೇ?” ಅವಳು ಕೇಳಿದಳು. + +“ಹ್ಮ್ ! ಬಹುಶಃ ಬರವಣಿಗೆಯ ಹೊರತಾಗಿ ಬೇರೆ ಏನು ಮಾಡಬಹುದು ಎನ್ನುವದರ ಕುರಿತು ನಾನು ಯಾವತ್ತೂ ಯೋಚಿಸಿಯೇ ಇಲ್ಲ..”“ಅಂದರೆ ಕನಸು ನನಸಾದ ಹಾಗೆಯೆ ಇದು..” + +“ನನಗನಿಸುತ್ತೆ ನಾನು ಒಬ್ಬ ಅತ್ಯುತ್ತಮ ಬರಹಗಾರನಾಗಬೇಕೆಂದು ನನಗಿದ್ದಿತ್ತು..” ಜುಂಪೇ ತನ್ನ ಕೈಗಳೆರಡನ್ನು ಬಿಡಿಸಿಟ್ಟುಕೊಂಡ “ನಾನೀಗ ಇರುವದಕ್ಕೂ, ನಾನಾಗಬೇಕು ಅಂದುಕೊಂಡಿದ್ದಕ್ಕೂ ದೊಡ್ಡ ವ್ಯತ್ಯಾಸವಿದೆ.” + +“ಪ್ರತಿಯೊಬ್ಬರೂ ಒಂದಲ್ಲ ಒಂದೆಡೆಯಿಂದ ಪ್ರಾರಂಭಿಸಲೇಬೇಕು. ನಿಮ್ಮ ಸಂಪೂರ್ಣ ಭವಿಷ್ಯತ್ತು ನಿಮ್ಮ ಮುಂದಿದೆ. ಪರಿಪೂರ್ಣತೆ ಕೂಡಲೇ ಬರುವದಿಲ್ಲ.” ನಂತರ ಅವಳು ಇದ್ದಕ್ಕಿದ್ದಂತೆ ಕೇಳಿದಳು “ನಿಮ್ಮ ವಯಸ್ಸೆಷ್ಟು?” + +ಆ ಸಂದರ್ಭದಲ್ಲೇ ಅವರು ಪರಸ್ಪರರ ವಯಸ್ಸು ಎಷ್ಟು ಎನ್ನುವದನ್ನು ತಿಳಿದುಕೊಂಡಿದ್ದು. ಅವನಿಗಿಂತ ಹೆಚ್ಚು ವಯಸ್ಸಾಗಿದೆ ಎನ್ನುವದರ ಬಗ್ಗೆ ಅವಳು ಕಿಂಚಿತ್ತೂ ತಲೆ ಕೆಡಿಸಿಕೊಳ್ಳಲಿಲ್ಲ. ಜುಂಪೇಯಂತೂ ಯಾವತ್ತಿಗೂ ಪ್ರಬುದ್ಧ ವಯಸ್ಸಿನವರನ್ನೇ ಆರಿಸಿಕೊಳ್ಳುತ್ತಿದ್ದ. ಮುಂದೆ ಯಾವತ್ತೋ ಒಂದು ದಿನ ಸಂಬಂಧ ಮುರಿದುಕೊಳ್ಳಬೇಕಾದರೆ ಸಣ್ಣ ವಯಸ್ಸಿನ ಹುಡುಗಿಯರಿಗಿಂತ ಪ್ರಬುದ್ಧರಾದ ವಯಸ್ಕ ಹೆಂಗಸರೇ ಮೇಲು ಅನ್ನುವದು ಅವನ ಅನುಭವಾಗಿತ್ತು. + +“ನೀವು ಯಾವ ಕೆಲಸದಲ್ಲಿದ್ದೀರಿ?” ಜುಂಪೇ ಅವಳನ್ನು ಪ್ರಶ್ನಿಸಿದ. + +ಅವಳ ತುಟಿಗಳು ಪರಿಪೂರ್ಣವಾದ ನೇರವಾದ ರೇಖೆಯನ್ನು ನಿರ್ಮಿಸಿದವು. ಮೊಟ್ಟಮೊದಲ ಬಾರಿಗೆ ಅವಳ ಭಾವ ನೈಜವಾಗಿದ್ದಂತೆ ತೋರಿತು. + +“ನಾನು ಯಾವ ಕೆಲಸ ಮಾಡುತ್ತಿರಬಹುದು ಎಂದು ಅನಿಸುತ್ತದೆ”? + +ಜುಂಪೇ ತನ್ನ ಗ್ಲಾಸನ್ನು ಎತ್ತಿಕೊಂಡು ವೃತ್ತಾಕಾರವಾಗಿ ಆಡಿಸಿ, ಒಂದೇ ಗುಟುಕಿಗೆ ಗ್ಲಾಸಿನಲ್ಲಿದ್ದ ಅಷ್ಟು ವೈನನ್ನು ಖಾಲಿ ಮಾಡಿದ. “ಏನಾದರು ಸುಳಿವು ನೀಡಬಹುದೇ?” + +“ಯಾವ ಸುಳಿವೂ ಇಲ್ಲ. ನನ್ನ ಕೆಲಸ ಯಾವುದು ಎಂದು ಊಹೆ ಮಾಡುವದು ಅಷ್ಟು ಕಷ್ಟವೇ? ಲಕ್ಷ್ಯಕೊಟ್ಟು ಗಮನಿಸುವದು ಮತ್ತು ಒಂದು ನಿರ್ಣಯಕ್ಕೆ ಬರುವದು ನಿಮ್ಮ ಕೆಲಸದ ಅವಿಭಾಜ್ಯ ಭಾಗ.” + +“ಹಾಗೇನಿಲ್ಲ” ಅವನು ಹೇಳಿದ “ಒಬ್ಬ ಬರಹಗಾರ ಮಾಡಬೇಕಾದದ್ದು ಸತತವಾಗಿ ಗಮನಿಸುವದು ಮತ್ತು ನಿರ್ಣಯವನ್ನು ಅತ್ಯಂತ ಕಟ್ಟಕಡೆಯಲ್ಲಿ ತೆಗೆದುಕೊಳ್ಳುವದು.” + +“ಖಂಡಿತ” ಅವಳು “ಸರಿ ಹಾಗಾದರೆ ಸತತವಾಗಿ ಗಮನಿಸಿ ಮತ್ತು ಕಲ್ಪನೆಯನ್ನು ಉಪಯೋಗಿಸಿ.” + +ಜುಂಪೇ ಮುಖವೆತ್ತಿ ಅತ್ಯ೦ತ ಶ್ರದ್ಧೆಯಿಂದ ಯಾವುದಾದರೂ ಸುಳಿವು ಸಿಗಬಹುದು ಎಂದು ಅವಳನ್ನು ಸೂಕ್ಷ್ಮವಾಗಿ ದಿಟ್ಟಿಸಿದ. ಅವಳು ಅವನ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು ಮತ್ತು ಅವನು ಅವಳ ಕಣ್ಣೊಳಗೆ ದಿಟ್ಟಿಸಿದ. + +ಕ್ಷಣಕಾಲದ ನಂತರ ಅವನು ಹೇಳಿದ “ಸರಿ ಹಾಗಾದರೆ, ಯಾವುದೇ ಸುಳಿವು ಇಲ್ಲದೆ ನಾನು ನಿಮ್ಮ ಬಗ್ಗೆ ಊಹಿಸಿದ್ದು ಇಷ್ಟು: ನೀವು ಯಾವುದೋ ಕೆಲಸದಲ್ಲಿ ವೃತ್ತಿಪರಳು. ನೀವು ಮಾಡುವ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ನೀವು ಮಾಡುವ ಕೆಲಸಕ್ಕೆ ಅದರದ್ದೇ ಆದ ವಿಶೇಷ ಪರಿಣಿತಿ ಅಗತ್ಯ.” + +“ವಾವ್! ನೀವು ಹೇಳಿದ್ದು ಸರಿಯಿದೆ. ನಾನು ಮಾಡುವ ಕೆಲಸವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಆದರೆ ಇನ್ನು ಸ್ವಲ್ಪ ನಿಖರವಾಗಿ ಊಹಿಸಲು ಸಾಧ್ಯವೇ?” + +“ಸಂಗೀತದ ಕ್ಷೇತ್ರವೇ?” + +“ಅಲ್ಲ” + +“ವಸ್ತ್ರ ವಿನ್ಯಾಸ?” + +“ಅಲ್ಲ” + +“ಟೆನಿಸ್?” + +“ಅಲ್ಲ” + +ಜುಂಪೇ ತಲೆಯಲ್ಲಾಡಿಸಿದ. “ನಿಮ್ಮದು ನಸುಗಂದು ಬಣ್ಣ, ಸದೃಢ ಮೈಕಟ್ಟು, ನಿಮ್ಮ ಕೈಯಲ್ಲಿನ ಸ್ನಾಯುಗಳು ಬಿಗಿಯಾಗಿವೆ. ಬಹುಶಃ ನೀವು ಹೊರಾಂಗಣ ಕ್ರೀಡೆಗೆ ಸಂಬಂಧಿಸಿದ ಕೆಲಸವನ್ನೇನೋ ಮಾಡುತ್ತಿರಬಹುದು. ನೀವು ಹೊರಗೆ ಕೂಲಿ ಕೆಲಸ ಮಾಡುವ೦ತೇನೂ ತೋರುತ್ತಿಲ್ಲ” + +ಅವಳು ತನ್ನ ಕೈತೋಳನ್ನು ಪೂರ್ತಿ ಮಡಚಿ ಕೈಯನ್ನು ಟೇಬಲ್ಲಿನ ಮೇಲಿಟ್ಟು ಹಿಂದಕ್ಕೆ ಮುಂದಕ್ಕೆ ಅವನ್ನು ಕೂಲಂಕುಷವಾಗಿ ನೋಡಿದಳು “ನೀವು ಹತ್ತಿರ ಹತ್ತಿರ ಬರುತ್ತಿರುವ ಹಾಗಿದೆ.” + +“ಆದರೂ ನಾನು ಹೇಳಿದ್ದು ಸರಿಯಾದ ಉತ್ತರವಲ್ಲ?” + +“ಒಂದಷ್ಟು ಸಣ್ಣ ರಹಸ್ಯಗಳನ್ನು ಹಾಗೆಯೇ ಜೋಪಾನವಾಗಿ ಕಾಪಾಡಿಕೊಳ್ಳುವದು ಅತ್ಯಂತ ಅಗತ್ಯ.” ಅವಳು ಮುಂದುವರೆಸಿದಳು. “ಆದರೆ ನಾನು ನಿಮ್ಮ ವೃತ್ತಿಪರ ಕೌಶಲ್ಯಗಳನ್ನು ಕಿತ್ತುಕೊಳ್ಳಲು ಬಯಸುವದಿಲ್ಲ- ಸತತವಾಗಿ ಗಮನಿಸುವದು ಮತ್ತು ಕಲ್ಪಿಸುವದು. ಒಂದು ಸುಳಿವನ್ನು ಕೊಡುತ್ತೇನೆ – ನಮ್ಮಿಬ್ಬರಿಗೂ ಅದು ಏಕಪ್ರಕಾರವಾದದ್ದು.” + +“ಏಕಪ್ರಕಾರ ಹೇಗೆ?” + +“ಅಂದರೆ, ನನ್ನ ಈಗಿನ ವೃತ್ತಿ ನಾನು ಬಾಲ್ಯ ಕಾಲದಿಂದಲೂ ಬಯಸಿದ್ದು. ನಿಮ್ಮ ಹಾಗೆಯೇ. ಆದರೆ ನಾನೀಗ ಇರುವದನ್ನು ತಲುಪುವದು ಅಷ್ಟೇನೂ ಸುಲಭದ ಕೆಲಸವಾಗಿರಲಿಲ್ಲ.” + +“ಒಳ್ಳೆಯದು..” ಜುಂಪೇ ನುಡಿದ “ಮುಖ್ಯವಾದದ್ದು ಅದೇ ಅಲ್ಲವೇ? ನಾವು ಮಾಡುವ ಕೆಲಸ ನಮ್ಮ ಹೃದಯಕ್ಕೆ ಹತ್ತಿರವಾಗಿರಬೇಕೆ ಹೊರತು ಅನುಕೂಲಕ್ಕೆ ಮಾಡಿಕೊಂಡ ಮದುವೆಯಂತೆ ಇರಬಾರದು.” + +“ಹೃದಯಕ್ಕೆ ಹತ್ತಿರವಾದದ್ದು..” ಅವನ ಶಬ್ಧ ಪ್ರಯೋಗ ಅವಳ ಮೇಲೆ ಪ್ರಭಾವ ಬಿರಿದಂತೆ ತೋರಿತು. + +“ನಿಮ್ಮ ಹೆಸರನ್ನು ನಾನು ಎಲ್ಲಿಯಾದರೂ ಕೇಳಿರಬಹುದು ಎಂದು ನಿಮಗೆ ಅನಿಸುತ್ತದೆಯೇ?” ಅವನು ಪ್ರಶ್ನಿಸಿದ. + +“ಬಹುಶಃ ಇಲ್ಲ.” ಅವಳು ತಲೆಯಾಡಿಸಿದಳು. “ನಾನು ಅಂತಹ ಪ್ರಸಿದ್ಧಳೇನು ಅಲ್ಲ.” + +“ಆಹ್! ಪ್ರತಿಯೊಬ್ಬರೂ ಒಂದಲ್ಲ ಒಂದೆಡೆಯಿಂದ ಪ್ರಾರಂಭಿಸಲೇ ಬೇಕು” + +“ಖಂಡಿತ..” ಅವಳು ನಗುತ್ತ ನುಡಿದಳು. ನಂತರ ಅವಳು ಗಂಭೀರವಾಗಿ “ನನ್ನ ವಿಷಯ ನಿಮಗಿಂತ ಒಂದರ್ಥದಲ್ಲಿ ಭಿನ್ನವಾದದ್ದು. ನಾನು ಶುರುವಾತಿನಿಂದಲೇ ಪರಿಪೂರ್ಣತೆಯನ್ನು ಕಂಡುಕೊಳ್ಳುವದು ಅತ್ಯಗತ್ಯ. ಅತ್ಯ೦ತ ಸಣ್ಣ ತಪ್ಪಿಗೂ ಜಾಗವಿಲ್ಲ. ಅಲ್ಲಿ ಎರಡನೆಯ ಅವಕಾಶವಿಲ್ಲ.” + +“ಅದನ್ನು ನಾನು ಇನ್ನೊಂದು ಸುಳಿವು ಅಂದುಕೊಳ್ಳಬೇಕು?” + +“ಹಾಗೂ ಅಂದುಕೊಳ್ಳಬಹುದು.” + +ಹತ್ತಿರದಲ್ಲೇ ಬರುತ್ತಿದ್ದ ವೈಟರ್ ಬಳಿಯಿಂದ ಅವಳು ಮತ್ತೆರಡು ಗ್ಲಾಸನ್ನು ಕೇಳಿ ಪಡೆದಳು. ಒಂದನ್ನು ತಾನಿಟ್ಟುಕೊಂಡು ಇನ್ನೊಂದನ್ನು ಜುಂಪೆಯ ಮುಂದಿಟ್ಟಳು. + +“ಚಿಯರ್…” ಅವಳು + +“ನಮ್ಮ ನಮ್ಮ ವೃತ್ತಿಯಲ್ಲಿನ ಪರಿಣಿತಿಗೆ…” ಜುಂಪೆ ನುಡಿದ. + +ಅವರಿಬ್ಬರ ಗ್ಲಾಸುಗಳು ತಾಕಿ ಖಣಿಲ್ ಎನ್ನುವ ಶಬ್ದ ಹೊರಹೊಮ್ಮಿತು. + +“ಅಂದ ಹಾಗೆ ನಿಮಗೆ ಮದುವೆಯಾಗಿದೆಯೇ?” ಅವಳು ಪ್ರಶ್ನಿಸಿದಳು. + +ಜು೦ಪೇ ಇಲ್ಲವೆಂದು ತಲೆಯಾಡಿಸಿದ. + +“ನನಗೂ ಆಗಿಲ್ಲ..” ಅವಳು. + +****** + +ಅವತ್ತು ರಾತ್ರಿ ಅವಳು ಜುಂಪೇಯ ರೂಮಿನಲ್ಲಿ ಕಳೆದಳು. ತಡ ರಾತ್ರಿಯವರೆಗೂ ಜೊತೆಗೆ ಕುಳಿತು ಹೋಟೆಲಿನಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದ ವೈನ್ ಅನ್ನು ಹೀರಿದರು ಮತ್ತು ಅವಳು ಜುಂಪೇಯೊಟ್ಟಿಗೆ ಮಲಗಿದಳು. ಮರುದಿನ ಬೆಳಿಗ್ಗೆ ಹತ್ತು ಗಂಟೆಯ ಸುಮಾರಿಗೆ ಜುಂಪೇಗೆ ಎಚ್ಚರವಾದಾಗ ಅವಳಿರಲಿಲ್ಲ. ಸದ್ದಿಲ್ಲದೆಯೇ ಜಾರಿಹೋದ ಮಧುರ ನೆನಪಿನಂತೆ ಅವಳು ಅವನ ದಿಂಬಿನ ಬಳಿ ಚಿಕ್ಕ ಚೀಟಿಯೊಂದನ್ನು ಅವನಿಗಾಗಿ ಬಿಟ್ಟು ಹೋಗಿದ್ದಳು.“ನಾನು ಕೆಲಸದ ನಿಮಿತ್ತ ಹೋಗಬೇಕಾಗಿದೆ. ನೀನು ಬಯಸಿದರೆ ಮತ್ತೆ ನಾವಿಬ್ಬರೂ ಭೇಟಿ ಮಾಡಬಹುದು”. ಚೀಟಿಯಲ್ಲಿ ತನ್ನ ದೂರವಾಣಿ ಸಂಖ್ಯೆಯನ್ನು ಬರೆದಿದ್ದಳು. + +ಅವನು ಅವಳಿಗೆ ಕರೆ ಮಾಡಿದ. ಶನಿವಾರ ರಾತ್ರಿ ಇಬ್ಬರೂ ಹೋಟೆಲವೊಂದರಲ್ಲಿ ರಾತ್ರಿಯೂಟ ಮಾಡಿದರು. ಸ್ವಲ್ಪ ವೈನ್ ಹೀರಿದ ನಂತರ ಇಬ್ಬರೂ ಜುಂಪೇಯ ರೂಮಿನಲ್ಲಿ ಸುಖಿಸಿದರು. ಮತ್ತೆ, ಮರುದಿನ ಬೆಳಿಗ್ಗೆ ಜುಂಪೇ ಏಳುವದಕ್ಕೆ ಮೊದಲೇ ಅವಳು ಹೊರಟು ಹೋಗಿದ್ದಳು. ಅವತ್ತು ಭಾನುವಾರ. ಅವಳು ಮತ್ತೆ ಜು೦ಪೇಗೋಸ್ಕರ ಚೀಟಿಯನ್ನು ಬರೆದಿಟ್ಟಿದ್ದಳು “ನಾನು ಕೆಲಸಕ್ಕೆ ಹೋಗಲೇ ಬೇಕು. ಹಾಗಾಗಿ ಸದ್ಯಕ್ಕೆ ಕಣ್ಮರೆಯಾಗುತ್ತಿದ್ದೇನೆ”. ಈಗಲೂ ಅವಳು ಕೆಲಸ ಏನು ಎನ್ನುವದು ಜುಂಪೆಗೆ ತಿಳಿದಿರಲಿಲ್ಲ. ಆದರೆ ಅವಳ ಕೆಲಸ ಬೆಳಿಗ್ಗೆ ಬೇಗ ಶುರುವಾಗುತ್ತದೆ ಮತ್ತು ಕೆಲವೊಮ್ಮೆ ಅವಳು ಭಾನುವಾರವೂ ಕೆಲಸ ಮಾಡಬೇಕಾಗುತ್ತದೆ ಎನ್ನುವದು ಮಾತ್ರ ಅವನಿಗೆ ತಿಳಿದಿತ್ತು. + +ಅವರಿಬ್ಬರ ನಡುವೆ ಮಾತನಾಡಬಹುದಾದ ವಿಷಯಗಳಿಗೆ ಯಾವತ್ತೂ ಕೊರತೆಯಿರಲಿಲ್ಲ. ಅವಳು ತೀಕ್ಷ್ಣಮತಿಯಾಗಿದ್ದಳು ಮತ್ತು ಅವಳಿಗೆ ಹಲವಷ್ಟು ವಿಷಯಗಳಲ್ಲಿ ಆಳವಾದ ಜ್ಞಾನವಿತ್ತು. ಅವಳಿಗೆ ಓದು ಇಷ್ಟವಾಗಿತ್ತು. ಆದರೆ ಸಾಮಾನ್ಯವಾಗಿ ಕಥೆ ಕಾದಂಬರಿ ಸಾಹಿತ್ಯಗಳ ಬದಲಾಗಿ ವಿಜ್ಞಾನ, ಸೈಕಾಲಜಿ, ಇತಿಹಾಸ, ತಂತ್ರಜ್ಞಾನ ಇತ್ಯಾದಿ ವಿಷಯಗಳನ್ನು ಹೆಚ್ಚಾಗಿ ಓದುತ್ತಿದ್ದಳು. ಅವಳಿಗೆ ಅಸಾಧಾರಣವಾದ ಗ್ರಹಣ ಶಕ್ತಿಯಿತ್ತು. ಒಮ್ಮೆ, ಸ್ಥಳಾ೦ತರಿಸಬಹುದಾದ ಮನೆಗಳ ಇತಿಹಾಸದ ಕುರಿತು ಅವಳಿಗಿರುವ ವಿವರವಾದ ಮಾಹಿತಿಯ ಕುರಿತು ಜುಂಪೇ ಬೆರಗಾಗಿದ್ದ. + +“ಸ್ಥಳಾ೦ತರಿಸಬಹುದಾದ ಮನೆ? ಅಂದರೆ ನೀನು ಮಾಡುವ ಕೆಲಸ ವಾಸ್ತುಶಾಸ್ತ್ರ ಅಥವಾ ಕಟ್ಟಡ ಸಂರಚನೆಗೆ ಸಂಬಂಧಿಸಿರಬೇಕು.” + +“ಇಲ್ಲ” ಅವಳು ಹೇಳಿದಳು “ವಾಸ್ತವಕ್ಕೆ ಹತ್ತಿರವಾದ ವಿಷಯಗಳೆಂದರೆ ನನಗೆ ಆಸಕ್ತಿ ಅಷ್ಟೇ.” + +ಅಷ್ಟಾದರೂ ಅವಳು ಜುಂಪೇಯ ಎರಡೂ ಕಥಾ ಸಂಕಲನಗಳನ್ನು ಓದಿ ಮುಗಿಸಿದ್ದಳು. “ನಾನು ಅಂದುಕೊಂಡದ್ದಕ್ಕಿಂತ ಚೆನ್ನಾಗಿಯೇ ಇದೆಯಲ್ಲ ನಿಜ ಹೇಳಬೇಕೆಂದರೆ ನಿನ್ನ ಕತೆಗಳು ನನಗೆ ಇಷ್ಟವಾಗದಿದ್ದರೆ ನಿನಗೆ ಏನು ಹೇಳಬೇಕು ಅನ್ನುವದೆ ನನಗೆ ದೊಡ್ಡ ಚಿ೦ತೆಯಾಗಿತ್ತು. ಆದರೆ ಈಗ ಪರವಾಗಿಲ್ಲ ನನಗೆ ಸಮಾಧಾನ ಅನ್ನಿಸುತ್ತಿದೆ. ಕತೆಗಳು ಚೆನ್ನಾಗಿಯೇ ಇದ್ದವು.” + +“ನಿನಗೆ ಹಿಡಿಸಿದೆ ಅಂದರೆ ನನಗೂ ಸಂತೋಷವೇ.” ಜುಂಪೇ ಸಮಾಧಾನದಿಂದ ನಿಟ್ಟುಸಿರು ಬಿಡುತ್ತ ಹೇಳಿದ. ಅವಳು ಅವನ ಕಥಾಸಂಕಲನಗಳನ್ನು ಕೇಳಿ ಪಡೆದಾಗ ಅವನಿಗೂ ಅದೇ ತೆರನಾದ ಚಿ೦ತೆಯಿತ್ತು. + +“ನಿನ್ನನ್ನು ಮೆಚ್ಚಿಸಲೆಂದು ನಾನು ಈ ಮಾತುಗಳನ್ನು ಹೇಳುತ್ತಿಲ್ಲ…” ಅವಳು ನುಡಿದಳು. “ನಿನ್ನಲ್ಲಿ ಏನೋ ಒಂದು ವಿಶೇಷತೆ ಇದೆ. ಒಬ್ಬ ಅತ್ಯುತ್ತಮ ಬರಹಗಾರನಿಗೆ ಮಾತ್ರ ಇರಬಲ್ಲ ವಿಶೇಷತೆ. ನಿನ್ನ ಬಹಳಷ್ಟು ಕತೆಗಳಲ್ಲಿ ಕಾಡುವ ಮೌನವಿದೆ, ಇನ್ನು ಕೆಲವಲ್ಲಿ ಧುಮ್ಮಿಕ್ಕುವ ಉತ್ಸಾಹವಿದೆ ಮತ್ತು ಕಥೆ ಹೆಣೆಯುವ ಶೈಲಿ ಅತ್ಯಂತ ಸುಂದರವಾದುದು. ನಿನ್ನ ಬರವಣಿಗೆಗೆ ಸಮತೋಲನವಿದೆ. ಕತೆಯಾಗಲಿ, ಸಂಗೀತವಾಗಲಿ, ಚಿತ್ರಕಲೆಯಾಗಲಿ ಎಲ್ಲದಕ್ಕೂ ಸಮತೋಲನ ಅತ್ಯಗತ್ಯ. ಸಮತೋಲನವಿಲ್ಲದ ಯಾವುದನ್ನು ನೋಡಿದರೂ, ನಾನು ನೋಡುತ್ತಿರುವದು ಅನುಭವಿಸುತ್ತಿರುವದು ಅಪೂರ್ಣವೆನ್ನುವ ಭಾವ ಹುಟ್ಟಿ, ಹೊಟ್ಟೆ ತೊಳೆಸಿದಂತಾಗಿ ಅಸ್ವಸ್ಥಳಾಗುತ್ತೇನೆ. ಇದೆ ಕಾರಣಕ್ಕಾಗಿಯೇ ನಾನು ಸಂಗೀತ ಕಚೇರಿಗಳಿಂದ ಅಥವಾ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗಳಿಂದ ದೂರವುಳಿಯುವದು.” + +“ಯಾಕೆಂದರೆ ನೀನು ಸಮತೋಲನವಿಲ್ಲದಿರುವದರಿಂದ ದೂರವುಳಿಯಲು ಬಯಸುತ್ತೀಯ?” + +“ಹೌದು..” + +“ಮತ್ತು ಅದು ಎದುರಾದರೆ ಎನ್ನುವ ಭಯದಿಂದ ನೀನು ಸಾಹಿತ್ಯ, ಸಂಗೀತಗಳಿಂದ ದೂರವಿರಲು ಬಯಸುವದು?” + +“ನಿಜ..” + +“ಇದು ನನ್ನ ಬುದ್ಧಿಶಕ್ತಿಗೆ ಮೀರಿದ್ದು.” + +“ನನ್ನದು ತುಲಾ ರಾಶಿ. ಹೀಗಾಗಿ ಅಂತರ್ಗತವಾದ ಸಮತೋಲನವಿಲ್ಲದ, ಪರಿಪೂರ್ಣವಲ್ಲದ ಯಾವುದರ ಬಳಿಯೂ ಇರಲಾರೆ. ಅಂದರೆ ಯಾವತ್ತೂ ಇರಲಾರೆ ಎಂದಲ್ಲ…” + +ಅವಳು ಮಾತನ್ನು ಅರ್ಧಕ್ಕೆ ನಿಲ್ಲಿಸಿ, ಸರಿಯಾದ ಶಬ್ದಕ್ಕಾಗಿ ತಡಕಾಡತೊಡಗಿದಳು. ಕೆಲವೊಂದು ಶಬ್ದಗಳು ಅವಳ ಬಾಯಿಯಿಂದ ಹೊರಬಂದರೂ ಅವಳಿಗೆ ಅದು ಸರಿಯೆನಿಸದೆ ಬಹುತೇಕ ಶಬ್ದಗಳು ಸಣ್ಣ ಸಣ್ಣ ನಿಟ್ಟುಸಿರಿನಲ್ಲಿ ಕೊನೆಯಾದವು. “ಸರಿ. ಪರವಾಗಿಲ್ಲ.” ಅವಳು ಶಬ್ದದ ಹುಡುಕಾಟವನ್ನು ಅಲ್ಲಿಯೇ ನಿಲ್ಲಿಸಿ ಮುಂದುವರೆಸಿದಳು “ನಾನು ಹೇಳಲಿಕ್ಕೆ ಬಯಸುವದೇನೆಂದರೆ ಒಂದಲ್ಲ ಒಂದು ದಿನ ನೀನು ಒಂದು ಸಂಪೂರ್ಣ ಕಾದಂಬರಿಯನ್ನು ಬರೆಯುತ್ತೀಯ ಮತ್ತು ಆಗ ನೀನು ಸಾಹಿತ್ಯ ಕ್ಷೇತ್ರದ ಒಬ್ಬ ಬಹುಮುಖ್ಯ ಲೇಖಕರಲ್ಲೊಬ್ಬನಾಗುತ್ತೀಯ. ಬಹುಶಃ ಅದಾಗಲು ಸಾಕಷ್ಟು ಸಮಯ ಬೇಕಾಗಬಹುದು, ಆದರೆ ಒಂದಲ್ಲ ಒಂದು ದಿನ ಆಗಿಯೇ ಆಗುತ್ತದೆ ಎನ್ನುವದು ನನ್ನ ನಂಬಿಕೆ.” + +“ಇಲ್ಲ, ನನಗೆ ಕಾದಂಬರಿಗಳನ್ನು ಬರೆಯಲು ಸಾಧ್ಯವಿಲ್ಲ. ನನ್ನ ಕ್ಷೇತ್ರ ಸಣ್ಣ ಕಥೆಗಳು..” ಜುಂಪೆ + +“ಅಷ್ಟಾದರೂ ಸಹ…” ಅವಳು.. + +ಜುಂಪೆ ಮರುನುಡಿಯಲಿಲ್ಲ. ಅವನು ಮೌನವಾಗಿ ಕುಳಿತು ಏರ್ ಕಂಡಿಷನ್ ನಿಂದ ಹೊರಬರುತ್ತಿರುವ ತಣ್ಣನೆಯ ಗಾಳಿಯ ಶಬ್ದವನ್ನು ಆಲಿಸತೊಡಗಿದ. ನಿಜ ಹೇಳಬೇಕೆಂದರೆ ಈ ಮೊದಲು ಅವನು ಸಾಕಷ್ಟು ಸಲ ಕಾದಂಬರಿಯನ್ನು ಬರೆಯಲಿಕ್ಕೆ ಪ್ರಯತ್ನಿಸಿದ್ದ. ಆದರೆ ಪ್ರತಿ ಬಾರಿಯೂ ಅವನ ಪ್ರಯತ್ನ ಅರ್ಧಕ್ಕೆ ಮೊಟಕುಗೊಳ್ಳುತ್ತಿತ್ತು. ಒಂದು ಬೃಹತ್ ಕಾದಂಬರಿ ಬರೆಯಲು ಬೇಕಾಗುವ ಏಕಾಗ್ರತೆಯನ್ನು ಕೊನೆಯವರೆಗೂ ಕಾದುಕೊಳ್ಳುವದು ಅವನಿಗೆ ಸಾಧ್ಯವಾಗಿರಲಿಲ್ಲ. ಪ್ರತಿ ಬಾರಿಯೂ ಅವನು ಹೊಸ ಉತ್ಸಾಹದಿಂದ ಕಾದಂಬರಿ ಬರೆಯಲು ಪ್ರಾರಂಭಿಸುತ್ತಿದ್ದ. ಅವನು ಬರೆಯುವ ಮೊದಮೊದಲಿನ ಅಧ್ಯಾಯಗಳಲ್ಲಿ ಉಲ್ಲಾಸವಿರುತಿತ್ತು, ಹೊಸತನವಿರುತ್ತಿತ್ತು. ಆದರೆ ಕಾದಂಬರಿಯ ಕತೆ ಮುಂದುವರಿದಂತೆ ಜು೦ಪೇಗೆ ಅರಿವಿಲ್ಲದಂತೆ ಕತೆಯ ಮೇಲಿನ ಅವನ ಹಿಡಿತ ಕಡಿಮೆಯಾಗುತ್ತಿತ್ತು. ಕ್ರಮೇಣ ಕತೆಯ ಓಘ, ಹದ ಹತೋಟಿ ತಪ್ಪಿ, ಚೇತನವನ್ನು ಕಳೆದುಕೊಂಡು ಕೊನೆಗೊಂದು ದಿನ ಸಂಪೂರ್ಣವಾಗಿ ನಿಂತುಬಿಡುತಿತ್ತು. + +****** + +ಶರತ್ಕಾಲದ ರಾತ್ರಿ ಅವರಿಬ್ಬರೂ ಹಾಸಿಗೆಯಲ್ಲಿ ಬೆತ್ತಲಾಗಿ ಮಲಗಿದ್ದರು. ಕೀರಿ ಜು೦ಪೇಗೆ ಒರಗಿ ಮಲಗಿದ್ದಳು. ಮಂಚದ ಪಕ್ಕದಲ್ಲಿದ್ದ ಟೀಪಾಯಿಯ ಮೇಲೆ ಎರಡು ವೈನ್ ಗ್ಲಾಸುಗಳಿದ್ದವು. + +“ಜುಂಪೇ?” + +“ಹ್ಮ್ ..” + +“ನೀನೊಬ್ಬಳನ್ನು ಪ್ರೀತಿಸಿದ್ದೆ ಅಲ್ಲವೇ? ನಿನಗೆ ಯಾವತ್ತೂ ಮರೆಯಲಾಗದಷ್ಟು..” + +“ಹೌದು” ಜುಂಪೇ ಒಪ್ಪಿಕೊಂಡ “ನಿನಗೆ ಗೊತ್ತಾಯಿತೇ?” + +“ಮ್..” ಅವಳು ನುಡಿದಳು. “ಹೆಂಗಸರು ಇಂತಹ ವಿಷಯದಲ್ಲಿ ಸೂಕ್ಷ್ಮಗ್ರಾಹಿಗಳು…” + +“ಎಲ್ಲ ಹೆಂಗಸರು ಹಾಗಲ್ಲ…” + +“ಎಲ್ಲ ಹೆಂಗಸರೂ ಹಾಗೆ ಎನ್ನುವದು ನನ್ನ ಮಾತಿನ ಅರ್ಥವಲ್ಲ..” + +“ಹೌದು. ಅದು ನಿಜ..” + +“ನಿನಗೆ ಅವಳನ್ನು ಭೇಟಿ ಮಾಡಲು ಸಾಧ್ಯವಿಲ್ಲ?” + +“ಒಂದಷ್ಟು ತೊಡಕುಗಳಿವೆ..” + +“ಮತ್ತು ಈ ತೊಡಕುಗಳನ್ನು ನಿವಾರಿಸುವ ಹಾದಿಗಳಿಲ್ಲ..” + +“ಇಲ್ಲ..” ಜುಂಪೇ ಖಚಿತಪಡಿಸುವವನಂತೆ ತಲೆಯಾಡಿಸಿದ. + +“ತೀವ್ರವಾಗಿ ಕಾಡುತ್ತದೆ ಅಲ್ಲವೇ?” + +“ತೀವ್ರ ಹೌದೋ ಅಲ್ಲವೋ ಎನ್ನುವದು ಗೊತ್ತಿಲ್ಲ. ಆದರೆ ಕಾಡುವದ೦ತೂ ಹೌದು …” + +ಕೀರಿ ಗ್ಲಾಸನ್ನು ತೆಗೆದುಕೊಂಡು ಸ್ವಲ್ಪ ವೈನನ್ನು ಹೀರಿದಳು. “ನನಗೆ ಮಾತ್ರ ಅಂಥವರು ಯಾರು ಇಲ್ಲ..” ತನ್ನಷ್ಟಕ್ಕೆ ತಾನೇ ಎನ್ನುವಂತೆ ಗೊಣಗಿಕೊಂಡಳು. “ನನಗೆ ನೀನು ಬಹಳ ಇಷ್ಟವಾಗುತ್ತಿಯ ಜುಂಪೇ. ನಿನ್ನ ಜೊತೆಯಿದ್ದಾಗಲೆಲ್ಲ ಖುಷಿಯಾಗಿರುತ್ತೇನೆ ಮತ್ತು ನನ್ನ ಮನಸ್ಸು ಅತ್ಯಂತ ಶಾಂತವಾಗಿರುತ್ತದೆ. ಹಾಗೆಂದ ಮಾತ್ರಕ್ಕೆ ನಿನ್ನೊಡನೆ ತುಂಬಾ ಗಂಭೀರವಾದ ಸಂಬಂಧವನ್ನು ಇಟ್ಟುಕೊಳ್ಳಬೇಕು ಎಂದು ನಾನು ಬಯಸುವದಿಲ್ಲ. ಇದು ನಿನಗೆ ಹೇಗೆ ಅನಿಸುತ್ತದೆ? ನಿನ್ನ ಮೇಲಿದ್ದ ಭಾರವನ್ನು ಇಳಿಸಿದ ಹಾಗೆ?” + +ಜು೦ಪೇ ಅವಳ ತಲೆಗೂದಲಿನಲ್ಲಿ ಬೆರಳನ್ನಾಡಿಸಿದ. ಅವಳ ಪ್ರಶ್ನೆಗೆ ಉತ್ತರಿಸುವ ಬದಲು ಅವನು ಅವಳನ್ನು ಮರು ಪ್ರಶ್ನಿಸಿದ. “ಯಾಕೆ ಹಾಗೆ?” + +“ಯಾಕೆ ನಾನು ನಿನ್ನೊಡನೆ ಯಾವಾಗಲು ಇರಲು ಬಯಸುವದಿಲ್ಲವೆಂದು?” + +“ಹ್ಮ್ ..” + +“ಅದು ನಿನ್ನನ್ನು ಕಾಡುತ್ತದೆಯೇ?” + +“ಸ್ವಲ್ಪ..” + +“ನೀನು ಎಂದಲ್ಲ ಜು೦ಪೇ. ಈ ಪ್ರತಿನಿತ್ಯದ ಗಂಭೀರ ಸಂಬಂಧವನ್ನು ಯಾರೊಟ್ಟಿಗೂ ಇಟ್ಟುಕೊಳ್ಳುವದಕ್ಕೆ ನನಗೆ ಸಾಧ್ಯವಿಲ್ಲ..” ಅವಳು ಹೇಳಿದಳು. “ನಾನು ಈಗ ಏನು ಮಾಡುತ್ತಿದ್ದೇನೋ ಅದರ ಮೇಲೆ ಸಂಪೂರ್ಣವಾಗಿ ಏಕಾಗ್ರ ಚಿತ್ತದಿಂದ ಕೆಲಸ ಮಾಡುವದು ಅತ್ಯಗತ್ಯ. ನಾನು ಇನ್ನೊಬ್ಬರೊಟ್ಟಿಗೆ ಬದುಕುವುದಾದರೆ, ಮತ್ತೊಬ್ಬರೊಟ್ಟಿಗೆ ಆಳವಾದ ಮಾನಸಿಕವಾಗಿ ಸಂಬಂಧ ಬೆಳೆಸಿದರೆ ನಾನು ಈಗ ಏನನ್ನು ಮಾಡಬೇಕು ಅಂದುಕೊಂಡಿದ್ದೇನೋ ಅದನ್ನು ಸಾಧಿಸುವದಕ್ಕೆ ಸಾಧ್ಯವಿಲ್ಲ. ಹೀಗಾಗಿ ಈ ಜೀವನ ಈಗ ಹೇಗೆ ನಡೆಯುತ್ತಿದೆಯೋ ಹಾಗೆ ಇರಲಿ ಎನ್ನುವದು ನನ್ನ ಬಯಕೆ..” + +ಜುಂಪೇ ಅವಳು ಹೇಳಿದ್ದನ್ನು ಒಂದು ಕ್ಷಣ ಯೋಚಿಸಿದ. “ಅಂದರೆ ನೀನು ಮಾಡುವ ಕೆಲಸದಿಂದ ಮನಸ್ಸನ್ನು ಬೇರೆಡೆಗೆ ಹರಿಸುವದು ಬೇಡವೆಂದು?” + +“ಹುಂ..” + +“ನಿನ್ನ ಮನಸ್ಸು ಬೇರೆಡೆಗೆ ಹರಿದರೆ ನಿನ್ನ ಸಮತೋಲನ ತಪ್ಪಬಹುದು ಮತ್ತು ಅದು ನಿನ್ನ ವೃತ್ತಿಗೆ ಅಡ್ಡವಾಗಬಹುದು..” + +“ನಿಜ.” + +“ಮತ್ತು ಅಂತಹ ಅಪಾಯವನ್ನು ತಪ್ಪಿಸಲಿಕ್ಕಾಗಿ ನೀನು ಯಾರೊಬ್ಬರ ಜೊತೆಯೂ ಜೀವನ ನಡೆಸಲು ಇಷ್ಟಪಡುವದಿಲ್ಲ?” + +ಅವಳು ತಲೆಯಾಡಿಸಿದಳು. “ಎಲ್ಲಿಯವರೆಗೆ ನಾನು ನನ್ನ ಈಗಿನ ವೃತ್ತಿಯಲ್ಲಿ ಇರುತ್ತೇನೋ ಅಲ್ಲಿಯವರೆಗೆ ಅದು ಸಾಧ್ಯವಿಲ್ಲ..” + +“ಆದರೆ ನಿನ್ನ ವೃತ್ತಿ ಯಾವುದು ಎಂದು ನೀನು ನನಗೆ ಹೇಳುವದಿಲ್ಲ…” + +“ಊಹೆ ಮಾಡು..” + +“ನೀನೊಬ್ಬಳು ದರೋಡೆಕೋರಳು.” + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +“ಖಂಡಿತವಾಗಿಯೂ ಇಲ್ಲ” ಅವಳು ಹುಸಿಮುನಿಸಿನಿಂದ ನೋಡಿದಳು. “ಎಂಥಹ ಅದ್ಭುತ ಊಹೆ. ದಯವಿಟ್ಟು ತಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು, ಯಾವ ದರೋಡೆಕೋರನೂ ಮುಂಜಾನೆ ದರೋಡೆಗೆ ಹೊರಡುವದಿಲ್ಲ..” + +“ಹಾಗಾದರೆ ಬಾಡಿಗೆ ಹಂತಕ..” + +“ಹಂತಕಿ” ಅವಳು ಅವನನ್ನು ಸರಿಪಡಿಸಿದಳು. “ಅದು ಅಲ್ಲ. ಆದರೆ ನೀನು ಯಾಕೆ ಇಂತಹ ಭಯಾನಕ ಸಾಧ್ಯತೆಗಳನ್ನು ಊಹಿಸುತ್ತಿದ್ದೀಯ?” + +“ಅಂದರೆ ನೀನು ಮಾಡುವದು ಕಾನೂನು ಬದ್ಧವಾದ ಕೆಲಸ..” + +“ಖಂಡಿತ..” + +“ಪತ್ತೇದಾರಿ ಕೆಲಸ?” + +“ಅಲ್ಲ. ನನ್ನ ಕೆಲಸ ಏನು ಎನ್ನುವದನ್ನು ಊಹೆ ಮಾಡುವದನ್ನು ಇಲ್ಲಿಗೆ ನಿಲ್ಲಿಸೋಣ. ಇದಕ್ಕಿಂತ ನಿನ್ನ ಬರವಣಿಗೆಯ ಬಗ್ಗೆ ಮಾತನಾಡುವದೇ ಎಷ್ಟೋ ವಾಸಿ. ಹೇಳು, ನೀನು ಹೊಸದಾಗಿ ಏನನ್ನು ಬರೆಯುತ್ತಿದ್ದೀಯ? ಏನನ್ನಾದರೂ ಬರೆಯುತ್ತಿದ್ದೀಯ ತಾನೇ?” + +“ಹೌದು, ಒಂದು ಸಣ್ಣ ಕತೆ..” + +“ಯಾವ ರೀತಿಯ ಕತೆ?” + +“ಬರೆದು ಮುಗಿಸಿಲ್ಲ. ಒಂದು ವಿರಾಮ ತೆಗೆದುಕೊಂಡಿದ್ದೇನೆ.” + +“ಸರಿ, ವಿರಾಮದವರೆಗೆ ಏನಾಗುತ್ತದೆ ಅನ್ನುವದನ್ನು ಮಾತ್ರ ಹೇಳು..” + +ಜುಂಪೇ ಮೌನಕ್ಕೆ ಶರಣಾದ. ಬರವಣಿಗೆ ಅರ್ಧದಲ್ಲಿರುವಾಗ ಅದರ ಬಗ್ಗೆ ಯಾರೊಟ್ಟಿಗೂ ಮಾತನಾಡಬಾರದು ಎನ್ನುವದು ಅವನ ಸಿದ್ಧಾಂತ. ಇಲ್ಲವಾದರೆ ಕತೆಯ ತೀವ್ರತೆ ಕಡಿಮೆಯಾಗಬಹುದು. ಬರೆಯುತ್ತಿರುವ ಕತೆಗೆ ಮಾತಿನ ರೂಪ ಕೊಟ್ಟು ಮತ್ತೊಬ್ಬರಲ್ಲಿ ಹೇಳಿಕೊಂಡಾಗ ಅವನಿಗರಿವಿಲ್ಲದಂತೆ ಕತೆಯಲ್ಲಿನ ಅದೃಶ್ಯ ಭಾವವೊಂದು ಅವನ ಹಿಡಿತಕ್ಕೆ ಸಿಗುವ ಮೊದಲೇ ಮಂಜಿನಂತೆ ಕರಗಿ ಹೋಗುತ್ತದೆ ಎನ್ನುವದು ಅವನ ನಂಬಿಕೆಯಾಗಿತ್ತು. ಅತ್ಯಂತ ನಾಜೂಕಾಗಿ ಹೆಣೆದ ಅರ್ಥ ವಿನ್ಯಾಸ ಕತೆಯಿಂದ ಕಳಚಿಬಿಡಬಹುದು ಎನ್ನುವದು ಅವನ ಭಯ. ಆದರೆ ಈಗ ಈ ಮಂಚದ ಮೇಲೆ ಮಲಗಿ ‘ಕೀರಿ’ಯ ಕೂದಲಿನಲ್ಲಿ ಕೈಯಾಡಿಸುವಾಗ, ಅವಳಿಗೆ ಕತೆಯನ್ನು ಹೇಳುವದರಲ್ಲಿ ಏನೂ ತಪ್ಪಿಲ್ಲ ಎಂದು ಒಂದು ಕ್ಷಣಕ್ಕೆ ಅವನಿಗೆ ಅನಿಸಿತು. ಇಷ್ಟಕ್ಕೂ ಕತೆಯನ್ನು ಮುಂದುವರೆಸಲಾಗದೆ ಕೆಲ ದಿನಗಳಿಂದ ಅವನು ಒದ್ದಾಡುತ್ತಿದ್ದ. + +“ಕತೆಯಿರುವದು ಪ್ರಥಮ ಪುರುಷ ನಿರೂಪಣೆಯಲ್ಲಿ ಮತ್ತು ಕತೆಯ ಮುಖ್ಯ ಪಾತ್ರ ಒಬ್ಬಳು ಮಹಿಳೆ…” ಅವನು ಶುರುಮಾಡಿದನು. + +“ಅವಳಿಗೆ ಸುಮಾರು ಮೂವತ್ತು ವರ್ಷವಾಗಿರಬಹುದು, ಅವಳು ಬಹು ದೊಡ್ಡ ಆಸ್ಪತ್ರೆಯೊಂದರಲ್ಲಿ ಹೆಸರಾಂತ ಆಂತರಿಕ ರೋಗಗಳ ತಜ್ಞೆ. ಅವಳು ಅವಿವಾಹಿತೆ. ಆದರೆ ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶಸ್ತ್ರವೈದ್ಯರೊಟ್ಟಿಗೆ ಅವಳಿಗೆ ಸಂಬಂಧವಿದೆ. ಅವನಿಗೆ ಸುಮಾರು ಐವತ್ತರ ಆಸುಪಾಸಿರಬಹುದು ಮತ್ತು ಅವನಿಗೆ ಹೆಂಡತಿ ಮಕ್ಕಳಿದ್ದಾರೆ.” + +ಕೀರಿ ಕತೆಯ ನಾಯಕಿಯನ್ನು ಕಲ್ಪಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಳು. “ಅವಳು ಆಕರ್ಷಕವಾಗಿದ್ದಾಳೆಯೇ?” + +“ಹುಂ. ಆಕರ್ಷಕವಾಗಿದ್ದಾಳೆ. ಆದರೆ ನಿನ್ನಷ್ಟಲ್ಲ.” + +ಕೀರಿ ನಸುನಕ್ಕು ಜುಂಪೇಯ ಕುತ್ತಿಗೆಗೆ ಮುತ್ತು ನೀಡಿದಳು. “ಅದು ಸರಿಯಾದ ಉತ್ತರ.” + +“ನಾನು ಸಾಧ್ಯವಾದಷ್ಟು ಸರಿಯಾದ ಉತ್ತರವನ್ನೇ ಕೊಡಲು ಬಯಸುತ್ತೇನೆ.” + +“ವಿಶೇಷವಾಗಿ ಹಾಸಿಗೆಯಲ್ಲಿ ಅಲ್ಲವೇ..” + +“ವಿಶೇಷವಾಗಿ ಹಾಸಿಗೆಯಲ್ಲಿ.” ಅವನು ಉತ್ತರಿಸಿದ. “ಒಂದು ದಿನ ಅವಳು ಆಸ್ಪತ್ರೆಯ ಕೆಲಸದಿಂದ ವಿರಾಮ ತೆಗೆದುಕೊಂಡು ಪ್ರವಾಸಕ್ಕೆ ಹೋಗುತ್ತಾಳೆ. ಅದು ಶರತ್ಕಾಲ. ಈಗಿನ ಹಾಗೆ. ಪರ್ವತದ ಮೇಲಿರುವ ಒಂದು ಸಣ್ಣ ರೆಸಾರ್ಟಿನಲ್ಲಿರುತ್ತಾಳೆ. ಅವಳು ಉಳಿದುಕೊಂಡಿರುವ ರೆಸಾರ್ಟಿನ ಹತ್ತಿರ ಸಣ್ಣಗೆ ಹರಿಯುತ್ತಿರುವ ತೊರೆಯಲ್ಲಿ ಅವಳು ಹೆಜ್ಜೆ ಹಾಕುತ್ತಾಳೆ. ಪಕ್ಷಿವೀಕ್ಷಣೆ ಅವಳಿಗೆ ಪ್ರಿಯವಾದ ಹವ್ಯಾಸ ಮತ್ತು ಮಿಂಚುಳ್ಳಿಗಳನ್ನು ನೋಡುವದೆಂದರೆ ಅವಳಿಗೆ ಎಲ್ಲಿಲ್ಲದ ಖುಷಿ. ಯಾವತ್ತೊ ಹರಿದು ಬತ್ತಿಹೋದ ತೊರೆಯ ಸೆಲೆಯೊಂದರಲ್ಲಿ ಅವಳು ಹೆಜ್ಜೆಯಿಡುತ್ತಾಳೆ. ಅಲ್ಲಿ ಅವಳಿಗೆ ವಿಚಿತ್ರವಾದ ಕಲ್ಲೊಂದು ಕಾಣುತ್ತದೆ. ಕಪ್ಪು ಬಣ್ಣದ ನುಣುಪಾದ ಆ ಕಲ್ಲಿನಲ್ಲಿ ನಸುಗೆ೦ಪಿನ ಛಾಯೆಯಿತ್ತು ಮತ್ತು ಕಲ್ಲಿನ ಸ್ವರೂಪ ಅವಳಿಗೆ ಸಾಕಷ್ಟು ಪರಿಚಿತವಾದಂತೆ ಭಾಸವಾಗುತಿತ್ತು. ನೋಡಿದಾಕ್ಷಣ ಅವಳಿಗೆ ಅದು ಕಿಡ್ನಿಯ ಆಕಾರವಿದೆ ಎಂದೆನಿಸಿತು. ಕಲ್ಲಿನ ಬಗೆಗಿನ ಎಲ್ಲವೂ ನೈಜ ಕಿಡ್ನಿಯ ಹಾಗೆ – ಗಾತ್ರ, ಆಕಾರ, ಬಣ್ಣ ಮತ್ತು ತೂಕ. + +“ಮತ್ತು ಅವಳು ಆ ಕಲ್ಲನ್ನು ಹೆಕ್ಕಿಕೊಂಡು ಮನೆಗೆ ತರುತ್ತಾಳೆ.” + +“ಹೌದು..” ಜುಂಪೇ ಹೇಳಿದ “ಅವಳು ಅದನ್ನು ಆಸ್ಪತ್ರೆಗೆ ತರುತ್ತಾಳೆ ಮತ್ತು ಅದನ್ನು ಪೇಪರ್ ವೈಟ್ ಹಾಗೆ ಉಪಯೋಗಿಸುತ್ತಾಳೆ. ಕಲ್ಲಿನದು ಹೇಳಿ ಮಾಡಿಸಿದ ಗಾತ್ರ ಮತ್ತು ತೂಕ..” + +“ಮತ್ತು ಆಸ್ಪತ್ರೆಗೆ ಹೇಳಿ ಮಾಡಿಸಿದಂತಹ ಆಕಾರ.” + +“ಹೌದು..” ಜುಂಪೇ ಹೇಳಿದ “ಆದರೆ ಸ್ವಲ್ಪ ದಿನಗಳಾದ ಮೇಲೆ ಅವಳು ಒಂದು ವಿಲಕ್ಷಣ ಘಟನೆಯನ್ನು ಗಮನಿಸುತ್ತಾಳೆ ..” + +ಕೀರಿ ಕತೆ ಮುಂದುವರೆಯುವದನ್ನು ಮೌನವಾಗಿ ನಿರೀಕ್ಷಿಸಿದಳು. ಅವಳ ಮೌನವನ್ನು ಪರೀಕ್ಷಿಸುವವನಂತೆ ಜುಂಪೇ ಮತ್ತಷ್ಟು ಮೌನಿಯಾದ. + +ಜು೦ಪೇ ಉದ್ದೇಶಪೂರ್ವಕವಾಗಿ ಕತೆ ಹೇಳುವದನ್ನು ನಿಲ್ಲಿಸಿದ್ದಲ್ಲ. ಕತೆಯನ್ನು ಇಲ್ಲಿಂದ ಮುಂದಕ್ಕೆ ಕೊಂಡೊಯ್ಯಲು ಅವನು ಹೆಣಗಾಡುತ್ತಿದ್ದ. ಜು೦ಪೇ ಕತೆಯ ಈ ಭಾಗದಲ್ಲಿ ನಿಂತು ಸುತ್ತಲೂ ಒಮ್ಮೆ ದೃಷ್ಟಿ ಹಾಯಿಸಿದ ಮತ್ತು ತನ್ನೆಲ್ಲ ಬುದ್ಧಿಶಕ್ತಿಯನ್ನು ಕತೆಯ ಮುಂದಿನ ಭಾಗವನ್ನು ಕಲ್ಪಿಸಲು ವಿನಿಯೋಗಿಸಿದ. ಸ್ವಲ್ಪ ಕಾಲದ ನಂತರ ಕತೆ ಹೇಗೆ ಮುಂದುವರೆಯಬೇಕು ಎನ್ನುವದನ್ನು ನಿರ್ಧರಿಸಿದ. + +“ಪ್ರತಿ ಮುಂಜಾನೆ ಕಲ್ಲು ಬೇರೆ ಬೇರೆ ಜಾಗದಲ್ಲಿ ಇರುವದನ್ನು ಅವಳು ಗಮನಿಸಿದಳು. ದಿನನಿತ್ಯ ಸಂಜೆ ಮನೆಗೆ ಹೋಗುವ ಮೊದಲು ಸಾಮಾನ್ಯವಾಗಿ ಅವಳು ಕಲ್ಲನ್ನು ತನ್ನ ಮೇಜಿನ ಮೇಲಿಟ್ಟು ಹೋಗುತ್ತಿದ್ದಳು. ಪ್ರತಿಯೊಂದನ್ನೂ ಅಚ್ಚುಕಟ್ಟಾಗಿ ಇಡುವದು ಅವಳ ಅಭ್ಯಾಸ. ಹೀಗಾಗಿ ಅವಳು ಪ್ರತಿದಿನ ಕಲ್ಲನ್ನು ಒಂದೇ ಜಾಗದಲ್ಲಿ ಇಡುತ್ತಿದ್ದಳು. ಆದರೆ ಮರುದಿನ ಕಲ್ಲು ಅವಳ ಕುರ್ಚಿಯ ಮೇಲೆ, ರೂಮಿನಲ್ಲಿದ್ದ ಹೂಕುಂಡದ ಮೇಲೆ ಅಥವಾ ನೆಲದ ಮೇಲಿರುತಿತ್ತು. ಮೊದಮೊದಲು ಅವಳು ತಾನೇ ಬೇರೆ ಬೇರೆ ಕಡೆ ಕಲ್ಲನ್ನು ಇಡುತ್ತಿದ್ದೇನೆ ಎಂದು ಭಾವಿಸಿದ್ದಳು. ನಂತರ ತನ್ನ ನೆನಪಿನ ಶಕ್ತಿ ಏನಾದರೂ ತನಗೆ ಆಟವಾಡುಸುತ್ತಿದೆಯೇ ಎಂದು ಯೋಚಿಸಿದಳು. ಬಾಗಿಲಿಗೆ ಅವಳು ಯಾವಾಗಲೂ ಬೀಗ ಹಾಕಿರುತ್ತಿದ್ದಳು. ಹೀಗಾಗಿ ಮತ್ತೊಬ್ಬರು ಒಳಗೆ ಬರುವ ಸಂಭವವಿರಲಿಲ್ಲ. ರಾತ್ರಿ ಪಾಳೆಯ ಕಾವಲುಗಾರನ ಬಳಿ ಒಂದು ಜೊತೆ ಕೀಗಳು ಇದ್ದರೂ, ಆಸ್ಪತ್ರೆಯಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದ ಅವನು ಬೀಗ ತೆಗೆದು ಮತ್ತೊಬ್ಬರ ಕೊಠಡಿಗೆ ಹೊಕ್ಕುವಷ್ಟು ಧೈರ್ಯ ಅವನಿಗಿರಲಿಲ್ಲ. ಅದೂ ಅಲ್ಲದೆ ಅವಳ ಕೊಠಡಿಗೆ ಪ್ರತಿ ರಾತ್ರಿ ಹೊಕ್ಕು ಪೇಪರ್ ವೈಟ್ ಆಗಿ ಅವಳು ಉಪಯೋಗಿಸುತ್ತಿದ್ದ ಕಲ್ಲಿನ ಜಾಗವನ್ನು ಬದಲಿಸುವ ಯಾವ ಅವಶ್ಯಕತೆಯೂ ಅವನಿಗೆ ಇದ್ದಂತಿರಲಿಲ್ಲ. ಅವಳ ಕೊಠಡಿಯಲ್ಲಿ ಬೇರೆ ಯಾವ ಬದಲಾವಣೆಯೂ ಆಗುತ್ತಿರಲಿಲ್ಲ. ಕಲ್ಲಿನ ಜಾಗ ಮಾತ್ರ ಬದಲಾಗುತ್ತಿತ್ತು. ಅವಳಿಗೆ ಏನಾಗುತ್ತಿದೆ ಎನ್ನುವದೇ ತೋಚದಂತಾಯಿತು. ಅವಳ ಕೊಠಡಿಯಲ್ಲಿ ಏನಾಗುತ್ತಿರಬಹುದು? ಕಲ್ಲು ಪ್ರತಿ ರಾತ್ರಿ ಚಲಿಸುವದು ಯಾಕಿರಬಹುದು?” + +“ಕಿಡ್ನಿಯಾಕಾರದ ಕಲ್ಲು ಏನನ್ನು ಮಾಡುತ್ತಿದೆಯೋ ಅದಕ್ಕೆ ಅದರದ್ದೇ ಆದ ಕಾರಣಗಳಿರಬಹುದು.” ಕೀರಿ ಆತ್ಮವಿಶ್ವಾಸದ ಧ್ವನಿಯಲ್ಲಿ ನುಡಿದಳು.“ಕಿಡ್ನಿಯಾಕಾರದ ಕಲ್ಲಿನ ಕ್ರಿಯೆಯ ಹಿಂದೆ ಯಾವ ಕಾರಣವಿರಬಹುದು?” + +“ಕಲ್ಲು ಅವಳ ಆಳದ ಯಾವುದೋ ತಂತುವನ್ನು ಮೀಟಲು ಪ್ರಯತ್ನಿಸುತ್ತಿದೆ. ಹಂತ ಹಂತವಾಗಿ. ಸುದೀರ್ಘವಾಗಿ.” + +“ಒಪ್ಪಿಕೊಂಡೆ. ಆದರೆ ಯಾಕೆ ಹಾಗೆ ಮಾಡಬೇಕು?” + +“ನನಗೆ ಗೊತ್ತಿಲ್ಲ…” ಕೀರಿ ಕಿಲಕಿಲ ನಗುತ್ತ ನುಡಿದಳು “ಬಹುಶಃ ಅವಳ ಪ್ರಪಂಚಕ್ಕೆ ಕಲ್ಲೆಸೆಯಲು ಪ್ರಯತ್ನಿಸುತ್ತಿರಬಹುದು.”“ನಾನು ಈ ಜನ್ಮದಲ್ಲಿ ಕೇಳಿದ ಅತ್ಯಂತ ಕೆಟ್ಟ ಜೋಕು ಇದು..” + +“ಕತೆಯ ಬರಹಗಾರ ನೀನು. ಏನಾಗಬೇಕು ಎನ್ನುವದನ್ನು ನಿರ್ಧರಿಸಬೇಕಾದವನು ನೀನಲ್ಲವೇ? ನಾನು ಕೇವಲ ಕೇಳುಗಳು.” + +ಜುಂಪೇಯ ಹುಬ್ಬು ಗ೦ಟಿಕ್ಕಿದವು. ಸತತವಾಗಿ ಏಕಾಗ್ರತೆಯಿಂದ ಯೋಚಿಸುತ್ತಿರುವದರಿಂದ ಅವನಿಗೆ ಸಣ್ಣಗೆ ತಲೆ ನೋವು ಬಂದಂತಾಯಿತು. ಬಹುಶಃ ವೈನ್ ಕುಡಿದಿದ್ದು ತುಸು ಜಾಸ್ತಿಯೇ ಆಗಿರಬಹುದು. “ಕತೆ ಮುಂದುವರೆಸಲಿಕ್ಕೆ ಮುಂದಿನ ವಿಚಾರ ಹೊಳೆಯುತ್ತಿಲ್ಲ. ನಾನು ನನ್ನ ಬರೆಯುವ ಮೇಜಿನಲ್ಲಿ ಕುಳಿತುಕೊಂಡು ಕೈಯನ್ನು ಮುಂದಕ್ಕೆ ಹಿಂದಕ್ಕೆ ಆಡಿಸಿ ಯೋಚಿಸಿದರೆ ಮಾತ್ರ ಕಥೆಯನ್ನು ಹೇಗೆ ಮುಂದುವರೆಸಬಹುದು ಎನ್ನುವದು ಹೊಳೆಯಬಹುದೇನೋ. ಸ್ವಲ್ಪ ಹೊತ್ತು ನೀನು ಇಲ್ಲೇ ಇದ್ದು ಕಾಯಬಹುದೇ? ನನಗನಿಸುತ್ತಿದೆ ಕತೆಯ ಮುಂದಿನ ಭಾಗ ತನ್ನಷ್ಟಕ್ಕೆ ತಾನೇ ನನ್ನಿಂದ ಬರೆಸಿಕೊಂಡು ಹೋಗುತ್ತದೆ..” + +“ನನಗೇನೂ ಅಭ್ಯ೦ತರವಿಲ್ಲ..” ಕೀರಿ ನುಡಿದಳು. ಅವಳು ಗ್ಲಾಸಿನಿಂದ ಒಂದು ಗುಟುಕು ವೈನ್ ಹೀರಿದಳು. “ನಾನು ಕಾಯುತ್ತೇನೆ. ನಿಜ ಹೇಳಬೇಕೆಂದರೆ ಕತೆ ಬಹಳ ಆಸಕ್ತಿದಾಯಕವಾಗಿದೆ. ಕಿಡ್ನಿಯಾಕಾರದ ಕಲ್ಲು ಮುಂದೇನು ಮಾಡುತ್ತದೆ ಎನ್ನುವದನ್ನು ತಿಳಿದುಕೊಳ್ಳಲು ನಾನು ಕಾತುರಳಾಗಿದ್ದೇನೆ..” + +ಅವಳು ಜುಂಪೇಯನ್ನು ಹಿತವಾಗಿ ತಬ್ಬಿಕೊಂಡಳು. ನಂತರ ಸಣ್ಣಗೆ ಗುಟ್ಟೊ೦ದನ್ನು ಹೇಳುವಂತೆ ಅವನ ಕಿವಿಯಲ್ಲಿ ಪಿಸುನುಡಿದಳು “ನಿನಗೆ ಒಂದು ವಿಷಯ ಗೊತ್ತೇ ಜುಂಪೇ, ಈ ಪ್ರಪಂಚದಲ್ಲಿ ನಡೆಯುವ ಪ್ರತಿ ಕ್ರಿಯೆಯ ಹಿಂದೆ ಒಂದಲ್ಲ ಒಂದು ಕಾರಣವಿರುತ್ತದೆ.” ಜುಂಪೇಗೆ ನಿದ್ರೆ ಕವಿಯುತಿತ್ತು. ಅವನಿಗೆ ಪ್ರತಿಕ್ರಿಯಿಸಲು ಆಗಲಿಲ್ಲ. ರಾತ್ರಿಯ ಏಕಾಂತದ ನಿಶ್ಶಬ್ದದಲ್ಲಿ ಅವಳ ಮಾತಿನ ಶಬ್ಧಗಳು ವಾಕ್ಯಗಳ ಕೊಂಡಿಯನ್ನು ಕಳಚಿಕೊಂಡು ಬಿಡಿ ಬಿಡಿಯಾಗಿ ವೈನಿನ ವಾಸನೆಯೊಂದಿಗೆ ಬೆರೆತು ಅವನ ಸುಪ್ತ ಪ್ರಜ್ಞೆಯನ್ನು ನಿಧಾನಕ್ಕೆ ತಾಕುತ್ತಿದ್ದವು. “ಉದಾಹರಣೆಗೆ ಬೀಸುವ ಗಾಳಿಗೆ ಅದರದ್ದೇ ಆದ ಕಾರಣಗಳಿವೆ. ನಮ್ಮ ಕೆಲಸಕಾರ್ಯಗಳ ನಡುವೆ ನಾವು ಅದನ್ನು ಗಮನಿಸುವದಿಲ್ಲ ಅಷ್ಟೇ. ಆದರೆ ಯಾವದೋ ಒಂದು ಬಿಂದುವಿನಲ್ಲಿ ನಾವು ಅದನ್ನು ಗಮನಿಸಲು ಪ್ರಾರಂಭಿಸುತ್ತೇವೆ. ಗಾಳಿ ನಮ್ಮನ್ನು ತಾಕುವಾಗ ಅದರ ಆಳದಲ್ಲಿ ಒಂದು ಕಾರಣವನ್ನಿಟ್ಟುಕೊಂಡು ಆವರಿಸುತ್ತದೆ. ಬೀಸುವ ಗಾಳಿಗೆ ನಿನ್ನೊಳಗೆ ಇರುವದೆಲ್ಲವೂ ತಿಳಿದಿದೆ. ಕೇವಲ ಗಾಳಿಯೊಂದಕ್ಕೆ ಅಲ್ಲ. ಪ್ರತಿಯೊಂದಕ್ಕೂ, ಕಲ್ಲಿಗೂ ಸಹ. ಅವಕ್ಕೆ ನಮ್ಮ ಒಳ ಸುಳಿಗಳ ಅರಿವಿದೆ. ಅದು ನಮಗೆ ಅರಿವಾಗುವದು ಯಾವತ್ತೋ ಒಮ್ಮೆ ಮಾತ್ರ ಮತ್ತು ಹಾಗೆ ಅರಿತಾಗ ಆ ಅರಿವಿನೊಟ್ಟಿಗೆ ಬದುಕುವದನ್ನು ಬಿಟ್ಟು ನಾವು ಬೇರೇನೂ ಮಾಡಲು ಸಾಧ್ಯವಿಲ್ಲ. ಅಂತದೊಂದು ಅರಿವು ನಮ್ಮೊಳಗೆ ಇಳಿದಾಗಲೇ ನಾವು ಗಟ್ಟಿಯಾಗುವದು ನಾವು ಬದುಕುಳಿಯುವದು.” + +ಮುಂದಿನ ಐದು ದಿನಗಳ ಕಾಲ ಜುಂಪೇ ತನ್ನ ಮನೆಯನ್ನು ಬಿಟ್ಟು ಹೊರಗೆಲ್ಲೂ ಹೋಗಲಿಲ್ಲ. ಬರೆಯುವ ಮೇಜಿನ ಮೇಲೆ ಕುಳಿತು ಸತತವಾಗಿ ಕಿಡ್ನಿಯಾಕಾರದ ಕಲ್ಲಿನ ಕತೆಯನ್ನು ಬರೆದು ಮುಗಿಸಿದ. ಕೀರಿ ಊಹಿಸಿದ ಹಾಗೆ ಕಿಡ್ನಿಯಾಕಾರದ ಕಲ್ಲು ಹಂತ ಹಂತವಾಗಿ ವೈದ್ಯೆಯ ಜೀವನವನ್ನು ಅಲ್ಲಾಡಿಸಲು ಪ್ರಾರಂಭಿಸಿತು. ನಿಧಾನವಾಗಿ ಆದರೆ ನಿಖರವಾಗಿ. + +ಒಂದು ದಿನ ಹೋಟೆಲಿನ ರೂಮಿನಲ್ಲಿ ಅವಳ ಪ್ರಿಯಕರನ ಜೊತೆಗೆ ಹಾಸಿಗೆಯಲ್ಲಿ ಮಲಗಿದ್ದಾಗ ಅವಳು ಮೆತ್ತಗೆ ಅವನ ಬೆನ್ನಿನ ಕೆಳಗೆ ಸೊಂಟದ ಮೇಲೆ ಕೈ ಆಡಿಸಿದಾಗ ಅವಳ ಕೈಗೆ ಕಿಡ್ನಿಯಾಕಾರವನ್ನು ಸ್ಪರ್ಶಿಸಿದ ಅನುಭವವಾಯಿತು. ಕಿಡ್ನಿಯಾಕಾರದ ಕಲ್ಲು ಅಲ್ಲಿ ಸರಿದಾಡುತ್ತಿರುವದು ಅವಳಿಗೆ ಅರಿವಾಯಿತು. ತನ್ನ ಪ್ರಿಯಕರನ ದೇಹದಲ್ಲಿ ಅವಳೇ ಆ ಕಿಡ್ನಿಯನ್ನು ರಹಸ್ಯವಾಗಿ ಹುಗಿದಿಟ್ಟಿದ್ದಳು. ಅವಳ ಕೈಬೆರಳುಗಳ ನಡುವೆ ಸಣ್ಣ ಕೀಟದಂತೆ ಕಿಡ್ನಿ ಸರಿದಾಡುತ್ತ ಅವಳಿಗೆ ಕಿಡ್ನಿಯಾಕಾರದ ಸಂದೇಶಗಳನ್ನು ಕಳಿಸುತ್ತಿತ್ತು. ಅವಳು ಕಿಡ್ನಿಯ ಜೊತೆಗೆ ಮಾತನಾಡುತ್ತಿದ್ದಳು ಅವಳ ವಿಚಾರಗಳನ್ನು ಹೇಳುತ್ತಿದ್ದಳು. ಕಿಡ್ನಿಯ ನುಣುಪನ್ನು ಅವಳು ಅಂಗೈಯಲ್ಲಿ ಅನುಭವಿಸುತ್ತಿದ್ದಳು. + +ದಿನ ಕಳೆದಂತೆ ವೈದ್ಯೆಗೆ ಕಿಡ್ನಿಯಾಕಾರದ ಕಲ್ಲು ಭಾರವಾಗುತ್ತಿರುವದು, ಪ್ರತಿ ರಾತ್ರಿ ಸ್ಥಳಾ೦ತರವಾಗುತ್ತ ತನ್ನ ಅಸ್ತಿತ್ವವನ್ನು ಪ್ರಕಟಿಸುವದು ಅಭ್ಯಾಸವಾಯಿತು. ಅವಳು ಇದನ್ನು ಸಹಜ ಕ್ರಿಯೆಯೆ೦ದು ಒಪ್ಪಿಕೊಂಡಳು. ಈಗ ಕಿಡ್ನಿಯಾಕಾರದ ಕಲ್ಲು ರಾತ್ರಿ ಚಲಿಸಿ ಸ್ಥಾನ ಬದಲಿಸಿದಾಗ ಅವಳಿಗೆ ಆಶ್ಚರ್ಯವಾಗುತ್ತಿರಲಿಲ್ಲ. ಅವಳು ಬೆಳಿಗ್ಗೆ ಆಸ್ಪತ್ರೆಗೆ ಬಂದಾಗ ಕಿಡ್ನಿಯಾಕಾರದ ಕಲ್ಲನ್ನು ಹುಡುಕಿ ಮತ್ತೆ ಅದರ ಜಾಗದಲ್ಲಿ ಇಡುತ್ತಿದ್ದಳು. ಈ ಕೆಲಸ ಅವಳ ದಿನಚರಿಯ ಒಂದು ಭಾಗವೇ ಆಯಿತು. ಅವಳು ರೂಮಿನಲ್ಲಿದ್ದಾಗ ಕಲ್ಲು ಚಲಿಸುತ್ತಿರಲಿಲ್ಲ. ಅದು ಬೆಕ್ಕು ಬಿಸಿಲನ್ನು ಕಾಯಿಸುತ್ತಾ ಬೆಚ್ಚಗೆ ಮಲಗಿದಂತೆ ಒಂದೆಡೆ ಮಲಗಿರುತ್ತಿತ್ತು. ಸಂಜೆ ರೂಮಿನ ಬಾಗಿಲನ್ನು ಹಾಕಿ ಅವಳು ಮನೆಗೆ ಹೋದ ನಂತರವೇ ಕಲ್ಲು ಎಚ್ಚರಗೊಂಡು ಚಲಿಸುತ್ತಿತ್ತು. + +ಅವಳಿಗೆ ಬಿಡುವಾದಾಗಲೆಲ್ಲ ಕಲ್ಲಿನ ನುಣುಪಾದ, ಗಾಢ ವರ್ಣದ ಮೇಲ್ಮೈ ಸವರುತ್ತ ಸಮಯ ಕಳೆಯುತ್ತಿದ್ದಳು. ಕೆಲ ದಿನಗಳಾದಮೇಲೆ ಅವಳಿಗೆ ಕಲ್ಲಿನಿಂದ ದೃಷ್ಟಿಯನ್ನು ತೆಗೆಯುವದೇ ಕಷ್ಟವಾಗತೊಡಗಿತು. ಮೋಡಿಗೊಳಗಾದ ಹಾಗೆ ಅವಳು ಸದಾಕಾಲ ಕಲ್ಲನ್ನು ದಿಟ್ಟಿಸುತ್ತಿದ್ದಳು. ನಿಧಾನವಾಗಿ ಅವಳು ಬೇರೆಲ್ಲ ಕೆಲಸಗಳ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳತೊಡಗಿದಳು. ಅವಳಿಗೆ ಈಗ ಪುಸ್ತಕ ಓದಲು ಸಾಧ್ಯವಾಗುತ್ತಿರಲಿಲ್ಲ. ಜಿಮ್ ಗೆ ಹೋಗುವದನ್ನು ನಿಲ್ಲಿಸಿದಳು. ರೋಗಿಗಳನ್ನು ನೋಡಲು ಸಾಧ್ಯವಾಗುವಷ್ಟು ಏಕಾಗ್ರತೆ ಮಾತ್ರ ಅವಳಲ್ಲಿ ಕೊಂಚ ಉಳಿದಿತ್ತು. ಏಕಾಗ್ರತೆ ಎನ್ನುವದಕ್ಕಿಂತ ಅನುಭವದ ಆಧಾರದ ಮೇಲೆ ಮತ್ತು ವಾಡಿಕೆಯಂತೆ ಅವಳು ರೋಗಿಗಳನ್ನು ಪರೀಕ್ಷಿಸಿ ಕಳುಹಿಸುತ್ತಿದ್ದಳು. + +ಅವಳು ಸಹೋದ್ಯೋಗಿಗಳ ಜೊತೆಗೆ ಮಾತನಾಡುವದರಲ್ಲಿ ಔದಾಸೀನ್ಯ ತೋರಲಾರಂಭಿಸಿದಳು. ಕ್ರಮೇಣ ಅವಳ ಹಸಿವು ಇಂಗತೊಡಗಿತು. ಅವಳ ಪ್ರಿಯಕರನ ಆಲಿಂಗನ ಸಹ ಕಿರಿಕಿರಿಯಾಗತೊಡಗಿತು. ಸುತ್ತ ಯಾರೂ ಇಲ್ಲದಿರುವಾಗ ಅವಳು ತನ್ನಷ್ಟಕ್ಕೆ ತಾನೇ ಕಲ್ಲಿನ ಜೊತೆಗೆ ಮಾತನಾಡುತ್ತಿದ್ದಳು. ಜನರು ಮೂಕ ಪ್ರಾಣಿಗಳ ಜೊತೆಗೆ ನಡೆಸುವ ಸಂಭಾಷಣೆಯಂತೆ ಕಲ್ಲು ಹೇಳುವ ಮಾತಿಲ್ಲದ ನಿಶ್ಯಬ್ದ ಶಬ್ದಗಳನ್ನು ಅವಳು ಆಲಿಸುತ್ತಿದ್ದಳು. ದಟ್ಟನೆಯ ವರ್ಣದ ಕಿಡ್ನಿಯಾಕಾರದ ಕಲ್ಲು ಈಗ ಅವಳ ಬಹುತೇಕ ಜಗತ್ತನ್ನು ನಿಯಂತ್ರಿಸುತ್ತಿತ್ತು. + +ಖಂಡಿತವಾಗಿಯೂ ಕಲ್ಲು ಯಾವುದೋ ಶೂನ್ಯದಿಂದ ಸೃಷ್ಟಿಯಾಗಿ ಅವಳ ಬಳಿ ಬಂದಿದ್ದಲ್ಲ. ಕತೆ ಮುಂದುವರೆದಂತೆ ಜುಂಪೆಗೆ ಈ ಸತ್ಯ ಸ್ಪಷ್ಟವಾಗಿ ಗೋಚರಿಸಿತ್ತು. ಅದು ಅವಳೊಳಗಿನ ಯಾವುದೋ ಒಂದು ಭಾವವೇ ಆಗಿತ್ತು. ಅವಳೊಗಿನ ಯಾವುದೋ ಭಾವ ತಂತು ಕಿಡ್ನಿಯಾಕಾರದ ಕಲ್ಲನ್ನು ಮೀಟುತ್ತ ಅವಳನ್ನು ಮೂರ್ತವಾದ ಕ್ರಿಯೆಯೊಂದಕ್ಕೆ ಪ್ರೇರೇಪಿಸುತಿತ್ತು. ಅವಳಿಗೆ ಸಂಜ್ಞೆಗಳನ್ನು ಕಳುಹಿಸುತ್ತಿತ್ತು – ಕಲ್ಲಿನ ಪ್ರತಿ ರಾತ್ರಿಯ ಚಲನೆಯ ಸಂಜ್ಞೆ.ಜುಂಪೇ ಬರೆಯುವಾಗ ‘ಕೀರಿ’ಯ ಬಗ್ಗೆ ಯೋಚಿಸುತ್ತಿದ್ದ. ಅವಳೊಳಗಿನ ಯಾವುದೋ ಅದೃಶ್ಯ ಭಾವ ಈ ಕತೆಯ ಮೇಲೆ ಪ್ರಭಾವ ಬಿರುತ್ತಿರುವಂತೆ ಅವನಿಗೆ ಭಾಸವಾಗುತಿತ್ತು. ವಾಸ್ತವಕ್ಕೆ ದೂರವಾದ ಕತೆಯನ್ನು ಬರೆಯಬೇಕೆನ್ನುವದು ಅವನ ಉದ್ದೇಶವಾಗಿರಲಿಲ್ಲ. ಅವನು ಬರೆಯಬೇಕೆಂದುಕೊಂಡಿದ್ದು ಗೊಂದಲವಿಲ್ಲದ ಮನೋವೈಜ್ಞಾನಿಕವಾದ ಕಥೆ. ಆ ಕತೆಯಲ್ಲಿ ಕಲ್ಲು ತನ್ನಷ್ಟಕ್ಕೆ ತಾನೇ ಚಲಿಸುತ್ತಿರಲಿಲ್ಲ. + +ಜುಂಪೇ ಮೊದಲು ಅಂದುಕೊಂಡಂತೆ ಮಹಿಳಾ ಡಾಕ್ಟರ್ ತನ್ನ ವಿವಾಹಿತ ಪ್ರಿಯಕರನ ಜೊತೆಗೆ ಸಂಬಂಧವನ್ನು ಕಡಿದು ಕೊಳ್ಳುತ್ತಾಳೆ. ಅವಳು ಅವನನ್ನು ದ್ವೇಷಿಸುವ ಹಂತವನ್ನು ಮುಟ್ಟಿರಲಿಕ್ಕೂ ಸಾಕು ಅಥವಾ ಅವಳು ಅರಿವಿಲ್ಲದಂತೆ ಇದನ್ನೇ ಬಯಸಿರಬಹುದು. + +ಒಮ್ಮೆ ಕತೆಯ ಓಘ ಅವನ ಹಿಡಿತಕ್ಕೆ ಸಿಕ್ಕಿದಾಗ ಅದನ್ನು ಬರೆಯುವದು ಅವನಿಗೆ ಕಷ್ಟವಾಗಲಿಲ್ಲ. ಸಣ್ಣಗೆ ಹಾಡೊಂದನ್ನು ಕೇಳುತ್ತ ತನಗೇ ಆಶ್ಚರ್ಯವಾಗುವಷ್ಟು ವೇಗವಾಗಿ ಅವನು ಕಥೆಯನ್ನು ಬರೆದು ಮುಗಿಸಿದ. “ವೈದ್ಯೆ ಅವಳ ಪ್ರಿಯಕರನ ಜೊತೆಗೆ ಸಂಬಂಧ ಕಡಿದುಕೊಳ್ಳಲು ನಿರ್ಧರಿಸುತ್ತಾಳೆ. “ನಾವಿಬ್ಬರು ಮತ್ತೆ ಭೇಟಿಯಾಗುವದು ಅಸಾಧ್ಯ .” ಅವನಿಗೆ ಹೇಳುತ್ತಾಳೆ. “ಇಬ್ಬರೂ ಕುಳಿತು ಮಾತನಾಡಿ ಬಗೆ ಹರಿಸಿಕೊಳ್ಳಬಹುದಲ್ಲವೇ? ಅವನು ಕೇಳಿಕೊಳ್ಳುತ್ತಾನೆ. “ಇಲ್ಲ..” ಅವಳು ದೃಢ ದನಿಯಲ್ಲಿ ನುಡಿಯುತ್ತಾಳೆ. “ಅದು ಸಾಧ್ಯವಿಲ್ಲದ ಮಾತು..” + +ಮಾರನೆಯ ದಿನ ಅವಳು ಟೋಕಿಯೋದಿಂದ ಹೊರಟಿದ್ದ ಹಡಗೊಂದನ್ನು ಹತ್ತಿ, ಹಡಗಿನ ಡೆಕ್ಕಿನ ಮೇಲೆ ನಿಂತು, ಕಿಡ್ನಿಯಾಕಾರದ ಕಲ್ಲನ್ನು ಸಮುದ್ರಕ್ಕೆ ಎಸೆಯುತ್ತಾಳೆ. ಕಲ್ಲು ಆಳ ಸಮುದ್ರದಲ್ಲಿ ಮುಳುಗುತ್ತ ಭೂಮಿಯ ಅಂತರಾಳವನ್ನು ತಲುಪುತ್ತದೆ. ಅವಳು ಹೊಸ ಬದುಕನ್ನು ಪ್ರಾರಂಭಿಸುತ್ತಾಳೆ. ಕಲ್ಲನ್ನು ಬಿಸಾಡಿದ ನಂತರ ಅವಳಿಗೆ ಎಲ್ಲವೂ ಹಗುರವಾದಂತೆ ಅನುಭವವಾಗುತ್ತದೆ. + +ಮಾರನೇ ದಿನ ಅವಳು ಕೆಲಸಕ್ಕೆ ಆಸ್ಪತ್ರೆಗೆ ಹೋದಾಗ ಕಲ್ಲು ಮತ್ತೆ ಅವಳ ಮೇಜಿನ ಮೇಲೆ ಕುಳಿತು ಅವಳಿಗಾಗಿ ಕಾಯುತ್ತಿತ್ತು ಮತ್ತು ಅವತ್ತಿನಿಂದ ಕೊನೆಯವರೆಗೂ ಗಾಢ ವರ್ಣದ ಕಿಡ್ನಿಯಾಕಾರದ ಕಲ್ಲು ಎಲ್ಲಿರಬೇಕೋ ಅಲ್ಲೇ ಸ್ಥಿರವಾಗಿ ಕುಳಿತಿತ್ತು. + +ಕತೆಯನ್ನು ಬರೆದು ಮುಗಿಸಿದ ತಕ್ಷಣ ಅವನು ‘ಕೀರಿ’ಗೆ ಫೋನಾಯಿಸಿದ. ಬಹುಶಃ ಕತೆಯನ್ನು ಅವಳು ಕೇಳಲು ಉತ್ಸುಕಳಾಗಿರಬಹುದು. ಹಾಗೆ ನೋಡಿದರೆ ಕತೆ ಈ ರೀತಿ ತಿರುವು ಪಡೆಯಲು ಒಂದು ರೀತಿಯಲ್ಲಿ ಅವಳೇ ಪ್ರೇರಣೆಯಾಗಿದ್ದಳು. ಆದರೆ ಅವನ ಕರೆ ಅವಳಿಗೆ ತಲುಪಲಿಲ್ಲ. ಪ್ರತಿ ಬಾರಿ ಕರೆ ಮಾಡಿದಾಗಲೂ “ಈ ನಂಬರ್ ಅಸ್ತಿತ್ವದಲ್ಲಿಲ್ಲ. ದಯವಿಟ್ಟು ಮತ್ತೊಮ್ಮೆ ಪರೀಕ್ಷಿಸಿ…” ಎನ್ನುವ ಮುದ್ರಿತ ಧ್ವನಿ ಕೇಳಿಸುತ್ತಿತ್ತು. ಜುಂಪೇ ಮತ್ತೆ ಮತ್ತೆ ಪ್ರಯತ್ನಿಸಿದ. ಬಹುಶಃ ಅವಳ ಫೋನಿನಲ್ಲಿ ಏನೋ ತಾಂತ್ರಿಕ ದೋಷವಿರಬೇಕು ಎಂದು ಅವನು ಭಾವಿಸಿದ. + +ಜುಂಪೇ ಮನೆಯಲ್ಲಿ ಒಬ್ಬಂಟಿಯಾಗಿ ಕುಳಿತು ಅವಳು ಮತ್ತೆ ಕರೆ ಮಾಡಬಹುದು ಎಂದು ಕಾದ. ಆದರೆ ಅವಳು ಮತ್ತೆಂದೂ ಅವನನ್ನು ಸಂಪರ್ಕಿಸಲಿಲ್ಲ. ಒಂದು ತಿಂಗಳು ಕಳೆಯಿತು. ಒಂದು ಎರಡಾಯಿತು. ಎರಡು ಮೂರಾಯಿತು . ಋತುಗಳು ಬದಲಾದವು. ಹೊಸ ವರ್ಷ ಪ್ರಾರಂಭವಾಯಿತು. ಅವನ ಕಥೆ ಫೆಬ್ರವರಿ ತಿಂಗಳ ಸಾಹಿತ್ಯ ಪತ್ರಿಕೆಯಲ್ಲಿ ಪ್ರಕಟವಾಯಿತು. ಪತ್ರಿಕೆಯ ಮುಖಪುಟದಲ್ಲಿ ಜುಂಪೇಯ ಫೋಟೋವನ್ನು ಮುದ್ರಿಸಿ, ಅದರ ಕೆಳಗೆ ಅವನ ಕತೆಯ ಹೆಸರನ್ನು ಹಾಕಿದ್ದರು “ಪ್ರತಿನಿತ್ಯ ಚಲಿಸುವ ಕಿಡ್ನಿಯಾಕಾರದ ಕಲ್ಲು.” ಕೀರಿ ಪತ್ರಿಕೆಯನ್ನು ನೋಡಿ, ಖರೀದಿಸಿ ಓದಿ ಒಂದಲ್ಲ ಒಂದು ದಿನ ಕರೆ ಮಾಡುತ್ತಾಳೆ ಎಂದು ಅವನು ಕಾಯತೊಡಗಿದ. ಅವನ ಕಾಯುವಿಕೆಗೆ ಪ್ರತಿದಿನ ಸಿಗುತ್ತಿದ್ದುದು ಮೌನದ ಇನ್ನೊಂದು ಸ್ತರವಾಗಿತ್ತು. + +ಕೀರಿ ಅವನ ಜೀವನದಿಂದ ಮಾಯವಾದ್ದರಿಂದ ಅವನು ಅನುಭವಿಸಿದ ನೋವು ಅವನು ಎಣಿಸಿದ್ದಕ್ಕಿಂತ ತೀವ್ರತರದ್ದಾಗಿತ್ತು. ಅವಳು ಬಿಟ್ಟುಹೋದ ಶೂನ್ಯ ಅವನನ್ನು ಅಲ್ಲಾಡಿಸಿತ್ತು. ಪ್ರತಿದಿನ ಲೆಕ್ಕವಿಲ್ಲದಷ್ಟು ಸಲ ಅವನು “ಕೀರಿ ಈ ಸಂದರ್ಭದಲ್ಲಿ ಇದ್ದಿದ್ದರೆ…” ಎಂದು ಅಂದುಕೊಳ್ಳುತ್ತಿದ್ದ. ಅವನು ಅವಳ ನಗುವನ್ನು ನೆನಪಿಕೊಳ್ಳುತ್ತಿದ್ದ, ಅವಳ ತುಟಿಯ ಆಕಾರವನ್ನು ನಿರ್ಧರಿಸುತ್ತಿದ್ದ ಶಬ್ದಗಳನ್ನು, ಅವಳ ಸ್ಪರ್ಶವನ್ನು ಜ್ಞಾಪಿಸಿಕೊಳ್ಳುತ್ತಿದ್ದ. ಅವನ ಪ್ರೀತಿಯ ಸಂಗೀತವಾಗಲಿ, ಅವನು ಬಹು ಇಷ್ಟಪಡುತ್ತಿದ್ದ ಲೇಖಕರ ಹೊಸ ಪುಸ್ತಕವಾಗಲೀ ಅವನ ನೋವನ್ನು ಮರೆಸಲಿಲ್ಲ. ಎಲ್ಲವೂ ಅವನಿಂದ ದೂರವಿರುವಂತೆ ಭಾಸವಾಗುತಿತ್ತು. ‘ಕೀರಿ’ ನನ್ನ ಬದುಕಿನ ಎರಡನೇ ಮಹಿಳೆ, ಜುಂಪೆ ನಿರ್ಧರಿಸಿದ. + +ಜುಂಪೇ ಮತ್ತೊಮ್ಮೆ ‘ಕೀರಿ’ಯನ್ನು ಭೇಟಿಯಾಗಿದ್ದು ವಸಂತ ಕಾಲದ ಒಂದು ಮಧ್ಯಾನ್ಹ. ಭೇಟಿಯೆ೦ದರೆ ಮುಖತಃ ಭೇಟಿಯಲ್ಲ. ಅವಳ ಧ್ವನಿಯನ್ನು ಕೇಳಲು ಮಾತ್ರ ಸಾಧ್ಯವಾಯಿತು. + +ಅವನು ಟ್ಯಾಕ್ಸಿಯೊಂದರಲ್ಲಿ ಟ್ರಾಫಿಕ್ಕಿನ ಸಂದಣಿಯಲ್ಲಿ ಇದ್ದ. ಡ್ರೈವರ್ ಯಾವುದೋ ಒಂದು ಎಫ್ ಎಂ ಛಾನೆಲ್ ಕೇಳುತ್ತಿದ್ದ. ‘ಕೀರಿ’ಯ ಧ್ವನಿ ರೇಡಿಯೋದಿಂದ ಕೇಳಿಸಿತು. ಮೊದಮೊದಲು ಜುಂಪೇಗೆ ಅದು ‘ಕೀರಿ’ಯದೇ ಧ್ವನಿ ಎಂದು ಅನ್ನಿಸಲಿಲ್ಲ. ಈ ಧ್ವನಿ ಅವಳ ಧ್ವನಿಯಂತೆ ಇದೆ ಎಂದು ಅವನಿಗೆ ಭಾಸವಾಯಿತು. ಮತ್ತೆ ಮತ್ತೆ ಕೇಳಿದಾಗ ಅವನಿಗೆ ಅದು ‘ಕೀರಿ’ಯದೆ ಧ್ವನಿ ಎಂದು ಖಚಿತವಾಯಿತು. ಅವಳದೇ ಶೈಲಿ, ಅವಳಿಗಷ್ಟೇ ವೈಯಕ್ತಿಕವಾಗಿದ್ದ ಮೆಲು ದನಿಯ ಉಚ್ಚಾರಣೆ ಮತ್ತು ಅವಳಿಗಷ್ಟೇ ಕರಗತವಾಗಿದ್ದ ವಾಕ್ಯಗಳ ನಡುವೆ ನಿಲ್ಲಿಸಿ ನಿಲ್ಲಿಸಿ ಮಾತನಾಡುವ ಕಲೆ.ಜುಂಪೇ ರೇಡಿಯೋದ ವಾಲ್ಯೂಮ್ ಹೆಚ್ಚಿಸುವಂತೆ ಕೇಳಿಕೊಂಡ. + +“ಖಂಡಿತವಾಗಿ ಸರ್..” ಡ್ರೈವರ್ + +ಅದು ರೇಡಿಯೋ ಚಾನೆಲ್ಲಿನ ಆಫೀಸಿನಲ್ಲಿ ನಡೆಯುತ್ತಿರುವ ಸಂದರ್ಶನವಾಗಿತ್ತು. ಮಹಿಳಾ ಉದ್ಘೋಷಕಿ ಪ್ರಶ್ನೆ ಕೇಳುತ್ತಿದ್ದಳು “ಹಾಗಾದರೆ ಚಿಕ್ಕವಳಾಗಿದ್ದಾಗಿನಿಂದಲೂ ನಿಮಗೆ ಎತ್ತರದ ಜಾಗಗಳೆಂದರೆ ಇಷ್ಟ..?” + +“ಅದು ನಿಜ..” ಕೀರಿ ನುಡಿದಳು ಅಥವಾ ಅವಳಂತೆ ಧ್ವನಿಯುಳ್ಳವಳು. “ನನಗೆ ಬುದ್ದಿ ಬಂದಾಗಿನಿಂದಲೂ ನನಗೆ ಎತ್ತರದ ಪ್ರದೇಶಗಳಿಗೆ ಹೋಗುವದೆಂದರೆ ಇಷ್ಟ. ನನ್ನ ತಂದೆತಾಯಿಯರನ್ನು ಅತ್ಯಂತ ಎತ್ತರದ ಕಟ್ಟಡಗಳಿಗೆ ಕರೆದುಕೊಂಡು ಹೋಗುವಂತೆ ಪೀಡಿಸುತ್ತಿದ್ದೆ. ನಾನೊಬ್ಬಳು ವಿಲಕ್ಷಣ ಪುಟ್ಟ ಹುಡುಗಿಯಾಗಿದ್ದೆ..” ಧ್ವನಿ ನಗುತ್ತ ನುಡಿಯಿತು. + +“ಅಂದರೆ ನಿಮ್ಮ ಈಗಿನ ಕೆಲಸ ಆರಂಭವಾದದ್ದು ಹಾಗೆ ಅನ್ನಿ..” + +“ಮೊದಲು ನಾನು ಒಂದು ಷೇರು ವಿಶ್ಲೇಷಣಾ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದೆ. ಕೆಲಸಕ್ಕೆ ಸೇರಿದ ಕೆಲವೇ ದಿನಗಳಲ್ಲೇ ಈ ಕೆಲಸ ನನಗೆ ಹೊಂದುವದಿಲ್ಲ ಎಂದು ನನಗೆ ಖಚಿತವಾಗಿತ್ತು. ನಾನು ಮೂರು ವರ್ಷಗಳ ನಂತರ ಅಲ್ಲಿ ಕೆಲಸವನ್ನು ಬಿಟ್ಟೆ. ಎತ್ತರದ ಕಟ್ಟಡಗಳ ಕಿಟಕಿಯನ್ನು ತೊಳೆಯುವ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದೆ. ಪುರುಷ ಪ್ರಧಾನವಾದ ಆ ಕೆಲಸದಲ್ಲಿ ಒಬ್ಬಳು ಮಹಿಳೆಗೆ ಅಷ್ಟು ಸುಲಭವಲ್ಲ. ಹಾಗಾಗಿ ಮೊದಮೊದಲು ಅಲ್ಲಿ ನಾನು ಅರೆ ಕಾಲಿಕ ಕೆಲಸಗಾರಳಾಗಿದ್ದೆ.” + +“ಷೇರು ವಿಶ್ಲೇಷಕಿಯಿಂದ ಕಿಟಕಿ ತೊಳೆಯುವದು, ದೊಡ್ಡ ಬದಲಾವಣೆಯೇ ಸರಿ..” + +“ನಿಜ ಹೇಳಬೇಕೆಂದರೆ ಕಿಟಕಿ ತೊಳೆಯುವದೇ ಕಡಿಮೆ ಒತ್ತಡದ ಕೆಲಸವೆಂದು ನನಗೆ ಅನಿಸುತ್ತದೆ. ಏನಾದರು ಬೀಳುವುದಾದರೆ ಅದು ನಾನು ಮಾತ್ರ ಹೊರತು ಕಂಪನಿಯ ಷೇರಲ್ಲ..” ಮತ್ತೆ ನಗು. + +“ಈ ಕಿಟಕಿ ತೊಳೆಯುವರು ಅಂದರೆ, ಎತ್ತರದ ಕಟ್ಟಡಗಳ ಆ ಕಡೆ ಈ ಕಡೆ ಹಗ್ಗ ಹಾಕಿ ನೇತಾಡುತ್ತಾ ಇರುತ್ತಾರಲ್ಲ ಅವರೇ ಅಲ್ಲವೇ?” + +“ಹೌದು. ಏನಾದರು ಹೆಚ್ಚು ಕಡಿಮೆ ಆದರೆ ಎಂದು ಜೀವರಕ್ಷಕ ಸಲಕರಣೆಗಳನ್ನು ಕೊಟ್ಟಿರುತ್ತಾರೆ. ಆದರೆ ಕೆಲವೊಂದು ಜಾಗಗಳನ್ನು ಆ ಜೀವರಕ್ಷಕ ಸಲಕರಣೆ, ಜಾಕೆಟ್ ಹಾಕಿಕೊಂಡು ತಲುಪವುದು ಸಾಧ್ಯವಿಲ್ಲ. ನನಗೆ ಅದೇನು ಕಾಡುವ ವಿಷಯವಾಗಿರಲಿಲ್ಲ. ಎಷ್ಟೇ ಎತ್ತರವಿದ್ದರೂ, ಎತ್ತರವೆನ್ನುವದು ನನ್ನನ್ನು ಯಾವತ್ತೂ ಭಯಪಡಿಸಿಲ್ಲ ಮತ್ತು ಈ ಗುಣ ನನ್ನನ್ನು ಒಬ್ಬ ಅಮೂಲ್ಯ ಕೆಲಸಗಾರಳಾಗಿ ಮಾಡಿತು.” + +“ಹಾಗಾದರೆ ನಿಮಗೆ ಪರ್ವತಾರೋಹಣವು ಇಷ್ಟ..” + +“ಪರ್ವತಾರೋಹಣದಲ್ಲಿ ನನಗೆ ಯಾವುದೇ ಆಸಕ್ತಿಯಿಲ್ಲ. ಕೆಲವು ಪರ್ವತಗಳನ್ನು ಹತ್ತಲು ಪ್ರಯತ್ನಿಸಿದ್ದೇನೆ. ಆದರೆ ಎಷ್ಟೇ ಎತ್ತರದ ಪರ್ವತವಾದರೂ ಅದರಲ್ಲಿ ನನಗೆ ಆಕರ್ಷಣೆಯಿಲ್ಲ. ನನ್ನ ಒಂದೇ ಆಸಕ್ತಿ ಎಂದರೆ ಮಾನವ ನಿರ್ಮಿತವಾದ ಭೂಮಿಯಿಂದ ಆಗಸಕ್ಕೆ ನೆಟ್ಟಗೆ ನಿಂತಿರುವ ಅತೀ ಎತ್ತರದ ಕಟ್ಟಡಗಳು. ಯಾಕೆ ಎಂದು ಕೇಳಬೇಡಿ.” + +“ಈಗ ತಾವು ಅತಿ ಎತ್ತರದ ಕಟ್ಟಡಗಳ ಕಿಟಕಿಗಳನ್ನು ತೊಳೆಯುವ ಕಂಪನಿಯನ್ನು ಸ್ಥಾಪಿಸಿದ್ದೀರ..” + +“ಹೌದು..” ಅವಳು ಹೇಳಿದಳು . “ನಾನು ಸ್ವಲ್ಪ ಸ್ವಲ್ಪವೇ ಹಣವನ್ನು ಉಳಿಸಿ, ನನ್ನದೇ ಆದ ಸಣ್ಣ ಕಂಪನಿಯನ್ನು ಆರು ವರ್ಷಗಳ ಹಿಂದೆ ಪ್ರಾರಂಭಿಸಿದೆ. ಖಂಡಿತವಾಗಿಯೂ ನಾನು ನನ್ನ ತಂಡದೊಡಗೂಡಿಯೇ ಹೋಗುತ್ತೇನೆ, ಆದರೆ ನನ್ನ ಕಂಪನಿಗೆ ನಾನೇ ಮಾಲೀಕಳು. ಈಗ ಬೇರೊಬ್ಬರಿಂದ ನಾನು ಆಜ್ಞೆ ಪಡೆಯುವ ಸಂದರ್ಭವಿಲ್ಲ ಹಾಗಾಗಿ ನಾನು ನನ್ನದೇ ನಿಯಮಗಳನ್ನು ನಿರ್ಧರಿಸಬಹುದು.” + +“ಅದರ ಅರ್ಥ ನೀವು ಜೀವರಕ್ಷಕ ಸಲಕರಣೆಗಳನ್ನು ಹಾಕಿಕೊಳ್ಳಬಹುದು ಅಥವಾ ಬಿಡಬಹುದು…” + +“ಒಂದರ್ಥದಲ್ಲಿ ಹೌದು..” ನಗು. + +“ನಿಮಗೆ ಅದನ್ನು ಧರಿಸುವದು ಇಷ್ಟಾವಾಗುವದಿಲ್ಲ ಅಲ್ಲವೇ..?” + +“ಇಲ್ಲ. ಅದನ್ನು ಧರಿಸಿದಾಗಲೆಲ್ಲ ನನಗೆ ನಾನು ಬೇರೊಬ್ಬಳು ಎನ್ನುವ ಭಾವ.” + +“ನಿಮಗೆ ಅತೀ ಎತ್ತರದ ಜಾಗಗಳೆಂದರೆ ಇಷ್ಟ ಅಲ್ಲವೇ?” + +“ಅತಿ ಎತ್ತರದ ಜಾಗಗಳು ನನ್ನನ್ನು ಕೈ ಬಿಸಿ ಕರೆಯುತ್ತಿದೆ ಎಂದೆನಿಸುತ್ತದೆ. ನಾನು ಇದಲ್ಲದೆ ಇನ್ನೊಂದು ಕೆಲಸ ಮಾಡುವದನ್ನು ಊಹೆ ಕೂಡ ಮಾಡಲಾರೆ. ನಾವು ಮಾಡುವ ಕೆಲಸ ನಮ್ಮ ಹೃದಯಕ್ಕೆ ಹತ್ತಿರವಾಗಿರಬೇಕೆ ಹೊರತು ಅನುಕೂಲಕ್ಕೆ ಮಾಡಿಕೊಂಡ ಮದುವೆಯಂತೆ ಇರಬಾರದು.” + +“ಈಗ ಒಂದು ಹಾಡು ಕೇಳೋಣ..” ಉದ್ಘೋಷಕಿ ಜೇಮ್ಸ್ ಟೇಲರ್ ನ ‘ಛಾವಣಿಯ ಮೇಲೆ’ ಎನ್ನುವ ಹಾಡನ್ನು ಹಾಕುತ್ತ ಹೇಳಿದಳು “ಈ ಹಾಡು ಮುಗಿದ ಮೇಲೆ ನಾವು ಹಗ್ಗದ ಮೇಲಿನ ನಡಿಗೆಯ ಬಗ್ಗೆ ಮಾತನಾಡೋಣ..” + +ರೇಡಿಯೋದಿಂದ ಹಾಡು ತೇಲಿ ಬರುತ್ತಿರುವಾಗ ಜುಂಪೆ ಡ್ರೈವರ್ ಕಡೆ ಬಾಗುತ್ತ ಕೇಳಿದ “ಈ ಹೆಂಗಸು ಏನು ಮಾಡುತ್ತಾಳೆ?” + +“ಅವಳು ಹೇಳುವ ಪ್ರಕಾರ ಅವಳು ಅತಿ ಎತ್ತರದ ಕಟ್ಟಡಗಳ ಮಧ್ಯೆ ಹಗ್ಗವನ್ನು ಕಟ್ಟಿ ಅದರ ಮೇಲೆ ನಡೆಯುತ್ತಾಳೆ..” ಡ್ರೈವರ್ ವಿವರಿಸತೊಡಗಿದ. “ಕೈಯಲ್ಲಿ ಸಮತೋಲನಕ್ಕಾಗಿ ಒಂದು ಉದ್ದನೆಯ ಕೋಲನ್ನು ಹಿಡಿದುಕೊಂಡಿರುತ್ತಾಳೆ. ಒಂದು ಅದ್ಭುತವೇ ಸರಿ. ನನಗೆ ಪಾರದರ್ಶಕವಾದ ಲಿಫ್ಟ್ ನಲ್ಲಿ ಹೋಗುವಾಗಲೇ ಮೈ ನಡುಗಿದಂತಾಗುತ್ತದೆ. ಬಹುಶಃ ಈ ಹಗ್ಗದ ಮೇಲಿನ ನಡಿಗೆ ಅವಳಿಗೆ ಒಂದು ರೋಮಾಂಚನವನ್ನು ತರುತ್ತದೆ ಅನಿಸುತ್ತದೆ. ಒಂಥರ ವಿಚಿತ್ರ. ಅವಳೇನು ತುಂಬಾ ಚಿಕ್ಕ ಹುಡುಗಿ ಅನಿಸುವದಿಲ್ಲ..” + +“ಅದು ಅವಳ ವೃತ್ತಿ ಇರಬಹುದೇ?” ಜುಂಪೆ ಕೇಳಿದ. ತನ್ನ ಧ್ವನಿ ಒಣಗಿರುವದು ಅವನಿಗೆ ಅರಿವಾಯಿತು. ತೂಕವಿಲ್ಲದ ಬರಿ ಒಣ ಮಾತು. ತನ್ನದಲ್ಲದ ಬೇರೆ ಯಾವುದೋ ಮಾತು ಟ್ಯಾಕ್ಸಿಯ ಛಾವಣಿಯಿಂದ ಒಳಬಂದಂತೆ ತೋರಿತು. + +“ಹೌದಿರಬೇಕು. ಅವಳಿಗೆ ಒಂದಷ್ಟು ಪ್ರಾಯೋಜಕರಿರಬೇಕು. ಸ್ವಲ್ಪ ದಿನಗಳ ಹಿಂದೆಯಷ್ಟೇ ಅವಳು ಜರ್ಮನಿಯ ಪ್ರಸಿದ್ಧ ಪ್ರಾರ್ಥನಾ ಮಂದಿರದ ಬಳಿ ಒಂದು ಪ್ರದರ್ಶನವನ್ನು ನೀಡಿದ್ದಳು. ಅವಳು ಅದಕ್ಕಿಂತ ಎತ್ತರದ ಕಟ್ಟಡದ ಮೇಲೆ ಪ್ರದರ್ಶನ ಕೊಡಬೇಕು ಎನ್ನುತ್ತಾಳೆ. ಆದರೆ ಅದಕ್ಕೆ ಇನ್ನು ಸರ್ಕಾರದ ಪರವಾನಿಗಿ ಸಿಕ್ಕಿಲ್ಲವಂತೆ. ಅಷ್ಟು ಎತ್ತರಕ್ಕೆ ತಲುಪಿದ ಮೇಲೆ ಸುರಕ್ಷಿತೆಗೆ ಹಾಕುವ ಬಲೆ ಯಾವುದೇ ಪ್ರಯೋಜನಕ್ಕೆ ಬರುವದಿಲ್ಲ. ಅವಳು ಪ್ರತಿ ಬಾರಿ ಹಿಂದಿನ ದಾಖಲೆಯನ್ನು ಮುರಿಯುತ್ತ ತನಗೆ ತಾನೇ ಸವಾಲನ್ನು ಹಾಕಿಕೊಳ್ಳುತ್ತಾ ಪ್ರತಿ ಬಾರಿಯೂ ಹಿಂದಿನದಕ್ಕಿಂತ ಎತ್ತರದ ಕಟ್ಟಡವನ್ನು ಹುಡುಕಿಕೊಳ್ಳುತ್ತಾಳೆ. ಖಂಡಿತ, ಈ ಪ್ರದರ್ಶನ ಮಾತ್ರದಿಂದಲೇ ಜೀವನವನ್ನು ಸಾಗಿಸಲು ಸಾಧ್ಯವಿಲ್ಲ. ಹೀಗಾಗಿ ಕಿಟಕಿ ತೊಳೆಯುವ ಕೆಲಸವನ್ನು ಮಾಡುತ್ತಾಳೆ. ಹಾಗಂತ ಅವಳೇನು ಸರ್ಕಸ್ ತಂಡದಲ್ಲಿ ಹಗ್ಗದ ಮೇಲಿನ ನಡಿಗೆಯ ಕೆಲಸವನ್ನು ಕೊಟ್ಟರೂ ಮಾಡುತ್ತಾಳೆ ಅನಿಸುವದಿಲ್ಲ. ಈ ಜಗತ್ತಿನಲ್ಲಿ ಅವಳು ಬಯಸುವದು ಅತ್ಯಂತ ಎತ್ತರದ ಕಟ್ಟಡಗಳನ್ನು ಮಾತ್ರವ೦ತೆ. ವಿಚಿತ್ರ ಹುಡುಗಿ. + +****** + +“ಈ ಕೆಲಸದ ಬಗೆಗಿನ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಅಷ್ಟು ಎತ್ತರವನ್ನು ತಲುಪಿದಾಗ ನೀವು ನಿಜವಾದ ಮನುಷ್ಯರಾಗುತ್ತೀರಿ.” ಕೀರಿ ಸ್ಪಷ್ಟವಾಗಿ ಸಂದರ್ಶಕಿಗೆ ಹೇಳಿದಳು. ನೀವು ಬದಲಾಗಲೇಬೇಕು ಅಥವಾ ಬದಲಾಗದಿದ್ದರೆ ಅಲ್ಲಿ ಉಳಿಗಾಲವಿಲ್ಲ. ನಾನು ಅತಿ ಎತ್ತರದ ಜಾಗಕ್ಕೆ ಹೋದಾಗ ಅಲ್ಲಿ ಕೇವಲ ನಾನು ಮತ್ತು ಬೀಸುವ ಗಾಳಿ. ಬೇರೆ ಏನೂ ಇಲ್ಲ. ಗಾಳಿ ಹೊದಿಕೆಯಂತೆ ನನ್ನನ್ನು ಆವರಿಸುತ್ತದೆ, ಅಲ್ಲಾಡಿಸುತ್ತದೆ. ಗಾಳಿಗೆ ನಾನು ಅರ್ಥವಾಗುತ್ತೇನೆ ಮತ್ತು ನನಗೆ ಗಾಳಿ ಅರ್ಥವಾಗುತ್ತದೆ. ನಾವಿಬ್ಬರೂ ಒಬ್ಬರನ್ನೊಬ್ಬರು ಒಪ್ಪಿಕೊಳ್ಳುತ್ತೇವೆ ಮತ್ತು ಜೊತೆಗೆ ಸಾಗಲು ನಿರ್ಧರಿಸುತ್ತೇವೆ. ಕೇವಲ ಗಾಳಿ ಮತ್ತು ನಾನು. + +ಅಲ್ಲಿ ನಮ್ಮಿಬ್ಬರ ಹೊರತಾಗಿ ಮತ್ತೊಬ್ಬರಿಗೆ ಜಾಗವಿಲ್ಲ. ಆ ಒಂದು ಕ್ಷಣವನ್ನೇ ನಾನು ಯಾವತ್ತಿಗೂ ಬಯಸುವದು. ಇಲ್ಲ, ನನಗೆ ಅಂಜಿಕೆಯಾಗುವದಿಲ್ಲ. ನಾನು ಒಮ್ಮೆ ಅತಿ ಎತ್ತರದ ಕಟ್ಟಡದ ಮೇಲಿನ ಏಕಾಗ್ರತೆಯ ಲೋಕವನ್ನು ಹೊಕ್ಕ ಮೇಲೆ ನನ್ನನ್ನು ಕಾಡುತ್ತಿರುವ ಭಯವೆಲ್ಲವೂ ದೂರವಾಗುತ್ತವೆ. ನಿರಾಳ. ನಮ್ಮ ಬೆಚ್ಚಗಿನ ಶೂನ್ಯದಲ್ಲಿ ನಾವಿಬ್ಬರು ಮಾತ್ರ. ನಾನು ಜೀವನದಲ್ಲಿ ಬಯಸುವದು, ಪ್ರೀತಿಸುವದು, ಆರಾಧಿಸುವದು ಆ ಒಂದು ಕ್ಷಣವನ್ನು ಮಾತ್ರ. + +ಕೀರಿ ಭರವಸೆ ತುಂಬಿದ ಧ್ವನಿಯಲ್ಲಿ ಮಾತನಾಡುತ್ತಿದ್ದಳು. ಸಂದರ್ಶಕಿಗೆ ಕೀರಿ ಹೇಳಿರುವದೆಲ್ಲ ಅರ್ಥವಾಯಿತೇ ಎನ್ನುವದು ಜುಂಪೇಗೆ ಸ್ಪಷ್ಟವಾಗಲಿಲ್ಲ. ಸಂದರ್ಶನ ಮುಗಿದಾಗ ಜುಂಪೇ ಕಾರನ್ನು ನಿಲ್ಲಿಸಲಿಕ್ಕೆ ಹೇಳಿ, ಕಾರಿನ ಡ್ರೈವರನಿಗೆ ಹಣವನ್ನು ನೀಡಿ, ತಾನು ಹೋಗಬೇಕಾಗಿದ್ದ ಜಾಗಕ್ಕೆ ನಡೆದುಕೊಂಡೇ ತಲುಪಿದ. + +ಇತ್ತೀಚಿಗೆ ಒಮ್ಮೊಮ್ಮೆ ಅವನು ತಲೆಯೆತ್ತಿ ಎತ್ತರದ ಕಟ್ಟಡಗಳನ್ನೂ ಅವುಗಳ ಮೇಲೆ ವಿಶಾಲವಾಗಿ ಹರಡಿಕೊಂಡಿರುವ ನೀಲ ಆಗಸವನ್ನೂ ದಿಟ್ಟಿಸುತ್ತಾನೆ. ಅವಳ ಮತ್ತು ಗಾಳಿಯ ನಡುವೆ ಮತೊಬ್ಬರಾರಿಗೂ ಪ್ರವೇಶವಿಲ್ಲ. ಅವನಿಗೆ ಹೊಟ್ಟೆಯಲ್ಲಿ ಅಸೂಯೆಯ ತಳಮಳವೆದ್ದು ಅಸ್ವಸ್ಥನಾಗುತ್ತಾನೆ. ಆದರೆ ಯಾರ ಮೇಲೆ ಅಸೂಯೆ? ಗಾಳಿಯ ಮೇಲೆಯೇ? ಗಾಳಿಯ ಮೇಲೆ ಅಸೂಯೆಗೊಳ್ಳುವವರು ಯಾರಿದ್ದಾರೆ? + +ಜುಂಪೇ ಅದಾದ ಮೇಲೆ ಕೀರಿ ತನ್ನನ್ನು ಸಂಪರ್ಕಿಸಬಹುದು ಎಂದು ಹಲವಷ್ಟು ತಿಂಗಳುಗಳ ಕಾಲ ಕಾದಿದ್ದ. ಅವನು ಅವಳನ್ನು ನೋಡಲು ಬಯಸುತ್ತಿದ್ದ. ಅವಳೊಟ್ಟಿಗೆ ಕುಳಿತು ಹಲವಷ್ಟು ವಿಷಯಗಳ ಬಗ್ಗೆ ಮಾತನಾಡಬೇಕೆಂದು ಅನಿಸುತ್ತಿತ್ತು . ಕಿಡ್ನಿಯಾಕಾರದ ಕಲ್ಲಿನ ಬಗ್ಗೆ ಹೇಳಬೇಕಿತ್ತು. ಆದರೆ ಕರೆ ಯಾವತ್ತೂ ಬರಲಿಲ್ಲ. ಅವನು ಕರೆ ಮಾಡಿದಾಗ ‘ನಿಮ್ಮ ಕರೆ ಪೂರ್ತಿಯಾಗಿಲ್ಲ’ ಎನ್ನುವ ಮುದ್ರಿತ ಧ್ವನಿ ಕೇಳಿಬರುತ್ತಿತ್ತು. ಬೇಸಿಗೆ ಕಾಲ ಶುರುವಾಗುವ ಹೊತ್ತಿಗೆ ಅವನಲ್ಲಿ ಸಣ್ಣದಾಗಿದ್ದ ನಿರೀಕ್ಷೆ ಕ್ರಮೇಣ ಕರಗತೊಡಗಿತು. + +ಅವಳಿಗೆ ಅವನನ್ನು ಪುನಃ ಭೇಟಿಯಾಗುವ ಯಾವ ಇರಾದೆಯೂ ಇರಲಿಲ್ಲ. ಮತ್ತು ಸಂಬಂಧವೊಂದು ವಿರೋಧವಿಲ್ಲದೆಯೇ, ಜಗಳವಿಲ್ಲದೆಯೇ ತಣ್ಣಗೆ ಮುರಿದಿತ್ತು – ಅವನು ಹಿಂದೆಲ್ಲ ಅಸಂಖ್ಯ ಹುಡುಗಿಯರೊಟ್ಟಿಗೆ ಮುರಿದುಕೊಂಡಿದ್ದ ಹಾಗೆ: ಯಾವತ್ತೋ ಒಂದು ದಿನ ಇದ್ದಕ್ಕಿದ್ದ ಹಾಗೆ ಸದ್ದಿಲ್ಲದೆ, ತಮ್ಮಷ್ಟಕ್ಕೆ ತಾವೇ ಕರೆಗಳು ನಿಂತುಹೋಗುತ್ತಿದ್ದವು. + +(ಹರುಕಿ ಮುರಕಮಿ) + +ಅವಳನ್ನು ನನ್ನ ಜೀವನದ ಭಾಗವಾಗಿ ಬಂದು ನನ್ನ ಬದುಕಿಗೊಂದು ಅರ್ಥ ಕಲ್ಪಿಸುವ ಮೂರು ಮಹಿಳೆಯರಲ್ಲಿ ಒಬ್ಬಳನ್ನಾಗಿ ಪರಿಗಣಿಸಬೇಕೇ? ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸಿದಾಗಲೆಲ್ಲ ಅವನಿಗೆ ಅಸಾಧ್ಯ ಸಂಕಟವಾಗುತ್ತಿತ್ತು. ಪ್ರಶ್ನೆಗೆ ಸರಿಯಾದ ಉತ್ತರ ಸಿಗುತ್ತಿರಲಿಲ್ಲ. ‘ನಾನು ಇನ್ನೂ ಆರು ತಿಂಗಳುಗಳಾಗಲಿ ಆಮೇಲೆ ನಿರ್ಧರಿಸುತ್ತೇನೆ’ ಎಂದುಕೊಂಡ. + +ಮುಂದಿನ ಆರು ತಿಂಗಳುಗಳ ಕಾಲ ಅವನು ಅಸಾಧಾರಣ ಏಕಾಗ್ರತೆಯಿಂದ ಬರೆದ ಮತ್ತು ಸಾಕಷ್ಟು ಸಣ್ಣ ಕತೆಗಳನ್ನು ಪ್ರಕಟಿಸಿದ. ಪ್ರತಿ ಬಾರಿ ಬರೆಯುವ ಮೇಜಿನ ಮುಂದೆ ಕುಳಿತು ತನ್ನ ಕತೆಯನ್ನು ತಿದ್ದುವಾಗಲೂ ಅವನಿಗೆ ಕೀರಿಯ ನೆನಪು ಕಾಡುತ್ತಿತ್ತು. ‘ಇಲ್ಲಿ ನಾನು ಏಕಾಂಗಿಯಾಗಿ ಕುಳಿತು ಕತೆ ಬರೆಯುತ್ತಿರುವ ಈ ಕ್ಷಣದಲ್ಲಿ ಅವಳು ಯಾವುದೋ ಎತ್ತರದ ಕಟ್ಟಡದ ಮೇಲೆ ಏಕಾಂತದಲ್ಲಿ ಅವಳ ಗಾಳಿಯೊಟ್ಟಿಗೆ ಎಲ್ಲವುಗಳಿಗಿಂತ ಎತ್ತರದಲ್ಲಿ ಜೀವರಕ್ಷಕವಿಲ್ಲದೆ ಅವಳದೇ ಆದ ಗಾಢ ಏಕಾಗ್ರತೆಯಲ್ಲಿ ಮುಳುಗಿರಬಹುದು. ಎತ್ತರದ ಆ ಬಿಂದುವಿನಲ್ಲಿ ಭಯವಿಲ್ಲ. ‘ಅಲ್ಲಿ ಅವಳು ಮತ್ತವಳ ಗಾಳಿ ಮಾತ್ರ’. ಎತ್ತರದ ಏಕಾಂತದ ಬಗ್ಗೆ ಅವಳು ಹೇಳಿದ ಈ ಮಾತುಗಳನ್ನು ಮತ್ತೆ ಮತ್ತೆ ಜ್ಞಾಪಿಸಿಕೊಳ್ಳುತ್ತ, ತನ್ನ ಜೀವನದಲ್ಲಿ ಇಲ್ಲಿಯವರೆಗೆ ಬಂದು ಹೋಗಿದ್ದ ಉಳಿದೆಲ್ಲ ಮಹಿಳೆಯರಿಗಿಂತ ಹೆಚ್ಚಿನದಾದ ಯಾವುದೋ ಅವ್ಯಕ್ತ ದಿವ್ಯ ಅನುಭೂತಿ ‘ಕೀರಿ’ಯಲ್ಲಿ ಕಂಡುಕೊಂಡಿದ್ದು ಜುಂಪೆಗೆ ಅರಿವಾಯಿತು. ಅದು ಅದರದ್ದೇ ಚೌಕಟ್ಟನ್ನು ಹೊಂದಿರುವ, ಅಸಾಧಾರಣ ತೂಕದ ಆಳವಾದ ಭಾವಪರವಶತೆ. ಜುಂಪೇ ಈ ಅನುಭೂತಿಯನ್ನು ಶಬ್ದಗಳಲ್ಲಿ ಹಿಡಿದಿಡುವದು ಹೇಗೆ ಎನ್ನುವದು ತಿಳಿಯಲಿಲ್ಲ. ಅವನಿಗೆ ತಿಳಿದ ಯಾವುದರೊಟ್ಟಿಗೂ ಹೋಲಿಸಲಾಗದ ಭಾವ ತೀವ್ರತೆ. ಅವನು ತನ್ನ ಜೀವನದಲ್ಲಿ ಅವಳನ್ನು ಮತ್ತೆಂದೂ ಕಾಣದಿದ್ದರೂ ಅವನಲ್ಲಿ ಶಾಶ್ವತವಾಗಿ ಉಳಿಯಬಲ್ಲ ಭಾವ. ಅವನ ಮನಸಿನ ಯಾವುದೋ ಮೂಲೆಯಲ್ಲಿ ಅವಳೆಡೆಗೆ ಶಾಶ್ವತವಾದ ಭಾವವೊಂದು ಸಣ್ಣಗೆ ಯಾವತ್ತೂ ಆರದೆ ಉರಿಯುತ್ತಿರುವಂತೆ. + +ವರ್ಷಗಳು ಉರುಳಿದಂತೆ ಜುಂಪೇ ಅವಳನ್ನು ತನ್ನ ಜೀವನದ ಎರಡನೆಯ ಮಹಿಳೆಯೆಂದು ನಿರ್ಧರಿಸಿದ. ಅವನ ಜೀವನಕ್ಕೆ ಅರ್ಥ ಕಲ್ಪಿಸಿದ ಮಹಿಳೆಯರಲ್ಲೊಬ್ಬಳು. ಈಗ ಯಾದಿಯಲ್ಲಿ ಕೇವಲ ಒಂದು ಸಂಖ್ಯೆ ಮಾತ್ರ ಮಿಕ್ಕಿತ್ತು. ಆದರೆ ಅವನಿಗೆ ಈಗ ಆ ಸಂಖ್ಯೆಯ ಕುರಿತು ಭಯವಿರಲಿಲ್ಲ. “ಸಂಖ್ಯೆಗಳು ಮುಖ್ಯವಲ್ಲ. ಎಣಿಕೆಗೆ ಅರ್ಥವಿಲ್ಲ” ಈಗ ಅವನಿಗೆ ಅರಿವಾಗಿತ್ತು. “ಎಲ್ಲಕ್ಕಿಂತ ಮುಖ್ಯವಾದದ್ದು ಮತ್ತೊಬ್ಬರನನ್ನು ಪೂರ್ತಿಯಾಗಿ ಒಪ್ಪಿಕೊಳ್ಳುವದು ಹೇಗೆ ಎನ್ನುವದನ್ನು ನಮ್ಮ ಹೃದಯದ ಅಂತರಾಳದಿಂದ ತೀರ್ಮಾನಿಸುವದು ಮತ್ತು ಆ ಒಪ್ಪಿಕೊಳ್ಳುವಿಕೆ ಅದೇ ಮೊದಲನೆಯ ಹಾಗೂ ಕೊನೆಯದಾಗಿರಬೇಕು.” + + + +****** + +ಒಂದು ದಿನ ಬೆಳಿಗ್ಗೆ ಕಿಡ್ನಿಯಾಕಾರದ ಕಲ್ಲು ಟೇಬಲಿನಿಂದ ಮಾಯವಾದದ್ದನ್ನು ವೈದ್ಯೆ ಗಮನಿಸಿದಳು ಮತ್ತು ಅದು ಯಾವತ್ತೂ ಮರಳುವದಿಲ್ಲವೆಂದು ಅವಳಿಗೆ ಅರಿವಾಯಿತು. + +****** + +ಸಚೇತನ ಭಟ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್ವ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. \ No newline at end of file diff --git a/Kenda Sampige/article_275.txt b/Kenda Sampige/article_275.txt new file mode 100644 index 0000000000000000000000000000000000000000..f4b6d31103d43b9d060b0a93e61bf7bd61d81260 --- /dev/null +++ b/Kenda Sampige/article_275.txt @@ -0,0 +1,35 @@ +byಶ್ರೀದೇವಿ ಕೆರೆಮನೆ|May 4, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಇಂತಹುದ್ದೊಂದು ಪ್ರತಿಕವನ ಹುಟ್ಟುವಾಗಿನ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಶಬ್ಧದ ಎಳೆಗಳು ಎಲ್ಲಿಯೂ ತುಂಡಾಗಿದೆ ಎಂದು ಓದುಗರಿಗೆ ಅನ್ನಿಸಬಾರದು. ಕವಿತೆ ಬರೆವಾಗ ತುಸು ಎಡವಿದರೂ ಎರಡೂ ಕವಿತೆಗಳು ಓದುಗರ ಕಣ್ಣಲ್ಲಿ ಬಿದ್ದುಹೋಗಿಬಿಡಬಹುದಾದ ಅಪಾಯವಿದೆ. ಹೀಗಾಗಿ ಎರಡೂ ಕವಿತೆಗಳು ಚಲಿಸುವ ಪಾದದ ಗತಿ ಒಂದೇ ಇರಬೇಕಾದದ್ದು ಇಲ್ಲಿ ಅತಿ ಮುಖ್ಯ…” + +byಡಾ. ಬಿ. ಜನಾರ್ದನ ಭಟ್|May 3, 2020|ವಾರದ ಕಥೆ,ಸಾಹಿತ್ಯ| 0 Comments + +“ಇಂದೀಗ ಫ್ರಾನ್ಸಿಸ್ಸನು ಬಿಡುಗಡೆ ಹೊಂದಿ ಊರ ಮೈದಾನಿನತ್ತ ಬರುತ್ತಿದ್ದಾನೆ. ಅಂದು ಸರಕಾರದ ವಿರುದ್ಧ ಭಾಷಣವೀಯಲು ಹೂಮಾಲೆಗಳಿಂದ ಅಲಂಕೃತನಾಗಿ ಜನರ ಜಯ ಜಯಕಾರದೊಡನೆ ಜನಸಂದಣಿಯ ಮಧ್ಯದಲ್ಲಿ ಅರಳಿದ ಮುಖದಿಂದ ಮೈದಾನಿನತ್ತ ತೆರಳಿದ್ದ ಮಾರ್ಗದಲ್ಲಿಯೆ ಇಂದು ಕಂದಿದ ಮುಖದಿಂದ ಒಬ್ಬಂಟಿಗನಾಗಿ ಹೋಗುತ್ತಿದ್ದಾನೆ….” + +byಡಿ.ಎಮ್. ನದಾಫ್|Apr 27, 2020|ದಿನದ ಪುಸ್ತಕ,ಸಾಹಿತ್ಯ| 3 Comments + +” ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ…” + +byಸೃಜನ್|Apr 26, 2020|ವಾರದ ಕಥೆ,ಸಾಹಿತ್ಯ| 3 Comments + +“ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು….” + +byನಾರಾಯಣ ಯಾಜಿ|Apr 20, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಮಂಜಮ್ಮ ಬಹುಶಃ ಮನಸ್ಸು ಮಾಡಿದ್ದರೆ ಮತ್ತೋರ್ವ ಪವಾಡ ಪುರುಷಳೇ ಆಗ ಬಿಡಬಹುದಿತ್ತೇನೋ ಎಂದು ಮರಡುಮನೆ ಸದಾಶಿವ ಅಭಿಪ್ರಾಯ ಪಡುತ್ತಾರೆ. ಆಕೆ ತುಂಬು ಸಂಸಾರದಲ್ಲಿದ್ದು ಎಲ್ಲ ಕೆಲಸ ಮಾಡುತ್ತಾ ಅದರಲ್ಲೇ ಪುರುಸೊತ್ತು ಮಾಡಿಕೊಂಡು ಧ್ಯಾನ, ತಪಸ್ಸುಗಳಲ್ಲಿ ಮುಳುಗಿಬಿಡುತ್ತಿದ್ದಳಂತೆ…” + +byಡಾ. ಬಿ. ಜನಾರ್ದನ ಭಟ್|Apr 19, 2020|ವಾರದ ಕಥೆ,ಸಾಹಿತ್ಯ| 0 Comments + +“ತಾನು ಸುರು ಮಾಡಿದ ಕೆಲಸವು ಇಷ್ಟೊಂದು ಸುಗಮವಾಗಿ ಸಾಗಬಹುದೆಂದು ಗೋಪಿನಾಥನು ಕನಸಿನಲ್ಲೂ ನಿರೀಕ್ಷಿಸಿಲಿಲ್ಲ. ಗ್ರಾಮದ ಶ್ಯಾನುಭೋಗರಿಂದ ಪ್ರಾರಂಭವಾಗಿ ಜಿಲ್ಲಾ ಕಲೆಕ್ಟರವರವರೆಗೂ ಅಧಿಕಾರಿಗಳು ಎಬ್ಬಿಸಿದ ಧೂಳಿನಿಂದ ಮುಚ್ಚಲ್ಪಟ್ಟ ಕಮಿಶನರ ಕಣ್ಣುಗಳನ್ನು ತೆರೆದು ತೊಳೆದು ಜನತಾ ಕಾರುಣ್ಯವನ್ನು ತುಂಬಿಸಿ ಅವರ ಸಹಾನುಭೂತಿಯನ್ನು ಗಳಿಸುವಷ್ಟು ಕಾರ್ಯದಕ್ಷತೆ ತನ್ನಲ್ಲಿದೆಯೆಂದು ಆತ ತಿಳಿದಿರಲಿಲ್ಲ.” + +byನಾರಾಯಣ ಯಾಜಿ|Apr 13, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಕಥೆಯ ನಿರೂಪಣೆಯಲ್ಲಿ ನಾವೂ ಕೂಡಾ ಕರುಣಾಕರನ ಜಾಗದಲ್ಲಿ ನಿಂತುಬಿಡುತ್ತೇವೆ. ಒಂದೆಲಗ ನೆನಪಿನ ಶಕ್ತಿಹೆಚ್ಚಿಸುವ ಸಂಕೇತ. ಇದು ನೆಲದಲ್ಲಿ ಬೆಳೆಯುವ ಸಸ್ಯವೂ ಹೌದು. ನೀರು ಮತ್ತು ಭೂಮಿಯ ಕುರಿತು ಅಪರಿಮಿತ ಆಸಕ್ತಿಯಿದ್ದ ಜೋಗಿನ್ಮನೆಯವರ ಇಗ್ಗಪ್ಪ ಮತ್ತು ಕರುಣಾಕರ ಇಬ್ಬರೂ ಇಲ್ಲಿ ಸಾಮ್ಯತೆಯನ್ನು ಪಡೆಯುವದು ಹೀಗೆ. ನಾವು ಕಳೆದುಕೊಂಡುದೆಲ್ಲಿ ಎನ್ನುವದರ ಹುಡುಕಾಟದಲ್ಲಿರುವ ಪುರಾಣಗಳ ‘ಅಭಿಜ್ಞಾ’ನದ “ + +byಅಬ್ದುಲ್ ರಶೀದ್|Apr 12, 2020|ವಾರದ ಕಥೆ,ಸಾಹಿತ್ಯ| 0 Comments + +“ಇವರ ಕಥೆಯನ್ನು ಕೇಳಿಸಿಕೊಂಡ ನಾನು ಅವರಿಗೆ ಬೇಕಾಗಿ ನಕ್ಕು ಸುಮ್ಮನಾಗುತ್ತೇನೆ. ಎಲ್ಲಿಂದ ಎಲ್ಲಿಗೋ ಹೊರಟಿದ್ದ ಉಕ್ಕಿನ ನೌಕೆಯೊಂದು ಯಾರದೋ ಹುಚ್ಚು ಮೋಹದಿಂದಾಗಿ ಇಲ್ಲಿ ತುಕ್ಕು ಹಿಡಿದು ಸಾಯಬೇಕಾಗಿ ಬಂದಿರುವುದು ಇವರಿಗೆ ನಗುವಿನ ವಿಷಯ… “ + +byಎಚ್ ಆರ್ ರಮೇಶ್|Apr 6, 2020|ದಿನದ ಪುಸ್ತಕ,ಸಾಹಿತ್ಯ| 1 Comment + +“ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ.” \ No newline at end of file diff --git a/Kenda Sampige/article_276.txt b/Kenda Sampige/article_276.txt new file mode 100644 index 0000000000000000000000000000000000000000..5ae86491aafe41909520f1d1cb4661e67a3a8cd5 --- /dev/null +++ b/Kenda Sampige/article_276.txt @@ -0,0 +1,53 @@ + + +‘ಇಸ್ಕು ಮೌತ್ ನಹೀ ಆರಿ’ ಎಂದು ಬೆಳಿಗ್ಗೆ ಏಳುತ್ತಲೇ ಅಂದುಕೊಳ್ಳುತ್ತಾಳೆ ಜಹೀರಾಬಿ ತನ್ನ ಗಂಡನನ್ನು ನೋಡಿ. ಹೀಗೆ ಕಳೆದ ಆರು ತಿಂಗಳಿನಿಂದ ದಿನಕ್ಕೆ ಕನಿಷ್ಟ ಮುವತ್ತು ಬಾರಿಯಾದರೂ ಅಂದುಕೊಳ್ಳುತ್ತಾಳೆ. ಈಗಲೇ ಎದ್ದಿದ್ದರಿಂದ ಏಳುತ್ತಲೇ ‘ಇಸ್ಕು ಮೌತ್ ನಹೀ ಆರಿ’ ಅಂದಳು ಮೇಕೆಯ ಮುಂದೆ ಕುಳಿತಿರುವ ತನ್ನ ಗಂಡನನ್ನು ನೋಡುತ್ತ. + +ಜಹೀರಾಬಿಗೆ ಮದುವೆಯಾಗಿ ಇನ್ನೂ ಒಂಭತ್ತು ವರ್ಷಗಳೂ ಆಗಲಿಲ್ಲ. ಏಳು ಮಕ್ಕಳ ತಾಯಿ. ಮಗುವಿಂದ ಮಗುವಿಗೆ ಕನಿಷ್ಟ ಒಂದು ವರ್ಷದ ಅಂತರವೂ ಇಲ್ಲ. ಹಾಗಂತ ತುಂಬಾ ಅನ್ಯೋನ್ಯತೆಯ ದಾಂಪತ್ಯವೆಂದು, ಗಂಡ ಹೆಂಡಿರರಿಬ್ಬರು ಗಿಣಿಮರಿಗಳಹಾಗೆ ಪ್ರೀತಿ ಸಂಭ್ರಮಗಳಿಂದ ಸುಖ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವ ಹಾಗಿಲ್ಲ. ಮೂರು ಹೆಣ್ಣು, ನಾಲ್ಕು ಗಂಡು ಮಕ್ಕಳು. ಹೊಟ್ಟೆಯಲ್ಲಿ ಯಾವಾಗ ಗರ್ಭಕಟ್ಟುತ್ತದೆಂದು ಗೊತ್ತಿಲ್ಲ. ಆಕೆಗೆ ಇಷ್ಟು ಪ್ರೆಗ್ನೆನ್ಸಿಗಳು ಹೇಗೆ ಬಂದಾವೆಂದೂ ಗೊತ್ತಿಲ್ಲ. ಸ್ವಲ್ಪ ಗೊತ್ತಾಗುವ ಹೊತ್ತಿಗೆ ಡೆಲಿವರಿಯ ದಿನಗಳು ಹತ್ತಿರ ಬರುತ್ತಿದ್ದವು. ಇದೇ ಮೊದಲ ಬಾರಿಗೆ ಈ ಮಗು ಹುಟ್ಟಿದ ನಂತರ ಇಲ್ಲಿಯವರೆಗೆ ಗರ್ಭಿಣಿಯಾಗದಿರುವುದು. ಹಾಲು ಕುಡಿಯುತ್ತಿರುವ ಈ ಕೊನೆಯ ಮಗನ ವಯಸ್ಸು ಏಳು ತಿಂಗಳು. ಆರು ತಿಂಗಳಿನಿಂದ ಶಾರೀರಿಕ ದಾಳಿ ಕಡಿಮೆ ನಡೆಯುತ್ತಿದೆ ಜಹೀರಾಬಿಗೆ. ಏಕೆಂದರೆ ಆರು ತಿಂಗಳಿನಿಂದ ಒಂದು ಮೇಕೆಯನ್ನು ತಂದು ಸಾಕುತ್ತಿದ್ದಾನೆ ತನ್ನ ಗಂಡ ಯಾಖುಬ್ ಮಿಯಾ. + +ಯಾಖೂಬ್ ಮಿಯಾ ಸೆಂಟ್ರಲ್ ಗೌರ್ನಮೆಂಟ್ ಗೆ ಸಂಬಂಧಿಸಿದ ಒಂದು ಕಂಪನಿಯಲ್ಲಿ ಡ್ರೈವರ್. ಇಪ್ಪತ್ತಮೂರನೇ ವಯಸ್ಸಿಗೆ ಮದುವೆಯಾದ ಯಾಖುಬ್ ಮಿಯಾಗೆ ಈಗ ಮುವತ್ತೆರಡು ವರ್ಷ. ಮನುಷ್ಯ ನೋಡುವುದಕ್ಕೆ ನಲವತ್ತು ವರ್ಷದವನಂತೆ ಕಾಣಿಸುತ್ತಾನೆ. ಮನೆಯಲ್ಲಿ ಇರುವಷ್ಟು ಹೊತ್ತು ಹೆಂಡತಿಯನ್ನು ಬೈಯುತ್ತಲೋ, ಹೊಡೆಯುತ್ತಲೋ ಏನೋ ಒಂದು ಗಲಾಟೆ ಮಾಡುತ್ತಲೇ ಇರುತ್ತಾನೆ. ಮಕ್ಕಳನ್ನು ಬೈಯುವುದು ಹೊಡೆಯುವುದು ಅವನಿಗೊಂದು ಚಟ. ಇದೊಂದು ಸಾಮ್ರಾಜ್ಯವೆಂದೂ ಈ ಸಾಮ್ರಾಜ್ಯಕ್ಕೆ ತಾನೇ ಷಹೀನ್ ಷಾ ಎಂಬಂತ್ತಿರುತ್ತದೆ ಯಾಖುಬ್ ಮಿಯಾನಿಗೆ. ಒಂದು ಮಾತು ಹೇಳಿದ ಮೇಲೂ ಸಹ ತನ್ನ ಕೆಲಸವಾಗಲಿಲ್ಲವೋ ಮನೆಯಲ್ಲೇ ಒಂದು ನರಕವನ್ನ ಸೃಷ್ಟಿಸುತ್ತಾನೆ. ಎಲ್ಲವನ್ನೂ ಅಭ್ಯಾಸವನ್ನು ಮಾಡಿಕೊಂಡಿದ್ದಳು ಜಹೀರಾಬಿ. ಶಾರೀರಿಕ, ಮಾನಸಿಕ ನರಕವನ್ನು ಅನುಭವಿಸುತ್ತಿರುವ ಜಹೀರಾಬಿ ಗಂಡನಲ್ಲಿ ಇಲ್ಲವೆಂದುಕೊಂಡಿದ್ದ ಪ್ರೀತಿಯನ್ನು ದಯಾಗುಣವನ್ನು ಈ ಮಧ್ಯೆಯೇ ನೋಡುತ್ತಿದ್ದಾಳೆ. ಅದೂ ಮುಖ್ಯವಾಗಿ ಯಾಖುಬ್ ಮಿಯಾ ತಾನು ಸಾಕುತ್ತಿರುವ ಒಂದು ಮೇಕೆಯ ಮೇಲೆ ಇವೆಲ್ಲವನ್ನೂ ತೋರಿಸುತ್ತಿರುವುದು. ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ ಜಹೀರಾಬಿಗೆ. + +ಮೇಕೆಯೇ ಲೋಕವಾಗಿಬಿಟ್ಟಿದೆ ಗಂಡನಿಗೆ. ಮೇಕೆಗೋಸ್ಕರ ಮನೆಗೆ ಬೇಗ ಬರುತ್ತಿದ್ದಾನೆ. ಬರುವಾಗ ಮೇಕೆಗಾಗಿ ತರಕಾರಿಗಳು, ಮರದ ಎಲೆಗಳು ಮೊದಲಾದವುಗಳನ್ನು ತೆಗೆದುಕೊಂಡು ಬರುತ್ತಿದ್ದಾನೆ. ಊಟ ಮುಗಿಯಿತೋ ಇಲ್ಲವೋ, ಕ್ಷಣದಲ್ಲೇ ನಿದ್ರೆ ಮಾಡುತ್ತಿದ್ದ ಗಂಡ ಈಗ ನಿದ್ದೆಯನ್ನೆಲ್ಲಾ ಬಿಟ್ಟು ಮೇಕೆಯ ಮುಂದೆ ಕುಳಿತಿರುತ್ತಾನೆ. ಅರ್ಧರಾತ್ರಿಯಲ್ಲೋ ತನಗೆ ಇಷ್ಟವಾದಾಗಲೋ ಬೇಕೆನಿಸಿದಾಗಲೋ ಒಂದು ಭಾರವಾಗಿ ತನ್ನ ಮೇಲೆ ಬಿದ್ದು ಹೊರಳಾಡುವ ಯಾಖುಬ್ ಮಿಯಾ, ಒಂದು ವೇಳೆ ನಿದ್ರೆ ಬಾರದಿದ್ದರೆ ರಾತ್ರಿಯೆಲ್ಲಾ ಮೇಕೆಯ ಮುಂದೆ ಕುಳಿತುಕೊಂಡು ಅದಕ್ಕೆ ಒಂದು ಕಥೆ ಹೇಳುವ ಹಾಗೆ ಏನೇನೋ ಸಂಗತಿಗಳನ್ನು ಹೇಳುತ್ತಿರುತ್ತಾನೆ. + +ಮೇಕೆಗಳ ಮೇಲೆ, ಜಂತುಗಳ ಮೇಲೆ, ಮನುಷ್ಯರ ಮೇಲೆ ಮೊದಲಿನಿಂದಲೂ ಯಾವುದರ ಮೇಲೂ ಪ್ರೀತಿಯಿಲ್ಲ ಯಾಖುಬ್ ಮಿಯಾನಿಗೆ. ಗಂಡಸೆಂಬ ಒಂದೇ ಒಂದು ಅಹಂ. ಯಾವುದೇ ಬದಲಾವಣೆಯಿಲ್ಲದ ತನ್ನ ವೃತ್ತಿಯ ಹಾಗೆ ಮನೆ ಸಹ ನಡೆಯುತ್ತದೆ ಎಂದುಕೊಳ್ಳುತ್ತಾನೆ ಅವನು. ಮಕ್ಕಳನ್ನು ಹತ್ತಿರಕ್ಕೆ ಕರೆದುಕೊಂಡು ನಾಲ್ಕು ಮಾತುಗಳನ್ನಾಡುವುದು, ಅವರೊಂದಿಗೆ ಆಟವಾಡುವುದು, ವಾರದಲ್ಲಿ ಯಾವುದೋ ಒಂದು ದಿನ ಅವರನ್ನು ಹಾಗೆ ಆಚೆ ಸುತ್ತಾಡಿಸುವುದು, ಮನೆಗೆ ಬರುವಾಗ ಜಹೀರಾಬಿಗೆ ಮಲ್ಲಿಗೆಯ ಹೂವು ತೆಗೆದುಕೊಂಡು ಬರುವುದು ಬಹುಶಃ ಇದ್ಯಾವುದೂ ಗೊತ್ತಿಲ್ಲ ಯಾಖುಬ್ ಮಿಯಾನಿಗೆ. ಮಕ್ಕಳನ್ನು ಹುಟ್ಟಿಸುವುದಷ್ಟೇ ಅವನಿಗೆ ಗೊತ್ತು ಹೊರತು ಅವರನ್ನು ಮುದ್ದುಮಾಡಿ ಸಾಕುವುದು ಯಾಖುಬ್ ಮಿಯಾನಿಗೆ ಗೊತ್ತಿಲ್ಲ. ಮನೆಯಲ್ಲಿ ಯಾಖುಬ್ ಮಿಯಾ ಇರುವಷ್ಟು ಹೊತ್ತು ಅವನ ರಾಜ್ಯ. ಅವನು ಹೊರಗೆ ಹೊರಟ ನಂತರ ಮಕ್ಕಳ ರಾಜ್ಯ. + +****** + +ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದರಿಂದ ಮೇಕೆಗೆ ನನ್ನ ಗಂಡನೆಂದರೆನೇ ಇಷ್ಟ. ಅದರ ಮುಂದೆ ತರಕಾರಿಗಳು, ಎಲೆ, ನೀರು ಇಡಬೇಕು. ಅದನ್ನು ಬದಲಿಸಿ ಬದಲಿಸಿ ಎರಡು ಮೂರು ಕಡೆ ಕಟ್ಟಬೇಕು. ಯಾರೂ ಕಾಣಿಸದಿದ್ದರೆ ಮೇ… ಮೇ… ಎಂದು ಅರಚುತ್ತದೆ. ಮೊದಲಲ್ಲಿ ನಾವು ಮೇಕೆಯನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದು, ಅದಕ್ಕೆ ನೀರಾದರೂ ಇಡಲಿಲ್ಲವೆಂದೂ ಅದಕ್ಕೆ ಹಿಗ್ಗಾ ಮುಗ್ಗಾ ಹೊಡೆಯುತ್ತಿದ್ದೇವೆಂದು ನಮ್ಮನ್ನು ಹೊಡೆಯುತ್ತಿದ್ದ ಯಾಖುಬ್ ಮಿಯಾ. ಅವರಿಗೆ ಯಾವಾಗ ಏಕೆ ಕೋಪ ಬರುತ್ತದೆಂದು ಗೊತ್ತಿಲ್ಲ. ಅವರಿಗೆ ಕೋಪ ಬರಲು ಕಾರಣ ಮೇಕೇಯೇ ಆಗಿರುತ್ತಿತ್ತು. ದಿನದಿನಕ್ಕೂ ಅವರ ಮೇಲೆ ಏರ್ಪಡುವ ದ್ವೇಷ ಮೇಕೆಯ ಮೇಲೂ ಸಹ ಹೆಚ್ಚಾಗುತ್ತಿದೆ. + +ಮೇಕೆಯನ್ನು ಬಿಟ್ಟು ಏಳಲಾರದೆ ಎದ್ದು ಅದನ್ನು ಬಿಡಲಾರದೆ ಬಿಟ್ಟು ಹೋಗುತ್ತಿರುತ್ತಾನೆ ಯಾಖುಬ್ ಮಿಯಾ ಆಚೆಗೆ. ಮೇಕೆಗಾಗಿಯೇ ಮನೆಗೆ ಬಂದಂತೆ ಬರುತ್ತಾನೆ. ಮನೆಗೆ ಬಂದ ಕೂಡಲೇ ಅದನ್ನು ಹೆಸರು ಹಿಡಿದು ಕರೆಯುತ್ತಾನೆ. ಇನ್ನು ಅದರೊಂದಿಗೇ ಮಾತು. ಅದು ಬಾಲ ಅಲ್ಲಾಡಿಸುತ್ತದೆ. ಮೂತಿಯಿಂದ ಮೈಯೆಲ್ಲಾ ನೆಕ್ಕುತ್ತದೆ. ಒಂದೊಂದು ತರಕಾರಿಯನ್ನು ತುಂಡು ತುಂಡಾಗಿ ಕತ್ತರಿಸಿ ಅದಕ್ಕೆ ತಿನ್ನಿಸುತ್ತಾನೆ. “ಏನ್ ತಿಂದೆ ಬೆಳಿಗ್ಗೆಯಿಂದ” ಎಂದು ಮನುಷ್ಯರನ್ನು ಕೇಳಿದ ಹಾಗೆ ಕೇಳುತ್ತಾನೆ. + +ಮಡಿಕೆಯಲ್ಲಿನ ಕುಡಿಯುವ ನೀರನ್ನು ತಂದು ಅದಕ್ಕೆ ಕುಡಿಸುತ್ತಾನೆ. ಅದು ಯಾಖುಬ್ ಮಿಯಾನ ಸುತ್ತ ವೃತ್ತಾಕಾರವಾಗಿ ಸುತ್ತುತ್ತದೆ. ತಲೆಯಾಡಿಸುತ್ತದೆ. ಸ್ವಲ್ಪಹೊತ್ತು ಕುಳಿತುಕೊಳ್ಳುತ್ತದೆ. ಸ್ವಲ್ಪಹೊತ್ತು ಮಲಗುತ್ತದೆ. ಹೊರಳಾಡುತ್ತದೆ. ಗೊರಸುಗಳನ್ನು ಅವನ ಎದೆಯ ಮೇಲೆ ಇಡುತ್ತದೆ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಅವನು ಡ್ಯೂಟಿಯಿಂದ ಬಂದಾಗ ಟೀ ಮಾಡಿ ಕರೆದರೂ ಹತ್ತಿರಕ್ಕೆ ಬರುತ್ತಿಲ್ಲ. ಕುದಿಕುದಿದ ಬಿಸಿ ನೀರು ತಣ್ಣಗಾಗುತ್ತಿದೆ. ಊಟ ಸಹ ಮೇಕೆಯ ಬಳಿ ತೆಗೆದುಕೊಂಡು ಹೋಗಿ ತಿನ್ನುತ್ತಾನೆ. ಮೊದಲಲ್ಲಿ ಈ ಚೇಷ್ಟೆಗಳನ್ನೆಲ್ಲ ನೋಡಿ ಅವನಿಗೆ ಹುಚ್ಚು ಹಿಡಿದಿದೆಯೇನೋ ಅಂದುಕೊಳ್ಳುತ್ತಿದ್ದೆ. ನಾಳೆಯಿಂದ ಈ ಕುಟುಂಬವನ್ನು ಹೇಗೆ ನಡೆಸಬೇಕೋ. ಈ ಮನುಷ್ಯನಿಗೆ ಮೇಕೆ ರೋಗ ಬಂದಿಲ್ಲವಲ್ಲಾ. ಯಾವ ಮನುಷ್ಯನಾದರೂ ಕನಿಷ್ಟ ಪ್ರೇಯಸಿಯೊಂದಿಗೆಯಾದರೂ ಹೀಗೆ ವರ್ತಿಸುತ್ತಾನಾ ಅಂತ ಅಂದುಕೊಳ್ಳುತ್ತಿದ್ದೆ. + +ವಠಾರವೆಲ್ಲಾ ಜಹೀರಾಬಿ ಗಂಡ ಮೇಕೆ ಮನುಷ್ಯನಾಗಿಬಿಟ್ಟಿದ್ದಾನೆ ಎಂದು ಆಡಿಕೊಳ್ಳುತ್ತಿದ್ದರು. ದಿನವೂ ಹೀಗೆ ವರ್ತಿಸಿದರೆ ಅವನು ಹುಚ್ಚನಾಗಿಬಿಡುತ್ತಾನೆ ಎನ್ನುತ್ತಿದ್ದರು. ಎಷ್ಟು ಬೈಗುಳ ಬೈಸಿಕೊಂಡೆಯೋ, ಎಷ್ಟು ಏಟುಗಳನ್ನು ತಿಂದೆಯೋ… ಹೋದರೆ ಹೋಗಲಿ ಬಿಡು, ನಿನಗೆ ಕಷ್ಟಗಳು ತಪ್ಪಿದವೆಂದು ನನಗೆ ಹೇಳತೊಡಗಿದರು. ಕೆಲವರು ಬೇಕೆಂದೇ ‘ನಿಮ್ಮ ಮೇಕೆ ಹೇಗಿದೆ?’ ಎಂದು ನನ್ನ ಗಂಡನ ಬಳಿ ಬಂದು ಕೇಳುತ್ತಿದ್ದರು. ಇವರಿಗೇನೋ ಸಂಭ್ರಮ. ಅವರನ್ನು ಕುಳ್ಳರಿಸಿಕೊಂಡು ಅವರಿಗೆ ಟೀ ಕೊಟ್ಟು “ಇದಕ್ಕೆ ನನ್ನ ಭಾಷೆಯೆಲ್ಲಾ ಗೊತ್ತು” ಎನ್ನುತ್ತಿದ್ದ. ಮೇಕೆಯನ್ನು ಮೆಚ್ಚಿಕೊಳ್ಳಲು ಅವರ ಹತ್ತಿರ ಪದಗಳೇ ಇರುತ್ತಿರಲಿಲ್ಲ. “ಮೇಕೆಗಳಲ್ಲಿಯೇ ಒಳ್ಳೆಯ ಮೇಕೆ” ಎಂದು ಹೇಳುತ್ತಿದ್ದ. + +“ರಾತ್ರಿಯೆಲ್ಲಾ ಮೇ… ಮೇ… ಎಂದು ಅರಚುತ್ತಿದೆ. ನೀನು ಮಲಗಿದರೆ ಏಳೋದಿಲ್ಲ. ಪಾಪ ಮೇಕೆಗೆ ಏನಾಗಿದಿಯೋ ಏನೋ ಅಂತ ದುಖಃ ಆಯ್ತು. ಅದಕ್ಕೇ ಮೇಕೆಯನ್ನು ನೋಡಿ ಹೋಗೋಣವೆಂದು ಬಂದ್ವಿ” ಎಂದು ಅವರನ್ನು ಅಪಹಾಸ್ಯ ಮಾಡುತ್ತ ಹೇಳುತ್ತಿದ್ದರು. ಇನ್ನೂ ನೆಂಟರಾದರೂ “ಬಕ್ರ ಬನ್ ಗಯಾ ತೇರಾ ಶೋಹರ್” ಎನ್ನುತ್ತಿದ್ದರು. + +‘ಇಸ್ಕೋ ಮೌತ್ ನಹಿ ಆತಿ. ಆದ್ದರಿಂದ ಬಕ್ರಿಕೂ ಮಾರ್ ಡಾಲ್ ನಾ’ ಅಂತ ನಾನು ಅಂದುಕೊಳ್ಳುತ್ತಿದೆ. ಹಗ್ಗ ಬಿಚ್ಚಿ ಬಿಟ್ಟರೆ ಎಲ್ಲಾದರೂ ಓಡಿ ಹೋಗುತ್ತದೆ. ‘ಪೀಡೆ ತೊಲುಗುತ್ತೆ’ ಅಂತೆಲ್ಲ ಅಂದುಕೊಳ್ಳುತ್ತಿದೆ. ಮತ್ತೆ ಯಾಖುಬ್ ಮಿಯಾನ ಕೋಪ ನೆನಪಿಗೆ ಬಂದು ನನ್ನ ದ್ವೇಷವನ್ನು ಅಡಗಿಸಿಕೊಳ್ಳುತ್ತಿದ್ದೆ. + +ಎಂದಿನಂತೆ ಈಗ ಬಜಾರಿಗೆ ಹೋಗಲಾಗುತ್ತಿಲ್ಲ. ಹಾಲು ಕುಡಿಯುವ ಹಸುಗೂಸನ್ನು ಬಿಟ್ಟು ಮಾರ್ಕೆಟ್ಟಿಗೆ ಹೋಗಿ ಸಾಮಾನು ತೆಗೆದುಕೊಂಡು ಬರುತ್ತಿದ್ದೆ. ಆದರೀಗ ಮನೆಗೆ ಬೀಗ ಹಾಕಿ ಮೇಕೆಯನ್ನು ಒಂಟಿಯಾಗಿ ಬಿಟ್ಟು ಆಚೆಗೆ ಹೋಗಲು ಆಗುತ್ತಿಲ್ಲ. ಅವರು ಡ್ಯೂಟಿಗೆ ಹೋದ ಮೇಲೆ ಮಕ್ಕಳು ಸಹ ಮೇಕೆಯೊಂದಿಗೆ ಒಡನಾಟ ಬೆಳೆಸಿಕೊಳ್ಳುತ್ತಿದ್ದಾರೆ. ಈ ಮೇಕೆ ಎಲ್ಲಿಂದ ಬಂತೋ? ಅವರು ಯಾಕೆ ಹೀಗೆ ಬದಲಾಗಿ ಹೋದರೋ? ಒಂದೂ ಅರ್ಥವಾಗದೆ ಹೋಗುತ್ತಿತ್ತು. “ಕೋಯಿ ಕರ್ತವಾ” ಅನ್ನುತ್ತಿದ್ದಾರೆ. “ತಾಯತ್ತು ಕಟ್ಟಿಸಲಾ… ದುವಾ ಓದಿಸಲಾ” ಅಂತ ಅನ್ನಿಸುತ್ತಿದೆ ಮನಸ್ಸಿಗೆ. + +‘ನಲವತ್ತೆಂಟು ಗಂಟೆಗಳ ಬಂದ್’ ಎಂದು ಕೆಲಸಕ್ಕೆ ಹೋಗುವುದು ಇಲ್ಲವೆಂದು ಯಾಖುಬ್ ಮಿಯಾ ಮನೆಯಲ್ಲೇ ಇದ್ದಾನೆ. ವಠಾರದಲ್ಲಿರುವ ನಾಲ್ಕೈದು ಮುಸ್ಲೀಮರು ಆಚೆಯ ಬಜಾರಿನ ಪರಿಸ್ಥಿತಿ ಸರಿಯಿಲ್ಲದಿರುವುದರಿಂದ ಇವರ ಹತ್ತಿರ ಬಂದು ಹರಟೆ ಹೊಡೆಯುತ್ತಿದ್ದಾರೆ. ಎಲ್ಲರಿಗೂ ಟೀ ಕೊಡಲು ಹೇಳಿದ್ದರಿಂದ ನಾನು ಟೀ ಮಾಡುತ್ತಿರುವೆ. “ನೋಡು ಯಾಖುಬ್ ಮಿಯಾ, ಅಚ್ಛಾ ಪಾಲ ಇಸ್ಕು. ಕಾಟ್ಲೆತೋ ಪಂದ್ರಾಕಿಲೋ ಗೋಷ್ ನಿಕಲ್ತಾ” ಅಂದನೊಬ್ಬ ಸಾಬಿ. “ಬಡಕಲಾಗಿತ್ತು ನೀನು ತಂದಾಗ. ಈಗ ನೊಡು ಗಾಯ್ ಕಾ ಜೈಸಾ ಹುವಾ” ಅಂದ ಇನ್ನೊಬ್ಬ ಸಾಬಿ. “ಈ ಬಂದ್ ಈಗ್ಲೇ ಬಂದಿದೆ. ಏನಾದ್ರು ಮಾಡೋಣ ಅಂದ್ರೆ ಕೆಲ್ಸನೇ ಇಲ್ಲ. ಗುಡ್ಡೆ ಹಾಕಿಕೊಂಡು ಒಳ್ಳೆಯ ದಾವತ್ ಮಾಡಿಕೊಳ್ಳೋಣ” ಅಂದ ಮತ್ತೊಬ್ಬ ಸಾಬಿ. “ಎಷ್ಟು ದಿನ ಸಾಕಿದ್ರು ಕೊಯ್ಯೋದೇ ಅಲ್ವೇ! ಈಗ ಕೊಯ್ದ್ರೆ ಏನು. ಈಗಾಗಲೇ ಬಲಿತಿದೆ” ಅಂದ ಮತ್ತೊಬ್ಬ ಸಾಬಿ. ಟೀ ತಂದು ಎಲ್ಲರಿಗೂ ಕೊಡುತ್ತ ಇವತ್ತು ದೊಡ್ಡ ಗಲಾಟೆಯೇ ಆಗುವಂತಿದೆ ಇಲ್ಲಿ ಅಂದುಕೊಂಡೆ ಮನಸ್ಸಿನಲ್ಲಿ. ‘ಬಂದವರು ನನ್ನನ್ನು ಏನಾದರೂ ಅಂದ್ರೆ ಸುಮ್ಮನ್ನಿರುತ್ತಾನೇನೋ ನನ್ನ ಗಂಡ, ಆದ್ರೆ ಮೇಕೆಗೇನಾದ್ರು ಅಂದ್ರೆ ಸುಮ್ಮನಿರೋದಿಲ್ಲ’ ಅನ್ನಿಸಿತು. + +“ನೋಡು ಯಾಖುಬ್ ಮಿಯಾ! ನಮಗೆ ಇಲ್ಲದಿಲ್ಲದೆ ಬಂದಿದೆ ಇಂಥ ಸಮಯ. ನಲವತ್ತೆಂಟು ಗಂಟೆ. ನಾವು ಮನೆಯಲ್ಲಿ ಇರುವವರೇನಾ? ಆಚೆ ಹೋಗುವಂತಿಲ್ಲ ಪರಿಸ್ಥಿತಿ. ನಮ್ಮ ಸಿಲಾರ್ ಮಿಯಾ ಮನೆಗೆ ಹೊಸದಾಗಿ ಮದುವೆಯಾದ ಅಳಿಯ ಮಗಳು ಬಂದಿದ್ದಾರೆ. ರೋಗವೋ ಗಾಯವೋ ಇಲ್ಲದ ಒಳ್ಳೆಯ ಬಕ್ರಿ ಇದು. ತಲೆ, ಕಾಲು ನೀನೇ ಇಟ್ಟಿಕೋ. ಎಲ್ಲರೂ ಸಮಾನವಾಗಿ ಗುಡ್ಡೆ ಹಾಕ್ಕೊಳೋಣ ನಡಿ!” ಅಂದ ರಹೀಂ ಖಾನ್. + +(ಅನ್ವರ್) + +“ಗುಡ್ಡೆ ಹಾಕಿಕೊಳ್ಳುವುದೆಂದರೆ ದೊಡ್ಡ ಕೆಲಸ. ಕಸಾಬು ಬರಬೇಕು. ಕೊಯ್ಯಬೇಕು. ಎಲ್ಲರೂ ಹಂಚಿಕೊಳ್ಳಬೇಕು. ಇದೆಲ್ಲಾ ಇವತ್ತಾಗತ್ತಾ? ಮತ್ತೆ ಕಸಾಬು ಇದ್ದನೋ ಇಲ್ಲವೋ” ಅಂದ ಯಾಖುಬ್ ಮಿಯಾ. “ಕಸಾಬು ಇಲ್ಲದಿದ್ದರೇ ಹೋಗ್ಲಿ, ಕಸಾಬು ಕೆಲ್ಸ ನನಗೆ ಬರೋದಿಲ್ಲವೇನು? ಎಲ್ಲರ ಶಾದಿ ಬಾರಾತ್ ನಲ್ಲಿ ನಾನು ಮಾಡ್ತಾಯಿಲ್ವೇನು? ನೀನು ಅದರ ಬಗ್ಗೆ ಫಿಕರ್ ಮಾಡಬೇಡ. ನಾನು ಈಗ್ಲೇ ಹೋಗಿ ಚೂರಿ ಕುಂದ ತಗೊಂಡು ಬರ್ತೀನಿ” ಅನ್ನುತ್ತ ಅಲ್ಲಿಂದ ಎದ್ದು ಮಹಮ್ಮದ್ ಮಿಯಾ ಅವರ ಮನೆಗೆ ಹೋದ. + +ನನ್ನ ಗಂಡ ನೆತ್ತಿಗೆ ಟೋಪಿ ಹಾಕಿಕೊಂಡ. ಬಕ್ರಿಗೆ ಮೂರು ಬಾರಿ ‘ಬಿಸ್ಮಿಲ್ಲಾ’ ಎಂದು ನೀರು ಕುಡಿಸಿದ. ಬಕ್ರಿಯನ್ನು ಮಲಗಿಸಿ ಒಂದು ಕೈಯಲ್ಲಿ ಅದರ ನಾಲ್ಕು ಕಾಲುಗಳನ್ನು ಇನ್ನೊಂದು ಕೈಯಿಂದ ಅದರ ಕೊರಳಿನ ಹತ್ತಿರ ಹಿಡಿದುಕೊಂಡ. ಮಹಮ್ಮದ್ ಮಿಯಾ ‘ಬಿಸ್ಮಿಲ್ಲಾ’ ಎಂದು ಹಲಾಲ್ ನಾಮ ಓದಿ ಬಕ್ರಿ ಕೊರಳು ಹಲಾಲ್ ಮಾಡಿ ದೂರ ಸರಿದು ಕತ್ತಿಯನ್ನು ತೊಳೆಯುತ್ತಿದ್ದಾನೆ. + +ಮಕ್ಕಳೆಲ್ಲಾ ಅಳುತ್ತ ಕುಳಿತುಕೊಂಡರು. “ಅಮ್ಮೀ! ಬಕ್ರಿಕು ಮಾರ್ ಡಾಲೆ. ಬಕ್ರಿಕೋ ಮಾರ್ ಡಾಲೆ” ಅನ್ನುತ್ತಿದ್ದಾನೆ ಚಿಕ್ಕ ಮಗ. + +ನಾನಿದೆಲ್ಲಾ ನನ್ನ ಕನಸಿನಲ್ಲಿ ನಡೆಯುತ್ತಿದೆ ಅಂದುಕೊಳ್ಳುತ್ತಿದ್ದೆನೇ ಹೊರತು ಯಾಖುಬ್ ಮಿಯಾನೇ ಹೀಗೆ ಮಾಡಿದ್ದಾನೆಂದುಕೊಳ್ಳಲಾರೆ. ಬಕ್ರಿಯನ್ನು ಮರಕ್ಕೆ ನೇತು ಹಾಕಿ ಅದರ ತೋಳು ಸಿಗಿಯುತ್ತಿದ್ದಾರೆ. “ಸರಿಯಾಗಿ ಸಿಗಿ ಮಹಮ್ಮದ್ ಮಿಯಾ. ಇಲ್ಲದಿದ್ದರೆ ಹಣ ಬರೋಲ್ಲ” ಅನ್ನುತ್ತಿದ್ದಾನೆ ಯಾಖುಬ್ ಮಿಯಾ. + +‘ಬಕ್ರಿಗೆ ಬಂದಿರುವ ಮೌತ್ ಇವರಿಗೆ ಬಾರದೇ ಹೋಯಿತೆ’ ಅನ್ನುತ್ತಿದೆ ನನ್ನ ಮನಸ್ಸು. ಇಷ್ಟು ದಿನ ಅದನ್ನು ಸಾಕಿ, ಅದಕ್ಕಾಗಿ ನಮ್ಮನ್ನು ಹೊಡೆದು, ಅದರೊಂದಿಗೆ ಹರಟಿದ್ದು ಏಕೋ ನನಗೆ ಅರ್ಥವೇ ಆಗಲಿಲ್ಲ. ಮಕ್ಕಳನ್ನು ಹೊಡೆದಷ್ಟು ಸಲೀಸಾಗಿ, ನನ್ನನ್ನು ಒದ್ದಷ್ಟು ಸಹಜವಾಗಿ ಬಕ್ರಿಯನ್ನು ಸಾಯಿಸಿಬಿಟ್ಟ ಯಾಖುಬ್ ಮಿಯಾ. + + + +ಮನೆಯೆಲ್ಲಾ ಮೇಕೆಯ ವಾಸನೆ ಬರುತ್ತಿದೆ. ನಿದ್ರೆ ಬರುತ್ತಿಲ್ಲ. ಇವತ್ತು ಎರಡು ಬಾರಿ ಬಿರ್ಯಾನಿ ತಿಂದ ಯಾಖುಬ್ ಮಿಯಾನಿಗೆ ನನ್ನ ಅವಶ್ಯಕತೆ ನೆನಪಾಯಿತು. ನಿದ್ದೆ ಮಾಡಿದಂತಿದ್ದ ನನ್ನ ಮೇಲೆ ರಸ್ತೆ ಮೇಲಿನ ಲಾರಿಯ ಭಾರದ ಹಾಗೆ ಭಾರ ಹಾಕಿದ ಯಾಖುಬ್ ಮಿಯಾ. ನನ್ನ ಕಷ್ಟಗಳು ಮತ್ತೇ ಮೊದಲಿಗೆ ಬಂದವು. ಮತ್ತೆ ಯಾವಾಗ ಗರ್ಭಧರಿಸುತ್ತೇನೋ ಗೊತ್ತಿಲ್ಲ. + +ಕಾ.ಹು. ಚಾನ್ ಪಾಷ ಮೂಲತಃ ಕೋಲಾರ ಜಿಲ್ಲೆಯ ಬಂಗಾರಪೇಟೆಯವರು. ಅಲ್-ಅಮೀನ್ ಅಂಜುಮನ್ ಪ್ರೌಢಶಾಲೆಯಲ್ಲಿ ಕನ್ನಡ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ, ಮನದ ಮಲ್ಲಿಗೆ(ಚುಟುಕು ಸಂಕಲನ), ಜನ ಮರುಳೋ! ಜಾತ್ರೆ ಮರುಳೋ! (ಕಥಾ ಸಂಕಲನ), 3. ಭಲೇ! ಗಿಣಿರಾಮ (ಮಕ್ಕಳ ನಾಟಕ), ಮೂರು ವರಗಳು (ಮಕ್ಕಳ ನಾಟಕ) ಜೊತೆಗೆ ಕೆಲವು ಅನುವಾದಿತ ಕೃತಿಗಳೂ ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_277.txt b/Kenda Sampige/article_277.txt new file mode 100644 index 0000000000000000000000000000000000000000..3e580701149c87a92ba708a9c6f3dc272b14de4a --- /dev/null +++ b/Kenda Sampige/article_277.txt @@ -0,0 +1,69 @@ + + +ನವರಾತ್ರಿ. ಭೂತ ಲೋಕದಲ್ಲಿ ಶಾಕಿನಿ ಢಾಕಿನಿಯರು ಶೃಂಗರಿಸಿಕೊಳ್ಳಲು ತೊಡಗಿದ್ದರು. ಮನುಷ್ಯ ಚರ್ಮದ ತನ್ನ ಸೀರೆಗೆ ನೆರಿಗೆಯೇರಿಸಿಕೊಳ್ಳುವಾಗ ಶಾಕಿನಿ ಹೇಳಿದಳು : ‘ನನ್ನ ಸೀರೆಯ ಬಣ್ಣವೆಲ್ಲಾ ಹೋಗಿಬಿಟ್ಟಿತು.’ + +‘ಸೀರೆಯ ಬಣ್ಣ ಹೋದರೆ ನಿನ್ನನ್ನು ಅಲ್ಲಿ ಭೇತಾಳ ಕಾದು ನಿಂತಿದ್ದಾನೆಂದು ಭಾವಿಸಿದಿಯಾ! ಹೋಗಿಬರುವ ಕ್ರಮವೊಂದನ್ನು ತೀರಿಸಿಬಿಡೋಣವೆಂದು ಹೊರಟರೆ, ನೀನು ಬೆಡಗಿನ ಮಾತಾಡುತ್ತೀ’ ಢಾಕಿನಿಯಂದಳು. + +‘ಅದು ಅಷ್ಟೆ. ನೋಡು – ನನ್ನ ಹಾರದ ಮಣಿಗಳೆಲ್ಲಾ – ತೂತು ಬೀಳಲಾರಂಭಿಸಿವೆ; ಇನ್ನು ವಸ್ತ್ರಹಾರವಾವುದೂ ಇಲ್ಲದೆ ಬತ್ತಲೆ ಕುಣಿಯುವ ಕಾಲ ಬರುತ್ತದೇನೋ!’ ರುಂಡ ಹಾರವನ್ನು ತೊಟ್ಟುಕೊಳ್ಳುವಾಗ ಪುನಃ ಶಾಕಿನಿಯ ಶೋಕ. + +‘ನಿನ್ನದೇ ಎಂದೇನು, ನನ್ನ ಸೀರೆ ಹಾರಗಳಲ್ಲೂ ತೂತುಗಳು ಬಿದ್ದಿವೆ. ಬೀಳದೆ ಮತ್ತೇನಾದೀತು, ಅವು ದ್ವಾಪರ ಯುಗದವುಗಳಲ್ಲವೇ? ಆಮೇಲೆ ಎಂದಾದರೂ ಸೀರೆ, ಹಾರ ನಮಗೆ ದೊರೆತುದುಂಟೆ?’ + +‘ಹೌದೇನೆ ಅಕ್ಕ! ಹೀಗೆಯೇ ಆದರೆ ಹೇಗೆ? ಈ ಸಲವಾದರೂ ಒಂದು ಸೀರೆ, ಹಾರ, ಸಂಪಾದಿಸಿಕೊಂಡು ಬರಬಹುದೋ ಹೇಗೆ?’ + +‘ನಿನ್ನ ಅತ್ಯಾಶೆಗೆ ಸರಿಯಾಗಿ ಅಂತಹದೇ ಕಾಲವೂ ಬಂದಿದೆ. ನೀನು ಶೃಂಗಾರ ಮಾತಿನಲ್ಲಿದ್ದಿ; ಕಳೆದ ಕೆಲವು ವರುಷಗಳಿಂದ ಹೊಸ ಚರ್ಮ, ಹೊಸ ರುಂಡದ ಮಾತು ಬಿಡು. ಬಾಯಿ ಮುಕ್ಕಳಿಸಿ ನಾಲ್ಕು ಗುಟುಕು ಕೆನ್ನೀರು ನಾವು ಕುಡಿದುದುಂಟೆ ಭಾರತದಲ್ಲಿ? ಆ ಮನುಷ್ಯನೊಬ್ಬ ಸಾಯದೆ ನಮಗೇನೂ ದೊರೆಯುವಂತಿಲ್ಲ!’ ಢಾಕಿನಿಯು ಗಾಂಧಿಗೆ ಶಾಪಕೊಟ್ಟಳು. + +‘ಹೌದೆನ್ನುತ್ತೇನೆ! ಆ ತ್ರೇತಾ ದ್ವಾಪರಾ ಯುಗಗಳಲ್ಲಿ ಎಂತಹ ಹಬ್ಬದೂಟವಿತ್ತು! ಈಗ ಕೆಲವು ವರುಷಗಳಿಂದ ಬಿಸಿ ರಕ್ತಕ್ಕಾಗಿ ಬಾಯಿ ನೀರೂರಿಸುವದೇ ಬಂತು.’ + +‘ನಿಜ, ಆ ಯುಗಗಳಲ್ಲಿ ರಾಮನಿದ್ದ, ಕೃಷ್ಣನಿದ್ದ. ಈಗ ಇರುವುದು ಆ ಫಕೀರನಲ್ಲವೇ? ಅವ ಹಿಂದಿನವರಂತೆ ರಕ್ತ ಸುರಿಸುವದು ಬಿಡು, ಸುರಿಯುವ ಚಿಹ್ನೆ ಕಂಡೊಡನೆ ಕಣ್ಣೀರು ಸುರಿಸುತ್ತಾನಂತೆ! ಮತ್ತೆ ರಕ್ತ್ತ ಸಿಕ್ಕುವದೆಂದರೆ ಹೇಗೆ?’ ಢಾಕಿನಿಗೇಕೋ ನಮ್ಮ ಗಾಂಧಿಯಜ್ಜನ ಮೇಲೆಯೇ ಕಣ್ಣು. + +‘ಆದರೆ ಅಕ್ಕಾ, ಕಳೆದ ನವರಾತ್ರಿಯ ವೇಳೆ ನಾವು ಹೋಗಿದ್ದಾಗ ಒಂದು ವಾರ್ತೆ ಕೇಳಿದ್ದಿದೆ – ಅವನಿಗೂ ರಕ್ತದ ಒತ್ತಡವಾರಂಭವಾಗಿತ್ತಂತೆ! ಈ ತನಕ….’ + +‘ಇದೊಂದು ಹುಚ್ಚು! ಆ ಒಣ ಮುದುಕನ ರಕ್ತದ ಒತ್ತಡವೇರಿ ಅದು ನಮ್ಮ ಬಾಯಿಗೆ ಬಂದು ಬಿದ್ದೀತೆಂದು ನೆನಸಿದೆಯಾ? ಅಂತೂ ದೇವಿಯಾಜ್ಞೆಗಾಗಿ ಹೋಗಿ ಬರುವ ಪದ್ಧತಿಯೊಂದುಂಟು – ಇಲ್ಲವಾದರೆ ಯಾರು ಸಾಯುತ್ತಿದ್ದರು. ಆ ಹಾಳು ಭೂಮಿಗೆ!’ ಢಾಕಿನಿಯು ನಿರಾಶೆಯಿಂದ ಉದ್ಗರಿಸಿದಳು. + +‘ಹಾಗಾದರೆ ಈ ಬಾರಿಯೂ ಏನೂ ಪ್ರಯೋಜನವಿಲ್ಲವೆನ್ನುತ್ತೀಯಾ? ಮತ್ತೆ ಆ ದೇವಿ ಯಾಕೆ ಇನ್ನೂ ಆ ನಿಷ್ಪ್ರಯೋಜಕ ಮಾನವರ ಬಳಿ ಬಿದ್ದುಕೊಂಡಿದ್ದಾಳಪ್ಪಾ!’ + +‘ಅವಳೀಗ ತೀರಾ ಮಂಕಳಾಗಿ ಹೋಗಿದ್ದಾಳೆ. ‘ಅಮ್ಮಾ! ತಾಯಿ! ಮೂಕಾಂಬಾ, ಓಂಕಾರ ಸ್ವರೂಪಿಣೀ, ಮಹಾಮಾತೇ’ ಎಂದು ಆ ಮಾನವರು ಹೊಗಳುತ್ತಾ ಇದ್ದಾರಲ್ಲಾ – ಆ ಬಾಯಿ ಹೊಗಳಿಕೆಗೆ ಮರುಳಾಗಿ ಹೋಗಿದ್ದಾಳೆ ಆಕೆ; ಒಂದು ತುತ್ತು ತಿಂಡಿ ಆ ಮನುಜರಿಗೂ ಇಲ್ಲ – ಒಂದು ತಟಕು ರಕ್ತ ಇವಳ ನಾಲಿಗೆ ತುದಿಗೂ ಇಲ್ಲ. ಅವರು ‘ಅಮ್ಮಾ ತಾಯೇ’ ಎನ್ನುವುದು – ಇವಳು ಕಿವಿಯರಳಿಸಿ ಕೇಳುವುದು, ಇಷ್ಟೇ; ಖೆ ಖೆ ಖೆ ಖೆ’ ಇದು ಢಾಕಿನಿಯ ನಂಜಿನ ನಗೆ. ಶಾಕಿನಿ ತಾನು ಬುದ್ಧಿವಂತೆಯೆಂಬ ಹೆಗ್ಗಳಿಕೆಯೊಡನೆ ಹೇಳಹತ್ತಿದಳು: ‘ಈ ಕಲಿಕಾಲದ ಮಾನವರಿಗೇಕೆ ಬುದ್ಧಿಯಿಲ್ಲವೋ ತಿಳಿಯದು. ಆ ಪಂಚಕಜ್ಜಾಯದ ಪೂಜೆಗೆ ಅವರಿಟ್ಟಿರುವ ಹೆಸರೇನು ಗೊತ್ತೇ ಅಕ್ಕಾ – ‘ಆಯುಧ ಪೂಜೆ’ಯಂತೆ! ಹೇ ಹೆ ಹೆ! ಈಗ ಈ ಅವಸ್ಥೆ ಬಂದಿರುವದು ನಮಗೆ ಮಾತ್ರವೆಂದು ಭಾವಿಸಬೇಡ. ಕಳೆದ ಗೋಪೂಜೆಗೆಂದು ಭಾರತಕ್ಕೆ ಹೋಗಿ ಬಂದಿದ್ದ ಬಲಿರಾಜ ಹೇಳುತ್ತಿದ್ದ, ‘ನಾನು ಗೋಪೂಜೆ ನೋಡಬೇಕೆಂದು ಉತ್ಸಾಹದಿಂದ ಹೋದವ ಕಣ್ಣೀರು ಸುರಿಸುತ್ತಾ ಬಂದೆ. ಅಲ್ಲಿ ದನಗಳ ಮೈಯಲ್ಲಿ ಎಲುಬು, ನೆತ್ತಿಯಲ್ಲಿ ಕೊಂಬು ಹೊರತು ಒಂದು ಹಿಡಿ ಮಾಂಸವವುಗಳ ಮೈಯಲ್ಲಿಲ್ಲ. ಗೋಪೂಜೆಗೆಂದು ಮಾನವರು ಆರತಿ ಕುಂಕುಮದ ಹರಿವಾಣ ತಂದಾಗ, ಹಸಿದಿದ್ದ ದನವೊಂದು ತಿಂಡಿ ಬಂತೆಂದು ಭಾವಿಸಿ ಬಾಯಿ ಹಾಕಿ ಹರಿವಾಣವನ್ನು ಕವಚಿಹಾಕಿತು. ಒಡನೆ ಲಟಪಟವೆಂದು ಅದರ ಬೆನ್ನೆಲುಬಿನ ಮೇಲೆ ಪೆಟ್ಟು ಬೀಳುವಾಗ ನನ್ನ ಕಪಿಲ ದನ ಒದ್ದಾಡುವದನ್ನು ನೋಡಲಾರದೆ ಓಡಿ ಬಂದುಬಿಟ್ಟೆ’ ಎಂದು. ವೀರಭದ್ರಾ! ಈ ಭಾರತೀಯರಿಗೇಕಪ್ಪಾ ಇಂಥ ಹಾಳು ಬುದ್ಧಿ ಬಂತು!’ + +‘ಈ ಸಲವೂ ಆ ಜಿಡ್ಡೆಣ್ಣೆಯ ವಾಸನೆಯಷ್ಟೇ ದೊರೆತರೆ ನಾವು ಖಂಡಿತವಾಗಿ ದೇವಿಯೊಡನೆ ಹೇಳಬೇಕು – ಇನ್ನು ಮುಂದೆ ನಾವೀ ಆಯುಧ ಪೂಜೆಗೆ ಬರುವಂತಿಲ್ಲವೆಂದು’ ಎಂದು ಢಾಕಿನಿ ಕಂಠೋಕ್ತವಾಗಿ ಹೇಳಿದಳು. + +ನರಚರ್ಮಾಂಬರಧಾರಿಗಳಾಗಿ, ರುಂಡಮಾಲಾಲಂಕೃತರಾಗಿ, ಎಂದೋ ಸಂಗ್ರಹಿಸಿಟ್ಟ ರಕ್ತ ಹುಡಿಯ ಬೊಟ್ಟನಿಟ್ಟುಕೊಂಡು, ಶಾಕಿನಿ ಢಾಕಿನಿಯರು ಭೂಲೋಕಕ್ಕಿಳಿದರು. + +***** + +ಇಂದಿನ ಯುದ್ಧ ಪರ್ವದಲ್ಲಿ ಸಂಕ ಸೇತುವೆಗಳನ್ನು ಕಡಿದು ಹಾಕುವದಾದರೂ ಸುಲಭ. ಅನಾದಿಯ ಸಂಬಂಧವನ್ನು ಕಡಿದುಕೊಳ್ಳುವದು ಬಹು ಕಷ್ಟ. ಇಲ್ಲವಾದರೆ ದೇವಿ ಮಹಾಶಕ್ತಿಯು ಭಾರತೇಯರ ಸಂಬಂಧವನ್ನು ಎಂದೋ ಕೈ ಹಿಡಿದುಕೊಳ್ಳುತ್ತಿದ್ದಳು. ಭಾರತವೂ ಯುಗಯುಗಾಂತರಗಳಿಂದ ಓಂಕಾರ ಸ್ವರೂಪಿಣಿ ಮಹಾಕಾಳಿಯನ್ನು ಆರಾಧಿಸಿಕೊಂಡು ಬಂದಿದ್ದ ದೇಶ. ಕೃತ, ತ್ರೇತಾ, ದ್ವಾಪರಾ ಯುಗಗಳಲ್ಲಂತೂ ಕ್ಷತ್ರಿಯರ ಉಕ್ಕುವ ರಕ್ತ ಶಕ್ತಿಯಾರ್ಪಣಕ್ಕಾಗಿಯೇ ಮೀಸಲಿತ್ತು. ಈ ಯುಗದಲ್ಲಿ ಕೂಡಾ ಭೀಮಸಿಂಗ, ಶಿವಾಜಿಯರ ಕಾಲದವರೆಗೆ ಅವಳ ಆರಾಧನೆಗೆ ಕೊರತೆಯಿರಲಿಲ್ಲ. ‘ಮೈ ಭೂಕ್ತಾ ಹೂಂ’ ಎಂದು ಭೀಮಸಿಂಗನಿಗೆ ಕನಸಿನಲ್ಲಿ ಹೇಳಿದೊಡನೆ ಅವ ರಾಜಪುತ್ರರ ಬಿಸಿ ಬಿಸಿ ರಕ್ತವವಳಿಗಾಗಿ ಸುರಿಸಿದ. ಶಿವಾಜಿಯು ಭವಾನಿ ಖಡ್ಗದ ಬಲದಿಂದ ಮಹಾಕಾಳಿಗೆ ಸಾಕಷ್ಟು ರಕ್ತತರ್ಪಣ ಕೊಟ್ಟಿದ್ದ. ಆಮೇಲೆ ಮಾತ್ರ ಅಂತಹದಾವುದನ್ನೂ ಕೇಳಬೇಡಿ. ಭಾರತೇಯರು ಕಾಲಕ್ರಮೇಣ ರಕ್ತಶೂನ್ಯ ಸ್ಥಿತಿಗೆ ಬಂದರು. ಅಂದರೆ ಮೈಯಲ್ಲಿಯೂ ಸಾಕಷ್ಟು ರಕ್ತ ತಂಬುತ್ತಿದ್ದಿಲ್ಲ – ಇದ್ದ ರಕ್ತವನ್ನು ಸುರಿಯುವುದು ಘೋರ ಪಾತಕವೆಂಬ ಧರ್ಮವೂ ಸ್ವಾಭಾವಿಕವಾಗಿ ಅಂಗೀಕರಿಸಲ್ಪಟ್ಟಿತು. + +ರಕ್ತದ ಒಣ ಹುಡಿಯ ಬೊಟ್ಟನ್ನಿಟ್ಟುಕೊಳ್ಳುವ ಆಪತ್ತಿನ ವೇಳೆ ಢಾಕಿನಿ ಗಾಂಧಿಯವರ ಮೇಲೆ ನಂಜು ಕಾರಿದುದು ವಿಶೇಷವಿಲ್ಲ . ಅಹಿಂಸಾ ಪರಮೋ ಧರ್ಮ ಮಂತ್ರೋಪಾಸಕಾರದ ಗಾಂಧೀಜಿಯವರ ಮಾಟದಿಂದಾಗಿ ಭಾರತವೂ ರಕ್ತ ಶೂನ್ಯವಾಯಿತೆಂದೇ ಹೇಳಬೇಕು. ಆದರೂ ವರುಷಕ್ಕೊಮ್ಮೆ ನವರಾತ್ರಿಯಲ್ಲಿ ಆಯುಧಪೂಜೆಯೆಂಬುದೊಂದು ನಡೆಯುತ್ತಿದೆ. ಆಯುಧದಿಂದ ಅಧಿದೇವತೆ ಶಕ್ತಿಯ ಆರಾಧನೆಯಾಗುತ್ತಿದೆ. ಹಣ್ಣು ಕಾಯಿ ಸಮರ್ಪಣೆ, ದೀಪಧೂಪಾರತಿ, ಮಂತ್ರ ಘೋಷಗಳೆಲ್ಲಾ ಆಗುತ್ತಿವೆ. ಹೀಗಾಗಿ ದೇವಿ ಮಹಾಶಕ್ತಿಗೆ ಭಾರತವನ್ನು ಹಿಡಿಯಲಿಕ್ಕೂ ಅಲ್ಲ, ಬಿಡಲಿಕ್ಕೂ ಅಲ್ಲ, ಎನ್ನುವಂಥಾ ಸಂಕಟ. ‘ಮಾತೇ! ಓಂಕಾರ ಸ್ವರೂಪಿಣೀ! ನಮಗೆ ನೀನೇ ಗತಿ’ ಎಂದು ಅಡ್ಡಾದಿಡ್ಡಿ ಬೀಳುವ ಪುರೋಹಿತರನ್ನು ಕಡೆಗಾಲಿಂದ ಒದ್ದು ಹೊರಟುಹೋಗುವಷ್ಟು ದಯಾಹೀನೆಯಾಗಲಿಲ್ಲ ಅಮ್ಮ. ಆದರೆ ಅವಳ ನಾಲಿಗೆ ರುಚಿಯ ರಕ್ತಕ್ಕೆ ಮಾತ್ರ ಬರಗಾಲ! ಮೇಲಾಗಿ ಅವಳ ಗಣಗಳಾದ ಶಾಕಿನಿ ಢಾಕಿನಿ ಭೂತಗಳಿವೆ. ಅವರನ್ನು ವರುಷಕ್ಕೊಮ್ಮೆಯಾದರೂ ತೃಪ್ತಿಪಡಿಸುವುದು ಒಡತಿಯ ಕರ್ತವ್ಯ. ಅದಕ್ಕಾಗಿ ನವರಾತ್ರಿಗೆ ತಾನಿದ್ದಲ್ಲಿಗೆ ಬಂದು ಹೋಗಿ ಎಂದು ಅವಳ ಅಪ್ಪಣೆಯಾಗಿತ್ತು. + +ಒಡತಿಯ ಆಜ್ಞೆಯಂತೆ ಆ ಗಣಗಳು ಪ್ರತಿ ನವರಾತ್ರಿ ಭಾರತಕ್ಕೆ ಬರುವ ವಾಡಿಕೆ. ಬಂದರೆ ಇಲ್ಲಿ ಇರುವವರೆಲ್ಲ ಥಂಡಾ ರಕ್ತದವರೆ – ಬಿಸಿ ರಕ್ತದ ವಾಸನೆ ಕೂಡಾ ಅವುಗಳ ಮೂಗಿಗೆ ಬಡಿಯಲಿಕ್ಕಿಲ್ಲ. ಬದಲಾಗಿ ಪಂಚಕಜ್ಜಾಯದ ಜಿಡ್ಡೆಣ್ಣೆಯ ವಾಸನೆ! ಸಾಲದುದಕ್ಕೆ ಆ ಕಾಳರಾತ್ರಿ ಪ್ರೇಮಿಗಳ ಮುಖದಿದಿರು ದೀಪಾರತಿ! ಹೀಗಾಗಿ ಆ ಭೂತಗಳು ಪ್ರತಿ ವರುಷವೂ ಗೊಣಗುಟ್ಟುತ್ತಾ ಹಿಂದಿರುಗುವ ವಾಡಿಕೆ. ಬಂದ ಅತಿಥಿಗಳ ಬಾಯಿಕೆಂಪು ಮಾಡಿಸಿ ಕಳುಹಿಸುವ ಕ್ರಮವೊಂದು ಭಾರದಲ್ಲುಂಟಲ್ಲಾ – ಆ ಆತಿಥ್ಯವೇನೋ ಪ್ರಯಾಸದಿಂದಲಾದರೂ ಶಾಕಿನಿ ಢಾಕಿನಿಯರಿಗೂ ದೊರೆಯುತ್ತಿತ್ತು. + + + +ವಿದ್ಯಾದಶಮಿಯ ಮೆರವಣಿಗೆ ಮಸೀದಿಗಳಿದಿರು ಬಂದಾಗ, ಅಲ್ಲಿಯೊಂದು ಹತ್ತಿಪ್ಪತ್ತು ತಟಕು ರಕ್ತ ಸುರಿದರೆ ಶಾಕಿನಿ ಢಾಕಿನಿಯರು ತುಟಿ ಕೆಂಪು ಮಾಡಿಕೊಳ್ಳುವಷ್ಟರಲ್ಲಿ ತಲೆಕೆಂಪಿದ್ದವರು ಅಲ್ಲಿ ಬಂದು ಅದಕ್ಕೂ ತಡೆಯೊಡ್ಡುತ್ತಿದ್ದರು. ಹೀಗಾಗಿ ಭಾರತದ ಆಯುಧ ಪೂಜೆಯ ದಿನ ಬಂತು ಎಂದಾದೊಡನೆ ಆ ಭೂತಗಳಿಗೆ ತೀರಾ ನಿರುತ್ಸಾಹ. ಮೊದಲು ಭಾರತ ಪ್ರವಾಸವೆಂದೊಡನೆ ಹಿಗ್ಗಿ ಹಾರುತ್ತಿದ್ದ ಗಣಗಳು ಈಗ, ಇದೊಂದು ಪ್ರಯಾಸವೆಂದು ಜಿಗುಪ್ಸೆಗೊಳ್ಳುತ್ತಿದ್ದವು. ಆದರೆ ಕಾಲಕಷ್ಟ. ದೇವಿಯ ಆಜ್ಞೆ ಇದೆ, ಹೋಗಲೇಬೇಕು ಎಂಬುದಕ್ಕಾಗಿ ಹೊರಡುತ್ತಿದ್ದವು. ಅಂತೆಯೇ ಈ ವರುಷವೂ ಹೊರಟವೆನ್ನಿ. + +ಶಾಕಿನಿ ಢಾನಿಯರು ಭಾರತ ಭೂಮಿಯ ಮೇಲೆ ಬಂದು ಬಿದ್ದವರೇ ಅಮ್ಮನನ್ನು ಹುಡುಕುತ್ತಾ ಹೊರಟರು. ಹಾದಿ ನಡೆಯುತ್ತಿದ್ದಾಗ, ಜನರಲ್ಲಾವುದೋ ಒಂದು ವಿಧದ ಬದಲಾವಣೆಯಾಗಿರುವುದು ಅವರಿಗೆ ಕಂಡು ಬಂತು. ಎಷ್ಟೋ ಮಂದಿ ಸತ್ತರಂತೆ, ಏನೋ ಮುಳುಗಿತಂತೆ, ಯಾವುದೋ ಬೀಳುತ್ತದಂತೆ ಎಂದು ಜನರಾಡಿಕೊಳ್ಳುವ ಮಾತನ್ನಾಧರಿಸಿ ಸಂಭಾಷಿಸುತ್ತಾ ಬಂದರು. ಅವರಿಳಿದುದು ಹಿಂದುಸ್ಥಾನದ ಯಾವುದೋ ಒಂದು ಮುಖ್ಯ ಪಟ್ಟಣದಲ್ಲಾಗಿರಬೇಕು. ಈ ಉತ್ಸವ ಎಲ್ಲಿ ನಡೆಯುತ್ತಿದೆ. ಎಲ್ಲಿಯೂ ಕಾಣುವುದಿಲ್ಲವಲ್ಲಾ. ದೇವಿ ಸಿಕ್ಕಿದಳಾದರೆ ತಿಳಿಯುತ್ತದೆ ಎಂದು ಶಕ್ತಿಯನ್ನು ಹುಡುಕುತ್ತಾ ಹೊರಟರು. ಆದರೆ ದೇವಿಯ ಪತ್ತೆಯಿಲ್ಲ. ತಳಿರು ತೋರಣಗಳಡಿಯಲ್ಲಿ ನಡೆದರು; ಸುಮಂಗಲೆಯರನ್ನು ತಮ್ಮಷ್ಟಕ್ಕೆ ಅಣಕಿಸುತ್ತಾ ಸಾಗಿದರು. ಆದರೆ ಎಲ್ಲಿಯೂ ದೇವಿ ಕಾಣಲಿಲ್ಲ. ಒಂದೆಡೆಯಿಂದ ಘಣ ಘಣಘಂಟಾರವವು ಕೇಳಿ ಬರುತ್ತಿತ್ತು. ‘ಓ ಅಲ್ಲಿ ದೇವೀ ಪೂಜೆ ನಡೆಯುತ್ತಿದೆ. ಅಮ್ಮ ಇದ್ದರೆ ಅಲ್ಲಿ ಇರಬೇಕು’ ಎಂದಳು ಶಾಕಿನಿ. ‘ಆಗಲಿ ನೋಡೋಣ’ ಎಂದು ಹೊರಟಿತು, ಅಲ್ಲಿಗೆ ಅವರ ಸವಾರಿ. + +ಸಮೀಪವಾದಂತೆ ‘ಅಂಬಂಭಜಾಮಿ || ಜಗ || ದಂಬಾ ಭಜಾಮಿ || ಕಾಳಿ ಭಜಾಮಿ || ಮಹಾಂಕಾಳಿ ಭಜಾಮಿ ||’ ಎಂದು ತಾಳ ಹಾಕಿ ಕುಣಿಯುವ ಗದ್ದಲ ಕೇಳಿ ಬರಹತ್ತಿತ್ತು. ಸ್ಮಶಾನ ರುದ್ರ ಮತ್ತು ಮಹಾಂಕಾಳಿಯರ ಜತೆಯಲ್ಲಿ ಒಂದೆರಡು ನೃತ್ಯದಲ್ಲಿ ಭಾಗವಹಿಸಿ ಅನುಭವವಿದ್ದ ಈ ಗಣಗಳಿಗೆ, ಎರಡು ಸುತ್ತು ಕುಣಿಯೋಣವೇ ಎಂಬ ಮೈಮರುಳು ಬಂತು. ಆದರೆ ಅಲ್ಲಿದ್ದ ದೀಪ, ಧೂಪದ ಹೊಗೆ, ಇವುಗಳಿಗೂ ಅಂದಿನವುಗಳಿಗೂ ವ್ಯತ್ಯಾಸವಿದ್ದುದರಿಂದ ಅಲ್ಲೇ ತಡೆದು ನಿಂತು ಮುಂಭಾಗಕ್ಕೆ ನೋಡಿದರು. ಭಟ್ಟರು ಒಂದು ಕೈಯಲ್ಲಿ ಆರತಿ, ಇನ್ನೊಂದರಲ್ಲಿ ಘಂಟಾಮಣಿ ಹಿಡಿದುಕೊಂಡು ಬಾಯಲ್ಲಿ ಏನೋ ಮಣ ಮಣ ಮಾಡುತ್ತಿದ್ದರು. ‘ಅವನೇನು ಗುಣಗುಟ್ಟುತ್ತಾನೆ. ದೇವೀ ಸ್ತೋತ್ರ ಪಠಿಸುತ್ತಿರುವಂತೆ ಕಾಣುವುದಿಲ್ಲವಲ್ಲಾ’ ಎಂದಳು ಶಾಕಿನಿ. ‘ಅವ ಪೂಜಾ ಸಾಹಿತ್ಯಗಳನ್ನು ನೋಡಿ ಗೊಣಗುತ್ತಿರುವಂತೆ ಕಾಣುತ್ತದೆ. ಕಡಿಮೆಯಾಯಿತೆಂದೋ ಏನೋ! ಆದರೆ ಈ ಭಜನೆ ಘಂಟಾರವದ ಗದ್ದಲದಲ್ಲಿ ಅದನ್ನು ಕೇಳುವವರಿಲ್ಲವೆನ್ನು – ಅದೊಂದು ಅನುಕೂಲ!’ ಎಂದಳು ಢಾಕಿನಿ. + +‘ಹೋ! ಅಲ್ಲಿದ್ದಾಳಲ್ಲಾ ದೇವಿ!’ ಎಂದಳು ಪಕ್ಕನೆ ಶಾಕಿನಿ. ಇಬ್ಬರೂ ಆತುರದಿಂದ ನೋಡಿದರು. + +ಅದು ದೇವಿಯ ಮೂರ್ತಿ. ಆದರೆ ಮೈಯೆಲ್ಲಾ ಪುಷ್ಪ ಮತ್ತು ಇತರ ಅಲಂಕಾರಗಳಿಂದ ಮುಚ್ಚಿಹೋಗಿತ್ತು. ಎರಡು ಕಣ್ಣುಗಳು ಮಾತ್ರ ಕುರುಡಿಯ ಕಣ್ಣುಗಳಂತೆ ನೋಡುವವರಿಗೆ ತೋರುತ್ತಿದ್ದವು! ‘ಅದೊಂದು ಗೊಂಬೆ’ ಎಂದಳು ಢಾಕಿನಿ. ‘ಛೆಕ್! ಹೊರಡೋಣ ಇಲ್ಲಿಂದ’ ಅಲ್ಲಿದ್ದವರನ್ನು ರಕ್ತಾಕ್ಷಿಗಳಿಂದ ನೋಡುತ್ತಾ ಇಬ್ಬರೂ ಹೊರಬಿದ್ದರು. ಆ ಪೂಜಾ ಗ್ರಹದ ಹೊರಭಾಗದ ದೀಪವೊಂದನ್ನೂ ಇಟ್ಟಿರಲಿಲ್ಲ . ‘ಈ ಬಾರಿ ಆಗಿರುವ ನಮಗನುಕೂಲವಾದ ಸುಧಾರಣೆಯೆಂದರೆ ಇದು’ ಎನ್ನುತ್ತಾ ಅವರು ಅಲ್ಲಿಂದ ನಡೆದರು. + +ಒಡತಿಯನ್ನು ಹುಡುಕುತ್ತಾ ಮತ್ತೊಂದು ಹಾದಿ ಹಿಡಿದು ಶಾಕಿನಿ ಢಾಕಿನಿಯರು ಬರುತ್ತಿದ್ದರು. ಕಿವಿಕೊಡುತ್ತಾ ಮುಂದುವರಿದು, ಘಣ ಘಣರವ, ಮಂತ್ರ ಘೋಷ ಕೇಳಿ ಬರುತ್ತಿರುವ ಒಂದು ಕಡೆಗೆ ಚಿತ್ತೈಸಿತು ಆ ಗಣಗಳ ಸವಾರಿ. + +‘ಶಕ್ತಿದಾಯಕೀ, ಮಾತೆ ಓಂಕಾರ ಸ್ವರೂಪಿಣಿ’ ಎಂಬ ಸ್ತುತಿಯಾಗುತ್ತಿರುವಲ್ಲಿಗೆ ನುಗ್ಗಿದರು. ‘ದೇವಿ ಸಿಕ್ಕಿ ಬಿದ್ದಿರುವುದು ಈ ಮಂತ್ರದ ದೆಸೆಯಿಂದಲೇ. ಮತ್ತೇನೂ ಸಾಗದೆ ಸ್ವರ ಮಾತ್ರವೆಬ್ಬಿಸುತ್ತಿರುವ ಈ ಕಂಠಗಳನ್ನು ಶೂಲದಿಂದ ಚುಚ್ಚುವವರಿಲ್ಲದೆ ಹೋದರು!’ ಎಂದು ಸಪ್ಪೆಯೇರಿದ ತುಟಿಕಚ್ಚಿಕೊಂಡಳು ಢಾಕಿನಿ. ಒಂದೆಡೆಯಲ್ಲಿ ಸಾಲಾಗಿ ತುಕ್ಕು ಹಿಡಿದ ಆಯುಧಗಳನ್ನಿರಿಸಲಾಗಿತ್ತು. “ಆ ಆಯುಧದ ಬೆನ್ನಾವುದು ಬಾಯಿ ಯಾವುದು ಹೇಳು ನೋಡೋಣ” ಎಂದಳು ಶಾಕಿನಿ ತಮಾಷೆಯಾಗಿ. ಭಟ್ಟ ಎತ್ತುತ್ತಿದ್ದ ಆರತಿಯ ಬೆಳಕಿನಲ್ಲಿ ಕೂಡ ಅದನ್ನು ಗುರುತಿಸಲಾರದೆ ಢಾಕಿನಿ ಸೋತುಹೋದಳು. ‘ಅಬ್ಬಾ ಆಯುಧ ಪೂಜೆಯೇ! ಮಂಕು ಮಾನವರ ರೀತಿ ನೋಡಿದಿಯಾ. ಆ ತರುಣರೆಲ್ಲಾ ದೂರನಿಂತು ಕೈಮುಗಿಯುತ್ತಿದ್ದಾರೆ ಪಾಪ – ಮುಟ್ಟಿದರೆ ಭ್ರಷ್ಠವಾದೀತಲ್ಲಾ! ಇದು ಆಯುಧ ಪೂಜೆಯಲ್ಲ, ಆಯುಧ ಪೂಜ್ಯ (0). ದೇವಿಯೆಲ್ಲಿ ಸತ್ತಳು! ನಡಿ, ಹೊರಡೋಣ’ ಎನ್ನುತ್ತಾ ಇಬ್ಬರೂ ಅಲ್ಲಿಂದ ಹೊರಟರು. + +ಅಲ್ಲಿಯೂ ಹೊರಗೆ ದೀಪವಿಲ್ಲ. ಶಾಕಿನಿ ಢಾಕಿನಿಯರು ಈ ವ್ಯತ್ಯಾಸಕ್ಕೇನು ಕಾರಣವೆಂಬ ಯೋಚನೆಯಲ್ಲಿ ಬಿದ್ದರು. ದೇವಿಯೆಲ್ಲಿ ಹೋದಳಪ್ಪಾ ಎಂದು ಕಾತರಿಸಹತ್ತಿದರು. ದೇವಿ ಈ ದೇಶದಲ್ಲಿರುವದಾದರೆ ಅಲ್ಲಿಯೇ ಇರಬೇಕಿತ್ತು; ಈ ಮಾನವರು ಪೂಜೆಯ ಸಮಯ ತುಂಬಾ ಬೆಳಕಿಡುವ ಕ್ರಮ, ಅದೂ ಇಲ್ಲ. ಮೇಲಾಗಿ ರಸ್ತೆಯಲ್ಲೆಲ್ಲಾ ಮನುಷ್ಯರು ರಕ್ತ ಸುರಿಯುವ ಪಂಚಾಯತಿಕೆ ಮಾತಾಡುತ್ತಾ ಹೋಗುತ್ತಿದ್ದಾರೆ. ಏನಿದು? ಅಮ್ಮ ಎಲ್ಲಿ ಹೋದಳು? ಎಂದು ಗದ್ದಲಗಳ ಪ್ರದೇಶಗಳನ್ನೆಲ್ಲಾ ಹಾದು ನಡು ಗುಡ್ಡಕ್ಕೆ ಬಂದು ನಿಂತುಕೊಂಡು ನಾಲ್ದೆಸೆಗಳನ್ನೂ ನೋಡಹತ್ತಿದರು. ಪಶ್ಚಿಮ ಕಡೆಯ ಗಾಳಿಯು ಬಿಸಿರಕ್ತದ ವಾಸನೆಯೊಡನೆ ಬಂದು ಅವರ ಮೂಗಿಗೆ ಬಡಿಯಿತು. ‘ಹಾಂ! ಆ ಕಡೆಯಲ್ಲಿ! ಎಂದು ಇಬ್ಬರೂ ಒಮ್ಮೆ ನೆಟ್ಟಗಾದರು. ‘ನಿಲ್ಲು ಆ ಕಡೆಗೆ ಕಿವಿಕೊಡು, ಏನೋ ಓಂಕಾರದ ಹಾಗೆ ಕೇಳಿಬರುತ್ತದಲ್ಲಾ’ ಶಾಕಿನಿಯೆಂದಳು. ಢಾಕಿನಿ ಲಕ್ಷ್ಯಕೊಟ್ಟು ಆಲಿಸಿ, + +‘ಅದು ಓಂಕಾರವಲ್ಲ , ಮಾನವರೆಬ್ಬಿಸುತ್ತಿರುವ ಹೂಂಕಾರ. ಈ ಕಾಲದಲ್ಲಿ ಓಂಕಾರದ ರೂಪ ಹಾಗಾಗುತ್ತದೋ ಏನೋ. ಅಮ್ಮ ಅಲ್ಲಿ ಇರಬಹುದು’ ಎಂದಳು. + +‘ಸರಿ ಸರಿ ಅಲ್ಲಿರಬೇಕು. ನಮಗೊಂದು ದೊಡ್ಡ ಬಲಿ. ಹೂ… ಹೊರಡೋಣ!’ + +ಇಬ್ಬರೂ ದಬಕ್ಕನೆ ಪಶ್ಚಿಮ ದೇಶಕ್ಕೆ ಹಾರಿದರು. + + + +ಅಲ್ಲಿ ಹೋಗಿ ನೋಡುತ್ತಾರೆ. ದೇವಿ ಅಲ್ಲಿದ್ದಾಳೆ ! ಕುರುಕ್ಷೇತ್ರದಲ್ಲಿ ಇದ್ದ ಭಂಗಿಯಲ್ಲಿಯೆ ಇದ್ದಾಳೆ! ಕಾಲುಗಳನ್ನು ಮಡಚಿ ಚೌಕ ಹಾಕಿ ಕುಳಿತು ಮಹಿಷಮರ್ದಿನಿ ಹರಿದು ಬರುತ್ತಿದ್ದ ರಕ್ತದ ಕಾಲುವೆಗೆ ಬಾಯಿ ಕೊಟ್ಟಿದ್ದಾಳೆ. ನೊರೆ ನೊರೆಯಾಗಿ ಕಾಲ ಬುಡಕ್ಕೆ ಹರಿದು ಬರುತ್ತಿದೆ ಬಿಸಿ ಬಿಸಿ ರಕ್ತ. ಸಾಲದುದಕ್ಕೆ ಸುತ್ತಲೂ, ಅಂದಿನ ಪ್ರಲಯ ಭೇರಿ ನಿನಾದವನ್ನು ಹಿಂದಿಕ್ಕುವ ‘ಧಡಧಡಾರ್’ ‘ಧುಡುಂ’ ಶಬ್ದ ಶಾಕಿನಿ ಢಾಕಿನಿಯರನ್ನು ಕಂಡಾಗ ದೇವಿ ಹರ್ಷವದನಳಾಗಿ ‘ಬಂದಿರೇ, ಬನ್ನಿ. ಈವರೆಗೂ ಆ ಬಂಜರು ಭೂಮಿಯಲ್ಲಿ ನಿಂತು ನಾನೂ ದಣಿದೆ, ನಿಮ್ಮನ್ನೂ ದಣಿಸಿದೆ. ಇಲ್ಲಿ ಇತ್ತು ನಮ್ಮ ಸ್ಥಾನ; ಇಂದಿಗೆ ಬಂತು ನಮ್ಮ ಭಾಗ್ಯೋದಯದ ಕಾಲ. ಆ ಕಡೆ ನೋಡಿ. ಇನ್ನೂ ನೆರೆಯೇರಲಿಕ್ಕಿದೆ. ಕುಡಿಯಿರಿ, ಕುಣಿಯಿರಿ.’ ಅವಳು ಬಾಯಿತೆರೆದು ಆಮಂತ್ರಿಸಿದಾಗ ಆ ನಗುವಿನೊಡನೆ ರಕ್ತ ಸೂಸುತ್ತಿತ್ತು. ‘ಮಾತೆ! ನಿನ್ನನ್ನಾಶ್ರಯಿಸಿ ಧನ್ಯರಾದೆವು. ದೇವೀ. ನಮೋನ್ನಮಃ’ ಎಂದು ಶಾಕಿನಿ ಢಾಕಿನಿಯರು ಚಂಡಮುಂಡಾಂತಕಿಗೆ ಪ್ರಣಾಮಮಾಡುವ ನೆವದಿಂದ ಅಲ್ಲೇ ಬಿದ್ದರು; ಬಿದ್ದವರು ಅಲ್ಲಿಗೆ ಹರಿದು ಬರುತ್ತಿದ್ದ ನೊರೆ ರಕ್ತವನ್ನು ಅಲ್ಲಿಯೆ ಜುಬ್ ಜುಬ್ ಹೀರಹತ್ತಿದರು. + +ಈ ತನಕ ಎದ್ದಿಲ್ಲ! + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_278.txt b/Kenda Sampige/article_278.txt new file mode 100644 index 0000000000000000000000000000000000000000..917dd2b219081ae00fdca6231d437fe135b785f9 --- /dev/null +++ b/Kenda Sampige/article_278.txt @@ -0,0 +1,87 @@ + + +‘ಇದು ಅನಿವಾರ್ಯ ನಂದೂ, ಇಲ್ಲದಿದ್ರೆ ನಿಮ್ಮ ಅಪ್ಪಯ್ಯನ್ನ ಹ್ಯಂಗೆ ಒಪ್ಸೋದು? ಒಂದು ರಾತ್ರೆ ಅಷ್ಟೇ, ನಿನ್ನನ್ನ ಹೂವಿನ ಹಂಗೆ ಕಾಯೋ ಜವಾಬ್ದಾರಿ ನಂದು’ ವೆಂಕಟಕರಂಜಿ ಕ್ರಾಸಿನಲ್ಲಿ ನಿಂತು ಕರೆದದ್ದು ನನಗೂ ಯಾವುದೋ ಸಿನೆಮಾದ ದೃಶ್ಯದಂತೆ ಮೈ ನವಿರೇಳಿಸಿತ್ತು. ಹಾಗೆ ಎಲ್ಲಬಿಟ್ಟು ಉಟ್ಟಬಟ್ಟೆಯಲ್ಲೇ ಎದ್ದುಹೋಗಿದ್ದೆ. ಯಾಕೆ ಹಿಂದುಮುಂದಿನದೆಲ್ಲ ಯೋಚಿಸದೇ ಹೋದೆ? ಆ ಕ್ಷಣ ಅಪ್ಪ ಅಕ್ಕನ ಸಂಗತಿ ಯಾಕೆ ನನ್ನ ಕಾಡದೇ ಹೋಯಿತು? + +ಮಧ್ಯಾಹ್ನ ಹನ್ನೆರಡರ ಸಮಯ ಅದು, ನಾನು ವೆಂಕಟ ಇಬ್ಬರೂ ಬೆಟ್ಟ ಹೊಕ್ಕುವಾಗ ಎದುರು ಕಂಡ ವ್ಯಕ್ತಿಯೊಬ್ಬರು ವೆಂಕಟನ ಹತ್ತಿರ ಮಾತಾಡಿದ್ದರಲ್ಲ, ಅವರು ಯಾರು ಏನೆಂದರು ನನ್ನ ಅರಿವಿಗೇ ಬರಲಿಲ್ಲ. ಅವರ ಕಣ್ಣು ಮಾತ್ರ ಎಲ್ಲವನ್ನೂ ಹೇಳಿದಂತಿತ್ತು. ನಡೆಯುವ ಅವಸರದಲ್ಲಿ ದೊರಗು ಮುಳ್ಳೊಂದು ನನ್ನ ಚಪ್ಪಲಿಗೆ ನೆಟ್ಟುಕೊಂಡಿತ್ತು. ನಿಂತು ಅದನ್ನು ಕಿತ್ತುಕೊಳ್ಳಲಾಗದ ನಿರ್ಲಕ್ಷ್ಯವೊಂದು ಮನಸ್ಸು ತುಂಬಿತ್ತು. + +ಕಾಲ್ದಾರಿ ಬಿಟ್ಟು ಇಡಿಕಿರಿದ ದಟ್ಟ ಗಿಡಮರಗಳ ಮಧ್ಯೆ ಹೆಜ್ಜೆಇಟ್ಟ ವೆಂಕಟ. ಹೆಗಲ ಬ್ಯಾಗಿನಿಂದ ಹರಿತ ಕೊಡಲಿಯೊಂದನ್ನು ತೆಗೆದ. ಮರದ ಟೊಂಗೆಗಳ ಸವರುತ್ತ ಲಂಟಾಣ ಬಳ್ಳಿಗಳನ್ನು ಅತ್ಯಂತ ನಿಪುಣನಂತೆ ಬಿಡಿಸುತ್ತಿದ್ದ. ಅದನ್ನು ಕಂಡು ‘ಈ ಮೊದಲು ಇಲ್ಲಿ ಬಂದಿದ್ದೆಯೋ? ಕಾಡಿನ ಒಳದಾರಿ ನಿನಗೆ ಹೇಗೆ ಗೊತ್ತು?’ ಎಂದೆಲ್ಲ ಕೇಳಬೇಕೆಂದಿದ್ದೆ, ಯಾಕೋ ಗಂಟಲಲ್ಲೇ ಉಳಿದುಹೋಯಿತು, ನಿಧಾನಿಸಿ ಅವನ ಹೆಗಲ ದೊಡ್ಡ ಬ್ಯಾಗನ್ನು ಹಿಡಿದು ‘ಮತ್ತೇನುಂಟು ಇದರಲ್ಲಿ?’ ಅಂತ ಸಣ್ಣ ಪ್ರಶ್ನೆ ಮಾಡಿದ್ದೆ, ‘ಸೇಬು ಬಾಳೆಹಣ್ಣು ಉಂಟು, ತಿಂತೀಯೋ?’ ಅಂತ ಕೇಳಿದ. ‘ಈಗ ಬೇಡ’ಅಂದೆ. ‘ಹಿಡೀ ನೀರಾದ್ರೂ ಕುಡಿ’ ಅನ್ನುತ್ತ ಅದೇ ಬ್ಯಾಗಿಂದ ಬಿಸ್ಲೆರಿ ನೀರು ತೆಗೆದುಕೊಟ್ಟಿದ್ದ. ಜೀವಕ್ಕೆ ಯಾವುದೂ ಬೇಕೆನ್ನಿಸಲಿಲ್ಲ. ಹಕ್ಕಿಗಳ ದಟ್ಟ ಚಿಲಿಪಿಲಿಯನ್ನು ಆಲಿಸುತ್ತ ವೆಂಕಟ ‘ನೋಡು ಸಂಗೀತ ಕೇಳಿದ ಹಾಗೆನಿಸ್ತದೆ’ ಅಂದ, ನನಗೆ ಅದನ್ನು ಸವಿಯುವ ನಿರಾಳ ಮನಸ್ಥಿತಿಯೂ ಇರಲಿಲ್ಲ. + +ಮಧ್ಯಾಹ್ನ ಎರಡುಗಂಟೆ ಸುಮಾರಿಗೆ ವೆಂಕಟ ‘ಇಲ್ಲಿಗೆ ಕೊಂಡದಗಲ್ಲಿ ಬೆಟ್ಟ ಮುಗೀತು, ಮುಂದೆ ತಾರಗಾರಕಾಡು, ಈಗ ಯಾರ ಭಯವೂಇಲ್ಲ’ ಅಂದ ವೆಂಕಟನ ದನಿಗೆ ಎಂಥದೋ ಹುಮ್ಮಸ್ಸಿತ್ತು. ಆದರೆ ನನ್ನ ಮನಸ್ಸು ಎತ್ತೆತ್ತಲೋ ತಿರುಗಿ ಅತಂತ್ರದ ಭಾವದಲ್ಲಿ ತೇಲುತ್ತಿತ್ತು. ‘ಅಪ್ಪಯ್ಯ, ಅಕ್ಕ, ಎಲ್ಲ ಈಗ ಏನು ಮಾಡ್ತಿರಬಹುದು? ನಾನು ತಪ್ಪು ಮಾಡುತ್ತಿದ್ದೇನೆಯೇ?’ ಎಂಬೆಲ್ಲ ಪ್ರಶ್ನೆಗಳು ನನಗೆ ಸ್ಪಷ್ಟವಾಗದೇ ಹೆಜ್ಜೆಹೆಜ್ಜೆಗೂ ಅವ್ಯಕ್ತ ವೇದನೆ ಕೊಡುತ್ತಿದ್ದವು. + +(ಸುನಂದಾ ಕಡಮೆ) + +ಹೆಬ್ಬಾವೊಂದು ಮರದ ದಪ್ಪರೆಂಬೆಗೆ ಸುತ್ತಿಕೊಂಡು ಬಿಸಿಲು ಕಾಸಿಕೊಳ್ಳುತ್ತಿರುವುದನ್ನು ವೆಂಕಟ ಅಚ್ಚರಿಯೇ ಇಲ್ಲವೆಂಬಂತೆ ತೋರಿಸಿದ. ಇದೇ ಕಾಡಲ್ಲಿ ಇಂಥದೇ ಹೆಬ್ಬಾವೊಂದು ಮುನಿಯಪ್ಪಎಂಬುವವನನ್ನು ನುಂಗಿದ್ದು, ಅವನ ಕೈಲಿದ್ದ ಕೊಡಲಿಯಿಂದಲೇ ಅದರ ಹೊಟ್ಟೆ ಸೀಳಿಕೊಂಡು ಅವ ಹೊರಬಂದದ್ದು, ಹೆಬ್ಬಾವು ಅಲ್ಲೇ ಸತ್ತು ಬಿದ್ದದ್ದು.. ಕತೆ ಹೇಳುತ್ತ ಸಾಗಿದ ವೆಂಕಟ. ನನ್ನ ಕಾಲು ಇನ್ನು ಹೆಜ್ಜೆ ಕಿತ್ತಿಡಲಾರೆ ಅನ್ನುವಷ್ಟು ಸೋತು ಹೋದವು. + +ಸಂಜೆ ನಾಲ್ಕರ ಹೊತ್ತಿಗೆ ನಾಲ್ಕೈದು ಕೀಮಿ ದಾರಿ ಸವೆಸಿದ್ದೆವು. ಬೆಟ್ಟದಲ್ಲಿ ‘ಯಾರು ಎಲ್ಲಿ ಹುಡುಕಿದರೂ ಕೈಗೆ ಸಿಗದಿದ್ದಷ್ಟು ಒಳಭಾಗಕ್ಕೆ ಬಂದು ಬಿಟ್ಟೆವು’ ಅನ್ನುತ್ತ ಒಮ್ಮೆ ನನ್ನ ಕೈ ಹಿಡಿದೆಳೆದು ತಬ್ಬಿಕೊಂಡಿದ್ದ ವೆಂಕಟ. ಆಗ ಸ್ವಲ್ಪ ಸಲಿಗೆ ತೊಗೊಂಡು ‘ಕಾಡಿನದಾರಿ ನಿಂಗೆ ಹ್ಯಾಂಗೆ ಗೊತ್ತು?’ ಅಂತ ಯಾವುದೋ ಧ್ಯಾನದಲ್ಲಿ ಕೇಳಿದ್ದೆ, ವೆಂಕಟನ ಮುಖ ಚಹರೆ ಚೂರು ಬದಲಾಗಿತ್ತು. ನನ್ನ ಮಾತಿಗೆ ಉತ್ತರಿಸಲೋ ಬೇಡವೋ ಎಂದು ಅನುಮಾನಿಸುತ್ತ ‘ಮಂಜಣ್ಣನ ಸಂಗ್ತಿ ಆಗಾಗ ಪಿಕ್ನಿಕ್ ಗೆ ಬರ್ತೇನೆ ಇಲ್ಲೆಲ್ಲ’ ಅನ್ನುತ್ತ ಒಮ್ಮೆಲೇ ತಬ್ಬಿದ ಕೈಯನ್ನು ಬಿಟ್ಟು ನಡೆಯತೊಡಗಿದ. ‘ಈಗ ಎಲ್ಲಿ ಹೋಗ್ತಿರೋದು ನಾವು?’ ತಲೆಕೆಟ್ಟಂತಾಗಿ ಆಗ ಕೇಳಲೇ ಬೇಕಾಗಿದ್ದ ಪ್ರಶ್ನೆ ಕೇಳಿದ್ದೆ. ‘ಮೊದ್ಲು ಕೊಂಡದಗಲ್ಲಿ ವಿಶ್ವನಾಥನ ಮನೇಲಿ ಉಳ್ಕೊಳ್ಳೂದು ಅಂತಾಗಿತ್ತು, ಅವ್ನ ಹೆಂಡತಿ ಶಾಲಿನಿ ನಳಿನಕ್ಕನ ಗೆಳತಿ, ಸುದ್ದಿ ಮುಟ್ಟಿಸಿಬಿಟ್ಟಾಳು, ನೀವು ತಾರಗಾರ ಬೆಟ್ಟಕ್ಕೇ ಹೋಗಿರೋದು ಚೊಲೋ ಅಂದ ಮಂಜಣ್ಣ’ ವೆಂಕಟ ತಡೆತಡೆದು ಹೇಳಿದ್ದ. + +‘ಅಯ್ಯೊ ಹುಲಿ ಚಿರತೆ ಉಂಟು ಅಂತಾರೆ ಇಲ್ಲಿ, ರಾತ್ರಿ ಹೊತ್ತು ಹೆದ್ರಿಕೆ ಅಲ್ಲ?’ ತೀರಾ ಮುಗ್ಧವಾಗಿ ಕೇಳಿದ್ದೆ. ಅಷ್ಟು ಹೇಳಿದ್ದಕ್ಕೆ ವೆಂಕಟ ‘ಬ್ಯಾಗು ತಡಕಿ ವೆಂಕಟ ಅದರೊಳಗಿನ ಒಂದು ಪಿಸ್ತೂಲು ತೆಗೆದು ತೋರುತ್ತ ‘ಇದೇನು ಗೊತ್ತೋ?’ ಕೇಳಿದ್ದೇ ನನ್ನ ಕೈಕಾಲು ನಡುಗತೊಡಗಿತು. ‘ಅಯ್ಯೋ ಹುಚ್ಚಿ, ಕಾಡು ಪ್ರಾಣಿ ಬಂದರೆ ಇದನ್ನು ಬಳಸೋದು, ಮಂಜಣ್ಣಂದಿದು’ ಅನ್ನುತ್ತ ಒಮ್ಮೆ ಪಿಸ್ತೂಲಿನ ಬಾಯಿ ಊದಿ ಒಳಗಿಟ್ಟುಕೊಂಡ. + +‘ತಾರ್ಗಾರ ಬೆಟ್ಟದಲ್ಲೊಂದು ಜಾಗೆ ಉಂಟು, ನಾಲ್ಕು ದೊಡ್ಡ ಮರಗಳ ದಪ್ಪ ಕೊಂಬೆಗಳು ಸೇರಿ, ಗದ್ದೇಲಿ ಮಾಳ ಹಾಕ್ತಾರಲ್ಲ, ಹಾಗೆ ಮಂಚದ ತರಹ ಆಗಿದೆ, ಮಂಜಣ್ಣ ಅದಕ್ಕೆ ಹೂಗಣೆ ಮಾಳ ಅಂತ ಕರೀತಾನೆ. ಅಲ್ಲೇ ಉಳ್ಕೋಳ್ಳೋಣ’ ಅಂದಿದ್ದ ವೆಂಕಟ. ಸುತ್ತ ಕತ್ತಲು ಮುತ್ತಿಕೊಳ್ಳುತ್ತಿತ್ತು. ಜೊತೆಯಲ್ಲಿ ಜೀರುಂಡೆ ಸ್ವರ ಭಯಾನಕವಾಗಿತ್ತು. + +‘ಮಂಜಣ್ಣ ಬರ್ತಾನ್ಯೆಇಲ್ಲಿ?’ ಅಂತ ಅಚ್ಚರಿಯಿಂದಲೇ ಕೇಳಿದ್ದೆ, ‘ಹ್ಞು, ಆಗಾಗ ಬರ್ತಾ, ಇದರ ಬಗ್ಗೆ ಅರಣ್ಯ ಇಲಾಖೆಗೂ ಗೊತ್ತಿಲ್ಲ, ಮಂಜಣ್ಣ ಶಿಕಾರಿ ಮಾಡ್ತಾ ಇಲ್ಲೀತಂಕ ಬಂದು ಈ ಜಾಗೆ ಶೋಧ ಮಾಡಿದ್ದು’ ಅಂದ. ನನಗೆ ಏನನ್ನಿಸಿತೋ ‘ಮಂಜಣ್ಣ ಅವ್ನ ಹೆಂಡ್ತೀ ಜೊತೆ ಬರ್ತಾನ್ಯೇ?’ ಅಂತ ಕೇಳಿಬಿಟ್ಟಿದ್ದೆ, ವೆಂಕಟ ನಗುತ್ತ ‘ಅರೆ, ಅವೆಲ್ಲ ಕೇಳಬಾರ್ದು, ಹೊಟ್ಟೆಗೆ ಅನ್ನಕೊಡೋ ದಣಿ ಅವ್ನು’ ಸ್ವಲ್ಪ ಜೋರಿನಲ್ಲೇ ಅಂದಿದ್ದ. ನಾನು ಯಾಕಾದ್ರೂ ಕೇಳಿದೆನೋ ಅಂದುಕೊಳ್ಳುತ್ತ ಸುಮ್ಮನಾದೆ. + +ಇಬ್ಬರೂ ಹೈರಾಣಗಿದ್ದೆವು. ದಾರಿಯಲ್ಲಿ ಒಂದು ಸಣ್ಣಝರಿ ಸಿಕ್ಕಿತು, ಅದರ ದಂಡೆಗೆ ಕೂತೆವು. ಅಲ್ಲೇ ನೀರುಕುಡಿಯಲು ಬಂದ ಜಿಂಕೆಯೊಂದು ನಮ್ಮನ್ನು ಬಿಟ್ಟಕಣ್ಣಿನಿಂದ ನೋಡುತ್ತ ನೆಗೆದು ಹಾರಿ ಮಾಯವಾಯಿತು. ಹಸಿವೂ ಆಗಿತ್ತು. ವೆಂಕಟ ಬ್ಯಾಗಿನಿಂದ ಸೇಬುಹಣ್ಣುಗಳೆರಡನ್ನು ಹೊರತೆಗೆದ. ಅದರ ಹಿಂದೆ ಫಳಫಳ ಹೊಳೆವ ಸ್ಟೀಲಿನ ಚಾಕುವೂ ಹೊರಬಂತು, ಅದನ್ನು ಕಂಡೇ ನಾನು ಇನ್ನೊಮ್ಮೆ ನಡುಗಿದೆ. ಜೀವ ತೆಗೆವ ಹತಾರು ಕಂಡರೇನೇ ಭಯಬೀಳುವ ಸ್ಥಿತಿಯನ್ನು ಯಾಕೆ ತಂದುಕೊಂಡೆ ಎಂಬ ಕುರಿತ ಯೋಚನೆಯೇ ನನ್ನನ್ನು ಹಣ್ಣು ಮಾಡುತ್ತಿತ್ತು. ಸೇಬು ತುಂಡುಗಳು ಹೇಗೆ ಹೊಟ್ಟೆ ಸೇರಿದವೋ ಗೊತ್ತೇ ಆಗಲಿಲ್ಲ. + +ಪುನಃ ಎದ್ದು ನಡೆಯತೊಡಗಿದವು. ದಟ್ಟಡವಿಯಲ್ಲೆಲ್ಲೋ ಹುಲಿ ಗರ್ಜಿಸಿದ, ನರಿಗಳು ಊಳಿಟ್ಟ ಸದ್ದು ಕಾಡಿನಲ್ಲಿಡೀ ಒಂದುರೀತಿಯ ಭಯಾನಕ ವಾತಾವರಣ ಸೃಷ್ಟಿಸಿತ್ತು. ಗಾಳಿ ಸುಂಯನೆ ಸದ್ದು ಮಾಡುತ್ತಿತ್ತು. ನಿಧಾನ ಕಾರ್ಗತ್ತಲು ವ್ಯಾಪಿಸತೊಡಗಿತು. ಅರ್ಥವಾಗದ ಭೀತಿಯೊಂದು ಒಳಗೆಲ್ಲೋ ನನ್ನನ್ನು ಅಧೀರಗೊಳಿಸುತ್ತಿತ್ತು. ನಾನು ಜೋಲಿ ಹೊಡೆಯುವಂತಾದ ನಿತ್ರಾಣ ಸ್ಥಿತಿ ತಲುಪಿದಾಗ ಆ ಸ್ಥಳ ತಲುಪಿದೆವು. + +ಹೂಗಣೆ ಮಾಳ ನಿಜಕ್ಕೂ ವಿಚಿತ್ರವಾಗಿತ್ತು, ನಾಲ್ಕು ಮರಗಳ ದಪ್ಪ ಕಾಂಡಗಳು ಒಂದಕ್ಕೊಂದು ಬೆಸೆದು ಮೇಲಕ್ಕೆ ಮಾಳದ ತರಹ ಸೇರಿದ್ದವು, ಕೆಳಗಡೆಯಿಂದ ಅದು ಮರದ ಕೊಂಬೆಗಳ ಹಸಿರು ತೊಟ್ಟಿಲಂತೆ ಕಾಣುತ್ತಿತ್ತು. ಒಂದು ಮೂಲೆಯ ಮರದ ಕೊಂಬೆ ಹಿಡಿದು ಇಬ್ಬರೂ ಮೇಲೆ ಹತ್ತಿಕೊಂಡು ಕೂತೆವು, ‘ಯಾವಕಾಡು ಪ್ರಾಣಿಯೂ ಹತ್ತಿ ಬರಲು ಅವಕಾಶ ಇಲ್ಲಇಲ್ಲಿ, ಬಂದರೆ ಅದು ಹೆಬ್ಬಾವು ಮಾತ್ರ’ ಅಂತ ಸೇರಿಸಿ ನಕ್ಕ. ಅವನ ಮಾತಿಗೆ ನಗುವ ಅಳುವ ತಲೆಯೆತ್ತುವ ಯಾವ ಅವಸ್ಥೆಯಲ್ಲೂ ನಾನಿರಲಿಲ್ಲ. ಮಾಳ ಹತ್ತಿದ್ದೇ ತಲೆಹಿಡಿದು ಅಲ್ಲೇ ಬಿದ್ದುಕೊಂಡೆ. + +ಮಾಳದ ಅಡಿಯಲ್ಲಿ ಮರದ ಕಾಂಡಗಳೇ ಅಣಿಯುತ್ತಿದ್ದುದರಿಂದ ವೆಂಕಟ ಅದೇ ಮರದ ಅಕ್ಕಪಕ್ಕದ ಹಸಿ ಎಲೆಗಳನ್ನು ಹರಿದು ಮಾಳದಲ್ಲಿ ಹರಡಿದ. ಮೆತ್ತನೆ ಎಲೆಹಾಸು ತಯಾರಾಯ್ತು. ಚಂದ್ರನ ಮಂದ ಬೆಳಕು ಹರಡಿತ್ತು. ಮರದ ಪೊಟರೆಗಳಿಂದ ಆಗಾಗ ಹಕ್ಕಿ ಪಕ್ಕಿಗಳ ಗುಟುರು ಮೆಲ್ಲಗೆ ಕೇಳುತ್ತಿತ್ತು. ‘ಹಣ್ಣು ತಿನ್ನು’ ಅನ್ನುತ್ತ ಇನ್ನೊಂದು ಸೇಬು ಕತ್ತರಿಸಿ ತೆಗೆದುಕೊಟ್ಟಿದ್ದ ವೆಂಕಟ, ನಾನು ಬೇಡವೆಂದೆ. ಬಾಳೆಹಣ್ಣು ಕೊಟ್ಟ, ಅದನ್ನೂ ನಿರಾಕರಿಸಿದೆ. ಆಗ ರಮಿಸುವಂತೆ ತಬ್ಬಿಕೊಂಡು ‘ನಾನೆ ತಿನ್ನಿಸಲೇ?’ ಕೇಳಿದ, ಆ ಸಲಿಗೆಯಲ್ಲೇ ನಾನು ‘ನಿನ್ನ ಹಟ್ಟಿಕೇರಿ ಮನೆಯಲ್ಲಿ ಯಾರಿದ್ದಾರೆ?’ ಅಂತ ಕೆದಕುತ್ತ ಎದ್ದುಕೂತೆ. ‘ಅಮ್ಮ ತೀರಿಕೊಂಡ ಮೇಲೆ ಆ ಮನೆಗೆ ಹೋಗೋದು ನಿಲ್ಲಿಸಿಬಿಟ್ಟೆ, ಹುಲ್ಲಿನ ಮನೆ, ಮಳೆಯ ರಭಸಕ್ಕೆ ಕಳೆದ ವರ್ಷ ಮನೆಯ ಒಂದುಬದಿ ಬಿದ್ದು ಹೋಗಿದೆ’ಅಂದ. + +‘ಕುಡೀತೀಯ ನೀನೂ?’ ಕೇಳಿದೆ. ಅವ ನನ್ನಗಲ್ಲ ಸವರಿ ನಸುನಗುತ್ತ ‘ಸ್ವಲ್ಪ ಯಾವಾಗಾದ್ರೂ, ಅದೂ ಮಂಜಣ್ಣ ಕುಡಿಸಿದ್ರೆ ಮಾತ್ರ’ ಹಣ್ಣು ತಿನ್ನುತ್ತಲೇ ಹೇಳಿದ. ‘ಅಪ್ಪಯ್ಯಗೆ ಕುಡಕರಂದ್ರೆ ಆಗೂದಿಲ್ಲ’ ಅಂತ ಹೇಳಿದೆ. ವೆಂಕಟ ಒಮ್ಮೆಲೇ ಸದ್ದು ಮಾಡಿ ನಕ್ಕುಬಿಟ್ಟ. ‘ಅಯ್ಯೋ ನನ್ನ ಬಂಗಾರ, ಕುಡಕರಂದ್ರೆ ಇಡೀ ದಿನ ಕುಡ್ದು ಗಟಾರದಲ್ಲಿ ಬೀಳೋರು, ಇದು ಫ್ಯಾಷನ್ನಿಗೆ ಒಂದಿಷ್ಟು ಕುಡಿಯೂದು, ಅವೆಲ್ಲ ನಿನಗೆ ಗೊತ್ತಾಗೂದಿಲ್ಲ’ಎಂದವನೇ ಕೂತಿದ್ದವಳನ್ನು ಒಮ್ಮೆಲೇ ಎಂಥದೋ ಆವೇಶದಲ್ಲಿ ಮೈಮೇಲೆ ಎಳೆದುಕೊಂಡು ಮುದ್ದಿಸಿದ. + + + +ವೆಂಕಟನ ಕೈಗಳು ಎಲ್ಲೆಲ್ಲೋ ಆಡುವಾಗ ಅದೇ ಸರೀ ಸಮಯವೆಂಬಂತೆ ‘ನಿನ್ನ ಹೆಂಡತಿಗೂ ಹೀಗೆಲ್ಲ ಮಾಡಿದ್ದಿಯೋ?’ ಅಂತ ಕೇಳಿಯೇ ಬಿಟ್ಟೆ, ಅಷ್ಟೇ ಅವಸರದಲ್ಲಿ ವೆಂಕಟ ‘ಇಲ್ಲ ಅವಳನ್ನು ಒಮ್ಮೆಯೂ ಮುಟ್ಟೇಇಲ್ಲ’ಅಂದ. ನಂಬಿದೆ, ‘ಎಲ್ಲಿದ್ದಾಳೆ ಅವಳೀಗ?’ ಕೇಳಿದ್ದಕ್ಕೆ ‘ಬೇಲೇಕೇರಿಯಲ್ಲಿ ಅಂಗನವಾಡಿ ಟೀಚರ್ ಆಗಿದ್ದಾಳೆ’ ಅವನ ಉತ್ತರ ಪ್ರಾಮಾಣಿಕವಾಗಿತ್ತು, ಅಲ್ಲಿಯವರೆಗೆ ಸರಿಯಾಗೇ ಇದ್ದ, ಆದರೆ ಅದರ ನಂತರ ಅವನ ವರ್ತನೆ ಬದಲಾದಂತೆನಿಸಿತು. + +ವೆಂಕಟನಿಗೆ ನನ್ನಿಂದ ಈ ಪ್ರಶ್ನೆ ಎದುರಾಗಬಹುದು ಅಂತ ಅನ್ನಿಸಿರಲಿಲ್ಲವೇನೋ, ಒಳಗೆಲ್ಲೋ ಕಸಿವಿಸಿ ಕಾಡಿ ಸ್ವಲ್ಪ ಹೊತ್ತು ಸುಮ್ಮನೇ ಇದ್ದ. ಮುಖದಲ್ಲಿ ಬೇಸರಕಂಡಿತು. ಒಮ್ಮೆಲೇ ಮೈಮೇಲೆ ಏರಿ ಬಂದ. ಹೆಂಡತಿಯ ಸುದ್ದಿ ತೆಗೆದಿದ್ದಕ್ಕೆ ಸಿಟ್ಟು ಏರಿ ಹೀಗೆ ನನ್ನನ್ನು ಎಳೆದಾಡುತ್ತಾನೆ ಅಂತ ತಿಳಿದೆ. ಆದರೆ ಅದೇ ಮುಂದುವರೆಯಿತು. + +ಏನು ನಡೆಯಿತು ಆ ದಿನ? ಒಮ್ಮೆಯೂ ನಾನು ಇಷ್ಟು ವ್ಯವಧಾನದಲ್ಲಿ ನಿಂತು ಯೋಚಿಸಲೇ ಇಲ್ಲವಲ್ಲ? + +ನಾನು ಬೇಡವೆಂದು ತಲೆಯಲ್ಲಾಡಿಸುತ್ತಿರುವಾಗಲೇ ಒತ್ತಾಯಿಸಿದನೇ? ತಪ್ಪಿಸಿಕೊಳ್ಳದ ಹಾಗೆ ನನ್ನನ್ನು ಹೆಡೆಮುರಿಗೆಕಟ್ಟಿ ಹಿಡಿದಿದ್ದನೇ? ನೋವಿನಿಂದ ಅರಚಿ ಆ ಬದಿ ತಿರುಗಿದವಳನ್ನು ರಭಸದಲ್ಲಿ ಎಳೆದು ತನ್ನೆಡೆ ಹೊರಳಿಸಿಕೊಂಡನೇ? ಕೆನ್ನೆ ತುಟಿ ಎದೆ ಕತ್ತು ರಟ್ಟೆಗಳಲ್ಲೆಲ್ಲ ಎಷ್ಟು ಹೊತ್ತಿಗೆ ಕಚ್ಚಿದ ನೋವು ಎದ್ದಿತು? ಯಾವಾಗ ತೊಟ್ಟ ಬಟ್ಟೆಗಳು ಚಲ್ಲಾಪಿಲ್ಲಿಯಾದವು? ಆ ಹತ್ತರಿಂದ ಹದಿನೈದು ನಿಮಿಷದ ಅವಧಿಯಲ್ಲಿ ಸತ್ತೇ ಹೋಗುತ್ತೇನೇನೋ ಅನ್ನುವಷ್ಟು ಉಸಿರುಗಟ್ಟಿತ್ತಲ್ಲ? ಒಂದು ದೊಡ್ಡ ಆಕ್ರಮಣ ಆದಂತೆ ಅಷ್ಟು ದೊಡ್ಡದಾಗಿ ನಾನು ಯಾಕೆ ಕೂಗಿಕೊಂಡಿದ್ದೆ ? ನಂತರ ಒಬ್ಬಳೇ ಕೂತು ಮುಸುಮುಸು ಅತ್ತೆ. + +ವೆಂಕಟ ಆ ಬದಿ ತಿರುಗಿ ಸಣ್ಣಗೊರಕೆ ಹೊಡೆಯಲಾರಂಭಿಸಿದ. ಕಾರ್ಗತ್ತಲಲ್ಲಿ ಎಲ್ಲಿ ನೋಡಿದರಲ್ಲಿ ಮಿಂಚುಹುಳುವಿನ ಬೆಳಕು ಕಣ್ಣಿಗೆ ರಾಚುತ್ತಿತ್ತು. ಎಲ್ಲ ಒಮ್ಮೆಲೇ ಬಯಲಾದಂತೆ ಅನಿಸುತ್ತ ನನಗೆ ಒಂದು ರೀತಿಯ ಭಯ ಶುರುವಾಯ್ತು. ಯಾಕೋ ಮುಖ ಮೈಯೆಲ್ಲ ಗಾಯವಾದಂತೆ ಉರಿ ಎದ್ದಿತ್ತು. ಮಾಳ ಇಳಿದು ಒಬ್ಬಳೇ ಹೋಗಿಬಿಡುವ ತಾಣವೂ ಅಲ್ಲ. + +ಆಗಸ ದಿಟ್ಟಿಸುತ್ತ ನಾನು ಸುಮ್ಮನೆ ಕಣ್ಣುತೆರೆದೇ ಮಲಗಿದೆ, ಒಂದು ಬೆಳ್ಳಿನಕ್ಷತ್ರ ಮಾತ್ರ ಆಕಾಶದಲ್ಲಿ ಅಷ್ಟೊತ್ತಿಂದ ತೋರುತ್ತಿತ್ತು. ಅದೀಗ ಒಮ್ಮೆಲೇ ಬೆಟ್ಟದಲ್ಲಿ ಇಳಿದಂತೆ ಭಾಸವಾಯಿತು. ನೀಲಿ ಬಣ್ಣದ ಹಾವಿನಂತಹ ಬೆಳಕು ಜಗ್ಗನೆ ಕಾಡಿಗೆ ಹೊತ್ತಿಕೊಂಡಂತೆ ಕಂಡು ದಡಗ್ಗನೆ ಎದ್ದುಕೂತೆ. ಅನಾಥೆಯ ಭಾವಕಾಡಿತು, ಅದನ್ನು ಹೋಗಲಾಡಿಸಿಕೊಳ್ಳಲೋಸುಗ ನಾನು ವೆಂಕಟನನ್ನು ಕ್ಷಮಿಸಿದೆ. + +ವೆಂಕಟನನ್ನು ಅಲುಗಿಸಿ ಎಬ್ಬಿಸುತ್ತ ‘ಅಲ್ಲಿ ಸಣ್ಣ ಹಳ್ಳ ಉಂಟಲ್ಲ, ಆಕಾಶದಿಂದ ನಕ್ಷತ್ರ ರಿಫ್ಲೆಕ್ಟ್ ಆಗ್ತದೆ, ಮತ್ತೆಂಥ ಅಲ್ಲದು ಸುಮ್ನೇ ಮಲ್ಕೊ’ ಎನ್ನುತ್ತ ಗದರಿದ. ಸಣ್ಣ ನುಶಿಯಂಥದೇನೋ ಕೈ ಕಾಲುಗಳಿಗೆ ಕಚ್ಚಿಕಚ್ಚಿ ನನಗೆ ನಿದ್ದೆಯೇ ಬರಲಿಲ್ಲ. ಸ್ವಲ್ಪ ನಿದ್ದೆ ಎಚ್ಚರ ತುರಿಕೆ ಚಳಿ ಎಂಥೆಂಥದೋ ಚಿತ್ರವಿಚಿತ್ರ ಸ್ವರಗಳಲ್ಲೇ ರಾತ್ರಿ ಸರಿದು ಹೋಗುತ್ತಿತ್ತು. + +ನನಗೆ ಏನೇನೋ ನೆನಪಾಗಿ ಬಿಕ್ಕಳಿಸಿ ಅತ್ತುಬಿಟ್ಟಿದ್ದೆ. ‘ತೀಡಲು ಎಂಥಾಯ್ತು? ನಾಳೆಯೇ ಮನೆಗೆ ಹೋಗ್ವ, ನಿಮ್ಮಪ್ಪ ಮನೆಯೊಳಗೆ ತೆಗೋಳ್ದಿದ್ರೆ ನಂ ಮನೆಗೇ ಕರೊಂಡು ಹೋಗ್ತೆ. ಅಥ್ವ, ಮಂಜಣ್ಣನ ಮನೆಗೆ ಹೋಗ್ವ, ಅವ್ನು ಹೇಳ್ದಂಗೆ ಹೊನ್ನಾರಾಕ ದೇವಸ್ಥಾನ್ದಲ್ಲಿ ಮದ್ವೆ ಆಗ್ವ, ನೀ ಏನೂ ಚಿಂತೆ ಮಾಡ್ಬೇಡ, ಇನ್ನು ಸ್ವಲ್ಪ ದಿನ ಅಷ್ಟೇ, ಎಲ್ಲ ಇದ್ದಲ್ಲೇ ಸರಿಹೋಗ್ತದೆ’ ಅಂತೆಲ್ಲ ರಮಿಸುತ್ತ ವೆಂಕಟ ಮೊಬೈಲ್ ಬೆಳಕಲ್ಲಿ ಸಮಯ ನೋಡಿದ್ದ, ರಾತ್ರೆ ಎರಡುಗಂಟೆ ತೋರಿಸುತ್ತಿತ್ತು. + +ಚಿತ್ರ ವಿಚಿತ್ರ ಸ್ವರಗಳು, ಯಾರೋ ಕೂಗಿಕೊಂಡ ಹಾಗೆ. ಹೆದರಿ ವೆಂಕಟನನ್ನು ಇನ್ನೊಮ್ಮೆ ಅಪ್ಪಿಕೊಂಡಿದ್ದೆ. ‘ಇಲ್ಲಿ ನಮ್ಮನ್ನ ಬಿಟ್ಟರೆ ಯಾವ ನರಮನುಷ್ಯರೂ ಇಲ್ಲ, ಯಾವುದೋ ಹಕ್ಕಿ ಕೂಗದು’ ನಿದ್ದೆಗಣ್ಣಲ್ಲೇ ಅಂದಿದ್ದ ವೆಂಕಟ. ನಂತರ ದೂರದಲ್ಲೆಲ್ಲೋ ಮಗು ಅಳುತ್ತಿರುವ ಸ್ವರ ಕೇಳಿತು. ‘ಬೇರೆ ಬೇರೆದೇಶದ ಪಕ್ಷಿಗಳು ಬರ್ತವೆ ಇಲ್ಲಿ, ಅವು ಯಾವ್ಯಾವುದೋ ಸ್ವರ ಹೊರಡಿಸಿ ಕೂಗ್ತವೆ, ಹೆದ್ರಬೇಡ ಮಲಗು’ ಅಂದ. ಸುಮ್ಮನೇ ಅತ್ತಿದ್ದೆ, ‘ನನ್ನ ಹೀಗೆ ಇಲ್ಲೇ ಬಿಟ್ಟು ಹೋಗ್ತೀಯಾ ಅಂತ ಭಯವಾಗ್ತಿದೆ’ ಅಂದಿದ್ದೆ. ಉತ್ತರ ಕೊಡದೇ ನಿದ್ದೆ ಬಿದ್ದವರಂತೆ ಸುಮ್ಮನುಳಿದ. ನನಗೆ ಅವನ ಬ್ಯಾಗಿನಲ್ಲಿದ್ದ ಪಿಸ್ತೂಲು ಮತ್ತು ಚಾಕುವಿನದೇ ಬಿಂಬ ಕಣ್ಣಲ್ಲಿ ಕೂತು ಒಂದೇ ಸಮನೇ ಹೆದರಿಸುತ್ತಿತ್ತು. + +ಇದ್ದಕ್ಕಿದ್ದಂತೆ ಮಲ್ಲಿ ಹೇಳಿದ ಕತೆ ನೆನಪಾಗಿ ಇನ್ನಷ್ಟು ನಡುಗಿಹೋದೆ. ‘ಹೀಗೇ ಬೆಟ್ಟದಲ್ಲಿ ಒಂದು ಹುಡುಗಿಯ ಹೆಣ ಅನಾಥವಾಗಿ ಬಿದ್ದಿತ್ತಂತೆ,ಅರಣ್ಯದಲ್ಲಿ ಯಾರೋ ಅವಳನ್ನು ಅತ್ಯಾಚಾರ ಮಾಡಿ ಕೊಂದು ಒಗೆದಿದ್ದರಂತೆ, ಕೊಳೆತ ಅವಸ್ಥೆಯಲ್ಲಿರೋ ಅವಳ ಶವ ಮೂರ್ನಾಲ್ಕು ದಿನಗಳ ನಂತರ ಕಂಡಿತಂತೆ’ ಆ ಕ್ಷಣ ನನಗೆ ಗೊತ್ತಿದ್ದ ಎಲ್ಲ ದೇವರನ್ನೂ ನೆನಪಿಸಿಕೊಂಡೆ. ಅಪ್ಪಯ್ಯನ ಕಾಲು ಹಿಡಿದು ತಪ್ಪಾಯ್ತು ಅಂತ ಕೇಳಿ, ಮೊದ್ಲು ಮನೆ ಸೇರಿಕೊಳ್ಬೇಕು ಅಂತೆಲ್ಲ ಒಮ್ಮೆ ತೀವ್ರವಾಗಿ ಅನಿಸಿಹೋಯಿತು. + +ಇವನ ಜೊತೆ ಬಂದದ್ದು ಯಾರಿಗೂ ಗೊತ್ತಿಲ್ಲ, ನನಗೆ ನಿದ್ದೆ ಹತ್ತಿದಾಗ ಈ ವೆಂಕಟನೇ ತನ್ನನ್ನು ಇಲ್ಲೇ ಪ್ರಾಣಿಗಳಿಗೆ ಆಹಾರ ಮಾಡಿ ಹೋಗಬಾರದೇಕೆ ಎಂಬ ಸಂಶಯ ಕಾಡುತ್ತ ಮುದ್ದಾಂ ನಿದ್ದೆ ಮಾಡದೇ ಹೊರಳಾಡಿದೆ, ಅಪ್ಪ ದಿನಾ ಹೇಳುತ್ತಿದ್ದ ವಕ್ರತುಂಡ ಮಹಾಕಾಯ ಗಣೇಶನ ಸ್ತೋತ್ರವನ್ನು ನೂರಾರು ಬಾರಿ ಮನಸ್ಸಿನಲ್ಲೇ ಹೇಳಿಕೊಂಡೆ. ಅಪ್ಪ ಅಕ್ಕ ಅಡುಗೆ ಖೋಲಿ ಬಾವಿಯ ಹಗ್ಗ ಕಸಬರಿಗೆ ಚಹಾ ಪಾತ್ರೆ ಎಲ್ಲವೂ ಸ್ಮೃತಿಯಲ್ಲಿ ಮೂಡಿ ನನ್ನನ್ನು ಅಲುಗಾಡಿಸಿಬಿಟ್ಟಿತು. + +ಅಂತೂ ಚಿಲಿಪಿಲಿ ಸದ್ದು ಬೆಳಗಾಗುವ ಸೂಚನೆ ಕೊಟ್ಟಿತ್ತು. ನಸುಕಿನ ಐದು ಆಗಿದ್ದೀತು, ಹೂಗಣೆಯ ಮಾಳ ಇಳಿದೆವು. ನಾನು ಚರ್ಮ ಹರಿದ ಗೊಂಬೆಯಂಥಾಗಿದ್ದೆ. ಬಾಳ ಹೊತ್ತು ಮಾತಾಡದೇ ನಡೆದೆ. ಇವನ ಜೊತೆ ಬಂದಿದ್ದೇನೆ ಅಂದಮೇಲೆ ಇವನ ಜೊತೆ ಬದುಕುವುದು ಅನಿವಾರ್ಯ ಅನಿಸಿಹೋಯಿತು. ದುಃಖ ಒತ್ತರಿಸಿ ಬಂತು. + +ಆಗ ವೆಂಕಟ ನನ್ನ ಹಸ್ತ ಹಿಡಿದು ‘ನಾ ಕೆಟ್ಟವ ಖರೆ, ಆದ್ರೆ ಅಷ್ಟು ಕೆಟ್ಟವ ಅಲ್ಲ, ಮದ್ವೆ ಆಗ್ತೀನಿ, ನಂಗಾದ್ರೂ ಯಾರಿದಾರೆ ಹೇಳು, ಸಂಗಡ ಇರೂವ, ಆದ್ರೆ ಮತ್ತೆ ಮತ್ತೆ ಅವಳ ಸುದ್ದಿ ತೆಗೆದು ನನ್ನ ಕುಕ್ಕಬೇಡ, ನೀನೂ ಸ್ವಲ್ಪ ಹೊಂದಿಕೊಂಡು ಹೋಗ್ಬೇಕು, ಯಾಕಂದ್ರೆ ಮಂಜಣ್ಣನ ಸುಪರ್ದಿನಲ್ಲಿರೋನು ನಾನು, ಅಂವ ಹೇಳಿದ ಕೆಲ್ಸ ತಲೇಮೇಲೆ ಹೊತ್ತು ಮಾಡ್ಬೇಕಾಗ್ತದೆ, ನೀನು ನನ್ನ ಕೆಲಸಕ್ಕೆ ತಕರಾರು ಮಾಡದಿದ್ರೆ ಆಯ್ತು ಅಷ್ಟೇ’ ಅಂದದ್ದಕ್ಕೆ ‘ಏನು ಅಂಥ ಕೆಲಸ?’ ಅಂತ ಕೇಳಿದ್ದೆ, ‘ಅದೇ ಆಫೀಸ್ನಲ್ಲಿ, ಹೋಗಿ ಬರುವ ಲಾರಿಗಳ ಲೆಕ್ಕ ಇಡೋದು, ಡ್ರೈವರ್ ಕ್ಲೀನರ್ ಗಳ ಪಗಾರ ಮಾಡೋದು, ರಿಪೇರಿಗೆ ಬಂದ ಲಾರಿಗಳ ಗ್ಯಾರೇಜಿಗೆ ಕಳ್ಸೋದು’ ಅಷ್ಟೇ ಅಂದವ ಸ್ವಲ್ಪ ಹೊತ್ತು ಬಿಟ್ಟು‘ಒಂದು ಲಾರಿ ನನ್ನ ಹೆಸರಿಗೇ ಮಾಡ್ಸಿದ್ದಾನೆ ಮಂಜಣ್ಣ’ಅಂದ. + +ಮನಸ್ಸಿಗೆ ಸ್ವಲ್ಪ ಸಮಾಧಾನವೆನಿಸಿತ್ತು. ಬಂಗಾರ ಬಣ್ಣದ ಬಿಸಿಲು ಕೋಲುಗಳು ಪೂರ್ವ ದಿಕ್ಕಿನಿಂದ ಮೂಡಲಾರಂಭಿಸಿದವು. ಇಬ್ಬರೂ ಅಲ್ಲಿಂದ ಮೊದಲ ದಿನ ಬಂದದಾರಿಯಲ್ಲೇ ನಡೆಯತೊಡಗಿದೆವು, ಮೈಕೈ ನೋವು ನಿರಂತರವಾಗಿತ್ತು. + +ನಡೆಯುತ್ತ ನಡೆಯುತ್ತ ದಾರಿಯಲ್ಲಿ ‘ಇಲ್ಲೇ ಇರು ಸ್ವಲ್ಪ ಬಂದೆ’ ಅನ್ನುತ್ತ ಅಲ್ಲೇ ಕೊಂಚ ಬದಿಗೆ ಹೋಗಿ ಮೂತ್ರ ವಿಸರ್ಜನೆ ಕೆಲಸ ಮುಗಿಸಿ ಬಂದ. ಕ್ಷಣಕ್ಷಣಕ್ಕೂ ಏನು ಸಂಭವಿಸಲಿದೆಯೋ ಗೊತ್ತಾಗದೇ ಭಯ ಮುತ್ತಿಕೊಳ್ಳುತ್ತಿತ್ತು. ಎದುರು ಝರಿಯೊಂದು ಸಣ್ಣಗೆ ಜುಳುಜುಳು ಹರಿಯುತ್ತಿತ್ತು. ಗುಡ್ಡದಿಂದ ನೀರು ಬೀಳುವ ಜಾಗೆಯಲ್ಲಿ ಸಣ್ಣ ಕೊಳದ ಹಾಗೆ ನೀರು ನಿಂತಿತ್ತು. + +‘ನೀರಿದೆ ನೋಡಿಲ್ಲಿ, ನೀನೂ ಬೇಕಾದರೆ ಇದಕ್ಕೆ ಇದಕ್ಕೆ ಹೋಗಿ ಬಾ’ ಎನ್ನುತ್ತ ಕೈ ಬೆರಳಲ್ಲೇ ಸನ್ನೆ ಮಾಡಿದ್ದ ವೆಂಕಟ, ಅವನು ಹಾಗೆಂದು ತೋರುವ ಪುರುಸೊತ್ತಿಲ್ಲದೇ ನಾನು ಝರಿಯ ಬಳಿ ಓಡಿ ಒಂದು ಪೊದೆಯ ಮರೆಯಲ್ಲಿ ಕೂತೆ, ಆ ಸಮಯದಲ್ಲೇ ನನಗೆ ಎಂಥದೋ ಅರ್ಥವಾಗದ ತಳಮಳ ಉಂಟಾಯಿತು. ಎಲ್ಲವೂ ಒಂದು ಘಳಿಗೆ ಸುಳ್ಳೆನಿಸಿಬಿಟ್ಟಿತು. ಅದನ್ನೂ ಮೀರಿ ಮೂತ್ರ ಮಾಡುವಾಗ ಕತ್ತರಿಸಿಟ್ಟಂತಹ ಅನುಭವವೊಂದು ಹಸಿಗಾಯದಂತೆ ಉರಿದಿತ್ತು. ಮುಂದೆ ನಡೆಯುತ್ತ ನಡೆಯುತ್ತ ಏನೇನೋ ಹೇಳಿದ. ನನಗೆ ಅದೊಂದೂ ಧ್ಯಾನಕ್ಕೆ ಹೋಗಲಿಲ್ಲ. + +‘ಅಂಕೋಲೆ ರಸ್ತೆಯಲ್ಲಿ ನೀಲಂಪುರದ ಮಂಜಣ್ಣನ ಆಫೀಸಲ್ಲೇ ಉಳಕೊಂಡಿದ್ದೇನೆ. ಕಾಮತರ ಹಳೇ ಹೆಂಚಿನ ಮನೆ ಅದು, ಮಂಜಣ್ಣ ಆಫೀಸಿಗೆ ಬಾಡಿಗೆ ಹಿಡಿದಿದ್ದಾನೆ. ಕಾಯ್ಲಿಕ್ಕೆ ಒಬ್ರು ಬೇಕಲ್ಲ, ಹಾಗಾಗಿ ಅಲ್ಲಿದ್ದೇನೆ, ನೀನೂ ಅಲ್ಲೇ ಇರಬಹುದು, ಗ್ಯಾಸು ಮಿಕ್ಸರು ಫ್ರಿಡ್ಜು, ಅಡುಗೆ ಸಾಮಾನು, ಟೀವಿ ಎಲ್ಲಇದೆ’ಅಂದ. ಹ್ಞೂ ಅಂತ ಸುಮ್ಮನಾದೆ. + +‘ಅಥ್ವಾ ಮಂಜಣ್ಣನ ಔಟ್ ಹೌಸ್ ಖಾಲಿ ಇದೆ, ಆರ್ ಸಿಸಿ ಬಿಲ್ಡಿಂಗದು, ಸ್ವಚ್ಛ ಚಂದಉಂಟು, ಮದ್ವೆಆದ್ರೆ ಮಾತ್ರ ಕೊಡ್ತೇನೆ, ಒಬ್ಬನೇ ಉಳಿಯೋದಾದ್ರೆ ಕೊಡೂದಿಲ್ಲ ಅಂತಾನೆ ಮಂಜಣ್ಣ’ಅಂದ. ನಾನು ಮಾತೇಆಡಲಿಲ್ಲ. + +ಹಾಗೇ ಕಾಲು ಸೋಲುವವರೆಗೆ ನಡೆದು ವಿಶ್ವನಾಥನ ಮನೆ ಸೇರಿಕೊಳ್ಳುವಾಗ, ಬೆಳಗಿನ ಹನ್ನೊಂದರ ಬಿಸಿಲು ಕಾಡನ್ನು ಬೆಚ್ಚಗಾಗಿಸಿತ್ತು. ವಿಶ್ವನಾಥ ಎಲ್ಲ ಗೊತ್ತಿದ್ದವರಂತೆ ಇಬ್ಬರನ್ನೂ ಬರಮಾಡಿಕೊಂಡಿದ್ದ. + +****** + +ಅಷ್ಟೆಲ್ಲ ನಡೆದಿದ್ದರೂ ಇಷ್ಟು ದಿನ ಕಷ್ಟವೋ ಸುಖವೋ ಅವನನ್ನೇ ಮದುವೆಯಾಗೋದು ಅನಿಸುತ್ತಿತ್ತು, ಆದರೆ ಈ ಕ್ಷಣ ಯಾಕೋ ಇನ್ನೊಮ್ಮೆ ನನ್ನೊಳಗನ್ನೇ ನಾನು ಕೆದಕಿಕೊಂಡಾಗ ಏನಿದು ಅರ್ಥವಾಗದ ಮಿಸುಗಾಟ? + +ನೆನಪುಗಳಿಗೆಲ್ಲ ಯಾಕೆ ಮುಳ್ಳುಗಳೇ ಏಳುತ್ತಿವೆ? ಅಂದು ನಡೆದದ್ದೆಲ್ಲ ಇಂದೇ ಈ ಕ್ಷಣವೇ ಪುನರಾವರ್ತನೆಗೊಂಡಂತೆ ಯಾಕೆ ಹಿಂಸಿಸುತ್ತಿವೆ? ಬೆಟ್ಟ, ಗಾಡಾಂಧಕರ, ಪ್ರೀತಿಸುವವಳು, ತಂದೆಯನ್ನು ಬಿಟ್ಟು ತನ್ನಜೊತೆ ಬದುಕುವ ಹಂಬಲದಿಂದ ಬಂದವಳು, ಆದರೆ ಅಂಥವಳ ದೇಹವನ್ನು ಅವಳ ಒಪ್ಪಿಗೆಯಿಲ್ಲದೇ ನೋಯಿಸಬಾರದು ಎಂಬ ಸಣ್ಣ ತಿಳಿವಳಿಕೆಯೂ ಬೇಡವೇ? ಅತ್ಯಾಚಾರದ ಬದಲಿಗೆ ಇದಕ್ಕೆ ಬೇರೆ ಯಾವ ಹೆಸರಿದೆ? + +ಇಷ್ಟು ದಿನ ಆ ಸಂಗತಿಯ ಕುರಿತು ಮಾತ್ರ ಯೋಚಿಸಲೇ ಭಯವಾಗಿ ನಾನು ಮುದ್ದಾಂ ಅದನ್ನು ಮರೆಯಲು ಯತ್ನಿಸಿ, ಒಳಗೊಳಗೇ ನವೆಯುತ್ತಿದ್ದೆನೇ? ಇಷ್ಟು ದಿನ ಮದುವೆಯೆಂಬ ಒಂದೇ ಧ್ಯಾನದಲ್ಲಿ ಹುದುಗಿ ಹೋಗಿದ್ದೆನೇ? ಸದ್ದಿಲ್ಲದೇ ಕಣ್ಣೀರು ಯಾಕೆ ಹೀಗೆ ಧಾರಾಕಾರ ಸುರಿದುಹೋಗುತ್ತಿದೆ? + + + +ಮನಸ್ಸುಕಲ್ಲಾಯಿತು. ಕಟ್ಟಕಡೆಯಲ್ಲಿ ನನಗೆ ವೆಂಕಟ ಬೇಡ ಎಂಬ ಒಂದೇ ನಿರ್ಧಾರ ನಂದಿನಿಯ ಮನಸ್ಸಿನಲ್ಲಿ ಗಟ್ಟಿಗೊಳ್ಳತೊಡಗಿತು. ಮದುವೆಯೊಂದೇ ಪರಮಗುರಿ ಅಲ್ಲ, ಅಂತೆಲ್ಲ ಅನಿಸುತ್ತಿದ್ದಂತೆ ನಂದಿನಿಯ ಮನಸ್ಸು ಇದ್ದಕ್ಕಿದ್ದಂತೆ ತಿಳಿಯಾಗಿತ್ತು. ಕಣ್ಣೊರೆಸಿಕೊಂಡು ಹಿತ್ತಿಲಿನ ಕಿಟಕಿಯಿಂದ ಈಚೆ ತಿರುಗಿದಳು. ನಿಧಾನ ಎಲ್ಲ ಬದಲಾದಂತೆನಿಸಿತು. ಈ ಕ್ಷಣದಿಂದ ಜಗತ್ತೆಲ್ಲ ಸುಂದರವಾಗಿ ಕಾಣತೊಡಗಿತು. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_279.txt b/Kenda Sampige/article_279.txt new file mode 100644 index 0000000000000000000000000000000000000000..7a2254d24eaa244526e89edeebe9cc7daffb4fd4 --- /dev/null +++ b/Kenda Sampige/article_279.txt @@ -0,0 +1,95 @@ + + +ಉಡುಪಿ ತಾಲೂಕಿನ ನೂರಹದಿನೈದು ಗ್ರಾಮಗಳ ಅನಭಿಷಿಕ್ತ ರಾಜರಾದ ನೂರಹತ್ತು ಪಠೇಲರು ಆಗ ತಾನೇ ಅಲಂಕಾರ ಪ್ರಾಯವಾಗಿ ಕಚೇರಿಯ ಮುಂದೆ ನೆರೆದಿದ್ದರು. ಅವರ ಮುಂಗಡೆಯಲ್ಲಿ ಐವತ್ತೆಂಟು ಶ್ಯಾನುಭಾಗರು ಸುಸ್ಥಿತರಾಗಿದ್ದರು. ಮತ್ತೇನು? ಇನ್ನು ದಂಡಧಾರಿಗಳಾದ ತಳಿಯಾರಿಗಳ ಪರಿವಾರವಂತೂ ಬೇರೆಯೇ ಬೇರೆ! ಆಗ ತಾನೇ ಗಂಟೆ ಒಂಬತ್ತು ಬಾರಿಸಿ ಹಿಂಗಡೆಯ ಸಾಲಿನ ಕೈದಿಗಳನ್ನು ಒಂದು ಕ್ಷಣಕ್ಕೆ ಮೇಯ ಬಿಟ್ಟಿದ್ದರು. ಕೆಂಪು ಕಿರೀಟದ ಪೋಲಿಸರು ಇವರೆಲ್ಲರ ಕೋಲಾಹಲದಿಂದ ಸಹಜವಾಗಿಯೇ ಭ್ರಾಂತಿಗೊಂಡಿರಬೇಕು. ಮತ್ತೆ ಕೈದಿಗಳನ್ನು ಕೋಣೆ ಕೂಡಿಸುವಾಗ ಮತ್ತು ಮತ್ತೂ ಲೆಕ್ಕ ಹಾಕುತ್ತಿದ್ದರು! + +ಈ ಎಲ್ಲಾ ಸಿಬ್ಬಂದಿಯ ಕೈಯಲ್ಲಿ ಒಂದೊಂದು ಚೂರು ಕಾಗದ. ಎಲ್ಲಾ ಮಹಾನುಭಾವರನ್ನು ಮೂಲೆಮೂಲೆಯಿಂದ ಕೊಂಪೆಕೊಂಪೆಯಿಂದ ಈ ಕಡೆಗೆ ಸೆಳೆದು ತಂದ ಆಜ್ಞಾಪತ್ರ! ಗಂಟೆ ಒಂಬತ್ತಕ್ಕೆ ತಪ್ಪದೆ ಹಾಜರಾಗಬೇಕೆಂಬ ನಿರಖುನೇಮ. ಈ ಕರಾವಳಿಯಿಂದ ಆ ಗಟ್ಟದ ಗಡಿಯ ತನಕದ ಜನಾಂಗದ ರೀತಿನೀತಿಯ ಸತ್ಯಪ್ರದರ್ಶನಕ್ಕಾಗಿ ಈ ವಿಧಾನದ ಏರ್ಪಾಟವಾಗಿರಬೇಕೆಂದೆಣಿಸಿಕೊಂಡೆ. ಆ ಕಡೆಯ ಗರ್ಭಸುತ್ತು ರುಮಾಲು – ಕಂಬತ್ತು ಕೋಟಿನ ಸೆಟ್ಟರು; ಈ ಕಡೆಯ ಮಲ್ ಮಲ್ ಜುಬ್ಬದ ಸಿಲ್ಕುಧಾರಿಗಳಾದ ಸುಂದರವದನರು – ಇವರೆಲ್ಲರ ಮಧ್ಯದಲ್ಲಿ ಕಿರುಕುಳದಂತೆ ಸೇರಿಸೇರಿ ಸುಳಿಯುತ್ತಿದ್ದ ಶ್ಯಾನುಭಾಗರು – ಹಳ್ಳಿಯ ದೈವಕ್ಕೂ ಮಿಕ್ಕಿದ ಪ್ರಭಾವದ ಉಗ್ರಾಣಿ ದೇವರು-ಇವರೆಲ್ಲ ಮಂದಿಯೂ ಗ್ರಾಮ ಉದ್ಯೋಗಸ್ಥರೇ! ತಲೆತಲೆಯಿಂದ ಈ ಜವಾಬ್ದಾರಿಯನ್ನು ಕಂಬದಂತೆ ಹೊತ್ತು ನಿಂತ, ಇಂದಿಗೂ ನಿರುದ್ಯೋಗಕ್ಕಿಂತಲೂ ಉದ್ಯೋಗವೇ ಮೇಲೆಂಬ ತತ್ವದ ಪ್ರತಿಪಾದನೆಗಾಗಿ, ಜೀವನದ ಹೋರಾಟ ನಡೆಸುವ ಗ್ರಾಮ ಉದ್ಯೋಗಸ್ಥರೆ! + +ಈ ಉದ್ಯೋಗಸ್ಥರೆಲ್ಲ ಕಾನೂನು ಬದ್ಧರಾಗಿ ಸುತ್ತಲೂ ನೋಡಿದರು – ಕುಳಿತಿರಲು ಏನಾದರೂ ಸಾಧ್ಯ ಬರುವಂತಿದೆಯೆ – ಎಂಬುದರ ನಿರ್ಣಯಕ್ಕಾಗಿ! ಆದರೆ ಎಲ್ಲಿಯೂ ಪಟ್ಟ ಮಂಚವಿಲ್ಲ. ಇನ್ನು ಚಾರು ಚೂರು ಮರದ ತುಂಡಿನ ಮೇಲೆ ಅಂಡಿಟ್ಟರೆ ಒಡನೆ ದಫೇದಾರ ಅದರ ಕಾವಲಿನವನೋ ಎಂಬಂತೆ ಬೆಕ್ಕು ಓಡಿಸುವ ರೀತಿ ಹುಶ್ – ಹುಶ್ ಎಲ್ಲಾ ಕೆಳಗೆ – ಕೆಳಗೆ ಎಂದು ಗದರಿಸಿ ಮತ್ತೆ ಮುಖ ಬಾಡಿಸಿ ಹೊಟ್ಟೆ ತಿಕ್ಕಿಕೊಳ್ಳುತ್ತಿದ್ದ. + +‘ನಮ್ಮೂರಲ್ಲಾದರೆ ಹತ್ತು ಅಡಿ ಮಂಚವನ್ನಾದರೂ ತಂದಿರಿಸ್ತಿದ್ದೆ -’ ಎಂದು ಗುರುಗುಟ್ಟಿದರು ಗಲ್ಲುಮೀಸೆಯ ಗುರಿಕಾರರೊಬ್ಬರು This is all nonsense ಎಂದು ಕರಾವಳಿ ಗಾಳಿ ತಾಗಿದ ಪಠೇಲರೊಬ್ಬರು ಸದಭಿಪ್ರಾಯವನ್ನು ಹೊರಹೊಮ್ಮಿಸಿದರು. ಮತ್ತಾರೂ ಮಾತಾಡಲಿಲ್ಲ. ಮಾತಾಡದೇನೆಯೆ ದಫೇದಾರ ಹುಶ್ ಹುಶ್ – ಸದ್ದು ಸದ್ದು – ಎನ್ನುವುದನ್ನು ಬಿಡಲಿಲ್ಲ. ಇನ್ನು ಈ ಉದ್ಯೋಗಸ್ಥರು ಮಾತಾಡುವದಿರಲಿ – ಉಸಿರನ್ನಾದರೂ ಗಟ್ಟಿಯಾಗಿ ಬಿಟ್ಟಿದ್ದರೆ ದಂಗೆಯೇ ನಡೆಯುತ್ತಿದ್ದಿತು! ಮತ್ತೆ ಮಾತಾಡುವುದೆಂದರೆ ಸಿಬ್ಬಂದಿ ಪೇದೆಗಳು ತಲೆತುರಿಸಿ ಸುಖ ದುಃಖದ ಸಲಾವಣೆ ಹೇಳುವುದೊಂದೆ. ಆದರೆ ಅದನ್ನು ಕೇಳಲು ಯಾವನೂ ಸಿದ್ಧನಿರಲಿಲ್ಲ. ಅದನ್ನು ಒಮ್ಮೆಗೆ ಕೇಳಿದನೆಂದರೆ ಮತ್ತೆ ಅದರ ಪ್ರಾಯಶ್ಚಿತ್ತವಾಗಿ ಏನಾದರೂ ದಂಡ ತೆರಲೇ ಬೇಕಾಗಿದ್ದಿತು! ಅದನ್ನು ಯಾರು ತೆರಬೇಕು – ಎಂಬುದೇ ಸಮಸ್ಯೆ. ತಳಿಯಾರಿ ಅಳಿಯ ಕಟ್ಟಿನ ಕಿರುಮೆಂಬರನಂತೆ; ಶ್ಯಾನುಭಾಗರ ವರ್ಗ ತೆಗೆದುಕೊಳ್ಳುವ ಅಭ್ಯಾಸದ ಹೊರತು ಕೊಡುವುದನ್ನು ಕಲಿಯಲೇ ಇಲ್ಲ. ಇನ್ನು ಠೀವಿಯ ಪಠೇಲರೊ – ಅದೆಲ್ಲ ಸೇಂಕ್ಷನ್ ಆಗಬೇಕು ಎಂದು ಶ್ಯಾನುಭಾಗರ ಮುಖ ನೋಡಿ ಬಿಡುತ್ತಿದ್ದರು. ಕಾರಣ ಹಣಕಾಸಿನ ಖಾತೆ ಶ್ಯಾನುಭಾಗರ ಕೈಯಲ್ಲಿ! ಕಟ್ಟಕಡೆಗೆ ಇದಿರಿನ ಜಗಲಿಯಲ್ಲಿ ಕುಳಿತಿರುವ ಹಕ್ಕಿನ ಸೌಲಭ್ಯಕ್ಕಾಗಿ ಎಲ್ಲರೂ ಒಂದುಗೂಡಿ ವಂತಿಗೆ ಪಟ್ಟಿ ಮಾಡಿದರು. ಈ ವಂತಿಗೆ ಪಟ್ಟಿ ಬೆಳೆದಂತೆ ಅವರೆಲ್ಲರಿಗೂ ಅಲ್ಲಿ ಕುಳಿತು ಉಸಿರಾಡುವ ಹಕ್ಕು, ಸಂದರ್ಭವಶಾತ್ ಹಾ – ಹೂ – ಎಂದು ಉದ್ಗಾರ ತೆಗೆಯುವ ಹಕ್ಕು, ಎಲ್ಲಕ್ಕೂ ಹೆಚ್ಚಿನದಾಗಿ ಆಕಳಿಸುವ ಹಕ್ಕು ಪ್ರಾಪ್ತವಾಯಿತು! + +ಒಮ್ಮಿಂದೊಮ್ಮೆಗೆ ಎಲ್ಲವೂ ತಣ್ಣಗಾದಂತಾಯಿತು. ಎಲ್ಲರೂ – ದೊರೆಗಳು ದೊರೆಗಳು ಎಂದು ನಾಲ್ಕೂ ಕಡೆ ಕಣ್ಣ ತಿರುಗಿಸಿ ತುದಿಗಾಲದಲ್ಲಿ ನಿಂತರು. ಇದು ಯಾವ ದೊರೆ? ಎಲ್ಲರೂ ಕೇಳಿದರು. ಕೊನೆಗೆ ದೀರ್ಘ ವಿಮರ್ಶೆಯ ಮೇಲೆ ಅದು ದೊರೆಯಲ್ಲ ದೊರೆಯ ಮರಿ ಅಥವಾ ಮೊಟ್ಟೆ – ದೊಡ್ಡ ದೊರೆಗಳ ಖುದ್ದು ದಫೇದಾರ ಎಂಬುದು ಖಚಿತವಾಯಿತು. + +ಪದೇಪದೇ ಇಂತಹ ಹಲವು ದೊರೆಗಳ ಅವತಾರ ನಡೆದೇ ಇದ್ದಿತು. ಈ ಮರಿಗಳಿಗೆಲ್ಲಾ ದೊಡ್ಡ ದೊರೆಗಳಿಂದಲೇ ನೇರವಾಗಿ ದೌಲತ್ತಿನ ಮೂಲಾಭ್ಯಾಸವಾದಂತೆ ಅರ್ಥವಾಗುತಿದ್ದಿತು. ಎತ್ತ ನೋಡಿದರೂ ಠೀವಿ – ದೌಲತ್ತು. ಇಷ್ಟೂ ದೊರೆ ಮಕ್ಕಳನ್ನು ಹೆತ್ತುದಕ್ಕಾಗಿ ನಮ್ಮ ದೇಶಕ್ಕೆ ನಾವು ಚಿರಋಣಿಗಳಾಗಿರಬೇಕು. + +ಈ ಸಾಮ್ರಾಜ್ಯಶಾಹಿಯ ಮಾದರಿಯನ್ನು ಕಂಡು ಒಂದು ಮೂಲೆಯಲ್ಲಿ ಕುಳಿತು ತೂಕಡಿಸುತ್ತಿದ್ದ ಜರಿ ರುಮಾಲಿನ ರಾಜೇಶ್ರೀಗಳೊಡನೆ ಕೇಳಿದೆ – ಇದೆಲ್ಲ ಏನು ಸ್ವಾಮಿ – ದಾಂಧಲೆ? + +ರಾಜೇಶ್ರೀಗಳವರು ಹೌಹಾರಿ – ಹಾ. ಜಮಾಬಂದಿ – ಜಮಾಬಂದಿ ಎಂದರು. + +‘ಏನು ಏನು? ಯಾರದು?’ + +‘ಹಾಗಲ್ಲಯ್ಯಾ! ಜಮಾಬಂದಿ ಎಂದರೆ ನಮ್ಮ ನಮ್ಮ ಗ್ರಾಮದ ಲೆಕ್ಕ ಪತ್ರದ ತನ್ಕಿನಿಶಿ ಪ್ಯಾಸು! ನೋಡಿ ನಿಮ್ಮಿಂದೆಲ್ಲಾ ನಾವು ತೀರ್ವೆ ಹಾಕಿಸಬೇಕಲ್ಲ – ರಿಕ್ವಿಶನ್ ಮಾಡಿ ಅಕ್ಕಿ ಕೊಡಿಸಬೇಕಲ್ಲ – ಅದಕ್ಕಾಗಿ ದೊರೆಗಳು ನಮ್ಮ ಮುಖ ನೋಡುತ್ತಾರೆ. + +‘ಏಕೆ – ನಿಮ್ಮ ಮುಖದಲ್ಲೇನಿದೆ?’ + +‘ಮೀಸೆಯಿದೆ! ನಾವು ಘನಗೊಂಡ ಇಂಡಿಯಾ ಸರಕಾರದ ಅತ್ಯಂತ ವಿಧೇಯ ಸೇವಕರು!’ ಎಂದವರೇ ಚಿಟ್ಟನೆ ಜಿಗಿದು ಬಿಟ್ಟರು! + +ಒಂದು ಕ್ಷಣ ಜೇನಿನ ಗೂಡಿಗೆ ಕಲ್ಲುಬಿದ್ದು ಗಲಭೆಯಾಗಿ ಕೊನೆಗೆ ಎಲ್ಲವೂ ನಿಂತಂತೆ ಸದ್ದಡಗಿತು – ಎನುವಾಗ ಬಂದರು ದೊಡ್ಡ ದೊರೆಗಳ ಹೇಡು ಗುಮಾಸ್ತಿಯರು! + +ಹೇಡುಗುಮಾಸ್ತಿಯರ ಹುದ್ದೆಯೇನೂ ಚಿಕ್ಕದಲ್ಲ. ಅಂತೆಯೇ ಅವರ ಹೊಟ್ಟೆಯ ಅಳತೆಯೂ ಚಿಕ್ಕದಲ್ಲ. ಆ ಹೊಟ್ಟೆ ತುಂಬಲು ಈ ಕಷ್ಟ ಕಾಲದಲ್ಲಿ ಎಷ್ಟು ಗ್ರಾಮಗಳ ಉತ್ತಾರವು ಬೇಕಾಗಿದ್ದಿತೊ ಏನೊ? ಹಲವರ ಮೇಲಣ ಅವರ ವಕ್ರದೃಷ್ಟಿ – ಇನ್ನು ಕೆಲವರ ಮೇಲಣ ಅವರ ಕೃಪಕಟಾಕ್ಷ – ಇದು ಅವರ ದೊಡ್ಡ ಕಿಸೆಯೊಳಗೆ ಎರಡು ಮನಸ್ಸು ತುಂಬಿಕೊಂಡಿದೆಯೋ ಎಂಬಂತೆ ಕಾಣುತಿದ್ದಿತು. + +ಗಂಟೆ ಹನ್ನೊಂದು ಹೊಡೆದಾಗ ದೊರೆಗಳು – ಮಹಾಪ್ರಭುಗಳು – ಖಾವಂದರು ಇತ್ಯಾದಿ ಬಿರುದಾಂಕಿತರಾದವರು ಚಿತ್ತೈಸಿದರು. ಬಂದು ಕೊಂಚ ದಣಿವಾರಿಸಿ ಮತ್ತೆ ಸಿಂಹಾಸನಾರೂಢರಾದರು. ಆ ಒಡ್ಡೋಲಗದಲ್ಲಿ ಎಲ್ಲಕ್ಕೂ ಮುಂದೆ ಹೇಡು ಗುಮಾಸ್ತಿಯರ ಹೊಟ್ಟೆ – ತಹಸೀಲ್ದಾರರ ಭವ್ಯಮೂರ್ತಿ – ನಾಲ್ಕು ಆರ್.ಐ. ಗಳ ತೆಳ್ಳನೆ ರೂಪ ಓರಣವಾಗಿ ಅಲಂಕರಿಸಿದ್ದಿತು. ಮತ್ತೆ ಆ ಕಡೆ ಬಾಗಿಲಿನಿಂದ ಆ ಕ್ಲಾರ್ಕರು – ಈ ಕ್ಲಾರ್ಕರು, ದರ್ಖಾಸು ಕ್ಲಾರ್ಕರು – ಬರ್ಕಾಸು ಕ್ಲಾರ್ಕರು ಎಲ್ಲರೂ ಸದ್ದಿಲ್ಲದೆ ತುದಿಗಾಲಲ್ಲಿ ನಿಂತಿದ್ದರು. + +ಆಗ ಒಬ್ಬ ದಫೆದಾರನ ಬಿಲ್ಲೆ ಪಟ್ಟೆ ಹಿಡಿದು ಕೇಳಿದೆ – ಏನಪ್ಪಾ – ತೊಡಗಿತೆ?ಇಲ್ಲ – ತುಂಬಾ ಕೆಲಸವಿದೆ ಸ್ವಾಮಿ – ತುಂಬಾ ಕೆಲಸವಿದೆ – ಎಂದು ನಾಲ್ಕೂ ಕಡೆ ಕಿಸೆ ಹಣಕತೊಡಗಿದೆ. ಅದೇ ತಾನೆ ಅವನ ಕೆಲಸ! + +ಗಂಟೆ ಗಂಟೆ ಉರುಳಿತು. ಇದಿರು ತೂಗು ಹಾಕಿದ ಗಂಟೆಯ ಮೇಲೆ ಕೋಲಿನ ಪೆಟ್ಟು ಬಿದ್ದಂತೆಲ್ಲ ಆ ಹಳ್ಳಿಹಳ್ಳಿಯ ಪುಣ್ಯಾತ್ಮರ ಹೊಟ್ಟೆ ಗುದ್ದಾಡತೊಡಗಿತು. ಆ ಕಡೆ ಈ ಕಡೆ ನೋಡಿ ಒಬ್ಬೊಬ್ಬರೆ ಅತ್ತಿತ್ತ ಸುಳಿದರು. ಸುಳಿದು ಮೆತ್ತನೆ ಗೇಟು ದಾಟಿ ರಸ್ತೆಗೆ ಕಾಲಿಟ್ಟರು. ಅದರ ಇದಿರಿನ ಹೋಟೆಲಿನಲ್ಲೇ ತೂಗಹಾಕಿದ್ದರು – ಊಟ ಮುಗಿದಿದೆ – ಪಕ್ಕಕ್ಕೆ ಹೊರಳಿದರೆ ಅಲ್ಲಿಯೂ ಅಂತೆಯೆ! ತಿಂಡಿ ತೀರಿದೆ! ಮತ್ತೊಂದರಲ್ಲಿ ಹಾಲು ಮುಗಿದಿದೆ. ಹಾಗಾದರೆ ಉಳಿದುದೇನು? ಎಂದು ಎಲ್ಲಾ ಹಸಿದ ಹೊಟ್ಟೆಗಳು ಬಾಯ್ಬಿಟ್ಟವು! + + + +ಗಂಟೆ ಸಾಗುತ್ತಲೇಯಿದ್ದಿತು. ಪಠೇಲರು ಎಲ್ಲ ಹೋಟೆಲುಗಳಿಂದ ತೀರ್ವೆ ವಸೂಲು ಮಾಡುತ್ತಿದ್ದರು – ಶ್ಯಾನುಭಾಗರು ಎಲ್ಲ ಕ್ಲಬ್ – ವಿಲಾಸಗಳನ್ನು ಸರ್ವೆ ಮಾಡುತ್ತಿದ್ದರು. ತಳಿಯಾರಿಗಳಂತೂ ಎಲ್ಲಾ ತಿಂಡಿ ತೀರ್ಥಗಳ ವರದಿ ಸಂಗ್ರಹಿಸುತ್ತಿದ್ದರೂ ಯಾರಿಗೂ ಹಸಿವು ಹಿಂಗಲಿಲ್ಲ. ಹೊಟ್ಟೆ ತಣಿಯಲಿಲ್ಲ. ರೇಡಿಯೋಗಳ ಚೀರಾಟದಿಂದಾಗಿ ಕಿವಿಯ ಹೊರತು ಮತ್ತೇನೂ ತುಂಬಲಿಲ್ಲ! + +ಎಲ್ಲರೂ ಸಾಲು ಮರಗಳ ಬುಡದಲ್ಲಿ ಕೈಕಾಲು ಬಿಟ್ಟು ಕುಳಿತಿದ್ದಂತೆ ಸಂಜೆ ಕಳೆಯಿತು. + +ಕೊನೆಗೆ ಬೇರೇನೂ ಉಪಾಯ ತೋಚದೆ ಎಲ್ಲರೂ ಏಕಾದಶೀ ಮಹಾತ್ಮ್ಯೆಯನ್ನು ಕುರಿತು ಚರ್ಚಿಸತೊಡಗಿದರು. ಹೆಚ್ಚು ಹೆಚ್ಚು ಹಸಿವಾಗಿದ್ದ ತಿಂಬಂಡಿಗಳೆಲ್ಲ ಆ ಕುರಿತಾಗಿ ಹೆಚ್ಚು ಹೆಚ್ಚಾಗಿ ವಾದ ಮಾಡಿದರು. ಅವರೆಲ್ಲರ ವಾದ ಮುಗಿದ ವೇಳೆಗೆ ಗಂಟೆ ಒಂಬತ್ತು ಹೊಡೆದಿದ್ದಿತು. ಆಗ ಅವರೆಲ್ಲರ ಪುಣ್ಯಫಲದಿಂದಾಗಿ ಅವರೆಲ್ಲರ ಗುರುಹಿರಿಯರ ಅನುಗ್ರಹದಿಂದ ದಫೇದಾರ ಅಧಿಕಾರ ವಾಣಿಯಿಂದ ಬೊಬ್ಬಿಟ್ಟ ಪಟೇಲರು – ಶ್ಯಾನುಭಾಗರು- ತಳಿಯಾರಿಗಳು – ಅರ್ಜಿದಾರರು! ಎಲ್ಲರೂ ದೊರೆಗಳ ದಿವ್ಯದರ್ಶನಕ್ಕಾಗಿ ಮುಂದೋಡಿದರು. ಮಹಾಸನ್ನಿಧಿಯಲ್ಲಿ ಕಾಣಿಸಿಕೊಂಡರು. + +ದೊರೆಗಳು ದೊರೆಗಳಾಗಿಯೇ ಇದ್ದರು. ಆದರೆ ಹೇಡು ಗುಮಾಸ್ತಿಯರು ಅವರ ಬಹುಭಾಗವನ್ನು ಆಕ್ರಮಿಸಿ ಅವರ ಅಪ್ಪಣೆಗಳಲ್ಲಿ ಬೇಕಾದುದನ್ನು ಬಿಟ್ಟು ಬೇಡವಾದುದನ್ನು ಮಾತ್ರ ಉದ್ದರಿಸಿ ಎಲ್ಲಾ ಗ್ರಾಮ ಉದ್ಯೋಗಸ್ಥರನ್ನು ಕೂಡಹಾಕಿ ತಾರತಮ್ಯ ಜ್ಞಾನಾನುಸಾರವಾಗಿ ಹಂಸಕ್ಷೀರ ನ್ಯಾಯದಂತೆ ವಿಭಾಗಿಸುತ್ತಿದ್ದರು. ಇದನ್ನೆಲ್ಲಾ ನೋಡಿ ಹಿಂದೆ ಹಿಂದೆ ಹೂಟೆಯ ಎತ್ತಿನಂತೆ ಅಳುಕಿ ನಿಂತಿದ್ದವರೊಬ್ಬರೊಡನೆ ಕೇಳಿದೆ – ಸ್ವಾಮೀ – ತಮ್ಮ ಕಡೆ ವಕೀಲರು ಯಾರು? + +‘ವಕೀಲರು ಏಕೆ?’ + +‘ವಕೀಲರು ಬೇಡವೆ ಮತ್ತೆ ನಿಮ್ಮ ಕಡೆ ವ್ಯವಹರಣೆಗೆ?’ + +‘ಹಾಗಲ್ಲ ಸ್ವಾಮೀ- ಇದು ವ್ಯವಹಾರವಲ್ಲ, ಜಮಾಬಂದಿ!’ + +‘ಜಮಾಬಂದಿ? ನಾನೇನೋ ಕ್ರಿಮಿನಲ್ ಆಪಾದನೆಯ ಮೊಕದ್ದಮೆ ಎಂತಲೇ ಭಾವಿಸಿದ್ದೆ ನೋಡಿ. ಕ್ಷಮಿಸಬೇಕು. ಈಗ ತಿಳಿಯಿತು ಜಮಾಬಂದಿ!’ + +ಜಮಾಬಂದಿಯಲ್ಲಿ ಅಧಿಕಾರ ಸ್ಥಾನದಿಂದ ಹೆಚ್ಚಿನದೇನೂ ವಿಚಾರ ಬರಲಿಲ್ಲ. ಆದರೆ ಬಂದುದರಲ್ಲಿ ಯುದ್ಧಸಹಾಯ ನಿಧಿಯ ವಿಚಾರವಾಗಿ ಚಾಚೂ ತಪ್ಪದೆ ಹೇಡು ಗುಮಾಸ್ತಿಯರ ಬಾಯಿಯಿಂದ ಒಂದೇ ಸಮನೆ ಅಮೃತವೃಷ್ಟಿಯಾಗುತ್ತಿದ್ದಿತು. ಹಲವರು ತಮ್ಮ ಸಾಹಸಗಳನ್ನು ರಿಕಾರ್ಡು ಮೂಲಕ ಪ್ರದರ್ಶಿಸಿ ಕೈಮುಗಿದು ಕೃತಾರ್ಥರಾದರು. ಇನ್ನು ಕೆಲವರು ದೈನ್ಯದಿಂದ ಮುಖತಗ್ಗಿಸಿ ಅತ್ತೇಬಿಟ್ಟರು! + +ಕೊನೆಯದಾಗಿ ಖಾವಂದರ ದೃಷ್ಟಿ ಪ್ರಾಯ ಕಳೆದ ಗಾಂಧಿ ಟೋಪಿಧಾರಿಗಳೊಬ್ಬರ ಮೇಲೆ ಬಿದ್ದಿತು. ಆ ಮಹಾನುಭಾವ ಜಮಾಬಂದಿಯ ಗೊಡವೆಯಲ್ಲೇ ಇರದೆ ಸದ್ದಿಲ್ಲದೆ ತಕಲಿ ಹಿಡಿದು ನೂಲು ತೆಗೆಯುತ್ತಿದ್ದ. ಖಾವಂದರು ಬಗ್ಗಿ ನೋಡಿದರು. ಒಂದಿಗೆ ಹೇಡು ಗುಮಾಸ್ತಿಯರೂ ಹೊಟ್ಟೆ ಬಗ್ಗಿಸಿದರು. ಎಲ್ಲರೂ ಆ ತಕಲಿ ತಿರುಗುವ ವಿಧಾನವನ್ನೇ ನೋಡಿ ಅದು ಏಕೆ ಅಲ್ಲಿ ತಿರುಗಬೇಕು ಎಂದು ವಿಚಾರ ಮಾಡತೊಡಗಿದರು. ಕಟ್ಟಕಡೆಗೆ ಹುಂಕಾರದೊಡನೆ ಅಧಿಕಾರ ಸ್ಥಾನದ ಪರವಾಗಿ ಹೇಡು ಗುಮಾಸ್ತಿಯವರಿಂದ ಅಪ್ಪಣೆಯಾಯಿತು. + +‘ನಿಮ್ಮ ಯುದ್ಧ ಸಹಾಯ ನಿಧಿ ಎಷ್ಟು?’ + +‘ಇಲ್ಲ’ + +ಹೇಡು ಗುಮಾಸ್ತಿಯರ ತಲೆತಿರುಗಿ ಅಟ್ಟಳಿಗೆಯ ಕಂಬ ಹಿಡಿದು ಗಟ್ಟಿಯಾಗಿ ನಿಂತರು. ಕೊನೆಗೆ ಖಾವಂದರೇ ಖುದ್ದು ಕೇಳಿದರು. + + + +‘ಏನು ಯುದ್ಧ ಸಹಾಯ ನಿಧಿ ಇಲ್ಲ?’ + +‘ಇಲ್ಲ’ + +‘ಏಕೆ’ + +‘ಅದು ನಮ್ಮ ಯುದ್ಧವಲ್ಲ.’ + +‘ಮತ್ತೆ?’ + +‘ನಿಮ್ಮ ಯುದ್ಧ.’ + +‘ಯಾರ ಮೇಲೆ?’ + +‘ನಮ್ಮ ಮೇಲೆ.’ + +‘ನೀವು ನಮ್ಮ ಪಠೇಲರಲ್ಲವೊ?’ + +‘ಅಲ್ಲ – ಊರಿನ ಪಠೇಲರು.’ + +ಹೇಡು ಗುಮಾಸ್ತಿಯರು ದೌಡು ಕಚ್ಚಿದರು. ದೊರೆಗಳು ಕಣ್ಣು ಕೆರಳಿಸಿ ಗರ್ಜಿಸಿದರು – ಡಿಸ್-ಮಿಸ್! + +ಎಲ್ಲರೂ ಗಾಬರಿಯಾದರು. ಪಠೇಲರೆಲ್ಲ ಇದರಿಂದಾಗಿ ತಮ್ಮ ಮರ್ಯಾದೆ ಹೋಯಿತೊ ಉಳಿಯಿತೊ – ಎಂಬುದನ್ನು ನಿರ್ಣಯಿಸುವುದಕ್ಕಾಗಿ ನಾಲ್ಕು ಸುತ್ತು ತಿರುಗಿ ಗೇಟಿನ ತನಕ ನೋಡಿಕೊಂಡರು. ನೋಡುತ್ತಿದ್ದಂತೆ ಆ ಗಾಂಧಿ ಟೋಪಿಧಾರಿ – ತಕಲೀವಾಲರು ನಗುತ್ತಾ ಅಲ್ಲಿಂದಲೇ ಹೊರಬಿದ್ದರು. + + + +ಠಾಣೆಯ ಪಹರೇದಾರ ಗಂಟೆ ಹತ್ತು ಹೊಡೆದು ಹುಶ್ಶಾರ್- ಎಂದು ಕೈದಿಗಳಿಗೆ ಎಚ್ಚರಿಕೆ ಕೊಟ್ಟು ಸದ್ದು ಹೊಡೆದ. ಒಂದಿಗೆ ದೊರೆಗಳ ಸನ್ನಿಧಿಯ ಜಮಾಬಂದಿಗಳೆಲ್ಲ ಬೆವರು ಸುರಿಸಿಕೊಂಡು ಹೊರಗೆ ಬಂದರು. ಹೊರಗೆ ಬಂದು ಆ ಕತ್ತಲಲ್ಲಿ ಸುತ್ತಲೂ ಕಣ್ಬಿಟ್ಟು ಬಿಡುಗಡೆಯಾಯಿತಪ್ಪ ಇನ್ನು ಒಂದು ವರ್ಷಕ್ಕೆ ತೊಂದರೆಯಿಲ್ಲ – ಎಂದು ಸೈಗರೆದರು. ಎಲ್ಲರ ಮುಖವೂ ಬಾಡಿ ಜೋತುಬಿದ್ದಿತ್ತು. ಆದರೆಲ್ಲರೂ ಪಾಪ! – ನಮ್ಮ ಗ್ರಾಮ ಉದ್ಯೋಗಸ್ಥರು. ಅಥವಾ ಆಗ ತಾನೇ ಕೂಡಹಾಕಿ ಬಿಡುಗಡೆಯಾದ ಜಮಾ-ಬಂದಿಗಳು! + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_28.txt b/Kenda Sampige/article_28.txt new file mode 100644 index 0000000000000000000000000000000000000000..4fab60d1c8d2d231742dcba0c9c00eaf7061f3b4 --- /dev/null +++ b/Kenda Sampige/article_28.txt @@ -0,0 +1,35 @@ +byಅನುಸೂಯ ಯತೀಶ್|Sep 3, 2024|ಸರಣಿ| 0 Comments + +ನನ್ನ ಮನದಿಂಗಿತವನ್ನು ಅರಿತ ಅವರು ಅಲ್ರೀ ಈ ಮಕ್ಕಳು ನಮಗೆಲ್ಲ ಎಷ್ಟು ಚಂದ ಚಂದ ಅಡ್ಡ ಹೆಸರುಗಳನ್ನು ಇಟ್ಟು ಕರೆಯುತ್ತಾರೆ. ನಮ್ಮ ಬೆನ್ನ ಹಿಂದೆ ಕರಿತಾರೆ. ಅವರು ಇಷ್ಟು ದಿನ ಅವರಿಗೆ ಮಾತ್ರ ಗೊತ್ತಿತ್ತು. ಈಗ ನಮಗೂ ತಿಳಿಯಿತು. ಇನ್ನು ಎಷ್ಟು ಜನ ಗೊತ್ತಿದ್ಯೋ ಏನೋ ಗೊತ್ತಿಲ್ಲ.ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ + +byಡಾ. ವಿಶ್ವನಾಥ ಎನ್ ನೇರಳಕಟ್ಟೆ|Sep 3, 2024|ಸರಣಿ| 0 Comments + +ಸಂವಿಧಾನದ ಪ್ರಕಾರ ಟರ್ಕಿ ಜಾತ್ಯತೀತ ರಾಷ್ಟ್ರವಾಗಿದ್ದರೂ, ಅನುದಿನದ ಬದುಕಿನಲ್ಲಿ ಅದು ಪಾಲನೆಯಾಗುತ್ತಿಲ್ಲ. ಶಾಲೆಗಳಲ್ಲಿ ಧಾರ್ಮಿಕ ವಿಚಾರಗಳನ್ನು ಬೋಧಿಸಲಾಗುತ್ತಿದೆ. ಧರ್ಮವನ್ನು ಮಕ್ಕಳಿಗೆ ಕಲಿಸುವುದಕ್ಕಾಗಿಯೇ ಪಠ್ಯಕ್ರಮವನ್ನು ರೂಪಿಸಲಾಗಿದೆ. ಟರ್ಕಿಯಲ್ಲಿರುವ ಹೆಚ್ಚಿನ ಜನರು ಮುಸ್ಲಿಂ ಧರ್ಮಕ್ಕೆ ನಿಷ್ಠರಾಗಿದ್ದು, ಇಸ್ಲಾಂ ಜಗತ್ತು ಸ್ಥಾಪನೆಯಾಗಬೇಕೆಂಬ ಆಶಯವನ್ನು ಇಟ್ಟುಕೊಂಡಿದ್ದಾರೆ.ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿಯಲ್ಲಿ “ಟರ್ಕಿ” ಕುರಿತ ಬರಹ ನಿಮ್ಮ ಓದಿಗೆ + +byಸುಮಾವೀಣಾ|Sep 2, 2024|ಸರಣಿ| 0 Comments + +ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರೂ ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ಕಾರಣ ಶಬ್ದಗಳ ಕೊರತೆ. ಮನಸ್ಸಿನಲ್ಲಿ ಭಾವನೆಗಳಿರುತ್ತವೆ….! ಇನ್ನೇನೋ ವಿಶೇಷವಾಗಿರುವುದನ್ನು ಹೇಳಬೇಕು…! ನಾನೂ ಮಾತನಾಡಬೇಕು….! ಎಂದಾಗ ಆ ಭಾವನೆಗಳಿಗೆ ಆತ ಶಬ್ದರೂಪವನ್ನು ಕೊಡಲು ಸಾಧ್ಯವಾಗುವುದಿಲ್ಲ.ಪದ ಪ್ರಯೋಗಗಳ ಕುರಿತು ಸುಮಾವೀಣಾ ಬರೆಯುವ ಹೊಸ ಸರಣಿ “ಮಾತು-ಕ್ಯಾತೆ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ + +byಎಸ್. ಜಯಶ್ರೀನಿವಾಸ ರಾವ್|Sep 2, 2024|ಸರಣಿ| 0 Comments + +ಅವರ ಕವನಗಳಲ್ಲಿ ಬೈಬಲ್‌ ಹಾಗೂ ಗ್ರೀಕ್ ಪುರಾಣಗಳ ಉಲ್ಲೇಖಗಳೂ ಇವೆ. ಈ ಪುರಾಣಗಳ ಪ್ರಯೋಗದಿಂದ ಹೆರ್ಬೆರ್ತರು ಸಮಕಾಲೀನ ಅನುಭವಗಳ ತೀಕ್ಷ್ಣ ಝಳಪನ್ನು ಸ್ವಲ್ಪ ಮಟ್ಟಿಗೆ ಮೃದುಗೊಳಿಸುತ್ತಾರೆ.ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲಂಡ್ ದೇಶದ ಖ್ಯಾತ ಕವಿ ಜ಼್ಬಿಗ್ನಿಎಫ಼್ ಹೆರ್ಬೆರ್ತ್-ರವರ (Zbigniew Herbert, 1924 – 1998) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ + +byಕಾರ್ತಿಕ್ ಕೃಷ್ಣ|Aug 31, 2024|ಸರಣಿ| 1 Comment + +ನನಗೆ ಎಲ್ಲಕ್ಕಿಂತ ಇಷ್ಟವಾದದ್ದು ಲೈಲ್ಸ್‌ನ ಖತರ್ನಾಕ್ ಎಂಟ್ರಿ. ಅವನು ಟ್ರ್ಯಾಕ್‌ಗೆ ಬರುವ ಕಾನ್ಫಿಡೆನ್ಸನ್ನು ನೀವೊಮ್ಮೆ ನೋಡಬೇಕು. ಆ ಕಾಂಫಿಡೆನ್ಸಿನಿಂದಲೇ ಅವನು ಅರ್ಧ ಪಂದ್ಯವನ್ನು ಗೆಲ್ಲುತ್ತಾನೆ ಎಂದು ನನಗನ್ನಿಸುತ್ತದೆ. ಹೆಸರು ಕೂಗಿದೊಡನೆ ವೇಗವಾಗಿ ಓಡಿ ಬಂದು, ಕುದುರೆಯಂತೆ ನೆಗೆದು ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆಯುವ ಅವನ ಆತ್ಮವಿಶ್ವಾಸ ಎಂತವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ನೂತನ ಒಲಿಂಪಿಕ್ ಚಾಂಪಿಯನ್ ನೋಅ ಲೈಲ್ಸ್ ನಮ್ಮ ಆತ್ಮವಿಶ್ವಾಸವನ್ನೂ ಒಂದಷ್ಟು ಹೆಚ್ಚಿಸಲಿ ಅಲ್ಲವೇ?ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ + +byರಾಮ್ ಪ್ರಕಾಶ್ ರೈ ಕೆ.|Aug 30, 2024|ಸರಣಿ| 0 Comments + +‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಳ್ಳನಿದ್ದಾನೆ’ ಎಂಬ ವಾಕ್ಯ, ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಮಗುವಿದೆ’ ಎಂದು ಕೋಟಿಯ ಕೈಗಳಲ್ಲಿ ಬದಲಾಗುವುದೇ ಆತನ ವ್ಯಕ್ತಿತ್ವದ ಹೆಚ್ಚುಗಾರಿಕೆಯ ಸಂಕೇತ. ಚಿತ್ರದ ತುಂಬೆಲ್ಲಾ ರೂಪಕಗಳ ಬಳಕೆ ಹೇರಳವಾಗಿದೆ. ಕೋಟಿಯೆಂಬ ಹೆಸರು ಅದರಲ್ಲೊಂದು. ಇಲ್ಲಿ ಎಲ್ಲರೂ ಸಾಗುತ್ತಲೇ ಇರುತ್ತಾರೆ. ಥೇಟು ಪಟ್ಟಣದ ಯಾಂತ್ರಿಕ ಬದುಕಿನಂತೆ. ಆದರೆ ಆ ಪಯಣಕ್ಕೊಂದು ವೇಗ ನಿಯಂತ್ರಕ ಎದುರಾದಾಗ, ಹೇಗೆ ಉತ್ತರಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿರ್ಧರಿತವಾಗುತ್ತದೆ ಎಂಬುದನ್ನು ನಿರೂಪಿಸಲಾಗಿದೆ.ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ + +byಗುರುಪ್ರಸಾದ್‌ ಕುರ್ತಕೋಟಿ|Aug 29, 2024|ಸರಣಿ| 0 Comments + +ಅಲ್ಲಿ ಇರೋದೇ ಬೇಡ, ನನ್ನ ದೇಶವೇ ನನಗೆ ಚಂದ, ಅಲ್ಲಿಯೇ ಸುಖ ಇದೆ, ವಾಪಸ್ಸು ಹೋಗಿಯೇ ತೀರುತ್ತೇನೆ ಅಂತೆಲ್ಲ ಬಡಬಡಿಸುತ್ತಿದ್ದ ನನಗೆ, ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಅಲ್ಲಿದ್ದು, ತಾವು ಅಲ್ಲಿ ಸುಖವಾಗಿ ಇದ್ದೇವೆ, ಯಾವುದೇ ವಿಷಾದ ಇಲ್ಲ ಅಂತ ಮಾತು ಹಾಗೂ ಕೃತಿಯಿಂದ ತೋರಿಸಿದ ನನ್ನ ಅಕ್ಕ ಬೆರಗು ಮೂಡಿಸಿದ್ದಳು! ಆ ಕ್ಷಣದಿಂದ ಬೇರೆಯವರಿಗೆ, ನೀವ್ಯಾಕೆ ಅಮೆರಿಕೆಯಲ್ಲಿಯೇ ಇರಲು ಬಯಸುತ್ತೀರಿ…?ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ಮೂರನೆಯ ಬರಹ + +byಸುಮಾ ಸತೀಶ್|Aug 28, 2024|ಸರಣಿ| 0 Comments + +ಸ್ಯಾನೆ ವಿಸೇಸವಾದ್ದು ಅಂದ್ರೆ ಆಟುದ್ ಸಾಮಾನಿನ ಬುಟ್ಟಿಗ್ಳು. ಕಾರು ಬೈಕು ಅಲ್ಲ ಬುಡಿ. ಆ ಬುಟ್ಟಿಗ್ಳಾಗೆ ಬುಡಿಗೆಗಳು ಇರ್ತಿದ್ವು. ಎಲ್ಡು-ಮೂರು ಬೆಟ್ಟಿನ ಗಾತ್ರದ ಮಣ್ಣಿನ‌‌ ಮಡಿಕೆ ಕುಡಿಕೆಗಳು, ಒಲೆ, ಬಟ್ಟಲು, ಮುಚ್ಚಳ, ಸೌಟು, ಹಂಚು ಇಂತಾ ಅಡ್ಗೆ ಮನೆ ಸಾಮಾನು. ಹುಡುಗೀರೆಲ್ಲಾ ಅಲ್ಲೇ ಸೇರ್ಕಂಡು ಒಬ್ಬಳು ಬಟ್ಟಲು ತಕಂಡ್ರೆ, ಇನ್ನೊಬ್ಬಳು ಒಲೆ ತಕಣಾದು. ಐದು ಪೈಸೆ, ಹತ್ತು ಪೈಸೆ, ಜಾಸ್ತಿ ಅಂದ್ರೆ ನಾಕಾಣೆ ಇರ್ತಿದ್ವು. ನಮ್ಗೋ ತಲಾಕೈವತ್ತು ಪೈಸೇ ಸಿಕ್ತಿದ್ರೆ ಹೆಚ್ಚು.‌ಸುಮಾ ಸತೀಶ್ “ರಂಗಿನ ರಾಟೆ” ಸರಣಿ + +byಬಸವನಗೌಡ ಹೆಬ್ಬಳಗೆರೆ|Aug 27, 2024|ಸರಣಿ| 2 Comments + +ಶನಿವಾರ ಶಾಲೆ ಬಿಟ್ಟಾಗಿನಿಂದ ಹಿಡಿದು ಸಂಜೆ 5;30 ವರೆಗೂ ನಾವು ವಿಶ್ರಾಂತಿ ತೆಗೆದುಕೊಳ್ಳದೆ ಕ್ಲೀನ್ ಮಾಡಿದರೆ ಮಾತ್ರ ಎಲ್ಲಾ ತೊಟ್ಟಿಗಳು ಕ್ಲೀನ್ ಮಾಡೋಕೆ ಸಾಧ್ಯ ಆಗ್ತಾ ಇತ್ತು. ಆ ನಂತರ ಸ್ನಾನ ಮಾಡಿ ನಮಗೆ ಸಿಕ್ಕ ಮೆಸ್ಸಿನಲ್ಲಿ ರಾತ್ರಿ ಊಟ ಮಾಡುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ತಾ ಇದ್ವಿ!! ‘ಭೂತಯ್ಯನ ಮಗ ಅಯ್ಯ’ ಫಿಲಮ್ಮಿನಲ್ಲಿ ಬರೋ ಸೀನಿನ ತರಹ ಕೆಲವರು ಸಾಕಷ್ಟು ಬಡಿಸಿಕೊಂಡು ತಿನ್ತಾ ಇದ್ರು. ನಮಗೆ ತುಂಬಾ ಖುಷಿ ಆಗ್ತಾ ಇತ್ತು.ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೊಂದನೆಯ ಕಂತು ನಿಮ್ಮ ಓದಿಗೆ \ No newline at end of file diff --git a/Kenda Sampige/article_280.txt b/Kenda Sampige/article_280.txt new file mode 100644 index 0000000000000000000000000000000000000000..a4d55998625a63d387c59c0aeb8142930f1e55c1 --- /dev/null +++ b/Kenda Sampige/article_280.txt @@ -0,0 +1,33 @@ + + +ಮಕ್ಕಳ ಸಾಹಿತ್ಯವನ್ನು ರಚಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದರಲ್ಲೂ ಮಕ್ಕಳ ಕಥೆಗಳನ್ನು ಬರೆಯುವುದು ಒಂದಿಷ್ಟು ಕಷ್ಟದಾಯಕ ಕೆಲಸವೇ ಸರಿ. ಒಂದು ಹೆಜ್ಜೆ ಹಿಂದಿಟ್ಟರೆ ಶಿಶು ಕಥೆಗಳಾಗಿಬಿಡುವ, ಒಂದು ಹೆಜ್ಜೆ ಮುಂದಿಟ್ಟರೆ ಹದಿಹರೆಯದವರ ಕಥೆಗಳಾಗಿಬಿಡುವ ಅಪಾಯವಿದೆ ಈ ಪ್ರಕಾರಕ್ಕೆ. ಹೀಗಾಗಿ ಮಕ್ಕಳ ಕಥೆ ಬರೆಯುವುದೆಂದರೆ ತಂತಿಯ ಮೇಲೆ ನಡಿಗೆ ಮಾಡಿದಂತೆ. ಆದರೆ ಸಮತೋಲನಕ್ಕೆ ಯಾವ ಕೋಲನ್ನೂ ಹಿಡಿದುಕೊಳ್ಳದೇ ತಂತಿಯ ಮೇಲೆ ಸರಾಗವಾಗಿ ನಡೆಯುವುದನ್ನು ರೂಢಿಸಿಕೊಂಡ ಕೆಲವೇ ಕೆಲವು ಸಾಹಿತಿಗಳಲ್ಲಿ ತಮ್ಮಣ್ಣ ಬೀಗಾರ ಒಬ್ಬರು. + +ಕನ್ನಡದ ಮಕ್ಕಳ ಕಥೆಗಳು ಇನ್ನೂ ವಿಚಿತ್ರ ಹಂತದಲ್ಲೇ ನಿಂತುಬಿಟ್ಟಿದೆ. ಬಹುತೇಕ ಮಕ್ಕಳ ಕಥೆಗಳು ಎಂದು ಸಾರ್ವಜನಿಕ ಗ್ರಂಥಾಲಯವನ್ನು ತುಂಬುವ ಪುಸ್ತಕಗಳಲ್ಲಿ ಅದೇ ಹಳೆಯ ಸಿದ್ಧ ಮಾದರಿಯ ಏಳು ಸುತ್ತಿನ ಮಲ್ಲಿಗೆಯ ತೂಕದ ರಾಜಕುಮಾರಿ, ಏಳು ಕೋಟೆಯ ರಾಜಕುಮಾರರ ವಿವರಣೆಗಳೇ ತುಂಬಿರುತ್ತವೆ. ಆದರೆ ಉಳಿದ ಭಾಷೆಗಳಲ್ಲಿ ಮಕ್ಕಳ ಕಥೆಗಳ ಆಯಾಮ ಬದಲಾಗಿ ದಶಕಗಳ ಸನಿಹಕ್ಕೆ ಬಂದಿದೆ. ಮಕ್ಕಳ ಕಥೆಗಳನ್ನು ವಾಸ್ತವಿಕ ನೆಲಗಟ್ಟಿಗೆ ತರುವ ಯಾವ ಪ್ರಯತ್ನವನ್ನೂ ಕನ್ನಡದ ಹೆಚ್ಚಿನ ಮಕ್ಕಳ ಸಾಹಿತಿಗಳೆಂದುಕೊಂಡವರು ಮಾಡುತ್ತಿಲ್ಲ. ಮಕ್ಕಳ ಕಥೆಗಳಿಗೆ ಬೇಕಾದ ಫ್ಯಾಂಟಿಸಿಯನ್ನು ತಂದು ಅದನ್ನು ಅಚ್ಚುಕಟ್ಟಾಗಿ ಬರೆಯುವುದಕ್ಕೂ ಹೆಚ್ಚಿನವರಿಗೆ ಮುಜುಗರ. + +(ತಮ್ಮಣ್ಣ ಬೀಗಾರ) + +ಹೀಗಾಗಿ ಮಕ್ಕಳ ಕಥೆಗಳು ಇಂದಿಗೂ ಅಡಗೂಲಜ್ಜಿಯ ಮಾದರಿಯಲ್ಲಿ, ಪಂಚತಂತ್ರದ ಹಳೆಯ ನಿರೂಪಣೆಯಲ್ಲಿಯೇ ಸಿಲುಕಿಕೊಂಡಿವೆ. ಆದರೆ ತಮ್ಮಣ್ಣ ಬೀಗಾರ, ಆನಂದ ಪಾಟೀಲ್, ಗಿರೀಶ್ ಜಕಾಪುರೆ, ಗಣೇಶ ನಾಡೋರಂತಹ ಕೆಲವೇ ಕೆಲವು ಮಕ್ಕಳ ಸಾಹಿತಿಗಳು ಇದರಲ್ಲೂ ಸೃಜನಶೀಲತೆಯನ್ನು ತರಲು ಪ್ರಯತ್ನಿಸಿ ಸಫಲರಾಗಿದ್ದಾರೆ. ಅಂತಹ ಸೃಜನಶೀಲ ಮಕ್ಕಳ ಕಥೆಗಾರರಲ್ಲೊಬ್ಬರಾದ ತಮ್ಮಣ್ಣ ಬೀಗಾರರ ‘ಉಲ್ಟಾ ಅಂಗಿ’ ಮಕ್ಕಳಿಗೆ ಬೇಕಾದ ವಾಸ್ತವವನ್ನು ತೆರೆದಿಡುವ ಜೊತೆಜೊತೆಗೇ ಫ್ಯಾಂಟಿಸಿಯನ್ನೂ ಕಟ್ಟಿಕೊಟ್ಟು ಮಕ್ಕಳ ಕುತೂಹಲವನ್ನು ತಣಿಸುವ ಪ್ರಯತ್ನ ಮಾಡುತ್ತಿರುವುದು ಕಾಣಿಸುತ್ತದೆ. + +ಮೊದಲ ಕಥೆ ‘ಯಾರು ಕೊಟ್ಟಿದ್ದು.’ ಇದು ಹಳ್ಳಿಯ ಬಡ ಮಕ್ಕಳ ವಾಸ್ತವಿಕತೆಯನ್ನು ತೆರೆದಿಡುತ್ತದೆ. ಹುಟ್ಟಿದ ದಿನದಂದು ಅಜ್ಜಿಯೇ ಆಸರೆಯಾಗಿ ಬದುಕುತ್ತಿರುವ ಸೌಮ್ಯಳಿಗೆ ಶಾಲೆಗ ಹಂಚಲು ಚಾಕ್ಲೇಟ್ ಡಬ್ಬ ತರಲು ಆಗದ ಬೇಸರ. ಹೀಗಾಗಿ ಹೊಸ ಅಂಗಿ ಹಾಕಿಕೊಂಡರೆ ಎಲ್ಲರಿಗೂ ಹುಟ್ಟಿದ ದಿನ ಎಂದು ಗೊತ್ತಾಗುತ್ತದೆ, ಆಗ ಚಾಕ್ಲೆಟ್ ಹಂಚಲು ಆಗುವುದಿಲ್ಲ ಎಂದು ನಿತ್ಯದ ಯುನಿಫಾರ್ಮ ಹಾಕಿ ಶಾಲೆಗೆ ಹೋದರೂ ಪ್ರಾರ್ಥನಾ ವೇಳೆಯಲ್ಲಿ ಮುಂದೆ ಕರೆಯಿಸಿ ಶಾಲಾ ಮಕ್ಕಳಿಂದ ಶುಭಾಶಯ ಹೇಳಿಸಿ ಪೆನ್ನು ಕೊಟ್ಟ ಶಿಕ್ಷಕರು, ‘ತಾನು ಚಾಕ್ಲೆಟ್ ಹೆಚ್ಚು ತಂದಿರುವೆ. ನನ್ನೊಂದಿಗೆ ಹಂಚಲು ಬಾ.’ ಎಂದು ಕರೆದ ರಂಜಿತಾ ಎಲ್ಲರೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಸಹೃದಯರೇ. ಕ್ಲಾಸಿನ ಒಳಗೆ ಹೋದರೆ ಬ್ಯಾಗ್ ನಲ್ಲಿ ಚಾಕ್ಲೆಟ್ ಪ್ಯಾಕ್. ತನ್ನದಲ್ಲದ ವಸ್ತು ಎಂದು ಹೆಡ್ಮಾಸ್ತರರಿಗೆ ಕೊಟ್ಟರೆ ‘ನಿನ್ನದೇ ಇದು, ಹಂಚಿ ಬಿಡು’ ಎನ್ನುವ ಗುರುಗಳು… ಓದಿದ ಕ್ಷಣಕ್ಕೆ ಮನಸ್ಸು ಆದ್ರವಾಗುತ್ತದೆ. + +ಎರಡನೇ ಕಥೆ ‘ಹೀಗೂ ಆಗುತ್ತದೆ.’ ಇದು ಪ್ರತಿ ಶಾಲೆಯ ಸಮಸ್ಯೆ. ಎಲ್ಲಾ ಶಾಲೆಯಲ್ಲೂ ಸುಬ್ಬುವಿನಂತಹ ಶಾಲೆ ತಪ್ಪಿಸುವ ಹುಡುಗನೊಬ್ಬ ಇದ್ದೇ ಇರುತ್ತಾನೆ. ಎರಡು ದಿನ ಬಂದರೆ ಒಂದು ವಾರ ಶಾಲೆ ತಪ್ಪಿಸುವವರು. ಈ ಕಥೆಯಲ್ಲಿ ಒಂದನೇ ತರಗತಿಯಿಂದಲೂ ಸುಬ್ಬುವಿಗೆ ಶಾಲೆಗೆ ಬರುವುದೆಂದರೆ ಅದೇನೋ ಬೇಸರ. ಆದರೆ ಶಿಕ್ಷಕರು ಬಿಡುವಂತಿಲ್ಲ. ಬಣ್ಣದ ಪೆನ್ಸಿಲ್, ಕಂಪಾಸ್ ಬಾಕ್ಸ್ ನ ಆಮಿಷ ತೋರಿಸಿ ಶಾಲೆಗೆ ಕರೆದುತರಲೇ ಬೇಕು. ಆದರೆ ಈ ವರ್ಷ ಮಾತ್ರ ಮೇ ರಜೆ ಕಳೆದು ಹದಿನೈದು ದಿನ ಕಳೆದರೂ ಸುಬ್ಬುವಿನ ಪತ್ತೆಯಿಲ್ಲ. ಆತನ ತಮ್ಮ ಶಾಲೆಗೆ ಬಂದರೂ ಸುಬ್ಬು ಮಾತ್ರ ಶಾಲೆಯ ಕಡೆ ತಿರುಗಿಯೂ ನೋಡಲಿಲ್ಲ. ಎಂದಿನಂತೆ ಆತನನ್ನು ಕರೆಯಲು ಹೋದ ಶಿಕ್ಷಕರಿಗೆ ಮುಖಕ್ಕೆ ಉಗಿದಂತೆ ಬಾಯಲ್ಲಿ ಗುಟ್ಕಾ ತುಂಬಿಕೊಂಡು ತಾನು ಶಾಲೆಗೆ ಬರುವುದಿಲ್ಲ ಎಂದು ಹೇಳಿಬಿಡುತ್ತಾನೆ. ಶಿಕ್ಷಕ ವೃತ್ತಿಯಲ್ಲಿರುವವರಿಗೆ ವಿಧೇಯ, ಬುದ್ಧಿವಂತ ಮಕ್ಕಳಿರುವಂತೆ ಇಂತಹ ಎದುರುತ್ತರ ಕೊಡುವ, ಅವಿಧೇಯ ವಿದ್ಯಾರ್ಥಿಗಳೂ ಇರುತ್ತಾರೆಂಬುದನ್ನು ಮರೆಯುವಂತಿಲ್ಲ. + + + +ಮೂರನೆ ಕಥೆ ‘ಉಲ್ಟಾ ಅಂಗಿ.’ ಹುಡುಗನೊಬ್ಬ ಉಲ್ಟಾ ಅಂಗಿ ಹಾಕಿಕೊಂಡು ಶಾಲೆಗೆ ಹೋಗುವ ಮತ್ತು ದಾರಿಯಲ್ಲಿ ಕಂಡಿದ್ದು ಕಾಡು ಪಾರಿವಾಳ ಅದರ ಕಾಲಿಗೆ ಉರುಳಂತೆ ಸಿಕ್ಕಿಕೊಂಡ ಬಳ್ಳಿಯಿಂದ ಅದನ್ನು ತಪ್ಪಿಸಲು ಹೋಗಿ ಮರಕ್ಕೆ ಅಂಟಿಕೊಂಡಿದ್ದ ಹಾವಸೆಯೆಲ್ಲ ಅಂಗಿಗೆ ಅಂಟಿ ನಂತರ ಅಂಗಿ ಉಲ್ಟಾ ಹಾಕಿಕೊಂಡು ಬಂದಿದ್ದೇ ಒಳ್ಳೆಯದಾಯ್ತು ಎನ್ನುವ ಕಥೆ. ನಾಲ್ಕನೆಯದ್ದು ‘ಕೆರೆಯಲ್ಲಿ ಮುಳುಗಿಸುವ ಹಾಗಿಲ್ವಾ….’ ಪ್ರತಿ ವರ್ಷದಂತೆ ಗಣಪತಿಯನ್ನು ಕೆರೆಗೆ ಮುಳುಗಿಸುವಂತಿಲ್ಲ ಎಂದು ತೀರ್ಮಾನ ಕೈಗೊಂಡ ಕುರಿತು ಮಕ್ಕಳ ಮಾತುಕಥೆ ಇರುವ ಕಥೆ ಇದು. ಕಥೆಯಲ್ಲಿ ಕೆರೆಯಲ್ಲಿ ಗಣಪನನ್ನು ಕೆರೆಯಲ್ಲಿ ಮುಳುಗಿಸುವುದರಿಂದ ಆಗುವ ಕೆಡಕುಗಳ ಬಗ್ಗೆ ಒಳ್ಳೆಯ ಮಾಹಿತಿಯನ್ನು ಮಕ್ಕಳ ಓದಿಗೆ ನಿಲುಕುವಂತೆ ಹೇಳಲಾಗಿದೆ. + +ಐದನೆಯ ಕಥೆ ಅಜ್ಜಿ ಮತ್ತು ಎಲೆ’ ಈ ಕಥೆಯಲ್ಲಿ ಅಪ್ಪ ಅಮ್ಮನಿಂದ ಬೇಸತ್ತ ಮಗ ಮತ್ತು ಅಜ್ಜಿ ಅವರನ್ನು ಒಂದಾಗಲು ಏನಾದರೂ ಮಾಡಬೇಕೆಂದು ಯೋಚಿಸುವ ಹಂದರವನ್ನು ಹೊಂದಿದೆ. ಕಾಡು ತಿರುಗಿ ಗಂಡ ಹೆಂಡಿರನ್ನು ಒಂದಾಗಿಸುವ ಎಲೆ ಹುಡುಕಿ ತರುವ ಅಜ್ಜಿ ಇಲ್ಲಿ ಬೆಸುಗೆಯ ಮಾಯಾವಿಯಂತೆ ಕಾಣುತ್ತಾರೆ. ಮುಂದಿನದ್ದು ‘ಗೀಜಗನ ಗೂಡಿನಿಂದ ಗೀಜಗನ ಮರಿ ಹೊರಕ್ಕೆ ಬಂತು.’ ಈ ಕಥೆಯಲ್ಲಿ ಓದಲು ಬರದ ಹುಡುಗನೊಬ್ಬ ಕಥೆ ಹೇಳಿ ಟೀಚರ್ನಿಂದ ಶಹಬ್ಬಾಸ ಪಡೆದು ಮುಂದೆ ಶಾಲೆಯ ಮುಖ್ಯೋಪಾಧ್ಯಾಯನಾದ ಕಥೆ ಇದೆ. ಪ್ರೀತಿಯಿಂದ ಹೇಳಿದರೆ ಮಕ್ಕಳೂ ಅರ್ಥ ಮಾಡಿಕೊಂಡು ಓದುತ್ತಾರೆ ಎನ್ನುವ ಕಿವಿಮಾತು ಇಲ್ಲಿದೆ. + +ಏಳನೆಯ ಕಥೆ ‘ರಾಡಿ ಅಂಗಿ.’ ಇಲ್ಲಿ ತಮ್ಮ ಮಕ್ಕಳು ಒಳ್ಳೆಯವರು, ಬೇರೆಯ ಮಕ್ಕಳೇ ದಾರಿ ತಪ್ಪಿಸುವುದು ಎನ್ನುವ ಅಮ್ಮಂದಿರಿಗೊಂದು ನೀತಿ ಇದೆ. ಪ್ರತಿದಿನ ಕಬ್ಬಡ್ಡಿ ಆಡಿ ಮೈಕೈ ಎಲ್ಲ ಕೆಸರು ಮಾಡಿಕೊಂಡು ಬರುವ ಮಗನನ್ನು ಕಂಡು ರೋಸಿ ಹೋದ ತಾಯಿಯೊಬ್ಬಳು ಅವನ ಸ್ನೇಹಿತರಿಗೆ ಇನ್ನು ಮುಂದೆ ಆಡಲು ಬರಬೇಡಿ ಎನ್ನುವುದು, ಆದರೆ ನಂತರ ಮಳೆಯಿಂದಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದವನನ್ನು ಸ್ನೇಹಿತರು ಹಿಡಿದು ಮೇಲೆ ತಂದಿದ್ದು ಎಲ್ಲವನ್ನೂ ಮನಮುಟ್ಟುವಂತೆ ಹೇಳಲಾಗಿದೆ. ಎಂಟನೆಯ ಕಥೆ ‘ರಾಜಣ್ಣನ ಹಾಗೆ’ ಇಲ್ಲಿ ಮೊಬೈಲ್ ನಿಂದಾಗಿ ಬರೀ ಕೆಲಸವಿಲ್ಲದ ಆಟದಲ್ಲಿ ತೊಡಗಿದ್ದ ಶ್ರೇಯಸ್ ಗೆ ಅವನ ದೊಡ್ಡಪ್ಪನ ಮಗ ರಾಜು ಮೊಬೈಲ್ ಲೋಕ ಬಿಟ್ಟು ಓದು, ಚಿತ್ರ ಬಿಡಿಸುವುದರ ಕುರಿತು ಹೇಳುವ ಮಾತುಗಳಿವೆ. ಈಗಿನ ಕಾಲದ ಮೊಬೈಲ್ ಗೆ ಅಂಟಿಕೊಂಡ ಮಕ್ಕಳೆಲ್ಲ ಓದಲೇಬೇಕಾದ ಕಥೆಯಿದು. + +ಒಂಬತ್ತನೆಯ ಕಥೆ ‘ಏನಾಯ್ತು’ ಮಾವಿನ ಮರದಲ್ಲಿ ಬಿಟ್ಟ ಹೊಂಬಣ್ಣದ ಮಾವಿನ ಹಣ್ಣಿಗೆ ಆಸೆ ಪಟ್ಟ ಮೊಮ್ಮಗನೊಬ್ಬನ ಆಸೆ ಈಡೇರಿಸಲು ಹೋಗಿ ಅಜ್ಜಿಯೊಬ್ಬಳು ಕಾಲು ಮುರಿದುಕೊಂಡ ಕಥೆ ಇಲ್ಲಿದೆ. ಆದರೆ ತನ್ನಿಂದಾಗಿ ಅಜ್ಜಿಯ ಕಾಲು ಮುರಿದಿದೆ ಎನ್ನುವ ಗಿಲ್ಟ್ ಇರುವ ಮೊಮ್ಮಗ ರವಿವಾರ ಅಜ್ಜಿಯ ಜೊತೆ ಕುಳಿತು ಅವಳ ಬೇಸರದ ಸಮಯವನ್ನು ಕಳೆಯಲು ಯೋಚಿಸುವುದು ಕೂಡುಕುಟುಂಬದ ಖುಷಿಯನ್ನು ಹೇಳುತ್ತದೆ. ಹತ್ತನೆಯದ್ದು ‘ನಮ್ಮ ಹಿಂದೇ ಹೊರಟಿದ್ದರು.’ ಓದಲು ಬರೆಯಲು ಅಷ್ಟೇನೂ ಜಾಣನಲ್ಲದವ ಬಾಯಿಲೆಕ್ಕ, ಪರಿಸರ ಪ್ರಜ್ಞೆಯ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಶಂಸಿದ್ದರ ಕುರಿತಿದೆ. + +ಹನ್ನೊಂದನೆಯ ಕಥೆ ‘ಯಾರ ತಪ್ಪು’ ಜೇಡಿ ಮಣ್ಣಿನಿಂದ ಆಕೃತಿಗಳನ್ನು ಮಾಡುವ ಸ್ಪಧೆಗಾಗಿ ಮಣ್ಣು ತರಲು ಕೆರೆಗೆ ಹೋದ ಮಕ್ಕಳ ಕುರಿತಾಗಿ ಈ ಕಥೆಯಲ್ಲಿದ್ದರೆ ಹನ್ನೆರಡನೆಯ ಕಥೆ ‘ಎಲ್ಲಾ ಮರೆತು’ ವಿನಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳನ್ನು ಸುಮ್ಮನಿರಿಸುವ ಸಲುವಾಗಿ ಮೊಬೈಲ್ ನೀಡಿ, ನಂತರ ಮೊಬೈಲ್ ಆಟ ಬಿಡಿಸಲು ಮಕ್ಕಳಿಗೆ ಬೈಯ್ಯುವ ಕಥೆ ಇದೆ. ಹದಿಮೂರನೆಯ ಕಥೆ ‘ಆಣೆಕಟ್ಟು’ ಇಲ್ಲಿ ಆಣೆಕಟ್ಟು ಕಟ್ಟಿ ತಮ್ಮ ಮನೆಮಠಗಳನ್ನು ಕಳೆದುಕೊಳ್ಳುವ ಚಿಕ್ಕ ಮಕ್ಕಳ ನೋವಿದೆ. ಮನೆಯನ್ನು ಕಳೆದುಕೊಳ್ಳುವುದಕ್ಕಿಂತ ಅವರು ಶಾಲೆ ಮುಳುಗಿ ಹೋಗುತ್ತದೆ ಎಂದು ದುಃಖಿಸುವುದು ಮನಕಲಕುತ್ತದೆ. + +ಹದಿನಾಲ್ಕನೆಯ ಕಥೆಯಲ್ಲಿ ‘ಅಜ್ಜನಾಗುವವರೆಗು…’ ಇಲ್ಲಿ ತೀರಿಹೋಗಿ, ಫೋಟೊದಲ್ಲಿರುವ ಅಜ್ಜನೊಬ್ಬ ಮೊಮ್ಮಗನ ವೇಶ ಧರಿಸಿ, ತನ್ನ ವಯಸ್ಸನ್ನು ಮೊಮ್ಮಗನಿಗೆ ನೀಡಿ ಊರನ್ನೆಲ್ಲ ತಿರುಗಿಸಿ ಪರಿಸರ ಸಂರಕ್ಷಣೆಯ ಬಗ್ಗೆ ತಿಳಿಹೇಳುವ ಕಥೆ ಇದೆ. ಹದಿನೈದನೆಯದ್ದು ‘ಹೊಳೆಯುವ ಕಲ್ಲು’ ಒಂದು ಬಾಹ್ಯಾಕಾಶದ ಕಾಲ್ಪನಿಕ ಕಥೆ. ತನ್ನ ಅಪ್ಪ ಗಗನಯಾತ್ರಿ ಎಂದುಕೊಳ್ಳುತ್ತ ತಾನು ಬಾಹ್ಯಾಕಾಶಕ್ಕೆ ಹೋದ ಕಥೆಯನ್ನು ಹೇಳುವ ಪುಟ್ಟ ಬಾಲಕನೊಬ್ಬನ ಕಲ್ಪನೆ ಕುತೂಹಲ ಹುಟ್ಟಿಸುವುದರ ಜೊತೆಜೊತೆಗೇ ಎಲ್ಲಿ ಹೋದರೂ ತಮ್ಮದಲ್ಲದ ವಸ್ತುವಿಗೆ ಆಸೆ ಪಡಬಾರದು ಎಂಬುದನ್ನು ತಿಳಿಸಿದೆ. + + + +ಇಲ್ಲಿನ ಕಥೆಗಳು ಕೇವಲ ಮನೋರಂಜನೆಗಾಗಿ ಮಾತ್ರವಲ್ಲ, ಪರಿಸರ, ವೈಜ್ಞಾನಿಕ, ಕೌಟುಂಬಿಕ ವಿಷಯವಾಗಿಯೂ ಮಕ್ಕಳನ್ನು ಯೋಚಿಸುವಂತೆ ಮಾಡುವುದರಲ್ಲಿ ಸಫಲವಾಗುತ್ತವೆ. ಮಕ್ಕಳ ಕಥೆಗಳು ಕೇವಲ ಮನರಂಜನೆಗಾಗಿ ಮಾತ್ರವಲ್ಲದೇ ಮಕ್ಕಳು ಹೇಗಿರಬೇಕು ಎಂಬುದನ್ನು ಸೂಕ್ಷ್ಮವಾಗಿ ತಿಳಿಸಿಕೊಡಬೇಕು ಎಂಬುದನ್ನು ತಿಮ್ಮಣ್ಣ ಬೀಗಾರ ತಮ್ಮ ಕಥೆಗಳ ಮೂಲಕವೇ ತೋರಿಸಿಕೊಟ್ಟಿದ್ದಾರೆ. ಇಂತಹ ಕಥೆಗಳು ಇನ್ನೂ ಹೆಚ್ಚು ಹೆಚ್ಚು ಬರಲಿ. ಮಕ್ಕಳ ಕಥಾ ಲೋಕ ಸಮೃದ್ಧಿಯಾಗಿ ವಾಸ್ತವತೆಯತ್ತ ಮುಖ ಮಾಡಲಿ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_281.txt b/Kenda Sampige/article_281.txt new file mode 100644 index 0000000000000000000000000000000000000000..fd033bb982c7adba9b395367ac92459687e11c38 --- /dev/null +++ b/Kenda Sampige/article_281.txt @@ -0,0 +1,35 @@ + + +ತನ್ನ ಸುತ್ತಣ ಲೋಕದ ವಿದ್ಯಮಾನಗಳನ್ನು ಸೂಕ್ಮವಾಗಿ ಅವಲೋಕಿಸುವ ಗುಣವನ್ನು ಮೈಗೂಡಿಸಿಕೊಂಡಿರುವ ಲಕ್ಷ್ಮಣ ಬಾದಾಮಿ ಅವರು ನಮ್ಮ ನಡುವಿನ ಸಮರ್ಥ ಕಥೆಗಾರರು. ತಮ್ಮ ಬದುಕಿನ ತಿಳುವಳಿಕೆಯಿಂದಾಗಿ ಅವರೊಳಗೆ ರೂಪುಗೊಂಡಿರಬಹುದಾದ ತಾತ್ವಿಕತೆಯ ಹಿನ್ನೆಲೆಯಲ್ಲಿಯೇ ಲೋಕಾನುಭವಗಳನ್ನು ವಾಸ್ತವದ ಪ್ರತಿಕೃತಿಯಾಗಿ ಚಿತ್ರಿಸದೇ, ಅವೆಲ್ಲವುಗಳನ್ನು ಮರುಸೃಷ್ಟಿ ಮಾಡುವುದರ ಮೂಲಕ ನಾವು ಕಾಣದ ಹೊಸದೊಂದು ಲೋಕವನ್ನು ಕಥೆಯೊಳಗೆ ತೆರೆದಿಡುತ್ತಾರೆ. + +ಸಧ್ಯ, ಕಥೆಗಾರ ಲಕ್ಷ್ಮಣ ಬಾದಾಮಿ ಅವರು ಮನುಷ್ಯ ಬದುಕಿನ ವಿವಿಧ ಮಗ್ಗುಲಗಳನ್ನು ಪ್ರತಿಫಲಿಸುವಂಥ, ಮಾನವೀಯ ಸಂಬಂಧಗಳ ನೆಲೆಗಳನ್ನು ಶೋಧಿಸುವ ಹತ್ತು ಕಥೆಗಳನ್ನೊಳಗೊಂಡ ‘ಒಂದು ಚಿಟಿಕೆ ಮಣ್ಣು’ ಎಂಬ ಕಥಾಸಂಕಲನವನ್ನು ಹೊರ ತಂದಿದ್ದಾರೆ. ಈ ಸಂಕಲನದ ಮೊದಲ ಕಥೆ ‘ಕಾಣುವ ಕಣ್ಣು’, ಸಾಂಪ್ರದಾಯಿಕವಾದ, ಶೂನ್ಯ ಬಂಡವಾಳದ ಸಹಜ ಮತ್ತು ಸಾವಯವ ಕೃಷಿ ಪದ್ಧತಿಯ ಮಹತ್ವದ ಕುರಿತು ಮಾತನಾಡುತ್ತದೆ. ಜೊತೆಗೆ, ಅವಸರದಲ್ಲಿ ಬೆಳೆ ತೆಗೆದು, ಹಣ ಮಾಡಬೇಕೆಂಬ ದುರಾಲೋಚನೆಯಲ್ಲಿ ಈ ದೇಶದ ರೈತನು ಸುಧಾರಿತ ಬೀಜ, ರಸಗೊಬ್ಬರ, ಕ್ರಿಮಿನಾಶಕ ಅಂತೆಲ್ಲ ಅವುಗಳ ಬೆನ್ನು ಬಿದ್ದು ಕಮ್ಮೀ ಅವಧಿಯಲ್ಲಿ ಬೆಳೆ ತೆಗೆಯುವ ಧಾವಂತಕ್ಕೆ ಸಿಲುಕಿ ಒಂದರ್ಥದಲ್ಲಿ ಭೂತಾಯಮ್ಮನ ಮೇಲೆ ಅತ್ಯಾಚಾರವನ್ನು ಎಸಗುತ್ತಿದ್ದಾನೆ ಎಂದು ಕಳಕಳಿಯನ್ನು ವ್ಯಕ್ತಪಡಿಸುತ್ತದೆ. + +ಹಾಗೆ ನೋಡಿದರೆ, ಭೂತಾಯಮ್ಮನ ಮಡಿಲೊಳಗೆ ಬೀಜ ಮೊಳಕೆಯೊಡೆಯುವುದು, ಚಿಗುರೊಡೆಯುವುದು ಮತ್ತು ಬೆಳೆಯಾಗುವುದು- ಈ ಇಂಥ ಕ್ರಿಯೆಗಳೆಲ್ಲ ಪ್ರಕೃತಿಯೊಳಗೆ ಸಂಭವಿಸುವ ಸಹಜ ಕ್ರಿಯೆಗಳು! ಬೀಜ ಅಂಕುರಿಸುವ ಕಾರ್ಯ ತಾಳ್ಮೆಯಿಂದ, ತಾಧ್ಯಾತ್ಮದಿಂದ ನಡೆಯಬೇಕು. ಆಗಲೇ ರೈತನ ಬಾಳು ಬಂಗಾರವಾಗುವುದು ಎಂಬುದು ಈ ಕಥೆಯ ತಾತ್ವಿಕತೆಯೂ ಕೂಡ ಆಗಿದೆ. + +(ಲಕ್ಷ್ಮಣ ಬಾದಾಮಿ) + +ಇಲ್ಲಿ, ಕಥೆಯ ಮುಖ್ಯಪಾತ್ರ ಸಿದ್ದಪ್ಪ, ಈ ದೇಶದ ಮಧ್ಯಮ ವರ್ಗದ ರೈತರ ಬದುಕನ್ನು ಪ್ರತಿನಿಧಿಸುತ್ತಾನೆ. ತಲೆಮಾರಿನಿಂದ ಬಂದ ನಾಲ್ಕು ಎಕರೆ ಭೂಮಿಯನ್ನು ಸರಿಯಾಗಿ ಹದ ಮಾಡುವ ಪದ್ಧತಿ ಅರಿಯದೇ, ಪದೇಪದೇ ನಷ್ಟವನ್ನು ಅನುಭವಿಸಿ, ವ್ಯವಸಾಯವೆಂದರೆ ಹಿಂಜರಿಯಲಾರಂಭಿಸುತ್ತಾನೆ. ಇದರೊಂದಿಗೆ, ಆತ, ತನ್ನ ಮಗ ಕಲ್ಲಪ್ಪ ಒಕ್ಕಲುತನವನ್ನು ಮುಂದುವರೆಸುವುದು ಬೇಡವಾಗಿರುವುದಕ್ಕೆ ಆತನಿಗೆ ಸಹಜವಾದ ಕೃಷಿ ವಿಧಾನದ ಅರಿವು ಇಲ್ಲದಿರುವುದೂ ಸಹ ಒಂದು ಕಾರಣವಾಗಿದೆ. ಹೀಗಾಗಿ, ಆತ ಸಹಜವಾಗಿಯೇ ತನ್ನ ಮಗ ನೌಕರಿ ಮಾಡಲಿ ಎಂದು ಬಯಸುತ್ತಾನೆ. ಅದು ಆತನ( ಸಿದ್ದಪ್ಪ) ಅನಿವಾರ್ಯ ಕಾರಣ ಪ್ರೇರಿತ ಬಯಕೆಯಾಗಿರುವುದು, ಅದಕ್ಕೆಲ್ಲ ಆತ ಅನುಸರಿಸಿದ ಅವೈಜ್ಞಾನಿಕ ಕೃಷಿ ಪದ್ಧತಿಯೇ ಪರೋಕ್ಷವಾಗಿ ಕಾರಣವಾಗುವುದು ಪರಿಸ್ಥಿತಿಯ ವ್ಯಂಗದಂತಿದೆ. + +ಕಡೆಗೂ ಇದೆಲ್ಲವನ್ನೂ ಮೀರಿ ತನ್ನಪ್ಪ ಸಿದ್ದಪ್ಪನ ಆಶೆಗೆ ವಿರುದ್ಧವಾಗಿ ಸರಕಾರಿ ನೌಕರಿಯಿಂದ ವಿಮುಖನಾಗಿ ವ್ಯವಸಾಯದತ್ತ ಮುಖ ಮಾಡುವುದು ಒಂದರ್ಥದಲ್ಲಿ ಈ ಲೋಕಕೆ ಅನ್ನವನ್ನು ನೀಡುವ ರೈತನೇ ಎಲ್ಲಕ್ಕೂ ಮಿಗಿಲು ಎಂಬ ಮಾತನ್ನು ಪುಷ್ಟೀಕರಿಸುತ್ತದೆ. ಮತ್ತು, ಕಥೆಯುದ್ದಕ್ಕೂ ರೈತ ಕುಟುಂಬವೊಂದರ ಭೂಮಿಯೊಂದಿಗಿನ ಸಂಬಂಧ ಹಾಗೂ ರೈತರ ಬದುಕನ್ನು ಕಥೆಗಾರ ಆರ್ದ್ರವಾಗಿ ಕಟ್ಟಿಕೊಟ್ಟಿದ್ದಾರೆ. + +ಇನ್ನು, ರಾಜಕೀಯ ವ್ಯವಸ್ಥೆಯನ್ನು ನಿಯಂತ್ರಿಸುವಷ್ಟರ ಮಟ್ಟಿಗೆ ಪ್ರಭಾವಶಾಲಿಯಾಗಿರುವ ಈ ನಾಡಿನ ಮಠ ಮಾನ್ಯಗಳು ಮುಗ್ಧ ಭಕ್ತರನ್ನು ಹೇಗೆಲ್ಲ ವಂಚಿಸುತ್ತವೆ ಎಂಬುದಕ್ಕೆ ಉದಾಹರಣೆಯಾಗಿ ಕಥೆಗಾರ ಲಕ್ಷ್ಮಣ, ‘ಆಶೀರ್ವಾದ’ ಎಂಬ ಕಥೆಯನ್ನು ಹೆಣೆದಿದ್ದಾರೆ. ಈ ದೇಶದಲ್ಲಿ ಎಲ್ಲವೂ ಕೂಡ ನಂಬಿಕೆ ಹಾಗೂ ಆಚರಣೆಗಳ ನೆಲೆಯ ಮೇಲೆಯೇ ನಿಂತಿರುವ ಕಾರಣವಾಗಿಯೇ ರಾಜಕಾರಣಿಗಳು ಮಠ ಮಾನ್ಯಗಳನ್ನು ಬ್ಯಾಂಕುಗಳನ್ನಾಗಿ ಮಾಡಿಕೊಂಡಿರಬಹುದಾದ ಸಾಧ್ಯತೆಯ ಬಗ್ಗೆ ಈ ಕಥೆ ವಿವರಿಸುತ್ತದೆ. ಹಾಗೆಯೇ, ಇಂದು ಧರ್ಮವನ್ನು ಎತ್ತಿ ಹಿಡಿಯಬೇಕಾಗಿರುವ ಮಠಾಧಿಪತಿಗಳು ತಮ್ಮ ತಮ್ಮ ಶ್ರೀಮಠಗಳ ಮುಗ್ಧ ಭಕ್ತಾದಿಗಳನ್ನು ಮುಂದಿಟ್ಟುಕೊಂಡು ಅಧಿಕಾರದ ಗದ್ದುಗೆಯ ವ್ಯಾಮೋಹವನ್ನು ಬೆಳೆಸಿಕೊಂಡು ಧರ್ಮಭ್ರಷ್ಟರಾಗುತ್ತಿರುವ ಬಗ್ಗೆ ಹಲವು ಮಗ್ಗುಲಗಳನ್ನು ಪರಾಮರ್ಶಿಸುತ್ತದೆ. + + + +ಈ ಕಥೆಯಲ್ಲಿ ಬರುವ ಸಿರಿಪುರ ಎಂಬ ಗ್ರಾಮ, ನೈತಿಕತೆಯ ಪಾತಳಿಯನ್ನು ಮೀರಿದ ಇಂಥ ಕ್ರಿಯೆಗಳಿಗೆ ಸಾಕ್ಷಿಯಾಗಿ ನಿಲ್ಲುವುದರ ಮೂಲಕ ನಮ್ಮ ದೇಶದಲ್ಲಿ ರಾಜಕಾರಣ ಎಂಬುದು ಧರ್ಮ ಮತ್ತು ಭಕ್ತಾದಿಗಳ ಮೌಢ್ಯತೆಯೊಂದಿಗೆ ಥಳಕು ಹಾಕಿಕೊಂಡಿರುವ ವಿಚಾರಕ್ಕೆ ಪ್ರತಿಮೆಯಂತಿದೆ. + +ಈ ಸಂಕಲನದ ಶೀರ್ಷಿಕೆಯೂ ಆಗಿರುವ ‘ಒಂದು ಚಿಟಿಕೆ ಮಣ್ಣು’ ಕಥೆ, ಇಡಿಯಾಗಿ ಭೂಮಿಯನ್ನು ಕಾಂಕ್ರೀಟ್ ಕಾಡಾಗಿಸುವುದರ ಮೂಲಕ ಅದರ ಸ್ವರೂಪವನ್ನು ವಿಕಾರಗೊಳಿಸುತ್ತಿರುವ ಮನುಷ್ಯನ ಸ್ವಾರ್ಥ ಮನೋಸ್ಥಿತಿಯ ಮೇಲೆ ಬೆಳಕು ಚೆಲ್ಲುತ್ತದೆ. ಕಥೆಯಲ್ಲಿ ಬರುವ ಕಲ್ಲಪ್ಪನಿಗಿರುವ ಮಣ್ಣು ತಿನ್ನುವ ಹವ್ಯಾಸದ ಮೂಲಕ ಅನ್ನ ಬೆಳೆಯುವ ಭೂಮಿಯ ಮಹತ್ವವನ್ನು ಕಥೆಗಾರ ಸಾರುತ್ತಾನೆ. ಇಂಚಿಂಚೂ ಬಿಡದಂತೆ ಭೂಮಿಯನ್ನು ಆಕ್ರಮಿಸಿಕೊಂಡಿರುವ ಕಾಂಕ್ರೀಟ್ ಕಟ್ಟಡಗಳು, ಭವಿಷ್ಯದಲ್ಲಿ ಅನ್ನವನ್ನು ಬೆಳೆಯಲು ಭೂಮಿಯೇ ಇಲ್ಲದಂತಾಗಬಹುದಾದ ಅಪಾಯದ ಮುನ್ಸೂಚನೆಯನ್ನು ಈ ಕಥೆ ನೀಡುತ್ತದೆ! ಪಟ್ಟಣ ಪ್ರದೇಶಗಳಿಗಷ್ಟೇ ಸೀಮಿತವಾಗಿದ್ದ ರಿಯಲ್ ಎಸ್ಟೇಟ್ ಉದ್ಯಮ ಈಗ ಪ್ರತೀ ಹಳ್ಳಿಗೂ ಕಾಲಿಟ್ಟಿರುವುದು ವಿಪರ್ಯಾಸದ ಸಂಗತಿ. ಅನ್ನ ಬೆಳೆಯಲು ಭೂಮಿಯೇ ಇಲ್ಲವಾದರೆ ಮುಂದಿನ ಸ್ಥಿತಿ ಹೇಗಿರಬಹುದು?- ಎಂದು ಯೋಚಿಸಿದಾಗ ಮನುಷ್ಯನ ಸ್ವಾರ್ಥ ಗುಣಕ್ಕೆ ಮುಂದೊಮ್ಮೆ ಪ್ರಕೃತಿಯೇ ಪಾಠ ಕಲಿಸುತ್ತದೆ ಎಂಬುದು ಇಡಿಯಾಗಿ ಕಥೆಯ ಆಶಯವಾಗಿದೆ. + +ಈ ಸಂಕಲನದಲ್ಲಿರುವ ‘ಈ ಪಯಣ ಮುಗಿಯುವುದಿಲ್ಲ’ ಎಂಬ ಕಥೆ, ತಾನು ಪಯಣಿಸುವ ದಾರಿಯಲ್ಲಿ ಅನುಭವಕ್ಕೆ ಬಂದ ಸಹ ಪ್ರಯಾಣಿಕರ ಬದುಕಿನಲ್ಲಿನ ಸಂಭ್ರಮ, ಸಂತಸ, ಸಂಕಟ, ಸಾವು, ನೋವು, ಅಗಲಿಕೆ, ಅಸಂಗತ ಜೀವನಕ್ರಮ- ಇತ್ಯಾದಿಗಳ ಕುರಿತಾಗಿ ಕಥೆಗಾರನಿಗೆ ಆದ ಅನುಭವಗಳ ವಿವರಣೆಯನ್ನು ನೀಡುತ್ತ, ಅವುಗಳ ಕುರಿತಾದ ವಿಷಣ್ಣತೆಯ ಭಾವವನ್ನು ಓದುಗನ ಮನದಲ್ಲಿ ಮೂಡಿಸುತ್ತ ಹೋಗುತ್ತದೆ. ಹಾಗೆ ನೋಡಿದರೆ, ಇಡಿಯಾಗಿ ಕಥೆಯು ಕ್ರಿಕೆಟ್ ಕಾಮೆಂಟರಿಯಂತೆ ವಿವರಣೆಯನ್ನು ಕೊಡುತ್ತ ಹೋಗುತ್ತದೆಯಾದರೂ ಮನುಷ್ಯನ ಎಂದೂ ಮುಗಿಯದ ಬದುಕಿನ ಪಯಣದಲ್ಲಿ ಮುಖಾಮುಖಿಯಾಗುವ ಇಂಥ ಕ್ಷುಲ್ಲಕ ಅನುಭವಗಳನ್ನು ಸಮಯ ಕೊಟ್ಟು ಮುಟ್ಟಿ ತಟ್ಟಿ ಮಾತಾಡಿಸಿದ ಅನುಭವವಾಗುತ್ತದೆ. + +ಹಾಗೆಯೇ, ‘ಜೀವ ದನಿಗಳು’ ಎಂಬ ಕಥೆ, ಹಸಿವು ಮತ್ತು ಕ್ರೌರ್ಯದ ಕುರಿತಾಗಿ ಮಾತನಾಡುತ್ತದೆ. ಹಸಿವನ್ನು ನೀಗಿಸಿಕೊಳ್ಳುವುದು ಈ ಲೋಕದ ಸಕಲ ಜೀವಿಗಳ ಹಕ್ಕು ಮತ್ತು ಉದ್ದೇಶವಾಗಿದ್ದರೂ ಸಹ ವಿವೇಕಿಯಾಗಿರುವ ಮನುಷ್ಯ ಇಂಥ ಸಂದರ್ಭದಲ್ಲೂ ಸಹ ಹೇಗೆಲ್ಲ ಕ್ರೌರ್ಯವನ್ನು ಮೆರೆಯುತ್ತಾನೆ ಎಂಬ ವಿಚಾರಕ್ಕೆ ಪ್ರತಿಮೆಯಾಗಿ ಇಲ್ಲಿ ಸಂಭವಿಸುವ ಘಟನೆಗಳು ಬರುತ್ತವೆ. ಅಸಹಾಯಕ ಸ್ಥಿತಿಯಲ್ಲಿರುವ ತಾಯಿ ಮಗ ಏನಕೇನ ಕಾರಣಗಳಿಂದಾಗಿ ದುರಗಮ್ಮನಿಗೆ ಬಲಿ ಕೊಡಲು ಕೊಟ್ಟಿದ್ದ ಹೋತದ ಮರಿಯನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟ ಮನುಷ್ಯನ ಕ್ರೌರ್ಯಕ್ಕೆ ಕನ್ನಡಿ ಹಿಡಿಯುತ್ತದೆ! + +ಅಲ್ಲದೇ, ಈ ಸಂಕಲನದಲ್ಲಿ ‘ಆಶೀರ್ವಾದ’ ಮತ್ತು ‘ಮಠದ ದಾರಿ’ ಎಂಬ ಎರಡು ಕಥೆಗಳಿದ್ದು, ಇವೆರಡೂ ಕಥೆಗಳು ಧರ್ಮದ ಹಿನ್ನೆಲೆಯಲ್ಲಿ ಸ್ವಾರ್ಥ ಕಾರಣವಾಗಿ ಕಳೆದು ಹೋದ ನೈತಿಕತೆಯನ್ನು ಶೋಧಿಸುತ್ತವೆ. ‘ಆಶೀರ್ವಾದ’ ಕಥೆಯಲ್ಲಿ, ಮಠದ ಭಕ್ತನಿಗೆ ಸಲ್ಲಬೇಕಾದ ಸನ್ಮಾನ ಸಲ್ಲದೇ, ತೀರ ಅನಿರೀಕ್ಷಿತವಾಗಿ ಆ ಕ್ಷೇತ್ರದ ಎಮ್ಮೆಲ್ಲೆಗೆ ಸಂದುಹೋಗುವುದರ ಮೂಲಕ ಮಠ ಮಾನ್ಯಗಳು ಅಧಿಕಾರದ ಗದ್ದುಗೆಯನ್ನು ಗೌರವಿಸುವುದಕ್ಕಾಗಿ ತನ್ನ ಭಕ್ತಾದಿಗಳನ್ನು ಹೇಗೆಲ್ಲ ಕಡೆಗಣಿಸುತ್ತವೆ ಎಂಬುದರ ವ್ಯಂಗ್ಯವಿದೆ. ‘ಮಠದ ದಾರಿ’ ಕಥೆ, ಅಭಿವೃದ್ಧಿಯ ನೆಪದಲ್ಲಿ ಬದಲಾದ ಧಾರ್ಮಿಕ ಧೋರಣೆಗಳ ಕುರಿತು ವಿವರಿಸುತ್ತದೆ. + +ಇಲ್ಲೂ ಒಂದು ಮಠವಿದೆ. ಈ ಮಠಕ್ಕೂ ಧರ್ಮದ ದಾರಿ ತಪ್ಪಿಸಿದ ಕಳಂಕವಿದೆ. ಮನಃಶಾಂತಿಯನ್ನು ಅರಸಿ ಈ ಮಠಕ್ಕೆ ಬರುವ ಭಕ್ತನಿಗೆ ಇದೆಲ್ಲವನ್ನು ಮೀರಿ ಮಠವೇ ಶಾಲೆಯಾದ ಬಗ್ಗೆ ಸಮಾಧಾನವಿದೆ. ತಾನು ಸಂಗ್ರಹಿಸಿದ ಹಣವನ್ನು ಆ ಶಾಲೆಗೆ ನೀಡುವುದರ ಮೂಲಕ ಧಾರ್ಮಿಕ ವಿಚಾರಕ್ಕೆ ಹೊಸ ಭಾಷ್ಯವನ್ನು ಬರೆಯುತ್ತಾನೆ. ಹೀಗೆ, ಹೊಸದೊಂದು ಆಯಾಮದಲ್ಲಿ ಧರ್ಮವನ್ನು ನೋಡಿರುವುದು ಕಥೆಯ ಶಕ್ತಿಯೂ ಹೌದು. + + + +ಈ ಸಂಕಲನದ ಎಲ್ಲ ಕಥೆಗಳು ಒಂದಿಲ್ಲೊಂದು ಕಾರಣದಿಂದಾಗಿ ಆಪ್ತವಾಗುತ್ತವೆ. ಇಲ್ಲಿ ಬಳಸಿರುವ ನುಡಿಗಟ್ಟುಗಳು, ಶರಣರ ವಚನಗಳು ಕಥೆಗಳ ತೂಕವನ್ನು ಹೆಚ್ಚಿಸಿವೆ. ಕಥೆಗಾರ ಲಕ್ಷ್ಮಣ, ಚಿತ್ರ ಕಲಾವಿದನಾಗಿರುವುದರಿಂದಾಗಿ ತನ್ನ ಸುತ್ತಣ ಲೋಕದಲ್ಲಿ ಅನುಭವಕ್ಕೆ ಬಂದ ಸಂಗತಿಗಳನ್ನು ಈ ಕಥೆಗಳಲ್ಲಿ ಒಂದು ಅಪೂರ್ವವಾದ ಕಲಾಕೃತಿಯಂತೆ ಅರಳಿಸಿದ್ದಾರೆ. ಈ ನಿಟ್ಟಿನಲ್ಲಿ ಲಕ್ಷ್ಮಣ ಬಾದಾಮಿ ಅವರು ಅಭಿನಂದನಾರ್ಹರು. + +ಕಲ್ಲೇಶ್ ಕುಂಬಾರ್ ಮೂಲತಃ ಬೆಳಗಾವಿ ಜಿಲ್ಲೆಯ ಹಾರೂಗೇರಿಯವರು. ಸಧ್ಯ, ಬಾಗಲಕೋಟ ಜಿಲ್ಲೆಯ ತೇರದಾಳದ ಶಾಖಾ ಗ್ರಂಥಾಲಯದಲ್ಲಿ ಗ್ರಂಥಪಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಉರಿಯ ನಾಲಗೆಯ ಮೇಲೆ’, ‘ಉಸುರಿನ ಪರಿಮಳವಿರಲು’, ‘ನಿಂದ ನಿಲುವಿನ ಘನ’ ಇವರ ಪ್ರಕಟಿತ ಕಥಾಸಂಕಲನಗಳು. ‘ಪುರುಷ ದಾರಿಯ ಮೇಲೆ’ ಕವನಸಂಕಲನದ ಪ್ರಕಟಣೆ. \ No newline at end of file diff --git a/Kenda Sampige/article_282.txt b/Kenda Sampige/article_282.txt new file mode 100644 index 0000000000000000000000000000000000000000..c829f9db60a0ac1733561617c72f1b51eb0a0c37 --- /dev/null +++ b/Kenda Sampige/article_282.txt @@ -0,0 +1,207 @@ + + +ಮುತ್ತಯ್ಯ ವಿಶಾಲವಾಗಿ ಹರಡಿಕೊಂಡಿರುವ ತನ್ನ ಮನೆಯ ಅಂಗಳದಲ್ಲಿ ಒಬ್ಬನೆ ಕೂತು ಆಕಾಶ ನೋಡುತ್ತಾ, ಬಲಗೈಯ ಕಿರುಬೆರಳನ್ನು ಬಲಕಿವಿಯೊಳಗೆ ಇಟ್ಟುಕೊಂಡು ಜೋರಾಗಿ ಅಲುಗಾಡಿಸಿ ಪೂರ್ತಿ ಒಣಗಿಲ್ಲದ ಕುಗುಣೆಯನ್ನು ಎಡಗೈಯ ಹೆಬ್ಬೆರಳು ಮತ್ತು ತೋರುಬೆರಳಗಳ ನಡುವೆ ಇಟ್ಟು ಉಂಡೆ ಉಂಡೆ ಮಾಡಿ ಚಿಮ್ಮುತ್ತಿದ್ದ. ಅವನ ಮೂಗಿಗೆ ಮನೆಯಿಂದ ಸ್ವಲ್ಪದೂರದಲ್ಲಿಯೇ ಇದ್ದ ತನ್ನ ಒಂದೂವರೆ ಎಕರೆ ಎಲೆ ತೋಟದಿಂದ ಕಮ್ಮನೆ ವಾಸನೆ ಮೂಗಿಗೆ ಬಡಿಯುತ್ತಿತ್ತು. ಅದು ತನ್ನ ಉಸಿರಿನ ಒಂದು ಭಾಗವಾಗಿದ್ದುದರಿಂದಲೋ ಏನೋ ಅದನ್ನು ಅಷ್ಟಾಗಿ ಅನುಭವಿಸುತ್ತಿರುವಂತೆ ಕಾಣುತ್ತಿರಲಿಲ್ಲ. ಅಥವಾ ಆ ಕ್ಷಣದಲ್ಲಿ ಅವನ ತಲೆತುಂಬ ತನ್ನ ಮಗಳು ಸಾವಿತ್ರಿ ತುಂಬಿ ಹೋಗಿದ್ದಳು. + +ಎರಡು ವರ್ಷಗಳ ಹಿಂದೆ ಮೈನೆರದಿದ್ದ ಅವಳನ್ನು ಸುತ್ರಾಮು ಕಾಲೇಜಿಗೆ ಕಳಿಸುವುದಕ್ಕೆ ಇಷ್ಟವಿಲ್ಲದಿದ್ದರೂ ತನ್ನ ಹೆಂಡತಿ ಸುಜಾತಳ ಒತ್ತಾಯಕ್ಕೆ ಮಣಿದು ಕಾಲೇಜಿಗೆ ಕಳುಹಿಸಿದ್ದ. ಆದರೆ ಸಾವಿತ್ರಿ ಡಿಸ್ಟಿಂಕ್ಷನ್ನಲ್ಲಿ ಪಾಸೂ ಆಗಿ ತನಗೆ ಹೇಳದೆ ಎಂಟ್ರೆನ್ಸ್ ಬರೆದು ಒಳ್ಳೆಯ ರ್ಯಾಂಕ್ ಗಿಟ್ಟಿಸಿಕೊಂಡು ತನ್ನ ಅಮ್ಮನ ಜೊತೆಗೆ ಏನೋ ಮಸಲತ್ತು ಮಾಡಿ ಎಂ.ಬಿ.ಬಿ.ಎಸ್.ಗೆ ಹೋಗಲು ಇವನಿಗೆ ಗೊತ್ತಾಗದೆ ತಯಾರಿ ನಡೆಸುತ್ತಿರುವುದು ಮುತ್ತಯ್ಯನನ್ನು ತುಂಬಾ ವಿಚಲಿತನನ್ನಾಗಿ ಮಾಡಿತ್ತು. ಇನ್ನೇನು ಕೌನ್ಸಿಲಿಂಗ್ ಮುಗಿದು ಜಾಯ್ನ್ ಆಗಬೇಕಿತ್ತಷ್ಟೆ. ಆದರೆ ಮಗಳನ್ನು ಯಾವುದೇ ಕಾರಣಕ್ಕೂ ಕಳುಹಿಸಲು ಒಪ್ಪದೆ ಅದರ ಸಲುವಾಗಿ ಸುಜಾತಳೊಂದಿಗೆ ಜಗಳ ಚರ್ಚೆಗಳಾಗಿ ವಿಫಲನಾಗಿದ್ದ. ಕಳುಹಿಸಬೇಕೋ ಬೇಡವೋ ಎನ್ನುವ ಗೊಂದಲ ಅವನ ಮನಸ್ಸನ್ನು ಹೊಕ್ಕು ಗುಂಗಾರಿ ಕೊರೆದ ಹಾಗೆ ಕೊರೆಯುತ್ತಿತ್ತು. ಒಬ್ಬಳೇ ಮಗಳಾಗಿದ್ದುದರಿಂದ ಒಂದುವರೆ ಎಕರೆ ಎಲೆ ತೋಟ, ಎರಡೆಕರೆ ಗದ್ದೆ, ಐದು ಎಕರೆ ಬೆದ್ದಲುನ್ನು ನೋಡಿಕೊಂಡು ತನ್ನ ಕಣ್ಣಮುಂದೆ ಇರಲಿ ಎಂದು ಬಯಸಿದ್ದ. ‘ಹೊಲ ಬೇಕಾದರೆ ಯಾರಿಗಾದರೂ ಕಂಟ್ರ್ಯಾಕ್ಟ್ ಕೊಡಿ; ಇಲ್ಲ ನಾನೇ ಬೇಕಾದರೆ ನನ್ನ ಕೈಲಾದಷ್ಟು ನೋಡಿಕೊಳ್ಳುತ್ತೀನಿ. ಸಾವಿ ಡಾಕ್ಟರ್ ಆಗಲೇ ಬೇಕು’ ಎಂದು ಕಡ್ಡಿ ತುಂಡು ಮಾಡಿದ ರೀತಿಯಲ್ಲಿ ಹೇಳಿರುವ ಸುಜಾತಳನ್ನು ಮನವೊಲಿಸಿ ಸೋತಿದ್ದ. + +ಎಷ್ಟೋ ಸಲ ಅವನ ಕನಸಿನಲ್ಲಿ ಸಾವಿತ್ರಿ ಮನುಷ್ಯರ ಅಂಗಾಂಗಗಳನ್ನು ಕತ್ತರಿಸುತ್ತಿದ್ದುದ ಕಂಡು ಏನೇನೋ ಕನವರಿಸಿಕೊಳ್ಳುತ್ತಿದ್ದ ಹಾಗು ವಿಚಿತ್ರ ಧ್ವನಿಯಲ್ಲಿ ಚೀರಿಕೊಂಡು ಎದ್ದು ಕೂರುತ್ತಿದ್ದ. ಆಗೆಲ್ಲಾ ಸಾವಿತ್ರಿನೇ ಎದ್ದು ಹೋಗಿ ನೀರುಕುಡಿಸಿ ಚಿಕ್ಕ ಮಗುವಿನ ಥರ ಸಾವರಿಸಿ ಅಪ್ಪಿಕೊಂಡು ಮಲಗುತ್ತಿದ್ದಳು. ‘ಒಂದೈದು ವರ್ಷ ಆರಾಮಾಗಿ ಇರಬಾರದ ಪಪ್ಪಾ ಅಮ್ಮನ ಜೊತೆ. ಇಬ್ಬರೆ ಎಂಥ ಜಾಲಿಯಾಗಿ ಇರಬಹುದು. ನಿಮಗೆ ವಯಸ್ಸಾದ ಮೇಲೆ ನಿಮ್ಮ ಆರೋಗ್ಯವನ್ನು ನೋಡಿಕೋಳ್ಳುವುದಕ್ಕಾದರೂ ಎಂ.ಬಿ.ಬಿ.ಎಸ್. ಗೆ ಕಳುಹಿಸು. ಪ್ಲೀಸ್. ಕೋರ್ಸ್ ಕಂಪ್ಲೀಟ್ ಆದಮೇಲೆ ಯಾವ ಸಿಟಿಯಲ್ಲೂ ನೆಲೆಸದೆ; ನಮ್ಮೂರಲ್ಲೇ ಇರುತ್ತೇನೆ. ನನ್ನ ಜನಗಳ ಆರೋಗ್ಯವನ್ನ ನೋಡಿಕೊಳ್ಳುತ್ತೇನೆ. ತೋಟದ ಕೆಲಸದಲ್ಲಿ ನಿನಗೆ ಹೆಲ್ಪ್ ಮಾಡಿಕೊಂಡು ಇರುತ್ತೇನೆ’ ಎಂದು ಹೇಳಿದರೂ ಮುತ್ತಯ್ಯ ಮಾತ್ರ ಸುತ್ರಾಮ್ ಒಪ್ಪುತ್ತಿರಲಿಲ್ಲ. ‘ರೀ ನಿನ್ನ ಮಗಳಿಗೆ ನೀವು ಪಂಜರ ಆಗಬೇಡಿ. ಅವುಳನ್ನ ಅವಳ ಪಾಡಿಗೆ ಬಿಡಿ. ಗಿವ್ ಹರ್ ಫ್ರೀಡಂ. ಇಟ್ಸ್ ಹರ್ ಲೈಫ್. ಮತ್ತೆ ನೀವು ಎಂ.ಎ. ಇಂಗ್ಲಿಶ್ ಲಿಟರೇಚರ್ ಮಾಡಿ ಕೃಷಿ ಮಾಡ್ತಿಲ್ಲವಾ. ಅವಳೇನು ಬೆಂಗಳೂರೋ ಮುಂಬೈಲೋ ಸೆಟ್ಲ್ ಆಗೋಲ್ಲ. ಐ ವಾಂಟ್ ಮೈ ಡಾಟರ್ ಟು ಬಿ ಎ ಡಾಕ್ಟರ್ ಅಂಡ್ ಸರ್ವ್ ಮೈ ವಿಲೇಜ್ ಪೀಪಲ್’ ಎಂದು ತುಸು ಗಂಭೀರವಾಗಿಯೇ ಹೇಳಿದುದಕೆ ‘ನೀನೂ ಸಹ ನನಗೆ ಏನು ಮಾಡಬೇಡ ಅನ್ನುತ್ತಿದ್ದೀಯೋ ಅದನ್ನೇ ಮಾಡುತ್ತಿರುವುದು. ಐ ಮೀನ್ ನಿನ್ನ ಆಸೆಯನ್ನು ಅವಳ ಮೂಲಕ ಈಡೇರಿಸಿಕೊಳ್ಳುವ ಬಯಕೆ. ನೀನೂ ಸ್ವಾರ್ಥಿಯೇ’ ಎಂದು ಹೇಳಿ ಸುಮ್ಮನಾಗಿದ್ದ. + +ಅಂಗಳದಲ್ಲಿ ಒಬ್ಬನೇ ಕೂತು ಆಕಾಶ ನೋಡುತ್ತಿದ್ದ ಅವನ ಮುಖದಮೇಲೆ ನಿಧಾನವಾಗಿ ಹಾಲು ಮತ್ತು ಜೇನುಗಳ ಮಿಶ್ರ ಬಣ್ಣದಂತ ಕಾಂತಿ ಹರಡಿಕೊಂಡಿತು. ಅವನೂ ಸಹ ಇದ್ದಕ್ಕಿದ್ದಹಾಗೆ ತಣ್ಣನೆ ಕಿರಣಗಳು ಸೋಕಿದುದಕೆ ರೋಮಾಂಚಿತನಾಗಿ ಬಲಗಡೆ ತಿರುಗಿದ. ಅಂದು ಬುದ್ಧ ಪೂರ್ಣಿಮೆಯಾಗಿದ್ದುದರಿಂದ ಚಂದ್ರ ಹೊಳೆಯುತ್ತಿದ್ದ. ಆ ಕಡೆ ಮುಖ ಮಾಡಿ ಧ್ಯಾನಸ್ಥ ಭಂಗಿಯಲ್ಲಿ ಕೂತ. ಅರ್ಧ ಗಂಟೆ ಹಾಗೆ ಕೂತಿದ್ದ. ನಾಯಿ ಜೋರಾಗಿ ಬೊಗಳದಿದ್ದಿದ್ದರೆ ಒಂದು ಗಂಟೆಯಾದ್ರೂ ಹಾಗೆ ಕೂರುತ್ತಿದ್ದನೇನೋ. ನಿಧಾನ ಎದ್ದು ನಡೆದ. ಅವನ ಸ್ನೇಹಿತ ಕಾಂತರಾಜ್ ಆಲಮಟ್ಟಿ ಡ್ಯಾಂ ಪ್ರೊಜೆಕ್ಟ್ ನಲ್ಲಿ ಕೆಲಸ ಮಾಡುವಾಗ ತನ್ನ ಕೆಲಸ ನಿಮಿತ್ತ ಮುಧೋಳಿಗೆ ಹೋಗಿದ್ದಂತಹ ಸಂದರ್ಭದಲ್ಲಿ ಈ ನಾಯಿಯನ್ನು ಅವನಿಗೆಂದೇ ಅಲ್ಲಿಂದ ತಂದು ಕೊಟ್ಟಿದ್ದ. ಅಂದಿನಿಂದ ಅದು ಈ ಮನೆಯಲ್ಲಿ ಒಂದು ಸದಸ್ಯನಾಗಿಬಿಟ್ಟಿದೆ. ಅದರ ಕತ್ತ ಹಿಡಿದು ಮೈ ಸವರುತ್ತಾ ದೂರದಲ್ಲಿ ಯಾರೋ ಬರುತ್ತಿದ್ದಾರಲ್ಲಾ ಎಂದು ತನ್ನ ಮನೆಯ ಪಕ್ಕದಿಂದ ಊರೊಳಗೆ ಸೇರುವ ಹಾದಿಯನ್ನೇ ದಿಟ್ಟಿಸಿ ನೊಡುತ್ತ ನಿಂತ. ಇವನಷ್ಟೆ ಎತ್ತರದ ಮನುಷ್ಯಾಕೃತಿ ಹತ್ತಿರವಾಯ್ತು. ಹತ್ತಿರ ಹತ್ತಿರವಾದಂತೆಲ್ಲಾ ಆ ಮನುಷ್ಯನ ಮುಖ ತನ್ನ ಹೆಂಡತಿ ಸುಜಾತಳ ಕಾಲೇಜು ಆಲ್ಬಂ ಪುಟಗಳ ತೆರೆದಿಡಲಾರಂಭಿಸಿತು. ಹಾಗು, ಹತ್ತಿರ ಹತ್ತಿರ ಬಂದಂತೆ ಆ ಮುಖ ಇನ್ನಷ್ಟು ಪರಿಚಿತವಾಗತೊಡಗಿತು. + +ತನ್ನ ಮಗಳು ಸಾವಿತ್ರಿ ಜೊತೆ ಇಂಟರ್ನೆಟ್ನಲ್ಲಿ ಹಾಗು, ಪತ್ರಿಕೆಗಳಲ್ಲಿ ನೋಡಿದ್ದಂತಹ ಮುಖ. ಬಂದ ವ್ಯಕ್ತಿ ತನ್ನನ್ನು ತಾನು ಪರಿಚಯಮಾಡಿಕೊಳ್ಳುವುದಕ್ಕೆ ಮುಂಚೆನೇ ‘ನೀವು ಡಾ. ಶಾಕ್ಯ ಅಲ್ಲವಾ?’ ಎಂದು ಅರ್ಧ ಮೇಲಕ್ಕೆ ಎತ್ತಿ ಕಟ್ಟಿಕೊಂಡಿದ್ದ ಅಚ್ಚ ಬಿಳಿ ಲುಂಗಿಯನ್ನು ಕೆಳಕ್ಕೆ ಇಳಿಬಿಟ್ಟು ಹಸ್ತ ಲಾಘವ ಮಾಡಿಕೊಂಡ. ಶಾಕ್ಯನಿಗೆ ತುಂಬಾ ಆಶ್ಚರ್ಯವಾಯ್ತು. ಇಬ್ಬರೂ ಪರಸ್ಪರ ಎಂದೂ ಭೇಟಿ ಆಗದಿದ್ದರೂ ಎಷ್ಟೋ ವರ್ಷಗಳ ಒಡನಾಟವೆಂಬಂತೆ ಆಡಿದ ಮಾತು ಶಾಕ್ಯನಲ್ಲಿ ಆಪ್ತತೆ ಮತ್ತು ಖುಷಿಯನ್ನು ಉಂಟುಮಾಡಿತ್ತು. ಅವನ ಪೂರ್ತಿ ಹೆಸರು ಶಾಕ್ಯ ಸಿದ್ಧಾರ್ಥ. ಪಿ.ಎಚ್.ಡಿ ಮುಗಿದ ನಂತರ ಡಾ. ಎನ್ನುವುದು ಅವನ ಹೆಸರಿನೊಟ್ಟಿಗೆ ಸೇರಿಕೊಂಡು, ಡಾ. ಶಾಕ್ಯ ಸಿದ್ಧಾರ್ಥ ಎಂದೇ ಪ್ರಸಿದ್ಧಿ. ಆದರೆ ಅವನಿಗೆ ಶಾಕ್ಯ ಎಂದು ಕರೆದರೆ ತುಂಬಾ ಇಷ್ಟ. ಯಾರಾದರೂ ಡಾ. ಶಾಕ್ಯ ಎಂದು ಕರೆದರೆ ‘ಅಯ್ಯೋ ಈ ಡಾಕ್ಟರ್ ಗೀಕ್ಟರ್ ಏನು ಬೇಡ, ನನ್ನ ಹೆಸರು ಕರೆಯಿರಿ ಸಾಕು’ ಎನ್ನುತ್ತಿದ್ದ. + +ಪ್ರಪಂಚದಲ್ಲಿ ಎಲ್ಲೂ ಇರದ ಪೂರ್ಣಿಮೆ ಇಲ್ಲಿ ಮಾತ್ರ ಹರಡಿಕೊಂಡಿದೆ ಎಂದು ಭಾವಿಸಿ, ತನ್ನ ಜುಬ್ಬ, ಶಾಲು ಮತ್ತು ಲೆದರ್ ಬ್ಯಾಗ್ ಗಳನ್ನು ಅಂಗಳದಲ್ಲಿಯೇ ಬಿಸಾಡಿ ಪುಟ್ಟ ಹೈಕ್ಳು ಥರ ಕುಣಿಯತೊಡಗಿದ. ಮನೆಗೆ ಬಂದ ಹೊಸ ಅತಿಥಿ ಈ ರೀತಿ ವರ್ತಿಸುವುದ ಕಂಡು ಕ್ಷಣ ದಂಗು ಬಡಿದವನಂತೆ ನಿಂತು ನೋಡುತಿದ್ದ ಮುತ್ತಯ್ಯನೂ ಸಹ ಲುಂಗಿ ಮೇಲಕ್ಕೆತ್ತಿ ಕಟ್ಟಿಕೊಂಡು ಬಗಲಮೇಲಿದ್ದ ಟವಲನ್ನು ಚೆಂಡಿನ ಥರ ಮೇಲಕ್ಕೆ ಎಸೆದು ಕುಣಿಯಲಾರಂಭಿಸಿದ. ನಾಯಿ ಮೂಕ ಪ್ರೇಕ್ಷಕನಂತೆ ಸುಮ್ಮನೆ ನಿಂತು ನೋಡಿತು. + +ಒಳಗಿಂದ ಸಾವಿತ್ರಿ ಮತ್ತು ಅವಳಮ್ಮ ಸುಜಾತ ಓಡಿಬಂದರು. ಸಾವಿತ್ರಿ ತನ್ನ ಮುಖದಲ್ಲಿ ಹರಿದಾಡುವ ಸಂತೋಷವ ಕಂಡು ತಾನೂ ಸಹ ತಲೆಯನ್ನು ಅಲುಗಾಡಿಸುತ್ತ ನಿಂತಲ್ಲೇ ಕುಣಿಯತೊಡಗಿದಳು. ಸುಜಾತ ತನ್ನ ಗಂಡನ ಜೊತೆ ಕುಣಿಯುತ್ತಿರುವ ಜಂಟಲ್ ಮ್ಯಾನ್ ಯಾರೆಂದು ಸಡನ್ನಾಗಿ ಗುರುತಿಸದೆ ಬೆಪ್ಪಾಗಿ ನಿಂತು ನೋಡಿದಳು. ಇಬ್ಬರ ಮುಖಗಳಲ್ಲೂ ಅಲ್ಲಲ್ಲಲ್ಲಿ ಬೆವರು ಮೂಡಿ ಬೆಳದಿಂಗಳ ಕಿರಣಗಳು ಮುಖಗಳ ಮೇಲೆ ಬಿದ್ದಿದ್ದರಿಂದ ತೆಳು ಬಂಗಾರಬಣ್ಣದ ರೇಷ್ಮೆವಸ್ತ್ರದ ರೀತಿ ಮಿನುಗುತ್ತಿತ್ತು. + +ಸ್ವಲ್ಪ ಹೊತ್ತಿನ ಬಳಿಕ ಕುಣಿಯುವುದನ್ನು ನಿಲ್ಲಿಸಿ, ಮುತ್ತಯ್ಯನ ಕೈ ಹಿಡಿದು ‘ಸಾರಿ’ ಎಂದು, ಸ್ವಲ್ಪ ಸುಧಾರಿಸಿಕೊಂಡು, ‘ತುಂಬಾ ಎಮೋಷನಲ್ ಆದೆ ಅನ್ನಿಸುತ್ತೆ’ ಎಂದ. ಆಮೇಲೆ ಸುಜಾತ ಮತ್ತು ಸಾವಿತ್ರಿ ಕಡೆ ಮುಖಮಾಡಿ, ‘ಹಾಯ್ ಸೂಜಿ! ಆರ್ ಯು ಸರ್ಪ್ರೈಸ್ಡ್?’ ಅನ್ನುತ್ತಾ ಅವಳತ್ತ ನಡೆದು, ‘ವಾಟ್ ಎ ಬ್ಯೂಟಿಫುಲ್ ಡಾಟರ್ ಯು ಹ್ಯಾವ್! ಪ್ರೆಟಿ. ಗಾರ್ಜಿಯಸ್. ಕ್ಯೂಟ್’ ಎಂದ. ಸುಜಾತ ಒಂದು ಕ್ಷಣ ಮೂಕವಿಸ್ಮಿತಳಾಗಿ ನಿಂತು ಬಿಟ್ಟಳು, ಇಪ್ಪತ್ತು ವರ್ಷಗಳ ಬಳಿಕ ತನ್ನ ಸ್ನೇಹಿತನನ್ನು ನೋಡುತ್ತ. + +‘ಓ ಗಾಡ್! ಶಾಕ್ಯ! ಸುಮಾರು ಇಪ್ಪತ್ತು ವರ್ಷಗಳು ಆದವು ಅಲ್ವಾ? ಅಮ್ಮಾ! ಒಂದು ಫೋನ್ ಮಾಡಬಾರದಿತ್ತಾ, ಹೇಗೆ ಬಂದೆ, ಯಾರು ದಾರಿ ತೋರಿಸಿದರು?!’ ಎಂದೆಲ್ಲಾ ಕೇಳುತ್ತಾ ಅವಳೂ ಸಹ ಕ್ಷಣಕಾಲ ಎಮೋಷನಲ್ ಆದಳು. + +‘ಫೋನ್ ಮಾಡದೆ ನಿಮಗೆ ಸರ್ಪ್ರೈಸ್ ಕೊಡೋಣ ಅಂತಾನೆ ಹೀಗೆ ಬಂದೆ. ಮೊಬೈಲ್ ಆಫ್ ಮಾಡಿದ್ದೀನಿ. ಅದರ ತಂಟೆನೇ ಬೇಡವೆಂದು.’‘ಎಲ್ಲಿಗೆ ಬಂದಿದ್ದೆ? ಏನು ಕತೆ?’ ರಾಗಿಣಿ ಚೆನ್ನಾಗಿದ್ದಾಳಾ? ಅವಳನ್ನೂ ಕರೆದುಕೊಂಡು ಬರಹುದಿತ್ತಲ್ಲೋ?’ + +ಮುತ್ತಯ್ಯ ಅವಳ ಮಾತಿಗೆ ಅಡ್ಡಬಂದು, ‘ಅದೆಲ್ಲಾ ಆಮೇಲೆ ಕೇಳುವಂತೆ. ಮೊದಲು ಇವರಿಗೆ ಬಿಸಿನೀರು ಕೊಡುಹೋಗು. ಫ್ರೆಶ್ ಆಗಲಿ. ತುಂಬಾ ದಣಿದಿರಬಹುದು. ಕಾಫಿ ಕುಡಿಯುತ್ತಾ ಹಾಯಾಗಿ ಬೆಳದಿಂಗಳ ಬೆಳಕಲ್ಲಿ ಕೂತು ಮಾತಾಡೋಣ’ ಎಂದ. + +ಸಾವಿತ್ರಿಯ ಖುಷಿಗೆ ಮಿತಿಯೇ ಇರಲಿಲ್ಲ ತನ್ನ ಅಪ್ಪನ ಮುಖದಲ್ಲಿ ಹರಡಿರುವ ಸಂತಸವ ಕಂಡು. ಅವಳೇ ಹಂಡೆಯಲ್ಲಿ ಇರುವ ಬಿಸಿನೀರನ್ನು ಬಕೆಟ್ ಗೆ ಹಾಕಿ ಬಚ್ಚಲ ಹತ್ತಿರ ಇಟ್ಟು ಹೊಸ ಪಿಯರ್ಸ್ ಸೋಪು ಮತ್ತು ಟವಲ್ ಅಲ್ಲಿ ಇಟ್ಟಳು. ನಂತರ ಪಟ ಪಟ ಅಂತ ಓಡಿ ರೋಸ್ ವುಡ್ಡಿನ ಟೇಬಲ್ ಮತ್ತು ನಾಲ್ಕು ಚೇರುಗಳನ್ನು ಅಂಗಳದಲ್ಲಿ ಹಾಕಿದಳು. ಸುಜಾತ ಅಡುಗೆ ಮನೆಗೆ ಕಾಫಿಮಾಡಲು ಹೋದಳು. ಶಾಕ್ಯನ ಲೆದರ್ ಬ್ಯಾಗ್ ಮತ್ತು ಶಾಲನ್ನು ಮುತ್ತಯ್ಯ ಈಸುಕೊಂಡು ತನ್ನ ಸ್ಟಡಿರೂಂನಲ್ಲಿ ಇಡಲು ಹೋದ. ತನ್ನ ಸ್ಟಡಿ ರೂಂನಿಂದನೇ ‘ಸಾವಿ, ಸಾವಿ ಲುಂಗಿ, ಟವಲ್ ಕೊಡೋ ಅವರಿಗೆ’ ಎಂದದ್ದಕ್ಕೆ ಆಗಲೇ ಮುಖತೊಳೆಯುತ್ತಿದ್ದ ಶಾಕ್ಯ, ಲುಂಗಿಬೇಡ, ಸದ್ಯಕ್ಕೆ ಮುಖ ಮತ್ತು ಕಾಲಿಗೆ ನೀರು ಹಾಕಿಕೊಳ್ಳುತ್ತೇನೆ. ಮಲಗುವಾಗ ಹಾಕಿಕೊಳ್ಳುತ್ತೇನೆ. ಈಗ ಬೇಡ’ ಅಂದ. ಮುಖ, ಕೈ ಮತ್ತು ಪಾದಗಳನ್ನಷ್ಟೆ ತೊಳೆದುಕೊಂಡು ಟವಲ್ ನಲ್ಲಿ ಒರೆಸಿಕೊಳ್ಳುತ್ತಾ ನಡುಮನೆಯಲ್ಲಿ ಒಮ್ಮೆ ನಿಂತು ಇಡೀ ಮನೆಯ ಕ್ಷಣ ನೋಡಿದ. ಹಾಲ್ ತುಂಬಾ ವಿಶಾಲವಾಗಿತ್ತು. ಅಚ್ಚ ಬಿಳಿ ಬಣ್ಣವನ್ನು ಗೋಡೆಗಳಿಗೆ ಬಳಿದಿದ್ದರಿಂದ ಹಾಗು ಸಿಎಫೆಲ್ ಬಲ್ಬುಗಳ ಬೆಳಕಿನಲ್ಲಿ ಇಡೀ ಮನೆ ಶುಭ್ರವಾಗಿ ಹಾಲಲ್ಲಿ ತೊಳೆದಂತೆ ಇತ್ತು. ಹಾಲ್ ನಲ್ಲಿ ಜಾಸ್ತಿ ಫರ್ನಿಚರ್ ಗಳು ತುಂಬಿಲ್ಲದಿದ್ದುದರಿಂದ ಹಾಲ್ ನೊಳಗಿನ ಸ್ಪೇಸ್ ಮನಸ್ಸಿಗೆ ಮುದ ನೀಡುವಂತಿತ್ತು. + +ಅವನು ನಿಂತುಕೊಂಡಿರುವ ಎದರುಗೋಡೆಯ ಹತ್ತಿರ ಸುಮಾರು ನೂರು ವರ್ಷಗಳಿಗೂ ಹಳೆಯದಾದ ತೇಗದ ಮರದ ಮೇಜಿನ ಮೇಲೆ ಲ್ಯಾಪ್ ಟಾಪ್, ಇಂಗ್ಲಿಷ್ ಮತ್ತು ಕನ್ನಡ ಜರ್ನಲ್ ಗಳು, ಪುಸ್ತಕಗಳು, ಸಿ.ಡಿಗಳು, ಚೆನ್ನಪಟ್ಟಣದ ಬಣ್ಣದ ಮರದ ಬೊಂಬೆಗಳು ಇದ್ದವು. ಹಾಲ್ ನ ಮೂಲೆಯೊಂದರಲ್ಲಿ ನುಣುಪು ನುಣುಪಾದ ದುಂಡನೆಯ ಬಿಳಿ ಬೆಣಚುಕಲ್ಲುಗಳನ್ನು ಒಂದರಮೇಲೆ ಒಂದರಂತೆ ಜೋಡಿಸಿ ಇಡಲಾಗಿತ್ತು. ಹಾಲ್ ನ ಬಲಗೋಡೆಗೆ ಹೊಂದಿಕೊಂಡಂತೆ ಒಂದು ಪುಟ್ಟ ಮರದ ದೀಪದ ಕಂಬವನ್ನು ಇಡಲಾಗಿದ್ದೂ ಮೇಲಿನ ತುದಿಯ ಸುತ್ತ ಹಂಸಗಳ ಚಿತ್ರವನ್ನು ಕೆತ್ತಲಾಗಿತ್ತು. ಹಂಸಗಳ ನಡುವೆ ಆಗಷ್ಟೇ ಹಚ್ಚಿರುವ ಪುಟ್ಟ ದೀಪ ಪ್ರಕಾಶಮಾನವಾಗಿ ಉರಿಯುತ್ತಿತ್ತು. ಮತ್ತೆ ಎಡಕ್ಕೆ ನೋಡಿದ. ಮೇಲಿನಿಂದ ಕೆಳಗೆ ಹಾಗು ಎಡದಿಂದ ಬಲಕ್ಕೆ ಅಡ್ಡವಾಗಿ ಗೋಡೆಯ ಮೇಲೆ ಅಂಬೇಡ್ಕರ್, ವಾಲ್ಮೀಕಿ, ಶೇಕ್ಸ್ಪಿಯರ್, ಗಾಂಧಿ, ಕಾರ್ಲ್ಮಾರ್ಕ್ಸ್, ದೇವನೂರು ಮಹಾದೇವ, ಅನಂತ ಮೂರ್ತಿ ಮತ್ತು ಲಂಕೇಶ್, ಅವರ ರೇಖಾಚಿತ್ರಗಳನ್ನು ಫ್ರೇಂ ಹಾಕಿಸಿ ಗೋಡೆಗೆ ನೇತುಹಾಕಿದ್ದರೂ ಫ್ರೇಂ ನಿಂದ ಹೊರಬರುವ ರೀತಿ ಭಾಸವಾಗುತ್ತಿರುವಂತೆ ಇದ್ದವು. ಅವುಗಳನ್ನು ಕುತೂಹಲದಿಂದ ನಿಂತು ನೋಡಿದ. ‘ಸೂಜಿ’ ಎಂದು ಬಾಯಿಬಿಡಬೇಕು ಅನ್ನುವಷ್ಟರಲ್ಲಿ ಅಡುಗೆ ಮನೆಗೆ ಹೋಗುವ ಕೋಣೆಯ ಗೋಡೆಯ ಮೇಲೆ ನೇತು ಹಾಕಿರುವ ಫೋಟೋ ಅವನ ಗಮನ ಸಳೆಯಿತು. ಅದರಲ್ಲಿ ಸಾವಿತ್ರಿ ಒಂದು ಕಲ್ಲ ಮೇಲೆ ಕೂತು ಏನನ್ನೋ ಬರೆಯುತ್ತಿದ್ದಾಳೆ. ಒಂದು ಕಾಲನ್ನು ಕಲ್ಲಿನ ಮೇಲೆ ಕೂತು ಮಡಿಚಿ ಇಟ್ಟುಕೊಂಡು, ಮತ್ತೊಂದನ್ನು ಇಳಿಬಿಟ್ಟಿದ್ದಾಳೆ. ಅವಳ ಆ ಪಾದವ ತೋಯಿಸಿಕೊಂಡು ನೀರು ಹರಿಯುತ್ತಿದೆ. ಇನ್ನೂ ಹತ್ತಿರ ಹತ್ತರ ಹೋಗಿ ಫೋಟೋವನ್ನು ದಿಟ್ಟಿಸತೊಡಗಿದ. ಸುಜಾತಳೂ ಸಹ ಪುಟ್ಟ ಹುಡುಗಿಯಾಗಿದ್ದಾಗ ಹೀಗೇ ಇದ್ದಳೇನೋ ಎಂದು ಕಲ್ಪಿಸಿಕೊಂಡ. + +ನಂತರ ‘ಸೂಜಿ’ಎಂದು ಕೂಗಿದ + +‘ಅಡಿಗೆ ಮನೆಯಲ್ಲಿದ್ದೇನೆ. ಇಲ್ಲೇ ಬಾರೋ’ + +‘ಆ ರೇಖಾಚಿತ್ರಗಳು ಯಾರು ಮಾಡಿದ್ದು. ಮಾರ್ವೆಲಸ್’ + +‘ನಮ್ಮ ಸಾವಿ ಕಣೋ. ಚೆನ್ನಾಗಿದ್ದಾವಾ. ಅವಳಿಗೆ ಕಾಂಪ್ಲಿಮೆಂಟ್ಸ್ ಹೇಳು ಖುಷಿ ಪಡುತ್ತಾಳೆ.’ ‘ಆ ಮೂಲೆಯಲ್ಲಿ ಪೆಬಲ್ಸ್ ಜೋಡಿಸಿ ಇಡಲಾಗಿದೆಯಲ್ಲಾ. ಯಾರು ಜೋಡಿಸಿದ್ದು? ನನಗಂತೂ ಅವು ಪುಟ್ಟ-ಪುಟ್ಟ ಮಕ್ಕಳು ಥರ ಕಾಣುತ್ತವೆ.’‘ಮುತ್ತಯ್ಯ ಜೋಡಿಸಿರುವುದು ಹಾಗೆ. ಅಪ್ಪ ಮಗಳು ಸೇರಿಕೊಂಡರೆ ಮನೆ ಶಿಶುವಿಹಾರ. ಏನೇನೋ ಮಾಡ್ತಿರ್ತಾರೆ. ಅದನ್ನು ತೆಗೆದು ಇಲ್ಲಿ ಇಡೋದು. ಇದನ್ನು ತೆಗೆದು ಅಲ್ಲಿ ಇಡೋದು. ಆದರೆ ಹಿ ಈಸ್ ವೆರಿ ವಂಡರ್ ಫುಲ್ ಪರ್ಸನ್. ಐಮ್ ರಿಯಲಿ ಲಕ್ಕಿ ಟು ಹ್ಯಾವ್ ಸಚ್ ಹಸ್ಬೆಂಡ್ ಅಂಡ್ ಡಾಟರ್.’ + +‘ಮನೆ ವಾತಾವರಣವೇ ಹೇಳುತ್ತೆ. ನೀ ಹೇಳದಿದ್ದರೂ. ವೆರಿ ಪ್ಲಸೆಂಟ್’ ಎಂದು ಮಾತನ್ನು ಮುಂದವರೆಸಿ ‘ಸಾವಿ ಫೋಟೋ ಎಷ್ಟು ಚಂದ ಇದೆ ಅಲಾ? ನಾನು ಕ್ಷಣ ನೀನು ಚಿಕ್ಕವಳಿದ್ದಾಗ ತೆಗಿಸಿಕೊಂಡಿದ್ದೇನೋ ಅಂದುಕೊಂಡೆ’ ಅಂದ. + +‘ಸಣ್ಣವರಿದ್ದಾಗ ಎಲ್ರೂ ಹೆಚ್ಚೂ ಕಡಿಮೆ ಒಂದೇ ಥರ. ತುಂಬಾ ಚೆನ್ನಾಗಿ ಕಾಣ್ತಾರೆ. ಬೆಳೀತಾ ಬೆಳೀತಾನೆ ಹೇಗೇಗೋ ಆಗೋದು. ಏನೇನೋ ಆಗೋದು’ ಎಂದಳು. + +ಅವಳ ಮಾತನ್ನೇ ಕುತೂಹಲದಿಂದ ಕೇಳಿಸಿಕೊಳ್ಳುತ್ತ ನಿಂತ. ಅವಳನ್ನೇ ನೋಡುತ್ತಾ ‘ಇಪ್ಪತ್ತು ವರ್ಷಗಳು ಎಷ್ಟುಬೇಗ ಹೋದವು. ನನಗಂತೂ ನಿನ್ನೆನೋ ಮೊನ್ನೆನೋ ಪಿ.ಜಿ. ಮಾಡ್ತಿದ್ದೀವಿ ಅನ್ನಿಸುತ್ತೆ. ಆ ಲೇಟ್ ನೈಟ್ ಡಿಸ್ಕಶನ್, ಒಬ್ಬರಿಗೊಬ್ಬರು ಚುಡಾಯಿಸುತ್ತಿದ್ದದ್ದು, ಹಾಸ್ಟಲ್ ನಲ್ಲಿ ಎಲ್ರೂ ಗಂಭೀರವಾಗಿ ಓದುತ್ತಿರುವಾಗ ನಾನು, ನೀನು, ಗೌಡ, ಡಿ.ಜಿ., ಸುಷ್ಮ, ವೆಂಕಿ, ಡೈಸಿ ಸಿನಿಮಾದ ಬಗ್ಗೆ, ಸ್ಟಿಫನ್ ಹಾಕಿಂಗ್ ಬಗ್ಗೆ, ನಾಸಾ ವಿಜ್ಞಾನಿಗಳ ಹೊಸ ಹೊಸ ಡಿಸ್ಕವರಿಗಳ ಬಗ್ಗೆ, ಸಂಗೀತದ ಬಗ್ಗೆ ಮಾತಾಡುತ್ತಿದ್ದದ್ದು.. ಇನ್ನೊಂದು ಸಂಗತಿ ಈಗಲೂ ನನಗೆ ನೆನಪಿದೆ. ಅದು ಯಾವಾಗಲು ನೆನಪಾಗುತ್ತಿರುತ್ತೆ. ಭೀಮಸೇನ್ ಜೋಷಿ ವರ್ಸಸ್ ಗಂಗೂಬಾಯಿ ಹಾನಗಲ್ ಚರ್ಚೆ ಮಾಡುವಾಗ ಭೀಮಸೇನ್ ಜೋಷಿ ಕೆಲವು ಸಲ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಹಾಡ್ತಾನೆ. ಆದರೆ ಗಂಗೂಬಾಯಿ ಹಾನಗಲ್ ಹಾಗಲ್ಲ. ರಂಜಿಸುವುದಕ್ಕೆ ಹಾಡುವುದಿಲ್ಲ; ಅವರದು ಮಳೆ ಸುರಿದಂತೆ. ನದಿಹರಿದಂತೆ. ಎಂದು ನಾನು ವಾದಮಾಡಿದ್ದು. ಗೌಡ ಭೀಮಸೇನ್ ಜೋಷಿಯನ್ನು ಸಮರ್ಥಿಸಿಕೊಂಡದ್ದು ನಾನು ಅವನನ್ನು ಇನ್ನಷ್ಟು ರೇಗಿಸಿದ್ದು. ಕೊನೆಗೆ ಅವನು ಚಪ್ಪಲಿ ತೆಗೆದುಕೊಂಡ ನನ್ನ ಕಡೆ ಬೀಸಿದ್ದು.. ಎಂದು ನಗುತ್ತಾ ‘ಆ ದಿನಗಳೆಲ್ಲಾ ಎಷ್ಟು ಬೇಗ ಉರಿದುಹೋದವು ಅಲಾ’ ಎಂದ. ತುಸು ಭಾವುಕನಾದಂತಿದ್ದ. + +‘ಹೌದಲ್ವಾ!’ ಎಂದು ಭಾವುಕಳಾಗಿ ನಗುತ್ತಾ ಸಕ್ಕರೆ ಡಬ್ಬಕ್ಕೆ ಕೈ ಹಾಕಿದಳು. + +ಸಾವಿ ಹುಟ್ಟಿದ ನಂತರ ಬದುಕಲ್ಲಿ ತುಸು ನೆಮ್ಮದಿ ಸಿಕ್ಕಂಗೆ ಆಯ್ತು. ಅವಳೂ ಅವಳಪ್ಪ ನನಗೀಗ ಬೆಸ್ಟ್ ಫ್ರೆಂಡ್ಸ್. ನಮ್ಮ ಮದುವೆಯಾದ ದಿನಗಳನ್ನು ನೆನೆಸಿಕೊಂಡರೆ ಹಾರಿಬಲ್. ನಿನ್ನ ಹತ್ತಿರ ಸಾಕಷ್ಟು ಮಾತಾಡಬೇಕು. ಹೇಗಿದ್ದರು ಒಂದು ವಾರ ಅಂತೂ ಇರುತ್ತೀಯಲ್ಲಾ?’ ಎಂದಳು. + +‘ಒಂದು ವಾರ! ಸರಿ ಹೇಳ್ದೆ. ಇನ್ನೊಂದು ಸರ್ತಿ ಯಾವಾಗಾದರೂ ಬರುತ್ತೀನಿ. ಈಗ, ಓ ಗಾಡ್! ಆಗೋದಿಲ್ಲ. ಮಂಡೆ ಎಷ್ಟು ಹೊತ್ತಿದ್ದರೂ ಹೋಗಲೇ ಬೇಕು’. + +‘ಒಂದು ವಾರ ಕ್ಲಾಸು, ಸೆಮಿನಾರು, ಲ್ಯಾಬು, ರೀಸರ್ಚ್, ಮರೆತು ಹಾಯಾಗಿ ಇರು. ಅದೆ ಇನ್ನೊಂದು ಸಲ ಅಂದರೆ-ಇನ್ನೊಂದು ಇಪ್ಪತ್ತು ವರ್ಷ ಆದಮೇಲೆ. ಅಷ್ಟು ಹೊತ್ತಿಗೆ ಮರಿಸಾವಿ ಬಂದಿರ್ತಾಳೆ. ಅವಳನ್ನು ನೋಡುವುದಕ್ಕೆ ಬಾ! ಸುಮ್ಮನೆ ಇರು. ಒಂದು ವಾರ ಅಂತೂ ಇರಲೇಬೇಕು. ಅಟ್ಲೀಸ್ಟ್ ಮೂರುದಿನ. ಮುತ್ತಯ್ಯ ಬಿಡಬೇಕಲ್ಲ ಅಷ್ಟಕ್ಕೂ’ + +‘ರಿಯಲಿ ಸಾರಿ. ಇಂಪಾಸಿಬಲ್. ಲ್ಯಾಬಲ್ಲಿ ಒಂದು ಕೆಮಿಕಲ್ ಅನ್ನು ಅಬ್ಸರ್ವೇಷನ್ ಗೆ ಇಟ್ಟಿದೆ. ಹೋಗಲೇಬೇಕು’. + +‘ಅದೆಲ್ಲಾ ಕೇಳಲ್ಲ. ನೀನು ಇರುತ್ತೀಯಾ ಅಷ್ಟೆ’ ಸಾವಿತ್ರಿ ಅಡುಗೆಮನೆಗೆ ಓಡಿಬಂದು, ‘ಅಮ್ಮಾ.. ಪಪ್ಪಾ ಕಾಯ್ತಿದ್ದಾರೆ ಹೊರಗಡೆ. ಒಬ್ಬರೇ ಕೂತು’ ಎಂದಳು. + +ನಾಲ್ಕು ಪಿಂಗಾಣಿ ಕಪ್ಪು, ಸಾಸರ್ ಗಳನ್ನು ಮತ್ತು ಬಿಸಿ ಕಾಫಿಯನ್ನು ಒಂದು ಜಗ್ಗಿನಂತಿರುವ ಪಿಂಗಾಣಿ ಬಟ್ಟಲಿನೊಳಗೆ ಸುರಿದು ಮುಚ್ಚಳದಿಂದ ಮುಚ್ಚಿ, ಪಿಂಗಾಣಿ ಟ್ರೇಯಲ್ಲಿ ಇಟ್ಟುಕೊಂಡು ಸುಜಾತ ಹೊರನಡೆದಳು. ಸಾವಿತ್ರಿ ಹಾಗು ಶಾಕ್ಯ ಅವಳನ್ನು ಹಿಂಬಾಲಿಸಿದರು. ಹೊರಗಡೆಹೋಗಿ ಟೇಬಲ್ಲಿನ ಸುತ್ತ ಕೂತರು. ಈ ಭೂಮಿಮೇಲೆ ಇನ್ನೆಲ್ಲೂ ಇರದೆ ಈ ಹುಣ್ಣಿಮೆಯ ಬೆಳದಿಂಗಳು ಇವರ ಅಂಗಳದಲ್ಲಿ ಅದರಲ್ಲೂ ಈ ನಾಲ್ವರ ಮುಖದಮೇಲೆ ಬಿದ್ದು ಮಿನುಗುವಂತಿತ್ತು. ಪಕ್ಕದಲ್ಲಿಯೇ ನಾಯಿ ತನ್ನ ಹಿಂಗಾಲುಗಳನ್ನು ನೆಲಕ್ಕೆ ಸಮನಾಂತರವಾಗಿ ಮಡಿಚಿಕೊಂಡು ಮುಂಗಾಲುಗಳನ್ನು ನೇರ ನಿಲ್ಲಿಸಿಕೊಂಡು ಬೆಳದಿಂಗಳ ನೋಡುತ್ತ ಧ್ಯಾನಿಸುತ್ತಿರುವಂತೆ ಕೂತಿತ್ತು. ಸಾವಿತ್ರಿ ನಿಧಾನ ಪಿಂಗಾಣಿ ಜಗ್ಗಿನ ಮುಚ್ಚಳವನ್ನು ತೆಗೆದು ನಾಲ್ಕೂ ಕಪ್ಪುಗಳಿಗೆ ಕಾಫಿಯನ್ನು ಸುರಿದಳು. ಕಾಫಿಯ ನೊರೆ ಬೆಳದಿಂಗಳಲಿ ಬೆರೆತು ಹೊಳೆಯುತ್ತಿತ್ತು. + +‘ಊಟಕ್ಕೆ ಏನಾದ್ರೂ ಸ್ಪೆಷಲ್ ಮಾಡು. ನಾನ್ ವೆಜ್ ಆದರೆ ಪೀಟರ್ಗೆ ಫೋನ್ ಮಾಡ್ತೀನಿ. ತಂದು ಕೊಟ್ಟು ಹೋಗ್ತಾನೆ. ಗಂಟೆ ಏಳುವರೆ ಆಗುತ್ತಾ ಬಂತು. ಎಂಟುವರೆ ತನಕ ಇರುತ್ತಾನೆ’ ಎಂದು ಮುತ್ತಯ್ಯ ಹೇಳಿದ. + +‘ಕಪ್ಪಿನ ಸುತ್ತ ಹುಲ್ಲ ಎಸಳಿನ ಭಿತ್ತಿಯನ್ನು ನೋಡುತ್ತಾ ಕಾಫಿ ಹೀರುತ್ತಿದ್ದ ಶಾಕ್ಯ ‘ಪ್ಲೀಸ್ ನಾನ್ ವೆಜ್ ಏನು ಬೇಡ. ನಾನ್ ವೆಜ್ ತಿಂದು ತಿಂದು ಸಾಕಾಗಿದೆ. ವೆಜ್ಜಲ್ಲೇ ಯಾವುದಾದರೂ ದೇಸಿ ಊಟ ಆದರೆ ಸಾಕು’ ಎಂದ. + +‘ಎಲ್ಲಿಯಾದರು ಉಂಟಾ? ಮಿಲ್ಟ್ರಿ ಸ್ಕಾಚ್ ಬೇರೆ ಇದೆ. ಒಳ್ಳೆ ಬೆಳದಿಂಗಳು.’ + +‘ಪ್ಲೀಸ್ ಬೇಡ.’ + +‘ಸರಿ.’ + +‘ಅಮ್ಮ ಮಗಳಿಗೆ ಬಿಡಿ. ನಾವೇನೋ ಮಾಡ್ತೀವಿ; ನೀವಿಬ್ಬರು ಮಾತಾಡುತ್ತಾ ಕೂತಿರಿ’ ಎಂದು ಸಾವಿತ್ರಿಯನ್ನು ಕರೆದುಕೊಂಡು ಸುಜಾತ ಒಳಗೆ ಹೋದಳು. + +‘ನಿಮ್ಮ ಬಗ್ಗೆ ಸೂಜಿ ಬಹಳ ಹೇಳ್ತಿರುತ್ತಾಳೆ. ನಿಮ್ಮ ಆರ್ಟಿಕಲ್ ಕೆಲವನ್ನು ಓದಿದ್ದೀನಿ. ಅರ್ಥ ಆಗಿಲ್ಲ. ಕೆಲವನ್ನು ಸುಜಾತ ವಿವರಿಸಿ ಹೇಳಿದ್ದಾಳೆ. ಇಂಟರ್ ನ್ಯಾಷನಲ್ ಲೆವೆಲ್ ನಲ್ಲಿ ನಿಮ್ಮ ಹೆಸರು ಖ್ಯಾತಿ ಪಡೆದಿರುವುದನ್ನ ಕೇಳಿದರೆ ತುಂಬಾ ಖುಷಿ ಮತ್ತು ಹೆಮ್ಮೆ ಅನ್ನಿಸುತ್ತೆ’ ಎಂದು ಹೇಳಿದ. + +‘ಹಾಗೇನಿಲ್ಲ. ನ್ಯಾನೋ ಟೆಕ್ನಾಲಜಿಯಲ್ಲಿ ಸ್ವಲ್ಪ ಕೆಲಸಮಾಡಿದ್ದೀನಿ. ಜರ್ಮನ್ ನ ಒಂದು ಸೈನ್ಸ್ ಆರ್ಗನೈಸೇಷನ್ ತುಂಬಾ ಮೆಚ್ಚಿಕೊಂಡು ಪೇಟೆಂಟ್ ಕೇಳ್ತಿದೆ. ಆದರೆ ನಮ್ಮ ಕಂಟ್ರಿಯಲ್ಲಿಯೇ ಇದು ಯೂಸ್ ಆಗಲಿ ಎಂದು ನನ್ನ ಆಸೆ. ಆದರೆ ಗೌರ್ನಮೆಂಟ್ ಇನ್ನೂ ಯಾವುದೇ ಅಭಿಪ್ರಾಯ ತಿಳಿಸಿಲ್ಲ. ಲೆಟರ್ ಕರೆಸ್ಪಾಂಡೆನ್ಸ್ ನಡಿತಿದೆ.’ + +‘ಹ್ಞಾ….’ ಎಂದು ಏನನ್ನೋ ನೆನೆಸಿಕೊಂಡು ಕೇಳುವವವನಂತೆ ಮುತ್ತಯ್ಯ, ‘ಅಲ್ಲದೆ ನಿಮ್ಮ ಕೆಲವು ಕವಿತೆಗಳನ್ನು ಋತುಮಾನ ನೆಟ್ ಮ್ಯಾಗಜಿನ್ನಲ್ಲಿ ಓದಿದ್ದೀನಿ. ರಿಯಲಿ ನ್ಯೂ ಕೈಂಡ್ ಆಫ್ ಪೊಯಟ್ರಿ. ತುಂಬಾ ಇಂಟರೆಸ್ಟಿಂಗ್ ಕವಿತೆ ಮತ್ತು ವಿಜ್ಞಾನ ಜೊತೆ ಜೊತೆಗೆ ಸಾಗುತ್ತಿರುವುದು.’ ಮತ್ತೆ ಮುಂದುವರೆಸಿ, ‘ನಿಮ್ಮ ಕವಿತೆಗಳಲ್ಲಿ ನಾನು ಗಮನಿಸಿರುವಂತೆ ಸಾವು, ಏಕಾಂತತೆ ಮತ್ತು ತಣ್ಣಗೆ ಹರಿವ ವಿಷಾದಗಳು ತುಂಬಾ ಚೆನ್ನಾಗಿ ಪೋಟ್ರೆ ಆಗಿದ್ದಾವೆ. ಪ್ರಕೃತಿಯಿಂದ ನೀವು ಹೆಕ್ಕಿಕೊಂಡಿರುವ ಇಮೇಜ್ ಗಳು ನಮ್ಮ ಮನಸ್ಸಿನೊಳಗೆ ಇಳಿದು ಹರಿದು ಹೋಗುತ್ತವೆ. ಬಟ್ ಬಹಳಷ್ಟು ಪದ್ಯಗಳು ಅತೃಪ್ತಿಯನ್ನು ಕುರಿತು ಹೇಳುತ್ತವೆ. ನಿಮ್ಮೊಳಗೊಬ್ಬ ಭಾವುಕನಿದ್ದಾನೆ. ಆದರೆ ನಿಮ್ಮನ್ನು ಬಾಹ್ಯವಾಗಿ ನೋಡಿದರೆ ಗೊತ್ತೇ ಆಗುವುದಿಲ್ಲ. ಅಲ್ಲ ಹೇಗೆ ಬ್ಯಾಲೆನ್ಸ್ ಮಾಡ್ತೀರ ನಿಮ್ಮ ರೀಸರ್ಚ್ ಮತ್ತು ಕವಿತೆಯನ್ನು?’ + +‘ಇದರ ಬಗ್ಗೆ ಲಿಟರೇಚರ್ ಓದಿಕೊಂಡಿರುವ ನಿಮಗೆ ನಾನು ಹೇಳುವುದು ಏನಿದೆ?’ ಎಂದು ಅಂಜಿಕೆಯಿಂದ ಹಾಗು ತುಸು ಭಾವುಕನಾಗಿ, ‘ನೇರವಾಗಿ ಹೇಗೆ ಹೇಳಬೇಕೆಂದು ನನಗೂ ಗೊತ್ತಾಗುತ್ತಿಲ್ಲ. ಆದರೆ ಕವಿತೆ ನನ್ನ ರೀಸರ್ಚ್ ಗೆ ದೊಡ್ಡ ಸ್ಪೂರ್ತಿ. ಬಹುಷಃ ಕವಿತೆ ಬರೆಯದಿದ್ದರೆ ನಾನ್ಯಾವತ್ತೋ ಸತ್ತು ಹೋಗುತ್ತಿದ್ದೆ ಅನ್ನಿಸುತ್ತೆ. ಪ್ರಕೃತಿಯೊಳಗೆ ನನ್ನನ್ನು ಬೆರೆಸಿರುವುದೇ ಕವಿತೆಗಳು. ನೋವನ್ನು ಮರೆಯಲು ಒಂದು ಪುಟ್ಟ ಹೂವು, ಮೆಲ್ಲ ಹರಿವ ಬಸವನಹುಳು, ಹರಿವ ನೀರ ನಿನಾದ ಹೀಗೆ ಅನೇಕ’ ಹೇಳಿದ.‘ಎಂತಾ ಸ್ಟ್ರೇಂಜ್ ಅಲ್ಲವಾ?’ ಎಂದು ಹೊಳೆವ ಚಂದಿರನನ್ನೇ ನೋಡುತ್ತಾ, ‘ನಾನು ಎಂ.ಎ.ದಲ್ಲಿ ಲಿಟರೇಚರ್ ಓದಿದ್ದರೂ ಇವತ್ತಿಗೂ ಒಂದು ಕವಿತೆ ಬರೆಯುವುದಕ್ಕೇ ಆಗಿಲ್ಲಾ!’, + +‘ಆದರೆ ನೀವು ನಿಜವಾದ ಕವಿತೆಯನ್ನೇ ಬರೆದಿದ್ದೀರಾ’ ಎಂದ ಶಾಕ್ಯನ ಮಾತಿಗೆ ‘ಅಂದರೆ!’ ಮುತ್ತಯ್ಯ ಕುತೂಹಲಗೊಂಡು, ‘ಮತ್ತೆ ನೀವು ಬರೆದಿರುವುದು ಹಾಗು ಬರೆಯುತ್ತಿರುವುದು ಸುಳ್ಳೋ!’ ಎಂದು ಮುತ್ತಯ್ಯ ತಮಾಷೆ ಮಾಡಿದ. + +‘ಡೊಂಟ್ ಟೇಕ್ ಇಟ್ ಲಿಟರಲಿ’ ಎಂದು ಸ್ವಲ್ಪ ಬಿಡಿಸಿ ‘ಸಾವಿ ನೀವು ಬರೆದಿರುವ ನಿಜವಾದ ಕಾವ್ಯ’ ಎಂದ.ಇದಕ್ಕೆ ಮುತ್ತಯ್ಯ ‘ನೀವು ತುಂಬಾ ಜೋಕ್ಸ್ ಸಹ ಮಾಡ್ತೀರಾ’ ಎಂದು ಹೇಳಿದ. + +‘ಹೇಳಬೇಕೆಂದರೆ ನಿಮ್ಮಿಬ್ಬರದು ಗುಡ್ ಕಾಂಬಿನೇಷನ್. ನಿಮ್ಮದು ಲಿಟರೇಚರ್. ಸೂಜಿದು ಸೈನ್ಸ್. ಅಂದಹಾಗೆ ಮದುವೆ ಆದಮೇಲೆ ಯಾವತ್ತಾದರೂ ಟೀಚ್ ಮಾಡಬೇಕು ಎಂದು ಕೇಳಿದ್ದಳಾ?’ + +‘ನಾನೇ ಕೇಳಿದ್ದೆ. ನನಗಂತು ಇಷ್ಟವಿಲ್ಲ. ನೀನು ಹೋಗುತ್ತೀಯಾ ಅಂದರೆ ನನ್ನದೇನು ಅಭ್ಯಂತರ ಇಲ್ಲ ಎಂದಿದ್ದೆ. ಆದರೆ ಅವಳೇ ಬೇಡ, ನಿನ್ನ ಜೊತೆ ನಾನು ಕೃಷಿ ಮಾಡ್ತೀನಿ ಎಂದು ಈ ಇಪ್ಪತ್ತು ವರ್ಷದಿಂದ ನನ್ನೊಟ್ಟಿಗೇ ಕೃಷಿ, ಮನೆ ಕೆಲಸ, ಬಂದವರು ಹೋಗುವವರನ್ನು ಸುಧಾರಿಸುವುದು ಹೀಗೆ…’ + +‘ನಿಮ್ಮನ್ನು ಮುಖತಃ ಈ ಹಿಂದೆ ಭೇಟಿಯಾಗಿಲ್ಲದಿದ್ದರೂ ನನಗಂತೂ ನೀವು ಅಪರಿಚಿತರೆನ್ನುವ ಫೀಲೇ ಇಲ್ಲ.’ + +‘ನನಗೂ ಅಷ್ಟೇ ಯಾವುದೋ ಹಳೆಯ ಗೆಳೆಯನನ್ನು ಮತ್ತೆ ಎಷ್ಟೋ ವರ್ಷಗಳ ಬಳಿಕ ಭೇಟಿಯಾಗಿದ್ದೀನೇನೋ ಅನ್ನಿಸುತ್ತಿದೆ.’ + +ಒಂದು ಗಂಟೆಯೊಳಗೆ ಸುಜಾತ ಮತ್ತು ಸಾವಿತ್ರಿ, ಮುದ್ದೆ, ಅನ್ನ, ಒಣಮೀನ ಗೊಜ್ಜು, ನುಗ್ಗೇಸೊಪ್ಪಿನ ಉಪ್ಪೆಸರು, ಮೊಟ್ಟೆಗಳನ್ನು ಹಾಕಿ ಹುರಿದ ನುಗ್ಗೇ ಸೊಪ್ಪನ್ನ ತಯಾರಿಸಿ, ಮನೆಯಲ್ಲಿಯೇ ತಯಾರಿಸಿರುವ ಬಿಳಿ ಜೋಳದ ಹಪ್ಪಳಗಳನ್ನು ಕರಿದು ಎಲ್ಲವನ್ನು ಒಂದು ಹತ್ತಿರ ಇಟ್ಟರು. + +‘ಸಾವಿ ಅಗೋ ಆ ಶೆಲ್ಫ್ ನಲ್ಲಿ ಅಜ್ಜಿ ಕಳುಹಿಸಿರುವ ಹುಣುಸೇ ಹಿಂಡಿ ಇದೆ. ಅದನ್ನು ಕೆಳಗೆ ಇಳಿಸಿಕೊಂಡು ಸ್ವಲ್ಪ ಆ ಬಟ್ಟಲಲ್ಲಿ ಹಾಕಿ ಇಡು. ಅವರನ್ನು ಕರೆದುಕೊಂಡು ಬರುತ್ತೇನೆ’ ಎಂದು ಹೊರನಡೆದಳು ಸುಜಾತಾ. ಸ್ವಲ್ಪ ಹೊತ್ತು ಕಾದು ಅವರು ಒಳಗೆ ಬರದಿದ್ದುದಕ್ಕೆ ಸಾವಿತ್ರಿ ಪಪ್ಪಾ.. ಅಮ್ಮಾ.. ಎಂದು ಕೂಗಿಕೊಂಡು ಹೊರಹೋದಳು. ‘ಸಾವಿ ನಿಮ್ಮ ಅಪ್ಪ ಮತ್ತು ಶಾಕ್ಯ ಕಾಣಿಸುತ್ತಿಲ್ಲ ಕಣೆ. ಬಾ ತೋಟದ ಕಡೆ ಏನಾದರೂ ಹೋಗಿರಬಹುದು. ನೋಡೋಣ’ ಎಂದು ಹೇಳಿ ಅವಳನ್ನು ಕರೆದುಕೊಂಡು ಆ ಕಡೆ ನಡೆದಳು. + +‘ಪಪ್ಪಾ.. ಪಪ್ಪಾ..’ ಎಂದು ನಾಲ್ಕೈದು ಬಾರಿ ಸಾವಿತ್ರಿ ಕೂಗಿದಳು. ಆದರೆ ಯಾವುದೇ ಸದ್ದು ಕೇಳಿಸಲಿಲ್ಲ. + +‘ಸಾವಿ ಈ ನಾಯಿನೂ ಕಾಣುತ್ತಿಲ್ಲವಲ್ಲೇ’ + +‘ಅದೂ ಅವರ ಜೊತೆ ಹೋಗಿರಬಹುದ ಅಮ್ಮಾ’ ಅಂದಳು ಸಾವಿತ್ರಿ. + +ತೋಟದಲ್ಲಿ ಗಾಳಿ ಬೀಸುತ್ತಿದ್ದುದರಿಂದ ಎಲೆಗಳ ಸದ್ದು ಕೇಳಿಸುತ್ತಿತ್ತು. ಜೊತೆಗೆ ಜೀರುಂಡೆ, ಕಪ್ಪೆಗಳ ಸದ್ದು. ಸುಮಾರು ಸಲ ಕೂಗಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ‘ಎಲ್ಲಿಗೆ ಹೋದರಪ್ಪ ಇಷ್ಟು ಹೊತ್ತಿನಲ್ಲಿ’ ಎಂದು ಮಾತಾಡಿಕೊಳ್ಳುತ್ತಾ ಸಾವಿತ್ರಿ, ಸುಜಾತಾ ವಾಪಸ್ಸಾದರು. ವಾಪಸ್ಸುಬರುತ್ತಿರುವಾಗ ಮನೆಯ ಬಲಗಡೆಯ ಶೇಂಗಾ ಹೊಲದ ಕಡೆಯಿಂದ ಅವರಿಬ್ಬರು ಮಾತಾಡಿಕೊಂಡು ಬರುತ್ತಿರುವುದು ಕಾಣಿಸಿತು. ನಾಯಿ ಅವರ ಮುಂದೆ ನೆಲವನ್ನು ಮೂಸಿನೋಡಿಕೊಂಡು ಬರುತ್ತಿತ್ತು. + +‘ಯಾವ ಕಡೆ ಹೋಗಿದ್ರಿ? ನಾವು ತೋಟದ ಕಡೆ ಹೋಗಿ ಕೂಗುತ್ತಿದ್ದೇವೆ.’ + +‘ಓ ಈಗ ಗೊತ್ತಾಯ್ತು ಕ್ವಾರಿ ಹತ್ತಿರ ಹೋಗಿದ್ದರೂ ಅನ್ನಿಸುತ್ತೆ.. ಅಲ್ವಾ ಪಪ್ಪಾ?’ + +‘ಹೋಗೋಣ ಅಂತ ಹೋದ್ವಿ. ಅರ್ಧ ದಾರಿಗೆ ಹೋಗಿ ಪುನಃ ವಾಪಸ್ಸು ಬಂದ್ವಿ, ನಾಳೆ ಬೆಳಗ್ಗೆ ಹೋದರೆ ಆಯ್ತು ಅಂಥ.’ + +‘ಸಾಯಲಿ ಬಿಡ್ರಿ. ನಮಗೆ ಯಾಕೆ’ ಅಂದಳು ಸುಜಾತಾ. + +‘ಯಾಕೆ ಸೂಜಿ? ತುಂಬಾ ಡೆಸ್ಪರೇಟಾಗಿ ಮಾತಾಡ್ತಿ?’ ಶಾಕ್ಯ ಕೇಳಿದ. + + + +‘ಮತ್ತಿನ್ನೇನು? ಆ ಕಂಪನಿಯವರು ನಮ್ಮಂಥವರ ಮಾತನ್ನೆಲ್ಲಾ ಕೇಳುತ್ತಾರ? ಈ ಊರಲ್ಲೂ ಅಷ್ಟೆ. ಅವರಪರವೇ ಜನ. ಎಂಥಹ ಅದ್ಭುತವಾದ ಕೋಟೆ. ಎಲ್ಲಾ ಹಾಳುಮಾಡಿದರು. ಈ ರಾಜ್ಯದ ಪ್ರಾಚೀನ ಶಾಸನಗಳಲ್ಲಿ ಒಂದು ಅಲ್ಲೇ ಇತ್ತಂತೆ. ಒಂದು ಊರಿಗೆ ನೆನಪೇ ಇಲ್ಲದಂತೆ ಮಾಡಿಬಿಟ್ಟರು. ಕಲ್ಲಿನ ಅರಮನೆ. ಏಕ ಶಿಲೆಯಲ್ಲಿಯೇ ಕೊರೆದ ಸಾವಿರದ ಒಂದು ದೇವತೆಗಳು. ಹೊಂಡ. ಥೂ ಎಲ್ಲಾ ಹಾಳುಮಾಡಿಬಿಟ್ಟರು. ಇಲ್ಲಿಯ ಕಲ್ಲುಗಳಿಗೆ ಹೊರದೇಶದಲ್ಲಿ ತುಂಬಾ ವ್ಯಾಲ್ಯೂ ಇದೆಯಂತೆ. ಈ ಊರಿನವರಿಗೇ ಮನೆಕಟ್ಟುವುದಕ್ಕೆ ಕಲ್ಲುಗಳಿಲ್ಲ. ಹೊರದೇಶದ ಮನೆಗಳಿಗೆ ನಮ್ಮ ದೇಶದ ಕಲ್ಲುಗಳ ಅಡಿಪಾಯ. ಸರ್ಕಾರಕ್ಕೆ ಡೆವಲಪ್ಮೆಂಟ್ ಅಂದರೆ ಇಲ್ಲಿಯ ಸಂಪತ್ತನ್ನ ಹೊರ ದೇಶಗಳಿಗೆ ಲಕ್ಷಗಳಿಗೆ ಕೋಟಿಗಳಿಗೆ ಮಾರಿಕೊಳ್ಳವುದು. ಥೂ ಸರ್ಕಾರದವರು ಹೊರಗೆ ರಾಷ್ಟ್ರಗೀತೆ ಹಾಡುತ್ತಾರೆ. ಒಳಗೊಳಗೆ ದೇಶವನ್ನು ಲೂಟಿ ಮಾಡುತ್ತಾರೆ. ಬನ್ನಿ ಬನ್ನಿ ನಮ್ಮ ಮಾತುಗಳೆಲ್ಲಾ ಜೋಗಪ್ಪರ ಮಾತುಗಳು ಇದ್ದಂಗೆ’ ಎಂದು ಬೇಸರದಿಂದ ಸಿಟ್ಟಿನಿಂದ ಹೇಳುತ್ತಾ ಒಳನಡೆದಳು. + +ಸಾವಿತ್ರಿ ಎರಡೂ ಅಂಗೈ ಬೆರಳುಗಳನ್ನು ಒಂದರ ನಡುವೆ ಒಂದನ್ನು ತೂರಿಸಿಕೊಂಡು ಎರಡೂ ತೋರುಬೆರಳುಗಳನ್ನು ಒಂದಕ್ಕೊಂದು ಒತ್ತಿಕೊಂಡು ತುಟಿಗೆ ಇಟ್ಟುಕೊಂಡು ಅಡುಗೆ ಮನೆ ಕಡೆ ತನ್ನ ಅಮ್ಮನನ್ನು ಹಿಂಬಾಲಿಸಿದಳು. ಮುತ್ತಯ್ಯ ಬಕೆಟ್ ಗೆ ನೀರನ್ನು ಸುರುವಿ ಶಾಕ್ಯನಿಗೆ ಮುಖತೊಳೆಯಲು ಹೇಳಿದ. ಶಾಕ್ಯ ಮುಖ ತೊಳೆದವನೇ ನೇರ ಹಾಲ್ ಗೆ ಬಂದು ‘ನೆಲದಲ್ಲಿ ಕೂತು ಊಟ ಮಾಡೋಣ್ವಾ?’ ಎಂದು ಅಡುಗೆ ಮನೆಯಲ್ಲಿ ಊಟಕ್ಕೆ ತಯಾರಿ ಮಾಡುತ್ತಿದ್ದ ಸುಜಾತಳಿಗೆ ಹೇಳಿದ. ತಕ್ಷಣಕ್ಕೆ ಸಾವಿತ್ರಿಗೆ ಹೇಳಿ ನಡುಮನೆಯ ಮಧ್ಯೆ ಜಮಖಾನ ಹಾಸಿಸಿದಳು. + +‘ಯಾವುದೋ ಒಂದು ಐಟಂ ತುಂಬಾ ಘಮಘಮ ಪರಿಮಳ ಸೂಸುತ್ತಿದೆಯಲ್ಲಾ!’ ಎಂದ ಶಾಕ್ಯ. + +ಅದಕ್ಕೆ ಸಾವಿತ್ರಿ, ‘ಅದಾ.. ಜೀರಿಗೆ ಸಣ್ಣ ಅಕ್ಕಿ. ನಮ್ಮ ಅಜ್ಜಿ ಮನೆದೂ. ಸಖತ್ತಾಗಿದೆಯಲಾ ಸ್ಮೆಲ್’ ಅಂದಳು. + +‘ಚಪಾತಿ, ತಿಂದೂ ತಿಂದೂ ಸಾಕಾಗಿದೆ. ಜೊತೆಗೆ ಆ ಬಿ.ಟಿ.ರೈಸು. ನಾಲಗೆ ಸ್ವಾದವನ್ನೇ ಕಳೆದುಕೊಂಡಿದೆ. ಅಲ್ಲಾ ಇಷ್ಟೊಂದೆಲ್ಲಾ ಇಷ್ಟು ಬೇಗ ಹೇಗೆ ಪ್ರಿಪೇರ್ ಮಾಡಿದೆ?’ ಅಂದ. + +’ಅವಳೊಬ್ಬಳ ಕೈಲಿ ಎಲ್ಲಿ ಆಗುತ್ತೆ? ನನ್ನ ಮಗಳು ಇಲ್ವಾ ದ ಗ್ರೇಟ್ ಸಾವಿತ್ರಿ!’ ಎಂದು ಮುತ್ತಯ್ಯ ಅಂದ. ‘ಒಟ್ಟು ನಿನ್ನ ಮಗಳು ಮುಂದೆ ಇರಬೇಕು ಯಾವಾಗಲು’ ಎಂದು ಛೇಡಿಸಿ, ‘ಇನ್ನು ಮುಂದೆ ನೋಡೋಣ… ಅವಳು ಎಂ.ಬಿ.ಬಿ.ಎಸ್.ಗೆ ಹೋದಾಗ’ ಅಂದಳು. ‘ಹೌದಾ ಸಾವಿ! ಎಂ.ಬಿ.ಬಿ.ಎಸ್. ಗೆ ಜಾಯ್ನ್ ಆಗುತ್ತಿದ್ದೀಯಾ? ಆಲ್ ದಿ ಬೆಸ್ಟ್. ರಿಯಲಿ ಯು ಹ್ಯಾವ್ ಚೂಸನ್ ಎ ಹೋಲಿ ಜಾಬ್. ರೋಗಿಯನ್ನು ಸರ್ವೀಸ್ ಮಾಡುವುದಿದೆಯಲ್ಲಾ ಗ್ರೇಟ್. ಆದರೆ ಅಂಥ ಹೋಲಿ ಜಾಬ್ ಇಂದು ಡೆವಿಲ್ ಗಳ ಕೈಯಲ್ಲಿದೆ.’ ಎಂದ ಶಾಕ್ಯ. ‘ಅಯ್ಯೋ ಅವಳು ಜಾಯ್ನ್ ಆಗುವತನಕ ಏನೇನು ರಾಣ ರಂಪೋ?’ ಎಂದಳು ಸುಜಾತ. + +‘ಯಾಕೆ?’ + +‘ಅವರದೇ ದೊಡ್ಡ ತಕರಾರು. ಸುತ್ರಾಮ್ ಇಷ್ಟ ಇಲ್ಲ.’ + +‘ಮಗಳನ್ನು ಬಿಟ್ಟಿರಬೇಕಾಗುತ್ತಲ್ಲ ಅನ್ನುವ ಫೀಲಿಂಗ್. ಒಂಥರ ಪೊಸೆಸ್ಸಿವ್ನೆಸ್ಸ್. ಎಲ್ಲಾ ಸರಿಯಾಗುತ್ತೆ. ಹಿ ವಿಲ್ ಅಗ್ರಿ. ಡೊಂಟ್ ವರಿ’ ಎಂದ ಶಾಕ್ಯ. + +‘ನೆನೆಸಿಕೊಂಡರೆ ಕರುಳು ಕಿವುಚಿದಂಗಾಗುತ್ತೆ. ಈ ಪುಟ್ಟ ಕೈಗಳಿಂದ ಎಂಥೆಂತಹವೋ ಹೆಣಗಳನ್ನೆಲ್ಲಾ ಕೊಯ್ಯಬೇಕಲ್ಲಪ್ಪಾ’ ಎಂದ ಮುತ್ತಯ್ಯ ನೀರುಕುಡಿದು, ಲೋಟವನ್ನು ಕೆಳಗಿಟ್ಟು, ಮಗಳ ಕೈಯನ್ನು ಒಮ್ಮೆ ಮುಟ್ಟಿ ಮರುಕದಿಂದ ಹೇಳಿದ. + +‘ನೀವಂಥೂ ಜಗತ್ತಿನ ಅನೇಕ ಲೇಖಕರನ್ನು ಓದಿಕೊಂಡು ಹೀಗೆ ಇಂಪ್ರಾಕ್ಟಿಕಲ್ ಆಗಿ, ಇರ್ಯಾಷನಲ್ ಆಗಿ ಯೋಚಿಸುತ್ತೀರಲ್ರಿ. ವೈಚಾರಿಕತೆ, ವಿಮರ್ಶೆ ಅಂತೆಲ್ಲಾ ಮಾತಾಡ್ತೀರಾ. ಮಗಳ ವಿಷಯದಲ್ಲಿ ಮಾತ್ರ ಕನ್ಸರ್ವೇಟಿವ್ ಆಗಿ ಯೋಚಿಸುವುದು. ನೀವೇ ಹೇಳ್ತಾ ಇರ್ತೀರಾ ತನುವಿನೊಳಗನುದಿನಾ ವಿದ್ದೂ ಎನ್ನಾ ಮನಕೊಂದು ಮಾತಾ ಹೇಳದೇ ಹೋದೆ ಹಂಸಾ’ ಎಂದು ರೇಗಿಸಿದಳು. + +‘ಊಟ ತುಂಬಾ ಚೆನ್ನಾಗಿದೆ. ನನಗಂತೂ ಇಂಥ ಊಟ ಮಾಡಿ ಎಷ್ಟೋ ವರ್ಷಗಳು ಆದ ಹಾಗೆ ಆಗಿದೆ. + +‘ಆದರೆ’, ಮುತ್ತಯ್ಯನ ಮುಖ ನೋಡಿಕೊಡು, ‘ಒಬ್ಬರಿಗೆ ತುಂಬಾ ನಿರಾಸೆಯಾಗಿದೆ. ಸ್ಕಾಚ್ ಕುಡಿಯಲಿಲ್ಲವಲ್ಲಾ ಎಂದು; ಆದರೆ, ನನ್ನದೇನು ಅಬ್ಜಕ್ಷನ್ ಇಲ್ಲಪ್ಪ. ಕುಡಿಯಬಹುದು ಈಗಲೇ ಬೇಕಾದರೆ’ ಅಂದಳು. + +‘ನೋ ನೋ. ಹಾಗೇನಿಲ್ಲ. ನೋಡೋಣ. ಅದಕ್ಕೆ ಎಂದು ಟೈಂ ಬರುತ್ತೆ’ ಅಂದ. ‘ಸ್ಕಾಚ್ ಹಳೆಯದಾದಷ್ಟು ಟೇಸ್ಟಂತೆ, ಅಲ್ವಾ ಪಪ್ಪಾ’ ಎಂದಳು ಸಾವಿತ್ರಿ. ಅದಕ್ಕೆ ಶಾಕ್ಯ ನಕ್ಕ. + +ಊಟ ಆದ ಮೇಲೆ ಎಲ್ಲರೂ ಮತ್ತೆ ಬೆಳದಿಂಗಳ ಅಂಗಳಕ್ಕೆ ಹೋದರು. ಸಾವಿತ್ರಿ ಅನ್ನಕ್ಕೆ ಹಾಲನ್ನು ಬೆರೆಸಿಕೊಂಡು ಒಂದು ತಟ್ಟೆಯಲ್ಲಿ ಇಟ್ಟು ಬಂದು ಅವರನ್ನು ಸೇರಿಕೊಂಡಳು. + +‘ಇಫ್ ಯು ಡೋಂಟ್ ಮೈಂಡ್ ಮೆ ಐ ಸ್ಮೋಕ್’ ಎಂದು, ಮುತ್ತಯ್ಯನಿಗೆ ಪ್ಯಾಕೆಟ್ ಹಿಡಿದು, ‘ಡು ಯು?’ ಅಂದ. + +‘ಪಪ್ಪಾ ಇದನ್ನೇ ಕಾಯ್ತಾ ಇದ್ದರು’ ಎಂದಳು ಸಾವಿತ್ರಿ. + +ಮುತ್ತಯ್ಯ ಸುಜಾತಳ ಕಡೆ ತಿರುಗಿದ. + +‘ಯಾವಾಗಲೂ ಎಲ್ಲಾ ಕಡೆಯೂ ನನ್ನನ್ನೇ ಕೇಳ್ತೀರಾ?’ ಎಂದು ಛೇಡಿಸಿದಳು. + +‘ಹಾಗೇನಿಲ್ಲಪ್ಪಾ. ಸುಮ್ಮನೆ ನಿನ್ನನ್ನು ನೋಡಬೇಕು ಅನ್ನಿಸಿತು ನೋಡ್ದೆ. ಬೆಳದಿಂಗಳ ಬೆಳಕಲ್ಲಿ ನೀನು ಹೇಗೆ ಕಾಣುತ್ತೀಯಾ ಎಂದು’ ಅಂದ. + +‘ಆಹಾಹಾ… ನನಗೆ ಗೊತ್ತಿಲ್ಲವಾ ನಿಮ್ಮ ನಾಟಕ?’ + +ಶಾಕ್ಯ ಸಿಗರೇಟನ್ನು ಲೈಟರ್ನಲ್ಲಿ ಹಚ್ಚಿಕೊಂಡು, ಮುತ್ತಯ್ಯನ ಸಿಗರೇಟ್ ಗೆ ಹಿಡಿದ. ಒಂದು ಧಮ್ ಎಳೆದು ಹೊಗೆಯನ್ನು ಸುರುಳಿಯಾಗಿ ಬಿಡುತ್ತಾ ಬೆಳದಿಂಗಳನ್ನು ನೋಡುತ್ತಾ ಒಂದು ಕ್ಷಣ ಸುಜಾತಳ ಕಡೆ ನೋಡಿದ. ಆಗಷ್ಟೇ ಕಾಣಿಸಿಕೊಳ್ಳುತ್ತಾ ಇಣುಕಿ ನೋಡುತ್ತಿರುವ ಬಿಳಿ ಕೂದಲು. ಆದರೆ, ಕಣ್ಣುಗಳಿಗೆ ಮಾತ್ರ ವಯಸ್ಸಾಗದೆ ಇನ್ನಷ್ಟು ಹೊಳಪು ಬಂದು ಹೊಳೆಯುತ್ತಿದ್ದವು. ದುಂಡು ಮುಖ. ಸಪೂರ ದೇಹ. ಎಂತಹವರನ್ನು ಕರಗಿಸುವಂತಹ ಮಾತು. + +ಅವನ ಮನಸ್ಸಿನ ದಡಕ್ಕೆ- ‘ರಾಗಿಣಿ’, ‘ಆಸ್ಪತ್ರೆ.’, ‘ಅವಳು ಬದುಕಬೇಕೆಂದರೆ ಅದನ್ನು ತೆಗೆಯಲೇಬೇಕು.’ ‘ನೋವೆ’. ‘ಬೆಟರ್ ಅಡಾಪ್ಟ್.’ ‘ಒಂದು ಸಲ ಟೆಸ್ಟ್ ಟ್ಯೂಬ್ ಟ್ರೈ ಮಾಡೋಣ್ವಾ?’… + +‘ಸಾರಿ. ಹೀಗೆ ಆಗುವುದಕ್ಕೆ ಚಾನ್ಸೇ ಇಲ್ಲ. ಬಟ್. ಫೇಲ್ಯೂರ್ ಡ್ಯೂಟು ನೆಗ್ಲಿಜೆನ್ಸ್. ಟೆಂಪರೇಚರ್ ಮೇಂಟೇನ್ ಮಾಡುವುದರಲ್ಲಿ ಮಿಸ್ಸಾಗಿದೆ.’ + +‘ಹೋಗಲಿ ಬಿಡು. ಅಡಾಪ್ಟ್ ಮಾಡಿಕೊಳ್ಳೋಣ.’- ಅಸ್ಪಷ್ಟ ಚಿತ್ರಗಳು ಅಲೆಅಲೆಯಾಗಿ ಬಡಿಯುತ್ತಿವೆ. ಕಣ್ಣು ಒದ್ದೆಯಾದವು. ತಕ್ಷಣಕ್ಕೆ ಅವರಿಗೆ ಅರಿವಾಗದೋಪಾದಿಯಲ್ಲಿ ಕಣ್ಣುಗಳನ್ನ ಒರೆಸಿಕೊಂಡು, ಸಾವಿತ್ರಿಯನ್ನು ನೋಡಿದ. ಅವಳು ನಾಯಿಯ ಕಡೆ ಮುಖಮಾಡಿ ನಾಯಿಯನ್ನು ಅಣಕಿಸುತ್ತಿದ್ದಾಳೆ.ಅದು ನಾಲಗೆಯನ್ನು ಜೋತುಬೀಳಿಸಿಕೊಂಡು ಇವಳಕಡೆ ನೋಡುತ್ತಿದೆ. ಅದರ ನಾಲಗೆತುದಿಯಿಂದ ಒಂದೊಂದೇ ಹನಿ ಜೊಲ್ಲು ಮಳೆನೀರಿನಂತೆ ಶುಭ್ರವಾಗಿ ಬೀಳುತ್ತಿದೆ. ಮತ್ತೆ ಅಲೆಗಳು ಅವನ ಮನಸ್ಸಿನ ದಡಕ್ಕೆ ಬಡಿಯುತ್ತಿವೆ- ‘ಅವಳು ಸೈಕಿಕ್ ಆಗಿದ್ದಾಳೆ.’ ‘ಮಕ್ಕಳಿಲ್ಲ ಎನ್ನುವ ಕೊರಗು.’‘ನೀನು ಬಿಟ್ಟರೆ ಬೇರೆಯಾರಿರಬಹುದು ಅವಳ ಹತ್ತಿರ.’ ‘ಒಂದು ವರ್ಷ ರಜೆಹಾಕಿ ಅವಳನ್ನು ಎಲ್ಲಿಗಾದರೂ ಕರೆದುಕೊಂಡು ಹೋಗು.’‘ರೀಸರ್ಚ್, ಲ್ಯಾಬ್, ಸೆಮಿನಾರ್ ಗಳು, ತರಗತಿಗಳು, ಸ್ಟೂಡೆಂಟ್ಸ್. ಕ್ಯಾಂಪಸ್ಸು.’ ‘ಅದು ಹೇಗೆ ಸಾಧ್ಯ.’ ‘ಅರೆ ಇದೊಳ್ಳೆ ಕತೆ ಆಯ್ತಲ್ಲ. ನನ್ನ ಮಗಳ ಬಾಳು ಹಾಳಾಯ್ತು. ನನ್ನ ಗೌರವ. ಮರ್ಯಾದೆ. ಯಾಕೆ. ಯಾಕೆ. ಅಂಥ ಕೇಳ್ತಾರೆ. ಏನು ಹೇಳಲಿ ಅವರಿಗೆಲ್ಲಾ….’ ‘ಬದುಕಿಗಿಂತಾ ಓದೇ ಮುಖ್ಯನಾ? ಸಂಸಾರ ಅಂದರೆ ಸುಮ್ಮನೇನಾ? ಲ್ಯಾಬಲ್ಲಿ ಮಾಡುವ ಎಕ್ಸ್ಪೆರಿಮೆಂಟಾ?’, ‘ಯಾರು ಕಾರಣ ಇದಕ್ಕೆ?’ ‘ನೀನೇ…….’‘ಹೌದು ಪೋಸ್ಟ್ ಪೋನ್ ಮಾಡದಿದ್ದರೆ ಹೀಗಾಗುತ್ತಿತ್ತಾ?’ ‘ಬೇಡ. ಬೇಡ ಎಂದು ಹೇಳಿದಿವಿ. ಕೇಳಿದ. ಕೊನೆಗೆ ನೋಡು ಗರ್ಭಕೋಶವನ್ನೇ ತೆಗೆಯಬೇಕಾಯಿತು.’ ‘ಕಾರಣಕ್ಕೆ ಕಾರಣಗಳು.’ ‘ನನಗೇನು ಇಷ್ಟವಿರಲಿಲ್ಲವಾ?’ ಯಾವುಯಾವುದಕ್ಕೆ ಆಯ್ತೋ?’ ‘ಜಗತ್ತಿನೊಳಗೆ ನಾನು ಏನೂ ಅಲ್ಲದಿದ್ದರೂ ನನ್ನೊಳಗೆ ಜಗತ್ತಿದೆ. ಹೂವಿದೆ. ಎಲೆಇದೆ. ನದಿಯಿದೆ. ನಕ್ಷತ್ರಗಳಿದ್ದಾವೆ. ಗುಡ್ಡಗಳಿದ್ದಾವೆ. ಸಿರಿಇದೆ. ದಟ್ಟ ದಾರಿದ್ರ್ಯವೂ ಇದೆ. ಮಕ್ಕಳಿದ್ದಾವೆ, ಹಾಲುಕೊಡೋ ಎದೆಯಿಲ್ಲ. ಹಾಲಿದೆ ಮಕ್ಕಳಿಲ್ಲ. ಅನಿರೀಕ್ಷಿತವಾದಂತಹ ಬದುಕಲ್ಲಿ ನಾವೇನು ಶಾಶ್ವತವಾಗಿ ಉಳಿಯುತ್ತೇವಾ… + +ಎಂತೆಂತಹ ಸಮಸ್ಯೆಗಳಿದ್ದಾವೆ ಈ ಜಗತ್ತಿನಲ್ಲಿ. ಜಗದ ಮಕ್ಕಳನ್ನೇ ನಮ್ಮ ಮಕ್ಕಳೆಂದು ಭಾವಿಸಬೇಕು. ಎಲ್ಲವನ್ನೂ ಅಷ್ಟೆ ಭಾವಿಸುತ್ತಾ ಹೋಗುವುದು. ನಾವು ಯಾವುದನ್ನು ಭಾವಿಸದೇ ಹೋದರೆ ಯಾವುದು ನಮ್ಮದಲ್ಲ. ಈ ಜಗತ್ತೂ. ಹೀಗೆ ಇದ್ದುಕೊಂಡು ಹೋದರಾಯ್ತು..’ ‘ ನಿನ್ನಂಥ ಹುಚ್ಚನಿಗೆ ಕಟ್ಟಿ ನನ್ನ ಮಗಳು ಬಾಳು ಹಾಳಾಯ್ತು’. + +ಮುತ್ತಯ್ಯ ಕೊನೆಯ ಪಫ್ ಅನ್ನು ಮಾತ್ರ ಉಳಿಸಿಕೊಂಡಿದ್ದ. ‘ಇವೊತ್ತು ಏನೋ ಒಂಥರ ಖುಷಿಯಾಗುತ್ತಿದೆ’ ಎಂದ. + +‘ಹೀಗೆ ಧಡೀರಂತ ಬಂದೆ. ಒಂದು ಫೋನ್ ಇಲ್ಲ. ಏನೂ ಇಲ್ಲ. ರಾಗಿಣಿ ಹೇಗಿದ್ದಾಳೆ’ ಎಂದು ಮೌನವನ್ನು ಮುರಿದು ಕೇಳಿದಳು. ‘ನಮ್ಮನ್ನು ನೋಡಬೇಕು ಎಂದು ಅನ್ನಿಸಿದೆ. ಅದಕ್ಕೆ ಬಂದಿದ್ದಾರೆ. ನೀನಂತೂ ಕಣೆ ಮನೆಗೆ ಬಂದಿರುವ ಅಪರೂಪದ ಅತಿಥಿಯನ್ನು ಹೀಗಾ ಕೇಳುವುದು?’ ಎಂದು ಬೈಯುವ ದಾಟಿಯಲ್ಲಿ ಹೇಳಿದ. + +‘ಛೇ ಹಾಗಲ್ಲ. ಯಾಕೆಂದರೆ ಇವನು ಯಾವಾಗಲು ಬ್ಯುಸಿ. ಸೆಮಿನಾರ್. ಕಾನ್ಫರೆನ್ಸ್. ರೀಸರ್ಚ್ ಅಂಥ. ಅದಕ್ಕೆ ಕೇಳಿದೆ.’‘ನಿಮ್ಮ ಇಬ್ಬರ ಊಹೆನೂ ಸರಿ. ಕುವೆಂಪು ಯುನಿವರ್ಸಿಟಿಯಲ್ಲಿ ಪಿ.ಎಚ್.ಡಿ. ವೈ.ವಾ ಮತ್ತು ಪೇಪರ್ ಪ್ರೆಸೆಂಟೇಷನ್ ಇತ್ತು. ಆಮೇಲೆ ನಿಮ್ಮನ್ನು ನೋಡಬೇಕು ಅಂತ ಬಹಳ ವರ್ಷಗಳ ಆಸೆ. ನೀನು ಯೂನಿವರ್ಸಿಟಿ ಬಿಟ್ಟಾಗಿಂದ ನಿನ್ನನ್ನು ನೋಡುವುದಕ್ಕೇ ಆಗಿಲ್ಲ. ಅಲ್ಲದೆ ನಿಮ್ಮ ಮದುವೆಗೂ ಬರುವುದಕ್ಕೆ ಆಗಲಿಲ್ಲ’ ಎಂದು, ‘ಇಪ್ಪತ್ತು ವರ್ಷಗಳ ಹಿಂದೆ ಸುಜಾತ ಒಬ್ಬಳಾಗಿದ್ದಳು. ಈಗ ಮೂರುಜನ ಆಗಿದ್ದಾಳೆ’ ಎಂದು ನಕ್ಕ. + +ಅದಕ್ಕೆ ಸುಜಾತ ‘ಎಲ್ರು ಅಷ್ಟೆ. ಏನೇನೋ ಆಗುತ್ತಾ ಹೋಗೋದು. ಯಾರ್ಯಾರೊ ಬರುತ್ತಾರೆ. ಏನೇನೋ ಘಟಿಸುತ್ತವೆ. ಸುಮ್ಮನೆ ಸಾಗುತ್ತಿರುವುದಪ್ಪ. ಬೈ ದ ವೇ ರಾಗಿಣಿನ ನೆಕ್ಸ್ಟೈಮ್ ಮಿಸ್ ಮಾಡದೆ ಕರೆದುಕೊಂಡು ಬರಬೇಕು’ ಎಂದಳು. + +ಬೆಳದಿಂಗಳನ್ನೇ ದಿಟ್ಟಿಸುತ್ತಾ ತಲೆಆಡಿಸಿದ. ಮತ್ತೊಮ್ಮೆ ಸುಜಾತಳನ್ನು ನೋಡುತ್ತಾ ‘ಕೊನೆಗೂ ಎಂಥಹ ಕಷ್ಟಗಳ ನಡುವೆಯೂ ನೀನು ಇಷ್ಟಪಟ್ಟ ಮುತ್ತಯ್ಯನನ್ನೇ ಮದುವೆಯಾದೆ. ಗ್ರೇಟ್. ನಿನ್ನ ಧೈರ್ಯ ಮೆಚ್ಚಬೇಕು’ ಎಂದ. + +ಬೆಳದಿಂಗಳು ಅಲೆಅಲೆಯಾಗಿ ಅವರ ಮುಖಗಳನ್ನು ಅಂಗಳವನ್ನು ಸವರುತ್ತಿರುವಂತೆ ಕಾಣುತ್ತಿತ್ತು. ನಿಟ್ಟುಸಿರು ಬಿಡುತ್ತಾ, ಮತ್ತು ತುಸು ಖುಷಿಯಿಂದ’ ಅದೆಲ್ಲಾ ಹೇಗೆ ನಡೆದುಹೋಯ್ತು. ನೆನೆಸಿಕೊಂಡರೆ ಜುಂ ಅನ್ನಿಸುತ್ತೆ. ಅದು ನಾವಾ! ನಮಗೆ ಅಷ್ಟೊಂದು ಧೈರ್ಯ ಎಲ್ಲಿಂದ ಬಂತೋ ಎಂದು ನೆನೆದರೆ..’ ಎಂದು ಹೇಳಿದಳು. + +ಮುಂದವರೆದು, ‘ಥೂ ನಮ್ಮ ಅಪ್ಪ ಆಗ ಎಷ್ಟು ಕ್ರೂರವಾಗಿ ನಡೆದುಕೊಂಡರು ಅಲಾ….’ ಎಂದು ಮುತ್ತಯ್ಯನ ಮುಖನೋಡುತ್ತಾ ಅಂದಳು. + +ಸಾವಿತ್ರಿ ಕೌತುಕದಿಂದ ಗಲ್ಲದಮೇಲೆ ಎರಡೂ ಕೈಗಳನ್ನು ಆಚೆಈಚೆ ಇಟ್ಟುಕೊಂಡು ಕೇಳುತ್ತಾ ಇದ್ದಳು. ಮುತ್ತಯ್ಯ ಅವಳ ಮುಖನೋಡಿ ನಗುತ್ತಿದ್ದ. ನಾಯಿ ಇವರು ಮಾತಾಡುವ ಪ್ರತಿ ಪದವನ್ನು ಎಚ್ಚರಿಕೆಯಿಂದ ಕೇಳಿಸಿಕೊಂಡು ಗಾಢವಾಗಿ ಆಲೋಚಿಸುವಂತೆ ಕುಳಿತಿತ್ತು. ‘ಆಕ್ಚುಯಲಿ ಆಗ ನಿನ್ನ ಹೆಲ್ಪ್ ಬೇಕಿತ್ತು. ಆದರೆ ರೀಸರ್ಚ್ ಗೆ ಟಾಪಿಕ್ ಫೈನಲ್ ಮಾಡ್ತಾಇದ್ದೆ ಅನ್ನಿಸುತ್ತೆ. ಅಥವಾ ಎಲ್ಲೋ ಹೋಗಿದ್ದೆ ಅನ್ನಿಸುತ್ತೆ’ ಅಂದಳು. + +‘ಹೌದು ಆಗ ನಿಮ್ಮ ಜೊತೆ ಇರಬೇಕಿತ್ತು ಎಂದು ಬಹಳ ಸಲ ಅನ್ನಿಸಿದೆ. ಆದರೆ ಅಪ್ಪನಿಗೆ ಹುಷಾರಿರಲಿಲ್ಲವಲ್ಲಾ. ಬ್ರೈನ್ ಗೆ ಸ್ಟ್ರೋಕ್ ಆಗಿ ಆಸ್ಪತ್ರೆಗೆ ಹಾಕೊಂಡು ಹೋಗಿದ್ದೆ. ಆದರೆ ಅಪ್ಪ ಉಳಿಯಲಿಲ್ಲ’ ಎಂದ. + +‘ಹ್ಞಾ .. ನಿಜ ನಿಜ. ಆಮೇಲೆ ಗೌಡ ಸಿಕ್ಕು ಹೇಳಿದ’ ಎಂದು, ಇಪ್ಪತ್ತು ವರ್ಷಗಳ ನೆನೆಪುಗಳನ್ನು ಹೇಳಲು ಮುಂದುವರೆಸಿದಳು. + +‘ಮದುವೆಯಾಗಿ ಮೂರುತಿಂಗಳಾಗಿತ್ತು. ಎಲ್ಲೆಲ್ಲೋ ಅಲೆದು, ಆಮೇಲೆ ಪವಿತ್ರಳ ಫ್ರೆಂಡು ಒಬ್ಬರು ಹೈದ್ರಾಬಾದಲ್ಲಿದ್ದರು. ಅವಳೇ ಫೋನ್ ಮಾಡಿ ಹೈದರಾಬಾದ್ ಗೆ ಕಳುಹಿಸಿದ್ದಳು. ಅಪ್ಪ ಪವಿತ್ರಳನ್ನು ಕಾಂಟ್ಯಾಕ್ಟ್ ಮಾಡಿ, ಅವಳಿಂದನೇ ಫೋನ್ ಮಾಡಿಸಿ, ಜೊತೆಗೆ ತಾನೇ ಫೋನ್ ಮಾಡಿ ಇನ್ನೇನು ಆಗಿದ್ದು ಆಯ್ತು. ವಾಪಸ್ಸುಬನ್ನಿ. ಅಮ್ಮ ಊಟ ಬಿಟ್ಟು ಹಾಸಿಗೆ ಹಿಡಿದಿದ್ದಾಳೆ. ಆಮೇಲೆ, ನನ್ನ ಫ್ರೆಂಡ್ಸು ಮುಂದೆ ತಲೆ ಎತ್ತಿಕೊಂಡು ಓಡಾಡುವುದಕ್ಕೆ ಆಗುವುದಿಲ್ಲ. ನಿಮ್ಮ ಮದುವೆಯನ್ನು ಒಪ್ಪಿಕೊಂಡಿದ್ದೇನೆ. ಪ್ಲೀಸ್ ವಾಪಸ್ಸುಬನ್ನಿ ಎಂದು ಕರೆಸಿಕೊಂಡರು. ನಾವು ವಾಪಸ್ಸು ಬಂದೆವು. ಆದರೆ ಮನೆಯಲ್ಲಿ ಆಗಿದ್ದೇ ಬೇರೆ. ಈಗ ಹೇಗೆ ನಾವು ನಾಲ್ಕು ಜನ ಕೂತು ಮಾತಾಡುತ್ತಾ ಇದ್ದೇವೋ ಆದೇ ರೀತಿ ಅಪ್ಪ ನಮ್ಮನ್ನು ಕೂರಿಸಿಕೊಂಡು ಮಾತಾಡುತ್ತ ಮಾತಾಡುತ್ತ ಮುತ್ತಯ್ಯನನ್ನು ಅದು ಇದು ಕೇಳುತ್ತ ಅಪ್ಪ ನನ್ನ ತಾಳಿಯನ್ನೇ ಕಿತ್ತುಬಿಟ್ಟರು. ಅಮ್ಮಾ ಒಂದೂ ಮಾತಾಡದೆ ಸುಮ್ಮನೆ ಕೂತಿದ್ದರು. ನನಗೋ ಅಮ್ಮ ಏನು ಮಾಡಿಕೊಂಡರೋ ಏನೋ ಅಂಥಾ ದಿಗಿಲಾಗಿತ್ತು. ಆದರೆ ಎಲ್ಲಾ ಮೋಸ. ಆಮೇಲೆ ಕೆಲವು ಗೂಂಡಾಗಳನ್ನು ಕರೆಸಿ ಮುತ್ತಯ್ಯನನ್ನು ತುಂಬಾ ಹೊಡೆಸಿಬಿಟ್ಟರು. ನನಗಂತೂ ಈಗ ನೆನೆಸಿಕೊಂಡರೂ ಕಣ್ಣಲ್ಲಿ ನೀರು ಬಂದುಬಿಡುತ್ತೆ. ಹೊಡೆಸಿ, ಹೊರಗೆ ದಬ್ಬಿದರು. + + + +ಎಂಥ ಅಮಾನುಷವಾಗಿತ್ತಂದರೆ ಆ ದೃಶ್ಯ…. ನೆನೆಸಿಕೊಂಡರೆ ಭಯ ಆಗುತ್ತೆ. ಈಗ ನೆನೆಸಿಕೊಂಡರೆ ಅದು ನಾವಾ ಅನ್ನುವ ಹಾಗೆ ಆಗುತ್ತೆ’ ಎಂದಳು ಶಾಕ್ಯನ ಮುಖವನ್ನು ನೋಡುತ್ತಾ. ಮುತ್ತಯ್ಯ ಅವಳ ಮಾತಿನ ಮಧ್ಯೆ ಶಾಕ್ಯನ ಮುಖ ನೋಡುತ್ತಾ, ‘ನನಗಂತೂ, ಶಾಕ್ಯ, ನಗುಬರುತ್ತೆ ಅದೆಲ್ಲಾ ನೆನೆಸಿಕೊಂಡರೆ. ಆದರೂ ಇವಳು ವಾಪಸ್ಸು ಬಂದೇ ಬರುತ್ತಾಳೆ ಎಂಬ ಹೋಪ್ಸ್ ಇದ್ದರೂ ಆ ಸಂದರ್ಭದಲ್ಲಿ ಅಂಥ ಲಕ್ಷಣಗಳು ಕಾಣದೆ ಕಂಗಾಲಾಗಿದ್ದೆ. ಆದರೂ ಇವಳ ಡೇರ್ ನೆಸ್ ಅನ್ನು ಮೆಚ್ಚಬೇಕು. ಒಂದು ವರ್ಷ…. ಅದೆಷ್ಟು ಅನುಭವಿಸಿದಳೋ ಯಾತನೆಯನ್ನು. ಆಮೇಲೆ ಒಂದು ಫೈನ್ ಡೇ ಓಡಿಬಂದಳು’ ಎಂದ. ಇವರ ಸಂಭಾಷಣೆಯನ್ನು ಆಲಿಸುತ್ತಿದ್ದ ಸಾವಿತ್ರಿ ನಗುತ್ತಿದ್ದಳು. ಆ ನಗುವಿನಲ್ಲಿ ತನ್ನ ಅಪ್ಪ ಅಮ್ಮನ ಮೇಲೆ ಒಂದು ರೀತಿಯ ಹೆಮ್ಮೆಯ ಭಾವವಿದ್ದಂತೆ ಕಾಣುತ್ತಿತ್ತು. + +ಶಾಕ್ಯ ಥಟ್ಟನೆ ಏನನ್ನೋ ನೆನೆಸಿಕೊಂಡು ಸಾವಿ, ಪ್ಲೀಸ್ ನನ್ನ ಬ್ಯಾಗಲ್ಲಿ ಮೊಬೈಲ್ ಫೋನ್ ಇದೆ. ತೆಗೆದುಕೊಂಡು ಬರುತ್ತೀಯಾ? ಎಂದ. ತಕ್ಷಣಕ್ಕೆ ಅವಳು ಒಳಗೆ ಓಡಿಹೋದಳು. ನಾಯಿಯೂ ಅವಳನ್ನು ಹಿಂಬಾಲಿಸಿತು. ಲೆದರ್ ಬ್ಯಾಗ್ ಓಪನ್ ಮಾಡಿ ಮೊಬೈಲ್ ಗಾಗಿ ತಡಕಾಡಿದಳು. ಕಾನ್ಫರೆನ್ಸಿನ ನೋಟ್ ಪ್ಯಾಡ್, ಲ್ಯಾಪ್ ಟಾಪ್, ಜುಬ್ಬ, ಜೀನ್ಸ್ ಪ್ಯಾಂಟ್ ಇನ್ನೂ ಏನೇನೋ ಪುಸ್ತಕ ಕಾಗದಗಳ ನಡುವೆ ಮೊಬೈಲ್ ಫೋನನ್ನು ಹುಡುಕಿದಳು. ಅದು ತುಂಬಾ ದುಬಾರಿ ಸೆಟ್ ಆಗಿದ್ದೂ ಅದನ್ನು ಕಂಡು ವ್ಹಾವ್! ಎಷ್ಟು ಚೆಂದವಿದೆ ಎಂದು, ಅದನ್ನು ತೆಗೆದಕೊಂಡು ವಾಪಸ್ಸು ಬಂದಳು. ನಾಯಿ ಇವಳು ಹೊರಬರುವದನ್ನೇ ಕಾಯುತ್ತ ಕೂತಿದ್ದು, ಅವಳು ಹೊರಬಂದ ನಂತರ ಅವಳನ್ನು ಹಿಂಬಾಲಿಸಿಕೊಂಡು ಅಂಗಳದಲ್ಲಿ ಕೂತಿದ್ದ ಅವರ ಬಳಿ ಹೋಯ್ತು. + +‘ಯಾಕೋ ಇಷ್ಟು ಹೊತ್ತಿನಲ್ಲಿ ಮೊಬೈಲ್? ಯಾರಿಗಾದರೂ ಫೋನ್ ಮಾಡಬೇಕಾ?’ ಎಂದು ಸುಜಾತ ಕೇಳಿದಳು. + +‘ಇಲ್ಲಾ ಈ ಬೆಳದಿಂಗಳಲ್ಲಿ ಸಾವಿದು ಒಂದು ಫೋಟೋ ತೆಗೆಯೋಣ ಅನ್ನಿಸಿತು.’ + +‘ಡಿಮ್ ಲೈಟಲ್ಲಿ ಫೋಟೋ ಕ್ಲಿಯರ್ ಆಗಿ ಬರುವುದಿಲ್ಲ ಕಣೋ. ಬೆಳಿಗ್ಗೆ ತೆಗೆಯುವಂತೆ ಬಿಡು.’ + +‘ಇಲ್ಲಪ್ಪಾ ತುಂಬಾ ಅಡ್ವಾನ್ಸಡ್ ಸೆಟ್ ಇದು. ಲಾಸ್ಟ್ ಮಂಥ್ ಫ್ರಾನ್ಸ್ ಗೆ ಹೋದಾಗ ತಂದದ್ದು. ಒಂದು ಟ್ರೈ ಮಾಡೋಣ. ಹೇಗೆ ಬರುತ್ತೆ ನೋಡೋಣ’ ಎಂದು ಮೊಬೈಲ್ ಆನ್ ಮಾಡಿ ಸಾವಿತ್ರಿಯ ಮುಖಕ್ಕೆ ಹಿಡಿದು ಕ್ಲಿಕ್ಕಿಸಿದ. ತಕ್ಷಣಕ್ಕೆ ಪಲ್ಲವಿಅನುಪಲ್ಲವಿ ಚಿತ್ರದ ನಗೂ ಎಂದಿದೆ ಮಂಜಿನಾ ಬಿಂದು ಎನ್ನುವ ರಿಂಗ್ ಟೋನ್ ಕೇಳಿಸಿತು. ‘ಯಾವುದೋ ಲ್ಯಾಂಡ್ ನಂಬರ್ ನಿಂದ ಫೋನ್ ಬರುತ್ತಿದೆಯಲ್ಲಾ’ ಎಂದು ರಿಸೀವ್ ಮಾಡಿಕೊಂಡವನೆ, ‘ಹೌದಾ?.. ಯಾವಾಗ?..’ ಎಂದು ತುಂಬಾ ಗಾಬರಿಯಿಂದ ಆಚೆ ಬದಿಯಿಂದ ಮಾತಾಡುತ್ತಿರುವ ಧ್ವನಿಗೆ ಪ್ರತಿಕ್ರಿಯಿಸಿದ. ಒಂದು ರೀತಿಯಲ್ಲಿ ದುಃಖ, ಆತಂಕ ಅವನ ಮುಖದಲ್ಲಿ ಮೂಡಿದವು. ‘ಮುತ್ತಯ್ಯ ಶಾಕ್ಯನ ಎಡಗೈ ಹಸ್ತವನ್ನು ಬಿಗಿಯಾಗಿ ಹಿಡಿದುಕೊಂಡ. ಕೈ ನಡುಗುತ್ತಿತ್ತು. ಸುಜಾತಳ ಎದೆ ಜೋರಾಗಿ ಬಡಿದುಕೊಳ್ಳಲು ಆರಂಭಿಸಿತು. ‘ಯಾರದೋ ಫೋನು? ಏನಂತೆ?’ ಎಂದು ಕೇಳಿದಳು. ಫೋನ್ ಕಾಲ್ ಎಂಡ್ ಮಾಡಿದವನೆ ಸುಮ್ಮನೆ ಕೂತ. ಸುತ್ತ ಮೌನ ಆವರಿಸಿಕೊಂಡಿತು. + +‘ಸೂಜಿ… ರಾಗಿಣಿ ಹೋದಳಂತೆ…’ ಎಂದು ಮುತ್ತಯ್ಯನ ಭುಜಕ್ಕೆ ಒರಗಿದ. ನಿಧಾನ ಕಣ್ಣೀರು ಹರಿಯತೊಡಗಿತು. + + + +‘ಯಾಕೋ? ಏನಾಯ್ತು? ಹೇಗಂತೆ?’ ಎಂದು ಸುಜಾತಾ ಆತಂಕದಿಂದ ಕೇಳಿದಳು.ಟೇಬಲ್ ಮೇಲೆ ಚೆಲ್ಲಿ ಹರಡಿಕೊಂಡಿರುವ ಬೆಳದಿಂಗಳು ಒದ್ದೆಯಾಗಿತ್ತು. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_283.txt b/Kenda Sampige/article_283.txt new file mode 100644 index 0000000000000000000000000000000000000000..6e76838d30dcf464e902746fe7e92e280500dfda --- /dev/null +++ b/Kenda Sampige/article_283.txt @@ -0,0 +1,71 @@ + + +ಕನ್ನಡ ಕಾವ್ಯಕ್ಕೆ ಗೋಪಾಲಕೃಷ್ಣ ಅಡಿಗರ ಕೊಡುಗೆಯೇನು? ಈ ಪ್ರಶ್ನೆಗೆ ಉತ್ತರವಾಗಿ ನವೋದಯದ ಕಾವ್ಯಕ್ಕಿಂತ ತೀರ ಭಿನ್ನವಾದ, ಎಲ್ಲ ರೀತಿಯಿಂದಲೂ ಸ್ವೋಪಜ್ಞವಾದ, ನಿಜಕ್ಕೂ ಬೆರಗುಹುಟ್ಟಿಸುವಂಥ ಅವರದೇ ಮಾರ್ಗಪ್ರವರ್ತಕ ಕಾವ್ಯವಿದೆ. ಇಪ್ಪತ್ತನೆಯ ಶತಮಾನದಲ್ಲಿ ಅವರು ಕಾವ್ಯ ರಚಿಸುವವರೆಗೆ ನಮ್ಮ ಆಧುನಿಕ ಕಾವ್ಯ ಬಹುಮಟ್ಟಿಗೆ ಒಂದು ಭಾವವನ್ನೋ ವಿಷಯವನ್ನೋ ಪ್ರಾಸಬದ್ಧವಾಗಿ, ಒಂದು ನಿರ್ದಿಷ್ಟ ಛಂದಸ್ಸಿನಲ್ಲಿ ಹೊಮ್ಮಿಸುವುದಕ್ಕಷ್ಟೇ ಸೀಮಿತವಾಗಿತ್ತು. ‘ಭಾವತರಂಗ’ ಎಂಬ ತಮ್ಮ ಮೊದಲ ಕವನ ಸಂಕಲನದ ಮೊದಲ ಕವನದಲ್ಲೇ ಅವರು,ಅನ್ಯರೊರೆದುದನೆ, ಬರೆದುದನೆ ನಾ ಬರೆಬರೆದುಖಿನ್ನಗಾಗಿದೆ ಮನವು; ಬಗೆಯೊಳಗನೇ ತೆರೆದುನನ್ನ ನುಡಿಯೊಳೆ ಬಣ್ಣ ಬಣ್ಣದಲಿ ಬಣ್ಣಿಸುವಪನ್ನತಿಕೆ ಬರುವನಕ ನನ್ನ ಬಾಳಿದು ನರಕಎಂದು ಬರೆದರು. ಅದಕ್ಕೆ ಕಾರಣ ನಮ್ಮ ನವೋದಯ ಕಾವ್ಯದ ಏಕತಾನತೆಯ ಬಗ್ಗೆ ಅವರಿಗಿದ್ದ ಅತೃಪ್ತಿ. ಜೊತೆಗೆ ಅವರ ರಸಪ್ರಜ್ಞೆ ಹೇಗೋ ಹಾಗೆ ಅವರ ಪ್ರಖರ ಬೌದ್ಧಿಕತೆಯೂ ನೈತಿಕಪ್ರಜ್ಞೆಯೂ ಕಾರಣವಾಗಿದ್ದವು. + +ಅವರನ್ನು ನಮ್ಮ ದೇಶದ ಸ್ವಾತಂತ್ರ್ಯಪೂರ್ವ ಕಾಲದ ಆದರ್ಶವಾದ ಕೆರಳಿಸಿದ ಹಾಗೆಯೇ ಸ್ವಾತಂತ್ರ್ಯೋತ್ತರ ಭಾರತದ ಭ್ರಮನಿರಸನವೂ ಕೆರಳಿಸಿತೆನ್ನಬೇಕು. ಕಾವ್ಯವೆಂದರೆ ಭಾವನೆಗಳನ್ನು ಮನಮುಟ್ಟುವ ಹಾಗೆ ವ್ಯಕ್ತಪಡಿಸುವುದಷ್ಟೇ ಅಲ್ಲವೆಂದು ನಂಬಿದ್ದ ಅಡಿಗರು ಅಮೂರ್ತವಾದ ಭಾಷೆಯಲ್ಲೇ ಕಾವ್ಯ ‘ಸಂಭವಿಸ’ಬೇಕು, ಅದರಲ್ಲಿ ಈ ನೆಲದ ಮಣ್ಣಿನ ವಾಸನೆ ಹೊಡೆಯಬೇಕು, ಅದು ಮೂರ್ತವಾಗಬೇಕು ಎಂದು ಹಂಬಲಿಸಿದರು. + +(ಎಂ. ಗೋಪಾಲಕೃಷ್ಣ ಅಡಿಗ) + +ಅವರ ದೃಷ್ಟಿಯಲ್ಲಿ ಸ್ವಾತಂತ್ರ್ಯೋತ್ತರ ಕಾಲದ, ನೆಹರೂ ಆಳ್ವಿಕೆಯ ಪೊಳ್ಳು ಭರವಸೆಗಳಾಗಲೀ ಕವಿಯೆನಿಸಿದವನು ಎಚ್ಚರವಿಲ್ಲದೆ ಬಳಸುತ್ತಿದ್ದ ಮಾಮೂಲಿ ಭಾಷೆಯಾಗಲೀ ಬೇರೆ ಬೇರೆಯಾಗಿರಲಿಲ್ಲ. ಯಾಕೆಂದರೆ ರಾಜಕಾರಣಿ ಯಾವ ಮುಂದಾಲೋಚನೆಯೂ ಇಲ್ಲದೆ ಆಡುತ್ತಿದ್ದ ಮಾತುಗಳಂತೆಯೇ ಕವಿಯಾದವನು ಅರ್ಥಬಾಹುಳ್ಯವನ್ನು ಕಡೆಗಣಿಸಿ, ಸಂಗೀತದ ಲಯಕ್ಕೆ ಬದ್ಧನಾಗಿ ಬರೆಯುತ್ತಿದ್ದುದು ಕೂಡ ‘ಸಾರ್ಥಕ’ವೆನಿಸುತ್ತಿರಲಿಲ್ಲ. ಅವರೇ ಒಂದು ಲೇಖನದಲ್ಲಿ ಬರೆದಂತೆ, “ಅತ್ಯಂತ ಸೂಕ್ಷ್ಮವೇದಿಯಾದ ಮನಸ್ಸುಳ್ಳ ಕವಿ ಮಾಡುವ ಕೆಲಸ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ತುಂಬ ಬೆಲೆಯುಳ್ಳದ್ದು – ತನಗೆ ತಾನೇ: ಮನುಷ್ಯನ ಜೀವನದ ಅತ್ಯಂತ ಅಪೂರ್ವ ಸಾಧನವಾದ ಮಾತಿನ ಅತ್ಯಂತ ಸರಿಯಾದ ಬಳಕೆಯಿಂದಲೇ ಕವಿ ಸಮಾಜಕ್ಕೆ ಅತ್ಯುತ್ತಮ ಸೇವೆ ಸಲ್ಲಿಸುತ್ತಾನೆ. ಎಲ್ಲರೂ ಒಂದು ಕಾಲದಲ್ಲಿ ತಮ್ಮ ಮನಸ್ಸಿನ ಒಳತಳದಲ್ಲಿ ಯಾವುದನ್ನು ಅಸ್ಪಷ್ಟವಾಗಿ ಕಾಣುತ್ತಾರೋ ಅನುಭವಿಸುತ್ತಾರೋ ಅದನ್ನೇ ಕವಿಯಾದವನು ಇನ್ನಷ್ಟು ಸ್ಪಷ್ಟವಾಗಿ ಅನುಭವಿಸಿ ಅದನ್ನು ತಕ್ಕ ಶಬ್ದಗಳಲ್ಲಿ ಮೂರ್ತಿಗೊಳಿಸಿ ಆ ಮೂರ್ತಿಯಲ್ಲಿ ಅದರ ಆದರ್ಶ ರೂಪವೂ ಹೊಳೆಯುವ ಹಾಗೆ ಮಾಡುತ್ತಾನೆ. + +ಹೀಗೆ ಅವನು ಬದುಕಿನ ಅಭ್ಯುದಯಕ್ಕೂ ಶ್ರೇಯಸ್ಸಿಗೂ ತಕ್ಕ ಪ್ರತಿಮೆಗಳನ್ನು ಸೃಷ್ಟಿಸಿ ಹೊಸ ಕಾಲಕ್ಕೆ ಅತ್ಯಗತ್ಯವಾದ ಹೊಸ ನಂಬಿಕೆಗಳಿಗೆ ತಕ್ಕ ಬಿಂಬವಾಗುವಂಥ ಕೃತಿಗಳನ್ನು ರಚಿಸುವುದರ ಮೂಲಕ ಸಮಕಾಲೀನನಾಗುತ್ತಾನೆ. ಸಮಾಕಾಲೀನತೆ ಎಂದರೆ ತಾತ್ಕಾಲಿಕತೆ ಅಲ್ಲ. ಎಲ್ಲ ಕಾಲದಲ್ಲೂ ಸಲ್ಲುವಂಥದು. ಈಗ ಈ ಕಾಲದಲ್ಲಿ ಯಾವ ರೀತಿ ಎಂಥ ವೇಷದಲ್ಲಿ ಎಂಥ ರೂಪಾಂತರದಲ್ಲಿ ವ್ಯಕ್ತವಾಗುತ್ತದೆ ಎಂದು ಕಾಣುವ ಕಂಡರಿಸುವ ಶಕ್ತಿ.” + +ಹೊಸ ಬಗೆಯ ಕಾವ್ಯಸೃಷ್ಟಿಗಾಗಿ ಅಡಿಗರು ನಮ್ಮ ಇಡೀ ಭಾಷೆಯನ್ನೇ ಸೂರೆಗೊಂಡರೆನ್ನಬೇಕು. ಅವರ ಕೆಲವು ಕವಿತೆಗಳಲ್ಲಿ ಸಂಸ್ಕೃತ, ಉರ್ದು, ಪರ್ಶಿಯನ್, ಇಂಗ್ಲಿಷ್ ಪದಗಳ ಜೊತೆಜೊತೆಗೇ ಹಳಗನ್ನಡದ, ನಡುಗನ್ನಡದ, ನಮ್ಮ ವಿವಿಧ ಪ್ರಾಂತ್ಯಗಳ ಪದಗಳು ಕೂಡ ಅರ್ಥಪೂರ್ಣವಾಗಿ ಹೊಂದಿ-ಕೊಂಡಿರುತ್ತವೆ. ಶಬ್ದಗಳ ಬಳಕೆಯಲ್ಲಿ ಅವರದು ಸಂಕೋಚವಿಲ್ಲದ ನಿಲುವು. ಜೊತೆಗೆ ಪ್ರಾಸ, ಅನುಪ್ರಾಸ, ಧ್ವನಿ, ಸಾಮ್ಯ, ಶ್ಲೇಷೆ, ಶಬ್ದಚಿತ್ರ, ವಿಡಂಬನೆ ಮೊದಲಾದವುಗಳನ್ನು ಸೂಕ್ತವೆನಿಸಿದ ಕಡೆಯಲ್ಲೆಲ್ಲ ಬಳಸಿ ನಮ್ಮ ಭಾಷೆಯ ಸಾಧ್ಯತೆಗಳನ್ನು ನಮಗೆ ತೋರಿಸಿಕೊಟ್ಟರು. ಕನ್ನಡಕ್ಕೆ ಸಹಜವೆನ್ನಿಸುವ ಗತಿ, ಲಯ, ಶಬ್ದರೂಪಕ ಮುಂತಾದವುಗಳ ಮೂಲಕ ಅರ್ಥಾನುಭವವನ್ನು ಸಾಧಿಸಿದರು. ಪೌರಾಣಿಕ, ಚಾರಿತ್ರಿಕ, ಸಾಮಾಜಿಕ, ರಾಜಕೀಯ, ಸಾಹಿತ್ಯಕ ವ್ಯಕ್ತಿಗಳನ್ನು, ಘಟನೆಗಳನ್ನು, ಒಮ್ಮೊಮ್ಮೆ ಕಾವ್ಯದ ಸಾಲುಗಳನ್ನು ಕೂಡ, ಉಪಯೋಗಿಸಿಕೊಂಡು ತೀವ್ರ ಕಾವ್ಯಾನುಭವವನ್ನು ಉಂಟುಮಾಡಿದರು. + +ಇದೆಲ್ಲದರ ಪರಿಣಾಮವಾಗಿ ಅವರ ಕಾವ್ಯ ತನ್ನ ಹೊಸ ಭಾಷೆಯಿಂದ, ಅರ್ಥಾನುಸಾರಿಯಾದ ಲಯದಿಂದ, ನಾಟಕೀಯ ಧಾಟಿಯಿಂದ, ಪ್ರತಿಮಾಲಂಕಾರದಿಂದ, ಎಂಥವರನ್ನಾದರೂ ಚುಚ್ಚುವಂಥ ವ್ಯಂಗ್ಯದಿಂದ, ಅಕರಾಳವಿಕರಾಳವೆನ್ನಿಸುವಂಥ ಪ್ರತಿಮೆಗಳಿಂದ, ಸಾರ್ಥಕ ರೂಪಕಗಳಿಂದ ಅಪೂರ್ವವೆನಿಸಿತು. + +ಅಡಿಗರ ಕಾವ್ಯದಲ್ಲಿ ಭಾವಾಭಿನಯ ಹೇಗಿರುತ್ತದೆ ಎಂಬುದಕ್ಕೆ ‘ದೀಪಾವಳಿ’ ಎಂಬ ಕವನದ ಈ ಒಂದು ಸಾಲು ಸಾಕು: “ಮರವೆಯಲಿ ನೆನಪು ಥಳಥಳಿಸಿ ಗರಗರ ಗೀರಿ ಸರಭರೆನ್ನುತ್ತಲಿದೆ ಸೊಗದ ನೇಗಿಲ ಮೊನೆ.” ಇದರಲ್ಲಿ ಶಬ್ದಗಳು ಹೊಮ್ಮಿಸುವ ದನಿಯನ್ನಷ್ಟೇ ಆಲಿಸಿದರೆ ದೀಪಾವಳಿಯ ಮತಾಪು, ಬಾಣ ಬಿರುಸು, ಸುರುಸುರುಬತ್ತಿ, ಭೂಚಕ್ರ ಮೊದಲಾದವುಗಳ ಸದ್ದು ಕೇಳಿಸುತ್ತದೆಯಲ್ಲವೆ? ಆದರೆ ಕವನ ದೀಪಾವಳಿಯ ಬಗೆಗಷ್ಟೇ ಇಲ್ಲ. ಇನ್ನು ಅವರು ಉಪಯೋಗಿಸಿರುವ ಪ್ರತಿಮೆಗಳನ್ನು ಗಮನಿಸಿ. ಅವು ಅನುಕ್ರಮವಾಗಿ, ಸಹಜವಾಗಿ ಬೆಳೆಯುವಂಥವು. ಉದಾಹರಣೆಗೆ ಈ ಸಾಲುಗಳನ್ನು ನೋಡಿ: + +ಮೂಡಿದೆ ಗುಲಾಬಿ ದಳದಲಿ ಮುಳ್ಳು; ಸಂಪಿಗೆಯಕಂಪಿನಲಿ ಕಾಳ್ಗಿಚ್ಚು ಭುಸುಗುಟ್ಟಿದೆ;ಮೆತ್ತೆಯಲಿ ಕುಟುಕುತಿದೆ ನೂರು ಚೇಳಿನ ಕೊಂಡಿ;ಹಾಲು ಹಾಲಾಹಲದ ಗುರಿಮುಟ್ಟಿದೆ.ಕಾಳನಾಗರ ನೇತ್ರಭೀತ ಪರವಶ ಪಕ್ಷಿಮತ್ತೆ ರಕ್ಕೆಯ ಬಿಚ್ಚಿ ಗರಿಗಟ್ಟಿದೆ. + +ಇಲ್ಲಿರುವುದು ಒಂದು ಹಾವಿನ ಪ್ರತಿಮೆ. ಇದು ಏಕಾಏಕಿ ಬೆಳೆದದ್ದಲ್ಲ; ಕ್ರಮಕ್ರಮವಾಗಿ ಬೆಳೆದದ್ದು. ಮುಳ್ಳು, ಭುಸುಗುಟ್ಟಿದೆ, ಚೇಳಿನ ಕೊಂಡಿ, ಹಾಲಾಹಲ, ಇತ್ಯಾದಿ ಶಬ್ದಗಳು ಹಾವನ್ನು ಮುನ್ಸೂಚಿಸುವ ಪರಿಕರಗಳಾಗಿ ಕೆಲಸಮಾಡುತ್ತ ಅಂತಿಮವಾಗಿ ಇಡೀ ಹಾವನ್ನು ‘ಕಾಣಿಸು’ತ್ತವೆ. + +ಅಡಿಗರು ತಮ್ಮ ಕಾವ್ಯದಲ್ಲಿ ಅಲ್ಲಲ್ಲಿ ತಂದಿರುವ ನಾಟಕೀಯ ಅಂಶಗಳು ಕೂಡ ಹಿಂದಿನ ಕಾವ್ಯದಲ್ಲಿ ಅಷ್ಟಾಗಿ ಕಾಣಿಸುವುದಿಲ್ಲ. ಒಮ್ಮೊಮ್ಮೆ ಯಕ್ಷಗಾನದ ರಾಕ್ಷಸನ ವಾಗ್ವೈಖರಿಯಂತೆ, ಇನ್ನು ಕೆಲವೊಮ್ಮೆ ವಿಡಂಬನೆಯ ಸಹಜ ದನಿಯಂತೆ ಕೇಳಿಸುವ ಈ ನಾಟಕೀಯ ಗುಣ ಕವನದ ಒಟ್ಟು ಆಶಯಕ್ಕೆ ಎಷ್ಟೆಲ್ಲ ಪೂರಕವಾಗಿರುತ್ತದೆ ಎಂಬುದನ್ನು ಗಮನಿಸಬೇಕು. + +ನಿದರ್ಶನಕ್ಕಾಗಿ ಈ ಕೆಲವು ಸಾಲುಗಳನ್ನು ನೋಡಿ: “ಮಹಾ ಧಮ್ಮಸ್ಸಿನವನೆ, ಹುಮ್ಮಸ್ಸಿದೆಯೆ ಬಾ ಈಚೆ ಕಡೆ ತೋರಿಸುತ್ತೇನೊಂದು ಕೈಯ”, “ಬಂದರಲ್ಲಾ ಕೊನೆಗು ಯಜಮಾನರು”, “ಪ್ರಭೂ, ಪರಾಕುಪಂಪನ್ನೊತ್ತಿಯೊತ್ತಿ ನಡಬಗ್ಗಿರುವ ಬೊಗಳು ಸನ್ನಿಯ ಹೊಗಳುಭಟ್ಟ ಖಂಡಿತ ಅಲ್ಲ”, “ದೊಡ್ಡವರ ಸಹವಾಸ ಸಾಕೋ ಸಾಕು ಈ ದೇಶಕ್ಕೆ”, “ಮೂಗು ಮುಚ್ಚಿಕೋ ನಗರಸಭೆಯ ಲಾರಿ”, “ರಂಧ್ರಾನ್ವೇಷಣಚತುರನೇ ಕೇಳು, ಕನ್ನಡಿಯ ಮುಂದೆ ಕ್ಷಣವಾದರೂ ನಿಲ್ಲು”, “ಬಲವೆಂದರೆ ಎಡ, ಎಡವೆಂದರೂ ಎಡ – ಇದು ಈ ಕಾಲದ ಗೂಢ”. + +ಅಡಿಗರ ಇನ್ನೊಂದು ವಿಶೇಷವಿರುವುದು ಅವರು ನಮ್ಮ ಪುರಾಣಗಳ ಪಾತ್ರಗಳನ್ನೋ ಸನ್ನಿವೇಶಗಳನ್ನೋ ಯಜ್ಞಯಾಗಾದಿಗಳ ವಿವರಗಳನ್ನೋ ಧ್ವನಿಪೂರ್ಣವಾಗಿ ಬಳಸಿಕೊಳ್ಳುವುದರಲ್ಲಿ. ‘ವರ್ಧಮಾನ’ ಕವಿತೆಯಲ್ಲಿ ಬರುವ ಹನುಮಂತ, ‘ಭೂಮಿಗೀತ’ ಕವಿತೆಯಲ್ಲಿ ಕಾಣಿಸಿಕೊಳ್ಳುವ ವಿಶ್ವಾಮಿತ್ರ, ತ್ರಿಶಂಕು, ಕರ್ಣ, ಕುಂತಿಯರು, ‘ಸಾಮಾನ್ಯನಂತೆ ಈ ನಾನು’ ಕವಿತೆಯಲ್ಲಿ ಬರುವ ಹಿರಣ್ಯಕಶಿಪು-ಪ್ರಹ್ಲಾದರ ಪ್ರಸಂಗ – ಇವೆಲ್ಲವೂ ಆಯಾ ಕವಿತೆಗಳ ಆಶಯವನ್ನು ಅನುರಣಿಸುವ ಪ್ರತಿಮೆ-ರೂಪಕಗಳಾಗಿವೆ. ‘ಅಜ್ಞಾತ ವೇಷ’ ಎಂಬ ಕವನದಲ್ಲಿ ಯಕ್ಷಗಾನದ ವೇಷಭೂಷಣಗಳಿರುವ ಪೆಟ್ಟಿಗೆಯನ್ನು ಹೊತ್ತು ಸಾಗಿಸುವ ಕೂಲಿಗಳು ನಮ್ಮ ಪ್ರಜಾತಂತ್ರದಲ್ಲಿರುವ ಸಾಮಾನ್ಯರಿಗೊಂದು ಪ್ರತೀಕವಾಗುತ್ತಾರೆ. + +‘ಬತ್ತಲಾರದ ಗಂಗೆ’ ಎಂಬ ಕವನದಲ್ಲಿ ಗಂಗಾನದಿಯೆನ್ನುವುದು ಇಡೀ ಭಾರತ ಸಂಸ್ಕೃತಿಗೆ ಸಂಕೇತವಾಗಿರುವಂತೆ, ಅದರ ಅವನತಿಗೂ ಒಂದು ರೂಪಕವಾಗಿದೆ. ಈ ಧ್ವನಿಯನ್ನು ಕವನದ ಈ ಮೊದಲ ಸ್ಟಾಂಜಾದಲ್ಲೇ ಗಮನಿಸಬಹುದು: + +ಬತ್ತಲಾರದ ಗಂಗೆಗೆಂಥ ಕುತ್ತಿದು, ನೋಡು;ಅದೇ ಪಾತ್ರ, ಧಾಟಿ, ವಸ್ತುಗಳ ಪಾಳಿ;ಹೊಸ ನೀರು ಬಂದರೂ ಅದೇ ಪುರಾತನದಮಲು,ರಂಗಮಂದಿರ ಅದೇ, ನಾಟಕವೂ ಅದೇ. + +ವರ್ತಮಾನದ ವಸ್ತುಸ್ಥಿತಿಯನ್ನು ಕನ್ನಡಿಸುವುದಕ್ಕಾಗಿ ನಮ್ಮ ಇತಿಹಾಸ, ಪುರಾಣ, ಸಂಸ್ಕೃತಿಗಳ ವಿವರಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದ ಅಡಿಗರು ಅವೆಲ್ಲವೂ ಸ್ವಾನುಭವವನ್ನು ಹರಳುಗಟ್ಟಿಸುತ್ತವೆಯೆಂದೂ ಆ ಮೂಲಕ ಮಾತ್ರ ತಮ್ಮ ಕಾವ್ಯದಲ್ಲಿ ಮಣ್ಣಿನ ವಾಸನೆ ಹೊಡೆಯುತ್ತದೆಂದೂ ನಂಬಿದ್ದವರು. ಅವರ ದೃಷ್ಟಿಯಲ್ಲಿ, “ಮಣ್ಣಿನ ವಾಸನೆ ಎಲ್ಲಿ ಇಲ್ಲವೋ ಅಲ್ಲಿ ಜೀವವಿಲ್ಲ. ಮಣ್ಣಿಗೂ ಜೀವಕ್ಕೂ ಅವಿಚ್ಛಿನ್ನ ಸಂಬಂಧ. ಜೀವಪ್ರಪಂಚಕ್ಕೆ ಸೇರಿದ ಸಾಹಿತ್ಯದಲ್ಲಿ ಎಂಥೆಂಥ ಉದಾತ್ತವಾದ ವಿಚಾರಗಳೂ ಕಲ್ಪನೆಗಳೂ ಇರಲಿ, ಅದರಲ್ಲಿ ಈ ಪಾರ್ಥಿವ ಲೋಕದ ವಾಸನೆ ಹೊಡೆಯುತ್ತಿದ್ದರೆ ಮಾತ್ರ ಅದು ನಿಜವಾದದ್ದೂ ಸಾರ್ಥಕವಾದದ್ದೂ ಆಗಬಲ್ಲದು.” + + + +ಅಡಿಗರಿಗೆ ಸ್ವಾನುಭವದಂತೆ ಆತ್ಮವಿಮರ್ಶೆಯೂ ತುಂಬ ಮುಖ್ಯವಾಗಿತ್ತು. ಆದ್ದರಿಂದಲೇ ಅವರು ಭಕ್ತಿ ಪಂಥದ ದಾಸರಂತೆ, ಅನುಭಾವಿ ಕವಿಗಳಂತೆ ಕಾವ್ಯದಲ್ಲಿ ತನ್ಮಯರಾಗಲಿಲ್ಲ. ಬೌದ್ಧಿಕ ಎಚ್ಚರದ ಜೊತೆಗೆ ವಿಮರ್ಶಾ ಪ್ರಜ್ಞೆಯೂ ಅತ್ಯಗತ್ಯವೆಂದು ಪ್ರತಿಪಾದಿಸಿದ ಅವರು ವ್ಯಕ್ತಿ ವೈಶಿಷ್ಟ್ಯಕ್ಕೆ ಒತ್ತು ಕೊಡುವಾಗ ಕೂಡ ಅದಕ್ಕಿರುವ ಸಮಷ್ಟಿಯ ಆಯಾಮವನ್ನು ಕಡೆಗಣಿಸಿದವರಲ್ಲ. + +“ಇಷ್ಟು ಕವನಗಳನ್ನು ರಚಿಸಿದೆ, ಇಷ್ಟು ಗ್ರಂಥಗಳನ್ನು ಪ್ರಕಟಿಸಿದೆ ಎಂದು ಸಂಖ್ಯೆಯನ್ನು ಬಿತ್ತರಿಸುವ ಹುಡುಗಾಟಿಕೆ ಬಿಟ್ಟು ಸಾರ್ಥಕವಾಗುವ ಕವನಗಳಲ್ಲಿ ಸದಾಕಾಲಕ್ಕಾಗಿ ಅನುಭವವನ್ನು ಭಟ್ಟಿಯಿಳಿಸಬೇಕು. ಕವನಗಳನ್ನು ಬರೆಯದೆ ಇದ್ದರೂ ನಷ್ಟವಿಲ್ಲ, ಆದರೆ ಬರೆದದ್ದು ಉತ್ತಮವಾಗುವ ಹಾಗೆ ಪರಿಶ್ರಮ ವಹಿಸಬೇಕು; ಕಾಯಬೇಕು”. ಅಡಿಗರೇ ಒಂದು ಕಡೆ ಬರೆದಿರುವ ಈ ಮಾತುಗಳು ಅವರ ಕಾವ್ಯಸೃಷ್ಟಿಯ ಹಿಂದಿರುವ ‘ಸ್ಫೋಟಕ್ಕೆ ಕಾದು ಕಿವಿ ಕಂಪಿಸುವ’ ತಪೋನಿಷ್ಠೆಯನ್ನು ಸೂಚಿಸುತ್ತವೆ. + +ಮೊದಮೊದಲು ಅವರದು ಅಂತರ್ಮುಖತೆಯ ಕಾವ್ಯವಾಗಿತ್ತು. ‘ಭಾವತರಂಗ’, ‘ಕಟ್ಟುವೆವು ನಾವು’ ಸಂಕಲನಗಳಲ್ಲಿ ಚರಿತ್ರೆ, ಭೂಗೋಳ, ಪರಂಪರೆ, ಭೂತ, ವರ್ತಮಾನ – ಇವುಗಳನ್ನು ಕುರಿತ ಕವನಗಳಿವೆ. ಈ ಕವನಗಳಲ್ಲಿ ಕಾಣಿಸಿಕೊಳ್ಳುವ ನಾಯಕ ಈ ಇಹಕ್ಕೆ ದೂರವಾದ, ಅವರ್ಣನೀಯವಾದ, ಅಲೌಕಿಕವಾದ ಜಗತ್ತಿನ ಕರೆಗೆ ಓಗೊಡುವವನು. ತುಂಬ ಪ್ರಸಿದ್ಧವಾದ ಕವನ ‘ಮೋಹನ ಮುರಲಿ’ಯಲ್ಲಿ ಅನಿರ್ವಚನೀಯದ ಸೆಳೆತ ಇರುವಂತೆಯೇ ಈ ಇಹವನ್ನು ತೊರೆಯುವುದೇನೂ ಸುಲಭವಲ್ಲ ಎಂಬ ಧ್ವನಿಯೂ ಇದೆ. ಇದೇ ಧ್ವನಿ ‘ಹಿಮಗಿರಿಯ ಕಂದರದಲ್ಲಿ’ ಎಂಬ ದೀರ್ಘ ಕವನದಲ್ಲಿ ಚಲನಚಿತ್ರದ ‘ಮೊಂತಾಜ್’ನಂತೆ ವಿಭಿನ್ನ ಪ್ರತಿಮೆಗಳ ಮೂಲಕ ಮತ್ತೆ ಮತ್ತೆ ಹೊಳಲಿಡುತ್ತದೆ. + +ಅಡಿಗರು ಪ್ರಗತಿಶೀಲರ ಪ್ರಭಾವಕ್ಕೊಳಗಾಗಿದ್ದ ಕಾಲದಲ್ಲಿ ಕೆಲವು ಸಮಾಜಕೇಂದ್ರಿತ ಕವನಗಳನ್ನು ಬರೆದರು. ಉದಾಹರಣೆಗೆ ‘ಸಮಾಜಭೈರವ’, ‘ಕಟ್ಟುವೆನು ನಾವು ಹೊಸ ನಾಡೊಂದನು’, ‘ನಾವೆಲ್ಲರು ಒಂದೆ ಜಾತಿ’, ‘ಸುಲಿಗೆಯೆಂಬ ಯಾಗ’, ಏಳುವುದೆಂದೀ ಜನಪದ?’ ಇತ್ಯಾದಿ. ಮೊದಲ ಸಂಗ್ರಹದಲ್ಲಿದ್ದ ‘ನಾನು’ ಇಲ್ಲಿ ‘ನಾವು’ ಎಂದಾದದ್ದು ಗಮನಾರ್ಹ. ಈ ಕವನಗಳಲ್ಲಿ ಅವರು ಸಮಾಜದ ಅವನತಿಯ ಕುರುಹುಗಳನ್ನು ಅನುಕಂಪದಿಂದ, ಜಿಗುಪ್ಸೆಯಿಂದ, ವ್ಯಂಗ್ಯದಿಂದ ಚಿತ್ರಿಸಿದ್ದಾರೆ. ‘ಇಂದು ನಮ್ಮೀ ನಾಡು’ ಎಂಬ ಮೂರು ಕವನಗಳನ್ನು ಬರೆಯುವ ಹೊತ್ತಿಗೆ ಅವರಲ್ಲಿ ಭ್ರಮನಿರಸನಕ್ಕೊಂದು ರೂಪಕವೇ ಸಿದ್ಧವಾಗಿತ್ತೆನ್ನಬೇಕು. + +‘ಚಂಡೆಮದ್ದಳೆ’, ‘ಭೂಮಿಗೀತ’, ‘ವರ್ಧಮಾನ’ ಸಂಗ್ರಹಗಳಲ್ಲಿ ಮತ್ತೆ ‘ನಾನು’ ಎನ್ನುವ ವ್ಯಕ್ತಿ ಅವತರಿಸುತ್ತಾನೆ. ಈ ‘ನಾನು’ವಿನಲ್ಲಿರುವವನು ಬರೀ ವ್ಯಕ್ತಿಯಲ್ಲ, ಇಡೀ ಸಮಾಜ; ಸಮಾಜಕ್ಕಿರುವ ಚಾರಿತ್ರಿಕ, ರಾಜಕೀಯ, ಸಾಂಸ್ಕೃತಿಕ ಆಯಾಮಗಳು. ಅಡಿಗರನ್ನು ಶ್ರೇಷ್ಠ ಕವಿಯೆಂದು ಕರೆಯುವುದಕ್ಕೆ ಕಾರಣವಾಗುವ ಅನೇಕ ಕವನಗಳು ಈ ಸಂಗ್ರಹಗಳಲ್ಲಿವೆ. + +‘ಭೂಮಿಗೀತ’ ಎಂಬ ಮಹತ್ವಾಕಾಂಕ್ಷೆಯ ಕವನದಲ್ಲಿರುವ ಕೆಲವು ಧ್ವನಿಗಳು ಅವರ ಮೊದಲ ಸಂಗ್ರಹದ ‘ಒಳತೋಟಿ’ ಎಂಬ ಕವನದಲ್ಲೇ ಇರುವುದನ್ನು ಗಮನಿಸಬೇಕು. ‘ಭೂಮಿಗೀತ’ದಲ್ಲಿ ಭೂಮಿತಾಯಿಯ ಆಕರ್ಷಣೆ ವಿಕರ್ಷಣೆ, ಅವಳ ಸಂಬಂಧದಲ್ಲಿರುವ ಹಿಂಸೆ, ಪ್ರಕೃತಿಯಲ್ಲಿರುವ ದ್ವಂದ್ವ, ಅವುಗಳಿಗೆ ಮನುಷ್ಯನೇ ಸೇರಿಸುವ ಇನ್ನಷ್ಟು ದ್ವಂದ್ವ (“ಇವಳೆದೆಗೆ ಬೇರಿಳಿದ ಕಾಲು ನನ್ನದು; ಬಿತ್ತಿದೆನು, ಬೆಳೆದೆ ಆಟಂಬಾಬು”) ಇವೆಲ್ಲವೂ ರೂಪಕಸಮೃದ್ಧಿಯಿಂದಾಗಿ ಅರ್ಥದ ಹಲವು ಆಯಾಮಗಳನ್ನು ಪಡೆದುಕೊಳ್ಳುತ್ತವೆ. + +ಸೃಷ್ಟಿಕ್ರಿಯೆಯನ್ನು ಕುರಿತ ‘ಪ್ರಾರ್ಥನೆ’ ಕವನವಂತೂ ಪ್ರತಿಮೆಯಿಂದ ಪ್ರತಿಮೆಗೆ, ಸಂಕೇತದಿಂದ ಸಂಕೇತಕ್ಕೆ ಬೆಳೆಯುವ, ಒಂದು ಇನ್ನೊಂದರ ಜೊತೆ ಸಂಪರ್ಕ ಸಾಧಿಸುವ, ಹೊಸ ಹೊಸ ಅರ್ಥಗಳನ್ನು ಹೊಳೆಯಿಸುವ ಒಂದು ಸಾವಯವ ಶಿಲ್ಪವಾಗಿಬಿಟ್ಟಿದೆ. ಅವರ ಬಹು ಮುಖ್ಯ ಕವನಗಳು ಏಕಮುಖವಾಗಿ ಸಾಗುವುದಿಲ್ಲ. ಅವು ಹೊಮ್ಮಿಸುವ ಧ್ವನಿಗಳು ಬಹು ಬಗೆಯವು. ‘ಶ್ರೀರಾಮ ನವಮಿಯ ದಿವಸ’ ರಾಮನ ಕತೆಯನ್ನು ಸ್ಥೂಲವಾಗಿ ನಿರೂಪಿಸುತ್ತಿರುವಾಗಲೇ ಸೃಷ್ಟಿಕಾರ್ಯದ ಬಗೆಗೂ ವಿಕಾಸವಾದದ ಬಗೆಗೂ ಹೇಳುವಂತಿದೆ. ‘ಭೂತ’ ಗತಕಾಲದ ಬಗ್ಗೆ ಇರುವಂತೆಯೇ ಭೂತದ ಬಗೆಗೂ ಇದೆ. (ಎ. ಕೆ. ರಾಮಾನುಜನ್ ಇದನ್ನು ಇಂಗ್ಲೀಷಿಗೆ ಅನುವಾದಿಸುವಾಗ ಆ ಭಾಷೆಯಲ್ಲಿ ‘ಭೂತ’ಕ್ಕೆ ಸಮಾನಾರ್ಥ ಪದವೊಂದು ಸಿಕ್ಕದೆ ‘ಘೋಸ್ಟ್ಸ್ ಅಂಡ್ ಪಾಸ್ಟ್ಸ್’ ಎಂದು ಅನುವಾದಿಸಬೇಕಾಯಿತು). ಈ ಮಾತು ‘ಶರದ್ಗೀತ’, ‘ವರ್ಧಮಾನ’, ‘ಕೂಪಮಂಡೂಕ’, ‘ಚಿಂತಾಮಣಿಯಲ್ಲಿ ಕಂಡ ಮುಖ’, ಇತ್ಯಾದಿ ಕವನಗಳಿಗೂ ಅನ್ವಯಿಸುತ್ತದೆ. + +ಅಡಿಗರು ಒಬ್ಬ ಧೀಮಂತ ಕವಿ. ಆದ್ದರಿಂದಲೇ ಅವರು ಎಲ್ಲವನ್ನೂ ಪ್ರಶ್ನಿಸುತ್ತಿದ್ದ ಕವಿ. ಅವರದು ಸರ್ವಾಧಿಕಾರದ ವಿರುದ್ಧ ಮೊಳಗಿದ ದನಿ. ಅಪ್ಪಟ ಪ್ರಜಾಪ್ರಭುತ್ವವಾದಿಯಾಗಿದ್ದ ಅವರಿಗೆ ನಮ್ಮ ದೇಶ ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಿ ಸರ್ವಾಧಿಕಾರದತ್ತ ಸಾಗುತ್ತಿದೆ ಎಂಬ ಆತಂಕವಿತ್ತು. 1975ರ ಜೂನ್ 26ರಂದು ಇಂದಿರಾಗಾಂಧಿ ತುರ್ತು ಪರಿಸ್ಥಿತಿಯನ್ನು ಘೋಷಿಸಿದರಷ್ಟೆ. ಮಾರನೆಯ ಬೆಳಿಗ್ಗೆ ನಾವೆಲ್ಲ ಪತ್ರಿಕೆಗಳಲ್ಲಿ ಆ ಬಗ್ಗೆ ಓದಿದರೂ ಕೂಡ ನಮ್ಮಲ್ಲಿ ಕೆಲವರಿಗೆ ಅಂಥ ಶಾಸನದಿಂದ ಏನೇನು ಅನರ್ಥವಾಗಬಹುದೆಂಬ ಕಲ್ಪನೆಯೂ ಇರಲಿಲ್ಲ. + +ಆ ಸಂಜೆ ಅಡಿಗರು ಎಂದಿನಂತೆ ಬೆಂಗಳೂರಿನ ಗಾಂಧಿ ಬಜಾರಿಗೆ ಬಂದರು. ನಾವು ಮೂವರು ನಾಲ್ವರು ಅವರ ಜೊತೆ ಹೋಟೆಲಿನಲ್ಲಿ ಕಾಫಿ ಕುಡಿದೆವು. ಆದರೆ ಹೋಟೆಲಿನಲ್ಲಿ ಕುಳಿತಿರುವಷ್ಟು ಹೊತ್ತೂ ಅವರು ಹೆಚ್ಚೇನೂ ಮಾತಾಡಲಿಲ್ಲ. ಅಂದಿನ ಅವರ ಆ ವ್ಯಗ್ರತೆಗೆ ಕಾರಣವೇನೆಂದು ನಾವೂ ಊಹಿಸಲಾಗಲಿಲ್ಲ. ಹೋಟೆಲಿನಿಂದ ಹೊರಗೆ ಬಂದು ಅಲ್ಲೇ ಇದ್ದ ಕೆನರಾ ಬ್ಯಾಂಕಿನ ಕಟ್ಟೆಯ ಮೇಲೆ ಕುಳಿತದ್ದೇ ಅಡಿಗರು, “ಏನ್ರೀ, ಎಂಥಾ ಧೂರ್ತ ಹೆಂಗಸು ಈಕೆ? ಪ್ರಜಾತಂತ್ರದ ಮೂಲಕ್ಕೇ ಕೊಡಲಿ ಹಾಕಿದಳಲ್ಲ” ಎಂದು ಮೊದಮೊದಲು ಪೇಚಾಡುತ್ತ ಆಮೇಲೆ ಅತೀವ ಸಿಟ್ಟಿನಿಂದ ಒಂದರ್ಧ ಗಂಟೆ ಪ್ರಜಾತಂತ್ರದ ಪರಮಮೌಲ್ಯಗಳ ಬಗ್ಗೆ ಮಾತಾಡಿದರು. ಪರಿಣಾಮವಾಗಿ ನಾವೂ ಸ್ವಲ್ಪ ಹೊತ್ತು ಇಂದಿರಾ ಗಾಂಧಿಯ ಕೃತ್ಯದ ಬಗ್ಗೆ ಯೋಚಿಸುವಂತಾಯಿತು. + +ರಾತ್ರಿ ಏಳೂವರೆ ಗಂಟೆಯಾದದ್ದೇ ಅವರು ಮನೆಗೆ ಹೊರಡಲೆಂದು ಎದ್ದರು. ನಾನು ಅದೇ ಹೊತ್ತಿಗೆ ಆ ದಾರಿಯಲ್ಲಿ ಬಂದ ಒಂದು ಆಟೋವನ್ನು ನಿಲ್ಲಿಸಿ ಅವರನ್ನು ಕೂಡಿಸಿದೆ. ಅವರು “ಬರುತ್ತೇನೆ, ನಾಳೆ ನೋಡೋಣ” ಎಂದದ್ದೇ ಆಟೋ ಹೊರಟಿತು. ಆಶ್ಚರ್ಯವೆಂದರೆ ಹತ್ತು ಗಜ ಹೋದದ್ದೇ ಅದು ನಿಂತುಬಿಟ್ಟದ್ದು. ಆಟೋದವನೇನಾದರೂ ಬರುವುದಿಲ್ಲ ಎಂದನೇನೋ ಎಂದುಕೊಂಡು ನಾನು ಓಡಿಹೋದೆ. ಅಡಿಗರು ಕೆಳಗಿಳಿದು ನನ್ನ ಭುಜ ಹಿಡಿದುಕೊಂಡು “ನಾವೀಗ ಬಾಂಬು ಮಾಡಬೇಕು” ಎಂದು ಹೇಳಿದವರೇ ಮತ್ತೆ ಆಟೋದೊಳಗೆ ತೂರಿಕೊಂಡುಬಿಟ್ಟರು. ಆಮೇಲೆ ಮೂರು ದಿನ ಅವರು ಗಾಂಧಿಬಜಾರಿನತ್ತ ಸುಳಿಯಲಿಲ್ಲ. “ಬಹುಶಃ ಬಾಂಬು ಮಾಡುತ್ತಿರಬೇಕು” ಎಂದು ನಾವು ನಕ್ಕದ್ದುಂಟು. ಆದರೆ ನಾಲ್ಕನೆಯ ದಿನ ಬಂದಿತು ಅವರ ಸವಾರಿ. ಎಲ್ಲರೂ ಕಾಫಿ ಹೀರುತ್ತಿರುವಾಗ ಒಂದು ಸಿಗರೇಟು ಹಚ್ಚಿದ ಅಡಿಗರು ಮೆಲ್ಲನೆ ತಮ್ಮ ಕೋಟಿನ ಜೇಬಿನಿಂದ ಮಡಿಸಿದ ಒಂದು ಕಾಗದ ತೆಗೆದು ಸುಮತೀಂದ್ರ ನಾಡಿಗರ ಕೈಗಿತ್ತರು. ಅದರಲ್ಲಿದ್ದದ್ದು ತುರ್ತು ಪರಿಸ್ಥಿತಿಯನ್ನು ವಿಡಂಬಿಸುವ ಒಂದು ಹೊಸ ಕವನ. + +ನಿನ್ನ ಗದ್ದೆಗೆ ನೀರು ತರುವ ನಾಲೆಗಳೆಲ್ಲ ಬಂದುಬೇಕಾದದ್ದು ಬೆಳೆದುಕೋ ಬಂಧು:ಕಲೆ ಧರ್ಮನ್ಯಾಯ ಕಾನೂನು ಸ್ವಾತಂತ್ರ್ಯ ಇತ್ಯಾದಿ ಮೂಲವ್ಯಾಧಿ,ನನ್ನ ಕುರ್ಚಿಗೆ ತಕ್ಕ ಗಾದಿ.. + +ಎಂದು ಪ್ರಾರಂಭವಾಗುವ ಆ ಕವನದಲ್ಲಿ ಒಬ್ಬ ಸರ್ವಾಧಿಕಾರಿಯ ಅಧಿಕಾರ, ದರ್ಪ, ಆಡಳಿತ, ಎಲ್ಲವೂ ಅತ್ಯಂತ ತೀವ್ರ ವ್ಯಂಗ್ಯಕ್ಕೆ ಗುರಿಯಾಗಿವೆ. ಬಹುಶಃ ಅಡಿಗರಂಥ ಸಮರ್ಥನಾದ ಕವಿ ಮಾಡಬಹುದಾದ ಬಾಂಬು ಅಂದರೆ ಇದೇ ಅಲ್ಲವೆ? ‘ಗಜೇಂದ್ರಮೋಕ್ಷ’, ‘ದೆಹಲಿಯಲ್ಲಿ’, ‘ಎಡ ಬಲ’, ‘ಸಾಮಾನ್ಯನಂತೆ ಈ ನಾನು’, ‘ಮೂಲಕ ಮಹಾಶಯರು’ ಮೊದಲಾದ ಕವನಗಳಲ್ಲಿ ಕೂಡ ಅವರ ಈ ಇಂಥ ಪ್ರಜಾತಂತ್ರಪರ ನಿಲುವೇ ಎದ್ದು ಕಾಣುತ್ತದೆ. + +ಇಂಗ್ಲೀಷಿನಲ್ಲಿ ‘ಶೇಕ್ಸ್‍ಪಿಯರ್ ಫಾರ್ ಆಲ್ ಅಕೇಷನ್ಸ್’ ಎಂಬ ಮಾತಿದೆ. ಬದುಕಿನಲ್ಲಿ ಯಾವುದೇ ಸಂದರ್ಭಕ್ಕೂ ಹೊಂದುವ ಸೂಕ್ತವಾದೊಂದು ನಾಣ್ನುಡಿಯ ರೂಪದ ಸಾಲು ಶೇಕ್ಸ್‍ಪಿಯರನಲ್ಲಿ ಸಿಕ್ಕೇ ಸಿಕ್ಕುತ್ತದೆ ಎನ್ನುವುದು ಅದರ ಅರ್ಥ. + +ವೈಯೆನ್ಕೆಯವರು ಒಮ್ಮೊಮ್ಮೆ ಅಡಿಗರ ಒಂದೆರಡು ಸಾಲುಗಳನ್ನು ಹೇಳಿದ್ದೇ ‘ಅಡಿಗ ಫಾರ್ ಆಲ್ ಅಕೇಷನ್ಸ್’ (ಎಲ್ಲ ಸಂದರ್ಭಗಳಿಗೂ ಅಡಿಗ) ಎನ್ನುತ್ತಿದ್ದರು. ಆ ಮಾತಿಗೆ ಸಾಕ್ಷಿಯಾಗಿವೆ ಈ ಕೆಲವು ಸಾಲುಗಳು: ‘ಮೂಗು ಮುಚ್ಚಿಕೋ ನಗರಸಭೆಯ ಲಾರಿ’; ‘ದೊಡ್ಡ ದೊಡ್ಡ ಮಾತು-ಬಲೂನು ಹಿಗ್ಗುವಾಗ್ಗೆಲ್ಲ ತಾಗಿಸು ನಿಜದ ಸೂಜಿಮೊನೆ’; ‘ಜಾತಕರ್ಮದಿ ನಿರತ ಈ ಪುರೋಹಿತ ಭಟ್ಟ ಅಪರ ಪ್ರಯೋಗದಲಿ ಪಾರಂಗತ’, ‘ನಾತದಿಂದಲೇ ಜಗದ್ವಿಖ್ಯಾತನಾಗು-ತ್ತಿರುವನಾಥಪ್ರೇತ’; ‘ಶಸ್ತ್ರಕ್ರಿಯೆಗೆ ಇಲ್ಲಿ ಯಾವ ಶೈಲಿ?’; ‘ಜಾತಕರ್ಮದಿ ನಿರತ ಈ ಪುರೋಹಿತಭಟ್ಟ ಅಪರಪ್ರಯೋಗದಲಿ ಪಾರಂಗತ’, ‘ಹೆಳವನ ಹೆಗಲ ಮೇಲೆ ಕುರುಡ ಕೂತಿದ್ದಾನೆ ದಾರಿ ಸಾಗುವುದೆಂತೊ ನೋಡಬೇಕು’, ‘ಕೇಳಿಲ್ಲವೇ ನೀವು ಪ್ರತಿನಿತ್ಯವೂ ಟೀವಿ ಕಕ್ಕುತ್ತಿರುವ ನನ್ನ ಠೀವಿವಾಕ್ಕು?’, ‘ಪರಾನುಕರಣೆಯ ಪರಾಕಾಷ್ಠೆಯೇ ಈ ನಮ್ಮ ಸತ್ತು ಬದುಕುವ ಜನರ ಮೂಲನಿಷ್ಠೆ’, ‘ಇದು ಸನಾತನ ವೃಕ್ಷವಣ್ಣ! ನೇಣಿಗೆ ಬೇರೆ ಆಧಾರ ಬೇಕೆ ಈ ಕೊಂಬೆಗಿಂತ?’, ‘ಆಸ್ಥಾನ ಬಿಟ್ಟವಗೆ ಜಾಪಾಳ ಮಾತ್ರೆ’, ‘ಎರಡು ದೋಣಿಗೆ ಕಾಲನಿಟ್ಟು ಸಾಗುವ ಶೂರ, ಇಲ್ಲದ ತೃತೀಯ ಕ್ರಮಕ್ಕೆ ಠಾವೆಲ್ಲೆಂದು ಕುದಿವ ಕುವರ’. + + + +ಈ ಲೇಖನದ ಆರಂಭದಲ್ಲಿ ಅಡಿಗರದು ಮಾರ್ಗಪ್ರವರ್ತಕ ಕಾವ್ಯ ಎಂದೆನಷ್ಟೆ. ಅವರಿಗೆ ತಾವೆಷ್ಟು ದೊಡ್ಡ ಕವಿ ಎಂದು ಗೊತ್ತಿದ್ದುದಲ್ಲದೆ ಕವಿಯಾಗಿ ತನ್ನ ಬಾಳು ಸಾರ್ಥಕವಾಯಿತೆಂಬ ಅರಿವೂ ಇತ್ತು. “ಒಂದು ಕಲೆ ಅಥವಾ ಕವನ ಸಫಲವಾಗುವುದು ಅದರಲ್ಲಿ ಕಲೆಗಾರ ಕಾಲವನ್ನು ತಡೆಹಿಡಿದು ನಿಲ್ಲಿಸಿದಾಗ. ಹೀಗೆ ನಿಲ್ಲಿಸುವುದು ಸಾಧ್ಯವಾಗುವುದು ಭೂತ ಭವಿಷ್ಯತ್ತು ಮತ್ತು ವರ್ತಮಾನಗಳನ್ನು ಒಂದೇ ಬಿಂದುವಿನಲ್ಲಿ ತಂದು ಕೇಂದ್ರೀಕರಿಸಿದಾಗ. ಇಂಥ ಕವನಗಳು ತೀರ ಅಪೂರ್ವವಾದಂಥವು, ಅಂಥವನ್ನು ಬರೆದಿದ್ದರೆ ನಾನು ಕೃತಾರ್ಥ” ಎಂದು ಅವರೇ ಒಂದು ಕಡೆ ಬರೆದಿದ್ದಾರೆ. ‘ಕೂಪಮಂಡೂಕ’ ಎಂಬ ಕವನದಲ್ಲಿ ಬರುವ ಬಾಳೆಗಿಡದ ಈ ರೂಪಕ ಹೇಳುತ್ತಿರುವುದು ಕೂಡ ಇದನ್ನೇ ಅಲ್ಲವೆ?ಗೊನೆಮಾಗಿ ಬಾಳೆ ಜೀವನ್ಮುಕ್ತ; ಹಳಸುತಿದೆಹಿಂಡುಹಿಳ್ಳುಗಳಲ್ಲಿ ಪ್ರಾಣವೂರಿ. + +(ಪುಸ್ತಕ: ಸ್ವಯಂದೀಪಕತೆ, ಲೇಖಕರು: ಎಸ್. ದಿವಾಕರ್, ಪ್ರಕಾಶಕರು: ಅಭಿನವ, ಬೆಂಗಳೂರು, ಪುಟಗಳು: 68 ಬೆಲೆ: 50/-) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_284.txt b/Kenda Sampige/article_284.txt new file mode 100644 index 0000000000000000000000000000000000000000..7ef1fb3ed6c10362041f0a8a044ca05a28d2fee3 --- /dev/null +++ b/Kenda Sampige/article_284.txt @@ -0,0 +1,43 @@ + + +ಒಬ್ಬರು ಕವಿತೆಯನ್ನು ಬರೆಯುವುದಕ್ಕೇ ಅದೆಷ್ಟೋ ತಿಣುಕಾಡಬೇಕಾಗಿರುವಾಗ ಇಬ್ಬರು ಸೇರಿ ಬರೆಯುತ್ತೇವೆ ಎಂದು ಹೊರಡುವುದು ಅದೆಷ್ಟು ಕಷ್ಟ ಎನ್ನುವುದು ನನಗೆ ಅನುಭವದಿಂದ ಗೊತ್ತಿದೆ. ಆದರೆ ಸುಮಾರು ಹದಿನಾಲ್ಕು ವರ್ಷಗಳ ಹಿಂದೆಯೇ ಇಂತಹುದ್ದೊಂದು ಜುಗಲ್ಬಂದಿ ಕವಿತೆಗಳನ್ನು ಪಿ ಚಂದ್ರಿಕಾ ಮತ್ತು ಶರಣು ಹುಲ್ಲೂರು ಪ್ರಕಟಿಸಿದ್ದಾರೆ. ಇಬ್ಬರು ಒಟ್ಟಿಗೆ ಕವಿತೆಗಳನ್ನು ಬರೆಯುವುದು ಅಷ್ಟು ಸುಲಭವಲ್ಲ. ಜುಗಲ್ ಕವಿತೆಗಳು ಸಂಕಲನದಲ್ಲಿ ಒಟ್ಟೂ ಮೂರು ಭಾಗಗಳಿವೆ. ಮೊದಲ ಭಾಗದಲ್ಲಿ ತಲಾ ಹತ್ತು ಕವಿತೆಗಳಿವೆ. ಇಲ್ಲಿ ಶರಣು ಹುಲ್ಲೂರು ಕವಿತೆಗಳು ಮೊದಲಿದ್ದು, ಚಂದ್ರಿಕಾರವರ ಕವಿತೆ ನಂತರವಿದೆ. ಎರಡನೇ ಭಾಗದಲ್ಲಿ ಪುನಃ ತಲಾ ಹತ್ತು ಕವಿತೆಗಳಿವೆ. ಇಲ್ಲಿ ಚಂದ್ರಿಕಾ ಕವಿತೆಗಳು ಮೊದಲಿದ್ದರೆ ನಂತರ ಶರಣು ಹುಲ್ಲೂರು ಬರೆದಿದ್ದಾರೆ. ಈ ವಿಭಾಗ ಕ್ರಮವನ್ನು ನೋಡಿದರೆ ಎಲ್ಲಿಯೂ ಲಿಂಗ ತಾರತಮ್ಯವಾಗಲಿ, ಹಿರಿತನದ ಅಧಿಕಾರವಾಗಲಿ ನುಸುಳದಂತೆ ಎಚ್ಚರಿಕೆಯ ಹೆಜ್ಜೆಯಿಟ್ಟಿದ್ದಾರೆ ಎಂದೇ ಅನ್ನಿಸುತ್ತದೆ. + +ಹೀಗೆ ಪ್ರತಿಯೊಬ್ಬರ ತಲಾ ಇಪ್ಪತ್ತು ಕವಿತೆಗಳಂತೆ ಒಟ್ಟೂ ನಲವತ್ತು ಕವಿತೆಗಳನ್ನು ಹೊಂದಿದ್ದರೆ ಕೊನೆಯದಾದ ಮೂರನೆ ಭಾಗ ಉಳಿದ ಮಾತು. ಇಲ್ಲಿ ಶರಣು ಹುಲ್ಲೂರು ಹಾಗೂ ಪಿ ಚಂದ್ರಿಕಾರವರ ಮಾತುಗಳಿವೆ. ಇದರ ಜೊತೆಗೆ ಬಿ ಸುರೇಶರವರು ಬರೆದ ಮಾತುಗಳಿವೆ. + +ಮೊದಲನೇ ಕವಿತೆ ಅರ್ಧ ಉಂಡು ಎದ್ದವಳಿಗೆ… ಕವಿತೆಯಲ್ಲಿ ಶರಣು ಹುಲ್ಲೂರುಗಂಗಾಳದ ತುಂಬಾ ಅಡಿಗೆಯಿಟ್ಟ ದಿವಸಅರ್ಧ ತುತ್ತಿನೊಂದಿಗೆ ಎದ್ದೇಳಬಾರದಿತ್ತುಎಂದರೆ ಅದಕ್ಕೆ ಸಂವಾದಿಯಾಗಿ ಪಿ ಚಂದ್ರಿಕಾ ಬರೆದಿರುವ ಸಾಲುಗಳು ಮನದ ಆಳದಲ್ಲಿ ಉಳಿಯುತ್ತದೆ. + +(ಪಿ. ಚಂದ್ರಿಕಾ) + +ನಮ್ಮೊಳಗಿನ ದೇವತೆಸತ್ತು ಮಲಗಿದ್ದಾಳೆಅವಳು ಮುಡಿದ ದೇವಲೋಕದ ಹೂವುಪರಿಮಳಿಸುತ್ತಿದೆಎಂತಹ ಸಂವಾದ ಇದು. ಮನಸ್ಸು ಸಣ್ಣಗೆ ನಡುಗುವ ತಣ್ಣನೆಯ ಪ್ರತಿಕ್ರಿಯೆಗೆ ಮಾತು ಮೂಕವಾಗದೆ ಇರದು. + +ಇಂತಹುದ್ದೊಂದು ಪ್ರತಿಕವನ ಹುಟ್ಟುವಾಗಿನ ಪ್ರಕ್ರಿಯೆ ಅಂದುಕೊಂಡಷ್ಟು ಸುಲಭವಲ್ಲ. ಶಬ್ಧದ ಎಳೆಗಳು ಎಲ್ಲಿಯೂ ತುಂಡಾಗಿದೆ ಎಂದು ಓದುಗರಿಗೆ ಅನ್ನಿಸಬಾರದು. ಕವಿತೆ ಬರೆವಾಗ ತುಸು ಎಡವಿದರೂ ಎರಡೂ ಕವಿತೆಗಳು ಓದುಗರ ಕಣ್ಣಲ್ಲಿ ಬಿದ್ದುಹೋಗಿಬಿಡಬಹುದಾದ ಅಪಾಯವಿದೆ. ಹೀಗಾಗಿ ಎರಡೂ ಕವಿತೆಗಳು ಚಲಿಸುವ ಪಾದದ ಗತಿ ಒಂದೇ ಇರಬೇಕಾದದ್ದು ಇಲ್ಲಿ ಅತಿ ಮುಖ್ಯ. ಹಾಗೆ ತುರುಸಿನ ಹೆಜ್ಜೆಯಿಡಲು ಒಬ್ಬರಿಗಿಂತ ಒಬ್ಬರು ಪೈಪೋಟಿ ನಡೆಸಿರುವ ಹಲವಾರು ಉದಾಹರಣೆಗಳನ್ನು ಇಬ್ಬರೂ ಒದಗಿಸಿದ್ದಾರೆ. + +ಅಲೆ ಅಪ್ಪಳಿಸಿದಾಗೊಮ್ಮೆದಂಡೆಗಳ ಬಿಕ್ಕಳಿಕೆನನಗಷ್ಟೇ ಅರ್ಥವಾಗುತ್ತೆ ಬಿಡುನಾವಿಬ್ಬರೂ ಸಮ ದುಃಖಿಗಳುಎನ್ನುವ ಶರಣು ಹುಲ್ಲೂರು ಎದೆಯ ನೋವನ್ನು ತೆರೆದಿಟ್ಟರೆಉಪ್ಪು ಕಡಲಿನ ನೀರಿನಲ್ಲಿ ಬೆಳೆ ಬೆಳೆಯುವುದಿಲ್ಲಎದೆಯ ಕಡಲಲಿ ಮಾತ್ರ ನಿರಂತರ ಉಬ್ಬರವಿಳಿತಎಂದು ಹೇಳುತ್ತಾರೆ. ಕಡಲು ಇಬ್ಬರನ್ನೂ ಏಕಕಾಲಕ್ಕೆ ಆವರಿಸಿಕೊಳ್ಳುವುದು ಹೀಗೆ. + +ಅಪ್ಪಾ,ನಿನ್ನ ಮೇಲೆ ಇನ್ನೂ ತಕರಾರಿದೆಕೊಟ್ಟು ಕಸಿದದ್ದಕ್ಕೆಬಿಟ್ಟು ನಡೆದದ್ದಕ್ಕೆಶರಣು ತಮ್ಮ ತಂದೆಯನ್ನು ಆಕ್ಷೇಪಿಸುತ್ತಾರೆ. ಅವ್ವನ ಕಣ್ಣೀರಿಗೆ/ ಯಾವ ಭಾಷೆ ಕಲಿಸಿದ್ದೆ ಎಂದು ಅಗಲಿದ ಅಪ್ಪನನ್ನು ಪ್ರಶ್ನಿಸುತ್ತಾರೆ. ದೂರವಾದ ಅಪ್ಪ ಒಮ್ಮೆಲೆ ಸನಿಹ ಬಂದು ಎದೆಕಲುಕಿದಂತಾಗುತ್ತದೆ. ಆದರೆ ಚಂದ್ರಿಕಾ ಹಾಗಲ್ಲ. + + + +ನೀನು ಹೋದಮೇಲೆಮನೆಯ ಮುಂದೆ ಆಲದ ಮರ ಉರುಳಿತಳದಿಂದ ಸಿಹಿನೀರು ಉಕ್ಕುತಿದೆಅದು ಸದಾಕಾಲಕ್ಕೂ ಮನೆಯ ಮುಂದೆ ಹರಿಯುತ್ತದೆಎನ್ನುತ್ತ ಓದುಗರ ದುಗುಡ ತುಂಬಿದ ಮನದೊಳಗೆ ಒಂದು ತಂಗಾಳಿಯ ಅಲೆಯನ್ನು ಎಬ್ಬಿಸಿ ಬಿಡುತ್ತಾರೆ. + +ಹಿಂದಿನ ಕವನವನ್ನೋದಿ ಅಪ್ಪನ ಅಗಲುವಿಕೆಗೆ ಹೆಪ್ಪುಗಟ್ಟಿದ್ದ ಮನಸು ಈ ಸಾಲುಗಳಿಂದ ಪುಳಕಗೊಳ್ಳುತ್ತದೆ. ಅಪ್ಪ ಸನಿಹವೇ ಇದ್ದಾನೆ ಎಂಬ ಭಾವ ಹುಟ್ಟುತ್ತದೆ. + +ಒಂದೇ ಹನಿಗೆ ಮುತ್ತಾಗುವ ಸ್ವಾತಿ ಮಳೆಯಲ್ಲ ನಾನಿಂತ ನೀರಿನ ಹಾಗೆ ಕೊಳೆತು ಹೋಗುವುದಿಲ್ಲಇದು ಚಂದ್ರಿಕಾರವರ ಸಾಲು. ಹೆಣ್ಣನ್ನು ಹೊಗಳಿ ಅಟ್ಟಕ್ಕೇರಿಸಿ, ಮುತ್ತು ರತ್ನ ಎಂದೆಲ್ಲ ಬಿರುದು ಕೊಟ್ಟು ನಿಂತ ನೀರಾಗಿಸಿ ಪಾಚಿಗಟ್ಟಿಸುವ ಗಂಡು ಮನಸಿಗೆ ಸವಾಲು ಹಾಕುತ್ತಾರೆ. + +ನಿನ್ನೊಳಗಿರುವ ಮಾಯೆಯನ್ನೇ ಕೇಳುಹನಿ ಸ್ವಾತಿ ಮಳೆಗೂ ಮನಸು ಹೆಣೆಯುವುದು ಗೊತ್ತುಎನ್ನುತ್ತ ಶರಣು ಹೆಣ್ಣಿನ ಕೋಪಕ್ಕೆ ಮತ್ತದೇ ಶತಮಾನದ ಉತ್ತರ ಕೊಡುತ್ತಾರೆ. ಹೆಣ್ಣಿನ ಮನಸ್ಸೇ ಮಾಯೆ ಎಂಬುದನ್ನು ಹೇಳುತ್ತಲೇ ಸ್ವಾತಿಯ ಹನಿ ಹನಿಯೂ ಮನಸ್ಸನ್ನು ಒಂದುಗೂಡಿಸುವ ಪ್ರೇಮದ ಭರವಸೆ ದೊರೆಯುತ್ತದೆ. + +(ಶರಣು ಹುಲ್ಲೂರು) + +ಶರಣು ಹುಲ್ಲೂರುರವರು ಮೊದಲು ಬರೆದು ಅದಕ್ಕೆ ಚಂದ್ರಿಕಾರವರು ಸಾಥ್ ನೀಡಿದ ಕವಿತೆಗಳಿಗೂ, ಚಂದ್ರಿಕಾ ಮೊದಲು ಬರೆದು ನಂತರ ಶರಣು ಹುಲ್ಲೂರುರವರು ಬರೆದ ಜುಗಲ್ ಗಳ ವಿಷಯವನ್ನೊಮ್ಮೆ ಅವಲೋಕಿಸಬೇಕು. ಶರಣುರವರ ಕವನಗಳು ಇಹದ ದನಿಗಳು. ಅರ್ಧ ಉಂಡು ಎದ್ದವಳಿಗೆ, ಕೇಳಬೇಕೆನಿಸಿದ್ದು, ಅರ್ಥವಾಗದ್ದು, ಪ್ರೀತಿ ಎಂಬ ಮಾಯೆ ಎನ್ನುವ ಕವನಗಳನ್ನು ಇಲ್ಲಿ ಗಮನಿಸಬಹುದು. ಇಲ್ಲಿ ಚಂದ್ರಿಕಾರವರು ಕೂಡ ಇಹವನ್ನೇ ಹೇಳಿದ್ದಾರೆ. ಆದರೆ ಚಂದ್ರಿಕಾರವರು ಬರೆದ ಕವನಗಳು ಇಹದಿಂದ ಒಂದು ಹೆಜ್ಜೆ ಮುಮದೆ ಹೋಗಿ ನಿಲ್ಲುತ್ತಾರೆ. ಬರಿ ಶ್ವೇತೆಗೆ, ಸರಯೂ ನದಿಯಾಳದಲಿ, ಮಹದೇವಿ ಅಕ್ಕ ಮುಂತಾದವು ಇಲ್ಲಿ ನಿದರ್ಶನವಾಗಿ ನಿಲ್ಲುತ್ತವೆ. ಶರಣು ಕೂಡ ಇಹದ ಮುಂದಕ್ಕೆ ಹೆಜ್ಜೆ ಇಡಲು ಪ್ರಯತ್ನಿಸಿರುವುದೇ ಈ ಜುಗಲ್ ಬಂದಿ ಕವಿತೆಗಳ ಸಾರ್ಥಕತೆ. + +ಹೆಣ್ತನದ ನವಿರತೆ, ಖಚಿತತೆ ಹಾಗೂ ಹೇಳಬೇಕಾದುದನ್ನು ತಣ್ಣಗೆ ಹೇಳಿಬಿಡುವ ಚಂದ್ರಿಕಾರವರ ಗುಣದಂತೆ ಅವರ ಕಾವ್ಯ ಕೂಡ ನಿಖರತೆಯಿಂದ ಕೂಡಿದೆ. + +ಚಂದ್ರಿಕಾ ಒಂದು ಸಾಗರ. ಅವರ ಸಾಹಿತ್ಯದ ಜ್ಞಾನವನ್ನು ನಾನು ಹತ್ತಿರದಿಂದ ಗಮನಿಸಿದ್ದೇನೆ. ಜೀವಪ್ರೀತಿಯ ಹೆಣ್ಣು ಅವರು. ಕವನಗಳಲ್ಲಿ ಅವರ ತಾನ್ ಅದ್ಭುತವಾಗಿದೆ. ಶಬ್ಧಗಳ ಬಳಸುವಿಕೆ ಮತ್ತು ಶಬ್ಧಗಳ ಚಮತ್ಕಾರ ಕೂಡ ಇಲ್ಲಿ ಒಂದು ಪರಿಪೂರ್ಣತೆಯನ್ನು ನೀಡಿದೆ. ಇನ್ನು ಶರಣು ನನಗೆ ವೈಯಕ್ತಿಕವಾಗಿ ಹೆಚ್ಚು ಪರಿಚಯವಿಲ್ಲದವರು. ಖಂಡಿತವಾಗಿಯೂ ಇವು ಚಂದ್ರಿಕಾ ಕವನಗಳೊಂದಿಗೆ ಪೈಪೋಟಿ ನೀಡಲು ಪ್ರಯತ್ನಿಸಿವೆ. + +ಇವೆಲ್ಲಕ್ಕಿಂತ ಹೆಚ್ಚಾಗಿ ಈ ಕವನಗಳಿಗೆ ಸುಮಾರು ಹದಿನಾಲ್ಕು ವರ್ಷಗಳ ಹಿಂದಿನ ಮಾತಿದೆ. ಇಬ್ಬರು ಕವಿಗಳ ಜುಗಲ್ಬಂದಿ ಹೊರಬರುವಾಗ ಅಲ್ಲಿ ಎಂತಹ ಸಾಹಸ ಇದ್ದಿರಬಹುದು ಎಂದು ನಾನು ಯಾವತ್ತೂ ಯೋಚಿಸುತ್ತೇನೆ. ಸಾಧಾರಣವಾದ ಮಾತಲ್ಲ ಇದು. ಹದಿನಾಲ್ಕು ವರ್ಷಗಳ ನಂತರ ನಾನು ‘ನನ್ನ ದನಿಗೆ ನಿನ್ನ ದನಿಯು’ ಗಜಲ್ ಜುಗಲ್ ಹೊರತರುವಾಗಲೂ ಅದೆಷ್ಟೋ ಅಳುಕಿದ್ದೆ ಎಂಬುದನ್ನು ಮರೆಯುವಂತಿಲ್ಲ. ಗಂಡು ಮತ್ತು ಹೆಣ್ಣಿನ ಸಹಚರ್ಯವನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವ ಸಮಾಜದ ಎದುರು ಇಂತಹುದ್ದೊಂದು ಜುಗಲ್ ಬರೆದರೆ ಆಡುವವರ ಎದುರಿಗೆ ಮಕಾಡೆ ಕವುಚಿ ಬಿದ್ದಂತಾಗುತ್ತದೇನೋ ಎನ್ನುವ ಆತಂಕ. + + + +ಇನ್ನು ಹದಿನಾಲ್ಕು ವರ್ಷಗಳ ಹಿಂದಿನ ಆ ಸ್ಥಿತಿ ಏನಿರಬಹುದು ಎಂದುಕೊಂಡೇ ಚಂದ್ರಿಕಾರವರಿಗೆ ಫೋನಾಯಿಸಿದೆ. ಆಡುವವರು ಆಡ್ಕೋತಾರೆ. ಆಗೋ ಕಾಲಕ್ಕೆ ಆಗಿ ಬಿಡಬೇಕು. ಸುಮ್ನೆ ಪುಸ್ತಕ ಮಾಡು. ಎಂದು ಅವರು ಧೈರ್ಯಕೊಟ್ಟು ನಮ್ಮ ಗಜಲ್ ಜುಗಲ್ ಹೊರಬರಲು ಕಾರಣವಾದ ಇವರಿಬ್ಬರಿಗೂ ಧನ್ಯವಾದಗಳು. ಕನ್ನಡದ ಮಟ್ಟಿಗೆ ಇದು ಹೊಸ ಪ್ರಯತ್ನವದು. ಅದಕ್ಕಿಂತ ಮೊದಲು ಎಲ್ಲಿಯೂ ಜುಗಲ್ ಬಂದ ಉದಾಹರಣೆಗಳಿಲ್ಲ. ಹೀಗೆ ಹೊಸದೊಂದು ಮಾರ್ಗವನ್ನು ಹಾಕಿಕೊಟ್ಟ ಇವರಿಬ್ಬರ ದಿಟ್ಟ ಹೆಜ್ಜೆಗೊಂದು ಸಲಾಂ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_285.txt b/Kenda Sampige/article_285.txt new file mode 100644 index 0000000000000000000000000000000000000000..98a4c397cf984be7ce34a0c8084e40bf0d8addbd --- /dev/null +++ b/Kenda Sampige/article_285.txt @@ -0,0 +1,145 @@ + + +ಶನಿವಾರ ಬೆಳಿಗ್ಗೆ ಸಹಕಾರಿ ಸಂಘಗಳ ಡಿಪ್ಯೂಟಿ ರಿಜಿಸ್ಟ್ರಾರವರಿಂದ ಗೋಪಿನಾಥನಿಗೊಂದು ಗುಪ್ತ ಪತ್ರಬಂತು. ಆಹಾರ ಇಲಾಖೆಯ ಪ್ರಧಾನ ಅಧಿಕಾರಿಯಾದ ಕಮೀಶನರು ಮದ್ರಾಸಿನಿಂದ ಸೋಮವಾರ ಸಾಯಂಕಾಲ ಬರುತ್ತಾರೆ. ಅದೇ ದಿನ ವರ್ತಕ ಸಂಘದವರಾಗಲಿ ಇನ್ನಿತರ ಸಂಸ್ಥೆಯವರಾಗಲಿ ಅವರನ್ನು ಕಂಡು ಮಾತನಾಡುವ ಮುಂಚಿತವಾಗಿ ಗೋಪಿನಾಥನು ಭೇಟಿಮಾಡಿ ಜಿಲ್ಲೆಯ ನಿಜಸ್ಥಿತಿಯನ್ನು ಕೂಲಂಕುಷವಾಗಿ ವಿವರಿಸಿ ಹೇಳಬೇಕು ಎಂಬ ಸೂಚನೆಯಿತ್ತು ಅದರಲ್ಲಿ. ಹಾಗಾದರೆ ತಾನಿನ್ನು ಸ್ವಪ್ನಶಾಯಿಯಾಗಿದ್ದರೆ ಪ್ರಯೋಜನವಿಲ್ಲ. ಕಾರ್ಯ ಪ್ರವರ್ತನಾಗಬೇಕು. ವಿಪಕ್ಷದವರು ಕಮಿಶನರನ್ನು ತಮ್ಮ ಪಂಥಕ್ಕೆ ತಿರುಗಿಸುವ ಪ್ರಯತ್ನ ಮಾಡದೆ ಇರಲಾರರು, ಅದಕ್ಕೆ ಮುಂಚಿತವಾಗಿಯೇ ಅವರ ದೃಷ್ಟಿಯನ್ನು ಜನತೆಯ ಹಿತಚಿಂತನೆಯ ಕಡೆಗೆ ಪರಿವರ್ತಿಸುವಂತೆ ಮಾಡುವುದು ಅತ್ಯಗತ್ಯ. ಅದಕ್ಕಾಗಿ ಇಡೀ ಜಿಲ್ಲೆಯ ವಸ್ತುಸ್ಥಿತಿಯ ವಿವರಗಳನ್ನು, ಅಂಕೆ ಸಂಖ್ಯೆ ಸಮಾಚಾರಗಳನ್ನು ಸಂಗ್ರಹಿಸಿಕೊಳ್ಳಬೇಕು. ಅಂದರೆ ಜಿಲ್ಲೆಯೆಲ್ಲ ಸುತ್ತಾಡಬೇಕು, ಮುಂದಿರುವ ಮೂರೇ ದಿನಗಳಲ್ಲಿ ಎಂದು ನಿರ್ಧಾರಕ್ಕೆ ಬಂದನು. + +ಸರಕಾರದ ಸಾಗುವಳಿಯ ಲೆಕ್ಕ ಪತ್ರಗಳು ನಿಷ್ಪ್ರಯೋಜನವೆಂತ ಆತಗೆ ಮೊದಲೇ ಗೊತ್ತು. ಹಿಂದೆ ಇದೇ ಕಮೀಶನರು ದಕ್ಷಿಣ ಕನ್ನಡ ಜಿಲ್ಲೆ ‘ತೇಮಾನು’ ಕ್ಷೇತ್ರವೋ ಅಥವಾ ‘ಕೊಸರು’ ಕ್ಷೇತ್ರವೋ ಎಂದು ಕಲೆಕ್ಟರಿಗೆ ಬರೆದು ವಿಚಾರಿಸಿದ್ದಾಗ, ಅವರು ತಮ್ಮ ಜಿಲ್ಲೆಯಲ್ಲಿ ಯಾವುದಕ್ಕೂ ಕೊರತೆಯಿಲ್ಲ, ಬೇಕಾದರೆ ಮಲಬಾರು ಜಿಲ್ಲೆಗಳಿಗೂ ಕೊಡುವಷ್ಟು ಧಾನ್ಯವಿದೆಯೆಂದು ಮರುಟಪ್ಪಾಲಿಗೇನೇ ಉತ್ತರ ಕಳುಹಿಸಿದ್ದರು. ಅಂದರೆ ತಮ್ಮ ಅಧಿಕಾರ ಕ್ಷೇತ್ರದ ನ್ಯೂನತೆಯನ್ನು ಒಪ್ಪಿಕೊಂಡರೆ ತಮ್ಮ ಆಡಳಿತಕ್ಕೆ ಎಲ್ಲಿ ನ್ಯೂನತೆ ಬರುತ್ತದೋ ಎಂಬ ಭಯದಿಂದ ನಾಲ್ಕು ಗೆರೆ ಗೀಚಿಬಿಟ್ಟು ಜಿಲ್ಲೆಯ ಹದಿಮೂರು ಲಕ್ಷ ಪ್ರಜೆಗಳಿಗೆ ಒಂದು ವರ್ಷದಲ್ಲಿ ಮೂರು ತಿಂಗಳ ಉಪವಾಸ ವಿಧಿಸಿಬಿಟ್ಟಿದ್ದರು. ತಮ್ಮ ನೌಕರಿ, ತಮ್ಮ ಸಂಬಳ, ತಮ್ಮ ಗೌರವ ಇವುಗಳ ಪಾಲನೆಯಲ್ಲೇ ಜೀವಸವೆಯಿಸುವ ಸರಕಾರಿ ಅಧಿಕಾರಿಗಳ ಆಶ್ರಯದಲ್ಲಿ ಇಂಥ ಪರೋಪಕಾರದ ಕೆಲಸ ಪೂರೈಸಲಾರದು ಎಂಬುದು ಆತನಿಗೆ ಅನೇಕವೇಳೆ ಮನದಟ್ಟಾಗಿತ್ತು. ಈ ವಿಚಾರದಲ್ಲಿ ಭೂಮಾಲೀಕರೆಷ್ಟು ಮಂದಿ, ಒಕ್ಕಲಿಗರೆಷ್ಟು ಮಂದಿ, ಹೊಲಗಳೆಷ್ಟು, ಉತ್ಪತ್ತಿಯೆಷ್ಟು, ಪರದೇಶದಿಂದ ಬರತಕ್ಕ ಆಹಾರ ಸಾಮಗ್ರಿಗಳೆಷ್ಟು? ಇದೆಲ್ಲ ವಿವರಗಳನ್ನು ಸ್ವಲ್ಪ ಸ್ವಲ್ಪವಾಗಿ ಕೆಲವು ತಿಂಗಳುಗಳಿಂದ ಸಂಗ್ರಹಿಸುತ್ತಲೇ ಇದ್ದನು. ಆದರೆ ಕಮಿಶನರನ್ನು ಕಾಣುವ ಮೊದಲು ಈ ಭಾಗದಲ್ಲಿ ಸಂಪೂರ್ಣ ಸಿದ್ಧತೆಯಿರಬೇಕೆಂತ ಡಿಪ್ಯೂಟಿ ರಿಜಿಸ್ಟ್ರಾರಿಗೆ ಬರೆದು ತಿಳಿಸಿದನು. + +ಅರ್ಧತಾಸಿನೊಳಗಾಗಿ ಅವರೇ ಬಂದರು. ಪ್ರತಿಯೊಂದು ಕೇಂದ್ರಕ್ಕೂ ಸ್ವತಃ ಹೋಗಬೇಕೆಂದು ಅಭಿಪ್ರಾಯಪಟ್ಟರು. ಅವರನ್ನೂ ಬರುವಂತೆ ವಿಜ್ಞಾಪಿಸಿಕೊಂಡುದಕ್ಕೆ ಇಂಥ ಪತ್ತೇದಾರಿ ಕೆಲಸಕ್ಕೆ ತಾನು ಎದುರು ಬೀಳುವುದು ಸಮಂಜಸವಲ್ಲ, ಗೋಪಿನಾಥ ಒಬ್ಬನೇ ಹೋಗುವುದು ಉಚಿತ, ತನ್ನ ಕಾರು ಆತನ ವಶವಿರಲಿ, ಕೆಲಸ ಮುಗಿಯುವತನಕ ಎಂದರು. ಈ ಪ್ರಕಾರ ಅಂದೇ ಹನ್ನೊಂದು ಗಂಟೆಗೆ ಊಟಮಾಡಿ ಸಂಚಾರಕ್ಕೆ ಹೊರಡುವುದಾಗಿ ಗೋಪಿನಾಥ ನಿಶ್ಚಯಿಸಿದನು. ಆ ಕೂಡಲೇ ಹೊರಟಿದ್ದರೆ ಊಟಕ್ಕೆ ಉಡುಪಿಯಲ್ಲಿರಬಹುದಿತ್ತು. ಆದರೆ ಹೋಗುವ ಮುನ್ನ ಒಮ್ಮೆಯಾದರೂ ಮಾಲತಿಯನ್ನು ನೋಡುವ ಹಾರೈಕೆ. ತಾಯಿಗೆ ತಿಳಿಸಲು ಹೋಗಿ ನೋಡುವಾಗ ಇಂದಿರಮ್ಮ ಅವರ ಕೋಣೆಯಲ್ಲಿರಲಿಲ್ಲ. ತೀರ ವಾಸಿಯಾಗುವಷ್ಟರಲ್ಲಿ ಹೀಗೂ ಮಾಡುತ್ತಾಳಲ್ಲ ಎಂದು ಚಿಂತಿಸುತ್ತ ಬರುವಾಗ ಅವರೇ ಬಂದರು. ಒಳಗಿಂದ ಹೆಜ್ಜೆಯ ಮೇಲೆ ಹೆಜ್ಜೆ ಹಾಕುತ್ತ ಅವರ ಬಲಗೈ ಬೆರಳೊಂದನ್ನು ಹಿಡಿದು ಮೊಮ್ಮಗಳು ನಡೆಸಿಕೊಂಡು ಬರುತ್ತಿದ್ದಳು. ಅವರಿಗೆ ತನ್ನ ಪ್ರವಾಸದ ಕಾಲಕ್ರಮವನ್ನು ತಿಳಿಸಿ, + +“ಮಾಲತಿ ಬಂದ್ರೆ ಇವೊತ್ತು ಇಲ್ಲೇ ನಿಲ್ಲಿಸಿಕೊಮ್ಮ’ ಎಂದನು. ತಾನಿರುವಾಗ ಆಕೆ ಬರಲು ಸಾಧ್ಯವಿಲ್ಲದ್ದರೂ ತನ್ನ ಮನೆಯಲ್ಲಿ ತಾನಿಲ್ಲದಿದ್ದಾಗಲಾದರೂ ಒಂದು ರಾತ್ರೆ ಇರಲಿ. ತನ್ನ ಮಂಚದ ಮೇಲೆ ಮಲಗಿ ನಿದ್ರಿಸಲಿ. ಆಕೆಯ ಚೆಲುವಿನ ಚಾರುಚಂದ್ರಿಕೆ ತನ್ನ ಶಯ್ಯಾಗೃಹದಲ್ಲಿ ತುಂಬಲಿ, ಎಂಬ ಬಯಕೆಯಿಂದ. + +“ಇಲ್ಯಾಕಪ್ಪ ಇರ್ತಾಳೆ, ಮನೆಬಿಟ್ಟು?” ಎಂದು ಇಂದಿರಮ್ಮ ಆಕ್ಷೇಪವೆತ್ತಿದರು. + +“ಅವಳ ಗಂಡ ಇವತ್ತಿನ ರೈಲಿಗೆ ಮದ್ರಾಸಿಗೆ ಹೋಗಿದ್ದಾನಂತೆ. ಇಲ್ಲಿರದೇಯೇನು?’’ + +“ಏನೋಪ್ಪ, ನೋಡೋಣ. ಯಾವುದಕ್ಕೂ ಅವಳು ಬರಲಿ” ಅಂದರು. + +ಪ್ಯಾಕು ಮಾಡುವಾಗ ಗಂಟಲೊಳಗೆ ಹಾಡತೊಡಗಿದನು. ಅಷ್ಟರಲ್ಲಿ ಹೊರಗೊಂದು ಜಟಕ ಬಂದು ನಿಂತಿತು. ಮಾಲತಿ ಇರಬೇಕು, ಮತ್ಯಾರು? ಆದರೆ ಶಾರದಮ್ಮನ ಸ್ವರ ಮಾತ್ರ ಕೇಳಿಸಿತು. ಹೋಗಿ ನೋಡಲು ಕಾಲೇ ಬರಲಿಲ್ಲ. ಎದೆ ಬಡಿದುಕೊಳ್ಳುತ್ತಿತ್ತು. ಇಂದಿರಮ್ಮನೂ ಶಾರದಮ್ಮನೂ ಮಾತನಾಡುತ್ತಿರುವುದನ್ನು ತನ್ನ ಕೋಣೆಯ ಹೊಸಲಬಳಿ ನಿಂತು ಕೇಳಿದನು. ಮಾಲತಿ ಮದ್ರಾಸಿಗೆ ಹೋದಳು? ಅಹುದು. ಫಕ್ಕನೆ ಮನಸ್ಸಾಯಿತು ಗಂಡನ ಜತೆಗೆ ಹೋಗಬೇಕೂಂತ. ಹೋಗಿಬಿಟ್ಟಳು. ಯಾರಿಗೂ ಗೊತ್ತಿರಲಿಲ್ಲ. ಪೆಟ್ಟಿಗೆ ಕಟ್ಟಿದ್ದೇ ಗೊತ್ತು. ಸೋಮವಾರ ಇಬ್ಬರೂ ಬರುತ್ತಾರೆ. ಆಶ್ಚರ್ಯ! ಪರಮಾಶ್ಚರ್ಯ! ಅಲ್ಲಾ, ಒಂದು ಮಾತಾದರೂ ಹೇಳಿಹೋಗಬಹುದಿತ್ತು. ಆದರೆ ಯಾವಾಗ, ಅವಕಾಶವೆಲ್ಲಿ? ಗೋಪಿನಾಥನಿಗೆ ಆ ದಿನದ ಗೋಪುರದ ಕಲಶವೇ ಕಳಚಿಬಿದ್ದು ಚೂರು ಚೂರಾದಂತಾಯಿತು. ಇನ್ನೊಂದು ಗಳಿಗೆಯಲ್ಲಿ ಹೊರಟೇತೀರಬೇಕು. + +ಆದರೆ ಆತನಿಗೆ ಮನೆಬಿಟ್ಟು ಹೊರಡುವಾಗಿದ್ದ ಎದೆಸಂಕಟ ಕಾರಿನಲ್ಲಿ ಕುಳಿತಮೇಲೆ ಬಹಳ ಸಮಯ ಇರಲಿಲ್ಲ. ಮೊದಲೇ ಉಬ್ಬಾಳಾಗಿದ್ದ ಡ್ರೈವರನಿಗೆ ತಾನು ಹೊರಟ ಕೆಲಸದ ಹಿರಿಮೆಯನ್ನೂ ತರಾತುರಿಯನ್ನೂ ತಿಳಿಸಿ ಹುರಿದುಂಬಿಸಿದ್ದರಿಂದ ಆತ ಹೊಸ ಕಾರನ್ನು ಹಾರಿಸಿದ, ಹೆಮ್ಮೆಯಿಂದ. ಅದು ನೀರಿನ ಮೇಲೆ ಹಕ್ಕಿ ಚಿಮ್ಮಿದಂತೆ ಚಲಿಸುವಾಗ ಮುಖದ ಮೇಲೆ ರುಮುರುಮು ಬೀಸುತ್ತಿದ್ದ ಗಾಳಿಯೊಂದಿಗೆ ವೇಗದ ಅಮಲು ತಲೆಗೇರಿತು. ಗೋಪಿನಾಥನಿಗೆ ಹಗಲುಗನಸುಗಳು ಸಾಲುಸಾಲಾಗಿ ತೇಲಿ ಬಂದು ತೇಲಿ ಹೋದವು. + +ಮೂಡಬಿದ್ರೆ, ಕಾರ್ಕಳ, ಉಡುಪಿ, ಭಾನುವಾರ ಕುಂದಾಪುರ. ರಾತ್ರಿ ಮರಳಿ ಮಂಗಳೂರು. ಸೋಮವಾರ ಬೆಳಿಗ್ಗೆ ಪುತ್ತೂರು. ಅಲ್ಲಿಂದ ಕಾಸರಗೋಡು. ಸಂಜೆ ಮರಳಿ ಮಂಗಳೂರು. ಹೋದಲ್ಲೆಲ್ಲಾ ಸಹಕಾರ ಸಂಘಗಳ ಆಫೀಸುಗಳಲ್ಲೊ, ಮಂಡಿಗಳಲ್ಲೋ ತಂಗಿದನು. ಸಭೆ ಕೂಡಿಸಿದನು. ಲೆಕ್ಕ ಪತ್ರ ತರಿಸಿದನು. ಎಡೆಬಿಡದೆ ದೆವ್ವ ಹಿಡಿದವನಂತೆ ದುಡಿದನು. ಸೋಮವಾರ ಸಂಜೆ ಮಂಗಳೂರಿಗೆ ತಲುಪುವಾಗ ಜಿಲ್ಲೆಯ ಆಹಾರದ ವಿಚಾರ ಆತನಿಗೆ ಗೊತ್ತಿಲ್ಲದ ವಿಷಯವೇ ಇರಲಿಲ್ಲವೆನ್ನಬಹುದು. + +ಅಂದು ಸಾಯಂಕಾಲ ಮದ್ರಾಸಿನಿಂದ ಮೈಲುಗಾಡಿ ಬರುವ ವೇಳೆಗೆ ಮಂಗಳೂರಿನ ಸ್ಟೇಶನ್ ಪ್ಲಾಟುಫಾರ್ಮಿನಲ್ಲಿ ವಿಶೇಷ ಗಲಿಬಿಲಿ. ರೈಲು ಬರುವ ಒಂದು ಗಂಟೆಗೆ ಮುಂಚಿತವಾಗಿಯೇ ಹಾಜರಾಗಿದ್ದ ಸರಕಾರಿ ಅಧಿಕಾರಗಳ ದಲಾಯಿತರು, ದಫೇದಾರರು ಹಲವಾರು ದವಾಲೆ ಹಾಕಿಕೊಂಡು ಠೀವಿಯಿಂದ ಸ್ಟೇಶನು ತುಂಬ ಓಡಾಡುತ್ತ ರೈಲ್ವೆ ಇಲಾಖೆಯ ಕೀಳು ನೌಕರರ ಎದುರಿಗೆ ಮೆರೆಯುತ್ತಿದ್ದರು. ಇನ್ನು ಕೆಲವರು ಹೊರಗಡೆ ಜಗಲಿಯ ಮೇಲೆ ತಂಡ ತಂಡವಾಗಿ ಕುಕ್ಕರಿಸಿ ತಮ್ಮ ಧಣಿಗಳ ಕಾರುಗಳ ಆಗಮನವನ್ನು ನಿರೀಕ್ಷಿಸುತ್ತ ಒಂದೇ ಒಂದು ಕಾಗೆಯನ್ನಾಗಲಿ ನಾಯಿಯನ್ನಾಗಲಿ ಹತ್ತಿರ ಬರಲು ಬಿಡುತ್ತಿರಲಿಲ್ಲ. + +ಸಮಯ ಸಮೀಪಿಸಿದ ಹಾಗೆಲ್ಲ ಒಬ್ಬೊಬ್ಬರೇ ಜಿಲ್ಲಾಧಿಕಾರಿಗಳು ಚಿತ್ಐಸಿದರು. ಕಮಿಶನರು ಪತ್ನಿಸಮೇತರಾಗಿ ಬರುತ್ತಾರೆಂತ ವರ್ತಮಾನವಿದ್ದುದರಿಂದ ದೊಡ್ಡದೊಡ್ಡವರೆಲ್ಲ ಸಪತ್ನಿಯರಾಗಿಯೇ ಬಂದಿದ್ದರು. ಕಲಾಬತು ಅಂಚಿನ ರಾಜನೀಲಿ ರೇಶ್ಮೆ ಸೀರೆಯನ್ನುಟ್ಟು ಸುಶೀಲಮ್ಮನೂ ಬಂದಿದ್ದರು. ಬಂಡಿ ಬರುವುದಕ್ಕೆ ಒಂದು ನಿಮಿಷಕ್ಕೆ ಮೊದಲು ಜಿಲ್ಲಾ ಕಲೆಕ್ಟರೂ ಅವರ ದೊರೆಸಾನಿಯೂ ಬಂದರು. ಒಂದು ತಾಸಿನ ಮುಂಚೆ ನಿರ್ಜನ – ನಿರ್ಜೀವವಾಗಿದ್ದ ಪ್ಲಾಟುಫಾರ್ಮು ಸ್ವಲ್ಪ ಸಮಯದೊಳಗೆ ಪುರ ಪ್ರಮುಖರ ಪ್ರದರ್ಶನ ಕೇಂದ್ರವಾಗಿಬಿಟ್ಟಿತು. + +ಜಿಲ್ಲಾ ಕಲ್ಲೆಕ್ಟರು, ಅವರ ಪರ್ಸನಲ್ ಅಸ್ಟಿಸ್ಟೆಂಟರು, ಅಸಿಸ್ಟೆಂಟು ಕಲೆಕ್ಟರು, ಡಿಪ್ಯುಟಿ ರಿಜಿಸ್ಟ್ರಾರು, ಸಬ್ ಡಿಪ್ಯೂಟಿ ರಿಜಿಸ್ಟ್ರಾರು ಹಲವರು, ತಹಸೀಲ್ದಾರರೂ ಅವರ ಗಣಗಳೂ, ಸಹಕಾರಿ ಸೆಂಟ್ರಲ್ ಸ್ಟೋರ್ಸಿನ ಅಧ್ಯಕ್ಷರು, ಸಪ್ಲೈ ಆಫೀಸರು, ಇವರೇ ಮೊದಲಾದ ಉನ್ನತಾಧಿಕಾರಿಗಳೂ ಅವರ ಕೈಕೆಳಗಿನವರೂ ಅಲ್ಲದೆ ಬೆಂಡೋಲೆಯಷ್ಟು ಗಾತ್ರದ ವಜ್ರದ ಗುಂಡಿಗಳಿಂದ ರೇಷ್ಮೆ ಜುಬ್ಬದ ಹೊದಿಕೆಯಿದ್ದ ಡೊಳ್ಳು ಹೊಟ್ಟೆಯ ವರ್ತಕ ಸಂಘದ ಅಧ್ಯಕ್ಷರೂ, ಆರಿಂಚು ಎತ್ತರದ ಗಾಂಧಿಟೋಪಿಯ ಕಾಂಗ್ರೆಸು ಮುಖಂಡರೂ ಲುಂಗಿಯ ಮೇಲೆ ಮೊಳಕಾಲುದ್ದ ಜುಬ್ಬಹಾಕಿ ಅದರ ಮೇಲೆ ನಶ್ಯ ಬಣ್ಣದ ವೆಸ್ಟುಕೋಟು ತೊಟ್ಟಿದ್ದ ಕಮ್ಯುನಿಷ್ಟ ಕಾಮ್ರೇಡರೂ, ವರ್ಷಕ್ಕೆ ಸುಮಾರು ಇಪ್ಪತ್ತು ಸಹಸ್ರ ರೂಪಾಯಿ ಕಂದಾಯ ತೆರುವ ಹಿರಿಮೆಯಿಂದ ಕತ್ತು ಜಗ್ಗಿಹೋದ ಭೂಮಾಲಿಕರ ಪ್ರೆಸಿಡೆಂಟರು ಅಪ್ಪಾಭಟ್ಟರೂ ನೆರೆದಿದ್ದರು. ಅಪ್ಪಾಭಟ್ಟರು ಇಂಥ ಸಂಭ್ರಮಗಳಿಗಾಗಿಯೇ ಮೀಸಲಾಗಿ ಹೊಲಿಸಿದ್ದ ಕರೆ ಅಲ್ಪಾಕ ಕೋಟನ್ನು ಹಾಕಿ, ಅದರ ಮೇಲೆ ಜರಿತಾರಿನ ರೇಷ್ಮೆ ಶಾಲನ್ನು ಕೊರಳಿನ ಇಬ್ಬದಿಯನ್ನೂ ದರ್ಜಿಯ ಲಾಡಿಯಂತೆ ಇಳಿಬಿಟ್ಟು ಕಲಾಬತಿನ ರುಮಾಲನ್ನು ಸುತ್ತಿಕೊಂಡಿದ್ದರು. ಜತೆಗೆ ಬಂದಿದ್ದ ಅವರ ಹೆಂಡತಿ ಸಮಯೋಚಿತವಾಗಿ ಭಾರಿ ಸೀರೆಯನ್ನುಟ್ಟು ಅರೆನೆರೆತ ಕೂದಲನ್ನು ತಲೆ ಹಿಂದುಗಡೆ ಬಿಗುವಾಗಿ ತುರುಬುಹಾಕಿ ಅದರ ಮೇಲೆ ಅಂಗೈಯಷ್ಟು ದೊಡ್ಡ ಚಿನ್ನದ ಗುಲಾಬಿ ಹೂವನ್ನು ಕುಕ್ಕಿಕೊಂಡಿದ್ದರು. ಅವರು ತಮ್ಮ ಹಳ್ಳಿಯಿಂದ ಬಂದುದು ಮತ್ಯಾವುದಕ್ಕೂ ಅಲ್ಲ. ಕಮಿಶನರ ದೊರೆಸಾನಿಯನ್ನ ಕಂಡು ನಾಲ್ಕು ಮಾತನಾಡಿಬಿಡಬೇಕೆಂಬ ಒಂದೇ ಚಪಲಕ್ಕಾಗಿ. ಒಂದೆರಡು ದೊರೆಗಳನ್ನು ಎಲ್ಲೋ ನೋಡಿದ್ದು ನೆನಪಿತ್ತು. ಆದರೆ ದೊರೆಸಾನಿಗಳನ್ನು ನೋಡಿರಲಿಲ್ಲ. ಸೇರುಕಟ್ಟಳೆ ಚಿನ್ನಾಭರಣಗಳಿಂದಲಂಕೃತರಾಗಿ ವೃದ್ಧ ವರಲಕ್ಷ್ಮಿಯಂತಿದ್ದರು. + +ಈ ದಿಬ್ಬಣಿಗರ ಗಡಿಬಿಡಿಯಲ್ಲಿ ರೈಲು ಬರುವ ಸ್ವಲ್ಪ ಮುಂಚೆ ಸ್ಟೇಷನಿಂದ ಒಳಹೊಕ್ಕ ಗೋಪಿನಾಥನನ್ನು ಯಾರೂ ಗಮನಿಸಲಿಲ್ಲ. ಆತನಿಗೂ ಅಷ್ಟೇ ಬೇಕಾದ್ದು. ತಮಾಷೆ ನೋಡಲು ಬರುವವರಂತೆ ಒಂದು ಧೋತ್ರ, ಅದರ ಮೇಲೊಂದು ಜುಬ್ಬವನ್ನಷ್ಟೇ ಹಾಕಿಕೊಂಡಿದ್ದನು. ಬಂದವನು ಹಿಗಿನ್ ಬಾತೆಮ್ಸಿನ ಪುಸ್ತಕ ಮಾರುವವನೊಂದಿಗೆ ಮಾತನಾಡುತ್ತ ನಗುತ್ತ ನಿಂತಿದ್ದನು. + +ಬಿರುಗಾಳಿ ಅಟ್ಟಿಕೊಂಡು ಬಂದ ದನಕರುಗಳಂತೆ ರೇಲ್ವೆ ನೌಕರರು ಜೆಲ್ಲಾಪಿಲ್ಲಿಯಾಗಿ ಅತ್ತಿತ್ತ ಓಡಾಡಲಾರಂಭಿಸಿದರು. ಬಹುದೂರದಿಂದ ‘ಕೋ’ ಅಂತ ಕೀಚುಸ್ವರ ಕೂಗಿತು. ಕಣ್ಣುಮುಚ್ಚಾಲೆ ಆಡುವ ಮಕ್ಕಳಂತೆ. ಮರುಕ್ಷಣ ರೈಲು ಕಾಣಬಂತು. ಹೊಗೆ ಕಾರುತ್ತ, ಗರ್ಜಿಸುತ್ತ, ನೆಲನಡುಗಿ ಸುತ್ತ ನೋಡುತ್ತಿದ್ದ ಹಾಗೇ ಬಂದೇಬಿಟ್ಟಿತು. ಮಹಾ ಕಾರ್ಕೋಟಕದಂತೆ. ಸ್ಟೇಶನ್ನಿನಲ್ಲಿ ನಿಲ್ಲುವದಿಲ್ಲವೋ ಎನ್ನುವಷ್ಟು ರಭಸದಿಂದ ಬಂತು. ಕಟಕಟ, ತಟತಟ ಅಂತ ಹಲವುಗಾಡಿಗಳು ಮಿಂಚಿಹೋದವು. ಫಕ್ಕನೆ ಪ್ಲಾಟು ಫಾರ್ಮಿಗೆ ಅಡ್ಡನಾಗಿ ಉದ್ದಕ್ಕೂ ನಿಂತುಬಿಟ್ಟಿತು. ಸಾಲುಸಾಲಾಗಿ ನಿಂತಿದ್ದ ಸ್ವಾಗತಕೂಟದವರು ಒಂದನೇ ತರಗತಿಯ ಗಾಡಿಯಿದ್ದಲ್ಲಿಗೆ ಹೋಗಿ ಮುತ್ತಿದರು. ಕಲೆಕ್ಟರ ಹೆಂಡತಿ ವಿನಹ ಮಿಕ್ಕ ಹೆಂಗಸರೆಲ್ಲ ಲೇಡೀಸ್ ವೈಟಿಂಗ್ ರೂಮಿನಲ್ಲಿದ್ದರು. ಗೋಪಿನಾಥ ನಿಂತಲ್ಲೇ ಎದುರು ಒಂದು ಫಸ್ಟ್ ಕ್ಲಾಸ್ ಗಾಡಿಯಿಂದ ಬಾಗಿಲನ್ನು ತೆರೆದು ಮಾಲತಿ ಕೆಳಕ್ಕೆ ಹಾರಿದಳು. ಆಕೆಯ ಬೆನ್ನಿಗೆ ನಗುತ್ತಿದ್ದ ಕಮಿಶನರ ಹೆಂಡತಿಯೂ ಇದ್ದರು. ಪಕ್ಕದ ಕಂಪಾರ್ಟುಮೆಂಟಿನಿಂದ ಕಮಿಶನರೂ ಅವರ ನಂತರ ರಾಘವೇಂದ್ರರಾಯರೂ ಹೊರಗೆ ಬಂದರು. ಅಲ್ಲಿ ಸಭೆಸೇರಿದ್ದವರ ಪರಿಚಯ ಮಾಡಿಸಿಕೊಡುವ ಕೆಲಸ ರಾಘವೇಂದ್ರರಾಯರು ನಿರ್ವಹಿಸಿದರು. ಕಲೆಕ್ಟರ ಹೆಂಡತಿ ಕಮಿಶನರ ಹೆಂಡತಿ ಹತ್ರ ಮಾತನಾಡುತ್ತ ಅವರ ಸಂದರ್ಶನಕ್ಕಾಗಿ ಹಲವು ಮಹಿಳೆಯರು ವೈಟಿಂಗ್ ರೂಮಿನಲ್ಲಿ ಕಾದಿರುವರೆಂತ ಹೇಳಿದೊಡನೆ ಅವರು ‘ಮಾಲ್ಲಾತಿ’ ಅಂತ ಮಾಲತಿಯನ್ನು ಕರೆದು ಆಕೆ ಜತೆಯಲ್ಲಿ ವೈಟಿಂಗ್ ರೂಮಿಗೆ ಹೋದರು. + +ಕಲೆಕ್ಟರ ದೊರೆಸಾನಿಯ ನಂತರ ಲೇಡಿ ಕಮಿಶನರ ಪರಿಚಯದ ಮಾರ್ಯಾದೆ ತನಗೇನೇ ಸಲ್ಲತಕ್ಕದ್ದೆಂತ ಹೆಮ್ಮೆಪಟ್ಟು ಸುಶೀಲಮ್ಮ ಮುಂದೊತ್ತಿ ಬಂದರು. ಆದರೆ ಮಾಲತಿ ಅವರನ್ನು ನೋಡದ ಹಾಗೆ ನಟಿಸಿ ಮಿಕ್ಕವರೆಲ್ಲರ ಪರಿಚಯ ಮಾಡಿಸಿದ ನಂತರವೇ ಅವರಿಗೆ ಆಗಂತುಕರ ಕೈಕುಲುಕಿಸುವ ಭಾಗ್ಯ ಒದಗಿಸಿಕೊಟ್ಟಳು. ಅಪ್ಪಾಭಟ್ಟರ ಹೆಂಡತಿಯನ್ನು ನೋಡಿ ಕಮಿಶನರರ ಹೆಂಡತಿಗೆ ಸುಖ ಸಂತೋಷವಾಯಿತು. + +“Tell the old lady I am delighted to see her” ಅಂದರು ಮಾಲತಿಗೆ. ಮಾಲತಿ ಈ ಸಂಭಾಷಣೆಯನ್ನು ಒಪ್ಪಿಸಿದಳು. ಈ ಉತ್ತೇಜನದಿಂದ ಭಟ್ಟರ ಹೆಂಡತಿಗೆ ಕೇಳಬೇಕೆಂದಿದ್ದ ಪ್ರಶ್ನೆಗಳ ಪಟ್ಟಿಯನ್ನು ಹೊರತೆಗೆಯುವ ಧೈರ್ಯ ಬಂತು.“ಇವಳಿಗೆ ವಯಸ್ಸೆಷ್ಟು?’’ ಎಂದು ಕಣ್ಸನ್ನೆ ಮಾಡುತ್ತ ಮಾಲತಿ ಹತ್ರ ಕೇಳಿದರು. ಮಾಲತಿ ಕಿಂಚಿತ್ತಾದರೂ ಚಮಕಿತಳಾಗದೆ, “ನೀವಿಲ್ಲಿ ಎಷ್ಟು ದಿನ ಇದ್ದಿರೀಂತ ಕೇಳ್ತಾರೆ” ಅಂದಳು. + +“Oh! only a couple of days. I’am afraid” ಅಂದರು ಕಮೀಶನರ ಹೆಂಡತಿ.“ಮೂವತ್ತೆರಡು ವರ್ಷ” ಅಂತ ಭಟ್ಟರ ಹೆಂಡತಿಗೆ ದಾಟಿಸಿದಳು.“ಮಕ್ಕಳೆಷ್ಟಂತೆ?’’“ಇನ್ನೆರಡು ದಿನಗಳಾದ್ರೂ ಇದ್ರೆ ಚೆನ್ನಾಗಿತ್ತೂಂತಾರೆ.’’ + +“I should have loved to. But we have our program cut out.” + +“ಎರಡು ಗಂಡು. ಒಂದು ಹೆಣ್ಣು. ಇಬ್ಬರು ವಿಲಾಯತಿಯಲ್ಲಿ, ಕೊನೆಯವಳು ಮದ್ರಾಸಿನಲ್ಲಿ.’’ + +“ಅವಳ ಗಂಡಗೆ ಪ್ರಾಯ, ಸಂಬಳ? ಇವಳು ಎರಡನೆಯ ಸಂಬಂಧವೋ? ವಿಲಾಯತಿಯ ಹೆಂಗಸರು ಮುಟ್ಟಾದರೆ ಹೊರಗೆ ಕೂತುಕೊಳ್ಳುತ್ತಾರೋ ಇಲ್ಲವೋ?’’ ಇಂಥ ಸವಾಲುಗಳನ್ನು ರೂಪಾಂತರಗೊಳಿಸಿ ಕೇಳಿ ಬಂದ ಜವಾಬುಗಳನ್ನು ಬದಲಿಸಿ ಹೇಳುತ್ತಿದ್ದ ಮಾಲತಿಗೆ ಪ್ರಾಣಕ್ಕೆ ಬಂತು. ಆದರೂ ಸ್ವಲ್ಪವೂ ಹಿಂದೆಗೆಯದೆ ಚಮತ್ಕಾರದಿಂದ ನಿಭಾಯಿಸಿದಳು. ಬೆರಗಾಗಿ ನೋಡುತ್ತಿದ್ದ ಮಿಕ್ಕ ಮಾನಿನಿಯರ ಮಾನವನ್ನು ಕಾಪಾಡಿದಳು. + +ಈ ಪ್ರಹಸನ ಮುಗಿದ ಮೇಲೆ ಕಮಿಶನರರ ಹೆಂಡತಿ ಭಟ್ಟರ ಹೆಂಡತಿಯ ಕಡೆಗೆ ಕೈ ನೀಡಿದರು. ಆದರೆ ಅವರು ಹಿಂಜರಿದು ಕೈ ಜೋಡಿಸಿ ನಮಸ್ಕರಿಸಿದರು. “ಯಾವ ಮೈಲಿಗೆಯೋ ಏನೋ! ನಾನವಳನ್ನು ಮುಟ್ಟುವದಿಲ್ಲಾಂತ ಹೇಳಿಬಿಡು” ಅಂತ ಮಾಲತಿಗೆ ಹೇಳಿದರು. + +“ನಮ್ಮ ದೇಶದ ಪದ್ಧತಿಯಂತೆ ವಂದಿಸುತ್ತಿದ್ದಾರೆ” ಅಂದಳು ಮಾಲತಿ. ಅದಕ್ಕೆ ಕಮಿಶನರ ಹೆಂಡತಿ ನಗುತ್ತ ತಾನೂ ಪರಿಷ್ಕಾರವಾಗಿ ಕೈಜೋಡಿಸಿ ನಮಸ್ಕರಿಸಿ ಎಲ್ಲರಿಗೂ ವಂದಿಸಿ ಹೊರಗೆ ಹೋದರು. + +ತನ್ನಷ್ಟಕ್ಕೆ ತಾನು ನಿಲುಗಡೆಯಲ್ಲಿ ಅಡ್ಡಾಡುತ್ತಿದ್ದ ಅಧಿಕಾರಿಗಳ ಅಟ್ಟಹಾಸವನ್ನು ನೋಡುತ್ತಿದ್ದ ಗೋಪಿನಾಥನಿಗೆ ಮಾಲತಿಯು ಕೇವಲ ಅಪರಿಚಿತರೊಂದಿಗೆ ಬೆರತು ಅವರ ಬೆಡಗಾಟಕ್ಕೆ ತಾನೂ ಹಿಗ್ಗಿ ಹಾರುವುದು ಆಶ್ಚರ್ಯಕರವಾಗಿತ್ತು. ಈ ಮಾಟಗಾರ್ತಿಗೆ ಯಾವ ವೇಷ ಹಾಕಿದರೂ ಒಪ್ಪುತ್ತದಲ್ಲ! ಈ ಜನಮೆಚ್ಚಿನ ಮರುಳು ಈಕೆಯ ಹುಟ್ಟುಗುಣವಾಗಿರಬಹುದೇ? ಅಥವಾ ಪ್ರಸಂಗಕ್ಕೆ ಹಾಕಿಕೊಂಡ ಬಣ್ಣವೇ? ಅಥವಾ ಗಂಡನ ಸಂಸರ್ಗ ದೋಷವೆ? ರಾಘವೇಂದ್ರರಾಯರಿಗಂತೂ ಇತ್ತಲಾಗಿನ ಅಕ್ಕಲೇ ಇರಲಿಲ್ಲ. ಅದನ್ನು ನೋಡುತ್ತ ಗೋಪಿನಾಥನಿಗೆ “ಇದೇನು ಹುಲಿಕುಣಿತ! ಕಮಿಶನರರ ಬಾಲಹಿಡಿದು ಹೀಗೂ ಒದ್ದಾಡಬೇಕೇ? ಮಹಾರಾಯ! ಡೌಲು ದೇವೇಂದ್ರಂದು, ಬುದ್ಧಿ ದಫೇದಾರಂದು.” ಎಂದನಿಸಿತು. + +ಅಷ್ಟರಲ್ಲಿ ಆತನಿದ್ದಲ್ಲಿಗೆ ಡಿಪ್ಯೂಟಿ ರಿಜಿಸ್ತ್ರಾರವರು ದುಡುದುಡು ಓಡಿ ಬಂದರು. ಗೋಪಿನಾಥ್ ರಾವ್ ನಿಮ್ಮನ್ನಾಗಲೇ ನೋಡಿದೆ. ನೀವು ಎದುರು ಬೀಳದೆ ಇದ್ದುದೇ ಅನುಕೂಲವಾಯಿತು. ಇಂದು ರಾತ್ರೆಯೇ ಎಂಟು ಗಂಟೆಗೆ ನಿಮ್ಮ ಇಂಟರ್ವ್ಯೂ ನಿರ್ಣಯವಾಗಿದೆ, ಅವರ ಬಂಗ್ಲೇಲಿ. ಈ ವಿಷಯ ನನಗೆ ಮಾತ್ರ ಗೊತ್ತು. ಕಲ್ಲೆಕ್ಟ್ರಿಗೂ ಗೊತ್ತಿಲ್ಲ. ಮುಂದಿನ ಕೆಲಸ ನಿಮ್ಮ ಕೈಲಿ; ಏನು?’’ ಅನ್ನುತ್ತ ಆತನ ಕೈ ಹಿಡಿದು ಕುಲುಕಿಸಿ ದುಡುದುಡು ಹೋಗಿಬಿಟ್ಟರು. ಅಷ್ಟರಲ್ಲಿ ಕಮಿಶನರರ ದಿಬ್ಬಣವೆಲ್ಲ ಹೊರಗೆ ಸರಿದು ಪ್ಲಾಟುಫಾರ್ಮು ಬರಿದಾಗುತ್ತ ಬಂದಿತ್ತು. ಗೋಪಿನಾಥ ನಿಧಾನವಾಗಿ ಹೊರಗೆ ಹೋದನು. ಅಧಿಕಾರಿಗಳ ಪರಿವಾರವೂ ಕಾರುಗಳೂ ಹೋಗಿಬಿಟ್ಟು ವರ್ತಕ ಸಂಘದ ಅಧ್ಯಕ್ಷರದು, ಕಾಂಗ್ರೇಸ್ ಮುಖಂಡರದು ಎರಡೇ ಕಾರುಗಳಿದ್ದವು. ದೂರದಲ್ಲಿ ಒಂದು ಬಿಡಿ ಜಟಕವೂ ಇತ್ತು. ಸ್ಟೇಶನಿನ ಮುಖಮಂಟಪದ ಒಂದೆಡೆ ಎರಡು ಸೂಟು ಕೇಸುಗಳು. ಒಂದು ಹೋಲ್ಡಾಲು ಇವುಗಳನ್ನು ಕಾದುಕೊಂಡು ಕೈಯಲ್ಲಿ ಪತ್ರಿಕೆಗಳ ಕಟ್ಟೊಂದನ್ನು ಹಿಡಿದುಕೊಂಡು ಮಾಲತಿಯೊಬ್ಬಳೇ ನಿಂತಿದ್ದಳು, ಖಿನ್ನ ಮನಸ್ಕಳಾಗಿ. ಗೋಪಿನಾಥನು ಆಕೆಯನ್ನು ಮಾತನಾಡಿಸುವುದರೊಳಗಾಗಿ ನಿಂತಿದ್ದ ಒಂದು ಕಾರಿನ ಮರೆಯಿಂದ ರಾಘವೇಂದ್ರರಾಯರು ಧಾವಿಸಿ ಬಂದು ಆತನನ್ನು ಕಂಡು, + +“ಲೋ, ಗೋಪಿನಾಥ? ಬರುವಾಗ ಲೇಟಾಯಿತೇ?’’ ಎಂದರು. ಆಚೆಗೆ ನೋಡುತ್ತಿದ್ದ ಮಾಲತಿ ತಬ್ಬಿಬ್ಬಾಗಿ ತಿರುಗಿ ನೋಡಿದಳು. + +“ಆಗಲೇ ಬಂದಿದ್ದೆ. ಬುಕ್ ಸ್ಟಾಲ್ ಪಕ್ಕದಲ್ಲಿದ್ದೆ.” + +“ಅಲ್ಲಾಂದ್ರೆ ನನಗೆ ಹೇಳಬಾರದಿತ್ತೇನೊ? ಕಮಿಶನರಿಗೆ ಇಂಟ್ರೊಡ್ಯೂಸ್ ಮಾಡಿಸುತ್ತಿದ್ದೆನಲ್ಲಾ?” + +“ಪರವಾಯಿಲ್ಲ. ಈ ಪೋಲಿಡ್ರೆಸ್ಸು ನೋಡಿ ಏನು ತಿಳಿಕೋತಿದ್ರೊ!” + +“ತುಂಬಾ ಯೋಗ್ಯರು. ಅವರ ಮಿಸೆಸ್ಸೂ ಹಾಗೇನೇ. ಮಾಲತಿಗೆ ಗೊತ್ತು. ಅಲ್ವೇನೇ” ಎಂದು ಹಿಗ್ಗುತ್ತ ಹೆಂಡತಿಯನ್ನು ನೋಡಿದರು. ಆಕೆ ಸುಮ್ಮಗಿದ್ದಳು. ಆಕೆಯ ಮುಖ ಭಾವರಹಿತವಾಗಿತ್ತು. + +“ಈಗ ನೀನು ಮನೆಗೆ ತಾನೇ ಹೋಗೋದು? ಅಥವಾ ಬೇರೆಲ್ಲಿಗಾದರೂ ತಿರುಗಾಟಕ್ಕೆ…” + +“ಇಲ್ಲ. ನನಗೇನೂ ಕೆಲಸವಿಲ್ಲ. ಏನಾಗಬೇಕು, ಹೇಳು.” + +“ಒಂದು ಕೆಲಸಮಾಡು. ಮಾಲತಿ ಒಬ್ಬಳೇ ಆಗಿದ್ದಾಳೆ. ಸಾಮಾನು ಬೇರೆ ಇದೆ. ನನಗೀಗ ಜರೂರು ಕೆಲಸವಿದೆ. ಬರೋದಕ್ಕಾಗೋದಿಲ್ಲ. ನೀನವಳನ್ನು ಮನೆಗೆ ತಲಪಿಸಿಬಿಟ್ಟು ಹೋಗು..” + +****** + +ಆಹಾರ ಕಮಿಶನರಲ್ಲಿಗೆ ಗೋಪಿನಾಥನು ಹೋದ ನಿಯೋಗವು ತೀರಾ ಫಲಕಾರಿಯಾಗುವಂತಿತ್ತು. ಅವನೂ ಅವನ ಅನುಯಾಯಿಗಳೂ ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನ ಕಾರ್ಯಸಿದ್ಧಿಯಾಗುವ ಸಂಭವವಿತ್ತು. ಎರಡು ಗಂಟೆ ಸಮಯ ಕಮಿಶನರರಿಗೂ ಗೋಪಿನಾಥನಿಗೂ ಕೂಲಂಕಷ ಚರ್ಚೆ ನಡೆಯಿತು. ಸರಕಾರದ ಮೇಲಧಿಕಾರಿಗಳು ಹಲವರ ಅಸಡ್ಡೆ, ಅಜಾಗರೂಕತೆ, ಲಂಚಕೋರತನ, ವರ್ತಕರನೇಕರ ಕಟುಕತನ, ಕಪಟ, ಲೋಭ, ಅವರ ಕಳ್ಳಸಂತೆಗೆ ಪರಜನರಿಂದಲೂ ಸರಕಾರದಿಂದಲೂ ಒದಗುವ ಒಳಸಂಚಿನ ಬೆಂಬಲ; ಕಾಂಗ್ರೆಸ್ಸಿನ ರಾಜಕೀಯ ವೇಷದಿಂದ ಪುರಜನರನ್ನು ವರ್ತಕರು ವಂಚಿಸುವ ವಿಧಾನ; ಜಿಲ್ಲೆಗೆ ಈ ಹಿತಶತ್ರುಗಳಿಂದುಂಟಾದ ದುರ್ಭಿಕ್ಷೆ, ಯಾವುದನ್ನೂ ಮರೆಮಾಚದೆ, ದಾಕ್ಷಿಣ್ಯವಿಲ್ಲದೆ ಅಂಕೆ ಸಂಖ್ಯೆ ವಸ್ತುಸ್ಥಿತಿಗಳನ್ನು ಸವಿಸ್ತಾರವಾಗಿ ಗೋಪಿನಾಥನು ವಿಶದೀಕರಿಸಿದನು. + +ಕಮಿಶನರು ಮೊದಮೊದಲು ಈತ ಯಾವುದೋ ಒಂದು ಸಮಿತಿಯ ಪರವಾಗಿ ಬಂದಿರಬೇಕು; ತನ್ನ ಪಕ್ಷವನ್ನು ಪ್ರತಿಪಾದಿಸುತ್ತಿದ್ದಾನೆ, ಮರ್ಯಾದೆಯಿಂದ ಮೆತ್ತಗೆ ಮಾತನಾಡಿ ಕಳುಹಿಸಿಕೊಟ್ಟರಾಯಿತು ಎಂದು ತಿಳಿದಿದ್ದರು. ಆದರೆ ಒಂದೊಂದಾಗಿ ಗಣನೀಯ ವಿಚಾರಗಳನ್ನು ಕೇಳುತ್ತ ಆರಾಮವಾಗಿ ಕುಳಿತಿದ್ದವರು ಎದ್ದು ಕುಳಿತರು. ಕೊಠಡಿಯ ಬಾಗಿಲು ಮುಚ್ಚಿಕೊಂಡರು. ಪೈಪ್ ಸೇದಬಹುದಷ್ಟೇ ಎಂದು ಹೇಳುತ್ತ ತಂಬಾಕಿನ ನಳಿಕೆಯನ್ನು ಹೊತ್ತಿಸಿದರು. ಸರಕಾರವನ್ನು ದೂಷಿಸಿದಾಗ ರೇಗಿದರು. ಎಗರಿಬಿದ್ದರು. ಅವರು ರೋಷಾವೇಶವನ್ನು ತಾಳಿದಂತೆಲ್ಲಾ ಗೋಪಿನಾಥನು ಇನ್ನಷ್ಟು ನಮ್ರತೆಯಿಂದಲೂ ಆತುರದಿಂದಲೂ ನಿರ್ಭೀತಿಯಿಂದಲೂ ಕಲ್ಲು ಮನಸ್ಸು ಕೂಡ ಕರಗುವ ರೀತಿ ಊರ ಜನರ ದಾರುಣ ಪರಿಸ್ಥಿತಿಯನ್ನು ನಿರೂಪಿಸಿದನು. ಕ್ರಮೇಣ ಒಂದೊಂದಾಗಿ ವಿಷಯಗಳು ಕಮಿಶನರ ಮನಸ್ಸಿಗಿಳಿದು ನಾಟಿದವು. ಅವರಿಗೆ ಆಶ್ಚರ್ಯವಾಯಿತು; ವ್ಯಥೆಯಾಯಿತು. ಗೋಪಿನಾಥ ಮುಗಿಸಿ ಹೊರಟಾಗ ಅವರು ಪುನಃಪೂರ್ವಕವಾಗಿ ಕೃತಜ್ಞತೆ ಗೌರವಗಳಿಂದ ಆತನನ್ನು ಅಭಿನಂದಿಸಿ, ಅವನ ಶ್ರೇಯಸ್ಕರವಾದ ಕಾರ್ಯಕ್ಕೆ ತಮ್ಮ ಪರಿಪೂರ್ಣ ಬೆಂಬಲವನ್ನು ವಾಗ್ದಾನ ಮಾಡಿ, ಶಾಂತಿ ಸುಭಿಕ್ಷೆ ನೆಲೆಸುವಂತೆ ತಾವು ಕೈಕೊಂಡ ಯತ್ನದಲ್ಲಿ ನೆರವಾಗಬೇಕೆಂದು ಆತನಲ್ಲಿ ಹೇಳಿ, ಕೊನೆಗೆ “ನೀವೂ ನನ್ನಂತೆ ತಂಬಾಕು ಸೇವಕನಾಗಬೇಕು. ದೇವರು ದಯಪಾಲಿಸಿದ ಅತ್ಯುತ್ತಮ ವಸ್ತುಗಳಲ್ಲಿ ತಂಬಾಕಿಗೆ ಪ್ರಥಮ ಸ್ಥಾನವಿದೆ” ಎಂದನ್ನುತ್ತ ನಕ್ಕು ಬೀಳ್ಕೊಟ್ಟರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ತಾನು ಸುರು ಮಾಡಿದ ಕೆಲಸವು ಇಷ್ಟೊಂದು ಸುಗಮವಾಗಿ ಸಾಗಬಹುದೆಂದು ಗೋಪಿನಾಥನು ಕನಸಿನಲ್ಲೂ ನಿರೀಕ್ಷಿಸಿಲಿಲ್ಲ. ಗ್ರಾಮದ ಶ್ಯಾನುಭೋಗರಿಂದ ಪ್ರಾರಂಭವಾಗಿ ಜಿಲ್ಲಾ ಕಲೆಕ್ಟರವರವರೆಗೂ ಅಧಿಕಾರಿಗಳು ಎಬ್ಬಿಸಿದ ಧೂಳಿನಿಂದ ಮುಚ್ಚಲ್ಪಟ್ಟ ಕಮಿಶನರ ಕಣ್ಣುಗಳನ್ನು ತೆರೆದು ತೊಳೆದು ಜನತಾ ಕಾರುಣ್ಯವನ್ನು ತುಂಬಿಸಿ ಅವರ ಸಹಾನುಭೂತಿಯನ್ನು ಗಳಿಸುವಷ್ಟು ಕಾರ್ಯದಕ್ಷತೆ ತನ್ನಲ್ಲಿದೆಯೆಂದು ಆತ ತಿಳಿದಿರಲಿಲ್ಲ. ತಿಳಿಯಲು ಸಂದರ್ಭ ಒದಗಿರಲಿಲ್ಲ. ಶಕ್ತಿಮೀರಿ ದುಡಿಯುವ ಅಗತ್ಯವೇನು? ಯಾರಿಗಾಗಿ? ಏಕಾಂಗಿಯಾದ ಗಂಡಸಿನ ಒಣ ಜೀವನದಲ್ಲಿ ಕಾರ್ಯಕುತೂಹಲವೆಲ್ಲಿಂದ? ಕೈಗೆ ಬಂದುದನ್ನು ಶಿಸ್ತಿನಿಂದ ಪರಿಷ್ಕಾರವಾಗಿ ನಿರ್ವಹಿಸುತ್ತಿದ್ದನೇನೋ ನಿಜ. ಆದರೆ ಅದರಿಂದ ಬಿಡುಗಡೆಯೂ ಇತ್ತು, ಬಂಧನವೂ ಇತ್ತು. ಬದುಕಿನಲ್ಲಿ ಬೇಸರದಿಂದ ಬಿಡುಗಡೆ, ಮಾಡದೆ ಗತ್ಯಂತರವಿಲ್ಲದ್ದರಿಂದ ಬಂಧನ. ಆತನ ಹೃದಯ ತಳದಲ್ಲಿ ಮನಮೆಚ್ಚಿನ ಚೆಲುವೆಯೊಬ್ಬನ್ನೊಲಿಸಿ ಅವಳ ಒಲುಮೆಯ ಒಡನಾಟದಿಂದ ಜನ್ಮವನ್ನು ಸಫಲಗೊಳಿಸಬೇಕೆಂಬ ಆಸೆಯೊಂದು ಚಿರಶ್ರುತಿಯನ್ನು ಮೀಟುತ್ತಲೇ ಇತ್ತು. + +****** + +ಮರುದಿನ ಗೋಪಿನಾಥ ಬಗೆಬಗೆಯ ಕೆಲಸಗಳಲ್ಲಿ ಮುಳುಗಿದ್ದನು. ಸಂಜೆ ಆರು ಗಂಟೆ ಹೊತ್ತಿಗೆ ಸ್ವಲ್ಪ ವಿಶ್ರಾಂತಿಗಾಗಿ ಕ್ಲಬ್ಬಿಗೆ ಹೋದನು. ವಾಡಿಕೆಯಂತೆ ನಡೆದೇ ಹೋದನು. ಹೋಗುವಾಗ ದಾರಿಯುದ್ದಕ್ಕೂ ಮಾಲತಿಯದೇ ನೆನಸು. ಆಕೆ ಹಂಪನಕಟ್ಟೆ ಕಡೆಗೆ ಬಂದಿದ್ದರೆ, ಅಥವಾ ವಿಹಾರಕ್ಕೆ ಬಾವುಟಗುಡ್ಡಕ್ಕೆಂತ ಬಂದಿದ್ದರೆ, ಕಾಣಸಿಗಬಹುದೆಂಬ ಹಂಬಲ. + +ಕ್ಲಬ್ಬಿನಲ್ಲಿ ಎಂದಿನಂತೆ ನಿಬಿಡ ಸಮೂಹ, ವಿಶ್ರಾಂತಿಗಾಗಿ ಉಗ್ರ ಪರಿಶ್ರಮ. ಮನಶ್ಶಾಂತಿಗಾಗಿ ಕೋಲಾಹಲ. ‘ಪೋಲಿ’ ಪಂಗಡದ ಬಯಲಲ್ಲಿ ಮಾತ್ರ ನಿಶ್ಶಬ್ದವಾಗಿತ್ತು. ನರಸಿಂಹ ಕಮ್ತಿಯರು, ಕೃಷ್ಣಯ್ಯ ಇಬ್ಬರೇ ಇದ್ದರು. ಕೃಷ್ಣಯ್ಯ ‘ಪೇಷನ್ಸ್’ ಆಡುತ್ತಿದ್ದರು. ಕಮ್ತಿಯರು ಸಚಿತ್ರ ಮಾಸಿಕ ಪತ್ರಿಕೆಯ ಹಾಳೆಯೊಂದರಲ್ಲಿದ್ದ ಸಿನೆಮಾ ತಾರೆಯೊಬ್ಬಳ ನಿತಂಬವನ್ನು ನೋಡಿ ನೋಡಿ ಸಾಕಾಗದೆ ಹಾಳೆಯನ್ನು ತಿರುವಿ ಅದರಾಚೆ ಏನಿದೆಯೆಂದು ಇಣಿಕಿ ನೋಡುತ್ತಿದ್ದರು. ಗೋಪಿನಾಥನನ್ನು ಕಂಡು ಕೃಷ್ಣಯ್ಯ, + +“ಒಳ್ಳೇ ಸಮಯಕ್ಕೆ ಬಂದಿ ಗೋಪಿ, ಕೂತುಕೋ. ನಾಳೆಯಿಂದ ಬಹುಶ ನಮ್ಮ ಕಂಪನಿಯ ಒಂದಿಸಮು ಖಾಲಿಯಾಗುತ್ತೆ” ಎಂದರು. ಕಮ್ತಿಯರು ಕುತೂಹಲದಿಂದ ತಲೆಯೆತ್ತಿ ನೋಡಿದರು. ಗೋಪಿನಾಥ ಕುಳಿತು, + +“ಹಾಗಾದರೆ ಇಂದೇ ಅವರ ಲೆಕ್ಕಕ್ಕೆ ಕಾಫಿ ಕುಡಿದುಬಿಡೋಣ” ಅಂದನು. + +“ಯಾರಂತ ಮಾಡಿದಿ? ಕಮ್ತೇರು, ಕಣಯ್ಯಾ, ಕಮ್ತೇರು ಮಿಲಿಟರಿಗೆ ಸೇರ್ತಾರೆ.” + +“ಹೊಟ್ಟೆ ತುಂಬೋದು ಸುಲಭಾಂತಲೋ?” + +“ಹೊಟ್ಟೆ ಯೋಚ್ನೆ ಚಿಕ್ಕಂದಿನಿಂದಲೂ ಅವರಿಗಿಲ್ಲವೇ ಇಲ್ಲ. ಅದು ತಾನಾಗಿ ತುಂಬಿಕೊಳ್ಳುತ್ತೆ, ಹೇಗಾದರೂ ಎಲ್ಲಾದರೂ. ಅವರು ಯುದ್ಧ ಮುಖರಾದ್ದು ಅದಕ್ಕಲ್ಲ. ಅವರ ಕೈಲಿದೆ ನೋಡು, ಚಿತ್ರ, ಇಲ್ಕೊಡ್ರಿ, ಕಮ್ತೇರೆ, ಅದೇ ನೋಡು, ಅಂತಹ ನೂರಾರು ಮಂದಿ ಹುಡುಗಿಯರನ್ನು ಸೈನಿಕರ ಮನೋರಂಜನೆಗೆ ಕಳುಹಿಸುತ್ತಾರಂತೆ; ಬೆಂಗಳೂರಿಗೆ ಮದ್ರಾಸಿಗೆಲ್ಲ. ಇದೊಂದು ಹೊಸ ಯುದ್ಧ ಸಾಮಗ್ರಿ. ಒಂದು ಕೈನೋಡೋಣಾಂತಿದ್ದಾರೆ, ಕಮ್ತೇರು.” + +ಇದನ್ನೆಲ್ಲ ಅತ್ಯಾಶ್ಚರ್ಯದಿಂದ ಕಿವಿಗೊಟ್ಟು ಕೇಳುತ್ತಿದ್ದ ಕಮ್ತಿಯರು. “ಹೌದೇನ್ರೀ? ಬೆಂಗಳೂರಿಗೂ ಬರ್ತಾರೇನ್ರೀ?’’ ಎಂದು ಕೇಳಿದರು. ಕೃಷ್ಣಯ್ಯ ಉತ್ತರ ಹೇಳುವಷ್ಟರಲ್ಲಿ ಸಂಜೀವರಾಯರು ಬಂದು ಗೋಪಿನಾಥನ ಬಳಿ ಕುಳಿತು. + +“ನಾನು ಬಿಸಿ ಬಿಸಿ..”ಅಷ್ಟು ಕೇಳಿದ್ದೇ ತಡ, ಕಮ್ತಿಯವರು ಜಗ್ಗನೆ ಎದ್ದು ಪಕ್ಕದ ಮೇಜಿಗೆ ಕೈ ಬಡಿದು, + +“ರೈಟ್, ಹೋ; ನೀನೇ ಭೂಪತಿ, ಕೈಕೊಡು, ನನಗೂ ಹೇಳಿದ್ದೀಯೋ ಇಲ್ಲವೋ?” ಎಂದು ಸಂತೋಷದಿಂದ ಅರಚುತ್ತ ಕೈ ನೀಡಿದರು. ಸಂಜೀವ ರಾಯರು ಹೇವರಿಸಿ, “ಥೋ..! ಹಂದಿ ಮುಂಡೇದು! ಯಾವಾಗ ನೋಡಿದರೂ ತಿಂಡಿತೀರ್ಥದ್ದೇ ಜಪ! ತೆಗೆಯೋ ಕೈ.” ಅನ್ನುತ್ತ ಮಿಕ್ಕವರ ಕಡೆಗೆ ತಿರುಗಿ “ನಾನು ಹೇಳ್ತಿದ್ದಿದ್ದು, ಬಿಸಿಬಿಸಿ ವರ್ತಮಾನವಿದೇಂತ. ಡಿಪ್ಯೂಟಿ ರಿಜಿಸ್ತ್ರಾರವರ ಆಫೀಸಿಂದ. ಕಾಫಿ ತಿಂಡಿ ವಿಚಾರವಲ್ಲ. ಕಮ್ತೀಗೆ ಹಾಗೂ ಬಾಯಿಂದ ನೀರು ಸುರೀತಾಯಿದ್ರೆ ಮಹಿಳಾ ಸಭೆಗೆ ಹೋಗಿ ಹೊರಗೆ ನಿಂತು ನಾಲಿಗೆ ಚಾಚಿ ಬಾಲ ಅಲ್ಲಾಡಿಸ್ತಾ ಇರ್ಲಿ. ಫುಡ್ ಕಮಿಶನರ ಹೆಂಡ್ತಿಗೆ ಭಾರೀ ಟೀಪಾರ್ಟಿ ಇದೆಯಂತೆ” ಎಂದರು. + +“ಗೋಪಿನಾಥರಾಯರೇ ಈ ವಿಚಾರ ನಿಮಗೆ ಸಂಬಂಧ ಪಟ್ಟದ್ದು. ಎಷ್ಟು ಸುಳ್ಳೋ, ಎಷ್ಟು ಸತ್ಯವೋ, ನೀವೇ ನೋಡಿಕೊಳ್ಳಿ. ನಾನು ಕೈಕೊಡು ಎಂದಾಗ ಈ ಪ್ರಾಣಿ ಶೇಕ್ ಹ್ಯಾಂಡ್ ಮಾಡೋದಕ್ಕೇಂತ ಗ್ರಹಿಸಿದ, ಆತನ ಜಂಭಕ್ಕೆ. ಆದರೆ ತುಪ್ಪದ ತಿಂಡಿಯೇನಾದ್ರೂ ತಿಂದು ಬಂದಿದ್ರೆ ಅಂಗೈ ವಾಸನೆಯಿಂದ ಪತ್ತೆ ಮಾಡೋಣಾಂತ ನಾನು ಹೇಳಿದ್ದು. ಅದಕ್ಕೆ ತಿಂದಮೇಲೆ ಕೈ ತೊಳಕೊಳ್ಳೋ ಅಭ್ಯಾಸ ಇಲ್ಲವಷ್ಟೆ” ಅನ್ನುತ್ತ ಕಮ್ತಿಯರು ಜೋಲು ಮುಖಮಾಡಿಕೊಂದು ತನ್ನ ಕುರ್ಚಿಯನ್ನು ಸೇರಿದರು. + +“ಫುಡ್ ಕಮಿಶನರು ಇವತ್ತು ಮಧ್ಯಾಹ್ನದಮೇಲೆ ಫೈನಲ್ ಆರ್ಡರು ಪಾಸುಮಾಡಿದ್ದಾರಂತೆ. ಇನ್ನೊಂದು ಆರ್ಡರು ಬರೋತನಕ ಆಹಾರ ಸಾಮಗ್ರಿಗಳ ಸಂಗ್ರಹಣ, ಹಂಚೋಣ – ಎಲ್ಲಾ ಸಹಕಾರ ಸಂಘದವರೇ ನಿಭಾಯಿಸಬೇಕು. ಸಾಹುಕಾರರಿಗೆ ಸರ್ವಥಾ ಕೊಡೋಣಾಗುವದಿಲ್ಲ ಅಂತ. ಇದು ಖಾತ್ರಿ ವರ್ತಮಾನ” ಅನ್ನುತ್ತ ಸಂಜೀವರಾಯರು ಸಾರಿ ಪ್ರಕಟಿಸಿದರು. ಈ ಶುಭವಾರ್ತೆಯನ್ನು ಕೇಳಿ ಗೋಪಿನಾಥನಿಗೆ ತುಂಬ ಸಂತೋಷವಾಯಿತು. ಇದರೆಡೆ ಎಲ್ಲರಿಗೂ ಮುಂಚಿತವಾಗಿ ಸಂಜೀವರಾಯರಿಗೆ ಈ ವಿಷಯ ಗೊತ್ತಾದುದು ಹೇಗೆಂತ ಆಶ್ಚರ್ಯವೂ ತಲೆದೋರಿತು. ಕೃಷ್ಣಯ್ಯನನ್ನೂ ಅದೇ ಕುತೂಹಲ ಕಾಡುತ್ತಿತ್ತು. “ಊರಿಗಿಂತ ಮೊದಲು ನಿನಗೆ ಹೇಗೆ ಗೊತ್ತಾಯಿತು ಈ ಗುಟ್ಟು?” ಎಂದು ಕೇಳಿದರು. + +“ಗೊತ್ತಿಲ್ವೇ ನಿಮಗೆ?” ಎಂದು ಕಮ್ತಿಯರು ನಡುವೆ ಬಂದರು. “ಡಿಪ್ಯೂಟಿಯವರ ಆಫೀಸಿನಲ್ಲಿ ಮೂರು ಮಂದಿ ಟಾೈಪಿಸ್ಟರಿದ್ದಾರೆ. ಇವರಿಗೆ ಬೇಕಾದವರು” ಅನ್ನುತ್ತ ಸಂಜೀವರಾಯರನ್ನು ಕಣ್ಸನ್ನೆ ಮಾಡಿ ಸೂಚಿಸಿದರು. + +“ಮೂರು ಮಂದಿನೂ ಇಟ್ಟುಕೊಂಡು ಹೇಗ್ರೀ ಆ ಡಿಪ್ಯೂಟಿಯವರು ಕೆಲಸ ಮಾಡ್ತಾರೆ?” ಎಂಬುದಾಗಿ ಕೃಷ್ಣಯ್ಯ ತನ್ನ ಸಮಸ್ಯೆಯನ್ನು ಹೊರಗೆಡವಿದರು. + +“ಇಬ್ಬರಿಗೆ ರಜಾಕೊಟ್ಟು ಕಳುಹಿಸಿದರಾಯಿತು” ಎಂಬ ಕಮ್ತಿಯರ ಸಲಹೆಯನ್ನು ಕೇಳಿ ಎಲ್ಲರೂ ನಕ್ಕರು. ತಾನು ಕೃತ್ಯಕೃತ್ಯನಾದುದರ ಸಲುವಾಗಿ ಡಾಕ್ಟರು ವಾಸುದೇವ ಪೈಗಳು ಬಂದರೆ ಮಾತ್ರ ಅಂದೇ ಸಂತೋಷಕೂಟವೊಂದನ್ನು ಮಾಡೋಣವೆಂತ ಗೋಪಿನಾಥ ತನ್ನೊಳಗೆ ನಿಶ್ಚಯಿಸಿಕೊಂಡಿದ್ದರೂ ಕಮ್ತಿಯವರು ಬಿಡಲಿಲ್ಲ. ಅಂಥ ಅಪೂರ್ವ ವಿಜಯೋತ್ಸವಕ್ಕೆ ಕ್ಲಬ್ಬಿನ ಹೋಟೆಲಿನಿಂದ ಸಾಲದು, “ಕೃಷ್ಣ ಭವನದಿಂದಲೇ” ತರಿಸಬೇಕೆಂತ ಹಟಮಾಡಿ, ಜವಾನನನ್ನು ಕೂಗಿ ಬರಮಾಡಿ ಸವಿವರವಾಗಿ ಆರ್ಡರು ಬರಕೊಟ್ಟು ಕಳುಹಿಸಿದರು. + +“ವರ್ತಕ ಸಂಘ ಸೋತಿತೂಂತ ಕಮ್ತೇರಿಗೆ ಬೇಜಾರವೇನೂ ಇದ್ದ ಹಾಗೆ ಕಾಣೋದಿಲ್ಲ” ಎಂದು ಕೃಷ್ಣಯ್ಯ ಕಿರುಕುಳ ಎಬ್ಬಿಸಿದರು. + +“ಅದೇನಿಲ್ಲ ಅವರಿಗೆ. ಸುಮ್ಮಗೆ ಹೇಳಬಾರದು. ಅವರದೊಂದು ದೊಡ್ಡ ಗುಣ. ಬ್ರೆಡ್ಡಿನ ಯಾವ ಬದಿಗೆ ಬೆಣ್ಣೆ ಹಚ್ಚಿದೇಂಬದು ನೋಡದೇನೇ ಗೊತ್ತು. ಅವರಿಗೆ, ಇವತ್ತಂತು ಇನ್ನೊಂದು ಕಾರಣವಿದೆ. ಒಂದು ವಿಲಕ್ಷಣವಾದ ಕೇಸು ಕಿಸೆಗೆ ಬಿದ್ದಿದೆ.” ಎಂದರು ಸಂಜೀವರಾಯರು. + +“ಅದೇನ್ರೀ ಕೇಸು?” ಅಂತ ಗೋಪಿನಾಥ ಕೇಳಿದ. + +“ಏನೋ ಒಂದು ಚಿಕ್ಕ ಕಳವಿನ ಕೇಸು” ಎಂದರು ಕಮ್ತಿಯರು. + +‘ಡಿಫೆನ್ಸೇನೋ?’ ಎಂದ ಗೋಪಿನಾಥ. + +“ನೋಡಬೇಕಷ್ಟೆ. ಮಾಡಿದ್ದು ಹೌದು. ಆದ್ರೆ ಆಸಾಮಿಗೆ ತಾನು ಮಾಡಿದ್ದು ತಪ್ಪೂಂತ ಗೊತ್ತೇ ಆಗೋದಿಲ್ಲವಲ್ಲ! ಏನು ಮಾಡಲಿ?” ಎಂದು ಆಶಾವಿಹೀನರಾದರು. + +“ಹೊಟ್ಟೇಗಿಲ್ದೇ ಕದ್ದನೋ ಏನೋ, ಪಾಪ” ಅಂತ ಗೋಪಿನಾಥ ಪಶ್ಚಾತ್ತಾಪ ಪಟ್ಟನು. + +“ಹಾಗಲ್ಲ, ಆತನ ತರ್ಕ. ದೇವರ ಕಣ್ಣು ತಪ್ಪಿಸೋದಕ್ಕೆ ಸಾಧ್ಯವಿಲ್ಲಾಂದಮೇಲೆ ದೇವರ ದುಡ್ಡು ಕದಿಯೋದಕ್ಕೂ ಇತರರ ದುಡ್ಡು ಕದಿಯೋದಕ್ಕು ವ್ಯತ್ಯಾಸವೇನು? ಎರಡನೇದಾಗಿ ಕಾಳಮ್ಮಗೆ ಕಾಸಿಗೇನು ಧಾಡಿ? ಕದ್ದರೆ ಕಡಿಮೆಯಾಗೋದಿಲ್ಲ. ಅಲ್ಲದೆ, ತಪ್ಪು ಕಾಣಿಕೆ ಬೇರೆ ಹಾಕಿದ್ದಾನಂತೆ, ಕದ್ದ ದುಡ್ಡಿನಿಂದ” ಅಂದರು ಕಮ್ತಿಯರು. + +“ಇಂಥ ಅಸ್ಸಲ್ ಗಿರಾಕಿಗಳು ನಿಮ್ಮನ್ನ ಬಿಟ್ಟು ಬೇರೆಲ್ಲಿಗೂ ಹೋಗೋದಿಲ್ಲೇನ್ರೀ?” ಎಂದು ಗೋಪಿನಾಥ ಕೇಳಿದ. + +“ಏನೋ, ಪಾಪ! ನಾನು ಹಣದಾಸೆಗೆ ಕೆಲಸ ಮಾಡೋದಲ್ಲಾ, ಪರೋಪಕಾರಕ್ಕೇಂತ ತಿಳಿದು ಬರ್ತಾರೆ.” + +“ಇವನಪ್ಪ ಇನ್ನೊಬ್ಬನಿದ್ದನಲ್ಲ, ಕಳೆದ ವರ್ಷ? ನೆರೆಮನೆಯವನ ಹೆಂಡ್ತೀನ ಅಪಹರಿಸಿ, ಬೇಕಾದ್ರೆ ಆಕೇನ ವಾರಕ್ಕೊಂದು ಸಲ ಗಂಡನ ಮನೇಗೆ ಕಳುಹಿಸಿಕೊಡ್ತೇನೆ. ಅದಕ್ಕಿಂತ ಹೆಚ್ಚಿನ ನೆರೆಹೊರ್ಕೆ ಎಲ್ಲಿದೆ ಲೋಕದಲ್ಲೀಂತ ಕೇಳಲಿಲ್ವೇ ನಿಮ್ಮ ಹತ್ರ?” ಎಂದು ಸಂಜೀವರಾಯರು ನೆನಪು ಮಾಡಿಕೊಟ್ಟರು. + +ಈ ಕತೆ ಹೇಳಿ ಗೋಪಿನಾಥನಿಗೆ ಹಠಾತ್ತಾಗಿ ಎದೆ ಶೂಲೆಯೆದ್ದಿತು. ಆ ಕಥಾನಾಯಕನಿಗೂ ತನಗೂ ಇದ್ದ ಸಾಮ್ಯ ಆತನ ಮನಸ್ಸಿಗೆ ನಾಟಿತು. ಮೆಲ್ಲಮೆಲ್ಲನೆ ಒಳಗೆ ಕರುಳನ್ನು ಕೊರೆಯಲು ಪ್ರಾರಂಭಿಸಿತು. + +‘ಕೃಷ್ಣ ಭವನ’ ದಿಂದ ಫಲಾಹಾರದ ಪಿಂಗಾಣಿ ಪರಿಹಾರವೇ ಬಂದು ಬಿಟ್ಟಿತು. ಆ ನಂತರದ ಕಾಲು ಗಂಟೆಯಲ್ಲಿ ತಟ್ಟಿ ಬಟ್ಟಲು ಚಮಚೆಗಳ ಶಬ್ದವೂ ಕಮ್ತಿಯರ ವಚನವೂ ಅಲ್ಲದೆ ಬೇರೇನೂ ಕೇಳಿಸುತ್ತಿದ್ದಿಲ್ಲ. + +ಗೋಪಿನಾಥನಿಗೆ ಕ್ಲಬ್ಬಿಗೆ ಹೋಗುವಾಗ ಇದ್ದ ಮನೋಲ್ಲಾಸ ಅಲ್ಲಿಂದ ಮರಳಿ ಮನೆಗೆ ಬರುವಾಗ ಇರಲಿಲ್ಲ. ‘ವನಸ್ಪತಿ’ ಎಂಬ ಕೃತಕ ತುಪ್ಪದ ತಂಡಿ ತಿಂದುದರಿಂದಲೋ ಅಥವಾ ಪರಸ್ತ್ರೀ ಚೋರನ ಕಥೆ ಕೇಳಿದರಿಂದಲೋ ಆತಗೆ ಹೊಟ್ಟೆತೊಳೆಸುತ್ತಿತ್ತು. ಊಟ ಮಾಡಲಿಲ್ಲ. ಒಂದು ಲೋಟ ನೀರು ಮಜ್ಜಿಗೆಗೆ ಉಪ್ಪು, ಶುಂಠಿ, ಲಿಂಬೆಹಣ್ಣು, ಹಿಂಗು ಹಾಕಿ ಬೆರಸಿಕೊಟ್ಟಿದ್ದನ್ನು ಕುಡಿದನು. ಸ್ವಲ್ಪ ವಾಸಿಯಾಯಿತು. ಮನಸ್ಸಿಗೂ ಗಾಳಿಬೆಳಕು ಸಂಚಾರವಾದಂತಾಗಿ ತಿಳಿಯಾಯಿತು. ಹಗುರವಾಯಿತು. ಪಂಬಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ರೇಡಿಯೋದಲ್ಲಿ ಸಂಗೀತವೇನಿದೆಯಂತ ಮೈಸೂರಿನ ಆಕಾಶವಾಣಿಯನ್ನು ಹಾಕಿ ಕೇಳಿದನು. ಯಾರದೋ ವೀಣೆಯಿತ್ತು, ತಕ್ಕಮಟ್ಟಿಗೆ ಚೆನ್ನಾಗಿಯೇ ಇತ್ತು. ಆದರೆ ಒಂದೆರಡು ನಿಮಿಷಗಳಲ್ಲೇ ಮುಗಿದುಬಿಟ್ಟು ಇನ್ನಾರದೋ ಹರಟೆ ಪ್ರಾರಂಭವಾದ್ದರಿಂದ ಮದ್ರಾಸಿಗೆ ತಿರುಗಿಸಿದನು. + +ಫಕ್ಕನೆ ಒಂದು ಘನವಾದ ಕಚೇರಿಯೇ ಆತನ ಮೇಲೆ ಸುರಿದು ಬಿತ್ತು. ಧ್ವನಿಯನ್ನು ಸ್ವಲ್ಪ ತಗ್ಗಿಸಿದನು. ಗಾಯಕನು ಷಣ್ಮುಗಪ್ರಿಯರಾಗವನ್ನಾಲಾಪನೆ ಮಾಡುತ್ತಿದ್ದನು. ನಾದವು ಗಂಟಲೊಡೆದು ಬರುತ್ತಿತ್ತು. ಎದೆಯೊಡೆದು ಬರುವಂತಿದ್ದರೆ ಉತ್ತಮವಿತ್ತು. ಆಲಾಪನೆ ಮುಗಿದು ಕೀರ್ತನೆ ಸುರುವಾಯಿತು. ವಿದ್ವತ್ತಿನ ಹೆಮ್ಮೆಯಿಂದ ಆರಂಭದಲ್ಲೇ ಕುಸ್ತಿಗೆ ತೊಡಗಿದನು. ಮುತ್ತಿನ ಮಣಿಗಳನ್ನು ಎಣಿಕೆ ಹಾಕುವಂತೆ ಸ್ವರವಿಸ್ತಾರ ಮಾಡುವುದರ ಬದಲು ಮುಷ್ಟಿ ಮುಷ್ಟಿ ಕಲ್ಲು ಹರಳುಗಳನ್ನು ಎರಚಿದನು. ಅದನ್ನಾದರೂ ಒಂದು ವೇಳೆ ಕೇಳಿ ಸುಮ್ಮಗಿರಬಹುದಿತ್ತು. ಆದರೆ ಮೃದಂಗದ ಜತೆಗೆ ಮೂರ್ಸಿಂಗದ ಮೂಗು ಮುರಿತ ಆರಂಭವಾದ ತಕ್ಷಣ ಗೋಪಿನಾಥನಿಗೆ ಸಹಿಸಲಾರದ ಅಸಹ್ಯವಾಗಿ ಗರ್ರಕ್ಕನೆ ದೆಹಲಿಗೆ ತಿರುಗಿಸಿ ಬಿಟ್ಟನು. ಅಲ್ಲಿಂದ ಯಾವಳೋ ಒಬ್ಬಳ ಉಲಿವು ಕೇಳಿಸಿತು. ಆಕೆಯ ರೋದನ, ನರಳಿದಂತೆ ಸಾರಂಗಿಯ ಮೊರೆ. ಇವರಿಬ್ಬರಿಗೂ ತಾತನಾಗುವವನೊಬ್ಬನು ಹಿಂದಿನಿಂದ ‘ಖಟ್ಕ ಖಟ್ಕ’ ಅಂತ ಕೋಲೂರಿಕೊಂಡು ಬಂದಂತೆ ತಬಲೆಯ ಟೇಕಾ. ಗೋಪಿನಾಥನಿಗೆ ಬೇಸರವಾಯಿತು. ಎಲ್ಲಿ ನೋಡಿದರೂ ಇದೇ ಅವಸ್ಥೆ. ನಾದನಿಷ್ಠುರತೆ; ಇಲ್ಲವೆ ನಿರಾಶೆ. + + + +ಸಂಗೀತಗಾರರೆಲ್ಲರೂ ಉದ್ದಾಮ ಪಂಡಿತರು. ಉಗ್ರನರಸಿಂಹ ಮೂರ್ತಿಗಳು ಇಲ್ಲವೆ ನೋವಿನಿಂದ ನರಳುವ ನಿರ್ಭಾಗ್ಯರು. ಗಾಳಿಯಂತೆ ಹಗುರವಾದ, ಆಕಾಶದಂತೆ ವಿಶಾಲವಾದ, ಇವೆರಡನ್ನೂ ಬೆಳಗಿಸಿ ರೂಪಲಾಲಿತ್ಯವನ್ನು ಕೊಡುವ ಮನೋಜನಿತವಾದ ಸಂಗೀತ ಎಲ್ಲಿಯೂ ಇಲ್ಲವೆ? ಎನ್ನುತ್ತ ಪಾಶ್ಚಾತ್ಯ ತಾಣಗಳನ್ನೊಂದೊಂದಾಗಿ ನೋಡಿದನು. ಲಂಡನಿನಿಂದ ವಾದ್ಯಮೇಳವೊಂದು ಕಿವಿಗೆ ಬಿತ್ತು. ಅದನ್ನು ಕೇಳಿ ಪಂಬಿ ಕೈ ಚಪ್ಪಾಳೆ ಹೊಡೆದು ತೊಡೆಯ ಮೇಲೆ ಕುಳಿತಲ್ಲೇ ಕುದುರೆ ಸವಾರಿಗೆ ಸುರುಮಾಡಿದ್ದರಿಂದ ಕೇಳಿಬಿಡೋಣವೆಂತ ಅಲ್ಲೇ ಒರಗಿ ಕಣ್ಣು ಮುಚ್ಚಿದನು. ಸಾವಿರಾರು ಮೈಲುಗಳಾಚೆ ಹಲವಾರು ಮಂದಿ ಕೆಂಪು ಜನರು ವಿವಿಧ ವಾದ್ಯಗಳಿಂದ ಹೊರಚೆಲ್ಲಿದ ಸ್ವರಮೇಳದ ಲಾಲನೆಯಿಂದ ಆತನಿಗೆ ಅಪೂರ್ವ ನೆಮ್ಮದಿಯುಂಟಾಯಿತು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_286.txt b/Kenda Sampige/article_286.txt new file mode 100644 index 0000000000000000000000000000000000000000..82b666a99b4ecf3942bcd4f101a96bdc5e121b83 --- /dev/null +++ b/Kenda Sampige/article_286.txt @@ -0,0 +1,95 @@ + + +ಕಾಡಿನಲ್ಲಿ ಮೊಟ್ಟಮೊದಲ ಸಲ ತುರಾಯಿ ಹೂವಿನ ಮೊಗ್ಗೊಂದು ರೂಪ ತಾಳಿತ್ತು. ನಾನು ಮೂರು ದಿನಗಳಿಂದ ಕಾಯುತ್ತಿದ್ದೆ. ಅದು ಅರಳುವ ಅದ್ಭುತವಾದ ದೃಶ್ಯಕ್ಕಾಗಿ. ಕಾಡಿಗೆ ಉಳಿದ ಕೊನೆಯ ಭರವಸೆ ಈ ತುರಾಯಿ ಗಿಡ. ಮುತ್ತುಗದ ಹೂವಿನ ಗಿಡಗಳಿವೆಯಾದರೂ ಅವುಗಳಿಗೆ ಆತುರ ಜಾಸ್ತಿ. ಕೆಂಪಗೆ ಮಿರಮಿರನೆ ಹೊಳೆಯುತ್ತಾ ನಾವು ಗಮನಿಸುವ ಮೊದಲೇ ಹಠಮಾರಿಯಂತೆ, ಬೆತ್ತಲಾಗಿ ಬಿಡುತ್ತದೆ. ಈಗ ಮೊದಲ ಮೊಗ್ಗು ರೂಪ ತಳೆದಿದೆ. ಇನ್ನು ಅದ್ಭುತವಾದ ಸಂಗೀತ ಸಭೆ. ಎಲ್ಲ ಕಡೆಯಿಂದ ಸುತ್ತುವರೆಯುತ್ತಾ ಗದ್ದರ್ ನಂಥವರು ಯಾರೋ ಕೆಂಪು ಹಾಡುಗಳನ್ನು ಚೆಲ್ಲುತ್ತಾ ಹೊರಟಂತೆ. ಕಾಡು ಈಗ ಬೆಂಕಿಕೋಳಿಯಂತಿದೆ. + +ಕಾಡಿನೊಳಕ್ಕೆ ಹೋಗಬೇಡವೆಂದು ಗೆಳೆಯರ ಸಲಹೆ. ಚರ್ಚೆಗಳ ಕನಸು ಮುಗಿದು, ಮತ್ತೇ ಕಾಡೊಳಗಿನ ಪೊದೆಗಳಿಗೆ ಬಂದೂಕುಗಳು ಮೊಳಕೆಯೊಡೆಯುತ್ತಿವೆಯೆಂದು ಎಚ್ಚರಿಕೆ ನೀಡಿದ್ದರು. ಆದರೂ ಕಣ್ತೆರೆಯುವ ತುರಾಯಿ ಮೊಗ್ಗುಗಳು, ಕೊಳಲು, ತಬಲಾ, ಪಿಟೀಲುಗಳ ರಾಗಗಳನ್ನು ಹೊಮ್ಮಿಸುವ, ಕೆಂಪನೆ ನವೆಂಬರ್ ತಿಂಗಳಿಗಾಗಿ ಎಷ್ಟೋ ದಿನಗಳಿಂದ ಎದುರು ನೋಡುತ್ತಿದ್ದೆ. ಒಂದು ವಾರದಿಂದ ಬಣ್ಣಗಳ ಚೀಲವನ್ನು, ಕ್ಯಾನ್ವಾಸನ್ನು ಹೊತ್ತುಕೊಂಡು ಅಲೆಯುತ್ತಿದ್ದೇನೆ. ಕೆಂಪು ಬಣ್ಣದ ತುರಾಯಿ ಮೊಗ್ಗುಗಳನ್ನು ಬಣ್ಣಗಳಾಗಿ ಅನುವಾದಿಸುವ ಅವಕಾಶ ಈಗ ದೊರೆತಿದೆ. ಕವಲೊಡೆದ ನದಿ, ಎತ್ತರವಾಗಿ ಬೆಳೆದ ಹುಲ್ಲು, ರಯ್ಯನೆ ಬೀಸುವ ಗಾಳಿಯ ಸದ್ದು. ನದಿಯ ಒಂದು ಬದಿಗೆ ಒರಗಿಕೊಂಡು ಹರಿವಿನ ದಡದಲ್ಲಿ ನಿಂತಿದ್ದೆ. + +ಎತ್ತರವಾದ ಬೆಟ್ಟ ವೃದ್ಧ ತಪಸ್ವಿಯಂತೆ. ನದಿಯಲ್ಲಿ ಈಜುತ್ತಿರುವ (ದನಕಾಯುವ) ಹುಡುಗರ ಕೂಗು ಕೇಳಿಸುತ್ತಿತ್ತು. ನೀರಮೇಲಿನಿಂದ ತೇಲಿಬರುತ್ತಿರುವ ವಿಚಿತ್ರ ಪರಿಮಳದ ಕಾಡಿನ ವಾಸನೆ. ಮಕ್ಕಳ ಚೀರಾಟ, ತುರಾಯಿ ಹೂಗಳ ಸೌಂದರ್ಯದೊಂದಿಗೆ ಮತ್ತೊಂದು ದೃಶ್ಯಕಣ್ಣಿಗೆ ರಾಚಿತು. ನೂರಡಿಗಳ ದೂರದಲ್ಲಿ ಎತ್ತರವಾದ ಕಲ್ಲುಬಂಡೆಯ ಮೇಲೆ ಒಬ್ಬ ನಡುವಯಸ್ಸಿನ ಮನುಷ್ಯ ಕೂತಿದ್ದ. ಉದ್ದನೆಯ ಗಾಳವನ್ನು ನದಿಗೆ ಬಿಟ್ಟು(ಅದು ಮೀನು ಹಿಡಿಯಲು ಮಾತ್ರವಲ್ಲ, ನದಿಯೊಂದಿಗೆ ಸಂಭಾಷಿಸಲು ಕೂಡಾ) ನದಿ ಕಡೆಗೆ ನೋಡುತ್ತಾ ಕುಳಿತಿದ್ದ. (ಬೆಳಿಗ್ಗೆಯಿಂದ ಹಾಗೆಯೇ ನೋಡುತ್ತಿದ್ದಾನೆ). ತುರಾಯಿ ಮೊಗ್ಗುಗಳನ್ನು ನೋಡುತ್ತಾ ಕಾಡಿನಲ್ಲಿ ಹುಚ್ಚನಂತೆ ಅಲೆಯುತ್ತಿದ್ದ ನನಗೆ, ಈ ಸಾಧಾರಣ ಮನುಷ್ಯನ ರೂಪ ಯಾವ ಮೂಲೆಗೆ ಹೋದರೂ ಬೆನ್ನು ಹತ್ತುತ್ತಿತ್ತು. ನಿನ್ನೆ ಸಂಜೆ ಸುರಿದ ದೊಡ್ಡ ಮಳೆ ಕಾಡನ್ನೆಲ್ಲಾ ತೊಯ್ಸಿತ್ತು. ಚಿಕ್ಕ ಮೋಡವೊಂದು(ಕಪ್ಪು ಬಣ್ಣದ್ದು) ಆಕಾಶದಿಂದ ನೇತಾಡುತ್ತಿತ್ತು. ಬೆಟ್ಟದ ಮೇಲೆ ಸಿಡಿಲು. ಗಾಳಿಯೊಂದಿಗೆ ಆಚೀಚೆ ಹರಿದಾಡುವ ಮಿಂಚುಗಳು. + +ವಿಶಾಲವಾದ ಮರದ ಕೆಳಗೆ, ನನ್ನ ಬಣ್ಣಗಳನ್ನು ಇಳಿಸಿಕೊಂಡು, ಕ್ರಮವಾಗಿ ಒಂದು ಮೂಡ್ ನೊಳಕ್ಕೆ ಹೋಗುವುದಕ್ಕೆ ಪ್ರಯತ್ನಿಸುತ್ತಿದ್ದೆ. ಆ ಮನುಷ್ಯನ ರೂಪ ನಿರಂತರ ದೃಶ್ಯದಂತೆ ಬೆನ್ನು ಹತ್ತಿತ್ತು. ಒಂದು ಮೀನು ಕೂಡ ಗಾಳಕ್ಕೆ ಬಿದ್ದಂತಿರಲಿಲ್ಲ. ಗಾಳವನ್ನು ಮೇಲಕ್ಕೆಳೆದು ಎರಡು ಮೂರು ಎರೆ ಹುಳುಗಳನ್ನು ಚುಚ್ಚಿ ಮತ್ತೇ ನೀರೊಳಕ್ಕೆ ಬಿಟ್ಟ. ಎಷ್ಟು ಸಲ ಗಾಳವನ್ನು ಮೇಲಕ್ಕೆತ್ತಿದರೂ ಅದು ಖಾಲಿಯಾಗಿಯೇ ಇರುತ್ತಿತ್ತು(ಮೀನುಗಳಿಗೆ ಊಟ ನೀಡಲು ಅವನು ಹಾಗೆ ಅಲ್ಲಿ ಕುಳಿತುಕೊಂಡಂತಿತ್ತು). ನಡುವೆ ಒಮ್ಮೆ ನನ್ನ ಕಡೆ ನೋಡಿ ಪರಿಚಯದ ನಗೆ ನಕ್ಕ. ಅವನ ಮುಖವನ್ನು ಎಲ್ಲೋ ನೋಡಿದಂತಿತ್ತು. ಸಪೂರವಾಗಿ, ನೀಳವಾಗಿ ಆತನ ವಯಸ್ಸು ಎಷ್ಟೆಂದು ಹೇಳಲಾಗದಂತಿತ್ತು ಅವನ ಮುಖ. ನೆರೆದ ಕೂದಲಿಗೆ ಮೆಹಂದಿ ಹಚ್ಚಿದಂತಿತ್ತು. ಕೆಂಪಗೆ, ಭಯಗೊಳಿಸುವಂತಿತ್ತು ಅವನ ತಲೆಗೂದಲು. ಅವನು ಹಾಗೆ ನದಿಯನ್ನು, ನದಿಯಾಚೆಯ ಬೆಟ್ಟವನ್ನು ನೋಡುತ್ತಲೇ ಇದ್ದ. ಆ ಮನುಷ್ಯನ ಧ್ಯಾನಸ್ಥಿತಿ ಮುಂದುವರಿದಿತ್ತು. ಪಕ್ಕದ ಊರಿನಿಂದ ಲೌಡ್ ಸ್ಪೀಕರ್ ನಲ್ಲಿ ಪ್ರಕಟಣೆಗಳು ಕೇಳಿಸುತ್ತಿದ್ದವು. ಊರಿನಲ್ಲಿ ಸಾಯಂಕಾಲ ನಡೆಯಲಿರುವ ಸಭೆಯನ್ನು ಕುರಿತು, ಒರಟು ದನಿಯಲ್ಲಿ, ಬಂದೂಕು ಹಾರಿಸಿದ ಸದ್ದಿನಂತೆ ಆ ಪ್ರಕಟಣೆಗಳು ಕೇಳಿಸುತ್ತಿದ್ದವು. ಮೀಸಲಾತಿ, ವರ್ಗೀಕರಣ, ಸಭೆ, ನಿರಶನ, ದಲಿತನಾಯಕರು, ಪದಗಳೆಲ್ಲಾ ಬೆರೆತು, ಒಮ್ಮೆಲೇ ಸ್ಫೋಟಿಸಿದ ಮದ್ದುಗುಂಡುಗಳ ಸದ್ದಿನಂತೆ ಕೇಳಿಸುತ್ತಿತ್ತು. ಆ ಶಬ್ದಕ್ಕೆ ಆ ಮನುಷ್ಯನ ಏಕಾಗ್ರತೆ ಭಂಗವಾದಂತಿತ್ತು. ಬೇಸರದಿಂದ ಎದ್ದು ನಿಂತು ಗಾಳವನ್ನು ಹೊರಕ್ಕೆಳೆದು, ದಾರವನ್ನು ಕೋಲಿಗೆ ಸುತ್ತಿ, ಏನೋ ನೆನೆಪಿಗೆ ಬಂದವನಂತೆ ಹಾಗೆಯೇ ಸ್ವಲ್ಪ ಹೊತ್ತು ನಿಂತುಕೊಂಡ. + +ಮೊದಲ ಸಲ ಆ ಪ್ರದೇಶವನ್ನು ನೋಡುವವನಂತೆ ಸುತ್ತಲೂ ಪರೀಕ್ಷಿಸಿ ನೋಡಿದ. ಎತ್ತರವಾದ ಬೆಟ್ಟದಕಡೆ, ನದಿಯತ್ತ, ಮಕ್ಕಳ ಗಲಾಟೆ ಕೇಳುತ್ತಿದ್ದ ಕಡೆಗೆ, ಕೊನೆಯದಾಗಿ ನನ್ನ ಕಡೆ ಕುತೂಹಲದಿಂದ ತುಂಬಾ ಹೊತ್ತು ನೋಡಿದ. ಎದ್ದು ಪೂರ್ವ ದಿಕ್ಕಿನ ಕಡೆ ಹೆಜ್ಜೆ ಹಾಕುತ್ತಾ ದಿಢೀರನೇ ಏನೋ ನೆನಪಿಗೆ ಬಂದವನಂತೆ ನನ್ನ ಕಡೆ ಬಂದ. + +ಕೆಂಪನೆ ದುಂಡನೆ ಮುಖ ಅವನದು. ಉದ್ದನೆಯ ಮೀಸೆ. ತಲೆಗೂದಲು ಮಾತ್ರ ಕೆಂಪು ಬಣ್ಣದಲ್ಲಿ ವಿಶೇಷವಾಗಿತ್ತು. ಕಣ್ಣುಗಳು ಮಿರಮಿರನೆ ಹೊಳೆಯುತ್ತ ಮಾದಕವಾಗಿ, ನಗುತ್ತಿರುವಂತೆ ಕಾಣುತ್ತಿದ್ದವು. + +“ನನ್ನನ್ನು ಈ ಮೊದಲು ಎಲ್ಲಾದರೂ ನೋಡಿದ್ದೀಯಾ?” ಎಂದ ಯಾವ ಮುನ್ನುಡಿ ಇಲ್ಲದೇ. + +“ಅದ್ಭುತವಾಗಿವೆಯೆಲ್ಲಾ!” ಎಂದ ಮರದ ಮೇಲಿನ ಹೂಗಳ ಕಡೆ, ನನ್ನ ಕ್ಯಾನ್ವಾಸ್ ಮೇಲಿದ್ದ ಹೂಗಳ ಕಡೆ ತೀಕ್ಷ್ಣವಾಗಿ ನೋಡುತ್ತಾ. + +“ಜೂಡಾಸ್ ಟ್ರೀ ಅಂದ್ರೆ ಗೊತ್ತಾ ನಿನಗೆ?” ಎಂದ ನನ್ನ ಕಡೆ ಪ್ರಖರವಾಗಿ ನೋಡುತ್ತಾ. + +“ನಾನೊಬ್ಬ ಶಾಲೆಮೇಷ್ಟ್ರು. ಇಪ್ಪತ್ತು ವರ್ಷಗಳಿಂದ ಇಲ್ಲೇ ಇದ್ದೇನೆ. ಪ್ರಾಜೆಕ್ಟ್ ನವರು ಆರಂಭಿಸಿದ್ದ ಶಾಲೆ. ಈಗ ಅಲ್ಲಿ ದಲಿತ ಕೇರಿಯ ಮಕ್ಕಳೇ ಓದುತ್ತಿದ್ದಾರೆ. ಒಬ್ಬಿಬ್ಬರು ಗಿರಿಜನ ಮಕ್ಕಳು” ಎಂದ ಸ್ವಗತದಂತೆ. + +“ನೀನಿಷ್ಟು ಕಷ್ಟಪಟ್ಟು ಚಿತ್ರ ಮಾಡುತ್ತಿರುವ ತುರಾಯಿ ಮರವನ್ನು ಜೂಡಾಸ್ ಟ್ರೀ ಅಂತಲೂ ಕರೆಯುತ್ತಾರೆ. ಈ ಮರಕ್ಕೊಂದು ಇತಿಹಾಸವಿದೆ.”“ಬೈಬಲ್ ನ್ಯೂಟೆಸ್ಟ್ಮೆಂಟ್, ಜೀಸಸ್ ಕ್ರೈಸ್ತನ ಕುರಿತು ನೀನು ಕೇಳಿರುತ್ತೀ. ಕ್ರೈಸ್ತನನ್ನು ಶಿಲುಬೆಗೇರಿಸಲು ಹಿಡಿದುಕೊಟ್ಟ ಶಿಷ್ಯನ ಹೆಸರು ಜೂಡಾ. ಆಮೇಲೆ ಪಶ್ಚಾತ್ತಾಪಪಟ್ಟು, ‘ಪವಿತ್ರ ರಕ್ತವನ್ನು ಮೋಸ ಮಾಡಿದ ಪಾಪಿ’ ಎಂದು ಆವೇದನೆಯಿಂದ, ಊರ ಹೊರಗಿನ ಒಂಟಿ ಮರಕ್ಕೆ ನೇಣುಹಾಕಿಕೊಂಡ. ಮಾರನೆಯದಿನ ಇಡೀ ಮರವೆಲ್ಲಾ ಹೊಳೆಯುತ್ತಾ, ಅದರ ಟೊಂಗೆಯ ತುಂಬಾ ಕೆಂಪು ಹೂವು(ಜೂಡಾಮರ ಕೆಂಪಗೆ ಹೊಳೆಯುತ್ತಿರುತ್ತದೆ) ಬಿಟ್ಟಿದ್ದವು. ಆ ಮರವೇ ಇದು ಎಂದು ಕ್ಷಣ ಹೊತ್ತು ನಿಂತು, “ಈ ಬಣ್ಣದ ಹೂಗಳನ್ನು ನೋಡಿ ಮೋಸ ಹೋಗಬೇಡ. ಇವುಗಳ ಸೌಂದರ್ಯವನ್ನು ನೋಡಿ ಮೋಹಕ್ಕೊಳಗಾಗ ಬೇಡ. ಇದು ನಂಬಿಕೆ ದ್ರೋಹದಿಂದ ಹುಟ್ಟಿದ ಸೌಂದರ್ಯ” ಎಂದು ಹೇಳಿದ ನಂತರ “ನನ್ನ ತಲೆಗೂದಲನ್ನು ನೋಡಿದ್ದೀಯಾ? ಕೆಂಪಗೇ ಮಿರಮಿರನೆ ಮಿಂಚುತ್ತಾ ಬಹುಶಃ ಜೂಡಾರಕ್ತ ನನ್ನೊಳಗೂ ಹರಿಯುತ್ತಿದೆಯೇನೋ?” ಎಂದು ಮತ್ತೆ ಕೆಲವು ಕ್ಷಣಗಳು ಸುಮ್ಮನಿದ್ದು “ನನ್ನ ಹೆಸರು ಉ.ಕೊಂಡಯ್ಯ. ನಾವಿಬ್ಬರೂ ಮುವತ್ತು ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಸುತ್ತಾಡಿದ್ದೆವು. ಬಹುಶಃ ನಿನಗೆ ನೆನಪಿರಲಿಕ್ಕಿಲ್ಲ. ನೀನು ಈಗ ಸಿಟಿಯ ಮನುಷ್ಯನಾಗಿದ್ದೀಯಾ. ಐಎಎಸ್ ಪರೀಕ್ಷೆಯಂಥದು ಬರೆದಿದ್ದೀಯಂತೆ. ನಾವು ಮತ್ತೇ ಹೀಗೆ ಜುಡಾಸ್ ಮರದ ಹತ್ತಿರ ಭೇಟಿಯಾಗುತ್ತಿರುವುದು ಕಾಕತಾಳೀಯವಂತೂ ಅಲ್ಲ.” ಎಂದ. + +“ಮೈಕ್ ನಲ್ಲಿ ಪ್ರಕಟಣೆ ಕೇಳಿದ್ದೀಯಲ್ಲ. ಅಲ್ಲಿ ಎರಡು ಕಾರ್ಯಕ್ರಮಗಳು ನಡೆಯಲಿವೆ. ಬಹುಶಃ ಹೊಡೆದಾಟಗಳು ಕೂಡಾ ನಡೆಯಬಹುದು. ಕೆಂಪನೆ ಜೂಡಾ ಹೂವಿನ ಬಣ್ಣದ ರಕ್ತ ಕೂಡಾ ಹರಿಯಬಹುದು. ಇನ್ನು ಕಾಡೆಲ್ಲಾ ಕೆಂಪು ಹೂಗಳ ಸೌಂದರ್ಯವೇ. ನಿನ್ನ ಕುಂಚಕ್ಕೆ ಸಿಗಲಾರದಷ್ಟು…” + +“ಉ.ಕೊಂಡಯ್ಯ… ನೆನಪಿಗೆ ಬಂದೆನೇ?” ಎಂದು ಗಂಭೀರವಾಗಿ ಹೆಜ್ಜೆ ಹಾಕುತ್ತಾ ಊರಿನ ಕಡೆ ನಡೆಯತೊಡಗಿದ ಅವನು. + +ನಾವು ನದಿ ದಡದ ಕಾಲ್ದಾರಿಯಲ್ಲಿ ಹೆಜ್ಜೆ ಹಾಕುವಾಗ ನೀರಿನಲ್ಲಿ ಈಜಾಡುತ್ತಿದ್ದ ಹುಡುಗನೊಬ್ಬ ಕಾಣಿಸಿದ. ಅವನು ಬಹುತೇಕ ನಗ್ನವಾಗಿದ್ದ. ಸೊಂಟದ ಸುತ್ತಲೂ ಒಂದು ತುಂಡು ಬಟ್ಟೆ. ನೀರಿನ ಮೇಲೆ ತೇಲಾಡುತ್ತಾ, ಕೈಗಳಿಂದ, ಆಕಡೆ ಈಕಡೆ ಪಟಪಟನೆ ಹೊಡೆಯುತ್ತಾ, ಮುಖವೆಲ್ಲಾ ನೀರಲ್ಲಿ ಮುಳುಗಿತ್ತಾದರೂ, ತಲೆಗೂದಲು ಮಾತ್ರ ಕಾಣುತ್ತಿತ್ತು. ಕಡುಕೆಂಪು ಬಣ್ಣದ ತಲೆಗೂದಲು. ಸೂಜಿಗಳಂತೆ ನಿಮಿರಿಕೊಂಡಿತ್ತು. ಅವನನ್ನು ತಕ್ಷಣ ಕಂಡುಹಿಡಿದೆ. ಕೊಂಡಯ್ಯ(ಮನೆ ಹೆಸರು ಉಮ್ಮೆಟಿ. ಶಾಲೆಯಲ್ಲಿ ಅವನನ್ನು ಉ.ಕೊಂಡಯ್ಯ ಎಂದು ಕರೆಯುತ್ತಾರೆ). ಅವನನ್ನು ಗುರುತು ಹಿಡಿಯುತ್ತಿರುವಂತೆ ನನ್ನೊಳಗೆ ಸರಸರನೆ ಸಿಟ್ಟು ಉಕ್ಕಿಬಂತು. ನಾಲ್ಕೈದು ಕಲ್ಲುಗಳನ್ನು ಆರಿಸಿದೆ. ನನ್ನನ್ನ ನೋಡುತ್ತಿದ್ದಂತೆ ಅವನ ಕಣ್ಣುಗಳಲ್ಲೂ ಭಯ. ಒಂಟಿಯಾಗಿ ಸಿಕ್ಕಿದ್ದಾನೆ. ದಡದ ಮೇಲಿಂದಲೇ “ಲೇಯ್, ಇವತ್ತು ನಿನ್ನ ಕತೆ ಮುಗಿದಂತೆ ಕಣೋ!” ಎಂದು ಕೂಗುತ್ತಾ ಕಲ್ಲುಗಳನ್ನು ಅವನ ಕಡೆ ಬೀಸಲಾರಂಭಿಸಿದೆ. + +ಕೊಂಡಯ್ಯ ನನ್ನ ಶತ್ರು. ಇಷ್ಟು ದಿನಕ್ಕೆ ಸಿಕ್ಕ. ಅವನು ವೇಗವಾಗಿ ಆಚೆಯ ದಡಕ್ಕೆ ಈಜುತ್ತಿದ್ದ. ಆ ಕಡೆ ಬೆಟ್ಟವಿತ್ತು. ಬೆಟ್ಟದ ಮೇಲೆ ಹತ್ತಿ ಓಡಿ ಹೋಗಬೇಕೆಂದು ಅವನ ಪ್ಲಾನ್. ಕಲ್ಲೆಸೆಯುವುದು, ಹೊಡೆದಾಡುವುದು ನಮಗೆ ಹೊಸದೇನಲ್ಲ. ಆದರೆ ಯಾರೂ ಯಾವತ್ತೂ ಒಂಟಿಯಾಗಿ ಹೀಗೆ ಸಿಕ್ಕಿಹಾಕಿಕೊಳ್ಳುವುದಿಲ್ಲ. ಸಾಧಾರಣವಾಗಿ ಕೊಂಡಯ್ಯನ ಬಳಿ ಗಿರಿಜನ ಹುಡುಗರಿಂದ ಪಟಾಯಿಸಿದ್ದ ಬಿಲ್ಲು-ಬಾಣ ಇರುತ್ತದೆ. ಅದು ಇರುವವರೆಗೂ ಅವನನ್ನು ಹೊಡೆಯುವುದು ನಮ್ಮ ಕೈಲಿ ಆಗುವುದಿಲ್ಲ. + +ಗೆರಿಲ್ಲಾ ಯುದ್ಧತಂತ್ರ ಅವನದು. ಕಾಲಿನ ಮೇಲೆ ಬಾಣದಿಂದ ಹೊಡೆದು, ಮುಖದ ಮೇಲೆ ದಬದಬನೆ ಗುದ್ದಿ ನಿಮಿಷಗಳಲ್ಲಿ ಮಾಯವಾಗುತ್ತಾನೆ. ನಮ್ಮಿಬ್ಬರ ಶಾಲೆಗಳು ಬೇರೆ ಬೇರೆಯಾದರೂ(ನಮ್ಮ ಶಾಲೆಯಲ್ಲಿ ಅವರ ಮಕ್ಕಳನ್ನು ಸೇರಿಸಿಕೊಳ್ಳುವುದಿಲ್ಲವೆಂದು ಬೇರೆ ಶಾಲೆ ಮಾಡಿಕೊಂಡಿದ್ದಾರೆ) ಎರಡೂ ಶಾಲೆ ಬಿಡುವ ಸಮಯ ಮಾತ್ರ ಒಂದೇ. ಶಾಲೆಯ ಚೀಲದ ತುಂಬಾ ಕಲ್ಲುಗಳು ತುಂಬಿರುತ್ತವೆ. + +“ಲೋ ಸಂಗೀತ(ನನ್ನ ಹೆಸರು ಸಂಗೀತರಾವ್) ಸತ್ತೆ ಕಣಲೋ ಇವತ್ತು!” ಎಂದು ಸರ್ರನೇ ಕಲ್ಲುಗಳನ್ನು ಎಸೆದು, ಕ್ಷಣಗಳಲ್ಲಿ ಪೊದೆಗಳಲ್ಲಿ ಮಾಯವಾಗುತ್ತಾನೆ. ಆದರೆ ಈ ದಿನ ಅವನು ಒಂಟಿಯಾಗಿ, ನಿರಾಯುಧನಾಗಿ ನನ್ನ ಕೈಗೆ ಸಿಕ್ಕಿದ್ದಾನೆ. + +ಅವನು ನನ್ನ ಮುಖ್ಯವಾದ ಶತ್ರು. “ಅವರನ್ನು ನಂಬಬೇಡ. ಅವರ ನೆರಳೂ ಕೂಡಾ ನಮ್ಮ ಮೇಲೆ ಬೀಳಬಾರದು” ಎಂದು ನಮ್ಮ ಮನೆಯಲ್ಲಿ ಪ್ರತಿದಿನ ಹೇಳುತ್ತಿರುತ್ತಾರೆ. ಎರಡೂ ಜಾತಿಗಳ ನಡುವೆ ನಾಲ್ಕೈದು ಸಲ ಭಾರಿ ಹೊಡೆದಾಟಗಳೇ ನಡೆದಿವೆ. ಕೊಲೆ ಕೇಸು, ಕೋರ್ಟ್ ವಾಯಿದೆಗಳು ಇನ್ನೂ ನಡೆಯುತ್ತಲೇ ಇವೆ. ನನಗೆ ಆರು ವರ್ಷ ವಯಸ್ಸಿದ್ದಾಗ ಒಂದು ದಿನ ಮಧ್ಯರಾತ್ರಿ ನಮ್ಮ ಮನೆಯೊಳಗಿಂದ ಬೆಂಕಿಯ ಜ್ವಾಲೆಗಳು ಎದ್ದವು. ಸಾಮಾನುಗಳನ್ನು ತಲೆಯ ಮೇಲಿಟ್ಟುಕೊಂಡು ದೊಡ್ಡದಾಗಿ ಅಳುತ್ತಾ ಬೀದಿಗೆ ಓಡಿದೆವು. ಇದು ನಡೆದ ಒಂದುವಾರದಲ್ಲಿ ಅವರ ಮನೆಗಳಿಗೂ ಬೆಂಕಿಬಿತ್ತು. ಊರಿನ ಹೊರಗೆ ಒಂದು ಕಡೆ ಅವರ ಮನೆಗಳು, ಒಂದು ಕಡೆ ನಮ್ಮ ಮನೆಗಳೂ. ಅವರ ಬೀದಿಯ ಮೂಲಕ ಓಡಾಡಬೇಡಿರೆಂದು ನಮ್ಮ ಮನೆಯ ಹಿರಿಯರ ಆರ್ಡರ್. + +ಒಟ್ಟಿನಲ್ಲಿ ಇವತ್ತು ಅವನು ನನಗೆ ಸಿಕ್ಕಿದ್ದಾನೆ. ಅವನು ಅದ್ಭುತ ಈಜುಗಾರ. ಏಟಿಗೆ ಸಿಗದಂತೆ ನೀರಿನಲ್ಲಿ ಮುಳುಗುತ್ತಾ, ತೇಲುತ್ತಾ ಇಡೀ ಹೊಳೆಯಲ್ಲಾ ಈಜುತ್ತಿದ್ದ. ಸುಂದರವಾದ ಮುಖ ಅವನದು. ಜೇನಿನ ಬಣ್ಣದ ಕಣ್ಣುಗಳು. ಮುಖದಲ್ಲಿ ಮುಗ್ಧತೆ. ಕಾಲುಗಂಟೆ ಅವನು ನನ್ನನ್ನು ತಪ್ಪಿಸಿಕೊಂಡು ನೀರಿನಲ್ಲಿ ಸುತ್ತುತ್ತಿದ್ದ. + +ಇನ್ನು ಪ್ರಯೋಜನವಿಲ್ಲವೆಂದು ನಾನೂ ನೀರಿನೊಳಕ್ಕೆ ಧುಮುಕಿದೆ. ಅವನು ನನಗೆ ಸಿಗದಂತೆ ಹಾವಿನಂತೆ ಹರಿದಾಡುತ್ತಿದ್ದ. ಸಣ್ಣನೆ ತಿಳಿಗಾಳಿ ನೀರನ್ನು ಅಲ್ಲೋಲ ಕಲ್ಲೋಲ ಮಾಡುತ್ತಿತ್ತು. ನೀರಿನಲ್ಲಿ ಅವನ ಕೆಂಪುಬಣ್ಣದ ತಲೆಗೂದಲು ಹೊಳೆಯುತ್ತಲೇ ಇತ್ತು. ಹತ್ತಿರ ಹೋಗಿ ಅವನ ಶರಟನ್ನು ಹಿಡಿದು ಎಳೆದೆ. ಅವನ ಕಣ್ಣುಗಳಲ್ಲಿ ಭಯ. ತುಟಿಗಳು ನಡುಗುತ್ತಿದ್ದವು. “ಲೇಯ್! ಇವತ್ತು ನಿನ್ನ ಕಥೆ ಮುಗಿಯಿತು!” ಎಂದು ಕೂಗಿದೆ. ಅವನು ಜೋರಾಗಿ ನನ್ನ ಕೈಬಿಡಿಸಿಕೊಂಡು ದಡದ ಕಡೆ ಓಡಿದ. ಪೊದೆಯಲ್ಲಿಟ್ಟಿದ್ದ ಚಡ್ಡಿ ಮತ್ತು ಅಂಗಿಯನ್ನು ಹಾಕಿಕೊಂಡ. ನಾನಿನ್ನೂ ನೀರಿನಲ್ಲಿದ್ದೆ. ‘ಇನ್ನು ಇವನು ನನ್ನ ಕಡೆ ಕಲ್ಲೆಸೆಯುತ್ತಾನೆ’ ಎಂದುಕೊಂಡೆ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಆದರೆ ಅವನು ಮಾತ್ರ ಮೌನವಾಗಿ ನನ್ನ ಬಳಿ ಬಂದ. ಹುಡುಗಿಯರ ಮುಖದಲ್ಲಿರುವ ಮೃದುತ್ವ ಇತ್ತು ಅವನ ಮುಖದಲ್ಲಿ. ಹತ್ತಿರ ಬಂದು “ಚಳಿಯಾಗುತ್ತಿಲ್ಲವಾ?” ಎಂದ. ನಾನು ಏನೂ ಮಾತಾಡಲಿಲ್ಲ. ಈಜುತ್ತಾ ದಡ ಸೇರಿದೆ. ‘ನಿನ್ನನ್ನು ಯಾರೋ ನಮ್ಮ ಜಾಗದಲ್ಲಿ ಈಜು ಹೊಡೆಯಲು ಹೇಳಿದ್ದು’ ಎಂದೆ ಗಡಸು ದನಿಯಿಂದ. “ನಿಮ್ಮ ಜಾಗಾನಾ? ಹಾಗೆಂದು ಎಲ್ಲಾದರೂ ಬರೆದಿದ್ದಾರಾ?” ಎಂದ. ಅವನ ಮುಖದಲ್ಲಿ ತೆಳು ನಗು. “ಇದನ್ನು ಕಂಡು ಹಿಡಿದಿದ್ದು ನಾವು. ಬೆಟ್ಟಗಳ ನಡುವೆ, ಇಷ್ಟುದಿನ ಯಾರೂ ಇದನ್ನು ನೋಡಿರಲಿಲ್ಲ” ಎಂದೆ ಅಸಹನೆಯಿಂದ. + +ಅವನು ದಿಢೀರನೇ ನನ್ನ ಕಡೆ ತಿರುಗಿ, “ಕೈಗೆ ಸಿಕ್ಕರೂ ಯಾಕೆ ನನ್ನನ್ನು ಬಿಟ್ಟುಬಿಟ್ಟೆ?” ಎಂದ. + +ಸ್ವಲ್ಪ ಹೊತ್ತು ಯೋಚಿಸಿ “ಬೇಕಂತಲೇ ನಿನ್ನನ್ನು ಬಿಟ್ಟೆ. ನಿನ್ನೊಂದಿಗೆ ಮಾತಾಡಬೇಕೆಂದು ನಿಂತೆ. ನಾವೆಂದರೆ ಏನೆಂದು ನಿಮಗೆ ಗೊತ್ತಾಗಬೇಕು. ತಲೆ ಇಲ್ಲದ ಮೂರ್ಖರು ನೀವು. ಆ ವಿಷಯ ನಿನಗೆ ಹೇಳಬೇಕೆಂದು. ‘ವಿಶ್ವಸಂಸ್ಥೆ’ ಎಂದರೆ ಗೊತ್ತ ನಿನಗೆ? ಅಲಿಪ್ತ ದೇಶಗಳೆಂದರೆ ಗೊತ್ತ ನಿನಗೆ? ಪ್ರಚ್ಛನ್ನಯುದ್ಧ ಎಂದರೆ? ಅರೆ ಅಸಲಿಗೆ ನೀನು ಸ್ವತಂತ್ರವಾಗಿ ‘ನನ್ನ ಹೆಸರು ಕೊಂಡಯ್ಯ’ ಎಂದು ಇಂಗ್ಲಿಷಿನಲ್ಲಿ ಹೇಳಬಲ್ಲೆಯಾ?’ ಎಂದೆ ಸಿಟ್ಟಿನಿಂದ. + +“ಗಣಿತದಲ್ಲಿ ನನಗೆ 94 ಮಾರ್ಕ್ಸ್ ಗೊತ್ತ? ಅಲ್ಜಿಬ್ರಾಗೆ ನಾವೆಂದರೆ ಗಾಬರಿ?” ಎಂದ ಕೊಂಡಯ್ಯ ಆವೇಶದಿಂದ. + +“ಲೇಯ್ ತೆಲಗು ಪದ್ಯವನ್ನು ತಪ್ಪುಗಳಿಲ್ಲದಂತೆ ಹೇಳಬಲ್ಲೆಯಾ? ಅಕಾಶಂಬುನ… ಪದ್ಯ ಹೇಳಲೇ ದಪ್ಪ ನಾಲಿಗೆಯವನೇ?” ಎಂದೆ ಸವಾಲು ಹಾಕುತ್ತಾ. + +“ಆ ಪದ್ಯವೇನು? ನನಗೆ ಕವಿ ಜಾಷುವಾರ ಪದ್ಯಗಳೆಲ್ಲವೂ ಬಾಯಿಪಾಠ ಬರುತ್ತದೆ. ಗಬ್ಬಿಲ ಪದ್ಯಗಳನ್ನು ಬಡಬಡನೇ ಹೇಳಲೇ?” ಎಂದ. + +ಮೆಲ್ಲಗೆ ಪೊದೆಗಳನ್ನು ದಾಟಿ ಮುಂದೆಕ್ಕೆ ನಡೆದೆವು. ಕೊಂಡಯ್ಯ ನನ್ನ ಶತ್ರು. ಅವನ ಹತ್ತಿರ ಶರಣಾಗತನಾಗೋದು ನನಗಿಷ್ಟವಿಲ್ಲ. “ಲೇಯ್ ಬೆಟ್ಟ ಹತ್ತೋದು ಬರುತ್ತಾ ನಿನಗೆ. ಈ ಎದುರಿಗಿರುವ ಬೆಟ್ಟವನ್ನು ಅರ್ಧಗಂಟೆಯಲ್ಲಿ ಹತ್ತಿ ಇಳಿಯಬಲ್ಲೆ ಗೊತ್ತ?” ಎಂದೆ ಗರ್ವದಿಂದ. + +“ನಿನ್ನ ಬಗ್ಗೆ ನಮ್ಮ ಜನ ಹೇಳುತ್ತಿರುತ್ತಾರೆ. ಬೆಟ್ಟ ಹತ್ತುವಲ್ಲಿ, ನಿನ್ನ ನಂತರವೇ ಯಾರಾದರೂ?” ಎಂದು ಒಪ್ಪಿಕೊಂಡ ಅವನು. + +ನನ್ನ ಕೆನ್ನೆಗಳು ಕೆಂಪಗಾದವು. ನಾವಿಬ್ಬರೂ ಶತ್ರುಗಳೆಂಬುದನ್ನು ಮರೆತೆವು. “ಇದೋ ಈ ಎದುರಿಗಿರುವ ಬೆಟ್ಟವನ್ನು ಹತ್ತಿದವನೇ ಗಂಡಸೆಂದರೆ. ಮಧ್ಯದವರೆಗೆ ಪೊದೆಗಳು, ಚಿಕ್ಕ ಚಿಕ್ಕ ಗಿಡಗಳಿರುತ್ತವೆಯಾದರೂ, ಅದು ನುಣ್ಣಗೆ ಜಾರುತ್ತಿರುತ್ತದೆ. ಎಲ್ಲಿ ಸ್ವಲ್ಪ ಹಿಡಿತ ತಪ್ಪಿದರೂ ಮೂಳೆ ಸಿಗೋದು ಕಷ್ಟ…” ಎಂದೆ ಗರ್ವದಿಂದ. + +“ನಾನು ತುಂಬಾ ಸಲ ಅರ್ಧದವರೆಗೆ ಹತ್ತಿ ಹಿಂದಕ್ಕೆ ಬಂದೆ” ಅವನು ಹೇಳುತ್ತಿದ್ದರೆ ನನ್ನ ಸಂತೋಷಕ್ಕೆ ಪಾರವೇ ಇರಲಿಲ್ಲ. “ನಿಜ ಹೇಳಬೇಕೆಂದರೆ ನಿಮ್ಮವರು ಅಷ್ಟೇ ದಮ್ ಇಲ್ದೋರು” ಎಂದೆ ಏನೋ ನೆನಪಿಗೆ ಬಂದಂತೆ. ಕೊಂಡಯ್ಯ ಏನೂ ಮಾತನಾಡಲಿಲ್ಲ. “ನನ್ನನ್ನು ಬೆಟ್ಟದ ಮೇಲಕ್ಕೆ ಕರ್ಕೊಂಡು ಹೋಗು. ಅರ್ಧದಿಂದ ಭಯ ನನಗೆ. ನೀನು ಜೊತೆಗಿದ್ದರೆ ಧೈರ್ಯದಿಂದ ಬರ್ತೇನೆ” ಎಂದ ಬೆಟ್ಟದ ಕಡೆ ನಡೆಯುತ್ತಾ. + +“ದಢೂತಿ ದೇಹ ನಿನ್ನದು. ನೀನೇನು ಹತ್ತಬಲ್ಲೆ?” ಎಂದೆ. + +“ಇಲ್ಲ, ನಾನು ಕೂಡಾ ಬರುತ್ತೇನೆ” ಎಂದು ನನ್ನೊಂದಿಗೆ ಹೆಜ್ಜೆ ಹಾಕಿದ. + +ಬೆಟ್ಟ ಹತ್ತಲು ಪ್ರಾರಂಭಿಸಿದೆವು. ಅರ್ಧದವರೆಗೆ ಯಾವ ತೊಂದರೆಯೂ ಆಗಲಿಲ್ಲ. ನಾನು ಚಕಚಕನೆ ಓಡುತ್ತಿದ್ದೆ. ನಡುಭಾಗದವರೆಗೂ ಹಸಿರು ಹುಲ್ಲಿತ್ತು. ಸಮಸ್ಯೆಯಾಗಲಿಲ್ಲ. ಎರಡು ಮೂರು ಕಡೆ ಅವನು ಜಾರುತ್ತಿದ್ದರೆ ಕೈಹಿಡಿದು ತಡೆದೆ. ಪೊದೆಗಳು, ಹುಲ್ಲಿನ ಹಾಸುಗಳು ಮುಗಿದ ನಂತರ, ಸಮತಟ್ಟಾದ ಇಳಿಜಾರಿಲ್ಲದ ಬೆಟ್ಟ ಆರಂಭವಾಯಿತು. ನುಣುಪಾದ, ತ್ರಿಭುಜಾಕಾರದ ಸಮತಟ್ಟಾದ ಹೊರಮೈ ಅದು. ಯಾವ ಕಡೆಯಿಂದ ನೋಡಿದರೂ ಹಿಡಿತ ಸಿಗುವುದಿಲ್ಲ. ಕುರಿ ಮೇಕೆಗಳಿಗೆ ಕೂಡಾ ಮೇಲೆ ಹತ್ತಲಾಗುವುದಿಲ್ಲ. ತುದಿಯವರೆಗೆ ಬಂದ ನಂತರ ಕೊಂಡಯ್ಯ ಹೆದರಿದ. ಅವನ ಕೈಗಳು ನಡುಗುವುದನ್ನು ಗಮನಿಸಿದೆ. ಮುಖದ ತುಂಬೆಲ್ಲಾ ಬೆವರು. + +“ಇನ್ನೂ ಮುಂದಕ್ಕೆ ಬರ್ತೀಯಾ? ನಿಂತು ಬಿಡ್ತೀಯಾ?” ಎಂದೆ. ನುಣ್ಣಗೇ ಯಾವ ಆಧಾರವೂ ಇಲ್ಲದ ಬೆಟ್ಟದ ತುದಿಯನ್ನು ನೋಡಿ ಸ್ವಲ್ಪ ಹಿಂಜರಿದ. + +“ಬೇಡಣ್ಣ, ಹಿಡಿತ ಸಿಕ್ತಾನೇ ಇಲ್ಲ. ನೀನು ಕೂಡ ಹತ್ತಬೇಡ” ಎಂದ. “ಹೋಗಲೇ ಭಡವಾ” ಎಂದು ನಾನು ಮುಂದಕ್ಕೆ ಚಲಿಸಿದೆ. ಶಿಖರದ ಮೇಲೆ ಅಲ್ಲಲ್ಲಿ ಮುಂದಕ್ಕೆ ಚಾಚಿದ್ದ ಚೂಪನೆ ಕಲ್ಲುಗಳಿದ್ದವು. ಕಾಲುಗಳನ್ನು ಅವುಗಳ ಮೇಲೆ ಒತ್ತಿ, ಎರಡು ಕೈಗಳಿಂದ ಮುಂದಕ್ಕೆ ಹರಿದಾಡತೊಡಗಿದೆ. ಕೊಂಡಯ್ಯ ನನ್ನೊಂದಿಗೆ ಮೇಲಕ್ಕೆ ಬರುತ್ತಿದ್ದ. ಸ್ವಲ್ಪ ದೂರ ಹೋದ ನಂತರ ನುಣ್ಣನೆ ಗ್ರಾನೈಟ್ ಮೇಲೆ ಅಲ್ಲಲ್ಲಿ ಬಿರುಕುಗಳೂ ಕಾಣಿಸಿದವು. ಹಾಗೆಯೇ ಬಿರುಕುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಮೇಲಕ್ಕೆ ಜರಿಯತೊಡಗಿದೆ. ಅಂಚಿನ ಮೇಲೆ ಕಾಲನ್ನು ಬಲವಾಗಿ ಊರಿ, ಕೊಂಡಯ್ಯನ ಕೈಯನ್ನು ಹಿಡಿದುಕೊಂಡೆ. ಅಲ್ಲಿಂದ ನೋಡಿದರೆ ಕೆಳಗೆ ನದಿ ದಾರದ ಹುರಿಯಂತೆ ಕಾಣುತ್ತಿತ್ತು. ಕಾಡು ಇರುವೆಯ ಹುತ್ತದಂತೆ ಕಾಣುತ್ತಿತ್ತು. ಗಾಳಿ ಜೋರಾಗಿ ಬೀಸುತ್ತಿತ್ತು. ಇನ್ನೊಂದು ಇಪ್ಪತ್ತು ಹೆಜ್ಜೆ ಹೋದರೆ ಬೆಟ್ಟದ ತುದಿ ಬರುತ್ತದೆ. ಈ ಭಾಗವೆಲ್ಲಾ ನುಣುಪಾಗಿ ಹೊಳೆಯುತ್ತಿತ್ತು. ಹೊಟ್ಟೆಯಿಂದಲೇ ಜರಿಯುತ್ತಾ ಹೋಗಬೇಕು. + +ಕೊಂಡಯ್ಯ ನನ್ನ ಹಿಂದೆಯೇ ಬರುತ್ತಿದ್ದ. ಅವನ ಧೈರ್ಯಕ್ಕೆ ಅಚ್ಚರಿಗೊಂಡೆ. ‘ಶಹಬ್ಬಾಸ್’ ಎಂದುಕೊಂಡೆ. ಒಂದೊಂದೇ ಹೆಜ್ಜೆ ಮುಂದಕ್ಕೆ ಹೋಗುತ್ತಿದ್ದರೆ, ಭಯ ಮತ್ತು ಥ್ರಿಲ್ ಉಂಟಾಗುತ್ತಿತ್ತು. ಅಲ್ಲಲ್ಲಿ ಬಿರುಕುಗಳು ಕಾಣಿಸಿದವು. ಅವುಗಳಲ್ಲಿ ಕೈಯಿಡುತ್ತಾ. ಮುಂದಕ್ಕೆ ಜರಿದೆವು. ಶಿಖರದ ತುದಿ ಸೇರಿ, ಅಲ್ಲಿ ಕುಳಿತೆವು. ಅಲ್ಲಿ ಕುಳಿತು ಸುತ್ತಲೂ ಇರುವ ಬೆಟ್ಟ ಗುಡ್ಡಗಳನ್ನು ನೋಡುತ್ತಿದ್ದರೆ ಅವೆಲ್ಲಾ ನಾವು ಗೆದ್ದ ರಾಜ್ಯಗಳಂತೆ ಕಾಣಿಸತೊಡಗಿದವು. ಮೇಲಕ್ಕೆ ಕೈ ಚಾಚಿದರೆ ಮೋಡಗಳು ಎಟುಕುತ್ತಿದ್ದವು. ತಲೆಯ ಮೇಲೆ ಮೋಡಗಳ ಕಿರೀಟವನ್ನು ಇಟ್ಟುಕೊಂಡ ಇಬ್ಬರು ಯುವರಾಜರಂತೆ ಹೊಳೆಯತೊಡಗಿದೆವು. ನನ್ನ ಶತ್ರು ಮತ್ತು ನಾನು ಸೇರಿ ಸಾಧಿಸಿದ ವಿಜಯವಿದು. ಯಾತಕ್ಕೋ ಅವನನ್ನು ಶತ್ರುವೆಂದು ಭಾವಿಸಲು ಆಗಲಿಲ್ಲ. ನಮ್ಮ ಇಷ್ಟಗಳು, ಸಂತೋಷಗಳು, ಒಂದೇ ರೀತಿಯಾಗಿದ್ದವು. ಹೇಳಲಾಗದ ಸ್ನೇಹ ಭಾವವೊಂದು ನಮ್ಮನ್ನು ಆವರಿಸಿತು. + +“ನಲ್ಲಮಲ ಬೆಟ್ಟಗಳ ಸಾಲಿನಲ್ಲಿ ಅತ್ಯಂತ ಎತ್ತರವಾದ ಬೆಟ್ಟವಿದು. ಯಾರೂ ಇಷ್ಟು ಎತ್ತರ ಏರಿರಲಿಲ್ಲ. ಈ ಬೆಟ್ಟಕ್ಕೆ ನಾವೇ ತೆನ್ ಸಿಂಗ್ ನೊರ್ಗೆ, ಎಡ್ಮಂಡ್ ಹಿಲರಿ” ಎಂದ ಕೊಂಡಯ್ಯ ಹೆಮ್ಮೆಯಿಂದ. ಇಬ್ಬರೂ ತುಂಬಾ ಹೊತ್ತು ಹರಟೆ ಹೊಡೆದೆವು. ಅದ್ಭುತವಾದ ವಿಹಾರವದು. ಸರೋವರ, ನದಿ ಕಾಡು, ಸಿಹಿಯಾದ ಹಣ್ಣುಗಳು, ಚಿಕ್ಕಂದಿನ ನೆನಪುಗಳು ಹಾಗೆ ಮಾತನಾಡಿಕೊಳ್ಳುತ್ತಲೇ ಇದ್ದೆವು. ಹರಟೆಗಳಲ್ಲಿ ನಮ್ಮದೇ ಆದ ಒಂದು ವರ್ತಮಾನವನ್ನು ಕಂಡುಹಿಡಿದೆವು. ನಮ್ಮ ದುಃಖಗಳು, ಹೋರಾಟಗಳು, ನಮ್ಮ ಪೂರ್ವಿಕರ ಅವಮಾನಗಳು, ಕಣ್ಣೀರು ಎಲ್ಲವನ್ನು ನೆನಪಿಗೆ ತಂದುಕೊಂಡೆವು. ನಮ್ಮಿಬ್ಬರ ರಕ್ತದಲ್ಲಿ ಪ್ರವಹಿಸುವ ಇತಿಹಾಸ ಒಂದೇ ಎಂದು ಅರಿತುಕೊಂಡೆವು. ಹತ್ತಿರದಿಂದ ನೋಡಿದರೆ ನಮ್ಮಿಬ್ಬರಲ್ಲಿ ಎಷ್ಟೊಂದು ಹೋಲಿಕೆಗಳು. ಮುಖ-ಮೂಗು, ದಪ್ಪನೆಯ ತುಟಿಗಳು, ಮಾತುಗಳ ಉಚ್ಛಾರಣೆ, ಇವೆಲ್ಲ ಅರ್ಥವಾಗುತ್ತಿದ್ದರೆ ಎಷ್ಟೊಂದು ಆಶ್ಚರ್ಯ ನನ್ನಲ್ಲಿ. ಮಾತುಗಳ ನಡುವೆ ಅವನ ಭುಜದ ಮೇಲೆ ಕೈ ಹಾಕಿದೆ. ಅದ್ಭುತವಾಗಿತ್ತು ಆ ಸ್ಪರ್ಶ. ಹಾಗೆಯೇ ಮಾತನಾಡುತ್ತಾ ಬೆಟ್ಟವನ್ನಿಳಿಯಲು ಪ್ರಾರಂಭಿಸಿದೆವು. + +ಬೆಟ್ಟ ಇಳಿದು, ಕಾಡನ್ನು ದಾಟಿ ಇಬ್ಬರೂ ಊರಿನ ಕಡೆ ಹೆಜ್ಜೆ ಹಾಕತೊಡಗಿದೆವು. ಕುರಿಕಾಯುವ ಹುಡುಗರಿಬ್ಬರು ನಮ್ಮ ಕಡೆ ಆಶ್ಚರ್ಯದಿಂದ ನೋಡಿದರು. ಊರೊಳಕ್ಕೆ ಬಂದ ನಂತರ, ಅವರ ಬೀದಿಯಲ್ಲಿ ಕಟ್ಟಿಗೆ ಹೊಡೆಯುತ್ತಿದ್ದ ವೃದ್ಧನೊಬ್ಬ ನಮ್ಮನ್ನು ನೋಡಿ ಮುಖ ಸಿಂಡರಿಸಿದ. ಕೊಂಡಯ್ಯನಲ್ಲಿ ಕ್ರಮವಾಗಿ ಹೆದರಿಕೆ ಪ್ರಾರಂಭವಾಯಿತು. + +“ನಾವು ದೂರದೂರವಾಗಿ ನಡೆಯೋಣ” ಎಂದ. ನಾನೇನೂ ಮಾತಾಡಲಿಲ್ಲ. + +ಗಬಗಬನೆ ಹೆಜ್ಜೆಗಳನ್ನು ಹಾಕಿ, ನನ್ನಿಂದ ದೂರಸರಿದ ಕೊಂಡಯ್ಯ. ನಾನು ತಲೆಕೆಡಿಸಿಕೊಳ್ಳದೇ ಅವನ ಪಕ್ಕದಲ್ಲೇ ನಡೆಯುತ್ತಿದ್ದೆ. ಅವನು ನಿಧಾನವಾಗಿ ದೂರಸರಿಯುತ್ತಿದ್ದ. ದಿಢೀರನೇ ಕೆಳಕ್ಕೆ ಬಗ್ಗಿ, ನೆಲದ ಮೇಲಿಂದ ಕಲ್ಲೊಂದನ್ನು ತೆಗೆದು, “ತಲೆ ಒಡಿತೇನೆ” ಎಂದು ಕೂಗಿ ಕಲ್ಲನ್ನು ನನ್ನ ಕಡೆಗೆ ಬೀಸಿದ. ನಾನು ಮುಂದಕ್ಕೆ ಬಾಗಿ, ಅದನ್ನು ತಪ್ಪಿಸಿಕೊಂಡೆ. ಒಂದು ನಿಮಿಷ ನಿಂತು, ನಾನು ಕೂಡಾ ಒಂದು ಕಲ್ಲನ್ನು ಕೈಗೆ ತೆಗೆದುಕೊಂಡೆ. + +ಉ.ಕೊಂಡಯ್ಯ ಹೊರಟು ಹೋಗಿ ತುಂಬಾ ಸಮಯವಾಗಿತ್ತು. ಗಾಳಿ ಜೋರಾಗಿ ಬೀಸುತ್ತಿತ್ತು. ಒಣಗಿದ ತರಗೆಲೆಗಳು ಸದ್ದು ಮಾಡುತ್ತಿದ್ದವು. ದೂರದಲ್ಲಿ ನೀರು ಹರಿಯುತ್ತಿರುವ ಸದ್ದು. + +ಉ.ಕೊಂಡಯ್ಯನೊಂದಿಗಿನ ನನ್ನ ಚಿಕ್ಕಂದಿನ ನೆನಪು, ಕೆಲವು ನಿಮಿಷಗಳ ಕೆಳಗೆ ನಡೆದಂತಿದೆ. ನನ್ನ ಪ್ಯಾಂಟಿನ ಎರಡು ಜೇಬುಗಳು ಭಾರವಾಗಿ ಕಲ್ಲುಗಳಿಂದ ತುಂಬಿದಂತೆ ಅನಿಸತೊಡಗಿತು. ಬೆಟ್ಟದ ಕಡೆ ನೋಡಿದೆ. ಈಗ ನಾನು ಉ.ಕೊಂಡಯ್ಯ ಸೇರಿ ಮತ್ತೇ ಆ ಬೆಟ್ಟವನ್ನು ಏರಬಲ್ಲವೇ? ಎಂದು ಯೋಚಿಸತೊಡಗಿದೆ. + + + +ಕಾಡಿನ ಆಚೆ ಊರಲ್ಲಿ ಗಲಾಟೆ ಕೇಳಿಸತೊಡಗಿತು. ಬಹುಶಃ ಉ.ಕೊಂಡಯ್ಯ ಹೇಳಿದಂತೆ ಎರಡು ಸಭೆಗಳು ಪ್ರಾರಂಭವಾಗಿರಬಹುದು. + +****** + +ಕಲಾವಿದ ಮತ್ತು ಅನುವಾದಕ. ಓದಿದ್ದು ಸಂಡೂರು ಹಾಗು ಬಳ್ಳಾರಿ . ವೃತ್ತಿಯಿಂದ ಸಿವಿಲ್ ಇಂಜಿನೀಯರ್ .ರಾಮ್ ಗೋಪಾಲ್ ವರ್ಮ ‘ ನನ್ನಿಷ್ಟ’ ಮೊದಲ ಅನುವಾದ. ‘ಪಚ್ಚೆ ರಂಗೋಲಿ’ ಮೊದಲ ಅನುವಾದ ಕಥೆ.ಸದ್ಯ ಅನುವಾದ ಮತ್ತು ಪೈಂಟಿಂಗ್ಸ್ ಗಳಲ್ಲಿ ಬ್ಯುಸಿ . \ No newline at end of file diff --git a/Kenda Sampige/article_287.txt b/Kenda Sampige/article_287.txt new file mode 100644 index 0000000000000000000000000000000000000000..c0ec0d8b0cd574d4017c8b23f6e1b07f4bb214ae --- /dev/null +++ b/Kenda Sampige/article_287.txt @@ -0,0 +1,123 @@ +ಮುಖ ಸಿಂಡರಿಸಿಕೊಂಡಿರುವ ಸುಂದರಿಯ ಹಾಗಿರುವ ಈ ಮೋಹಕ ದ್ವೀಪದ ಮೂಗಿನಂತಹ ಈ ತುದಿಯಲ್ಲಿ ಕಡಲು ಯಾವಾಗಲೂ ಅಬ್ಬರಿಸುತ್ತಲೇ ಇರುತ್ತದೆ. ಈ ಅಬ್ಬರಕ್ಕೆ ವರುಷಾನು ವರುಷಗಳಿಂದ ತತ್ತರಿಸುತ್ತಲೇ ಮಲಗಿರುವ ತುಕ್ಕು ಹಿಡಿದು ಹಾಳಾದ ಸರಕಿನ ಹಡಗು. ಎಲ್ಲಿಂದಲೋ ಎಲ್ಲಿಗೋ ಹೊರಟಿದ್ದ ಈ ಸರಕು ಹಡಗು ಇರುಳು ಲಂಗರು ಹಾಕಿದ ಹೊತ್ತಲ್ಲಿ ಬಿರುಗಾಳಿಗೆ ಸಿಲುಕಿ, ಹಾದಿ ತಪ್ಪಿ ಈ ತೀರಕ್ಕೆ ಡಿಕ್ಕಿ ಹೊಡೆದು ಮಗುಚಿಕೊಂಡು ಅಬ್ಬೇಪಾರಿಯಂತೆ ವರುಷಗಳಿಂದ ಹಾಗೇ ಮಲಗಿಕೊಂಡಿದೆ. ಕಡಲ ಉಪ್ಪುಗಾಳಿಗೆ ಅದರ ಮೈಬಣ್ಣ ಕಡಲ ಬಣ್ಣಗಳೊಂದಿಗೆ ಬೆರೆತು ಶತಮಾನಗಳಿಂದ ಇಲ್ಲೇ ಹುಟ್ಟಿ ಇಲ್ಲೇ ಬೆಳೆದು ಇಲ್ಲೇ ವೃದ್ಧಾಪ್ಯದಿಂದ ತೀರಿ ಹೋಗಿರುವ ಬೃಹತ್ ಪುರಾತನ ಮತ್ಸ್ಯವೊಂದರಂತೆ ಅದು ಕಾಣಿಸುತ್ತದೆ. + +ಕಪ್ತಾನನೊಬ್ಬನ ತಪ್ಪಿನಿಂದಾಗಿ ಇನ್ನು ಆಯುಷ್ಯಪೂರ್ತಿ ಇಲ್ಲೇ ಸಿಲುಕಿಕೊಂಡಿರಬೇಕಾದ ಈ ಉಕ್ಕಿನ ನೌಕೆಯ ಕುರಿತು ಈ ದ್ವೀಪವಾಸಿಗಳ ಬಾಯಲ್ಲಿ ಹಲವು ಕಥೆಗಳು ಹರಿದಾಡುತ್ತವೆ. ಅದರಲ್ಲಿ ಒಂದು ಕಥೆಯಂತೂ ಬಹಳ ರೋಮಾಂಚನಕಾರಿಯಾಗಿದೆ. ಹೊಸತಾಗಿ ಮದುವೆಯಾಗಿದ್ದ ಈ ದ್ವೀಪವಾಸಿ ಕಪ್ತಾನ ಎಲ್ಲಿಂದ ಎಲ್ಲಿಗೋ ಸಾಗರದಲ್ಲಿ ಹೊರಟಿದ್ದ ತನ್ನ ಸರಕು ಹಡಗನ್ನು ಒಂಚೂರು ದಾರಿ ಬದಲಿಸಿ ಈ ದ್ವೀಪದ ಬಳಿಗೆ ತಂದನಂತೆ. ಒಂದಿರುಳನ್ನಾದರೂ ತನ್ನ ಮಡದಿಯ ಬಳಿ ಕಳೆಯುವ ಅವನ ಹಾಳು ಬಯಕೆಯಿಂದಾಗಿ ಈ ಹಡಗು ಜೀವಮಾನ ಪೂರ್ತಿ ಇಲ್ಲಿ ಕಳೆಯುವಂತಾಯಿತು ಎಂದು ಅವರು ಆಡಿಕೊಳ್ಳುತ್ತಾರೆ. + +ಕೋಟ್ಯಾಂತರ ಮೌಲ್ಯದ ಸಿಮೆಂಟು ಚೀಲಗಳನ್ನು ತುಂಬಿಕೊಂಡಿದ್ದ ಈ ಹಡಗು ಕಡಲಿಗೆ ಮಗುಚಿಕೊಂಡು ಆ ನಷ್ಟ ತಡೆಯಲಾರದೆ ಮುಂಬೈಯಲ್ಲಿರುವ ಅದರ ಮಾಲೀಕನೂ ದೇಶಾಂತರ ಪರಾರಿಯಾಗಿ, ಈ ಅವಮಾನ ಸಹಿಸಲಾರದೆ ಆ ಪ್ರಣಯ ಸಾಹಸಿ ಕಪ್ತಾನನು ಜೇಲಿಗೆ ಹೋಗುವ ಹಾದಿಯಲ್ಲಿ ಕೊಚ್ಚಿ ನಗರದಲ್ಲಿ ತನ್ನನ್ನು ತಾನು ಕೊಂದುಕೊಂಡನೆಂದೂ ಅವನ ಹೆಂಡತಿಯಾದವಳು ಇದೇ ದ್ವೀಪದಲ್ಲಿ ಏಕಾಂಗಿಯಾಗಿ ಆಡು ಸಾಕುತ್ತ, ಅವರಿವರಿಗೆ ಅಡುಗೆ ಮಾಡಿ ಬಡಿಸುತ್ತ ಬದುಕುತ್ತಿರುವಳೆಂದೂ ಕಥೆ ಹೇಳುತ್ತಾರೆ. ಪ್ರೇಮ ದಾಂಪತ್ಯ ಮತ್ತು ಪ್ರಣಯಗಳ ಕುರಿತು ಅಷ್ಟೇನೂ ಭಾವಾಸಕ್ತರಲ್ಲದ ಈ ದ್ವೀಪವಾಸಿಗಳಿಗೆ ಆ ಕಪ್ತಾನನದು ಹುಚ್ಚುತನವಾಗಿಯೂ, ಅವನ ಹೆಂಡತಿಯದು ವಿಧಿಲಿಖಿತವಾಗಿಯೂ ಎಲ್ಲಕ್ಕಿಂತ ಹೆಚ್ಚಾಗಿ ಆ ಸಿಮೆಂಟು ಹಡಗಿನದು ದುರಾದೃಷ್ಟವಾಗಿಯೂ ಕಾಣಿಸುತ್ತದೆ. + +ಇವರ ಕಥೆಯನ್ನು ಕೇಳಿಸಿಕೊಂಡ ನಾನು ಅವರಿಗೆ ಬೇಕಾಗಿ ನಕ್ಕು ಸುಮ್ಮನಾಗುತ್ತೇನೆ. ಎಲ್ಲಿಂದ ಎಲ್ಲಿಗೋ ಹೊರಟಿದ್ದ ಉಕ್ಕಿನ ನೌಕೆಯೊಂದು ಯಾರದೋ ಹುಚ್ಚು ಮೋಹದಿಂದಾಗಿ ಇಲ್ಲಿ ತುಕ್ಕು ಹಿಡಿದು ಸಾಯಬೇಕಾಗಿ ಬಂದಿರುವುದು ಇವರಿಗೆ ನಗುವಿನ ವಿಷಯ. ಆದರೆ ಒಂದು ಮೋಹಕ್ಕೆ ಸಿಲುಕಿ ಘಾಸಿಗೊಂಡ ನಡು ವಯಸ್ಕನಾದ ನಾನು ಹಳೆಯ ಜನ್ಮದ ಎಲ್ಲವನ್ನೂ ಕಳಚಿಕೊಂಡು ಈ ದ್ವೀಪವಾಸಿಯಾಗಿ ಈ ದ್ವೀಪದ ಮೂಗಿನಂತಹ ಈ ಮೋಹಕ ತುದಿಯಲ್ಲಿ ಕೊನೆಯಾಗಬೇಕೆಂದುಕೊಂಡಿರುವೆ ಎಂಬುದು ನಿಮಗೇನು ಗೊತ್ತು ಎಂದು ಮನಸಿನಲ್ಲೇ ಗೊಣಗುತ್ತೇನೆ. + +ಆ ಕಪ್ತಾನನ ಮೋಹದ ಮಡದಿಯ ಮೇಲಿನ ಹುಚ್ಚು ಹಂಬಲ ಮತ್ತು ಅಷ್ಟೇನೂ ಸಹಜವಲ್ಲದ ನನ್ನ ನಡುವಯಸ್ಸಿನ ದುರಂತ ಅನುರಾಗ. ಎರಡೂ ಸಂಭವಿಸಿದ ದೇಶ ಕಾಲ ಮತ್ತು ವಿಧಿವಿಹಿತಗಳು ಬೇರೆಬೇರೆಯಾದರೂ ಅವು ತಂದೊಡ್ಡಿದ ಅವಾಂತರಗಳು ಕಣ್ಣಿಗೆ ಕುಕ್ಕುವಂತಿವೆ. ನಾನೋ ಎಲ್ಲವನ್ನೂ ಕಳಚಿಕೊಂಡು ಕೊನೆಗಾಲವನ್ನು ಈ ಮೋಹಕ ತುದಿಯಲ್ಲಿ ಲಂಗರು ಹಾಕಿ ಪರಿಸಮಾಪ್ತಿಗೊಳ್ಳಬೇಕೆಂದು ಇಲ್ಲಿಗೆ ಬಂದರೆ ಇಲ್ಲಿ ಹಾಳಾಗಿ ಬಿದ್ದಿರುವ ಈ ಹಡಗಿನ ಅವಸ್ಥೆ ನನ್ನ ಅಣಕಿಸುವಂತಿದೆ ಮತ್ತು ದ್ವೀಪದ ಮೂಗಿನ ತುದಿಯ ಈ ಅಸಾಧಾರಣ ಸೌಂದರ್ಯ ಮತ್ತೆ ಹಲವು ಮೋಹಗಳಲ್ಲಿ ಮುಳುಗಿಸುವಂತೆ ತೋರುತ್ತಿದೆ. ನೆಲವೂ, ಕಡಲೂ ಐಕ್ಯಗೊಳ್ಳುವ ದ್ವೀಪದ ತುದಿಯ ಬಿಳಿಯ ಮರಳು ಹಗಲಿಡೀ ಹೊಳೆಯುತ್ತಿರುತ್ತದೆ. ರಾತ್ರಿ ನಕ್ಷತ್ರಗಳ ಬೆಳಕಿನಲ್ಲಿ ತಾನೂ ಮಿನುಗುತ್ತಿರುತ್ತದೆ. + +ಹುಣ್ಣಿಮೆಯ ಚಂದ್ರಿಕೆಯ ಇರುಳು ಈ ಬಿಳಿಯ ಮರಳಿನ ಮೇಲೆ ಚಾಚಿಕೊಂಡಿರುವ ಒಂಟಿ ತೆಂಗಿನ ಮರದ ನೆರಳಲ್ಲಿ ಕುಳಿತು ನಾನು ಕಡಲನ್ನು ನೋಡುತ್ತೇನೆ. ಪುರಾತನ ಸಂಕಟವೊಂದನ್ನು ಹೊತ್ತುಕೊಂಡಿರುವ ಆತ್ಮದಂತೆ ಬೆಳದಿಂಗಳಿನಲ್ಲಿ ನಿಟ್ಟುಸಿರಿಡುತ್ತಿರುವ ತುಕ್ಕು ಹಿಡಿದ ಸರಕು ಹಡಗಿನ ಮೇಲೆ ಲಾಸ್ಯವಾಡುತ್ತಿರುವ ಕಡಲಿನ ಬೆಳ್ಳಿ ಅಲೆಗಳು. ಕಣ್ಣು ಕಾಣಿಸುವಷ್ಟೂ ದೂರ ಬೆಳ್ಳನೆಯ ಬೆಳಕಲ್ಲಿ ಅನುರಾಗವೇರಿದ ಮೋಹಿನಿಯಂತೆ ಸೆರಗು ಕಿತ್ತೆಸೆದು ಮಲಗಿರುವ ಕಡಲು. ಬೆಳದಿಂಗಳಲ್ಲಿ ಕೆಲವೊಮ್ಮೆ ಚಿಮ್ಮುವ ಹಾರುಮೀನುಗಳು. ಆ ಬೆಳಕನ್ನೂ ಭೇದಿಸಿ ಹಾಲಿನಂತಹ ಆಕಾಶದಲ್ಲಿ ಹೊಳೆಯುತ್ತಿರುವ ನಕ್ಷತ್ರರಾಜ್ಯ. ಆಕಾಶದಲ್ಲಿ ನಕ್ಷತ್ರಗಳು ಒಂಟಿ ಅಂದುಕೊಂಡಿದ್ದ ನನಗೇ ಅಚ್ಚರಿಯಾಗುವಂತೆ ಅವುಗಳ ನಡುವಿನ ಸಾಂಗತ್ಯ ಗೋಚರಿಸುತ್ತವೆ. ಒಂದೇ ರೇಖೆಯಲ್ಲಿ, ಒಂದೇ ಒಂದು ವಿನ್ಯಾಸದಲ್ಲಿ ಅಡಗಿಕೊಂಡು ಆದರೆ ಒಂದಷ್ಟು ಅಂತರವನ್ನೂ ಕಾದುಕೊಂಡು ಕೋಟ್ಯಾನುಶತಕೋಟಿ ವರ್ಷಗಳಿಂದ ಹಾಗೆಯೇ ಮಿನುಗುತ್ತಿರುವ ಅವುಗಳ ಗೆಳೆತನ. ಒಂದೇ ಒಂದು ಕ್ಷೀರಪಥದಲ್ಲಿ ಒಟ್ಟಾಗಿ ಬಾಳುತ್ತಿರುವ ಸಹಸ್ರ ಸಹಸ್ರ ತಾರೆಗಳು. ಹಾಗೆ ನೋಡಿದರೆ ತಾರೆಗಳೂ ಮನುಷ್ಯನಷ್ಟು ಒಂಟಿಯಾಗಿರಲಿಕ್ಕಿಲ್ಲ ಎಂದು ಸ್ವಮರುಕದಲ್ಲಿ ಮುಳುಗುತ್ತೇನೆ. + +ದೂರದಲ್ಲಿ ಕಡಲ ಹಾಲುಬೆಳಕಿನಲ್ಲಿ ಒಟ್ಟಾಗಿ ಈಸುತ್ತಿರುವ ಡಾಲ್ಫಿನ್ ಮೀನುಗಳ ಮೈಯ್ಯ ಮಿಂಚು ಸಳಕ್ಕನೆ ಹೊಳೆದು ಮರೆಯಾಗುತ್ತವೆ. ಅವುಗಳು ಕುಟುಂಬ ಸಮೇತ ಈಸುತ್ತ ಬೆಳದಿಂಗಳನ್ನು ಸವಿಯುತ್ತಿರಬಹುದು ಎಂದು ಈರ್ಷ್ಯೆಯಾಗುತ್ತದೆ. ಮಗುವನ್ನು ತೆಕ್ಕೆಯಲ್ಲಿಟ್ಟುಕೊಂಡು ಈಸುತ್ತಿರಬಹುದಾದ ತಾಯಿ ಡಾಲ್ಫಿನ್, ತನ್ನದೇ ಕೀಚಲು ಭಾಷೆಯಲ್ಲಿ ಏನನ್ನೋ ಆದೇಶಿಸುತ್ತಿರುವ ತಂದೆ ಡಾಲ್ಪಿನ್ನಿನ ಸದ್ದು. ಇದೆಲ್ಲಾ ನಿಜವೋ ಅಥವಾ ನನ್ನದೇ ಮರಳೋ ಎಂದು ಆಕಾಶ ನೋಡುತ್ತೇನೆ. ಅಲ್ಲಾಡುವ ತೆಂಗಿನ ಗರಿಗಳ ಮೇಲೂ ಹೊಳೆಯುತ್ತಿರುವ ನಿಹಾರಿಕೆಗಳ ಬೆಳಕು. ಇಲ್ಲೇ ಈ ಮರಳಿನಲ್ಲೇ ಈ ತೆಂಗಿನ ನೆರಳಿನಲ್ಲೇ ಕೊನೆಯಾಗಬೇಕೆಂದು ಬಂದು ಕುಳಿತವನಿಗೆ ಬೇಡದ ಪುಳಕಗಳನ್ನು ತೋರಿಸುತ್ತಿರುವ ಮಾಯಾವಿ ಸೌಂದರ್ಯ ಮತ್ತು ಅಣಕಿಸುತ್ತಿರುವ ಈ ಹಾಳಾದ ಹಡಗು. ಈ ಹೊತ್ತಲ್ಲಿ ಅವಳು ಇಲ್ಲಿ ಇದ್ದಿದ್ದರೆ ಎಂಬ ಆಶೆಯಾಗುತ್ತದೆ. ಸಾಧಾರಣ ಬೆಳದಿಂಗಳು ಎಂದರೇ ಜೀವ ಹೋಗುವಷ್ಟು ಸಾಯುತ್ತಿದ್ದ ಅವಳ ಕಣ್ಣುಗಳು. ಅವಳು ಇದ್ದಿದ್ದರೆ ಈ ದೈವಿಕ ಬೆಳಕಲ್ಲಿ ಎಷ್ಟು ಹೊಳೆಯುತ್ತಿದ್ದಿರಬಹುದು ಎಂದು ಆಶೆಯಾಗುತ್ತದೆ. ಆಗದ ಹೋಗದ ವಿಷಯಗಳಿಗೆ ಹಾಗೆಲ್ಲ ಆಶೆ ಪಡಬಾರದು ಎಂದು ಮೈಯ್ಯನ್ನು ಜಿಗುಟಿಕೊಂಡು, ಮೈಗಂಟಿಕೊಂಡಿರುವ ಮರಳನ್ನು ಕೊಡವಿಕೊಂಡು ಎದ್ದು ನಿಲ್ಲುತ್ತೇನೆ. + +ಎದೆಯೊಳಗೆ ಹಾಲಾಹಲವೊಂದು ಹರಿದಾಡಿದಂತಾಗುತ್ತದೆ. ಈ ದ್ವೀಪದ ಮೂಗಿನ ತುದಿಯಲ್ಲಿ ತೀರಿಹೋಗಬೇಕು ಎಂದುಕೊಂಡು ಬಂದರೆ ದೂರದಲ್ಲಿ ದಕ್ಷಿಣದ ತುದಿಯಲ್ಲಿ ನತ್ತಿನಂತೆ ಹೊಳೆಯುವ ನಕ್ಷತ್ರವೊಂದು ನಕ್ಕಂತಾಗುತ್ತದೆ. ಬಹುಶಃ ಅವಳೇ ಹೇಳುತ್ತಿದ್ದ ತ್ರಿಶಂಕು ನಕ್ಷತ್ರವಿರಬೇಕು ಇದು. ಅವಳು ಇದ್ದಿದ್ದರೆ ಇದೂ ನಿನ್ನ ಹಾಗೆಯೇ ತ್ರಿಶಂಕು ಎಂದು ಸಣ್ಣಗೆ ನಗುತ್ತಿದ್ದಳು. ತುಕ್ಕು ಹಿಡಿದಿರುವ ಈ ಹಳೆಯ ಹಡಗು ನಿನ್ನ ಹಾಗೆ ಕಾಣಿಸುತ್ತಿದೆಯಲ್ಲೋ ಹಾಳಾದವನೇ ಎಂದು ಹಂಗಿಸುತ್ತಿದ್ದಳು. + +‘ಹಂಗಿಸಿಕೊಂಡಾದರೂ ನೀನು ಇರಬೇಕಿತ್ತು. ನಿನ್ನ ಹುಚ್ಚು ಹಿಡಿಸುವ ಮೋಹವಾದರೂ ನಡುವಯಸ್ಕನಾದ ನನ್ನನ್ನ ಬದುಕಿಸುತ್ತಿತ್ತು, ಹಾಳಾದವಳು ಹೋಗೇಬಿಟ್ಟೆಯಲ್ಲೇ’ ಎಂದು ಹಾಲು ಉಸುಕಿನಲ್ಲಿ ಪಾದಗಳ ಮುಳುಗಿಸುತ್ತಾ ನಡೆಯತೊಡಗುತ್ತೇನೆ. + +********* + +ಈ ದ್ವೀಪದ ಮೂಗ ತುದಿಯಿಂದಲೇ ಆರಂಭವಾಗಿರುವ ಹವಳದ ಗೋಡೆ ಅರ್ಧ ಚಂದ್ರಾಕೃತಿಯಲ್ಲಿ ಈ ದ್ವೀಪವನ್ನು ಮಣಿಹಾರದಂತೆ ಸುತ್ತಿಕೊಂಡಿದೆ . ಈ ಗೋಡೆಯ ನಡುವೆ ತುಂಬಿಕೊಂಡಿರುವ ನೀಲ ನೀಲ ಸ್ಫಟಿಕ ಸರೋವರ ಈ ದ್ವೀಪವನ್ನು ಕಡಲ ಭೋರ್ಗರೆತದಿಂದ ಕಾಪಾಡುತ್ತದೆ. ತಿಂಗಳಿಗೆರಡು ಬಾರಿ ಅಮವಾಸ್ಯೆ ಮತ್ತು ಹುಣ್ಣಿಮೆಯ ಹಗಲಿನಲ್ಲಿ ಒಂದೆರೆಡು ತಾಸು ಹೊತ್ತು ಈ ಸರೋವರ ಅಷ್ಟು ದೂರ ಬೆತ್ತಲಾಗಿ ಬರಿದಾಗುತ್ತದೆ. ಆಗ ನಾನೂ ಈ ಜುಬೇದಾಳ ಜೊತೆ ನೀರಿಗಿಳಿದು ಅಕ್ಟೋಪಸ್ ಬೇಟೆಗೆ ಹೊರಡುತ್ತೇನೆ. ತುಂಬ ಪಾಪದವಳ ಹಾಗೆ ತೋರುವ ಈ ಜುಬೇದಾ ಮಹಾ ಅಕ್ಟೋಪಸ್ ಬೇಟೆಗಾರ್ತಿ. ಭಯಂಕರ ಆಕ್ರಮಣಕಾರಿಯಂತೆ ತೋರುವ ಈ ಅಕ್ಟೋಪಸ್ ನಿಜದಲ್ಲಿ ಒಂದು ಪಾಪದ ಜೀವಿ. ಕಡಲ ನೀರು ಬರಿದಾದಾಗ ಕಲ್ಲಿನ ಪೊಟರೆಯೊಳಗೆ ಉಳಿದ ನೀರಲ್ಲಿ ತಾನು ಅಡಗಿಕೊಂಡಿರುವುದು ಗೊತ್ತಾಗಬಾರದೆಂದು ಪೊಟರೆಯ ಪ್ರವೇಶದ್ವಾರಕ್ಕೆ ಪುಟ್ಟ ಕಲ್ಲೊಂದನ್ನು ಎಳೆದು ಮುಚ್ಚಿಟ್ಟು ನೀರು ಮತ್ತೆ ಏರುವುದನ್ನೇ ಕಾಯುತ್ತಿರುತ್ತದೆ. + +ಕೈಯಲ್ಲಿ ಕಬ್ಬಿಣದ ಎರಡು ಈಟಿಗಳನ್ನು ಹಿಡಿದು ಬೇಟೆಗೆ ಹೊರಟ ಜುಬೇದಾಳಿಗೆ ಅಕ್ಟೋಪಸ್ಸುಗಳ ಈ ಆಟ ವರುಷಗಳಿಂದ ಗೊತ್ತು. ಎಲ್ಲಿ ಪೊಟರೆಯ ಬಾಗಿಲು ಸಣ್ಣ ಕಲ್ಲೊಂದರಿಂದ ಮುಚ್ಚಲಾಗಿದೆಯೋ ಅಲ್ಲಿಗೆ ಈಟಿಯಿಂದ ಮೆಲ್ಲಗೆ ಮಮತೆಯಿಂದ ಚುಚ್ಚುತ್ತಾಳೆ. ಮೃದುಲ ಮಾಂಸದ ಅಕ್ಟೋಪಸ್ ಈಕೆಯ ಈಟಿಯ ಇರಿತಕ್ಕೆ ಒಮ್ಮೆ ಸಣ್ಣಗೆ ಅಲುಗಾಡುತ್ತದೆ. + +‘ಸುಂದರನಾದ ಮಾರಾಯ ಇದೋ ಇಲ್ಲಿ ಅಡಗಿಕೊಂಡಿದೆ’ ಎಂದು ಆಕೆ ಬಲವಾಗಿ ಇರಿಯುತ್ತಾಳೆ. + +‘ಸುಂದರನೇ ಯಾಕಾಗಬೇಕು ಸುಂದರಿಯೂ ಆಗಿರಬಹುದು’ ಎಂದು ತುಳುವಿನಲ್ಲಿ ಅಂದು ನೀರೊಳಗೆ ಬಗ್ಗಿ ನೋಡುತ್ತೇನೆ. + +ಅದು ಸುಂದರನೋ ಸುಂದರಿಯೋ ಗೊತ್ತಾಗದ ಹಾಗೆ ಕಡಲ ನೀರಿನಲ್ಲಿ ನೇರಳೆ ಬಣ್ಣದ ಸಣ್ಣದೊಂದು ವ್ಯರ್ಥ ಕಾರ್ಮೋಡ ಸೃಷ್ಟಿಯಾಗುತ್ತದೆ. ಅಕ್ಟೋಪಸ್ಸಿನ ಕೊರಳಲ್ಲಿರುವ ನೇರಳೆ ಬಣ್ಣದ ಶಾಯಿ ತುಂಬಿಕೊಂಡಿರುವ ಆ ಚೀಲದಿಂದ ಹೊಮ್ಮಿದ ಶಾಯಿಯ ಬಣ್ಣವದು. + +‘ಪ್ರಾಣ ಉಳಿಸಲು ಪಡೆದವನು ಅವುಗಳಿಗೆ ಕರುಣಿಸಿದ ಬಣ್ಣದ ಚೀಲ ಅದು’ ಎಂದು ಜುಬೇದಾ ನಗುತ್ತಾಳೆ.‘ಪಡೆದವನ ಯಾವ ಬಣ್ಣದ ಚೀಲಗಳೂ ಈ ಪಾಪದ ಜೀವಿಯನ್ನು ನಿನ್ನ ಈಟಿಯಿಂದ ರಕ್ಷಿಸುವುದಿಲ್ಲವಲ್ಲವಾ ಜುಬೇದಾ’ ನಾನು ಮೆಲ್ಲಗೆ ಗೊಣಗುತ್ತೇನೆ. + +ಜುಬೇದಾ ಇರಿತಕ್ಕೊಳಗಾದ ಅಕ್ಟೋಪಸ್ಸನ್ನು ಈಟಿಯ ತುದಿಯಿಂದ ಮೇಲಕ್ಕೆ ಎತ್ತುತ್ತಾಳೆ ಎತ್ತಿ ಅದರ ಕೊಡೆಯ ಬಟ್ಟೆಯಂತಿರುವ ತಲೆಯನ್ನು ಮಿಂಚಿನ ವೇಗದಲ್ಲಿ ಹಿಂದಕ್ಕೆ ಮಡಚುತ್ತಾಳೆ.ಅಕ್ಟೋಪಸ್ ವಿಧಿಯಿಲ್ಲದೆ ಸ್ತಬ್ದಗೊಳ್ಳುತ್ತದೆ.ಅದರ ಬಣ್ಣಗಳು ಮಂಕಾಗಿ ದೇಹ ನಿಸ್ತೇಜವಾಗುತ್ತದೆ. ಜುಬೇದಾ ಆ ಸೋತ ದೇಹವನ್ನು ಚೀಲಕ್ಕೆ ಹಾಕಿಕೊಳ್ಳುತ್ತಾಳೆ. + +‘ಜುಬೇದಾ ಇಂದು ಸುಂದರನಾ ಸುಂದರಿಯಾ?” ನಾನು ಮತ್ತೆ ತುಳುವಿನಲ್ಲಿ ಕೇಳುತ್ತೇನೆ. ಆಕೆ ಮಾತನಾಡುವುದಿಲ್ಲ. ಏಕೆಂದರೆ ಅಷ್ಟು ಹೊತ್ತಿಗೆ ಬರಿದಾಗಿದ್ದ ಕಡಲು ಇಳಿತ ಮುಗಿದು ಮತ್ತೆ ತುಂಬಿಕೊಳ್ಳತೊಡಗುತ್ತಿದೆ. ನೀಲಸಾಗರದ ಬೆತ್ತಲನ್ನು ಮುಚ್ಚಿಕೊಳ್ಳಲು ಮತ್ತೆ ಮರಳುತ್ತಿರುವ ಕಡಲ ಭರತದ ನೀರು. ಅವಸರವಸರವಾಗಿ ಮರಳುತ್ತಿರುವ ಜುಬೇದಾಳನ್ನು ನಾನು ತೊಂಡು ಬಾಲಕನಂತೆ ಹಿಂಬಾಲಿಸುತ್ತೇನೆ. ಇಬ್ಬರೂ ಕಡಲುಕಳೆದು ಬಂಗಾರ ಬಣ್ಣದ ಮರಳಲ್ಲಿ ನಡೆಯತೊಡಗುತ್ತೇವೆ. ದೂರದಲ್ಲಿ ಹಂಗಿಸುವಂತೆ ಕಪ್ಪಗೆ ನಿಂತಿರುವ ಮಗುಚಿಕೊಂಡ ಹಡಗು. ಜುಬೇದಾ ತಪ್ಪಿ ಕಣ್ಣೆತ್ತಿಯೂ ಅದರ ಕಡೆ ನೋಡುವುದಿಲ್ಲ. + +‘ಜುಬೇದಾ ನಿನ್ನ ಗಂಡನ ಮೋಹದಿಂದಾಗಿ ಮಗುಚಿಕೊಂಡಿರುವ ಹಡಗು’ ಎಂದು ಕಿಚಾಯಿಸಬೇಕೆನಿಸುತ್ತದೆ. ಆದರೆ ಧೈರ್ಯ ಬರುವುದಿಲ್ಲ. ಅನಿಸಿದರೆ ಅವಳು ಕೈಯಲ್ಲಿರುವ ಈಟಿಯಿಂದ ನನ್ನನ್ನು ತಿವಿಯಲೂ ಹೆದರುವುದಿಲ್ಲ. + +ಉಲ್ಲಾಳದ ಒಂದು ಕಾಲದ ಸುಂದರಿ ಬ್ಯಾರಿ ಹೆಂಗಸು. ಈಗ ನೋಡಿದರೆ ಈ ದ್ವೀಪದ ಗಟ್ಟಿಗಿತ್ತಿ ಹೆಂಗಸರನ್ನೂ ಮೀರಿಸುವ ಹಾಗೆ ಅವಳಿಗಿಂತಲೂ ಎತ್ತರದ ಅಕ್ಟೋಪಸ್ಸಾದರೂ ಸರಿ ಈಟಿಯಿಂದ ಇರಿದು ಚೀಲಕ್ಕೆ ಬಿಸುಟು ಏನೂ ಆಗಿಲ್ಲವೆಂಬಂತೆ ನಡೆಯುತ್ತಿದ್ದಾಳೆ. ಉಲ್ಲಾಳದ ತನ್ನ ಮನೆಯ ಹಿತ್ತಲಲ್ಲಿ ತಾನೇ ನೀರು ಹಾಕಿ ಬೆಳೆಸಿದ ಸಾರುಸೌತೆಯನ್ನು ಕಿತ್ತು ಕೊಂಡೊಯ್ಯುವಂತೆ ಕಡಲ ಈ ಅಮಾನುಷ ಜೀವಿಯನ್ನು ಮುಲಾಜಿಲ್ಲದೆ ಎತ್ತಿಕೊಂಡು ನಡೆಯುತ್ತಿದ್ದಾಳೆ. ಒಂದು ಹಡಗಿನ ದುರಂತಕ್ಕೆ ಕಾರಣಳಾದ ಮೋಹದ ಮಡದಿ. ಅದಕ್ಕೂ ಮೊದಲು ಇನ್ನೊಬ್ಬನ ಮಡದಿಯಾಗಿದ್ದವಳು. ಅದಕ್ಕೂ ಮೊದಲು ಉಲ್ಲಾಳದ ಕಡಲ ತೀರದಲ್ಲಿ ತಲೆಗೊಂದು ಬಿಳಿಯ ಲೇಸನ್ನು ಕಟ್ಟಿ ಮದರಸಕ್ಕೆ ನಡೆದು ಹೋಗುತ್ತಿದ್ದ ಬಾಲಕಿ. + +ಒಡಹುಟ್ಟಿದ ಹಿರಿಯಳ ಹಿಂದೆ ಮದರಸಕ್ಕೆ ಸಾಗುವ ಬಾಲಕನಂತೆ ನಾನು ಈಕೆಯ ಹಿಂದೆ ನಡೆಯುತ್ತೇನೆ. + +********* + +‘ಪಡೆದವನೇ ಇದು ಯಾವ ಗ್ರಾಚಾರ! ನನ್ನ ಊರಿನ ಕಡೆಯ ನೀನು ಎಲ್ಲಿಂದ ಅವತರಿಸಿ ಈ ದ್ವೀಪ ಬಂದು ತಲುಪಿದೆ. ಬಂದವನು ನನಗೇ ಯಾಕೆ ತಗುಲಿಕೊಂಡೆ?’ ಎಂದು ಜುಬೇದಾ ಆಗಾಗ್ಗೆ ಕೇಳುತ್ತಲೇ ಇರುತ್ತಾಳೆ. ಪೂರ್ತಿ ಮರೆತೇ ಹೋಗಿದ್ದ ಆಕೆಯ ಬಾಲ್ಯದ ತುಳುಭಾಷೆ ನನ್ನಿಂದಾಗಿ ಮತ್ತೆ ಜೀವ ಪಡೆಯುತ್ತಿದೆ. ಹತ್ತಿರದಿಂದ ಬಲಿಷ್ಟ ಗಂಡಸಿನಂತೆ ತೋರುವ ಈಕೆ ದೂರದಿಂದ ನಡೆದು ಹೋಗುತ್ತಿರುವ ಬೆಳ್ಳಕ್ಕಿಯಂತೆ ಕಾಣುತ್ತಾಳೆ. ಈ ದ್ವೀಪದ ಶೈಲಿಯಲ್ಲೇ ಸಣ್ಣ ಸಣ್ಣ ಬಣ್ಣದ ಹೂಗಳಿರುವ ಲುಂಗಿಯನ್ನೂ, ಕುಪ್ಪಸವನ್ನೂ, ತಲೆಯ ಮೇಲೊಂದು ಗುಲಾಬಿ ಬಣ್ಣದ ಬಟ್ಟೆಯನ್ನೂ ಸುತ್ತಿಕೊಂಡಿರುತ್ತಾಳೆ. ಎರಡೂ ಕಿವಿಗಳಲ್ಲಿ ಮಂಕಾಗಿ ಜೋತು ಬಿದ್ದಿರುವ ಚಿನ್ನದ ಅಲಿಕತ್ತುಗಳು, ವೀಳ್ಯದೆಲೆ ಜಗಿದು ಸುಟ್ಟಂತಾಗಿರುವ ತುಟಿಗಳು, ಅಲ್ಲಲ್ಲಿ ರಕ್ತವರ್ಣವಾಗಿರುವ ದಂತಪಂಕ್ತಿ, ಒಂದಿಷ್ಟು ಕಾಣಿಸುವ ಒಸಡು, ತಲೆಯ ಬಟ್ಟೆಯೊಳಗಿಂದ ಇಣುಕುತ್ತಿರುವ ಕಪ್ಪು ಮಿಶ್ರಿತ ಬಿಳಿ ಕೂದಲು. ಅವೆಲ್ಲವನ್ನೂ ಮರೆಸುವ ಮುಖದ ಮೇಲಿನ ಅರಸಿಯಂತಹ ಮಂದಹಾಸ. ತಾನು ಇಲ್ಲೇ ಹುಟ್ಟಿ, ಇಲ್ಲೇ ಬೆಳೆದು ಇಲ್ಲಿಯ ಎಲ್ಲವನ್ನೂ ಅರಿತುಕೊಂಡಿರುವೆ ಎಂಬಂತಹ ಧಿಮಾಕಿನ ನಡಿಗೆ. + +ಆದರೆ ನಾನು ತುಳುವಿನಲ್ಲಿ ಮಾತನಾಡಿಸಿದರೆ ಮಗುವಿನಂತಾಗುತ್ತಾಳೆ. ಕೇಳಿದಕ್ಕೆಲ್ಲ ಚಾಚೂ ತಪ್ಪದೆ ಉತ್ತರಿಸುತ್ತಾಳೆ. ಈ ದ್ವೀಪದಲ್ಲಿ ಈಗ ಯಾರಿಗೂ ನೆನಪಿಲ್ಲದಂತಿರುವ ತನ್ನ ಜನ್ಮರಹಸ್ಯವನ್ನು ಭೇದಿಸಲು ಇವನೆಲ್ಲಿಂದ ಬಂದು ತಲುಪಿದ ಎಂಬ ಇವಳ ಕೊಂಕು ವಾತ್ಸಲ್ಯ ನನಗೂ ಇಷ್ಟ ಎಂಬುದನ್ನು ಅವಳು ಅರಿತಿದ್ದಾಳೆ. ಹಾಗಾಗಿ ಕೊಂಕು ಮಾತನಾಡದೆ ಬೇಕಾದ್ದನ್ನು ಹೊಟ್ಟೆ ತುಂಬ ಉಣಿಸಿ, ಹೊರಡುವಾಗ ವೀಳ್ಯದೆಲೆಯ ಸಂಚಿಯಿಂದ ಎಲೆಯನ್ನೂ ಸುಣ್ಣದ ಕರಂಡಿಕೆಯನ್ನೂ ಹೊರತೆಗೆದು, ಒಣಗಿದ ಸುಣ್ಣವನ್ನು ಒಂದಿಷ್ಟು ನೀರಲ್ಲಿ ನೆನೆಸಿ, ಹಸಿ ಅಡಿಕೆಯನ್ನು ಕತ್ತರಿಸಿ ಹೋಳು ಮಾಡಿಕೊಟ್ಟು, ತಾನೂ ವೀಳ್ಯದೆಲೆ ಬಾಯಿಗೆ ಹಾಕಿಕೊಳ್ಳುತ್ತಾಳೆ, ಇಲ್ಲಿ ಯಾರೂ ಅರಿಯದ ತುಳುನಾಡಿನ ದಿವ್ಯ ಅಡುಗೆಗಳ ಕುರಿತು ನಾವಿಬ್ಬರೂ ಕೆಲವೊಮ್ಮೆ ಹರಟುತ್ತೇವೆ. ಒಮ್ಮೊಮ್ಮೆ ಯಾರಿಗೂ ಬಿಟ್ಟುಕೊಡದ ತನ್ನ ಕಿರಿದಾದ ಅಡುಗೆಯ ಕುಶಿನಿ ಕೋಣೆಗೆ ನನ್ನನ್ನು ಬಿಟ್ಟುಕೊಟ್ಟು ದೂರದಿಂದ ನೋಡುತ್ತಾ ನಗುತ್ತಾಳೆ. ಕೆಲವೊಮ್ಮೆ ನಾವಿಬ್ಬರೂ ಸೇರಿ ಬಸಳೆಯ ಪುಂಡಿ ಮಾಡುತ್ತೇವೆ. ಕಾಯಿಯ ಹಾಲು ಸೇರಿಸಿ ಮಾಡುವ ಆಡುಮಾಂಸದ ಸಾರಿನ ಜೊತೆಗೆ ಅಕ್ಕಿ ಅರೆದು ಮಾಡಿದ ಶ್ಯಾವಿಗೆಯನ್ನೂ. + +ಇಬ್ಬರೂ ಆಕಾಶದ ಕೆಳಗೆ ಅವಳ ಹಿತ್ತಲಿನ ಕೂರುಮಣೆಯಲ್ಲಿ ಕೂತು ನಮ್ಮಿಬ್ಬರ ಬಾಲ್ಯದ ತಿನಿಸುಗಳ ಕುರಿತು ದೇಶಾವರಿ ಮಾತನಾಡುತ್ತ ಕಬಳಿಸಲು ತೊಡಗುತ್ತೇವೆ. ಅವಳ ಒಂದೆರಡು ಆಡುಗಳು ಪರಿಚಿತರಂತೆ ಬಳಿ ಬಂದು ನಮ್ಮ ತಿನಿಸುಗಳನ್ನು ಮೂಸಲು ತೊಡಗುತ್ತವೆ. + +‘ನಮ್ಮ ಊರಾಗಿದ್ದರೆ ಈ ಆಡುಗಳಿಗೆ ತಿನ್ನಲು ಏನೆಲ್ಲ ಸೊಪ್ಪುಗಳು ಸಿಗುತ್ತಿತ್ತಲ್ಲವಾ?’‘ಹೌದು ಅಷ್ಟೆಲ್ಲ ಸೊಪ್ಪುಗಳು ಸಿಕ್ಕಿದ್ದಿದ್ದರೆ ಅವುಗಳು ಇಷ್ಟು ಬೆಳ್ಳಗೆ ಇರುತ್ತಿರಲಿಲ್ಲ’.‘ಎಂತ ಮಣ್ಣಾಂಗಟ್ಟಿ ಬೆಳ್ಳಗೆ. ಇಲ್ಲಿ ಇವು ತೆಂಗಿನ ಒಣಗರಿ ತಿಂದು ಬದುಕಬೇಕು. ಎಂತ ಸಾವು’ ಆಕೆ ಕೈಯಲ್ಲಿದ್ದ ಶ್ಯಾವಿಗೆಯನ್ನು ತಿನ್ನಿಸುತ್ತಾಳೆ. + +‘ಸ್ವಲ್ಪ ಆಡು ಮಾಂಸವನ್ನೂ ಕೊಟ್ಟುಬಿಡು. ನೀನು ಯಾಕೆ ಅವುಗಳನ್ನು ಇಷ್ಟಪಟ್ಟು ಸಾಕುತ್ತಿರುವೆ ಎಂದು ಅವುಗಳಿಗೂ ಗೊತ್ತಾಗಲಿ’ ನಾನು ಕಟಕಿಯಾಡುತ್ತೇನೆ. + +‘ನನ್ನ ಆಡುಗಳನ್ನು ಯಾರಿಗೂ ಕುಯ್ಯಲು ಬಿಡುವುದಿಲ್ಲ. ಒಂದೋ ನಾನು ಸಾಯಬೇಕು. ಇಲ್ಲಾ ಅವುಗಳು ಸಾಯಬೇಕು. ಅದಲ್ಲದೆ ಯಾವ ನರಮಾಣಿಯೂ ಅವುಗಳನ್ನು ತಿನ್ನಲು ಬಿಡುವುದಿಲ್ಲ’. + +ಪ್ರತಿ ಮಾತುಕತೆಯ ಕೊನೆಯಲ್ಲೂ ಇವಳ ಬಾಯಿಂದ ಬರುವ ಸಾವೆಂಬ ಶಬ್ದ! + +ನಾನು ಜುಬೇದಾಳ ಮುಖವನ್ನು ನೋಡುತ್ತೇನೆ. ತನ್ನ ಬಾಯಿಂದ ಬಂದ ಸಾವು ಎಂಬ ಪದಕ್ಕೂ ಅದು ಕೇಳಿದ ನನ್ನಲ್ಲಿ ಉಂಟುಮಾಡಿದ ಅರ್ಥಕ್ಕೂ ಅಂತಹ ಸಂಬಂಧವೇನೂ ಇಲ್ಲ ಎನ್ನುವಂತಹ ಅವಳ ಮುಖಭಾವ. ವರ್ಷ ಬಹುಶಃ ಅರವತ್ತು ಕಳೆದಿದ್ದರೂ ಗೊತ್ತಾಗದ ಹಾಗಿರುವ ಅವಳ ಮುಖದ ಎಂದಿನ ಮಂದಹಾಸ. ಬಹುಶಃ ಮದುವೆಯಾದ ಇಬ್ಬರು ಗಂಡಸರೂ ಇವಳ ಕಣ್ಣಮುಂದೆ ಸಾವಿಗೀಡಾಗಲಿಲ್ಲ. ತೀರಿಹೋದ ಅವರ ಮೃತದೇಹಗಳನ್ನೂ ಇವಳಿಗೆ ನೋಡಲಾಗಿಲ್ಲ. ಹಾಗಾಗಿ ಸಾವು ಎಂದರೆ ಬಹುಶಃ ಕಣ್ಣಿಂದ ಮರೆಯಾಗುವುದು ಎಂದು ಮಾತ್ರ ತಿಳಿದುಕೊಂಡ ಹಾಗಿದೆ ಇವಳು. ಬಹುಕಾಲವೇನೂ ಜೊತೆಗೆ ಇರದ ಕಟ್ಟಿಕೊಂಡ ಇಬ್ಬರು ಗಂಡಸರು ಒಬ್ಬರ ನಂತರ ಒಬ್ಬರಂತೆ ಶಾಶ್ವತವಾಗಿ ದೂರ ಹೋದರು ಎಂಬ ಒಂದು ಸಣ್ಣ ವಿಷಾದದ ಎಳೆಯೊಂದು ಮಾತ್ರ ಇವಳನ್ನು ಕೊರೆಯುತ್ತಿರಬಹುದು ಅಷ್ಟೇ ಅನಿಸಿತ್ತು. + +ಒಂದು ಸಂಜೆಗತ್ತಲಲ್ಲಿ ಸಣ್ಣ ಕೂರು ಮಣೆಯಲ್ಲಿ ನಾವಿಬ್ಬರೂ ಎದುರುಬದುರಾಗಿ ಕೂತು ಹೇಳಿಕೊಂಡ ನಮ್ಮಿಬ್ಬರ ಕಥೆಗಳು. ಬೇರೆ ಯಾರದೋ ಬದುಕಲ್ಲಿ ನಡೆದ ಕಥೆಯೆಂಬಂತೆ ಇಬ್ಬರೂ ನಿರ್ಲಿಪ್ತರಾಗಿ ಹೇಳಿಕೊಂಡ ಬಗೆಯೂ ಚೆನ್ನಾಗಿತ್ತು. ಬಾಲ್ಯದಲ್ಲೇ ಕಳೆದುಹೋಗಿ ಆನಂತರ ಅಚಾನಕ್ಕಾಗಿ ಭೇಟಿಯಾದ ಒಡಹುಟ್ಟುಗಳಿಬ್ಬರು ಅದುವರೆಗೆ ನಡೆದದ್ದನ್ನು ಸಂಕ್ಷಿಪ್ತವಾಗಿ ಒಬ್ಬರಿಗೊಬ್ಬರು ಒಪ್ಪಿಸಿದಂತಿತ್ತು ಆವತ್ತಿನ ಮಾತುಗಳು. + + + +‘ನೀನು ಯಾಕೆ ಉಳ್ಳಾಳದ ಕಡಲ ತೀರದಿಂದ ಇಲ್ಲಿ ಬಂದೆ?’ ನಾನು ಆವತ್ತು ಕೇಳಿದ್ದೆ‘ಬರಬೇಕಾದಂತಹ ಸಂಗತಿಗಳು ಬದುಕಿನಲ್ಲಿ ನಡೆದವು, ಹಾಗಾಗಿ ಬಂದೆ’ ಎಂದು ಒಗಟಿನಂತೆ ಉತ್ತರಿಸಿದವಳು, ನನ್ನನ್ನೂ ಅದೇ ಪ್ರಶ್ನೆ ಕೇಳಿದ್ದಳು.‘ನಾನು ಸರಕಾರೀ ಕೆಲಸಕ್ಕಾಗಿ ಬಂದೆ’ ಎಂದಿದ್ದೆ.‘ಎಂತ ಮಣ್ಣಾಂಗಟ್ಟಿ. ಸರಕಾರೀ ಕೆಲಸ ಅಲ್ಲಿಯೂ ಇಲ್ಲವಾ. ಅದಕ್ಕಾಗಿ ಇಲ್ಲಿ ಬಂದು ಸಾಯಬೇಕಾ?’ + +‘ಹೌದು ಸಾಯಲಿಕ್ಕೇ ಬಂದಿರುವುದು’ ನಾನು ಧ್ವನಿಯಲ್ಲಿನ ಸಂಕಟವನ್ನು ಅಡಗಿಸಿಡಲಾಗದೇ ಅಂದು ಬಿಟ್ಟಿದ್ದೆ. ಜೊತೆಗೆ ಆ ಜಾಗದ ಚಿತ್ರವನ್ನೂ ಅವಳ ಮುಖದ ಮುಂದೆ ಮೊಬೈಲು ತೆರೆದಿಟ್ಟು ತೋರಿಸಿದ್ದೆ. + +ದ್ವೀಪದ ಮೂಗಿನ ಹಾಗಿರುವ ತುದಿ. ಮೂಗಿಗೆ ತಾಗಿಕೊಂಡೇ ಅಬ್ಬರಿಸುತ್ತಿರುವ ಕಡಲು ಚಿತ್ರದಲ್ಲಿ ಸ್ತಬ್ದವಾಗಿತ್ತು, ಹಾಲಿನಂತೆ ಚೆಲ್ಲಿಕೊಂಡಿರುವ ಬಿಳಿಯ ಮರಳು. ಬಿಳಿಯ ಮರಳಿನ ಮೇಲೆ ಒಂಟಿ ತೆಂಗಿನ ನೆರಳು. ದೂರಕ್ಕೆ ಹಬ್ಬಿರುವ ನೀಲ ಕಡಲು. ಅದಕ್ಕಿಂತಲೂ ಕಡು ನೀಲ ವರ್ಣದಲ್ಲಿ ಹೊಳೆಯುತ್ತಿರುವ ಸ್ಫಟಿಕ ಲಗೂನ್ ಸರೋವರ. ಕಡಲೂ ಸರೋವರವೂ ಸೇರುವ ಜಾಗದಲ್ಲಿ ತುಕ್ಕು ಹಿಡಿದು ಮಗುಚಿಕೊಂಡು ನಿಂತಿರುವ ಸಿಮೆಂಟು ಸಾಗಿಸುವ ಸರಕಿನ ಹಡಗು. + +ಆ ಸರಕಿನ ಹಡಗನ್ನು ನೋಡಿದ ಅವಳು ಕೊಂಚ ಮ್ಲಾನವಾಗಿದ್ದಳು. ಆಮೇಲೆ ಸುಧಾರಿಸಿಕೊಂಡಳು. “ಈ ದ್ವೀಪದವರು ಹೇಳಿದ ಆ ಹಡಗಿನ ಕತೆ ನೀನು ಕೇಳಿರಬಹುದಲ್ಲಾ’ ಎಂದು ಕೇಳಿದ್ದಳು. + +‘ಅದು ಕೇಳಿದ್ದೇನೆ ಮತ್ತು ಆ ಕಪ್ತಾನನ ಮೋಹದ ಹೆಂಡತಿ ನೀನೇ ಎಂದೂ ಗೊತ್ತಿದೆ’ ಎಂದು ಹೇಳಿದ್ದೆ. + +‘ಸರಿ ಇಲ್ಲಿ ಯಾರಿಗೂ ಗೊತ್ತಿಲ್ಲದ ಇನ್ನೊಂದು ಸಂಗತಿ ನಿನಗೆ ಹೇಳಲಾ?’ ಎಂದು ಕೇಳಿದ್ದಳು. + +‘ಆ ಕಪ್ತಾನ ನನ್ನ ಮೊದಲ ಗಂಡನಲ್ಲ. ಅದಕ್ಕೂ ಮೊದಲು ಒಬ್ಬರಿದ್ದರು. ಅವರೂ ಹಡಗಲ್ಲಿ ಕೆಲಸ ಮಾಡುತ್ತಿದ್ದರು. ಎಲ್ಲೋ ದೂರದಲ್ಲಿ ಅರಬೀಸ್ತಾನದ ಬಳಿ ಕಡಲುಗಳ್ಳರು ಅವರನ್ನು ಎತ್ತಿಕೊಂಡು ಹೋದವರು ಅವರ ದೇಹವನ್ನು ಎಲ್ಲೋ ಕಡಲಲ್ಲಿ ಬಿಸಾಕಿದ್ದರು. + +ಅವರ ಸಾವಿನ ವಿಷಯವನ್ನು ಹೇಳಲು ಇವರು ಉಳ್ಳಾಳಕ್ಕೆ ಬಂದಿದ್ದರು.ಆಮೇಲೆ ನಾನು ಆರೂವರೆ ತಿಂಗಳು ಮರೆಯಲ್ಲಿದ್ದೆ.ಆಮೇಲೆ ಆರು ತಿಂಗಳಿಗೆ ಇವರು ಪುನಃ ಬಂದರು. + +ಬಂದವರು, ‘ನನ್ನನ್ನು ನಿಖಾ ಮಾಡಿಕೊಂಡು ದ್ವೀಪಕ್ಕೆ ಬರುತ್ತಾಳಾ’ ಎಂದು ನನ್ನ ತಂದೆಯವರ ಬಳಿ ಕೇಳಿಸಿದರು.ನಾನು ಏನೂ ಹೇಳಲಿಲ್ಲ.ತಂದೆಯವರು ‘ಆಗಲಿ’ ಎಂದರು. + +ನಿಖಾ ಆದಮೇಲೆ ಮಂಗಳೂರು ಬಂದರಿನಿಂದ ಹಡಗು ಹತ್ತಿ ಒಂದು ಹಗಲು ಒಂದು ಇರುಳು ಕಡಲಲ್ಲಿ ಕಳೆದು ಇಲ್ಲಿಗೆ ಬಂದೆ. + +ಹಾಗೆ ತಂದು ಬಿಟ್ಟವರು ಒಂದು ತಿಂಗಳಲ್ಲಿ ಕಪ್ತಾನನ ಕೆಲಸಕ್ಕೆ ಎಂದು ಕೊಚ್ಚಿಗೆ ಹೋದರು. ಅದಾಗಿ ಒಂದು ಮಳೆಗಾಲದ ಇರುಳು ಬಿರುಗಾಳಿಯಂತೆ ಬಂದವರು ಏನೂ ಹೇಳದೆ ತಬ್ಬಿಕೊಂಡು ಅಳಲು ಶುರುಮಾಡಿದರು. ಅವರಿಗೆ ನನ್ನನ್ನು ಬಿಟ್ಟು ಕಡಲಲ್ಲಿ ಒಬ್ಬನೇ ಸಂಚರಿಸಿಕೊಂಡಿರುವುದು ಆಗುತ್ತಿಲ್ಲವಂತೆ. ಅದನ್ನೇ ಮತ್ತೆ ಮತ್ತೆ ಹೇಳಿ ಅಳುತ್ತಿದ್ದರು. + +ಬೆಳಗ್ಗೆ ಅವರನ್ನು ದ್ವೀಪದ ಪೋಲೀಸರು ಎತ್ತಿಕೊಂಡು ಕೊಚ್ಚಿಗೆ ಕರೆದುಕೊಂಡು ಹೋದರು.ಅವರಿಂದಾಗಿ ಹಡಗು ಮುಳುಗಿತಂತೆ.ಕೊಚ್ಚಿಯಲ್ಲಿ ಇವರೂ ತಮ್ಮನ್ನು ತಾವು ಕೊಂದುಕೊಂಡರು.ಇವರ ದೇಹವೂ ನೋಡಲು ಸಿಗಲಿಲ್ಲ. + +ನಾನು ಮತ್ತೆ ಆರೂವರೆ ತಿಂಗಳು ಮರೆಯಲ್ಲಿದ್ದೆ. ಆಮೇಲೆ ಯಾವ ಗಂಡಸರ ಮುಖವನ್ನೂ ನಾನು ನೋಡಲಿಲ್ಲ. ಈ ದ್ವೀಪದ ಗಂಡಸರೂ ಒಳ್ಳೆಯವರು. ಅವರೂ ನನ್ನ ಮುಖ ನೋಡಲಿಲ್ಲ. ಹಡಗು ಹತ್ತಿ ಊರಿಗೆ ಹೋಗಲೂ ಮನಸ್ಸು ಬರಲಿಲ್ಲ. + +ಆಡು ಸಾಕಿದೆ. ಬಾಯಿಬಾರದ ಅವುಗಳು ಪ್ರೀತಿಸಿದವು. ಆಡುಗೆ ಮಾಡಿ ಹಸಿದು ಬಂದವರಿಗೆ ಊಟ ಹಾಕಿದೆ. ನಿನ್ನ ಹಾಗೆಯೇ ಅವರೂ ಇಷ್ಟಪಟ್ಟರು. + +‘ಇದು ನನ್ನ ಕಥೆ. ಈಗ ನಿನ್ನ ಸಂಕಟದ ಕಥೆ ಹೇಳು’ ಅಷ್ಟೇನೂ ಆಸಕ್ತಿ ಇಲ್ಲದವಳಂತೆ ಕೇಳಿದಳು.ನನ್ನ ಕಥೆ ಕೇಳಿದರೆ ಇವಳೂ ನಗಬಹುದು ಅನಿಸಿತು. + +ನಡುವಯಸ್ಕನೊಬ್ಬನ ಅಷ್ಟೇನೂ ನೈತಿಕವಲ್ಲದ ನಡುಗಾಲದ ಅನುರಾಗ! + +ಅವಳು ಬದುಕಿದ್ದಿದ್ದರೆ ಅದನ್ನು ವಿವರಿಸಲೂ ಪುರುಸೊತ್ತಿಲ್ಲದ ಹಾಗೆ ಆ ಅನುರಾಗದಲ್ಲಿ ಮುಳುಗಿರುತ್ತಿದ್ದೆ. ಈಗ ಹೇಳಿದರೆ ಅವಳು ಬದುಕಿ ಬರುವುದೂ ಇಲ್ಲ. ಒಂದು ಇರುಳಿನ ಮುಗಿಯದ ರಾಗದ ಹಾಗಿದ್ದ ಆ ಅನುರಾಗದ ಹಾಗೆ ಇನ್ನೇನಾದರೂ ಉಳಿದಿದ್ದರೆ ಅದು ಸ್ವರ್ಗವೂ ಲೋಕವೂ ಸೇರುವ ಹಾಗೆ ತೋರುವ ಈ ದ್ವೀಪದ ಮೂಗಿನ ತುದಿಯ ಹಾಗಿರುವ ಬೆಳ್ಳಗಿನ ಮರಳಹಾಸಿನ ಮೇಲೆ ಬಿದ್ದಿರುವ ತೆಂಗಿನ ನೆರಳಲ್ಲಿ ನಕ್ಷತ್ರಗಳ ನೋಡುತ್ತಾ ಒಂದು ಹುಣ್ಣಿಮೆಯ ಇರುಳು ತೀರಿಹೋಗುವುದು! + +ಆದರೆ ಇದನ್ನೆಲ್ಲಾ ಈ ಅಕ್ಟೋಪಸ್ ಈಡುಗಾರ್ತಿ ಉಲ್ಲಾಳದ ಹಳೆಯ ಸುಂದರಿ ಜುಬೇದಾಳಿಗೆ ಹೇಗೆಂದು ವಿವರಿಸುವುದು. + +‘ಬಿಟ್ಟಾಕು ಜುಬೇದಾ, ನನ್ನದು ನಿನ್ನ ಹಾಗೆ ಉದ್ದದ ಕಥೆಯಲ್ಲ. ತುಂಬ ಅಂದರೆ ತುಂಬಾ ಸಣ್ಣದು. ಎರಡೇ ಪದದಲ್ಲಿ ಹೇಳಬಹುದು. ಮುಂದೆ ಯಾವತ್ತಾದರೂ ಹೇಳುತ್ತೇನೆ’ ಎಂದು ಎದ್ದು ನಿಂತಿದ್ದೆ. + +‘ನಿನಗೆ ಮರ್ಲು.’ ಅವಳು ಗೊಣಗಿದ್ದಳು. + +‘ಹೌದು ನನಗೆ ಮರಳು, ಎಷ್ಟು ಕೂಡಿಸಿದರೂ ಎರಡೇ ಪದ’ ಎದ್ದು ನಿಂತವನು ಮೂಲೆಗೆ ನಿಲ್ಲಿಸಿದ್ದ ಸೈಕಲ್ಲು ಹತ್ತಿದ್ದೆ. + +********* + +ಜುಬೇದಾ ಕುದಿವ ನೀರಲ್ಲಿ ಮುಳುಗಿಸಿ ತಂದ ಆ ಅಕ್ಟೋಪಸ್ಸಿನ ದೇಹ ಅಚ್ಚರಿಯಾಗುವಂತೆ ಹೊಸಬಣ್ಣಗಳನ್ನು ಪಡೆದುಕೊಂಡಿದೆ. ಈ ಅಕ್ಟೋಪಸ್ಸುಗಳು ಕಡಲಲ್ಲಿ ಇರುವಾಗಲೂ ಬಣ್ಣಗಳನ್ನು ಬದಲಿಸಿಕೊಳ್ಳುತ್ತಲೇ ಇರುತ್ತವೆ. ತನ್ನನ್ನು ಕಬಳಿಸಲು ಬರುವ ಕಡಲಿನ ಇತರ ಜೀವಿಗಳಿಗೆ ಚಳ್ಳೆಹಣ್ಣು ತಿನ್ನಿಸಲು ನೀರಿನ ಬಣ್ಣ, ಹವಳ ಜೀವಿಗಳ ಬಣ್ಣ, ಬಂಡೆಗಳ ಬಣ್ಣ, ತಾನು ಕಬಳಿಸಲು ಹೊರಟ ಕಡಲ ಮಿಕಗಳಿಗೆ ಗೊತ್ತಾಗದ ಹಾಗೆ ಅವುಗಳದೇ ಬಣ್ಣ. ಅಚ್ಚರಿ ಎಂದರೆ ಇರುಳ ಹೊತ್ತಲ್ಲಿ ಕಡಲ ನೀರಲ್ಲಿ ಜೊಂಡಿನ ಹಾಗೆ ತೇಲುತ್ತ ಅಥವಾ ಹವಳ ಬಂಡೆಗಳನ್ನು ಮಗುವಿನ ಹಾಗೆ ಅಪ್ಪಿಕೊಂಡು ನಿದ್ದೆ ಹೋಗುವ ಇವುಗಳು ಕನಸನ್ನೂ ಕಾಣುತ್ತವಂತೆ. ಆ ಕನಸಿನ ದೃಶ್ಯಗಳಿಗನುಗುಣವಾಗಿ ನಿದ್ದೆ ಹೋಗಿರುವ ಇವುಗಳ ಮೈಯ್ಯ ಬಣ್ಣಗಳೂ ಬದಲಾಗುತ್ತಿರುತ್ತವಂತೆ. ಹಾಗೇ ಸತ್ತಮೇಲೂ ಕೂಡಾ ಅವುಗಳ ದೇಹದ ಬಣ್ಣ ಬದಲಾಗುತ್ತವೆ. + +ಅದನ್ನು ನೋಡಲೆಂದೇ ನಾನು ಜುಬೇದಾಳಿಗೆ ಅದನ್ನು ಕುದಿವ ನೀರಲ್ಲಿ ಮುಳುಗಿಸಿ ತರಲು ಹೇಳಿದ್ದೆ. ಅಂದುಕೊಂಡಂತೆಯೇ ಅಕ್ಟೋಪಸ್ಸಿನ ಅರೆಬೆಂದ ದೇಹ ಹೊಸತೊಂದು ಬಣ್ಣದಿಂದ ಹೊಳೆಯುತ್ತಿತ್ತು. ಕಡಲ ತಿಳಿನೀಲಿಯೂ, ಆಕಾಶದ ಘನನೀಲಿಯೂ, ಹವಳ ದಿಬ್ಬಗಳ ನಸುಗೆಂಪೂ ಸೇರಿಕೊಂಡ ಒಂದು ಅಪೂರ್ವ ಬಣ್ಣ ಮೆಲ್ಲಗೆ ಮಂಕಾಗುತ್ತಿತ್ತು. + +ಜುಬೇದಾಳು ಮುಂದಿನ ಕ್ರಿಯೆ ಶುರುಮಾಡಿದಳು. ಅಂಗಳದ ಮೂಲೆಯಲ್ಲಿ ಒರಗಿಸಿಟ್ಟಿದ್ದ ತೆಂಗಿನ ಸಿಪ್ಪೆಯಿಂದ ಬಡಿದು ನಾರು ಬಿಡಿಸುವ ಮರದ ಬಲಿಷ್ಟ ದೊಣ್ಣೆಯಿಂದ ಅದರ ಮೈಯನ್ನು ಬಡಿದು ಮೃದು ಮಾಡಲು ತೊಡಗಿದಳು. ಸೂರ್ಯ ಕಂತಿದ ಮೇಲೆ ಉಳಿದ ಸಣ್ಣಬೆಳಕಿನಲ್ಲಿ ಜುಬೇದಾ ಅದರ ದೇಹದ ಮೇಲೆ ನುರಿತ ಕಲಾವಿದೆಯಂತೆ ಬಾಯಿಂದ ಸಣ್ಣ ಸದ್ದು ಹೊರಡಿಸುತ್ತಾ ಮೆಲ್ಲಗೆ ಅದರ ದೇಹ ಛಿದ್ರವಾಗದ ಹಾಗೆ ಬಡಿಯುತ್ತಿದ್ದಳು. ಕತ್ತಲಾದಂತೆನಿಸಿ ನಾನು ಮೂಲೆಯಲ್ಲಿದ್ದ ದೀಪ ಹೊತ್ತಿಸಿದೆ. ಬಡಿಯುತ್ತಿದ್ದ ಹಾಗೆ ಆ ಬೆಳಕಿನಲ್ಲಿ ಅಕ್ಟೋಪಸ್ಸಿನ ತೀರಿ ಹೋದ ಮೈಯಲ್ಲಿ ಒಂದರ ನಂತರ ಒಂದು ಬಣ್ಣಗಳು ಬದಲಾಗುತ್ತಿದ್ದವು. + +ಕನಸಿನಲ್ಲಿ ಬದಲಾಗುವ ಬಣ್ಣಗಳು ಭೇಟೆಯಾಡುವ ಹೊತ್ತಲ್ಲೂ, ಮಿಕವಾಗುವುದರಿಂದ ಬಚಾವಾಗುವ ಹೊತ್ತಲ್ಲೂ, ಈಗ ತೀರಿ ಹೋದ ದೇಹದ ಮೇಲೆ ಪ್ರಹಾರವಾಗುವ ಹೊತ್ತಲ್ಲೂ ಬಂದು ಹೋಗುತ್ತಿದ್ದವು. ಇದು ಯಾವುದನ್ನೂ ಗಮನಿಸುವ ಅಗತ್ಯವೂ ಇಲ್ಲ, ವ್ಯವಧಾನವೂ ಇಲ್ಲ, ಈ ಯಾವುದರ ಒಳಾರ್ಥಗಳನ್ನು ಅರಿಯುವುದರಿಂದ ನಯಾಪೈಸೆಯ ಉಪಯೋಗವೂ ಇಲ್ಲ, ಸತ್ತು ಹೋಗಿರುವ ಅಕ್ಟೋಪಸ್ಸಿನ ಜೀವನದಲ್ಲಿ ಈ ಯಾವುದಕ್ಕೂ ಯಾವ ಅರ್ಥವೂ ಇಲ್ಲ ಮತ್ತು ಇದು ಯಾವುದೂ ಅದನ್ನು ತನ್ನ ಈಟಿಯಿಂದ ರಕ್ಷಿಸಲೂ ಇಲ್ಲ ಎಂಬ ಭಾವದಲ್ಲಿ ಜುಬೇದಾ ಅದನ್ನು ಬಡಿಯುತ್ತಾ ಹದಗೊಳಿಸುತ್ತಿದ್ದಳು. + +ನಾನು ಯಾಕೋ ಖಿನ್ನನಾಗುತ್ತಿದ್ದೆ. ಅವಳು ಬದುಕಿರಬೇಕಿತ್ತು ಅನ್ನಿಸುತ್ತಿತ್ತು. ಅವಳು ಮಗುವಾಗಿದ್ದಾಗ, ಬದುಕಿದ್ದಾಗ, ಅನುರಾಗದಲ್ಲಿದ್ದಾಗ, ಇದ್ದಕ್ಕಿದ್ದಂತೆ ನೋವು ಬಂದು ತಬ್ಬಿಕೊಂಡಾಗ, ದೇಹ ಛಿದ್ರಛಿದ್ರಗೊಂಡಾಗ, ಇನ್ನು ಬದುಕಲಾರೆ ಅನಿಸಿದಾಗ, ಮರಣ ಬಂದು ಮಗುವಿನಂತೆ ಅವಳನ್ನು ಎತ್ತಿಕೊಂಡಾಗಲೂ ಹೀಗೇ ಆಕಾಶದ ಬಣ್ಣ, ಕಡಲ ಬಣ್ಣ, ಅವಳು ಯಾವಾಗಲೂ ಹೆದರುತ್ತಿದ್ದ ಸಂಜೆಯ ಮೋಡಗಳ ಬಣ್ಣ ಕ್ರೂರ ರಾಗವೊಂದರ ಆರೋಹಣ ಅವರೋಹಣದಂತೆ ಬದಲುಗೊಳ್ಳುತ್ತಾ ಅವಳ ಮೈಯಲ್ಲಿ ಸಂಚರಿಸುತ್ತಿದ್ದಿರಬಹುದು ಅನಿಸುತ್ತಿತ್ತು. + + + +‘ಜುಬೇದಾ, ಹೊರಡುತ್ತೇನೆ. ಸೈಕಲ್ಲು ಇಲ್ಲೇ ಇರಲಿ’ ಎಂದು ಕಡಲ ಹಾದಿಯಗುಂಟ ನಡೆಯತೊಡಗಿದೆ. ದೂರದಲ್ಲಿ ದ್ವೀಪದ ಮೂಗಿನಂತಹ ತುದಿಯ ಮೇಲೆ ಆಕಾಶದಲ್ಲಿ ಅರೆ ಬಾಗಿರುವ ಸಲಾಕೆಯಂತಹ ಚಂದ್ರ. ಅದಕ್ಕೆ ತಾಗಿಕೊಂಡಂತೆಯೇ ಒಂದು ನಕ್ಷತ್ರ. ಸಣ್ಣಗೆ ಮಂಕಾಗಿ ಕಾಣಿಸುತ್ತಿರುವ ಬಿಳಿಯ ಮರಳ ಹಾಸು ಮತ್ತು ಬಗ್ಗಿ ನಿಂತುಕೊಂಡಿರುವ ಅದೇ ಒಂಟಿ ತೆಂಗಿನ ಮರ. + +ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು. \ No newline at end of file diff --git a/Kenda Sampige/article_288.txt b/Kenda Sampige/article_288.txt new file mode 100644 index 0000000000000000000000000000000000000000..e7d0f9c26d5cc6e82de58d9e2ecb1ef82cbbed5a --- /dev/null +++ b/Kenda Sampige/article_288.txt @@ -0,0 +1,57 @@ + + +ಎರಡು ವರುಷಗಳ ಹಿಂದೆ ಸತ್ಯಾಗ್ರಹ ಮಾಡಿ ಜೈಲು ಸೇರಿದ್ದ ಫ್ರಾನ್ಸಿಸ್ಸನು ಜೈಲು ಕೋಣೆಯೊಂದರಲ್ಲಿ ಬಿದ್ದುಕೊಂಡಿದ್ದಾನೆ. ರಾತ್ರಿ ಹನ್ನೊಂದು ಘಂಟೆ ಆಗಿರಬಹುದು. ಒಂದೆಡೆ ನುಸಿ – ತಗಣೆಗಳ ಕಾಟ; ಇನ್ನೊಂದೆಡೆ ತನ್ನ ಭಾವೀ ಜೀವನದ ಚಿಂತನೆ; ಇವುಗಳಿಂದ ಅವನಿಗೆ ನಿದ್ರೆಯೇ ಹತ್ತಲಿಲ್ಲ. ಬಹು ಸಮಯದವರೆಗೆ ಆಚೆ – ಈಚೆ ಹೊರಳಾಡಿದನು. ತಂಪಾದ ಗಾಳಿಯು ಮೆಲ್ಲನೆ ಬೀಸತೊಡಗಿದ್ದುದರಿಂದ ಇನ್ನಾದರೂ ನಿದ್ರಾಂಗನೆಯು ಒಲಿದಾಳು ಎಂದು ಭಾವಿಸಿ, ಕಣ್ಣುಗಳನ್ನು ಮುಚ್ಚಿಕೊಂಡು ಬಿದ್ದುಕೊಂಡನು. + +****** + +ಇಂದೀಗ ಫ್ರಾನ್ಸಿಸ್ಸನು ಬಿಡುಗಡೆ ಹೊಂದಿ ಊರ ಮೈದಾನಿನತ್ತ ಬರುತ್ತಿದ್ದಾನೆ. ಅಂದು ಸರಕಾರದ ವಿರುದ್ಧ ಭಾಷಣವೀಯಲು ಹೂಮಾಲೆಗಳಿಂದ ಅಲಂಕೃತನಾಗಿ ಜನರ ಜಯ ಜಯಕಾರದೊಡನೆ ಜನಸಂದಣಿಯ ಮಧ್ಯದಲ್ಲಿ ಅರಳಿದ ಮುಖದಿಂದ ಮೈದಾನಿನತ್ತ ತೆರಳಿದ್ದ ಮಾರ್ಗದಲ್ಲಿಯೆ ಇಂದು ಕಂದಿದ ಮುಖದಿಂದ ಒಬ್ಬಂಟಿಗನಾಗಿ ಹೋಗುತ್ತಿದ್ದಾನೆ. ಅವನನ್ನು ಕಂಡು ಮಾತಾಡಿಸುವವರಿಲ್ಲ. ಅವನ ತ್ಯಾಗಕ್ಕೆ ತಣಿದ ಒಂದೇ ಒಂದು ವ್ಯಕ್ತಿ ಕಂಡುಬರುವುದಿಲ್ಲ. ಒಮ್ಮೆ ಫ್ರಾನ್ಸಿಸ್ಸನು ತಲೆಯೆತ್ತಿ ನಾಲ್ಕು ಕಡೆಗೂ ದಿಟ್ಟಿಸಿದನು. ಇಲ್ಲ; ಒಂದೇ ಒಂದು ಪ್ರೇಮದೃಷ್ಟಿ ಅವನನ್ನು ಇದಿರುಗೊಳ್ಳಲಿಲ್ಲ. ಅವನಿಂದ ತಡೆಯಲಿಕ್ಕಾಗಲಿಲ್ಲ. ಊರ ಮುಂದಾಳು, ಪ್ರಸಿದ್ಧ ದೇಶ ಪ್ರೇಮಿ; ಲಕ್ಷಾಧಿಪತಿ, ವಿ. ಪಿ. ರಾಯರ ಮನೆಯು ಸಮೀಪಿಸಿತು. ನೆಟ್ಟಗೆ ಅವರ ಮನೆಯನ್ನು ಸೇರಿದನು. ಫ್ರಾನ್ಸಿಸ್ಸನ ಆಗಮನವು ಪತ್ರಿಕೆಯೊಂದನ್ನೋದುತ್ತಾ ಕುಳಿತಿದ್ದ ರಾಯರಿಗೆ ತಿಳಿದರೂ ತಿಳಿಯದವನಂತೆ ನಟಿಸತೊಡಗಿದರು. ತಲೆಯನ್ನು ಬಗ್ಗಿಸಿಕೊಂಡು ಪತ್ರಿಕೆಯನ್ನು ಓದುವುದರಲ್ಲೇ ಮಗ್ನನಾಗಿದ್ದ ರಾಯರನ್ನು ಫ್ರಾನ್ಸಿಸ್ಸನೇ ಮಾತಾಡಿಸಬೇಕಾಯಿತು. + +‘ನಮಸ್ಕಾರ ರಾಯರೇ.’ + +‘ಯಾರು?’ + +‘ನಾನು ಫ್ರಾನ್ಸಿಸ್ಸ್’ + +‘ಏಕೆ ಬಂದೆ?’ + +‘ತಮ್ಮನ್ನು ಕಾಣಲು.’ + +‘ಇಗೋ ಸರಿಯಾಗಿ ನೋಡು.’ + +‘ತಮಗೆ ನನ್ನ ಗುರುತು ಹತ್ತಲಿಲ್ಲವೆಂದು ಕಾಣುತ್ತದೆ. ನಾವು ಅಂದು ತಮ್ಮ ಸಲಹೆಯಂತೆ ಸತ್ಯಾಗ್ರಹ ಮಾಡಿದ್ದ ಫ್ರಾ….!’ + +‘ನನ್ನ ಸಲಹೆಯಂತೆ! ತಾನೂ ಒಬ್ಬ ಕಾಂಗ್ರೆಸ್ ಧುರೀಣನೆನಿಸಿಕೊಂಡು ಕೀರ್ತಿಗಳಿಸಬೇಕೆಂಬ ಅಪೇಕ್ಷೆಯಿಂದ ಎಂದರೆ ನಾಚಿಕೆಯಾಗುತ್ತದೆಯೇ?’ + +‘ರಾಯರೇ, ಇಂತಹ ಮಾತುಗಳು ತಮ್ಮಂತಹರ ಬಾಯಿಯಿಂದ ಬರತಕ್ಕವಲ್ಲ. ನೀನು ಮುಂದೆ ಹೋಗು ನಾನು ನಿನಗಿಂತ ಮುಂದಾಗಿ ಸತ್ಯಾಗ್ರಹಮಾಡಿ ಜೈಲು ಸೇರಿದರೆ ಚಳವಳಿಯೇ ನಿಂತು ಹೋಗುವುದು’ ಎಂದು ಪುಸಲಾಯಿಸಿ, ಸಾರ್ವಜನಿಕರೆದುರಲ್ಲಿ ತಾನೊಬ್ಬ ದೊಡ್ಡ ದೇಶ ಪ್ರೇಮಿಯೆಂದು ತೋರ್ಪಡಿಸುತ್ತಾ ಪರಿಸ್ಥಿತಿಯ ವಿಪರೀತಕ್ಕೆ ಕಾಲಿಟ್ಟೊಡನೆ ಬಾಲ ಮಡಚಿ ಕುಳಿತುಬಿಟ್ಟಿರಿ. ನಿಮ್ಮಂತಹ ಗೋಮುಖ – ವ್ಯಾಘ್ರರಿಂದಲೇ ಭಾರತಕ್ಕೆ ಈ ದುರ್ಗತಿಯೆಂದು ತಿಳಿಯಿರಿ. ನಿಮ್ಮನ್ನು ದೇಶ – ಪ್ರೇಮಿಗಳೆಂದರೆ ಹೆತ್ತ ತಾಯಿಯನ್ನು ಕಯ್ಯಾರೆ ಕೊಂದ ಮಗನನ್ನು ಮಾತೃ – ಪ್ರೇಮಿ ಎಂದಂತಾದೀತು. ನಿಮ್ಮೋರ್ವರ ಸ್ವಾರ್ಥಕ್ಕೋಸುಗ ನಿಮ್ಮನ್ನು ನಂಬಿಕೊಂಡಿರುವ ಜನ ಸಾಮಾನ್ಯರನ್ನು ವಂಚಿಸಲು….’ + +‘ರಾಸ್ಕಲ್!’ ರಾಯರು ಕುಳಿತಲ್ಲಿಂದ ಧಡಕ್ಕನೆ ಎದ್ದು ನಿಂತರು. ‘ಹೊರಡಿಲ್ಲಿಂದ. ಇಲ್ಲದಿದ್ದರೆ ದೂಡಿಸುತ್ತೇನೆ ಬೀದಿಗೆ!’ + +ಫ್ರಾನ್ಸಿಸ್ಸನು ಅಲ್ಲಿಂದ ಹೊರ ಹೊರಡುತ್ತಾ ‘ಭಾರತಾಂಬೇ, ಇದು ನಿನ್ನ ದೌರ್ಭಾಗ್ಯ’ ಎಂದವನೇ ನಿಟ್ಟುಸಿರೊಂದನ್ನು ಬಿಟ್ಟನು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ದಿನಂಪ್ರತಿ ತಪ್ಪದೆ ಬರುತ್ತಿದ್ದ ಮೈದಾನವನ್ನು ಫ್ರಾನ್ಸಿಸ್ಸನು ಎರಡು ವರುಷಗಳ ನಂತರ ಪುನಹ ಪ್ರವೇಶಿಸುತ್ತಿದ್ದಾನೆ. ತನ್ನ ಜೀವನದ ಒಂದು ವಿಶೇಷ ಸ್ಥಳವಾದ ಆ ‘ಸೋಫಾ’ಗಳೆರಡರ ಕಡೆಗೆ ಒಮ್ಮೆ ದೃಷ್ಟಿಯನ್ನು ಹರಿಯಿಸಿದ. ತಾನು ಕುಳಿತುಕೊಳ್ಳುತ್ತಿದ್ದ ‘ಸೋಫಾ’ವು ಇಂದು ಬರಿದಾಗಿದೆ. ಎದುರು ಕಡೆಯಲ್ಲಿರುವ ಆ ಸೋಫಾದ ಮೇಲೆ ಸ್ತ್ರೀಯೋರ್ವಳು ಆಸೀನಳಾಗಿದ್ದಾಳೆ. ಯಾರೀಕೆ? ಲಿಲ್ಲಿಯಾಗಿರಬಹುದೇ? ಎಂದಾಲೋಚಿಸುತ್ತಾ ಬೇಗ ಬೇಗ ನಡೆಯತೊಡಗಿದ. ಹೌದು; ಲಿಲ್ಲಿಯೇ ಹೌದು. + +‘ಲಿಲ್ಲೀ’ + +ಲಿಲ್ಲಿಯು ಹಿಂತಿರುಗಿ ನೋಡಿದಳು. ಫ್ರಾನ್ಸಿಸ್ಸನೂ ಅವಳನ್ನು ದಿಟ್ಟಿಸಿದ. ಆದರೆ ಲಿಲ್ಲಿಯ ಕಂಗಳಿಗೆ ಫ್ರಾನ್ಸಿಸ್ಸನ ಕಣ್ನೋಟವನ್ನು ಇದಿರಿಸುವ ಶಕ್ತಿಯೆಲ್ಲಿಂದ ಬರಬೇಕು. ಆಕೆ ತಲೆತಗ್ಗಿಸಿದಳು. + +‘ಏನು ಲಿಲ್ಲೀ, ನನ್ನ ಗುರುತಾಗಲಿಲ್ಲವೇ?’ + +‘ಇಲ್ಲ’ + +‘ಏನು? ಇದೇ ‘ಸೋಫಾ’ದ ಮೇಲೆ ಕುಳಿತು ನೀನು ಯಾರೊಡನೆ ‘ನನ್ನ ಕೈ ಬಿಡಬೇಡ’ ಎಂದು ಯಾಚಿಸಿದ್ದೆಯೋ ಆ ಫ್ರಾನ್ಸಿಸನ ಗುರುತಾಗಲಿಲ್ಲ! ದಿನಕ್ಕೆರಡರಂತೆ ಪತ್ರಗಳನ್ನು ಯಾರಿಗೆ ಕಳುಹಿಸುತ್ತಿದ್ದೆಯೋ ಅವನ ಗುರುತಾಗಲಿಲ್ಲ! ‘ಬೇಡ, ನನ್ನ ದಾರಿಗೆ ಅಡ್ಡ ಬರಬೇಡ! ಸ್ತ್ರೀಯರು ಚಂಚಲೆಯರು. ಅವರನ್ನು ನಂಬಬಾರದು’ ಎಂದು ಅನೇಕ ತಡವೆ ಹೇಳಿದರೂ ‘ಪವಿತ್ರ ಪ್ರೇಮ, ನಿಷ್ಕಾಮ ಪ್ರೇಮ, ನಿನ್ನ ಹೊರತು ಅನ್ಯ ಪುರುಷರು ನನಗೆ ಭ್ರಾತೃಸಮಾನರು’ ಎಂದು ಯಾರೊಡನೆ ಹೇಳಿದ್ದೆಯೋ ಅಂತಹ ಫ್ರಾನ್ಸಿಸ್ಸನ ನೆನಪಾಗಲಿಲ್ಲ!’ + +‘ಹೋ ಫ್ರಾನ್ಸಿಸ್ಸನೇ? ಹೇಗೆ ಗುರುತು ಹಚ್ಚಬೇಕು? ಅಂದಿನ ಆ ಫ್ರಾನ್ಸಿಸ್ಸೆಲ್ಲಿ? ಇಂದಿನ ನೀನೆಲ್ಲಿ? ಅಂದಿನ ಆ ಫ್ರಾನ್ಸಿಸ್ಸನು ಕ್ಲಾಸಿನಲ್ಲಿ ಪ್ರಥಮ ಶ್ರೇಣಿಯಲ್ಲಿ ಪಾಸಾಗುತ್ತಿದ್ದ ವಿದ್ಯಾರ್ಥಿ; ಜಮೀನುದಾರ ಅಂತೋನಿ ಪ್ರಭುಗಳ ಆಸ್ತಿಯ ಹಕ್ಕುದಾರನಾಗಿದ್ದ ಫ್ರಾನ್ಸಿಸ್ಸನು. ಇಂದಿನ ಫ್ರಾನ್ಸಿಸ್ಸನು ಬೀದಿಯ ಭಿಕಾರಿಗಿಂತಲೂ ಕಡೆಯಾಗಿ ಕಾಣುತ್ತಿರುವ, ಜೈಲಿನಿಂದ ಹೊರಬಿದ್ದ ಫ್ರಾನ್ಸಿಸ್ಸನು! ಫ್ರಾನ್ಸಿಸ್ಸ್, ಎಚ್ಚರದಿಂದ ಮಾತನಾಡು. ಏನೋ ಹುಡುಗಾಟಿಕೆಯ ಮರುಳು ಬುದ್ಧಿಯಿಂದ ನಿನ್ನೊಡನೆ ಅಂದು ಆಡಿರಬಹುದು. ಪತ್ರ ಬರೆದಿರಬಹುದು; ಅವನ್ನೆಲ್ಲಾ ನೆನೆಸಿ ಈಗ ಫಲವಿಲ್ಲ . ಈಗ ನಿನ್ನ ಮುಂದೆ ಕುಳಿತಿರುವವಳು ವಿದ್ಯಾರ್ಥಿನಿ, ಅವಿವಾಹಿತೆ ಲಿಲ್ಲಿಯಲ್ಲ. ಲಕ್ಷಾಧೀಶ ಡಿ. ಜೆ. ಜೋಸೇಫರ ಪತ್ನಿ ಎಂದು ತಿಳಿದು ಮರ್ಯಾದೆಯಿಂದ ಮಾತನಾಡು.’ + +‘ಏನು? ಡಿ. ಜೆ. ಜೋಸೇಫರ ಪತ್ನಿಯೇ? ಆದ್ದರಿಂದಲೇ ನಿನಗೆ ನನ್ನ ಗುರುತಾಗಲಿಲ್ಲ. ಮನೋವಾಕ್ಕಾಯಗಳಿಂದ ಕಠಿಣ ವೃತವನ್ನಾಚರಿಸಿ, ಸ್ವದೇಶಸೇವೆಗಾಗಿ ಪುರುಷರನ್ನು ಹುರಿದುಂಬಿಸುತ್ತಿದ್ದ ಭಾರತೀಯ ಸ್ತ್ರೀಯರ ಆ ಕಾಲವು ಕಾಲವಾಗಿರುವಾಗ ನಿನ್ನಂತಹರು ಹೀಗೆ ವರ್ತಿಸುವುದರಲ್ಲಿ ತಪ್ಪೇನಿದೆ? ಆದರೆ ಲಿಲ್ಲೀ, ಶ್ರೀಮಂತಿಕೆಯನ್ನು ಇಷ್ಟೊಂದು ಪ್ರೀತಿಸುತ್ತಿದ್ದ ನೀನು ನನ್ನನ್ನು ಬಗೆ ಬಗೆಯಾಗಿ ಪುಸಲಾಯಿಸಿ ನನ್ನ ಜೀವನಪಥದಲ್ಲಿ ಕಲ್ಲು ಮುಳ್ಳುಗಳನ್ನೇಕೆ ಒಡ್ಡಿದೆ?’ + +‘ಅಂದು ನಾನೆಣಿಸಿದ್ದೆ, ಫ್ರಾನ್ಸಿಸ್ಸನೆಂದರೆ, ಮುಂದೆ ಶಿಕ್ಷಣವನ್ನು ಸಂಪೂರ್ಣಗೊಳಿಸಿ, ‘ಸರ್ಟಿಫೀಕೇಟು’ ಪಡೆದು ಉದ್ಯೋಗವನ್ನು ಸಂಪಾದಿಸಿಕೊಂಡು, ತಂದೆಯ ಆಸ್ತಿಯನ್ನನುಭವಿಸಿಕೊಂಡು ಶ್ರೀಮಂತಿಕೆಯಿಂದ ಮೆರೆಯಬಹುದಾದ ವ್ಯಕ್ತಿಯೆಂದು! ಹುಚ್ಚನಂತೆ ಶಿಕ್ಷಣವನ್ನು ಅರ್ಧದಲ್ಲಿಯೇ ನಿಲ್ಲಿಸಿ ಜೈಲು ಸೇರಿ ಬೀದಿಯ ಭಿಕಾರಿಯಾಗಿ ಅಲೆಯುತ್ತಿರುವ ನಿನ್ನಂತಹ ಪುರುಷನೊಬ್ಬನ ಕೈಹಿಡಿಯಲು ನನ್ನಂತಹ ನವನಾಗರಿಕ ಸ್ತ್ರೀಯೋರ್ವಳು ಮುಂದೆ ಬರಬಹುದೆಂಬುದನ್ನು ಮರೆತುಬಿಡು.’ + +‘ಹಾಗಾದರೆ ನೀನು ಅಥವಾ ನಿನ್ನಂತಹ ಸ್ತ್ರೀಯರು ಪ್ರೀತಿಸುವುದು ಸಂಪತ್ತನ್ನು; ವ್ಯಕ್ತಿಯನ್ನಲ್ಲ. ನಿನ್ನ ಮುಖಾವಲೋಕನವೂ ಪಾಪಕರ. ನೀನು ನನಗೆ ಬರೆದಿದ್ದ ಪತ್ರಗಳಲ್ಲಿ ಇದೊಂದನ್ನು ಜೋಪಾನವಾಗಿಟ್ಟಿದ್ದೆ. ನಿನ್ನದನ್ನು ನೀನು ತೆಗೆದುಕೊ.’ + + + +ನಿಟ್ಟುಸಿರೊಂದನ್ನು ಬಿಡುತ್ತಾ ಪತ್ರವನ್ನು ಲಿಲ್ಲಿಯ ಕಡೆಗೆ ಎಸೆದು ನಡೆಯತೊಡಗಿದನು. ಮತ್ತೆ ಹಿಂದಿರುಗಿ ನೋಡಲಿಲ್ಲ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_289.txt b/Kenda Sampige/article_289.txt new file mode 100644 index 0000000000000000000000000000000000000000..89a0939c13d87aa79f7c7ec8ee0432e5c6a1ea18 --- /dev/null +++ b/Kenda Sampige/article_289.txt @@ -0,0 +1,23 @@ + + +“ಕತೆಯಾದಳು ಹುಡುಗಿ” ಕಥಾಸಂಕಲನಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಯಶವಂತ ಚಿತ್ತಾಲರ ಕ್ಲಾಸಿಕ್ ಕಾದಂಬರಿ ‘ಶಿಕಾರಿ’. “ಬೇಟೆ ಈ ಕಾದಂಬರಿಯ ಕೇಂದ್ರ ಪ್ರತಿಮೆ” ಎನ್ನುತ್ತಾರೆ ವಿಮರ್ಶಕ ಡಾ.ಜಿ.ಎಸ್. ಆಮೂರ್. + +ಇಂದಿನ ಕೈಗಾರಿಕೀಕರಣಗೊಂಡ ಪಟ್ಟಣ ನಾಗರಿಕತೆಯಲ್ಲಿ ನಡೆಯುವ ಮನುಷ್ಯನ ಬೇಟೆ, ಅದರಲ್ಲೂ ಹೆಚ್ಚುತ್ತಿರುವ ಔದ್ಯೋಗಿಕ ಸ್ಪರ್ಧೆಗಳ ನಡುವೆ ಸಿಕ್ಕ ಅವಕಾಶಗಳನ್ನು ಉಳಿಸಿಕೊಂಡು ತನ್ನೊಂದಿಗೆ ವ್ಯಕ್ತಿತ್ವ ರೂಪಿಸಿಕೊಳ್ಳುವದೂ ಒಂದು ಸವಾಲು. ಸ್ವಾರ್ಥಿಗಳೆಲ್ಲ ಒಂದಾಗಿ ಪ್ರತಿಭಾವಂತ ನೊಬ್ಬನನ್ನು ಹೊಂಚುಹಾಕಿ, ಸುತ್ತುವರಿದು ಅವನ ಮೇಲೆ ನಡೆಸುವ ಮಾನಸಿಕ ಆಕ್ರಮಣದ ಕತೆ “ಶಿಕಾರಿ”ಯದು. + +ಒಂದೇ ಏಣಿಯೇರಲು ಮುಗಿಬಿದ್ದವರು ತಮ್ಮಲ್ಲಿರುವನೊಬ್ಬನನ್ನು ಮುಗಿಸಲು ಸಜ್ಜಾದ ಬೇಟೆ. ಅಸ್ತಿತ್ವಕ್ಕಾಗಿ, ಅನ್ವೇಷಣೆಗಾಗಿ, ಯಾವುದೋ ಕೆಡುಕೊಂದನ್ನು ತೊಡೆದು ಹಾಕುವುದಕ್ಕಾಗಿ ನಡೆಯುವ ಬೇಟೆಯಲ್ಲ ಇದು. ಬದಲಿಗೆ ಸ್ವಾರ್ಥ, ದ್ವೇಷಗಳನ್ನು ನಯ-ನಾಜೂಕಾಗಿ, ಎದುರಿಗೆ ಕಾಣದೇ ಬೆನ್ನಿಗೆ ಚೂರಿಯಿರಿಯುವ ಬೇಟೆ. ಈ ವಸ್ತುವಿಗೆ ಸಮರ್ಥನೆ ಒದಗಿಸುವ ಪಾತ್ರ ಸನ್ನಿವೇಶಗಳನ್ನು ಸೃಷ್ಟಿಸಿ ಸಂಕೀರ್ಣವಾದ ವಸ್ತುವನ್ನು ಸರಳವಾಗಿ ಓದುಗರಿಗೆ ತಲುಪಿಸುವ ಯಶವಂತ ಚಿತ್ತಾಲರ ನಿರೂಪಣೆಯ ಶೈಲಿ ಅದ್ಭುತವಾದದ್ದು. ಕನ್ನಡದ ಫಿಕ್ಷನ್ ಗಳಲ್ಲಿಯೇ ಮನೋವೈಜ್ಞಾನಿಕ ನೆಲೆಗಟ್ಟಿನ ಮೂಲಕ ಪಾತ್ರ ಪೋಷಣೆ ಮಾಡಲಾದ ವಿಶಿಷ್ಟ ಸೃಜನಶೀಲ ಕೃತಿ ‘ಶಿಕಾರಿ’. ಜಾಗತೀಕರಣದ ಬದುಕಿಗೆ ಮಾರ್ಗದರ್ಶಿಯಾಗಬಲ್ಲ ಸಾರ್ವಕಾಲಿಕ ಸಾಹಿತ್ಯ ಕೃತಿ ಇದು ಎನ್ನಬಹುದು. + +ಉತ್ತರ ಕನ್ನಡ ಜಿಲ್ಲೆಯ ಹನೇಹಳ್ಳಿಯಂತಹ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ನಾಗಪ್ಪ, ಈ ಕಾದಂಬರಿಯ ನಾಯಕ. ಜೀವನದಿಂದ ಏನನ್ನೂ ಬಯಸದ, ಕೇವಲ ಮಹತ್ವಾಕಾಂಕ್ಷೆಗೆ ಮಾತ್ರ ಬದುಕದ ಅವನದು ಒಂದು ರೀತಿಯ ಸಂತ ಬದುಕು. ತನ್ನ ನೌಕರಿ, ಲ್ಯಾಬರೋಟರಿ, ಇವುಗಳನ್ನು ಬಿಟ್ಟರೆ, ಅವನು ತನ್ನನ್ನು ತಾನು ಮೈಮರೆತು ತೊಡಗಿಕೊಳ್ಳುವದು ಸಾಹಿತ್ಯದಲ್ಲಿ. ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಆರ್ ಆ್ಯಂಡ್ ಡಿ ಹುದ್ದೆಯಲ್ಲಿರುವ ನಾಗಪ್ಪನಿಗೆ, ಕಂಪನಿಯ ದುಷ್ಟಕೂಟ ರಾಜೀನಾಮೆಯ ಒತ್ತಡ ತರುತ್ತದೆ. ಆ ಜನರ ದೃಷ್ಟಿಯಲ್ಲಿ, ಅವನೊಬ್ಬ ಸೆಂಟಿಮೆಂಟಲ್ ಮನಸ್ಸಿನ ಮುಗ್ಧ. ಅವನ ಮೌಲ್ಯಾಧಾರಿತ ಬದುಕು ಮತ್ತು ಸಾಹಿತ್ಯ ಕೃತಿಗಳು (ಅವರ ಪ್ರಕಾರ) ವಾಸ್ತವಿಕ ಜೀವನಕ್ಕೆ ಏನನ್ನೂ ಕೊಡಲಾರವು. ಆದರೆ ನಾಗಪ್ಪನ ದೃಷ್ಟಿಯಲ್ಲಿ ಮೌಲ್ಯಗಳೇ ವಾಸ್ತವವಾದವುಗಳು. ಅವುಗಳ ಪಾಲನೆಗಾಗಿಯೇ ತಾನು ಹೋರಾಡುವದು. ಇದು ಅವನಿಗೆ ತಾನು ಒಳ್ಳೆಯದು ಮಾಡುತ್ತಿರುವೆನೆಂಬ ಹೆಮ್ಮೆಯೇನೂ ಉಂಟು ಮಾಡುವುದಿಲ್ಲ. + +ನಾಗಪ್ಪನಲ್ಲಿ ಮಾನವ ಸಹಜ ಕ್ರೌರ್ಯ ಜಾಗೃತವಾಗುವದು, ಅವನಿಗೆ ತನ್ನ ಮಾನ ಮತ್ತು ಪ್ರಾಣಗಳ ರಕ್ಷಣೆಯ ತುರ್ತು ಸಂದರ್ಭ ಬಂದಾಗ! ಚತುರಮತಿಗಳಾದ ಬೇಟೆಗಾರರ ಕೈಯಲ್ಲಿ ನಾಗಪ್ಪ ದಿಢೀರನೆ ಶಿರವನ್ನೇನೂ ಒಪ್ಪಿಸುವದಿಲ್ಲ. ತನ್ನಿಂದಾದ ಎಲ್ಲ ಮಟ್ಟುಗಳನ್ನು ಪ್ರಯೋಗಿಸಿ ಎದುರಿಸುತ್ತಾನೆ. + +ಅವನ ಒಳ ಉರಿತಗಳು ಒಮ್ಮೊಮ್ಮೆ ಜ್ವಾಲಾಮುಖಿಯಾಗುವದು, ಅವನ ಬಯ್ಗುಳಗಳಲ್ಲಿ! ಕೋಳಿ ಗಿರಿಯಣ್ಣನಿಂದ ಕಲಿತ ಬೋಳೀಮಗನೇ, ಸೂಳೆ ಮಗನೇ ಅವನಿಗೆ ಹೆಚ್ಚು ಪ್ರಿಯವಾದವುಗಳು. ಇವುಗಳಿಗೆ ಅವನು ಖಾಸಗಿ ಭಾಷೆಯನ್ನೂ ನಿರ್ಮಿಸಿಕೊಂಡಿದ್ದಾನೆ. ಉದಾಹರಣೆಗೆ, ಒಂದೂಮಗನೇ ಅಂದರೆ ಬೋಳೀಮಗನೇ, ಎರಡೂ ಮಗನೇ ಎಂದರೆ ಸೂಳೇಮಗನೇ ಇತ್ಯಾದಿಯಾಗಿ ಹತ್ತೂ ಮಗನೇ ತನಕ. ಇವುಗಳಿಗೆ ಅವನು “ಸಾಂಖ್ಯದ ಸುಭಾಷಿತಗಳು” ಎಂದು ಹೆಸರು ಕೊಟ್ಟಿದ್ದಾನೆ. + +ನಾಗಪ್ಪ ಇಂಥ ಸ್ವಭಾವದವನಾದರೂ, ತನ್ನಲ್ಲಿರುವ ಪ್ರತಿಭೆಯಿಂದ ಸಮಾಜದಲ್ಲಿರುವ ಪಟ್ಟಭದ್ರ ಕುಳಗಳನ್ನು ತನ್ನ ಲೇಖನಿಯ ಮೂಲಕ ಮಟ್ಟ ಹಾಕುತ್ತಾನೆ. ಇದರಿಂದಲೇ ಅವನು ಹಲವಾರು ಮಿತ್ರರನ್ನು ಶತೃಗಳನ್ನಾಗಿಸಿಕೊಳ್ಳಬೇಕಾಗುತ್ತದೆ. ಅಂಥವರಲ್ಲಿ ಒಬ್ಬ ಶ್ರೀನಿವಾಸ. ತನ್ನ ತಾಯಿಯ ಮೇಲೆ ಕತೆ ಬರೆದ ನಾಗಪ್ಪ, ಈಗ ತನ್ನ ಮೇಲೂ ಕಾದಂಬರಿ ಬರೆಯುತ್ತಿರುವದು ತಿಳಿದು, ಇವನ ಸಂಪರ್ಕವುಳ್ಳವರೆಲ್ಲರ ಮುಂದೆ ಈತನ ವಂಶ, ತಂದೆ, ತಂಗಿಯರ ತರಲೆಗಳನ್ನೆಲ್ಲ ಹೇಳಿ ಅಪಪ್ರಚಾರ ಮಾಡುತ್ತಾನೆ. ತನ್ನ ತಾಯಿಯನ್ನು ಹಳ್ಳಿಯಿಂದ ಕರೆಸಿ ನಾಗಪ್ಪನ ಜನ್ಮ ಜಾಲಾಡುತ್ತಾನೆ. ಶ್ರೀನಿವಾಸನ ಮುದಿ ತಾಯಿಯ ಮಾತುಗಳಿಗೆ ನಾಗಪ್ಪ, ಮನದಾಳದಲ್ಲಿ, ಹೀಗೆ ಪ್ರತಿಕ್ರಿಯಿಸುತ್ತಾನೆ: “ಸಾಯಲು ಹೊರಟವಳಲ್ಲಿಯೂ ಕೊಲ್ಲುವ ಛಲದ ಪ್ರವೃತ್ತಿ ಇನ್ನೂ ಜೀವಂತವಾಗಿರಬಹುದೆಂಬ ಗುಮಾನಿಯಿಂದ ದಿಗ್ಭ್ರಮೆಗೊಂಡೆ”. ಆತನಲ್ಲಿ ಮೊದಲ ಬಾರಿಗೆ ಹತಾಶೆ ಕಾಣುತ್ತದೆ. + +ಖೇತವಾಡಿ, ಮುಂಬಯಿಯ ಚಾಳ್ ಗಳು, ಅಲ್ಲಿಯ ಸ್ಕಾಯ್ ಸ್ಕ್ರೇಪರ್ ಕಟ್ಟಡಗಳು, ರಾತ್ರಿಯಲ್ಲಿಯೂ ಹಗಲನ್ನು ನಾಚಿಸುವ ಬೀದಿ ಬದಿಯ ನೀಯಾನ್ ದೀಪಗಳು, ಮೆಟ್ರೋಪಾಲಿಟನ್ ಸಿಟಿಯೊಂದರ ಸನ್ನಿವೇಶಗಳು ಕಥಾನಾಯಕನ ಮಾನಸಿಕ ತುಮುಲವನ್ನು ಕಣ್ಣಿಗೆ ಕಟ್ಟುವಂತೆ ವಿವರಪೂರ್ಣವಾಗಿವೆ. + +ಕಂಪನಿಯ ಫ್ಯಾಕ್ಟರಿಯಿಂದ ಹತ್ತು ಟನ್ನಿನಷ್ಟು ಕಚ್ಚಾಮಾಲನ್ನು ಕಳ್ಳರೀತಿಯಿಂದ ಹೊರ ಸಾಗಿಸಿದ್ದ ಆಪಾದನೆಯ ವಿಚಾರಣೆ ಎದುರಿಸುತ್ತಿದ್ದ ನಾಗಪ್ಪ, ತನ್ನೊಡನಿದ್ದೂ ತನ್ನ ಶತೃಗಳಾದ ಖಂಬಾಟಾ, ಬಂದೂಕವಾಲಾ, ಶ್ರೀನಿವಾಸರ ಸಂಚಿನ ಸುಳಿಗೆ ಸಿಕ್ಕು ಕೊನೆಗೂ ತಾನು ಮಾಡದ ತಪ್ಪಿಗೆ ರಾಜೀನಾಮೆ ಕೊಟ್ಟು ಹೊರ ಬರುತ್ತಾನೆ. + +ಏಕಾಂತದಲ್ಲಿ ಮಾನವ ಸಹಜವಾದ ದೌರ್ಬಲ್ಯಗಳನ್ನು ಆತ್ಮವಿಮರ್ಶೆಯಲ್ಲಿ ತೊಡಗಿಕೊಳ್ಳುವ ನಾಗಪ್ಪ, ಅಂತರ್ಮುಖಿಯಾದ ಸಹೃದಯರಿಗೆ ಮೆಚ್ಚುಗೆ ಆಗುತ್ತಾನೆ. ೩೨೩ ಪುಟಗಳ ಸುದೀರ್ಘ ಕಾದಂಬರಿಯಲ್ಲಿ ನಡೆಯುವ ಸಮಗ್ರ ಕಥಾವಸ್ತು ಘಟಿಸಲು ತೆಗೆದುಕೊಳ್ಳುವ ಅವಧಿ, ಹದಿನೈದು ದಿನ ಮಾತ್ರ. + +ಡಿ.ಎಮ್ ನದಾಫ್, ಕಲಬುರಗಿ ಜಿಲ್ಲೆಯ ಅಫಜಲಪುರದ ಮಾತೋಳಿ ಗ್ರಾಮದವರು. ಪ್ರೌಢಶಾಲಾ ಅಧ್ಯಾಪಕರಾಗಿದ್ದು, ಎರಡು ಕವನ ಸಂಕಲನ ಮತ್ತು ಅಫಜಲಪುರ ದರ್ಶನ (ಸ್ಥಳಪರಿಚಯ) ಪುಸ್ತಕ ಪ್ರಕಟಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ಕತೆಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_29.txt b/Kenda Sampige/article_29.txt new file mode 100644 index 0000000000000000000000000000000000000000..df8bc541532da149a59f0c0b0ef5ab6ecbbb7be8 --- /dev/null +++ b/Kenda Sampige/article_29.txt @@ -0,0 +1,43 @@ +ನಮ್ಮೂರು ಚಿಕ್ಮಾಲೂರಿನಲ್ಲಿ (ಚಿಕ್ಕಮಾಲೂರು)ಗೌರ್ಮೆಂಟು ಇಸ್ಕೂಲ್ ಇತ್ತು.‌ ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆ ಎಲ್ಲಾ ಇದ್ವು. ಅಂದರೆ ಒಂದನೇ ಕ್ಲಾಸಿಂದ ಹತ್ತನೇ ಕ್ಲಾಸಿನವರೆಗೆ ಇತ್ತು. ಸುತ್ತೂರುಗಳಲ್ಲಿ ಇಸ್ಕೂಲ್ ಇರಲಿಲ್ಲ. ಕೆಂಪಾಪುರ, ವೀರಾಪುರ, ಅಕ್ಕಳಾಪುರ, ತಿಗಳರಹಳ್ಳಿ, ವೆಂಕಟಾಪುರಗಳಿಂದ ಹೈಕಳು ಇಲ್ಲಿಗೇ ಬರ್ಬೇಕಿತ್ತು. ನಮ್ಮ ಜೊತೆ ಓದುತ್ತಿದ್ದ ವಾರಗೆಯ ಹುಡುಗ್ರಾಗೆ ಎಷ್ಟೋ ಜನ ಈ ಊರುಗಳಿಂದಾನೂ ಬರ್ತಿದ್ರು. + +ಈಗೀಗ ಎಲ್ಲಾ ಊರುಗಳಾಗೂ ನಾಕನೇ ಕ್ಲಾಸಿನವರೆಗೆ ಶಾಲೆ ಬಂದೈತೆ. ಆಮೇಲೆ ಇಲ್ಲಿಗೇ ಬರಬೇಕು. ಕೆಲವು ಕಡೆ ಮಾಧ್ಯಮಿಕ ತರಗತೀನೂ ಬಂದೈತೆ. ಆದರೆ ಪ್ರೌಢಶಾಲೇಗೆ ಇಲ್ಲಿಗೇ ಬರ್ಬೇಕು. ಈಗಲೂ ಊರಲ್ಲಿ ಖಾಸಗಿ ಶಾಲೆ ಭರಾಟೆ ಇಲ್ಲ. ಸರ್ಕಾರಿ ಶಾಲೇನೆ ಸರ್ವಸ್ವ. ಅದೇ ಕೈಲಾಸ. + +ಮಾಧ್ಯಮಿಕ ಶಾಲೆಯಲ್ಲಿನ ಸಂಗ್ತಿಗಳಂತೂ ಬಲು ಪಸಂದಾಗಿವೆ. ಒಂದು ನಾಕೈದು ಇಸ್ಯ ಯೋಳೋಕೇ ಬೇಕು. ನಮ್ಮ‌ ಹೆಡ್ ಮೇಷ್ಟ್ರು ‌ಮತ್ತೆ ಕನ್ನಡ ಮೇಡಮ್ಮು ಸುನಂದಮ್ಮ ಮಾತ್ರ ಊರಲ್ಲಿದ್ದಿದ್ದು. ಗಣಿತ- ವಿಜ್ಞಾನ ತಕಂತಿದ್ದ ಜೆ.ಸಿ. ಮೇಷ್ಟ್ರು, ಹಿಂದಿಗೆ ಬರ್ತಿದ್ದ ರಮಾಮಣಿ ಮೇಡಮ್ಮೂ, ಸಮಾಜ‌ ಮತ್ತು ಇಂಗ್ಲಿಷ್ ಹೇಳ್ಕೊಡ್ತೀನಿ ಅಂತಿದ್ದ ಸಂಜೀವರಾಯಪ್ಪ ಮೇಷ್ಟ್ರು ಮಧುಗಿರೀಲಿ ಇದ್ದರು. ಅವರೆಲ್ಲ ರಿಲಯನ್ಸ್ ಬಸ್ಸಿಗೆ ಬರ್ತಿದ್ರು. ಅದು ಹತ್ತು ಗಂಟೆಗೆ ಸರಿಯಾಗಿ ಬರ್ತಿತ್ತು. ರಿಲಯನ್ಸ್ ಬತ್ತೂ ಅಂದ್ರೆ ದಡದಡನೆ ಇಸ್ಕೂಲ್ ಬ್ಯಾಗ್ ಹುಡ್ಕಿ ತಗ್ಲಾಕ್ಕೊಂಡು ಓಡ್ತಿದ್ವಿ. ಬಸ್ಸುಗ್ಳೆ ನಮ್ಮ‌ ಗಡಿಯಾರ. + +ಒಳ್ಳೆ ಕೆಲಸ ಯಾವ್ದೂಂತ ಯೋಚ್ನೆ + +ಒಂದು ಪುಟಾಣಿ ನೋಟ್ ಬುಕ್ನಾಗೆ ಅವತ್ತವತ್ತಿನಲ್ಲಿ ನಾವ್ ಮಾಡಿದ್ದ ಒಳ್ಳೆ ಕೆಲ್ಸವ ದಿನಾಲೂ ಬರೀಬೇಕಿತ್ತು. ಇಲ್ದೇ ಹೋದ್ರೆ ನಮ್ಮ ಜೆ ಸಿ ಮೇಷ್ಟ್ರು ಬಯ್ತಿದ್ರು. ಈಗ್ನಿಂದ್ಲೆ ಒಳ್ಳೆ ಮನುಸ್ಯರಾಗ್ಬೇಕು ಅಂಬೋದು ಅವ್ರ ಮಾತು. ನಮ್ಗೋ ಒಳ್ಳೆ ಕೆಲ್ಸ ಅಂದ್ರೆ ಆ ಪಟ್ಟೀ ಒಳ್ಗೆ ಯಾವ್ ಯಾವ್ ಕೆಲ್ಸ ಸೇರ್ಕಂತಾವೆ ಅಂಬೋದೆ ತಲೆನೋವು. ನಮ್ಮಮ್ಮುಂಗೆ ಹೊಸ್ಲು ಸಾರಿಸ್ಕೊಟ್ಟೆ. ಸೀನೀರು ತಕಾಬಂದೆ. ಇವೇ ದೊಡ್ಡ ಕೆಲ್ಸಗಳು. ದಿನಾ ಅದುನ್ನೇ ಬರುದ್ರೆ ಯಗ್ಗಾಮುಗ್ಗಾ ಬೈತಾರೆ. ಸರಿ ಸುಳ್ಳು ಬರ್ಯೋಕೆ ಸುರು ಹಚ್ಕೊಂಡ್ವಿ. ರಸ್ತೆನಾಗೆ ಬರ್ತಿರೋ ಭಿಕ್ಸುಕಂಗೆ ತಿನ್ನಾಕೇಂತ ಕಾಸು ಕೊಟ್ಟೆ ಅಂತ ಬರ್ಯೋದು. ಅಲ್ಲ ನಮ್ಗೇ ಕಾಸಿಲ್ದೆ ಭಿಕ್ಸುಕುರ್ ತರ ಇದ್ವೋ. ಇನ್ನ ಅವುರ್ಗೆ ಕಾಸು ಎಲ್ಲಿಂದ ತರಾಣಾ! ಅದ್ಕೂ ಬಯ್ಸಿಕೊಂಡು ಅದುನ್ನ ಬಿಟ್ವಿ. ಕುಲ್ಡುಂಗೆ ರಸ್ತೆ ದಾಟಕೆ ಸಾಯಾ ಮಾಡ್ದೆ ಅಂತ ಬರ್ಯೋದು. ಅದ್ಯಾವನು ಕುಲ್ಡ, ಎಲ್ಲಿಂದ ಬಂದ ಅಂತ ಕೇಳೋರು? ಸುರು ಮಾಡೊ ಮದ್ಲು ನಮ್ ಮೇಷ್ಟ್ರೇಯಾ ಇದ್ನೆಲ್ಲಾ ಉದಾರ್ಣೆ(ಉದಾಹರಣೆ) ಕೊಟ್ಟಿದ್ದು. ಅವ್ರು ಮಧುಗಿರಿ ಪ್ಯಾಟೇನಾಗಿದ್ರಲ್ಲ, ಅಲ್ಲಿ ಭಿಕ್ಸುಕ, ಕುಲ್ಡ ಎಲ್ಲ ಇರ್ತಿದ್ರು. ಒಳ್ಳೆ ಕೆಲ್ಸ ಅಂತ ಒಂದು ವಾಕ್ಯ ಬರ್ಯೋ ಹೊತ್ಗೆ ಸುಸ್ತು. ಆಮೇಲೆ ಮೇಷ್ಟ್ರು ಬೋದು ಬುದ್ಧಿ ಹೇಳುದ್ರು. ಸುಳ್ಳು ಬರ್ಯೋದು ತಪ್ಪು. ಅದ್ರಾಗೂ ಒಳ್ಳೆ ಕೆಲ್ಸದ ಬಗ್ಗೆ ಬರೆಯೋವಾಗ ಸುಳ್ಳು ಹೇಳೋದು ದೊಡ್ಡ ತಪ್ಪು ಅಂತ ಯೋಳಿದ್ ಮೇಲೆ ಅದ್ಕೇಂತಾದ್ರೂ ನಮ್ಮಮ್ಮಂಗೋ, ಅಪ್ಪಂಗೋ, ಸ್ನೇಹಿತ್ರುಗೋ, ಕೆಲಸ್ದೋರ್ಗೋ ಏನಾರಾ ಸಹಾಯ ಮಾಡೋ ಕೆಲ್ಸಾ ಸುರು ಮಾಡ್ಕೊಂಡ್ವಿ. ಈ ಪಟ್ಟೀನಾಗೆ ನಮ್ಮಪ್ಪಂಗೆ ಬೆನ್ನು ತುಳಿಯೋದೂ ಒಂದು ಒಳ್ಳೆ ಕೆಲ್ಸ ಅಂತ ಸೇರ್ಕೊಂತಿತ್ತು!! ಹುವ್ವ ಕಿತ್ಕಬರಾದು, ದೇವ್ರ ಪಟಕ್ಕೆ ಹಾರ ಏರ್ಸಾದು (ಪೋಣಿಸೋದು) ಎಲ್ಲಾ ನುಸೀತಿತ್ತು(ನುಸುಳುತ್ತಿತ್ತು). ಕೊನೆಕೊನೆಗೆ ಕೆಲ್ಸ ಮಾಡಾಕೆ ಪೈಪೋಟಿ ಶುರುವಾತು. ಮದ್ಲೆಲ್ಲಾ ಕೆಲ್ಸ ಕದೀತಿದ್ವಿ, ಈಗ ಹುಡೀಕ್ಕೊಂಡು ಹುಡೀಕ್ಕೊಂಡು ಮಾಡೋಂಗಾದ್ವಿ. ಹೊಸ ಕೆಲ್ಸ ಕಂಡು ಹಿಡಿಯೋದೂ ನಮ್ಮ ಅಜೆಂಡಾ ಆಗ್ತಿತ್ತು. ಇಸ್ಕೂಲ್ನಾಗಿದ್ದ ಗಾಂಧಿ ತಾತ, ಚಾಚಾ ನೆಹರು ಪಟಗಳ ಮ್ಯಾಗೆ ಧೂಳು ಕೊಡವಿ ಅದ್ನೂ ಬರೀತಿದ್ವಿ. ಕೆಲ್ಸಗಳು ನಮ್ ಕೈಯಾಗೆ ಸಿಕ್ಕಿ ನಜ್ಜುಗುಜ್ಜಾಗ್ತಿದ್ವು. + +ಸ ಭಾಷೆ, ಕ ಭಾಷೆ ಇದ್ಯಾವ್ದು ಹೊಸ ಭಾಷೆಗ್ಳು ಅಂತೀರಾ? ಕನ್ನಡವೇಯಾ. ನಮ್ ಕೈಯಾಗೆ ಸಿಕ್ಕಿ ಕೈಕಾಲು ಮುರ್ಕೊಂಡಿತ್ತು. ಇಡೀ ಕ್ಲಾಸ್ನಾಗೆ ಏಸೊಂದು ಹುಡುಗೀರು ಇರ್ತಿದ್ವಿ. ಅದ್ರಾಗೆ ನಾಕೈದು ಜನ ಒನೊಂದು ಗುಂಪು. ಒಬ್ಬರಿಗೊಬ್ಬರಿಗೆ ಗೊತ್ತಾಗ್ದಂಗೆ ವಿಸ್ಯ ಮುಟ್ಟಿಸಾಕೆ ಸ ಭಾಷೆ ಮೊದ್ಲು ಕಂಡು ಹಿಡಿದ್ವಿ. ಎಲ್ಲಾ ಪದಗೋಳ್ಗೂ ಮದ್ಲನೆ ಅಕ್ಸರ ಸ ಅಂತ ಸೇರಿಸೋದು. ಬಾರಿಸು ಅನ್ನಾಕೆ ಸಾರಿಸು, ಮಾತಾಡು ಅನ್ನಾಕೆ ಸಾತಾಡು ಅಂತ. ಇದು ಸಲೀಸಾಗಿತ್ತಲ್ಲ, ಎಲ್ರೂ ಕಲ್ತು ಬಿಟ್ರು. ಆಮ್ಯಾಕೆ ವಸಿ ತಲೆ ಉಪ್ಯೋಗ್ಸಿ (ಇತ್ತೂಂತ ಅನ್ ಕೊಂಡಿದ್ವಿ!) ಕ ಭಾಷೆ ಕಂಡು ಹಿಡಿದ್ವಿ. ತಕಳಿ ಇದು ಬೋ ಕಷ್ಟ ಇತ್ತು. ಒನ್ನೊಂದು ಅಕ್ಸರಕ್ಕೂ‌ ಮೊದ್ಲು ಕ ಸೇರುಸ್ಬೇಕು. ಕಮಲಿ ಕಮಂಗಿ ತರ ಆಡ್ತಾಳೆ ಅಂತ ಹೇಳ್ಬೇಕು ಅಂದ್ರೆ ಕಕಕಮಕಲಿ ಕಕಕಮಂಕಗಿ ಕತಕರ ಕಆಕಡ್ತಾಕಳೆ. ಈಸೂದ್ದ ಯೋಳೋ ಅಷ್ಟರಾಗೆ ಎದ್ರುಗೆ ಕುಂತೋರು ಕಮಂಗಿಗಳಂಗೇ ಮಿಕಮಿಕ ನೋಡ್ತಿದ್ರು. ನಮ್ಗೋ ಬಲ್ ಖುಸಿ. ಅಮ್ಯಾಗೆ ಅವ್ರೂ ಕಲಿತ್ರು. ಅಷ್ಟರಲ್ಲಿ ನಾವೂ ಸ್ಯಾನೆ ಬೇಗ್ ಬೇಗ ಮಾತಾಡಾಕ್ ಕಲಿತ್ವಿ. ಆಮ್ಯಾಲೆ ದೊಡ್ಡ ಜಗ್ಳ, ಜಟಾಪಟಿ ಸುರುವಾಗಿ ಮೇಷ್ಟ್ರು ಕಿವೀಗ್ ಬಿದ್ದು, ಬಂದ್ ಮಾಡ್ಸುದ್ರು. ಕಲ್ತಿದ್ ಬಿಡೆ ಕಳ್ಮುಂಡೆ ಅಂದ್ರೆ ನಡುನೀರಾಗ್ ಬಿಟ್ಟು ಮಣ್ಣು ಹೊಯ್ಕೊಂಬ್ಲೆ ಅಂದಂಗೆ ಅಷ್ಟು ಕಷ್ಟ ಬಿದ್ದು ಕಲ್ತಿದ್ನ ಅಷ್ಟು ನಿಸೂರಾಗಿ ಬಿಡಾಕಾಯ್ತದೆ? ಆಮ್ಯಾಲೆ ಆಟಾಡಾಕೆ ಹೋದಾಗ ಅಲ್ಲಿನ್ ಗುಂಪುಗಳಾಗೆ ರಹಸ್ಯ ದಾಟ್ಸೋಕೆ ಬಳ್ಸಾಕೆ ಸುರು ಮಾಡಿದ್ವಿ. + + + +ಮನೆಪಾಠವೂ ಹರಟೆಕಟ್ಟೆಯೂ + +ನಾಕ್ನೇ ಕ್ಲಾಸಿನ್ ವರೆಗೆ ಎಂಗೋ ಚೆಂದಾಗಿತ್ತು.‌ ಐದುಕ್ಕೆ ಇಂಗ್ಲೀಸ್ ಬಂತು. ಆರುಕ್ಕೆ ಹಿಂದಿ ಬತ್ತು. ಎಲ್ಡೂ ತಲ್ಯಾಗೆ ಕುಂತ್ಕಳ್ದೆ, ಹುಳಾ ಬಿಟ್ವು. ನಮ್ ಸಂಜೀವರಾಯಪ್ಪ ಮೇಷ್ಟ್ರು ಇಂಗ್ಲೀಸ್ ತಕಂತೀನಿ ಅಂತ ಬುರುಡೆ ಬಿಡ್ತಿದ್ರು. ಯೋನೂ ಕಲಿಸ್ಲಿಲ್ಲ. ಎಬಿಸಿಡಿ ಒಂದು ಬರ್ತಿತ್ತು.‌ ನೇಮ್ ಅಂದ್ರೆ ಹೆಸ್ರು ಅಂತ ಗೊತ್ತಿತ್ತು. ‌ಹತ್ತೋ ಹನ್ನೆಲ್ಡೋ ಪದುಗುಳ್ನ ಕಲಿಸಿದ್ದರು. ನಾವೂ ಮಕ್ಕಿಕಾಮಕ್ಕಿ. ಮೇಷ್ಟ್ರು ಬೋಲ್ಡ್ ಮ್ಯಾಗೆ ಬರ್ದಿದ್ದುನ್ನ ಅಂಗೇ ಬಟ್ಟಿ ಇಳ್ಸಾದು. ಉರು ಹೊಡ್ಯಾದು. ಹಿಂದಿನೂ ತಲೇಗೆ ಇಳೀತಿರ್ಲಿಲ್ಲ. ಜೆ ಸಿ ಮೇಷ್ಟ್ರು ಮಾತ್ರ ಗಣಿತ ವಿಜ್ಞಾನ ಚೆಂದಾಗಿ ಎದೆಯೊಳೀಕ್ಕೆ ಇಳ್ಸಿದ್ರು. ಕನ್ನಡ ರಸಬಾಳೆ. ಸಮಾಜ ನಾನೇ ಓದ್ಕಂತಿದ್ದೆ. ಏಳ್ನೇ ಕ್ಲಾಸ್ನಾಗೆ ಹೆಡ್ ಮೇಷ್ಟ್ರು ಇಂಗ್ಲೀಷ್ ತಕಂತಿದ್ರು. ಅವ್ರ ತಲೆಮ್ಯಾಗೆ ಇಸ್ಕೂಲೇ ಕುಂತಿತ್ತಲ್ಲ, ಬ್ಯಾರೆ ಕೆಲ್ಸದಾಗೆ ಕ್ಲಾಸಿಗ್ ಬರಾಕೆ ಟೇಮಿರ್ಲಿಲ್ಲ. ಅಂಗಾಗಿ ಐನಾತೀದು ಈ ಎಲ್ಡೂ ಭಾಷೆಗ್ಳು ಕೈಕೊಟ್ವು. ಅದು ಏನಾರಾ ಹಾಳಾಗೋಗ್ಲಿ ಈ ಮನೆಪಾಠ ಅಂದ್ರೆ ನಂಗೆ ಕೋಪ. ಆಡೋಕೆ ಸಮ್ಯ ಸಾಲಲ್ವಲ್ಲ ಅಂತ. ನಮ್ ಹೆಡ್ ಮೇಷ್ಟ್ರು ಸುಬ್ಬಣ್ಣ ಮೇಷ್ಟ್ರು ಮನೆಪಾಠುಕ್ಕೆ ಬರ್ಲೇ ಬೇಕೂಂತ ಬಲವಂತ ಮಾಡೋರು.‌ ಅವ್ರು ಮಾತ್ರ ಮನ್ಯಾಗೆ ಇರ್ತಿರ್ಲಿಲ್ಲ. ನಾನು ಅವ್ರ ಮಕ್ಕಳ‌ ಜೊತೆ ಮಾತುಕತೆ ಮುಗುಸ್ಕೊಂಡು ಬರೋದು. ಒಂದಕ್ಷರ ಕಲೀಲಿಲ್ಲ. ನಮ್ಮಪ್ಪ ದವ್ಸ ಧಾನ್ಯ ಕಾಯಿ ಸಮಸ್ತವೂ ಕಳುಸ್ತಿದ್ರು. ಅದ್ಕೇ ನಾನು ಹೋಗ್ಬೇಕಿತ್ತು. ಕೊನೀಗೆ ಏಳ್ನೆ ಕ್ಲಾಸ್ನಾಗೆ ನಾನು ಹೋಗಲ್ಲ ಅಂತ ಹಠ ಹಿಡ್ದೆ. ಹೈಸ್ಕೂಲ್ ಗೆ ಇಂಗ್ಲಿಷ್ ಹೇಳ್ಕೊಡಾಕೆ ಲಕ್ಷ್ಮೀನಾರಾಯಣ ಮೇಷ್ಟ್ರು ಇದ್ರು. ನಮಪ್ಪ ಅವ್ರ ಮನೆಗೆ ಕಳಿಸಿದ್ರು. ಅವ್ರ ಮಗ ದ್ವಾರಕಿ ಕ್ಲಾಸ್ನಾಗೆ ನನ್ನ ಎದುರಾಳಿ. ಸ್ಯಾನೆ ಪೈಪೋಟಿ ಇರ್ತಿತ್ತು. ಒಂದ್ ಕಿತ ನಾನು, ಒಂದು ಕಿತ ಅವ್ನು ಗೆಲ್ತಿದ್ವಿ. ನಾನು ಅವ್ರ ಮನೆಗೆ ಹೋಗಾಕೆ ಸುರು ಮಾಡಿದ್ ಮೇಲೆ ಸುಬ್ಬಣ್ಣ ಮೇಷ್ಟ್ರು ಮಗ ರಾಘೂನೂ ಬಂದ! ಗೌಡ್ರ ಮಗ ಪ್ರಸನ್ನ, ಕರಿಯಣ್ಣನ ಸಣ್ಣಮಗ( ಹೆಸ್ರು ನೆಪ್ಪಾಗ್ತಿಲ್ಲ) ಎಲ್ರೂ ಬಂದ್ರು. ಶಾಲೇಲಿ ಹೆಣ್ಣುಮಕ್ಕಳು ಗಂಡು ಹುಡುಗ್ರೀಗೆ ಹೆಸರಿನ್ ಜೊತೇಗೆ ಅಪ್ಪ ಅನ್ನೋದು. ಅವ್ರೂ ನಮ್ಮುನ್ನ ಅಮ್ಮ ಅನ್ನೋದು. ಪ್ರಸನ್ನಪ್ಪ, ರಾಘಪ್ಪ, ಸುಮಮ್ಮ, ಕಮಲಮ್ಮ ಹಿಂಗೆ. ಜಾಸ್ತಿ ಮಾತುಕತೆ ಇರ್ಲಿಲ್ಲ. ದೂರ್ದೂರಾನೆ ಇರ್ತಿದ್ವಿ. ಇಲ್ಲೀಗ್ ಬಂದ್ ಮೇಲೆ ಎಲ್ರೂ ಮಧ್ಯೆ ಒಳ್ಳೆ ಸ್ನೇಹ ಸುರುವಾತು. ಮೇಷ್ಟ್ರು ಪಾಠ ಮಾಡಿ ಒಂದಷ್ಟು ಮನೆಕೆಲ್ಸ ಕೊಟ್ಟು ಹೋದ್ರೆ ನಮ್ಮ ಹರಟೆ ಸುರುವಾಗ್ತಿತ್ತು. + +ಏಳ್ನೇ ಕ್ಲಾಸ್ನಾಗೆ ಚಿಕ್ಕಪರೀಕ್ಷೇ ಮುಗೀತು. ನಮ್ ಸಂಜೀವರಾಯಪ್ಪ ಮೇಷ್ಟ್ರು ನಾವ್ ಬರೆದಿದ್ದ ಉತ್ತರ ಓದ್ತಾನೆ ಇರ್ಲಿಲ್ಲ‌. ಉತ್ತರ ಏಸುದ್ದ ಇದೆ ಅಂತ ನೋಡ್ಕಂಡು ನಂಬ್ರು ಕೊಡ್ತಿದ್ರು. ಪ್ರಸನ್ನ ಸೊಲ್ಪ ತೀಟೆ ಹುಡುಗ. ಯಾವಾಗ್ಲೂ ನಗ್ಸಾರ ಮಾಡ್ತಿದ್ದ. ಸಮಾಜಶಾಸ್ತ್ರ ಪರೀಕ್ಷೇಲಿ ಮೂರು‌ ನಂಬರ್ ಪ್ರಶ್ನೇಗೆ ಪೂರ್ತಿ ಉತ್ತರ ಗೊತ್ತಿಲ್ದೆ ಸಿನಿಮಾ ಹಾಡು ಬರ್ದಿದ್ದ. ಅದುನ್ನ ನಮ್ಮ‌ತ್ರ ಹೇಳ್ಕೊಂಡಿದ್ದ. ನಾವೂ ನಕ್ಕೂ ನಕ್ಕೂ ಸುಸ್ತಾದ್ವಿ. ಯಾರೇ ಕೂಗಾಡಲಿ ಊರೇ ಹೋರಾಡಲಿ ಅಂತ ಸಂಪತ್ತಿಗೆ ಸವಾಲ್ ಚಿತ್ರದ ನಾಕು ಸಾಲು ಬರ್ದು, ಬಬ್ರುವಾಹನ ಚಿತ್ರದ್ದು ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ನಾಕು ಸಾಲು ಬರ್ದಿದ್ದ. + +ಇಲ್ಲಿ ತಮಾಸಿ ಏನಾಯ್ತಪ್ಪ ಅಂದ್ರೆ ಆ ಮೇಷ್ಟ್ರು ಸ್ವಲ್ಪ ಸೋಂಬೇರಿ. ನಂಬರ್ ಕೊಟ್ಟ ಮ್ಯಾಕೆ ಎಣಿಸಾ ತಾಪತ್ರಯ ಬೇಸ್ರ ಅಂತ ಕೂಡ್ಸಿಕೊಡು ಅಂತ ನನ್ ಕರೀತಿದ್ರು. ಬ್ಯಾರೆ ಮೇಷ್ಟ್ರು ಮೇಡಮ್ಮುಗಳು, “ಯಜ್ಮಾನ ತನ್ನ ನಾಯೀಗ್ ಯೋಳೀರೆ ನಾಯಿ ತನ್ನ ಬಾಲುಕ್ಕೆ ಯೋಳ್ತಂತೆ ಅನ್ನಂಗೆ ಅಸಿಸ್ಟೆಂಟು ಬ್ಯಾರೆ’ ಅಂತ ಆಡ್ಕೊಣೋರು. ನಾನೂ ನೋಡ್ತೀನಿ ಪ್ರಸನ್ನನ್ ಪೇಪ್ರೂ ಬಂತು. ಸುಮ್ಕೆ ನಂಬ್ರು ಕೊಟ್ಟು ನನ್ ಕೈಯಾಗಿಟ್ರು. ನಂಗೆ ಗೊತ್ತಿತ್ತಲ್ಲ, ಹುಡುಕ್ಯಾಡಿ ಕಂಡುಹಿಡ್ದು ‘ಸಾ, ಏನ್ಸಾ ನೀವು ಇದ್ಕೂ ಎರ್ಡು ನಂಬರ್ ಕೊಟ್ಟಿದೀರಾ’ ಅಂತ ತೋರ್ಸಿದ್ರೆ, ನಗಾಡಿ, ಒಳ್ಳೆ ಹಾಡು ಬಿಡಮ್ಮ ಅನ್ನೋದೆ. ನಂಬ್ರೂ ತೆಗೀಲಿಲ್ಲ. ಪಕ್ಕದಾಗಿದ್ದ ಎಲ್ರೂ ನನ್ ತಾವ ಪೇಪ್ರು ಈಸ್ಕೊಂಡು ಓದಿ ಓದಿ ನಗಾಡಿದ್ರು. + + + +ಶಾರದಾ ಪೂಜೆ + +ಪ್ರತಿ ಶುಕ್ರವಾರ ಸಾಯಂಕಾಲ ಶಾರದಾ ಪೂಜೆ ಮಾಡ್ತಿದ್ರು. ಹಾಡು ಹೇಳಿಸ್ತಿದ್ರು, ಭಜನೆ ಮಾಡ್ತಿದ್ವಿ. ತೌಡು ಬಿಸ್ಕತ್ತು, ಪೆಪ್ಪರ್ಮೆಂಟು, ಸೀ ಕಡಲೆಹಿಟ್ಟು(ಪಪ್ಪಿಂಡಿ) ಏನಾದ್ರೂ ಕೊಡ್ತಿದ್ರು.‌ ಏಳ್ನೇ ಕ್ಲಾಸ್ನಾಗೆ ಪಬ್ಲಿಕ್ ಪರೀಕ್ಷೆ ಅಂತ ಕೊನೇನಲ್ಲಿ ಜೋರಾಗಿ ಪೂಜೆ ಇಟ್ಕಂತಿದ್ರು. ಅದೇ ನಮ್ಮ ವಿದಾಯದ ಕಾರ್ಯಕ್ರಮವೂ ಆಗ್ತಿತ್ತು. ನಾಟಕ ಅದೂ ಇದೂ ಇರ್ತಿತ್ತು. ಐದು ಆರನೇ ಕ್ಲಾಸಿನವರೂ ಕೂಡಿ ಶಾರದಾ ದೇವಿಗೆ ಅಲಂಕಾರ ಮಾಡ್ತಿದ್ವಿ. ಅದಿಕ್ಕೆಲ್ಲಾ‌ ಬೇಜಾನ್ ಹುವ್ವ ಬೇಕಾಗ್ತಿತ್ತು. ಒಂದ್ಸತಿ ನಾವು ಐದಾರು ಹುಡುಗೀರು ಬಲ್ ವಿಶೇಷವಾಗಿ ಅಲಂಕಾರ ಮಾಡ್ತೀವಿ, ತರಾವರಿ ಹುವ್ವ ಕಿತ್ಕೊಂಬರ್ತೀವಿ ಅಂತ ಮೇಷ್ಟ್ರುಗೆ ಯೋಳಿ ಬೆಳಗ್ಗೇನೆ ಸ್ಕೂಲ್ ಬಿಟ್ಟು ಹುವ್ವ ಹುಡೀಕ್ಕೊಂಡು ದಂಡಯಾತ್ರೆ ಹೊಂಟ್ವಿ. ಕಮಲಿ ಇದ್ದೋಳು ನಮ್ಮೂರ್ಗೋಗೋಣ ನಮ್‌ ತೋಟದಾಗೂ ಐತೆ ಅಂದ್ಲು.‌ ನಮ್ ತೋಟ ಇಸ್ಕೂಲ್ ಹಿಂಭಾಗದಾಗೆ ಇತ್ತು. ಅದಿಕ್ಕೆ ಅಲ್ಲಿ ತರಾವರಿ ಹುವ್ವ ಇದ್ರೂ ಸುತ ಯಾರಿಗೂ ಬೇಕಿರ್ಲಿಲ್ಲ. ಒಂದು ಬಸ್ಸು ಹತ್ಕೊಂಡು ಪಕ್ಕದಾಗಿರೋ ವೆಂಕಟಾಪುರಕ್ಕೋದ್ವಿ. ಅವರ ಅಮ್ಮ ಪಾಪ‌ ಮಕ್ಕಳು ಬಿಸಿಲಾಗೆ ಬಂದವೆ ಅಂತ ಬೇಲದಣ್ಣಿನ ಪಾನಕ ಕೊಟ್ರು. ತೋಟಕ್ಕೋಗಿ ಚಿಂತಾಮಣಿ, ಚೆಂಡೂವ, ಸ್ಯಾವಂತಿಗೆ, ಕನಕಾಂಬರ ಕಿತ್ತಿದ್ದಾಯ್ತು. ಕಿತ್ತಿದ್ದು ಅವರಮ್ಮ ಮತ್ತೆ ಯಾರ್ಯಾರೋ. ನಾವು ಅವರ ತೋಟದ ಮಗ್ಗುಲಲ್ಲಿ ಅಡ್ಡಾಡ್ಕೊಂಡು ಕಾರೆ ಹಣ್ಣು, ತೊಂಡೆಹಣ್ಣು, ನಾಯಿ ನೇರಳೆ ಕೀಳೋದ್ರಾಗೆ ಟೇಮಾಯ್ತು. ಸುಜಾತ ಅವರ ಮನೇಗೆ ಕರ್ಕೊಂಡು ಹೋದ್ಲು. ಅಲ್ಲಿ ಮಜ್ಜಿಗೆ ಸಮಾರಾಧ್ನೆ ಆಯ್ತು. ತಂಬಿಟ್ಟು ಕೊಟ್ರು. ಅವರಮ್ಮ‌ ಏಳು ಸುತ್ತಿನ್ ಕಣಗಿಲೆ, ಶಂಕೂವ ಕೀಳೋ ಹೊತ್ಗೆ ಚೇಪೇಕಾಯಿ, ಕಾಶಿಹಣ್ಣು ಕಿತ್ತು ಚೀಲ ತುಂಬಿದ್ದಾಯ್ತು. ಅಂಗೂ ಇಂಗೂ ಮಧ್ಯಾನ ಆಯ್ತು. ಕಮಲಿ ಮನೇಲಿ ಊಟುಕ್ಕಿಕ್ಕಿದ್ರು. ಉಂಡು ಬಸ್ ಹತ್ಕೊಂಡು ವಾಪ್ಸು ಬಂದ್ವಿ. ಅಲ್ಲೀವರ್ಗೂ ಬೇರೆ ಹುಡುಗೀರು ಪಾಠ ಕೇಳ್ಕೊಂಡು ಕುಂತಿದ್ರು. ಟೇಮಾತು ಎಲ್ಲ ತಯಾರು ಮಾಡ್ಕೊಳಿ ಅಂತ‌ ಮೇಷ್ಟ್ರು ಪಾಠ ಬಿಟ್ರು. ನಾವು ಬೇರೆ ಹುಡುಗೀರ್ಗೆ ಜೋರ್ ಮಾಡಿದ್ವಿ. ಬೆಳಗ್ನಿಂದ ಊರು ಅಲ್ಕೊಂಡು ಸುಸ್ತಾಗಿದ್ದೀವಿ.‌ ನೀವು ಕುಂತು ಹುವ್ವ ಕಟ್ರಿ. ನಾವು ಅಲಂಕಾರ ಮಾಡಾಕೆ ಬರ್ತೀವಿ ಅಂತೇಳಿ‌ ಮೆತ್ತಗೆ ಜಾಗ ಖಾಲಿ ಮಾಡಿದ್ವಿ. ಒಂದು ಮೂಲೇಲಿ ಕುಂತು ತಂದಿರೋ ಹಣ್ಣು- ಕಾಯಿ ಹಂಚ್ಕಂಡು ಸದ್ದಿಲ್ದಂಗೆ ತಿಂದಿದ್ದು ಯಾರ್ಗೂ ಗೊತ್ತೇ ಆಗ್ಲಿಲ್ಲ. ಅವತ್ತು ಅಲಂಕಾರ ಸ್ಯಾನೆ ಚೆಂದಾಗಿತ್ತು, ಪಾಪ ಈ ಹುಡುಗೀರು ಎಷ್ಟು ಕಷ್ಟ ಪಟ್ರು ಅಂತ ಎಲ್ರೂ ಹೊಗಳಿದ್ದೇ ಹೊಗಳಿದ್ದು. ನಾವು ಮಖ ಮಖ ನೋಡ್ಕೊಂಡು, ಮರೇಲಿ ಮುಸಿ ಮುಸಿ ನಕ್ಕಿದ್ದು ಮೊನ್ನೆ ನಡೆದಂಗೈತೆ. + +ಜೆ ಸಿ ಮೇಷ್ಟ್ರು + +ಜೆ ಸಿ‌ ಮೇಷ್ಟ್ರು ಅಂದ್ರೆ ನಮಗೆಲ್ಲ ದೇವ್ರಿದ್ದಂಗೆ. ಇಸ್ಕೂಲ್ ಪಾಠ ಹೇಳೋದ್ರಾಗೂ ಸೈ. ಬದುಕಿನ್ ಪಾಠ ಕಲ್ಸೋದ್ರಾಗೂ‌ ಸೈ. ವಿಜ್ಞಾನ ಪಾಠ ಮಾಡಾವಾಗ ಪ್ರಯೋಗ ಮಾಡಿ ತೋರುಸ್ತಿದ್ರು. ಬದುಕಿನಾಗೆ ಒಂದು ಗುರಿ ಅಂತ ಬಂದಿದ್ದು ಅವ್ರಿಂದ್ಲೇ. ನನ್ನ ನೋಡಿದ್ರೆ ಅವ್ರು ತುಂಬಾ ಆಸೆ ಮಾಡ್ತಿದ್ರು. ಪಾಪ ಸಾಧು ಹುಡುಗಿ!! ಅಪ್ಪ ದೊಡ್ಡ ಮನುಷ್ಯರು ಅಂತ ಚೂರೂ ದೊಡ್ಡಸ್ತಿಕೆ ಮಾಡಲ್ಲ. ವಿನಯವಂತೆ ಅಂತ‌ ನಂಬಿದ್ರು. ನನ್ನ ಖೊಖೊ ತಂಡಕ್ಕೆ ನಾಯಕಿ ಮಾಡಿದ್ರು. ಒಂದ್ಸಲ ನನ್ನ ನೋಟ್ ಬುಕ್ ಕಳ್ದೋಗಿದ್ದುಕ್ಕೆ ಎಲ್ರುನ್ನೂ ತರಗತೀಯಿಂದ ಆಚೆ ನಿಲ್ಸಿದ್ರು. ಆಗ ಈ ಪ್ರಸನ್ನ ಇದ್ದೋನು ‘ನಂಗೆ ಗೊತ್ತಿರೋರು ಮಂತ್ರ ಹಾಕೋರು ಒಬ್ರವ್ರೆ, ಕದ್ದವ್ರು ಸುಮ್ಕೆ ತಂದ್ಕೊಟ್ರೆ ಸೈ. ಇಲ್ಲದಿದ್ರೆ ಎಲ್ಲಾರ್ ಮುಂದ್ಲು ಅವ್ಮಾನ ಆಗ್ತೈತೆ’ ಅಂತ ಹೆದುರ್ಸಿದ್ದ. ಪಾಪ ಕದ್ದೋರು ಹೆದ್ರಿ ಮಾರ್ನೇ ದಿನ ಕ್ಲಾಸ್ ರೂಮ್ನಾಗೆ ಬಿಸಾಕಿದ್ರು.ಆವಾಗ ಒಂದು ಲೆಡ್ ಪೆನ್ನು ಹೊಸ್ದಾಗಿ ಬಂದಿತ್ತು. ಒಂದೇ ಪೆನ್ನಾಗೆ ನಾಕು ಬಣ್ಣ. ಹಸ್ರು, ಕೆಂಪು, ಕಪ್ಪು, ನೀಲಿ. ಮೇಷ್ಟ್ರು ತಾವ ಇತ್ತು. ನಮ್ಗೋ ನೋಡೋಕೆ ಖುಷಿ. ನಂಗೂ ಒಂದು ಪೆನ್ ತಂದುಕೊಟ್ಟಿದ್ರು. ಅದ್ರಾಗೆ ಬರೆಯೋದುಕ್ಕೆ ಎಷ್ಟು ಖುಷಿ. ಅದುಕ್ಕಿಂತ ಜಾಸ್ತಿ ಎಲ್ರುಗೂ ಅದುನ್ನ ತೋರ್ಸೋದ್ರಾಗೆ. ಅದು ಕೈಯಾಗಿದ್ರೆ ತಲೆ ಕುತ್ತಿಗೇ ಮ್ಯಾಲೇ ನಿಲ್ಲದೇ ಇರೋಷ್ಟು ಜಂಭ ಬೇರೆ. + +ದೇವ್ರ ಸಿನಿಮಾ ನೋಡಿದ್ದು + +ಇದಂತೂ ಮರೆಯೋಕೆ‌ ಆಗಲ್ಲ. ಆಗ ನಮ್ಗೆ ಸಿನಿಮಾ ಅಪರೂಪದ್ದು. ಹೋಬಳಿ ಕೇಂದ್ರ ಕೊಡಿಗೇನಹಳ್ಳೀಲಿ ಟೆಂಟ್ ಇತ್ತು. ತಾಲೂಕು ಕೇಂದ್ರ ಮಧುಗಿರೀಲಿ ಥೇಟರ್ ಇತ್ತು. ರವಿಚಂದ್ರನ್ ಅವರ ಪ್ರೇಮಲೋಕ ಸಿನಿಮಾ ಬಂದಿತ್ತು. ಸಿನಿ ಲೋಕಕ್ಕೇ ಹೊಸ ವ್ಯಾಕರಣ ಕೊಟ್ಟಂತಹ ಸಿನಿಮಾ ಅದು. ಅದ್ರ ಬಗ್ಗೆ‌ ಎಲ್ಲೆಲ್ಲೂ ಮಾತು.‌ ನಮ್ಗೆ ಅದೆಲ್ಲ ಗೊತ್ತಿರ್ಲಿಲ್ಲ. ಇನ್ನೂ ಸಣ್ಣುಡುಗ್ರು. ನಮ್ ಮೇಷ್ಟ್ರು ಮೇಡಮ್ಮುಗಳು ಕುಂತು ಇದರ ಬಗ್ಗೆ ಮಾತಾಡ್ತಿದ್ರೆ ನಾವು ಕಣ್ಣೂ ಬಾಯಿ ಬಿಟ್ಕೊಂಡು ಕೇಳ್ತಿದ್ವಿ. ಅದೆಂತ ಸಿನಿಮಾ‌ ಇರ್ಬೋದಪ್ಪ ಅಂತ ಸೋಜಿಗ ಅನ್ಸಿತ್ತು. ನೀವೆಲ್ಲ ನೋಡಲೇಬೇಕು ಅಂತ ಅವ್ರೂ ಹೇಳೇ ಹೇಳೀರು. ನಮ್ ಮನ್ಯಾಗೂ ಕೇಳ್ ನೋಡ್ದೆ. ಅಪ್ಪ ಅಮ್ಮ‌ ಅಂತ ಆಸೆ ತೋರ್ಲಿಲ್ಲ. ಗೆಳತೀರ್ ಮನ್ಯಾಗೂ ಅಷ್ಟೆ. ಸುಮ್ಕಾದ್ವಿ. ಒಂದಿನ ಮೇಷ್ಟ್ರು ಹೇಳಿದ್ರು. ಇವತ್ತೇ ಕೊನೆದಿನ. ನಾಳೆಯಿಂದ ಬ್ಯಾರೆ ಸಿನ್ಮಾ ಬರುತ್ತೆ. ನಾನು ಹೇಳ್ದೆ ಅಂತ ಮನೇಲಿ ಹೇಳಿ ನೀವೆಲ್ಲ ಹೋಗಿ ಅಂತ, ಇಸ್ಕೂಲ್ ಬಿಟ್ಟು ಸಿನ್ಮಾ ನೋಡಾಕೆ ಕಳ್ಸಿದ್ರು. ಅದುವರ್ಗೆ ನಾವ್ಯಾರೂ ನಾವ್ ನಾವೇ ಸಿನಿಮಾಗೆ ಹೋಗಿರ್ಲಿಲ್ಲ. ಮೇಷ್ಟ್ರು ಹೇಳೌರೆ ನಾವು ಹೋಗ್ಲೇಬೇಕೂಂತ ಹೇಳಿ, ಕಾಸು ಈಸ್ಕೊಂಡು ಬಸ್ಸ್ಟಾಂಡಿಗೆ ಓಡಿ, ಬಸ್ಸು ಹತ್ತಿ ಅಂತೂ‌ ಮಧುಗಿರಿ ತಲುಪಿದ್ ಮ್ಯಾಲೇನೆ ಉಸಿರು ಬಿಟ್ಟಿದ್ದು. ಸಿನಿಮಾ ಶುರು ಆಗಾಕೆ ಇನ್ನೂ ಟೇಮಿತ್ತು. ಮೊದಲು ರವಿ ಟಾಕೀಸ್ ಗೆ ಹೋಗಿದ್ದು. ಅಲ್ಲಿ‌ ಪ್ರೇಮ ಲೋಕ ಸಿನಿಮಾದ್ದು ದೊಡ್ಡ ದೊಡ್ಡ ಪಟಗಳ್ನ ಹಾಕೌರೆ. ನಾವು ಅದುನ್ನು ನೋಡಿದ್ದೆ, ಮಕ ಮಕ ನೋಡ್ಕೊಂಡು ಗಾಬ್ರಿ ಬಿದ್ವಿ. ಅಲ್ಲಾ ನಮ್‌ ಮೇಷ್ಟ್ರು ಹೇಳಿರೋ ಸಿನ್ಮಾ‌ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು. ಮದ್ಲು ಇಲ್ಲಿಂದ ದೂರ ಹೋಗ್ದಿದ್ರೆ ಗುರ್ತಿರಾರು ಯಾರಾನಾ ನೋಡಿ ತಪ್ಪು ತಿಳ್ಕೊಂಡಾರು’ ಅಂತ ಮಕ ತಿರುಗುಸ್ಕೊಂಡು ಸ್ಯಾನೆ ಬೇಸ್ರದಿಂದ ಅಲ್ಲಿಂದ ಹೊರಟ್ವಿ. ಮೊದುಲ್ನೇ ಕಿತ ನಾವ್ ನಾವೇ ಮನೇಲಿ ಗಲಾಟೆ ಮಾಡ್ಕೊಂಡು ಬಂದೀವಿ. ಸ್ವಲ್ಪ ದೂರದಲ್ಲಿ ಶಂಕರ ಥೇಟರ್ ಇತ್ತು. ಅಂಗೇ ಅಲ್ಲೂ ಒಂದ್ ಸತಿ ಕಣ್ಣಾಕಾನ ಅಂದು ಹೋದ್ವಾ? ನೋಡೀರೇ ದ್ಯಾವ್ರು ಸಿನ್ಮಾ. ಬೆಳ್ಳಿನಾಗ ಅಂತ ಮಕ್ಕಳ್ ಸಿನ್ಮಾ ಅದು. ಸುತ್ತೂರ ನಾಗಪ್ಪುಂದು ದೊಡ್ಡ ದೊಡ್ಡ ಪಟ ಹಾಕಿದ್ರಾ, ಭಕ್ತಿ ಅಂಬೋದು ಅಂಗೇ ಉಕ್ಕೋಗಿ ಕೈಮುಗಿದ್ವಿ. ಅಡ್ಡ ಬೀಳಾದು ಚೆಂದಾಕಿರಲ್ಲ ಅಂತ ಸುಮ್ಕಾದ್ವಿ. ಮೊದ್ಲು ಓಡೋಗಿ ಸರ್ತೀಲಿ ನಿಂತು ಟಿಕೀಟ್ ತಕಂಡು ಒಳೀಕ್ ಹೋಗಿ ಸಿನಿಮಾ ನೋಡಿ ಪಾವನ ಆದ್ವಿ. ಒಳ್ಳೆ ಸಿನ್ಮಾ ನೋಡಿದ್ ಖುಷೀಲಿ ಮನೇಗೆ ಬಂದು ಅಮ್ಮುಂಗೆ ಕತೆ ಯೋಳಿದ್ದೂ ಯೋಳಿದ್ದೆ. + +ಮಾರ್ನೇ ದಿನ‌ ಇಸ್ಕೂಲ್ಗೋದ್ವಾ. ಮೇಷ್ಟ್ರು ಕೇಳಿದ್ರು, ಸಿನಿಮಾ ನೋಡಿದ್ರಾ? ನಾನು‌ ಅಡ್ಡಡ್ಡ ಉದ್ದುದ್ದ ತಲೆ ಆಡುಸ್ದೆ. ಅವುರ್ಗೆ ಅರ್ಥ ಆಗ್ಲಿಲ್ಲ. ಹೆಂಗಿತ್ತು ಅಂತ ಕೇಳಿದ್ರು. ನಾನೂ ಧೈರ್ಯ ಮಾಡಿ ಯೋಳೇಬಿಟ್ಟೆ. ‘ಯಾಕೋ ಅದುರ್ ಪಟ ನೋಡೀರೇ ಮಕ್ಕುಳ್ ನೋಡೋ ಸಿನ್ಮಾ ಅನ್ನುಸ್ಲಿಲ್ಲ ಸಾ. ಅದಿಕ್ಕೇ ದೇವುರ್ ಸಿನ್ಮಾ ಅಂತ ಬೆಳ್ಳಿನಾಗ ನೋಡಿದ್ವಿ. ಬೋ ಚೆಂದಾಕಿತ್ತು’ ಅಂತ ಒಂದೇ ಉಸಿರ್ನಾಗೆ ಯೋಳಿ ಬೈಗಿಯ್ತಾರೇನೋ ಅಂತ ನೋಡ್ದೆ. ಒಂದು ನಿಮಿಷ ಯೋನೂ ಯೋಳ್ಲಿಲ್ಲ. ಆಮೇಲೆ ಅಂಗೇ ನಗಾಡಿ, ‘ಒಳ್ಳೆ ಕೆಲ್ಸ ಮಾಡಿದ್ದೀರಿ. ಇಸ್ಕೂಲ್ ತಪ್ಸಿ ನಿಮ್ಮುನ್ನ ಕಳಿಸಿದ್ನಲ್ಲ ನಾನು ಬಲ್ ಬುದ್ದಿವಂತ’ ಅಂತ ಕುಶಾಲು(ತಮಾಷೆ) ಮಾಡಿದ್ರು. ಊಟಕ್ಕೆ ಬಿಟ್ಟಾಗ ನಮ್ಮುನ್ನ ತೋರ್ಸಿ ಬ್ಯಾರೆ ಮೇಷ್ಟ್ರು ಮೇಡಮ್ಮುಗಳ್ಗೆ ಅದೇನೋ ಯೋಳ್ಕೊಂಡು ನಗಾಡಿದ್ದೂ ನಗಾಡಿದ್ದೇ. ಅವ್ರೆಲ್ಲಾ ದೇವ್ರ ಸಿನ್ಮಾ ಹೆಂಗಿತ್ತು ಅಂತ ನಮ್ಮುನ್ನ ಕೇಳೋದು, ನಗೋದು. ನಮ್ಗೂ ನೋಡೀ ನೋಡೀ ಇವುರ್ಗೆಲ್ಲಾ ಮಳ್ಳು ಹಿಡೀತೋ ಏನೋ ಅಂತ ಅನ್ಮಾನ ಬಂದೋತು. ಒಂತರಾ ಅವ್ಮಾನ ಆದಂಗಾಗಿ ಎರ್ಡು ದಿನ ತಲೇ ತಪ್ಸಿ ಓಡಾಡ್ತಿದ್ವಿ. ಇವತ್ತೂ ಈ ವಿಸ್ಯ ನಡೆದಿದ್ ನೆನುಸ್ಕೊಂಡ್ರೆ ನಗು ಪಕ್ಕೆ ತಿವ್ಕೊಂಡು ಬರುತ್ತೆ. + + + +ಇಸ್ಕೂಲು ಅನ್ನೋದು ನನ್ನ ಬಾಲ್ಯದಾಗೆ ಇಂತಾ ಎಷ್ಟೋ ರಸಪುರಿ ಮಾವಿನಹಣ್ಣಿನಂಗಿರೋ ಸಂಗ್ತಿಗಳ್ನ ಮಡಿಲಾಗೆ ಕಟ್ಟಿಕೊಂಡಿದೆ. ಘಮಕ್ಕೆ ಮೂಗರಳಿಸಿ, ಖುಷಿಲಿಂದ ಚೀಪುತ್ತಾ ಹೋದ್ರೆ ಬಲ್ ಮೋಜು.‌ + +ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_290.txt b/Kenda Sampige/article_290.txt new file mode 100644 index 0000000000000000000000000000000000000000..8f109da615be3759a9dfbd62e3c9a2b3b2102300 --- /dev/null +++ b/Kenda Sampige/article_290.txt @@ -0,0 +1,41 @@ + + +ಕತೆ ಹುಟ್ಟಿಕೊಳ್ಳುವ ಹೊತ್ತೇ ವಿಸ್ಮಯ. ಕ್ರೌಂಚ ಪಕ್ಷಿಯ ರೋಧನ ರಾಮಾಯಣಕ್ಕೆ ಹೇತುವಾದ ರೀತಿಯಲ್ಲಿಯೇ ಅನೇಕ ಸಂದರ್ಭಗಳಲ್ಲಿ ಬದುಕಿನಲ್ಲಿ ಕಾಣುವ ಸಣ್ಣ ಸಣ್ಣ ಘಟನೆಗಳೇ ಮಹಾಕಾವ್ಯಕ್ಕೆ ಪ್ರೇರಣೆಯಾಗಬಹುದು. ಬಾನಲ್ಲಿ ಕಂಡ ಮೋಡಗಳು ಪಡೆಯುವ ವಿವಿಧ ರೀತಿಯ ಆಕಾರಗಳಂತೆ ಸೃಜನಶೀಲ ಕತೆಗಾರ ತನ್ನ ಕಣ್ಣಲ್ಲಿ, ಕಿವಿಯಲ್ಲಿ, ಮನದಲ್ಲಿ ನೋಡಿದ, ಕೇಳಿದ, ಅನುಭವಿಸಿದ ವಸ್ತುವನ್ನು ನವಿರಾದ ಕತೆಯನ್ನಾಗಿಸಬಲ್ಲದು. + +ಅಷ್ಟಕ್ಕೂ ಕತೆಯೆನ್ನುವುದು ಓದುವವರನ್ನು ಆಯಾ ಭಾವಲೋಕಕ್ಕೆ ಒಯ್ಯುವ ಒಂದು ಮಾಧ್ಯಮ ತಾನೇ. ಈ ಕತೆಗಳ ಯಶಸ್ಸು ಈ ಭಾವಲೋಕದಲ್ಲಿ ಓದುಗನನ್ನು ಹೇಗೆ ಸೆರೆಹಿಡಿದಿಡುತ್ತದೆ ಎನ್ನುವದರಮೇಲೆ ನಿಂತಿದೆ. ವರ್ತಮಾನದ ಕನ್ನಡ ಕಥಾಲೋಕದಲ್ಲಿ ಇಂತಹ ಅನೇಕ ಗಮನಿಸಬಹುದಾದ ಕತೆಗಳಲ್ಲಿ ಒಂದು ರಾಜಶೇಖರ ಜೋಗಿನ್ಮನೆಯವರು ಬರೆದ “ಇಗ್ಗಪ್ಪಣನ ವಿಗ್ರಹಾನ್ವೇಷಣೆ”. ಒಟ್ಟು ಹನ್ನೆರಡು ಕತೆಗಳ ಈ ಕಥಾ ಸಂಕಲನವನ್ನು ಬೆಂಗಳೂರಿನ ಸಮನ್ವಿತ ಪ್ರಕಾಶನದವರು ಹೊರತಂದಿದ್ದಾರೆ. + +ರಾಜಶೇಖರ ಜೋಗಿನ್ಮನೆಯವರು ಕರ್ನಾಟಕದ ಹಿರಿಯ ಪತ್ರಕರ್ತರು. ವಿಜಯವಾಣಿಯಲ್ಲಿ ಸುದ್ಧಿ ಸಂಪಾದಕರು. ಇವರಮೊದಲ ಕಥಾ ಸಂಕಲನ “ಬಿಂಗಿ” ಪ್ರಕಟವಾದ ಇಪ್ಪತ್ತು ವರ್ಷಗಳ ನಂತರ ಈ ಕಥಾಸಂಕಲವನ್ನು ಹೊರತಂದಿದ್ದಾರೆ. ಉತ್ತರ ಕನ್ನಡದ ಸಿದ್ದಾಪುರ ಮೂಲದವರಾದ ಜೋಗಿನ್ಮನೆಯವರ ಕತೆಗಳಲ್ಲಿ ಪತ್ರಕರ್ತರಿಗಿರುವ ವರದಿಗಾರಿಕೆಯ ಚಾಳಿಹೊರಬರದೇ ಓರ್ವ ಕತೆಗಾರನಾಗಿ ಭಾವನಿರೂಪಣೆಯ ಬಣ್ಣಗಳನ್ನು ತುಂಬಿರುವದನ್ನು ಕಾಣಬಹುದಾಗಿದೆ. ಉತ್ತರ ಕನ್ನಡದ ಕತೆಗಾರರಲ್ಲಿ ಇರುವ ವೈಶಿಷ್ಟ್ಯವೇ ಅಂತಹದ್ದು. ಇಲ್ಲಿನ ಕತೆಗಾರರಲ್ಲಿ ಸಾಮಾನ್ಯವಾಗಿ ಇತರೆಡೆ ಕಂಡು ಬರುವಂತೆ ಊಳಿಗ ಮಾನ್ಯ ಪದ್ಧತಿ, ಶೋಷಣೆ ಮುಂತಾದ ಘಟನೆಗಳು ಕಂಡು ಬರುವದಿಲ್ಲ. ಇಲ್ಲಿನ ಜನರೆಲ್ಲಾ ಶೇಕಡಾ ಎಂಭತ್ತು ಅರಣ್ಯದಿಂದ ಕೂಡಿರುವ ಗುಡ್ಡ ಬೆಟ್ಟಗಳಿಂದ ಆವೃತವಾದ ಪ್ರಕೃತಿಯ ಮಡಿಲಲ್ಲಿ ಸುಖ ಮತ್ತು ಕಷ್ಟಗಳನ್ನು ಸಹಿಸಿಯೇ ಬಡ ಮತ್ತು ಮಧ್ಯಮ ವರ್ಗಗಳಲ್ಲಿ ಬೆಳೆದವರು. ವರ್ಗ ಬೇಧವಿಲ್ಲದೇ ಶಾಲೆಗೆ ಹತ್ತಾರು ಮೈಲಿಗಳಷ್ಟು ಹೋಗಿ ಬರುವ ಕಾಲುದಾರಿಯಲ್ಲಿ ಕಾಡಿನ ನೋಂಪನ್ನು ಅನುಭವಿಸಿರುವದರಿಂದ ಸಹಜವಾಗಿಯೇ ಭಾವಜೀವಿಯಾದವರು. + +(ರಾಜಶೇಖರ ಜೋಗಿನ್ಮನೆ) + +ಈ ಭಾವ ತೀವ್ರತೆ ಉದ್ಯೋಗಕಾಗಿ ದೊಡ್ಡ ದೊಡ್ಡ ಪಟ್ಟಣ ಸೇರಿದರೂ ಇಲ್ಲಿನ ಕತೆಗಾರರನ್ನು ಕಾಡುತ್ತಿರುತ್ತದೆ. ಚಿತ್ತಾಲರ, ಕಾಯ್ಕಿಣಿಯವರ ಕತೆಗಳಲ್ಲಿನ ಹನೇಹಳ್ಳಿ, ಗಂಗಾವಳಿ ಗೋಕರ್ಣದ ಬದುಕನ್ನು ಇಲ್ಲಿ ನೆನೆಯಬಹುದು. ಅದೇ ರೀತಿ ಘಟ್ಟದ ಮೇಲಿನ ಪುಟ್ಟ ಊರು ಕುಮ್ರಿಜಡ್ಡಿ ಈ ಸಂಕಲನದಲ್ಲಿ ಕತೆಗಾರರನ್ನು ಬೆನ್ನುಬಿಡದೆ ನೆನಪಿಸಿಕೊಂಡು ಪತ್ರಿಕಾವ್ಯವಸಾಯದ ಮಧ್ಯೆಯೂ ಇಣುಕುಹಾಕಿದೆ. + +ಇಗ್ಗಪ್ಪಣ್ಣನಿಗೆ ಅಪ್ಪ ಹೇಳಿದ ವಿಗ್ರಹಾನ್ವೇಷಣೆ ತುಂಬಾ ಮುಖ್ಯ. ಅಪ್ಪ ಸಾಯುವಾಗ ಹೇಳಿದ ಮಾತು ಆತನನ್ನು ಕೊರೆಯುತ್ತಿದೆ. ಕುಮ್ರಿಜಡ್ಡಿಯಿಂದ ಸುಮಾರು ಹದಿನಾಲ್ಕು ಕಿ.ಮೀ. ದೂರದಲ್ಲಿನ ಕಾನಿನೊಳಗೆ ದಿಬ್ಬದ ಪಕ್ಕ ಇರುವ ನೀರೆತ್ತಿಮರ, ಅದರ ಪಕ್ಕದಲ್ಲಿರುವ ಪುಟ್ಟ ತಗ್ಗು. ಈ ತಗ್ಗಿನಲ್ಲಿ ಅಗೆದರೆ ಅಲ್ಲಿ ಇರುವ ದೇವಿಯನ್ನು ತಂದು ಮನೆಯ ಪಕ್ಕದಲ್ಲಿರುವ ಅಶ್ವತ್ಥಮರದ ಪಕ್ಕದಲ್ಲಿ ಸ್ಥಾಪಿಸಬೇಕು. ಪ್ರಾರಂಭದಲ್ಲಿಯೇ ಕುತೂಹಲ ಮೂಡಿಸುವ ಈ ಕತೆ ಸರಳವಾಗಿ ಸಾಗಿದರೂ, ಉಪಯೋಗಿಸಿರುವ ಪ್ರತಿಮೆಗಳು ಮತ್ತು ಸಂಕೇತಗಳು ಕತೆ ಓದಿದ ನಂತರವೇ ಮಹತ್ವ ಪಡೆಯುತ್ತದೆ. + +ಅನ್ವೇಷಣೆ ಮನುಷ್ಯನ ಸಹಜ ಸ್ವಭಾವ. ಇಗ್ಗಪ್ಪಣ್ಣನ ಅಪ್ಪ ಸಾಯುವಾಗ ಬೋದೆ ಸರಿಯಿಲ್ಲದೇ ಹೇಳಿದ್ದಿರಬಹುದು ಎಂದು ಅಂದುಕೊಂಡರೂ ಆ ಅಪ್ಪ ಇಗ್ಗಪ್ಪಣ್ಣನ ಮನಸ್ಸಿನಲ್ಲಿ ಆಳವಾಗಿ ಇಳಿದುಬಿಟ್ಟಿದ್ದಾನೆ. ಆತನ ಮಗ ಬೆಳೆದು ದೊಡ್ಡವನಾಗಿ ಬೆಂಗಳೂರಿನಲ್ಲಿ ದುಡಿಯುವ ಸುಖದ ಬದುಕಿನಲ್ಲಿಯೂ ಇಗ್ಗಪ್ಪಣ್ಣನಿಗೆ ಅಪ್ಪನ ಮಾತು ಮನಸ್ಸಿನಾಳಕ್ಕೆ ಇಳಿದು ಬಿಟ್ಟಿದೆ ಎನ್ನುವದಕ್ಕೆ ಸ್ವಪ್ನದಲ್ಲಿ ಅಪ್ಪ ಮತ್ತೆ ಬಂದು ಹೇಳಿದುದು ಸಾಕ್ಷಿ. ಹಾಗಾಗಿಯೇ ಆ ನೀರೊತ್ತಿಮರ, ಅಲ್ಲಿನ ದಿಬ್ಬವನ್ನು ಹುಡುಕಿಹೋಗುತ್ತಾನೆ; ಹೋಗುವ ಮಾರ್ಗದಲ್ಲಿ ದಾರಿ ತಪ್ಪಿದಾಗ ಮತ್ತೊಂದು ದಾರಿಯನ್ನು ತಾನೇ ಅನ್ವೇಷಿಸುತ್ತಾ ಕೊನೆಗೆ ಗುರಿತಲುಪುತ್ತಾನೆ. ಅಲ್ಲಿ ಅಗೆದಾಗ ಇನ್ನೇನು ದೇವಿಯ ವಿಗ್ರಹ ಸಿಕ್ಕೇ ಬಿಟ್ಟಿತು ಎನ್ನುವ ಕುತೂಹಲದ ತೀವ್ರತೆಯಲ್ಲಿ ಓದುಗನನ್ನು ತಂದು ನಿಲ್ಲಿಸಿ ಇಣುಕಿ ನೋಡುವಾಗ ಅಲ್ಲಿ ಸಿಕ್ಕಿದ್ದು ದೇವಿಯ ವಿಗ್ರಹವಲ್ಲ. ಬದಲು ಉಕ್ಕೇರಿದ್ದು ನೀರಿನ ಒರತೆ. “ನೀರೆಂಭ ನಿಧಿ”ಯ ಮೂಲಕ ನೀರಿನ ಸಹವಾಸ ಅಂಟಿಕೊಂಡ ಲೇಖಕರು ದೇವಿಯನ್ನು ನೀರಿಗೆ ಸಮೀಕರಿಸುವ ರೀತಿಯೇ ವಿಭಿನ್ನ. ಈಗ ಕತೆಯನ್ನು ಹಿಂತಿರುಗಿ ನೋಡಿದಾಗ ಅಶ್ವತ್ಥಮರದ ಪಕ್ಕದಲ್ಲಿ ಸ್ಥಾಪಿಸಬೇಕಾದ ಸಂಕೇತ ಅರ್ಥವಾಗುತ್ತದೆ. + +ಈ ನಡುವೆ ಒಮ್ಮೆ ಇಗ್ಗಪ್ಪಣ್ಣ ತನ್ನ ಬದುಕಿನ ಹೋರಾಟದಲ್ಲಿ ಹೆಬ್ಬಾವಿನ ಬಾಯಿಗೆ ಸಿಕ್ಕಿಕೊಂಡು ಅಲ್ಲಿಂದ ಉಳಿದುಬಂದರೂ ಆ ಲೋಳೆಯನ್ನು ತೊಳೆಯಲು ನೆರವಾದದ್ದು ನೀರೇ. ಕೊನೆಯಲ್ಲಿ ಕಾಡಿಪ್ರಾಣಿಗಾದರೂ ಆದೀತು ಎನ್ನುತ್ತಾ ಮನೆಗೆ ಕಾಲುವೆ ಮಾಡಿ ಕೊಂಡೊಯ್ಯಬಹುದಾದ ನೀರು ಅನ್ವೇಷಣೆಯ ಹೊಸ ಮಜಲನ್ನು ಮುಟ್ಟುವದು ಅರ್ಥಪೂರ್ಣ. ಅದೇ ರೀತಿ “ಒಂದೆಲಗದ ತಂಬುಳಿ”ಯ ಕರುಣಾಕರ. ಈತನೂ ತನ್ನ ಮೂಲದ ಪ್ರೀತಿಯನ್ನು ಬಿಡಲಾರದವ. ಬದುಕಿನ ರಥಕ್ಕಾಗಿ ಬೆಂಗಳೂರು ಸೇರಿದವ. ಅನುಕೂಲಸ್ಥ. ಅಪ್ಪ ಅಮ್ಮ ಇಬ್ಬರೂ ಊರನಲ್ಲಿ ಇದ್ದರೂ ಈತ ಊರು ಸೇರಲಾರ; ಆದರೆ ಆ ಬಂಧವನ್ನು ಬಿಡಲಾರದ ವ್ಯಕ್ತಿತ್ವ. + +ಕಥೆಯ ನಿರೂಪಣೆಯಲ್ಲಿ ನಾವೂ ಕೂಡಾ ಕರುಣಾಕರನ ಜಾಗದಲ್ಲಿ ನಿಂತುಬಿಡುತ್ತೇವೆ. ಒಂದೆಲಗ ನೆನಪಿನ ಶಕ್ತಿಹೆಚ್ಚಿಸುವ ಸಂಕೇತ. ಇದು ನೆಲದಲ್ಲಿ ಬೆಳೆಯುವ ಸಸ್ಯವೂ ಹೌದು. ನೀರು ಮತ್ತು ಭೂಮಿಯ ಕುರಿತು ಅಪರಿಮಿತ ಆಸಕ್ತಿಯಿದ್ದ ಜೋಗಿನ್ಮನೆಯವರ ಇಗ್ಗಪ್ಪ ಮತ್ತು ಕರುಣಾಕರ ಇಬ್ಬರೂ ಇಲ್ಲಿ ಸಾಮ್ಯತೆಯನ್ನು ಪಡೆಯುವದು ಹೀಗೆ. ನಾವು ಕಳೆದುಕೊಂಡುದೆಲ್ಲಿ ಎನ್ನುವದರ ಹುಡುಕಾಟದಲ್ಲಿರುವ ಪುರಾಣಗಳ ‘ಅಭಿಜ್ಞಾ’ನದ ನೆನಪು ಮಾಡಿಕೊಳ್ಳುವ ಕರುಣಾಕರನಿಗೆ ಅನಿಸಿದ್ದು ಕಳೆದುದನ್ನು ಕಳೆದಕಡೆಯೇ ಹುಡುಕಬೇಕು, ಹಾಗೇ ಹುಡುಕಬೇಕಾದರೆ ನಮ್ಮ ಮೂಲ ಸೆಲೆ ನೆನಪಾಗಬೇಕು. + + + +ಇಗ್ಗಪ್ಪಣ್ಣನಲ್ಲಿ ವೇದಾಂತದ ಅಶ್ವತ್ಥ ಸಂಕೇತವಾದರೆ ಇಲ್ಲಿ ಜನಪದರ ‘ಒಂದೆಲಗ’ಪಡೆದುಕೊಳ್ಳುವ ಸಂಕೇತ ಮತ್ತೂ ವಿಶಿಷ್ಠ. ಈ ಎರಡರಲ್ಲೂ ಸಾಮ್ಯವಿದೆ. ಈ ಎರಡೂ ಕತೆಯ ರಚನಾ ಕ್ರಮವೇ ಇತ್ತೀಚಿನ ಕತೆಗಳಲ್ಲಿ ಹೊಸ ರೀತಿಯದು. “ಮುತ್ತಜ್ಜನ ಊರುಗೋಲು” ಮತ್ತು “ನಾಟಕದ ಮಾರನೇ ದಿನ” ಎರಡೂ ಕತೆಗಳೂ ಹಳ್ಳಿಯ ಬದುಕಿನಲ್ಲಿರುವ ಕಳೆದು ಹೋದ ವೈಭವದ ನೆನಪುಮಾಡಿಕೊಳ್ಳುವಂತಹದ್ದು. + +ಮನು ಮತ್ತು ಮಹೇಶ ಇಲ್ಲಿ ವರ್ತಮಾನದ ಪ್ರತಿನಿಧಿಗಳು. ಗೌರಕ್ಕನಿಗೆ ಮಾವನ ತಂದೆ ಊರಜ್ಜ ತಬಲಾ ಬಾರಿಸುವ ಹುಚ್ಚಿನಲ್ಲಿ ನಾಟಕದ ಖಯಾಲಿಗೆ ತೊಡಗಿ ಅಲ್ಲಿನ ಹೆಣ್ಣುಗಳ ಹಿಂದೆ ಬಿದ್ದು ಎಲ್ಲವನ್ನು ಕಳೆದುಕೊಂಡು ಬೀದಿ ಹೆಣವಾದ ದುಃಸ್ವಪ್ನ ಕಾಡುತ್ತಿರುತ್ತದೆ. ಅಪ್ಪನಿಗೆ ತನ್ನ ಅಜ್ಜನೊಳಗಿನ ಕಲಾವಿದ ತನ್ನ ಮಗನಲ್ಲಿ ಮೂಡಿಬರಲಿ ಎನ್ನುವದು ಆಶಯ. ಇದಕ್ಕೆ ಮನುವಿನ ಅಪ್ಪ ಆಶ್ರಯಿಸುವದು ಶಟ್ಟಿ ಮಾಸ್ತರರ ಜ್ಯೋತಿಷ್ಯ. “ನಾಟಕದ ಮಾರನೇ ದಿನ” ಕತೆಯ ಮಹೇಶ ಖಯಾಲಿಗಾಗಿ ವರ್ಷಕ್ಕೊಮ್ಮೆ ಆಡುವ ನಾಟಕದ ನಟ. ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೊಮ್ಮೆ ನಾಟಕ ಆಡುವ ಸಂಭ್ರಮವೇ ಬೇರೆ. ಅದರ ತಯಾರಿ, ತಾಲೀಮು, ಅತಿಥಿ ನಟಿಯರ ಕುರಿತು ಹಬ್ಬುವ ಸುದ್ದಿ, ನಾಟಕ ಮುಗಿದ ಮೇಲೆ ಆ ಕುರಿತು ಬರುವ ವಿಮರ್ಶೆ ಮತ್ತೆ ಮುಂದಿನ ವರ್ಷದ ನಾಟಕದ ಸಿದ್ಧತೆ; ಇವೆಲ್ಲಾ ಸಂಸ್ಕೃತಿಯ ಕೊಂಡಿಗಳು. ಇಲ್ಲಿ ಆ ಸಂಸ್ಕೃತಿಯ ಸೆಳವಿಗೆ ಸಿಕ್ಕ ಮಹೇಶ ಚಾರುದತ್ತ ಪುಲಕೇಶಿಯಾಗಿ ಅಗುವ ರೂಪಾಂತರದ ಸುತ್ತ ಕತೆ ಸಾಗುತ್ತದೆ. + +ಎರಡೂ ಕಡೆ ಅಮ್ಮನ ಆತಂಕ ಸಹಜವಾಗಿ ಬಂದಿದೆ. ಮನು ಊರಿನಲ್ಲಿದ್ದೇ ಪ್ರಸಿದ್ಧ ತಬಲಾವಾದಕನಾಗುತ್ತಾನೆ. ಊರು ಕೇರಿ ಮುಖ್ಯವಲ್ಲ, ಆ ಕುರಿತಾದ ಪರಿಶ್ರಮ ಮುಖ್ಯವೆನ್ನುವದಕ್ಕೆ ಜ್ಯೋತಿಷ್ಯವನ್ನು ನೆಪಮಾಡಿಕೊಂಡು ಮನುವಿನ ಅಪ್ಪ ಮನುವಿನ ಆಶೆಗೆ ನೀರೆರೆದಿದ್ದಾನೆ. ಮಹೇಶ ನಾಟಕದ ಮಾರನೇ ದಿನ ಅಮ್ಮನ ಅಡ್ಡಿ ನಿವಾರಿಸಿಕೊಳ್ಳಲು ಊರುಬಿಟ್ಟು ಓಡಿಹೋಗಿ ನಾಟಕದ ಕಂಪನಿ ಸೇರಿದ್ದಾನೆ. ಇಬ್ಬರೂ ಪ್ರಸಿದ್ಧರಾದಾಗ ಹೆಮ್ಮೆಪಡುವದು ಆ ತಾಯಂದಿರೆ ಹಾಗೂ ಅವರ ಮೂಲಕ ಊರವರೆಲ್ಲರೂ. ಈ ವೈಭವ ಇದೀಗ ಉಳಿದಿಲ್ಲ. “ನಾಟಕದ ಮಾರನೇದಿನ”ದಲ್ಲಿ ಈ ವೈಭವ ಕಳೆದು ಹಳ್ಳಿಯಜನ ಟೀವಿಯ ಧಾರಾವಾಹಿಯಲ್ಲಿ ಮುಳುಗಿರುವದನ್ನು ತಿಳಿಸುವಾಗ ವಿಷಾದದ ಛಾಯೆ ಆವರಿಸುವದೂ ಅಷ್ಟೇ ಸತ್ಯ. + +ಇನ್ನುಳಿದ ಕತೆಗಳಲ್ಲಿ ಬರುವ ‘ಚಂಡವ್ಯಾಘ್ರ’ ಪುಣ್ಯಕೋಟಿ ಕತೆಯ ಇಂದಿನ ಸ್ವರೂಪ. ಪುಣ್ಯ ಕೋಟಿಯ ಸಂತತಿಯ ಕೆಂಪಿ ಎನ್ನುವ ಆಕಳಿನ ಗುಣ ಸ್ವಭಾವಗಳಲ್ಲಿ ಬದಲಾವಣೆಯಾಗಿಲ್ಲ. ಅದೇ ಸಭ್ಯತನ, ಅದೇ ಸತ್ಯದ ಕುರಿತಾದ ನಂಬಿಕೆ, ಮುಗ್ಧತೆ ಉಳಿದುಕೊಂಡಿದೆ. ಆದರೆ ಚಂಡವ್ಯಾಘ್ರನ ಗುಣದಲ್ಲಿ ಬದಲಾವಣೆಯಾಗಿದೆ. ಆತ ಗೋಮುಖ ವ್ಯಾಘ್ರನಾಗಿ ಬದಲಾಗಿದ್ದಾನೆ. ಈ ವ್ಯಾಘ್ರಕಿಂತಲೂ ಮನುಷ್ಯ ಮತ್ತೂ ಅಪಾಯಕಾರಿ ಎನ್ನುವದನ್ನು ತಿಳಿಸಲು ಆಯ್ಕೆಮಾಡಿಕೊಂಡಿದ್ದು ಗೋವಿನ ಹಾಡಿನ ಹಿನ್ನೆಲೆಯ ವಸ್ತು. ಹಾಗಾಗಿ ಇಲ್ಲಿ ಕೆಂಪಿ ಎನ್ನುವ ಹಸು ಮತ್ತು ಗಿರಿಜೆ ಎನ್ನುವ ಮುಗ್ಧಹುಡುಗಿ ಇಬ್ಬರೂ ಮಾಂಸದ ಸರಕಾಗಿ ಬಲಿಯಾಗುತ್ತಾರೆ. + +ಹಳ್ಳಿಯ ಬದುಕಿನಲ್ಲಿ ಈ ಹಿಂದಿನ ಕತೆಗಳಲ್ಲಿ ಸಹಜತೆ, ಸರಳತೆ ಮುಗ್ಧತೆಯನ್ನು ಕಾಣುವ ಕತೆಗಾರನಿಗೆ ಇಲ್ಲಿ ಅದೇ ಹಳ್ಳಿಯ ಬದುಕಿನಲ್ಲಿ ವ್ಯಾಪಿಸಿದ ಮೋಸ ವಂಚನೆ ಗೋಚರಿಸತೊಡಗಿವೆ. ಅದು ಈ ಕತೆಯಲ್ಲಿ ಮತ್ತು ‘ಆತ’ ಎನ್ನುವ ಕತೆಯಲ್ಲಿ ವ್ಯಕ್ತವಾಗಿದೆ. ‘ಆತ’ ತುಂಬಾ ಸಂಕೀರ್ಣ ವಸ್ತುವನ್ನು ಆಯ್ದುಕೊಂಡ ಕತೆ. ಆತ ಎನ್ನುವವ ಯಾರೂ ಆಗಬಹುದು. ಆತ ಎನ್ನುವವ ನಾನಲ್ಲ ನೀನೂ ಅಲ್ಲ. ಏಕೆಂದರೆ ಆತನಂತವರ ಗುಣಹೊಂದಿದ ವ್ಯಕ್ತಿತ್ವವುಳ್ಳವರೂ ಆತನಂತಹ ಗುಣವನ್ನು ಹೊಂದಿದ್ದೇನೆಂದು ಬಹಿರಂಗವಾಗಿ ವ್ಯಕ್ತಪಡಿಸಲು ಬಯಸುವದಿಲ್ಲ. ಹಾಗಾಗಿಯೇ ಗಾಂಧೀಜಿಯ ಅಭಿಮಾನಿ ಎನ್ನುತ್ತಲೇ ಆತನ ಬಾಯಿಯಿಂದ ಬರುವ ಬೋಳಿಮಗ… ಎನ್ನುವ ಮಾತುಗಳನ್ನು ಕೇಳಿದವರು ಕಣ್ಣು ಬಾಯಿ ಮತ್ತು ಕಿವಿಗಳನ್ನು ಮುಚ್ಚಿಕೊಳ್ಳಬೇಕಾದ ಪರಿಸ್ಥಿತಿ. + +ಎಂತಹ ಕತೆಗಾರನಿಗಾದರೂ ನಾಮಪದವಿಲ್ಲದ ತೃತೀಯ ವಿಭಕ್ತಿಯಲ್ಲಿ ಸರ್ವನಾಮವನ್ನು ಬಳಸಿ ಕತೆ ಕಟ್ಟುವಾಗ ಇರುವ ಸವಾಲು ಬಹಳ ಸಂಕೀರ್ಣ. ಇಲ್ಲಿ ರಾಜಶೇಖರ ಜೋಗಿನ್ಮನೆಯವರು ಈ ಏರುಗಂಬವನ್ನು ದಾಟಲು ಶಕ್ತಿಮೀರಿ ಪ್ರಯತ್ನಿಸಿದ್ದಾರೆ. ಹಾಗಾಗಿ ಮಧ್ಯೆ ಮಧ್ಯೆ ಕತೆಗಾರ ಕತೆಯೊಳಗೆ ಇಣುಕುವದನ್ನು ಗಮನಿಸಬಹುದಾಗಿದೆ. ಕತೆಯ ಓಘಕ್ಕೆ ಇಲ್ಲಿ ಸ್ವಲ್ಪ ತಡೆ ಎಂದು ಅನಿಸಿದರೂ ಹೊಸವಸ್ತುವನ್ನು ಆಯ್ಕೆಮಾಡಿ ಕತೆಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಕೊನೆಯಲ್ಲಿ ಗಾಂಧಿಯ ಅನುಯಾಯಿ ಎಂದುಕೊಳ್ಳುತ್ತಲೇ ಆ ಆತ ಸಂಕರನ ತಲೆಯ ಮೇಲೆ ಕಲ್ಲುಹಾಕಿ ಕೊಂದಾಗ ಹೇಳುವ ಮಾತು “ಕೆಟ್ಟದ್ದನ್ನು ಮಾಡಬಾರದು- ನಾನು ಮಾಡಿಲ್ಲ. ಕೆಟ್ಟದ್ದನ್ನು ಆಡಬಾರದು – ನೀನು ಆಡಿಲ್ಲ. ಕೆಟ್ಟದ್ದನ್ನು ನೋಡಬಾರದು – ನೀನು ನೋಡಿಲ್ಲ” ಗಾಂಧಿಯ ಅನುಯಾಯಿಗಳನ್ನು ಅಣಕಿಸುವ ಒಂದು ತುರೀಯಾವಸ್ಥೆಯನ್ನು ತಲುಪಿದೆ.ಈ ಕತೆಯಂತಹ ಕತೆಗಳು ನಮ್ಮೊಳಗಿರುವ ಆತನನ್ನು ನಮ್ಮೆದುರು ರಾಚಿತೋರಿಸುವ ಪ್ರಯತ್ನ. + +“ಎಲ್ಲ ಮರೆತಿರುವಾಗ” ಕತೆಯಲ್ಲಿ ನಾಯಕನ ಮೇಲೆ ಬೆಟ್ಟದಷ್ಟು ಆಸೆ ಇಟ್ಟುಕೊಂಡು ಪ್ರೀತಿಸಿದ ಮತ್ತೆ ಅವನಿಂದ ದೂರವಾದವಳ ಸಾವಿನನಲ್ಲಿ ಮತ್ತೆ ಕಾಡುವ ಆದರೆ ಆ ಹೊತ್ತಿನಲ್ಲಿ ಈತನಿಗೆ ತಾನು ಮದುವೆ ಮಾಡಿಕೊಂಡವಳ ನೆನಪಾಗಿ ಇಬ್ಬಂದಿತನದಲ್ಲಿ ಸಿಲುಕುವ ಚಿತ್ರಣದ ನಿರೂಪಣೆಯಿದೆ. ಈ ಕತೆ ಇವರ ಹಳ್ಳಿಬದುಕಿನಷ್ಟು ಇಲ್ಲಿ ಕತೆ ಆಳಕ್ಕೆ ಇಳಿಯುವದಿಲ್ಲ. ಬಾಕೀ ಕತೆಗಳಾದ “ಬಾವಾಜಿ ಕೊಲೆ” ಪ್ರಜಾಪ್ರಭುತ್ವದ ಬೆಂಕಿ, ಲಾಟೀನು, ಸ್ವಯಂಭೂ ಕಥಾ ನಿರೂಪಣೆಯಲ್ಲಿ ಗೆಲ್ಲುತ್ತದೆ. ಜೋಗಿನ್ಮನೆಯವರು ಆರಿಸಿಕೊಂಡ ವಸ್ತು ತುಂಬಾ ಸರಳವಾದುದು. ಆದರೆ ಅದನ್ನು ನಿರೂಪಿಸುವಲ್ಲಿ ಆಯ್ದುಕೊಂಡ ವಿಧಾನಮಾತ್ರ ವಿಶಿಷ್ಠವಾದುದು. “ಲಾಟಿನಿನ ಗಾಜು ದಿನನಿತ್ಯ ರಾತ್ರಿ ತನ್ನದೇ ದೀಪಸೂಸುವ ಇಂಗಾಲಕ್ಕೆ ಕಪ್ಪಾಗಿಬಿಡುತ್ತದೆ. ಅದನ್ನು ಸುಣ್ಣದಿಂದ ಮುಸ್ಸಂಜೆಯಾಗುವದರೊಳಗೆ ಬೆಳಗುತ್ತಿರಬೇಕಾಗುತ್ತದೆ. ಬೆಳಕು ಅದೇ ಇದ್ದರೂ ಆ ಬೆಳಕಿನಲ್ಲಿ ಕಾರಣದಿಂದಲೇ ಕಪ್ಪಾಗಿ ಬಿಡುವ ಹೊತ್ತಿನಲ್ಲಿ ಮಾನಸಿಕವಾಗಿರುವ ಬಂಧಿಸಲ್ಪಟ್ಟ ತನ್ನೊಳಗಿನ ಇತಿವೃತ್ತವನ್ನು ಚಿದಾನಂದನಿಗೆ ದಾಟಲು ಗುರು ಸಹಾಯಮಾಡುತ್ತಾನೆ. + + + +ಉತ್ತರ ಕನ್ನಡದ ಜನಜೀವನದ ಮುಗ್ಧತೆಯ ನಡುವೆ ಇಲ್ಲಿನ ಬೆಟ್ಟಗುಡ್ಡಗಳ ಒಳಗಿರುವ ಅಡಿಕೆ ತೋಟ ಆ ಅಡಿಕೆಗೆ ಬರುವ ಕೊಳೆ, ಅರಣ್ಯದ ಕಾಡು ಪ್ರಾಣಿಗಳ ಉಪಟಳದ ನಡುವೆ ಬೆಳವ ವ್ಯಕ್ತಿತ್ವದಲ್ಲಿ ಅರಳಿದ “ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ” ಓದಿಸಿಕೊಂಡು ಹೋಗಿ ಆ ನಂತರದಲ್ಲಿ ಈ ಭಾವಜೀವಿಗಳನ್ನು ನಮ್ಮಲ್ಲಿ ಹುಡುಕುವ ಒಂದು ಯಶಸ್ವೀ ಪ್ರಯತ್ನ. ಓದಲೇ ಬೇಕಾದ ಕೃತಿ ಇದು. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_291.txt b/Kenda Sampige/article_291.txt new file mode 100644 index 0000000000000000000000000000000000000000..90ffb8d85349c334da6514bd833ce4925d630786 --- /dev/null +++ b/Kenda Sampige/article_291.txt @@ -0,0 +1,35 @@ +byಉಮೇಶ ದೇಸಾಯಿ|Apr 5, 2020|ವಾರದ ಕಥೆ,ಸಾಹಿತ್ಯ| 0 Comments + +“ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು.” + +byಶ್ರೀದೇವಿ ಕೆರೆಮನೆ|Mar 30, 2020|ದಿನದ ಪುಸ್ತಕ,ಸಾಹಿತ್ಯ| 3 Comments + +“ಬಹಳಷ್ಟು ಕೈಲಾಸ ಯಾತ್ರೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಓದಿದ್ದೇನೆ. ನಿರ್ಜೀವ ವರ್ಣನೆ ಹಾಗೂ ಭಕ್ತಿಯ ಪರಾಕಾಷ್ಟೆಯನ್ನಷ್ಟೇ ನಾವಿಲ್ಲಿ ಕಾಣುತ್ತಿರುವುದು. ಆದರೆ ‘ನಾ ಕಂಡ ಕೈಲಾಸ’ ಪುಸ್ತಕದಲ್ಲಿ ಭಕ್ತಿಯ ಉತ್ತುಂಗದಲ್ಲಿ ಉಳಿದ್ದನ್ನೆಲ್ಲ ಮರೆಮಾಚುವ ಮೂಢತನವಿಲ್ಲ. ಇದ್ದುದನ್ನು ಇದ್ದಹಾಗೇ ದಾಖಲಿಸುವ, ಕೆಲವೊಮ್ಮೆ ಇದನ್ನು ಸ್ವಲ್ಪ ಮರೆಮಾಚಬಹುದಿತ್ತೇನೋ ಎಂದು ಓದುಗರೇ ಅಂದುಕೊಳ್ಳುವಷ್ಟರ ಮಟ್ಟಿಗೆ ಎಲ್ಲವೂ ಖುಲ್ಲಾಂಖುಲ್ಲ.” + +byಸುನೈಫ್ ವಿಟ್ಲ|Mar 29, 2020|ದಿನದ ಪುಸ್ತಕ,ವಾರದ ಕಥೆ,ಸಾಹಿತ್ಯ| 0 Comments + +“ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ…” + +byಕೆಂಡಸಂಪಿಗೆ|Mar 26, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ವಾಡೆಯ ಮಂದಿಗೆ ವಿಧಿ ಕಾಡಾಟವೆಂದು ತಿಳಿದು ಅದನ್ನು ಹೋಗಲಾಡಿಸಲು ಕೈಗೊಳ್ಳುವ ಮಾಟ ಮಂತ್ರಗಳು ರಂಗಪ್ಪನ ಕೊರಳಿಗೆ ಉರುಲಾಗುತ್ತದೆ. ವಾಡೆಯ ಕಾಡಾಟಗಳನ್ನು ಓಡಿಸಲು ಬರುವ ‘ಹೂಲಗೇರಿಯ ಅಜ್ಜ’ನ ಮೇಲೆ ರಂಗಪ್ಪನಿಗೆ ನಂಬಿಕೆ ಇರಲಿಲ್ಲ. ಆದರೂ ಹೂಲಗೇರಿ ಅಜ್ಜನನ್ನು ಕರೆಯಿಸಿ ಪೂಜೆ ಮಾಡಿಸಿಯೇ ಬಿಡುತ್ತಾರೆ. ಅದರ ಅಂಗವಾಗಿ ರಂಗಪ್ಪನಿಗೆ ಒಂದು ಬಿಳಿ ಎಕ್ಕಿಗಿಡದ ಗೂಟವನ್ನು… “ + +byಕೆಂಡಸಂಪಿಗೆ|Mar 23, 2020|ದಿನದ ಪುಸ್ತಕ,ಸಾಹಿತ್ಯ| 0 Comments + +” ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ…” + +byಡಾ. ಬಿ. ಜನಾರ್ದನ ಭಟ್|Mar 22, 2020|ವಾರದ ಕಥೆ,ಸಾಹಿತ್ಯ| 0 Comments + +“ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ.. “ + +byಕಿರಸೂರ ಗಿರಿಯಪ್ಪ|Mar 20, 2020|ದಿನದ ಪುಸ್ತಕ,ಸಾಹಿತ್ಯ| 0 Comments + +ಹುಳಕ್ಕೆ ಎಲ್ಲೆಲ್ಲಿಯ ಕನೆಕ್ಷನ್ನುಗಳಿವೆ? ಎನ್ನುವುದರ ಮೂಲಕ ಮುಗ್ಧ ಜನರಿಗೆ ಈ ಹಸಿವೆಂಬ ಹುಳ ಅದ್ಹೇಗೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಮನದಟ್ಟು ಮಾಡುತ್ತಾ ಸಾಗುತ್ತದೆ. ‘ಹೂವುಗಳ್ಯಾಕೋ ಮೊಗ್ಗಿನಲೆ ಕಮರುತ್ತಿವೆ’ ಎನ್ನುವ ಸಾಲಿನಲ್ಲಿಯೂ ಮುಗ್ಧ ಹೃದಯಗಳ ಆತಂಕ ಎತ್ತಿ ತೋರಿಸುತ್ತದೆ. ಮತ್ತೆ ಮುಂದುವರೆದು ‘ಹೂವು ಅರಳಿಲ್ಲ’ ಎನ್ನುವ ಕವಿತೆಯಲ್ಲಿ ಬೆಳಕಿನ ಬೆಂಬತ್ತಿ ಹೋಗಿ, ಎಷ್ಟೆ ದಾರಿ ಸವಿಸಿದರೂ ಗಾಢಕತ್ತಲೆಯಲ್ಲಿ…” + +byಎಚ್ ಆರ್ ರಮೇಶ್|Mar 16, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು…” + +byಮುನವ್ವರ್, ಜೋಗಿಬೆಟ್ಟು|Mar 15, 2020|ವಾರದ ಕಥೆ,ಸಾಹಿತ್ಯ| 0 Comments + +“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.” \ No newline at end of file diff --git a/Kenda Sampige/article_292.txt b/Kenda Sampige/article_292.txt new file mode 100644 index 0000000000000000000000000000000000000000..91fe60acdcbb4c1e8f4c47e8c6550e523e733ea0 --- /dev/null +++ b/Kenda Sampige/article_292.txt @@ -0,0 +1,143 @@ + + +ಕನ್ನಡ ಸಾಹಿತ್ಯದಲ್ಲಿ ಕವಯಿತ್ರಿಯರ ಸಂಖ್ಯೆ ಕ್ರಿ.ಶ. 1100ರ ಮಹಾದೇವಿ ಅಕ್ಕನಿಂದ ತೊಡಗಿ ಈ ಕಾಲದವರೆಗೆ ಬಹಳ ದೊಡ್ಡದು. ಮೌಲಿಕವಾಗಿಯೂ ಹಲವಾರು ಉತ್ತಮ ಕೃತಿಗಳು ಇವರಿಂದ ಹೊರಬಂದಿವೆ. ಹನ್ನೆರಡನೇ ಶತಮಾನದ ವಚನ ಸಾಹಿತ್ಯ 14-15ರ ದಾಸಸಾಹಿತ್ಯದಿಂದ ಮುಂದುವರಿದು ನವೋದಯ, ನವ್ಯ, ನವ್ಯೋತ್ತರ, ಬಂಡಾಯ, ಅದರೀಚೆಗಿನ ಸಾಹಿತ್ಯಗಳ ಅಧ್ಯಯನದಲ್ಲಿ ಯಕ್ಷಗಾನ ಕವಿಗಳಿಗೆ ಸೂಕ್ತ ಸ್ಥಾನ ದೊರೆಯದಿದ್ದುದು ಮಾತ್ರ ವಿಷಾದನೀಯ ಎಂತಲೇ ಹೇಳಬಹುದು. + +ದಾಸ ಸಾಹಿತ್ಯಕ್ಕೆ ಅಖಿಲ ಕರ್ನಾಟಕ ವ್ಯಾಪ್ತಿಯಿದ್ದರೆ, ಅದೇ ರೀತಿ ರಾಗತಾಳಬದ್ಧವಾದ ಆದರೆ ರಂಗಮಾಧ್ಯಮಕ್ಕೆ ಅನುಕೂಲವಾಗುವಂತೆ ರಚಿತವಾದ ಯಕ್ಷಗಾನದ ಕಾವ್ಯಗಳಿಗೆ ಕನ್ನಡ ಸಾಹಿತ್ಯದ ಮುಖ್ಯ ಮಾರ್ಗಗಳಲ್ಲಿ ಯಾವ ಸ್ಥಾನವೂ ಇಲ್ಲ! ಸರಿಸುಮಾರು ಹದಿನೈದನೇ ಶತಮಾನದ ವಿಷ್ಣು ವಾರಂಬಳ್ಳಿ, ಕುಂಬಳೆಯ ಪಾರ್ತಿ ಸುಬ್ಬನಿಂದ ತೊಡಗಿ ಈ ಕಾಲದವರೆಗಿನ ಯಕ್ಷಕವಿಗಳ ಸಾಹಿತ್ಯದ ಅಧ್ಯಯನ ಪ್ರಾರಂಭವಾದುದೇ 1924ರಲ್ಲಿ ಎನ್ನಬಹುದು. ಡಾ. ಪಾದೇಕಲ್ಲು ವಿಷ್ಣುಭಟ್ಟರು ಸಂಪಾದಿಸಿದ ‘ಹಟ್ಟಿಯಂಗಡಿ ರಾಮಭಟ್ಟರ ಯಕ್ಷಗಾನ ಕೃತಿಗಳು’ ಗ್ರಂಥದಲ್ಲಿ ಐರೋಡಿ ಶಿವರಾಮಯ್ಯನವರು 1924ರಲ್ಲಿ “ಯಕ್ಷಗಾನೋಜ್ಜೀವಕರಾದ ಹಟ್ಟಿಯಂಗಡಿ ರಾಮಭಟ್ಟರು’ ಎಂಬ ಲೇಖನ ಪ್ರಕಟಸಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲಿಂದ ಮೊದಲುಗೊಂಡು ಯಕ್ಷಗಾನದ ಕವಿಗಳ ಕುರಿತು ಡಾ. ಶಿವರಾಮ ಕಾರಂತರು, ಸೇಡಿಯಾಪು ಕೃಷ್ಣಭಟ್ಟರು, ಕುಕ್ಕಿಲ ಕೃಷ್ಣ ಭಟ್ಟರು, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ, ನಾರಾಯಣ ಶಾನಭಾಗ ಮುಂತಾದವರು ತುಂಬಾ ಆಳವಾಗಿ ಈ ರಂಗದಲ್ಲಿ ಸಂಶೋಧನೆ ನಡೆಸಿ ಅನೇಕ ಅಜ್ಞಾತ ಕವಿಗಳನ್ನು ಬೆಳಕಿಗೆ ತಂದಿದ್ದಾರೆ. + +ಸುಮಾರು ಆರುನೂರು ವರುಷಗಳ ಇತಿಹಾಸವಿರುವ ಯಕ್ಷಗಾನ ಸಾಹಿತ್ಯದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚಿನ ಕವಿಗಳ ಪ್ರಸಂಗಗಳಿವೆಯೆುನ್ನುವ ಅಂದಾಜಿದೆ. ಈ ಎಲ್ಲದರ ಪ್ರಸಂಗಕರ್ತರ ನಡುವೆ ಮಹಿಳಾ ಪ್ರಾಚೀನ ಕಾಲದಿಂದ ಈ ವರೆಗೆ ಪ್ರಸಂಗಕರ್ತೆಯರಾದ ಕವಿಯತ್ರಿಯರ ಸಂಖ್ಯೆ ಮಾತ್ರ ಕೇವಲ ಹದಿನಾಲ್ಕು ಎನ್ನುವದನ್ನು (ಈಚೆಗೆ ಯಕ್ಷಗಾನ ಕಲಾವಿದೆಯರಾದ ನಿರ್ಮಲಾ ಹೆಗಡೆ ಗೋಳಿಕೊಪ್ಪರವರನ್ನು ಒಳಗೊಂಡು) ಗಮನಿಸಿದಾಗ ಮಹಿಳೆಯರಿಗೆ ಈ ರಂಗ ಕೇವಲ ಪ್ರೇಕ್ಷಕರಾಗಿ ಮಾತ್ರ ಇರುವ ಆಯ್ಕೆಮಾತ್ರ ಆಗಿತ್ತೇನೋ ಎನಿಸದಿರದು. + +ಈ ಬೆರಳೆಣಿಕೆಯ ಕವಿಯತ್ರಿಯರಲ್ಲಿ ಮೊದಲ ಹೆಸರು ಬರುವದು ಹರಪನಹಳ್ಳಿ ಭೀಮವ್ವ (ಕ್ರಿ. ಶ. ೧೮೨೨-೧೯೦೨) ನಾಲ್ಕು ಯಕ್ಷಗಾನ ಕೃತಿಗಳನ್ನು ರಚಿಸಿದ್ದಳೆಂಬ ತಿಳಿದು ಬರುತ್ತದೆ. ಈಕೆ ದಾಸ ಸಾಹಿತ್ಯದಲ್ಲೂ ಗಮನಾರ್ಹ ಕೊಡುಗೆ ನೀಡಿದ್ದಾಳೆ. ಈ ಭೀಮವ್ವನಿಗಿಂತಲೂ ಹಿಂದಿನ ಇತಿಹಾಸ ತೆಗೆದು ನೋಡಿದರೆ ಸುಮಾರು ಕ್ರಿ. ಶ. ೧೮೦೦ದಲ್ಲಿ ಇದ್ದ ಚಾವಾಡಿ ಮಹಾಲಕ್ಷ್ಮಿ ಹೆಬ್ಬಾರ ಎನ್ನುವವರು “ಕೆಂಪಾಸುರ ಕಾಳಗ” ವೆನ್ನುವ ಪ್ರಸಂಗ ಬರೆದಿದ್ದರೆಂದು ತಿಳಿದು ಬರುತ್ತದೆ. ಇವರು ಕನ್ನಡದ ಪ್ರಸಿದ್ಧ ಕವಿ ಮುದ್ದಣನ ಕಾವ್ಯಗುರು ಬವುಲಾಡಿ ವೆಂಕಟರಮಣ ಹೆಬ್ಬಾರರ ತಾಯಿ. ಈ ಎರಡೂ ಕವಿಗಳ ಕೃತಿ ಇಂದು ಉಪಲಬ್ಧವಿಲ್ಲ. ಇನ್ನು “ಪ್ರಸನ್ನಾಮೃತ” ಎಂಬ ಯಕ್ಷಗಾನ ಕೃತಿ (ಕ್ರಿ. ಶ. ೧೮೫೦) ರಚಿಸಿದ ಅಮ್ಮಣಿಯಮ್ಮ, “ಕೃಷ್ಣ ಲೀಲೆ” ಯನ್ನು ಬರೆದ ಗಣಪಕ್ಕ ಸಣ್ಣಭಡ್ತಿ (ಕ್ರಿ. ಶ. ೧೮೭೯-೧೯೩೦) ಮತ್ತು ಕೃಷ್ಣ ಪಾರಿಜಾತವನ್ನು ಬರೆದ ವೆಂಕಟಲಕ್ಷ್ಮಮ್ಮ (ಕ್ರಿ. ಶ. ೧೮೯೦) ಇವರು ಯಕ್ಷಗಾನದ ಪ್ರಾಚೀನ ಕವಿಯತ್ರಿಯರೆಂದು ಗುರುತಿಸಬಹುದು. ಈ ಎಲ್ಲ ಕವಿಯತ್ರಿಯರಪೈಕಿ ಗೋಕರ್ಣದ ಗಣಪಕ್ಕ ಸಣ್ಣಭಡ್ತಿಯವರ ಕೃಷ್ಣ ಲೀಲೆಯ ಕೆಲವೇ ಪದ್ಯಗಳು ಮಾತ್ರ ಲಭ್ಯವಿದೆ. + +ಈ ಎಲ್ಲದರ ನಡುವೆ ನನ್ನ ಕಣ್ಣಿಗೆ ಬಿದ್ದದ್ದು ನನ್ನ ಮಾವ ಆರೋಡಿ ಮಂಜಯ್ಯನವರ ಸಂಗ್ರಹದಲ್ಲಿದ್ದ ಯಕ್ಷಗಾನ ಪ್ರಸಂಗಗಳ ಸಂಗ್ರಹಗಳ ನಡುವೆ ಸಿಕ್ಕ ‘ವೇದಾಂತ ತತ್ವಸಾರ ಜೀವ ಪರಮರ ಕಲ್ಯಾಣ, ಮನೋಬುದ್ಧಿ ಸಂವಾದ” ಹಾಗೂ ‘ಚಿಲ್ಲರೆ ಕೀರ್ತನೆಗಳು’ ಎನ್ನುವ ಕಿರು ಪುಸ್ತಕ. ಆ ಪುಸ್ತಕದ ಮೇಲಿದ್ದಿದ್ದು “ಸ ಭ ಸಾಗೂರ ತಾಲೂಕ ಕಿಬ್ಬಚ್ಚಲ ಮಂಜಮ್ಮನವರಿಂದ ರಚಿಸಲ್ಪಟ್ಟದ್ದನ್ನು ಕೆ. ವೆಂಕಟರಮಣ ಶಾಸ್ತ್ರಿ ಸೂರಿ ಇವರು ಚನ್ನಾಗಿ ಶೋಧಿಸಿ ವೆ. ರಾ. ಬೂದೀ ಮಹಾಭಲೇಶ್ವರಭಟ್ಟ ಕರ್ಕಿ ಇವರಿಗೋಸ್ಕರ ಎರಡನೇ ಆವರ್ತಿ ಎನ್ನುವ ೧೮೮೯ರಲ್ಲಿ ಪ್ರಕಟವಾದ ದ್ವಿತೀಯ ಮುದ್ರಣದ ಪ್ರತಿ. ಅಲ್ಲಿಗೆ ಕಾಲಗರ್ಭದಲ್ಲಿ ಹೂತುಹೋಗಿದ್ದ ಯಕ್ಷಗಾನದ ಕವಿಯತ್ರಿಯೊಬ್ಬಳು ಇತಿಹಾಸದಲ್ಲಿ ಪ್ರಥಮವಾಗಿ ಮುದ್ರಣವಾದ ಯಕ್ಷಗಾನ ಪ್ರಸಂಗ ಕರ್ತೆಯೆಂದು ನಿಸ್ಸಂದೇಹವಾಗಿ ದಾಖಲಾದಳು. + +ನನಗೆ ಯಕ್ಷಗಾನದಲ್ಲಿ ಅಪರಿಮಿತ ಆಸಕ್ತಿ. ಈ ನನ್ನ ಯಕ್ಷಗಾನದ ಆಸಕ್ತಿಯನ್ನು ಗಮನಿಸಿ ನನ್ನ ಮಾವ ಈಗ ದಿವಂಗತರಾದ ಆರೋಡಿ ಮಂಜಯ್ಯನವರು ತನ್ನಲ್ಲಿದ್ದ ಅಪರೂಪದ ಯಕ್ಷಗಾನದ ಪ್ರಸಂಗಗಳ ಸಂಗ್ರಹವನ್ನು ತೆಗೆದುಕೊಳ್ಳಲು ನನಗೆ ಹೇಳಿದರು. ಸಾಗರ ತಾಲೂಕಿನ ತಾಳಗುಪ್ಪಾ ಸಮೀಪದ ಬೆಳ್ಳೆಣ್ಣೆ ವಾಸಿಯಾದ ಅವರು ಯಕ್ಷಗಾನದ ಅಪ್ಪಟ ಪ್ರೇಕ್ಷಕರಾಗಿದ್ದರು. ಸಂಕೋಚ ಸ್ವಭಾವದ ಅವರ ಪರಿಚಯ ಯಾವ ಕಲಾವಿದರಿಗೂ ಇಲ್ಲ. ಬಡತನ, ಮುಳುಗಡೆಯ ಹೋರಾಟದ ಮಧ್ಯೆಯೂ ಪುಸ್ತಕ ಸಂಗ್ರಹ ಅವರ ನೆಚ್ಚಿನ ಹವ್ಯಾಸ. + +ಆ ಪುಸ್ತಕಗಳನ್ನು ಯಾರಿಂದ ಎಷ್ಟು ಕ್ರಯಕ್ಕೆ ಕೊಂಡುಕೊಂಡೆ ಎಂದು ಅಚ್ಚುಕಟ್ಟಾಗಿ ಬರೆದು ಅದಕ್ಕೊಂದು ಬೈಂಡ್ ಹೊಲಿದು ಅಟ್ಟದ ಮೇಲೆ ಜೋಪಾನವಾಗಿ ಇರಿಸಿದ್ದರು. ಆ ಸಂಗ್ರಹವನ್ನು ಬಿಡಿಸಿದಾಗ ಒಂದು ಕೃತಿ ನನ್ನ ಗಮನ ಸೆಳೆಯಿತು. ಅದರ ಮುಖಪುಟ ಗಮನಾರ್ಹವಾಗಿದೆ. ಅದು ಹೀಗಿದೆ. + +ಈ ಕೃತಿಯನ್ನು ನೋಡಿ ಆಶ್ಚರ್ಯ ತಡೆಯಲಾಗಲಿಲ್ಲ. ಈ ಕೃತಿಯ ಮೊದಲನೇ ಮುದ್ರಣ 1886ರಲ್ಲಿ, ದ್ವಿತೀಯ ಮುದ್ರಣ 1889ರಲ್ಲಿ ಎಂದು ಹವ್ಯಕ ಅಧ್ಯಯನ ಕೇಂದ್ರವು 2011ರಲ್ಲಿ ಪ್ರಕಟಿಸಿದ ‘ಹವ್ಯಕ ಗ್ರಂಥಕಾರ ಕೃತಿದರ್ಪಣ’ದಲ್ಲಿ ದಾಖಲಾಗಿದೆ. ದ್ವಿತೀಯ ಮುದ್ರಣದಲ್ಲಿ ಸಾವಿರ ಪ್ರತಿಗಳು ಮುದ್ರಣಗೊಂಡಿರುವುದು ಇದರ ಅಂದಿನ ಜನಪ್ರಿಯತೆಗೆ ಸಾಕ್ಷಿ. ಇಂಥ ಗೌರವ ಸಮಕಾಲೀನ ಮತ್ತಾವ ಕೃತಿಗೂ ದೊರಕಿಲ್ಲ ಎಂಬುದು ಪರಿಶೀಲನಾರ್ಹ. ಈ ಯಕ್ಷಗಾನ ಪ್ರಸಂಗಗಳ ಪುಸ್ತಕದಲ್ಲಿ ಮೂರು ಭಾಗಗಳಿವೆ. ಮೊದಲಿನವೆರಡು ಯಕ್ಷಗಾನಗಳು. ಮೂರನೆಯದು ಭಜನೆ-ಬಿಡಿ ಕೀರ್ತನೆಗಳು. ಮೊದಲನೇ ಯಕ್ಷಗಾನ ಜೀವಪರಮರ ಕಲ್ಯಾಣದಲ್ಲಿ ನೂರಾರಂಭತ್ತೆರೆಡು ಪದ್ಯಗಳಿದ್ದರೆ ಎರಡನೇ ಯಕ್ಷಗಾನ ಮನೋಬುದ್ಧಿ ಸಂವಾದದಲ್ಲಿ ನೂರಾಮೂವತೈದು ಪದ್ಯಗಳಿವೆ. ಮೂರನೇ ಭಾಗದಲ್ಲಿ ಮೂವತ್ತೆರೆಡು ತುಂಡು ಪದಗಳಿವೆ. + +ಇಲ್ಲಿಂದ ಈ ಮಂಜಮ್ಮ ಯಾರು? ಅವಳ ವಂಶಸ್ಥರು ಯಾರಾದರು ಇರುವರೇ ಎನ್ನುವ ಹುಡುಕಾಟ ಪ್ರಾರಂಭವಾಯಿತು. ಲಿಂಗನಮಕ್ಕಿ ಆಣೆಕಟ್ಟಿನಿಂದಾಗಿ ಅಲ್ಲಿನ ಅನೇಕ ಮನೆಗಳು ಮುಳುಗಡೆಯಾದ ಕಾರಣ ಆ ಭಾಗದಲ್ಲಿರುವ ಕುಟುಂಬಗಳು ಹೆಚ್ಚಿನ ಪ್ರಮಾಣದಲ್ಲಿ ವಲಸೆ ಹೋದದ್ದರಿಂದ ಆಕೆಯ ಕುರಿತು ತಿಳಿದವರನ್ನು ಹುಡುಕುವದು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ನೆರವಿಗೆ ಬಂದವರು ನನ್ನ ಹೆಂಡತಿಯ ಸೋದರ ಮಾವ ಮರಡುಮನೆ ಸದಾಶಿವ. ಅವರ ಹತ್ತಿರ ‘ಕಿಬ್ಬಚ್ಚಲು ಎಂಬ ಗ್ರಾಮ ಎಲ್ಲಿದ್ದು?’ ಎಂದು ಕೇಳಿದ್ದೇ ತಡ, “ಇಲ್ಲೇ ಹತ್ತಿರವೇ ಕಿಬ್ಬಚ್ಚಲು ಮಾರಾಯ, ಅಲ್ಲಿ ಮಂಜಮ್ಮನ ಕೆರೆ ಹೇಳಿ ಇದ್ದು. ಹೋಗಿ ಕೇಳುವಾ.” ಎಂದೊಡನೆ ಅವರೊಡನೆ ಹೊರಟೆ. ಸಾಗರದಿಂದ ಸುಮಾರು ಹದಿನೈದು ಕಿ.ಮೀ. ದೂರದ ಸರಿಯಾಗಿ ರಸ್ತೆ ಸಂಪರ್ಕವಿಲ್ಲದ ಊರು. ಅಡಿಕೆ ತೋಟದ ಮಧ್ಯದಲ್ಲಿ ಒಂದು ಹಳೇ ಹಂಚಿನ ಮನೆಗೆ ನಮ್ಮನ್ನು ಕರೆದೊಯ್ದ. ದತ್ತಣ್ಣ ಎನ್ನುತ್ತಾ ಕರೆದರೆ ಸುಮಾರು ಐವತ್ತರಿಂದ ಐವತೈದರ ಪ್ರಾಯದ ವ್ಯಕ್ತಿ ನಮ್ಮನ್ನು ಸ್ವಾಗತಿಸಿದರು. ಪಕ್ಕಾ ಹವ್ಯಕರ ಆತ್ಮೀಯ ಆತಿಥ್ಯದ ನಂತರ ಕಿಬ್ಬಚ್ಚಲ ಮಂಜಮ್ಮನ ಕುರಿತು ಕೇಳಿದಾಗ ಆಕೆ ಅದೇ ಮನೆತನದವಳು ಎನ್ನುವದನ್ನು ಕೇಳಿ ಮೈ ರೋಮಾಂಚನಗೊಂಡಿತು. ಆದರೆ ದತ್ತಣ್ಣನಿಗೊ ಹೆಚ್ಚಿನ ವಿವರ ಗೊತ್ತಿಲ್ಲ. ಗೊತ್ತಿರುವಷ್ಟಾದರು ಕೇಳಬೇಕೆಂಬ ಕುತೂಹಲದಿಂದ ವಿಷಯ ಕೆದಕಿದಾಗ ಅಲ್ಲಿನ ಊರಿನ ಹಳೇ ಹಳೇ ಮುದಕರನ್ನೆಲ್ಲಾ ವಿಚಾರಿಸಿದಾಗ ಸಿಕ್ಕ ವಿವರದ ಆಧಾರದ ಮೇಲೆ ಕಿಬ್ಬಚ್ಚಲ ಮಂಜಮ್ಮನ ಚರಿತ್ರೆಯನ್ನು ದಾಖಲಿಸಲು ಯತ್ನಿಸಿದ್ದೇನೆ. + +ಕಿಬ್ಬಚ್ಚಲು ಎಂಬುವದು ಹಂಸಗಾರು ಗ್ರಾಮದ ಒಂದು ಪುಟ್ಟ ಮಜರೆ. ದಟ್ಟ ಮಲೆನಾಡಿನ ಮಧ್ಯದಲ್ಲಿರುವ ಈ ಊರಿನಲ್ಲಿ ಮಂಜಮ್ಮನ ಸಂಸಾರ. ಅಲ್ಲಿ ದೊರೆತ ಮಾಹಿತಿಗಳಿಂದ ಈಕೆಯ ಕಾಲ 1830 ರಿಂದ 1900ರ ಸುಮಾರಿಗೆ ಎಂದು ಊಹಿಸಬಹುದು. ಬಾಲ್ಯದಿಂದಲೂ ದೈವಭಕ್ತೆಯಾದ ಈಕೆಯ ಗಂಡ (ಅವರ ಹೆಸರು ತಿಳಿದುಬಂದಿಲ್ಲ)ನೂ ದೈವಭಕ್ತಿಯುಳ್ಳವನಾಗಿದ್ದನಂತೆ. ಗಂಡ ಹೆಂಡತಿ ಇಬ್ಬರೂ ಹಂಸಗಾರಿನ ಲಕ್ಷ್ಮೀನಾರಾಯಣನ ಪರಮಭಕ್ತರಾಗಿದ್ದರಂತೆ. ಈ ದಂಪತಿಗಳಿಗೆ ಎಂಟು ಗಂಡು ಮತ್ತು ನಾಲ್ಕು ಹೆಣ್ಣು ಮಕ್ಕಳಿದ್ದವಂತೆ. ದಂಪತಿಗಳಿಬ್ಬರೂ ತೋಟದಲ್ಲಿ ಹೋಗಿ ಗಂಟೆಗಟ್ಟಲೆ ಜಪದಲ್ಲಿ ಮುಳುಗಿಬಿಡುತ್ತಿದ್ದರಂತೆ. ಆ ಸಂದರ್ಭದಲ್ಲಿ ಏನೋ ಪ್ರೇರಣೆಯಾಗಿ ಮಂಜಮ್ಮ ಅಲ್ಲೇ ಒಂದು ಕೆರೆಯನ್ನು ತೋಡಿಸಿದಳೆಂದೂ, ಆ ಕೆರೆಯ ನೀರಿನಲ್ಲಿ ಸ್ನಾನಮಾಡಿ ದಂಪತಿಗಳಿಬ್ಬರೂ ದಿನಗಟ್ಟಲೆ ತಪಸ್ಸಿಗೆ ಕುಳಿತುಬಿಡುತ್ತಿದ್ದರೆಂದೂ ಪ್ರತೀತಿ ಇದೆ. ಇವರ ತಪಸ್ಸಿಗೆ ಒಲಿದ ಶಿವ-ಪಾರ್ವತಿಯರು ಆ ಕೆರೆಯ ಹತ್ತಿರವೇ ಅವರಿಗೆ ಪ್ರತ್ಯಕ್ಷರಾಗಿದ್ದರೆಂದೂ ಹೇಳುತ್ತಾರೆ. ಈಗ ಆ ಕೆರೆಗೆ ಸಿಮೆಂಟಿನ ವೃತ್ತವನ್ನು ಕಟ್ಟಿ ತೋಟಕ್ಕೆ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಈಗಲೂ ದೀಪಾವಳಿಯ ದಿನ ಈ ಕೆರೆಯಿಂದಲೇ ಸುತ್ತಮುತ್ತಲಿನವರೆಲ್ಲ ನೀರನ್ನು ತೆಗೆದುಕೊಂಡು ಹೋಗುತ್ತಾರೆ. ಇವತ್ತಿಗೂ ಅದನ್ನು ಮಂಜಮ್ಮನ ಕೆರೆ ಎಂತಲೇ ಕರೆಯುತ್ತಾರೆ. + +ಮನೆಯ ಮುಂದಿರುವ ಒಂದೇ ಕಲ್ಲಿನಿಂದ ಕೆತ್ತಿದ ತುಳಸೀ ಕಟ್ಟೆಯೂ ಮಂಜಮ್ಮನ ಕಾಲದ್ದಂತೆ. ಮಂಜಮ್ಮನಿಗೆ ದೈವಿಕ ಭಕ್ತಿಯ ಒಟ್ಟಿಗೆ ವೇದಾಂತದ ಮೇಲೆ ಆಸಕ್ತಿ ಇತ್ತು. ಆಕೆಯಲ್ಲಿನ ಭಕ್ತಿಯ ಪಾರಮ್ಯದಲ್ಲಿ ಯಾವುದೋ ಒಂದು ಅದ್ಯಾತ್ಮ ಶಕ್ತಿ ಒಲಿದು ದೃಷ್ಟಾಂತವಾದದ್ದು ಎನ್ನುವ ಪ್ರತೀತಿ ಇದೆ. ಈಗ ಲಭ್ಯವಿರುವ ಆಕೆಯ ಕೃತಿಯನ್ನು ಓದಿದರೆ ಈ ಮಾತಿಗೆ ಪುಷ್ಟಿ ಸಿಗುತ್ತದೆ. ಆಶ್ಚರ್ಯ ಎಂದರೆ ಮಂಜಮ್ಮನಿಗೆ ಓದು ಬರೆಯಲು ಬರುತ್ತಿರಲಿಲ್ಲವಂತೆ. ತಪಸ್ಸಿಗೆ ಕುಳಿತು ಧ್ಯಾನ ಮಾಡಿ ಎದ್ದಾಗ ಅವಳ ಬಾಯಿಂದ ವೇದಾಂತ, ಕಾವ್ಯ, ಯಕ್ಷಗಾನದ ಪದ್ಯಗಳೆಲ್ಲ ಸಹಜವಾಗಿ ಉದುರುತ್ತಿದ್ದವಂತೆ. ಆಕೆ ಹೇಳುತ್ತಾ ಹೊರಟರೆ ಅವಳ ದೂರದ ಸಂಬಂಧಿ ಹಿರೆಮನೆಯ ರಾಮನಾಥಯ್ಯ ಎಂಬವರು ಅದನ್ನೆಲ್ಲ ಬರೆದಿಟ್ಟುಕೊಳ್ಳುತ್ತಿದ್ದರಂತೆ. + +ಮಂಜಮ್ಮ ಬಹುಶಃ ಮನಸ್ಸು ಮಾಡಿದ್ದರೆ ಮತ್ತೋರ್ವ ಪವಾಡ ಪುರುಷಳೇ ಆಗ ಬಿಡಬಹುದಿತ್ತೇನೋ ಎಂದು ಮರಡುಮನೆ ಸದಾಶಿವ ಅಭಿಪ್ರಾಯ ಪಡುತ್ತಾರೆ. ಆಕೆ ತುಂಬು ಸಂಸಾರದಲ್ಲಿದ್ದು ಎಲ್ಲ ಕೆಲಸ ಮಾಡುತ್ತಾ ಅದರಲ್ಲೇ ಪುರುಸೊತ್ತು ಮಾಡಿಕೊಂಡು ಧ್ಯಾನ, ತಪಸ್ಸುಗಳಲ್ಲಿ ಮುಳುಗಿಬಿಡುತ್ತಿದ್ದಳಂತೆ. ಊರಿನವರೆಲ್ಲ ತಮ್ಮ ತಮ್ಮ ಕಷ್ಟವನ್ನು ಹೇಳಲು ಬಂದಾಗಲೆಲ್ಲ ಅವರಿಗೆ ವೇದಾಂತದ ಉತ್ತರವನ್ನು ನೀಡಿ ಬದುಕನ್ನು ಎದುರಿಸಲು ಪ್ರೇರಣೆ ನೀಡುತ್ತಿದ್ದಳಂತೆ. ಹಂಸಗಾರಿನ ಲಕ್ಷ್ಮೀನಾರಾಯಣ ಮತ್ತು ಸಿದ್ಧಿವಿನಾಯಕ ದೇವರ ಭಕ್ತೆಯಾದ ಆಕೆ ಆ ದೇವರ ಸೇವೆಗಳಲ್ಲಿ, ಉತ್ಸವಗಳಲ್ಲೆಲ್ಲ ತಾನೇ ಕಟ್ಟಿದ ಪದ್ಯಗಳನ್ನು ಹಾಡುತ್ತಿದ್ದಳಂತೆ. ಆ ಕಾಲದಲ್ಲಿ ಸಾಗರ ಪ್ರಾಂತ್ಯದಲ್ಲಿ ಆಕೆ ಪ್ರಸಿದ್ಧಿಯಾಗಿದ್ದಳು ಎಂದು ಊರಿನವರು ಹೇಳುತ್ತಾರೆ. + +ಸೂರಿ ವೆಂಕಟ್ರಮಣ ಶಾಸ್ತ್ರಿ ಕರ್ಕಿ ಆ ಕಾಲದಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ ಓರ್ವ ಶ್ರೇಷ್ಠ ವಿದ್ವಾಂಸ. (ವಿವರಗಳಿಗೆ ಡಾ. ಶಾಲಿನಿ ರಘುನಾಥ ಭಟ್ಟರ ‘ಇಗ್ಗಪ್ಪ ಹೆಗಡೇ ವಿವಾಹ ಪ್ರಹಸನ-ಒಂದು ಅಧ್ಯಯನ’-ಸೌರಭ ಧಾರವಾಡ 1988 ಮತ್ತು ನಾರಾಯಣ ಶಾನಭಾಗರ ‘ಹವ್ಯಕ ಗ್ರಂಥಕಾರ ಕೃತಿದರ್ಪಣ’ ಪುಟ 17-19 ನೋಡಿ) ಅವರು ಸ್ವತಃ ಸಾಹಿತಿಯಲ್ಲದೇ ಪುಸ್ತಕ ಸಂಪಾದಕ, ಪ್ರಕಾಶಕ, ಪತ್ರಿಕೆಯ ಸಂಪಾದಕ, ಸಂಶೋಧಕ ಎಲ್ಲಾ ಆಗಿದ್ದರು. ಅವರ ಕಾಲ 1852 ರಿಂದ 1892. ಆ ಅಲ್ಪ ಕಾಲದಲ್ಲಿಯೇ ಅವರು ಮುಂಬೈಯ ಥಾಕುರದ್ವಾರದಲ್ಲಿ ಭಾರತೀ ಪ್ರೆಸ್ ಎನ್ನುವ ಮುದ್ರಣಾಲಯವನ್ನು ಸ್ಥಾಪಿಸಿದ್ದರು. ಹವ್ಯಕ ಹೀತೇಚ್ಚು ಎನ್ನುವ ಕಾವ್ಯನಾಮವನ್ನು ಹೊಂದಿರುವ ಅವರು ಮಹಾಕವಿ ಪರಮದೇವನ ತುರಂಗಭಾರತ ಮಹಾಕಾವ್ಯವನ್ನು ಸಂಪಾದಿಸಿ ಪ್ರಕಟಿಸಿದವರು. + +ಅವರು ತೀರ್ಥಹಳ್ಳಿಯ ರಾಮಚಂದ್ರಾಪುರಮಠದಲ್ಲಿಯೂ ಪ್ರಮುಖ ಕರ್ತವ್ಯದಲ್ಲಿದ್ದರು ಎಂದು ತಿಳಿದು ಬರುತ್ತದೆ. ಅವರು ಆ ಕಾಲದಲ್ಲಿ ಕರ್ಕಿಯಿಂದ ಘಟ್ಟದ ಮೇಲೆಲ್ಲಾ ಕುದುರೆಯ ಮೇಲೆ ತಿರುಗಾಡುತ್ತಿದ್ದರಂತೆ. ಗೇರುಸೊಪ್ಪಾದಿಂದ ತೀರ್ಥಹಳ್ಳಿಗೆ ಹೋಗುವ ಮಾರ್ಗ ಹಂಸಗಾರಿನ ಮೇಲಿನಿಂದಲೇ ಹಾಯ್ದು ಹೋಗುತ್ತಿತ್ತು. ಹಾಗಾಗಿ ಕಿಬ್ಬಚ್ಚಲ ಮಂಜಮ್ಮನ ಕುರಿತು ಅವರಿಗೆ ತಿಳಿದು ಆಕೆ ಬರೆದ ಪುಸ್ತಕವನ್ನು ಪ್ರಕಟಿಸುವ ಆಸಕ್ತಿ ತೋರಿರಬೇಕು.ಕರ್ಕಿಯಲ್ಲಿ ಬೂದಿಭಟ್ಟರ ಮನೆತನ ಈಗಲೂ ಇದೆ. ಈ ಮನೆತನದ ಪೂರ್ವಜರು ಶತಮಾನಗಳ ಹಿಂದೆಯೇ ಗ್ರಾಮೀಣ ಚಿಕಿತ್ಸೆಯ ಅಂಗವಾಗಿ ವಿಭೂತಿಯನ್ನು ಮಂತ್ರಿಸಿಕೊಡುತ್ತಿದ್ದದರಿಂದ ಬಂದ ವಿಭೂತಿಭಟ್ಟರ ಮನೆ ಎಂಬ ಹೆಸರು ಅಪಭ್ರಂಶಗೊಂಡು ಬೂದಿಭಟ್ಟರಮನೆ ಆಯಿತಂತೆ. ಇಂತಹ ಸುಮಾರು ಮೂವತ್ತರಷ್ಟು ಅಡ್ಡಹೆಸರುಗಳಿರುವ ಮನೆತನಗಳು ಕರ್ಕಿಯಲ್ಲಿರುವದೊಂದು ವಿಶೇಷ. ತಮ್ಮ ಎಪ್ಪತ್ತೊಂಭತ್ತನೇ ವಯಸ್ಸಿನಲ್ಲಿ 1991ರಲ್ಲಿ ದಿವಂಗತರಾದ ಬೂದಿ ತಿಮ್ಮಣ್ಣಭಟ್ಟರು ಕರ್ಮಕಾಂಡ ಮತ್ತು ಜ್ಯೋತಿಷ್ಯ ಪಂಡಿತರಾಗಿದ್ದರಂತೆ. ಇವರು ತಮ್ಮ ಮಗ ಪಿ.ಟಿ. ಭಟ್ಟರಿಗೆ ಹೇಳಿದ ಪ್ರಕಾರ ಸೂರಿ ವೆಂಕಟರಮಣ ಶಾಸ್ತ್ರಿಗಳ ಸಮಕಾಲೀನ ಬೂದಿ ಮಹಾಬಲೇಶ್ವರ ಭಟ್ಟರು ತಿಮ್ಮಣ್ಣ ಭಟ್ಟರ ಅಜ್ಜನ ಅಪ್ಪ (ಮುತ್ತಜ್ಜ). ಅವರು ಸೂರಿ ಶಾಸ್ತ್ರಿಗಳಿಗೆ ಆರ್ಥಿಕವಾಗಿ ಬಲನೀಡುತ್ತಿದ್ದರಂತೆ. ಕರ್ಕಿಯಲ್ಲಿ ಈಗಲೂ ಬೂದೀ ಭಟ್ಟರ ಮನೆತನ ಇದೆ. ಅಲ್ಲಿ ಮಹಾಬಲೇಶ್ವರ ಭಟ್ಟ ಎಂದು ಪ್ರಸಿದ್ಧರಾದವರು ಇದ್ದರಂತೆ. ಕಿಬ್ಬಚ್ಚಲ ಮಂಜಮ್ಮನ ಈ ಪುಸ್ತಕ ನೋಡಿದಾಗ ಅವರ ಮೇಲೂ ಮಂಜಮ್ಮ ಪ್ರಭಾವ ಬೀರಿರುವುದು ಸ್ಪಷ್ಟ. ಹಾಗಾಗಿ ಅವರ ಒತ್ತಾಸೆಯ ಮೇಲೆ ಮಂಜಮ್ಮನ ಕೃತಿಗಳನ್ನು ಪ್ರಕಟಿಸಿರಬಹುದಾಗಿದೆ. + +ಮಂಜಮ್ಮ ವೇದಾಂತ ತತ್ವಸಾರ ಮಾತ್ರವಲ್ಲದೇ ಇನ್ನು ಅನೇಕ ಕೃತಿ ರಚಿಸಿದ್ದಳಂತೆ. ಅವಳ ವಂಶದ ಈಗಿನ ಕುಡಿ ದತ್ತ ಮೂರ್ತಿ ಹೇಳುವ ಪ್ರಕಾರ ಯಾರು ಯಾರೋ ಅವನ್ನೆಲ್ಲ ತೆಗೆದುಕೊಂಡು ಹೋಗಿದ್ದಾರೆ. ಮಂಜಮ್ಮನಿಂದ ಏಳನೆಯ ತಲೆಮಾರಿನವರಾದ ಇವರ ಮನೆಯಲ್ಲಿ ಮಂಜಮ್ಮ ರಚಿಸಿದ ಒಂದು ಕೃತಿಯೂ ಇಲ್ಲ. ಅವರಿಗೆ ಮಹಾತಪಸ್ವಿ, ಪರಿವ್ರಾಜಕಿ ಮಂಜಮ್ಮ ಎನ್ನುವ ತನ್ನ ಹಳೆಯ ತಲೆಮಾರಿನವಳು ಅನೇಕ ಪುಸ್ತಕ ಬರೆದಿದ್ದಾಳೆ ಎನ್ನುವದನ್ನು ತನ್ನ ಹಿರಿಯರಿಂದ ಕೇಳಿ ಗೊತ್ತು ಅಷ್ಟೇ! ಸದ್ಯ ನನಗೆ ಸಿಕ್ಕ ವೇದಾಂತ ತತ್ವಸಾರ ಕೃತಿಯಲ್ಲಿ ಮಂಜಮ್ಮನ ಜೀವನದ ಕುರಿತು ಯಾವ ವಿವರವೂ ಇಲ್ಲ. + + + +ವೇದಾಂತ ತತ್ವಸಾರದಲ್ಲಿರುವ ‘ಜೀವ ಪರಮರ ಕಲ್ಯಾಣ’ ಮತ್ತು ‘ಮನೋಬುದ್ಧಿ ಸಂವಾದ’ ಎರಡರಲ್ಲೂ ಮಂಜಮ್ಮ ಆಯ್ದುಕೊಂಡಿದ್ದು ಶುದ್ಧ ಯಕ್ಷಗಾನದ ಛಂದಸ್ಸನ್ನು. ಅದಕ್ಕೆ ಕಾರಣ ಆ ಕಾಲಕ್ಕೆ ಅಲ್ಲೆಲ್ಲಾ ಇದ್ದ ಯಕ್ಷಗಾನದ ಪ್ರಭಾವ. ಯಕ್ಷಗಾನ ಛಂದಸ್ಸಿನ ಮಾತ್ರಾಬಂಧಗಳಾದ ಝಂಪೆ, ಏಕ, ಆದಿ, ಅಷ್ಟತಾಳಗಳು; ರಾಗಗಳಾದ ನವರೋಜು, ಢವಳಾರ, ಸೌರಾಷ್ಟ್ರ ಮುಂತಾದವುಗಳಲ್ಲಿ ಕೃತಿ ರಚನೆಗೊಂಡಿದೆ. + +ಕವಿ ಬದುಕಿರುವದು ಆತನ ಕಾವ್ಯಗಳ ಮೂಲಕ. ಇದು ತನಕ ಬಂದ ಯಾವ ಕವಿ ಚರಿತ್ರೆಯಲ್ಲೂ ಸೇರದ ಇಂತಹ ಅನೇಕ ಪ್ರತಿಭೆಗಳು ಎಷ್ಟಿವೆಯೊ! ಅವನ್ನು ನೆನೆದು ಅವರಿಗೆ ನಮಿಸಿ ಕಿಬ್ಬಚ್ಚಲ ಮಂಜಮ್ಮನ ಯಕ್ಷಗಾನದ ಕೃತಿಗೆ ಪ್ರವೇಶ ಮಾಡುತ್ತಿದ್ದೇನೆ. + +ಕೃತಿ ಪ್ರವೇಶ : + +ಈಗ ನನಗೆ ಸಿಕ್ಕಿರುವ 1889ರರಲ್ಲಿ ದ್ವಿತೀಯ ಮುದ್ರಣಗೊಂಡ ವೇದಾಂತ ತತ್ವಸಾರ ಕೃತಿಯಲ್ಲಿರುವ ಎರಡು ಯಕ್ಷಗಾನ ಪ್ರಸಂಗಗಳು- ‘ಜೀವ ಪರಮರ ಕಲ್ಯಾಣ’ ಮತ್ತು ‘ಮನೋಬುದ್ಧಿ ಸಂವಾದ’ ಆಧರಿಸಿದ್ದು ವೇದಾಂತವನ್ನೇ. ಅದೂ ಅಲ್ಲದೇ ಇದೇ ಕೃತಿಯ ಕೊನೆಯಲ್ಲಿ ಸೂರಿ ಶಾಸ್ತ್ರಿಗಳು ತಮ್ಮಲ್ಲಿ ಸಿಗತಕ್ಕ ಕನ್ನಡ ಮತ್ತು ಬಾಳಬೋದಿಯ ಪುಸ್ತಕಗಳ ಪರಿಚಯಯಾದಿಯನ್ನು ಕೊಟ್ಟಿದ್ದಾರೆ. ಅದರಲ್ಲಿ ವೇದಾಂತ ತತ್ವಸಾರ (ಅನುಕ್ರಮ ಸಂ.-4) ಮತ್ತು ಜೀವಪರಮರ ಕಲ್ಯಾಣ (ಅ.ಸಂ.-11) ಎರಡೂ ಪುಸ್ತಕಗಳಿಗೆ ಬೆಲೆ 0-4-0 ಗೊಂದರಂತೆ ನಿಗದಿಪಡಿಸಲಾಗಿದೆ ಎನ್ನುವ ವಾಕ್ಯವಿದೆ. ಅಂದರೆ ವೇದಾಂತ ತತ್ವಸಾರ ಮತ್ತು ಜೀವ ಪರಮರ ಕಲ್ಯಾಣ ಎರಡೂ ಬೇರೆ ಬೇರೆಯಾಗಿ ಪ್ರಕಟಿಸಿದ್ದು ಎಂತಾಯಿತು. ಆದರೆ ‘ಮನೋಬುದ್ಧಿ ಸಂವಾದ’ ಹೆಸರು ಅವರ ಯಾದಿಯಲ್ಲಿ ಎಲ್ಲೂ ಇಲ್ಲ. ಈ “ಮನೋಬುದ್ಧಿ ಸಂವಾದ” ನಡೆದಿರುವದು ಮನಸ್ಸು ಮತ್ತು ಬುದ್ಧಿಯ ನಡುವೆ. ಈ ಕೃತಿ ಪ್ರಾರಂಭವಾಗುವದು ಮುಂದಿನ ಪದ್ಯದಿಂದ. + +ರಾಗ- ಅಷ್ಟತಾಳ|| ಶ್ರೀ ಗಜರಾಜ ಪ್ರಸನ್ನಾ || ಮನೋಬುದ್ಧಿ ಸಂವಾದಾ ||ವಡೆಯ ಶ್ರೀಗುರು ಪರಮಾತ್ಮನೇ ಗತಿಯೆಂದು |ಪೊಡವೊಡುತಿರು ಪಾಡುತಿರು ಮನವೇ |ಯಡಬಿಡದೇ ನಂಬಿಕೊಂಡಿಹ ಜ್ಞಾನಕ್ಕೆ |ಯಡರ ಮಾಡುವ ಬಲು ಮೂಢ ಜನರ ಸುದ್ಧಿ ||ಇನ್ನಾದರು ಬಿಡುಯಲೆ ಮನವೆ ||1|| + +ಲೋಕದ ವ್ಯವಹಾರದಲ್ಲಿ ಮನುಷ್ಯನ ಇಂದ್ರಿಯಗಳು ಜ್ಞಾನದ ಹಾದಿಯಲ್ಲಿ ಸಾಗುವಾಗ ಮೂಢ ಜನರ ಸುದ್ದಿಯಿಂದಾಗಿ ವಿಷಯ ಸುಖಕ್ಕೆ ಎಳೆಯುತ್ತಿದೆ. ಅವನ್ನು ಇನ್ನಾದರೂ ಬಿಡು ಎಂದು ಪ್ರಾರ್ಥಿಸಿಕೊಳ್ಳುತ್ತಾಳೆ. ಮುಂದುವರಿಯುತ್ತಾ… + +ಪಾವನಾತ್ಮಕರನು ಬಲುತರ ನಿಂದಿಸಿ ||ಜೀವವ ಹೊರದು ಕೊಂಡೇನು ಫಲ ||ದೇವ ಬ್ರಾಹ್ಮಣ ಗುರುಹಿರಿಯರೆಂದೆಂಬ ||ಭಾವಭಕ್ತಿಗಳಿಲ್ಲದಂಥ ಜನರ ಸುದ್ಧಿ || + +ಎನ್ನುತ್ತಾ ಹಳವಳಿಸುತ್ತಾಳೆ. ಬಹುಶಃ ಆಧ್ಯಾತ್ಮದ ದಾರಿಯಲ್ಲಿ ಸಾಗುವಾಗ ಜನರ ಮಾತಿಗೆ ಪ್ರತಿಸ್ಪಂದನವಾಗಿ ಈ ಭಾಗವನ್ನು ಬರೆದಿರಬೇಕು ಎನಿಸುತ್ತದೆ. ಬುದ್ಧಿ ಮತ್ತು ಮನಸ್ಸು ಆಧ್ಯಾತ್ಮದ ಕಡೆಗೆ ಚಿಂತಿಸುತ್ತದೆ. ಅಕ್ಷರ ಗೊತ್ತಿಲ್ಲದ ಮಂಜಮ್ಮ ಇಲ್ಲಿ ವಿಷಯ ಸುಖದಿಂದ ಮೋಕ್ಷದ ಮೆಟ್ಟಿಲಾದ ಚಿತ್ತಶುದ್ಧಿಯ ಕಡೆ ಕೊಂಡೊಯ್ಯುವ ಭಾಗ ಯಕ್ಷಗಾನದ ಇತರ ಕವಿಗಳು ಬರೆದ ಪ್ರಸಂಗಗಳಿಗೆ ಹೋಲಿಸಿದರೆ ಕಬ್ಬಿಣದ ಕಡಲೆಯೇ. ಯಕ್ಷಗಾನದಂತೆ ಇಲ್ಲಿ ಪಾತ್ರಗಳ ಪ್ರವೇಶವಿಲ್ಲ. ಯುದ್ಧ, ಪ್ರಯಾಣ, ಹಾಸ್ಯ ಈ ಯಾವ ರಂಗಕ್ರಿಯೆಯೂ ಇಲ್ಲ. ಆದರೆ ಪದ್ಯಗಳ ರಚನೆ ಛಂದಸ್ಸು ಮಾತ್ರೆ ಯಕ್ಷಗಾನದ್ದೆ. ರಾಗ ದೇಶಿ- ಅಷ್ಟ ತಾಳ; ಝಂಪೆ, ಸಾಂಗತ್ಯ ಢವಳಾರ ರಾಗಗಳನ್ನು ಸೂಚಿಸಿದ್ದಾಳೆ. + +ನೂರಾಐವತೈದು ಪದಗಳಲ್ಲಿ ಮುಗಿಯುವ ಈ ಪ್ರಸಂಗದಲ್ಲಿ ಕವಿಯಿತ್ರಿ ಮನುಷ್ಯರಿಗೆ ಪ್ರಪಂಚದ ಆದಿಯ ಗುಟ್ಟೇನು ಗೊತ್ತು ಎನ್ನುವಲ್ಲಿಂದ ಪ್ರಾರಂಭಿಸುತ್ತಾಳೆ. ಅದು ಮನಸ್ಸು ಬುದ್ಧಿಗೆ ವಿಷಯ ಸುಖದ ಕಡೆ ಹೋಗಬೇಡ, ಅಂತರ್ಮುಖಿಯಾಗು ಎನ್ನುವದನ್ನು ಸೂಚಿಸುವ ಮೂಲಕ. + +|| ವಾದಿಸಿಯೇ ಕೇಳಿದರನಾದಿಲೊಂದು ಮಾತ್ರೆಪುಟ್ಟಿ |ಬೀದಿವರಿದೆ ವ್ಯಕ್ತವಾಗುತಾದಿಯೆನಿಸಿತು || + +ಸೃಷ್ಟಿಯ ಹುಟ್ಟಿನ ರಹಸ್ಯವನ್ನು ವೇದಾಂತದ ಕಡೆ ಕೊಂಡೊಯ್ಯುತ್ತಾಳೆ. ಕಠೋಪನಿಷತ್ತಿನಲ್ಲಿ ಯಮ ನಚಿಕೇತನಿಗೆ ವಿಷಯ ಸುಖದಿಂದ ಮನಸ್ಸಿನೊಳಗಿರುವ ಅವ್ಯಕ್ತದೊಳಗಿನ ಪುರುಷನನ್ನು ವಿವರಿಸುವ ರೀತಿಯಲ್ಲಿ ಈ ಭಾಗ ಇದ್ದರೂ ಇದು ಕಠೋಪನಿಷತ್ತು ಒಂದನ್ನೇ ಆಧರಿಸಿಲ್ಲ. ಆದರೆ ಆತ ವಿದ್ಯೆಯನ್ನು ಸಾಕ್ಷಾತ್ಕರಿಸಿಕೊಳ್ಳಬೇಕು ಎನ್ನುವದನ್ನು ಪ್ರಾರಂಭದಲ್ಲಿಯೇ ಎಚ್ಚರಿಸುತ್ತಾಳೆ. ಈ ಬ್ರಹ್ಮಾಂಡವೇ ಮೂರು ಮಾತ್ರೆಗಳಾಗಿ ಸ್ವರ್ಗ, ಮರ್ತ್ಯ, ಪಾತಾಳಗಳಾದುದು. ಅಲ್ಲಿಂದ ಜೀವವೊಡೆದು ಕರ್ಮದ ವಾಸನೆಯಲ್ಲಿ ಪ್ರಪಂಚವಾದದ್ದನ್ನು ತುಂಬಾ ಮಾರ್ಮಿಕವಾಗಿ ವರ್ಣಿಸಿದ್ದಾಳೆ. + +“ಪಂಚಭೂತ, ಪಂಚಕರಣ, ಪಂಚಮರುತ, ಪಂಚಕೋಶ, ಪಂಚವಿಷಯ ದಿಂದಲೇ ಪ್ರಪಂಚವಾಯಿತು ಎನ್ನುವ ಮೂಲಕ ಪಂಚೀಕರಣವನ್ನು ತಿಳಿಸಿ ಮುಂದೆ ಸತ್ವ, ರಜ, ತಮಗಳ ತತ್ವವಾದವನ್ನು ತಿಳಿಸಿ ಇವೆಲ್ಲ ವಿಷ್ಣುಮಾಯೆ, ಅದನ್ನ ತಿಳಿದವರು ಪರಮನಿಷ್ಠರು ಎನ್ನುತ್ತಾಳೆ. ಹಾಗಾಗಿಯೇ ನಾನು ನೀನುಯೆಂಬ ಮಾತು ಏನೂ ಇಲ್ಲ. ಜ್ಞಾನ ಮಾರ್ಗವೊಂದೇ ಅಂತಿಮ ಸಾಧನ. ಈ ಪಥಕ್ಕೆ ಏರಬೇಕಾದರೆ ಲೋಕದ ಜನ ಏನನ್ನು ಆಡಿಕೊಂಡರೂ ಲೆಕ್ಕಿಸಬೇಡ ಎನ್ನುವದನ್ನ ಹೀಗೆ ಹೇಳಿದ್ದಾಳೆ. + +|| ಕರಿಯ ರಾಜ ನರಿಯ ಕಂಡು ಭರದಿ ಒದರುವನೆ ಬುದ್ಧಿ ||| ಕುರಿಯ ಜನರಿಗಂಜುವರೆ ಹರಿಯ ಶರಣರು || + + + +ಇಲ್ಲಿ ಬುದ್ಧಿ ತಿರುಗಿ ಮನಸ್ಸನ್ನು ಪ್ರಶ್ನಿಸುವದು ಬಂಡಾಯದಿಂದಲ್ಲ. ಅದೂ ಕೂಡಾ ಪಕ್ವವಾಗಿದೆ. ಜ್ಞಾನ ಮಾರ್ಗದ ತುಡಿತದಲ್ಲಿದೆ. ಆದರೆ ಲೋಕದ ಡೊಂಕನ್ನೆ ನೋಡಿ ಕವಿ ಮರುಗುವದು ಬುದ್ಧಿ ಮನಸ್ಸಿಗೆ ಕೇಳುವ ಈ ಪದ್ಯದಿಂದ… + +|| ಯೇಸು ಘನವೋ ಶಿವನೆ | ಹೇಸಿಕೆಯಮಲಮೂತ್ರ | ಸೂಸಿ ತುಂಬಿರುವ ರುಧಿರಗಳು || + +ಕವಿ ಇಲ್ಲಿ ಸಂಸಾರದಿಂದ ಸಂಪೂರ್ಣ ವಿರಕ್ತಿ ಹೊಂದಿರುವದನ್ನು ಕಾಣುತ್ತೇವೆ. ಆದರೂ ಈ ಸಂಸಾರದ ತಾಪವನ್ನು ಕಳೆಯಲು ಶ್ರೀಪತಿಯ ಕರುಣೆಯಾಗಬೇಕು. ಅದಕ್ಕೆತಾಪರಹಿತಾನಂದ ಗುರುಗಣಾಧೀಶ್ವರನೆ | ಪೋಪವಿರಬೇಕು ಕೇಳ್ಮನವೆ ||ಎಂದು ಬುದ್ಧಿ ಬೇಡಿಕೊಳ್ಳುತ್ತಾಳೆ. ಹಾಗಂತ ಮಂಜಮ್ಮ ಜೀವವಿರೋಧಿಯಲ್ಲ. ಮಾನವ ಜನ್ಮ ದೊಡ್ಡದು ಎನ್ನುವದು ಚೆನ್ನಾಗಿ ತಿಳಿದಿವೆ. ಹಾಗಾಗಿಯೇ ಮನಸ್ಸು ಮುಂದಿನ ಪದ್ಯಗಳಲ್ಲಿಸರ್ವ ದೇವತೆಗಳೂ ಋಷಿಗಳಿರುವ ಪುರವಿದು ||ಎಂದು ದೇಹವನ್ನು ಕೊಂಡಾಡುತ್ತಾಳೆ. ಮೋಕ್ಷಸಾಧನೆ ಈ ದೇಹದಿಂದ ಮಾತ್ರ ಸಾಧ್ಯ ಎನ್ನುವದನ್ನ ಬುದ್ಧಿಗೆ ತಿಳಿಹೇಳುತ್ತಾಳೆ. + +ಬುದ್ಧಿಗೆ ಸಂದೇಹ ಹೋಗಿಲ್ಲ. ಆವರಿಸಿದ ಮಾಯೆಯೆಂಬ ಮಾನಿನಿ ತನ್ನನ್ನು ಆವರಿಸಿದಾಗ ತಾನು ಅದರ ಕೈಗೊಂಬೆ ಎಂದು ಹಲಬುತ್ತದೆ. ಅದಕ್ಕೆ ಮನಸ್ಸು ಕೊಡುವ ಉತ್ತರ ಅರಿಯದವರಿಗೆ ದೊಡ್ಡ ಮಾರಿಯೆ ಹೊರತಾಗಿ ಅರಿತವರಿಗೆ ಲೋಕಮಾತೆ || ಎನ್ನುವ ಸಾಂಗತ್ಯದ ಪದ್ಯದ ಮೂಲಕ. + +ಇಲ್ಲಿ ಭಕ್ತಿ ಮಾರ್ಗವೇ ಶ್ರೇಷ್ಠ ಎನ್ನುವಾಗ ಮತ್ತೆ ಬುದ್ಧಿಗೆ ಅರಿಷಡ್ವೈರಿಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳಿಂದ ಅವನ್ನು ಅರಿಯಲು ಸಾಧ್ಯವಾಗಲಾರದು ಎಂಬ ಚಿಂತೆ. ಮತ್ತೆ ಅದಕ್ಕೆ ಉತ್ತರಿಸುವ ಆದಿತಾಳದ ಪದ್ಯ ಆ ಷಡ್ವೈರಿಗಳನ್ನೇ ಮಿತ್ರಭಾವಕ್ಕೆ ತರುವ ಬಗೆ ವಿವರಿಸುತ್ತ ವೇದಾಂತದ ರಹಸ್ಯಗಳನ್ನೆಲ್ಲ ಸರಳವಾಗಿ ವಿವರಿಸಿದೆ. + +ಕಮಲದ ಬುಡದಲ್ಲಿ ಕುಳಿತ ಕಪ್ಪೆಗೆ ಕಮಲದ ಹೂವಿನ ಪರಿಮಳ ಏನು ಗೊತ್ತು? ಎನ್ನುವ ಪ್ರಶ್ನೆ ಕೇಳಿ ಭಕ್ತಿ ಮಾರ್ಗಕ್ಕೆಳೆಯುತ್ತಾಳೆ. ಹೀಗೆ ಮನಸ್ಸು ಮತ್ತು ಬುದ್ಧಿಯದು ಸಂವಾದವೇ (ಸಮ್ಯಕ್ ವಾದ) ಹೊರತು ಚರ್ಚೆಯಲ್ಲ. ಆದರೆ ಮನಸ್ಸು ಮತ್ತು ಬುದ್ಧಿಗಳು ಸ್ವಭಾವತಃ ಚಂಚಲ. ಅವು ಮೋಕ್ಷದ ದಾರಿ ತೋರಿಸಲಾರವು. ಏಕೆಂದರೆ ಮೋಕ್ಷ ಸಿಗಬೇಕಾದರೆ ಚಿತ್ತ ಶುದ್ಧಿಯಾಗಬೇಕು ಎನ್ನುತ್ತದೆ ವೇದಾಂತ. ಇಲ್ಲಿ ಈಗ ಭಕ್ತಿಮತಿ ಬಂದು ಮನಸ್ಸು ಮತ್ತು ಬುದ್ಧಿಯನ್ನು ಈ ಸಂವಾದಗಳೆಲ್ಲಾ ಸಂಸ್ಥಿರವಾದ ಕೈವಲ್ಯ ಕೊಡಲಾರವು, ಮೋಕ್ಷಸಾಧನೆ ಸುಲಿದ ಬಾಳೆಹಣ್ಣಲ್ಲ ಎನ್ನುತ್ತಾ ಆ ಹಾದಿಯ ರಹಸ್ಯ ಹೇಳುವ ಭಾಗ ಕನ್ನಡ ಸಾಹಿತ್ಯದಲ್ಲಿ ವಿಶಿಷ್ಟ ಎನ್ನಬಹುದು. + +(ದತ್ತಣ್ಣ) + +ಆದಿಮೂಲವ ನೋಡಬೇಕು ಎನ್ನುತ್ತಾ ಯೋಗದ ರಹಸ್ಯವನ್ನು ವಿವರಿಸುತ್ತದೆ. ಹಾಗೇ ತೂರಿ ತುರ್ಯಾನದಂದದಲಿ ನಿಲ್ಲಬೇಕು ಎನ್ನುತ್ತಾ ಬ್ರಹ್ಮ ವಿದ್ಯೆಯನ್ನ ಬೋಧಿಸುತ್ತದೆ.ಅದನ್ನು ಅರಿತು ಬುದ್ಧಿ ಮನಸ್ಸು ಎನ್ನುವದು ನಿರ್ವಿಕಲ್ಪ ಸಮಾಧಿಯ ಸ್ಥಿತಿಯನ್ನು ಹೊಂದುತ್ತದೆ ಎನ್ನುವದರೊಂದಿಗೆ ಈ ಕಥಾಭಾಗಕ್ಕೆ ಮಂಗಳ ಹಾಡುತ್ತಾಳೆ. + +ಈ ಇಡೀ ಪ್ರಸಂಗ ವೇದಾಂತವನ್ನು ಆಧರಿಸಿದ ನಿರೂಪಣೆ. ಇದನ್ನು ರೂಪಕದ ಪ್ರಕಾರಗಳಿಗೆ ಸೇರಿಸುವದು ಕಷ್ಟವೇ. ಆದರೆ ಪ್ರಚಲಿತ ತಾಳಮದ್ದಳೆಗೆ ಹೇಳಿ ಮಾಡಿಸಿದಂತಿದೆ. ನಚಿಕೇತೋಪಾಖ್ಯಾನ, ಶಂಕರ ವಿಜಯಗಳಂತೆ ವೇದಾಂತವನ್ನು ಬೋಧಿಸುವ ಈ ಕೃತಿಯನ್ನು ತಾಳಮದ್ದಳೆಗೆ ಅಳವಡಿಸುವ ಪ್ರಯತ್ನ ಮಾಡಬಹುದು. + +ಯಕ್ಷಗಾನವೆಂಬುದು ಗಾನದೇಹಿ. ಇದಕ್ಕೆ ನೃತ್ಯ, ಆಹಾರ್ಯಗಳೆಲ್ಲ ಮತ್ತೆ ಸೇರಿಕೊಂಡಿದುದು ಎನ್ನುವ ವಾದವಿದೆ. ‘ಯಕ್ಷಗಾನದೊಳೊರೆವೆಂ… ಈ ಕೃತಿಯನು’ ಎನ್ನುವ ಪದ್ಯವನ್ನು ನಾವು ಆಗಿಂದಾಗ್ಗೆ ನೋಡುತ್ತೇವೆ. ಆದರೆ ಅದಕ್ಕೆ ಉದಾಹರಣೆ ಸಿಕ್ಕಿರಲಿಲ್ಲ. ಗಮಕದ ಸಾಲಿಗೆ ಸೇರದ ದೇಸಿ ಮಟ್ಟಿನಲ್ಲಿ ರಚಿತವಾದ ಈ ಕೃತಿ ಯಕ್ಷಗಾನ ಹಾಡುಗಬ್ಬ ಎನ್ನುವದಕ್ಕೆ ಉದಾಹರಣೆಯಾಗಿ ಸಿಗುವಂತೆ ತೋರುತ್ತದೆ. ಈ ಕುರಿತು ಚರ್ಚೆ ಆದರೆ ಒಳ್ಳೆಯದು. ಕನ್ನಡ ಸಾಹಿತ್ಯದಲ್ಲಿ ವೇದಾಂತದ ಕುರಿತು ವಿಪುಲವಾದ ಕೃತಿಗಳು ಬಂದಿವೆ. ವಚನದಿಂದ ಹಿಡಿದು ದಾಸಸಾಹಿತ್ಯದಲ್ಲಿನವರೆಗೆ ಎಲ್ಲವೂ ಭಕ್ತಿ ಮಾರ್ಗವನ್ನು ಬೋಧಿಸಿದವುಗಳೇ. ಆದರೆ ಶುದ್ಧ ವೇದಾಂತವನ್ನೇ ಆಧರಿಸಿದ ಭಕ್ತಿಯಿಂದ ಚಿತ್ತಶುದ್ಧಿಯ ಪರಮಯೋಗದ ರಹಸ್ಯವನ್ನು ಕಿಬ್ಬಚ್ಚಲು ಮಂಜಮ್ಮರಂತೆ ಬರೆದವರು ಸಿಗುತ್ತಿಲ್ಲ. ಹಾಗಾಗಿ ಯಕ್ಷಗಾನಕ್ಕೆ ನೂತನವಾದ ಯಕ್ಷಗಾನದ ಮಟ್ಟಿನಲ್ಲಿರುವ ಕೃತಿಯ ಅಧ್ಯಯನಕ್ಕೆ ಮಂಜಮ್ಮನ ಕೃತಿ ಒಳ್ಳೆಯ ವಸ್ತು. + +ಈ ಯಕ್ಷಗಾನ ರಂಗಕ್ರಿಯೆಯಲ್ಲಿ ಪ್ರಮುಖವಾಗಿರುವ ಯುದ್ಧದ ದೃಶ್ಯವನ್ನು ಒಳಗೊಂಡಿದೆ. ಇಲ್ಲಿ ಹಲವು ಪಾತ್ರಗಳ ಪ್ರವೇಶವಾಗುತ್ತದೆ. ಹೆಚ್ಚಿನ ಯಕ್ಷಗಾನ ಪ್ರಸಂಗಗಳಲ್ಲಿರುವಂತೆ ಇಲ್ಲಿಯೂ ನಾರದನ ಪ್ರವೇಶವಿದೆ. ಮಾತುಗಾರರಿಗೆ ವಿಪುಲ ಅವಕಾಶವನ್ನು ಕೊಡುವ ಪ್ರಸಂಗವಿದೆ. ನಾಂದಿ ಪದ್ಯದಲ್ಲಿ ಗಣಪತಿ, ಶಿವ, ಪಾರ್ವತಿ, ನಾರಾಯಣ ಹೀಗೆ ದೇವರನ್ನು ಸ್ಮರಿಸುತ್ತ, ಕಥಾಪ್ರಾರಂಭದ ಭಾಮಿನಿಯಲ್ಲಿ ಮಾಯೆ ಮುಸುಕಿದ ಜೀವಕ್ಕೆ ಅರಿವಿನ ಗುರುವಾಗಿ ಗಣಪತಿಯನ್ನ ಸ್ತುತಿಸುತ್ತಾಳೆ. ಹಾಗೂ ಕಥಾಪ್ರಾರಂಭಕ್ಕೆ ಅನುಮತಿ ಕೇಳುತ್ತಾಳೆ. + +ಕಥಾ ಪ್ರವೇಶವಾಗುವುದೇ ಗುರುಶಿಷ್ಯರ ಸಂಭಾಷಣೆಯಲ್ಲಿ. ಇಲ್ಲಿ ಬರುವ ಗುರು ದೋಷರಹಿತ ಮತ್ತು ಜ್ಞಾನಿ. ಸಂದೇಹಗಳನ್ನೆಲ್ಲ ಪರಿಹರಿಸುವಾತ. ಶಿಷ್ಯನೂ ಅಷ್ಟೇ. ಆತ ಅಂತೇವಾಸಿ. ಆತನಿಗೆ ವೈರಾಗ್ಯ ಬಂದಿದೆ. ಆತ ಒಂದು ದಿನ ಅದೇ ವೈರಾಗ್ಯಭಾವದಲ್ಲಿ ಗುರುವಿನ ಬಳಿಗೆ ಬಂದು… + +|| ನಿಂದು ಕರಗಳ ಮುಗಿದು | ಯೀ ಭವ |ಸಿಂಧುವನು ನೆರೆ ಕಳಿವುಪಾಯವ |ನಂದದಲಿ ದಯ ಮಾಡಿ ರಕ್ಷಿಪುದೆಂದನಾಗ || + +ಎಂದು ಕೇಳಿಕೊಳ್ಳುತ್ತಾನೆ. ಪರಂಪರೆಯ ಯಕ್ಷಗಾನದ ಪ್ರಾರಂಭದ ಪದ್ಯಗಳಂತೆ ಇದು ರಾಗ ಸೌರಾಷ್ಟ್ರ – ತ್ರಿವುಡೆ ತಾಳದಲ್ಲಿದೆ. ಶಿಷ್ಯನ ಸಂದೇಹ ಸರಳವಾಗಿ ಆದರೆ ಬಿಗುವಾಗಿಯೂ ಇರುವದನ್ನು ಈ ಕೆಳಗಿನ ಪದ್ಯಗಳಲ್ಲಿ ಕಾಣಬಹುದು. + +|| ಆದಿಯಲಿ ತೋರುವ ಪ್ರಪಂಚಗ |ಳಾದ ವೃತ್ತಾಂತಗಳನೆಲ್ಲವ |ಹೇ ದಯಾಂಬುಧಿ ಗುರುವೆ ನನಗದ ಬೋಧಿಸುವದು ||ಎನ್ನುತ್ತಾ ಅದರಿಂದ ಮುಂದುವರಿದು:-ಬಂದ ಭವಕೋಟಲೆಯನೆಲ್ಲವ ಹಿಂದುಗಳೆದು |ಚಂದದಿಂದಲೆ ಜೀವ ಪರಮರೊಳೊಂದೆಯಾಗುವ ಪರಿಯದೆಂತದ |ರಂದವನು ಯರುಹೆನುತ ಗುರುಪದಕೊಂದಿಸಿದನು || + +ಇದು ಲೋಕದ ಸಂಶಯಕ್ಕೆ ಮಂಜಮ್ಮ ಕೇಳಿದ ಪ್ರಶ್ನೆಯೂ ಹೌದು. ಏಕೆಂದರೆ ಆಕೆಗೆ ಈ ಜೀವ ಜನ್ಮಗಳ ಮೇಲೆ ಜನ್ಮವನ್ನು ತಳೆಯುವದೇಯೌವ್ವನ ಬರಲು ಸತಿಯರು |ನೆರದು ತಮ್ಮಯ ಪುರುಷನೊಳಗೆರಕವನು ಪಡವಂತೆ ||ಎನ್ನುವ ಗುಟ್ಟನ್ನು ಲೋಕಕ್ಕೆ ತಿಳಿಸಬೇಕಾಗಿದೆ. ಈ ರೀತಿಯ ತಂತ್ರಗಳ ಮೂಲಕ ಕಥಾ ಪ್ರವೇಶದ ವರಸೆ ಅದುವರೆಗೆ (ಅಂದರೆ 1886ರ ವರೆಗೆ) ಇನ್ನುಳಿದ ಕವಿಗಳ ಪ್ರಸಂಗದಲ್ಲಿಲ್ಲ. ಅದರ ನಂತರ ಬಂದ ಪ್ರಸಂಗಗಳಲ್ಲೂ ಬಂದ ಉದಾಹರಣೆಯೂ ಸಿಗುವದಿಲ್ಲ. + +ಇಲ್ಲಿ ಗುರು ಸೃಷ್ಟಿಯ ಜೀವ ಉದಯಿಸಿದ ಕಥೆಯನ್ನು ಓರ್ವ ದೊರೆ ಮಗನಾದ ‘ಹಂಕರ’ ಎನ್ನುವವನಿಗೆ ವಿವರಿಸುತ್ತಾನೆ. ಹಂಕರ ಎನ್ನುವ ವೇದಾಂತದ ಪಾರಿಭಾಷಿಕ ಶಬ್ದ ಪರಿಚಯ ಆಕೆಗಿದ್ದದ್ದನ್ನು ನೋಡಿದರೆ ವೇದದ ರಹಸ್ಯಗಳೆಲ್ಲ ಈ ನಿರಕ್ಷರ ಮತಿಗೆ ಸಿದ್ದಿಸಿದ್ದು ಹೇಗೆ ಎನ್ನುವ ಸಂಶಯ ಬರದಿರದು. (ಹಂಕರಗಳು – 3 : ವೈಕಾರಿಕ, ಅಹಂಕಾರಿಕ ಮತ್ತು ತಾಮಸ) ಆತನಿಗೆ ಪತ್ನಿಯಾಗಿ ಬರುವವಳು ಶೂನ್ಯ ಭೂಪತಿಯ ಮಗಳು ಮಾನ್ಯೆ ಸುಖೇಚ್ಛೆ ಎಂಬವಳು. ಹಂಕರಕ್ಕೆ ಸುಖ ದೊರಕಿದಾಗ ನಾರಿಧರಿಸಿದ ಗರ್ಭದ ಕುರಿತು ವರ್ಣನೆ. + +|| ಭಾಮಿನಿ ||ಅಬ್ಬರಿಸಿತೇನೆಂಬೆ ನಾರಿಯು | ಗರ್ಭವನು ಧರಿಸಿದಳು | + +ಈ ಜಗತ್ತಿನ ಸರ್ವಲೋಕಗಳೆಲ್ಲ ಬಳಿಕವರಿಂದಲಾಯ್ತು ಎನ್ನುವ ಮೂಲಕ ಶಿಷ್ಯನಿಗೆ ಸೃಷ್ಟಿಯ ಆದಿಯನ್ನು ಹೇಳುತ್ತಾಳೆ. ಇದು ಸಾಂಖ್ಯ ತತ್ವ. ಯೋಗದ ನಡೆಯೂ ಹೌದು. ತ್ರಿಗುಣ, ತನ್ಮಾತ್ರೆ, ಪಂಚಭೂತ, ಬ್ರಹ್ಮ, ದೇವತೆಗಳ ಸೃಷ್ಟಿಯನ್ನೆಲ್ಲ ಸುಂದರವಾಗಿ ವರ್ಣಿಸುತ್ತಾಳೆ. ಆದರೆ ಹಂಕೃತಿ (ವಿಕಾರ, ಅಹಂಕಾರ ಮತ್ತು ತಾಮಸ) ಗಳು ಸೇರಿದಾಗ ಮತಿದುಷ್ಟವಾಗುವದು ಸಹಜ ತಾನೇ! ದುಷ್ಟಮತಿ ಎನ್ನುವ ಹೆಸರಿಂದ ಅಷ್ಟಪುರದ (ದೇಹದ) ಅಧಿಕಾರಿ ತಾನೆಂದು ಮೆರೆಯುತ್ತಾನಂತೆ. ಆತನ ರಾಜ್ಯಭಾರದ ದರ್ಪವನ್ನು ಭೈರವಿರಾಗದಲ್ಲಿ (ಅಷ್ಟ ತಾಳ) ಚೆನ್ನಾಗಿ ವರ್ಣಿಸಿದೆ. ಮುಂದೆ, ದುಷ್ಟಮತಿತ್ವ ತಲೆಗೇರಿದರೆ ಏನೇನೆಲ್ಲ ಅನಾಹುತ ಸೃಷ್ಟಿಸಬಹುದು ಎನ್ನುವದನ್ನು ಮುಂದಿನ ಪದ್ಯಗಳಲ್ಲಿ ಚೆನ್ನಾಗಿ ವರ್ಣಿಸಿದೆ. ಓರ್ವ ನುರಿತ ಯಕ್ಷಗಾನ ಕಲಾವಿದ ಈ ಭಾಗವನ್ನು ಚೆನ್ನಾಗಿ ಬಳಸಿಕೊಳ್ಳಬಲ್ಲ. (ಕೆರೆಮನೆ ಮಹಾಬಲ ಹೆಗಡೆ ಅವರ ದುಷ್ಟಬುದ್ಧಿಯ ಪೀಠಿಕೆ ಇಲ್ಲಿ ನೆನಪಿಗೆ ಬರುತ್ತದೆ) ದುಷ್ಟಮತಿಯ ದರ್ಪಕ್ಕೆ ವಿವೇಕವನ್ನು ಹೇಳುವವ ಶಾಂತಮತಿ. ಅದು ಅರ್ಥವಾಗಬೇಕಾದರೆ ಚಿತ್ತಶುದ್ಧಿಯಿಂದ ಕೇಳಬೇಕು. ಆದರೆ ಇಲ್ಲಿ ಶಾಂತನ ವಿವೇಕ ದುಷ್ಟಮತಿಗೆ ಅರ್ಥವಾಗುವದಿಲ್ಲ. ಮನಸ್ಸಿನಲ್ಲಿ ಉದ್ಭವವಾಗುವ ಈ ಎರಡೂ ಗುಣಗಳಿಗೆ ಎರಡು ಪಾತ್ರದ ರೂಪಕೊಟ್ಟು ರೂಪಕಕ್ಕೆ ಒಂದು ಹೊಸ ಆಯಾಮವನ್ನು ಮಂಜಮ್ಮ ಹತ್ತೊಂಭತ್ತನೇ ಶತಮಾನದ ಉತ್ತರಾರ್ಧದಲ್ಲಿ ನೀಡಿರುವದನ್ನು ವಿಮರ್ಶಕರು ಗಮನಿಸಬೇಕಾಗಿದೆ. + +ಇಲ್ಲಿ ಮಟ್ಟೆತಾಳವನ್ನು ಉಪಯೋಗಿಸಿ ದುಷ್ಟಮತಿ ಶಾಂತನ ಹತ್ತಿರ ಯುದ್ಧ ಮಾಡುವ ದೃಶ್ಯ ಅದ್ಭುತವಾಗಿ ಮೂಡಿಬಂದಿದೆ. ಶಾಂತನ ವಿವೇಕವನ್ನು ದುಷ್ಟಮತಿ ತಿರಸ್ಕರಿಸಿ ಅವನ ಮೇಲೆ ಯುದ್ಧ ಸಾರುತ್ತಾನೆ. ಪಾರಂಪರಿಕ ಯಕ್ಷಗಾನದಲ್ಲಿ ಬರುವ ಚೂನಿ ಕಾಳಗದ ನಂತರ ಅಸ್ತ್ರ ಪ್ರತ್ಯಸ್ತ್ರದ ಘೋರ ಯುದ್ಧದ ತಂತ್ರವನ್ನು ಕವಯಿತ್ರಿ ಇಲ್ಲಿ ಚೆನ್ನಾಗಿ ಬಳಸಿಕೊಂಡಿದ್ದಾಳೆ. ಹನ್ನೆರಡು ಪದ್ಯಗಳಲ್ಲಿ ಬರೆದ ದುಷ್ಟಮತಿ ಮತ್ತು ಶಾಂತನ ಯುದ್ಧದಲ್ಲಿ ಬಳಕೆಯಾದ ಅಸ್ತ್ರಪ್ರತ್ಯಸ್ತ್ರಗಳು ರೋಚಕವಾಗಿವೆ. + +ಮೊದಲು ದುಷ್ಟಮತಿ ಶಾಂತನ ಮೇಲೆ ಕಾಮದಸ್ತ್ರ ಪ್ರಯೋಗಿಸುತ್ತಾನೆ. ಶಾಂತ ಎನ್ನುವದು ವಿಕಾರರಹಿತ ಹಂಕರಗಳಿಲ್ಲದ ಸ್ಥಿತಿ ಎನ್ನುವ ಮೂಲತತ್ವ ಬಲ್ಲ ಮಂಜಮ್ಮ ಆತನಿಂದ ಪ್ರತ್ಯಸ್ತ್ರ ಬಿಡಿಸುವದು ವಿರತಿಯಾಸ್ತ್ರದ ಮೂಲಕ. ಮುಂದಿನದು ಮೋಹದಸ್ತ್ರ ಪ್ರಯೋಗ. ಅದಕ್ಕೆ ದಮಾಸ್ತ್ರದಿಂದ ಸೋಲು. + +ದುಷ್ಟಮತಿ ಇದಕ್ಕೆಲ್ಲ ಬೆದರುವನಲ್ಲ. ಆತ ಈ ಬಾರಿ ಪ್ರಯೋಗಿಸಿದ್ದು ಮದಾಸ್ತ್ರವನ್ನು. ಇಲ್ಲಿ ಉಲ್ಲಸಿತಾಸ್ತ್ರದೆದುರು ಮದಾಸ್ತ್ರ ವಿಫಲ. ಮುಂದಿನದೇ ಮತ್ಸರಾಸ್ತ್ರದ ಪ್ರಯೋಗ. ವಿವೇಕಾಸ್ತ್ರದೆದುರು ಆ ಮತ್ಸರದ ಆಟ ಅಡಗಿತು. ಈ ಬಾರಿ ಲೋಭದಸ್ತ್ರ ಶಾಂತನ ಮೇಲೆ ದುರುವಿಕಾರದಿಂದ ಎರಗಿತಂತೆ. ಶಾಂತನ ಸುಧರ್ಮಶರದ ಎದುರು ಲೋಭ ಮಾಯ! ಅಂತಿಮವಾಗಿ ಧೃತಿಗೆಟ್ಟ ದುಷ್ಟಮತಿಯ ಕೈಗೆ ಸಿಕ್ಕಿದ್ದು ಮಹಾಕ್ರೋಧಾಸ್ತ್ರ. ಅದೂ ಹೇಗೆ? ಸಿಂಧು ಮೇರೆದಪ್ಪುವಂತೆ ಬಂದದ್ದನ್ನು ಶಾಂತ ಅದನ್ನೂ ಹಾರಿಸುತ ನಿಧಾನದಿಂದ ಮೌನವೆಸೆದನು. ಈ ಅರಿಷಡ್ವ್ಯೆರಿಗಳನ್ನೆಲ್ಲ ಪ್ರತ್ಯಸ್ತ್ರದಿಂದ ಗೆದ್ದ ಮೇಲಿನ ಸ್ಥಿತಿಯನ್ನು ಹದಿಮೂರನೇಯ ಪದ್ಯ ಮಾರ್ಮಿಕವಾಗಿ ವರ್ಣಿಸಿದೆ. + +ಮೌನವದುವೆ ಹೃದಯದೊಳಗೆ |ವೈನದಿಂದ ಪೊಗಲು ನಿದ್ರೆ |ಯಾನುವಂತೆ ಮರೆದನೆಲ್ಲವೇನನೆಂಬೆನು ||13|| + +ದುಷ್ಟಮತಿಯ ಪ್ರವೃತ್ತಿಗಳು ಮುಗಿದ ಮೇಲೆ ಉಳಿದುದೇನು? ನಿವೃತ್ತಿ ಮಾರ್ಗತಾನೇ! ಅರಿವು ಒಳಗೆ ಮೂಡಿದಾಗ ಅದೇ ಬೆಳಗು. ಹಂಕರ (ವಿಕಾರ, ಅಹಂಕಾರ ಮತ್ತು ತಾಮಸ) ಇಳಿದ ಮೇಲೆ ಮತಿಗೆ ವಿವೇಕದುದಯ. ಆಗ ಪಶ್ಚಾತ್ತಾಪ ಪಡುವಾಗ ಕವಿ ವರ್ಣಿಸಿದ ಉಪಮೆ ಹೀಗಿದೆ. + +ನಾನು ನಾನೆಂದೆಂಬ ಹಂಕರ |ಭಾನುವರಿಯದ ಗೂಗೆಯಂದದಿ ಮಾಡಿತಕಟೆಂದ || + +ಇಲ್ಲಿನ ಉಪಮೆ ಬಾನುವರಿಯದ ಗೂಗೆಯಂದದಿ ಕನ್ನಡ ಸಾಹಿತ್ಯದಲ್ಲಿನ ಅಪರೂಪದ ಹೋಲಿಕೆ. ಇಂತಹ ಅನೇಕ ಹೋಲಿಕೆಗಳ ಮೂಲಕ ಬರೆದೈಲ್ಲಿನ ಕಾವ್ಯ ಸೌಂದರ್ಯ ಇಂದಿಗೂ ಕನ್ನಡ ಸಾಹಿತ್ಯದಲ್ಲಿ ಅನುಪಮವೇ. + +ಮನಸ್ಸಿನ ವಿಕಾರ ಕಳೆದ ಮೇಲೆ ಜ್ಞಾನ ಉದಯಿಸುವದು ಎನ್ನುವದನ್ನು ದುಷ್ಟಮತಿಗೆ ಜ್ಞಾನಮತಿಯೆಂಬ ಮಗಳು ಜನಿಸಿದಳು ಎಂದು ವರ್ಣಿಸಿದ್ದಾಳೆ. ಮುಂದೆ ಅವಳು ಬೆಳೆದು ಯುಕ್ತ ವಯಸ್ಸಿಗೆ ಬಂದಾಗ ಅವಳಿಗೆ ತಕ್ಕ ವರನಾರು ಎಂದು ಚಿಂತಿಸುವಾಗ ಅಲ್ಲಿಗೆ ನಾರದ ಬಂದು ಪರಮ ಪುರುಷ ಆಕೆಯ ವರ ಎಂದು ತಿಳಿಸುತ್ತಾನೆ. + +ಇಲ್ಲಿಂದ ಮುಂದಿನದು ಸಂಪೂರ್ಣ ಗಾನದೇಹಿ. ಒಂದೊಂದು ಪದ್ಯವೂ ಸಹ ಅಷ್ಟೇ ಸತ್ವದಿಂದ ಕೂಡಿದ ಜೀವ ಪರಮರ ಕಲ್ಯಾಣದ ವರ್ಣನೆಯೇ ಮುಂದಿನ ವಸ್ತು. ಅದರಲ್ಲಿಯೂ ಅಷ್ಟಪುರವನ್ನು ಶೃಂಗರಿಸುವದು ಹೀಗೆ. + +ಅರುವಿನಸಿಯಿಂದ ನೆಲಗಟ್ಟ ನೆರೆಸಿದರೂ |ದುರುವಿಕಾರದ ಕಲ್ಲ ದೂರ ಹೊರೆಸಿದರೂ || + +ಹೀಗೆ ಸಾಗುವ ದ್ವಿಪದಿಯಲ್ಲಿರುವ ಹನ್ನೊಂದು ಪದ್ಯಗಳು ಯಕ್ಷಗಾನದಲ್ಲಿ ಒಂದೇ ಅಲ್ಲ ಕನ್ನಡ ಸಾಹಿತ್ಯದಲ್ಲೂ ವಿಶೇಷ ಸ್ಥಾನ ಗಳಿಸುವಂತಹವು. ಒಂದು ಮದುವೆಯಲ್ಲಿನ ಮಂಟಪ ಕಟ್ಟುವದರಿಂದ ಹಿಡಿದು ಪರಮ ಪುರುಷನಿಗೆ ಎಣ್ಣೆ ಮಜ್ಜನ ಮಾಡಿಸುವದು, ಆತ ಕಾಶೀಯಾತ್ರೆಗೆ ಹೋಗುವಾಗ ಸನ್ಮತಿ ಆತನನ್ನು ತಡೆಯುವದೆಲ್ಲವನ್ನು ಅಪ್ಪಟ ವೇದಾಂತದ ಉಪಮೆಯನ್ನು ಕಾವ್ಯದ ಬಂಧಕ್ಕೆ ತಂದಿರುವದು ಅಂತಿಂಥ ಸಾಧನೆಯಲ್ಲ! ಇನ್ನು ಮದುವೆಗೆ ಬಂದ (ಅದು ಜ್ಞಾನಮತಿ ಮತ್ತು ಪರಮಪುರುಷನ ಮದುವೆ) ಜನರಾದರೂ ಕಡಿಮೆಯವರಲ್ಲ. + +|| ಆರಂಭದೊಳಧಿಕಾರದುಪಾದ್ಯರು ಬಂದರಾಗ ||ಎನ್ನುವಲ್ಲಿಂದ ತೊಡಗಿಸಂಧಿಸಿರುವ ತುರ್ಯನಂದಗಾಮಿಗಳೆಲ್ಲ ಬಂದರಾಗ ||8||ಎನ್ನುತ್ತಾಳೆ ಇಲ್ಲಿ ಕವಿ. + +ಇಡೀ ಮದುವೆಯ ವೈಭವವನ್ನು ವೇದಾಂತದ ಪಾಠ ಮಾಡಿಸುವ ಕಥೆಯ ಪ್ರಾರಂಭದಲ್ಲಿ ಬರುವ ಗುರು ಮತ್ತೆ ಪ್ರಕಟನಾಗುತ್ತಾನೆ. + +|| ಮೆರೆವ ಪರಮಾತುಮನು ತಾನೆಂ |ದರಿದು ಗುರುಮುಖದಿಂದ ಮೋಕ್ಷದ |ಸಿರಿಯ ಸೇರುವ ಪರಿಯಗುರು ಶಿಷ್ಯನಿಗೆ ಬೋಧಿಸಿದ || + +ವೇದಾಂತವನ್ನು ಒಣ ಎಂದು ಕರೆಯುತ್ತಾರೆ. ಆದರೆ ಈ ಒಣ ವೇದಾಂತದ ಕೊನರನ್ನು ಮಂಜಮ್ಮನಂತೆ ಕಾವ್ಯದಲ್ಲಿ ಚಿತ್ರಿಸಿದವರು ವಿರಳ. ಯಕ್ಷಗಾನದಲ್ಲಂತೂ ಈ ಬಗೆಯ ಪ್ರಸಂಗ ಮತ್ತೊಬ್ಬ ಕವಿಯಿಂದ ಬಂದೇ ಇಲ್ಲ. ಪುರಾಣ, ಮಲಯಾಳಿ ರಾಮಾಯಣ, ತೊರವೆ ರಾಮಾಯಣ, ಜೈಮಿನಿ ಸಪ್ತಶತಿ ಮುಂತಾದ ಕಾವ್ಯಗಳಿಂದ ರಂಗಕೃತಿಯಾಗಿ ಪ್ರಸಿದ್ಧಿ ಪಡೆದ ಆಟದ ಪ್ರಸಂಗದ ನಡುವೆ ಮಂಜಮ್ಮ ವಿನೂತನ ವಸ್ತುವನ್ನು ಸರಳವಾದ ಭಾಷೆಯಲ್ಲಿ ವಿವರಿಸಿದ್ದು ಅನನ್ಯ. ಇಂತಹ ಕವಿಗೆ ಇತಿಹಾಸದಲ್ಲಿ ಸೂಕ್ತ ಸ್ಥಾನ; ಪರಿಚಯ ಇಲ್ಲದೇ ಹೋಗಿದ್ದು ಸಾಹಿತ್ಯ ಮತ್ತು ಯಕ್ಷಗಾನಕ್ಕೆ ಕೊರತೆಯೇ ಸರಿ. + +ಮಂಜಮ್ಮ ಬರೆದ ಅನೇಕ ಹಾಡುಗಳೂ ಇಂದು ಸಾಗರದ ಕಡೆ ಹೆಂಗಸರ ಕಂಠದಲ್ಲಿ ಇದೆ. ಈಕೆ ಬರೆದ ಅನೇಕ ಕೃತಿಗಳನ್ನು ಮುಂದೆ ಅನೇಕ ಜನ ತಮ್ಮದಾಗಿಸಿಕೊಂಡು ತಾವೇ ಕವಿಗಳು ಎಂದು ಮೆರೆದಿದ್ದಾರೆ ಎಂದು ಆಕೆಯ ವಂಶಜರಾದ ದತ್ತಮೂರ್ತಿ ವಿಷಾದದಿಂದ ಹೇಳುತ್ತಾರೆ. ಈಕೆಯ “ಆತ್ಮ ಮತ್ತು ಯಮ” ಎನ್ನುವ ಕೃತಿ ಮತ್ತೆ ಬೇರೆ ಹೆಸರನ್ನು ಪಡೆದುಕೊಂಡು ಒಂದು ಮೇಳದ ಪ್ರಸಿದ್ಧ ಕಲಾಕಾಣಿಕೆಯಾಗಿ ಮೆರೆದಿದ್ದನ್ನು ಅವರು ಉದಾಹರಿಸಿದರು. + +ಈ ಯಕ್ಷಗಾನದ ಸಾಹಿತ್ಯವೆಲ್ಲ ಹೆಕ್ಕಿಕೊಂಡವರ ಸ್ವತ್ತು. ಹಾಗಾಗಿ ಆ ಕುರಿತು ಆಲೋಚಿಸುವದಕ್ಕಿಂತ ಮಂಜಮ್ಮ ಬರೆದ ಅಸಂಖ್ಯಾತ ಹಾಡುಗಳು, ಯಾರ ಯಾರ ಮನೆಯ ಕಪಾಟದಲ್ಲೋ ಅಡಗಿ ಕುಳಿತ ಆಕೆಯ ಕೃತಿಗಳು ಹೊರ ಬರಬೇಕಿದೆ. + +‘ಮನೋಬುದ್ಧಿಸಂವಾದ’ ಮತ್ತು ‘ಜೀವಪರಮರ ಕಲ್ಯಾಣ’ ಈ ಎರಡೂ ಯಕ್ಷಗಾನಗಳಲ್ಲಿ ವೇದಾಂತದ ಸಾರಗಳನ್ನು ಸುಂದರವಾಗಿ ಅಡಕಗೊಳಿಸಲಾಗಿದೆ. ಬಿಡಿಪದ್ಯಗಳಲ್ಲಿರುವುದೂ ಭಕ್ತಿಪರವಾದ ಕೀರ್ತನೆ ಭಜನೆಗಳೇ. ಹೀಗೆ ಕೃತಿಯ ಉದ್ದಕ್ಕೂ ವೇದಾಂತ ವಿಚಾರಗಳೇ ಪಲ್ಲವಿಸಿಕೊಂಡಿರುವದರಿಂದ ವೇದಾಂತ ತತ್ವಸಾರ ಎಂಬ ಶೀರ್ಷಿಕೆ ಸ್ವನಾಮಧನ್ಯತೆ ಪಡೆದಿದೆ ಎಂಬುದು ಗಮನಾರ್ಹ.ಈ ಕವಿಯತ್ರಿಯ ಕುರಿತು ವಿವರಗಳಿಗೆ ಈ ಲೇಖಕ ಪ್ರಕಟಿಸಿದ ವೇದಾಂತ ತತ್ವಸಾರ (ಪ್ರ. ಹವ್ಯಕ ಅಧ್ಯಯನ ಕೇಂದ್ರ, ಬೆಂಗಳೂರು) ಇದನ್ನು ನೋಡಬಹುದು. + + + +ಮಂಗಳೂರಿನ ಅಶೋಕವರ್ಧನರು ಅವರ ಮಗ ಅಭಯಸಿಂಹ ಇದರ E-Book ಆವ್ರತ್ತಿಯನ್ನು ಪ್ರಕಟಿಸಿದ್ದು ಈ ಕೆಳಗಿನ ಲಿಂಕ್ ನಲ್ಲಿ ಉಚಿತವಾಗಿ ಓದಬಹುದು. + +https://issuu.com/abhayasimhaಅಥವಾhttp://www.athreebook.com/p/blog-page_19.html + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_293.txt b/Kenda Sampige/article_293.txt new file mode 100644 index 0000000000000000000000000000000000000000..3bf6ff37e27ca0ec6a3714909742783d8eb01e0b --- /dev/null +++ b/Kenda Sampige/article_293.txt @@ -0,0 +1,49 @@ + + +ಕಲೆ ನಿಸರ್ಗದ ಅನುಕರಣೆ. ಪ್ಲೇಟೋನ ಮಾತು. ಅಂದರೆ ಬದುಕಿನ ಅನುಕರಣೆಯೇ. ಇದು ಅರ್ಧಸತ್ಯ. ಸಂಪೂರ್ಣವಾಗಿ ಒಪ್ಪಿದರೆ ಮನುಷ್ಯನ ಸೃಜನಶೀಲತೆ, ಸೋಪಜ್ಞತೆಗಳಿಗೆ ಪ್ರಾಮುಖ್ಯತೆಯೇ ಇಲ್ಲವೆ ಎನ್ನುವ ಪ್ರಶ್ನೆಗಳು ಏಳುತ್ತವೆ. ಇದು ತಾತ್ವಿಕ ಪ್ರಶ್ನೆ. ಕವಿ ಯಾ ಕಲಾವಿದ ಇರುವುದನ್ನೋ ಅಥವಾ ಇಲ್ಲದಿರುವುದನ್ನೋ ಸೃಷ್ಟಿಮಾಡುವುದು. ಅಥವಾ ಸೃಷ್ಟಿಮಾಡಿ ಇಡಲಾಗುತ್ತದೆಯೋ ಅಥವಾ ಅಭಿವ್ಯಕ್ತಿಗೊಂಡಿರುವುದು ಈಗಾಗಲೇ ಇದ್ದದ್ದೋ ಅಥವಾ ಇದ್ದಿರುವುದನ್ನೋ. ‘ಹೀಗೆ ಇತ್ತು’ ಎಂದು ಗೆರೆ ಕೊಯ್ದು ಒಂದು ಆಕಾರದಲ್ಲಿ ಇಡುವುದೋ. ಈ ಥರ ಯೋಚಿಸುವುದು ಸೊಗಸಿನ, ಕುತೂಹಲದ ಸಂಗತಿ. ‘ಬರವಣಿಗೆ ಎಂದರೇನು?’ ಎಂಬುದು ಅರ್ಥಕ್ಕೆ ಸುಲಭದಲ್ಲಿ ಸಿಗದಂತಹದ್ದಲ್ಲ. ಆದರೆ ಅದು ಬದುಕಿನಲ್ಲಿ ಏನೋ ಅವ್ಯಕ್ತವಾದುದನ್ನು ಹುಡುಕುತ್ತಿರುತ್ತದೆ, ಹುಡುಕುತ್ತ ಸೃಜನಶೀಲತೆಯ ಕುಲುಮೆಯಲ್ಲಿ ರೂಪಿಸಲು ಪ್ರಯತ್ನಿಸುತ್ತದೆ. ಹೀಗೆ ಬದುಕನ್ನು ಬಗೆಯುವ, ಅನುಭವಿಸಿದ್ದನ್ನು ಬಗೆಬಗೆಯಲ್ಲಿ ತಿರುಗಿ, ತಿರುಗಿ ಕಾಣಿಸುವುದು. ಸತ್ಯಕ್ಕೆ ಮುಖಾಮುಖಿಯಾಗುವ ಅವಕಾಶ ಮತ್ತು ಅದೃಷ್ಟ ಸಿಗಬಹುದಾ ಎಂದು. ಸಂವೇದನೆ ಸ್ವಂತದ್ದಾದರೂ ಅದು ಒಳಗೊಳ್ಳುವ ಭಾಷೆ ಲೋಕದಲ್ಲಿ ಅನಾದಿಕಾಲದಿಂದಲೂ ಕಾಲದ ನದಿಯಲ್ಲಿ ಜನರ ನುಡಿಯಲ್ಲಿ ಹರಿಯುತ್ತ ಬಂದಿರುವುದು. ಹಾಗೂ ಕಲೆಯಲ್ಲಿ ವ್ಯಕ್ತಗೊಳ್ಳುವುದು ಸ್ವಂತದ್ದೆಷ್ಟೋ ಸಮಾಜದ್ದೂ, ಪ್ರಪಂಚದ್ದೂ ಅಷ್ಟೇ ಇದೆ. + +ಹೀಗೆ ಸಮರ್ಥಿಸಿಕೊಂಡಲ್ಲಿ ಕವಿಯ ಸ್ವಂತದ್ದೆನ್ನುವ ಅಭಿವ್ಯಕ್ತಿ ಎಲ್ಲೋ ಒಂದು ಕಡೆ ಬೇರೆಯವರದ್ದೂ ಆಗಿರುತ್ತದೆ. ಆದರೆ ‘ಥರ’ ಬೇರೆಯಾಗಿರಬಹುದು. ಸ್ಪಂದನೆಗಳು ಒಮ್ಮೊಮ್ಮೆ ಏಕಕಾಲದಲ್ಲಿ ಒಂದೇ ತೆರನಾಗಿಯೂ ಇರಬಹುದು. ನಿಸರ್ಗಸಹಜವಾದ ಕೋಇನ್ಸಿಡೆನ್ಸು! ವೇಸ್ಟ್ ಲ್ಯಾಂಡಿನ ಭಿತ್ತಿ, ಧಾತು, ಅಡಿಗರಲ್ಲಿ ಮೂಡಿರುವುದು. ಅಂಗಳ ಬೇರೆ. ಆಂತರ್ಯದಲ್ಲಿ ಸಾಮ್ಯತೆ. ಪ್ರಭಾವ ಪ್ರಜ್ಞಾಪೂರ್ವಕವೆಷ್ಟೋ ಅಪ್ರಜ್ಞಾಪೂರ್ವಕವೂ ಅಷ್ಟೇ ಇದೆ. ಸಾಮ್ಯತೆ ಮತ್ತು ಭಿನ್ನತೆ ಜೊತೆಗೆ ಅನನ್ಯತೆ. ಹೇಗಿದ್ದರೂ ಸೃಜನಶೀಲ ಮನಸ್ಸು ಇರುತ್ತದಲ್ಲ, ಅದು ಕಾಲದ ಪರೀಕ್ಷೆಗೆ ಒಡ್ಡುವುದಕ್ಕೆ. ಉಪ್ಪಾಕಿ ಕಾಪಿಡಲು ಮುಂದಕ್ಕೆ, ಇನ್ನೂ ಮುಂದಕ್ಕೆ. ಅಲ್ಲದೆ, ಬದುಕಿನ, ಲೋಕದ ಸಂಬಂಧ ಒಂದಕ್ಕೊಂದು ಸಾವಯವವಾಗಿ ಹೆಣೆದುಕೊಂಡಿದೆಯಲ್ಲ… ಹಾಗಾಗಿ ‘ಪ್ರಭಾವ’, ‘ಪ್ರೇರಣೆ’ ಸಹಜವಾದುದು. ಇದಕ್ಕೆ ಅಳುಕೇತಕೆ. ಮತ್ತು ಅದನ್ನು ಜರಿಯುವುದಾದರೂ ಬೇಡ. ಹೇಗಿದ್ದರೂ ಪರಂಪರೆಯೆನ್ನುವುದು ಇದೆಯಲ್ಲ ಮುಳುಗಿಸಲು ಮತ್ತು ತೇಲಿಸಲು, ಹಾಗೇ ದಡಕ್ಕೆ ರಪ್ಪಂಥ ಬಿಸಾಕಲು. + +(ಎಸ್. ದಿವಾಕರ್) + +ಕಲೆಯ ಅಭಿವ್ಯಕ್ತಿಯಲ್ಲಿ ಮುಖಾಮುಖಿಯಾಗುವುದು ಸತ್ಯಕ್ಕೆ. ಈ ಎಲ್ಲ ಲಹರಿ, ಯೋಚನೆ, ಅನಿಸಿಕೆಗಳು ಬಂದದ್ದು ಮೋಹಕ ಕನ್ನಡದ ಕಥಾಲೋಕವನ್ನು ಜಗದ ಬೇರೆ ಬೇರೆ ಹೂವುಗಳನ್ನು ತಂದು ಇನ್ನಷ್ಟು ಸಿಂಗರಿಸಿರುವ ಎಸ್. ದಿವಾಕರರ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ ಓದುತ್ತಾ ಹೋದಹಾಗೆ. ‘ಸ್ವಂತ’ದ್ದು ಮತ್ತು ‘ಅನ್ಯ’ರದ್ದು ಎರಡನ್ನು ಮಿಕ್ಸ್ ಮಾಡಿ, ಹದಗೊಳಿಸಿ ಇಲ್ಲಿಯದನ್ನಾಗಿಸಿರುವುದ ಕಾಣಬಹುದು. + +ಕವಿತೆ ಮಿಡಿಯುವುದು ನೋವಿಗೆ. ಅದು ಅದರ ಫಿಲಾಸಪಿ, ಬದ್ಧತೆ. ಆದರೂ ತನ್ನ ಸೌಂದರ್ಯ ಪ್ರಜ್ಞೆಯನ್ನು ಕವಿತೆ ಅಂತರ್ಗಾಮಿನಿಯಾಗಿ ಇಟ್ಟುಕೊಂಡಿರುತ್ತದೆ. ಬ್ಯೂಟಿ ಮತ್ತು ಡಿಕೆಡೆನ್ಸ್ ಜೊತೆ ಜೊತೆಗೆ. ನೋವು ಕವಿತೆಯ ಪ್ರಾಣ. ಯು.ಜಿ.ಹೇಳುತ್ತಾರಲ್ಲ ‘ಯು ಆರ್ ನಾಟ್ ಅಟ್ ಪೀಸ್ ವಿಥ್ ಯುವರ್ಸೆಲ್ಫ್. ಹೌ ಕ್ಯಾನ್ ಯು ಕ್ರಿಯೇಟ್ ಪೀಸ್ ಇನ್ ದ ವರ್ಲ್ಡ್?’ ನೋವು ಎಲ್ಲಿದ್ದರೂ ನೋವೇ. ಟೈಟಾನಿಕ್ ನ ರೋಸ್, ಕಾಳಿದಾಸನ ಶಾಕುಂತಲೆ, ಇಬ್ಬರದೂ ಹತಾಶೆ, ಕಣ್ಣೀರು. ಅಲ್ಲಿಯ ಕವಿತೆಗಳಿಂದ ಸ್ಫೂರ್ತಿಗೊಂಡು ಇಲ್ಲಿ ರಚಿಸಿದ್ದರೂ ನೋವು ಇಲ್ಲಿಯದೇ. ನೋವಿಗೆ ನೋವು ಎಂಥಾ ಸಾಥ್! ಹೇಳುವ ದುಃಖ, ಕೇಳುವ ದುಃಖ ಹೋಮೋ ಸೇಪಿಯನ್ನರದೆ. ಕನ್ನಡ ಭಾಷೆಯ ಹಿಗ್ಗು. ನಿನ್ನನ್ನು ನಾನು ನನ್ನೊಳಗೆ ಎಳೆದುಕೊಂಡೆ ಎನ್ನುವ ಸಿರಿಯ ಹಿಗ್ಗು. ಒಳಗುಮಾಡಿಕೊಂಡಷ್ಟೂ ವಿಸ್ತಾರ. ಮೇಲಾಗಿ ‘ಸೋತ ಕಣ್ಣುಗಳನ್ನು ಮಿಟುಕಿಸುವ ಮಧ್ಯಾಹ್ನ’ದ ಕವಿ ಮೂಲತಃ ಜಗದ ಕತೆಗಳನ್ನು ಇಲ್ಲಿ ಹೇಳಿದ ಕತೆಗಾರ. + +ಕತೆ ಮಾತು; ಕವಿತೆ ಪಿಸುಮಾತು. ಇಲ್ಲಿನ ಕವಿತೆಗಳು ಹೇಳುತ್ತವೆ, ಜಗದ ಅವನತಿಗೆ ಮನುಷ್ಯನೇ ಮಾಡಿಕೊಂಡ ಅವಾಂತರಗಳು. ಯಾರು ಹೊಣೆ, ಅವನೇ ಎಂದು. ನೋಡಿ ಇಲ್ಲಿ ಒಂದು ಕವಿತೆಯ ಸಾಲುಗಳನ್ನು: ಪ್ರತಿಯೊಂದು ಯುದ್ಧ ನಡೆದ ಮೇಲೂ / ಶುದ್ಧೀಕರಿಸಬೇಕು ಯಾರಾದರೂ / ಚೆಲ್ಲಾಪಿಲ್ಲಿಯಾದದ್ದು ತನಗೆ ತಾನೇ ಓರಣಗೊಳ್ಳುವುದಿಲ್ಲ ಎಷ್ಟೆಂದರೂ/ ಯಾರಾದರೂ ಕಲ್ಲು ಮಣ್ಣು ರಾಶಿಯನ್ನು /ಸರಿಸಬೇಕು ರಸ್ತೆಯ ಬದಿಗೆ /ಹೆಣ ತುಂಬಿದ ಗಾಡಿಗಳು /ಮುಂದೆ ಸಾಗುವುದಕ್ಕೆ. ಯುದ್ಧ ಎಲ್ಲೆಯೇ ನಡೆದರೂ ಎಂದೇ ನಡೆದರೂ ನಾಗರೀಕತೆಗೆ ಕಳಂಕವೇ. ಮನುಷ್ಯತ್ವಕ್ಕೆ ಮನುಷ್ಯರೇ ಬಳಿಯುವ ಮಸಿ. ಅದು ಸಿರಿಯಾ ಆಗಿರಬಹುದು, ಪಕ್ಕದ ಪಾಕಿಸ್ತಾನ ಆಗಬಹದು, ನಮ್ಮ ತಲೆಯ ಮೇಲಿರುವ ಕಾಶ್ಮೀರವೂ ಆಗಬಹುದು. + +ಸರ್ಕಾರಿ ಲೆಕ್ಕದಲ್ಲಿ ಅರ್ಥಶಾಸ್ತ್ರದ ಅಭಿವೃದ್ಧಿಯ ಸೂಚ್ಯಂಕ ಮೇಲಕ್ಕೆ ‘ಏರಿಸಬಹುದು’, ಆದರೆ ನಮ್ಮೊಳಗೆ ಇರುವ ಕ್ರೌರ್ಯ, ಹಿಂಸಾ-ಪ್ರವೃತ್ತಿಗಳ ಯಾವ ಸೂಚ್ಯಂಕಗಳಲ್ಲಿ ಹೇಳುವುದು? ಎಲ್ಲಾ ಕಡೆಯೂ ಕವಿತೆಯು ಅವಿರತವಾಗಿ ಲೋಕವು ಮನುಷ್ಯತ್ವವನ್ನು ಮರೆಯದಿರುಲು ತಿವಿಯುತ್ತಲೇ ಬಂದಿದೆ. ಆದರೆ ಆಳುವ ದೊರೆಗಳ ಚರ್ಮ ದಪ್ಪವಾಗಿದೆಯಲ್ಲ. ಎದೆಯಿದ್ದರಷ್ಟೇ ಸಾಲದು, ಹೃದಯವೂ ಇರಬೇಕಲ್ಲ ಒಳಗೆ! ಹಾಗೆಂದು ಸುಮ್ಮನೆ ಬಿಡುವುದಕ್ಕೆ ಆಗುತ್ತದೆಯೇ? ದಿವಾಕರ ಅವರು ಹೇಳುತ್ತಾರೆ ‘ನೇರ ಹೃದಯಕ್ಕೆ ನುಗ್ಗುವ ಹಾಡು ಬರಿ’ ಎಂದು. ಹೌದಲ್ಲವೇ. ಅದನ್ನೇ ಮಾಡುತ್ತ ಬಂದಿರುವುದು. ಅಂದೂ , ಇಂದು ಮತ್ತು ಮುಂದೂ. ಭಿತ್ತಿ ಒಂದೇ, ಆಶಯ, ಭಾವ ಒಂದೇ. ರಚನೆ ಬೇರೆಯಿರಬಹುದು. ಹೂಮರ್, ಕುವೆಂಪು ಅಥವಾ ಈ ಸಂಕಲನದ ಮೂಲಕ ಕನ್ನಡಕ್ಕೆ ಬಂದಿರುವ ವಿಸ್ವಾವಾ ಶಿಂಬೋರ್ ಸ್ಕ ಇರಬಹುದು. ದನಿಗಳು ಕಾಲಾತೀತವಾಗಿ ನಿಲ್ಲುವುವು. + +‘ಜಿರಾಫೆ’ ಎನ್ನುವ ಒಂದು ಮೋಹಕ ಕವಿತೆ ಇದೆ ಇಲ್ಲಿ. ಅದು ಸ್ವಂತದ್ದು. ಹೇಳುವುದು ಏನನ್ನು? ಲೋಕದ ಅತಿರೇಕಗಳನ್ನು ಮತ್ತು ಬದುಕಿನ ಮೀಮಾಂಸೆಯನ್ನು. ಉತ್ಕೃಷ್ಟವಾದ ಸೃಜನಶೀಲವಾದ ಮನಸ್ಸೊಂದು ಬದುಕಿನ ಸತ್ಯಗಳಿಗೆ ಮುಖಾಮುಖಿಯಾಗುವುದು ಇಲ್ಲಿ. ಇಂತಹ ಒಂದು ಕವಿತೆ ಕನ್ನಡಕ್ಕೆ ಸಿಕ್ಕಿದೆ. ಇದು ನಮ್ಮ ಅದೃಷ್ಟ. ಹೆಗ್ಗಳಿಕೆ. ಇದರ ಸಾಲುಗಳು ಒಳಗೆ ಹೇಗೆ ಇಳಿಯುತ್ತವೆ ಕಾಣಿ: ದೇವರು ತಿದ್ದಿಕೊಳ್ಳುವುದಿಲ್ಲ ತಾನು ಮಾಡಿದ ತಪ್ಪು/ ಸಾಮಾನ್ಯವಾಗಿ ಒಮ್ಮೊಮ್ಮೆ ತಿದ್ದಿಕೊಂಡರೆ ಅಪರೂಪಕ್ಕೆ/ ಹೆಚ್ಚು ಕಮ್ಮಿ ಅವನ ಕೈಚಳಕಕ್ಕೆ/ ಜಿರಾಫೆಯಂಥ ಪ್ರಾಣಿಯೇ ಸಿಕ್ಕಿ ಜಖಂ ಆದೀತು ಆಕಾಶಕ್ಕೆ/.. ನೀರಡಿಕೆಯಾದಾಗ ದೂರದೂರಕ್ಕಿಟ್ಟು ಕೋಲು ಕೋಲು/ ಮುಂಗಾಲು/ಆಕಾಶ ಕುತ್ತಿಗೆಯ ಕೆಳಕ್ಕಿಳಿಸಿ ಬಾಯಿಡುತ್ತೆ ಹೊಳೆಯಲ್ಲಿ/ ನೆಲದಲ್ಲಿ ಕೂತ ಜಿರಾಫೆ ಮೇಲೆದ್ದು ನಿಲ್ಲುವುದಕ್ಕೆ / ಏನೆಲ್ಲ ಪ್ರಯಾಸ, ಪ್ರಾಣ ಸಂಕಟ/ ನಿಂತು ನೋಡುವ ಕಣ್ಣುಗಳಿಗೊಂದು ದೊಂಬರಾಟ. + +ಯಾಕೋ ದೊಂಬರಾಟ ಎನ್ನುವ ಪದ ಸರಿಯಿಲ್ಲ ಅನ್ನಿಸುತ್ತೆ. ಲೋಕದ ಸಂವೇದನಾ ರಹಿತ ಕಣ್ಣುಗಳನ್ನು ಒಂದು ಸಮುದಾಯಕ್ಕೆ ಹೋಲಿಕೆಮಾಡಿ(ಆರೋಪಿಸಿ) ಹೇಳುವುದು ಒಪ್ಪಿಕೊಳ್ಳಲು ಆಗುವುದಿಲ್ಲ. ಇರಲಿ, ಕವಿಯ ಉದ್ದೇಶ ಹಾಗಿಲ್ಲದಿರಬಹುದು. ಆದರೆ ಭಾಷೆ ಈ ತರಹದ ಧ್ವನಿಯನ್ನು ಕೊಡುತ್ತದೆಯಲ್ಲ. ಧರ್ಮನಿರಪೇಕ್ಷವಾಗಿ ಜಾತ್ಯಾತೀತವಾಗಿ ಯೋಚಿಸಿದರೂ ಇಲ್ಲಿ ಜಾತಿ ಒಂದು ರಿಯಾಲಿಟಿಯೇ ಈ ನಮ್ಮ ಭವ್ಯ ಪರಂಪರೆಯಿರುವ ದೇಶದಲ್ಲಿ! ಇರಲಿ. ಮುಂದಕ್ಕೆ ಹೋಗೋಣ.. + +ಮತ್ತೆ ಮುಂದಕ್ಕೆ ಹೋದರೆ ಮೊದಲೆಲ್ಲೋ ನೆನಪಿಸಿಕೊಳ್ಳಲಾಗಿದೆಯಲ್ಲಾ, ಯಾಸ್ಲಾ ಬಳಿಯ ಯಾತನಾ ಶಿಬಿರದಲ್ಲಿ ಕವಿತೆ ರಪ್ಪಂತೆ ಕಣ್ಣಿಗೆ ರಾಚುವುದು. ಪ್ರೀತಿ ಪಾತ್ರರರನ್ನು ಕಳೆದುಕೊಂಡವರ ಆಕ್ರಂದನ, ರೋಧನೆ, ಅಸಹಾಯಕತೆ ಮತ್ತು ಮನುಷ್ಯನ ಅಂತರಾಳದಲ್ಲಿ ಮನುಷ್ಯತ್ವದ ಪಕ್ಕವೇ ಹುದುಗಿರುವ ಅಮಾನುಷತೆ. ಇವೆರಡು: ಕ್ರೌರ್ಯ ಮತ್ತು ಮಾನವೀಯತೆ ಎಂತಹ ಪ್ರತಿಸ್ಪರ್ಧಿಗಳು! ಗೆಲ್ಲಬೇಕು ಮನುಷ್ಯತ್ವ. ಅದಕ್ಕೆ ಕವಿತೆ, ಕಲೆ, ತತ್ವ ಇರುವುದು. ಮನುಷ್ಯತ್ವವ ಗೆಲ್ಲಿಸುವ ಹೊಣೆಗಾರಿಕೆ ಇವುಗಳದು ಹೆಚ್ಚಾಗಿಯೇ ಇದೆ. ಇರಬೇಕು. ಇಲ್ಲದಿದ್ದರೆ ಕವಿತೆ ಕವಿತೆಯಲ್ಲ, ಕಲೆ ಕಲೆಯಲ್ಲ. + +ಈ ಕವಿತೆಯ ಕೆಲ ಸಾಲುಗಳು: ಚರಿತ್ರೆಯ ಅಸ್ಥಿಪಂಜರಗಳೆಲ್ಲ ಸಮ ಸಂಖ್ಯೆಗಳಲ್ಲಿ, ಆದರೂ ಹೃದಯಕ್ಕೆ ನೇರವಾಗಿ ನುಗ್ಗುವ ಹಾಡ ಬರೆಯಬೇಕು. ಸಿ.ಏ.ಏ ಮತ್ತು ಎನ್ ಆರ್ ಸಿ ಗಳಿಂದಾಗಿ ಹೀಗೆ ಆಗಬಹುದು ಎನ್ನುವ ಆತಂಕ ಇದೆ ಈಗಲೂ. ಆಗದಿರಲಿ ಹಾಗೆ. ಆದರೆ ಪ್ರಶ್ನೆ ಕೇಳುವುದಕ್ಕೇ ಬಿಡುತ್ತಿಲ್ಲವಲ್ಲ! ಮೂಲವಾಗಿ ಇಲ್ಲಿನ ಎಲ್ಲರೂ ಜಗತ್ತಿನ ನಾಗರೀಕರು. ಇದು ತುಂಬಾ ಆದರ್ಶದ ಮಾತು ಎಂದು ಮುಖ ಅತ್ತ ತಿರುಗಿಸುವರು ಕೆಲವರು. ಅವರೂ ಇರಬೇಕು. ಅಲ್ಲಿಯ ಗಿಯೋಮ್, ಅಪೊಲಿನೇರ್, ಮಾರ್ಜೊರಿ ಎವಾಸ್ಕೋ, ಮಯಕೋವ್ಸ್ಕಿ, ಕೋರ್ತಜಾರ್ ರ ಕವಿತೆಗಳು ಇಲ್ಲಿ ರೂಪಾಂತರಗೊಂಡಿರುವ ಬಗೆ ಅವು ಇಲ್ಲಿಯವೇ ಎಂಬಂತಿವೆ. + + + +ಅಪೊಲಿನೇರ್ ಒಂದು ಕವಿತೆ ‘ಝೋನ್’ ದಿವಾಕರರ ಕೈಯಲ್ಲಿ ‘ಮಂಡಲ’ವಾಗಿದೆ. ಅದು ಭೂಮಂಡಲದ ದುಗುಡವನ್ನೇ ಹೇಳುತ್ತಿದೆ. ‘ಕೆಲವರು ನಿರಾಶ್ರಿತರು ಇಲ್ಲೇ ಹಾಕುತ್ತಾರೆ ಠಿಕಾಣಿ ರೈಲ್ವೆ ಸ್ಟೇಷನ್ನಲ್ಲಿ/ ಮರಗಳ ಕೆಳಗೆ ಗಟಾರದ ಪಕ್ಕ ಜೋಪಡಿಗಳಲ್ಲ.. ಅದೋ ಆ ಕಪ್ಪು ಹುಡುಗಿ ಅವಳ ನಗು.. ತಲೆಬಾಗುವೆನು ನಮ್ರವಾಗಿ ಅವಳ ದುಃಖ ಅನೂಹ್ಯ’ ಮತ್ತೆ ಮುಂದಕ್ಕೆ ಕಣ್ಣಾಯಿಸಿದರೆ ಸಿಗುವುವು ಈ ಸಾಲುಗಳು: ಒಂದೊಂದು ಬೀದಿಯಲ್ಲೂ ಒಬ್ಬೊಬ್ಬ ಕಾಣಿಸುತ್ತಾನೆ/ ಎಲ್ಲರಲ್ಲೂ ನೋಡುವುದೇನು ದೇವರನ್ನು ತಾನೆ, ಇಲ್ಲಿ ನಾವು ಮಾತಾಡುವುದಕ್ಕೆ ಏನಿದೆ, ಕವಿತೆಯೇ ಕಾಣಿಸುತ್ತಿದೆ.. ಹೃದಯ, ಮನಸ್ಸುಗಳ ಮೀಟುತ್ತ. + +ಹೌದು ಕವಿಯಷ್ಟು ಲೋಕವನ್ನು ತಿವಿದವರುಂಟೆ ಜಗತ್ತಿನಲ್ಲಿ? ಆದರೆ ಅದಕ್ಕೆ ಲಜ್ಜೆಯೆಂಬುದಿಲ್ಲವಲ್ಲ. ಹಾಗಂತ ಸುಮ್ಮನಿರುವುದಕ್ಕಾಗುತ್ತಾ. ಕ್ಲೀಷೆಯಾದರೂ ಹಿಂಸೆಯನ್ನು, ಕ್ರೌರ್ಯವನ್ನು ಖಂಡಿಸಲೇಬೇಕು. ಕತ್ತಲೆಯಲ್ಲಿದ್ದಾಗ ಕತ್ತಲೆಯ ಬಗ್ಗೆಯೇ ಬರೆಯಬೇಕು. ಬದುಕನ್ನು, ಪ್ರಪಂಚವನ್ನು ಹದಗೆಡಿಸುತ್ತಿರುವುದು ಮನುಷ್ಯನ ವಿಕೃತಿಗಳೇ. ಬುದ್ಧ ಎರಡುವರೆ ಸಾವಿರ ವರ್ಷಗಳ ಹಿಂದೆಯೇ ಹೇಳಿದ್ದಾನೆ, ಆಸೆ ಮನುಷ್ಯನ ದುರಂತದ ಹಾದಿ ಎಂದು. ದಿವಾಕರ್ ಅವರು ಇಂತಹ ಅರ್ಥ ಹೊಮ್ಮುವ ಸಾಲುಗಳನ್ನು ಬರೆದಿದ್ದಾರೆ ಹೀಗೆ: ಹರಿದು ಹೋದೀತು ಆಕಾಶ ನೀಲಿಯ ತೊಗಲು ನಮ್ಮಾಸೆಗಳಿಗಾಗಿ ಹಿಗ್ಗುತ್ತ ಹಿಗ್ಗುತ್ತ . + +ಕ್ಲೀಷೆಯಲ್ಲದ, ಚರ್ವಿತಚರ್ವಣವಲ್ಲದ ಇಲ್ಲಿನ ಕವಿತೆಗಳ ವಿಸ್ತಾರ, ಭಿತ್ತಿ, ಆಧುನಿಕೋತ್ತರ ಕನ್ನಡ ಕಾವ್ಯ ಮೀಮಾಂಸೆಗೆ ಒಂದು ಕೊಡುಗೆ. ಅದರ ದಾರಿಯನ್ನು ಇನ್ನಷ್ಟು ಮುಂದಕ್ಕೆ ಸ್ಪಷ್ಟಮಾಡುವಲ್ಲಿ ಪ್ರೀತಿಯ ಪ್ರಯತ್ನ. ಅದು ಸಫಲವೂ ಕೂಡ ಇಲ್ಲಿ. ಓದುತ್ತ ಹೋದಲ್ಲಿ ಕವಿತೆಗಳ ಸಾಲುಗಳ, ಮನಗಾಣಬಹುದು. ಹೊಸ ಚೈತನ್ಯದಿಂದ ತುಂಬಿ ತುಳುಕುವವು. ಜೊತೆಗೆ ವ್ಯಕ್ತಗೊಂಡಿರುವ ವಸ್ತು ಕಡುವಾಸ್ತವದ ನಿಗಿನಿಗಿ ಕೆಂಡದಂತಿವೆ. ಆಧುನಿಕೋತ್ತರ ಕನ್ನಡ ಕಾವ್ಯವಂತೂ ಹೊಸ ರೂಪಕ, ಭಾಷೆ, ಸಂವೇದನೆಗಳಿಗೆ ಹಪಹಪಿಸುತ್ತಿದೆ. ಹುಡುಕುತ್ತಿದೆ. ಈ ಸಂಕಲನ ನಿಜಕ್ಕೂ ಅದನ್ನು ಪೂರೈಸುವುದು. + +ಆಧುನಿಕೋತ್ತರ ಕಾವ್ಯದ ಜೊತೆಗೆ ಸಾಗಲು ಇದೊಂದು ಸಂಗಾತಿ. ಇದಕ್ಕೆ ಜಗದ ಕಾವ್ಯಗಳ ಘಮಲೂ ಇದೆ. ಗುಣಕ್ಕೆ ಮತ್ಸರವಿಲ್ಲ ಎನ್ನುವ ಮಾತಿದೆ. ಈ ಸಂಕಲನ ಹೊಗಳಿಕೆಗೆ ಅರ್ಹ. ಪ್ರಶಂಸಿಸಿದರೆ ಮೂಲೆಯಲ್ಲಿ ಯಾರಾದರೂ ಮೂತಿ ಸೊಟ್ಟ ಮಾಡಬಹುದು. ಸಿನಿಕತನಕ್ಕೆ ಮದ್ದೆಲ್ಲಿ?ಮುಂದೊಂದು ಕವಿತೆಯಿದೆ ನೋಡಿ: ‘ಎಲ್ಲಿ ಹೋಯಿತು ರುಂಡ?’ ಇದು ಅತಿವಾಸ್ತವದಂತೆ ಇದ್ದು, ವಾಸ್ತವವನ್ನು, ನಮ್ಮ ನಡುವೆಯೇ ಜರುಗುವ ಕೋಲ್ಡ್ ಬ್ಲಡೆಡ್ ಕ್ರೌರ್ಯವನ್ನು, ಅದು ಎಸಗುವ ದುರಂತವನ್ನು ಹೇಳುತ್ತದೆ ಹೀಗೆ: ಮುಸ್ಸಂಜೆಯ ಕೆಂಪಿನಲ್ಲಿ ಬಿಕೋ ಎನ್ನುವ ಬೀದಿಯಲ್ಲಿ/ ನಿಂತಿದೆಯೊಂದು ಮುಂಡ/.. ಎಲ್ಲಿಹೋಯಿತು ಅದರ ರುಂಡ?/ ಗೋಳಿಡುತ್ತಿದೆ ಎಲ್ಲಿ?.. ಮುಂದಿನದು ಇನ್ನಷ್ಟು ಭೀಕರವಾಗಿದೆ. ಇಂತಹದ್ದು ಜನರಿಗೆ ಸಲೀಸಾಗಿದೆ. ಒಂದು ಸಂಗತಿಯಾಗಿದೆಯಷ್ಟೇ ಅನೇಕ ದೃಶ್ಯಮಾಧ್ಯಮದ ಚಾನಲ್ಲುಗಳ ಹಾವಳಿಯಿಂದಾಗಿ: ಯಾರವರು ಹೀಗೆ ರುಂಡಗಳನ್ನು/ಕೊಂಡೊಯ್ಯುವವರು?.. ರಾತ್ರಿಯ ಬರಮಾಡಿಕೊಳ್ಳುತ್ತಿರುವ ಮುಸ್ಸಂಜೆ ನಂಜೇರುತ್ತಿರುವ ಆಕಾಶ. + +ಆಕಾಶ ದಯಪಾಲಿಸಿರುವ ಪ್ರಪಂಚ ಇದು. ಅದು ಮನುಷ್ಯನ ಮತ್ತು ಎಲ್ಲ ಚರಾಚರಗಳ ತಾವು. ಅದೇ ನಂಜಾದರೆ, ಬದುಕುವುದು ಎಲ್ಲಿ? ಮನುಷ್ಯನೊಳಗಿನ ಆತ್ಮಘಾತುಕತನ ಕಾರಣ ಇದಕ್ಕೆಲ್ಲ. ತತ್ವ ಸಾವಿರಸಲ ಹೇಳಿದೆ ಎರಡು ದಿನದಲ್ಲೇ ಈ ಪಾಟಿ, ಇನ್ನ ಸಾವಿರ ವರ್ಷ ಬದುಕುವಂತಿದ್ದರೆ, ಕಲ್ಪಿಸಿ ಏನಾಗಬಹುದು. + +ಈ ಸಂಕಲನದ ಮೊದಲ ಕವಿತೆಯ ಮೊದಲ ಸಾಲು ಕವಿತೆಗಳೇ ಎದ್ದು ತಬ್ಬಿಕೊಳ್ಳುತ್ತವೆ ನಮ್ಮನ್ನು ಎಂಬಂತಿವೆ: ಪುಸ್ತಕ ಬೆಳೆಸಿಕೊಳ್ಳುತ್ತೆ ಕೈಯಿ/ ಪುಳಕಗೊಳ್ಳುತ್ತವೆ ಅಕ್ಷರಗಳು ವಾಕ್ಯಗಳು.. ಈ ಸಂಕಲನದ ಕವಿತೆಗಳು ಮನುಷ್ಯ ಬಗೆಯುವ ಕೇಡನ್ನು ಹೇಳಿದರೂ ಅಂತರಾಳದಲ್ಲಿ ಅವು ಸಾರುವುದು ಜೀವನ ಪ್ರೀತಿಯನ್ನು. ಎಲ್ಲ ಉತ್ಕೃಷ್ಟ ಕವಿತೆಗಳೂ ಅಷ್ಟೇ ಅಲ್ಲವೆ. ಅದನ್ನೇ ಹೇಳುವುದು. ಅದು ಅದರ ರೀತಿ ಮತ್ತು ನೀತಿ. ಮತ್ತು ತತ್ವ. ಇಲ್ಲೊಂದು ‘ಝೀಬ್ರಾ’ ಎನ್ನುವ ಕವಿತೆಯಿದೆ ಕೇಳಿ: ಆಫ್ರಿಕಾದಲ್ಲೂ ಅಪರೂಪವಂತೆ/ಝೀಬ್ರಾ ಈ ದಿನಗಳಲ್ಲಿ/ ಬಿಳಿಯ ಮೈಮೇಲೆ ಕಪ್ಪು ಪಟ್ಟೆಗಳೋ/ಕಪ್ಪು ಮೈಮೇಲೆ ಬಿಳಿಯ ಪಟ್ಟೆಗಳೋ/ ಇಲ್ಲಿದಿದ್ದರೆ/ಝೀಬ್ರಾವೊಂದು ಕತ್ತೆಯಷ್ಟೇ. ಕವಿ ಕತ್ತೆಯನ್ನು ‘ಕತ್ತೆ’ಯಷ್ಟೇ ಎನ್ನುವುದು ಯಾಕೋ ಸರಿಕಾಣಲಿಲ್ಲ. ಕತ್ತೆಯೆಂದರೆ ಏನು, ನಿಕೃಷ್ಟವಾ? ಶೇಕ್ಸ್ಪಿಯರ್ ನ ಮಿಡ್ ಸಮ್ಮರ್ ನೈಟ್ಸ್ ಡ್ರೀಮ್ ನಲ್ಲಿ ಅಪ್ಸರೆಯೊಬ್ಬಳು ಕತ್ತೆಯ ಮುಖದವನನ್ನು ದೈವ ಪುರುಷನೆಂಬಂತೆ ರಮಿಸುತ್ತಾಳೆ. ಶೇಕ್ಸ್ಪಿಯರ್ ಕಿಲಾಡಿ. ಯಾರನ್ನು ಎಲ್ಲಿ ಹೇಗೆ ಸರಿಯಾಗಿ ತುಳಿಯಬೇಕೋ ಅಲ್ಲಿ ಸರಿಯಾಗಿಯೇ ತುಳಿಯುತ್ತಾನೆ. + +ಕತ್ತೆಯನ್ನು ಒಂದು ಡಿವೈನ್ ಎಲಿಮೆಂಟಾಗಿ ಚಿತ್ರಿಸುತ್ತಾನೆ. ಗಲ್ಲಿ ಗಟಾರಗಳಲ್ಲಿ ಅಲೌಕಿಕದ ಎಳೆಗಳನ್ನು ತೋರಿಸುತ್ತಾನೆ. ಯಾಕೋ ಕುವೆಂಪು ಅವನನ್ನು ‘ಮರ್ತ್ಯದ ಕವಿ’ ಎಂದು ಜರಿಯುತ್ತಾನೆ. ಹೌದು ಅವನು ಜನರ ಕವಿ. ಮನುಷ್ಯನ ನೀಚತನ, ಸಣ್ಣತನ, ದುರಾಸೆಗಳೇ ಅವನ ದ್ರವ್ಯ. ಎಲ್ಲವೂ ಅವನಿಗೆ ಇಲ್ಲಿಯೇ ಸಂಭವಿಸಬೇಕು. ಲೌಕಿಕ, ಅಲೌಕಿಕಗಳ ಡಿಕ್ಕಿ ಹೊಡೆಸುತ್ತಾನೆ ಇದೇ ಮಣ್ಣಿನಲ್ಲಿ. ನಾವು ಓಡಾಡುವಲ್ಲಿ. ಈ ಕವಿತೆಯನ್ನು ಹಾದು ಮುಂದಕ್ಕೆ ಹೋದರೆ ಕಾಣುತ್ತದೆ ಅಲ್ಲಿ ಒಂದು ಅಸಮಾನ ಸಮಾಜ. ಓದಿದ ಮೇಲೆ ಅನ್ನಿಸುತ್ತದೆ ನಾಗರೀಕತೆ ನಿಜಕ್ಕೂ ನಾಗರೀಕವಾಗಿದೆಯಾ ಎಂದು. + +ಕವಿತೆಯ ಹೆಸರು: ಬಂಗಲೆಯೂ ಜೋಪಡಿಯೂ. ಇದರೊಳಗೆ ಇಣುಕಿದರೆ ಕಾಣುತ್ತದೆ ನಯನಾಜೂಕಿನ ನಾಗರೀಕ ಸಮಾಜ. ಅಲ್ಲಿ ಮರೆಯಾಗಿದೆ ಮಣ್ಣಿನವಾಸನೆ. ವ್ಯಂಗ್ಯದ ದಂಡವನ್ನು ಇಡೀ ಕವಿತೆಯ ಉದ್ದಕ್ಕೂ ಕವಿ ಸವರಿ ಆಧುನಿಕ ಬದುಕಿನ ಪ್ರೀತಿ ರಹಿತ ಬದುಕಿನ ಅನಾವರಣ ಮಾಡುತ್ತಾರೆ: ಬಂಗಲೆಯ ಸುತ್ತ ಬಂಗಲೆಯಷ್ಟಾದರೂ ಬೇಕು ಜಾಗ / ಗಾರ್ಡನ್ನಿಗೆ ಇರಬೇಕು ಕಾಲಿಗೆ ಮಕಮಲ್ಲಾಗುವ ಹುಲ್ಲು/ ಕೋಳಿ ತಿನ್ನಬಹುದೇ ಹೊರತು ಬೀಳಬಾರದು / ಕಣ್ಣಿಗೆ.. ಬಂಗಲೆಗೆ ಬೇಕು ಊರಿನೆಲ್ಲ ಬೆಳಕು/ ಹೀರಿಕಣ್ಣಿನ ಕಿಟಕಿ… + +ಪಕ್ಕದಲ್ಲಿ ಮತ್ತೊಂದು ಚಿತ್ರಣ: ಜೋಪಡಿಗಿಲ್ಲ ಕಿಟಕಿ; ಮುರುಕಲು ತಟ್ಟಿ/ ಬಾಗಿಲಿಗೆ. ಹುಲ್ಲುಮಾಡಿನಡಿ ಕುಕ್ಕುವ ಕತ್ತಲು/ ಅದು ಇರುತ್ತೆ ಜೋಪಡಿಮರದ ಕೆಳಗೆ/ ಸುತ್ತ ಸಾಕಷ್ಟು ಕಡ್ಡಿಕಸ ಕೋಳಿ ಕೆದಕುವುದಕ್ಕೆ/ ಕಂತ್ರಿ ನಾಯಿ ಫ್ರೀಯಾಗಿ ತಿರುಗಬಲ್ಲದು ಸುತ್ತೆಲ್ಲ ಕಡೆ. + + + +ಇಲ್ಲಿಯ ಕವಿತೆಗಳೆಲ್ಲ ಲೋಕದ ಸಂಗತಿಗಳೇ. ಅವು ಕವಿಯನ್ನು ಖಾಸಗೀ ನೋವಂತೆ ಬಾಧಿಸಿವೆ. ‘ಪೋಸ್ಟ್ ಟ್ರುಥ್ ಕಾಲಘಟ್ಟ’ದ ಆತಂತಕಗಳಾದ ಸತ್ಯವನ್ನು ಸುಳ್ಳಿನ ಪರದೆಯಲ್ಲಿ ಮುಚ್ಚಿ ಸುಳ್ಳನ್ನೇ ಪುನರಾವರ್ತಿಸುತ್ತ ಸುಳ್ಳನ್ನೇ ಸತ್ಯವೆಂದು ಬಿಂಬಿಸುತ್ತಿರುವ, ಧರ್ಮದ ಹೆಸರಿನಲ್ಲಿ ಮನುಷ್ಯರ ಭಾವನೆಗಳ ಜೊತೆ ಚೆಲ್ಲಾಟವಾಡುತ್ತ ಜನರ ನಿಗವನ್ನು ದಿಕ್ಕುತಪ್ಪಿಸುತ್ತಿರುವ, ಊಹಾಧಾರಿತ ಅಭಿಪ್ರಾಯಗಳನ್ನೇ ನೈಜ ಸಂಗತಿಗಳೆಂದು ಬಿಂಬಿಸುತ್ತಿರುವ, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹಿಂಸೆಯ ಮೂಲಕ ಹತ್ತಿಕ್ಕುತ್ತಿರುವ ರಾಜಕೀಯದ ಹಿಪಕ್ರಸಿಗಳು ಕೊಂಚಮಟ್ಟಿಗಾದರೂ ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಅಷ್ಟರಮಟ್ಟಿಗೆ ಇದು ಸದ್ಯದ ವಿಲಕ್ಷಣ ಕಾಲಕ್ಕೆ ಮಿಡಿಯುವ ಒಂದು ಗಮನಾರ್ಹ ಸಂಕಲನ ಇದು. ಇನ್ನೇನು ಇಷ್ಟೇ. ಓದಿ ನೀವೂ. ನನಗೆ ಕಂಡಿರದಿರುವುದು, ಕಾಣದಿರುವುದು ಕಾಣಬಹುದು ನಿಮಗೆ. ಹೇಳಿ ಆಮೇಲೆ. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_294.txt b/Kenda Sampige/article_294.txt new file mode 100644 index 0000000000000000000000000000000000000000..3b81de5c10d7ecfb914c572ec677dfc745151276 --- /dev/null +++ b/Kenda Sampige/article_294.txt @@ -0,0 +1,25 @@ + + +ಬಾಲ್ಕನಿಯಲ್ಲಿ ಪುಸ್ತಕ ಹಿಡಿದು ಕುಳಿತಿದ್ದವಳಿಗೆ ನಾಳೆ “ಬಿಸಿನೆಸ್ ಲಾ” ಪರೀಕ್ಷೆ. ಕಡು ಕಷ್ಟದ ವಿಷಯ. ಯಾವ ಪ್ರಶ್ನೆ ಬರಬಹುದೆಂದು ನಿರೀಕ್ಷಿಸುವಂತೆಯೂ ಇಲ್ಲ. ‘ಡಿಗ್ರಿ ಪಾಸು ಮಾಡಲು ಇದೊಂದು ಪತ್ರಿಕೆ ತೊಡರಾಗುತ್ತದಲ್ವಾ’ ಎಂದು ಚಿಂತಿಸುತ್ತಿದ್ದವಳಿಗೆ, ಈ ಮಧ್ಯ ರಾತ್ರಿ ಪರೀಕ್ಷೆಗೆ ಓದಬೇಕೆನಿಸುತ್ತಲೇ ಇಲ್ಲ. ಬೀಸಿ ಬರುವ ಗಾಳಿಯೊಂದಿಗೆ ಮಂಗಳೂರು ಸಮುದ್ರದ ಉಚ್ವಾಸ-ನಿಶ್ವಾಸಗಳು ಮೊರೆತಗಳು ಕೇಳಿಸಿಕೊಳ್ಳುವುದು ಬಿಟ್ಟರೆ ಪ್ರಶಾಂತ ಮೌನ. ಮನೆಯೊಂದರ ಮೂಲೆಯಲ್ಲಿ ಕಟ್ಟಿ ಹಾಕಿ ಎಸೆದಿದ್ದ ಕಸದ ಮೂಟೆಯಲ್ಲಿ ಕೂಳು ಹುಡುಕಲು ಬಂದ ಅಬ್ಬೇಪಾರಿ ಬೀದಿ ನಾಯಿಗಳ ಗುಂಪು. ಬಿಳಿ, ಕಂದು, ಕಪ್ಪು ಅವುಗಳ ಚರ್ಮಕ್ಕೆಷ್ಟು ಬಣ್ಣಗಳು…. ‘ಹಸಿವಿಗೆ ಬೇಧ, ಮಡಿ, ಮೈಲಿಗೆಯುಂಟೇ?’ ಎಂದನಿಸಿತವಳಿಗೆ. + +ರಸ್ತೆಯ ಕೊನೆಯಲ್ಲಿ ಆ ನಿಗೂಢ ತಿರುವು. “ಛೇ… ಬೇಡ ಬೇಡವೆಂದರೂ ಆ ಎರಡನೇ ತಿರುವಿಗೆ ಕಣ್ಣೇಕೆ ಹೊರಳುತ್ತದೆ. ಎಷ್ಟೊಂದು ಭಯಾನಕವದು. ಮೊನ್ನೆ ಮೊನ್ನೆ ಹಾಲು ತರುವವನು ಬೈಕ್ ಸ್ಕಿಡ್ಡಾಗಿ ಬಿದ್ದು ಬಿಟ್ಟವ ಅಲ್ಲೇ ನರಳುತ್ತಾ ಸತ್ತು ಹೋದನಂತೆ. ಬಿಳಿಯ ಹಾಲೆಲ್ಲ ಕೆಂಪು ಕೆಂಪು. ಅಬ್ಬಾ?!” ಮನಸ್ಸಿನಲ್ಲೇ ಮಾತಾಡಿಕೊಂಡವಳು ಹೆದರಿಕೊಂಡೇ ಆ ತಿರುವಿನೆಡೆಗೆ ಮತ್ತೆ ಕಣ್ಣು ನೆಟ್ಟಳು. + +ಅದು ವೆಲೆನ್ಸಿಯಾ ಎರಡನೇ ಅಡ್ಡ ರಸ್ತೆ. ಪಿಳಿ ಪಿಳಿ ಉರಿಯುವ ಬೀದಿ ದೀಪ. ತಿರುವು ಸರಿಯಾಗಿ ಕಾಣಿಸದಷ್ಟು ಅಡ್ಡಲಾದ ಆಲದ ಮರ. ನಿರ್ಜನವಾದ ಆ ರಸ್ತೆ ಏನೋ ಕುತೂಹಲ ಕೆರಳಿಸುತ್ತಿದೆ. ಎಷ್ಟೋ ಬಾರಿ ಅದೇ ತಿರುವು ನೋಡಿಕೊಂಡು ಕವಿತೆ ಬರೆಯಬೇಕು ಅನಿಸಿದ್ದಿದೆ. ಬಾಲ್ಕನಿ ಇಳಿದು ಹೋದರೆ ಹೇಗೆ?. “ಬೇಡ ಹಾಲಿನವನ ಪ್ರೇತ ಬಂದರೆ? ನಾನು ಹೀಗೆಲ್ಲಾ ನೋಡುವಾಗಲೂ ಅಲ್ಲಿಗೆ ಸೆಳೆಯುವುದೆಂದರೆ? ಏನೋ ಇರಬೇಕು. ಯಾವುದೋ ಪ್ರೇತಾತ್ಮವೇ ಕರೆಯುತ್ತಿರಬೇಕು”. + +“ಆದದ್ದಾಗಲಿ”. ಪುಸ್ತಕ ಕೆಳಗಿಟ್ಟು ಅವಳು ಮೆಲ್ಲಗೆ ಮೆಟ್ಟಿಲಿಳಿಯತೊಡಗಿದಳು. ಎದೆಯಲ್ಲಿ ಅವಿಲ್ ಮಿಲ್ಕ್ ಶರಬತ್ತು ಮಾಡಿದಂತೆ. ಆದರೂ ಆ ತಿರುವು ನೋಡಲೇ ಬೇಕೆನಿಸುವ ಜಿಜ್ಞಾಸೆ. “ಪರೀಕ್ಷೆಗಿನ್ನೂ ಓದಲೇ ಬೇಕಾ?” ಧ್ವಂದ್ವ ನಿಲುವುಗಳು. ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು. ಹತ್ತಿರವಾದಷ್ಟು ವಯರಗಳು ಸುಡುವ “ಟ್ರೀ.” ಸದ್ದು ಅಧಿಕವಾಯಿತು. ಬೆಳಕು ಸುತ್ತುವರಿದ ರಾಶಿ ಹಾತೆಗಳ ಆತ್ಮಹತ್ಯೆ ವಿಚಿತ್ರ ಬೆರಗು ಹುಟ್ಟಿಸುತ್ತಿತ್ತು. ಒಮ್ಮೆಲೆ ಸಣ್ಣ ಮಗು ಅಳುವಂತಹ ಸದ್ದು. ಅರೇ! ಈ ಅಪ ರಾತ್ರಿಯಲ್ಲಿ ಇಷ್ಟು ಸಣ್ಣ ಮಗು?!. ಹೇಗೆ ಸಾಧ್ಯ!?. ಅವಳು ಮೆಲ್ಲಗೆ ಬೆವರತೊಡಗಿದಳು. ನಿಂತಳು. + +ಒಂದೊಂದೇ ಹೆಜ್ಜೆ ಮುಂದಿಡತೊಡಗಿದಳು. ಮಗುವಿನ ಕಿರುಚಾಟ ವಿಚಿತ್ರವಾಗಿತ್ತು. ಅಷ್ಟರಲ್ಲೇ ಹಿಂದಿನಿಂದ ಯಾರೋ ಹಿಂಬಾಲಿಸಿದಂತಹ ಅನುಭವ! ಬೆಚ್ಚಿ ಒಮ್ಮೆಲೆ ಹಿಂತಿರುಗಿದಳು. ಅಬ್ಬಾ… ಖಾಲಿ ರಸ್ತೆ!. + +ಮೆಲ್ಲಗೆ ಮುಂದಡಿಯಿಟ್ಟಳು. ತಟ್ಟನೆ ಬೆವರ ಹನಿಯೊಂದು ಕುತ್ತಿಗೆಯಿಂದ ಜಾರಿತು. ಹೆದರಿಕೆ ಮತ್ತಷ್ಟು ಗಾಢವಾಯಿತು. ಮಗುವಿನ ಸದ್ದು ಕ್ಷೀಣವಾದಂತಾಯಿತು. ಅವಳೀಗ ನೇರ ಅರೆ ಬರೆ ಉರಿಯುವ ದೀಪದ ಕೆಳಗೆ ನಿಂತಿದ್ದಾಳೆ. ಮೌನವಾಗಿ ನಿಂತ ಆ ಆಲದ ಮರ. ಭಯ ಮಿಶ್ರಿತ ಕುತೂಹಲ. ಅವಳಿಗೀಗ ತಾನು ನೆನೆದ ತಿರುವಿನಲ್ಲೇ ನಿಂತ ಖುಷಿ. ಕಲ್ಲಾಗಿ ನಿಂತು ಆ ಕತ್ತಲು ಬೆಳಕಿನಾಟವನ್ನು ಮನದಣಿಯೆ ಆಸ್ವಾದಿಸುತ್ತಿದ್ದಾಳೆ. ಬೆಳಕಿಗೊಮ್ಮೆ ಹೊಳೆಯುತ್ತಾಳೆ, ಮತ್ತೆ ದೀಪ ನಂದಿದರೆ ಮಾಸುತ್ತಾಳೆ. ಅಷ್ಟರಲ್ಲೇ ಆ ನಿರ್ಜನ ದಾರಿಯಲ್ಲಿ ಶರ ವೇಗದಲ್ಲಿ ಬೈಕೊಂದು ಹಾದು ಬಂತು. ಬೆಳಕು, ಕತ್ತಲಿನಾಟದಲ್ಲಿ ಮಿಣುಗುತ್ತಿರುವ ಇವಳ ಕೆಂಪು ಚೂಡಿದಾರ್. + +ಬೈಕಿನಲ್ಲಿದ್ದವರಿಬ್ಬರು ಇವಳನ್ನು ನೋಡಿದ್ದಾರೆ. ಹೆದರಿದ್ದಾರೆ, ಯದ್ವಾ ತದ್ವಾ ಬೈಕು ಅನಿಯಂತ್ರಿತಗೊಂಡಂತಿದೆ. ಅವರ ಸಮತೋಲನ ತಪ್ಪಿದೆ. ವೇಗ ಹೆಚ್ಚಿದೆ. ರಪ್ಪೆಂದು ಹಿಂಬದಿ ಸವಾರನ ಕೈಯಲ್ಲಿದ್ದ ಆ ಪೇಪರ್ ಗಾಳಿಯಲ್ಲಿ ಹಾರಿತು. ಹಾಗೂ ಹೀಗೂ ಬೈಕ್ ಕಂಟ್ರೋಲ್ಗೆ ತಗೆದುಕೊಂಡು ಅವರು ತಿರುವಿನಲ್ಲಿ ವೇಗದಲ್ಲೇ ಮಾಯವಾದರು. ಅರೆಕ್ಷಣದಲ್ಲಿ ಮುಗಿದ ಈ ಪ್ರಕ್ರಿಯೆಯನ್ನು ನೋಡುತ್ತಿದ್ದಾಳೆ. + + + +ಅಷ್ಟರಲ್ಲೇ ಮತ್ತೆ ಆ ವಿಚಿತ್ರ ಮಗು ಅಳುವ ಸದ್ದು ಇನ್ನಷ್ಟು ಸ್ಪಷ್ಟವಾಗಿ ಅಲ್ಲೇ ತಿರುವಿನ ಮೋರಿ ಬಳಿಯಿಂದ ಕೇಳಿಸುತ್ತಿದೆ. ಧೈರ್ಯ ತಂದುಕೊಂಡವಳು ಮೆಲ್ಲಗೆ ಮೋರಿ ಕಡೆಗೆ ಬಂದಳು. ನೋಡಿದರೆ ಕತ್ತಲಲ್ಲಿ ಆ ಕಣ್ಣುಗಳೆರಡು ಮಿನುಗುತ್ತಿದೆ. ಬಹುಶಃ ಯಾವುದೋ ಅನಾಥ ಬೆಕ್ಕೊಂದು ಸ್ವರ ಕೆಟ್ಟು ಅಳುತ್ತಿದೆ. ಈಗ ಸ್ವಲ್ಪ ನಿರಾಳ. ಬೀಸಿ ಬರುವ ತಂಗಾಳಿಯಲ್ಲಿ ಹೊಸ ಉನ್ಮಾದವಿದೆ. ಈ ತಿರುವಿನ ಭಯವು ಮೆಲ್ಲನೆ ಸರಿಯುತ್ತಿದೆ. ಹೊತ್ತಿ, ನಂದುವ ಆ ಬೀದಿ ದೀಪದ ವಿಚಿತ್ರ ಸದ್ದು ಪರಿಚಿತ ಅನಿಸುತ್ತಿದೆ. ದೂರದಲ್ಲೇ ಬೈಕಿನವನ ಕೈಯಿಂದ ಬಿದ್ದಿದ್ದ ಆ ಹಾಳೆ ಜೋರು ಗಾಳಿಯ ಜೊತೆ ಹಾರಿ ಇವಳತ್ತಲೇ ಬರುತ್ತಿದೆ. ಅವಳ ಕಾಲ ಕೆಳಗೆ ಬಂದು ನಿಂತಾಗ ಮೆಲ್ಲಗೆ ಅವಳೆತ್ತಿಕೊಂಡಿದ್ದಾಳೆ. ಅಬ್ಬಾ! “ಬ್ಯುಸಿನೆಸ್ ಲಾ- ೬ ಸೆಮಿಸ್ಟರ್” ಎಂದು ಬರೆದ ನಾಳಿನ ಪರೀಕ್ಷೆ ಪತ್ರಿಕೆ ಇಂದೇ ಕೈಯಲ್ಲಿದೆ. + + + +ಒಮ್ಮೆಲೆ ಪರೀಕ್ಷಾ ಕೊಠಡಿ ಆವರಿಸಿದಂತಾಯಿತವಳಿಗೆ. ಕೊಠಡಿಯ ಬಲ್ಬ್ ಕೂಡಾ ತಿರುವಿನ ದಾರಿದೀಪದಂತೆ ಉರಿಯುತ್ತಿದೆ ಮತ್ತೆ ನಂದುತ್ತಿದೆ. “ಕೆಲವೊಂದು ಉತ್ತರಗಳನ್ನು ಹುಡುಕುತ್ತಾ ಹೊರಟರೆ, ಪ್ರಶ್ನೆಗಳು ಸಿಗಬಹುದು” ಅಂತ ಅನಿಸಿತವಳಿಗೆ. + +ಊರು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಜೋಗಿಬೆಟ್ಟು. . “ಮೊಗ್ಗು” ಇವರ ಪ್ರಕಟಿತ ಕವನ ಸಂಕಲನ. ಪರಿಸರ, ವಿಜ್ಞಾನ, ಪ್ರಾಣಿ ಪ್ರಪಂಚದ ಬಗ್ಗೆ ಕಾಳಜಿ ಮತ್ತು ಆಸಕ್ತಿ. ಬೆಂಗಳೂರಲ್ಲಿ ಉದ್ಯೋಗ. ಇತ್ತೀಚೆಗಷ್ಟೇ “ಇಶ್ಕಿನ ಒರತೆಗಳು” ಎಂಬ ಎರಡನೇ ಕವನಸಂಕಲನ ಲೋಕಾರ್ಪಣೆಗೊಂಡಿದೆ.. \ No newline at end of file diff --git a/Kenda Sampige/article_295.txt b/Kenda Sampige/article_295.txt new file mode 100644 index 0000000000000000000000000000000000000000..ece7d678d20bde9c32fbd084e8a18722ce5943ed --- /dev/null +++ b/Kenda Sampige/article_295.txt @@ -0,0 +1,33 @@ + + +ಸೋಮು ರೆಡ್ಡಿಯವರು ವೃತ್ತಿಯಿಂದ ಪೋಲಿಸ್ ಕೆಲಸದಲ್ಲಿದ್ದಾರೆ. ಅವರ ಹವ್ಯಾಸಗಳು ಹಲವು. ಕತೆ, ಕಾದಂಬರಿ, ನಾಟಕ ಮುಂತಾದ ಪ್ರಕಾರಗಳಲ್ಲಿ ಸಾಹಿತ್ಯ ರಚಿಸಿದ್ದಾರೆ. ಸಾಂಸ್ಕೃತಿಕವಾಗಿ ಭಿನ್ನ ಭಿನ್ನ ವೇದಿಕೆಗಳಲ್ಲಿ ಜನೋಪಯೋಗಿ ಕೆಲಸ ಮಾಡಿಕೊಂಡಿದ್ದಾರೆ. ಉತ್ಸಾಹಿ ಯುವಕರು. + +‘ಕಂದಿಲು’ ಸೋಮು ರೆಡ್ಡಿಯವರ ಕಾದಂಬರಿ ಗಮನಾರ್ಹವಾಗಿದೆ. ಜಾಗತೀಕರಣದ ಸಂದರ್ಭದಲ್ಲಿರುವ ಸಮಾಜ ; ತನ್ನ ಚಹರೆಯನ್ನು ಬದಲಿಸಿಕೊಳ್ಳುತ್ತಿದೆ. ಕಳೆದ ಮೂರು ದಶಕಗಳಿಂದಂತೂ ಸಮಾಜ ವೇಗವಾಗಿ ಬೆಳೆಯುತ್ತಿದೆ. ಹೊಸ ರೂಪವನ್ನು ಹೊತ್ತು. + +(ಸೋಮು ರೆಡ್ಡಿ ) + +ಈ ತಲೆಮಾರಿನವರಿಗೆ ಕನ್ನಡತನ; ಕನ್ನಡತನದ ದೇಶಿಯತೆಯ ಕಲ್ಪನೆ ಇಲ್ಲದಂತಾಗಿದೆ. ಯಾವಾಗಲೂ ಸಂಸ್ಕೃತಿ ರಚನೆಗೊಳ್ಳುತ್ತಿರುತ್ತದೆಯೇ ಹೊರತು, ಸಿದ್ದರೂಪದಲ್ಲಿ ಇರುವುದಿಲ್ಲ. ಈ ಕಾದಂಬರಿಯಲ್ಲಿ ಕಂದೀಲು ಹಿಡಿಯುವ ಸ್ವರೂಪವನ್ನು ಕಟ್ಟಿಕೊಟ್ಟಿದೆ. ವಾಡೆ, ದೇಸಾಯಿ, ದೇಶಗತಿ ಆಳ್ವಿಕೆ ಇರುವ ಕಡೆ ಈ ಕಂದೀಲು ಹಿಡಿಯುವ ವೃತ್ತಿ ಇತ್ತೆಂದು ಕಾಣುತ್ತದೆ. ಉತ್ತರ ಕರ್ನಾಟಕದ ಎಲ್ಲ ಕಡೆ ಇರಲಿಲ್ಲವೆಂದು ತೋರುತ್ತದೆ. ಕಂದೀಲು ಬೆಳಕು ಹಿಡಿಯುವ ವೃತ್ತಿ ಇತ್ತೆಂದು ಕಂದೀಲು ಕಾದಂಬರಿಯಿಂದ ಮಾತ್ರ ತಿಳಿಯುತ್ತದೆ. ಬಾಗಲಕೋಟೆ, ಬಿಜಾಪೂರ, ಬೆಳಗಾವಿ ಈ ಜಿಲ್ಲೆಗಳಿಂದ ಸಾಹಿತ್ಯ ಪ್ರಕಟವಾಗಿದೆ. ಹಲವು ನೆಲೆಯ ಲೇಖಕರು ಇಲ್ಲಿಂದು ಬರೆದು ಕನ್ನಡ ಸಾಹಿತ್ಯಕ್ಕೆ ಒಳ್ಳೆಯ ಕೊಡುಗೆ ನೀಡಿದ್ದಾರೆ. + +‘ನಿಸರ್ಗ’, ‘ದೀಪ ಹೊತ್ತಿತು’, ‘ಗ್ರಾಮಾಯಣ’, ‘ತೇರು’, ‘ಕೃಷ್ಣೆ ಹರಿದಳು’ ‘ಶಿಖರ ಸೂರ್ಯ’ ‘ತಾಯಿ ಸಾಹೇಬ’ ‘ಹಳ್ಳ ಬಂತು ಹಳ್ಳ’ ಮುಂತಾದ ಕಾದಂಬರಿಗಳು ಈ ಪ್ರಾಂತ್ಯದಿಂದ ಬಂದಿವೆ. ಬಸವರಾಜ ಕಟ್ಟಿಮನಿ, ಕೃಷ್ಣಮೂರ್ತಿ ಪುರಾಣಿಕ, ಆನಂದ ಕಂದ ಮುಂತಾದ ಹಿರಿಯ ಲೇಖಕರು ಇಲ್ಲಿದ್ದವರೇ. ಚರಿತ್ರೆ, ಭಾಷೆ, ಸಂಸ್ಕೃತಿ, ಆಚಾರ ವಿಚಾರಗಳು ವಿಶಿಷ್ಟವಾಗಿವೆ. ಜಾಗತೀಕರಣ ಸಂದರ್ಭದಲ್ಲಿ ಈ ಅನನ್ಯತೆ ಉಳಿದುಕೊಂಡಿದೆ. ಇದನ್ನು ರಚಿಸಿಕೊಡಲು ಕವಿ, ಕಲಾವಿದ, ಸಾಹಿತಿ ಹುಟ್ಟಬೇಕು. ಹಿಂದಿನ ಬಾಳ್ವೆಯನ್ನು ಕಟ್ಟಿಕೊಡುವ ಸಾಮಾರ್ಥ್ಯ ಕತೆ ಕಾದಂಬರಿ ಪ್ರಕಾರಕ್ಕಿದೆ. ಈ ಪ್ರಕಾರದಲ್ಲಿ ಬರೆಯುವ ಯುವ ಸಾಹಿತಿಗಳು ರೂಪಗೊಂಡರು. ಹಳೆಯದೆಲ್ಲಾ ಮುನ್ನೆಲೆಗೆ ಬಂದು ಹೊಸ ರೂಪದಲ್ಲಿ ನಿಲ್ಲುತ್ತದೆ. ಕಂದೀಲು ಕಾದಂಬರಿ ಈ ದೃಷ್ಠಿಯಿಂದ ವಿಶೇಷವಾದದ್ದು ಎಂದು ಹೇಳಬಹುದು. + +ಕಂದೀಲು ಕಾದಂಬರಿಯಲ್ಲಿ ಕುಸುಮಿ-ರಂಗಪ್ಪ, ಮಗ ಪ್ರಮೋದ ಇವರ ಕತೆ, ಅನಂತ ದೇಸಾಯಿಯ ವಾಡೆ ಕತೆ, ಊರವರ ಕತೆ ಈ ಮೂರು ಕತೆಗಳು ಅಂತರ್ ಸಂಬಂಧ ಹೊಂದಿವೆ. ಪ್ರಧಾನವಾಗಿ ಕುಸುಮಿಯ ಕತೆ ಎದ್ದು ಕಾಣುತ್ತದೆ. ವಾಡೆ ಪರಿಸರದಲ್ಲಿ ರಾತ್ರಿ ಕಂದೀಲು ಹಿಡಿದು ಬೆಳಕು ಮೂಡಿಸುತ್ತ ತಿರುಗಾಡುವ ರಂಗಪ್ಪನ ವೃತ್ತಿಯೇ ಕಂದೀಲು ಹಿಡಿಯುವ ಕುಲಕಸುಬು ದಲಿತರು ಈ ಕಸುಬನ್ನು ಹೊಂದಿದ್ದರೆಂಬುದು ವಿಶೇಷ. ವಾಡೆಗೆ ಬೆಳಕನ್ನು ರಾತ್ರಿಯಲ್ಲಿ ನೀಡುವುದರ ಜೊತೆಗೆ ಊರಲ್ಲಿ ಕಾರಣಕತೆಗಳಿಗೂ ಬೆಳಕನ್ನು ಹಿಡಿಯುವ ಪದ್ಧತಿಯೂ ಇತ್ತು. + + + +ಕಾದಂಬರಿ ಶುರುವಾಗುವುದೇ ಒಂದು ಕನಸ್ಸಿನ ಮೂಲಕ. ಕನಸ್ಸು ಕುಸುಮಿಗೆ ಬೀಳುತ್ತದೆ. ಭಯಾನಕ ಕನಸ್ಸು ಕಂಡ ಕುಸುಮಿ ಎಚ್ಚರಗೊಳ್ಳುತ್ತಾಳೆ. ಅದು ಸಾವಿನ ಬಳಿ ಹೋಗುವಂಥ ಕನಸ್ಸು. ಅದು ಕಾದಂಬರಿಯಲ್ಲಿ ಸಾಂಕೇತಿಕವಾಗಿ ನಿಲ್ಲುತ್ತದೆ. ‘ಕೆರಕಲಮಟ್ಟಿಯ ಅನಂತ ದೇಸಾಯಿಯಿಂದ ದಕ್ಕಬೇಕಾದ ಹಳ್ಳದ ಸೀಮೆಯ ಹೊಲ ಸಿಗುತ್ತದೋ ಇಲ್ಲವೋ? ಕಂದೀಲು ಹಿಡಿಯುವ ಕುಲಕಸಬು ಮುಂದುವರೆಯುವುದೋ ಇಲ್ಲವೋ? ಎದೆಯೆತ್ತರಕ್ಕೆ ಬೆಳೆದು ನಿಂತ ಮಗ ಪ್ರಮೋದನ ಬದುಕು ಭವಿಷ್ಯದಲ್ಲಾದರೂ ಉಜ್ವಲವಾಗತ್ತದೆಯೋ ಇಲ್ಲವೋ? ಆಗಾಗ ಹಾಸಿಗೆ ಹಿಡಿಯುವಂತೆ ಮಾಡುವ ರೋಗ ವಾಸಿಯಾಗುತ್ತದೆಯೋ ಇಲ್ಲವೋ?’ ಕುಸುಮಿಗೆ ಈ ಪ್ರಶ್ನೆಗಳು ಭಾದಿಸುತ್ತವೆ. ತನ್ನ ಅಂತಿಮ ಕಾಲದವರೆಗೆ ಕುಸುಮಿ ಏಕಾಂಗಿಯಾಗಿ ಹೋರಾಡುತ್ತಾ ಕನಸ್ಸನ್ನು ನಿಜಗೊಳಿಸಲು; ಸಾಕಾರ ಮಾಡಿಕೊಳ್ಳಲು ಜೀವದ ಹಂಗು ತೊರೆದು ನಿಲ್ಲುತ್ತಾಳೆ. + +ಕುಸುಮಿಗೆ ಬೀಳುವ ಕನಸು ಎಚ್ಚೆತ್ತ ಮೇಲೆ ಕೇಳಿಕೊಳ್ಳುವ ಪ್ರಶ್ನೆಗಳಿಂದ ಕಾದಂಬರಿ ಸಾಗುವ ದಿಕ್ಕನ್ನು ತೋರಿಸುತ್ತದೆ. ಗಂಡ ರಂಗಪ್ಪನಿಗೆ ವಯಸ್ಸಾಗದಿದ್ದರೂ ಮದುವೆಯಾದ ಹೆಂಡತಿ ಕುಸುಮಿಗಿಂತ ಹೆಚ್ಚು ವಯಸ್ಸಾದವನು. ಈ ಕೊರಗು ಕುಸುಮಿಗಿದ್ದರೂ ಸಂಸಾರಕ್ಕೆ ತೊಂದರೆಯಾಗಲಿಲ್ಲ. ಗಂಡನಿಗಿಂತ ತನ್ನ ವಯಸ್ಸು ಚಿಕ್ಕದು ಎಂದು ಅನ್ನಿಸುವುದು ತಮಗೆ ಮಕ್ಕಳಾಗದೇ ಇರುವುದು ಕಂಡುಬಂದಾಗ. ಕುಲಕಸುಬುನಿಂದ ಬರುವ ಆದಾಯ ಅವರ ಜೀವನಕ್ಕೆ ಸರಿ ಹೋಗುತ್ತಿತ್ತು. ಸಂಸಾರ ಸರಿಯಾಗಿ ನಡೆದಿದ್ದಾಗಲೇ ವಾಡೆಯಲ್ಲಿ ಘಟಿಸುವ ಸಂದರ್ಭಗಳು ರಂಗಪ್ಪನನ್ನು ಸುತ್ತಿಕೊಳ್ಳುತ್ತವೆ. ವಾಡೆಯ ಮಂದಿಗೆ ವಿಧಿ ಕಾಡಾಟವೆಂದು ತಿಳಿದು ಅದನ್ನು ಹೋಗಲಾಡಿಸಲು ಕೈಗೊಳ್ಳುವ ಮಾಟ ಮಂತ್ರಗಳು ರಂಗಪ್ಪನ ಕೊರಳಿಗೆ ಉರುಲಾಗುತ್ತದೆ. ವಾಡೆಯ ಕಾಡಾಟಗಳನ್ನು ಓಡಿಸಲು ಬರುವ ‘ಹೂಲಗೇರಿಯ ಅಜ್ಜ’ನ ಮೇಲೆ ರಂಗಪ್ಪನಿಗೆ ನಂಬಿಕೆ ಇರಲಿಲ್ಲ. ಆದರೂ ಹೂಲಗೇರಿ ಅಜ್ಜನನ್ನು ಕರೆಯಿಸಿ ಪೂಜೆ ಮಾಡಿಸಿಯೇ ಬಿಡುತ್ತಾರೆ. ಅದರ ಅಂಗವಾಗಿ ರಂಗಪ್ಪನಿಗೆ ಒಂದು ಬಿಳಿ ಎಕ್ಕಿಗಿಡದ ಗೂಟವನ್ನು ಮಂತ್ರಿಸಿಕೊಟ್ಟು ಅದನ್ನು ಸುಡುಗಾಡಿನಲ್ಲಿ ರಾತ್ರಿ ಹೊತ್ತು ಜಡಿದು ಬರಲು ಕಳಿಸುತ್ತಾರೆ. ರಂಗಪ್ಪ ಹೋದವನು ಮರಳಿ ಬರುವುದಿಲ್ಲ. ರಂಗಪ್ಪನ ಹೆಣ ಮಾತ್ರ ಸಿಗುತ್ತದೆ. ಇಲ್ಲಿಂದ ಕುಸುಮಿ ಒಂಟಿಯಾಗುತ್ತಾಳೆ ಮಕ್ಕಳೂ ಆಗಿರುವುದಿಲ್ಲ. ಆದರೂ ಕುಸುಮಿಗೆ ವಾಡೆಯಿಂದ ಉಪಜೀವನಕ್ಕೆ ಸಿಗುತ್ತದೆ. ಆದರೆ ಅದು ಬಹಳ ದಿನ ಮುಂದುವರೆಯುವುದಿಲ್ಲ. + +(ಡಾ.ಅಮರೇಶ ನುಗಡೋಣಿ) + +ಕಾದಂಬರಿಯಲ್ಲಿ ಊರು, ಜನ, ಸಮಸ್ಯೆಗಳು, ತಿಕ್ಕಾಟಗಳು ನಡೆದಾಗ ಜೀವಂತ ಬರುತ್ತದೆ. ಕುಸುಮಿ ಕಂದೀಲು ಹಿಡಿದು ರಾತ್ರಿ ಹೋಗುವ ದೃಶ್ಯಗಳು, ಆಕೆಯನ್ನು ಉಪಯೋಗಿಸುವ ಗಟ್ಟಿಮಂದಿ, ಕುಸುಮಿ ಅಸಹಾಯಕಳಾದರೂ ಬದುಕುವ ಛಲ ಸಾರ್ಥಕವಾಗಿ ಮೂಡಿನಿಂತಿದೆ. ಕುಸುಮಿ ಊರುಬಿಟ್ಟು, ವೇಶ್ಯಾಜೀವನ ಸಾಗಿಸುವ ಭಾಗಗಳು ಸಾಮಾನ್ಯ ಎನ್ನಿಸುತ್ತವೆ. ಮತ್ತೆ ಕುಸುಮಿ ಊರಿಗೆ ಬಂದು ನಿಲ್ಲುತ್ತಾಳಲ್ಲ, ಅಲ್ಲಿಂದ ಕಾದಂಬರಿಗೆ ಹೊಸತನ ಬರುತ್ತದೆ. ಕಾದಂಬರಿಯಲ್ಲಿ ವಾಡೆಯ ಅನಂತ ದೇಸಾಯಿ, ಗೋಧಾವರಿ ಮತ್ತಿತರ ಬಾಳ್ವೆ ಒಳ ಕಷ್ಟಗಳು ವಾಸ್ತವಕ್ಕೆ ಹತ್ತಿರವಾಗಿವೆ. ವಾಡೆಯ ಜೀವನವನ್ನು ಈ ಕಾದಂಬರಿ ಹತ್ತಿರದಿಂದ ಚಿತ್ರಿಸಿದೆ. + +ಕುಸುಮಿ ಮಗನೊಂದಿಗೆ ಊರಿಗೆ ಬಂದು ತಳವೂರುವುದೇ ತನ್ನ ನೆಲೆಯನ್ನು ಕಂಡುಕೊಳ್ಳಲು. ಕುಸುಮಿಯನ್ನು ನೋಡುವ ದೃಷ್ಠಿಕೋನ ಬದಲಾಗಿಬಿಡುತ್ತದೆ. ಕುಸುಮಿ ಕಂದೀಲು ಹಿಡಿಯುವ ಕುಲಕಸುಬನ್ನು ಗಂಡನಿಂದ ತನಗೆ ಕೇಳಿದಾಗಲೇ ಅದನ್ನು ನಿರಾಕರಿಸುವ ಹೊಂಚು ಬಯಲಿಗೆ ಬರುತ್ತದೆ. ಊರಿನ ಪುರಷರ ನಿಜ ಬಣ್ಣ ತಿಳಿಯುತ್ತದೆ. ಕುಸುಮಿ ಹೆಂಗಸು ಅದಕ್ಕಾಗಿ ಕುಲಕಸುಬ ನೀಡಲು ಬರುವುದಿಲ್ಲವೆಂದು ದೈವದವರು ನಿರಾಕರಿಸುತ್ತಾರೆ. ಕುಸುಮಿ ಇಲ್ಲಿ ಶಕ್ತಿ ಕಳೆದುಕೊಳ್ಳುತ್ತಾಳೆ. ಕುಸುಮಿ ವಾಡೆಯ ಶ್ರೀಪಾದನನ್ನು ನಂಬಿರುತ್ತಾಳೆ. ಆತ ಮೊದಲೇ ಕುಸುಮಿಯಿಂದ ವಾಗ್ಧಾನ ತೆಗೆದುಕೊಳ್ಳುತ್ತಾನೆ. ‘ನಾನು ನಾಳೆ ನಿನ್ನ ಪರವಾಗಿ ಮಾತಾಡ್ಲೀಕ್ ಆಗೂದಿಲ್ಲಾ. ಯಾಕ ಏನು ಅಂತ ಪ್ರಶ್ನೆ ಕೇಳ್ಲೀಕ್ ಹೋಗಬ್ಯಾಡ’ ಎಂದು ಕುಸುಮಿಯನ್ನು ಏಕಾಂಗಿ ಮಾಡಿಬಿಡುತ್ತಾನೆ. + +ಶ್ರೀಪಾದ ಕುಸುಮಿಯಿಂದ ಸುಖ ಉಂಡವನೆ. ಹಾಗೆಯೇ ಊರ ಕೆಲ ಗಂಡಸರು ಉಂಡಿರುತ್ತಾರೆ. ಆದರೆ, ಕುಸುಮಿ ಕಂದೀಲು ಹಿಡಿಯುವ ವೃತ್ತಿಯನ್ನು ಮುಂದುವರೆಸಲು ಬಿಡುವುದಿಲ್ಲ. ಗಂಡಸರ ಕ್ರೌರ್ಯ ಕಾದಂಬರಿಯಲ್ಲಿ ದಟ್ಟವಾಗಿ ಚಿತ್ರಗೊಂಡಿದೆ. ಕುಸುಮಿಯ ಸಾವು ತಣ್ಣಗೆ ನಡೆದು ಬಿಡುತ್ತದೆ. ಕಾದಂಬರಿಯ ಅಂತ್ಯ ನಿಶಬ್ಧವಾಗಿ ಚಿತ್ರಿತವಾಗಿದೆ. + + + +ಸೋಮು ರೆಡ್ಡಿಯವರ ಅವರ ನಿರೂಪಣೆ ಮನದಲ್ಲಿ ನೆಲೆಗೊಳ್ಳುತ್ತದೆ. ಈ ಬಗೆಯ ವಸ್ತು ಎಪ್ಪತ್ತರಿಂದ ಎಂಬತ್ತರ ದಶಕದ ನಡುವೆ ಚಾಲ್ತಿಗೆ ಬಂದಿತು. ಆ ಕಾಲದಲ್ಲಿ ಈ ಕಾದಂಬರಿ ಬಂದಿದ್ದರೆ ಚರ್ಚೆಯಾಗುತ್ತಿತ್ತು. ಶೋಧಿಸಲಾದ ಕಥಾವಸ್ತು ಎಂದು ಉದಾಸೀನ ಮಾಡುವ ಕೆಲಸವಾಗಬಹುದು. ಆದರೆ ಇಂತಹವೂ ಮುನ್ನೆಲೆಗೆ ಬರುವ ಸಂದರ್ಭಗಳು ಉಂಟಾಗುತ್ತವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_296.txt b/Kenda Sampige/article_296.txt new file mode 100644 index 0000000000000000000000000000000000000000..66976ec39b1aa61e5700e8aeed67878e2cbb9e5d --- /dev/null +++ b/Kenda Sampige/article_296.txt @@ -0,0 +1,31 @@ + + +ಕನ್ನಡಕ್ಕೆ ಮತ್ತೊಂದು ಗಾಂಧಿಯ ಗಂಧದ ಸೇರ್ಪಡೆ. ಅದು ವಿಸ್ತೃತವಾಗಿ. ಗಾಂಧಿಯನ್ನು ಅರಿತುಕೊಳ್ಳುವುದೆಂದರೆ ಅದೊಂದು ಪರ್ವತವನ್ನೋ ಅಥವಾ ಹರಿವ ನದಿಯನ್ನೋ ನೋಡುವಂತಹ ಅನುಭವ. ಪ್ರತಿಬಾರಿ ನೋಡುವಾಗಲೂ ಅವು ಮೊದಲಿನ ಥರ ಕಾಣುವುದಿಲ್ಲ. ಹೊಸದಾಗಿಯೇ ಕಾಣುತ್ತವೆ. ನಿತ್ಯ ನೂತನವಾಗಿ ಕಾಣುತ್ತವೆ. ಹೀಗೆ ಕಾಲಾದೇಶಗಳನ್ನು ಮೀರಿ ನಿಲ್ಲುವ ಗುಣದ ಗಾಂಧಿಯನ್ನು ಕನ್ನಡದಲ್ಲಿ ಡಿ.ಎಸ್. ನಾಗಭೂಷಣ ಅವರು ಕಟ್ಟಿಕೊಟ್ಟಿರುವ ಬೆರಗಿಗೆ ಪರವಶವಾಗದೆ ಇರುವುದಕ್ಕೆ ಆಗುವುದಿಲ್ಲ. ಅಷ್ಟರ ಮಟ್ಟಿಗೆ ಇದು ಇತ್ತೀಚೆಗೆ ಕನ್ನಡದಲ್ಲಿ ಬಂದಿರುವ ಕೃತಿಗಳಲ್ಲಿಯೇ ಮಹತ್ವಾಕಾಂಕ್ಷೆಯ ಕೃತಿಯಾಗಿ ಕಾಣುತ್ತದೆ. ಹಾಗೂ ಗಾಂಧಿಯ ಬದುಕನ್ನು ಕುರಿತು ಇತ್ತೀಚಿನ ದಿನಗಳಲ್ಲಿ ಬಂದಂತಹ ಕೃತಿಗಳಲ್ಲಿಯೇ ಇದೊಂದು ನಿಜಕ್ಕೂ ಒಂದು ಅಪರೂಪದ ಮತ್ತು ಅಸಾಧಾರಣವಾದ ಕೃತಿಯಾಗಿದೆ. + +ಈ ಪ್ರಶಂಸೆಗೆ ಅದನ್ನು ಅರ್ಹಗೊಳಿಸಲು ಆ ಕೃತಿಯ ಹಿಂದೆ ಅಪಾರವಾದಂತಹ ಓದು, ಪರಿಶ್ರಮ, ಬದ್ಧತೆ ಮತ್ತು ಧ್ಯಾನಸ್ಥವಾದಂತಹ ಮನಸ್ಸು ಇರುವುದನ್ನು ಗಮನಿಸಬಹುದು. ಇಲ್ಲಿ ನಿರೂಪಿತಗೊಂಡಿರುವ ಗಾಂಧಿಯ ಬದುಕಿನ ನಿರೂಪಣೆಗೆ ಲೇಖಕರ ಹದಗೊಂಡ, ಉತ್ಕೃಷ್ಟವೆನ್ನಬಹುದಾದ ಅಭಿವ್ಯಕ್ತಿ, ಶೈಲಿ ಮಿಳಿತಗೊಂಡಿವೆ. ತಮ್ಮ ಖಡಕ್, ನಿಷ್ಠುರ ಮಾತುಗಳಿಂದ ಕನ್ನಡ ಸಾಹಿತ್ಯಲೋಕದಲ್ಲಿ ಹೆಸರಾಗಿರುವ ಡಿ.ಎಸ್. ನಾಗಭೂಷಣ ಅವರು ಇಲ್ಲಿ ಒಬ್ಬ ಸಂತನ ರೀತಿ ನಿರುಮ್ಮಳವಾಗಿ ಗಾಂಧಿಯ ಬದುಕನ್ನು ಬಗೆಯುತ್ತ ಹೋಗುತ್ತಾರೆ. ಗಾಂಧಿಯ ಸಮುದ್ರದಷ್ಟಿನ ಬದುಕನ್ನು ಇಷ್ಟಿಷ್ಟೇ ಹನಿಹನಿಯಾಗಿ ನಮ್ಮೊಳಗೆ ತೊಟ್ಟಿಕ್ಕಿಸುವ ಪರಿ ಹಿಂದುಸ್ತಾನಿ ಸಂಗೀತದಂತೆ ಆವರಿಸಿಕೊಳ್ಳುತ್ತ ಹೋಗುತ್ತದೆ. + +(ಡಿ.ಎಸ್. ನಾಗಭೂಷಣ) + +ಹೀಗೆ ನಿರೂಪಿಸಿರುವ ಗಾಂಧಿ ಕಥನದ ನಿರೂಪಣಾ ಶೈಲಿ ಕನ್ನಡ ಸಾಹಿತ್ಯದಲ್ಲಿ ಒಂದು ಗಾಂಧಿಯನ್ನು ಕುರಿತು ಬಂದಿರುವ ಕೃತಿಗಳಲ್ಲಿಯೇ ಒಂದು ಘನ ಕೃತಿಯಾಗಿ ಹೊಳಪಿಸಿ ಅದನ್ನು ಒಂದು ಮೈಗಲ್ಲಾಗಿಸುತ್ತದೆ. ಸಂದರ್ಶಕರೊಬ್ಬರ ಸಮಾಜಕ್ಕೆ ನಿಮ್ಮ ಸಂದೇಶವೇನೆಂದು ಕೇಳಿದ ಪ್ರಶ್ನೆಗೆ ಗಾಂಧಿ ನನ್ನ ಬದುಕೇ ಒಂದು ಸಂದೇಶ ಎಂದು ಕೊಡುವ ಉತ್ತರ ನಮಗೆ ಮನವರಿಕೆಯಾಗಬೇಕೆಂದರೆ ಅವರ ಅಪರಿಮಿತವಾಗಿ ಸಾಗಿದ ಬದುಕಿನ ದಾರಿಯನ್ನು ತುದಿಯಿಂದ ಕೊನೆಯತನಕ ಕ್ರಮಿಸಲೇಬೇಕು. ಅದನ್ನು ಕಾಣಲು ಈ ಕೃತಿ ಪರಿಶುದ್ಧವಾದ ಪ್ರೀತಿಯಿಂದ ನಮ್ಮನ್ನು ಕೈಹಿಡಿದು ನಡೆಸುತ್ತದೆ. ಕಲ್ಪನೆಗೂ ನಿಲುಕದ ಗಾಂಧಿಯ ಪ್ರಯೋಗಗಳು, ಹಟ, ಕಷ್ಟಗಳನ್ನು ಎದುರಿಸಿದ ಜಾಣ್ಮೆ, ತಾಳ್ಮೆ ಅಚ್ಚರಿ. + +ಗಾಂಧಿ ಪ್ರತಿ ಭಾರತೀಯನ ಸ್ವಾಭಿಮಾನದ ಪ್ರತೀಕ. ಇವೊತ್ತು ಗಾಂಧಿ ಎನ್ನುವ ಪದವನ್ನೇ ತುಚ್ಛೀಕರಿಸಿ ನೋಡುವಂತಹ ಪರಿಸ್ಥಿತಿ ಉದ್ಭವವಾಗಿದೆ. ಯಾವ ವ್ಯವಸ್ಥೆ ನೈತಿಕವಾಗಿ ಬಲಗೊಂಡು ಜಗತ್ತಿನ ಎದುರು ಸೆಟೆದು, ತಲೆಎತ್ತಿ ನಿಲ್ಲಬೇಕೆಂದು ತನ್ನ ಬದುಕನ್ನೇ ಸಮರ್ಪಿಸಿಕೊಂಡು ಹೋರಾಡಿದ ಗಾಂಧಿಯನ್ನು ಇಂದು ಆ ವ್ಯವಸ್ಥೆ ಅವರನ್ನು ಕೇವಲ ಅವರ ಕನ್ನಡಕಕ್ಕಷ್ಟೇ ಸೀಮಿತಗೊಳಿಸಿ ಅವರ ವಿಚಾರ, ತಿಳುವಳಿಕೆ, ಯೋಚನೆಗಳನ್ನು ಧೂಳಿಪಟಮಾಡಲಾಗುತ್ತಿದೆ. ಹುಸಿ ದೇಶಭಕ್ತರು ಯಾವ ಲಜ್ಜೆಯಿಲ್ಲದೆ ಮೆರೆಯುತ್ತಿದ್ದಾರೆ. ದಾರಿ ತಪ್ಪಿದ ಅವರು ಭಾರತದ ಬಗ್ಗೆ ನಿಜ ಪ್ರೀತಿಯನ್ನು ಪಡೆಯಬೇಕೆಂದರೆ ಗಾಂಧಿಯ ಬದುಕನ್ನು ಅಡಿಯಿಂದ ಮುಡಿಯ ತನಕ ನೋಡಲೇಬೇಕಿದೆ. ಅಲ್ಲಿ ದೇಶಕ್ಕಾಗಿ ತನ್ನ ಜೀವಿತಾವಧಿಯಲ್ಲಿ ಅನುಕ್ಷಣ ಮಿಡಿದ ಗಾಂಧಿ ಕಾಣುತ್ತಾರೆ. + +ಗಾಂಧಿ ದಿನದಿನಕ್ಕೂ ಪ್ರಸ್ತುತವಾಗುತ್ತ ಹೋಗುತ್ತಾರೆ. ಗಾಂಧಿ ಲೋಕದ ಬದುಕಿನ ಭವಿಷ್ಯ. ಗಾಂಧಿಯನ್ನು ಯಾವರೂಪದಲ್ಲಾದರೂ ಎದುರಾಗಲೇಬೇಕು. ಅವರ ಚಿಂತನೆಗಳಿಲ್ಲದ ಮುಂದಿನ ಸಮಾಜವನ್ನು ಕಟ್ಟಲು ಆಗುವುದಿಲ್ಲ. ಅವರ ಸಂಕೀರ್ಣವಾದ ವ್ಯಕ್ತಿತ್ವದಿಂದಾಗಿಯೇ ಅವರ ಜೊತೆ ಜಗಳಕ್ಕೆ ವಿಫುಲವಾದ ಅವಕಾಶವೂ ಇದೆ. ಅವರು ನಿಜ ಅರ್ಥದಲ್ಲಿ ಹೀರೋ. ಬದುಕಿನ ತೀವ್ರತೆರನಾದ ಸಂದರ್ಭಗಳನ್ನು ಅವರು ಸಂಯಮದಿಂದ, ಸ್ಟ್ರಾಂಗ್ ವಿಲ್ಡ್ ಆದಂತಹ ಮನಸ್ಸಿನಿಂದ ನಿಭಾಯಿಸಿಕೊಂಡು ಸಾಗಿದ ಅವರ ಬದುಕನ್ನು ಶೋಧಿಸುತ್ತ ಹೋಗುವುದೇ ಒಂದು ರೋಮಾಂಚಕಾರಿ. ಅವರು ಬದುಕಿನಲ್ಲಿ ಜರುಗಿದ ಘಟನೆಗಳನ್ನು ತಮ್ಮ ಪಾಡಿಗೆ ತಾವಷ್ಟೇ ಹಾದುಹೋಗುವುದಿಲ್ಲ, ಬದಲಿಗೆ ನಮ್ಮನ್ನು ಅವುಗಳ ಜೊತೆ ಸಿಕ್ಕಿಸಿ, ಸಂಘರ್ಷಕ್ಕಿ ಇಳಿಸಿ ನಮ್ಮನ್ನು ಅಲ್ಲಾಡಿಸುವಂತೆ ಮಾಡುತ್ತಾರೆ. ಗಾಂಧಿ ನಮ್ಮನ್ನು ಒಳಗೊಳ್ಳುವಂತೆ ಮಾಡುತ್ತಾರೆ. ಆಗ ಮಾತ್ರ ಸ್ವಾಭಿಮಾನ ದೇಶವನ್ನು, ಬದುಕನ್ನು ಕಟ್ಟಿಕೊಳ್ಳಬಹುದು ಎಂದು ನಮ್ಮೊಳಗೇ ನಮಗೆ ಗೊತ್ತಾಗದ ರೀತಿಯಲ್ಲಿ ಒಂದು ರೀತಿಯ ಸಂಚಲನ ಉಂಟಾಗುತ್ತದೆ. + + + +ಡಿ.ಎಸ್. ನಾಗಭೂಷಣ ಅವರು ಇಲ್ಲಿ ಗಾಂಧಿಯ ಬದುಕಿನಲ್ಲಿ ಜರುಗಿದ ಅಸಂಖ್ಯ ಘಟನೆಗಳನ್ನು ತಮ್ಮ ಓದು, ಗ್ರಹಿಕೆ, ತಿಳುವಳಿಕೆಗಳನ್ನು ಹದಬೆರೆತ ಪಾಕದಂತೆ ಮಿಶ್ರಿಸಿ ಹೇಳುತ್ತಾ ಹೋಗುತ್ತಾರೆ. ನಿರೂಪಿತಗೊಂಡ ಒಂದೊಂದು ಘಟನೆಗಳಿಗೆ ಮನಸ್ಸಿನಲ್ಲಿ ಸದಾ ಉಳಿಯುವ ಚಿತ್ರಕ ಶಕ್ತಿಯನ್ನು ಮೂಡಿಸಿದ್ದಾರೆ. ತಮ್ಮ ಕೃತಿಯ ಉದ್ದಕ್ಕೂ ಡಿ.ಎಸ್. ಎನ್ ಅವರು ಎಲ್ಲೂ ವೈಭವೀಕರಿಸದೆ ಗಾಂಧಿಯನ್ನು ತೀರಾ ಸಾಮಾನ್ಯ ಮನುಷ್ಯನಾಗಿ ಚಿತ್ರಿಸಿ, ಸರಳವಾಗಿ ಬದುಕುತ್ತಲೇ ಮಹಾತ್ಮನಾದುದನ್ನು ತೋರಿಸುತ್ತಾ ಹೋಗಿದ್ದಾರೆ.ಗಾಂಧೀಜಿ ಸರಳಾದೇವಿಯವರ ಜೊತೆಗಿನ ಸ್ನೇಹ, ಪ್ರೀತಿ ಸಂಗತಿಗಳಂತೂ ಅದ್ಭುತ ಕಾವ್ಯದಂತೆ ಮೂಡಿವೆ. ಗುಹ ಮತ್ತು ರಾಜ್ ಮೋಹನ್ ಗಾಂಧಿಯವರ ಗ್ರಹಿಕೆಗಳನ್ನು ಪ್ರಸ್ತಾಪಿಸುತ್ತ ಸಾಗುವ ನಿರೂಪಣ ಕ್ರಮ ಯಾವ ಮೋಹಕ ಕಾದಂಬರಿಗೂ ಮಿಗಿಲಾಗದಂತೆ ಮೂಡಿಬಂದಿದೆ. ಗಾಂಧಿಯೆಂದರೆ ಸರಳ ರೇಖೆಯನ್ನು ಎಳೆದು ಅರ್ಥೈಸಿಕೊಳ್ಳುವುದಕ್ಕೆ ಆಗುವುದಿಲ್ಲ ಎನ್ನುವುದು ಈ ಪ್ರಸಂಗವು ಗೊತ್ತುಮಾಡುತ್ತದೆ. + +ಗಾಂಧಿಯವರು ಮನೂ ಅವರನ್ನು ಒಳಗೊಂಡಂತೆ ಅಮೃತ ಕೌರ್, ಸುಶೀಲ ನಯ್ಯರ್, ಪ್ರಭಾವತಿ ಅವರ ಜೊತೆ ಲೈಂಗಿಕ ಮತ್ತು ಬ್ರಹ್ಮಚರ್ಯದ ಪ್ರಯೋಗಗಳು ಕೇಳುವುದಕ್ಕೆ, ನೋಡುವುದಕ್ಕೆ ಅಭಾಸವಾದರೂ ಅವರು ಅದನ್ನು ಯಶಸ್ವಿಯಾಗಿ ಪ್ರಯೋಗಮಾಡುವಾಗ ಅವರು ಒಬ್ಬ ಸಂತನಂತೆ ಕಾಣುತ್ತಾರೆ. ಈ ಪ್ರಸಂಗಗಳು ಮುಕ್ತವಾಗಿ ದಾಖಲಾಗಿವೆ ಇಲ್ಲಿ. ಆದರೂ ಡಿ.ಎಸ್. ತಮ್ಮ ಜೆ.ಪಿ. ಮೇಲಿನ ಮಮಕಾರವನ್ನು ತೋರದೆ ಬಿಡುವುದಿಲ್ಲ. ಜೆ.ಪಿ ಮತ್ತು ಲೋಹಿಯಾ ಅವರ ಗಾಂಧಿಯ ಒಡನಾಟಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತ ಎಲ್ಲೋ ಒಂದು ಕಡೆ ನಿಜ ಅರ್ಥದಲ್ಲಿ ಗಾಂಧಿಯ ಶಿಷ್ಯರು ಲೋಹಿಯಾ ಮತ್ತು ಜೆ.ಪಿ.  ನೆಹರು ಮತ್ತು ಪಟೇಲ್ ಅಲ್ಲ ಎನ್ನುವಂಥಹ ಧ್ವನಿ ವ್ಯಕ್ತವಾಗುತ್ತದೆ. ಅದು ನಿಜ ಕೂಡ ಅನ್ನಿಸುತ್ತದೆ. + +ಈ ಗಾಂಧಿಯ ನಂತರದ ನಾಯಕರು ಗಾಂಧಿಯ ಜೊತೆ ನಡೆಸಿದ್ದ ವಾಗ್ವಾದ, ಸಂಘರ್ಷ, ಸ್ನೇಹ-ಪ್ರೀತಿಯ ಸಂದರ್ಭಗಳು ಇನ್ನಷ್ಟು ವಿಸ್ತೃತವಾಗಿ ನಿರೂಪಿತಗೊಳ್ಳಬೇಕಾಗಿತ್ತೇನೋ ಅನ್ನಿಸುತ್ತೆ. ಸ್ವಾತಂತ್ರ ಪೂರ್ವ ಮತ್ತು ನಂತರದ ಭಾರತದಲ್ಲಿ ಗಾಂಧಿಯ ಪಾತ್ರ ಮಹತ್ತರವಷ್ಟೇ ಅಲ್ಲ ನಿರ್ಣಾಯಕವಾದದ್ದೂ ಕೂಡ. ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವದೆಡೆಗೆ ಭಾರತ ಹೊರಳುತ್ತಿರುವಂತಹ ಸಂದರ್ಭದಲ್ಲಿ ಆದಂತಹ ಕೆಲವು ಸಂಗತಿಗಳನ್ನು ಇನ್ನೊಂದಿಷ್ಟು ಸೂಕ್ಷ್ಮವಾಗಿ ಮತ್ತು ವಿಸ್ತಾರವಾಗಿ ಚರ್ಚಿಸಬಹುದಿತ್ತು. ಆದರೆ ಇದು ಸಂಪೂರ್ಣವಾಗಿ ಗಾಂಧೀಕೇಂದ್ರಿತವಾಗಿರುವುದರಿಂದ ಗಾಂಧಿಯ ಬದುಕಿನ ಆ ಕಡೆ ತಮ್ಮ ನಿರೂಪಣೆಯನ್ನು ಹರಿಸುವುದಿಲ್ಲ. ಹಾಗಾಗಿದ್ದಲ್ಲಿ ಹಿರಿಯ ಮಗ ಹರಿಲಾಲ್, ಗಾಂಧಿಯ ಮತ್ತೊಬ್ಬ ಅನುಯಾಯಿ ವಿನೋಭಬಾವೆ ಮತ್ತು ಎಲ್ಲದಕ್ಕಿಂತ ಮಿಗಿಲಾಗಿ ಅಂಬೇಡ್ಕರ್ ಜೊತೆಗಿನ ವಾಗ್ವಾದಗಳನ್ನು ಇನ್ನಷ್ಟು ವಿಸ್ತರಿಸಬಹುದಿತ್ತು. ಈ ಇಬ್ಬರ ನಡುವಿನ ಸಂಘರ್ಷ, ವಾಗ್ವಾದ, ಪತ್ರವ್ಯವಹಾರ, ಸೈದ್ಧಾಂತಿಕ ಭಿನ್ನತೆ, ಸಾಮಾಜಿಕ ಕಾಳಜಿ ಮತ್ತು ರಾಜಕೀಯ ಮನೋಧರ್ಮಗಳನ್ನು ಕುರಿತು ಇಷ್ಟೇ ವಿಸ್ತೃತವಾಗಿ ಒಂದು ನಿರೂಪಣೆಯ ಅವಶ್ಯಕತೆ ಇದೆ. ಡಿ.ಆರ್. ಆ ನಿಟ್ಟಿನಲ್ಲಿ ಮಾಡಿದ್ದರೂ ಅದೊಂದು ರೂಪಕಾತ್ಮಕ ಭಾಷೆಯಲ್ಲಿ ಸಿಲುಕಿಕೊಂಡಿದೆ. + +ಡಿ.ಎಸ್. ನಾಗಭೂಷಣ ಅವರು ತಮ್ಮ ಈ ಕೃತಿಯಲ್ಲಿ ಬಳಸಿಕೊಂಡಿರುವ ಭಾಷೆಯ ರೀತಿಯಲ್ಲಿ ಅವರಿಬ್ಬರ ಕುರಿತು ಒಂದು ನಿರೂಪಣೆ ಬೇಕಾಗಿದೆ. ಭಾರತಕ್ಕೆ ಇನ್ನೆರಡು ವರ್ಷ ತಡವಾಗಿ ಸ್ವಾತಂತ್ರ್ಯಸಿಕ್ಕಿದ್ದರೆ ಲೋಹಿಯ ಮತ್ತು ಜಿ.ಪಿ ಆ್ಯಕ್ಟಿವ್ ಪೊಲಿಟಿಕ್ಸ್ ನಲ್ಲಿ ಬೇರೆ ತರವೇ ಕಾಣುತ್ತಿದ್ದರು. ಭಾರತಕ್ಕೆ ಒಂದು ರೀತಿಯ ವೈಬ್ರೆಂಟ್ ಆದಂತಹ ರಾಜಕೀಯ ಸಿಗುತ್ತಿತ್ತೇನೋ. ಆದರೆ ಅಷ್ಟೊತ್ತಿಗೆ ಆಗಲೇ ಕಾಂಗ್ರಿಸ್ಸಿನಲ್ಲಿನ ಅನೇಕ ನಾಯಕರಿಗೆ ವಯಸ್ಸು ಆಗುತ್ತಿತ್ತು. ಜೊತೆಗೆ ಅಧಿಕಾರದ ಆಸೆ. ಜಿನ್ನ ಅವರೂ ಸಹ ತಮ್ಮ ಸಂಕುಚಿತ ಮನೋಭಾವವನ್ನು ಬಿಟ್ಟು ದಿಟ್ಟತನ್ನವನ್ನು ತೋರಿದ್ದರೆ ಇಂದು ಜಗತ್ತಿನ ಎದುರು ಭಾರತ ಉಪಖಂಡ ಒಂದು ಸುಭದ್ರ ದೇಶವಾಗಿ ಹೊರಹೊಮ್ಮುತ್ತಿತ್ತು. ಈ ಸಂಗತಿಗಳು ಇಲ್ಲಿ ವಾಸ್ತವಾಂಶಕ್ಕೆ ಹತ್ತಿರವಾಗಿ ನಿಷ್ಟುರವಾಗಿ ಮತ್ತು ನಿಷ್ಪಕ್ಷಪಾತವಾಗಿ ದಾಖಲಾಗಿವೆ. ಆದರೂ ಇನ್ನೊಂದಿಷ್ಟು ಚರ್ಚಿಸಬಹುದಿತ್ತೇನೋ ಅನ್ನಿಸದಿರದು. + +ಗಾಂಧಿಯ ಬದುಕನ್ನು ಓದುವುದೆಂದರೆ ಅದು ಭಾರತ ಉಪಖಂಡದ ರಾಜಕೀಯ, ಜೀವನಶೈಲಿ, ಧರ್ಮ, ಆಹಾರ, ಕುಟುಂಬ, ಸಮಾಜ, ತತ್ವಜ್ಞಾನ, ಪತ್ರಿಕೋದ್ಯಮ, ರಾಷ್ಟ್ರೀಯತೆಗಳನ್ನು ತಿಳಿದುಕೊಳ್ಳವುದೇ ಆಗಿದೆ. ಇಪ್ಪತ್ತನೇ ಶತಮಾನದ ಭಾರತದ ಇತಿಹಾಸವನ್ನು ಗಾಂಧಿಯ ಮೂಲಕವೇ ಅಥವಾ ಅವರಿಗೆ ಮುಖಾಮುಖಿಯಾಗಿಯೇ ನೋಡಬೇಕು. ಅಷ್ಟೇ ಅಲ್ಲ ಇಪ್ಪತ್ತೊಂದನೇ ಶತಮಾನದಲ್ಲಿ ಸೃಷ್ಟಿಗೊಂಡಿರುವ ಅನೇಕ ಆತಂಕ, ಅಸಹನೀಯ ಸಂಗತಿಗಳಿಗೆ ಗಾಂಧಿಯಲ್ಲಿ ಪರಿಹಾರವನ್ನು ಹುಡುಕಿಕೊಳ್ಳಬೇಕಿರುವುದು ಸಹ ವಾಸ್ತವತೆ. ಗಾಂಧಿಯ ಚಿಂತನೆಗಳಿಗೆ ವಿಕಸನಗೊಳ್ಳುವ ಚೈತನ್ಯವಿರುವುದರಿಂದ ಕಾಲಕ್ಕೆ ತಕ್ಕಂತೆ ಹಾಗೂ ಕಾಲದ ತುರ್ತುಗಳಿಗೆ ಅನುಗುಣವಾಗಿ ಚರ್ಚೆ, ವಾಗ್ವಾದ ಮತ್ತು ಮಂಥನಗಳ ಮೂಲಕ ಅವು ಪ್ರಸ್ತುತಗೊಳ್ಳುತ್ತಲೂ ಹೋಗುತ್ತವೆ. ‘ಮಾತು ಸೋತ ಭಾರತ’ಕ್ಕೆ ಪಶ್ಚಾತ್ತಾಪವನ್ನು ಮೂಡಿಸುವಂತಹ ನೈತಿಕ ಸ್ಥೈರ್ಯವನ್ನು ತುಂಬುವಂತಹ ಶಕ್ತಿ ಗಾಂಧಿಯ ಚಿಂತನೆಗಳು ಮತ್ತು ಜೊತೆಗೆ ಅಂಬೇಡ್ಕರ್ ವಿಚಾರಗಳಲ್ಲಿ ಕಾಣಬಹುದು. + + + +ಇಂದಿನ ತಲೆಮಾರು ಮತೀಯ ಶಕ್ತಿಯ ಪಾಶಕ್ಕೆ ಸಿಲುಕುವ ಮತ್ತು ಸಾಮಾಜಿಕ ಅನಿಷ್ಟಗಳಿಗೆ ಕುರುಡಾಗುವ ಅಪಾಯದಿಂದ ಪಾರಾಗಬೇಕಾದಲ್ಲಿ, ಜರೂರಾಗಿ ಗಾಂಧಿಕಥನದಂತಹ ಕೃತಿಗಳನ್ನು ಓದಬೇಕಾದ ಅನಿವಾರ್ಯತೆ ಇದೆ. ಸದ್ಯದ ಯುವ ಜನತೆಗೆ ಬೇಕಿರುವುದು ಅಪಾರವಾದ ಓದಿನ ಜೊತೆಗೆ ನೈತಿಕ ಮತ್ತು ಬೌದ್ಧಿಕ ಶಕ್ತಿಗಳು. ಇದನ್ನು ಈ ಕೃತಿ ಖಂಡಿತವಾಗಿ ಮಾಡಬಲ್ಲದು. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_297.txt b/Kenda Sampige/article_297.txt new file mode 100644 index 0000000000000000000000000000000000000000..ee472919ddff50bb66db50c70ba11a831025fc02 --- /dev/null +++ b/Kenda Sampige/article_297.txt @@ -0,0 +1,45 @@ + + +ಆಷಾಢ, ಆಗಸದಲ್ಲಿ ಕವಿದಿರುವ ದಟ್ಟ ಮೋಡಗಳು, ಸುಯ್ಯೆಂದು ಬೀಸುವ ಗಾಳಿ, ಧುಯ್ಯೆಂದು ಸುರಿವ ಮಳೆ, ಮನೆಯ ಸುತ್ತಲೂ ಮಾರ್ಧನಿಸುವ ನವಿಲುಗಳ ಕೂಗು, ಎದುರಿನ ಪಶ್ಚಿಮ ಘಟ್ಟಗಳ ನಡುವೆ ಧುಮ್ಮಿಕ್ಕುವ ಜಲಪಾತಗಳ ಸಾಲು, ತುಂಬಿ ಉಕ್ಕುವ ಹೊಳೆ, ಸ್ವಲ್ಪ ದೂರದಲ್ಲಿ ಬೋರ್ಗರೆಯುವ ಸಮುದ್ರದ ಅಲೆಗಳು, ಕೈಯಲ್ಲಿನ ಬಿಸಿಯುಕ್ಕುವ ಚಹಾದ ಕಪ್ಪಿಗೂ… ಕಥೆಗಳಿಗೂ ಏನು ಸಂಬಂಧ!? ಬೇರೆಯವರ ಪಾಲಿಗೆ ಇವುಗಳ ನಡುವೆ ಯಾವುದೇ ಸಂಬಂಧ ಕಾಣದೇ ಹೋಗಬಹುದು ಅಥವಾ ಕಾಣಲೂಬಹುದು! + +ಆದರೆ ಕಳೆದ ಮೂವ್ವತ್ತು ವರ್ಷಗಳ ಅವಧಿಯಲ್ಲಿ ನನ್ನೆದೆಯಲ್ಲಿ ಹುಟ್ಟಿದ ಕಥೆಗಳ ಪೈಕಿ ಒಂದನ್ನು ಬಿಟ್ಟು ಉಳಿದೆಲ್ಲವೂ ಆಷಾಢದ ಮಳೆ ಹನಿಗಳಿಗೆ ನೇರವಾಗಿ ಥಳಕು ಹಾಕಿಕೊಂಡಿದೆ. ಮೂವ್ವತ್ತು ವರ್ಷಗಳ ಹಿಂದೆ ಮೊದಲ ಕಥೆ ‘ಅರ್ಥ’ ಹುಟ್ಟಿದ್ದು ಮತ್ತು ‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡಿದ್ದು ಸುರಿವ ಮಳೆಯ ನಡುವೆಯೇ! ನಂತರ ‘ಬೇರು’ ಬರೆದಿದ್ದು ಸುರಿವ ಮಳೆಯ ನಡುವೆಯೇ! ಆ ಕಥೆಗೆ ‘ಪ್ರಜಾವಾಣಿ’ ದೀಪಾವಳಿ ಪ್ರಶಸ್ತಿ ಬಂತು. ಅದಾದ ಮರು ವರ್ಷವೇ ‘ಮರ’ ಕೂಡ ‘ಪ್ರಜಾವಾಣಿ’ ದೀಪಾವಳಿ ಕಥಾ ಸ್ಪರ್ಧೆಯ ಮೂಲಕ ಬೆಳಕಿಗೆ ಬಂತು. + +ಬೇರೆ ಕಥೆಗಾರರ ಮನದಲ್ಲಿ, ಎದೆಯಲ್ಲಿ ಕಥೆ ಹೇಗೆ ಹುಟ್ಟುತ್ತದೆ ಎನ್ನುವ ಅರಿವು ನನಗಿಲ್ಲ. ಆದರೆ, ನನ್ನೆದೆಯಲ್ಲಿ ಕಥೆ ಹುಟ್ಟುವ ಪರಿ ಹಲವು ಬಾರಿ ನನ್ನನ್ನೇ ಅಚ್ಚರಿಯ ಸಾಗರದೊಳಗೆ ಮುಳುಗಿಸಿ ಬಿಟ್ಟಿದೆ. ಕೆಲವೊಮ್ಮೆ ರಸ್ತೆಯ ಬದಿ, ಆಸ್ಪತ್ರೆಯೊಳಗೆ, ಮಾಲ್ ನ ಮೂಲೆಯಲ್ಲಿ, ಕಾಫಿ ಡೇಯ ಕುರ್ಚಿಯಲ್ಲಿ, ಬಸ್ಸಿನಲ್ಲಿ ಪ್ರಯಾಣಿಸುವಾಗ, ವಿಮಾನದಲ್ಲಿ ಹಾರುತ್ತಿರುವಾಗ, ಕೈಯಲ್ಲಿ ಬೇರೊಂದು ಪುಸ್ತಕ ಹಿಡಿದಾಗ, ದಟ್ಟ ಕಾನನದ ನಡುವೆ ಒಂಟಿಯಾಗಿ ನಿಂತಾಗ… ಎದೆಯಲ್ಲಿ ಕಥೆಯ ಬೀಜ ಬಿದ್ದು ಬಿಡುತ್ತದೆ. ಆ ಬೀಜ ಮನದಲ್ಲಿಯೇ ಮೊಳಕೆಯೊಡೆದು, ಸಸಿಯಾಗಿ, ಚಿಗುರೊಡೆದರೂ ಸಂಪೂರ್ಣವಾಗಿ ಅಕ್ಷರ ರೂಪ ತಾಳುವುದು ಮಾತ್ರ ಮಳೆಯ ಹನಿಗಳ ಸದ್ದಿನ ನಡುವೆಯೇ. ಅದೂ ಮೊದಲ ಮಳೆಯ ಹನಿ ಭುವಿಯನ್ನು ಚುಂಬಿಸಿ, ಘಮ್ಮೆನ್ನುವ ಮಣ್ಣಿನ ಸುವಾಸನೆ ಮೂಗಿಗೆ ಬಡಿದ ಮೇಲೆ ಕಥೆಗಳು ಅಕ್ಷರ ರೂಪ ತಾಳುವ ಪ್ರಕ್ರಿಯೆ ಆರಂಭವಾಗುತ್ತದೆ. + +ಬೆಂಗಳೂರಿನ ಯಾರಿಗೋ ಸೇರಿದ ಎಂಟನೇ ಮಹಡಿಯ ಅಪಾರ್ಟ್ಮೆಂಟ್ ಬಾಲ್ಕನಿಯಲ್ಲಿ ನಿಂತು; ಕೆಲವೊಮ್ಮೆ ಉಜಿರೆಯ ನಮ್ಮ ಮನೆಯ ಬಾಲ್ಕನಿಯಲ್ಲಿನ ತೂಗುಯ್ಯಾಲೆಯಲ್ಲಿ ಕೂತು; ಯಾವಾಗಲೋ ಒಮ್ಮೆ ಚಪ್ಪರಿಕೆ ಮನೆಯ ಅಂಗಳದಲ್ಲಿ ಒದ್ದೆಯಾಗಿ ನಿಂತಾಗ; ಹೊಸಾಡಿನ ಹೊಸ ಮನೆಯ ಮುಂದಿನ ಜಗಲಿಯಲ್ಲಿ ಕೂತು ಎದುರಿದ್ದ ಹಸಿರನ್ನು ಕಣ್ತುಂಬಿಕೊಳ್ಳುವಾಗ; ಶಿರಾಡಿ, ಚಾರ್ಮಾಡಿ, ಆಗುಂಬೆ, ಊಟಿ, ಪೋಖ್ರಾದ ಘಾಟಿಗಳಲ್ಲಿ ಸಾಗುವಾಗ ಸುರಿವ ಮಳೆಯನ್ನು ಆಸ್ವಾದಿಸಿದ ಮೇಲೆ ಎದೆಯೊಳಗಿನ ಕಥೆಗಳು ಉಕ್ಕಲಾರಂಭಿಸುತ್ತವೆ. + +(ಸತೀಶ್ ಚಪ್ಪರಿಕೆ) + +ಅದು ಹೇಗೆಂದರೆ ಮಳೆಗಾಲದ ಸಂದರ್ಭದಲ್ಲಿ ಘಾಟಿಯ ಗುಡ್ಡಗಳ ಮೇಲಿಂದ ಎಗ್ಗಿಲ್ಲದೇ ಜಲಧಾರೆ ಉಕ್ಕಿ ಧುಮ್ಮಿಕ್ಕಿದ ಹಾಗೆ. ಹಾಗೆ ಧುಮ್ಮಿಕ್ಕುವಾಗ ಆ ಜಲಧಾರೆಯ ನಡುವೆ ನಾನೇ ಕಳೆದುಹೋಗುವ, ಸೃಜನಶೀಲ ಸ್ಖಲನದ ಸುಃಖ ಅನುಭವಿಸುವ ಸಂದರ್ಭ! ಮನದಲ್ಲಿ ಕಥೆ ರೂಪುಗೊಳ್ಳುವ ಪರಿ ಅನನ್ಯ. ಮಿದುಳಿನ ನರ-ನರದಲ್ಲಿ ಕಥೆ ಹುಟ್ಟಿ ಹರಿಯುವಾಗ ಆಗುವ ಆ ಆನಂದ ವರ್ಣಿಸಲಸಾಧ್ಯ. ಒಮ್ಮೆ ಮಿದುಳಲ್ಲಿ ಹರಿದಾಡಿ, ಹೃದಯದಲ್ಲಿ ಗಟ್ಟಿಯಾದ ಕಥೆ ಎಂದೂ ನನ್ನನ್ನು ಬಿಟ್ಟು ಹೋಗುವುದಿಲ್ಲ. ಹಾಗೆ ಗಟ್ಟಿಯಾದ ಎಷ್ಟೋ ತಿಂಗಳು, ವರ್ಷದ ನಂತರ ಸಾಮಾನ್ಯವಾಗಿ ಆ ಕಥೆಯನ್ನು ಒಂದೇ ‘ಸಿಟ್ಟಿಂಗ್’ನಲ್ಲಿ ಬರೆದು ಮುಗಿಸುವ ಜಾಯಮಾನ ನನ್ನದು. ಹಾಗೆ ಉಕ್ಕಿದ ಕಥೆಯನ್ನು ಪದೇ, ಪದೇ ತಿದ್ದುವ ಅವಕಾಶ ಕೂಡ ಬರುವುದಿಲ್ಲ. ಕಾಗುಣಿತ ತಿದ್ದುವುದನ್ನು ಬಿಟ್ಟರೆ, ಒಟ್ಟಾರೆ ಕತಾ ಹಂದರ- ಆಶಯ ಬದಲಾಗುವುದಿಲ್ಲ. + +ಕಥೆ ಹುಟ್ಟುವ ಪರಿಯ ಬಗ್ಗೆ ಈಗ ಬರೆಯಲು ಹೊರಟಿರಲು ಮುಖ್ಯ ಕಾರಣ ನನ್ನ ಎರಡನೇ ಕಥಾ ಸಂಕಲನ ‘ವರ್ಜಿನ್ ಮೊಹಿತೊ’ ಜನ್ಮ ತಾಳಿರುವ ಸಂದರ್ಭ. ಅದೂ ಕೂಡ ಒಂದು ವಿಚಿತ್ರ ಸಂಧಿಗ್ಧದಲ್ಲಿ. ಕಳೆದ ಐದಾರು-ವರ್ಷಗಳಲ್ಲಿ ಹಲವಾರು ವೈಯಕ್ತಿಕ ಕಾರಣಗಳಿಂದ ‘ಇನ್ನು ಮುಂದೆ ಏನನ್ನೂ ಬರೆಯಲೇಬಾರದು’ ಎಂಬ ನಿರ್ಧಾರಕ್ಕೆ ಬಂದ ದಿನಗಳು ಬದುಕಲ್ಲಿ ಹಲವಿವೆ. ಹೆಚ್ಚಿನ ಪಕ್ಷ ಮಾಧ್ಯಮಲೋಕದ ಅವಿಭಾಜ್ಯ ಅಂಗವಾಗಿ ಎರಡು ದಶಕ ಕಳೆದಿದ್ದರ ಪರಿಣಾಮವಾಗಿ ಆ ಭಾವನೆಗಳು ಮೊಳಕೆ ಒಡೆದಿರಬಹುದು. + +‘ಪ್ರಜಾವಾಣಿ’ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಶಸ್ತಿ ಪಡೆದ ಮೇಲೆ, ‘ಪ್ರಜಾವಾಣಿ’ಯ ಭಾಗವಾಗಲು ಹೊರಟ ಸಂದರ್ಭದಲ್ಲಿ ಹಿರಿಯ ಸಹೋದ್ಯೋಗಿಗಳಾದ್ದ ಡಿ.ವಿ. ರಾಜಶೇಖರ ಮತ್ತು ಲಕ್ಷ್ಮಣ ಕೊಡಸೆ ಇಬ್ಬರೂ, “ಇನ್ನೊಬ್ಬ ಕಥೆಗಾರ ಸತ್ತ ಬಿಡಿ” ಎಂದು ಪ್ರೀತಿಯಿಂದಲೇ ನನ್ನನ್ನು ಸ್ವಾಗತಿಸಿದ ನೆನಪು ಇಪ್ಪತ್ತೈದು ವರ್ಷಗಳ ನಂತರ ಕೂಡ ಈಗಲೂ ಮನದಲ್ಲಿ ಹಸಿಯಾಗಿಯೇ ಇದೆ. ಮಾಧ್ಯಮ ಲೋಕದಲ್ಲಿ ಸೃಜನಶೀಲ ಮನೋಭಾವ ಮತ್ತು ಮನುಷ್ಯತ್ವ ಎರಡೂ ಸಾಯುವುದು ಸಹಜ. ಆ ಸಹಜದ ವಿರುದ್ಧವಾಗಿ ಈಜಿ ಯಶಸ್ವಿಯಾದವರ ಸಂಖ್ಯೆ ಅತ್ಯಂತ ವಿರಳ. ಒಮ್ಮೆ ನನಗೂ ಆ ಸೋತ ಅನುಭವ ಆಗಿತ್ತು. ಅದು ನನ್ನನ್ನು ಗಾಢವಾಗಿ ಕಾಡಿತ್ತು. ‘ನನ್ನ ಕೈಯಲ್ಲಿ ಇನ್ನೆಂದೂ ಕಥೆ ಬರೆಯಾಗದು’ ಎಂದು ಒಬ್ಬಂಟಿಯಾಗಿ ಕೂತು ನಾನು ಕಣ್ಣೀರು ಕೂಡ ಸುರಿಸಿದ ದಿನಗಳಿವೆ. + +ಮತ್ತೊಂದು ಹಂತ, ಇನ್ನು ಮುಂದೆ ಕನ್ನಡದಲ್ಲಿ ಬರೆಯಬೇಕೋ ಅಥವಾ ಬೇಡವೋ ಎಂಬ ದ್ವಂದ್ವ ನನ್ನಲ್ಲಿ ಹುಟ್ಟಿಕೊಂಡಿತ್ತು. ಅದೇ ಸಂದರ್ಭದಲ್ಲಿ ಯು.ಆರ್.ಅನಂತಮೂರ್ತಿ ಅವರನ್ನು ಭೇಟಿಯಾಗಿದ್ದೆ. ಆಗ ಅವರು ರವೀಂದ್ರನಾಥ್ ಠಾಗೂರ್ ಪೀಠದ ಅಧ್ಯಕ್ಷರಾಗಿದ್ದರು. ಬೆಂಗಳೂರಿನಲ್ಲಿರುವ ಕನ್ನಡ ಭವನದ ಕಚೇರಿಯಲ್ಲಿ ಸುಮಾರು ಎರಡು ಗಂಟೆಗಳ ಕಾಲ ನಾವಿಬ್ಬರೂ ಆ ಗೊಂದಲದ ಬಗ್ಗೆಯೇ ಮಾತನಾಡಿದ್ದವು. ಕೊನೆಗೆ ಅನಂತಮೂರ್ತಿ, “ಯಾವುದೇ ಒಬ್ಬ ಲೇಖಕನ ನಿಜ ಪ್ರತಿಭೆಯ ಅನಾವರಣವಾಗಬೇಕು ಎಂದರೆ ಆತ ಸೃಜನಶೀಲ ಸಾಹಿತ್ಯವನ್ನು ಮಾತೃ ಭಾಷೆಯಲ್ಲಿಯೇ ಬರೆಯಬೇಕು. ಆ ಕಾರಣಕ್ಕಾಗಿಯೇ ಇಂಗ್ಲಿಷ್ ಮೇಷ್ಟ್ರಾಗಿದ್ದರೂ ನಾನು ಕನ್ನಡಕ್ಕೆ ಅಂಟಿಕೊಂಡಿದ್ದು. ನೀನು ಕೂಡ ನಿನ್ನ ಸೃಜನಶೀಲ ಬರವಣಿಗೆಗಳನ್ನು ಕನ್ನಡದಲ್ಲಿ ಮತ್ತು ಪತ್ರಿಕೋದ್ಯಮದ ಬರವಣಿಗೆಗಳನ್ನು ಇಂಗ್ಲಿಷ್ ನಲ್ಲಿ ಮುಂದುವರೆಸು” ಎಂದು ಪ್ರೀತಿಯಿಂದಲೇ ಆಜ್ಞಾಪಿಸಿದ್ದರು! ನನಗೂ ಅವರ ಅಭಿಪ್ರಾಯ ಒಪ್ಪಿಗೆಯಾಗಿತ್ತು. + +ಆದರೆ ವಿಭಿನ್ನ ಪ್ರಯತ್ನ ಮಾಡುವ ಹಂಬಲ ಹಾಗೆಯೇ ಉಳಿದುಕೊಂಡಿತ್ತು. ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಹೆಚ್ಚಿನೆಲ್ಲ ಬರವಣಿಗೆಗಳನ್ನು ಕೇವಲ ಇಂಗ್ಲಿಷ್ ಗೆ ಸೀಮಿತಗೊಳಿಸಿ ಹಲವು ವರ್ಷಗಳೇ ಆದವು. ಅದರಿಂದ ಮನಸ್ಸಿಗೆ ಅಂತಹ ಕಿರಿ-ಕಿರಿ ಆಗಲಿಲ್ಲ. ಆ ನಡುವೆ ಕಥೆ ಮತ್ತು ಕಾದಂಬರಿಯ ಕಥಾವಸ್ತು ಎದೆಯಲ್ಲಿ ಮೊಳಕೆಯೊಡೆದಾಗಲೆಲ್ಲ, ಕನ್ನಡ ಮತ್ತು ಇಂಗ್ಲಿಷ್ ಸಂಘರ್ಷ ಮಿತಿ ಮೀರಿ ನಿಂತಿತು. ದಶಕದಿಂದ ಎದೆಯಲ್ಲಿ ಇಟ್ಟುಕೊಂಡಿದ್ದ ‘ಮೋಕ್ಷ’ ಎಂಬ ಕಾದಂಬರಿಯ ಕಥಾ ಹಂದರವನ್ನು ಇಂಗ್ಲಿಷ್ ನಲ್ಲಿ ಬರೆಯುವ ಯತ್ನ ಮಾಡಿದ್ದು ಆಯಿತು. ಒಂದು ಅಧ್ಯಾಯ ಬರೆದ ಮೇಲೆ ಕೂಡ ಮನದೊಳಗಿನ ದ್ವಂದ್ವಕ್ಕೆ ಕೊನೆ ಹಾಡಲಾಗದೇ, ‘ಮೋಕ್ಷ’ಕ್ಕೆ ಮೋಕ್ಷ ನೀಡಲು ಆಗಲೇ ಇಲ್ಲ. ಕೊನೆಗೂ ಆ ದ್ವಂದ್ವದಿಂದ ಹೊರಗೆ ಬರಲು ಸುಮಾರು ಮೂರು ವರ್ಷಗಳಷ್ಟು ದೀರ್ಘ ಕಾಲ ಬೇಕಾಯಿತು. ಕೊನೆಗೂ ಅನಂತಮೂರ್ತಿ ಎದೆಯಾಳದಲ್ಲಿ ಅನಂತವಾಗಿ ಉಳಿದುಕೊಂಡು ಬಿಟ್ಟರು. ಆಗ ಸೃಜನಶೀಲ ಬರವಣಿಗೆಗಳೆಲ್ಲ ಕನ್ನಡದಲ್ಲಿ ಮತ್ತು ನನ್ನ ವೃತ್ತಿಗೆ ಸಂಬಂಧಿಸಿದ ಬರವಣಿಗೆಗಳೆಲ್ಲ ಇಂಗ್ಲಿಷ್ ನಲ್ಲಿ ಎಂಬ ನಿರ್ಧಾರ ಮೂಡಿದ ಮೇಲೆ ಮನಸ್ಸು ಸ್ವಲ್ಪ ನಿರಾಳವಾಯಿತು.ಆದರೂ ಮನಸ್ಸಿನ ಕಿರಿ-ಕಿರಿ ತಪ್ಪಲಿಲ್ಲ. ಅದಕ್ಕೆ ಒಂದು ಬಲವಾದ ಕಾರಣ ಕೂಡ ಇತ್ತು. + + + +ಪತ್ರಿಕಾ ವ್ಯವಸಾಯದಿಂದ ಹೊರಬಂದು, ಮಾಧ್ಯಮ ಲೋಕದಿಂದ ಬಹುದೂರ ಪಯಣಿಸಿದ ಮೇಲೆ, ನಿಜಕ್ಕೂ ಸೃಜನಶೀಲವಲ್ಲದ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕೆ ಎಂಬ ಗೊಂದಲ ಕೂಡ ಹುಟ್ಟಿಕೊಂಡಿತ್ತು. ಆ ಗೊಂದಲದ ನಡುವೆಯೇ ‘ಪ್ರಜಾವಾಣಿ’ಯಲ್ಲಿ ಒಂದು ವರ್ಷ ಕಾಲ ‘ಮುಸಾಫಿರ್’ ಅಂಕಣದ ಪಯಣ ಮುಗಿದ ಮೇಲೆ, ಅದು ನನ್ನ ಅಂತ್ಯ ಎಂದೆನ್ನಿಸಿತು. ಅದು ನನ್ನದಲ್ಲದ ಲೋಕ ಎಂಬ ಭಾವ ದೃಢವಾಯಿತು. ಏನಿದ್ದರೂ ಇನ್ನು ಬದುಕಲ್ಲಿ ಇನ್ನು ಮುಂದೆ ಸೃಜನಶೀಲ ಬರವಣಿಗೆ ಮಾತ್ರ ಎಂಬ ಭಾವನೆ ಕೂಡ ಬಲವಾಯಿತು. ಏಕೆಂದರೆ ಯಾವುದೋ ಒಂದು ಹಂತದಲ್ಲಿ ಅನಿವಾರ್ಯವಾಗಿ ಬದುಕಲ್ಲಿ ಹಲವನ್ನು ಬಿಟ್ಟು, ಹೊಟ್ಟೆ ಪಾಡಿಗಾಗಿ ನಮ್ಮದೇ ಆದ ಒಂದು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈಗ ವೈಯಕ್ತಿಕವಾಗಿ ಅಂತಹ ದುಸ್ಥಿತಿಯಿಲ್ಲ. ಆ ಕಾರಣ ಇನ್ನು ಏನಿದ್ದರೂ ಸೃಜನಶೀಲ ಬರವಣಿಗೆ, ಅದರಲ್ಲೂ ಕಥೆ-ಕಾದಂಬರಿ ಮಾತ್ರ ಎಂಬ ನಿರ್ಧಾರ ಬಲವಾಗಿ ಬಿಟ್ಟಿದೆ. ಮೇಲಿನೆಲ್ಲ ಸಮುದ್ರ ಮಥನದ ಪರಿಣಾಮದಿಂದಲೇ ಆಷಾಢದ ಮಳೆ ಮತ್ತೆ ಸುರಿಯುತ್ತಿರುವುದು. + +ಸುಮಾರು ಹತ್ತು ವರ್ಷಗಳ ಸೇವೆಯ ನಂತರ 2007ರಲ್ಲಿ ‘ಪ್ರಜಾವಾಣಿ’ಯಿಂದ ಹೊರಬಂದೆ. 1997 ರಿಂದ 2007ರವರೆಗೆ ‘ಪ್ರಜಾವಾಣಿ’ಯಲ್ಲಿ ಇದ್ದ ಸಂದರ್ಭದಲ್ಲಿ ಒಂದೇ ಒಂದು ಕಥೆ ಬರೆಯಲು ಸಾಧ್ಯವೇ ಆಗಿರಲಿಲ್ಲ. ನಂತರ ‘ಟಿವಿ 9’ ನಲ್ಲಿ ಇದ್ದಾಗ ಸೃಜನಶೀಲ ಮನಸ್ಸಿನ ತಿಥಿಯಾಗಿತ್ತು. ಅದಾದ ಮೇಲೆ ‘ದಿ ಸಂಡೆ ಇಂಡಿಯನ್’ ಸೇರಿದ ಮೇಲೆ ಮತ್ತೆ ‘ಕಥೆ’ಗಳು ಹುಟ್ಟಲಾರಂಭಿಸಿದವು. ನಂತರ ‘ಸಿಂಬಯಾಸಿಸ್ ವಿಶ್ವವಿದ್ಯಾಲಯ’ದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ ಸಂದರ್ಭದಲ್ಲಿ ಕೂಡ ಓದಲು-ಬರೆಯಲು ಸಾಕಷ್ಟು ಅವಕಾಶ ದೊರಕಿತ್ತು. ಕೊನೆಗೆ 2013ರಲ್ಲಿ ‘ದಿಗ್ವಿಜಯ’ ಮುಗಿಸಿ ಪತ್ರಿಕೋದ್ಯಮಕ್ಕೆ ಕೊನೆಯ ನಮಸ್ಕಾರ ಹೊಡೆದ ಮೇಲೆ ನನ್ನೊಳಗಿನ ಕಥೆಗಾರನನ್ನು ನಾನೇ ಮರಳಿ ಹುಡುಕಿಕೊಂಡೆ. ಅದು ಸಾವಿನ ಮನೆಯಿಂದ ಹೊರ ಬಂದಂತಹ ಭೀಕರ ಅನುಭವ. ಈ ನನ್ನ ಮನಸ್ಸಿಗೆ ಜೀವವಿಲ್ಲ ಎಂಬ ಅರಿವಾದ ಮೇಲೆ ಕೂಡ ಹಲವು ವರ್ಷಗಳ ಕಾಲ ಹಗಲು-ರಾತ್ರಿ ಹೋರಾಟ ನಡೆಸಿ ಮರುಜೀವ ಪಡೆದ ಅನುಭವವಿದು. ಸುಮಾರು ಹದಿನೈದು ವರ್ಷಗಳ ಕಾಲ ‘ವೆಂಟಿಲೇಟರ್’ನಲ್ಲಿದ್ದ ಒಂದು ಬಡಜೀವ ಈಗ ಪುನರ್ಜನ್ಮ ತಾಳಿದೆ.ಅದರ ಫಲವೇ, ‘ವರ್ಜಿನ್ ಮೊಹಿತೊ.’ + +ಈ ಕಥಾ ಸಂಕಲನದಲ್ಲಿರುವ ಒಂದು ಕಥೆಯನ್ನು ಬಿಟ್ಟು, ಉಳಿದೆಲ್ಲ ಕಥೆಗಳು ಕೂಡ ಆಷಾಢದ ಮಳೆ ಹನಿಗಳ ನಡುವೆಯೇ ಅರಳಿ ನಿಂತವು. ಆ ಒಂದೇ ಒಂದು ಅಪವಾದವೆಂದರೆ ‘ಗರ್ಭ.’ ಈ ಕಥೆ ಹುಟ್ಟಿದ್ದು, ಅದನ್ನು ನಾನು ಬರೆದಿದ್ದು ಒಂದು ವಿಚಿತ್ರ ಸನ್ನಿವೇಶದಲ್ಲಿ. ಅದೆಂತಹ ಸನ್ನಿವೇಶ ಎನ್ನುವುದರ ಪೂರ್ಣ ವಿವರಣೆಯನ್ನು ಇಲ್ಲಿ ನೀಡುವ ಅಗತ್ಯವಿಲ್ಲ. ‘ಗರ್ಭ’ ಹುಟ್ಟಿದ್ದು ಮತ್ತು ನಾನು ಆ ಇಡೀ ಕಥೆಯನ್ನು ಬರೆದಿದ್ದು ಆಸ್ಪತ್ರೆಯೊಂದರ ಮುಂದೆ. ಕಾರಿನಲ್ಲಿ ಕೂತು, ನಡುರಾತ್ರಿಯಲ್ಲಿ ನಾನೊಬ್ಬನೇ ಬಲವಂತವಾಗಿ ನಿದ್ರೆ ಮಾಡುವ ಯತ್ನ ಮಾಡುತ್ತಿದ್ದಾಗ. ಮೇಲೆ ಐಸಿಯುವಿನಲ್ಲಿದ್ದ ಜೀವಕ್ಕಾಗಿ ಚಡಪಡಿಸುತ್ತಲೇ, ಸೋತು ಹೋಗಿದ್ದ ನನ್ನ ಜೀವವನ್ನು ಕೊಡವಿ ಮೇಲೇಳಿಸಿದ ಕಥೆ ‘ಗರ್ಭ.’ ಆ ಕಥೆ ಮೊಳಕೆಯೊಡೆದ ಮರುಕ್ಷಣ, ಬ್ಯಾಗಿನಲ್ಲಿದ್ದ ಲ್ಯಾಪ್ ಟಾಪ್ ತೆಗೆದು ಒಂದೇ ಉಸಿರಿನಲ್ಲಿ ಬರೆಯಲಾರಂಭಿಸಿದಾಗ ಮುಂಜಾನೆ ಒಂದು ಗಂಟೆ. ಕಥೆ ಮುಗಿಸಿದ್ದು ಮುಂಜಾನೆ ಐದು ಗಂಟೆಗೆ! ಆಗ ಬಾನಲ್ಲಿ ಸೂರ್ಯ ಎದ್ದು ಕೂತು ಮೈ ಮುರಿಯಲಾರಂಭಿಸಿದ್ದ. + +‘ಬೇರು’ ಕಥಾ ಸಂಕಲನದಿಂದ ‘ವರ್ಜಿನ್ ಮೊಹಿತೊ’ ವರೆಗೆ ನಾನು ಬರೆದ ಯಾವುದೇ ಕಥೆ ಬಲವಂತವಾಗಿ ಹಡೆದ ಕೂಸಲ್ಲ. ಪ್ರತಿಯೊಂದು ಕಥೆ ಕೂಡ ಅವಾಗಿಯೇ ಬರೆಸಿಕೊಂಡ ತುಣುಕುಗಳು. ಆ ಕಾರಣದಿಂದಲೇ ಕಳೆದ ಇಪ್ಪತೈದು ವರ್ಷಗಳ ಅವಧಿಯಲ್ಲಿ ನನಗೆ ಇಪ್ಪತೈದು ಕಥೆ ಕೂಡ ಬರೆಯಲು ಸಾಧ್ಯವಾಗದೇ ಇರುವುದು. ಹಾಗೆಂದ ಕೂಡಲೇ ಬರೆದ ಕಥೆಗಳೆಲ್ಲ ಶ್ರೇಷ್ಠ ಅಥವಾ ಅತ್ಯುತ್ತಮ ಕಥೆಗಳು ಎಂಬ ಭ್ರಮೆ ನನಗಿಲ್ಲ. ಒಬ್ಬ ನಿಜವಾದ ಕಥೆಗಾರ ಅಥವಾ ಯಾವುದೇ ಸೃಜನಶೀಲ ಲೇಖಕ ಅನುಭವಿಸುವ ‘ಸೃಜನಶೀಲ ಸ್ಖಲನ’ದ ಮುಂದೆ ಶ್ರೇಷ್ಠತೆಯ ವ್ಯಸನಗಳು ನಶ್ವರ. ಯಾವುದೇ ಒಂದು ಸೃಜನಶೀಲ ಕ್ರಿಯೆ ಮುಗಿದ ತತ್ ಕ್ಷಣ ಸಿಗುವ ಆ ಒಂದು ಕ್ಷಣದ ‘ಆ ಸುಃಖ’ ಅನುಭವಿಸಿದವರಿಗೆ ಮಾತ್ರ ಗೊತ್ತು. ಅದನ್ನು ಬಿಟ್ಟು ಆನಂತರ ಬರುವ ತೆಗಳಿಕೆ, ಹೊಗಳಿಕೆ, ಅಪ್ರಶಸ್ತಿ, ಪ್ರಶಸ್ತಿಗಳು… ಒಂದು ನಿಜವಾದ ಸೃಜನಶೀಲ ಮನಸ್ಸಿಗರ ಅಂತಹ ಪರಿಣಾಮ ಬೀರುವುದಿಲ್ಲ ಮತ್ತು ಬೀರಲೂ ಬಾರದು. ನನ್ನ ಮೇಲಂತೂ ಆ ಯಾವುವೂ ಯಾವುದೇ ಪರಿಣಾಮ ಬೀರಿಲ್ಲ. ಇನ್ನು ಮುಂದೆ ಕೂಡ ಬೀರಲಾರವು. + +ಒಬ್ಬ ಸೃಜನಶೀಲ ಲೇಖಕ, ಕಲಾವಿದ, ಸಂಗೀತಗಾರ… ಯಾರೇ ಆಗಲಿ, ಯಾರಿಗಾಗಿ ಸೃಜನಶೀಲ ಕ್ರಿಯೆಯಲ್ಲಿ ತನ್ಮಯನಾಗುತ್ತಾರೆ? ಎಂಬ ಪ್ರಶ್ನೆಗೆ ಇರುವ ಒಂದೇ ಒಂದು ಉತ್ತರ, ‘ಅವನಿಗಾಗಿ ಅಥವ ಅವಳಿಗಾಗಿ.’ ಒಬ್ಬ ಕಥೆಗಾರನನ್ನೇ ತೆಗೆದುಕೊಂಡರೆ ಕಥೆ ಹುಟ್ಟುವ, ಬರೆಯುವ, ಸ್ಖಲನದ ಸುಃಖ ಅನುಭವಿಸುವುದು ಆತನಿಗೆ ಮುಖ್ಯವಾಗಿರುತ್ತದೆ. ಅದಕ್ಕಿಂತ ಮೊದಲಿನ ಹಾಗೂ ಆನಂತರದ ಗಳಿಗೆಗಳು ಕಥೆಗಾರನ ಪಾಲಿಗೆ ಅಷ್ಟು ಮುಖ್ಯವಾಗುವುದಿಲ್ಲ. ಅಂತಹ ಒಂದು ಸನ್ನಿವೇಶದಲ್ಲಿ ಎರಡನೇ ಬಾರಿಗೆ ನಾನೀಗ ನಿಂತಿದ್ದೇನೆ. + +ಅದೃಷ್ಟವೋ ಅಥವ ದುರಾದೃಷ್ಟವೋ, ‘ವರ್ಜಿನ್ ಮೊಹಿತೊ’ದ ಯಾವುದೇ ಕಥೆ ಇದುವರೆಗೆ ಎಲ್ಲಿಯೂ ಪ್ರಕಟವಾಗಿಲ್ಲ. ‘ಬೊಂಬಾಯಿ ಪೆಟ್ಟಿಗೆ’ಯನ್ನು ಪ್ರಕಟಿಸುವಂತೆ ಎರಡು ದಿನ ಪತ್ರಿಕೆಗಳ ಭಾನುವಾರದ ಪುರವಣಿ ವಿಭಾಗದ ಸಂಪಾದಕರ ಬಳಿ ಕೇಳಿಕೊಂಡೆ. ಆ ಎರಡೂ ಆತ್ಮೀಯ ಗೆಳೆಯರು ಕಥೆಯನ್ನು ಓದಿ ಮೆಚ್ಚುಗೆ ಕೂಡ ಸೂಚಿಸಿದರು. ಒಬ್ಬ ಪ್ರಧಾನ ಸಂಪಾದಕರಂತೂ, “ಕಥೆ ಓದಿದ ಕೂಡಲೇ ಯಶವಂತ ಚಿತ್ತಾಲರು ನೆನಪಾದರು” ಎಂದು ಕೂಡ ಮನಸ್ಸು ಬಿಚ್ಚಿ ಹೇಳಿದರು, ಉತ್ಸಾಹ ತುಂಬಿದರು. ಆದರೆ, “ಹೆಚ್ಚೆಂದರೆ ಎಂಟುನೂರು ಪದಗಳು. ಅದಕ್ಕಿಂತ ಜಾಸ್ತಿ ಇದ್ದರೆ ಪ್ರಕಟಿಸಲು ಆಗುವುದಿಲ್ಲ” ಎಂಬ ಪ್ರಾಮಾಣಿಕ ಉತ್ತರ ಅವರಿಂದ ಬಂತು. ಮತ್ತೊಬ್ಬರು, “ಒಂದು ಕೆಲಸ ಮಾಡಿ ಸರ್! ನಿಮ್ಮ ಕಥೆಯನ್ನ ಎಂಟುನೂರು ಪದಗಳಿಗೆ ಎಡಿಟ್ ಮಾಡಿ ಕಳುಹಿಸಿ” ಎಂಬ ಅಮೋಘ ಸಂದೇಶ ನೀಡಿದರು. “ಏನು ಸ್ವಾಮಿ, ಎಡಿಟ್ ಮಾಡೋಕೆ ಕಥೆಯೇನು ಲೇಖನವೇ? ಲೇಖನಗಳನ್ನಾದರೆ ಎಡಿಟ್ ಮಾಡಬಹುದು. ಆದರೆ, ಕಥೆಗಳನ್ನು ಎಡಿಟ್ ಮಾಡಲಾಗುವುದಿಲ್ಲ. ನನಗಂತೂ ಅದು ಸಾಧ್ಯವಿಲ್ಲ. ನನ್ನನ್ನು ಕ್ಷಮಿಸಿಬಿಡಿ” ಎಂದು ನಗು-ನಗುತ್ತಲೇ ಅವರಿಗೆ ಉತ್ತರ ನೀಡಿದ್ದೆ. ಪತ್ರಿಕಾ ವ್ಯವಸಾಯದ ಒಳಹೊರಗನ್ನು ಬಲ್ಲ ನನಗೆ ಆ ಆತ್ಮೀಯ ಸ್ನೇಹಿತರಿಬ್ಬರ ಬಗ್ಗೆ ಮರುಕ ಉಂಟಾಯಿತೇ ಹೊರತೂ ಕೋಪ ಉಕ್ಕಲಿಲ್ಲ. + +ಮಾಧ್ಯಮ ಈಗ ಉದ್ಯಮವಾಗಿರುವ ಹಿನ್ನಲೆಯಲ್ಲಿ ಸಂಪಾದಕರ ಸ್ಥಾನ ‘ಬ್ರಾಂಡಿಂಗ್ ಡಿರೆಕ್ಟರ್’ಗಳ ಕಪಿಮುಷ್ಟಿಯಲ್ಲಿ ಸಿಕ್ಕಿ ನರಳುತ್ತಿದೆ. “ಯಾಕ್ರೀ ಅಷ್ಟೊಂದು ದೊಡ್ಡ-ದೊಡ್ಡ ಲೇಖನ, ಕಥೆ ಹಾಕಿ ಜಾಗ ಹಾಳು ಮಾಡ್ತೀರಾ? ಯಾರೀ ಓದುತ್ತಾರೆ ಅವನ್ನ. ನಾವು ತರೋ ಜಾಹೀರಾತುಗಳಿಗೆ ಒಗ್ಗುವ ರೀತಿಯಲ್ಲಿ ಸಣ್ಣ-ಸಣ್ಣ ಲೇಖನಗಳು ಅಥವಾ ಕಥೆ ಪ್ರಕಟಿಸಿ. ಈಗ ಎಲ್ಲವೂ ಷಾರ್ಟ್ ಅಂಡ್ ಸ್ವೀಟ್ ಆಗಿರಬೇಕು. ಯಾರೀ ನಿಮ್ಮ ಪುರಾಣ ಓದುತ್ತಾರೆ?” ಎಂಬ ಮಾತುಗಳನ್ನು ಮ್ಯಾನೇಜ್ಮೆಂಟ್ ಸಭೆಗಳಲ್ಲಿ ನನ್ನ ಕಿವಿಗಳೇ ಕೇಳಿಸಿಕೊಂಡಿವೆ. ಒಬ್ಬ ಸಂಪಾದಕ ಮಿತ್ರರಂತೂ, “ನಮ್ಮ ಮಾಲೀಕರಿಗೆ ಕಥೆ-ಕವಿತೆ ಅಂದ್ರೆ ಅಲರ್ಜಿ. ಪುಸ್ತಕಗಳ ವಿಮರ್ಶೆ ಅಂದರೆ ಕೋಪ ಬರುತ್ತೆ. ಅವುಗಳ ಬದಲು ಬಾಬಾ ರಾಮದೇವ, ರವಿಶಂಕರ್ ಗುರೂಜಿ, ನಿತ್ಯಾನಂದನ ಬಗ್ಗೆ ಒಳ್ಳೆ ಲೇಖನ ಬರೆದು ಪ್ರಕಟಿಸಿ ಎಂಬ ಆದೇಶ ನೀಡಿದ್ದಾರೆ” ಎಂದು ಗುಟ್ಟಾಗಿ ಹೇಳಿಕೊಂಡಿದ್ದರು. ಈಗಂತೂ ಭಾನುವಾರದ ಪುರವಣಿಗಳಲ್ಲಿ ಕಥೆ ಹಾಗೂ ಕವನ ಕ್ಯೂಆರ್ ಕೋಡ್ ಆಗಿ ಪರಿವರ್ತನೆಗೊಂಡು ಬಿಟ್ಟಿವೆ! + +ಅವೆಲ್ಲವನ್ನೂ ಕೇಳಿ, ಅನುಭವಿಸಿ, ತಿರಸ್ಕಾರಕ್ಕೆ ಒಳಗಾದ ಮೇಲೆ ಇಲ್ಲಿರುವ ಯಾವುದೇ ಕಥೆಯನ್ನು ಪತ್ರಿಕೆ ಅಥವಾ ನಿಯತಕಾಲಿಕಗಳಿಗೆ ತಿರುಗಿ ಕಳುಹಿಸುವ ಧೈರ್ಯ ಮಾಡಲಿಲ್ಲ. ಆ ನಿರಾಳ ಮನೋಭಾವದಿಂದಲೇ ‘ವರ್ಜಿನ್ ಮೊಹಿತೊ’ವನ್ನು ‘ಪ್ರಕಾಶ’ಕರ ಕೈಗೆ ತಲುಪಿಸುವುದು ಮಾತ್ರ ನನ್ನ ಕರ್ತವ್ಯ ಎಂದುಕೊಂಡೆ. ಅವರು ಪ್ರಕಟಿಸಿದಲ್ಲಿ ಅದು ಓದುಗರ, ಸಾಹಿತ್ಯಾಸಕ್ತರ ಕೂಸು; ಇಲ್ಲವಾದಲ್ಲಿ ಇಲ್ಲ ಎಂದುಕೊಂಡಿದ್ದೆ. ಅದೀಗ ಸಾಧ್ಯವಾಗಿದೆ. ಈ ನಡುವೆ ಆಷಾಢದ ಮಳೆಯ ನಡುವೆ ಮಿಂದೆದ್ದ ಸುಃಖ ಮಾತ್ರ ನನ್ನದು. + + + +ಒಬ್ಬ ಕಥೆಗಾರನ ಬದುಕು ಧನ್ಯವಾಗಲು ಆಗೊಮ್ಮೆ-ಈಗೊಮ್ಮೆ ಇಂತಹ ಸುಃಖ-ಸಮಾಧಾನ ಸಿಕ್ಕರೆ ಸಾಕು. ಉಳಿದಂತೆ ಎಲ್ಲ ಸೃಜನಶೀಲ ಕೃತಿಗಳು ಓದುಗರು, ಕೇಳುಗರು ಅಥವಾ ನೋಡುಗರ ಆಸ್ತಿ. ಆ ಭಾವನೆಗಳನ್ನೇ ತುಂಬಿಕೊಂಡು ‘ವರ್ಜಿನ್ ಮೊಹಿತೊ’ವನ್ನು ನಿಮ್ಮ ಕೈಗೆ ತಲುಪಿಸುತ್ತಿದ್ದೇನೆ. ಈ ಸಂಕಲನದಲ್ಲಿರುವ ಕಥೆಗಳನ್ನು ಓದುಗ ಮಹಾಪ್ರಭುಗಳಾದ ನೀವು ಇಷ್ಟ ಪಟ್ಟರೆ, ಒಂದೆರಡು ಉತ್ಸಾಹದ ಮಾತುಗಳನ್ನಾಡಿದರೆ, ಒಂದಿಷ್ಟು ಟೀಕಿಸಿದರೆ ನನ್ನೊಡಲಲ್ಲಿ ಮತ್ತೊಂದಿಷ್ಟು ಕಥೆಗಳು ಹುಟ್ಟಲು ಸಹಾಯವಾಗಬಹುದು. ಆ ಮೂಲಕ ನಾನು ಮತ್ತೆ-ಮತ್ತೆ ಜೀವಂತವಾಗಿ ಬದುಕಲು ನೀವು ನೆರವು ನೀಡಬಹುದು.ವಂದನೆಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_298.txt b/Kenda Sampige/article_298.txt new file mode 100644 index 0000000000000000000000000000000000000000..6d0f3e0e8dee7832054246eb6e8807ad9d8b3328 --- /dev/null +++ b/Kenda Sampige/article_298.txt @@ -0,0 +1,247 @@ + + +ಓದೋಣವೆಂದರೆ ಕತ್ತಲಾಗಿತ್ತು. ದೀಪ ಹಚ್ಚೋಣವೆಂದರೆ ಬೆಳಕಿತ್ತು. ತಿರುಗಾಡಲಿಕ್ಕೆ ಹೋಗೋಣವೆಂದರೆ ಹೊತ್ತು ಮೀರಿತ್ತು. ರಾಗದ ಪೆಟ್ಟಿಗೆಯನ್ನಾದರೂ ಬಾರಿಸಿ ಕಾಲಹರಣ ಮಾಡೋಣವೆಂದರೆ ಕೇಸರಿ ಆಗಲೇ ಆ ಕರಕರೆ ಈಗ ಬೇಡ ಎಂದು ಆಜ್ಞಾಪಿಸಿದ್ದಳು. ಹೀಗಾಗಿ ಏನು ಮಾಡಬೇಕೆಂದು ತೋಚದೆ ಕುರ್ಚಿಯಲ್ಲಿ ಚಡಪಡಿಸುತ್ತಾ ಕುಳಿತಿದ್ದೆನು. ಕೇಸರಿಯಾದರೋ ಸ್ವಲ್ಪ ದೂರದಲ್ಲಿ ತನ್ನ ಕೆನ್ನೆಯನ್ನು ಕೈಯಲ್ಲಿ ಆನಿಸಿ ಕುಳಿತುಕೊಂಡು, ಕಿಟಕಿಯ ಬಳಿಯಲ್ಲಿರುವ ಮಾವಿನ ಮರಕ್ಕೆ ಎಷ್ಟು ಎಲೆಗಳಿವೆ ಎಂದು ಲೆಕ್ಕಹಾಕುವುದರಲ್ಲಿ ಮಗ್ನಳಾಗಿದ್ದಳು. + +ಅಷ್ಟರೊಳಗೆ ನಾಗಣ್ಣ ಬಂದೇಬಿಟ್ಟನು. ದಾರಿಯಲ್ಲಿ ನಮ್ಮ ಸರ್ವೋತ್ತಮ ನಾಯಕನು ಸಿಕ್ಕಿದನು…. ಎಂದ ನಾಗಣ್ಣ. + +“ನಮ್ಮ ಸರ್ವೋತ್ತಮ ನಾಯಕನು! ಯಾರಪ್ಪಾ, ಅದು?” + +“ಏನು, ನಮ್ಮೂರಿನ ಸರ್ವೋತ್ತಮ ನಾಯಕನ ಹೆಸರನ್ನು ಕೇಳಿಲ್ಲವೆ? ಇದು ನಿಜವಾಗಿಯೂ ಆಶ್ಚರ್ಯ! ಅವನಂತಹ ಸದ್ಗುಣಶಾಲಿಯಾದ ಬೇರೊಬ್ಬ ಮನುಷ್ಯನನ್ನು ನಾನು ಇನ್ನೂ ನೋಡಬೇಕಷ್ಟೇ –” + +“ಮನೆಯ ಗುಡಾಣಗಳಲ್ಲಿ ಹಣ ತುಂಬಿಸಿದವರಲ್ಲೊಬ್ಬರೆಂದು ಕಾಣುತ್ತದೆ” ಎಂದು ಕೇಸರಿಯನ್ನು ನೋಡಿ ಹೇಳಿದೆನು. + +“ಹೌದು, ಆದರೆ ಧನಾಢ್ಯನಾದರೇನು? ಗರೀಬನಾದ ನನ್ನಂಥವರ ಪರಮ ಮಿತ್ರನು. ಅಂತಹ ಸದ್ಗುಣಶಾಲಿಯ ಕೂಡ ಲಕ್ಷ್ಮೀದೇವಿಯೂ ಕೂಡಿದರೆ ಬಂಗಾರಕ್ಕೆ ಒಪ್ಪೆ ಹಾಕಿದಂತಾಗುವುದಿಲ್ಲವೆ?” + +ನಾಗಣ್ಣ ಮುಂದುರಿಸಿದನು, “ಸರ್ವೋತ್ತಮನಾಯಕನು ಯಾವಾಗಲೂ ಹೀಗಿರಲಿಲ್ಲ. ಎಂಟು ವರ್ಷಗಳ ಕೆಳಗೆ ಅವನು ಕಡುಲೋಭಿಯೆಂದು ಎಲ್ಲರ ಅವಹೇಳನೆಗೆ ಪಾತ್ರನಾಗಿದ್ದನು. ಹೆಚ್ಚೇಕೆ, ಎಂಟು ವರ್ಷಗಳ ಕೆಳಗೆ ಬಡಜನರ ರಕ್ತವನ್ನೇ ಹೀರಿಕೊಂಡು ಬಾಳುವ ಒಂದು ಕೊಬ್ಬಿದ ತಗಣೆಯೆಂದು ನಾನೇ ಅವನನ್ನು ಎಷ್ಟೋ ಸಾರಿ ದೂಷಿಸಿದ್ದೇನೆ. ಆದರೆ ಮನುಷ್ಯ ವ್ಯವಹಾರ ವಿಚಿತ್ರವಾದುದು. ಎಂಟು ವರ್ಷಗಳ ಕೆಳಗೆ ಇದ್ದ ಸವೋತ್ತಮ ನಾಯಕನೂ ಎಂಟು ವರ್ಷಗಳಿಂದೀಚೆಗೆ ಅದೇ ಜಡದೇಹದಲ್ಲಿರುವ ಸವೋತ್ತಮ ನಾಯಕನೂ ಬೇರೆ ಬೇರೆ ಪುರುಷರು. ಇದರಲ್ಲಿ ವಿಚಿತ್ರವೇನು?” + +ನಾನು ಕೇಳಿದೆ, “ಎಂಟು ವರ್ಷಗಳ ಕೆಳಗೆ ಬಡಜನರ ರಕ್ತವನ್ನೇ ಹೀರಿಕೊಂಡು ಕೊಬ್ಬಿದ ತಗಣೆಯಾಗಿದ್ದ ನಿನ್ನ ಅಲ್ಲ, ನಮ್ಮ ಸರ್ವೋತ್ತಮ ನಾಯಕರಿಗೆ ಯಾರು ಪುನರ್ಜನ್ಮ ಕೊಟ್ಟರು?” + +“ಅದನ್ನು ಕೇಳುತ್ತಿಯೋ? ಸನ್ 1919 ರಲ್ಲು ನಮ್ಮ ಜಿಲ್ಲೆಯಲ್ಲಿ ಅಕ್ಕಿಗೆ ಒದಗಿದ ಘೋರ ಬರಗಾಲ! ಮತ್ತು ಆಗ್ಗೆ ಇನ್ನೂ ಮೊಳಕೆಯಲ್ಲಿದ್ದ ಏಳು ವರ್ಷದ ಒಬ್ಬ ಬಾಲಿಕೆ!” + +“ಪರಶುರಾಮನ ಸೃಷ್ಟಿಯಾದ ನಮ್ಮ ಜಿಲ್ಲೆಯಲ್ಲಿ ಬರಗಾಲವೇ? ಮತ್ತೇನು ಹೇಳುತ್ತೀ, ನಾಗಣ್ಣ?” + +“ಕೇಸರಿ! ಕಲಿಯುಗದಲ್ಲಿ ಜನರ ನೆನಪು ಕ್ಷೀಣವಾಗುತ್ತಾ ಬರುವುದು ಕಲಿಯುಗದೊಂದು ವಿಶೇಷವಾದ ಲಕ್ಷಣ. ಹೀಗಿರುವಾಗ್ಗೆ ಎಂಟು ವರ್ಷಗಳ ಕೆಳಗೆ ಈ ಜಿಲ್ಲೆಯಲ್ಲಿ ಸಂಭವಿಸಿದ ಘೋರ ಬರಗಾಲದ ನೆನಪು ನಿಮಗಿರುವುದು ಹೇಗೆ?” + +“ನಾಗಣ್ಣ , ನೀನು ಕೇಸರಿಯನ್ನು ದೂರಿ ಪ್ರಯೋಜನವಿಲ್ಲ. ಆಗ್ಗೆ ನಾವಿಬ್ಬರೂ ಮದ್ರಾಸಿನಲ್ಲಿದ್ದೆವು. ದಕ್ಷಿಣ ಕನ್ನಡದ ಗಂಧಗಾಳಿ ಕೂಡ ನಮಗೆ ಸೋಂಕಿದ್ದಿಲ್ಲ. ನಾನಾದರೋ ವಾರ್ತಾಪತ್ರಿಕೆಗಳಿಂದ ಈ ಜಿಲ್ಲೆಯಲ್ಲೊಂದು ಅಪರೂಪವಾದ ಬರಗಾಲ ಸಂಭವಿಸಿತೆಂದು ಓದಿ ತಿಳಿದಿದ್ದೆನು. ಅಷ್ಟಾದರೂ ಪ್ರತಿವರ್ಷವೂ ಅನಂತಪುರ, ಬಳ್ಳಾರಿ ಮೊದಲಾದ ಜಿಲ್ಲೆಗಳಲ್ಲಿ ಸಂಭವಿಸುತ್ತಿರುವ ಬರಗಾಲದ ಪರಿಣಾಮ ಈ ಜಿಲ್ಲೆಯಲ್ಲಿ ಮುಟ್ಟಲಿಲ್ಲವೆಂತಲೇ ಭಾವಿಸಿದ್ದೆನು… + +“ಪರಿಣಾಮ ಗಿರಿಣಾಮ – ನನಗೇನೂ ತಿಳಿಯದು. ಅಲ್ಪಕಾಲದಲ್ಲಿಯೇ ಜಿಲ್ಲೆಯೊಳಗೆಲ್ಲಾ ಕ್ಷಾಮದೇವತೆ ಅತ್ಯಂತ ಭಯಂಕರಳಾಗಿ ವ್ಯಾಪಿಸಿಕೊಂಡಳು. ಐದಾರು ರೂಪಾಯಿಗೆ ಸಿಗುತ್ತಿದ್ದ ಅಕ್ಕಿಮುಡಿಯೊಂದು ಇಪ್ಪತ್ತು ರೂಪಾಯಿ ಕೊಟ್ಟರೂ ಸಿಗಲಾರದೆ ಹೋಯಿತು. ಯುದ್ಧದ ದೆಸೆಯಿಂದ ನಾಗಾಲೋಟದಿಂದ ಏರಿದ ಜಿನಸು ದವಸಗಳ ಕ್ರಯ ನಾಲ್ಕು ಬಾರಿಯಾಗಿ ಏರಿತು. ಹುಟ್ಟಿದಾರಭ್ಯದಿಂದ ಕ್ಷಾಮವೆಂದರೇನೆಂದರಿಯದ ನನ್ನಂಥವರಿಗೆ ಕ್ಷಾಮದೇವತೆಯ ಅತ್ಯಂತ ಗೆಳೆತನ ಲಭಿಸಿತು. ದಿನಕ್ಕೆ ಒಂದುಬಾರಿ ಊಟಮಾಡುವುದು ಕಷ್ಟವಾಯಿತು. ಹೀಗಿರುವಾಗ ದಿನಗೂಲಿಯವರ ಪಾಡೇನು? ನನ್ನಂತಹ ಮುದಿಗೂಬೆಗಳ ಪಾಡೇನು? ದೊಡ್ಡ ದೊಡ್ಡ ಕುಟುಂಬಗಳನ್ನು ಬೆಳೆಯಿಸಿಕೊಂಡು ತಿಂಗಳಿಗೆ ಹತ್ತಿಪ್ಪತ್ತು ರೂಪಾಯಿಯೊಳಗೆ ಜೀವಿಸಬೇಕಾಗಿದ್ದ ಬಡ ಗೃಹಸ್ಥರ ಪಾಡೇನು? ಅರವಿಂದಾ, ನೀನೇ ಆಲೋಚಿಸು!” + +ಆಲೋಚಿಸಲಿಕ್ಕೆ ಕೇಸರಿ ನನಗೆ ಆಸ್ಪದವನ್ನು ಕೊಡಲಿಲ್ಲ. ಬರಗಾಲದ ಕಾರಣವನ್ನೇ ಅವಳು ನಾಗಣ್ಣನ ಕೂಡೆ ಕೇಳಿದಳು. + +“ಕಾರಣವೇ? ಕಾರಣವೇನು – ದೈವ ಇಚ್ಛೆಯೇ! ಮತ್ತೇನು! ಅಕ್ಕಿಯ ಬೆಳೆಗೆ ಅತಿ ಪ್ರಾಮುಖ್ಯವಾದ ಮಳೆಯೇ ಕ್ಲಪ್ತ ಸಮಯದಲ್ಲಿ ಬಾರದಿದ್ದರೆ ರೈತರು ಬೆಳೆಯನ್ನು ಮಾಡುವುದರಲ್ಲಿ ಎಷ್ಟು ಚುಟುವಟಿಕೆಯುಳ್ಳವರಾದರೂ ಪ್ರಯೋಜನವೇನು? ಸಾಗುವಳಿಯ ಕೆಲಸ ಯೋಗ್ಯ ರೀತಿಯಲ್ಲಿ ಕೈಗೂಡಿಬರುವಂತೆ ಮಳೆಗಾಲದ ನೀರನ್ನು ಒಟ್ಟುಗೂಡಿಸುವಂತಹ ದೊಡ್ಡ ದೊಡ್ಡ ಕೆರೆಗಳೂ, ಕಾಲುವೆಗಳೂ ನಮ್ಮ ಜಿಲ್ಲೆಯಲ್ಲಿ ಇನ್ನೂ ಇಲ್ಲವಷ್ಟೇ? + +ಕ್ಲಪ್ತಸಮಯದಲ್ಲಿ ಮಳೆ ಬಾರದೆ ಇದ್ದುದನ್ನು ನೋಡಿ ನಾವೆಲ್ಲರೂ ಹತಾಶರಾದೆವು. ಆಗಲೇ ಕ್ಷಾಮದೇವತೆ ತನ್ನ ಭೀಕರವಾದ ನೋಟವನ್ನು ನಮ್ಮ ಕಡೆಗೆ ತಿರುಗಿಸಿದಂತೆ ತೋರಿಬಂತು. ರೈತರಿಗಾದರೋ ಕ್ಷಾಮ ದೇವತೆಯೊಂದಿಗೆ ಇನ್ನೊಂದು ಭೀಕರವಾದ ದೇವತೆಯೂ ತೋರಿಬಂದಳು. ಅವಳ್ಯಾರಂದರೆ – ಕಂದಾಯ ದೇವತೆಯೇ! + +ಕ್ಷಾಮದೇವತೆಯನ್ನು ಒಲಿಸುವುದಕ್ಕೆ ದೈವ ಸಹಾಯವಲ್ಲದೆ ಲೌಕಿಕ ಸಹಾಯ ಅಷ್ಟೊಂದು ಆಗಲಾರದು. ಅದರ ಕಂದಾಯ ದೇವತೆಯನ್ನಾದರೂ ಸರಕಾರ ದೇವರಿಗೂ ಪೂಜಾರಿಗೂ ಯಥೋಚಿತ ಪ್ರಾರ್ಥನೆ ಕಾಣಿಕೆಗಳನ್ನರ್ಪಿಸಿ ತೃಪ್ತಿಪಡಿಸಬಹುದಲ್ಲವೇ? ಆದುದರಿಂದ ಕಂದಾಯ ದೇವತೆಗಾಗಿ ಸರಕಾರ ದೇವರಿಗೆ ಕೂಡಲೇ ಮಂತ್ರೋಚ್ಛಾರಣೆಗಳೂ, ಪ್ರಾರ್ಥನೆಗಳೂ ನೆರವೇರಿದುವು. ಸರಕಾರ ದೇವರು ಪ್ರತ್ಯಕ್ಷರಾದರು – ಅದೂ ಒಂದು ಆಶ್ಚರ್ಯ – ಮತ್ತು ಕಂದಾಯ ದೇವತೆಗಾಗಿ ಅಭಯವನ್ನಿತ್ತರು. + +ಇದಾದ ಕೂಡಲೇ ರೈತರು ಕ್ಷಾಮ ದೇವತೆಗಾಗಿ ಮಾತ್ರ ಮೊರೆಯಿಟ್ಟು ತಮ್ಮ ತಮ್ಮ ಬೆಳವಣಿಗೆಯ ಕೆಲಸವನ್ನು ಸಾಕಷ್ಟು ಉತ್ಸಾಹದಿಂದ ಕೈಗೊಳ್ಳುವವರಾದರು. ಅವರ ಪ್ರಯತ್ನಗಳು ಅನೇಕ ಮಟ್ಟಿಗೆ ಸಫಲವಾದುವೆಂತಲೇ ಹೇಳಬಹುದು. ನಮ್ಮ ಜಿಲ್ಲೆಯಲ್ಲಿ ಇತರ ವರ್ಷಗಳಲ್ಲಿ ಆಗುವಷ್ಟು ಬೆಳೆ ಈ ವರ್ಷದಲ್ಲಿ ಆಗದಿದ್ದರೂ ಸಂತೋಷ ಪಟ್ಟೆವು. ನಮ್ಮನ್ನು ತೃಪ್ತಿಪಡಿಸಿ ಇತರ ಜಿಲ್ಲೆಗಳಿಗೆ ಕಳುಹಿಸಲಿಕ್ಕೆ ಮಾತ್ರ ಬೇಕಾದಷ್ಟು ಬೆಳೆಯಾಗಿರಲಿಲ್ಲ. ಆದರೆ ಅದರಿಂದ ನಮಗೇನು? ನಮ್ಮ ಉಪಯೋಗಾರ್ಥವಾಗಿ ತಕ್ಕಷ್ಟು ಬೆಳೆಯಾಯಿತಲ್ಲವೇ? ಅಂತೇ ನಮ್ಮ ಸಂತುಷ್ಟಿ …” + +“ಆದರೂ ಕ್ಷಾಮ ಒದಗಿತೇ?” + +“ಹೌದು, ಕೇಸರಿ ನಮ್ಮ ಸಂತೋಷ ಅಲ್ಪಕಾಲವೇ ಬಾಳುವಂತಾಗಿತ್ತು. ನಮಗೆಲ್ಲರಿಗೆ ಬೇಕಾಗುವಷ್ಟು ಬೆಳೆಯಾಗಿದೆಯೆಂದು ತಿಳಿದುಕೊಂಡು ಸರಕಾರ ಕಂದಾಯ ದೇವತೆಗಾಗಿ ಅಭಿಯವನ್ನಿತ್ತ ತನ್ನ ಪ್ರತಿಜ್ಞೆಯನ್ನು ಹಿಂತೆಗೆದು ಕಂದಾಯವನ್ನು ಎಂದಿನಂತೆ ತೆರೆಬೇಕೆಂತಲೇ ನಿರ್ಧರಿಸಿತು.” + +“ಸರಕಾರವು ಹಾಗೆ ಮಾಡಬಹುದಿತ್ತೇ?” + +“ಕೇಳುವವರ್ಯಾರು? ಸರಕಾರ ಹೊಡೆದ ಈ ಅಂತರ್ಲಾಗದ ನ್ಯಾಯಾ ನ್ಯಾಯಗಳನ್ನು ವಿಚಾರಿಸಲಿಕ್ಕೆ ನಾನು ಅರ್ಹನಲ್ಲ. ಆದರೆ ಸರಕಾರ ಕಂದಾಯವನ್ನು ತೆರಬೇಕೆಂದು ಪುನಃ ನಿರ್ಧರಿಸುವಾಗಲೇ ಅಕ್ಕಿ ನಮ್ಮ ಜಿಲ್ಲೆಯಿಂದ ಇತರ ಪ್ರದೇಶಗಳಿಗೆ ಹೋಗದಿರುವಂತೆ ನೋಡಿಕೊಂಡಿದ್ದರೆ ಎಲ್ಲವೂ ಸರಿಯಾಗುತ್ತಿತ್ತು. ನಾವು ಆ ವರ್ಷ ಬರಗಾಲದಿಂದ ಅಷ್ಟು ಕಷ್ಟ ಪಡಬೇಕಾಗಿರಲಿಲ್ಲ. ಆದರೆ ಸರಕಾರ ಎಂದಿನಂತೆ ತಾನು ಮಾಡಬಾರದುದನ್ನೇ ಮಾಡಿಬಿಟ್ಟಿತು. ಇತ್ತ ಕಂದಾಯ ತಗಾದೆಗೆ ಪ್ರಾರಂಭಿಸಿತು. ಅತ್ತ ಜಿಲ್ಲೆಯೊಳಗಣ ಅಕ್ಕಿಯೆಲ್ಲ ಇತರ ಪ್ರದೇಶಗಳಿಗೆ ರಫ್ತಾಗುವುದನ್ನೂ ತನ್ನ ಅರೆನೋಟದಿಂದ ನೋಡಿ ತಟಸ್ಥವಾಯಿತು. ಇದರಿಂದ ನನ್ನಂತಹ ಬಡಜನರಿಗೆ ಘೋರ ಶನಿದಶೆ ಪ್ರಾಪ್ತವಾಯಿತು. ಆದರೆ ಬೆಳೆ ಕಟಾವಾದ ಕೂಡಲೇ ಜಿಲ್ಲೆಯೊಳಗಣ ಅಕ್ಕಿಯನ್ನೆಲ್ಲ ಶೇಖರಿಸಿಟ್ಟಿದ್ದ ಸಾಹುಕಾರರಿಗೆ ಬುಧದೆಶೆ ಪ್ರಾರಂಭವಾಗಿ ‘ಗಜಕೇಸರಿ ಯೋಗ’ ಬಂತು. + +“ಸರಕಾರವೇನೋ ಮಾಡಬಾರದುದನ್ನೇ ಮಾಡಿಬಿಟ್ಟಿತು. ಆದರೆ ಸಾಹುಕಾರರಾದರೋ ತಮ್ಮ ವೃತ್ತಿಸ್ವಭಾವವನ್ನು ಅನುಸರಿಸಿಯೇ ತಮ್ಮ ಲಾಭದ ಕಾರ್ಯವನ್ನು ಸಾಗಿಸಿದರು. ಆದುದರಿಂದ ಸಾಹುಕಾರರ ಕೂಡೆಯೂ ನನಗೆ ಜಗಳವಿಲ್ಲ. ಆದರೆ ಗುಂಡಪ್ಪನ ಮತ್ತು ಕಲ್ಲಪ್ಪನ ನಡುವೆ ಸಿಕ್ಕಿ ಮೆಣಸಪ್ಪ, ಪುಡಿ, ಹಾಗೆಯೇ ಸರಕಾರ ಸಾಹುಕಾರರ ಮಧ್ಯೆ ನಮ್ಮ ಜಿಲ್ಲೆಯ ಬಡ ಮನುಷ್ಯರು ಪುಡಿಪುಡಿಯಾದರು. + +“ಯಾವ ದೇಶದಲ್ಲಿಯಾದರೂ ಸರಿ. ಕ್ಷಾಮದೇವತೆ ಒಮ್ಮೆ ತನ್ನ ಮುಖವನ್ನು ತೋರಿಸಿದೊಡನೆಯೇ ಅಲ್ಲಿಯ ಜನರು ಅಲ್ಲಿಂದ ಗುಂಪು ಗುಂಪಾಗಿ ಪಲಾಯನ ಮಾಡಿ ಇತರ ಪ್ರದೇಶಗಳಿಗೆ ಹೋಗಿ ಅಲ್ಲಿ ಹರಿನಾಮ ಸ್ಮರಣೆ ಮಾಡುತ್ತಾ ಬೇಡಿ ಜೀವಿಸುವುದುಂಟು. ಆದರೆ ನಮ್ಮ ಜನರು ಸಾಧಾರಣವಾಗಿ ಬೇಡುವುದೆಂದರೆ ತುಂಬಾ ಅಸಹ್ಯಪಡುವರು. ಹೀಗಾಗಿ ಆ ವರ್ಷ ನಮ್ಮ ಜಿಲ್ಲೆಯಲ್ಲಿ ಕ್ಷಾಮದೇವತೆ ಕಾಲುಗಳನ್ನು ಉದ್ದವಾಗಿ ಚಾಚಿ ನೆಲವನ್ನು ಊರಿ ಕುಳಿತುಕೊಂಡಿದ್ದರೂ ನಮ್ಮ ಜನರು ತಮ್ಮ ತಮ್ಮ ಸ್ಥಾನದಿಂದ ಸ್ವಲ್ಪವಾದರೂ ಕದಲಲಾರದೆ ಹೋದರು. ಆಶ್ಚರ್ಯವಲ್ಲ. ಜಿಲ್ಲೆಯಲ್ಲಿ ಕ್ಷಾಮವಿದ್ದರೇನು? ನಮ್ಮ ಸಾಹುಕಾರರ ಭಂಡಸಾಲೆಗಳಲ್ಲಿ ನಮಗೆಲ್ಲರಿಗೆ ಬೇಕಾಗುವಷ್ಟು ಅಕ್ಕಿ ಇದ್ದಿತಲ್ಲವೇ?” + +“ಹಾಗಾದರೆ ಇದೊಂದು ನಿಜವಾಗಿಯೂ ಸೋಜಿಗದ ಬರಗಾಲವು!” + +“ನಿಜ, ಅರವಿಂದಾ; ಆದರೆ ಅದರ ಸೋಜಿಗತನ ನಮಗೆ ಆಗಾಗ್ಗೆ ಅಷ್ಟೊಂದಾಗಿ ಹೊಳೆಯಲಿಲ್ಲ.” + +“ಅದಂತಿರಲಿ ನಾಗಣ್ಣ! ನಿನ್ನ ಕಥೆಯೆಲ್ಲಿ?” + +“ಕಥೆಯೇ? ನಿನಗೆ ಕಥೆ ಬೇಕೇ? ಹಾಗಾದರೆ ಕೇಳು” ಎಂದು ನಾಗಣ್ಣ ಮುಂದುವರಿಸಿದನು : + +“ಬರಗಾಲದ ದೆಶೆಯಿಂದ ಬುಧದೆಶೆ ಪ್ರಾಪ್ತವಾದ ನಮ್ಮ ಮಂಗಳೂರಿನ ಸಾಹುಕಾರರಲ್ಲಿ ಸರ್ವೋತ್ತಮ ನಾಯಕನು ಒಬ್ಬನಾಗಿದ್ದನು. ಇತರ ಜಿಲ್ಲೆಗಳಲ್ಲಿ ಕಳುಹಿಸಲಿಕ್ಕೆಂದು ಅಕ್ಕಿಯನ್ನು ಹೇರಳವಾಗಿ ಶೇಖರಿಸಿದವರಲ್ಲಿ ಅವನೇ ಅದ್ವಿತೀಯನಾಗಿದ್ದನು. ನಮ್ಮೂರಿನ ಇತರ ಸಾಹುಕಾರರೆಲ್ಲರೂ ಸಾಧಾರಣವಾಗಿ ಅವನನ್ನೇ ಮಾದರಿಯಾಗಿಟ್ಟುಕೊಂಡು ತಮ್ಮ ತಮ್ಮ ವಹಿವಾಟುಗಳನ್ನು ನಡೆಸುತ್ತಿದ್ದರು. ಪ್ರಾಯದಲ್ಲಿ ನಾಯಕನೇನೂ ಮುದುಕನಲ್ಲ. ಯೌವನಸ್ಥನೇ. ಆದರೆ ವ್ಯಾಪಾರದಲ್ಲಿ ಬಹಳ ಚತುರನೂ ಅನುಭವಶಾಲಿಯೂ ಆಗಿರುವನು. ಸರಕಾರ ಕಂದಾಯವನ್ನು ತೆರಬೇಕೆಂದು ಪುನಃ ನಿರ್ಧರಿಸಿದಾಗ ಇತರ ಸಾಹುಕಾರರಾದರೋ ಅಕ್ಕಿ ಮುಡಿ ಒಂದಕ್ಕೆ 12 ರೂಪಾಯಿಯ ಮೇಲೆ ಬೆಲೆ ಏರಿಸಲಿಕ್ಕೆ ಧೈರ್ಯಪಡುತ್ತಿದ್ದಿಲ್ಲ. ಆದರೆ ನಾಯಕನಾದರೋ ಲಾಭದ ಮೇಲೆ ದೂರದೃಷ್ಟಿಯನ್ನಿಟ್ಟು ಅಕ್ಕಿಯ ಧಾರಣೆಯನ್ನು ಇಪ್ಪತ್ತು ರೂಪಾಯಿಗೆ ಏರಿಸಿಯೇಬಿಟ್ಟನು; ಮಾತ್ರವಲ್ಲ , ಗೋಣಿ ಗೋಣಿಗಳಿಂದ ಅಕ್ಕಿಯನ್ನು ಮಲಬಾರಿಗೆ ಮಂಜಿಗಳಲ್ಲಿ ಕಳುಹಿಸಲುದ್ಯುಕ್ತನಾದನು. + +“ಇತ್ತ ಸಾಕಷ್ಟು ಅಕ್ಕಿ ಸಿಗದೆ ಉಪವಾಸದಲ್ಲಿರುವ ಬಡ ಜನರ ಗಲಾಟೆ ತೀಕ್ಷ್ಣತೆಯನ್ನು ಹೊಂದುತ್ತಾ ಬಂತು. ಮೊತ್ತ ಮೊದಲು ಹಸಿವೆಯಿಂದ ದೀನರಾಗಿ ಅಕ್ಕಿ ಸಾಹುಕಾರರ ಕಾಲಡಿಗೆ ಬಂದುಬಿಟ್ಟರು. ‘ಅಕ್ಕಿಯನ್ನು ಬೇಡಲಿಕ್ಕೆ ನಾವು ಬಂದಿಲ್ಲ. ಮುಡಿ ಒಂದಕ್ಕೆ ಬೇಕಾದರೆ ಆರು ರೂಪಾಯಿಯಷ್ಟು ಮಾಡಿ. ನಾವು ಮರುಗುವುದಿಲ್ಲ’ ಎಂದು ಅವರು ಹಲವು ವಿಧವಾಗಿ ಬೇಡಿಕೊಂಡರು. ಆದರೆ ಅವರ ಪ್ರಾರ್ಥನೆಗಳಿಗೆ ಸಾಹುಕಾರರು, ‘ನಾವು ಅಕ್ಕಿಯ ಧಾರಣೆಯನ್ನು ತಗ್ಗಿಸಿದರಾಯಿತೆ? ಸರ್ವೋತ್ತಮ ನಾಯಕರನ್ನು ನೋಡಿ. ಅವರು ಮುಡಿ ಒಂದಕ್ಕೆ ಇಪ್ಪತ್ತು ರೂಪಾಯಿಗೆ ಏರಿಸಿ ಎಷ್ಟು ಹಣವನ್ನು ಶೇಖರಿಸುತ್ತಿದ್ದಾರೆ! ಸರ್ವೋತ್ತಮ ನಾಯಕರು ಧಾರಣೆಯನ್ನು ತಗ್ಗಿಸುವುದಾದರೆ ನಾವೂ ಯಥಾಪ್ರಕಾರ ತಗ್ಗಿಸುವೆವು’ ಎಂದರು. ಸರ್ವೋತ್ತಮನಾದರೆ ಧಾರಣೆ ತಗ್ಗಿಸುವನೆ? ‘ನೀವು ಬೇಡಲಿಕ್ಕೆ ಬರುವುದಾದರೆ ಶನಿವಾರ ಬನ್ನಿ. ನಿಮಗೆಂದಿನಂತೆಯೇ ಒಂದೊಂದು ಮುಷ್ಟಿ ಅಕ್ಕಿಯನ್ನು ಹಾಕುವೆನು. ಆದರೆ ಅಕ್ಕಿಯ ಧಾರಣೆಯನ್ನು ತಗ್ಗಿಸಬೇಕೆಂದು ಮಾತ್ರ ನನ್ನೊಡನೆ ಕೇಳಬೇಡಿ. ನಾನು ಅಕ್ಕಿಯ ಭಂಡಸಾಲೆಯನ್ನು ಇಟ್ಟದ್ದು ಧರ್ಮ ಮಾಡಲಿಕ್ಕಲ್ಲ. ಸಾಧ್ಯವಿದ್ದಾಗ ಆದಷ್ಟು ದುಡ್ಡು ಮಾಡಲಿಕ್ಕೆ! ತಿಳಿಯಿತೇನು?’ ಎಂಬ ಪ್ರತ್ಯುತ್ತರವೇ ಆ ಬಡ ಪಾಪಿಗಳಿಗೆ ಅವನಿಂದ ದೊರಕುತ್ತಿತ್ತು. ಎಂತಹ ಪಾಪಿಷ್ಠನಯ್ಯ! + +“ಜನರ ಗಲಾಟೆ ಹೆಚ್ಚೆಚ್ಚಾಗುತ್ತಾ ಬಂತು. ಸವಿನಯ ನುಡಿಗಳಿಗೆ ಕೇಳಲಾರದ ಸರ್ವೋತ್ತಮನನ್ನು ಜನರೆಲ್ಲರೂ ಕಲ್ಲೆದೆಯವನೆಂದು ಶಪಿಸತೊಡಗಿದರು. ಬಾಕಿ ಸಾಹುಕಾರರೆಲ್ಲರೂ ಸರ್ವೋತ್ತಮನನ್ನು ಅನುಸರಿಸಿ ತಮ್ಮ ತಮ್ಮ ಲಾಭದ ಕಾರ್ಯದಲ್ಲಿ ತಲ್ಲೀನರಾದರು. ಮನೆಯಲ್ಲಿ ಅಲ್ಪಸ್ವಲ್ಪ ರೊಕ್ಕವಿದ್ದವರು ಮುಡಿಗೆ ಇಪ್ಪತ್ತು ರೂಪಾಯಿ ಆದರೂ ಕೊಟ್ಟು ಎಂದಿನಂತೆಯೇ ಉಂಡು ತಿಂದು ಸುಖವಾಗಿದ್ದರು. ಕಲೆಕ್ಟರ್ ಸಾಹೇಬರಂತೂ ಊರಲ್ಲಿ ಬರಗಾಲವಿಲ್ಲವೆಂತಲೇ ತಿಳಿದುಕೊಂಡು ತಟಸ್ಥರಾದರು. ಹೀಗಾಗಿ ಬರಗಾಲದ ಘೋರ ಪರಿಣಾಮ ಬಡವರಾದ ನಮ್ಮ ಮೇಲೆ ಯಥೇಷ್ಟವಾಗಿ ಬಂದಿಳಿಯಿತು. ಊರಿನ ಒಬ್ಬಿಬ್ಬರು, ಉದಾರ ಮನಸ್ಸಿನವರು, ಲೋಕೋಪಕಾರಿಗಳು ಅಲ್ಲಲ್ಲಿ ಧರ್ಮಸಹಾಯದ ಠಾಣ್ಯಗಳನ್ನು ಸ್ಥಾಪಿಸುವುದಕ್ಕೆ ಬಹಳವಾಗಿ ಪ್ರಯತ್ನಪಟ್ಟರು. ಆದರೆ ಸಾಹುಕಾರರ ಸಹಕಾರವಿಲ್ಲದೆ ಅವರ ಈ ಪ್ರಯತ್ನಗಳೇ ಹೆಚ್ಚಿನ ಮಟ್ಟಿಗೆ ನಿಷ್ಪಲವಾದುವು. + +“ಆದರೂ ಹೊಟ್ಟೆಗಿಲ್ಲದ ಬಡಜನರು ಸರ್ವೋತ್ತಮ ನಾಯಕನ ಮನೆಯನ್ನೂ ಭಂಡಸಾಲೆಯನ್ನೂ ಕಾಯುವುದನ್ನು ಬಿಡಲಿಲ್ಲ. ಒಂದೊಂದು ಬಾರಿ ನಾಯಕನು ದೊಡ್ಡ ಮನಸ್ಸು ಮಾಡಿ ಅವರಲ್ಲಿ ಪ್ರತಿ ಒಬ್ಬರಿಗೂ ಒಂದೊಂದು ಪಾವು ಅಕ್ಕಿಯಂತೆ ಕೊಟ್ಟು ಬಿಡುತ್ತಿದ್ದನು. ಆದರೆ ಜನರ ಗೋಳಾಟ ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಬೆಲೆಯನ್ನು ತಗ್ಗಿಸುವುದಕ್ಕೆ! ‘ಮಹಾಸ್ವಾಮೀ, ನಮಗೆ ನಿಮ್ಮ ಭಿಕ್ಷೆ ಬೇಕಾದ್ದಿಲ್ಲ. ನಮ್ಮ ಕೈಕಾಲುಗಳು ನೆಟ್ಟಗಿವೆ. ನಿಮ್ಮ ಅಕ್ಕಿಯ ಭಿಕ್ಷೆ ಬೇಡ, ನಮಗೆ ಅಕ್ಕಿಯ ಧಾರಣೆಯನ್ನು ಮಾತ್ರ ತಗ್ಗಿಸಿರಿ! ಅದನ್ನೇ ನಾವು ಬೇಡುವುದು!’ ಎಂದು ನಾಯಕನನ್ನು ಮೊರೆಯಿಟ್ಟರು. ಆದರೆ ಇದನ್ನು ಕೇಳಿದೊಡನೆ ನಾಯಕನು ರೇಗಿಕೊಂಡು ಅವರಿಗೆಂದು ತಂದ ಭಿಕ್ಷೆಯನ್ನು ಕೂಡ ಒಳಗೆ ಕಳುಹಿಸುತ್ತಿದ್ದನು. + +“ಹೀಗೆಯೇ ಹಲವು ದಿನಗಳು ಕಳೆದುಹೋದುವು. ಜಿಲ್ಲೆಯಲ್ಲಿ ದುರ್ಭಿಕ್ಷ ಹೆಚ್ಚೆಚ್ಚಾಗುತ್ತಾ ಬಂತು. ಅನೇಕ ಕಡೆಗಳಲ್ಲಿ ಜನರು ಹತಾಶರಾಗಿ ದೂರಾಲೋಚನೆಗಳಲ್ಲಿ ಪ್ರವೃತ್ತರಾದರು. ಜೀವನಕ್ಕೆ ಬೇರೆ ಉಪಾಯವಿಲ್ಲದೆ ಸುಲಿಗೆ, ದಂಗೆ ಮೊದಲಾದವುಗಳಿಗೆ ಕೈಹಾಕತೊಡಗಿದರು. ಆದರೂ ಜಿಲ್ಲಾಧಿಕಾರಿಗಳು ಬಡಜನರ ಸಂಕಷ್ಟ ನಿವಾರಣೆಗಾಗಿ ಯಾವ ಹೆಜ್ಜೆಯನ್ನಾದರೂ ತೆಗೆಯಲಾರದೆ ಹೋದರು. + +“ಆದರೆ ಮಂಗಳೂರಿನ ವಾರ್ತಾಪತ್ರಿಕೆಗಳು ಸುಮ್ಮನಿರಲಿಲ್ಲ. ಜಿಲ್ಲೆಯ ನಿಜಸ್ಥಿತಿಯನ್ನು ಕೂಲಂಕುಷವಾಗಿ ತಿಳಿಸುವಂತೆ ಅವುಗಳು ಕೂಡಲೇ ಸೊಂಟಕಟ್ಟಿದುವು. ಜಿಲ್ಲೆಯೊಳಗೆ ಘೋರವಾದೊಂದು ಬರಗಾಲವಿದೆ ಎಂಬ ಸಂಗತಿಯನ್ನು ಅವುಗಳು ಗಂಟಲು ಒಣಗುವವರೆಗೆ ಕೂಗಲಾರಂಭಿಸಿದುವು. ಕಟ್ಟಕಡೆಗೆ ಹೇಗಾದರೂ ಅವುಗಳ ಕೂಗು ಮದ್ರಾಸಿನವರೆಗೆ ಮುಟ್ಟಿ, ಅಲ್ಲಿಯ ಮೇಲಧಿಕಾರಿಗಳು ಅಲ್ಪಸ್ವಲ್ಪ ಎಚ್ಚರಾಗಲಿಕ್ಕೆ ಪ್ರಾರಂಭಿಸಿದರು. ಮದ್ರಾಸು ಸರಕಾರದ ರೆವಿನ್ಯು ಮೆಂಬರರು ತಾನು ಸ್ವತಃ ಮಂಗಳೂರಿಗೆ ಬಂದು ಜಿಲ್ಲೆಯ ಪರಿಸ್ಥಿತಿಯನ್ನು ನೋಡುವೆನೆಂದು ತಿಳಿಸಿದರು.” + +ನಾಗಣ್ಣ ತನ್ನ ನಸ್ಯದ ಬುರುಡೆಯಿಂದ ಅರೆವಾಸಿ ಪಾಲು ನಸ್ಯವನ್ನು ತನ್ನ ಮೂಗಿನ ಎರಡು ರಂಧ್ರಗಳೊಳಗೂ ತುರುಕಿಸಿಕೊಂಡು ಸ್ವಲ್ಪ ಸಮಯದ ಮೇಲೆ ಹೀಗೆ ಮುಂದರಿಸಿದನು : + +“ಪ್ರಾತಃಕಾಲ ಒಂಭತ್ತುವರೆ ಗಂಟೆ. ಕಣ್ಣಾನೂರಿನಲ್ಲಿ ಮುಂಚಿನ ದಿನ ಬಂದು ಇಳಿದ ರೆವಿನ್ಯೂ ಮೆಂಬರರು ಅಂದಿನ ಪ್ರಾತಃಕಾಲದ ರೈಲು ಬಂಡಿಯಲ್ಲಿ ಮಂಗಳೂರಿಗೆ ಬರುವರೆಂದು ತಂತೀವಾರ್ತೆ ಬಂದಿತ್ತು. ಆದುದರಿಂದ ಊರೆಲ್ಲ ಗದ್ದಲ. ಅವರ ಬರುವಿಕೆಯನ್ನು ನೀರೀಕ್ಷಿಸಿ ರೈಲ್ವೆ ಸ್ಟೇಷನ್ನಿನಲ್ಲಿ ಜನರು ಕಿಕ್ಕಿರಿದು ತುಂಬಿದ್ದರು. ಮೋಟಾರ್ ಕಾರುಗಳೂ, ಜಟ್ಕಾ ಗಾಡಿಗಳೂ ಒಂದರ ಹಿಂದೆ ಮತ್ತೊಂದು ಎಡೆಬಿಡದೆ ಬರಲಿಕ್ಕೆ ತೊಡಗಿದುವು. ಕೆಂಪು ಟೊಪ್ಪಿಗೆಗಳಿಗೆ ತುಂಬಾ ಕೆಲಸವಾಯಿತು. ಅವರ ಉತ್ಸಾಹಕ್ಕೆ ಮಿತಿಯೇ ಇಲ್ಲದಂತೆ ತೋರಿತು. ರೈಲು ಬಂಡಿಯಲ್ಲಿ ಬರುವ ಮಹಾನುಭಾವರನ್ನು ಸ್ಟೇಶನಿನಲ್ಲಿ ಎದುರುಗೊಳ್ಳಲಿಕ್ಕೆಂದು ಕಲೆಕ್ಟರ್ ಸಾಹೇಬರೂ, ಡಿಸ್ಟ್ರಿಕ್ಟ್ ಬೋರ್ಡು ಪ್ರೆಸಿಡೆಂಟರೂ, ಮಂಗಳೂರು ತಾಲ್ಲೂಕು ಬೋರ್ಡು ಪ್ರೆಸಿಡೆಂಟರೂ, ಮ್ಯುನಿಸಿಪಾಲಿಟಿಯ ಚೇರ್ ಮೇನರೂ ಮೊದಲಾದ ದೊಡ್ಡ ದೊಡ್ಡ ಹುದ್ದೇಗಾರರೂ ಸ್ಟೇಶನಿನೊಳಗೆ ಚಿತ್ತೈಸಿದ್ದರು. ಜನರ ಪರವಾಗಿ ಊರಿನ ಕೆಲವು ಮಂದಿ ಮುಖಂಡರೂ ಅಲ್ಲಿ ಸೇರಿದ್ದರು. ಅದಲ್ಲದೆ ಮಂಗಳೂರು ಡಿವಿಜನಲ್ ಆಫೀಸರರೂ, ತಹಶಿಲ್ದಾರರೂ, ಮೆಜಿಸ್ಟ್ರಟರೂ ಮೊದಲಾದ ಮಹನೀಯರಿಂದ ಕೂಡಿದ ಕಲೆಕ್ಟರ ಸಾಹೇಬರ ಇಡೀ ಪರಿಹಾರವೇ ಅಲ್ಲಿ ಕೂಡಿತ್ತು. ತಹಶೀಲ್ದಾರರು ಬೆಳ್ಳಿಯ ಹರಿವಾಣದಲ್ಲಿ ಬಂಗಾರದ ತಂತಿಗಳಿಂದ ಹೆಣೆದ ಹೂಮಾಲೆಯನ್ನು ಹಿಡಿದುಕೊಂಡು ನಿಂತುದನ್ನು ಒಬ್ಬಿಬ್ಬರು ನೋಡಿದುದೂ ಉಂಟು. + +“ರೈಲುಬಂಡಿ ಬಂದೇಬಿಟ್ಟಿತು. ಸ್ಟೇಶನಿನಲ್ಲಿ ಬಂದು ನಿಂತೇ ಬಿಟ್ಟಿತು. ಡಿವಿಜನಲ್ ಆಫೀಸರರ ಹೃದಯ ಡಬಡಬ ಎಂದು ಹೊಡೆಯಲಾರಂಭಿಸಿತು. ತಹಸಿಲ್ದಾರರ ಕೈ ಕೂಡಲೇ ಹರಿವಾಣದಲ್ಲಿದ್ದ ಹೂಮಾಲೆಯನ್ನು ಹುಡುಕಿಕೊಂಡು ಹೋಯಿತು. ಕಲೆಕ್ಟರ್ ಸಾಹೇಬರು ಮತ್ತು ಡಿಸ್ಟ್ರಿಕ್ಟ್ ಬೋರ್ಡು ಪ್ರೆಸಿಡಂಟರು ರೈಲುಬಂಡಿಯ ಕಡೆಗೆ ನುಗ್ಗಿದರು. ಅವರೊಂದಿಗಿದ್ದ ಊರಿನ ಇತರ ಮುಖಂಡರೂ ಅವರನ್ನು ಹಿಂಬಾಲಿಸಿದರು. ಕಲೆಕ್ಟರ್ ಸಾಹೇಬರು ತಮ್ಮ ಹುಬ್ಬುಗಳನ್ನು ತುರಿಸಿಕೊಳ್ಳಲಿಕ್ಕೆ ಪ್ರಾರಂಭಿಸಿದರು. ರೆವಿನ್ಯೂ ಮೆಂಬರರು ಬರಬಹುದಾದ ಸ್ಪೆಶ್ಯಲ್ ಗಾಡಿ ಅವರ ಕಣ್ಣಿಗೆ ಬೀಳದೆ ಹೋಯಿತು! ಒಡನೆಯೇ ಫಸ್ಟ್ ಕ್ಲಾಸ್ ಕಂಪಾರ್ಟುಮೆಂಟುಗಳಲ್ಲಿ ನುಗ್ಗಿದರು. ಅವುಗಳಲ್ಲಿಯೂ ರೆವಿನ್ಯು ಮೆಂಬರರು ಇದ್ದಿಲ್ಲ! + +“ಇಲ್ಲ, ರೆವಿನ್ಯು ಮೆಂಬರರು ಬಂದಿರಲಿಲ್ಲ ! ಅವರಿಗೆ ಕಣ್ಣಾನೂರಿನಲ್ಲಿ ಅಗತ್ಯವಾದ ಕೆಲಸವಿದ್ದುದರಿಂದ ಆ ಬಂಡಿಗೆ ಬರಲು ಅವರಿಗೆ ಸಾಧ್ಯವಾಗಲಿಲ್ಲವೆಂತಲೂ, ಆ ದಿನದ ಸಂಜೆಯ ‘ಮೇಲು’ ಬಂಡಿಯಲ್ಲಿಯೇ ಬರುವರೆಂದೂ ಮಾತು ಹರಡಿತು. ಅವರನ್ನು ಎದುರುಗೊಳ್ಳಲಿಕ್ಕೆಂದು ಸ್ಟೇಷನಿನೊಳಗೆ ಬಂದವರೆಲ್ಲರ ಕುತೂಹಲವೂ, ಉತ್ಸಾಹವೂ ನಿಷ್ಪ್ರಯೋಜಕವಾಯಿತು! ತಾವು ಪಟ್ಟ ಆಶಾಭಂಗವನ್ನು ದೊಡ್ಡ ಸ್ವರಗಳಲ್ಲಿ ಪ್ರಕಟಗೊಳಿಸುತ್ತಾ ಬಂದವರೆಲ್ಲರೂ ಸ್ಟೇಷನಿನ ಹೊರಗೆ ಗುಂಪುಗುಂಪಾಗಿ ಹೋಗಲಿಕ್ಕೆ ಪ್ರಾರಂಭಿಸಿದರು. + +“ರೆವಿನ್ಯು ಮೆಂಬರರೇನೋ ಬರಲಿಲ್ಲ. ಆದರೆ ರೈಲು ಬಂಡಿಯ ಯಾವುದೋ ಒಂದು ಎಡೆಯಿಂದ ಒಂದು ಮೃದುವಾದ ಸ್ವರ ಕೂಲಿಯನ್ನು ಪದೇಪದೇ ಕರೆಯುವುದು ಆ ಗಲಭೆಯಲ್ಲಿ ಕೇಳಿಬಂತು. ಕೂಲಿ ಆಳುಗಳಲ್ಲಿ ಹೆಚ್ಚಿನವರು ರೆವಿನ್ಯು ಮೆಂಬರರ ಸಾಮಾನನ್ನು ಒಯ್ಯಲಿಕ್ಕೆ ಸಿದ್ಧರಾಗಿದ್ಧವರು. ಇಬ್ಬರು ಕೂಲಿಗಳು ಅವರು ಬಾರದೆ ಇದ್ದುದನ್ನು ನೋಡಿ ಖಿನ್ನಮನಸ್ಕರಾಗಿದ್ದರು. ಅವರಲ್ಲಿ ಒಬ್ಬನು ಆ ಧ್ವನಿಯನ್ನು ಕೇಳುತ್ತಲೇ ನೀರಿನಲ್ಲಿ ಮುಳುಗಿ ಸಾಯಲಿಕ್ಕಾದ ಮನುಷ್ಯನು ಒಂದು ಹುಲ್ಲುಕಡ್ಡಿಯನ್ನು ಕೂಡ ಹಿಡಿಯಲಿಕ್ಕೆ ಹೋಗುವಂತೆ ಆ ಧ್ವನಿ ಹೊರಟಿದ್ದ ಕಂಪಾರ್ಟುಮೆಂಟಿಗೆ ಓಡಿ ಹೋದನು. + +ದೊಡ್ಡದಾದ ಆ ಇಡೀ ಕಂಪಾರ್ಟುಮೆಂಟಿನಲ್ಲಿ ಏಳು ವರ್ಷದ ಕೋಮಲವಾದ ಬಾಲಿಕೆಯೊಬ್ಬಳು ಒಂದು ಸಣ್ಣ ಪೆಟ್ಟಿಗೆಯ ಹತ್ತಿರ ಚಡಪಡಿಸುತ್ತಾ ನಿಂತಿದ್ದಳು. + +ಕೂಲಿಯಾಳುಗಳನ್ನು ನೋಡಿದ ಕೂಡಲೇ ಬಾಲಿಕೆ ಹಸನ್ಮುಖಿಯಾದಳು. ‘ನೋಡು, ಸಣ್ಣ ಪೆಟ್ಟಿಗೆ, ಹಗುರವೂ ಉಂಟು. ನೀನು ಬಂದುದು ಒಳ್ಳೇದಾಯಿತು. ಯಾರೂ ಬರಲಿಕ್ಕಿಲ್ಲವೆಂದು ತಿಳಿದಿದ್ದೆನು. ಎಷ್ಟು ಜನರು! ಅಮ್ಮ ಕೂಲಿ ಆಳಿಗೆ ಕೊಡಬೇಕೆಂದು ಒಂದಾಣೆ ಪಾವಲಿ ಕೊಟ್ಟಿದ್ದಾರೆ. ಇದೋ ನೋಡು’ ಎಂದು ಹೇಳಿದಳು. + +ಏಳು ವರ್ಷದ ಹುಡುಗಿ ಮತ್ತು ಒಂದು ಸಣ್ಣ ಪೆಟ್ಟಿಗೆ ಹತ್ತಿರ ದೊಡ್ಡವರ್ಯಾರೂ ಇರಲಿಲ್ಲ. ಇದನ್ನು ನೋಡಿ ಆ ಟೊಣಪನಿಗೆ ಆಶ್ಚರ್ಯವಾಯಿತು. ಆಶ್ಚರ್ಯದಿಂದ ತನ್ನ ತಲೆಯನ್ನು ತುರಿಸಿಕೊಳ್ಳಲಾರಂಭಿಸಿದನು.‘ಎಲ್ಲಿಂದ ಬರುವುದಮ್ಮಾ?’ ಎಂದು ಕೇಳಿದನು.‘ಕಾಸರಗೋಡಿನಿಂದ’ ಎಂದು ಹುಡುಗಿ ಉತ್ತರಕೊಟ್ಟಳು.‘ನಿಮ್ಮ ಸಂಗಡ ದೊಡ್ಡವರ್ಯಾರೂ ಇಲ್ಲವೇ?’ + +‘ಇಲ್ಲ, ಯಾಕೆ? ಅಮ್ಮ ಕಾಸರಗೋಡು ಸ್ಟೇಶನಿನಲ್ಲಿ ನನ್ನನ್ನು ರೈಲುಬಂಡಿಯಲ್ಲಿ ಕುಳ್ಳಿರಿಸುವಂತೆ ಮಾಡಿದರು. ಭಯವೇನೂ ಇಲ್ಲವೆಂದು ಹೇಳಿದರು. ನಾನು ಮಂಗಳೂರಿಗೆ ಈ ಮೊದಲು ಅನೇಕ ಸಾರಿ … ಅಪ್ಪ … ಅಪ್ಪನೊಂದಿಗೆ ಬಂದಿದ್ದೇನೆ.” + +ಟೊಣಪನು – ಅವನ ಹೆಸರು ಸೋಮನೆಂದಾಗಿದ್ದಿರಬಹುದು ಅಥವಾ ದೂಮನೆಂದಾಗಿದ್ದಿರಬಹುದು, ಆದರೆ ಟೊಣಪನೆಂಬ ಹೆಸರು ಅವನಿಗೆ ಚೆನ್ನಾಗಿ ಒಪ್ಪುತ್ತಿತ್ತು. ಹುಡುಗಿಯ ಪೆಟ್ಟಿಗೆಯನ್ನು ಕಂಪಾರ್ಟುಮೆಂಟಿನಿಂದ ಕೆಳಗೆ ತಂದಿಟ್ಟಿದ್ದನು. + +“ನಿನಗೆ ಅಪ್ಪನಿರುವನೇ?” ಎಂದು ಹುಡುಗಿ ಕೇಳಿದ ಪ್ರಶ್ನೆಗೆ ದಿಗಿಲುಬಿದ್ದನು. “ಇಲ್ಲ ಯಾಕೆ?” ಎಂದು ಕೇಳಿದನು. + +“ಹೀಗೆಯೇ ನನ್ನ …. ಅಪ್ಪ …. ಇವತ್ತು ….. ತೀರಿಹೋದರು …. ನನಗೆ ಅಳು … ಬರುತ್ತದೆ.” + +ಇದನ್ನು ಕೇಳಿದಕೂಡಲೇ ಆ ಟೊಣಪನ ಕಲ್ಲೆದೆಯಲ್ಲಿ, ಏನೋ ಫಕ್ಕನೆ ಚಲಿಸಿದಂತೆ ತೋರಿತು. ಅವನ ಗಂಟಲೊಳಗೆ ಫಕ್ಕನೆ ಏನೋ ಒಂದು ಗುಳ್ಳೆ ಬಂದಂತಾಯಿತು. ಏನು ಹೇಳಬೇಕೆಂದು ತೋರದೆ ಬಾಯಿ ತೆರೆದು ಹುಡುಗಿಯನ್ನು ನೋಡುತ್ತಾ ನಿಂತನು. + +‘ಅಮ್ಮ, ನೀವು ಹೋಗುವುದಾದರೂ ಯಾರಲ್ಲಿಗೆ?’ ಎಂದು ಕಟ್ಟಕಡೆಗೆ ಕೇಳಿದನು. + +‘ನನ್ನ ಸೋದರಮಾವನಾದ ಸರ್ವೋತ್ತಮ ನಾಯಕರಲ್ಲಿಗೆ’ + +‘ನೀವು ಈಗ ಬರುತ್ತೀರೆಂದು ಅವರಿಗೆ ಗೊತ್ತಿಲ್ಲವೆ?’ + +‘ಇಲ್ಲವೆಂದು ಕಾಣುತ್ತದೆ. ಅಮ್ಮ ನನಗೆ ಅಳಬಾರದೆಂದು ಹೇಳುತ್ತಿದ್ದರು. ಆದರೆ ಅವರು ಅಳುತ್ತಲೇ ಇದ್ದರು. ನನ್ನನ್ನು ರೈಲುಬಂಡಿಯಲ್ಲಿ ಕುಳ್ಳಿರಿಸುವಾಗ್ಗೆ.‘ನೀನು ಮಂಗಳೂರಿನಲ್ಲಿರುವ ನಿನ್ನ ಸೋದರಮಾವನಾದ ಸರ್ವೋತ್ತಮ ನಾಯಕರಲ್ಲಿಗೆ ಹೋಗು’ ಎಂದರು. ನಾನು ಯಾರ ಸಂಗಡ ಹೋಗಲಿ ಎಂದು ಕೇಳಿದೆ. ಮಂಗಳೂರು ಸ್ಟೇಷನ್ನಿನಲ್ಲಿ ಯಾರಾದರೂ ಪುಣ್ಯಾತ್ಮರು ನಿನ್ನನು ಅವರಿದ್ದಲ್ಲಿಗೆ ಕರಕೊಂಡು ಹೋಗುವರು’ ಎಂದರು…. ನೀನು ಒಬ್ಬ ಪುಣ್ಯಾತ್ಮನೇ?’ + +‘ನನಗೆ ಗೊತ್ತಿಲ್ಲಮ್ಮಾ!’ + +‘ಹಾಗಾದರೆ ನೀನು ನನ್ನನ್ನು ನನ್ನ ಸೋದರ ಮಾವನಿದ್ದಲ್ಲಿಗೆ ಕರಕೊಂಡು ಹೋಗಲಾರೆಯಾ?’ + +ಟೊಣಪನು, ‘ಅಮ್ಮ ನಾನವರನ್ನು ಇದುವರೆಗೆ ನೋಡಿದ್ದಿಲ್ಲವಲ್ಲ!’ ಎಂದು ಹೇಳಿ ಆ ಬಾಲಿಕೆಯ ಪೆಟ್ಟಿಗೆಯನ್ನು ಒಂದು ಕೈಯಿಂದ ತನ್ನ ಹೆಗಲ ಮೇಲಿಟ್ಟು, ಇನ್ನೊಂದು ಕೈಯಿಂದ ಅವಳ ಕೈಯನ್ನು ಹಿಡಿದುಕೊಂಡು ಸ್ಟೇಶನ್ನಿನ ಹೊರಗೆ ಬಂದನು. + +‘ಸಾಹುಕಾರ ಸವೋತ್ತಮ ನಾಯಕರಲ್ಲಿ ನೆಟ್ಟಗೆ ಹೋಗು’ ಎಂದು ಗಾಡಿಯವನಿಗೆ ಹೇಳಿದನು. + +“ಅತ್ತ ಸರ್ವೋತ್ತಮನಾಯಕ (ನಾಗಣ್ಣ ಮುಂದುರಿಸಿದನು) ಸರಿಯಾಗಿ ತನ್ನ ಭಂಡ ಸಾಲೆಯ ಬಾಗಿಲನ್ನು ಎಂದಿನಂತೆ ತೆರೆದಿದ್ದನು. ಕೂಡಲೇ ಎಂದಿನಂತೆ ನೂರಾರು ಬಡಜನರು ಅವನ ಭಂಡಸಾಲೆಯನ್ನು ಮುತ್ತಿಗೆ ಹಾಕಿದರು. ಇಂದು ಸರ್ವೋತ್ತಮ ನಾಯಕನ ಮನಸ್ಸಿನಲ್ಲಿ ಸುಖವಿರಲಿಲ್ಲ. ಸರಕಾರದವರು ಅಕ್ಕಿಯ ಧಾರಣೆಯನ್ನು ತಗ್ಗಿಸಬೇಕೆಂದು ತನ್ನನ್ನು ಬಲಾತ್ಕರಿಸುವವರೆಗೆ ತಾನು ಅಕ್ಕಿಯ ಧಾರಣೆಯನ್ನು ತಗ್ಗಿಸಲಿಕ್ಕಿಲ್ಲವೆಂದು ಅವನು ನಿಶ್ಚೈಸಿದ್ದನು. ಆದರೆ ಇಂದು ಪ್ರಾತಃಕಾಲದ ರೈಲು ಬಂಡಿಯಲ್ಲಿ ಮದ್ರಾಸಿನ ರೆವಿನ್ಯು ಮೆಂಬರು ಇಲ್ಲಿಯ ಅಕ್ಕಿಯ ಧಾರಣೆಯ ವಿಚಾರಕ್ಕಾಗಿ ಬರುವರೆಂದು ಅವನು ತಿಳಿದಿದ್ದನು. ಅವರು ಬಂದು ಏನೆಲ್ಲ ಮಾಡುವರೋ, ಅಕ್ಕಿಯ ಧಾರಣೆಗೆ ಜನರು ಕೇಳುವಂತೆ ಸರಕಾರಿ ನಿರ್ಬಂಧವಿರುವಂತೆ ಮಾಡಿಬಿಡುತ್ತಾರೋ ಎಂಬ ಭೀತಿ ಅವನ ಎದೆಗೆ ಅಂಟಿಕೊಂಡಿತ್ತು. ಅಷ್ಟು ಮಾತ್ರವಲ್ಲ. ಅವನ ಭಂಡಸಾಲೆಯನ್ನು ಮುತ್ತಿದ್ದ ಜನರ ಗಲಾಟೆಯು ವಿಪರೀತವಾಗುತ್ತ ಬಂತು. + + + +ಹೆಂಗಸರು ಮತ್ತು ಮಕ್ಕಳು ಗೋಳಿಡಲಾರಂಭಿಸಿದರು. ಯುವಕರು ಭಂಡಸಾಲೆಯನ್ನು ಸುಲಿಗೆ ಮಾಡುವೆವೆಂದು ಬೆದರಿಸಲಾರಂಭಿಸಿದರು. ಮುದುಕರು ನಾಯಕನನ್ನು ಬಾಯಿ ತುಂಬ ಶಪಿಸತೊಡಗಿದರು. ಮೊನ್ನೆ ತಾನೆ ನಾಯಕನ ಸ್ನೇಹಿತನಾದ ರಾಮ ಮಲ್ಯರ ಭಂಡಸಾಲೆಯನ್ನು ಮಾಪಿಳ್ಳೆಯವರು ಸುಲಿಗೆ ಮಾಡಿದ್ದರು. ರಾಮ ಮಲ್ಯರ ಅಕ್ಕಿಗೆ ಪ್ರಾಪ್ತವಾದ ಗತಿಯೇ ತನ್ನ ಅಕ್ಕಿಗೂ ಪ್ರಾಪ್ತವಾಗುವುದೋ ಎಂಬ ಭೀತಿಯೂ ಸರ್ವೋತ್ತಮ ನಾಯಕನನ್ನು ಆವರಿಸಿಕೊಂಡಿತು. ತನ್ನ ಮುಂದಿರುವ ಜನರ ವರ್ತನೆಯನ್ನು ನೋಡಿ ಕೋಪದಿಂದ ಕಿಡಿಕಿಡಿಯಾದನು. ‘ನಿಮಗೆ ಅಕ್ಕಿ ಬೇಕಾದರೆ ಕ್ರಯಕೊಟ್ಟು ತಕ್ಕೊಳ್ಳಿ. ಇಲ್ಲವಾದರೆ ಇಲ್ಲಿಂದ ಹೋಗಿ, ಗಲಾಟೆಯನ್ನೆಬ್ಬಿಸಿದರೆ ಪೋಲೀಸರನ್ನು ಕರೆಯುವೆನು!’ ಎಂದು ಕೂಗಿ ಹೇಳಿದನು. ಇದನ್ನು ಕೇಳಿ ಕಲಹಪ್ರಿಯನಾದ ಒಬ್ಬ ಪುಂಡ ಯುವಕನು, ‘ಪೋಲೀಸರನ್ನೋ? ಬೇಗನೇ ಕರೆಯಿರಿ! ಬಂದಿಖಾನೆಯಲ್ಲಾದರೂ ನಮಗೊಂದಿಷ್ಟು ಅನ್ನ ಸಿಕ್ಕೀತು’ ಎಂದನು. ಇದನ್ನು ಕೇಳುತ್ತಲೇ ಅಲ್ಲಿದ್ದ ಕೆಲವರು ಗಟ್ಟಿಯಾಗಿ ನಕ್ಕುಬಿಟ್ಟರು. ‘ಪೋಲೀಸರನ್ನು ಕರೆಯುವಿರೇ? ಬೇಗನೇ ಕರೆದುಬಿಡಿ! ಈಗಲೇ ಕರೆದುಬಿಡಿ!’ ಎಂಬ ಬೊಬ್ಬೆ ಹರಡಲಾರಂಭಿಸಿತು. + +ಗಲಾಟೆ ಹೆಚ್ಚಾಗುತ್ತಾ ಬಂತು. ಭಂಡಸಾಲೆಯ ಬಾಗಿಲನ್ನು ಇನ್ನು ತೆರೆದಿರುವುದು ವಿಹಿತವಲ್ಲವೆಂದು ನಾಯಕನು ತಿಳಿದುಕೊಂಡನು. ಕೋಪದಿಂದ ಕೆಂಪಗಾದನು. ಭಯದಿಂದ ಬಿಳುಪೇರಿದನು. ಆದದ್ದಾಗುತ್ತದೆ. ಆದರೆ ತನ್ನ ಪ್ರತಿಜ್ಞೆಯನ್ನು ಹಿಂತೆಗೆಯೆನು ಎಂದು ತನ್ನೊಳಗೆ ಹೇಳುತ್ತಾ ಭಂಡಸಾಲೆಯನ್ನು ಮುಚ್ಚಲಿಕ್ಕೆ ತನ್ನ ಆಳಿಗೆ ಆಜ್ಞೆ ಕೊಟ್ಟನು. ಭಂಡಸಾಲೆಯ ಬಾಗಿಲು ಹಾಕುವಾಗಲೆಲ್ಲ ಅಲ್ಲಿ ಕೂಡಿದ್ದ ಜನರು ಹಾಸ್ಯ ಮಾಡತೊಡಗಿದರು. ಗೊಳ್ಳೆಂದು ನೆಗಾಡಿದರು. ಭಂಡಸಾಲೆಯನ್ನು ಸುಲಿಗೆ ಮಾಡುವೆವು ಎಂದು ನಾಯಕನನ್ನು ಮೊದಲು ಬೆದರಿಸಿದವರು ಈಗ ಅವನನ್ನು ನೋಡಿ, ‘ಸ್ವಾಮಿ ಸರ್ವೋತ್ತಮನಾಯಕರೇ, ನೀವು ನಮಗೆ ಹೆದರಿ ಭಂಡಸಾಲೆಯ ಬಾಗಿಲನ್ನು ಮುಚ್ಚಬೇಕೆಂತಿಲ್ಲ. ನಾವೇನು ನಿಮ್ಮ ಅನ್ನವನ್ನು ತೆಗೆಯಲಿಕ್ಕೆ ಬಂದವರಲ್ಲ!’ ಎಂದು ಹಾಸ್ಯಮಾಡಿದರು. + +ನಾಯಕನು ಮನಸ್ಸಿನೊಳಗೇ ರೇಗಿಕೊಂಡನು. ಏನು ಮಾಡಬೇಕೆಂದು ಅವನಿಗೆ ತಿಳಿಯಲಿಲ್ಲ. ಭಂಡಸಾಲೆಯ ಬಾಗಿಲನ್ನು ಮುಚ್ಚಿಯೇಬಿಟ್ಟನು. ಕೋಪದಿಂದ ಕಂಪಿಸುತ್ತಾ ತನ್ನ ಮನೆಗಾಗಿ ಹೊರಟನು. ಆದರೆ ಊಟಕ್ಕಿಲ್ಲದೆ ಹತಾಶರಾದ ಆ ಜನರು ಅವನನ್ನು ಬಿಡುವರೇ? ಕೂಡಲೇ ಅಲ್ಲಿಂದ ಗುಂಪುಗುಂಪಾಗಿ ಅವನ ಹಿಂದೆಯೇ ಹೋದರು. ಅವನ ಭಂಡಸಾಲೆಯನ್ನು ಮೊದಲು ಮುತ್ತಿಗೆ ಹಾಕಿದವರು ಈಗ ಅವನ ಮನೆಯನ್ನೇ ಮುತ್ತಿಗೆ ಹಾಕಿದರು. + +ಕೊಂಚ ಸಮಯದಲ್ಲೇ ಅವನು ತನ್ನ ಕೋಣೆಯಲ್ಲಿ ಪಂಜರದಲ್ಲಿ ಹಾಕಿದ ಸಿಂಹದಂತಾದನು. ಹೊರಗಿನಿಂದ ಜನರ ಗದ್ದಲ ಅವನ ಕಿವಿಯಲ್ಲಿ ಬೀಳುತ್ತಲೇ ಇತ್ತು. ಒಂದು ಸಲ ಹೆಂಗಸರ ಗೋಳು, ಮತ್ತೊಂದು ಸಲ ಮಕ್ಕಳ ಕೂಗು, ಇನ್ನೊಂದು ಸಲ ಮುದುಕರ ಕರ್ಕಶವಾದ ಧ್ವನಿ, ಮಗದೊಂದು ಸಲ ಹರೆಯದವರ ಹಾಸ್ಯ ಇವುಗಳೆಲ್ಲ ಆಗಾಗ್ಗೆ ಅವನ ಲಕ್ಷ್ಯವನ್ನು ಎಳೆಯುತ್ತಲೇ ಇದ್ದುವು. ಸರ್ವೋತ್ತಮ ನಾಯಕ ಬೇರೊಬ್ಬನಾಗಿದ್ದರೆ ಅವನ ಮನಸ್ಸು ಆಗಲೇ ಕರಗಿ ತನ್ನ ಒಂದು ಮಾತಿನಿಂದ ಅಲ್ಲಿ ಕೂಡಿದವರೆಲ್ಲರ ಮನಸ್ಸನ್ನು ಸಂತೋಷಪಡಿಸಿ ಅವರನ್ನು ಆಗಲೇ ಕಳುಹಿಸಿಬಿಡುತ್ತಿದ್ದನು. ಆದರೆ ಸರ್ವೋತ್ತಮ ನಾಯಕ ಸರ್ವೋತ್ತಮ ನಾಯಕನೇ. ಹಟವಾದಿ, ಕಲ್ಲೆದೆಯವ, ಕೋಪಿಷ್ಠ. ತಾನಿದ್ದೆಡೆಗೆ ಬರಲಿಕ್ಕೆ ಯಾರನ್ನೂ ಬಿಡಬಾರದೆಂದು ತನ್ನ ಆಳಿಗೆ ಆಜ್ಞಾಪಿಸಿ, ಅವನನ್ನು ತನ್ನ ಕೋಣೆಯ ಬಾಗಲಿನಲ್ಲಿ ಕಾವಲಾಗಿ ಕುಳ್ಳಿರಿಸಿದನು. + +“ಅಷ್ಟರೊಳಗೆ ತನ್ನ ಮನೆಯ ಮುಂದೆ ಗಾಡಿ ಬಂದು ನಿಂತ ಶಬ್ದವನ್ನು ಕೇಳಿದನು. ಕೊಂಚ ಸಮಯದಲ್ಲಿಯೇ ಅವನ ಕೋಣೆಯ ಬಾಗಿಲು ತೆರೆಯಲ್ಪಟ್ಟಿತು. ಸರ್ವೋತ್ತಮ ನಾಯಕ ಕೋಪದಿಂದ ತನ್ನ ಕುರ್ಚಿಯಿಂದೆದ್ದು ಬಾಗಿಲಿನ ಕಡೆಗೆ ನೋಡಿದನು. ಏಳು ವರ್ಷದ ಕೋಮಲವಾದ ಬಾಲಿಕೆ ಅವನ ಕಣ್ಣಿಗೆ ಬಿದ್ದಳು. ದೊಡ್ಡವರು ಯಾರೇ ಆಗಿದ್ದರೂ ನಾಯಕನು ಕೂಡಲೇ ಅವರ ಮೇಲೆ ರೇಗಿ ಹಾಯಲಿಕ್ಕೆ ಹೋಗುತ್ತಿದ್ದನೆಂಬುದರಲ್ಲಿ ಸಂಶಯವಿಲ್ಲ. ಆದರೆ ಬಂದವಳು ಬರೇ ಒಬ್ಬಳು ಹುಡುಗಿ. ಅವಳನ್ನು ನೋಡಿ ಅವನ ಕೋಪ ತಾತ್ಸಾರ ರೂಪವಾಗಿ ಮಾರ್ಪಟ್ಟಿತು. + +“ಯಾರೇ ನೀನು?” ಎಂದು ಅವಳನ್ನು ಕೇಳಿದನು. ಅವನ ಸ್ವರವನ್ನು ಕೇಳಿ ಹುಡುಗಿ ಬಾಗಿಲಿನಲ್ಲೇ ನಿಂತುಬಿಟ್ಟಳು. + +‘ನಾನು ಕಮಲೆ.’ + +‘ನೀನಿಲ್ಲಿ ಬಂದದ್ದು ಯಾಕೆ?’ + +‘ನನಗೆ ಗೊತ್ತಿಲ್ಲ. ನನಗಿಲ್ಲಿ ಬರಲಿಕ್ಕೆ ಮನಸ್ಸು ಇರಲಿಲ್ಲ. ಆದರೆ ಅಮ್ಮ ಒತ್ತಾಯ ಮಾಡಿ ನನ್ನನ್ನು ಕಳುಹಿಸಿದರು. ಅಮ್ಮನನ್ನು ಬಿಟ್ಟು ಬಂದುದಕ್ಕೆ ನನಗೆ ಈಗ ಅಳು ಬರುತ್ತಿದೆ… ನಾನು ಇಲ್ಲೇ ನಿಲ್ಲಬೇಕೆಂದು ಅಮ್ಮ ಹೇಳಿದ್ದಾರೆ.’ + +‘ಇಲ್ಲೇ ನಿಲ್ಲಬೇಕೆಂದು! ಇದೇನು ಛತ್ರವೆಂದು ನಿನ್ನ ಅಮ್ಮ ತಿಳಿದುಕೊಂಡಿದ್ದಾಳೋ?’ + +‘ನನಗೆ ಗೊತ್ತಿಲ್ಲ… ಅಪ್ಪ… ಇಂದು…. ಬೆಳಿಗ್ಗೆ ತೀರಿಹೋದರು….’ಇದನ್ನು ಕೇಳಿ ಸರ್ವೋತ್ತಮ ನಾಯಕ ಒಂದು ಕ್ಷಣಕ್ಕೆ ಸುಮ್ಮನಾದನು. + +‘ನಿನ್ನಪ್ಪ ತೀರಿ ಹೋದರೆ ನಿನ್ನಮ್ಮ ನಿನ್ನನ್ನು ಇಲ್ಲಿಗೆ ಕಳುಹಿಸಬೇಕೆ?’ + +‘ನಾನು ಇಲ್ಲಿಯೇ ನಿಲ್ಲಬೇಕೆಂದು ಅಮ್ಮ ನನ್ನನ್ನು ಕಳುಹಿಸಿದ್ದಾರೆಂದು ಹೇಳಿದ್ದೇನಲ್ಲವೇ?’ + +‘ನಿನ್ನ ಅಮ್ಮ ಭಲಾ ಹೆಂಗಸು! ಛತ್ರ – ಅಲ್ಲ ತಪ್ಪಾಯಿತು – ಅನಾಥಾಲಯವೆಂದು ನಿಮ್ಮ ಅಮ್ಮ ತಿಳಿದುಕೊಂಡಿರುವಂತೆ ಕಾಣುತ್ತದೆ. ಇರಲಿ, ನೀನು ಇಲ್ಲಿಂದ ಬಂದ ಹಾಗೆ ಹೋಗಿ, ಇದೊಂದು ಛತ್ರವಲ್ಲ, ಮುಸಾಫರ್ ಖಾನೆಯೂ ಅಲ್ಲವೆಂದು ನಿನ್ನ ಅಮ್ಮನ ಕೂಡೆ ಹೇಳು; ಹೋಗು!’ + +“ಕಮಲೆಯ ಕಣ್ಣುಗಳಲ್ಲಿ ನೀರು ತುಂಬಿತು. ತನ್ನಲ್ಲಿ ಉಕ್ಕಿ ಉಕ್ಕಿ ಬರುವ ಅಳುವನ್ನು ನಿಲ್ಲಿಸಲಿಕ್ಕೆ ಶತಪ್ರಯತ್ನಗಳನ್ನು ಮಾಡಿದಳು. ಗದ್ಗದ ಕಂಠದಿಂದ ನಾಯಕನನ್ನು ‘ಮಾವಯ್ಯ!’ ಎಂದು ಕರೆದಳು. ಇದನ್ನುಕೇಳಿ ಸರ್ವೋತ್ತಮನಾಯಕ ಬೆಚ್ಚಿಬಿದ್ದನು. ‘ಮಾವಯ್ಯಾ! ನಾನು ನಿನ್ನ ಮಾವಯ್ಯಾ! ನಾನು ನಿನ್ನನ್ನು ಇದುವರೆಗೆ ನೋಡಲಿಲ್ಲವಲ್ಲ!’ + +‘ಮಾವಯ್ಯಾ, ನಾನೂ ನಿಮ್ಮನ್ನು ಇದುವರೆಗೆ ನೋಡಲಿಲ್ಲ!’ + +‘ಹಾಗಾದರೆ ನಾನು ನಿನ್ನ ಮಾವಯ್ಯನೆಂದು ನಿನಗೆ ಯಾರು ಹೇಳಿದರು?’ + +‘ನನ್ನ ಅಮ್ಮ ಹೇಳಿದರು.’ + +ಹುಡುಗಿ ಏನೋ ತನ್ನನ್ನು ಮಾವನೆಂದು ಕರೆಯುತ್ತಿರುವಳು. ಅದರಿಂದೇನು? ಪಾಪ, ತನ್ನನ್ನು ಬೇಕಾದ ಹಾಗೆ ಕರೆಯಲಿ ಎಂದು ಸರ್ವೋತ್ತಮ ನಾಯಕ ತಿಳಿದುಕೊಂಡನು. ಆದರೂ ಅವಳನ್ನು ತನ್ನ ಮನೆಯಲ್ಲಿಟ್ಟುಕೊಂಡು ಸಾಕಿ ಸಲಹುವ ಆಲೋಚನೆಯನ್ನು ಅವನು ಕ್ಷಣಮಾತ್ರಕ್ಕೂ ಮಾಡಲಿಲ್ಲ. ಅವಳನ್ನು ಆ ದಿನದ ಸಂಜೆಯ ‘ಶಟ್ಲಿ’ನಲ್ಲೇ ಕಾಸರಗೋಡಿಗೆ ಕಳುಹಿಸಬೇಕೆಂದು ನಿರ್ಧರಿಸಿದನು. ಅವಳನ್ನು ಒಳಗೆ ಕರಕೊಂಡು ಹೋಗಿ ಅವಳಿಗೆ ಅನ್ನ ಬಡಿಸುವಂತೆ ಮಾಡಿ, ಪುನಃ ತನ್ನ ಭೈಠಕ್ ಕೋಣೆಗೆ ಬಂದನು. ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ ಪುನಃ ಗಟ್ಟಿಯಾಗಲಿಕ್ಕೆ ಪ್ರಾರಂಭಿಸಿತು. ಕೂಡಲೇ ಅವರಿಗೆ ಭಿಕ್ಷೆ ಹಾಕುವ ಆಲೋಚನೆಯನ್ನು ಕೂಡ ದೂರಮಾಡಿದನು. ಪುನಃ ತನ್ನ ಲೆಕ್ಕಾಚಾರದ ಪುಸ್ತಕಗಳನ್ನು ತೆಗೆದುಕೊಂಡು ತನ್ನ ಲಾಭ – ನಷ್ಟದ ಲೆಕ್ಕ ಹಾಕುವುದರಲ್ಲಿ ಮಗ್ನನಾದನು. + +ಅಷ್ಟರೊಳಗೆ ಕಮಲೆ ಊಟಮಾಡಿಕೊಂಡು ಅವನಿದ್ದೆಡೆಗೆ ಪುನಃ ಬಂದಳು. ತನ್ನ ಪೆಟ್ಟಿಗೆಯ ಬಾಗಿಲನ್ನು ತೆರೆದು ಒಂದು ಪುಸ್ತಕವನ್ನು ಹೊರಗೆ ತೆಗೆದಳು. + +‘ಮಾವಯ್ಯ ಈ ಪುಸ್ತಕವನ್ನು ನೋಡಿದಿರಾ?’ + +‘ಇಲ್ಲ ಮತ್ತೆ ನೋಡುವೆನು. ಈಗ ನನಗೆ ಕೆಲಸ ಉಂಟು’ ಎಂದು ನಾಯಕನು ತಲೆಯನ್ನು ಕೂಡ ಎತ್ತದೆ ಹೇಳಿದನು.ಕಮಲೆ ಪುಸ್ತಕವನ್ನು ತೆಗೆದುಕೊಂಡು ಅವನ ಹತ್ತಿರ ಹೋದಳು. + +‘ಮಾವಯ್ಯ, ನೋಡಿ ಅಮ್ಮ ಇದನ್ನು ನನಗೆ ಕಲಿಸುತ್ತಿದ್ದರು. ಇದು ನಿಮ್ಮ ಪುಸ್ತಕವಂತೆ… ನೀವು ಅಮ್ಮನೂ ಒಟ್ಟುಗೂಡಿ ಕಲಿತ ಪುಸ್ತಕವಂತೆ …’ + +ಕಮಲೆಯ ಈ ಮಾತು ಅವನ ಮನಸ್ಸನ್ನು ಅವಳು ಹಿಡಿದಿದ್ದ ಪುಸ್ತಕದ ಕಡೆಗೆ ಸೆಳೆಯಿತು. ಪುಸ್ತಕವನ್ನು ನೋಡಿದನು. ಬಹಳ ಹಳೆದಾದ ಪುಸ್ತಕವಾಗಿತ್ತು. ಕುರ್ಚಿಯಿಂದ ತಟಕ್ಕನೇ ಎದ್ದನು. + +‘ಏನು, ಏನು? ನೀನು ಹೇಳಿದ್ದೇನು?’ ಎಂದು ತವಕದಿಂದ ಕೇಳಿದನು. + +ಕಮಲೆ ಕೂಡಲೇ ನೆಲದ ಮೇಲೆ ಕೂತುಕೊಂಡು ಪುಸ್ತಕದ ಹಾಳೆಗಳನ್ನು ಮಗುಚಿದಳು. ನಾಯಕನು ಅವಳ ಹಿಂದೆಯೇ ಬಗ್ಗಿಕೊಂಡು ನಿಂತು ಅವಳ ತಲೆಯ ಮೇಲಿನಿಂದ ಪುಸ್ತಕವನ್ನು ನೋಡಿದನು. + +‘ನೋಡಿ ಮಾವಯ್ಯ, ಇದು ನೀವು ಬರೆದ ನಿಮ್ಮ ಹೆಸರೆಂದು ಅಮ್ಮ ಹೇಳುತ್ತಿದ್ದರು. ನೋಡಿ, ಇದರ ಕೆಳಗೇನೇ ಅಮ್ಮ ಬರೆದ ಅವರ ಹೆಸರು … ಇದು ನೀವು ಮಾಡಿದ ಗುರುತು ಅಂತೆ…’ + +ನಾಯಕನು ಮೈಮರೆತನು. ಕೂಡಲೇ ಹುಡುಗಿಯಿಂದ ಆ ಪುಸ್ತಕವನ್ನು ಕಿತ್ತುಕೊಂಡು ಅಲುಗಾಡುವ ಬೆರಳುಗಳಿಂದ ಅದರ ಹಾಳೆಗಳನ್ನು ಮಗುಚಿದನು… ಕೂಡಲೇ ಒಂದು ದೊಡ್ಡ ಅರಚನ್ನು ಹಾಕಿ ಪುಸ್ತಕವನ್ನು ಕೆಳಗೆ ಬಿಟ್ಟುಬಿಟ್ಟನು … ಪುಸ್ತಕ ನೆಲದ ಮೇಲೆ ದೊಪ್ಪನೆ ಬಿತ್ತು… ನಾಯಕನು ರೆಪ್ಪೆಗೆ ರೆಪ್ಪೆಯನ್ನು ತಾಗಿಸದೆ ಕಮಲೆಯನ್ನು ದೀರ್ಘ ಸಮಯದವರೆಗೆ ನೋಡಿದನು. ಹತ್ತು ವರ್ಷಗಳ ದಪ್ಪವಾದ ಪದರುಗಳು ಅವನ ಕಣ್ಣುಗಳನ್ನು ಮುಚ್ಚಿದ್ದುವು. ಅವುಗಳೆಲ್ಲ ಈಗ ಫಕ್ಕನೆ, ಒಂದೇ ಸವನೆ ಉದುರಿ ಬಿದ್ದುವು…. ಕಮಲೆ ಕೂತಲ್ಲಿಂದ ಏಳದೆ ನಾಯಕನ ಈ ಭಾವಾಂತರವನ್ನು ನೋಡಿ ಅವನನ್ನು ಆಶ್ಚರ್ಯದಿಂದ ನೋಡುತ್ತಾ ಕೂತುಕೊಂಡಳು… + +‘ಕಮಲೆ… ಕಮಲೆ….’ ಎಂದು ನಾಯಕನು ಮೆಲ್ಲ ಮೆಲ್ಲಗೆ ಹೇಳಿದನು. + +‘ಏನು ಮಾವಯ್ಯ?’ ಎಂದು ಕಮಲೆ ಕೇಳಿದಳು. + +‘ನಾನು… ನಾನು ನಿಜವಾಗಿಯೂ ನಿನ್ನ ಸೋದರಮಾವ.’ + +‘ನಿನಗೆ ಸಂಶಯವಿತ್ತೇ?… ನಾನು ಮೊದಲೇ ಹೇಳಿಲ್ಲವೇ?’ ಎಂದು ಕಮಲೆ ಹೇಳಿದಳು. + +ನಾಯಕನು ಉತ್ತರ ಕೊಡಲಿಲ್ಲ… ಹೊರಗೆ ಜನರ ಗಲಾಟೆ ಇನ್ನೂ ನಿಂತಿರಲಿಲ್ಲ. ಆದರೆ ಅದಕ್ಕೆಲ್ಲ ನಾಯಕನು ಈಗ ಕಿವುಡಾದನು. ಹತ್ತು ವರ್ಷ! ಹತ್ತು ವರ್ಷಗಳ ಕೆಳಗೆ ನಾಯಕನು ಅವನ ತಂಗಿ ರುಕ್ಕುವೂ ಎಂತಹ ಅನ್ಯೋನ್ಯದಲ್ಲಿದ್ದರು! ಹತ್ತು ವರ್ಷಗಳ ಕೆಳಗೆ ಅವನ ತಂಗಿ ರುಕ್ಕು ತನ್ನ ತವರುಮನೆಯಲ್ಲಿ ನಿಲ್ಲಬೇಕೆಂದು ಬಂದಿದ್ದಳು…. ಒಂದು ತಿಂಗಳು ಅಂತ್ಯವಾಗುವಷ್ಟರಲ್ಲಿಯೇ ಯಾವುದೋ ಒಂದು ಚಿಕ್ಕ ಸಂಗತಿ ಅವರೊಳಗೆ ಮನಃಕ್ಲೇಶವನ್ನು ಎಬ್ಬಿಸಿತು. ಸಂಗತಿಯೇನೋ ಅಲ್ಪವಾಗಿತ್ತು. ಆದರೆ ಅದರಿಂದುದ್ಭವಿಸಿದ ಪರಿಣಾಮ ಘೋರವಾಯಿತು. ನಾಯಕನು ತನ್ನ ತಂಗಿಯನ್ನು ತನಗೆ ಜೀವವಿರುವವರೆಗೆ ನೋಡಲಾರೆನೆಂದು ಶಪಥ ಹಾಕಿಕೊಂಡನು. ರುಕ್ಕುವು ತನಗೆ ಪ್ರಾಣವಿರುವವರೆಗೆ ತನ್ನಣ್ಣನ ಮನೆಯಲ್ಲಿ ಕಾಲಿಡಲಾರೆ ಎಂದು ಅಣೆ ಹಾಕಿಕೊಂಡಳು. ಆ ದಿನವೇ ರುಕ್ಕುವು ತವರುಮನೆಯಿಂದ ಗಂಡನ ಮನೆಗೆ ಹೊರಟಿದ್ದಳು!… + +ಹತ್ತು ವರ್ಷ! ಹತ್ತು ವರ್ಷಗಳು ಮನುಷ್ಯನ ಜೀವಮಾನದಲ್ಲಿ ಅಲ್ಪವಾದ ಸಮಯವಲ್ಲ! ಆದರೆ ನಾಯಕನು ಹಟವಾದಿ ಎಂದು ನಾನು ಮೊದಲೇ ಹೇಳಲಿಲ್ಲವೇ? ರುಕ್ಕುವು ಅವನ ತಂಗಿ. ಅದರಲ್ಲಿಯೂ ಹೆಂಗಸು. ಅವಳೂ ಹಟವಾದಿಯಾದುದರಲ್ಲಿ ಆಶ್ಚರ್ಯವೇನು? ಈ ಹತ್ತು ವರ್ಷಗಳ ಪರ್ಯಂತವೂ ಅಣ್ಣ – ತಂಗಿಯರು ತಮ್ಮ ತಮ್ಮ ಪ್ರತಿಜ್ಞೆಯನ್ನು ಪಾಲಿಸಿಕೊಂಡೇ ಬಂದಿದ್ದರು. ನಾಯಕನಾದರೊ ಧನವನ್ನು ಶೇಖರಿಸುವುದರಲ್ಲಿ ರುಕ್ಕುವನ್ನು ಕೂಡಲೇ ಮರೆತುಬಿಟ್ಟಿದ್ದನು. ತೀರಾ ಮರೆತುಬಿಟ್ಟಿದ್ದನು. ಈ ಹತ್ತು ವರ್ಷಗಳಲ್ಲಿಯೂ ಅವಳು ಜೀವನದಲ್ಲಿದ್ದಳೋ ಇಲ್ಲವೋ ಎಂಬುದನ್ನು ಕೂಡ ಅವನು ಅರಿಯದಿದ್ದನು. ಈ ಹತ್ತು ವರ್ಷಗಳಲ್ಲಿಯೂ ಅವನ ಹೃದಯದಿಂದ ರುಕ್ಕುವು ತೀರಾ ಮಾಯವಾಗಿ ಹೋಗಿದ್ದಳು. + +ಆದರೆ, ಹತ್ತು ವರ್ಷಗಳ ಕೆಳಗೆ! – ಹತ್ತು ವರ್ಷಗಳ ಕೆಳಗೆ ಅವರೊಳಗಿದ್ದ ಮಮತೆ ಅಷ್ಟಿಷ್ಟಾಗಿರಲಿಲ್ಲ! ಕಮಲೆಯ ಕೈಯಲ್ಲಿದ್ದ ಆ ಹಳೇ ಪುಸ್ತಕವೇ ಅವರೊಳಗಿದ್ದ ಮಮತೆಯ ಮೂಕ ಸಾಕ್ಷಿಯಾಗಿತ್ತು… ಪ್ರತಿಜ್ಞೆ…. ಹಾಳಾಗಿ ಹೋಗಲಿ! ರುಕ್ಕು ಸಂಕಷ್ಟದಲ್ಲಿರುವಳು! ಅವಳ ಸರ್ವಸ್ವವಾದ ಅವಳ ಪತಿ ಈಗ ಅವಳ ಕೈಯನ್ನು ಬಿಟ್ಟು ಹೋಗಿರುವನು! ಅವಳೀಗ ಅನಾಥೆಯಾಗಿರುವಳು! ಮರಣದ ಎದುರಿಗೆ ಆ ಹಾಳು ಪ್ರತಿಜ್ಞೆಯೇ? ರುಕ್ಕುವು ಸಂಕಷ್ಟದ ಸಮಯದಲ್ಲಿ ತನ್ನನ್ನು ಮರೆಯಲಿಲ್ಲ! ತನ್ನ ಪ್ರತಿಜ್ಞೆಯನ್ನು ಭಂಗಮಾಡಿಕೊಂಡಳು! ಕಮಲೆಯನ್ನು ಕೂಡಲೇ ತಾನಿದ್ದೆಡೆಗೆ ಕಳುಹಿಸಿದಳು! ತಾನು ಈಗ ಹೇಡಿಯಾಗಬಹುದೆ? ಇದೇ ರೀತಿಯಲ್ಲಿ ನಾಯಕನು ಆಲೋಚಿಸತೊಡಗಿದನು.ಹೊರಗಿನ ಗಲಾಟೆ ಇನ್ನೂ ನಿಂತಿರಲಿಲ್ಲ. ಕಮಲೆ ಅದನ್ನು ಕೇಳಿ ಸ್ವಲ್ಪ ಬೆದರಿದಳು. ‘ಮಾವಯ್ಯ, ಹೊರಗೆ ಕೂಡಿದ ಜನರು ಯಾರು?’ ಎಂದು ಕೇಳಿದಳು. + +‘ಬೇಡುವವರು.’‘ಇವತ್ತು ಶನಿವಾರ ಅಲ್ಲವಲ್ಲ?’‘ಅವರಿಗೆ ಎಲ್ಲಾ ದಿನಗಳು ಶನಿವಾರವೇ.’ + +‘ಅದೇನು ಮಾವಯ್ಯ, ಅವರು ಬಹಳ ಬಡವರೇ? ಪಾಪ ಮಕ್ಕಳು ಹೇಗೆ ಅಳುತ್ತವೆ! ಹಸಿವೆಯಾಗಿದೆಯೋ ಏನೋ…’ + +ನಾಯಕನು ತನ್ನ ತುಟಿಗಳನ್ನು ಕಚ್ಚಿಕೊಂಡನು. ಕಮಲೆ ತನ್ನ ಕೈಯಲ್ಲಿದ್ದ ಪುಸ್ತಕದ ಹಾಳೆಗಳನ್ನು ಮಗುಚಿದಳು. + +‘ಮಾವಯ್ಯ’ + +‘ಏನು ಮಗು?’ + +‘ಅಮ್ಮ… ನನ್ನನ್ನು ಇಲ್ಲಿ ಕಳಿಸುವಾಗ್ಗೆ ನನ್ನನ್ನು ಇನ್ನು ನೋಡಲಾರಳೆಂದು ಹೇಳಿದ್ದರು…. ಮಾವಯ್ಯ, ನನಗೆ ಅಳು ಬರುತ್ತದೆ….’ + +ಇದನ್ನು ಕೇಳಿ ನಾಯಕನು ದಿಗಿಲುಬಿದ್ದನು. ಒಂದು ಘೋರವಾದ ಸಂಶಯ ಅವನ ಮನಸ್ಸಿಗೆ ಹತ್ತಿತು. ಅವನ ದೇಹ ಕಂಪಿಸಲಿಕ್ಕೆ ಪ್ರಾರಂಭಿಸಿತು. ತನ್ನ ಲೆಕ್ಕಚಾರದ ಪುಸ್ತಕವೊಂದರ ಖಾಲಿ ಕಾಗದವೊಂದನ್ನು ಹರಿದು ಅದರಲ್ಲಿ ಅಲುಗಾಡುತ್ತಿರುವ ತನ್ನ ಬೆರಳುಗಳಿಂದ ಏನೋ ಗೀಚಿದನು. ಕೂಡಲೇ ತನ್ನ ಆಳನ್ನು ಕರೆದು ಅವನೊಡನೆ ಆ ಕಾಗದವನ್ನು ಒಂದು ಐದು ರೂಪಾಯಿಯ ನೋಟನ್ನೂ ಕೊಟ್ಟು ಆ ಕ್ಷಣವೇ ಅವನನ್ನು ತಂತೀ ಆಫೀಸಿಗೆ ಕಳುಹಿಸಿದನು. + +ತನ್ನ ತಂತಿಗೆ ಜವಾಬು ಬರುವವರೆಗೆ ತಾನು ಊಟ ಮಾಡುವುದಿಲ್ಲವೆಂದು ಒಳಗೆ ಹೇಳಿ ಕಳುಹಿಸಿದನು. + +‘ಕಮಲೆ.’ + +‘ಏನು, ಮಾವಯ್ಯ?’ + +‘ನಿನಗೆ ಪುಣ್ಯವಿದ್ದರೆ…. .ಪುಣ್ಯವಿದ್ದರೆ…..’ ನಾಯಕನಿಗೆ ಮಾತು ಮುಂದುವರಿಸಲಿಕ್ಕಾಗಲಿಲ್ಲ. + +ಹೊರಗಿನಿಂದ ಜನರ ಗಲಾಟೆ ಇನ್ನೂ ಕೇಳಿಬರುತ್ತಿತ್ತು. + +“ಎರಡು ತಾಸುಗಳು ಕಳೆದುವು. (ನಾಗಣ್ಣ ಮುಂದುವರಿಸಿದನು) ನಾಯಕನು ಈ ಎರಡು ತಾಸುಗಳವರೆಗೂ ಕುರ್ಚಿಯಲ್ಲಿ ಕದಲದೆ ಕುಳಿತಿದ್ದನು. ಪ್ರತಿ ಒಂದು ಕ್ಷಣ ಬಾಗಿಲಿನ ಕಡೆಗೆ ತವಕದಿಂದ ನೋಡುತ್ತಿದ್ದನು. ಕಮಲೆ ನೆಲದ ಮೇಲೆ ಕುಳಿತುಕೊಂಡು ಗಿಳಿಯಂತೆ ಮಾತಾಡುತ್ತಿದ್ದಳು. ಅವಳ ನಿರ್ಮಲವಾದ ಮಾತುಗಳು ಅವನ ಹೃದಯದಲ್ಲಿ ಉರಿಯುತ್ತಿರುವ ಜ್ವಾಲೆಯನ್ನು ಸ್ವಲ್ಪಮಟ್ಟಿಗಾದರೂ ತಣ್ಣಗೆ ಮಾಡುತ್ತಿದ್ದುವು. ಕಟ್ಟಕಡೆಗೆ ಅವರಿದ್ದ ಕೊಠಡಿಯ ಬಾಗಿಲು ತೆರೆಯಿತು. ತಂತೀ ಜವಾನನು ಬಾಗಿಲ ಬಳಿಯಲ್ಲಿ ನಿಂತ. ಸರ್ವೋತ್ತಮನಾಯಕ ಕೂಡಲೇ ಅವನಿದ್ದಲ್ಲಿಗೆ ಹೋಗಿ ಅವನು ಹಿಡಿದಿದ್ದ ಲಕೋಟೆಯನ್ನು ಅವನ ಕೈಯಿಂದ ಎಳೆದುಕೊಂಡನು. ಉತ್ಸುಕತೆಯಿಂದ ಅಲುಗಾಡುತ್ತಿರುವ ಬೆರಳುಗಳಿಂದ ಲಕೋಟೆಯನ್ನು ಹರಿದು ತನ್ನ ತಂತಿಗೆ ಬಂದ ಜವಾಬನ್ನು ಓದಿ ನೋಡಿದನು…. + +ನಾಯಕನಿಗೆ ತಲೆಗೆ ಸಿಡಿದು ಬಡಿದಂತಾಯಿತು. ಎಲ್ಲವೂ ಅಂಧಕಾರಮಯವಾಯಿತು. ‘ಕಮಲೆ… ಕಮಲೆ!’ ಎಂದು ಕರೆದನು. ಕಮಲೆಯು ಅವನ ಹತ್ತಿರ ಓಡಿ ಹೋದಳು. ಅವಳನ್ನು ಬಿಗಿದಾಗಿ ಅಪ್ಪಿಕೊಂಡನು. `ನಾನು ಪಾಪಿಷ್ಠ! ನನ್ನಷ್ಟು ಪಾಪಿಷ್ಠ ಈ ಲೋಕದಲ್ಲಿ ಬೇರೆ ಯಾರೂ ಇಲ್ಲ!’ ಎಂದು ತನ್ನ ಹಣೆಯನ್ನು ಬಡಿದುಕೊಳ್ಳಲಾರಂಭಿಸಿದನು. ತನ್ನ ಕೈಗಳಿಂದ ಮುಖವನ್ನು ಮುಚ್ಚಿಕೊಂಡು ಮಕ್ಕಳಂತೆ ಅತ್ತನು. ತನ್ನ ಮಾವನ ಅವಸ್ಥೆಯನ್ನು ನೋಡಿ ಕಮಲೆಯ ಕಣ್ಣುಗಳಲ್ಲಿಯೂ ನೀರು ತುಂಬಿತು. ಆದರೂ ಅವನನ್ನು ಸಂತೈಸಲಿಕ್ಕೆ ಪ್ರಯತ್ನಿಸಿದಳು. + +‘ಮಾವಯ್ಯ, ಅಮ್ಮ, ಇಲ್ಲಿ ಬರುವುದಿಲ್ಲವೇ?’ + +‘ಇಲ್ಲ , ಮಗು….’ + +‘ಎಂದಾದರೂ ಬರಲಿಕ್ಕಿಲ್ಲವೇ?’ + +‘ಇಲ್ಲ ಮಗು, ಅವಳು ನಿನ್ನ ಅಪ್ಪನ ಹಿಂದೆಯೇ ಹೋಗಿರುವಳು.’ + +‘ಮಾವಯ್ಯ …. ಮಾವಯ್ಯ …. ನನ್ನನ್ನೂ ಕರಕೊಂಡು ಹೋಗಬಹುದಿತ್ತಲ್ಲವೇ?…. ಅಮ್ಮ!….ಅಪ್ಪ! …..’ + +ಆ ಬಾಲೆ ಶೋಕಿಸುವುದನ್ನು ನೋಡಿ ನಾಯಕನ ಎದೆಗೆ ಶೂಲವನ್ನು ಹಾಕಿದಂತಾಯಿತು. ತಾನು ಪಡುವ ದುಃಖವನ್ನು ಬಿಗಿದಾಗಿ ತಡೆದುಕೊಂಡು, ಅವಳ ತಲೆಯನ್ನು ತನ್ನ ಹೃದಯಕ್ಕೆ ಒತ್ತಿಕೊಂಡು ಅವಳ ಹಣೆಗೆ ಮುದ್ದಿಟ್ಟನು. + +ಹೊರಗಿನಿಂದ ಜನರ ಗಲಾಟೆ ಇನ್ನೂ ಕೇಳಿಬರುತ್ತಿತ್ತು. + +ಅದನ್ನು ಕೇಳಿದ ಕೂಡಲೇ ನಾಯಕನ ಮುಖದಲ್ಲಿ ನೂತನವಾದ ಪ್ರಕಾಶವೊಂದು ಹೊಳೆಯಲಾರಂಭಿಸಿತು. ಕಮಲೆಯನ್ನು ಬಿಗಿಯಾಗಿ ಅಪ್ಪಿಕೊಂಡು ಅವಳ ಕಣ್ಣುಗಳಲ್ಲಿ ಪುನಃ ನೋಡಿದನು. + +‘ಮಗೂ ಕಮಲೇ’‘ಏನು ಮಾವಯ್ಯ?’‘ಹೊರಗೆ ನೂರಾರು ಜನರಿದ್ದಾರಲ್ಲವೇ?’‘ಹೌದು, ಮಾವಯ್ಯ ಅವರು ಇನ್ನೂ ಹೋಗಲಿಲ್ಲ.’‘ಅವರ ಮುಂದೆ ಹೋಗಿ ನಿಲ್ಲಲಿಕ್ಕೆ ನಿನಗೆ ಹೆದರಿಕೆಯಾದೀತೇ?‘ಇಲ್ಲ ಮಾವಯ್ಯ, ಹೆದರಿಕೆ ಏನು?’‘ನಾನೀಗ ನಿನ್ನ ಹತ್ತಿರ ಹೇಳುವುದನ್ನು ನೀನು ಅವರ ಮುಂದೆ ಹೇಳುವಿಯಾ?’‘ಅಡ್ಡಿಯೇನು ಮಾವಯ್ಯ? ಏನೆಂದು ಹೇಳಬೇಕು?’ + +‘ಮಗೂ, ಅವರಿದ್ದಲ್ಲಿಗೆ ಹೋಗಿ ನಾನು ನಾಳೆ ಬೆಳಗ್ಗಿನಿಂದ ನನ್ನ ಹತ್ತಿರ ಇದ್ದ ಅಕ್ಕಿಯನ್ನೆಲ್ಲ ಮುಡಿ ಒಂದಕ್ಕೆ ಐದು ರೂಪಾಯಿಯಂತೆ ಮಾರುತ್ತೇನೆಂದು ಹೇಳಿ ಬಾ… ಅಷ್ಟೇ… ಹೋಗು, ಮಗು.’ + +ಕಮಲೆ ತನ್ನ ಮುಖವನ್ನು ಒರಸಿಕೊಂಡು ಹೊರಗೆ ಹೋದಳು. ಆ ನೂರಾರು ಮಂದಿ ಜನರ ಮುಂದೆ ಜಗಲಿಯ ಮೇಲೆ ನಿಂತುಕೊಂಡಳು. ಅವರೆಲ್ಲರನ್ನೂ ಒಂದು ಬಾರಿ ನೋಡಿದಳು. ಅವರೆಲ್ಲರೂ ತಾವು ಮಾಡುತ್ತಿರುವ ಗದ್ದಲವನ್ನು ಕೂಡಲೇ ನಿಲ್ಲಿಸಿ ಆ ಕೋಮಲವಾದ ಬಾಲಿಕೆಯನ್ನು ನೋಡಲಾರಂಭಿಸಿದರು. + +‘ನನ್ನ ಸೋದರಮಾವ ಸರ್ವೋತ್ತಮ ನಾಯಕರು ನನ್ನನ್ನು ನಿಮ್ಮ ಹತ್ತಿರ ಕಳುಹಿಸಿದ್ದಾರೆ’ ಎಂದು ಕಮಲೆ ಸ್ವಲ್ಪವಾದರೂ ಭೀತಿಯಿಲ್ಲದೆ ಪ್ರಾರಂಭಿಸಿದಳು. ಅವರೆಲ್ಲರೂ ತಮ್ಮ ಕಿವಿಗಳನ್ನು ನೆಟ್ಟಗೆ ಮಾಡಿಕೊಂಡು ಅವಳು ಹೇಳಬಹುದಾದ ಮಾತುಗಳನ್ನು ಕೇಳಲಿಕ್ಕೆ ತವಕಗೊಂಡರು. + +ಕಮಲೆ ತನ್ನ ಮುಂದೆಯೇ ನೋಡುತ್ತಾ ತನ್ನ ಮೃದುವಾದ ಸ್ವರದಿಂದ ಮೆಲ್ಲಗೆ ಹೇಳಿದಳು : ‘ನನ್ನ ಮಾವ ಸರ್ವೋತ್ತಮ ನಾಯಕರು ನಾಳೆ ಬೆಳಗ್ಗಿನಿಂದ ತಮ್ಮ ಹತ್ತಿರವಿದ್ದ ಅಕ್ಕಿಯನ್ನೆಲ್ಲಾ ಮುಡಿ ಒಂದಕ್ಕೆ ಐದು ರೂಪಾಯಿಯಂತೆ ಮಾರುತ್ತಾರಂತೆ. ಇದನ್ನು ನಿಮಗೆ ತಿಳಿಸಲಿಕ್ಕೆ ನನ್ನನ್ನು ಕಳುಹಿಸಿದ್ದಾರೆ… ಇನ್ನು ನೀವೆಲ್ಲರೂ ಹೋಗುವಿರೇನು?’ + +ಇದನ್ನು ಕೇಳುತ್ತಲೇ ಆ ಬಡಜನರ ಸಂತೋಷಕ್ಕೆ ಪಾರವೇ ಇಲ್ಲದಂತಾಯಿತು. ಸರ್ವೋತ್ತಮ ನಾಯಕರನ್ನು ತುಂಬಾ ಹೊಗಳಿಕ್ಕೆ ಪ್ರಾರಂಭಿಸಿದರು. ಆ ಬಾಲಿಕೆಯನ್ನು ತುಂಬಾ ಹರಸಿದರು. ಇಬ್ಬರು ಮುದುಕರು ಮುಂದಕ್ಕೆ ಬಂದು ಕಮಲೆಯ ತಲೆಯ ಮೇಲೆ ಕೈಗಳನ್ನಿಟ್ಟು, ದೇವರು ನಿನಗೆ ಒಳ್ಳೇದು ಮಾಡಲಿ ತಾಯಿ ಎಂದರು. ಇದನ್ನೆಲ್ಲ ನೋಡಿ ಕಮಲೆಯ ಕಣ್ಣುಗಳಿಗೆ ನೀರು ಬಂತು. ಅವಳು ಕೂಡಲೇ ತನ್ನ ಸೋದರ ಮಾವನಿದ್ದಲ್ಲಿಗೆ ಓಡಿಹೋದಳು. ನಾಯಕನು ಹೊರಗೆ ಆಗುತ್ತಿದ್ದುದನ್ನೆಲ್ಲ ನೋಡುತ್ತಲೂ ಕೇಳುತ್ತಲೂ ನಿಂತುಕೊಂಡಿದ್ದನು. ಕಮಲೆ ತನ್ನ ಹತ್ತಿರ ಬಂದಾಕ್ಷಣ ಅವಳನ್ನು ಬಿಗಿಯಾಗಿ ಅಪ್ಪಿಕೊಂಡನು. ಅವಳಲ್ಲಿ ಅಳು ಉಕ್ಕಿ ಉಕ್ಕಿ ಬರಲಾರಂಭಿಸಿತು. + +ನಾಯಕನು ಅವಳ ಕೋಮಲವಾದ ತಲೆಯನ್ನು ತನ್ನ ಹೃದಯಕ್ಕೆ ಒತ್ತಿಕೊಂಡು ನೋಡುವವರ ಹೃದಯ ಕರಗಿ ನೀರಾಗಿ ಹೋಗುವಂತೆ ಅವಳೊಂದಿಗೆ ತಾನೂ ಅತ್ತನು….. + +ನಾಗಣ್ಣ ಕಥೆಯನ್ನು ಹೇಳುವುದನ್ನು ನಿಲ್ಲಿಸಿದನು. ನಮ್ಮನ್ನು ಕತೆಯ ಭಾವಲೋಕದಲ್ಲಿ ವಿಹರಿಸಲು ಬಿಟ್ಟು ಅಲ್ಲಿಂದ ಹೊರಟುಹೋದನು.(ಸಂಕ್ಷೇಪಿತ ಸಣ್ಣಕತೆ – ಸಂಕಲನ : ಹುಚ್ಚು ಬೆಳದಿಂಗಳಿನ ಹೂಬಾಣಗಳು. 1938) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_299.txt b/Kenda Sampige/article_299.txt new file mode 100644 index 0000000000000000000000000000000000000000..9240aae722258567b9229dfc0fd4e83bcfe56330 --- /dev/null +++ b/Kenda Sampige/article_299.txt @@ -0,0 +1,35 @@ + + +ಬಾನಸಮುದ್ರಕೆ ಗಾಳ ನೋಟ ಪ್ರವೀಣ ಅವರ ಕವನ ಸಂಕಲನ. ಈ ಸಂಕಲನದ ಮೊದಲ ಕವಿತೆಯನ್ನು ಓದಿದಂತೆಲ್ಲಾ ಎದೆಗಿಳಿದು ನನ್ನೊಳಗೆ ಅವ್ವನ ಧ್ಯಾನˌ ಮಣ್ಣ ಬಿಸುಪಿನಲಿ ಅವಳ ಪಿಸುನುಡಿಗಳನ್ನು ಎದೆಯೊಳಗೆ ಇಳಿಸಿ ನೊಂದ ಹೃದಯಗಳಿಗೂ ಲಕ್ಷಾಂತರ ಬತ್ತಿಯಾಗಿ ಹೂ ನಗೆಯಾಗಿ ಬೆಳಕಿನ ಎಳೆಯಾಗಿ ಮನಸ್ಸು ಮತ್ತು ಹೃದಯಗಳಲಿ ಸದಾ ಬೆಚ್ಚಗಿಡುವಂತೆ “ಲಕ್ಷಾಂತರ ಬತ್ತಿ” ಬೆಸೆವ ಅವ್ವ ಕಾಲಗನ್ನಡಿಯಂತೆ ಗೋಚರಿಸುತ್ತಾಳೆ. ಇಲ್ಲಿಯ ಅವ್ವ ಸೀರೆಯ ಸೆರಗಿನಷ್ಟೇ ಜಗವನ್ನೇ ಸಂತೈಸೋ ಜೋಳಿಗೆಯಂತೆˌ ಕಾಣದೂರಿಗೆ ಮಿಣುಕು ದೀಪದ ದಾರಿಯಂತೆ ಅವ್ವ ದಿಕ್ಸೂಚಿಯಾಗಿ ಗೋಚರಿಸುತ್ತಾಳೆ. + +ನಂತರದ ಕವಿತೆಗಳನ್ನು ಮತ್ತೆ ಮತ್ತೆ ಓದಿದ್ದೇನೆ. ಓದಿ ಆಡಿಯೋ ಮಾಡಿ ಕೇಳಿದ್ದೇನೆ. ಕೇಳಿಯೂ ಓದಿಯೂ ಅನಿಸಿದ್ದು ಮಾತ್ರ ಬರೆಯಲು ತೊದಲು ನುಡಿ ದಾಖಲಿಸುವ ಪ್ರಯತ್ನ. + +‘ಮೋಜಿಗೆಂದು ಬಿಟ್ಟುಕೊಂಡ ಹುಳಹೃದಯವನ್ನೇ ಕೊರೆಯುತ್ತದೆ’ + +(ಪ್ರವೀಣ) + +ಎಂಬಂತಹ ಅಸಾಯಕತೆಯಲ್ಲಿ ‘ಹಸಿವೆಗೆ ದಣಿವೆ ಇಲ್ಲ’ ಇಕ್ಕಟ್ಟುಗಳು ಸಂಕಟಗಳು ತಳಮಳಗಳು ಮನುಷ್ಯನೊಳಗೆ ಸುಳಿದಾಡುವ ಪರಿಯನ್ನು ವಿಸ್ತೃತಗೊಳಿಸುತ್ತಾ ಸಾಗುತ್ತದೆ. ಹುಳಕ್ಕೆ ಎಲ್ಲೆಲ್ಲಿಯ ಕನೆಕ್ಷನ್ನುಗಳಿವೆ? ಎನ್ನುವುದರ ಮೂಲಕ ಮುಗ್ಧ ಜನರಿಗೆ ಈ ಹಸಿವೆಂಬ ಹುಳ ಅದ್ಹೇಗೆ ತನ್ನ ಹಿಡಿತ ಸಾಧಿಸಿದೆ ಎಂಬುದನ್ನು ಮನದಟ್ಟು ಮಾಡುತ್ತಾ ಸಾಗುತ್ತದೆ. ‘ಹೂವುಗಳ್ಯಾಕೋ ಮೊಗ್ಗಿನಲೆ ಕಮರುತ್ತಿವೆ’ ಎನ್ನುವ ಸಾಲಿನಲ್ಲಿಯೂ ಮುಗ್ಧ ಹೃದಯಗಳ ಆತಂಕ ಎತ್ತಿ ತೋರಿಸುತ್ತದೆ. ಮತ್ತೆ ಮುಂದುವರೆದು ‘ಹೂವು ಅರಳಿಲ್ಲ’ ಎನ್ನುವ ಕವಿತೆಯಲ್ಲಿ ಬೆಳಕಿನ ಬೆಂಬತ್ತಿ ಹೋಗಿ, ಎಷ್ಟೆ ದಾರಿ ಸವಿಸಿದರೂ ಗಾಢಕತ್ತಲೆಯಲ್ಲಿ ಕಷ್ಟ ಸುಖ ಸಹಿಸಿಯೂ ಬೆಳಕನೂರ ಕಾಣುವ ಆಶಾವಾದವನ್ನು ಎದೆಯೊಳಗೆ ಕಾಪಿಟ್ಟುಕೊಂಡು ಮನಸ್ಸು ಅರಳಿಸುವ ಅರಳುವ ಕಾಲಘಟ್ಟಕ್ಕಾಗಿ ಕಾಯುತ್ತಾ ಕುಳಿತುಕೊಂಡಿದೆ ಕಾಲ. ಅರಳುವ ಕಾಲ ಬಂದೆ ಬರುತ್ತದೆ ಎಂಬುದು ಕವಿಯ ಆಶಯವಾಗಿದೆ. + +ತನ್ನನ್ನೇ ತಾನು ಮೈಸುಟ್ಟುಕೊಂಡು ಎದೆ ಪರಚಿಕೊಂಡು ಸಣ್ಣಾಗಿ ಹಣ್ಣಾಗಿ ಮಾಗುತ್ತಾ ‘ಆಘಾತದಿಂದ ಬಿದ್ದುಕೊಂಡಿರುವ ಬೆಂಕಿಕಡ್ಡಿ ಒಂದೆಡೆಯಾದರೆ ಬೆಂಕಿಯ ಅರಿವೆ ಇಲ್ಲದೆ ನಿಧಾನವಾಗಿ ಎದೆಗಿಳಿವ ಧ್ಯಾನಸ್ಥ ಬುದ್ಧನ ಮಿಂಚು ಎದೆಗೆ ನಾಟುವಂತೆ ಚಿತ್ರಿಸಿದ್ದಾರೆ. + +‘ಬ್ಯಾಟರಿ ಬೆಳಕು’ ಪದ್ಯದಲ್ಲಿ ಗಡಿಯಾರದ ಕಾಲಿಗೆ ಪೋಲಿಯೋ ಹೊಡೆದ ಸವಿಗನಸು’ ಹೀಗೆ ಬೀಡುಬೀಸಾಗಿ ಕವಿತೆಯ ಸಾಲುಗಳ ಮೂಲಕ ಕಾಲಕ್ಕೆ ಅಂಟಿದ ರೋಗದ ವ್ಯಾದಿಗಳನ್ನು ಬಿಚ್ಚಿಡುತ್ತಾ ಬ್ಯಾಟರಿ ಬೆಳಕು ಬೆನ್ನು ಬಿಡುತ್ತಿಲ್ಲ ಎನ್ನುವ ಆತಂಕದೊಳಗೆ ಹೃದಯಕ್ಕೆ ಬೆಂಕಿಹಚ್ಚಿ ಬೆಚ್ಚಗಾಗುತ್ತೇನೆ ಎನ್ನುವ ಆತಂಕದೊಳಗೂ ಕತ್ತಲಿನಲಿ ಮಿಂಚುಹುಳುವಿನ ಧ್ಯಾನದಲಿ ನಕ್ಷತ್ರ ಬಿಡಿಸುವ ಕೆಲಸಕ್ಕೆ ಕೈಹಾಕುತ್ತಾರೆ. + +‘ವಿಶ್ವವೆ ಆಟಿಕೆಯ ಬುಟ್ಟಿ’ ಭಯವಿಲ್ಲ ಬೇದವಿಲ್ಲˌ ದಣಿವಿಲ್ಲ ರಣರಣ ಬಿಸಿಲಲ್ಲೂ ಹಣೆತುಂಬಾ ಇಬ್ಬನಿಸಂತೆ’ ಮನಸು ಮಗುವಾದ ಬೆರಗಿನಲಿ ತೇಲುವ ಕವಿತೆ ವಿಶ್ವವನ್ನೇ ತೆಕ್ಕೆಯೊಳಗೆ ಬಾಚಿಕೊಂಡು ಸಾಗುತ್ತದೆ. ವಿಶ್ವ ಅದು ಮುಗ್ಧಮಗುವಿನಂತೆ ಚಂದಿರನ ತಿಳಿ ನಗುವಿನಂತೆ ಎಂಬ ಕ್ಷಣ ಚುಂಬಕ ಬಿಸಿಲು ಇಬ್ಬನಿಗೆ ಹೋಲಿಸಿದ್ದಾರೆ. + +‘ಕನಿಕರ ಬೇಕಿರುವುದು ಹೆಣಕ್ಕಲ್ಲಅಳುವವರಿಗೆ'(ಆಚೆಗೇನು ಇಲ್ಲ) + +ಇಲ್ಲಿ ವ್ಯಕ್ತವಾಗಿರುವ ಕವಿಯ ಕನಿಕರ ಕಳವಳ ಮಾರ್ಮಿಕವಾದದ್ದು. ಸದ್ಯ ಸತ್ತವರ ಹೆಸರಲ್ಲಿ ರಾಜಕೀಯ ಮಾಡುತ್ತಾ ರಾಡಿ ಎಬ್ಬಿಸುವವರಿಗೆ ನೇರವಾದ ಪ್ರಶ್ನೆಯೂ ಹೌದು. ಕಣ್ಣೀರಲ್ಲಿ ಕೈತೊಳೆಯುತ್ತಿರುವ ಅಸಂಖ್ಯಾತ ಕಣ್ಣೀರುಗಳಿಗೆ ಆಶ್ರಯಬೇಕು ಎಂದು ಹೇಳುತ್ತಾ ‘ಸಾವು ನಿರಾತಂಕ ನಿರ್ಭಯ ನಿರ್ವಸ್ತ್ರ| ಗೆಳತಿಯಂತೆ ಬಂದು| ತಬ್ಬಿಕೊಳ್ಳುತ್ತದೆ|-ಸಾವಿನ ಬೀಡೆಗೂ ಮುನ್ನ ಜನ ಇದ್ದಷ್ಟು ದಿನವನ್ನಾದರೂ ಸುಖನೆಲೆ ಕಂಡುಕೊಳ್ಳಲಿ ಎಂಬುದಾಗಿದೆ. + +‘ಬೀಜಧ್ಯಾನ’ ಕವಿತೆಯಲ್ಲಿ ‘ರೆಕ್ಕೆಕಟ್ಟಿಕೊಂಡು ಹಾರಿ ಹೋಗುತ್ತಿತ್ತು ಮೋಡ’ ಹೀಗೆ ನೆಲದ ನಗೆ ಹಿಗ್ಗಿಸಲು ಬಿಸಿಲ ಬರೆಯನ್ನು ಅಳಿಸಲು ಬೋಳು ಬುಡದ ಟೊಂಗೆಯಲಿ ಹೊಸ ಹೂ ಅರಳಿಸಲು ತಯಾರಿಯಾಗಬೇಕಿದ್ದ ಮೋಡಗಳು ಆಗಸದ ಜಾತ್ರೆಯಲ್ಲಿ ಕಳೆದುಕೊಂಡಿವೆ ಎನ್ನುತ್ತಾರೆ. ಮತ್ತು ನೆಲದ ಬಾಯಾರಿಕೆ ಕಣ್ಣುಗಳು ನಿವೇದಿಸುತ್ತಲೆ ಕನವರಿಸುವಂತೆ ಮಾಡುತ್ತದೆ. + +ಹಾಗೆ ಮುಂದುವರೆದ ಇನ್ನೊಂದು ಕವಿತೆ ‘ಕಾಮಪಿಪಾಸು ಸಮುದ್ರ’ ಕವಿತೆಯಲ್ಲಿ ‘ಮಳೆಯ ಸ್ಪರ್ಶದಿಂದ ತೃಪ್ತಿ ಹೊಂದದ/ ‘ಕಾಮಪಿಪಾಸು ಸಮುದ್ರ/ಉಬ್ಬರದಿಂದ ಬಳಲುತ್ತದೆ ಎನ್ನುತ್ತಾರೆ. ನಂತರ ‘ಇಲ್ಲಿ ಮಳೆ ನಿನ್ನಂತಿಲ್ಲ’ ಕವಿತೆಯಲ್ಲಿ ‘ಮಳೆಬಿದ್ದ ಮುಂಜಾನೆಯ/ಮಬ್ಬೆಳಕಿನಲಿ ಮನದ ಕೊಳ್ಳ ತುಂಬುವ/ನೂರಾರು ಹರಿವುಗಳು/ಹೀಗೆ ನಿರಂತರ ಜೀವಜಲದಂತೆ ಪುಳಕದಂತೆ ನಿಟ್ಟುಸಿರಿನಂತೆ ಗೋಚರಿಸುವ ಮಳೆ ‘ಕೆಲಸದ ಮಧ್ಯೆ ಧುತ್ತನೆ ಗೆಳತಿಯ ನೆನಪಾದಂತೆ ಎಂದು ಮಳೆಯನ್ನು ತಬ್ಬಿಕೊಳ್ಳುವ ಕೆಲಸ ನಡೆಯುತ್ತದೆ. + +‘ನನ್ನದೂ ಒಂದು ಕೂಗು’ ಎನ್ನುವ ಕವಿತೆಯೂ ವ್ಯವಸ್ಥೆಯ ಪಿತೂರಿಗಳ ನಡುವೆ ನಿಂತು ಮೌನ ಪ್ರತಿಭಟನೆಯನ್ನು ದಾಖಲಿಸುತ್ತದೆ. ‘ಹಗ್ಗದ ಯಾವ ತುದಿಗಾದರೂ ನೂಲಾಗಲಿ|ನನ್ನ ಕೂಗು| ಎನ್ನುವುದರ ಮೂಲಕ ‘ಒಡಕು ಅಪಸ್ವರವಾದರು ಕೂಗುತ್ತೇನೆ| ಎನ್ನುವುದರ ಮೂಲಕ ಧಮನಿತ ದನಿ ಕೊಲ್ಲುವ ಪಿತೂರಿಗೆ ಹಗ್ಗವನ್ನೆ ಉರುಳಾಗಿಸಲು ಹಿಂಜರಿಯುವುದಿಲ್ಲ ಎಂಬದನ್ನು ಕವಿತೆಯ ಮೂಲಕ ಪ್ರತಿಭಟಿಸುತ್ತಾರೆ. + +ತಮ್ಮ ಕವಿತೆಯುದ್ದಕ್ಕೂ ಸುಪ್ತ ಮನಸ್ಸುಗಳ ಬೆಸೆಯುವ ಕೆಲಸ ಮಾಡುತ್ತಾ ನೊಂದವರಿಗೆ ದನಿಯಾಗಿ ಈ ಕಾಲದ ತಲ್ಲಣಗಳಿಗೆ ಮಿಡಿಯುತ್ತಾ ‘ದೂರದಲಿ ನೀರಿಗೂ ಹಸಿವು’ ಎಂಬುದನ್ನು ಜೋರಾಗಿ ಸಿಳ್ಳೆ ಹೊಡೆದಂತೆ ಹೇಳುತ್ತಾರೆ. ‘ಭೂಮಿಗೂ ಬುದ್ಧಿ ಇರಬೇಕಿತ್ತು’ ಎನ್ನುವುದರ ಮೂಲಕ ‘ಹಸಿದವನಿಗೆ ಹಸಿವಾದರೆ ಮಾತ್ರ ಪ್ರಳಯವಾಗುತ್ತದೆ’ ಎಂಬುದನ್ನು ಎತ್ತಿ ತೋರಿಸುತ್ತಾರೆ. + + + +ಪ್ರವೀಣರವರ ಕವಿತೆಯಲ್ಲಿ ನೆಲದ ನಗೆ ಹಿಗ್ಗಿಸುವ ಮಳೆಯ ಮೊದಲ ಸ್ಪರ್ಶವಿದೆ. ತವಕ ತಲ್ಲಣಗಳ ಕಂಗಾಲಾದವರ ದನಿಗೆ ಮುಲಾಮಾಗಿ ನಿಲ್ಲುವ ಧೈರ್ಯವಿದೆ. ಹಸಿವೆಂಬ ಕ್ರೂರ ಜಗತ್ತಿಗೆ ಬಿಸಿಲಲ್ಲೂ ಕಚಗುಳಿ ಇಕ್ಕುವ ಇಂಬನಿಯ ಧ್ಯಾನವಿದೆ. ನಿಧಾನವಾಗಿ ಎದೆಗೆ ತಾಕುವ ಇಲ್ಲಿಯ ಕವಿತೆಗಳು ಪಳಗಿಸಿಕೊಂಡವನೊಬ್ಬ ಎಳೆಎಳೆಯಾಗಿ ಪೋಣಿಸಿ ಮಾಲೆ ಮಾಡಿ ಸಮಾಜದ ಹೊಸ್ತಿಲಲಿ ಎಚ್ಚರಗೊಂಡಂತೆ ಎಲ್ಲ ಕವಿತೆಗಳು ಎಚ್ಚರವಾಗಿಯೆ ಎಲ್ಲ ಕಾಲಘಟ್ಟದಲ್ಲಿಯೂ ಎದೆ ತಾಕುತ್ತವೆ. + +ಕಿರಸೂರ ಗಿರಿಯಪ್ಪ ಮೂಲತಃ ಬಾಗಲಕೋಟ ತಾಲೂಕಿನ ಕಿರಸೂರಿನವರು. ಸದ್ಯ ಸ.ಕಿ.ಪ್ರಾ.ಶಾಲೆ.ಗುಗಲಗಟ್ಟಿˌ ಸುರಪೂರ ತಾಲೂಕಿನಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಲವು ಪತ್ರಿಕೆಗಳ ಕಾವ್ಯ ಸ್ಪರ್ಧೆಗಳಲ್ಲಿ ಹಾಗೂ ದಲಿತ ಯುವ ಕಾವ್ಯ ಪ್ರಶಸ್ತಿ ಮುಂತಾದವುಗಳಲ್ಲಿ ಬಹುಮಾನ ಲಭಿಸಿವೆ. ಇವರ ಚೊಚ್ಚಲ ಕೃತಿಗೆ ಪುಸ್ತಕ ಪ್ರಾಧಿಕಾರ ಕರ್ನಾಟಕ ಸರಕಾರ ಪ್ರೋತ್ಸಾಹ ಧನ ಲಭಿಸಿದೆ. ನಾಭಿಯ ಚಿಗುರು(ಕವನಸಂಕಲನ) ಪ್ರಕಟಗೊಂಡಿದ್ದು, ‘ಅಲೆವ ನದಿ’ ಗಜಲ್ ಸಂಕಲನ ಬಿಡುಗಡೆಯ ಸಿದ್ಧತೆಯಲ್ಲಿದೆ. \ No newline at end of file diff --git a/Kenda Sampige/article_3.txt b/Kenda Sampige/article_3.txt new file mode 100644 index 0000000000000000000000000000000000000000..055da0186fdf6a800fbbc17e5e92adc93f43dc33 --- /dev/null +++ b/Kenda Sampige/article_3.txt @@ -0,0 +1,67 @@ +ನಮ್ದು ಸ್ವಲ್ಪ ದೊಡ್ಡ ಮನೇನೆ ಇತ್ತು.‌ ಮನೆ ತುಂಬಾ ಮಕ್ಕಳು ಅಂತಾ ತಾತಾ ಮನೆಯ ಹಿಂಭಾಗ ಹಾಗೂ ಬದಿಯನ್ನು ವಿಸ್ತರಿಸಿಕೊಂಡಿದ್ದರು. ಮನೆಯ ತಲಬಾಗಿಲ ಮುಂದೆ ಐವತ್ತರವತ್ತು ಜನ ಕೂತ್ಕಣಾಕಾಗೋವಷ್ಟು ದೊಡ್ಡ ಅಂಗಳ ಇತ್ತು. ತಾತನ ಕಾಲದಲ್ಲಿ ಅದು ಸೆಗಣಿ ನೆಲ. ಅಪ್ಪ ಅಲ್ಲಿ ಬಿಳೀ ಬಂಡೆಕಲ್ಲು ಹಾಕ್ಸಿದ್ರು. ಕುಂತ್ಕಣಾಕೆ ಚೆಂದಾಕಿತ್ತಲ್ಲ, ರಾತ್ರೆ ಊಟ ಮುಗ್ಸಿ ಎಂಟು ಎಂಟೂವರೆನಾಗೆ ಹೆಂಗುಸ್ರು, ಗಂಡುಸ್ರು ಸೇರ್ತಿದ್ರು. ರಾತ್ರೆ ಒಂಬತ್ತೂವರೆಗಂಟ ಹರಟೆ ನಡೀತಿತ್ತು. ಊರ ಸುದ್ದಿ, ರಾಜಕೀಯ, ದೇಶುದ್ ಸುದ್ದಿ, ಬೆಳಿಗ್ಗೇನಾಗೆ ಪೇಪರ್ನಾಗೆ ಬಂದ ಸುದ್ದೀನ ಅಪ್ಪ ಯೋಳ್ತಿದ್ರೆ, ಅದುರ್ ಮ್ಯಾಗೆ ಮಾತುಕತೆ ನಡೀತಿತ್ತು. ತಲಬಾಗಿಲ್ ಬಲ್ಗಡೀಕ್ಕೆ ಆಳೆತ್ತರದ ತುಳಸೀಕಟ್ಟೆ ಇತ್ತು. ಅದುರ್ ಮಗ್ಗುಲಾಗೆ ಅಂಗೇ ಅದುಕ್ಕೆ ಅಂಟಿಕೊಂಡಂಗೆ ಸುರು ಆಗಿ ಕಲ್ ಚಪ್ಪಡೀ ಹಾಸಿನ ನ್ಯಾರದವರೆಗೆ ಕಟ್ಟೆ ಕಟ್ಟಿಸಿದ್ರು. ಅದುರ್ ಮ್ಯಾಗೆ ಅಪ್ಪ ಕುಂತ್ಕಂತಿದ್ರು. + +ಕಣಜ + +ಮನೆ ಮಗ್ಗುಲಿಗೆ ಮಾಡಿಮನೆ ಇತ್ತು. ಅದುಕ್ಕೆ ಆಚಿಂದಾನೂ ಬಾಗ್ಲಿತ್ತು. ಆಳುಕಾಳು ಬರಾಕೆ ದವಸ ದಾನ್ಯ ತರಾಕೆ ಮಾತ್ರ ಅದುನ್ನ ತೆಗೀತಿದ್ದಿದ್ದು. ಇಲ್ದೆ ಹೋದ್ರೆ ನಮ್ಮನೆ ನಡೂನಿಂದಾನೆ ಇನ್ನೊಂದು ಬಾಗ್ಲು ಇತ್ತು. ಅಲ್ಲಿಂದಾನೆ ಓಡಾಡ್ತಿದ್ವಿ. ಅದ್ರಾಗೆ ದೊಡ್ಡ ಪಡಸಾಲೆ ಇತ್ತು. ಅದ್ರ ಮುಂದೆ ಒಂದು ದೊಡ್ಡ ರೂಮು. ಆ ರೂಮ್ನಾಗೆ ನೆಲದೊಳಗೆ ಕಣಜ ಮಾಡ್ಸಿದ್ರು. ಕಣಜಕ್ಕೇಮ್ತಾನೆ ಆ ಮನೆ ತಕಂಡಿದ್ದು. ಸುಮಾರು ಒಂದಿಪ್ಪತ್ತು ಕಿಂಟಾಲು (ಕ್ವಿಂಟಾಲ್) ಇಡುಸ್ತಿತ್ತು. ರಾಗಿ, ಬತ್ತ ಪಲ್ಲಗಳ್ನ ತಂದು ಇಲ್ಲೇ ಹಾಕ್ತಿದ್ರು. ಅದ್ರೊಳೀಕ್ಕೆ ಒಬ್ಬಾಳು ಇಳಿಯಾವಷ್ಟು ಜಾಗವಿತ್ತು. ಅದುಕ್ಕೆ ಕಿಟಕೀ ಜಾಲರೀ ತರ ರೆಕ್ಕೆ ಮಾಡ್ಸಿದ್ರು. ದವಸ ತುಂಬಾ ಮುಂಚೆ ಚೆಂದಾಕಿ ಸಾಂಬ್ರಾಣಿ ಹೊಗೆ ಹಾಕಿ ಆಮ್ಯಾಗೆ ತುಂಬ್ತಿದ್ರು. ಮೂರ್ ನಾಕು ತಿಂಗಳುತಕ ಕೆಡತಾಲೇ ಇರ್ಲಿಲ್ಲ. ಸೀಜನ್(ಸೀಸನ್)ಬರಾತಂಕ, ಒಂದೊಂದು ಕಿತ ಒಳ್ಳೆ ರೈಟು ಬರ್ಲಿಲ್ಲಾಂದ್ರೆ ಐದಾರು ತಿಂಗಳೂ ಮಡುಗ್ತಿದ್ರು. ಗಾಳಿ ಆಡ್ತಿರ್ಲಿಲ್ಲ. ಆದ್ರೂ ಸುತ ಕೆಡ್ತಿರ್ನಿಲ್ಲ. ಹೊಸ ರಾಗಿ ಬಂದ ಮ್ಯಾಗೆ ಹಳೆ ರಾಗಿ ಮಾರ್ತಿದ್ದಿದ್ದು. ಕಣಜ ತುಂಬಾವಾಗ ಮ್ಯಾಗ್ಲಿಂದ ಕುಮುರುಸ್ತಿದ್ರು.(ಸುರೀತಿದ್ರು) ಈಚಿಕ್ ತೆಗ್ಯಾವಾಗ ಒಂದಾಳು ಎರಡಾಳು ಒಳೀಕ್ ಇಳ್ದು ಚೀಲ್ದಾಗೆ ತುಂಬಿ ತುಂಬಿ ಮ್ಯಾಕೆ ಅಂದುಸ್ ಕೊಡ್ತಿದ್ರು. (ಅಂದಿಸಿಕೊಡುತ್ತಿದ್ದರು). + +ಆಲೆಮನೆ ಕಾಲ್ದಾಗೆ ರಾಶಿ ರಾಶಿ ಬೆಲ್ಲ ತಂದು ಅಲ್ಲೇ ಪಡಸಾಲೇನಾಗೆ ಚಾಪೆ ಹಾಸಿ, ಹುಲ್ಲು ಹಾಸಿ, ಸುರೀತಿದ್ರು. ಪಡಸಾಲೇನಾಗೆ ಮ್ಯಾಕೆ ಹತ್ತೋ ಮೆಟ್ಲು ಇದ್ವು. ಅಲ್ಲೊಂದು ದೊಡ್ಡ ರೂಮಿತ್ತು. ಅದ್ಕೂ ಮುಂಚೆ ಊರ್ನಾಗೆ ಗೌಡ್ರ‌ ಮನ್ಯಾಗೆ ಮಾತ್ರ ಮಾಡಿ ಇತ್ತು. ‌ಆ ರೂಮು ಯಾಕೆಂದ್ರೆ ನಮ್ಮನೆ ಗವಾಕ್ಷಿ ಮುಚ್ಚಾಕೆ ಅಲ್ಲಿಂದ್ಲೇ ಹೋಗ್ಬೇಕಿತ್ತು. ಅದ್ಕೇ ಮಾಡಿ ಕಟ್ಸಿ, ರೂಮು ಕಟ್ಸಿದ್ರು. ಮಳೆ ಬಂದ್ರೆ ಅಲ್ಲಿಂದ್ಲೇ ಓಡೋಗಿ ಗವಾಕ್ಷಿ ಮುಚ್ತಿದ್ವಿ. ಬ್ಯಾಸಿಗೆ ಕಾಲ್ದಾಗೆ ಅಲ್ಲೇ ಹಪ್ಪಳ, ಸಂಡಿಗೆ ಒಣಗಿಕ್ಕುತಿದ್ವಿ. ಬ್ಯಾಸಿಗೆ ಕಾಲ್ದಾಗೆ ರೂಮಿನ್ ಕದ ತೆಗ್ದು ಮನಿಕ್ಕಂಡ್ರೆ ಗಾಳಿ ಸುಯ್ ಅಂತ ಬೀಸ್ತಿತ್ತು.‌ + +ಗವಾಕ್ಷಿ ಸರ್ಕಸ್ಸು + +ಆವಾಗೆಲ್ಲಾ ಮನೆಗಳಾಗೆ ಕಿಟಕಿ ಇರ್ತಿರಲಿಲ್ಲ.‌ ಗವಾಕ್ಷಿಗ್ಳಾಗಿಂದಲೇ ಒಳ್ಳೆ ಗಾಳಿ ಬೆಳಕು ಬರ್ತಿತ್ತು. ನಮ್ಮನೇಲಿ ಪಡಸಾಲೆಗೊಂದು, ಅಡಿಗೆ ಮನೇಗೊಂದು, ಬಚ್ಚಲಿಗೊಂದು, ನಡುಮನೇಗೊಂದು ಗವಾಕ್ಷಿ ಇದ್ವು. ರೂಮುಗ್ಳಾಗೆ ಕಿಟಕಿ ಇದ್ವು. ಮೇಸ್ತ್ರಿಗೋಳು ಒನೊಂದು ಸತಿ ಕಿಟಕಿ ಇದ್ದರೂ ಮರ್ತು ರೂಡಿಯಾಗಿರೋ ಗವಾಕ್ಷಿ ಇಕ್ಕೇ ಬಿಡ್ತಿದ್ರು. ಈ ಗವಾಕ್ಷಿ ಕಾಟ ಏನಪ್ಪಾಂದ್ರೆ, ಮಳೆಗಾಲ್ದಾಗೆ ನಮ್ಗೆ ಒಳ್ಳೆ ಸರ್ಕಸ್ಸು. ಹನಿ ಬಿದ್ದರೆ ಓಡೋಗಿ ಗವಾಕ್ಷಿ ಮುಚ್ಚೋದು. ಗವ್ವಂತ ಕತ್ಲೆ ಮುಚ್ಕಣಾದು. ಮಳೆ ನಿಲ್ಲೂತ್ಲೆ ತಿರ್ಗಾ ಓಡೋಗಿ ಗವಾಕ್ಷಿ ತೆಗೆಯೋದು. + +ಪಡಸಾಲೇ ಒಳೀಕ್ಕೆ ಬಂದ ತಕ್ಷಣ ಎದೂರ್ಗೆ ಗೋಡೆ ತುಂಬಾ ಮೂರಡಿ ದೊಡ್ದಿರೋ ರಾಮ ಸೀತಾ ಲಕ್ಷ್ಮಣ ಆಂಜನೇಯ, ವೆಂಕಟ್ರಣಸಾಮಿ, ಪಾರ್ವತಿ ಪರಮೇಶ್ವರ ದ್ಯಾವ್ರ ಫೋಟೋಗಳು, ನಮ್ಮಜ್ಜಿ ತಾತನ ಫೋಟೋಗ್ಳು ಇದ್ವು.‌ + +ಇಲಿ ಏರದ ಗುಡಾಣಗಳು + +ಬಲಕ್ಕೆ ಮೂರು ರೂಮಿದ್ವು. ಒಂದು ಅಂಗಡಿ ರೂಮು. ತಾತನ ಕಾಲದಲ್ಲಿ ಚಿಲ್ಲರೆ ಅಂಗಡಿ ಇತ್ತು. ಅಂಗಡಿ ತೆಗುದ್ ಮ್ಯಾಲೆ ಅದು ಅಜ್ಜಿ ರೂಮು.‌ ಮಗ್ಗುಲಾಗೆ ಬೀರು ರೂಮು.‌ ಅದುಕ್ಕೆ ಗುಡಾಣದ ರೂಮೂಂತಾನೂ ಕರೀತಿದ್ವಿ. ಅಲ್ಲಿ ಒಂದು ಬೀರು, ಒಂದೆರೆಡು ಟ್ರಂಕು, ಮೂರಡಿ ನಾಕಡಿ ದೊಡ್ಡ ಗುಡಾಣಗಳು, ಅದ್ರ ಮ್ಯಾಗೆ ದೊಡ್ಡ ಅರವಿಗಳು, ಮ್ಯಾಲೊಂದು ಚಿಕ್ಕ ಅರವಿ ಇರ್ತಿತ್ತು. ಗುಡಾಣಗಳು ಖಾಲೀನೇ ಇರ್ತಿದ್ವು. ಅದ್ರ ಮ್ಯಾಗಿನ್ ದೊಡ್ಡ ಅರವೀಗಳಾಗೆ ಮನೇಗೆ ಉಪಯೋಗ್ಸೋ ರಾಗಿ ಬತ್ತ ಜೋಳ ತುಂಬಿರ್ತಿತ್ತು. ಮ್ಯಾಗುಳ್ ಅರವೀಗಳಾಗೆ ದಪ್ಪಗೆ ಚೆಂದಾಕಿರೋ ಕಾಳು‌ಗಳ್ನ ಬೀಜವಾಗಿ ಮುಂದ್ಲ ಕಿತ ಬಿತ್ತನೆ ಮಾಡಾಕೆ ಅಂತ ಬಚ್ಚಿಡ್ತಿದ್ರು. ದವಸದ ಅರವಿಗಳ್ನ ಕೆಳೀಕ್ಕಿಕ್ಕಿದ್ರೆ ಇಲಿಗಿಲಿ ಕಾಟ.‌ ಅವು ಏರ್ಲಾರ್ದಂಗೆ ದೊಡ್ಡ ಗುಡಾಣಗಳ ಮ್ಯಾಲೆ ಅರವಿಗಳ್ನ ಇಡ್ತಿದ್ದು. ಈ ಅರವೀಗಳಾಗೆ, ಗುಡಾಣದಾಗೆ ಇಟ್ರೆ ಏಸು ದಿನಾ ಆದ್ರೂವೇ ದಾನ್ಯ ಕೆಟ್ಟೊಗಾಕಿಲ್ಲ. + +ಆ ರೂಮಿನ್ ಮಗ್ಗುಲಿಂದೆ ಅಪ್ಪನ‌ ರೂಮು. ಅಲ್ಲಿ ಒಂದು ಗೂಡಿತ್ತು. ಅದ್ರಲ್ಲಿ ಕತೆ ಪುಸ್ತಕಗಳನ್ನು ಇಡ್ತಿದ್ವಿ. ಟೇಬಲ್ ಇತ್ತು. ಅದ್ರ ಮ್ಯಾಗೂ ಕತೆಪುಸ್ತಕ ಇರ್ತಿದ್ವು. + +ಮಜ್ಜಿಗೆ ಕಡಿಯೋ ಕರಿ ಕಂಬ + +ಪಡಸಾಲೇನಾಗೆ ಎರಡು ಕಂಬ ಇದ್ವು. ಅವು ಕಪ್ಪಗೆ‌ ಮಿಂಚ್ತಿದ್ವು. ಜಾಲಿ ಮರದ ದಿಮ್ಮಿಗಳನ್ನು ಆರು ತಿಂಗಳು ನೀರಾಗೆ ನೆನೆಸಿಕ್ಕುದ್ರೆ ಒಳ್ಳೆ ತೇಗಿನ ಮರುದ್ ತರ ಆಗ್ತಿತ್ತು. ಅಂತಾವು ಇವು. ಒಂದೂವರೆ ಅಡಿ ದಪ್ಪಗಿದ್ವು. ನಾವು ಮಕ್ಕಳು ಕಂಬಗಳ ಸುತ್ತಾ ಸುತ್ತುತಿದ್ವು. ಅದ್ರಾಗೆ ಒಂದು ಕಂಬಕ್ಕೆ ಹಗ್ಗ ಕಟ್ಟಿ ದೊಡ್ಡ ಕೊಳದಪ್ಪಲೇಲಿ, ಎತ್ತರದ ಮಜ್ಜಿಗೆ ಗುತ್ತಿ ಹಾಕಿ ದಿನಾ ಮಜ್ಜಿಗೆ ಕಡೀತಿದ್ದ ನಮ್ಮ‌ ರಾಮಪ್ಪ. ದಿನಾ ಮಜ್ಜಿಗೆ ಕೇಳ್ಕೊಂಡು ಸೊಲ್ಪ ಜನ ಬರ್ತಿದ್ರು. ಬಾಣಂತೀರ್ಗೆ, ಬಸಿರೀರ್ಗೆ, ಮಕ್ಕುಳ್ಗೆ ಔಷ್ದೀಗೆ‌ ಬೆಣ್ಣೆ ತುಪ್ಪಕ್ಕೆ ಬರ್ತಿದ್ರು. + +ಬೆಣ್ಣೇಗೇಂತ ಇಸ್ಕೂಲ್ಗೆ ಹುಡೀಕ್ಕಂಡು ಬಂದೌಳೆ + +ನಮ್ಮನೇಲಿ ಹೊರಗಾದ್ರೆ‌ ಮೂರು ದಿನ ಮೂಲೇಲಿ ಕೂರ್ಬೇಕಿತ್ತು. ಒಂದ್ಸಲ ಇಂಗೇ ಯಾರೋ ಸಣ್ಣ ಮಗೀಗೆ ಬೆಣ್ಣೆ ಕೇಳ್ಕಂಡು ಬಂದೌರೆ. ನಮ್ಮಮ್ಮ ಮೂಲೇಲಿ ಕುಂತಿದ್ರು. ಇಸ್ಕೂಲ್ಗೋಗಿ ಸುಮಕ್ಕನ್ನ ಕರ್ಕಂಡು ಬಾ ಅಂತ ಯೋಳ್ ಕಳ್ಸೌರೆ.‌ ಎಡವುದ್ರೆ ಸಿಕ್ತಿತ್ತಲ್ಲ ಅದುಕ್ಕೆ. ಆವಮ್ಮ ಬಂದು ಇಸ್ಕೂಲ್ ನಾಗೆ ಮೇಷ್ಟ್ರ ತಾವ ವಸಿ ಸುಮಕ್ಕನ್ನ ಕಳ್ಸಿ ಸಾ, ಮಗೀಗೆ ಬೆಣ್ಣೆ ಇಸ್ಕಾಬೇಕು. ಅಕ್ಕ ಹೊರ್ಗೆ ಕುಂತವ್ರೆ ಅಂತಾ ಕೇಳೇ ಬಿಟ್ಲು. ಥೋ.. ಹುಡುಗ್ರೆಲ್ಲಾ ಮುಸಿಮುಸಿ ನಗಾಕೆ ಸುರು ಹಚ್ಕಂಡ್ರು. ಮೇಷ್ಟ್ರು ಕಿಸುಕ್ ಅನ್ನುತ್ಲೇ ಹೋಗಮ್ಮ ಅಂದ್ರು. ನಾನು ತಲೆ ಬಗ್ಸಿ ಬಂದೋಳು ನಮ್ಮಮ್ಮುನ್ ಮೇಲೆ ಎಗರಾಡ್ದೆ. ಇನ್ನೊಂದು ಸತಿ ಇಸ್ಕೂಲ್ಗೆಲ್ಲಾ ಯೋಳ್ ಕಳ್ಸೀರೆ ನಾನು ಬರಾಕಿಲ್ಲ ಅಂದೆ. ಪಾಪ ಸಣ್ ಮಗೀಗೆ ಬೆಣ್ಣೆ ಕೊಡಾಕೆ ಇಂಗಾಡಿದ್ರೆ ದ್ಯಾವ್ರಿಗೆ ಕೋಪಾ ಬರಲ್ವೇನೇ ಅಂದ್ರಾ, ಗಪ್ ಚುಪ್ಪಾಗಿ ವಾಪಸ್ ಇಸ್ಕೂಲ್ಗೋದೆ. + +ಜಂತೆ ಮನೆ + +ಜಂತೆ ಮನೆ ನಮ್ದು.‌ ಅಡೀಕ್ಕೆ ಧೂಲದ ಅಡ್ಡಿ ಹಾಕಿ, ತೀರು ಇಕ್ಕಿ, ಮ್ಯಾಲೆ ಕರಿ ಬಂಡೆ ಇಕ್ಕಿರ್ತಿದ್ರು. ಮಣ್ಣು, ಗಾರೆ ಹಾಕಿ ಮುಚ್ಚುತಿದ್ರು. ಕಿಟಕಿ ಬಾಗ್ಲು ಚೌಕಟ್ಟುಗಳು ಬೇವಿಂದು. ರೆಕ್ಕೆಗಳು ಹಲಸಿಂದು. ಎಡಕ್ಕೆ ಮಧ್ಯೆ ಓಣಿ ಇತ್ತು. ಬಲಗಡೆ ಪಕ್ಕ ಒಂದು ಶೆಲ್ಪು ಇತ್ತು. ಅದ್ರ ಮ್ಯಾಲೆ ಟೇಪ್ರಿಕಾರ್ಡರು. ಒಂದು ರಾಶಿ ಕ್ಯಾಸೆಟ್ಟುಗಳು. ಮಾಸ್ಟರ್ ಹಿರಣ್ಣಯ್ಯನವರವ್ವು ಎಲ್ಲಾ ನಾಟಕಗಳು ಇದ್ವು. ದಿನಾ ಸಂಜೆ ತಿರ್ ತಿರ್ಗಾ ಅವುನ್ನೇ ಕೇಳೋದು. ಗುರುರಾಜುಲು ನಾಯ್ಡು ಅವುರ್ದು ಹರಿಕತೇಗಳು ಇದ್ವು. ಎಡಗಡೆ ಪಕ್ಕ ಹಳೆ ರೂಮಿತ್ತು. ಅದು ಬಾಣಂತೀರ ರೂಮಂತೆ. ನಮ್ಮಜ್ಜೀಗೆ ಎಂಟು ಜನಾ ಹೆಣ್ಣುಮಕ್ಕಳು. ಯಾವಾಗ್ಲೂ ಆ ರೂಮು ಕಾಲೀನೇ ಇರ್ತಿರ್ಲಿಲ್ಲವಂತೆ. ಆಮೇಲೆ ಹಳೆ ಸಾಮಾನೆಲ್ಲಾ ಅಲ್ಲೇ ಜಾಗ ಮಾಡ್ಕೊಂಡಿದ್ವು. ಇಡೀ ಮನೇಗೆ ನೆಲುಕ್ಕೆ ಕಪ್ಪು ಕಡಪಾ ಬಂಡೆ ಹಾಕ್ಸಿದ್ವು. + +ನಡೂ ಇದ್ದ ಓಣೀಗಾಸಿ ಒಳೀಕ್ಕೋದ್ರೆ ಬಲುಕ್ಕೆ ಅಡಿಗೆ ಮನೆ. ಅಲ್ಲೇ ಒಂದು ಮೂಲೇನಾಗೆ ದ್ಯಾವ್ರ ಜಗಲಿ. ಅಲ್ಲೇ ಒಂದು ಗೂಡೊಳ್ಗೆ ದ್ಯಾವ್ರು. ಅಡಿಗೆ ಮನ್ಯಾಗೆ ಸೀಮೆಣ್ಣೆ ಸ್ಟೋವು ಇತ್ತು. ಅಡಿಗೆ ಅದ್ರಾಗೆ ಮಾಡ್ತಿದ್ದು. ಮೊದ್ಲು ಕಟ್ಟಿಗೇದು ಕೋಡೊಲೆ ಇತ್ತಂತೆ. ಅಲ್ಲೇ ಒಂದು ನೆಲುವು ಇತ್ತು. ಅಲ್ಲಿ ಮಜ್ಜಿಗೆ ಮೊಸರು ಇಡ್ತಿದ್ರು. ಅಡಿಗೆ ಮನೆ ಪಕ್ಕದಲ್ಲೇ ಸಾಮಾನು ಇಡಾಕೆ ಒಂದು ಸಣ್ಣ ರೂಮಿತ್ತು. ಅದುಕ್ಕೆ ನಡುಮನೆ ಅಂತಿದ್ರು. ಅಲ್ಲೇ ತಿಂಡಿ ಪಂಡಿ ಎಲ್ಲ ಇದ್ದಾಗ ಡಬ್ಬದಲ್ಲಿ ಮುಚ್ಚಿಕ್ಕಿರ್ತಿದ್ರು. ಅಡಿಗೆ ಮನೆಯಿಂದ ಆಚೆ ಓಣೀಲಿ ಒಂದು ಕರೆಂಟ್ ಸ್ಟೋವು ಇತ್ತು. ಅದ್ರಾಗೆ ಬರೀ ಕಾಫೀ ಟೀ ಅಷ್ಟೇ ಮಾಡ್ತಿದ್ದು. ಕುಕ್ಕರ್‌ನಲ್ಲಿ ಅನ್ನ. ಇನ್ನೆಲ್ಲಾ ಸೀಮೆಣ್ಣೆದ್ರಲ್ಲೆ. ಆ ಸ್ಟೋವಿದ್ದ ಜಾಗದಲ್ಲೇ ಎಡೀಕ್ಕೆ ಬಚ್ಚಲುಮನೆ. ಅಲ್ಲೊಂದು ದೊಡ್ಡ ಹಂಡೆ ಜೊತೀಗೆ ಒಂದು ನೂರು ಬಿಂದಿಗೆ ಹಿಡ್ಸಾದೊಂದು ತೊಟ್ಟಿ ಇತ್ತು. ಬಚ್ಚಲ ಒಂದು ಮಗ್ಗುಲಾಗೆ ಅಟ್ಟ. ಅದ್ರಲ್ಲಿ ತೆಂಗಿನ‌ಮಟ್ಟೆ. ಅದ್ರ ಕೆಳಗೆ ಹುಣಿಸೆಹೊಟ್ಟು, ಸೌದೆಗಳು ಇದ್ವು. ಒಂದು ಕಟ್ಟೆ ಮೇಲೆ ಹರಳೆಣ್ಣೆ, ಸೀಗೆಪುಡಿ, ಅಂಟ್ವಾಳದ ಪುಡಿ, ಚೌಳು‌ಮಣ್ಣು, ತೆಂಗಿನ ನಾರು ಇರ್ತಿದ್ವು. ತಲೆಗೂ ಸೀಗೆಪುಡಿ.‌ ಪಾತ್ರೆ ಜಿಡ್ಡಿಗೂ ಸೀಗೆಪುಡಿ.‌ ಕೈ ಜಿಡ್ಡಾದ್ರೂ ಅದೇಯಾ ರಾಮಬಾಣ. ಚೌಳು ಮಣ್ಣು, ತೆಂಗಿನ ನಾರು ಪಾತ್ರೆ ಬೆಳಗಾಕೆ. ನಾಗಮ್ಮನೋ, ಕಮಲಮ್ಮನೋ, ಹನುಮಕ್ಕನೋ ಪಾತ್ರೆ ಬೆಳಗಾಕೆ ಬರ್ತಿದ್ರು. ಬೆಳಗ್ಗೇನಾಗಾದ್ರೆ ಬಚ್ಚಲಿನಾಗೆ ಬೆಳಗಿಕ್ಕುತ್ತಿದ್ರು. ರಾತ್ರೆ ಆದ್ರೆ ಜನಾ ಸೇರಿ ಮಾತುಕತೆ ಆಡ್ತಿದ್ರಲ್ಲ, ಮನೆ ಮುಂದಿನ್ ಅಂಗಳದಾಗೆ, ಅಲ್ಲೇ ಕೊನೇಲಿ ಕುಂತು ಮಾತಾಡ್ತಾ, ಪಾತ್ರೆ ಹರಡಿಕ್ಕೊಂಡು, ಅಲ್ಲೇ‌ ಬೀದಿಲಿರೋ ಮಣ್ಣು ತಕ್ಕಂಡು ಗಸಗಸ‌ ತಿಕ್ಕಿ, ಇನ್ನಾ ಹೋಗದಿದ್ರೆ, ರಂಗೋಲಿ ಪುಡಿ ಹಾಕಿ ತಿಕ್ಕುತಿದ್ರು. + +ಮೈಗೆ ಲೈಫ಼್ ಬಾಯ್ ಸೋಪು.‌ ಮಕಕ್ಕೆ ಮೈಸೂರು ಸ್ಯಾಂಡಲ್ ಸೋಪು.‌ ಮನೆ ಮಂದೀಗೆಲ್ಲಾ ಒಂದೆ ಸೋಪು. ಅದ್ಯಾಕೋ ಗೊತ್ತಿಲ್ಲಪ್ಪ ಮೈಸೂರು ಸ್ಯಾಂಡ್ಲು ಮಕಕ್ಕೆ ಮಾತ್ರ. ಮೈಗೆಲ್ಲ ಲೈಫ್ ಬಾಯಿ. ಮಕ ಬೆಳ್ಳಕಾದ್ರೆ ಸಾಕು ಅಂತ್ಲೋ ಏನೋ! ನಾನು ಚಿಕ್ಕೋಳಾಗಿದ್ದಾಗಿಂದ ಮದ್ವೆ ಆಗಾತಂಕ ಅದೇ ಎರ್ಡು ಸೋಪುಗಳ ರೂಡಿ ಬಂದಿತ್ತು. ಹಲ್ಲಿಗೆ ನಂಜನಗೂಡು ‌ಹಲ್ಲಿನಪುಡಿ. ಒಂದೇ ಕಿತ ಹಲ್ಲುಜ್ಜೋದು. ರಾತ್ರಿ ಉಜ್ಜೋ ಇಸ್ಯವೇ ಗೊತ್ತಿರ್ಲಿಲ್ಲ. ಆ ಹಲ್ಲು ಪುಡೀನಾಗೆ ಉಪ್ಪಿರ್ಲಿಲ್ಲ, ಮಸಾಲೆ ಇರಲಿಲ್ಲ. ಅದ್ಕೇಯಾ ಹಲ್ಲುಗಳಾಗೆ ಕಬ್ಬಿನಜಲ್ಲೆ ಕಡಿದು ಜಗಿಯೋಕೆ ಆಗ್ತಿತ್ತು! ಹಲ್ಲುಗಳೇ ನಮಗೆ ಚಾಕು ತರ ಇದ್ವು. ಈಗ ಉಪ್ಪು ಗಿಪ್ಪು ಇರೋ ತರಾವರಿ ಪೇಸ್ಟುಗ್ಳು ಬಂದು, ಎರಡೂ ಮೂರೂ ಸತಿ ಉಜ್ಜಿ ಹಲ್ಲುಗ್ಳು ಸವೆದೋಗವೆ. ಸೀಬೇ ಹಣ್ಣಿಗೂ ಚಾಕೂನೆ ಬೇಕಾಗದೆ. + + + +ನೀರೊಲೆ ನಂಟು + +ಸಂಜೀ ಆದ್ರೆ ರಾಮಪ್ಪ ನೀರೊಲೆಗೆ ಹೊಟ್ಟು ತುಂಬಿ, ತೆಂಗಿನ್ ಮಟ್ಟೆ ತುರುಕ್ತಿದ್ದ. ನಾವೂ ಮೆಲ್ಲಕೆ ಹೋಗೋದು. ಕೈಯಲ್ಲಿ ಹಲಸಿನ ಬೀಜ, ಈರುಳ್ಳಿ, ಕಡಲೆಕಾಯಿ, ಜೋಳ, ಬುಡ್ಡ ಕಡಲೆ, ಹುಣಿಸೆ ಬೀಜ ಏನೊ ಒಂದು ಬಚ್ಚಿಟ್ಕೊಂಡು ಹೋಗಿ, ಒಲೆ ಒಳೀಕ್ಕೆ ಹಾಕಿ ಸುಟ್ಟುಕೊಡು ಅನ್ನೋದು. ಆಯಪ್ಪ ಅಯ್ಯ, ನಿಂಗೇನ್ ಬ್ಯಾರೆ ಬದುಕಿಲ್ವೇನಮ್ಮಣ್ಣಿ ಸುಮ್ಕೆ ನನ್‌ ಪ್ರಾಣ ತಿಂತೀಯ ಅಂಬ್ತ ಬೈತಾ ಸುಟ್ಟುಕೊಡೋದು. ನಾನೂ ಸಾಯಾ ಮಾಡ್ತೀನಿ ಅಂತ ಊದುಕೊಳಪಿ ತಕಂಡು ಊದಿ, ಕಣ್ಣೆಲ್ಲಾ ಕೆಂಪಾಗಿ, ಮೂಗು ಸೊರಬರ ಆದ್ರೆ, ಲಂಗದಲ್ಲೇ ಕಣ್ಣೂ ಮೂಗೂ ಒರೆಸ್ಕೊಂಡು, ಬೂದಿ ಉಬುರಿ, ಸುಟ್ಟಿರೋ ತಿಂಡಿ ತಿನ್ನೋದು. ರಾಮಪ್ಪಂಗೂ ಸೊಲ್ಪ ಕೊಟ್ಟು ಅಲ್ಲಿಂದ ಜಾಗ ಕಾಲಿ ಮಾಡೋದು. + +ಹಳೆಮನೆ + +ಅಂಗಡಿ ರೂಮಿನ ಮಗ್ಗಲಾಗೆ ಒಂದು ಹಳೆಮನೆ ಇತ್ತು. ದನುಗಳ್ನ ಕಟ್ಟಾಕೆ ಜಾಗ ಬೇಕಿತ್ತು ಅಂತ ಅದುನ್ನ ತಾತ ತಕಂಡಿದ್ರು. ಅಲ್ಲಿ ಒಂದು ಹಸಾ, ಒಂದು ಎಮ್ಮೆ, ಹೊಲಾ ಉಳಾಕೆ ಒಂದು ಜೊತೆ ಎತ್ತು ಇದ್ವು. ಆ ಮನೆ ಮುಂದೆ ಸ್ಯಾನೆ ಜಾಗಾ ಖಾಲಿ ಇತ್ತು. ಅಲ್ಲಿ ನಮ್ಮಪ್ಪ‌ ಒಂದು ಬಾವಿ ತೋಡ್ಸೀರು. ಮೂವತ್ತೈದು ಅಡಿ ಇತ್ತು. ಅದುಕ್ಕೆ ಒಂದು ಮೋಟರು ಕೂಡಿಸಿ, ಪೈಪು ಕನೆಕ್ಸನ್ ಮಾಡ್ಸಿದ್ರು. ಆವಾಗೆಲ್ಲಾ ಬೋರ್ ಇರಲಿಲ್ಲ. ಆ ಪೈಪ್ನ ಮಾಡಿ ಮ್ಯಾಗ್ಳಿಂದ ಎಳ್ಕೊಂಡು ಬಂದು ಬಚ್ಚಲಮನೆ ಗವಾಕ್ಷಿ ದಸೀಲಿ ತೂರಿಸಿ ಸೀದಾ ತೊಟ್ಟೀಗೆ ನೀರು ಬೀಳಂಗೆ ಮಾಡ್ಸಿದ್ರು. ಇಡೀ ಊರ್ನಾಗೆ ನಮ್ದೇ ಮೊದಲ ಮನೆ, ಪಂಪ್ ಸೆಟ್ ಜೋಡ್ಸಿ, ನೀರು ಬರ್ಸಿದ್ದು. ಆಗ ನಮ್ಮಣ್ಣಯ್ಯಂಗೆ ಎರ್ಡು ವರ್ಸವಂತೆ. ನಮ್ಮಜ್ಜೀ ತಾವ ಅಜ್ಜೀ ಪಂಪು ಅಂದ್ರೆ ಏನು.. ಪೈಪಲ್ಲಿ ನೀರು ಅದೆಂಗೆ ಬರ್ತವೆ. ಯಾಕೆ ಹಾಕ್ಸಿದ್ದು ಅಂತೆಲ್ಲಾ ಕ್ಯೋಳಿದ್ಕೆ ನಮ್ಮಜ್ಜಿ, ನೀನು‌ ಮದ್ವೆ ಆದ್ಮೇಲೆ ನಿನ್ನೆಂಡ್ತಿಗೆ ಬಾವೀಗ್ಳಾಗಿಂದ ನೀರು ಸೇದಾಕೆ ಕಷ್ಟ ಆಯ್ತದೆ ಅಂತ ನಿಮ್ಮಪ್ಪ ಪೈಪಿಂದ ನೀರು ಬರಾಂಗೆ ಮಾಡವ್ರಪ್ಪ ಅಂತ ತಮಾಷಿ ಮಾಡ್ತಿದ್ರಂತೆ. ಆದ್ರೆ ಅದುನ್ನ ಸೂಕ್ಸ್ಮವಾಗಿ ನಮ್ಮಮ್ಮಂಗೆ ಯೋಳ್ತಿದ್ದುದ್ದು!! + +ಹಲಾಲಗುಂಡಿ + +ಇನ್ನಾ ನಮ್ಮ ಮಾಡಿ ಮನೆ ಸ್ವಲ್ಪ ಎತ್ತರದಾಗಿತ್ತು. ಅದ್ರ ಮುಂದೆ ಸ್ಟೇಜಿನ ತರ ಇತ್ತು. ಅದ್ರ ಮುಂದಿಂದೆ ಊರಾಗಳ ಘನವಾದ ಬಯಲು. ಊರ್ನಾಗೆ ಬಯಲುನಾಟಕವೋ, ಕಣ್ಣುಕಟ್ಟೊ ಏನಾದ್ರೂವೆ ಅಲ್ಲೇ ಸ್ಟೇಜು. ಜಾತ್ರೆ ಪಾತ್ರೆ ಎಲ್ಲಾ ಅಲ್ಲೆ. ನಾವೆಲ್ಲಾ ಕೆಳಗಿನ ಬಯಲ್ನಾಗೆ ಕುಂತು ನೋಡ್ತಿದ್ವಿ. ಬಾಬಯ್ಯನ ಹಬ್ಬದಾಗೆ ಕೊಂಡಹಾಯಾಕೆ ಹಲಾಲಗುಂಡಿ ಅಂತ ತೋಡ್ತಿದ್ರು. ಎರಡಡಿ ಗುಂಡಿ. ಅದ್ರಾಗೆ ಇಜ್ಜಿಲಾಕಿ ಕೆಂಡ ಮಾಡಿ ತುಳೀತಿದ್ರು.‌ + + + +ಬಸ್ಸುಗಳೆ ನಮ್ಮ ಗಡಿಯಾರ + +ನಮ್ಮ ಮನ್ಯಾಗೇನೂ ಊರಲ್ಲಿ ಯಾರ ಮನ್ಯಾಗೂ ಗಡಿಯಾರಾ ನೋಡಾ ಬಾಬತ್ತೇ ಇರಲಿಲ್ಲ. ಮನೆಗ್ಳಾಗೆ ಗಡಿಯಾರುದ್ ಗುರುತೂ ಇರಲಿಲ್ಲ.‌ ಬಸ್ಸುಗಳೆ ನಮಗೆ ಟೇಮು ಯೋಳ್ತಿದ್ವು. ಗೋಪಾಲಕೃಷ್ಣ ಬಸ್ಸು ಬೆಳಿಗ್ಗೆ ಒಂಬತ್ತುಕ್ಕೆ ಬರ್ತಿತ್ತು. ಆಗ ನಾಷ್ಟಾ ಟೇಮು. ಹತ್ತು ಗಂಟೆಗೆ ರಿಲಯನ್ಸು, ರಂಗನಾಥ ಒಂದೈದು ನಿಮಿಷ ಹಿಂದೂಮುಂದು ಬರ್ತಿದ್ವು. ಬ್ಯಾಗ್ ತಗ್ಲಾಕ್ಕೊಂಡು ಇಸ್ಕೂಲಿಗೆ ಓಡೋದು. ಮಧ್ಯಾಹ್ನ ಒಂದೂವರೆಗೆ ಶಂಕರಾ ಬಸ್ಸು. ಆಗ ಊಟದ ಟೇಮು. ರಾತ್ರಿ ಎಂಟು ಗಂಟೆಗೆ ಗೋಪಾಲಕೃಷ್ಣ ತಿರ್ಗಾ ಬರ್ತಿತ್ತು. ಅದೇ ಪಸ್ಟ್ ಬಸ್ಸು. ಅದೇ ಲಾಸ್ಟ್ ಬಸ್ಸು. ಊಟ ಮಾಡಾಕೆ ಆ ಬಸ್ಸು ಬರ್ಲಿ ಅಂತ ಕಾಯ್ತಿದ್ವಿ. ಯಾರಾರೂ ನಂಟರು ಬಂದ್ರೆ, ನಂಟರು ಅಂದ್ರೆ ಇಲ್ಲಿ ನಮ್ಮ ಬಳಗದೋರೂಂತಲ್ಲ. ಕಾಳೇನಳ್ಳಿ, ವೀರನಾಗೇನ ಹಳ್ಳಿಗ್ಳ ನಮ್ಮ ಜನ ಈ ಬಸ್ಸಿಗೇನಾರಾ ಬಂದ್ರೆ ಅಷ್ಟೊತ್ತಿನಾಗೆ ಊರಿಗೋಗಾಕೆ ಆಗ್ತಿರ್ಲಿಲ್ಲ. ನಡ್ಕೊಂಡು ಓಯ್ಬೇಕಿತ್ತು. ರಾತ್ರಿ ನಮ್ಮನೇಲೆ ಊಟ ಮಾಡಿ, ಮಲಗಿದ್ದು, ಬೆಳಿಗ್ಗೆ ಎದ್ದು ಹೋಗ್ತಿದ್ರು. ಆಗೆಲ್ಲಾ ಬಸ್ ಗಳಾಗೆ ಕಂಡಕ್ಟ್ರು, ಡ್ರೈವರ್ರು ಇಸ್ಕೂಲ್ ಹುಡುಗ್ರನ್ನ ಕಂಡ್ರೆ ನಿಲ್ಸಿ, ಪುಗ್ಸಟ್ಟೆ ಕರ್ಕೋ ಓಯ್ತಿದ್ರು. ಪಾಪ ಮಕ್ಳು ಬಿಸ್ಲಾಗೆ ನಡೀಬೇಕೂಂತ ಪ್ರೀತಿ ತೋರ್ಸೋರು. + +ಹಾರ್ಮೋನಿಯಂ ಬಾರ್ಸಿದ್ದು + +ಹಾರ್ಮನಿ ಅಂತಿದ್ವಿ. ಅದ್ಯಾಕೋ ನಮ್ಮಿಂದ ಹಾರ್ಕೊಂಡೇ ಹೋಯ್ತು. ನಮ್ಮಪ್ಪನ ರೂಮಿನಲ್ಲಿ ಅಟ್ಟದ ಮೇಲೆ ಒಂದು ಹಾರ್ಮೋನಿಯಂ ಇತ್ತು. ನಮ್ಮತ್ತೆಯಂದಿರಿಗೆ ಕಲಿಸೋಕೆ ಅಪ್ಪ ತಂದಿದ್ದು. ಅವ್ರೆಲ್ಲಾ ಮದ್ವೆ ಆಗಿ ಹೋಗಾಯ್ತಲ್ಲ, ಅದು ಅಟ್ಟ ಸೇರಿತ್ತು. ಇದ್ಕಿದ್ದಂಗೆ ಅಪ್ಪಂಗೆ ನಂಗೂ ನಮ್ಮಕ್ಕಂಗೂ ಕಲಿಸ್ಬೇಕು ಅಂತ ಅನ್ನಿಸ್ತು. ನಮ್ ಗಾಚಾರ ಸರೀಗಿರ್ಲಿಲ್ಲ ಅನ್ನುಸ್ತೈತೆ. ಆ ಮೇಷ್ಟ್ರೋ ಕೊಡಿಗೇನಹಳ್ಳಿಯಿಂದ ಬರ್ತಿದ್ರು. ಕಣ್ಣು ಕಾಣುಸ್ತಿರ್ಲಿಲ್ಲ. ಕಿರುಚ್ಕೊಂಡು ಹೇಳ್ಕೊಡ್ತಿದ್ರು. ಸರಿಗಮಪ ನನ್ ಗಂಟ್ಲಾಗೆ ಸರಿಯಾಗಿ ಬರಲೇ ಇಲ್ಲ. ಅವ್ರು ಮ್ಯಾಕೆತ್ತೋಕೆ ಯೋಳಿದ್ರೆ ಆಕಾಶಕ್ಕೇ ನೆಗೀತಿತ್ತು. ಕೆಳೀಕ್ ಇಳ್ಸೋಕೆ ಯೋಳಿದ್ರೆ ಪಾತಾಳಕ್ಕೆ ಹೊಂಟೋಯ್ತಿತ್ತು. ಅದ್ ಬರಲ್ಲ. ಆ ಮೇಷ್ಟ್ರು ಬಿಡಾಕಿಲ್ಲಾ. ನಮ್‌ ರಾಗಾಲಾಪಕ್ಕೆ ಊರಾಗಿನ್ ನಾಯಿಗ್ಳೂ ಗೋಳಾಡ್ತಿದ್ವು. ನಂಗಂತೂ ಈ ತಾಪತ್ರಯಕ್ಕೆ ಬೋ ರೇಗ್ ಹತ್ತೋಯ್ತು. ಸರ್ಯಾಗಿ ಅವ್ರು ಬರೋ ಟೇಮಿಗೆ ಆಡಾಕೆ ಹೋಗ್ತಿದ್ದೆ. ರಾಮಪ್ಪ ಊರೆಲ್ಲಾ ಹುಡುಕಿದ್ರೂ ಕಾಣ್ತಿರಲಿಲ್ಲ. ಆ ಊರಲ್ಲಿ ನಾನು ಬಚ್ಚಿಟ್ಟುಕೊಣಾ ಜಾಗಗ್ಳು ಸ್ಯಾನೆ ಇದ್ವು. ನಾಗಮ್ಮನ ಹಟ್ಟಿ, ಈಶ್ವರಮ್ಮನ ಮನೆ, ಜಕ್ಕೇನಹಳ್ಳಿಯವರ ಮನೆ ಇಂಗೇ ಮಸ್ತ್ವಿದ್ವು. ನಮ್ಮಪ್ಪಂಗೂ ರೋಸೋಗಿ ಹಾರ್ಮೋನಿಯಂ ಪೆಟ್ಟಿಗೇನಾ ಇಸ್ಕೂಲ್‌ಗೆ ದಾನ ಮಾಡಿದ್ರು.‌ ಅದು ಆಚೆ ಹೋದ್ ಮೇಲೆ ನಮ್ಗೂ ನೆಮ್ದಿ ಆಯ್ತು. + + + +ಕೇರಂ ಬಂದದ್ದು + +ನಮ್ಮೂರ್ನಾಗೆ ನಮ್ಮನೇಲೆ ಮೊದ್ಲು ಅಪ್ಪ ಕೇರಂ ತಂದ್ರು. ಚೈನೀಸ್ ಚಕ್ಕರ್ ತಂದ್ರು. ಬ್ಯಾಂಕ್ ಆಟ ತಂದಿದ್ರು. ಅವೆಲ್ಲಾ ಬಂದ ಮೇಲೆ ಊರಾಗಿನ್ ಹೈಕ್ಳೆಲ್ಲಾ ನಮ್ಮನೇಲಿ ಸೇರೋರು. ಆಡೋರು ನಾಕು ಮಂದಿ ಆದ್ರೆ ನೋಡೋರು ಎಂಟು ಮಂದಿ. ನಮ್ಕಿನ್ನ ದೊಡ್ಡೋರು ಬರ್ತಿದ್ರಾ, ನಮ್ಮಣ್ಣ ನಮ್ಮಕ್ಕ ಸೇರ್ಕೊಂಡು ಆಡ್ತಿದ್ರು. ನನ್ನ ಚಿಕ್ಕೋಳು ಅಂತಾ ನೋಡೋಕೆ ಮಾತ್ರ ಬಿಡೋರು. ಅವ್ರೆಲ್ಲಾ ಆಡಿ ಬ್ಯಾಸ್ರಾಗಿ ಎದ್ದೋದ್ ಮೇಲೆ ನಮ್ಮ ಸರದಿ. ನಾನೂ ನನ್ ಗೆಳತೀರು ಆಡ್ತಿದ್ವಿ. ನಾವೆಲ್ಲಾ ದೊಡ್ಡೋರಾದ ಮೇಲೆ ಕೇರಂ ಬೋರ್ಡ್‌ನ ಅಪ್ಪ ಇಸ್ಕೂಲ್ಗೆ ಕೊಟ್ಟುಬಿಟ್ಟರು. ಅಪ್ಪ ಇಂತ ಹೊಸ ಆಟಗಳ್ನ, ಕತೆ ಪುಸ್ತಕಗಳ್ನ, ಕ್ಯಾಸೆಟ್ಟುಗಳ್ನ ತರೋದು ನಂಗೆ ಆವಾಗ್ಲಿಂದ್ಲೂನೆ ಹೊರಗಿನ್ ಜಗತ್ತಿಗೆ ತೆರ್ಕೊಳ್ಳೋಕೆ ದಾರಿ ಮಾಡ್ತು. ಪೇಪರ್ ತರ್ಸೋದು ಮಾತ್ರವಲ್ಲ, ನಾನೂ ಓದ್ಲೇ ಬೇಕಿತ್ತು. ಆಮೇಲೆ ಅಷ್ಟು ಚಿಕ್ಕ ವಯಸ್ಸಿನಲ್ಲೇ ರಾಜಕೀಯದ ವಿಸ್ಯಾನೂ ನಂಜೊತೆ ಮಾತಾಡ್ತಿದ್ರು. ಈಗೇನಾದ್ರೂ ನಾನು ಸ್ಟೇಜ್ ಮ್ಯಾಗೆ ಮಾತಾಡ್ತೀನಿ ಅಂದ್ರೆ, ಅದ್ಕೆ ಅಪ್ಪ ಹಾಕಿದ ಬೀಜಾನೆ ಕಾರಣ. + +ಸುಮಾ ಸತೀಶ್‌ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ),  ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು),  ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_30.txt b/Kenda Sampige/article_30.txt new file mode 100644 index 0000000000000000000000000000000000000000..b0dac60f1afc1ed044738a601acd4e916fc70ef7 --- /dev/null +++ b/Kenda Sampige/article_30.txt @@ -0,0 +1,25 @@ +ಪ್ರಿಯ ನಿನ್ನ ಮುಖ ಹೀಗೇಕೆ ಕಪ್ಪಿಟ್ಟಿದೆಪ್ರಿಯೆ ನನ್ನ ಮುಂದೆ ನೀ ಮಾಡಿದ ಉಪ್ಪಿಟ್ಟಿದೆ + +ಇದು ಉಪ್ಪಿಟ್ಟಿನ ಬಗೆಗೆ ದುಂಡಿರಾಜರ ವ್ಯಾಖ್ಯಾನ. ಇದು ಅವರದೊಬ್ಬರದೇ ಅಲ್ಲ, ಹೆಚ್ಚಿನ ಜನರು ಉಪ್ಪಿಟ್ಟು ಎಂದರೆ ಮುಖ ಸಿಂಡರಿಸುತ್ತಾರೆ ಇಲ್ಲವೆ ಮೂಗುಮುರಿಯುತ್ತಾರೆ. ಯಾವ ಪುಣ್ಯಾತ್ಮರು ಅದಕ್ಕೆ ಉಪ್ಪಿಟ್ಟು ಎಂದು ಹೆಸರಿಟ್ಟರೋ? ಅದು ಉಪ್ಪು ಹಿಟ್ಟು ಸೇರಿ ತಯಾರಿಸುವುದೇನಲ್ಲ. ಉಪ್ಪಿನಕಾಯಿ ಎಂದರೆ ಅದರಲ್ಲಿ ಉಪ್ಪಿನ ಅಂಶ ಅತಿಯಾಗಿರುತ್ತದೆ. ಮಾವಿನಕಾಯಿ, ನಿಂಬೆಹಣ್ಣು, ಅಮಟೆಕಾಯಿ ಅಂತ ಯಾವುದರಿಂದ ತಯಾರಾದರೂ ಅದರಲ್ಲಿ ಉಪ್ಪು ಕಟುವಾಗಿ ಇರಲೇಬೇಕು, ಇಲ್ಲದಿದ್ದರೆ ಅದರ ಆಯುಷ್ಯ ತೀರ ಅಲ್ಪ. ತಾಳಿಕೆಯ ಗುಣ ಉಪ್ಪಿನದು. ಈಗ ಹೇಳುತ್ತಾರಲ್ಲ, preservative ಅಂತ. ಉಪ್ಪು ಪ್ರಕೃತಿಸಹಜವಾದ ಪ್ರಿಸರ್ವೇಟಿವ್ ಗುಣ ಉಳ್ಳದ್ದು. ಇನ್ನು ಉಪ್ಪೇರಿ, ಉಪ್ಪೆಸರು, ಉಪ್ಸಾರು ಅನ್ನುವ ವ್ಯಂಜನಗಳಲ್ಲಿ ಉಪ್ಪಿನ ರುಚಿ ತುಸು ತೀಕ್ಣವಾದುದೇ. ಅಷ್ಟೆ ಅಲ್ಲ, ಅವುಗಳಲ್ಲಿ ಖಾರವೂ ತುಸು ಜಾಸ್ತಿಯೇ. ಆದರೆ ಇವ್ಯಾವ ಗುಣವೂ ಇಲ್ಲದೆ ಉಪ್ಪಿಟ್ಟು ಆ ಹೆಸರನ್ನು ಹೊತ್ತಿದೆ. + +ಉಪ್ಪಿಟ್ಟಿನ ಬಗ್ಗೆ ಲೇಜಿ ವಿಮೆನ್ ಈಜಿ ಟಿಫಿನ್ ಎನ್ನುವ ಮಾತೂ ಚಾಲ್ತಿಯಲ್ಲಿದೆ. ನಮ್ಮವರು ನನ್ನ ತಮ್ಮನ ಹೆಂಡತಿಯನ್ನು ಹೀಗೆ ರೇಗಿಸುತ್ತಾರೆ. ಅದಕ್ಕೆ ಆಕೆ `ಭಾವ, ನೀವನ್ನೋತರ ಉಪ್ಪಿಟ್ಟು ಮಾಡೋದೇನು ಸುಲಭದ್ದಲ್ಲ, ಬೋಳು ಉಪ್ಪಿಟ್ಟು ಮಾಡಿರೆ ಯಾರು ತಿಂತಾರೆ’ ಅಂತ ಹೇಳುತ್ತಿರುತ್ತಾಳೆ. ಆದು ನಿಜ. ಅದನ್ನು ತಯಾರಿಸಲು ಸಾಕಷ್ಟು ಸಮಯ ಬೇಕೇಬೇಕು. ಸುಲಭವಾಗಿ ರವೆ ಕೆದಕಿ ಉಪ್ಪಿಟ್ಟು ಮಾಡಿದ್ರೆ ನಮ್ಮನೆ ನಾಯಿಯೂ ಮೂಸಲಿಕ್ಕಿಲ್ಲ. ಯಾಕೆಂದರೆ ಅದಕ್ಕೂ ಬೇರೆ ರುಚಿ ರೂಢಿಯಾಗಿದೆಯಲ್ಲ. ನಾಯಿ ಅಂದಾಗ ಒಂದು ವಿಷಯ ನೆನಪಾಗುತ್ತಿದೆ. ಒಮ್ಮೆ ಯಾರೋ ನೆಂಟರ ಮನೆಗೆ ಹೋಗಿದ್ದೆ, ಆ ಮನೆಯೊಡತಿ ವಾಂಗಿಭಾತ್ ಮಾಡಿದ್ದರು. ಹೊಸದಾದ ಸಿದ್ಧಪುಡಿ ಆಗಿತ್ತಂತೆ, ಆಕೆಗೆ ಅಂದಾಜಾಗದೆ ಖಾರ ಅತಿಯಾಗಿತ್ತು. ನಾವೆಲ್ಲ ಕಷ್ಟಪಟ್ಟು ತಿನ್ನುತ್ತಿದ್ದೆವು. ಆಕೆಯ ಪತಿಮಹಾಶಯ `ತುಂಬ ಖಾರ, ಕಷ್ಟಪಟ್ಟು ಯಾಕೆ ತಿನ್ನದು, ಯಾವುದಾದ್ರೂ ಬೀದಿನಾಯಿ ಬರುತ್ತೆ ಅದಕ್ಕೆ ಹಾಕು’ ಅಂತ ಹೆಂಡತಿಗೆ ಹೇಳಿದರು. ಕೂಡಲೇ ಅವರ ಮಗ `ಅಪ್ಪಯ್ಯ ಇದನ್ನು ನಾಯಿಗೆ ಹಾಕಿರೆ ನಾಳೆಯಿಂದ ಅದು ನಮ್ಮನೆ ಕಡೆ ಬರದನ್ನ ನಿಲ್ಸುತ್ತೆ’ ಅಂತ ತಮಾಶೆ ಮಾಡಿದ್ದ. + +ಉಪ್ಪಿಟ್ಟು ಎಷ್ಟೊಂದು ವೈವಿಧ್ಯಮಯವಾದದ್ದು. ಅಕ್ಕಿತರಿ, ಗೋಧಿರವೆ, ಗೋಧಿಶಾವಿಗೆ, ಅಕ್ಕಿಶಾವಿಗೆ, ರಾಗಿಶಾವಿಗೆ, ಸಿರಿಧಾನ್ಯ, ಮುಂತಾಗಿ ತರಾವರಿ ಉಪ್ಪಿಟ್ಟುಗಳು. ತಯಾರಿಸುವ ವಿಧಾನವೂ ವಿಭಿನ್ನ. ಮೂಲವಸ್ತು ಯಾವುದೇ ಇರಲಿ, ಹುರುಳಿಕಾಯಿ, ಕ್ಯಾರೆಟ್, ದಪ್ಪಮೆಣಸು ಇವೆಲ್ಲ ಉಪ್ಪಿಟ್ಟಿಗೆ ಒಳ್ಳೆಯ ಸಂಗಾತಿಗಳು. ಕೆಲವರಿಗೆ ಅಕ್ಕಿತರಿ ಉಪ್ಪಿಟ್ಟು ಅಂದ್ರೆ ಬಹಳ ಪ್ರಿಯ. ಇನ್ನು ಕೆಲವರಿಗೆ ಗೋಧಿರವೆಯೇ ಆಗಬೇಕು. ಗೋಧಿ ಅಂದ್ರೆ ಮಡಿಗೂ ಆಗುತ್ತದೆ. ಏಕಾದಶಿ, ಶಿವರಾತ್ರಿ, ಸಂಕಷ್ಟಿ ಏನೇ ಇರಲಿ ಗೋಧಿ ಅಂದರೆ ಅಕ್ಕಿಯಂತೆ ಮುಸುರೆ ಅಲ್ಲವಲ್ಲ ಅದಕ್ಕೆ. (ಅದ್ಯಾವ ಪುಣ್ಯಾತ್ಮರು ಗೋಧಿ ಮುಸುರೆಯಲ್ಲ ಅಂದರೋ!)ಹಾಗಾಗಿಯೇ ಇರಬೇಕು, ಪಕ್ಕದ್ಮನೆ ಸುಬ್ಬಮ್ಮನ ಏಕಾದಶಿ ಉಪವಾಸದಲ್ಲಿ ಆಕೆ ತಿನಿಸಿನ ಪಟ್ಟಿಗೆ ಅವಲಕ್ಕಿಯೊಂದಿಗೆ ಉಪ್ಪಿಟ್ಟೂ ಸೇರಿದೆ. ಉಪವಾಸ ಮಾಡೋರು ಗೋಧಿರವೆ ಉಪ್ಪಿಟ್ಟು ತಿಂತಾರೆ. ನಮ್ಮ ಪರಿಚಿತರೊಬ್ಬರು ಅವರ ಅಳಿಯನ ಏಕಾದಶಿ ಉಪವಾಸಕ್ಕೆ ಖಾಯಂ ಆಗಿ ಶುಂಟಿ ಉಪ್ಪಿಟ್ಟು ಮಾಡ್ತಾರೆ. ಈರುಳ್ಳಿ ಹಾಕದೆ, ತುಸು ಹೆಚ್ಚು ಶುಂಟಿ ಹಾಕಿ ಕಾಯಿತುರಿ ಸ್ವಲ್ಪ ಹೆಚ್ಚಿಗೆ ಸೇರಿಸಿ ತಯಾರಿಸುವ ಆ ಉಪ್ಪಿಟ್ಟು ಅವರಿಗೆ ಪ್ರಿಯವಂತೆ. ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿದ ದಿನ ನಮ್ಮ ತಂದೆ ಸಂಜೆಹೊತ್ತಿಗೆ ಕೇಳುತ್ತಿದ್ದರು, `ಬೆಳಗಿನ ಉಪ್ಪಿಟ್ಟು ಇದೆಯಾ?’ ಅಂತ. ಎಚ್. ನರಸಿಂಹಯ್ಯ ಅವರು ಇಂಗ್ಲೆಂಡಿನಲ್ಲಿದ್ದಾಗ ಪ್ರತಿದಿನವೂ ಉಪ್ಪಿಟ್ಟು ಮಾಡಿಕೊಂಡು ತಿನ್ನುತ್ತಿದ್ದರಂತೆ. ಅವರಿಗೆ ಉಪ್ಪಿಟ್ಟು ಪ್ರಿಯವಾದುದಾಗಿತ್ತೋ ಅಥವಾ ಅವರಿಗೆ ಅದು ಅನಿವಾರ್ಯವಾಗಿತ್ತೋ! ಮತ್ಯಾವ ಕಾರಣದಿಂದಲೋ? ನಾನಂತೂ ಉಪ್ಪಿಟ್ಟಿನ ಬಗ್ಗೆ ಏನೇ ಹೇಳಿದರೂ ಅದು ಮುಖ್ಯ ಅಂತಾ ಭಾವಿಸೋಳು. ಯಾಕೆ ಗೊತ್ತಾ? ವಧುಪರೀಕ್ಷೆಯಲ್ಲಿ ಶಿರದೊಂದಿಗೆ ಸ್ಥಾನ ಪಡೆದಿರೋದು ಈ ಉಪ್ಪಿಟ್ಟೇ ಅಲ್ವಾ? ನಮ್ಮೂರ ಕಡೆ ಹೇಳುವುದಿದೆ, ಅವನು ಇನ್ನೆಷ್ಟು ಮನೆಯಲ್ಲಿ ಶಿರ ಉಪ್ಪಿಟ್ಟು ತಿನ್ನಬೇಕಂತೆ ಅಂತ. + +ನಮ್ಮ ಹಿರಿಯರು ತಯಾರಿಸುತ್ತಿದ್ದ ಉಪ್ಪಿಟ್ಟಿನಲ್ಲಿ ರವೆಯೇ ಮುಖ್ಯ ಪರಿಕರವಾಗಿತ್ತು. ಆದರೆ ಈಗ ಹಾಗಿಲ್ಲ. ಶಾವಿಗೆಗೆ ಅದು ಭಡ್ತಿ ಹೊಂದಿದಂತೆ ಕಾಣುತ್ತದೆ. ಹಿಂದೆಲ್ಲ ಗೋಧಿಶಾವಿಗೆಯನ್ನು ಹುರಿದು ಉಪ್ಪಿಟ್ಟು ತಯಾರಿಸಬೇಕಿತ್ತು. ಆದರೆ ಈಗ ಹುರಿದ ಶಾವಿಗೆಯೇ ಸಿಗುತ್ತದೆ. ಅಕ್ಕಿಶಾವಿಗೆಯನ್ನು ಕುದಿಯುವ ನೀರಿಗೆ ಹಾಕಿ ಬಸಿದೇ ತಯಾರಿಸಬೇಕು. ಯಾವುದೇ ಶಾವಿಗೆ ಇರಲಿ, ಏಳೆಂಟು ಇಂಚಿನಷ್ಟು ಉದ್ದವಿದ್ದು ಕಡ್ಡಿಯಂತಿರುತ್ತಿತ್ತು. ಸಣ್ಣದಾಗಿ ಮುರಿದು ಬಳಸಬೇಕಿತ್ತು. ಶಾವಿಗೆ ಉಪ್ಪಿಟ್ಟು ತಿನ್ನೋದು ಒಂದು ಚಾಲೆಂಜ್ ಆಗಿತ್ತು. ಆ ಬಾಲವನ್ನು ಮುಖಕ್ಕೆ ಮೆತ್ತಿಕೊಳ್ಳದೆ ಹ್ಯಾಗೆ ನಾಜೂಕಾಗಿ ತಿನ್ನೋದು ಅಂತ. ಒಂದು ಸರಿ ನಾನು ಪರಿಚಿತರೊಬ್ಬರ ಮನೆಗೆ ಹೋಗಿದ್ದೆ, ಶಾವಿಗೆ ಉಪ್ಪಿಟ್ಟು ಕೊಟ್ಟರು. ಜೊತೆಯಲ್ಲಿ ಸುತ್ತಿ ತಿನ್ನಲು ಬೇಕಾದ ಚಮಚವನ್ನೂ ಕೊಟ್ಟಿದ್ದರು. ಅಷ್ಟಾಗಿ ರೂಢಿಯಿಲ್ಲದ ನನಗೆ ಬಾರಿ ಕಷ್ಟವಾಗಿತ್ತು. ಈಗ ಹಿಂದಿನಂತಲ್ಲ, ಅಂಗಡಿಯಲ್ಲಿ ಸಿಕ್ಕೋದೇ ಚಿಕ್ಕದಾಗಿ ಮುರಿದ ಶಾವಿಗೆ. ಈಗ ಮದುವೆ ಮುಂತಾದ ಕಾರ್ಯಕ್ರಮಗಳಲ್ಲಿ ಶಾವಿಗೆ ಉಪ್ಪಿಟ್ಟು ಸ್ಥಾನಪಡೆದುಕೊಂಡಿದೆ. + +ಸಕ್ಕರೆ ಕಾಯಿಲೆಯ ಕಾರಣದಿಂದಲೋ ಏನೋ ರಾಗಿಶಾವಿಗೆ ಮಾರುಕಟ್ಟೆಗೆ ಬಂತು. ಅದನ್ನು ನೀರಲ್ಲಿ ಒಂದುಕ್ಷಣ ನೆನೆಸಿಟ್ಟು ಉಗಿಯಲ್ಲಿ ಬೇಯಿಸಿ ಉಪ್ಪಿಟ್ಟು ಮಾಡಲು ತಾಳ್ಮೆಬೇಕು. ಹೀಗೆ ತಯಾರಿಸಿದರೂ ಮನೆಗೆ ಬಂದ ಅತಿಥಿಗಳಿಗೆ ಕೊಡುವಂತಿಲ್ಲ. ಕಪ್ಪಾದ ಉಪ್ಪಿಟ್ಟನ್ನು ಹೇಗೆ ಕೊಡೋದು? ಒಮ್ಮೆ ಅವರು ಬೇಡ ಅಂದರೆ? ನನ್ನ ಮೊಮ್ಮಗನೇ ಹೇಳಿದ್ದ `ಅಜ್ಜಿ ರಾಗಿಶಾವಿಗೆ ಉಪ್ಪಿಟ್ಟು ಮಾಡಬೇಡ’ ಅಂತ. `ಯಾಕೋ?’ ಅಂತ ಕೇಳಿದರೆ, “ಅದರ ಬಣ್ಣ ನೋಡಿದ್ರೆ ತಿನ್ನಕ್ಕೆ ಒಂಥರಾ ಆಗುತ್ತೆ” ಅಂತ ಅಂದಿದ್ದ. ಸಿರಿಧಾನ್ಯದ ಉಪ್ಪಿಟ್ಟಿನ ವಿಷಯವೂ ಹಾಗೆಯೇ. ಕೆಲವರು `ಅಯ್ಯೋ ನಮ್ಮನೆಯಲ್ಲಿ ಯಾರೂ ಅದನ್ನ ಇಷ್ಟಪಡಲ್ಲ. ಅದ್ಕೆ ನಾವು ಮಾಡಲ್ಲ’ ಅಂತಾರೆ. ಈಗಂತೂ ಸಿರಿಧಾನ್ಯದ ಬಗ್ಗೆ ತರಾವರಿ ವ್ಯಾಖ್ಯಾನಗಳು. ಅದರಲ್ಲಿ ಇರುವ ಪ್ರೊಟಿನ್ ನಮಗೆ ಅಗತ್ಯ ಎನ್ನುವ ಉಪದೇಶಗಳು. ಕೊಳ್ಳುವವರೇ ಇಲ್ಲದ ಸಿರಿಧಾನ್ಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಅದೇ ಮುಖ್ಯ ಆಹಾರವಾಗಿದ್ದ ವಲಯದವರು ಅಕ್ಕಿಯ ಬೆಳುಪಿಗೆ ಮರುಳಾಗಿ ತಿನ್ನುವುದನ್ನು ನಿಲ್ಲಿಸಿದ್ದರು. ಈಗ ಬಹಳ ಜನರಿಗೆ ಅದರ ಅಗತ್ಯ ಕಂಡಿದೆ. ಅದರ ವಿಶೇಷವೆಂದರೆ ಧಾನ್ಯವನ್ನು ನೇರವಾಗಿ ಉಪ್ಪಿಟ್ಟು ಮಾಡಬಹುದು. ಇತ್ತೀಚೆಗೆ ಸಕ್ಕರೆ ಕಾಯಿಲೆಯ ಕಾರಣದಿಂದ ಗೋಧಿ ರವೆಯಂತೆ ಗೋಧಿ ನುಚ್ಚಿನ ಉಪ್ಪಿಟ್ಟೂ ಚಾಲ್ತಿಗೆ ಬಂದಿದೆ. ಈ ಪಟ್ಟಿಗೆ ಬ್ರೆಡ್ ಉಪ್ಪಿಟ್ಟನ್ನೂ ಸೇರಿಸಬಹುದು. ನಿನ್ನೆಯ ಉಳಿದ ಸಾಂಬಾರ್ ಇವತ್ತು ಹೋಟೆಲ್ಲಿನ ವಿಶೇಷ ಅಂತ ತಮಾಶೆ ಮಾಡುವುದಿದೆ. ಇದೂ ಒಂದರ್ಥದಲ್ಲಿ ಹಾಗೆಯೇ. ಬ್ರೆಡ್ ತಂದು ಎರಡೋ ಮೂರೋ ದಿನ ಕಳೆದ ಮೇಲೆ ಅದನ್ನು ಯಾರೂ ಮೂಸುವುದಿಲ್ಲ. ಅವಧಿ ಮುಗಿದಿರದಿದ್ದರೆ ಹೆಂಗಸರಿಗೆ ಅದನ್ನು ಬಿಸಾಡಲು ಮನಸ್ಸಾಗಲ್ಲ. ಪ್ರಾಯಶಃ ಅದರ ಮುಂದುವರಿಕೆಯ ಒಂದು ವಿಧಾನವೇ ಬ್ರೆಡ್ ಉಪ್ಪಿಟ್ಟಿನ ವೇಷಧರಿಸಿ ಆರ‍್ಷಿಸಿರಬಹುದು. ಉಪ್ಪಿಟ್ಟಿನ ಒಗ್ಗರಣೆ ಸಿದ್ಧಪಡಿಸಿ (ತರಕಾರಿ ಇರಬೇಕು) ನೀರನ್ನು ಹಾಕದೆ ಬ್ರೆಡ್ಡನ್ನು ಚಿಕ್ಕದಾಗಿ ತುಂಡರಿಸಿ, ಸಾಧ್ಯವಾದರೆ ಪುಡಿಮಾಡಿ ಹಾಕಿ, ಮೆದು ಅಂಶ ಹೋಗಲು ಅಥವಾ ರುಚಿ ಹೆಚ್ಚಿಸಲು ಹುರಿಗಡಲೆ ಪುಡಿಮಾಡಿ ಹಾಕಿದರೆ ಸ್ವಾದಿಷ್ಟವಾದ ಬ್ರೆಡ್ ಉಪ್ಪಿಟ್ಟು ರೆಡಿ. ಈರುಳ್ಳಿ ಬದಲು ಈರುಳ್ಳಿ ಗಿಡವನ್ನು ಕತ್ತರಿಸಿ ಒಗ್ಗರಣೆಗೆ ಹಾಕಿದರೆ ರುಚಿ ಹೆಚ್ಚು. + +ಇನ್ನೊಂದು ಬಗೆಯ ಉಪ್ಪಿಟ್ಟಿದೆ. ವಾಂಗಿಭಾತ್ ಉಪ್ಪಿಟ್ಟು. ಒಳ್ಳೆ ಬದನೆಕಾಯಿ ಹಾಕಿ ವಾಂಗಿಭಾತಿನ ಪುಡಿ ಹಾಕಿ ತಯಾರಿಸಿದರೆ ಬಾಯಲ್ಲಿ ನೀರು ಬರೋದು ಗ್ಯಾರಂಟಿ. ಉಪ್ಪಿಟ್ಟಾ ಅಂತ ಕೇಳೋರು ಕೂಡ ರುಚಿಯಾಗಿದೆ ಅಂತ ಬಾಯಿ ಚಪ್ಪರಿಸದಿದ್ದರೆ ಕೇಳಿ. ತಯಾರಾದ ಮೇಲೆ ತುಸು ಘಮಘಮ ಅಂತ ತುಪ್ಪ ಹಾಕುವುದನ್ನು ಮಾತ್ರ ಮರಿಬಾರದು. ಅದರ ಗುಟ್ಟು ಇರೋದು ಅಲ್ಲಿಯೇ. ಕೆಲವರು ಮಾಡುವ ತಿಳಿಸಾರಿನ ರಹಸ್ಯವೂ ಇದೇ. ತುಪ್ಪದ ಒಗ್ಗರಣೆ ಹಾಕಿದರೆ ಸ್ವಾದ ಅಧಿಕ. ಪ್ರಮಾಣ ಗೊತ್ತಿರಬೇಕು ಅಷ್ಟೆ. + +ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ. ನೀವು ಮಾಡೋ ಅವರೆಕಾಳು ಉಪ್ಪಿಟ್ಟಿನ ರುಚಿ ಬಹಳ ವಿಶಿಷ್ಟ’ ಅಂತ ಹೇಳಿದ ಮೇಲೆ ಇನ್ನಷ್ಟು ಬಡಿಸದೆ ಇರೋಕೆ ಹೇಗೆ ಸಾಧ್ಯ? ಬೇರೆ ಉಪ್ಪಿಟ್ಟಿಗಿಂತ ಅವರೆಕಾಳು ಉಪ್ಪಿಟ್ಟು ಮಾಡಲಿಕ್ಕೆ ಹೆಚ್ಚು ತಯಾರಿ ಬೇಕು. ಸೊನೆ ಇರುವ ಎಳೆಯ ಅವರೆಕಾಯಿ ತರಬೇಕು. ಅದನ್ನು ಬಿಡಿಸಿ ಬೆರ್ಪಡಿಸಬೇಕು. ನೀರಲ್ಲಿ ನೆನೆಹಾಕಿ ಕಾಳನ್ನು ಒಂದೊಂದಾಗಿ ಹಿತಕಬೇಕು. ಈ ಕೆಲಸಕ್ಕೆ ಮನೆಯ ಇತರ ಸದಸ್ಯರು ಕೈಹಾಕೋದು ಅಪರೂಪ. ರುಚಿ ಉಪ್ಪಿಟ್ಟು ಮಾಡಬೇಕು ಅಂತ ಮಹಿಳೆಯರೇ ಈ ಕಷ್ಟವನ್ನ ಮೈಮೇಲೆಳಕೊಳ್ಳೋದು. ಈರುಳ್ಳಿ, ಶುಂಟಿ ಇತ್ಯಾದಿಯಾಗಿ ಎಲ್ಲವೂ ತುಸು ಹೆಚ್ಚಿಗೆ ಪ್ರಮಾಣವೇ ಬೇಕು. ಉಪ್ಪಿಟ್ಟು ಕೂಡ ಬೇರೆ ಉಪ್ಪಿಟ್ಟಿಗಿಂತ ಹೆಚ್ಚೇ ಮಾಡಬೇಕು. + +ಅವರೆಕಾಳು ಶ್ರಾಯದಲ್ಲಿ ನಡೆಯುವ ಯಾವುದೇ ಕಾರ್ಯಕ್ರಮವಿರಲಿ. ಅಲ್ಲಿ ಸಾಧಾರಣವಾಗಿ ಅವರೆಕಾಳು ಉಪ್ಪಿಟ್ಟು ಹಾಜರಿ ಹಾಕುತ್ತದೆ. ಅವರೆಕಾಳು ಉಪ್ಪಿಟ್ಟಿನ ವ್ಯಾಮೋಹ ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚು. ಈಗೀಗ ಮಹಿಳೆಯರು ಅವರೆಕಾಳಿನ ಸೀಸನ್‌ಲ್ಲಿ ಅದನ್ನು ಬಿಡಿಸಿ, ಉಪ್ಪುನೀರಲ್ಲಿ ತೊಳೆದು ಆರುಹಾಕಿ ಒರೆಸಿ ಫ್ರಿಜ್ಜಿನಲ್ಲಿ ಕಾಪಿಟ್ಟು ಬಳಸುತ್ತಾರೆ. ಇನ್ನು ಮೊದಲಿಂದಲೂ ಹಿತಕಿದ ಕಾಳನ್ನು ಒಣಗಿಸಿ ಬಾಟಲಿಯಲ್ಲಿ ತುಂಬಿಟ್ಟು ಬಳಸುವುದು ಇದ್ದೇಇದೆ. ಆದರೆ ಅದು ಉಪ್ಪಿಟ್ಟಿಗೆ ಅಷ್ಟೊಂದು ರುಚಿಸುವುದಿಲ್ಲ. ಹಸಿಯಾಗಿ ರಕ್ಷಿಸಿಕೊಂಡು ಬಳಸಬಹುದು. + +ಒಮ್ಮೆ ಯಾರದೋ ಮನೆಗೆ ಹೋದಾಗ ಕಡಲೆಬೇಳೆ ಉಪ್ಪಿಟ್ಟು ಅಂತ ಕೊಟ್ಟಿದ್ದರು. ನಾನು ಇದೇನು ಅಂಥ ಮಿಕಿಮಕಿ ಅವರ ಮುಖ ನೋಡಿದೆ. ತಿಂದು ನೋಡು ಅಂದರು ತಿಂದೆ ಸವಿಯಾಗಿತ್ತು. ಅದರ ರೆಸಿಪಿ ಕೇಳಿ ತಿಳಿದು ಮನೆಯಲ್ಲಿ ಪ್ರಯೋಗ ಮಾಡಿದೆ. `ಚೆನ್ನಾಗಿದೆ’ ಅಂತ ಎಲ್ಲ ಸವಿದರು. ಕಡಲೆಬೇಳೆಯನ್ನು ಎರಡು ಗಂಟೆ ಕಾಲ ನೆನಸಿ ಅದನ್ನು ತರಿತರಿಯಾಗಿ ರುಬ್ಬಿ ಅದನ್ನು ಇಡ್ಲಿ ಪಾತ್ರೆಯಲ್ಲಿ ಬೇಯಿಸಿದರೆ ಒಂದು ಹಂತ ಮುಗಿಯಿತು. ಆಮೇಲೆ ಉಳಿದ ಉಪ್ಪಿಟ್ಟುಗಳಂತೆ ಒಗ್ಗರಣೆ ಸಿದ್ಧಪಡಿಸಿ, ಅದಕ್ಕೆ ತಯಾರಿಸಿದ ಇಡ್ಲಿಯನ್ನು ಪುಡಿಮಾಡಿ ಸೇರಿಸಿದರೆ ಉಪ್ಪಿಟ್ಟು ರೆಡಿ. ಬಾಯಿಗೂ ಸವಿ, ಸಾಕಷ್ಟು ಪ್ರೊಟೀನೂ ಸಿಗುತ್ತದೆ. ಸಬ್ಬಕ್ಕಿ ಉಪ್ಪಿಟ್ಟು ಮಾಡುವ ವಿಷಯ ನನಗೆ ಗೊತ್ತಿರಲಿಲ್ಲ. ಒಮ್ಮೆ ತಿಂದ ಮೇಲೆ ಮಾಡುವುದನ್ನು ಕಲಿತೆ. ಅದು ಧಾನ್ಯವಲ್ಲ, ಹಾಗಾಗಿ, ಎಂಥ ಮಡಿಯವರು ಕೂಡ ಅದರ ಉಪ್ಪಿಟ್ಟನ್ನು ಸವಿಯಬಹುದು. + + + +ಇತ್ತೀಚೆಗೆ ಇನ್ನೊಂದು ಬಗೆಯ ಉಪ್ಪಿಟ್ಟು ಮಾಡುವುದನ್ನು ಕಲಿತೆ. ಅದಕ್ಕೆ ನಾವು ಕೊಟ್ಟ ಹೆಸರು ಇಡ್ಲಿ ಉಪ್ಪಿಟ್ಟು ಅಂತ. ಎಲೆಕೋಸು, ಅಥವಾ ಕ್ಯಾರೆಟ್ ಇಲ್ಲವೆ ಸೀಮೆಬದನೆ ಯಾವುದಾದರೂ ಒಂದನ್ನು ಸಣ್ಣಗೆ ಅಂದರೆ ಕೋಸುಂಬರಿಯಷ್ಟು ಸಣ್ಣಗೆ ಹೆಚ್ಚಬೇಕು. ಈಗೇನು ಕಷ್ಟವಿಲ್ಲ ಬಿಡಿ. ವೆಜ್ ಕಟರ್‌ನಲ್ಲಿ ಹಾಕಿ ಎಳೆದರಾಯಿತು. ಒಂದು ಲೋಟ ಇಡ್ಲಿ ತರಿಯನ್ನು ರಾತ್ರಿ ನೀರಿನಲ್ಲಿ ತೊಳೆದಿಡಬೇಕು. ಬೆಳಗ್ಗೆ ಅದಕ್ಕೆ ಸಣ್ಣಗೆ ಹೆಚ್ಚಿದ ತರಕಾರಿಯನ್ನು ಎರಡೂವರೆ ಲೋಟದಷ್ಟು ಸೇರಿಸಿ, ಒಂದು ಲೋಟ ತೆಂಗಿನತುರಿಯನ್ನು ಪತ್ರೊಡೆ ಮಸಾಲೆಯೊಂದಿಗೆ ರುಬ್ಬಿ ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪಿನೊಂದಿಗೆ ಇಡ್ಲಿ ಲೋಟದಲ್ಲಿ ಬೇಯಿಸಿದರೆ ಇಡ್ಲಿ ಉಪ್ಪಿಟ್ಟು ರೆಡಿ. ಬೆಂದಿರುವ ಇಡ್ಲಿಯನ್ನು ಚಮಚದಲ್ಲಿ ಕೆದಕಿದರೆ ಅದು ಇಡ್ಲಿ ಆಕಾರ ಕಳೆದುಕೊಂಡು ಉಪ್ಪಿಟ್ಟಾಗಿ ತಟ್ಟೆಯತುಂಬ ಹರಡುತ್ತದೆ. ಹೀಗೆ ಕಾಲಕಾಲಕ್ಕೆ ಅದು ಹೊಸಹೊಸ ರೂಪದಲ್ಲಿ ವಿಜೃಂಭಿಸುತ್ತಿದೆ. ʻಉಪ್ಪಿಟ್ಟಾʼ ಅಂತ ಮೂಗುಮುರಿಯುವವರಿಗೆ ಅದರ ಇತಿಹಾಸ ಎಷ್ಟೊಂದು ವೈವಿಧ್ಯದಿಂದ ಕೂಡಿದೆ ಅಂತ ಗೊತ್ತಿಲ್ಲ. ಆದರೂ ಯಾಕೋ ದೋಸೆ ಪಾಯಿಂಟ್ ಇದ್ದಂತೆ ಉಪ್ಪಿಟ್ಟು ಪಾಯಿಂಟ್ ಅಂತ ಯಾರೂ ಶುರುಮಾಡಿಲ್ಲ. + +ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ. \ No newline at end of file diff --git a/Kenda Sampige/article_300.txt b/Kenda Sampige/article_300.txt new file mode 100644 index 0000000000000000000000000000000000000000..b6a471583d662efb5605d0c7bf2a484edb43bc32 --- /dev/null +++ b/Kenda Sampige/article_300.txt @@ -0,0 +1,109 @@ + + +ಬಾಗಿಲಹೊರಗೆ ನಿಂತವ ಪಾಟೀಲನೇ ಅಂತ ಖಾತರಿ ಮಾಡಿಕೊಂಡೇ ಬಾಗಿಲು ತೆರೆದಿದ್ದಳು ರಾಧಾ. ಮನೆಯ ಗೇಟಿನ ಹೊರಗೆ ಅನೇಕ ಚಾನೆಲ್ ನವರು ನಿಂತಿದ್ದರು. ಒಂದುವೇಳೆ ಸೆಕ್ಯುರಿಟಿಯವ ಇರದಿದ್ದರೆ ಮನೆಯ ಒಳಗಡೆಯೆ ನುಗ್ಗುತ್ತಿದ್ದರೇನೋ.. ರಾಧಾಳಿಗೆ ಪಾಟೀಲ ಬಂದಿದ್ದು ಸಮಾಧಾನ ತಂದಿತ್ತು. ಅದನ್ನು ಹೇಳಿ ತೋರಿಸಿದಳು. ಅವಳ ಮಾತಿನ ಕಡೆ ಗಮನ ಕೊಡದ ಪಾಟೀಲ ಕುರ್ಚಿಯ ಮೇಲೆ ಕುಳಿತ. ಮುಖ ವ್ಯಗ್ರವಾಗಿತ್ತು. + +“ಅಲ್ಲ ಮಾರಾಯ್ತಿ ನಿನಗ ಏನು ಹೇಳಬೇಕು ಏನು ಹೇಳಬಾರದು ಅಂತ ಗೊತ್ತಾಗೂದಿಲ್ಲ… ಹೋಗಿ ಹೋಗಿ ಅಕಿ ಮುಂದ ಯಾಕ ಹೇಳಿದಿ….” ದನಿಯಲ್ಲಿ ಆಕ್ಷೇಪಣೆ ತುಂಬಿತ್ತು. + +“ಹಾಗಲ್ಲ ಇನ್ನೂ ಅನೇಕ ಸಂಗತಿ ಹಂಚಿಗೊಂಡಿದ್ದೆ ಅವಳ ಜೊತೆ ವಿ ಬಿಕೇಮ್ ಗುಡ್ ಫ್ರೆಂಡ್ಸ್.. ಅನಿಸಿತ್ತು…” ರಾಧಾಳ ದನಿಯಲ್ಲಿ ಕಾಳಜಿಯಿತ್ತು. + +“ಅಗದೀ ಸೀದಾಸಾದಾ ಮಾತದ.. ನಿನ್ನ ಕಾಲಮ್ಯಾಲೆ ನೀನ ಕೊಡ್ಲಿ ಹಾಕಿಕೊಂಡಂಗ ಅದ ಈಗ. ಒಂದುವಾರ ಕಳದರ ಮಂತ್ರಿಮಂಡಳ ರಚನಾ ಆಗತದ… ನಿನಗ ಕ್ಯಾಬಿನೆಟ್ ಮಂತ್ರಿ ಮಾಡೂದು ಖಾತ್ರಿ ಆಗಿತ್ತು. ಸಾಹೇಬರು ಹಂಗ ಸುಕೇಶಜಿ ಮುದ್ರಿ ಒತ್ತಿದ್ದರು.. ನೋಡು ಎಲ್ಲಾ ಅವಘಡ ಆತು.. ನೋಡು ನಮ್ಮದು ಸನಾತನಿಗಳ ಪಕ್ಷ.. ಇಂತಹ ವಿಚಾರ ಅಷ್ಟು ಲಗೂನ ರುಚಸೂದಿಲ್ಲ.. ನಾವು ಇನ್ನು ಬಹಳ ಹಿಂದ ಉಳದೇವಿ ಅಂತ ಬೇಕಾದರ ತಿಳಕೋ… ಅದರಾಗ ಈ ಸುಕೇಶಜಿಗೆ ಇಂತಹ ಯಾವ ಸಂಗತಿನೂ ಪಥ್ಯಾಗೂದಿಲ್ಲ.” ಅವನ ದನಿಯಲ್ಲಿ ವ್ಯಂಗ್ಯವಿತ್ತು. ಇವ ತನ್ನನ್ನು ಆಡಿಕೊಳ್ಳುತ್ತಿದ್ದಾನೋ ಅಥವಾ ಪಾರ್ಟಿಗೋ… ಗೊಂದಲವಿತ್ತು. + +“ನಂಬಿದೆ ಅವಳಿಗೆ ಬಯೋಪಿಕ್ ಮಾಡತೇನಿ ಅಂತ ಫಾಕ್ಸ್ ಕಂಪನಿಯವರು ಬಂದು ಕೇಳಿದರು. ಆಸೆಗೆ ಒಳಗಾದೆ.. ಯಾರಿಗೆ ಬೇಡ ಕಿರೀಟ.. ಸಿನೇಮಾರಂಗದಾಗ ಅದೂ ಕನ್ನಡ ಸಿನೇಮಾರಂಗದಾಗ ಹೆಂಗಸಿನ ಜೀವನಚರಿತ್ರಾದ ಮ್ಯಾಲೆ ಬಯೋಪಿಕ್ ಮಾಡತಾರೆ ಅಂತ ತಿಳಿದು ಖುಶಿಯಾಗಿತ್ತು… ಆದರೆ ಒಂದು ಹೇಳು ಈ ನ್ಯೂಸ ಚಾನೆಲ್ಲಿನವರಿಗೆ ಜನರ, ಅದರಲ್ಲಿ ಹೆಸರುಗಳಿಸಿದವರ ಖಾಸಗಿ ಜೀವನ ಯಾಕ ಬೇಕು? ಅದೂ ನನ್ನ ಮಗಳ ಖಾಸಗಿ ಸಂಗತಿ.. ಅವಳಿಗೂ ಒಂದು ಜೀವನವಿದ… ಸೆಕ್ಸುವಲ್ ಒರಿಯಂಟೇಶನ್ ಇದೆ, ನನಗೇ ಅಡ್ಡಿಯಾಗದ್ದು ಇವರಿಗ್ಯಾಕೆ ಆಗಬೇಕು ಪಾಟೀಲ…” ಅವಳ ಪ್ರಶ್ನೆಗೆ ಅವ ವ್ಯಂಗ್ಯವಾಗಿ ನಕ್ಕ. + +“ಸಿನೇಮಾದಾಕಿ ನೀನು, ನೀನ ಹೇಳು ಎಂದರೆ ಖಾಸಗಿ ಜೀವನ ನಿಂಗ ಸಿಕ್ಕಿತ್ತೇನು? ಎಂಜಾಯ್ ಮಾಡಿ ಏನು.. ನಾವು ಪಬ್ಲಿಕ ಫಿಗರಗೋಳು ನೂರಕಣ್ಣು ಕಾವಲಿರತಾವ ನಮ್ಮ ಮ್ಯಾಲೆ.. ಸದಾ ಹುಶಾರಿಯೊಳಗ ಇರಬೇಕು.. ಅಂತಾದ್ರಾಗ ನೀನು ಎಲ್ಲ ತೆರೆದಿಟ್ಟಿ ಅಕಿ ಮುಂದ, ಬಿಡತಾರೇನು ಆ ಮಂದಿ, ನೀನ ನಿನ್ನೆ ಹೇಳಿದಿ, ಐವ್ವತ್ತು ಕೋಟಿ ಕೇಳತಾನ ಆ ನಾಯರ್ ಮುಚ್ಚಿಡಲಿಕ್ಕೆ ಅಂತ” + +“ಆದ್ರ ಇದು ಅನ್ಯಾಯ ಅಲ್ಲ, ಇದು ಬ್ಲಾಕಮೇಲಿಂಗ್ ಅದ” ಅವಳ ದನಿ ಕಂಪಿಸುತ್ತಿತ್ತು. + +“ನಾಳೆ ಸಾಹೇಬರು ಬಾ ಅಂದಾರ. ಅವರ ಏನಾದರೂ ದಾರಿ ತೋರಿಸಬಹುದು ನೋಡೋಣ… ಆದರ ಬಂಗಾರದಂತ ಚಾನ್ಸು ಮಾರಾಯ್ತಿ.. ಈ ಹಾಳು ಚಾನೆಲ್ಲಿನವರ ಸಲುವಾಗಿ ಎಲ್ಲಿ ಮಣ್ಣ ಆಗತದೊ ಅಂತ ಹೆದರಿಕಿ ನಂಗ..” + +“ನಾ ಆ ಚಾನೆಲ್ಲಿನವರ ಜೋಡಿ ಮಾತಾಡಲಿಕ್ಕೆ ಹೋಗಲಿಲ್ಲ, ಮತ್ತೇನಾದರೂ ಅನಾಹುತ ಮಾಡಬಹುದು ಈ ಹೆದರಿಕೆ ಇದೆ..”ಪಾಟೀಲ ನಕ್ಕ. + +“ಹುಚ್ಚಿದ್ದೀ ನೀನು. ನಾ ಆ ನಾಯರ ಜೋಡಿ ಮಾತಾಡಿದೆ, ಬಗ್ಗುವ ಮನಿಶಾ ಅಲ್ಲ ಅವ… ನಿಂಗ ಬಲಿಯೊಳಗ ಹಾಕ್ಯಾರ ಅವರು… ಅಂದರ ವಿರೋಧ ಪಕ್ಷದವರು ಶಾಮೀಲಾಗ್ಯಾರ…”ರಾಧಾಳ ಮುಖ ಸಪ್ಪಗಾತು. ಪಾಟೀಲ ಮೆತ್ತಗಾದ. + +“ಹೋಗಲಿ ಅಕಿ ಅವತ್ತು ಬಂದದ್ದು ಮೊದಲ ಸಲ ಏನ ಅಲ್ಲಲ್ಲ. ಆದರ ಅವತ್ತ ಯಾಕ ಅಕಿ ರೆಕಾರ್ಡ್ ಮಾಡಕೊಂಡಳು.. ನೀ ಯಾಕ ಅದಕ್ಕ ಅಲಾವ್ ಮಾಡಿದಿ…? ಅವತ್ತು ಏನೇನಾತು ಎಲ್ಲಾ ಡಿಟೇಲಾಗಿ ಹೇಳು…” + +ರಾಧಾ ಮೆಲುಕು ಹಾಕಿದಳು. ಫಾಕ್ಸ್ ಚಾನೆಲಿನವರು ಕನ್ನಡದಾಗ ತನ್ನ ಬಯೋಪಿಕ್ ಮಾಡಲು ಆಸಕ್ತಿ ತಳೆದಿದ್ದಾರೆ. ಈ ವಿಷಯವೇ ಖುಶಿತಂದಿತ್ತು. ಅವರೇ ಮಾಯಾಳನ್ನು ನಿಯೋಜಿಸಿದ್ದರು.. ರಾಧಾಳ ಜೀವನಚರಿತ್ರೆ ಜನಜನಿತವಾಗಿತ್ತು. ಆದರೂ ಕೆಲವು ಒಳಸುಳಿಗಳ ಬಗ್ಗೆ ವಿವರ ಬೇಕಾಗಿತ್ತು. ಮಾಯಾ ಕೆಲವೇ ದಿನಗಳಲ್ಲಿ ಆತ್ಮೀಯ ಗೆಳತಿಯಂತಾದಳು. ಅವಳೊಡನೆ ಮನಬಿಚ್ಚಿ ಮಾತಾಡಬಹುದಾಗಿತ್ತು. + +******** + +ತನ್ನ ಸಿನೆಮಾದ ಸುರುವಾತಿನ ದಿನಗಳ ಬಗ್ಗೆ, ಕಿಟ್ಟಣ್ಣ ಎಂಬ ನಿರ್ದೇಶಕನ ಒಡನಾಟ, ಅವನ ಜೊತೆ ಮಾಡಿದ ಹಿಟ್ ಸಿನೇಮಾಗಳು, ಇದ್ದಕ್ಕಿದ್ದಂತೆ ಲಭಿಸಿದ ಸೂಪರ್ ಸ್ಟಾರ್ ಪಟ್ಟ, ಕನ್ನಡ ಸಿನೇಮಾದ ಸಾಮ್ರಾಜ್ಞಿಯಾಗಿದ್ದು… ದಿನಗಳೆದಂತೆ ಕಿಟ್ಟಣ್ಣನಲ್ಲಿ ಬೆಳೆದ ಪೊಸೆಸಿವನೆಸ್… ತನ್ನ ಅಪ್ಪಣೆ ಮೀರಕೂಡದೆಂಬ ಅವನ ಒತ್ತಾಯ ದಿನಗಳೆದಂತೆ ಇರಿಟೇಟ್ ಆಗಿದ್ದು… ಸಿಡಿದುನಿಂತಾಗ ಅವ ರೇಗಿದ್ದು, ತಾನೇ ಚಾನ್ಸ್ ಕೊಟ್ಟವ ಎಂಬ ಹಮ್ಮು ಬೇರೆ… ಇದೇ ಸದರದಿಂದ ತನಗೆ ಹಾಸಿಗೆಗೆ ಕರೆದಿದ್ದು, ತಾನು ಕಪಾಳಕ್ಕೆ ಬಾರಿಸಿದ್ದು.. ಇದೇ ಗೊಂದಲದಲ್ಲಿ ಅನಿಲ್ ಕಪೂರ್ ಜೀವನದಲ್ಲಿ ಬಂದಿದ್ದು, ಅವನೊಡನೆ ಮದುವೆ, ಯಶುಳ ಜನನ ಹೀಗೆ ಹೊರಗಡೆ ಹೇಳದ ಅನೇಕ ಖಾಸಗಿ ಸಂಗತಿಗಳು ಮಾಯಾ ಜೊತೆ ಶೇರ್ ಮಾಡಿಕೊಂಡಿದ್ದಳು. + +ರಾಧಾ ಹಾಗೂ ಅನಿಲ ಕಪೂರರ ಹೊಸ ಬಾಳು ಸುಂದರವಾಗಿತ್ತು. ಯಶು ಹುಟ್ಟಿದಮೇಲಂತೂ ಅವಳು ಹೋಮ್ ಮೇಕರ್ ಆಗಿ ಬದಲಾದಳು. ಅವಳಲ್ಲಿ ಹುದುಗಿದ್ದ ಕಲಾವಿದೆ ನಿವೃತ್ತಿ ಹೊಂದಿದಂತೆ.. ಯಶು ಎಲ್ ಕೆಜಿ ಸೇರಿದಾಗ ಜಗದಲ್ಲಿ ಅದರಲ್ಲಿ ಭಾರತದಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಸಂಪರ್ಕಕ್ರಾಂತಿಯ ಹೊಸ ಪರ್ವ ಇಂಟರ್ನೆಟ್ ಸೌಲಭ್ಯದಿಂದ ದೊರೆಯಿತು. ಅದುವರೆಗೂ ರಾಧಾ ಹೊರ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸಿರಲಿಲ್ಲ. ಪರ್ಯಾವರಣಕ್ಕೆ ಆಗುತ್ತಿದ್ದ ಹಾನಿಯ ಬಗ್ಗೆ ಅವಳು ಓದಿದ ಒಂದು ಲೇಖನ ಅವಳಿಗೆ ಬ್ಲಾಗ್ ಸುರುಮಾಡಲು ಪ್ರೇರೆಪಿಸಿತು. ಮಾಜಿನಟಿಯೊಬ್ಬಳು ಬರೆಯತೊಡಗಿದ ಬ್ಲಾಗನ್ನು ಜನ ಸ್ವಾಗತಿಸಿದರು. ಅವಳ ಬ್ಲಾಗುಗಳ ಲೇಖನದ ವಿಸ್ತಾರ ವ್ಯಾಪಿಸತೊಡಗಿತು. ಮಲೆನಾಡಿನ ಸುಂದರ ಪರಿಸರಕ್ಕೆ ಹೊಸದಾಗಿ ಸುರುಆದ ಕಾರ್ಖಾನೆಯಿಂದ ಆದ ಹಾನಿಯ ಬಗ್ಗೆ ಅವಳು ಅಧ್ಯಯನ ಮಾಡಿ ಬರೆದ ಲೇಖನ ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾಯಿತು. + +ಆದರೆ ಆ ಕಾರ್ಖಾನೆಯ ಮಾಲೀಕ ಕಪೂರ ಕುಟುಂಬಕ್ಕೆ ತೀರ ಆತ್ಮೀಯನಾಗಿದ್ದ. ಅನಿಲ ಕಪೂರನಿಗೆ ಒತ್ತಡ ಹೇರಲಾಯಿತು. ತನ್ನ ಹೆಂಡತಿಯ ಕಡೆ ವಿವರಣೆ ಪಡೆಯಲು ಅಂತೆಯೇ ಬರೆದಿದ್ದು ತಪ್ಪು ಮಾಹಿತಿಯಿಂದ ಹುಟ್ಟಿದ್ದು ಅದು ಅಂತ ಸ್ಪಷ್ಟೀಕರಣ ಕೊಡಲು ಒತ್ತಾಯ ಹೇರಬೇಕು ಅಂತ. ಹೆಂಡತಿಯ ಜೊತೆ ವಿಶ್ವಾಸದಿಂದಲೇ ಮಾತಾಡಿದ ಅನಿಲ. ಆದರೆ ರಾಧಾ ಮಣಿಯಲಿಲ್ಲ. ತಾನು ಬರೆದ ಲೇಖನ ಆಧಾರದಿಂದ ಕೂಡಿದೆ, ಸುಕಾಸುಮ್ಮನೇ ಬರೆದದ್ದಲ್ಲ… ಇದು ಅವಳ ವಾದ. ಕೊನೆಗೆ ಅನಿಲಕಪೂರ ತನಗೆ ಬಂದ ಒತ್ತಡದ ಬಗ್ಗೆ ಹೇಳಿಕೊಂಡ. ಬಿನ್ನವಿಸಿಕೊಂಡ. ಆದರೆ ರಾಧಾ ತನ್ನ ತತ್ವಗಳಿಗೆ ಅಂಟಿಕೊಂಡಳು.. ಗಂಡ ಹೆಂಡತಿಯ ನಡುವೆ ವಿರಸ ಟಿಸಿಲೊಡೆಯಲು ಇದು ಕಾರಣವಾಯಿತು. + +ಅದೇ ಸುಮಾರು ಓರ್ವ ತರುಣ ನಿರ್ದೇಶಕ ಒಂದು ಕತೆ ತಗೊಂಡು ಬಂದು ರಾಧಾಳಿಗೆ ಭೇಟಿಯಾದ. ಅವ ಕತೆ ಹೇಳಿದ ಶೈಲಿ ಹಾಗೂ ತಾನು ಮಾಡಲಿರುವ ಪಾತ್ರದ ವ್ಯಾಪ್ತಿ ಅವಳಿಗೆ ಹಿಡಿಸಿತು. ಸಿನೇಮಾಕ್ಕೆ ಅವಳು ಮರು ಪ್ರವೇಶ ಮಾಡಿದಳು. ಈ ವಿಷಯ ಅನಿಲನಿಗೆ ಅಪಥ್ಯವಾತು. ವಾದ ವಿವಾದ ತಾರಕಕ್ಕೇರಿದವು.. ಈ ಎಲ್ಲದರ ಒಟ್ಟು ಪರಿಣಾಮ ಡೈವೋರ್ಸ್ ಒಂದೇ ಅಂತ ಇಬ್ಬರೂ ತೀರ್ಮಾನಿಸಿದರು. ಯಶು ರಾಧಾಳ ಬಳಿಯೇ ಇರಬೇಕು, ಅನಿಲ ಆಗಾಗ ಅವಳಿಗೆ ಹೋಗಿ ಭೇಟಿಯಾಗಬಹುದು ಅಂತ ಕೊರ್ಟ ತೀರ್ಪು ಕೊಟ್ಟಿತು. ಯಶು ಹೆಸರಿನಲ್ಲಿ ಸಾಕಷ್ಟು ದೊಡ್ಡ ಮೊತ್ತ ಬ್ಯಾಂಕಿನಲ್ಲಿ ಅನಿಲ ಇಟ್ಟ. + +ರಾಧಾಳ ಸಿನೇಮಾದ ಮರುಪ್ರವೇಶ ಸುಗಮವಾಗಿತ್ತು. ಜನ ಇನ್ನೂ ತನ್ನ ಮರೆತಿಲ್ಲ, ಇದು ಅವಳಿಗೆ ಸಂತೋಷ ಕೊಟ್ಟ ಸಂಗತಿ. ಈಗ ಕನ್ನಡ ಸಿನೇಮಾದಲ್ಲಿ ಹೊಸನೀರು ಹರದಿತ್ತು. ಹೊಸ ಹೊಸ ನಿರ್ದೇಶಕರು ಹೊಸ ವಿಚಾರಗಳು ಅಂತೆಯೇ ಹೊಸ ಕತೆಗಳು ರಾಧಾ ಖುಶಿಯಾದಳು. ತನ್ನ ವ್ಯಸ್ತ ಜೀವನ ಯಶು ಮೇಲೆ ಪರಿಣಾಮ ಬೀರಬಾರದೆಂದು ಅವಳನ್ನು ಬೋರ್ಡಿಂಗ ಸ್ಕೂಲಿಗೆ ಹಾಕಿದಳು. ದೂರದ ದೆಹರಾಡೂನಗೆ ಕಳಿಸಿಕೊಡುವಾಗ ಅರೆಕ್ಷಣ ಪಿಚ್ಚೆನ್ನಿಸಿತ್ತು… ಆದರೆ ಮರಳಿ ತನ್ನ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ತ್ಯಾಗ ಅನಿವಾರ್ಯ ಅಂತ ಸಮಾಧಾನಪಟ್ಟುಕೊಂಡಳು ರಾಧಾ. + +ಮಾಯಾ ಮಾಮೂಲಿ ಸಂಜೆವೇಳೆ ಬರುತ್ತಿದ್ದಳು. ಅದಾಗಲೇ ಎರಡು ಮೂರು ಚಾನೆಲ್ಲಿನಲ್ಲಿ ಕೆಲಸ ಮಾಡಿದ ಅನುಭವ ಅವಳಿಗೆ. ಆತ್ಮೀಯ ಗೆಳತಿಯಂತಾಗಿದ್ದಳು… ಮಗಳು ಯಶು ಮುಂಬೈಯಲಿ ಕಾಲೇಜ ಓದುತ್ತಿದ್ದಳು. ಇಡೀ ಮನೆಗೆ ಒಂಟಿಯಾದ ರಾಧಾ ಮಾಯಾಳ ಬರುವಿಕೆಗೆ ಕಾಯುತ್ತಿದ್ದಳು. ಆಗೀಗ ಇಬ್ಬರೂ ವೈನ್ ಕುಡಿಯುತ್ತಿದ್ದರು. ಸಹಜವಾಗಿಯೇ ಅವಳು ತಮ್ಮಿಬ್ಬರ ನಡುವೆ ನಡೆಯುವ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತಿದ್ದಳು. ರೆಕಾರ್ಡ್ ಮಾಡಿದ್ದನ್ನು ಮನೆಗೆ ಹೋದ ನಂತರ ಕಾಗದದಲ್ಲಿ ಇಳಿಸುವುದು ಅವಳ ರೂಢಿ. ಅಂದು ಸಹ ಹಾಗೆಯೇ ಆಗಿದ್ದು. + +ಯಶುಳ ಬಗ್ಗೆ ಯಾವಾಗ ಮಾತು ಶುರುವಾತು ಗೊತ್ತಿಲ್ಲ. ತನ್ನ ಹಾಗೂ ಅನಿಲನ ವಿಷಮ ದಾಂಪತ್ಯ , ಬೋರ್ಡಿಂಗ್ ವಾಸದ ಮುಕ್ತತೆ ಅಥವಾ ಒಟ್ಟಾರೆಯಾಗಿ ಬಂದ ಒಳಗಿನ ಒತ್ತಾಸೆ ಹಿಗೆ ಯಶು ಲೆಸ್ಬಿಯನ್ ಆಗಲು ಕಾರಣವೇನು ಇದು ರಾಧಾಳಿಗೂ ಬಿಡಿಸದ ಒಗಟು. ತಾನು ಓದಿದ ಪಾಶ್ಚಾತ್ಯ ಸಾಹಿತ್ಯ ಬದಲಾದ ಭಾರತದ ಮುಕ್ತತೆ ಈ ಎಲ್ಲ ಯಶು ಮಾಡುವುದರಲ್ಲಿ ಅಂತಹ ಗಂಭೀರ ತಪ್ಪು ಇಲ್ಲ ಅಂತ ನಂಬಿಕೆ ಹುಟ್ಟಿಸಿದ್ದವು. ವಿಚಾರ ಮಾಡಿದಾಗ ಹೌದೆಂದು ಮನವರಿಕೆಯಾಗಿತ್ತು. ವ್ಯಕ್ತಿ ವ್ಯಕ್ತಿಯ ಸ್ವಭಾವ ಬೇರೆಬೇರೆ ಆಗಿರುತ್ತದೆ. ಅವರಿಗೆ ಅವರದೇ ಆದ ನಿಲುವುಗಳಿರುತ್ತವೆ. ಬಹುಶಃ ತನ್ನ ಕಾಲದಲ್ಲಿದ್ದ ಕಟ್ಟುಪಾಡುಗಳು ಸಂಕೋಲೆಗಳು ಈಗ ಇಲ್ಲ. ಬದಲಾದ ಸ್ಥಿತಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. + +ಓದಿನ ಕೊನೆಯ ವರ್ಷದಲ್ಲಿದ್ದ ಯಶು ಮನೆಗೆ ಬಂದಿದ್ದಳು. ಅದಾಗಲೆ ಮುಂಬೈಯ ಒಂದು ಕಂಪನಿಯ ಆಫರ್ ಸಿಕ್ಕಿತ್ತು ಅವಳಿಗೆ. ಒಬ್ಬಳೇ ಬಂದಿರಲಿಲ್ಲ. ಜೊತೆಗೆ ಜಾಹ್ನವಿ ಎಂಬ ಹುಡುಗಿ ಬಂದಿದ್ದಳು. ತನ್ನ ಪಾರ್ಟನರ್ ಅಂತ ಮಗಳು ಪರಿಚಯಿಸಿದ್ದಳು. ಬಂದ ದಿನವೇ ಇಬ್ಬರ ಒಡನಾಟ ಸಹಜ ಇಲ್ಲ ಅನಿಸಿತ್ತು. ರಾತ್ರಿ ಇಬ್ಬರೂ ಒಂದೇ ರೂಮಿನಲ್ಲಿ ಮಲಗಿದಾಗ ಅಂತೆಯೇ ಅಂಟಿಕೊಂಡೇ ಸದಾ ಇರುವವರ ನೋಡಿ ಯಶುಗೆ ಕೇಳಿಯೇ ಬಿಟ್ಟಳು. ಬಂದ ಉತ್ತರ ಸಂಶಯ ಬಲಪಡಿಸಿತ್ತು. + +“ಯಸ್ ಮಮ್ಮಾ, ಜಾಹ್ನವಿ ಜೊತೆ ನನಗೆ ರಿಲೇಶನಶಿಪ್ ಇದೆ. ನಿನಗೆ ಇದು ಸೇರದಿರಬಹುದು. ಆದರೆ ನಾನು ಇದನ್ನು ಆಯ್ದುಕೊಂಡಿದ್ದಲ್ಲ. ಅವಳು ನಾನು ಬೋರ್ಡಿಂಗನಲ್ಲಿದ್ದಾಗಿನಿಂದಲೂ ರೂಮ್ ಶೇರ್ ಮಾಡುತ್ತಿದ್ದೆವು.. ಇಂಟಿಮಸಿ ಬೆಳೀತು. ಹೀಗೆ ಸಂಬಂಧದಲ್ಲಿ ಅದು ಮುಗಿದಿದೆ…” ಯಶು ಎದುರು ಕೂತು ಹೇಳುವಾಗ ಜಾಹ್ನವಿಯೂ ಜೊತೆಗಿದ್ದಳು. + +“ಬೇಟಾ ಏನು ಹೇಳಬೇಕು ತಿಳೀತಿಲ್ಲ. ನೀನು ಹುಡುಗನ ಜೊತೆ ಗೆಳೆತನ ಬೆಳೆಸಿದ್ದು ಆದರೆ ನಾರ್ಮಲ್ ಅನಿಸುತ್ತಿತ್ತೇನೋ…” ಅಳೆದು ತೂಗಿ ಅಳುಕಿನಿಂದಲೇ ರಾಧಾ ಅಂದಿದ್ದಳು. + +“ಯಸ್ ಮಮ್ಮ. ಇದು ಎಕ್ಸಪೆಕ್ಟ್ ಮಾಡಿದ್ದೆ… ಏನು ಓದಿದರೇನು? ಅಭಿನೇತ್ರಿಯಾದರೇನು? ನೀನೂ ಸಹ ತಾಯಿಯೇ… ನಿನಗೆ ನೋವಾಗಿರುವುದು ಸಹಜವೇ. ಆದರೆ ನಾನು ಕಮಿಟ್ ಆಗಿರುವೆ. ಯು ನೋ ಜಾಹ್ನವಿಯ ಗೆಳೆತನ, ಆತ್ಮೀಯತೆ ಎಲ್ಲೂ ಸಿಕ್ಕಿಲ್ಲ. ಶಿ ಈಸ್ ಲೈಕ ಎ ಬೂನ್. ವರದಾನ ಅವಳು. ಅವಳಿಲ್ಲದಿದ್ದರೆ ನಾನೇನಾಗುತ್ತಿದ್ದೇನೋ ಗೊತ್ತಿಲ್ಲ.” + +ಪಕ್ಕದಲ್ಲಿ ಕೂತ ಜಾಹ್ನವಿಯ ಅಪ್ಪಿಕೊಳ್ಳುತ್ತ ಮಗಳು ನುಡಿದಾಗ ತಟಕ್ಕನೇ ರಾಧಾಳಲ್ಲಿ, ಮಗಳು ಹೀಗೆ ಲೆಸ್ಬಿಯನ್ ಆಗಿ ಪರಿವರ್ತನೆ ಆಗಿದ್ದರಲ್ಲಿ ನನ್ನ ಪಾತ್ರ ಇದೆ ಅನ್ನುವ ಅಪರಾಧಿಭಾಬವ ಜಾಗೃತವಾಯಿತು. ಅದಾವುದೋ ನಿಲುವು ತತ್ವಕ್ಕೆ ಗಂಡನಿಗೆ ಎದುರಾಗಿ ಅವನಿಂದ ಬೇರೆಯಾಗಿರದಿದ್ದರೆ ಯಶು ಬೋರ್ಡಿಂಗಿಗೆ ಹೋಗುವ ಪ್ರಮೇಯ ಬರುತ್ತಿತ್ತೋ ಇಲ್ಲವೋ. ಹಾಗಾದರೆ ನಾ ತಪ್ಪು ಮಾಡಿದೆನೇ? ಅವ ಬೇಡ ಅಂದ, ಆದರೂ ಮತ್ತೆ ಮಿಂಚಬೇಕು, ಮೆರೆಯಬೇಕು, ಅಂತ ಮರಳಿ ಮೇಕಪ್ ಮಾಡಿಕೊಂಡು ಸಿನೆಮಾಕ್ಕೆ ಮರುಪ್ರವೇಶ ಮಾಡಬಾರದಾಗಿತ್ತೇನೋ… ಈ ದ್ವಂದ್ವ ಕಾಡಿತ್ತು. ಇದೇ ಭಾವ ಬಲವಾಗಿ ಏನೂ ಮಾತಾಡಲಿಲ್ಲ. ರಾತ್ರಿಯಿಡೀ ನಿದ್ದೆ ಸಹ ಬರಲಿಲ್ಲ. ಮರುದಿನ ಎದ್ದಾಗ ಭಾವ ತಿಳಿಯಾಗಿತ್ತು. ನನ್ನನ್ನು ನಾನು ಹಳಿದುಕೊಂಡರೇನೂ ಆಗದು. ಓಕೆ ಮಗಳ ಸೆಕ್ಷುವಲ್ ಓರಿಯಂಟೇಶನ್ ಬೇರೆ ಇದೆ, ಅದು ಅವಳ ಆಯ್ಕೆ ಕೂಡ. ನಾ ವಿರೋಧಿಸಿದರೆ ಅದು ಬದಲಾಗದು. ಇದು ಮನಸ್ಸಿಗೆ ಬಂದಿದ್ದು. ಯಶುಗೆ ಹೇಳಿದಾಗ ಅಮ್ಮನನ್ನು ಅಪ್ಪಿಕೊಂಡಿದ್ದಳು. ಜಾಹ್ನವಿಯ ಕಡೆ ತಿರುಗಿ ಬೀಗಿದಳು. + +“ನಾ ಹೇಳಿರಲಿಲ್ಲವೇ.. ಮಮ್ಮಾ ವಿಲ್ ಅಂತ. ಐ ಲವ್ ಯೂ ಮಮ್ಮಾ…” ಕಣ್ಣೀರು ಸುರಿಸಿದಳು. + +******** + +ಅಂದು ರಾಧಾ ಅನುಭವಿಸಿದ ಭಾವೋದ್ವೇಗ ಅದರ ತೀವ್ರತೆ ಶಬ್ದರೂಪದಲ್ಲಿ ಮಾಲಿನಿಗೆ ಹೇಳಿದಾಗ ಅವಳ ಕಣ್ಣೂ ಮಿನುಗುತ್ತಿದ್ದವು. + +“ಇಟ್ ಈಸ್ ರೇರ್ ಟು ಕಮ್ ಎಕ್ರಾಸ್ ಅ ಮಾಮ್ಸ ಲೈಕ್ ಯು. ಅದರಲ್ಲೂ ನೀವು ಹಿಂದೆ ಮಾಡುತ್ತಿದ್ದ ಆ ತ್ಯಾಗಮಯಿ ಹೆಂಗಸಿನ ಪಾತ್ರಗಳ ನಿಲುವಿಗೆ ತೀರ ವ್ಯತಿರಿಕ್ತವಾಗಿ ನಿಜಜೀವನ ಇದೆ ನಿಮ್ಮದು. ಲೈಕ್ ಇಟ್..” ಅವಳು ಹೇಳಿದಾಗ ಉಬ್ಬಿ ಹೋಗಿದ್ದಳು. ಲಿಬರಲ್ ಮೈಂಡೆಡ್ ಅಂತ ಹೇಳಿದಳು, ಗರ್ವ ಬರುವಂತೆ ನಡೆದುಕೊಂಡಳು. ಬಹುಷಃ ರಾಧಾಳಿಗೂ ಈ ಹೊಗಳಿಕೆಯ ರೂಢಿ ತಪ್ಪಿಹೋಗಿತ್ತೇನೋ.. ಅಪ್ಪಿಕೊಂಡಿದ್ದಳು ಮಾಯಾಳಿಗೆ. ಆದರೆ ಮರುದಿನ ಬಂದ ಫೋನ್ ಎಲ್ಲ ಉಲ್ಟಾ ಮಾಡಿತ್ತು. ಸಕ್ಕರೆ ಬೆರೆತ ದನಿ ನಾಯರ್ ದು. ಆದರೆ ಹೇಳಿದ ಸಂಗತಿ ವಿಷದ್ದು. ದುಡ್ಡು ಕೊಡದಿದ್ದರೆ ಮಾಯಾ ಮಾಡಿಕೊಂಡ ಸಂಭಾಷಣೆಯ ಆಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದ. ಮಾಯಾಳನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಳು ರಾಧಾ. ಅವಳು ಫೋನ್ ತೆಗೆಯಲೇ ಇಲ್ಲ. ವಿಷಯ ನಾ ಹಬ್ಬಿಸಬೇಕಾಗಿರಲಿಲ್ಲ. + +ಅಸಲು ಆ ನಾಯರ್ ವಿರೋಧಪಕ್ಷದವ. ದುಡ್ಡು ಕೊಟ್ಟಿದ್ದರೂ ಅವ ಲೀಕ್ ಮಾಡುತ್ತಿದ್ದ ಆಡಿಯೋ. ಬಲೆಯಲ್ಲಿ ಸಿಕ್ಕಿಹಾಕಿಕೊಂಡಂತಹ ಅನುಭವ. ಅತ್ಯಂತ ಖಾಸಗಿ ಹಾಗೂ ಆತ್ಮೀಯತೆಯ ಒಂದು ಸಂಭಾಷಣೆ ಹೀಗೆ ರೂಪಾಂತರ ಹೊಂದಬಹುದು, ಇದು ರಾಧಾಳಿಗೆ ಅಪಥ್ಯದ ಸಂಗತಿಯಾಗಿತ್ತು. ನನ್ನನ್ನು ಪೂರ್ತಿ ಬಳಸಿಕೊಳ್ಳಲಾಗಿದೆ ಈ ಮೂಲಕ ವಿರೋಧಪಕ್ಷದವರು ನನ್ನ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನನ್ನ ಮೇಲೆ ದ್ವೇಷ ಇರಬೇಕಾದದ್ದೇ, ಉತ್ತರ ಕರ್ನಾಟಕದಲ್ಲಿ ನಾನು ನಿರಂತರವಾಗಿ ಸಂಚಾರ ಮಾಡಿದೆ, ಭಾಷಣ ಮಾಡಿದೆ, ಮನೆಮನೆಗೆ ಹೋದೆ, ಹಲವು ಮನೆಯವರು ಉಡಿ, ಖಣ ತುಂಬಿ ಗೌರವಿಸಿದರು. ಇದೆಲ್ಲ ನಿರ್ಣಾಯಕ ವೋಟುಗಳು ಪಕ್ಷಕ್ಕೆ ಬಂದಿದ್ದು ರಾಧಾ ಹಾಗೂ ಪಾಟೀಲರ ನಿರಂತರ ಓಡಾಟದಿಂದ ಅಂತೆಲ್ಲ ಫಲಿತಾಂಶ ಬಂದ ನಂತರ ರಾಜಕೀಯ ಪಂಡಿತರು ವಿಶ್ಲೇಷಿಸಿದ ರೀತಿ. ಈಗ ರಾಧಾ ಆಡಿದ ನಿಜವಾದ ಮಾತೇ ಅವಳ ವಿರುದ್ಧವಾಗಿದೆ. ಅದನ್ನೇ ಒಂದು ಆಯುಧವಾಗಿ ಅವರು ಬಳಸಿಕೊಳ್ಳುತ್ತಿದ್ದಾರೆ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಪಾಟೀಲ ಹೋದ ನಂತರ ರಾಧಾ ಟಿವಿ ಹಚ್ಚಿದಳು. ಎಲ್ಲಾ ಚಾನೆಲ್ಲಿನಲ್ಲೂ ಒಂದೇ ಸುದ್ದಿ. ಇವಳು ಅಭಿನಯಿಸಿದ ಹಳೆಯ ಚಿತ್ರಗಳ ತುಣುಕು, ಅದರಲ್ಲಿ ಭಾರತೀಯ ನಾರಿಯ ಪ್ರತಿರೂಪದಂತಿರುವ ರಾಧಾ ಪಾತ್ರವಾಗಿ ಆಡಿದ ಮಾತುಗಳು, ಜೊತೆಗೆ ಆಯ್ದ ಮಂದಿಯ ಬಿಸಿಬಿಸಿ ಚರ್ಚೆ. ಅದರಲ್ಲಿ ಭಾಗವಹಿಸಿದವರೆಲ್ಲರದೂ ಒಂದೇ ದನಿ… ಇಂತಹ ಮನೋಧೋರಣೆ ಇರುವ ಹೆಂಗಸು ನಮ್ಮ ರಾಜ್ಯಕ್ಕೆ ಮಂತ್ರಿಯಾಗಬಾರದು ಅಂತ.ಆಶ್ಚರ್ಯವೆಂದರೆ ಅನೇಕರು ಇವಳ ಜೊತೆ ಕೆಲಸ ಮಾಡಿದವರೇ. ಒಂದಾನೊಂದು ಕಾಲದಲ್ಲಿ ಇವಳಿಂದ ಆರ್ಥಿಕ ಸಹಾಯ ಪಡೆದವರೇ. ಈಗ ಇವಳ ವಿರುದ್ಧ ಮಾತನಾಡುತ್ತಿದ್ದಾರೆ. + +ಜನ ಬದಲಾಗಿದ್ದಾರೆ. ಇದು ಅಪ್ರಿಯ ಸತ್ಯ. ತನ್ನ ಹಾಗೂ ಕಿಟ್ಟಣ್ಣನ ನಡುವೆ ನಡೆದ ಸಂಗತಿಗಳಿಗೆ ಬಣ್ಣ ಹಚ್ಚಿ ಮಾತಾಡಿದ್ದು ವಿಚಿತ್ರ ಅನಿಸಿತು. ಒಂದು ಖಾಸಗಿ ಸಂಗತಿ ಹೀಗೆ ಜನರ ಬಾಯಲ್ಲಿ ರೂಪ ಪಡೆಯುವ ಪರಿ ರೇಜಿಗೆ ತರುತ್ತಿತ್ತು. ಇವಳ ಜೊತೆ ಪಾತ್ರ ಮಾಡುತ್ತಿದ್ದ ಸಹನಟಿ ಮುಖ್ಯ ಅಂದರೆ ಸಂಸ್ಕಾರ ಮುಖ್ಯ ಅದು ತಂದೆ ತಾಯಿಯಿಂದನೇ ಬರಬೇಕು ಅಂತ ಒತ್ತಿ ಒತ್ತಿ ಹೇಳುತ್ತಿದ್ದಳು. ಬೇಸರ ಅನಿಸಿತು ಟಿ ವಿ ಆಫ್ ಮಾಡಿದಳು. ಹೊರಗಡೆ ಗೇಟ್ ಮುಂದೆ ಇನ್ನೂ ಚಾನೆಲ್ಲಿನವರು ಕೆಮರಾ ಹಿಡಿದುಕೊಂಡು ನಿಂತಿದ್ದರು. ಸೆಕ್ಯುರಿಟಿಯವ ಹೆಣಗಾಡುವುದು ನಡೆದೇ ಇತ್ತು. + +******** + +ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು. ಮತ್ತು ಅಲ್ಲಿಯ ಸಹವಾಸದಿಂದ ಲೆಸ್ಬಿಯನ್ ಆಗಬೇಕಾತು, ಇದು ಅವನ ವಾದ. ಅವನ ಮಾತು ತೀರ ಖಾರವಾಗಿದ್ದವು. ಅರಗಿಸಿಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಮಾತು ಕೇಳಿದಾಗ ಇಂತಹ ಮನುಷ್ಯನ ಜೊತೆ ಬಾಳುವೆ ಮಾಡಿದ್ದೆನೇಯೇ ಅಂತ ಪಿಚ್ಚೆನ್ನಿಸಿದ್ದು ಸುಳ್ಳಲ್ಲ. ಹೆಚ್ಚಿಗೆ ಮಾತಾಡದೆ ಫೋನ್ ಕಟ್ ಮಾಡಿ ಮುಖ್ಯಮಂತ್ರಿ ಕರೆದಿರುವ ಮೀಟಿಂಗಿಗೆ ಹೋಗಲು ಅನುವಾದಳು. + +******** + +ಮೀಡಿಯಾದವರನ್ನು ತಪ್ಪಿಸಿ ಕಾರು ಹತ್ತಿ ಗೃಹಕಚೇರಿಗೆ ಬರುವಾಗ ಸಾಕಾಯಿತು ರಾಧಾಳಿಗೆ. ಇವಳ ಹಿಂದೆಯೇ ಕಾರಿನಿಂದಿಳಿದ ಪಾಟೀಲನನ್ನು ನೋಡಿ ಖುಶಿಯಾಯಿತು. ನಿಯೋಜಿತ ಮುಖ್ಯಮಂತ್ರಿಗಳು ಇವರದೇ ದಾರಿ ಕಾಯುತ್ತಿದ್ದರು. ಸುಕೇಶಜಿ, ಸಂಸ್ಥಾದ ರಾಜ್ಯ ಪ್ರಮುಖರು ಇದ್ದರು. ಮುಖ್ಯಮಂತ್ರಿಗಳು ಸನ್ನೆ ಮಾಡಿದಾಗ ತಿಂಡಿ ಕಾಫಿ ಸರಬರಾಜಾಯಿತು. ಪರಿಚಾರಕರು ಹೊರಗಡೆ ಹೋಗುವವರೆಗೂ ಯಾರೂ ಮಾತನಾಡಲಿಲ್ಲ. ಮುಖ್ಯಮಂತ್ರಿಗಳೇ ಮಾತಿಗೆ ಸುರುವಿಟ್ಟರು. + +“ಮೇಡಂ ನಿಮ್ಮ ಉಪಕಾರ ಪಾರ್ಟಿಮೇಲೆ ಬಹಳವಿದೆ. ಉತ್ತರಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ಸ್ಕೋಪೇ ಇರಲಿಲ್ಲ ಇಷ್ಟುದಿನ. ನಿಮ್ಮ ಹಾಗೂ ಪಾಟೀಲನ ಹೋರಾಟದಿಂದ ಸೀಟು ಬಂದವು. ನಾವು ಯಾವುದೇ ಬೆಂಬಲವಿಲ್ಲದೆ ಸರಕಾರ ರಚಿಸುವಷ್ಟು. ಮೊದಲಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಪಾರ್ಟಿಯ ಸರಕಾರ ಇರಲಿದೆ. ರಾಜ್ಯದ ಜನರ ನಿರೀಕ್ಷೆ ಬಹಳ ಇವೆ. ಈ ಖುಶಿಯಲ್ಲಿ ನೀವು ಆ ರಿಪೋರ್ಟರ್ ಜೊತೆ ಮಾತಾಡಿದ್ದು ಮೈನರ್ ಹಿಕಪ್ ಆದಹಾಗಿದೆ. ವಿರೋಧಪಕ್ಷದವರ ನಾಲಿಗೆಗೆ ಜೀವ ಬಂದಿದೆ..” ಮುಖ್ಯಮಂತ್ರಿಗಳ ದನಿಯಲ್ಲಿ ಖಚಿತತೆ ಇತ್ತು. “ಸುಕೇಶಜಿ ನಾನು ಹಾಗೂ ನಮ್ಮ ಪಕ್ಷದ ಮುಖಂಡರು ವಿವರವಾಗಿ ಚರ್ಚಿಸಿದೆವು. ಸುಕೇಶಜಿ ನಿಮಗೆ ಪ್ಲಾನ್ ಏನು ಅಂತ ತಿಳಸತಾರೆ…” + +ರಾಧಾ ಸುಕೇಶಜಿಯೆಡೆಗೆ ಹೊರಳಿದಳು. ಕಟ್ಟಾ ಮನುಷ್ಯ ಪಾಟೀಲ ಹೇಳಿದ ಹಾಗೆ ಯಶುಳ ಈ ನಿಲುವು ಅವನಿಗೆ ಸಮ್ಮತವಲ್ಲ. + +“ನೋಡಿಮಾ ಇದು ಪಕ್ಷದ ಮರ್ಯಾದೆಯ ಪ್ರಶ್ನೆ. ನಿಮ್ಮ ಮಗಳು ಅವಳ ಆಯ್ಕೆ ಅವಳ ಜೀವನ ಶೈಲಿ ಬಿಡಿಸಿಹೇಳುವುದಾದರೆ ಅವಳ ಲೈಂಗಿಕ ಜೀವನದ ಬಗ್ಗೆ ನಮಗೇನೂ ಆಸಕ್ತಿಯಿಲ್ಲ. ಆದರೆ ನೀವು ಅವಳ ತಾಯಿ ಆಗಿದ್ದು ಸುಮ್ಮನಿದ್ದೀರಿ ಅಂದರೆ ಅವಳ ಕೃತ್ಯಕ್ಕೆ ಬೆಂಬಲ ಕೊಟ್ಟಂತೆಯೇ ಅಂತ ಪಾರ್ಟಿ ಭಾವಿಸಿದೆ. ಮೇಲಾಗಿ ನೀವು ಅದಾವುದೋ ಗುಂಗಿನಲ್ಲಿ ಆ ರಿಪೋರ್ಟರ್ ಮುಂದೆ ಎಲ್ಲ ಹೇಳಿ ಇನ್ನೂ ಹೆಚ್ಚಿನ ಗೊಂದಲ ಮಾಡಿದಿರಿ.. ಇರಲಿ ಈಗ ಆಗಿದ್ದು ಆಗಿ ಹೋಗಿದೆ. ಒಂಥರಾ ಡ್ಯಾಮೇಜ ಕಂಟ್ರೋಲ್ ಕ್ರಮ ಇದು. ನಾವು ಆ ಚಾನೆಲ್ಲಿಗೆ ಪ್ರತಿಯಾಗಿ ಬೇರೆ ಚಾನೆಲ್ಲಿನಲ್ಲಿ ನಿಮ್ಮ ಮುಲಾಕಾತ್ ಇಡತೇವಿ. ನೀವು ಅಲ್ಲಿ ಹೇಳಿಕೊಟ್ಟಿದ್ದನ್ನು ಹೇಳಿದರಾತು.” + +“ಅಂದರೆ ನಾ ಏನು ಹೇಳಬೇಕು….” ರಾಧಾಳ ದನಿ ಅಲ್ಪಸ್ವಲ್ಪ ವ್ಯಗ್ರವಾಗಿತ್ತು. + +“ನೋಡಿಮಾ… ಪಾರ್ಟಿಗೆ ನಿಮ್ಮ ಯೋಗದಾನದ ಅರಿವಿದೆ.. ಹಾಗಂತ ಎಲ್ಲ ಸಹಿಸಲಾಗುವುದಿಲ್ಲ. ನಿಮ್ಮದು ಹಾಗೂ ನಿಮ್ಮ ಮಗಳದು ವೈಯುಕ್ತಿಕ ಜೀವನ ಇರಬಹುದು. ಆದರೆ ನೀವು ಪಾರ್ಟಿ ಸದಸ್ಯೆ, ನಾಳೆ ಮಂತ್ರಿಯಾಗೋರು. ನಾವು ಹೇಳೋದು ಇಷ್ಟೇ. ನೀವು ನಾವು ನಿಗದಿಪಡಿಸಿದ ಚಾನೆಲ್ಲಿಗೆ ಒಂದು ಇಂಟರ್ವ್ಯೂ ಕೊಡಿ. ನಾನು ಆ ಮಾಯಾ ಜೊತೆ ಹೇಳಿದ್ದೆಲ್ಲ ಸುಳ್ಳು ಅದು ನಿಜವಲ್ಲ ಅಂತ. ಆಡಿಯೋ ಅವರ ಬಳಿ ಇದೆ, ನಮಗೂ ಅರಿವಿದೆ. ಇಷ್ಟಾಗಿಯೂ ಅವರು ಒತ್ತಾಯಿಸಿದರೆ ತನಿಖೆಗೆ ಕಳಿಸುವ, ತನಿಖೆಯಲ್ಲಿ ಏನು ಅಡ್ಜಸ್ಟ್ ಮಾಡಬೇಕು ಅದೆಲ್ಲಮಾಡುವ, ವಿರೋಧ ಪಕ್ಷದವರ ಹಗರಣದ ಫೈಲು ಈಗ ನಮ್ಮ ಬಳಿ ಇವೆ. ಅದು ಅವರು ಮರೆಯುವಂತಿಲ್ಲ. ಡ್ಯಾಮೇಜ್ ಕಂಟ್ರೋಲಿಗೆ ನೀವು ನಾವು ಹೇಳಿದ ಹಾಗೆ ಮಾಡಿ ಸಾಕು. ಪಾಟೀಲರು ನಿಮಗೆ ಇಂಟರ್ವ್ಯೂ ದಿನಾಂಕ ಹೇಳತಾರೆ” ಅನಿಸಿದ್ದನ್ನು ನೇರವಾಗಿ ತಡೆಯಿಲ್ಲದೆ ಹೇಳಿದ ಸುಕೇಶಜಿ ಜ್ಯೂಸಿನ ಗ್ಲಾಸು ಎತ್ತಿಕೊಂಡರು. + +“ಆದರೆ ನೀವು ಹೇಳಿದ ಉಪಾಯಗಳು ವಸ್ತುಸ್ಥಿತಿಯನ್ನು ಮರೆಮಾಚುವುದಿಲ್ಲ ಅಲ್ಲವೇ. ನನ್ನ ಮಗಳ ವೈಯಕ್ತಿಕ ಜೀವನ ಅವಳ ಒಂದು ತುಡಿತ ಅದು ನಿಮ್ಮ ದೃಷ್ಟಿಯಲ್ಲಿ ತಪ್ಪಾಗಿರಬಹುದು. ಬಟ್ ಅದು ವಾಸ್ತವ ಅಲ್ಲವೇ? ನನ್ನನ್ನು ಒಪ್ಪಿಕೋತೀರಿ ನೀವು ಆದರೆ ನನ್ನ ಹುಳುಕು, ಅದೂ ಕೇವಲ ನಿಮ್ಮ ದೃಷ್ಟಿಕೋನದಲ್ಲಿ, ಒಪ್ಪಿಕೊಳ್ಳಲು ತಯಾರಿಲ್ಲ ಅಲ್ವೇ…” ಅವಳ ಮಾತಿಗೆ ಸುಕೇಶಜಿ ಮುಖ ಕೆಂಪಾಯಿತು, ಮುಖ್ಯಮಂತ್ರಿಕಡೆ ನೋಡಿದರು. + +“ಅದು ಹಾಗಲ್ಲ ಮೇಡಂ. ನಿಮ್ಮ ಪ್ರಚಾರ, ಹೆಸರು ನಾವು ಬಳಸಿದೆವು ನಿಜ.. ಜನ ನಿಮ್ಮನ್ನು ಭಾರತೀಯ ನಾರಿಯ ಉದಾಹರಣೆಯಾಗಿ ನೋಡುತ್ತಾರೆ. ಅವರ ಭಾವನೆಗಳಿಗೆ ನೋವಾಗಿದೆ. ನಿಜ, ಪಾರ್ಟಿ ನಿಮ್ಮನ್ನ ಮಿನಿಸ್ಟರ್ ಮಾಡಲಿದೆ, ಇದು ಬಹುಮಾನವೇ ತಾನೇ? ಹಾಗಂತ ಎಲ್ಲವನ್ನೂ ಒಪ್ಪಿಕೊಳ್ಳೋದು ಪಾರ್ಟಿಯ ನಿಲುವಿಗೆ ತಾಳೆಯಾಗುವುದಿಲ್ಲ. ಹಾಗೆ ನೋಡಿದರೆ ದೆಹಲಿಯ ಅನೇಕ ಹಿರಿಯರಿಗೂ ನಿಮ್ಮ ಇಂಟರವ್ಯೂ ವಿಷಯ ತಿಳಿದಿದೆ. ಅನೇಕರು ಆಕ್ಷೇಪ ಮಾಡಿದ್ದಾರೆ…” ನಿಯೋಜಿತ ಮುಖ್ಯಮಂತ್ರಿ ಅದೇನೋ ಉಪಕಾರ ಮಾಡಿದವರಂತೆ ಮಾತನಾಡುತ್ತಿದ್ದಾನೆ ಅನಿಸಿತು ರಾಧಾಳಿಗೆ. ಅವರು ಈಗಾಗಲೇ ನಿರ್ಧಾರ ಮಾಡಿರುವ ಹಾಗಿದೆ. ಹೆಚ್ಚಿನ ವಾದ ಮಾಡಿ ಉಪಯೋಗವಿಲ್ಲ ಅನಿಸಿತು. + +“ನನಗೆ ನಾಳೆಯವರೆಗೆ ಯೋಚಿಸಲು ಟೈಮ್ ಕೊಡಿ…” ಉತ್ತರಕ್ಕೂ ಕಾಯದೇ ಅವಳು ಎದ್ದು ನಿಂತಳು. + +******** + +ಪಾಟೀಲನಿಗೆ ಫೋನು ಬಂದಾಗ ಎದ್ದೆನೋ ಬಿದ್ದೆನೋ ಅಂತ ಜೋರಾಗಿ ಕಾರು ಓಡಿಸಿಕೊಂಡು ಬಂದು ಹೋಟೆಲ್ ತಲುಪಿದ. ಅಲ್ಲಿಯ ಬಾಂಕ್ವೆಟ್ ಹಾಲಿನ ದಾರಿ ಕೇಳಿ ತಿಳಿದು ಹೋದವನಿಗೆ ನಿರಾಳವಾತು. ಪ್ರೆಸ್ ಮೀಟ್ ಇನ್ನೂ ಶುರುವಾಗಿರಲಿಲ್ಲ. ಬಿಳಿಸೀರೆ, ರವಿಕೆ ಧರಿಸಿದ ರಾಧಾಳನ್ನು ಒತ್ತಾಯದಿಂದ ಪಕ್ಕಕ್ಕೆ ಕರೆದುಕೊಂಡು ಹೋದ. + +“ಏನ ಮಾರಾಯ್ತಿ, ಮತ್ತೇನಿದು ಹೊಸಾ ಕತಿ ನಿಂದು. ಅಲ್ಲ ಸಿಎಂ ಸಾಹೇಬರು ಫೋನ್ ಮಾಡಿದರು ಹೋಗಿ ನಿಲ್ಲಿಸು ಅಂತ…” ಅವನ ಮಾತು ಅರ್ಧಕ್ಕೆ ನಿಲ್ಲಿಸುತ್ತ ರಾಧಾ ಮುಗುಳ್ನಕ್ಕಳು. + +“ಗಾಬರಿಯಾಗಬೇಡ. ನಿಮ್ಮ ಪಾರ್ಟಿಗೂ ಸಿಎಂ ಸಾಹೇಬರಿಗೂ ಏನೂ ತೊಂದರೆಯಾಗಲಾರದು. ಆದ್ದರಿಂದ ರಿಲ್ಯಾಕ್ಸ್…” ಅದಾರೋ ಬಂದು ಹೊತ್ತಾಗುತ್ತಿರುವುದಾಗಿ ಹೇಳಿದ. ರಾಧಾಳ ಬೆನ್ನು ಹತ್ತಿದವನಿಗೆ ಅಚ್ಚರಿ ಕಾದಿತ್ತು. ನಾಡಿನ ಪತ್ರಿಕೆಗಳ ವರದಿಗಾರರು, ನ್ಯೂಸ್ ಚಾನೆಲ್ಲಿನವರು ಬಂದಿದ್ದರು. ಶಾರ್ಟ್ ನೋಟಿಸ್ ಇದ್ದರೂ ಹಾಲ್ ತುಂಬಿಹೋಗಿತ್ತು. ಯಾರ ಪ್ರಶ್ನೆಗೂ ತಾನು ಉತ್ತರಿಸುವುದಿಲ್ಲ. ನನಗೆ ಹೇಳಬೇಕಾಗಿದ್ದನ್ನು ಓದಿ ಹೇಳಲಿರುವೆ. ಸ್ಟೇಟ್ಮೆಂಟ್ ಪ್ರತಿ ಎಲ್ಲರಿಗೂ ಸಿಗಲಿದೆ ಅಂತ ರಾಧಾ ಮೊದಲೇ ಸಾರಿದಳು. ಪಾಟೀಲ ಅವಳ ಪಕ್ಕಕ್ಕಿದ್ದ ಖಾಲಿ ಕುರ್ಚಿಯ ಮೇಲೆ ಕುಳಿತ. + +ಎಲ್ಲ ಮುಗಿದು ಹೋಗಿತ್ತು. ರಾಧಾ ಎದ್ದು ಯಾವಾಗಲೋ ಹೋಗಿದ್ದಳು. ಪಾಟೀಲ ಕುಳಿತೇ ಇದ್ದ. ಅವ ಶಾಕ್ ಗೆ ಒಳಗಾಗಿದ್ದ. ಪರಿಚಯದ ಪತ್ರಕರ್ತರು ಅವನಿಗೆ ಮುತ್ತಿಕೊಂಡರು. ರಾಧಾಳ ಸ್ಟೇಟ್ಮೆಂಟ್ ಬಗ್ಗೆ ಅವನ ಅಭಿಪ್ರಾಯ ತಿಳಿಯುವುದಿತ್ತು ಅವರಿಗೆ. ಅವರಿಂದ ಬಿಡಿಸಿಕೊಂಡು ಹೊರಬಂದವನ ಫೋನ್ ರಿಂಗಣಿಸಿತು. ಸುಕೇಶಜಿ ಅದೇನೋ ಬೈಯುತ್ತಿದ್ದರು ರಾಧಾಳಿಗೆ. ಇವ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕಾರ್ ಪಾರ್ಕಿಂಗ್ ಹತ್ತಿರ ಅದಾರೋ ಒಬ್ಬ ಫೋನ್ ಮೂಲಕ ಸಭೆಯಲ್ಲಿ ನಡೆದ ಸಂಗತಿಗಳ ವಿವರಗಳನ್ನು ತನ್ನ ಕಚೇರಿಗೆ ಹೇಳುತ್ತಿದ್ದ. + +“ತೀರಾ ಓಪನ್ ಆಗಿ ರಾಧಾ ಹೇಳಿದರು. ಅವರು ತಮ್ಮ ಮಗಳು ಸಲಿಂಗಿಯಾಗಿದ್ದು, ಅವಳ ವೈಯುಕ್ತಿಕ ಸಂಗತಿ. ಆ ಕಾರಣಕ್ಕೆ ಮುಜುಗುರ ಆದರೆ ಅಂತಹ ಪಕ್ಷ ಕೊಡುವ ಅಧಿಕಾರ ಬೇಡ ಅಂತ ಹೇಳಿದರು. ನಾನು ನನ್ನ ಮಗಳ ಪರ ಅಂತ ಸಾರಿದರು. ಅವಳ ಆಯ್ಕೆ ಅದು. ಸರಿನೋ ತಪ್ಪೋ ಪಾಪವೋ ಪುಣ್ಯವೋ ಗೊತ್ತಿಲ್ಲ. ಆದರೆ ಅದನ್ನು ಗೌರವಿಸುತ್ತೇನೆ ಅಂತ ಹೇಳಿದರು. ಅಧಿಕಾರಕ್ಕಾಗಿ ಏನೆಲ್ಲ ಮಾಡುವ ರಾಜಕಾರಣಿಗಳ ನಡುವೆ ರಾಧಾ ತಳೆದ ನಿಲುವಿಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇದೊಂದು ವಿಚಿತ್ರ ಸನ್ನಿವೇಶ. ಸನಾತನ ಸಂಪ್ರದಾಯ ಪಾಲಿಸಿಕೊಂಡು ಬಂದ ಅವರ ಪಾರ್ಟಿ ರಾಧಾ ಅವರ ಈ ನಿಲುವನ್ನು ಖಂಡಿತ ಬೆಂಬಲಿಸಲಾರದು…” ವರದಿಗಾರ ಹೇಳುತ್ತಲೇ ಇದ್ದ. + + + +ಕಾರಿನಲ್ಲಿ ಕುಳಿತ ಪಾಟೀಲ ಏನೂ ತೋಚದೆ ಸುಮ್ಮನೇ ಕುಳಿತಿದ್ದ. + +ಉಮೇಶ ದೇಸಾಯಿ ವೃತ್ತಿಯಿಂದ ಲೆಕ್ಕಿಗ. ಪ್ರವೃತ್ತಿಯಿಂದ ಲೇಖಕ. ಎರಡು ಕಿರುಕಾದಂಬರಿಗಳು- ‘ಭಿನ್ನ’ ಹಾಗೂ ‘ಅನಂತಯಾನ’ ಪ್ರಕಟವಾಗಿವೆ. ‘ಚೌಕಟ್ಟಿನಾಛೆ’ ಎಂಬ ಕಥಾಸಂಕಲನವೂ ಪ್ರಕಟವಾಗಿದೆ. ‘ಮೈತ್ರಿ ಪ್ರಕಾಶನ’ದ ಮೂಲಕ ಇಲ್ಲಿಯವರೆಗೆ ೧೫ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. \ No newline at end of file diff --git a/Kenda Sampige/article_301.txt b/Kenda Sampige/article_301.txt new file mode 100644 index 0000000000000000000000000000000000000000..9043a947f12d72ca788f534da569b3c4ebc49940 --- /dev/null +++ b/Kenda Sampige/article_301.txt @@ -0,0 +1,155 @@ + + +ದೂರದೂರಿನ ಯಾವುದೋ ಪಟ್ಟಣದಲ್ಲಿ ಸಂಕಟಗಳ ಮೂಟೆ ಹೊತ್ತು ದಿನದೂಡುತ್ತಿರುವ ಮಗನಿಗೆ ಅಮ್ಮ ಎದೆ ಭಾರ ಹೊತ್ತ ಕಾಗದ ಬರೆಯುತ್ತಾಳೆ.‘ಮಗನೇ, ನಮಗೆ ನಿನ್ನನ್ನೊಮ್ಮೆ ನೋಡಬೇಕು.’ + +ಪತ್ರ ಇಷ್ಟಕ್ಕೇ ಮುಗಿಯುವುದಿಲ್ಲ. ಸುಮಾರು ಸಾಲುಗಳಾಗಿ ಮುಂದುವರಿಯುತ್ತವೆ. ವ್ಯಾಕರಣ ನಿಯಮಗಳಾಗಲೀ, ಅಕ್ಷರ ಚೆಂದವಾಗಲೀ ಅಲ್ಲಿರುವುದಿಲ್ಲ. ಪರಸ್ಪರ ಕಂಡು ಅದೆಷ್ಟು ಕಾಲವಾಯಿತೋ. + +ಅಮ್ಮ ದಿನವೂ ಮಗನ ದಾರಿ ಕಾದು ಕೂರುವ ಸಂಗತಿ ಅವನಿಗೆ ಗೊತ್ತಿಲ್ಲದೇನಿಲ್ಲ. ಆದರೇನು ಮಾಡುವುದು? ಮನೆಯ ದಾರಿ ಹಿಡಿಯೋಣವೆಂದರೆ ಕೈಯಲ್ಲಿ ಬಿಡಿಗಾಸಿಲ್ಲ. ದಿನದೂಡುವುದೇ ಕಷ್ಟ. ‘ನಾಳೆ ಹೊರಡಬೇಕು. ಅಮ್ಮನನ್ನು ಒಮ್ಮೆ ನೋಡಬೇಕು.’ ಎಂದು ದಿನವೂ ಸಮಾಧಾನಿಸಿಕೊಳ್ಳುವುದು. ಹೀಗಿರುವಾಗ, ದಿನಗಳು ವಾರಗಳಾಗಿಯೂ, ವಾರಗಳು ತಿಂಗಳುಗಳಾಗಿಯೂ, ತಿಂಗಳುಗಳು ವರ್ಷಗಳಾಗಿಯೂ ಬದಲಾಗುತ್ತಲೇ ಇರುತ್ತದೆ.ಅಮ್ಮ ಮಾತ್ರ ದಿನವೂ ಮಗನ ದಾರಿ ಕಾದೇ ಕಾಯುತ್ತಾಳೆ. + +(ವೈಕಂ ಮುಹಮ್ಮದ್ ಬಷೀರ್) + +ನಾನು ಇಲ್ಲಿಯ ತನಕ ಹೇಳಿದ್ದು ಮತ್ತು ಮುಂದಕ್ಕೆ ಹೇಳ ಹೊರಟಿರುವುದು ಬೇರೆ ಯಾರ ಕುರಿತೂ ಅಲ್ಲ, ಆಕೆ ನನ್ನ ಅಮ್ಮ. ಭಾರತದ ಪ್ರತಿಯೊಬ್ಬ ಮಕ್ಕಳಿಗೂ ತಮ್ಮ ಅಮ್ಮಂದಿರ ಬಗ್ಗೆ ಇಂತಹ ಕತೆಗಳನ್ನು ಹೇಳಲಿಕ್ಕಿರಬಹುದು. ನಾನಿಲ್ಲಿ ಹೇಳುತ್ತಿರುವುದು ಇಂಡಿಯಾದ ಸ್ವಾತಂತ್ರ್ಯ ಹೋರಾಟದ ಬಗ್ಗೆ. ನನಗೆ ಅಮ್ಮನೊಂದಿಗೆ ಅಂತಹ ಗಾಢ ನಂಟೇನೂ ಇರಲಿಲ್ಲ. ಅವಳ ಮಗ ಎಂಬುದಷ್ಟೇ ನನಗೂ ಅವಳಿಗೂ ನಡುವೆ ಇರುವ ಗಂಟು. ಆದರೂ ನೆನಪಾದಾಗಲೆಲ್ಲ ಬೇಸರ ಕವಿಯುತ್ತದೆ. ನನ್ನಂತಹ ಸಂತತಿಗಳನ್ನು ಹುಟ್ಟಿಸಿದ ಅಮ್ಮಂದಿರು ಭಾರತದ ತುಂಬ ತುಂಬಿದ್ದಾರೆ. ಆ ಮಕ್ಕಳು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಜೈಲಿಗೆ ತಳ್ಳಲ್ಪಟ್ಟಾಗ ಆ ಅಮ್ಮಂದಿರೆಲ್ಲ ಏನು ಮಾಡಿದರು? ಎಲ್ಲಿಂದಲೋ ನುಸುಳಿ ಬಂದ ಬಿಳಿಯರಿಗೆ ತಮ್ಮತನವನ್ನೇ ಅರ್ಪಿಸಿ ಅವರ ಕಿಂಕರರಂತೆ ವರ್ತಿಸುತ್ತಿದ್ದ ಭಾರತೀಯರೇ ನಮ್ಮ ದೇಶದ ಯುವಕ, ಯುವತಿಯರನ್ನು ಸಾಯುವಂತೆ ಹೊಡೆದು ಹಿಂಡಿ ಹಿಪ್ಪೆ ಮಾಡಿ ಜೈಲಿಗೆ ತಳ್ಳುತ್ತಿದ್ದ ಕಾಲದಲ್ಲಿ ಅವರ ಅಮ್ಮಂದಿರು ಮನೆಗಳಲ್ಲಿ ಕೂತು ತಮ್ಮ ಮಕ್ಕಳಿಗಾಗಿ ಏನು ಮಾಡುತ್ತಿದ್ದರು? ಯೋಚಿಸಲೂ ಆಗುತ್ತಿಲ್ಲವಲ್ಲ? ನನ್ನ ಯೋಚನೆಗೂ ನಿಲುಕುತ್ತಿಲ್ಲ. ಆದರೆ ನನ್ನ ಅಮ್ಮ ಏನು ಮಾಡುತ್ತಿದ್ದರು ಎಂಬುದು ಮಾತ್ರ ನನಗೆ ಗೊತ್ತು. + +ಈ ಹಳೆ ಪುರಾಣಗಳನ್ನು ಬರೆಯಲು ಅಂತಹ ದೊಡ್ಡ ಕಾರಣಗಳೇನೂ ಇಲ್ಲ. ಅಮ್ಮನ ಪತ್ರ ಓದುತ್ತಿದ್ದಾಗ ಹಳೆಯ ನೆನಪುಗಳು ಹೀಗೇ ನುಸುಳಿದವು. ಅದು ವೈಕ್ಕಂನ ತಲಯೋಲಪ್ಪರಂಬಿನಿಂದ ನೂರು ಚಿಲ್ಲರೆ ಮೈಲು ದೂರದ ಕೋಳಿಕ್ಕೋಡಿಗೆ ಉಪ್ಪು ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಲು ಹೋದ ಕತೆ. + +‘ಉಪ್ಪು ಸತ್ಯಾಗ್ರಹ! ನೆನಪುಂಟು ತಾನೇ?’ + +ಆ ಕತೆ ಬರೆಯುವ ಮುನ್ನ ಒಂದು ಸಂಗತಿ ಹೇಳಲಿಕ್ಕಿದೆ. ನಾನಿದನ್ನು ಬರೆಯುತ್ತಿರುವುದು ಸಾವಿರದೊಂಬೈನೂರ ಮೂವತ್ತೆಂಟರಲ್ಲಿ ಎಂಬುದೋ, ಭಾರತ ಈಗಲೂ ಸ್ವಾತಂತ್ರ್ಯ ಹೊಂದಿಲ್ಲ ಎಂಬುದೋ ಅಲ್ಲ. ಇಲ್ಲಿ ಕೇಳಿ ಆ ಗುಟ್ಟನ್ನು. ನಾನು ಮೊದಲ ಬಾರಿ ಪೆಟ್ಟು ತಿಂದದ್ದು ಮೋಹನದಾಸ ಕರಮಚಂದ ಗಾಂಧಿ ಎಂಬ ಮನುಷ್ಯನ ಕಾರಣದಿಂದ! ಅಮ್ಮ ನನ್ನನ್ನು ಹಡೆಯದಿರುತ್ತಿದ್ದರೆ ಈ ಗಲಾಟೆಗಳೊಂದೂ ನನ್ನ ಸುತ್ತ ನಡೆಯುತ್ತಿರಲಿಲ್ಲ. ನನ್ನಿಂದಾಗಿ ಆಕೆ ನೋವುಣ್ಣುವುದೂ ತಪ್ಪುತ್ತಿತ್ತು. ಗುಲಾಮಿತನ, ದಾರಿದ್ರ್ಯ ಮತ್ತನೇಕ ಭಯಾನಕ ವ್ಯಾಧಿಗಳಿರುವ ಈ ಹತಭಾಗ್ಯ ನಾಡಿನಲ್ಲಿ ಯಾಕಾಗಿ ನನ್ನನ್ನು ಹೆತ್ತಳು? ಇಂಡಿಯಾದ ಪ್ರತಿಯೊಬ್ಬ ತಾಯಿಯೊಂದಿಗೆ ಅವರ ಗಂಡು-ಹೆಣ್ಣು ಸಂತತಿಗಳು ಈ ಪ್ರಶ್ನೆಯನ್ನು ಕೇಳುತ್ತವೆಯೇ? ಇಂಡಿಯಾ ದೇಶ ಹೇಗೆ ಇಷ್ಟೊಂದು ದರಿದ್ರವಾಯಿತು? ನಾನೊಬ್ಬ ಭಾರತೀಯ ಎಂದು ಅಭಿಮಾನದಿಂದ ಹೇಳಲಾಗುತ್ತಿಲ್ಲವಲ್ಲ. ನಾನೊಬ್ಬ ಬರಿಯ ಗುಲಾಮ. ಈ ಗುಲಾಮಿ ದೇಶವನ್ನು ನಾನು ದ್ವೇಷಿಸುತ್ತೇನೆ! ಆದರೆ ಇಂಡಿಯಾ ನನ್ನ ತಾಯಿಯಲ್ಲವೆ? ನನ್ನನ್ನು ಹೆತ್ತ ತಾಯಿ ನನಗಾಗಿ ಕಾಯುತ್ತಿರುವಂತೆ ನನ್ನ ದೇಶವು ನನಗಾಗಿ ಕಾಯುತ್ತಿಲ್ಲವೇ? ಭಾರತವು ಸತ್ತ ನನ್ನನ್ನು ಮತ್ತು ನನ್ನ ಅಮ್ಮ ಬದುಕಿರುವ ನನ್ನನ್ನು ಕಾಯುತ್ತಿಲ್ಲವೇ?ಭರವಸೆ! + +ನನಗೆ ನೆನಪುಂಟು.ಅಮ್ಮ ನನ್ನನ್ನು ಹೆತ್ತಳು. ಮೊಲೆ ಹಾಲು ಕುಡಿಸಿ ಉಣ್ಣಿಸಿ ಬೆಳೆಸಿದಳು. ನನ್ನನ್ನು ಒಬ್ಬ ಮನುಷ್ಯನನ್ನಾಗಿ ಮಾಡಿದಳು. ದಾಹ ಮೋಹದಿಂದ ಹುಟ್ಟಿದ ಕೂಸು ನೀನು ಎಂದು ಅಮ್ಮ ವಾದಿಸುತ್ತಾಳೆ. ‘ನೀನು ದಾಹಿಸಿ ಮೋಹಿಸಿ ಉಂಟಾದ ಸಂತಾನ ಮಗಾ’ ಎಂದು ಎಲ್ಲ ಅಮ್ಮಂದಿರು ತಮ್ಮ ಮಕ್ಕಳೊಂದಿಗೆ ಹೇಳಿಕೊಳ್ಳುವುದಿಲ್ಲವೇ. ನನ್ನೆದೆಯಲ್ಲಿ ಉರಿಯುತ್ತಿರುವುದನೆಲ್ಲ ಇಲ್ಲಿ ಬರೆಯಲಾಗುತ್ತಿಲ್ಲ. ಕೈಕೋಳ ತೊಡಿಸಿ ಬಂಧಿಸಿದಂತೆ. ಪೋಲೀಸ್ ಲಾಕಪ್ಪುಗಳು, ಜೈಲು, ಗಲ್ಲುಮರ… ಏನನ್ನು ಯೋಚಿಸುತ್ತಿದ್ದೀರಿ? + +‘ಮನಸ್ಸು ಮತ್ತು ದೇಹಗಳೆರಡನ್ನೂ ಉಸಿರುಗಟ್ಟಿಸುವ ಎತ್ತರೆತ್ತರದ ಗೋಡೆಗಳಿರುವ ಕಾರಾಗೃಹ ಈ ಇಂಡಿಯಾ.’ ಎಂದು ಗಾಂಧೀಜಿ ಹೇಳಿದ್ದರು. ಸಂದರ್ಭ ಸರಿಯಾಗಿ ನೆನಪಿಲ್ಲ. ಆದರೆ ಗಾಂಧೀಜಿಯ ಕಾರಣದಿಂದ ಒದೆ ತಿಂದದ್ದು ಮಾತ್ರ ಸರಿಯಾಗಿ ನೆನಪುಂಟು. ಹೊಡೆದಾತ ಒಬ್ಬ ಬ್ರಾಹ್ಮಣ. ಹೆಸರು ವೆಂಕಟೇಶ್ವರ ಅಯ್ಯರ್. ವೈಕ್ಕಂ ಇಂಗ್ಲಿಷ್ ಹೈಸ್ಕೂಲ್ ಹೆಡ್ ಮಾಸ್ಟರ್. ನಾಗರ ಬೆತ್ತದಿಂದ ಚೆನ್ನಾಗಿ ಏಳು ಏಟು ಕೊಟ್ಟಿದ್ದರು. ಅದು ವೈಕ್ಕಂ ಸತ್ಯಾಗ್ರಹ ಕಾಲದಲ್ಲಿ. ಎಲ್ಲ ಕೆಳಜಾತಿ ಹಿಂದೂಗಳಿಗೆ ದೇವಸ್ಥಾನ ಪ್ರವೇಶಕ್ಕೆ ಅನುಮತಿ ಕೊಡಬೇಕು. ಸತ್ಯಾಗ್ರಹಿಗಳ ಕಣ್ಣಿಗೆ ಸವರ್ಣೀಯರು ಹಸಿ ಸುಣ್ಣ ಬಳಿಯುತ್ತಿದ್ದರು. ಹೊಡೆಯುತ್ತಿದ್ದರು. ಇದಕ್ಕೆಲ್ಲ ಕೊನೆ ಹಾಡಬೇಕು. ಬರುತ್ತಿದ್ದಾರೆ ಗಾಂಧೀಜಿ! + +ವೈಕ್ಕಂ ಬೋಟ್ ಜೆಟ್ಟಿ ಮತ್ತು ಸರೋವರದ ದಡದಲ್ಲಿ ದೊಡ್ಡ ಜನಸಂದಣಿ. ಸುತ್ತಲೂ ಗಲಾಟೆ. ಉಳಿದ ವಿದ್ಯಾರ್ಥಿಗಳೊಂದಿಗೆ ನುಸುಳಿಕೊಂಡು ನಾನೂ ಆ ಜನ ಸಾಗರದ ಮುಂಚೂಣಿ ತಲುಪಿದೆ. ಬೋಟಿನಲ್ಲಿದ್ದ ಗಾಂಧೀಜಿಯನ್ನು ದೂರದಿಂದ ಕಂಡೆ. ಬೋಟು ಜೆಟ್ಟಿಗೆ ಬಂತು. ಸಾವಿರ ಸಾವಿರ ಕಂಠಗಳು ಧ್ವನಿಸಿದವು. ಇಂಡಿಯಾದ ಸಕಲ ಅನ್ಯಾಯಗಳ ವಿರುದ್ಧದ ಸಮರ ಕಹಳೆಯಂತೆ. ಕದನಕ್ಕೆ ತೊಡೆ ತಟ್ಟಿದಂತೆ; ಸಾವಿರ ಸಾವಿರ ಕಂಠಗಳಿಂದ ಕಡಲ ಮೊರೆತದಂತೆ: ‘ಮಹಾತ್ಮ ಗಾಂಧೀ… ಕೀ… ಜೇ!’ + +ಆ ಅರೆಬೆತ್ತಲೆ ಫಕೀರ ಎರಡು ಹಲ್ಲುದುರಿದ್ದ ಮುಖ ತೋರಿಸುತ್ತಾ ನಸುನಕ್ಕು ಕೈ ಜೋಡಿಸಿ ನಮಸ್ಕರಿಸುತ್ತಾ ದಡಕ್ಕಿಳಿದರು. ಅಬ್ಬಾ ಬೊಬ್ಬೆಯೇ! ತೆರೆದ ಕಾರಿನಲ್ಲಿ ಅವರು ಮೆಲ್ಲಗೆ ಕೂತರು. ಆ ಜನಸಾಗರದ ನಡುವಿನಿಂದ ನಿಧಾನಕ್ಕೆ ಕಾರು ಸತ್ಯಾಗ್ರಹಾಶ್ರಮದ ಕಡೆಗೆ ಚಲಿಸಿತು. ವಿದ್ಯಾರ್ಥಿಗಳು ಕೆಲವರು ಕಾರಿನ ಬಾಡಿಗೆ ಹತ್ತಿ ನಿಂತರು; ಅವರಲ್ಲಿ ನಾನೂ ಒಬ್ಬ. ಈ ಗಲಾಟೆಯ ನಡುವೆ ನನಗೆ ಒಂದು ಬಯಕೆ. ಲೋಕವಂದಿತನಾದ ಈ ಮಹಾತ್ಮನನ್ನು ಒಮ್ಮೆ ಮುಟ್ಟಬೇಕು! ಈಗ ಒಂದು ಬಾರಿ ಮುಟ್ಟಲಾಗದಿದ್ದರೆ ನಾನಿಲ್ಲಿಯೇ ಬಿದ್ದು ಸಾಯುತ್ತೇನೆ ಎಂದು ಅನಿಸತೊಡಗಿತು. ಲಕ್ಷೋಪಲಕ್ಷ ಜನರ ನಡುವೆ ಯಾರಾದರೂ ನೋಡಿದರೆ? ಭಯ ಆತಂಕ. ಎಲ್ಲ ಮರೆತು ನಾನು ಗಾಂಧೀಜಿಯ ಬಲ ತೋಳನ್ನು ಮುಟ್ಟಿಯೇ ಬಿಟ್ಟೆ! ಬೀಳುವಂತೆ ವಾಲಿಕೊಂಡಿದ್ದರಿಂದ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡೆ. ಬಲವಿಲ್ಲದ ಮಾಂಸಖಂಡ. ಮೆತ್ತಗಿದೆ. ಗಾಂಧೀಜಿ ನನ್ನನ್ನು ನೋಡಿ ಮಂದಹಾಸ ಬೀರಿದರು. + +ಅಂದು ಸಂಜೆ ಮನೆಗೆ ಬಂದವನೇ ಅಭಿಮಾನದಿಂದ ಅಮ್ಮನ ಬಳಿ ಹೇಳಿದೆ:“ಉಮ್ಮಾ ನಾನು ಗಾಂಧಿಯನ್ನು ಮುಟ್ಟಿದೆ.” + +ಗಾಂಧೀಜಿ ಎಂದರೆ ಏನೆಂದೇ ಗೊತ್ತಿಲ್ಲದ ನನ್ನ ತಾಯಿ ಭಯಗೊಂಡಿದ್ದಳು. + +“ಹೋ… ನನ್ನ ಮಗನೇ…” ಅಮ್ಮ ತೆರೆದ ಬಾಯಿ ಮುಚ್ಚದೆ ನನ್ನನ್ನು ನೋಡುತ್ತಿದ್ದರು. + +ನನಗೆ ನೆನೆಪುಂಟು:ಹೆಡ್ ಮಾಸ್ಟರ್ ದೇವಸ್ಥಾನ ಪ್ರವೇಶ ಸತ್ಯಾಗ್ರಹಕ್ಕೆ ವಿರುದ್ಧವಾಗಿದ್ದರು. ಗಾಂಧೀಜಿಯನ್ನೂ ವಿರೋಧಿಸುತ್ತಿದ್ದರು. ಆದ್ದರಿಂದಲೇ ವಿದ್ಯಾರ್ಥಿಗಳು ಯಾರೂ ಖಾದಿ ಧರಿಸಬಾರದೆಂದು ನಿಷೇಧ ಹೇರಿದ್ದರು. ಸತ್ಯಾಗ್ರಹಾಶ್ರಮದ ಕಡೆಗೂ ಹೋಗುವಂತಿರಲಿಲ್ಲ. + +ಆ ಕಾಲದಲ್ಲಿ ನಾನು ಖಾದಿ ಧರಿಸುತ್ತಿದ್ದೆ; ಆಶ್ರಮಕ್ಕೂ ಹೋಗುತ್ತಿದ್ದೆ. ಒಂದು ದಿನ ಕ್ಲಾಸಿಗೆ ಹೋಗುತ್ತಿದ್ದಾಗ ನನ್ನನ್ನು ಕರೆದ ಹೆಡ್ ಮಾಸ್ಟರ್ ವ್ಯಂಗ್ಯ ಮಿಶ್ರಿತ ಕೋಪದಿಂದ ಹೇಳಿದರು: + +“ಅಯ್ಯೋ.. ಇವನದ್ದೊಂದು ವೇಷ ನೋಡಿದ್ರಾ?”ನಾನು ಸುಮ್ಮನಿದ್ದೆ, ಆತ ಮತ್ತೆ ಕೇಳಿದ:“ನಿನ್ನ ಅಪ್ಪ ಹಾಕಿದ್ದನೇನೋ ಇದನ್ನ.”“ಇಲ್ಲ” ಎಂದೆ. + +ಮತ್ತೊಂದು ದಿನ ನಾನು ಕ್ಲಾಸ್ ತಲುಪುವಾಗ ಗಂಟೆ ಹೊಡೆದು ಒಂದೆರಡು ನಿಮಿಷ ಕಳೆದಿತ್ತು. ಅವರು ನಾಗರಬೆತ್ತ ಹಿಡಿದು ವರಾಂಡದಲ್ಲಿ ನಿಂತಿದ್ದರು. ನನ್ನನ್ನು ಕರೆದು ಕೇಳಿದಾಗ ನಾನು ಆಶ್ರಮಕ್ಕೆ ಹೋಗಿದ್ದೆನೆಂದು ಹೇಳಿದೆ. + +“ಅಲ್ಲಿ ನಿನಗೆ ಯಾರಿದ್ದಾರೆ?” ಆತ ನೆಟ್ಟಗೆ ನಿಂತು ಫಡಫಡಾ ಅಂತ ಆರು ಏಟು ಅಂಗೈಗೆ ಕೊಟ್ಟರು. “ಇನ್ನು ಹೋಗಬಾರದು! ಗೊತ್ತಾಯ್ತಾ?” ಇನ್ನೊಂದೇಟು ಕುಂಡೆಗೆ.“ಇನ್ನೊಮ್ಮೆ ಹೋದರೆ ನಿನ್ನನ್ನು ಡಿಸ್ಮಿಸ್ ಮಾಡುತ್ತೇನೆ.”ಆದರೆ ನಾನು ಪುನಃ ಹೋದೆ! + +ನನಗೆ ನೆನಪುಂಟು:ಆ ಕಾಲದಲ್ಲಿ ನನಗೆ ಒಂದು ಖಾದಿ ಅಂಗಿ ಮತ್ತು ಲುಂಗಿ ಇತ್ತು. ಅಂದರೆ ಒಂದೇ ಅಂಗಿ ಮತ್ತು ಲುಂಗಿ ಮಾತ್ರ. ಆಗೆಲ್ಲ ಖಾದಿ ಸ್ವಾತಂತ್ರ್ಯ ಮತ್ತು ಹೋರಾಟದ ಪ್ರತೀಕವಾಗಿತ್ತು. ವಿದೇಶಿ ಬಟ್ಟೆ ತೊಡುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದೆ. + +ಈಗೇನಾದರು ನಾನು ಸತ್ತರೆ ನನ್ನನ್ನು ಈ ಖಾದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿ ಎಂದು ಹೇಳುತ್ತಿದ್ದೆ. ಉಮ್ಮ ಕೇಳುತ್ತಾರೆ:“ಕಾಂದಿಗೆ ಎಲ್ಲಿ ಸಿಕ್ಕಿದ್ದಾ ಈ ಗೋಣಿಚೀಲ ಲುಂಗಿ?” ಖಾದಿ ತಾಗಿದರೆ ತುರಿಕೆ ಉಂಟಾಗುತ್ತದೆ ಎಂದೇ ಉಮ್ಮ ನಂಬಿದ್ದರು. + +ಆಗೆಲ್ಲ ನಾನು ಹೇಳುವೆ:“ಇದು ನಮ್ಮ ದೇಶದಲ್ಲಿ ತಯಾರು ಮಾಡಿದ್ದು.” + +ಹಾಗೆ ಗಾಂಧೀಜಿ, ಅಲಿ ಸಹೋದರರು, ಮೌಲಾನಾ ಅಬುಲ್ ಕಲಾಂ ಆಝಾದ್, ಜವಾಹರಲಾಲ್ ನೆಹರು, ಸ್ವಯಂ ಆಡಳಿತ, ಬ್ರಿಟಿಷರ ದರ್ಪ – ಇವೆಲ್ಲ ನಮ್ಮ ಚರ್ಚಾ ವಿಷಯಗಳು. ಚೈನಾದ ಬಗ್ಗೆಯೋ ಇಂಗ್ಲೆಂಡಿನ ಬಗ್ಗೆಯೋ ಆ ಊರಿನ ಹಿರಿಯರು ಏನಾದರೂ ಕೇಳಿದರೆ ಉತ್ತರಿಸಲು ಆ ಊರಿನಲ್ಲಿ ಇದ್ದದ್ದು ಇಬ್ಬರು ಯುವಕರು ಮಾತ್ರ. ಒಬ್ಬರು ಮಿಸ್ಟರ್ ಕೆ.ಆರ್. ನಾರಾಯಣನ್. ಕಠಿಣ ಪರಿಶ್ರಮಿಯಾಗಿದ್ದ ಆತ ಅಂದಿನ ಎಲ್ಲ ಪ್ರಮುಖ ಸುದ್ದಿ ಪತ್ರಿಕೆಗಳ ಲೇಖಕರಾಗಿದ್ದರು. ನನ್ನಲ್ಲಿ ಯಾರೇ ಏನೇ ಕೇಳಲಿ ‘ನನಗೆ ಗೊತ್ತಿಲ್ಲ’ ಎಂದು ಹೇಳಿದ್ದು ನೆನಪಿಲ್ಲ. ಆದರೆ, ಒಮ್ಮೆ ಮಾತ್ರ ತಬ್ಬಿಬ್ಬಾಗಿ ಹೋದೆ. + +ಉಮ್ಮಾ ಕೇಳಿದರು:“ಮಗಾ, ನಿನ್ನ ಕಾಂದಿ ನಮ್ಮ ಹಸಿವು ನೀಗಿಸ್ತಾರಾ?” + +ಇದೊಂದು ದೊಡ್ಡ ಪ್ರಶ್ನೆ, ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆ. ಅದರ ಬಗ್ಗೆ ನನಗೆ ಏನೇನೂ ತಿಳಿದಿಲ್ಲ. ಆದರೂ ನಾನು ಹೇಳಿದೆ:“ಭಾರತ ಸ್ವತಂತ್ರಗೊಂಡಾಗ ನಮ್ಮ ಹಸಿವು ಕೂಡ ತೀರುತ್ತದೆ.” + +ಅದು ಸಾವಿರದೊಂಬೈನೂರ ಮೂವತ್ತರ ಕಾಲ. ಆಗಲೇ ಇರಬೇಕು, ಪ್ರಸಿದ್ಧವಾದ ಹನ್ನೊಂದು ಬೇಡಿಕೆಗಳ ಪತ್ರವನ್ನು ಅಂದಿನ ವೈಸ್ರಾಯ್ ಇರ್ವಿನ್ ಪ್ರಭುವಿಗೆ ಗಾಂಧೀಜಿ ಸಾಬರ್ಮತಿ ಆಶ್ರಮದಿಂದ ಕಳಿಸಿ ಕೊಟ್ಟಿದ್ದರು. ರೆನಾಲ್ಡ್ ಎಂಬ ಒಬ್ಬ ಇಂಗ್ಲಿಷ್ ಯುವಕ ಅದನ್ನು ಕೊಂಡುಹೋಗಿದ್ದ ಎಂದು ಕಾಣುತ್ತದೆ. ಆದರೆ ಪ್ರತಿಕ್ರಿಯೆ ನಿರಾಶಾದಾಯಕವಾಗಿತ್ತು. ಗಾಂಧೀಜಿ ಮಾತ್ರ ಪತ್ರದಲ್ಲಿ ಹೇಳಿದ್ದಂತೆ ಅಸಹಕಾರ ಚಳುವಳಿಗೆ ಇಳಿದರು. ಉಪ್ಪು ನಿಯಮ ಉಲ್ಲಂಘಿಸಲು ತನ್ನ ಎಪ್ಪತ್ತು ಅನುಯಾಯಿಗಳೊಂದಿಗೆ ದಂಡೀ ಸಮುದ್ರ ತೀರಕ್ಕೆ ಹೊರಟು ನಿಂತರು. ಇಂಡಿಯಾದ ದರಿದ್ರಕೋಟಿಗಳು ಗಂಜಿಗೂ ಸಾರಿಗೂ ಹಾಕುತ್ತಿದ್ದ ಉಪ್ಪಿಗೆ ಎಲ್ಲಿಂದಲೋ ಬಂದು ಇಲ್ಲಿ ನೆಲೆಯೂರಿರುವ ಬ್ರಿಟಿಷರು ಕರ ಹಾಕಿದ್ದರು. ಇಂಡಿಯಾವನ್ನೇ ನಡುಗಿಸಿದ್ದ ಆ ದಂಡೀ ಯಾತ್ರೆಗೂ ಮೊದಲು ಗಾಂಧೀಜಿ ಹೇಳಿದ್ದರು: + +“ಒಂದೋ ನನ್ನ ಬೇಡಿಕೆಗಳನ್ನು ಈಡೇರಿಸಿಕೊಂಡು ಆಶ್ರಮಕ್ಕೆ ಮರಳುವೆ, ಇಲ್ಲದಿದ್ದರೆ ನನ್ನ ದೇಹ ಅರಬ್ಬೀ ಸಮುದ್ರದಲ್ಲಿ ತೇಲುವುದನ್ನು ಕಾಣುವಿರಿ!”ಗಾಂಧೀಜಿ ಸಾಯುವುದೇ? ಹಿಮಾಲಯದಿಂದ ಕನ್ಯಾಕುಮಾರಿ ತನಕ ಪ್ರತಿಧ್ವನಿಸಿತು. ಭಾರತ ಒಟ್ಟಾಗಿ ಅಲ್ಲೋಲ ಕಲ್ಲೋಲವಾಯಿತು. ಬ್ರಿಟಿಷ್ ಸರಕಾರ ಮತ್ತು ಇಂಡಿಯಾದ ರಾಜರುಗಳು ಅವರ ಸಕಲ ಶಕ್ತಿ ಉಪಯೋಗಿಸಿ ನಿರಾಯುಧರಾದ ಹಿಂದು, ಮುಸ್ಲಿಂ, ಕ್ರೈಸ್ತ, ಫಾರ್ಸಿ, ಸಿಖ್ ಮೊದಲಾದ ಸತ್ಯಾಗ್ರಹಿಗಳನ್ನು ಎದುರಿಸಿ ನಿಂತರು. ಸೈನ್ಯ, ಪೋಲೀಸ್, ಜೈಲು, ಗಲ್ಲು – ಇವಿಷ್ಟೇ ಸರಕಾರದ ಆಡಳಿತವಾಯಿತು. ಗಾಂಧೀಜಿ ಮತ್ತು ಸಂಗಡಿಗರನ್ನು ದಂಡೀ ಸಮುದ್ರ ತೀರದಲ್ಲಿ ಅರೆಸ್ಟ್ ಮಾಡಲಾಯಿತು. ಉಳಿದೆಡೆ ಇದ್ದ ಪರಿಸ್ಥಿತಿಯೇ ಕೇರಳದಲ್ಲೂ ಇತ್ತು. ವಾತಾವರಣ ಸಂಪೂರ್ಣ ಪ್ರಕ್ಷುಬ್ದ. + +ಕೋಳಿಕ್ಕೋಡು ಸಮುದ್ರ ತೀರದಲ್ಲಿ ಉಪ್ಪು ನಿಯಮ ಉಲ್ಲಂಘನೆಯಲಿ ತೊಡಗಿದವರ ಮೇಲೆ ಭಾರತೀಯನೆ ಆಗಿದ್ದ ಪೋಲೀಸ್ ಸುಪ್ರೆಂಟ್ ಆಜ್ಞೆಯಂತೆ ಕಠಿಣವಾಗಿ ಮರ್ದಿಸಲಾಯಿತು. ಬೂಟುಕಾಲಿನ ಒದೆ, ಲಾಠಿಯೇಟು. ಅದೂ ಕೂಡ ಭಾರತೀಯರೇ ಆಗಿದ್ದ ಪೋಲೀಸ್ ಮತ್ತು ಸೈನ್ಯದಿಂದ!ಕೇಳಪ್ಪನ್, ಮುಹಮ್ಮದ್ ಅಬ್ದುರ್ರಹ್ಮಾನ್ ಮೊದಲಾದವರನ್ನು ಅರೆಸ್ಟ್ ಮಾಡಿದರು. ನಿಯಮ ಉಲ್ಲಂಘನೆ, ಅರೆಸ್ಟ್, ಪೋಲೀಸರ ಅಟ್ಟಹಾಸ ಮುಂದುವರಿಯಿತು. ಅವುಗಳಲ್ಲಿ ಅತ್ಯಂತ ದಾರುಣವಾದದ್ದು ಕೋಳಿಕ್ಕೋಡ್ ಸಮುದ್ರತೀರದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಸಿದ ದಾಳಿ. ಎಳೆ ಹುಡುಗರು! ಭವಿಷ್ಯ ಭಾರತದ ಪ್ರಜೆಗಳು. ಅವರನ್ನು ಕೇರಳೀಯರೇ ಆಗಿದ್ದ ಪೋಲೀಸರು ಹೊಡೆದು ಹಾಕಿದರು. ತಲೆ ಹೊಡೆದು, ರಕ್ತದ ಕೋಡಿ ಹರಿಯಿತು. ನೂರಾರು ಮಕ್ಕಳು! ‘ಮಾತೃಭೂಮಿ’ ಪತ್ರಿಕೆಯಲ್ಲಿ ನಾಯಕನೊಬ್ಬ ಕೊಟ್ಟ ಕರುಣಾಜನಕ ಸ್ಟೇಟ್ಮೆಂಟ್ ಒಂದು ಹೀಗಿತ್ತು: + +“ಮಾತೃನೆಲದ ಮೇಲಿನ ನಿಮ್ಮ ಕರ್ತವ್ಯ ನಿರ್ವಹಿಸಲು ಕೋಳಿಕ್ಕೋಡ್ ಕಿನಾರೆಯಲ್ಲಿ ಸೇರಿದ ವಿದ್ಯಾರ್ಥಿಗಳೇ, ನಿರಾಯುಧರೂ, ನಿರಪರಾಧಿಗಳೂ ಆದ ಹುಡುಗರೇ, ನಿರ್ದಯೆಯಿಂದ ಕ್ರೂರವಾಗಿ ಲಾಠಿಯಿಂದ ಹೊಡೆದು ತಲೆ ಹೊಡೆಯಲು, ಕೈಕಾಲುಗಳು ಮುರಿದು ಹಾಕಲು ಮಲಯಾಳಿ ಮಹಿಳೆಯರು ಹೆತ್ತವರೆಂದು ಕರೆಯಲ್ಪಡುವ ಈ ಪೋಲೀಸರು ಕೈ ಎತ್ತಿಯೇ ಬಿಟ್ಟರಲ್ಲ! ಈ ನಗರದ ಗೌರವಾನ್ವಿತರು, ಧನಿಕರು, ಪ್ರಜಾ ಪ್ರತಿನಿಧಿಗಳು ಎಂದೆಲ್ಲ ಕರೆದುಕೊಳ್ಳುವವರು ಇದನ್ನೆಲ್ಲ ಕಂಡೂ ಕಾಣದಂತೆ ಸುಮ್ಮನಿರುವುದನ್ನು ನೋಡುವಾಗ, ಬರೀ ಮೇಲಧಿಕಾರಿಗಳ ಆಜ್ಞೆಯನ್ನು ಕಣ್ಣು ಮುಚ್ಚಿ ಪಾಲಿಸುವ ಈ ಬುದ್ದಿಯಿಲ್ಲದ ಪೋಲೀಸರನ್ನು ನಾನೇಕೆ ಬಯ್ಯಬೇಕು?” + + + +ಹೀಗೆ ವಾಗ್ಯುದ್ಧ ಮತ್ತು ಕಿವಿ ಕಳೆದುಕೊಂಡವರ ಕಾಲ. ಆದರೂ ಬಹುಜನರು ಸುಮ್ಮನಾಗಲಿಲ್ಲ. ಒಕ್ಕೊರೊಳ ಕ್ರಾಂತಿಗೀತೆ ಮೊಳಗಿತು.‘ಬನ್ನಿ ಬನ್ನಿ ಜನಗಳೇ. ಅಹಿಂಸ ಸಮರ ಕಾದಿದೆ!’ + +ಹಾಗೇ ನಾನೂ ಹೋದೆ. ಯಾರಲ್ಲೂ ಹೇಳದೆ ಕೇಳದೆ. ಓದು ನಿಲ್ಲಿಸಿ ಕೋಳಿಕ್ಕೋಡಿಗೆ ಹೊರಟು ನಿಂತೆ. ಅವತ್ತು ಸಂಜೆ ಉಮ್ಮ ಅಡುಗೆ ಕೆಲಸದಲ್ಲಿದ್ದಳು. ಉಮ್ಮನಿಗೆ ಯಾವ ಸೂಚನೆಯೂ ಬಿಟ್ಟು ಕೊಡಲಿಲ್ಲ. ಒಂದು ಗ್ಲಾಸ್ ನೀರು ಅವಳ ಕೈಯಿಂದ ಕೇಳಿ ಕುಡಿದು ಅವಳನ್ನೊಮ್ಮೆ ನೋಡಿ ಇಳಿದು ನಡೆದೇಬಿಟ್ಟೆ.ಯಾರಾದರೂ ಹಿಂಬಾಲಿಸುತ್ತಿರಬಹುದು ಎಂದು ಭಯಗೊಂಡಿದ್ದೆ. ಮರುದಿನ ಎರ್ನಾಕುಳಂ ಅಲ್ಲಿ ಬೋಟ್ ಇಳಿದು ಇಡಪ್ಪಳ್ಳಿಯ ತನಕ ನಡೆದು ರೈಲ್ವೆ ಸ್ಟೇಷನ್ ತಲುಪುವಾಗ ಸಂಜೆಯಾಗಿತ್ತು. ಗಾಡಿ ಬರಲು ತುಂಬಾ ತಡವಾಗಿತ್ತು. ಆಗ ನಾಲ್ಕೈದು ಪೋಲೀಸರು ಲ್ಯಾಂಟೀನ್ ಹಿಡಿದುಕೊಂಡು ಬಂದರು. ಭಯದಿಂದ ನಡುಗ ತೊಡಗಿದೆ. + +ಒಬ್ಬೊಬ್ಬರನ್ನು ಎಬ್ಬಿಸಿ ಅವರು ಪ್ರಶ್ನಿಸುತ್ತಿದ್ದಾರೆ. ನಾನು ನಿದ್ದೆ ಮಾಡಿದವನಂತೆ ಮಲಗಿದೆ. ಒಬ್ಬಾತ ಲಾಠಿಯಿಂದ ನನ್ನ ಹೊಟ್ಟೆಗೆ ತಿವಿದು ಎಬ್ಬಿಸಿದ. + +ಬೆಳಕನ್ನು ನನ್ನ ಮುಖದ ಹತ್ತಿರ ಹಿಡಿದು ಕೇಳಿದ:“ಎಲ್ಲಿಗೆ ಹೋಗುತ್ತಿದ್ದೀಯಾ ನೀನು?” + +ಏನು ಹೇಳುವುದು? ಕಾಂಗ್ರೆಸ್ ಸೇರಲು ತಿರುವಾಂಕೂರಿನಿಂದ ಕೋಳಿಕ್ಕೋಡಿಗೆ ಹೋಗುತ್ತಿದ್ದೇನೆಂದು ಹೇಳಲು ನನ್ನಿಂದ ಸಾಧ್ಯವಿರಲಿಲ್ಲ.ನಾನು ಸುಳ್ಳು ಹೇಳಿದೆ: “ಶೋರನೂರಿಗೆ ಹೋಗ್ತಿದ್ದೇನೆ.”“ಯಾಕೆ?”ಮತ್ತೊಂದು ಸುಳ್ಳು: “ಅಲ್ಲಿ ನನ್ನ ಮಾವನಿಗೆ ಚಾದಂಗಡಿ ಉಂಟು.” + +ನನ್ನ ಭಾಗ್ಯಕ್ಕೆ ಅವರು ಇನ್ನೇನು ಕೇಳಲಿಲ್ಲ. ಅವರು ಒಬ್ಬ ಕಳ್ಳನನ್ನು ಹುಡುಕಿ ಹೊರಟಿದ್ದರು. ಶೋರನೂರಿಗೆ ಟಿಕೆಟ್ ತೆಗೆದುಕೊಂಡೆ. ಅಲ್ಲಿ ಇಳಿದು ಪಟ್ಟಾಂಬಿ ತನಕ ನಡೆದೆ. ಪುನಃ ರೈಲು ಗಾಡಿ ಹತ್ತಿ ಕೋಳಿಕ್ಕೋಡ್ ತಲುಪಿದೆ. ಮುಹಮ್ಮದ್ ಅಬ್ದುರ್ರಹಮಾನರ ‘ಅಲ್ ಅಮೀನ್’ ಪತ್ರಿಕೆಯ ಅಲ್ ಟಮೀನ್ ಲಾಡ್ಜಿನಲ್ಲಿ ಉಳಿದುಕೊಂಡೆ. ಅಲ್ಲಿ ನಾನು ಮಾಡಿದ ಮೊದಲ ಕೆಲಸ ಬಳ್ಳಾರಿ ಜೈಲಿನಲ್ಲಿದ್ದ ನನ್ನ ಊರಿನವರೇ ಆಗಿದ್ದ ಸೈದ್ ಮುಹಮ್ಮದಿಗೆ ರಹಸ್ಯವಾಗಿ ಒಂದು ಪತ್ರ ಕಳಿಸಿದ್ದು. ನನ್ನ ಸರ್ವಸ್ವವನ್ನು ಭಾರತ ಮಾತೆಯ ಪಾದಗಳಿಗೆ ಅರ್ಪಿಸಿಯಾಗಿತ್ತು. ಕೂಡಲೇ ನಾನು ಕೂಡ ಬಂಧಿಸಲ್ಪಡುವೆ! + +ಆ ಪತ್ರಕ್ಕೆ ಅವರು ಉತ್ತರ ಬರೆದರು: “ಇನ್ನು ನನಗಿಲ್ಲಿ ಕೆಲ ದಿನಗಳೇ ಬಾಕಿ ಇರುವುದು. ಬೇಗನೆ ಇಲ್ಲಿಂದ ಬಿಡುಗಡೆಯಾಗಿ ಬರುವೆ. ಇಬ್ಬರು ಕೂತು ಚರ್ಚಿಸಿ ಕಾಂಗ್ರೆಸ್ ಸೇರುವ ತೀರ್ಮಾನ ಮಾಡಿದರೆ ಸಾಕು.” ಅವರು ಅಲ್ ಅಮೀನ್ ಪತ್ರಿಕೆಯ ಸಹ ಸಂಪಾದಕರು ಮತ್ತು ಆ ಕಾಲದ ನಾಯಕರಲ್ಲಿ ಒಬ್ಬರೂ ಆಗಿದ್ದರು. ಒಟ್ಟಪಾಲದಲ್ಲಿ ಇ. ಮೊಯಿದು ಮೌಲವಿ ಮೊದಲಾದವರೊಂದಿಗೆ ಸುಪ್ರೆಂಟಿನ ನಿರ್ದಾಕ್ಷಿಣ್ಯ ಬೂಟಿನೇಟು ತಿಂದವರೂ ಆಗಿದ್ದರು. ಅವರು ಬರುವ ತನಕ ಕಾಯುವುದಕ್ಕೆ ನನ್ನಿಂದ ಸಾಧ್ಯವಿರಲಿಲ್ಲ. ಭಾರತ ನಾಳೆ ಸ್ವತಂತ್ರಗೊಂಡರೆ; ಸ್ವಾತಂತ್ರ್ಯ ಹೋರಾಟದಲ್ಲಿ ನನಗೂ ಪಾಲು ಬೇಕು! ನನ್ನ ನಾಡಿನಿಂದ ನನ್ನ ಜಾತಿಯ ಜನಗಳು ಅಷ್ಟೇನೂ ಸೇರಿಕೊಂಡಿಲ್ಲ. ಆ ಕೊರತೆಯನ್ನು ನಾನು ನೀಗಿಸಬೇಕು. ಆ ಸಮಯದಲ್ಲಿ ನನ್ನ ತಂದೆಯೂ ಹುಡುಕಿಕೊಂಡು ಬಂದರು. ಸೈದ್ ಮುಹಮ್ಮದರ ಪತ್ರ ತೋರಿಸಿ “ನಾನು ಕಾಂಗ್ರೆಸ್ ಸೇರುವುದಿಲ್ಲ, ಸ್ಕೂಲಿಗೂ ಹೋಗುವುದಿಲ್ಲ. ಬದಲಾಗಿ ಒಂದು ಕೆಲಸ ಹುಡುಕುತ್ತಿದ್ದೇನೆ. ಸದ್ಯದಲ್ಲೇ ಸಿಗುತ್ತದೆ.” ಎಂದು ಹೇಳಿದೆ. + +ಒಂದು ವಿಧದಲ್ಲಿ ಬಾಪ್ಪನನ್ನು ಸಮಾಧಾನ ಪಡಿಸಿದೆ. ನಂತರ ಸೀದಾ ಹೋಗಿದ್ದು ಕಾಂಗ್ರೆಸ್ ಆಫೀಸಿಗೆ. ಅಲ್ಲಿಯೂ ನನಗೆ ನಿರಾಶೆ ಕಾದಿತ್ತು. ನಾನೊಬ್ಬ ಸಿಐಡಿ ಆಗಿರಬಹುದೆಂದು ಅವರು ಶಂಕಿಸಿದರು. ಅದಕ್ಕೆ ಕಾರಣವಾಗಿದ್ದು ನನ್ನ ಡೈರಿ. ಅದರಲ್ಲಿ ಇಂಗ್ಲಿಷ್, ತಮಿಳು, ಹಿಂದಿ, ಅರಬ್ಬೀ, ಮಲಯಾಳಂ ಮೊದಲಾದ ಭಾಷೆಗಳಲ್ಲಿ ಬರೆದುಕೊಂಡಿದ್ದೆ. ಅದನ್ನು ಬೆಂಚಿನಲ್ಲಿಟ್ಟು ನಾನು ಮೂತ್ರಕ್ಕೆಂದು ಹೋಗಿದ್ದೆ. ತಿರುಗಿ ಬಂದಾಗ ಸೆಕ್ರೆಟರಿ ಅದನ್ನು ಓದುತ್ತಿದ್ದರು. ಅವರಿಗೆ ಪೂರ್ತಿ ಓದಲಾಗಿರಲಿಕ್ಕಿಲ್ಲ. ಆದರೂ ನನ್ನ ಮೇಲೆ ಸಂಶಯ ಮೂಡಲು ಅದು ಸಾಕಾಗಿತ್ತು. ನಾನು ಸೈದ್ ಮುಹಮ್ಮದರ ಪತ್ರ ತೋರಿಸಿದೆ. ಅವರ ಸಂಶಯ ಮುಗಿಯಲಿಲ್ಲ. ನನ್ನ ಹಾವ ಭಾವಗಳನ್ನು ಅವರು ಗಮನಿಸುತ್ತಿದ್ದರು. + +ಆಫೀಸಲ್ಲಿ ರಾಜಕೀಯ ನಾಯಕರ ಪಟಗಳನ್ನು ತೂಗು ಹಾಕಿದ್ದರು. ಫೆಲ್ಟ್ ಹ್ಯಾಟ್ ಸ್ವಲ್ಪ ಓರೆಯಾಗಿಸಿ, ದೊಡ್ಡ ಕಾಲರ್ ಇರುವ ಬಿಳಿ ಬಟ್ಟೆ ಧರಿಸಿದ, ಮೇಲ್ತುಟಿ ತುಂಬ ಚಾಚಿಕೊಂಡ ಸಪೂರ ಮೀಸೆಯ, ಶೋಕಗಂಭೀರ ಮುಖಭಾವದ ಆ ಚಿತ್ರ ಯಾರದ್ದೆಂದು ನಾನು ಕೇಳಿದೆ. ಬಿಳಿಯರ ವೇಷ ಧರಿಸಿದ್ದ ಆ ನಾಯಕ ನನಗೆ ಚೂರೂ ಇಷ್ಟವಾಗಲಿಲ್ಲ.ಸೆಕ್ರೆಟರಿ ಹೇಳಿದ:‘ಭಗತ್ ಸಿಂಗ್’ + +ಅದು ಕೇಳಿದಾಗ ನನ್ನೊಳಗೆ ಮಿಂಚು ಹೊಕ್ಕಂತಾಯಿತು. ವೀರ ಪರಾಕ್ರಮಿ ಭಗತ್ ಸಿಂಗ್! ಅಂದು ಆತನನ್ನು ಗಲ್ಲಿಗೇರಿಸಿರಲಿಲ್ಲ. ಭಗತ್ ಸಿಂಗ್, ರಾಜ್ ಗುರು, ಸುಖ್ ದೇವ್ – ಪಂಜಾಬ್ ಗೂಢಾಲೋಚನೆಯಲ್ಲಿ ಭಾಗಿಯಾಗಿದ್ದ ಆ ಮೂವರು ಕ್ರಾಂತಿಕಾರಿಗಳ ಬಗ್ಗೆ ಪತ್ರಿಕೆಯಲ್ಲಿ ಓದಿದ್ದೆ. ಅಸ್ಸೆಂಬ್ಲಿ ಹಾಲಲ್ಲಿ ಬಾಂಬ್ ಹಾಕಿದ್ದು, ವೈಸ್ರಾಯಿಯ ರೈಲನ್ನು ಹೊಡೆಯಲು ಪ್ರಯತ್ನ ಮಾಡಿದ್ದು ನನಗೆ ತಿಳಿದಿರಲಿಲ್ಲ. ಆ ಪಟವನ್ನು ಹಾಗೆ ನೋಡುತ್ತಲೇ ನಿಂತಿದ್ದೆ. ಸೆಕ್ರೆಟರಿ ಹೇಳಿದರು: + +“ಭಗತ್ ಸಿಂಗನ ಛಾಯೆ ನಿಮಗುಂಟು. ಮೀಸೆ ಮತ್ತು ಕಾಲರ್ ಹಾಗೆಯೆ ಇವೆ. ಒಂದು ಫೆಲ್ಟ್ ಹ್ಯಾಟ್ ಇದ್ದರೆ ಆಯಿತು!” + +ನಾನು ಏನನ್ನೂ ಹೇಳಲಿಲ್ಲ. ಭಗತ್ ಸಿಂಗನಂತೆ ಕಾಣುತ್ತಿದ್ದೇನೆ ಎಂಬುದರ ಬಗ್ಗೆ ಯೋಚಿಸುತ್ತಿದ್ದೆ. ಆಗ ಸೆಕ್ರೆಟರಿ ಪುನಃ ಕೇಳಿದರು:“ನಿಜದಲ್ಲಿ ನೀವು ಮುಸಲ್ಮಾನ ಹೌದಾ?” + +ನಾನು ಕೇಳಿದೆ: “ನಿಮಗೆ ಸಂಶಯ ಉಂಟಾ?” ನಂತರ ಅಲ್ಲಿಯ ತನಕದ ನನ್ನ ಆತ್ಮಕತೆಯನ್ನು ಹೇಳಿ ಮುಗಿಸಿದೆ. ಕೊನೆಗೆ ಅವರು ಕೇಳಿದರು:“ನಾಳೆ ಸಮುದ್ರ ದಡದಲ್ಲಿ ಉಪ್ಪು ಶೇಖರಿಸಲು ನೀವು ತಯಾರಿದ್ದೀರಾ?” + +“ತಯಾರಿದ್ದೇನೆ.” ತಕ್ಷಣ ಸಮ್ಮತಿಸಿದೆ. + +ಮರುದಿನ ಬೇಗನೆ ಎದ್ದು ಪಾತ್ರೆ, ಬಾವುಟ ಎಲ್ಲ ಹಿಡಿದು ಹೊರಡಲು ತಯಾರಾಗುತ್ತಿದ್ದೆವು. ಆಗ ಮೆಟ್ಟಿಲುಗಳ ಮೇಲೆ ‘ಚಡ ಪಡ’ ಸದ್ದು ಕೇಳಿ ನಾವು ಗಾಬರಿಯಿಂದ ಆ ಕಡೆ ನೋಡಿದೆವು. ಆರೇಳು ಪೋಲೀಸರೊಂದಿಗೆ ಇನ್ಸ್ಪೆಕ್ಟರ್ ಒಳಗೆ ಬಂದ. ನಾವು ಹನ್ನೊಂದು ಜನರನ್ನೂ ಅರೆಸ್ಟ್ ಮಾಡಿಕೊಂಡು ಹೋದರು. + +ಅದೊಂದು ಭಾನುವಾರದ ದಿನ. ನಾವು ಯಾರೂ ಏನೂ ತಿಂದಿರಲಿಲ್ಲ. ನಿದ್ರೆಯ ಮಂಪರೂ ನನಗಿತ್ತು. ನಮ್ಮ ಹಿಂದೆಯೇ ಜನರ ಗುಂಪೊಂದು ಸೇರಿತು. ಸ್ಟೇಷನ್ ಹತ್ತಿರ ಆದಂತೆ ನನ್ನ ಧೈರ್ಯವೆಲ್ಲ ಕರಗಿ ಮಾಯವಾಗಿ ಹೋಗಿತ್ತು. ಮೊದಲ ಬಾರಿಗೆ ಪೋಲೀಸ್ ಸ್ಟೇಷನ್ ಹತ್ತುತ್ತಿರುವುದು. ಖಡ್ಗಗಳು, ಬಯನೆಟ್ಟುಗಳು, ಕೈಕೋಳಗಳು ಭಿತ್ತಿಯಲ್ಲಿ ಭೀಕರವಾಗಿ ಮಿನುಗುತ್ತಿದ್ದವು. ಅದರ ತೀಕ್ಷ್ಣ ಬೆಳಕು ಮತ್ತು ಅಲ್ಲಿದ್ದ ಪೋಲೀಸರ ಕ್ರೂರ ಮುಖಭಾವ ನನ್ನನ್ನು ತುಂಬಾ ಭಯಗೊಳಿಸಿದವು. ನರಕದ ನೆನಪು ಒಮ್ಮೆ ಸುಳಿದು ಹೋಯಿತು. + +ನಮ್ಮನ್ನು ಸಾಲಾಗಿ ವರಾಂಡದಲ್ಲಿ ನಿಲ್ಲಿಸಿದರು. ಬೆಕ್ಕಿನ ಕಣ್ಣಿನ ಇನ್ಸ್ಪೆಕ್ಟರ್ ಒಳಗೆ ಹೋದ. ನಮ್ಮ ಮುಂದಿನಿಂದ ಒಬ್ಬ ಅಜಾನುಬಾಹು ಪೋಲೀಸ್ ಅತ್ತಿಂದಿತ್ತ ನಡೆಯುತ್ತಿದ್ದ. ಕೆಂಪಗಿನ ಕಣ್ಣುಗಳಿಂದ ನಮ್ಮನ್ನು ದುರುಗುಟ್ಟಿ ನೋಡುತ್ತಿದ್ದ. ಆತನ ನಂಬರ್ 270. ಸಾಲಿನ ಮೊದಲಿಗೆ ನಿಂತಿದ್ದ ಕ್ಯಾಪ್ಟನ್ನಿನ್ನ ಕತ್ತು ಹಿಡಿದು ಒಳಗೆ ನೂಕಿದ. ಒಳಗಿನಿಂದ ಒದೆ, ಹೊಡೆತ ಮತ್ತು ಆರ್ತನಾದ ಕೇಳಿತು. ನನ್ನ ಹೃದಯದ ಸದ್ದು ನಿಂತಂತೆ ಅನಿಸಿತು. ಸಾಲಿನಲ್ಲಿ ನಾಲ್ಕನೆಯವ ನಾನು. ಹತ್ತು ನಿಮಿಷದ ನಂತರ ಎರಡನೆಯವನನ್ನು ಕೊಂಡು ಹೋದರು. + +ಆತನ ಹೃದಯ ವಿದ್ರಾವಕ ಆರ್ತನಾದಕ್ಕೆ ನಾನು ಕುಸಿದೇ ಬಿಟ್ಟೆ. ಕ್ಷಮೆ ಕೇಳಿ ಬಿಡುವುದೇ ಒಳಿತೆಂದು ಭಾವಿಸಿದೆ. ಒಂದು ನಿಮಿಷವಷ್ಟೇ ಆ ಯೋಚನೆಯ ಆಯುಸ್ಸು. ತಕ್ಷಣ ನಾನು ಯೋಚಿಸಿದೆ. ಯಾಕಾಗಿ ಕ್ಷಮೆ ಕೇಳಬೇಕು? ನಾನು ತಪ್ಪೇನೂ ಮಾಡಿಲ್ಲವಲ್ಲ. ಸ್ವಾತಂತ್ರ್ಯಕ್ಕಾಗಿ ಅದೆಷ್ಟು ಸಾವಿರ ಯುವಕ ಯುವತಿಯರು ಮರಣದ ರುಚಿ ನೋಡಿದರು. ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ನೆನೆದೆ. ಮರಣವೇ ನನ್ನ ದಾರಿ ಮತ್ತು ಕರ್ತವ್ಯ! + +ಮುಂದಿನಿಂದ ನಡೆಯುತ್ತಿದ್ದ 270 ಎಲ್ಲರ ಬಳಿಯೂ ಅವರವರ ಊರು ಕೇಳಿದ. ಒಬ್ಬೊಬ್ಬರೂ ಹೇಳಿದರು:“ಕಣ್ಣೂರು”, “ತಲಶೇರಿ”, “ಪೊನ್ನಾಣಿ”. + +ಆತ ಈಗ ನನ್ನ ಬಳಿ ಬಂದು ಕೇಳಿದ:“ನಿನ್ನದು?”“ವೈಕ್ಕಂ”“ವೈಕ್ಕಂ!” ಆತ ಆಶ್ಚರ್ಯದಿಂದ ನನ್ನನ್ನು ನೋಡಿದ. ತಿರುವಾಂಕೂರಿನವ! + +“ಹೆಸರು?” + +ನಾನು ಹೆಸರು ಹೇಳಿದೆ. ಆತ ತಲೆಯೆತ್ತಿ ಕೇಳಿದ:“ತಿರುವಾಂಕೂರಿನಲ್ಲಿ ಸ್ವಯಂ ಆಡಳಿತ ಬಂತೋ ಹೇಗೆ?” + +ನಾನು ಹೇಳಿದೆ:“ಇಲ್ಲ. ರಾಜಾಡಳಿತ ಇರುವ ಕಡೆ ಹೋರಾಟ ಬೇಡವೆಂದು ಗಾಂಧೀಜಿ ಹೇಳಿದ್ದಾರೆ.” + +“ಹುಂ!” ಆತ ಭಯಂಕರವಾಗಿ ಹೂಂಗುಟ್ಟಿದ. ಹಾಗೇ ಹತ್ತಿರ ಬಂದವ ನನ್ನ ಎರಡು ಕೆನ್ನೆಗಳಿಗೂ ಫಡ ಫಡಾ ಅಂತ ಎರಡೇಟು ಬಿಗಿದ! ನಂತರ ಬಗ್ಗಿಸಿ ಬೆನ್ನಿಗೆ ಗುದ್ದತೊಡಗಿದ. ತಾಮ್ರದ ಪಾತ್ರೆಗೆ ಗುದ್ದಿದ ಸದ್ದು. ಹದಿನೇಳರ ತನಕವೋ ಇಪ್ಪತ್ತೇಳರ ತನಕವೋ ನಾನು ಎಣಿಸಿದೆ. ನಂತರ ಎನಿಸಲಿಲ್ಲ. ಎಣಿಸಿ ಮಾಡೋದೇನಿದೆ? + +ಕೊನೆಗೆ ಇಬ್ಬರು ಪೋಲೀಸರು ಬಳಲಿದ್ದ ನನ್ನನ್ನು ಒಳಗೆ ಕೊಂಡು ಹೋದರು. ಇನ್ಸ್ಪೆಕ್ಟರ್ ನನ್ನನ್ನು ನೋಡಿ ಕೇಳಿದ: + +“ಊಂ?”ಒಬ್ಬ ಪೋಲೀಸ್ ಹೇಳಿದ:“ನಂಬಿಯಾರ್ ಚೆನ್ನಾಗಿ ಕೊಟ್ಟರು.”ಪರವಾಗಿಲ್ಲ ಎಂಬಂತೆ ಇನ್ಸ್ಪೆಕ್ಟರ್ ಹೂಂಗುಟ್ಟಿದ. + +ಮತ್ತೊಬ್ಬ ಪೋಲೀಸ್ ನನ್ನ ಅಂಗಿಯೆಲ್ಲ ಕಳಚಿ ಎತ್ತರ, ದಪ್ಪ, ಗುರುತುಗಳನ್ನೆಲ್ಲ ಹೇಳಿದ. + +ಕೊನೆಗೆ ನಮ್ಮನ್ನು ಹನ್ನೊಂದು ಜನರನ್ನು ಲಾಕಪ್ಪಿಗೆ ಹಾಕಿದರು. ಸಿಮೆಂಟು ಹಾಕಿದ ಒಂದು ಸಣ್ಣ ಕೋಣೆ. ಅದರ ಒಂದು ಮೂಲೆಯಲ್ಲಿ ಉಗ್ರ ವಾಸನೆಯೊಂದಿಗೆ ಒಂದು ಕೊಡ ಮೂತ್ರ ಇತ್ತು. ಅವತ್ತು ನಮಗೆ ಆಹಾರ ಏನೂ ಸಿಗಲಿಲ್ಲ. ಭಯಂಕರ ಛಳಿಯ ಆ ರಾತ್ರಿ ನಮಗೆ ಮಲಗಲು ಚಾಪೆ ಕೂಡ ಇರಲಿಲ್ಲ. ಮರುದಿನ ಬೆಳಿಗ್ಗೆ ಏಳುವ ಹೊತ್ತಿಗೆ ಎಲ್ಲರ ಮುಖ ಊದಿಕೊಂಡಿತ್ತು. ನಡೆಯಲು ಸಾಧ್ಯವೇ ಆಗುತ್ತಿರಲಿಲ್ಲ. ಕೈಕೋಳ ತೊಡಿಸಿ ಕೋಳಿಕ್ಕೋಡ್ ಅಂಗಡಿ ಬೀದಿಯ ಮೂಲಕ ಗನ್ನು, ಖಡ್ಗಗಳ ಪೋಲೀಸ್ ರಕ್ಷಣೆಯಲ್ಲಿ ನಮ್ಮನ್ನು ಕೋರ್ಟಿಗೆ ಹಾಜರು ಪಡಿಸಿದರು. + +ಹನ್ನೊಂದು ದಿನಗಳ ರಿಮ್ಯಾಂಡಿನ ಮೇಲೆ ನಮ್ಮನ್ನು ಕೋಳಿಕೋಡ್ ಸಬ್ ಜೈಲಿಗೆ ಕಳಿಸಲಾಯಿತು. 270 ಮುಷ್ಟಿಯಿಂದ ಹೊಡೆದೂ ಹೊಡೆದು ನಂತರ ಮೊಣಕೈಯಿಂದ ನನ್ನ ಬೆನ್ನಿಗೆ ಗುದ್ದಿದ್ದ ಎಂದು ಗೆಳೆಯರು ಹೇಳಿದರು. ಎಣ್ಣೆ ಹಾಕಿ ತಿಕ್ಕಿದ ಒಬ್ಬ ಧರ್ಮಭಟ. ಆದರೂ, ಒಂಬತ್ತು ಸ್ಥಳಗಳಲ್ಲಿ ರೂಪಾಯಿಯಗಲ ಕಪ್ಪು ಗುರುತು ಮೂಡಿದೆ ಎಂದು ಹೇಳಿದ. + +ನನಗೆ ಮೂರು ತಿಂಗಳ ಕಠಿಣ ಸಜೆ ಸಿಕ್ಕಿತು. ಆದ್ದರಿಂದ ನನ್ನನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ಹಾಕಿದರು. ಟಿ. ಪ್ರಕಾಶಂ, ಬಾಟ್ಲಿವಾಲಾ, ಇ. ಮೊಯಿದು ಸಾಹೇಬ್ ಮೊದಲಾದ ಸುಮಾರು ಆರುನೂರು ರಾಜಕೀಯ ಖೈದಿಗಳು ಅಲ್ಲಿದ್ದರು. ಜೈಲಿನ ಊಟ ತುಂಬಾ ಕಳಪೆಯಾಗಿತ್ತು. ಗಂಜಿಯಲ್ಲಿ ಹುಳಗಳು ಹೀರೇಕಾಯಿಯಂತೆ ತೇಲುತ್ತಿದ್ದವು. ಅದನ್ನು ತೆಗೆದು ಹಾಕಿ ಗಂಜಿ ಕುಡಿಯುವುದು. ಹೊರಗಿನ ಸುದ್ದಿ ನಮಗೆ ತಲುಪುತ್ತಿದ್ದದ್ದು ಹೊಸದಾಗಿ ಶಿಕ್ಷಿಸಲ್ಪಟ್ಟ ಖೈದಿಗಳಿಂದ. ಈ ನಡುವೆ ಭಗತ್ ಸಿಂಗ್ ಮತ್ತು ಸಂಗಾತಿಗಳನ್ನು ಗಲ್ಲಿಗೇರಿಸಿದ ಸುದ್ದಿ ತಿಳಿದು ನಾವೆಲ್ಲ ಮೂರು ದಿನಗಳ ಕಾಲ ಉಪವಾಸ ಕೂತೆವು. ನನ್ನ ಮೊದಲ ಉಪವಾಸ ವ್ರತ. ಮೂರನೆಯ ದಿನ ನೀರು ಕುಡಿದಾಗ ಗಂಟಲು ಒಡೆದಂತೆ ಅನ್ನಿಸಿತು. + +ಇಂಡಿಯಾದ ಹಲವು ಭಾಗಗಳಿಂದ ಬಂದಿದ್ದ ಖೈದಿಗಳು ಅಲ್ಲಿದ್ದರು. ಕ್ರಾಂತಿಕಾರಿಗಳು, ಅರಾಜಕತಾವಾದಿಗಳು, ಸೊಷಿಯಲಿಸ್ಟುಗಳು, ಕಮ್ಯುನಿಸ್ಟರು ಹೀಗೆ ಹಲವು ಆದರ್ಶವಾದಿಗಳು. ಎಲ್ಲರ ಗುರಿಯೂ ಭಾರತದ ಸ್ವಾತಂತ್ರ್ಯ. ತಿಂಗಳುಗಳು ಕಳೆದಾಗ ಗಾಂಧಿ-ಇರ್ವಿನ್ ಒಪ್ಪಂದಂತೆ ನಮ್ಮನ್ನೆಲ್ಲ ಬಿಡುಗಡೆಗೊಳಿಸಿದರು. ಹೊರಗಡೆ ಬಂದಾಗ ಎಲ್ಲಿಗೆ ಹೋಗುವುದು ಎಂದೇ ಯೋಚಿಸಿರಲಿಲ್ಲ. ನನ್ನ ಹಾಗೆ ಕಷ್ಟ ಪಟ್ಟಿದ್ದ ಧರ್ಮಭಟರು ಹಲವರಿದ್ದರು. ಬಹುತೇಕರಿಗೆ ರೈಲ್ವೆ ಪಾಸ್ ಕೂಡ ಸಿಕ್ಕಿರಲಿಲ್ಲ. + +ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ. ಆರಡಿ ಎತ್ತರದ ಒಬ್ಬ ರಾಕ್ಷಸ. ನಾನು ಹೊಡೆದರೆ ಆತನಿಗೆ ನಾಟದು. ಸಣ್ಣ ಚೂರಿಯಿದ್ದಿದ್ದರೆ ಎದೆಗೆ ಇರಿದು ಗೀರಬಹುದಿತ್ತು! ‘ಅಲ್ ಅಮೀನ್’ ಲಾಡ್ಜಿನಿಂದ ಒಂದು ಚೂರಿಯನ್ನು ಎಗರಿಸಿದ್ದೂ ಆಯಿತು. ಅದನ್ನು ಹಿಡಿದುಕೊಂಡು ಹೋಗುತ್ತಿದ್ದಾಗ ದಾರಿಯಲ್ಲಿ ಮಿಸ್ಟರ್ ಅಚ್ಚುತನ್ ಸಿಕ್ಕಿದರು. ಅವರು ಆಶ್ಚರ್ಯದಿಂದ ಕೇಳಿದರು: + +“ಹೋಗಿಲ್ವಾ?”ಇಲ್ಲವೆಂದೆ.“ಮನೆಗೆ ಹೋಗಿ ಬಾಪಾ ಉಮ್ಮನನ್ನು ನೋಡುವುದಿಲ್ಲವೇ?” + +ನಾನು ಹೇಳಿದೆ: “ಅದಕ್ಕೂ ಮುಂಚೆ ನನಗೊಂದು ಕೆಲಸ ಮುಗಿಸಲಿಕ್ಕುಂಟು.” ವಿಷಯಗಳನ್ನೆಲ್ಲ ಅವರಿಗೆ ಹೇಳಿದೆ. ಅವರು ನನ್ನನ್ನು ಮನಾಂಚಿರ ಕೊಳದ ಬಳಿ ಕರೆದುಕೊಂಡು ಹೋಗಿ ಶಾಂತವಾಗಿ ಹೇಳಿದರು: + +“ನೀವೂ ಒಬ್ಬ ಸತ್ಯಾಗ್ರಹಿಗಳಾ?” ನಂತರ ಗಾಂಧೀಜಿಯ ಹಲ್ಲು ಹೋದ ಕತೆಯನ್ನು ಹೇಳಿದರು. + +“ಮತ್ತೆ ನೀವು ಕೊಲ್ಲುವುದೇ ಆಗಿದ್ದರೆ ಬದುಕಲು ಅರ್ಹತೆ ಇರುವ ಯಾವೊಬ್ಬ ಪೋಲಿಸನೂ ಈಗ ಇಲ್ಲ. ಪೋಲೀಸರೆಂದರೆ ಈಗಿನ ಆಡಳಿತದಿಂದ ಬೇರ್ಪಡಿಸಲಾಗದ ಒಂದು ಸಂಗತಿ. ಸರಕಾರದ ದಾಳಗಳು ಮಾತ್ರ ಈ ಬಡಪಾಯಿಗಳು. ಅವರನ್ನು ಬಯ್ಯುತ್ತಾ ಕೂತರೆ ಏನು ಬಂತು? ಕ್ಷಮಿಸು. ಈಗ ಮನೆಗೆ ಹೋಗು.” + +ಮಿಸ್ಟರ್ ಅಚ್ಚುತನ್ ಅವರೇ ನನ್ನನ್ನು ಗಾಡಿ ಹತ್ತಿಸಿದರು. ಎರ್ನಾಕುಳಂ ಬಂದು ಒಂದು ತಿಂಗಳು ಮುಸ್ಲಿಂ ಹಾಸ್ಟೆಲಲ್ಲಿ ತಂಗಿದೆ. ಮನೆಗೆ ಹೋಗಲು ನಾಚಿಕೆ. ನಿರಾಶೆ, ಬೇಸರ ಮತ್ತೆ ಸೋಮಾರಿತನ! ಕೊನೆಗೆ, ಒಂದು ರಾತ್ರಿ ಬೋಟ್ ಹತ್ತಿ ವೈಕ್ಕಂ ತಲುಪಿದೆ. ಅಲ್ಲಿಂದ ತಲಯೋಲಪ್ಪರಂಬಿಗೆ ನಡೆದೆ. ನಾಲ್ಕೈದು ಮೈಲುಗಳು. ಕತ್ತಲ ರಾತ್ರಿ. ಹಾವುಗಳು ತುಂಬಿರುವ ದಾರಿ. ಶ್ರುವೇಲಿಕುನ್ನು ಎಂಬಲ್ಲಿ ಮಾವಿನ ಕೊಂಬೆಗೆ ನೇಣು ಬಿಗಿದು ಯಾರೋ ಸತ್ತಿದ್ದರು. ರಾತ್ರಿ ಮೂರು ಗಂಟೆ ಕಳೆದಿತ್ತು. ನಾನು ಮನೆಯಂಗಳ ತಲುಪಿದಾಗ “ಯಾರದು?” ಎಂದು ಉಮ್ಮ ಕೇಳಿದರು. ನಾನು ವರಾಂಡ ಹತ್ತಿದೆ. ಉಮ್ಮ ದೀಪ ಹಚ್ಚಿದರು. ಏನೂ ಸಂಭವಿಸಿಯೇ ಇಲ್ಲವೆನ್ನುವಂತೆ ಉಮ್ಮ ಕೇಳಿದರು: + +“ಏನಾದ್ರೂ ತಿಂದಿದ್ದೀಯಾ ಮಗಾ?” + +ನಾನು ಸುಮ್ಮನಿದ್ದೆ. ದುಃಖ ಉಮ್ಮಳಿಸುತ್ತಿತ್ತು. ಲೋಕ ನಿದ್ರೆಯಲ್ಲಿ ಮುಳುಗಿದೆ. ನನ್ನ ಉಮ್ಮಾ ಮಾತ್ರ ನಿದ್ದೆ ಬಿಟ್ಟು ಕೂತಿದ್ದಾರೆ! ನೀರು ಮತ್ತು ಬಿಂದಿಗೆ ತಂದಿಟ್ಟು ಕೈಕಾಲು ತೊಳೆಯಲು ಹೇಳಿದರು. ನಂತರ ಊಟದ ತಟ್ಟೆ ತಂದಿಟ್ಟರು. ಬೇರೇನೂ ಕೇಳಲಿಲ್ಲ. + +ನನಗೆ ಆಶ್ಚರ್ಯ. “ನಾನು ಇವತ್ತೇ ಬರುತ್ತೇನೆ ಅಂತ ಉಮ್ಮಾಗೆ ಹೇಗೆ ಗೊತ್ತಾಯಿತು?” + +ಉಮ್ಮ ಹೇಳಿದರು: “ಓ.. ಅನ್ನ ಸಾರು ಮಾಡಿಟ್ಟು ನಾನು ದಿನಾ ಕಾಯುತ್ತೇನೆ.” + +ಯಾವ ಭಾವೋದ್ವೇಗವೂ ಇಲ್ಲದ ಒಂದು ಮಾತು. ನಾನಿಲ್ಲದಿದ್ದ ಅಷ್ಟೂ ರಾತ್ರಿಗಳಲ್ಲಿ ಅಮ್ಮ ನಿದ್ದೆ ಬಿಟ್ಟು ನನಗಾಗಿ ದಾರಿ ಕಾಯುತ್ತಿದ್ದರು. ವರ್ಷಗಳು ಮತ್ತೆಯೂ ಉರುಳಿದವು. ಬದುಕಿನಲ್ಲಿ ಹಲವು ಸಂಗತಿಗಳು ಬಂದು ಹೋದವು. + + + +ಅಮ್ಮ ಇಂದೂ ಮಗನ ದಾರಿ ಕಾಯುತ್ತಾಳೆ: + +“ಮಗನೇ, ನಮಗೆ ನಿನ್ನನ್ನೊಮ್ಮೆ ನೋಡಬೇಕು…” + +ಊರು ದಕ್ಷಿಣ ಕನ್ನಡದ ವಿಟ್ಲ. ಹೊಟ್ಟೆಪಾಡು ಕೇರಳದ ಕಲ್ಲಿಕೋಟೆಗೆ ಕಟ್ಟಿ ಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ \ No newline at end of file diff --git a/Kenda Sampige/article_302.txt b/Kenda Sampige/article_302.txt new file mode 100644 index 0000000000000000000000000000000000000000..092de220377629c01e8d03bf1e2b8dc6849134ee --- /dev/null +++ b/Kenda Sampige/article_302.txt @@ -0,0 +1,35 @@ +byಕೆಂಡಸಂಪಿಗೆ|Mar 9, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ…” + +byಡಾ. ಬಿ. ಜನಾರ್ದನ ಭಟ್|Mar 8, 2020|ವಾರದ ಕಥೆ,ಸಾಹಿತ್ಯ| 0 Comments + +“ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ… “ + +byಶ್ರೀದೇವಿ ಕೆರೆಮನೆ|Mar 2, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ….” + +byದರ್ಶನ್ ಜೆ|Mar 1, 2020|ವಾರದ ಕಥೆ,ಸಾಹಿತ್ಯ| 0 Comments + +“ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ…” + +byಓ.ಎಲ್. ನಾಗಭೂಷಣ ಸ್ವಾಮಿ|Feb 24, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು…” + +byಡಾ. ಬಿ. ಜನಾರ್ದನ ಭಟ್|Feb 23, 2020|ವಾರದ ಕಥೆ,ಸಾಹಿತ್ಯ| 0 Comments + +“ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು….” + +byಆಶಾ ಜಗದೀಶ್|Feb 17, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ.” + +byಎಚ್ ಆರ್ ರಮೇಶ್|Feb 16, 2020|ವಾರದ ಕಥೆ,ಸಾಹಿತ್ಯ| 1 Comment + +“ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ…” + +byಕೆಂಡಸಂಪಿಗೆ|Feb 10, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಏಕತಾರಿ ಕತೆಯೊಳಗ ಉಪಮೆ ಹಾಗೂ ಹೋಲಿಕೆಗಳು ತುಂಬಿ ತುಳಕತಾವ. ಕಾಂಡಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದಾನೆ, ಮುರುದು ಮುಟಗಿಮಾಡಿ ನುಂಗಿ ನೀರ ಕುಡಿತಿದ್ರು, ಪಡಸಾಲ್ಯಾಗ ಕುಂತಾವ ಎದ್ದು ಹೊಲಕ ಹೋದವರಂಗ ಹೋಗಿ ಬಿಟ್ಟ ನೋಡ್ರಿ, ಮಳಿಯಪ್ಪ ಗವಿ ಸೆರಿದವರಮಗ ರೈತರ ಕೂಡಾ ಕಣಮುಚಗಿ ಆಟ ಆಡಾಕ ಸುರು ಮಾಡಿದ..” \ No newline at end of file diff --git a/Kenda Sampige/article_303.txt b/Kenda Sampige/article_303.txt new file mode 100644 index 0000000000000000000000000000000000000000..01bfeaae19c6fa81fd2b39d1b0f4c5d9a1cda72b --- /dev/null +++ b/Kenda Sampige/article_303.txt @@ -0,0 +1,31 @@ + + +ಕೈಲಾಸ ಮಾನಸ ಯಾತ್ರೆಯ ಕುರಿತು ಈಗಾಗಲೇ ಬಹಳಷ್ಟು ಪುಸ್ತಕಗಳು ಬಂದಿವೆ. ಕೈಲಾಸ ಪರ್ವತದ ಯಾತ್ರೆಗೆ ಹೋಗಿಬಂದ ಬಹಳಷ್ಟು ಜನ ಇದರ ಕುರಿತು ಬರೆದಿದ್ದಾರೆ. ಅದರಲ್ಲೂ ಸಾಹಿತ್ಯದ ಕಡೆ ಒಲವಿರುವ ಬಹಳಷ್ಟು ಜನ ತಮ್ಮ ಮೊದಲ ಬರವಣಿಗೆಯನ್ನು ಪ್ರಾರಂಭಿಸಿದ್ದೇ ಕೈಲಾಸದ ಯಾತ್ರೆಯ ಕುರಿತು ಬರೆಯುವುದರಿಂದ. ಅಂತೆಯೇ ಶ್ರೀಕೃಷ್ಣ ಎನ್ ಬುಗಟ್ಯಾಗೋಳ ಬರೆದಿರುವುದೂ ಕೂಡ ಮೊದಲ ಸಲವೇ. ಆದರೆ ಎಲ್ಲಿಯೂ ವಿಷಯ ತಪ್ಪದಂತೆ ತಮ್ಮ ನೆನಪಿನ ಆಳದಿಂದ ಪ್ರತಿಯೊಂದನ್ನೂ ಹೆಕ್ಕಿ ತೆಗೆದು ಮರು ನಿರೂಪಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬೆಂಗಳೂರಿನ ಅಕ್ಷರ ಮಂಟಪ ಪ್ರಕಾಶನವು ಇದನ್ನು ಚಂದದ ಬಣ್ಣದ ಚಿತ್ರಗಳೊಂದಿಗೆ ಮುದ್ರಿಸಿ ಓದುಗರಿಗೆ ತಲುಪಿಸಿದೆ. + +ಬಹಳಷ್ಟು ಕೈಲಾಸ ಯಾತ್ರೆಯ ಪುಸ್ತಕಗಳನ್ನು ಇಲ್ಲಿಯವರೆಗೆ ಓದಿದ್ದೇನೆ. ನಿರ್ಜೀವ ವರ್ಣನೆ ಹಾಗೂ ಭಕ್ತಿಯ ಪರಾಕಾಷ್ಟೆಯನ್ನಷ್ಟೇ ನಾವಿಲ್ಲಿ ಕಾಣುತ್ತಿರುವುದು. ಆದರೆ ‘ನಾ ಕಂಡ ಕೈಲಾಸ’ ಪುಸ್ತಕದಲ್ಲಿ ಭಕ್ತಿಯ ಉತ್ತುಂಗದಲ್ಲಿ ಉಳಿದ್ದನ್ನೆಲ್ಲ ಮರೆಮಾಚುವ ಮೂಢತನವಿಲ್ಲ. ಇದ್ದುದನ್ನು ಇದ್ದಹಾಗೇ ದಾಖಲಿಸುವ, ಕೆಲವೊಮ್ಮೆ ಇದನ್ನು ಸ್ವಲ್ಪ ಮರೆಮಾಚಬಹುದಿತ್ತೇನೋ ಎಂದು ಓದುಗರೇ ಅಂದುಕೊಳ್ಳುವಷ್ಟರ ಮಟ್ಟಿಗೆ ಎಲ್ಲವೂ ಖುಲ್ಲಾಂಖುಲ್ಲ. ಆದರೆ ಎಲ್ಲಿಯೂ ಯಾತ್ರೆಯ ಚಿಕ್ಕ ಚಿಕ್ಕ ವಿವರಣೆಗಳನ್ನೂ ಬಿಡದಂತೆ ನಿಖರವಾಗಿ ದಾಖಲಿಸಿದ್ದಾರೆ. + +(ಶ್ರೀಕೃಷ್ಣ ಎನ್. ಬುಗಟ್ಯಾಗೋಳ) + +ಯಾತ್ರೆಯ ಸಮಯದಲ್ಲಿ ನರೇಶ ಎಂಬ ಗುಜರಾತಿ ದಂಪತಿಗಳು ಕಳೆದ ಹದಿನೈದು ವರ್ಷಗಳಿಂದ ಬೆಂಗಳೂರಿನಲ್ಲಿ ಸಾಪ್ಟ್ವೇರ್ ಇಂಜಿನಿಯರ್ ಗಳಾಗಿದ್ದವರಾದರೂ ಅವರಿಗೆ ಒಮ್ಮೆಯೂ ಕನ್ನಡ ಮಾತನಾಡಬೇಕಾದ ಪ್ರಸಂಗ ಬರಲೇ ಇಲ್ಲವಂತೆ ಎಂಬುದನ್ನು ತೀರಾ ಬೇಸರಿಂದ ದುಗುಡದಿಂದ ಹೇಳಿಕೊಳ್ಳುತ್ತಾರೆ ಕೃಷ್ಣ. ನಾವು ಕನ್ನಡಿಗರು ಅದೆಷ್ಟು ಉದಾರಿಗಳು. ಹದಿನೈದು ವರ್ಷಗಳಿಂದಲೂ ಬೆಂಗಳೂರಿನಲ್ಲಿದ್ದೂ ಕನ್ನಡವನ್ನು ಒಂದು ಸಲವೂ ಮಾತನಾಡಬೇಕಾದ ಅನಿವಾರ್ಯತೆ ಸೃಷ್ಟಿಸಿದವರು ಎಂದು ತಕ್ಷಣ ಅನ್ನಿಸಿಬಿಡುತ್ತದೆ. + +ಕೈಲಾಸ ಪರ್ವತಕ್ಕೆ ಯಾತ್ರೆ ಹೊರಡುವ ಮುನ್ನ ಮಾಡಬೇಕಾದ ವೀಸಾ, ಪಾಸ್ ಪೋರ್ಟ್ ವಿವರಣೆಗಳಿಂದ ಹಿಡಿದು ಟ್ರಾವೆಲ್ ಏಜನ್ಸಿಯವರ ಮೋಸದ ತನಕವೂ ಪ್ರತಿಯೊಂದು ವಿವರವೂ ಇಲ್ಲಿ ದಾಖಲಾಗಿದೆ. ಹೀಗಾಗಿ ಮುಂದೆ ಯಾತ್ರೆಗೆ ಹೋಗುವವರಿಗೆ ಬೇಕಾದ ಅತ್ಯುತ್ತಮ ಗೈಡ್ ನಂತೆ ಈ ಪುಸ್ತಕ ರಚಿತವಾಗಿದೆ. + +ಕೈಲಾಸ ಮಾನಸ ಯಾತ್ರೆಯಲ್ಲಿ ನ್ಯಾಲಮ್ ಎನ್ನುವ ಟಿಬೇಟಿನ ಕೊನೆಯ ಸ್ಥಳದ ಬಗ್ಗೆ ನೀಡಿರುವ ವಿವರಣೆ ಗಮನ ಸೆಳೆಯುವಂತಿದೆ. ನ್ಯಲಮ್ ಎಂದರೆ ನರಕ ಎಂದರ್ಥವಂತೆ. ಕೈಲಾಸ ಎಂಬ ಸ್ವರ್ಗ ಸದೃಶ ಸ್ಥಳವನ್ನು ನೋಡಬೇಕೆಂದರೆ ನರಕದ ದರ್ಶನ ಅನಿವಾರ್ಯ. ಒಂದಿಷ್ಟೂ ಅನುಕೂಲವಿಲ್ಲದ ನ್ಯಾಲಮ್ ನಲ್ಲಿ ಮನಬಂದಂತೆ ಹಣ ಸುಲಿಯುವ ಬಗ್ಗೆ ಕೂಡ ಲೇಖಕರು ವಿವರವಾಗಿ ಬರೆಯುತ್ತಾರೆ. + +ಕೋಶಿ ಎಂಬ ಬಿಹಾರದ ‘ಕಣ್ಣೀರು’ ಎಂಬ ಅರ್ಥ ಬರುವ ಒಂದೇ ನದಿಯ ಎರಡು ಬದಿಗಳ ವ್ಯತ್ಯಾಸದ ಬಗ್ಗೆ ಲೇಖಕರ ವಿವರಣೆ ಅದ್ಭುತವಾಗಿದೆ. ಕೋಶಿಯ ಒಂದು ಬದಿಯಲ್ಲಿ ಏನೇನೂ ಅನುಕೂಲವಿಲ್ಲದ, ರಸ್ತೆ ಕೂಡ ಸರಿಯಾಗಿಲ್ಲದ ಟಿಬೇಟ್ ಇದೆ. ಇನ್ನೊಂದು ಕಡೆ ಅದ್ಭುತವಾದ ರಸ್ತೆ ವ್ಯವಸ್ಥೆಯನ್ನು ಹೊಂದಿದ ಸುಸಜ್ಜಿತ ಕಟ್ಟಡಗಳನ್ನು ಹೊಂದಿರುವ ಸುಂದರ ಹಳ್ಳಿಯ ಚೀನಾವಿದೆ. ಅತಿಹೆಚ್ಚು ಚಳಿ ಇರುವ ನ್ಯಾಲಮ್ ಸಮುದ್ರಮಟ್ಟದಿಂದ ೧೨೩೦೦ ಅಡಿ ಎತ್ತರವಿದೆ. ಕೈಯ್ಯಲ್ಲಿ ಹಿಡಿದ ವಸ್ತು ಕೆಳಗೆ ಬಿದ್ದರೂ ಗೊತ್ತಾಗದಷ್ಟು ಕೈ ಮರಗಟ್ಟುತ್ತದೆಯೆಂದ ಮೇಲೆ ಮೂಗಿನಿಂದ ಹರಿದ ಸಿಂಬಳ ಅಲ್ಲಲ್ಲಿಯೇ ಹಿಮಮಣಿಯಾಗಿ ಮೂಗಿನಿಂದ ಕೆಳಗೆ ಜೋತಾಡುತ್ತ ಹೆಪ್ಪುಗಟ್ಟಿದ್ದನ್ನೂ ಹೇಳುತ್ತಾರೆ. + + + +ತೀರಾ ವಾಸ್ತವಕ್ಕೆ ಹತ್ತಿರವಾಗಿ ಬರೆದಿದ್ದರೂ ಎಲ್ಲಿಯೂ ಭಕ್ತಿಗೆ ಚ್ಯುತಿ ಬರದಂತೆ ಲೇಖಕರು ಎಚ್ಚರಿಕೆ ವಹಿಸಿದ್ದಾರೆ. ನಮಗೆ ಹೇಗೆ ಶಿವನ ವಾಸಸ್ಥಾನವಾದ ಕೈಲಾಸ ಪರ್ವತ ಶ್ರೇಷ್ಠ ಎನ್ನಿಸಿಕೊಳ್ಳುತ್ತದೆಯೋ ಹಾಗೆಯೇ ಟಿಬೇಟಿಯನ್ನರಿಗೂ ಕೈಲಾಸ ಪರ್ವತ ಮತ್ತು ಮಾನಸ ಸರೋವರ ಪವಿತ್ರವೇ. ಟಿಬೇಟಿಯನ್ನರು ಅನುಸರಿಸುವ ಬೌದ್ಧ ಧರ್ಮದ ಪ್ರಕಾರ ಮಾನಸ ಸರೋವರ ಬುದ್ಧನ ಜನ್ಮ ವೃತ್ತಾಂತದೊಂದಿಗೆ ಬೆಸೆದುಕೊಂಡಿದೆ. ಬುದ್ಧನ ತಾಯಿಯನ್ನು ಕರೆತಂದು ದೇವತೆಗಳು ಈ ಸರೋವರದಲ್ಲಿ ಸ್ನಾನ ಮಾಡಲು ಬಿಡುತ್ತಾರೆ. ಆ ಮಹಾನ್ ತಾಯಿ ಶುದ್ಧ ಮನಸ್ಸಿನಿಂದ ಸ್ನಾನ ಮಾಡಿ ಶುದ್ಧಳಾಗಿ ಮೇಲೇಳುತ್ತಿದ್ದಂತೆ ಕೈಲಾಸ ಪರ್ವತದ ಕಡೆಯಿಂದ ಐರಾವತದ ಕಡೆಯಿಂದ ಓಡಿಬಂದು ತನ್ನ ಗರ್ಭವನ್ನು ಪ್ರವೇಶಿಸುವುದನ್ನು ಕಾಣುತ್ತಾಳೆ. ಇದರಿಂದಾಗಿ ಮಾನಸ ಸರೋವರದ ಸುತ್ತಲೂ ಒಂಭತ್ತು ಬೌದ್ಧ ಪ್ರಾರ್ಥನಾ ಮಂದಿರಗಳಿವೆ. ಬೌದ್ಧ ಧರ್ಮೀಯರು ಕಾಲ್ನಡಿಗೆಯಿಂದಲೇ ಮಾನಸ ಸರೋವರವನ್ನು ಪ್ರದಕ್ಷಿಣೆಗೈಯ್ಯುತ್ತಾರೆ. ಜೈನರ ಭವಾವಳಿಗಳ ಪ್ರಕಾರ ಇದು ಜೈನರಿಗೂ ಪವಿತ್ರ ಸ್ಥಳ. ಹೀಗಾಗಿ ಹಿಂದುಗಳಷ್ಟೇ ಅಲ್ಲದೇ ಬೌದ್ಧರು, ಜೈನರೂ ಇಲ್ಲಿ ಪವಿತ್ರ ಯಾತ್ರೆಗೆಂದು ಬರುತ್ತಾರೆ ಎಂಬುದನ್ನು ಶ್ರದ್ಧಾ ಭಕ್ತಿಗಳಿಂದ ಹೇಳುತ್ತಾರೆ. ಇದರೊಟ್ಟಿಗೆ ಹೋಮ ನಡೆದ ನಂತರವಷ್ಟೇ ಪಕ್ಕದಲ್ಲಿಯೇ ಹಿಮಚ್ಛಾದಿತವಾಗಿರುವ ಕೈಲಾಸ ಪರ್ವತ ಸ್ಪಷ್ಟವಾಗಿ ಗೋಚರಿಸುತ್ತದೆ ಎಂಬುದನ್ನೂ ಅಷ್ಟೇ ಭಕ್ತಿಯಿಂದ ಒಪ್ಪಿಕೊಳ್ಳುತ್ತಾರೆ. + +ಮಾನಸ ಸರೋವರದ ನಂತರ ರಾಕ್ಷಸ ಸ್ಥಳ ಎಂಬ ಸರೋವರವೊಂದಿದೆ. ಅಲ್ಲಿ ಸ್ನಾನ ಮಾಡಿ ರಾವಣನು ಶಿವನನ್ನು ಕುರಿತು ತಪಸ್ಸನ್ನು ಆಚರಿಸಿದನಂತೆ. ಇದು ವಿಕಾರವಾಗಿದ್ದು ವಿಲಕ್ಷಣವಾಗಿದೆ ಎನ್ನುತ್ತಾರೆ. ಅದರ ನೀರೂ ಸೋಕಬಾರದು ಎಂಬುದು ಸ್ಥಳೀಯರ ಹಾಗೂ ಹಿಂದುಗಳ ನಂಬಿಕೆ. ನಿಶೆ ಮತ್ತು ನೆರಳು ಆವರಿಸಿಕೊಂಡಿರುವ ಈ ಸರೋವರಕ್ಕೆ ಕೈಲಾಸ ಪರ್ವತದಲ್ಲಿ ಹುಟ್ಟುವ ನದಿಗಳೆಲ್ಲ ಬಂದು ಸೇರುತ್ತವೆಯಾದರೂ ಯಾವ ಜೀವಿಯೂ ಈ ಸರೋವರದ ಬಳಿ ಸುಳಿಯದ ವಿಲಕ್ಷಣತೆಯನ್ನು ಲೇಖಕರು ವಿವರಿಸಿದ್ದಾರೆ. + +ಎಣ್ಣೆಗಲಸು ಕಾಡಿಗೆಯ ಬಣ್ಣದವ ನೀನು ನಗದ ತುದಿಗೆಕೋರೆ ಹಲ್ಲಗೆರೆಯಂತೆ ಕೊರೆದ ಕೈಲಾಸ ಕೀಳು ಬದಿಗೆ + +ಬೆಳಿಗ್ಗೆ ಬೆಳಿಗ್ಗೆ ಕೈಲಾಸ ಪರ್ವತವನ್ನು ಕಂಡು ವರ್ಣಿಸುವ ಲೇಖಕರು ಕಾಳಿದಾಸನ ಮೇಘದೂತ ಮಹಾಕಾವ್ಯದಲ್ಲಿ ಹೇಳುತ್ತಾನೆ. ಲೇಖಕರು ಪುಸ್ತಕದುದ್ದಕ್ಕೂ ಮೇಘದೂತ ಕಾವ್ಯದಲ್ಲಿ ಬರುವ ಮಾನಸ ಸರೋವರ ಹಾಗೂ ಕೈಲಾಸ ಪರ್ವತದ ವರ್ಣನೆಯನ್ನು ಹೇಳುತ್ತ ಹೋಗುತ್ತಾರೆ. ಒಂದೆಡೆಜಂಬೂದ್ವೀಪ; ಸಮಸ್ತಾನಾಮೇತಾಷಾಂ ಮಧ್ಯಸಂಸ್ಥಿತ;//ತಯ್ಯಾಪಿ ಮೇರುರ್ಮೈತ್ರೇಯ ಮಧ್ಯೇ ಕನಕಪರ್ವತ?/ಎನ್ನುವ ಶ್ರೀ ವಿಷ್ಣು ಪುರಾಣದ ಶ್ಲೋಕವನ್ನೂ ಉದ್ಘರಿಸುತ್ತಾರೆ. + +ಇಲ್ಲಿ ಲೇಖಕರು ಕೈಲಾಸ ಪರ್ವತದ ಕುರಿತಾಗಿ ತಮ್ಮ ಮನಸ್ಸಿನೊಂದಿಗೆ ಮಾತನಾಡುವ ಒಂದು ವಿಶಿಷ್ಟವಾದ ಅಧ್ಯಾಯವಿದೆ. ಅದು ಇಡೀ ಪುಸ್ತಕಕ್ಕೆ ಮೆರಗು ನೀಡಿದಂತೆ ಕಳಶಪ್ರಾಯವಾಗಿದೆ. ತಮ್ಮ ಮನಸ್ಸಿನೊಂದಿಗೇ ಮಾತನಾಡುತ್ತ ತಮ್ಮ ಮನಸ್ಸನ್ನು ಗುರುವಾಗಿ ಇಟ್ಟುಕೊಂಡು ಇಡೀ ಕೈಲಾಸ ಪರ್ವತದ ಕುರಿತಾಗಿ ಭಾರತದ ಪುರಾಣಗಳಲ್ಲಿ ಇರುವ ನಂಬಿಕೆಯನ್ನು ಹೇಳುತ್ತಾರೆ. ಇಡೀ ಪುಸ್ತಕವೇ ಈ ಒಂದು ಅಧ್ಯಾಯದಿಂದಾಗಿ ಕಳೆಗಟ್ಟಿದೆ. + +ಕೈಲಾಸದ ಪರಿಕ್ರಮಣ, ಅಲ್ಲಿ ಸಿಗುವ ತಮ್ಜು ಮತ್ತವಳ ಮನಕಲಕುವ ಕಥೆ ಹಾಗೂ ಎಲ್ಲಕ್ಕಿಂತ ಹೆಚ್ಚಾಗಿ ಅವರ ದಾಂಪತ್ಯಗೀತ ಇಡೀ ಪುಸ್ತಕವನ್ನು ನೀರಸವಾದ ಪ್ರವಾಸ ಕಥನ ಅಥವಾ ಕೈಲಾಸ ಮಾನಸದ ಬರಡು ವಿವರಣೆಗಳಿಂದ ಹೊರತುಪಡಿಸಿ ಜೀವ ತುಂಬುವಲ್ಲಿ ಯಶಸ್ವಿಯಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಇಡೀ ಪುಸ್ತಕದಲ್ಲಿ ಬರುವ ಬಣ್ಣಬಣ್ಣದ ಚಿತ್ರಗಳು ಪುಸ್ತಕದ ಜೀವಂತಿಕೆಯನ್ನು ಹೆಚ್ಚಿಸಿದೆ. ಸುಮಾರು ಎಂಟು ಹತ್ತು ತಿಂಗಳು ಈ ಪುಸ್ತಕಕ್ಕಾಗಿ ಕಷ್ಟಪಟ್ಟಿದ್ದೇನೆ ಅಕ್ಕ ಎನ್ನುತ್ತ ಇಷ್ಟೆಲ್ಲ ಮುತುವರ್ಜಿ ವಹಿಸಿ ಇಡೀ ಪುಸ್ತಕವನ್ನು ಅಕ್ಷರ ಮಂಟಪದ ಮೂಲಕ ಪ್ರಕಟಿಸಿದ ಚೇತನ ಕಣಬೂರರಿಗೂ ನನ್ನ ಅಭಿನಂದನೆಗಳು ಸಲ್ಲುತ್ತವೆ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_304.txt b/Kenda Sampige/article_304.txt new file mode 100644 index 0000000000000000000000000000000000000000..0cd9dc64f7fdf0e70ce221563b4dafe292256aa0 --- /dev/null +++ b/Kenda Sampige/article_304.txt @@ -0,0 +1,121 @@ + + +“ಶೇಖರ, ನಮ್ಮಿಷ್ಟು ಮಂದಿಯ ಮಾತನ್ನು ಮೀರಿ ಹೋಗುವೆಯಾ?” ಎಂದ ಕೃಷ್ಣಮೂರ್ತಿ + +“ಹೋಗಿರೋ, ದೊಡ್ಡ ದೇಶಭಕ್ತರು ನೀವು! ಸತ್ಯಾಗ್ರಹವಂತೆ! ಸತ್ಯಾಗ್ರಹ! ಅದೇನು ಕಾಫಿ ಕುಡಿದು ಸಿಗರೇಟು ಸೇದಿ, ಮಜಾ ಮಾಡಿದಷ್ಟು ಸುಲಭವೆಂದು ತಿಳಿದಿರಾ? ಸ್ಟಡಿ ಮಾಡೋದು ಬಿಟ್ಟು ಇಲ್ಲದ ಒಣ ಉಸಾಬರಿ” – ಎಂದು ಪ್ರತ್ಯುತ್ತರವಿತ್ತ ಚಂದ್ರಶೇಖರ ಸಹಪಾಠಿಗಳನ್ನು ಅಲ್ಲೇ ಬಿಟ್ಟು ಅಭ್ಯಾಸದ ಪುಸ್ತಕಗಳೊಂದಿಗೆ ಮುನ್ನಡೆದ. ಅವರಲ್ಲಿ ಕೆಲವರು ಆತನನ್ನು ಕೂಗಿ ಹಿಂದೆ ಕರೆಯಲು, ದಳನಾಯಕ ಕೃಷ್ಣಮೂರ್ತಿ, “ಯಾರೊಬ್ಬರೂ ಕರೆಯಕೂಡದು ಅವನನ್ನು; ನೋಡೋಣ ಮುಂದೇನಾಗುವುದೆಂದು! ಗೇಟಿನ ಬಳಿ ಸುನಂದೆ ಇದ್ದಾಳೆ; ಅಲ್ಲಿ ಇಳಿದೀತು – ಈತನ ಜಂಭ” ಎಂದು ಕಟ್ಟಾಜ್ಞೆಯಿತ್ತ. + +ಸೆಂಚುರಿ ಕಾಲೇಜಿನ ಉನ್ನತ ಗೋಪುರದ ಗಂಟೆಯ ಗುಂಜಾರವು ಅಂತರಾಳದಲ್ಲಿ ಅಲೆ ಅಲೆಯಾಗಿ ತೇಲಿ ಮಾಯವಾಯಿತು. + +ವಿದ್ಯಾರ್ಥಿಯಾದ ಚಂದ್ರಶೇಖರನು ವೇಳೆಯಾದುದನ್ನರಿತು ಧಾವಿಸಿ ಬಂದು ಗೇಟಿನೊಳಗೆ ಕಾಲಿಸಿರಿದ್ದನಷ್ಟೆ – “ಶೇಖರ್” ಎಂಬ ಧ್ವನಿಯು ಅದೆತ್ತಣಿಂದಲೋ ಬಂದು ಕರ್ಣರಂಧ್ರವನ್ನು ಪ್ರವೇಶಿಸಿತು. ಕರೆದ ವ್ಯಕ್ತಿ ಯಾರೆಂದು ನಿಂತಲ್ಲೇ ಬೆರಗಾಗಿ ಅತ್ತಿತ್ತ ನೋಡತೊಡಗಿದ. + +“ತುಸು ನಿಲ್ಲಬೇಕು” ಎನ್ನುತ್ತ ಸುನಂದೆಯು ಆತನಿದ್ದಲ್ಲಿಗೆ ಬಂದಳು. + +“ಏಕೆ?” ಎಂದು ಕೇಳುವುದೊತ್ತಟ್ಟಿಗುಳಿದು ಶೇಖರನ ಮುಖಭಾವವೇ ಅದೊಂದು ಪ್ರಶ್ನಾರ್ಥಕ ಚಿಹ್ನವಾಗಿತ್ತು. + +“ಇದೋ ಈ ಬಳೆದೊಟ್ಟು ಮುನ್ನಡೆ; ಕೈಯಲ್ಲಿ ಅಂದವಾಗಿ ಶೋಭಿಸಬಹುದು” ಎಂದಳು. ಗಟ್ಟಿ ಚಿನ್ನದ ಜೋಡು ಬಳೆಯನ್ನು ಮುಂದಕ್ಕೆ ಚಾಚಿ ಹಿಡಿದಿದ್ದಳು ಸುನಂದೆ. ನಿನ್ನೆ ಕಾಲೇಜಿನ ಚರ್ಚಾ ಸಂಘದಲ್ಲಿ ತನ್ನೆದುರು ಭಾಗವಹಿಸಿ ವಾದಿಸಿದ ಇವಳು ಇಷ್ಟೊಂದು ಗಂಭೀರೆಯಾಗಿದ್ದಿಲ್ಲ. ಅಬ್ಬ, ಇಂದಿನ ಗಾಂಭೀರ್ಯವು ಬಹು ವಿಚಿತ್ರವಾಗಿದೆ! ಸಹಪಾಠಿಗಳ ಮಾತನ್ನು ಸುಲಭವಾಗಿ ಜಾಡಿಸಿಬಿಟ್ಟು, ಉಬ್ಬಿನಿಂದ ಬಂದಿದ್ದ ಶೇಖರ ಸುನಂದೆಯ ಇದಿರಲ್ಲಿ ತೆಪ್ಪಗಾಗಿ ಹೋದ. ಗೇಟಿನ ಹತ್ತಿರ ಅವಳ ನಾಯಕತ್ವದಲ್ಲಿ ಕಾಲೇಜು ಹುಡುಗಿಯರ ಒಂದು ತಂಡವೇರ್ಪಟ್ಟಿತು. ಪರಿಸ್ಥಿತಿಯ ಅರಿವಾಯಿತವನಿಗೆ. ಸತ್ಯಾಗ್ರಹ! ಅದರ ಒಂದಂಗವಾದ ಕಾಲೇಜು ಪಿಕೆಟಿಂಗ್. + +ಶೇಖರನಿಗಾದ ಮುಖಭಂಗವು ಅವನಲ್ಲಿ ಕ್ರೋಧವನ್ನು ಕೆರಳಿಸಿತು. “ಸುನಂದಾ, ಇದು ಮಕ್ಕಳಾಟವಲ್ಲವೆಂದು ತಿಳಿದಿರಲಿ; ಅದರಲ್ಲೂ ನಿಮಗೆ! ಹುಡುಗಿಯರಿಗೆ – ಇದು ಸಲ್ಲದ ಕೆಲಸ” ಎಂದು ಕಂಪಿತ ಸ್ವರದಲ್ಲಿ. + +“ಹುಡುಗಿಯರೇನು? ಹುಡುಗರೇನು? ಇದು ನಮ್ಮೆಲ್ಲರ ಕೆಲಸ” – ಅನುಯಾಯಿಗಳೊಂದಿಗೆ ಪಕ್ಕದಲ್ಲೇ ಬಂದು ನಿಂತಿದ್ದ ಕೃಷ್ಣಮೂರ್ತಿಯ ಉತ್ತರ. “ಎಪ್ಪತ್ತೆರಡರ ಬಾಪೂಜಿಯು ಭಾರತ ಸ್ವಾತಂತ್ರ್ಯ ಸಮರಕ್ಕೆ ಆಹ್ವಾನವಿತ್ತು ಕೈಬೀಸಿ ಕರೆಯುವಾಗ ಅದಕ್ಕೆ ‘ಓ’ ಕೊಡುವುದು ಮಕ್ಕಳಾಟವೇ? ಯುವ ಜನಾಂಗದ ಮಕುಟಮಣಿಗಳಂತಿರುವ ವಿದ್ಯಾರ್ಥಿಗಳೇ ಸಿದ್ಧರಾಗಿರಿ” ಎನ್ನುವಾಗ ಹಿಂಜರಿದು ನಿಲ್ಲುವುದು ನಮಗೆ ಲಾಂಛನವಲ್ಲವೇ? ಕೇಳಿರುವೆಯಾ ಶೇಖರ, ನಿನ್ನೆಯ ರೇಡಿಯೊ? ಬೊಂಬಾಯಿಯಲ್ಲಿ ಧುರೀಣರ ಬಂಧನ!” + +ಶೇಖರ ಕೇಳಿದ ವಿಸ್ಮಿತವಾಗಿ – “ಏನು? ಧುರೀಣರ ಬಂಧನ?” + +“ಆ ಬಂಧನದ ರೀತಿಯೆಂದರೆ ಸಾಮ್ರಾಜ್ಯಶಾಹಿಯ ಮರ್ದನ ನೀತಿ” ಎಂದಳು ಸುನಂದೆ. + +ಕಂಕುಳದಲ್ಲಿದ್ದ ಪುಸ್ತಕಗಳನ್ನು ಹತ್ತಿರದ ಕಲ್ಲು ಬೆಂಚಿನ ಮೇಲೆ ಮಡಗಿ ಬಂದ ಚಂದ್ರಶೇಖರ ಸಿನೆಮಾ ನಟನ ಠೀವಿಯಲ್ಲಿ ಕೈಕಟ್ಟಿ ಎದೆಯಗಲಿಸಿ ನೆರೆದಿದ್ದವರೊಡನೆ – ‘ಹಾಗಾದರೆ ಮುಂದೇನು’ ಎಂದು ಪ್ರಶ್ನಿಸಿದ. ‘ಸತ್ಯಾಗ್ರಹ!’ ಎಂದಿತು ವಿದ್ಯಾರ್ಥಿವೃಂದ. + +*** + +1942 ನೇ ಇಸವಿ ಅಗೋಸ್ತು ಗಲಭೆಯು ಭಾರತ ರಾಷ್ಟ್ರೇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನೇ ತೆರೆದಿದೆ. ದೇಶದಲ್ಲಿ ನವಕ್ರಾಂತಿಯ ಉಸಿರನ್ನು ಊದಿದೆ. ಆಗ ಜರಗಿದ್ದ ಯಾವತ್ತೂ ಕಾರ್ಯರಂಗಗಳಲ್ಲಿ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳು ಅತ್ಯಧಿಕವಾಗಿ ಪ್ರವೇಶಿಸಿದ್ದರಿಂದ ಅದಕ್ಕೆ ಕಳೆಯೇರಿತೆನ್ನಬಹುದು. + +‘ಕ್ವಿಟ್ ಇಂಡಿಯಾ’ (ಚಲೇ ಜಾವ್) ಈ ಮಾತು ಮಹಾತ್ಮಾಜಿಯವರ ಕಂಠದಿಂದ ಹೊರಟು ದೇಶದ ಉದ್ದಗಲಗಳಲ್ಲಿ ವ್ಯಾಪಿಸಿ ಪ್ರತಿಧ್ವನಿಸಿತು. ಅಗೋಸ್ತು 12 ನೇ ತಾರೀಕು ಬಾಪೂಜಿಯ ಪಟ್ಟ ಶಿಷ್ಯ ಮಹದೇವ ದೇಸಾಯಿಯವರ ಅಕಸ್ಮಾತ್ ನಿಧನ ವಾರ್ತೆಯು ಮಿಂಚಿನ ವೇಗದಿಂದ ಹಿಂದುಸ್ಥಾನದ ಮೂಲೆ ಮೂಲೆಗೂ ನುಗ್ಗಿತು. ಮುಖಂಡರ ಬಂಧನದ ನಿಮಿತ್ತ ದೇಶ ಸರ್ವತ ಹರತಾಳ, ಸಭೆ, ಮೆರವಣಿಗೆ ಮೊದಲಾದ ನಿಷೇಧ ಪ್ರದರ್ಶನಗಳು ನಡೆಯುತ್ತಲಿದ್ದು ಈ ದುರ್ವಾರ್ತೆಯು ಉರಿಯ ಮಧ್ಯೆ ಸ್ಫೋಟವಾದಂತಾಗಿ ಜನತೆ ಇನ್ನಷ್ಟು ಕೆರಳಿ ನಿಂತಿತು. + +ತೇಜನಗರದ ಗಾಂಧಿ ಮೈದಾನಿನಲ್ಲಿ ವಿದ್ಯಾಲಯಗಳಿಂದ ಹೊರಸಿಡಿದು ಬಂದಿದ್ದ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪ್ರಚಂಡ ಸಭೆ ಸೇರಿದ್ದರು. ಪಟ್ಟಣಿಗರೂ ಅದರಲ್ಲಿ ಭಾಗವಹಿಸಿದ್ದರು. ಸರಕಾರದ ದಬ್ಬಾಳಿಕೆಯನ್ನು ಖಂಡಿಸಿ ಸ್ಫೂರ್ತಿಯುಕ್ತ ಭಾಷಣಗಳಾಗುತ್ತಿದ್ದವು. ನೋಡಿದತ್ತ ಕೃಷ್ಣಮೂರ್ತಿ, ಚಂದ್ರಶೇಖರ, ಸುನಂದೆಯರ ಚಟುವಟಿಕೆಗಳೂ ಕಂಡುಬರುತ್ತಿದ್ದವು. ವಿದ್ಯಾರ್ಥಿ ಮುಖಂಡರವರು. + +ಶಾಂತಿರಕ್ಷಣೆಗೆಂದು ಸ್ವತಃ ಸುಪರಿಂಟೆಂಡೆಂಟರೇ ಅಶ್ವಾರೋಹೀ ರಿಜರ್ವ್ ಪೋಲೀಸ್ ಪಡೆಯೊಡನೆ ಬಂದು ಜನ ಚದುರಲು ಹುಕುಂ ಜಾರಿ ಮಾಡಿದರು. ಸತ್ಯಾಗ್ರಹಿಗಳು ಒಂದಿನಿತೂ ಅಲುಗಾಡಲಿಲ್ಲ. ಕ್ರಮದಂತೆ ಕಾನೂನಿನಂತೆ ಗಂಡಸರಿಗೆ ‘ಲಾಥೀ ಛಾರ್ಜ್’, ಸ್ತ್ರೀಯರಿಗೆ ‘ಬೆತ್ತದೇಟು’ ಬೀಳಲಾರಂಭಿಸಿತು. ಅಹಿಂಸಾ ಪರ ಶಾಂತ ಸತ್ಯಾಗ್ರಹವೆಲ್ಲಿ? ಶಸ್ತ್ರ ಸಹಿತವಾದ ಹೋರಾಟವೆಲ್ಲಿ? ಗುಬ್ಬಿಗೆ ಹೂಡಿದ ಬ್ರಹ್ಮಾಸ್ತ್ರ! ಮತ್ತರಾದ ಪೋಲೀಸರು ಮೈದಾನನ್ನು ರಣರಂಗವೆಂದೇ ಭಾವಿಸಿ ಕೈದೊಣ್ಣೆಗಳನ್ನು ಗರಗರನೆ ತಿರುಗಿಸುತ್ತಾ ಸ್ತ್ರೀಪುರುಷರೆಂಬ ತಾರತಮ್ಯವಿಲ್ಲದೆ ಬಡಿಯತೊಡಗಿದರು. ವಿದ್ಯಾರ್ಥಿ ಮುಂದಾಳುಗಳು ರಾಷ್ಟ್ರಧ್ವಜಗಳನ್ನು ಎತ್ತಿಕೊಂಡು ಮಂದಿಯನ್ನು ಓಡಿಹೋಗದಂತೆ ‘ಜೈ’ ಕಾರಗಳಿಂದ ಹುರಿದುಂಬಿಸುತ್ತಿದ್ದರು. ಅವರೊಳಗೆ ಸ್ವಾತಂತ್ರ್ಯವೀರೆ ಸುನಂದಾದೇವಿಯ ಧೈರ್ಯವು ಅತ್ಯಂತ ಶ್ಲಾಘನೀಯವಾದುದೆಂದು ಈಗಲೂ ಜನರಾಡಿಕೊಳ್ಳುವರು. + +ಘರ್ಷಣೆಗೆ ಕಸುವೇರಲು ಓರ್ವ ಪೋಲೀಸ್ ವೀರ ದರ್ಪದಿಂದ ಧಾವಿಸಿ ಬಂದು ಸುನಂದೆಯ ಬಳಿಯಲ್ಲಿದ್ದ ಒಬ್ಬ ಹುಡುಗಿಯ ತಲೆಗೆ ಲಾಥಿಯಿಂದ ಪ್ರಹಾರ ಮಾಡಿದ. ಉತ್ತರ ಕ್ಷಣ ಅವಳು ಚಟ್ಟನೆ ಚೀರಿ ಬಿದ್ದು ಬಿಟ್ಟಳು. ಈ ದೃಶ್ಯವನ್ನು ಕಂಡು ಕುಪಿತಳಾದ ಸುನಂದೆ ಕೆರಳಿದ ಕೇಸರಿಯಂತೆ ಮುಂಬರಿದು ‘ಎಲೋ ದುರಾತ್ಮಾ, ಬೆತ್ತದೇಟಿನ ಆಜ್ಞೆಯಿರಲು ಹುಡುಗಿಗೆ ದೊಣ್ಣೆಯಿಂದ ಹೊಡೆದೆಯಾ? ನಿನ್ನ ಪೊಳ್ಳು ಪೌರುಷಕ್ಕೆ ಬೆಂಕಿ ಬೀಳಲಿ’ ಎಂದು ಘರ್ಜಿಸಿದಳು. ಅದಕ್ಕೆ ಆತ – “ಹುಡುಗಿಯರಾದರೆ ಮನೆಯೊಳಗೆ ಇರಬೇಕಿತ್ತು; ಇಲ್ಲೇನು ಕೆಲಸ ನಿಮಗೆ?” ಎನ್ನುತ್ತ ದಂಡವನ್ನು ಸುನಂದೆಯ ಮಸ್ತಕಕ್ಕೆ ನೇರವಾಗಿ ಬೀಸಿದ. + +ಶಹಬಾಸ್! ವೀರಾಗ್ರಣಿಯ ಕಾರ್ಯದಕ್ಷತೆಯ ಮೆಚ್ಚುವಂತಹದೆ! ನಿಜವಾದ ಕಾದಾಟವೆಂದರೆ ಇದೇ ಸೈ! ರುಂಯ್ಗುಟ್ಟಿ ಬಂದ ದೊಣ್ಣೆಯನ್ನು ಬಲಗೈಯಿಂದ ತುಡುಕಿ ಹಿಡಿದು ಸುನಂದೆಗಾಗುವ ಪ್ರಬಲ ಆಘಾತವನ್ನು ತಪ್ಪಿಸಿ ನಿಂತಿದ್ದ ಚಂದ್ರಶೇಖರ. ಏಟಿನ ಭರಕ್ಕೆ ಆತನ ಕೈಬೆರಳುಗಳ ಮಧ್ಯಭಾಗವು ಹರಿದು ರಕ್ತವು ಧಾರೆಗಟ್ಟಿ ಸುರಿಯತೊಡಗಿತು. ಕ್ರೋಧಸಂತಪ್ತವಾದ ರಿಸರ್ವ್ ವೀರನು ಅಶ್ವಾರೋಹಿಯಾಗಿಯೇ ಇದಿರಾಳಿಯ ಹಿಡಿತದಲ್ಲಿದ್ದ ದಂಡವನ್ನು ಕಸಿದು ಇನ್ನೊಂದು ಗಡುಸಾದ ‘ಛಾರ್ಜ್’ ಮಾಡಿದ. ಅದು ಶೇಖರನ ಹೆಗಲಿಗೆ ಬಿತ್ತು. ಅಷ್ಟರಲ್ಲಿ ಎತ್ತಲೋ ಇದ್ದ ಮೂರ್ತಿ ಓಡಿಬಂದು ಶೇಖರ, ಸುನಂದೆಯರನ್ನು ಹಿಂದಿಕ್ಕಿ ತಾನು ಅಶ್ವಾರೋಹಿಯ ಇದಿರಾದ. + +ಪರಿಸ್ಥಿತಿಯು ವಿಷಮವಾದುದನ್ನರಿತು ಚದರಿಹೋಗಿ ರೊಚ್ಚಿಗೆದ್ದ ಜನ ಕೈಗೆ ಸಿಕ್ಕಿದ ಕಲ್ಲು ತುಂಡು ಇಟ್ಟಿಗೆ ಇತ್ಯಾದಿಗಳನ್ನು ಪೋಲೀಸ್ ಅಧಿಕಾರಿಗಳ ಮೇಲೆ ಎಸೆಯತೊಡಗಿದರು. ಕೆಲ ಮಂದಿ ಪೋಲೀಸರು ಇದರಿಂದ ಗಾಯಗೊಳ್ಳಲು ಇನ್ನು ನಿರ್ವಾಹವಿಲ್ಲವೆಂದು ಮನಗಂಡ ಸುಪರಿಂಟೆಂಡರು ‘ಫಾಯರ್’ ಅಂದುಬಿಟ್ಟರು. + +ಆಜ್ಞೆಯನ್ನು ಇದಿರು ನೋಡುತ್ತಿದ್ದ ಪೋಲೀಸ್ ಪಡೆಯು ಪಿಸ್ತೂಲುಗಳನ್ನು ಹೊರಸೆಳೆದು ಜನದಟ್ಟಣೆಗೆ ಗುರಿಯಿಟ್ಟು ಗುಂಡೆಸೆಯತೊಡಗಿತು. ಕಾಗೆಯ ಹಿಂಡಿಗೆ ಕಲ್ಲು ಹಾರಿದಂತಾಯಿತು. ಇತ್ತ ಈ ವೀರತ್ರಯರನ್ನು ಸಂಧಿಸಿದ್ದ ಅಶ್ವಾರೋಹಿಯು ತನ್ನ ಪಿಸ್ತೂಲನ್ನು ಟೊಂಕದಿಂದ ಹೊರ ತೆಗೆದು ಮುಂಚೆ ಚಾಚಿದ. ಇದನ್ನು ನೋಡಿದ ಸುನಂದೆಯು ಒಡನೆ ಶೇಖರನ ರಟ್ಟೆ ಹಿಡಿದು ಬದಿಗೆಳೆದು – ‘ಮೂರ್ತೀ’ ಎಂದು ಕೂಗಿದಳು. ಅಷ್ಟರೊಳಗೆ ಗುಂಡೊಂದು ಹಾರಿ ಮೂರ್ತಿಯ ಹೆಗಲನ್ನು ಪ್ರವೇಶಿಸಿತು. ನಿಂತಲ್ಲೇ ವಾಲಿದ ಮೂರ್ತಿಯ ದೇಹವು ಚಂದ್ರಶೇಖರ ಸುನಂದೆಯರನ್ನು ಆಧರಿಸಿತು. + +*** + +ಅಂದಿನ ಭಯಂಕರ ಗಲಭೆಯಲ್ಲಿ ಹಲವು ಮಂದಿ ಗಾಯಗೊಂಡು ಆಸ್ಪತ್ರೆ ಸೇರಿದರು. ಬಂಧಿತರಾಗಿ ಕಾರಾಗೃಹ ಹೊಕ್ಕರು. ಚಂದ್ರಶೇಖರನಿಗಾದ ಗಾಯಗಳಿಗಿಂತಲೂ ಮೂರ್ತಿಯ ಹೆಗಲಿಗೆ ತಗಲಿದ್ದ ಗುಂಡಿನೇಟು ಪ್ರಬಲವಾಗಿತ್ತು. ಆಸ್ಪತ್ರೆಗೊಯ್ದ ಒಂದು ವಾರದಲ್ಲಿ ಆತ ಇಹಲೋಕದ ಕೊನೆಯುಸಿರೆಳೆದ. ಸ್ಥಳೀಯ ಪತ್ರಿಕೆಗಳು ಅಂದಿನ ಅಗ್ರಲೇಖನದಲ್ಲಿ – ‘ಸ್ವಾತಂತ್ರ್ಯ ಸಮರಾಗ್ನಿಯಲ್ಲಿ ದೇಶಭಕ್ತನ ಆತ್ಮ ಸಮರ್ಪಣೆ’ ಎಂದು ಪ್ರಕಟಿಸಿದುವು. ಕೃಷ್ಣಮೂರ್ತಿಯ ಆತ್ಮವೃತ್ತವನ್ನು ಬರೆದು ಬಂಧುಬಳಗದೊಂದಿಗೆ ತಮ್ಮ ಸಹಸಂತಾಪವನ್ನು ವ್ಯಕ್ತಪಡಿಸಿ ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರಿದುವು. ವಿದ್ಯಾರ್ಥಿಗಳು ಉದ್ವಿಗ್ನರಾದರು. ಸಾರ್ವಜನಿಕರು ನಾಡಿಗಾಗಿ ದೇಹ ನೀಡಿದ ವೀರನನ್ನು ಮುಕ್ತ ಕಂಠದಿಂದ ಹೊಗಳಿ ಕಂಬನಿಗರೆದರು. + +*** + +ಅಗೋಸ್ತು ಕಳೆದು ಸಪ್ಟೆಂಬರ್ ನಲ್ಲಿ ಮೂರು ವಾರಗಳು ಮುಗಿದಿದ್ದವು. ಚಂದ್ರಶೇಖರನ ಗಾಯಗಳು ಇನ್ನೂ ವಾಸಿಯಾಗಿರಲಿಲ್ಲ. ಸಾಲದುದಕ್ಕೆ ಜ್ವರ ಹಿಡಿದು ಬೇರೆ ಬಾಧಿಸುತ್ತಿತ್ತು. ತೇಜನಗರದ ಅತೀ ದೊಡ್ಡ ಆಸ್ಪತ್ರೆಯಾದ ವಿಕ್ಟೋರಿಯಾ ಹಾಸ್ಪಿಟಲ್ ನ ಕೊಠಡಿಯೊಂದರಲ್ಲಿ ಒರಗಿದ್ದ ಶೇಖರ. ರಾತ್ರೆ ಸುಮಾರು ಹನ್ನೊಂದು ಹೊಡೆದಿರಬಹುದು. ಮಧ್ಯಾಹ್ನ ಹತ್ತಿದ್ದ ಜ್ವರವು ಆಗ ತಾನೇ ಒಂದು ತಾಸಿನ ಮೊದಲು ಇಳಿದುದರಿಂದ ಮೈಯಲ್ಲಿ ಉಲ್ಲಾಸವಿದ್ದಿತು. ಹಾಗೆ ಮಂಚದಲ್ಲೊರಗಿಕೊಂಡು ಹಿಂದು ಮುಂದನ್ನು ಯೋಚಿಸತೊಡಗಿದ. + +ಮಹಾತ್ಮಾಜಿಯ ಕರೆ, ಕಾಲೇಜಿನ ತ್ಯಾಗ, ಮುಂದೆ ನಡೆದ ಹತ್ಯಾಕಾಂಡ, ಮೂರ್ತಿಯ ಮರಣ – ಇವೆಲ್ಲವೂ ಚಲಚ್ಚಿತ್ರದಲ್ಲಿ ಪಟ ಪರಿವರ್ತನವಾದಂತೆ ಆತನ ಮುಂದೆ ಹಾಯ್ದುಹೋದವು. ಮೂರ್ತಿಯನ್ನು ನೆನೆದಾಗ ಆತನ ಕಣ್ಣುಗಳು ಅಶ್ರುಪೂರ್ಣವಾದುವು. ಆಹ – ಮೂರ್ತಿ! ದೇಶಮಾತೆಯ ಪದತಲದಲ್ಲಿ ಪ್ರಾಣ ಒಪ್ಪಿಸಿ ವೀರಸ್ವರ್ಗವನ್ನು ಸೂರೆಗೊಂಡೆ! ಧನ್ಯ ನೀನು!! ಎಂದು ಉದ್ಗರಿಸಿದ. ಅನಂತರ ಸ್ವಾತಂತ್ರ್ಯ ಧೀರೆ ಸುನಂದೆಯ ಚಿತ್ರವು ಕಾಣಿಸಿತು. ಆಗ ಅವಳ ಕುರಿತು ಶೇಖರನ ಹೃದಯದಲ್ಲಿ ಒಂದು ತೆರೆದ ಅನಿರ್ವಚನೀಯ ಅಭಿಮಾನವು ಉಕ್ಕೇರಿತು. ಆಕೆಯ ಧೈರ್ಯೋತ್ಸಾಹ, ತೇಜ ಗಾಂಭೀರ್ಯ, ನಿಲುವು ಚೆಲುವುಗಳನ್ನು ಯೋಚಿಸಿ ಅಲ್ಲೇ ತನ್ಮಯನಾದ. + + + +ನರ್ಸ್ ಬಂದು ರಾತ್ರಿಯ ಔಷಧ ಕುಡಿಯಗೊಟ್ಟು ರೋಗಿಯ (ಚಂದ್ರಶೇಖರ) ನಾಡಿಯನ್ನು ಪರೀಕ್ಷಿಸಲು ಆತನ ಬಲಗೈಯೆತ್ತಿ ಹಿಡಿದು ನಿಂತಳು. ಕೆಲವು ಸೆಕುಂಡುಗಳು ಸರಿದವು. ನಾಡಿ ನಿರೀಕ್ಷಣೆ ಹಾಗೆಯೇ ನಡೆದಿತ್ತು. ಇದ್ದಕ್ಕಿದ್ದಂತೆಯೇ ಶೇಖರ ಭಾವ ಸಮಾಧಿಯಿಂದ ಎಚ್ಚತ್ತು ನರ್ಸಮ್ಮನ ಮೊಗ ನೋಡಿದ. ಇಷ್ಟು ದಿನ ಬರುತ್ತಿದ್ದವಳಲ್ಲ ಈಕೆ ಹೊಸಬಳು. ಎಲ್ಲಿಯೋ ನೋಡಿದಂತಿದೆ ಮುಖ. ಶಂಕಾತುರನಾಗಿ ದೃಷ್ಟಿಯೆತ್ತಿ ನೋಡಿದ. ಪೂರ್ಣಚಂದ್ರಿಕೆಯ ಚೆಲುವಿನಲ್ಲಿ ಆಗ ತಾನೇ ವಿಕಸಿತವಾಗಿ ನಸುಗಾಳಿಗೆ ಕಂಪಿಸುವ ಮಲ್ಲಿಕಾ ಗುಚ್ಛವನ್ನು ಹೋಲುತ್ತಿತ್ತು ವದನ ಮಂಡಲ. ಮನಸ್ಸಿನೊಳಗೆ ಏನನ್ನೋ ತಿಳಿದು ನಸುನಾಚಿ ಮುಖ ತಗ್ಗಿಸಿದಾತ ಮತ್ತೊಮ್ಮೆ ನೋಡಿದ. ನಾಲ್ಕು ದೃಷ್ಟಿಗಳು ಮಿಲನವಾದುವು. ಒಡನೆ ಚಂದ್ರಶೇಖರನ ದೇಹದಲ್ಲಿ ವಿದ್ಯುತ್ ಸಂಚಾರವಾಯಿತು. ‘ಸುನಂದೆ!’ ವಿಸ್ಮಯ ಮೂಕನಾದ ಅವನ ಬಾಯಿಯಿಂದ ಮಾತು ಹೊರಬಿತ್ತು. “ಸುನಂದಾ, ನನ್ನ ಪ್ರಾಣರಕ್ಷಕಿ” ಎನ್ನುತ್ತ ಒರಗಿದಲ್ಲಿಂದ ಏಳಲು ಯತ್ನಿಸಿದ. ನಾನೀಗ ಕಾಣುತ್ತಿರುವುದು ಕನಸಲ್ಲವಷ್ಟೆ ತನ್ನ ಕಣ್ಣುಗಳನ್ನೇ ನಂಬದಾದ ಶೇಖರ. + +“ಏಳಲು ಪ್ರಯತ್ನಿಸಬಾರದು. ಆಗಸ್ಟ್ ವೀರರಿಗೆ ಮತ್ತೆ ಆಯಾಸವಾದೀತು” ಎಂದು ತನ್ನ ಶಿರೋದುಪ್ಪಟವನ್ನು ಬಿಚ್ಚಿದಳು ನರ್ಸ್. ಅಹುದು – ತಾನು ಧ್ಯಾನಿಸುತ್ತಿದ್ದ ದೇವಿಯು ಪ್ರತ್ಯಕ್ಷಳಾಗಿದ್ದಾಳೆ! ಕ್ಷಣದೊಳಗೆ ಶೇಖರನ ಮಿದುಳಲ್ಲಿ ಹತ್ತು ಹಲವು ಬಗೆಯ ವಿಚಾರಗಳು ಮಿಂಚಿ ಮಾಯವಾದವು. ಇದುವರೆಗೆ ಆತನರಿಯದ ಅನುಭವ ರಶ್ಮಿಯೊಂದು ಹೃದಯ ಪ್ರವೇಶಿಸಿತ್ತು. ‘ಅಗಸ್ಟ್ ವೀರೆ, ನೀನಿಲ್ಲಿಗೆ ಹೇಗೆ ಬಂದೆ! ಇದೇನು ಅವತಾರ?’ ಕುತೂಹಲಾಶ್ಚರ್ಯಗಳಿಂದ ಪ್ರಶ್ನಿಸಿದ ಶೇಖರ. + +“ನನ್ನ ದೊಡ್ಡಮ್ಮನ ಮಗಳು ತಮ್ಮ ನರ್ಸ್. ಅವಳ ಸಹಾಯದಿಂದ ನನ್ನ ಪ್ರಯತ್ನವು ಕೈಗೂಡಿತು. ಈಗ ಹೇಗಿದೆ ಜ್ವರ, ಕೈ ಗಾಯವು ವಾಸಿಯಾಯಿತೇ?” ಎಂದು ಪ್ರಶ್ನಿಸುತ್ತ ಹತ್ತಿರದಲ್ಲಿದ್ದ ಆಸನದಲ್ಲಿ ಕೂತಳು ಸುನಂದೆ. + +ಶೇಖರ ಆಕೆಯ ಯುಕ್ತಿ ಸಾಹಸಗಳಿಗೆ ತಲೆದೂಗಿದ. ತನ್ನ ಯೋಗಕ್ಷೇಮದಲ್ಲಿ ಇಷ್ಟೊಂದು ಆಸಕ್ತಿ ವಹಿಸಿದುದನ್ನು ಯೋಚಿಸುತ್ತ ಸುನಂದೆಯ ಬಗ್ಗೆ ಆತನ ಹೃದಯದಲ್ಲಿ ಸುಪ್ತವಾಗಿದ್ದ ಒಲುವೆಯು ಬುಗ್ಗೆಯೊಡೆಯಿತು. + +“ಆ ದಯಾಘನನ ಕೃಪೆಯಿಂದ ನಾನು ಕ್ಷೇಮವಾಗಿದ್ದೇನೆ. ಆದರೆ…. ಆದರೆ ಸುನಂದಾ!” ಶೇಖರನ ಕಂಠವು ಗದ್ಗದಿತವಾಯಿತು. ಮುಂದೆ ಮಾತು ಹೊರಡಲಿಲ್ಲ. ಎವೆಯಿಕ್ಕದೆ ಆಕೆಯನ್ನು ನೋಡತೊಡಗಿದ. ಆ ಬಿಟ್ಟ ಕಂಗಳಲ್ಲಿ ಕೃತಜ್ಞತೆಯು ಮೌನವಾಗಿ ಮಿನುಗುತ್ತಿತ್ತು. + +‘ಆದರೆ ಏನು? ಹೇಳಬಾರದೆ? ಮೌನವೇಕೆ?’ + +‘ಈ ಚಂದ್ರಶೇಖರನ ಮೇಲೆ ಸುನಂದಾದೇವಿಯ ಕೃಪೆಯು ಅತಿ ಅಮೂಲ್ಯವಾಗಿರುವುದು.’‘ಛೀ ಇದೇನು ಮಾತು. ಅಸ್ವಸ್ಥವಿದ್ದವರ ದೇಹಾರೋಗ್ಯವನ್ನರಿಯುವುದು ಅದೊಂದು ಕೃಪೆಯೇ? ಅಂದು ಪೋಲೀಸ್ ದಂಡವನ್ನು ತಡೆಗಟ್ಟಿದುದು ಮಾತ್ರ ನಿಜವಾದ ಕೃಪೆಯನ್ನಬಹುದು.’ + +‘ಅದು ನನ್ನಿದಿರಲ್ಲಿ ಮಿಂಚಿದ ಕರ್ತವ್ಯ ವಿಭಾಗವಷ್ಟೆ; ಮತ್ತೇನೂ ಇದ್ದಿಲ್ಲ. ಆದರೆ ಬಾಯ್ದೆರೆದು ಬಂದ ಮೃತ್ಯುವಿನಿಂದ ತಪ್ಪಿಸಿದವರಾರು?’ + +‘ಏನು ಫಲ? ಮೂರ್ತಿ ಆಹುತಿಯಾಗಿಬಿಟ್ಟನಲ್ಲ!’ + +‘ಅಹುದು. ಆತನೇ ಆಗಸ್ಟ್ ವೀರ. ದೇಶಮಾತೆಯ ಪುಣ್ಯಸ್ಥಾನವನ್ನು ಸಾರ್ಥಕಗೊಳಿಸಿದ ಸ್ವಾತಂತ್ರ್ಯಯೋಧ.’ ನಿಟ್ಟುಸಿರುಗಳೆರಡು ಒಂದರ ಹಿಂದೊಂದಾಗಿ ಹೊರಟು ಕೊಠಡಿಯ ವಾಯುವಿನಲ್ಲಿ ಲೀನವಾದುವು. + +‘ವಿದ್ಯಾರ್ಥಿಗಳ ಹೃದಯದಲ್ಲಿ ಕ್ರಾಂತಿಯನ್ನು ಊದಿದಾತ’ ಎಂದಳು ಸುನಂದೆ. + +‘ಆದರೆ ಚಂದ್ರಶೇಖರನಲ್ಲಿ ನವಸ್ಫೂರ್ತಿಯನ್ನು ತುಂಬಿದವರಾರೆಂದು ಬಲ್ಲೆಯೋ?’ ಶೇಖರನ ಪ್ರಶ್ನೆ. + +‘ಆತನು ತಾನೇ; ಕೃಷ್ಣಮೂರ್ತಿ.’ + +‘ಅಲ್ಲ, ಆತನಲ್ಲ.’ + +‘ಮತ್ತಾರು?’ ಸುನಂದೆ ತಲೆ ಎತ್ತಿ ಶೇಖರನ ಮೊಗ ನೋಡಿದಳು. ಆಕೆಯ ಚಂಚಲ ನೇತ್ರಗಳು ಆವುದೋ ಒಂದು ವಿಷಯವನ್ನು ರಹಸ್ಯವಾಗಿಡಲು ಹವಣಿಸುತ್ತಿದ್ದವು. ಮುಖ ಮುದ್ರೆಯಲ್ಲಿ ಮುಗ್ಧತೆಯ ಕೌಟಿಲ್ಯವಿತ್ತು. + +‘ಅವರನ್ನು ಹುಡುಕಲು ಪ್ರಯಾಸವಿದೆಯೇ? ಇದಿರಲ್ಲೇ ಪ್ರತ್ಯಕ್ಷವಾಗಿರುವಾಗ’ ಸುನಂದೆಯು ಅವನತಮುಖಿಯಾದಳು. + +‘ಸಾಕು ಉತ್ಪ್ರೇಕ್ಷೆಯೇಕೆ? ನನ್ನಿಂದ ಏನಾದೀತು? ನಾನು ಅಬಲೆಯಲ್ಲವೇ?’ + +‘ಅಹುದು ಅಬಲೆ! ರಾಜಕೀಯ ಕೈದಿಯನ್ನು ಸಂದರ್ಶಿಸಲು ಸರಕಾರದ ಪ್ರತಿಬಂಧವಿರುವಾಗ ನರ್ಸಿನ ವೇಷ ತಳೆದ ನೀನು ಅಬಲೆ! ಇರಲಿ’ ಶೇಖರನ ಕೈ ನಾಡಿಯು ಏನೆಂದು ನುಡಿಯುತ್ತಿತ್ತಾಗ? + +‘ಏನೂ ಇಲ್ಲ! ಸುಖ ಸ್ಪಂದನವಿತ್ತು ಅದರಲ್ಲಿ.’ + +‘ಆಗ ಅದು ಸುನಂದಾ, ಸುನಂದಾ ಎನ್ನುತ್ತಿರಲಿಲ್ಲವೇ?’ + +ಶೇಖರನ ದೃಷ್ಟಿಯೂ ಸುನಂದೆಯ ಮೊಗದಾವರೆಯಲ್ಲಿ ನೆಟ್ಟಿತ್ತು. + +ಸುನಂದೆಯು ಲಜ್ಜಿತಳಾಗಿ ಅವುಡುಗಚ್ಚಿ ಆತನನ್ನೊಮ್ಮೆ ಕಡೆಗಣ್ಣಿನಿಂದ ನೋಡಿ ತಲೆವಾಗಿದಳು. ಗಲ್ಲಗಳು ಕೆಂಪೇರಿದವು. + +ಶೇಖರನು ಕುಳಿತಲ್ಲಿಂದ ಎದ್ದು ಸುನಂದೆಯನ್ನು ಸಮೀಪಿಸಿ, ‘ನನ್ನ ಸುಪ್ತ ಹೃದಯವನ್ನು ಜಾಗೃತಗೊಳಿಸಿದ ದೇವಿ! ನನ್ನ ಪ್ರಾಣ ಪ್ರಿಯೆ! ನಿನ್ನಲ್ಲಿ ಒಂದು ಭಿಕ್ಷೆಯನ್ನು ಯಾಚಿಸುತ್ತೇನೆ. ಅನುಗ್ರಹಿಸುವೆಯಾ?’ + +‘ಅದೇನಿರಬಹುದು?’ + +‘ಪ್ರೇಮ ಭಿಕ್ಷೆ! ಮುಂದಕ್ಕೆ ನನ್ನ ಜೀವನ ನೌಕೆಯನ್ನು ದೇಶ ಸೇವೆಯೆಂಬ ಮಹಾನದಿಗೆ ತಳ್ಳಲು ಸಂಕಲ್ಪಿಸಿದ್ದೇನೆ. ಅದರ ನಾಯಕಿಯಾಗಿ ದಡ ಕಾಣಿಸುವವಳು ನಿನ್ನ ಹೊರತು ಅನ್ಯರಿಲ್ಲ. ನೀನೊಲಿದರೆ ಈ ಜೀವನವು ಜೀವಂತವೆನಿಸುವುದು.’ + +ಅಹ! ಬಯಸಿದ ಹಾರವು ಕೊರಳಲ್ಲಿ ಶೋಭಿಸಿದಂತಾಯಿತು. ಸುನಂದೆಯ ನಯನಗಳಲ್ಲಿ ಬಾಷ್ಪಬಿಂದುಗಳುದುರಿದುವು. ಗುಣ ಹೊಂದಿರುತ್ತಿರುವ ಶೇಖರನ ಗಾಯದ ಹಸ್ತವನ್ನು ಪ್ರೇಮವ್ಯಂಜಕ ಭಕ್ತಿಭಾವದಿಂದ ಕುಸುಮದೋಪಾದಿಯಲ್ಲಿ ಎತ್ತಿ ಹಿಡಿದು – ‘ಈ ಗಾಯವು ಸಾಮಾನ್ಯವಾದುದಲ್ಲ, ಇದು ಇಲ್ಲಿ ತೋರಿದ ಪರಕ್ಷಣದಲ್ಲಿ ನನ್ನ ಹೃತ್ಪಟಲದ ಮೇಲೆ ತಮ್ಮ ಮೋಹನ ಮೂರ್ತಿಯು ಪ್ರತಿಷ್ಠಿತವಾಯಿತು. ಅದರ ಸಾಕ್ಷಾತ್ಕಾರ ಹೊಂದಲು, ಕಣ್ಮುಚ್ಚಿ ನೋಡಲು, ಮನ ತಣಿದು ಕುಣಿದಾಡಲು ಈ ವೇಷದಲ್ಲಿ ಇತ್ತ ಬಂದೆ. ಹಾಗಾದರೆ ನಿಜವಾಗಿಯೂ ನಾನು ನಿಮ್ಮವಳೇ?’ + +‘ಸಂದೇಹವೇಕೆ? ಎಂದೆಂದಿಗೂ ನೀನು ನನ್ನವಳು!’ ಎನ್ನುತ್ತ ಚಂದ್ರಶೇಖರ ತನ್ನ ಬೆರಳುಂಗುರವನ್ನು ಸುನಂದೆಗೆ ತೊಡಿಸಿದನು.ಹನ್ನೆರಡು ಗಂಟೆಯು ಕೇಳಿಸಿತು. ಸುನಂದೆ ಬಡಿದೆಬ್ಬಿಸಿದಂತಾಗಿ, + +‘ಶೇಖರ್, ಹನ್ನೆರಡಾಯಿತು. ಈಗ ನಾನು ಹೊರಡಬೇಕು. ಸೋದರಿಯು ಹೊರಗೆ ಕಾದಿರುವಳು.’ + +‘ಪುನರ್ಮಿಲನವೆಂದು?….’ + + + +‘ಪುನರ್ಮಿಲನ!’ ಆಸ್ಪತ್ರೆಯ ಮಂಚದಿಂದ ಮುಂದಕ್ಕೆ ಕಾರಾಗೃಹದ ಪಂಜರವನ್ನು ಪ್ರವೇಶಿಸಲಿದ್ದೇನೆ. ಆಗ ನನ್ನನ್ನು ಕಾಣಲು ಯತ್ನಿಸಬೇಡ. ಅಪಘಾತವಾದೀತು. ಬಿಡುಗಡೆಯಾದ ಮರುದಿವಸ ಆ ‘ಆಗಸ್ಟ್ ವೀರ’ ನ ಸಮಾಧಿಯ ಸನಿಹದಲ್ಲಿ ವಿದ್ಯಾರ್ಥಿಗಳ ನೆರವಿನಲ್ಲಿ – ತುರಂಗ ಸಿಂಹಗಳ ಮಧ್ಯದಲ್ಲಿ – ರಾಷ್ಟ್ರ ಧ್ವಜದ ಸುಂದರಛಾಯೆಯಲ್ಲಿ ಪುನರ್ಮಿಲನ!’ + +**** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_305.txt b/Kenda Sampige/article_305.txt new file mode 100644 index 0000000000000000000000000000000000000000..fb0da084f6842b10e563ead4315023cd0d5a3285 --- /dev/null +++ b/Kenda Sampige/article_305.txt @@ -0,0 +1,237 @@ + + +1. ರಂಗರಾಯ2. ಮಾಧವರಾಯ (ಮಿಶನ್ ಶಾಲೆಯ ಹುಡುಗರು)3. ರಾಮಾಚಾರಿ4. ಕೃಷ್ಣ ಶಾಸ್ತ್ರಿ (ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳು)5. ಸುದರ್ಶನರಾಯ (ದೇಶ ಸೇವಕ) + +ಸ್ವಯಂ ಸೇವಕಿಯರು (ಮೂರುಮಂದಿ); ಪೋಲೀಸರು (ಇಬ್ಬರು); ಹೋಟೆಲ್ ಮ್ಹಾಲಕ (ಒಬ್ಬ); ಮಾಣಿ (ಒಬ್ಬ). + +ದೃಶ್ಯ 1ಪಾರ್ಕಿನ ಸೀನ್ – ಮಗ್ಗುಲಲ್ಲಿ ಒಂದು ಕಬ್ಬಿಣದ ಒರಗು ಬೆಂಚು. ಸ್ಕೌಟುಗಳ ಡ್ರೆಸ್ಸಿನ ರಂಗರಾಯ – ಮತ್ತು ಮಾಧವರಾಯ – ಇವರ ಪ್ರವೇಶ. + +ರಂಗ :ಹೌದು! ಆ ಗಾಂಧಿ ಹೇಳೋದು ಸತ್ಯವೆ! ಅಲ್ಲವಾದರೆ ನೋಡು! ಮೊನ್ನೆ ಪೋಲೀಸಿನವರು ಏನನ್ಯಾಯ ಮಾಡಿಬಿಟ್ಟರು! ಹಾಗಾದರೆ ಹೇಳೋರು ಕೇಳೋರು ಇಲ್ಲವೆ? + +ಮಾಧು :ಸತ್ಯವೆ. ಅದರಲ್ಲೇನು ಸಂದೇಹ? ನಮ್ಮದು ದೇಶ – ಅದರ ಉದ್ಧಾರಕ್ಕಾಗಿ ಹೆಣಗಾಡಿದರೆ ನಮ್ಮವರಿಂದಲೇ ನಮಗೆ ಹೊಡಿಸುವುದೆಂದರೆ! ನಾಯಿಗಿಂತಲೂ ಕಡೆಯಾಯಿತಲ್ಲ ನಮ್ಮ ಬಾಳುವೆ? + +ರಂಗ :ಅದನ್ನೆಲ್ಲಾ ಎಣಿಸುವಾಗ ನೋಡು! ನನಗೆ ಒಂದೊಂದು ತಡವೆ ಎಲ್ಲಿ ಇಲ್ಲದ ‘ಸ್ಪಿರಿಟ್’ ಬಂದು ಬಿಡ್ತದೆ! + +ಮಾಧು :ನನಗೂ ಕೂಡಾ ಹಾಗೇನೇ. ಆದರೆ – ಗಾಂಧಿ ಕಡೆಯವರದ್ದು ಅದೊಂದು ಮಾತ್ರ ತಪ್ಪು ನೋಡು! + +ರಂಗ :ಏನದು? + +ಮಾಧು :ಅಲ್ಲ ಮತ್ತೆ! ಸುಮ್ಮಗಾದರೂ ನಿಂತು ಪೆಟ್ಟು ಹೊಡಿಸಿಕೊಳ್ಳೋದೆಂದರೆ ಏನರ್ಥ ಹಾಗಂದರೆ? ಅದೊಂದು ಇಲ್ಲದಿದ್ದರೆ – ಖಂಡಿತ ನಾನೂ ಮೂಮೆಂಟಿಗೆ ಸೇರಿ ಬಿಡ್ತಿದ್ದೆ! – + +(ರಾಮಾಚಾರಿ ಕೃಷ್ಣ ಶಾಸ್ತ್ರಿ ಇವರ ಪ್ರವೇಶ. ಇಬ್ಬರ ಕೈಯಲ್ಲೂ ಒಂದೊಂದು ಸಂಸ್ಕೃತ ಪುಸ್ತಕ. ಉಡುಪು :- ಪಟ್ಟಿಕಚ್ಚೆ, ಶಾಲು ಹೊದೆದುದು, ಹಣೆಯಲ್ಲಿ ದೊಡ್ಡ ಅಂಗಾರ ಅಕ್ಷತೆ.) + +ರಾಮು :(ಸುತ್ತಲೂ ನೋಡಿ) ನೋಡಿದೆಯಾ? ಎಷ್ಟು ಸೊಗಸಾಗಿದೆ ಈ ಜಾಗ! ಇಲ್ಲೇ ಕುಳಿತು ಚಿಂತನೆ ಮಾಡೋಣ! + +ಕೃಷ್ಣ :ಅದು ಹೌದು, ಬಹಳ ಒಳ್ಳೇ ಜಾಗ.(ಇಬ್ಬರೂ ಒಂದು ಬೆಂಚಿನಲ್ಲಿ ಕುಳಿತುಕೊಳ್ಳುವರು.) + +ರಂಗ :ಏ! ನಾವು ಕೂಡ ಸ್ವಲ್ಪ ಕುಳಿತುಕೊಳ್ಳೋಣ! ಇಷ್ಟು ಬೇಗ ಶಾಲೆಗೆ ಹೋಗಿ ಏನು ಮಾಡೋದು? + +ಮಾಧು :ಆದೀತಲ್ಲ! ಯಾರು ಬೇಡಾಂದ್ರು?(ಅದೇ ಬೆಂಚಿನಲ್ಲಿ ಕುಳಿತುಕೊಳ್ಳುವರು) + +ರಂಗ :(ಹೊಸಬರೊಡನೆ) ನೀವು ಯಾವ ಶಾಲೆಯವರ್ರೀ? + +ರಾಮು :ನಾವು ಸಂಸ್ಕೃತ ಮಹಾಪಾಠಶಾಲೆಯವರು. + +ಕೃಷ್ಣ :ನೀವು ಯಾವ ಶಾಲೆಯವರು? + +ರಂಗ :ನಮ್ಮದು ಮಿಶ್ಶನ್ ಶಾಲೆ. + +ಕೃಷ್ಣ :ಮಿಶ್ಶನ್ ಶಾಲೆಯೆ? (ಎಂದು ಸ್ವಲ್ಪ ದೂರ ಸರಿದು ಕುಳಿತುಕೊಳ್ಳುವನು-) + +ಮಾಧು :ಏನಯ್ಯ? ದೂರ ಸರಿದಿದ್ದೀರಿ! ನೀವಿನ್ನೂ ಈ ಯುಗಕ್ಕೆ ಬರಲಿಲ್ಲಾಂತ ತೋರುತ್ತೆ! + +ಕೃಷ್ಣ :ಇಲ್ರೀ. ನಮ್ಮ ಶಾಸ್ತ್ರದಲ್ಲಿ ಈ ಯುಗಾಂತ ಒಂದು ಕಾಲ ಗಣನೆ ಮಾಡಿಲ್ಲ. ಒಟ್ಟು ನಾಲ್ಕೇ ಯುಗ; ಕೃತ-ತ್ರೇತ-ದ್ವಾಪರ-ಕಲಿ. + +ಮಾಧು :(ಬೇಸರದಿಂದ) ಅದು ಯಾಕೀಗ ಪುರಾಣ? + +ಕೃಷ್ಣ :ಅಲ್ಲ. ನೀವು ಈ ಯುಗಾಂದ್ರಿ. ಅದಕ್ಕೆ ತಪ್ಪು ತೋರಿಸಿಕೊಟ್ಟೆ. + +ಮಾಧು :ಹಾಗಲ್ಲಯ್ಯ! ಈ ಯುಗಾಂದ್ರೆ – ನಮ್ಮನ್ನು ಕಂಡು ದೂರ ಸರಿದುಕೊಂಡಿರಿ. ಅದಕ್ಕೆ ಬಹಳ ಹಿಂದಿನ ಕಾಲದವರ ಹಾಗಿದ್ದೀರಿ. ಅಂತಂದದ್ದು. + +ರಾಮು :ಅಂದ್ರೆ ಮತ್ತೇನಿಲ್ಲ. ನಿಮ್ಮ ಶಾಲೆಯಲ್ಲಿ ಎಲ್ಲಾ ಒಂದೇ ಜಾತಿ – ಹೊಲೆಯರೂ ಕೂಡಿದ್ದಾರೆ. + +ರಂಗ :ಏನಾಯ್ತೀಗಾ? ಹೊಲೆಯನಾದರೇನು – ಹಾರುವನಾದರೇನು? ಎಲ್ಲರೂ ಬಂದದ್ದು ಒಂದೇ ದಿಕ್ಕಿನಿಂದ – ಹೋಗೋದು ಅಲ್ಲಿಗೇ! ಮತ್ತೇನು? + +ಕೃಷ್ಣ :ಯಾರಂದದ್ದು? ಅದೇ ತಪ್ಪು ನೋಡಿ. ಹೊಲೆಯ ಹೋಗೋದು ಅಂಧಂ ತಮಸ್ಸಿಗೆ! ಅವ ಮುಕ್ತಿಬಾಹಿರ. ಆದರೆ ನಾವು ಮುಕ್ತಿಯೋಗ್ಯ ಜೀವಿಗಳು! + +ರಾಮು :ಹೇಳಿದೆಯಲ್ಲ ವೇದದಲ್ಲಿ ‘ಬ್ರಾಹ್ಮಣೋಸ್ಯ ಮುಖ ಮಾಸೀತ್’ – ಅಂತ! ಆದರೆ ಆ ಗಾಂಧಿಯೊಬ್ಬ – ಕಲಿ ಸ್ವರೂಪಿ! ಎಲ್ಲಾ ಜಾತಿಯೂ ಒಂದೇಂತ ಹೇಳತೊಡಗಿದ್ದಾನೆ. + +ಕೃಷ್ಣ :ಅವನಿಗೆ ನಾಯಿಯೂ ಒಂದೇ, ದನವೂ ಒಂದೇ! ಅದಕ್ಕೆ ಅಂತವರಿಗೆ ದೇವರು ಕೈ ಬಿಡೋದು! + +ಮಾಧು :ದೇವರು ಕೈಬಿಟ್ಟದ್ದೇನೀಗ? + +ಕೃಷ್ಣ :ಮತ್ತೇನು ಪೆಟ್ಟು ತಿಂದು ಸಾಯುತ್ತಾ ಇದ್ದಾರಲ್ಲ ಅವನ ಕಡೆಯವರೆಲ್ಲ? + +ರಂಗ :ಸತ್ತರೂ ಅದರಲ್ಲಿ ಕೀರ್ತಿಯಿದೆ. ಪುಣ್ಯವಿದೆ! – ‘ಪರೋಪಕಾರಾರ್ಥಮಿದಂ ಶರೀರಂ’- ! ಮತ್ತೇಕೆ ಸಾಯಬಾರದು? + +ರಾಮು :(ತಾತ್ಸಾರವಾಗಿ) ಪುಣ್ಯವಲ್ಲ – ಏಳೇಳು ಜನ್ಮಕ್ಕೂ ರೌರವ ನರಕ! + +ಕೃಷ್ಣ :ನಮ್ಮ ಸ್ಮೃತಿಗಳಲ್ಲಿ ಏನು ಹೇಳಿದೆಯಂತ ತಮಗೆ ಗೊತ್ತಿದೆಯೆ? ‘ರಾಜಾ ಪ್ರತ್ಯಕ್ಷ ದೇವತಾ’! ರಾಜದ್ರೋಹ ಎಂದರೆ ಅದರಿಂದ ಮೇಲಿನ ತಪ್ಪೇ ಇಲ್ಲ. ಅದೇ ದೈವ ದ್ರೋಹ! + +ಮಾಧು :(ಬೇಸರದಿಂದ) ಎಂತಹ ರಾಜನಯ್ಯ! ಊರು ಹಾಳು ಮಾಡೋದೂ ಒಂದು ರಾಜಧರ್ಮವೆ? + +ರಾಮು :(ಆಶ್ಚರ್ಯದಿಂದ) ಹಾಳು? ಹಾಳು ಮಾಡಿದ್ದೇನೀಗ? ಎಷ್ಟು ಒಳ್ಳೇ ಸ್ಥಿತಿಗೆ ಬಂತು ನಮ್ಮ ದೇಶ! ಮೊದಲು ನಮ್ಮ ಊರಲ್ಲಿ ಎಷ್ಟು ಸಂಸ್ಕೃತ ಶಾಲೆಯಿದ್ದಿತು? ಈಗ ನೋಡಿ! ನಮ್ಮ ಶಾಲೆಗೆ ಎರಡು ಸಾವಿರ ರೂಪಾಯಿ ಗ್ರೆಂಟ್ ಕೊಡಿಸುತ್ತಾ ಇದ್ದಾನಲ್ಲ ಪುಣ್ಯಾತ್ಮ! ಇದಕ್ಕಿಂತ ದೊಡ್ಡ ಧರ್ಮವೇನಿದೆ? + +ರಂಗ :ಅದೇನ್ರೀ? ನಿಮ್ಮ ಶಾಲೆಗೆ ಗ್ರೆಂಟ್ ಸಿಕ್ಕಿಬಿಟ್ಟರೆ ದೊಡ್ಡ ಧರ್ಮ ಆಯಿತೆ? + +ರಾಮು :ಮತ್ತೆ! ನಮ್ಮದು ಧಾರ್ಮಿಕ ಭಾಷೆ! ದೇವಭಾಷೆ! + +ಮಾಧು :ನಮ್ಮದು ಮತ್ತೆ? + +ರಾಮು :ನಿಮ್ಮದು ಮ್ಲೇಂಛ ಭಾಷೆ. + +ರಂಗ :ಎಂದರೆ? + +ರಾಮು :ಹೂಣ ಭಾಷೆ! + +ಮಾಧು :ಹೂಣ ಭಾಷೆಯಾದರೇನಾಯಿತು? + +ಕೃಷ್ಣ :ಹೂಣರೆಂದರೆ ಪಾಷಂಡಿಗಳು – ನಾಸ್ತಿಕರು! ಆದುದರಿಂದ ಅವರ ಭಾಷೆಯೂ ನಿಷಿದ್ಧ! ವೇದದಲ್ಲೇ ಹೇಳಿದೆ – ನ ಮ್ಲೇಂಛಿತ ವೈ ನಾಪಭಾಷಿತ ವೈ – ಮ್ಲೆಂಛೋ ಹವಾ ಏಷ ಯದಪಶಬ್ದಃ – ಅಂತ! + +ಮಾಧು :ಹಾಗಾದರೆ – ಮ್ಲೇಂಛರೆಂದರೆ ಅಷ್ಟು ನಿಷಿದ್ಧ? + +ರಾಮು :ಅಡ್ಡಿಯೇನು? ಅವರು ಧರ್ಮದ್ರೋಹಿಗಳು! + +ರಂಗ :(ನಗುತ್ತ) ಹಾಗಾದರೆ – ನಿಮ್ಮ ರಾಜಾ ಪ್ರತ್ಯಕ್ಷ ದೇವತಾಂತ ತತ್ವ ಎಲ್ಲಿಗೆ ಹೋಯಿತಯ್ಯ? + +ರಾಮು :(ದಿಗಿಲುಬಿದ್ದು) ರಾಜ ಆದರೆ ಚಿಂತಿಲ್ಲ. + +ಮಾಧು :ಅವ ಏನು ಮ್ಲೇಂಛ ಅಲ್ಲವೆ?(ರಾಮು, ಕೃಷ್ಣಶಾಸ್ತ್ರಿ ಮುಖ – ಮುಖ ನೋಡಿಕೊಳ್ಳುವರು – ಇವರು ನಗುವರು) + +ಕೃಷ್ಣ :(ಸಿಟ್ಟಿನಿಂದ) ನೀವು ಮಿಶ್ಶನ್ ಶಾಲೆಯವರು! ಫಟಿಂಗರು! ನಿಮ್ಮ ಕೂಡೆ ಮಾತಾಡಿದ್ದೆ ತಪ್ಪು! + +ರಂಗ :(ನಗುತ್ತ) ಹಾ! ಅದು ಸರಿ! ಚೆನ್ನಾಯಿತು. (ಕಿವಿಗೊಟ್ಟು) ಏನದು ಸಂಗೀತ? + +ಮಾಧು :(ಕೇಳಿ) ಏನೋ ರಾಷ್ಟ್ರಗೀತೆ! ಪ್ರಾಯಶಃ ಪಿಕೆಟಿಂಗಿಗೆ ಹೋಗುತ್ತಾರಂತ ಕಾಣ್ತದೆ. (ಜ್ಞಾಪಿಸಿಕೊಂಡು) ಹೌದು. ಇವತ್ತು ಮಿರ್ಜಾ ಬ್ರದರ್ಸ್ ರ ಅಂಗಡಿ ಮುಂದೆ ಪಿಕೆಟಿಂಗ್ ಇದೆಯಂತೆ! (ನಗುತ್ತಾ) ಏ! ಮತ್ತೊಂದು ವಿಷಯ – ಆ ಪೈಕಿ ಒಂದು ಹುಡುಗಿ ಏನು ಚೆಂದ ಇದೆ ಗೊತ್ತಿದೆಯೆ? ಅದನ್ನು ನೋಡಿ ನಾನು ಕೂಡ ಪಿಕೆಟಿಂಗಿಗೆ ಸೇರೋಣಾಂತ ಒಮ್ಮೆ ಎಣಿಸಿಬಿಟ್ಟೆ! + +ರಾಮು :(ಕಿವಿಮುಚ್ಚಿ) ಶಾಂತಂ ಪಾಪಂ! ಶಾಂತಂ ಪಾಪಂ! ಏನಿದು? ಪರಸ್ತ್ರೀಯರ ವರ್ಣನೆ ಮಾಡೋದು? + +ರಂಗ :ಅದಕ್ಕೇನು? ಮಹಾಕವಿ ಕೀಟ್ಸ್ ಹೇಳಿದ್ದಾನೆ –“A thing of beauty is a joy for ever;Its loveliness increases, – it will neverPass into nothingness…..” + +ರಂಗ :ಛೇ ಛೇ! ಅನ್ಯಾಯ! ಅದರಿಂದ ಮೇಲಿನ ಪಾಪವೇ ಇಲ್ಲ. ನಮ್ಮ ಶಾಸ್ತ್ರದಲ್ಲಿದೆ – ಮಾತೃವತ್ ಪರದಾರೇಷು – ಅಂತ. + +ಕೃಷ್ಣ :ಅದಕ್ಕೆ ಹೇಳೋದು ಮಿಶನ್ ಶಾಲೆಯವರೂಂತ! ರಾಮು! ನಾವು ಅವರನ್ನು ನೋಡೋದು ಬೇಡ. ಚಿಂತನೆ ಮಾಡೋಣ!(ಇಬ್ಬರೂ ಪುಸ್ತಕದಿಂದ ಮುಖವನ್ನು ಮರೆಮಾಡಿಕೊಂಡು ಓದುವರು-) + + + +(ಮೂವರು ಸ್ವಯಂಸೇವಕಿಯರು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಹಾಡುತ್ತಾ ಬರುವರು.) + +ಝಂಡಾ ಊಂಚಾ ರಹೇ ಹಮಾರಾವಿಜಯೀ ವಿಶ್ವತಿರಂಗಾ ಪ್ಯಾರಾ | + +ಮಾಧು :(ಕಣ್ಣು ಮಿಟಕಿಸಿ) ನೋಡಿದೆಯಾ! ಅದೇ ಹುಡುಗಿ! + +(ಇಬ್ಬರೂ ಕಣ್ಣೆವೆ ಮುಚ್ಚದೆ ನೋಡುತ್ತಿರುವರು)(ರಾಮು – ಕೃಷ್ಣರದ್ದೂ ಕಣ್ಣುಗಳು ಪುಸ್ತಕದಿಂದ ಹೊರಗೆ)(ಸ್ವಯಂಸೇವಕಿಯರು ಹೋಗುವರು-) + +ರಂಗ :(ತಿರುಗಿ ನೋಡಿ ನಗುತ್ತ) ಏನಯ್ಯ ಮಹಾ ಧಾರ್ಮಿಕರು! ಎಲ್ಲಿ ಹಾರಿಹೋಯಿತು ನಿಮ್ಮ ಶಾಸ್ತ್ರ – ‘ಮಾತೃವತ್ ಪರದಾರೇಷು’ + +(ರಂಗ – ಮಾಧು ಇಬ್ಬರೂ ನಗುವರು)(ಸ್ವಯಂಸೇವಕರ ಉಡುಪಿನಲ್ಲಿ ಸುದರ್ಶನರಾಯನ ಪ್ರವೇಶ) + +ಸುದ :(ರಂಗ – ಮಾಧು ಇವರನ್ನು ನೋಡಿ) ನೀವಾರಯ್ಯ? ಸ್ವಯಂಸೇವಕರೆ? + +ರಂಗ :ಅಲ್ಲ, ನಾವು ಸ್ಕೌಟುಗಳು! + +ಸುದ :ಸ್ಕೌಟುಗಳೆ? ಹಾಗಾದರೆ ಬನ್ನಿ. ಪಿಕೆಟಿಂಗಿಗೆ ಹೋಗೋಣ! + +ಮಾಧು :ಛೆ ಛೇ! ಸಮಯವಿಲ್ಲರೀ! ಈ ಹೊತ್ತು ನಮ್ಮ ಶಾಲೇಲಿ ನಮ್ಮದು ‘ಕೇಂಪ್ ಫಯರ್’! + +ಸುದ :ಕೇಂಪ್ ಫಯರ್! ದೇಶದಲ್ಲೇ ದಾರಿದ್ರ್ಯದ ಬೆಂಕಿ ಏಳುತ್ತಾ ಇರುವಾಗ ಮತ್ತೆ ನಿಮ್ಮ ‘ಕೇಂಪ್ ಫಯರ್’| + +ರಂಗ :ಅಲ್ರೀ! ಅದು ಸ್ಕೌಟುಗಳ ‘ಸಿಸ್ಟಮ್!’ + +ಸುದ :(ಬೇಸರದಿಂದ) ಬೆಂಕಿ ಹಾಕಿದರು ನಿಮ್ಮ ಸಿಸ್ಟಮಿಗೆ! ಕೆಲಸಕ್ಕೆ ಬಾರದ ಕೂಟ! + +ಮಾಧು :(ಸಿಟ್ಟಿನ ಸೋಗಿನಿಂದ) ಹಾಗಾದರೆ ಏನ್ರೀ? ನಮ್ಮ ಜಗತ್ಪ್ರಸಿದ್ಧ ಪೋವೆಲ್ ಸಾಹೇಬರು ತೊಡಗಿದ ಸ್ಕೌಟ್ ಸಿಸ್ಟಮ್! ಅದನ್ನು ಹೀಗೆ ಹಳಿಯೋದೆಂದ್ರೆ! + +ಸುದ :ಹಳಿಯದೆ ಮತ್ತೇನು ಉದ್ಧಾರ ಮಾಡಿರುವಿರಿ ನೀವು? + +ರಂಗ :ಉದ್ಧಾರಂದ್ರೆ! ಮೊನ್ನೆ ನಮ್ಮ ಎಜ್ಯುಕೇಶನ್ ಮಿನಿಷ್ಟರ್ ಬಂದಾಗ ನಮ್ಮ ಕೇಂಪ್ ಫಯರ್ ನೋಡಿ ಮೆಚ್ಚಿಬಿಟ್ಟಿದ್ದಾರೆ! ಆ ದಿನ ನಮ್ಮ ಈ ಮಾಧವ ರಾಯರ ಹಕ್ಕಿಗಳ ಕೂಗಿನ ಇಮಿಟೇಶನ್ ಕೇಳಿ ಎಲ್ಲರೂ ಬೆರಗಾಗಿ ಹೋದರು! + +ಸುದ :(ಪಶ್ಚಾತ್ತಾಪದಿಂದ) ಅಯ್ಯೋ ಬಡವರ ಕರುಳಿನ ಕೂಗೇ ದಿನ ದಿನಕ್ಕೂ ದಿಗಂತ ವ್ಯಾಪಿಯಾಗುತ್ತಿರುವಾಗ ನಿಮ್ಮ ಈ ಹಕ್ಕಿಗಳ ಕೂಗೇ!(ರಾಮು – ಶಾಸ್ತ್ರಿ ಇವರು – ಇನ್ನು ತಮ್ಮೊಡನೆ ಕೇಳುವನೋ ಎಂಬ ಭೀತಿಯಿಂದ ಮುಂಚಿತವಾಗಿಯೇ ಓದತೊಡಗಿದರು.) + +ರಾಮು :ಅತ್ರ ಭೂತಲೆ ಘಟೋ ನಾಸ್ತೀತಿ ಪ್ರತೀತಿ ಸಾಕ್ಷಕೋಯೋ ಆಭಾವಃ! + +ಕೃಷ್ಣ :ಘಟಾಭಾವಃ – + +ಸುದ :(ತಡೆದು) ಅಲ್ಲ ಅಲ್ಲ! ತಲೆ ಬುರುಡೆಯ ಅಭಾವ! ಏನು? ನೀವಾದರೂ ಬರುತ್ತೀರೋ? + +ರಾಮು :(ಏನೂ ಅರಿಯದವರಂತೆ) ಎಲ್ಲಿಗೆ? + +ಸುದ :ಪಿಕೆಟಿಂಗಿಗೆ! + +ರಾಮು :ಛೇ – ಛೇ! ನಾವೆಲ್ಲ ಅಂತಹ ರಾಜದ್ರೋಹಗಳಿಗೆ ಕೈ ಹಾಕುವಂತೆಯೇ ಇಲ್ಲ. ಅದು ನಮ್ಮ ಶಾಸ್ತ್ರಕ್ಕೆ ತೀರಾ ವಿರುದ್ಧ! + +ಕೃಷ್ಣ :ಮತ್ತು ನೋಡಿ! ನಾವು ಬ್ರಾಹ್ಮಣರು! ಹಾಗೆಲ್ಲ ಶೂದ್ರರ ಅಂಗಡಿ ಮುಂದೆ ನಿಂತು ಬಂದವರಿಗೆಲ್ಲಾ ಕೈಮುಗಿದು ಕಾಲು ಹಿಡಿಯೋ ಹಾಗಿಲ್ಲ! + +ಸುದ :(ಪಶ್ಚಾತ್ತಾಪದಿಂದ) ಅಯ್ಯೋ! ನಮ್ಮ ಮುಂದಿನ ಜನಾಂಗವೆ! ಇಂತಹ ನಿರ್ಜೀವ ಸಂತತಿಯಿಂದ ನಮ್ಮೀ ಭಾರತ ವರ್ಷವು ಹೇಗೆ ತಾನೆ ಉದ್ಧಾರವಾದೀತು? (ಅವರೊಡನೆ) ಹಾಗಾದರೆ ಯಾರೂ ಬರುವಂತಿಲ್ಲ?(ಉತ್ತರವಿಲ್ಲ)(ಧಿಕ್ಕಾರದಿಂದ) ಛೀ! ಆ ಎಳೆ ಹುಡುಗಿಯರಿಗಿಂತಲೂ ಕೀಳಾಯಿತಲ್ಲ ನಿಮ್ಮ ಬಾಳು!(ಹೊರಟು ಹೋಗುವನು) + +ರಂಗ :ಅಲ್ಲ. ನಾವೇನೂ ಹುಡುಗಿಯರಿಗಿಂತ ಕೀಳಲ್ಲ. ಆದರೆ ಅದನ್ನು ಸಿದ್ಧಾಂತ ಮಾಡಿ ತೋರಿಸಲಿಕ್ಕೆ ಮಾತ್ರ ಪ್ರಕೃತ ತಯಾರಿಲ್ಲ – ಅಷ್ಟೆ! + +ಮಾಧು :(ತಲೆದೂಗುತ್ತ) ಅದು ಹೌದು! + +ರಾಮು :ಏನ್ರೀ! ಈಗ ತಾನೇ ಗಾಂಧಿ ವಿಷಯ ದೊಡ್ಡ ವಾಖ್ಯಾನ ಕೊಟ್ಟಿರಲ್ಲ! ಮತ್ತೇಕೆ ದೇಶೋದ್ಧಾರಕ್ಕೆ ಹೊರಡಲಿಲ್ಲ? (ನಗುತ್ತ -) ಇಷ್ಟೆಯೇ ನಿಮ್ಮ ಉಪದೇಶ? + +ಕೃಷ್ಣ :‘ಪರೋಪದೇಶೇ ಪಾಂಡಿತ್ಯಂ’ –(ಇಬ್ಬರೂ ನಗುವರು.) + +ಮಾಧು :(ಬೇಸರದಿಂದ) ಸುಮ್ಮನಿರಿಯಯ್ಯ! ಹೇಳಿದಂತೆ ಮಾಡಬೇಕೆಂದು ಯಾರು ಹೇಳಿರುವರು? ರಂಗ! ನಾವಿನ್ನು ಹೋಗೋಣ! (ಕಿವಿಗೊಟ್ಟು) ಏನಿದು ಸದ್ದು? + +ರಂಗ :ಅಹುದು. ಯಾರೋ ಈ ಕಡೆಗೆ ಬರುವಂತಿದೆ. + +ಮಾಧು :(ನೋಡಿ ಗಾಬರಿಯಿಂದ) ರಂಗ! ಕೆಟ್ಟಿತಲ್ಲೊ ಕೆಲಸ! ಬೇಗ ಹೊರಡು. + +ರಂಗ :(ಎದ್ದು ನಿಂತು) ಏನಾಯಿತು? + +ಮಾಧು :ನೋಡು ಪೋಲೀಸಿನವರು ಲಾಥೀ ಚಾರ್ಜಿಗೆ ಬರ್ತಾಯಿದ್ದಾರೆ! ಕೊನೆಗೆ ನಮ್ಮ ಡ್ರೆಸ್ ನೋಡಿ ವಲಂಟೀಯರ್ಸ್ ಅಂತ ನಮಗೂ ಚಡಸಿ ಬಿಟ್ರೆ? + +ರಾಮು :ಏನಾಯ್ತಿಗ? ‘ಪರೋಪಕಾರಾರ್ಥಮಿದಂ ಶರೀರಂ -’ + +ಮಾಧು :(ಕಿವಿಗೊಡದೆ) ಏನು ಮಾಡೋದೀಗ? + +ಕೃಷ್ಣ :ಮಾಡೋದು ಮತ್ತೇನು? ಪಲಾಯನ ಸೂಕ್ತ ಪಾರಾಯಣ ಒಂದು ತಡವೆ ಮುಗಿಸಿಬಿಡೋದು!(ಇಬ್ಬರೂ ಚಪ್ಪಾಳೆ ತಟ್ಟಿ ನಗುವರು) + +ಮಾಧು :(ರಂಗನ ಕೈಹಿಡಿದು) ಬಾ! ಬೇಗ ಬಾ! (ಇಬ್ಬರೂ ಓಡುವರು)(ಲಾಥಿ ಹಿಡಿದ ಪೋಲೀಸರಿಬ್ಬರ ಪ್ರವೇಶ) + +ಒಬ್ಬ :(ಅಬ್ಬರದಿಂದ) ಯಾರಯ್ಯ? ಅದು ಓಡಿಹೋದ್ದು? ಏನು ಮಾಡ್ತಾ ಇದ್ದೀರಿ ಇಲ್ಲಿ ಕೂಟ ಕೂಡಿಸಿಕೊಂಡು? 144ನೇ ಸೆಕ್ಷನ್ ಜಾರಿಯಾದ್ದು ಗೊತ್ತಿಲ್ವೆ? + +ಮತ್ತೊಬ್ಬ :ಹೌದು! ಈ ಹುಡುಗರಿಗೆಲ್ಲಾ ಒಂದೊಂದು ತಡವೆ ಬಿಸಿ ಮಾಡದಿದ್ದರೆ ಆಗೋದಿಲ್ಲ! + +ರಾಮು :(ಬೆದರಿ) ಅಯ್ಯೋ! ನಾವೇನು ಮಾಡಿತಪ್ಪ ಅನ್ಯಾಯ? ನಾವು ಪಾಠ ಶಾಲೆಯವರು! + +ಕೃಷ್ಣ :ಹಾಗೆಲ್ಲ ನಾವು ಆ ಹಾಳು ಗಾಂಧೀಮತಕ್ಕೆ ಕೈ ಹಾಕೋದೇ ಇಲ್ಲ! + +ಒಬ್ಬ :ಮತ್ತಿಲ್ಲಿ ಕೂಡಿಕೊಂಡು ಏನ್ಮಾಡುತಿದ್ದೀರಿ? + +ರಾಮು :(ದೈನ್ಯದಿಂದ) ಏನಿಲ್ಲ! ಒಂದಿಷ್ಟು ಚಿಂತನೆ ಮಾಡ್ತಿದ್ದೆವು! + +ಮತ್ತೊಬ್ಬ :(ದರ್ಪದಿಂದ) ಚಿಂತನೆ. ಇಬ್ಬರು ವಲಂಟೀಯರ್ಸ್ ಓಡಿಹೋದರಲ್ಲ ಇಲ್ಲಿಂದ? ಮತ್ತೀಗ ಸುಳ್ಳು ಹೇಳ್ತೀರಿ! ಅಲ್ಲವೆ? (ಲಾಥಿ ಎತ್ತಿ) ಹುಂ! ಜಾಗ್ರತೆ! + +ರಾಮು :(ಕೈಮುಗಿದು) ಇಲ್ಲಪ್ಪ! ಅದು ಯಾರೋ ಏನೋ! + +ಕೃಷ್ಣ :ಅವರಿಗೂ ನಮಗೂ ಸಂಬಂಧವೇ ಇಲ್ಲ. (ಕಾಲಿಗೆ ಬಿದ್ದು ಅಳುತ್ತಾ) ದಮ್ಮಯ್ಯ! ನಾವು ಗಾಂಧಿ ಕಡೆಯವರೇ ಅಲ್ಲ. ನಾವು ಪಾಠಶಾಲೆಯ ಹುಡುಗರು. + +(ಆ ಕಡೆ ಮರೆಯಿಂದ ರಂಗ – ಮಾಧು ಹಣಕುವರು) + +ಒಬ್ಬ :(ಮತ್ತೊಬ್ಬನೊಡನೆ) ಪಾಠಶಾಲೆಯವರಂತೆ! ಪಾಪ! ಬಡಪ್ರಾಣಿಗಳು. ನಾವು ಮುಂದೆ ಹೋಗೋಣ. + +ರಾಮು :(ಕೈಮುಗಿದು ನಡುಗುತ್ತಾ) ಹೌದು; ಹೌದು; ನಾವು ಪಾಠ ಶಾಲೆಯವರು, ಬಡಪ್ರಾಣಿಗಳು.(ಪೋಲೀಸರು ಅವರಿಬ್ಬರನ್ನೂ ಒಮ್ಮೆ ದಿಟ್ಟಿಸಿ ನಗುತ್ತಾ ಹೋಗುವರು) + +ರಾಮು :(ಉಸಿರ್ಗರೆದು) ಒಂದು ತಡವೆಗೆ ಬಚಾವಾಯಿತಪ್ಪಾ!(ರಂಗ ಮಾಧು, ಮರೆಯಿಂದ ನಗುತ್ತಾ ಬಂದು) + +ರಂಗ :ಏನ್ರೀ! ಮಹಾಬ್ರಾಹ್ಮಣರು, ಶೂದ್ರರ ಕಾಲು ಹಿಡಿದು ಅಳೋದೇ? + +ರಾಮು :ಎಲ್ಲಿಗೆ ಹೋಯಿತು ನಿಮ್ಮ ಶಾಸ್ತ್ರ? ‘ಬ್ರಾಹ್ಮಣೋಸ್ಯ ಮುಖಮಾಸೀತ್’. ಆವಾಗಲೇ ನಮ್ಮ ಕೂಡೆ ಪಲಾಯನ ಸೂಕ್ತ ಪಾರಾಯಣ ಮಾಡುತ್ತಿದ್ದರೆ ಈ ಕಷ್ಟ ಬರ್ತಿತ್ತೆ?(ಇಬ್ಬರು ಕೈತಟ್ಟಿ ನಗುವರು) + +ರಾಮು :(ಸಿಟ್ಟಿನಿಂದ) ಶಾಸ್ತ್ರಿ! ನಾವು ಇಲ್ಲಿಂದ ಹೋಗೋಣ! ಈ ಫಟಿಂಗರ ಸಾವಾಸವೇ ನಮಗೆ ಬೇಡ!(ಇಬ್ಬರೂ ಪುಸ್ತಕ ಹಿಡಿದುಕೊಂಡು ಹೋಗುವರು) + +ರಂಗ :ಮಾಧು! ನಾವೂ ಹೋಗೋಣ! ಟೈಮಾಯಿತೋ ಏನೋ ಕೇಂಪ್ ಫಯರಿಗೆ! + + + +ಮಾಧು :ಅದು ಹೌದು ಬೇಗ ಹೋಗೋಣ!(ಹೋಗುವರು) + +(‘ಎರಡು ಏಕಾಂಕ ನಾಟಕಗಳು’ (1935) ಇದರಲ್ಲಿರುವ ‘ಉದ್ಧಾರ’ ನಾಟಕದ ಒಂದು ದೃಶ್ಯ.) + +******* + +‘ಕವಿರಾಜ ಹಂಸ’ ಎಂಬ ಬಿರುದು ಪಡೆದಿದ್ದ ಉಡುಪಿ ಜಿಲ್ಲೆಯ ಬಹುಮುಖ್ಯ ಸಾಹಿತಿಗಳಲ್ಲೊಬ್ಬರಾದ ಎಸ್.(ಸಾಂತ್ಯಾರು) ವೆಂಕಟರಾಜರು (1913-1988) ಮೂವತ್ತರ ದಶಕದಿಂದಲೇ ಕತೆಗಳನ್ನು ಬರೆಯಲು ಪ್ರಾರಂಭಿಸಿದ್ದರು; ಅಂದಿನ ಅವಿಭಜಿತ ದಕ್ಷಿಣ ಕನ್ನಡದ ಶ್ರೇಷ್ಠ ಕತೆಗಾರರೆಂದು ಮಾನ್ಯರಾಗಿದ್ದರು. ‘ಆಕಾಶಗಂಗೆ’ (1945) ಮತ್ತು ‘ಸಪ್ತಸಾಗರ’ (1947) ಅವರ ಪ್ರಕಟಿತ ಕಥಾಸಂಕಲನಗಳು. ಅವರ ಹಲವು ಕತೆಗಳು ಪತ್ರಿಕೆಗಳಲ್ಲಿ ಪ್ರಕಟವಾಗಿ, ಸಂಕಲಿತವಾಗದೆ ಉಳಿದಿವೆ. ಪ್ರಸ್ತುತ ಕತೆ ಅವರದೇ ಆದ ‘ವೀರಭೂಮಿ’ ಮಾಸಿಕದಲ್ಲಿ ಪ್ರಕಟವಾಗಿತ್ತು. ವೆಂಕಟರಾಜರು ಸಾಂತ್ಯಾರು, ಬೈರಂಪಳ್ಳಿ, ಬೆಳ್ಳರ್ಪಾಡಿ ಗ್ರಾಮಗಳ ಪಟೇಲರಾಗಿದ್ದರು. ತಮ್ಮ ‘ಮಾನಸಗಂಗೆ’ ಕವನ ಸಂಕಲನಕ್ಕಾಗಿ ರಾಜ್ಯಪ್ರಶಸ್ತಿ ಪಡೆದಿದ್ದ ಅವರು 7 ಕವನಸಂಕಲನಗಳು, 3 ಕಾದಂಬರಿಗಳು, 8 ನಾಟಕಗಳು, 54 ಕತೆಗಳು, ಸಂಪಾದಕೀಯ ಲೇಖನಗಳು, ಲಲಿತಪ್ರಬಂಧಗಳು, ಅಂಕಣ ಬರಹಗಳು ಮುಂತಾಗಿ ಎಲ್ಲ ಬಗೆಯ ಸಾಹಿತ್ಯ ಕೃತಿಗಳನ್ನು ಪ್ರಕಟಿಸಿದ್ದಾರೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_306.txt b/Kenda Sampige/article_306.txt new file mode 100644 index 0000000000000000000000000000000000000000..c1b3ef3a6b0b4499a8403473f0573bfccfc8c888 --- /dev/null +++ b/Kenda Sampige/article_306.txt @@ -0,0 +1,77 @@ + + +ಈ ಸಮಕಾಲಿನ ಕಥಾ ಪ್ರಪಂಚದಲ್ಲಿ ಅತ್ಯದ್ಭುತವಾಗಿ ಕತೆಯನ್ನು ಕಟ್ಟಿಕೊಡಬಲ್ಲ ಅದಮ್ಯ ಶಕ್ತಿ ಚನ್ನಪ್ಪ ಕಟ್ಟಿ ಅವರು. ಹುಟ್ಟು ಗದಗ ಜಿಲ್ಲೆಯ ರೋಣ ತಾಲೂಕಿನ ಹಿರೇಹಾಳ ಗ್ರಾಮವಾದರೂ,ಬೆಳೆದು ನಿಂತು ನಂಬಿಗೆಗೆ ಇಂಬು ಎನಿಸಿದ್ದು ಸಿಂದಗಿ. ಸಿಂದಗಿಯಲ್ಲಿ ಸಾಹಿತ್ಯ ಸಾಂಸ್ಕೃತಿಕ ವಲಯದಲ್ಲಿ ಚನ್ನಪ್ಪ ಕಟ್ಟಿ ಅವರು ಬೆಳೆದರು. ಅವರು ಬೆಳದ ಎತ್ತರಕ್ಕೆ ತಮ್ಮ ಶಿಷ್ಯಕೋಟಿಯನ್ನು ಬೆಳೆಸಿದರು. ವೃತ್ತಿಯಿಂದ ಸಿಂದಗಿಯ ಪ್ರತಿಷ್ಠಿತ ಪೋರವಾಲ್ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಭಾವದೆತ್ತರದ ಆ ಇಂಗ್ಲೀಷ್ ಗೂ, ಭಾವದಾಳದೊಳಿರುವ ಕನ್ನಡಕ್ಕೂ ಎಂಥಾ ಸಂಬಂಧವನ್ನು ಕಟ್ಟಿಕೊಡುವ ಗಟ್ಟಿತನ ಚನ್ನಪ್ಪ ಕಟ್ಟಿ ಗುರುಗಳ ಬದುಕು ಮತ್ತು ಬರಹದಲ್ಲಿ ಕಾಣುತ್ತೇವೆ. + +ಕತೆ ಹೇಳುವ ಪರಿಯಂತೂ “ಹಸಿ ಗ್ವಾಡಿಗಿ ಹಳ್ಳಿಟ್ಟಂಗ” ಓದುತ್ತ ಸಾಗಿದಂತೆಲ್ಲ ನಮ್ಮನ್ನು ತಮ್ಮಂತೆ ಮಾಡಿಕೊಳ್ಳುವ ಪರುಷಗುಣ ಕಟ್ಟಿಯವರ ಬರಹಕ್ಕಿದೆ. ನಮ್ಮ ಓಣ್ಯಾಗಿನ ಮುದುಕಿ ಮಾತಾಡಿದಂಗ, ನಮ್ಮನಿಯಾಗ ಇದೇನೋ ನಡದೈತಿ ಅನುವಂಗ, ನಾನೇ ಕಥಾನಾಯಕ, ನಂದ ಕತಿ ನಡದೈತಿ ಅನಸತೈತಿ. ಯಾಕ್ಹಿಂಗ ಅಂದ್ರ, ಪಕ್ಕಾ ಪಕ್ಕಾ ಹಳ್ಯಾಗಿನ ಹವಳದಂತ ಮಾತು ಏಕತಾರಿ ತುಂಬಾ ತುಂಬಿಕೊಂಡಾವ! ಕಟ್ಟಿ ಅವರ ವಿದ್ಯಾಗುರುಗಳು ಎನಿಸಿಕೊಂಡಿರುವ ಎಸ್.ಎಫ್. ಯೋಗಪ್ಪನವರು ಬರೆದ ಮುನ್ನುಡಿ ಹಾಗೂ ಬೆನ್ನುಡಿಯಂತು, ಏಕತಾರಿಯನ್ನು ಪ್ರತಿಬಿಂಬಿಸುವ ಮುತ್ತಿನ ಕನ್ನಡಿಯಂಗ ಕಾಣತೈತಿ. ಅದಕ್ಕೆ ಅವರು ಬಳಸಿದ ಪದ ಶ್ರೀಮಂತಿಕೆ, ಹೊಂದಿಸಿ ಹೇಳಿದ ರೀತಿ, ಕತೆಯೊಳಗಿನ, ಕತೆಹೊರಗಿನ ಜೀವನದೊಂದಿಗೆ ಬೆರೆಸಿದ ಭಾವದೋಕಳಿಗೆ ಓದುಗನ ಮನ ಮಿಂದೆದ್ದ ಹಗೂರ ಆಗತೈತಿ. + +ಪ್ರತಿ ಕತಿಯು ಒಂದೊಂದು ದಿಕ್ಕಿನ್ಯಾಗ ಹರದಾಡತಾವ, ಊಟಕ್ಕ ಕುಂತವ್ರಿಗೆ ಊಟ ಬಡಿಸುವ ಕೆಲಸ ನಡೆದೇ ಇರತೈತಿ… ಹಸಿವ ಹೆಚ್ಚಾಗತಿರ್ತೈತಿ ಕಾರಣ ರುಚಿ ಹೆಚ್ಚಿದ್ದಾಗ ಹಂಗ ಆಗತೈತಿ. ಕತಿ ಮುಗಿತೈತಿ ಆದ್ರ ಕೈ ತೊಳೆದುಕೊಳ್ಳುವ ಮುನ್ಸೂಚನೆ ಸಿಗೋದಿಲ್ಲ.. ಅಂದ್ರ ಮುಂದುವರೆಸಿದ್ರ ಕತೆಯೆಲ್ಲವೂ ಕಾದಂಬರಿ ಆಗುವ ವಿಸ್ತಾರವನ್ನು, ಹರಿವನ್ನು ಹೊಂದ್ಯಾವ. ಎಲ್ಲಾ ಕತಿಯಲ್ಲಿ ಎಲ್ಲವನ್ನೂ ಹೇಳುತ್ತಾರೆ ಆದರೆ ತೀರ್ಮಾನಿಸುವುದಿಲ್ಲ. ಒಂದು ಮತ್ತೊಂದು ಸನ್ನಿವೇಶಕ್ಕೆ ಲಿಂಕ್ ಕೊಡುತ್ತಾರೆ. ಅದನ್ನು ಅರ್ಥೈಸಿಕೊಳ್ಳುವಿಕೆ ಬಹಳ ಜಾಣತನದ್ದಾಗಿದೆ. + +(ಚನ್ನಪ್ಪ ಕಟ್ಟಿ) + +ಜುಮ್ಮಣ್ಣನ ಕಂಚಿನ ಮೂರ್ತಿ ಎಂಬ ಕತಿಯೊಳಗ, ಅಪ್ಪನ ಸಾವಿನ ರಹಸ್ಯ ಕೇಳಲು ಬಂದ ಮಗ ಸೋಮ್ನಿಂಗಗೆ ಬಹಳ ಸ್ವಾರಸ್ಯಕರವಾಗಿ ಅವನ ತಾಯಿ ಉತ್ತರ ನೀಡುತ್ತಾಳೆ. “ದೇವಿರಪ್ಪ ಆರ ವರ್ಷದ ಶಿವ್ಲಿಂಗನ ಕರಕೊಂಡು ದೇವರ ಹಿಪ್ಪರಗಿಗೆ ಬಂದ, ಆ ಶಿವ್ಲಿಂಗ್ ಎಂಟು ವರ್ಷದಾವ ಆಗೂದರೊಳಗ ನೀ ಹುಟ್ಟಿದಿ” ಎಂದು ನಿಟ್ಟುಸಿರ ಬಿಟ್ಟಳು ಎಂಬಲ್ಲಿಗೆ ಅವನ ಹುಟ್ಟು, ತಂದೆಯ ಕೊಂದ ಗುಟ್ಟು ಎರಡು ತಿಳಿಸಿದಂತೆ ಅನಿಸಿದರೂ ಅದರ ಗುಟ್ಟು ಬಿಟ್ಟುಕೊಡುವುದಿಲ್ಲ ಕತೆಗಾರರು. ನೀರ ಮೇಲೆ ಸೀರೆ ಎಳೆದಂತೆ, ಬಾರಿ ಕಂಟಿಮ್ಯಾಲ ಬಿದ್ದ ಸೀರೆಯನ್ನು ನಾಜೂಕಾಗಿ ಬಿಡಿಸಿಕೊಂಡತೆ ಕತೆಯನ್ನು ಬಿಚ್ಚಿಡುತ್ತಾರೆ. ತೀರ್ಮಾನವನ್ನ ಬಹುಪಾಲು ಕತೆಗಳಲ್ಲಿ ಓದುಗನಿಗೆ ಬಿಡುತ್ತಾರೆ. + +ಜುಮ್ಮಣನ ಕಂಚಿನ ಮೂರ್ತಿ, ಒಲಿಯದ ಗಂಡ, ದೇವಿರಪ್ಪನ ಆಗಮನ, ಸೋಮ್ಲಿಂಗನ ಜನನ, ದೇವಿರಪ್ಪನ ಕೊಲೆ, ಸೋಮ್ಲಿಂಗ ಹಾಗೂ ಶಿವ್ಲಿಂಗನ ಗೆಳೆತನ, ಕ್ಷಮಿಸು ಎಂದು ಹೇಳಿ ಬಾವನೊಂದಿಗೆ ಹೊರಡುವ ಶಿವ್ಲಿಂಗನ ರೀತಿ… ಕೊನೆಗೆ ಜುಮ್ಮಣ್ಣನ ಮೂರ್ತಿಯೊಂದಿಗೆ ದೇವರಹಿಪ್ಪರಗಿಯಿಂದ ಅವಳು ಹೊರಡುವ ನಿರಮ್ಮಳತೆ ಇವೆಲ್ಲವನ್ನು ಕಟ್ಟಿಯವರು ಕಟ್ಟಿಕೊಟ್ಟಿರುವ ರೀತಿ ಸ್ವಾರಸ್ಯದಿಂದ ಕೂಡಿದೆ. + +ರತ್ನಗಿರಿಯೆಂಬ ಮಾಯೆಯ ಕತೆಯಲ್ಲಿ ಕಾಯಿಪಲ್ಯ ಮಾರುವ ಮುದಕಿ ಮಾತುಗಳು ಸಂಸಾರ ಹಾಗೂ ಪಾರಮಾರ್ಥದ ಒಳಸುಳಿವುಗಳನ್ನು ಬಿಚ್ಚಿಡುತ್ತದೆ. ಕಾಯಕ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದುಡಿಯುವುದೆಂದರೆ “ಅಂಗೈಯ ಗೆರೆ ಅಳಿಸಿ ಹೋಗುವಂಗ ದುಡದ ಎದಿಮಟ ಬೆಳಿಯೊಳಗ ತನ್ನಷ್ಟಕ್ಕೆ ತಾನೇ ನಕ್ಕೋತ ನಿಂದ್ರಾವ” ಅನ್ನೋದಿದೆಯಲ್ಲ ಅದು ಭೂಮಿಯೊಂದಿಗೆ ರೈತ ಹೊಂದಿರುವ ಅವಿನಾಭಾವ ಸಂಬಂಧ ಹಾಗೂ ಶ್ರಮ ಸಂಸ್ಕೃತಿಯನ್ನು ಗೌರವಿಸಿದಂತ ಮಾತುಗಳನ್ನು ಕಟ್ಟಿಯವರು ಆಡಿಸಿದ್ದಾರೆ. ಇದ ಕಾಯಿಪಲ್ಯ ಮಾರುವ ಮುದಕಿ ಮಕ್ಕಳು ರತ್ನಗಿರಿಗೆ ಹೋಗಿದ್ದನ್ನ ವಿರೋಧಿಸುವ ಧಾಟಿಯೊಳಗ ಅವಳ ನುಡಿಗಳು ಒಕ್ಕಲುತನವನ್ನು ಪುಷ್ಠಿಕರಿಸುತ್ತವೆ. ಅದೆನೆಂದರೆ “ರಟ್ಟಿ ದುಡದರ ದುಡದವನ ಹೊಟ್ಟಿ ಮಾತ್ರ ತುಂಬುತ್ತ, ಹೊಲಾ ದುಡದ್ರ ಹೊಲದಾಗ ದುಡದವರು, ಅವರ ನೆಚಗೊಂಡ ಆಳುಕಾಳು, ಎತ್ತುಎಮ್ಮಿ, ಆಡುಆಕಳ, ಎಲ್ಲಾ ಬದುಕತಾವು” ಅನ್ನುವುದು ಪರಿಸರ ಹಾಗೂ ಜೀವಕೋಟಿಯೊಂದಿಗೆ ಮೂಲತಃ ಮಾನವನ ಸಂಬಂಧವನ್ನು ತಿಳಿಸುತ್ತದೆ. ಕಥಾನಾಯಕ ಹೊಲ ಮಾರಬಾರದು ಎಂಬ ನಿರ್ಧಾರಕ್ಕೆ ಬರುವಂತೆ ಆಗುವುದು. + +ಬಾಲಕನ ಕಣ್ಣಲ್ಲಿ ಸಾವು ಎಂಬ ಕತೆಯೊಳಗ ತನ್ನದೆ ರೆಕಾರ್ಡ್ ತಾನೇ ಮುರಿಯುವ ಒಟಗಾರನಂತೆ ಓಡುತ್ತ ರೈಲು ನಿಲ್ದಾಣ ತಲುಪಿದ ಅನ್ನುವ ಪರಿಕಲ್ಪನೆ ಹಾಗೂ ಟ್ರೇನ್ ನಲ್ಲಿ ನಡೆಯುವ ಒಂದೊಂದು ಘಟನೆಯೂ ನೈಜತೆಯಿಂದ ಕೂಡಿರುವುದು. ಅವರವರ ಕಣ್ಣುಗಳಲ್ಲಿ ಏನೆಲ್ಲವನ್ನು ಕಂಡಂತೆ ಆ ಬಾಲಕನ ಕಣ್ಣಲ್ಲಿ ಸಾವಿತ್ತು ಎನ್ನುವುದರಲ್ಲಿಗೆ ಕತೆ ಮುಕ್ತಾಯವಾಗುತ್ತದೆ. + +ಅಟ್ಟ ಎಂಬ ಕತೆ ಕಟ್ಟಿಕೊಡುವ ಅತ್ಯಂತ ಅದ್ಬುತ ಅರ್ಥಹುಡುಕುವ ಲೋಕವನ್ನು… ಅತ್ತೆಯ ಕುಬಸದ ಕಾರಣ, ಅದಕ್ಕೆ ಅರ್ಥಹುಡುಕುವ ಕೆಂಚನಿಗೆ ಮಹಾಜ್ಞಾನಿಯಂತೆ ನಿಲ್ಯಾನ ಇರುವಿಕೆ, ಅದಕ್ಕೆಲ್ಲ ಕೆಂಚ ಮಾಡುವ ಸೇವೆಗಳನ್ನು ಗಮನಿಸಿದಾಗ ಜ್ಞಾನ ಜಗವನ್ನೆ ಆಳುತ್ತದೆ ಎಂದೆನಿಸುತ್ತದೆ. ಅಷ್ಟೇ ಅಲ್ಲ ಕೆಂಚನಂತೆ ನಾವೂ ಅಲ್ಲಲ್ಲಿ ಬರುವ ದೇಸಿಯ ನುಡಿಗಟ್ಟಿನ ಅರ್ಥಹುಡುಕಿ ಹೊರಟಂತೆ ಅನಿಸುತ್ತದೆ. + +ಅಟ್ಟದ ವರ್ಣನೆ, ತಾಯಿಯನ್ನು ಕಳೆದುಕೊಂಡಾಗ ಬತ್ತಿರಪ್ಪನ ಗುಡ್ಡದಿಂದ ಸೂರ್ಯನ ಬೆಳಕು, ಕಣ್ಣಿರು, ಅತ್ತೆ ಕುಬಸದ ಕಾರಣಕ್ಕೆ ಹೋಗಬೇಕೆನ್ನುವಾಗಿನ ಮನಸ್ಸಿನ ತುಮುಲ, ಅವ್ವನ ನೆನಪು ಮರಳಿ ಮನೆಗೆ ಬಂದರೆ ಮನೆ ಮುಂದೆ ಜನ ಜಾತ್ರಿ, ಮುದಕಿಯ ಸಾವು… ಹೀಗೆ ಬತ್ತಿರಪ್ಪನ ಗುಡ್ಡ, ಸಯ್ಯದ ಬಾಶ ದರ್ಗಾ, ಬಸರಿ ಮರದಲ್ಲಿನ ಮರಿಗಳು ತನ್ನನ್ನು ಆವರಿಸಿಕೊಳ್ಳುತ್ತಿದ್ದಂತೆ ಅವನು ಇಹ ಲೋಕವನ್ನು ಮರೆಯುತ್ತಾನೆ. ಕೆಂಚನ ಅಂತಿಮವನ್ನು ಅಟ್ಟದ ವಿಸ್ತಾರವನ್ನು ಓದುಗ ಬಯಸುತ್ತಾನೆ. ಇದಕ್ಕೆ ಅಂದದ್ದು ಒಂದೊಂದು ಕತೆಯೂ ಮುಂದುವರೆದರೆ ಕಾದಂಬರಿಯಾಗಬಲ್ಲಷ್ಟು ಆಳ ಅಗಲ ವಿಸ್ತರಿಸಿಕೊಂಡಿವೆ ಎನಿಸುತ್ತದೆ. + +ಹೊಸ್ತಿಲೊಳಗಣ ಹುತ್ತ ಕತೆಯಲ್ಲಿ ಗಿರಿಯಪ್ಪನ ಗತ್ತು, ಮುಶೀಯ ಮಸಲತ್ತು, ಪರಪ್ಪನು ಮಾಡಿದ ಗರ್ದಿಗಮ್ಮತ್ತು, ತಿಪ್ಪಣ್ಣನ ಮಜಕುರಾದ ತತ್ವಜ್ಞಾನದ ಸೊಗಡು, ಮಸ್ತ ಮಸ್ತ ಮಾತಿನ ಪದಗಳ ಸಕ್ಕಸರಗಿ ಈ ಕತಿಯೊಳಗ ವ್ಯಕ್ತ ಆಗತೈತಿ. ಹಳ್ಳಿಯಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ಜಗಜ್ಜಾಹಿರವಾದ ಪದ “ಇದರವೌನ” “ಇವನೌನ” ಇದರ ಮಜಾನೆ ಬ್ಯಾರೆ. ಇದರ ಬಳಕೆಯನ್ನು ಕಟ್ಟಿಯವರು ಬಹಳ ಚಂದ ಬಳಸಿದ್ದಾರೆ. ಗಿರಿಯಪ್ಪ ಮುಶೀ ಸೇದಿದ ಮ್ಯಾಲ ದೂರಬಿನ್ ನೋಡಿದಂಗ್ ಒಂದ ಕಣ್ಣ ಮುಚ್ವಿ ಅದರೊಳಗ ನೋಡ್ತಾನ, ಆಗ “ಉಪ್ ಎಂದರೆ ಉದರಿ ಬೀಳುವ ಜಾತಿಯದಲ್ಲ ಇದರೌನ”, “ಸೊನ್ನಿ ಮಾತ ಎಲ್ಲಿ ಕೇಳತ್ತ ಇದರೌನ, ಹಾರೀ ತಗೊಂಡು ಮುಕಳಾಗ ಹೆಟ್ಟಿದರ ಬಾಯಾಗಿಂದ ಬುದಬುದ ಕಾರಿಕೋತ ಕಣ್ಣಕಣ್ಣ ಬಿಟಗೊಂಡ ಕುಂದರತೈತಿ” ಎಂದು ಬಯ್ಯುವ ಬೇಗಳದ ಮಜ ಕೇಳಾಕ ಬಲುಚಂದ. + +ಗಿರಿಯಪ್ಪನಿಗೆ ಬಲು ಸಂತೋಷವಾದಾಗ, ವ್ಯಘ್ರನಾದಾಗ ಮುಶೀಯು ಆಲಿಂಗನ, ಅದು ನೀಡುವ ಸಾಂತ್ವನ, ಸುಖ ಗಮನಿಸಿದಾಗ ಶಿವರಾಮ ಕಾರಂತರ ಕಾದಂಬರಿ “ಚೋಮನದುಡಿ”ಯಲ್ಲಿ ಚೋಮ ದುಡಿಯನ್ನು ಬಡಿಯುವ ಘಟನೆ ಸರಕ್ಕಂತ ಸ್ಮೃತಿಯಲ್ಲಿ ಬಂದು ಹೋಗುವುದು…. + +ಉರ್ಧ್ವರೇತು ಎಂಬ ಕತೆಯಲ್ಲಿ ಬಾದಾಮಿಯ ಶಿಲ್ಪಕಲೆಯನ್ನು ಹಾಗೂ ರಂಗ್ಯಾ, ರಂಗಪ್ಪ, ಡಾ.ರಂಗರಾಜ ಆದ ಬಗೆಯನ್ನು ಆತನ ಆಲೋಚನಾ ಶೈಲಿಯ ಬದಲಾವಣೆಗೆ ದೆಹಲಿಯ ಜವಹರಲಾಲ್ ನೇಹರು ವಿಶ್ವವಿದ್ಯಾಲಯದ ದಟ್ಟ ಪ್ರಭಾವದ ಹಿನ್ನೆಲೆ ಕಾಣುತ್ತೇವೆ. ಬಹುದಿನದ ಗೆಳತಿ ಸೇವಂತಿ ಮೊಬೈಲ್ ನಲ್ಲಿ “ಸೇಬು” ಎಂದು ಹೆಸರಾದದ್ದು, ಅದರ ಹಿಂದಿನ ಹೆಜ್ಜೆಗುರುತುಗಳನ್ನು ಗಮನಿಸಿದ ವನಮಾಲ ಆಗಿ ಮರುನಾಮಕರಣಗೊಂಡ ಶಂಕ್ರೆಮ್ಮಗ ಗೊತ್ತಾಗದೆ ಇರಲಾರದು. ಸಂಸಾರವನ್ನು ನಿಭಾಯಿಸುವ ಎಲ್ಲಾ ತಾಯಂದಿರು(ಹೆಣ್ಣುಮಕ್ಕಳು) ಮನಿಮನದ ಗೌರವಕ್ಕೆ ಧಕ್ಕೆಯಾಗದಂತೆ, ಸಂದರ್ಭದ ಸೂಕ್ತತೆ ನೋಡಿ ಹೇಳುವ ಮಾತುಗಳು ಎಚ್ಚರಿಕೆಯ ಗಂಟೆಯಂತೆ! “ಮದುವೆಯ ವಯಸ್ಸಿಗೆ ಬಂದ ಎರಡು ಮಕ್ಕಳಿದ್ದಾರೆ, ಸಂಭಾಳಿಸಿಕೊಂಡು ಬನ್ನಿರಿ” ಎಂದು ವನಮಾಲ ಆಡಿದ ಮಾತುಗಳು. + +ಪ್ರತಿಯೊಬ್ಬರ ಮನೆಯಲ್ಲಿ ಗಂಡನ ಬಗ್ಗೆ ಎಲ್ಲೊ ಎಳ್ಳಕಾಳಿನಷ್ಟು ಸುಳಿವು ಸಿಕ್ಕಾಗ, ಮರ್ಯಾದೆಯ ಪ್ರಶ್ನೆಯೆಂದು ಹೇಳದೆ, ಮನಸಿಗೆ ನಾಟುವ ಮಾತುಗಳನ್ನು ಆಡುತ್ತಾರೆ ಎಂಬುದಕ್ಕೆ ವನಮಾಲ ಆಡುವ ಒಂದು ಮಾತು ನಿದರ್ಶನ. + +ಸುಖದ ನಾದ ಹೊರಡಿಸುವ ಕೊಳಲು ಕತೆಯಲ್ಲಿ: ರೆಬಕಾಯಿ ಮತ್ತು ಅರ್ಯಾಣಸಿದ್ಧನ ಕತೆಯೊಂದಾದರೆ, ಅದರಲ್ಲಿ ಅರ್ಯಾಣಸಿದ್ಧ ದೇವರ ಹಾಗೂ ಜನ್ನವ್ವನ ಕತೆಯೂ ಸಮೀಕರಿಸುತ್ತದೆ. ಕತೆಯೊಳಗ ಕತೆಯ ಕಟ್ಟಿ ಕೊಡುವ ಕತೆಗಾರರು ನಮ್ಮ ಚನ್ನಪ್ಪ ಕಟ್ಟಿಯವರು. ಸಂಪ್ರದಾಯ, ನಂಬಿಕೆ, ಚಾಜ ಹೊದ್ದು ಬೆಳೆದ ರೆಬಕಾಯಿಗೆ ಆಧುನಿಕತೆಯ ಮೆರವಣಿಗೆ ಇಷ್ಟವಾಗುವುದಿಲ್ಲ. ಸಂಪ್ರದಾಯಬದ್ಧ ಜನರಿಗೆ ಅದು ಅಂದು, ಇಂದು, ಮುಂದೆಯೂ ಹಿಡಿಸುವುದಿಲ್ಲ. ಅದಕ್ಕೆ ರೆಬಕಾಯಿಯ ಮಾತು ಮನದಾಗ ಸಿಡಲ ಹೊಡದಂಗ ಆಗತೈತಿ. ಹೀಂಗ ಉರುಣಗಿ ಮಾಡಿದವರ್ಯಾರೂ ಉಳದಿಲ್ಲ ನಮ್ಮ ದೇವರ ಮುಂದ ಎಂದು ಊರ ಗೌಡ ಹೇಳಿಕೊಳ್ಳುವ ಪರಿಯೂ ಬದಲಾವಣೆಗೆ ಒಗ್ಗದ ಮನೋಭಾವ ಎನ್ನೋದಕ್ಕಿಂತ ನಂಬಿಕೊಂಡ ಬಂದ ನಂಬಿಗೆಯ ಮ್ಯಾಲ ಬದುಕು ಮಾಡುವವರ ಮಾತೆನ್ನಬಹುದು. + + + +ಏಕತಾರಿ ಕತೆಯೊಳಗ ಮೊದಲ ರಾತ್ರಿಯಂದು ಚಂದ್ರಪ್ಪನ ಅಳು ಚಂದ್ರವ್ವಗ ಯಕ್ಷಪ್ರಶ್ನೆಯಾಗಿ ಕಾಡತೈತಿ. ಅದು ಬಹಳ ದಿನ ಆ ಗುಟ್ಟು ಹಂಗ ಉಳಿಯಂಗಿಲ್ಲ. ತನ್ನ ಗೆಳೆಯಾರೊಂದಿಗೆ ಕುಡತಕ್ಕೆ ಕುಂತಾಗ ಸತ್ಯದ ಮಾತ ಹೊರಡತಾವ. ಕುಡದವ್ರು ಖರೆ ಹೇಳ್ತಾರ ಅನ್ನೋದಕ್ಕೆ ಸಾಕ್ಷಿ ಎಂಬಂತೆ ಕುಡಿದ ನಿಶೇದಾಗ ಚಂದ್ರಪ್ಪ “ಅವ್ವನ ಕೂಡ ಯಾರಾರ ಸಂಸಾರ ಮಾಡಿದ್ದು ಕಂಡಿರೇನೋ ಭಾಡಕೋಗೋಳ್ರ್ಯಾ? ಅಕಿನ್ ನೊಡಿದ್ರ ಥೇಟ ನನ್ನ ಹಡದವ್ವನ ನೆನಪ ಆಕ್ಕೈತಿ, ಅಂಥಾಕಿ ಕೂಡ ಹ್ಯಾಂಗ್ ಮಾಡಲ್ಯೋ ಸಂಸಾರ? ಅಂದಕೊಂಡು ಚಂದಾಲಿಂಗ ಗೀಗೀ ತಂಡದ ಮಾಳವ್ವನ ಮನೆ ಸೇರಿದ ಸುದ್ಧಿ ಖಚಿತವಾಗುವುದು. ಕೈ ಹಿಡಿದ ಗಂಡ ಕೈ ಬಿಟ್ರೂ ಹಳ್ಯಾಗಿನ ಹೆಣ್ಣಮಕ್ಕಳು ಧೈರ್ಯದಿಂದ ತಾವೇ ಸ್ವತಃ ಗಣಮಕ್ಕಳಂಗ ದುಡ್ದು ತೋರುವ ಅದೇಷ್ಟೋ ಚಿತ್ರಗಳು ನಮ್ಮೆದುರಿಗೆ ಇವೆ. ಅದೆ ಇದು ಅನ್ನುವಷ್ಟರ ಮಟ್ಟಿಗೆ ಸಹಜತೆ ಕತೆಯಲ್ಲಿ ಕಂಡುಬರುತ್ತದೆ. + +ಚಂದ್ರವ್ವ ಸಣ್ಣಾಕಿ ಇದ್ದಾಗ ಕಿತ್ತಲಿ ನೀಲಪ್ಪನ ಅಂಗಡಿಗೆ ಬೆಲ್ಲ ತರಾಕಂತ ಹೊದಾಗ ಮುಖಕ್ಕೆಲ್ಲ ಬೆಲ್ಲ ಕೊಟ್ಟ ಘಟನೆ, ಮುಂದೆ ಅವನಲ್ಲಿ ಸಹಾಯ ಯಾಚಿಸಿದ ಸಂದರ್ಭ, ಸಂಬಂಧಿಕರು ಇವರ ಸಂಬಂಧಗಳ ಬಗ್ಗೆ ಮಾತನಾಡಿಕೊಳ್ಳಲು ಆರಂಭಿಸುತ್ತಾರೆ. ವಾದಿಬಿದಿಯ ಗೀಗೀ ಪದದಲ್ಲಿ ಅಮೀನಸಾಬನ ಹಾಡು ಚಂದ್ರಪ್ಪನನ್ನು ಎತ್ತಿ ಕುಸ್ತಿಕಣದಾಗ ಒಗೆದಂಗ ಆಗತೈತಿ. ವೇದಿಕೆಯಿಂದ ನಿಧಾನವಾಗಿ ಹಿಂದೆ ಸರಿದ ಚಂದ್ರಪ್ಪ ಸೀದಾ ಚಂದಾಲಿಂಗನ ಗುಡಿಯನ್ನು ಸೇರಿದ ಬದುಕಿನ ಏನೆಲ್ಲ ಚಿತ್ರಣ ಕಣ್ಣಮುಂದ ಬಂದು ಹೋಗ್ತಾವ. ಕಪ್ಪಲಮನಿಯ ಗುಡಿಯಿಂದ ಕೇಳಿಬರುವ ಏಕತಾರಿ ನಾದದತ್ತ ಮನಸ್ಸು ದೇಹ ಹೊರಡತೈತಿ. “ಏ ತಮ್ಮಾ ನೀ ತಿಳಿದು ನೋಡೋ, ಕದ್ದು ಹಾದರ ಮಾಡೋದು ಸಲ್ಲ” ಎಂಬ ತತ್ವಪದ ಗುಣಗುತ್ತ ಏಕತಾರಿ ನಾದದತ್ತ ಹೆಜ್ಜೆ ಹಾಕುತ್ತಾನೆ… ಏಕತಾರಿಯ ನಾದ ಅವನನ್ನು ಕರೆಯುತ್ತದೆ… ಇಲ್ಲಿ ಚಂದ್ರಪ್ಪ ಚಂದ್ರವ್ವನ ವಿವಾಹ ನಂತರದ ಸಂಬಂಧಗಳು ಸೂಕ್ಷ್ಮಾತೀಸೂಕ್ಷ್ಮ ವಿಷಯಗಳನ್ನು ಬಿಟ್ಟುಕೊಡುತ್ತವೆ. ಒಂದಕ್ಕೆ ಮತ್ತೊಂದು ಆಸರ ಎನ್ನುವ ಧಾಟಿಯಲ್ಲಿ ಕತೆ ದಡ ಮುಟ್ಟುತ್ತದೆ. + +ರಾಯಪ್ಪನ ಬಾಡಿಗೆ ಸಾಯಿಕಲ್ಲು ಎಂಬ ಕತೆಯಲ್ಲಿ ರಾಯಪ್ಪನ ಸೂಕ್ಷ್ಮ ಗ್ರಹಿಕೆ, ಸ್ವಾಮಿನಿಷ್ಠೆ, ಋಣ ಸಂಬಂಧ, ಕೊನೆಗೆ ಬೆಂಕಿಗೆ ಆಹುತಿಯಾದ ಬಾಡಿಗೆ ಸಾಯಿಕಲ್ಲು ಗಮನಿಸಿದಾಗ ಇಂದು ನಡೆಯುವ ಅದೇಷ್ಟೋ ಬಂದ್, ಮುಷ್ಕರಗಳಲ್ಲಿ ಬಡಪಾಯಿಯ ಬದುಕೆ ಛಿದ್ರಛಿದ್ರ ಎನಿಸುತ್ತದೆ. ಕೊನೆಗೆ ಎಲ್ಲವನ್ನು ಬಿಟ್ಟು ಬೆಳಂದಿಗಳಲ್ಲಿ ಹೊಲತುಂಬಾ ಗೊಬ್ಬರವನ್ನು ಚರಗ ಹೊಡೆಯುತ್ತಾನೆ. ರೈತರಿಗೆ ರಾಜಕೀಯ ಡಾಂಭಿಕತನ, ಇನ್ನೊಬ್ಬರನ್ನು ಒಲಿಸಿಕೊಳ್ಳುವ ಪ್ರಯತ್ನ ಫಲ ನೀಡದೆ ಭೂತಾಯಿಯನ್ನು ನೆಚ್ಚಿನಡೆದರೆ ಬದುಕು ಬಂಗಾರವಾಗುವುದು ಎಂಬ ಸಂದೇಶವಿದೆ. + +ಏಕತಾರಿಯಲ್ಲಿ ಪ್ರತಿ ಪಾತ್ರದ ಹುಟ್ಟು, ಬೆಳವಣಿಗೆ, ಅಂತಿಮ ಹಂತ ತಲುಪುವ ಅವುಗಳ ಗುಣ, ಅಂತಿಮ ಸತ್ಯವನ್ನು ತೋರುವ ಸನ್ನಿವೇಶಗಳನ್ನು ಗಮನಿಸಿದಾಗ, ಕುವೆಂಪುರವರ “ಮಲೆಗಳಲ್ಲಿ ಮದುಮಗಳು” ನೆನಪಾಗುತ್ತದೆ. + +ಹಳ್ಳಿಗಾಡಿನಿಂದ ಮರೆಯಾಗಬಲ್ಲ ಹವಳದಂತ ಪದಗಳು:- ಜುಮ್ಮಣ್ಣನ ಕಂಚಿನ ಮೂರ್ತಿಯಲ್ಲಿ ಬರುವ ಸೋಮ್ಲಿಂಗ್ ನಿಗೆ ಕನಸಲ್ಲಿ ಶಿವ್ಲಿಂಗ್ ತನ್ನ ಮರ್ಮಾಂಗಕ್ಕೆ ಕೈ ಹಾಕಿ ತೊರಡು ಹಿಚಕಿದಂತೆ ಅನ್ನಿಸಿ ಚಿಟ್ಟನೆ ಚೀರಿದೆ ಎನ್ನುವುದು ಸಹಜವಾಗಿ ಮೂಡುವಂತದ್ದು. ನಿಮ್ಮಪ್ಪ ನನ್ನ ಸನಿಹಕ್ಕೆ ಬಂದರ ಹೂಸಲಂಗಿ ವಾಸನೀ ಮೂಸಿದಂಗ ದೂರ ಸರಿತಿದ್ದ ಎನ್ನುವುದರಲ್ಲಿ ಹೂಸಲಂಗಿ ವಾಸನೇ ಎನ್ನುವುದು ಮರೆಯಾಗುತ್ತಿದೆ. + +ರತ್ನಗಿರಿ ಎಂಬ ಮಾಯೆಯಲ್ಲಿ ಕಾಯಿಪಲ್ಯ ಮಾರುವ ಮುದಕಿ ಆಡಿದ “ಗಟ್ಟ್ಯೂಳ್ಳಾಕಿ ಅಂತ ಪಾರಾಗಿ ಬಂದೆ”ಸದಾ ಹೊಲದೊಂದಿಗೆ ಗುದಮುರಗಿ ಹಾಕುವವನಿಗೆ ಮಕ್ಕಳ ಹಡೆಯೋದ ಯಾವಾಗ ನೆನಪ ಇಟ್ಕೊಂಡೋ ಅನ್ನೋದು, ಮಳಿಯಪ್ಪ ರೈತರೊಂದಿಗೆ ಕಣ್ಣಮುಚಗಿ ಆಟಾ ಅಡಾಕ ಸುರು ಮಾಡಿದ ಎನ್ನುವ ಪದ ಲಾಲಿತ್ಯ ನಮಗೆಲ್ಲರಿಗೂ ತಿಳಿಯುವಂತದ್ದು. + +“ಈಟ ಮುಟ್ಟಿದರ ಏನಾತು? ಮ್ಯಾಣಿಲೆ ಮಾಡೆರೇನು? ಕಪ್ಪುರ ಗೊಂಬೇನು?” ಎನ್ನುವ ಪದಗಳು ಸಹಜ ಸುಂದರವಾಗಿವೆ. ಈ ಮಾತುಗಳು ಬಾಲಕನ ಕಣ್ಣಲ್ಲಿ ಸಾವಿತ್ತು ಕತೆಯಲ್ಲಿ ಕಂಡುಬರುತ್ತವೆ. + +ಅಟ್ಟದ ಕತೆಯಲ್ಲಿ ಸೂಳೇ ಮಗ ಮಾಸ್ತರಾ, ಈ ಕೆಂಪ ಬಸ್ಸತಂದು ನಮ್ಮೂರ ಹುಡ್ಗರ್ನ ಹಾಳ ಮಾಡಾಕ ಹತ್ಯಾನ. ಅತ್ತಿ ಬಂದ್ರ ಹಿಂಗಾತ, ಇನ್ನೂ ಅತ್ತೀ ಮಗಳು ಬಂದ್ರ ನಾವೆಲ್ಲ ಕುಂಡಿ ಹಿಂದಲ ಗಾಳಿ ಆಕ್ಕಿವಿ, ನಸುಕಿನ್ಯಾಗ ಹೊರಕಡೆಗೆಂದು ಹೋಗಿದ್ದ, ಎಂಥಾ ಪಾಮರ ಐತಿ ಈ ಪಾರ, ಹ್ಯಾಂಗ ಬಂದ ನಿಂತಾನ ನೋಡ್ರಿ ಬಾಜಿರಾಯ? ಇಂಥಾ ಮೊಮ್ಮಟ್ಯಾ ಮೊಮ್ಮಗನ ಕಾರಣ ಮುದಕಿ ಹೆಣಾ ತಾಸ ಹಾದಿ ಹೆಣದಂತೆ ಬಿಳೋದು ಆತ ನೋಡ್ರಿ ಎನ್ನುವ ಪದಗುಚ್ಚಗಳು ನಾವೆಲ್ಲೂ ಕೇಳಿರಲಾಕ ಸಾಧ್ಯವೆ ಇಲ್ಲ. + +ಹೊಸ್ತಿಲೊಳಗಣ ಹುತ್ತ ಕತೆಯಲ್ಲಿ ಸೊನ್ನಿ ಮಾತ ಎಲ್ಲಿ ಕೇಳತ್ತ ಇದರೌನ, ನಿನ್ನ ಉರವಣಿಗೀಗೆ ಹ್ಯಾಂಗ ಉರಿ ಹಚ್ಚೀನಿ, ತಿಪ್ಪಣ್ಣನ ಮಜಕುರದ ತತ್ವಜ್ಞಾನ, ಶಬ್ದಗಳು ತಲೆಯಲ್ಲಿ ಸುತ್ತಿ ಮನಸ್ಸನ್ನು ಕಳ್ಳೆಮಳ್ಳೆ ಆಡಿಸತೊಡಗಿದವು ಎನ್ನುವ ಮಾತುಗಳ ಕರಳಿಗಿ ಕರಳ ಹಚ್ಚಿದಂಗ ಅನಿಸತೈತಿ. + +ಕಕ್ಕುಲಾತಿ, ಒಂದೆ ವಾಟೆ ಹಾಲು, ಕೊಕ್ಕಸಿ ನಕ್ಕ, ಬುದಗ್ಗನೆ ಎದ್ದು ನಿಂತ, ಅಡರಾಸಿ ಜೀಪಿನೊಳಗ ನುಗ್ಗಿ ಕುಳಿತ, ತಾಯಿ ಮೊಲೆಯನ್ನು ಜುರುಜುರು ಜಗ್ಗವಂತೆ ಅಷ್ಟಷ್ಟೇ ಹಿರತೊಡಗಿದ, ಮುಖವೆಲ್ಲ ರಾಮಾರಗತಾಯಿತು ಅನ್ನುವ ವಾಕ್ಯಗಳು ಕತೆಗಳಲ್ಲಿ ವ್ಯಕ್ತವಾಗುತ್ತವೆ. ಇವು ಬುತ್ತಿಪಾಡಿನಲ್ಲಿ ಉಳಿದ ರೊಟ್ಟಿ ಚುರಿನಂತೆ ಮನಸಿನ್ಯಾಗ ಉಳಿತಾವ. ಕಟ್ಟಿಯವರೆ ಕತೆ ಉತ್ತರಕರ್ನಾಟಕದ ಜನಪದದ ಜೇನುಸವಿಯಂತೆ ಮನಸನ್ನು ಎಳೆಯುತ್ತವೆ. + +ಜುಮ್ಮಣ್ಣನ ಕಂಚಿನ ಮೂರ್ತಿಯಲ್ಲಿ ದೇವಿರಪ್ಪನ ಆಗಮನ, ಸೋಮ್ನಿಂಗನ ಜನನ, ದೇವಿರಪ್ಪನ ಕೊಲೆ, ಸೋಮ್ನಿಂಗನ ತಂದೆ ಒಂದೆ ದಿನದಾಗ ನಾಲ್ಕಾರ ಅವ್ವಂದಿರ ಮನೆಗೆ ಕುದರೆ ಏರಿ ಹೋಗಿ ಬರ್ತಿದ್ದ… ಈ ಘಟನೆಗಳ ಹಿಂದೆ ವಿವಾಹೇತರ ಸಂಬಂಧದ ತಿಳಿಯಾದ ಹೊಗೆ ಎದ್ದುಕಾಣುತ್ತದೆ. ಅದನ್ನು ಬಿಚ್ವಿ ಹೇಳದ ಕತೆಗಾರರು ಮಾರ್ಮಿಕವಾಗಿ ನುಡಿಯುತ್ತಾರೆ. + +ಅಟ್ಟ ಕತೆಯಲ್ಲಿ ಕೆಂಚನ ಅತ್ತಿ ಗೊಡ್ಡಿ, ಮಾಸ್ತರ ಬಗೆಗಿನ ಮಮಕಾರ, ಕೆಂಚನ ತಂದೆಗೆ ಎರಡನೆ ಹೆಂಡತಿ, ಇವೆಲ್ಲವುಗಳು ಅಂತರ್ಮುಖಿ ಸಂಬಂಧಗಳನ್ನು ಸೂಚಿಸುತ್ತವೆ. ಉರ್ಧ್ವರೇತ ಕತೆಯಲ್ಲಿ ರಂಗಪ್ಪನಿಗೆ ಥೇಟರ್ ನಲ್ಲಿ ರಾಮ್ಯಾನಿಂದಾದ ಅನುಭವ ಹಾಗೂ ಡಾ.ರಂಗರಾಜನಾದ ಬಳಿಕಫೋನ್ ಡೈರಿಯಲ್ಲಿ ಸೇವಂತಿ ಎಂಬ ಹೆಸರಿ ಗರ್ಲ್ ಫ್ರೆಂಡ್ ಸೇಬು ಆದದ್ದು, ಅದನ್ನು ಗಮನಿಸಿ ಎಚ್ಚರಿಕೆಯ ಮಾತುಗಳನ್ನಾಡಿದ ವನಮಾಲ… ಡಾ.ಸೇವಂತಿ ನಾನು ಬಾಣಂತಿಯಾಗಬೇಕು ಅದು ತಪ್ಪಾ? ಎಂದು ಕೇಳಿಕೊಳ್ಳುವ ಪರಿ.. ವಿವಾಹೇತರ ಸಂಬಂಧವನ್ನು ಅತ್ಯಂತ ಜಾಗರುಕರಾಗಿ ಕತೆಯನ್ನು ಹೆಣೆದಿದ್ದಾರೆ. + +ಸುಖದ ನಾದ ಹೊರಡಿಸುವ ಕೊಳಲು ಕತೆಯಲ್ಲಿ ರೆಬಕಾಯಿಯ ಮಗ ಅರ್ಯಾಣಸಿದ್ದ ಮದುವೆಯ ವಿಚಾರ ಬಂದಾಗ ಮಾತಾಡಿದ್ದು “ಸಂಬಂಧಕ್ಕಿಂತ ಸಂಬೋಗ” ಒಂದು ಸರಳ ಕ್ರೀಯೆ ಎಂಬಂತೆ ತೋರುತ್ತದೆ. “ಒಂದು ವಾಟೆ ಹಾಲಿನ ಸಲುವಾಗಿ ಒಂದ ಎಮ್ಮಿ ಯಾಕ ಸಾಕಬೇಕು? ಹಸಿವಾದ್ರ ಹ್ವಾದನೇನೋ, ಒಂದ ವಾಟೆ ಹಾಲ ಕುಡದನೇನೋ, ಬಾಯಿ ಒರೆಸಿಗೊಂಡು ಬಂದನೇನೋ” ಅನ್ನುವುದು ವಿವಾಹ ಬಂಧನಕ್ಕಿಂತ ಬಾಹ್ಯದೇಹ ಸಂಬಂಧ ಹಗುರ ಎನ್ನುವ ಮಾತುಗಳು ಕಂಡುಬರುತ್ತವೆ. + +ಏಕತಾರಿ ಕತೆಯಲ್ಲಿ ಚಂದ್ರಪ್ಪ ಜಂದಾಲಿಂಗನ ಗೀಗೀ ಮ್ಯಾಳದ ಮಾಳವ್ವನನ್ನು ಕೂಡುವುದು, ಚಂದ್ರವ್ವಗ ತಬ್ಬಿಕೊಂಡು ಬೆಲ್ಲಕೊಟ್ಟ ಕಿತ್ಲಿನಿಂಗನ ಸಹಾಯ ಸದಾ ಇರೋದು ಗಮನಿಸಿದರೆ ಹಳ್ಯಾಗ ಹಗಲಲ್ಲೂ ಕಾಣುವ ಹಾದರದ ವಿಷಯ ಸರಾಗವಾಗಿ ಎದ್ದು ತೋರುತ್ತದೆ. ಬೀಳು ಜೀವಕ್ಕ ಹುಲ್ಲು ಆಸರ ಎನ್ನುವಂಗ ಕಂಡುಕಾಣದಂಗ ಒಳಮುಚುಕಿನ ದೈಹಿಕ ಸಂಬಂಧದ ಸದ್ದು ಕತೆಯಲ್ಲಿ ವ್ಯಕ್ತವಾಗುತ್ತದೆ. ಏಕತಾರಿ ನಾದಕ್ಕೆ ಚಂದ್ರಪ್ಪ ತಲ್ಲೀನನಾಗಿ “ಕದ್ದು ಹಾದರ ಮಾಡುದು ಸಲ್ಲ, ನಾ ಖುಲ್ಲಾ ಖುಲ್ಲಾ” ಎಂದು ಹಾಡುಕಟ್ಟಿ ಹಾಡುತ್ತಾನೆ. ಈ ಎಲ್ಲಾ ಪಾತ್ರಗಳು ಭೋಗ ಸಂಭೋಗದಾಚೆ ದಾರಿಯನ್ನು ಕಾಣುತ್ತವೆ ಎನ್ನುವುದು ವಿಶಿಷ್ಟವಾಗಿದೆ. + +ಉತ್ತರ ಕರ್ನಾಟಕದ ಭಾಷೆ ಅಂದ್ರನೆ ಒಂದ ನಮೂನಿ ಬ್ಯಾರೇನೆ ಐತಿ ಅಂತ ಹಾಡ ಹಾಡಬೇಕು ಅನಸತೈತಿ. ಏಕತಾರಿ ಕತೆಯೊಳಗ ಉಪಮೆ ಹಾಗೂ ಹೋಲಿಕೆಗಳು ತುಂಬಿ ತುಳಕತಾವ. ಕಾಂಡಕೊರೆಯುವ ಹುಳು ಒಳಗೆ ಹೊಕ್ಕವರಂತೆ ದಿನದಿನಕ್ಕೆ ಕೃಶನಾಗುತ್ತ ಹೊರಟಿದ್ದಾನೆ. ಹೂಸಲಂಗಿ ವಾಸನೀ ಮೂಸಿದಂಗ ದುರ ಸರೀತಿದ್ದ, ಕಟ್ಟಾ ಗಾಂಧೀವಾದಿ ದೇವಿರಪ್ಪನ ಕೊಂದ ನಮ್ಮೂರಿನ ಗೋಡ್ಸೆ ಯಾರು? ಅಂಗೈ ಗೆರಿ ಅಳಿಸಿ ಹೋಗೂವಂಗ ದುಡುದು ಎದಿಮಟ ಬೆಳಿಯೊಳಗ ತನ್ನಷ್ಟಕ್ಕ ತಾನ ನಕ್ಕೋತ ನಿಂದ್ರಾವ, ಮುರುದು ಮುಟಗಿಮಾಡಿ ನುಂಗಿ ನೀರ ಕುಡಿತಿದ್ರು, ಪಡಸಾಲ್ಯಾಗ ಕುಂತಾವ ಎದ್ದು ಹೊಲಕ ಹೋದವರಂಗ ಹೋಗಿ ಬಿಟ್ಟ ನೋಡ್ರಿ, ಮಳಿಯಪ್ಪ ಗವಿ ಸೆರಿದವರಮಗ ರೈತರ ಕೂಡಾ ಕಣಮುಚಗಿ ಆಟ ಆಡಾಕ ಸುರು ಮಾಡಿದ, ಹೋರಿ ಕೋಡಿಗೆ ಕೊಂಬೆಣಸು ಹಾಕಿಸಿದೆಂಗ ಆಗೈತಿ ನೋಡು ಗಿರಿಯಪ್ಪ ನಿನ್ನ ಮುಶಿ… ಎಂಬಂಥ ಸಾಲುಗಳು ತಲೆಯಲ್ಲಿ ಸುತ್ತಿ ಮನಸ್ಸು ಕಳ್ಳೆಮಳ್ಳೆ ಆಡಿಸತೊಡಗಿದವು. + +( ಸಾಹೇಬಗೌಡ ಯ ಬಿರಾದಾರ) + +ಗುಡ್ಡದ ಮುಕದಲ್ಲಿ ಎದ್ದ ಬೊಕ್ಕೆಗಲ ಹಾಗೆ ಕಾಣುತ್ತದೆ, ಯಾವ ಕುಸ್ತಿಯಾಳೂ ಎತ್ತಲಾಗದಕ್ಕೆ ಗರಡಿಯ ಮನೆಯ ಹೊರಗೆ ಅನಾಥವಾಗಿ ಬಿದ್ದ ಸಂಗ್ರಾಣು ಕಲ್ಲಿನ ಹಾಗೆ ರೆಬಕಾಯಿ ಅಚಲವಾಗಿ ಕುಳಿತಿದ್ದಾಳೆ, ಎನ್ನುವ ಹೋಲಿಕೆ ಹಾಗೂ ಉಪಮೆಗಳನ್ನು ಖುದ್ದು ಈ ಕತೆಗಳನ್ನು ಓದಿ ತಿಳಿದಾಗ ಹೋಳಿಗಿ ಉಂಡಷ್ಟು ಖುಷಿ ಆಗುವುದು. + +ಎಲ್ಲಾ ಕತೆಗಳ ಅಂತಿಮ ಸತ್ಯ “ಏಕದಾರಿ”: ಜುಮ್ಮಣ್ಣನ ಕಂಚಿನ ಮೂರ್ತಿಯಲ್ಲಿ ಶಿವ್ಲಿಂಗ್ ಬಾವಾನ ಜೊತೆ ಹೊರಡುವುದು, ರತ್ನಗಿರಿಯ ಮಾಯೆಯಲ್ಲಿ ಮತ್ತೆ ಹಳ್ಳಿಯ ಹೊಲದತ್ತ ಮುಖ ಮಾಡುವುದು, ಅಟ್ಟ ಕತೆಯಲ್ಲಿ ಕೆಂಚ ಬತ್ತಿರಪ್ಪನ ಗುಡ್ಡದ ಕಡೆ ನೋಡುತ್ತ ನಿಂತು ಲೋಕ ಮರೆಯೋದು, ಹೊಸ್ತಿಲೊಳಗಣ ಹುತ್ತದಲ್ಲಿ ತಿಪ್ಪಣ್ಣನ ಮಾತಿನಿಂದ ಗಿರಿಯಪ್ಪ ಮನಸ್ಸು ಬದಲಾಯಿಸುವುದು, ಊರ್ಧ್ವರೆತುವಿನಲ್ಲಿ ಡಾ. ರಂಗರಾಜ ಮೋಹಬಂಧನದಿಂದ ಯೋಗಬಂಧನಕ್ಕೆ ಒಳಗಾಗಿ ಡಾ.ಸೇವಂತಿಯ ಬಯಕೆಯನ್ನು ಸೌಜನ್ಯದಿ ತಿರಸ್ಕರಿಸುವುದು, ಅರ್ಯಾಣಸಿದ್ಧ ದೇವರ ಮೇಲೆ ಅಪಾರ ಭಕ್ತಿಯನ್ನು ಇಟ್ಟ ರೆಬಕಾಯಿಯ ನಿಷ್ಠೆ, ರಾಯಪ್ಪನ ಬಾಡಿಗೆ ಸಾಯಿಕಲ್ಲು ಕತೆಯಲ್ಲಿ ರಾಯಪ್ಪ ಮರಳಿ ಹೊಲಕ್ಕೆ ಬಂದು ಗೊಬ್ಬರ ಚೆಲ್ಲಿದ ಪರಿ ಇದೆಲ್ಲವನ್ನು ನೋಡಿದರೆ, ಈ ಎಲ್ಲಾ ಕತೆಗಳು ಹಳ್ಳಿಗಾಡಿನ ಲೌಕಿಕ ಹಂದರದಲ್ಲಿ ಹುಟ್ಟಿ, ಬದುಕಿನ ತೊಟ್ಟಿಲದಾಗ ಬಡಿದಾಡಿ, ಸಂಜೆಗತ್ತಲಿನ ಇಳಿವಯಸ್ಸಿಗೆ ಅಲೌಕಿಕದತ್ತ ಮುಖಮಾಡಿ ಏಕತಾರಿಯ ನಾದದಲ್ಲಿ ಒಂದಾದಂತೆ ಎದ್ದು ತೋರುತ್ತವೆ. + +ಮುನುಷ್ಯ ಬದುಕಿನ ಸಾರ್ಥಕತೆಯನ್ನು ನಂಬಿಕೆ, ನೈತಿಕತೆಯ ಚೌಕಟ್ಟಿನೊಳಗೆ ಕಟ್ಟಿಯವರು ಕಟ್ಟಿದ ಕತೆಗಳಿವೆ. ಅವುಗಳನ್ನು ನಿಭಾಯಿಸಿದ ರೀತಿ ದಡಮುಟ್ಟಿಸಿದ ಪರಿ ಓದುಗನಿಗೆ ವಿಸ್ಮಯ ಎನಿಸುತ್ತದೆ. ಆ ಮೂಲಕ ಕಥಾ ಸಾಹಿತ್ಯದಲ್ಲಿ ಈ ಕತೆಗಳು ಗಟ್ಟಿಯಾಗಿ ನಿಲ್ಲಬಲ್ಲವುಗಳಾಗಿವೆ. + + + +ಏಕತಾರಿಯ ಬೆನ್ನಪುಟದ ಒಳಪುಟದಲ್ಲಿ ಡಾ.ಬಾಳಾಸಾಹೇಬ ಲೋಕಾಪುರ ಅವರು ಕೃತಿ ಕುರಿತು ಆಡಿದ ಮಾತುಗಳು ಏಕತಾರಿಯ ನಾಡಿಮಿಡಿತದಂತಿವೆ. ಒಳಗೇನಿದೆ ಎಂಬುದರ ಹೊಸಹೊಳಲಿನ ಹೂರಣ ಮುಷ್ಟಿ ಮುಷ್ಟಿಯಾಗಿ ನೀಡಿದ್ದಾರೆ. ಈ ಕತೆಗಳಲ್ಲಿ ಉಂಡ ಬದುಕಿನ ತಾಜಾತನವಿದೆ, ಕಟ್ಟಿದ ಕತೆಗಳ ಕೃತ್ರಿಮತೆಯನ್ನು ದಾಟಿದ ಹುಟ್ಟಿದ ಕತೆಗಳು ಇಲ್ಲವೆ ಎಂದು ಹೃದಯತುಂಬಿ ಆಡಿದ ಮಾತುಗಳು ಸಹ ಎದೆಯಾಳಕ್ಕೆ ಇಳಿಯುತ್ತವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_307.txt b/Kenda Sampige/article_307.txt new file mode 100644 index 0000000000000000000000000000000000000000..a5286dbefbf70c89332776ee9069911fa81d5c3f --- /dev/null +++ b/Kenda Sampige/article_307.txt @@ -0,0 +1,43 @@ + + +ಹಿರಿಯ ಕಥೆಗಾರ ಎ.ಎನ್. ಪ್ರಸನ್ನ ಅವರ ಆಯ್ದ ಕಥೆಗಳ ಸಂಕಲನದೊಂದಿಗೆ ಓದುಗನಾಗಿ ನನ್ನ ಕೆಲವು ಮಾತುಗಳನ್ನು ಸೇರಿಸುವ ಅವಕಾಶ ದೊರೆತಿದೆ. ಪ್ರಸನ್ನ ಅವರು ತೋರಿರುವ ಈ ವಿಶ್ವಾಸಕ್ಕೆ ಕೃತಜ್ಞ. ಸುಮಾರು ಐವತ್ತು ವರ್ಷ, 1970 ರಿಂದ 2018ರವರೆಗೆ ಪ್ರಸನ್ನ ಅವರು ಬರೆದ ಕಥೆಗಳಲ್ಲಿ ಹದಿನಾರು ರಚನೆಗಳು ಸೇರಿ ಈ ಸಂಕಲನ ರೂಪುಗೊಂಡಿದೆ. ಪ್ರಸನ್ನ ಅವರ ಕಥೆಗಳನ್ನು ಓದುತ್ತ ಬಂದವರಿಗೆ ಅವರ ಮುಖ್ಯ ಕಥೆಗಳೆಲ್ಲ ಒಂದೆಡೆ ದೊರೆಯುವಂತಾಗಿದೆ, ಓದುಗರು ತಾವು ಮೆಚ್ಚಿದ ಕಥೆಗಳನ್ನು ಮತ್ತೊಮ್ಮೆ ಓದುತ್ತ ಹಿಂದೆ ಓದಿ ಪಟ್ಟ ಸಂತೋಷವನ್ನು ಮರಳಿ ಅನುಭವಿಸುತ್ತ ತಮ್ಮ ಓದಿನ ಅನುಭವವನ್ನು ಮತ್ತೆ ಕೆದಕಿ ನೋಡಿಕೊಳ್ಳುವ ಅವಕಾಶ ದೊರೆತಿದೆ. ಜೊತೆಗೇ ಈ ಸಂಕಲನ ಪ್ರಸನ್ನ ಅವರು ಕಥೆಗಾರರಾಗಿ ಹೇಗೆ ಬೆಳೆದಿದ್ದಾರೆ, ಅವರ ಕಥೆಗಾರಿಕೆಯಲ್ಲಿ ಏನೇನು ಬದಲಾವಣೆಗಳಾಗಿವೆ ಎಂಬಂಥ ಕುತೂಹಲಕ್ಕೂ ಉತ್ತರ ದೊರೆಯುತ್ತದೆ. ಇನ್ನೊಂದು ಸಂಗತಿ ಎಂದರೆ ಕಥೆಗಳನ್ನು ವಿವರವಾಗಿ ಅಭ್ಯಾಸ ಮಾಡುವವರಿಗೆ ಕಳೆದ ಐವತ್ತು ವರ್ಷಗಳ ಕನ್ನಡ ಕಥೆಯ ಒಂದು ಟಿಸಿಲು ಈ ಒಬ್ಬ ಕಥೆಗಾರರಲ್ಲಿ ಹೇಗೆ ಪಲ್ಲವಿಸಿದೆ ಎಂದು ತಿಳಿಯುವ ಅನುಕೂಲ ಒದಗಿದೆ. + +ಇದೀಗ ಈ ಕಥೆಗಳನ್ನು ಓದುತ್ತ ಪ್ರಸನ್ನ ಅವರು ಕಥೆಗಳಲ್ಲಿ ಕಟ್ಟಿಕೊಟ್ಟಿರುವ ಲೋಕ ಎಂಥದು ಅನ್ನುವ ಕುತೂಹಲದಿಂದ ಓದಿದೆ. ಈ ಕಥೆಗಳಲ್ಲಿ ನಾವು ನಮ್ಮ ನಿಮ್ಮಂಥ ಸಾಮಾನ್ಯ ಜನರ ಸಾಮಾನ್ಯ ಲೋಕದಲ್ಲಿ ಅಡ್ಡಾಡುತ್ತೇವೆ, ನಮ್ಮ ನಿಮ್ಮಂಥ ಪಾತ್ರಗಳನ್ನೇ ಭೇಟಿಮಾಡುತ್ತೇವೆ. ಪ್ಯಾರಾಸೈಟ್ ಎಂಬ 1973ರಲ್ಲೇ ಬರೆದ ಕಥೆಯಲ್ಲಿ ‘ಇನ್ನೂರು ಮುನ್ನೂರು ಅಡಿ ದೂರದಲ್ಲಿ ತಮ್ಮ ತಮ್ಮಲ್ಲೆ ನಿರತರಾದ ಜನಗಳು, ನೆರಳುಗಳು’ ಎಂಬ ಮಾತು ಗಮನ ಸೆಳೆಯಿತು. ಹಾಗೆಯೇ 2017ರಲ್ಲಿ ರಚನೆಗೊಂಡ ಪ್ರತಿಫಲನ ಕಥೆಯಲ್ಲಿ ‘ತಮ್ಮ ಸ್ವಂತ ಬದುಕಿನ ಕ್ಷೇಮದ ಪರಿಧಿಯ ಆಚೆ ಕಿವಿ-ಕಣ್ಣುಗಳು ಕೆಲಸ ಮಾಡುವುದು ಕಡಿಮೆಯೇ.. ದೈನಂದಿನ ಆಗು-ಹೋಗುಗಳು… ಏನೂ ಉಳಿಸದೆ ಸುಮ್ಮನೆ ಹೀಗೆ ಬಂದು ಹಾಗೆ ಹಾರಿಹೋಗುವಂಥವು’ ಎಂಬ ಮಾತು ಹಿಡಿದು ನಿಲ್ಲಿಸಿತು. ಇದು ದಿನ ನಿತ್ಯದ ಶ್ರೀಸಾಮಾನ್ಯ ಲೋಕದ ಲಕ್ಷಣ ನಿರೂಪಣೆಯಂತಿವೆ. ಲೋಕವೆಂಬ ಪದದ ಅರ್ಥವೇ ‘ನಮ್ಮ ಕಣ್ಣಿಗೆ ಕಾಣುವಷ್ಟು’ ‘ನಮ್ಮ ಕಣ್ಣಳತೆಗೆ ದೊರೆಯುವಷ್ಟು’ ಎಂದಲ್ಲವೇ! + +(ಎ.ಎನ್. ಪ್ರಸನ್ನ) + +ಈ ಸಾಮಾನ್ಯ ಲೋಕದಲ್ಲಿ ವೈವಿಧ್ಯಮಯ ಜನರಿದ್ದಾರೆ: ಗುಮಾಸ್ತ, ಮಧ್ಯಮದರ್ಜೆ ಅಧಿಕಾರಿ, ಪೋಸ್ಟ್ ಮಾಸ್ಟರು, ಪಾರಿವಾಳ ಸಾಕುವವರ ಲೋಕ, ನಿವೃತ್ತರು, ಪ್ರಿಂಟಿಂಗ್ ಪ್ರೆಸ್ಸಿನ ಮಾಲಕ, ಹೋಟೆಲ್ ಯಜಮಾನ, ಆಟೋ ಡ್ರೈವರ್, ಬಾಂಬೆ ಶೋ ನಡೆಸುವಾತ ಹೀಗೆ… ಒಂದೇ ಥರ ಅನ್ನಿಸುವ ಹೆಂಡತಿಯರ ಪಾತ್ರಗಳು, ಸರಸೂ, ಅಶ್ವಿನಿಯರಂಥ ಧೀರ ತಾಯಂದಿರು, ಸ್ವಾಭಿಮಾನೀ ಮಹಿಳೆಯರು, ಲೋಕದ ಬಗ್ಗೆ ನಿರ್ಭೀತರಾಗಿ ಸಂಬಂಧಗಳನ್ನು ರೂಢಿಸಿಕೊಳ್ಳುವ ನಿಂಗಿಯಂಥ ಗಾರೆ ಕೂಲಿ ಕೆಲಸದವಳು ಇಂಥ ದಿಟ್ಟ ಹೆಣ್ಣುಗಳೂ ಇದ್ದಾರೆ. ಆಯಾ ಕಥೆ ಓದುವಾಗ ಅಲ್ಲಿನ ಸಾಮಾನ್ಯರೆಲ್ಲ ತಮ್ಮ ಇನ್ನೂರಡಿ ಲೋಕದಲ್ಲಿ ಅಸಾಮಾನ್ಯರಾಗಿಯೇ ಕಾಣುತ್ತಾರೆ. ಪರಿಮಿತವಾಗಿರುವ ಲೋಕಾಂತರಂಗದಲ್ಲಿ ಎಲ್ಲರೂ ಅಸಾಮಾನ್ಯರೇ ಅಲ್ಲವೇ! ನಾವು ಸಾಮಾನ್ಯರೆಂದು ಯಾವ ಸಾಮಾನ್ಯರೂ ಒಪ್ಪುವುದೇ ಇಲ್ಲ! + +ಪ್ರಸನ್ನ ಅವರ ಕಥೆಗಳ ಲೋಕದ ವಿಶೇಷವಿರುವುದು ಮೂರು ಸಂಗತಿಗಳಲ್ಲಿ ಎಂದು ನನಗೆ ತೋರುತ್ತದೆ. ಮೊದಲನೆಯದು ಒಂದು ಸ್ವಲ್ಪ ಹೀಗೋ ಹಾಗೋ ಹೊರಳಿದರೆ ಸಾಕು, ನಾವು ‘ನಿಜ’ ಅಂದುಕೊಂಡಿರುವುದಕ್ಕಿಂತ ಭಿನ್ನವಾದ ಕಲ್ಪನೆಯ, ಮಾಯೆಯ ಲೋಕಕ್ಕೆ ಹೊಕ್ಕುಬಿಡುತ್ತೇವೆ. ಅದು ನಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಇನ್ನೊಂದು ಲೋಕ ನಮ್ಮ ಕಣ್ಣೆದುರಿಗೇ ಕಂಡು ಕಾಣುತ್ತಿರುವುದೇ ನಿಜ ಅನಿಸಿಬಿಡುವ ಮಾಯೆಯಂಥ ವಾಸ್ತವ. ಹೊರಗೆ ಕಾಣಿಸಿದಂತೆನಿಸುವ ಒಳಗಿನ ಲೋಕವನ್ನೂ ನಾವು ಯಾವುದನ್ನು ವಾಸ್ತವ ಬದುಕು ಅನ್ನುತ್ತೇವೋ ಅದನ್ನೂ ಸಂದು ಕಾಣದಂತೆ ನೇಯುತ್ತಾರೆ ಪ್ರಸನ್ನ ಅವರು. ಆಲಿಸ್ ಇನ್ ವಂಡರ್ಲ್ಯಾಂಡ್ ಕಥೆಯಲ್ಲಿ ಆಲಿಸ್ ಎಂಬ ಹುಡುಗಿ ಕನ್ನಡಿಯ ಒಳಹೊಕ್ಕು ಇನ್ನೊಂದು ಲೋಕಕ್ಕೆ ಹೊಗುತ್ತಾಳೆ. ಪ್ರಸನ್ನ ಅವರ ಕಥೆಗಳಲ್ಲಿ ಹೋಟೆಲ್ ಕಥೆಯ ಹಾಗೆ ಮಸಾಲೆ ವಾಸನೆಯೊ, ಬಾಂಬೆ ಶೋ ಕಥೆಯ ಹಾಗೆ ಆಟ ತೋರಿಸುವ ಪೆಟ್ಟಿಗೆಯೋ, ನಿನ್ನೆ ಇಂದಿನ ನಡುವೆ ಕಥೆಯಲ್ಲಿನ ಹಾಗೆ ರೂಮಿನೊಳಗೆ ಸುಳಿದಾಡುವ ಗಾಳಿಯೋ, ಮುಂಗಾರು ಕಥೆಯಲ್ಲಿನ ಹಾಗೆ ಹೆಣ ಸಾಗಿಸುವ ವ್ಯಾನು, ಫೋಟೋಗ್ರಫಿಗಳೋ, ಅಪ್ಪ ಮಗ ಕಥೆಯ ಹಾಗೆ ಬಾಗಿಲ ಬಡಿತದ ಸದ್ದೋ.. ಇಂಥ ಏನೋ ಒಂದು ಮಾಮೂಲು ಸಂಗತಿ ಸಾಮಾನ್ಯವು ಅಸಾಮಾನ್ಯ ಮಾಯಾ ಕಲ್ಪನಾಲೋಕಕ್ಕೆ ಕಥೆ ಹೊರಳುವಂತೆ ಮಾಡುವುದು ಕಾಣುತ್ತದೆ. + +ಎರಡನೆಯದಾಗಿ ಈ ಅಸಾಮಾನ್ಯ ಮಾಯಾ ಲೋಕದ ವರ್ಣನೆಯಲ್ಲಿ ಪ್ರಸನ್ನ ಅವರ ಭಾಷೆ ಕಾವ್ಯದ ಸ್ಪರ್ಶವನ್ನು ಪಡೆದು ಕಾಮನಬಿಲ್ಲಾಗುತ್ತದೆ. ‘ಪಾರಿವಾಳಗಳು ಕಥೆಯಲ್ಲಿ’ ಬರುವ ಈಜಿನ ವರ್ಣನೆ ನೋಡಿ: + +ಮಧ್ಯಾಹ್ನದ ಉರಿ ಬಿಸಿಲಲ್ಲಿ ಕಣ್ಣು ಕುಕ್ಕುವಂತೆ ಮಿರುಗುತ್ತಿದ್ದ ಅಲೆಗಳನ್ನು ಅತ್ತಿತ್ತ ಒತ್ತರಿಸಿ ಈಜಿ ದಡಕ್ಕೆ ಬಂದರೆ ಮೈಗೆಲ್ಲ ರೆಕ್ಕೆ ಮೂಡಿ ಮೇಲೆಲ್ಲೋ ಹಾರಾಡಿದ ಹಾಗೆ. ತೊಟ್ಟಿಕ್ಕುತ್ತಿದ್ದ ನೀರು ನೋಡ ನೋಡುತ್ತಲೆ ಮಾಯವಾಗಿ ಬಿಸಿಲಿನ ಝಳ ಚರ್ಮದೊಳಕ್ಕೆ ನುಗ್ಗಲು ಹವಣಿಸಿ ಚುಚ್ಚುತ್ತಿದ್ದರೂ ಒಳಗೆ ಗೆಲುವಿನ ಲಹರಿ. ಅಂಗಾಲುಗಳಿಗೆ ಕುದಿಯುವ ಮರಳಿನ ಕಚಗುಳಿ. + +ಇಂಥ ವರ್ಣನೆಗಳು ಧಾರಾಳವಾಗಿ ಸಿಗುತ್ತವೆ ಈ ಕಥೆಗಳಲ್ಲಿ. ಬರಿಯ ವರ್ಣನೆಗಳಾಗಿಯಷ್ಟೇ ಉಳಿದಿದ್ದರೆ ಇಂಥ ಬರಹ ಕೇವಲ ರುಚಿಯ ಬರವಣಿಗೆಯಷ್ಟೇ ಆಗುತ್ತಿತ್ತು. + +‘ನಿನ್ನೆ ಇಂದಿನ ನಡುವೆ’ ಕಥೆಯಲ್ಲಿ ಬರುವ ಈ ವರ್ಣನೆ ನೋಡಿ: + +ಮಂಜುಳಾ ಕಣ್ಣು ಹೊಳೆಸಿ ಸಣ್ಣಗೆ ಚಪ್ಪಾಳೆ ತಟ್ಟಿದಳು. ಅವಳ ಹುಬ್ಬಿನ ಮೇಲೆ ಹಬ್ಬ ಮೂಡಿದ್ದು ಕಂಡು ಕೃಷ್ಣಮೂರ್ತಿ ತನಗೇ ತಿಳಿಯದ ಹಾಗೆ ಸಣ್ಣಗೆ ಶಿಳ್ಳೆ ಹಾಕಿದ. ದಿಢೀರನೆ ಇಬ್ಬರ ಕಣ್ಣುಗಳಲ್ಲೂ ಹಠಾತ್ ಹೊಳಪು ಹುಟ್ಟಿ, ಹೊರಗೆ ಇಣುಕಿ, ಗಲ್ಲಕ್ಕಿಳಿದು ನಂತರ ತುಟಿಗಳ ತನಕ ಹಬ್ಬಿ, ನಸುನಗು ಹೊಮ್ಮಿದ್ದು ಯಾವಾಗೆಂದು ಅವರ ಪರಿವೆಗೆ ಬಾರದ ಸಂಗತಿಯಾಗಿತ್ತು.. ಅವರಿಗೆ ಲಭ್ಯವಾಗಿದ್ದ ಆ ರೂಮೊಳಗೆ ಗಾಳಿ ಎಂದಿನಿಂದಲೂ ಇರುವ ದೇಶ-ಪ್ರದೇಶಗಳ ಸಾರವನ್ನು ಹೀರಿಕೊಂಡದ್ದು, ಎಲ್ಲ ಜನ-ಮನದ ಒಳಹೊರಗಿನಲ್ಲಿ ಸುತ್ತಿ ಸುಳಿದು ವಿವಿಧ ಭಾವ ಸ್ತರಗಳ ಬುಡವನ್ನು ಸ್ಪರ್ಶಿಸಿದ್ದು, ನೆಲ-ಜಲಗಳ ಮಿಡಿತವನ್ನು ಅರಿತದ್ದು, ಇತಿಹಾಸದ ಕೋಟೆ-ಕೊತ್ತಲಗಳಲ್ಲಿ ಅಡಗಿದಂಶಗಳನ್ನು ಜೋಪಾನವಾಗಿ ಹೊತ್ತು ತಂದದ್ದು, ಗಿರಿ-ಶಿಖರಗಳೆತ್ತರಕ್ಕೆ ತಲೆ ಎತ್ತಿ ಸಂಭ್ರಮಿಸಿದ್ದು, ಯೋಗಿ-ಭೋಗಿಗಳನ್ನು ಅವರ ನೆಲೆಯಲ್ಲೆ ಕಂಡದ್ದು, ಹಾಡುವವರ ಲಯಕ್ಕೆ ತಲೆದೂಗಿದ್ದು, ನರ್ತಿಸುವರ ಲಾಸ್ಯಕ್ಕೆ ಬೆರಗಾದದ್ದು, ಬಣ್ಣದ ಕುಂಚಗಳ ಅಂಚನ್ನು ಮೃದುವಾಗಿ ನೇವರಿಸಿದ್ದು, ಬನವಾಸಿಗೆ-ಗದಗಿಗೆ ನಮಿಸಿದ್ದು- ಹೀಗೆಯೇ ಇನ್ನಷ್ಟು ಮತ್ತಷ್ಟು, ಮೊಗೆದಷ್ಟು…. ಇವೆಲ್ಲವನ್ನೂ ಪದರು-ಪದರುಗಳಲ್ಲಿ ಒಳಗೊಂಡು ಸುಳಿದಾಡುತ್ತಿತ್ತು ಆ ರೂಮಿನೊಳಗಿನ ಗಾಳಿ. ಇದಕ್ಕೆಲ್ಲ ಸಾಕ್ಷಿ ಅಲ್ಲಿದ್ದ ಕುರ್ಚಿ, ಮೇಜು, ಕಪಾಟು, ಕನ್ನಡಿ, ಬಾಚಣಿಕೆ, ಹೇರ್ ಪಿನ್ನು, ಪೌಡರು ಇತ್ಯಾದಿ ಜೊತೆ ಅಟ್ಟದ ಮೇಲಿನ ತಾತನ ಕಾಲದ ಅಂದು ಇಂದಿಗೆ ಕೊಂಡಿಯಾಗಿದ್ದ ವಸ್ತುಗಳು. + + + +ಈ ವರ್ಣನೆ ಮಾತು ಸಾಮಾನ್ಯ ಮನುಷ್ಯರ ಬದುಕಿನ ಸಾಮಾನ್ಯ ಬದುಕಿನ ಪ್ರತಿಯೊಂದೂ ಗಳಿಗೆಯಲ್ಲಿ ಚರಿತ್ರೆ, ಸಂಸ್ಕೃತಿ, ಇಡೀ ವಿಶ್ವದ ವ್ಯಾಪಾರ ಅಡಗಿರುತ್ತದೆ ಅನ್ನುವುದನ್ನು ಸೂಕ್ಷ್ಮವಾಗಿ ತೋರುವಂತಿದೆ. ಇಂಥ ಅಗಾಧ ಸತ್ಯ ಪಾತ್ರಗಳಿಗೆ ಎಷ್ಟೋ ಬಾರಿ ಹೊಳೆಯದಿದ್ದರೂ ಕತೆಗಾರರಿಗೆ, ಅವರ ಕಥನದ ಮೂಲಕ ಓದುಗರಿಗೆ ಹೊಳೆಯುತ್ತದೆ. ನಿನ್ನೆ ಇಂದುಗಳ ನಡುವೆ ಎಂಬ ಈ ಕಥೆ ಸ್ವಲ್ಪ ಇದೇ ಥರದ್ದು ಎಂದು ನನಗೆ ಅನಿಸಿದ ‘ಆ ಊರಿನಲ್ಲಿ’ ಕಥೆಗಿಂತ ಹೆಚ್ಚು ಇಷ್ಟವಾಯಿತು. + +ಮೂರನೆಯ ಸಂಗತಿ ಎಂದರೆ ಸಾಮಾನ್ಯ ಜಗತ್ತನ್ನು ವರ್ಣಿಸುವಾಗ ಪ್ರಸನ್ನ ಅವರು ಸಣ್ಣ ಪುಟ್ಟ ವಸ್ತು, ಸಂಗತಿಗಳಿಗೆ ಗಮನಕೊಡುತ್ತ ಅವು ಕಥನದಲ್ಲಿ ಹೊಳೆದು ಕಾಣುವಂತೆ ಮಾಡುತ್ತಾರೆ. ‘ಅಪ್ಪ ಮಗ’ ಕಥೆಯಲ್ಲಿ ಬರುವ ಪೋಸ್ಟ್ ಆಫೀಸಿನ ವರ್ಣನೆ, ಭೇಟಿ ಕಥೆಯಲ್ಲಿ ಶೇಖರನು ಆಫೀಸಿನ ವ್ಯವಹಾರದಲ್ಲಿ ಮುಳುಗಿ ‘ದೊಡ್ಡ ಜನರೇಟರಿನಂತೆ ಕಂಡ’ ಎಂಬ ವರ್ಣನೆ, ‘ಪಾರಿವಾಳಗಳು’ ಕಥೆಯಲ್ಲಿ ಬರುವ ಪಾರಿವಾಳಗಳ ಮತ್ತು ಜನಗಳ ವರ್ಣನೆ, ‘ಹೋಟೆಲ್’ ಕಥೆಯಲ್ಲಿ ಬರುವ ಬೆಳಗಿನ ಜಾವದ ಬಸ್ಸ್ಟಾಂಡಿನ ವರ್ಣನೆ ಇಂಥವು ಪ್ರತಿ ಕಥೆಯಲ್ಲೂ ಓದುಗರಿಗೆ ಎದುರಾಗುತ್ತವೆ.ಈ ಇಡೀ ಸಂಕಲನದಲ್ಲಿ ನನಗೆ ‘ಪಾರಿವಾಳಗಳು’ ಕಥೆ ಬಹಳ ಇಷ್ಟವಾಯಿತು. ಇದು ಸಣ್ಣಕಥೆಯ ಅವಕಾಶದಲ್ಲಿ ಅಡಗಿ ಕುಳಿತ ಕಾದಂಬರಿ ಅನ್ನಿಸುತ್ತದೆ. ಪಾರಿವಾಳಗಳ ಲೋಕ ಮತ್ತು ಮನುಷ್ಯ ಲೋಕಗಳ ವೈರುಧ್ಯ, ರಂಗಯ್ಯ-ಶಿವಕುಮಾರ್, ರಂಗಯ್ಯ-ಲಕ್ಕವ್ವ, ರಂಗಯ್ಯ-ಮಲ್ಲಪ್ಪ, ರಂಗಯ್ಯ ಶಂಕ್ರು- ರಂಗಯ್ಯ ಹೀಗೆ ಜೋಡಿ ಜೋಡಿಗಳಾಗಿ ಮನುಷ್ಯ ಮನಸಿನ ಹೊರಳು, ಸಿಕ್ಕು, ಗೋಜಲು, ಭಾವಾವೇಶಗಳ ಚಿತ್ರಣ ಮನಸ್ಸು ತುಂಬುತ್ತದೆ. ಮಿಕ್ಕ ಕಥೆಗಳ ಹಾಗೆ ಈ ಕಥೆ ಇನ್ನೂರಡಿಗಳ ಮಿತಿಯನ್ನು ಮೀರಿದ್ದು ಈ ಕಥೆಯಲ್ಲಿ ಓದುಗರಿಗೆ ದೊರೆಯುತ್ತದೆ. + +ನನಗೆ ಇಷ್ಟವಾದ ಮತ್ತೊಂದು ಕಥೆ ಹಚ್ಚೆ. ಇದರಲ್ಲಿ ಸಾಮಾನ್ಯವಾಗಿ ನವ್ಯಕಥೆಗಳಲ್ಲಿ ಕಾಣದಂಥ ದುಡಿಮೆಗಾರರ ಲೋಕದ ವರ್ಣನೆ ಇದೆ. ದುಡಿಯುವ ಜನರ ಮನಸ್ಥಿತಿ, ಅವರ ಮನೋಲೋಕ, ಸಂಶಯ, ಅಗಾಧ ಪ್ರೀತಿ, ವಿಶ್ವಾಸ, ನೀತಿಯನ್ನು ಮೀರುವ ಛಾತಿ ಇವೆಲ್ಲವೂ ಸಾವಕಾಶವಾಗಿ ಚಿತ್ರಣಗೊಂಡಿವೆ. ಆಟೋ ಡ್ರೈವರು, ಮನೆ ಕಟ್ಟುವ ಮೇಸ್ತ್ರಿ, ಕೂಲಿಗಳ ಲೋಕ ಇದು. ಆರ್ ಸಿ ಸಿ ಹಾಕುವ ವರ್ಣನೆ, ಟೆಂಟ್ ಸಿನಿಮಾದ ವರ್ಣನೆ, ಹಚ್ಚೆ ಹಾಕುವ ವಿವರ ಇಂಥವು ಮನಸಿನಲ್ಲಿ ಉಳಿಯುತ್ತವೆ. ಇಡೀ ಕಥೆಯಲ್ಲಿ ಅಚ್ಚರಿ ಹುಟ್ಟಿಸುವ ಸಂಗತಿ ಎಂದರೆ. ಗೆಳೆಯರು ಪರಸ್ಪರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು, ಮತ್ತು ಇಬ್ಬರನ್ನೂ ಬಯಸುವ ನಿಂಗಿ ಜೋಡಿ ಹೂಗಳ ಹಚ್ಚೆ ಹಾಕಿಸಿಕೊಳ್ಳುವುದು ಸಂಕೇತಿಕವಾಗಿ ಚಿತ್ರಣಗೊಂಡರು ಕಥೆಯ ಕೊನೆಗೆ ವಾಸ್ತವವೇ ಆಗುತ್ತದೆ. ನಿಂಗಿಯ ಪಾತ್ರ ಈ ಸಂಕಲನದ ಮಿಕ್ಕ ಪಾತ್ರಗಳಿಗಿಂತ ಬೇರೆಯಾಗಿ ನಿಲ್ಲುತ್ತದೆ. ಇದೂ ಕೂಡ ಕಾದಂಬರಿಯಾಗಿ ಬೆಳೆಯಬಹುದಾದ ಕಥೆ ಅನಿಸುತ್ತದೆ. + +ಪ್ರಸನ್ನ ಅವರ ಕಥೆಗಳ ರಚನೆಯಲ್ಲಿ ಸಮಾನವಾದೊಂದು ವಿನ್ಯಾಸವೂ ಕಾಣುತ್ತದೆ. ಸಾಮಾನ್ಯ ಮನುಷ್ಯ ಪಾತ್ರದ ಸಾಮಾನ್ಯ ದಿನಚರಿ ಅರಿವೇ ಆಗದಂತೆ ಮತ್ತೊಬ್ಬ ಮನುಷ್ಯನಿಂದಲೋ ಅಕಸ್ಮಾತ್ ಸಂಭವಿಸುವ ಘಟನೆಯಿಂದಲೋ ಯಾವುದೋ ವಸ್ತುವಿನಿಂದ ಮಾಯಾ ಕಲ್ಪನಾ ಲೋಕಕ್ಕೆ ತಟ್ಟನೆ ಹೊರಳುತ್ತದೆ. ಆ ಪಾತ್ರ, ಕೆಲವೊಮ್ಮೆ ಅದರ ಜೊತೆಗಾರ ಪಾತ್ರ ತರ್ಕಕ್ಕೆ ಮೀರಿದ, ಅವಾಸ್ತವ ಅನಿಸುವಂಥ ಅನುಭವಗಳನ್ನೂ ಸಹಜವಾಗಿ, ಸಲೀಸಾಗಿ ಅನುಭವಿಸುತ್ತಾರೆ. ಬದುಕಿನ ಬಗ್ಗೆ ಮತ್ತೆ ತಮ್ಮ ಬಗ್ಗೆ ಹೊಸದೆನಿಸುವಂಥ ತಿಳಿವು ಪಡೆಯುತ್ತಾರೆ. ಮತ್ತೆ ತಮ್ಮ ಪರಿಚಿತ ವಾಸ್ತವಕ್ಕೆ ಮರಳುತ್ತಾರೆ. ಈ ವಿನ್ಯಾಸಕ್ಕೆ ತಳಹದಿಯಾಗಿ ಕುತೂಹಲ ಕೆರಳಿಸುವ, ಮುಂದೇನು ಎಂದು ಕುತೂಹಲ ಕೆರಳಿಸುವ ‘ಕಥೆ’ಯ ಅಂಶವೂ ಇರುತ್ತದೆ. ಆದರದು ಬಹಳ ಮುಖ್ಯವೇನೂ ಅಲ್ಲ. + +‘ಆಗಮನ’ ಕಥೆಯಲ್ಲಿ ಅಪರೂಪದ ತಾಯಿಯೊಬ್ಬಳು ಎದುರಾಗುತ್ತಾಳೆ. ತಾಯಿಯ ವಾತ್ಸಲ್ಯ, ಹೆಣ್ಣಿನ ಮರ್ಯಾದೆಯನ್ನು ಕಾಪಾಡುವ ಧೈರ್ಯ, ಛಲ, ತನ್ನ ಮಗನೇ ಅತ್ಯಾಚಾರಿಯೆಂದು ತಿಳಿದಾಗ ಅವಳಿಗಾಗುವ ಅಸಾಧ್ಯ ನೋವು, ಹತಾಶೆ ಸಿಟ್ಟು ಇವೆಲ್ಲ ಮನಸ್ಸನ್ನು ತುಂಬುತ್ತವೆ. ಪರಿಣತ ಓದುಗರಿಗೆ ‘ಆಗಮನ’ ಕಥೆಯ ಅರ್ಧ ಭಾಗಕ್ಕೆ ಬರುವಷ್ಟು ಹೊತ್ತಿಗೆ ಇದು ಹೀಗೇ ಮುಗಿಯುತ್ತದೆಂಬ ಸುಳಿವು ಸಿಕ್ಕಿಬಿಡುತ್ತದೆ. ರಚನೆಯ ವಿನ್ಯಾಸದ ದೃಷ್ಟಿಯಿಂದ ‘ಪ್ರತಿಫಲನ’ ಕಥೆಯ ನಾಯಕಿ ಕೂಡ ಅಪರೂಪದವಳು. ಅತ್ಯಾಚಾರಕ್ಕೆ ಗುರಿಯಾದವಳೂ ಹೌದು, ಅತ್ಯಾಚಾರದ ವಿಚಾರಣೆ ನಡೆಸುವ ಅಧಿಕಾರಿಯೂ ಹೌದು. ಅವಳ ಖಾಸಗಿ ಬದುಕು, ಊರು, ನೆನಪುಗಳೆಲ್ಲ ಸೇರಿ ಒಳಗೊಳಗೇ ಹೆಣ್ಣಿನ ದೌರ್ಬಲ್ಯವನ್ನು ವಿಚಾರಣೆ ನಡೆಸುವ ಅಧಿಕಾರಿಯಾಗಿ ನಿಷ್ಠುರ ಚತುರ ಅಧಿಕಾರಿಯಾಗಿಯೂ, ತನ್ನ ಮಗಳನ್ನು ಉಳಿಸಿಕೊಳ್ಳುವಾಗ ಹೆಣ್ಣುತನದ ಸ್ವಾತಂತ್ರ್ಯ ಕಾಪಾಡಿಕೊಳ್ಳುವವಳಾಗಿಯೂ, ಅತ್ಯಾಚಾರಿಯ ಮಗಳನ್ನು ತನ್ನ ಮಗಳಿಗೆ ಇವಳು ನಿನ್ನ ಸಹೋದರಿ ಎಂದು ಪರಿಚಯಿಸುವ ತಾಯ್ತನವುಳ್ಳವಳೂ ಆಗಿದ್ದಾಳೆ. ‘ಆಗಮನ’ ಕಥೆಯ ತಾಯಿಯ ಪಾತ್ರಕ್ಕಿಂತ ಸಂಕೀರ್ಣವಾದ, ಮನಸ್ಸು ತುಂಬುವ ಪಾತ್ರವಾಗಿ ಬೆಳೆದಿದ್ದಾಳೆ. + +ಪ್ರಸನ್ನ ಅವರ ಈ ಕಥೆಗಳನ್ನು ಓದುತ್ತ ಇವೆಲ್ಲ ದೇಶಾತೀತ ಕಥೆಗಳು ಅನ್ನಿಸುತ್ತವೆ. ಇಲ್ಲಿನ ಯಾವ ಕಥೆಯೂ ನಿರ್ದಿಷ್ಟವಾಗಿ ಇಂಥದೇ ಊರಿನಲ್ಲಿ ನಡೆದವಲ್ಲ. ಇದಕ್ಕೆ ಕಾರಣವಿದೆ. ಏನೆಂದರೆ, ನಾವು ಮಧ್ಯಮವರ್ಗ ಎಂದು ಗುರುತಿಸುವ ವರ್ಗಕ್ಕೆ ಸೇರಿದ, ಸಾಮಾನ್ಯರೆಂಬ ವರ್ಣನಗೆ ಗುರಿಯಾಗುವ ಜನರ ಬದುಕನ್ನು ಕುರಿತ ಕಥೆಗಳು ಇವು. ಎಲ್ಲ ದೇಶದಲ್ಲೂ ಸುಮಾರಾಗಿ ಹೀಗೇ ಇದ್ದೀತು. ಆದರೆ, ಕಾಲ ಮಾತ್ರ ಭಿನ್ನ. ಈ ಸಂಕಲನದ ಮೊದಲ ಎರಡು ಕಥೆಗಳಲ್ಲಿ ಬರುವ ಹೆಣ್ಣು ಪಾತ್ರಗಳಿಗೂ ಕೊನೆಯ ಕಥೆಯಲ್ಲಿ ಬರುವ ಅಶ್ವಿನಿಯ ಪಾತ್ರಕ್ಕೂ ಗಮನಾರ್ಹವಾದ ವ್ಯತ್ಯಾಸಗಳಿವೆ. ಆದರೂ ಈ ಎಲ್ಲ ಕಥೆಗಳು ಈಗ ಬಲು ಮಟ್ಟಿಗೆ ಸುಳಿವು ಉಳಿಸದಂತೆ ಮರೆಯಾಗಿರುವ, ಅಥವಾ ವೇಗವಾಗಿ ಕಣ್ಮರೆಯಾಗುತ್ತಿರುವ ಮಧ್ಯಮವರ್ಗದ ಬದುಕಿನ ವಿವರಗಳಾಗಿ ಕಂಡೀತು. + +ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು ಹೋಲಿಸಿ ನೋಡುವ, ಸಾಮಾನ್ಯದೊಳಗೇ ಇರುವ ಅಸಾಮಾನ್ಯವನ್ನು ಕುರಿತ ಸೂಚನೆಗಳನ್ನು ಮತ್ತಷ್ಟು ಆಳವಾಗಿಸಿ, ಹಿಗ್ಗಿಸಿ ನೋಡುತ್ತ ಸಂತೋಷಪಡುವ ಅವಕಾಶವನ್ನು ಒದಗಿಸುತ್ತವೆ ಈ ಕಥೆಗಳು. + + + +ಪ್ರಸನ್ನ ಅವರು ತಮ್ಮ ಆಯ್ದ ಕಥೆಗಳನ್ನು ಮತ್ತೊಮ್ಮೆ ಓದುವ ನನ್ನ ಪ್ರತಿಕ್ರಿಯೆಯನ್ನು ತಿಳಿಸುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಅವರಿಗೆ ಮತ್ತೊಮ್ಮೆ ನಮಸ್ಕಾರ. + +ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ. \ No newline at end of file diff --git a/Kenda Sampige/article_308.txt b/Kenda Sampige/article_308.txt new file mode 100644 index 0000000000000000000000000000000000000000..1b9a571158c86215ce50a2bc0a9f7ee8ab34d74a --- /dev/null +++ b/Kenda Sampige/article_308.txt @@ -0,0 +1,93 @@ + + +ಅಸ್ಸಾಮಿ: ಸಂಜೀವ್ ಪೋಳ್ ಡೇಕಾಕನ್ನಡಾನುವಾದ : ಡಾ. ಬಸವರಾಜ ಸಾದರ + +ನಾರಾಯಣ ಕಾಕೋಟಿಯ ಗಂಟಲು ಒಣಗಿದಂತಾಯ್ತು. ಪೋಲೀಸಿನವರಿಗೆ ಅತ್ಯಂತ ಸಹಜವಾದ ಸಿಟ್ಟು ಅವನಲ್ಲಿ ನಿಧಾನವಾಗಿ ಏರತೊಡಗಿತು. ಆದರೆ ಅದನ್ನಾತ ತಕ್ಷಣ ಎಚ್ಚರದಿಂದ ನಿಯಂತ್ರಿಸಿಕೊಂಡ. ಅವನಾದರೂ ಯಾರ ಮೇಲೆ ಆ ಸಿಟ್ಟನ್ನು ತೀರಿಸಿಕೊಳ್ಳಲು ಸಾಧ್ಯ? ಅಷ್ಟಕ್ಕೂ, ಅಂಥ ಒಂದು ಸಣ್ಣ ಸ್ಥಳದಲ್ಲಿ ಇಂಥ ಘಟನೆ ಸಂಭವಿಸುವುದನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ. ಹಾಗೆ ವಿಚಾರ ಮಾಡುತ್ತ ಹೋದರೆ, ಆ ಸಣ್ಣ ಹಳ್ಳಿಯಲ್ಲಿ ವಾಸಿಸುವ ಜನರೆಲ್ಲಾ ನಿರಕ್ಷರಿಗಳು. ಕಛೇರಿಯಲ್ಲಿ ಕೆಲಸ ಮಾಡುವ ಒಬ್ಬ ಕ್ಲರ್ಕ ಹಾಗೂ ಒಬ್ಬ ಹೈಸ್ಕೂಲ್ ಟೀಚರ್ ನನ್ನು ಬಿಟ್ಟರೆ ಉಳಿದ ಆ ಗ್ರಾಮವಾಸಿಗಳೆಲ್ಲಾ ದಿನಗೂಲಿ ದುಡಿಯುವವರೆ. ಅವರಲ್ಲಿ ಮೂವರು ಬಡಗಿಗಳು, ಇಬ್ಬರು ರಿಕ್ಷಾ ಎಳೆಯುವವರು ಹಾಗೂ ಕೆಲವರು ಚಕ್ಕಡಿ ಹೊಡೆಯುವವರೂ ಇದ್ದರು. ಈ ಜನರಲ್ಲಿ ಹೆಚ್ಚಿನವರು ಕೆಲಸ ಅರಸಿಕೊಂಡು ಹೊತ್ತು ಮೂಡುವ ಮೊದಲೇ ಮನೆ ಬಿಟ್ಟರೆ ಮತ್ತೆ ಅವರು ತಮ್ಮ ಗೂಡುಗಳನ್ನು ಸೇರುವುದು ಸೂರ್ಯ ಮುಳುಗಿದ ಮೇಲೆಯೇ. + +ಇಂಥ ಒಂದು ಅನಿರೀಕ್ಷಿತವಾದ ಹಾಗೂ ವಿಚಿತ್ರವಾದ ಘಟನೆ ನಡೆದದ್ದನ್ನು ನಾರಾಯಣ ಕಾಕೋಟಿ ಕಂಡದ್ದು ಆತನ ಇಡೀ ಸೇವಾವಧಿಯಲ್ಲಿ ಅದೇ ಮೊದಲು. ಬಹುಶಃ ನಮ್ಮ ದೇಶದಲ್ಲಿ ಆ ಹಳ್ಳಿಯಷ್ಟು ಹಿಂದುಳಿದ ಪ್ರದೇಶ ಬೇರೆಲ್ಲೂ ಇರಲಾರದೆಂದೇ ಆತ ನಂಬಿದ್ದ. ಅಂಥ ಹಳ್ಳಿಯಲ್ಲಿ ನಡೆದಿದ್ದ ಆ ಪ್ರಕರಣ ನಿಜಕ್ಕೂ ಅವನಿಗೆ ವಿಚಿತ್ರ ಕುತೂಹಲ ಮೂಡಿಸಿತ್ತು. ಅಪರಾಧಿಯನ್ನು ಹಿಡಿದು ಕೇಸು ಹಾಕುವುದು ಈಗ ಮುಖ್ಯವಲ್ಲವೆಂದೇ ಕಾಕೋಟಿ ಬಲವಾಗಿ ನಂಬಿದ್ದ. ಅಷ್ಟೇ ಅಲ್ಲ; ಆ ಇಡೀ ಘಟನೆಯನ್ನು ಮರೆತುಬಿಡುವುದೇ ಸೂಕ್ತವೆಂದು ತೀರ್ಮಾನಿಸಿದ್ದ. ಆದರೆ ಯಾವಾಗ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಿಂದ ಅತ್ಯಂತ ಕಠಿಣವಾದ ಆದೇಶ ಬಂತೋ, ಆಗ ಅನಿವಾರ್ಯವಾಗಿ ಆತ ಮತ್ತೆ ಹಳ್ಳಿಗೆ ಬರಲೇಬೇಕಾಗಿತ್ತು. + +(ಡಾ. ಬಸವರಾಜ ಸಾದರ) + +ಹಳ್ಳಿಗೆ ಬಂದ ಕಾಕೋಟಿಯ ತಪಾಸಣಾ ತಂಡ ದೂರದ ಹೊಲವೊಂದರ ಮೂಲೆಯಲ್ಲಿದ್ದ ಮಹಿರಾಯನ ಮನೆಗೆ ಭೆಟ್ಟಿ ಕೊಟ್ಟು, ಅನಂತರ ತಿರುಗಿ ಬಂದು ತರಗೆಲೆ ಮತ್ತು ಮುರಿದುಬಿದ್ದ ಟೊಂಗೆಗಳಿಂದ ಅಸ್ತವ್ಯಸ್ತವಾಗಿದ್ದ ಮಾವಿನ ಮರದ ಕೆಳಗೆ ನಿಂತಿತು. ಹಾಗೆ ನಿಂತುಕೊಂಡ ಅವರೆಲ್ಲ ಬಿಸಿಲಲ್ಲಿ ತಿರುಗಾಡಿ ಬಂದ ಕಾರಣಕ್ಕಾಗಿ ಒಸರುತ್ತಿದ್ದ ತಮ್ಮ ಮುಖದ ಮೇಲಿನ ಬೆವರನ್ನು ಒರೆಸಿಕೊಂಡರು. ದಣಿವಾರಿಸಿಕೊಳ್ಳುತ್ತ ಟಿಸಿಲೊಡೆದ ಮಾವಿನ ಮರದ ಟೊಂಗೆಯೊಂದರ ಕಡೆಗೆ ಕೈ ಮಾಡಿದ ಕಾನ್ಸ್ಟೇಬಲ್ ಬಿಮಲ್ ಹೀಗೆಂದನು- + +“ಸರ್, ಎಲ್ಲ ತೊಂದರೆಗೂ ಈ ಮಾವಿನ ಮರವೇ ಕಾರಣ ನೋಡಿ!! ಈ ಮಾವಿನ ಮರ ಇಲ್ಲಿ ಇರದೇ ಹೋಗಿದ್ದರೆ ಇಂಥ ಪ್ರಕರಣ ನಡೆಯುತ್ತಲೇ ಇರಲಿಲ್ಲ. ಇದನ್ನು ನೀವು ಒಪ್ಪುತ್ತೀರಲ್ಲವೆ?” + +“ನಿಜ ಬಿಮಲ್, ನೀನಂದದ್ದು ಖಂಡಿತ ನಿಜ”-ಎಂದು ತಲೆಹಾಕುತ್ತ ಒಪ್ಪಿಕೊಂಡ ಕಾಕೋಟಿ, “ನೋಡು, ಬಿಮಲ್ ನಮ್ಮ ಜೀವನದಲ್ಲಿ ಯಾವುದೊಂದು ಕ್ರಿಯೆಯೂ ಪರಿಪೂರ್ಣವಲ್ಲ. ಅಷ್ಟೇ ಅಲ್ಲ; ಇಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಖಂಡಿತವಾಗಿ ಮತ್ತೊಂದರೊಡನೆ ತಳುಕು ಹಾಕಿಕೊಂಡೇ ಇರುತ್ತದೆ. ವೈಜ್ಞಾನಿಕ ಪರಿಭಾಷೆಯಲ್ಲಿ ನಾವು ಇದನ್ನೇ ಸಾಪೇಕ್ಷ ಸಂಬಂಧ ಎನ್ನುತ್ತೇವೆ. ನೀನೇ ಯೋಚಿಸಿ ನೋಡು, ಈ ಗಿಡ ಈಗ ನಡೆದ ಕಳವಿಗೆ ಸಂಬಂಧಿಸಿದೆ. ಮತ್ತೆ ಈ ಪ್ರಕರಣ ಪೋಲೀಸರಿಗೆ ಸಂಬಂಧಿಸಿದೆ, ಅಂದರೆ ನಮಗೆ ಗಂಟುಬಿದ್ದಿದೆ……” ಎಂದ. + +ತಾನು ಇದೀಗ ಹೇಳಿದ್ದೆಲ್ಲ ಖಂಡಿತವಾಗಿ ಬಿಮಲ್ ನ ತಲೆಯ ಮೇಲೆಯೇ ಹಾಯ್ದು ಹೋಯಿತೆಂಬುದು ಕಾಕೋಟಿಗೆ ಸ್ಪಷ್ಟವಾಗಿ ಅರ್ಥವಾಯಿತು. ಕಾಕೋಟಿಯು ಆಗಾಗ ಇದೇ ರೀತಿ ಬಿಮಲ್ ಹಾಗೂ ಅವನ ಸಹೋದ್ಯೋಗಿಗಳ ಜೀವನಕ್ಕೆ ಸಂಬಂಧಿಸಿದ ಘಟನೆಗಳ ಬಗ್ಗೆ ಉದ್ದುದ್ದ ಭಾಷಣ ಬಿಗಿಯುತ್ತಿದ್ದುದೇನೂ ಸುಳ್ಳಲ್ಲ. ಕಾಲೇಜಿನಲ್ಲಿ ಆತ ಭೌತಶಾಸ್ತ್ರವನ್ನು ಓದಿದ್ದ. ಕವಿತೆಗಳನ್ನೂ ಬರೆದಿದ್ದ. ಆತ ಯಾವಾಗಲೂ ತನ್ನ ವಿಚಾರಗಳನ್ನು ಮತ್ತೊಬ್ಬರಿಗೆ ಹೇಳುವುದರಲ್ಲಿಯೇ ತೃಪ್ತಿಪಡುತ್ತಿದ್ದ. ಯಾವಾಗಲೂ ಟಿ.ವಿ. ಪೆಟ್ಟಿಗೆಯೊಂದಿಗೆ ಅಂಟಿಕೊಂಡೇ ಇರುತ್ತಿದ್ದ ಕಾಕೋಟಿಯ ಹೆಂಡತಿ ಅವನ ಮಾತುಗಳಿಗೇನೂ ಹೆಚ್ಚು ಕಿವಿಗೊಡುತ್ತಿರಲಿಲ್ಲ. ಹಾಗಾಗಿಯೇ ಆತ ಬಿಮಲ್ ಮತ್ತು ಅವನಂಥ ಇತರ ಕಾನ್ಸ್ಟೇಬಲ್ ಗಳಿಗೆ ಭಾಷಣ ಬಿಗಿಯುತ್ತಲೇ ಇರುತ್ತಿದ್ದ. ಅವೆಲ್ಲ ವಿಚಾರಗಳು ಅವರಿಗೆ ತಿಳಿಯುತ್ತಲೂ ಇರಲಿಲ್ಲ. ಆದರೆ ಹಾಗೆ ಹೇಳಿಕೊಂಡಾಗ ಮಾತ್ರ ಕಾಕೋಟಿಯ ಹೃದಯ ಹಗುರವಾಗುತ್ತಿತ್ತು. + +-2- + +ಒಂದು ಕ್ಷಣದಲ್ಲಿ ಮತ್ತೆ ಕಾಕೋಟಿ ವಾಸ್ತವಕ್ಕೆ ಹಿಂದಿರುಗಿದ. “ಹೌದು, ಬಿಮಲ್ ಹೇಳಿದ್ದು ಸರಿಯಾಗೇ ಇದೆ. ಈ ಹಾಳಾದ ಪಂಚಾಯತಿ ಕೆಲಸಗಾರರು ಎಲ್ಲ ಜಾಗೆ ಬಿಟ್ಟು ಈ ಗಿಡದ ಮೇಲೆಯೇ ತಮ್ಮ ಬ್ಯಾನರ್ ಅನ್ನು ತೂಗು ಹಾಕಲು ಯಾಕೆ ಮುಂದಾದರೊ? ಅವರಿಗೆ ಈ ಗಿಡದಲ್ಲೇನು ಮಹಾ ಸ್ವರ್ಗ ಕಂಡಿತೋ! ಅಷ್ಟಕ್ಕೂ ನಿರಕ್ಷರಿಗಳಾಗಿರುವ ಈ ಊರಿನ ಜನರೆಲ್ಲ ಆ ಬ್ಯಾನರ್ ನಲ್ಲಿ ಏನು ಬರೆದಿದೆ ಎಂಬುದನ್ನು ಓದಲು ಮತ್ತು ಅರ್ಥ ಮಾಡಿಕೊಳ್ಳಲು ಹೇಗೆ ಸಾಧ್ಯ? ಸದ್ಯದ ಸರಕಾರ ಯಶಸ್ವೀ ನಾಲ್ಕು ವರ್ಷ ಪೂರೈಸಿದ್ದನ್ನು ಕಟ್ಟಿಕೊಂಡು ಅವರಿಗೇನಾಗಬೇಕಾಗಿದೆ? ಆ ಬ್ಯಾನರ್ ನಲ್ಲಿ ಏನು ಬರೆದಿದ್ದಾರೆಂಬುದನ್ನು ತಿಳಿಯಲಾರದೆ, ಯಾರೋ ಒಬ್ಬರು ಅದನ್ನು ಕಿತ್ತುಕೊಂಡು ಹೋಗಿ, ಯಾವುದೋ ಒಂದು ಕೆಲಸಕ್ಕೆ ಉಪಯೋಗಿಸಿಕೊಂಡಿರಬೇಕು. ಇದೆಂಥ ಮಹಾ ಗುನ್ಹೆ? ಪೋಲೀಸರಿಂದ ತನಿಖೆ ಮಾಡಿಸುವಷ್ಟು ಘೋರ ಅಪರಾಧವೆ ಇದು?” ಹೀಗೆ ಆತ ತನ್ನಷ್ಟಕ್ಕೆ ತಾನೇ ಯೋಚಿಸಿದ. + +ಕಾಕೋಟಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ‘ಹಳ್ಳಿಯ ಸಾಮಾನ್ಯ ಜನರು ಇಂಥ ಸಣ್ಣ ಸಣ್ಣ ತಪ್ಪುಗಳನ್ನು ಮಾಡಿದಾಗ ಈ ಅಧಿಕಾರಶಾಹಿಯು ತಾನೆಷ್ಟು ಶಕ್ತಿಶಾಲಿಯೆಂಬುದನ್ನು ತೋರಿಸಿಕೊಳ್ಳಲು ಹೀಗೆ ತನ್ನ ಕೈಗಳನ್ನು ಪ್ರಯೋಗಿಸುತ್ತದೆ. ಆದರೆ ದೊಡ್ಡ ದೊಡ್ಡ ದರೋಡೆಗಳಾದಾಗ ಮತ್ತು ಕಿಮ್ಮತ್ತಿನ ಸಾರ್ವಜನಿಕ ಸ್ವತ್ತು ಹಾಳಾದಾಗ ಅದಕ್ಕೆ ಕಾರಣರಾದ ಅಪರಾಧಿಗಳನ್ನು ಹಿಡಿಯುವಲ್ಲಿ ಅದು ಖಂಡಿತ ಮುಂದೆ ಬರುವುದಿಲ್ಲ. ತೆರಿಗೆದಾರರು ಕೊಡುವ ಕೋಟಿಗಟ್ಟಲೆಯ ತೆರಿಗೆ ಹಣವನ್ನು ಗುಳುಂ ಮಾಡುವ ಖದೀಮರನ್ನು ಪತ್ತೆ ಹಚ್ಚಿ ಶಿಕ್ಷಿಸುವಲ್ಲಿ ಅದು ಸೋಲುತ್ತದೆ. ಪ್ರತಿಭಾವಂತರನ್ನು ಹಿಂದೆ ಸರಿಸಿ ಅಯೋಗ್ಯರಿಗೆ ಮತ್ತು ಅನರ್ಹರಿಗೆ ಶಿಕ್ಷಕ ವೃತ್ತಿಗಳನ್ನು ಹರಿವಾಣದಲ್ಲಿಟ್ಟು ಮಾರಿ, ಅದಕ್ಕೆ ಪ್ರತಿಯಾಗಿ ಅಪಾರ ಲಂಚ ತಿನ್ನುತ್ತದೆ. ನಿರಂತರ ಅಪರಾಧ ಕೃತ್ಯಗಳಲ್ಲಿ ತೊಡಗಿರುವವರಿಗೆ ಯಾವ ಶಿಕ್ಷೆಯಾಗಿದೆ? ಇಂಥ ಎಲ್ಲ ಕುಕೃತ್ಯಗಳಿಗೂ ಅಧಿಕಾರಶಾಹಿಯು ಕುರುಡಾಗಿರುತ್ತದೆ. ಇದೆಲ್ಲ ಹೀಗೇಕೆ? ಯಾಕೆ ಈ ಅನ್ಯಾಯ?’ – ಆತ ಒಳಗೊಳಗೇ ಕುದಿಯತೊಡಗಿದ. + +ಅಪರಾಧಿಗಳನ್ನು ಹಿಡಿಯುವುದು ಕಾಕೋಟಿಗೇನೂ ದೊಡ್ಡ ಸಮಸ್ಯೆಯಾಗಿರಲಿಲ್ಲ. ಆದರೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯು ಕೊಟ್ಟಿದ್ದ ಕಠಿಣ ಆದೇಶ ಅವನ ಮನಸ್ಸಿನಲ್ಲಿ ಹಲವಾರು ಸಂದೇಹಗಳನ್ನು ಹುಟ್ಟಿಸಿತ್ತು. ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅವನಿಗೆ ಹೀಗೆ ಹೇಳಿದ್ದ- “ನೋಡು ಕಾಕೋಟಿ, ಈ ಇಡೀ ಪ್ರಕರಣವನ್ನು ನೀನು ತೀರ ಹಗುರವಾಗಿ ತೆಗೆದುಕೊಂಡಂತೆ ಕಾಣಿಸುತ್ತಿದೆ. ಬಡವರು ಮತ್ತು ಅನಕ್ಷರಸ್ಥರ ಬಗ್ಗೆ ನಿನಗೆ ಅಪಾರ ಕನಿಕರವಿದೆಯೆಂಬುದು ನನಗೆ ಚೆನ್ನಾಗಿ ಗೊತ್ತು. ಆದರೆ, ಈ ಅಪರಾಧ ಮಾಡಿದ ವ್ಯಕ್ತಿ ಆ ಜನರಲ್ಲಿಯೇ ಒಬ್ಬನಾಗಿದ್ದಾನೆಂಬುದನ್ನು ನೀನು ಸರಿಯಾಗಿ ನೆನಪಿಟ್ಟುಕೋ. ಇದು ಪಕ್ಕಾ ಸರಕಾರೀ ಕೇಸು. ನೀನು ಎರಡು ಮೂರು ದಿನಗಳಲ್ಲಿ ಅಪರಾಧಿಯನ್ನು ಹಿಡಿಯದಿದ್ದರೆ ಅದು ನಿನಗೆ ಮತ್ತು ನನಗೆ ಇಬ್ಬರಿಗೂ ಅಪಕೀರ್ತಿ. ಸಾಲದ್ದಕ್ಕೆ ಈ ಸಂಬಂಧವಾಗಿ ಮೇಲಿನವರಿಂದ ಮತ್ತೆ ಮತ್ತೆ ಫೋನ್ ಕರೆಗಳು ಬರ್ತಾ ಇವೆ ಬೇರೆ!!” + +“ಸರ್, ಏನು ಯೋಚಿಸ್ತಿದ್ದೀರಿ?”- ಬಿಮಲ್ ನ ಪ್ರಶ್ನೆ ಕಾಕೋಟಿಯನ್ನು ವಾಸ್ತವಕ್ಕೆ ಕರೆತಂದಿತ್ತು. + +“ಬಿಮಲ್, ಎರಡು ದಿನಗಳಲ್ಲಿ ನಾವು ಅಪರಾಧಿಯನ್ನು ಪತ್ತೆ ಹಚ್ಚಲೇಬೇಕು. ಈ ರೀತಿ ಹಿಂದೆ-ಮುಂದೆ ನೋಡುವುದನ್ನು ನಾವೀಗ ನಿಲ್ಲಿಸಲೇಬೇಕು…… ತಿಳಿಯಿತೆ? ಏನು, ನಾನು ಹೇಳಿದ್ದು ಅರ್ಥವಾಯಿತೆ?” -ಹೀಗೆನ್ನುತ್ತ ಕಾಕೋಟಿಯು ಗಿಡದಲ್ಲಿಯ ಮುರಿದ ಟಿಸಿಲಿನ ಕಡೆಗೆ ನೋಡಿದ. ಒಂದು ಕ್ಷಣದಲ್ಲಿ ಅವನ ಪಿತ್ತ ನೆತ್ತಿಗೇರಿತು. ಈ ಸರಕಾರ ತಾನು ನಾಲ್ಕು ವರ್ಷಗಳಲ್ಲಿ ಮಾಡಿದ ಸಾಧನೆಗಳನ್ನು ಬರೆಸಿದ ಬ್ಯಾನರ್ ಅನ್ನು ಈ ಜಾಗೆಯಲ್ಲಿಯೇ ಹಾಕಬೇಕಿತ್ತೆ? ಇದನ್ನು ತೂಗು ಹಾಕಲು ಅದಕ್ಕೆ ಬೇರೆ ಜಾಗೆ ಸಿಗಲೇ ಇಲ್ಲವೆ? ಬ್ಯಾನರ್ ಹಾಕಿದ ಒಂದೆರಡೇ ದಿನಗಳಲ್ಲಿ ಅದು ಇಲ್ಲಿಂದ ಮಾಯವಾಗಿದೆ. ಅದು ಹಾಗೆ ಮಾಯವಾದುದನ್ನು ಮೊದಲು ಯಾರು ಗಮನಿಸಿದರೋ, ಅದೂ ಗೊತ್ತಿಲ್ಲ. ಆದರೆ ಸ್ವಲ್ಪ ಸಮಯದಲ್ಲೇ ಈ ಮಾಹಿತಿ ಮುಖ್ಯಮಂತ್ರಿಗಳಿಗೆ ತಲುಪಿದೆ. ಅವರ ಗಮನಕ್ಕೆ ಬಂದದ್ದೊಂದೇ ತಡ, ಆಗ ಸುರುವಾಗಿದೆ ನಿಜವಾದ ಕೋಲಾಹಲ!! ಬ್ಯಾನರ್ ಕಳುವಾಗಿದ್ದ ಕ್ಷೇತ್ರದ ಶಾಸಕನನ್ನು ಕರೆಸಿದ ಮುಖ್ಯಮಂತ್ರಿಗಳು- “ಏನಯ್ಯಾ, ನಿನ್ನ ಕ್ಷೇತ್ರದಲ್ಲಿ ಏನೇನು ನಡೆದಿದೆ ಎಂಬ ಅರಿವು ನಿನಗಿದೆಯೇ? ನಮ್ಮನ್ನು ಈ ಪರಿಯಲ್ಲಿ ಅವಹೇಳನ ಮಾಡುವುದೆ? ಹಾಂ….. ಏನಿದೆಲ್ಲ?” – ಎಂದು ದಬಾಯಿಸಿದ್ದಾರೆ. ಅನಂತರ ಪೋಲೀಸ್ ವರಿಷ್ಠಾಧಿಕಾರಿಯನ್ನು ಕರೆದು ಆದಷ್ಟು ಶೀಘ್ರದಲ್ಲಿಯೇ ಅಪರಾಧಿಯನ್ನು ಹಿಡಿಯಲು ಆದೇಶ ಕೊಟ್ಟಿದ್ದಾರೆ. + +-3- + +ಇಷ್ಟು ನಡೆಯುವುದರೊಳಗೆ ಈ ಘಟನೆಯ ಬಗ್ಗೆ- “ಸರಕಾರದ ಸಾಧನೆಗಳ ಬ್ಯಾನರ್ ಕಳವು-ನಿರಕ್ಷರಿಗಳ ವಾಸಸ್ಥಳದಲ್ಲಿ ರಾಜಕೀಯ ದೊಂಬರಾಟ”- ಎಂದು ದಿನಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡ ಸುದ್ದಿಯಾಗಿದೆ. ಸುತ್ತ-ಮುತ್ತಲಿನ ಹಳ್ಳಿಗಳ ಪುಡಿ ರಾಜಕಾರಣಿಗಳು ಈ ಘಟನೆಯಲ್ಲಿ ಭಾಗಿಯಾಗಿರದಿದ್ದರೆ ಆ ಘಟನೆ ಇಂಥದೊಂದು ತಿರುವನ್ನು ಪಡೆಯುತ್ತಲೇ ಇರಲಿಲ್ಲ. ಈ ಕೃತ್ಯದಲ್ಲಿ ವಿರೋಧ ಪಕ್ಷದವರ ಕೈವಾಡವಿದೆಯೆಂದು ಅವರು ಪುಕಾರು ಹಬ್ಬಿಸಿದರು. ಮೇಲಿನವರಿಗೆ ಅಷ್ಟೇ ಸಾಕಾಗಿತ್ತು, ಅವರೂ ಇದು ನಿಜವೆಂದೇ ಭಾವಿಸಿದರು. + +“ನಡೆಯಿರಿ, ನಡೆಯಿರಿ. ನಾವು ಇಲ್ಲೇ ಗಿರಕಿ ಹೊಡೆಯುವುದರಲ್ಲಿ ಅರ್ಥವಿಲ್ಲ. ಒಬ್ಬೊಬ್ಬರೂ ಆಸು-ಪಾಸಿನ ಮನೆಮನೆಗಳನ್ನು ಹೊಕ್ಕು ತಪಾಸಣೆ ಮಾಡೋಣ” -ನಿರಾಶೆಯೊಂದಿಗೆ ಕಾಕೋಟಿಯು ಪೋಲೀಸ್ ಪೇದೆಗಳನ್ನುದ್ದೇಶಿಸಿ ಸೂಚನೆ ನೀಡಿದನು. + +ಅವರೆಲ್ಲ ತ್ವರಿತವಾಗಿ ಶಾಲಾ ಶಿಕ್ಷಕನ ಮನೆಗೆ ನಡೆದರು. ಹಳ್ಳಿಯ ಜನರು ಆ ಶಿಕ್ಷಕನನ್ನು ‘ಲಕ್ಕೀ ಮಾಸ್ತರ್’ ಎಂದೇ ಕರೆಯುತ್ತಿದ್ದರು. ಇತ್ತೀಚಿನ ದಿನಗಳಲ್ಲಿ ಕಾಕೋಟಿಯು ಅವನ ಮನೆಗೆ ಮತ್ತೆ ಮತ್ತೆ ಭೆಟ್ಟಿ ಕೊಡುತ್ತಿದ್ದ ಕಾರಣಕ್ಕಾಗಿ ‘ಲಕ್ಕೀ ಮಾಸ್ತರ್’ ಅವನಿಗೆ ತುಂಬ ಪರಿಚಿತನಾಗಿದ್ದ. ಕಾಕೋಟಿಯು ಬಂದದ್ದನ್ನು ನೋಡಿ ಅವನಿಗೆ ಕುಳಿತುಕೊಳ್ಳಲು ಸೂಚಿಸಿದ. + +“ಹಾಂ, ಈಗ ಇದೆಲ್ಲ ಶಿಷ್ಟಾಚಾರ ಬೇಡ”-ಎನ್ನುತ್ತ ನಾರಾಯಣ ಕಾಕೋಟಿಯು “ಡೇಕಾ, ಇದು ನಿನಗೆ ಗೊತ್ತಲ್ಲ, ಈ ಹುಡುಕಾಟ ನಮಗೆ ನಿತ್ಯದ ಗೋಳಾಗಿದೆ. ಹಗಲೂ-ರಾತ್ರಿ ಇದೇ ಪುರಾಣವಾಗಿದೆ. ಜೀವನದಲ್ಲಿ ಯಾವುದೇ ಆಸಕ್ತಿಯಾಗಲಿ, ಸಂತೋಷವಾಗಲಿ ಉಳಿದಿಲ್ಲ”- ಎಂದು ಜಿಗುಪ್ಸೆ ವ್ಯಕ್ತಪಡಿಸಿದ. ಇಷ್ಟು ಅನ್ನುವುದರೊಳಗಾಗಿಯೇ ಬಿಮಲ್ ಮತ್ತು ಇತರ ಪೋಲೀಸ್ ಪೇದೆಗಳು ಆ ಮನೆಯ ಒಳಗೆ ಹೊಕ್ಕರು. ಕಾಕೋಟಿ ಮಾತ್ರ ಹೊರಗೆ ಆವರಣದಲ್ಲಿ ಕುಳಿತಿದ್ದ. ಒಂದೆರಡು ದಿನಗಳ ಹಿಂದೆ ಇದೇ ಜಾಗೆಯಲ್ಲಿ ಆ ಹಳ್ಳಿಯವರೆಲ್ಲ ಒಟ್ಟುಗೂಡಿದ್ದರು. ಈ ಕಳುವಿನಿಂದಾಗಿ ಉಂಟಾದ ಸಮಸ್ಯೆಯ ತೀವ್ರತೆ ಎಂಥದೆಂಬುದನ್ನು ಆ ಸಭೆಯಲ್ಲಿ ಚರ್ಚಿಸಲಾಗಿತ್ತು. ಶಾಲಾ ಮಾಸ್ತರ ಕೂಡಾ ಆ ವಿಷಯದಲ್ಲಿ ಪೋಲೀಸರಿಗೆ ನೆರವಾಗಿದ್ದ. ಹೀಗೆ ಸಭೆ ಸೇರಿಸಿ ಅಪರಾಧಿಯನ್ನು ಪತ್ತೆ ಹಚ್ಚುವ ರೀತಿಯನ್ನು ಕಾಕೋಟಿಯು ಹಿಂದೆಂದೂ ಕಂಡಿರಲಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಆ ಹಳ್ಳಿಯ ಸಾಮಾನ್ಯ ಜನರಿಗೆ ವಸ್ತುಸ್ಥಿತಿಯನ್ನು ವಿವರಿಸುವುದು ಅಗತ್ಯವೆಂಬುದು ಅವನ ವಿಚಾರವಾಗಿತ್ತು. + +ಶಾಲಾ ಮಾಸ್ತರನೂ ಊರಿನ ಜನರನ್ನೆಲ್ಲ ಸಭೆ ಸೇರಿಸುವಲ್ಲಿ ಸಹಾಯ ಮಾಡಿದ್ದ. ಆ ಜನರಾದರೋ ತಮ್ಮ ವಿವಿಧ ಅವತಾರಗಳಲ್ಲೇ ಗುಂಪು-ಗುಂಪಾಗಿ ಬಂದಿದ್ದರು. ಕೆಲವರು ಸೊಂಟಕ್ಕೆ ಮಾತ್ರ ಬಟ್ಟೆಯೊಂದನ್ನು ಸುತ್ತಿಕೊಂಡು, ಉಳಿದಂತೆ ಬರಿಮೈಯಲ್ಲೇ ಬಂದಿದ್ದರು. ಮತ್ತೆ ಕೆಲವು ಹೆಣ್ಣುಮಕ್ಕಳು ತಮ್ಮ ಅರೆಬರೆ ಬಟ್ಟೆಯಲ್ಲೇ ಬಂದಿದ್ದರು. ಜೊತೆಗೆ ಬತ್ತಲೆಯಲ್ಲಿದ್ದ ಅವರ ಮಕ್ಕಳೂ ಕಂಕುಳಲ್ಲಿದ್ದವು. ಆ ಮಕ್ಕಳ ಮೈಮೇಲೆ ಬಿಸಿಲಿನ ತಾಪದಿಂದಾಗಿ ಬೆವರುಸಾಲೆ ಎದ್ದಿದ್ದವು. ಎಲ್ಲರ ಮುಖಗಳ ಮೇಲೂ ಭಯದ ಛಾಯೆ ಆವರಿಸಿತ್ತು. ಕಾಕೋಟಿಯು ಅವರನ್ನೆಲ್ಲ ಉದ್ದೇಶಿಸಿ ಸೌಮ್ಯರೀತಿಯಲ್ಲಿಯೇ ಮಾತಾಡಿದ. + +“ನೋಡಿ, ನೀವೆಲ್ಲ ಇಲ್ಲಿ ಸೇರಿರುವುದರ ಕಾರಣ ಏನೆಂಬುದು ಬಹುಶಃ ನಿಮಗೆಲ್ಲ ಗೊತ್ತಿರಬಹುದು. ಕಳೆದ ವಾರವಿಡೀ ನಾನು ಇಲ್ಲಿಯ ಜನರ ಮನೆ ಮನೆಯೊಳಗೆ ಹೊಕ್ಕು, ಕಳೆದು ಹೋಗಿರುವ ಬ್ಯಾನರ್ ನ ವಿಷಯವಾಗಿ ವಿಚಾರಣೆ ನಡೆಸಿದ್ದನ್ನು ನೀವೇ ನೋಡಿದ್ದೀರಿ. ಆ ಬ್ಯಾನರ್ ನ ಮೇಲೆ ಸರಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ಬರೆಸಿದ್ದರು. ನಿಮ್ಮಂಥ ಎಲ್ಲ ಬಡವರಿಗೆ ಮತ್ತು ಅಗತ್ಯವಿರುವವರಿಗೆ ಸರಕಾರ ಯಾವ ಯಾವ ಸಹಾಯ ಮಾಡಿದೆ ಎಂಬುದನ್ನು ಅದರಲ್ಲಿ ವಿವರಿಸಿದ್ದರು. ಆದರೆ ಆಶ್ಚರ್ಯವೆಂಬಂತೆ ಒಮ್ಮಿಂದೊಮ್ಮಲೇ ನೀವೆಲ್ಲ ಆ ಬ್ಯಾನರ್ ಅನ್ನು ಈ ಮಾವಿನ ಮರದಿಂದ ಕಾಣದಂತೆ ಮಾಡಿದ್ದೀರಿ. ನೋಡಿ. ನೀವೆಲ್ಲ ಸಾಮಾನ್ಯ ಹಾಗೂ ಮುಗ್ಧ ಹಳ್ಳಿಗರು. ನೀವು ಹಾಗೇ ಇರಬೇಕೆಂದು ನಾವು ಬಯಸುತ್ತೇವೆ. ಒಂದು ವಿಚಾರ ನಿಮ್ಮ ಗಮನದಲ್ಲಿರಲಿ, ನಿಮ್ಮಲ್ಲಿ ಯಾರಾದರೂ ಈ ಅಪರಾಧ ಮಾಡಲು ಬೇರೆಯವರು ಹೆಣೆದ ಬಲೆಯಲ್ಲಿ ಬಿದ್ದಿದ್ದರೆ, ಅಂಥವರಿಗೆ ಅತ್ಯಂತ ಕಠೋರ ಶಿಕ್ಷೆಯಾಗುತ್ತದೆ. ಇದನ್ನು ನೀವು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಇನ್ನೂ ಸಮಯವಿದೆ, ಯಾರೇ ಆಗಲಿ, ಈ ಅಪರಾಧ ಮಾಡಿದವರು ಇಲ್ಲಿದ್ದರೆ ದಯವಿಟ್ಟು ನೀವಾಗಿಯೇ ಒಪ್ಪಕೊಂಡುಬಿಡಿ. + +ಆ ಜನಸಮೂಹವೆಲ್ಲ ಮೌನದಿಂದಿತ್ತು. ಪೋಲೀಸರೆದುರು ಬಾಯಿಬಿಚ್ಚಿ ಮಾತಾಡಲು ಅವರಲ್ಲಿ ಯಾರಿಗೂ ಧೈರ್ಯವಿರಲಿಲ್ಲ. + +-4- + +ನಾರಾಯಣ ಕಾಕೋಟಿಯ ವಿನಂತಿಯ ಮೇರೆಗೆ ಶಾಲಾ ಮಾಸ್ತರನೂ ಆ ಹಳ್ಳಿಯ ಜನರನ್ನುದ್ದೇಶಿಸಿ ಮಾತನಾಡಿದನು. “ನೋಡ್ರಿ, ನಾವೆಲ್ಲಾ ಇಲ್ಲಿ ಹೆಚ್ಚೂ-ಕಡಿಮೆ ಅಣ್ಣ-ತಮ್ಮಂದಿರಂತೆ ಹತ್ತಿರದ ಸಂಬಂಧಿಗಳಾಗಿಯೇ ಬದುಕುತ್ತಿದ್ದೇವೆ. ಪೋಲೀಸರೂ ಅತ್ಯಂತ ಸಭ್ಯ ರೀತಿಯಲ್ಲಿಯೇ ಮಾತಾಡಿದ್ದನ್ನು ನೀವೆಲ್ಲ ಕೇಳಿಸಿಕೊಂಡಿದ್ದೀರಿ. ನಾವೆಲ್ಲಾ ಇಲ್ಲಿ ದಿನಗೂಲಿ ಮಾಡಿಯೇ ಜೀವನ ಮಾಡುವವರು. ಅಷ್ಟೇ ಅಲ್ಲ; ಜೀವನಪೂರ್ತಿ ಇದನ್ನೇ ಮಾಡಿಕೊಂಡು ಹೋಗಬೇಕಾದವರು. ಯಾವುದೇ ಪಕ್ಷ ಅಧಿಕಾರದಲ್ಲಿರಲಿ ನಮ್ಮ ದುಃಖಗಳನ್ನು ದೂರ ಮಾಡುವವರು ಯಾರೂ ಇಲ್ಲ. ನಮ್ಮ ಚಿಕ್ಕ ಹಳ್ಳಿಯಲ್ಲಿ ನಡೆದ ಈ ಘಟನೆ ಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗುವುದು ನಮಗೆಲ್ಲ ನಾಚಿಕೆಯನ್ನು ಉಂಟು ಮಾಡಿದೆ. ಪೋಲೀಸರು ನಮ್ಮ ಈ ಊರನ್ನು ಕಳ್ಳರ ಹಳ್ಳಿಯೆಂದು ಕರೆಯಲಾರಂಭಿಸಿದ್ದಾರೆ. ಅದಕ್ಕಾಗಿ ನಾನು ನಿಮ್ಮಲ್ಲಿ ಕಳಕಳಿಯಿಂದ ವಿನಂತಿಸಿಕೊಳ್ಳುತ್ತೇನೆ – ಈ ಕಳ್ಳತನವನ್ನು ಯಾರು ಮಾಡಿದ್ದೀರಿ? ದಯವಿಟ್ಟು ಒಪ್ಪಿಕೊಳ್ಳಿರಿ” + +(ಸಂಜೀವ್ ಪೋಳ್ ಡೇಕಾ) + +ಏನೊಂದೂ ಸದ್ದಿಲ್ಲ!! ಸಭೆ ಸೇರಿಸಿದ್ದರಿಂದ ಯಾವ ಪ್ರಯೋಜನವೂ ಆಗಲಿಲ್ಲ. ಹೆಣ್ಣಾಗಲಿ, ಗಂಡಾಗಲಿ ಯಾರಿದ್ದರೂ ತಮ್ಮ ತಪ್ಪನ್ನು ಒಪ್ಪಿಕೊಳ್ಳಬಹುದೆಂದು ಕಾಕೋಟಿಯು ನಿರೀಕ್ಷೆಯಲ್ಲಿದ್ದ. ಆದರೆ, ಅವನ ನಿರೀಕ್ಷೆ ನಿಜವಾಗಲಿಲ್ಲ. ಒಂದು ಹಳ್ಳಿಯ ಸಾಮಾನ್ಯ ಜನರೂ ಈ ಪರಿಯಲ್ಲಿ ಸಮಸ್ಯಾತ್ಮಕವಾದದ್ದನ್ನು ಕಾಕೋಟಿಯು ಅದೇ ಮೊದಲ ಸಲ ಕಾಣುತ್ತಿದ್ದ. ಅವನಿಗೆ ಇದು ಬಹಳ ಅಚ್ಚರಿಯನ್ನುಂಟು ಮಾಡಿತು. + +ಬಿಮಲ್ ಮತ್ತು ಆತನ ಸಹಪೋಲೀಸರು ಮಾಸ್ತರನ ಮನೆಯಿಂದ ಹೊರಗೆ ಬಂದರು. ವಸ್ತುಸ್ಥಿತಿಯನ್ನರಿತ ಕಾಕೋಟಿಯು ಶಾಲಾ ಮಾಸ್ತರನಲ್ಲಿ- “ ನನ್ನದು ತಪ್ಪಾಯಿತು. ನಿಮಗೆ ನಾನು ಬಹಳ ತೊಂದರೆ ಕೊಟ್ಟೆ. ದಯವಿಟ್ಟು ನನ್ನನ್ನು ಕ್ಷಮಿಸಿರಿ”-ಎಂದು ಕ್ಷಮೆ ಕೇಳಿದನು. + +“ಅದೇನೂ ತಪ್ಪಲ್ಲ. ನೀವು ನಿಮ್ಮ ಕರ್ತವ್ಯವನ್ನು ಮಾಡುತ್ತಿದ್ದೀರಿ” – ಎನ್ನುತ್ತ ಶಾಲಾ ಮಾಸ್ತರನು ಹೊರಬಂದು, ನಾರಾಯಣ ಕಾಕೋಟಿಯನ್ನು ರಸ್ತೆಯ ಅಂಚಿನವರೆಗೆ ಬಿಟ್ಟು ಬಂದನು. ಅದೇ ಸ್ಥಳದಲ್ಲಿ ಒಂದಕ್ಕೊಂದು ಒತ್ತೊತ್ತಾಗಿ ತಾಕಿಕೊಂಡಿದ್ದ ಮೂರು ಮನೆಗಳಿದ್ದವು. ಬಿಮಲ್ ಮತ್ತು ಆತನ ಸಹಪೋಲೀಸರು ಆ ಮೂರೂ ಮನೆಗಳಲ್ಲಿ ಮೊದಲನೆಯದರಲ್ಲಿ ಒಳಹೊಕ್ಕರು. + +ಆ ಮನೆಯು ನೆಲಕ್ಕಂಟಿಕೊಂಡಂತಿದ್ದ ಎರಡು ಇಳಿಜಾರುಗಳುಳ್ಳ ಜೋಪಡಿಯಾಗಿತ್ತು. ಅದರಲ್ಲಿ ಒಂದು ಕಡೆಯ ಮಾಳಿಗೆಗೆ ಹುಲ್ಲು, ತೆಂಗಿನಗರಿ ಮತ್ತು ಎಲೆಗಳನ್ನು ಹೊದಿಸಲಾಗಿತ್ತು. ಮತ್ತೊಂದು ಕಡೆಯ ಇಳಿಜಾರು ಸಹ ಅದಕ್ಕಿಂತ ಭಿನ್ನವಾಗಿರಲಿಲ್ಲ. ಮಳೆಗಾಲದಲ್ಲಿ ಆ ಎರಡೂ ಇಳಿಜಾರುಗಳು ಸಾಕಷ್ಟು ಸೋರಿದ್ದವೆಂಬುದನ್ನು ಯಾರಾದರೂ ಸುಲಭವಾಗಿ ಊಹಿಸಬಹುದಾಗಿತ್ತು. + +ನಾರಾಯಣ ಕಾಕೋಟಿಯು ಈ ಜೋಪಡಿಗೆ ಮೊದಲು ಭೆಟ್ಟಿಕೊಟ್ಟಿರಲಿಲ್ಲ. ಬಿಮಲ್ ಹಾಗೂ ಅವನ ಸಹೋದ್ಯೋಗಿಗಳು ಆ ಗುಡಿಸಲಿನೊಳಗಿಂದ ನಿರಾಶೆಯೊಂದಿಗೆ ಹೊರಬಂದರು. ಇಂಥ ಜೋಪಡಿಯೊಳಗೆ ತಪಾಸಣೆಗೆಂದು ಹೋದುದರ ಬಗ್ಗೆ ಪ್ರತಿಯೊಬ್ಬ ಪೋಲೀಸನ ಮುಖದಲ್ಲೂ ಆತಂಕ ಹಾಗೂ ನಾಚಿಕೆಯ ಭಾವಗಳಿದ್ದುದನ್ನು ಕಾಕೋಟಿಯು ಗುರುತಿಸಿದ. ಅವರಲ್ಲಿ ಕೆಲವರು ಜಿಗುಪ್ಸೆಯಿಂದ ಹಲ್ಲು ಕಿರಿಯುತ್ತ- “ಸರ್, ಇಲ್ನೋಡಿ, ಇವು ಅವರ ಬಟ್ಟೆಗಳು. ಇದರಲ್ಲಿ ಮೇಲಿನದು ಅವರ ಸಣ್ಣ ಮಗುವಿನ ಉಚ್ಚೆಯಿಂದ ಒದ್ದೆಯಾದದ್ದು. ಬಹುಶಃ ಇಂಥ ಕೊಳಕು ಬಟ್ಟೆಗಳನ್ನು ನೀವು ಈ ಮೊದಲು ಎಲ್ಲಿಯೂ ನೋಡಿರಲಿಕ್ಕಿಲ್ಲ”- ಎಂದು ಆ ಕೊಳಕು ಬಟ್ಟೆಗಳನ್ನು ತೋರಿಸಿದರು. + +-5- + +ಕಾಕೋಟಿಗೆ ಆ ಬಟ್ಟೆಗಳನ್ನು ನೋಡಿ ತುಂಬ ಸಂಕಟ ಮತ್ತು ವ್ಯಥೆಯೆನಿಸಿತು. ತಂದೆ-ತಾಯಿ ಮತ್ತು ಮೂರು ಮಕ್ಕಳು ಸೇರಿ ಒಟ್ಟು ಐದು ಜನರಿದ್ದ ಆ ಕುಟುಂಬವೆಲ್ಲ ಆ ಒಂದೇ ಹಾಸಿಗೆಯ ಮೇಲೆ ಮಲಗುತ್ತಿತ್ತು. ಅದಾದರೂ ಎಂಥದ್ದು? ತೆಳ್ಳನೆಯ ಎರಡು ಪದರಿನ ಹರಿದ ಹಾಸಿಗೆ ಅದು!!ಅದನ್ನೆಲ್ಲ ಗಮನಿಸುತ್ತ ಕಾಕೋಟಿಯು ಅಂಗಳದಲ್ಲಿ ನಿಂತಿರುವಾಗ ಒಮ್ಮೆಲೇ ಒಬ್ಬ ಹೆಣ್ಣುಮಗಳು ಓಡಿಬಂದವಳೇ ಅವನ ಕಾಲಿನ ಮೇಲೆ ದೊಪ್ಪೆಂದು ಬಿದ್ದು ರೋಧಿಸತೊಡಗಿದಳು. + +“ಅರೆ! ಅಮ್ಮಾ ಏನಿದು? ಯಾಕೆ, ಏನಾಯ್ತು? ಹೀಗೇಕೆ ಅಳುತ್ತಿದ್ದೀ? ಮೇಲೇಳು.” – ಎಂದು ಕಾಕೋಟಿ ಅವಳನ್ನು ಸಮಾಧಾನಪಡಿಸತೊಡಗಿದ.ಆ ಹೆಣ್ಣುಮಗಳು ಅಳುತ್ತಲೇ ಎದ್ದುನಿಂತಳು. ಬಿಕ್ಕುತ್ತ ಬಿಕ್ಕುತ್ತ- “ಸಾಹೇಬ್ರೆ, ನನ್ನನ್ನ ಶಿಕ್ಷಿಸಬೇಡಿ. ನನ್ನ ಸಣ್ಣ ಮಗುವಿನ ಮುಖ ನೋಡಿ. ನನ್ನನ್ನ ನೀವು ಹಿಡಿದುಕೊಂಡು ಹೋಗಿಬಿಟ್ರೆ ಈ ಕೂಸನ್ನ ಯಾರು ನೋಡಿಕೊಳ್ತಾರೆ ಸಾಹೇಬ್ರೆ? ಈ ಮಗು ದೊಡ್ಡದಾಗಿದ್ದಿದ್ರೆ ಆ ಮಾತು ಬೇರೆ ಆಗ್ತಿತ್ತು.” + +“ಅಲ್ಲಮ್ಮಾ, ನಿನ್ನ ಸಮಸ್ಯೆಯಾದ್ರೂ ಏನು? ಅದನ್ಯಾಕೆ ಹೇಳುತ್ತಿಲ್ಲ ನೀನು?” – ಕಾಕೋಟಿಯು ಅವಳ ಬಾಯಿಂದ ಮುಂದೆ ಯಾವ ವಿಚಾರ ಹೊರಬರಲಿದೆಯೆಂಬುದನ್ನು ಊಹಿಸಿಯೇ ಪ್ರಶ್ನೆ ಕೇಳಿದ. + +“ಸಾಹೇಬ್ರೆ, ನಿಜವಾಗಿಯೂ ಆ ಬ್ಯಾನರ್ ಅನ್ನು ನಾನು ತೊಗೊಂಡಿದ್ದೇನೆ. ಇಷ್ಟು ಸಣ್ಣ ವಿಷಯ ಈ ಪರಿ ದೊಡ್ಡ ಸಮಸ್ಯೆಗೆ ಕಾರಣ ಆಗ್ತದೆ ಅಂತ ನನಗೆ ಗೊತ್ತಾಗ್ಲೇ ಇಲ್ಲ” – ಎಂದು ಅವಳು ಹೆದರುತ್ತಲೇ ಬಡಬಡಿಸತೊಡಗಿದಳು. + +“ಆಯ್ತು, ನೀನು ಇಲ್ಲಿಯವರೆಗೆ ಯಾಕೆ ಇದನ್ನೆಲ್ಲ ಹೇಳ್ಲಿಲ್ಲ? ಯಾಕೆ ಸುಮ್ಮನಿದ್ದೆ?” – ಕಾಕೋಟಿ ಪ್ರಶ್ನಿಸಿದ. + +“ಸಾಹೇಬ್ರೆ, ನಾನು ಮೊನ್ನೆ ಮನೆಯಲ್ಲಿ ಇರಲಿಲ್ಲ. ನಿಮ್ಮ ಪೋಲೀಸರು ಅದಕ್ಕೂ ಮೊದಲೇ ಬಂದು ಹೋಗಿದ್ದರು. ಆದರೆ……” + +“ಆಯ್ತಮ್ಮಾ, ತಾಯಿ. ಇದನ್ನು ನೀನು ಎಲ್ಲಿ ಬಚ್ಚಿಟ್ಟಿದ್ದೆ? ಅದಿರಲಿ, ನೀನು ಇದನ್ನು ಯಾಕೆ ಕಳವು ಮಾಡಿದೆ?” + +“ಸಾಹೇಬ್ರೆ, ಏನು ಹೇಳ್ಲಿ ನಾನು!! ಈ ಕೂಸಿನ ತಂದೆ ಕಟ್ಟಿಗೆ ಕಡಿಯಲು ದಿನಾಲೂ ಅಡವಿಗೆ ಹೋಗುತ್ತಿದ್ದ. ಕಳೆದ ತಿಂಗಳು ಹಾಗೆ ಕಟ್ಟಿಗೆ ಕಡಿಯಲು ಹೋದಾಗ ಅವನು ಗಿಡದ ಮೇಲಿಂದ ಬಿದ್ದು ತೀರಿಹೋದ ಸಾಹೇಬ್ರೆ…… ಅವನು ಹೋದ ನಂತರ ನಮ್ಮಿಬ್ಬರ ಹೊಟ್ಟೆ ಹೊರೆಯಲು ಬೇರೆ ದಾರಿಯಿಲ್ಲದೆ ನಾನೇ ದಿನಗೂಲಿಗೆ ಹೋಗತೊಡಗಿದೆ. ಭತ್ತ ನಾಟಿ ಮಾಡಿದೆ, ಕಾಳನ್ನು ಹಸನು ಮಾಡಿಕೊಟ್ಟೆ. ಎಷ್ಟು ದುಡಿದರೂ, ಏನು ಮಾಡಿದರೂ ದಿನಗೂಲಿಯಿಂದ ಬಂದ ಹಣ ಜೀವನಕ್ಕೆ ಸಾಲದಾಯ್ತು. ನಮ್ಮ ದಿನನಿತ್ಯದ ಅಗತ್ಯಗಳನ್ನು ಪೂರೈಸಿಕೊಳ್ಳೋದು ಸಾಧ್ಯವಾಗಲೇ ಇಲ್ಲ. ಅಂಥ ಸಂದರ್ಭದಲ್ಲಿ ನಾನು ಕುಟುಂಬದ ಪೆನ್ಶನ್ ಗಾಗಿ ಅರ್ಜಿ ಹಾಕಿ ಕಛೇರಿ ಕಛೇರಿ ಅಂತ ಇನ್ನಿಲ್ಲದ ಹಾಗೆ ಅಲೆದಾಡಿದೆ. ಆದರೆ ಅದರಿಂದ ಏನೂ ಫಲ ದೊರಕಲಿಲ್ಲ ಸಾಹೇಬ್ರೆ……..”“ಆಯ್ತಮ್ಮಾ, ಅದಕ್ಕೂ ಇದಕ್ಕೂ ಏನು ಸಂಬಂಧ? ಈಗ ಹೇಳು, ಈ ಬ್ಯಾನರ್ ನ ಯಾಕೆ ಕದ್ದೆ ನೀನು?”- ಕಾಕೋಟಿ ಪ್ರಶ್ನಿಸಿದ. + +“ಸಾಹೇಬ್ರೆ, ಎಲ್ಲಾ ನಾಚಿಕೆ ಬಿಟ್ಟು, ಇರೋ ಸತ್ಯಾನೆಲ್ಲಾ ನಿಮಗೆ ಹೇಳುತ್ತೇನೆ. ನನ್ನ ಹತ್ತಿರ ಒಂದೇ ಒಂದು ಒಳಲಂಗ ಇದೆ. ಅದನ್ನು ನನ್ನ ಮದುವೆಯಲ್ಲಿ ಕೊಟ್ಟಿದ್ದರು. ಹರಿದು ಹೋಗಿದ್ದ ಅದನ್ನು ನಾನು ಅದೆಷ್ಟೋ ಸಾರಿ ಹೊಲಿದು ರಿಪೇರಿ ಮಾಡಿಕೊಂಡಿದ್ದೇನೆ. ಅದು ಮತ್ತೆ ಹೊಲಿಯಲಾರದಷ್ಟು ಚಿಂದಿ ಚಿಂದಿಯಾಗಿತ್ತು. ಅದಕ್ಕಾಗಿ ಸಾಹೇಬ್ರೆ…. ಈ ಬ್ಯಾನರ್ ಅನ್ನು ಕಿತ್ತುಕೊಂಡು ಅದರಿಂದ ಒಂದು ಒಳಲಂಗವನ್ನು ನಾನೇ ಹೊಲಿದುಕೊಂಡಿದ್ದೇನೆ. ಅಗೋ ಅಲ್ಲಿ ನೋಡಿ ಸಾಹೇಬ್ರೆ, ಹರಕು ಬಟ್ಟೆಗಳ ಸಾಲಿನಲ್ಲಿ ಅದು ಜೋತಾಡುತ್ತಿದೆ. ದಯವಿಟ್ಟು ಸಾಹೇಬ್ರೆ ನನಗೆ ಏನೂ ಶಿಕ್ಷೆ ಕೊಡಬೇಡಿ. ನಿಮ್ಮ ದಮ್ಮಯ್ಯ ಅಂತೀನಿ. ಪೋಲೀಸ್ ಜನರು ತಪಾಸಣೆ ಮಾಡಲು ಬಂದಾಗ ನಾನು ಅದನ್ನು ತೊಟ್ಟುಕೊಂಡಿದ್ದೆ. ಹೀಗಾಗಿ ಅವರು ಅದನ್ನು ಪತ್ತೆ ಮಾಡಲಾಗಲಿಲ್ಲ. ದಯವಿಟ್ಟು ನನ್ನನ್ನು ಶಿಕ್ಷಿಸಬೇಡಿ….. ಸಾಹೇಬ್ರೆ…. ನನ್ನನ್ನ ಕ್ಷಮಿಸ್ರಿ…. ದಯಮಾಡಿ ಬಿಟ್ಟುಬಿಡ್ರಿ…” ಅವಳು ಗದ್ಗದಿತಳಾದಳು. + +-6- + +ಕಾಕೋಟಿಯ ಬಾಯಲ್ಲಿ ಶಬ್ದಗಳೇ ಬರುತ್ತಿಲ್ಲ. ಹೃದಯದ ಯಾವುದೋ ಮೂಲೆಯಲ್ಲಿ ಅವನಿಗೆ ಚುಚ್ಚುತ್ತಿರುವ ಅನುಭವವಾಗತೊಡಗಿತು. ಸಂಕಟ, ವೇದನೆ ಏನೇ ಇದ್ದರೂ ಕಾಕೋಟಿಯು ಆ ಬ್ಯಾನರ್ ಅನ್ನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಸುಪರ್ದಿಗೆ ಒಪ್ಪಿಸಲೇಬೇಕಾದದ್ದು ಕಡ್ಡಾಯವಾಗಿತ್ತು. ಆತ ಬಿಮಲ್ ಹಾಗೂ ಆತನ ಸಹಪೋಲೀಸರಿಗೆ ಒಳಲಂಗಕ್ಕೆ ಹಾಕಿದ್ದ ಹೊಲಿಗೆಗಳನ್ನು ಬಿಚ್ಚುವಂತೆ ಸೂಚಿಸಿದ. ಗಂಜಿ ಹಾಕಿದ್ದ ಆ ಬಟ್ಟೆಯನ್ನು ಒಗೆದಿದ್ದ ಕಾರಣಕ್ಕಾಗಿ ಅದು ಜಾಳು-ಜಾಳಾಗಿತ್ತು. ಹಾಗೆ ಜಾಳಾಗಿ ಹೋಗಿದ್ದ ಅದರ ಮೇಲೆ ಬರೆದಿದ್ದ ಅಕ್ಷರಗಳು ಮಸಕು ಮಸಕಾಗಿದ್ದವು. ಕಾಕೋಟಿ ಅವುಗಳನ್ನು ನಿಧಾನವಾಗಿ ಓದತೊಡಗಿದ. “ಇದು ಸಮಾಜವಾದಿ ಸರಕಾರದ ಅದ್ಭುತ ಯಶಸ್ಸು. ಬಡತನ ಮತ್ತು ಅನಕ್ಷರತೆಯನ್ನು ಹೊಡೆದೋಡಿಸುವಲ್ಲಿ ಸರಕಾರದ ಅಭೂತಪೂರ್ವ ಸಾಧನೆ. + +ವಿಧವೆಯರು ಮತ್ತು ವಯಸ್ಸಾದವರಿಗೆ ಮಾಸಾಶನದ ಯೋಜನೆ……” ಕಾಕೋಟಿಗೆ ಅದನ್ನು ಮುಂದೆ ಓದುವ ಮನಸ್ಸಾಗಲಿಲ್ಲ. ಕರುಳು ಕಿತ್ತು ಬರುವಂತೆ ಅಳುತ್ತಿದ್ದ ಆ ಅಸಹಾಯಕ ಹೆಣ್ಣುಮಗಳ ಹತ್ತಿರ ಬಂದು ಆತನು ಹೀಗೆ ಹೇಳಿದ- “ಅಮ್ಮಾ ನೀನು ಹೆದರುವ ಕಾರಣವಿಲ್ಲ. ನಾವು ನಿನ್ನನ್ನು ಖಂಡಿತ ಬಂಧಿಸುವುದಿಲ್ಲ. ಇಗೋ ಈ ಐನೂರು ರೂಪಾಯಿಗಳನ್ನು ತೆಗೆದುಕೋ. ನೀನು ಈ ಹಣದಲ್ಲಿ ಒಂದು ಒಳಲಂಗವನ್ನು ಕೊಂಡುಕೋ, ಮಗುವಿನ ಹೊಟ್ಟೆಗೆ ಏನಾದರೂ ಕೊಡಿಸು……” ಎನ್ನುತ್ತ ನೋಟನ್ನು ಅವಳ ಕೈಗಿತ್ತ. + + + +ಆ ಐನೂರು ರೂಪಾಯಿ ನೋಟಿನ ಮೇಲೆ ಗಾಂಧೀಜಿಯವರು ಸ್ವಾತಂತ್ರ್ಯ ಹೋರಾಟಕ್ಕೆ ಹೊರಟಿದ್ದ ಚಿತ್ರವಿದ್ದುದನ್ನು ನೋಡಲು ಕಾಕೋಟಿಯ ಹೃದಯ ಒಪ್ಪಲಿಲ್ಲ. ಲಂಗದ ಹೊಲಿಗೆಯನ್ನು ಬಿಚ್ಚಿದ ಕಾರಣಕ್ಕಾಗಿ ತುಂಡು ತುಂಡಾಗಿದ್ದ ಬ್ಯಾನರ್ ನ ಆ ಬಟ್ಟೆಯನ್ನು ಎತ್ತಿಕೊಂಡು ಆತ ಜೀಪನ್ನು ಹತ್ತಿದ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_309.txt b/Kenda Sampige/article_309.txt new file mode 100644 index 0000000000000000000000000000000000000000..e874df1a9e80bf052bef2617b20bb288668e81c1 --- /dev/null +++ b/Kenda Sampige/article_309.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|Feb 9, 2020|ವಾರದ ಕಥೆ,ಸಾಹಿತ್ಯ| 2 Comments + +“ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು.” + +byಎಚ್ ಆರ್ ರಮೇಶ್|Feb 3, 2020|ದಿನದ ಪುಸ್ತಕ,ಸಾಹಿತ್ಯ| 2 Comments + +“ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು… “ + +byಮಂಜುನಾಥ್ ಲತಾ|Feb 2, 2020|ವಾರದ ಕಥೆ,ಸಾಹಿತ್ಯ| 1 Comment + +“‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ…” + +byಕೆಂಡಸಂಪಿಗೆ|Jan 27, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ …” + +byಡಾ. ಬಿ. ಜನಾರ್ದನ ಭಟ್|Jan 26, 2020|ವಾರದ ಕಥೆ,ಸಾಹಿತ್ಯ| 0 Comments + +“ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ…” + +byಶ್ರೀದೇವಿ ಕೆರೆಮನೆ|Jan 20, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ.” + +byಕೆಂಡಸಂಪಿಗೆ|Jan 19, 2020|ವಾರದ ಕಥೆ,ಸಾಹಿತ್ಯ| 0 Comments + +“ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು.” + +byಕೆಂಡಸಂಪಿಗೆ|Jan 13, 2020|ದಿನದ ಪುಸ್ತಕ,ಸಾಹಿತ್ಯ| 1 Comment + +“‘ಸಾವೆಂಬುದು ನಿರಾಳ ಮೌನ’ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ. `ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು…” + +byಶ್ರೀಹರ್ಷ ಸಾಲಿಮಠ|Jan 12, 2020|ವಾರದ ಕಥೆ,ಸಾಹಿತ್ಯ| 1 Comment + +“ಹೀಗೆ ಕಾಯುತ್ತಿದ್ದ ಮೂರನೆ ದಿನ ನಮ್ಮ ದೋಣಿ ತಳ ಮುರಿದು ಮುಳುಗತೊಡಗಿತು. ನಾವು ಅಷ್ಟರೊಳಗೆ ಅಪಾಯದ ಗಂಟೆ ಮೊಳಗಿಸಿ ಸಮುದ್ರಕ್ಕೆ ಹಾರಿಕೊಂಡೆವು. ನಮ್ಮ ಕರೆಯನ್ನು ಕೇಳಿದ ಮಿಲಿಟರಿ ದೋಣಿಯೊಂದು ಬಂದು ನಮ್ಮಲ್ಲಿ ಸಾಧ್ಯವಾದವರನ್ನೆಲ್ಲ ರಕ್ಷಿಸಿತು. ಹೊರಬಂದು ಎಣಿಸಿಕೊಂಡು ನೋಡಿದಾಗ ಹನ್ನೆರಡು ಜನ ಮುಳುಗಿಹೋಗಿದ್ದಾರೆ ಅಂತ ತಿಳಿಯಿತು. ನಮ್ಮ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುವ ಜನರಲ್ಲಿ ಒಂದು ಪಾಲನ್ನು ತನ್ನ ಬಲಿಯಾಗಿ ಪಡೆದುಕೊಳ್ಳುವ ಕ್ರಿಶ್ಚಿಯನ್…” \ No newline at end of file diff --git a/Kenda Sampige/article_31.txt b/Kenda Sampige/article_31.txt new file mode 100644 index 0000000000000000000000000000000000000000..0d6b318ab25374db6dbc849ba738ad2d7c295654 --- /dev/null +++ b/Kenda Sampige/article_31.txt @@ -0,0 +1,39 @@ +ಆರಂಭವೇ ಹನಿಮೂನ್ ಅವಾಂತರ! + +ನಾನು ಓದಿದ ನವೋದಯ ಶಾಲೆಯ ನೆನಪುಗಳನ್ನು ನೆನಪಿಸಿ ಕೊಳ್ಳಲು ಹೊರಟವನಿಗೆ ನಮ್ಮ ಬ್ಯಾಚಿನ ಮೊದಲ ದಿನವನ್ನು ನೆನೆಯದಿದ್ದರೆ ಹೇಗೆ ಎನಿಸಿತು! + +ಅದು ನಮ್ಮ ಮೊದಲ ದಿನದ ಮೊದಲ ಇಂಗ್ಲಿಷ್ ಕ್ಲಾಸ್! + +“ಡಿಯರ್ ಸ್ಟೂಡೆಂಟ್ಸ್…ಗುಡ್ ಮಾರ್ನಿಂಗ್…” ಎನ್ನುತ್ತಾ, ನಗು ಮೊಗವನ್ನೊತ್ತು ನಮ್ಮ ಹೊಸ ಇಂಗ್ಲಿಷ್ ಮೇಡಂ ತರಗತಿ ಕೋಣೆಗೆ ಎಂಟ್ರಿ ಕೊಟ್ಟಿದ್ದರು. ಎಂಟ್ರಿ ಕೊಟ್ಟವರು ತಮ್ಮ ಪರಿಚಯವನ್ನು ಇಂಗ್ಲಿಷ್‌ನಲ್ಲೇ ಮಾಡಿಕೊಂಡು ಶಾಲೆಗೆ ಹೊಸದಾಗಿ ಎಂಟ್ರಿ ಪಡೆದಿರುವ ತನ್ನ ‘ಡಿಯರ್ ಸ್ಟೂಡೆಂಟ್ಸ್’ ಗಳ ಪರಿಚಯಕ್ಕೂ ಮುಂದಾದರು. + +ಈ ‘ಡಿಯರ್ ಸ್ಟೂಡೆಂಟ್ಸ್’ ಗಳಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದ ಕನ್ನಡ ಮಾಧ್ಯಮ ಶಾಲೆಗಳಿಂದ ಬಂದವರು, ಐದನೇ ತರಗತಿಯಿಂದ ಎ, ಬಿ, ಸಿ, ಡಿ ಕಲಿಯಲು ಆರಂಭಿಸಿದವರು ಆಗಿದ್ದರೂ ಈಗ ಆರನೇ ತರಗತಿಯಲ್ಲಿ ಕುಳಿತು ಎಲ್ಲಾ ಭಾಷೆಗಳಲ್ಲೂ ಒಂದೇ ಆದ ತಮ್ಮ ಹೆಸರು, ತಮ್ಮ ಊರಿನ ಹೆಸರು ಹೇಳಲು ಒಂದಿನಿತೂ ಕಷ್ಟ ಪಡಲಿಲ್ಲ! + +ಒಬ್ಬರಾದಂತೆ ಒಬ್ಬರು ಎದ್ದು ನಿಂತು ನಮ್ಮನ್ನು ನಾವು ಪರಿಚಯಿಸಿ ಕೊಳ್ಳುತ್ತಾ ಸಾಗಿದೆವು. ಮೇಡಂರವರೋ ತಮ್ಮ ‘ಡಿಯರ್ ಸ್ಟೂಡೆಂಟ್ಸ್’ ಗಳು ಯಾವುದೋ ಅದ್ಭುತ ವಿದ್ವತ್ತನ್ನು ಪ್ರದರ್ಶಿಸುತ್ತಿರುವರು ಎಂಬಂತೆ “ಗುಡ್.., ವೆರಿಗುಡ್..,” ಎಂಬ ವಿಶೇಷಣಗಳೊಂದಿಗೆ ನಮ್ಮನ್ನು ಹುರಿದುಂಬಿಸುತ್ತಾ ಸಾಗಿದ್ದರು! ಅವರ ಮೊಗದಲ್ಲಿನ ನಗುವನ್ನೂ ಹಾಗೆಯೇ ಕಾಯ್ದುಕೊಂಡಿದ್ದರು! + +**** + +ಹೀಗೆ ಪರಿಚಯವೇನೋ ಮುಗಿಯಿತು. ಆದರೆ ಅವಧಿ ಮುಗಿದಿರಲಿಲ್ಲವಲ್ಲ! ಆದ್ದರಿಂದ ಅವಧಿಯ ಮುಂದುವರೆದ ಭಾಗವಾಗಿ ಮೇಡಂ ತಮ್ಮ ‘ಡಿಯರ್ ಸ್ಟೂಡೆಂಟ್ಸ್’ಗಳ ಇಂಗ್ಲಿಷ್ ಜ್ಞಾನದ ಪರೀಕ್ಷೆಗೂ ಮುಂದಾದರು! + +ಪರೀಕ್ಷೆ ಎಂದೊಡನೆ ಗಾಬರಿ ಪಡುವಂತಹದ್ದು ಏನೂ ಇರಲಿಲ್ಲ. ಅದು ಸಾಕಷ್ಟು ಸರಳವಾಗಿಯೇ ಇತ್ತು. ಪ್ರತಿಯೊಬ್ಬರು ‘ಎ’ ನಿಂದ ಆರಂಭಗೊಂಡು ಒಂದೊಂದು ಆಲ್ಫಬೆಟ್‌ಗಳನ್ನು ಹೇಳಿ ಅದಕ್ಕೆ ಸಂಬಂಧಿಸಿದಂತೆ ಪದವೊಂದನ್ನು ಹೇಳುವುದಾಗಿತ್ತು. ಅದೇ ಎ ಫಾರ್ ಆ್ಯಪಲ್, ಬಿ ಫಾರ್ ಬಾಲ್, ಸಿ ಫಾರ್ ಕ್ಯಾಟ್, ಡಿ ಫಾರ್… ಹೀಗೆ ಹೇಳುತ್ತಾ ಹೋಗುವುದು! + +ಸರಿ, ಎ ಫಾರ್ ಆ್ಯಪಲ್ ನಿಂದ ಆರಂಭಗೊಂಡ ನಮ್ಮ ಈ ಪರೀಕ್ಷೆ ಸುಲಲಿತವಾಗಿಯೇ, ಮೇಡಂ ಮೆಚ್ಚುವಂತೆಯೇ, ತಮ್ಮ ನಗು ಮೊಗವನ್ನು ಕಾಯ್ದುಕೊಳ್ಳುವಂತೆಯೇ ಸಾಗಿತ್ತು; ‘ಎಚ್’ ಅಕ್ಷರ ಬರುವವರೆಗೆ..! + + + +‘ಎಚ್’ ಬಂದದ್ದು ಗೆಳೆಯ ‘ರುದ್ರಸ್ವಾಮಿ ಫ್ರಮ್ ಹೂವಿನಹಳ್ಳಿ’ಯ ಸರದಿಗೆ.. + +ಅವನೋ ‘ಎಚ್ ಫಾರ್’ ಎಂದು ಹೇಳಿ ಅದಕ್ಕೆ ಸಂಬಂಧಿಸಿದ ಪದವನ್ನು ಹೇಳಲು ಯೋಚಿಸುತ್ತಿರುವಾಗಲೇ ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ ಗೆಳೆಯ ಮನು ತುಸು ನಿಧಾನವಾಗಿ ‘ಹನಿಮೂನ್’ ಎಂದು ಬಿಡಬೇಕೆ! ಅದನ್ನು ಕೇಳಿಸಿಕೊಂಡ ನಮ್ಮ ರುದ್ರಸ್ವಾಮಿ ‘ಎಚ್’ಗೆ ಅದೇ ಸೂಕ್ತ ಪದವೆಂದು ಒಡನೆಯೇ ಗ್ರಹಿಸಿ ಮುಗ್ಧವಾಗಿ, ತುಸು ಜೋರಾಗಿಯೇ ‘ಹನಿಮೂನ್’ ಎಂದು ಬಿಟ್ಟಿದ್ದ…! + +ಹೀಗೆ ‘ಹನಿಮೂನ್’ ಎಂದವನು ಮೇಡಂರವರ ಪ್ರತಿಕ್ರಿಯೆಯನ್ನು ನಿರೀಕ್ಷಿಸುವ ಮೊದಲೇ ಪಟಾರೆಂದು ಅವನ ಕೆನ್ನೆಗೆ ಜೋರಾದ ಹೊಡೆತವೊಂದು ಬಿದ್ದಿತ್ತು! ನೋಡ ನೋಡುತ್ತಲೇ ಕ್ಷಣಾರ್ಧದಲ್ಲಿ ಎಂಬಂತೆ ಮೇಡಂ ಮೊಗದಲ್ಲಿನ ನಗು ಮಾಯವಾಗಿ ರೌದ್ರತೆಯನ್ನೇ ಆವಾಹಿಸಿಕೊಂಡವರಂತಾಗಿದ್ದರು! + +ಅಷ್ಟಕ್ಕೆ ಸುಮ್ಮನಾಗದೆ ತಮ್ಮ ಇಂಗ್ಲಿಷ್ ಭಾಷಾ ಪದಪುಂಜಗಳ ಬ್ರಹ್ಮಾಸ್ತ್ರಗಳನ್ನು ಪುಂಖಾನುಪುಂಖವಾಗಿ ರುದ್ರನ ಮೇಲಲ್ಲದೆ ನಮ್ಮ ಮೇಲೆಯೂ ಪ್ರಯೋಗಿಸಿ ಹೊರ ನಡೆದರು. + +ಅವರ ಮಾತುಗಳ ಅರ್ಥ ಅರ್ಥವಾಗದಿದ್ದರೂ ಎಲ್ಲಾ ಭಾಷೆಗಳಲ್ಲೂ ಒಂದೇ ಆದ ಮುಖದಲ್ಲಿನ ಕೋಪ ಮಾತ್ರ ನಮ್ಮೆಲ್ಲರ ಪಾಲಿಗೂ ಅರ್ಥವಾಗುವಂತಿತ್ತು! + +ಇನ್ನೂ ರುದ್ದಸ್ವಾಮಿಯೋ“ತಾನೇನು ತಪ್ಪು ಮಾಡಿದೆ!? ತನಗೆ ಪೆಟ್ಟು ಬಿದ್ದಿದಾದರೂ ಏಕೆ!?” ಎಂಬ ಯಾವೊಂದೂ ಸಂಗತಿಗಳು ಅರ್ಥವಾಗದೇ ದಿಙ್ಮೂಢನಂತಾಗಿ ಪೆಚ್ಚು ಮೋರೆ ಹಾಕಿ ನಿಂತಿದ್ದ! + +ಪಾಪ! ‘ಹನಿಮೂನ್’ ಪದವನ್ನು ತಾನು ನೋಡಿದ್ದ ರವಿಚಂದ್ರನ್ ಸಿನಿಮಾಗಳ “ಹನಿಮೂನ್ ಗೆ ಹೋಗಿ ಬರೋಣ…” ಎಂಬಂತಹ ಡೈಲಾಗ್‌ಗಳಲ್ಲಿ ಮಾತ್ರ ಕೇಳಿದ್ದ, ಅಮಾಯಕರಲ್ಲಿ ಅಮಾಯಕನಂತಿದ್ದ ರುದ್ರಸ್ವಾಮಿ, ‘ಹನಿಮೂನ್’ ಎಂದರೆ ಅಮೆರಿಕ, ಇಂಗ್ಲೆಂಡ್ ನಂತಹ ಯಾವುದೋ ಸುಂದರ ದೇಶವೋ ಇಲ್ಲ ಲಂಡನ್, ಪ್ಯಾರಿಸ್ ನಂತಹ ಸುಂದರ ನಗರವೋ ಇರಬೇಕೆಂದು ಆ ಕ್ಷಣದವರೆಗೂ ಪರಿಭಾವಿಸಿದ್ದ! + +ಆದರೆ, ಮೇಡಂರವರ ಕಪಾಳ ಮೋಕ್ಷ ಈ ದಿಸೆಯಲ್ಲಿ ಹೆಚ್ಚಿನ ಜ್ಞಾನಾನ್ವೇಷಣೆಗೆ ಅವನು ಜೊತೆಗೆ ನಾವುಗಳೆಲ್ಲರೂ ತೊಡಗುವಂತಾಗಲು ಪ್ರೇರಣೆಯಾಯಿತೆಂಬುದು ಮುಂದಿನ ಕತೆಯಾದರೂ ಆ ಕ್ಷಣಕ್ಕೆ ರುದ್ರಸ್ವಾಮಿಯ ಮುಗ್ಧತೆಯ ‘ಹನಿಮೂನ್ ಅವಾಂತರ’ ”ಈ ಬ್ಯಾಚಿನ ಹುಡುಗರು ಮುಗ್ಧರಲ್ಲ…” ಎಂಬ ನಟೋರಿಟಿಯನ್ನು ಶಾಲೆಯಲ್ಲಿ ಶಿಕ್ಷಕರು ಮತ್ತು ಹಿರಿಯ ವಿದ್ಯಾರ್ಥಿಗಳ ನಡುವೆ ಮೊದಲ ದಿನವೇ ನಮಗೆ ಸುಲಭವಾಗಿ ದಯಪಾಲಿಸಿತ್ತು! + +ಪೂರ್ಣೇಶ್ ಮತ್ತಾವರ ಮೂಲತಃ ಚಿಕ್ಕಮಗಳೂರಿನವರು. ಮೂಡಿಗೆರೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ, ಸಂಘಟನೆಗಳಲ್ಲಿ ಸಕ್ರಿಯ. “ದೇವರಿದ್ದಾನೆ! ಎಚ್ಚರಿಕೆ!!” ಇವರ ಪ್ರಕಟಿತ ಕಥಾ ಸಂಕಲನ. ಕತೆಗಳು, ಲೇಖನಗಳು, ಮಕ್ಕಳ ಪದ್ಯಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪರಿಸರದ ಒಡನಾಟದಲ್ಲಿ ಒಲವಿದ್ದು, ಪಕ್ಷಿ ಛಾಯಾಗ್ರಹಣದಲ್ಲೂ ಆಸಕ್ತಿ ಹೊಂದಿದ್ದಾರೆ.. \ No newline at end of file diff --git a/Kenda Sampige/article_310.txt b/Kenda Sampige/article_310.txt new file mode 100644 index 0000000000000000000000000000000000000000..1a0f099a98f5a176c56f83baa009f1b897b3908a --- /dev/null +++ b/Kenda Sampige/article_310.txt @@ -0,0 +1,77 @@ + + +ಡಿಸೆಂಬರ್ ತಿಂಗಳ ಕೊನೆ, ಚಳಿಯ ತೀವ್ರತೆ ಹೆಚ್ಚಾಗುತ್ತಿತ್ತು. ಒಂದರ ಬದಲು ಎರಡು ಹೊದಿಕೆ, ಮೈಗೆ ಸ್ವೆಟರ್, ತಲೆಗೆ ಟೊಪ್ಪಿ ಕಾಲಿಗೆ ಬಾಣಂತಿಯಂತೆ ಕಾಲುಚೀಲ ಹಾಕಿ ಮಲಗಿದರೂ ಚಿಟಿಕೆಯಷ್ಟು ಚಳಿ ಎಲ್ಲಿಂದಲೋ ನುಸುಳಿ ಮೈ ಬಿಗಿಸಿ ಬಿಡುತ್ತಿತ್ತು! ಅಂಥ ದಿನಗಳಲ್ಲೇ ಮೂರ್ತಣ್ಣ ಅನಾಥನಾದದ್ದು! ಬಹುಷಃ ಅವನಿಗೆ ಚಳಿಗಿಂತಾ ಅನಾಥಪ್ರಜ್ಞೆ ತೀವ್ರವಾಗಿ ಕಾಡಿರಬಹುದಾ? ಅದಕ್ಕೋ ಏನೋ ರುದ್ರಯ್ಯನವರ ಮನೆಯ ಮುಂದೆಯೇ ಕುಕ್ಕರಗಾಲು ಹಾಕಿ ಕುಂತವನು ಹೊತ್ತು ಮುಳುಗಿ ಕತ್ತಲಾಗಹೊರಟರೂ ಅಳ್ಳಾಡಲಿಲ್ಲ. + +fರುದ್ರಪ್ಪನವರಿಗೆ ಕೆಲವು ತಿಂಗಳ ಹಿಂದಷ್ಟೇ ರಿಟೈರ್ಮೆಂಟ್ ಆಗಿತ್ತು. ಇದ್ದ ಎರಡು ಹೆಣ್ಣುಮಕ್ಕಳಲ್ಲಿ ದೊಡ್ಡವಳನ್ನು ಸಿರಾ ತಾಲ್ಲೂಕಿನ ಪರಮೇಶ್ ಎಂಬ ಲಾಯರಿಗೂ, ಚಿಕ್ಕವಳನ್ನು ಗುಬ್ಬಿಯ ಚನ್ನಬಸವಯ್ಯ ಎಂಬ ಹಿಸ್ಟರಿ ಲೆಕ್ಚರರ್ರಿಗೂ ಕೊಟ್ಟು ಮದುವೆ ಮಾಡಿ ವರ್ಷಗಳು ಸಂದಿದ್ದವು. ವೃತ್ತಿಯಿಂದ ಹೈ ಸ್ಕೂಲ್ ಮಾಸ್ಟರ್ ಆಗಿದ್ದ ರುದ್ರಪ್ಪನವರು ತುಮಕೂರು ಜಿಲ್ಲೆ, ಹಾಸನ ಜಿಲ್ಲೆ ಮತ್ತು ಕೋಲಾರದ ಕೆಲವು ಕಡೆಗಳಲ್ಲಿ ಕಲಿಸಿದವರು ತಮ್ಮ ಹಿರಿಯರಿಂದ ಬಂದ ಜಮೀನಿನಲ್ಲಿ ಗದ್ದೆ, ತೋಟ ಮಾಡಿಕೊಂಡು ತಾವಿರುತ್ತಿದ್ದ ಊರಿನಿಂದ ನಿಟ್ಟೂರಿಗೂ ಮತ್ತು ಅಲ್ಲಿಂದ ತಾವಿರುತ್ತಿದ್ದ ಊರಿಗೂ ಓಡಾಡಿ ಸೈ ಅನಿಸಿಕೊಂಡವರು. + +ಮಕ್ಕಳಿಬ್ಬರನ್ನು ಮದುವೆ ಮಾಡಿ ಕಳಿಸಿದಮೇಲೆ ಮನೆಯೆಲ್ಲ ಬಿಕೋ ಅನ್ನಿಸುತ್ತಿತ್ತು. ಆಗಲೇ ಅವರ ಮನಸ್ಸು ತಮ್ಮ ತೋಟದ ಬಾಳೆ, ತೆಂಗು, ಬತ್ತ, ರಾಗಿ, ಆಕಳು ಸೀತಾರತ್ತ ವಾಲಿದ್ದು. + +“ನೋಡೇ ಇವಳೇ, ರಿಟೈರ್ ಆದಮೇಲೆ ಎಲ್ಲ ಕಟ್ಕೊಂಡು ನಿಟ್ಟೂರಿಗೆ ಹೋಗಿಬಿಡಾಣ… ನಂಗೆ ಇವಾಗ್ಲೆ ಮನೆಯೆಲ್ಲ ಖಾಲಿ ಖಾಲಿ ಅಂತ ಅನ್ಸೋಕೆ ಶುರುವಾಗೈತೆ, ಆಮೇಲೆ ಪೂರ್ತಿ ದಿನಾ ನಂಕೈಲಂತೂ ಇಲ್ಲಿ ಇರಕಾಗಲ್ಲ ನೋಡು..” ಅನ್ನುತ್ತಿದ್ದವರು ರಿಟೈರ್ ಆದ ಎರಡು ತಿಂಗಳಲ್ಲೇ ತೋಟದ ಮನೆಯ ರಂಗಣ್ಣನಿಗೆ ಹೇಳಿ ಕಳುಹಿಸಿ ಟ್ರ್ಯಾಕ್ಟರ್ ತರಿಸಿದ್ದರು. + +ಸಾಮಾನು ಸರಂಜಾಮು ಕಟ್ಟುವ ಹಿಂದಿನ ರಾತ್ರಿ ದೇವಿರಮ್ಮ ,“ಏನ್ರಿ ನಮ್ಮ ಜೊತೆಗೆ ಮೂರ್ತಣ್ಣನ್ನು ಕರ್ಕೊಂಡೋಗನಾ? ಪಾಪ ಅವ್ನಿಗಾದ್ರು ಯಾರವ್ರೆ!” ಅಂದಾಗ ಅದರ ಬಗ್ಗೆಯೇ ಯೋಚಿಸುತ್ತಿದ್ದವರಂತೆ ರುದ್ರಪ್ಪನೋರು,“ನೋಡು ಮೂರ್ತಣ್ಣ ಬರಾದಿದ್ರೆ ನಂಗೂ ಸಂತೋಷಾನೆ, ಅವ್ನಿದ್ರೆ ಒಂದಾನೆ ಬಲ ಇದ್ದಂಗೆ ನಂಗೆ, ಜೊತೆಗೆ ನಮಗೂ ಹಿರೀಕ್ರು ಅಂತ ಯಾರಾದ್ರೂ ಇರ್ಬೇಕಲ್ಲ” ಅಂದಿದ್ದರು. + +***** + +ಮೂರ್ತಣ್ಣ ಅನಾಥನಲ್ಲ. ಅವನಿಗೆ ಅಣ್ಣ ತಮ್ಮಂದಿರಿದ್ದರು. ಸ್ಥಿತಿವಂತರ ಕುಟುಂಬವಾಗಿದ್ದಿದ್ದರಿಂದ ಅಕ್ಕಿ, ಬೇಳೆ, ಎಣ್ಣೆಗೆ ಎಂದೂ ಕುಂದಿರಲಿಲ್ಲ. ಅಣ್ಣಂದಿರ ಮದುವೆಯಾಯಿತು, ಅತ್ತಿಗೆಯರು ಬಂದರು. ತಮ್ಮಂದಿರಿಗೂ ಆಯಿತು ಅವರ ಹೆಂಡಿರೂ ಬಂದರು. ತುಂಬಿದ ಮನೆ ಭಾಗವಾಗಿ, ಒಂದು ಬಾಗಿಲು ನಾಲ್ಕಾಯಿತು. ಮೂರ್ತಣ್ಣ ಎಲ್ಲರ ಮದುವೆಯಲ್ಲಿಯೂ ಓಡಾಡಿದ, ತೋರಣ ಕಟ್ಟಿದ, ಮೂಟೆ ಹೊತ್ತ, ಸುಣ್ಣ-ಬಣ್ಣ ಮಾಡಿದ, ಚಪ್ಪರ ಹಾಕಿದ. ಅದ್ಯಾಕೋ ಅಣ್ಣಂದಿರಾಗಲಿ, ತಮ್ಮಂದಿರಾಗಲಿ ಇವನಿಗೊಂದು ಮದುವೆ ಮಾಡುವ ಯೋಚನೆಯನ್ನೇ ಮಾಡಲಿಲ್ಲ. ಇವನೂ ಕೇಳಲಿಲ್ಲ. ಮದುವೆಯಾದವರಿಗೆಲ್ಲ ಮಕ್ಕಳಾದವು. ಅವು ಬೆಳೆದು ಶಾಲೆಗೆ ಹೋಗಲು ಶುರುವಿಟ್ಟವು. ಅವರ ಜವಾಬ್ದಾರಿಯೂ ಇವನ ಮೇಲೆಯೇ ಬಿತ್ತು. ಅಥವಾ ಇವನೇ ವಹಿಸಿಕೊಂಡ. ಒಟ್ಟಿನಲ್ಲಿ ಮೂರ್ತಣ್ಣ ವ್ಯಾವಹಾರಿಕವಾಗಿ ದಡ್ಡ! + +ಮಕ್ಕಳೂ ಬೆಳೆದವು, ಇವನಿಗೂ ಐವತ್ತು ದಾಟಿತು. ಅವರೂ ಇವನನ್ನು ಚಿಕ್ಕಪ್ಪ ದೊಡ್ಡಪ್ಪ ಅನ್ನದೆ ಮೂರ್ತಣ್ಣ ಎಂದೇ ಅನ್ನತೊಡಗಿದರು. ಸುತ್ತಮುತ್ತಲಿನವರಿಗೆ ಇದರಲ್ಲೆಲ್ಲಾ ಸ್ವಾರ್ಥ ಕಾರಣ ತಿಳಿದರೂ, ಮೂರ್ತಣ್ಣ ಎಂದಿಗೂ ಕಂಗೆಡಲಿಲ್ಲ. ತಾನಾಯಿತು ತನ್ನ ಕೆಲಸವಾಯಿತು ಎಂದು ಇದ್ದುಬಿಟ್ಟ. + +ಆದರೆ, ಆಗಾಗ ಇವ ಖಾಯಿಲೆ ಬೀಳತೊಡಗಿದ. ಆಗಾಗೊಂದು ಬೀಡಿ ಸೇದುತ್ತಿದ್ದವನಿಗೆ ಕೆಮ್ಮು ಆವರಿಸಿಬಿಟ್ಟರೆ ವಾರಗಳಗಟ್ಟಲೆ ಹೋಗುತ್ತಿರಲಿಲ್ಲ. ದಿನಕ್ಕೊಂದು ಬಾಗಿಲ ಬಳಿ ಮಲಗುತ್ತಿದ್ದವನಿಗೆ ಬಾಗಿಲ ಹೊರಗಡೆ ಮಲಗಲು ಹೇಳಿದರು. + +“ನಿಮಗೆ ಬೆಳಿಗ್ಗೆ ಕಸ ಗುಡಿಸಲಿಕ್ಕೆ ರಂಗೋಲಿ ಹಾಕಲಿಕ್ಕೆ ತೊಂದರೆಯಾದರೆ… ಅಟ್ಟದಲ್ಲೇ ಮಲಗುವೆ” ಎಂದ. + +ಆದರೆ ಅಟ್ಟದಿಂದ ಕೆಮ್ಮಿದರೆ ಮನೆಮಂದಿಯೆಲ್ಲ ನಿದ್ರಿಸಲು ತೊಂದರೆಯಾಗುವುದೆಂದು ಮನೆ ಹೊರಗಡೆಯೇ ಮಲಗಲು ಹೇಳಿದರು. ಎಲ್ಲರಿಗಾಗಿ ಹುಚ್ಚನಂತೆ ದುಡಿದ ಮೂರ್ತಣ್ಣನಿಗೆ ಚಳಿಗಾಲದ ತೀವ್ರತೆ ಎಷ್ಟೋ ವಿಷಯಗಳನ್ನು ಹೇಳಿಕೊಟ್ಟಿತು. + +ಮನೆಯ ಹೊರಗೆ ಬಿದ್ದವನನಿಗೆ ದಿನನಿತ್ಯದ ಕಾಫಿ ತಿಂಡಿಗಳೂ ಕಡಿಮೆಯಾದವು. ಮೂರ್ತಣ್ಣ ಮೊದಲಬಾರಿ ಕಂಗಾಲಾಗಿದ್ದ. ಸ್ವಾಭಿಮಾನಿಯಾಗಿದ್ದರಿಂದ ಮನೆಯವರ ಮೇಲೆ ಹಕ್ಕು ಚಲಾಯಿಸಲಿಲ್ಲ. ಪಾಲು ಕೇಳಲು ಏನೂ ಉಳಿದಿರಲಿಲ್ಲ. ಮುಂದೇನು ಎಂದು ಯೋಚಿಸುತ್ತಿರುವಾಗಲೇ ಜಿಲ್ಲೆಯಲ್ಲೆಲ್ಲಾ ನೀರಿನ ಅಭಾವ ಶುರುವಾಯಿತು. ಜನರಿಗೆ ಕುಡಿಯುವ ನೀರನ್ನು ಟ್ಯಾಂಕರ್ ಗಳಲ್ಲಿ ದಿನಕ್ಕೆರೆಡು ಬಿಂದಿಗೆಯಂತೆಯೂ, ಬಳಸುವ ನೀರನ್ನು ಮೂರುದಿನಕ್ಕೊಮ್ಮೆ ಅರ್ಧಗಂಟೆಗಳ ಕಾಲ ಬಿಡತೊಡಗಿದರು. + +ಇದನ್ನೆಲ್ಲಾ ನೋಡಿದ ಮೂರ್ತಣ್ಣ ಒಂದು ನಿರ್ಧಾರಕ್ಕೆ ಬಂದ. ಬಿಂದಿಗೆಯೊಂದಕ್ಕೆ ಐವತ್ತು ಪೈಸೆಯಂತೆ ನೀರು ತುಂಬಿಸಿ ಮನೆಗಳಿಗೆ ಹಾಕತೊಡಗಿದ. ಆದರೆ ನೀರಿಗಾಗಿ ಬೋರು ಒತ್ತಬೇಕಿತ್ತು. ಅಂತರ್ಜಲ ತೀವ್ರವಾಗಿ ಕುಸಿದಿದ್ದರಿಂದ ಒಂದು ಬಿಂದಿಗೆ ನೀರು ತುಂಬಿಸಲು ತುಂಬಾ ಕಷ್ಟಪಡಬೇಕಿತ್ತು. ಅಂಗಡಿ ಮುಗ್ಗಟ್ಟಿನವರು, ಹೋಟೆಲ್ಲಿನವರು ಮತ್ತು ಅನುಕೂಲಸ್ಥ ಮನೆಯವರು ಇವನಿಂದ ಹತ್ತಾರು ಬಿಂದಿಗೆ ನೀರು ತುಂಬಿಸಿಕೊಂಡು, ಕಾಸೂಕೊಟ್ಟು, ತಿನ್ನಲು ತಿಂಡಿಯೊ, ಊಟವೋ ಅಥವಾ ಸಮಯಕ್ಕೆ ತಕ್ಕಂತೆ ಕಾಫಿಯನ್ನೂ ಕೊಟ್ಟರು. ಜೀಕುತ್ತಿದ್ದ ಮೂರ್ತಣ್ಣನ ಜೀವನ ಸಮತೋಲನಕ್ಕೆ ಬರಲಾರಂಭಿಸಿತ್ತು. + +ಒಮ್ಮೆ ರುದ್ರಪ್ಪನವರ ಮನೆಗೂ ನೀರು ತುಂಬಿಸಿ ಕೊಡುವಾಗ ಅದೇನಾಯಿತೋ ಎಲೆ ಅಡಿಕೆ ಹಾಕಿ ಕುಂತ ಪತಿ ಪತ್ನಿಯರ ಮುಂದೆ ತನ್ನ ದುಮ್ಮಾನವೆಲ್ಲ ತೋಡಿಕೊಂಡ. ಆಗಾಗ ನಿಟ್ಟೂರಿಗೂ, ತುಮಕೂರಿಗೂ ಮತ್ತು ತಾವು ಕೆಲಸಮಾಡುತ್ತಿದ್ದ ಊರಿಗೂ ತಿರುಗಾಡಬೇಕಿದ್ದ ರುದ್ರಯ್ಯನವರಿಗೆ, ಹೆಣ್ಣುಮಕ್ಕಳೇ ಇದ್ದ ಮನೆಗೆ ಮೂರ್ತಣ್ಣ ದೇವರಾಗಿ ಕಂಡ. ಹಿರಿಯ, ನಂಬಿಕಸ್ತ, ಮೇಲಾಗಿ ಅವರದ್ದೇ ಜನ. + +ಹಿಂದೂ ಮುಂದೂ ಹೆಚ್ಚು ಯೋಚಿಸದೆ “ಮೂರ್ತಣ್ಣ, ಅಲ್ಲಿ ಇಲ್ಲಿ ಯಾಕ್ ಮಲ್ಕಂತಿಯಾ? ಇವತ್ತಿಂದ ನಮ್ ಕಾಯಿ ರೂಮ್ ಕ್ಲೀನ್ ಮಾಡ್ಕಂಡು ಅಲ್ಲೇ ಇದ್ದು ಬಿಡಪ್ಪ, ನಾನು ಓನರ್ ಗೆ ಹೇಳ್ಕಣ್ತೀನಿ” ಅ೦ದರು. ಮೂರ್ತಣ್ಣನೂ ಆ ಮಾತಿಗೆ ಸುಲಭವಾಗಿ ಒಪ್ಪಿಬಿಟ್ಟ. ರುದ್ರಯ್ಯನವರು ಇರಲಿಕ್ಕೆ ಜಾಗ ಮಾಡಿಕೊಟ್ಟದಲ್ಲದೆ, ನೀರು ಹೊಡೆಯಲು ಒಂದು ಹಳೆಯ ರಾಲಿಸ್ ಸೈಕಲ್ ಕೊಂಡುಕೊಟ್ಟಾಗ ಅವನ ಖುಷಿಗೆ ಪಾರವೇ ಇರಲಿಲ್ಲ. ಅದನ್ನು ತುಳಿವಾಗೆಲ್ಲ ಮೂರ್ತಣ್ಣ ತನ್ನಿಂದ ತಾನೇ ಬಿಡುಗಡೆಯಾಗುತ್ತಿದ್ದ! + +ಇದು ಹೀಗೆ ನಡೆಯುತ್ತಿರುವಾಗಲೊಮ್ಮೆ, ಕೃಷ್ಣಪ್ಪನ ಹೋಟೆಲ್ಲಿಗೆ ನಾಲ್ಕು ಬಿಂದಿಗೆ ನೀರು ಸೇದಿ, ಸೈಕಲ್ ನ ಕ್ಯಾರಿಯರ್ ಮೇಲೆರಡು ಬಿಂದಿಗೆ ಕಟ್ಟಿ, ಮುಂದಿನ ಬಾರಿನ ಮೇಲೆರಡಿಟ್ಟು, ಬಿರಬಿರನೆ ಬರುತ್ತಿರುವಾಗ ಯಾರೋ ಎದುರಿನಿಂದ ಹಂದಿಗಳನ್ನು ಓಡಿಸುತ್ತಾ ಬಂದರು. ಮೂರ್ನಾಲಕ್ಕು ಕೊಚ್ಚೆ ಮೈನ ಹಂದಿಗಳು ಒಮ್ಮೆಗೆ ಇದಿರಾದದ್ದರಿಂದ ಮತ್ತು ಹಂದಿಯನ್ನು ಮುಟ್ಟಿಸಿಕೊಂಡರೆ ಸೈಕಲ್ ಮಾರಬೇಕಾದ ಪ್ರಸಂಗದ ಬಗ್ಗೆ ಹೆದರಿ, ಅದನ್ನು ತಪ್ಪಿಸಲು ಹೋಗಿ, ಆಯತಪ್ಪಿ ಬಿದ್ದ ಏಟಿಗೆ ಎಡ ಭುಜದ ಮೂಳೆ ಪಟ್ ಅಂದಿತ್ತು. + +ಡಾಕ್ಟರ್ ಪಟ್ಟು ಹಾಕಿ “ಇನ್ನು ಮೂರು ತಿಂಗಳು ಏನೂ ಮಾಡುವಹಾಗಿಲ್ಲ” ಅಂದು ಬಿಟ್ಟರು. + +ಮೂರ್ತಣ್ಣನ ತಲೆಯ ಮೇಲೆ ಬೆಟ್ಟ ಬಿದ್ದ ಹಾಗಾಯ್ತು. ತಾನು ಹೆಚ್ಚು ಸಂಭ್ರಮಿಸಿಬಿಟ್ಟೆನಾ? ಎಂದು ತನ್ನ ಮೇಲೆ ತನಗೇ ಜಿಗುಪ್ಸೆಯಾಯ್ತು. ಅವನ ಅತ್ತಿಗೆಯರು ಆಗೊಮ್ಮೆ ಈಗೊಮ್ಮೆ ತಿಂಡಿಯೊ ಕಾಪಿಯೋ ಕೊಟ್ಟು ಸುಮ್ಮನಾದರು. ಅವನ ಒಬ್ಬ ಅಣ್ಣ “ಏನಾದರೂ ದುಡ್ಡು ಕಾಸು ಬೇಕಿದ್ದರೆ ಕೇಳು” ಎಂದಷ್ಟೇ ಹೇಳಿ ಒಂದು ಬಿಡಿಗಾಸೂ ಕೊಡದೆ ಹೋದನು. + +ಆದರೆ ರುದ್ರಪ್ಪ ಮತ್ತು ದೇವಿರಮ್ಮನವರು ಮಾತ್ರ ಮೂರ್ತಣ್ಣನ ಕೈಬಿಡಲಿಲ್ಲ. ಅವನ ಕೈ ಸರಿಹೋಗುವವರೆಗೂ ಅವನ ಊಟ-ತಿಂಡಿ ನೋಡಿಕೊಂಡರು. ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದರಿಂದ ಮಾತ್ರೆ ಕೊಡಿಸುವುದರವರೆಗೆ, ಪಟ್ಟು ಬಿಚ್ಚಿದಮೇಲೆ ಇಸ್ಮಾಯಿಲ್ ನ ಕರೆಸಿ ಎಣ್ಣೆ ನೀವಿಸುವವರೆಗೆ, ಅವನ ಶುಶ್ರೂಷೆ ಮಾಡಿಸಿದರು. ಅವನನ್ನು ಯಾವತ್ತೂ ಅವರು ಹೊರಗಿನವನಂತೆ ನೋಡಲೇ ಇಲ್ಲ. ಆದ್ದರಿಂದಲೇ ಅವನು ತನಗಿಂತಾ ಚಿಕ್ಕವರಾಗಿದ್ದ ರುದ್ರಪ್ಪನವರನ್ನು “ಅಯ್ಯ” ಅಂತಲೂ ದೇವೀರಮ್ಮನವರನ್ನು “ಅಮ್ಮಾ” ಅಂತಲೂ ತುಂಬು ಕಂಠದಿಂದ ಕರೆಯಲು ಶುರುಮಾಡಿದ್ದು. + +***** + +ಮರುದಿನ ಬೆಳಿಗ್ಗೆ ಬೇಗನೆದ್ದ ದಂಪತಿಗಳು ಸ್ನಾನ ಮಾಡಿ, ಮನೆದೇವರಾದ ಗುಬ್ಬಿ ಚನ್ನಬಸವೇಶ್ವರನಿಗೆ ಪೂಜೆ ಮಾಡಿ, ಆರತಿ ಬೆಳಗಿ, ಅಡ್ಡಬಿದ್ದೆದ್ದು ಜೋಡಿಸಿದ್ದ ಕೈಗಳಿಂದ….“ಇಷ್ಟುದಿನ ನಮ್ಮ ಕುಟುಂಬಾನ ಈ ಮನೆಯಲ್ಲಿ ಸಲಹಿದ್ದಿಯಾ ನಮ್ಮಪ್ಪ… ಹಿಂಗೇನೆ ನಮ್ಮನಾ ಮುಂದೇನೂ ಕಾಪಾಡು” ಅನ್ನುತ್ತಾ ರಾತ್ರಿ ಕಟ್ಟಿಟ್ಟಿದ್ದ ಸರಂಜಾಮುಗಳನ್ನು ಒಂದೊಂದಾಗಿ ಟ್ರ್ಯಾಕ್ಟರ್ ಗೆ ಜೋಡಿಸುತ್ತಿರುವಾಗಲೇ……. ಅದೆಲ್ಲಿದ್ದನೋ ಒಣಕಲು ದೇಹದ, ಬಿಳಿತಲೆ ಗಡ್ಡದ, ಚೂಪು ಮೂಗಿನ, ನೆಡೆಯುವಾಗ ಸ್ವಲ್ಪ ಗೂನು ಅನ್ನಿಸುವ ಬೆನ್ನಿನ, ಬರಿಗಾಲಿನ ಮೂರ್ತಣ್ಣ ಬರ ಬರ ನಡೆದು ಬಂದು,“ಎನ್ರಪ್ಪ ನೆನ್ನೆಗ್ಲಿನ್ನ ವೋಗ್ಬೇಕು ಅಂದ್ಕಂಡ್ ಇದ್ದಿವಿ ಅಂದ್ರಿ, ಇವತ್ತಾಲೆ ಗಂಟು ಮೂಟೆನಾ? ಸಾಮಾನೆಲ್ಲ ನಂಗೇಳಿದ್ರೆ ನಾನ್ ಇಟ್ಟು ಕೊಡ್ತಿರ್ಲಿಲ್ವೇ? ಎ ಬಿಡು ದೇವಮ್ಮ” ಎಂದು ಅವರ ಕೈಯಲ್ಲಿದ್ದ ಪುಟ್ಟ ಟೀಪಾಯಿಯನ್ನು ಎತ್ತಿ ಒಂದೇ ಉಸಿರಿಗೆ ಓಡಿ, ಟ್ರ್ಯಾಕ್ಟರ್ ನ ಮಧ್ಯೆ ಜಾಗ ಮಾಡಿ ಇಟ್ಟ. ತೋಟದ ಮನೆಯ ರಂಗಣ್ಣ, ಮೂರ್ತಣ್ಣ, ರುದ್ರಪ್ಪನೋರು ಎಲ್ಲರೂ ಸೇರಿ ಒಂದೆರಡು ಗಂಟೆಗಳಲ್ಲಿ ಮನೆ ಬರಿದು ಮಾಡಿದರು! + +ರುದ್ರಪ್ಪನೋರು “ದೇವಿ ಹಂಗೆ ನೋಡಿ ಬಾರೆ.. ಏನಾದ್ರು ಬಿಟ್ಟುಗಿಟ್ಟಿದೀಯಾ ಒಳಗೆ ಒಂದು ಸಲಿ” ಅಂದದಕ್ಕೆ“ನಾನು ಓಗಲ್ಲಪ್ಪ, ಕೈಕಾಲು ಬಿದ್ದಂಗಾಗುತ್ತೆ” ಅಂದರು. + +ಊರೂರಿಗೆ ವರ್ಗವಾಗುತ್ತಿದ್ದ ರಾಯರು ಮಕ್ಕಳು ಸ್ವಲ್ಪ ದೊಡ್ಡವರಾಗತೊಡಗಿದ ಮೇಲೆ ತುಮಕೂರಿನಲ್ಲಿಯೇ ಬಾಡಿಗೆ ಮನೆ ಮಾಡಿ ಹೆಂಡತಿ ಮಕ್ಕಳನ್ನು ಅಲ್ಲಿಯೇ ಇರಿಸಿ, ತಾವು ಮಾತ್ರ ಪಾಠದೂರಿಗೂ, ತೋಟದೂರಿಗೂ ಮತ್ತು ಸಂಸಾರವಿದ್ದ ಊರಿಗೂ ಓಡಾಡುತ್ತಿದ್ದರು! ಇವರ ಪರ್ಯಟನೆ ಕಂಡು ಸುತ್ತಮುತ್ತಲಿನ ಕೆಲವರು ಆಡಿಕೊಂಡರು, ಕೆಲವರು ಭೇಷ್ ಎಂದರು. ಈಗ್ಗೆ ಐದು ವರ್ಷದ ಕೆಳಗೆ ಸಿಟಿಗೇ ವರ್ಗವಾದ ಮೇಲೆಯೇ ಮತ್ತೆ ಪೂರ್ಣವಾಗಿ ಸಂಸಾರದೊಡನೆ ನೆಲೆ ನಿಂತದ್ದು ರುದ್ರಪ್ಪನೋರು. + +ದೇವೀರಮ್ಮನವರಷ್ಟು ಮನೆಯನ್ನು ಭಾವನಾತ್ಮಕವಾಗಿ ಹಚ್ಚಿಕೊಳ್ಳದಿದ್ದರೂ ಆಗಾಗ ಅವರು ಆಡುತ್ತಿದ್ದ,“ಮಕ್ಳು ಆಡಿ ಬೆಳೆದ ಮನೆ ಬಿಟ್ಟೋಬೇಕು ಅಂದ್ರೆ ಸಂಕ್ಟ ಆಗತೈತೆ” ಅನ್ನುವ ಮಾತನ್ನು ನೆನಪಿಸಿಕೊಂಡು ಒಳಗೆ ಕಾಲಿಡಲು ರುದ್ರಪ್ಪನವರೂ ಹಿಂಜರಿದರು!ಕಡೆಗೆ ಮೂರ್ತಣ್ಣನೇ “ಇರ್ರಮ್ಮ ನಾನೇ ನೋಡ್ಕೊಂಡ್ ಬತ್ತೀನಿ” ಅಂದವನು ಅಟ್ಟ, ಹಿತ್ತಲು, ರೂಮು ಎಲ್ಲಾ ತಡಕಾಡಿ ಬಂದು” ಏನಮ್ಮ ಗುಬ್ಬಿಯಪ್ಪನ್ ಫೋಟಾನೂ, ಹಿತ್ತಾಳೆ ದೀಪಾನೂ ಹಂಗೆ ಬಿಟ್ಟಿದೀರಾ?” ಎಂದು ಕೇಳಿದ. + +ದೇವೀರಮ್ಮ ಗಂಡನ ಮುಖವನ್ನೊಮ್ಮೆ ನೋಡಿದರು. + + + +ರುದ್ರಪ್ಪನೋರು “ಮೂರ್ತಣ್ಣ ಇಷ್ಟು ದಿನ ಮನೇನಾ, ಮಕ್ಳನ್ನಾ, ನಮ್ಮನ್ನೆಲ್ಲ ಕಾದವ್ನೆ ನಮ್ಮಪ್ಪ, ಇವಾಗ ಎತ್ಕೊಂಡೋಗೋದು ಸರಿಯಲ್ಲ, ಇನ್ನು ಮುಂದೇನೂ ಈ ಮನೆನಾ ಅವ್ನೆ ಕಾಯ್ಲಿ ಬಿಡು” ಅ೦ದರು.ಮೂರ್ತಣ್ಣ ತಲೆಯಾಡಿಸಿದ. + +ದೇವೀರಮ್ಮ ಮನೆಗೆ ಬೀಗ ಹಾಕಿ, ಹೊಸ್ತಿಲು ಮುಟ್ಟಿ ನಮಸ್ಕರಿಸಿ, ಎದುರು ಮನೆಯವರಿಗೆ ಕೀಲಿಕೈ ಕೊಡಲು ಹೋದಾಗ ಅವರು ಕುಂಕುಮಕ್ಕೆ ಒಳಗೆ ಕರೆದರು. ಎಲೆ-ಅಡಿಕೆ-ಕಾಯಿ-ಬಾಳೆಹಣ್ಣು ದೇವೀರಮ್ಮನ ಮಡಿಲು ತುಂಬಿದವು. + +“ಆಗಾಗ ಇತ್ಲಾಗೆ ಬರ್ತಾ ಇರಿ ದೇವಿರಮ್ಮ.. ಮರೀಬೇಡಿ” ಎಂದರು ಮನೆಯವರು. + +ಹೀಗೆ ನಾಲ್ಕಾರು ಮನೆಯಲ್ಲಿ ನಡೆದು, ದೇವಿರಮ್ಮ ನವರ ಮನಸ್ಸು ತುಂಬಿ ಬಂದು ಕಂಗಳು ಒದ್ದೆಯಾದವು. ಭಾರವಾದ ಮನಸ್ಸಿನಿಂದ ಎಲ್ಲರಿಗೂ ವಂದಿಸಿ, ಸಿಕ್ಕ ಮಕ್ಕಳ ಕೆನ್ನೆ ಸವರಿ ತಮ್ಮ ಮನೆಯ ಹತ್ತಿರ ಬ೦ದರು. + +ಎಲ್ಲವೂ ಸಮೀಪಿಸುತ್ತಿರುವಂತೆ ಅನ್ನಿಸಿ ‘ಮೂರ್ತಣ್ಣ’ ಮತ್ತಷ್ಟು ನಿಶಬ್ಧನಾದ! + +ರುದ್ರಪ್ಪನೋರು ಸರಾಗವಾಗಿ ಮೊದಲೇ ನಿರ್ಧರಿಸಿರುವಂತೆ “ಹೋಗಪ್ಪಾ ಮೂರ್ತಣ್ಣ ನಿನ್ನ ಗಂಟು ಮೂಟೆ ತಗಂಬಾ ಹೊರಟು ಬಿಡಾಣ” ಅಂದರು. ಮೂರ್ತಣ್ಣ ಮಾತನಾಡಲಿಲ್ಲ! + +ದೇವಿರಮ್ಮನವರೂ ಅದೇ ಮಾತು ಹೇಳಿದಮೇಲೆ ತಗ್ಗಿಸಿದ ತಲೆಯನ್ನು ನಿಧಾನವಾಗಿ ಮೇಲೆತ್ತಿದ ಮೂರ್ತಣ್ಣ…” ಅಮ್ಮಾ ಇಷ್ಟು ದಿನಾ ನಿಮ್ಮ ಮನೆಯವನಂಗೇ ನೋಡ್ಕಂಡಿರಾ, ಅವ್ರಿವ್ರ ಮನೇಲಿ ನೀರು ತುಂಬಿಕಂಡು, ಸೌದೆ ಒಡ್ಕಂಡು, ಕಾಯಿ ಸುಲ್ಕಂಡು ಎಂಗೊ ಹೊಟ್ಟೆ ಹೊರ್ಕೊಂತಾ ಇದ್ದೋವ್ನಿಗೆ ನಾಲ್ಕಾರು ವರ್ಷ ಅನ್ನ, ನೆಳ್ಳು ಕೊಟ್ಟಿದ್ದೀರಾ, ಸಾಕು ಬಿಡಮ್ಮ! ಅದೂ ಅಲ್ದೆ ಅಲ್ಲಿ ನಂಗೆ ಹಿಂದೂ ಮುಂದೂ ಯಾರೂ ಗೊತ್ತಿಲ್ಲ, ಕಾಲ ಕಳಿಯಾಕೆ ಆಗಕಿಲ್ಲ , ಇಲ್ಲಾದ್ರೆ ಎಲ್ಲಾ ಗೊತ್ತಿರೋರೇಯಾ ಎಂಗೊ ನೆಡ್ಕೊಂಡು ಒಗತೈತೆ ” ಅ೦ದ. + +ಮೂರ್ತಣ್ಣನ ಸ್ವಾಭಿಮಾನದ ಅರಿವಿದ್ದ ದೇವೀರಮ್ಮನವರು ಒತ್ತಾಯಿಸಲಿಲ್ಲ. ರುದ್ರಪ್ಪನವರೇ ಹತ್ತಿರಕ್ಕೆ ಬಂದು“ಮೂರ್ತಣ್ಣ ನಮಗೆಲ್ಲಾ ಹಿರಿಯ ನೀನು, ಸುಮ್ನೆ ನಮ್ಮ ಜೊತಿಗೆ ಬಾ, ಕೈಲಾದ ಕೆಲಸ ಮಾಡು, ಆಗದಿದ್ರೆ ಬಿಡು, ಆಳು ಕಾಳು ಇರತೈತೆ, ನೀನೂ ಇದ್ರೆ ನಮಗೂ ಒಂದ್ ಧೈರ್ಯ” ಅಂದರೂ ಮೂರ್ತಣ್ಣ ಮಾತನಾಡಲಿಲ್ಲ! + +ರುದ್ರಪ್ಪನೋರು ಪುನಹಾ ಮಾತನಾಡದೆ, ನೂರು ರುಪಾಯಿಯ ನೋಟೊಂದನ್ನು ಜೇಬಿನಿಂದ ತೆಗೆದು ಮೂರ್ತಣ್ಣನ ಪ್ರತಿರೋಧದ ನಡುವೆಯೇ ಮಾಸಿದ ಅವನ ಅಂಗಿ ಜೇಬಿಗೆ ಇಟ್ಟರು. ಮೂರ್ತಣ್ಣ ಕಸಿವಿಸಿಗೊಂಡರೂ ಸುಮ್ಮನಿದ್ದ! + + + +ರಂಗಣ್ಣನಿಗೆ ರಾಯರು ಸನ್ನೆ ಮಾಡಿದರು. ಟ್ರ್ಯಾಕ್ಟರ್ ಸದ್ದು ಮಾಡತೊಡಗಿತು. ಅಮ್ಮನವರು ಹಿಂದೆ ಟ್ರೇಲರ್ ನಲ್ಲಿ ಕುಳಿತರು, ರಾಯರು ರಂಗಣ್ಣನ ಎಡಗಡೆಯ ದೊಡ್ಡ ಟೈರಿನ ಗಾರ್ಡ್ ನ ಮೇಲೆ ಕುಳಿತರು. ಟ್ರ್ಯಾಕ್ಟರ್ ಚಲಿಸತೊಡಗಿತು, ಮೂರ್ತಣ್ಣ ತಲೆಬಗ್ಗಿಸಿಯೇ ನಿಂತವನು ಗಾಡಿಯ ಶಬ್ದ ಕ್ಷೀಣಿಸವಾಗುತ್ತಾ ಬಂದಾಗ ಆತಂಕದಿಂದ ತಲೆ ಎತ್ತಿದ. ದೂರದಲ್ಲಿ ದೇವೀರಮ್ಮನವರು ಕೈಬೀಸಿದಂತಾಯ್ತು! ಮೂರ್ತಣ್ಣ ಕೈ ಎತ್ತುವಷ್ಟರಲ್ಲಿ ಟ್ರ್ಯಾಕ್ಟರ್ ಬಲಗಡೆಗೆ ತಿರುಗಿತ್ತು! + +ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ ( ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ಪದ್ಯ ಸಿಕ್ಕಿತು” ಇವರ ಚೊಚ್ಚಲ ಕವನ ಸಂಕಲನ. \ No newline at end of file diff --git a/Kenda Sampige/article_311.txt b/Kenda Sampige/article_311.txt new file mode 100644 index 0000000000000000000000000000000000000000..3e673b39a4bf473148ca9ab176489b580044c6a8 --- /dev/null +++ b/Kenda Sampige/article_311.txt @@ -0,0 +1,41 @@ + + +ಒಂದು ದಟ್ಟ ಕಾಡು. ಕೊರೆ ಹಿಂಡುತ್ತಿರುವ ಹೊಟ್ಟೆಯ ತಳಮಳ. ಅಕ್ಕ ಪಕ್ಕ ಯಾರೂ ಇಲ್ಲ. ಭೂಮಿಯಲ್ಲಿ ಉದಿಸಿದ ಮೊದಲ ಮತ್ತು ಏಕಾಂಗಿ ನರಜೀವಿಯಂತೆ ಅಪ್ಪಟ ಒಂಟಿ. ಅದೇ ನದಿ, ಅದೇ ಹಕ್ಕಿ, ಕಾಮನಬಿಲ್ಲು, ಆಕಾಶದ ನೀಲಿ, ದಿಕ್ಕೆಟ್ಟು ಅಲೆಯುತ್ತಿರುವ ಹುಟ್ಟು ಕಳೆದ ಹಾಯಿದೋಣಿ, ಮರಳ ದಂಡೆಯ ಸೂಜಿಗಲ್ಲು, ಒಂಟಿ ಹೆಜ್ಜೆಗಳ ಅಲೆಮಾರಿ ನೆರಳು…. ಇದು ಕನಸು ಎನಿಸಿಬಿಡುವ ಹೊತ್ತಿನಲ್ಲೇ ಇದು ವಿರಕ್ತ ಮನಸಿನ ಕಲ್ಪನೆಯೂ ಆಗಿಬಿಡಬಹುದು. ಆದರೆ ಆ ತೀವ್ರ ಏಕಾಂತವನ್ನು ಮುರಿಯುವುದು ಮನಸಿಗೆ ಬೇಕಿಲ್ಲ. ಕೆಲವೊಮ್ಮೆ ಯಾರ ಎದೆಗೂ ಒರಗದೆ, ಅನುಕಂಪದ ಸೋಂಕು ತಗುಲಿಸಿಕೊಳ್ಳದೆ, ಸುಮ್ಮನೆ ಜೋರು ಧ್ವನಿ ತೆಗೆದು ಎದೆ ಒಡೆಯುವಂತೆ ಕರುಣಾಜನಕವಾಗಿ ಅಳುವುದೂ ಬಿಡುಗಡೆಯ ಹಾದಿಯಾಗಿಬಿಡುತ್ತದಲ್ಲ ಹಾಗೆ. + +ಅಂತಹ ನಿರುಪಾಯ ಸ್ಥಿತಿಯಲ್ಲಿ ಕವಿತೆ ಹುಟ್ಟುತ್ತದೆ ಅನಿಸುತ್ತದೆ ನನಗೆ. ಇಲ್ಲದೇ ಹೋಗಿದ್ದರೆ ಒಂದು ಕ್ಷಣ ಈ ಎಲ್ಲ ಸಾಲುಗಳು ಸತ್ಯಕ್ಕೂ ಈ ಲೋಕದವು ಅಲ್ಲವೇ ಅಲ್ಲ ಅಂತ ಯಾಕನಿಸಬೇಕು…. ಬರೆದವನಿಗೂ ಬರೆದ ನಂತರ ಈ ಸಾಲುಗಳು ಖಂಡಿತಾ ನನ್ನವಲ್ಲ ಅಂತಲಾದರೂ ಯಾಕನಿಸಬೇಕು… + +ದಿನನಿತ್ಯದ ಸಾಮಾನ್ಯ ವಾರ್ತೆಯೂ ಕವಿತೆಯಾಗಬಲ್ಲದು. ಸಾಮಾನ್ಯ ಎನಿಸುವ ಸಣ್ಣ ವರ್ತಮಾನವೂ ಕವಿಗೆ ಭಿನ್ನವಾಗಿ ಕಾಣಬಹುದು. ಅಂತಹ ಭಿನ್ನತೆಯಲ್ಲಿಯೇ ವರ್ತಮಾನದ ಕಾವ್ಯ ಹೊಸತನ ಪಡೆದುಕೊಳ್ಳುತ್ತದೆ. ಆದರೆ ಕವಿತೆ ಎನ್ನುವುದು ಒಂದು ಭಾಷೆಯ ಸೌಂದರ್ಯ ಸಾಧನವಾಗಿರುತ್ತದೆ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಲಿಕ್ಕೆ ಕಾವ್ಯ ನೆರವಾಗುತ್ತದೆ. ಕಾವ್ಯಕ್ಕೆ ಪದಗಳ ದುಂದು, ತುಂಡರಿಸಿಟ್ಟ ಗದ್ಯದ ಭಾಗ ಎನಿಸುವಂತಹ ರಚನೆಗಳು ಸಲ್ಲುವುದಿಲ್ಲ. ಇತ್ತೀಚಿನ ದಿನಗಳಲ್ಲಿ ಜನಪ್ರಿಯವಾಗಿರುವ ಮತ್ತು ಹೊಸ ಬರಹಗಾರರು ಅನುಸರಿಸುತ್ತಿರುವ ಗಪದ್ಯಗಳು (ಗದ್ಯ ರೂಪದ ಪದ್ಯಗಳು) ಮತ್ತು ಕಥನ ಕವನಗಳು ಸಹ ತಮ್ಮದೇ ವೈಶಿಷ್ಟ್ಯನ್ನು ಹೊಂದಿವೆ. ಆದರೆ ಅವುಗಳ ಒಳಗೂ ಅಂತರ್ಗತವಾಗಿರಬೇಕಾದ ಲಯವನ್ನು ಗುರುತಿಸಿಟ್ಟುಕೊಂಡು ಅನುಸರಿಸದೆ ಹೋದರೆ ಅದು ಅರ್ಥವಿಲ್ಲದ ಅನುಕರಣೆ ಎನಿಸಿಬಿಡುವ ಅಪಾಯವಿದೆ ಮತ್ತು ಕವಿತೆಯಾಗಿ ಸೋಲನುಭವಿಸಬೇಕಾಗಿ ಬರುತ್ತದೆ. + +ಇಂತಹ ಹಲವಾರು ಕಾವ್ಯಕಾರಣ ವಿಚಾರಗಳನ್ನು ಮಥಿಸುತ್ತಿರುವುದರ ನಡುವೆಯೇ ಸದಾಶಿವ ಸೊರಟೂರರ ಕವಿತೆಗಳನ್ನು ಓದುವಂತಾಯಿತು. ಸದಾಶಿವ ಸೊರಟೂರರು ಅಂಕಣಕಾರರಾಗಿ, ಲೇಖನ ಬರೆಯುವವರಾಗಿ ಬಹಳಾ ಪ್ರಸಿದ್ಧರು. ಇತ್ತೀಚೆಗೆ ಒಳ್ಳೆಯ ಪ್ರಬಂಧಗಳನ್ನು ಮತ್ತು ಕಥೆಗಳನ್ನೂ ಸಹ ಬರೆದವರು. ಬರಹದ ಸಾಧ್ಯತೆಗಳನ್ನು ಶೋಧಿಸುವ ಮತ್ತು ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಿಕೊಳ್ಳುವ ಸ್ಥಿತಿಸ್ಥಾಪಕತ್ವ ಗುಣದ ಸದಾಶಿವರು ಇಲ್ಲಿ ಈಗ ತಮ್ಮ ಸುಂದರ ಕವಿತೆಗಳದೊಂದು ಗುಚ್ಛ ಹಿಡಿದು ನಿಂತಿದ್ದಾರೆ. ಈ ಹಿಂದೆಯೇ ಅವರ ಒಂದಷ್ಟು ಕವಿತೆಗಳನ್ನು ಓದಿ ಗೊತ್ತಿದ್ದ ನನಗೆ ಈ ಸಂಕಲನದ ಹಸ್ತಪ್ರತಿ ಕೈಗೆ ಸಿಕ್ಕಾಗ ಕುತೂಹಲದಿಂದಲೇ ಓದಲು ಶುರುಮಾಡಿದ್ದೆ. ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚಿನದ್ದು ಸಿಕ್ಕಿದ್ದು ಖುಷಿ ನನಗೆ. + +ಸದಾಶಿವರ ಕವಿತೆಗಳನ್ನು ಓದುವಾಗ ಅವರ ರೂಪಕಗಳ ಕಟ್ಟುವಿಕೆಯಲ್ಲಿನ ತಾಜಾತನ ಹಿತವೆನಿಸುತ್ತದೆ. ಸೌಮ್ಯವಾಗಿ ಹೇಳಿದರೂ ಧ್ವನಿಯಲ್ಲಿನ ದೃಢತೆ ಅವರ ಕವಿತೆಗಳಿಗೊಂದು ಗಟ್ಟಿತನವನ್ನು ತಂದು ಕೊಟ್ಟಿದೆ. ಮಾನವ ಸಹಜ ಭಾವನೆಗಳು ಎಲ್ಲೋ ತಮ್ಮ ನೈಜ ಜಾಗವನ್ನು ಕಳೆದುಕೊಳ್ಳುತ್ತಾ ಕುಸಿಯುತ್ತಿರುವುದನ್ನು ತಮ್ಮ ಪ್ರತಿ ಕವನದಲ್ಲೂ ಆರ್ದ್ರವಾಗಿ ಕಟ್ಟಿಕೊಡುವ ಸದಾಶಿವರದ್ದು ಜೀವಪರ ಕಾಳಜಿ. + +“ಅಪ್ಪ ಅವ್ವ ನಳನಳಿಸುತ್ತಾರೆಯಾರ್ಯಾರೋ ತೊಡಿಸಿ ಹೋದಅವಮಾನದ ಬಟ್ಟೆಯಿಂದನೋಡಿ ಅದೆಷ್ಟು ಗಟ್ಟಿಇಂದಿಗೂ ಅದಕ್ಕೊಂದು ಸವಕಲುಬಂದಿಲ್ಲ” + +ಅವಮಾನ ಬಟ್ಟೆಯಾದದ್ದು ಎಷ್ಟು ಹೊಸದೊ, ಅದನ್ನು ತೊಟ್ಟೂ ನಳನಳಿಸುವ ಅಪ್ಪ ಅಮ್ಮ ಮನಸಿಗೆ ನಾಟಿಬಿಡುತ್ತಾರೆ. ಇದು ತಾನೆ ನಮಗೆ ಆದರ್ಶವಾಗಬೇಕಿರುವುದು… ಅವಮಾನದ ಅಂತ್ಯ ಸೋಲು ಅಥವಾ ಸಾವಲ್ಲವೇ ಅಲ್ಲ. ಅದು ಯಾವತ್ತಿಗೂ ಎದಿರಿಸುವುದು ಮಾತ್ರವೇ ಆಗಿರುತ್ತದೆ. ಕೋಮಲವಾದ ತಾಯಿ ಕಷ್ಟಗಳ ನಡುವೆಯೂ ಬಾಗಿಬಳುಕಿರುವಳೇ ಹೊರತು ಎಂದೂ ಮುರಿದುಹೋದವಳಲ್ಲ. ಅಪ್ಪನ ಉಬ್ಬಿದೆದೆ ಸೋಲುಗಳನ್ನೂ ಬಗ್ಗುಬಡಿದಿದೆಯೇ ಹೊರತು ಪಾತಾಳಕ್ಕೆ ಕುಸಿದಿಲ್ಲ. ಇಂತಹ ಚಿತ್ರಣಗಳನ್ನು ಕಟ್ಟಿಕೊಡುವ ಸದಾಶಿವರ ಕಲೆಗಾರಿಕೆ ಮೆಚ್ಚುವಂಥದ್ದು. + + + +“ಬೆಳಗಿದ ಸೂರ್ಯನಿಗೊಂದುಕತ್ತಲೆಯ ಮೂಲೆಇಲ್ಲವೇ; ಹಣ ಕೊಟ್ಟುಅನ್ನವಹಾಕಿಸುವ ಒಂದು ಮನೆ!”(ಅಪ್ಪನ ವ್ಹೀಲ್ ಚೇರ್ ಮಾರಾಟಕ್ಕಿದೆ) + +ಎನ್ನುವ ಈ ಸಾಲುಗಳಲ್ಲಿ ಅವ ಉರಿಉರಿ ಸೂರ್ಯನೇ ಆಗಿದ್ದರೂ ಕತ್ತಲೆಗೆ ಸಲ್ಲಬೇಕಿರುವುದು ನಿಯಮವೇ… ಬಳಸಿಯಾದ ನಂತರ ಬಿಸಾಡುವ ಹಂತ ಒಬ್ಬನದಾದರೆ ತ್ಯಜಿಸಲ್ಪಟ್ಟದ್ದು ಹಣ್ಣಕ್ಕೆ ವಿಲೇವಾರಿಗೊಂಡು ಮತ್ತೊಬ್ಬರ ಬಳಕೆಗೆ ನಿಲುಕುತ್ತಾ ಹೋಗುವುದೂ ಸಹ ಒಂದು ವರ್ತುಲವೇ… + +“ನನ್ನವ್ವ ನಿತ್ಯ ತರುಣಿ” ಕವಿತೆ ಒಂದು ಚಂದದ ಕವಿತೆ. ಸಣ್ಣ ವಾಚ್ಯತೆ ಇಣುಕಿದೆಯಾದರೂ ಕವಿತೆಯಾಗಿ ಗೆದ್ದಿದೆ. ಕವಿತೆಯ ಯಶಸ್ಸಿಗೆ ಭಾವತೀವ್ರತೆ ಮತ್ತು ಅದರ ಸಮತೋಲನದ ಹದವೂ ಬೇಕು. ಮತ್ತು ಒಂದು ಪ್ರಾಮಾಣಿಕತೆಯೂ ಇರಬೇಕು. ಅದು ಈ ಕವಿತೆಯಲ್ಲಿದೆ ಅನಿಸಿತು. ಇಲ್ಲಿನ ಬಹಳಷ್ಟು ಕವಿತೆಗಳಲ್ಲೂ ಅದನ್ನು ಕಾಣಬಹುದು. + +“ಶಾಲೆ ಹೆಸರಿನದೊಡ್ಡ ಕಟ್ಟಡಗಳಿಂದಮುಗ್ಧತೆಯ ಜಗಿಯುವಅಮಾನವೀಯ ಸದ್ದು” + +“ಬಿಡಿ ಸುಳ್ಳೇ ನಟಿಸಬೇಡಿಆಕೆ ಪ್ರತಿ ಉಸಿರೂ ಓದಬಲ್ಲಳುಪಾಪದ ಭರ್ತಿಗೆ ಚಿಟಕಿಯಷ್ಟು ಬಾಕಿನಮಗೆ ನಾಳೆಗಳಿಲ್ಲ”(ತುದಿ ಪಾದದ ಗುರುತುಗಳು) + +ಎನ್ನುವ ಸಾಲುಗಳು ಕಡು ವಿಷಾದವನ್ನು ಹುಟ್ಟಿಸುತ್ತವೆ. ಎಲ್ಲೊ ಅಂಗಳದಲ್ಲಿ ಆಡಿಕೊಂಡಿರುವ ಮಗಳನ್ನು ಎದೆಯಲ್ಲಿ ಹುದುಗಿಸಿಕೊಳ್ಳಬೇಕೆನಿಸುತ್ತದೆ. ಇಂತಹ ಕವಿತೆಗಳು ಅವರ ಮುಂದಿನ ಕಾವ್ಯಯಾನವನ್ನು ನಿರ್ಧರಿಸುತ್ತವೆ. ಅವರ ಶಕ್ತಿಗೊಂದು ಪುರಾವೆಯಾಗಿಯೂ ಸಲ್ಲುತ್ತವೆ. + +ಮುರಿದ ಕೊಡೆ ಮತ್ತು ಮುಪ್ಪು, ಕವಿಗಳಿಗೂ ಇರಲಿ ಬಿ.ಪಿ.ಎಲ್. ಕಾರ್ಡು… ಮತ್ತಿತರ ಕವಿತೆಗಳು ತಾಜಾ ಅನಿಸುತ್ತವೆ. ಸದಾಶಿವರ ಕವಿತೆಗಳಲ್ಲಿ ವೈವಿಧ್ಯಮಯ ವಸ್ತು ಪ್ರಯೋಗವನ್ನು ಕಾಣಬಹುದು. ಸಣ್ಣ ನಾಯಿಯೊಂದು ಅವರ ಕವಿತೆಯ ರೂಪಕವಾಗುವ ಹೊತ್ತಿನಲ್ಲೇ ಅವ್ವ, ಹೆಣ್ಣು, ಕಾಮ ದಾಹ… ಎಲ್ಲವೂ ಅವರ ಕಾವ್ಯವನ್ನು ವಸ್ತುವಾಗಿ ಆಕ್ರಮಿಸತೊಡಗುತ್ತವೆ. ಪದಗಳೊಂದಿಗಿನ ಅವರ ಸುಲಲಿತ ಆಟ ಮತ್ತು ಓಟ, ಅವರು ಬರಹದಲ್ಲಿ ಎಷ್ಟರ ಮಟ್ಟಿಗೆ ಪಳಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. + +ಒಟ್ಟಾರೆ ಇಲ್ಲಿನ ಎಲ್ಲಾ ಕವಿತೆಗಳು ಒಂದು ಚಂದದ ಅನುಭವವನ್ನಂತೂ ಕೊಡುತ್ತವೆ. ಸದಾಶಿವರು ಕವ್ಯಲೋಕಕ್ಕೆ ಒಂದೊಳ್ಳೆ ಅಡಿ ಇಟ್ಟಿದ್ದಾರೆ, ಮತ್ತವರು ಬಹುದೂರ ಸಾಗಬಲ್ಲವರೂ ಸಹ. ಪದಗಳ ಲಾಲಿತ್ಯಕ್ಕೆ ತೀವ್ರ ಭಾವದ ಜೀವ ಸಂಚಾರವಾಗುವುದರಿಂದ ಕವಿತೆ ಜೀವಂತವಾಗಬಲ್ಲದು. ಮತ್ತು ನೋಡಿದ್ದೆಲ್ಲ ಕವಿತೆಗಳಾಗಬೇಕಿಲ್ಲ. ಆದರೆ ಕಾಡಿದ್ದೆಲ್ಲವೂ ಕವಿತೆಗಳಾದಾಗ ಅವರ ಪರಿಣಾಮವೇ ಬೇರೆ. ಮತ್ತು ಕವಿತೆಯ ಭಾವವೇ ಮುಖ್ಯವಾಗಿದ್ದರೂ ಕಟ್ಟುವಿಕೆಯಲ್ಲಿನ ತಾಂತ್ರಿಕ ಅಂಶಗಳು ಮತ್ತು ಪದ್ಯವೊಂದಕ್ಕೆ ಇರಬೇಕಾದ ಲಯ ಯಾವುದೇ ಕಾರಣಕ್ಕೂ ಅಲ್ಲಗಳೆಯುವಂಥವಲ್ಲ. ಈ ಎಲ್ಲ ಎಚ್ಚರದೊಟ್ಟಿಗೆ ಸದಾಶಿವರ ಮುಂದಿನ ಕಾವ್ಯಯಾನ ಸಾಗಲಿ ಎಂದು ಪ್ರೀತಿಯಿಂದ ಹಾರೈಸುತ್ತೇನೆ. + +“ಎಂದೋ ಬಿದ್ದು ಹೋದ ಮಳೆಈಗ ಗೀಚಿದೆ ಕುಂಟಲಿಪಿಓದುವುದೊ ಮರೆಯುವುದೊ ಗೊತ್ತಿಲ್ಲ!”(ಹೆಜ್ಜೆಗಳು) + + + +ಕೊನೆಯಲ್ಲಿ ಈ ಅಯೋಮಯದ ಸ್ಥಿತಿಯೂ ಕಾವ್ಯವನ್ನು ಪೊರೆಯಬಲ್ಲದು ಅನಿಸಿಬಿಡುತ್ತದೆ. + +ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.” \ No newline at end of file diff --git a/Kenda Sampige/article_312.txt b/Kenda Sampige/article_312.txt new file mode 100644 index 0000000000000000000000000000000000000000..61d4705ff3aecb23e6a99572aa07eb991fc68417 --- /dev/null +++ b/Kenda Sampige/article_312.txt @@ -0,0 +1,33 @@ + + +ಕಾದಂಬರಿಯನ್ನು ಬರೆಯಹೊರಟವನ ಕಾದಂಬರಿ ಇದು. ಸ್ವಾತಂತ್ರ್ಯ ಹೋರಾಟಗಾರರಿಂದಲೇ ತುಂಬಿರುವ ಉತ್ತರಕನ್ನಡ ಜಿಲ್ಲೆಯ ಹಳ್ಳಿಯೊಂದರ ಕಥೆಯನ್ನು ತುಂಬಾ ಆಕರ್ಷಣೀಯವಾದ ಭಾಷಾ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಗಡಿಮನೆಯ ಸುಬ್ರಾಯಪ್ಪನವರ ಕಥೆ ಬರೆಯಲು ಹೊರಟ ಲೇಖಕನೊಬ್ಬನ ಎದುರು ಬಿಚ್ಚಿಕೊಳ್ಳುವ ಸ್ವಾತಂತ್ರ್ಯಪೂರ್ವದ ಕಥೆ ಸ್ವಾತಂತ್ರ್ಯಾ ನಂತರದ ಮುಜುಗರದ ಕಥೆಯಾಗಿಬಿಡುವ ವಿಸ್ಮಯ ಇದು. + +ಹಾಗೆ ನೋಡಿದರೆ ಎರಡು ಪ್ರಮುಖ ಮನೆತನಗಳ ಮೇಲಾಟ ಯಾವ ಊರಲ್ಲಿ ಇಲ್ಲ ಹೇಳಿ? ಎರಡು ಸಮಾನವಾದ ಮನೆತನಗಳ ನಡುವಿನ ಪೈಪೋಟಿ ಎಲ್ಲ ಊರಲ್ಲೂ ಎಲ್ಲ ಕಾಲದಲ್ಲೂ ಇರುವಂಥಹುದ್ದೇ. ಆದರೆ ಈ ಮೇಲಾಟದ ಜೊತೆ ಹೆಣ್ಣಿನ ವಿಷಯ ಸೇರಿಕೊಂಡುಬಿಟ್ಟರೆ ಅದಕ್ಕೊಂದು ಎಂದಿಗೂ ಸಿಗದ ರೋಚಕತೆ ಪ್ರಾಪ್ತವಾಗಿಬಿಡುತ್ತದೆ. ಅಂತಹದ್ದೊಂದು ರೋಚಕತೆಗೆ ಸ್ವಾತಂತ್ರ್ಯ ಹೋರಾಟದ ತಿರುವನ್ನಿಟ್ಟು ದೇಶಪ್ರೇಮದ ಆಯಾಮ ಹೊದಿಸಿದ ಈ ಕಥೆ ಕೊನೆಯವರೆಗೂ ಉಸಿರು ಬಿಡದಂತೆ ನಮ್ಮನ್ನು ಓದಿಸಿಕೊಂಡು ಹೋಗುತ್ತದೆ. + +(ಶ್ರೀಧರ ಬಳಗಾರ) + +ಗಾಂಧೀಜಿಯವರು ಸಿರಸಿಗೆ ಬಂದಾಗ ಎದುರಿಗೆ ಬಂದು ನಿಂತವರ ತಲೆಯ ಮೇಲೆ ಗಾಂಧಿ ಟೋಪಿ ಇಟ್ಟು ಹೋದಾಗಿನಿಂದ ಸ್ವಾತಂತ್ರ್ಯ ಹೋರಾಟದಲ್ಲಿ ವಿದ್ಯುಕ್ತವಾಗಿ ಭಾಗಿಯಾದ ಸುಬ್ರಾಯಪ್ಪನವರನ್ನು ತಡೆಯುವುದಕ್ಕಾಗಿ ಅಪ್ಪ ಮದುವೆ ಮಾಡಿದರೂ ಮದುವೆ ಮುಗಿಸಿ ತಿಂಗಳೊಳಗೆ ಚಳವಳಿಗೆ ಸೇರಿಕೊಂಡವರು. ಅತ್ತ ಮೈನೆರೆದವಳನ್ನು ಮನೆಯಲ್ಲಿ ಇಟ್ಟುಕೊಳ್ಳಲಾಗದೇ ಅಂತೆ ಎಂದು ಕರೆಯುವ ಅನುಸೂಯಾಳನ್ನು ಗಂಡನ ಮನೆಗೆ ಬಿಟ್ಟು ಹೋಗಿದ್ದರು ಆಕೆಯ ಹೆತ್ತವರು. ಅಂತೆಯನ್ನು ಮನೆಗೆ ಸೇರಿಸಲು ಬರುವಾಗಿನಿಂದ ಹಿಡಿದು, ತವರಿನವರು ಕೊಟ್ಟ ತೆಂಗಿನ ಮರವನ್ನು ನೆಡುವುದರವರೆಗೂ ಹೊಸ್ಮನೆಯ ಪುಟ್ಟಣ್ಣನದೇ ಕಾರುಬಾರು. ಚಳವಳಿಗೆ ಹೋದ ಸುಬ್ರಾಯಪ್ಪನವರು ಬರದೇ, ಇತ್ತ ಗಮಯನ ಕಾಟ ತಡೆಯಲು ಮಾಳಕ್ಕೆ ಹೋದ ಅನುಸೂಯಾಳನ್ನು ಬವಂತವಾಗಿ ಭೋಗಿಸಿದ ಪುಟ್ಟಣ್ಣ ಮತ್ತು ಮನೆಗೆ ಹಿಂದಿರುಗಿದ ನಂತರ ತನ್ನದಲ್ಲದ ಮಗ ಗಣಪತಿಯನ್ನು ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಎಲ್ಲವನ್ನೂ ಹಂತಹಂತವಾಗಿ ಹೇಳಲಾಗಿದೆ. + +ಕಥೆ ಬರೆಯುವ ನಿರೂಪಕ ಕೇವಲ ಸುಬ್ರಾಯಪ್ಪನವರನ್ನಷ್ಟೇ ಸಂದರ್ಶಿಸುವುದಿಲ್ಲ. ಅವರ ಹೆಂಡತಿ ಅನುಸೂಯಾರವರನ್ನೂ ಮಾತನಾಡಿಸುತ್ತಾರೆ. ಎಂದೋ ಮಾಳದಲ್ಲಿ ತಮ್ಮ ಅನುಮತಿಯಿಲ್ಲದೇ ನಡೆದು ಹೋದ ಮಿಲನಕ್ಕೆ ಸದಾ ತಮ್ಮ ಗಂಡನ ನೆನಪಿನಲ್ಲೇ ಉಳಿದು ಅದನ್ನು ತನ್ನ ಗಂಡ ಕೊಟ್ಟ ಉಡುಗೊರೆ ಎಂದೇ ತಿಳಿಯುತ್ತಾರೆ. ಅಂತತ್ತೆಯ ಮಾತಿನಲ್ಲೇ ಹೇಳುವುದಾದರೆ ‘ಹುಟ್ಟಲಿರುವ ಕೂಸಿನ ಬಗ್ಗೆ ಹೊರಗಡೆ ಕೃತ್ರಿಮ ಸಂಭ್ರಮವಿದ್ದರೂ ಮನೆಯೊಳಗೆ ಅಪವಿತ್ರ ಭಾವನೆ ಎಲ್ಲರನ್ನೂ ಕಾಡುತ್ತಿತ್ತು.. ಆದರೆ ನನ್ನ ಮನದಲ್ಲಿ ಪಾಪಪ್ರಜ್ಞೆ ಬಾಧಿಸಲಿಲ್ಲ. ಪುಟ್ಟಣ್ಣ ಶರೀರವನ್ನು ಮಾತ್ರ ಮುಟ್ಟಿದ್ದ. ನನ್ನ ಮತ್ತು ನನ್ನೊಳಗಿನ ಜೀವಕ್ಕೆ ಪ್ರಾಣ ನೀಡಿದವರು ‘ನನ್ನವರೇ’ ಎಂಬ ಅಚಲ ಭಾವನನ್ನ ಕಾಪಾಡಿತ್ತು’… ಇಡೀ ಕಾದಂಬರಿಯಲ್ಲಿ ನನ್ನನ್ನು ಸೆಳೆದ ಮಾತು ಇದು. + +ಎಂದೋ ತನ್ನ ಯಾವುದೇ ಪಾತ್ರ, ಒಳಗೊಳ್ಳುವಿಕೆ ಏನೂ ಇಲ್ಲದೇ ಕೈಮೀರಿ ಘಟಿಸಿಹೋದ ಕಾರ್ಯಕ್ಕೆ ಹೆಣ್ಣನ್ನು ಹೊಣೆಯಾಗಿಸಿ ಬಹಿಷ್ಕಾರ ಹಾಕುವ ಕಾಲಘಟ್ಟದಲ್ಲಿ ಅಂತತ್ತೆಯ ಬಾಯಲ್ಲಿ ಇಂತಹ ಮಾತೊಂದನ್ನು ಹೇಳಿಸಿದ್ದಕ್ಕಾಗಿ ಶ್ರೀಧರ ಬಳಗಾರರಿಗೆ ಧನ್ಯವಾದ ಹೇಳದೇ ಇರಲಾರೆ. + + + +ಇವೆಲ್ಲದರ ನಡುವೆ ಬಲವಂತವಾಗಿ ಅಂತತ್ತೆಯನ್ನು ಪಡೆದುಕೊಂಡ ಪುಟ್ಟಣ್ಣನ ಮನಸ್ಥಿತಿ ಕೂಡ ಚಿತ್ರಿತವಾಗಿದೆ. ಒಮ್ಮೆ ಕದ್ದು ಕುಡಿದ ಹಾಲಿಗಾಗಿ ಮತ್ತೆ ಮತ್ತೆ ಹೊಂಚುಹಾಕುವ ಬೆಕ್ಕಿನಂತೆ ಕಂಡರೂ ಆತ ಮತ್ತೆಂದೂ ಎಲ್ಲೆ ಮೀರಿ ಹೋಗುವುದಿಲ್ಲ. ಆದರೆ ಬೊಂಬ್ಡಿಗೆ ಹೋದ ಪುಟ್ಟಣ ಅದು ಹೇಗೆ ಹೆಣವಾದನೋ ಕೊನೆಯವರೆಗೂ ಸುಳಿವು ಹತ್ತದೇ ಅನುಮಾನದ ಸುಳಿ ಎಲ್ಲರತ್ತಲೂ ತಿರುಗುವುದನ್ನು ಕಾಣಬಹುದು. + +ಸ್ವಾತಂತ್ರ್ಯ ಹೋರಾಟದ ಜೈಲುವಾಸ ಮುಗಿಸಿ ಹಿಂದಿರುಗಿ ಬಂದ ಸುಬ್ರಾಯಪ್ಪನವರು ಹೆಂಡತಿಯನ್ನು ದೂರವಿಟ್ಟರು ನಿಜ. ಆದರೆ ಅದೆಲ್ಲೋ ದೂರದಲ್ಲಿ ತನ್ನದೇ ಊರಿನ ಆಚಾರಿಯ ಮಗಳನ್ನು ದೂರದ ಕಾಶಿಯಲ್ಲಿ ಮದುವೆ ಆದದ್ದು ತಪ್ಪು ಎಂದು ಒಪ್ಪಿಕೊಳ್ಳುವುದಿಲ್ಲ. ತನ್ನ ತಪ್ಪಿಲ್ಲದಿದ್ದರೂ ಆಗಿ ಹೋದ ಘಟನೆಗೆ ಹೆಣ್ಣನ್ನು ಹೊಣೆ ಮಾಡಿ ಬಹಿಷ್ಕಾರ ಹಾಕುವ ಸಮಾಜ ಗಂಡಿನ ತಪ್ಪನ್ನು ಸಲೀಸಾಗಿ ಒಪ್ಪಿಬಿಡುವುದನ್ನು ಇಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ. ಇಲ್ಲಿ ಇನ್ನೊಂದು ಸೂಕ್ಷ್ಮದ ಅನಾವರಣವೂ ಆಗಿದೆ. ಮದುವೆಯಾಗಲು ಸ್ವಜಾತಿಯ ಹೆಣ್ಣಿನ ಕೊರತೆ ಎದುರಿಸುವ ಜಟಿಲ ಸ್ಥಿತಿ ಅದು. ಮದುವೆ ಆಗಬೇಕು, ಆದರೆ ಸ್ವಜಾತಿಯಲ್ಲಿ ಹೆಣ್ಣಿಲ್ಲ. ಹೀಗಾಗಿ ತಲೆಯ ಮೇಲಿನ ಕಿರೀಟ ಉದುರದಂತೆ ದೂರದಲ್ಲೆಲ್ಲಿಂದಲೋ ಹೆಣ್ಣನ್ನು ತಂದು ಇಲ್ಲಿಯವರನ್ನು ಒಪ್ಪಿಸುವ ಪರಿಪಾಠದ ಪಡಿಪಾಟಲು ಇಲ್ಲಿ ಬಿಂಬಿತವಾಗಿದೆ. + +ಇತ್ತ ಸತ್ತು ಹೋದ ಪುಟ್ಟಣ್ಣನ ಹೆಂಡತಿ ತುಂಗೆಯ ಬೆಂಗಾವಲಿಗೆ ಪುನಃ ಅಂತತ್ತೆಯೇ ಹೊರಡುತ್ತಾಳೆ. ಆಕೆಯ ಪಾಲಿಗೆ ಬರಬೇಕಾದ ಆಸ್ತಿಯನ್ನು ಜತನ ಮಾಡಿ ತುಂಗೆಯನ್ನು ಕಾಯುತ್ತಾಳೆ. ‘ಪುಟ್ಟಣ್ಣನ ಅಂತ್ಯಸಂಸ್ಕಾರ ಸರಿಯಾಗಿ ಮಾಡಿದ್ದಾರೋ ಏನೋ, ಗೋಕರ್ಣದಲ್ಲಿ ನಮ್ಮ ಪುರೋಹಿತರಿದ್ದಾರೆ ಗಪ್ಪತಿಯನ್ನು ಜೊತೆಗೆ ಕರೆದುಕೊ. ಅಲ್ಲೊಂದು ಶಾಸ್ತ್ರ ಆಗಿ ಹೋಗಲಿ. ಖರ್ಚಿಗೆ ನಾನು ಕೊಡುತ್ತೇನೆ.’ ಎನ್ನುತ್ತ ಗೋಕರ್ಣಕ್ಕೆ ಗಪ್ಪತಿಯನ್ನು ಕಳುಹಿಸಿದ ಉದ್ದೇಶ ಇಬ್ಬರಿಗೂ ಅರಿವಿತ್ತು ಎನ್ನುವುದರ ಮೂಲಕ ಹೆಣ್ಣಿನೊಳಗಿನ ಲೋಕವನ್ನು ತೆರೆದಿಡುತ್ತಾರೆ. + +ಜೀವಮಾನವಿಡೀ ಬೇರೆಬೇರೆಯಾಗಿಯೇ ಬದುಕು ಸಾಗಿಸಿದ ಅಂತತ್ತೆ ಹಾಗೂ ಸುಬ್ರಾಯಪ್ಪನವರ ವಿಕ್ಷಿಪ್ತ ಸಂಸಾರದ ಊರಿನವರಿಗೆಲ್ಲ ಗೊತ್ತಿದ್ದೂ ಗೊತ್ತಿರದ ಗುಟ್ಟು. ಇದರ ನಡುವೆ ಅಂತತ್ತೆಯ ಮಗ ಬೇರೆ ಮನೆಮಾಡಿ ಉಳಿದದ್ದು ಇಲ್ಲಿ ಅಂತಹ ಮಾನ್ಯತೆಯನ್ನೇನೂ ಪಡೆಯುವುದಿಲ್ಲ. + +ಇಡೀ ಕಾದಂಬರಿಯಲ್ಲಿ ಗಮನ ಸೆಳೆಯುವುದು ಹವ್ಯಕ ಭಾಷೆಯ ಮಾತುಗಳು. ಇಡೀ ಉತ್ತರ ಕನ್ನಡದಲ್ಲಿ ಪ್ರತಿ ಜನಾಂಗಕ್ಕೂ ಅದರದ್ದೇ ಆದ ಒಂದೊಂದು ಭಾಷೆ ಇದೆ. ಅದರದ್ದೇ ಆದ ಏರಿಳಿತಗಳಿವೆ. ಹಾಗೆಯೆ ಒಂದು ಪ್ರದೇಶದಲ್ಲಿ ಯಾವ ಜನಾಂಗ ಪ್ರಬಲವಾಗಿದೆಯೋ ಆ ಜನಾಂಗದ ಮಾತನ್ನು ಸಾಮಾಜಿಕವಾಗಿ ಕೆಳವರ್ಗದ ಜನಾಂಗಗಳೂ ಅನುಸರಿಸುತ್ತವೆ. ಅಂತಹದ್ದೊಂದು ರೂಢಿ ಇಲ್ಲಿದೆ. + +ಉಗ್ರಾಣಿ ಶಂಕ್ರನಿಂದ ಹಿಡಿದು ಹೆರಿಗೆಯ ಕೆಲಸಕ್ಕೆ ಬರುವ ಲಕ್ಷ್ಮಿಯವರೆಗೆ ಎಲ್ಲರೂ ಹವ್ಯಕ ಭಾಷೆ ಬಳಸುವವರೇ. ಮಾತನಾಡುತ್ತ ಆಡುತ್ತ ಪುಸ್ತಕದ ಭಾಷೆಗೆ ಹೊರಳುವ ಕೆಲವು ಸಂಭಾಷಣೆಗಳನ್ನು ಹೊರತುಪಡಿಸಿದರೆ ಭಾಷಾಪ್ರಯೋಗದ ದೃಷ್ಟಿಯಿಂದಲೂ ಇದೊಂದು ಗಟ್ಟಿ ಪ್ರಯೋಗ. ವಿ. ತಿ. ಶೀಗೆಹಳ್ಳಿಯವರ ‘ತಲೆಗಳಿ’ಯ ನಂತರ ಬಂದ ಮತ್ತೊಂದು ಯಶಸ್ವಿ ಪ್ರಯೋಗ ಎನ್ನಬಹುದು. + + + +ಶ್ರೀಧರ ಬಳಗಾರ ನನ್ನ ಬಿಇಡಿ ಗುರುಗಳು. ನನಗೆ ಇಂಗ್ಲೀಷ್ ಮೆಥೆಡ್ ಕಲಿಸಿದ ಶಿಕ್ಷಕರು. ಮೆಲುಮಾತಿನ ಅವರ ಕಲಿಸುವಿಕೆಯ ಓಘದಲ್ಲಿ ಕಳೆದು ಹೋದವರು ನಾವು. ನಾಲ್ಕೇ ನಾಲ್ಕು ಜನರಿದ್ದ ನಮ್ಮ ಇಂಗ್ಲೀಷ್ ಮೆಥೆಡ್ ಕ್ಲಾಸ್ ನ್ನು ಅವರ ರೂಂ ನಲ್ಲಿಯೇ ಅವರ ಸುತ್ತ ಖುರ್ಚಿ ಹಾಕಿ ಕುಳಿತುಕೊಂಡು ಕೇಳುತ್ತಿದ್ದೆವು. ಅವರ ತಣ್ಣನೆಯ ಶ್ರಾವಣದ ಮಳೆಯಂತ ಜಿಟಿಜಿಟಿ ಮಾತು ನಮಗೆ ಅದೆಷ್ಟು ರೂಢಿಯಾಗಿತ್ತು ಎಂದರೆ ಉಳಿದ ಮೆಥೆಡ್ ಶಿಕ್ಷಕರು ಜೋರು ಧ್ವನಿಯಲ್ಲಿ ಹೇಳಿದರೆ ಯಾಕೆ ಇವರು ಕಿರುಚುತ್ತಾರೆ ಎನ್ನಿಸಿಬಿಡುತ್ತಿತ್ತು. ಅಂತಹ ಮೆಲುವಾದ ಸಂಗೀತದಂತೆ ಭೂತ ವರ್ತಮಾನಗಳನ್ನು ಜೊತೆಯಾಗಿ ಬೆಸೆಯುತ್ತ ಸಾಗುವ ‘ಮೃಗಶಿರ’ ಮತ್ತೆ ಮತ್ತೆ ಓದನ್ನು ಮೆಲುಕಾಡಿಸುವಂತೆ ಮಾಡಿರುವುದಕ್ಕಾಗಿ ಗುರುಗಳಿಗೆ ವಂದನೆಗಳು. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_313.txt b/Kenda Sampige/article_313.txt new file mode 100644 index 0000000000000000000000000000000000000000..1ada98f67032a246b40d555d7f94e6e81feb4e2a --- /dev/null +++ b/Kenda Sampige/article_313.txt @@ -0,0 +1,49 @@ + + +ಸರೀ ಮಳೆ ಸುರಿದಿತ್ತು. ಹೈಕಳು ಮಳೆಯಲ್ಲಿ ಸಂಭ್ರಮಿಸಿ ತಮ್ಮನ್ನು ತಾವೇ ಮರೆತು ಆಟ ಆಡುತ್ತಿದ್ದರು. ಮಳೆಯ ಗುಳ್ಳೆಗಳ ಹಿಡಿಯುತ್ತಾ ಅವುಗಳ ಹಿಡಿಯುವಾಗ ಅವು ಒಡೆದು ಹೋಗುತ್ತಿದ್ದುದನ್ನು ಕಂಡು ಪೆಚ್ಚುಮೋರೆ ಹಾಕಿಕೊಳ್ಳುತ್ತಿದ್ದವು. ಆ ಹೈಕ್ಳ ತಾಯಿ ರುಕ್ಮಣಮ್ಮ ತನ್ನ ಗಂಡ ಮೂಡ್ಲಗಿರಿಯನನ್ನು ಶಪಿಸಿಕೊಳ್ಳುತ್ತ ಗೋಡೆಯಿಂದ ಇಳಿದು ಮನೆಯನ್ನೆಲ್ಲಾ ತುಂಬಿರುವ ಮಳೆನೀರನ್ನು ತುಂಬಿ ಹೊರ ಹಾಕುತ್ತಿದ್ದಳು. ‘ಇಲ್ಲ ಕಣಮ್ಮಿ ಗ್ಯಾರಂಟಿ ಈ ಸಲ ಬೇಸಿಗೆಗೆ ದೊಡ್ಡ ಚೆಲ್ಲೂರಿಂದ ಕರ್ಲು ತರಿಸಿ ಮಾಳಿಗೆಗೆ ಹಾಕಿ ಸರಿಮಾಡ್ತೀನಿ’ ಎಂದು ಅವಳ ಗಂಡ ಸಾವಿರ ಸಲ ಹೇಳಿದ್ದು ಮನಸ್ಸಿಗೆ ಬಂದು ಹೋಗಿ ಬಂದು ಹೋಗಿ ಮಾಡುತ್ತಿತ್ತು. ಇದನ್ನು ನೆನೆದು ಮಳೆಯ ತಂಪಿನಲ್ಲೂ ಕೆಂಡಮಂಡಲವಾಗಿದ್ದಳು. + +ಗೋಡೆಗೆ ಆನಿಸಿ ಇಟ್ಟಿದ್ದ ಸೊಸೈಟಿಯಿಂದ ತಂದ ರೇಷನ್ನ್ ಚೀಲ ಒಡೆದು ಮನೆಯೆಲ್ಲಾ ತುಂಬಿದ್ದ ನೀರಲ್ಲಿ ಅಕ್ಕಿಯ ಹುಳುಗಳು ತೇಲುತ್ತಾ ಇದ್ದವು. ಅಕ್ಕಿಯೆಲ್ಲಾ ನೆಂದು ಪುಡಿ ಪುಡಿಯಾಗಿ ಅವಳ ಪಾದಗಳ ಒತ್ತುತ್ತಿದ್ದವು. ಗೋಡೆಗುಂಟ ಇಳಿದ ಮಳೆನೀರ ಜೊತೆ ಅಕ್ಕಿಯೂ ಬೆರೆತು, ಅವಳು ಬೇಸನ್ನಿನಲ್ಲಿ ಎತ್ತಿಹೊರಗೆ ಹಾಕುವಾಗ ಬೆಳ್ಳಗೆ ಹರಿದು ಹೋಗುತ್ತಿತ್ತು ನೀರು. ಹೈಕ್ಳು ಇದ್ಯಾವುದರ ಪರಿವಿಲ್ಲದೆ ಮಳೆನೀರಗುಳ್ಳೆಯಲಿ ಆಟವಾಡುತ್ತಿದ್ದವು. + +ಅವಳು ಇಂತಹ ಏಳು ಮಳೆಗಾಲಗಳನ್ನು ಅದೇ ಮನೆಯಲ್ಲಿಯೇ ಕಳೆದಿದ್ದಾಳೆ. ಮೂಡ್ಲಿಗಿರಿಯನೂ ಸಹ ಏಳು ಬೇಸಿಗೆಯಲ್ಲಿ ಏಳುನೂರರಷ್ಟು ಮಿರುಗುವ ಬಿಸಿಲಗುದುರೆಗಳ ತೋರಿಸಿದ್ದಾನೆ. ತನ್ನ ಪಾಡಿಗೆ ತಾನು ಗೊಣಗುತ್ತ ಶಪಿಸುತ್ತಾ ನೀರನ್ನು ಹೊರಗೆ ಹಾಕುವಾಗ ಚಂದ್ರಾಚಾರಿ ಕೆತ್ತುತ್ತಿದ್ದಂತಹ ಮರದ ಗೊಂಬೆಗಳು ಅವಳ ಮನಸಿನೊಳಗೆ ಇಣುಕಿ ಇಣುಕಿ ಹೋಗುತ್ತಿದ್ದವು. + +ಒಂದು ಸಲ ಚಂದ್ರಾಚಾರಿಯನ್ನು ನೋಡಲು ಕತ್ತಲಲ್ಲಿ ಅವನ ಮನೆಯ ಹಿತ್ತಲಿಗೆ ಹೋದಾಗ ಲಕ್ಷ್ಮಿ ಚೇಳು ಕಚ್ಚಿದ್ದ ಗುರುತು ಅವಳ ಎಡಗಾಲ ಹೆಬ್ಬಟ್ಟಿನ ಮೇಲೆ ಅಚ್ಚುಒತ್ತಿದ ರೀತಿ ಇನ್ನೂ ಹಾಗೆ ಇತ್ತು. ಆದರೂ ಆ ಕತ್ತಲಲ್ಲೂ ಅವನು ಕೊಟ್ಟ ಮುತ್ತು ಹಣೆಯ ಮೇಲೆ ಹಸಿಯಾಗಿಯೇ ಇದ್ದು ಹಣೆ ಮುಟ್ಟಿದಾಗೆಲ್ಲಾ ಚಂದ್ರಾಚಾರಿ ಮಿಂಚಿ ಹೋಗುತ್ತಿದ್ದ. ಈ ಲಹರಿಗಳ ಜೊತೆಗೆ ‘ಚಂದ್ರಾಚಾರಿಯನ್ನು ಮದುವೆಯಾಗಿದ್ದರೆ ಅವನ ಮರದ ಕೆತ್ತನೆಗಳ ಸುಂದರ ಗೊಂಬೆಗಳಂತೆ ಬದುಕೂ ಸುಂದರವಾಗಿರುತ್ತಿತ್ತು’ ಎಂದು ತನ್ನ ಮನಸ್ಸಿನ ಮೂಲೆಯಲ್ಲೆಲ್ಲೋ ಯಾರೋ ಪಿಸುನುಡಿಯುತ್ತಿದ್ದಂಗಿತ್ತು. + +ಮೂಡ್ಲಗಿರಿಯನನ್ನು ಮದುವೆಯಾಗಿ ಏಳುವರ್ಷಗಳನ್ನು ಕಳೆದಿರುವ ಆ ನಾಲ್ಕು ಹೆಣ್ಣು ಹೈಕ್ಳ ತಾಯಿ ರುಕ್ಮಣಮ್ಮ ಬೆಳ್ಳಗೆ ಸಪೂರಾಗಿ ಇದ್ದಳು. ಕುಕ್ಕರಗಾಲಲ್ಲಿ ಕೂತು ನೀರನ್ನು ಹೊರಗೆ ಮೊಗೆದು ಹಾಕುವಾಗ ಅವಳ ಮೀನು ಖಂಡಗಳು ತೊಡೆಗೆ ಒತ್ತಿಕೊಂಡು ಚಪ್ಪಟೆಯಾಗಿ ಕಾಣುತ್ತಿದ್ದವು. ಸೀರೆಯೆಲ್ಲಾ ಒದ್ದೆಯಾಗಿದ್ದರೂ ಲೆಕ್ಕಿಸದೆ ತನ್ನ ಪಾಡಿಗೆ ತಾನು ಮಳೆನೀರ ಮೊಗೆದು ಮೊಗೆದು ಹಾಕುತ್ತಿದ್ದಳು. ಅವಳ ಮೈಕಟ್ಟು ಇನ್ನೂ ಮದುವೆಯಾಗಿಲ್ಲದ ಹೆಂಗಸಿನ ಮೈಕಟ್ಟಿನಹಾಗೆಯೇ ಇತ್ತು. ಅದನ್ನು ಅವಳು ಕನ್ನಡಿ ಮುಂದೆ ನಿಂತು ಹಣೆಗೆ ಕುಂಕುಮ ಇಟ್ಟುಕೊಳ್ಳುವಾಗ ನೋಡಿಕೊಂಡು ಒಳಗೊಳಗೇ ಸುಮಾರು ಸಲ ನಾಚಿಕೆಯಿಂದ ನಕ್ಕು, ನಗುವಾಗ ಬಲದ ಕೆನ್ನೆಯ ಮೇಲೆ ಬೀಳುವ ಗುಳಿಯ ಕಂಡು ಖುಷಿ ಪಡುತ್ತಿದ್ದಳು. ‘ನಿನ್ನ ಗಂಡನಿಗಂತೂ ಮಾನ ಮರ್ಯಾದೆ ಎಲ್ಲ ಅಂದರೆ ನಿನಗೂ ಇಲ್ಲವೇನೇ? ಮೊದಲು ಧರ್ಮಪುರದ ಹಾಸ್ಪೆಟ್ಲಿಗೋಗಿ ಆಪರೇಷನ್ಮಾಡಿಸಿಕೊಂಡು ಬರಬಾರದೆ’ ಎಂದು ನೆರೆಹೊರೆಯ ಹೆಂಗಸರು ಬೈದರೂ, ಆ ಮಾತುಗಳನ್ನು ತಲೆಒಳಗೆ ಹಾಕಿಕೊಳ್ಳದೆ ಇದ್ದಳು. + +ಅವಳ ಗಂಡ ಮೂಡ್ಲಗಿರಿ ಮೂರುದಿನ ಮನೆಯಲ್ಲಿದ್ದರೆ ನಾಲ್ಕುದಿನ ಹೊರಗಿರುತ್ತಿದ್ದ. ಕಾಸೀಂ ಸಾಬಿ ಜೊತೆ ಸೇರಿ ಚರ್ಮದ ವ್ಯಾಪಾರ ಮಾಡುತ್ತಿದ್ದ. ಅದು ಅವನ ಏಳನೇ ಕಸುಬಾಗಿದ್ದೂ, ‘ಯಾವ ಕೆಲಸಾನೂ ನೆಟ್ಟಗೆ ಮಾಡದೆ ವರ್ಷಕ್ಕೊಂದು ಕಸುಬು ಬದಲಿಸಿದರೆ ಕೈ ಹತ್ತದೆಯಾ’ ಎಂದು ಸುಮಾರು ಸಲ ರುಕ್ಮಣಮ್ಮ ಗಂಡನಿಗೆ ಬೈದಿದ್ದಿದೆ. ಅದ್ಯಾವುದಕ್ಕೂ ಕೇರ್ ಮಾಡದೆ ಮೂಡ್ಲಗಿರಿ ಇದ್ದ. ಒಂದೊಂದು ಸಲ ತಿಂಗಳುಗಟ್ಟಲೆ ಊರು ಬಿಟ್ಟರೂ ಸಂಸಾರದ ಖರ್ಚಿಗೆ ಎಂದೂ ಕಡಿಮೆ ಮಾಡಿರಲಿಲ್ಲ. ಅವನನ್ನು ನೆನೆಸಿಕೊಂಡು ಒಳಗೊಳಗೇ ಅಳುತ್ತಿದ್ದಳು. ಆದರೆ ಈ ಸಲ ಆದಹಾಗೆ ಈ ಹಿಂದೆಂದೂ ಇಷ್ಟೊಂದು ಜಿಗುಪ್ಸೆಗೊಂಡಿರಲಿಲ್ಲ. ಯಾಕಂದರೆ ಅವಳ ಗಂಡ ಈ ಆರುತಿಂಗಳಿಂದ ಮನೆಗೆ ಬಂದಿರಲೇಯಿಲ್ಲ. + +ಹೀಗೆ ತನ್ನ ಪಾಡಿಗೆ ತಾನು ದುಃಖದಿಂದ ನೀರನ್ನು ಹೊರಗೆ ಹಾಕುತ್ತಿರುವಾಗ, ಭಜನೆ ರಾಮಣ್ಣ, ‘ಶಿವ ಶಿವ ಎಂಥ ಮಳೆ! ಮಣ್ಣಿನ ಒಡಲು ಬಿರಿಯೂವಾ ಮಳೆಯೂ.. ಮಣ್ಣಿನ ಒಡಲು ಅರಳೂವಾ ಮಳೆಯೂ’ ಎಂದು ಗುನುಗಿಕೊಂಡು ಬಂದ. ಅಷ್ಟು ಹೊತ್ತಿಗೆ ರುಕ್ಮಣಮ್ಮ ನೀರೆಲ್ಲಾ ಮೊಗೆದು ಕಾಫಿ ಮಾಡಲೆಂದು ಸೀಮೆಎಣ್ಣೆ ಸ್ಟವ್ ಹೊತ್ತಿಸುತ್ತಿದ್ದಳು. ಬಂದವನೆ ತನ್ನ ಫೆವರೇಟ್ ಭಜನೆ ಪದವ ಅರ್ಧಕ್ಕೆ ನಿಲ್ಲಿಸಿ ‘ಅವನಿಗೆ ಇದು ಬೇಕಿತ್ತಾ? ನೋಡು ಎಂಥಾ ಹೊತ್ತು ಬಂತು? ಎಲ್ಲಾ ವಿಧಿಯಾಟ!’ ಎಂದ. ‘ಅದೇನು ರಾಮಣ್ಣ ಭಜನೆ ಪದದಂಗೆ ಒಗಟು ಒಗಟು ಮಾತಾಡ್ತೀಯಾ. ಅಂಥದ್ದೇನಾಯ್ತು? ಆಗಬಾರದ್ದು? ಅಂದಹಾಗೆ, ನನ್ನ ಗಂಡುಂದ ವರ್ತಮಾನ ಏನಾರ ಸಿಕ್ತಾ ವಸಿ’ ಎಂದು ಕೇಳಿದಳು. ‘ಅಗ ನೋಡು! ಅದೇ ವಿಷ್ಯ ಮಾತಾಡನಾ ಅಂಥ ಬಂದೆ. ಏನೇ ಅಂದರೂ ನಿನ್ನ ಗಂಡುಂಗೆ ನೂರು ವರ್ಷ ಬಿಡು. ಯಾಕಂದರೆ ನಿನ್ನ ಗಂಡ ಬದುಕಿದ್ದಾನಂತೆ’ ಅಂದ. ‘ಏನಂಥ ಸತ್ಪುರುಷ, ನೂರು ವರ್ಷ ಬದುಕೋಕೆ! ಹೆಂಡ್ರು ಅನ್ನಂಗೆ ಇಲ್ಲ. ಮಕ್ಕಳು ಅನ್ನಂಗೆ ಇಲ್ಲ. ಸುಮ್ಮನೆ ತಿರುಗುತ್ತೆ. ಅಲ್ಲಾ ತಿಂಗಳಾನುಗಟ್ಟಲೇನೆ ಮನೆ ಬಿಟ್ಟು ಹೋಗೋದು?’ ಎಂದು ಸಿಟ್ಟಾಗಿ, ‘ಇಂಥ ಗಂಡಸಿಗೆ ಸಂಸಾರ ಯಾಕೆ? ಸುಮ್ಮನೆ ಯಾವುದಾದರೂ ಮಠಕ್ಕೆ ಸೇರಬಾರದೆ ಕಾವಿ ತೊಟ್ಟು?’ ಅಂದಳು. ‘ನೀನೊಳ್ಳೆ ತಂದೆ! ಸನ್ಯಾಸಿ ಆಗುವಂಗಿದ್ದರೆ ನಾಲ್ಕು ಮಕ್ಳ ತಂದೆ ಆಗುತ್ತಿದ್ದನಾ? ಯಾರ್ಯಾರೋ ಕರಕಂಡು ಹೋಗ್ತಾರೆ. ಅದೆಲ್ಲಿಗೆ ಹೋಗ್ತಾನೋ, ಏನೋ ಶಿವಾ! ಪಾಪ ಅವನು ತಾನೆ ಏನು ಮಾಡ್ತಾನೆ! ವಿಧಿ. ವಿಧಿಕಣವ್ವಾ ವಿಧಿ! ವಿಧಿ ಅವನ ಕೈ ಕಾಲುಗಳಲ್ಲಿ ಚಕ್ರಗಳನ್ನು ಬರೆದಿರುವಾಗ’ ಎಂದ. ‘ಸುಮ್ಮನಿರು ರಾಮಣ್ಣ ಅಂಥ ಪುಣ್ಯಾತ್ಮನ ಪರ ಏನು ವಹಿಸಿಕೊಂಡ ಮಾತಾಡ್ತೀಯಾ, ನೆನೆಸಿಕೊಂಡರೆ ಒಡಲಲ್ಲಿ ಬೆಂಕಿ ಹತ್ತಿದಂಗೆ ಆಗುತ್ತೆ’ ಅಂದು, ತನ್ನ ಎರಡು ಕೈಗಳನ್ನು ಅವನತ್ತ ಚಾಚಿ ‘ಇಗ ನೋಡು ನನ್ನ ಕೈಯಲ್ಲೂನೂವಿ ಚಕ್ರಗಳು ಹೆಂಗವೆ’ ಅಂತ ತೋರಿಸಿದಳು. ‘ಅಂಥವರನ್ನು ಕಟ್ಟಿಕೊಂಡು ಏಗಿ ಏಗಿ ಸಾಕಾಗದೆ. ಅಲ್ಲಾ ರಾಮಣ್ಣ ನೀನೆ ನೋಡು ಹೆಂಗೆ ಸೋರಿದೆ ಮನೆ. ಯೋಗ್ತಿಗೆ ಒಂದು ಮನೆ ಸ್ಯಾಂಕ್ಷನ್ನ್ ಮಾಡಿಸಿಕೊಳ್ಳುವುದಕ್ಕೆ ಆಗಿಲಿಲ್ಲವೆ ಪಂಚಾತಿಯಿಂದ. ಗಂಡಸಂತೆ ಗಂಡ್ಸು. ಥೂ!’ ಎಂದು ಶಪಿಸುತ್ತಾ ಕಾಫಿಯನ್ನು ಸೋಸಿ ಅವನಿಗೆ ಕೊಟ್ಟಳು. + +ತನ್ನ ಹೈಕ್ಳು ಅಂಗಳದಲ್ಲಿದ್ದಾರ ಅಂತ ಆ ಕಡೆ ನೋಡಿ ಇಲ್ಲದುದು ಕಂಡು ಸುಮ್ಮನಾಗಿ ಕಾಫಿ ಲೋಟದ ಕಪ್ಪಿಗೆ ಬಾಯಿಟ್ಟಳು. ‘ಸುಮ್ಮನೆ ಮುಂದಿನ ಪಂಚಾಯ್ತಿ ಎಲೆಕ್ಷನ್ನನಲ್ಲಿ ನೀನೇ ನೀಂತ್ಕೊ ಬಾರ್ದೆ. ಹೆಂಗಿದ್ರು ಹೆಂಗಸರಿಗೆ ಜಾಸ್ತಿ ಸೀಟು ಕೊಡ್ತಾರಂತೆ ಈ ಸಲ’ ಎಂದ. ಅದಕ್ಕೆ ರುಕ್ಮಣಮ್ಮ ‘ನಮಗೆ ರಾಜಕೀಯ ಎಲ್ಲಾ ಯಾಕೆ? ಸುಮ್ಮನೆ ಅಚ್ಚುಕಟ್ಟಾಗಿ ಮರ್ಯಾದೆಯಿಂದ ಬದುಕಿಹೋಗೋದು ಬಿಟ್ಟು’ ಎಂದಳು. ಬಂದ ವಿಷಯಾನೇ ಮರೆತೆನೋಡು ಅಂತ ಅಂದುಕೊಂಡು ರಾಮಣ್ಣ, ‘ನಿನ್ನೆ ದಿನ ಕೋಡಿಮನೆ ಕರಿಯಜ್ಜನ ಮನೆಯಾಗೆ ಭಜನೆ ಇತ್ತು. ಅಲ್ಲಿ ಮಾತಾಡಿಕೊಳ್ಳುತ್ತಿದ್ದರು. ನಿನ್ನ ಗಂಡ ಮೂಡ್ಲಗಿರಿಯನ್ನ ಬಳ್ಳಾರಿ ಜೈಲಲ್ಲಿ ಇಟ್ಟವರಂತೆ. ಆದರೆ ಕಾಸೀಂ ಸಾಬಿ ತಪ್ಪಿಸಿಕೊಂಡು ಹೋದನಂತೆ. ಅವನನ್ನು ಈಗ ಪೊಲೀಸಿನವರು ಹುಡುಕುತ್ತಿದ್ದಾರಂತೆ. ಮೊನ್ನೆ ಸಾಬರ ಕೇರಿಗೆ ಪೊಲೀಸ್ ಜೀಪ್ ಬಂದಿತ್ತಲ್ಲ ಇದೇ ವಿಷಯಕ್ಕೆ ಅಂತೆ’ ಎಂದು ಹೇಳಿದನು. + + + +ಇಷ್ಟು ಹೊತ್ತು ತನ್ನ ಗಂಡನನ್ನು ಬೈಯುತ್ತಿದ್ದ ರುಕ್ಮಣಮ್ಮ ಪೊಲೀಸ್ನವರನ್ನು ಬೈಯಲು ಪ್ರಾರಂಭಿಸಿದಳು: ‘ಆ ಪಾಪಿ ಮುಂಡೇವುಕೆ ನನ್ನ ಗಂಡನೇ ಬೇಕಿತ್ತೇ ಹಿಡಿದುಕೊಂಡು ಹೋಗೋಕೆ? ಮಟ್ಕಾ ಆಡಿಸಿ ಆಡಿಸಿ ಮನೆ ಹಾಳು ಮಾಡ್ತಿರೋ ಆ ಸಿದ್ದಪ್ಪುನ್ನ ಹಿಡಿದುಕೊಂಡು ಹೋಗೋಕೆ ಆಗಲಿಲ್ಲವೆ? ಪಂಚಾತಿ ಅಧ್ಯಕ್ಷ ಕೊಲೆ ಮಾಡೀನೂ ರಾಜಾರೋಷವಾಗಿ ಅಡ್ಡಾಡ್ತ ಅವ್ನಲ್ಲ ಅವುನಾದರೂ ಸಿಗಲಿಲ್ವೆ ಇವರ ಕೈಗೆ? ಇವರ ಕೈ ಸೇದು ಹೋಗಾ. ಮದುವೆಯಾಗಿ ಮಕ್ಕಳಿರೋ ಆ ವಡ್ಡರ ಪೆದ್ದಿನ ಹೊತ್ತುಕೊಂಡು ಹೋದನಲ್ಲ ಆ ನನ್ನ ಮೈದ್ನ ಶಿವುಲಿಂಗುನಾದರೂ ಹಿಡಿದಕೊಂಡು ಹೋಗೋಕೆ ಆಗಲಿಲ್ಲವೆ?… ಅಯ್ಯೋ.. ಚರ್ಮದ ವ್ಯಾಪಾರದಿಂದ ಊರೂರು ತಿರುಗುವುದು ಬಿಟ್ಟು , ಬೀಳು ಬಿದ್ದಿರೋ ಹೊಲದಾಗೆ ಬೋರು ಹಾಕಿಸಿ ಬೇಸಾಯನಾದರೂ ಮಾಡಬಾರದೆ ಅಂಥ ಸಾವಿರ ಸತಿ ಬಡಕಂಡೆ. ಗಿಣಿಗೇಳಿದಂಗೆ ಹೇಳಿದೆ. ನನ್ನ ಮಾತೆಲ್ಲಿ ಕೇಳ ಗಂಡ್ಸೆ’ ಎಂದು ಒಂದೇ ಸಮ ಎದೆ ಹೊಡೆದುಕೊಳ್ಳುತ್ತಾ ಅಳಲು ಆರಂಭಿಸಿದಳು. + +‘ಅಯ್ಯೋ ಸಮಾಧಾನ ತಾಳವ್ವ. ಜೈಲಲ್ಲಿ ಎಷ್ಟು ದಿನಾ ಅಂಥಾ ಇಟ್ಟುಕೊಳ್ಳುತ್ತಾರೆ. ಅವರಿಗೇನು ಕೂಳು ಹೆಚ್ಚಾಗಿದ್ದಾತೆ. ಇವತ್ತಲ್ಲ ನಾಳೆ ಬಿಡ್ತಾರೆ’ ಎಂದನು. ‘ಎಲ್ಲಾ ಈ ಗೋರ್ಮೆಂಟಿಂದಾನೆ. ಇಷ್ಟು ವರ್ಷ ಆದರೂ ಒಂದು ರೇಷನ್ ಕಾರ್ಡು ಸರಿಯಾಗಿ ಕೊಡುವ ಯೋಗ್ಯತೆಯಿಲ್ಲ. ಮಂದಿರ ಹೊಡಿದಿದ್ದು, ಸಾಬ್ರು ದರ್ಗ ಹೊಡಿದಿದ್ದು, ಯೇಸಪ್ಪನ ಚರ್ಚ್ ಕೆಡವಿದ್ದು. ಈಗ ನೋಡಿದರೆ ಆ ಪ್ರಾಣಿ ತಿನುವ ಹಾಗಿಲ್ಲ ಈ ಪ್ರಾಣಿ ತಿನ್ನುವ ಹಾಗಿಲ್ಲ. ಉಣ್ಣಕೂ ಕಾಯ್ದೆ. ಉಡಕು ಕಾಯ್ದೆ. ತಮಗೆ ಏನು ಒಗ್ಗುತ್ತೋ ಅದುನ್ನ ಮನೆಯಾಗೆ ಮಾಡಿಕೊಂಡು ತಿಂದರೆ ಈ ದೊಣ್ಣೆನಾಯಕರಿಗೇನೋ? ಹಸ ತಿನ್ನವ ಹಾಗಿಲ್ಲ. ಕುರಿ ಕೋಳಿ ತಿನ್ನುಬಹುದಂತೆ. ಅದೆಂತದೋ ಬಿ.ಟಿ. ಬದನೆ ತಿನ್ನಬಹುದಂತೆ. ದಿನಕ್ಕೊಂದು ಕಾನೂನು. ಘಳಿಗೆಗೊಂದು ರೂಲ್ಸು. ಅವನ್ಯಾವನೋ ಸುಲ್ತಾನ ಇದ್ದನಂತಲ್ಲ ಹಂಗಾತು ಇದು. ಇನ್ನೂ ಈ ಕಾಲದಾಗೆ ಏನೇನು ಆಗುತ್ತೊ ಶಿವಾ!’ + +‘ಅದೇನು ಲಾಯರ್ ಗಿರಿಯಜ್ಜ ಮಾತಡಿದಂಗೆ ಮಾತಾಡ್ತೀಯ ರಾಮಣ್ಣ. ಭಜನೆ ಪದ ಹೇಳೋದು ಬಿಟ್ಟು ರಾಜಕೀಯಕ್ಕೆ ಸೇರಿಕೊಂಡೇನು? ವಸಿ ಬಿಡಿಸಿ ಹೇಳಬಾರದೆ ಬಳ್ಳಾರಿಗೆ ಯಾಕೆ ಪೊಲೀಸಿನವರು ಹಿಡಿದುಕೊಂಡು ಹೋದರು ನನ್ನ ಗಂಡುನ್ನ’ ಎಂದು ಬೈಯುವ ದಾಟಿಯಲ್ಲಿ ಕೇಳಿದಳು. ‘ಈ ಸರ್ಕಾರಕ್ಕೆ ಮಾಡುವುದಕ್ಕೆ ಏನೂ ಕೇಮಿಲ್ಲವೆ. ನನ್ನ ಸಂಸಾರನೇ ಬೇಕೆತ್ತೇ ಹಾಳುಮಾಡುವುದಕ್ಕೆ’ ಎಂದು ಶಪಿಸಿದಳು. + +ಅದಕ್ಕೆ ಭಜನೆ ರಾಮಣ್ಣ, ‘ಆದಿವಾಲದ ಮಾರಿ ಜಾತ್ರೆಯಲ್ಲಿ ನೂರು ಕೋಣ ಕಡಿದಿದ್ದರಂತೆ. ನಿನ್ನ ಗಂಡುನೂ ಕಾಸೀಂನೂ ಜಾತ್ರೆಗೆ ಹೋಗಿ ಚರ್ಮ ಖರೀದಿ ಮಾಡಿಕೊಂಡು ಮಾರಲು ದುರ್ಗಕ್ಕೆ ಹೋಗಬೇಕಾದರೆ ಲಾರಿಯಲ್ಲಿ, ಪೊಲೀಸಿನವರು, ಅವರು ಹೋಗುವ ಲಾರಿಯನ್ನು ಅಡ್ಡಗಟ್ಟಿ, ಒಂದು ಕಡೆಯಿಂದ ಜಪ್ತಿಮಾಡುವಾಗ ಕೋಣಗಳ ಚರ್ಮಜೊತೆಗೆ ಹಸುವಿನ ಚರ್ಮ ಸಿಕ್ಕು, ಒಬ್ಬೊಬ್ಬರನ್ನೇ ಲಾರಿಯಲ್ಲಿ ಎನ್ಕ್ವೆರಿ ಮಾಡುವಾಗ ಲಾರಿಯಿಂದ ಹಾರಿ ಕಾಸೀಂ ಸಾಬಿ ತಪ್ಪಿಸಿಕೊಂಡು ನಿನ್ನ ಗಂಡುನ್ನ ಹಿಡಿದುಕೊಂಡು ಹೋದರಂತೆ. ಅಷ್ಟುಕ್ಕೂ ಅವರು ಕೋಣಗಳ ಚರ್ಮ ಮಾತ್ರ ಖರೀದಿಮಾಡಿ, ಅವುನ್ನ ಮಾತ್ರ ದುರ್ಗಕ್ಕೆ ತಾಂಡು ಹೋಗುತ್ತಿದ್ದರಂತೆ. ಆದರೆ ಅದರೊಳಗೆ ಹಸುವಿನ ಚರ್ಮ ಹೇಗೆಬಂತು ಎಂಬುದು ಗೊತ್ತಿಲ್ಲ ಅಂತ ಎಷ್ಟು ಹೇಳಿದ್ರು ಕೇಳದೆ ಜೈಲಿಗೆ ಹಾಕಿದರೆ ಬಾಯಿ ಬಿಡುತ್ತೀಯಾ ಯಾವನು ಹಸ ಕೊಯ್ದವನು ಎಂದು ನಿನ್ನ ಗಂಡುನ್ನ ಧಮುಕಿ ಹಾಕಿ ಎಳೆದುಕೊಂಡು ಹೋದರಂತೆ’ ಎಂದು ಸವಿವರವಾಗಿ ಹೇಳಿದನು. + +‘ಹಸ ಯಾವೋನು ತಂದನೋ? ಏನು ಸತ್ತಿತ್ತೋ? ಇಲ್ಲ ಮುದಿಯಾಗಿತ್ತೋ? ಅಷ್ಟುಕ್ಕೂ ತಿಂದರೇನಂತೆ. ಉಣ್ಣಕ್ಕೂ ದೊರೆ ಅಪ್ಪಣೆಯೇ! ಎಂದು ತನಗೆ ಗೊತ್ತಿದ್ದ ಲಾಜಿಕ್ಕ ಬೆರಿಸಿ ರೇಗಿದಳು. + +‘ಗೋವು ತಿನ್ನುವುದನ್ನ’ ಅದೇನೋ ಹೇಳಿದರು ತಡಿ ತಡಿ ನೆನೆಸಿಕೊಂಡು ಹೇಳ್ತೀನಿ ಎಂದು ನೆನೆಸಿಕೊಂಡು ‘ಹ್ಞಾ ಬ್ಯಾನ್ ಬ್ಯಾನ್ ಆ ಬ್ಯಾನ್ ಮಾಡವ್ರಂತೆ ಸರ್ಕಾರದವರು’ ಎಂದ. + +‘ಜಾತ್ರೆ ಆಗಿ ಆರು ತಿಂಗಳು ಆಯ್ತಲ್ಲೋ ಯಪ್ಪಾ! ಅಷ್ಟುಕ್ಕೂ ತಿಂದಿರೋದೇನು ಹಂಗೆ ಇದೆಯಾ ತಿಂದು ಹೇತಿಲ್ಲವಾ. ನನ್ನ ಗಂಡನೇನು ಕೊಯ್ಕೊಂಡು ತಿಂದನಾ. ಅದ್ಯಾವನು ಹಸುವಿನ ಚರ್ಮ ಕೋಣುನ್ನ ಚರ್ಮದಾಗೆ ಬಚ್ಚಿಟ್ಟನೋ ಶಿವನೇ’ ಎಂದು ಸಿಟ್ಟಾಗಿ ದುಃಖದಿಂದ ಕಣ್ಣೀರ ಹೊರೆಸಿಕೊಂಡಳು. ‘ಇಂಥಾ ಸರ್ಕಾರನ ಎಲ್ಲಾದ್ರೂ ಕಂಡಿದ್ದಾ ಕೇಳಿದ್ದಾ ಎಲ್ಲರಿಗೂ ಮಾಂಸ ತಿನ್ನಬೇಡಿ ಎಂದು ದೀಕ್ಸೆ ಕೊಡಿಸೋದು ಉಳಿದೈತೆ. ಕೋಣ ಕುರಿನಾದರೆ ತಿನ್ನಬಹುದಂತೆ. ಮಾಡಬಾರದ ಮಾಡಿ ಮಠಕ್ಕೆ ಸ್ವಾಮಿ ಆಗಿರೋರು. ಮರ್ಯಾದೆ ಇಲ್ಲದೆ ರಾಜಕೀಯಮಾಡೋ ನಮ್ಮ ನಾಯಕರುಗಳು. ಎಲ್ಲಾ ಸರಿಯಾಗೆ ಕಲೆತಿದೆ’ ಎಂದು ಬೈದುಕೊಳ್ಳುತ್ತಿರುವಾಗ, ಕಾಸೀಂ ಸಾಬಿ ತಾಯಿ ಜುಲಕಜ್ಜಿ ಕೆಮ್ಮುತ್ತಾ ಕೋಲೂ ಊರಿಕೊಂಡು ರುಕ್ಮಣಮ್ಮನ ಮನೆ ಅಂಗಳಕ್ಕೆ ಬಂದಳು. + +ಜುಲಕಜ್ಜಿ ಬರುವುದೇ ತಡ ರುಕ್ಮಣಮ್ಮ,‘ನಿನ್ನ ಮಗ ನನ್ನ ಗಂಡುನ್ನ ಜೈಲಿಗೆ ಕಳುಹಿಸಿ ಆರಾಮಾಗಿ ದೇಶಾಂತರ ಹೋದನಂತಲ್ಲ’ ಎಂದು ವ್ಯಂಗ್ಯದಿಂದ ಹೇಳಿದಳು. + +‘ನಿನ್ನ ಗಂಡ ನನಗೆ ಮಗ ಇದ್ದಂಗೆ. ಯಾಕೆ ಹಂಗೆ ಚುಚ್ಚುಮಾತಾಡ್ತೀಯಾ ತಾಯಿ. ಮೂಡ್ಲಗಿರಿ ಇವತ್ತಲ್ಲ ನಾಳೆ ಬರುತ್ತಾನೆ ಜೈಲಿಂದ. ಆದರೆ ನನ್ನ ಮಗ ಕಾಸೀಂ ಇನ್ನೆಲ್ಲಿ ಬರುತ್ತಾನೆ. ದೆಲ್ಲೆಗೆ ಮೊನ್ನೆ ಬಾಂಬು ಹಾಕಿದ್ರಂತಲ್ಲ. ನೂರೋ ನೂರೈವತ್ತೋ ಜನ ಸತ್ತು ಹೋದ್ರಂತಲ್ಲ…. ಅದರಾಗೆ ನಮ್ಮ ಕಾಸೀಂನೂ ಸತ್ತು ಹೋದನಂತೆ. ಪೇಪರ್ನಲ್ಲಿ ಅವನ ಫೋಟೋನೂ ಕೊಟ್ಟಿದ್ದರಂತೆ. ಏನೂ ಅರಿಯದ ನಮ್ಮ ಹೈದ ಹೋದ್ನಲ್ಲೇ’ ಎಂದು ಜುಲಕಜ್ಜಿ ಕಣ್ಣಿರಿಟ್ಟಳು. + +ಮಳೆ ನಿಂತು ಭೂಮಿ ಒಂಥರ ತಣ್ಣಗೆ ಆಗ್ತಾ ಇತ್ತು. ಪಂಚಾಯ್ತಿ ಜವಾನ ನಿಂಗಣ್ಣ ‘ನಾಳೆ ಬಿತ್ತನೆ ಬೀಜ ಕೊಡ್ತಾರಂತೆ. ರೈತರೆಲ್ಲಾ ಬರಬೇಕಂತೆ’ ಎಂದು ಸಾರುತ್ತಿದ್ದುದು ಅಸ್ಪಷ್ಟವಾಗಿ ರುಕ್ಮಣಮ್ಮನ ಅಂಗಳಕ್ಕೆ ಬಡಿಯುತ್ತಿತ್ತು. + +ಜುಲಕಜ್ಜಿಯ ಕಣ್ಣಂಚಲ್ಲಿ ನೀರು ನಿಧಾನ ಇಳಿಯುತ್ತಿತ್ತು. + +ಕತ್ತಲು ನಿಧಾನ ಆವರಿಸಿಕೊಳ್ಳತೊಡಗಿತು. + + + +ಇದ್ದಕ್ಕಿದ್ದಂತೆ ಜನಗಳ ದೊಂಬಿ ಪಂಚಾಯ್ತಿ ಆಫೀಸಿನ ಕಡೆಯಿಂದ ಕೇಳಿಬರುತ್ತಿತ್ತು. ಕೆಲವರು ‘ಬೀಜ ತುಂಬಿದ್ದ ಪಂಚಾಯ್ತಿ ಗೋಡನ್ನಿನೊಳಗೆ ಬೆಂಕಿ ಬಿದ್ದೈತಂತೆ’ ಎಂದು ಓಡತೊಡಗಿದರು. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_314.txt b/Kenda Sampige/article_314.txt new file mode 100644 index 0000000000000000000000000000000000000000..583ab5bb66cd1335f38fc12217b920f47da237e8 --- /dev/null +++ b/Kenda Sampige/article_314.txt @@ -0,0 +1,25 @@ + + +ಅತ್ಯಂತ ಮುಗ್ಧ, ಪ್ರಾಮಾಣಿಕ, ಪಾರದರ್ಶಕ ಮತ್ತು ನಿರಂತರವಾದ ಜ್ಞಾನಾಕಾಂಕ್ಷಿ ಚಿಂತನೆಯ ನಿಸರ್ಗದತ್ತ ವಿಚಾರಧಾರೆಯಾದ ಜಾನಪದವು ಎಲ್ಲ ಕಾಲಕ್ಕೂ ಸಕಲರ ಏಳಿಗೆಗೂ ಪೂರಕವಾಗುವಂತಹ, ತೆರೆದ ಮನಸ್ಸಿನ ಆರೋಗ್ಯಕರ ಹೆದ್ದಾರಿಯಾಗಿದ್ದು-ಕುತೂಹಲಕಾರಿ ವಿದ್ವಾಂಸರ ಅಚ್ಚರಿ ಮತ್ತು ಶಾಶ್ವತ ಕುತೂಹಲಕ್ಕೆ ಕಾರಣವಾಗಿದೆ. ಭಾರತದ ಪರಿಸ್ಥಿತಿಯಲ್ಲಂತೂ “ಆಕಾಶ ನೋಡೋಕೆ ನೂಕಾಟಯಾಕೆ?” ಎಂಬ ಸಂತೃಪ್ತ ಭಾವದ ನಿರಾಳತೆಯ, ನಿರ್ಲಿಪ್ತ ಆಲೋಚನಾ ವಿಧಾನವಾಗಿ ಈ ಮಾರ್ಗವು “ಅನಂತತಾನ್ ಅನಂತವಾಗಿ ಆಗುತಿಹನೆ ನಿತ್ಯಯೋಗಿ!” ಎಂಬಂತಹ ಸಹಜ ಉಸಿರಾಟದ ಹೆಮ್ಮೆಯ, ತೀವ್ರತರ ಹುಡುಕಾಟದ, ಸೂಕ್ಷ್ಮವೂ-ಸಂಕೀರ್ಣವೂ ಆಗಿರುವ ಅಧ್ಯಯನ ಹಾಗೂ ಸಂಶೋಧನೆಯ ವಿಧಾನಗಳಿಗೆ ಹೆಚ್ಚಿನ ಸವಾಲುಗಳನ್ನು ಒಡ್ಡುತ್ತಲೇ ನಡೆದುಬಂದಿರುವ ಅಕ್ಷಯ ನಿಧಿಯಾಗಿದೆ. + +ತುಂಬಾ ವೈವಿಧ್ಯಮಯ ಹಿನ್ನೆಲೆ ಮತ್ತು ವಾತಾವರಣದಲ್ಲಿ ಬೇರೆ ಬೇರೆ ಕಾಲಘಟ್ಟಗಳಲ್ಲಿ ಅರಳುತ್ತಾ, ಕವಲೊಡೆಯುತ್ತಾ ಸಾಗಿ ಬಂದಿರುವ ಕರ್ನಾಟಕದ ಜಾನಪದವು ಸಹ ವೈಶಿಷ್ಟ್ಯಪೂರ್ಣವೂ, ವಿಭಿನ್ನವೂ ಆಗಿರುವ ಸಂಪದ್ಭರಿತ ಜ್ಞಾನಶಾಖೆಯಾಗಿ ಕಂಗೊಳಿಸುತ್ತಿರುವುದನ್ನು ತಿಳಿಯುವ ಆನಂದ ನಮ್ಮದಾಗಿದೆ. ಅದರಲ್ಲೂ ನಮ್ಮ ಪಡುಗಡಲು ಮತ್ತು ಸುಪ್ರಸಿದ್ಧ ಸಹ್ಯಾದ್ರಿ ಶ್ರೇಣಿಯ ಎಡೆಬಿಡದ ಒಡನಾಟದ ಚೋದ್ಯದಾಯಕ ಹರ್ಷಕ್ಕೆ ನೆಲೆಮನೆಯಾಗಿರುವ ಉತ್ತರಕನ್ನಡ ಜಿಲ್ಲೆಯ ಪ್ರಕೃತಿ ಸೌಂದರ್ಯದ ಸಂತೃಪ್ತ ಮಡಿಲಿನ ಮೌಖಿಕ ಸಾಹಿತ್ಯದ ಮತ್ತು ನಿರಾಳ ಬದುಕಿನ ತಾಜಾತನಕ್ಕೆ ನಾನಂತೂ ಮಾರು ಹೋಗಿದ್ದೇನೆ. + +ಅಲ್ಲಿನ ಹಾಲಕ್ಕಿ ಒಕ್ಕಲು ಮತ್ತಿತರ ಮುಗ್ಧ, ನಿರ್ಲಿಪ್ತ ಬುಡಕಟ್ಟುಗಳ ಜೀವನಪ್ರೀತಿಯು ನಿಜಕ್ಕೂ ವಿಶಿಷ್ಟವಾದುದು. ಹೀಗಾಗಿ ನನ್ನೆಲ್ಲ ಸುತ್ತಾಟಗಳ ಹರ್ಷದಾಯಕ ಹೆಜ್ಜೆಗಳು ಉತ್ತರಕನ್ನಡ ಮತ್ತು ಕೊಡಗಿನ ಕಡೆಗೆಆನಂದದಿಂದ ಸದಾಕಾಲವೂ ಮುಖಮಾಡಿರುತ್ತವೆ. ಬೆಂಗಳೂರು ವಿಶ್ವವಿದ್ಯಾನಿಲಯದ ಐಚ್ಛಿಕ ಜಾನಪದ ವಿದ್ಯಾರ್ಥಿಗಳನ್ನು ಸತತವಾಗಿ ಹತ್ತು ವರ್ಷಗಳ ಕಾಲ (1974-84) ನಾನು ಕ್ಷೇತ್ರಕಾರ್ಯಕ್ಕಾಗಿ ಉತ್ತರಕನ್ನಡ ಜಿಲ್ಲೆಯ ಎಲ್ಲೆಡೆ ಕರೆದೊಯ್ದು, ಅಧ್ಯಯನ ನಡೆಸಿ, ಆ ಸಂಬಂಧದ ಸಂಪದ್ಭರಿತ ತಾಜಾ ಅನುಭವಗಳನ್ನು ತೀರಾ ಹತ್ತಿರದಿಂದ ಪಡೆದಿದ್ದೇನೆ. + +ಈ ಬಗೆಯ ನನ್ನ ವಿಚಿತ್ರತರ ಆಸಕ್ತಿಯುತ ಸುತ್ತಾಟಗಳ ನಡುವೆಯೇ ಇದೇ ಉತ್ತರಕನ್ನಡ ಜಿಲ್ಲೆಯ ಹೆಮ್ಮೆಯ ಜನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಅವರನ್ನು ನಾನು ಹಲವಾರು ಸಲ ತುಂಬಾ ಆತ್ಮೀಯವಾಗಿ ಭೇಟಿಯಾಗಿದ್ದೇನೆ. ಕರ್ನಾಟಕ ಜಾನಪದ ಅಕಾಡೆಮಿಯ ವತಿಯಿಂದ ನಾಡಿನ ಬೇರೆ ಬೇರೆ ಜಿಲ್ಲೆಗಳಲ್ಲಿ ನಡೆದಿರುವ ಸಮ್ಮೇಳನ, ವಿಚಾರಗೋಷ್ಠಿಗಳಲ್ಲಿ ಆಗಾಗ್ಗೆ ಸುಕ್ರಜ್ಜಿಯ ಒಡನಾಟವು ನೀಡುವ ಆನಂದದ ಸವಿಯನ್ನು ನಾವೆಲ್ಲಾ ಅನುಭವಿಸಿದ್ದೇವೆ. ಕಾಡುಗೊಲ್ಲರ ಸಿರಿಯಜ್ಜಿ, ಸಾಲುಮರದ ತಿಮ್ಮಕ್ಕ, ಹಾಲಕ್ಕಿ ಒಕ್ಕಲು ಬುಡಕಟ್ಟಿನ ವಿಶಿಷ್ಟ ಪ್ರತಿಭೆ ಸುಕ್ರಿ ಬೊಮ್ಮಗೌಡ- ಮುಂತಾದ ಈ ಪ್ರಕೃತಿಯ ಕಂದಮ್ಮಗಳು ನೀಡುವ ಅನುಭವಲೋಕ ಹಾಗೂ ಸಂಸ್ಕೃತಿ ಸಂಪನ್ನತೆಯ ಪ್ರತೀಕವೇ ತಾನಾದ ನಿರಾಡಂಬರ ಮೂರ್ತಿಗಳ ಜೀವಚೈತನ್ಯದ ಸೂಕ್ಷ್ಮಗಳು ಅಕ್ಷರಶಃ ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತಿರುತ್ತವೆ. + +ಈಚೆಗೆ ಭಾರತ ಸರ್ಕಾರವು ಸುಕ್ರಜ್ಜಿ ಅಂತಹ ಗ್ರಾಮೀಣ ಭಾಗದ ಶ್ರೇಷ್ಠ ಕಲಾವಿದೆಯ ಮಹತ್ವವನ್ನು ಅರಿತು ಪದ್ಮಶ್ರೀ ಪ್ರಶಸ್ತಿ ನೀಡಿ ತನ್ನ ಘನತೆಯನ್ನು ಹೆಚ್ಚಿಸಿಕೊಂಡಿದೆ. ಕಡುಬಡತನದ ನಡುವೆಯೇ ಹುಟ್ಟಿ ಬೆಳೆದು, ನೂರೆಂಟು ಅಭದ್ರತೆಯ ಸಂಕೋಲೆಗಳ ತೊಡಕುಗಳನ್ನೆಲ್ಲಾ ಬದಿಗೊತ್ತಿ ತುಂಬು ಸೃಜನಶೀಲತೆಯ ಸಾಕ್ಷಾತ್ ಪ್ರತೀಕವಾಗಿ ಬೆಳಗುತ್ತಿರುವ ಸುಕ್ರಜ್ಜಿ ಅವರ ನಿರಂತರ ಸಮಾಜಮುಖಿ ಕ್ರಿಯೆಗಳ ಜೀವಂತಿಕೆಯು ನಿಜಕ್ಕೂ ಮಾದರಿಯಾಗಿದೆ. ಇದೇರೀತಿಯಲ್ಲಿ ಸಾಲುಮರದ ತಿಮ್ಮಕ್ಕನವರಂತಹ ಹೆಮ್ಮೆಯ ಜನೋಪಕಾರಿ ಪರಿಸರ ಪ್ರೇಮಿಯನ್ನು ಭಾರತ ಸರ್ಕಾರ ಗೌರವಿಸಿದ ಸಂದರ್ಭದಲ್ಲಿ, ರಾಷ್ಟ್ರಪತಿಗಳು ಆಕೆಗೆ ವಿನಯದಿಂದ ತಲೆಬಾಗಿದಾಗ-ಆ ಮುಗ್ಧ ತುಂಬು ಮನದ ಪರಿಶುದ್ಧ ಸ್ತ್ರೀ ಚೇತನವು ಅವರ ತಲೆಮುಟ್ಟಿ ಪ್ರೀತಿಯಿಂದ ನೇವರಿಸುತ್ತಾ ಆಶೀರ್ವದಿಸಿದ ಘಟನೆಯನ್ನು ದೃಶ್ಯಮಾಧ್ಯಮಗಳಲ್ಲಿ ಇಡೀ ರಾಷ್ಟ್ರವೇ ಬೆಕ್ಕಸ ಬೆರಗಾಗಿ ವೀಕ್ಷಿಸಿತು. + +ಈ ಬಗೆಯ ಘಟನೆಗಳು ಜನತಂತ್ರ ವ್ಯವಸ್ಥೆಯ ಅಸಾಧಾರಣ ಸೊಬಗನ್ನು ಸದಭಿರುಚಿಯ ಭಾಗವಾಗಿ ವಿಸ್ತರಿಸುತ್ತಿರುವ ಹರ್ಷದಾಯಕ ಸಂಗತಿಗಳಾಗಿವೆ. ಸುಕ್ರಜ್ಜಿಯಂತಹ ಅತ್ಯುತ್ತಮ ಗ್ರಾಮೀಣ ಪ್ರತಿಭೆಗಳೂ ಸಹ ಇಂತಹ ಶ್ರೇಷ್ಠ ಮಾದರಿಗಳಾಗಿ ನಮ್ಮ ನಡುವೆ ಕಂಗೊಳಿಸುತ್ತಿರುವುದನ್ನು ನಾವೆಲ್ಲಾ ಹೆಜ್ಜೆಹೆಜ್ಜೆಗೂ ಕಾಣುತ್ತಿದ್ದೇವೆ. ಈ ಎಲ್ಲಾ ಶ್ರಮಜೀವಿ ಪರಂಪರೆಯ ಶಾಶ್ವತ ಋಣದ ಮಕ್ಕಳಾಗಿಯೇ ಮೆರೆಯುತ್ತಿರುವ ನಮ್ಮ ನಡುವಣ ಶಾಸಕ, ಸಂಸದ, ಅಧಿಕಾರಿ, ಪ್ರಾಧ್ಯಾಪಕ, ಮಂತ್ರಿ, ಪ್ರಧಾನಿ, ರಾಷ್ಟ್ರಪತಿಯೂ ಸೇರಿದಂತಹ ಐಷಾರಾಮಿ ತೋಳ ತೊಟ್ಟಿಲುಗಳಲ್ಲಿ ಪವಡಿಸುವ, ಸದಾಕಾಲವೂ ಕೂತುಂಡು ತಣಿಯುವ, ನೆಣಗೊಬ್ಬಿನ ಹೊಣೆಗೇಡಿಗಡಣದ ನಡುವೆ ಇವರೆಲ್ಲಾ ಚಿರಂತನ ದೇವತಾ ಸ್ವರೂಪಿಗಳಾಗಿ ಸದಾಕಾಲವೂ ಬೆಳಗುತ್ತಿದ್ದಾರೆ. + + + +ತುಂಬು ಮನಸ್ಸು ಮತ್ತು ಮುಕ್ತ ಚಿಂತನೆಯ ಹರಿಕಾರರಾಗಿಯೇ ಬದುಕುತ್ತಿರುವ ಹಾಲಕ್ಕಿ ಒಕ್ಕಲು ಜನಾಂಗದ ಅತ್ಯುತ್ತಮ ಪ್ರತಿಭೆಯಾದ ಸುಕ್ರಜ್ಜಿ ಅವರ ಕ್ರಿಯಾಶೀಲ ಚಟುವಟಿಕೆಗಳನ್ನು ಹತ್ತಿರದಿಂದ ಕಂಡು, ಕೇಳಿ, ತಿಳಿದ ಪ್ರಜ್ಞಾವಂತರೆಲ್ಲರೂ ಆ ನಿರಾಡಂಬರ ಜೀವವನ್ನು ಅಪಾರವಾಗಿ ಗೌರವಿಸುವ ಪರಿಯು ಆಶ್ಚರ್ಯಕರವಾದುದು. ಈ ಎಲ್ಲ ಅಗ್ಗಳಿಕೆಗಳ ಹಿನ್ನೆಲೆಯಲ್ಲಿ ಸುಕ್ರಜ್ಜಿ ಅವರ ಸಾಧನೆಯ ನಾನಾ ಮುಖಗಳನ್ನೂ ಪ್ರಕಟಿಸುವಂತಹ ಒಂದು ಉತ್ತಮ ಅಭಿನಂದನ ಗ್ರಂಥವನ್ನು ಹೊರತರುವ ಪ್ರಯತ್ನಕ್ಕಾಗಿ ನಾನು ಹಲವಾರು ದಿನಗಳಿಂದಲೂ ತೀವ್ರವಾಗಿ ಹಂಬಲಿಸುತ್ತಿದ್ದೆ. ಅದೇ ಭಾಗದಲ್ಲಿ ಹುಟ್ಟಿ, ಬೆಳೆದು ಪ್ರಜ್ಞಾವಂತ ಲೇಖಕಿಯಾಗಿರುವ ಅಕ್ಷತಾ ಕೃಷ್ಣಮೂರ್ತಿ ಅವರಿಗೆ ಈ ಹೊಣೆಗಾರಿಕೆಯನ್ನು ಒಪ್ಪಿಸುವುದು ಸೂಕ್ತವೆಂದು ನಿರ್ಧರಿಸಿದೆ. + +ಅವರಿಗೆ ಈ ಯೋಜನೆಯ ಬಗ್ಗೆ ವಿವರಿಸಿದಾಗ ಉತ್ಸಾಹ ಮತ್ತು ಸಡಗರದಿಂದ ಈ ಜವಾಬ್ದಾರಿಯನ್ನು ಒಪ್ಪಿಕೊಂಡರು. ಕಥೆ, ಕವಿತೆ, ಗಜಲ್, ವಿಮರ್ಶೆ, ವೈಚಾರಿಕತೆ- ಮುಂತಾದ ಪ್ರಕಾರಗಳಲ್ಲಿ ತೀವ್ರತರವಾದ ಪ್ರೀತಿಯಿಂದ ದುಡಿಯುತ್ತಿರುವ ಅಕ್ಷತಾ ನಮ್ಮ ಯುವ ಲೇಖಕಿಯರ ಬಳಗದಲ್ಲಿ ಗಮನಾರ್ಹವಾದ ರೀತಿಯಲ್ಲಿ ತೊಡಗಿಕೊಂಡಿದ್ದಾರೆ. ನಾಡಿನ ಬೇರೆ ಬೇರೆ ಭಾಗದ ಪ್ರಜ್ಞಾವಂತರು ಅಪರಿಮಿತವಾದ ಮೆಚ್ಚುಗೆಯಿಂದ ಬರೆದಿರುವ ಸುಕ್ರಜ್ಜಿಯವರನ್ನು ಕುರಿತ ಬರಹಗಳನ್ನೆಲ್ಲಾ ಆಸ್ಥೆಯಿಂದ ಕಲೆಹಾಕಿ, ಅಧ್ಯಯನ ಮಾಡಿ, ತಾವೂ ವಿವರವಾದ ತಮ್ಮ ಕ್ಷೇತ್ರಕಾರ್ಯದ ಮೂಲಕ ಉತ್ತಮ ವಿವೇಚನೆಯಿಂದ ಕೂಡಿದ “ಹಾಲಕ್ಕಿ ಕೋಗಿಲೆ” ಗ್ರಂಥವನ್ನು ವಿಶೇಷ ಶ್ರದ್ಧೆ ಮತ್ತು ಆಸಕ್ತಿಯಿಂದ ಇವರು ಸಿದ್ಧಪಡಿಸಿದ್ದಾರೆ. + + + +ಜನಪದ ಸಾಹಿತ್ಯ, ಸಂಸ್ಕೃತಿ ಕುರಿತಂತೆ ಅಧ್ಯಯನ, ಸಂಶೋಧನೆಯಲ್ಲಿ ನಿರತರಾದವರಿಗೆ ಈ ಕೃತಿಯು ಹೆಚ್ಚಿನ ಪ್ರಮಾಣದಲ್ಲಿ ಉಪಯುಕ್ತವಾದುದೆಂದು ನಾನು ನಂಬಿದ್ದೇನೆ. ಅಪರಿಮಿತವಾದ ಪ್ರೀತಿಯಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಾರ್ಥಕಕಾರ್ಯ ಮಾಡಿರುವ ಅಕ್ಷತಾ ಅವರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಹಾಗೆಯೇ ಇವರು ಕನ್ನಡ ಸಾಹಿತ್ಯಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮಹತ್ವಪೂರ್ಣ ಹೊತ್ತಗೆಗಳನ್ನು ಪ್ರಕಟಿಸಿ ಕೀರ್ತಿಶಾಲಿಗಳಾಗಲೆಂದು ತುಂಬು ಮನಸ್ಸಿನಿಂದ ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_315.txt b/Kenda Sampige/article_315.txt new file mode 100644 index 0000000000000000000000000000000000000000..2ac0ef67e6fdb146ec2464be6ab29ac66ec9016c --- /dev/null +++ b/Kenda Sampige/article_315.txt @@ -0,0 +1,53 @@ + + +ಇಡೀ ಕಾಡಿಗೆ ಕಾಡು-ರಾಜನಾದ ದೊಡ್ಡ ಮೀಸೆಯ ದೊಡ್ಡ ಸಾಹೇಬ ಪಿ.ನಂಜಪ್ಪನವರು ಇವರು. ಬಹಳಾ ಶಿಸ್ತುಬದ್ಧವಾಗಿ ತನ್ನ ಎಲ್ಲಾ ಕಿರಿ ಆಳುಗಳನ್ನ ದುಡಿಸಿದ್ದಕ್ಕೆ, ಆ ಕಿರಿ ಆಳುಗಳು ಕೋಪಗೊಂಡು, ಕೋಪವು ದ್ವೇಷವಾಗಿ ಆ ದ್ವೇಷವನ್ನು ನಂಜಪ್ಪನ ಮೇಲೆ ನೇರವಾಗಿ ತೋರಿಸಲಾಗದೇ, ಅದುಮಿಕ್ಕಿದಷ್ಟೂ ಒತ್ತಡ ಜಾಸ್ತಿಯಾಗಿ, ಒಂದು ದಿನ ರಾಜಪ್ಪನ ಸುಪರ್ದಿಯಲ್ಲಿದ್ದ ಝೂನ ಗಡ್ದುಲಿಗಳನ್ನು ಆ ಕಿರಿ ಆಳುಗಳು ಕಾಡಿಗೆ ಬಿಟ್ಟು ಬಿಟ್ಟರು! ಆ ಕಾಡಿನ ಮಧ್ಯದಾಗ ಇರುವ ಸೊಳ್ಳೆಪುರವೆಂಬ ಆ ಊರಿಗೆ ಕೆಂಪಾಲಗನೇ ದೊರೆ. ಅವನ ಹುಲ್ಲು ಜೋಪಡಿಯ ತಡಿಕೆ ಬಾಗಿಲು ಗೆದ್ಲಿಡ್ದು ಇನ್ನೇನು ಬೀಳೋ ಸ್ಥಿತಿ ತಲುಪಿದ್ದರೂ, ಆ ರಕ್ತ ಮಾಂಸದ ತಡಿಕೆಯಾದ ಕೆಂಪಲಗನು ಗುರುಗುರು ಗೂರುಲುತ್ತಾ ಏದುಸಿರು ಬಿಡುತ್ತಿದ್ದರೆ, ಆ ಜೋಪಡಿಯಾದ ಕೆಂಪಲಗನ ಮನೆಯು, ಹಲಗೆ ಏಟ್ಗೆ ಗಂಡೈಕಳು ಗೆಜ್ಜೆಕಟ್ಟಿ ಕುಣಿದಾಂಗ ಕುಣಿತಿತ್ತು. + +ಪಿಳೇಕಮ್ಮನ ಗರ್ಭಗುಡಿಯಂತೆ ಕತ್ತಾಲಲ್ಲಿದ್ದ ಆ ಜೋಪಡೆಯ ಒಳಗೆ, ಕೆಲವೊಮ್ಮೆ ಸೂರ್ಯ ಪರಮಾತ್ಮನ ಕಿರಣಗಳು ಬರಲೋ ಬ್ಯಾಡವೋ ಎನ್ನುವಂತೆ ಬಂದು ಬಾಗಿಲಸಂದಿಯಲ್ಲಿ ಮರೆಯಾಗುತ್ತಿತ್ತು. ಆ ಗೌಗತ್ತಲಲ್ಲಿ ಆ ಮೂಲೆಯ ಒಲೆಯಲ್ಲೇ ಬೈರಿ ಹೊಗೆಯೆಬ್ಬಿಸಿ, ಕೆಂಡವನ್ನು ಬೆಂಕಿಯಾಗಿಸೋ ಕೇಮೆಯಲ್ಲಿ ಕಣ್ಣೀರು ಸುರಿಸುತ್ತಾ ಕಹ್ಹಾ.. ಖಹ್ಹಾ.. ಕೆಮ್ಮುತ್ತಾ ಊದುಕೊಳವೆಗೆ ತನ್ನ ಶ್ವಾಸವನ್ನೆಲ್ಲಾ ಕೊಟ್ಟು ಕೆಂಡಕ್ಕೆ ಜೀವಬರಿಸುತ್ತಿದ್ದಳು. ಈ ಕಿರಿ ಕೆಂಡವೆಂಬುದು ಬೈರಿಯ ಶ್ವಾಸಕುಲುಮೆಯಲ್ಲಿ ನಿಗಿನಿಗಿ ಕೆಂಡವಾಗಿ, ಆ ಕೆಂಡವು ಬೆಂಕಿಯಾಗಿ, ಬೆಂಕಿಯು ಬೆಳಕಾಗಿ! ಆ ಬೆಳಕಿಗೆ ಕತ್ತಲೆಯು ದಿಗಿಲುಗೊಂಡು ಬಾಗಿಲ ಸಂದಿಯನ್ನು ಸೇರಿಕೊಂಡಿತು. + +ವತ್ತಾರೆ ಬೆಳಾಕಾದೊಡನೆ ಎದ್ದ ಕೆಂಪಾಲಗನು, ಬೈರಿ ಕೊಟ್ಟ ಚೆಂಬು ಬಿಸಿನೀರಿನಲ್ಲೇ ಮುಖಾರವಿಂದವನ್ನು ಸಾರಿಸಿ ಗುಡಿಸಿ, ಏಳುಮಲೆ ಎಪ್ಪಲ್ಲೇಳುಮಲೆ ಒಡೆಯನಾದ ಅಪ್ಪಾ ಮಾದಪ್ಪನು ಹುಲಿಮೇಲೆ ಕುಳಿತಿರುವ ಪಟಕ್ಕೆ ಕೈ ಮುಗಿದು, ಈ ‘ನನ್ನ ಮಕ್ಕಂಳಗೆ ಇರೋ ಮೂರು ಆಡು, ನಾಲ್ಕು ಕುರಿಮರಿಗಳನ್ನ, ಗಡ್ದುಲಿ, ದೊಡ್ಬೆಕ್ಕು, ಸೀಳ್ನಾಯಿ, ಮಟ್ಗನಿಂದ ಕಾಪಾಡ್ಬೇಕು ಸ್ವಾಮಿ.’ ಎಂದು ಆಕಾರವಿಲ್ಲದ ನೀರನ್ನು ಕಂಚಿನ ಕಳಸಕ್ಕೆ ತುಂಬಿ ಆಕಾರಕೊಟ್ಟು ಮಡಗಿದ್ದ ಕಳಸಕ್ಕೆ ಕೈಮುಗಿದು ‘ಸತ್ತಮೇಲೆ ಎಲ್ಲರೂ ಭೂಮಿಗೆ, ಈ ಜನ್ಮ.’ ಎಂದು ವಿಭೂತಿಯನ್ನು ರಾಮಪಿತಿಕಸ್ ಸ್ಕಲ್ ನಂತಿದ್ದ ತನ್ನ ಹಣೆಗೆ ಅಡ್ಡಡ್ಡ ಮೂರ್ ಪಟ್ಟೆ ಬಳದುಕೊಂಡಾಗ, ಆ ಬಿಳಿ ಕುಳೆ ಗಡ್ಡ ಒಳಗೊಂಡ ಆ ಮುಖಕ್ಕೆ ಕಳೆಯೆಂಬುದು ಅದೆಲ್ಲಿಂದಲೋ ಚಂಗನೆ ಬರುತ್ತಿತ್ತು. + +ಝೂನಿಂದ ತಪ್ಪಿಸಿಕೊಂಡಿದ್ದ ಆ ಗಡ್ದುಲಿಯು, ಜೇನುಕಲ್ಲಿನ ಗುಡ್ಡದ ಮೇಲೆ ಇರೋ ಕಲ್ಲುಗುಡ್ಡದ ನೆರಳಲ್ಲಿ ಮಲಗಿ ಆಕಡೆ ಈಕಡೆ ಹೊರಳಾಡುತ್ತಾ ತನ್ನ ನಿಗಿನಿಗಿ ಕೆಂಪಾಗಿದ್ದ ಕಣ್ಣುಗಳನ್ನು ಮುಚ್ಚಿ, ನೆರಳಿನಲ್ಲಿ ನಿದ್ರಿಸುತ್ತಿದುದ್ದನ್ನು ಸೌದೆ ತರಲು ಹೋಗಿದ್ದ ಮೂರ್ನಾಲ್ಕು ಹೆಣ್ಣುಮಕ್ಕಳು ನೋಡಿದ್ದರು.ಸಂಜೆಯಾಗುತ್ತಾ ಪಡುವಣದಲ್ಲಿ ದೂರಕ್ಕೆ ಕಾಣುವ ಘಟ್ಟಸಾಲಿನಲ್ಲಿ ಜೇನುಕಲ್ಲಿನ ಹಿಂಭಾಗದಲ್ಲಿ ಸೂರ್ಯ ಸ್ವಾಮಿ ಮುಳುಗುತ್ತಿದ್ದಾಗ, ತಪ್ಪಲಿನಂತಿದ್ದ ಆ ಊರಿನ ಸಕಲ ಸೀಮೆ ಎಣ್ಣೆ ಬುಡ್ಡಿಗಳು ಬೆಂಕಿ ಹಚ್ಚಿಕೊಂಡು ಉರಿದಾಗ ಮಿಂಚು ಹುಳುಗಳು ಮಿನುಗುವಂತೆ ಕಾಣುತ್ತಿತ್ತು. ಬೈರಿಯ ಮನೆಯ ಹಿಂಬಾಗಿಲಿಗೆ ಇರುವ ವಪ್ಪಾರದ ಕೊಟ್ಟಿಗೆಯಲ್ಲಿ ಕೂಡಿದ್ದ ಆಡುಕುರಿಗಳು ಸಹಾ ಕಣ್ಣು ಮುಚ್ಚಿ, ಮೆಲಕು ಹಾಕುತ್ತಿದ್ದವು. ಕೆಂಪಲಗನು ಮೋಟು ಗೋಡೆಗೆ ಒರಗಿ ಕುಳಿತಿದ್ದ. ಅವನ ಎರಡನೇ ಹೆಂಡರು ಲಚ್ಮಿ ಮಾಡುತ್ತಿದ್ದ ಸಾರು ವಗ್ರಣ್ಣೆಗೊಂಡು, ಆ ವಾಸನೆಯೂ ಸೀಮೆ ಬುಡ್ಡಿಯ ವಾಸನೆಯೂ ಮಿಳಿತವಾಗಿ ಕಂಪು ಎಲ್ಲೆಡೆ ಪಸರಿಸುತ್ತಿತ್ತು. + +ಉಳ್ಳುಳ್ಳಗಿದ್ದ ಕಲಗಚ್ಚು ನೀರನ್ನು ಆಡುಕುರಿಗೆ ಕುಡಿಸಿ ಹಟ್ಟಿಗೆ ಆನುಕೊಂಡಿದ್ದ ದೊಡ್ಡಿಗೆ ಅವುಗಳನ್ನು ಕೂಡಿ ಕಣ್ಜಕ್ಕೊರಗಿ ಕುಕ್ಕುರಗಾಲಲ್ಲಿ ಕೂತಿದ್ದನಲ್ಲಾ ಕೆಂಪಾಲಗನು. + +ಇನ್ನೂ ಅವರಮ್ಮನೋ ನಡುಮನೆಯ ಮಧ್ಯೆ ಒಂದು ಮಕ್ಕರಿ ಅವರೆಕಾಯಿ ರಾಶಿಮಾಡಿ ಹಾಕಿಕೊಂಡು, ಕಿರು ಬುಡ್ಡಿ ಮಿಣಮಿಣ ಬೆಳಕಿನಲ್ಲಿ ಆ ಅವರೆಕಾಯಿ ಬೆಟ್ಟವನ್ನು ಕಾಳಾಗಿಸುತ್ತಿದ್ದಳು. ಸುತ್ತಲೂ ಕತ್ತಲಿತ್ತು. + + + +ದೂರದಲ್ಲಿ ನಾಯಿಗಳು ಬೊಗಳುತ್ತಿದ್ದವು. ಕಾಡು ಸೇರಿಕೊಂಡ ಮೇಲೆ ಬೇಟೆ ಸಿಗದೆ ಹಸಿದಿದ್ದ ಗಡ್ದುಲಿಯು ಕೆಂಪಾಲಗನ ಆಡು ಕುರಿಗಳ ಜಾಡಿಡಿದು ಜೋಪಡಿಯ ಕೊಟ್ಟಿಗೆಯ ಬಳಿ ಬಂದು ನಿಂತಿತ್ತು. ಆ ಕಳ್ಳ ಹೆಜ್ಜೆಗಳನಿಕ್ಕುತ್ತಾ ಒಂದು ಕೊಟ್ಟಿಗೆಯ ಮುಂದೆ ಕಟ್ಟಿದ್ದ ಕರುವಿನ ಮೇಲೆ ಬಿದ್ದು ಗ್ವಾಕೆಗೆ ಬಾಯಾಕಿ ಅಲುಮಾಕಿಬಿಡ್ತು. ಆಡು ಕುರಿಗಳು ಒಂದೇ ಸಮನೆ ಬ್ಯಾಗುಡುತ್ತಿದ್ದವು. ಆ ಒಂದೇ ಒಡೆತಕ್ಕೆ ತಣ್ಣಗಾದ ಕರು ಅಂಬೋ ಅನ್ನುವಷ್ಟರಾಗಾ ಆ ಮೊಬ್ಬು ಗತ್ತಲಾಗ ಕುಕ್ಕುರುಗಾಲಿನಲ್ಲಿ ಕುಂತಿದ್ದ ಕೆಂಪಾಲಗನಿಗೆ. ಕಣಜದ ಮೇಲೆ ಮಡಗಿದ್ದ ತರಳು ಮೂಟೆ ಉರಳಿ ಕರುಮೇಲೆ ಬಿದ್ದೋದಂಗೆ ಆಗಿ, ಏನೋ ಎಂದು ಗಕ್ಕನೆ ಓಡಿಹೋಗಿ ಎರಡೂ ಕೈಯಲ್ಲೂ ಕರುವಿನ ಮೇಲೆ ಬಿದ್ದಿದ್ದ ಮೂಟೆಗೆ ಕೈ ಹಾಕಿ ತಬ್ಬಿ ಎತ್ತ ತೊಡಗಿದಾಗ ಕೈಯಿಗೆ ಎರಡು ಕೆವಿಗಳು ಸಿಕ್ಕವು. ಕರುವಿನ ಗ್ವಾಮಾಳೆ ಕಿತ್ತು ರಕುತವೆಂಬೋ ರಕುತವನ್ನ ಜೋರ್ ಎಂದು ಪಾನಮಾಡುತ್ತಿದ್ದ ಜೀವಿಗೆ ಯಾರೋ ತನ್ನ ಕಿವಿಗಳನ್ನು ಹಿಂಡಿದಂಗೆ ಭಾಸವಾಯಿತು. + +ಕರುವಿನ ಮೇಲೆ ಕುಂತಿದ್ದು ಗಡ್ದುಲಿಯೂ ಗಡ್ದುಲಿಯ ಮೇಲೆ ಕಾಲಾಕಿ ತಬ್ಬಿಕೊಂಡು ಕುಂತಿದ್ದ ಕೆಂಪಾಲಗನನ್ನು ನೋಡಿದ ಲಚ್ಮಿಗೆ ಸ್ವಾಮಿ ಮಾದಪ್ಪನೇ ಮನೆಗೆ ಬಂದಂಗೆ ದರುಶನವಾಗಿ ಕೈ ಮುಗಿದು ನಿಂತಳು. ರಕ್ತಪಾನಕ್ಕೆ ಡಿಸ್ಟರ್ಬ್ ಮಾಡಿದ್ದಕ್ಕೆ ತನ್ನ ನಿಗಿನಿಗಿ ಕಣ್ಣುಗಳನ್ನು ಅರಳಿಸಿ ತನ್ನ ಕಟವಾಯಿಯನ್ನು ಮೇಲೆ ಸರಿಸಿ ಹಲ್ಲುಗಳನ್ನು ಪ್ರದರ್ಶನ ಮಾಡಿ ಗುರಗುಟ್ಟಿತ್ತು ಗಡ್ದುಲಿಯು. ಅದರ ಒಂದೇ ಒದರಿಗೆ ಕೆಂಪಾಲಗನೂ ತಡಕೆಯಾಚೆ ಬಿದ್ದು. ‘ಅಯ್ಯಯ್ಯೋ! ಏ ಮಾರಿ ಲಚ್ಮಿ… ಲವ್ವೋ… ಗಡ್ದುಲಿ ಬಂದ್ಬುಟದೇ ಬಾರ್ರೇ’ ಎಂದು ಬೊಬ್ಬೆಯಿಟ್ಟನು. + +ಆ ಕೂಗಾಟವು ಕಿರಿಚಾಟವಾಗಿ ಕಿರಿಚಾಟಕ್ಕೆ ಅವನ ಬಾಮೈಕ್ಳು, ಸದ್ಯ ಮಾವನಾದ ಗೂಸ ಬೈರನು, ಕುಳ್ಳೀರ, ಸಾಕನು ಎಲ್ಲರಿಗೂ ಮೈಯಲ್ಲಿ ಅಡ್ರಿನಾಲಿನ್ ರಿಲೀಸ್ ಆಗಿ, ಬೇಟೆಯೆಂಬುದು ಮೃಗವೆಂಬುದು ಹಳ್ಳಿಗೆ ಲಗ್ಗೆ ಇಕ್ಕಿದ್ದು ತಿಳಿದು, ಸಬ್ಬಲು, ಬರ್ಜಿ, ಕುಡುಗೋಲು, ಬೆಟ್ ಕುಡ್ಲುಗಳನ್ನು, ಓಡೋಡಿ ತರುವಷ್ಟರಲ್ಲಿ ಅವರಿಗೆ ಆಯುಧಗಳು ಸಾಲ್ಟೇಜ್ ಇದೆ ಅನ್ನಿಸಿತು. ಮೊದಲು ಬಂದ ಹಿರಿತಲೆ ಸಿದ್ದನು ತನ್ನ ಬೆಟ್ ಕುಡ್ಲುನಿಂದ ದೂರದಿಂದಲೇ ಕರುವಿನ ಮೇಲೆ ಅವುಚಿ ರಕ್ತ ಕುಡಿತಿದ್ದ ಗಡ್ದುಲಿಗೆ ಬೀಸಿದ. ಆ ಹೊಡೆತಕ್ಕೆ ಕುಡ್ಲು ಗುಯ್ಯನೆ ತಿರುಗಿ ಗಡ್ದುಲಿಯ ಗಡ್ಡದ ಜುಬ್ರಕ್ಕೆ ಬಡಿದು ಗೊಂತು ಕಲ್ಲಿಗೆ ತಗುಲಿ ಮುರುದಿಕ್ಕಿಕೊಂಡಿತು. + +ನಿರಾಯುಧರಾಗಿ ನಿಂತಿದ್ದ, ಬೊಬ್ಬೆಯಾಕುತ್ತಾ, ಚೀರುತ್ತಾ, ಅಳುತ್ತಾ, ಇದ್ದ ಮಾನವ ಪ್ರಾಣಿಗಳನ್ನು ಕಂಡು ಬೆದರಿದ ಗಡ್ದುಲಿಯು ಚಂಗನೆ ಕಣಜದ ಮೇಲೆ ಎಗರಿ ಡಿಫೆನ್ಸಿವ್ ಮೋಡ್ ನಲ್ಲಿ ಕುಳಿತು, ಇನ್ಸ್ ಎಂದು ಬಾಯಿ ಕಳಚಿ ಆವ್೦… ಎಂದಿದ್ದಕ್ಕೆ. ಬಾಗಲಲ್ಲಿ ನಿಂತಿದ್ದ ಗಂಡುಗಳು, ಹೆಣ್ಣುಗಳು, ಮುದುಕಿ-ಮುದುಕರು ತಡಕ್ಕನೆ ಎಗರಿ ಮೂರು ಗಜ ಹಿಂದಕ್ಕೆ ಬಿದ್ದರೆ, ಕೆಲವರ ಕಾಲು ನಡುಗುತ್ತಿತ್ತು, ಸಿದ್ದನಿಗೆ ಒಂದಕ್ಕೆ ಹೋಗಬೇಕೆನಿಸಿತು. + + + +ಕೇರಿಗೆ ಸಿಂಬ ಬಂದ ಸುದ್ದಿ ಅತ್ತಗಿರಲಿ, ಈ ಶನಿಯನ್ನು ಊರು ಬಿಟ್ಟು ಓಡಿಸೋದು ಹೆಂಗೆ? ಎಂದು ಹಿರಿಯ-ಕಿರಿಯ ತಲೆಗಳು ತಲೆ ಕೆಡಸಿಕೊಂಡಿದ್ದಾಗ ದೂರದಲ್ಲಿ ಕುಳಿತ ಹಿರಿಯಜ್ಜಿ ಮುದುಕಿ ‘ನಾನೇಳಿಲ್ಲೇನೋ ಮೊನ್ನೇನೆ ಹುಣಸನಳ್ಳಿ ಬಸಪ್ಪನ ಪೂಜೆ ಮಾಡ್ಸ್ ಕೋ ಬಾರೋ ಅಂತ. ಇವತ್ತು ಆ ಸ್ವಾಮಿನೇ? ಪರಮಾತ್ಮನ್ನನೇ? ಮನೆಲೇ ಒಡದ್ ಸಾಯಸ್ತಿಯೇನೋ? + +ಸಿವಾ? ಇನ್ನಾ ಏನೇನ್ ನೋಡ್ಬೇಕೋ ಈ ಕಣ್ಣಾಗ’ ಎಂದು ಎಂದಿದ್ದಕ್ಕೆ ಅವರ ಸೊಸೆಯು ಸೋಭಾನವಾಗಿ ‘ಆಹಾಹ… ಬಂದ್ಬುಟ್ಲು ಇಲ್ಲಿ! ಆರ್ ತಿಂಗಳಿಂದ ಸಾಕಿದ್ದೇ ಕರ, ಅದರ ಪಡೆ ಕಿತ್ತೋಗಾ ಬಾಯಾಗ ಇಕ್ಕೋಂತು. ಅದಕ್ಕೆ ಮಾಡ್ತಾ ಇರೋದೇ ಸರಿ ಸುಮ್ನೆ ಇರೇ ಮುದ್ಕಿ’ ಎಂದು ತೆಪ್ಪಗಾಗಿಸಿದಳು. + +ಊರಿನ ಗಂಡುಗಲಿ ನರರೆಲ್ಲಾ ಸೇರಿ ಹಿರಿ ತಲೆಗಳು. ಕಿರಿ ತಲೆಗಳು ಬೆರೆತು ಬೀಡಿ ಹಚ್ಚಿ ಪಿಲಾನ್ ನಡೆದು ರಜಾಕಣ್ಣನ್ ಮನೆಗಿರೋ ಗನ್ನು ತರಸಿ, ಆ ಸರಿರಾತ್ರೀಲಿ ಆರು ಇಂಚು ಲೋಡ್ ಮಾಡಿ, ಸಕಲರೂ ತಮ್ಮ ತಮ್ಮ ಶಕ್ತಾನುಸಾರವಾಗಿ ಆ ಮಚ್ಚು, ದೊಣ್ಣೆ, ಬೆಟ್ ಕುಡ್ಲು, ಚಾಕು, ಗಡಾರಿ ಎಲ್ಲಾ ಸರಿ ಮಾಡ್ಕೊಂಡು ಕಣಜದ ಮೇಲೆ ಕುಳಿತ ಗಡ್ದುಲಿ ಬೇಟೆಗೆ ನಿಂತರು. + +‘ನನ್ನ ಬೇಗ ಕರಕೋ ಬಾರದೇನಪ್ಪ, ನನ್ನ ಜೊತೆಗಾರರೆಲ್ಲಾ ಹೋಗ್ಬಿಟ್ರು’ ಇದನ್ನಾ ನೋಡಾಕಿಂತಾ. ನಾನು ಯಾವಾಗಪ್ಪಾ ಸಾಯೋದು ಯಾವಾಗಪ್ಪಾ ನನ್ನ ಗುಂಡಿ ತೋಡಿ ಮುಚ್ಚೋದು ಎಂದು ಒಬ್ಬಳೇ ಕಲ್ಲು ಚಪ್ಪಡಿ ಮೇಲೆ ಕುಳಿತು ಹನಿ ಹನಿ ಮಳೆಯಂತೆ ತೊಟಕಾ ತೊಟಕಾ ಎಂದು ಮಾತಾಡುತ್ತಿದ್ದರೆ ಮುದುಕಿ, ‘ಮುಚ್ಚೇ ಬಾಯಿ! ಅಮ್ಮ … ತಾಯಿ’ ಎಂದು ಸುಮ್ಮನಾಗಿಸಿದಳು ಸೊಸೆ. + +ಮುಂದೆ ಗನ್ನುಧಾರಿ, ರಜಾಕಣ್ಣನೂ ಕಣಜದ ಮೇಲೆ ಅವುಚಿಕೊಂಡು ಕುಂತಿದ್ದ ಧಡಿ ತಲೆ ಗಡ್ದುಲಿಗೆ ಒಂದೇ ಒಂದು ಢಮ್ ಅನಿಸಿದನು. ಆ ಸದ್ದಿಗಾಗಿ ಕಾದು ನಿಂತಿದ್ದ ಗಂಡುಗಳು ಎಲ್ಲರು ಒಮ್ಮೆಲೆ ನುಗ್ಗಿ ತಲೆಗೊಂದು ಏಟಂತೆ ಬೊಬ್ಬೆ ಇಡುತ್ತಾ ಚೆನ್ನಾಗಿ ಚಚ್ಚುವಾಗ ಮೂರ್ನಾಲ್ಕು ಜನರ ಕೈ ಕಾಲುಗಳಲ್ಲಿ ರಕ್ತ ಸುರಿಸಿಕೊಂಡು ಕೂಗುತ್ತಾ ಬಂದರು. ಕುಳ್ಳೀರನ ಕಿರುಬೆರಳು ಮಾತ್ರ ಅರ್ಧ ಕಟ್ ಆಗಿ ನ್ಯಾತಾಡುತ್ತಿತ್ತು. ಅಡ್ರಿನಾಲಿನ್ ಪರವಶವಾಗಿ ಹೋಗಿದ್ದ ಗಂಡುಗಳು ತಮ್ಮ ಇದ್ದಬದ್ದ ಕ್ವಾಪವನ್ನು ಸಿಂಹಕ್ಕೆ ತೋರಿಸಹೋಗಿ ಕತ್ತಲೆಯಲ್ಲಿ ಅವರವರ ಕತ್ತಿ ಮಚ್ಚುಗಳಿಂದ ಅವರವರ ಕಾಲು ಕೈಗಳಿಗೆ ಚಚ್ಚಿಕೊಂಡಿದ್ದರು. ಕೊನೆಗೂ ಸಿಂಬದ ಹೆಣವನ್ನು ಬಾಗಿಲ ಮುಂದೆ ಹೊತ್ತು ತಂದು ಹಾಕಿದರು. + +ಸ್ವಲ್ಪ ಕಾಲ ಯಾರೂ ಮಾತಾಡದೇ ಎಲ್ಲೆಲ್ಲಿ ಗಾಯವಾಗಿದೆ ಎಂದು ತಮ್ಮ ತಮ್ಮ ಕೈ ಕಾಲುಗಳನ್ನು ನೋಡಿಕೊಳ್ಳತೊಡಗಿದರು. ದೂರದಲ್ಲಿದ್ದ ಹೆಂಗಸರು ಹತ್ತಿರ ಬಂದರು, ಮಕ್ಕಳು ಕಣ್ಣು ಬಾಯಿ ಅಗಲಿಸಿ ಪಂಜಿನ ಬೆಳಕಲ್ಲಿ ಸಿಂಬವನ್ನು ಕಂಡವು. ಕಾಲು ಕೈಗಳಿಂದ ರಕ್ತ ಸೋರಿಸಿಕೊಂಡು ಬಂದ ಗಂಡುಗಳಿಗೆ ಅವರವರ ಹೆಂಡರುಗಳು ಔಷಧೋಪಚಾರ ಮಾಡಿ ಕಾರುತ್ತಿದ್ದ ರಕ್ತವನ್ನು ನಿಲ್ಲುವಂತೆ ಮಾಡಿದರು. + +‘ಆ ಹೊತ್ತಿಗೆ ಸರಿಯಾಗಿ ಕಾಡು ಕಾಯುವ ಡೂಟಿ ಕೆಲಸಕ್ಕೆ ಸೇರಿದ ಗುಟ್ಟಿಗೆ ಇಂಪರ್ಮೇಸನ್ ಗೊತ್ತಾಗಿ ಡೂಟಿ ಮುಗಿಸಿ ಮನೆಗೆ ಬಂದನು. ಅವನ ಕೆಲಸ ಕಾಡು ಕಾಯುವುದಾದರೂ ಇವನು ಒಮ್ಮೊಮ್ಮೆ ಊರಿನಲ್ಲಿ ನಾಯಿ ಸತ್ತರೂ, ನರಿ ಸತ್ತರೂ, ಮದುವೆಯಾದರೂ, ಕುಟುಕೆಯಾದರೂ, ಉಸಿರಾಡಿದರೂ, ಹೂಸು ಬಿಟ್ಟರೂ ಅದರ ಸುದ್ದಿಯನ್ನು ದೊಡ್ಮನೆ ಗೌಡರಿಗೆ ತಿಳಿಸುವುದು ಇವನ ಆಜನ್ಮ ಸಿದ್ಧ ಹಕ್ಕು ಎಂದೇ ತಿಳಿದಿದ್ದ. + +ಗುಟ್ಟಿಯು ಮೂರುದಿನದ ಹಿಂದೆ ತಪ್ಪಿಸಿಕೊಂಡಿದ್ದ ಗಡ್ದುಲಿ ಕಿಲ್ಲಿಂಗ್ ಆಗಿರೊ ಸ್ಪಾಟ್ ಗೆ ಬಂದು ‘ನೋಡಿ ಸಿದ್ದಣ್ಣಾ… ಕಾಡು ಮೃಗ ಮನೆಗೆ ಬರೋದು ದನಕರ ಹಿಡಿಯೋದು ಸಾಮಾನ್ಯ. ಅದಕ್ಕೆ ಪರಿಹಾರ ಕೊಡೋಕೆ ಪಾರೆಸ್ಟರ್ ಅವ್ರೆ, ಗೌರ್ಮೆಂಟ್ ಇದೆ. + + + +ನೀವು ನಮಗೊಂದು ಮೆಸೇಜ್ ತಿಳಿಸ್ದೇ ಕೊಂದಿರೋದು ದೊಡ್ಡ ಕೇಸು. ಏನದರೂ ಇದು ಒಳ್ಳೆ ಕೇಸಲ್ಲ. ಎಂದು ಮೊದಲು ನಾವು ದೊಡ್ಡ ಗೌಡರಿಗೆ ತಿಳಿಸಿಬಿಡಾನ ಎಂದಿದ್ದಕ್ಕೆ ಸಿದ್ದನಿಗೆ ಎಲ್ಲಿಂದಲೋ ಕೋಪಬಂದು, ನಮ್ಮ ಅಟ್ಟಿಗೆ ನುಗ್ಗಿರೋ ಇದನ್ನ ಜೀವಸಹಿತ ಬಿಡ್ಬೇಕೆನ್ ಸ್ವಾಮಿ. ಎಂದು ಸತ್ತಿರುವ ಸಿಂಬದ ಕಳೆಬರಕ್ಕೆ ಜಾಡಿಸಿ ಒದ್ದು ಕೋಪ ತೀರಿಸಿಕೊಂಡನು. + +ಇಬ್ಬರೂ ಸೇರಿ, ಊರಿನ ಹಿರಿತಲೆಗಳು ಗೌಡರನ್ನ ಸಂಧಿಸಿ ಸಂದೀ ಕಾರ್ಯವನ್ನು ಪ್ರಸ್ತಾಪಿಸಿ, ಕೊನೆಗೆ ಹುಚ್ಚನಕುಂಟೆ ಹಳ್ಳದಲ್ಲಿ ಆಳುದ್ದ ಗುಂಡಿ ತೋಡಿ ಸತ್ತ ಸಿಂಬವ ಮಣ್ಣುಮಾಡಿ ನೆಲವನ್ನೆಲ್ಲಾ ಸಮಮಾಡಿ ಉಚ್ಚೆಳ್ಳು ಕಡ್ಡಿ ಸೋಗೆಯೆಲ್ಲಾ ಹಾಕಿ, ಸುಟ್ಟು ರಾತ್ರೋ ರಾತ್ರಿ ಸುತ್ತಲೂ ಉತ್ತು ಸಮಾ ಮಾಡಿ ಆರಾಮಾಗಿ ಸದ್ದು-ಸುದ್ದು ಇಲ್ಲದೇ ಊರಿಗೆ ಊರೇ ಸಿಂಬಕ್ಕೆ ಹೊಡೆದ ಹೊಡೆತಗಳನ್ನು ಹೇಳಿಕೊಂಡು ಖುಷಿಪಡುತ್ತಿತ್ತು. ಊರನ್ನು ಸಿಂಬದಿಂದ ಕಾಪಾಡಿದ ಗನ್ನುಳ್ಳ ರಾಜಾಕಣ್ಣನಿಗೆ ಪರಾಕುಗಳು ಸಿಕ್ಕವು. ಬನ್ನೇರುಘಟ್ಟ ಝೂ ನಿಂದ ತಪ್ಪಿಸಿಕೊಂಡು ಬಂದ ಮೂರು ಸಿಂಬಗಳನ್ನು ಹುಡುಕುತ್ತಾ ಪೊದೆಗಳನ್ನ ಶೋಧಿಸಿ ಹುಡುಕಿ ಸೊರಗಿದ್ದ ಗುಟ್ಟಿಯ ಬಳಗ ಮತ್ತು ವಾಚರ್ಗಳು ‘ಈ ಕೆಲಸನೂ ಬೇಡ ಏನು ಬೇಡ ಹೋಗಲೇ!’ ಎನ್ನುತ್ತಾ, ಹುಡುಕುತ್ತಾ ಹುಡುಕುತ್ತಾ ಬಳಲಿ ಬರಲಾಗಿ, ಸಕ್ಕರೆಕೆರೆಯ ಬಳಿ ಒಂದು ಸಿಂಬವನ್ನು ಬೋನಿಗೆ ಕೆಡವಿ, ಮತ್ತೊಂದು ಸಿಂಬವು ಸುದ್ದಳ್ಳದಲ್ಲಿ ಬಲೆಗೆ ಬೀಳಲಾಗಿ, ಇನ್ನೊಂದು ಸಿಂಬಕ್ಕಾಗಿ ಕಾಡಿನ ಪೊದೆಪೊದೆಗಳನ್ನು ಸೋಸಿದರೂ ಸಿಗದೇ, ಹಳ್ಳಿಹಳ್ಳಿಯ ದನ ಕುರಿ ಕಾಯುವ ಎಲ್ಲರನ್ನೂ ಕೇಳೀ ತಿಳಿದರೂ ಸಿಗದೆ, ಮೂರ್ನಾಲ್ಕು ತಿಂಗಳು ಹುಡುಕಿದರೂ ಸಿಂಬ ಸಿಗಲಿಲ್ಲ. ಕೊನೆಗೆ ಸಿಂಬ ಕಳೆದು ಹೋಗಿದೆ ಎಂದು ರೆಕಾರ್ಡ್ ಮಾಡಲಾಯಿತು ರೆಕಾರ್ಡ್. + + + +ಕೆಂಪಾಲಗನು ಇನ್ನು ನಶಿಸಿಹೋಗುತ್ತಿರುವ ರಾಷ್ಟ್ರೀಯ ಉದ್ಯಾನದಲ್ಲಿ ಕುರಿ ಮೇಯಿಸುತ್ತಿದ್ದಾನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_316.txt b/Kenda Sampige/article_316.txt new file mode 100644 index 0000000000000000000000000000000000000000..ae3d3a3f8b64886f2d88f1dbec5bdf174af399d0 --- /dev/null +++ b/Kenda Sampige/article_316.txt @@ -0,0 +1,203 @@ + + +ತಣಿವವರನ್ನು ತಣಿಸಿ, ದಣಿವವರನ್ನು ದಣಿಸಿ, ದಣಿದ ದಿನಮಣಿಯು ದಿಗ್ದೆಶೆಗಳನ್ನೆಲ್ಲ ಮಲಿನವಾಗಿಸಿ ವಿರಾಮಕ್ಕಾಗಿ ತೆರಳಿದನು. ಆ ತನಕ ಪ್ರಫುಲ್ಲವದನವನ್ನಿಟ್ಟುಕೊಳ್ಳಲೆತ್ನಿಸಿದ್ದ ಕುಮುದೆಯ ಮುಖವು ಕಳೆಗುಂದಿತು. ಅನಿವಾರ್ಯವಾಗಿ ಎದ್ದು, ಸಣ್ಣ ದೀಪವನ್ನೆತ್ತಿ ಉರಿಸಿಟ್ಟಳು. ಕುಮುದೆಗಾಗಿ ಹೆಚ್ಚಿನ ಸಹಾನುಭೂತಿಯನ್ನು ತೋರಲಾರದೆ ಆ ದೀಪವು ಹೊಗೆ ಊದುತ್ತ ಉರಿಯತೊಡಗಿತು. ಕುಮುದೆಯು ಆ ದೀಪವನ್ನೇ ದಿಟ್ಟಿಸುತ್ತ ಕುಳಿತಳು. ಅವಳ ಮನಸ್ಸು ಆದಾವುದೋ ದೂರದ ಸಾಮ್ರಾಜ್ಯದಲ್ಲಿ ಭ್ರಮಣ ಮಾಡುತ್ತಿತ್ತು. ಕೊಠಡಿಯ ಒಂದು ಬದಿಯಿಂದ ಕ್ಷೀಣ ಸ್ವರವೊಂದು ‘ಅಮ್ಮಾ’ ಎಂದು ಕೂಗಿತು. ಕುಮುದೆಯು ತಟ್ಟನೆ ಎದ್ದು ಆ ಕಡೆಗೆ ನಡೆದು ‘ಏನಮ್ಮಾ?’ ಎಂದು ಕೇಳಿದಳು. + +ಮಗುವು ಒಂದರೆ ನಿಮಿಷ ಏನನ್ನೋ ಯೋಚಿಸುತ್ತ ‘ಅಮ್ಮಾ, ಅಪ್ಪನು ಬರಲಿಲ್ಲವೇ?’ ಎಂದು ಪ್ರಶ್ನಿಸಿತು. + +‘ಇಲ್ಲ’ + +‘ಈ ದಿನ ಬರುವನಲ್ಲವೇ?’ + +‘ಅಹುದು ಮಗು; ಕೊಂಚ ಹೊತ್ತಿನಲ್ಲೆ ಬರುವರು. ಆದರೆ, ನೀನು ಎಚ್ಚರವಾಗಿರಬೇಕಾದುದಿಲ್ಲ; ನಿದ್ದೆ ಮಾಡು.’ + +ಮಗುವು, ತನ್ನ ಶುಷ್ಕ ತುಟಿಗಳನ್ನು ಚೇತನವಿಹೀನವಾದಂತಿದ್ದ ನಾಲಗೆಯಿಂದ ಸವರುತ್ತ ‘ಇಲ್ಲ, ಇನ್ನು ನಿದ್ದೆ ಬಾರದು, ನನಗೆ ಬಾಯಾರಿದೆಯಮ್ಮ!’ ಎಂದಿತು. + +ಕುಮುದೆಯು ಸಮೀಪದಲ್ಲಿರಿಸಿದ್ದ ತಟ್ಟೆಯಿಂದ ಸ್ವಲ್ಪ ನೀರನ್ನು ತೆಗೆದು ಮಗುವಿನ ಬಾಯಿಗೆ ಗುಟುಕು ಗುಟುಕಾಗಿ ಬಿಟ್ಟಳು. ನೀರನ್ನು ಕುಡಿದು ಮಗುವು ಪುನಃ ಪ್ರಶ್ನೆ ಮಾಡಿತು. ‘ಅಮ್ಮಾ, ನಿನ್ನ ಊಟವಾಯಿತೇ?’ + +‘ಇಲ್ಲ ಮನೂ, ಇನ್ನು ಮಾಡಬೇಕಾಗಿದೆ.’ + +‘ಅಮ್ಮಾ, ನಾನು ಊಟಮಾಡುವುದ್ಯಾವಾಗ?’ + +‘ನೀನು ಸೌಖ್ಯವಾಗಮ್ಮ; ಆಮೇಲೆ ನಿತ್ಯವೂ ಊಟವಲ್ಲವೇ?’ + +‘ನೋಡು, ನಾನು ಸೌಖ್ಯವಾಗಬೇಕೆನ್ನುವೆ. ಯಾವಾಗಲೂ ಹಾಗೆಯೇ ಹೇಳುತ್ತಿರುವೆ. ನಾನು ಸೌಖ್ಯವಾಗುವುದೆಂದರೆ ಯಾವಾಗ? ನನಗೀಗ ಜ್ವರವಿದೆಯೇ?’ + +‘ಅಹುದು ಮಗು, ಕೊಂಚವಿದೆ.’ + +‘ಅದು ಎಂದೆಂದೂ ನಿಲ್ಲುವುದಕ್ಕಿಲ್ಲವೇ?’ + +‘ಇದೆ, ನೀನು ಬೇಗನೆ ಗುಣಹೊಂದುವೆ’ + +‘ಬೇಗನೆ? – ಯಾವಾಗ? ಎರಡು ದಿನಗಳಲ್ಲೇ?’ + +‘ಅಹುದಹುದು.’ + +ಮಗುವಿಗೆ ತುಂಬಾ ಯೋಚನೆಗಿಟ್ಟಿತು. ಎರಡೇ ದಿನಗಳಲ್ಲಿ! ತಾನು ಸೌಖ್ಯವಾದ ಮೇಲೆ ಇಂಥ ಖಾದ್ಯ ಪದಾರ್ಥಗಳನ್ನು ಸವಿಯಬೇಕು! – ಇಂಥವರೊಡನೆ ಇಂಥಿಂಥ ಆಟಗಳನ್ನು ಆಡಬೇಕು! – ಎಂಥ ಸುಖ! + +ತಡೆಯಲಾರದೆ ಮಗುವು, ಮುಖವರಳಿ, ಆವೇಶದಿಂದ ನುಡಿಯಿತು; ‘ಅಮ್ಮಾ, ನಾನು ಸೌಖ್ಯವಾದ ಮೇಲೆ ನಾನು ಕೇಳಿದ ತಿಂಡಿಗಳನ್ನೆಲ್ಲ ನೀನು ಕೊಡಬೇಕು.’ + +‘ನನ್ನ ಅಮ್ಮಣ್ಣಿಗೆ ಕೊಡದಿರುವೆನೇ?’ + +‘ನಾನು ರಾಜುನೊಡನೆ ಓಡಾಡುವಾಗ ‘ಇತ್ತ ಬಾರೆ ಮನೂ’ ಎಂದು ನನ್ನನ್ನು ಕರೆದು, ‘ಎಣ್ಣೆ ತಾ, ಕಾಳು ತಾ’ ಎಂದು ಹೇಳಬಾರದು!’ + +‘ಇಲ್ಲ ಅಪ್ಪೂ!’ + +‘ಮತ್ತೆ ನಾನು ಶಾಲೆಗೆ ಹೋಗುವಾಗ ನನಗೊಂದು ಹೊಸ ಕೊಡೆ ಕೊಡಬೇಕಮ್ಮ. ಇನ್ನು ನಾನು ರಾಜುವಿಗೆ ಕೊಡೆಗಾಗಿ ಕಾದಿರಲಾರೆ. ಆಕೆ ಎಂದೆಂದೂ ನನ್ನನ್ನು ಮೈ ತುಂಬ ನೆನೆಯಿಸಿ, ಹಾಗೇಕೆ ಮಾಡಿದೆಯೆಂದಾಗ ‘ನಿತ್ಯವೂ ಕೊಡೆಯಿಲ್ಲದಿದ್ದರೆ ಶಾಲೆಗೇಕೆ ಬರುವೆ? ನಿನ್ನ ಅಪ್ಪನಿಗೆ ಕುಡಿಯಲಿಕ್ಕೆ ಮಾತ್ರ ಗೊತ್ತೇ? ಒಂದು ಕೊಡೆಯನ್ನು ಕೊಂಡುಕೊಡುವಂತೆ ಹೇಳು!’ ಎಂದು ಗದರಿಸುವಳಮ್ಮ – ಆ ರಾಜು! ಕೊಡೆಯೊಂದು ಹೊಸತಾಗಿ ನನಗೆ ಬೇಕೇ ಬೇಕು!’ + +ಕುಮುದೆಯು ಮೌನವಾಗಿದ್ದಳು. ಆಕೆಯ ಹೃದಯ ಭಾರವನ್ನು ಈ ಹಸುಳೆ ಬಲ್ಲುದೇನು? + +ಮಗುವೂ ಮತ್ತೂ ಕಾಡಿತು. ‘ಕೊಡೆ, ತಿಳಿಯಿತೇನಮ್ಮ?’ + +‘ಅಹುದಹುದು.’ + +‘ಇನ್ನು ನಾನು ರಾಜುವಿನೊಂದಿಗೆ ಶಾಲೆಗೆ ಹೋಗಲೊಲ್ಲೆ; ಎಂದರೆ ಆಕೆಯ ಕೊಡೆಯನ್ನು ಮುಟ್ಟಲೊಲ್ಲೆ. ನನ್ನ ಹೊಸ ಕೊಡೆ – ತಿಳಿಯಿತೇನಮ್ಮ?’ + +‘ನೀನೀಗ ಸುಮ್ಮನೆ ನಿದ್ರಿಸು ಮಗು.’ + +‘ಇಲ್ಲ ನಿದ್ದೆಯಿಲ್ಲ ಅಮ್ಮಾ. ಅಪ್ಪನೊಡನೆ ನಾನು ಮಾತಾಡಬೇಕು. ಅವನೆಂದು ಬರುವನು?’ + +‘ಅವರು ಬರಲು ಹೊತ್ತಿದೆ ಮಗೂ; ನೀನು ಮಲಗಿಕೋ ಎಂದೆನಲ್ಲ!’ + +‘ಇರಲಮ್ಮ….. ಅಮ್ಮ, ಕುಡಿಯುವುದೆಂದರೇನಮ್ಮ?’ + +ಕುಮುದೆಗೆ ಹೃದಯವನ್ನು ಕಲುಕಿಸಿಬಿಟ್ಟಂತಾಯಿತು. ಮಗುವಿನ ವಿಮಲ ಮಾತುಗಳು ಮತ್ತೂ ಆಕೆಯೂ ಎದೆಯನ್ನು ತಿವಿದುವು:‘ರಾಜುವು ಹೇಳುವಳಲ್ಲ – ಕುಡಿವುದೆಂದರೆ ಕೆಟ್ಟುದೆಂದು? ನಾನು ಕುಡಿವುದಿಲ್ಲವೇ? ನೀನು ಕುಡಿವುದಿಲ್ಲವೆ? ಹಾಗೆಯೇ ‘ನೀನೂ ಕುಡಿವುದಲ್ಲವೇ ರಾಜು? – ನನ್ನ ಅಪ್ಪನು ಕುಡಿದರೆ ಮಾತ್ರ ಕೆಟ್ಟದ್ದು ಹೇಗೆ?’ ಎಂದು ನಾನು ಕೇಳಿದೆ. ಅದಕ್ಕಮ್ಮಾ …. ನನಗೆ ಕೋಪ ಬರುವುದಮ್ಮಾ… ನನ್ನಪ್ಪನು ಕುಡಿವುದು ಮಾತ್ರ ಕೆಟ್ಟುದೆಂದು ಅವಳ ತಾಯಿಯು ಮಾತಾಡುತ್ತಿದ್ದಳೆಂದು ಹೇಳಿದಳಮ್ಮ! ಕೆಟ್ಟ ರಾಜು! ಇನ್ನು ನಾನು ಆಕೆಯೊಡನೆ ಮಾತಾಡಕೂಡದೇ?’ + +‘ಬೇಡ’ + +‘ಆದರೆ ಕುಡಿವುದೆಂದರೇನು?’ + +ಹೊರಗೆ ಕಾಲುಗಳ ಸಪ್ಪಳ ಕೇಳಿಸಿತು. ಅದರೊಡನೆ ಈ ವಾಕ್ಸರಣಿಯು ತೇಲಿ ಬಂತು; ಪಿಕೆಂಟಿಂಗ್ – ಪಿಕ್, ಎಟ್, ಇಂಗ್ – ಪಿಕ್, ಪಿಕ್, ಇಂಗ್ – ಪೀ ಕೇ… ಟ್ ಇಂಗ್ – ಪೀ ಪಿಂಗ್- ಪಿಂಗ್ – ಪಿಂಪಿಂಗ್….’ ಬಾಗಿಲು ಬಲವಾಗಿ ನೂಕಲ್ಪಟ್ಟು ಕೆಂಗಣ್ಣಿನ ಕರಾಳ ಮಾನವ ಜೀವಿಯೊಂದು ಆ ಹರಕು ಕೊಠಡಿಯನ್ನು ಪ್ರವೇಶಿಸಿತು! + +ಕುಮುದೆಯು ಅತ್ತ ಕಡೆ ಹೊರಳಿ ನೋಡಿ, ಪುನಃ ಮುಖ ತಿರುಗಿಸಿಕೊಂಡಳು. ಮಗುವು ಹಾಸಿಗೆಯಲ್ಲಿದ್ದು ಕುಳಿತುಕೊಳ್ಳಲೆತ್ನಿಸಿ, ಸಫಲವಾಗದೆ, ತಲೆಯನ್ನು ಮಾತ್ರ ಬಾಗಿಲ ಕಡೆಗೆ ತಿರುಗಿಸಿ, ‘ಅಪ್ಪ ಬಂದ!’ ಎಂದು ಸಂತೋಷದಿಂದ ಕೂಗಾಡಿತು. + +ಆರಂಗುಲ ಉದ್ದಕ್ಕೆ ಬೆಳೆದ ಕೂದಲುಳ್ಳ ತಲೆ, ನಾಲ್ಕಂಗುಲದ ಹಣೆ; ಕೆಂಪಡರಿದ ಕಣ್ಣುಗಳೆರಡು; ಮುಖ ತುಂಬ ಗಡ್ಡ; ಬಾಗಿ ಸಂಕೋಚಿಸಿಕೊಂಡ ಭುಜಗಳು; ಗುಂಡಿಯಿಲ್ಲದ ಅಂಗಿಯ ಕೆಳಗೆ ಕೊಳಕಾದ ಪಂಚೆ; ಇವಿಷ್ಟು ಕೂಡಿದರೆ ಓರ್ವ ಸಂಪತನಾಗುವನು. ಆ ಸಂಪತನು ಕುಮುದೆಯ ಗಂಡ! – ನೋಡಿ ಸಹಿಸದಾದಳು. ಮಗುವು ಕೂಗಿತು ‘ಅಪ್ಪ’. + +ಸಂಪತನು ಮಗುವಿನ ನಿಸ್ತೇಜ ಮೊಗವನ್ನು ಕಾಣಲಿಲ್ಲ; ಮಮತೆಯ ವಚನವನ್ನಾಲಿಸಲಿಲ್ಲ. ತನ್ನ ಸಂಗೀತವನ್ನು ಮುಂದುವರಿಸಿದನು; ‘ಇಂಗ್, ಇಂಗ್, ಇಂಗ್, ಪಿಕೆಟಿಂಗ್, ಪಿಕ್, ಪಿಕ್ ಇಕ್ ಇಕ್ ಇಂಗ್! ಕುಮುದ್, ಎಲ್ಲಾ ಇಂಗ್, ಪಿಕೆಟಿಂಗ್! ಒಳಗೆ ಹೊರಗೆ ಮೇಲೆ ಕೆಳಗೆ ಎಲ್ಲಾ ಇಂಗಿಂಗ್! ಫೂ, ಫೂ! ಮೀಸೆ ಇಲ್ಲ ಕೂದಲಿಲ್ಲ – ಅಲ್ಲ ಕೂದಲುಂಟು ಮೀಸೆ ಇಲ್ಲ – ಹುಡುಗಿಯರು! ಕುಡಿಯ ಬೇಡಣ್ಣಾ ಅಂತೆ! ಇಲ್ಲ ಮೀಸೆ! ನಾನು ಕೇಳದೆ, ಹೇಳದೆ, ಬೀಳದೆ ಕುಡಿದೆ! ಕುಡಿದು ಕುಡಿದು ಬೀಳದೆ ಎದ್ದು ಕುಡಿದೆ! ಹೇಳಲೇ ಇಲ್ಲ. ಹುಡುಗಿಯರು ಕೇಳಲೇ ಇಲ್ಲ! ಮೀಸೆಯೂ ಇಲ್ಲ! ಫೂ…. ! ಒಂದು, ಎರಡು ಹುಡುಗಿಯರೆಲ್ಲಾ ಹುಡುಗಿಯರು – ಕೇಳಿದರೆ ಪಿಕೆಟಿಂಗ್, ಕುಮುದ್! ಹುಡುಗಿಯರು, ಆಣೆಗಾರರ ಹುಡುಗಿಯರು!’ + +ಮಗುವು ಬೆಪ್ಪಾಯಿತು. ಕುಮುದೆಯು ಮೌನವಾಗಿ ಕೇಳಿದಳು. ಸಂಪತನು ಮುಂದೆ ಒದರುತ್ತಲೇ ನಡೆದನು. + +‘ಇಲ್ಲ ಕುಮುದ್! ಹುಡುಗಿಯರೆಲ್ಲಾ ಬೆಡಗು! ಎಲ್ಲಾ ಮೋಸ! ಗಾಂಧಿ ಮತ್ತು ಶೇಂದಿ ಮತ್ತು ಮೋಸ! ದುಡ್ಡು ಕೊಟ್ಟು ಕುಡಿವವರಿಗೆ ಪಿಕೆಟಿಂಗ್!-ಸಾಲಗಾರರಿಗೆ?’ + +ಮಗುವು ಕೊಂಚ ಚೇತನಗೊಂಡು, ಪುನಃ ‘ಅಪ್ಪಾ’ ಎಂದಿತು. + +ಸಂಪತನ ಕೆಂಪು ಕಣ್ಣುಗಳು ಕೆಂಡವಾದವು. ‘ಅಪ್ಪಾ ಅಪ್ಪಾ ಅಪ್ಪಾ – ಇಲ್ಲ ಊರಲ್ಲಿ ತುಪ್ಪಾ. ನನ್ನಪ್ಪ ನಿನ್ನಪ್ಪ . ಸುಮ್ಮನೆ ಅಪ್ಪ! ಗಾಂಧಿಯೂ ಅಪ್ಪನಂತೆ! ಅವನೂ ಪಿಕೆಟಿಂಗ್, ನೀನೂ ಪಿಕೆಟಿಂಗ್…..’ + +ಕುಮುದೆಯ ಕಣ್ಣುಗಳಲ್ಲಿ ನೀರಹನಿಗಳು ಕಾಣಿಸಿಕೊಂಡವು. ‘ಮನುವು ನಿಮ್ಮೊಂದಿಗೆ ಮಾತಾಡಬೇಕೆಂದು ಎಚ್ಚರವಾಗಿರುವಳು’ ಎಂದಳು. + +ಸಂಪತನಿಗೆ ಅಂದು ಶೇಂದಿ ಅಂಗಡಿಯ ಮುಂದೆ ಪಿಕೆಟಿಂಗ್ ನಡೆಸುವ ಹುಡುಗಿಯರು ತಡೆದ ಕಾರಣ ಪ್ರಪಂಚದ ಮೇಲಿನ ವಿಶ್ವಾಸವೇ ಕಳಚಿ ಹೋಗಿದ್ದಿತು. ಎಂದನು ‘ಎಲ್ಲಾ ಸುಳ್ಳು ಕುಮುದ್. ನೀನೂ ಸುಳ್ಳು, ಮನುವೂ ಸುಳ್ಳು! ಎಲ್ಲಾ ಪಿಕೆಟಿಂಗ್! ಕೊಟ್ಟು ಕೊಟ್ಟು ಪಿಕೆಟಿಂಗ್! ಕೊಡದಿದ್ದರೆ ಕಿಕ್ಕಿಂಗ್!’ + +ಮಗುವು ಮೌನವಾಯಿತು. ಕುಮುದೆಯೂ ಮಾತೆತ್ತಲಿಲ್ಲ. ಸಂಪತನು ಅರೆ ತಾಸಿನ ತನಕ ಚೀರಾಡಿ, ನೆಗಾಡಿ ‘ಇಂಗ್-ಇಂಗ್’ ಸಂಗೀತವನ್ನು ಹಾಡುತ್ತಾ ಅಲ್ಲೇ ಅಡ್ಡಾಡಿದನು. ಯಾರಿಗೂ ಅನ್ನಾಹಾರವಿಲ್ಲ. ನೀರಿಲ್ಲ. + +ಮೇಕೆಗಳೆರಡು ಆ ವ್ಯಾಘ್ರವಿರುವ ಗವಿಯಲ್ಲಿ ನಿದ್ರಾವಶವಾದವು. ವ್ಯಾಘ್ರ-ಅಹ! ವ್ಯಾಘ್ರವು ‘ಪತ್ನಿಪ್ರೇಮ’ವನ್ನು ಬಲ್ಲುದು; ‘ಪುತ್ರ ಪ್ರೇಮ’ವನ್ನೂ ಬಲ್ಲುದು. ಸಂಪತನು…. ವ್ಯಾಘ್ರನಲ್ಲ; ಅದಕಿಂತಲೂ ಲಕ್ಷ ಪಾಲು ಕೀಳು. ಸುರಾದೇವಿಯ ಮಡಿಲಲ್ಲಿ ಬೆಳೆದ ಭೀಷಣ ಕೂಸು! ಪ್ರಪಂಚವನ್ನರಿಸಲಾಪದ ಜೀವನ್ಮೃತನು!!! ಸ್ವ ಪರ ಹಾನಿಗಳನ್ನು ಮಾತ್ರ ಬಲ್ಲ ಕರಾಳಯಂತ್ರ!!! + +ಅನಂತಮಹಿಮಳಾದ ನಿಶಿಯು ಇಂಥ ಅನಂತ ಭೀಷಣ ದೃಶ್ಯಗಳನ್ನು ಜಡನೇತ್ರಗಳಿಂದ ಮರೆಯಿಸಿ ಅನಂತಾಕಾಶದಲ್ಲಿ ಮೆರೆದಳು. ಅನಂತನು ಮಾತ್ರ ಅನಂತಲೋಚನಗಳಿಂದಿದನ್ನು ನೋಡಿ ಅನಂತಾಲೋಚನೆಗಳಿಗೊಳಗಾದನು. + +*** + +ನೀರಿನ ಅಂತರಾಳದಲ್ಲಿದ್ದರೂ ಮತ್ಸ್ಯವು ನೀರಿನಲ್ಲಾದ ತಾಡನವನ್ನು ತಿಳಿವಂತೆ, ನಿದ್ದೆಯಲ್ಲಿದ್ದರೂ ಸಂಪತನ ಗುಡಿಸಲಲ್ಲಿ ಅಂದು ಮಾತೃ ಹೃದಯವು ಆಕಸ್ಮಿಕವಾಗಿ ಕಂಪಿಸಿತು. ಕುಮುದೆಯು ತಟ್ಟನೆದ್ದು ಕುಳಿತು, ನೇತ್ರಯುಗಗಳನ್ನು ಅಗಲವಾಗಿರಿಸಿದಳು. ಅದಾವುದೋ ಒಂದು ವಿಧದ ನಿಗೂಢ ಭೀತಿಯಿಂದಾದ ಚಳಿಯಿಂದಾಕೆಗೆ, ತಾನು ಹಿಮಾಲಯದ ಕಂದರಲ್ಲಿ ಕುಳಿತಂತೆನಿಸಿತು. ತಾನು ‘ಅಮ್ಮಾ’ ಎಂಬ ಕ್ಷೀಣ ಸ್ವರವನ್ನು ಕೇಳಿದೆನೇ, ಅಥವಾ ಕನವರಿಸುತ್ತಿರುವೆನೇ ಎಂಬುದು ಆಕೆಗೆ ತಿಳಿಯದಾಯಿತು. ‘ಮನೂ, ಕರೆದೆಯೇನಮ್ಮ?’ ಎಂದು ಮಮತಾವಾಣಿಯಿಂದ ಕೇಳಿದಳು; ಉತ್ತರವಿಲ್ಲ! ಮತ್ತೊಮ್ಮೆ ಹೃದಯವು ಬಲವಾಗಿ ಕಂಪಿಸಿತು ಆ ಭೀತಿ! + +ಮರುಕ್ಷಣದಲ್ಲಿ ದೀಪವನ್ನುರಿಸಿ ಅದನ್ನೆತ್ತಿ ಮಗುವಿನ ಕಡೆಗೆ ನೋಡಿದಳು. ಅದೇನು? ಬಾಲೆಯ ನಿಸ್ತೇಜ – ಪರಂತು ಸುಂದರವಾದ ಮುಖವು ಇದೇಕೆ ಹೀಗೆ? – ಬಾಯಿಯು ತೆರೆದುಕೊಂಡಿದೆ! ಕಣ್ಣುಗಳು ಶಾಂತ ನಿದ್ರಾಸೂಚಕವಾಗಿ ಮುಚ್ಚಿಕೊಂಡಿರುವುದೇನೋ ನಿಜ; ಆದರೆ ಹೃಚ್ಚಲನೆಯು ಕಾಣುವುದೇ? -ಕುಮುದೆಯ ಭೀತಿಯು ದ್ವಿಗುಣಿತವಾಯಿತು. ಚಳಿಯು ಆಭಾಸವಾದರೂ ಆಕೆಯ ಹಣೆಯಲ್ಲಿ ಬೆವರ ಹನಿಗಳು ಕಾಣಿಸಿಕೊಂಡವು. ತನ್ನ ಕೈಯನ್ನು ಮಗುವಿನ ಎದೆಯ ಮೇಲಿರಿಸಿದಳಷ್ಟೆ; ಮರುಕ್ಷಣದಲ್ಲಿ ಅವಳ ಆರ್ತನಾದವು ದಿಗಂತವನ್ನೇ ಭೇದಿಸಿ ಹೊರಟಿತು! + +ಆ ಹಳ್ಳಿಯಲ್ಲಿ ಆ ಆರ್ತೆಯ ಕೂಗು ಅಂದು ಯಾರಿಗೂ ಕೇಳಿಸಲಿಲ್ಲ. ರೋದನವು ನಾಡಿನಲ್ಲಾದರೂ ಅದು ಅರಣ್ಯ ರೋದನವೇ ಆಯಿತು. ಕಂಠ ಪರ್ಯಂತ ಮದ್ಯಪ್ರಾಶನ ಮಾಡಿ ಪ್ರಪಂಚವನ್ನೇ ಮರೆತು ನಿದ್ರಿಸುವ ಸಂಪತನಿಗೂ ಅದು ಕೇಳಿಸಲಿಲ್ಲ! + +ಅಹುದು, ಕ್ರಿಮಿಕೀಟಗಳು ಮರುಕುಗೊಂಡವು; ವೃಕ್ಷಗಳು ಸುಯ್ಯೆಂದು ನಿಟ್ಟುಸಿರಿಟ್ಟವು; ವಾಯುವೂ ಸಹಾನುಭೂತಿಯ ಸಂದೇಶವನ್ನರುಹ ತೊಡಗಿದನು; ಗುಡಿಸಲಿನ ನಿರ್ಜೀವ ಗೋಡೆಗಳೂ ಎಚ್ಚರಗೊಂಡು ಖೇದ ಪ್ರದರ್ಶನ ಮಾಡುತ್ತಿರುವಂತೆ ತೋರಿತು; ಆದರೆ, ಸಂಪತನು ಮಾತ್ರ ಈ ಲೋಕಕ್ಕೆ ಸಂಬಂಧಪಟ್ಟವನಲ್ಲ! + +ಕುಮುದೆಯ ರೋಧನದ ಭರವು ಕಡಮೆಯಾಯಿತು. ಎದ್ದು ಪತಿಯನ್ನು ಬಲವಾಗಿ ಅಲುಗಾಡಿಸಿದಳು. ಆದರೆ ಸಂಪತನಿಗೆ ಕುಮುದೆಯ ಭಾಷೆಯೇ ತಿಳಿಯದು. ಅವನ ಪರವಾಗಿ ಸುರಾದೇವಿಯು ಉತ್ತರಕೊಟ್ಟಳು. ‘ಪಿಕೆಟಿಂಗ್ ಇಂಗಿಂಗ್, ಪಿಕ್ಕಿಂಗ್, ಕಿಕ್ಕಿಂಗ್!’ + +ಹಾಯ್, ಕುಮುದ! ನೀನು ಕೇಸರಿನಲ್ಲೇ ಬೆಳೆಯಬೇಕೆ? ಸಹಸ್ರ ವರ್ಷಗಳ ಕೆಳಗಿನ ಕಾಶಿಯ ಸ್ಮಶಾನದಲ್ಲಿನ ಚಿತ್ರವಲ್ಲವಿದು : ಚಂದ್ರಮತಿಯು ಲೋಹಿತಾಶ್ವನ ಶವವನ್ನು ತೊಡೆಯಲ್ಲಿರಿಸಿ ಆ ಗಾಢ ನಿಶಿಯಲ್ಲಿ ಪರಮಾತ್ಮನಲ್ಲಿ ಮೊರೆಯಿಟ್ಟಳು. + + + +ಮುಂಜಾನೆ ಕುಮುದೆಯ ಪರಿಚಿತಳೊಬ್ಬಳು ಅಲ್ಲಿಗೆ ಬಂದಾಗ – ತನ್ನ ಚೇತನವಿಹೀನ ಬಾಲೆಯ ಅಸ್ತಿಪಂಜರವನ್ನು ತೊಡೆಯಲ್ಲಿಟ್ಟು ಕುಳಿತಲ್ಲಿ ನಗುತ್ತಿರುವ ಕುಮುದೆಯನ್ನು ನೋಡಿ ಬೆರಗಾದಳು; ಭಯಗೊಂಡಳು! + +*** + +ಅದು ಹಳ್ಳಿಯು; ನಿಜ. ನಗರದ ಪೇಟೆಗಳಲ್ಲಿನ ವಿಲಾಸ ಸಾಮಗ್ರಿಗಳೂ ಸಾಧನಗಳೂ ಅಲ್ಲಿರಲಿಲ್ಲ; ಅದೂ ನಿಜ ಆದರೆ ಭೋಗಾಭಿಲಾಷಿಗೆ, ತನ್ನ ವಾಂಛಿತ ಭೋಗಕ್ಕಾಗಿ ನಗರವೇ ಅವಶ್ಯಕವೆಂದಿಲ್ಲ. ದುಷ್ಕರ್ಮ ಸಾಧನೆಗೆ ಹಳ್ಳಿಯೂ ಯಥೇಷ್ಟ ವಸ್ತುಗಳನ್ನೊದಗಿಸಿ ಕೊಡಬಲ್ಲದು. + +ಮದ್ಯದ ಮಾತು – ಮದ್ಯಕ್ಕೆ ನಗರವೆ ಪ್ರಾಮುಖ್ಯವೇ – ಅಲ್ಲ. ಹಳ್ಳಿ…. ಅದರ ಉಗಮಸ್ಥಾನ! ಹಳ್ಳಿಯ ಕೃಪೆಯಿಂದಲೇ ನಗರದ ಲಕ್ಷ ಕಂಠ ನಾಳಗಳು ಸುರೆಯನ್ನು ಸುರಿದುಕೊಳ್ಳುವುವು. ಅದು ಕಾರಣ, ನಗರ ವಾಸಿಗಳೇ ಮದ್ಯಪಾಯಿಗಳೆನ್ನಲಾಗದು. ಅಹುದು, ಅದು ಹಳ್ಳಿಯು, ಅಲ್ಲೊಂದು ಮದ್ಯದ ಗುಡಿಯು. ಮೂರು ಮೈಲುಗಳ ವ್ಯಾಸಕ್ಕೆ ವಾಸವಾಗಿರುವ ಸುರಾ ಭಕ್ತರಿಗೆ ಇಲ್ಲೇ ಉಪಾಸನೆ. + +‘ಶಾಸನ ಭಂಗ’ ಚಳವಳವು ಗ್ರಾಮಾಂತರಗಳಲ್ಲೂ ಹರಡಿ ರಾಜಕೀಯ ವಿಷಯಗಳನ್ನರಿಯದ ಪಾಮರರೆನಿಸಿದ ಗ್ರಾಮವಾಸಿಗಳಲ್ಲೂ ವಿವೋಕೋದಯವನ್ನುಂಟು ಮಾಡಹತ್ತಿತ್ತು. ಎರಡನೇ ಬುದ್ಧನ ಬೋಧನೆಯು ಅಲ್ಲಿಗೆ ಮುಟ್ಟಿತು. ಅದು ಕಾರಣ ಇಂದು ಅಲ್ಲಿ ಮದ್ಯದ ಗುಡಿಯ ಮುಂದೆ ಈರ್ವರು ಲಲನೆಯರು ನಿಂತು ಕೆಲವು ದಿನಗಳಿಂದ ನಡೆದು ಬಂದಂತೆ ಪಹರೆ (ಪಿಕೆಟಿಂಗ್) ನಡೆಸುತ್ತಿದ್ದರು. ನೂರು ಜನರು ಆ ಗುಡಿಯೆದುರಲ್ಲಿ ನಿಂತು, ಆ ಲಲನೆಯರ ಕಂಠದಿಂದ ‘ಮದ್ಯಪಾನ ಮಾಡದಿರು’ ಎಂದು ಹೊರಡುವಾ ಕೊಳಲದನಿಯನ್ನು ಕೇಳಿ ಆನಂದಿಸುತ್ತಿದ್ದರು. ಸಮಯ ಆರು ಘಂಟೆ; ಸೂರ್ಯಾಸ್ತಮಾನ. + +ಇನ್ನೂರು ಕಣ್ಣುಗಳ ಟೀಕಾಯುಕ್ತ ದೃಷ್ಟಿಯನ್ನು ಅಗಣ್ಯ ಮಾಡಿ, ‘ಮಾನವ’ ನೆಂದು ಯಾರಿಂದಲೊ ಕರೆಯಲ್ಪಡುತ್ತಿದ್ದ ಪ್ರಾಣಿಯೊಂದು ನೆಟ್ಟಗೆ ಆ ಗುಡಿಯ ಮುಂದೆ ಬಂತು. ಬಂದು ಒಳಹೊಕ್ಕುವೆನೆನ್ನುವಾಗ ಲಲನಾದ್ವಯದ ನಾಲ್ಕು ಕೈಗಳು ಆ ಜೀವಿಯನ್ನು ತಡೆದುವು; ಕೋಮಲವಾಣಿ ‘ಹೋಗದಿರು ಕೈ ಮುಗಿಯುವೆವು; ಮದ್ಯವೇ ಮರಣವು!’ ಎಂದಿತು. ಸಂಪತನು ತಲೆಯೆತ್ತಿ ನೋಡಿ ಆ ಲಲನೆಯರಲ್ಲೋರ್ವಳನ್ನು ಗುರುತಿಸಿ ‘ಏನು ನೀನೇ, ಕುಮುದ!’ ಎಂದು ಸಖೇದಾಶ್ಚರ್ಯದಿಂದ ಕೇಳಿದನು. + +‘ಕುಮುದ? – ಅಹುದು. ಆದರೆ ಅರಳಿದ ಕುಮುದವಲ್ಲ’ ಎಂದೇ ಕುಮುದೆಯು ಉತ್ತರವಿತ್ತಳು. ‘ಕುಮುದವಲ್ಲ? ಕುಮುದವಾದರೆ, ಬಾಂಧವನನ್ನು ನೋಡಿದಾಗ ಅರಳುವುದು!’ + +ಸಂಪತನು ತಿರಸ್ಕಾರದಿಂದ ನುಡಿದನು. ‘ಸಾಕು ನಡೆ ಮನೆಗೆ!’ + +ಕುಮುದೆಯು ಕದಲಲಿಲ್ಲ. ‘ಮನೆ? ನನಗೆಲ್ಲಿದೆ ಮನೆ? – ಈ ಮದ್ಯದ ಗುಡಿಯನ್ನು ಬೀಳಿಸಿ, ಇಲ್ಲಿ ಮನೆಯನ್ನು ಕಟ್ಟುವುದಕ್ಕಾಗಿ ಬಂದಿರುವೆನು. ಆ ತನಕ ನನಗೆ ಮನೆಯೆಲ್ಲಿ ಅಣ್ಣ’ ಎಂದಳು. + +ಅಣ್ಣ? – ಗಂಡನನ್ನು ‘ಅಣ್ಣ’ ನೆನ್ನುವಳು! + +ಸಂಪತನು ರೋಷದಿಂದ ರೂಪಗೆಟ್ಟನು. ‘ಪಾಪೀಯಸೀ! – ಅಣ್ಣನೆಂದಾರನ್ನು ಕರೆವೆ? ನಿನ್ನ ಅಣ್ಣನು ಎಂದೋ ವಿಷಮ ಜ್ವರ ತುತ್ತಾಗಿ ನರಕಕ್ಕೆ ಹೋಗಿರುವನು!’ ಎಂದು ಒದರಿದನು. + +ಕುಮುದೆಯು ಶಾಂತವಾಗಿಯೇ ಉತ್ತರವಿತ್ತಳು. ‘ಇಲ್ಲ. ನನ್ನ ಅಣ್ಣನು ಇಲ್ಲೇ, ನನ್ನ ಮುಂದಿರುವನು. ಅವನು – ವಿಷಮ ಜ್ವರಕ್ಕೆ ತುತ್ತಾಗಿರುವುದೇನೋ ನಿಜ; ಆದರೆ, ಇನ್ನೂ ನರಕಕ್ಕೆ ಹೋಗಲಿಲ್ಲ; ಹೋಗಿ ಮುಟ್ಟಲಿಲ್ಲ. ‘ಮದ್ಯ’ ಎಂಬ ವಿಷವನ್ನು ಪಾನಮಾಡಿ ಅದೊಂದು ಜ್ವರವನ್ನು ಸಂಪಾದಿಸಿ, ನರಕದ ಪಥದಲ್ಲಿ ಪದಾರ್ಪಣ ಮಾಡಿರುವನಷ್ಟೆ. ಅವನನ್ನು ತಡೆಯಲು ನಾನಿಲ್ಲಿ ಬಂದುದಾಗಿದೆ.’ + +ಸಂಪತನು ರೋಷೋನ್ಮತ್ತನಾಗಿ, ಮೈಮರೆತು ‘ನಾನು ನಿನ್ನ ಗಂಡನು!’ ಎಂದು ಗರ್ಜಿಸಿದನು. + +ಆ ಗರ್ಜನೆಗೆ ಕುಮುದೆಯು ಕಂಪಿಸಲಿಲ್ಲ. ‘ಗಂಡ! ಎಲ್ಲಿಯ ಗಂಡ? ಅಣ್ಣಾ ಹೀಗೇಕೆ ಮಾತಾಡುವೆ? ನನಗೆ ವಿವಾಹವಾದುದಿಲ್ಲ. ನೀನು ನನ್ನ ಅಣ್ಣನು!’ ಎಂದು ಸ್ಥಿರವಾಗಿ ನುಡಿದಳು. + +ಸಂಪತನು ರೋಷಾವೇಶದಿಂದ ‘ಛಿ! ನರಕ!’ ಎಂದು ಚೀರುತ್ತಾ ಕುಮುದೆಯನ್ನೂ ಆಕೆಯ ಸಂಗಾತಿಯನ್ನು ಎರಡು ಕೈಗಳಿಂದ ತಟ್ಟನೆ ಬಲವಾಗಿ ದೂಡಿ ಮದ್ಯದ ಗುಡಿಯನ್ನು ಪ್ರವೇಶಿಸಿದನು. ವಿನಯಾವತಾರಿಗಳಾದ ಆ ಸ್ತ್ರೀಯರ ಮೇಲೆ ಕೈ ಮಾಡಿದ ಪಾಪಿಯನ್ನು ಹಿಸುಕಿಬಿಡಲು ಎದುರಲ್ಲಿ ಕೂಡಿದ ಜನಸ್ತೋಮದಿಂದ ನೂರು ಕೈಗಳು ಮುಂದುವರಿದವು. ‘ಆಕೆಯ ಪತಿಯವನು, ಹೊಡೆಯಲಾಗದು. ಶಾಂತಿ ಸಂದೇಶವೂ ನೆನಪಿರಲಿ!’ ಎಂದು, ಆ ನೂರು ಕೈಗಳನ್ನು ಬೇರೆ ನೂರು ಶಾಂತಿಹಸ್ತಗಳು ತಡೆದುವು. + +*** + +ಮೇಲೆ ವಿವರಿಸಿದ ಘಟನೆಗಳು ನಡೆದ ರಾತ್ರೆ :- ಭೀಷಣಾಂಧಕಾರ. ಆ ಮದ್ಯದ ಗುಡಿಯ ಆಕಾರವನ್ನೇ ಹೋಲುವ ಸಂಪತನ ಮನೆಯಲ್ಲಿ ಕುಮುದೆಯು ಕೊಳಕಾದ ನೆಲದ ಮೇಲೆ ಗೋಡೆಗೆ ಆತು ಕುಳಿತಿದ್ದಳು. ಪಾಪಿ ಸಂಪತನು ಆಕೆಯನ್ನು ರೋಷದಿಂದ ದೃಷ್ಟಿಸಿ ನಿಂತಿದ್ದನು. + +ಸಂಪತನ ಹೊಲಸು ಬಾಯಿಯು ಅವಾಚ್ಯ ಮಾತುಗಳನ್ನು ಪ್ರಸವಿಸಿತು. ‘ಪಾಪೀಯಸಿ! ನಿನಗಾರು ಕುಮುದವೆಂದು ನಾಮಕರಣ ಮಾಡಿದರು? – ಅಷ್ಟು ಜನಸ್ತೋಮದ ಮುಂದೆ ನಿನ್ನ ಪತಿಯಾದ ನನ್ನನ್ನು ಏನೆಂದು ಗಳಹಿದೆ? – ನಾನು ನಿನ್ನ ‘ಅಣ್ಣ?’ ಚಾಂಡಾಲ ಸ್ತ್ರೀ! ಗಂಡನನ್ನು ಅಣ್ಣನೆಂದು ಕರೆವ ತತ್ವಜ್ಞಾನವನ್ನು ನಿನಗಾರು ಕಲಿಸಿದರು? ಆ ‘ಗಾಂಧೀ ಪಂಥ’ದವರೇ? ಗೃಹಿಣಿಧರ್ಮವನ್ನು ಮರೆತು ಸಂತೆಸೂಳೆಯ ವೇಷವನ್ನು ಧರಿಸಿ ಆ ಜನರ ಸಂತೆಯ ಮುಂದೆ ನಿಲ್ಲುವ ದಿಟ್ಟತನ! ಛೀ ಛೀ ನಿನ್ನ ಬಾಳು!’ + +ತುಟಿಗಳನ್ನು ಕದಲಿಸದೆ, ಕುಮುದೆಯು ಮೌನವಾಗಿ ಕುಳಿತಿದ್ದಳು. ಸಂಪತನು ಮುಂದೆ ಒದರಿದನು; + +‘ಮದ್ಯದ ಅಂಗಡಿಯನ್ನು ಬೀಳಿಸುವೆನೆಂದೆಯಾ? ಮತ್ತೆ ಅಲ್ಲಿ ಮನೆ ಕಟ್ಟುವ ಸಾಹಸವೆ? ಹೇ ಕ್ಷುದ್ರಜೀವಿಯೆ; ಒಲೆಯು ಕುಸಿದರೆ ಒಂದು ಹಿಡಿ ಮಣ್ಣನ್ನು ಮೆತ್ತಲಾಪದ ನಿನ್ನ ಆ ಪುಟ್ಟ ಕೈಯು, ಮದ್ಯದಂಗಡಿಯನ್ನು ಕೆಡವಿ ಹೊಸ ಮನೆಯನ್ನು ಕಟ್ಟುವ ಶಕ್ತಿ ಪ್ರದರ್ಶನ ಮಾಡಬಲ್ಲುದೆ?’ಇಲ್ಲ ಕುಮುದೆಯ ಬಾಯಿಂದ ಉತ್ತರವಿಲ್ಲ. ಸಂಪತನ ವಾಕ್ಪಟುತ್ವದ ಭರವೂ ಕಡಿಮೆಯಾಗಲಿಲ್ಲ. + +‘ನಿನಗೆ ವಿವಾಹವಾಗಿಲ್ಲ? ಹೇ ಮಾನಗೇಡಿಯೇ! ಅಷ್ಟು ಜನರನ್ನು ಅಲಕ್ಷಿಸಿ, ನಿನ್ನ ಗಂಡನ ಮುಖದಲ್ಲೆ ಆ ಮಾತುಗಳನ್ನಾಡುವ ಸಾಹಸವೆ?’ + +ತಟ್ಟನೆ ಮುಂದರಿದು ಸಂಪತನು ಕುಮುದೆಯ ಬಾಯಿಗೆ ಬಲವಾಗಿ ಬಡೆದನು! ನಿರಾಹಾರದಿಂದ ಶುಷ್ಕವಾಗಿದ್ದ ಅಧರಗಳೊಡೆದು ನೆತ್ತರ ಹರಿಯಿತು! ಸಹಿಸಲಾರದೆ ಕುಮುದೆಯು ಭೂಶಾಯಿಯಾದಳು! + +ಸಂಪತನು ಅಷ್ಟಕ್ಕೇ ನಿಲ್ಲಲಿಲ್ಲ. ‘ಹೇಳು, ನಾನು ನಿನ್ನ ಪತಿಯ ಸ್ಥಾನದಲ್ಲಿರುವೆನೇ? ಅಥವಾ ನಿನ್ನ ಅಣ್ಣನಾಗಿ ತೋರುವೆನೇ?’ ಎನ್ನುತ್ತ ಒದೆದನು. + +ಒಳಗಿಂದೊಳಗೆ ಕುದಿಯುತ್ತಿದ್ದ ಜ್ವಾಲಾಮುಖಿಯು ಮೇಲಕ್ಕೆ ಹೊರಟಿತು. ಹೇಳಿದಳು: ‘ಅಹುದು, ನೀನು ನನಗಣ್ಣನಾಗಬೇಕು! ಪ್ರೇಮದ ಸಸಿಯನ್ನು ನಿನಗಾಗಿ, ನಿನ್ನೊಳಿತಿಗಾಗಿ, ನೆಟ್ಟು ಅದಕ್ಕೆ ನೀರೆರೆದು ಶ್ರಮಪೂರ್ವಕವಾಗಿ ಅದನ್ನು ಬೆಳೆಯಿಸತೊಡಗಿದೆನು. ನಿನ್ನನ್ನೊಲಿಸಲು ಮಮತಾವರ್ಷವನ್ನು ಸುರಿದು ಸುರಿದು ಒಣಗಿದೆನು. ನಿನ್ನ ಕುಡಿಕತನವನ್ನು ಬಿಡಿಸಲು ರಾತ್ರಂದಿನವೂ ಹೆಣಗಾಡಿ ಹೆಣವಾದೆನು. ಮನೆಯಲ್ಲಿ ಕಾಳುಕಡ್ಡಿಯಿಲ್ಲದಿದ್ದರೂ ಅದನ್ನು ಸೃಜಿಸಿ ಅಡುಗೆಯನ್ನಿಟ್ಟು ನಿನಗೆ ಬಡಿಸಿದೆನು. ಸಾಕಷ್ಟು ಅನ್ನವಿಲ್ಲದಿದ್ದರೆ ನಿನಗೂ ನನ್ನ ಮನುವಿಗೂ ಬಡಿಸಿ, ನಾನು ಉಪವಾಸದಿಂದ ದಿನಗಳೆದೆನು. ಅನ್ನವು ಕೇವಲ ಕಡಮೆ ಇದ್ದಾಗ, ಮೊದಲೇ ಮದ್ಯದಿಂದ ಅಸ್ತಿಪಂಜರವಾದ ನೀನು ಅನ್ನವಿಲ್ಲದೆ ನಶಿಸಿಹೋಗಬಾರದಾಗಿ ನಿನಗಾಗಿ ಸಾಕಷ್ಟು ಇಟ್ಟು, ನನ್ನ ಮಗುವಿಗೆ ಅರೆಹೊಟ್ಟೆಯಲ್ಲಿಯೇ ತೃಪ್ತಿಪಡಿಸಿ ಅವಳನ್ನು ಕ್ಷಯದ ಬಾಯಿಗೆ ಬಲಿಗೊಟ್ಟೆನು. ಈ ದುರ್ಭಾಗಿ ಬಾಲೆಯು ನನ್ನ ಪಾಪೀ ಬಸಿರಲ್ಲಿ ಜನನಕ್ಕೆ ಬಂದು, ಕೆಲ ಕಾಲ ಈ ನರಕ ಭೋಗ್ಯವನ್ನನುಭವಿಸಿ, ಯಾವುದೋ ಸುಖ ಸಾಮ್ರಾಜ್ಯಕ್ಕೆ ಹೊರಟು ಹೋಯಿತು. ನಾನು ಇಲ್ಲೇ ಉಳಿದೆನು. + +ಆತ್ಮಹತ್ಯೆಗೆ ನನ್ನ ಮನಸ್ಸು ಒಪ್ಪದಾಯಿತು. ಉಳಿದ ಜೀವಿತವನ್ನು ನಿನ್ನ – ಸಾಧ್ಯವಾದರೆ ಇತರರ – ಮದ್ಯಪಾನ ಚಟ ನಿರ್ಮೂಲನಕ್ಕಾಗಿ ಸವೆಯಿಸಬೇಕೆಂದು ಮನಸ್ಸಾಯಿತು. ‘ದೇಶ ಸೇವಿಕೆ’ಯಾಗಿ ಸೇರಿ, ನೀನು ಉಪಾಸನೆಗಾಗಿ ತೆರಳುವ ಆ ಸುರಾದೇವಿ ಮಂದಿರದ ಮುಂದೆ ನಿಂತುಕೊಂಡೆ, ನಿನಗಾಗಿಯೇ. ನನ್ನ ಹೃದಯದಲ್ಲಿ ಸಾಕಿ ಸಲಹಿದ ಪ್ರೇಮದ ಸಸಿಯನ್ನು ಕಡಿದಾತನು ನೀನೇ. ಆದರೆ, ಅದನ್ನು ಪುನಃ ಚಿಗುರಿಸುವಂತೆ ಮಾಡಲು ಯತ್ನಗೊಳ್ಳುವೆನು. ಅದು ಕಾರಣವೇ ನಿನ್ನ ಕುಡಿತಕದ ಚಟವು ಸಂಪೂರ್ಣ ಕಿತ್ತು ಹೋಗುವ ತನಕ, ನಿನ್ನನ್ನು ಅಣ್ಣನೆಂದೇ ತಿಳಿದು, ಹಾಗೆಯೇ ಸಂಬೋಧಿಸುತ್ತ, ತದ್ರೀತಿಯಲ್ಲಿಯೆ ಸಂಪರ್ಕವನ್ನಿಟ್ಟುಕೊಳ್ಳಬೇಕೆಂದು ನಿರ್ಧರಿಸಿರುವೆನು!’ + +ಸ್ತಂಭೀಭೂತನಾಗಿ ಸಂಪತ್ತನು ಎಲ್ಲವನ್ನು ಕೇಳಿದನು. ಒಂದು ಗರ್ಜನೆ, ಒಂದು ಬಲವಾದ ಒದೆ, ಒಂದು ಆರ್ತನಾದ; ಸಂಪತನ ಮನೆಯ ಭಾಗ್ಯಜ್ಯೋತಿಯು ದಿವ್ಯ ಜ್ಯೋತಿಯಲ್ಲಿ ಐಕ್ಯಹೊಂದಿತು! + +ಈ ಪಾಮರ ಜನಸಾಗರದಲ್ಲಿ ತಳದಲ್ಲಿ ಅಗಣ್ಯವಾಗಿ ಬಿದ್ದಿದ್ದ ಅಮೌಲ್ಯ ಮೌಕ್ತಿಕವನ್ನು ವಿಧಾತನು ಹೆಕ್ಕಿ ತನ್ನ ಕಂಠಹಾರದಲ್ಲಿ ಧರಿಸಿಕೊಂಡನು! + +*** + +ಪಾಪಿಯ ಮೈಯು ಚಿರ್ರನೆ ತಣ್ಣಗಾಯಿತು. ಭೀತಿಯ ಸಹಸ್ರ ಕರಾಳ ವದನಗಳು ಅವನನ್ನು ನೋಡಿ ನಗುವಂತೆ ಭಾಸವಾಯಿತು. ಓಡಿಹೋಗಿ ಕುಮುದೆಯ ಕಳೇಬರವನ್ನು ಅಪ್ಪಿಕೊಂಡು ಕೇಳಿದನು. ‘ಕುಮುದ! ನೋವಾಯಿತೇ?’ + +ಆ ಶವವನ್ನು ಅತ್ತಿತ್ತ ಅಲುಗಾಡಿಸಿ ಮತ್ತೊಮ್ಮೆ ಕೇಳಿದನು ‘ಕುಮುದ, ನನ್ನ ಕುಮುದ! ಮಾತಾಡು, – ನೋವಾಯಿತೇನಮ್ಮ?’ + +ಉತ್ತರವಾಗಿ, ಕಿಟಕಿಯೊಳಗಿಂದ ಗಾಳಿಯು ಬಲವಾಗಿ ಬೀಸಿ ದೀಪವನ್ನು ನಂದಿಸಿ ಬಿಟ್ಟಿತು. ಸಂಪತನು ಸ್ತಂಭಿತವಾಗಿ, ಕರ್ತವ್ಯಮೂಢನಾಗಿ ಕೆಲಕ್ಷಣಗಳ ತನಕ ಸ್ಥಿರವಾಗಿ ನಿಂತನು. + +ಆಕಸ್ಮಿಕವಾಗಿ ಅವನಲ್ಲಿ ಅವರ್ಣನೀಯ ಮಾರ್ಪಾಟಾಯಿತು. ಅದು ಸ್ವರ್ಗವೂ ಇರಬಹುದು. ನರಕವೂ ಇರಬಹುದು. ಎದ್ದು, ಆ ಕಳೇಬರದ ಕತ್ತಿಗೆ ಕೈಯಿಕ್ಕಿ, ಎರಡಾಣೆಯ ಗಾಜಿನ ಮಣಿಗಳಿರುವ ಮಾಂಗಲ್ಯ ಸೂತ್ರವನ್ನು ಕಿತ್ತು ತೆಗೆದನು. ಎಂಥ ಪೈಶಾಚಿಕ ದೃಷ್ಟಿ! ಎಂಥ ನಗು – ಈ ನರಪಿಶಾಚಿಯನ್ನು ನೋಡಿ ನಿಜಪಿಶಾಚಿಗಳು ಭೀತಿಯಿಂದ ನಡುಗಿರಬೇಕು! + +ಅಂದಿನ ಆ ನಿಶಿ! ವಿಧಾತನು ತನ್ನ ಕಲಾಜ್ಞಾನವನ್ನೆಲ್ಲ ಪ್ರಯೋಗಿಸಿ ಅದನ್ನು ರಚಿಸಿರುವನೆಂಬಂತೆ ತೋರುತ್ತಿತ್ತು. ಆ ಅಂಧಕಾರದ ಭೀಕರ ಸೌಂದರ್ಯವನ್ನು ನೋಡಿ ದೇವಗಣಗಳೂ, ತಾರಾಮಂಡಲವೂ ಮುಗ್ಧವಾದಂತಿತ್ತು. ಸಂಪತನು ಅದರ ಕಡೆಗೆ ತಿಲಾಂಶವೂ ಗಮನಕೊಡದೆ, ಉನ್ಮಾದನಂತೆ ಮನೆಯಿಂದ ಹೊರಬಿದ್ದನು. ಈ ಕೊಲೆಗಡುಕನನ್ನು ಸ್ಪರ್ಶಿಸಲಾರದೆ ವಾಯುದೇವನು ಕೂಗುತ್ತ ದಿಕ್ಕು ತೋಚದೆ ಓಡಾಡಿದನು. ಭೀತಿಗೂ ಪ್ರೇಮಕ್ಕೂ ಪ್ರವೇಶವಿಲ್ಲದ ಸಂಪತನ ಎದೆಯು ಕಂಪಿಸಲಿಲ್ಲ! + +ಲಕ್ಷ ಹೃದಯಗಳನ್ನು ಕೊರೆದು ತಿಂದ ಆ ಪಾಪ ಮಂದಿರವೂ, ಆ ಕತ್ತಲಲ್ಲಿ ಕದಲದೆ ನಿಂತಿತ್ತು. ಯಾವ ಬಿರುಗಾಳಿಯೂ ಸಿಡಿಲೂ ಅದನ್ನು ಕೆಡಹಿರಲಿಲ್ಲ. ‘ಸುರೇ! ಸುರೇ!’ ಎಂದು ಒದರುತ್ತ ಸಂಪತನು ಅತ್ತ ಓಡಿ ಬಂದನು. ನಾಯಿಗಳೆರಡು ಈ ಪಿಶಾಚಿಯನ್ನು ಕಂಡು ಬೊಗಳಿದುವಷ್ಟೆ. ಮಾನವನಾರೂ ಆ ಮಾರ್ಗದಲ್ಲಿ – ನೂರು ಗಜಗಳ ವ್ಯಾಸದಲ್ಲಿ – ಇರಲಿಲ್ಲ. + +ಆ ಪಾಪ ಮಂದಿರವು – ಮದ್ಯದ ಗುಡಿಯು – ಸಮೀಪಿಸಿತು. ಸಂಪತನು ಅದರ ಮೆಟ್ಟಲುಗಳನ್ನು ಹತ್ತಿ ನೋಡಿದನು. ಬೀಗ ಇಕ್ಕಿಕೊಂಡಿತ್ತು. ಅಲ್ಲಿ ಯಾರೂ ಇರಲಿಲ್ಲ. ಉನ್ಮಾದನಂತೆ ಬಾಗಿಲಿಗೆ ಬಡೆದನು. + +‘ಸುರೇ! ಸುರೆ!’ + +ಆದರೆ, ಆ ಮರದ ಕದವು ಉತ್ತರ ಕೊಡಲಿಲ್ಲ. + +ಸಂಪತನ ಉದ್ರೇಕವು ಹೆಚ್ಚಿತು. ಶ್ವಾಸಕೋಶಗಳು ಉಚ್ಛ್ವಾಸ – ನಿಶ್ವಾಸಗಳ ಆವೇಗವನ್ನು ತಡಿಯದಾದುವು. ರಕ್ತದ ಒತ್ತಾಟವು ರಭಸದಿಂದ ನಡೆಯಹತ್ತಿತು. ಪಾಪಿಯ ಶಿರದಲ್ಲಿ ಅಸಹನೀಯ ವೇದನೆಯ ಅಭಾಸವಾಯಿತು. + +‘ಸುರೇ! ಸುರೇ!’ + +ಹ್ಹ! ಎಲ್ಲಿದೆ ಸುರೇ? – ಇದೇ ಮಂದಿರದ ಒಳಗೆ, ಆದರೆ, ಆ ಸುರಾಭಾವಕ್ಕೆ ಚೇತನವಿಲ್ಲ. ವಿನಂತಿಯನ್ನು ಕೇಳಿ ಹೊರಗೆ ಬರಲಾಪದು.ಪಾಪಿಗೆ ಯಾರಿಂದಲೂ ಉತ್ತರವಿಲ್ಲ. ಆತನ ಶಿರೋವೇದನೆಯು ದ್ವಿಗುಣಿತವಾಯಿತು. ತ್ರಿಕರಣಗಳೂ ತಾಂಡವವಾಡಿದುವು. ಎದೆಗುಂಡಿಗೆಯು ಸಹಜ ಪ್ರಮಾಣವನ್ನು ಮೀರಿ ಉಬ್ಬಿಕೊಳ್ಳಲಾರಂಭಿಸಿತು. + +‘ಸುರೇ…. ಸುರೇ…..’ + +ಬಾಯಿಯಿಂದ ನೆತ್ತರು ಹರಿದು ಬಂತು. ಅಧಿಕೋದ್ರೇಕದಿಂದ ರಕ್ತ ಕೋಶವು ಒಡೆದಿತ್ತು : ‘ಸು…. ಉ… ರೆ’ ಎಂದೂ ಮತ್ತೂ ತೊದಲುತ್ತ ಬಾಗಿಲಿಗಾಗಿ ಕೈಯೆತ್ತಿದನು. ಆ ಕೈಯು ಪುನಃ ಮೆಟ್ಟಲ ಮೇಲೆ ಬಿತ್ತು. ಸುರಾದೇವಿಯು ಪ್ರಸನ್ನಳಾಗಲಿಲ್ಲ. ಸಂಪತನ ಜೀವಶುಕವು ಹಾರಿ ಹೋಯಿತು. + +ಮರುದಿನ ಆ ಪಾಪಮಂದಿರದ ಮುಂದೆ ಸಹಸ್ರ ಗ್ರಾಮವಾಸಿಗಳು ನಿಂತು ಆ ಭೀಕರ ದೃಶ್ಯವನ್ನು ನೋಡಿದರು. ಮಾಂಗಲ್ಯ ಸೂತ್ರವನ್ನು ಗಟ್ಟಿಯಾಗಿ ಹಿಡಿದುಕೊಂಡ ಕೈಯನ್ನು ಆ ಪಾಪಮಂದಿರದ ಕಡೆಗೆತ್ತಿ ಸಂಪತನ ಶವವು ಅಂಗಾತ ಬಿದ್ದುಕೊಂಡಿತ್ತು. ಆ ವಿಕಾರಮುಖವು ಒಂದು ನಿಗೂಢ ಅರ್ಥ ಸೂಚಕವಾಗಿದ್ದು. ಕಣ್ಣುಗಳ ದೃಷ್ಟಿಯು ಏಕಕಾಲದಲ್ಲಿ ಎಲ್ಲರ ಕಡೆಗೂ ನೆಡೆಲ್ಪಟ್ಟು ‘ಎಚ್ಚರವಿರಲಿ!’ ಎನ್ನುವಂತಿತ್ತು. ಈ ಪಹರೆಯನ್ನು ನೋಡಿ ಸಹಸ್ರ ಹೃದಯಗಳು ಕಂಪಿಸಿದುವು! + + + +ಜನಸ್ತೋಮದಿಂದೊಬ್ಬನು ಹೇಳಿದನು. ಸಂಪತ್ತನು ಸ್ವರ್ಗಕ್ಕೆ ಹೋಗಿರಬಹುದಾದರೆ ಆ ಮಾಂಗಲ್ಯ ಸೂತ್ರವೆ ದಾರಿ ತೋರಿಸಿರಬೇಕು – ಎಂದು. + +*** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_317.txt b/Kenda Sampige/article_317.txt new file mode 100644 index 0000000000000000000000000000000000000000..3e4871c5d8fbb9465cb31852553a3895d5089850 --- /dev/null +++ b/Kenda Sampige/article_317.txt @@ -0,0 +1,87 @@ + + +ಕಳೆದೆರಡು ತಿಂಗಳಿಂದಲೂ ಯಾವೊಂದೂ ಸಾವು ಸಂಭವಿಸದಿರುವುದು ಅವರನ್ನೆಲ್ಲ ಆತಂಕಕ್ಕೀಡು ಮಾಡಿದ್ದುದು ಸರಿಯಷ್ಟೆ. ಸಪೂರಾಕೃತಿಯ, ನೀಳಮೂಗಿನ, ಒಣಗಿದ ಬೇರಿನಂತಿರುವ ಚೆನ್ನಮಲ್ಲನು ಅವರಲ್ಲಿ ಮುಖ್ಯನಾದವನಾಗಿದ್ದು ಉಳಿದವರಲ್ಲಿ ಶಿವರಾಜ, ಮುದ್ದುರಂಗ, ಗೌರಿಪುಟ್ಟ ಮತ್ತು ಕುಮಾರಸ್ವಾಮಿ ಸೇರಿದ್ದರು. + +ಇಷ್ಟೊಂದು ದೊಡ್ಡ ಊರಲ್ಲಿ ಎರಡು ತಿಂಗಳಾದರೂ ಸಾವಾದ ಮನೆಯಿಂದ ತಮಗೆ ಸುದ್ದಿಯೇ ಬರಲಿಲ್ಲವೆಂದು ಹೆಚ್ಚು ಚಿಂತೆಗೀಡಾಗಿದ್ದವನು ಚೆನ್ನಮಲ್ಲನು. ಒಂದು ಸಾವಾದರೂ ಸಾಕು; ಕನಿಷ್ಠ ಅವನು ಇಪ್ಪತ್ತು ದಿನ ಬಾಳುತ್ತಿದ್ದುದು ಅದಕ್ಕಿದ್ದ ಕಾರಣವು. ಸಾವಿನ ಮನೆಯಲ್ಲಿ ಅವರೆಲ್ಲ ಮಾಡುವ ಭಜನೆಗಾಗಿ ಸಿಕ್ಕುವ ಒಂದಿಷ್ಟು ಭತ್ತ, ಖಾರದ ಪುಡಿ, ಸೌದೆ ಸೊಪ್ಪು, ಕಾಳು ಕಡ್ಡಿ ಅವನ ಸಂಸಾರವನ್ನು ಸರಿಸುಮಾರು ಇಪ್ಪತ್ತು ದಿನದವರೆಗೆ ನೂಕುತ್ತಿದ್ದುದಲ್ಲದೆ, ಅವೆಲ್ಲಕ್ಕಿಂತಲೂ ಹೆಚ್ಚಾಗಿ ಮೂರ್ನಾಲ್ಕು ಹಿಡಿ ಭಂಗಿ ಸೊಪ್ಪು ಮತ್ತು ಹತ್ತು ಬಾಟಲಿ ಸಾರಾಯಿಗಾಗುವಷ್ಟು ಕಾಸು ಅವನ ಕೈಸೇರುತ್ತಿದ್ದುದೂ ಇನ್ನೊಂದು ಕಾರಣವಾಗಿತ್ತು. ಅಷ್ಟೂ ಸಾಮಾನು ಸರಂಜಾಮು ಉಳಿದ ನಾಲ್ಕು ಮಂದಿಗೂ ಸೇರಬೇಕಾಗಿದ್ದರೂ ಬೇರಾವ ದುಡಿಮೆಯನ್ನೂ ಸಂಪಾದನೆಯನ್ನೂ ಕಾಣದ ಚೆನ್ನಮಲ್ಲನಿಗೇ ಅದನ್ನೆಲ್ಲ ಅವರು ಧಾರೆಯೆರೆದು ನೀಡಿಬಿಡುತ್ತಿದ್ದುದು ಅವರ ನಡುವಿನ ವಿಶೇಷ ಸಂಗತಿಯಾಗಿದ್ದಿತು. + +ಹೀಗಿರಲಾಗಿ ಈಗ ‘ಸಾವಾದ ಮನೆಯವರ ಆಕ್ರಂದನವೇ ತನ್ನ ಕಿವಿಗೆ ಬೀಳುತ್ತಿಲ್ಲವಲ್ಲ ಧರೆಗುರುವೇ’ ಎಂದು ಚೆನ್ನಮಲ್ಲನು ಹೆಜ್ಜೆ ಹೆಜ್ಜೆಗೂ ಕಂಗಾಲಾಗಿದ್ದನು. ಮತ್ತೊಂದೆಡೆ ಹೋದ ಒಂದು ಸಾವಿನ ಸಂದರ್ಭದ ಭಜನೆಮೇಳದಲ್ಲಿ ಕುಮಾರಸ್ವಾಮಿ ತಂದು ಮಡಗಿದ ಜಗಳ ಅವರೆಲ್ಲರಲ್ಲೂ ವೈಮನಸ್ಸು ಹುಟ್ಟುಹಾಕಿದ್ದು ಅವನ ಚಿಂತೆಯನ್ನು ಇಮ್ಮಡಿಗೊಳಿಸಿದ್ದಿತು. + +ಅದೇನಾಗಿತ್ತೆಂದರೆ, ಎಂದಿನಂತೆ ಉಪ್ಪಾರ ಕೇರಿಯಲ್ಲೊಂದು ಸಾವಾಗಿತ್ತು. ಎಲ್ಲಿದ್ದರೂ ಇವರಿಗೆ ಸಾವಿನ ವಾಸನೆ ಮೂಗಿಗೆ ಬಡಿಯುತ್ತಿತ್ತಲ್ಲವೇ, ಹಾಗಾಗಿ ಇವರು ಮಧ್ಯಾಹ್ನವೇ ಸಾವಾದ ಮನೆಯ ಮುಂದೆ ಹಾಜರಾದರು. ಸತ್ತಿರುವುದು ತಾಲ್ಲೂಕಾಫೀಸಿನಲ್ಲಿ ಅಟೆಂಡರ್ ಆಗಿದ್ದ ಲಿಂಗಶೆಟ್ಟಿ; ಸುತ್ತಿ ಬಳಸಿ ಅವರೆಲ್ಲರಿಗೂ ಸಂಬಂಧಿಕನೇ ಆಗಿದ್ದುದು ಅವರ ಸಂತಸವನ್ನು ಮುಮ್ಮಡಿಗೊಳಿಸಿತ್ತು. ಇವರು ಭಜನೆಗೆ ನಾಕು ಸಾವಿರವೇ ಬೇಕೆಂದರು. ಲಿಂಗಶೆಟ್ಟಿಯ ಮಗನೂ ಹಿಂದೆ ಮುಂದೆ ಯೋಚಿಸುವಂಥವನಾಗಿರಲಿಲ್ಲವಾದ್ದರಿಂದ, ಹತ್ತು ಸಾವಿರವಾದರೂ ಸರಿ; ಕೊಟ್ಟು ತನ್ನ ಅಪ್ಪನ ಆತ್ಮವನ್ನು ಸ್ವರ್ಗಕ್ಕೆ ಸೇರಿಸುವಂಥನಾಗಿದ್ದರಿಂದ ಆ ನಾಕು ಸಾವಿರ ಕೊಡಲು ಒಪ್ಪಿಕೊಂಡು ಮುಂಗಡವಾಗಿ ಒಂದೆರಡು ಸಾವಿರ ಕೊಡಲು ಮುಂದಾದನು. ಆಗಲೇ ಕುಮಾರಸ್ವಾಮಿ ಕೈ-ಬಾಯಿ ಅಡ್ಡಮಾಡಿದನು. + +“ಇವ್ರಗ್ಯಾಕೆ ಅಷ್ಟು ದುಡ್ಡು? ಮೂರು ಪದ ಹಾಡಿ ಹನ್ನೆರಡು ಗಂಟೆಗೇ ಎಣ್ಣೆ ಹೊಡ್ದು, ಭಂಗಿ ಕುಡ್ದು ಮಲಗಿಬಿಡೋಕಾ? ಹಂಗಾಗೋದಾದ್ರ ನಾನು ಮಳವಳ್ಳಿ ಮಾದೇಸ್ವಾಮಿನೇ ಕರಿಸ್ತೀನಿ…. ಇನ್ನೊಂದೈದು ಸಾವಿರವಾಗ್ಲಿ…. ಜನನೂ ಕೂತು ಕಥ ಕೇಳ್ತಾರ… ನೀನು ಒಪ್ಕಬೇಡ ನಾಗೇಂದ್ರ…” ಎಂದು ನಾಗೇಂದ್ರನ ಕೈಯಿಂದ ಹಣ ಕಿತ್ತುಕೊಳ್ಳಲನುವಾದನು. + +ಅವನು ಹಾಗಂದುದೇ ಚೆನ್ನಮಲ್ಲನು ಕ್ರುದ್ಧನಾದನು; ಆದರೂ ತೋರಗೊಡದೆ “ಮಳವಳ್ಳಿ ಮಾದೇಸ್ವಾಮಿ ಯಾಕ? ನೀನೇ ಇದ್ದಯಲ್ಲಾ ಕುಮಾರಸ್ವಾಮಿ; ಸಾಕು! ನೀನೇ ಅವನಿಗಿಂತ್ಲೂ ಚೆಂದಾಗಿ ಹಾಡ್ತಿಯಲ್ಲಾ ಸಿನಿಮಾ ಪದವಾ? ನಿನಗೇ ಹತ್ತು ಸಾವಿರ ಕೊಟ್ಟು ಹಾಡುಸ್ತನ ಬುಡು ನಾಗೇಂದ್ರ” ಎಂದು ಚುಚ್ಚಿದನು. + +ಅವನು ಹಾಗೆ ಚುಚ್ಚಿದ್ದು ಕುಮಾರಸ್ವಾಮಿಗೆ ಚೆನ್ನಾಗಿಯೇ ತಾಕಿತು. ಅವನು ಇನ್ನಷ್ಟು ಕೆರಳಿ “ಇಲ್ಲ ನಿನ್ನನ್ನ ಕಟ್ಟಿಕೊಂಡ್ರ ಐವತ್ತು ವರ್ಷದಿಂದ ಹಾಡ್ತಿದ್ದ ಪದನೇ ಹಾಡಬೇಕಾಯ್ತದ… ಜನ ಎದ್ದು ಹೋಯ್ತರ ಅಷ್ಟೆ… ಜನ ಸೇರಬೇಕು ಅಂದ್ರ ಸಿನಿಮಾ ಪದನೂ ಹಾಡ್ಬೇಕಾಯ್ತದ… ಇನ್ನೊಂದ್ ಪದನೂ ಹಾಡ್ಬೇಕಾಯ್ತದ…” ಎಂದನು. + +ಹೆಣ ಮುಂದಿಟ್ಟುಕೊಂಡು ಇದೇನಪ್ಪಾ ಇವರ ಕದನ ಎಂದು ಚಿಂತಾಕ್ರಾಂತರಾದ ನಾಗೇಂದ್ರನ ದೊಡ್ಡಪ್ಪ-ಚಿಕಪ್ಪಂದಿರು ಎದ್ದು ಬಂದು ‘ಯಾವುದೋ ಒಂದು ಕಥೆನೋ ಪದವೋ ಹಾಡಿ ರಾತ್ರಿ ತುಂಬಿಸಿ ಅವನ ಆತ್ಮನ ಸ್ವರ್ಗಕ್ಕೆ ಸೇರ್ಸಿ… ಇದೇನ ಚೆನ್ನಮಲ್ಲ ನೀನು ಹಟ ಹಿಡಿದಿರೋದು…. ಒಂದು ಕಾಸು ಹೆಚ್ಚುಕಮ್ಮಿ ಮಾಡ್ಕೊಂಡು ಭಜನ ಮುಗಿಸಿಕೊಡು’ ಎಂದು ರಾಜಿ ಮಾಡಿ ಸುಮ್ಮನಾಗಿಸಲು ನೋಡಿದರು. + +ಅಷ್ಟಕ್ಕೂ ಸುಮ್ಮನಾಗದ ಕುಮಾರಸ್ವಾಮಿ “ಆದ್ರ ಒಂದ್ಮಾತು… ನೀವು ಭಜನ ಮಾಡೋದಾದ್ರ ಎಣ್ಣೆ ಹೊಡಿಬಾರ್ದು… ಭಂಗಿ ಸೇದಬಾರದು…. ಹಾಗಾದ್ರ ಮಾತ್ರ ನಾನು ನಿಮ್ಮೊಂದಿಗೆ ಹಾಡ್ತೀನಿ…” ಎಂದನು. + +ಚೆನ್ನಮಲ್ಲ ಅದನ್ನು ಸುತಾರಾಂ ಒಪ್ಪದೆ ಹೋದನು. ‘ತಾನು ಮಂಟೇದರನ ಗುಡ್ಡನಾದ ಕಾಲದಿಂದಲೂ ಯಾವೊಂದು ಸಾವಿನ ಮನೆಯಲ್ಲೂ ಭಂಗಿ ಸೇದದೆ, ಸಾರಾಯಿ ಕುಡಿಯದೆ ಹಾಡಿದ್ದಿಲ್ಲ; ಹಾಡಲಾಗುವುದೂ ಇಲ್ಲ… ಒಂದೊಳ್ಳೆಯ ಕಾರ್ಯವಾದರೆ ನಾನು ಹಾಗೇ ಹಾಡ್ತೀನಿ… ಸಾವಿಗಲ್ಲ’ ಎಂದು ಪಟ್ಟು ಹಿಡಿದು ಕುಂತನು. + +ಹತ್ತುಹಲವು ದಿನಗಳ ತರುವಾಯ ತಮಗೆ ಒಂದೊಳ್ಳೆ ಸಾವಿನ ಪದ ಸಿಕ್ಕಿದೆ; ಹಾಡಿ ನಮ್ಮ ಬಾಯಿ ಕೆರೆತ ನಿವಾರಣೆಯಾದಂತೆ ಆಗುತ್ತದೆಯೆಂತಲೂ ಲೋಕ ಮರೆತು ತೇಲಾಡುವ ನೀಲಿಗ್ಯಾನಕ್ಕೆ ಅವಕಾಶವಾಗುತ್ತದೆಂತಲೂ ಇದ್ದ ಮುದ್ದುರಂಗ, ಗೌರಿಪುಟ್ಟ ಇತ್ಯಾದಿಗಳು ಈ ಚೆನ್ನಮಲ್ಲನ ಹಟದಿಂದ ಅದಕ್ಕೂ ಕತ್ತರಿ ಬಿದ್ದೀತೆಂದು ಹೆದರಿದವು. ಕೊನೆಗೆ ಗೌರಿಪುಟ್ಟ ಹಾಗೂ ಶಿವರಾಜ ಚೆನ್ನಮಲ್ಲನನ್ನು ಹಾಗೂ ಹೀಗೂ ಮಾಡಿ ಹದಕ್ಕೆ ತಂದು ಒಪ್ಪಿಸಿದರು; ಮುದ್ದುರಂಗ ‘ನೀನು ಉಚ್ಚೆ ಮಾಡೋಕೋ, ಬೀಡಿ ಸೇದೋಕೋ ಹೋಗುವಂತೆ ಹೋಗುವಾಗ ನಿನಗೆ ಎಲ್ಲ ವ್ಯವಸ್ಥೆನೂ ಮಾಡ್ತೀನಿ ಒಪ್ಕೊ ಮಾವ’ ಎಂದು ಚೆನ್ನಮಲ್ಲನ ಕಿವಿಯಲ್ಲಿ ಉಸುರಿದ ಮೇಲೆ ಚೆನ್ನಮಲ್ಲನು ಭಜನೆಗೆ ಒಪ್ಪಿದನು. + +ಇತ್ತೀಚಿನ ಕೆಲವು ದಿನಗಳಿಂದ ಹೊಗೆಯಾಡುತ್ತಿದ್ದ ಅವರ ನಡುವಿನ ಕೊಸರಾಟವು ಅಂದು ಸರಿಯಾಗಿಯೇ ಸೆಟೆದು ನಿಂತಿದ್ದಿತು. ಎಂದಿನಂತೆ ಮಂಟೇದರನನ್ನೂ ಸಿದ್ದಪ್ಪಾಜಿಯನ್ನೂ ದೊಡ್ಡಮ್ಮತಾಯಿಯನ್ನೂ ರಾಚಪ್ಪಾಜಿಯನ್ನೂ ನೆನೆದು ಪದಗಳಿಗೆ ಮುಂದಾಗುತ್ತಿದ್ದ ಕುಮಾರಸ್ವಾಮಿಯು ಅಂದು ತಾನು ಹೊಸದಾಗಿ ಸೀಡಿ ಕ್ಯಾಸೆಟ್ಟಿನಲ್ಲಿ ಕೇಳಿ ಕಲಿತಿದ್ದ; ಅದಾಗಲೇ ಆ ಫಾಸಲೆಯಲ್ಲೆಲ್ಲ ಫೇಮಸ್ಸಾಗಿದ್ದ ಮಳವಳ್ಳಿ ಮಾದೇಸ್ವಾಮಿಯ ‘ತಾಳಿ ತಾಳಿ ಚಿನ್ನದ ತಾಳಿ… ಹೆಣ್ಣಿನ ಬಾಳಿಗೆ ಇದುವೆ ಬೇಲಿ’ ಎಂಬ ಹಾಡನ್ನು ಹಾಡಲು ಮುಂದಾದನು. ಅವನು ಹಾಗೆ ಶುರು ಮಾಡುತ್ತಲೇ ಕಂಜರ ಬಾರಿಸುತ್ತಿದ್ದ ಚೆನ್ನಮಲ್ಲನು ಕನಲಿ ಕೆಂಡವಾದನು. + +“ಸ್ವಾಮಿ ನಿಂಗೆ ನಾನು ಎಷ್ಟು ಸಲ ಹೇಳಿದಿನಿ ಈ ಕಾಸೆಟ್ ಪದಗಳನ್ನೆಲ್ಲ ಹಾಡಬೇಡ ಅಂತ… ಸುರುವಿಗೇ ಧರೆಗುರುವನ್ನ ಮರ್ತು ಇದೆಂಥದು ನಿಂದು? ಅದ್ಯಾಕೆ ನಿಂಗೆ ಮೂಲಪದಗಳು ಮರೆತುಹೋದವಾ?” ಎಂದು ಜೋರಾಗಿಯೇ ಗದರಿಕೊಂಡನು ಚೆನ್ನಮಲ್ಲನು. + +ಅವನು ಹಾಗೆ ತಗಾದೆ ತೆಗೆಯಲೆಂದೇ ಆ ಹಾಡು ಶುರು ಮಾಡಿದ್ದ ಕುಮಾರಸ್ವಾಮಿಯೂ ತಿರುಗಿ ಜೋರಾಗಿಯೇ ದಬಾಯಿಸಿದನು. “ನಿನ್ನ ಮೂಲಪದವ ಕೇಳೋಕೆ ಇಲ್ಲಿ ಯಾರಿದ್ದಾರು? ಜನಕ್ಕೆ ನಾ ಹೇಳೋ ಪದಗಳೇ ಹಿಡಿಸೋದು… ನೀನು ಬೇಕಾದ್ರೆ ಮಧ್ಯೆ ಮಧ್ಯೆ ನಿನ್ನ ಹಳೆಯ ಕಾಲದವುಗಳನ್ನ ಹಾಡ್ಕೋ…ಅದು ನಿನ್ನ ತೀಟೆ…ನಾನು ಹೊಸಪದಗಳನ್ನ ಹಾಡ್ತೀನಿ…” ಎಂದು ಮೇಳದವರಿಗೆ ಸೂಚನೆ ಕೊಟ್ಟು ಮುಂದುವರಿದನು. + +ಹಾಗೆ ಸಾವಿನ ಭಜನೆಯ ನಡುವೆ ಎಂದೂ ಸಿಟ್ಟಾಗದ ಚೆನ್ನಮಲ್ಲನು ಅಂದು ಬಹಳವೇ ಸಿಟ್ಟಿಗೆದ್ದನು. “ನೀನು ಮಾಡ್ತಿರೋದು ಗುರುದ್ರೋಹದ ಕೆಲಸ ಗೊತ್ತಾ? ಮೂರು ಕಾಸಿನ ಆಸೆಗಾಗಿ ನೀನು ನಿನ್ನ ಹಳೆ ವರಸೆನೇ ಬಿಟ್ಟು ಆ ಮಳವಳ್ಳಿ ಮಾದೇವನ ಥರ ಆಗೋಕೆ ಹೋಯ್ತಿದಯಿ? ಇದು ಒಳ್ಳೆದಲ್ಲ ತಿಳಕೋ” ಎಂದು ಕೂಗಾಡತೊಡಗಿದನು. + +ಆ ಇಬ್ಬರ ವಾಗ್ವಾದವು ತಾರಕಕ್ಕೇರಲು ಮುಂಜಾನೆಯಿಂದ ಹೆಣದ ಮುಂದೆ ಶೋಕಾಡಿ ಸುಸ್ತಾಗಿ ಅರೆನಿದ್ದೆ, ಅರೆ ಎಚ್ಚರದಲ್ಲಿದ್ದ ಮನೆಯಮಂದಿ, ಅಕ್ಕಪಕ್ಕದ ಜನರಲ್ಲಿ ಕೆಲವರು “ಯಾವುದೋ ಒಂದು ಹಾಡಿ ಬೆಳಗು ಮಾಡ್ರಪ್ಪಾ…” ಅಂದರೆ, ಹೆಚ್ಚಿನವರು “ಕುಮಾರಸ್ವಾಮಿ ಹಾಡೇ ಚೆಂದಾಗದಪ್ಪಾ… ಅದನ್ನೇ ಹಾಡ್ಲಿ ಬುಡಿ…” ಎಂದರು. ಎಲ್ಲೋ ಒಂದಿಬ್ಬರು “ಚೆನ್ನಮಲ್ಲನದು ಹಿಂದಿನಿಂದಲೂ ನಡೆದು ಬಂದಿರುವ ಧಾಟಿ; ಅದನ್ನ ಬುಟ್ಟು ಹಾಡೋಕ್ಕಾಯ್ತದ?” ಎಂದು ಆಕಳಿಸಿ ಸುಮ್ಮನಾದರು. + +ಅಂತಹ ಜನರ ಯಾವ ಮಾತುಗಳನ್ನೂ ಕಿವಿಗೆ ನುಗ್ಗಿಸದ ಕುಮಾರಸ್ವಾಮಿಯೂ ಚೆನ್ನಮಲ್ಲನೂ ಜಟಾಪಟಿಗಿಳಿದರು. ‘ನೀನು ಇನ್ನು ಮುಂದೆ ಈ ಹೊಸಪದಗಳನ್ನೆಲ್ಲ ಹಾಡುವುದಾದರೆ ನನ್ನ ಮೇಳಕ್ಕೇ ಬರಬೇಡ’ ಎಂದು ಚೆನ್ನಮಲ್ಲನೂ ‘ನಿನ್ನದೇನು ಮಹಾ ಮೇಳ? ನಾನೇ ಒಂದು ಮೇಳ ಕಟ್ತೀನಿ… ಅದೇನು ಕಿತ್ಕೊಂಡಯಿ ಕಿತ್ಕೊಹೋಗು… ಜನ ಚೇಂಜ್ ಕೇಳ್ತಾವರೆ ಕನ… ನಿನ್ನ ಹಳೆ ಗೊಡ್ಡು ಪದನ್ನೆಲ್ಲ ಗಂಟು ಕಟ್ಟಿ ನಿನ್ನ ತಂಬೂರಿ ಜೊತೆಲಿಡು’ ಎಂದು ಕುಮಾರಸ್ವಾಮಿಯೂ ಘೋಷಿಸಲಾಗಿ ಅಂದಿಗೆ ಆ ರಾತ್ರಿಯ ಭಜನೆಯು ಕಳೆಕಟ್ಟದೆ ಮುಕ್ತಾಯವಾಗಿದ್ದಿತು. + +* * * + +ಚೆನ್ನಮಲ್ಲನಿಗೆ ಸದ್ಯಕ್ಕೆ ಯೋಚನೆಗಿಟ್ಟುಕೊಂಡಿದ್ದುದೇ ಅದು. ಕುಮಾರಸ್ವಾಮಿ ತಾನು ಹೇಳಿದಂತೆ ಮೇಳ ಕಟ್ಟುವವನೇ. ಅವನಿಗೇನು ಕಮ್ಮಿಯಿದೆ? ಫ್ಯಾಕ್ಟರಿಯಲ್ಲೊಂದು ಕೆಲಸವಿದೆ. ಅವನಣ್ಣನೂ ಸರಕಾರಿ ಕೆಲಸದಲ್ಲಿರುವವನೇ. ತನ್ನ ತಮ್ಮ ದೊಡ್ಡ ಹಾಡುಗಾರನಾಗಿ ಮೆರೆದಾಡುವುದಾದರೆ ಎಂಥ ತ್ಯಾಗಕ್ಕಾದರೂ ತಾನು ಸಿದ್ಧನಿರುವುದಾಗಿ ತನ್ನ ಮುಂದೆಯೇ ಆಡಿದವನಲ್ಲವೆ ಅವನು? ಹಾಗಿರುವಾಗ ಅವನು ಕುಮಾರಸ್ವಾಮಿ ‘ನಾನೊಂದು ಹಾಡುಗಾರಿಕೆ ಮೇಳ ಕಟ್ಟುವೆನು ಅಣ್ಣಾ? ನನಗೆಲ್ಲ ಪರಿಕರಗಳೂ ಬೇಕು’ ಎಂದರೆ ‘ಆಗದು’ ಎನ್ನುವನೇ ಅವನ ಅಣ್ಣ ಎಂಬುದು ಚೆನ್ನಮಲ್ಲನ ಲೆಕ್ಕಾಚಾರವಾಗಿದ್ದಿತು. + + + +ಆ ಕುಮಾರಸ್ವಾಮಿ ಮಂಟೇಸ್ವಾಮಿಯ ಗುಡ್ಡನಾದ ಮೇಲೆ ಪದಗಳ ಗುಂಗು ಹಿಡಿಸಿಕೊಂಡು ಚೆನ್ನಮಲ್ಲನ ಹಿಂದೆ ಬಂದವನು. ಎಲ್ಲರಿಗಿಂತಲೂ ಚುರುಕಾಗಿ ಹಾಡುವುದನ್ನು ಕಲಿತುಕೊಂಡು ಇವತ್ತು ಅಲ್ಲಿನ ಸುತ್ತಮುತ್ತಲ ಪೈಕಿಗೆಲ್ಲ ಒಳ್ಳೆಯ ತಂಬೂರಿ ಪದದ ಹಾಡುಗಾರನೆಂತಲೇ ಅನ್ನಿಸಿಕೊಂಡಿರುವವನು. ಚೆನ್ನಮಲ್ಲನನ್ನೂ ಮೀರಿಸುವ ಹಾಡುಗಾರಿಕೆ ಅವನದು. ಈಚೆಗಂತೂ ಅವನು ಆ ಮಳವಳ್ಳಿ ಮಾದೇಸ್ವಾಮಿ ಹಾಡುವ ಹಾಡುಗಳ ಅನುಕರಣೆಯಲ್ಲಿ ತೊಡಗಿ, ಅವನು ರೆಕಾರ್ಡ್ ಮಾಡಿ ಮಾರ್ಕೆಟ್ಗೆ ಬಿಟ್ಟಿರುವ ಸಿ.ಡಿಗಳನ್ನು ಕೇಳುತ್ತಾ, ಆನಂದಿಸುತ್ತಾ ‘ಆಹಾ ಆ ಮಳವಳ್ಳಿ ಮಾದೇಸ್ವಾಮಿಯೇನಾದರೂ ಸತ್ತುಕೆಟ್ಟು ಹೋದರೆ ಅವನ ಜಾಗವನ್ನು ಭರ್ತಿ ಮಾಡುವವನೆಂದರೆ ಈ ಕುಮಾರಸ್ವಾಮಿಯೇ ಸೈ’ ಎಂದು ಜನಗಳಿಂದ ಹಾಡಿ ಹೊಗಳಿಸಿಕೊಳ್ಳುತ್ತಿರುವವನು ಈ ಕುಮಾರಸ್ವಾಮಿ ಆಗಿರಲಾಗಿ; ಆ ಕುಮಾರಸ್ವಾಮಿಯೂ ಸೈತ ‘ನಾನೂ ಅ ಮಳವಳ್ಳಿ ಮಾದೇವಸ್ವಾಮಿಯ ಹಾಗೆಯೇ ಹಾಡಿ, ರೆಕಾರ್ಡ್ ಮಾಡಿ ಈ ಕನ್ನಡ ನಾಡಿಗೆ ಕೀರ್ತಿ ತರಬೇಕು, ಅವನ ಹಾಗೆಯೇ ಸರ್ಕಾರದಿಂದ ಬೆಂಗಳೂರಿನಲ್ಲೊಂದು ಸೈಟು ಗಿಟ್ಟಿಸಿಕೊಳ್ಳಬೇಕು’ ಮುಂತಾಗಿ ಅಂದುಕೊಂಡು; ಆ ಮಳವಳ್ಳಿ ಮಾದೇಸ್ವಾಮಿ ಒಮ್ಮೆ ನಂಜನಗೂಡಲ ದೊಡ್ಡ ಜಾತ್ರೆಯಲ್ಲಿ ನಂಜುಂಡೇಶ್ವರನ ಕಥೆ ಮಾಡಲು ಬಂದು ಆಡಿದ ಮಾತುಗಳನ್ನು ಹೊಟ್ಟೆಯೊಳಗಿಂದ ತಂದು ಮುಂದಿಟ್ಟುಕೊಂಡು ನೆನೆದನು: + +‘ಎಲ್ಲಾ ಮಾಸ್ವಾಮಿಗಳಿಗೂ ಈ ಮಾದೇಸ್ವಾಮಿಯ ನಮಸ್ಕಾರ…. ನನ್ನ ಆದಿಜಾಂಬವ ಕುಲದ ಮೇಲೆ ಆಣೆ ಮಾಡಿ ಹೇಳುತ್ತೇನೆ. ಇದು ನನ್ನ ಪೂರ್ವ ಜನ್ಮದ ಸುಕೃತವು. ನನ್ನ ಹಾಡುಗಾರಿಕೆಯನ್ನು ಕೇಳಿ, ನಲಿದು ಆನಂದಿಸಿದ ಎಲ್ಲಾ ಬಂಧುಗಳಿಗೂ ನನ್ನ ವಂದನೆಗಳು. ನಾನು ಹಾಡಿದ ನೂರಾರು ಕ್ಯಾಸೆಟ್ಟುಗಳನ್ನು ಕೇಳಿ ಘನ ಸರ್ಕಾರವು ನನಗೆ ಬೆಂಗಳೂರಿನಲ್ಲಿ ಸೈಟೊಂದನ್ನು ಕೊಟ್ಟಿದೆ; ಅದರ ಬೆಲೆ ಸರಿಸುಮಾರು ನಾಕೈದು ಲಕ್ಷವಾಗಿರುವುದು…. ಅಷ್ಟೇ ಅಲ್ಲದೆ ಘನ ಸರ್ಕಾರವು ನನಗೆ ರಾಜ್ಯೋತ್ಸವ ಪ್ರಶಸ್ತಿಯನ್ನೂ ಕೊಟ್ಟು ಸನ್ಮಾನಿಸಿದೆ. ಇದಲ್ಲದೆ ಊರೂರು ಕೇರಿಕೇರಿ ಮೇಲೆ ನನಗೆ ಬಂದಿರುವ ಬಹುಮಾನಗಳೆಷ್ಟೋ, ಶಾಲು, ಫಲ ತಾಂಬೂಲಗಳೆಷ್ಟೋ ನಾನರಿಯೆ…. ಇದ ಕೇಳಿದರೆ ನೀವು ರೋಮಾಂಚನಗೊಳ್ಳುವಿರಿ… ಇರಲಿ, ಈಗ ನಾನು ನನ್ನ ಒಂದೆರಡು ಜನಪ್ರಿಯ ಗೀತೆಗಳನ್ನು ಹಾಡಿ ಆಮೇಲೆ ನಂಜುಂಡೇಶ್ವರನ ಕಥೆಗೆ ಬರುವೆನು… ಈಗ ನಾನು ಹಾಡುವ ಗೀತೆಗಳನ್ನು ಮುಂದೆ ಬರಲಿರುವ ಒಂದೆರಡು ಸಿನಿಮಾಗಳಿಗೂ ಸೇರಿಸಿಕೊಳ್ಳುವುದಾಗಿ ಒಂದೀರ್ವರು ಸಂಗೀತ ನಿರ್ದೇಶಕರು ನನ್ನನ್ನು ಕೇಳಿರುವರು…’ + +ಈ ತೆರನಾಗಿ ಹೇಳುತ್ತಿರುವ ಮಾದೇಸ್ವಾಮಿಯ ಮಾತುಗಳನ್ನು ಅಲ್ಲೇ ಕಥೆ ಕೇಳಲೆಂದು ಟೇಪ್ ರಿಕಾರ್ಡರ್, ನೋಟ್ಬುಕ್ಕುಗಳನ್ನೆಲ್ಲ ಸಿದ್ದಪಡಿಸಿಟ್ಟುಕೊಂಡಿದ್ದ ಜನಪದ ಪ್ರೊಫೆಸರೊಬ್ಬರು ತಡೆದರು. ಮಾದೇವಸ್ವಾಮಿಯ ಮಾತುಗಳಿಗೆ ಅವರ ವಾದ ಹೀಗಿತ್ತು: + +‘ಸ್ವಾಮಿ ಮಾದೇಸ್ವಾಮಿಯವರೇ, ನಿಮ್ಮ ಹಾಡುಗಾರಿಕೆಯನ್ನು ಮೆಚ್ಚಿ ಘನ ಸರ್ಕಾರವು ತಮಗೆ ಸೈಟು, ಪ್ರಶಸ್ತಿಗಳನ್ನೆಲ್ಲ ದಯಪಾಲಿಸಿರುವುದು ಸರಿಯಷ್ಟೆ. ಆದರೆ ಅದು ನಿಮ್ಮ ಹಳೆಯ ಮೂಲ ಹಾಡುಗಾರಿಕೆಗೆ ಸಂದ ಬೆಲೆಯಲ್ಲದೆ ಈಗ ನೀವು ಹಾಡಲು ಹೊರಡುತ್ತಿರುವ ಕ್ಯಾಸೆಟ್ ಹಾಡುಗಳಿಗೆ ಸಿಕ್ಕಿದ್ದಲ್ಲ… ನೀವು ನಿಮ್ಮ ಮೂಲವನ್ನು ಮರೆತಂತೆ ಮಾತಾಡುತ್ತಿರುವುದು ಸರಿಯಲ್ಲ… ಇಂಥ ನಿಮ್ಮ ಧೋರಣೆಗೆ ನನ್ನ ಧಿಕ್ಕಾರವಿದೆ… ನೀವು ನಿಮ್ಮ ಮೂಲ ಕಥೆಯನ್ನೇ ಹಾಡಿರಿ… ನಮಗೆ ಬೇಕಿರುವುದು ನಿಮ್ಮ ಸಿನಿಮಾ ಹಾಡುಗಳಲ್ಲ…’ ಮುಂತಾಗಿ ಅವರು ವಾದಿಸುತ್ತ ಮಾದೇಸ್ವಾಮಿಯ ಮೈಕಿನ ಬಳಿಗೆ ಬರಲು, ಹಾಡು ಕೇಳಲು ತುದಿಗಿವಿಯಲ್ಲಿ ಕುಂತಿದ್ದ ಜನರು ರೊಚ್ಚಿಗೆದ್ದರು. + +‘ಮಾದೇಸ್ವಾಮಿಗಿಂತಲೂ ನೀನು ದೊಡ್ಡವನೋ? ಹಾಡುವುದು ಅವನಿಗೆ ಗೊತ್ತು; ಕೇಳುವುದು ನಮಗೆ ಗೊತ್ತು… ಮಧ್ಯೆ ನಿನ್ನದೆಂತಹುದು ರಾಗ?’ ಎಂದೆಲ್ಲ ತಗಾದೆಗಿಳಿಯಲು ಮಾದೇಸ್ವಾಮಿ ಆ ಪ್ರೊಫೆಸರರ ಮುಖವನ್ನು ನೋಡಲಾಗಿ, ಅವರು ವಿಶ್ವವಿದ್ಯಾಲಯದಲ್ಲೊಮ್ಮೆ ತಮ್ಮನ್ನು ಕರೆಸಿ ಹಾಡಿಸಿ, ಆ ಕಥೆಯನ್ನು ಪುಸ್ತಕ ಮಾಡಿಸಿ, ಅದನ್ನು ಲೋಕಕ್ಕೆಲ್ಲ ಹಂಚಿ, ಪ್ರಶಸ್ತಿ ಬರಲೂ ಕಾರಣರಾಗಿದ್ದವರು ಎಂಬುದೆಲ್ಲ ನೆನಪಾಗಿ ಅರೆಕ್ಷಣ ಅಲುಗಾಡಿದ ಮಾದೇಸ್ವಾಮಿಯು ‘ಸ್ವಾಮಿ ಪ್ರೊಫೆಸರರೇ ನಿಮ್ಮ ಮಾತು ನಿಜ… ಆದರೆ ನಾನು ನನ್ನ ಮೂಲದ ಪದಗಳನ್ನು ಹಾಡಿದರೆ ಕೇಳುವ ಕಾಲವಿದಲ್ಲ… ನಾನು ಎಂದೋ ಊಟದೊಂದಿಗೆ ಉಪ್ಪಿನಕಾಯಿಯಂತಿರಲಿ ಎಂದು ನಾಲಿಗೆಯ ರುಚಿಗೆಂದು ಹಾಡಿದ ಜನಪ್ರಿಯ ಹಾಡುಗಳೇ ನನ್ನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿವೆ… ನನಗೆ ಅನ್ನ, ಬಟ್ಟೆ, ವಸತಿ, ಕೀರ್ತಿಗಳನ್ನೆಲ್ಲ ಕೊಟ್ಟಿವೆ. ನೀವೊಮ್ಮೆ ನನ್ನನ್ನು ಸನ್ಮಾನಿಸಿ ‘ನಮ್ಮ ಸಾಂಸ್ಕೃತಿಕ ಪರಂಪರೆ’, ‘ಮೂಲ ಸಂಸ್ಕೃತಿ, ತಳ ಸಂಸ್ಕೃತಿ, ಒಳಸಂಸ್ಕೃತಿ’ ಎಂದೆಲ್ಲ ಹೇಳಿದ್ದು ನನಗೆ ಚೆನ್ನಾಗಿ ನೆನಪಿದೆ… ಆದರೆ ನೀವು ಹೇಳುತ್ತಿರುವ ಆ ಹಾಡುಗಳನ್ನು ಹಾಡಲೆಂದೇ ನನ್ನ ಒಳನಾಲಿಗೆ ಒತ್ತರಿಸಿ ಬರುತ್ತಿದ್ದರೂ ನಾನು ಹೋದಲ್ಲೆಲ್ಲ ಈ ಜನ ನಾನು ಹಾಡಿದ ಜನಪ್ರಿಯ ರಾಗಗಳ ಹಾಡುಗಳೇ ಬೇಕೆಂದು ಚಂಡಿ ಹಿಡಿಯುತ್ತಾರೆ. ಅಂಥ ಹಾಡುಗಳನ್ನು ಹಾಡುವುದಾದರೆ ಮಾತ್ರ ನನ್ನನ್ನು ಕಥೆ ಮಾಡಲು ಕಾಸು ಕೊಟ್ಟು ಕರೆಯುತ್ತಾರೆ…. ಇಲ್ಲದಿದ್ದರೆ ಇಂದು ನಾನೆಲ್ಲಿ ಈ ಮಹಾಜಾತ್ರೆಯ ಮಹಾಮೇಳದಲ್ಲಿ ಇರುತ್ತಿದ್ದೆ?’ ಮುಂತಾಗಿ ಹೇಳಬೇಕೆಂದುಕೊಂಡರೂ ಜನರೆಲ್ಲ ಆ ಪ್ರೊಫೆಸರರನ್ನು ನೂಕಿ ಹೊರ ಹಾಕುತ್ತಿರುವುದನ್ನು ಕಂಡು ನಿರುಮ್ಮಳವಾಗಿ ‘ಹೋಗಲಾರೆ ಹಲಗೂರಿಗೆ ನಾನು’ ಎನ್ನುವ; ಇದೀಗ ತಾನೇ ಸಖತ್ ಫೇಮಸ್ಸಾಗಿರುವ ತನ್ನ ಸಿನಿಮಾ ಧಾಟಿಯ ಹಾಡನ್ನು ಹಾಡಿ ಜನರನ್ನು ರಂಜಿಸಲು ಗಂಟಲು ಸರಿ ಮಾಡಿಕೊಳ್ಳತೊಡಗಿದನು. + +* * * + +ಅಂತೆಲ್ಲ ಬಗೆಯಲ್ಲಿ ಜನಮನ ಗೆದ್ದಿರುವ ಮಾದೇಸ್ವಾಮಿಯ ಕಂಠದ ಹಾಗೆಯೇ ಇರುವ ತನ್ನ ಗಂಟಲಿಂದ ಹೊರಡುವ ಹಾಡುಗಳಿಗೆಲ್ಲ ಈ ಚೆನ್ನಮಲ್ಲನೇಕೆ ತಡೆಯೊಡ್ಡುತ್ತಿದ್ದಾನೆಂಬುದೇ ತನಗೆ ಒಗಟಾಗಿರುವುದಲ್ಲ ಎಂದು ಕುಮಾರಸ್ವಾಮಿಯು ಚಿಂತಿಸತೊಡಗಿದ್ದನು. ಆದರೆ ತಾನು ಚೆನ್ನಮಲ್ಲನ ಮುಂದೆ ಅಂದು ಘೋಷಿಸಿದ ಹಾಗೆ ಹೊಸ ಮೇಳ ಕಟ್ಟುವ ತನ್ನ ನಿರ್ಧಾರ ತರವೆ ಎಂದೂ ಯೋಚಿಸಿದನು. ಇದಕ್ಕೆ ಕಾರಣವೆಂತೆಂದರೆ: ಒಂದು ಕಾಲದಲ್ಲಿ ಹುಟ್ಟಿಸಿದ ಮಗನಿಗಿಂತಲೂ ಹೆಚ್ಚಾಗಿ ತನಗೆ ಅನ್ನ, ಬಟ್ಟೆ ಕೊಟ್ಟು, ಹೊದೆಯಲು ಕಂಬಳಿ ಕೊಟ್ಟು, ಇರುಳೆಲ್ಲ ಹಾಡಿ ಕಲಿಸಿದ ಚೆನ್ನಮಲ್ಲ ಈಗಲೂ ತನಗೆ ಗುರು ಸಮಾನ, ತಂದೆಸಮಾನ ಆಗಿರುವುದು. + +‘ಆದರೆ ಅವನ ಹಳೆಯ ಕಾಲದ ಪದಗಳನ್ನೇ ಹಾಡಿಕೊಂಡಿದ್ದರೆ ನನಗೆ ಈ ಕಳೆ ಒದಗುತ್ತಿತ್ತೆ; ನಾನು ಕೊಮ್ಮತ್ತೂರಿನಲ್ಲಿ ಹಾಡಿದ ‘ತಾಯಿನೇ ಇಲ್ಲದಂಥ ತವರ್ಯಾಕೆ ತಂಗಿ’ ಹಾಡನ್ನು ಕೇಳಿಯೆ ಅಲ್ಲವೇ ಮಲ್ಲಿಯು ನನ್ನ ಕೈಹಿಡಿಯಲು ಮುಂದಾದದ್ದು; ನನ್ನ ಹೆಂಡತಿಯ ಊರಿನ ಜನ ಈಗಲೂ ನಾನು ಮಳವಳ್ಳಿ ಮಾದೇಸ್ವಾಮಿಯ ಹಾಗೆ ಹಾಡುತ್ತಿದ್ದೇನೆಂದು ಹೊಗಳಿ, ಹೊತ್ತು ಮೆರೆಯುವುದು ನನ್ನ ಹೊಸ ಹಾಡುಗಳಿಗಲ್ಲವೆ? ಇದ್ಯಾಕೆ ಚೆನ್ನಮಲ್ಲನಿಗೆ ಅರ್ಥವಾಗುತ್ತಿಲ್ಲ’ ಎಂದೆಲ್ಲ ಚಿಂತಿಸಿ ಕುಮಾರಸ್ವಾಮಿಯೂ ಒಂದು ಬಗೆಯಲ್ಲಿ ಮಂಕಾಗಿದ್ದನು. + +* * * + +‘ಮಾದೇಸ್ವಾಮಿಯ ಹಾಗೆ ಹಾಡಲು ತನಗೇಕೆ ಆಗುವುದಿಲ್ಲ; ನನ್ನಿಂದ ಪದ ಕಲಿತ ಕುಮಾರಸ್ವಾಮಿಯೇ ಹಾಗೆ ಹಾಡಲು ಶಕ್ತನಾಗಿರುವಾಗ ಅವನಿಗೆ ಹಾಡು ಕಲಿಸಿದ ತನಗೇಕೆ ಅದು ಒಲಿಯಲಾರದು? ತನಗೆ ಸಿದ್ದಪ್ಪಾಜಿಯ ಕಥೆ ಕಲಿಸಿದ ಅಪ್ಪಾಜಪ್ಪನೇ ಮಾದೇಸ್ವಾಮಿಗೂ ಕಲಿಸಿದ್ದು; ಅವನೇ ಈ ಹಾಡುಗಳನ್ನೆಲ್ಲ ಹಾಡಿ ದೊಡ್ಡವನಾಗಿದ್ದಾನೆಂದ ಮೇಲೆ ತನಗೇಕೆ ಅದು ಆಗಲಾರದು? ಮಾದೇಸ್ವಾಮಿಗೆ ಆ ಕಲೆ ಒಲಿದಿತ್ತು, ಅವನು ದೊಡ್ಡ ಮನುಷ್ಯನಾಗಿ ಬೆಂಗಳೂರವರೆಗೂ ಹೋದ; ನಾನು ಮಂಟೇದರನ ಒಕ್ಕಲಾಗಿ ಇಲ್ಲೇ, ಅವನು ನೆಲೆಸಿದ ಫಾಸಲೆಯಲ್ಲೇ ಇರಬೇಕೆಂದುಕೊಂಡು ಬಂದೆ. ಅದೇ ನನಗೆ ಹಿನ್ನಡೆಯಾಯಿತೆ? ಇನ್ನೂ ನಾನು ಹೀಗೆಯೇ ಹಾಡಿಕೊಂಡಿದ್ದರೆ ನನ್ನನ್ನು ಕಥೆಗೆ ಕರೆಯುವವರ್ಯಾರು? ನನ್ನ ಹಳೆಯ ಪದವ ಕೇಳುವವರಾರು?’ ಎಂದು ಅತ್ತ ಚೆನ್ನಮಲ್ಲನೂ ಯೋಚಿಸತೊಡಗಿದ್ದನಾದರೂ ತಾನು ಹೀಗೆ ಯೋಚಿಸತೊಡಗುತ್ತಿದ್ದಂತೆ ಅವನ ಗುರುವಾಗಿದ್ದ ಅಪ್ಪಾಜಪ್ಪನು ಮೈದಾಳಿ ಮುಂದೆ ನಿಂತು ಹೀಗೆ ನುಡಿದಂತಾಗಿತ್ತು: + +‘ಅಲಲಲಾ ಚೆನ್ನ… ನೀನೂ ಲೋಕರೂಢಿಯ ರುಣಕ್ಕೊಳಗಾದೆಯಾ ಮಗನೆ? ಲೋಕದ ಆತ್ಮಗಳೆಲ್ಲ ಕೊಳೆತು, ತನ್ನರಿವು, ಇರುವ ಮರೆತು, ತಾ ನಿಂತ ನೆಲವ ತೊರೆದು ಹೊರಡುವ ಹೊತ್ತಾದರೂ ನಾನು ಬೇರು ಬಿಟ್ಟು ಅಲಗುವುದಿಲ್ಲವೆಂದು ನೀನು ಧರೆಗುರುವಿನ ಮೇಲಾಣೆ ಮಾಡಿ ಸಿಸುವೃತ್ತಿ ಸ್ವೀಕರಿಸಿದ್ದು ಮರೆತುಹೋದೆಯಾ ಕಂದ? ಈಗಲೂ ನಾನು ನಂಬಿರುವುದು ನಿನ್ನೊಬ್ಬನನ್ನೇ; ನೀನು ಕುಡಿದ ಭಂಗಿಸೊಪ್ಪಿನ ನೀಲಿಗ್ಯಾನ, ಸುರೆಯ ಅಮಲು ನಿನ್ನನ್ನು ಲೋಕಗ್ಯಾನಕ್ಕೊಳಗು ಮಾಡದೆಂದೇ ನಾನು ನಂಬಿರುವಾಗ ನೀನು ಈಗ ಈ ಲೋಕರೂಢಿಯ ಹಣೆಬರಹಕ್ಕೆ ಸಿಲುಕಿ ನನ್ನನ್ನು ನಿಂದೆಗೆ ದೂಡುವೆಯಾ ಮಗನೇ… ಅಯ್ಯೋ ಮಂಟೇದರನೇ… ಎಲ್ಲಿಗೆ ಬಂದರು ನಿನ್ನ ನೀಲಿಗ್ಯಾನದ ಮಕ್ಕಳು!’ + +ಅಂತೆ ತನ್ನ ಗುರುವಿನ ಇರುವು ಕಾಡಿದ ಕೂಡಲೇ ಬೆಚ್ಚುವ ಚೆನ್ನಮಲ್ಲನು; ತನ್ನ ಮಗಳು ಬಲಿತು ಬೆಳೆದು, ತನ್ನ ಮುಂದೆಯೇ ಚಿಗುರು ಮೊಲೆಗಳ ನಿಗುರಾಡಿಸಿಕೊಂಡು ಓಡಾಡುವುದನ್ನು ಕಂಡು ಕಂಗಾಲಾಗುವನು. + +ಮದುವೆಗೆ ನಿಂತಿರುವ ಮಗಳು ‘ಅಪ್ಪ ನನ್ನನ್ನು ನನ್ನ ಕನಸಿನ ಚೆನ್ನಿಗನಿಗೆ ಧಾರೆಯೆರೆದು ಕೊಡುತ್ತಿಲ್ಲವಲ್ಲ’ ಎಂದು ಚಿಂತಿಸುತ್ತಿರುವಂತಿದೆ. ಒಣಗಿ, ಮುದುರಿ, ಕೊಳೆತು ಉದುರಿ ಹೋಗುತ್ತಿರುವ ನನ್ನೀ ನೆರಕೆಯ ಗುಡಿಸಲು ‘ಈ ಚೆನ್ನಮಲ್ಲ ದುಡಿದು ಸಂಪಾದಿಸದೆ, ನನ್ನನ್ನು ಮೇಲಕ್ಕೆತ್ತಿ ನಿಲ್ಲಿಸದೆ ಸತಾಯಿಸುತ್ತಿದ್ದಾನೆ’ ಎಂದು ಯೋಚಿಸುತ್ತಿರುವಂತಿದೆ. ನಡುವಯಸ್ಸಿಗೇ ದುಡಿದುಡಿದು, ಸೊಪ್ಪು ಸೆದೆಗೆ ಗುದ್ದಾಡಿ ಮುದಿ ಗೊಡ್ಡಾದಂತೆ ಕಾಣುತ್ತಿರುವ ಹೆಂಡತಿ ‘ನಾನು ಕಟ್ಟಿಕೊಂಡ ನನ್ನ ಹಾಡುಗಾರ ಚೆನ್ನಮಲ್ಲ; ಹೊಸದೊಂದನ್ನೂ ಕಲಿಯದೆ ನನ್ನ ಬದುಕನ್ನು ಮೂರಾಬಟ್ಟೆ ಮಾಡಿ ನಿಲ್ಲಿಸಿದ್ದಾನೆ’ ಎಂದು ಸೆರಗಲ್ಲಿ ಕಣ್ಣೀರು ಬಸಿದು ಕೊರಗುತ್ತಿರುವಂತಿದೆ… + +ಈ ಅಂತೆ ಕಂತೆಗಳೆಲ್ಲ ತನ್ನ ಕಣ್ಣಮುಂದಿನ ನಿಜಗಳಾಗಿ ಕಾಡುತ್ತಿರಲು; ಕಾಡಿ ಕುಣಿಯುತ್ತಿರಲು ನಿಜವಾಗಿಯೂ ರೊಚ್ಚಿಗೀಡಾದ ಚೆನ್ನಮಲ್ಲನು ತಾನೂ ಕುಮಾರಸ್ವಾಮಿಯಂತೆಯೇ, ಆ ಮಳವಳ್ಳಿ ಮಾದೇವಸ್ವಾಮಿಯಂತೆಯೇ ಹೊಸ ಹೊಸ ಪದಗಳನ್ನೆಲ್ಲ ಕಲಿತು ಜನಸಮೂಹವನ್ನು ರಂಜಿಸದೆ ತನಗೆ ಉಳಿಗಾಲವಿಲ್ಲವೆಂದೇ ನಿಶ್ಚಯಿಸಲು, ಅವನು ಆ ಹಾಡುಗಳನ್ನೆಲ್ಲ ಕಲಿಯುವ ದಾರಿಯನ್ನು ಹುಡುಕಲು ತೊಡಗಿದನು. + +ಹಳೆಯ ಪದಗಳಾಗಿದ್ದರೆ ಅವನ ನಾಲಿಗೆ ತಡವರಿಸಬೇಕಿರಲಿಲ್ಲ, ಕೈಯ ಕಂಜರ ತೊದಲಬೇಕಿರಲಿಲ್ಲ; ಹಳೆಯ ತಂಬೂರಿ ಮುದುಡಬೇಕಿರಲಿಲ್ಲ… ಆದರಿವು ಹೊಸ ಪದಗಳು… ತಾನು ಇತ್ತೀಚೆಗೆ ಯಾವ ಮದುವೆಯಲ್ಲೇ ಆಗಲಿ, ಸಮಾರಂಭಗಳಲ್ಲೇ ಆಗಲಿ ಕೇಳಿದರೂ ಕ್ಯಾಸೆಟ್ಟುಗಳಲ್ಲಿ, ಮೈಕುಗಳಲ್ಲಿ ಮೊರೆಯುತ್ತಿದ್ದವುಗಳೆಂದರೆ ಅವೇ… ಅವೇ ಸಿನಿಮಾ ರಿವಾಜಿನ ಪದಗಳು… ಆಗೆಲ್ಲ ‘ಹೆ! ಇವೆಂಥ ಪದಗಳೋ ಮಗನೇ… ನೀನಿವತ್ತು ನಿನ್ನ ಕಿವಿಗಳನ್ನಷ್ಟೇ ನಂಬಿ ಕ್ಯಾಸೆಟ್ಟು ಮುಂದಿಟ್ಟುಕೊಂಡು ಕಲಿತ ಪದಗಳಿವು…ನನ್ನವು ಹಾಗಲ್ಲ…. ಹೊಟ್ಟೆಯೊಳಗಿಂದ, ಅನ್ನ ಸೇರುವ ಕರುಳೊಳಗಿಂದ ಹುಟ್ಟುವ ಪದಗಳು…. ನೀನು ಕುಡಿದ ಭಂಗಿಯ ಸೊಪ್ಪು, ಕುಡಿದ ಹೆಂಡದ ನಶೆ, ಲೋಕವ ಮರೆತು ಲೋಕದೊಳಗಾಗುವ ಚಟದಿಂದ ಹುಟ್ಟುವ ಪದಗಳೋ ತಮ್ಮಾ’ ಎಂದು ಚೆನ್ನಮಲ್ಲ ಮತ್ತಿನಲ್ಲಿ ನುಡಿದು ಅವುಗಳಿಗೆ ಕಿವಿಗೊಡದೆ ನಡೆದುಬಿಡುತ್ತಿದ್ದ. + +ಆದರೆ ಈಗ ಹಾಗಿರಲಿಲ್ಲ. ಆ ಎಲ್ಲ ಹೊಸ ಪದಗಳನ್ನು ಕಲಿಯಲೇಬೇಕೆಂಬ ವಿಚಿತ್ರವಾದ ಹಟವೊಂದು ಅವನ ಕರುಳನ್ನೆಲ್ಲ ಸುತ್ತಿಕೊಂಡು; ಒಳಗೆ ಹಿಂಡಿ ನುಲಿಯುತ್ತಿತ್ತು. ಆಗ… + +ಮೊದಲಿಗೆ ಅವನಿಗೆ ನೆನಪಾದುದು ಕುಮಾರಸ್ವಾಮಿಯ ಹಟ್ಟಿಯು. ಹಿಂದೊಮ್ಮೆ ತಾನು ತಂದ ರಿಕಾರ್ಡಿನ ಮೆಷೀನು, ಕ್ಯಾಸೆಟ್ಟುಗಳು ಎಲ್ಲವನ್ನೂ ಮನೆಗೆ ಚೆನ್ನಮಲ್ಲನನ್ನು ಕರೆದು ತೋರಿಸಿದ್ದ ಕುಮಾರಸ್ವಾಮಿ. ಅವೆಲ್ಲ ನೆನಪಾಗುತ್ತಲೇ ಅಲ್ಲಿರುವ ಮಳವಳ್ಳಿ ಮಾದೇಸ್ವಾಮಿಯ ಪದಗಳು, ಕುಮಾರಸ್ವಾಮಿಯ ಹಾಡುಗಳು, ಇನ್ನೂ ಯಾರ್ಯಾರೋ ಹೆಂಗಸರು ಹಾಡಿರುವ ಹಾಡುಗಳು ಎಲ್ಲವೂ ನೆನಪಾಗಲಾಗಿ ಇಂದು ರಾತ್ರಿಯೇ ಅವನ ಹಟ್ಟಿಗೆ ನುಗ್ಗಿ ಅವುಗಳನ್ನೆಲ್ಲ ಹೊತ್ತೊಯ್ದು ಹಾಡು ಕೇಳಿ ಅವನ್ನೆಲ್ಲ ಕಲಿಯಲೇಬೇಕೆಂದು ನಿಶ್ಚಯಿಸಿದ ಚೆನ್ನಮಲ್ಲನ ಹೊಟ್ಟೆಯೊಳಗಿದ್ದುದು ‘ನನಗೂ ನಿನ್ನ ಹೊಸ ಹಾಡು ಕಲಿಸು’ ಅಂತ ಕೇಳಿದರೆ ನನ್ನನ್ನು ಗೇಲಿಗೊಳಗು ಮಾಡದೆ ಬಿಟ್ಟಾನೆಯೆ ಆ ಕುಮಾರಸ್ವಾಮಿ’ ಎನ್ನುವ ವಾದವು. + +* * * + +ಕುಮಾರಸ್ವಾಮಿಯ ಮನೆಗೆ ನುಗ್ಗಿದ ಕಳ್ಳನನ್ನು ಊರು ಕೇರಿಯ ಜನರೆಲ್ಲ ಅಟ್ಟಾಡಿಸಿಕೊಂಡು ಹೊಡೆದದ್ದರಿಂದ ಆ ಕಳ್ಳ ಸತ್ತು ಹೋದನೆಂತಲೂ, ಹೊಡೆಯುವುದಕ್ಕೂ ಮುಂಚೆ ಅವನು ಚೆನ್ನಮಲ್ಲನೆಂಬುದು ಗೊತ್ತಾಯಿತಾದರೂ ಕುಮಾರಸ್ವಾಮಿಯೇ ಅವನು ಮುಂದೆ ತನ್ನನ್ನು ದೊಡ್ಡ ಹಾಡುಗಾರನಾಗಲು ಬಿಡುವುದಿಲ್ಲವೆಂದು ತಿಳಿದು ತಲೆಗೆ ದೊಣ್ಣೆಯಿಂದ ಹೊಡೆದು ಸಾಯಿಸಿದನೆಂತಲೂ ಊರೊಳಗೆಲ್ಲ ಸುದ್ದಿಯಾಯಿತು. + +ಆದರೆ ಚೆನ್ನಮಲ್ಲ ಸತ್ತ ಬಗೆಯು ಚೆನ್ನಮಲ್ಲ ಮತ್ತು ಅವನ ಗುರು ಅಪ್ಪಾಜಪ್ಪನಿಗೆ ಮಾತ್ರ ಗೊತ್ತಿತ್ತು ಮತ್ತು ಅದು ಹೀಗಿದ್ದಿತ್ತು: + + + +ಚೆನ್ನಮಲ್ಲ ಆ ಕ್ಯಾಸೆಟ್ಟು, ರಿಕಾರ್ಡರುಗಳನ್ನೆಲ್ಲ ಕದಿಯಲೆಂದು ಕುಮಾರಸ್ವಾಮಿಯ ಹಟ್ಟಿಯ ಹಿತ್ತಲಬಾಗಿಲಿಂದ ನುಗ್ಗಲು ಅನುವಾದನಷ್ಟೆ; ಅಲ್ಲೇ ಕಾವಲಿಗೆ ಕುಳಿತಂತೆ ಕುಳಿತಿದ್ದ ತನ್ನ ಗುರು ಅಪ್ಪಾಜಪ್ಪನನ್ನು ಅಲ್ಲಿ ಕಂಡು ಬೆಚ್ಚಿಬಿದ್ದನು. ಎಂದೋ ಸತ್ತುಹೋದ ತನ್ನ ಗುರು ಅಪ್ಪಾಜಪ್ಪನು ಇಂದು, ಹೀಗೆ ಈ ಪರಿಯಲ್ಲಿ ತನ್ನ ಮುಂದೆ ಕುಂತು ಕಿಚ್ಚುನಗೆದೋರುತ್ತಿರುವುದಕ್ಕೆ ನನ್ನ ಅರಿವುಗೇಡಿತನವೇ ಕಾರಣವಿರಬಹುದೆ ಎಂದು ನೊಂದು, ಬೆಂದು ಬಸವಳಿದ ಚೆನ್ನಮಲ್ಲನು; ಯಾವುದೋ ಕಾಣಬಾರದ ಪವಾಡವನ್ನು ಕಂಡವನಂತೆ ಬೆಚ್ಚಿ ಹಿಂದಕ್ಕೆ ನೆಗೆದು ಬೀಳಲು, ಅವನ ಹಿಂತಲೆಗೆ ಸಿಕ್ಕಿದ ದೊಡ್ಡದಾದ ಚೂಪು ಕಲ್ಲೊಂದು ಅವನ ತಲೆಯನ್ನು ಸೀಳಿತ್ತು. + +ಹುಟ್ಟಿದ್ದು, ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದಲ್ಲಿ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಹಿರಿಯ ಉಪ ಸಂಪಾದಕನಾಗಿ ಕೆಲಸ ನಿರ್ವಹಣೆ. ಸದ್ಯಕ್ಕೆ ಹವ್ಯಾಸಿ ಪತ್ರಕರ್ತ, ಕಲಾವಿದರಾಗಿ ಸ್ವಯಂ ಉದ್ಯೋಗ.‘ತೆಂಕಲಕೇರಿ’ (2003), ‘ಸನ್ ಆಫ್ ಸಿದ್ದಪ್ಪಾಜಿ’(2008), ಕತೆ ಎಂಬ ಇರಿವ ಈ ಅಲಗು (2011) ಕಥಾ ಸಂಕಲನಗಳು. ‘ಪರದೇಸಿ ಮಗನ ಪದವು’ (2006), ‘ಆಹಾ ಅನಿಮಿಷ ಕಾಲ’ ‘ಸೋಜಿಗದ ಸೂಜಿ ಮಲ್ಲಿಗೆ’ (2008) ಕವನ ಸಂಕಲನಗಳು. ‘ಪಲ್ಲಂಗ’ ಕಾದಂಬರಿ(2008), ‘ಜನಪದ ಕಲಾರೂಪ ಡಾ.ರಾಜ್ಕುಮಾರ್’ (ಜೀವನ ಚಿತ್ರಣ) ಇದುವರೆಗಿನ ಪ್ರಕಟಿತ ಕೃತಿಗಳು.ಡಾ. ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕುಂ.ವೀರಭದ್ರಪ್ಪ ಕಥಾ ಪ್ರಶಸ್ತಿ, ಸೇರಿದಂತೆ ಹಲವು ಪುರಸ್ಕಾರಗಳು ದೊರೆತಿವೆ \ No newline at end of file diff --git a/Kenda Sampige/article_318.txt b/Kenda Sampige/article_318.txt new file mode 100644 index 0000000000000000000000000000000000000000..233da421e09d7bb1edbdf44a80be89bee364db7b --- /dev/null +++ b/Kenda Sampige/article_318.txt @@ -0,0 +1,111 @@ + + +ಶ್ರೀಧರ ಬನವಾಸಿ ಸರಳ ಸಜ್ಜನಿಕೆಯ ಸದ್ವಿನಯದಿಂದ ಕೂಡಿದ ಪ್ರತಿಭಾವಂತ ಯುವಕವಿ. ಇವರ ಕಾವ್ಯನಾಮ ಫಕೀರ. ಇವರು ಕವಿಯಾಗಿ, ನಾಟಕಕಾರರಾಗಿ, ಕಥೆಗಾರರಾಗಿ, ಕಾದಂಬರಿಕಾರರಾಗಿ, ಸಂಪಾದಕರಾಗಿ ಗುರುತಿಸಿಕೊಂಡಿದ್ದಾರೆ. ಇವರು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮತ್ತು ಜರ್ನಲಿಸಂ ಅಂಡ್ ಮಾಸ್ ಕಮ್ಯೂನಿಕೇಷನ್ಸ್ ವ್ಯಾಸಂಗ ಮಾಡಿದ್ದಾರೆ. ಇವರು ಸಾಹಿತ್ಯ, ಕಲೆ, ದೃಶ್ಯ ಮಾಧ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. + +ಅಮ್ಮನ ಆಟೋಗ್ರಾಫ್, ದೇವರ ಜೋಳಿಗೆ, ಬ್ರಿಟಿಷ್ ಬಂಗ್ಲೆ ಕಥಾ ಸಂಕಲನ. ಬೇರು ಕಾದಂಬರಿ, ತಿಗರಿಯ ಹೂಗಳು ಕವನ ಸಂಕಲನ ರಚಿಸಿದ್ದಾರೆ. ಪ್ರಸ್ತುತ ‘ಬಿತ್ತಿದ ಬೆಂಕಿ’ ಎಂಬ ತಮ್ಮ ಎರಡನೇಯ ಕವನ ಸಂಕಲನವನ್ನು ಲೋಕಾರ್ಪಣೆ ಮಾಡುತ್ತಿದ್ದಾರೆ. ಒಂದು ಗಿಡ ಅಥವಾ ಮರದ ಬೇರು ಕಾಂಡ, ಎಲೆ, ಹೂವು, ಹಣ್ಣುಗಳ ಬೆಳವಣಿಗೆಗಾಗಿ ಸತ್ತ್ವ ನೀಡುತ್ತದೆ. ಆದರೆ ಸಾಮಾನ್ಯವಾಗಿ ಬೇರಿನ ಬಗ್ಗೆ ನಾವು ಯೋಚಿಸುವುದಿಲ್ಲ. ಸಂತಸದ ಸಂಗತಿ ಎಂದರೆ ಇವರ `ಬೇರು’ ಕಾದಂಬರಿಗೆ ಕೇಂದ್ರ-ರಾಜ್ಯ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸೇರಿದಂತೆ ಕೃತಿಯ ಸತ್ತ್ವವನ್ನು ಅರಸಿ ಒಂಬತ್ತು ಪ್ರಶಸ್ತಿಗಳ ಸುರಿಮಳೆಗರೆದಿರುವುದು ಇವರ ಪ್ರತಿಭೆಗೆ ಸಿಕ್ಕ ಯಶಸ್ಸು ಎಂದರೆ ತಪ್ಪಾಗಲಾರದು. + +ಬೆಲೆಯಿಂದ ಅಕ್ಕುಮೇ ಕೃತಿ ಗಾ-ವಿಲ ಭುವನದ ಭಾಗ್ಯದಿಂದ ಅಕ್ಕುಂ: ನೋಳ್ಪಂಬೆಲೆಗೊಟ್ಟು ತಾರ ಮಧುವಂಮಲಯಾನಿಲನಂ ಮನೋಜನಂ ಕೌಮುದಿಯಂ? + +(ಫಕೀರ) + +ಈ ಮೇಲಿನ ಸಾಲುಗಳು ನೇಮಿಚಂದ್ರ ವಿರಚಿತ ನೇಮಿನಾಥ ಪುರಾಣದಲ್ಲಿ ಬರುತ್ತದೆ. ಇದು ಸಾರ್ವಕಾಲಿಕ ಸತ್ಯವಲ್ಲವೇ? ನಿಜವಾದ ಕಾವ್ಯ ಸುಮ್ಮನೆ ಸಂಭವಿಸುವುದಿಲ್ಲ. ಆ ನಾಡಿನ ಭಾಗ್ಯವೂ ಸಹ ಇರಬೇಕು. ಹಾಗೆ ಮಧುಮಾಸವನ್ನು, ಮಲಯ ಮಾರುತವನ್ನು, ಮನ್ಮಥ (ಪ್ರೇಮ) ನನ್ನು ಬೆಳದಿಂಗಳನ್ನು ಬೆಲೆಕೊಟ್ಟು ತರಲಾಗದು. + +ಕನ್ನಡ ಸಾಹಿತ್ಯದಲ್ಲಿ ಆದಿಕವಿ ಪಂಪನಿಗೆ ಪ್ರಿಯವಾದ ಆತನ ಹುಟ್ಟೂರಾದ ಬನವಾಸಿಯ ನೆಲದಲ್ಲಿ ಹುಟ್ಟಿದ ಯುವಕವಿ ಶ್ರೀಧರ ಬನವಾಸಿ ಎಂಜಿನಿಯರಿಂಗ್ ಓದಿದ್ದರೂ ಆ ಮಣ್ಣಿನ ಸತ್ತ್ವ ಅವರನ್ನು ಸಾಹಿತ್ಯ ಕ್ಷೇತ್ರಕ್ಕೆ ಕರೆದುಕೊಂಡು ಬಂದಿದೆಯೋ ಎಂಬ ಭಾವನೆ ಮೂಡುತ್ತದೆ. + +ಈ ಸಂಕಲನದ ಕವಿತೆಗಳನ್ನು ಓದುತ್ತಾ ಹೋದ ಹಾಗೆ ಹಲವು ವಿಚಾರಗಳು ನನ್ನ ಮನದಲ್ಲಿ ಮೂಡಿದವು. ಪ್ರೇಮದ ವಸ್ತುವನ್ನು ಕುರಿತು ರಚಿತಗೊಂಡ ಒಂದು ಹಿಡಿ ಮಣ್ಣು, ಒಲುಮೆಯ ಲೆಕ್ಕಾಚಾರ, ಯೌವ್ವನದ ಸಂಧ್ಯೆಯಲ್ಲಿ, ಸೂರಿಲ್ಲದ ನೆನಪುಗಳು, ಬಯಕೆಯೆಂಬ ಹೊನ್ನ ಕಳಶವು, ಭಾರವಾದ ಹೆಜ್ಜೆಗಳು, ಕಥೆಯಾಗದಿರು ಮುಂತಾದ ಕವಿತೆಗಳಲ್ಲಿನ ಶೃಂಗಾರ, ಪ್ರೇಮ ಪ್ರಸಂಗ, ವಿರಹ ವೇದನೆ, ಕಾತುರ, ನಿರೀಕ್ಷೆ ಇತ್ಯಾದಿಗಳನ್ನು ಓದಿದಾಗ ನನಗೆ ತಮಿಳಿನ ಸಂಗಂ ಸಾಹಿತ್ಯದ ನೆನಪು ಬರುತ್ತದೆ. ಕಾರಣ ಎಲ್ಲ ಕಾಲದ ಕವಿ ಮನಸ್ಸೂ ಹೆಚ್ಚೂ ಕಡಿಮೆ ಒಂದೇ ಬಗೆಯಲ್ಲಿರುತ್ತದೆ ಎಂಬುದಕ್ಕೆ ಸಾಕ್ಷಿಯಾಗಿ ಯೌವನದ ಸಂಧ್ಯೆಯಲಿ ಎಂಬ ಕವನದ ಸಾಲುಗಳನ್ನುಉದಾಹರಿಸಬಹುದು. + +ಕರಿಮೋಡ ಕರಗುತಲಿತ್ತುಮಳೆಯಾಗಿ ಇಳೆ ಸೇರಲುಬಿದ್ದ ಮಳೆ ಹನಿ ಮಣ್ಣ ಚುಂಬಿಸಿಅಪ್ಪಿದಂತೆ. + +ಸಂಗಂ ಸಾಹಿತ್ಯದ ಹದಿನೆಂಟು ಕೃತಿಗಳಲ್ಲಿ ‘ಕುರುಂದೊಗೈ’ ಎಂಬುದು ಒಂದು ಕೃತಿ. ಆ ಕೃತಿಯ 40ನೇ ಹಾಡು, ಅಪರಿಚಿತ ಹೆಣ್ಣು ಗಂಡಿನ ಒಗ್ಗೂಡುವಿಕೆಯನ್ನು ತಿಳಿಸುತ್ತದೆ. ನಲ್ಲೆಯ ಜೊತೆ ನಲ್ಲನು ರಹಸ್ಯ ಪ್ರಣಯದಲ್ಲಿ ತೊಡಗಿದ್ದವನು. ನಂತರ ತನ್ನನ್ನು ಎಲ್ಲಿ ಬಿಟ್ಟು ಅಗಲಿ ಹೋಗುವನೋ ಎಂಬ ಆತಂಕದಲ್ಲಿ ಮರುಕಪಡುವ ಆಕೆಯನ್ನು ಕಂಡು ನಲ್ಲನು ಹೇಳಿದ ಸಾಂತ್ವನದ ಹಾಡು ಈ ರೀತಿಯಾಗಿದೆ. + +“ಯಾಯುಂ ಜ್ಞಾಯುಂ ಯಾರಾಗಿಯರೊಎಂದೈಯುಂ ನುಂದೈಯುಂ ಎಮ್ಮುರೈ ಕೇಳೀರ್ಯಾನುಂ ನೀಯುಂ ಎವ್ವಳಿ ಅರಿದುಂಸೆಂಬುಲಪ್ಪೆಯ ನೀರ್ ಪೋಲಅನ್ಬುಡೈ ನೆಂಜಂ ತಾಂ ಕಲಂದನವೇ?” + +ಅರ್ಥ- ನನ್ನ ತಾಯಿ ಮತ್ತು ನಿನ್ನ ತಾಯಿ ಯಾರೋ? ನನ್ನ ತಂದೆ ಹಾಗೂ ನಿನ್ನ ತಂದೆ ಯಾವ ಬಗೆಯಲಿ ನೆಂಟರೋ? ನಾನೂ ನೀನೂ ಯಾವ ಬಗೆಯಲಿ ಪರಿಚಯವಾದೆವು, ಕೆನ್ನೆಲದಿ ಸುರಿದ ಮಳೆಯ ನೀರು ಬೆರೆತು ಒಂದಾದಂತೆ ಒಲವಿನ ಮನಗಳೆರಡೂ ಬೆರೆತವು. ಮಳೆಯ ನೀರನ್ನು, ಮಣ್ಣನ್ನು ಬೇರ್ಪಡಿಸಲಾಗದ ಕೆನ್ನೀರಾದಂತೆ ಎಲ್ಲೋ ಹುಟ್ಟಿ ಬೆಳೆದ ಎರಡು ಜೀವಗಳು ಪ್ರೇಮ ಬಂಧನಕ್ಕೊಳಗಾಗುವರು ಎಂಬ ಮಾತು. ಈ ಪ್ರಪಂಚ ಸೃಷ್ಟಿಯಾದಾಗಿನಿಂದ ಎಲ್ಲರೂ ಪ್ರೇಮ ಪ್ರಣಯ ಮೋಹಕ್ಕೆ ಸಿಕ್ಕಿ ಹಾಕಿಕೊಳ್ಳುವವರೇ ಹೆಚ್ಚು. ಅದರಿಂದ ಬಿಡಿಸಿಕೊಂಡು ಬರುವುದು ಅಷ್ಟು ಸುಲಭದ ಮಾತಲ್ಲ ಎಂಬುದು ವೇದ್ಯವಾಗುತ್ತದೆ. + +ಇಲ್ಲಿಯ ಅನೇಕ ಕವನಗಳಲ್ಲಿ ಪ್ರೇಮ-ಪ್ರಣಯ, ಪ್ರಕೃತಿ, ಕಲೆ, ಪರಿಸರ, ಮಾನವೀಯತೆ, ಮನಸ್ಸು, ಬದುಕಿನ ಬವಣೆ, ಭಗ್ನ ಪ್ರೇಮ, ಭರವಸೆ, ವಿಶ್ವಾಸ, ನೆನಪಿನ ಸುರುಳಿಗಳು, ಸ್ನೇಹ, ಜನರ ಕಪಟತನ, ಸುಳ್ಳು-ಮೋಸ-ವಂಚನೆ, ಪ್ರಾಮಾಣಿಕತನ, ಸಾವು ಮುಂತಾದ ಜೀವನದ ಕಟುವಾಸ್ತವ ಪ್ರಸಂಗಗಳು ಚಿತ್ರಿತವಾಗಿವೆ. + +`ಬಿತ್ತಿದ ಬೆಂಕಿ’ ಕವನ ಸಂಕಲನದಲ್ಲಿನ ‘ಕೊನೆ ಎಂದಿಗೋ’ ಎಂಬ ಕವಿತೆ ಇಡೀ ಮನುಕುಲದ ಆತ್ಮ ವಿಡಂಬನೆಯ ಹಾಗೆ ಮೂಡಿಬಂದಿದೆ. ಮನುಷ್ಯನ ಸ್ವಭಾವ, ಮಾನಸಿಕ ತೊಳಲಾಟಗಳು, ನಾವು ಮೋಸಕ್ಕೆ ಗುರಿಯಾಗುವುದು, ನಾವೂ ಸಹ ಕೆಲವೊಮ್ಮೆ ನಂಬಿಕೆ ದ್ರೋಹ ಮಾಡುವುದು, ಆ ಪಾಪಪ್ರಜ್ಞೆ ನಮ್ಮನ್ನು ಸದಾ ಎಚ್ಚರಿಸುವಿಕೆ… ಇತ್ಯಾದಿ. + +ಒಬ್ಬ ವ್ಯಕ್ತಿ ಒಂದು ಮಾತು ಮಾತನಾಡಿದರೆ ವಿವೇಚನೆಯಿಂದ ಮಾತನಾಡಬೇಕು. ಒಮ್ಮೊಮ್ಮೆ ವಿವೇಚನೆಯಿಲ್ಲದೆ ಬೆಂಕಿಯಂತೆ ಉಗುಳಿಬಿಡುತ್ತೇವೆ. ಆಡಿದ ಮಾತು, ಬಿಟ್ಟ ಬಾಣ, ಬಿದ್ದ ಮಳೆ, ಕಳೆದ ಸಮಯ ಎಂದಿಗೂ ತಿರುಗಿ ಬರಲಾರದು ಎಂಬ ಕಟುವಾಸ್ತವ ಚಿತ್ರಣದ ಮೂಲಕ ಪ್ರತಿಯೊಬ್ಬ ಮಾನವನ ಮನಸ್ಸನ್ನು ಪಾರದರ್ಶಕವಾಗಿ ತೆರೆದಿಡುತ್ತದೆ. ವಯೋಸಹಜ ಬಯಕೆಗಳಿಂದ ಆಗುವ ಅವಘಡಗಳು, ಈ ಬದುಕಿನ ನಶ್ವರತೆ, ‘ಗುಟ್ಟು’ ಕಾಣದು ‘ಒಳಗಣ್ಣು ತೆರೆಯಬೇಕು’ ಎಂಬ ಆಶಯಗಳನ್ನು ಒಳಗೊಂಡಿದೆ. + +‘ನೀ ಬಂಧಿಯಲ್ಲ’ ಕವಿತೆಯಲ್ಲಿ ಶೋಷಣೆ ಮಾಡುವ ವರ್ಗವು ಶೋಷಿತ ವರ್ಗಕ್ಕೆ ಮತ್ತು ಸೋಮಾರಿ ವರ್ಗ, ಶ್ರಮಜೀವಿ ವರ್ಗಕ್ಕೆ ದೌರ್ಜನ್ಯವನ್ನುಂಟು ಮಾಡುತ್ತಿರುವುದನ್ನು ಬಿಂಬಿಸಿದ್ದಾರೆ. + +“ಕಟುಕನ ಕತ್ತಿಗೆ ದೇಹ ಯಾವುದಾದರೇನು?ಎಷ್ಟು ರುಚಿಯಿದ್ದರೇನು? ಕತ್ತಿ ಅನುಭವಿಸಿತೇ? – ಈ ಸಾಲುಗಳು ಸಮಾಜದಲ್ಲಿನ ಶೋಷಿತ ವರ್ಗದವರ ನೋವು ಶ್ರೀಮಂತರಿಗೆ ಅರಿವಾಗÀದು ಎಂಬ ಒಳದನಿಯನ್ನು ತಿಳಿಸುತ್ತವೆ. + +`ಸೂರ್ಯನ ಸುತ್ತಲೂ ಕತ್ತಲು’- ಎಂಬ ಕವಿತೆಯಲ್ಲಿ ಮನಸ್ಸಿನ ಮಾಲಿನ್ಯವನ್ನು, ರಾಜಕಾರಣಿಗಳ ದುಷ್ಟತನ ಹಾಗೂ ರೈತರ ಬವಣೆಯನ್ನು, ಸುತ್ತಲಿನ ಲೌಕಿಕ ಜಗತ್ತನ್ನು ಅತ್ಯಂತ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. + +“ಹುಲ್ಲಿನಡಿಯಲಿ ಅವಿತು ಕುಳಿತು ತೆವಳುತ್ತಿದ್ದಮಿಡತೆಯ ನೋವಿನ ಸ್ವಗತವುಪೊರೆಯ ಬಿಚ್ಚಿ ಮರೆತ ಉರಗಕ್ಕೆಹುತ್ತ ಎಲ್ಲಿ ನೆನಪಾಗುವುದೋ?”“ರಕ್ತ ಚಿಮ್ಮುವ ಹೃದಯದಲ್ಲಿ/ಯಾವ ವ್ಯಾಘ್ರವು ಅಡಗಿಹುದೋ?” + +ಎಂಬ ವರ್ಣನೆ ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. `ಸೂರ್ಯನ ಸುತ್ತಲೂ ಕತ್ತಲು’ ಕವಿತೆಯ ಶೀರ್ಷಿಕೆಯಲ್ಲೇ ಅತ್ಯಂತ ಮೊನಚಾದ ವ್ಯಂಗ್ಯವಿದೆ. + +‘ಧರ್ಮದ ಬತ್ತಳಿಕೆ’ ಎಂಬ ಕವಿತೆಯ ಕೆಲವು ಸಾಲುಗಳು ದ.ರಾ. ಬೇಂದ್ರೆ ಅವರ ‘ಚಿಗರಿಕಂಗಳ ಚೆಲುವಿ’ ಕವಿತೆಯ ನೆನಪನ್ನು ತರುತ್ತವೆ. `ಲೋಹದ ಹಕ್ಕಿ’ ಕವಿತೆ ವರ್ಣನೆ ಉಪಮೆ, ರೂಪಕಗಳಿಂದ ಕೂಡಿ ವಿಸ್ಮಯ ಅಚ್ಚರಿಯನ್ನುಂಟು ಮಾಡುತ್ತದೆ. ಕವಿಯು ವಿಮಾನದಲ್ಲಿ ಪಯಣಿಸಿದಾಗ ಉಂಟಾದ ಅನುಭವ ಮನೋಜ್ಞವಾಗಿ ಮೂಡಿಬಂದಿದೆ. + +“ಜಗದ ಗಗನ ಕುಸುಮವೆಂಬಂತೆಮುಗಿಲ ಲೋಹದ ಹಕ್ಕಿಯು ಹಾರುತ್ತಿತ್ತು”-ಹೀಗೆ ಕೆಲವು ಸಾಲುಗಳನ್ನು ಓದಿದಾಗ ನೇಮಿಚಂದ್ರನ ಲೀಲಾವತಿ ಪ್ರಬಂಧಂ ನೆನಪಿಗೆ ಬರುತ್ತದೆ. + +“ಕಟ್ಟುಗೆ ಕಟ್ಟದಿರ್ಕೆ ಕಡಲಂ ಕಪಿ ಸಂತತಿಇದೇನಳವಗ್ಗಳಮೋ ಕವೀಂದ್ರರಾ” + +`ಲೋಹದ ಹಕ್ಕಿ’ ಕವಿತೆಯಲ್ಲೂ ವಿಮಾನವು ಗಗನ ಕುಸುಮವೋ ಅಲ್ಲವೋ… ಎಂಬುದು ತರ್ಕವೆಂಬಂತೆ ಕಂಡರೂ ಕವಿ ಮಾತ್ರ ತನ್ನ ಪ್ರತಿಭೆಯಿಂದ ಅದು ಹೌದು ಎಂಬಂತೆ ಸಾಧ್ಯವಾಗಿಸಿದ್ದಾರೆ. ಈ ಕವಿತೆಯಲ್ಲಿ ವಿವಿಧ ರೀತಿಯ ಹಲವು ವರ್ಣನೆಗಳನ್ನು ರೂಪಕಗಳನ್ನು ಕಾಣಬಹುದಾಗಿದೆ. ಕವಿಯ ವರ್ಣನಾ ಪ್ರತಿಭೆಗೆ ಸಾಕ್ಷಿಯಾಗಿದೆ ಈ ಕವಿತೆ. + + + +‘ಸಾವೆಂಬುದು ನಿರಾಳ ಮೌನ’ ಕವಿತೆಯಲ್ಲಿ ಒಬ್ಬ ವ್ಯಕ್ತಿಯ ಸಾವಿನ ನಂತರದ ನೆನಪುಗಳು ಹೇಗೆಲ್ಲ ನಮ್ಮನ್ನು ಕಾಡುತ್ತವೆ, ಇಲ್ಲಿಯ ತದ್ರೂಪ ಚಿತ್ರಣಗಳು ನಮ್ಮ ಮನಸ್ಸನ್ನು ತಟ್ಟುತ್ತವೆ, ಎಚ್ಚರಿಸುತ್ತವೆ. ತಾತ್ತ್ವಿಕತೆಯನ್ನು ಬೋಧಿಸುತ್ತವೆ, ನಶ್ವರತೆಯ ಸಂದೇಶವನ್ನು ಸಾರುತ್ತಾ ನೆನಪೊಂದೇ ಉಳಿಯುವುದು ಎಂಬ ಚಿತ್ರಣವನ್ನು ಕಣ್ಣಿಗೆ ಕಟ್ಟಿದಂತೆ ಶ್ರೀಧರರು ರಚಿಸಿದ್ದಾರೆ. + +`ನಗುವಿನ ಬೀಜಗಳು ಮಾರಾಟಕ್ಕಿವೆ’-ಇತ್ತೀಚೆಗೆ ನಗು ಮಾಯವಾಗುತ್ತಿರುವುದು, ನಕ್ಕರೂ ತಮ್ಮನ್ನು ಅನಾಗರಿಕರೆಂಬರೋ ಎಂಬ ಅಂಜಿಕೆಯಿಂದ ನಗದಿರುವುದು ಒಂದು ಪ್ರತಿಷ್ಠೆಯ ರೀತಿಯಂತೆ ತಿಳಿದಿರುವರು. ಆದರೆ ಸಹಜ ನಗುವನ್ನು ಮತ್ತೊಬ್ಬರನ್ನು ಅವಮಾನಿಸಲು ಅಪಹಾಸ್ಯ ಮಾಡಲು ಬಳಸಬಾರದು, ಹಿತಮಿತವಾಗಿ ಬಳಸಬೇಕು ಎಂಬುದೂ ಸಹ ವೇದ್ಯವಾಗುತ್ತದೆ. ನಮ್ಮ ಸ್ವಭಾವ, ಸಂಸ್ಕøತಿ ದೇಸಿತನವನ್ನು ಕಳೆದುಕೊಳ್ಳುತ್ತಿದ್ದೇವೆ ಎಂಬುದನ್ನು ತಿಳಿಸುತ್ತದೆ. + +‘ಕನ್ನಡ ಕುಮಾರ ಮತ್ತು ತಮಿಳು ಸೆಲ್ವಿಯ ಕತೆಯು’ ಒಂದು ವಿಶಿಷ್ಟ ಕವಿತೆಯಾಗಿ ಮಿರುಗುತ್ತದೆ. ಕಥೆಗಾರನ ಪಾತ್ರವಾಗಿ ಬಂದ ಅತಿಥಿಗಳಿಗೆ ಗೌರವವನ್ನು ನೀಡುತ್ತಾ ಹೊಸ ಪಾತ್ರಗಳ ಅವತರಣವಾಗುವಿಕೆಗೆ ನಿರೀಕ್ಷಿಸುತ್ತಿರುವ ಕವಿ ಮನಸ್ಸು ಒಳಗಿನ ತೊಳಲಾಟಗಳನ್ನು ಹೇಳಿಕೊಳ್ಳಲಾಗದೇ ತಾನೇ ಸೃಷ್ಟಿಸಿದ ಪಾತ್ರಗಳ ಜೊತೆ ಮುಖಾಮುಖಿಯಾಗುವ ಸಂದರ್ಭವನ್ನು ಎದುರಿಸುತ್ತದೆ. ಈ ಒಂದು ಕವಿತೆಯು ಡಾ. ಚಂದ್ರಶೇಖರ ಕಂಬಾರರು ರಚಿಸಿರುವ `ನನ್ನ ಪಾತ್ರ’ ಎಂಬ ಕವಿತೆಯನ್ನು ನೆನಪಿಸುತ್ತದೆ. + +“ಆಕಳು ತಾನಾಗೇ ಹಾಲು ಕೊಟ್ಟರೆ ಕುಡಿದವರಿಗೆ ಅಮೃತಹಿಂಡಿಸಿಕೊಳ್ಳದೆ ಹಾಗೇ ಇಟ್ಟುಕೊಂಡರೆ ಅದಕೆ ವಿಷ.” + +ಈ ಮೇಲಿನ ಸಾಲು ಅಗಾಧ, ಅನನ್ಯ ಅರ್ಥವನ್ನು ಹೊಳೆಯಿಸುವಂತಹದ್ದು. ಕಾವ್ಯದ ಕೊನೆಯಲ್ಲಿನ ಮಾರ್ಮಿಕ ಸಂದೇಶವೇನೆಂದರೆ ಓತಪ್ರೋತವಾಗಿ ಬರುವ ಸತ್ವಶಾಲಿ ಕಥೆ ಕವನಗಳನ್ನು ಮೆಚ್ಚಿ ಪ್ರೋತ್ಸಾಹಿಸಬೇಕೇ ಹೊರತು ತೆಗಳಿ ಎಳೆ ಪ್ರತಿಭೆಯನ್ನು ಚಿವುಟಿ ಹಾಕಬಾರದು ಎಂಬ ಸಂದೇಶವನ್ನು ತಿಳಿಸುವಂತಿದೆ. + +‘ರಕ್ತ ಕಹಳೆಯ ಕತೆಯು’ ಎಂಬ ಕವನದಲ್ಲಿ ಜೀವನವೆಂಬುದೇ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಅದು ಸಾವಿನ ವಿಕಟಚಕ್ರದಲ್ಲಿ ತೊಳಲಾಡುತ್ತಿದೆ. ಕೊನೆಯ ಪಂಕ್ತಿಗಳಂತೂ ಹಿಂಸೆಯನ್ನು ವಿರೋಧಿಸುತ್ತಾ ಮೂಢನಂಬಿಕೆಯನ್ನು ಅಪಹಾಸ್ಯ ಮಾಡಿ ಸಮಾಜವನ್ನು ಎಚ್ಚರಿಸುವ ನಿಟ್ಟಿನಲ್ಲಿ ಸಾಗುತ್ತಾ ಮಾಸ್ತಿಯವರ `ಕಲ್ಮಾಡಿಯ ಕೋಣ’ ಕಥೆಯ ನೆನಪನ್ನು ತಾರದಿರದು. + +‘ಗೆಳತಿಗೆ ಪೋಣಿಸಿದ ಮುತ್ತುಗಳು’ ಶೀರ್ಷಿಕೆಯಲ್ಲಿ ಬಂದಂತಹ ಪುಟ್ಟ ಪುಟ್ಟ ಕವಿತೆಗಳು ಶೃಂಗಾರ, ಜಿಜ್ಞಾಸೆ, ಅಸಮಾಧಾನ, ಸದಾಶೆ, ಜೀವನ ಪ್ರೀತಿಯ ಕಾವ್ಯರೂಪಕದಂತೆ ಕಾಣುತ್ತವೆ. ಅತ್ಯಂತ ಮನೋಜ್ಞವಾಗಿವೆ. ಈ ಕವಿತೆಯ ಮೊದಲ ಪಂಕ್ತಿಯೇ ಆಶಾವಾದ ಹಾಗೂ ಸ್ವಾಭಿಮಾನದ ಉತ್ತುಂಗವನ್ನು ಸಾರುತ್ತಾ ಉತ್ಕøಷ್ಟಕವಿ ಎಂಬುದಕ್ಕೆ ದ್ಯೋತಕವಾಗಿ ಪರಿಣಮಿಸಿದೆ. + +“ಗೆಳತಿಹೆಬ್ಬಂಡೆಯ ಮೇಲೆ ಹುಟ್ಟಿದವನುಬಾಯಾರಿಕೆಗೆ ಹೆದರುವನೇ …” + +ಈ ಸಾಲುಗಳನ್ನು ಓದಿದಾಗ ತಮಿಳಿನ ಕವಿ ವೈರಮುತ್ತುರವರು ತಮ್ಮ ಸಂದರ್ಶನದಲ್ಲಿ ಒಂದು ಮಾತನ್ನು ಹೇಳಿದ್ದು ನೆನಪಿಗೆ ಬರುತ್ತಿದೆ. ಅವರ ಬಾಲ್ಯಾವಸ್ಥೆ ಹೇಗಿತ್ತು? ಹೇಗೆ ಈ ಮಹತ್ತರ ಬೆಳವಣಿಗೆಯನ್ನು ಸಾಧಿಸಿದಿರಿ ಎಂಬ ಸಂದರ್ಶಕರ ಪ್ರಶ್ನೆಗೆ ಬಂಡೆಯನ್ನು ಸೀಳಿಕೊಂಡು ಮೊಳಕೆಯೊಡೆದ ಬೀಜದಂತೆ ಕಷ್ಟಪಟ್ಟು ಮುಂದೆ ಬಂದೆ ಎಂದು ನುಡಿದ ನುಡಿ ನೆನಪಿಗೆ ತರುತ್ತದೆ. + +`ಮಸಣದ ದಾರಿಯು’-ಮನುಷ್ಯನಿಗೆ ಆಸೆ ಇರಬೇಕು ನಿಜ. ಆತನ ದುರಾಸೆಯ ಚಿತ್ರಣವನ್ನು ಕವಿ ಇಲ್ಲಿ ನೀಡುತ್ತಾ ಹುಟ್ಟು- ಮಸಣದ ನಡುವೆ ನಾವು ಹಣದ ದಾಹಕ್ಕೆ ಮಾರುಹೋಗಿ ಭ್ರಷ್ಟಾಚಾರದಲ್ಲಿ ತೊಡಗಿ ಅಮಾಯಕ ಜನತೆಯನ್ನು ಶೋಷಿಸಿ ದೌರ್ಜನ್ಯವನ್ನುಂಟು ಮಾಡಿದರೂ ಸಹ ಯಾರೂ ಇಲ್ಲಿ ಶಾಶ್ವತವಾಗಿ ಉಳಿಯಲಾರೆವು, ಎಲ್ಲರೂ ಮಸಣದ ಬಳಿಗೇ ಹೋಗಬೇಕು ಎಂಬುದನ್ನು ಪುಟ್ಟ ಕವಿತೆಯ ಮೂಲಕ ಮನದಟ್ಟು ಮಾಡಿದ್ದಾರೆ. + +ಪರಿಸರದ ಬಗೆಗಿನ ಕಾಳಜಿಯ ಕುರಿತು ‘ಗಣಿ ರಕ್ತದ ಮಡಿಲು’ ಕವಿತೆ ತಿಳಿಸುತ್ತದೆ. ‘ಬಿತ್ತಿ ಬೆಳೆದವರು’ ಕವಿತೆಯಲ್ಲಿ ನಗರೀಕರಣ ಕೈಗಾರಿಕೀಕರಣ, ಜಾಗತೀಕರಣ ನಾಗಾಲೋಟದಿಂದ ಬೆಳೆಯುವ ಈ ನಗರದ ಬೆಳವಣಿಗೆಯು, ಬೆಳೆಯುತ್ತಿದ್ದ ಹೊಲಗದ್ದೆಗಳನ್ನೆಲ್ಲ ಕಾಂಕ್ರೀಟ್ ಕಾಡುಗಳನ್ನಾಗಿ ಮಾಡಿದ ಮನುಷ್ಯ ಮತ್ತೆ ಹಳ್ಳಿಯ ಜೀವನದ ಕಡೆಗಿನ ಬಯಕೆಯನ್ನು ಉಳಿಸಿಕೊಳ್ಳಬೇಕು ಎಂಬ ಆತಂಕ ಹಾಗೂ ಕವಿಯ ಮನೋಭಿಲಾಷೆಯನ್ನು ತಿಳಿಸುತ್ತದೆ.“ಬಿತ್ತಿದ ಮಣ್ಣು ನೇಗಿಲಯೋಗಿಗಾಗಿ ಕಾಯುತ್ತಿರಲು” ಎಂಬುದರಲ್ಲಿ ವ್ಯಕ್ತವಾಗುತ್ತದೆ. + +‘ಮನಸು ಮಾಯಾರೂಪ’ ಒಗಟಿನ ಕವಿತೆಯಾಗಿ ರೂಪು ತಾಳಿದೆ. + +‘ಮೂಕಸಾಕ್ಷಿ’ ವಿವಿಧ ಸ್ವಭಾವಗಳ ಜನರ ನಡುವಿನ ಅನುಭವ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಇರುತ್ತದೆ. ಕಾದಂಬರಿಯಲ್ಲಿ ಕೆಲವು ಪಾತ್ರಗಳ ಮನೋಭಿಲಾಷೆಯನ್ನು ತಿಳಿಸುವ ಪ್ರಯತ್ನ ಮಾಡಿದ್ದಾರೆ. + +‘ಕಾರಣವು ಬೇಕಿಲ್ಲ’ ಎಂಬ ಕವಿತೆಯಲ್ಲಿ ಮನುಷ್ಯನ ಅಸಹಾಯಕತೆ ನೋವು ಸಂಕಟ, ಸೋಲು, ಅವಮಾನ, ಮನದ ಬೇಗುದಿ, ತಳಮಳ ಬಯಕೆ, ಸಾಧನೆಯ ಮಾರ್ಗ, ವಿಶ್ವಾಸ, ನಂಬಿಕೆ, ಭರವಸೆ, ಗುರಿ ಇವೆಲ್ಲದರ ಯಥಾವತ್ತಾದ ಚಿತ್ರಣವಿದೆ. + +ಪ್ರತಿಯೊಬ್ಬರಿಗೂ ಹುಟ್ಟಿನಿಂದಲೇ ಹೋರಾಟದ ಬದುಕಾದರೂ ಸಹ ದುಃಖ ನದಿಯಂತೆ ಹರಿಯುತ್ತಿರುತ್ತದೆ. ನಂಬಿಕೆ, ಭರವಸೆ ಹಾದಿಯ ನಾಳೆಗಳೆಂಬ ಸಿಹಿ ಸಾಗರವ ಸೇರುವ ಕ್ಷಣದವರೆಗೂ… + +‘ಹೆಣ್ಣೊಬ್ಬಳು’ ಕವಿತೆಯಲ್ಲಿ ಹೆಣ್ಣು ತಾಯಿಯಾಗಿ, ಭೂತಾಯಿಯಾಗಿ, ದೈವತ್ವದ ರೂಪಕವಾಗಿ ಕಾಣುವುದಲ್ಲದೇ, ಅದರ ಅರ್ಥ ಇನ್ನೂ ವಿಸ್ತಾರವಾಗುತ್ತಾ ಹೆಣ್ಣಿನ ಬಗೆಗಿನ ವಿಸ್ಮಯತೆಯು ಇನ್ನಷ್ಟು ಅರ್ಥವನ್ನು ಪಡೆಯುತ್ತಾ ಹೋಗುತ್ತದೆ. ಹೆಣ್ಣು ಎಂಬುವವಳು ಬರೀ ಹೆಣ್ಣಲ್ಲ; ಆಕೆ ಇನ್ನೂ ಬೇರೆನೋ ಆಗಿದ್ದಾಳೆ ಎಂಬ ಅಧ್ಯಾತ್ಮದ ಒಳಸುಳಿಯನ್ನು ಕವಿತೆಯು ತಿಳಿಸುತ್ತದೆ. + +‘ದೀಪ ಹಚ್ಚಿದವರಾರು?’ ಕವಿತೆಯಲ್ಲಿ ಯಾವುದೋ ಒಂದು ಕಾಣದ ಶಕ್ತಿ ಉಂಟು. ಆ ಶಕ್ತಿಯೇ ನಮ್ಮೆಲ್ಲರನ್ನೂ ಮುನ್ನಡೆಸುತ್ತಿದೆ. ಒಳಗಿನ ಅಂತಃಶಕ್ತಿಯನ್ನು ಅರಿಯುವ ಮರ್ಮವ ಕುರಿತಾದ ಕವಿತೆಯಾಗಿದೆ. + +ವ್ಯಕ್ತಿಚಿತ್ರವನ್ನು ತಿಳಿಸುವ ಕವಿತೆಗಳಾದ ‘ತ್ಯಾಗ ಮತ್ತು ವೈರಾಗ್ಯ’, ಶತಾಯುಷಿ ಶಿವಕುಮಾರ ಸ್ವಾಮೀಜಿ ಅವರ ಕುರಿತಾದ `ಸಿದ್ಧಗಂಗೆಯ ಯುಗಪುರುಷ’, ಸ್ವಾಮಿ ವಿವೇಕಾನಂದರ ಕುರಿತಾದ `ವೀರವೇದಾಂತಿಯು’, ಮೀರಾ ಮತ್ತು ಕೃಷ್ಣನ ಭಕ್ತಿ ಕಾವ್ಯವು ಯೇಸುವಿನ ಬದುಕು ಕಾವ್ಯವು, ವೃಕ್ಷಮಾತೆ ಕವಿತೆಯಲ್ಲಿ ಸಾಲುಮರದ ತಿಮ್ಮಕ್ಕನ ಜೀವನ- ಹೀಗೆ ಇಂತಹ ಹಲವು ವಿಶಿಷ್ಟ ಕವಿತೆಗಳು ಬೇರೆಯದ್ದೇ ಹಾದಿಯಲ್ಲಿ ಆದರ್ಶ ಹಾಗೂ ದೈವಿಕ ನೆಲೆಯನ್ನು ಕಟ್ಟಿಕೊಡುವಂತಹ ಕವಿತೆಗಳಾಗಿವೆ. + +‘ಮುಳ್ಳಿನ ಬಲೆ’-ಇಡೀ ಕವನವು ಕಾವಿಯ ಒಳಗೆ ಬಂಧಿಸುವ ಒಂಬತ್ತು ಮಂದಿಗಳಿಂದ ಒಬ್ಬ ಸಂನ್ಯಾಸಿ ಮಾಡುವ ತಪ್ಪು, ಅದರಿಂದಾಗುವ ಅವಘಡ, ಅದನ್ನು ಆತ ಎದುರಿಸುವ ಬಗೆ. ಹೀಗೆ ಅವನ ಬದುಕಿನಲ್ಲಿ ಅನೇಕ ಊಹಾಪೋಹಗಳಿದ್ದರೂ ಸಹ ಸತ್ಯ ಅಡಗಿರುವುದು ಎಲ್ಲಿ? ಎಂಬ ಪ್ರಶ್ನೆ ಬಂದಾಗ, ಸತ್ಯ ಗೊತ್ತಿರುವುದು ಸನ್ಯಾಸಿಯ ಏಕಾಂತಕೋಣೆ ಮತ್ತು ಉಟ್ಟ ಕಾವಿಬಟ್ಟೆಗೆ ಮಾತ್ರ ಎಂಬ ಮಾತಿನಲ್ಲಿ ಕವಿತೆಯ ಸತ್ತ್ವ ಅಡಗಿದೆ. + +‘ಕಲಾಕುಂಜದ ಸಂತೆಯಲ್ಲಿ’ ಎಂಬ ಕವನವು ನಾವೇ ಸ್ವತಃ ಚಿತ್ರಸಂತೆಗೆ ಹೋದಾಗ ಉಂಟಾದ ಅನಿಸಿಕೆ, ಅನುಭವ ಈ ಕವಿಗೆ ಹೇಗೆ ಗೊತ್ತು? ಎಂಬ ಅಚ್ಚರಿ ಮೂಡುವಂತಹ ಚಿತ್ರಣ ಹಾಗೂ ಅದರಲ್ಲಿ ಲೌಕಿಕ ಜಗತ್ತಿನ ಎಲ್ಲ ಮನದ ವ್ಯಾಪಾರವನ್ನು ಆಗು-ಹೋಗುಗಳನ್ನು ತಿಳಿಸುತ್ತಾ ಜನಪ್ರಿಯ ಕಲಾವಿದರನ್ನು ಗೌರವಿಸುವ ಹಾಗೂ ಎಲೆಮರೆಯ ಕಾಯಿಯಂತಿರುವ ಪ್ರತಿಭಾವಂತರನ್ನು ನಿರ್ಲಕ್ಷಿಸುವ ಬಗೆ-‘ಕಲಾವಿದನ ಕಣ್ಣೀರು ಬಣ್ಣದಲಿ ಸೇರಿಕೊಂಡಿದೆ’/ ‘ಅಳಿದುಳಿದ ಚಿತ್ರಗಳು ಸೋತಂತೆ ಕಾಣಲಿಲ್ಲ / ಇನ್ನೊಮ್ಮೆ ಕಲಾರಸಿಕರ ಎದೆಯೊಳಗೆ ನುಗ್ಗುವ ತವಕದಲ್ಲಿದ್ದಂತೆ’ ನಿರ್ಜೀವ ಚಿತ್ರಗಳು ಸಹ ಬದುಕುಳಿಯಲು ತಾಳ್ಮೆಯಿಂದ ಮರಳಿ ಪ್ರಯತ್ನಿಸುವ ರೀತಿ ನೋಡಿದರೆ ಕವಿ ತನ್ನ ಕಾವ್ಯ ಪ್ರತಿಭೆಯ ಉತ್ತುಂಗವನ್ನು ಮುಟ್ಟಿದ್ದಾರೆ ಎಂದು ಅನಿಸುತ್ತದೆ. ಈ ಕವಿತೆಯ ಕೆಲವು ಸಾಲುಗಳು ಕೆಳಕಂಡಂತೆ; + +(ಡಾ.ಮಲರ್ ವಿಳಿ) + +“ಸಂತೆಯಲಿ ಎಲ್ಲಾ ಚಿತ್ರಗಳು ಕಣ್ಣಿಗೆ ಬೀಳುವವುಕೆಲವು ಜಾಗ ಸಿಗದೆ ಸಂದಿಗೊಂದಿಯಲಿಅವಿತು ಕಣ್ಣರಳಿಸಿ ಜನರತ್ತ ನೋಡುವಂತೆಸೆರೆಮನೆಯ ಸರಳಿನಲ್ಲಿ ಕದ್ದು ನೋಡುವಂತೆಚಿತ್ರಪ್ರಿಯರಿಗೆ ಭಾಸವಾಗುವಂತೆ” + +ಸಂಕಲನದ ಕೊನೆಯಲ್ಲಿ ಬರುವ ಕವಿತೆಗಳಾದ ಬಡವನ ನೊಗದಾಗ ನೂರೆಂಟು ಭಾರ ಮತ್ತು ಮುತ್ತೈದೆಯ ಮೂಗುತಿ ಜನಪದೀಯ ಶೈಲಿಯ ರಚನೆಯ ಕವನಗಳಾಗಿವೆ. + +ಕೊನೆಯದಾಗಿ, ಈ ಸಂಕಲನದ ಎಲ್ಲ ಕವಿತೆಗಳನ್ನು ಓದಿದ ಮೇಲೆ, `ಫಕೀರ’ ಅಂಕಿತನಾಮದ ಶ್ರೀಧರ ಬನವಾಸಿ ಅವರ ಬರವಣಿಗೆಯಲ್ಲಿ ವಸ್ತುನಿಷ್ಠ ಚಿಂತನೆಯನ್ನು ಕಾಣಬಹುದು. ಕಾವ್ಯಪ್ರೀತಿಯೊಂದಿಗೆ ಸಾಮ ಮಾರ್ಗದ ಮೂಲಕ ಮನುಷ್ಯ ಬದುಕಿಗೂ ಸಮಾಜಕ್ಕೂ ಸ್ವಾಸ್ಥ್ಯ ತರುವ ವಿವೇಕ ತುಂಬಿದ್ದರೂ ಎಲ್ಲಿಯೂ ಕ್ರಾಂತಿಕಾರಕ ನುಡಿಗಳಿಲ್ಲದ ರೀತಿಯನ್ನು ಕಾಣಬಹುದು. ಅಂತಹ ಸಹಜತೆಯನ್ನು ಅವರು ಉಳಿಸಿಕೊಂಡಿದ್ದಾರೆ. + +`ಬಿತ್ತಿದ ಬೆಂಕಿ’ ಕವನ ಸಂಕಲನದಲ್ಲಿ ಮನುಷ್ಯನ ಸ್ವಾರ್ಥ, ಮೋಸ-ವಂಚನೆ, ಭ್ರಷ್ಟಾಚಾರ ಇತ್ಯಾದಿಗಳ ಬಗೆಗಿನ ಅಸಹನೆಯನ್ನು ಪ್ರಿಯಸತ್ಯ ನುಡಿಗಳ ಶೈಲಿಯಲ್ಲಿ ನಿರೂಪಿಸುತ್ತದೆ. ಮನುಷ್ಯರು ನಿಜದ ನೆಲೆಯತ್ತ ಸಾಗಬೇಕೆಂಬ ಆಶಯವೇ ಈ ಕವಿಯ ಮಹದಾಸೆಯಾಗಿದೆ. + +ಇಲ್ಲಿ ಕವಿ ತನ್ನ ಸುತ್ತಲಿನ ವಿದ್ಯಮಾನಗಳನ್ನು ಅವಲೋಕಿಸುವ ರೀತಿ ಅದರ ಬಗ್ಗೆ ತಾಳುವ ನಿಲುವು, ಅಂತರ್ದೃಷ್ಟಿ, ವಿಶಿಷ್ಟ ಆಲೋಚನಾಕ್ರಮ ಢಾಳಾಗಿ ಕಾಣುತ್ತದೆ ಹಾಗೂ ಕಾವ್ಯ ರಸಿಕರಿಗೆ ಚಿಂತಿಸಲು ಪ್ರೇರೇಪಿಸುತ್ತದೆ. ಅವು ಸಹೃದಯರ ಹೃದಯವನ್ನು ತಟ್ಟುತ್ತವೆ. ಅರಿತಿರುವ ಅಧ್ಯಾತ್ಮವು ಕವಿತೆಗಳಲ್ಲಿ ಬಹುಮುಖ್ಯವಾಗಿ ಕಾಣುತ್ತದೆ. + +ಶ್ರೀಧರ ಬನವಾಸಿಯವರ ಅನೇಕ ಕವನಗಳು ಅದು ಪ್ರೇಮವಿರಲಿ, ಪರಿಸರ ಪ್ರಜ್ಞೆಯಾಗಲಿ, ರಾಜಕೀಯವಾಗಲಿ ಸಮಾಜದ ಒಳಿತಿಗಾಗಿ ಪ್ರಾಮಾಣಿಕತನ ಸತ್ಯ, ಪ್ರೀತಿ ಹಾಗೂ ಒಳಿತಿನ ದಾರಿಯಲ್ಲಿ ಸಾಗಬೇಕು ಎಂಬುದನ್ನು ಸಾರುತ್ತವೆ. + + + +ಓದುಗರ ಮನದ ಒಳದನಿಯಾಗಿ ಇವರ ಕವಿತೆಗಳು ಪುಟಿದೇಳುತ್ತವೆ. ದೈನಂದಿನ ಬದುಕನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸಿ ಸಾಮಾಜಿಕ ಕಾಳಜಿಯಿಂದಲೇ ಬರೆದಿರುವುದು ಅವರ ಪ್ರತಿಭೆಗೆ ಹಿಡಿದ ಕನ್ನಡಿಯಾಗಿದೆ. ಭವಿಷ್ಯದಲ್ಲಿ ಉತ್ತಮೋತ್ತಮ ಕವನ ಸಂಕಲನಗಳನ್ನು ಕನ್ನಡ ಕಾವ್ಯ ಕ್ಷೇತ್ರಕ್ಕೆ ನೀಡಲಿ ಎಂದು ಶುಭ ಹಾರೈಸುತ್ತೇನೆ. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_319.txt b/Kenda Sampige/article_319.txt new file mode 100644 index 0000000000000000000000000000000000000000..381818d8e9121b5ea526faf682541355c38d4ab2 --- /dev/null +++ b/Kenda Sampige/article_319.txt @@ -0,0 +1,107 @@ + + +ಕಂಪನಿ ಲಾಕೌಟ್ ಆಗಲಿದೆ ಅಂತ ಪದೇ ಪದೇ ಸುದ್ದಿಗಳು ಕೇಳಿಬರುತ್ತಿದ್ದವು. ಅದಾಗಲೇ ಕೆಲವರು ಹೊಸ ಕೆಲಸವನ್ನು ಹುಡುಕಲು ಮೊದಲು ಮಾಡಿದ್ದರೆ ಇನ್ನು ಕೆಲವರು ತಮಗೆ ಸಿಗಬಹುದಾದ ಪರಿಹಾರ ಮೊತ್ತವನ್ನು ಲೆಕ್ಕ ಹಾಕುತ್ತಿದ್ದರು. ನನಗೆ ಹಿಂದೆ ಇಂತಹ ಅಭದ್ರತೆ ಕಾಡಿರಲಿಲ್ಲ. ಹತ್ತು ವರ್ಷಗಳಿಂದ ಒಂದೇ ಕಂಪನಿಯಲ್ಲಿ ದುಡಿದು ಇಲ್ಲಿಯವರೆಗೆ ನಿರಾತಂಕವಾಗಿ ಯವ್ವನವನ್ನು ಕಳೆದಿದ್ದ ನನಗೆ ಒಮ್ಮಿಂದೊಮ್ಮೆಲೆ ಕಂಪನಿಯ ಲಾಕೌಟ್ ಸುದ್ದಿ ಅಲ್ಲಾಡಿಸಿಬಿಟ್ಟಿತ್ತು. + +ಪ್ರತಿದಿನ ಭವಿಷ್ಯದ ಚಿಂತೆ ಕಾಡುತ್ತಿತ್ತು. ಇದ್ದಕ್ಕಿದ್ದಂತೆ ಬೆಳಕು ಕೊನೆಗೊಂಡು ಕತ್ತಲು ಕವಿದಂತೆ ಭಾಸವಾಗುತ್ತಿತ್ತು. ಪ್ರತಿದಿನ ಮಲಗುವ ಮುಂಚೆ ಡಿವಿಜಿಯ “ಬದುಕು ಜಟಕಾ ಬಂಡಿ” ಕಗ್ಗವನ್ನು ಹೇಳಿಕೊಳ್ಳುತ್ತಾ “ಪದಕುಸಿಯೆ ನೆಲವಿಹುದು ಮಂಕುತಿಮ್ಮ” ಎಂಬುದನ್ನು ಪದೇ ಪದೇ ಹೇಳಿಕೊಳ್ಳುತ್ತಿದ್ದೆ. ಆ “ನೆಲ” ಯಾವುದು ಎಂಬುದರ ಬಗ್ಗೆ ಸ್ಪಷ್ಟತೆಯಿರಲಿಲ್ಲ. ಈಗ ಮಾಡಿರುವ ಉಳಿತಾಯ ಆರು ತಿಂಗಳಿಗೆ ಸಾಕು. ಅದರಲ್ಲಿ ತಿಂಗಳ ಮನೆ ಸಾಲ, ಕಾರು ಸಾಲ, ಎರಡನೆಯ ಮನೆ ಸಾಲ, ಟೂರಿಗಂತ ಕೊಂಡಿದ್ದ ಪರ್ಸನಲ್ ಲೋನುಗಳು ಇವೆಲ್ಲವನ್ನು ನಿಭಾಯಿಸಬೇಕು. ಒಂದೆರಡು ತಿಂಗಳು ಕೆಲಸ ಸಿಗುವವರೆಗೆ ಈ ಸಾಲಗಳನ್ನು ಮುಂದೂಡಲು ಅರ್ಜಿ ಹಾಕಿಕೊಳ್ಳಬಹುದು. ನಿರುದ್ಯೋಗಿ ಭತ್ಯೆಗೆ ಅರ್ಜಿ ಹಾಕಬಹುದು. ಮಕ್ಕಳನ್ನು ಸಾಕಲು ಸರಕಾರ ಕೊಡುವ ದುಡ್ಡು ಒಂದಷ್ಟು ಹೆಚ್ಚಾಗಬಹುದು. ಎಲ್ಲಾ ಲೆಕ್ಕ ಹಾಕಿದರೂ ಕೈಯಲ್ಲಿ ಕೆಲಸವಿಲ್ಲದೆ ಎಷ್ಟು ದಿನ ಬದುಕಬಹುದು ಎಂಬುದರ ಲೆಕ್ಕದಲ್ಲೇ ಪ್ರತಿ ರಾತ್ರಿಗಳು ಅರ್ಧಕ್ಕರ್ಧ ಸರಿದು ಹೋಗುತ್ತಿದ್ದವು. ಇಷ್ಟರ ನಡುವೆ ಹೊಸದೊಂದು ಇಷ್ಟೇ ಸಂಬಳ ತರುವ ಇಷ್ಟೇ ಭದ್ರತೆ ಕೊಡುವ ಕೆಲಸವೊಂದು ಗಿಟ್ಟಿಬಿಟ್ಟರೆ “ನೆಲ” ಮತ್ತು ನೆಲೆ ಎರಡೂ ಸಿಕ್ಕಂತಾಗುತ್ತದೆ ಎನಿಸುತ್ತಿತ್ತು. + +ಈ ಮಧ್ಯೆ ನಮ್ಮ ಕಂಪನಿ ವಹಿಸಿದ ಅದಾವುದೋ ಚಿಕ್ಕ ಅಸೈನ್ ಮೆಂಟ್ ಮೇಲೆ ಕ್ರಿಸ್ಮಸ್ ಐಲ್ಯಾಂಡಿಗೆ ಹೋಗಬೇಕಾಗಿ ಬಂತು. ಕ್ರಿಸ್ಮಸ್ ಐಲ್ಯಾಂಡ್ ಇಡೀ ಪ್ರಕೃತಿಯೇ ಹಂಬಲಿಸಿ ತನ್ನ ಎಲ್ಲಾ ಚೆಲುವನ್ನು ಒಂದೆಡೆ ಕಲೆಹಾಕಿ ತಾನೇ ಮರುಳಾಗಿ ನೋಡುತ್ತಾ ಕುಳಿತಿರುವಂತಿರುವ ಹಚ್ಚಹಸಿರು ನಡುಗಡ್ಡೆ. ನನಗೆ ಯಾವತ್ತೂ ಈ ನಡುಗಡ್ಡೆಗೆ ಹೋಗಲು ಬೇಸರವೇ ಬರುವುದಿಲ್ಲ. ಅವತ್ತು ಕೆಲಸ ಮುಗಿಸಿ ನಮ್ಮ ಕ್ಲೈಂಟ್ ಆಫೀಸಿನಿಂದ ಗೆಸ್ಟ್ ಹೌಸ್ ಗೆ ತೆರಳಲು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ನನ್ನ ಪಕ್ಕದಲ್ಲಿ ಮುಖ ಒಣಗಿ ಹೋಗಿದ್ದ ಚರ್ಮಗಳೆಲ್ಲ ಮೂಳೆಗೆ ಅಂಟಿಕೊಂಡಂತಿದ್ದ ಎಣ್ಣೆಗೆಂಪು ಬಣ್ಣದ ವ್ಯಕ್ತಿಯೋರ್ವ ಬಂದು ಕುಳಿತ. ಅವನ ಬಟ್ಟೆ ಕೊಳೆಯಾಗಿತ್ತು. ತೊಡೆಯ ಮೆಲೆ ತನ್ನ ಎರಡೂ ಮೊಳಕೈಗಳನ್ನು ಆಸರೆಯಾಗಿಸಿ ಬಗ್ಗಿ ಕುಳಿತು ಒಂದಷ್ಟು ಹೊತ್ತು ಕಾಂಕ್ರೀಟ್ ನೆಲವನ್ನು ದಿಟ್ಟಿಸಿದ. ನಿಧಾನಕ್ಕೆ ನನ್ನೆಡೆಗೆ ತಿರುಗಿ,“ಒಂದು ಸಿಗರೇಟ್ ಇದೆಯೇ?” ಅಂತ ಕೇಳಿದ. + +“ನನಗೆ ಅಭ್ಯಾಸ ಇಲ್ಲ.” ಅಂದೆ. + +“ಆ ಅಂಗಡಿಯಿಂದ ಕೊಂಡುಕೊಂಡು ಬಂದು ನನಗೆ ದಾನ ಮಾಡುತ್ತೀಯಾ?” ಅಂತ ಕೇಳಿದ.ನನ್ನಿಂದ ದಾನ ಪಡೆಯುವುದು ತನ್ನ ಹಕ್ಕು ಅಂತ ಅಂದುಕೊಂಡಂತಿತ್ತು ಆತನ ಮಾತಿನ ಶೈಲಿ. + +“ನಿನಗೆ ಊಟ ಬೇಕಿದ್ದರೆ ಕೊಡಿಸುತ್ತೇನೆ. ಸಿಗರೇಟು ಕೊಡಿಸುವುದು ನನ್ನ ತತ್ವಗಳಿಗೆ ವಿರುದ್ಧ” ಅಂದೆ.ಇಂತಹ ಚಿಲ್ಲರೆ ವಿಷಯಗಳಿಗೆಲ್ಲ ತತ್ವವನ್ನ ಎಳೆದುತರುತ್ತೀಯಲ್ಲ ಎಂಬಂತೆ ನನ್ನ ಕಡೆಗೆ ವ್ಯಂಗ್ಯವಾಗಿ ನಕ್ಕ. + +“ಸಿಗರೇಟಾದರೆ ಎರಡು ಮೂರು ದಿನ ಉಪಯೋಗಕ್ಕೆ ಬರುತ್ತದೆ. ಊಟವಾದರೆ ಒಂದೇ ಹೊತ್ತು. ಬೆಳಿಗ್ಗೆಗೆ ದೇಹದಿಂದ ಖಾಲಿಯಾಗಿ ಬಿಡುತ್ತದೆ. ಆದರೆ ನೀನಾಗಿ ಕೇಳುತ್ತಿರುವುದರಿಂದ ನಾನು ಊಟ ಮಾಡುತ್ತೇನೆ. ಸಾಧ್ಯವಾದರೆ ನನಗೆ ಪಿಝಾ ಕೊಡಿಸು. ಪ್ರತಿದಿನ ಈ ಚರ್ಚ್ ನವರು ಕೊಡುವ ಬೀಫ್ ಸ್ಯಾಂಡ್ ವಿಚ್ ತಿಂದು ಬೇಸರವಾಗಿದೆ” ಅಂದ, ನಾನು ಕೊಡಿಸುವ ಬಿಟ್ಟಿ ಊಟವನ್ನು ತಿನ್ನುವುದೇ ನನಗೆ ಆತ ಮಾಡಲಿರುವ ಮಹದುಪಕಾರ ಎಂಬಂತೆ!ಒಂದು ಎಕ್ಸ್ಟ್ರಾ ಹ್ಯಾಮ್ ಚೀಜ್ ಹಾಕಿದ ಮೆಕ್ಸಿಕನ್ ಪಿಝಾಗೆ ಆರ್ಡರ್ ಮಾಡಿ ಇಬ್ಬರಿಗೂ ಒಂದೊಂದು ಕಾಫಿ ತೆಗೆದುಕೊಂಡು ಬಂದು ಅವನಿಗೊಂದು ಲೋಟ ಕೊಟ್ಟು ನಾನು ಕಾಫೀ ಹೀರುತ್ತಾ ಕುಳಿತೆ. + +“ನೀನೆಲ್ಲಿಯವನು? ಇಂಡಿಯಾ, ಪಾಕಿಸ್ತಾನ್, ಬಾಂಗ್ಲಾದೇಶ್?” ಅಂಥ ಕೇಳಿದ. ಕಾಫಿ ಕಪ್ ನ ಮುಚ್ಚಳವನ್ನು ತೆರೆಯುತ್ತಾ. + +“ಇಂಡಿಯಾ” ಅಂದೆ. + +“ಹಾಗಾದರೆ ನಿನಗೆ ಮಂಗಳೂರು, ಚೆನೈ, ಪಾಂಡಿಚೆರಿ, ಕೊಚ್ಚಿ ಈ ಊರುಗಳೆಲ್ಲಾ ಗೊತ್ತಾ?” + +“ಗೊತ್ತು ಎಲ್ಲಾ ಕಡಲ ತಡಿಯ ಊರುಗಳು. ಮಂಗಳೂರು ನಮ್ಮ ರಾಜ್ಯದಲ್ಲೇ ಇದೆ. ನಿನಗೆ ಇವೆಲ್ಲ ಹೇಗೆ ಗೊತ್ತು?” + +“ಪ್ರತಿ ಶ್ರೀಲಂಕನ್ನರಿಗೂ ಅಕ್ರಮವಾಗಿ ಹೊರದೇಶಕ್ಕೆ ತಪ್ಪಿಸಿಕೊಂಡು ಹೋಗಲು ಮುಖ್ಯ ಕಳ್ಳದಾರಿಗಳಿವು. ಏಷಿಯಾದ ಒಬ್ಬೊಬ್ಬ ಯುದ್ಧಪೀಡಿತನಿಗೂ ಈ ಊರುಗಳು ಬಾಯಿಪಾಠವಾಗಿ ಹೋಗಿವೆ. ಒಂಥರಾ ಡ್ರೀಮ್ ಡೆಸ್ಟಿನೇಶನ್ ಅಂತಾರಲ್ಲ ಹಾಗೆ. ಈ ಊರುಗಳಿಗೆ ತಲುಪಿಬಿಟ್ಟರೆ ನಮ್ಮ ಜೀವನ ದಡ ತಲುಪುತ್ತದೆ ಎನ್ನುವ ನಂಬಿಕೆ ಎಲ್ಲರದು. ನಿಮ್ಮ ದೇಶದ ಭ್ರಷ್ಟಾಚಾರ, ಯುದ್ಧ ಪೀಡಿತರಿಗೆ ವರದಾನ. ಭ್ರಷ್ಠ ಅಧಿಕಾರಿಗಳಿರದಿದ್ದರೆ ನಮ್ಮಂತಹ ಜನರನ್ನು ಕಳ್ಳಸಾಗಣೆಯಿಂದ ದೇಶದಿಂದ ದೇಶಕ್ಕೆ ಸಾಗಿಸಲು ಸಾಧ್ಯವಾದರೂ ಉಂಟೇ? ಅದೂ ಪ್ರತಿದಿನ ಸಾವಿರ ಜನಗಳ ಲೆಕ್ಕದಲ್ಲಿ?” + +ನಾನು ಮಾನವ ಕಳ್ಳಸಾಗಾಣಿಕೆಯ ಬಗ್ಗೆ ಅಲ್ಲಿಲ್ಲಿ ಕೇಳಿದ್ದೆನಾದರೂ ಇವನು ಆ ಸುದ್ದಿಗೆ ಹೊಸ ಆಯಾಮವನ್ನೇ ಕೊಟ್ಟಂತಿತ್ತು. ಕಿವಿಯಿಟ್ಟು ಕೇಳಿ ಮತ್ತೆ ಅರ್ಥಮಾಡಿಕೊಳ್ಳಲು ಯತ್ನಿಸಿದೆ. ಅಷ್ಟರಲ್ಲಿ ಪಿಝಾದ ಹುಡುಗ ಬಂದು ನಮ್ಮೆದುರಿಗೆ ಪಿಝಾ ಇಟ್ಟು ಒಂದು ಮುಗುಳುನಗೆ ಕೊಟ್ಟು ಹೊರಟುಹೋದ. ಪಿಝಾವನ್ನು ಬಿಡುಗಣ್ಣಿನಿಂದ ನೋಡಿದ ಅವನು ಜೊಲ್ಲು ನುಂಗಿಕೊಳ್ಳುತ್ತಾ,“ಮೊದಲ ಬಾರಿಗೆ ಇಂಡಿಯನ್ನನೊಬ್ಬನಿಂದ ನನಗೆ ಉಪಕಾರವಾಗಿದೆ, ಇಲ್ಲವಾದರೆ ನೀವು ನಮ್ಮಂತಹ ದೇಶಗಳಿಗೆ ಕೊಟ್ಟಿರುವ ಕಾಟ ಅಷ್ಟಿಷ್ಟಲ್ಲ.” ಅಂದ. + +“ನಿನಗೆ ನಮ್ಮ ದೇಶದ ಬಗ್ಗೆ ಬಹಳವೇ ದೂರುಗಳು ಇದ್ದಂತಿವೆ” ಅಂದೆ. + +“ಇಲ್ಲ. ನನಗೆ ದೇಶದ ಬಗ್ಗೆ ದೂರುಗಳಿಲ್ಲ. ನನಗೆ ಬಡತನಗಳ ಬಗ್ಗೆ ದೂರುಗಳಿವೆ. ಬಡದೇಶದ ಜನಗಳು ಅಡಕತ್ತರಿಯಲ್ಲಿ ಸಿಕ್ಕಿಕೊಂಡದ್ದನ್ನು ಬಳಸಿಕೊಳ್ಳುವ ಸಿರಿವಂತ ದೇಶಗಳ ಕ್ರೌರ್ಯದ ಬಗ್ಗೆ ದೂರುಗಳಿವೆ. ನಮ್ಮನ್ನು ಕಳ್ಳ ಸಾಗಣೆ ಮಾಡುವವರೂ ನಿಮ್ಮ ದೇಶದ ಬಡಜನರೇ! ದೊಡ್ಡ ಮೀನು ಸಣ್ಣ ಮೀನನ್ನು ತಿನ್ನುತ್ತದೆ.” + +“ಸರಿ. ನೀನಾರು? ಹೀಗೇಕೆ ನಿರ್ಗತಿಕನಂತೆ ಓಡಾಡುತ್ತಿದ್ದೀಯಾ? ಎಲ್ಲಿಂದ ಬಂದಿರುವೆ?” + +ಆತ ನನ್ನ ಪ್ರಶ್ನೆಗಳಿಗೆ ಉತ್ತರಿಸಲು ಯಾವ ಅವಸರವನ್ನೂ ತೋರದೇ ನಿಧಾನಕ್ಕೆ ಬಾಯಲ್ಲಿದ್ದ ಪಿಝಾವನ್ನು ನಾಲಗೆ ಮತ್ತು ಹಲ್ಲುಗಳ ನಡುವೆ ಹೊಯ್ದಾಡಿಸುತ್ತಾ ಚೀಝ್ ಮತ್ತು ಹಂದಿ ಮಾಂಸಗಳ ರಸ ಮಿಶ್ರಣ ನಿಧಾನಕ್ಕೆ ಗಂಟಲಿನ ಮೂಲಕ ಇಳಿಸುತ್ತಾ ಪಾಕಸ್ವರ್ಗ ವನ್ನು ಅನುಭವಿಸುವುದನ್ನು ಮುಗಿಸಿ ಮಾತನಾಡತೊಡಗಿದ. + +“ನಾನು ಮಗೆಂದ್ರನ್. ಶ್ರೀಲಂಕಾದ ಜಾಫ್ನಾ ಭಾಗದಲ್ಲಿರುವ ಒಂದು ಸಣ್ಣ ಹಳ್ಳಿ ನನ್ನೂರು.” ಅಂತ ಹೇಳಿ ತನ್ನ ಜೇಬಿನಿಂದ ಮಡಚಿ ಮುದ್ದೆಯಾಗಿದ್ದ ಸುದ್ದಿಹಾಳೆಯ ತುಣುಕೊಂದನ್ನು ನನ್ನ ಕೈಗಿಟ್ಟ. ತೆರೆದು ನೋಡಿದೆ. ಅದು ಒಂದು ಸ್ಥಳೀಯ ಸೆನೆಟರ್ ಒಬ್ಬನ ಲೇಖನ. ಲೇಖನದ ಸಾರಾಂಶ “ಶ್ರೀಲಂಕಾದಲ್ಲಿ ಯುದ್ಧ ಮುಗಿದಿದೆ. ಆದರೂ ತಮಿಳು ಜನರನ್ನು ರಫ್ಯೂಜಿಗಳೆಂದು ಪರಿಗಣಿಸಿ ಒಳಬರಮಾಡಿಕೊಳ್ಳಲಾಗುತ್ತಿದೆ. ಇದನ್ನು ತಕ್ಷಣವೇ ನಿಲ್ಲಿಸಬೇಕು. ಇಲ್ಲದಿದ್ದಲ್ಲಿ ಇದು ನಮ್ಮ ಆರ್ಥಿಕತೆಗೆ ಹೊರೆಯಾಗುವುದು” ಅಂತ ಇತ್ತು. + +ಆತ ನಿರ್ಲಿಪ್ತ ಮುದ್ರೆಯಲ್ಲಿ ಟಿಶ್ಯೂ ಪೇಪರ್ ನಿಂದ ತನ್ನ ತುಟಿಗಳನ್ನು ಒರೆಸಿಕೊಂಡ. ಸೀದಾ ನನ್ನ ಕಣ್ಣುಗಳಲ್ಲಿ ತನ್ನ ಒಣಗಿಹೋದ ಕಣ್ಣುಗಳನ್ನು ನೆಟ್ಟ. ಆತನ ಕಣ್ಣು ಎಷ್ಟು ಒಣಗಿ ಹೋಗಿತ್ತೆಂದರೆ ಅವನಿಗೆದುರಾಗಿ ಕುಳಿತಿದ್ದ ನನ್ನ ಬಿಂಬ, ಪಕ್ಕದಲ್ಲಿದ್ದ ಕಿಟಕಿಯ ಬಿಂಬ, ನನ್ನ ಹಿಂದೆ ಹಿಂದೆ ಇದ್ದ ಬಾಗಿಲ ಬಿಂಬ ಯಾವುದೂ ಕಾಣುತ್ತಿರಲಿಲ್ಲ. ನಾನು ಆತನಿಂದ ಯಾವುದಾದರೂ ಮಾತು ಬರುತ್ತದೇನೋ ಅಂತ ಕಿವಿಗಳನ್ನು ಆತನ ಕಡೆಗೆ ನಿಮಿರಿಸಿ ಕೂತೆ. + +ಇಡಿ ಜಗತ್ತಿನ ಸಾವಧಾನವೇ ಆತನಲ್ಲಿ ಮೈವೆತ್ತಂತೆ ಆತ ಮುಂದಿನ ಮಾತುಕತೆಗೆ ಅವಸರವನ್ನೇ ತೋರಲಿಲ್ಲ. ನಿಧಾನಕ್ಕೆ ಹೇಳತೊಡಗಿದ, + +“ಶ್ರೀಲಂಕಾದಲ್ಲಿ ತಮಿಳು ಮತ್ತು ಸಿಂಗಳೀಯರ ನಡುವಿನ ಆಂತರಿಕ ಯುದ್ಧ ಹತ್ತು ವರ್ಷಗಳ ಹಿಂದೆಯೇ ಮುಗಿದುಹೋಗಿತ್ತು. ಆದರೆ ನಮ್ಮ ತಮಿಳರ ಗೋಳು ಅಷ್ಟು ಸುಲಭಕ್ಕೆ ಮುಗಿಯಲಿಲ್ಲ. ನಾನು ಅಲ್ಲಿ ಸರಕಾರಿ ಶಾಲೆಯಲ್ಲಿ ಶಿಕ್ಷಕನಾಗಿದ್ದೆ. ನನ್ನ ಹೆಂಡತಿ ಮನೆ ನೋಡಿಕೊಳ್ಳುತ್ತಿದ್ದಳು. ಯುದ್ಧ ಮುಗಿಯುವ ಎರಡು ವರ್ಷ ಮುಂಚೆ ನನ್ನ ಮದುವೆಯಾಯಿತು. ಒಂದು ವರ್ಷಕ್ಕೆ ಒಂದು ಗಂಡುಮಗು. ಯುದ್ಧ ಮುಗಿದಾಗ ನನ್ನ ಮಗನಿಗೆ ಒಂದು ವರ್ಷ. ಪ್ರಭಾಕರನ್ ಸತ್ತ. ನೂರಾರು ಜನ ನಮ್ಮ ಸುತ್ತಮುತ್ತಲಿನ ಊರವರು ಸತ್ತರು. ಅನೇಕರನ್ನು ಊರೂರುಗಳಲ್ಲಿ ಅಟ್ಟಾಡಿಸಿಕೊಂಡು ಕೊಲೆ ಮಾಡಲಾಯಿತು. ಮತ್ತೆ ದಂಗೆಗಳು ಶುರುವಾಗಬಾರದು ಅಂತ ಶ್ರೀಲಂಕಾ ಸರಕಾರ ಕೆಲವು ಕ್ರಮಗಳನ್ನು ಕೈಗೊಂಡಿತು. ವಾರದಲ್ಲಿ ಎರಡು ದಿನ ಇದ್ದಕ್ಕಿದ್ದಂತೆ ಬೆಳಿಗೆ ಆರು ಗಂಟೆಗೆ ಸೈನಿಕರು ತಮ್ಮ ಸೈನಿಕ ಲಾರಿಗಳಲ್ಲಿ ಭಯಂಕರವಾದ ಹಾರ್ನ್ ಮಾಡುತ್ತಾ ಬಂದು ನಮ್ಮ ಹಳ್ಳಿಗಳನ್ನು ಸುತ್ತುವರಿಯುವರು. ಎಲ್ಲಾ ಜನರನ್ನು ಹೊರ ಬರುವಂತೆ ಕರೆಯುವರು. ಬಂದವರನ್ನು ಗಂಡಸರು, ಹೆಂಗಸರು, ಮುದುಕರು, ಮಕ್ಕಳು ಅಂತ ಬೇರೆ ಬೇರೆ ಭಾಗಗಳಾಗಿ ವಿಂಗಡಿಸುವರು. ನಂತರ ನಮ್ಮಂತಹ ಕಿರಿವಯಸ್ಸಿನ ಗಂಡಸರಿಗೆ ಲಾರಿಗಳ ಅಕ್ಕಪಕ್ಕದಲ್ಲಿ ರಸ್ತೆಗುಂಟ ನಡೆಯಲು ಹೇಳುವರು. ಹೀಗೆ ಬೇರೆ ಬೇರೆ ಊರಿನಿಂದ ಬಂದವರನ್ನೆಲ್ಲ ಊರಾಚೆಗೆ ಕರೆದುಕೊಂಡು ಹೋಗುವರು. + +ದಾರಿಯುದ್ದಕ್ಕೂ ಸಾಕಷ್ಟು ಆಯುಧಗಳನ್ನು ಹೇರಿಕೊಂಡಿದ್ದ ಮಿಲಿಟರಿ ಟ್ರಕ್ಕುಗಳು, ನಮ್ಮ ಕಿವಿಗಳೆಲ್ಲ ಕಿತ್ತುಹೋಗುವಂತೆ ಹಾರ್ನ್ ಮಾಡುತ್ತಿದ್ದರು. ನಂತರ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ, ಕೆಲವರಿಗೆ ಕೈಕೋಳ ತೊಡಿಸಿ ತಲೆಗೆ ಮುಸುಕು ಹಾಕಿ ಲಾರಿಯೊಳಗೆ ತುಂಬಿಕೊಂಡು ಕರೆದುಕೊಂಡು ಹೋಗುತ್ತಿದ್ದರು. ಪ್ರತಿ ವಾರ ಕನಿಷ್ಟ ಒಮ್ಮೆ ಅಥವಾ ಎರಡು ಬಾರಿ ಇದು ನಡೆಯುತ್ತಿತ್ತು. ವಾರಕ್ಕೆ ಹತ್ತರಿಂದ ಇಪ್ಪತ್ತು ಜನರನ್ನು ಈ ರೀತಿ ಒಯ್ಯುತ್ತಿದ್ದರು. ಹೀಗೆ ಲಾರಿಯೊಳಗೆ ಹೋದವರಲ್ಲಿ ಕೆಲವರು ಕೊಲೆಯಾದರು, ಕೆಲವರು ಚಿತ್ರಹಿಂಸೆಗೊಳಗಾದರು ಕೆಲವರು ಕಾಣೆಯಾದರು. ಹೀಗೆ ಲಾರಿಯಲ್ಲಿ ಒಯ್ಯಲ್ಪಟ್ಟವರ ಸಂಬಂಧಿಕರು ಪೋಲೀಸರಲ್ಲಿ ವಿಚಾರಿಸಿದರೆ, ಇದರ ಬಗ್ಗೆ ಆರ್ಮಿಯನ್ನು ಕೇಳಿ ಎನ್ನುವರು, ಆರ್ಮಿಯವರನ್ನು ಕೇಳಿದರೆ ಅವರು ಇದು ನಮ್ಮ ಕೆಲಸವಲ್ಲ ನೌಕಾದಳವನ್ನು ಕೇಳಿ ಎನ್ನುವರು, ನೌಕಾದಳದವರ ಬಳಿ ವಿಚಾರಿಸಿದರೆ ಅವರು ಪೋಲೀಸರೆಡೆಗೆ ಬೊಟ್ಟುಮಾಡುವರು. + +ಹೀಗೆ ದಿನಗಳೆದಂತೆ ಊರಲ್ಲಿ ಗಂಡಸರ ಸಂಖ್ಯೆ ಕಡಿಮೆಯಾಗುತ್ತಾ ಬಂದಂತೆ ನನ್ನ ಹೆಂಡತಿಗೆ ದಿಗಿಲು ಹತ್ತಲು ಶುರುವಾಯಿತು. ಅದೃಷ್ಟವಶಾತ್ ಇಷ್ಟು ದಿನಗಳವರೆಗೆ ನನ್ನನ್ನು ಕರೆದೊಯ್ದಿರಲಿಲ್ಲ. ಆದರೆ ಯಾವ ಭೇಟಿಯಲ್ಲಾದರೂ ನನ್ನನ್ನು ಕರೆದೊಯ್ಯುವ ಸಾಧ್ಯತೆಯಿತ್ತು. ನಾವು ರಾತ್ರೋ ರಾತ್ರಿ ಒಂದು ನೀರಿನ ಬಾಟಲಿ, ಮಗುವಿಗೆ ಒಂದೆರಡು ಹಾಲಿನ ಬಾಟಲಿ ತೆಗೆದುಕೊಂಡು ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಬೈಕ್ ಮೇಲೆ ಊರು ಬಿಟ್ಟೆವು. ಸೀದಾ ನನ್ನ ಹೆಂಡತಿಯ ಊರಿಗೆ ಬಂದು ತಂಗಿದೆವು. ಕೆಲದಿನಗಳ ಮಟ್ಟಿಗೆ ಅಲ್ಲಿ ಸುರಕ್ಷಿತವಾಗಿಯೇನೋ ಇದ್ದೆವು. ಆದರೆ ಅಲ್ಲಿಯೂ ಪೋಲೀಸರು ಬಂದು ಕಿರುಕುಳ ನೀಡತೊಡಗಿದರು. ಯುದ್ಧ ಮುಗಿದಿದ್ದರಿಂದ ವಾಪಸು ಊರಿಗೆ ಹೋಗಬೇಕೆಂದು ತಾಕೀತು ಮಾಡತೊಡಗಿದರು. ಪ್ರತಿದಿನ ಬೆಳಿಗ್ಗೆ ನಾನು ಹತ್ತಿರದ ಠಾಣೆಗೆ ಹೋಗಿ ಸಹಿ ಹಾಕಬೇಕಿತ್ತು. ಯಾವುದೇ ಕ್ಷಣದಲ್ಲಾದರೂ ಅವರು ಮತ್ತೆ ನಮ್ಮನ್ನು ಊರಿಗೆ ದಬ್ಬಿಬಿಡುವ ಸಾಧ್ಯತೆಯಿತ್ತು. ಎಲ್ಲೂ ನನಗೆ ಸುರಕ್ಷತೆಯಿರಲಿಲ್ಲ. ಜೀವಭಯದಲ್ಲೇ ದಿನಗಳನ್ನು ಕಳೆಯಬೇಕಾಗಿತ್ತು.” + +ನನಗೆ ಕುತೂಹಲ ತಡೆಯಲಾಗಲಿಲ್ಲ. “ಮುಂದೆ?” ಅಂತ ಕೇಳಿದೆ. + +ಆತ ಎಂದಿನಂತೆ ಹೆಚ್ಚಿನ ಅವಸರವನ್ನೇನೂ ತೋರಲಿಲ್ಲ. ಆತ ಎರಡನೆಯ ತುಂಡು ಪಿಝಾವನ್ನು ಎತ್ತಿ ಬಾಯಲ್ಲಿಟ್ಟು ಅದು ನಿಧಾನವಾಗಿ ಆತನ ಹಲ್ಲಿನ ಸಾಲುಗಳ ನಡುವೆ ನುಜ್ಜುಗುಜ್ಜಾಗಿ, ಕಣಕಣವೆಲ್ಲ ನಾಲಗೆಯ ಮೇಲೆಲ್ಲ ಹರಿದಾಡಿ ನಿಧಾನಕ್ಕೆ ಗಂಟಲಿನ ಇಳಿಜಾರಿನಲ್ಲಿ ಕಾಣೆಯಾಗುವವರೆಗೂ ನಾನು ಕಾಯಬೇಕಾಯಿತು. + +“ಆ ಊರಲ್ಲಿ ಬೇರೆ ದೇಶಕ್ಕೆ ನಮ್ಮನ್ನು ರವಾನೆ ಮಾಡುವ ಏಜೆಂಟ್ ಒಬ್ಬನನ್ನು ಸಂಪರ್ಕಿಸಿದೆ. ಆತ ಹದಿನೈದು ಸಾವಿರ ಡಾಲರುಗಳಾಗುತ್ತವೆ ಎಂದ. ಹದಿನೈದು ಸಾವಿರ ಡಾಲರುಗಳೆಂದರೆ ನಮ್ಮಲ್ಲಿ ಮಧ್ಯಮವರ್ಗದವನ ಜೀವಮಾನದ ಗಳಿಕೆ. ನನ್ನ ಹೆಂಡತಿಯ ಬಂಗಾರವನ್ನು ಅಡವಿಟ್ಟು ಒಂದಷ್ಟು ಜಮೀನನ್ನು ಮಾರಿ ಅಷ್ಟು ಹಣ ಹೊಂದಿಸಿದ್ದಾಯಿತು. ಆತ ನನಗೆ ಸಿಂಗಾಪೂರಿನ ವೀಸಾ ಕೊಡಿಸಿದ. ಅಲ್ಲಿಂದ ಮುಂದೆ ಹೇಗೆ ಹೋಗಬೇಕು ಎಲ್ಲಿ ಹೋಗಬೇಕು ಅಂಬುದರ ವಿವರ ಕೊಟ್ಟ. ಕೊಲಂಬೊದಿಂದ ಸಿಂಗಪೂರಿಗೆ ವಿಮಾನದಲ್ಲಿ ಪ್ರಯಾಣಿಸಬೇಕು. ನನ್ನನ್ನು ಕಳಿಸಲು ಬಂದ ಹೆಂಡತಿಯ ಕಣ್ಣುಗಳು ಕೋಡಿಬಿದ್ದ ಕೆರೆಗಳ ಪಾತ್ರಗಳಾಗಿವೆ. ಆಕೆಯ ಅಳು ನಿಲ್ಲಲೊಲ್ಲದು. ನನ್ನ ಮಗನಿಗೆ ಇದೆಲ್ಲ ಗೊತ್ತಾಗದು. ಅಪ್ಪ ಎಲ್ಲೋ ಹೊರಗೆ ಹೋಗುತ್ತಿದ್ದಾನೆ, ನನ್ನನ್ನೂ ಕರೆದುಕೊಂಡು ಹೋಗು ಎಂಬುದಷ್ಟೇ ಆತನ ಬೇಡಿಕೆ. ಕಾಲ ಅದೆಷ್ಟ ಕ್ರೂರ ಅಂದರೆ ಅದು ನನಗಾಗಿ ಒಂದು ಕ್ಷಣವೂ ಹೆಪ್ಪುಗಟ್ಟಲು ಸಿದ್ಧವಿರಲಿಲ್ಲ. ದೊಡ್ಡ ದೇಶಕ್ಕೆ ಹೋಗುತ್ತೇನೆ ಅಲ್ಲಿ ನೆಲೆ ನಿಲ್ಲುತ್ತೇನೆ ನಿಮ್ಮನ್ನು ಕರೆಸಿಕೊಳ್ಳುತ್ತೇನೆ ಅಂತ ಪದೇ ಪದೇ ಹೇಳಿದೆ. ಚೆಕಿನ್ ಡೆಸ್ಕಿಗೆ ಬರುವವರೆಗೂ ಅವರನ್ನೇ ನೋಡುತ್ತಲಿದ್ದೆ. ಅವರನ್ನು ನಾನು ನೋಡುವುದು ಅದೇ ಕಡೆಯ ಬಾರಿ ಅಂತ ನನಗೆ ಆಗ ಗೊತ್ತಿರಲಿಲ್ಲ. + +ಸಿಂಗಾಪೂರದಿಂದ ಒಂದು ಕಾರು ಬಾಡಿಗೆ ಪಡೆದು ಮಲೇಶಿಯಾಗೆ ಬಸ್ ನಲ್ಲಿ ಹೋದೆ. ಮಲೆಶಿಯಾದಲ್ಲಿ ನಮ್ಮ ಏಜೆಂಟ್ ಹೇಳಿದ ಮನುಷ್ಯ ಸಿಕ್ಕಿದ. ಕರಾವಳಿಯ ಊರೊಂದರ ಜೆಟ್ಟಿಯಲ್ಲಿ ಒಂದು ಹಿರಿದಾದ ದೋಣಿಗೆ ಹತ್ತಿಸಿದ. ತನ್ನ ಕಡೆಯ ದಿನಗಳನ್ನು ಎಣಿಸುತ್ತಿದ್ದ ಮುದಿ ದೋಣಿಯದು. ಒಂದು ಕಾಲದಲ್ಲಿ ಸರಕು ಸಾಗಣೆ ಮಾಡುತ್ತಿತ್ತೆಂದು ತೋರುತ್ತದೆ. ವಸ್ತುಗಳನ್ನಿಡುವ ಕಪಾಟುಗಳೇ ನಮಗೆ ಹಾಸಿಗೆಗಳಾಗಿದ್ದವು. ದೋಣಿಯಲ್ಲಿ ನನ್ನಂತೆ ಬೇರೆಬೇರೆಡೆಯಿಂದ ಬಂದ ಸುಮಾರು ಇನ್ನೂರು ಜನರಿದ್ದೆವು. ನಾಲ್ಕೈದು ದಿನಗಳ ಪ್ರಯಾಣದ ನಂತರ ನಮ್ಮ ದೋಣಿಯ ಇಂಜಿನ್ ಕೆಟ್ಟು ನಿಂತಿತು. ರಿಪೇರಿ ಮಾಡುವ ತಜ್ಞರಾರೂ ಇರಲಿಲ್ಲ. ಒಂದಿಡೀ ಮಹಾಸಾಗರವನ್ನು ಅಂತಹ ಶಿಥಿಲ ದೋಣಿಯಲ್ಲಿ ಯಾವುದೇ ಸಮಯದಲ್ಲಾದರೂ ಮರಿದು ಬೀಳಬಹುದಾದ ತುಕ್ಕು ಹಿಡಿದ ಇಂಜಿನ್ ನೊಂದಿಗೆ ದಾಟುವ ಆ ಹುಂಬತನವನ್ನು ಜೀವನದ ಅನಿವಾರ್ಯತೆ ಎನ್ನಬೇಕೊ ಅಥವಾ ಅತಿಯಾದ ಆತ್ಮವಿಶ್ವಾಸ ಎನ್ನಬೇಕೊ! ಚಿಲ್ಲರೆ ಕಾಸಿಗೆ ಆ ದೋಣಿಯನ್ನು ನಡೆಸುವ ಬಡಜನರೂ ನಮ್ಮಷ್ಟೇ ತಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿರುತ್ತಾರೆ. ಆದರೆ ನಮಗೆ ಸಿಗುವ ಸಹಾನುಭೂತಿ ಅವರಿಗೆ ಸಿಗುವುದಿಲ್ಲ. ಯಾಕೆಂದರೆ ನಾವು ರಫ್ಯೂಜಿಗಳು ಮತ್ತು ಅವರು ನಮ್ಮನ್ನು ಸಾಗಿಸಿದ ಮಾನವ ಕಳ್ಳಸಾಗಣಿಕೆ ಗುಂಪಿನ ಸದಸ್ಯರು! + +ಹೀಗೆ ಕೆಟ್ಟು ನಿಂತ ನಮ್ಮ ದೋಣಿ ಸುಮಾರು ಇಪ್ಪತ್ತು ದಿನಗಳು ವಿಶಾಲ ಸಾಗರದಲ್ಲಿ ದಿಕ್ಕಿಲ್ಲದೆ ಜಾತ್ರೆಯಲ್ಲಿ ಕಳೆದುಹೋದ ಮಗುವಿನಂತೆ ಅನಾಥವಾಗಿ ನಿಂತಿತ್ತು. ಅದೃಷ್ಟವಷಾತ್ ಸಾಗರದ ತೆರೆಗಳು ಗಾಳಿ ಪ್ರವಾಹಗಳು ನಮ್ಮ ದೋಣಿಯನ್ನು ಇಂಡೋನೇಷಿಯಾದ ಯಾವುದೋ ಊರಿನ ದಡವೊಂದಕ್ಕೆ ತೇಲಿಸಿಕೊಂಡು ಬಂದು ಸೇರಿಸಿದ್ದವು. ಈ ಕಳ್ಳಸಾಗಣೆದಾರರ ಸಂಪರ್ಕಜಾಲ ಎಷ್ಟು ಬಲವಾಗಿರುತ್ತದೆ ಎಂಬುದು ಅಂದೇ ನನಗೆ ಗೊತ್ತಾಗಿದ್ದು! + +ಇಂಡೋನೇಷಿಯಾದಲ್ಲಿ ಮತ್ತೊಬ್ಬ ಈ ಸಾಗಣಿಕೆ ಜಾಲದ ಮನುಷ್ಯ ನಮ್ಮನ್ನು ಮತ್ತೊಂದು ದೋಣಿಯೊಳಗೆ ಸೇರಿಸಿದ. ಈ ದೋಣಿಯೊಳಗೆ ನಾವು ಇನ್ನೂರು ಜನ ಸೇರಿಸಿ ಒಟ್ಟು ಐನೂರು ಜನರಾದರೂ ಇದ್ದರು ಎನ್ನಬಹುದು. ನಿಜ ಎಂದರೆ ಆ ಹಡಗಿನ ಸಾಮರ್ಥ್ಯ ಹೆಚ್ಚೆಂದರೆ ನೂರೈವತ್ತು ಜನರನ್ನು ಹಿಡಿಸುವಷ್ಟಿರಬಹುದು. ಸಾಲದೆಂಬಂತೆ ಈ ಹಡಗೂ ತುಕ್ಕು ಹಿಡಿದು ತನ್ನ ಮೈಯಲ್ಲಿ ಅನೇಕ ಕಡೆ ಬಿಲಗಳನ್ನು ಕೊರೆದುಕೊಂಡಿತ್ತು. ನಮಗೆ ಆ ಹಡಗಲ್ಲಿ ಕೂರಲು ಹೆದರಿಕೆಯಾಯಿತಾದರೂ ಬೇರೆ ದಾರಿ ಇರಲಿಲ್ಲ. ವಾಪಸು ಹೋಗುವಂತಿರಲಿಲ್ಲ. + +ಸುಮಾರು ಒಂದು ತಿಂಗಳು ಪಯಣಿಸಿದೆವು. ನಮ್ಮಲ್ಲಿ ಸಾಕಷ್ಟು ಆಹಾರ ನೀರು ಇರಲಿಲ್ಲ. ದಿನಕ್ಕೊಂದು ಹೊತ್ತು ಲೆಕ್ಕ ಹಾಕಿ ಊಟ ಮಾಡುತ್ತಿದ್ದೆವು. ಲೆಕ್ಕ ಹಾಕಿ ನೀರು ಕುಡಿಯುತ್ತಿದ್ದೆವು. ಎರಡು ಮೂರು ದಿನಕ್ಕೊಬ್ಬರು ಸಾಯುತ್ತಿದ್ದರು. ಸತ್ತವರನ್ನು ಸಮುದ್ರಕ್ಕೆ ಎಸೆಯುತ್ತಿದ್ದರು. ಒಮ್ಮೊಮ್ಮೆ ನಮ್ಮ ಕಣ್ಣೆದುರಿಗೇ ಮೀನುಗಳು ಹೆಣಗಳನ್ನು ಎಳೆದುಕೊಂಡು ಹೋಗುತ್ತಿದ್ದವು. ಎಲ್ಲಿ ಹುಟ್ಟಿದ್ದರೋ ಹೇಗೆ ಬದುಕಿದರೋ, ಅದೆಂತಹ ವೈಭವಗಳನ್ನು ಕಂಡಿದ್ದರೋ, ಅವರ ಸಾವು ಮಾತ್ರ ಘೋರವಾಗಿತ್ತು! ಕನಿಷ್ಟ ಸಂಸ್ಕಾರವೂ ಇಲ್ಲದಂತೆ ವಿಲೇವಾರಿಯಾದ ಕಳೇಬರಗಳ ಬಗ್ಗೆ ಇನ್ನೊಂದು ಜೀವಕ್ಕೆ ಆಹಾರ ಒದಗಿಸಿದ ತೃಪ್ತಿಯೊಂದೇ ದಕ್ಕುತ್ತಿದ್ದುದು. ಇದರ ನಡುವೆ ಓವರ್ ಲೋಡ್ ಆಗಿದ್ದ ನಮ್ಮ ದೋಣಿಯ ಭಾರ ಕೊಂಚ ಕಡಿಮೆಯಾಯಿತು ಅಂತ ಸಂತೋಷಪಡುವವರೂ ಇದ್ದರು! ಬಹುಷಃ ಇದು ತಾನು ಸಾಯದಿರಲು ಮತ್ತೊಂದು ಪ್ರಾಣಿಯನ್ನು ಕೊಂದು ತಿನ್ನುವ ಬೇಟೆಗಾರ ಪ್ರಾಣಿಗಳ ಪ್ರಾಕೃತಿಕ ಕ್ರೌರ್ಯದ ಮನುಷ್ಯ ರೂಪ ಇರಬಹುದು. + +ಆಸ್ಟ್ರೇಲಿಯಾ ಮುಟ್ಟಲು ಇನ್ನೇನು ಒಂದೆರಡು ನೂರು ನಾಟಿಕಲ್ ಮೈಲಿಗಳಿವೆ ಅಂದಾಗ ನಮ್ಮ ಹಡಗಿನ ನೀರನ್ನು ಹೊರಹಾಕುವ ಪಂಪು ಕೆಟ್ಟು ಹೊಯಿತು. ಹಡಗಿನಲ್ಲಿ ನೀರು ಹೊರಹಾಕಲು ನಾವೇ ಮುಂದಾದೆವು. ಏಳು ತಂಡಗಳನ್ನಾಗಿ ವಿಂಗಡಿಸಿಕೊಂಡು ಹಗಲು ರಾತ್ರಿ ಎನ್ನದೇ ಸರದಿಯಂತೆ ನೀರನ್ನು ಬಕೆಟ್ ಮೂಲಕ ಎತ್ತಿ ನೀರನ್ನು ಹೊರಗೆ ಚೆಲ್ಲುತ್ತಿದ್ದೆವು. ಹಸಿವು ನೀರಡಿಕೆ ದುಡಿತದ ದಣಿವುಗಳು ಸಾವಿನ ಹೆದರಿಕೆಯ ಮುಂದೆ ಬಾಲ ಮುದುರಿಕೊಂಡು ಮೂಲೆ ಸೇರಿದ್ದವು. + +ಈ ದುಡಿತದ ನಡುವೆ ನಡೆದ ವಿಶಾಲ ಸಾಗರದ ನಡುವೆ ಪ್ರಯಾಣ ಸಾಗುತ್ತಿತ್ತು. ಸುತ್ತಲಿನ ಕಡಲು ನಮ್ಮನ್ನು ನುಂಗಲಿರುವ ಸಾವಿನಂತೆ ಭಾಸವಾದರೆ, ನಮ್ಮ ದೋಣಿ ತಿಣುಕುತ್ತಿರುವ ಬದುಕಿನಂತೆ ಭಾಸವಾಗುತ್ತಿತ್ತು. ಅಷ್ಟಕ್ಕೂ ಬದುಕು ಎಂದರೇನು? ಅಪರಿಮಿತ ಶೂನ್ಯದ ನಡುವೆ ಒಮ್ಮೆ ಹೊಳೆದು ಮಾಯವಾಗುವ ಸಣ್ಣ ಕಂಪನ ತಾನೆ? ಬಹುಷಃ ನಮಗೆ ಅರ್ಥವಾದ ಬದುಕಿನ ಈ ಒಳಗುಟ್ಟು ಜಗತ್ತಿನ ಯಾವ ಸಾಧು ಸನ್ಯಾಸಿ ತಪಸ್ವಿಗೂ ಅರ್ಥವಾಗಿರಲಿಕ್ಕಿಲ್ಲ! ಒಂದು ದಿನ ನಮಗೆ ಕ್ರಿಶ್ಚಿಯನ್ ಐಲ್ಯಾಂಡಿನ ನೆಲ ಕಾಣಿಸುತ್ತಿತ್ತು. ನಮ್ಮ ದೋಣಿಯವರು ಅದೇ ಆಸ್ಟ್ರೇಲಿಯಾದ ನೆಲ ಅಂತ ತೋರಿಸಿದರು. ನಮ್ಮ ಕನಸಿನ ನೆಲ ನಮ್ಮ ಕಣ್ಣೆದುರಿಗೇ ಇತ್ತು! ಆದರೆ ತಕ್ಷಣ ಹೋಗುವಂತಿರಲಿಲ್ಲ. ಒಂದೆರಡು ಮಿಲಿಟರಿ ಹಡಗುಗಳು ಲಂಗರು ಹಾಕಿದ್ದವು. ಅವುಗಳ ಕಣ್ಣು ತಪ್ಪಿಸಿ ನಾವುಗಳು ನೆಲದ ಮೇಲೆ ಕಾಲಿಡಲು ಸಾಧ್ಯವೇ ಇರಲಿಲ್ಲ. ಅವುಗಳು ಚೆದುರಿ ಹೋಗುವವರೆಗೆ ಕಾಯಬೇಕು. ಅವು ಚದುರಿ ಹೋಗಲು ಒಂದೆರಡು ದಿನಗಳಾಗಬಹುದು, ವಾರಗಳಾಗಬಹುದು ಅಥವಾ ತಿಂಗಳುಗಳೇ ಆಗಬಹುದು. ನಮಗೆ ಕ್ಷಣಗಳೂ ಭಾರವಾಗತೊಡಗಿದ್ದವು. ಇದರ ನಡುವೆಯೇ ಸತತವಾಗಿ ನಾವು ನೀರನ್ನು ಹೊರಹಾಕುತ್ತಿದ್ದೆವು. + +ಹೀಗೆ ಕಾಯುತ್ತಿದ್ದ ಮೂರನೆ ದಿನ ನಮ್ಮ ದೋಣಿ ತಳ ಮುರಿದು ಮುಳುಗತೊಡಗಿತು. ನಾವು ಅಷ್ಟರೊಳಗೆ ಅಪಾಯದ ಗಂಟೆ ಮೊಳಗಿಸಿ ಸಮುದ್ರಕ್ಕೆ ಹಾರಿಕೊಂಡೆವು. ನಮ್ಮ ಕರೆಯನ್ನು ಕೇಳಿದ ಮಿಲಿಟರಿ ದೋಣಿಯೊಂದು ಬಂದು ನಮ್ಮಲ್ಲಿ ಸಾಧ್ಯವಾದವರನ್ನೆಲ್ಲ ರಕ್ಷಿಸಿತು. ಹೊರಬಂದು ಎಣಿಸಿಕೊಂಡು ನೋಡಿದಾಗ ಹನ್ನೆರಡು ಜನ ಮುಳುಗಿಹೋಗಿದ್ದಾರೆ ಅಂತ ತಿಳಿಯಿತು. ನಮ್ಮ ಹಾಗೆ ಸಾವಿರ ಸಾವಿರ ಸಂಖ್ಯೆಯಲ್ಲಿ ಬರುವ ಜನರಲ್ಲಿ ಒಂದು ಪಾಲನ್ನು ತನ್ನ ಬಲಿಯಾಗಿ ಪಡೆದುಕೊಳ್ಳುವ ಕ್ರಿಶ್ಚಿಯನ್ ದ್ವೀಪದ ಸಮುದ್ರದಂಡೆ ಒಂದು ದ್ರವರೂಪದ ಸ್ಮಶಾನ!” ಅಂತ ಹೇಳಿ ಒಮ್ಮೆ ಉಸಿರೆಳೆದುಕೊಂಡ. ಮತ್ತೆ ಅದೇ ಕುಗ್ಗಿ ಹೋದ ಕಣ್ಣುಗಳಿಂದ ನಿರ್ಲಿಪ್ತ ನೋಟವನ್ನು ನನ್ನೆಡೆಗೆ ಬೀರಿದ. + +“ನೀನು ಇಂಡಿಯನ್ ಎಂದೆ ಅಲ್ಲವಾ?” ಅಂತ ಕೇಳಿದ. + +ನಾನು ಅಹುದೆಂಬಂತೆ ತಲೆಯಾಡಿಸಿದೆ. + +“ನಮ್ಮ ಜೊತೆಗೆ ನಿಮ್ಮ ಕಡೆಯ ಗುಜರಾತಿ ಕುಟುಂಬವೊಂದು ಬಂದಿತ್ತು. ನಿಮ್ಮ ಕಡೆ ಮುಟ್ಟಿಸಿಕೊಳ್ಳಬಾರದ ಜನ ಇದ್ದಾರಂತಲ್ಲ ಆ ಜನ ಅವರು. ನಮ್ಮ ಶ್ರೀಲಂಕಾದಿಂದ ಕೆಲಸ ಹುಡುಕಿಕೊಂಡು ವಲಸೆ ಹೋಗಿದ್ದ ಕುಟುಂಬವೊಂದು ಈ ಗುಜರಾತಿ ಕುಟುಂಬದ ಜೊತೆ ಗೆಳೆತನ ಬೆಳೆಸಿಕೊಂಡಿತ್ತು. ನಾನು ಸಿಂಗಪೂರ ಕಡೆಯಿಂದ ಬಂದ ಹಾಗೆ ಕೆಲವರು ಮೀನುಗಾರಿಕೆ ದೋಣಿಯ ಮೂಲಕ ಇಂಡಿಯಾಕ್ಕೆ ಹೋಗಿ ಅಲ್ಲಿ ಪಾಂಡಿಚೆರಿ, ಚೆನೈ, ಮಂಗಳೂರು ಕಡೆಯಿಂದ ಬೇರೆ ಬೇರೆ ದೇಶಗಳಿಗೆ ದೋಣಿಗಳಲ್ಲಿ ಸಾಗುತ್ತಾರೆ. ಈ ದೋಣಿಗಳು ಪ್ರತಿದಿನ ಇರುವುದಿಲ್ಲ. ತುಂಬಲು ಸಾಕಾಗುವಷ್ಟು ಜನ ಕೂಡುವಷ್ಟು ದಿನ ದೋಣಿಗಳು ಕಾಯುತ್ತಿರುತ್ತವೆ. ಹೀಗೆ ಕಾಯುವಿಕೆ ಕೆಲವೊಮ್ಮೆ ವಾರ ತಿಂಗಳುಗಳು ಹಾಗೆಯೇ ಕಾಯುತ್ತಿರುತ್ತವೆ. ನಮ್ಮ ಕಡೆಯ ಕುಟುಂಬವೊಂದಕ್ಕೆ ದೋಣಿ ಹತ್ತಲು ಕೆಲ ದಿನಗಳು ಬಾಕಿ ಇದ್ದದ್ದರಿಂದ ಕೊಂಚ ಹಣ ಸಂಪಾದಿಸಿಬಿಡೋಣ ಅಂತ ಕೂಲಿಗೆ ಸೇರಿದ್ದಾಗ ಪರಿಚಯವಾದ ಕುಟುಂಬವದು. ಅಲ್ಲಿ ಆ ಜನರ ಮೇಲೆ ಅವರು ಬೀಫ್ ತಿನ್ನುತ್ತಾರೆ ಎನ್ನುವ ಕಾರಣಕ್ಕಾಗಿ ದಾಳಿಗಳಾಗುತ್ತಿದ್ದವಂತೆ! ಪದೇ ಪದೇ ಜೀವಕ್ಕೆ ಬೆದರಿಕೆ ಬರುತ್ತಿದ್ದವಂತೆ. ಹಾಗಾಗಿ ಅವರೂ ತಮ್ಮ ಇದ್ದ ಬದ್ದ ಹರುಕು ಮುರುಕು ಬರಡು ಜಮೀನನ್ನು ಮಾರಿಕೊಂಡು ಒಂದು ದೋಣಿಯನ್ನು ಹತ್ತಿಕೊಂಡು ಇಲ್ಲಿಯವರೆಗೂ ಬಂದಿದ್ದರು. + +ಅವರಿಗೆ ದೋಣಿಯವನೂ ಏಜೆಂಟರುಗಳೆಲ್ಲರೂ ಯಾವುದೇ ಕಾರಣಕ್ಕೂ ಹಿಂದಿಯಲ್ಲಿ ಮಾತನಾಡಬೇಡಿ ಅಂತ ಪದೇ ಪದೇ ತಾಕೀತು ಮಾಡಿದ್ದರು. ಅವರ ದುರಾದೃಷ್ಟ ನೋಡು. ನಾವೆಲ್ಲಾ ಸಾಲಾಗಿ ನಿಂತು ರಫ್ಯೂಜಿ ಸ್ಟೇಟಸ್ ಗಾಗಿ ಸಂದರ್ಶನ ನೀಡುತ್ತಿದ್ದೆವು. ಅವರಿಗೆ ಇಂಡಿಯಾ ಮೂಲದ ಅಧಿಕಾರಿಯೇ ಸಂದರ್ಶನದ ಸರದಿಯಲ್ಲಿ ಬಂದ. ಇವರ ಹರಕು ಮುರುಕು ತಮಿಳನ್ನು ನೋಡಿ ನೀವು ಇಂಡಿಯಾದಿಂದ ಬಂದಿದ್ದೀರಾ? ಏನೂ ಚಿಂತೆ ಮಾಡಬೇಡಿ ನಾನೂ ನಿಮ್ಮವನೇ! ನಿಮಗೆ ಎಲ್ಲಾ ಸಹಾಯ ಮಾಡುತ್ತೇನೆ, ಸಂಕೋಚವಿಲ್ಲದೇ ಹೇಳಿ ಅಂತ ಹಿಂದಿಯಲ್ಲಿ ಕೇಳಿದ. ಈ ಮೂರ್ಖರು ನಮ್ಮ ದೇಶದ ಬಾಂಧವ ಸಿಕ್ಕಿದ, ನಾವು ಅನಾಥರಲ್ಲ ಎಂದು ಹಿಗ್ಗಿ ಹಿಂದಿಯಲ್ಲಿ ಮಾತನಾಡಲು ಶುರುವಿಟ್ಟುಕೊಂಡರು. ಆತ ತಕ್ಷಣ ತನ್ನ ಮೇಲಾಧಿಕಾರಿಗಳನ್ನು ಕರೆಕಳಿಸಿ ಇವರನ್ನು ಹಿಡಿದುಕೊಟ್ಟ. ರೆಫ್ಯೂಜಿ ಸ್ಟೇಟಸ್ ಬೇಕೆಂದರೆ ಯುದ್ಧ ಪೀಡಿತ ಪ್ರದೇಶದಿಂದ ಬಂದಿರಬೇಕು.” + +ಮತ್ತೊಂದು ತುತ್ತು ಪಿಜ್ಜಾವನ್ನು ಬಾಯಲ್ಲಿಟ್ಟುಕೊಂಡು ನಿಧಾನವಾಗಿ ಜಗಿಯುತ್ತಾ…“ನಿಮ್ಮ ದೇಶದಲ್ಲಿ ಕಾಶ್ಮೀರ ಅಂತ ರಾಜ್ಯವಿದೆಯಂತೆ ಹೌದಾ?” ಅಂದ. + +“ಹೌದು. ಬಡಗು ತುದಿಯಲ್ಲಿದೆ” ಅಂದೆ. + +“ತಾಂತ್ರಿಕವಾಗಿ ನೋಡುವುದಾದರೆ ಅದು ಯುದ್ಧ ಪೀಡಿತ ಪ್ರದೇಶ. ಯುದ್ಧ ಪೀಡಿತ ಪ್ರದೇಶಗಳಲ್ಲಿ ಸಿಡಿಯುವಷ್ಟು ಬಾಂಬುಗಳು ಗುಂಡುಗಳು ಅಲ್ಲಿ ಸಿಡಿಯುತ್ತವೆ. ಅಷ್ಟೇ ಸೈನಿಕರೂ ಇದ್ದಾರೆ. ಆದರೆ ಆ ಪ್ರದೇಶದ ಜನರಿಗೆ ಯಾವ ದೇಶದಲ್ಲೂ ನಿರಾಶ್ರಿತ ಅಂದರೆ ರೆಫ್ಯೂಜಿ ನೆಲೆಗಳು ಸಿಗುವುದಿಲ್ಲ. ಯಾಕೆಂದರೆ ಅದು ಇಂಡಿಯಾದೊಳಗೆ ಬರುತ್ತದೆ ಮತ್ತು ಇಂಡಿಯಾ ಯುದ್ಧಪೀಡಿತ ದೇಶವಲ್ಲ! ನಮಗಿರುವಷ್ಟೂ ಸೌಲಭ್ಯ ಅವರಿಗಿಲ್ಲ.” + +ತನ್ನದೇ ಬದುಕು ಮುಳುಗಿರುವ ಸಂದರ್ಭದಲ್ಲೂ ಈ ಮನುಷ್ಯ ತನಗೆ ಸಂಬಂಧವೇ ಇಲ್ಲದವರ ಬಗ್ಗೆ ಚಿಂತಿಸುತ್ತಿದ್ದಾನಲ್ಲ. ಸಾಕಷ್ಟು ಜನರಿಗೆ ಹೋಲಿಸಿಕೊಂಡು ತನ್ನ ಬದುಕನ್ನು ಇಷ್ಟು ಮೆಚ್ಚುತ್ತಿದ್ದಾನಲ್ಲ ಎಂದೆನಿಸಿತು. “ಆ ಗುಜರಾತಿ ಕುಟುಂಬ ಏನಾಯಿತು?” ಅಂತ ಕೇಳಿದೆ. + +“ಆಗುವುದೇನಿದೆ? ಅಧಿಕಾರಿಗಳು ಅವರನ್ನು ವಾಪಸ್ಸು ಭಾರತಕ್ಕೆ ಕಳಿಸಿದರು. ಸತತವಾಗಿ ಸಾವಿನೊಡನೆ ಹೋರಾಡಿ ಹೊಸ ಬದುಕು ಕಟ್ಟಿಕೊಳ್ಳಲು ಬಂದವರಿಗೆ ತಮ್ಮದೇ ದೇಶದ ಮನುಷ್ಯ ಬೆನ್ನಿಗೆ ಚೂರಿ ಹಾಕಿಬಿಟ್ಟ. ನಾನು ಖಂಡಿತಾ ಆ ಅಧಿಕಾರಿಯದ್ದು ಕರ್ತವ್ಯ ನಿಷ್ಠೆ ಎನ್ನಲಾರೆ. ಅದು ಭ್ರಷ್ಠಾಚಾರ. ನಿಮ್ಮ ದೇಶದ ಜನ ಎಲ್ಲಿದ್ದರೂ ಭ್ರಷ್ಠರೇ! ಎಲ್ಲಕ್ಕಿಂತ ಗಾಬರಿ ಪಡಬೇಕಾದದ್ದು ಏನು ಗೊತ್ತಾ? ವಾಪಸು ಹೋದರಲ್ಲ ಆ ಗುಜರಾತಿ ಕುಟುಂಬದವರು ಅವರ ಬಳಿ ಪಾಸ್ ಪೋರ್ಟ್ ಇರಲಿಲ್ಲ. ಅನಧಿಕೃ ಬಾಗಿಲ ಮೂಲಕ ದೇಶದ ಹೊರ ಹೋದದ್ದರಿಂದ ಅವರು ಮಾಡಿದ್ದು ಅಪರಾಧ. ಅವರ ಹುಟ್ಟಿನ ಬಗ್ಗೆ ನಿರ್ಧಾರವಾಗುವವರೆಗೂ, ಹೊರದೇಶಕ್ಕೆ ಅನಧಿಕೃತವಾಗಿ ಹೋಗಿ ಬಂದಿದ್ದರ ಶಿಕ್ಷೆಯೂ ಸೇರಿದಂತೆ ಅವರು ಜೈಲಿನಲ್ಲಿ ಕೊಳೆಯಬೇಕು. + +ಕಾನೂನು ಹೋರಾಟಕ್ಕೆ ಅವರ ಬಳಿ ಹಣ ಇಲ್ಲ. ಇದ್ದಬದ್ದ ಜಮೀನು ಮಾರಿಕೊಂಡದ್ದರಿಂದ ಬದುಕೂ ಇಲ್ಲ. ಅಪರಾಧಿಗಳೆಂಬ ಹಣೆ ಪಟ್ಟಿ ಕಟ್ಟಿಕೊಂಡು ಬದುಕಬೇಕು. ಅಪರಾಧಿಗಳಿಗೆ ಕೆಲಸ ಯಾರು ಕೊಡುತ್ತಾರೆ? ಜೈಲಿನಲ್ಲಿ ಕೊಳೆಯುತ್ತಿರುವವರೆಗೂ ನಿಮ್ಮ ನಾಗರಿಕ ಸಮಾಜದಿಂದ ಜೀವಭಯ ಇಲ್ಲ ಎಂಬುದೊಂದೇ ಅವರು ಸಮಾಧಾನ ಪಟ್ಟಿಕೊಳ್ಳಬೇಕಾದ ವಿಷಯ! ಆರು ವರ್ಷದ ಹಿಂದಿನ ಕತೆ. ನಿನ್ನೆ ಮೊನ್ನೆ ನಡೆದಂತಿದೆ.” ಅಂತ ಹೇಳಿ ಮತ್ತೊಂದು ಹೊಸ ತುಣುಕನ್ನು ಕೈಗೆತ್ತಿಕೊಂಡ. + +“ನಿನ್ನ ಕತೆ ಮುಂದೇನಾಯಿತು?” ಅಂತ ಕೇಳಿದೆ. + +“ನನ್ನನ್ನು ಮತ್ತು ಎಲ್ಲರನ್ನೂ ದಾಖಲೆಗಳಿಲ್ಲದೇ ಮತ್ತು ಅಧಿಕೃತವಲ್ಲದ ಬಾಗಿಲುಗಳಿಂದ ದೇಶದೊಳಕ್ಕೆ ಬಂದಿರುವ ಕಾರಣಕ್ಕಾಗಿ ಸೆರೆಮನೆಯಲ್ಲಿಡಲಾಯಿತು. ಸಮಯಕ್ಕೆ ಊಟ ಕೊಡುತ್ತಿದ್ದರು.ನಿದ್ದೆ ಆಗುತ್ತಿತ್ತು. ಜೀವಭಯ ಇರಲಿಲ್ಲ. ಎಷ್ಟೋ ವರ್ಷಗಳ ನಂತರ ಸಾಯುತ್ತೇನೆ ಎಂಬ ಭಯವಿಲ್ಲದೇ ಜೈಲಿನಲ್ಲಿ ದಿನ ಕಳೆದಿದ್ದೆ. ಸೆರೆವಾಸ ಎಷ್ಟು ಅಂತ ಗೊತ್ತಿರಲಿಲ್ಲ. ಬೇರೆ ಬೇರೆ ಊರುಗಳಿಗೆ ನಮ್ಮನ್ನು ಸ್ಥಳಾಂತರಿಸುತ್ತಿದ್ದರು. ಆರು ವರ್ಷಗಳ ಕಾಲ ಹೀಗೆ ಬೇರೆ ಬೇರೆ ಊರುಗಳಿಗೆ ಸ್ಥಳಾಂತರ ನಡೆಯುತ್ತಿತ್ತು. ಈ ನಡುವೆ ಇಂಗ್ಲೀಷ್ ಕಲಿಸಿದರು, ಕೆಲವು ಅಡುಗೆಗಳನ್ನು ಕಲಿಸಿದರು. ಇಲ್ಲಿ ಬದುಕಲು ಬೇಕಾದ ಕೆಲವು ಕುಶಲ ಕಲೆಗಳನ್ನು ಹೇಳಿಕೊಟ್ಟರು. ಆದರೆ ನನಗೆ ಹೊರ ಜಗತ್ತಿನೊಡನೆ ಸಂಪರ್ಕವಿರಲಿಲ್ಲ. ಫೋನ್ ಮಾಡುವ ಅವಕಾಶವಿರಲಿಲ್ಲ. + +ಒಂದು ವಾರದ ಹಿಂದೆ ನನ್ನನ್ನು ಬಿಡುಗಡೆ ಮಾಡಿ ಟೆಂಪರರಿ ರೆಸಿಡೆಂಟ್ ಅಂದರೆ ತಾತ್ಕಾಲಿಕ ನಿವಾಸಿ ಅಂತ ವಿಸಾ ಕೊಟ್ಟಿದ್ದಾರೆ. ಅಂದರೆ ನಾನು ಯಾವಾಗ ಬೇಕಾದರೂ ಈ ದೇಶದಿಂದ ಹೊರ ನೂಕಲ್ಪಡಬಹುದು. ಆದರೆ ಇಲ್ಲಿ ಇರುವವರೆಗೆ ನನಗೆ ದುಡಿಯುವ ಹಕ್ಕಿದೆ. ಕಳೆದೊಂದು ವಾರದಿಂದ ನನ್ನ ಹೆಂಡತಿ ಮತ್ತು ಮಗುವನ್ನು ಸಂಪರ್ಕಿಸಲು ಯತ್ನಿಸುತ್ತಿದ್ದೇನೆ. ಸಂಪರ್ಕಕ್ಕೆ ಸಿಗುತ್ತಿಲ್ಲ. ಈ ದೊಡ್ಡ ದೇಶಗಳಲ್ಲಿ ಕೂಲಿ ಕೆಲಸ ಸಿಗುವುದಕ್ಕೂ ತತ್ವಾರ. ಅಲ್ಲೂ ಮೊದಲು ಬಿಳಿಯರಾರಾದರೂ ಸಿಗುತ್ತಾರೆಯೇ ಅಂತ ಕಾದು ನೋಡಿ ಇಲ್ಲವಾದರೆ ಮಾತ್ರ ನಮ್ಮಂಥವರಿಗೆ ಕೊಡುತ್ತಾರೆ. ಒಂದೆರಡು ಹೋಟೆಲ್ಲುಗಳಿಗೆ ತೊಳೆಯುವ ಬಳಿಯುವ ಕೆಲಸಕ್ಕಾಗಿ ಬೇಡಿಕೊಂಡು ದಿನವೂ ಅಲೆಯುತ್ತಿದ್ದೇನೆ. ಕಕ್ಕಸು ತೊಳೆಯುವ ಕೆಲಸಕ್ಕೆ ಹೋದರೂ ಅಲ್ಲಿ ಇಂಟರ್ ವ್ಯೂ ಕೊಡಬೇಕು. ಯಾವ ರೀತಿಯ ಕಲೆಗೆ ಯಾವ ಕೆಮಿಕಲ್ಸ್ ಹಾಕಬೇಕು, ನೆಲಕ್ಕೆ ಹಾಕುವ ಕೆಮಿಕಲ್ ಗೂ ಬೇಸಿನ್ ಗೆ ಹಾಕುವ ಕೆಮಿಕಲ್ ಗೂ ಏನು ವ್ಯತ್ಯಾಸ ಎಂಬಂತ ಇತ್ಯಾದಿ ಪ್ರಶ್ನೆಗಳನ್ನು ಕೇಳುತ್ತಾರೆ. ಇದೊಂದು ದಿನಚರಿ ನನಗೆ! + +ಚರ್ಚ್ ನವರು ದಿನಕ್ಕೆ ಮೂರು ಬಾರಿ ಕೊಡುವ ಊಟ ಮಾಡಿಕೊಂಡು ಯಾರೋ ಪುಣ್ಯಾತ್ಮರು ಕೊಟ್ಟ ಸ್ಲೀಪಿಂಗ್ ಬ್ಯಾಗ್ ಹೊದ್ದುಕೊಂಡು ಫುಟ್ ಪಾತ್ ಮೇಲೆ ಮಲಗುತ್ತೇನೆ. ಒಮ್ಮೊಮ್ಮೆ ನನ್ನ ಮುಂದೆ ಕೆಲವು ಕರುಣಾಳುಗಳು ಒಂದಷ್ಟು ಚಿಲ್ಲರೆ ಎಸೆದು ಹೋಗುತ್ತಾರೆ. ಅದನ್ನೆಲ್ಲ ಒಟ್ಟುಗೂಡಿಸಿ ನನ್ನ ಮನೆಗೆ, ಬಂಧುಗಳಿಗೆ ಫೋನ್ ಮಾಡಲು ಯತ್ನಿಸುತ್ತೇನೆ. ನನ್ನ ಕುಟುಂಬದ ಸ್ಥಿತಿಗತಿಯನ್ನು ತಿಳಿಯಲು ಪ್ರಯತ್ನಿಸುತ್ತೇನೆ. ಇವತ್ತಲ್ಲ ನಾಳೆ ಒಬ್ಬ ನನಗೆ ಕೂಲಿಯ ಕೆಲಸವನ್ನೋ, ಅಡುಗೆಯ ಕೆಲಸವನ್ನೋ ಕೊಡಬಹುದು. ಅಡುಗೆಯ ಕೆಲಸ ಸಿಕ್ಕರೆ ಒಳ್ಳೆಯ ಸಂಬಳ ಬರುತ್ತದೆ. ಆಗ ಹೆಂಡತಿ ಮಕ್ಕಳನ್ನು ಕರೆಸಿಕೊಳ್ಳಬಹುದು. ಈಗ ನನ್ನ ಮಗನಿಗೆ ಏಳು ವರ್ಷವಾಗಿರಬಹುದು, ಆತ ಶಾಲೆಗೆ ಹೋಗುತ್ತಿರಬಹುದು. ಆತ ಒಮ್ಮೆ ನನ್ನನ್ನು ‘ಅಪ್ಪಾ..’ ಅಂತ ಕೂಗುವುದನ್ನು ಕೇಳಲು ನನ್ನ ಕಿವಿಗಳು ಕಾತರಿಸುತ್ತಿವೆ. ನನ್ನ ಹೆಂಡತಿ ಇಷ್ಟು ವರ್ಷದ ಸಂಪರ್ಕ ಸಿಗದ ಕಾರಣ ನಾನು ಕಾಣೆಯಾಗಿದ್ದೇನೆ ಅಥವಾ ಸತ್ತು ಹೋಗಿದ್ದೇನೆ ಅಂದುಕೊಂಡಿರಬಹುದು. ಪುರಾಣಗಳ ಪ್ರಕಾರ ಏಳು ವರ್ಷಗಳ ಕಾಲ ಕಾಣದಿದ್ದರೆ ಅವನು ಸತ್ತಿರುವನು ಅಂತ ಪರಿಗಣಿಸ್ತಾರಲ್ವೇ? ನಮ್ಮ ಕಾನೂನೂ ಹಂಗೇ ಪರಿಗಣಿಸುತ್ತೆ! ಅವಳು ನಾನು ಸತ್ತೇನೆಂದುಕೊಂಡು ಮತ್ತೊಬ್ಬನನ್ನು ಮದುವೆಯಾಗಿಬಿಟ್ಟರೆ ಏನು ಗತಿ? ಆದಷ್ಟು ಬೇಗ ಆಕೆಯನ್ನು ಸಂಪರ್ಕಿಸಬೇಕು.” ಅಂತ ಹೇಳಿದ. + +ಬತ್ತಿಹೋದ ನದಿಪಾತ್ರದ ಆಳಕ್ಕೆ ತೋಡಿದ ಒರತೆಯಲ್ಲಿ ನಿಧಾನವಾಗಿ ನೀರಿನ ಪಸೆ ಕಟ್ಟಿಕೊಳ್ಳುವಂತೆ ಆತನ ಕಣ್ಣುಗಳು ಹನಿಗಟ್ಟಲು ಯತ್ನಿಸುತ್ತಿದ್ದವು. + +ಈಗಾಗಲೇ ಇವನಿಗಾಗಿ ಒಂದು ಬಸ್ಸನ್ನು ಕಳೆದುಕೊಂಡಿದ್ದೆ. ಜನರೇ ಇಲ್ಲದ ಈ ದೇಶಗಳಲ್ಲಿ ಸಾರಿಗೆ ಬಸ್ಸುಗಳು ವಿರಳ. ಮುಂದೆ ಬರಲಿರುವುದು ಕಡೆಯ ಬಸ್ಸು. ಅದನ್ನೂ ತಪ್ಪಿಸಿಕೊಂಡರೆ ದುಬಾರಿ ಟ್ಯಾಕ್ಸಿಗಾಗಿ ಮತ್ತೆ ಹಣ ತೆರಬೇಕು. ನಿಧಾನಕ್ಕೆ ಎದ್ದು ಆತನ ಹೆಗಲ ಮೇಲೆ ಕೈ ಇಟ್ಟು,“ನಿಧಾನಕ್ಕೆ ಪಿಜ್ಜಾ ಮುಗಿಸು. ನೈಸ್ ಮೀಟಿಂಗ್ ಯೂ. ಮತ್ತೆ ಸಿಗೋಣ. ನನಗೆ ಬಸ್ಸು ಬರುವ ಹೊತ್ತಾಯಿತು” ಎಂದೆ. + +ಆತ ನನ್ನೆಡೆಗೆ ನೋಡಿ ಎರಡೇ ಎರಡು ಸಾರಿ ತಲೆಯಾಡಿಸಿ ಮತ್ತೆ ಪಿಜ್ಜಾ ಲೋಕದಲ್ಲಿ ತೂರಿಹೋದ. ನಾನು ಹೊರಬಂದು ನನ್ನ ಹೆಂಡತಿಗೆ ಫೋನಾಯಿಸಿದೆ. + + + +“ಪದಪಕುಸಿಯೆ ನಮಗೆ ನೆಲವಾದರೂ ಇದೆ. ಆದರೆ ನೆಲವೇ ಇಲ್ಲದಂತಹ ಜನರು ಈ ಜಗತ್ತಿನಲ್ಲಿದ್ದಾರೆ! ನಾವು ಭಯಂಕರ ಸುಖವಾಗಿದ್ದೇವೆ” ಅಂತ ಹೇಳಿದೆ! + +ಶ್ರೀಹರ್ಷ ಎಂ ಟೆಕ್ ಪದವೀಧರ. ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್. ಬಾಲ್ಯ ಮತ್ತು ಇಂಜಿನಿಯರಿಂಗ್ ಪದವಿಯವರೆಗೆ ಓದಿದ್ದು ದಾವಣಗೆರೆಯಲ್ಲಿ. ಸಧ್ಯಕ್ಕೆ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವೃತ್ತಿ ಮತ್ತು ವಾಸ.ಹವ್ಯಾಸಗಳು, ಓದು, ಸುತ್ತಾಟ, ಸಂಗೀತ. \ No newline at end of file diff --git a/Kenda Sampige/article_32.txt b/Kenda Sampige/article_32.txt new file mode 100644 index 0000000000000000000000000000000000000000..3adbd1ed854dabb0cd3742860aaaad1865055007 --- /dev/null +++ b/Kenda Sampige/article_32.txt @@ -0,0 +1,97 @@ +ಬೆಂಗಳೂರಿನ ಕತೆ ಬಿಟ್ಟು ರಾಜಕೀಯಕ್ಕೆ ಹಾರಿದ್ದೀಯಲ್ಲಾ ಯಾಕೆ? ಅಂತ ನನ್ನ ಕೆಲವು ಗೆಳೆಯರು ಕಣ್ಣು ಕೆಂಪು ಕೆಂಪಗೆ ಮಾಡಿಕೊಂಡಿದ್ದಾರೆ ಅಂತ ಗೊತ್ತಾಯ್ತು! ನೆನಪು ಆ ಕಡೆ ಎಳೆದಿತ್ತು ಅದರಿಂದ ಮರೆಯುವ ಮುನ್ನ ಅದನ್ನ ಹೇಳಿದ್ದೆ, ಅಷ್ಟೇ. ಮತ್ತೆ ಬೆಂಗಳೂರು ಕತೆಗೆ ಹೊರಳುವ ಮುನ್ನ ಕಳೆದ ಸಂಚಿಕೆಯಲ್ಲಿ ಹೇಳದೇ ಉಳಿಸಿಕೊಂಡಿದ್ದ ಕಟ್ಟ ಕೊನೆ ಕೊನೇ ತುತ್ತು(ಮೊಸರನ್ನದ ಕೊನೇ ತುತ್ತು ತುಂಬಾ ರುಚಿ ಇರುತ್ತೆ ಬಿಡಬಾರದು, ಅದನ್ನ ತಿನ್ಲೇ ಬೇಕು ಊಟ ಮುಗಿಸಿ ಏಳುವ ಮೊದಲು ಅಂತ ನಮ್ಮಜ್ಜಿ ನಿಮ್ಮಜ್ಜೀ ಸಹ ಹೇಳ್ತಾ ಇದ್ರು, ನೆನಪಿದೆ ತಾನೇ)ಉಂಡು ನಂತರ ನಮ್ಮ ಹಾದಿಗೆ ಬರ್ತೀನಿ, ಸರಿ ತಾನೇ? + +ಹಿಂದಿನ ಸಂಚಿಕೆ ಕೊನೆಗೆ ಹೇಳಿದ್ದರ ಸಾರಾಂಶ ಇದು… + +ಚೇಂಬರ್ ಆಫ್ ಕಾಮರ್ಸ್ ಬಿಲ್ಡಿಂಗ್‌ನಲ್ಲಿ ಪೋಸ್ಟರ್ ಬರೆಯೋಕ್ಕೆ ಹೋಗಿದ್ದು, ನಾನು ಮತ್ತು ನಾಗರಾಜ. ನಾಗರಾಜ ಬ್ಯಾಂಕ್ ಉದ್ಯೋಗಿ ಮತ್ತು ಇಂದಿರಾಗಾಂಧಿ ಅವರ ಬಗ್ಗೆ ತುಂಬಾ ಸಾಫ್ಟ್ ಕಾರ್ನರ್ (ಮೃದು ಭಾವ)ಇದ್ದವನು. ಅಂದರೆ ಅವರ ಭಕ್ತ, ಫ್ಯಾನ್. ಅವರ ಇಪ್ಪತ್ತು ಅಂಶ ನಂತರದ ಐದು ಅಂಶ ಅವನಿಗೆ ಬಾಯಿ ಪಾಠ ಆಗಿತ್ತು. ನಡುರಾತ್ರಿ ಗಾಢ ನಿದ್ರೆಯಲ್ಲಿ ಆರನೇ ಪಾಯಿಂಟ್ ಯಾವುದು ಎಂದು ಕೇಳಿದರೂ ಥಟ್ಟನೆ ಹೇಳುತ್ತಿದ್ದ. ಬಹುಶಃ ಅವನಿಂದಲೇ ಥಟ್ ಅಂತ ಹೇಳಿ ಕಾರ್ಯಕ್ರಮ ಶುರು ಆಯಿತು ಅಂತ ನನ್ನ ಗುಮಾನಿ. ನಾನು ಸುಮ್ನೆ ನಿಂಜೊತೆ ಬರ್ತೀನಿ ಅಷ್ಟೇ ನನಗೆ ಪೋಸ್ಟರ್ ಬರೆಯೋಕ್ಕೆ ಬರಲ್ಲ… ಅಂತ ಹೇಳಿದ. ಜತೆಗೆ ಬಂದಿದ್ದ ನನಗೂ ಪೋಸ್ಟರ್ ಬರೆಯೋದು ಗೊತ್ತಿರಲಿಲ್ಲ. ಆದರೂ ಅದೇನೋ ಹುಮ್ಮಸ್ಸು ಮತ್ತು ಉತ್ಸಾಹ. ಬರೆಯದೇ ಇದ್ದರೆ, ಕಲಿಯದೇ ಇದ್ದರೆ ಯಾವ ವಿದ್ಯೆ ಆದರೂ ಅದು ಹೇಗೆ ಬರುತ್ತೆ, ಕಳ್ಳತನ ಒಂದು ಬಿಟ್ಟು? ಬರೆದೂ ಬರೆದೂ ಕಲಿಬೇಕು ಅನ್ನುವ ಸ್ಕೂಲ್ ಆಫ್ ಥಿಂಕಿಂಗ್ ನನ್ನದು. ಈ ಥಿಂಕಿಂಗ್ ನನ್ನನ್ನು ಎಷ್ಟೋ ಕೆಲಸಗಳಿಗೆ ನೂಕಿದೆ. ಅವತ್ತೂ ಸಹ ಇದೇ ನೂಕಿದ್ದು ಅಲ್ಲಿಗೆ. ಡಿಕ್ಟೇಟರ್‌ನ ಸೋಲಿಸಬೇಕು ಅನ್ನುವ ಇಚ್ಛೆ! ಇಂದಿರಾಗಾಂಧಿ ಅವರನ್ನು ಡಿಕ್ಟೇಟರ್ ಎಂದು ವಿರೋಧ ಪಕ್ಷಗಳು ಬಿಂಬಿಸಿದ್ದವು. ಇಂದಿರಾ ಗಾಂಧಿ ಅಂದರೆ ಲೇಡಿ ಹಿಟ್ಲರ್ ಎಂದೇ ಆಗಿನ ಯುವಕರ ಭಾವನೆ…! + +ಚೇಂಬರ್ ಆಫ್ ಕಾಮರ್ಸ್ ಬಿಲ್ಡಿಂಗ್‌ನ ಒಳ ಹೊಕ್ಕೆವು. ಆಗಲೇ ಸುಮಾರು ಯುವಕರು, ಮಧ್ಯ ವಯಸ್ಕರು ಮುದುಕರು ಎಂಬತ್ತು ವಯಸ್ಸಿನವರು ಸಹ ಸೇರಿದ್ದರು. ಪೇಂಟಿಂಗ್ ಮಾಡುವ ಉದ್ದನೆ ಬೋರ್ಡುಗಳು ಸ್ಟ್ಯಾಂಡ್ ಮೇಲೆ ಇರಿಸಿದ್ದರು. ಪಕ್ಕದ ಟೇಬಲ್ಲಿನ ಮೇಲೆ ನ್ಯೂಸ್ ಪ್ರಿಂಟ್ ಪೇಪರ್ ರಾಶಿ ರಾಶಿ ಬಿದ್ದಿದ್ದವು. ಅದರ ಪಕ್ಕ ಹಲವಾರು ಬಣ್ಣ ಬಣ್ಣಗಳ ದೊಡ್ಡ ಪೈಂಟು ಡಬ್ಬ. + +ಆಗತಾನೇ ಅಡಿಗರ ಕವನಗಳನ್ನು ಓದಿ ಅರ್ಥ ಮಾಡಿಕೊಳ್ಳುವ ಪ್ರಯತ್ನ ಶುರು ಮಾಡಿದ್ದೆ. ಅವರ ಮತ್ತು ಇತರ ಕವಿಗಳ ಹಲವು ಪದ್ಯಗಳ ಆರಂಭಿಕ ಸಾಲು ನೆನಪಿನಲ್ಲಿ ಇತ್ತು. ಕಟ್ಟುವೆವು ನಾವು ಹೊಸ ನಾಡೊಂದನು…., ನಾನು ಮಾಯವಾದಿಯಾಗಿ ಬಂದೆ, ಇದು ನಮ್ಮ ಮನೆಯ ಕಥೆ, ಕಾಲವ ನಾನು ನಿಂತೆ, ಮರಳಿನಿಂದ ಎಣ್ಣೆ ಹಿಂಡುವ ಗಾಣ ಮೊದಲಾದ ಸಾಲುಗಳು ತಲೆಯಲ್ಲಿ ಆಳವಾಗಿ ಹುದುಗಿತ್ತು…… ಇವು ಅಲ್ಪ ಸಲ್ಪ ಬದಲಾವಣೆ ಒಂದಿಗೆ ಪೇಪರಿನ ಮೇಲೆ ಮೂಡಿದವು… + +ಮುಂದೆ… + +ಸುಮಾರು ಎರಡು ಗಂಟೆಯಲ್ಲಿ ಹದಿನೈದು ಕನ್ನಡ ಪೋಸ್ಟರ್ ಬರೆದೆ. ಗಣ್ಯರು ಮಂತ್ರಿಗಳು ಚಿಕ್ಕಪುಟ್ಟ ಪುಢಾರಿಗಳು ಬಂದಾಗ ಅಲ್ಲೇ ಇದ್ದ ಪೇಯ್ಡ್ ಫೋಟೋಗ್ರಾಫರು ಓಡಿ ಹೋಗಿ ಪೋಟೋ ತೆಗೀತಿದ್ದ. ಆಗಿನ್ನೂ ಸೆಲ್ ಪೋನ್ ಹೆಸರು ಗೊತ್ತಿರಲಿಲ್ಲ, ಇಂತಹ ಒಂದು ಫೋನು ಮುಂದೆ ನಮ್ಮ ಕೈಲಿ ಇರುತ್ತೆ ಅನ್ನುವ ಕಲ್ಪನೆ ಸಹ ಇರಲಿಲ್ಲ. ಸೆಲ್ ಫೋನ್ ಆಗ ಇದ್ದಿದ್ದರೆ ಆಗ ತೆಗೆದ ಫೋಟೋಗಳು ಎಂತಹ ಖಜಾನೆ ಆಗ್ತಾ ಇತ್ತು ಅಂತ ಎಷ್ಟೋ ಸಲ ಅನಿಸಿದೆ. ಪೇಯ್ಡ್ ಫೋಟೋಗ್ರಾಫರು ಓಡಿ ಹೋಗಿ ಫೋಟೋ ತೆಗೀತಿದ್ದ ಅಂದೇನಲ್ಲಾ, ನಮ್ಮ ಯಾವ ಪೋಟೋ ಸಹ ಅವನು ತೆಗೀಲಿಲ್ಲ. ಪೋಸ್ಟರ್ ಬರೆದು ಆಚೆ ಬಂದರೆ ಗೊತ್ತಿದ್ದ ಒಬ್ಬ ಮರಿ ಲೀಡರು ಸಿಕ್ಕಿದ. ಹೀಗೆ ನಮ್ಮ ಫೋಟೋ ಯಾರೂ ತೆಗಿಲಿಲ್ಲ , ದೊಡ್ಡ ದೊಡ್ಡವರು, ಮಂತ್ರಿಗಳು ಛೋಟಾ ಲೀಡರ್ ಗಳ ಫೋಟೋ ತೆಗೆದ… ಅಂತ ದುಃಖ ತೋಡಿಕೊಂಡೆ. ಕಣ್ಣಂಚಿನಲ್ಲಿ ಒಂದೆರೆಡು ಹನಿ ಇದ್ದಿರಬಹುದು. ಲೀಡರು ಬೆನ್ನ ಮೇಲೆ ಕೈ ಹಾಕಿ ಸಮಾಧಾನ ಮಾಡಿದ ಹೀಗೆ “ಅಯ್ಯೋ ಒಳ್ಳೇದೇ ಆಯ್ತು. blessing in disguise ಇದು. ಅಕಸ್ಮಾತ್ ಈ ರಾಕ್ಷಸಿ ಮುಂದೆ ಗೆದ್ದು ಗವರ್ಮೆಂಟ್ ಫಾರ್ಮ್ ಮಾಡಿ ಮತ್ತೆ ಎಮರ್ಜೆನ್ಸಿ ಹಾಕಿದರೆ ಫೋಟೋದಲ್ಲಿ ಇದ್ದವರು ಜೈಲಿಗೆ ಹೋಗ್ತಾರೆ, ಅದರಿಂದ ತಪ್ಪಿಸಿಕೊಂಡೆ ತಾನೇ….! ಎಂತಹ ಒಳ್ಳೇ ಬ್ಲೆಸಿಂಗ್ ಇದು ಅಲ್ವಾ…..” ಅಂತ. + +ರಾಕ್ಷಸಿ ಅಂದರೆ ಇಂದಿರಾಗಾಂಧಿ. ಖಾಸಗಿಯಾಗಿ ಮಾತುಕತೆ ಆಡಬೇಕಾದರೇ ಇಂದಿರಾಗಾಂಧಿ ಅವರನ್ನು ರಾಕ್ಷಸಿ ಅಂತ ಸರಿ ಸುಮಾರು ಎಲ್ಲರೂ ಐಡೆಂಟಿ ಫೈ ಮಾಡೋರು ಭಯದಿಂದಲೇ. ಚಿಕ್ಕಮಗಳೂರು ಚುನಾವಣೆಯಲ್ಲಿ ಇಂದಿರಾಗಾಂಧಿ ಗೆದ್ದರು. ಅವರೆದುರು ನಿಂತು ಸೋತಿದ್ದ ವೀರೇಂದ್ರ ಪಾಟೀಲ್ ಕೆಲ ತಿಂಗಳ ನಂತರ ಇಂದಿರಾಗಾಂಧಿ ಪಾರ್ಟಿ ಸೇರಿದರು. ಇಲ್ಲಿಗೆ ರಾಜಕೀಯದ ಒಂದು ಮಜಲು ಮುಗೀತು. + +ಈಗ ಮುಂದಕ್ಕೆ… + +ಮಲ್ಲೇಶ್ವರದ ಸಂಗತಿ ಬರೆಯಬೇಕಾದರೆ ರಾಜಾಜಿನಗರದ ಮುಖ್ಯ ರಸ್ತೆಯಲ್ಲಿ ಕೊನೆತನಕ ಬಂದರೆ ನಿಮಗೆ ಸೋಪ್ ಫ್ಯಾಕ್ಟರಿ ಸಿಗುತ್ತೆ, ಅಲ್ಲಿಂದ ಕೊಂಚ ಮುಂದೆ ಬಂದರೆ ರಸ್ತೆ ಕವಲು ಆಗುತ್ತೆ ಎಡಕ್ಕೆ ಹೋದರೆ ತುಮಕೂರು ರಸ್ತೆ, ಬಲಕ್ಕೆ ಹೋದರೆ ಬೆಂಗಳೂರು ಪುರ ಪ್ರವೇಶ. (ಎಡಕ್ಕೆ ಹೋದರೆ ಅಲ್ಲಿಯೂ ಸಹ ಕವಲು. ಒಂದು ಕವಲು ಯಶವಂತಪುರ ಮಾರುಕಟ್ಟೆ, ರೈಲ್ವೆ ಸ್ಟೇಶನ್ ಇತ್ತ ಹೋಗುತ್ತೆ. ಮತ್ತೊಂದು ಕವಲು ಗೊರಗುಂಟೇ ಪಾಳ್ಯ ಸೇರುತ್ತೆ.) ಆ ರಸ್ತೆ ಮಲ್ಲೇಶ್ವರಕ್ಕೆ ಒಯ್ಯುತ್ತೆ ಅಂತ ವಿವರಿಸಿ ಮಲ್ಲೇಶ್ವರ ಹೊಕ್ಕು ಅಲ್ಲಿ ಸುತ್ತಾಡಿದ್ದೆ ತಾನೇ. + +ಸೀದಾ ಮಲ್ಲೇಶ್ವರದ ರಸ್ತೆಗೆ ನೀವು ನುಗ್ತೀರಿ. ಕಾಲುಭಾಗ ಬಂದರೆ ಒಂದು ರಸ್ತೆ ಎಡಕ್ಕೆ, ಇದು ನೇರ ಮತ್ತಿಕೆರೆಗೆ. ಇದರ ಟೊಪೊಗ್ರಫಿ ಮುಂದೆ ವಿವರವಾಗಿ ಹೇಳುತ್ತೇನೆ. ರಸ್ತೆಯ ಮುಂದೆ ಸಾಗುತ್ತಾ ಸುಮಾರು ಮಧ್ಯದಲ್ಲಿ ನಿಮಗೆ ಒಂದು ಬಸ್ಸು ಹೋಗಬಹುದಾದ ರಸ್ತೆ ಎಡಕ್ಕೆ ತಿರುಗುತ್ತೆ. ರಸ್ತೆ ತಿರುವಿಗೆ ಬೆನ್ನು ಮಾಡಿ ನಿಂತರೆ ಅದರ ಎದುರು ನಿಮಗೆ ಸುಮಾರು ದೊಡ್ಡ ಮೈದಾನ ಕಾಣಿಸುತ್ತೆ. ಎಡಕ್ಕೆ ತಿರುಗದೆ ಒಂದು ಹತ್ತು ಹದಿನೈದು ಹೆಜ್ಜೆ ಮುಂದೆ ನಡೆದರೆ ಅಲ್ಲೊಂದು ಜಿಂಕ್ ಶೀಟ್ ಹೊದಿಸಿದ ಚಿಕ್ಕ ಶೆಡ್ಡು. ಅದು ಚೆಕ್ ಪೋಸ್ಟ್ ಅಂತ ಆಗ ಹೆಸರು ಮಾಡಿತ್ತು. ಇದು ಬೆಂಗಳೂರಿನ ಎಂಟ್ರಿ ಪಾಯಿಂಟ್‌ಗಳಲ್ಲಿ ಇವೆ ಎಂದು ಕೇಳಿದ್ದೆ. ಹೊರ ಊರುಗಳಿಂದ ಬರುವ ಸರಕು ಸಾಮಗ್ರಿಗಳು ಕಾನೂನಿನ ಪ್ರಕಾರ ನಗರ ಪ್ರವೇಶಿಸುತ್ತಿದೆ ಎಂದು ಖಾತ್ರಿ ಪಡಿಸಿಕೊಳ್ಳಲು ಈ ಚೆಕ್ ಪೋಸ್ಟ್‌ಗಳು ಇದ್ದವು. ಸುಮಾರು ಎಂಬತ್ತರ ದಶಕದವರೆಗೆ ಈ ಚೆಕ್ ಪೋಸ್ಟ್‌ಗಳು ಇದ್ದವು ಮತ್ತು ಕೊನೆಯ ಕೆಲವು ವರ್ಷ ಬರೇ ಶೆಡ್ ಮಾತ್ರ ಇದ್ದವು. ಅರವತ್ತರ ದಶಕದಲ್ಲಿ ಈ ಚೆಕ್ ಪೋಸ್ಟ್‌ಗಳು ಮುಂದೆ ಭರ್ತಿ ತುಂಬಿದ ಲಾರಿಗಳು ಸರದಿ ನಿಂತು ಕಾಯುತ್ತಿದ್ದವು. ನಮ್ಮ ತೆರಿಗೆ ನೀತಿ ಬದಲಾದ ಹಾಗೆ ಈ ಚೆಕ್ ಪೋಸ್ಟ್‌ಗಳು ನಿಧಾನಕ್ಕೆ ಕಣ್ಮರೆಯಾದವು. ಅಂದ ಹಾಗೆ ಈ ಚೆಕ್ ಪೋಸ್ಟ್‌ಗಳು ಕನ್ನಡದಲ್ಲಿ ಉಕ್ಕಡ ಎನ್ನುವ ಹೆಸರಿನಲ್ಲಿ ಪರಿಚಯವಾಗಿತ್ತು. ಮಡಿವಾಳದ ಬಳಿ ಒಂದು ಚೆಕ್ ಪೋಸ್ಟ್ ಅನ್ನು ಎಂಬತ್ತರ ದಶಕದಲ್ಲಿ ನೋಡಿದ್ದೆ. ಹಳೇ ಮದ್ರಾಸ್ ರಸ್ತೆಯಲ್ಲಿ ಒಂದು ಚೆಕ್ ಪೋಸ್ಟ್ ಇದ್ದ ಮಸಕು ಮಸಕು ನೆನಪು. ಈಗ ಚೆಕ್ ಪೋಸ್ಟ್ ಅಂದರೆ, ಅದು ಒಂದು ನಾನ್ ವೆಜ್ ಹೋಟೆಲಿನ ಹೆಸರು, ಬೆಂಗಳೂರಿನ ಒಂದು ಪ್ರತಿಷ್ಠಿತ ಬಡಾವಣೆಯಲ್ಲಿ ಇದರ ಮುಖ್ಯ ಶಾಖೆ ಇದೆ! ಅಂದ ಹಾಗೆ ಇನ್ನೊಂದು ಸಂಗತಿ ಈ ಸಂಗತಿಗೆ ಏನೂ ನೇರ ಸಂಪರ್ಕವೇ ಇಲ್ಲದ್ದು ನೆನಪಾಗುತ್ತಿದೆ. ಏನೋ ಮರೆತೆ ಅನಿಸಿದಾಗ ಮತ್ತೇನೋ ಜಗತ್ತೇ ಮರೆತದ್ದು ತಲೆಯೊಳಗೆ ಧುತ್ತೆಂದು ಧುಮ್ಮಿಕ್ಕಿ ಹರಿಯುತ್ತದೆ!‌ (ನಮ್ಮ ಜೋಗ ಧುಮ್ಮಿಕ್ಕಿ ಹರಿಯುತ್ತಾಳೆ ಎಂದು ಎಲ್ಲೋ ಓದಿದ ನೆನಪು). + +ಜಗತ್ತು ಈಗ ಮರೆತ ಒಂದು ಇಂಜಿನಿಯರಿಂಗ್ ಉಪಕರಣದ ನೆನಪು ಬಂತು. ನಮ್ಮ ಕಾಲೇಜು ದಿವಸಗಳಲ್ಲಿ ಡಿಪ್ಲೊಮಾ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿಗಳು ಸ್ಲೈಡ್ ರೂಲ್ ಎನ್ನುವ ಒಂದು ಪುಟ್ಟ ಪೆಟ್ಟಿಗೆ ಇಟ್ಟುಕೊಂಡಿರುತ್ತಿದ್ದರು. ಅದರಲ್ಲಿ ಕೆಲವು ಸ್ಕೇಲ್‌ಗಳು ಇರುತ್ತಿದ್ದವು ಮತ್ತು ಆ ಸ್ಕೇಲ್‌ಗಳು ನಾವು ಉಪಯೋಗಿಸುತ್ತಿದ್ದ ಇಂಚು ಸೆಂಟಿಮೀಟರ್ ಸ್ಕೇಲ್‌ಗಳಿಗಿಂತ ಭಿನ್ನವಾಗಿತ್ತು. ಅದರ ಮೇಲೆ ಅದೇನೋ ಅಂಕಿಗಳು, ಸೈನ್‌ಗಳು ಹೀಗೆ. ನನ್ನ ಕಾಲೇಜು ಜೀವನದಲ್ಲಿ ಈ ಸ್ಲೈಡ್ ರೂಲ್ ನಾನು ಉಪಯೋಗಿಸಿರಲಿಲ್ಲ, ಕಾರಣ ನಾನು ಓದಿದ್ದು ಬಿಎಸ್ಸಿ. ಆಗ ಬಿಎಸ್ಸಿಗೆ ಸ್ಲೈಡ್ ರೂಲ್ ಪಾಠ ಇರಲಿಲ್ಲ. + +(ಚೆಕ್ ಪೋಸ್ಟ್) + +ಕಾಲೇಜು ಮುಗಿಸಿ ಅದೆಷ್ಟೋ ವರ್ಷಗಳ ನಂತರ ಸ್ಲೈಡ್ ರೂಲ್ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹುಟ್ಟಿತು. ಬೆಂಗಳೂರು ಬುಕ್ ಬ್ಯೂರೋಗೆ ಹೋಗಿ learn your self Slide Rule ಎನ್ನುವ ಸುಮಾರು ನೂರು ಪುಟದ ಪುಸ್ತಕ ಕೊಂಡಿದ್ದೆ, ಆಗ ಅದಕ್ಕೆ ಒಂದೂವರೆ ರುಪಾಯಿ. ಹಾಗೇ ಅವೆನ್ಯೂ ರಸ್ತೆಗೆ ನಡೆದು ಅಲ್ಲಿನ ಸುಭಾಷ್ ಬುಕ್ ಸ್ಟೋರ್ಸ್‌ನಿಂದ ಒಂದು ಸ್ಲೈಡ್ ರೂಲ್ ಬಾಕ್ಸ್ ತಂದಿದ್ದೆ. ಅದಕ್ಕೆ ಇಪ್ಪತ್ತು ಕೊಟ್ಟ ನೆನಪು. ಎರಡು ತಿಂಗಳು ಕಷ್ಟಪಟ್ಟು ಪುಸ್ತಕ ಓದಿ ಸ್ವಯಂ ಓದಿನ ಮೂಲಕ ಸ್ಲೈಡ್ ರೂಲ್ ಉಪಯೋಗಿಸುವ abcd ತಿಳಿದುಕೊಂಡಿದ್ದೆ. ಅದು ನಂತರ ಅಷ್ಟು ಉಪಯೋಗಿಸದೆ ಇದ್ದ ಕಾರಣ ಎಲ್ಲವೂ ಮರೆ ಆಯಿತು. ಮೊನ್ನೆ ಅಟ್ಟದ ಮೇಲಿನ ಪುಸ್ತಕ ಕೆಳಗೆ ಇಳಿಸಿ ಲಿಸ್ಟ್ ಮಾಡಬೇಕಾದರೆ ಈ ಸ್ಲೈಡ್ ರೂಲ್ ಪುಸ್ತಕ ಸಿಗಬೇಕೇ?(ಅಟ್ಟದ ಮೇಲಿನ ಪುಸ್ತಕದ ವಿಲೇವಾರಿ ಬಗ್ಗೆ ಒಂದು ದೊಡ್ಡ ಕಥಾನಕ ಇದೆ. ಮುಂದೆ ಯಾವಾಗಲಾದರೂ ತಿಳಿಸುತ್ತೇನೆ) ಪುಸ್ತಕ ತೆಗೆದು ತಿರುವಿ ಹಾಕಿದೆ… + +ಮಾರನೇ ದಿವಸ ನನಗಿಂತ ವಯಸ್ಸಿನಲ್ಲಿ ಸುಮಾರು ಚಿಕ್ಕವರಾದ ಸ್ನೇಹಿತರ ಬಳಿ ಈ ಸ್ಲೈಡ್ ರೂಲ್ ವಿಷಯ ತೆಗೆದೆ. ಅವರಿಗೆ ಹೀಗೊಂದು ಉಪಕರಣ ಇತ್ತು ಅಥವಾ ಇದೆ ಎಂದೇ ಗೊತ್ತಿಲ್ಲ ಎಂದರು! ನಾವು ಓದಬೇಕಾದರೆ ಹೊಸಹೊಸ ಕ್ಯಾಲ್ಕುಲೇಟರ್ ಇದ್ದವು, ಅದರ ಮೂಲಕ ಕ್ಲಿಷ್ಟ ಲೆಕ್ಕದ ಸಮಸ್ಯೆ ಪರಿಹಾರ ಸಿಕ್ಕುತ್ತಿತ್ತು. ಅದರಿಂದ ಸ್ಲೈಡ್ ರೂಲ್ ನಮಗೆ ಗೊತ್ತೇ ಇಲ್ಲ ಅಂದರು. ಹೊಸಹೊಸ ಆವಿಷ್ಕಾರಗಳಿಂದ ಮೂಲೆ ಸೇರಿದ ಅಸಂಖ್ಯಾತ ಉಪಕರಣಗಳಲ್ಲಿ ಇದೂ ಒಂದು. ಅದೆಷ್ಟೋ ಸಲಕರಣೆಗಳು ಒಂದು ಕಾಲದಲ್ಲಿ ಅವು ಇಲ್ಲದೇ ಜೀವನ ಸಾಧ್ಯವೇ ಇಲ್ಲ ಎಂದು ತಿಳಿದವು ಈಗ ಕಾಲಗರ್ಭದಲ್ಲಿ ಹೂತು ಹೋಗಿವೆ! + +ಚೆಕ್ ಪೋಸ್ಟ್ ಬಗ್ಗೆ ಹೇಳುತ್ತಿದ್ದೆ. ಚೆಕ್ ಪೋಸ್ಟ್ ಪಕ್ಕದ ರಸ್ತೆಗೆ ಬೆನ್ನು ಮಾಡಿ ಎದುರು ನೋಡಿದರೆ ಒಂದು ದೊಡ್ಡ ಮೈದಾನ ಇತ್ತು. ಈ ಮೈದಾನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಗೆ (IISc ಐಐಎಸ್ಸಿ ಗೆ) ಸೇರಿದ್ದು. ಅರವತ್ತರ ದಶಕದಲ್ಲಿ ಅದು ದೊಡ್ಡ ಬಯಲು ಮತ್ತು ತುಮಕೂರು ರಸ್ತೆಗೆ ಅಂಟಿಕೊಂಡ ಹಾಗೇ ಇದ್ದದ್ದು. ಈಗ ಅದು IISc ಜಮಖಾನ ಮೈದಾನ ಎಂದು ಹೆಸರು ಪಡೆದಿದೆ. + +ಈಗ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಕತೆಯನ್ನು ತುಂಬಾ ಪುಟ್ಟದಾಗಿ ಹೇಳಿಬಿಡುತ್ತೇನೆ. IISC ಸ್ಥಾಪನೆಗೆ ಸಂಬಂಧಿಸಿದ ಒಂದು ಲೇಖನ ಕಳೆದ ವರ್ಷ ಓದಿದ್ದೆ. ಲೇಖನದ ಕೆಲವು ಅಂಶಗಳು ಇವು. + +ರಾಷ್ಟ್ರಕ್ಕಾಗಿ ಸಂಸ್ಥೆ: ಐಐಎಸ್‌ಸಿ ತಯಾರಿಕೆಯಲ್ಲಿ ವಿವೇಕಾನಂದ ಮತ್ತು ನಿವೇದಿತಾ ಪಾತ್ರ + +1893 ರ ಬೇಸಿಗೆಯಲ್ಲಿ ಇಬ್ಬರು ಭಾರತೀಯರು ಜಪಾನ್‌ನ ಯೊಕೊಹಾಮಾದಿಂದ ಕೆನಡಾದ ವ್ಯಾಂಕೋವರ್‌ಗೆ ಹಡಗಿನಲ್ಲಿ ಒಟ್ಟಿಗೆ ಪ್ರಯಾಣಿಸಿದರು. ಅವರಲ್ಲಿ ಒಬ್ಬರು 30 ವರ್ಷದ ಯುವ ಅಪರಿಚಿತ ಸನ್ಯಾಸಿ ಮತ್ತು ಇನ್ನೊಬ್ಬರು ಅತ್ಯಂತ ಯಶಸ್ವಿ ವ್ಯಾಪಾರಿ-ಕೈಗಾರಿಕೋದ್ಯಮಿ.. ಅವರಿಬ್ಬರೂ ಭಾರತೀಯರಿಗೆ ಕೇವಲ ವಿಜ್ಞಾನದಲ್ಲಿ ಮಾತ್ರವಲ್ಲದೆ ತಂತ್ರಜ್ಞಾನದಲ್ಲಿ ತರಬೇತಿ ನೀಡುವ ಬಗ್ಗೆ ಮಾತನಾಡಿದರು, ಇದರಿಂದಾಗಿ ದೇಶದ ಅಗತ್ಯತೆಗಳನ್ನು ಅದರ ದೇಶೀಯ ಉತ್ಪಾದನೆಯಿಂದ ಗಣನೀಯವಾಗಿ ಪೂರೈಸಬಹುದು ಎನ್ನುವುದು ಅವರ ಯೋಚನೆ. ಆದರೆ ಆಗಿನ ಪ್ರತಿಕೂಲ ಆಡಳಿತದ ದಿನಗಳಲ್ಲಿ ಇದು ಸುಲಭದ ಕೆಲಸವಲ್ಲ ಎಂದು ಇಬ್ಬರಿಗೂ ತಿಳಿದಿತ್ತು. + +(ಸ್ವಾಮಿ ವಿವೇಕಾನಂದ ಹಾಗೂ ಸಿಸ್ಟರ್‌ ನಿವೇದಿತಾ) + +ಹಡಗು ದಡ ಸೇರಿತು. ಇಳಿದು ಒಬ್ಬರಿಗೊಬ್ಬರು ವಿದಾಯ ಹೇಳಿದರು. ಮತ್ತೆ ಭೇಟಿ ಮಾಡುವ ಯಾವುದೇ ಯೋಚನೆ ಇಬ್ಬರಿಗೂ ಇರಲಿಲ್ಲ. ಕೈಗಾರಿಕೋದ್ಯಮಿಯು ಸನ್ಯಾಸಿಯ ಹೆಸರನ್ನು ತೆಗೆದುಕೊಳ್ಳಲಿಲ್ಲ, ಏಕೆಂದರೆ ಅಲ್ಲಿಯವರೆಗೆ, ತನ್ನನ್ನು ಹೆಸರಿಲ್ಲದೆ ಕೇವಲ ಸನ್ಯಾಸಿನ್ ಎಂದು ಪರಿಚಯಿಸಿಕೊಳ್ಳುವ ಪ್ರವೃತ್ತಿಯನ್ನು ಸನ್ಯಾಸಿ ಹೊಂದಿದ್ದರು. + +ಐದು ವರ್ಷಗಳು ಕಳೆದವು. ಸನ್ಯಾಸಿ ನಾಲ್ಕು ವರ್ಷಗಳ ನಂತರ ಪಶ್ಚಿಮದಿಂದ ಮರಳಿದರು. ಉಪಖಂಡದಾದ್ಯಂತ ಹಲವಾರು ಪಟ್ಟಣಗಳು ಮತ್ತು ನಗರಗಳಲ್ಲಿ ಅವರಿಗೆ ಭವ್ಯವಾದ ಸ್ವಾಗತವನ್ನು ನೀಡಲಾಯಿತು. ಪತ್ರಿಕೆಗಳಲ್ಲಿಯೂ ವರದಿ ಪ್ರಕಟ ಆಯಿತು. ವರದಿ ಓದಿದ ಕೈಗಾರಿಕೋದ್ಯಮಿಗೆ ಹಡಗಿನಲ್ಲಿ ಸಿಕ್ಕ ಸನ್ಯಾಸಿ ಸ್ವಾಮಿ ವಿವೇಕಾನಂದ ಎಂದು ಅರಿವಾಯಿತು. ಜಮ್ಶೆಡ್‌ ಜಿ ಟಾಟಾ, ಇದು ಕೈಗಾರಿಕೋದ್ಯಮಿ ಹೆಸರು. ಅವರು ಸ್ವಾಮಿ ವಿವೇಕಾನಂದರಿಗೆ ಒಂದು ಪತ್ರ ಬರೆಯುತ್ತಾರೆ. ಅದರಲ್ಲಿ ತಮ್ಮ ಮಾತುಕತೆಯನ್ನು ನೆನಪಿಸಿ ಭಾರತೀಯ ವಿಜ್ಞಾನ ಸಂಶೋಧನಾ ಸಂಸ್ಥೆಯ ಯೋಜನೆಗೆ ಸಂಬಂಧಿಸಿದಂತೆ ಸ್ವಾಮಿಗಳ ಯೋಚನೆಗೆ ಸಹಮತ ಇದೆ ಎಂದು ತಿಳಿಸುತ್ತಾರೆ. + +ಟಾಟಾ ಅವರ ಪತ್ರದಲ್ಲಿನ ಪ್ರಸ್ತಾಪ + +………200,000 ಪೌಂಡ್ ಸ್ಟರ್ಲಿಂಗ್ (ಅಂದು ಸುಮಾರು 30 ಲಕ್ಷ ರೂ.) ಉಡುಗೊರೆಯಾಗಿ ನೀಡುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ, “ದೇಶದ ಸಮಸ್ಯೆಗಳ ಕುರಿತು ಸಂಶೋಧನೆಗಳನ್ನು ಕೈಗೊಳ್ಳಲು ಈ ದೇಶದ ವಿದ್ಯಾರ್ಥಿಗಳನ್ನು ಪ್ರೇರೇಪಿಸಲು ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲು ರಾಷ್ಟ್ರೀಯವಾಗಿ ವ್ಯಾಪಕವಾಗಿ ವರದಿಯಾಗಿದೆ. ಉಷ್ಣವಲಯದ ಕಾಯಿಲೆಗಳು ಅಥವಾ ಉಷ್ಣವಲಯದ ರಸಾಯನಶಾಸ್ತ್ರ, ನಮ್ಮ ರಾಷ್ಟ್ರೀಯ ಇತಿಹಾಸ ಮತ್ತು ಭಾರತೀಯ ಭಾಷಾಶಾಸ್ತ್ರದ ವಿಶಾಲವಾದ ಮತ್ತು ನಿರ್ಲಕ್ಷಿಸಲ್ಪಟ್ಟ ವಸ್ತುಗಳನ್ನು ತನಿಖೆ ಮಾಡಲು ಮತ್ತು “ಪ್ರಯೋಗಾಲಯಗಳು ಮತ್ತು ಗ್ರಂಥಾಲಯಗಳನ್ನು ಪತ್ತೆಹಚ್ಚಲು, ಅಲ್ಲಿ ವಿದ್ಯಾರ್ಥಿಗಳು ಶ್ರೇಷ್ಠ ಶಿಕ್ಷಕರ ನಿರ್ದೇಶನದಲ್ಲಿ ಕೆಲಸ ಮಾಡಬಹುದು.” + + + +ಸ್ವಾಮಿ ವಿವೇಕಾನಂದರು ಈ ಕಾರ್ಯವನ್ನು ಸಹಜವಾಗಿ ಈ ಸಾಹಸದ ನಾಯಕತ್ವವನ್ನು ನೇರವಾಗಿ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಯೋಜನೆಗೆ ಶುಭ ಹಾರೈಸಿದ ಅವರು ಯೋಜನೆಯ ಬಗ್ಗೆ ತಮ್ಮ ಯೋಚನೆಗಳನ್ನು ತಮ್ಮ ಕೆಲವು ಶಿಷ್ಯರ ಸಂಗಡ ಹಂಚಿಕೊಂಡರು. ಹೀಗೆ ವಿಷಯ ತಿಳಿದವರಲ್ಲಿ ಸಿಸ್ಟರ್ ನಿವೇದಿತಾ ಸಹ ಒಬ್ಬರು. + +ಈ ಮಧ್ಯೆ ಟಾಟಾ ಅವರು ವೈಸರಾಯ್ ಲಾರ್ಡ್ ಕರ್ಜನ್ ಅವರನ್ನು ಭೇಟಿಯಾದರು. ವೈಸರಾಯ್ ಈ ಕಲ್ಪನೆಯನ್ನು ಅಪ್ರಾಯೋಗಿಕವೆಂದು ತಳ್ಳಿಹಾಕಿದರು. ಭಾರತೀಯರಿಗೆ ವಿಜ್ಞಾನದಲ್ಲಿ ಸಂಶೋಧನೆಯಲ್ಲಿ ತೊಡಗುವ ಮನೋಧರ್ಮವಿಲ್ಲ ಎಂದು ಅವರು ಭಾವಿಸಿದ್ದರು, ಸಂಸ್ಥೆಗೆ ಸಾಕಷ್ಟು ಸಮರ್ಥ ಅಭ್ಯರ್ಥಿಗಳು ಸಿಗುವುದಿಲ್ಲ ಎಂದು ಅವರು ಭಾವಿಸಿದರು ಮತ್ತು ಅಂತಹ ತರಬೇತಿಯ ನಂತರ ವಿದ್ಯಾರ್ಥಿಗಳ ಉದ್ಯೋಗಾವಕಾಶದ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. + +ಇದನ್ನು ಅನುಸರಿಸಿ, ಸ್ವಾಮಿಗಳ ಶ್ರೇಷ್ಠ ಶಿಷ್ಯೆ, ಸೋದರಿ ನಿವೇದಿತಾ, ಈ ಮಹಾನ್ ದೇಶಪ್ರೇಮಿ-ಕೈಗಾರಿಕೋದ್ಯಮಿ ಈ ಯೋಜನೆಯನ್ನು ಕಾರ್ಯಗತಗೊಳಿಸಲು ಸಕ್ರಿಯವಾಗಿ ಪ್ರಚಾರ ಮಾಡಲು ಪ್ರಾರಂಭಿಸಿದರು ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಹಲವಾರು ಲೇಖನಗಳನ್ನು ಬರೆದರು. ಸರ್ಕಾರವು 1900 ರಲ್ಲಿ ಮುಂದೆ ನೊಬೆಲ್ ಪ್ರಶಸ್ತಿ ಗಳಿಸಿದ ಸರ್ ವಿಲಿಯಂ ರಾಮ್ಸೆ ಅವರಿಗೆ ಈ ಪ್ರಸ್ತಾಪದ ಬಗ್ಗೆ ವರದಿಯನ್ನು ಕೇಳಿತು. ತನ್ನ ವರದಿಯಲ್ಲಿ ರಾಂಸೆ ಅವರು ಪ್ರಸ್ತಾಪವನ್ನು ತಿರಸ್ಕರಿಸಿದರು. ಅಷ್ಟು ದೊಡ್ಡ ಮೊತ್ತದ ದೇಣಿಗೆ ಬಗ್ಗೆ ಆಕರ್ಷಿತರಾಗಿದ್ದ ವೈಸರಾಯ್ ಮತ್ತು ಇತರರು ಟಾಟಾ ಅವರು ತಮ್ಮ ದೇಣಿಗೆ ನೀಡಲಿ ಮತ್ತು ಸರ್ಕಾರ ಈ ಬಗ್ಗೆ ತೀರ್ಮಾನಿಸುತ್ತದೆ ಎನ್ನುವ ನಿಲುವಿಗೆ ಬರುತ್ತಾರೆ.. ಟಾಟಾ ಅವರು ದೇಣಿಗೆ ಕೊಟ್ಟು ಸುಮ್ಮನೆ ಕೂದಲು ಸಿದ್ಧರಿಲ್ಲ ಎಂದು ಸ್ಪಷ್ಟ ಪಡಿಸುತ್ತಾರೆ. + +ಹೀಗಾಗಿ ವಿಷಯ ಬಿಕ್ಕಟ್ಟಿನಲ್ಲಿಯೇ ಉಳಿಯಿತು. ನಿವೇದಿತಾ ಅವರ ಪ್ರಯತ್ನ ಮುಂದುವರಿದೆ ಇತ್ತು ಮತ್ತು ಬ್ರಿಟಿಷ್ ಸರ್ಕಾರ ಒಂದಲ್ಲ ಒಂದು ನೆವದಿಂದ ಈ ಯೋಜನೆಗೆ ಸಮ್ಮತಿ ಕೊಟ್ಟಿರಲಿಲ್ಲ. + +ಈ ಸಮಯದಲ್ಲಿ ನಿವೇದಿತಾ ಅವರು ಈ ವಿಷಯದ ಬಗ್ಗೆ ವ್ಯಾಪಕವಾದ ಸಾರ್ವಜನಿಕ ಅಭಿಪ್ರಾಯವನ್ನು ಒಟ್ಟುಗೂಡಿಸಲು ಯೋಚಿಸಿದರು ಮತ್ತು ಹಲವಾರು ಪ್ರಮುಖ ವಿಶ್ವ-ಚಿಂತಕರಿಗೆ ಪತ್ರ ಬರೆದರು, ಅವರಲ್ಲಿ ಅನೇಕರು ವೈಯಕ್ತಿಕವಾಗಿ ಅವರ ಸಂಪರ್ಕದಲ್ಲಿದ್ದರು, ಅಂತಹ ಸಂಸ್ಥೆಯ ಅಗತ್ಯ ಮತ್ತು ಅಪೇಕ್ಷಣೀಯತೆಯ ಬಗ್ಗೆ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿಸಲು ವಿನಂತಿಸಿದರು. + +(ಸೋದರಿ ನಿವೇದಿತಾ) + +ಅಮೇರಿಕನ್ ಮನಶ್ಶಾಸ್ತ್ರಜ್ಞ ಮತ್ತು ತತ್ವಜ್ಞಾನಿ ಹಾರ್ವರ್ಡ್‌ನ ವಿಲಿಯಂ ಜೇಮ್ಸ್ ಅವರ ಬೆಂಬಲ ಪಡೆದರು. ವಿಲಿಯಂ ಜೇಮ್ಸ್ ಬರೆದಿದ್ದಾರೆ, “ಭಾರತದಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ಶ್ರೀ ಟಾಟಾ ಅವರ ಯೋಜನೆಗೆ ಸಂಬಂಧಿಸಿದಂತೆ, ಅವರ ಉದ್ದೇಶವನ್ನು ಸಾಧಿಸಲು ಇಂತಹ ನಿರ್ವಹಣೆಯನ್ನು ಸಂಪೂರ್ಣವಾಗಿ ರಾಷ್ಟ್ರೀಯ ಮಾರ್ಗಗಳಲ್ಲಿ ನಡೆಸಬೇಕು ಎಂದು ನಾನು ಭಾವಿಸುತ್ತೇನೆ.” ಅವರು ಈ ಸಂಸ್ಥೆಯ ಆಡಳಿತ ಮಂಡಳಿಯಲ್ಲಿ ಭಾರತದ ಎಲ್ಲಾ ಸಮುದಾಯಗಳಿಗೆ ಸಮಾನ ಪ್ರಾತಿನಿಧ್ಯವನ್ನು ಮತ್ತು ಸರ್ಕಾರದ ನಿಯಂತ್ರಣದಿಂದ ಸ್ವಾತಂತ್ರ್ಯವನ್ನು ಸೂಚಿಸಿದರು. ಅಂದರೆ ಅಟನಾಮಸ್ ಸ್ಥಾನ. + +ಈ ನಡುವೆ ವಿವೇಕಾನಂದರು ಮತ್ತು ಟಾಟಾ ನಿಧನರಾದರು. ಅವರ ಜೀವಿತಾವಧಿಯಲ್ಲಿ ಅವರ ಕನಸು ಬೆಳಗಲಿಲ್ಲ. ಆದರೆ ಈ ಪ್ರಸ್ತಾಪವನ್ನು ಅಂತಿಮವಾಗಿ ಲಾರ್ಡ್ ಮಿಂಟೋ ಅವರು 1909 ರಲ್ಲಿ ಅನುಮೋದಿಸಿದರು, ಅವರು ಲಾರ್ಡ್ ಕರ್ಜನ್ ನಂತರ ವೈಸರಾಯ್ ಆಗಿ ಬಂದರು. ಇನ್ಸ್ಟಿಟ್ಯೂಟ್‌ನ ಸ್ಥಳಕ್ಕಾಗಿ ಟಾಟಾ ಅವರ ಆಯ್ಕೆಯು ಅವರ ಸ್ವಂತ ನಗರವಾದ ಬಾಂಬೆಯಾಗಿದ್ದರೂ, ನಂತರದ ಪರಿಸ್ಥಿತಿಗಳು ಅದನ್ನು ಬೆಂಗಳೂರಿನಲ್ಲಿ ಸ್ಥಾಪಿಸಲು ಕಾರಣವಾಯಿತು, ಮೈಸೂರು ರಾಜ್ಯದ ಆಡಳಿತಗಾರ ಮಹಾರಾಜ ಕೃಷ್ಣರಾಜ್ ಒಡೆಯರ್ ಅವರು 370 ಎಕರೆಗಳನ್ನು ಉಡುಗೊರೆಯಾಗಿ ನೀಡಿದರು. ಮಹಾರಾಜರ ತಂದೆ ಎಚ್.ಎಚ್.ಚಾಮರಾಜ ಒಡೆಯರ್ ಅವರು ವಿವೇಕಾನಂದರ ನಿಷ್ಠಾವಂತ ಶಿಷ್ಯರಾಗಿದ್ದರು ಮತ್ತು ಅವರನ್ನು ಪಶ್ಚಿಮಕ್ಕೆ ಕಳುಹಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಮತ್ತು ಅದಕ್ಕೆ ಪೂರಕವಾಗಿ ಹಲವು ನೆರವನ್ನೂ ನೀಡಿದ್ದರು. + +(ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು) + +ಅದರ ಅಂತಿಮ ರೂಪವು ನಿಖರವಾಗಿ ಟಾಟಾ ಬಯಸಿದ ರೂಪದಲ್ಲಿಲ್ಲದಿದ್ದರೂ (ವಿಜ್ಞಾನ ಮತ್ತು ಮಾನವಿಕ ವಿಜ್ಞಾನ ಎರಡನ್ನೂ ಅದರ ಕೇಂದ್ರೀಕೃತ ಕ್ಷೇತ್ರಗಳಾಗಿ ಹೊಂದಿದೆ), ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಬೆಂಗಳೂರು (ಟಾಟಾ ಇನ್‌ಸ್ಟಿಟ್ಯೂಟ್‌ಗೆ ನಂತರ ಈ ಹೆಸರಾಯಿತು) ದೇಶದಲ್ಲಿ ವೈಜ್ಞಾನಿಕ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ ಮತ್ತು ಸಾಕಷ್ಟು ಮಟ್ಟಿಗೆ, ಭಾರತೀಯ ವಿಜ್ಞಾನ ಸಂಸ್ಥೆಗಳು ಮತ್ತು ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಂತಹ ವಿಶೇಷ ಸಂಸ್ಥೆಗಳ ಹೋಸ್ಟ್‌ಗಳ ಜ್ಞಾನ-ಇನ್ಕ್ಯುಬೇಟರ್ ಆಗಿ ಕಾರ್ಯನಿರ್ವಹಿಸಿದೆ. + +ಸಂಸ್ಥೆಯ ಹಿಂದಿರುವ ವಿವೇಕಾನಂದರ ಒತ್ತಾಸೆಯ ಸ್ಪೂರ್ತಿದಾಯಕ ನಿಲುವು ಸಾರ್ವಜನಿಕರಲ್ಲಿ ಹೆಚ್ಚು ಪ್ರಚಾರ ಪಡೆದಿಲ್ಲ ಮತ್ತು ಸಹೋದರಿ ನಿವೇದಿತಾ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಮರೆತುಬಿಡಲಾಗಿದೆ. ಅದೇ ರೀತಿಯಲ್ಲಿ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸಂಸ್ಥೆಗೆ ೩೭೦ಎಕರೆ ಜಮೀನು ದಾನವಾಗಿ ನೀಡಿದ ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ್ ಒಡೆಯರ್ ಅವರನ್ನು ಸಹ ಸಂಪೂರ್ಣವಾಗಿ ಮರೆಯಲಾಗಿದೆ. ದೇಶವನ್ನು ಮುಂದೆ ತಂದವರನ್ನ ಮತ್ತು ಅವರ ನೆನಪಿಗಾಗಿ ಏನೂ ಮಾಡದಿರುವುದು ನಮ್ಮ ರಕ್ತದಲ್ಲಿ ಬಂದಿದೆ, ಒಂದು ರೀತಿ ಕೃತಘ್ನರು ನಾವು. + +ಇದು ಮೂಲ ಲೇಖನದ ಸಂಕ್ಷಿಪ್ತ ರೂಪ. ಸಂಸ್ಥೆ ಸ್ಥಾಪನೆಗೊಳ್ಳಲು ಭೇಟಿ ಮಾಡಿದ ಬ್ರಿಟಿಷ ಸಾಮ್ರಾಜ್ಯದ ಆಡಳಿತ ನಡೆಸುತ್ತಿದ್ದ ಹಲವರ ಹೆಸರುಗಳು, ಪಟ್ಟ ಶ್ರಮ, ಹಾಕಿದ ಒತ್ತಡ… ಮುಂತಾದ ಸಂಪೂರ್ಣ ವಿವರಗಳು ಲೇಖನದ ತುಂಬಾ ಇದೆ. ಇಂತಹ ಒಂದು ಸಂಸ್ಥೆಯನ್ನು ನಡೆಸಲು ಭಾರತೀಯರು ಅಸಮರ್ಥರು ಎಂದು ಕೆಲವು ಬ್ರಿಟಿಷ್ ಅಧಿಕಾರಿಗಳು ಅಭಿಪ್ರಾಯ ಪಟ್ಟರೆ ಯೋಜನೆಯ ಹೆಸರು ವಿವರ ಕೇಳಿದ ಹಲವಾರು ವಿಜ್ಞಾನಿಗಳು ಕೊಂಕು ನಗೆ ಬೀರುತ್ತಾರೆ, ಹೊಸಾ ಯೋಜನೆ ಯಾರೆಷ್ಟು ಪಾಲು ಪಡೆಯುತ್ತೀರಿ ಎಂದು ಕುಹಕ ವಾಡುತ್ತಾರೆ. + +ಇಷ್ಟೆಲ್ಲಾ ಅಡೆತಡೆಗಳ ನಡುವೆ ಮುಂಬೈಯಲ್ಲಿ ಸ್ಥಾಪಿತವಾಗಬೇಕಿದ್ದ ಸಂಸ್ಥೆ ನಮ್ಮಲ್ಲಿಗೆ, ನಮ್ಮ ರಾಜ್ಯಕ್ಕೆ, ರಾಜ್ಯದ ರಾಜಧಾನಿ ಬೆಂಗಳೂರಿಗೆ ಬರುತ್ತದೆ ಮತ್ತು ವಿಶ್ವದ ಅತ್ಯಂತ ವಿಶ್ವಾಸಾರ್ಹ ವಿದ್ಯಾ ಸಂಸ್ಥೆಯಾಗಿ ಹೆಸರು ಮಾಡುತ್ತದೆ. ದೇಶ ವಿದೇಶಗಳಿಂದ (ಇಲ್ಲಿನ ಜನಕ್ಕೆ ಇಂತಹ ಸಂಸ್ಥೆಯ ಅಗತ್ಯವಿಲ್ಲ ಎಂದು ಹೇಳಿದ್ದ ಬ್ರಿಟನ್ ಸೇರಿದಂತೆ) ವಿಜ್ಞಾನಿಗಳು ಇಲ್ಲಿ ಅಧ್ಯಯನಕ್ಕಾಗಿ ಬರುತ್ತಾರೆ. ಇಂದು IISc ವಿಶ್ವದ ಅತಿ ಶ್ರೇಷ್ಠ ವೈಜ್ಞಾನಿಕ ಸಂಶೋಧನಾ ಕೇಂದ್ರಗಳಲ್ಲಿ ಮುಂಚೂಣಿಯಲ್ಲಿ ಕಾಣಿಸುವ ಹೆಸರು. + +ಯಶವಂತಪುರದ ಒಳಭಾಗಕ್ಕೆ ಚೆಕ್ ಪೋಸ್ಟ್ ಪಕ್ಕದ ದಾರಿಯಲ್ಲಿ ಬಂದರೆ ಈ IISc ಕಟ್ಟಡದ ಹಿಂಭಾಗಕ್ಕೆ ಬರುತ್ತೇವೆ. ಬೆಳಿಗ್ಗೆ ಸಂಜೆ ಸುತ್ತಮುತ್ತಲಿನ ಹಲವಾರು ನಾಗರಿಕರು ಇಲ್ಲಿನ ಉದ್ಯಾವನಕ್ಕೆ ವಾಯುವಿಹಾರಕ್ಕೆ ಬರುತ್ತಾರೆ. IISc ಕಟ್ಟಡದ ಮುಂಭಾಗ ಚೆಕ್ ಪೋಸ್ಟ್ ಹಾದಿಯಲ್ಲಿ ಮುಂದುವರೆದರೆ ಅಲ್ಲೇ ಎಡಭಾಗದಲ್ಲಿದೆ. ಅದರಲ್ಲಿ ಒಂದು ಎತ್ತರದ ಕಟ್ಟಡಕ್ಕೆ ಗೋಪುರದ ವಿನ್ಯಾಸ ಮಾಡಲಾಗಿತ್ತು. ಅದರ ತುದಿಯಲ್ಲಿ ಒಂದು ಗಡಿಯಾರ ಸಹ ಇತ್ತು. ಗೋಪುರದ ಗಡಿಯಾರ ಅಂದಿನ ಫ್ಯಾಶನ್. ಈ ಗೋಪುರ ರಾಜಾಜಿನಗರದ ನಮ್ಮ ಮನೆ ಮುಂದೆ ನಿಂತರೆ ಕಾಣುತ್ತಿತ್ತು, ಇದು ಸುಮಾರು ಎಪ್ಪತ್ತರ ದಶಕದಲ್ಲಿ. ಯಶವಂತ ಪುರದ ಚೆಕ್ ಪೋಸ್ಟ್ ಒಳ ಹೊಕ್ಕರೆ ಆಗ ಎಡಭಾಗವೂ ಸಹ ಮೈದಾನ ಇತ್ತು. ನಂತರ ಅಲ್ಲಿ ಒಂದು ವಿದ್ಯಾಶಾಲೆ ಶುರುವಾಯಿತು. + +IISc ಹಿಂಭಾಗದ ಪಕ್ಕದಲ್ಲಿ ಒಂದು ರುದ್ರಭೂಮಿ ಸುಮಾರು ವರ್ಷ ಇತ್ತು. ಈಗ ಸುತ್ತ ಮುತ್ತ ಬಹು ಮಹಡಿ ಕಟ್ಟಡಗಳು ತಲೆ ಎತ್ತಿವೆ ಮತ್ತು ರುದ್ರಭೂಮಿ ಜಾಗ ಕಿರಿದು ಆಗುತ್ತಾ ಬಂದಿದೆ. ಈಗಲೂ ಆಗಾಗ್ಗೆ ರಸ್ತೆ ತುಂಬಾ ಕಿತ್ತ ಹೂವಿನ ಹಾರದ ತುಂಡುಗಳು ಬಿದ್ದಿರುವುದು ನೋಡಿದರೆ ಸ್ಮಶಾನದ ಅವಶೇಷ ಇನ್ನೂ ಇದೆ ಅನಿಸುತ್ತದೆ. ಕೊಂಚ ಮುಂದೆ ಹೋದರೆ ಅಲ್ಲೊಂದು BTS ಬಸ್ ಸ್ಟಾಪ್ ತೊಂಬತ್ತರ ಕೊನೆಗೆ ಶುರು ಆಯಿತು. + +ಅಂದಹಾಗೆ ನಿಮಗೆ ಯಶವಂತಪುರ ಅನ್ನುವ ಹೆಸರು ಹೇಗೆ ಬಂದಿತು ಎಂದು ಹೇಳಬೇಕು. ಅದೇ ಯಶವಂತಪುರದ ನಿವಾಸಿ ಆಗಿದ್ದ ಗೆಳೆಯ ನಾರಾಯಣ ಮೂರ್ತಿ ಅವರನ್ನು ಮೊನ್ನೆ ಈ ಬಗ್ಗೆ ವಿಚಾರಿಸಿದೆ. ಮಹಾರಾಷ್ಟ್ರದ ಕಡೆಯಿಂದ ಕೆಲವು ಜನ ಗುಂಪು ಗುಂಪಾಗಿ ಬಂದು ಇಲ್ಲಿ ನೆಲೆಸಿದರು ಗುಂಪಿನ ನಾಯಕ ಯಶವಂತ ಪಾಟೀಲ್ ಎಂದೋ ಏನೋ. ಅದೇ ಹೆಸರು ಮುಂದುವರೆಯಿತು ಎಂದರು. ಜತೆಗೆ ಅಲ್ಲಿಗೆ ಸಂಬಂಧಪಟ್ಟ ಎಲ್ಲೂ ದಾಖಲಾಗಿರದ ಹಲವು ಸಂಗತಿಗಳನ್ನೂ ಹೇಳಿದರು. ಮುಂದೆ ಅದನ್ನೇ ಸೇರಿಸುತ್ತಾ ಹೋಗುತ್ತೇನೆ. ಈಗ ಯಶವಂತಪುರ ಹೆಸರಿನ ಬಗ್ಗೆ… + +(ಯಶವಂತಪುರ) + +ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಯಶವಂತ ರಾಯ ಎನ್ನುವವರು ಯಶವಂತಪುರದ ಪಾಳೆಗಾರರಾಗಿದ್ದರು. ಆಗ ಒಂದು ಪುಟ್ಟ ಹಳ್ಳಿ. ಪಾಳೆಗಾರರ ಹೆಸರೇ ಪುಟ್ಟ ಹಳ್ಳಿಗೆ ಬಂದದ್ದು. ಇನ್ನೊಂದು ಕತೆ ನನ್ನ ಸ್ನೇಹಿತ ಹಾಸ್ಯ ಬರೆಹಗಾರ ಹೇಳಿದ್ದು. ಯಶವಂತ ರಾವ್ ಬಲವಂತ ರಾವ್ ಚವಾಣ್ ಎನ್ನುವವರು ಕೇಂದ್ರ ಸರ್ಕಾರದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಾವಧಿಯಲ್ಲಿ ಮಂತ್ರಿಯಾಗಿ ಹಲವಾರು ಪ್ರತಿಷ್ಠಿತ ಹುದ್ದೆ ನಿರ್ವಹಿಸಿದ್ದರು. ಇಲ್ಲಿನ ಲೋಕಲ್ ಕಾಂಗ್ರೆಸ್ ನಾಯಕರು ಅವರ ಫ್ಯಾನ್ಸ್ ಆಗಿದ್ದರು. ಅವರ ಹೆಸರಲ್ಲಿ ಈ ಯಶವಂತಪುರ ಹುಟ್ಟಿತು ಅಂತ. ಹಿಂದೆ ಕುಮಾರಸ್ವಾಮಿ ಲೇಔಟ್ ಬಗ್ಗೆ ಆ ಹೆಸರು ಬಂದಿದ್ದ ರೀತಿ ಹೇಳಿದ್ದರು. ಹೇಳಿ ಕೇಳಿ ಹಾಸ್ಯ ಪಾಸ್ಯ ಬರೆಯೋದು ಅವರ ಚಟ. ಅವರ ಸ್ಥಳ ಪುರಾಣ ನಗೆ ಹುಟ್ಟಿಸಿತು. ಇನ್ನೊಂದು ನೂರು ವರ್ಷದ ನಂತರ ಇದೇ ಸತ್ಯ ಆದರೂ ಆಶ್ಚರ್ಯ ಇಲ್ಲ. ಈ ಕತೆ ಸತ್ಯ ಆಗುವ ಹಾಗಿದ್ದರೆ ನನ್ನದೂ ಒಂದು ಪುರಾವೆ ಇರಲಿ ಎಂದು ಒಂದು ಕತೆ ಹುಟ್ಟು ಹಾಕಿ, ಮುಂದಿನ ಚರಿತ್ರೆ ಬರೆಯುವವರಿಗೆ ಕೊಂಚ ತ್ರಾಸು ಕೊಟ್ಟಿದ್ದೇನೆ. ಆ ಕತೆ ಯಾವುದು ಅಂದಿರಾ? ಕನ್ನಡದ ಖ್ಯಾತ ಗಾಯಕ ಯಶವಂತ ಹಳಿಬಂಡಿ ಅವರ ಹೆಸರಿನಲ್ಲಿ ಸ್ಥಳೀಯ ಕನ್ನಡಿಗರು ಈ ಪ್ರದೇಶಕ್ಕೆ ಯಶವಂತ ಅವರ ಹೆಸರು ಇಟ್ಟರು. ಮುಂದೆ ಇದಕ್ಕೆ ಪುರ ಎನ್ನುವ ಪದ ಸೇರ್ಪಡೆಗೊಂಡಿತು…! ಚರಿತ್ರೆ ಆಗಾಗ ಪುನರ್ ವಿಮರ್ಶೆ ಆಗಬೇಕಂತೆ. ಆಗಲಿ ಮತ್ತು ಹೀಗೆ ಆಗದಿರಲಿ ಇವತ್ತಿನ ಯಶವಂತಪುರದ ಬಗ್ಗೆ AI ಹೇಳೋದು ಏನು ಗೊತ್ತಾ….. + +“………..Today, Yeshwantpur is a bustling neighbourhood with a mix of residential, commercial, and industrial areas, and it’s also home to the Yeshwantpur Railway Station, one of the major railway terminals in Bangalore.” + +ಇವತ್ತಿನ ಯಶವಂತಪುರ ಅಂದರೆ ಎಲ್ಲಾ ರೀತಿಯ ವಾಣಿಜ್ಯ, ವ್ಯವಹಾರ, ವಹಿವಾಟು ಮತ್ತು ಕೈಗಾರಿಕೆ ಹೊಂದಿರುವ ಜನ ಸಾಮಾನ್ಯರ ವಾಸಸ್ಥಳ ಸೇರಿದ ಪ್ರದೇಶ. ಇಲ್ಲಿನ ರೈಲ್ವೆ ಸ್ಟೇಶನ್ ನಗರದ ಒಂದು ದೊಡ್ಡ ರೈಲ್ವೆ ಟರ್ಮಿನಲ್. ಇನ್ನು ಕೆಲವೇ ವರ್ಷದಲ್ಲಿ ಇಲ್ಲಿನ ರೈಲ್ವೆ ಸ್ಟೇಶನ್ ದೇಶದ ಪ್ರಮುಖ ನಿಲ್ದಾಣ ಆಗುವತ್ತ ದೊಡ್ಡ ಹೆಜ್ಜೆ ಇಟ್ಟಿದೆ. ಅದಕ್ಕೆ ಪೂರಕವಾಗಿ ಬಿರುಸಿನ ಕಾಮಗಾರಿ ನಡೆಯುತ್ತಿದೆ. + + + +ಇದೇ ರಸ್ತೆಯಲ್ಲಿ ಒಂದು ನೂರೈವತ್ತು ಮೀಟರ್ ಮುಂದೆ ಹೋಗಿ.ಇಲ್ಲೊಂದು ಸೈನಿಕರ ನೆಲೆ ಇದ್ದ ಸ್ಥಳ ಉಂಟು. ಅದೇ ಸುಬೇದಾರ್ ಪಾಳ್ಯ. ಸುಬೇದಾರ್ ಹೆಸರಿಗೆ ಲಿಂಕ್ ಇರುವ ಮತ್ತೊಂದು ಬೆಂಗಳೂರಿನ ಸ್ಥಳ ಮೆಜೆಸ್ಟಿಕ್ ಏರಿಯಾದ ಸುಬೇದಾರ್ ಛತ್ರ…. ಯಶವಂತಪುರದ ಈ ಜಾಗ ನನಗೆ ಹೆಚ್ಚು ಆಪ್ತವಾಗಿದ್ದು ಎಪ್ಪತ್ತರ ದಶಕದಲ್ಲಿ. ಅಲ್ಲಿಯವರೆಗೆ ಒಂದೈದು ಸಲ ಇಲ್ಲಿಗೆ ಬಂದಿರ ಬಹುದೇನೋ..ಇದರ ಕತೆಗೆ ಮುಂದಕ್ಕೆ ಬರುತ್ತೇನೆ. + +(ಇನ್ನೂ ಇದೆ…) + +ಎಚ್. ಗೋಪಾಲಕೃಷ್ಣ ಬೆಂಗಳೂರಿನ BEL ಸಂಸ್ಥೆಯಲ್ಲಿ ಸ್ಪೋರ್ಟ್ಸ್ ಆಫೀಸರ್ ಜೊತೆಗೆ ಹಲವು ಹುದ್ದೆಗಳನ್ನು ನಿರ್ವಹಿಸಿ ಈಗ ನಿವೃತ್ತರಾಗಿದ್ದಾರೆ. ರಾಜಕೀಯ ವಿಡಂಬನೆ ಮತ್ತು ಹಾಸ್ಯ ಬರಹಗಳತ್ತ ಒಲವು ಹೆಚ್ಚು. \ No newline at end of file diff --git a/Kenda Sampige/article_320.txt b/Kenda Sampige/article_320.txt new file mode 100644 index 0000000000000000000000000000000000000000..ada133df278ee0e8e24a2373627f2225ce16cdba --- /dev/null +++ b/Kenda Sampige/article_320.txt @@ -0,0 +1,41 @@ + + +Starting tomorrow. Await arrival station. Ramacharya.(ನಾಳೆ ಹೊರಡುವೆನು. ಸ್ಟೇಶನಿನಲ್ಲಿ ಕಾದಿರಿ. ರಾಮಾಚಾರ್ಯ) + +ಅಂಕೋಲೆಯಿಂದ ಬಂದ ಈ ತಂತಿಯನ್ನು ನೋಡಿ, ಮಂಗಳೂರ ‘ಕಾಂಗ್ರೆಸ್ ಜನರು’ ಆನಂದೋತ್ಸಾಹದಿಂದ ತುಂಬಿದರು. ಜನಸಾಮಾನ್ಯರನ್ನು ರಾಜಕೀಯ ವಿಚಾರದಲ್ಲಿ ಹುರಿದುಂಬಿಸಲು ಆಚಾರ್ಯರ ಹರಿಕೀರ್ತನೆಗಳೇ ಪಂಚಾಕ್ಷರೀ ಮಂತ್ರವೆಂದು ಅವರು ದೃಢ ನಂಬಿದ್ದರು. ರಾಮಾಚಾರ್ಯರು ಇತರ ಕೀರ್ತನಕಾರರಂತೆ ಜರಿ ಪೇಟಾ ಕಟ್ಟಿಕೊಂಡು, ಥಳಥಳಿಪ ಅಲ್ಪಾಕು ನಿಲುವಂಗಿಯ ಮೇಲೆ ಮಿರಿಮಿರಿ ಶಾಲನ್ನು ಪಾದಗಳ ತನಕ ಬಿಟ್ಟು, ಪಟ್ಟೆ ಧೋತ್ರವುಟ್ಟು, ಆಡಂಬರದಿಂದ ಸುಂದರ ರಾವಣನಂತೆ ಮೆರೆದು, ಗಂಧಾಕ್ಷತೆ, ಪುಷ್ಪ ಮಾಲಾಲಂಕೃತರಾಗಿ, ಆರತಿ ಪಾದಪೂಜೆಗಳನ್ನು ಸ್ವೀಕರಿಸಿ, ನೀರಸ ಧಾರ್ಮಿಕ ತತ್ವಗಳಿಗೆ ಕಟ್ಟುಕಥೆಗಳ ಉಪ್ಪು ಖಾರ ಹಚ್ಚಿ, ಹರಕೆ ಸಲ್ಲಿಸಿ ಜನರಿಗೆ ಪುಣ್ಯ ಹಂಚುವವರಲ್ಲ. + +“ಒಂದೇ ನಾಮವು ಸಾಲದೇ| ಶ್ರೀ ಹರಿಯೆಂಬ |ಒಂದೇ ನಾಮವು ಸಾಲದೇ||ಒಂದೇ ನಾಮವು ಭವ | ಬಂಧನ ಬಿಡಿಸುವ |ದೆಂದು ವೇದಗಳು ಆ | ನಂದದಿ ಸಾರ್ವವು ||’’ಎಂಬ ಪೀಠಿಕೆಯಿಂದ ತನ್ನಷ್ಟಕ್ಕೆ ಒಂದೆಡೆ ಕುಳಿತು “ರಾಮ, ರಾಮ, ರಾಮ” ಅಥವಾ “ನಾರಾಯಣ, ನಾರಾಯಣ, ನಾರಾಯಣ” ಇಲ್ಲವೇ ಒಬ್ಬರ ಹೆಸರನ್ನೇ ಹೇಳುವುದರಿಂದ ಇನ್ನೊಬ್ಬರಿಗೆ ಕೋಪವುಂಟಾಗುವುದಾದರೆ ಬೆಳಗ್ಗೆ ನಾರಾಯಣ, ಸಂಜೆ ರಾಮನಾಮ ಸ್ಮರಣೆಯನ್ನು ಮಾಡಿದ ಕೂಡಲೇ ಪಾಪವೆಲ್ಲವೂ ದೂರವಾಗುವುದೆಂಬ ಜಡ ತತ್ವವನ್ನು ಗಿಳಿಬಾಯಿಪಾಠ ಹೇಳುವವರಲ್ಲ. ಪ್ರಕೃತದ ವಿದ್ಯಮಾನಗಳಿಗನುಗುಣವಾಗಿ ಧಾರ್ಮಿಕಕ್ಕೆ ರಾಜಕೀಯ ಬಣ್ಣವನ್ನು ಚಿತ್ತಾಕರ್ಷಕವಾಗಿ ಕೊಟ್ಟು, ನೂಲುವ ಚರಕವನ್ನು ಸುದರ್ಶನ ಚಕ್ರಕ್ಕೆ ಸರಿಹೋಲಿಸಿ, ಗಾಂಧಿ, ದಾಸ, ತಿಲಕರನ್ನು ಬ್ರಹ್ಮ, ವಿಷ್ಣು, ಮಹೇಶ್ವರರೆಂದು ಚಿತ್ರಿಸಿ, ಖಾದಿಯನ್ನು ಕಾಮಧೇನುವಿಗೆ ತುಲನೆಮಾಡಿ, ಜನರಲ್ಲೆಲ್ಲಾ ತಾತ್ಕಾಲಿಕವಾದ ಕ್ಷೋಭೆಯನ್ನುಂಟುಮಾಡುವವರು. ಇಂತಹ ಹರಿದಾಸರು ಬರುವುದೆಂದರೆ ಮಂಗಳೂರು ಕಾಂಗ್ರೆಸ್ ಕೆಲಸಗಾರರು ತಮ್ಮ ಪಾಲಿನ ಭಾಗ್ಯೋದಯವೆಂದೇ ಭಾವಿಸಿಕೊಂಡು ಹಿರಿಹಿರಿ ಹಿಗ್ಗಿದರು. + +ಮರುದಿವಸ ಇನ್ನೊಂದು ತಂತಿ! Started today. Arrange procession with elephants and band. Ramacharya. (ಇಂದು ಹೊರಟಿರುವೆನು. ಆನೆ ಮತ್ತು ಬೇಂಡಿನಿಂದ ಮೆರವಣಿಗೆಯನ್ನು ವ್ಯವಸ್ಥೆ ಮಾಡಿರಿ – ರಾಮಾಚಾರ್ಯ) ಎಂದೇ ತಂತಿಯ ವರ್ತಮಾನ. ಕೂಡಲೇ ಕಾಂಗ್ರೆಸ್ ಕೆಲಸಗಾರರು ಮೆರವಣಿಗೆಯ ಸನ್ನಾಹ ಮಾಡಿದರು. ಸ್ವಯಂ ಸೇವಕರ ಆವೇಶ, ಕಾಂಗ್ರೆಸ್ ಕಡೆಯವರ ಉತ್ಸಾಹ, ಜನರ ಉತ್ಸುಕತೆಯ ಮಧ್ಯೆ ಆಚಾರ್ಯರ ಸವಾರಿ ಬಂದಿಳಿಯಿತು. ಸ್ವಯಂ ಸೇವಕರ ಗಡಣದಿಂದ ಮೆರವಣಿಗೆಯು ಬಹು ಸಂಭ್ರಮದಿಂದ ನಡೆಯಿತು. + +ಇದೇ ಸುಸಂದರ್ಭವೆಂದು ಸ್ವಯಂಸೇವಕರು ನೂರಾರು ಗಾಂಧಿಟೊಪ್ಪಿಗಳನ್ನು ಬಲವಂತದಿಂದ ಸಿಕ್ಕಸಿಕ್ಕವರ ತಲೆಗಿಟ್ಟರು. ನಾನೂ ಒಬ್ಬ ಸ್ವಯಂಸೇವಕನಾಗಿದ್ದು ಮೌನವಾಗಿ ಎಲ್ಲವನ್ನೂ ನೋಡುತ್ತಿದ್ದೆನು. ಕೆಲವು ಸ್ವಯಂಸೇಕವರು ಆವೇಶಭರದಿಂದ ಆಚಾರ್ಯರನ್ನು ಹೊತ್ತುಕೊಂಡು ಹೋಗಲೂ ತಯಾರಿದ್ದರು. ಆಚಾರ್ಯರು ಓರ್ವ ಸದ್ಗೃಹಸ್ಥರ ಖಾಸಗೀ ಮನೆಯಲ್ಲುಳಿಯುವುದೆಂದು ನಿಶ್ಚಿತವಾಗಿತ್ತು. ಅಂತೆಯೇ ಮೆರವಣಿಗೆಯು ಆ ಮನೆಗೆ ನಡೆಯಿತು. ಆಚಾರ್ಯರು ತನಗೆ ಸಿದ್ಧವಾದ ನಿವಾಸಕ್ಕೆ ಹೋಗಿ, ಅವರನ್ನು ಒಂದೊಮ್ಮೆ ನೋಡಲು ನುಗ್ಗಿ ನುಸುಳುತ್ತಿದ್ದ ಜನರನ್ನು, ರುಕ್ಷಸ್ವದಿಂದ ಸಂಬೋಧಿಸಿ, “ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ….’’ ಎಂಬ ಪುರಾಣವಾದಿ ರಾಜಕೀಯ ಪ್ರಮುಖರ ಪಲ್ಲವಿಯನ್ನೆತ್ತಿಹಿಡಿದು, ಉದ್ವೇಗಪೂರ್ವಕವಾದ ಎರಡು ಮಾತು ಹೇಳಿ, ತನ್ನ ಸ್ವರ ಬಿದ್ದು ಹೋದುದರಿಂದ ಹೆಚ್ಚು ಮಾತಾಡಲಾಗುವುದಿಲ್ಲವೆಂದು ಹೇಳಿ ಜನರನ್ನು ಅಂದಿಗೆ ಬೀಳ್ಕೊಟ್ಟರು. + +ನಾನೊಬ್ಬ ಸ್ವಯಂಸೇವಕನಾಗಿದ್ದುದರಿಂದ ಆಚಾರ್ಯರ ಬಳಿ ಹೋಗುವ ‘ಪ್ರಿವಿಲೇಜು’ ನನಗಿದ್ದಿತು. ಆದುದರಿಂದ ನಾನು ರಾಮಾಚಾರ್ಯರ ಹತ್ತಿರ ಹೋಗಿ ಅವರ ಉಡುಪನ್ನು ಪರೀಕ್ಷಿಸಿದೆನು. ಅವರ ಹೆಂಡತಿ ಮಕ್ಕಳ ಉಡುಗೆಯನ್ನೂ ಲಕ್ಷ್ಯವಿಟ್ಟು ನೋಡಿದೆನು. ಆಚಾರ್ಯರ ಖದ್ದರಿನ ಜಿಬ್ಬವೊಂದು ಮತ್ತು ಗಾಂಧಿ ಟೊಪ್ಪಿಯ ಹೊರತು ಉಳಿದ ವಸ್ತ್ರವೆಲ್ಲಾ ಗಿರಣಿ ಅಥವಾ ವಿದೇಶಿಯಾಗಿದ್ದಿತು. ನಾನು ಮನಸ್ಸಿನೊಳಗೆನೇ ನಕ್ಕು ಹೊರ ನಡೆದೆನು. + +ಕೀರ್ತನ ಕಂಠೀರವ ರಾಮಾಚಾರ್ಯರ ಹರಿಕೀರ್ತನೆಗಳು ನಡೆಯತೊಡಗಿದವು. ಈ ಬಿರುದು ಈಗ ಕೆಲವರಿಟ್ಟುಕೊಳ್ಳುವಂತೆ ಸ್ವಯಂದತ್ತವಾದುದೋ ಎಂಬೀ ಸಂಶಯವೇ ನನ್ನಲ್ಲಿ ಪ್ರಬಲವಾಗಿದ್ದರೂ, ನಾನು ಆಚಾರ್ಯರನ್ನಿಲ್ಲಿ ಕೀರ್ತನ ಕಂಠೀರವರೆಂದೇ ಸಂಬೋಧಿಸುವೆನು. ಜನರ ಉತ್ಸಾಹವೇ ಉತ್ಸಾಹ! ಹಳ್ಳಿ ಪಳ್ಳಿಗಳಿಂದಲೂ ಜನರು ಬಂದು ಕಿಕ್ಕಿರಿದು ನೆರೆದು ಆಚಾರ್ಯರ ಹರಿಕಥೆ ಕೇಳಿ ಮೆಚ್ಚಿಹೋಗುತ್ತಿದ್ದರು. + +“ಬಂದನು ಸಿ. ಆರ್. ದಾಸನು ಭರದಲಿ |ಇಳಿದನು ಜಬ್ಬಲ್ ಪುರ ಸ್ಟೇಶನಲಿ ||ಎಂದು ಸ್ಪೂರ್ತಿಯಿಂದ ಹೇಳಿದೊಡನೆಯೇ ಜನರು ಮೆಚ್ಚಿ ಕೈ ಚಪ್ಪಾಳೆ ಹೊಡೆದುಬಿಡುತ್ತಿದ್ದರು. ಅನಂತರ ಆಚಾರ್ಯರು ಏನು ಹೇಳುವರೆಂಬ ಗೊಡವೆಯೇ ಅವರಿಗಿದ್ದಿಲ್ಲ. ಆಚಾರ್ಯರೂ ಮುಂದಿನ ಸೊಲ್ಲನ್ನು ಪೂರ್ತಿಗೊಳಿಸುವ ದಾರಿಗಾಣದೆ,“ತಾನ ತಾನನ ತಾನನ ತಾನನ ತಾನನ ತಾನನ ||ರಾಮಾರಮಾ ರಮ ರಾಮರಮಾ ರಮ ರಾಮರಮಾ ||ಎಂದು ಕೊನೆಗೊಳಿಸಿಬಿಡುತ್ತಿದ್ದರು. ಆಚಾರ್ಯರ ಹಾಡುಗಳು ಹೆಚ್ಚಾಗಿ ಇಂತಹವೇ. ಏನೆಂದರೂ ಒಮ್ಮೆಗೆ ತನ್ನ ವಾಕ್ ಚಮತ್ಕಾರದ ಪ್ರವಾಹದಲ್ಲಿ ಜನರನ್ನೆಲ್ಲಾ ಮುಳುಗಿಸಿ ಸೆಳೆದೊಯ್ಯುವ ಶಕ್ತಿಯೊಂದು ಕೀರ್ತನ ಕಂಠೀರವರಲ್ಲಿದ್ದಿತು. + +ಸ್ತ್ರೀಯರೆಂದರೆ ಆಚಾರ್ಯರಿಗೆ ವಿಶೇಷ ಪಕ್ಷಪಾತ. ಕೀರ್ತನೆ ಮುಗಿದ ಕೂಡಲೆ ಸ್ವರಾಜ್ಯಫಂಡಿಗೆ ಹಣ ಆಭರಣ ಕೂಡಿಸಲು ಆಚಾರ್ಯರೇ ತೊಡಗುತ್ತಿದ್ದರು. ಸ್ತ್ರೀಯರು ತಮ್ಮ ಆಭರಣಗಳನ್ನು ಕೊಡಬೇಕೆಂದು ಪ್ರತ್ಯೇಕವಾಗಿ ಉತ್ತೇಜಿಸುತ್ತಿದ್ದರು. ಆಚಾರ್ಯರ ಉತ್ತೇಜಕ ವಾಕ್ಸರಣಿಯ ಬಲೆಯಲ್ಲಿ ಸಿಕ್ಕಿದ ಎಂತಹ ಲೋಭಿಯ ಮನಸ್ಸೂ ಒಮ್ಮೆಗೆ ತಲ್ಲಣವಾಗುತ್ತಿತ್ತು. ಹಣ ಮಾತ್ರವಲ್ಲದೆ ಉಂಗುರ, ಬಳೆ, ಸರ, ಒಂಟಿ ಮೊದಲಾದ ಆಭರಣಗಳೂ ಸ್ವರಾಜ್ಯ ಫಂಡಿಗೆ ಅರ್ಪಿತವಾದವು. ಕೊನೆಯಲ್ಲಿ ಆಚಾರ್ಯರೇ ಅವುಗಳನ್ನೆಲ್ಲಾ ಏಲಂ ಹಾಕಿ ಸ್ಫೂರ್ತಿಯ ಮಾತುಗಳಿಂದ ಮೇಲಾಟವೆಬ್ಬಿಸಿ ಆದಷ್ಟು ಹೆಚ್ಚಿನ ಹಣ ಪಡೆಯುತ್ತಿದ್ದರು. + +ಹೊಸತಾಗಿ ಹೊರಟ ಭೂತದ ಪ್ರಭಾವದಂತೆ ಕೀರ್ತನ ಕಂಠೀರವರ ಪ್ರಭಾವ ಹಬ್ಬಿಬಿಟ್ಟಿತು. ಆಚಾರ್ಯರು ಅದೇಕೋ ಸ್ತ್ರೀಯರಿಗಾಗಿ ಪ್ರತ್ಯೇಕ ಹರಿಕೀರ್ತನೆಯೊಂದನ್ನು ಏರ್ಪಡಿಸಿದರು. ಪುರುಷರಾರೂ ಬರಬಾರದೆಂದು ಆಜ್ಞೆ ಮಾಡಿದರು. ನಾನು ಸ್ವಯಂಸೇವಕನೆಂದು ಆಜ್ಞೆಯನ್ನು ಉಲ್ಲಂಘಿಸಿ ಹೋಗಿಬಿಟ್ಟೆನು. ಆಚಾರ್ಯರಿಗೆ ಆರತಿ, ಪುಷ್ಪಹಾರ ಅರ್ಪಣೆ, ಪಾದಪೂಜೆಗಳು ಸಾಂಗವಾಗಿ ನಡೆದವು. ಆಚಾರ್ಯರ ಅಂದಿನ ಪರಿಯೇ ಬೇರೆ. ಹಿಂದೂ ಸ್ತ್ರಿಯರ ಪಾತಿವ್ರತ್ಯ, ದಾನಧರ್ಮ ಬುದ್ಧಿಗಳನ್ನೆಲ್ಲಾ ಬಹಳವಾಗಿ ಹೊಗಳಿ ಪುರುಷರ ಅನೀತಿ ಅನಾಚಾರಗಳನ್ನು ತೆಗಳಿದರು. + +ಹರಿಕಥೆಯ ನಂತರ ತಾನೇ ಹರಿವಾಣ ಹಿಡಿದು,“ಕನ್ನಡದಾಸನು ಬೇಡಲು ಬಂದಿಹ| ದಾನವ ದಯದಿಂ ಕೊಡಿರಮ್ಮಾ ||’’ಎಂಬೀ ಪಲ್ಲವಿ ಹಾಡುತ್ತಾ ಭಿಕ್ಷೆಗೆ ಹೊರಟರು. ದಯಾದ್ರಹೃದಯರಾದ ಸ್ತ್ರೀಯರು ತಮ್ಮ ಮನೆಯವರೇನೆನ್ನುವರೆಂಬ ಗೊಡವೆಯೇ ಇಲ್ಲದೆ, ಆವೇಶದಿಂದ ವಿಧವಿಧ ಆಭರಣಗಳನ್ನು ಹರಿವಾಣದ ಮೇಲೆ ಸುರಿದರು. + +******* + +ಆಚಾರ್ಯರು ಯಾವ ಸದ್ಗೃಹಸ್ಥರ ಮನೆಯಲ್ಲಿ ಉಳಿದಿದ್ದರೋ ಅಲ್ಲಿಂದವರು ಕೂಡಲೇ ಬಿಟ್ಟು ಹೋಗಬೇಕೆಂದು ಆ ಗೃಹಸ್ಥರು ಹೇಳಿದುದನ್ನು ಕೇಳಿ ಕಾಂಗ್ರೆಸ್ ಕೆಲಸಗಾರರೆಲ್ಲಾ ಚಕಿತರಾದರು. ಈ ಸದ್ಗೃಹಸ್ಥರ ದುರ್ವರ್ತನೆಗಾಗಿ ಅವರನ್ನು ಜನರೆಲ್ಲಾ ಹಳಿಯತೊಡಗಿದರು! + + + +ಆಚಾರ್ಯರು ಹಳ್ಳಿಹಳ್ಳಿಗಳಿಗೂ ಹೋಗಿ ಕೀರ್ತನೆ ಮಾಡಲಾರಂಭಿಸಿದರು. ಅನಂತರಾಮ ಭಟ್ಟರೆಂಬುವರು ತನ್ನ ಹಳ್ಳಿಗೆ ಕೀರ್ತನ ಕಂಠೀರವರನ್ನು ಕರೆಸಿ ಹರಿಕೀರ್ತನೆ ಮಾಡಿಸಿದರು. ಭಟ್ಟರು ಆ ಪ್ರಾಂತದಲ್ಲಿ ರಾಷ್ಟ್ರಸೇವೆಗಾಗಿ ತನ್ನ ತನುಮನಧನವನ್ನರ್ಪಿಸುತ್ತಿರುವರು. ತನ್ನ ಊರಿನ ಆಸುಪಾಸಿನ ಜನರಲ್ಲಿ ರಾಜಕೀಯ ಜಾಗೃತಿಯನ್ನುಂಟು ಮಾಡುವ ಸಂದರ್ಭವೇನು ದೊರೆತರೂ ಅದನ್ನವರು ಎಂದೂ ಬಿಟ್ಟುಬಿಡುತ್ತಿದ್ದಿಲ್ಲ. + +ಕೀರ್ತನ ಕಂಠೀರವರಿಗೆ ಅನಂತರಾಮಭಟ್ಟರ ಮನೆಯಲ್ಲಿ ಭೋಜನ ಸತ್ಕಾರವು ಬಹಳ ಸಂಭ್ರಮದಿಂದ ನಡೆಯಿತು. ಮರುದಿವಸ ಬೆಳಿಗ್ಗೆ ಆಚಾರ್ಯರು ಹಿಂತೆರಳುವವರಿದ್ದರು. ಅನಂತರಾಮ ಭಟ್ಟರು ಆಚಾರ್ಯರಿಗೆ ಭೋಜನ ಸತ್ಕಾರ ಮಾತ್ರವಲ್ಲ, ಆಭರಣಗಳನ್ನೂ ಅರ್ಪಿಸಿ, ತಾನೂ ಗೌರವ ಪಡೆಯಬೇಕೆಂದಿದ್ದರು. ಅವರ ಪತ್ನಿಯೂ ಇದಕ್ಕೆ ಒಪ್ಪಿದರು. ಮರುದಿನ ಆಚಾರ್ಯರು ಬೀಳ್ಕೊಟ್ಟಾಗ ಅವರು ತನ್ನ ಕೈಯ ಚಿನ್ನದ ಬಳೆಗಳನ್ನು ಕಳಚಿಕೊಟ್ಟರು. ಆಚಾರ್ಯರು ಅವರಿಬ್ಬರ ತಲೆಯ ಮೇಲೂ ಪ್ರಶಂಸೆಯ ಮಳೆಗರೆದು, “ಈ ಆಭರಣಗಳು ದಾಸ್ಯದಿಂದ ನರಳುವ ಹಿಂದೂ ಮಾತೆಯ ಬಂಧವಿಮೋಚನೆಗಾಗಿ ಉಪಯೋಗಿಸಲ್ಪಡುವವು” ಎಂದು ಆಶ್ವಾಸನೆಯಿತ್ತರು. + + + +ಕೆಲವು ದಿನಗಳು ಗತಿಸಿ ಹೋದವು. ಅನಂತರಾಮ ಭಟ್ಟರ ಪತ್ನಿಯು ಮಂಗಳೂರಲ್ಲಿದ್ದ ತನ್ನ ತಾಯಿ ಮನೆಗೆ ಬಂದಿದ್ದರು. ಒಂದು ದಿನ ಸಂಜೆ ನೆರೆಮನೆಯ ವೇಶ್ಯೆ ಕಲಾವತಿಯೊಡನೆ ಮಾತನಾಡುತ್ತಿದ್ದಾಗ ಆಕೆಯ ಮುಂಗೈಯಲ್ಲಿ ತಾನು ಆಚಾರ್ಯರಿಗೆ ಅರ್ಪಿಸಿದ ಬಳೆಗಳನ್ನು ಕಂಡು ಅವರ ಎದೆ ಧಸ್ಸೆಂದಿತು.‘ಈ ಬಳೆಗಳು ದಾಸ್ಯದಿಂದ ನರಳುತ್ತಿರುವ ಹಿಂದೂ ಮಾತೆಯ ಬಂಧವಿಮೋಚನೆ ಗಾಗಿ ಉಪಯೋಗಿಸಲ್ಪಡುವವು!’ + +******* + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_321.txt b/Kenda Sampige/article_321.txt new file mode 100644 index 0000000000000000000000000000000000000000..bbbf82ddf69dc1da9805a68e5bfc8b30e128bd10 --- /dev/null +++ b/Kenda Sampige/article_321.txt @@ -0,0 +1,29 @@ + + +ಹಿಂದೆಂದೋ ಕಾಲೇಜು ದಿನಗಳಲ್ಲಿ ಪ್ರೀತಿಸಿದ್ದ ಜೋಡಿಯೊಂದು ಮತ್ತೆ ಕೀ ಚೈನ್ ಪಾರ್ಟಿಯ ನೆಪದಲ್ಲಿ ಜೊತೆಯಾಗುವ ಮೊದಲ ಕಥೆಯೇ ಎಲ್ಲಿಲ್ಲದ ನಡುಕ ಹುಟ್ಟಿಸಿ, ಹೀಗೂ ಇರುತ್ತಾ ಎಂಬ ಆತಂಕ, ಒಂದುರೀತಿ ಕುತೂಹಲ ಮಿಶ್ರಿತ ಭಯದಲ್ಲಿ ಮೊಬೈಲ್ ಮುಚ್ಚಿಟ್ಟವಳು ಒಂದು ಇಡೀ ದಿನ ಆ ಕಥೆಗಳನ್ನು ಓದಲು ಹೋಗಲಿಲ್ಲ. + +ನಾನು ಯಾವತ್ತೂ ಹೇಳುವ ಹಾಗೆ ವಿಕ್ಷಿಪ್ತ ಬರಹಗಾರರ ಒಂದು ಬಳಗವೇ ನನ್ನ ಸುತ್ತ ಇದೆ. ಅದರಲ್ಲಿ ವಿ ಆರ್ ಕಾರ್ಪೆಂಟರ್ ಹೆಸರು ಮೊದಲನೆಯದ್ದು. ಕವನವೇ ಇರಲಿ, ಕಾದಂಬರಿಯೇ ಇರಲಿ ಅದರಲ್ಲೊಂದು ವಿಚಿತ್ರ ಉನ್ಮಾದವನ್ನು ಸೃಷ್ಟಿಸಲು ಯಶಸ್ವಿಯಾಗುತ್ತದೆ ಎನ್ನುವುದಷ್ಟೇ ಅಲ್ಲ ಓದುಗನ ಮನಸ್ಸಿನಲ್ಲಿ ಒಂದು ಸಂಚಲನವನ್ನು ಸೃಷ್ಟಿಸಿ ಬಿಡುತ್ತದೆ. ಹೀಗಾಗಿ ನನಗೆ ಅರಿವಿರದ ಹೊಸ ಪ್ರಪಂಚವೊಂದರ ಬಾಗಿಲು ತಟ್ಟುತ್ತಿದ್ದೇನೆ ಎಂಬ ತಲ್ಲಣದಲ್ಲಿಯೇ ನಾನು ಈ ಕಥೆಗಳನ್ನು ಓದಲು ಪ್ರಾರಂಭಿಸಿದ್ದು. + +(ವಿ.ಆರ್. ಕಾರ್ಪೆಂಟರ್) + +(ವಿ.ಆರ್. ಕಾರ್ಪೆಂಟರ್) + +ಬ್ರಾಹ್ಮಿನ್ ಕೆಫೆ ಎನ್ನುವ ಪಿಡಿಎಫ್ ಒಂದು ಝಗ್ಗನೆ ಮೊಬೈಲ್ ಗೆ ಬಂದು ಕುಳಿತಾಗ ಆ ಹೆಸರು ಆಶ್ಚರ್ಯ ಹುಟ್ಟಿಸಿರಲಿಲ್ಲ. ಯಾಕೆಂದರೆ ಎಷ್ಟೋ ದಿನಗಳಿಂದ ಗೆಳೆಯ ವಿ ಆರ್ ಕಾರ್ಪೆಂಟರ್ ಈ ಹೆಸರನ್ನು ಹೇಳುತ್ತಲೇ ಇದ್ದ. ಕೆಲವೊಮ್ಮೆ ಅಲ್ಲಿನ ಕತೆಗಳ ಒಂದಿಷ್ಟು ಎಳೆಗಳನ್ನೂ ಕೂಡ. ಆದರೆ ಕತೆಗಳು ಪೂರ್ಣಗೊಂಡ ನಂತರ ಅದು ಪಡೆದುಕೊಂಡ ತಿರುವುಗಳನ್ನು ಕಂಡಾಗ ಮೈ ಜುಂ ಎನಿಸುವಂತಾಗುತ್ತದೆ. ಒಟ್ಟೂ ಒಂಬತ್ತು ಕಥೆಗಳನ್ನು ಹೊಂದಿರುವ ಈ ಸಂಕಲನದ ಕಥೆಗಳನ್ನು ಒಮ್ಮೆ ಓದಲು ಪ್ರಾರಂಭಿಸಿದರೆ ಎಲ್ಲಿಯೂ ಮಧ್ಯದಲ್ಲಿ ಬಿಟ್ಟು ಎದ್ದು ಹೋಗುವಂತಿಲ್ಲ. + +ಅದರಲ್ಲಿಯೂ ಮೊದಲ ಕಥೆಯಂತೂ ಇಡೀ ಸಂಕಲನದ ಹೈಲೈಟ್. ನವಿರಾದ ಪ್ರೇಮಿಗಳವರು. ಆತ ಹೋರಾಟದ ಬದುಕಿನಲ್ಲಿ ನಂಬಿಕೆ ಇರುವಾತ. ಈಕೆ ಮುಟ್ಟಿದರೂ ನಲುಗಿ ಹೋಗುವವಳು. ಶತ ಒರಟನನ್ನು ಸಹಿಸಲಾಗದೇ ಅವಳು ಅವನನ್ನು ದೂರ ಮಾಡಿಕೊಂಡರೂ ಅವನದ್ದೇ ಕನಸು. ಆದರೆ ಅವರಿಬ್ಬರೂ ಕೀ ಚೈನ್ ಪಾರ್ಟಿಯ ಮುಖಾಂತರ ಸೇರಿದ್ದು ಒಂದು ರೀತಿ ಅಜಾನಕ್ ತಿರುವು. ಹಾಗೇಯೇ ಓದುಗನಿಗೆ ಒಂದು ದೊಡ್ಡ ಶಾಕ್ ನೀಡುವಲ್ಲೂ ಅದು ಯಶಸ್ವಿಯಾಗುತ್ತದೆ. + +ಪ್ರವಾಸಿಗರು ಬಂದು ತಾವೇ ಅಡುಗೆ ಮಾಡಿಕೊಂಡು ಊಟ ಮಾಡಿ ಒಂದಿಷ್ಟು ಹಣ ನೀಡಿ ಹೋಗುವ ಈರಣ್ಣ ಮತ್ತವನ ಮಗ ಮಹೇಶನ ಹೊಟೆಲು ಹೆಸರೂ ಇಲ್ಲದೇ ಪ್ರಸಿದ್ಧವಾಗಿದ್ದು, ಆದರೆ ಪ್ರವಾಸಿಗರ ಒತ್ತಾಯಕ್ಕೆ ಓದಲು ಬರದೇ ಒಂದು ಹೆಸರು ತಂದು ನೇತು ಹಾಕಿದ್ದಲ್ಲದೆ ಅಲ್ಲಿಗೆ ಬಂದ ಹುಡುಗರ ಗುಂಪೊಂದು ಬೀಪ್ ಅಡುಗೆ ಮಾಡಿ, ಅದನ್ನು ಫೇಸ್ ಬುಕ್ ಲೈವ್ ನಲ್ಲಿ ಹಾಕಿ, ಹೊಟೇಲ್ ನ ಬೋರ್ಡ್ ತೋರಿಸಿದ ನಂತರ ಬಂದ ಗುಂಪೊಂದು ಬ್ರಾಹ್ಮಣ ಕೆಫೆ ಎಂಬ ಹೆಸರಿನ ಆ ಪುಟ್ಟ ಗೂಡನ್ನು ಸುಟ್ಟು ಹಾಕಿದ ಕಥೆಯು ಮನಸೆಳೆಯುವಂತಿದೆ. + +‘ಡೆತ್ ನೋಟ್’ ಕತೆ ಸೈನಿಕನೊಬ್ಬನ ಕಡೆಯ ದಿನಗಳಲ್ಲಿ ತಾನು ಸೈನ್ಯದಲ್ಲಿರುವಾಗ ಮಾಡಿದ ಅತ್ಯಾಚಾರದ ಬಗ್ಗೆ ಹೇಳಿ ದುಃಖಪಟ್ಟರೆ, ‘ಖಂಡವಿದಕೊ ಮಾಂಸವಿದಕೋ’ ಕಥೆಯು ಮೇಲ್ವರ್ಗದ ಶಾಂತಕ್ಕ ಜೊತೆ ಹೋದ ಸಾವಂತ್ರಿ ಸಾವಿತ್ರಿಯಾಗಿ ಹೆತ್ತ ಅಮ್ಮನನ್ನೇ ದೂರಿಕರಿಸಿದರೆ ಮ್ಯಾರಿಡ್ ವರ್ಜಿನ್ ಇಬ್ಬರ ಫೇಸ್ ಬುಕ್ ಚಾಟನ್ನು ಹೇಳುತ್ತ ಸಾಮಾಜಿಕ ಜಾಲತಾಣದಲ್ಲಿ ನಾವೆಷ್ಟು ಬೆತ್ತಲಾಗುತ್ತಿದ್ದೇವೆ ಎಂಬುದನ್ನು ಎತ್ತಿ ತೋರಿಸುತ್ತದೆ. ‘ಅಟ್ರಾಸಿಟಿ’ ಕಥೆಯು ಕಾರಣವಲ್ಲದ ಕಾರಣಕ್ಕೆ ರಾಜಕೀಯ ದಾಳವಾಗಿ ಅಟ್ರಾಸಿಟಿಯನ್ನು ಬಳಸುವ ಪರಿಯನ್ನು ತಿಳಿಸುತ್ತದೆ. + +ನೋಟ್ ಬಂದಿ ಕಥೆಯು ಜುಬೇದಾ, ಕಲೀಲ ಡಿಸೋಜನ ಸುತ್ತ ತಿರುಗುತ್ತಿದೆ ಅನಿಸಿದರೂ ಕಥೆಯ ಕೊನೆಯು ನೋಟ್ ಬ್ಯಾನ್ ಆಗಿ ಆದ ಅನಾಹುತಗಳ ಬಗ್ಗೆ ತಿಳಿಸುತ್ತದೆ. ಯುದ್ಧ ಮತ್ತು ಶಾಂತಿ ಅನಾವಶ್ಯಕ ಯುದ್ಧದ ಪರಿಣಾಮಗಳನ್ನು ಯುದ್ಧದಿಂದ ಹಿಂದಿರುಗಿದ ಸೈನಿಕನೊಬ್ಬನಿಂದಲೇ ಹೇಳಿಸುತ್ತದೆ. ಯುದ್ಧದ ಘೋರ ಪರಿಣಾಮ ಬೆಚ್ಚಿಬೀಳುವಂತೆ ಮಾಡುತ್ತದೆ. ಒಂದು ಸಂದರ್ಶನ ಕಥೆಯು ತಾನು ಸಂದರ್ಶಿಸಬೇಕಾದ ವ್ಯಕ್ತಿಯ ಕುರಿತಾದ ಪೂರ್ವ ನಿಯೋಜಿತ ಭಾವನೆಗಳನ್ನು ಹೇಳುತ್ತದೆ. + + + +ಒಟ್ಟಿನಲ್ಲಿ ಇಡೀ ಸಂಕಲನವು ವರ್ತಮಾನದ ತಲ್ಲಣಗಳನ್ನು ಸಮರ್ಥವಾಗಿ ಬಿಚ್ಚಿಡುತ್ತದೆ. ಬ್ರಾಹ್ಮಿನ್ ಕೆಫೆ, ನೋಟ್ ಬಂದಿ ಕಥೆಗಳು ಪ್ರಸ್ತುತ ಪರಿಸ್ಥಿತಿಗೆ ಹಿಡಿದ ಕನ್ನಡಿಯಂತಿದ್ದರೆ ಖಂಡವಿದಕೋ ಮಾಂಸವಿದಕೋ ಹಾಗೂ ಅಟ್ರಾಸಿಟಿ ಕಥೆಗಳು ಸಾಮಾಜಿಕ ಸ್ಥರಗಳನ್ನು ಹೇಳುತ್ತಲೇ ಜನರ ಮನಸ್ಥಿತಿಯನ್ನು ನಿರೂಪಿಸುವ ಕೆಲಸ ಮಾಡುತ್ತವೆ. + + + +ವರ್ಗ ಬೇಧವು ಸಮಾಜದೊಳಗೆ ಬಿಟ್ಟ ಬೇರುಗಳ ಆಳವನ್ನು ಇಲ್ಲಿ ತಿಳಿಯಬಹುದು. ಯುದ್ಧ ಮತ್ತು ಶಾಂತಿ ಹಾಗೂ ಡೆತ್ ನೋಟ್ ಕಥೆಗಳು ಸೈನ್ಯದ ಕುರಿತಾದ, ಸೈನಿಕರ ಕುರಿತಾದ ನಮ್ಮಲ್ಲಿ ಅಡಗಿರುವ ಭಾವನೆಗಳನ್ನು ಬದಲಾಯಿಸುತ್ತದೆ. ಸೈನಿಕರ ಹೆಸರು ಹೇಳಿ ತಮ್ಮ ರಾಜಕೀಯ ಲಾಭ ಪಡೆವ ನಮ್ಮ ನರಿಬುದ್ಧಿಯನ್ನು ತೆರೆದಿಡುತ್ತಲೇ ಅವರನ್ನು ಮಾನವರನ್ನಾಗಷ್ಟೇ ನೋಡಬೇಕಾದ ಅಗತ್ಯತೆಗಳನ್ನು ಒತ್ತಿ ಹೇಳುತ್ತವೆ. ಇತ್ತೀಚೆಗೆ ಸಂದರ್ಶನದ ಹೆಸರಲ್ಲಿ ಮಾಧ್ಯಮಗಳು ತಮಗೆ ಬೇಕಾದವರನ್ನು ಕರೆಸಿ ಅವಮಾನ ಪಡಿಸಲು ಆಡುತ್ತಿರುವ ಗೇಮ್ ಅನ್ನು ನೆನಪಿಸುತ್ತದೆ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_322.txt b/Kenda Sampige/article_322.txt new file mode 100644 index 0000000000000000000000000000000000000000..5933363776dc7829825e2a142f76911c70ff6381 --- /dev/null +++ b/Kenda Sampige/article_322.txt @@ -0,0 +1,59 @@ + + +ಪ್ರೀತಿ ನದಿಯಂತೆ ಎಂದು ಜಿಡ್ಡು ಕೃಷ್ಣಮೂರ್ತಿ ಹೇಳುತ್ತಾರೆ. ಇದು ವಸುಧೇಂದ್ರ ಅವರ ಇತ್ತೀಚಿನ ತೇಜೋ-ತುಂಗಭದ್ರಾ ಕಾದಂಬರಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸರಿಯಾದ ಮಾತು. ಹಾಗೆ ಬದುಕೂ ಸಹ. ಇಡೀ ಕಾದಂಬರಿಯ ಉದ್ದಕ್ಕೂ ಇತಿಹಾಸದ ಒಂದು ಕಾಲಘಟ್ಟದಲ್ಲಿ ಅಂದರೆ 1492-1518 ನಡೆದಿರಬಹುದಾದ ಮತ್ತು ನಡೆದಿರುವ ಕ್ರೌರ್ಯ ಮತ್ತು ಹಿಂಸೆಗಳ ನಡುವೆ ಜೋಡಿಯೊಂದು ತಮ್ಮ ಪ್ರೀತಿಯನ್ನು ಸಾಫಲ್ಯಗೊಳಿಸಿಕೊಳ್ಳಲಾಗದೆ ಬದುಕಿನ ಅನಿವಾರ್ಯ ಕಾರಣಗಳಿಂದಾಗಿ ಬೇರ್ಪಡುವ ನೋವಿನ, ದುಃಖದ ಕತೆಯನ್ನು ಕಾಣುತ್ತೇವೆ. ಜೊತೆಗೆ ಈ ಕದಾಂಬರಿಯು ತನ್ನ ಒಡಲೊಳಗೆ ಮಧ್ಯಕಾಲೀನ ಅಂದರೆ ಹದಿನೈದು-ಹದಿನಾರನೇ ಶತಮಾನದ ಕರ್ನಾಟಕ ಮುಖ್ಯವಾಗಿ ವಿಜಯನಗರ, ಗೋವ ಮತ್ತು ಪೋರ್ಚುಗಲ್ ನ ರಾಜಕೀಯ ಚಿತ್ರಣವನ್ನು ಕೊಡುತ್ತದೆ. + +ಈ ಕಾದಂಬರಿಯ ಉದ್ದೇಶ ಕೇವಲ ಆ ಕಾಲಘಟ್ಟದ ರಾಜಕೀಯ ಚಿತ್ರಣವನ್ನಷ್ಟೇ ಕೊಡುವುದಲ್ಲ; ಬದಲಿಗೆ ಸಾಮಾನ್ಯರ ಬದುಕು ಹೇಗೆ ಇತ್ತು ಎನ್ನುವುದನ್ನು ಆ ಕಾಲದ ಸಂಸ್ಕೃತಿ, ಆಚರಣೆ, ನಂಬಿಕೆ, ರೀತಿ-ರಿವಾಜುಗಳ ಮೂಲಕ ನೋಡಲು ಪ್ರಯತ್ನಿಸುತ್ತದೆ. ಪ್ರಭುತ್ವದ ಹಿಂಸೆಯ ವಿರಾಟ್ ಸ್ವರೂಪ ಮತ್ತು ಆಚರಣೆಗಳ ಹೆಸರಿನಲ್ಲಿ ನಡೆಯುವ ಹೆಣ್ಣಿನ ಮೇಲಿನ ಶೋಷಣೆಯನ್ನೂ ಸಹ ತುಂಬಾ ಮಾರ್ಮಿಕವಾಗಿ ಚಿತ್ರಿಸುತ್ತದೆ. ಮಿಶಿಲ್ ಫೂಕೋ ನ ಪ್ರಭುತ್ವ ಮತ್ತು ಹಿಂಸೆಯ ಕುರಿತಾಗಿ ಇರುವ ಚರ್ಚೆಯ ಆಧಾರದ ಮೇಲೆ ಇನ್ನಷ್ಟು ಗಂಭೀರವಾಗಿ ಈ ಸಂಗತಿಗಳ ಮೇಲೆ ಬೆಳಕನ್ನು ಚೆಲ್ಲಬಹುದು. ಧಾರ್ಮಿಕ ಆಚರಣೆಯ ಮೂಲಕ ಹೆಣ್ಣನ್ನು ಸೈಕಾಲಾಜಿಕಲ್ ಆಗಿ ಡಿಸ್ಟರ್ಬ್ ಮಾಡಿ, ಸಾವಿನ ಕೂಪಕ್ಕೆ ತಳ್ಳುವುದನ್ನು ವಿಸ್ತೃತವಾಗಿ ಚರ್ಚಿಸಲು ಈ ಕಾದಂಬರಿಯಲ್ಲಿ ಬರುವ ಕೆಲವು ಘಟನೆಗಳು ಹೆಚ್ಚಿನ ಒತ್ತನ್ನು ಕೊಡುತ್ತವೆ. + +(ವಸುಧೇಂದ್ರ) + +ಸುಮಾರು ಇಪ್ಪತ್ತಾರು ವರ್ಷಗಳ ಕಾಲ ನಡೆಯುವ ಈ ಕಾದಂಬರಿಯ ಅಂತ್ಯವು ಅನಿರೀಕ್ಷಿತ ಮತ್ತು ಆ ದೃಶ್ಯ ಕನ್ನಡ ಕಾದಂಬರಿಲೋಕದಲ್ಲಿ ಒಂದು ಬಹುಮುಖ್ಯವಾದಂತಹದ್ದಷ್ಟೇ ಅಲ್ಲ, ಅದು ಒಂದು ಸದಾ ಕಾಲ ನೆನಪಿನಲ್ಲಿಟ್ಟುಕೊಳ್ಳುವಂತಹದ್ದಾಗಿದೆ. ಇದರ ಆರಂಭ ಭಾರತದ ಮಸಾಲೆ ಪದಾರ್ಥಗಳು ಯುರೋಪಿನ ದೇಶಗಳನ್ನು ಹೇಗೆಲ್ಲ ತಲೆಕೆಡಿಸಿದವು ಮತ್ತು ವಸಾಹತುಕರಣಕ್ಕೆ ನಾಂದಿಹಾಡಿದವು ಎನ್ನುವುದನ್ನು ಸೂಚ್ಯವಾಗಿ ಒಂದು ಎಳೆಯನ್ನಷ್ಟೇ ಬಿಚ್ಚಿ, ನಂತರ ವಸಾಹತುಕರಣದ ಹಿಂಸೆಯ ವಿರಾಟ್ ಸ್ವರೂಪವನ್ನು ನಿಧಾನ ಬಿಚ್ಚತೊಡಗುತ್ತದೆ. ಮಧ್ಯಕಾಲೀನ ಯುಗದಲ್ಲಿ ಭಾರತದ ಮಸಾಲೆ ವಾಸನೆಯು ಯುರೋಪಿನ ಅನೇಕ ರಾಷ್ಟ್ರಗಳ ನಿದ್ದೆಯನ್ನು ಕೆಡಿಸಿದ್ದಷ್ಟೇ ಅಲ್ಲದೆ ಅನೇಕ ರಾಜಕೀಯ ಪಲ್ಲಟಗಳಿಗೂ ಸಾಕ್ಷಿಯಾಗಿದೆ. + +ಇಂಗ್ಲಿಷ್ ಕವಿ ಡನ್ ಸಹ ತನ್ನ ಒಂದು ಕವಿತೆಯಲ್ಲಿ ‘ಇಂಡಿಯಾಸ್ ಸ್ಪೈಸ್’ ಎನ್ನುವ ಪದ ಪುಂಜವನ್ನು ಬಳಸುತ್ತಾನೆ. ಕಾದಂಬರಿ ಆರಂಭವಾಗುವುದೇ ಹೆಣ್ಣೊಬ್ಬಳು ಅರಮನೆಯ ಅಡುಗೆ ಮನೆಯಿಂದ ಮಸಾಲೆ ಪದಾರ್ಥಗಳನ್ನು ಕದ್ದು, ಸಿಕ್ಕಿಬಿದ್ದು ಧಾರುಣವಾಗಿ ಸಾಯುವುದರ ಮೂಲಕ. ಇದು ಕಾದಂಬರಿಯಲ್ಲಿ ಮುಂದೆ ಕಾಣಬಹುದಾದ ರಕ್ತಸಿಕ್ತ ಹಿಂಸೆಯ ಮತ್ತು ಅಮಾನುಷ ಕ್ರೌರ್ಯಗಳ ರೋಚಕ ಕತೆಯ ಮುನ್ನುಡಿಯಂತಿದೆ. + +ಅದು ಮುಂದೆ ಪಡೆದುಕೊಳ್ಳುವ ತಿರುವು ಮೇಲೆ ಹೇಳಿದ ಹಾಗೆ ನದಿಯ ಹಾದಿಯಂತೆ. ಹಾಗಾಗಿಯೇ ಇರಬೇಕು ಇದರ ಶೀರ್ಷಿಕೆಯೂ ಸಹ ನದಿಗಳ ಹೆಸರನ್ನು ಪೆಡೆದುಕೊಂಡಿದೆ. ನದಿ ನಡೆದದ್ದೇ ಹಾದಿ. ಅದರ ಚಲನೆಯ ಬಳೂಕು, ಲಾಸ್ಯ, ವಿಲಾಸ ಈ ಕಾದಂಬರಿಯ ಪಾತ್ರಗಳಿಗೂ ಅನ್ವಯಿಸುತ್ತದೆ. ಇತಿಹಾಸದ ಅಥವ ಒಂದು ಕಾಲಘಟ್ಟದ ಚಿತ್ರಣವನ್ನು ಫ್ಯಾಕ್ಟ್ಸ್ ಮತ್ತು ಫಿಗರ್ಸ್ ಗಳ ಹಿನ್ನೆಲೆಯ ಬೆಂಬಲ ಪಡೆದುಕೊಂಡು ಕಲ್ಪನೆಯ ಬೆನ್ನೇರಿ ಮನುಷ್ಯರ ಬದುಕಿನ ಕಥನವನ್ನು ಕಟ್ಟಿರುವ ಕ್ರಮ ಚೇತೋಹಾರಿಯಾಗಿದೆ. ಮತ್ತು ಕೆಲವು ದೃಶ್ಯಗಳಂತೂ ಹೃದಯ ಕಲಕುವಂತೆ ಮೂಡಿಬಂದಿವೆ. + +ಪೋಸ್ಟ್ ಕಲೋನಿಯಲ್ ಕಾಲಘಟ್ಟವು ಮತ್ತು ಪೋಸ್ಟ್ ಮಾಡ್ರನ್ ಕಥನ ಕ್ರಮಗಳು ಯಾವುದನ್ನು ಮೆಟಾನೆರೇಟಿವ್ಸ್ ಎಂದು ಗುರುತಿಸಿ ಅಂತವುಗಳನ್ನು ಪಕ್ಕಕ್ಕೆ ಇಟ್ಟು ಅಲಕ್ಷಿತ ಸಂಗತಿಗಳನ್ನು ಮತ್ತು ಸಮುದಾಯಗಳ ಮೇಲೆ ಬೆಳಕನ್ನು ಚೆಲ್ಲಿ ಬೌದ್ಧಿಕ ವಲಯದಲ್ಲಿ ಚರ್ಚಿಗೆ ಆಸ್ಪದಕೊಡಲು ಕಾಳಜಿಯನ್ನು ತೋರಿಸುತ್ತದೆಯೋ ಅಂತಹ ಒಂದು ಪ್ರಯತ್ನವನ್ನು ಇಂದಿನ ಪೋಸ್ಟ್ ಟ್ರುತ್ ಕಾಲ ಘಟ್ಟದ ಈ ಕೃತಿ ಮಾಡಿರುವುದು ಒಂದು ಮೈಲಿಗಲ್ಲು ಎಂದು ಹೇಳಬಹುದು. + +‘ಹೇಗಿದಿಯಾ?’ ಎಂದು ಬೆಲ್ಲಾ ಸೋತ ಧ್ವನಿಯಲ್ಲಿ ಕೇಳಿದಳು./ ಅಮ್ಮದಕಣ್ಣ ಏನೆಂದು ಉತ್ತಿರಸಬಲ್ಲ, ಸುಮ್ಮನೆ ಗೋಣಲ್ಲಾಡಿಸಿದ ‘ನಿನ್ನ ಪ್ರಿಯತಮನನ್ನು ಕಿತ್ತುಕೊಂಡ ಈ ದೇಶಕ್ಕೆ ನೀನು ಶಾಪ ಕೊಟ್ಟಿದ್ದೆ. ಆದರೆ ಆ ಶಪಿತ ದೇಶಕ್ಕೆ ನೀನೇ ಏಕೆ ಬಂದೆ ಬೆಲ್ಲಾ?’ ಎಂದು ಸಂಕಟದಿಂದ ಕೇಳಿದೆ. ‘ಎಷ್ಟೇ ದ್ವೇಷಿಸಿದರೂ ಈ ದೇಶದ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಗೇಬಿ. ಈ ದೇಶವೊಂದು ಉರಿಉರಿಯುವ ದೀಪ. ಜಗತ್ತಿನ ಯುವಕ ಯುವತಿಯರೆಲ್ಲ ಇದರ ಆಕರ್ಷಣೆಗೆ ಬಲಿಯಾಗುವ ಹುಳುಗಳು. ರೆಕ್ಕೆಗಳು ಸುಟ್ಟು ಹೋಗುತ್ತವೆ ಎಂದು ಗೊತ್ತಿದ್ದರೂ ಇದರತ್ತ ನಾವೆಲ್ಲ ನುಗ್ಗಿ ಬರುತ್ತಿದ್ದೇವೆ’ ಎಂದು ಬೆಲ್ಲಾ ಹೇಳಿದಳು. + +ಇವು ಕಾದಂಬರಿಯ ಕೊನೆಯಲ್ಲಿ ಯಾರೂ ಊಹಿಸಲಾರದಂತಹ ಸಂದರ್ಭದಲ್ಲಿ ಬರುವಂತಹ ಮಾತುಗಳು. ಈ ಮಾತುಗಳು ಬರುವ ಹೊತ್ತಿಗೆ ಬದುಕಿನಲ್ಲಿ ಅನೇಕ ಬಗೆಯ ಸ್ಥಿತ್ಯಂತರಗಳು ಮತ್ತು ಪಲ್ಲಟಗಳು ಜರುಗಿಹೋಗಿರುತ್ತವೆ. ಇವು ಇಡೀ ಕಾದಂಬರಿಯ ಮುಖ್ಯ ಧ್ವನಿಯನ್ನು ಹೇಳಿದಂತಿದೆ. + +ಈ ಮೇಲಿನ ಮಾತುಗಳಿಗೆ ಕಾದಂಬರಿಯ ಮೊದಲಲ್ಲಿ ಈ ಇಬ್ಬರ ನಡುವೆ ಗೇಬ್ರಿಯಲ್ ಲಿಸ್ಬನ್ ನಿಂದ ಭಾರತಕ್ಕೆ ಹೊರಡುವ ಮುನ್ನ ಈ ಇಬ್ಬರಲ್ಲಿ ನಡೆವ ಸಂಭಾಷಣೆಯನ್ನು ನೆನಪಿಸಿಕೊಂಡರೆ ಕಾದಂಬರಿಯ ಅತಿ ಮುಖ್ಯವಾದ ಒಂದು ಅಂಶವನ್ನು ಗುರುತಿಸಿದಂತಾಗುತ್ತದೆ. ಇದು ಕಾದಂಬರಿಯ ಒಳಹೋಗಲು ಒಂಥರದ ಸರ್ಚ್ ಲೈಟ್ ನಂತೆ ಇದೆ. ‘ನಾನು ಭಾರತಕ್ಕೆ ಹೋಗ್ತೀನಿ’ ಎಂದು ನಿಧಾನಕ್ಕೆ ಗೇಬ್ರಿಯಲ್ ಹೇಳಿದ. ಈ ನಿರ್ಧಾರ ಬೆಲ್ಲಾಳಿಗೆ ಅತ್ಯಂತ ಅನಿರೀಕ್ಷಿತವಾಗಿತ್ತು. ಅವನನ್ನು ಅಚ್ಚರಿಯ ಕಂಗಳಿಂದ ನೋಡಿದಳು./ ‘ಗಾಮನ ಜೊತೆಗೆ ಹೋದ ನನ್ನ ಗೆಳೆಯರೆಲ್ಲರೂ ಈಗ ದೊಡ್ಡ ಶ್ರೀಮಂತರಾಗಿ ಹೋಗಿದ್ದಾರೆ. ಅವರಿಗೆಲ್ಲ ಮ್ಯಾನ್ಯುಯಲ್ ಮಹಾಪ್ರಭು ಹಿಡಿಹಿಡಿ ಹಣ ಕೊಟ್ಟಿದ್ದಾನೆ. ಹಲವು ದೇಶಗಳಲ್ಲಿ ಅವರು ಕೊಳ್ಳೆ ಹೊಡೆದು ತಂದ ಸಂಪತ್ತೆಲ್ಲ ಅವರಿಗೇ ಅನುಭವಿಸಲು ಮಹಾಪ್ರಭು ಬಿಟ್ಟಿದ್ದಾನೆ. ಈಗ ಅರಮನೆಯಲ್ಲಿ ಒಳ್ಳೆಯ ಹುದ್ದೆಯನ್ನು ಕೊಟ್ಟಿದ್ದಾನೆ. ನನ್ನ ಬಳಿ ಹಣವಿಲ್ಲವೆಂಬುದಷ್ಟೇ ನಿಮ್ಮಪ್ಪನ ಕುಹಕಕ್ಕೆ ಕಾರಣವಲ್ಲವೆ? ನಾನು ಹಣ ಸಂಪಾದಿಸಿ ತರುತ್ತೇನೆ. ಆಗ ನಿನ್ನನ್ನು ಮದುವೆಯಾಗುತ್ತೇನೆ’ ಎಂದು ವಿವರಿಸಿದ. + +ಅವನ ನಿರ್ಧಾರ ಗಟ್ಟಿಯಾಗಿ ಹೋಗಿದೆ ಎನ್ನುವುದು ಬೆಲ್ಲಾಳಿಗೆ ಮನವರಿಕೆಯಾದಾಗ, ನಿರಾಶೆಯಿಂದ ಅವಳು ಹೀಗೆ ಹೇಳುತ್ತಾಳೆ: ‘ತನ್ನ ಶ್ರೀಮಂತಿಕೆಯ ಸೊಕ್ಕಿನಿಂದ ಆ ಭಾರತವೆಂಬ ದೇಶ ನನ್ನ ಪ್ರಿಯಕರನನ್ನು ನನ್ನಿಂದ ಕಿತ್ತುಕೊಳ್ಳುತ್ತಿದೆ. ಅದಕ್ಕಾಗಿ ನಾನು ಭಾರತವನ್ನು ದ್ವೇಷಿಸುತ್ತೇನೆ. ಸಿರಿತನ ಯಾವತ್ತೂ ಪ್ರೀತಿಗಿಂತಲೂ ಮಿಗಿಲಾದುದ್ದಲ್ಲ. ಆದರೂ ತನ್ನ ಸಿರಿತನ ಅಹಂಕಾರ ಆ ದೇಶಕ್ಕಿದೆ. ಈ ದೇಶದ ಬಡ ಯುವಕರನ್ನೆಲ್ಲ ತನ್ನಡೆಗೆ ಕರೆಸಿಕೊಳ್ಳುತ್ತಿದೆ. ಅದಕ್ಕೆ ತಕ್ಕ ಪ್ರತಿಫಲವನ್ನು ಅದು ಅನುಭವಿಸುತ್ತದೆ. ಇಕೋ ಆ ದೇಶಕ್ಕೆ ಈ ನೊಂದ ಪ್ರೇಮಿಯ ಶಾಪವಿದೆ.’ + +ಕೇವಲ ವ್ಯಾಪಾರಕ್ಕಾಗಿ, ಅತಿಮುಖ್ಯವಾಗಿ ಮಸಾಲೆ ಪದಾರ್ಥಗಳ ಆಕರ್ಷಣೆಗೆ ಒಳಗಾಗಿ ಯೂರೋಪಿನ ಒಂದು ದೇಶ ಪೋರ್ಚ್ಗಲ್, ಭಾರತಕ್ಕೆ ಸಮುದ್ರ ಮಾರ್ಗವನ್ನು ಕಂಡುಹಿಡಿದುಕೊಂಡು ಬರುವ ಸಂದರ್ಭದಲ್ಲಿ ಹೇಳುವಂತಹದ್ದು. ವ್ಯಾಪಾರದ ಉದ್ದೇಶದಿಂದ ಹೊರಟು ಅಷ್ಟಕ್ಕೇ ನಿಲ್ಲದೆ ರಾಜಕೀಯಕ್ಕೂ ತನ್ನ ರೆಕ್ಕೆಗಳನ್ನು ಚಾಚಿ ಸಾಮಾಜಿಕ ಮತ್ತು ಧರ್ಮಕ್ಕೂ ಕೈ ಹಾಕಿ ಇಲ್ಲಿ ಅನೇಕ ಬಗೆಯ ಹಿಂಸೆಯನ್ನು ನಡೆಸುತ್ತದೆ. + +ಈ ಮಾತುಗಳು ಯಾಕೆ ಮುಖ್ಯ ಅಂದರೆ ಇವು ಕಾದಂಬರಿಯ ಬಂಧಕ್ಕೆ ಒಂದು ಸಾವಯವವಾದ ಒಂದು ಸಂಪರ್ಕವನ್ನು ಕೊಟ್ಟು, ಕಥಾಹಂದರವನ್ನು ಬಿಗಿಗೊಳಿಸುತ್ತವೆ. ಈ ಎರಡು ಸಂದರ್ಭಗಳಲ್ಲಿನ ಸಂಭಾಷಣೆಗಳ ನಡುವೆ ಇಲ್ಲೂ ಮತ್ತು ಅಲ್ಲೂ ಅನೇಕ ಬಗೆಯ ಬದಲಾವಣೆ ಮತ್ತು ಸ್ಥಿತ್ಯಂತರಗಳು ಕಾಲದಲ್ಲಿ ಜರುಗುತ್ತವೆ. ಅದಕ್ಕೆ ಇತಿಹಾಸ ಮತ್ತು ಅಂದಿನ ಜನಸಾಮಾನ್ಯರು ಸಾಕ್ಷಿಯಾಗುತ್ತಾರೆ. + + + +ಕಥಾನಾಯಕ ಅಂದರೆ ಗೇಬ್ರಿಯಲ್ (ಹಾಗೆ ನೋಡಿದರೆ ಇಲ್ಲಿ ಅನೇಕರು ಕಥಾನಾಯಕರಿದ್ದಾರೆ. ಆದರೆ ಬಹಳಷ್ಟು ಸಂದರ್ಭದಲ್ಲಿ ಕಾದಂಬರಿ ಇವನ ಸುತ್ತ ಜರುಗುತ್ತದೆ. ಲಿಸ್ಬನ್ ನಿಂದ ಭಾರತದ ಆಕರ್ಷಣೆಗೆ ಒಳಪಟ್ಟು ಬರುವಾಗ ತನ್ನ ಪ್ರೇಯಸಿ ಬೆಲ್ಲಾ ತನ್ನ ಪ್ರಿಯಕರ ತನಗೆ ಸಿಗುವುದಿಲ್ಲವೆನ್ನುವ ಆತಂಕೆ, ನಿರಾಸೆ ಅವಳ ಮಾತಿನಲ್ಲಿ ವ್ಯಕ್ತವಾಗುತ್ತದೆ. ಮತ್ತು ಮುಂದೆ ಜರುಗಬಹುದಾದ ಹಿಂಸೆ, ಕ್ರೌರ್ಯಗಳು ಅವಳ ಮಾತಿನಲ್ಲಿ ಕಾಲಜ್ಞಾನದಂತೆ, ಕಾರಣಿಕದಂತೆ ಹೊರಬರುತ್ತವೆ.ಬೆಲ್ಲಾ ಒಬ್ಬಳು ಯಹೂದಿ ಹುಡುಗಿ. ಅವಳ ಅಪ್ಪ ಬೆಲ್ಶಾಮ್. ಪೋರ್ಚುಗಲ್ ದೇಶಕ್ಕೆ ಮೊದಲ ಮುದ್ರಣಯಂತ್ರವನ್ನು ಪರಿಚಯಿಸಿರುವವನು. ಗೇಬ್ರಿಯಲ್ ಒಬ್ಬ ಕ್ರೈಸ್ತ ಹಡುಗ. ಅಪ್ಪ ಆಂಟೋನಿಯೋ ಒಬ್ಬ ಶಿಲ್ಪಿ. ಗ್ಯಾಬ್ರಿಯಲ್ ಬೈಬಲ್ ತಿದ್ದುವ ಕೆಲಸದಲ್ಲಿ ತೊಡಗಿ, ಅದರ ಮುದ್ರಣ ಕಾರ್ಯದಲ್ಲಿ ಬೆಲ್ಲಾಳ ಅಪ್ಪನ ಬಳಿ ಸಹಾಯಕನಾಗಿ ಕೆಲಸ ಮಾಡುತ್ತಿರುತ್ತಾನೆ. ಯಹೂದಿ ಹುಡುಗಿಯನ್ನು ಮದುವೆಯಾಗಬೇಕೆಂದರೆ ಸಂಪತ್ತು ಗಳಿಸಬೇಕು ಎಂದು ಹೇಳುವ ಬೆಲ್ಲಾಳ ತಂದೆಯ ಮಾತು ಅವನ ಬದುಕಿನಲ್ಲಿ ನಡೆದಂತಹ ಮಹತ್ವದ ತಿರುವು. ಇದು ಅವನನ್ನು ಅವಮಾನ ಮಾಡುವುದರ ಜೊತೆಗೆ ಅವನ ಆತ್ಮಾಭಿಮಾನವನ್ನು ಪರೀಕ್ಷೆಗೆ ಒಡ್ಡುತ್ತದೆ. ತಾನು ಪ್ರೀತಿಸಿದ ಹುಡುಗಿಯನ್ನು ಸಂಪತ್ತು ಗಳಿಸಿದ ನಂತರ ಮದುವೆಯಾಗುವ ಸಲುವಾಗಿ ಶ್ರೀಮಂತನಾಗಲು ಭಾರತಕ್ಕೆ ಬರುತ್ತಾನೆ. + +ಮುಂದೆ ಅವನು ನಿರೀಕ್ಷಿಸಿದಂತೆ ಬದುಕು ಸಾಗದೆ, ಬದುಕಿನ ತಿರುವು, ವ್ಯೂಹಗಳಿಗೆ ಸಿಕ್ಕು ವಾಪಸ್ಸು ಮರಳಲು ಆಗುವುದಿಲ್ಲ, ತನ್ನ ಪ್ರಿಯತಮೆಯನ್ನು ಮದುವೆಯಾಗುವುದರ ಮೂಲಕ ಪ್ರೇಮದ ಸಾಫಲ್ಯತೆಯನ್ನು ಕಾಣಲು ಸಾಧ್ಯವಾಗುವುದಿಲ್ಲ. ಆದರೆ ಕಾದಂಬರಿಯ ಒಂದು ಘಟ್ಟದಲ್ಲಿ ಇವಳನ್ನು ಹಲವು ವರ್ಷಗಳ ನಂತರ ಮುಖಾಮುಖಿಯಾಗುವ ಸಂದರ್ಭ ಒದುಗುತ್ತದೆ. ಅವಳು ಯಾವ ದೇಶಕ್ಕೆ ಶಾಪಕೊಟ್ಟಿರುತ್ತಾಳೋ ಅದೇ ದೇಶಕ್ಕೆ ಬರುತ್ತಾಳೆ. ಗೇಬ್ರಿಯಲ್ ಭಾರತಕ್ಕೆ ಬಂದನಂತರ ಬದುಕಿನ ಜೀವನ್ಮರಣದ ಸಂದರ್ಭದಲ್ಲಿ ತನ್ನ ಧರ್ಮವನ್ನು ಬದಲಿಸಿಕೊಂಡು ಅಹಮದ್ ಖಾನ ಆಗಿ ಮುಂದಿ ಅಮದಕಣ್ಣನಾಗಿ ರೂಪಾಂತರವಾಗುತ್ತ ಏನೆಲ್ಲ ಪಾಡನ್ನು ಪಡುತ್ತಾನೆ ಎನ್ನುವುದನ್ನು ಕಾದಂಬರಿ ಮನೋಜ್ಞವಾಗಿ ಚಿತ್ರಿಸುತ್ತದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ, ಅಂದರೆ ವಿಜಯನಗರದಲ್ಲಿ.. + +ನಾಗವ್ವೆ ಮತ್ತು ಗಣಪಯ್ಯಗೌಂಡರ ಮಗಳು ಹಂಪಮ್ಮ. ಮಾಪಳ ನಾಯಕ ವ್ಯಾಪಾರಸ್ಥರಿಗೆ ರಕ್ಷಣೆಕೊಡುವ ಕಾವಲುಗಾರನ ಕೆಲಸ. ತೆಂಬಕ್ಕ ಎಂಬುವಳನ್ನು ಮದುವೆಯಾಗಿರುತ್ತಾನೆ. ಮತ್ತು, ಈಶ್ವರಿ ಎನ್ನುವ ಮಗಳು ಇರುತ್ತಾಳೆ. ಹಂಪಕ್ಕನ್ನು ಮಾಪಳನಾಯಕ ಮತ್ತು ದ್ವಾರಸಮುದ್ರದ ಕಡೆಯ ಕೇಶವ ಎನ್ನುವ ಶಿಲ್ಪಿಯೂ ಹಂಪಕ್ಕಳನ್ನು ಇಷ್ಟಪಡುತ್ತಾರೆ, ಇವಳನ್ನು ಪಡೆಯುವ ಸಲುವಾಗಿ ಇಬ್ಬರ ನಡುವೆ ಕುಸ್ತಿ ಏರ್ಪಟ್ಟು ಕೊನೆಗೆ ಮಾಪಳನಾಯಕ ಸೋತು ಸಾವನ್ನಪ್ಪುತ್ತಾನೆ. ಅವನ ಜೊತೆ ಅವನ ಹೆಂಡತಿ ತೆಂಬಕ್ಕಳು ಸತಿಯಾಗುತ್ತಾಳೆ. ಮಗಳು ಈಶ್ವರಿಯನ್ನು ಗೆಳತಿ ಹಂಪಕ್ಕಳಿಗೆ ಕೊಟ್ಟು, ಮಾಪಳನಾಯಕನನ್ನು ಸಾಯಿಸಿದ ಗಿಲ್ಟ್ ಕೊನೆಯವರೆಗೂ ಇವನನ್ನು ಬಿಡುವುದಿಲ್ಲ. ಕೇಶವ ಲೆಂಕನಾಗುತ್ತಾನೆ. ಅಂದರೆ ರಾಜನಿಗೆ ಗಂಡುಮಗುವಾದರೆ ಒಬ್ಬ ಕ್ಷತ್ರಿಯ ಗಂಡಸನ್ನು ಬಲಿಕೊಡುವುದು. ಇವನ ಬಲಿಯನ್ನು ವೀರಮರಣವಾಗಿ ಪರಿಗಣಿಸುತ್ತಾರೆ, ಅದರ ದ್ಯೋತಕವಾಗಿ ಅಂದಿನ ಪದ್ಧತಿಯಂತೆ ಅವನ ಹೆಂಡತಿ ಹಂಪಕ್ಕಳು ಸಹ ಸತಿಯಾಗುವ ಸಂದರ್ಭ ಒದುಗತ್ತದೆ. ಆದರೆ ಆ ಸಂದರ್ಭದಲ್ಲಿ ಅವಳು ಮೂರು ತಿಂಗಳ ಬಸುರಿ. ಧರ್ಮ ಸಂಕಟಕ್ಕೆ ಬಿದ್ದ ಅವಳು ಕೊನೆಗೆ ಬದುಕುವ ಆಸೆಯಿಂದಾಗಿ ಉಪಾಯದಿಂದ ತಪ್ಪಿಸಿಕೊಳ್ಳುತ್ತಾಳೆ (ಇದು ಒಂದು ರೀತಿಯಲ್ಲಿ ಸಿನಿಮೀಯವಾಗಿ ಮತ್ತು ಡ್ರಮಾಟಿಕ್ ಆಗಿ ಕಾಣುತ್ತದೆ, ಇರಲಿ ಅದೇನು ಅಂತಹ ದೋಷವಲ್ಲ) ತಪ್ಪಿಸಿಕೊಂಡು ಅಮ್ಮದಕಣ್ಣ ಅಂದರೆ ಗೇಬ್ರಿಯಲ್ ನ ಕೈಗೆ ಸಿಗುತ್ತಾಳೆ. + +ಅವನ ಪರಿಚಯವಾಗಲೇ ಅವಳಿಗೆ ಆಗಿರುತ್ತದೆ, ಏಕೆಂದರೆ ಅವನು ಗೋವಾದಿಂದ ಬಂದು, ವಿಜಯನಗರದಲ್ಲಿಯೇ ವಾಸಿಸುತ್ತಿರುತ್ತಾನೆ. ನಂತರ ಅವರು ಗೋವಾದ ಕಡೆ ಪಯಣ ಬೆಳೆಸುತ್ತಾರೆ. ಈ ಸಂದರ್ಭದಲ್ಲಿ ಅವರಿಗೆ ಪುರಂದರ ದಾಸರನ್ನು ಭೇಟಿಯಾಗುವ ಅವಕಾಶ ಮಾರ್ಗಮಧ್ಯದಲ್ಲಿ ಸಿಗುತ್ತದೆ. ಅವರೇ ಸ್ವತಃ ತಮ್ಮ ಪ್ರಸಿದ್ಧ ಕೀರ್ತನೆಯಾದ ‘ಲೊಳಲೊಟ್ಟೆ’ಯನ್ನು ಹಾಡುವುದು ಕೃತಿಯಲ್ಲಿ ಚಿತ್ರಿತವಾಗಿರುವ ಹಿಂಸೆ, ಕ್ರೌರ್ಯ, ಪ್ರಭುತ್ವದ ಹಿಪಕ್ರಸಿಗಳನ್ನು ಟೀಕೆ ಮಾಡಿದಂತಿದೆ. + +ಯಾರನ್ನು ತೊರೆದು ತನ್ನ ದೇಶವನ್ನು ಬಿಟ್ಟು ಭಾರತಕ್ಕೆ ಬಂದಿರುತ್ತಾನೋ ಮತ್ತೆ ಅದೇ ವ್ಯಕ್ತಿಯನ್ನು ಮತ್ತೆ ಭಾರತದಲ್ಲಿ ಕಾಣುವ ಪ್ರಸಂಗ ಕಾದಂಬರಿಯಲ್ಲಿ ಕಂಡು ಬರುವ ಕಟು ವ್ಯಂಗ್ಯ. ಆ ವ್ಯಕ್ತಿ ಇವನ ಪ್ರೇಯಸಿ ಬೆಲ್ಲಾ. ಇವಳು ಭಾರತದಲ್ಲಿ ನಿಯೋಜನೆಗೊಂಡಿರುವ ಪೋರ್ಚ್ಗಲ್ ಅಧಿಕಾರಿ ಕ್ರಸ್ಟಾವೋನ ಹೆಂಡತಿ. ಒಂದು ಮಗುವೂ ಇರುತ್ತದೆ. ಹಂಪಕ್ಕಳನ್ನು ಇವರ ಸುಪರ್ದಿಗೆ ಬಿಟ್ಟು ಹೊರಟಾಗ ಹಂಪಕ್ಕಳಿಗೆ ಇವನ ಮೇಲೆ ಆಸೆ ಹುಟ್ಟುತ್ತದೆ. ಆದರೆ ಅವನು ‘ನಾನೊಂದು ದೇಶದವನು, ನೀನು ಮತ್ತೊಂದು ದೇಶದವಳು. ಒಂದಕ್ಕೊಂದು ಸಂಬಂಧವಿಲ್ಲದ ಸಂಸ್ಕೃತಿಯಲ್ಲಿ ಬೆಳೆದವರು. ಇಬ್ಬರಿಗೂ ಹೊಂದಾಣಿಕೆಯಾಗುವುದಿಲ್ಲ ಹಂಪಮ್ಮ’ ಎನ್ನುತ್ತಾನೆ. ಅದಕ್ಕೆ ಅವಳು ‘ಕಣ್ಣಾ, ಹಲವಾರು ಬಗೆಯ ಕುಲಾವಿಗಳನ್ನು ಹೊಲಿದವಳು ನಾನು. ಚೈನಾ ದೇಶದ ರೇಶ್ಮೆ, ನಮ್ಮ ಸೀಮೆಯ ಹತ್ತಿ ಬಟ್ಟೆ, ಅರಬ್ಬರ ಮಸ್ಲಿನ್, ಪರ್ಶಿಯಾದವರ ಡಮಾಸ್ಕ್ ಬಟ್ಟೆಗಳನ್ನು ಸೇರಿಸಿ ಕುಲಾವಿಗಳನ್ನು ಸುಂದರವಾಗಿ ಮಾಡಿದ್ದೇನೆ. ಬಣ್ಣಗಳನ್ನು ಸರಿಯಾಗಿ ಸೇರಿಸಿದರೆ ಎಲ್ಲವೂ ಸೊಗಸಾಗಿ ಹೊಂದಿಕೊಳ್ಳುತ್ತದೆ. ಇನ್ನು ನಿಮ್ಮ ದೇಶದ ಉಣ್ಣೆ ಬಟ್ಟೆಯನ್ನು ಬಳಸುವುದು ಕಷ್ಟವೆ?’ ಎನ್ನುತ್ತಾಳೆ. + +ಇಷ್ಟು ವರ್ಷಗಳು ಕಳೆದರೂ ಜಾತಿಯ ಕಂದಕವಿನ್ನೂ ನಾಶಹೊಂದಿರದ ಭಾರದಲ್ಲಿ ಈ ಕಾದಂಬರಿ ಪ್ರಸ್ತುತವಾಗುತ್ತದೆ. ವರ್ತಮಾನದ ತಲ್ಲಣಗಳಿಗೆ ಭೂತಕಾಲದ ವಿದ್ಯಮಾನಗಳ ಮೂಲಕ ಸ್ಪಂದಿಸಿರುವುದು ಇದರ ಒಂದು ವಿಶೇಷವೆಂದೇ ಹೇಳಬಹುದು. + +ಬದುಕಿನ ವಿವರಣೆಗಳು ಅಷ್ಟೊಂದು ಸಾಂದ್ರವಾಗಿ ಮೂಡಿಬಂದಿಲ್ಲದಿದ್ದರೂ ಪಾತ್ರಗಳ ಒಳ ಲೋಕಗಳ ಅನಾವರಣ ಕೆಲವು ಸಂದರ್ಭಗಳಲ್ಲಿ ಓದುಗರನ್ನು ಬೆಚ್ಚಿ ಬೀಳಿಸುತ್ತದೆ ಮತ್ತು ಚಿಂತನೆಗೆ ಹಚ್ಚುತ್ತದೆ. ಐತಿಹಾಸಿಕ ಕಾದಂಬರಿಗೆ ಸಾಕ್ಷಾಧಾರಗಳು ಎಷ್ಟು ಮುಖ್ಯನೋ ಅಷ್ಟೇ ಫ್ಯಾಂಟಸಿ ಮತ್ತು ಇಮ್ಯಾಜಿನೇಷನ್ ಗಳೂ ಸಹ ಅವಶ್ಯಕ. ಈ ಕಾದಂಬರಿಯಲ್ಲಿ ವಾಸ್ತವವಾದಿ ನೆಲೆಯ ನಿರೂಪಣೆಯನ್ನು ಬಹುವಾಗಿ ನೆಚ್ಚಿಕೊಂಡು ಆ ಕ್ರಮದಲ್ಲಿಯೇ ಕತೆಯನ್ನು ಕಟ್ಟಲು ತುಂಬಾ ಶ್ರಮಪಟ್ಟಿರುವುದು ಕಾದಂಬರಿಯ ಪ್ರತಿ ಪುಟದಲ್ಲಿ ಅವ್ಯಕ್ತವಾಗಿ ವ್ಯಕ್ತವಾಗುತ್ತ ಹೋಗುತ್ತದೆ. ಮನುಷ್ಯರ ಛಿದ್ರಗೊಂಡ ಬದುಕು ಅದರ ದಾರುಣತೆ, ಸಾವು-ನೋವುಗಳನ್ನು ತುಂಬಾ ಸೂಕ್ಷ್ಮವಾಗಿ ಹಿಡಿದಿಡಲಾಗಿದೆ. + +ಈ ಬೃಹತ್ ಕಾದಂಬರಿಯಲ್ಲಿ ‘ಚಿಟಿಕೆ’ಯಷ್ಟು ಸಂತೋಷ ಮತ್ತು ‘ಮೊಗೆ’ದಷ್ಟು ಸಿಗುವ ನೋವು, ಹತಾಶೆ, ಸಾವು, ಹಿಂಸೆ, ಮೋಸಗಳು ತುಂಬಿವೆ. ಇತಿಹಾಸ ಚಿತ್ರಿಸುವ ವ್ಯಕ್ತಿಗಳು ಇಲ್ಲಿ ಗೌಣವಾಗಿ, ಕೆಲವೊಮ್ಮೆ ತಮ್ಮ ನೀಚತನಗಳಿಂದ ಖಳನಾಯಕರಾಗಿ, ಅಲಕ್ಷಿತ ವ್ಯಕ್ತಿಗಳು ಮತ್ತು ಅವರ ಬದುಕು ಕಾದಂಬರಿಯಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದೆ. + +ಎರಡು ನಗರಗಳ ಕಥೆ, ಎರಡು ದೇಶಗಳ, ಸಂಸ್ಕೃತಿಗಳ ನಾಗರೀಕತೆಗಳ ಕತೆಯಾಗಿ ಅಷ್ಟೇ ಅಲ್ಲದೆ ಅನೇಕ ಪಲ್ಲಟಗಳಿಗೆ ಸಾಕ್ಷಿಯಾಗುತ್ತೆ. ಇಲ್ಲಿ ಮನಕಲುಕುವ ಪ್ರೀತಿ, ಪ್ರೇಮಗಳ ಜೊತೆ ವಿಷಾದ ನಿರಾಸೆಗಳು ಇವೆ. ಪಾತ್ರಗಳ ‘ಮಾತು’ಗಳ ಮೂಲಕವೇ ನಿರೂಪಕ ಕಥನದ ಹಾದಿಯಲ್ಲಿ ಬದುಕಿನ ಸತ್ಯಗಳನ್ನು ವಿಕ್ಷಿಪ್ತ ಸನ್ನಿವೇಶಗಳಿಗೆ ಮುಖಾಮುಖಿಯಾಗಿಸುತ್ತಾನೆ. ಮಾತು, ಸಂಭಾಷಣೆಗಳ ಮೂಲಕವೇ ಕಾದಂಬರಿಯು ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತ ಹೋಗುತ್ತದೆ. + +ಅವಧೇಶ್ವರಿ ಅಥವ ಮಲೆಗಳಲ್ಲಿ ಮದುಮಗಳು ಕಾದಂಬರಿಗಳಲ್ಲಿ ಬರುವ ಸಾಂದ್ರವಾದ ಮತ್ತು ದಟ್ಟವಾದ ಬದುಕಿನ ಮತ್ತು ಪ್ರದೇಶಗಳ ವಿವರಣೆಯಿಲ್ಲದಿದ್ದರೂ, ಬದುಕಿನ ಸತ್ಯಗಳನ್ನು ದರ್ಶನಮಾಡಿಸುವ ಆ ಕಾದಂಬರಿಗಳು ಮುಟ್ಟುವ ಎತ್ತರಗಳನ್ನು ಇದೂ ಸಹ ಮುಟ್ಟಲು ಪ್ರಯತ್ನಪಡುವುದರ ಮೂಲಕ ಅವುಗಳ ಪಕ್ಕದಲ್ಲಿ ಸ್ಥಾನವನ್ನು ಗಳಿಸಿಕೊಳ್ಳಲು ತುಡಿಯುತ್ತದೆ. ಪ್ರಯತ್ನದ ಫಲಿತಾಂಶವನ್ನು ಕಾಲ ನಿರ್ಧರಿಸುತ್ತದೆ. ಆಧುನಿಕೋತ್ತರ ಕಾಲಘಟ್ಟದ ಎಲ್ಲವೂ ಇಸ್ಟಂಟ್ ಆಗಿ ಸಂತೆಗೆ ಮೂರು ಮೊಳ ನೇಯ್ದುಕೊಂಡ ಮಾರಾಟಮಾಡುವ ಈ ಧಾವಂತದ ಯುಗದಲ್ಲಿ ಇದರ ಒಂದು ದೊಡ್ಡ ಕ್ಯಾನ್ವಾಸ್ ಇಂದಿನ ಭಾರತೀಯ ಸಾಹಿತ್ಯ ಸಂದರ್ಭದಲ್ಲಿ ಗಮನಸಳೆಯುತ್ತದೆ. ಮತ್ತು ಪ್ರಸ್ತುತವಾಗುತ್ತ ಹೋಗುತ್ತದೆ. ಸಾಹಿತ್ಯದ ಮೌಲ್ಯವನ್ನು ಹೆಚ್ಚುಸುತ್ತದೆ. ಮತ್ತು ಅವಸರವು ಸಾವಧಾನದ ಬೆನ್ನೇರಬೇಕು ಎಂಬುದನ್ನು ನೆನಪಿಸುತ್ತದೆ. + +ನಿರೂಪಕನ ಅನಿಸಿಕೆಗಳು, ಕಾಮೆಂಟು(ರಿ)ಗಳು ಒಮ್ಮೊಮ್ಮೆ ಕಥನಕ್ರಮಕ್ಕೆ ಅಡ್ಡಿಯನ್ನು ಉಂಟುಮಾಡುತ್ತವೆ. ಮತ್ತು, ಘಟನೆಗಳನ್ನು ‘ಹೀಗೆ’ ಎಂದು ಓದುಗರಿಗಿಂತ ಮುಂಚೆಯೇ ಇಂಟರ್ ಪ್ರಿಟ್ ಮಾಡುವುದು ಔಚಿತ್ಯಪೂರ್ಣವೆನ್ನಿಸುವುದಿಲ್ಲ. + +ನಡೆದ ಇತಿಹಾಸದ ಘಟನೆಗಳನ್ನು ಇಟ್ಟುಕೊಂಡು ಕಲ್ಪಿತ ಸಾಮಾನ್ಯರ ಬದುಕನ್ನು ನಿಜವೆಂಬಂತೆ ವಾಸ್ತವವಾದಿ ಧೋರಣೆಯಲ್ಲಿ ಬರೆಯಲ್ಪಟ್ಟಿರುವ ಈ ಕಾದಂಬರಿಗೆ ತುಸು ಮ್ಯಾಜಿಕಲ್ ರಿಯಲಿಸಮ್ ನ ನಿರೂಪಣೆಗಳಲ್ಲಿ ಕಾಣುವ ಕಾವ್ಯಾತ್ಮಕ ಶಕ್ತಿ ದಕ್ಕಿದ್ದಿದ್ದರೆ ಇದು ಇನ್ನಷ್ಟು ಮೋಹಕವಾಗಿ ಬೆಳಗುತ್ತಿತ್ತೇನೋ ಎನ್ನಿಸುತ್ತದೆ. ಇದು ವೈಯಕ್ತಿಕ ಅನಿಸಿಕೆ. + + + +ಆಧುನಿಕ ಭಾರತೀಯ ಕಾದಂಬರಿ ಸಾಹಿತ್ಯದ ಸಂದರ್ಭದಲ್ಲಿ ಅಮಿತಾವ್ ಘೋಶ್ ಇತಿಹಾಸದಿಂದ ವಿಷಯಗಳನ್ನು ಆರಿಸಿಕೊಂಡು ತಮ್ಮ ಸಟಲ್ ಆದಂತಹ ದೃಷ್ಟಿಕೋನದಿಂದ ಕಾದಂಬರಿಯ ಪ್ರಕಾರಕ್ಕೆ ಹೊಸ ಹೊಸ ಆಯಾಮಗಳನ್ನು ತಂದುಕೊಟ್ಟಿರುವುದು ನೆನಪಿಗೆ ಬರುತ್ತದೆ. ಘೋಶ್ ತಮ್ಮ ವಿಶಿಷ್ಟ ನಿರೂಪಣಾ ಶೈಲಿ, ಭೂತ-ವರ್ತಮಾನಗಳನ್ನು ಬೆಸೆದುಕೊಂಡು ‘ಲೇಯರ್ಡ್’ ಎನ್ನುವಂತಹ ಕಥನಕ್ರಮಗಳಿಂದ ಗಮನಸೆಳೆದಷ್ಟು ಈ ಕಾದಂಬರಿಯಲ್ಲಿ ಕಾಣದಿದ್ದರೂ ಪ್ರಸ್ತುತ ಭಾರತದ ಸನ್ನಿವೇಶದಲ್ಲಿನ ಜಾತಿಯತೆ, ಮತೀಯತೆ, ಧರ್ಮಾಂದತೆ ಹಾಗೂ ಕ್ರೌರ್ಯ ಮತ್ತು ಹಿಂಸೆಗಳಿಂದ ಪಾರಾಗಲು ಇತಿಹಾಸದಿಂದ ಸಾಕಷ್ಟಿದೆ ಕಲಿಯುವುದಕ್ಕೆ ಎನ್ನುವುದನ್ನು ತೇಜೋ=ತುಂಗಭದ್ರಾ ತುಂಬಾ ಮಾರ್ಮಿಕವಾಗಿ ತೋರಿಸಲು ಪ್ರಯತ್ನಿಸಿದೆ. ಅದಕ್ಕಾಗಿ, ಮತ್ತು ‘ಛಂಧ’ವಾಗಿ ಪುಸ್ತಕಗಳನ್ನು ಪ್ರಕಟಿಸುತ್ತಿದ್ದ ಮನಸ್ಸು ಕನ್ನಡಕ್ಕೆ ಒಂದು ‘ಚಂದ’ವಾದ ಕೃತಿ ಕೊಟ್ಟಿದ್ದಕ್ಕೆ ಒಂದು ಪ್ರೀತಿಯ ಹ್ಯಾಟ್ಸಾಫ್. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_323.txt b/Kenda Sampige/article_323.txt new file mode 100644 index 0000000000000000000000000000000000000000..33cb63c3c2dafebca9236d651686987acd9479f9 --- /dev/null +++ b/Kenda Sampige/article_323.txt @@ -0,0 +1,35 @@ +byಶ್ರೀದೇವಿ ಕೆರೆಮನೆ|Jan 6, 2020|ದಿನದ ಪುಸ್ತಕ,ಸಾಹಿತ್ಯ| 0 Comments + +“ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ.” + +byಡಾ. ಬಿ. ಜನಾರ್ದನ ಭಟ್|Jan 5, 2020|ವಾರದ ಕಥೆ,ಸಾಹಿತ್ಯ| 1 Comment + +“ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ.” + +byಎಂ.ಎಸ್.ಶ್ರೀರಾಂ|Dec 30, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಈ ಪಾತ್ರಗಳು ನಾರ್ಮಲ್ ಅಲ್ಲವಾದ್ದರಿಂದ ಅವರು ಮಾಡುವ ಕ್ರಿಯೆ, ಹೇಳುವ ಮಾತು–ಸೂಚಿಸುವ ವಿಚಾರ ಎಲ್ಲವೂ ಅಸಾಧಾರಣವಾಗಿರುತ್ತವೆ. ಒಂದು ಚೌಕಟ್ಟಿನೊಳಗೆ ಪ್ರತಿಭಟಿಸಲು ಭಾರತಿ, ಸಂಸಾರ, ಅದರ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ನಿಭಾಯಿಸುತ್ತಲೇ ಈ ರೀತಿಯ ಪಾತ್ರಗಳಿಂದ ಚೌಕಟ್ಟಿನ ಸೀಮೋಲ್ಲಂಘನ ಮಾಡುತ್ತಾರೆ. ಒಂದು ಮಟ್ಟದಲ್ಲಿ ಈ ಪಾತ್ರಗಳು ಅತಿರೇಕದ ಪಾತ್ರಗಳು…” + +byಆರ್. ವಿಜಯರಾಘವನ್|Dec 29, 2019|ವಾರದ ಕಥೆ,ಸಾಹಿತ್ಯ| 0 Comments + +“ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ..” + +byಓ.ಎಲ್. ನಾಗಭೂಷಣ ಸ್ವಾಮಿ|Dec 23, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು…” + +byಡಾ. ಬಿ. ಜನಾರ್ದನ ಭಟ್|Dec 22, 2019|ವಾರದ ಕಥೆ,ಸಾಹಿತ್ಯ| 0 Comments + +“ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು.” + +byಶ್ರೀದೇವಿ ಕೆರೆಮನೆ|Dec 16, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಜನ ಲಾಭದ ಆಸೆಗೆ ಬಿದ್ದ ನಂತರ ಸುಣ್ಣದ ಬೆಟ್ಟವನ್ನೇ ಬೇಕಾಬಿಟ್ಟಿ ಅಗೆದು ಲೋಡುಗಟ್ಟಲೆ ತುಂಬಿಸಿ ಪೇಂಟ್ ಕಾರಖಾನೆಗೆ ಸಾಗಿಸಿ ನಂತರ ಕೈಸುಟ್ಟುಕೊಂಡಿದ್ದೂ ಅಲ್ಲದೇ, ಸರಕಾರಿ ಬೆಟ್ಟವನ್ನು ಅಗೆದದ್ದಕ್ಕಾಗಿ ಕೇಸನ್ನೂ ಎದುರಿಸಬೇಕಾಗುತ್ತದೆ. ಕೊನೆಗೆ ಎಲೆ ಅಡಿಕೆಗೆ ಹಾಕಿಕೊಳ್ಳುವ ಸುಣ್ಣಕ್ಕೂ ಪರದಾಡುವ ಸ್ಥಿತಿ ಬಂದು ಬಿಡುವುದು ಕಣ್ಣಲ್ಲಿ ನೀರು ತರಿಸುತ್ತದೆ.” + +byಅಂಜನಾ ಗಾಂವ್ಕರ್|Dec 15, 2019|ವಾರದ ಕಥೆ,ಸಾಹಿತ್ಯ| 1 Comment + +“ಗಂಗಜ್ಜಿಯ ಮಗಳು ಹಳ್ಳಿಯ ಕೆಲಸಕ್ಕೆ ಬೀಳಬಾರದೆಂದು ನಗರದ ವರನ ಹುಡುಕಿ ಕೊಟ್ಟಿದ್ದಳು. ಇನ್ನು ಮಗನಿಗೆ ತಂದ ಹೆಣ್ಣು ಶಾಲು. ಅತ್ತೆಗೆ ಒಂದು ಮಾತೂ ಆಡದವಳು. ಅವಳಾಯಿತು, ಅವಳ ಕೆಲಸವಾಗಿತ್ತು. ಮಗಳಿಗೆ ಹೋಲಿಸಿ ನೋಡುತ್ತಿದ್ದರು. ‘ಸುಜಲಾಗೆ ಎಷ್ಟು ಕಷ್ಟ, ಅತ್ತೆ ಮಾತು ಎದುರಿಸಬೇಕು. ಕೆಲಸಕ್ಕೆ ಹೋಗುತ್ತಾಳೆ. ಜಾಣೆ ಅವಳು.” + +byಕೆಂಡಸಂಪಿಗೆ|Dec 9, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ..” \ No newline at end of file diff --git a/Kenda Sampige/article_324.txt b/Kenda Sampige/article_324.txt new file mode 100644 index 0000000000000000000000000000000000000000..3e8cb5a4a2dbbfc98d503eac2537c6a897669244 --- /dev/null +++ b/Kenda Sampige/article_324.txt @@ -0,0 +1,87 @@ + + +ಗಾಂಧಿಯಂತೆ – ಗಾಂಧಿ! ಇವರ ಮನೀ ಹಾಳಾಗ! ಈ ಪೇಟೆ ನಾಯಿಗಳು ನಮಗೆ ಬುದ್ಧಿ ಹೇಳಲಿಕ್ಕೆ ಹಳ್ಳಿಗೆ ಬಂದಿದ್ದಾವೆ. ನಮ್ಮನ್ನಾಳೋ ರಾಜನಿಗೆ ಎದುರು ನಿಂತು ರಾಜದ್ರೋಹದ ಪಾಪ ಕಟ್ಟಿಕೊಂಡು ಮತ್ತೆ ಇವುಗಳು ಸ್ವರಾಜ್ಯಗಳಿಸಿಕೊಳ್ಳುತ್ತಾವಂತೆ – ಸ್ವರಾಜ್ಯ! ಜಾತಿ ಬೇಡ – ನೀತಿಬೇಡ. ಬ್ರಾಹ್ಮಣನೂ ಒಂದೇ ಹೊಲೆಯನೂ ಒಂದೇ – ಈ ಕಳ್ಳ ಸೂಳಾ ಮಕ್ಕಳಿಗೆ! ಇವರ ಸ್ವರಾಜ್ಯಕ್ಕೆ ಬೆಂಕಿ ಹಾಕಿದರು. ಪೇಟೆಯಲ್ಲಿ ಬೇಳೆ ಬೇಯದ್ದಕ್ಕೆ ತಲೆಮರೆಸಿಕೊಂಡು ಈಗ ಹಳ್ಳಿಗೆ ಬಂದು ಉಪದೇಶಕ್ಕೆ ತೊಡಗಿದ್ದಾವೆ. ನಮಗೇನೂ ಬುದ್ಧಿಯಿಲ್ಲ ಬೋಳುತಲೆ ಎಂತ ಎಣಿಸಿಕೊಂಡಿದ್ದಾವೋ ಏನೋ ಈ ಮಂಗಗಳು. ಇವರ ಅಪ್ಪನಿಗೆ ಬುದ್ಧಿ ಹೇಳಿ ಕಳುಹಿಸಲಿಕ್ಕೆ ನಮಗೆ ಗೊತ್ತಿದೆ! ಇವರ ಹಲ್ಲು ಸೊಂಟ ಮುರಿಸಿ ಮುರಿಕಟ್ಟಿ ಹಳ್ಳಿಯಿಂದ ಹೊರಗೆ ಹಾಕಿಸಲಿಕ್ಕೆ ಗೊತ್ತಿದೆ. ಇವರ ಈ ಎಲ್ಲಾ ವೇಷಗಳು ಪೇಟೆಯಲ್ಲಿ ನಡೀತದಂತ ನಮ್ಮಲ್ಲಿ ಖರ್ಚಾಗಲಾರವು. ಹತ್ತು ಆಳುಕೂಡಿಸಿ ಅವರನ್ನೆಲ್ಲಾ ಹೊರಗೆ ದಬ್ಬಿಸಿ ಬಿಡಬೇಕು – ಎಂದು ಧರ್ಮನ ಹಳ್ಳಿಯ ಜಮೀನ್ದಾರ ಶ್ರೀನಿವಾಸರಾಯರು ತಮ್ಮ ಶ್ಯಾನುಭಾಗರಿಗೆ ಕಟ್ಟಪ್ಪಣೆ ಕೊಡಿಸಿದರು. + +ಶ್ರೀನಿವಾಸರಾಯರು ಹಳೆಯ ಸಂಪ್ರದಾಯದ ಮನುಷ್ಯ. ಮನುಷ್ಯನ ಮಟ್ಟದ ಏರುತಗ್ಗುಗಳಲ್ಲಿ ಆಚಾರ ರೂಢಿಗಳ ಕೀಳು ಮೇಲ್ಮೆಗಳಲ್ಲಿ ಅವರಿಗೆ ಅಚಲವಾದ ವಿಶ್ವಾಸವಿದ್ದಿತು. ಈ ಅರುವತ್ತು ವರ್ಷಗಳ ಆಯುಷ್ಯದ ತನಕವೂ ಅದೇ ಸಂಸ್ಕಾರವು ಅವರ ಎದೆಹಿಡಿದು ಊದಿ ಅವರನ್ನು ಉಬ್ಬಿಸುತಿದ್ದಿತು. ಅಂತಹ ಉಬ್ಬುವಿಕೆಯಿಂದಾಗಿ ಅವರು ತನ್ನ ಜಮೀನ್ದಾರಿಕೆಯ ರಾಜ್ಯದಲ್ಲಿ ಪೇಟೆಯಿಂದ ಸಹಸಾ ಬಂದ ಹತ್ತು ಮಂದಿ ಸ್ವಯಂ ಸೇವಕರ ದಾಳಿಯನ್ನು ಸಹಿಸಲಿಲ್ಲ. ಬಂದ ಆ ಲವಡೀ ಮಕ್ಕಳಾದರೂ ಮಾಡಿದುದೇನು? ಅಲ್ಲಿಯ ಗಡಂಗಿನ ಮುಂದೆ ಪಿಕೆಟಿಂಗ್! ಶ್ರೀನಿವಾಸ ರಾಯರಿಗೆ ನಿಜವಾಗಿಯಾದರೆ ಗಾಂಧಿಯ ಮೇಲೇನೂ ವಿಶೇಷ ಆಕ್ರೋಶವಿರಲಿಲ್ಲ. ಒಂದು ಬಿಳಿಟೋಪಿ ಏರಿಸಿ ಗೋಣೀತಟ್ಟಿನ ದಪ್ಪ ಅಂಗಿ ಹಾಕಿ ಸುತ್ತಾಡಿದ್ದರೆ ಅವರದೇನೂ ಆಕ್ಷೇಪವಿರುತಿದ್ದಿಲ್ಲ. ಆದರೆ ಆ ಮುಂಜಾನೆ ಮನೆ ಆಳು ಬೋರನು ಬಂದವನೇ ಆ ಹಿಂದಿನ ದಿನ ಬಿಳಿ ಟೋಪಿಯವರು ಗಡಂಗಿನ ಮುಂದೆ ಪತಾಕೆ ಹಿಡಿದು ನಿಂತು ತಡೆಯುತ್ತಿದ್ದರು ಎಂದಿದ್ದ. ಅದನ್ನು ಕೇಳಿದೊಡನೆಯೇ ಅವರು ಕಿಡಿಕಿಡಿಯಾದರು. ಅವರ ಹೆಂಡತಿ ಹದಿನೈದು ವರ್ಷಗಳ ಹಿಂದೆ ಸತ್ತಂದಿನಿಂದಲೂ ಅವರಿಗೆ ಮದ್ಯದ ಮೇಲೆ ವಿಶೇಷ ಮಮತೆ ಬಿದ್ದಿದ್ದಿತು. ಹೆಂಡತಿಯ ಆಂತರಿಕ ಸ್ಥಾನ ಗೌರವಗಳಲ್ಲಿ ಅದನ್ನಿರಿಸಿ ಅವರು ದಿನಾ ಸಾಕ್ಷಾತ್ಕರಿಸುತಿದ್ದರು. ಆದುದರಿಂದಲೇ ಬೆಳಗಿನ ಆ ವರ್ತಮಾನದಿಂದಾಗಿ ಅವರ ಆಕ್ರೋಶವು ಕೆರಳಿದ್ದಿತು. + +ಕುಡಿಯೋದಂತೆ – ಕುಡಿಯೋದು! ಏಕೆ ಕುಡಿಯಬಾರದಂತೆ? ಕುಡಿದು ಕುಡಿದೇ ಹಿಂದಿನವರು ಋಷಿಗಳಾಗಿದ್ದಾರೆ. ಹಾಗೆ ಕುಡಿಯುವುದಕ್ಕಾಗಿಯೇ ಅವರು ಯಜ್ಞ ಯಾಗ ಮಾಡುತಿದ್ದುದು. ದೇವತೆಗಳೆಲ್ಲಾ ಸುರೆ ಕುಡಿದು ಕುಡಿದು ಸುರರಾಗಿ ಹೋದರು. ಅದು ಸಿಕ್ಕದೆ ಹೋದುದರಿಂದ ದೈತ್ಯರು ಅಸುರರಾದರು. ಈಗ ಕುಡೀಬಾರದು ಅನ್ನುವ ಈ ಲವಡೀ ಮಕ್ಕಳು ಅಂದೇ ಹುಟ್ಟಿ ಬಲರಾಮನಿಗೆ ಬುದ್ಧಿ ಹೇಳಬೇಕಿದ್ದಿತು. ನಾನೇನೂ ಬಲರಾಮನಿಗೆ ಬಿಟ್ಟುಕೊಡುವ ಮನುಷ್ಯನಲ್ಲ! ಇವರಿಗೆಲ್ಲಾ ಒಮ್ಮೆ ಕಪಾಲಮೋಕ್ಷ ಮಾಡಿಸದಿದ್ದರೆ ಮತ್ತೇಕೆ ಇರೋದು ನಾನಿಲ್ಲಿ? ನಮ್ಮ ಸರಕಾರವೇ ಕುಡೀ ಕುಡೀ ಅಂತ ಗುತ್ತಿಗೆ ಹಾಕಿಸಿ ಜನರಿಗೆ ಧಾರಾಳ ತುಂಬಿಸಿ ತುಂಬಿಸಿ ಕೊಡುತಿರುವಾಗ ಇವರು ಯಾರಯ್ಯ ಕೇಳಲಿಕ್ಕೆ? ನಾವು ಬೇಕಾದಾಗ ಬೇಕಾದ್ದು ಕುಡಿದೇವಲ್ಲ? ಬೆಳಿಗ್ಗೆ ಕಾಫಿ – ಮತ್ತೆ ಗಂಜಿ – ಪರಮಾನ್ನ – ಹಾಲು ಮೊಸರು – ಹೆಂಡ ಏನು ಬೇಕಾದರೂ ಕುಡಿದೇವಲ್ಲ! ಇವರಿಗೇನು ಬಂತು ಕಷ್ಟ? ಅಧಿಕ ಪ್ರಸಂಗಿಗಳು. ಗಾಂಧಿಯೇಕೆ ಹೇಳಿಯಾನು ಕುಡೀಬಾರದೂಂತ? ಏನೋ ಕುಡಿದು ನಿಮ್ಮ ನಿಮ್ಮೊಳಗೆ ಜಗಳ ಮಾಡಿಕೊಳ್ಳಬೇಡಿ ಎಂತ ಹೇಳಿರಬಹುದು. ಒಂದು ದಿವಸ ಅವನೇ ಬಂದು ಈ ಎಲ್ಲಾ ಜನರಿಗೂ ಚೆನ್ನಾಗಿ ಕುಡಿಸಿ ಈ ಬಿಳಿ ಮುಖದವರ ಮೇಲೆ ಬಿಟ್ಟು – ಬಿಡಲಿ – ಅದೇ ದಿವಸವೇ ಸ್ವರಾಜ್ಯ! + +ಕೆಳಗಡೆಯ ಗದ್ದಲ ಕೇಳಿ ಮೇಲುಪ್ಪರಿಗೆಯಿಂದ ಕೃಷ್ಣಸ್ವಾಮಿಯು ಮೆಲ್ಲನೆ ಕೆಳಗಿಳಿದು ಬಂದನು. ಅವನನ್ನು ಕಂಡೊಡನೆ ಶ್ರೀನಿವಾಸರಾಯರು ಕೈಯೆತ್ತಿ – ಹೇಳಿದರು – ಎಲೋ ಹುಚ್ಚು ಮುಂಡೆ! ನೀನೆಲ್ಲಿಯಾದರೂ ಅವರ ಕಡೆ ಸೇರಿದಿಯಾದರೆ ಜಾಗ್ರತೆ! ನಿಮ್ಮ ಗಾಂಧಿ ಗೀಂಧಿ ಎಲ್ಲ ಒಂದೇ ದಿವಸಕ್ಕೆ ಪಿತ್ತಯಿಳಿಸಿಬಿಟ್ಟೇನು! + +ಕೃಷ್ಣಸ್ವಾಮಿಗೆ ಅದೇನೆಂದು ಅರ್ಥವಾಗಲಿಲ್ಲ. ಅವನು ಮುಖ ಮುಖ ನೋಡುತ್ತ ನಿಂತಿದ್ದ. + +ಶ್ರೀನಿವಾಸರಾಯರು ಮತ್ತೊಮ್ಮೆ ದುರದುರನೆ ನೋಡಿ ಹೇಳಿದರು – ಸತ್ಯ ಹೇಳು, ನೀನೆಲ್ಲಿಯಾದರು ಆ ಕೋತಿಗಳನ್ನೆಲ್ಲಾ ಇಲ್ಲಿಗೆ ಬರಲಿಕ್ಕೆ ಹೇಳಿದ್ದೀಯಾ? + +ಯಾವ ಕೋತಿಗಳು? + +ನಿನ್ನ ಜಾತಿಯವುಗಳು! ತಲೆ ಮೇಲೆ ಗಾಂಧೀ ಟೋಪಿ ಹಾಕಿ ಬೊಬ್ಬೆ ಹಾಕುತ್ತಾ ಅಡ್ಡಾಡುತ್ತಾವಲ್ಲ ಅವೇ! + +ಇಲ್ಲ, ನಾನು ಯಾರನ್ನೂ ಬರಲಿಕ್ಕೆ ಹೇಳಲಿಲ್ಲಪ್ಪ. + +ಹಾ – ಹಾಗಾದರೆ ಚೆನ್ನಾಯ್ತು. ಅಲ್ಲವಾದರೆ ತಿಳಿದೀತು ಬಗೆ! ಅವುಗಳೊಂದಿಗೆ ಎಲ್ಲಿಯಾದರೂ ಕೂಡಿದಿ ಎಂದರೆ ನಾನೇನೂ ಸರಕಾರಕ್ಕೆ ದ್ರೋಹ ಮಾಡಿ ಪಾಪ ಕಟ್ಟಿಕೊಳ್ಳಲಿಕ್ಕಿಲ್ಲ . ಇನ್ನು ಆ ಗಾಂಧೀ ಕೇಶವಯ್ಯ- ಅವನೆಲ್ಲಿಯಾದರೂ ಸೇರಿದ್ದರೆ ಚೆನ್ನಾಗಿ ಬುದ್ಧಿ ಕಲಿಸಿಯೇನು! + +ಇಲ್ಲ. ಅವರಿಗೆ ಗೊತ್ತೇಯಿಲ್ಲ. + +ಅದು ಹೇಗೆ ನಿನಗೆ ಗೊತ್ತು? ನಿನಗೂ ಅವರಿಗೂ ಬಹಳ ಹತ್ತಿರ ಎಂತ ತೋರುತ್ತದೆ. ತಿಳಿದುಕೋ – ಅಂಥವರ ಮಾತಿಗೆಲ್ಲಿಯಾದರೂ ಮರುಳಾಗಿ ತಲೆ ಕೆಡಿಸಿಕೊಂಡಿ ಎಂದರೆ ಮತ್ತೆ ನನ್ನನ್ನು ಅಪ್ಪ ಎಂತ ತಿಳಿಕೊಳ್ಳಬೇಡ. ನನಗೆ ಎಲ್ಲಾ ಗೊತ್ತಿದೆ. ನೀನು ಬರುತ್ತಾ ಬರುತ್ತಾ ರಾಯರ ಕತ್ತೆಯಾಗುತ್ತಾಯಿದ್ದಿ. ನನಗೇನು ಕೇಶವಯ್ಯ- ಅವನ ಮಗಳು ಈ ಕತೆ ಗೊತ್ತಿಲ್ಲ ಎಂತ ಭಾವಿಸಿದ್ದಿಯಾ? ಎಲ್ಲಾ ಗೊತ್ತು. ಮುಂದೆ ಎಲ್ಲಿಯಾದರೂ ಅವರ ಮನೆಯ ಕಡೆ ಹೋದಿ ಎಂದರೆ ನಿಮ್ಮೆಲ್ಲರನ್ನೂ ಥಳಿಸಿಬಿಟ್ಟೇನು! + +ಕೃಷ್ಣಸ್ವಾಮಿ ಏನನ್ನೂ ಆಡಲಿಲ್ಲ. ಅದು ಮಾತಾಡುವ ಹೊತ್ತಲ್ಲವೆಂಬುದು ಅವನಿಗೆ ತಿಳಿದಿದ್ದಿತು. ತಂದೆಯ ಮನಸ್ಸಿನ ಏರಿಳಿತಗಳನ್ನೆಲ್ಲಾ ಅವನು ಚೆನ್ನಾಗಿ ಗ್ರಹಿಸಿದ್ದನು. ಆದರೆ ಕೇಶವಯ್ಯ ಮತ್ತು ಅವರ ಮಗಳು ಇವರ ಕುರಿತು ತನ್ನನ್ನು ಹೊಂದಿಸಿ ತಂದೆಯು ಹೀಗೆ ಒಮ್ಮಿಂದೊಮ್ಮೆಗೆ ಕಟ್ಟುನಿಟ್ಟಿನಿಂದ ಮಾತಾಡುವನೆಂದು ಅವನು ಎಣಿಸಿದ್ದಿಲ್ಲ. ಅದು ಆಕಸ್ಮಿಕವಾಗಿ ಸಿಡಿದು ಉರಿಕಾರಿ ಹೊರಹೊಮ್ಮಿದಂತಾದುದಕ್ಕಾಗಿ ಅವನು ಖೇದಗೊಂಡನು. ಆದರೂ ಮರುಮಾತಾಡದೆ ಮುಖ ಕೆಳಗಿಟ್ಟು ಎಂದು ಕ್ಷಣ ನಿಂತಿದ್ದು ಮತ್ತೆ ಉಪ್ಪರಿಗೆ ಏರಿದನು. + +ಶ್ರೀನಿವಾಸರಾಯರು ಸ್ವಲ್ಪಹೊತ್ತು ಗುಡುಗುಡಿಸುತಿದ್ದು ಮತ್ತೆ ಬೋರನನ್ನು ಕರೆದು ಹೇಳಿದರು – ‘ಲೋ – ನಾಳೇನೇ ರಿಪೋರ್ಟು ಕೊಡುತ್ತೇನೆ. ಪೇಟೆಗೆ ಕೊಂಡುಹೋಗಿ ಹತ್ತು ಪೋಲಿಸು ತಂದು ಆ ಕತ್ತೆಗಳಿಗೆಲ್ಲಾ ಬೇಡಿಹಾಕಿಸಬೇಕು’ ಎಂದು ಅಷ್ಟು ಹೊತ್ತು ಮಾತಾಡಿದ ಶ್ರಮ ಪರಿಹಾರಕ್ಕಾಗಿ ಸ್ವಲ್ಪ ಹೊತ್ತು ಎದೆಹಿಡಿದುಕೊಂಡು ಕುಳಿತು ಮತ್ತೆ ಹಿಂಗಡೆಯ ಬೀರುವಿನಲ್ಲಿದ್ದ ಬಾಟ್ಲಿಯೊಂದರ ತಲೆಹಾರಿಸಿ ಅದನ್ನು ಗಂಟಲಿಗಿಳಿಸಿಕೊಂಡರು. ತುಸು ಹೊತ್ತು ಆಕಡೆ ಈ ಕಡೆ ಅಡ್ಡಾಡುತಿದ್ದು ಮತ್ತೆ ಆರಾಮ ಕುರ್ಚಿಯಲ್ಲಿ ಕೈಕಾಲು ಬಿಟ್ಟು ಕುಳಿತು ಒಮ್ಮೆ ಅಬ್ಬರಿಸಿದರು. + +… ನಾವು ಕುಡಿದೇ ಕುಡಿತೇವೆ. ಬೇಕಾದಾಗ ಬೇಕಾದ್ದು ಕುಡಿದೇವಲ್ಲ! ಯಾರಯ್ಯ ಕೇಳುವವರು? ಇದು ಧರ್ಮನ ಹಳ್ಳಿ. ಇಲ್ಲಿಯ ಧರ್ಮರಾಜ ನಾನೇ! ನಾನೇ ಧರ್ಮರಾಜ! ನಮ್ಮಲ್ಲಿ ಯಾರಿಗಾದರೂ ಒಂದೇ ನ್ಯಾಯ. ಬೇಕಾದವರು ಬೇಕಾದಷ್ಟು ಕುಡೀಬಹುದು. ಹಾಂ! ಇದು ಧರ್ಮನ ಹಳ್ಳಿಯ ಧರ್ಮಶಾಲೆ ಧರ್ಮಶಾ-ಲೆ! – ಎನ್ನುತಿದ್ದು ಮತ್ತೆ ನಾಲಗೆ ತಡವರಿಸುತ್ತ -ಧ-ರ್ಮ-ಶಾಲೆ -ಡರಂ-ಶಾಲೆ- ಡರಂ-ಶಾ-ಲೆ-!- ಎಂದು ಅಲ್ಲೇ ಒರಗಿಬಿಟ್ಟರು. + +*********************** + +ಶ್ರೀನಿವಾಸರಾಯರ ಸಿಡುಕಿನ ಸ್ವಭಾವವು ಯಾರಿಗೆ ತಾನೇ ತಿಳಿದಿಲ್ಲ? ಧರ್ಮನಹಳ್ಳಿಯು ಒಂದು ಹಳ್ಳಿ ಮಾತ್ರವಾದರೂ ಯಾವಾಗಲೂ ಅವರ ಸಿಡುಕಿನಿಂದಾಗಿ ಬೆಚ್ಚನೆ ಕಾದಿರುತಿದ್ದಿತು. ಅಲ್ಲೇ ಅವರ ಮೂರು ಸಹಸ್ರ ರೂಪಾಯಿಗಳ ಕಂದಾಯ ತೆರುವ ಜಮೀನು ಇದ್ದಿತು. ಅವರೇ ಅಲ್ಲಿನ ಊರಗೌಡರು. ಅವರ ವಾಕ್ಯ ಅಲ್ಲಿ ವೇದವಾಕ್ಯವಾಗಿದೆ. ಜನರು ಅವರ ಪ್ರತಾಪದ ಪ್ರಖರತೆಯ ಮುಂದೆ ನಿಲ್ಲಲು ಅಂಜಿ ಹಿಂಜರಿಯುತಿದ್ದರು. ಆ ಪ್ರತಾಪವು ಅಲ್ಲಿಂದ ಎಂಟು ಮೈಲು ದೂರದಲ್ಲಿರುವ ಪೇಟೆಯ ತನಕವೂ ಹಬ್ಬಿದೆ. ಆದರೆ ಶ್ರೀನಿವಾಸರಾಯರು ನ್ಯಾಯಬಾಹಿರರಲ್ಲ. ಸಿಡುಕು ಕಳೆದ ಮೇಲೆ ಅವರನ್ನು ಸಮದಾರಿಯಲ್ಲಿ ಸೆಳೆದೊಯ್ಯುವುದು ಬಹಳ ಸುಲಭವಿದ್ದಿತು. + +ರಾಯರ ಹೆಂಡತಿ ಇರುವ ತನಕ ಅವರ ಸ್ವಭಾವವು ಇಷ್ಟು ಒರಟಾಗಿದ್ದಿಲ್ಲ. ಅವರ ಕಠೋರ ವೃತ್ತಿಯಲ್ಲೂ ಒಂದು ನಯವಿದ್ದಿತು. ಆದರೆ ಆ ಮಾತಾಯಿ ಹಲವು ವರ್ಷಗಳ ಹಿಂದೆಯೇ ಒಬ್ಬ ಮಗನನ್ನು ಮಾತ್ರ ಮುಂದಿಟ್ಟು ತೀರಿಹೋಗಿದ್ದಳು. ರಾಯರು ಬೇರೆ ಮದುವೆಯಾಗಿದ್ದಿಲ್ಲ. ಮದುವೆಯಾಗಬೇಕೆಂದಿದ್ದರೆ ಅವರಿಗೇನೂ ಅದೊಂದು ಕಷ್ಟದ ಕೆಲಸವಾಗುತಿದ್ದಿಲ್ಲ. ಅವರ ಧನ-ದೌಲತ್ತು-ಮರ್ಯಾದೆಗಳಿಗೆ ಮನಸೋತು ಎಷ್ಟೋ ಸಂಬಂಧ ತಾನೇ ತಾನೇ ಮುನ್ನುಗ್ಗಿ ಬಂದಿದ್ದಿತು. ಆದರೂ ಅವರು ಮದುವೆಯಾಗಿದ್ದಿಲ್ಲ. ಅದು ಅವರ ಹೆಂಡತಿಯ ಮೇಲಣ ಪ್ರೀತಿ, ಆ ಸಂತತಿಯ ಮೇಲಣ ಸಚ್ಚಿಂತನೆ. ಆದರೆ ಅಂತಹ ಪ್ರೀತಿಯ ಬಿಗಿತವು ಕಳೆದು ಬಾಳು ನಿರಾಲವಾದಾಗ ಅವರ ನೆಲೆಗಾಗಿ ಸುರೆಯ ಸೇವನೆಯ ಚಟವು ಹೊಕ್ಕಿಕೊಂಡಿತು. ಅಂದಿನಿಂದ ಅವರ ವೃತ್ತಿಯ ಮೇಲಣ ನಯವು ಕಳೆದುಹೋಗಿ ಅದು ಒರಟಾಗಿ ಸುತ್ತಲೂ ಸಿಡಿಯುತಿದ್ದಿತು. + +ಅಂತಹ ಸಿಡುಕನ್ನು ಕೃಷ್ಣಸ್ವಾಮಿಯು ನಿನ್ನೆ ಮೊನ್ನೆಯಿಂದಲ್ಲ – ಚಿಕ್ಕಂದಿನಿಂದಲೂ ಕಾಣುತ್ತ ಬಂದಿರುವನು. ಅದರಿಂದಲೇ ಅಂತಹ ಸಂದರ್ಭಗಳನ್ನು ಬೇಕಾದಂತೆ ಹೊಂದಿಸಿಕೊಂಡು ಹೋಗುವ ಸಹನೆಯನ್ನು ಅವನು ಕಂಡುಕೊಂಡಿದ್ದನು. ಆದುದರಿಂದಲೇ ಅವನು ಈ ತನಕವೂ ತಂದೆಯ ಮನಸ್ಸನ್ನು ಕಿಂಚಿತ್ತು ನೋಯಿಸಿದ್ದಿಲ್ಲ – ಅಂತಹ ಸ್ವಭಾವವು ನೋವಿನಿಂದಲೇ ತೊಡಗಿ ಅಲ್ಲಿ ಅಭ್ಯಾಸವಾಗಿ ನಿಂತಿದೆ ಎಂಬುದು ಅವನಿಗೆ ಗೊತ್ತು. ಹೀಗಿರುತ್ತ ಅದನ್ನು ಮತ್ತಷ್ಟು ನೋಯಿಸಹೋದರೆ ಅದು ಅದರ ಶಕ್ತಿಗೂ ಮೀರಿ ಅನರ್ಥಕ್ಕೆ ಕಾರಣವಾದೀತೆಂಬುದು ಅವನ ಸಿದ್ಧಾಂತವಾಗಿದ್ದಿತು. ಆದುದರಿಂದಲೇ ಯಾವುದಕ್ಕೂ ಮರು ಮಾತಾಡದೆ ತಂದೆಯನ್ನು ಒಲಿಸಿದ್ದನು. ತಂದೆಯು ಮಗನ ಮುಂದೆ ಎರಡು ಬಿರುಮಾತಾಡಿದರೆ ಅವರ ಉದ್ದೇಶವು ಅಸಾಧುವಲ್ಲ. ಅದು ಸ್ವಾರ್ಥವಲ್ಲ. ಮಗನ ಅಭ್ಯುದಯದ ಹಿತಾಕಾಂಕ್ಷೆ. ಅಂತಹ ಆಕಾಂಕ್ಷೆಯು ಮನುಷ್ಯನನ್ನು ಒಮ್ಮೆ ಅಳಿಸುವುದು – ಒಮ್ಮೆ ನಗಿಸುವುದು – ಮತ್ತೊಮ್ಮೆ ರೇಗಿಸುವುದು.ಇವೆಲ್ಲವುಗಳ ಅಂತರಾರ್ಥವೂ ಒಂದೇ. ಅದು ತನ್ನ ಕರುಳಿನ ಕಡೆಗೆ ಹೃದಯವು ಹಬ್ಬಿಸುವ ಪ್ರೀತಿ. ಅಂತಹ ಪ್ರೀತಿಯ ಉತ್ಕಟತೆಯಿಂದಾಗಿ ಮಗನು ಹಲವೊಮ್ಮೆ ದಿಙ್ಮೂಡನಾಗಬಹುದು. ಆದರೆ ವಿವೇಕದಿಂದ ಅವುಗಳ ಹಾಸುಹೊಕ್ಕನ್ನು ಹರಹಿದಾಗ ಕಾಣಲಿರುವುದು ತಂದೆಯ ನಿರತಿಶಯವಾದ ಪುತ್ರವಾತ್ಸಲ್ಯವು ಮಾತ್ರ. ಆಗ ಅಂತಹ ರಂಗಿಗೆ ಅಪಾರ್ಥವನ್ನು ಕಲ್ಪಿಸಿ ಬೇಸರಿಸುವ ಮಕ್ಕಳು ಎಷ್ಟು ಮಂದಿ ಇಲ್ಲ? ಸಿಡುಕಿನೊಂದಿಗೆ ಸಿಡುಕು ಕೂಡಿಹೋಗುವುದಿಲ್ಲ. ಸಹನೆಯೊಂದೇ ಸಿಡುಕಿನೊಂದಿಗೆ ಕೂಡಿ ಅದನ್ನು ತಕ್ಕೈಸುವುದು. ಆ ಸಹನೆಯಿಂದಲೇ ಕೃಷ್ಣಸ್ವಾಮಿಯು ಐದು ವರ್ಷಗಳಲ್ಲೇ ತಾಯನ್ನು ಕಳಕೊಂಡ ದುರ್ದೈವಿಯಾಗಿದ್ದರೂ ತಂದೆಯೊಡನೆ ಕೂಡಿ ಬೆಳೆದಿರುವನು. ತಂದೆಯು ತಾಯಂತೆ ನಗುತ್ತ ನಗುತ್ತ ಹಾಲುಣಿಸಲಾರ. ಅನುನಯದಿಂದ ಬೇಡಿ ಹಿತವೆಸಗಲಾರ. ಅವನದು – ಆಜ್ಞೆ – ಆದೇಶ. ಆದರೆ ಅವುಗಳ ಉದ್ದೇಶವು ಒಂದೇ ತಾನೆ? ತಾಯಿಯ ಪ್ರೇಮ ಹೃದಯದೊಡನೆ ಕೂಡಿ ಹರಿಯಬಹುದು. ತಂದೆಯದು ದೇಹದೊಡನೆ ಮಾತ್ರ ಕೂಡಲಿದೆ. ತಾಯಿಯು ಪ್ರಕೃತಿಯ ಅಂತಃಸೃಷ್ಟಿ. ತಂದೆಯಿಂದಾಗಿ ಮಗನು ಎಲ್ಲವನ್ನೂ ಹೊಂದಿದ್ದರೂ ತಾಯಿಯ ಅಂತಃಕರಣದ ಲಾಲನೆಗಾಗಿ ಕಣ್ಣೀರು ಸುರಿಸದಿರಲಾರ. + + + +ಕೃಷ್ಣಸ್ವಾಮಿಯು ಉಪ್ಪರಿಗೆಯೇರಿ ಹಾಗೆಯೇ ಖಿನ್ನನಾಗಿ ಕುಳಿತಿದ್ದನು. ದೇಶ ದೇಶಗಳಲ್ಲಿ 1942 ರ ಸ್ವತಂತ್ರಾಂದೋಲನವು ಕಾಳ್ಗಿಚ್ಚಿನಂತೆ ಹಬ್ಬುತಿದ್ದಿತು. ಅದರಲ್ಲಿ ಆತ್ಮಾರ್ಪಣೆಗಾಗಿ ಯಾವನು ಹಾರಿಲ್ಲ? ಹಿರಿಯನೇನು – ಕಿರಿಯನೇನು – ಎಲ್ಲರೂ ತಮ್ಮ ತಮ್ಮ ಭಾಗಗಳನ್ನು ಆಹುತಿ ಹೊಯ್ದಿದ್ದರು. ಅದೇ ಆಶಂಕೆಯು ಮಗನ ಮೇಲೂ ಮೂಡಿ ತಂದೆಯು ಗದರಿಸುವುದು ಸಹಜ. ಆ ಮಾತನ್ನು ಕಣ್ಣೀರು ಸುರಿಸಿ ಹೇಳಲು ಅವನ ತಾಯಿಯಿದ್ದಿಲ್ಲ. ಆದುದರಿಂದ ತಂದೆಯೇ ಅದನ್ನು ತನ್ನ ಸ್ವಭಾವಕ್ಕನುಗುಣವಾಗಿ ಇನ್ನೊಂದು ವಿಧದಿಂದ ಪೂರೈಸಬೇಕಾಯಿತು. + +********************** + +ನಲ್ವತ್ತೆರಡರ ಅಗೋಸ್ತು ತಿಂಗಳ ಮೊದಲಿಗೆ ದೇಶಕ್ಕೆ ದೇಶವೇ ಕಾವಲಿಯಂತೆ ಕಾದು ಬೆಂಕಿಯುರಿಯತೊಡಗಿತು. ಕಾಂಗ್ರೆಸ್ ಕಾರ್ಯಕರ್ತರ – ಪೂಜ್ಯ ಬಾಪೂಜಿಯ ಚಲೇಜಾವ್ ನಿರ್ಣಯದಿಂದಾಗಿ ದೇಶದಲ್ಲಿ ಕ್ಷೋಭೆಯೆದ್ದು ಕಾಳ್ಗಿಚ್ಚಿನಂತೆ ಹಬ್ಬಿತು. ಸಂಕ ಕಂಬಿಗಳೆಲ್ಲ ಕಡಿದು ಹಾಕಲ್ಪಟ್ಟುವು. ಸರಕಾರವು ಒಮ್ಮಿಂದೊಮ್ಮೆಗೆ ಸ್ತಬ್ಧವಾದಂತಾಗಿ ಕಚೇರಿಗಳೆಲ್ಲಾ ಲೂಟಿ ಮಾಡಲ್ಪಟ್ಟುವು. ಕಡಿವಾಣ ಬಿಟ್ಟಿದ್ದ ಕುದುರೆಯಂತೆ ಆಗಿನ ಸ್ವಾತಂತ್ರ್ಯದ ರಥವೂ ಯಾವ ಕಡೆಗೆ ನಡೆದಿದ್ದಿತೆಂಬುದೇ ಗೋಚರವಿದ್ದಿಲ್ಲ. + +ದೇಶದ ಹೋರಾಟದ ಕರೆಯು ಮೈಸೂರು ಸೀಮೆಯನ್ನೂ ಮುಟ್ಟದಿರಲಿಲ್ಲ. ಮೈಸೂರಿನ ಚಿನ್ನದ ಗಣಿಯಿಂದ – ಮೈಸೂರಿನ ಗಂಧದ ಗುಡಿಯಿಂದ – ಮೈಸೂರಿನ ನಂದನವನಗಳಿಂದ ಜನಜನತೆಯ ಸಿಡಿದು ಮೇಲೆದ್ದಿತು. ಗಡಂಗುಗಳೆಲ್ಲ ಮುಚ್ಚಲ್ಪಟ್ಟವು. ರಾಷ್ಟ್ರವು ಸಿಪಾಯಿಗಳ ರಾಜ್ಯವಾಯಿತು. ಆದರೆ ಆ ಕರೆಗೆ ಓಕೊಡದವನಾವನು? ಶಾಲಾಮಕ್ಕಳು ಶಾಲೆಯುಳಿದು ಬೀದಿಯ ಮೇಲೆ ಸಾಮ್ರಾಜ್ಯ ನಾಶಕ್ಕಾಗಿ ಬೊಬ್ಬಿಟ್ಟವು. ಅದರ ಪರಿಣಾಮವಾಗಿ ಕೈಮುರಿದು ತಲೆಯೊಡೆದು ರಕ್ತಕಾರಿದ ದೃಶ್ಯ ಸೀಮೆಯ ಚರಿತ್ರೆಯನ್ನು ಕೆಂಪುಗೊಳಿಸಿತು. ದೇಶಮಾತೆಯ ರೂಕ್ಷ ಲಲಾಟದಲ್ಲಿ ಅದೇ ಒಂದು ರಕ್ತ ಕುಂಕುಮವಾಗಿ ಶೋಭಿಸಿತು. ಆದರೂ ಆ ಹೋರಾಟವು ಸಾಗುತಲೇಯಿದ್ದಿತು! + +ನವರಾತ್ರಿಯ ಉತ್ಸವದ ಸಂತೋಷದ ಸುಖಪ್ರಸವದ ವೇದನೆಯು ಇನ್ನೂ ಕಳೆದಿದ್ದಿಲ್ಲ. ಕೃಷ್ಣಸ್ವಾಮಿಯು ಊರಿನಿಂದ ಬೆಂಗಳೂರು ಸೇರಿ ಮೂರು ತಿಂಗಳೂ ಕಳೆದಿದ್ದಿಲ್ಲ. ಆಗ ಬೆಂಗಳೂರಿನ ಕಾಲೇಜಿನ ಅಖಂಡ ವಿದ್ಯಾರ್ಥಿ ಸಂಘವು ರಾಜ್ಯದ ದಬ್ಬಾಳಿಕೆಗಳನ್ನು ಪ್ರತಿಷೇಧಿಸಿ ಠರಾವು ಮಂಡಿಸಿತು. ಅದರ ನಿಷೇಧಾರ್ಥವಾಗಿ ವಿದ್ಯಾರ್ಥಿಗಳ ವಾಕ್ ಸ್ವಾತಂತ್ಯಕ್ಕಾಗಿ ಮೆರವಣಿಗೆ ಹೊರಡಿಸಿತು. ಆಗ ಎಲ್ಲರ ರಕ್ತವೂ ಕುದಿದಿದ್ದಿತು. ಬಡವರು ಬಲ್ಲಿದರು ಎಂಬ ಭೇದವಿದ್ದಿಲ್ಲ. ಎಲ್ಲರ ಉದ್ದೇಶವೂ ದೇಶದ ಸ್ವಾತಂತ್ರ್ಯಸೇವೆ! + +ಸೇವೆಯ ಮುಂದೆ ಲಾಠಿಯೇನು – ಗುಂಡೇನು – ಗುಡುಗಾಟವೇನು? ಶಕ್ತಿಯನ್ನು ಪ್ರತಿಗಾಮಿಶಕ್ತಿಯು ಎಂದಿಗೂ ಹಿಂದೆ ದಬ್ಬಲಾರದು. ಹೊಡೆ ಹೊಡೆದಷ್ಟು ಅದು ಚೆಂಡಿನಂತೆ ಪುಟಿಪುಟಿದು ಹಾರುವುದು ಆ ವೇಳೆಯಲ್ಲಿ ಎಷ್ಟೋ ವಿದ್ಯಾರ್ಥಿಗಳ ದಿಗ್ಬಂಧವಾಯಿತು. ಅವರಲ್ಲಿ ಕೃಷ್ಣಸ್ವಾಮಿಯೂ ಒಬ್ಬನು. + +ಅದಕ್ಕಾಗಿ ಕೃಷ್ಣಸ್ವಾಮಿಯ ಕಳವಳಗೊಳ್ಳಲಿಲ್ಲ. ಅದು ಅವನು ನಿರ್ಧಾರವಾಗಿ ಇಟ್ಟಿದ್ದ ಹೆಜ್ಜೆ. ಅದನ್ನು ಹಿಂದೆಗೆಯುವ ಪ್ರಸಂಗವೇ ಇದ್ದಿಲ್ಲ. ಅದಕ್ಕಾಗಿ ದುಃಖಿಸುವ ಅಥವಾ ಕ್ಷಮೆ ಕೇಳುವ ವಿಚಾರವೇ ಇದ್ದಿಲ್ಲ. ಸತ್ಯವು ಎಂದಿಗೂ ಸಾಯಲಾರದೆಂದು ಕೇಶವಯ್ಯನವರು ಹೇಳುತ್ತಿದ್ದ ಮಾತು ಅವನಿಗೆ ಗಂಭೀರವಾಗಿ ಕೇಳಿಸುತಿದ್ದಿತು. ಶಾರದೆ ಆ ಶಾರದೆ! ಪಾಪ ಆ ಹೆಣ್ಣುಮಗಳು ಜನರ ಸೇವೆಗಾಗಿ ಎಷ್ಟು ಕಷ್ಟ ಪಡುತಿದ್ದಿಲ್ಲ? ಸೇವೆಯಲ್ಲಿ ಅವಳು ಏನು ಸುಖವನ್ನು ಕಂಡಿರುವಳು? ಹಾಗಾದರೆ ಆದೇ ಆತ್ಮ ಸುಖವು ತನಗೂ ನಿಲುಕಲಾರದೆ? ಸುಖವೂ ಶಾಶ್ವತವಾಗಿರುವುದು ಭೋಗದಲ್ಲಿಯಲ್ಲ – ತ್ಯಾಗದಲ್ಲಿ! ವಿಶ್ವದಲ್ಲಿಯ ಭೋಗ ಮೂರ್ತಿಗಳು ಬಾಳಿಬದುಕಿಲ್ಲ. ಆದರೆ ತ್ಯಾಗಮೂರ್ತಿಗಳು ಮಾತ್ರ ಯುಗ ಯುಗಗಳ ಮೇಲೂ ಚಿರಸ್ಮರಣೀಯರಾಗಿರುವರು. ಅಂತಹ ತ್ಯಾಗದ ವಿಶ್ವರೂಪದಲ್ಲಿ ಅವನದೂ ಒಂದು ಸೇವೆಯು ಮಳಲ ಕಣವಾಗಿ ಮುಂದಿನ ಸಚ್ಚರಿತ್ರೆಯ ತಳಹದಿಗೆ ಒದಗಿ ಬರಲಾರದೆ? + +ಈ ಹುರುಪಿನ ಪ್ರಚೋದನೆಯಿಂದಾಗಿ ಅವನು ಶಾರದೆಗೆ ಒಂದು ಕಾಗದ ಬರೆದನು. ಶಾರದೆಗೆ ಕಾಗದ ಬರೆಯಲು ಆಗಲಾಗ ತಾನು ಯೋಗ್ಯನೆಂಬ ಹುಮ್ಮಸವೇ ಅದಕ್ಕೆ ಕಾರಣವಿದ್ದಿತೋ ಏನೋ! + +ಪ್ರಿಯಳಾದ ಶಾರದಾದೇವಿಗೆ – + +ಈ ಕಾಗದವು ಕೈ ಸೇರುವ ವೇಳೆಗೆ ನಾನು ಪ್ರಾಯಶಃ ಜೈಲಿನೊಳಗಿರಬಹುದು. ಅದಕ್ಕಾಗಿ ನೀನು ಸಂತೋಷಪಡಬೇಕೇ ಹೊರತು ದುಃಖಿಸಬಾರದು. ಕಾರಣ – ಈ ಬಂದೀವಾಸದಲ್ಲಿ ನನಗೆ ತುಂಬಾ ಹೆಮ್ಮೆಯಿದೆ. ಆದರೆ ನೀನು ಕೇಳಿ ದುಃಖಿಯಾದಿಯೆಂದು ತಿಳಿದು ಬಂದರೆ ಮಾತ್ರ ನನಗೆ ಅನಂತ ಯಾತನೆಯಾಗಲಿದೆ. ಮೊನ್ನೆ ಮೊನ್ನೆ ಇಲ್ಲಿ ನಡೆದ ಮೆರವಣಿಗೆಯ ಪ್ರಕರಣವನ್ನು ನೀನು ನಿನ್ನ ತಂದೆಯ ಮುಖಾಂತರ ಪತ್ರಿಕೆ ಗಳಿಂದ ತಿಳಿದಿರಬಹುದು. ಆ ವರ್ತಮಾನ ಅದರ ಒಂದು ಭಾಗ ಮಾತ್ರ. ಅದೆಂತೇಯಿರಲಿ. ನಾನು ಅದಕ್ಕಾಗಿ ನಾಚುವುದಿಲ್ಲ. ನನ್ನ ಕಿಂಚಿತ್ ಸೇವೆಯು ನಮ್ಮ ದೇಶಕ್ಕೆ ಕೂಡಿಬಂದಿತಲ್ಲ – ಎಂಬ ಅಭಿಮಾನದಿಂದ ನನ್ನ ಎದೆಯು ತುಂಬಿ ಬಂದಿದೆ. + +ಆ ದಿನ ನಾನು ನಿನ್ನನ್ನು ಕೊನೆಯದಾಗಿ ಕಂಡಾಗ ನೀನು ಹೇಳಿದ ಮಾತು ಇನ್ನೂ ನೆನಪಿನಲ್ಲಿದೆ – ನೀವೇನು ಈ ಕಡೆಯಿಂದ ತಪ್ಪಿಸಿಕೊಂಡು ಓಡುತಿದ್ದೀರಿ! – ಈ ಕಡೆ ಬಂದ ಮೇಲೆ ನನ್ನ ಮನಸ್ಸೇ ನಾಚಿ ಅಣಕಿಸುತಿದ್ದಿತು. ನಾನು ಹೇಡಿ – ಅಂಜುಬುರುಕ! ಸಂದರ್ಭಗಳನ್ನು ಇದಿರಿಸಲಾರದೆ ಈ ಕಡೆ ಓಡಿಬಂದವನು. ಆದರೆ ಕೊನೆಗೆ ಆ ಮಾತೇ ನನಗೆ ಮಾರ್ಗದರ್ಶಿಯಾಯಿತು. ಆದುದರಿಂದಲೇ ನನ್ನ ಈ ಪರೀಕ್ಷಾ ಕಾಲದಲ್ಲಿ ನಾನು ಅಂಬಲಿಲ್ಲ. ನಿನ್ನ ಹೆಸರನ್ನು ಧ್ಯಾನಿಸಿ ಧ್ಯಾನಿಸಿ ಧೈರ್ಯಗೊಂಡಿದ್ದೇನೆ. ನಿನ್ನ ರೂಪವು ನನ್ನ ಮುಂದೆ ಮುಂದೆ ನಡೆದು ಇಂತಹ ಬಿಕ್ಕಟ್ಟನ ಪ್ರಸಂಗದಲ್ಲೂ ನನ್ನನ್ನು ಹುರಿದುಂಬಿಸಿರುವುದು. ಆ ನಿನ್ನ ಉಪಕಾರವನ್ನು ನಾನು ಹೇಗೆ ತೀರಿಸಲಿ? + +ಶಾರೀ – ಈಗ ನನ್ನ ಮನಸ್ಸು ಹೇಳುತ್ತಿದೆ – ಬಡವರ ಬಡವನಾಗಿರುವುದು ಎಷ್ಟು ಸಂತೋಷ! ನಮ್ಮ ಜಗದ್ಗುರು ಗಾಂಧೀಜಿಯ ಆ ಪರಮ ಮಂತ್ರ – ಆ ದರಿದ್ರ ನಾರಾಯಣನ ಸೇವೆಯೊಂದೇ ಇಂದಿನ ತುಮುಲ ಜಗತ್ತಿಗೆ ತಾರಕ ಮಂತ್ರವಾಗಿದೆ! ಅಂತಹ ಭಾಗ್ಯ ನನಗೂ ಲಭಿಸಿತಲ್ಲ – ಇದೇ ನನ್ನ ಪುಣ್ಯ! + +ನಿಜವಾಗಿಯೂ ನನ್ನ ಶಾರಿಯು ಇದಕ್ಕಾಗಿ ಅಳಲಾರಳೆಂದು ನಾನು ಖಚಿತವಾಗಿ ತಿಳಿದಿದ್ದೇನೆ. ನನ್ನ ಶಾರಿಯು ಅತ್ತರೆ ನಾನೆಲ್ಲಿ – ನನ್ನ ನಿರ್ಧಾರವೆಲ್ಲಿ? + +ಹೆಚ್ಚೇನು ಬರೆಯಲಿ? ಮೊತ್ತ ಮೊದಲಿಗೆ ನಿನಗೆ ಕಾಗದ ಬರೆಯುವ ಈ ಸುಮುಹೂರ್ತಕ್ಕಾಗಿ ನಾನು ತುಂಬಾ ಸಂತುಷ್ಟನಾಗಿದ್ದೇನೆ. ಪೂಜ್ಯರಾದ ಕೇಶವಯ್ಯನವರಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳನ್ನು ತಿಳಿಸಿಬಿಡು. + +ಬೆಂಗಳೂರು ಬಾಕಿ ಸಂಗತಿ ಮುಖತಃ28-11-1943 ಇತಿನಿನ್ನವನಾದ – ಸ್ವಾಮಿ. + +ಈ ಕಾಗದವು ಶಾರದೆಯ ಕೈ ಸೇರಿದಾಗ ಅವಳು ಬೆಚ್ಚಿಬಿದ್ದಳು. ಆ ಕಡೆ ಈ ಕಡೆ ಲಕೋಟೆಯನ್ನು ತಿರುಗಿಸಿ ಅದರ ಮೇಲಣ ಬೆಂಗಳೂರಿನ ಮುದ್ರೆಯನ್ನು ಓದಿಕೊಂಡಳು. ಓದಿ ಚಿಗರೆಯಂತೆ ನೆಗೆದು ತೋಪಿನ ಕಡೆ ಓಡಿಹೋದಳು. ಬಹಳ ಹೊತ್ತಿನ ತನಕ ಅವಳು ಹಿಂದೆ ಬರಲಿಲ್ಲ. + +ಅವಳ ಆ ದಿನದ ಅಸಂಬದ್ಧ ಸ್ವರೂಪವನ್ನು ಕಂಡು ಕೇಶವಯ್ಯನವರು ಕೇಳಿದರು ಏನು ಶಾರದಮ್ಮ ತುಂಬಾ ಕಾತರಗೊಂಡಿದ್ದಿ? ಏನಾಯಿತು? ಮೈ ಚೆನ್ನಾಗಿಲ್ಲವೆ? + +ಏನಿಲ್ಲ ಅಪ್ಪ, ಎಲ್ಲಿ? ಚೆನ್ನಾಗಿದ್ದೇನಲ್ಲ! + +ಮರುದಿನ ಮುಂಜಾವ ಕೇಶವಯ್ಯನವರಿಗೆ ಇದರ ನೆಲೆಯನ್ನು ಕಂಡು ಹಿಡಿಯಲು ಕಷ್ಟವಾಗಲಿಲ್ಲ. ಕಾರಣ – ಆದಿನ ಬೆಳಿಗ್ಗೆ ರಾಯರ ಮನೆಯ ಕಡೆಯಿಂದ ಭಾರೀ ಗದ್ದಲವಾಗುತಿದ್ದಿತು. ಶ್ರೀನಿವಾಸರಾಯರು ತುಪಾಕಿ ಹೊಡೆದಂತೆ ತಮ್ಮ ಉಚ್ಚ ಕಂಠದಿಂದ ಒಂದೇ ಸಮನೆ ಆರ್ಭಟಿಸುತ್ತಿದ್ದರು. ಆ ಆರ್ಭಟವು ಹಳ್ಳಿ ಮೀರಿ ಕಾಡಿನತ್ತ ಪ್ರತಿಧ್ವನಿಸುತಿದ್ದಿತು. + +– ಆ ಮುಠ್ಠಾಳ! ಅವನ ಹಣೆಬರಹ ನನಗೆ ಈ ಮೊದಲೇ ತಿಳಿದಿತ್ತು. ಆ ಮೂರು ಕಾಸಿನ ರಾಜಬಂದಿ ನನ್ನ ಮಗನೇ ಅಲ್ಲ. ಇಂದಿನಿಂದ ನನಗೆ ಮಗನಿಲ್ಲವೆಂದೇ ತಿಳಿದು ಕೊಂಡಿದ್ದೇನೆ – + +ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು. ನಮ್ಮವರ ಕಡೆಯಿಂದ ಇಷ್ಟಾದರೂ ಸೇವೆಸಂದಿತಲ್ಲ – ಎಂದು ಅಭಿಮಾನ ಪಡಬೇಕು. ನನಗೆ ಈ ಮೊದಲೇ ಗೊತ್ತು – ಕೃಷ್ಣಸ್ವಾಮಿ ಚಲೋ ಹುಡುಗನಪ್ಪ ಚಲೋ ಹುಡುಗ! ಸಾರ್ಥಕವಾಯಿತು. ಆ ತಂದೆಯ ಜನ್ಮ ಸಾರ್ಥಕವಾಯಿತು!(ಧರ್ಮಶಾಲೆ – ಕಾದಂಬರಿಯ ಭಾಗ : 1955) + +********************** + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_325.txt b/Kenda Sampige/article_325.txt new file mode 100644 index 0000000000000000000000000000000000000000..c03dd2d7df068eb01b9f9bdb485148712e0ed5ea --- /dev/null +++ b/Kenda Sampige/article_325.txt @@ -0,0 +1,159 @@ + + +ಮಿಸ್ಟರ್ ಬ್ರಿಡ್ಜ್ ಅವಳ 47 ನೇ ಹುಟ್ಟುಹಬ್ಬದಂದು ಆಕೆಗೆ ನೀಡಿದ ಕಪ್ಪು ಲಿಂಕನ್ ತುಂಬಾ ಉದ್ದವಾಗಿತ್ತು. ಅವಳು ಅದನ್ನು ಸದಾ ರೈಲೊಂದನ್ನು ಓಡಿಸಿದಂತೆ ಎಚ್ಚರಿಕೆಯಿಂದ ಓಡಿಸುತ್ತಿದ್ದಳು. ಅವಳ ಹಿಂದೆ ವಾಹನ ಓಡಿಸುವ ಜನರು ಯಾವಾಗಲೂ ಅವಳ ನಿಧಾನಕ್ಕೆ ಬೇಸತ್ತು ಒಂದೇ ಸಮ ಹಾರನ್ ಗಳನ್ನು ಬಜಾಯಿಸುತ್ತಿದ್ದರು. ಹಾಗೆಯೇ ಅವರು ಅವಳನ್ನು ದಾಟಿ ಹೋಗುವಾಗ ತಲೆಯನ್ನು ಹೊರಹಾಕಿ ವಿಚಿತ್ರವಾಗಿ ಅವಳತ್ತ ನೋಡುತ್ತಿದ್ದರು. ಲಿಂಕನ್ ನ ಇಂಜಿನ್ನನ್ನು ತುಂಬಾ ನಿಧಾನವಾಗಿ ಐಡಲ್ ಆಗಲು ಹೊಂದಿಸಲಾಗಿತ್ತು. ಇದರ ಪರಿಣಾಮವಾಗಿ ಕೆಲವೊಮ್ಮೆ ಅವಳು ಇಂಟರ್ ಸೆಕ್ಷನ್ ನಲ್ಲಿ ಜೋರಾಗಿ ಪೆಡಲ್ ಒತ್ತಿದಾಗ ಇಂಜಿನ್ ನಿಂತುಹೋಗುತ್ತಿತ್ತು. ಅವಳ ಪತಿ ಮಿಸ್ಟರ್ ಬ್ರಿಡ್ಜ್ ಎಂದಿಗೂ ಲಿಂಕನ್ ಅನ್ನು ಬಳಸುತ್ತಿರಲಿಲ್ಲ. ಅವಳು ಅದನ್ನು ಎಲ್ಲಾ ವಾಹನಗಳ ಹಣೆಬರಹ ಎಂದು ಮಾತ್ರ ಭಾವಿಸಿದ್ದರಿಂದಲೇ ಐಡ್ಲಿಂಗ್ ವೇಗವನ್ನು ಎಂದಿಗೂ ಸರಿ ಹೊಂದಿಸಲಾಗಿರಲಿಲ್ಲ. + +ಆಗಾಗ್ಗೆ ಅವಳು ಸ್ಟಾರ್ಟರ್ ಬಟನ್ ಅನ್ನು ತುಂಬಾ ಕಡಿಮೆ ಹೊತ್ತು ಅಥವಾ ತುಂಬಾ ದೀರ್ಘವಾಗಿ ಒತ್ತಿದಾಗ ಕಾರು ಚಾಲೂ ಆಗದೆ ಕಾರುಗಳು ಹಿಂದೆ ಸಾಲುಗಟ್ಟುತ್ತಿದ್ದವು. ತಾನು ವಾಹನ ಚಾಲನೆಯಲ್ಲಿ ಪರಿಣಿತಳಲ್ಲ ಎಂದು ತಿಳಿದುಕೊಂಡಿರುವುದರಿಂದ ದುರದೃಷ್ಟಕರವಾದ ಏನಾದರೂ ಸಂಭವಿಸಿದಾಗ ಅವಳು ಯಾವಾಗಲೂ ಕ್ಷಮೆಯಾಚಿಸುವುದಕ್ಕೆ ಸಿದ್ಧಳಿರುತ್ತಿದ್ದಳು. ಸರಿಯಾಗಿ ವಾಹನ ಚಲಾಯಿಸುವ ಎಲ್ಲರ ಮಾರ್ಗದಿಂದ ದೂರವಿರಲು ಪ್ರಯತ್ನ ಮಾಡುತ್ತಿದ್ದಳು. ಯಾವುದೇ ಬೆಟ್ಟದ ಶುರುವಿನಲ್ಲಿ ಅವಳು ಎರಡನೇ ಗೇರ್ ಗೆ ಬದಲಾಯಿಸುವಳು ಮತ್ತು ಅಗತ್ಯಕ್ಕಿಂತ ನಿಧಾನವಾಗಿ ಕೆಳಕ್ಕೆ ಇಳಿಯುವಳು. + +ಸರ್ವೇಸಾಮಾನ್ಯವಾಗಿ ಅವಳು ಡೌನ್ಟೌನ್ ನಲ್ಲಿದ್ದ ಗ್ಯಾರೇಜಿನಲ್ಲಿ ಕಾರು ನಿಲುಗಡೆ ಮಾಡುತ್ತಿದ್ದಳು. ಅಲ್ಲಿ ಮಿಸ್ಟರ್ ಬ್ರಿಡ್ಜ್ ಅವಳಿಗೆ ಅಂತ ಒಂದು ಅಂಗಡಿಯನ್ನು ಬಾಡಿಗೆಗೆ ಪಡೆದಿದ್ದ. ಅವಳು ಅಗಾಧವಾದ ಬಾಗಿಲುಗಳ ಗ್ಯಾರೇಜ್ ಮುಂದೆ ಹಾರನ್ ಬಜಾಯಿಸಬೇಕಿತ್ತು. ಆಗ ಮಾತ್ರ ಅದು ಕಿರ್ರನೆ ತೆರೆದುಕೊಳ್ಳುತ್ತಿತ್ತು. ಅವಳು ಕಾರನ್ನು ಒಳಕ್ಕೊಯ್ದಾಗ ಒಬ್ಬ ಸೇವಕ ಅವಳನ್ನು ‘ವೆಲ್ ಕಂ ಮಿಸೆಸ್ ಬ್ರಿಡ್ಜ್’ ಎಂದು ಸ್ವಾಗತಿಸುತ್ತಿದ್ದ. ಕಾರನ್ನು ಸರಿಯಾಗಿ ಪಾರ್ಕ್ ಮಾಡಲು ಅವಳಿಗೆ ಸಹಾಯ ಕೂಡ ಮಾಡುತ್ತಿದ್ದ. + +ಸಾಮಾನ್ಯವಾಗಿ ಅವಳನ್ನು ಕೆಳಗಿಳಿಸಿದ ನಂತರ ಆ ಅಸಾಧಾರಣ ಭೂತಯಂತ್ರವನ್ನು ತಾನೇ ಸರಿಯಾಗಿ ನಿಲ್ಲಿಸುತ್ತಿದ್ದ. ಆದರೆ ಕಂಟ್ರಿ ಕ್ಲಬ್ ಜಿಲ್ಲೆಯಲ್ಲಿ ಅವಳು ಬೀದಿ ಬದಿಯಲ್ಲಿಯೇ ಕಾರನ್ನು ನಿಲುಗಡೆ ಮಾಡುತ್ತಿದ್ದಳು. ಅಡ್ಡ ಪಟ್ಟೆಗಳಿದ್ದರೆ ಅವಳು ತುಂಬಾ ಚೆನ್ನಾಗಿಯೇ ಪಾರ್ಕ್ ಮಾಡುತ್ತಿದ್ದಳು. ಆದರೆ ಪಾರ್ಕಿಂಗ್ ಸಮಾನಾಂತರವಾಗಿದ್ದರೆ ಆಕೆಗೆ ದೂರದಿಂದ ನಿಲುಗಡೆಯ ಸ್ಥಳವನ್ನು ನಿರ್ಣಯಿಸಲು ತೊಂದರೆಯಾಗುತ್ತಿತ್ತು. ಕಾರಿಳಿದು ಹೊರಗೆ ಹೋಗಿ ಸುತ್ತಲೂ ತಿರುಗಿ ನೋಡಿ ಮತ್ತೆ ಕಾರನ್ನೇರಿ, ಮತ್ತೆ ಪ್ರಯತ್ನಿಸಿ ಓಹ್! + +ಲಿಂಕನ್ ಕಾರಿನ ಆಸನವು ತುಂಬಾ ಮೃದುವಾಗಿತ್ತು. ಶ್ರೀಮತಿ ಬ್ರಿಡ್ಜ್ ತುಂಬಾ ಕುಳ್ಳಗಿದ್ದು, ಮುಂದೆ ಏನಾಗುತ್ತಿದೆ ಎಂದು ನೋಡಲು ಅವಳು ಸೀಟಿನ ಮೇಲೆ ತುಂಬಾ ನೆಟ್ಟಗೆ ಕುಳಿತುಕೊಳ್ಳಬೇಕಾಗುತ್ತಿತ್ತು. ಅವಳು ತೋಳುಗಳನ್ನು ಮುಂದಕ್ಕೆ ಚಾಚಿ ಕೈಗಳನ್ನು ದೊಡ್ಡ ಸ್ಟಿಯರಿಂಗ್ ಚಕ್ರದ ಮೇಲೆ ಬಿಗಿಯಾಗಿ ಹಿಡಿದಿರುತ್ತಿದ್ದಳು. ಅವಳ ಪಾದಗಳು ಪೆಡಲ್ ಗಳನ್ನು ಒತ್ತಲು ಸಾಧ್ಯವಾಗುವಷ್ಟು ಉದ್ದ ಮಾತ್ರವೇ ಅವಳ ಕಾಲುಗಳಿದ್ದವು. ಆದರೂ ಅವಳು ಎಂದೂ ಗಂಭೀರವಾದ ಯಾವುದೇ ಅಪಘಾತವನ್ನು ಮಾಡಿರಲಿಲ್ಲ. ಆದರೆ ಆಗಾಗ್ಗೆ ಗಸ್ತು ತಿರುಗುತ್ತಿದ್ದ ಪೊಲೀಸಿನವರು ಅವಳೊಡನೆ ಕಾರಿನ ಬಗ್ಗೆ ಮಾತನಾಡುತ್ತಿದ್ದರು. ಅವರು ಎಂದಿಗೂ ಅವಳಿಗೆ ಏನನ್ನೂ ಮಾಡಲಿಲ್ಲ. ಏಕೆಂದರೆ ಅವರು ಅವಳನ್ನು ತಕ್ಷಣಕ್ಕೆ ಬಂಧಿಸಲು ಸಾಧ್ಯವಿರಲಿಲ್ಲ. ಮತ್ತೆ ಅವಳು ಎಲ್ಲವನ್ನೂ ಮಾಡಬೇಕಾದ ರೀತಿಯಲ್ಲಿಯೇ ಮಾಡಲು ಪ್ರಯತ್ನಿಸುತ್ತಿದ್ದಾಳೆಂದು ಅವರಿಗೆ ಮನವರಿಕೆಯಾಗಿತ್ತು. + +ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ ಎಂಬಂತೆ ಇರುತ್ತಿದ್ದರು. ಆಗೆಲ್ಲ ಅವಳಿಗೆ ಗಾಡಿ ಜರ್ಕ್ ಹೊಡೆದಂತೆ ಆಗುತ್ತಿತ್ತು. ಹೇಗಾದರೂ, ಕೆಲವೊಮ್ಮೆ, ಒಬ್ಬ ಒಳ್ಳೆಯ ವ್ಯಕ್ತಿ ಎಲ್ಲಿಯೂ ಇರುತ್ತಾನೆ. ಅವಳ ಕಷ್ಟವನ್ನು ನೋಡಿ, ಅಂಥವನೊಬ್ಬ ಸುತ್ತಲೂ ಬಂದು ತನ್ನ ಟೋಪಿಯನ್ನು ತೆಗೆದು ತಲೆ ಕೆಳಗೆ ಹಾಕಿ ‘ಸಹಾಯ ಮಾಡಬಹುದೇ’ ಎಂದು ಕೇಳುತ್ತಿದ್ದ. + +“ಓ, ತುಂಬಾ ಸಂತೋಷ” ಅವಳು ಬಿಡುಗಡೆ ದೊರೆತ ಧ್ವನಿಯಲ್ಲಿ ಹೇಳುತ್ತಿದ್ದಳು. ಅವನು ಬಾಗಿಲು ತೆರೆದ ನಂತರ ಅವಳು ಕಾರಿಳಿದು ಹೊರಬಂದು ಅವನು ಕಾರ್ ಪಾರ್ಕ್ ಮಾಡುವ ತನಕ ರಸ್ತೆಯ ದಂಡೆಯ ಮೇಲೆ ನಿಲ್ಲುತ್ತಿದ್ದಳು. ಅವನು ಟಿಪ್ಸ್ ಏನಾದರೂ ನಿರೀಕ್ಷಿಸಿದ್ದಾನೋ ಇಲ್ಲವೋ ಎಂದು ತಿಳಿಯುವುದು ಅವಳಿಗೆ ಒಂದು ಸಮಸ್ಯೆಯಾಗಿತ್ತು. ಬೀದಿಗಳಲ್ಲಿ ನಿಂತಿರುವ ಜನರಿಗೆ ಹಣದ ಅವಶ್ಯಕತೆಯಿದೆ ಎಂದು ಅವಳು ತಿಳಿದಿದ್ದಳು. ಆದರೂ ಅವಳು ಯಾರಿಗೂ ಅಪಮಾನ ಮಾಡಲು ಬಯಸುವುದಿಲ್ಲ. ಕೆಲವೊಮ್ಮೆ ಅವಳು ಕೇಳಲಿಕ್ಕೇ ಹಿಂಜರಿಯುತ್ತಾಳೆ: ಆತ ತಾನು ಕೊಡಲು ಬಯಸಿರುವ ಇಪ್ಪತ್ತೈದು-ಸೆಂಟ್ ಹಣ ಸ್ವೀಕರಿಸುತ್ತಾನೋ ಇಲ್ಲವೋ ಎಂದು. ಕೆಲವೊಮ್ಮೆ ಅವಳಿಗೆ ಹಾಗೆಲ್ಲ ಕೇಳಲಾಗುವುದಿಲ್ಲ. ಆಗ ಅವಳು ಅವನ ಮೇಲೆ ಕೃತಜ್ಞತೆಯ ಕಿರುನಗೆ ಬೀರುತ್ತಾ, “ತುಂಬಾ ಧನ್ಯವಾದಗಳು” ಎಂದು ಹೇಳುತ್ತಾಳೆ. ಲಿಂಕನ್ ನ ಬಾಗಿಲುಗಳನ್ನು ಲಾಕ್ ಮಾಡಿದ ನಂತರ ಅಂಗಡಿಗೆ ತೆರಳುತ್ತಾಳೆ. + +ಶ್ರೀಮತಿ ಬ್ರಿಡ್ಜ್ ಒಂದು ಪುಸ್ತಕವನ್ನು ಏನಾದರೂ ಖರೀದಿಸಿದರೆ ಅದು ಯಾವಾಗಲೂ ಮೂರು ವಿಷಯಗಳಲ್ಲಿ ಒಂದನ್ನು ಕೇಂದ್ರವಾಗಿ ಒಳಗೊಂಡಿರುತ್ತದೆ: ಎಲ್ಲಾ ಮಳಿಗೆಗಳಲ್ಲಿ ಅವಳು ಕೇಳಿದ ಅಥವಾ ನೋಡಿದ ಅತಿ ಹೆಚ್ಚು ಮಾರಾಟವಾಗುತ್ತಿರುವ ಪುಸ್ತಕ, ಸ್ವಯಂ-ಸುಧಾರಣಾ ಪುಸ್ತಕ, ಅಥವಾ ಕನ್ಸಾಸ್ ನ ಕುರಿತ ಅಥವಾ ಕನ್ಸಾಸ್ ನಗರದ ಲೇಖಕರ ಪುಸ್ತಕ – ಅದರ ಹೂರಣ ಏನೇ ಇರಲಿ. ಈ ಎರಡನೆಯ ಬಗೆಯದು ವಿರಳವಾಗಿತ್ತು. ಆದರೆ ಈಗಲೋ ಆಗಲೋ ಯಾರಾದರೂ ಕನ್ಸಾಸ್ / ಕನ್ಸಾಸ್ ನಗರದ ಮಧ್ಯೆ ಅಂತರ್ಯುದ್ಧದ, ಇತಿಹಾಸದ ಅಥವಾ ಓಲ್ಡ್ ವೆಸ್ಟ್ಪೋರ್ಟ್ ಲ್ಯಾಂಡಿಂಗ್ ಬಗ್ಗೆ ಏನಾದರೂ ಬರೆದು ಸ್ಫೋಟಿಸುತ್ತಿದ್ದರು. ಆಗಲೂ ಸ್ಥಳೀಯ ಪ್ರಕಾಶನ ಸಂಸ್ಥೆಗಳಿಂದ ಸಾಮಾನ್ಯವಾಗಿ ಮುದ್ರಿತವಾದ ಪದ್ಯ ಮತ್ತು ಪ್ರಬಂಧಗಳ ಸಪೂರ ಸಂಪುಟಗಳು ಇದ್ದವು. ಗೋಲ್ಡ್ ಪೇಂಟೆಡ್ ಲೆದರ್ ನಲ್ಲಿರುವ ದಿ ಬ್ರದರ್ಸ್ ಕರಮಾಜೋವ್ ನ ಅತ್ಯಂತ ಹಳೆಯ ಎರಡು-ಸಂಪುಟಗಳ ಸೆಟ್ ಹೊರತುಪಡಿಸಿ ಬೇರೆ ಯಾವುದೇ ಪುಸ್ತಕಗಳಿಗಿಂತಲೂ ಹೆಚ್ಚು ಕಾಲ ಕೋಣೆಯನ್ನು ಆಶ್ರಯಿಸಿರುವ ಮಳಿಗೆಗಳಲ್ಲಿ ಇದೂ ಒಂದು. ದಿ ಬ್ರದರ್ಸ್ ಕರಮಾಜೋವ್ ಅನ್ನು ಅಂತೂ ಮನೆಯಲ್ಲಿ ಯಾರೂ ಓದಿರಲಿಲ್ಲ. ಅದನ್ನು ಶ್ರೀಯುತ ಬ್ರಿಡ್ಜ್ ನ ಸಹೋದರ ಪುರಾತನ ವಸ್ತುಗಳನ್ನು ಮಾರುವ ಆ್ಯಂಟಿಕ್ ವ್ಯಾಪಾರಿಗಳಿಂದ ಖರೀದಿಸಿದ್ದ. ಈ ಸೆಟ್ ಭಾರತೀಯ ಅರಸರ ಕಂಚಿನ ಜೋಡಿ ಪ್ರತಿಮೆಗಳ ನಡುವಿನ ಶೆಲ್ಫಿನಲ್ಲಿ ಇದ್ದುಬಿಟ್ಟಿತ್ತು. ಇದು ಶ್ರೀಮತಿ ಬ್ರಿಡ್ಜ್ ಬಳಸಿದ ಸೋದರಸಂಬಂಧಿ ಲುಲುಬೆಲ್ಲೆ ವಾಟ್ಸ್ ಅವರ ಏಕೈಕ ಕೊಡುಗೆಯಾಗಿತ್ತು. ವಾರಕ್ಕೊಮ್ಮೆ ಹ್ಯಾಜೆಲ್ ನವಿಲುಗರಿಗಳ ಡಸ್ಟರಿನಿಂದ ಅದರ ಮೇಲಿನ ಧೂಳು ಹೊಡೆಯುತ್ತಿದ್ದಳು. + +ದಿ ಬ್ರದರ್ಸ್ ಕರಮಾಜೋವ್ ಸಂಪುಟಗಳ ಬಳಿಕ ಎರಡನೆಯ ಸ್ಥಾನದಲ್ಲಿದ್ದ ಸಂಪುಟವು ಸ್ಥಳೀಯ ಮಂತ್ರಿ ಡಾ. ಫೋಸ್ಟರ್ ಅವರ ಆಲೋಚನೆಗಳ ಸಂಗ್ರಹವಾಗಿತ್ತು. ಡಾ. ಫೋಸ್ಟರ್ ಗಿಡ್ಡ ಮನುಷ್ಯ. ಸ್ನೇಹಮಯಿ ಮತ್ತು ಹಾಸ್ಯಮಯವಾದ ಮನುಷ್ಯ. ಅತನಿಗೆ ಮೃದುವಾದ ಚಿನ್ನದ ಹಾಗೆ ಹೊಳೆವ ಬಿಳಿ ಕೂದಲಿತ್ತು. ಅದನ್ನು ಅವನು ಉದ್ದವಾಗಿ ಬೆಳೆಯಲು ಬಿಟ್ಟಿದ್ದ. ಹಿಂದಕ್ಕೆ ತಾನು ಒಂದಿಂಚು ಎತ್ತರ ಕಾಣುವಂತೆ ಕೂದಲನ್ನು ಬಾಚಿಕೊಳ್ಳುತ್ತಿದ್ದ. ಅವನು ಈ ಪ್ರಬಂಧಗಳನ್ನು ಹಲವಾರು ವರ್ಷಗಳ ಅವಧಿಯಲ್ಲಿ ಪುಸ್ತಕ ರೂಪದಲ್ಲಿ ಹೊರತರುವ ಉದ್ದೇಶದಿಂದ ಬರೆದಿದ್ದು. ಕಾಲಕಾಲಕ್ಕೆ ಅವುಗಳ ಜೊತೆ ತನ್ನ ನೆನಪುಗಳ ದಾಖಲೆಯಂತೆ ಸಂಭಾಷಿಸುತ್ತಾ ನಗುತ್ತಿದ್ದ. ಖಂಡಿತವಾಗಿಯೂ ಅವನು ತಾನು ಸಾಯುವವರೆಗೂ ಅದನ್ನು ತನ್ನಲ್ಲಿಯೇ ಇಟ್ಟುಕೊಳ್ಳಬಾರದು ಎಂದು ಜನರು ಉದ್ಗರಿಸುತ್ತಿದ್ದರು. ಆ ಸಮಯದಲ್ಲಿ ಆ ಮಾತನ್ನು ಅಂದವನ ತೋಳನ್ನು ಸ್ಪರ್ಶಿಸುವ ಡಾ. ಫೋಸ್ಟರ್, ಹೃತ್ಪೂರ್ವಕವಾಗಿ ನಗುತ್ತಾ, “ನಾವು ಅದನ್ನು ಕುರಿತು ಯೋಚಿಸುತ್ತೇವೆ, ನಿಜಕ್ಕೂ ನಾವು ಅದನ್ನು ಕುರಿತು ಯೋಚಿಸುತ್ತೇವೆ ಎಂದು ಗಂಟಲನ್ನು ತೆರವುಗೊಳಿಸಿಕೊಳ್ಳುತ್ತಿದ್ದ. + +ಕೊನೆಗೆ, ಅವರು ಕನ್ಸಾಸ್ ನಗರದಲ್ಲಿ ಹದಿನೇಳು ವರ್ಷಗಳಿಂದ ಉಪದೇಶ ಮಾಡುತ್ತಿದ್ದಾಗ, ಅವನ ಹೆಸರು ಪ್ರಖ್ಯಾತವಾದಾಗ, ಅವನ ಹೆಸರನ್ನು ದಿ ಟ್ಯಾಟ್ಲರ್ ಪತ್ರಿಕೆಯಲ್ಲಿ ಯಾವಾಗಲೂ ಮತ್ತು ಸಿಟಿ ಪೇಪರ್ನಲ್ಲಿ ಕೆಲವೊಮ್ಮೆ ಉಲ್ಲೇಖಿಸಲಾಗುತ್ತಿತ್ತು. ಸಿಟಿ ಪೇಪರ್ ಒಂದು ಸಣ್ಣ ಪ್ರಕಾಶನ ಸಂಸ್ಥೆ. ಅದು ಈ ಪ್ರಬಂಧಗಳನ್ನು ಪ್ರಕಟಣೆಗೆ ತೆಗೆದುಕೊಂಡಿತ್ತು. ಸದ್ದಿಲ್ಲದೆ ಅವನ್ನು ಸಿಟಿ ಪೇಪರ್ಗೆ ಡಾ. ಫೋಸ್ಟರ್ ಈ ಮೊದಲೇ ಹಲವಾರು ಬಾರಿ ಕಂತುಗಳಲ್ಲಿ ಸಲ್ಲಿಸಿದ್ದ. ಕಪ್ಪು ರಕ್ಷಾಕವಚದಲ್ಲಿ ಪುಸ್ತಕವು ಹೊರಬಂದಿತ್ತು. ನೋಡಲು ಗಂಭೀರವೆನಿಸುವ ಬೂದು ಮತ್ತು ನೇರಳೆ ಬಣ್ಣದ ಧೂಳಿನ ಜಾಕೆಟ್ಟಿನೊಂದಿಗೆ ಅದು ಪ್ರಕಟವಾಗಿತ್ತು, ಅದು ಅವನ ಅಧ್ಯಯನದ ಕಿಟಕಿಯಿಂದ ಮುಸ್ಸಂಜೆಯಲ್ಲಿ ಏಕಾಗ್ರಚಿತ್ತದಲ್ಲಿ ನಗುತ್ತಿರುವ ಭಾವಚಿತ್ರವನ್ನು ಒಳಗೊಂಡಿತ್ತು. ಚಿತ್ರದಲ್ಲಿ ಅವನ ಕೈಗಳು ಅವನ ಬೆನ್ನಿನ ಹಿಂದೆ ಕಟ್ಟಿವೆ ಮತ್ತು ಒಂದು ಅಡಿ ಮುಂದಕ್ಕೆ ಮೊಣಕೈಗಳಿವೆ ಎಂದು ತೋರುತ್ತಿತ್ತು. + +ಆ ಪುಸ್ತಕದ ಮೊದಲ ಪ್ರಬಂಧವು ಪ್ರಾರಂಭವಾಗುವುದು: “ನಾನು ಈಗ ನನ್ನ ಮೇಜಿನ ಮುಂದೆ ಕುಳಿತಿದ್ದೇನೆ. ಹಲವು ವರ್ಷಗಳಿಂದ ಈ ಮೇಜು ನನಗೆ ಆರಾಮ ಮತ್ತು ಸ್ಫೂರ್ತಿಯ ಮೂಲವಾಗಿದೆ. ಆ ರಾತ್ರಿಯಾಗುವುದನ್ನು ನಾನು ನೋಡುತ್ತಿದ್ದೇನೆ. ಸಣ್ಣ ಆದರೆ (ನನ್ನ ಕಣ್ಣುಗಳಿಗೆ) ಸುಂದರವಾದ ನನ್ನ ಉದ್ಯಾನವನದ ಮೇಲೆ ನೆರಳುಗಳು ನಿಧಾನವಾಗಿ ತೆವಳುತ್ತಿವೆ. ಅಂತಹ ಸಮಯದಲ್ಲಿ ನಾನು ಮಾನವಕುಲದ ಸ್ಥಿತಿಯನ್ನು ಹೆಚ್ಚಾಗಿ ಧ್ಯಾನಿಸುತ್ತೇನೆ.” ಎಂದು. + +ಶ್ರೀಮತಿ ಬ್ರಿಡ್ಜ್ ಡಾ. ಫೋಸ್ಟರ್ ಪುಸ್ತಕ ಓದಿದಳು. ಅದರ ಮೇಲೆ ಅವರು ಸ್ವ ಅಕ್ಷರದಲ್ಲಿ ಸಹಿಮಾಡಿದ್ದರು. ಅವರು ಬಹಳ ಧ್ಯಾನಶೀಲ ವ್ಯಕ್ತಿ ಎಂದು ಆಕೆಗೆ ಕಂಡುಬಂತು. ಆಕೆ ಆಶ್ಚರ್ಯಚಕಿತರಾದಳು. ಸೂರ್ಯೋದಯಕ್ಕೆ ಆತ ತುಂಬಾ ಸಂವೇದನಾಶೀಲನಾಗಿರುವುದನ್ನು, ಅದನ್ನು ಕಾಣಲೆಂದು ಅವನು ಆಗಾಗ ಬೇಗನೆ ಎದ್ದು ಕಾಯುತ್ತಿದ್ದನೆಂದು ಕಂಡುಬಂದು ಮತ್ತಷ್ಟು ಅಚ್ಚರಿಗೊಂಡಳು. ಅವಳು ಪುಸ್ತಕದ ಹಲವೆಡೆಗಳಲ್ಲಿ ಸಾಲುಗಳ ಕೆಳಗೆ ಅಡಿಗೆರೆ ಎಳೆದಿದ್ದಳು. ಆ ಸಾಲುಗಳು ಅವಳಿಗೆ ನಿರ್ದಿಷ್ಟವಾದ ಅರ್ಥವನ್ನು ತೋರುತ್ತಿದ್ದವು. ಓದು ಪೂರ್ಣಗೊಂಡಾಗ ಅವಳು ಅದನ್ನು ತನ್ನ ಸ್ನೇಹಿತರೊಂದಿಗೆ ಚರ್ಚಿಸಲು ಅಡಿಗೆರೆಗಳು ಒದಗಿಬಂದವು. ಅವರೂ ಅದನ್ನು ಓದುತ್ತಿದ್ದರು. ಕೆಲವು ಪುಟಗಳನ್ನು ಓದಲು ಕೊನೆಗೂ ಒಪ್ಪಿದ ಗ್ರೇಸ್ ಬ್ಯಾರನ್ ಗೆ ಅವಳು ಅದನ್ನು ಬಲವಾಗಿ ಶಿಫಾರಸು ಮಾಡಿದಳು. + +ಎಲ್ಲೆಲ್ಲೂ ಯುದ್ಧದ ಬಗ್ಗೆ, ಕಮ್ಯುನಿಸ್ಟರು ಮತ್ತು ವಿಕೃತ ಮನಸ್ಸುಗಳ ಬಗ್ಗೆ ಕೊಳಕು, ನಕಾರಾತ್ಮಕ ಪುಸ್ತಕಗಳು ನಿರಂತರವಾಗಿ ಬುಕ್ ಕೌಂಟರ್ ಗಳನ್ನು ಪ್ರವಾಹದಂತೆ ತುಂಬುತ್ತಿರುವಾಗ ಈ ಪುಸ್ತಕವು ಆಲಿವ್ ಶಾಖೆಯಂತೆ ಅವಳ ಬಳಿಗೆ ಬಂದಿತು. ಜೀವನವು ಎಲ್ಲಕ್ಕಿಂತ ಹೆಚ್ಚು ಮೌಲ್ಯಯುತವಾಗಿದೆ. ಅವಳು ಯಾವುದೇ ತಪ್ಪು ಮಾಡುತ್ತಿಲ್ಲ ಮತ್ತು ಜನರಿಗೆ ಅವಳ ಅವಶ್ಯಕತೆಯಿದೆ ಎಂದು ಅದು ಭರವಸೆ ನೀಡಿತು. ಆದ್ದರಿಂದ, ದೋಸ್ಟೊಯೆವ್ಸ್ಕಿಯ ನೆರಳಿನಲ್ಲಿ, ಡಾ. ಫೋಸ್ಟರ್ ಅವರ ಆಹ್ಲಾದಕರ ಧ್ಯಾನ-ಚಿಂತನೆಗಳು ಅವರ ಲಿವಿಂಗ್ ರೂಮಿನ ವಿವಿಧ ಸ್ಥಾನಗಳಲ್ಲಿವೆ. + +ಬ್ರಿಡ್ಜ್ ದಂಪತಿಗಳು ಕಾಕ್ಟೈಲ್ ಪಾರ್ಟಿಯನ್ನು ನೀಡಿದ್ದು ಅವರು ಜನರ ಗುಂಪಿನೊಂದಿಗೆ ಕಾಕ್ಟೈಲ್ ಹೊಂದಲು ಬಯಸಿದ್ದರಿಂದ ಅಲ್ಲ. ಬದಲಿಗೆ ಅದು ಅವರು ಪಾರ್ಟಿ ನೀಡುವ ಸಮಯವಾಗಿತ್ತು. ಒಟ್ಟಾರೆ ಎಂಭತ್ತಕ್ಕೂ ಹೆಚ್ಚು ಜನರು ಬೆಟ್ಟದ ಪಕ್ಕದಲ್ಲಿ ನಿಂತ ಲೋಯಿರ್ ವ್ಯಾಲಿ ಚೇಟೌ ಶೈಲಿಯಲ್ಲಿದ್ದ ಮನೆಯ ಸುತ್ತ ನಲಿದಾಡಿದರು. ಗ್ರೇಸ್ ಮತ್ತು ವರ್ಜಿಲ್ ಬ್ಯಾರನ್ ಅಲ್ಲಿದ್ದರು. ಮ್ಯಾಡ್ಜ್ ಮತ್ತು ರಸ್ ಅರ್ಲೆನ್, ಹೇವುಡ್ ಡಂಕನ್ ಗಳು ಸಹ. ವಿಲ್ಹೆಲ್ಮ್ ಮತ್ತು ಸುಸಾನ್ ವ್ಯಾನ್ ಮೀಟರ್ ಸ್ಥಳದಿಂದ ಹೊರಗೆ ನೋಡುತ್ತಿದ್ದರೆ, ಲೋಯಿಸ್ ಮತ್ತು ಸ್ಟುವರ್ಟ್ ಮಾಂಟ್ಗೊಮೆರಿ, ಪ್ರಾಚೀನ ಮಣಿಗಳ ನಿಲುವಂಗಿಯಲ್ಲಿರುವ ಬೆಕರ್ಲ್ ಸಹೋದರಿಯರು ಶ್ರೀಮತಿ ಬ್ರಿಡ್ಜ್ ಅವರು ಕಣಕಾಲುಗಳಲ್ಲಿ ಕಿಂಕಿಣಿ ತೊಟ್ಟು ರಂಜಿಸಿದ ಕ್ಷಣವನ್ನು ಮರೆತುಹೋದಂತೆ ಕಾಣುತ್ತಿರಲಿಲ್ಲ. + +ನೋಯೆಲ್ ಜಾನ್ಸನ್ ಅವರು ಬಳಲಿಕೆಯಿಂದ ಹಾಸಿಗೆ ಹಿಡಿದಿದ್ದ ಕಾರಣ, ಮಾಬೆಲ್ ಇಹೆ ಗಂಭೀರ ಚರ್ಚೆಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದ್ದರು. ಡಾ. ಮತ್ತು ಶ್ರೀಮತಿ ಬ್ಯಾಚೆಲರ್ ಅವರ ಆಸ್ಟ್ರಿಯನ್ ನಿರಾಶ್ರಿತ ಅತಿಥಿಗಳು ಈಗ ಲಾಸ್ ಏಂಜಲೀಸ್ ನ ಪೌರರಾಗಿದ್ದರು. ಡಾ. ಫೋಸ್ಟರ್ ಸಹ ಸಹನೆಯ ಮೂರ್ತಿಯೇ ಆಗಿ ನಗುತ್ತಾ, ಭಾನುವಾರದ ಗಾಲ್ಫ್ ಬಗ್ಗೆ ಹಲವಾರು ಪುರುಷರನ್ನು ಕುಶಾಲಿನ ಮೊನೆಯಿಂದ ಚುಚ್ಚುತ್ತಾ ವಿಸ್ಕಿ ಮತ್ತು ಸಿಗರೆಟ್ ಗಾಗಿ ಸೇರಿಕೊಂಡರು. ಬೀಚಿ ಮಾರ್ ಎಂಬ ಆಟೋ ಸೇಲ್ಸ್ ಮ್ಯಾನ್ ಟುಕ್ಸೆಡೊ ಬದಲಿಗೆ ಡಬಲ್-ಬ್ರೆಸ್ಟ್ ನ ಪಿನ್-ಸ್ಟ್ರೈಪ್ ಬಿಸಿನೆಸ್ ಸೂಟ್ ನಲ್ಲಿ ಮೊದಲೇ ಆಗಮಿಸಿದ್ದ. ತನ್ನ ತಪ್ಪಿನ ಬಗ್ಗೆ ಮುಜುಗರಕ್ಕೊಳಗಾದ ಅವನು ಮನೋರಂಜನೆ ಎಂದು ಭಾವಿಸುವ ಎಲ್ಲವನ್ನೂ ಮಾಡುತ್ತಿದ್ದ. ಅವನೇನು ಅವರ ಆಪ್ತ ಸ್ನೇಹಿತನಲ್ಲ ಆದರೂ ಅವನನ್ನು ಇತರರೊಂದಿಗೆ ಆಹ್ವಾನಿಸುವುದು ಅಗತ್ಯವಾಗಿತ್ತು. + +ಶ್ರೀಮತಿ ಬ್ರಿಡ್ಜ್ ಕಣ್ಣು ಕೋರೈಸುವಂತೆ ಬೆಳಗಿದ್ದ ಮನೆಯ ತಪಾಸಣೆಯನ್ನು ಮಾಡುತ್ತಾ, ಎಲ್ಲವೂ ಎಲ್ಲೆಲ್ಲಿ ಇರಬೇಕೋ ಅಲ್ಲಲ್ಲೇ, ಹಾಗೆಯೇ ಇದೆಯಾ ಎಂದು ಖಚಿತಪಡಿಸಿಕೊಳ್ಳಲು ಮನೆಯಿಡೀ ಅಡ್ಡಾಡಿದಳು. ಅವಳು ಐದೈದು ನಿಮಿಷಕ್ಕೂ ಬಚ್ಚಲು ಮನೆಗಳತ್ತ ದೃಷ್ಟಿ ಹಾಯಿಸುತ್ತಾ ಬಣ್ಣದ ಕರವಸ್ತ್ರಗಳನ್ನು ಹೋಲುವ ಅತಿಥಿ ಟವೆಲ್ ಗಳು ಚೂರೂ ಕೊಳೆಯಾಗದೆ ಇನ್ನೂ ಒಂದರ ಮೇಲೊಂದು ಕಪಾಟಿನಲ್ಲೇ ಇರುವುದನ್ನು ಗಮನಿಸಿಕೊಂಡಳು. ಸಂಜೆಯ ಕೊನೆಯಲ್ಲಿ ಕೇವಲ ಮೂರು ಟವೆಲ್ಲುಗಳು ಮಾತ್ರ ವ್ಯಸ್ತವಾಗಿದ್ದವು. ಒಮ್ಮೆ ಮಾತ್ರ ಅವಳು ಅಡುಗೆಮನೆಗೆ ಪ್ರವೇಶಿಸಿದ್ದು. ಆಳು ಹುಡುಗಿ, ಹ್ಯಾಝೆಲ್ ಗೆ ಸಹಾಯ ಮಾಡಲು ನೇಮಕಗೊಂಡವಳು ತೊಟ್ಟಿದ್ದ ಸ್ಟಾರ್ಚ್ ಮಾಡಿದ ಸಮವಸ್ತ್ರದ ಇರುಕಿನಲ್ಲಿ ಕಾಣುತ್ತಿದ್ದ ಸ್ತನಗಳ ಮೇಲಿನ ಸಂದಿಯನ್ನು ಪಿನ್ ಹಾಕಿ ತಾನೇ ಮುಚ್ಚಿದಳು. + +ಬೆಳ್ಳಿಯ ದೀಪ ಮತ್ತು ಪುಟ್ಟ ಪುಟ್ಟ ಟರ್ಕಿ ಸ್ಯಾಂಡ್ವಿಚ್ ಗಳ ನಡುವೆ ಶ್ರೀಮತಿ ಬ್ರಿಡ್ಜ್ ಎಲ್ಲರೊಡನೆ ಒಂದು ಕ್ಷಣ ಸುಂದರವಾಗಿ ನಗುತ್ತಾ, ಹರಟೆ ಹೊಡೆಯುತ್ತಾ, ಹೊಗೆಯನ್ನು ಹೊರಹಾಕಲು ಸದ್ದಿಲ್ಲದೆ ಕಿಟಕಿಗಳನ್ನು ತೆರೆಯುತ್ತಾ, ಮಹೋಗನಿ ಟೇಬಲ್ ಮೇಲಿನಿಂದ ಬಳಸಿದ ಲೋಟಗಳನ್ನು ತೆಗೆಯುತ್ತಾ ಹೋದಳು. ಒಮ್ಮೆ ಅಲ್ಲಿಂದ ತೆರಳಿ, ನಂತರ ಓನಿಕ್ಸ್ ಆಶ್ ಟ್ರೇಗಳನ್ನು ಖಾಲಿ ಮಾಡಲು ಮರಳಿದಳು. ಅವನ್ನು ಅವಳು ಖರೀದಿಸಿ ಮನೆಯಾದ್ಯಂತ ಇರಿಸಿದ್ದಳು. + +ಬೀಚಿ ಮಾರ್ ಕುಡಿದು ಬಿಟ್ಟಿದ್ದಾನೆ. ಅವನು ಜನರ ಭುಜದ ಮೇಲೆ ಹೊಡೆದ. ಜೋಕ್ ಹೇಳಿದ. ಜೋರಾಗಿ ನಕ್ಕ. ಕೆನ್ನೇರಳೆ ಬಣ್ಣದ ಸ್ಟಬ್ ಗಳನ್ನು ಆಶ್ ಟ್ರೇಗಳಿಂದ ಖಾಲಿ ಮಾಡಿಕೊಂಡು ಸುತ್ತಲೂ ಸುತ್ತಿದ. ಇದೆಲ್ಲಾ ಮಾಡುತ್ತಿರುವಾಗಲೂ ಬೆವರಿನಿಂದ ತೇವಗೊಂಡ ಶರ್ಟ್ ಕಾಲರ್ ನ ಅಂಚುಗಳನ್ನು ಸರಿಯಾಗಿ ಇಟ್ಟುಕೊಳ್ಳಲು ಹೆಣಗುತ್ತಿದ್ದ. ಅದು ನೆಂದು ಕೊಂಬುಗಳ ರೀತಿ ಗಾಳಿಯಲ್ಲಿ ಮೇಲೆದ್ದಿತ್ತು. ಶ್ರೀಮತಿ ಬ್ರಿಡ್ಜ್ ಅವರನ್ನು ಕಾರ್ಪೆಟ್ ಹಾಸಿದ ಮೆಟ್ಟಿಲುಗಳ ಅರ್ಧದಾರಿಯವರೆಗೂ ಕ್ರಮಿಸಿ ಅವನು ಆಶಾದಾಯಕವಾಗಿ ಹೇಳಿದ, “ಮದ್ರಾಸ್ ನಿಂದ ಒಬ್ಬ ಯುವ ಸೇವಕಿ ಬಂದಿದ್ದಾಳೆ. ಅವಳಿಗೆ ದಿವಿನಾದ ಕುಂಡೆ ಇದೆ. ಬಹುಶಃ ನೀವು ಯೋಚಿಸಿದಂತೆ ದುಂಡಾಗಿಯೂ ಇಲ್ಲ, ಗುಲಾಬಿ ಬಣ್ಣದ್ದಾಗಿಯೂ ಇಲ್ಲ. ಇವಳು ಬೂದು ಬಣ್ಣ. ಉದ್ದವಾದ ಕಿವಿ ಇವೆ. ಮತ್ತಿದು ಹುಲ್ಲು ತಿನ್ನುತ್ತದೆ.” “ಅಯ್ಯೋ ದೇವರೇ” ಎಂದು ಉದ್ಘರಿಸಿದ ಶ್ರೀಮತಿ ಬ್ರಿಡ್ಜ್, ಅವಳ ಭುಜದ ಮೇಲಿಂದ ಅವನತ್ತ ಸಭ್ಯ ನಗುವಿನೊಂದಿಗೆ ನೋಡುತ್ತಲೇ ಮೆಟ್ಟಿಲುಗಳನ್ನು ಏರುತ್ತಿದ್ದಳು. ಆಟೋ ಸೇಲ್ಸ್ ಮ್ಯಾನ್ ತನ್ನ ಕಾಲರ್ ನ ಶೋಚನೀಯವಾಗಿ ಕಿತ್ತುಕೊಂಡ. + +ಪ್ರತಿ ಬುಧವಾರ ಅಗಸಗಿತ್ತಿ ಬರುತ್ತಿದ್ದಳು, ಬಸ್ ಮಾರ್ಗವು ಬ್ರಿಡ್ಜ್ ಅವರ ಮನೆಯಿಂದ ಹಲವಾರು ಬ್ಲಾಕ್ ಗಳಷ್ಟು ದೂರದಲ್ಲಿರುವುದರಿಂದ ಯಾರಾದರೂ ಖಂಡಿತ ಬೆಳಿಗ್ಗೆ ಅವಳ ಬಸ್ ಅನ್ನು ಕಾಣುತ್ತಿದ್ದರು. ವರ್ಷಗಳಿಂದಲೂ ಅಗಸಗಿತ್ತಿ ಬ್ಯೂಲಾ ಮಾ ಎಂಬ ಮುದುಕಿ ಕಪ್ಪು ಹೆಂಗಸು. ಅವಳು ತುಂಬ ಬುದ್ಧಿವಂತಳು. ಕೆಂಪು ಸ್ಕಾರ್ಫ್ ಮತ್ತು ಬಣ್ಣಬಣ್ಣದ ಆಸ್ಪತ್ರೆಯ ನಿಲುವಂಗಿಯನ್ನು ಹೋಲುವ ಉಡುಪನ್ನು ಧರಿಸುತ್ತಿದ್ದಳು. ಶ್ರೀಮತಿ ಬ್ರಿಡ್ಜ್ ಬ್ಯೂಲಾ ಮಾಳನ್ನು ತುಂಬಾ ಇಷ್ಟಪಡುತ್ತಿದ್ದಳು. ಅವಳನ್ನು “ಒಳ್ಳೆಯ ಮುದಿ ಮನಸ್ಸು” ಎಂದು ಕರೆಯುತ್ತಿದ್ದಳು. ಆಗಾಗ್ಗೆ ಅವಳಿಗೆ ಸ್ವಲ್ಪ ಹೆಚ್ಚುವರಿ ಹಣ ಅಥವಾ ಹಳೆಯದಾದಂತೆ ಕಾಣುವ ಸಂಜೆಯ ಉಡುಪುಗಳನ್ನು ಕೊಡುತ್ತಿದ್ದಳು. ಹುಡುಗಿಯ ಸ್ಕೌಟ್ಸ್ ಮತ್ತು ವಿವಿಧ ದತ್ತಿಗಳಿಗೆ ನೆರವಾಗಲು ಅವಳು ಕೊಂಡ ರಾಫೆಲ್ ಟಿಕೆಟ್ ಗಳನ್ನು ನೀಡುತ್ತಿದ್ದಳು. ಆದರೆ ಒಂದು ದಿನ ಬ್ಯೂಲಾ ಮಾಗೆ ಬಟ್ಟೆ ಒಗೆದು ಒಗೆದು ಸಾಕಾಯಿತು. ಹೆಚ್ಚುವರಿ ಉಡುಗೊರೆಗಳು ಬೇಡವಾದವು. ತನ್ನ ಯಾವುದೇ ಗ್ರಾಹಕರಿಗೆ ಒಂದು ಮಾತನ್ನೂ ಹೇಳದೆ ಅವಳು ಸಮುದ್ರ ತೀರದಲ್ಲಿ ತನ್ನ ಜೀವನವನ್ನು ಸಾಗಿಸಲು ಕ್ಯಾಲಿಫೋರ್ನಿಯಾಗೆ ಬಸ್ ಹತ್ತಿದಳು. ಹಲವಾರು ವಾರಗಳವರೆಗೆ ಶ್ರೀಮತಿ ಬ್ರಿಡ್ಜ್ ಅಗಸಗಿತ್ತಿ ಇಲ್ಲದೆ ಆ ಕೆಲಸವನ್ನು ತಾನೇ ಮಾಡಬೇಕಾಯಿತು. ಕೊನೆಗೆ ಅವಳಿಗೆ ಬೇರೊಬ್ಬರು ಸಿಕ್ಕಿದರು. ಅವಳು ಅತ್ಯಂತ ದಢೂತಿ ದುಃಖಿ ಸ್ವೀಡಿಷ್ ಮಹಿಳೆ. ಅಡುಗೆಮನೆಯಲ್ಲಿ ನಡೆದ ಸಂದರ್ಶನದಲ್ಲಿ ತನ್ನ ಹೆಸರು ಇಂಗ್ರಿಡ್ ಎಂದೂ, ಹದಿನೆಂಟು ವರ್ಷಗಳಿಂದ ತಾನು ಮಸಾಜ್ ಮಾಡುತ್ತಿದ್ದೆ ಎಂದೂ ಹೇಳಿದಳು. ಅಗಸಗಿತ್ತಿ ಆಗುವುದಕ್ಕೆ ಹೆಚ್ಚು ಇಷ್ಟಪಟ್ಟಳು. + +ಮೊದಲ ದಿನ ಬೆಳಿಗ್ಗೆ ಶ್ರೀಮತಿ ಬ್ರಿಡ್ಜ್ ಬಸ್ ಮಾರ್ಗಕ್ಕೆ ಬಂದಾಗ ಇಂಗ್ರಿಡ್ ಆಕೆಗೆ ಶೋಕಪೂರಿತ ನಮಸ್ಕಾರ ಮಾಡಿ ಪ್ರಯಾಸಪಟ್ಟು ಮುಂಭಾಗದ ಸೀಟಿನಲ್ಲಿ ಕೂತಳು. ಅದು ರೂಢಿಯ ಪದ್ಧತಿಯಾಗಿರಲಿಲ್ಲ. ಆದರೆ ಅಂತಹ ವಿಷಯವನ್ನು ವಿವರಿಸಲು ಕಷ್ಟಕರವಾಗಿತ್ತು. ಏಕೆಂದರೆ ಶ್ರೀಮತಿ ಬ್ರಿಡ್ಜ್ ಯಾರೊಬ್ಬರ ಭಾವನೆಗಳನ್ನು ಘಾಸಿಗೊಳಿಸಲು, ಅವರನ್ನು ಕೀಳಾಗಿ ಕಂಡು ನೋಯಿಸಲು ಇಷ್ಟಪಡುವುದಿಲ್ಲ. ಆದ್ದರಿಂದ ಆಕೆ ಇದರ ಬಗ್ಗೆ ಏನನ್ನೂ ಹೇಳಲಿಲ್ಲ. ಮುಂದಿನ ವಾರದ ವೇಳೆಗೆ ನೆರೆಹೊರೆಯಲ್ಲಿರುವ ಇತರ ಅಗಸಗಿತ್ತಿಯರು ಇಂಗ್ರಿಡ್ ಗೆ ಹೇಳಿಯಾರು ಎಂದು ಆಕೆಗೆ ಅನ್ನಿಸಿತ್ತು. + +ಆದರೆ ಮುಂದಿನ ವಾರ ಅವಳು ಮತ್ತೆ ಬಸ್ಸಿಗೆ ಮುಂದಿನ ಬಾಗಿಲಲ್ಲಿ ಹತ್ತಿಕೊಂಡಳು. ಮತ್ತೆ ಶ್ರೀಮತಿ ಬ್ರಿಡ್ಜ್ ಎಲ್ಲವೂ ಸರಿ ಇದೆ ಎಂಬಂತೆ ನಟಿಸಿದಳು. ಆದರೆ ಮೂರನೆಯ ಬೆಳಿಗ್ಗೆ ಅವರು ಮನೆಯ ಕಡೆಗೆ ವಾರ್ಡ್ ಪಾರ್ಕ್ ವೇಯಲ್ಲಿ ಹೋಗುತ್ತಿದ್ದಾಗ ಶ್ರೀಮತಿ ಬ್ರಿಡ್ಜ್, “ನಾನು ಬ್ಯೂಲಾ ಮಾಗೆ ತುಂಬಾ ಹೊಂದಿಕೊಂಡಿದ್ದೆ. ಅವಳ ಮನಸಿನಲ್ಲಿ ಇದ್ದ ಹಳೆಯ ಅನುಭವವನ್ನು ಅವಳು ಕಳಚಿಕೊಳ್ಳಲಿಲ್ಲ” ಎಂದಳು. + +ಶ್ರೀಮತಿ ಬ್ರಿಡ್ಜರನ್ನು ನೋಡಲು ಇಂಗ್ರಿಡ್ ತಣ್ಣಯ ದೊಡ್ಡ ಹಳದಿ ತಲೆಯನ್ನು ತಿರುಗಿಸಿದಳು. ಆ ನೋಟ ಕಲ್ಲಿನಂತಿತ್ತು. ಅವರು ಡ್ರೈವ್ ವೇನಲ್ಲಿ ನಡೆಯುತ್ತಿದ್ದಂತೆ ಇಂಗ್ರಿಡ್ ಮಾತನಾಡಿದಳು: “ಆದ್ದರಿಂದ ನಾನು ಹಿಂಭಾಗದಲ್ಲಿ ಕುಳಿತುಕೊಳ್ಳಬೇಕೆಂದು ನೀವು ಬಯಸುತ್ತೀರಿ.” + +“ಓಹ್, ದೇವರೇ! ನಾನು ಅದನ್ನು ಬಯಸಲಿಲ್ಲ,” ಶ್ರೀಮತಿ ಬ್ರಿಡ್ಜ್ ಉತ್ತರಿಸಿದಳು, ಇಂಗ್ರಿಡ್ ನ ಮಾತಿಗೆ ಮುಗುಳುನಗುತ್ತಾ. “ನೀನು ಬಯಸಿದರೆ ಇಲ್ಲಿಯೇ ಕುಳಿತುಕೊಳ್ಳಲು ನಿನಗೆ ಸಂಪೂರ್ಣವಾಗಿ ಸ್ವಾಗತವಿದೆ.” + +ಇಂಗ್ರಿಡ್ ಈ ವಿಷಯದ ಬಗ್ಗೆ ಹೆಚ್ಚು ಹೇಳಲಿಲ್ಲ. ಮುಂದಿನ ವಾರ ಅದೇ ಭವ್ಯ ವಿಷಣ್ಣತೆಯೊಂದಿಗೆ ಹಿಂದಿನ ಸೀಟಿನಲ್ಲಿ ಪ್ರಯಾಣ ಮಾಡಿದಳು. + +ಸಾಮಾನ್ಯವಾಗಿ ಶ್ರೀಮತಿ ಬ್ರಿಡ್ಜ್ ಲಾಂಡ್ರಿಯಿಂದ ಬಂದ ಬಟ್ಟೆಗಳನ್ನು ಪರೀಕ್ಷಿಸುತ್ತಿದ್ದಳು. ಆದರೆ ಅವಳು ಶಾಪಿಂಗ್ ಮಾಡುವಾಗ ಅಥವಾ ಸಭೆ ನಡೆಸಿದಾಗ, ಆ ಕೆಲಸವು ಹ್ಯಾಜೆಲ್ ಪಾಲಿಗೆ ಬೀಳುತ್ತಿತ್ತು. ಹ್ಯಾಜೆಲ್ ಎಂದಿಗೂ ಕಾಣೆಯಾದ ಗುಂಡಿಗಳು ಅಥವಾ ಸಡಿಲವಾದ ಎಲಾಸ್ಟಿಕ್ ಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ಹಾಗಾಗಿ ಶ್ರೀಮತಿ ಬ್ರಿಡ್ಜ್ ಡೌಗ್ಲಾಸ್ ಹಾಳಾಗಿದ್ದ ಕಫ್ ನೊಂದಿಗೆ ಶರ್ಟ್ ಧರಿಸಿರುವುದನ್ನು ಕಾಣಬೇಕಾಗಿ ಬಂದಿತ್ತು. + +“ಅಯ್ಯೋ, ದೇವರೇ!” ಅವಳು ಉದ್ಗಾರವೆತ್ತಿ ಅವನ ತೋಳನ್ನು ಹಿಡಿದುಕೊಂಡಳು. “ನಾಯಿಯೇನಾದರೂ ಅದನ್ನ ಅಗಿಯುತ್ತಿತ್ತಾ?” + +ಅವನು ದಾರದ ಎಳೆಗಳನ್ನು ಹಿಂದೆಂದೂ ನೋಡಿಲ್ಲವೆಂಬಂತೆ ನೋಡಿದ. + +“ಖಂಡಿತವಾಗಿಯೂ ನೀವು ಆ ಅಂಗಿಯನ್ನು ಧರಿಸುವ ಉದ್ದೇಶ ಹೊಂದಿರಲಿಲ್ಲ, ಅಲ್ಲವೇ?” + +“ಇದು ನನಗೇನೋ ಚೆನ್ನಾಗಿಯೇ ಇದೆ ಎಂದು ತೋರುತ್ತದೆ,” ಡೌಗ್ಲಾಸ್ ಹೇಳಿದ. + +“ಆ ಕಫ್ ಗಳನ್ನು ನೋಡಿ! ನಾವು ಪೂರ್ ಹೌಸಿಗೆ ಹೋಗುತ್ತಿದ್ದೇವೆ ಎಂದು ಯಾರಾದರೂ ಭಾವಿಸುತ್ತಾರೆ.” + +“ಹಾಗಾದರೆ ಬಡವರಾಗಿರುವುದು ನಾಚಿಕೆಗೇಡು ವಿಚಾರವೇ?” + +“ಇಲ್ಲ!” ಅವಳು ಪ್ರತಿಭಟಿಸಿದಳು. “ಆದರೆ ನಾವು ಬಡವರಲ್ಲ!” + +ಶ್ರೀಮತಿ ಬ್ರಿಡ್ಜ್ ಸಮಾನತೆಯ ಪರಿಕಲ್ಪನೆಯನ್ನು ಅಂಗೀಕರಿಸಿದವಳು. ಪತ್ರಿಕೆಗಳಲ್ಲಿ ನೋಡಿದಾಗ ಅಥವಾ ಕಾರ್ಮಿಕ ಸಂಘಗಳು ಮತ್ತೊಂದು ವಿಜಯವನ್ನು ಸಾಧಿಸಿವೆ ಎಂದು ರೇಡಿಯೊದಲ್ಲಿ ಕೇಳಿದಾಗ ಆಕೆ ಅಂದುಕೊಳ್ಳುತ್ತಿದ್ದುದು: “ಅವರಿಗೆ ಅದರಿಂದ ಒಳ್ಳೆಯದು!” ಎಂದು. ವಿವಿಧ ರಾಜ್ಯಗಳ ಪ್ರತ್ಯೇಕತಾ ನೀತಿಗಳು ಹೆಚ್ಚು ಹೆಚ್ಚು ನಾಗರಿಕ ಸಮುದಾಯಗಳಿಂದ ಮತ್ತು ಫೆಡರಲ್ ಸರ್ಕಾರದಿಂದ ಟೀಕೆಗೆ ಗುರಿಯಾಗುತ್ತಿದ್ದಂತೆ, ಇದು ತಪ್ಪುಗಳನ್ನು ತಿದ್ದಿಕೊಳ್ಳಲು ಸರಿಯಾದ ಸಮಯ ಎಂದು ಅವಳು ಭಾವಿಸುತ್ತಿದ್ದಳು. ತಾರತಮ್ಯವು ಅದು ಹೇಗೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಅವಳು ಪ್ರಯತ್ನಿಸುತ್ತಿದ್ದಳು. ಈ ಬಗ್ಗೆ ಅವಳಲ್ಲಿ ಎಷ್ಟು ಪ್ರಬಲವಾದ ಭಾವನೆಗಳಿದ್ದರೂ ಅವಳು ಹೇಳುವ ವಿಷಯದ ಬಗ್ಗೆ ಜಾಗರೂಕಳಾಗಿರುತ್ತಿದ್ದಳು. ಏಕೆಂದರೆ ಒಬ್ಬ ನಿರ್ದಿಷ್ಟ ವ್ಯಕ್ತಿಯ ಪ್ರಯತ್ನದಿಂದ ಅವಳು ಹೊಂದಿದ್ದ ಎಲ್ಲ ಅಭಿಪ್ರಾಯವೂ ತನ್ನದಾಗಿದೆಯೆಂದು ಅವಳು ತಿಳಿದಿದ್ದಳು: ಅದು ಅವಳ ಪತಿ. + +ಶ್ರೀಯುತ ಬ್ರಿಡ್ಜ್ ಅವರು ಎಲ್ಲಾ ಜನರೂ ಸಮಾನರಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ತನ್ನ ನಿರ್ಣಾಯಕ ರೀತಿಯಲ್ಲಿ ಮಾತನಾಡುವಾಗ, ಅವಳು ಅಂತಹ ವಿಷಯದ ಬಗ್ಗೆ ಸಹ ವಿಚಾರ ಮಾಡಬೇಕೆಂದು ಕೋಪದಿಂದಲೇ ಹೇಳುತ್ತಿದ್ದರು. “ನೀವು ಭೂಮಿಯ ಮೇಲಿನ ಎಲ್ಲ ಜನರನ್ನು ಕರೆಯಿರಿ ಮತ್ತು ಎಲ್ಲವನ್ನೂ ಸಮವಾಗಿ ಹಂಚಿರಿ. ಕೇವಲ ಆರು ತಿಂಗಳಲ್ಲಿ ಪ್ರತಿಯೊಬ್ಬರೂ ಈಗ ಇರುವಷ್ಟನ್ನು ಮಾತ್ರ ಹೊಂದಿರುತ್ತಾರೆ. ಅಬ್ರಹಾಂ ಲಿಂಕನ್ ಬಯಸಿದ್ದು ಸಮಾನ ಹಕ್ಕುಗಳು, ಸಮಾನ ಸಾಮರ್ಥ್ಯವಲ್ಲ.” + +ಅನೇಕ ಜನರಿಗೆ ಸಮಾನ ಹಕ್ಕುಗಳಿಲ್ಲ. ಯಾವಾಗಲೂ ಅವನಿಗೆ ಆಕೆ ಸೂಚಿಸಲು ಪ್ರಯತ್ನಿಸುತ್ತಿರುವುದು ಇದನ್ನೇ ಎನ್ನುವುದು ನಿಖರವಾಗಿ ಕಾಣುತ್ತದೆ. ಆದರೆ ಕೆಲವು ನಿಮಿಷಗಳ ಚರ್ಚೆಯ ನಂತರ ಅವಳು ತನ್ನಲ್ಲಿ ಎಂಥದೋ ಕೊರತೆಯುಂಟೆಂಬ ವಿಷಣ್ಣ ಭಾವನೆಯಲ್ಲಿ ಮುಳುಗುತ್ತಾಳೆ; ಅದರಿಂದಲೇ ಗೊಂದಲಕ್ಕೊಳಗಾಗಲು ಪ್ರಾರಂಭಿಸುತ್ತಾಳೆ. ಆ ಸಮಯದಲ್ಲಿ ಅವನು ಅವಳನ್ನು ಗಾಜಿನ ಪೆಟ್ಟಿಗೆಯಲ್ಲಿ ಇರುವ ವಸ್ತುವನ್ನು ನೋಡುವಂತೆ ಒಂದು ಕ್ಷಣ ದಿಟ್ಟಿಸಿ ನಂತರ ಅವನು ಏನು ಮಾಡುತ್ತಿದ್ದನೋ ಅದನ್ನು ಪುನರಾರಂಭಿಸುತ್ತಾನೆ. + +ಸೇರುತ್ತಿದ್ದ ಯಾವುದೇ ಸಭೆಯಲ್ಲಾದರೂ ಸರಿ, ಅವಳು ಅಲ್ಪಸಂಖ್ಯಾತರ ಗುಂಪುಗಳ ಸದಸ್ಯರಿಗೆ ಸದಾ ತನ್ನನ್ನು ಪರಿಚಯಿಸಿಕೊಳ್ಳುತ್ತಾ ಹೋದಳು. + +“ನಾನು ಇಂಡಿಯಾ ಬ್ರಿಡ್ಜ್,” ಆಕೆ ಸ್ನೇಹಪರವಾಗಿ ಹೇಳುತ್ತಿದ್ದಳು. ಜನರನ್ನು ನನ್ನ ಮನೆಗೆ ಆಹ್ವಾನಿಸಲು ಸಾಧ್ಯವಿದೆ ಎಂದು ಭಾವಿಸುತ್ತಿದ್ದಳು. ಯಾವುದೇ ಅಸಾಮಾನ್ಯ ವಿಚಾರಗಳನ್ನು ನೀಡಲಾಗದ ನೆರೆಹೊರೆಯ ಜನರನ್ನು ಅವಳು ಬಹಳ ಸಮಯದಿಂದ ತಿಳಿದಿದ್ದಳು. ಕೆಲವು ವರ್ಗಗಳ ಹೆಚ್ಚಿದ ಆದಾಯದ ಬಗ್ಗೆ ಚರ್ಚಿಸಿದಾಗ ಆಕೆ ಹೇಳುತ್ತಿದ್ದದ್ದು “ಅವರು ಟಿವಿ ಮತ್ತು ವಾಹನಗಳನ್ನು, ಅಷ್ಟೇಕೆ ಬೇಕಿರುವ ಎಲ್ಲವನ್ನೂ ಹೊಂದಿರುವುದು ಒಳ್ಳೆಯದಲ್ಲವೇ” ಎಂದು. + +ಪಟ್ಟಣದ ಉತ್ತರದಲ್ಲಿ ನೀಗ್ರೋ ದಂಪತಿಗಳು ಬಿಳಿಯರ ನೆರೆಹೊರೆಯಲ್ಲಿ ಕಿರಾಣಿ ಅಂಗಡಿಯೊಂದನ್ನು ತೆರೆದರು. ಆ ರಾತ್ರಿಯೇ ಅಂಗಡಿಯ ಕಿಟಕಿಗಳನ್ನು ಒಡೆದುಹಾಕಲಾಯಿತು. ಅಂಗಡಿಯು ಬೆಂಕಿಗೆ ಆಹುತಿಯಾಯಿತು. ವರ್ತಮಾನ ಪತ್ರಿಕೆಗಳು ಹಾಳಾದ ಆಸ್ತಿಯ, ನಗುತ್ತಿರುವ ಇಬ್ಬರು ಪೊಲೀಸರ ಮತ್ತು ತಮ್ಮ ಜೀವಮಾನದ ಸಂಪೂರ್ಣ ಉಳಿತಾಯವನ್ನು ಕಳೆದುಕೊಂಡಿರುವ ನೀಗ್ರೋ ದಂಪತಿಗಳ ಛಾಯಾಚಿತ್ರಗಳನ್ನು ಪ್ರಕಟಿಸಿದವು. ಪತಿ ಕೆಲಸಕ್ಕೆ ತೆರಳಿದ ಹಲವು ಗಂಟೆಗಳ ನಂತರ ಶ್ರೀಮತಿ ಬ್ರಿಡ್ಜ್ ಈ ಕಥೆಯನ್ನು ಸ್ವತಃ ಓದುತ್ತಿದ್ದಳು. ಅವಳು ಯುವ ನೀಗ್ರೋ ಮತ್ತು ಅವನ ಹೆಂಡತಿಯ ಶೋಚನೀಯ ಮುಖಗಳನ್ನು ಅಧ್ಯಯನ ಮಾಡುವಂತೆ ತದೇಕಚಿತ್ತಳಾಗಿ ಕಡುದುಃಖದಿಂದಲೇ ನೋಡಿದಳು. + +ವೃತ್ತಪತ್ರಿಕೆಯಾದ್ಯಂತ ಬೆಳಿಗ್ಗೆಯ ಸೂರ್ಯನ ಬೆಚ್ಚಗಿನ ಕಿರಣ ಬಿದ್ದಿತ್ತು. ಸೂರ್ಯ ಬೆಚ್ಚಗೆ, ಹರ್ಷಚಿತ್ತದಿಂದ ಓರೆಯಾದ. ಅಡುಗೆಮನೆಯಲ್ಲಿ ಹ್ಯಾಜೆಲ್ ಸ್ತುತಿಗೀತೆಗಳನ್ನು ಹಾಡಿಕೊಂಡು ಆಪಲ್ ಪೈಗಾಗಿ ಸೇಬುಗಳ ಸಿಪ್ಪೆ ತೆಗೆಯುತ್ತಿದ್ದಳು. ಅವಳ ಕಿಟಕಿಯಿಂದ ನೋಡಿದರೆ ಭೂಮಿಯೆಲ್ಲವೂ ಸಮಾಧಾನಗೊಂಡಂತೆ ತೋರುತ್ತಿತ್ತು. ಆದರೂ ಅಂತಹ ವಿಷಯಗಳು ಇನ್ನೂ ಮನಸ್ಸಿಗೆ ಬಂದವು. ಕೈಯಲ್ಲಿ ಬೆಣ್ಣೆ ಹಚ್ಚಿದ ಟೋಸ್ಟಿನ ತುಂಡು ಹಿಡಿದು ತನ್ನ ಉಪಾಹಾರದ ಮೂಲೆ ಸೇರಿದ ಶ್ರೀಮತಿ ಬ್ರಿಡ್ಜ್ ಗೆ ತಡೆಯಲಾಗದ ಬಯಕೆಯೊಂದು ಉಂಟಾಯಿತು. ಅವಳು ಈ ದುರದೃಷ್ಟಕರ ಜನರನ್ನು ತನ್ನ ಎದೆಗೆ ಒತ್ತಿ ಹಿಡಿದು ತನಗೆ ನೋಯುವುದರ ಅರ್ಥವೇನೆಂದು ತಿಳಿದಿದೆ. ಎಲ್ಲವೂ ಸರಿಹೋಗುತ್ತದೆ ಎಂದು ಹೇಳಬೇಕು ಎನ್ನುವುದದು. + +ಅವಳು ಯಾವಾಗಲೂ ತನ್ನ ಸ್ನೇಹಿತರೊಂದಿಗೆ ಕೂಡಿ ಗಮನಾರ್ಹವಾದ ದಾನ ಧರ್ಮ ಕಾರ್ಯವನ್ನು ಮಾಡಿದ್ದಳು. ವಿಶೇಷವಾಗಿ ಒಂಭತ್ತನೇ ಬೀದಿಯಲ್ಲಿರುವ ಒಂದು ಸಣ್ಣ ಅಂಗಡಿಯಲ್ಲಿ ಡ್ರೈವ್ ಗಳಲ್ಲಿ ಸಂಗ್ರಹಿಸಿದ ಬಳಸಿದ ಬಟ್ಟೆಗಳನ್ನು ಇಟ್ಟು ವಿತರಿಸುತ್ತಿದ್ದಳು. ಈ ಅಂಗಡಿಯಲ್ಲಿ ಎರಡು ಕೋಣೆಗಳಿದ್ದವು. ಮುಂಭಾಗದಲ್ಲಿ ಒಂದು ಸಾಲಿನ ಇಸ್ಪೇಟಾಟದ ಟೇಬಲ್ ಗಳನ್ನು ಒಟ್ಟಿಗೆ ಇರಿಸಲಾಗಿತ್ತು. ಅದರ ಹಿಂದೆ ಚಾರಿಟಿ ಕಾರ್ಮಿಕರು ನಿಂತು ಏನನ್ನಾದರೂ ಧರಿಸಲು ಬಯಸುವ ಜನರಿಗೆ ಸಹಾಯ ಮಾಡಬೇಕಾಗಿತ್ತು. ಹಿಂದಿನ ಕೋಣೆಯಲ್ಲಿ ಇನ್ನೂ ಹಲವಾರು ಇಸ್ಪೇಟಾಟದ ಟೇಬಲ್ ಗಳು ಮತ್ತು ಮಡಚಿ ಇಡಬಹುದಾದ ಮರದ ಕುರ್ಚಿಗಳು ಇದ್ದವು. ಶ್ರೀಮತಿ ಬ್ರಿಡ್ಜ್ ಮತ್ತು ಅವಳ ಸಹ ಕೆಲಸಗಾರರು ತಮ್ಮ ಊಟವನ್ನು ಇಲ್ಲೇ ಮಾಡುತ್ತಿದ್ದರು ಅಥವಾ ಮುಂದಿನ ಕೋಣೆಯ ಕರ್ತವ್ಯದಲ್ಲಿ ಇರದಿದ್ದಾಗ ವಿಶ್ರಾಂತಿ ಪಡೆಯುತ್ತಿದ್ದರು. + +ಅವಳು ಸಾಮಾನ್ಯವಾಗಿ ಮ್ಯಾಡ್ಜ್ ಅರ್ಲೆನ್ ಜೊತೆ ಅಲ್ಲಿಗೆ ಹೋಗುತ್ತಿದ್ದಳು. ಒಂದು ವಾರ ಅವರು ಆರ್ಲೆನ್ಸರ ಕ್ರಿಸ್ಲರ್ ನಲ್ಲಿ, ಮುಂದಿನ ವಾರ ಶ್ರೀಮತಿ ಬ್ರಿಡ್ಜ್ ಳ ಲಿಂಕನ್ ನಲ್ಲಿ ತಮ್ಮ ಕೆಲಸಕ್ಕೆ ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಶ್ರೀಮತಿ ಬ್ರಿಡ್ಜ್ ತನ್ನ ಪಾರ್ಕಿಂಗ್ ಸ್ಟಾಲ್ ಬಾಡಿಗೆಗೆ ಪಡೆದ ಗ್ಯಾರೇಜ್ ನ ಮುಂದೆ ಯಾವಾಗಲೂ ನಿಲ್ಲಿಸುತ್ತಿದ್ದಳು. ನಿಲ್ಲಿಸಿ ಜೋರಾಗಿ ಹಾರ್ನ್ ಮಾಡುತ್ತಿದ್ದಳು. ಯಾರಾದರೂ ದೃಷ್ಟಿಗೆ ಬಿದ್ದರೆ ಅವಳು ಸನ್ನೆ ಮಾಡಿ ಕರೆಯುತ್ತಿದ್ದಳು. ಸಾಮಾನ್ಯವಾಗಿ ಜಾರ್ಜ್ ಎಂಬ ಹೆಸರಿನ ಒಬ್ಬ ಪರಿಚಾರಕ ತನ್ನ ಜಾಕೆಟ್ ಬಟನ್ ಹಾಕಿಕೊಳ್ಳುತ್ತಾ ಹೊರಬರುತ್ತಿದ್ದ. ಅವನು ಹಿಂದಿನ ಸೀಟಿನಲ್ಲಿ ಕುಳಿತ ಮೇಲೆ ಬಟ್ಟೆ ಅಂಗಡಿಗೆ ಸವಾರಿ ಹೊರಡುತ್ತಿತ್ತು. ಅಲ್ಲಿ ಅವನು ಹೊರಗೆ ಜಿಗಿದು ಶ್ರೀಮತಿ ಬ್ರಿಡ್ಜ್ ಅವರಿಗಾಗಿ ಬಾಗಿಲನ್ನು ತೆರೆಯುತ್ತಿದ್ದ. ಅದರ ನಂತರ ಲಿಂಕನ್ ನನ್ನು ಮತ್ತೆ ಗ್ಯಾರೇಜ್ ಗೆ ಮರಳಿಸಲಾಗುತ್ತಿತ್ತು, ಏಕೆಂದರೆ ಅಂತಹ ನೆರೆಹೊರೆಯಲ್ಲಿ ಕಾರನ್ನು ಬೀದಿಯಲ್ಲಿ ಬಿಡುವುದು ಅವಳಿಗೆ ಇಷ್ಟವಾಗುತ್ತಿರಲಿಲ್ಲ. + +“ಜಾರ್ಜ್, ಆರು, ಅಥವಾ ಆರು-ಹದಿನೈದರ ಸುಮಾರಿಗೆ ನೀನು ಇಲ್ಲಿಗೆ ಬರಬಹುದೇ?” ಎಂದು ಅವರು ಕೇಳುತ್ತಿದ್ದರು. + +ಅವನು ಯಾವಾಗಲೂ “ಸಂತೋಷವಾಗಿ” ಎಂದು ಉತ್ತರಿಸುತ್ತಿದ್ದ, ತನ್ನ ಕ್ಯಾಪಿನ ಮುಂಚಾಚನ್ನು ಮುಟ್ಟಿ ಕಾರ್ ಓಡಿಸಲು ಮೊದಲಿಡುತ್ತಿದ್ದ. + +ಇಬ್ಬರೂ ತಮ್ಮ ಅಂಗಡಿಗೆ ಕಾಲಿಡುತ್ತಿರುವಾಗ ಶ್ರೀಮತಿ ಅರ್ಲೆನ್ ಹೇಳಿದರು “ಅವರು ನೋಡಲು ತುಂಬಾ ಒಳ್ಳೆಯವರಾಗಿ ಕಾಣುತ್ತಾರೆ”. + +“ಓಹ್, ಅವನು! ನಿಜಕ್ಕೂ” ಶ್ರೀಮತಿ ಬ್ರಿಡ್ಜ್ ಶ್ರೀಮತಿ ಅರ್ಲೆನ್ ಅವರ ಮಾತನ್ನು ಒಪ್ಪಿದಳು. “ಅವನು ನಮ್ಮ ಹತ್ತಿರ ಇದ್ದ ಗ್ಯಾರೇಜ್ ಪುರುಷರಲ್ಲಿಯೇ ಉತ್ತಮ” + +“ನೀವು ಎಷ್ಟು ದಿನದಿಂದ ಅಲ್ಲಿ ಕಾರ್ ಪಾರ್ಕ್ ಮಾಡುತ್ತಿದ್ದೀರಿ?” + +“ಬಹಳ ಸಮಯದಿಂದಲೂ. ಮೊದಲು ನಾವು ವಾಲ್ನಟ್ ನಲ್ಲಿ ಆ ಭಯಂಕರವಾದ ಸ್ಥಳದಲ್ಲಿ ಪಾರ್ಕ್ ಮಾಡುತ್ತಿದ್ದೆವು.” + +“ಆ ಪಾಪ್ಕಾರ್ನ್ ಮೆಶೀನ್ ಇಟ್ಟುಕೊಂಡಿದ್ದಾನಲ್ಲ? ಅಲ್ಲಿಯಾ? ದೇವರೇ, ಅದು ಚಿಕ್ಕದಲ್ಲವೇ?” + +“ಇಲ್ಲ, ಆ ಸ್ಥಳವಲ್ಲ. ಇಟಾಲಿಯನ್ನರ ಒಂದು ಜಾಗ. ನನ್ನ ಗಂಡನ ಅಭಿಪ್ರಾಯ ಇಟಾಲಿಯನ್ನರ ಬಗ್ಗೆ ಹೇಗೆ ಇದೆ ಎಂದು ನಿಮಗೆ ತಿಳಿದಿದೆ. ಸರಿ, ಅದು ಅವರಿಗೆಲ್ಲ ಪ್ರಧಾನ ಕಚೇರಿಯಂತೆ ಕಾಣುತ್ತದೆ. ಅವರು ತಮ್ಮ ಸ್ಯಾಂಡ್ವಿಚ್ ತಿನ್ನಲು ಮತ್ತು ನ್ಯೂಯಾರ್ಕ್ ನಿಂದ ಪ್ರಸಾರವಾಗುವ ಒಪೆರಾ ಕೇಳಲು ಅಲ್ಲಿಗೆ ಬಂದವರು. ಅಲ್ಲಿ ನಿಲ್ಲಿಸುವುದು ಅಸಾಧ್ಯವಾಗಿತ್ತು. ಆದ್ದರಿಂದ ಅಂತಿಮವಾಗಿ ವಾಲ್ಟರ್, ‘ನಾನು ಗ್ಯಾರೇಜ್ ಬದಲಾಯಿಸಲಿದ್ದೇನೆ.’ ಅಂದರು. ಹಾಗೇ ಮಾಡಿದ್ದೇವೆ. + +ಅವರು ಕೊಳೆಯಾದ ಮತ್ತು ಹುಳಿಯಿಂದ ತೊಳೆಯದ ಬಟ್ಟೆಗಳಿಂದ ತುಂಬಿದ್ದ ಇಸ್ಪೇಟ್ ಟೇಬಲ್ ಗಳ ಸಾಲನ್ನು ದಾಟಿ ಹಿಂಬದಿಯ ಕೋಣೆಗೆ ಹೋದರು. ಅಲ್ಲಿ ಕೆಲವರು ಮುಂಚಿತವಾಗಿ ಬಂದವರು ಕಾಫಿ ಮತ್ತು ಎಕ್ಲೇರ್ ಗಳನ್ನು ಸೇವಿಸುತ್ತಿದ್ದರು. ಶ್ರೀಮತಿ ಬ್ರಿಡ್ಜ್ ಮತ್ತು ಶ್ರೀಮತಿ ಅರ್ಲೆನ್ ತಮ್ಮ ಕೋಟುಗಳನ್ನು ನೇತುಹಾಕಿ ಕಾಫಿ ಕುಡಿದು ಕೆಲಸಕ್ಕೆ ಸಿದ್ಧರಾದರು. ಸುಧಾರಣಾ ಶಾಲೆಯು ಸಹಾಯ ಮಾಡಲು ತಮ್ಮ ಕೆಲವು ಹುಡುಗರನ್ನು ಕಳುಹಿಸಿತ್ತು. ಅವರನ್ನು ಇತ್ತೀಚಿಗಿನ ಬಳಸಿದ ಬಟ್ಟೆಯ ಚೀಲಗಳನ್ನು ಬಿಚ್ಚಿ ಹೊರಗೆ ಹಾಕುವ ಕೆಲಸಕ್ಕೆ ಹಚ್ಚಲಾಯಿತು. + +ಎರಡು ಗಂಟೆಯ ಹೊತ್ತಿಗೆ ಎಲ್ಲವೂ ದಿನದ ವಿತರಣೆಗೆ ಸಿದ್ಧವಾಯಿತು. ಬಾಗಿಲುಗಳ ಚಿಲಕ ತೆಗೆದು ಕಾದಿದ್ದ ಬಡವರಲ್ಲಿ ಮೊದಲನೆಯವರು ಕೌಂಟರ್ ಬಳಿ ನಿಂತಿದ್ದವರು ಶ್ರೀಮತಿ ಬ್ರಿಡ್ಜ್ ಮತ್ತು ಇನ್ನಿಬ್ಬರ ಮುಂದೆ ನಿಂತರು. ಉತ್ತೇಜಿಸುವ ನಗೆಯೊಂದಿಗೆ ನಿಂತಿದ್ದ ಈ ಮೂವರೂ ಕೈಗವಸು ಧರಿಸಿದ್ದರು. + +ಹೇವುಡ್ ಡಂಕನ್ಸರ ಮನೆಯಲ್ಲಿ ನಡೆದ ಕಾಕ್ಟೈಲ್ ಪಾರ್ಟಿಯಲ್ಲಿ ಪಾಲ್ಗೊಳ್ಳುತ್ತಿರುವಾಗಲೇ ಬ್ರಿಡ್ಜ್ ದಂಪತಿಗಳನ್ನು ಬಹುತೇಕ ದೋಚಲಾಯಿತು. ಅದು ರಾತ್ರಿ ಹತ್ತು ಗಂಟೆಯ ನಂತರ. ಅವಳು ಬಫೆ ಟೇಬಲ್ ನಿಂದ ಉಪ್ಪು ಮೀನು-ಆಂಚೊವಿ ಕ್ರ್ಯಾಕರ್ ತೆಗೆದುಕೊಳ್ಳುತ್ತಿದ್ದಂತೆಯೇ ನಾಲ್ಕು ಮಂದಿ ಪುರುಷರು ರಿವಾಲ್ವರ್ ಗಳೊಂದಿಗೆ ಬಾಗಿಲಲ್ಲಿ ಕಾಣಿಸಿಕೊಂಡರು. ಅವರು ಗುರುತು ಸಿಗದಂತೆ ಹಾರ್ನ್-ರಿಮ್ಡ್ ಗ್ಲಾಸ್ ಗಳಿಗೆ ಜೋಡಿಸಲಾದ ಪ್ಲಾಸ್ಟಿಕ್ ಮೂಗುಗಳನ್ನು ಧರಿಸಿದ್ದರು. ಅವರಲ್ಲಿ ಒಬ್ಬ, “ಆಲ್ ರೈಟ್, ಎಲ್ಲರೂ ಕೇಳಿ. ನಾವು ದರೋಡೆಗೆ ಬಂದಿದ್ದೇವೆ!” ಎಂದು ಅರಚಿದ. ಅವರಲ್ಲಿ ಮತ್ತೊಬ್ಬ – ಶ್ರೀಮತಿ ಬ್ರಿಡ್ಜ್ ಆ ನಂತರ ಪೋಲೀಸರಿಗೆ ಅವನನ್ನು ವಿವರಿಸಿದ್ದು ಅವನು ಟೈ ಧರಿಸಿರಲಿಲ್ಲ ಎಂದು. ಅವನು ಪಿಯಾನೋ ಬೆಂಚ್ ಮೇಲೆ ಹತ್ತಿ, ಅಲ್ಲಿಂದ ಪಿಯಾನೋ ಮೇಲಕ್ಕೆ ಹತ್ತಿ ನಿಂತು ತನ್ನ ಗನ್ ಅನ್ನು ವಿವಿಧ ಜನರ ಕಡೆಗೆ ತೋರಿಸಿದ. ಮೊದಲಿಗೆ ಎಲ್ಲರೂ ಇದು ತಮಾಷೆಯೆಂದು ಭಾವಿಸಿದ್ದರು. ಆದರೆ ಅದು ತಮಾಷೆ ಅಲ್ಲ. ಏಕೆಂದರೆ ದರೋಡೆಕೋರರು ನಮ್ಮ ತಲೆಯ ಮೇಲೆ ಕೈಗಳ ಹೊತ್ತು ಗೋಡೆಯತ್ತ ಮುಖ ಮಾಡಿಕೊಂಡಿರುವಂತೆ ಮಾಡಿದರು. ಅವರಲ್ಲಿ ಒಬ್ಬ ಮೇಲಕ್ಕೆ ಓಡಿ ತನ್ನ ತೋಳುಗಳ ತುಂಬ ತುಪ್ಪಳದ ಕೋಟುಗಳು ಮತ್ತು ಪರ್ಸುಳೊಂದಿಗೆ ಇಳಿದು ಬಂದ. ಇನ್ನೂ ಇಬ್ಬರು ಕೋಣೆಯ ಸುತ್ತಲೂ ಪುರುಷರ ಜೇಬಿನಿಂದ ನೋಟುಗಳನ್ನು ಸೆಳೆಯಲು ಮತ್ತು ಮಹಿಳೆಯರ ಬೆರಳುಗಳಿಂದ ಉಂಗುರಗಳನ್ನು ಕೀಳಲು ಪ್ರಾರಂಭಿಸಿದರು. ಡಾ. ಫೋಸ್ಟರ್ ಮತ್ತು ಅರ್ಲೆನ್ಸ್ ನಡುವೆ ನಿಂತಿದ್ದ ಮಿಸ್ಟರ್ ಅಥವಾ ಮಿಸೆಸ್ ಬ್ರಿಡ್ಜ್ ಬಳಿಗೆ ಅವರು ಹೋಗುವ ಮೊದಲು ಏನೋ ಅವರನ್ನು ಭಯಭೀತಗೊಳಿಸಿತು. ಪಿಯಾನೋ ಮೇಲೆ ನಿಂತಿದ್ದವನು ಕರ್ಕಶ ಧ್ವನಿಯಲ್ಲಿ ಕಿರುಚಿದ್ದ, “ಆ ನೀಲಿ ಬಣ್ಣದ ಕ್ಯಾಡಿಲಾಕ್ ನ ಕೀ ಯಾರ ಹತ್ತಿರ ಇದೆ?” + +ಅದೇ ಸಮಯದಲ್ಲಿ ಶ್ರೀಮತಿ ರಾಲ್ಫ್ ಪೋರ್ಟರ್ ಕಿರುಚಿಕೊಂಡಳು, “ನೀನು ಅವನಿಗೆ ಹೇಳಬೇಡ, ರಾಲ್ಫ್!” + +ಆದರೆ ಡಕಾಯಿತರು ಬಿಡದೆ ಮಿಸ್ಟರ್ ಪೋರ್ಟರ್ ನ ಕೀಗಳನ್ನು ಎತ್ತಿಕೊಂಡರು. ಮೂವತ್ತು ನಿಮಿಷಗಳ ಕಾಲ ಯಾರೂ ಅಲ್ಲಾಡಬಾರದೆಂದು ಎಲ್ಲರಿಗೂ ಎಚ್ಚರಿಸಿ ಅವರು ಮುಂಬಾಗಿಲ ಮೂಲಕ ಓಡಿಹೋದರು. + +ಇದು ಪತ್ರಿಕೆಯ ಮೊದಲ ಪುಟದಲ್ಲಿಯೇ ಪ್ರಕಟವಾಯಿತು. ಎಂಟನೇ ಪುಟದಲ್ಲಿ ಘಟನೆಯ ಚಿತ್ರಗಳನ್ನು ಹಾಕಲಾಗಿತ್ತು. ಗೀರುಗೀರಾದ ಪಿಯಾನೋದ ಹತ್ತಿರದ ಚಿತ್ರವೂ ಸೇರಿದಂತೆ. ಪತಿ ಕೆಲಸಕ್ಕೆ ಹೋದ ನಂತರ ಮರುದಿನ ಬೆಳಿಗ್ಗೆ ಉಪಾಹಾರ ಕೋಣೆಯಲ್ಲಿ ಕುಳಿತು ವರದಿಯನ್ನು ಓದಿದ ಶ್ರೀಮತಿ ಬ್ರಿಡ್ಜ್, ಸ್ಟುವರ್ಟ್ ಮಾಂಟ್ಗೊಮೆರಿ ಕೇವಲ $2.14 ಅನ್ನು ಹೊಂದಿದ್ದರು ಮತ್ತು ಶ್ರೀಮತಿ ನೋಯೆಲ್ ಜಾನ್ಸನ್ ಅವರ ಉಂಗುರವು ಜಿರ್ಕಾನ್ ಆಗಿತ್ತು ಎನ್ನುವುದನ್ನು ತಿಳಿದು ಆಶ್ಚರ್ಯಚಕಿತರಾದರು. + +ಹಲವಾರು ಮಹಿಳೆಯರು, ಅವರಲ್ಲಿ ಒಬ್ಬರು ಮ್ಯಾಡ್ಜ್ ಅರ್ಲೆನ್ ರಿಗೆ ಸಾಕಷ್ಟು ಆಪ್ತರಾಗಿದ್ದವರು ಹೇಳಿದ್ದರ ಪ್ರಕಾರ ವಾರ್ಡ್ ಪಾರ್ಕ್ ವೇ ಅನತಿದೂರದಲ್ಲಿಯೇ ಹಲ್ಲೆಗೊಳಗಾದ ಯಾರೋ ಒಬ್ಬರ ಹೆಸರು ಅವರಿಗೆ ತಿಳಿದಿತ್ತು. ಆದರೂ ಹೆದರಿಕೆ ನಿಜಕ್ಕೂ ಹೇಗೆ ಪ್ರಾರಂಭವಾಯಿತು ಎಂಬುದು ಯಾರಿಗೂ ತಿಳಿದಿರಲಿಲ್ಲ. + +ಇದು ಪ್ಲಾಜಾ ಬಳಿ ಸಂಭವಿಸಿದೆ ಎಂದು ಕೆಲವರು ಭಾವಿಸಿದರು, ಇತರರು ಅದಕ್ಕಿಂತ ದಕ್ಷಿಣಕ್ಕೆ ದೂರದಲ್ಲಿ ಎಂದುಕೊಂಡಿದ್ದರು ಇದು ತಡರಾತ್ರಿಯಲ್ಲಿ ಸಂಭವಿಸಿದೆ ಎಂದು ಎಲ್ಲರೂ ಸಾಮಾನ್ಯವಾಗಿ ಒಪ್ಪಿಕೊಂಡರು. ಕಥೆ ಹೇಗೆಂದರೆ, ಪ್ರಸಿದ್ಧ ಕುಟುಂಬದ ಒಬ್ಬ ಮಹಿಳೆ ಒಬ್ಬಂಟಿಯಾಗಿ ಮನೆಗೆ ಕಾರು ಓಡಿಸುತ್ತಿದ್ದಳು. ಅವಳು ಇಂಟರ್ಸೆಕ್ಷನ್ ಒಂದರಲ್ಲಿ ನಿಧಾನ ಮಾಡಿದ್ದಾಗ ಒಬ್ಬ ವ್ಯಕ್ತಿ ಯಾವುದೋ ಪೊದೆಯ ಹಿಂದಿನಿಂದ ಜಿಗಿದು ಬಾಗಿಲು ಜಗ್ಗಿದ್ದ. ದಾಳಿಯು ಪ್ರಯೋಜನಕಾರಿಯಾಗಿತ್ತೋ ಇಲ್ಲವೋ ಎಂಬುದನ್ನು ಆ ಕಥೆ ಹೇಳಲಿಲ್ಲ. ಪ್ರಸಂಗದ ಪ್ರಮುಖ ಭಾಗವೆಂದರೆ ಒಬ್ಬ ಮನುಷ್ಯನಿದ್ದ, ಅವನು ಜಿಗಿದು ಕಾರಿನ ಬಾಗಿಲು ಜಗ್ಗಿ ತೆರೆದ ಎಂಬುದಷ್ಟೇ. ಅದರ ಬಗ್ಗೆ ಪತ್ರಿಕೆಯಲ್ಲಿ ಏನೂ ಇರಲಿಲ್ಲ, ಅಥವಾ ದಿ ಟ್ಯಾಟ್ಲರ್ ನಲ್ಲಿ ಅಹಿತಕರವಾದ ಯಾವುದನ್ನೂ ಮುದ್ರಿಸುವುದಿಲ್ಲವಾಗಿ ಹಾಗೆ ಆಗಿದ್ದೀತು. ಇವೇ ಕಾರಣಗಳಿಂದ ಹಲ್ಲೆಯ ದಿನಾಂಕವನ್ನು ನಿರ್ಧರಿಸಲಾಗಿರಲಿಲ್ಲ. ಖಚಿತವಾದ ವಿಚಾರವೆಂದರೆ ಅದು ಅನತಿಕಾಲದ ಹಿಂದೆ ಕತ್ತಲೆಯ ರಾತ್ರಿಯಲ್ಲಿ ನಡೆದಿತ್ತು. + +ಈ ಕಥೆಯು ಪ್ರಚಾರಕ್ಕೆ ಬಂದ ಬಳಿಕ ಯಾವುದೇ ಮಾಟ್ರಾನ್ ಗಳು ಸೂರ್ಯಾಸ್ತದ ನಂತರ ಎಲ್ಲಿಗಾದರೂ ಸರಿಯೆ ಏಕಾಂಗಿಯಾಗಿ ಕಾರು ಓಡಿಸಲು ಬಯಸಲಿಲ್ಲ. ಅದರೆ ಅವರ ಗಂಡಂದಿರು ಕಚೇರಿಯಲ್ಲಿ ತಡವಾಗಿ ಕೆಲಸ ಮಾಡುತ್ತಿದ್ದರಿಂದ ಅಥವಾ ದಣಿದು ಮಲಗಿ ಓದಿಕೊಂಡಿರಲು ಬಯಸಿದ್ದರಿಂದ ಅವರು ಸ್ವತಃ ಕಾಕ್ಟೈಲ್ ಪಾರ್ಟಿಗೆ ಅಥವಾ ರಾತ್ರಿಯ ಭೋಜನ ಕೂಟಕ್ಕೆ ತಾವೇ ಕಾರು ಚಲಾಯಿಸಿಕೊಂಡು ಆತಂಕದಿಂದಲೇ ಹೋಗಬೇಕಾಗಿತ್ತು. ಕಾರಿನ ಬಾಗಿಲುಗಳನ್ನು ಲಾಕ್ ಮಾಡಿಕೊಂಡು ಅವರು ಹೋಗುತ್ತಿದ್ದರು. ಪತಿ-ಆತಿಥೇಯರು ತಮ್ಮ ವಾಹನವನ್ನು ಸಂಜೆಯಲ್ಲಿ ಗ್ಯಾರೇಜ್ ನಿಂದ ಹೊರತೆಗೆಯುವುದು ಮತ್ತು ಮಾಟ್ರಾನ್ ಗಳನ್ನು ಅವರು ಮನೆಗಳಿಗೆ ಹಿಂತಿರುಗುವ ತನಕ ಅನುಸರಿಸುವುದು ವಾಡಿಕೆಯಾಯಿತು. ಆದ್ದರಿಂದ ಕಂಟ್ರಿ ಕ್ಲಬ್ ಜನವಸತಿ ಜಿಲ್ಲೆಯ ಬೌಲೆವಾರ್ಡ್ ಗಳಲ್ಲಿ ಕಾರುಗಳು ಎಚ್ಚರಿಕೆಯಿಂದ ಅಂತ್ಯಕ್ರಿಯೆಯ ಮೆರವಣಿಗೆಗಳಂತೆ ಚಲಿಸುತ್ತಿರುವುದನ್ನು ಕಾಣಬಹುದಾಗಿತ್ತು. + +ಗಂಡ ಸಮಯಕ್ಕೆ ಸರಿಯಾಗಿ ಕಚೇರಿಯಿಂದ ಹಿಂತಿರುಗದಿದ್ದಾಗ, ಅಥವಾ ಅವನು ತುಂಬಾ ದಣಿದು ಹಾಸಿಗೆಗೆ ಒರಗಿ ರಜೆಯ ಜಾಹೀರಾತುಗಳನ್ನು ಓದುತ್ತ ಮಲಗಲು ಆದ್ಯತೆ ನೀಡಿದಾಗ ಶ್ರೀಮತಿ ಬ್ರಿಡ್ಜ್ ಆ ಮಹಿಳೆಯರು ಬರುತ್ತಿದ್ದಂತೆ ಮನೆಗೆ ಬರುತ್ತಿದ್ದಳು. ಅವಳ ಮನೆಯ ಡ್ರೈವ್ ಹಾದಿಯಲ್ಲಿ ಮೆರವಣಿಗೆ ಸ್ಥಗಿತಗೊಳ್ಳುತ್ತಲಿತ್ತು. ಅವಳು ಗ್ಯಾರೇಜ್ ಗೆ ಗಾಡಿ ಓಡಿಸಿ, ನಿಲ್ಲಿಸಿ ಹೊರಬಂದು ಮುಂಬಾಗಿಲಿನಿಂದ ಮನೆ ಬೀಗ ತೆಗೆದು ಒಳಪ್ರವೇಶಿಸುವವರೆಗೂ ನಿರಂತರವಾಗಿ ಅವಳು ಗೋಚರಿಸುತ್ತಿರುವಂತೆ ಎಂಜಿನ್ ಗಳು ಐಡಲ್ ಆಗುತ್ತಿದ್ದವು. ಇಷ್ಟು ಮಾಡಿದ ನಂತರ ಅವಳು ಒಳಗೆ ಹೆಜ್ಜೆ ಹಾಕುತ್ತಿದ್ದಳು. ಹಾಲ್ ನ ದೀಪಗಳನ್ನು ಆನ್ ಮಾಡುತ್ತಿದ್ದಳು ಮತ್ತು “ನಾನು ಮನೆಗೆ ಬಂದಿದ್ದೇನೆ” ಎಂದು ಗಂಡನಿಗೆ ಕೂಗಿ ಹೇಳುತ್ತಿದ್ದಳು. ಅವನು ಉತ್ತರವಾಗಿ ಕೆಲವು ಶಬ್ದಗಳನ್ನು ಮಾಡುತ್ತಿದ್ದ. ನಂತರವೇ ಅವಳು ಕೆಲವು ಬಾರಿ ಅಂಗಳದ ದೀಪಗಳನ್ನು ಮಿನುಗಿಸುತ್ತಿದ್ದಳು. ಅವಳು ಸುರಕ್ಷಿತ ಎಂದು ಹೊರಗೆ ಕಾಯುತ್ತಿರುವ ಸ್ನೇಹಿತರಿಗೆ ತೋರಿ, ನಂತರವೇ ಅವರೆಲ್ಲರೂ ರಾತ್ರಿಯ ಕತ್ತಲಿನ ಒಳಕ್ಕೆ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದರು. + +ಅಪರಿಚಿತ ಪುರುಷರನ್ನು ಎಂದಿಗೂ ಮಾತನಾಡಿಸಬೇಡಿ + +ಡೌನ್ಟೌನ್ ಬೀದಿಯಲ್ಲಿನ ಡಿಪಾರ್ಟ್ಮೆಂಟ್ ಸ್ಟೋರ್ಸಿನ ಹೊರಗೆ ಒಬ್ಬ ವ್ಯಕ್ತಿ ಅವಳಿಗೆ ಏನನ್ನೋ ಹೇಳಿದ. ಅವಳು ಅವನನ್ನು ಕಡೆಗಣಿಸಿದಳು. ಆದರೆ ಆ ಕ್ಷಣದಲ್ಲಿ ಜನಸಮೂಹ ಅವರನ್ನು ಒಟ್ಟಿಗೆ ಸುತ್ತುವರಿಯಿತು. + +“ಹೇಗಿದ್ದೀರಿ?” ಅವನು ನಗುತ್ತಾ ತನ್ನ ಹ್ಯಾಟ್ ಮುಟ್ಟಿಕೊಂಡ.ಅವನು ಸುಮಾರು ಐವತ್ತು ವಯಸ್ಸಿನವ. ಬೆಳ್ಳಿಯ ಕೂದಲು ಮತ್ತು ಪಿಶಾಚಿಯ ಕಿವಿ ಹೊಂದಿದ್ದಾನೆಂದು ಅವಳು ಗಮನಿಸಿದಳು. ಅವನ ಮುಖ ಕೆಂಪಾಯಿತು. ಅವನು ವಿಚಿತ್ರವಾಗಿ ನಕ್ಕ. + +“ನಾನು ಗ್ಲಾಡಿಸ್ ಶ್ಮಿಟ್ ಅವರ ಪತಿ.” + +“ಓಹ್, ದೇವರೇ!” ಶ್ರೀಮತಿ ಬ್ರಿಡ್ಜ್ ಉದ್ಗರಿಸಿದಳು. “ನಾನು ನಿಮ್ಮನ್ನು ಗುರುತಿಸಲಿಲ್ಲ.” + +ಒಂದು ಬೆಳಿಗ್ಗೆ ಸುಮ್ಮನೆ ಪುಸ್ತಕಗಳ ಮೇಲಿನ ಧೂಳೊರೆಸುವಾಗ ಅವಳು ಕ್ಷಣ ಪುಸ್ತಕಗಳ ಶೀರ್ಷಿಕೆಗಳನ್ನು ಓದತೊಡಗಿದಳು. ಕಾನ್ರಾಡ್ ನ ಹಳೆಯ ಕೆಂಪು-ಚಿನ್ನದ ರಕ್ಷಾಕವಚದ ಪುಸ್ತಕವನ್ನ ಕಂಡಳು. ಅದನ್ನು ವರ್ಷಾನುವರ್ಷಗಳಿಂದ ಯಾರೂ ಮುಟ್ಟಿರಲಿಲ್ಲ. ಅಲ್ಲಿಗೆ ಅದು ಹೇಗೆ ಬಂತು ಎಂದು ಅವಳಿಗೆ ತೋಚಲಿಲ್ಲ. ಅದನ್ನು ಕೈಗೆ ತೆಗೆದುಕೊಂಡು ಅವಳು ಮೊದಲ-ಕೊನೆಯ ಖಾಲಿ ಹಾಳೆಯನ್ನು ನೋಡಿದಳು. ಅಲ್ಲಿದ್ದ ಒಕ್ಕಣೆ: Ex Libris Thomas Bridge. + +ನೈಟ್ ಕ್ಲಬ್ ಎಂಟರ್ಟೈನರ್ ಒಬ್ಬಳನ್ನು ಮದುವೆಯಾಗಿದ್ದ ನಂತರ ಮೆಕ್ಸಿಕೊದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದ ತನ್ನ ಗಂಡನ ಸಹೋದರನ ಮರಣದ ನಂತರ ಅವರು ವಿಚಿತ್ರ ಮನುಷ್ಯನ ಕೆಲವು ಪುಸ್ತಕಗಳು ಮತ್ತು ಚಾರ್ಟ್ ಗಳನ್ನು ಆನುವಂಶಿಕವಾಗಿ ಪಡೆದಿದ್ದನ್ನು ಅವಳು ನೆನಪಿಸಿಕೊಂಡಳು. + +ಆ ದಿನ ಬೆಳಿಗ್ಗೆ ಏನೂ ಮಾಡಲಿಕ್ಕೆ ಇಲ್ಲದ ಅವಳು ಮುಟ್ಟಿದರೆ ಹರಿವಂತೆ ಪೆಡಸಾಗಿದ್ದ, ಹಳದಿ ಬಣ್ಣದ ಪುಟಗಳನ್ನು ತಿರುಗಿಸಲು ಪ್ರಾರಂಭಿಸಿ ನಿಧಾನವಾಗಿ ಅದರತ್ತ ಆಕರ್ಷಿತಳಾದಳು. ಸುಮಾರು ಹತ್ತು ನಿಮಿಷಗಳ ಕಾಲ ಪುಸ್ತಕದ ಅಲ್ಮೇರಾದ ಪಕ್ಕದಲ್ಲಿ ನಿಂತ ಅವಳು ನಂತರ ಇನ್ನೂ ಓದುತ್ತಲೇ ಲಿವಿಂಗ್ ರೂಮಿಗೆ ಹೋದಳು. ಅಲ್ಲಿ ಪುಸ್ತಕದಿಂದ ತಲೆ ಮೇಲೆತ್ತದೆ ಊಟದ ಸಮಯವನ್ನು ಘೋಷಿಸಲು ಹ್ಯಾಜೆಲ್ ಬರುವವರೆಗೂ ಓದುತ್ತಲೇ ಇದ್ದಳು. ಒಂದು ಕಥೆಯ ಮಧ್ಯೆ ಒಂದು ಕಾಲದಲ್ಲಿ ಅಡಿಗೆರೆ ಹಾಕಲ್ಪಟ್ಟ ಒಂದು ಪ್ಯಾರಾವರೆಗೂ ಬಂದಿದ್ದಳು. ಸ್ಪಷ್ಟವಾಗಿ ಅದನ್ನು ಮಾಡಿದ್ದಿದ್ದು ಟಾಮ್ ಬ್ರಿಡ್ಜ್. ಅಲ್ಲಿ ಬರೆದಿದ್ದುದು ಇದು: ‘ಬದುಕಿರುವ ವರ್ಷಗಳಲ್ಲಿ ಕೆಲವರು ಲೋಳೆಯ ಮೇಲೆ ಜಾರಿದಂತೆ ಕಾಲ ಕಳೆಯುತ್ತಾರೆ. ಹಾಗೇ ಜಾರಿ ಗೋರಿಯಲ್ಲಿ ಬೀಳುತ್ತಾರೆ, ಏನೂ ಅರಿತುಕೊಳ್ಳದೆ. ಜೀವನದ ಬಗ್ಗೆ ಅಜ್ಞಾನ ಕೊನೆಯವರೆಗೆ. ಅದರಲ್ಲಿರುವ ಎಲ್ಲವನ್ನು ನೋಡಲು ಎಂದಿಗೂ ಪ್ರಯತ್ನ ಮಾಡದೆ ಹೋಗಿಬಿಡುತ್ತಾರೆ.’ ಮತ್ತಷ್ಟು ಓದುವಾಗಲೂ ಅವಳು ಈ ತುಣುಕಿನ ಮೇಲೆ ನೋಡುತ್ತಲೇ ಸಂಭ್ರಮಿಸಿದಳು. ಅಂತಿಮವಾಗಿ ಮತ್ತೆ ಅದರತ್ತ ತಿರುಗಿದಳು. ಹ್ಯಾಜೆಲ್ ಪ್ರವೇಶಿಸಿದಾಗ ಅವಳು ಕಾರ್ಪೆಟ್ ಅನ್ನು ದಿಗ್ಭ್ರಮೆಗೊಳಿಸುವ ಅಭಿವ್ಯಕ್ತಿಯೊಂದಿಗೆ ನೋಡುತ್ತಿದ್ದಳು. + +ಶ್ರೀಮತಿ ಬ್ರಿಡ್ಜ್ ಈ ಗ್ರಹಿಕೆಯ ಮನುಷ್ಯನನ್ನು ಹೆಚ್ಚು ಓದುವ ಉದ್ದೇಶದಿಂದ ಪುಸ್ತಕವನ್ನು ಮಾಂಟೆಲ್ ಮೇಲೆ ಇಟ್ಟಳು. ಆದರೆ ಮಧ್ಯಾಹ್ನದ ಸಮಯದಲ್ಲಿ ಹ್ಯಾಜೆಲ್ ಯಾಂತ್ರಿಕವಾಗಿ ಕಾನ್ರಾಡ್ ಅನ್ನು ಮತ್ತೆ ಕಪಾಟಿನಲ್ಲಿ ಇರಿಸಿಬಿಟ್ಟಳು. ಶ್ರೀಮತಿ ಬ್ರಿಡ್ಜ್ ಅವನ ಬಗ್ಗೆ ಮತ್ತೆ ಯೋಚಿಸಲಿಲ್ಲ. + +ಕೃಷಿ ಹೆಚ್ಚುವರಿ ಮತ್ತು ವಿದೇಶಿ ಸಬ್ಸಿಡಿಗಳಂತಹ ವ್ಯವಹಾರಗಳ ಬಗ್ಗೆ ಗಂಡಸರ ರೀತಿಯಲ್ಲಿ ಮಾತನಾಡಲು ಸಮರ್ಥರಾದ ಕೆಲವು ಮಹಿಳೆಯರು ಮಾಡಿದ ರೀತಿಯಲ್ಲಿ ಅವಳು ರಾಜಕೀಯಕ್ಕೆ ಹೋಗಿರಲಿಲ್ಲ. ಉಪನ್ಯಾಸ ಭೋಜನ ಅಥವಾ ವೃತ್ತ ಸಭೆಗಳಲ್ಲಿ ಈ ವಿಷಯಗಳು ಬಂದಾಗ ಅವಳು ಯಾವಾಗಲೂ ಗಮನವಿರಿಸಿ ಕೇಳುತ್ತಿದ್ದಳು; ಅವಳಿಗೆ ತನ್ನ ಜ್ಞಾನದ ಕೊರತೆಯ ಅನುಭವವಾಗುತ್ತಿತ್ತು. ಅದರಿಂದಲೇ ಇನ್ನಷ್ಟು ತಿಳಿದುಕೊಳ್ಳಲು ಬಯಸುತ್ತಿದ್ದಳು. ಅಷ್ಟೇ ಅಲ್ಲ, ಪಟ್ಟಾಗಿ ಕುಳಿತು, ಓದಿ ಗಂಭೀರ ಅಧ್ಯಯನಕ್ಕೆ ಇಳಿಯುವ ಉದ್ದೇಶವನ್ನು ಹೊಂದಿದ್ದಳು. ಆದರೆ ಅನೇಕ ವಿಷಯಗಳು ಪುಟಿದೇಳುತ್ತಿದ್ದವು. ಹಾಗಾಗಿ ಪ್ರಾರಂಭಿಸುವುದೇ ಕಷ್ಟವಾಗಿತ್ತು. ನಂತರವೂ ಅವಳಿಗೆ ಕಲಿಯಲು ಹೇಗೆ ಪ್ರಾರಂಭಿಸುವುದು ಎಂದು ತಿಳಿಯಲಿಲ್ಲ. ಕೆಲವೊಮ್ಮೆ ಅವಳು ತನ್ನ ಗಂಡನನ್ನು ಪ್ರಶ್ನಿಸಲು ಪ್ರಾರಂಭಿಸುತ್ತಿದ್ದಳು. ಆದರೆ ಅವನು ಅವಳೊಂದಿಗೆ ಹೆಚ್ಚು ವಿಚಾರ ಮಾಡಲು ನಿರಾಕರಿಸಿದ. ಆದ್ದರಿಂದ ಅವಳು ಈ ವಿಷಯದಲ್ಲಿ ಒತ್ತಾಯ ಮಾಡುವುದಿಲ್ಲ. ಏಕೆಂದರೆ ಎಲ್ಲಕ್ಕಿಂತ ಹೆಚ್ಚಾಗಿ ಅವಳು ಸ್ವತಃ ಸಾಧಿಸುವಂಥದು ಏನೂ ಇರಲಿಲ್ಲ. + +ಗಂಡ ಹೇಗೆ ಮತ ಚಲಾಯಿಸಬೇಕು ಎಂದು ಹೇಳಿದ ಮಾಹಿತಿಯನ್ನು ಅಜಾಗರೂಕತೆಯಿಂದ ಬಾಯಿ ತಪ್ಪಿ ಅವಳು ಮಾಬೆಲ್ ಇಹೆಗೆ ಹೇಳಿಬಿಟ್ಟಳು. ಆ ಬಳಿಕ ತನ್ನನ್ನು ತಾನು ಮೇಲಿನಂತೆ ಸಮರ್ಥಿಸಿಕೊಂಡಳು. + +ಮಾಬೆಲ್ ಇಹೆ ಹದಿಹರೆಯದವಳಂತೆ ಸಮತಟ್ಟಾಗಿದ್ದಳು. ಆದರೆ ಕಾಣುವುದಕ್ಕಿಂತ ಹೆಚ್ಚು ಗಟ್ಟಿಮುಟ್ಟಾಗಿದ್ದಳು. ಅವಳ ಮೈಕಟ್ಟು ಎಂದಿಗೂ ತೆರೆಯಲು ಸಾಧ್ಯವಾಗದ ಮೊಗ್ಗಿನಂತಿತ್ತು. ಅವಳು ಟ್ವೀಡ್ ಕೋಟುಗಳನ್ನು ಧರಿಸುತ್ತಿದ್ದಳು. ಕೂದಲನ್ನು ಕತ್ತರಿಸಿದ್ದಳು. ಆಗಾಗ್ಗೆ ತನ್ನ ಕೈಗಳನ್ನು ಪಕ್ಕದ ಜೇಬಿನಲ್ಲಿ ಆಳವಾಗಿ ತೂರಿಸಿ ಗಂಡಸಿನಂತೆ ನಿಲ್ಲುತ್ತಿದ್ದಳು. ಸಣ್ಣ ಸಣ್ಣ ಆದರೆ ಭರವಸೆಯ ಮಾತನಾಡುತ್ತಿದ್ದಳು. ಕೆಲವೊಮ್ಮೆ ಸಿವಿರೆದ್ದ ಬಿದಿರನ್ನು ನೆನಪಿಸುವ ಧ್ವನಿಯೊಂದಿಗೆ ನಗಲು ತೊಡಗುತ್ತಿದ್ದಳು, ತಲೆಯನ್ನು ಹಿಂದಕ್ಕೆ ಚಾಚಿ. ಬಂಡವಾಳಶಾಹಿಯನ್ನು ಕುರಿತು ಅವಳು ಅನೇಕ ಅವಲೋಕನಗಳನ್ನು ಮಾಡಿದ್ದಳು, ಅದು ಕಹಿಯಾಗಿತ್ತು. ಹೆರಿಗೆಯ ಸಮಯದಲ್ಲಿ ಸಾಯುತ್ತಿರುವ ಮಹಿಳೆಯರ ಬಗ್ಗೆ ಪ್ರಶ್ನಾತೀತ ಮೂಲಗಳಿಂದ ಅವಳು ಕೇಳಿದ್ದ ಸತ್ಯಕಥೆಗಳನ್ನು ಅದಕ್ಕೆ ಹೊಂದಿಸಿ ಮಾತನಾಡುತ್ತಿದ್ದಳು. ಅವರು ಆಸ್ಪತ್ರೆಗೆ ದಾಖಲಾದಾಗ ತಗುಲುವ ಹೆಚ್ಚಿನ ವೆಚ್ಚವನ್ನು ಭರಿಸಲಾಗದೆ ಅಥವಾ ವಿಮಾ ಯೋಜನೆಗಳ ಕಂತುಗಳ ವೆಚ್ಚವನ್ನು ಸಹ ಭರಿಸಲಾಗದೆ ಸಾವನ್ನಪ್ಪುತ್ತಿದ್ದುದು ಅವಳ ಸಂಕಟಕ್ಕೆ ಕಾರಣವಾಗಿತ್ತು. + +“ನಾನು ಎಂದಾದರೂ ಮಗುವನ್ನು ಹೊಂದುವುದಿದ್ದರೆ” ಅವಳು ಈ ರೀತಿ ಮಾತನ್ನು ಪ್ರಾರಂಭಿಸುವುದನ್ನು ಇಷ್ಟಪಡುತ್ತಿದ್ದಳು. ನಂತರ ವೈದ್ಯಕೀಯ ಶುಲ್ಕದ ವಿಚಾರಕ್ಕೆ ಬರುತ್ತಿದ್ದಳು. ಅವಳು ಶ್ರೀಮತಿ ಬ್ರಿಡ್ಜ್ ಳನ್ನು ಒತ್ತಾಯಿಸಿದಳು: “ನಿಮಗೆ ನಿಮ್ಮ ಸ್ವಂತ ಮನಸ್ಸು ಇಲ್ಲವೇ? ಗ್ರೇಟ್ ಸ್ಕಾಟ್, ಮಹಿಳೆ, ನೀವು ವಯಸ್ಕರಾಗಿದ್ದೀರಿ. ಮಾತನಾಡಿ! ನಾವು ವಿಮೋಚನೆ ಪಡೆದಿದ್ದೇವೆ.” ಅಶುಭಸೂಚಕವೋ, ಭಯಗ್ರಸ್ತಳೋ, ಅವಳು ತನ್ನ ಹಿಮ್ಮಡಿಯಿಂದ ಕಾಲ್ಬೆರಳುಗಳವರೆಗೆ ಹಿಂದಕ್ಕೆ ಮುಂದಕ್ಕೆ ಊದಲು ಪ್ರಾರಂಭಿಸಿದಳು. ಆಕ್ಸಿಲರಿ ಕ್ಲಬ್ಹೌಸ್ ನ ಕಾರ್ಪೆಟ್ ನ ಕಂಡು ಕೆಂಡಾಮಂಡಲವಾದ ಅವಳು ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿಕೊಂಡಿದ್ದಳು. + +“ನೀವು ಹೇಳಿದ್ದು ಸರಿ,” ಶ್ರೀಮತಿ ಬ್ರಿಡ್ಜ್ ಕ್ಷಮೆಯಾಚಿಸಿದಳು, ಮಾಬೆಲ್ ಇಹೆ ಅವಳ ಮತ್ತು ತಮ್ಮ ನಡುವಿನ ಜಾಗದಲ್ಲಿ ಊದಿದ ಹೊಗೆಯನ್ನು ವಿವೇಚನೆಯಿಂದ ತಪ್ಪಿಸಿಕೊಳ್ಳುತ್ತಾ. “ಏನು ಯೋಚಿಸಬೇಕು ಎಂದು ತಿಳಿಯುವುದು ತುಂಬಾ ಕಷ್ಟ. ತುಂಬಾ ಹಗರಣ ಮತ್ತು ವಂಚನೆ ಇದೆ. ಇನ್ನು ಪತ್ರಿಕೆಗಳು, ಅವರು ನಮಗೆ ಏನು ತಿಳಿಯಬೇಕಾಗಿದೆ ಎಂದು ಭಾವಿಸುತ್ತವೋ ಅದನ್ನು ಮಾತ್ರ ಮುದ್ರಿಸುತ್ತವೆ” ಎಂದಳು. ಬಳಿಕ ಅವಸರಿಸುತ್ತ ಕೇಳಿದಳು, “ನೀವು ಯಾವ ನಿಲುವಿಗೆ ಬರುತ್ತೀರಿ?” + +ಮಾಬೆಲ್ ಇಹೆ ಸಿಗರೆಟ್ ಹೋಲ್ಡರನ್ನು ತನ್ನ ಸಣ್ಣ ಶಾಂತ ತುಟಿಗಳಿಂದ ಹೊರತೆಗೆದಳು. ಅಂತಹ ಮುಗ್ಧ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂಬುದರ ಬಗ್ಗೆ ವಿಚಾರಿಸುತ್ತಿರುವಂತೆ ಅವಳು ಸೀಲಿಂಗ್ ಮತ್ತು ನಂತರ ಕಾರ್ಪೆಟ್ ಅನ್ನು ಪರಿಶೀಲಿಸಿದಳು. ಅಂತಿಮವಾಗಿ ಶ್ರೀಮತಿ ಬ್ರಿಡ್ಜ್ ಕೆಲವು ಪುಸ್ತಕಗಳನ್ನು ಉದ್ದೇಶಪೂರ್ವಕವಾಗಿ ಓದುವ ಮೂಲಕ ಮೂಲಭೂತ ಅಂಶಗಳನ್ನು ಗ್ರಹಿಸಲು ಪ್ರಾರಂಭಿಸಬಹುದು ಎಂದು ಸೂಚಿಸಿದಳು. ಅದನ್ನು ಅವಳು ಟ್ಯಾಲಿ ಕಾರ್ಡ್ ನ ಮಾರ್ಜಿನ್ ನಲ್ಲಿ ಬರೆದುಕೊಂಡಳು. ಶ್ರೀಮತಿ ಬ್ರಿಡ್ಜ್ ಈ ಪುಸ್ತಕಗಳ ಪೈಕಿ ಒಂದನ್ನು ಹೊರತುಪಡಿಸಿ ಬೇರೆ ಯಾವುದರ ಬಗ್ಗೆಯೂ ಕೇಳಿರಲಿಲ್ಲ. ಇದಕ್ಕೆ ಕಾರಣ ಅದರ ಲೇಖಕನ ವಿಚಾರದಲ್ಲಿ ತನಿಖೆ ಮಾಡಲಾಗುತ್ತಿತ್ತು, ಆದರೂ ಅವಳು ಅದನ್ನು ಹೇಗಾದರೂ ಓದಲು ನಿರ್ಧರಿಸಿದಳು. + +ಸಾರ್ವಜನಿಕ ಗ್ರಂಥಾಲಯದಲ್ಲಿ ಇದಕ್ಕಾಗಿ ಕಾಯುವವರ ಪಟ್ಟಿಯೇ ಇತ್ತು. ಆದರೆ ಅವಳು ಅದನ್ನು ಬಾಡಿಗೆ ಗ್ರಂಥಾಲಯದಲ್ಲಿ ಪಡೆದುಕೊಂಡಳು. ಮಾಬೆಲ್ ಇಹೆ ಸಲಹೆ ನೀಡಿದ ಉದ್ದೇಶದಿಂದಲೇ ಅದನ್ನು ಓದಲು ಮೊದಲಿಟ್ಟಳು. ಆ ಲೇಖಕರ ಹೆಸರು ಜೋಕೊಲೋಫ್, ಖಂಡಿತವಾಗಿಯೂ ಅದು ಹೆದರಿಕೆಯೊಡ್ಡಿತ್ತು. ಮೊದಲ ಅಧ್ಯಾಯವೇ ಸಕ್ರ್ಯೂಟ್ ಕೋರ್ಟ್ ಗಳಲ್ಲಿ ಲಂಚದ ಬಗ್ಗೆ ಇತ್ತು. ಶ್ರೀಮತಿ ಬ್ರಿಡ್ಜ್ ಅದರ ಬಹುಪಾಲು ಓದಿ ಅದರ ಬಗ್ಗೆ ಮಾತನಾಡುವ ಸಾಮರ್ಥ್ಯ ಬಂತೆಂದಾಗ ಅದನ್ನು ಸಾಕಷ್ಟು ಧೈರ್ಯದಿಂದ ಹಾಲ್ ಟೇಬಲ್ ಮೇಲೆ ಬಿಟ್ಟಳು. ಆದರೆ ಶ್ರೀಯುತ ಬ್ರಿಡ್ಜ್ ಅದನ್ನು ಮೂರನೇ ಸಂಜೆಯವರೆಗೂ ಗಮನಿಸಲಿಲ್ಲ. ಅದನ್ನು ಕಂಡದ್ದೇ ಅವನು ತನ್ನ ಮೂಗಿನ ಹೊಳ್ಳೆಗಳನ್ನು ಹಿಗ್ಗಿಸಿಕೊಂಡ. ಪುಸ್ತಕ ಬಿಡಿಸಿ ಮೊದಲ ಪ್ಯಾರಾಗ್ರಾಫ್ ಅನ್ನು ಓದಿದ. ಒಮ್ಮೆ ಗೊಣಗಿ ಅದನ್ನು ಮತ್ತೆ ಹಾಲ್ ನ ಟೇಬಲ್ ಮೇಲೆ ಇಳಿಸಿದ. ಇದು ನಿರಾಶಾದಾಯಕವಾಗಿತ್ತು. ವಾಸ್ತವವಾಗಿ, ಈಗ ಯಾವುದೇ ಅಪಾಯವಿಲ್ಲದ ಕಾರಣ, ಪುಸ್ತಕವನ್ನು ಮುಗಿಸಲು ಆಕೆಗೆ ತೊಂದರೆಯಾಯಿತು. ಮ್ಯಾಗಜೀನ್ ಡೈಜೆಸ್ಟ್ ನಲ್ಲಿ ಇದನ್ನು ಓದುವುದು ಉತ್ತಮವೆಂದು ಅವಳು ಭಾವಿಸಿದಳು. ಕೊನೆಗೆ ಅವಳು ಅದನ್ನು ಬಾಡಿಗೆ ಗ್ರಂಥಾಲಯಕ್ಕೆ ಹಿಂದಿರುಗಿಸಿದಳು. ಅದರ ಮಾಲೀಕರಿಗೆ, “ಎಲ್ಲವನ್ನೂ ಒಪ್ಪುತ್ತೇನೆ ಎಂದು ನಾನು ಪ್ರಾಮಾಣಿಕವಾಗಿ ಹೇಳಲಾರೆ. ಆದರೆ ಅವನಲ್ಲಿ ಖಂಡಿತವಾಗಿಯೂ ಉತ್ತಮ ಮಾಹಿತಿ ಇದೆ” ಎಂದು ಹೇಳಿದಳು. + +ಜೊಕೊಲಾಫ್ ಅವರ ಕೆಲವು ವಾದಗಳು ಅವಳೊಂದಿಗೆ ಉಳಿದುಕೊಂಡವು. ಅವಳು ಅವರ ಬಗ್ಗೆಯೆ ಹೆಚ್ಚು ಸಮಯ ಯೋಚಿಸುವುದರಿಂದ ಅವರು ಹೆಚ್ಚು ಆಳಕ್ಕೆ ಇಳಿಯತೊಡಗಿದ್ದರು. ಅವರು ತಾರ್ಕಿಕರಾದವರು ಎಂದು ಅವಳು ಕಂಡುಕೊಂಡಳು; ಅವರು ಸರ್ಕಾರದ ಬದಲಾವಣೆಗೆ ಸಮಯ ಎಂದು ಒತ್ತಾಯಿಸಿದ್ದು ಖಂಡಿತವಾಗಿಯೂ ನಿಜ ಅನ್ನಿಸಿತು. ಮುಂದಿನ ಚುನಾವಣೆಯಲ್ಲಿ ಉದಾರವಾದಿ ಪಕ್ಷಕ್ಕೆ ಮತ ಚಲಾಯಿಸಲು ನಿರ್ಧರಿಸಿದಳು. ಚುನಾವಣೆಯ ಸಮಯ ಸಮೀಪಿಸುತ್ತಿದ್ದಂತೆ ಅವಳಲ್ಲಿ ಉತ್ಸಾಹ ಮತ್ತು ಆತಂಕ ತುಂಬಿಕೊಂಡಿತು. ಎಷ್ಟೆಂದರೆ ಅವಳು ತಮ್ಮ ಪತಿಯೊಂದಿಗೆ ಸರ್ಕಾರದ ವಿಚಾರವನ್ನು ಚರ್ಚಿಸಲು ತುಂಬಾ ಬಯಸುತ್ತಿದ್ದಳು. ಅವನ ಅಭಿಮತವನ್ನು ಬದಲಾಯಿಸಲು ಅವನ ಮನವೊಲಿಸಬಹುದೆಂದು ಅವಳು ನಂಬಲು ಪ್ರಾರಂಭಿಸಿದ್ದಳು. ನಿಜವಾಗಿಯೂ ರಾಜಕೀಯಕ್ಕೆ ಯಾವುದೇ ರಹಸ್ಯವಿಲ್ಲ ಎಂಬುದೆಲ್ಲವೂ ಅವಳಿಗೆ ಸ್ಪಷ್ಟವಾಗಿತ್ತು. ಆದರೆ ಅವಳು ಅವನನ್ನು ಚರ್ಚೆಗೆ ಕರೆದಾಗ ಅವನು ವಿಶೇಷ ಆಸಕ್ತಿಯನ್ನೇನೂ ತೋರಲಿಲ್ಲ. ವಾಸ್ತವವಾಗಿ ಅವನು ಉತ್ತರಿಸಲಿಲ್ಲ. ಅವನು ಟೆಲಿವಿಷನ್ನಲ್ಲಿ ಬರುತ್ತಿದ್ದ ಬಾಟಲಿಯಲ್ಲಿ ಹೆಬ್ಬೆರಳಿಟ್ಟು ಅದರ ಮೇಲೆ ನಿಲ್ಲುವವನ ದೊಂಬರಾಟ ನೋಡುತ್ತಿದ್ದ. ಕಿರಿಕಿರಿಯ ಅಭಿವ್ಯಕ್ತಿಯೊಂದಿಗೆ ಕ್ಷಣಾರ್ಧ ಮಾತ್ರ ಅವಳನ್ನು ನೋಡಿದ್ದ. ಮರುದಿನ ಸಂಜೆ ಟಿವಿ ಮುಗಿವ ತನಕ ಅವಳು ಅದನ್ನು ಬಿಟ್ಟುಬಿಟ್ಟಳು. ಈ ಸಮಯದಲ್ಲಿ ಅವನು ಅವಳನ್ನು ಕುತೂಹಲದಿಂದ, ಸಾಕಷ್ಟು ತೀವ್ರವಾಗಿ, ಅವಳ ಮನಸ್ಸನ್ನು ಪರೀಕ್ಷಿಸುತ್ತಿದ್ದಂತೆ ನೋಡಿದ. ತದನಂತರ ಅವನು ಒಮ್ಮೆ ಅಸಮ್ಮತಿ ಹಾಗೂ ಸಿಟ್ಟಿನಿಂದ ಬುಸುಗುಟ್ಟಿದ. + + + +ಚುನಾವಣಾ ಮುನ್ನಾದಿನದಂದು ಅದರ ಬಗ್ಗೆ ಒತ್ತಾಯದ ಚರ್ಚೆಯನ್ನು ಮಾಡಲು ಅವಳು ನಿಜವಾಗಿಯೂ ಉದ್ದೇಶಿಸಿದ್ದಳು. ಅವಳು ಚರ್ಚೆಯಲ್ಲಿ ಜೊಕೊಲೋಫ್ ಪುಸ್ತಕದಿಂದ ಉಲ್ಲೇಖಿಸಲಿದ್ದಳು. ಆದರೆ ಅವನು ತುಂಬಾ ತಡವಾಗಿ ಮನೆಗೆ ಬಂದ. ತುಂಬಾ ದಣಿದಂತೆ ಕಂಡ. ಅವಳಿಗೆ ಅವನನ್ನು ಅಸಮಾಧಾನಗೊಳಿಸುವ ಮನಸ್ಸಾಗಲಿಲ್ಲ. ಅವನು ಯಾವಾಗಲೂ ಮಾಡಿದ್ದಂತೆಯೇ ಮತ ಚಲಾಯಿಸಲು ಬಿಡುವುದು ಉತ್ತಮ ಎಂದು, ಇನ್ನು ತಾನು ಬಯಸಿದಂತೆ ತಾನು ಮಾಡುವುದೆಂದೂ ಅವಳು ತೀರ್ಮಾನಿಸಿದಳು. ಕಂಟ್ರಿ ಕ್ಲಬ್ ಶಾಪಿಂಗ್ ಜಿಲ್ಲೆಯಲ್ಲಿ ಅನುಕೂಲಕರವಾಗಿ ವ್ಯವಸ್ಥೆ ಮಾಡಿರುವ ಮತದಾನ ಕೇಂದ್ರಕ್ಕೆ ಬಂದ ನಂತರ ಅವಳಲ್ಲಿ ಯಾಕೋ ಅನುಮಾನ ಹುಟ್ಟಿದಂತೆ ಅನಿಸಿ ಸ್ವಲ್ಪ ಆತಂಕಕ್ಕೊಳಗಾದಳು. ಆ ಕ್ಷಣ ಅಂತಿಮವಾಗಿ ಬಂದೇ ಬಿಟ್ಟಾಗ ಅವಳು ಪ್ರಪಂಚವು ಹಾಗೆಯೇ ಇರಬೇಕೆಂಬ ತನ್ನ ಆಸೆಯನ್ನು ದಾಖಲು ಮಾಡುವ ಲಿವರ್ ಅನ್ನು ಎಳೆದಳು. + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_326.txt b/Kenda Sampige/article_326.txt new file mode 100644 index 0000000000000000000000000000000000000000..25ab7ac846259b794f617ac43ac2a442f3f639eb --- /dev/null +++ b/Kenda Sampige/article_326.txt @@ -0,0 +1,47 @@ + + +ಒಂದು ಕಾವ್ಯಪ್ರಕಾರವನ್ನು ಅದರ ಮೂಲ ಬಾಷೆಯನ್ನು ಹೊರತುಪಡಿಸಿ ಬೇರೆ ಭಾಷೆಯಲ್ಲಿ ಅದೇ ಛಂದಸ್ಸಿನಲ್ಲಿ ಬರೆಯುವುದೆಂದರೆ ಸುಲಭದ ಮಾತಲ್ಲ. ಅದರ ಮೂಲ ಸ್ವರೂಪವನ್ನೂ, ಅದು ಮತ್ತೊಂದು ಭಾಷೆಗೆ ಬಂದಾಗ ಹಾಗೆಯೇ ಉಳಿಸಿಕೊಂಡು ರಚಿಸಬೇಕೆಂದರೆ ಅದರ ಬಗ್ಗೆ ಆಳವಾದ ಅಧ್ಯನವಿರಬೇಕು. ಅಂತಹದ್ದೊಂದು ಆಳ ಅಧ್ಯಯನ ಹಾಗೂ ಸತತ ಪ್ರಯತ್ನದಿಂದ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿಯೇ ಕನ್ನಡಕ್ಕೆ ತರುವಲ್ಲಿ ಬಹುತೇಕ ಯಶಸ್ವಿಯಾಗಿರುವ ಗಿರೀಶ ಜಕಾಪುರೆಯವರು ತಮ್ಮ ಮತ್ತೊಂದು ಗಜಲ್ ಸಂಕಲನ ‘ಮನದ ಮುಂದಣ ಮಾಯೆ’ಯ ಮೂಲಕ ನಮ್ಮ ಮುಂದಿದ್ದಾರೆ. + +ಒಂದು ಮುಕ್ತ ಛಂದದ ಕಾವ್ಯವನ್ನು ಬರೆಯುವಾಗಲೇ ಪ್ರತಿ ಸಾಲಿನ ನವಿರಾದ ಹೊಂದಾಣಿಕೆಗೆ ಅದೆಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಕವಿತೆಯನ್ನು ತೀವ್ರವಾಗಿ ಅನುಭವಿಸುತ್ತ ಬರೆಯುವ ಎಲ್ಲರಿಗೂ ಗೊತ್ತು. ಗಜಲ್ ಎಂದರೆ ಅದರ ಪ್ರತಿ ಸಾಲನ್ನೂ ಒಂದೇ ಮಾತ್ರೆಗೆ ಅಳವಡಿಸಬೇಕು. ಕನ್ನಡದಲ್ಲಿ ಮೊಟ್ಟಮೊದಲ ಸಲ ಗಜಲ್ ಅನ್ನು ಅದರ ಮೂಲ ಛಂದಸ್ಸಿನಲ್ಲಿ ಹಿಡಿದಿಡುವ ಕೆಲಸವನ್ನು ಗಿರೀಶ್ ಜಕಾಪುರೆ ಮಾಡಿದ್ದಾರೆ. ಉದ್ದುದ್ದದ ಸಾಲುಗಳ, ಒಂದೇ ಸಾಲಿನಲ್ಲಿ ಪರಸ್ಪರ ವೈರುಧ್ಯದ ಚಿತ್ರಣ ಕೊಡುವ ಗಜಲ್ ಗಳು ಈಗಾಗಲೇ ಕನ್ನಡದಲ್ಲಿ ಬಹಳಷ್ಟು ಬಂದಿದೆ. ಗಿರೀಶ ಜಕಾಪುರೆಯವರು ಸದ್ದಿಲ್ಲದೇ ಸರಿಯಾದ ರಾಜಮಾರ್ಗವನ್ನು ಕನ್ನಡದ ಕಿರಿಯ ಗಜಲ್ ಕಾರರಿಗೆ ಹಾಕಿಕೊಡುತ್ತಿದ್ದಾರೆ. + +ಇವರ ಮನದ ಮುಂದಣ ಮಾಯೆಯ ಗಜಲ್ ಗಳಲ್ಲಿ ಹದಿನಾರು ಮಾತ್ರೆಯಿಂದ ಹಿಡಿದು ನಲವತ್ತು ಮಾತ್ರೆಗಳವರೆಗಿನ ಸಾಲುಗಳಿವೆ. ಛೋಟಿ ಬೆಹರ್’ನಿಂದ ಬಡಿ ಬೆಹರ್’ಗಳು ತಮ್ಮನ್ನು ಹೀಗೆಯೇ ಬರೆಯಬೇಕು ಎಂಬುದನ್ನು ಕಲಿಸಿಕೊಡಲು ಎಂಬಂತೆ ಉದಾಹರಣೆಗಳಾಗಿ ನಮ್ಮೆದುರು ನಿಂತಿವೆ. ಇನ್ನು ವಿಷಯ ವ್ಯಾಪ್ತಿಯಂತೂ ಭೂಮ್ಯಾಕಾಶಕ್ಕೆ ವ್ಯಾಪಿಸಿದೆ. ಗಜಲ್’ಗಳಲ್ಲಿ ಇರಲೇಬೇಕಾದ ಪ್ರೀತಿ ಪ್ರೇಮ ವಿರಹಗಳು ಸಹಜವೆಂಬಂತೆ ಹಾಸುಹೊಕ್ಕಾಗಿದ್ದರೆ ಸಾಮಾಜಿಕ ವಿಷಯಗಳೂ ನಡುನಡುವೆ ಭಾವನೆಗಳಿಗೆ ಢೀ ಕೊಟ್ಟು ಗುಡುಗು ಸಿಡಿಲಿನ ಆರ್ಭಟವನ್ನು ಸೃಷ್ಟಿಸಲು ಹಿಂದುಮುಂದು ನೋಡುವುದಿಲ್ಲ. + +(ಗಿರೀಶ್ ಜಕಾಪುರೆ) + +ಪದೇಪದೇ ಕೇಳುತ್ತಿದ್ದೀರಿ ಹೇಗಿದ್ದೀರಿ ಎಂದುಗೊತ್ತು ನನಗೆ ನೀವೇ ಕಾಲು ಜಗ್ಗಿದ್ದೀರಿ ಎಂದು ( ಗಜಲ್-೧೫) + +ಜಗದ ರೀತಿನೀತಿಗಳು ಇಲ್ಲಿ ಮನ ಸೆಳೆಯುವ ಗಜಲ್ ಗಳಾಗಿವೆ ಎಂಬುದನ್ನು ಈ ಶೇರ್ ಗಳಲ್ಲಿಯೇ ಕಾಣಬಹುದು. ಹೇಗಿದ್ದೀರಿ ಎನ್ನುತ್ತಲೇ ನಮ್ಮ ಖುಷಿಯನ್ನು ಕಿತ್ತುಕೊಳ್ಳುವ ಜನರ ನಡುವೆಯೇ ಬದುಕಬೇಕಾದ ಅನಿವಾರ್ಯತೆಯನ್ನು ಈ ಶೇರ್ ಗಳು ಹೇಳುತ್ತದೆ. + +ನೆರಳ ಬಯಕೆಯಿದ್ದರೆ ಸುಮ್ಮನೆ ಗಿಡನೆಡುಬಿಸಿಲಿನ ಭಯವಿದ್ದರೆ ಸುಮ್ಮನೆ ಗಿಡ ನೆಡು (೭೧) + +ಅದಕ್ಕಿಂತ ಹೆಚ್ಚಾಗಿ ಸಂಕಲನದಲ್ಲಿ ಪರಿಸರ ಕಾಳಜಿಯ ಗಜಲ್ ಗಳು ಹೆಚ್ಚು ಗಮನ ಸೆಳೆಯುತ್ತವೆ. ಗಿಡ ನೆಡು ಎನ್ನುವ ಎಪ್ಪತ್ತೊಂದನೆಯ ಗಜಲ್ ನಮಗೆ ಗಿಡಗಳ ಅವಶ್ಯಕತೆಯನ್ನು ಹೇಳುತ್ತಲೇ ಖುಷಿಯಲ್ಲೂ, ಬೇಸರದಲ್ಲೂ ಕೊನೆಗೆ ವಿರಹದಲ್ಲೂ ಗಿಡ ನೆಡಬೇಕು ಎನ್ನುತ್ತ ನಾವು ಯೋಚಿಸುವ ರೀತಿಯನ್ನೇ ಬದಲಾಯಿಸಿಬಿಡುತ್ತದೆ. + +ಬಿಸಿರಕ್ತ ಬಸಿದು ಭಾರತಾಂಬೆಯ ಗುಡಿ ಕಟ್ಟಿದವರು ನಾವುಬಿಕ್ಕದಿರಿ ಬಂಧುಗಳೇ ಸಾಯಲೆಂದೇ ಹುಟ್ಟಿದವರು ನಾವು (ಗಜಲ್-೬೭) + +ಎನ್ನುತ್ತ ಗಜಲ್ ಕಾರ ನಮ್ಮ ಸೈನಿಕರನ್ನೂ ನೆನೆಸಿಕೊಳ್ಳುತ್ತರಲೇ ಬಹಳಷ್ಟು ಗಜಲ್ ಗಳಲ್ಲಿ ನಮ್ಮ ರಾಷ್ಟ್ರ ನಿರ್ಮಾಣಕ್ಕೆ ಕಾರಣರಾದ ಗಾಂಧೀಜಿಯವರನ್ನು ನೆನಪಿಸಿಕೊಳ್ಳುತ್ತಾರೆ. ಗಾಂಧೀಜಿಯ ಹೆಸರಿನಲ್ಲಿ ಮಾಡುವ ದುರಾಚಾರವನ್ನು ಕಣ್ಣಿಗೆ ಕಟ್ಟಿದಂತೆ ಹೇಳುವಾಗ ನಮ್ಮ ಬಗ್ಗೆ ನಾವೇ ತಟ್ಟಿಕೊಂಡು ನೋಡಿಕೊಳ್ಳಬೇಕೆನಿಸುವಂತಿದೆ. + +ಹೀಗಾಗಿಯೇ ಬಾಪು ಇನ್ನೇನು ಮಾಡೋಣ ಎನ್ನುತ್ತ ಗಾಂಧೀಜಿಯವರ ಎಲ್ಲ ತತ್ವ ಸಿದ್ಧಾಂತಗಳನ್ನು ನಮಗೆ ಬೇಕಾದಂತೆ ತಿರುಚಿಕೊಂಡು ಹಾಯಾಗಿರುವ ನಮ್ಮ ಸ್ವಾರ್ಥದ ಕುರಿತು ಈ ಗಜಲ್ ಹೇಳುತ್ತದೆ. + +ಒಂದಕ್ಕೆ ಹೊಡೆದರೆ ಇನ್ನೊಂದು ಗಲ್ಲವನೂ ಮುಂದೆ ಮಾಡಲು ಹೇಳಿದಿರಿಇನ್ನೊಂದಕ್ಕೂ ತೆಗೆದು ಬಾರಿಸಿದ್ದೇವೆ ಬಾಪು, ಇನ್ನೇನು ಮಾಡೋಣ (ಗಜಲ್-೨೮) + +ಅಂದ ಹಾಗೆ ಇಡೀ ಸಂಕಲನವನ್ನು ವಿರಹದಲ್ಲಿ ಅದ್ದಿ ತೆಗೆದಂತೆ ಭಾಸವಾಗುತ್ತದೆ. ಹೆಚ್ಚಿನ ಗಜಲ್ ಗಳು ಕಳೆದು ಹೋದವಳ ನೆನಪಿಗೆಂಬಂತೆ ಬರೆದ ವಿರಹದ ಪತ್ರಗಳೆಂಬಂತೆ ಭಾಸವಾಗುತ್ತದೆ. + +ಇಡೀ ಸಂಕಲನವನ್ನು ಒಟ್ಟಾಗಿ ಗಮನಿಸಿದರೆ ಇನ್ನೊಂದು ಸೂಕ್ಷ್ಮತೆಯನ್ನು ಕಾಣಬಹುದು. ವಿರಹದ ಜೊತೆಜೊತೆಗೇ ಮದಿರೆ ಕೂಡ ಇಡೀ ಸಂಕಲನವನ್ನು ತನ್ನ ತೆಕ್ಕೆಯೊಳಗೆ ಅಪ್ಪಿಕೊಂಡಿದೆ. ಮಧುಶಾಲೆ ಗಜಲ್ ನ ಮುಖ್ಯಪಾತ್ರ. ಸಾಕಿ ಎಂಬುದು ಗಜಲ್ ಕಾರನ ಆತ್ಮ ಸಖಿ. ಹೀಗಾಗಿ ಗಜಲ್ ಕಾರರು ಒಂದುತೊಟ್ಟು ಕುಡಿಯದಿದ್ದರೂ ಶರಾಬಿನ ಬಗ್ಗೆ ಯಥೇಚ್ಛವಾಗಿ ಬರೆಯಲು ಇಚ್ಚಿಸುವುದು ತಪ್ಪೇನಲ್ಲ. + +ನೀನು ಇರದಾಗಲೂ ಸಾಗುತ್ತದೆ ಬದುಕು, ಆದರೆ ಸ್ವಲ್ಪ ಸಪ್ಪೆಸಖಿ, ನಿನ್ನ ವಿರಹದಲೂ ರುಚಿಸುತ್ತದೆ ಮಧು, ಆದರೆ ಸ್ವಲ್ಪ ಸಪ್ಪೆ (ಗಜಲ್ ೧೯) + +ವಿರಹ ಮತ್ತು ಮಧುವನ್ನು ಬೆರೆಸಿ ಕಾಕ್ ಟೇಲ್ ಮಾಡಿ ಕುಡಿಯುವವರಿಗೆ ಯಾವುದರ ಅಮಲು ಹೆಚ್ಚು ಎಂದು ತಿಳಿಯುವ ಕುತೂಹಲವಿರುತ್ತದೆ. ವಿರಹದ ನೋವಿಗೆ ಮದಿರೆ ಸಾಥ್ ನೀಡದಿದ್ದರೆ ಹೇಗೆ ನಡೆದೀತು ಹೇಳಿ? + +ಊಟ, ತಿಂಡಿ, ನಿದ್ರೆ ಬಿಡಬಹುದು. ಆದರೆ ಮದಿರೆಯ ನಶೆಯನ್ನು ಮರೆಯುವುದು ಹೇಗೆ ಸಾಧ್ಯ? ಅದಕ್ಕೆಂದೇ ಸಂಕಲನದ ಪ್ರತಿ ಗಜಲ್ ನಲ್ಲೂ ಒಂದು ಶೇರ್ ಕಡ್ಡಾಯವಾಗಿ ಮದಿರೆ ಹಾಗೂ ನಶೆಯ ಕುರಿತಾಗಿದೆ. ಗಿರೀಶ್ ಜಕಾಪುರೆಯವರಿಗೆ ಗಾಲಿಬ್ ತುಂಬಾ ಇಷ್ಟದ ಗಜಲಕಾರ. ಬಹುಶಃ ಆತನ ನೆನಪಿಗಾಗಿ ಒಂದಾದರೂ ಮಧು ತುಂಬಿದ ಶೇರ್ ಅನ್ನು ಬರೆದು ಸಮರ್ಪಿಸುತ್ತಿರಬಹುದೆ. + + + +ಒಂದೇ ಭಾವನೆಗಳಿರುವ ಮುಸಲಸಿಲ್ ಗಜಲ್ ಗಳು ಓದಿ ಮುಗಿಸಿದರೂ ಕಲ್ಲುಸಕ್ಕರೆಯ ಸವಿ ಎಷ್ಟೋ ಸಮಯದವರೆಗೆ ನಾಲಿಗೆಯ ತುದಿಯಲ್ಲಿ ಉಳಿದುಬಿಡುವಂತೆ ಮನಸ್ಸಿನಾಳದಲ್ಲಿ ನವಿರಾಗಿ ಕುಳಿತುಬಿಟ್ಟರೆ ಗೈರ್ ಮುಸಲಸಿಲ್ ಗಜಲ್ ಗಳು ಹಲವು ಬಗೆಯ ಹೂಗಳನ್ನು ಪೋಣಿಸಿ ಮಾಲೆಕಟ್ಟಿದಂತೆ ತನ್ನ ಮನಮೋಹಕ ಬಣ್ಣಗಳಿಂದಲೇ ಆಕರ್ಷಿಸುತ್ತವೆ. + +ಏನೇ ಇರಲಿ, ಕನ್ನಡ ಗಜಲ್ ಲೋಕದ ಅನಭಿಷಿಕ್ತ ದೊರೆ ಅಲ್ಲಮ ತನ್ನ ಮನದ ಮುಂದಣ ಮಾಯೆಯನ್ನು ನಮ್ಮೆದುರು ಅನಾವರಣಗೊಳಿಸುತ್ತಿದ್ದಾರೆ. ಅಲ್ಲಮನನ್ನು ಆವರಿಸಿಕೊಂಡಿರುವ ಗಜಲ್ ಎಂಬ ಮಾಯೆ ಅವರನ್ನು ಬಿಟ್ಟು ದೂರ ಸರಿಯದಿರಲಿ + + + +ಅಲ್ಲಮ ಯಾರು? ಬಲ್ಲವರು ಕೇಳುತಿಹನುಅವನೆಂದರೆ ಎಲ್ಲವೂ ಅಳಿದ ಮೇಲೆ ಉಳಿದವನು (ಗಜಲ್-೫೦) + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_327.txt b/Kenda Sampige/article_327.txt new file mode 100644 index 0000000000000000000000000000000000000000..274f102f87544ca227d31097b747490770932676 --- /dev/null +++ b/Kenda Sampige/article_327.txt @@ -0,0 +1,47 @@ + + +ಗಂಟೆ ಅದಾಗಲೇ ಏಳಾಗಿತ್ತು. ಆಗ ಎದ್ದು ಅರ್ಜೆಂಟ್ ಅರ್ಜೆಂಟಲ್ಲಿ ಕೈಯ್ಯಲ್ಲೊಂದು ಒದ್ದೆ ಬಟ್ಟೆ, ಎಡಗೈಯಲ್ಲಿ ರಂಗೋಲಿ ತಟ್ಟೆ ಹಿಡಿದು ಪಟ್ ಪಟ್ ಅಂತ ರಂಗವಲ್ಲಿ ಹಾಕುವ ಶಬ್ದ. ಮನೆಯ ಗಡಿಬಿಡಿ ಸದ್ದು ಕೇಳಿ ಮಲಗಿದ್ದ ಗಂಗಮ್ಮನ ಕೋಪ ನೆತ್ತಿಗೇರಿತ್ತು, ಇದೇನು ಅವತಾರವೋ ಏನೋ, ಒಂದಿಷ್ಟು ಭಕ್ತಿಯಿಲ್ಲ, ಶ್ಲೋಕವಿಲ್ಲ, ಈ ತಟ್ಟೆ ಹಿಡಿದು ಥಟ್ಟನೆ ಹಾಕುವ ರಂಗೋಲಿಗೂ ಆಲಸಿತನ ಯಾಕೆಂದೂ. ನಮ್ಮ ಕಾಲದಲ್ಲಾದರೆ ಹೀಗಿರಲಿಲ್ಲ. ಮಣ್ಣಿನ ನೆಲ. ಬೆಳಿಗ್ಗೆ ಐದು ಗಂಟೆಗೆ ಎದ್ದು ಸಗಣಿ ತೆಗೆದು ಗೋಮಯ ತಂದು ಅಡಿಕೆ ಹಾಳೆ ಹಿಡಿದು ಬಳುಗ ಬೇಕು. ಮತ್ತೆ ಚೆಂದಾದ ರಂಗೋಲಿ ಇತ್ತು ಅರಸಿನ ಕುಂಕುಮ ಹಾಕಿ ಮಧ್ಯೆ ಹೂವಿಟ್ಟು ಬಾಯಲ್ಲಿ ಒಂದಿಷ್ಟು ಶ್ಲೋಕ, ನಾರಾಯಣ ನಾರಾಯಣ ಎಂದು ಪಠಣೆ. ಈಗಿನ ಕಾಲದಲ್ಲಿ ಸಿಮೆಂಟ್ ನೆಲಕ್ಕೆ ಒಂದ್ಸಲ ಬಟ್ಟೆಯಿಂದ ಒರೆಸಲೂ ಸರಿಯಾಗಿ ಆಗದಾ? ಅರಸಿನ ಕುಂಕುಮ ಬೇಡ, ರಂಗೋಲಿ ಹಾಕಲೂ ಪುರುಸೊತ್ತಿಲ್ಲವಾ? ಎಂದು ಮನ ಕೊರಗುತ್ತಿತ್ತು. ನಾನು ಏಳುವ ಹಾಗಿದ್ದರೆ ಎಲ್ಲಾ ಮುಗಿಸುತ್ತಿದ್ದೆ. + +‘ಅತ್ತೆ, ದೋಸೆ ಎರೆದಿಡಲಾ ಇಲ್ಲ ಆಮೇಲೆ ನೀವು ದೋಸೆ ಮಾಡ್ಕೋತೀರಾ?’, ಎಂದು ಶಾಲು ಕೇಳಿದಾಗ ಮತ್ತೆ ಅಬ್ಬೆ ಈ ಲೋಕಕ್ಕೆ ಆಗಮನ. ‘ಓಲೆ ಮೇಲೆ ಬಾಳೆ ಹಂದರದಿಂದ ಎರೆದರೆ ಕಾಗದದಂತಾ ದೋಸೆ, ಇಲ್ಲಾ ತೆಳ್ಳೆವ್ ಆದರೆ ಜೀವಕ್ಕೂ ಗನಾದು, ಈ ಸುಟ್ ಅದೆಂತದೋ ತವಾ ಮೇಲೆರದ್ದು ದೋಸೆ, ಕಡಿಗ್ ತಿಂದ್ರೆ ರಬ್ಬರ್ ಹಾಗೆಯಾ’ ಅಂತ ಯೋಚಿಸುತ್ತ, ‘ಇರು ಶಾಲು, ಬಂದೆ’ ಅಂತ ಎದ್ದಳು ಅಬ್ಬೆ. + +ಪಾತ್ರೆಗೆಲ್ಲ ಅದೆಂತದೋ ವಿಮ್ ಶಾಬು ಹಾಕೋದು, ಬೂದಿ ಕತ್ ಸುಂಬು ಹಾಕ್ ತಿಕ್ಕಿರೆ ಎಷ್ಟು ಲಾಯ್ಕ್ ಆಗ್ತಿತ್ತು. ಮಸಿ ಎಲ್ಲ ಹೋಗ್ತಿತ್ತು, ಅದೇನೋ ಈ ಶಾಲು, ಕೈ ಹಾಳಾಗತ್ತೆ ಅಂತ ಅದನ್ನೆಲ್ಲ ಬಳಸೋದೆ ಇಲ್ಲ ಅಂತ ಅಬ್ಬೆಗೆ ಯೋಚನೆ ಬಂತು. ಏನಾದರೂ ಬಾಯ್ಬಿಟ್ ಹೇಳಿದ್ದರೆ ‘ಅತ್ತೆ, ನೀವೇ ತೊಳೆಯಿರಿ’ ಅಂದು ಬಿಟ್ಟಾಳು ಎನ್ನುವ ಭಯ. ಎಲ್ಲಾ ಕೆಲಸ ಮುಗಿಸಿ ಪಕ್ಕದ ಮನೆಗೆ ಹೋದರೆ ಅದೇನು ಹರಟೆಯೊ ಆ ಕಮಲಿ ಜೊತೆಗೆ. ಅದರ ಬದಲು ಒಂದಿಷ್ಟು ಹಪ್ಪಳ ಸಂಡಿಗೆ ಏನಾದರೂ ಮಾಡಬಾರದಾ? ಅಬ್ಬಿ ಒಲೆಗೆ ಕತ್ಕಡಿ, ಅಡಿಕೆ ಸಿಪ್ಪೆ, ಚಕ್ಕೆ ಏನಾದರೂ ತರಬೇಕೆಂಬ ಯೋಚನೆ ಇಲ್ಲ ಅವಳಿಗೆ, ಆಳುಗಳೇ ಮಾಡಲಿ ಎಂದು. ಸೌದಿ ಕಣ್ಣಿ ಬೇಗ ಖಾಲಿ ಆಗತ್ತೆ, ಮಳೆಗಾಲ ಮುಗಿದು ದೀಪಾವಳಿ ತನಕ ಬರತ್ತೆ ಎನ್ನುವ ಸಾಮಾನ್ಯ ತಿಳುವಳಿಕೆ ಇಲ್ಲ. + +ಭಾನುವಾರ ಬಂದರೆ ಸಾಕು ‘ರೀ ಸಂತೆಗೆ ಹೋಗಿ ತರಕಾರಿ ತರೋಣ’ ಅಂತಾಳೆ. ಅಲ್ಲಿ ಆ ಹೊಲ್ಸ್ ಪಾನಿಪುರಿ ಮತ್ತೊಂದು ಮಗದೊಂದ್ ತಿಂಬುದು, ಅದರ ಬದಲಿಗೆ ಒಂದಿಷ್ಟು ಪಾಯಸಾವೋ, ಕಡುಬು, ಇಲ್ಲಾ ರವೆ ಲಡ್ಡು ಏನಾರು ಮಾಡಿದ್ರೆ ನಾನು ತಿನ್ನಬಹುದು, ಈ ವಯಸ್ಸಿನಲ್ಲಿ ಪೇಟೆಗೆ ಹೋಗಲೂ ಆಗದು, ಮನೆಲೆ ಒಂದಿಷ್ಟು ಮೊಗೆಹಾಳಿ, ಬಡನೆಹಾಳಿ ಮಾಡಿದ್ದರೆ ಆಗಿತ್ತು. ಏನಾರು ಮಾಡಿಕೊಳ್ಳಲಿ ಎಂದು ಎದ್ದು ಹೋದಳು ಗಂಗಮ್ಮ. + +ಅವತ್ತು ಮಗಳು ಸುಜಲಾ ಬರುತ್ತೇನೆಂದು ಕರೆ ಮಾಡಿದ್ದಳು. ಏಳಲಾಗದ ಗಂಗಜ್ಜಿ ಅದೇನೋ ಸಂಭ್ರಮ. ಈ ಹಾಳು ತಳಮಳ ಹೊರಗೆ ಹಾಕಬಹುದು ಎಂಬ ಲವಲವಿಕೆ. ಬೆಳಿಗ್ಗೆಯೇ ಅಕ್ಕಿ ನೆನೆ ಹಾಕಿದ್ದಳು. ಶಾಲು ‘ಅದ್ಯಾಕೆ ಅತ್ತೆ ನಾನು ಪಲಾವ್ ಮಾಡೋಣ ಅಂತಿದ್ದೆ’ ಎಂದಾಗ ಸಿಟ್ಟು ಬಂದರೂ ‘ನಿನ್ನ ನಾದಿನಿಗೆ ಅಕ್ಕಿವಡೆ ಅಂದರೆ ಪ್ರೀತಿ. ಅದಿಕ್ಕೆ ಮಾಡೋಣ ಅಂತ. ನೀನು ಕಲಿತುಕೊ ನಾಳೆ ನಾ ಸತ್ತರೆ ಉಪಯೋಗಕ್ಕೆ ಬರತ್ತೆ’ ಅಂದಾಗ ಶಾಲೂ ಕೇಳದಂತೆ ಹೊರಟೇ ಬಿಟ್ಟಳು ಕಮಲಿ ಮನೆಗೆ. + +ಅಕ್ಕಿಯ ಜೊತೆಗೆ ಸೌತೆಕಾಯಿ ರುಬ್ಬಿ ವಡೆ ತಯಾರಿಸಿದಳು ಗಂಗಜ್ಜಿ.. ಸುಜಲಾ ‘ಆಯಿ ಇದ್ಯಾಕೆ ಮಾಡಿದೆ’ ಅಂತ ಅಲವತ್ತುಕೊಂಡೆ ತಿಂದಳು. ರಾತ್ರಿಗೆ ಶಾಲು ಪಲಾವ್ ಮಾಡಿದಾಗ ಅಣ್ಣ ತಂಗಿ ಚೆನ್ನಾಗಿ ನಗುತ್ತಾ ತಿಂದಿದ್ದು ನೋಡಿ ಸ್ವಲ್ಪ ಸಿಟ್ಟು ಬಂತು. + +‘ಆಯಿ, ನಮ್ಮ ಅತ್ತೆ ಅದೆಷ್ಟು ಹಳೆ ಕಾಲದವರ ಥರಾ ಮಾಡ್ತಾರೆ ಗೊತ್ತಾ? ನಾನಂತೂ ಅದೆಷ್ಟೋ ಸಲ ಜಗಳ ಆಡಿದ್ದೇನೆ. ನನ್ನ ಕಂಡರೆ ಖಾಯಿಲೆ ಹಿಡಿದು ಬಿಡತ್ತೆ. ನಿನಗೆ ಪರವಾಗಿಲ್ಲ ಅತ್ತಿಗೆ ಒಳ್ಳೆಯವಳು. ಸುಮ್ಮನಿರ್ತಾಳೆ. ಮತ್ತೇನು ಸುದ್ದಿ, ನನ್ನ ಸಣ್ಣ ಕೈತೋಟ ಎಷ್ಟು ಚೆನ್ನಾಗಿದೆ ಗೊತ್ತಾ ಆಯಿ, ನಿನ್ನ ಕೈ ಗುಣದ ಹಾಗೆ ಸೌತೆಕಾಯಿ, ಬದನೆಕಾಯಿ, ಒಂದೆಲಗ, ಲೋಳೆಸರ, ಮಲ್ಲಿಗೆ ದಾಸವಾಳ ಎಲ್ಲಾ ಇದೆ. ಆದರೆ ಕೆಲಸಕ್ಕೆ ಹೋಗಬೇಕು, ನೋಡುಕೊಳ್ಳೋದೇ ಕಷ್ಟ, ಅತ್ತೆ ಅಂತೂ ಒಂದು ಹನಿ ನೀರು ಹಾಕಲ್ಲ’ ಅನ್ನುತ್ತಿದ್ದಳು. ರಜಾ ಮುಗಿಸಿ ಹೊರಟಳು. + +ಪಕ್ಕದ ಮನೆಯ ಸುನಂದಾ ಬಂದು ಕಷ್ಟ ಸುಖ ವಿಚಾರಿಸುತ್ತಿದ್ದಾಗ ‘ಅದೇನೇ ನಿನ್ನ ಸೊಸೆ ಆ ಕಮಲಿ ಜೊತೆಗೆ ಕಡಿದು ಕಟ್ಟಾಕೋದು? ಇಬ್ರು ಏನ್ ಮಾತಾಡ್ತಾರೆ? ನಿನ್ನ ಸುದ್ದಿ ಹೇಳ್ತಾರಾ?’ ಎಂದು ಗಂಗಜ್ಜಿಗೆ ಹುಳ ಬಿಟ್ಟರು. ಅಷ್ಟರಲ್ಲಿ ಮನೆಗೆ ಮರಳುವ ಶಾಲು ಕಂಡು ‘ಸುನಂದಾ ನನ್ನ ಮಗಳು ಎಷ್ಟು ಜಾಣೆ ಗೊತ್ತಾ, ಕೆಲಸದ ಜೊತೆಗೆ ಹಿತ್ತಲ ಹಾಳಿ ಎಲ್ಲಾ ಮಾಡಿದ್ದಾಳೆ’ ಎಂದರು. ಶಾಲು ನಕ್ಕು ಒಳಗೆ ಹೋದಳು. ಗಂಗಜ್ಜಿಗೆ ಪೆಚ್ಚಾಯಿತು. ಇದೇನು ಇವಳು ಜಗಳಾನು ಆಡಲ್ಲ, ಮಾತೂ ಇಲ್ಲ, ಅವಳಷ್ಟಕ್ಕೆ ಅವ್ಳಿರ್ತಾಳೆ ಎಂದು. + +‘ರೀ ಮನೆಗೆ ನೆಟ್ ಹಾಕಿಸಬೇಕಿತ್ತು.’ ಎಂದಾಗ ಮಗ ಮರು ಮಾತನಾಡದೆ ಹಾಕಿಸಿದ್ದ. ಈಗ ಮೊಬೈಲ್ ಹಿಡಿದು ಕುಳಿತಿದ್ದಳು ಶಾಲು. ‘ಇದು ಬೇರೆ…’ ಎಂದು ಗಂಗಜ್ಜಿ ಬೈದುಕೊಂಡರು. ಸೊಸೆಯ ಮೇಲಿನ ಕೋಪ ಹೆಚ್ಚಾಗುತ್ತಿತ್ತು ಅವಳಿಗೆ. ಶಾಲು ಮಾತ್ರ ಯಾವುದನ್ನೂ ಗಮನಿಸುತ್ತಿಲ್ಲ. ಅಥವಾ ಗೊತ್ತಿದ್ದೂ ಗೊತ್ತಿಲ್ಲದಂತಿದ್ದಳು. + +ಗಂಗಜ್ಜಿಗೆ ದಿನೇ ದಿನೇ ಸೊಸೆಯ ಮೇಲೆ ಸಿಟ್ಟು ಏರುತ್ತಿತ್ತು. ಅದೇನು ಮಾಡುತ್ತಾಳೆ ಮುಂದೆ ಎಂದು. ಮನದ ದುಗುಡ ಹೇಳಲು ಯಾರೂ ಇಲ್ಲ. ತಾನು ಕೆಲಸ ಮಾಡದಿದ್ದರೂ ಅವಳೇ ಮುಗಿಸಿ ಮತ್ತೆ ಆ ಕಮಲಿ ಜೊತೆಗೆ ಅದೇನೊ…. + +ಗಂಗಜ್ಜಿಯ ಮಗಳು ಹಳ್ಳಿಯ ಕೆಲಸಕ್ಕೆ ಬೀಳಬಾರದೆಂದು ನಗರದ ವರನ ಹುಡುಕಿ ಕೊಟ್ಟಿದ್ದಳು. ಇನ್ನು ಮಗನಿಗೆ ತಂದ ಹೆಣ್ಣು ಶಾಲು. ಅತ್ತೆಗೆ ಒಂದು ಮಾತೂ ಆಡದವಳು. ಅವಳಾಯಿತು, ಅವಳ ಕೆಲಸವಾಗಿತ್ತು. ಮಗಳಿಗೆ ಹೋಲಿಸಿ ನೋಡುತ್ತಿದ್ದರು. ‘ಸುಜಲಾಗೆ ಎಷ್ಟು ಕಷ್ಟ, ಅತ್ತೆ ಮಾತು ಎದುರಿಸಬೇಕು. ಕೆಲಸಕ್ಕೆ ಹೋಗುತ್ತಾಳೆ. ಜಾಣೆ ಅವಳು. ಈ ಶಾಲು ಎಷ್ಟು ಆರಾಮಾಗಿದ್ದಾಳೆ ಇಲ್ಲಿ. ಈ ಮಗನೂ ಅವಳಿಗೆ ಕೆಲಸಕ್ಕೆ ಸಹಾಯ ಮಾಡೋದು ಬೇರೆ…’ ಅಂತ ಗಂಗಮ್ಮನ ಅಳಲು. + +ಅದೊಂದು ದಿನ ಗಂಗಜ್ಜಿ ಬಚ್ಚಲು ಮನೆಯಲ್ಲಿ ಕಾಲುಜಾರಿ ಬಿದ್ದಳು. ಕಿರುಚಿಕೊಳ್ಳುತ್ತಲೇ ಶಾಲು ಓಡಿ ಬಂದಳು. ಅವಳ ಬಳಿ ಸೇವೆ ಮಾಡಿಸಿಕೊಳ್ಳಲು ಅದೇನೋ ಬಿಗುಮಾನ. ಆದರೆ ಶಾಲು ಯಾರಿಗೋ ಫೋನ್ ಮಾಡಿ ಗಾಡಿ ತರಿಸಿದ್ದಳು. ಆಸ್ಪತ್ರೆಗೆ ಹೋಗಿ ಎಕ್ಸರೆ ಮಾಡಿಸಿದಾಗ ಸ್ವಲ್ಪ ಬಿರುಕು ಬಂದಿದೆ ಎಂದು ಗೊತ್ತಾಗಿತ್ತು. ಶಾಲು ಎ. ಟಿ. ಎಮ್ ಗೆ ಹೋಗಿ ಹಣ ತಂದಳು. ಇಷ್ಟೊಂದು ಹಣ ಎಲ್ಲಿಂದ ಬಂತು ಎಂದು ಯೋಚಿಸಿದಳು ಗಂಗಜ್ಜಿ. + +ಮನೆಗೆ ಹೋಗಿ ಸುಜಲಾಗೆ ಫೋನ್ ಮಾಡಿ ಒಂದಿಷ್ಟು ದಿನ ಬಾ ಎಂದಾಗ ‘ಹೋಗು ಆಯಿ, ನನ್ನ ಅತ್ತೆ ಸೇವೆ ಮಾಡಿ ಸುಸ್ತಾಗಿದೆ. ಇನ್ನು ನಿನ್ನ ಗೋಳು ಬೇರೆ, ರಜಾ ಇಲ್ಲಾ.’ ಅಂದಳು. ಆದರೆ ಶಾಲು ಮಾತ್ರ ಎದ್ದೇಳದೇ ಇದ್ದ ಗಂಗಜ್ಜಿಗೆ ಮಗಳಿಗಿಂತ ಹೆಚ್ಚಾಗಿ ಸೇವೆ ಮಾಡಿದಳು. ಆದರೆ ಕಮಲಿ ಮನೆಗೆ ಹೋಗುವಾಗ ಮಾತ್ರ ಗಂಡನಿಗೆ ಅತ್ತೆಯ ನೋಡಿಕೊಳ್ಳಲು ಹೇಳುತ್ತಿದ್ದಳು. + +ಗಂಗಜ್ಜಿಗೆ ಅದೇನೋ ಕುತೂಹಲ ತಡೆಯಲಾರದೆ ಮಗನ ಕೇಳಿದಳು. ‘ಅದೇನೋ ರಾಮು, ಆ ಕಮಲಿ ಮನೇಲಿ ಅದೇನಿದೆ, ಆವತ್ತು ನೀನಿಲ್ಲದಾಗ ಶಾಲುಗೆ ಆಸ್ಪತ್ರೆಗೆ ಕೊಡಲು ಹೇಗೆ ಹಣ ಬಂತು?’ ಎಂದು. + +‘ಆಯಿ ಶಾಲು ಮತ್ತೆ ಕಮಲಿ ಸೇರಿ ಅದೇನೊ ವುಲನ್ ಸ್ವೇಟರ್, ಅದು ಇದು ಮಾಡಿ ಮೊಬೈಲಿನಲ್ಲಿ ಮಾರ್ತಾರೆ, ಅದರಿಂದಾಗಿ ಒಂದಿಷ್ಟು ಹಣ ಅವರ ಬ್ಯಾಂಕ್ ಖಾತೆಯಲ್ಲಿ ಬರತ್ತೆ. ಅದಕ್ಕೆ ನೆಟ್ ಹಾಕಿಸಿದ್ದು.’ ಅಂದಿದ್ದ. + +ಗಂಗಜ್ಜಿಗೆ ಸೊಸೆಯ ಹೊಸ ಮುಖ ಕಂಡಿತ್ತು. ಆವತ್ತು ಶಾಲೂ ಜೊತೆಗೆ ಕಮಲಿಯು ಗಂಗಜ್ಜಿ ಮನೆಗೆ ಬಂದಿದ್ದಳು. ‘ಹೇಗಿದ್ದೀರಾ ಅಮ್ಮ? ಶಾಲೂಗೆ ನಿಮ್ಮದೇ ಚಿಂತೆ. ನಾವು ಮಾಡುವ ವ್ಯಾಪಾರ ಚೆನ್ನಾಗಿ ನಡೀತಿದೆ. ಅವಳು ಮೊಬೈಲ್ ನಲ್ಲಿ ಎಲ್ಲಾ ಫೋಟೋ ಹಾಕ್ತಾಳೆ. ನಂಗೆ ಆ ಇಂಗ್ಲಿಷ್ ಅಷ್ಟು ಬರಲ್ಲ. ಅದಕ್ಕೆ ನಿಮ್ಮ ಈ ಸ್ಥಿತಿಯಲ್ಲಿ ಬಿಟ್ಟು ಬಂದಳು. ಕ್ಷಮಿಸಿ, ನಿಮ್ಮ ಬಗ್ಗೆ ಅದೆಷ್ಟು ಹೊಗಳುತ್ತಾಳೆ. ಅಂದಹಾಗೆ ಸುಜಲಾ ಬರಲಿಲ್ವಾ ನಿಮ್ಮನ್ನ ನೋಡೋಕೆ?’ ಅಂದಾಗ ಗಂಗಜ್ಜಿಗೆ ದಿಗಿಲಾಯಿತು. + +‘ಅರೇ ಇದೇನಾಯಿತು. ನನ್ನ ಮಗಳು ಮಾತ್ರ ಹಳ್ಳಿಯ ಕೆಲಸ ಮಾಡಬಾರದು ಅಂತ ನಗರಕ್ಕೆ ಕಳುಹಿಸಿದ್ದೆ. ಆದರೆ ನನ್ನ ಸೊಸೆ ಮಾತ್ರ ಎಲ್ಲಾ ಕೆಲಸ ಮಾಡಲಿ ಎಂದು ಬಯಸಿದೆ. ನಾನೇ ಎಷ್ಟೋ ಸಲ ಅವಳ ಸುದ್ದಿಗಳನ್ನು ಪಕ್ಕದ ಸುನಂದಾ ಜೊತೆಗೆ ಹೇಳಿದಿನಿ. ಅದು ಇವಳ ಕಿವಿಗೆ ಬಿದ್ದಿರತ್ತೆ. ಆದರೆ ಒಂದೇ ಒಂದು ದಿನ ನನ್ನಲ್ಲಿ ಅನಾದರ ತೋರಲಿಲ್ಲ ಇವಳು’ ಅಂದುಕೊಂಡಳು. + +ಅವತ್ತು ಶಾಲು‘ಅತ್ತೆ ಇದೋ ಹೊಸ ಸೀರೆ ನಿಮಗಾಗಿ, ಕಮಲಿಯಿಂದ ಸ್ವೇಟರ್ ಕಾಲುಚೀಲ, ಮಕ್ಕಳ ಟೊಪ್ಪಿ ಎಲ್ಲ ಕಲಿತೆ. ಈಗ ನಮ್ಮ ಬಿಸಿನೆಸ್ ಶುರುವಾಗಿದೆ. ಒಂದಿಷ್ಟು ಹಣವೂ ಕೈಗೆ ಬಂತು. ಅದಕ್ಕೆ ಮೊದಲ ಗಿಫ್ಟ್ ನಿಮಗೇ’ ಎಂದಳು. + +ಅವತ್ತೊಂದಿನಾ ಮಗಳಿಗೆ ಚೆಂದದ ಸೀರೆ ತಂದು ಇವಳಿಗೆ ಸಾದಾ ಸೀರೆ ತಂದಿದ್ದು ನೆನಪಾಯಿತು ಗಂಗಜ್ಜಿಗೆ. ತಾನು ಕಾಳು ಪೆಟ್ಟುಮಾಡಿಕೊಂಡ ಸುದ್ದಿ ಗೊತ್ತಿದ್ದರೂ ಮಗಳು ಒಂದೇ ಒಂದ್ ಫೋನ್ ಸಹ ಮಾಡಲಿಲ್ಲ, ಹುಷಾರ್ ಆಯಿತಾ ಎಂದು… + +ಗಂಗಜ್ಜಿಗೆ ಈಗ ಕಾಲು ನೋವು ಸ್ವಲ್ಪ ಸುಧಾರಿಸಿತ್ತು. + + + +‘ಶಾಲು ಇವತ್ತು ನಾನೇ ದೋಸೆ ಹುಯ್ದು ಕೋಡ್ತೆ. ನೀ ಬೇಗ ಹೋಗಬಹುದು ಕಮಲಿ ಮನೆಗೆ, ಮಧ್ಯಾಹ್ನ ಅಡುಗೆ ನಾನೇ ನಿಧಾನವಾಗಿ ಮಾಡುತ್ತೇನೆ, ಆದರೆ ಆದಷ್ಟು ಬೇಗ ಬಾ’. ಎಂದು ಗಂಗಜ್ಜಿ ಅಂದಾಗ ಶಾಲುಗೆ ಆಶ್ಚರ್ಯ ಕಾದಿತ್ತು….. + +ಅಂಜನಾ ಗಾಂವ್ಕರ್ ಕುಮಟಾದಲ್ಲಿ ಶಿಕ್ಷಕ ತರಬೇತಿ ಮುಗಿಸಿ ಏಳು ವರ್ಷಗಳ ಕಾಲ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಂದಿ ಭಾಷೆಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿ ಈಗ ಯಲ್ಲಾಪುರದ ದಟ್ಟ ಅರಣ್ಯದ ನಡುವೆ ಪುಟ್ಟ ಮನೆ ಮಾಡಿದ ರೈತ ಮಹಿಳೆ. ಕತೆ ಬರೆಯೋದು ಇವರ ಹವ್ಯಾಸ. \ No newline at end of file diff --git a/Kenda Sampige/article_328.txt b/Kenda Sampige/article_328.txt new file mode 100644 index 0000000000000000000000000000000000000000..076fc7572b9eaa216e5c3f9c96e46f459ac6ba55 --- /dev/null +++ b/Kenda Sampige/article_328.txt @@ -0,0 +1,39 @@ + + +ಮದುವೆಯಾಗಿ ಎಂಟು ದಿನಗಳಲ್ಲಿ ಉಮೇಶನಿಗೊಂದು ತಂತಿ ಬಂತು: ‘ಕೂಡಲೇ ಹೊರಟು ಬರಬೇಕು’ – ಎಂದು. ಹೊರಡಲು ಸನ್ನಾಹ ಮಾಡಿದನು. ಅವನು ರಾಜಕೀಯ ಚಳವಳಕ್ಕೆ ಸೇರಿದ್ದಾನೆಂದು ಕಮಲೆಗೆ ಹೊರತು ಬೇರೆ ಯಾರಿಗೂ ಗೊತ್ತಿರಲಿಲ್ಲ. ಹೊರಡುವ ಮುನ್ನಾದಿನ ಕಮಲೆಯೊಡನೆ ಮನಬಂದಂತೆ ತುಂಬ ಮಾತಾಡಬೇಕೆಂದು ಸಂಜೆಯಾಗುವಾಗ ಅವಳ ಕೋಣೆಗೆ ಹೋದ. ಮದುವೆಯಾದ ಮೇಲೆ ಅವಳ ಕೋಣೆಗೆ ಹೋಗುವುದು ಇದೇ. ಹೋದ ಕೂಡಲೇ ಎದ್ದು ನಿಂತಳು. ಇದುವರೆಗೆ ಎದ್ದವಳಲ್ಲ. ಗಂಡನಿಗೆ ಗೌರವ ಕೊಡಬೇಕೆಂದು ಇಂದು ಎದ್ದಳು. ಅವಳ ಸಂತೋಷವನ್ನು ನೋಡಿ ಉಮೇಶನಿಗೆ ನಗು ಬಂತು. ‘ಹೀಗೂ ಗೌರವ ಕೊಡಲು ತೊಡಗಿದೆಯಾ’ ಎಂದು ಹೇಳಿ, ಎದುರಿನಲ್ಲಿ ಬೇರೆ ಕುರ್ಚಿಯಿದ್ದರೂ ಅವಳ ಕುರ್ಚಿಯಲ್ಲಿ ಕುಳಿತುಕೊಂಡ. ಅವಳು ಬೇರೆ ಕುರ್ಚಿಯಲ್ಲಿ ಕುಳಿತುಕೊಂಡಳು. ಉಮೇಶ ಕುರ್ಚಿಯಿಂದೆದ್ದು ನೆಲದಲ್ಲಿ ಹಾಸಿದ ಹಾಸಿಗೆಯ ಮೇಲೆ ಕುಳಿತುಕೊಂಡ. ದಾರಿಯಿಲ್ಲದೆ ಅವಳೂ ಹಾಸಿಗೆಯಲ್ಲೇ ಕುಳಿತುಕೊಳ್ಳಬೇಕಾಯಿತು. ಅವಳ ಗಲ್ಲವನ್ನು ಹಿಡಿದು, ‘ಯಾರು ಬುದ್ದಿವಂತರು?’ ಎಂದು ಕೇಳಿದ. ‘ನೀವೇ’ ಎಂದು ಹೇಳಿದಳು. ‘ಏನು ಕಮೆ?’ ‘ಅಲ್ಲ, ನೀನೇ’. ಅವಳನ್ನು ಎತ್ತಿ ಮಡಿಲಿನಲ್ಲಿ ಕುಳ್ಳಿರಿಸಿಕೊಂಡು ಹೇಳಿದ- + +‘ಕಮೆ, ನಿನ್ನ ಅಪೇಕ್ಷೆ ಪ್ರಕಾರ ಮದುವೆಯಾಯಿತು. ಇನ್ನು ನಿನ್ನನ್ನು ಯಾವಾಗ ನೋಡುವುದೋ ಏನೋ. ತಂತಿ ಬಂದಿದೆ. ನಾಳೆ ಬೆಳಗ್ಗೆ ಹೊರಡುತ್ತೇನೆ. ನಾನು ಹೇಳಿದ್ದೆಲ್ಲಾ ನೆನಪಿದೆಯಲ್ಲವೆ? ಇದನ್ನು ಯಾರಲ್ಲೂ ಹೇಳಬೇಡ. ನನ್ನನ್ನು ಹೋಗಲಿಕ್ಕೇ ಬಿಡಲಿಕ್ಕಿಲ್ಲ.’ + +‘ಹೇಳುವುದಿಲ್ಲ. ಕಾಗದ ಬರೆಯಲು ಮಾತ್ರ ಮರೆಯಬೇಡ. ಆದಷ್ಟು ಬೇಗ ಬರುವಂತೆ ಕೆಲಸ ಮುಗಿಸು.’ + +‘ಆಗಲಿ, ಇಗೋ, ಒಂದು ಮಾತು ಹೇಳುತ್ತೇನೆ; ಸೆರಗಿನಲ್ಲಿ ಗಂಟು ಹಾಕಿಕೋ. ಎಷ್ಟು ದೊಡ್ಡ ಕೆಲಸವಿದ್ದರೂ ನಿನಗಿಂತಲೂ ಸುಂದರಿ, ಹೆಚ್ಚು ಕಲಿತ, ದೊಡ್ಡ ಶ್ರೀಮಂತ ಹುಡುಗಿ ಸಿಕ್ಕುವ ಸಂದರ್ಭವಿದ್ದರೂ ನಿನ್ನ ಸಾಹಜಿಕ ಕೋಮಲ ಅನುರಾಗಕ್ಕೂ, ನಿನಗಾರೂ ಗತಿಯಿಲ್ಲವೆಂಬುದಕ್ಕೂ ವಶವಾಗಿ ನಿನ್ನ ಮಾತಿನ ಪ್ರಕಾರ ಮದುವೆ ಮಾಡಿಕೊಂಡುದು. ನನ್ನ ತಂದೆತಾಯಿಯರಿಗೆ ನಾನೊಬ್ಬನೇ ಮಗ. ನೀನು ಹೆಂಡತಿ. ಬೇಕಾದ ಸಂಪತ್ತಿದೆ. ಯಾರೊಬ್ಬನ ಹಂಗಿಲ್ಲದೆ ಸಂತೋಷದಲ್ಲಿ ಕಾಲಕ್ಷೇಪ ಮಾಡಬಹುದು. ಇದರಲ್ಲೆಲ್ಲ ಇದ್ದ ಮೋಹಪಾಶವನ್ನು ಕಡಿದು ದೇಶಕ್ಕಾಗಿ ಜೀವಕೊಡಲು ತಯಾರಾಗಿದ್ದೇನೆ – ಕೊಡುವ ಸಮಯ ಬಂದರೆ. + +ನೀನು ಕೊಟ್ಟ ಕೈಭಾಷೆಯನ್ನು ನಂಬಿ ಮದುವೆ ಮಾಡಿಕೊಂಡೆ. ಇಗೋ! ಜಾಗ್ರತೆ! ನಾನು ವೀರಕೋಟಿಯಲ್ಲಿ ಸೇರಿದವನು. ನೀನೂ ವೀರ ರಮಣಿಯಾಗಬೇಕು. ಒಂದು ಪಕ್ಷಕ್ಕೆ ನಾನು ಮೃತಪಟ್ಟರೆ, ನಿನಗೆ ಪ್ರಾಯಬಂದಾಗ ನೀನೂ ದೇಶಕ್ಕಾಗಿಯೇ ಕೆಲಸ ಮಾಡಬೇಕು. ಪ್ರಾಪಂಚಿಕ ವಿಷಯಗಳ ಮೇಲೆ ಮೋಹಿಸಬೇಡ. ಪಾತಿವ್ರತ್ಯಕ್ಕೆ ಇಷ್ಟೂ ಕುಂದು ಬರಬಾರದು. ಪಾತಿವ್ರತ್ಯ, ಬ್ರಹ್ಮಚರ್ಯಗಳಿಗಾಗಿ ಜೀವವನ್ನೂ ಕೊಡಬೇಕು. ಇನ್ನೊಬ್ಬನ ಹಾಸಿಗೆಯಲ್ಲಿ ಮಲಗಿಕೊಳ್ಳಬೇಕೆಂದು ಒಂದು ಕ್ಷಣವೂ ಈ ಮನಸ್ಸಿನಲ್ಲಿ ಗ್ರಹಿಸಬೇಡ. ಹಾಗೆ ಗ್ರಹಿಸಿದರೆ ಅಲ್ಲಿಗೇ ನಿನ್ನ ಪಾತಿವ್ರತ್ಯ ಮುಗಿಯಿತು. ಜಾಗ್ರತೆ! ಕಮೆ! ಮೋಸ ಬೀಳಬೇಡ. ಹಾಳಾಗಬೇಡ, ಹಾಳು ಮಾಡಬೇಡ. ನೀನು ಒಂದೂವರೆ ವರ್ಷದ ಮಗುವಾಗಿ ನಮ್ಮ ಮನೆಗೆ ಬಂದಂದಿನಿಂದೀಚೆಗೆ ನನ್ನ ಹೃದಯದಲ್ಲಿ ನೀನಿದ್ದೆ. ತಪ್ಪಬೇಡ.’ + +‘ಉಮಾ, ನನ್ನ ಮಾನಕ್ಕೆ ಸ್ವಲ್ಪವಾದರೂ ಹಾನಿ ಬರುವ ಸಂದರ್ಭ ಇದ್ದರೆ ರಜಪೂತ ಸ್ತ್ರೀಯರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.’ + +‘ಭೇಷ್, ಭೇಷ್, ಕಮೆ! ಮೆಚ್ಚಿದೆ, ಇಗೋ, ತೆಗೆದುಕೋ’ ಎಂದು ಸುಮಾರು ನೂರು ರೂಪಾಯಿ ಬೆಲೆಬಾಳುವ ಎರಡು ಕಡೆಯಲ್ಲಿ ಬಾಯಿಯಿರುವ ಚೂರಿಯನ್ನು (ಬಾಂಕ್) ಕೊಟ್ಟು ಹೇಳಿದ: ‘ಮನುಷ್ಯಮಾತ್ರನಿಗೆ ಗೊತ್ತಾಗದಂತೆ ಇದು ನಿನ್ನ ಕೈಯಲ್ಲಿರಬೇಕು. ಇದನ್ನು ಬಿಟ್ಟು ಎಲ್ಲಿಗೂ ಹೋಗಬಾರದು. ಇದರಲ್ಲಿ ಜೀವಕಳೆಯಿದೆ. ಹಿಂದೂ ರಮಣಿಯರ ಪಾತಿವ್ರತ್ಯ ಸಂರಕ್ಷಣೆಗಾಗಿ ಮೂರು ಜನರನ್ನು ಆಹುತಿ ತೆಗೆದುಕೊಂಡಿದೆ. ಜಾಗ್ರತೆ, ನಿನ್ನ ಮಾನಹೋಗುವ ಸಮಯದಲ್ಲಿ ಇದನ್ನು ಉಪಯೋಗಿಸಬೇಕು. ನಿನ್ನಲ್ಲಿ ಹೆಚ್ಚು ಹೇಳುವಂತಹುದು ಇಲ್ಲ. ನೀನು ಬೆಳೆದ ಹಾಗೆ ನಿನಗೆ ಎಲ್ಲ ಗೊತ್ತಾಗುತ್ತದೆ. ಒಂದೇ ಮಾತು ಹೇಳುತ್ತೇನೆ – ‘ಹಾಳಾಗಬೇಡ, ಹಾಳು ಮಾಡಬೇಡ.’ + +ಇಬ್ಬರ ಮುಖವೂ ವೀರಾವೇಶದಿಂದ ಉರಿಯುತ್ತಿದೆ. ಪ್ರಾಯ ಹತ್ತೇ ವರ್ಷವಾದರೂ ಆ ಹುಡುಗಿಯ ವೀರಾವೇಶವನ್ನು ನೋಡಿ ಉಮೇಶನಿಗೆ ಸಂತೋಷವಾಯಿತು. ತುಂಬ ಹೊತ್ತು ಪರಸ್ಪರ ಮುಖಗಳನ್ನು ನೋಡಿಕೊಂಡರು. ಕೊನೆಗೆ ಮೆಲ್ಲಮೆಲ್ಲನೆ ಸಣ್ಣಸಣ್ಣ ನಗುಗಳು ಹೊರಟುವು. ಇಬ್ಬರೂ ಅಪ್ಪಿಕೊಂಡು ಮುತ್ತಿಟ್ಟುಕೊಂಡರು. ಉಮೇಶ ಬುದ್ದಿವಂತನಾದುದರಿಂದ ಮುತ್ತಿಡುವಾಗ ಸಾಧ್ಯವಾದಷ್ಟು ತನ್ನ ಬಾಯಿಯಿಂದ ಅವಳ ಬಾಯಿಗೆ ಗಾಳಿ ತುಂಬಿ ಹೊಟ್ಟೆಯವರೆಗೆ ತುಂಬುವಂತೆ ಮಾಡಿದ. ಎಷ್ಟು ಮುತ್ತಿಟ್ಟರೂ ಅವರಿಗೆ ತೃಪ್ತಿಯಾಗಲಿಲ್ಲ. ಆಯಾಸಪಟ್ಟರು. ಕತ್ತಲಾದಾಗ ಕೋಣೆಯನ್ನು ಬಿಟ್ಟುಹೋದ. + +ಮರುದಿನ ಹೊತ್ತಾರೆ ‘ಮದ್ರಾಸ್ ಮೆಯಿಲ್’ ಹಿಡಿದು ಹೊರಟುಹೋದನು. ಕಲ್ಕತ್ತಕ್ಕೆ ಹೋದಮೇಲೆ ಆಗಾಗ ಕ್ಷೇಮ ಸಮಾಚಾರಕ್ಕೆ ಮಾತ್ರ ಕಾಗದ ಬರೆಯುತ್ತಿದ್ದ. ಆದರೆ ಒಂದು ದಿನ ಅವಳು ಶಾಲೆಯಲ್ಲಿರುವಾಗ ಅವಳ ಶಾಲೆಯ ಮೇಲು ವಿಳಾಸಕ್ಕೆ ಒಂದು ಪತ್ರ ಬಂತು. ಏನುಂಟೆಂದು ತಿಳಿಯಬೇಕೆಂದಿದ್ದರೂ ಅಲ್ಲಿ ಒಡೆದು ನೋಡಲು ಅನುಕೂಲವಾಗಲಿಲ್ಲ. ಶಾಲೆ ಬಿಟ್ಟ ಕೂಡಲೇ ಬೇಗನೆ ಮನೆಗೆ ಹೋಗಿ ತನ್ನ ಕೋಣೆಯಲ್ಲಿ ಆ ಕಾಗದವನ್ನು ಒಡೆದು ನೋಡಿದಳು. + + + +ಮಜಪುರತಾ-4-10-1907ಪ್ರಿಯ ಕಮೆ,ನಿನ್ನ ಮೇಲೆ ಪ್ರೀತಿಯಿಂದ ಹೇಳುವ ಕೊನೆಯ ನಾಲ್ಕು ಮಾತುಗಳು. ನಾನು ಎಂತಹ ದೊಡ್ಡ ಕೆಲಸಕ್ಕೆ ಕೈಹಾಕಿದ್ದೇನೆಂದು ನಿನಗೆ ಗೊತ್ತೇ ಇದೆ. ಕಲ್ಕತ್ತದಿಂದ ಇಲ್ಲಿಗೆ ಬಂದು ಹತ್ತು ಹನ್ನೆರಡು ದಿನಗಳಾದವು. ಶಿಷ್ಟಪರಿಪಾಲನೆಗೆ ಬೇಕಾಗಿ ದುಷ್ಟಸಂಹಾರಮಾಡಿ ನಮ್ಮ ಮನಸ್ತಾಪವನ್ನು ಆದಷ್ಟು ಕಡಮೆ ಮಾಡಿ ವ್ರತವನ್ನು ಮುಗಿಸಬೇಕೆಂದು ನಾವೆಲ್ಲರೂ ನಿಶ್ಚಯ ಮಾಡಿ ಕೆಲಸಕ್ಕೆ ತೊಡಗಿದೆವು. ನಾವು ಪ್ರಾರಂಭಿಸುವಾಗ ಹೇಗೋ ಸರಕಾರದವರಿಗೆ ನಮ್ಮ ಗುಪ್ತಕಾರ್ಯಕ್ರಮ ತಿಳಿದುಹೋಯಿತು. ಈಗ ನಮ್ಮನ್ನು ಹುಡುಕಲು ತೊಡಗಿದ್ದಾರೆ. ನಮ್ಮ ಪೈಕಿಯಲ್ಲಿ ಹಲವು ಜನರನ್ನು ಹಿಡಿದಿದ್ದಾರೆ. ನಮ್ಮ ಜಾಗವನ್ನೇ ಆಕ್ರಮಣ ಮಾಡಿದ್ದಾರೆ. ಆದುದರಿಂದ ನಾವು ಒಬ್ಬೊಬ್ಬರು ಒಂದೊಂದು ಕಡೆಗೆ ಓಡಬೇಕಾಯಿತು. + +ನನ್ನ ಆಪ್ತಸ್ನೇಹಿತ ಉಮೇಶ ರೈ ನಿನ್ನೆ ಆತ್ಮಹತ್ಯವನ್ನು ಮಾಡಿಕೊಳ್ಳದೆ ನಿರ್ವಾಹವಿರಲಿಲ್ಲ. ನನ್ನ ಜೀವವೂ ಇನ್ನು ಮೇಲೆ ಈ ಲೋಕದಲ್ಲಿರಲಾರದೆಂದು ನಂಬಿಕೆ. ಸರ್ಕಾರದವರು ಹಿಡಿಯದೆ ಬಿಡರು. ಅವರ ಕೈಗೆ ಬಿದ್ದು ಮಾನವನ್ನು ಕಳೆದುಕೊಳ್ಳುವುದರಿಂದ ಆತ್ಮಹತ್ಯೆಯೇ ಉತ್ತಮವೆಂದು ನಮ್ಮ ಮತ. “ಸತಾಂ ಮಾನೇ ಮ್ಲಾನೇ ಮರಣಮಥವಾ ದೂರಸರಣಂ” ಎಂದು ದೊಡ್ಡವರ ಉಪದೇಶ. ಆದ್ದರಿಂದ ನನ್ನ ಜೀವ ಈಗಲೋ ಮತ್ತೋ ಎಂಬಂತೆ ಇದೆ. ಒಂದು ವೇಳೆ ನಾನು ಬದುಕಿದ್ದರೆ ಎಂದಾದರೂ ಈ ಜನ್ಮದಲ್ಲಿ ನಿನಗೆ ದರ್ಶನ ಕೊಡದೆ ಹೋಗಲಾರೆ. ಆದರೆ ನಿನ್ನ ಮುಂದಿನ ಸ್ಥಿತಿ ಏನೆಂದು ನಿಶ್ಚಯ ಮಾಡಿಕೋ. ನೀನು ಚಿಕ್ಕವಳಾದುದರಿಂದ ಪುಸ್ತಕದಲ್ಲೋದಿದ ಅಂಶಗಳನ್ನು ಗಿಳಿ ಹೇಳಿದಂತೆ ಹೇಳುತ್ತೀ. ದೊಡ್ಡದೊಡ್ಡ ಯೋಚನೆಗಳು ಯೋಚನೆಗಳೇ. ಅವನ್ನು ಅನುಸರಿಸಲು ಬಹಳ ಕಷ್ಟವಿದೆ. ನೀನು ಈಗ ಚಿಕ್ಕವಳು. ಇನ್ನು ಕೆಲವು ವರ್ಷಗಳು ಸಂದಾಗ ನಿನಗೆ ಪುರುಷಾಪೇಕ್ಷೆ ಬಂದೀತು. ನಿನ್ನಿಂದ ಏಕಾಕಿನಿಯಾಗಿರಲು ಸಾಧ್ಯವೇ? ನೀನು ನನ್ನಲ್ಲಿ ಹೇಳಿದ ಮಾತನ್ನು ಇಟ್ಟುಕೊಳ್ಳುವೆಯಾ? ಕಮೆ! ಸಾಯುವವರೆಗೆ ಬ್ರಹ್ಮಚರ್ಯದಲ್ಲಿರುವುದು ಪ್ರೀತಿಯ ಲಕ್ಷಣ. ಇಡೀ ಹಿಂದುಸ್ಥಾನದಲ್ಲಿ ಅನುರಾಗಶಾಸ್ತ್ರ ಪ್ರಕಾರವೇ ಎಲ್ಲ ಸ್ತ್ರೀಯರು ವೈಧವ್ಯವನ್ನು ಅನುಭವಿಸುತ್ತಾರೆ. ಹೆಚ್ಚು ಜನರ ಸಮ್ಮತಿ ಇದ್ದುದರಿಂದ ಕೊನೆಗೆ ಧರ್ಮಶಾಸ್ತ್ರದಲ್ಲಿ ಸೇರಿತು. ಕಾಲ ಕ್ರಮದಲ್ಲಿ ಪ್ರೀತಿ ಕಡಮೆಯಾದುದರಿಂದ ಸುಧಾರಕರ ಅವಶ್ಯಕತೆ ಬೇಕಾಯಿತು. + +ಇಗೋ ನಾನು ಹೇಳುವುದಿಷ್ಟೆ. ನಿನಗೆ ಪ್ರಾಯ ಬರುವವರೆಗೆ ಯಾವ ಕೆಲಸಕ್ಕೂ ಕೈಹಾಕಬೇಡ. ನೀನು ಹೇಳಿದ ಮಾತನ್ನು ಇಟ್ಟುಕೊಳ್ಳಲು ಆಗುವುದಾದರೆ ಹಾಗೆಯೇ ಇರು. ನನಗೆ ಸಂತೋಷವೇ. ಒಂದು ವೇಳೆ ಬ್ರಹ್ಮಚರ್ಯದಲ್ಲಿರಲು ಆಗಲಿಲ್ಲವಾದರೆ ನನ್ನನ್ನು ಮರೆತುಬಿಡು. ಬೇರೆ ಯಾರನ್ನಾದರೂ ಮದುವೆ ಮಾಡಿಕೋ. ನೀನು ಹೇಗಿದ್ದರೂ ನನಗೆ ಸಂತೋಷವೇ. ಆದರೆ ವಿಧವೆಯೆಂದು ಹೆಸರಿಟ್ಟುಕೊಂಡು, ನನ್ನ ಹೆಂಡತಿಯೆಂದು ಹೇಳಿಕೊಂಡು ವಿಟರನ್ನು ಮಾತ್ರ ಕರೆಯಬೇಡ. ಇದರಷ್ಟು ಕೆಟ್ಟದು ಬೇರೇನೂ ಇಲ್ಲ. ಬ್ರಹ್ಮಚರ್ಯದಲ್ಲಿರಲು ಸಾಧ್ಯವಿಲ್ಲದಿದ್ದರೆ ಬೇರೆ ಮದುವೆ ಮಾಡಿಕೋ. ಒಳ್ಳೆಯದೋ ಕೆಟ್ಟದೋ ಎಂದು ವಿಚಾರಿಸಬೇಡ. ಜನಗಳ ಮಾತಿಗೆ ಕಿವಿಕೊಡಬೇಡ. ಬ್ರಹ್ಮಚಾರಿಣಿಯೆಂದೂ ಪತಿವ್ರತೆಯೆಂದೂ ಹೆಸರಿಟ್ಟುಕೊಂಡು ಕೆಟ್ಟ ಕೆಲಸ ಮಾಡಿದರೆ, ಆದರಷ್ಟು ನೀಚಕೃತ್ಯ ಬೇರೇನೂ ಇಲ್ಲ. ಯಾವುದನ್ನೂ ಅವಸರದಲ್ಲಿ ಮಾಡಬೇಡ. ಕಲಿತುಕೊಂಡಿರು. ನಿನಗೆ ಪ್ರಾಯ ಬರುವಾಗ ಯಾವುದನ್ನಾದರೂ ನಿಶ್ಚಯ ಮಾಡು. ಇದರೊಂದಿಗೆ ನನ್ನ ಭಾವಚಿತ್ರವನ್ನೂ ಕಳುಹಿಸಿದ್ದೇನೆ. ಇದನ್ನೂ ಈ ಪತ್ರವನ್ನೂ ನಿನ್ನ ಜೊತೆಗೇ ಇಟ್ಟುಕೊಂಡಿರು. ನಾನು ಕೊಟ್ಟ ಚೂರಿಯನ್ನು ಬಿಟ್ಟಿರಬೇಡ. + +ನೀನು ಮದುವೆ ಮಾಡಿಕೊಳ್ಳುವ ಸಂದರ್ಭ ಬಂದರೆ, ಈ ಪತ್ರವನ್ನೂ ಭಾವಚಿತ್ರವನ್ನೂ ಹರಿದುಹಾಕು; ಚೂರಿಯನ್ನು ತುಂಡುಮಾಡಿ ಹಾಕು – ಆಮೇಲೆ ಅವೆಲ್ಲಾ ನಿನಗೆ ಬೇಡ. ಕಮೆ, ಬ್ರಹ್ಮಚರ್ಯವೂ ಪಾತಿವ್ರತ್ಯವೂ ಬಹಳ ಕಷ್ಟ. ಒಂದು ಕ್ಷಣವಾದರೂ ಪರಪುರುಷ ಸಂಸರ್ಗ ಮಾಡಬೇಕೆಂದು ಯೋಚನೆ ಬಂದರೆ ಅದರ ಹಣೆಬರಹ ಮುಗಿಯಿತು. ಜಾಗರೂಕತೆಯಲ್ಲಿರು. ನೀನು ಸಾಯುವವರೆಗೆ ನನ್ನ ಹೆಂಡತಿಯಾಗಿರಬೇಕಾದರೆ, ನಿನ್ನ ಕರ್ತವ್ಯವೇನೆಂದರೆ – ನಾನು ವೀರನಾಗಿ ನನ್ನ ಪ್ರಾಣವನ್ನು ದೇಶಕಾರ್ಯಕ್ಕೆ ಹೇಗೆ ಸಮರ್ಪಿಸುತ್ತೇನೋ ಹಾಗೆಯೇ ನೀನೂ ವೀರ ರಮಣಿ ಎಂಬ ಹೆಸರನ್ನು ಸಾರ್ಥಕ ಮಾಡಿ ನಿನ್ನ ಪ್ರಾಣವನ್ನೂ ದೇಶಕ್ಕೆ ಕೊಡಬೇಕು. ನಿನ್ನ ಭವಿಷ್ಯವನ್ನು ಯೋಚಿಸಿ ನಿಶ್ಚಯಮಾಡು. ಅವಸರಿಸಬೇಡ. ಕಮೆ, ನಿನ್ನ ಮೇಲಿನ ಪ್ರೀತಿಯಿಂದ ನನಗೆ ತುಂಬ ವ್ಯಸನವಾಗುತ್ತಿದೆ. ಆದರೆ ನಿನ್ನ ಮೇಲಿರುವ ಪ್ರೀತಿಯಿಂದ ನೂರು ಪಾಲು ಹೆಚ್ಚು ದೇಶದ ಮೇಲಿದೆ. ಹೆಂಡತಿಯ ಮಾತು ಕೇಳಿ ತಾಯಿಯನ್ನು ಮನೆಯಿಂದ ಹೊರಗಟ್ಟುವ ಮಗ ನಾನಲ್ಲ. ಆದುದರಿಂದ ಎಲ್ಲರಿಗೂ ಮಾತೃದೇಶವಾದ ಹಿಂದೂ ಸ್ಥಾನದ ಕ್ಷೇಮಕ್ಕೆ ನನ್ನ ಪ್ರಾಣವನ್ನು ಕೊಡುತ್ತೇನೆ. + +ಕಮೆ, ನನ್ನ ಹೆಂಡತಿಯಾಗಿರುವವರೆಗೆ ‘ವಂದೇಮಾತರಂ’ ಗೀತವನ್ನು ಮರೆಯಬೇಡ. ಗೀತಾಪಾರಾಯಣವನ್ನು ಮಾಡು. ಇನ್ನು ಸಾಕು, ಇಗೋ – ಒಂದೇ ಮಾತು – ಹಾಳಾಗಬೇಡ, ಹಾಳುಮಾಡಬೇಡ.ಇತಿ ನಿನ್ನ ಸರ್ವಸ್ವ,ಉಮೇಶ.ಪಾಪ! ಕಮಲೆಯ ತಲೆಯ ಮೇಲೆ ಕಲ್ಲನ್ನು ಹಾಕಿದಂತಾಯಿತು. ಅತ್ತಳು, ಹೊರಳಿದಳು. ಏನು ಮಾಡುವುದು! ಬೇರೆ ಯಾರಿಗೂ ಗೊತ್ತಾಗಬಾರದೆಂದು ಆದಷ್ಟು ಅಳುವನ್ನು ತಡೆದುಕೊಂಡಳು. ತೊಡೆಯ ಮೇಲೆ ಮುಂಗೈಯಿಟ್ಟು, ಅಂಗೈಯ ಮೇಲೆ ತಲೆಯಿಟ್ಟು ಕುಳಿತುಕೊಂಡಳು. ವ್ಯಸನದಲ್ಲಿ ಅವಳ ತಲೆಗೆ ಏನೂ ಕಾಣಲಿಲ್ಲ. ಕಣ್ಣೀರು ಮಾತ್ರ ಧಾರಾಕಾರವಾಗಿ ಇಳಿಯುತ್ತಿತ್ತು. ಇಷ್ಟರಲ್ಲಿ ಸುಂದರರಾಯರು ಕ್ಲಬ್ಬಿನಿಂದ ಬಂದರು. ನೇರವಾಗಿ ಕಮಲೆಯ ಕೋಣೆಗೆ ಹೋಗಿ ‘ಅಯ್ಯೋ ಮಗಳೆ, ನಿನ್ನ ಹಣೆಬರಹವೇ’ ಎಂದು ಹೇಳಿದರು. ಕಮಲೆಗೆ ಏನೆಂದು ಗೊತ್ತಾಗಲಿಲ್ಲ. ಅವರ ಮುಖವನ್ನೆ ನೋಡಿದಳು. ಅವರಿಗೆ ಕಣ್ಣೀರು ಬಂತು. ಕಮಲೆಯನ್ನು ಅಪ್ಪಿಕೊಂಡು ಉಮೇಶ ತೀರಿಕೊಂಡನೆಂದು ಹೇಳಿದರು. ಅತ್ತಳು, ಅತ್ತಳು. ಯಾರು ತಡೆಯುವವರು? ಕಾವೇರಮ್ಮನೂ ಬಂದು ಸುದ್ದಿಯನ್ನು ಕೇಳಿ ಅಳತೊಡಗಿದರು. ಇದನ್ನೆಲ್ಲ ನೋಡಿ ಸುಂದರರಾಯರೂ ಅತ್ತರು. + + + +ಇದ್ದ ಒಬ್ಬ ಮಗ ಸತ್ತುಹೋದ, ಸತ್ತೇಹೋದ. ಮಗಳಂತೆಯೇ ಸಾಕುತ್ತಿದ್ದ ಹುಡುಗಿಯೂ ಸತ್ತಂತೆಯೇ. ಯಾರಿಗೆ ವ್ಯಸನವಾಗದು? ಮೂವರೂ ಅತ್ತರೆ ಯಾರು ಸಮಾಧಾನ ಮಾಡುವವರು? ಸುಂದರರಾಯರು ಆದಷ್ಟು ಸಹಿಸಿಕೊಂಡು ಅವರನ್ನು ಸಮಾಧಾನಪಡಿಸಲು ತೊಡಗಿದರು. ಅವರು ಅಂದಿನ ವರ್ತಮಾನ ಪತ್ರಿಕೆಯಲ್ಲಿ ಉಮೇಶರಾಯ ಮೂರನೇ ತಾರೀಕಿನಂದು ಆತ್ಮಹತ್ಯೆ ಮಾಡಿಕೊಂಡನೆಂದು ನೋಡಿದರು. ಅದರಲ್ಲಿಯೇ ‘ಅವನು ಮಂಗಳೂರಿನವನೆಂದೂ ಕಲ್ಕತ್ತದಲ್ಲಿ ಕಲಿತುಕೊಂಡಿದ್ದವನೆಂದೂ ಮಜಪುರ ಬಾಂಬು ಗಲಾಟೆಯಲ್ಲಿ ಸೇರಿದ್ದವನೆಂದೂ ಸರ್ಕಾರದವರು ಹಿಡಿಯಲು ಬಂದಾಗ ಸಿಕ್ಕಲಾಗದೆಂದು ನದಿಯಲ್ಲಿ ಬಿದ್ದ ಪ್ರಾಣವನ್ನು ತೆಗೆದುಕೊಂಡನೆಂದೂ’ ಇತ್ತು. ಹೆಣವಾದರೂ ಸಿಕ್ಕುವುದೇ ಎಂದು ಕೂಡಲೇ ತಂತಿಕೊಟ್ಟು ವಿಚಾರಿಸಿದರು. ಆದರೆ ಏನೂ ಪ್ರಯೋಜನವಾಗಲಿಲ್ಲ. ಕೊನೆಗೆ ಸಂಸ್ಕಾರವನ್ನು ಕ್ರಮಪ್ರಕಾರ ಮಾಡಿದರು. + +ಸ್ವಾತಂತ್ರ್ಯ ಹೋರಾಟಗಾರರೆಂದೇ ಖ್ಯಾತರಾಗಿರುವ ಉಡುಪಿ ಪಣಿಯಾಡಿಯ ಶ್ರೀನಿವಾಸ ಉಪಾಧ್ಯಾಯರು (ಎಸ್. ಯು. ಪಣಿಯಾಡಿ : 1897 – 1959) ಸಂಸ್ಕೃತ ವಿದ್ವಾಂಸರು; ಉಡುಪಿಯ ಅನಂತೇಶ್ವರ ದೇವಸ್ಥಾನದ ಅರ್ಚಕ ಮನೆತನದವರು. ಬರೋಡದಲ್ಲಿ ಲೈಬ್ರೇರಿಯನ್ ಆಗಿದ್ದ ಎಸ್. ಯು. ಪಣಿಯಾಡಿಯವರು ಗಾಂಧೀಜಿಯವರ ಕರೆಗೆ ಓಗೊಟ್ಟು ಕೆಲಸ ತೊರೆದು ಉಡುಪಿಗೆ ಬಂದು ಸಮಾಜ ಸುಧಾರಣೆ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿಕೊಂಡವರು. ತುಳು ಭಾಷೆ ಹಾಗೂ ಸಾಹಿತ್ಯದ ಪುನರುತ್ಥಾನವೂ ಅವರ ಕಾರ್ಯಗಳಲ್ಲಿ ಒಂದಾಗಿತ್ತು. ಅವರು ತುಳುನಾಡ ಛಾಪಖಾನೆ ಎಂಬ ಪ್ರೆಸ್ಸು ಮತ್ತು ‘ಅಂತರಂಗ’ ಎಂಬ ಪತ್ರಿಕೆಗಳನ್ನೂ ನಡೆಸುತ್ತಿದ್ದರು. ಅವರ ಖಾದಿ ಭಂಡಾರದಲ್ಲಿ ಸೇಲ್ಸ್ಮನ್ ಆಗಿದ್ದ ಪಾ. ವೆಂ. ಆಚಾರ್ಯರು ನಂತರ ಅವರ ‘ಅಂತರಂಗ’ ಪತ್ರಿಕೆಯ ಮೂಲಕ ಪತ್ರಿಕಾರಂಗಕ್ಕೆ ಕಾಲಿಟ್ಟದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇವರ ಪತ್ನಿ ಭಾರತೀ ಬಾಯಿ ಪಣಿಯಾಡಿಯವರು ಕೂಡಾ ಸ್ವಾತಂತ್ರ್ಯ ಹೋರಾಟಗಾರ್ತಿ ಹಾಗೂ ಕತೆಗಾರ್ತಿ. ಅವರ ಕತೆಯೂ ಈ ಸಂಪುಟದಲ್ಲಿದೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_329.txt b/Kenda Sampige/article_329.txt new file mode 100644 index 0000000000000000000000000000000000000000..6fb6430500b7dd017db57249a71fbc6422906b49 --- /dev/null +++ b/Kenda Sampige/article_329.txt @@ -0,0 +1,33 @@ + + +ಶ್ರೀಧರ ಬಳಗಾರ ಅವರು ತಮ್ಮ ಹೊಸ ಕೃತಿ ‘ಮೃಗಶಿರ’ದ ಜೊತೆಯಲ್ಲಿ ನನ್ನ ಕೆಲವು ಅನಿಕೆಗಳನ್ನು ಸೇರಿಸಿಕೊಳ್ಳುವ ಔದಾರ್ಯ ತೋರಿದ್ದಾರೆ. ಬಳಗಾರ ಅವರ ಕಥೆ, ಕಾದಂಬರಿಗಳನ್ನು ಓದುವುದು ಯಾವತ್ತಿಗೂ ನನಗೆ ಸಂತೋಷ ತಂದಿದೆ. + +ಯಾರು ಕೇವಲ ಕಥೆಯ ಕುತೂಹಲಕ್ಕಾಗಿ ಮಾತ್ರವೇ ಕಾದಂಬರಿಯನ್ನು ಓದುವುದಿಲ್ಲವೋ ಅಂಥ ಓದುಗರಿಗೆ ‘ಮೃಗಶಿರ’ದಲ್ಲಿ ಸಮೃದ್ಧ ಆಹಾರವಿದೆ. ಇಪ್ಪತ್ತನೆಯ ಶತಮಾನದ ಎರಡು-ಮೂರನೆಯ ದಶಕಗಳ ಬದುಕು ಉತ್ತರ ಕನ್ನಡ ಜಿಲ್ಲೆಯ ಕಾಡಿನ ಮಧ್ಯದ ಊರುಗಳಲ್ಲಿ ಹೇಗಿತ್ತು ಅನ್ನುವ ಜೀವಂತ ಲೋಕವನ್ನು ಬಳಗಾರರು ಭಾಷೆಯಲ್ಲಿ ಸೃಷ್ಟಿಸಿದ್ದಾರಲ್ಲ, ಆ ಲೋಕದಲ್ಲಿ ಮಗ್ನವಾಗಿ ಸಂಚರಿಸಬಹುದು. ಯಾರಿಗೆ ಒಂದೇ ಥರದ ಕನ್ನಡ ಓದಿ, ಕೇಳಿ ಬೇಸರವಾಗಿದೆಯೋ ಅವರು ಇಲ್ಲಿ ಇದು ಇಂಥ ಊರಿನ ಇಂಥ ಜನ ಆಡುವ ಕನ್ನಡ ಎಂದು ಓದುತ್ತಲೇ ಮನಸ್ಸಿನಲ್ಲಿ ಕೇಳಿಸಿಕೊಂಡು ನುಡಿಕುತೂಹಲ ತಣಿಸಿಕೊಳ್ಳಬಹುದು.. + +(ಶ್ರೀಧರ ಬಳಗಾರ- ಚಿತ್ರ ಸೌಜನ್ಯ: ಋತುಮಾನ) + +ಈ ಕಾದಂಬರಿ ವ್ಯಾವಹಾರಿಕ ದೃಷ್ಟಿಯಿಂದ ಸ್ವಾತಂತ್ರ್ಯ ಪೂರ್ವದ ಕಾಲದ್ದು; ಕಾದಂಬರಿಯ ದೇಶ ಉತ್ತರ ಕನ್ನಡ ಜಿಲ್ಲೆ. ಕಾದಂಬರಿಯ ತಿರುಳು ಮಾತ್ರ ಕಾಲ, ದೇಶಗಳನ್ನು ಮೀರಿದ, ಕಾಮ ದ್ವೇಷ, ಮತ್ತು ಸತ್ಯಾನ್ವೇಷಣೆ. ರಚನೆಯ ದೃಷ್ಟಿಯಿಂದ ಇದು ಬೇರೆ ಬೇರೆ ನಿರೂಪಕರು ಹೊತ್ತು ಮುಂದೆ ಮುಂದೆ ಸಾಗಿಸುತ್ತ ಕೊನೆಗೆ ಓದುಗರ ಮನದಂಗಳದಲ್ಲಿ ತಂದಿಳಿಸುವ ‘ಕಥೆಗಳ ಪಲ್ಲಕ್ಕಿ.’ ಪರಿಣಾಮದ ದೃಷ್ಟಿಯಿಂದ ಬಹಳಷ್ಟು ಎಡೆಗಳಲ್ಲಿ ಭಾವಗೀತೆಯ ತೀವ್ರತೆಯೊಡನೆ ಓದುಗರನ್ನು ಪರವಶಗೊಳಿಸುವ, ‘ಎಂಬುದೆಲ್ಲದರ ಅರ್ಥ’ ಎಂದು ಕೆಣಕುವ ರಚನೆ. + +‘ವ್ಯಕ್ತಿಯ ಅಹಂಕಾರದ ಅಸ್ತಿತ್ವದ ಕಥೆ ಎನಿಸದೆ ಮನುಷ್ಯ ಮಾತ್ರರಾದವರ ಯಾರದ್ದೂ ಆಗಬಹುದು ಎಂದು ಬೆಳದಿಂಗಳ ಅನಾದಿ ಹಾಡಲ್ಲಿ’ ಕಾದಂಬರಿಯ ಮುಖ್ಯ ನಿರೂಪಕನಿಗೆ ಅನಿಸುತ್ತದೆ. ಈ ಅನಾದಿ ಹಾಡನ್ನು ಹಾಡಬೇಕೆಂಬ ಒತ್ತಾಯಕ್ಕೆ ಕಾರಣ, ‘ಪುಸ್ತಕದಲ್ಲಿ ಶಾಶ್ವತ ಇರೊ ಆಸೆ ಇಲ್ಲೆ ಎನಗೆ; ಇಷ್ಟು ದಿನದ ಸುಳ್ಳಿನಿಂದ ಬಿಡುಗಡೆ ಆದ್ರೆ ಸಾಕು’ ಎನ್ನುತ್ತಾಳೆ ಒಬ್ಬ ನಿರೂಪಕಿ. ‘ಈಗ ನಾವು ಆಡುವ ಮಾತಿನಲ್ಲಿ ಮಾಡುವ ಕೆಲಸದಲ್ಲಿ ವಿಷ ಸೇರದ ಹಾಗೆ ನಿಮ್ಮ ಕೃತಿ ಪವಾಡ ಮಾಡಬೇಕು. ಸೇಡಿನ ಬೆಂಕಿ ನಂದಬೇಕು,’ ಎನ್ನುತ್ತಾನೆ ಇನ್ನೊಬ್ಬ ನಿರೂಪಕ.’ ‘ಚರಿತ್ರೆಯ ಪುಸ್ತಕಗಳಲ್ಲಿ ಬೀದಿಯಲ್ಲಿ ಘೋಷಣೆ ಕೂಗಿದವರ ಹೆಸರಿರುತ್ತದೆಯೆ ವಿನ: ಹೊಗೆಯ ಒಲೆ ಊದಿ ಹಿತ್ತಲ ಪ್ರಪಂಚದಲ್ಲೆ ಆಯುಷ್ಯ ಕಳೆದವರ ನೆನಪಿರುವುದಿಲ್ಲ. + +ಪುಟ್ಟಣ್ಣ ಕುಟುಂಬಕ್ಕಾಗಿ ಪ್ರಾಣರ್ಪಣೆ ಮಾಡಿದವನು. ದೇಶದ ದೊಡ್ಡ ಕಥೆಗಳಲ್ಲಿ ಕೋಟೆಯ ಬಾಗಿಲನ್ನು ಕಾದವರಿಗೆ ಜಾಗವೇ ಇರುವುದಿಲ್ಲ’ ಎನ್ನುವುದು ಮತ್ತೊಂದು ನಿರೂಪಕ ದನಿ ಹೇಳುವ ಮಾತು. ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿ ಹೆಸರುವಾಸಿಯಾದ ಸುಬ್ರಾಯನ ಜೀವನ ಚರಿತ್ರೆಗೆ ಸರಕು ಒದಗಿಸುವವರೆಲ್ಲ ಚರಿತ್ರೆಯಲ್ಲಿ ಎಂದೂ ದಾಖಲಾಗದವರೇ. ಈ ಎಲ್ಲ ನಿರೂಪಕರ ಮಾತನ್ನು ಪೋಣಿಸುವ ಮುಖ್ಯ ನಿರೂಪಕನಿಗೆ ತಾನು ‘ನೆನಪಿನಲ್ಲಿ ಹುಗಿದು ಹೋದ ಮನೆತನಗಳ ಕಥೆಗಳನ್ನು ಕೆದಕುವ ತಂಟೆಗೋರನಂತೆಯೊ, ಮುಗಿದು ಹೋದ ಪ್ರಕರಣಗಳಿಗೆ ಮರು ಜೀವ ಬರಿಸುವ ಪತ್ತೆದಾರಿ ಪೊಲಿಸ್ನಂತಯೊ’ ಕಂಡೇನು ಅನ್ನುವ ಅರಿವೂ ಇದೆ. + +ಭಾಷೆಯನ್ನು ಬಳಸಿ ನಾವು ತಲುಪುವ ತೀರ್ಮಾನಗಳು, ಮಾಡಿಕೊಳ್ಳುವ ನಿರ್ಧಾರಗಳು ಎಲ್ಲವೂ ಅರ್ಧ ಸುಳ್ಳೋ, ಅರ್ಧ ಸತ್ಯವೋ, ಕಲ್ಪನೆಯೋ, ಸದಾಶಯಗಳೋ, ಸೇಡು-ಕೇಡಿನ ಬಯಕೆಗಳೋ ಆಗಿರುವುದನ್ನು ತಪ್ಪಿಸಲಾಗದೇನೋ; ಆದರೆ, ಮನುಷ್ಯರ ಇಂದ್ರಿಯಗಳು ಗ್ರಹಿಸುವ ಅನುಭವಗಳು ಮಾತ್ರ ವಾಸ್ತವ ಸತ್ಯ ಎಂದು ಲೇಖಕರಾಗಿ ಶ್ರೀಧರ ಬಳಗಾರರು ನಂಬಿದ್ದಾರೆ ಅನಿಸುತ್ತದೆ. ಹಾಗಾಗಿ ಇಂದ್ರಿಯಗಳ ಮೂಲಕ ಪಡೆಯುವ ಗ್ರಹಿಕೆಗಳಗೆ ನುಡಿಯರೂಪವನ್ನು ಕೊಡುವುದೇ ಅವರ ಬರವಣಿಗೆಯ ಮುಖ್ಯ ಭಾಗವಾಗಿ ಕಾಣುತ್ತದೆ. + + + +ಅಂಥವೆರಡು ವರ್ಣನೆಗಳನ್ನು ನೋಡಿ: ‘ಅವರೆಕಾಯಿ ಆಕಾರದ ಹೊಳಪಿನ ಆಕಾಶದ ನಕಾಶೆಯ ಕೆಳಗೆ, ಕಾಲವೇ ಅಸ್ತಂಗತವಾದಂತೆ ನೀರವವಿತ್ತು; ಎತ್ತರದ ಮರಗಳ ಬೆಟ್ಟದ ಸಾಲು ದಾಟಿ ನೆರೆ ಊರಿಗೆ ಹಾರಿ ಹೊಗುವ ಕಾಗೆಗಳ ಕೂಗೊ, ಗದ್ದೆ ಹಾಳಿಕಂಠದ ಕನ್ನಿನಲ್ಲಿ ಗೊಳೊಗೊಳೊನೆ ಸುರಿವ ಕೆರೆ ನೀರಿನ ಸದ್ದೊ, ದಿಗಂತದಲ್ಲಿ ನಿರ್ಗಮಿಸುತ್ತಿರುವ ಮೋಡದ ಚೂರಿನ ಆಕ್ರಂದನವೊ, ಮಹಾ ನಿರ್ಲಕ್ಷ್ಯದಲ್ಲಿ ಗದ್ದೆಯ ಬದಿ ಎತ್ತರಕ್ಕೆ ನಿಂತು ಗರಿ ಅಲ್ಲಾಡಿಸುವ ತೆಂಗಿನ ಮರಗಳ ನಿಟ್ಟುಸಿರೊ, ಬಿಕೋಗುಡುವ ಆಳುಗಳ ಬಿಡಾರದಲ್ಲಿ ಮಲಗಿದಲ್ಲೆ ಬೆಚ್ಚಿ ನಾಯಿ ಬೊಗಳುವುದೊ, ದಿನಕ್ಕೆರೆಡು ಸಲ ಹಾರುವ ಕಣ್ಣಿಗೆ ಕಾಣದ ಬೆಳ್ಳಿ ಮೀನಿನಂತ ವಿಮಾನಿನ ಹೂಂಕಾರವೊ ಏನೊ ಒಂದು ಮಂಪರು ಕವಿದ ಮನೆಯ ಪ್ರಾಚೀನ ಮೌನವನ್ನು ಕಲಕುತ್ತಿತ್ತು’ ಶುರುವಿನಲ್ಲಿ ಕಣ್ಣ ನೋಟ, ಆಮೇಲೆಲ್ಲ ಕಿವಿಗೆ ತಾಗುವ ದನಿಗಳ ಮೂಲಕ ‘ಪ್ರಾಚೀನ ಮೌನ’ವನ್ನು ರೂಪಿಸಿರುವ ಪರಿಯನ್ನು ಗಮನಿಸಿ. ಇನ್ನೊಂದು ಉದಾಹರಣೆ ಇದು: ‘ಒರೆಸಿದ ಒದ್ದೆ ನೆಲದಿಂದ ಹೊರಸೂಸುವ ವಸ್ತ್ರದ ಹಳಸಲು ವಾಸನೆ; ಪಕ್ಕದ ಸಾಗವಾನಿ ಮರಗಳಿಂದ ಉದುರಿದ ಎಲೆಗಳ ಅಂಗಳದಲ್ಲಿ ಪುಟಾಣಿ ಮರಿಗಳನ್ನು ಕರೆಯತ್ತಿರುವ ಕೋಳಿ; ಜಗಲಿಯ ಆಚೆ ತುದಿಯಲ್ಲಿ ಕ್ರಾಸ್ ತಳಿಯ ನೆರಳು-ಬೆಳಕಿನ ನೆಯ್ಗೆಯ ಆರಾಮು ಕುರ್ಚಿಯಲ್ಲಿ ಕುಳಿತ ಮಾಸ್ತರು ಬಿಸಿಲು ಕೋಲಿಗೆ ಪತ್ರಿಕೆಯ ಪುಟ ಹಿಡಿದು ಓದುತ್ತಿದ್ದರು..’ ಪಾತ್ರವನ್ನೂ ಪರಿಸರವನ್ನೂ ಓದುಗರ ಮನಸಿಗೆ ಇಳಿಸಲು ಲೇಖಕರು ಇಲ್ಲಿ ಕಣ್ಣು-ಮೂಗುಗಳ ಸಂಯೋಜನೆ ಬಳಸಿರುವುದನ್ನು ಗಮನಿಸಿ. + +ಹೀಗೆ ಇಂದ್ರಿಯಾನುಭವಗಳನ್ನು ಹಿಡಿದಿಡುವುದು ಕವಿತೆಗೆ ಸಹಜವಾದ ಕರ್ತವ್ಯ, ಕಾದಂಬರಿಗೆ ವಿಶೇಷವಾದ ರುಚಿಯನ್ನು ಕೊಡುವ ಕೌಶಲ. ಇಂಥ ನುಡಿಭಾವಚಿತ್ರಣ ಬಳಗಾರರ ಈ ಕಾದಂಬರಿಯಲ್ಲೂ ಕಥೆಗಳಲ್ಲೂ ಹೇರಳವಾಗಿ ದೊರೆಯುತ್ತವೆ. ಓದುಗರ ಮನಸಿನಲ್ಲಿ ಉಳಿಯುತ್ತವೆ. ಸುತ್ತಲ ಪರಿಸರದ ವಸ್ತು, ದೃಶ್ಯಗಳ ಖಚಿತ, ಉದ್ದೇಶಪೂರ್ವಕ ವಿವರಣೆಯ ಮೂಲಕವೇ ಬಳಗಾರರು ಪಾತ್ರ ಮತ್ತು ಕಥೆಯ ಕ್ರಿಯೆಗಳಿಗೆ ಜೀವ ತುಂಬಿ ಮುನ್ನಡೆಸುತ್ತಾರೆ ಅನಿಸುತ್ತದೆ. + +ಕಾದಂಬರಿಯ ಮೊದಲಲ್ಲೇ ಬರುವ ಸ್ವಾತಂತ್ರ್ಯ ಹೋರಾಟದ ವರ್ಣನೆಯೂ ಕಥೆಯ ಕೊನೆಗೆ ಬರುವ ‘ಹೊಸ್ಮನೆ ಮನೆತನದ ಇತಿಹಾಸ ವಿವರಿಸಬೇಕಿಲ್ಲ; ಹಲವು ತಲೆಮಾರುಗಳಿಂದ ಅವಿಭಕ್ತ ಕುಟುಂಬವಾಗಿಯೇ ಉಳಿದುಕೊಂಡಿದೆ; ಈ ಮನೆಯನ್ನು ಯಾರ ಕಾಲದಲ್ಲಿ ಕಟ್ಟಿದ್ದು ಎಂದು ಯಾರಿಗೂ ಸರಿಯಾಗಿ ನೆನಪಿಲ್ಲ; ಅನೇಕ ಸಲ ಮುರಿದು, ವಿಸ್ತರಿಸಿ ಕಟ್ಟಿದ ಮೂಲಪಾಯದ ಮನೆಯಂತೆ; ಹಳೆಯ ದಪ್ಪ ಬಾಗಿಲುಗಳು ಮತ್ತು ಹೊಗೆ ಕಪ್ಪಿನ ಮಜಭೂತ ಅಂಕಣಗಳು ಹೇಳುವ ಕಥೆಗಳನ್ನು ಕೇಳಬೇಕು; ಮನೆಯ ಅಂಗಳದಾಚೆ ಆಚೆ ಕೇರಿಯ ದಾರಿ ಪಕ್ಕದ ಹಲಸಿನ ಮರ ನನ್ನ ಅಪ್ಪಜ್ಜನ ಕಾಲದಿಂದ ಈಗ ಇದ್ದಂತಯೇ ಇತ್ತಂತೆ’ ಎಂಬ ಮಾತೂ ಇಡೀ ಕಥೆಯನ್ನು ಭಾರತದ ಚರಿತ್ರೆಗೆ ಒಡ್ಡಿದ ರೂಪಕದಂತೆ ಭಾವಿಸಬೇಕೋ ಅನಿಸುವಂತೆ ಮಾಡುತ್ತವೆ. + +ಚರಿತ್ರೆಗೆ ಸಲ್ಲದ ನಿರೂಪಕರ ಧ್ವನಿಗಳಲ್ಲಿ ನಿರೂಪಣೆ ಸಾಗುವುದೂ ಇಂಥ ಅನಿಸಿಕೆಗೆ ಒಂದಿಷ್ಟು ಬಲ ಕೊಡುತ್ತದೆ. ಆದರೆ ಸುಬ್ರಾಯಪ್ಪ ಉಗ್ರಾಣಿ ಶಂಕ್ರ, ಅಂತೆ, ಲಕ್ಷ್ಮಿ, ಬಂಟ್ ಮಾಸ್ತರ್, ತಂಗ, ನರಸಿಂಹ, ಗಪ್ಪತಿ ಈ ಎಲ್ಲ ನಿರೂಪಕರು ಹೇಳಿದ್ದನ್ನು ಬರೆಯುವ ಲೇಖಕ ನಿರೂಪಕ, ಅವನು ಬರೆದದ್ದರ ಮೊದಲ ಓದುಗಳಾಗುವ ಲೇಖಕನ ಪತ್ನಿ ಇವರೆಲ್ಲ ಸುಬ್ರಾಯಪ್ಪನ ಬದುಕಿನ ಒಂದೊಂದು ಪ್ರಮುಖ ಘಟ್ಟಗಳನ್ನು ನಿರೂಪಿಸುತ್ತ ಒಂದೊಂದೂ ಒಂದೊಂದು ಕಥೆಯ ಪಲ್ಲಕ್ಕಿಯಾಗಿ ಸಾಗುತ್ತ ಸುಬ್ರಾಯಪ್ಪನ ‘ಜೀವನ ಚರಿತ್ರೆ’ಯನ್ನು ಇದು ಹೀಗೇ ಎಂದು ನಿರ್ಧರಿಸಲಾಗದು ಅನ್ನುವ ಮಜಲಿಗೆ ಮುಟ್ಟುತ್ತದೆ. ಯಾರ ಬದುಕನ್ನೂ ಯಾರೂ ಹಾಗೆ ಅಳತೆಮಾಡಿ ಬೆಲೆಕಟ್ಟಲಾಗದು, ಕಥೆಗಳೆಲ್ಲ ಕಥೆಗಳೇ, ಬದುಕು ಬದುಕೇ ಅನ್ನುವ ತತ್ವಕ್ಕೆ ಮುಟ್ಟಿದಂತೆ ಅನಿಸುತ್ತದೆ. ಅಂಥ ನಿಲುವಿಗೆ ಮುಟ್ಟಲೂ ಕಥೆ ಕಟ್ಟಿಕೊಳ್ಳುವುದು ಅಗತ್ಯ ಅನ್ನುವ ವ್ಯಂಗ್ಯವೂ ಮನಸಿಗೆ ಬರುತ್ತದೆ. + +ಮೃಗಶಿರ ನಕ್ಷತ್ರದಲ್ಲಿ ಹುಟ್ಟಿದವರು ವಿದ್ಯಾವಂತರು ಉತ್ಸಾಹಿಗಳು ರಾಜಪೂಜಿತರು ಸನ್ಮಾರ್ಗದಲ್ಲಿ ನಡೆಯುವವರು ಚಂಚಲ ಚಿತ್ತರು ಮಧ್ಯಮ ದೇಹವನ್ನು ಉಳ್ಳವರು ಕೋಪ ಸ್ವಭಾವವುಳ್ಳವರು ಆಗಿರುತ್ತಾರೆ, ಪರೋಪಕಾರಿಯೂ ಸ್ನೇಹಿತರನ್ನು ಆದರಿಸುವರು. ಹೇಳಿದ ಮಾತುಗಳನ್ನು ಕೇಳುವುದಿಲ್ಲ ತಂದೆ ತಾಯಿಯ ಬಗ್ಗೆ ಪ್ರೀತಿ ಗೌರವ ಇರುವವರು ಈ ನಕ್ಷತ್ರದವರಿಗೆ ದೇಶಭಕ್ತಿ ಬಂಧು ಪ್ರೀತಿ ಅಧಿಕವಾಗಿರುತ್ತದೆ, ಸಂಗೀತ ಸಾಹಿತ್ಯದಲ್ಲಿ ಒಳ್ಳೆಯ ಅಭಿರುಚಿ ಇರುತ್ತದೆ’ ಅನ್ನುವುದು ಜ್ಯೋತಿಷ್ಯದ ಮಾತು. ಇವೆಲ್ಲ ಕಾದಂಬರಿಯ ನಾಯಕ ಪಾತ್ರಕ್ಕೆ ಅನ್ವಯವಾಗುವಂತಿದೆ. ಇದು ಬಿಟ್ಟರೆ ಕಾದಂಬರಿಯ ಶೀರ್ಷಿಕೆಯನ್ನು ಸಮರ್ಥಿಸುವುದು ಹೇಗೆಂದು ಹೊಳೆಯುತ್ತಿಲ್ಲ. ಮಹಾಕಾವ್ಯವೆಂಬುದಿಲ್ಲ, ಇರುವುದೆಲ್ಲ ಭಾವಗೀತೆಗಳ ಸರಣಿ ಅನ್ನುವ ಪ್ರಸಿದ್ಧ ಮಾತೊಂದಿದೆ, ಹಾಗೆಯೇ ‘ಮೃಗಶಿರ’ವು ಸುಬ್ರಾಯ-ಅಂತೆ-ಪುಟ್ಟಣ್ಣರ ಬದುಕಿನ ಬಿಡಿ ಕಥೆಗಳ ಸರಣಿಯಾಗಿದೆಯೋ ಅಂತಲೂ ಅನಿಸುತ್ತದೆ. + + + +ಇದೆಲ್ಲ ಏನೇ ಇರಲಿ, ಶ್ರೀಧರ ಬಳಗಾರರಂಥ ಲೇಖಕರ ಕೃತಿಗಳ ಬಗ್ಗೆ ನಡೆಯಬಹುದಾಗಿದ್ದಷ್ಟೂ ಚರ್ಚೆ ನಡೆದಿಲ್ಲ ಅನ್ನುವುದು ಖೇದ ಹುಟ್ಟಿಸುತ್ತದೆ. ಇಂದ್ರಿಯಾನುಭವಗಳಿಗೆ ನುಡಿರೂಪ ಕೊಡುವ ಮೂಲಕವೇ ಕಥಾಕಲ್ಪನೆಯ ಲೋಕ ಸೃಷ್ಟಿಸುವ ಶ್ರೀಧರ ಬಳಗಾರ ಬರವಣಿಗೆಯ ಮುಖ್ಯಗುಣವಾಗಿ ಕಂಡಿದೆ. ಸುಮಾರು ನಾಲ್ಕು ದಶಕಗಳಿಂದ ಬರೆಯುತ್ತ ಉತ್ತರ ಕನ್ನಡದ ಲೋಕವನ್ನು ಚಿತ್ತಾಲ, ಕಾಯ್ಕಿಣಿ, ಇಂಥ ಲೇಖಕರಿಗಿಂತ ಭಿನ್ನವಾದ ರೀತಿಯಲ್ಲಿ ಆಪ್ತವಾಗಿಸುತ್ತ ಬಂದಿರುವ ಬಳಗಾರರಿಗೆ ಅವರು ಹೇಳಿರುವ ಒಳ್ಳೆಯ ಕಥೆಗಳಿಗೆ ಕೃತಜ್ಞ. + +ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ. \ No newline at end of file diff --git a/Kenda Sampige/article_33.txt b/Kenda Sampige/article_33.txt new file mode 100644 index 0000000000000000000000000000000000000000..258553c1fc1d6e2d8964984fd126e380fe4e37d2 --- /dev/null +++ b/Kenda Sampige/article_33.txt @@ -0,0 +1,13 @@ +ಲಂಡನ್ನಿಗೆ ಇದು ನಮ್ಮ ಎರಡನೆಯ ಭೇಟಿಯಾಗಿದ್ದರೂ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂಗೆ ಮೊದಲನೆಯ ಭೇಟಿಯಾಗಿತ್ತು. ಈ ಬಾರಿ ನನಗೆ ಮತ್ತು ನನ್ನ ಪತ್ನಿಗೆ ಲಂಡನ್ ಮಾರ್ಗದರ್ಶಿ ನಮ್ಮ ಮಗಳೇ ಆಗಿದ್ದಳು. ಆಕ್ಸಫರ್ಡ್‌ನಲ್ಲಿ ನನ್ನ ಮಗಳು ಅನನ್ಯಳ ಪಿಎಚ್.ಡಿ. ಮುಗಿಯುವ ಹಂತದಲ್ಲಿದ್ದುದರಿಂದ ಅವಳು ಆಕ್ಸಫರ್ಡ್ ಬಿಡುವ ಮುನ್ನ ಆ ಶಿಕ್ಷಣ ನಗರಿಯನ್ನೊಮ್ಮೆ ನೋಡಲು ಅವಳ ಆಹ್ವಾನದ ಮೇರೆಗೆ ನಾವು ಹೋಗಿದ್ದೆವು. ನಾಲ್ಕು ದಿನ ಆಕ್ಸಫರ್ಡ್, ನಂತರ ಒಂದು ದಿನ ಕೇಂಬ್ರಿಡ್ಜ್ ನೋಡಿ ಲಂಡನ್‌ಗಾಗಿ ನಾಲ್ಕು ದಿನಗಳು ಮೀಸಲಿಟ್ಟಿದ್ದೆವು. + +(ಡಾ. ಜೆ. ಬಾಲಕೃಷ್ಣ) + +ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ಪ್ರವೇಶಿಸುತ್ತಿದ್ದಂತೆಯೇ ನನ್ನ ಮಗಳು ನಿಮಗೇನೋ ತೋರಿಸುತ್ತೇನೆ ಬನ್ನಿ ಎಂದು ಕರೆದೊಯ್ದಳು. ಎದುರಿಗೆ ಗಾಜಿನ ಪೆಟ್ಟಿಗೆಯಲ್ಲಿ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರ’ ಗೊಂಬೆಯಿತ್ತು. ಅದರ ಮಿನಿಯೇಚರ್ ಕೃತಿ ಬೆಂಗಳೂರಿನ ಟಿಪ್ಪೂನ ಬೇಸಿಗೆ ಅರಮನೆಯಲ್ಲಿ ನೋಡಿದ್ದೆ. ಅಲ್ಲಿಯೇ ಟಿಪ್ಪೂ ಧರಿಸಿದ್ದ ವಸ್ತç, ಗಡಿಯಾರ, ಅವನ ಸಿಂಹಾಸನದಲ್ಲಿದ್ದ ಹುಲಿಯ ತಲೆಗಳು ಮುಂತಾದವಿದ್ದವು. ಬ್ರಿಟಿಷರಿಗೆ `ವ್ಯಾಘ್ರಸ್ವಪ್ನ’ವಾಗಿದ್ದ ಟಿಪ್ಪೂನನ್ನು ಜೀವಂತ ಕಂಡಷ್ಟು ಸಂತೋಷವಾಯಿತು ನನಗೆ. `ನಿಮ್ಮ ಲೇಖನಕ್ಕೆ ಬೇಕಾಗುತ್ತದೆ’ ಎಂದು ನನ್ನನ್ನು ಅಲ್ಲಿ ನಿಲ್ಲಿಸಿ ನನ್ನ ಮಗಳು ಫೋಟೊ ತೆಗೆದಳು. + +***** + +ಟಿಪ್ಪೂ ಸುಲ್ತಾನ್ ಮತ್ತು ಹುಲಿಯನ್ನು ನಾವು ಬೇರೆಬೇರೆಯಾಗಿ ನೋಡುವುದು ಸಾಧ್ಯವಿಲ್ಲ. ಟಿಪ್ಪೂ ಹುಲಿಯ ರೂಪಕವನ್ನು ಅತಿರೇಕಕ್ಕೆ ಕೊಂಡೊಯ್ದಿದ್ದ. ಆತನ ರಾಜಮುದ್ರೆಯಲ್ಲಿ, ನಾಣ್ಯಗಳಲ್ಲಿ, ಗೋಡೆಗಳ ಮೇಲೆ, ಬಾವುಟಗಳಲ್ಲಿ, ಅವನ ಅಡಿಕೆ ಡಬ್ಬಿಯ ಮೇಲೆಯೂ ಹುಲಿಯ ಚಿತ್ರವಿತ್ತು. ಹುಲಿಯ ಪಟ್ಟೆಗಳ ವಿನ್ಯಾಸದ ವಸ್ತ್ರ ಧರಿಸುತ್ತಿದ್ದ, ತನ್ನ ಸೈನಿಕರಿಗೂ ಅಂಥದೇ ವಸ್ತ್ರಗಳನ್ನು ಕೊಟ್ಟಿದ್ದ. ಅವನ ಕೆಲವು ಚಿಕ್ಕ ಫಿರಂಗಿಗಳನ್ನು ಸಹ ದಾಳಿಮಾಡಲು ಸಿದ್ಧವಿರುವ ಹುಲಿಗಳಂತೆ ವಿನ್ಯಾಸಗೊಳಿಸಲಾಗಿತ್ತು. ಅವನ ಸಿಂಹಾಸನಕ್ಕೆ ಹುಲಿಯ ಕಾಲುಗಳು ಹಾಗೂ ಹುಲಿಯ ತಲೆಗಳ ಆಕೃತಿಗಳಿದ್ದವು. ಯೂರೋಪಿಯನ್ನರ ಮೇಲೆ ವಿಶೇಷವಾಗಿ ಬ್ರಿಟಿಷರ ಮೇಲೆ ಹುಲಿಗಳು ಮತ್ತು ಆನೆಗಳು ದಾಳಿ ಮಾಡುತ್ತಿರುವ ಚಿತ್ರಗಳನ್ನು ಶ್ರೀರಂಗಪಟ್ಟಣದ ನಗರದ ಗೋಡೆಗಳ ಮೇಲೆಲ್ಲಾ ಬರೆಸಿದ್ದನಂತೆ. ಟಿಪ್ಪು ಶತ್ರುಗಳಿಗೆ ತನ್ನ ಶಕ್ತಿಯನ್ನು ಪ್ರದರ್ಶಿಸಲು ಒಂದು ಪ್ರಬಲ ಮತ್ತು ಪರಿಣಾಮಕಾರಿ ಸಂಕೇತವನ್ನು ಬಳಸಿಕೊಂಡಿದ್ದ. ಬ್ರಿಟಿಷರಿಗೆ ಆ `ವ್ಯಾಘ್ರಸ್ವಪ್ನ’ ಎಷ್ಟು ನಿದ್ರೆ ಕೆಡಿಸಿತ್ತೆಂದರೆ ಅವರು ಆ ಸಿಟ್ಟನ್ನು ಕಾಡಿನಲ್ಲಿನ ನಿಜವಾದ ಹುಲಿಗಳನ್ನು ಕೊಂದು ಅವುಗಳ ಮೇಲೆ ಕಾಲನ್ನಿಟ್ಟು ಫೋಟೊ ತೆಗೆಸಿಕೊಂಡು ಗರ್ವದಿಂದ ಬೀಗುತ್ತಿದ್ದರು. ಟಿಪ್ಪು ಹುಲಿಯೊಂದಿಗೆ ಸೆಣಸುತ್ತಿರುವ ಹಲವಾರು ಚಿತ್ರಗಳು ಟಿಪ್ಪೂನ ಕಾಲದ ನಂತರ ರಚಿತವಾಗಿವೆ. ಟಿಪ್ಪೂ ನಿಜವಾಗಿ ಹುಲಿಯೊಂದಿಗೆ ಸೆಣಸಿದ ದಾಖಲೆಗಳಿಲ್ಲವೆನ್ನುತ್ತಾರೆ ಚರಿತ್ರಕಾರರು. ಆದರೆ, ಟಿಪ್ಪೂನ ಕಾಲದ್ದೇ ಆದ ದಂತ ಕತೆಯೊಂದರಲ್ಲಿ ಹೈದರಾಲಿ ಟಿಪ್ಪೂನನ್ನು ಹೈದರಾಬಾದ್‌ಗೆ ಒಪ್ಪಂದವೊಂದರೆ ವಿಚಾರಕ್ಕೆ ಕಳುಹಿಸಿದ್ದಾಗ ಅಲ್ಲಿನ ಕಾಡೊಂದರಲ್ಲಿ ಹುಲಿಯೊಂದನ್ನು ಎದುರಿಸಿದ್ದನಂತೆ. 1795-1798ರ ಅವಧಿಯಲ್ಲಿ ನಿರ್ಮಾಣವಾಗಿರುವ ತುಮಕೂರು ಜಿಲ್ಲೆಯೊಂದರ ನರಸಿಂಹಸ್ವಾಮಿ ದೇವಾಲಯದ ಚಾವಣಿಯಲ್ಲಿ ಟಿಪ್ಪೂ ಹುಲಿಯೊಂದನ್ನು ತನ್ನ ಕತ್ತಿಯಿಂದ ಕೊಲ್ಲುತ್ತಿರುವ ಚಿತ್ರವಿದೆಯಂತೆ. ದೇವಿ ಚಾಮುಂಡಿಯ ವಾಹನವೂ ಆಗಿರುವ ಹುಲಿಯನ್ನು ತನ್ನ ಸಂಕೇತವನ್ನು ಟಿಪ್ಪೂ ಬಳಸಿಕೊಂಡಿದ್ದು ಧರ್ಮ ನಿರಪೇಕ್ಷತೆಯ ಆಗಿನ ಸಾಮಾಜಿಕ-ಧಾರ್ಮಿಕ ಪರಿಸರದ ಅಭಿವ್ಯಕ್ತಿ ಎನ್ನುತ್ತಾರೆ ಚರಿತ್ರೆಕಾರರು. + +ಇನ್ನು ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನ ಟಿಪ್ಪೂ ಸುಲ್ತಾನನ ಪ್ರಖ್ಯಾತ ಯೂರೋಪಿಯನ್ನನ ಮೇಲೆ ದಾಳಿ ಮಾಡಿರುವ ಹುಲಿಯ `ಯಂತ್ರ’ ಗೊಂಬೆಯ ವಿಷಯಕ್ಕೆ ಬರೋಣ. ಟಿಪ್ಪೂನ ಸಮಯದಲ್ಲಿ ಬ್ರಿಟಿಷರು ಆತನನ್ನು ಕಂಡು ಹೆದರುತ್ತಿದ್ದರು. ಬ್ರಿಟಿಷರು ಮೈಸೂರಿನ ಮೇಲೆ ನಾಲ್ಕು ಯುದ್ಧಗಳನ್ನು ನಡೆಸಿದ್ದರು. ಟಿಪ್ಪೂ ಸತ್ತಾಗ ಬ್ರಿಟನ್ನಿನಲ್ಲಿ ಸಂಭ್ರಮಾಚರಣೆಗಳು ನಡೆದುವಂತೆ. ಕವಿಗಳು, ನಾಟಕಕಾರರು ಹಾಗೂ ಚಿತ್ರಕಲಾವಿದರು ಆ ಘಟನೆಯನ್ನು ವರ್ಣಿಸಿ ತಮ್ಮ ಕೃತಿಗಳಲ್ಲಿ ಬಿಂಬಿಸಿದರು. ಟಿಪ್ಪೂನ ರಾಜಧಾನಿ ಶ್ರೀರಂಗಪಟ್ಟಣದ ಮೇಲಿನ ದಾಳಿ ಹಾಗೂ ಲೂಟಿಯು ಆಗಿನ ಬ್ರಿಟನ್ನಿನ ಹಲವಾರು ನಾಟಕ, ಚಿತ್ರಕಲೆಗಳಲ್ಲಿ ಕಂಡುಬಂದಿವೆ. ಪರಕೀಯ ಬ್ರಿಟಿಷರ ಅಪಾಯವನ್ನು ಮನಗಂಡಿದ್ದ ಟಿಪ್ಪು ಅವರನ್ನು ಅಷ್ಟೇ ಕಟುವಾಗಿ ದ್ವೇಷಿಸುತ್ತಿದ್ದ. ಆ ದ್ವೇಷವೇ ಅವನನ್ನು ಬ್ರಿಟಿಷ್ ಸೈನಿಕನೊಬ್ಬನನ್ನು ಕೊಲ್ಲುತ್ತಿರುವ ಹುಲಿಯ ಯಂತ್ರ ಗೊಂಬೆ ತಯಾರಿಸಲು ಪ್ರೇರಣೆ ನೀಡಿದೆ. ಟಿಪ್ಪೂನ ಯಂತ್ರ ಹುಲಿ ಬ್ರಿಟಿಷ್ ಸೈನಿಕನನ್ನು ಕೊಲ್ಲುತ್ತಿದ್ದರೂ ಬ್ರಿಟಿಷರು ಟಿಪ್ಪೂ ಸತ್ತನಂತರ ಅದನ್ನು ಬ್ರಿಟನ್ನಿಗೆ ಕೊಂಡೊಯ್ದು ಆ ಬಿಳಿ ಸೈನಿಕ ಬ್ರಿಟಿಷ್‌ನವನೆಂದು ಒಪ್ಪಿಕೊಳ್ಳದೆ ಯಾರೋ ಯೂರೋಪಿಯನ್ ಸೈನಿಕನೆಂದರು ಹಾಗೂ ದಾಖಲೆಗಳಲ್ಲಿ ಅದೇ ರೀತಿ ದಾಖಲಿಸಿದ್ದಾರೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_330.txt b/Kenda Sampige/article_330.txt new file mode 100644 index 0000000000000000000000000000000000000000..67fd1480e0d617dc486bb73944a27513bed1e551 --- /dev/null +++ b/Kenda Sampige/article_330.txt @@ -0,0 +1,27 @@ + + +ನಾವು ಸ್ವಚ್ಛ ಭಾರತದ ಅಭಿಯಾನಕ್ಕೆ ಎಷ್ಟೊಂದು ಹಣವನ್ನು ಪೋಲು ಮಾಡುತ್ತಿದ್ದೇವೆಂದರೆ ಅದರ ಜಾಹಿರಾತಿಗಾಗಿ ಮಾಡಿದ ಖರ್ಚಿನಲ್ಲಿ ಇಡೀ ದೇಶವನ್ನು ಸ್ವಚ್ಛಗೊಳಿಸಬಹುದಿತ್ತು ಎನ್ನುವ ಮಾತಿದೆ. ಅದರ ಹಿಂದೆಯೇ ಸ್ವಚ್ಛ ಭಾರತ ಅಭಿಯಾನದ ಹಿಂದೆಯೇ ತಮಗೆ ಆಗದವರನ್ನು ಹಣಿಯುವ ಹಿಕಮತ್ತನ್ನೂ ಕಾಣಬಹುದು. ಇಂತಹುದ್ದೊಂದು ಹಿನ್ನಲೆಯನ್ನು ಇಟ್ಟುಕೊಂಡು ಬರೆದ ಓದುತ್ತಲೇ ಮನಸ್ಸನ್ನು ಆಕ್ರಮಿಸಿಕೊಳ್ಳುವಂತೆ ಮಾಡುವ ಸಾಂವಕ್ಕನ ತಿಪ್ಪಿ ಎನ್ನುವ ಕಥೆ ಇರುವುದು ಶ್ರೀ ಆನಂದ ಬೋವಿಯವರು ಬರೆದ ಕೆಂಪು ಹಾಳೆಯ ಹೂವು ಎನ್ನುವ ಸಂಕಲನದಲ್ಲಿ. + +(ಆನಂದ ಬೋವಿ) + +ಊರು ತುಂಬಾ ಓಡಾಡಿ ದನದ ಸಗಣಿ ಸಂಗ್ರಹಿಸುವ ಸಾಂವಕ್ಕನಿಗೆ ತಿಪ್ಪಿ ಗುಂಡಿಯೇ ವರ್ಷಕ್ಕೆ ನಲವತ್ತರಿಂದ ಐವತ್ತು ಸಾವಿರ ಉತ್ಪನ್ನ ತಂದುಕೊಡುತ್ತಿತ್ತು. ಸಗಣಿಯ ಜೊತೆ ಜೊತೆಗೇ ಅವರಿವರ ಮನೆಯ ಹಳಸುಪಳಸಿದ ಅಡಿಗೆಯನ್ನೂ ತಂದು ಅದಕ್ಕೆ ಸುರಿಯುತ್ತಿದ್ದ ಸಾಂವಕ್ಕನದು ಒಂದು ರೀತಿಯಲ್ಲಿ ಕುಲ ಕಸುಬು. ಅವಳ ತಂದೆ ತಾಯಿ ಕೂಡ ಅದೇ ರೀತಿ ತಿಪ್ಪಿ ಸಂಗ್ರಹದಿಂದಲೇ ಬದುಕಿದವರು. ಊರು ಬೆಳೆದಂತೆ ಎಲ್ಲಾ ತಿಪ್ಪಿಗಳೂ ಮಣ್ಣು ಸುರಿದುಕೊಂಡು ಬಹುಮಹಡಿ ಕಟ್ಟಡಗಳಾದರೆ ಸಾಂವಕ್ಕನ ತಿಪ್ಪಿ ಹಾಗೆಯೇ ಉಳಿದು ಊರ ಜನರ ಕಣ್ಣಿನ ಉರಿಗೆ ಕಾರಣವಾಗುವುದು ಹಾಗೂ ತಿಪ್ಪಿಯ ವಾಸನೆಗೆ ಊರವರೆಲ್ಲ ಅದನ್ನು ತೆಗೆಸಲು ಪಂಚಾಯತ್ ಗೆ ಅರ್ಜಿ ಬರೆಯುವುದೂ, ವೈಯಕ್ತಿಕ ದ್ವೇಷವನ್ನಿಟ್ಟುಕೊಂಡ ಪಂಚಾಯತ್ ಅಧ್ಯಕ್ಷ ಅದನ್ನು ತೆಗೆಸಲು ಮುಂದಾದಾಗ ಸಾವಕ್ಕನಿಂದ ಅವಮಾನಕ್ಕೀಡಾಗುವುದೂ, ನಂತರ ಬಂದ ಸ್ವಚ್ಛ ಭಾರತ ಅಭಿಯಾನದಡಿ ಅದನ್ನು ತೆಗೆಸಲೆಂದೇ ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಯಿಸಿ ಸಾಂವಕ್ಕನ ತಿಪ್ಪೆಯ ಕಡೆ ಹೊರಟಾಗ ಆಕೆ ತೆಗೆದುಕೊಳ್ಳುವ ತೀರ್ಮಾನವನ್ನು ಓದಿಯೇ ತಿಳಿಯಬೇಕು. ಸಂಕಲನದ ಗಟ್ಟಿ ಕಥೆಗಳಲ್ಲಿ ಇದೂ ಒಂದು. ಕಟಮಳ್ಳಿ ಎನ್ನುವ ಊರಲ್ಲಿ ನಡೆಯುವ ವಿವಿಧ ಘಟನೆಗಳೇ ಕಥೆಗಳಾಗಿವೆ ಎಂಬ ಭಾವನೆಯನ್ನು ಹುಟ್ಟಿಸುವ ಸಂಕಲನ ಇದು. + +ಸಂಕಲನದ ಮೊದಲ ಕಥೆ ಸುಣ್ಣ ಹಾಗು ಕರಿನೀರು ಮತ್ತು ತನುವೆಂಬ ಏರಿಗೆ ಮನವೆಂಬ ಕಟ್ಟೆ ನೋಡಲು ಬೇರೆ ಬೇರೆ ವಸ್ತು ವಿಷಯವನ್ನು ಹೊಂದಿರುವ ಕಥೆ ಎನ್ನಿಸಿದರೂ ಆಳದಲ್ಲಿ ಒಂದೇ ವಿಷಯ ಹೇಳಲು ಹೊರಟಂತೆ ಭಾಸವಾಗುತ್ತದೆ. ವ್ಯಾಪಾರಿಕರಣದಲ್ಲಿ ಹೇಗೆ ಹಳ್ಳಿಗಳು ನಲುಗುತ್ತವೆ ಎಂಬುದನ್ನು ಈ ಮೂರೂ ಕಥೆಗಳು ಭಿನ್ನ ಭಿನ್ನವಾಗಿ ವಿವರಿಸುತ್ತ ಸಾಗುತ್ತದೆ. ಲಾಭದ ಆಸೆಗೆ ಹೇಗೆ ಹಳ್ಳಿಯ ಮುಗ್ಧ ಜನ ತಮ್ಮದೆಲ್ಲವನ್ನೂ ಕಳೆದುಕೊಂಡು ನಂತರ ಬೀದಿಗೆ ಬಂದು ನಿಲ್ಲುತ್ತಾರೆ ಎಂಬುದನ್ನು ಇವು ಮನೋಜ್ಞವಾಗಿ ವಿವರಿಸುತ್ತದೆ. ಸುಣ್ಣ ಕಥೆಯಲ್ಲಿ ಬೇಕಾದಷ್ಟೇ ಸುಣ್ಣದ ಕಲ್ಲನ್ನು ತಂದು ಸುಟ್ಟು ಜರಡಿ ಹಿಡಿದು ಮಾರುವಾಗ ತಮಗೆ ಬೇಕಾದಂತೆ ಬೆಟ್ಟವನ್ನು ಅಗೆದು ಪ್ರಕೃತಿಯ ವಿರುದ್ಧ ಹೋಗಬಾರದೆನ್ನುವ ವಿವೇಚನೆಯನ್ನು ಹಳ್ಳಿಯ ಮುಗ್ಧ ಜನರಲ್ಲಿ ಕಾಣಬಹುದು. + +ಆದರೆ ಅದೇ ಜನ ಲಾಭದ ಆಸೆಗೆ ಬಿದ್ದ ನಂತರ ಸುಣ್ಣದ ಬೆಟ್ಟವನ್ನೇ ಬೇಕಾಬಿಟ್ಟಿ ಅಗೆದು ಲೋಡುಗಟ್ಟಲೆ ತುಂಬಿಸಿ ಪೇಂಟ್ ಕಾರಖಾನೆಗೆ ಸಾಗಿಸಿ ನಂತರ ಕೈಸುಟ್ಟುಕೊಂಡಿದ್ದೂ ಅಲ್ಲದೇ, ಸರಕಾರಿ ಬೆಟ್ಟವನ್ನು ಅಗೆದದ್ದಕ್ಕಾಗಿ ಕೇಸನ್ನೂ ಎದುರಿಸಬೇಕಾಗುತ್ತದೆ. ಕೊನೆಗೆ ಎಲೆ ಅಡಿಕೆಗೆ ಹಾಕಿಕೊಳ್ಳುವ ಸುಣ್ಣಕ್ಕೂ ಪರದಾಡುವ ಸ್ಥಿತಿ ಬಂದು ಬಿಡುವುದು ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ ಕರಿನೀರು ಕಥೆಯಲ್ಲಿ ಕಟಮಳ್ಳಿಗೆ ಬಂದ ಹೈಸ್ಕೂಲು ಮೇಲು ಕೀಳು ಭಾವನೆಯನ್ನು, ಸ್ಪರ್ಶ- ಅಸ್ಪೃಶ್ಯ ಎಂಬ ಸಾಮಾಜಿಕ ಕಟ್ಟುಪಾಡನ್ನು ಮೀರುವುದನ್ನು ಮಕ್ಕಳಿಗೆ ಕಲಿಸಿಕೊಡುತ್ತದೆ. ಹೊಸದಾಗಿ ಸಿಕ್ಕ ಸ್ವಾತಂತ್ರ್ಯದಲ್ಲಿ ಅಸ್ಪೃಶ್ಯ ಹುಡುಗನೊಂದಿಗೆ ಕೆರೆಗೆ ಹೋದ ಮೇಲ್ಜಾತಿಯ ಹುಡುಗಿಯನ್ನು ಕಂಡ ಊರು ಧಗಧಗನೆ ಹೊತ್ತುರಿದು ಅವರೆಲ್ಲ ಊರು ಬಿಡುವಂತಾಗುತ್ತದೆ. ಆದರೆ ಎಷ್ಟೋ ವರ್ಷಗಳ ನಂತರ ಕಟಮಳ್ಳಿಯ ಗುಡ್ಡದ ಆಕಡೆಗೆ ಇರುವ ಹಳ್ಳದ ನೀರನ್ನು ಊರಿಗೆ ಬಿಡದೇ ಊರು ಹಾಹಾಕಾರದಲ್ಲಿದ್ದಾಗ ಅಂದು ಮೇಲ್ಜಾತಿಯ ಹುಡುಗಿಯ ಜೊತೆ ಹಳ್ಳಕ್ಕೆ ಹೋದ ದುಗ್ರ್ಯಾ ಕಂಪನಿ ನೀರನ್ನು ತಂದು ಮಾರುತ್ತ ಲಾಭಗಳಿಸಿಕೊಳ್ಳುತ್ತಾನೆ. + + + +ತನುವೆಂಬ ಏರಿಗೆ ಮನವೆಂಬ ಕಟ್ಟೆಯಲ್ಲಿಯೂ ಹೊಸ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮಾತನಾಡುತ್ತ ಇದ್ದ ಆಸ್ತಿಯನ್ನೆಲ್ಲ ಕರಗಿಸಿ ಯಾವುದಕ್ಕೂ ಬೇಡದವ ಶಂಕರ ಗೌಡ ದನದ ಸಗಣಿಯಿಂದ ಸೋಪು ತಯಾರಿಸುವ ಕಂಪನಿ ಮಾಡಿ ಲಾಭಗಳಿಸುತ್ತ, ನಂತರ ಶುದ್ಧ ಹಸುವಿನ ಸಗಣಿಗೆ ಬದಲಾಗಿ ಎಮ್ಮೆ, ಮೇಕೆಗಳ ಸಗಣಿಯನ್ನೂ ಸೇರಿಸುತ್ತ ಕಟಮಳ್ಳಿ ಸೋಪು ತಯಾರಿಕಾ ಕೈಗಾರಿಕೆಯನ್ನು ಪ್ರಸಿದ್ಧಗೊಳಿಸಿ ಊರನ್ನು ಉದ್ಧಾರ ಮಾಡಿದ ಎಂಬ ಹೊತ್ತಿನಲ್ಲಿಯೇ ಊರ ಜನ ಎಲ್ಲ ಬೆಳೆ ಬೆಳೆಯುವುದನ್ನು ಬಿಟ್ಟು ಕೇವಲ ಹಸುವಿನ ಹುಲ್ಲು ಬೆಳೆಯುತ್ತ ದನದ ಹಿಂಬಾಗಕ್ಕೆ ಬುಟ್ಟಿ ಹಿಡಿದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾದ ನಂತರ ಮುಂಬೈ ಸೇರಿದ ಗೌಡರು ತಮ್ಮ ಕಂಪನಿ ದಿವಾಳಿ ಆಗಿದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಕಟಮಳ್ಳಿಯ ಜನತೆ ಬೀದಿಗೆ ಬಿದ್ದಿದ್ದನ್ನು ಹೇಳುತ್ತದೆ. ಆದರೆ ಇಲ್ಲಿ ಬೀದಿಗೆ ಬಿದ್ದದು ಕೇವಲ ಕಟಮಳ್ಳಿಯವರು ಮಾತ್ರವಲ್ಲ. ಇಡೀ ದೇಶಕ್ಕೆ ದೇಶವೇ ಈಗ ದನದ ಗಂಜಲದ, ಸಗಣಿಯ ಹಿಂದೆ ಬಿದ್ದು ಒದ್ದಾಡುತ್ತ ಕೊನೆಗೆ ತಳ ಕಾಣುವ ಸ್ಥಿತಿಯನ್ನು ವಿಡಂಬನಾತ್ಮಕವಾಗಿ ಹೇಳುತ್ತದೆ. + +‘ಬಿಳಿಜೋಳದ ರೊಟ್ಟಿ’ ಮತ್ತು ‘ಹಾಸಿಗೆಯ ಹಂಗ್ಯಾಕ’ ಇವೆರಡೂ ಒಂದೇ ಗುಂಪಿಗೆ ಸೇರುವ ಕಥೆಗಳು. ಬಡತನ ನಮ್ಮ ಬದುಕಿನಲ್ಲಿ ಆಟ ಆಡುವ ರೀತಿಯನ್ನು ಹೇಳುತ್ತಲೇ ಜೀವನದ ಸೂಕ್ಷ್ಮ ದರ್ಶನ ಮಾಡಿಸುತ್ತದೆ. ಬರಗಾಲ ಎಂದು ಗುಳೆ ಎದ್ದು ಮಂಗಳೂರು ಕಡೆ ಹೊರಟರೆ ಅಷ್ಟು ದಿನಗಳವರೆಗೆ ಒಂದೇ ಸಮನೆ ಬರಲು ವರಾತೆ ಹಚ್ಚಿದ್ದ ಸಾಹುಕಾರ ಈಗ ಮಂಗಳೂರು ತಲುಪಿದ ಮೇಲೆ ‘ಮಳೆ ಬಿದ್ದು ಕೆಲಸ ನಿಂತಿದೆ ಎಂದು ಸಾಗ ಹಾಕಲು ನೋಡುತ್ತಾನೆ. ಮನೆಯಲ್ಲಿ ಇದ್ದ ಬಿದ್ದ ಜೋಳವನ್ನೆಲ್ಲ ಸೇರಿಸಿ ಹಿಟ್ಟು ಮಾಡಿಸಿಕೊಂಡು ಖಡಕ್ ರೊಟ್ಟಿ ಮಾಡಿಕೊಂಡು ಹೊರಟ ಮಡಿವಾಳಿ ಮತ್ತು ಪಾರವ್ವನ ಸಂಸಾರ ಕಂಗಾಲಾಗುವ ಹೊತ್ತಿನಲ್ಲಿಯೇ ಊರಲ್ಲಿ ಮಳೆ ಬಂದು ಹೊಲಕ್ಕೆ ರೆಂಟಿ ಹೊಡೆಯಲು ದೌಡು ಬನ್ನಿ ಎಂದು ಕರೆಯುತ್ತಿದ್ದ ದೊಡ್ಡಪ್ಪನ ಮಗನ ಮಾತು ಜೀವನದಲ್ಲಿ ಆಸೆಯನ್ನು ಚಿಗುರಿಸುತ್ತದೆ. ಇತ್ತ ಹಾಸಿಗೆಯ ಹಂಗ್ಯಾಕ ಕಥೆಯೂ ಬಡತನವನ್ನು ಹೇಳುತ್ತಲೇ ಕೌದಿ ಹೊಲಿಯುತ್ತಿದ್ದ ಬಸವ್ವನ ಮಗ ಕಥಾ ನಾಯಕ ಹಾಸಿಗೆ ಮಾರುವ ಉದ್ಯೋಗ ಮಾಡುತ್ತಿದ್ದವನಿಗೆ ಕೊನೆಗೆ ತಾನೇ ಹೊಲಿದ ಕೌದಿಯೊಳಗೆ ಮಲಗಿದ ಅಮ್ಮನನ್ನು ನೋಡಿ ದುಃಖ ಉಕ್ಕೇರಿ ಬರುತ್ತದೆ. ಒಂದು ಸುಖಾಂತವೆನಿಸಿದರೆ ಇನ್ನೊಂದು ತೀರಾ ನೋವು ನೀಡುವ ಅಂತ್ಯ. + +‘ರೊಕ್ಕ’ ಮತ್ತು ‘ದೇವರು ಉಟ್ಟ ಸೀರೆ’ ಮೂಢ ನಂಬಿಕೆಗಳು ನಮ್ಮನ್ನು ಆಳುವ ಮನಸ್ಥಿತಿಯನ್ನು ಹೇಳುತ್ತದೆ. ದೇವರ ಹೆಸರಿನಲ್ಲಿ ನಾವು ಆಚರಿಸುವ ಮೂಢನಂಬಿಕೆಗಳು ನಮ್ಮ ಬದುಕನ್ನೇ ಬದಲಿಸಿ ಬಿಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ರೊಕ್ಕ ಕಥೆಯಲ್ಲಿ ಬಡತನದ ಕಾರಣದಿಂದ ಶಾಲೆಯಲ್ಲಿನ ನಾಟಕದ ಪಾತ್ರಕ್ಕೆ ಬೇಕಾದ ಕಿರೀಟ ಹೊಂದಿಸಲಾಗದ ಪಕ್ಯಾ ಕೊನೆಗೆ ಜಾತ್ರೆಯಲ್ಲಿ ಪೂಜಾರಪ್ಪನ ಕೈ ಬೀಳಿಸಿ ನೂರು ರೂಪಾಯಿ ತೆಗೆದುಕೊಂಡು, ನಿಂಗ್ಯಾಕೆ ದುಡ್ಡು ಎಂದು ದೇವರನ್ನೇ ಕೇಳುವ ಮುಗ್ಧತೆ ಕಾಣಿಸಿದರೆ ದೇವರು ಉಟ್ಟ ಸೀರೆಯಲ್ಲಿ ಜಾತ್ರೆಗೆ ಉಡಿ ತುಂಬಿದ ಸೀರೆಯನ್ನು ಕೊಂಡುಕೊಂಡು ಉಟ್ಟ ಶೇಖವ್ವನ ಸಣ್ಣ ಸೊಸೆ ತುಂಬು ಗರ್ಭಿಣಿಯಾಗಿರುವಾಗಲೇ ಅದೇ ಸೀರೆಯಿಂದ ನೇಣು ಹಾಕಿಕೊಂಡು ಕೊನೆಗೆ ದೇವಿಗೆ ಸೀರೆ ನೇಯ್ದುಕೊಡುವ ಸಿದ್ದಪ್ಪನ ಮಗಳು ಪುನಃ ದೇವಿ ಸೀರೆಗೆ ಪೂಜಾರಪ್ಪನ ಹೆಂಡತಿ ಮಹಾದೇವಿಯ ಬಳಿ ಹೋಗುವುದರೊಂದಿಗೆ ದೇವಿಯ ಅಪಶಕುನದ ಅಪಮಾನ ಕೊನೆಯಾಗುವ ಸೂಚನೆ ನೀಡುತ್ತದೆ. + +ಶೀರ್ಷಿಕೆಯ ಕಥೆ ಕೆಂಪು ಹಾಳೆಯ ಹೂವು ಕಾಲೇಜು ದಿನಗಳ ಪ್ರೇಮಿಯನ್ನು ಹುಡುಕಿ ಹೋಗುವ ಸ್ತ್ರೀಯೊಬ್ಬಳು ಆತ ಹತ್ತಿರ ಇರುವಾಗ ಆತನ ಸೆಳೆತವನ್ನು ನಿರಾಕರಿಸಿ ಹೊರಟು ಹೋಗುವುದನ್ನು ಹೇಳಿದರೆ, ಸುರುಳಿ ಕಥೆಯು ಗಂಡು ಹೆಣ್ಣಿನ ಮಿಲನವನ್ನು ಸಂಭಾಷಣೆಯಲ್ಲೇ ಹೇಳುತ್ತದೆ. ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ನಿರೂಪಿತವಾಗುವ ಕಥೆಗಳು ಭಾಷಾ ದೃಷ್ಟಿಯಿಂದ ಸಶಕ್ತವಾಗಿದೆ. ಆದರೆ ಕಟಮಳ್ಳಿ ಎನ್ನುವ ಒಂದೇ ಊರಿನ ಘಟನಾವಳಿಗಳನ್ನು ಇಟ್ಟುಕೊಂಡು ರಚಿತವಾದ ಇಡೀ ಕಥಾ ಸಂಕಲನ ಇದು. + + + +ಸರಿ ಸುಮಾರು ಎಲ್ಲಾ ಕಥೆಗಳೂ ಕಟಮಳ್ಳಿ ಎಂಬ ಊರಿನಲ್ಲಿಯೇ ನಡೆಯುತ್ತವೆಯಾದ್ದರಿಂದ ಇಡೀ ಸಂಕಲನಕ್ಕೆ ಒಂದು ರೀತಿಯ ಏಕರೂಪತೆ ಪ್ರಾಪ್ತವಾಗಿದೆ. ಬಹುಶಃ ಕಥೆಗಳನ್ನು ಮತ್ತೊಂದಿಷ್ಟು ವಿಸ್ತೃತಗೊಳಿಸಿ ಯಾವುದೋ ಎಳೆಯಲ್ಲಿ ಸಂಬಂಧ ಕಲ್ಪಿಸಿದ್ದರೆ ಒಂದು ಕಾದಂಬರಿಯಾಗಿ ಬಿಡುವ ಎಲ್ಲ ಅವಕಾಶಗಳೂ ಇಲ್ಲಿದ್ದವು ಮಾತ್ರವಲ್ಲ ಕಥೆ ಹೇಳುವ ರೀತಿಯಲ್ಲಿ ಸ್ವಲ್ಪ ಎಡವಿದ್ದಕ್ಕೂ ಒಂದು ಘನತೆಯನ್ನು ಕೊಟ್ಟು ಬಿಡಬಹುದಾಗಿತ್ತು ಎಂದೆನಿಸದೇ ಇರದು. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_331.txt b/Kenda Sampige/article_331.txt new file mode 100644 index 0000000000000000000000000000000000000000..4ea634c974c7adecf11551fc6f830c256ecba9da --- /dev/null +++ b/Kenda Sampige/article_331.txt @@ -0,0 +1,35 @@ +byಎಂ.ಜಿ. ಶುಭಮಂಗಳ|Dec 7, 2019|ವಾರದ ಕಥೆ,ಸಾಹಿತ್ಯ| 0 Comments + +“‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ.” + +byಆರ್. ವಿಜಯರಾಘವನ್|Dec 2, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ.” + +byಡಾ. ಬಿ. ಜನಾರ್ದನ ಭಟ್|Dec 1, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು…” + +byಕೆಂಡಸಂಪಿಗೆ|Nov 25, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ….” + +byಉಮಾರಾವ್|Nov 24, 2019|ವಾರದ ಕಥೆ,ಸಾಹಿತ್ಯ| 0 Comments + +“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…” + +byಕೆಂಡಸಂಪಿಗೆ|Nov 18, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ….” + +byಡಾ. ಬಿ. ಜನಾರ್ದನ ಭಟ್|Nov 17, 2019|ವಾರದ ಕಥೆ,ಸಾಹಿತ್ಯ| 0 Comments + +“ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು.” + +byಎಚ್ ಆರ್ ರಮೇಶ್|Nov 11, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಪ್ರಸ್ತುತದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಕಥಾಸಂಕಲನ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಇವು ಶುದ್ಧ ಗ್ರಾಮೀಣ ಬದುಕಿನ ಸೊಗಡಿರುವ ಕತೆಗಳು. ಇಲ್ಲಿಯ ಕತೆಗಳಿಗೆ ಯಾವ ಇಸಮ್ಮುಗಳ ಸೋಂಕು ಇಲ್ಲದೆ, ಕೇವಲ ಕತೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು, ಬದುಕಿಗೆ…” + +byವೈ.ಎಸ್. ಹರಗಿ|Nov 10, 2019|ವಾರದ ಕಥೆ,ಸಾಹಿತ್ಯ| 0 Comments + +“ಗಲ್ಲಿ ಗಲ್ಲಿಗೆ ಹೋಗಿ “ಮೀನು!.. ಮೀನು ತಾಜಾ ಮೀನು..!!” ಎಂದು ಶಹರದಲ್ಲಿ ಮಾರಾಟಕ್ಕೆ ಹೋಗುತ್ತಿದ್ದ ಸಾಹೇಬರಿಗೆ ಪ್ರಾರಂಭಿಕವಾಗಿ ಸಮಸ್ಯೆಗಳುಂಟಾದವು.. ಯಾವ ಏರಿಯಾದಲ್ಲಿ ಮೀನು ತಿನ್ನುವವರು ನೆಲೆಸಿದ್ದಾರೆಂದು ಗೊತ್ತಾಗಲಾರದೇ ಬ್ರಾಹ್ಮಣರ ಓಣಿಯಲ್ಲಿ ಹೋಗಿ “ಮೀನು..!! ಮೀನು ತಾಜಾ ಮೀನು.!.” \ No newline at end of file diff --git a/Kenda Sampige/article_332.txt b/Kenda Sampige/article_332.txt new file mode 100644 index 0000000000000000000000000000000000000000..a6384accfcb4b93fded6437c30029f4dc962cca6 --- /dev/null +++ b/Kenda Sampige/article_332.txt @@ -0,0 +1,37 @@ + + +‘ಸೀತಾಳೆದಂಡೆಯ ಸದ್ದಿಲ್ಲದ ಕಥೆಗಳು’ ಭಾರತಿ ಹೆಗಡೆಯವರ ಮೊದಲ ಪುಸ್ತಕವಲ್ಲದಿದ್ದರೂ ಮೊದಲ ಕಥಾ ಸಂಕಲನವಾಗಿದೆ. ಈ ಸಂಕಲನಕ್ಕೆ ಮುನ್ನುಡಿ ಬರೆದುಕೊಡಲು ಅವರು ಕೇಳಿದ್ದಕ್ಕೆ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಈ ಸಂದರ್ಭದಿಂದಾಗಿ ಅವರ ಕಥೆಗಳನ್ನು ಓದಲು ಸಾಧ್ಯವಾಯಿತು. ಸಿನೇಮಾದ ಬಗೆಗಿನ ಅವರ ಬರವಣಿಗೆಯಲ್ಲಿ ಗಟ್ಟಿಯಾದ ಸ್ತ್ರೀಪರ-ಸ್ತ್ರೀವಾದಿ ನಿಲುವನ್ನು ತೆಗೆದು ನಿಂತಿರುವ ಭಾರತಿಯವರ ಕಥೆಗಳಲ್ಲೂ ಆ ಎಳೆ ಗಟ್ಟಿಯಾಗಿ ಕಾಣಬಹುದೆಂದು ನಾನಂದುಕೊಂಡಿದ್ದೆ. ಪೂರ್ವನಿರ್ಧಾರಿತ ನಂಬಿಕೆ, ನಿಲುವನ್ನು ವ್ಯಕ್ತಪಡಿಸಿದ ಲೇಖಕರ ಬಗ್ಗೆ ಯಾವುದೇ ಪೂರ್ವಗ್ರಹವಿರ ಕೂಡದು ಎನ್ನುವುದನ್ನು ಭಾರತಿ ತಮ್ಮ ಕಥೆಗಳ ಮೂಲಕ ನಿರೂಪಿಸಿದ್ದಾರೆ. ಹಾಗೆಂದು ಈ ಕಥೆಗಳಲ್ಲಿ ಗಟ್ಟಿ ಸ್ತ್ರೀ ಪಾತ್ರಗಳಿಲ್ಲವೆಂದಲ್ಲ. ಆದರೆ ಆ ಪಾತ್ರಗಳು ಪೂರ್ವ ನಿರ್ಧಾರಿತವಾಗಿರದೆ ಸಹಜವಾಗಿ ರೂಪುಗೊಂಡಿವೆ. + +ಈ ಪುಸ್ತಕಕ್ಕೆ ಮುನ್ನುಡಿ ಬರೆಯಲು ಭಾರತಿ ನನ್ನನ್ನೇ ಏಕೆ ಕೇಳಿದರು ಎನ್ನುವುದನ್ನು ನಾನು ಯೋಚಿಸುತ್ತಿದ್ದೇನೆ. ನನ್ನ ಕಥನದ ಜಾಯಮಾನಕ್ಕೂ ಅವರದ್ದಕ್ಕೂ ಬಹಳ ಭಿನ್ನತೆಯಿದೆ. ಸ್ತ್ರೀಕೇಂದ್ರಿತ-ಪುರುಷಪ್ರಧಾನ, ಗ್ರಾಮ-ನಗರ, ಗ್ರಾಮ್ಯ-ನಾಗರಿಕ, ಸಂಪ್ರದಾಯ-ಆಧುನಿಕ, ಸಹಜ ಹವ್ಯಕ ಕನ್ನಡ – ಇಂಗ್ಲಿಷ್ ಬೆರೆತ ಕನ್ನಡ – ಹೀಗೆ ಯಾವ ರೀತಿಯಿಂದ ನೋಡಿದರೂ ನಮ್ಮಿಬ್ಬರ ಆಲೋಚನಾ ವಿಧಾನ ಮತ್ತು ಬರವಣಿಗೆಯಲ್ಲಿ ಭಿನ್ನತೆಯಿದೆ. ಅವರು ಆಯ್ದುಕೊಳ್ಳುವ ವಸ್ತು, ಪಾತ್ರಗಳು, ಪರಿಸರ, ನಿರೂಪಣೆಯ ತಂತ್ರ ಎಲ್ಲವೂ ಭಿನ್ನವಾದದ್ದು. ಹೀಗಾಗಿ ಈ ಕಥೆಗಳಿಗೆ ಪ್ರವೇಶಿಕೆ ನೀಡಲು ವೈದೇಹಿಯವರಂತಹ ಹಿರಿಯ ಲೇಖಕರು ಸಮರ್ಪಕವಾಗಿರುತ್ತಿದ್ದರು ಅನ್ನಿಸುತ್ತಿರುವಾಗಲೇ ನನ್ನಿಂದ ಮುನ್ನುಡಿ ಬರೆಸುವುದರಲ್ಲಿ ಯಾವುದೋ ಅರ್ಥವಿರಬಹುದು… + +(ಭಾರತಿ ಹೆಗಡೆ) + +ಒಂದು ಭಿನ್ನ ದೃಷ್ಟಿಕೋನದಿಂದ ಈ ಕಥೆಗಳು ಹೇಗೆ ಕಾಣಬಹುದೆನ್ನುವ ಕುತೂಹಲ ಭಾರತಿಯವರಿಗೆ ಇದ್ದಿರಬಹುದು. ಅಥವಾ ಅವರ ಕಥೆಗಳನ್ನು ನನ್ನಂತಹವರು ಹೇಗೆ ಅಪಾರ್ಥೈಸಬಹುದೆನ್ನುವುದನ್ನು ನೋಡುವ ದುಷ್ಟ ಕುತೂಹಲವೂ ಭಾರತಿಯವರಿಗೆ ಇದ್ದಿರಬಹುದು. ಏನೇ ಇರಲಿ ಈಗ ಈ ಜವಾಬ್ದಾರಿ ನನ್ನ ಮೇಲೆ ಬಿದ್ದಿದೆ. + +ಭಾರತಿಯವರ ಕಥೆಗಳಲ್ಲಿನ ಅನೇಕ ಪಾತ್ರಗಳು ಯಾವುದೋ ರೀತಿಯ ಬಿಡುಗಡೆಯನ್ನು ಪಡೆಯಲು ಪ್ರಯತ್ನಿಸುತ್ತಿವೆ. ಆ ಬಿಡುಗಡೆಯು ಒಂದು ಚೌಕಟ್ಟಿನೊಳಗೇ ಇರುವ ಕಟ್ಟುಪಾಡುಗಳನ್ನು ಧಿಕ್ಕರಿಸುವ, ಚೌಕಟ್ಟನ್ನು ಮೀರದೆಯೇ ಪ್ರತಿಭಟಿಸುವ, ಅನಂತಮೂರ್ತಿಯವರು ಹೇಳುತ್ತಿದ್ದ ಕ್ರಿಟಿಕಲ್ ಇನ್ಸೈಡರ್ ರೀತಿ ನಿರೂಪಣೆಗೆ ಒಳಗಾಗಿವೆ. ಒಂದು ರೀತಿಯಿಂದ ಸಂಪ್ರದಾಯವನ್ನು ಪ್ರಶ್ನಿಸುವ ಮಟ್ಟಕ್ಕೆ ಯಾವುದೇ ಕಥೆಗಳು ಏರುವುದಿಲ್ಲ. ಬದಲಿಗೆ ಆ ಸಂಪ್ರದಾಯಗಳು ಆಯಾ ಪಾತ್ರಗಳಿಗೆ ಸರಿಯಾಗಿ ವರ್ತಿಸದಿದ್ದಾಗ ಆಗುವ ಘರ್ಷಣೆಯನ್ನೂ, ಆ ಘರ್ಷಣೆಯನ್ನು ಆ ಪಾತ್ರಗಳು ನಿಭಾಯಿಸುವ ರೀತಿಯನ್ನು ಭಾರತಿ ಸಶಕ್ತವಾಗಿ ಗ್ರಹಿಸಿ ಬರೆಯುತ್ತಾರೆ. + +ಯಥಾಸ್ಥಿತಿವಾದವನ್ನು ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನಮ್ಮ ಬದುಕಿನಲ್ಲೂ, ಬರವಣಿಗೆಯಲ್ಲೂ ಪ್ರಶ್ನಿಸುತ್ತಲೇ ಬಂದಿದ್ದೇವೆ. ದಲಿತ-ಬಂಡಾಯ ಸೆಲೆಯ ಈ ಬೆಳವಣಿಗೆಯಲ್ಲಿ ಯಥಾಸ್ಥಿತಿ ವಾದವನ್ನು ಕ್ರಾಂತಿಕಾರಿ ಕಾರ್ಯಗಳ ಮೂಲಕ, ಸಾಂಪ್ರದಾಯಿಕ ಪದ್ಧತಿಗಳನ್ನು ಪ್ರಶ್ನಿಸುವ ಮೂಲಕ ಅನುಸಂಧಾನ ಮಾಡಿದರೆ, ನವ್ಯರು ಅದಕ್ಕೆ ಅಂತರಂಗದಲ್ಲೇ– ಕಾಮ ಮತ್ತು ವ್ಯಕ್ತಿಗತ ಸಂಬಂಧಗಳ ಮೂಲಕ ಅದಕ್ಕೊಂದು ಅಭಿವ್ಯಕ್ತಿಯನ್ನು ಕಂಡುಕೊಂಡರು. ಆದರೆ ಬಹಿರಂಗವಾಗಿ ಯಥಾಸ್ಥಿತಿ ವಾದವನ್ನು ಪ್ರಶ್ನಿಸದೆಯೇ, ಅದರಲ್ಲಿದ್ದೇ ಅದನ್ನು ಧಿಕ್ಕರಿಸುವಂತೆ ಕಾಣುವ ಹಾಗೆ ಬರೆದವರಲ್ಲಿ ಮುಖ್ಯರಾಗಿ ವೈದೇಹಿ ಉಳಿಯುತ್ತಾರೆ. ಭಾರತಿ ಆ ಪರಂಪರೆಗೆ ಸೇರುವ ಲೇಖಕರು. + +ಭಾರತಿಯವರ ಬರವಣಿಗೆಯ ಮುಖ್ಯ ಲಕ್ಷಣ ಅವರ ನಿರೂಪಣಾ ಶೈಲಿಯ ಏಕತಾನತೆ. ಇಲ್ಲಿ ಏಕತಾನತೆ ಎನ್ನುವುದನ್ನು ಒಂದು ಸಕಾರಾತ್ಮಕ ನೆಲೆಯಲ್ಲಿ ಬಳಸುತ್ತಿದ್ದೇನೆ. ಆಕೆಯ ನಿರೂಪಣೆ ಹೊರಗಿದ್ದು ಎಲ್ಲವನ್ನೂ ಕಾಣುವ–ಅದಕ್ಕೊಂದು ಟಿಪ್ಪಣಿಯನ್ನು ಕೊಡುವ ರೀತಿಯದ್ದು. ಹೀಗಾಗಿಯೇ, ಎಲ್ಲ ಪಾತ್ರಗಳೂ ಒಂದೇ ರೀತಿ ಮಾತಾಡುತ್ತವೆ. ಎಲ್ಲ ಕಥೆಗಳ ನಿರೂಪಣಾ ಶೈಲಿಯೂ ನೇರವಾಗಿ ಯಾವುದೇ ಕಾಲ ಪಲ್ಲಟವಿಲ್ಲದೇ ತಂತ್ರಗಾರಿಕೆಯಲ್ಲಿಲ್ಲದೇ ಇವೆ. ಅವರ ಎಲ್ಲ ಕಥೆಗಳೂ ಒಂದು ಪುಟ್ಟ ಹವ್ಯಕ ಸಮಾಜದೊಳಗಣ ಗಿರಕಿ ಹೊಡೆಯುತ್ತಿರುತ್ತವೆ. ಆಕೆ ಈ ಚೌಕಟ್ಟನ್ನು ಮೀರಿ ಕಥೆಗಳನ್ನು ಈ ಸಂಕಲನದಲ್ಲಿ ಬರೆದಿಲ್ಲವಾದರೂ ಆ ಒಂದು ಚೌಕಟ್ಟಿನಲ್ಲಿಯೇ ನಿಜಕ್ಕೂ ಎಷ್ಟೊಂದು ವಿಭಿನ್ನ ಅನುಭವಗಳಿದ್ದಾವೆ ಎನ್ನುವುದನ್ನು ಕಂಡು ನಾನು ಚಕಿತನಾಗಿದ್ದೇನೆ. + + + +ಒಂದು ಚೌಕಟ್ಟಿನಲ್ಲೇ ಉಳಿದಂತಿದ್ದು ಸಿಡಿದೇಳುವುದು ಸುಲಭದ–ಸಹಜವರ್ತನೆಯಲ್ಲ. ಆದರೆ ಆ ಚೌಕಟ್ಟಿನಲ್ಲಿದ್ದು ಒಂದು ಸಾಂಪ್ರದಾಯಿಕತೆಯೊಳಗೇ ಸಿಡಿದೇಳುವುದನ್ನು ಭಾರತಿಯವರು ಸಹಜವಾಗಿ–ಯಾವುದೇ ಭಾವಾತಿರೇಕವಿಲ್ಲದೇ ನಿರೂಪಿಸಬಲ್ಲರು. ಭಾವಾತಿರೇಕವಿಲ್ಲದಾಗ ಕಥೆಗಳು ಬೌದ್ಧಿಕವಾಗುವ–ಒಂದು ಸರಣಿ ಟಿಪ್ಪಣಿಯಾಗುವ ಅಪಾಯವಿದೆ. ಹೀಗೆ ಬೌದ್ಧಿಕವಾಗಿಯೂ ಕಾಣದಂತೆ, ಭಾವಾತಿರೇಕವೂ ಇಲ್ಲದಂತೆ, ಆದರೆ ವ್ಯವಸ್ಥೆಯ ವಿರುದ್ಧ ತಮ್ಮದೇ ರೀತಿ ಸಿಡಿಯುವ ಪಾತ್ರಗಳನ್ನು ಭಾರತಿ ಸಶಕ್ತವಾಗಿ ನಿಭಾಯಿಸಿದ್ದಾರೆ. ಇದೇ ಅವರ ಕಥನದ ಜಾಯಮಾನದ ಪ್ರಮುಖವಾದ ಗುಣ. + +ಭಾರತಿಯವರ ಹಲವು ಕಥೆಗಳಲ್ಲಿ ಮುಖ್ಯ ಪಾತ್ರಕ್ಕೆ ಯಾವುದೋಒಂದು ವಿಲಕ್ಷಣತೆಯ ಗುಣವಿರುತ್ತದೆ. ಒಂದು ರೀತಿಯಿಂದ ರೋಗಪೀಡಿತ ಸಮಾಜವನ್ನು ಸಂಕೇತಿಸಲು ಅವರು ಈ ರೀತಿಯ ಪಾತ್ರಗಳನ್ನು ಸೃಷ್ಟಿಸುತ್ತಾರೋ ಏನೋ. + +ಕೊಂಕಣಿ ಚೌಡಿ, ಜಲದೇವತೆ ಕಲಾವತಕ್ಕ, ಜಯಮಾಲಿನಿ ಹುಚ್ಚಿನ ಹಾವು ಗಣಪ, ಬೀಡಿ ಸುಬ್ಬಮ್ಮ, ದಿಗ್ಭ್ರಮೆ ವಂಕಟರಮಣ–ಹೀಗೆ ಹಲವು ಪಾತ್ರಗಳು ತಮ್ಮದೇ ಕೆಲ ಐಬುಗಳೊಂದಿಗೆ ಕಥೆಗಳಲ್ಲಿ ಬಂದು ಹೋಗುತ್ತವೆ. ಇಂಥ ಪಾತ್ರಗಳಿಂದ ಅಸಾಧಾರಣವಾದದನ್ನು ಭಾರತಿ ಮಾಡಿಸುತ್ತಾರೆ. ಈ ಪಾತ್ರಗಳು ನಾರ್ಮಲ್ ಅಲ್ಲವಾದ್ದರಿಂದ ಅವರು ಮಾಡುವ ಕ್ರಿಯೆ, ಹೇಳುವ ಮಾತು–ಸೂಚಿಸುವ ವಿಚಾರ ಎಲ್ಲವೂ ಅಸಾಧಾರಣವಾಗಿರುತ್ತವೆ. ಒಂದು ಚೌಕಟ್ಟಿನೊಳಗೆ ಪ್ರತಿಭಟಿಸಲು ಭಾರತಿ, ಸಂಸಾರ, ಅದರ ಸಂಪ್ರದಾಯ ಮತ್ತು ಕಟ್ಟುಪಾಡುಗಳನ್ನು ನಿಭಾಯಿಸುತ್ತಲೇ ಈ ರೀತಿಯ ಪಾತ್ರಗಳಿಂದ ಚೌಕಟ್ಟಿನ ಸೀಮೋಲ್ಲಂಘನ ಮಾಡುತ್ತಾರೆ. ಒಂದು ಮಟ್ಟದಲ್ಲಿ ಈ ಪಾತ್ರಗಳು ಅತಿರೇಕದ ಪಾತ್ರಗಳು –ಹುಚ್ಚು ಪಾತ್ರಗಳೆನ್ನುವಂತೆ ತೆಗೆದುಹಾಕುವ ಸಾಧ್ಯತೆಯನ್ನು ನೀಡುತ್ತಲೇ, ಅವು ಗಹನ ಪಾತ್ರಗಳೆಂದೂ, ಇರುವ ಚೌಕಟ್ಟಿನಲ್ಲೇ ಇರುತ್ತಾ, ತಮ್ಮ ವಿಲಕ್ಷಣತೆಯಿಂದಾಗಿ ಸಿಡಿದೇಳುತ್ತಿರುವ ಪಾತ್ರಗಳಂತೆ ಕಾಣುತ್ತವೆ. ಹೀಗಾಗಿ ಈ ತಂತ್ರದಿಂದ ಒಳಗೇ ಇರುವುದಕ್ಕೆ ಒಂದು ಸಮಜಾಯಿಷಿಯೂ, ಹಾಗೂ ಸಿಡಿದೇಳುವುದಕ್ಕೆ ಒಂದು ಸಂದರ್ಭವನ್ನೂ ಒದಗಿಸಿಕೊಟ್ಟಂತಾಗುತ್ತದೆ. + +ಹಾಗೆ ವಿಲಕ್ಷಣವಾಗಿರುವ ಪಾತ್ರಗಳನ್ನು ಸೃಷ್ಟಿಸಿ ಅವುಗಳನ್ನು ಕೋಡಂಗಿಯಾಗಿಸಬಹುದು. ಆದರೆ ಭಾರತಿಯವರ ಕಥನದ ಸಂಯಮದಿಂದಾಗಿ ಆ ಪಾತ್ರಗಳು ಬಹಳ ಗಟ್ಟಿಯಾಗಿ ತಮ್ಮದೇ ನಿಲುವನ್ನು ತೆಗೆದು–ಸಮಾಜದ ಕಟ್ಟುಪಾಡುಗಳಿಗೆ ಒಗ್ಗದೆ–ಜೀವನವನ್ನು ತಮ್ಮದೇ ನಿಯಮಾನುಸಾರ ಮುಂದುವರೆಸುವ ಗಟ್ಟಿಪಾತ್ರಗಳಾಗಿವೆ. ಆ ಪಾತ್ರಗಳು ವಿಲಕ್ಷಣವಾಗಿರುವುದರಿಂದ, ಹಾಗೆ ವರ್ತಿಸಲು ಒಂದು ಬಲವಾದ ತಾರ್ಕಿಕ ಹಿನ್ನೆಲೆಯನ್ನು ಸೃಷ್ಟಿಸುವ ಅವಶ್ಯಕತೆಯಿಲ್ಲ. ಈ ಸುಲಭ ಮಾರ್ಗವನ್ನು ಭಾರತಿ ಸಹಜವಾಗಿ ದುಡಿಸಿಕೊಳ್ಳುತ್ತಾರೆ. ಆದರೆ ಈ ತಂತ್ರ ಅವರ ಕಥನದಲ್ಲಿ ಮರುಕಳಿಸುತ್ತಾ ಹೋದರೆ ಅದು ಒಂದು ದೌರ್ಬಲ್ಯವಾಗಬಹುದಾದ ಅಪಾಯವನ್ನು ಭಾರತಿ ಮನಗಾಣಬೇಕಾಗಿದೆ. ಈ ವಿಲಕ್ಷಣ ಪಾತ್ರಗಳಲ್ಲಿ ಹೆಚ್ಚಿನ ಪಾತ್ರಗಳು ಸ್ತ್ರೀ ಪಾತ್ರಗಳಾದರೂ, ಇಲ್ಲಿ ಮಹಿಳಾ ಸಶಕ್ತೀಕರಣದ ಚೌಕಟ್ಟನ್ನು ಬಳಸದೆಯೇ ಸಹಜವಾಗಿ ಪುರುಷರೂ, ಸ್ತ್ರೀಯರೂ ತಮ್ಮ ಸ್ಥಾನಗಳನ್ನು ಕಾಪಾಡುವ, ಅದಕ್ಕೆ ಬೇಕಾದ ಪ್ರತಿಭಟನೆಯನ್ನು ಒಡ್ಡುವ ಕ್ರಿಯೆಯನ್ನು ನಾವು ಕಾಣುತ್ತೇವೆ. + +ಒಂದು ರೀತಿಯಿಂದ ವೈದೇಹಿಯವರ ಪರಂಪರೆಯಲ್ಲಿ ಭಾರತಿಯವರು ತಮ್ಮ ಕಥಾಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎನ್ನಿಸುತ್ತಿರುವಾಗಲೇ ಆ ರೀತಿಯಾಗಿ ಅವರನ್ನೊಂದು ಪೆಟ್ಟಿಗೆಯಲ್ಲಿ ಕೂಡ್ರಿಸುವುದು ಸರಿಯಲ್ಲವೆಂದೂ ಅನ್ನಿಸುತ್ತದೆ. ಒಂದು ರೀತಿಯಿಂದ ನೋಡಿದರೆ, ಸಮಾಜದ ಕಟ್ಟಲೆಗಳಿಂದ ಮುಕ್ತಿ ಪಡೆದ ಭಾರತಿಯವರ ಅನೇಕ ಪಾತ್ರಗಳು ಕಟ್ಟುಪಾಡಿನ ಸಂಬಂಧಗಳನ್ನು ಮೀರಿ ನಿಲ್ಲುತ್ತವೆ. ಇದರಲ್ಲಿ ದೈಹಿಕ ಸಂಬಂಧವೂ ಒಳಗೊಂಡಿದೆ. ಹಾದರವೂ, ಅನೈತಿಕ ಎನ್ನುವಂತಹ ಸಂಬಂಧದ ಸಂದರ್ಭಗಳೂ ಸಹಜವಾಗಿಯೇಇದೆ. ಮನುಷ್ಯ ವ್ಯಾಪಾರದಲ್ಲಿ ಆಗುವಷ್ಟೇ ಸಹಜವಾಗಿ ಇದು ಅವರ ಕಥಾಲೋಕದಲ್ಲೂ ಘಟಿಸುತ್ತದೆ. + +ಇದನ್ನು ಕಂಡಾಗ ತಟ್ಟನೆ ನೆನಪಾಗುವುದು ಚಂದ್ರಶೇಖರ ಕಂಬಾರರು. ಕಂಬಾರರ ಕಥೆ ನಾಟಕಗಳಲ್ಲಿರುವ ಗ್ರಾಮ್ಯದ ಸೊಗಡು, ಅರ್ಬೇನ್ ಅಥವಾ ಶಿಷ್ಟ ಎನ್ನಿಸುವ ಸೋಗಲಾಡಿತನಕ್ಕೆ ವಿರುದ್ಧವಾದದ್ದು. ಹೌದೋ ಅಲ್ಲವೋ ಎನ್ನುವ ಹಾಗೆ ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ನಿರೂಪಿಸುವ ಸಂಬಂಧಗಳಿಗೆ ವಿರುದ್ಧವಾಗಿ ನಡೆದಿರಬಹುದಾದದ್ದನ್ನು ನೇರವಾಗಿ ಮುಖಕ್ಕೆ ಹೊಡೆದಂತೆ ಹೇಳುವ ಸಹಜ ಪ್ರಾಮಾಣಿಕ ಗ್ರಾಮ್ಯವು ಭಾರತಿಯವರ ಕಥೆಗಳಲ್ಲೂ ಕಾಣಿಸುತ್ತದೆ. + +ಯಾವುದೇ ಒಂದು ಗಟ್ಟಿ ಬುನಾದಿಯಿಲ್ಲದೇ, ಅದರ ಹಿಂದಿನ ತಲ್ಲಣಗಳನ್ನು ನಿಭಾಯಿಸದೇ, ದ್ವಂದ್ವ ಮತ್ತು ಪಾಪಭಾವನೆಯಿಲ್ಲದ ಅನೈತಿಕ ಸಂಬಂಧಗಳು, ಅಸಹಜ ಸಾವುಗಳು (ಆತ್ಮಹತ್ಯೆ, ಕೊಲೆ) ಈ ಕಥೆಗಳಲ್ಲಿ ನಮಗೆ ಕಾಣಸಿಗುತ್ತವೆ. ಒಂದು ನೆಲೆಯಲ್ಲಿ ಸಾಂಪ್ರದಾಯಿಕ ಸಮಾಜದ ಕಟ್ಟುವಿಕೆಯಲ್ಲಿರುವ ಸರಿ-ತಪ್ಪುಗಳ ತುರ್ತು ಪರಿಷ್ಕಾರದ ಫಲವಾಗಿ ಇವು ಸಹಜವಾಗಿ ಘಟಿಸುವಂತೆ ಕಾಣುವ ಮನೋಧರ್ಮ ಕಂಬಾರರ ಕರಿಮಾಯಿ, ಸಿಂಗಾರೆವ್ವಗಳನ್ನು ಕಾಣುತ್ತದೆ. ಅದೇ ಮನೋಧರ್ಮ ಭಾರತಿಯವರ ಕಥೆಗಳಲ್ಲೂ ನನಗೆ ಕಂಡವು. ಈ ಒಂದು ನಿಟ್ಟಿನಲ್ಲಿ ಭಾರತಿ ವೈದೇಹಿಯ ಪರಂಪರೆಯಿಂದ ಭಿನ್ನರಾಗಿ ನಿಲ್ಲುತ್ತಾರೆ. ಬಹುಶಃ ನಗರ ಕೇಂದ್ರಿತ, ಆಧುನಿಕ ನ್ಯಾಯ ವ್ಯವಸ್ಥೆಯೊಂದಿಗಿನ ಜೊತೆ ವ್ಯವಹರಿಸಿದಾಗ ಈ ತಲ್ಲಣಗಳಿಗೆ ಬೇರೊಂದೇ ರೂಪ ಸಿಗಬಹುದೇನೋ. ಮಲೆನಾಡಿನಲ್ಲಿಯೇ ಬೇರುಬಿಟ್ಟಿರುವ ಈ ಕಥೆಗಳನ್ನು ಬೆಂಗಳೂರಿಗೆ ಭಾರತಿಯವರು ಕರೆತಂದರೆ ಹೇಗಿರಬಹುದು, ಅದನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಹಲ ನನ್ನಲ್ಲಿದೆ. + + + +ಮೊದಲ ಕಥಾಸಂಗ್ರಹದಲ್ಲಿಯೇ ಸಶಕ್ತವಾದ ಕಥೆಗಳನ್ನು ಕೊಡುತ್ತಾ ತಮ್ಮ ದನಿಯನ್ನು ಗಮನಿಸುವಂತೆ ನಮ್ಮನ್ನು ಒತ್ತಾಯಿಸುವ ಈ ಬರವಣಿಗೆಯನ್ನು ಕನ್ನಡ ಕಥಾಲೋಕ ಸ್ವಾಗತಿಸುತ್ತದೆಂದು ನಾನು ನಂಬಿದ್ದೇನೆ. ಮೂಲತಃ ಕಥೆಗಾರನಾಗಿರುವ ನಾನು ಭಾರತಿಯವರನ್ನು ಈ ಲೋಕಕ್ಕೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತಿದ್ದೇನೆ. ಅವರಿಂದ ಹೀಗೇ ನಮ್ಮನ್ನು ಕಾಡುವಂತಹ, ನಮ್ಮ ಚಿಂತನೆಯನ್ನು ಒರೆಗೆ ಹಚ್ಚುವಂತಹ ಕಥೆಗಳು ಬರಲೆಂದು ನಾನು ಆಶಿಸುತ್ತೇನೆ. ಈ ಎರಡು ಮಾತುಗಳನ್ನು ಬರೆಯಲು ಅವಕಾಶ ಮಾಡಿಕೊಟ್ಟ ಭಾರತಿಯವರಿಗೆ ನನ್ನ ಕೃತಜ್ಞತೆಗಳು ಸಲ್ಲುತ್ತವೆ. + +ಶ್ರೀರಾಂ, ಎಂ. ಎಸ್. ಆಂಧ್ರಪ್ರದೇಶದ ನೆಲ್ಲೂರಿನವರು.  ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು ಮತ್ತು ನಡೆಯಲಾರದ ದೂರ – ಹಿಡಿಯಲಾರದ ಬಸ್ಸು (ಕಥಾ ಸಂಕಲನಗಳು), ಕನಸು ಕಟ್ಟುವ ಕಾಲ, ಶನಿವಾರ ಸಂತೆ, ಅರ್ಥಾರ್ಥ,  ಕಥನ ಕುತೂಹಲ (ಪ್ರಬಂಧ ಸಂಕಲನಗಳು) ಜೊತೆ ಇನ್ನೂ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_333.txt b/Kenda Sampige/article_333.txt new file mode 100644 index 0000000000000000000000000000000000000000..0e27884e562c23adcb6a5b891ff91bdb6cac9733 --- /dev/null +++ b/Kenda Sampige/article_333.txt @@ -0,0 +1,39 @@ + + +ಮೂರು ಕಥಾಸಂಕಲನಗಳ ನಂತರ ಅನುಪಮಾ ಪ್ರಸಾದ್ ಇದೀಗ ತಮ್ಮ ಮೊತ್ತಮೊದಲ ಕಾದಂಬರಿಯನ್ನು ಬರೆದು ಮುಗಿಸಿದ್ದಾರೆ. ಅವರ ಪ್ರತಿಯೊಂದು ಸಂಕಲನಕ್ಕೂ ಅದೂ ಇದೂ ತಕರಾರು ತೆಗೆಯುತ್ತಿದ್ದ ನನ್ನನ್ನು ಅವರು ಸಹಿಸಿದ್ದು ವಿಶೇಷ! ಈ ಬಾರಿ ಅವರು ನನಗೆ ನಿಜಕ್ಕೂ ಸವಾಲೊಡ್ಡಿದ್ದಾರೆ. ತಕರಾರುಗಳಿದ್ದರಷ್ಟೇ ಬರೆಯಲು ಇಷ್ಟಪಡುವ ನನ್ನ ಬಾಯಿ ಮುಚ್ಚಿಸುವಂಥ ಒಂದು ಅದ್ಭುತ ಕಾದಂಬರಿಯನ್ನು ಕೈಗಿಟ್ಟಿದ್ದಾರೆ. ಹಾಗಾಗಿ, ಇದು ನನಗೆ ನಿಜಕ್ಕೂ ಇಷ್ಟವಾಗಿದ್ದರ, ಸವಾಲೊಡ್ಡಿದ್ದರ ಕಾರಣಗಳನ್ನೇ ಹುಡುಕುತ್ತ ಹೋದರೆ ಅಂಥದ್ದೇನಾದರೂ ಸಿಗಬಹುದೆಂಬ ನಂಬಿಕೆಯಿಂದ ಹೊರಟಿದ್ದೇನೆ! + +ಹತ್ತಿರದಿಂದ ಒಂದು ಕುಟುಂಬದ ಎರಡು ಮೂರು ತಲೆಮಾರಿನ ಬದುಕು, ಬವಣೆಯನ್ನು ಕಂಡಿದ್ದರೆ ಒಂದು ಕಾದಂಬರಿ ಬರೆಯುವುದು ನುರಿತ ಬರಹಗಾರರಿಗೆ ಅಷ್ಟೇನೂ ಕಷ್ಟವಾಗಲಾರದು. ಏಕೆಂದರೆ ಒಬ್ಬ ಬರಹಗಾರನ ದೊಡ್ಡ ಅನುಕೂಲವೇನೆಂದರೆ ಅವನು ಕಂಡಿದ್ದಕ್ಕೆಲ್ಲ ಸ್ಪಂದಿಸಿ, ತನ್ನನ್ನು ತಾನು ಕೊಟ್ಟುಕೊಂಡು, ಅದನ್ನು ತನ್ನಲ್ಲೇ ಆವಾಹಿಸಿಕೊಂಡು ಬದುಕಬಲ್ಲ. ಹಾಗಾಗಿ ಒಬ್ಬ ಬರಹಗಾರನಿಗೆ ಹಲವು ಜೀವನಗಳಿರುತ್ತವೆ. ಅವನು ಹಲವರ ಬದುಕನ್ನು, ಅದರ ಸಂಘರ್ಷವನ್ನು ತನ್ನದೇ ಎಂಬಂತೆ ತಲೆಯಲ್ಲಿ ಹೊತ್ತು ಬದುಕುತ್ತಿರುವುದರಿಂದಲೇ ಜೀವನವನ್ನು, ಮನುಷ್ಯನನ್ನು ಮತ್ತು ಮನಸ್ಸನ್ನು ಅವನು ಹೆಚ್ಚು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಬಲ್ಲ, ಪೂರ್ಣವಾಗಿ ಅನುಭವಿಸಬಲ್ಲ. ಆದರೆ ಹಾಗೆ ಬದುಕಿದ್ದು, ಅನುಭವಿಸಿದ್ದು, ಸ್ಪಂದಿಸಿದ್ದು ಎಲ್ಲ ಅಕ್ಷರವಾಗಿ ಹಾಳೆಯ ಮೇಲೆ ಮೂಡುವುದಕ್ಕೆ ಬೇರೆಯೇ ಪರಿಶ್ರಮ ಬೇಕಾಗುತ್ತದೆ. ಅದು ಬೇರೆಯೇ ಒಂದು ಸಾಹಸ, ಸವಾಲು ಮತ್ತು ಸಾಧನೆ. + +(ಅನುಪಮಾ ಪ್ರಸಾದ್) + +ಭಾಷೆಗೆ ಮೀರಿದ್ದು ತುಂಬ ಇದೆ ಬದುಕಿನಲ್ಲಿ. ಪಂಚೇಂದ್ರಿಯಗಳಿಗೆ ಒದಗಬಹುದಾದ ಎಲ್ಲವನ್ನೂ ಮೀರಿದ್ದು ಕೂಡ ತುಂಬ ಇದೆ ಬದುಕಿನಲ್ಲಿ. ಆದರೆ ಅದನ್ನೆಲ್ಲ ಇನ್ನೊಂದು ಜೀವದ ಅನುಭವಕ್ಕೂ ಬರುವಂತೆ ಮಾಡಲು ಒಬ್ಬ ಸಾಹಿತಿಗೆ ಇರುವುದೆಲ್ಲಾ ಬರೀ ಭಾಷೆಯ ನೆರವೊಂದೇ. ‘ಹಕ್ಕಿಯಂತೆ ಹಾಡಲಾರದ, ಹಾರಲಾರದ’ ಯಕಃಶ್ಚಿತ್ ಮನುಷ್ಯ ತನ್ನ ಕಣ್ಣ ಪೊರೆಯ ಮೇಲೆ ಮೂಡಿದ ಒಂದು ವಿನ್ಯಾಸವನ್ನು ಇನ್ನೊಂದು ಜೀವಕ್ಕೆ ತೋರಿಸಲಾರ. ಅವನು ಇನ್ನೊಂದು ಜೀವಕ್ಕೆ ಬೆಟ್ಟು ಮಾಡಿ ತೋರಿಸಬಹುದಾದ್ದೆಲ್ಲ ಕಣ್ಣಿನ ಹೊರಗಿನ ನೋಟವನ್ನಷ್ಟೇ. ಕಣ್ಣಿನ ಒಳಗಿನ ನೋಟ, ಒಳಗಣ್ಣಿನ ನೋಟ ಎರಡೂ ಸಂವಹನದಲ್ಲಿ ಮುಕ್ಕಾಗುತ್ತದೆ. ಪ್ರತಿಬಿಂಬದ ನೆರವಿಲ್ಲದೆ ಸ್ವತಃ ತನ್ನನ್ನೇ ‘ಸತ್ಯ’ವಾಗಿ, ಪೂರ್ಣವಾಗಿ ಕಾಣಲು ಅವನಿಗೆ ಸಾಧ್ಯವಿಲ್ಲ. ಹಾಗಿದ್ದೂ ಏನೆಲ್ಲವನ್ನು ತೋರಿಸಲು ಭಾಷೆಯ ನೆರವೊಂದನ್ನೇ ಆಧಾರವಾಗಿಟ್ಟುಕೊಂಡು ಅವನು ಹೊರಡುತ್ತಾನೆ. ಅವನಿಗಿರುವ ಮಿತಿಗಳು ಹೆಚ್ಚು. ಅದನ್ನು ಮೀರುವ ಕೌಶಲ, ಕಲೆ, ಸಿದ್ಧಿ ಎಲ್ಲರಿಗೂ ಇರುವುದಿಲ್ಲ. ಅನುಪಮಾ ಏನು ಬರೆದರೂ ಅದನ್ನು ಓದಬೇಕು ಅನಿಸಲು ಇರುವ ಕಾರಣ ಅವರು ಇದೆಲ್ಲದರ ಬಗ್ಗೆ ಸೂಕ್ಷ್ಮವಾದ ಅರಿವಿರುವ, ಇಂಥ ಸಿದ್ಧಿ ತನ್ನದಾಗಬೇಕೆಂಬ ಅತೀವ ಹಂಬಲವುಳ್ಳ ಮತ್ತು ತಪಸ್ಸಿನ ಪಸೆಯಿರುವ ಸಾವಧಾನ, ತಾಳ್ಮೆ, ನಿಧಾನಗಳೆಲ್ಲ ಇರುವ ಕತೆಗಾರ್ತಿಯಾಗಿರುವುದು. ಇದನ್ನು ಇಲ್ಲಿನ ಪುಟಪುಟಗಳಲ್ಲೂ ನೀವು ಕಾಣುತ್ತೀರಿ, ಕಂಡುಕೊಳ್ಳುತ್ತೀರಿ. + +ಇದು ಹಲವು ಸ್ತರಗಳ ಕಾದಂಬರಿ. ಮೊದಲಿಗೆ ಇದು ಒಂದೊ ಎರಡೊ ಕುಟುಂಬದ, ತಲೆಮಾರುಗಳ ಕತೆಯಂತೆ ಕಾಣುತ್ತದೆ. ಕುಂಬಳೆ ಸನಿಹದ ಆನಂದಮಠವನ್ನು ಬಿಟ್ಟು ದೇವನಗರಿಗೆ ಬರುವ ರಾಮಶರ್ಮರ ಕುಟುಂಬ, ಅಲ್ಲಿ ಅವರಿಗೆ ನೆರವಾಗುವ ಅಣ್ಣಯ್ಯ ಬಲ್ಲಾಳರ ಕುಟುಂಬ ಈ ಕಥಾನಕದ ಕೇಂದ್ರ ಎನಿಸುವಾಗಲೇ ಅದು ಕಮ್ಯುನಿಸಂ ತನ್ನ ಮೊದಲ ಹೆಜ್ಜೆಗಳನ್ನು ಊರಲು ನಡೆಸುವ ಪ್ರಯತ್ನಗಳಿಂದ, ಕನ್ನಡಪರ ಹೋರಾಟ ತೀವ್ರಗೊಳ್ಳುವ ವಿದ್ಯಮಾನಗಳಿಂದ ಅಥವಾ ಎಂಡೋಸಲ್ಫಾನ್ ದುರಂತದ ಮೂಲಕ ಇಡೀ ಕಾಸರಗೋಡು ಸೀಮೆಗೆ ಪಸರಿಸಿಕೊಳ್ಳುತ್ತದೆ. ಅದೇ ಕಾಲಕ್ಕೆ ಅದು ಜಯಂತ-ಹರಿಣಾಕ್ಷಿಯರ, ಮಹೇಂದ್ರ-ಸುಭಾಷಿಣಿಯರ, ಮುಕ್ತಾತಾಯಿ-ಜಯವಂತನ, ತಿಮ್ಮಪ್ಪ ಭಟ್ಟ – ಕಲ್ಯಾಣಮ್ಮನವರ, ಶಿವರಾಮನ ಮಾತ್ರವಲ್ಲ, ಇಂಥ ಇನ್ನೂ ಹಲವರ ವೈಯಕ್ತಿಕ ಬದುಕಿಗೂ ಮೊನಚುಗೊಂಡು ವ್ಯಕ್ತಿಗತ ನೆಲೆಯ ನೋಟವನ್ನೂ ಒದಗಿಸುತ್ತ ಸಾಗುತ್ತದೆ. ಏನಿಲ್ಲವೆಂದರೂ ಸುಮಾರು ಐವತ್ತರಷ್ಟು ಪಾತ್ರಗಳು ಇಲ್ಲಿನ ಪ್ರಧಾನ ಭೂಮಿಕೆಯಲ್ಲೇ ನಮ್ಮ ಗ್ರಹಿಕೆಗೆ ಬರುತ್ತವೆ. ಹೀಗೆ ಮಾಡುವಾಗ ಅದು ತನ್ನ ಪ್ರಾದೇಶಿಕ ಪರಿಸರದ ಚಿತ್ರ, ಅಲ್ಲಿನ ಜನಜೀವನದ ಸಂಸ್ಕಾರ, ಜಾತೀಯತೆ, ಕಟ್ಟುಪಾಡುಗಳು, ಭಾಷಾ ವೈವಿಧ್ಯ, ಶಾಲೆ, ಅಡುಗೆ, ಯಕ್ಷಗಾನ, ಕೋಲ, ಹರಕೆ, ಕೃಷಿ, ನಗರದ ಕಾರ್ಪೊರೇಟ್ ಜಗತ್ತು ಎಲ್ಲವನ್ನೂ ಸಹಜವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡೇ ಸಾಗುತ್ತದೆ ಎನ್ನುವುದನ್ನು ಗಮನಿಸಿದರೆ ಈ ಕಾದಂಬರಿಯ ಹರಹು ಮತ್ತು ಅದನ್ನು ನಿರ್ವಹಿಸಿದ ಬಗೆಯಿಂದ ಅದು ಪಡೆದುಕೊಳ್ಳುವ ಗುರುತ್ವ ಅಚ್ಚರಿ ಹುಟ್ಟಿಸುತ್ತದೆ. ಇಷ್ಟು ವಿಶಾಲವಾದ ಒಂದು ಜನಸಮುದಾಯವನ್ನು, ಪ್ರದೇಶವನ್ನು, ಹಲವು ಬದುಕುಗಳನ್ನು ಗಮನದಲ್ಲಿರಿಸಿಕೊಂಡು ಕಥಾನಕವನ್ನು ಹೆಣೆಯುವುದು ಸುಲಭದ ಕೆಲಸವಲ್ಲ. ಅದನ್ನು ಅನುಪಮಾ ಅತ್ಯಂತ ಸೊಗಸಾಗಿ ಮತ್ತು ಸಹಜವಾಗಿ ಮಾಡುತ್ತಾರೆ. + +ಈ ಕಾದಂಬರಿ ಕಥಾನಕ ಪ್ರಧಾನವಾಗಿಯೇ ಇದೆ. ಒಂದಿಷ್ಟು ಮೌನ, ಒಂದಿಷ್ಟು ಅಂತರಂಗದ ಶೋಧ, ಒಂದಿಷ್ಟು ಸ್ವಗತ ಬೇಕೆಂದರೆ ಅದಿಲ್ಲಿ ಸಿಗುವುದು ತನ್ನದೇ ಆದ ಲಯದಲ್ಲಿ, ಕ್ರಮದಲ್ಲಿ. ಉದಾಹರಣೆಗೆ ರಾಮಶರ್ಮರು ತಮ್ಮ ಪತ್ನಿ ರಾಧಮ್ಮನ ಜೊತೆ ತಮ್ಮ ದಾಂಪತ್ಯದ ಪರಾಮರ್ಶನ ನಡೆಸುವ ಪ್ರಸಂಗವೊಂದಿದೆ ಇಲ್ಲಿ. ಮುಕ್ತಾತಾಯಿ ತನ್ನ ಸಹಪಾಠಿ, ಸಹವರ್ತಿ, ಸ್ನೇಹಿತ ಮತ್ತು ಬಾಳ ಸಂಗಾತಿ ಜಯವಂತನಿಂದಾಗಿ ತನ್ನ ಜೀವದ ಹಂಬಲವಾದ ಸಂಗೀತದಿಂದ ವಿಮುಖಳಾದ ಬಳಿಕ ತನ್ನದೇ ಬಗೆಯಲ್ಲಿ ಮನುಷ್ಯ ಸಂಬಂಧ ಮತ್ತು ಬದುಕು ಎರಡನ್ನು ಮುಖಾಮುಖಿಯಾಗಿಸಿ, ತೂಗಿ ಮಾಗುವುದಿದೆ. ಮಹೇಂದ್ರ-ಸುಭಾಷಿಣಿಯರು ತಾವು ಎಂದಿಗೂ ಮಕ್ಕಳನ್ನು ಹೊಂದದೇ ಇರುವಂಥ ನಿಷ್ಠುರ ನಿಲುವಿಗೆ ಬರುವ ಪ್ರಸಂಗವಿದೆ. ಇಂಥ ಇನ್ನಷ್ಟು ಉದಾಹರಣೆಗಳನ್ನು ಕೊಡಬಹುದು. ಆದರೆ ಎಲ್ಲೂ ಅದು ಕಥಾನಕದ ಚಲನೆಗೆ ಸ್ಥಾಗಿತ್ಯವೊಡ್ಡಿ ಅಂತರಂಗದ ಮೊನಲಾಗುಗಳಿಗೆ ಹೊರಳದಂತೆ ಅನುಪಮಾ ತಮ್ಮ ನಿರೂಪಣೆಯನ್ನು ಸಾಗಗೊಡುತ್ತಾರೆ. ಕತೆ ಸಾಗುತ್ತಲೇ ಇರುತ್ತದೆ, ಅದು ನಿಲ್ಲುವುದಿಲ್ಲ ಬದುಕಿನಂತೆಯೇ, ಹರಿವ ನದಿಯಂತೆಯೇ. ಎಲ್ಲಿಯೂ ಭಾರವೆನಿಸದ, ಸಹಜವಾದ ಬದುಕಿನ ನಡೆಯಂತೆ ಸಾಗುವ ಕಥಾನಕವು ಮುಗಿದಾಗಲೇ ಅದರ ಹರಹು, ವ್ಯಾಪ್ತಿ ಮತ್ತು ಗಹನತೆ ಅರಿವಿಗೆ ಬಂದು ಒಂದು ಸಾರ್ಥಕ ಭಾವ ಮೂಡಿಸುತ್ತದೆ, ಜಿಜ್ಞಾಸೆಗಳನ್ನೊಡ್ಡುತ್ತದೆ. + +ಭಾವ ಜಗತ್ತಿನ ವೈಭವೀಕರಣಕ್ಕಿಂತ ಪ್ರಜ್ಞಾವಂತಿಕೆಯ ನಿರೂಪಣೆಗೆ ಹೆಚ್ಚಿನ ಆದ್ಯತೆ ನೀಡಿ ಕಥಾನಕವನ್ನು ನಡೆಸಿರುವ ವಿಧಾನವಿದೆಯಲ್ಲ, ಅದು ಕುತೂಹಲ ಮೂಡಿಸುತ್ತದೆ. ವಿಶೇಷತಃ ಭಾವುಕ ಸನ್ನಿವೇಶಗಳಿಂದ, ಎಲ್ಲೋ ಒಂದು ಕಡೆ ಓದುಗನ ಹೃದಯವನ್ನು, ಮನಸ್ಸಿನ ಸೂಕ್ಷ್ಮವನ್ನು ಕಾವ್ಯಮಯ ಭಾಷೆಯ ನಾದದಿಂದ ಮೀಟಿ ಓದುಗನನ್ನು ಸೆಳೆದುಕೊಳ್ಳುವ ಬರವಣಿಗೆಗೆ ವಿಶೇಷವಾದ ಮನ್ನಣೆ, ಆದರ ಸಿಗುತ್ತಿರುವ ದಿನಗಳಿಂದ ತೊಡಗಿ ಅವೆಲ್ಲ ಕ್ಲೀಷೆಯಾಗಿ ಬಿಟ್ಟ ಹಂತದ ವರೆಗಿನ ಸಾಹಿತ್ಯವನ್ನು ಕಾಣುವಾಗ ಇದು ಗಮನಾರ್ಹವಾದ ಒಂದು ಡೈವರ್ಷನ್ ಅನಿಸುತ್ತದೆ. ಮನುಷ್ಯನನ್ನು ಆರ್ದ್ರಗೊಳಿಸುವ, ಅವನ ಸಂವೇದನೆಗಳನ್ನು ಸೂಕ್ಷ್ಮಗೊಳಿಸುವ, ಅವನಲ್ಲಿನ ಸತ್ – ಅನ್ನು ಜಾಗೃತಗೊಳಿಸುವ ಮೂಲಕ ಅವನನ್ನು ಹೆಚ್ಚು ಹೆಚ್ಚು ಮನುಷ್ಯನನ್ನಾಗಿಸುವ ಸಾಹಿತ್ಯ ಸದಾ ಕಾಲ ಅಪೇಕ್ಷಣೀಯ ಎನ್ನುವಾಗಲೇ ಅವನ ಔದಾರ್ಯ, ಆದರ್ಶ ಮತ್ತು ಮುಕ್ತ ಮನಸ್ಸು ‘ಶಾಂತಿಕಾಲ’ದ ಮನಸ್ಥಿತಿಯಾಗಿಯೇ ಒದಗುವುದಲ್ಲದೆ ‘ಯುದ್ಧಕಾಲ’ದ ಮನಸ್ಥಿತಿಯಾಗಿ ಯಾವ ಓದುಗನಿಗೂ, ಸ್ವತಃ ಅಂಥ ಸಾಹಿತಿಗೂ ರಕ್ತಗತವಾಗುವುದೇ ಇಲ್ಲ ಎನ್ನುವ ಸತ್ಯವನ್ನು ನಾವು ಮರೆಯಬಾರದು. ಎಷ್ಟೇ ಓದಿ, ತಿಳಿದುಕೊಂಡು, ಜಾಣರಾಗಿದ್ದೇವೆಂದುಕೊಂಡರೂ ನಮ್ಮ ದುರ್ಬಲ ಘಳಿಗೆಯಲ್ಲಿ ನಮ್ಮ ತಿಳಿವು ಕೈಹಿಡಿಯುವುದಿಲ್ಲ, ಸ್ವಭಾವ ವಿಜೃಂಭಿಸುತ್ತದೆ ಎನ್ನುವುದೇ ನಿಜ. ಹಾಗಿದ್ದರೆ ನಮಗೆ ಮಹಾಭಾರತವೊಂದೇ ಸಾಕಿತ್ತು, ಮನುಷ್ಯ ಹೇಗೆ ಬಾಳ್ವೆ ನಡೆಸಬೇಕು ಎನ್ನುವುದನ್ನು ತಿಳಿದುಕೊಳ್ಳಲು. ಅತ್ಯಂತ ಮಾನವೀಯ ಕಳಕಳಿಯನ್ನು, ಹೃದಯವಂತಿಕೆಯನ್ನು, ಕಕ್ಕುಲಾತಿಯನ್ನು ಭಾಷೆಯಲ್ಲಿ ಕಲ್ಲು ಕೂಡ ಕರಗುವಂತೆ ಬರೆಯುವ ಸಾಹಿತಿ ಕೂಡ ತನ್ನ ಬದುಕಲ್ಲಿ ಕ್ರೌರ್ಯವನ್ನು, ಹಿಂಸೆಯನ್ನು, ಅಸೂಯೆಯನ್ನು, ಸಣ್ಣತನವನ್ನು ಎಷ್ಟರ ಮಟ್ಟಿಗೆ ಮೀರಿದ್ದಾನೆ ಎನ್ನುವುದನ್ನು ವಿವೇಚಿಸಿ ನೋಡಿದರೆ ಎಲ್ಲೋ ಇವೆಲ್ಲ ಸಂವೇದನೆಗಳೂ ಪ್ರಸಿದ್ಧಿಗೆ, ಲಾಭಕ್ಕೆ ಬಳಸಿಕೊಳ್ಳುವ ಸರಕುಗಳಾಗಿ ಬಿಟ್ಟಿವೆ ಅನಿಸುತ್ತದೆ. ಆ ನಿಟ್ಟಿನಲ್ಲಿ ಅನುಪಮಾ ಅವರ ನಿಲುವು ಗಮನಾರ್ಹವಾಗಿದೆ ಮಾತ್ರವಲ್ಲ ಕಾದಂಬರಿಯಲ್ಲಿ ಹರಿಣಾಕ್ಷಿ ತೆಗೆದುಕೊಳ್ಳುವ ಒಂದು ವಿಶಿಷ್ಟವಾದ ನಿರ್ಧಾರವನ್ನು ನಾವು ಈ ಹಿನ್ನೆಲೆಯಲ್ಲಿ ನೋಡುವುದು ಕೂಡ ಅಗತ್ಯವಾಗಿದೆ. + + + +ತಲೆಮಾರುಗಳ ಕತೆಯನ್ನು ಹೇಳುವ ಕಾದಂಬರಿಯಾಗಿರುವುದರಿಂದ ಸಹಜವಾಗಿಯೇ ಇದು ಕಾಲಘಟ್ಟದ ದೃಷ್ಟಿಯಿಂದಲೂ ವಿಸ್ತಾರವಾದ ಹರಹು ಉಳ್ಳದ್ದು. ಅಣ್ಣಯ್ಯ ಬಲ್ಲಾಳರ ಮಗ ಧೂಮ ಬಲ್ಲಾಳರ ಮಗ ಶೇಖರ ಬಲ್ಲಾಳರ ಮಗ ರಜನೀಂದ್ರನ ತಲೆಮಾರಿನ ತನಕದ ಕತೆ ಇಲ್ಲಿರುವಂತೆಯೇ ರಾಮಶರ್ಮರ ಮಗ ಶಂಭು ಶರ್ಮರ ಮಗ ಶಿವರಾಮನ ಮಗ ಮಹೇಂದ್ರನ ತನಕದ ಕತೆಯೂ ಇಲ್ಲಿದೆ. ಅಷ್ಟು ಮಾತ್ರವಲ್ಲ, ಮಕ್ಕಳಿಂದ ತೊಡಗಿ ಎಲ್ಲ ವಯೋಮಾನದ ತುಡಿತ-ಮಿಡಿತಗಳನ್ನೂ ಸಂತುಲಿತಗೊಳಿಸಿದ ಒಂದು ಚಿತ್ರವನ್ನು ಕೊಡುತ್ತ ಸಾಗುವ ಸಮನ್ವಯತೆಯನ್ನೂ ಇದು ಸಾಧಿಸಿದೆ. ಇದರಾಚೆ ಬೇರೆ ಬೇರೆ ತಲೆಮಾರಿನಲ್ಲಿ ಜೊತೆಯಾಗುವ ಕೇಚ-ಮಾಚಿಯರ ಮಗ ಜಯಂತ, ಅಡ್ಕ ವಾಸುದೇವ, ಅಡೂರು ಗೋಪರಾಯರು, ಶಬರಾಯರು, ಅಬ್ದುಲ್ಲಾ ಹಾಜಿ, ತಿಮ್ಮಪ್ಪ ಭಟ್ಟರು, ಮುಕ್ತಾತಾಯಿಯರ ಕತೆಯೂ ಇಲ್ಲಿದೆ. + +ಇಲ್ಲಿ ಬದುಕಿನ ಶೈಲಿ ಕಾಲಕಾಲಕ್ಕೆ ಬದಲಾಗುತ್ತ ಬಂದ ಒಂದು ಸುಂದರ ಚಿತ್ರವೂ ನಮಗೆ ಸಿಗುತ್ತದೆ. ಹೋಟೆಲು ಮುಚ್ಚಿ ಕೃಷಿಗೆ ಇಳಿದ ರಾಮಶರ್ಮರ ಮಗ ಶಂಭು ಭತ್ತದ ಬದಲು ಅಡಕೆ ಕೃಷಿಗೆ ಹೊರಳುವ ಮಾತನಾಡಿದಾಗ ರಾಮಶರ್ಮರಿಗೆ ಅದು ಪಥ್ಯವಾಗುವುದಿಲ್ಲ ಹೇಗೋ ಮುಂದೆ ಶೇಖರ ಬಲ್ಲಾಳರ ಮಗ ಮಹೇಶ ಹೊಲಕ್ಕೆ ಮಶೀನು ಇಳಿಸುವ, ರಬ್ಬರು ಬೆಳೆಸುವ ಮಾತನಾಡಿದಾಗಲೂ ಶಂಭು ಶರ್ಮರ ಮಗನ ಸಮಕಾಲೀನನಾದ ಶೇಖರ ಬಲ್ಲಾಳರಿಗೆ ಅದು ಪಥ್ಯವಾಗುವುದಿಲ್ಲ. ಇದೆಲ್ಲ ಹೀಗಿರುತ್ತ ಕ್ರಿಮಿನಾಶಕದ ಭಯಂಕರ ರುದ್ರತಾಂಡವ ಅದಾಗಲೇ ಆ ಸೀಮೆಯಲ್ಲಿ ಎಂಡೊಸಲ್ಫಾನ್ ಹೆಸರಿನಲ್ಲಿ ಸುರುವಾಗಿರುತ್ತದೆ. ಕೃಷಿ ಮಾತ್ರವಲ್ಲ, ಕಾಸರಗೋಡು ಸೀಮೆಯ ಕನ್ನಡ ಪರ ಹೋರಾಟ, ಕೇರಳದಲ್ಲಿ ಕಮ್ಯುನಿಸಂ ಚಳವಳಿ ಕಾಲಿಟ್ಟು ಭೂಹಿಡುವಳಿದಾರರನ್ನು ಕಂಗೆಡುವಂತೆ ಮಾಡತೊಡಗಿದ್ದು ಎಲ್ಲವೂ ಕಾದಂಬರಿಯ ಕಾಲಘಟ್ಟದಲ್ಲಿ ಸಹಜವಾಗಿ ಬಂದು ಹೋಗುತ್ತದೆ. + +ಕೃಷಿ ಎಂದು ನೋಡಿದರೆ ಮಹೇಂದ್ರ-ಸುಭಾಷಿಣಿಯರ ಕಾಲಕ್ಕೆ ಕಾರ್ಪೊರೇಟ್ ಜಗತ್ತಿನ ವಿವರಗಳು ಕಾದಂಬರಿಯ ತೆಕ್ಕೆಯೊಳಕ್ಕೆ ಸೇರಿಕೊಳ್ಳುತ್ತವೆ. ಹಾಗೆಯೇ ಎಂಡೋಸಲ್ಫಾನ್ ದುರಂತದ ರಾಜಕೀಯ ಆಯಾಮಗಳೂ, ಕ್ಷೇತ್ರಮಾಹಿತಿ ಸಂಗ್ರಹದ ನಾಟಕಗಳೂ, ಜನರನ್ನು ತಪ್ಪುಹಾದಿಗೆಳೆಯುವ ಪ್ರಯತ್ನಗಳು ಹೇಗೆ ಸಾಗುತ್ತವೆ ಎನ್ನುವುದೂ ಕಾಣಿಸಿಗುತ್ತದೆ. ರೈತರಿಂದಲೇ ಅದು ಹಾನಿಕಾರಕವಲ್ಲ, ಅದರಿಂದ ಬೆಳೆಗೆ ಒಳ್ಳೆಯದಾಗಿದೆ ಎಂದು ಹೇಳಿಸುವ ಪ್ರಯತ್ನಗಳು, ಅದನ್ನು ಸಮರ್ಥಿಸುವ ವೈಜ್ಞಾನಿಕ ವಿತಂಡವಾದ ಎಲ್ಲ, ಸದ್ಯ ನಾವು ಬದುಕುತ್ತಿರುವ ಜಗತ್ತಿನ ವರ್ಚ್ಯುಯಲ್ ಸತ್ಯಗಳು ಮತ್ತು ವಾಸ್ತವ ಎರಡರ ನಡುವಿನ ಕಂದಕವನ್ನು ಬೆಚ್ಚಿ ಬೀಳುವಂತೆ ಕಣ್ಣೆದುರು ಇಡುತ್ತವೆ. ಆದರೆ ಕಾದಂಬರಿಯಲ್ಲಿ ಯಾವುದಕ್ಕೂ ವಿಶೇಷ ಮಹತ್ವ, ಕೇಂದ್ರವೆಂಬ ಭಾವನೆ ಒದಗದಂತೆ ಈ ವಿದ್ಯಮಾನಗಳು ಸಾಗುತ್ತವೆ. ಅದೇ ರೀತಿ ಈ ಕಾದಂಬರಿಗೆ ಕೇಂದ್ರ ಎನ್ನಬಹುದಾದಂಥ ಪಾತ್ರವಾಗಲಿ, ಕ್ಷೇತ್ರವಾಗಲಿ, ಪ್ರದೇಶವಾಗಲಿ ಇಲ್ಲ. ಹಾಗೆ ಇದೊಂದು ಊರಿನ ಜನಸಮುದಾಯವನ್ನೇ ಕೇಂದ್ರವಾಗಿಟ್ಟುಕೊಂಡು ಸಾಗುವ ಕಾದಂಬರಿ, ಏಕಕಾಲಕ್ಕೆ ಹಲವು ಪಾತಳಿಗಳಲ್ಲಿ ಸಮಾನವಾಗಿಯೂ ಸಮರ್ಥವಾಗಿಯೂ ಮಿಡಿಯುವಂಥದ್ದು. + +ಆನಂದ ಮಠದ, ಪಾನಕಕಟ್ಟೆಯ ಮೂಲದಿಂದ ತೊಡಗಿ ತೊಟ್ಟಿಮನೆಯ ತಪ್ಪಲಿಗೆ ಬಂದ ಕಥಾನಕದ ಕಥಾಕ್ಷೇತ್ರ ಪುಣೆ, ಮುಂಬಯಿ, ಧಾರವಾಡ, ವಾರಣಾಸಿ ಎಂದೆಲ್ಲ ಹರಿಯುತ್ತ ಹಕ್ಕಿ ಹಳ್ಳದ ಹಾದಿ ಊರ್ಧ್ವಮುಖಿಯಾಗಿ ಗಂಗೆಯ ಮಡಿಲಿನ ತನಕ ಹರಿಯುತ್ತದೆ ಎನ್ನುವುದೂ ಒಂದು ವಿಶೇಷ. ಗಂಗೆ ನಮಗೆಲ್ಲ ತಿಳಿದಿರುವಂತೆ ಅಘನಾಶಿನಿ, ಪಾಪನಾಶಿನಿ. ಆದರೆ ಮನುಷ್ಯ ತನ್ನ ಪರಿಸರದ ಮೇಲೆ ನಡೆಸಿದ ನಿರಂತರ ಅತ್ಯಾಚಾರ, ಹಾನಿ, ಅತಿರೇಕಗಳಿಂದ ಅವಳ ಮೈಯ ನರನಾಡಿಗಳೂ ಕೊಳೆತು ನಾರುತ್ತಿವೆ. ಇದೇ ಒಂದು ರೂಪಕದಂತಿದೆ, ಮನುಷ್ಯನ ದುರಾಸೆ, ಸ್ವಾರ್ಥ ಮತ್ತು ಮುಂದಾಲೋಚನೆಯಿಲ್ಲದ ಅತಿರೇಕದ ವರ್ತನೆಗಳಿಗೆ. + +(ನರೇಂದ್ರ ಪೈ) + +ಹೇಗೆ ಈ ಮೈಯೆಲ್ಲ ಹೇಸಿಗೆ, ಕೊಚ್ಚೆಗಳ ಮುದ್ದೆಯಾಗಿ, ವೃಣಗಳ ಮೂಟೆಯಂತಾದ ಗಂಗೆಯನ್ನು ಸಾಕ್ಷಾತ್ಕರಿಸಿ ಎಂಡೋಸಲ್ಫಾನ್ ಹೆಸರಿನಲ್ಲಿ ನಾವು ಭೂತಾಯಿಗೆ ಸಲ್ಲಿಸಿದ ಕೊಡುಗೆಯನ್ನು ಕಣ್ಣಿಗೆ ಕುಕ್ಕುವಂತೆ ಈ ಕಾದಂಬರಿ ತೋರಿಸುತ್ತಿದೆಯೋ ಹಾಗೆಯೇ ದೇವನಗರಿಯಲ್ಲಿ ಇವತ್ತು ಕಾಣುತ್ತಿರುವುದಕ್ಕೂ ಅದರದ್ದೇ ಆದ ಒಂದು ಪರಂಪರೆಯಿರುತ್ತದೆ. ಭೂತಕಾಲದ ಚರಿತ್ರೆ ಇರುತ್ತದೆ. ಯಾವುದನ್ನೂ ನಾವು ಐಸೊಲೇಟ್ ಮಾಡಿ ನೋಡಲು ಸಾಧ್ಯವಿಲ್ಲ ಮತ್ತು ಬಹುಶಃ ಹಾಗೆ ನೋಡಲೂ ಕೂಡದು. ಮತಾಂತರದ ಹೆಸರಿನಲ್ಲಿ ಇಲ್ಲಿ ನಡೆದ ದುರಾಚಾರ, ಕಮ್ಯುನಿಸಂ ಹೆಸರಿನಲ್ಲಿ ನಡೆದ ಕೊಲೆಗಳು, ಹಣದ ಬೆಂಬತ್ತಿ ಕಡಿದುರುಳಿಸಿದ ಕಾಡು, ರಬ್ಬರ್, ಶುಂಠಿ ಎಂದು ಮರುಳುಗಾಡಾದ ಭೂಮಿ, ಕಡಲ ತೀರದ ದಂಧೆಗಳು ಎಲ್ಲವೂ ಯಾವ ಧರ್ಮ/ಇಸಮ್ಮುಗಳ ಹಂಗಿಲ್ಲದ ಪ್ರಕೃತಿಗೆ ಕೇವಲ ಮನುಷ್ಯನ ಅಹಂಕಾರದ ರುದ್ರನರ್ತನವಷ್ಟೇ ಆಗಿರುತ್ತದೆ. ಎಂಡೋಸಲ್ಫಾನ್ ಎಲ್ಲೆಲ್ಲಿ ಉಪಯೋಗಿಸಲ್ಪಟ್ಟಿದೆಯೋ ಅಲ್ಲೆಲ್ಲಾ ಇದೇ ಬಗೆಯ ದುಷ್ಪರಿಣಾಮ ಆಗಿದೆಯೇ ಎನ್ನುವ ದಿಸೆಯಲ್ಲಿ ನೋಡಿದರೆ ಭಾರತದ, ಅದರಲ್ಲೂ ಕೇರಳದ ಮಟ್ಟಿಗೆ ಮಾತ್ರ ದುರಂತದ ಚಿತ್ರ ಕಣ್ಣಿಗೆ ರಾಚುತ್ತದೆ ಎನ್ನುವುದು ಕೂಡ ನಿಜವೇ. ಇದನ್ನೆಲ್ಲ ಪ್ರಾಫೆಟಿಕ್ ಆಗಿ ನೋಡುತ್ತಿದ್ದೇನೆಂದು ತಿಳಿಯುವ ಅಗತ್ಯವಿಲ್ಲ. ಪ್ರಕೃತಿಗೊಂದು ನಿಯಮವಿದೆ, ಅದು, ನಾವು ಅದಕ್ಕೇನು ಮಾಡುತ್ತೇವೋ ಅದನ್ನೇ ಅದು ನಮಗೆ ಮಾಡುತ್ತದೆ! ದೇವರ ಸ್ವಂತ ನಾಡಾದ ಕೇರಳದಲ್ಲಿ ನಡೆಯುತ್ತಿರುವುದನ್ನೆಲ್ಲ ನಾವು ಒಂದು ಸ್ವಸ್ಥ ಮನಸ್ಸಿನಿಂದ ಅರ್ಥಮಾಡಿಕೊಂಡರೆ ಅದರಲ್ಲಿ ಇಡೀ ಮನುಕುಲದ ಹಿತವಿದೆ. ಈ ನೆಲೆಯಿಂದಲೂ ಕಾಸರಗೋಡಿನ ನೆಲದಿಂದ ಬಂದ ಈ ಕಾದಂಬರಿಗೆ ವಿಶೇಷವಾದೊಂದು ಮಹತ್ವವಿದೆ. + +ಇಲ್ಲಿನ ಕಥೆ ಹಲವು ತಲೆಮಾರುಗಳ ಕತೆಯಾಗಿಯೂ, ಕಾಲಘಟ್ಟಗಳಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ಕತೆಯಾಗಿಯೂ, ಜೀವನಶೈಲಿಯಲ್ಲಿನ ಪಲ್ಲಟಗಳ ಕತೆಯಾಗಿಯೂ, ಹಲವು ರಂಗಗಳಲ್ಲಿ ನಡೆದ ವಿದ್ಯಮಾನಗಳ ಕತೆಯಾಗಿಯೂ, ಪರಿಸರದ ದುರಂತಕತೆಯಾಗಿಯೂ ದಾಖಲಾಗುವುದರೊಂದಿಗೆಯೇ ಮನುಷ್ಯ ಸಂಬಂಧಗಳ, ಭಾವನೆಗಳ, ಮೌಲ್ಯಗಳ ಕತೆಯಾಗಿಯೂ ಕೂಡ ನಿಲ್ಲುತ್ತದೆ. ಒಂದು ನೆಲೆಯಿಂದ ನೋಡಿದರೆ ಶೇಖರ-ಶಿವರಾಮರ ಬಾಲ್ಯದಿಂದ ತೊಡಗಿ ವೃದ್ಧಾಪ್ಯದ ವರೆಗಿನ ಅಪೂರ್ವ ಸ್ನೇಹದ ಕಥಾನಕ ಇದು. ಇನ್ನೊಂದು ನೆಲೆಯಿಂದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಹೆಣ್ಣು ನಿರ್ವಹಿಸುವ ಪಾತ್ರವನ್ನು, ಗಂಡು ಕುಸಿದಾಗ ಅವಳೇ ಕುಟುಂಬದ ಸಾರಥ್ಯವನ್ನು ವಹಿಸಿಕೊಂಡು ನಿರ್ವಹಿಸುವ ಅವಳ ಧೈರ್ಯವನ್ನು ಹೇಳುವ ಕಥಾನಕ ಕೂಡ. ಅದು ರಾಧಮ್ಮನಿಂದ ತೊಡಗಿ ಹರಿಣಾಕ್ಷಿಯ ತನಕ ಮತ್ತೆ ಮತ್ತೆ ಕಣ್ಣಿಗೆ ಕಟ್ಟುತ್ತಲೇ ಇರುತ್ತದೆ. + +ಮೂರು ಭಾಗಗಳಲ್ಲಿರುವ ಕಾದಂಬರಿಯ ಅತ್ಯಂತ ಸುಂದರ ಮತ್ತು ಪ್ರಧಾನ ಎನ್ನಿಸುವ ಘಟ್ಟ ಮುಕ್ತಾತಾಯಿಯ ಪ್ರವೇಶದೊಂದಿಗೆ ತೊಡಗುತ್ತದೆ, ಈಕೆ ಒಂದು ಬಗೆಯಲ್ಲಿ ಮಹಾತಾಯಿ. ಧಾರವಾಡದ ಕುಲಕರ್ಣಿ ಮಾಸ್ತರರ ಮಗಳಾಗಿ ಸಂಗೀತಕ್ಕೆ ತನ್ನನ್ನೇ ತೆತ್ತುಕೊಂಡ ಹುಡುಗಿ ಮುಂದೆ ಜಯವಂತನಿಗಾಗಿ ತೆರೆಮರೆಗೆ ಸರಿದು ನಿಲ್ಲುತ್ತಾಳೆ. ಆದರೂ ಅವಳ ಬದುಕು ಸಂಪನ್ನಗೊಳ್ಳುವುದು ಸಂಗೀತದ ಸಾನ್ನಿಧ್ಯದಲ್ಲೇ, ಸಾಂಗತ್ಯದಲ್ಲೇ. ಅದು ಹರಿಣಾಕ್ಷಿಯ ಬದುಕಿಗೆ ಒಂದು ಸುಪ್ತ ಸಾಪೇಕ್ಷವನ್ನೊದಗಿಸುವಂತೆ ಮೂಡಿಬಂದಿರುವುದರಲ್ಲೇ ಈ ಭಾಗದ ಒಟ್ಟಾರೆ ಸಾರ್ಥಕತೆಯಿದೆ. ಕೊಂಚ ರೂಪಕದ ಭಾಷೆಯಲ್ಲಿ, ಪ್ರತಿಮಾ ವಿಧಾನವನ್ನು ನೆಚ್ಚಿಕೊಂಡು ಸುಂದರವಾಗಿ ಮೂಡಿ ಬಂದಿರುವ ಈ ಭಾಗದಲ್ಲಿ ಗಂಗೆ, ಕಾಶಿ, ಮೃತ್ಯುಪ್ರಜ್ಞೆ, ಆಧ್ಯಾತ್ಮ ಎಲ್ಲವೂ ಮೇಳೈಸಿದೆ. ಇಲ್ಲಿ ಕಾಶಿಯಲ್ಲಿ ಜಯಂತ, ಮಹೇಂದ್ರ, ಬಲ್ಲಾಳರು – ಪ್ರತಿಯೊಬ್ಬರಿಗೂ ಒಂದೊಂದು ಬಗೆಯ ಅನುಭೂತಿಯಾಗುತ್ತದೆ. ಅದರ ಅರ್ಥವೇನೆಂಬುದಕ್ಕಿಂತ ಹೆಚ್ಚು ಮಹತ್ವದ ಪ್ರಶ್ನೆ, ಈ ಬದುಕಿನ ಅರ್ಥವೇನೆಂಬುದೇ. ನಮ್ಮ ಬದುಕು ಕೂಡಾ ನಮಗೆ ಸರಿಯಾಗಿ ಅರ್ಥವಾಗುವುದರೊಳಗೆ ಒಂದು ಕ್ಷಣಭಂಗುರ ಅನುಭೂತಿಯಂತೆ ಕಣ್ಮರೆಯಾಗಿ ಬಿಡುತ್ತದೆ. + + + +ಒಂದು ಅದ್ಭುತವಾದ ಜೀವನದರ್ಶನದ ಕಥಾನಕವನ್ನು ಕಾದಂಬರಿಯಾಗಿ ಕಟ್ಟಿಕೊಟ್ಟ ಅನುಪಮಾ ಪ್ರಸಾದ್ ಅವರಿಗೆ ಅಭಿನಂದನೆಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_334.txt b/Kenda Sampige/article_334.txt new file mode 100644 index 0000000000000000000000000000000000000000..e3490e9b65b6e72a8d6f102a5e1b830f1d016d4d --- /dev/null +++ b/Kenda Sampige/article_334.txt @@ -0,0 +1,97 @@ + + +ನದೀಮ ಸನದಿ ಬೆಳಗಾವಿ ಸಮೀಪದ ಶಿಂದೊಳ್ಳಿ ಗ್ರಾಮದವರು. ಇವರು ನಿರ್ಮಾಣ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರರು. ಸದ್ಯಕ್ಕೆ ಬೆಳಗಾವಿಯ ಜೈನ್ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಈಚಿನ ದಶಕಗಳಲ್ಲಿ ಭಾಷಾ ವಿದ್ಯಾರ್ಥಿಗಳ ಹೊರತಾಗಿ ವಿವಿಧ ಕ್ಷೇತ್ರಗಳ ವಿದ್ಯಾರ್ಥಿಗಳೂ ಸಾಹಿತ್ಯವನ್ನು ಅಭಿವ್ಯಕ್ತಿ ಮಾಧ್ಯಮವಾಗಿ ಸ್ವೀಕರಿಸಿ ಹೊಸ ಅನುಭವಗಳನ್ನು ಹೊಸ ಅಭಿವ್ಯಕ್ತಿ ವಿಧಾನಗಳ ಮೂಲಕ ಪ್ರಕಟಿಸುತ್ತಿದ್ದಾರೆ. ಇದು ಸ್ವಾಗತಾರ್ಹ ಬೆಳವಣಿಗೆ. + +ನದೀಮ್ ಅವರು ಮಾನವ್ಯ ಕವಿಯೆಂದು ಹೆಸರುಗೊಂಡ ಕನ್ನಡದ ಖ್ಯಾತ ಕವಿ ಬಿ ಎ ಸನದಿ ಅವರ ಸಹೋದರನ ಮಗ. ಹಾಗೆ ನೋಡಿದರೆ ಇಡೀ ಸನದಿ ಕುಟುಂಬವೇ ಕನ್ನಡ ಸಾಹಿತ್ಯ ಸಂಸ್ಕೃತಿಯ ಭಾಗವಾಗಿದ್ದಾರೆ. ಉರ್ದು ಮನೆಮಾತಿನ ನದೀಮ ಚಾರಿತ್ರಿಕವಾಗಿ ಎರಡು ಕರ್ತವ್ಯಗಳನ್ನು ನಿರ್ವಹಿಸುವ ತಮ್ಮ ಕುಟುಂಬದ ನಡೆಯನ್ನು ಇನ್ನೊಂದು ಪೀಳಿಗೆಗೆ ಮುಂದುವರಿಸಿದ್ದಾರೆ. ಎರಡು ಕರ್ತವ್ಯಗಳು ಎಂದರೆ ಒಂದು ಭಾಷಿಕ ಅನುಸಂಧಾನ ಇನ್ನೊಂದು ಧಾರ್ಮಿಕತೆಯು ರೂಪಿಸುವ ಮಾನವ ಸಮಾಜ, ಸಂಸ್ಕೃತಿಯ ಅನುಸಂಧಾನ. + +ತಮ್ಮ ಕಾವ್ಯವನ್ನು ಕುರಿತು ಸನದಿ ಹೇಳುವ ಮಾತು:ಕ್ರಾಂತಿಯ ಹಕ್ಕಿಗೆ ಶಾಂತಿಯ ರೆಕ್ಕೆ ಕಟ್ಟುವ ಯತ್ನಎಂಬುದು. ಇದು ಅವರ ಇಲ್ಲಿನ ಕವಿತೆಗಳ ಮ್ಯಾನಿಫೆಸ್ಟೋ ಎಂದರೂ ಸರಿಯೇ. ಮೊದಲಿಗೆ ಬ್ರೆಕ್ಟ್ ಅವರ ಕವಿತೆಯೊಂದರ ಮೂರು ಸಾಲುಗಳನ್ನು ನದೀಮ ನಮ್ಮ ಮುಂದಿಡುತ್ತಾರೆ ಅದು,“ದುರಿತ ಕಾಲದಲ್ಲಿ ಹಾಡುತ್ತಿರಬೇಕುಹೌದು ಹಾಡುತ್ತಿರಬೇಕುದುರಿತಕಾಲದ ಹಾಡನ್ನು…” + +(ನದೀಮ ಸನದಿ) + +ಬ್ರೆಕ್ಟನ ಈ ಮೂರು ಸಾಲುಗಳು ಮನಸ್ಸಾಕ್ಷಿಯ ಲೇಖಕನೊಬ್ಬನ ಕರ್ತವ್ಯವನ್ನು ಸದಾ ನೆನಪಿಸಲು ಶಕ್ತವಾದದ್ದು. ಇವತ್ತಿನ ಭಾರತದ ಸಾಮಾಜಿಕ ಸಂರಚನೆ ಎಲ್ಲ ಕವಿಗಳಿಗೂ ಅದರಲ್ಲೂ ಮುಸ್ಲಿಂ ಕವಿಗಳಿಗೆ ಒಂದಕ್ಕಿಂತ ಹೆಚ್ಚು ಬಗೆಗಳಲ್ಲಿ ಸೂಕ್ಷ್ಮವಾದ ಸಂಕಟಗಳನ್ನು ತಂದೊಡ್ಡುತ್ತದೆ. ಅದು ಭಿನ್ನ ಸಂಸ್ಕೃತಿಗಳ ಒಪ್ಪಿತ ಗೃಹೀತಗಳನ್ನು ದಾಟಿ ಹೊಸ ಜಗತ್ತಿನ ಕಡೆಗೆ ಸಮಾಜವನ್ನು ನಡೆಸುವ ಸಂಕಟ. ಈ ಸಂಕಟದ ನಿರ್ವಹಣೆಯನ್ನು ನದೀಮ ಜವಾಬ್ದಾರಿ ಮತ್ತು ಜರೂರತ್ತು ಎಂದು ಬಗೆಯುತ್ತಾರೆ. + +ಅವರು ತಮ್ಮ ಕೃತಿಗಳಿಗೆ ಬರೆದಿರುವ ಮುನ್ನುಡಿ ರೂಪದ ಬರಹ ಜಾತಿಯ, ಧರ್ಮದ, ಅಂತಸ್ತುಗಳ ಸಂಕೋಲೆಗಳನ್ನು ಮುರಿಯಬಯಸುವ ಆಧುನಿಕ ತರುಣನೊಬ್ಬ ತನ್ನ ಸಮಕಾಲೀನ ಸ್ಥಿತಿಯ ಸಂಕಟಗಳನ್ನು ಪರಿಭಾವಿಸುವ ಬಗೆಗೆ ಬೆಳಕು ಚೆಲ್ಲುತ್ತದೆ. ತಾನು ನಂಬಿರುವ ಜೀವನದ ತಾತ್ವಿಕತೆ, ಸಾಮಾಜಿಕ ಸಮತೋಲನ, ಆಧುನಿಕ ಮನೋಧರ್ಮ ಇವುಗಳು ಎಲ್ಲೆಡೆ ಸಾರ್ವತ್ರಿಕವಾಗಿ ಹಬ್ಬುತ್ತಿರುವ ಮೂಲಭೂತವಾದಿ ಮನೋಧರ್ಮದ ಎದುರು ಹೇಗೆ ನಿಲ್ಲುವುದು ಎಂಬ ವಿಚಾರವನ್ನು ಇವರ ಕಾವ್ಯ ಕಣ್ಣ ಮುಂದೆ ಇರಿಸಿಕೊಂಡಿವೆ. + +ಜೊತೆಗೆ ನದೀಮ ಅವರ ಕಾವ್ಯದ ಕೇಂದ್ರದಲ್ಲಿರುವುದು ಜನಾಂಗ ದ್ವೇಷ ಹಾಗೂ ಪ್ರತೀಕಾರಗಳ ಮೂಲಕ ಬಿತ್ತಲಾಗುತ್ತಿರುವ ಮನೋದೈಹಿಕ ಹಿಂಸೆಗಳು ಹಾಗೂ ಅವು ಉಂಟುಮಾಡುವ ಅನೇಕ ಬಗೆಯ ಕ್ಷೋಭೆ ಹಾಗೂ ಅದರ ವಿರುದ್ಧ ಮಾನಸಿಕ ಶಕ್ತಿಯೊಂದನ್ನು ಸಂಘಟಿಸಿಕೊಳ್ಳುವ ಪ್ರಯತ್ನ. ಈ ಪ್ರಶ್ನೆಗಳೇ ಅವರನ್ನು ಉಳಿದ ಎಲ್ಲಕ್ಕಿಂತ ಹೆಚ್ಚು ಕಾಡಿದೆ ಎನಿಸುತ್ತದೆ. ಹಾಗಾಗಿ ಅವರ ಸಂಕಲನದ ಮೊದಲನೆಯ ಕವಿತೆಯ ಶೀರ್ಷಿಕೆ ‘ಪ್ರಶ್ನೆ’. ಹಾಯ್ಕು ಮಾದರಿಯ ಈ ಕವಿತೆ ಎರಡೇ ಸಾಲಿನ ಕವಿತೆ. ಆ ಎರಡು ಸಾಲು ‘ಉತ್ತರದ/ ಹುಡುಕಾಟದಲ್ಲಿದ್ದೇನೆ/ ಎನ್ನುವುದು. ಇದೊಂದು ಬಗೆಯಲ್ಲಿ ಎಲ್ಲ ಕಾಲಕ್ಕೂ ಉಳಿದುಬಿಡುವ ತಲ್ಲಣದ ಹಾಗೆ ಗೋಚರಿಸಿದರೆ ಅದು ಕವಿಯ ತಪ್ಪಲ್ಲ. ಸದಾಕಾಲ ಮನಸ್ಸಿನಲ್ಲಿ ಹಿಂಸೆಯ ಅನೀತಿಯನ್ನು, ಹಿಂಸೆ ತಂದೊಡ್ಡುವ ಸಾಮಾಜಿಕ ಕ್ಷೋಭೆಯನ್ನು ಎದುರುಗೊಳ್ಳುವ ಕವಿ ಎಲ್ಲೆಡೆಯಲ್ಲೂ ಕಾಡ್ಗಿಚ್ಚನ್ನು ಕಾಣುತ್ತಾನೆ. ಈ ಕಾಡ್ಗಿಚ್ಚು ಸುಡುವುದು ಕಾಡನ್ನು ಅಷ್ಟೇ ಅಲ್ಲ. ಹಬ್ಬುತ್ತ ಹಬ್ಬುತ್ತ ಜೀವಗಳ ಸುಡುತ್ತಾ ಕೊನೆಗೆ ಊರು ತಲುಪಿದೆ ಈ ಕಾಡ್ಗಿಚ್ಚು. ಈ ಕಾಡ್ಗಿಚ್ಚಿಗಿಂತಲೂ ಭಯಾನಕವಾಗಿರುವುದು ಮನುಷ್ಯನ ಮನಸ್ಸಿನಲ್ಲಿ ಹುಟ್ಟಿ ಮನುಷ್ಯ-ಮನುಷ್ಯರ ಮನೆಗಳಲ್ಲಿ ಹೊತ್ತಿ ಉರಿಯುತ್ತಿರುವ ಕ್ರೋಧಾಗ್ನಿ. ಈ ಕ್ರೋಧಾಗ್ನಿಯ ಮುಂದೆ ಕಾಡ್ಗಿಚ್ಚು ಕೂಡಾ ತಣ್ಣಗಾಗಿಬಿಡುವ ಚಿತ್ರವನ್ನು ನಮ್ಮ ಮುಂದಿಡುವ ನದೀಮರು ಮಾನವ ಸೃಷ್ಟಿಯ ಹಿಂಸೆಯು ಉಳಿದ ಎಲ್ಲಾ ವಿನಾಶಕಾರಿ ಘಟಕಗಳಿಗಿಂತ ಮಾರಕ ಎಂದು ಬಣ್ಣಿಸುತ್ತಾರೆ. + +ಈ ಕವಿತೆಯ ಸಾಂಕೇತಿಕ ಮುಂದುವರಿಕೆ ಎಂಬಂತೆ ನಮ್ಮನ್ನು ಎದುರುಗೊಳ್ಳುವುದು ಒಂದು ಗಾಳಿಗೋಡೆ. ಅದೇ ಗಾಳಿಯಲ್ಲಿ ತೇಲುತ್ತಾ/ ನಿನ್ನತ್ತ ಧಾವಿಸುತ್ತಿರುವುದು/ ಬಿರುಕುಗಳನ್ನು ಹುಡುಕಿ/ ಹುಡುಕುವ ಇಲಿಯಂತೆ. ಇದು ಮನೆಯೊಳಗೆ ಮನದೊಳಗೆ ತೂರಿಕೊಂಡರೆ ನಮ್ಮ ಸಂಸ್ಕಾರವೆಂಬ ಗೋಡೆಯನ್ನೇ ಕೊರೆದು ಬಿಡುತ್ತದೆ. ಹಾಗಾಗಿ ಕಾಡ್ಗಿಚ್ಚುಗಳು ಬಿರುಬಿರುಸಾಗಿ ಹಬ್ಬುತ್ತಿರುವಾಗಲು ನಂಬಿಕೆಯ ಗೋಡೆ ದೃಢವಾಗಿ ನಿಂತಿರಲಿ ಎಂದು ಕವಿ ಆರೋಗ್ಯಪೂರ್ಣವಾಗಿ ಬಯಸುತ್ತಾರೆ. + +ಗಾಳಿ ಮಾತೊಂದುಅದೇ ಗಾಳಿಯಲಿ ತೇಲುತ್ತನಿನ್ನತ್ತ ಧಾವಿಸುತ್ತಿದೆನಂಬಿಕೆಯ ಗೋಡೆದೃಢವಾಗಿ ನಿಂತಿರಲಿ + +ಈ ಹಿಂದೆ ನದೀಮರ ಕಾವ್ಯದ ಕೇಂದ್ರ ಬಗೆಬಗೆಯ ಹಿಂಸೆ ಎಂದು ಗುರುತಿಸಲಾಗಿದೆ. ಅವರ ಇನ್ನೊಂದು ಕವಿತೆ ಗಲಭೆ. ಗಲಭೆಯಲ್ಲಿ ಹೊತ್ತಿ ಉರಿಯುತ್ತಿರುವ ಮನೆಗಳ ಚಿತ್ರವೊಂದು ನಿರ್ಮಾಣವಾಗಿದೆ. ಅದರಲ್ಲಿ ಒಬ್ಬ ಪೇದೆಯ ಮನೆಗೆ ಗಲಭೆಕೋರರು ಬೆಂಕಿ ಹಚ್ಚಿದ್ದಾರೆ. ಅದೇ ಪೇದೆ ಉರಿಯುತ್ತಿರುವ ಇನ್ನೊಂದು ಮನೆಯ ಬೆಂಕಿಯನ್ನು ಆರಿಸುತ್ತಿದ್ದಾರೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದದ್ದು ಗಲಭೆಗೆ ಪ್ರತಿಯಾಗಿ ಗಲಭೆ ಉತ್ತರವಾಗಲಾರದು ಎನ್ನುವ ಕವಿಯ ನಿಲುವು. ಬುದ್ಧನ, ಯೇಸುವಿನ, ಗಾಂಧೀಜಿಯ, ಬಸವಣ್ಣನ ಪಾಠಗಳು ಅವು. ಯಾವುದೇ ಸ್ವಸ್ಥ ಮನಸ್ಸಿನ ವ್ಯಕ್ತಿ ಪ್ರತೀಕಾರಕ್ಕೆ ಸಿದ್ಧನಾಗುವುದಿಲ್ಲ. ಬದಲಿಗೆ ಗಲಭೆಕೋರರ ಮನದ ಬೆಂಕಿಯನ್ನು ಆರಿಸುತ್ತ ಶ್ರಮಿಸುತ್ತಾನೆ ಎನ್ನುವ ನಂಬಿಕೆಯನ್ನು ಕಾಣಬಹುದಾಗಿದೆ. ಇದು ಕಾವ್ಯಕರ್ಮದ ಉದ್ದೇಶವೂ ಹೌದು. + +ಇಷ್ಟೆಲ್ಲ ವಿಷಮ ಪರಿಸ್ಥಿತಿಯಲ್ಲಿ ತಾನು ಇದ್ದಾಗ್ಯೂ ಸ್ವಸ್ಥ ಮನಸ್ಸಿನ ಕವಿಯೊಬ್ಬ ಕಾಣಬಯಸುವುದು ಒಂದು ಬೀಜವನ್ನಾಗಿ. ಒಳಿತನ್ನು ಒಡಲೊಳಗೆ ಇರಿಸಿಕೊಂಡ, ಬಿತ್ತಿದರೆ ಒಳಿತನ್ನೇ ಬೆಳೆವ ನಿಜವಾದ ಬೀಜವದು. ಈ ಸಾಲುಗಳನ್ನು ನೋಡಿ. + +ನಾನು…..ಒಂದು ಬೀಜವಾಗಲುಬಯಸುತ್ತೇನೆಕೆಳಕ್ಕೆ ಬಿದ್ದರೂಕಳೆದು ಹೋಗುವುದಿಲ್ಲಒಡೆದು ಚಿಗುರುತ್ತೇನೆನೆಲದಿಂದೆದ್ದು ಮೇಲೆ ಬರುತ್ತೇನೆಹತ್ತಾರು ಬೀಜಗಳಿಗೆಜನ್ಮ ನೀಡುತ್ತೇನೆ + +ಇದು ರಕ್ತಬೀಜಾಸುರನ ರಕ್ತದ ತೊಟ್ಟುಗಳ ಹಾಗೆ ರಕ್ಕಸರಿಗೆ ರಕ್ತಪಿಪಾಸು ಜನ್ಮ ನೀಡುವುದಿಲ್ಲ. ಆಗ ಬಯಸುವುದು ಮಾನವೀಯ ನೆಲೆಯಲ್ಲಿಯೇ ಬದುಕುವ, ಈ ತರದ ಬದುಕು ಕಟ್ಟುವ ಬೀಜದಂತೆ. + +ಕವಿ ಬಿ ಆರ್ ಲಕ್ಷ್ಮಣರಾವ್ ತಮ್ಮ ‘ಕ್ವಿಕ್ಸೋಟ್’ ಕವಿತೆಯಲ್ಲಿ ಬರೆಯುತ್ತಾರೆ; ‘ಕ್ಷಮಿಸು ಇತಿಹಾಸವೇ, ನಿನ್ನ ಪಾಠಗಳಿಂದ ಕಲಿಯಲಾರದೆ ಹೋದ ಹೆಡ್ಡ ನಾನು’ಎಂದೇನೋ ಈ ಸಾಲುಗಳಿವೆ. ಮನುಕುಲದ ಕಾರ್ಪಣ್ಯಗಳಿಗೆ ಚರಿತ್ರೆಯ ವಿಸ್ಮೃತಿಯೇ ಕಾರಣವಾಗಿದೆ. ಆದರೆ ಈಗ ಇದರ ಜೊತೆಗೆ ಇರುವ ಇತಿಹಾಸ ಪುನಾರಚನೆಯ ಹುಮ್ಮಸ್ಸು ಸಾಮಾಜಿಕ ನೆಮ್ಮದಿಗೆ ಆತಂಕಕಾರಿಯಾಗಿದೆ. ‘ಚರಿತ್ರೆಯ ಮಹಾ ಮುಟ್ಠಾಳರು ನಾವು’ ಎಂಬ ಕವಿತೆಯಲ್ಲಿ ಸನದಿ ಹೊಸ ಇತಿಹಾಸ ಹಾಸುವ ಭರದಲ್ಲಿನ, ಇತಿಹಾಸ ಕ್ರಮಿಸಿದ ಹಾದಿಯ ಅರಿವಿಲ್ಲದೆ ಅದರ ಜಾಡನ್ನು ಬದಲಿಸಿಬಿಡುವ, ಅದನ್ನು ಅಳಿಸಿ ಬೇರೆ ಬರೆಯುವ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಮನಸ್ಸುಗಳನ್ನುಚಿತ್ರಿಸುತ್ತಾರೆ. ಇವರಲ್ಲಿ ಇರುವ ತಿಳಿವಳಿಕೆ ಸುಮ್ಮನೆ ವಿದ್ಯಮಾನಗಳನ್ನು ಚರಿತ್ರೆಯು ಗಮನಿಸುತ್ತಾ ಇರುತ್ತದೆ ಎಂಬುದು. + +ಕೆಲವು ಸಾಲುಗಳನ್ನುಕೆಲವು ನಾಮಗಳನ್ನುಕೆಲವು ಮಾತುಗಳನ್ನುಕೆಲವು ಅರ್ಥಗಳನ್ನುಕೆಲವು ಯೋಚನೆಗಳನ್ನುಕೆಲವು ಯೋಜನೆಗಳನ್ನುಅಳಿಸಿ ಹಾಕುವ ಹುನ್ನಾರ + +ಆದರೆ‘ಇಷ್ಟೆಲ್ಲ ಹೊಲಿಗೆ/ ಸುಲಿಗೆ ನಡೆಯುತಿರುವಾಗ/ ಎಲ್ಲವನೂ ಸುಮ್ಮನೇ ಗಮನಿಸುತ್ತಿದೆ/ ಚರಿತ್ರೆ ಮಂದಹಾಸ ಬೀರುತಿದೆ/’ಎಂದಿನಂತೆ ಮನುಷ್ಯ ಸದಾಕಾಲ ತನ್ನ ಭೂತವನ್ನು ಹೊತ್ತುಕೊಂಡೇ ಇರುತ್ತಾನೆ. ಬೆನ್ನುಹತ್ತಿದ ಭೂತ ಎಂಬ ಕವಿತೆಯಲ್ಲಿ ಈ ಭೂತವನ್ನು ಕಳಚುವ ನಿಟ್ಟಿನಲ್ಲಿ ಸೋಲುವ ಮನುಷ್ಯ ಕುಲವನ್ನು ಇನ್ನೆಸ್ಕೇಪಬಲ್ ಎಂಬ ವರ್ತಮಾನದ ಪರಿಸ್ಥಿತಿಯಲ್ಲಿ ನದೀಮ ಸ್ಥಾಪಿಸುತ್ತಾರೆ. + +ಮನುಷ್ಯಜೀವ ತಾನು ಬೆಳೆಯುತ್ತ ಬೆಳೆಯುತ್ತ ಹೋದಂತೆ ಬದುಕಿನ ಆನಂದಗಳನ್ನು ಕಟ್ಟಿಕೊಳ್ಳುತ್ತಾ, ನೆನಪುಗಳನ್ನು ಸುಂದರಗೊಳಿಸಿಕೊಳ್ಳುತ್ತಾ ಇರಬೇಕಾಗುತ್ತದೆ. ಆದರೆ ನಿನ್ನೆ ಇಂದು ಕವಿತೆಯಲ್ಲಿ ಕವಿ ಬೆಳೆದು ನಿಂತಿರುವುದು ಭವಿಷ್ಯದ ಚಿಂತೆಯಲ್ಲಿ ದಿನವೂ ಕೊರಗುತ್ತಾ ನಿಲ್ಲುವುದಕ್ಕೆ. ನದೀಮ ಅವರ ಮೂಲ ಆಶಯವೇ ಅಸಮಾನತೆಯ ನಾಶ, ಜಾತಿ-ಮತ ಪಂಥ – ಧರ್ಮಗಳ ಸಂಕೋಲೆಯಿಂದ ಮನಸ್ಸುಗಳ ವಿಮೋಚನೆ. ಅಮಾಯಕರಲ್ಲಿ ದ್ವೇಷದ ಬೀಜ ಬಿತ್ತುವವರು, ಲಂಚಕೋರರು, ಸತ್ಯ ಮಾರ್ಗ ತೋರುವವರನ್ನು ಕೊಲ್ಲುವ ಮನಸ್ಥಿತಿಗಳ ಕಂಡು ಅಲ್ಲೇನಾದರೂ ಒಳ್ಳೆಯದು ಒಂದನ್ನು ನೀಡಲು ಸಾಧ್ಯವೇ ಎಂದು ಹಂಬಲಿಸಿ, ಪ್ರಯತ್ನಿಸಿ, ಹೆಣಗಾಡಿ ಸೋತವರ ಕಂಡು ಕಣ್ಣೀರು ಸುರಿಸುವುದಕ್ಕೆ. ಅವರು ಮೊದಲನೆಯ ಕವಿತೆಯಲ್ಲಿ ಬರೆದುಕೊಂಡಂತೆ ಇಲ್ಲಿಯೂ ತಮ್ಮ ಅಸಹಾಯಕತೆಗೆ ಉತ್ತರ ಹುಡುಕುತ್ತಿದ್ದಾರೆ. + +ಬೆಳೆದು ನಿಂತಿದ್ದೇನೆ/ಭವಿಷ್ಯದ ಚಿಂತೆಯಲಿ/ದಿನವೂ ಕೊರಗುತ್ತಿದ್ದೇನೆಬಡ/ಶೋಷಿತರ ರಕ್ತ ಹೀರುವವರಬಣ್ಣ-ಬಣ್ಣಗಳ ಬಾವುಟಗಳಡಿ ಹಂಚಿ ಹೋದವರಜಾತಿ-ಮತ-ಪಂಥ-ಧರ್ಮಗಳ ಹುಸಿ ಮರ್ಯಾದೆ ಸಾರುವವರಅಮಾಯಕರಲ್ಲಿ ದ್ವೇಷದ ಬೀಜ ಬಿತ್ತುವವರಮೇಜಿನ ಕೆಳಗೆ ವ್ಯವಹರಿಸುವ ಭ್ರಷ್ಟರ ಲಂಚಕೋರರಜಗಕೆ ಸತ್ಯಮಾರ್ಗ ತೋರುವವರ ಗುಂಡಿಕ್ಕಿ ಕೊಂದವರಸಮಾಜದ ಲೋಪಗಳ ತಿದ್ದಲು ಹಂಬಲಿಸಿ ಹೆಣಗಾಡಿ ಸೋತವರಕಂಡು ಕಣ್ಣೀರು ಸುರಿಸುತ್ತಿದ್ದೇನೆಆತಂಕಗಳ ಸುಳಿಯಲಿ ಸಿಲುಕಿರುವನನ್ನ ಅಸಹಾಯಕತೆಗೆ ಉತ್ತರ ಹುಡುಕುತ್ತಿದ್ದೇನೆ + +ಬದುಕು ದೇವರು ಬರೆದ ಮಹಾಕಾವ್ಯ. ಅಲ್ಲಿಂದಾಚೆ ಮನುಷ್ಯ ಸಾಯುವ ತನಕ ಬದುಕುವ ನೇತ್ಯಾತ್ಮಕ ಬದುಕು ಅಚ್ಚಿನ ತಪ್ಪುಗಳು ಎಂದು ಕವಿ ಭಾವಿಸುತ್ತಾರೆ. ಅವರಿಗೆ ಪ್ರೇಮ ಎನ್ನುವುದು ಕಾವ್ಯದ ಅರಿಕೆ. + + + +ಇಂದಿನ ಎಲ್ಲ ಮೌಲ್ಯಗಳು ಪಲ್ಲಟವಾಗುತ್ತಿರುವ ಸಮಾಜೋ-ರಾಜಕೀಯ ಸನ್ನಿವೇಶಗಳಲ್ಲಿ ಗಾಂಧಿಯ ಆದರ್ಶಗಳಲ್ಲಿ ರೂಪುಗೊಳ್ಳಬೇಕಾದ ನಮ್ಮ ವ್ಯಕ್ತಿತ್ವಗಳು ಅದಕ್ಕೆ ವಿರುದ್ಧವಾದ ಎಲ್ಲವನ್ನೂ ಒಳಗೊಂಡ ಕೆಟ್ಟ ಚಿತ್ರಗಳಾಗಿ ಎದುರು ಬಂದು ನಿಲ್ಲುತ್ತವೆ. ಗಾಂಧಿ ಸಿಕ್ಕಿದ್ದ ಕವಿತೆಯ ಶೀರ್ಷಿಕೆ ಗಾಂಧಿಯನ್ನು ಕುರಿತ ಅಗೌರವದಿಂದ ಮೂಡಿದ್ದಲ್ಲ. ಇಲ್ಲಿ ಕವಿಗೆ ಎದುರಾದ ಗಾಂಧಿ ಧೋತಿ ಪಂಚೆಯ ನಗುಮೊಗದ ಗಾಂಧಿಯಲ್ಲ. ಗಾಂಧಿಯನ್ನು ಮರೆತ ನವಭಾರತದ ಮನುಷ್ಯ. ದಾರಿಯಂಚಿನಲ್ಲಿ ಸಿಕ್ಕ ಗೋಡ್ಸೆಯ ಹೆಗಲಿಗೆ ಕೈ ಹಾಕಿ ನಡೆಯುತ್ತಾ ಏನೇನೋ ಹರಟುತ್ತ ಎತ್ತಲೋ ಮಾಯವಾಗುವುದು ಗಾಂಧಿಯ ಚಿತ್ರ. + +ನಗುಮೊಗದಗಾಂಧಿ ಅವನಾಗಿರಲಿಲ್ಲಕೈಯಲ್ಲಿ ಕೋಲುಕಣ್ಣಿಗೆ ಕನ್ನಡಕಯಾವುದೂ ಇರಲಿಲ್ಲಸೂಟು-ಬೂಟುತಲೆಗೊಂದು ಹ್ಯಾಟುಕೈಯಲ್ಲಿ ವಿದೇಶಿ ಸಿಗರೇಟುಹಿಡಿದಿದ್ದ ಗಾಂಧಿಬಾರ್ ಎಂಡ್ ರೆಸ್ಟೋರೆಂಟ್ ಹೊಕ್ಕುಚಿಕನ್ ಕಬಾಬ್ ಸವಿಯುತ್ತಿದ್ದಹೊರಬಂದುಕಂಪೌಂಡಿನ ಗೋಡೆಗೆ ನಿಂತುಉಚ್ಚೆ ಹೊಯ್ಯುತ್ತಿದ್ದವೃತ್ತಗಳಲ್ಲಿನತನ್ನ ಮೂರ್ತಿಗಳಿಗೆಲ್ಲಚಪ್ಪಲಿಯ ಹಾರ ಹಾಕಿವಿರೂಪಗೊಳಿಸುತ್ತಿದ್ದ + + + +ಈ ಬಗೆಯಲ್ಲಿ ಚಿತ್ರಗಳನ್ನ ಕಟ್ಟಿಕೊಟ್ಟು ಆಲೋಚನೆಗೆ ತೊಡಗಿಸುವ ಹಲವು ಪ್ರಯತ್ನವನ್ನು ನಾವು ಸಂಕಲನದಲ್ಲಿ ಕಾಣಬಹುದಾಗಿದೆ. ನೆರೆಮನೆಯ ಮುದುಕಿ ಕವಿತೆಯನ್ನು ಇಂತಹುದೇ ನೆಲೆಗಟ್ಟಿನ ಮೇಲೆ ಚಿಂತಿಸಬಹುದಾಗಿದೆ. ವಯಸ್ಸಾದ ಮುದುಕಿ ತೀರಿಹೋಗಿದ್ದಾರೆ. ಆಕೆ ಎಲ್ಲದರಿಂದ ವಂಚಿತಳಾಗಿ ಬದುಕು ಸವೆಸಿದ ಮುದುಕಿ. ನಮ್ಮ ಸಮಾಜ ಸೃಷ್ಟಿಸಿದ ಒಂದು ಸಂಕೇತ ಆಕೆ. ಸಾವಿನಲ್ಲೂ ಮುಚ್ಚಿದ ಕಂಗಳಿಂದ ದಿಟ್ಟಿಸಿ ನನ್ನನ್ನೇ ನೋಡುತ್ತಾ ಒಳಗೊಳಗೆ ನಗುತ್ತಿದ್ದಾಳೆ ಅವಳು. ಇವಳು ನಮ್ಮ ಭಾರತ ಮಾತೆಯೇ? ಎಂಬ ಪ್ರಶ್ನೆ ಓದುಗರ ಮನಸ್ಸಿನಲ್ಲಿ ಸಹಜವಾಗಿಯೇ ಮೂಡುತ್ತದೆ. + +ಇವುಗಳಿಂದಲೇ ಹುಟ್ಟಿಬರುವ ಆಶಾವಾದವನ್ನು ಸಹ ಇಲ್ಲಿನ ಕವಿತೆಗಳಲ್ಲಿ ಕಾಣಬಹುದು. ಉದಾಹರಣೆಗೆ ‘ನನ್ನ ದಿನ’ ಎಂಬ ಕವಿತೆಯನ್ನು ಗಮನಿಸಬಹುದು. + +ನಾನು ಮಾತ್ರನಿಂತಲ್ಲೇ ನಿಂತಿದ್ದೇನೆಒಂಟಿಗಾಲ ಬಕದಂತೆ + +ಸಾವಿಗೂ ಸೆಡ್ಡು ಹೊಡೆದುಇಂದಲ್ಲ ನಾಳೆನಾಳೆಯಲ್ಲ ನಾಡಿದ್ದುಎಂದರೊಂದು ದಿನನನ್ನ ದಿನಬಂದೇ ಬರುವುದೆಂದು + +ಒಟ್ಟಿನಲ್ಲಿ ಭ್ರಮನಿರಸನದಲ್ಲಿಯೇ ನೆಟ್ಟ ದೃಷ್ಟಿ, ಜೊತೆಗೆ ಬದುಕಿನ ಅಸಾಂಗತ್ಯಗಳ ಚಿತ್ರಣವೇ ಕಾವ್ಯದ ಉದ್ದೇಶವಿರಬೇಕು ಎಂಬ ಕಲ್ಪನೆಯು ಬಹಳ ಜನ ಯುವ ಕವಿಗಳ ರಚನೆಗಳಲ್ಲಿ ಕಂಡುಬರುತ್ತದೆ. ಇಲ್ಲಿ ಅಧಿಕಾರ ರಾಜಕಾರಣ, ದೀನ ದುರ್ಬಲರ, ದರಿದ್ರರ ಬವಣೆ, ಫ್ಯೂಡಲಿಸಂ ಎಬ್ಬಿಸುವ ಕಾರ್ಮುಗಿಲಿನಂತಹ ದುರ್ಭರ ಸಾಮಾಜಿಕ ವಾತಾವರಣ ಮುಂತಾದ ಬಂಡಾಯ ಕಾವ್ಯದ ಪಳೆಯುಳಿಕೆಗಳು ಕೂಡ ಮತ್ತೆ ಮತ್ತೆ ಚಿಗುರಲು ಪ್ರಯತ್ನಿಸುತ್ತಿರುವುದನ್ನು ಗಮನಿಸಬಹುದು. ದುರದೃಷ್ಟವಶಾತ್ ಇಲ್ಲಿ ಬೇಂದ್ರೆ ಬಯಸುವ, ನುಡಿಸುವ ಕಲ್ಪನಾವಿಲಾಸವನ್ನು ಮೆರೆಯಲು ಕವಿಗೆ ಏನೂ ಉಳಿಯುವುದಿಲ್ಲ. ‘ವಿಧಾನಸೌಧ: ಅಲುಗಾಡುತ್ತಿರುವ ಐದು ಕಂಬಗಳು’ ಕವಿತೆಯನ್ನು ಈ ಬಗೆಯ ಕಾವ್ಯರಚನೆಯ ಪ್ರತಿನಿಧಿಯಂತೆ ನೋಡಬಹುದು. + +“ಡಿ.ಆರ್.ನಾಗರಾಜ್ ರೂಪಿಸಿದ ‘ಖಡ್ಗವಾಗಲಿ ಕಾವ್ಯ ; ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ – ಎಂಬ ಮಾತು ಹಾಗೂ ರಂಜಾನ್ ದರ್ಗಾ ರೂಪಿಸಿದ ‘ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ’ ಎಂಬ ಮಾತು, ಇವೆರಡೂ ಮಾತುಗಳು ಬಂಡಾಯ ಚಳವಳಿಯ ಕಾವ್ಯಧೋರಣೆಯ ಪ್ರಧಾನ ಘೋಷಣೆಗಳು. ಖಡ್ಗವೆಂಬುದು ಹಿಂಸೆಯ ಸಂಕೇತ. ಖಡ್ಗದಿಂದ ಕಾವ್ಯವನ್ನು ಮೂಡಿಸಲಾಗುವುದಿಲ್ಲ; ಜೀವಿಯನ್ನು ಕತ್ತರಿಸಿ ಪ್ರಾಣ ಹಾರಿಸಿ, ನೆತ್ತರನ್ನು ಬಸಿಯಬಹುದು. ಕಾವ್ಯವೆಂಬುದು ಜೀವಪ್ರೀತಿಯ ಸಂಕೇತ. ಕಾವ್ಯವೆಂಬುದು ಕವಿಯೊಬ್ಬನು ಲೇಖನಿಯಿಂದ ಇಂಕು ಬಸಿದು ಅಕ್ಷರಗಳನ್ನು ಮೂಡಿಸಿ, ಕಾವ್ಯದ ಶಬ್ದಶರೀರದಲ್ಲಿ ಜೀವಭಾವಗಳನ್ನು ಮಿಡಿಸುವ ಮಹಾಧ್ಯಾನದ ಸೃಜನಶೀಲ ಸಾತತ್ಯ. ‘ಖಡ್ಗವಾಗಲಿ ಕಾವ್ಯ’ ಎಂದು ಡಿಆರ್ ಹೇಳಿರುವ ಮಾತಿನಲ್ಲಿ ಖಡ್ಗ ಎಂಬ ಶಬ್ದವು ಲೇಖನಿ ಎಂಬ ಅರ್ಥವನ್ನು ವ್ಯಂಜಿಸುತ್ತದೆ. ಹಿಂಸೆಯ ಸಂಕೇತವಾದ ಖಡ್ಗವು ಕಾವ್ಯವನ್ನು ಕೈಹಿಡಿದು, ಕಾವ್ಯವೇ ಖಡ್ಗವಾಗಿ ಜನರ ನೋವಿಗೆ ಪ್ರಾಣಮಿತ್ರನಾಗಿ ಮಿಡಿಯಬೇಕು. ಅಹಿಂಸಾತತ್ವ ಪ್ರಧಾನವಾದ ಮೈತ್ರಿಯನ್ನು ಕಾವ್ಯವು ಅಂತರ್ಗತಗೊಳಿಸಿಕೊಂಡಾಗ ಮಾತ್ರ, ‘ಖಡ್ಗವಾಗಲಿ ಕಾವ್ಯ ; ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ ಎಂಬ ಕಾವ್ಯಘೋಷಣೆಯು ‘ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುತ್ತದೆ’ ಎಂಬ ಉದಾತ್ತತೆಯನ್ನು ಸಾಕಾರಗೊಳಿಸುವ ದಾರಿಯಲ್ಲಿ ಜನಮುಖಿಯಾಗುತ್ತದೆ. ಕಾವ್ಯವು ಹೀಗೆ ಉದಾತ್ತ ಜೀವಪ್ರೀತಿಯಿಂದ ಜನಮುಖಿಯಾದಾಗ ಮಾತ್ರ ‘ಜನರ ನೋವಿಗೆ ಮಿಡಿವ ಪ್ರಾಣ ಮಿತ್ರ’ನಾಗಿ ಒದಗುತ್ತದೆ. ಡಾ. ವಡ್ಡಗೆರೆ ನಾಗರಾಜಯ್ಯ.” + +ಮೇಲಿನ ಮಾತುಗಳನ್ನು ಗಮನಿಸಿ ನದೀಮ ಅವರ ಕಾವ್ಯವನ್ನು ಮನನ ಮಾಡುವುದು ಉಚಿತ. ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು ಕಟ್ಟುವ ಕಲ್ಪನೆ ಕನ್ನಡ ಕಾವ್ಯಕ್ಕೆ ಬಹಳ ಹಳೆಯ ರೂಪಕ. ರೋಮ್ಯಾಂಟಿಕ್ ಆದಂತಹದೂ ಹೌದು. ಬಿಜಾಪುರದ ಕೆನಾನ್ ಗಳ ಚಿತ್ರಣದಲ್ಲಿ ಒಂದು ಕಾಲದಲ್ಲಿ ಭಯ ಹುಟ್ಟಿಸುತ್ತಿದ್ದ ತೋಪಿನ ಸುತ್ತ ಎಷ್ಟೊಂದು ಆನಂದವನ್ನು ಕವಿ ಕಾಣುತ್ತಾರೆ. ಆ ಆನಂದದಲ್ಲಿ ಸ್ಥಾಯಿಯಾಗಿ ನಿಂತುಬಿಡುವ ಆಸೆ ಕಳೆದ ಕ್ರೂರ ಸಮಯದತ್ತ ಹೋಗಬಾರದು ಎಂಬ ಅಭೀಪ್ಸೆ ಈ ಸಾಲುಗಳಲ್ಲಿ ಹರಳುಗಟ್ಟುತ್ತದೆ. + +ಅಲ್ಲಿ ಯುವ ಪ್ರೇಮಿಗಳು ಸಂಧಿಸುತ್ತಾರೆ + +ರಾತ್ರಿಯಾದರೆಮದ್ದನು ತುಂಬಿಕೊಂಡಿರುತ್ತಿದ್ದತೋಪಿನ ನಳಿಕೆಯಲಿಗುಬ್ಬಿಗಳು ಠಿಕಾಣಿ ಹೂಡುತ್ತವೆ + +ಒಂದು ಕಾಲದಲ್ಲಿ ಭಯಹುಟ್ಟಿಸುತ್ತಿದ್ದ ತೋಪಿನಸುತ್ತಈಗ ಎಷ್ಟೊಂದು ಆನಂದ + +ಕಳೆದ ಕ್ರೂರ ಸಮಯದತ್ತಹೋಗದಾರದೂ ಚಿತ್ತ + +ಹೀಗೆ ವಾಸ್ತವದ ಕ್ರೌರ್ಯಕ್ಕೆ ರೋಮ್ಯಾಂಟಿಕ್ ಮದ್ದನ್ನು ಹಚ್ಚುವ ಕೆಲಸದಲ್ಲಿ ನದೀಮ್ ಅವರಿಗೆ ಉತ್ಸಾಹವಿದೆ. + +ಇದೇ ಪೀಳಿಗೆ ಒಂದು ಬಗೆಯ ಸಾರುವಿಕೆಯನ್ನು ಕಾವ್ಯ ವಸ್ತುವನ್ನಾಗಿ ಇಟ್ಟುಕೊಳ್ಳುತ್ತದೆ. ರಾಮ ರಹೀಮ ಕೃಷ್ಣ ಕಬೀರ ಎಂಬ ನುಡಿಗಟ್ಟುಗಳು ಜಾತಿಮತದ ಗುಹೆಗಳಿಂದ ಹೊರ ಬನ್ನಿರಿ ಬಯಲಿಗೆ ಎಂಬ ಮತ್ತು ವಿಶ್ವಮಾನವ ಮತ್ತು ಮನುಜ ಮತಗಳ ಕಲ್ಪನೆಯ ಪ್ರವರ್ತಕ ಕವಿ ಮಹಾಶಯರ ಆಶಯಗಳು ಕನ್ನಡಕಾವ್ಯ ಸಂದರ್ಭದಲ್ಲಿ ಪದೇ ಪದೇ ಅನುರಣನಗೊಳ್ಳುತ್ತಾ ಇದ್ದುಬಿಟ್ಟಿವೆ. ಹೇಳಿದ್ದನ್ನೇ ಹೇಳುತ್ತಾ ಇರಬೇಕಾದ ಕರ್ಮಕಾಂಡವನ್ನು ಕವಿಗಳ ಮುಂದಿರಿಸಿ ಸಮಾಜ ತಾನು ನಿಂತಲ್ಲೇ ನಿಂತುಬಿಟ್ಟಿದೆ. ನದೀಮ ಅವರು ಕೂಡ ‘ನನ್ನ ನಿನ್ನ ಜಗತ್ತಿನಲ್ಲಿ’ ಎಂಬ ಕವಿತೆಯಲ್ಲಿ ಇಂಥದೇ ಘೋಷಣೆಗಳನ್ನು ಉದ್ಘರಿಸಲು ಹೋಗುತ್ತಾರೆ. ಬದುಕಿಗೆ ಹೊಸದೊಂದು ಭಾಷ್ಯವ ಬರೆಯೋಣ ಎಂಬ ಹಲವು ಬಾರಿ ಉಚ್ಚರಿಸಲ್ಪಡುವ ಅದೇ ಘೋಷಣೆಯನ್ನು ಪುನರುಚ್ಚರಿಸುತ್ತಾರೆ. ಈ ಕಾರಣಕ್ಕಾಗಿಯೇ ಪ್ರಾಯಶಃ ದುರಿತ ಕಾಲದಲ್ಲೂ ಹಾಡುತ್ತಿರಬೇಕು ಹೌದು ಹಾಡುತ್ತಿರಬೇಕು ದುರಿತಕಾಲದ ಹಾಡನ್ನು ಎಂಬ ಬ್ರೆಕ್ಟನ ಕವಿತೆಯ ಸಾಲುಗಳನ್ನು ಅವರು ಸಮರ್ಥನೆಗಾಗಿ ಎಂಬಂತೆ ಕೋಟ್ ಮಾಡುತ್ತಾರೆ. + +ಈ ದುರಿತ ಕಾಲದಲ್ಲಿ ಕವಿತೆಗೆ ಅಂದರೆ ಸಮಾಜದ ನಾಲಗೆಗೆ ಬಹಳ ದೊಡ್ಡ ಸಂಕಟ ಬಂದೊದಗಿದೆ. ನಾಲಿಗೆ ಸೀಳುವ ಕೈ, ಕಡಿಯುವ ಕಾಲು, ಮುರಿಯುವ, ಕೊಲ್ಲಲು ಏನೇನೆಲ್ಲ ಮಾಡುವ ಜನರ ನಡುವೆ ಈ ಕಾವ್ಯವೆಂಬ ಜುಬಾನ್ ಉಸಿರಾಡುತ್ತಲೇ ಇದೆ. ಆದರೆ ಇಲ್ಲಿನ ಜನಗಳಿಗೆ ಏನಾಗಿದೆ? ಏಕೆ ಅವರು ಯಾರು ಮನುಷ್ಯರಾಗಿ ಬದುಕಿಲ್ಲ? ಈ ಪ್ರಶ್ನೆಯನ್ನು ಸಹ ನದೀಮ ಕೇಳಿಕೊಂಡಿದ್ದಾರೆ. ಇದ್ದಾರೆ ಇದ್ದಾರೆ/ ಇಲ್ಲಿ ಎಲ್ಲರೂ ಇದ್ದಾರೆ/ ಮನುಷ್ಯರ ಹೊರತು/ ಇಲ್ಲಿ ಎಲ್ಲರೂ ಇದ್ದಾರೆ. + +ಮನುಷ್ಯ ಸಂಘಜೀವಿ. ಅದರಲ್ಲೂ ಪ್ರೀತಿಯನ್ನು ಒಡಲುಗೊಂಡ ಕವಿಯೊಬ್ಬ ಒಂಟಿಯಾಗಿರಲು ಸಾಧ್ಯವೇ ಇಲ್ಲ. ಹಾಗಾಗಿ ಒಂಟಿಯಾಗಿ ಇರಲಾರೆ ಎಂದು ಕವಿ ಅಲವತ್ತುಕೊಳ್ಳುತ್ತಾರೆ. ನಾವು ಬದುಕುವ ಜಗತ್ತು ಹೇಗಿರಬೇಕು ಎಂಬುದನ್ನು ಗಲಭೆಯಲ್ಲಿ ಸತ್ತವನೊಬ್ಬನ ಅಫಿಡೆವಿಟ್ಟು ಕವಿತೆ ಹೇಳುತ್ತದೆ. ಇಲ್ಲಿನ ಹಲವು ಕವಿತೆಗಳಲ್ಲಿ ಇರುವ ಸಮಸ್ಯೆಯಂತೆ ಇಲ್ಲಿಯೂ ಸಹ ಕಾವ್ಯ ಉದ್ಘೋಷ ಒಂದರಂತೆ ಕಿವಿಗೆ ಕೇಳುತ್ತದೆ. + +ನದೀಮ ಅವರ ಕಾವ್ಯವನ್ನು ಕುರಿತು ಮೆಹಬೂಬ ಮುಲ್ತಾನಿ, ಮತ್ತು ಸರಜೂ ಕಾಟ್ಕರ್ ಮಾತನಾಡಿದ್ದಾರೆ. ಅವುಗಳಲ್ಲಿ ನನಗೆ ಕೋಟ್ ಮಾಡಬೇಕೆನ್ನಿಸಿದ ಮಾತುಗಳು ಇಲ್ಲಿವೆ: + +‘ಒಬ್ಬ ಕವಿ ಇನ್ನೊಬ್ಬ ಕವಿಯಿಂದ ಪ್ರಭಾವಿತನಾಗುವುದು ಕಾವ್ಯ ಪ್ರಪಂಚದಲ್ಲಿ ಸಹಜವಾದ ಕ್ರಿಯೆ. ಆದರೆ ಆ ಮಿತಿಯನ್ನು ಮೀರಿ ಬೆಳೆಯುವುದು ಕವಿಯ ಪ್ರತಿಭೆಯನ್ನು ಅವಲಂಬಿಸಿದೆ. ಇಲ್ಲಿಯ ಎಲ್ಲ ಕವಿತೆಗಳಲ್ಲೂ ನದೀಮ ಅವರ ಪ್ರತಿಭೆಯನ್ನು ಗುರುತಿಸಬಹುದಾಗಿದೆ. + +ನದೀಮ ಸನದಿ ಸಾಹಿತ್ಯದ ವಿದ್ಯಾರ್ಥಿಯಲ್ಲ….. ಆದರೆ ಅವರ ತಂದೆ, ಕಕ್ಕಂದಿರಿಗೆ ಒಲಿದ ಕಾವ್ಯ ಇವರನ್ನು ಗಾಢವಾಗಿ ಒಲಿದಿದೆ. ಹೊಸ ಹೊಸ ಪ್ರತಿಮೆಗಳನ್ನು ರೂಪಕಗಳನ್ನು ನದೀಮ ತಮ್ಮ ಕವಿತೆಗಳಲ್ಲಿ ಸಹಜವಾಗಿ ಸೃಷ್ಟಿಸುತ್ತಾರೆ ಮತ್ತು ಬಳಸುತ್ತಾರೆ. + +(ಸರಜೂ ಕಾಟ್ಕರ್) + +ಪ್ರತಿಭೆ, ಆಸಕ್ತಿ, ಅಕ್ಷರಗಳ ಬಗ್ಗೆ ಮೋಹ, ಜೀವನ ಪ್ರೀತಿ, ಮನುಷ್ಯತ್ವದ ಬಗ್ಗೆ ಮಮಕಾರಗಳು ಇರುವ ನದೀಮ ಸನದಿ ನಮ್ಮ ಮುಂದಿನ ಕಾವ್ಯದ ಬಲಶಾಲಿ ಕೊಂಡಿಯಂತೆ ಕಾಣಿಸುತ್ತಾರೆ. ಅವರ ಕಾವ್ಯದ ಕೇಂದ್ರ ಬಿಂದುವೇ `ಹುಡುಕಾಟ’. ಅದು ಸುಂದರ ಸಮಾಜದ ರಚನೆಯ ಕನಸಾಗಿರಬಹುದು; ಭ್ರಾತೃತ್ವ ಪಸರಿಸುವ ಸಂಗತಿಯಾಗಿರಬಹುದು; ಪ್ರೀತಿ ಪ್ರೇಮದ ಪುಳಕವಾಗಿರಬಹುದು – ಇವುಗಳೆಲ್ಲದರ ಹಿಂದೆ ಕವಿಯ ಮನುಷ್ಯತ್ವದ ಹುಡುಕಾಟ ಗೋಚರಿಸುತ್ತದೆ. ಕವಿ ಬರೀ ಶಬ್ದದ ಗುಲಾಮನಲ್ಲ; ಆತ ಸುಂದರ ಸಮಾಜದ ಸೃಷ್ಟಿಕರ್ತನೂ ಆಗಿದ್ದಾನೆಂದು ನದೀಮ ಸನದಿಯವರ ಕವಿತೆಗಳು ಹೇಳುತ್ತವೆ. ಅವರ ದೊಡ್ಡಪ್ಪ ಬಿ. ಎ. ಸನದಿಯವರ ಕವಿತೆಗಳು ಮಾನವ್ಯತೆಗಾಗಿ ತುಡಿದಿದ್ದರೆ, ನದೀಮ ಸನದಿಯವರ ಕವಿತೆಗಳು ಮನುಷ್ಯನ ಬಗ್ಗೆ ಹಾಡುತ್ತವೆ.- ಡಾ. ಸರಜೂ ಕಾಟ್ಕರ್ + +ಇತಿಹಾಸ ಮತ್ತು ಚರಿತ್ರೆಯನ್ನು ಕವಿತೆಯೊಂದಿಗೆ ಅನುಸಂಧಾನಗೊಳಿಸುವ ಕಲೆ ಇವರಿಗೆ ಸಿದ್ಧಿಸಿದೆ… ರಾಜಕೀಯ ದೊಂಬರಾಟ, ವಂಚನೆ, ತಳ ಸಮುದಾಯದ ತಲ್ಲಣಗಳು, ಒಡೆದು ಆಳುವ ಹುನ್ನಾರ, ಬಣ್ಣ ಲೇಪಿತ ಮಾತು, ಮಾತೇ ಬಂಡವಾಳವಾಗಿರುವ ಈ ದುರಿತ ಕಾಲ ಹೀಗೆ ಹತ್ತು ಹಲವು ವಿಷಯಗಳು ಕಾಡಿದ ಫಲವೇ ಕಾವ್ಯೋತ್ಪತ್ತಿ… ಈ ಸಂಕಲನದ ಕವಿತೆಗಳು ಈ ಮೆಟ್ಟಿಲನ್ನು ದಾಟಿ ಸಾಮಾಜಿಕ ಸಂಘರ್ಷದ ಮೂಲಕ ಬದುಕನ್ನು ಕಟ್ಟುವ ಹೆಚ್ಚುಗಾರಿಕೆಗೆ ತೆರೆದುಕೊಂಡಿವೆ. ಭಾಷೆ ಮತ್ತು ರಚನೆಯ ವಿಷಯದಲ್ಲಿ ವಿನಾಯತಿ ಬಯಸಿದರೂ ಕವಿಗೆ ಕವಿತೆಗೆ ಇರಬೇಕಾದ ಲಯ ಸಿಕ್ಕಿದೆ. ಚಿಕ್ಕ ಚಿಕ್ಕ ಸಂಗತಿ, ರೂಪಕ, ಪ್ರತಿಮೆಗಳು, ಪದ ಬಳಕೆಗಳ ಮುಖಾಂತರ ಕವಿತೆಯ ರಚನಾ ಪಾಠಕ್ಕೆ ಒಗ್ಗಿಸಿಕೊಂಡಿದ್ದಾರೆ. ಕಾವ್ಯ ತತ್ವಗಳ ಖಚಿತ ನಿಲುವು ತುಳಿಯಬೇಕಾದ ಹಾದಿ ಇನ್ನೂ ಬಹಳಷ್ಟಿದೆ.- ಮೆಹಬೂಬ ಮುಲ್ತಾನಿ + +ಮೇಲಿನ ಎರಡೂ ಅಭಿಪ್ರಾಯಗಳು ಮೊದಲ ಸಂಕಲನದ ಕವಿಯನ್ನು ಸ್ವಾಗತಿಸುವ ಮಾತುಗಳೆಂದು ಭಾವಿಸಲು ಅಡ್ಡಿಯಿಲ್ಲ. ಅವು ನಿಜಕ್ಕೂ ಕವಿಗೆ ಸಂತೋಷ ಕೊಡುವಂತಹವು. ಆದರೆ ಸೂಕ್ಷ್ಮ ಮನಸ್ಸಿನ ಕವಿ ಅವುಗಳಿಂದ ಭಾರವಾಗುತ್ತಾನೆ. ಆದ್ದರಿಂದ ಇಲ್ಲಿನ ಒಳ್ಳೆಯ ಮಾತುಗಳು ಸನದಿಯವರನ್ನು ಹೊಸ ಜವಾಬ್ದಾರಿಗೆ ಸಜ್ಜುಗೊಳಿಸಬೇಕು.. ಒಂದು ಬಗೆಯ ಸ್ವ-ಅವಲೋಕನ, ಪೂರ್ವಸೂರಿಗಳ ಓದು, ಪ್ರಾತಿನಿಧಿಕ ಕವಿಗಳ ಅಧ್ಯಯನ ಸನದಿಯವರ ಕಾವ್ಯಧ್ವನಿಯನ್ನು ಇನ್ನೂ ವೈವಿಧ್ಯಮಯವಾಗುವ ಹಾದಿಯನ್ನು ತೆರೆಯಬಲ್ಲದು. + + + +ಕೊನೆಯ ಮಾತು:ಇಂದಿನ ತಲೆಮಾರಿನವರ ಕವಿತೆಗಳನ್ನು ಮುಕ್ತವಾಗಿ, ಗಂಭೀರವಾಗಿ ಕನ್ನಡ ಕಾವ್ಯಲೋಕ ಗಮನಿಸಬೇಕಿದೆ. ಜೊತೆಗೆ ವಿಭಿನ್ನ ಬಗೆಯ ಕವಿತೆಗಳು ಕಣ್ಣಿಗೆ ಬೀಳುತ್ತಿವೆ; ಹೊಸ ಅನುಭವಗಳನ್ನು ಸಹ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ಕನ್ನಡ ಬೇರೊಂದು ಬಗೆಯ ಕಾವ್ಯರಚನೆಯತ್ತ ಓಲುತ್ತಿದೆಯೇ ಎಂಬುದನ್ನು ಸಹ ಗಮನಿಸಿ ಹೊಸ ಧ್ವನಿಗಳನ್ನು ಗುರುತಿಸಬೇಕಿದೆ. + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_335.txt b/Kenda Sampige/article_335.txt new file mode 100644 index 0000000000000000000000000000000000000000..fb210a65ae33b9a22bf6a980743a7e82377d0dba --- /dev/null +++ b/Kenda Sampige/article_335.txt @@ -0,0 +1,57 @@ + + +ಅಮೃತಾ ಪ್ರೀತಮ್ ಇಪ್ಪತ್ತನೇ ಶತಮಾನದ ಸಂವೇದನಶೀಲ ಕವಿ. ಸಮಕಾಲೀನ ಪಂಜಾಬಿ- ಹಿಂದೀ ಸಾಹಿತ್ಯಲೋಕದ ಅಗ್ರಗಣ್ಯರು ಮತ್ತು ಬಹು ಚರ್ಚಿತರು. ದೇಶದ ಬಹುಸಮ್ಮಾನಿತ ಖ್ಯಾತ ಕವಿ – ಸಾಹಿತ್ಯಕಾರರಲ್ಲಿ ಒಬ್ಬರು. ಅವರ ಸಾಹಿತ್ಯ ಭಾರತೀಯ ಭಾಷೆಗಳಲ್ಲದೇ ವಿಶ್ವದ 34 ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕಾದಂಬರಿ, ಕಥೆಯನ್ನಾಧರಿಸಿದ ಅನೇಕ ಚಲನಚಿತ್ರಗಳು, ಟಿವಿ ಸೀರಿಯಲ್ ಗಳು ವಿಶಿಷ್ಟವಾಗಿವೆ. ಅಮೃತಾ ಏಕಕಾಲಕ್ಕೆ ಕವಿ, ಕತೆಗಾರ್ತಿ, ಕಾದಂಬರಿಕಾರ್ತಿ, ಅನುವಾದಕಿ, ಸಂಪಾದಕಿ ಮತ್ತು ಚಿಂತಕಿಯಾಗಿದ್ದರು. ಅವರ ಮನೆ ಸದಾಕಾಲ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಕೇಂದ್ರವಾಗಿತ್ತು ಎಂದು ಪಂಜಾಬಿ ಲೇಖಕ ಸುತಿಂದರ್ ಸಿಂಗ್ ನೂರ್ ಉಲ್ಲೇಖಿಸುತ್ತಾರೆ. + +ಆಗಸ್ಟ್ 31, 1919ರಲ್ಲಿ ಪಂಜಾಬಿನ ಗುಜರನ್ವಾಲಾದಲ್ಲಿ ಜನಿಸಿದ್ದ ಅಮೃತಾ ಹುಟ್ಟಾ ಬಂಡಾಯಗಾರ್ತಿ. ಆಕೆ ಹನ್ನೊಂದು ವರ್ಷವಿದ್ದಾಗಲೇ ತಾಯಿ ತೀರಿಕೊಳ್ಳುತ್ತಾರೆ. ಆಕೆಯ ತಂದೆ ಕರ್ತಾರ್ ಸಿಂಗ್ ಹಿತಕಾರಿ ಸ್ವತಃ ಕವಿ. ಗುರುದ್ವಾರದಲ್ಲಿ ಧಾರ್ಮಿಕ ಗುರು. ಕಟ್ಟಾ ಸಾಂಪ್ರದಾಯಿಕ ವಾತಾವರಣದಲ್ಲಿ ಅಮೃತಾ ಬೆಳೆದರೂ ಹಿಂದೂ- ಮುಸ್ಲಿಂ ಭೇದಭಾವದ ವಿರುದ್ಧ ಪ್ರತಿಭಟನೆಯನ್ನು ತಮ್ಮ ಮನೆಯಿಂದಲೇ ಆರಂಭಿಸುತ್ತಾರೆ. ಮನೆಗೆ ಬಂದವರಿಗೆ ಲಸ್ಸಿ ಕೊಡಲು ಹಿಂದೂ – ಮುಸ್ಲಿಮರಿಗೆ ಪ್ರತ್ಯೇಕವಾಗಿ ಇಡುತ್ತಿದ್ದ ಲೋಟಗಳನ್ನು ಒಟ್ಟಿಗೆ ಇಡುವಂತೆ ಹಠಹಿಡಿದು ಅಜ್ಜಿಯನ್ನೇ ಮಣಿಸಿ ಗೆದ್ದ ಛಲಗಾತಿ ಆಕೆ. ಅದೂ ಎಳೆಯ ವಯಸ್ಸಿನಲ್ಲಿ. + +(ಅಮೃತಾ ಪ್ರೀತಮ್) + +ತಂದೆ ಕರ್ತಾರ್ ಸಿಂಗ್ ಮಗಳಿಗೆ ಲಯ- ಛಂದಸ್ಸು- ನಿಯಮ ಮುಂತಾದ ಕಾವ್ಯರಚನೆಯ ಸೂಕ್ಷ್ಮಗಳನ್ನು ಹೇಳಿಕೊಟ್ಟು ಪದ್ಯ ಬರೆಯಲು ಪ್ರೊತ್ಸಾಹಿಸಿದರು. ಮೊದಮೊದಲು ಕೇವಲ ಪಂಜಾಬಿ ಮತ್ತು ಉರ್ದುವಿನಲ್ಲಿ ಧಾರ್ಮಿಕ ಕವಿತೆಗಳನ್ನಷ್ಟೇ ಬರೆಯುತ್ತಿದ್ದ ಅಮೃತಾ, ವಿಭಜನೆಯ ನಂತರ ದೆಹಲಿಯಲ್ಲಿ ನೆಲೆಸಿ ಹಿಂದಿಯಲ್ಲೂ ಬರೆಯಲು ತೊಡಗುತ್ತಾರೆ. + +ಕವಿತೆಗಳೇ ಅವರ ಬದುಕಿನ ಹಲವು ಘಟ್ಟಗಳನ್ನು ಬಿಂಬಿಸುವ ಅದ್ಭುತ ಕಾವ್ಯ ಕಥನಗಳೆನಿಸುತ್ತವೆ. ಲಾಹೋರಿನ ದಿನಗಳಿಂದಲೇ ಸಾಹಿರ್ ಲೂಧಿಯಾನ್ವಿ ಜೊತೆ ಮೊಳೆತಿದ್ದ ಪ್ರೇಮ ಕೈಗೂಡಲಿಲ್ಲ. ಆದರೆ ಆಕೆಯ ಜೀವಿತಕಾಲದುದ್ದಕ್ಕೂ ಎದೆಯಲ್ಲುಳಿದುಹೋಯ್ತು. ವಿರಹ, ವಿಷಾದದ ಛಾಯೆಯನ್ನು ಅವರ ಕವಿತೆಗಳಲ್ಲಿ ಕಾಣುತ್ತೇವೆ. + +“ಆಯುಷ್ಯದ ಸಿಗರೇಟು ಉರಿಯಿತು / ನನ್ನ ಪ್ರೇಮದ ಗಂಧ / ತುಸು ನಿನ್ನುಸಿರಿನಲಿ / ತುಸು ಗಾಳಿಯಲಿ ಬೆರೆಯಿತು.!” + +“ನಿನ್ನ ಪ್ರೇಮದ ಒಂದು ಹನಿ, ನನ್ನೊಳಗೆ ಬೆರೆತುಹೋಗಿತ್ತು, ಅದಕ್ಕೇ ನಾನು ಆಯುಷ್ಯದ ಎಲ್ಲ ಕಹಿಯನ್ನೂ ನುಂಗಿಕೊಂಡೆ……” + +“ನಾ ನಿನಗೆ ಮತ್ತೆ ಸಿಗುವೆಎಲ್ಲಿ ? ಹೇಗೆ ? ಗೊತ್ತಿಲ್ಲಬಹುಶಃ ನಿನ್ನ ಕಲ್ಪನೆಯ ಕಿಡಿಯಾಗಿ,ನಿನ್ನ ಕ್ಯಾನವಾಸಿಗೆ ಇಳಿಯುವೆಅಥವಾ ಬಹುಶಃ ನಿನ್ನ ಕ್ಯಾನವಾಸಿನ ಮೇಲೆಒಂದು ರಹಸ್ಯಮಯ ಗೆರೆಯಾಗಿ,ಮೌನವಾಗಿ ನಿನ್ನನ್ನು ನೋಡುತ್ತಾ ಇರುವೆ…” + +ಇವು ನನ್ನಿಷ್ಟದ, ನನ್ನನ್ನು ಗಾಢವಾಗಿ ಪ್ರಭಾವಿಸಿದ ಕವಿತೆಗಳು. ತಮ್ಮ ಜೀವಿತದ ಕೊನೆಗಾಲದಲ್ಲಿ ಸಂಗಾತಿ ಇಮ್ರೋಜ್ ಅವರಿಗೆ “ನಾ ನಿನಗೆ ಮತ್ತೆ ಸಿಗುವೆ” ಎಂದು ವಚನವಿತ್ತು ಲೋಕದಿಂದ ತೆರಳಿದ ಅಮೃತಾರ ಈ ಪದ್ಯ ವಿಚಲಿತಗೊಳಿಸುತ್ತದೆ. ಇದು ಇಡೀ ಬದುಕಿನ ನಿರ್ಣಾಯಕ ಅಭಿವ್ಯಕ್ತಿ ಕವಿತೆ. ಅವರ ಎಲ್ಲಾ ಕವಿತೆಗಳೂ ದೇಶಕಾಲಾತೀತ ಮೌಲ್ಯಗಳಿಂದ ಮಹತ್ವಪೂರ್ಣವೆನಿಸುತ್ತವೆ. + +(ರೇಣುಕಾ ನಿಡಗುಂದಿ) + +ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಮಧುರಾನುಭವ. ಈ ಕವಿತೆಗಳಿಂದ ಹಿಂದಿ ಕಾವ್ಯ ಶ್ರೀಮಂತವೂ ಶಿಲ್ಪ ಸಮೃದ್ಧವೂ ಆಗುವುದು! ಎಂದು ಅಮೃತಾ ಪ್ರೀತಮ್ ಅವರ ಕವಿತೆಗಳ ಕುರಿತು ಹಿಂದಿ ಪ್ರಖ್ಯಾತ ಕವಿ ಸುಮಿತ್ರಾನಂದನ್ ಪಂತ್ ಭವಿಷ್ಯ ನುಡಿದಿದ್ದರು. + +ಪಂಜಾಬಿ ಸಾಹಿತ್ಯದ ಸಂದರ್ಭವನ್ನು ಸ್ವಾತಂತ್ರ್ಯಪೂರ್ವ ಸಾಹಿತ್ಯ ಮತ್ತು ಸ್ವಾತಂತ್ರ್ಯೋತ್ತರ ಸಾಹಿತ್ಯವೆಂದು ನೋಡಬಹುದು. 1947 ಸ್ವಾತಂತ್ರ್ಯ ಪ್ರಾಪ್ತಿಯ ಕಾಲ ವಿಭಜನೆಯ ಹಿಂಸಾಚಾರ, ದಂಗೆ, ನರಮೇಧದ ಕರಾಳಕಾಲವೂ ಹೌದು. ಈ ವಿಭಜನೆ ಪಂಜಾಬನ್ನು ಎರಡು ಹೋಳಾಗಿಸಿತು. ಪಂಜಾಬಿನ ಸಾಮಾಜಿಕ ಜನಜೀವನ, ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿತು. ವಿಭಜನೆಯ ಭೀಕರತೆ, ಗಾಯ- ಯಾತನೆ ಸೂಸಿದ ಸಂವೇದನಶೀಲ ಸಾಹಿತ್ಯ ಆ ಕಾಲದಲ್ಲಿ ವಿಪುಲವಾಗಿ ನಿರ್ಮಿತವಾಯ್ತು. + +ಭಾಯೀ ವೀರ್ ಸಿಂಗ್, ಪ್ರೊ.ಮೋಹನ್ ಸಿಂಗ್ , ಅಮೃತಾ ಪ್ರೀತಂ, ಗೋಪಾಲ ಸಿಂಗ್ ‘ದರ್ದಿ’, ಹರಿಂದರ್ ಸಿಂಗ್ ನೂರ್ “ಕಂವರ್”; ಮುಂತಾದ ಕವಿಗಳು ಭಾರತ ವಿಭಜನೆಯ ದುರಂತದ ದುರ್ದಿನಗಳಿಗೆ ಸಾಕ್ಷಿಯಾದವರು ಮತ್ತು ಆ ಎಲ್ಲ ಸಂಕಟಗಳನ್ನು ಸ್ವತಃ ಅನುಭವಿಸಿದವರು. ಅಂಥ ಸಂದರ್ಭದಲ್ಲಿ ಅಮೃತಾ ಪ್ರೀತಂ ‘ಆಜ್ ಅಖ್ಕಾಂ ವಾರಿಸ್ ಶಾಹ್ ನೂ’ ಬರೆದು ಉಭಯ ದೇಶಗಳ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿಹೋದರು. “ಶವಗಳ ರಾಶಿಯನ್ನಷ್ಟೇ ಅಲ್ಲ, ಶವಗಳಂಥ ಜನರನ್ನೂ ಕಂಡಿದ್ದೇನೆ” ಎಂದು ತಮ್ಮ ಆತ್ಮಕತೆ – ‘ರಶೀದಿ ಟಿಕೆಟ್’ ನಲ್ಲಿ ಬರೆದಿದ್ದಾರೆ. ವಿಭಜನೆಯ ನರಕ ಯಾತನೆಯೇ ಆ ಕಾಲದ ಪಂಜಾಬಿ ಸಾಹಿತ್ಯದ ಕೇಂದ್ರಬಿಂದು ಆಗಿತ್ತು. + +ಹಿಂದೂ – ಮುಸ್ಲಿಂ ದ್ವಿಸಂಸ್ಕೃತಿಯ ಫಲವಾಗಿ ಅರಬ್ಬಿ ಮತ್ತು ಫಾರ್ಸಿಭಾಷೆಗಳ ಪ್ರಭಾವಕ್ಕೊಳಗಾಗಿದ್ದ ಪಂಜಾಬಿ ಸಾಹಿತ್ಯ, ವಿಭಜನೆಯ ನಂತರ ಆ ಪ್ರಭಾವದಿಂದ ಮುಕ್ತವಾಗಿ ಭಾರತೀಯ ಸಂಸ್ಕೃತಿ, ಭಾರತೀಯ ಭಾಷೆಗಳಿಗೆ ಹೆಚ್ಚು ಹತ್ತಿರವಾಯಿತು ಎನ್ನುತ್ತಾರೆ ಚಿಂತಕರು. ಹೊಸದಾಗಿ ಕಟ್ಟಿಕೊಂಡ ಬದುಕು, ಹೊಸದಾಗಿ ಕಟ್ಟಿಕೊಂಡ ನಗರಗಳು ಜನಜೀವನವನ್ನು ಬದಲಿಸಿದವು. ವಿಕಾಸದ ಹೊಸ ಆಯಾಮಗಳು ಪಂಜಾಬಿ ಸಾಹಿತ್ಯ ಮತ್ತು ಭಾಷೆ ಎರಡಕ್ಕೂ ತೆರೆದುಕೊಂಡವು. ಹೊಸ ಉತ್ಸಾಹ, ಹೊಸ ಚೈತನ್ಯದಿಂದ ಸಾಹಿತ್ಯ ರಚನೆಯಾಗತೊಡಗಿತು. ಅಮೃತಾ ಪ್ರೀತಂ, ದೇವೇಂದ್ರ ಸತ್ಯಾರ್ಥಿ, ಬಾಬಾ ಬಲವಂತರ ಕಾವ್ಯರಚನೆಯಲ್ಲಿ ಈ ಹೊಸ ಪ್ರವೃತ್ತಿ ಎದ್ದು ಕಾಣುತ್ತದೆ ಎನ್ನುತ್ತಾರೆ ವಿಮರ್ಶಕರು. + +ಅಮೃತಾರ ಕವಿತೆಗಳನ್ನು ಆ ಕಾಲ ಪ್ರವಾಹದ ವಿಪ್ಲವದ ನೆಲೆಯಲ್ಲಿ ವಿಕಸನಗೊಂಡ ಕಾವ್ಯಭಾಷೆಯ ದೃಷ್ಟಿಯಿಂದಲೇ ಓದಬೇಕು. ಅಮೃತಾರ ಭಾಷೆ ಪ್ರೇಮಭಾಷೆ! ಪ್ರೇಮವೇ ಅವರ ಗುಣ! ಭಾಷೆ ಪ್ರತಿಮೆ ರೂಪಕಗಳಿಂದ ಅಲಂಕೃತವಾದುದು, ಅಲ್ಲಿ ಹೃದಯವನ್ನು ಸೂರೆಗೊಳ್ಳುವಂಥ ಸಮ್ಮೋಹಕ ಪದಲಾಲಿತ್ಯದ ಲಯವಿದೆ. ಸೊಬಗಿದೆ, ಗಾಢವಾದ ಬದುಕಿನ ಅನುಭವವಿದೆ. + +ಕಟು ವಾಸ್ತವತೆ, ಸಂಘರ್ಷಮಯ ಬದುಕು ಕಲಿಸಿದ ಪಾಠಗಳು ಅವರನ್ನು ಗಟ್ಟಿಗೊಳಿಸಿವೆ ಎನ್ನಬಹುದು. ಇವತ್ತೇನಾದರೂ ಅವರು ಗಂಗಾಜಲದಿಂದ ವೊಡ್ಕಾವರೆಗಿನ ಕವಿತೆ ಬರೆದಿದ್ದರೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರೋ ಏನೋ. ಬದಲಾವಣೆಯೇ ಕಾಲದ ನಿಯಮವೆಂದಾದರೆ ಬದಲಾವಣೆಯನ್ನು ಕೇಡುಗಾಲವೆಂದು ಗ್ರಹಿಸಿ ಸದಾ ನಿಕಷಕ್ಕೊಡ್ಡುವ ಸಮಾಜ. ಮುಳ್ಳುಗಳಂತೆ ಚುಚ್ಚುವ ಸಮಾಜ – ಸಂಸ್ಕಾರದ ರೀತಿ ರಿವಾಜುಗಳನ್ನು, ಧಾರ್ಮಿಕ ಪರಂಪರೆಗಳನ್ನು ಧಿಕ್ಕರಿಸಿದ ಅಮೃತಾ ಎಲ್ಲ ಕಟ್ಟಳೆಗಳನ್ನು ಮುರಿದು ತಮ್ಮದೇ ಆದ ಲೋಕವೊಂದನ್ನು ಕಟ್ಟಿಕೊಳ್ಳುತ್ತಾರೆ… ಹೀಗೆ ಕಾಲಾಂತರದಲ್ಲಿ ಅವರ ಉತ್ಕಟ ಪ್ರೇಮ ಮಾನವೀಯ ಪ್ರೇಮವಾಗಿ, ಮನುಷ್ಯಕಾರುಣ್ಯದ ಸಂವೇದನೆಯಾಗಿ ಲೋಕೊತ್ತರವಾಗುತ್ತದೆ. + + + +1947 ರ ಜುಲೈ 3 ರಂದು ಗಂಡುಮಗುವಿಗೆ ಜನ್ಮ ನೀಡುತ್ತಾರೆ ಅಮೃತಾ. ಮುಂದೆ 14 ಅಗಸ್ಟ್ ವಿಭಜನೆಯ ದಂಗೆ ಶುರುವಾಗುತ್ತದೆ. ತಿಂಗಳ ಹಸುಳೆಯನ್ನು ಉಡಿಯಲ್ಲಿಟ್ಟುಕೊಂಡು ಜೀವವುಳಿಸಿಕೊಂಡು ದೆಹರಾಡೂನಿಗೆ ಗಡಿಪಾರಾಗುವ ದೃಶ್ಯವನ್ನು ನಾವಿಂದು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ವಿಭಜನೆ ಮತ್ತು ಕೋಮುವಾದದ ಕರಾಳ ಕಷ್ಟಗಳ ಝಳವನ್ನು ಉಂಡ ಜೀವ –ಘಾಸಿಗೊಂಡ ಹೃದಯ ಯಾತನೆಯನ್ನೇ ಕಾವ್ಯವಾಗಿಸುತ್ತದೆ. ಕಣ್ಣಿಗೆ ರಾಚುವ ಜಾತಿ- ಮತ- ಧರ್ಮದ ಸೋಗಲಾಡಿತನ.. ಸಮಾಜದ ಓರೆ ಕೋರೆಗಳನ್ನು, ಉಳ್ಳವರ ದರ್ಪ, ಬಡವ, ಶೋಷಿತರ ಅಸಹಾಯತೆಯನ್ನು, ವಿಭಜನೆಯ ದ್ವೇಷ ಅತ್ಯಾಚಾರ ಅನಾಚರಗಳಿಗೆ ಬಲಿಯಾದ ನೊಂದ ಹೆಣ್ಣುಮಕ್ಕಳ ದನಿಯಾಗಿ ಅವರ ಕಾವ್ಯ ಸಶಕ್ತ ಅಭಿವ್ಯಕ್ತಿಯಾಗಿದೆ. ವೈಯಕ್ತಿಕವೂ ರಾಜಕೀಯವಾಗಿ ಲೇಖನಿ ಹರಿತವಾದ ಅಸ್ತ್ರವಾಗುತ್ತದೆ, ಶಸ್ತ್ರವಾಗುತ್ತದೆ. + +ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ. ಅವರಿಗೆ ಹೆಗಲಾಗಿ, ನೆರಳಾಗಿ ಧೃಡವಾಗಿ ನಿಂತವರು ಇಮ್ರೋಜ್. ಸಾಹಿರ್ ಬದುಕಿಗೆ ಬೆಳಕಾಗಲಿಲ್ಲ. ಇಮರೋಜ್ ಅಮೃತಾರ ಕಣ್ಣಾದರು. ಸಾಹಿರ್- ಅಮೃತಾ- ಇಮರೋಜ್ ಪ್ರೇಮ ಇತಿಹಾಸದ ಅದ್ವಿತೀಯ ಪ್ರೇಮಗಾಥೆ. ಅಚ್ಚಳಿಯದೇ ಎಲ್ಲ ಕಾಲದ ಪ್ರೇಮಿಗಳನ್ನು ಕಾಡುತ್ತಲೇ ಇರುತ್ತದೆ. + +ವಿಫಲ ವಿವಾಹದಿಂದ ಅಮೃತಾ ವಿಚ್ಚೇದನ ಪಡೆದು ಹೊರಬಂದಾಗ ಸಾಹಿರ್ ಮತ್ತೊಬ್ಬಳ ಪ್ರೇಮದಲ್ಲಿದ್ದಾನೆಂಬ ವದಂತಿಗೆ ಕುಸಿದು ಖಿನ್ನತೆಗೆ ಜಾರುತ್ತಾರೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯಬೇಕಾಗುತ್ತದೆ. ಆ ಖಿನ್ನತೆಯ ಸೋಲಿನ ಕಾಲದಲ್ಲಿ ಅವರ ಸಾಹಿತ್ಯ ಕೃಷಿ ಪ್ರವಾಹದಂತೆ ಉಕ್ಕೇರುತ್ತದೆ. ಅದೇ ಸಮಯದಲ್ಲಿ ಅವರಿಗೆ ಆಸರೆಯಾದದ್ದು ಇಮರೋಜ್. ವಯಸ್ಸಿನಲ್ಲಿ ಅಮೃತಾರಿಗಿಂತ ಕಿರಿಯ. ಮದುವೆಯಾಗಿ ಇಬ್ಬರು ಮಕ್ಕಳಿದ್ದವಳೊಂದಿಗೆ ಬದುಕನ್ನು ಹಂಚಿಕೊಳ್ಳುವುದೇನು ಸರಳವಾಗಿದ್ದಿಲ್ಲ. ಕೊಂಕುನುಡಿಗಳು ನಂಜು ಮಾತಿನ ಬಾಣಗಳನ್ನು ಇಬ್ಬರೂ ಎದುರಿಸಬೇಕಾಗಿತ್ತು. ಸಖ್ಯವನ್ನು ಸಾಂಗತ್ಯವನ್ನು ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದಿದೆಯಲ್ಲ ಅದು ಸುಲಭದ್ದಲ್ಲ. ಅದಕ್ಕೆ ಇಬ್ಬರ ಸಮರ್ಪಣೆಯೂ ಬೇಕು. + +ಅಮೃತಾ ಮತ್ತು ಇಮರೋಜ್ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕಿನ ಬ್ಯಾಂಕಿನ ಕೆಲಸಕ್ಕೆಂದು ಹೋದರೆ ಸಾಕು, ಎಲ್ಲರ ನೋಟಗಳೂ ಅವರನ್ನೇ ಇರಿಯುತ್ತಿದ್ದವಂತೆ. ಬ್ಯಾಂಕ್ ಉದ್ಯೋಗಿಯಾಗಿದ್ದ ನನ್ನ ಗೆಳತಿ ನಂದಿನಿ ಮಲ್ಯ ಆ ದಿನಗಳಲ್ಲಿ ಈ ಘಟನೆಯನ್ನು ಹೇಳಿದ್ದಳು. ನಾನೇ ನೊಂದಷ್ಟು ಘಾಸಿಗೊಂಡಿದ್ದೆ… ಈಗಲೂ ಅದು ನನ್ನೆದೆಯಲ್ಲಿ ನೋವಿನ ತುಂಡು. ಅನಂತ ನೋವಿನ ಸಾಂಗತ್ಯ ಅಮೃತಾರನ್ನು ಕೊನೆತನಕವೂ ಕೈಬಿಡಲಿಲ್ಲ. ಈಗ ಸುಲಭ ಸಾಧ್ಯವಾಗಿರುವ ಲಿವ್- ಇನ್ ಸಂಬಂಧವನ್ನು ಅಮೃತಾ- ಇಮರೋಜ್ ಅರವತ್ತರ ದಶಕದಲ್ಲಿಯೇ ಬದುಕಿ ತೋರಿಸಿದ್ದಾರೆ. ಇಮರೋಜರ ಮಾತಿನಲ್ಲಿ ಹೇಳುವುದಾದರೆ – ‘ನೀನು ನನ್ನ ಸಮಾಜ, ನಾನು ನಿನ್ನ ಸಮಾಜ, ಇದೇ ಸತ್ಯ. ಬಾಕಿ ಎಲ್ಲ ಮಿಥ್ಯ’. ಇಮರೋಜ್ ಇಲ್ಲಿ ಸಮಾಜದ ಪರಿಭಾಷೆಯನ್ನೇ ಬದಲಿಸಿಬಿಡುತ್ತಾರೆ. ತುಂಬು ಪ್ರೇಮದ ಈ ಅನುಭಾವವೇ ಅವರ ನಾಕು ದಶಕಗಳ ಸಾಂಗತ್ಯವನ್ನು ಗಟ್ಟಿಗೊಳಿಸಿ ಬಾಳಿಸುತ್ತದೆ. 1966 ರಿಂದ 2002ರವರೆಗಿನ ಮೂರುದಶಕಗಳ ಕಾಲ “ನಾಗಮಣಿ” ಎಂಬ ಪಂಜಾಬಿ ಸಾಹಿತ್ಯಿಕ ಪತ್ರಿಕೆಯನ್ನು ಈ ಜೋಡಿ ನಡೆಸುತ್ತದೆ. ಅನೇಕ ಯುವಕವಿಗಳನ್ನು ಬರಹಗಾರರನ್ನು ಪೋಷಿಸಿ ಬೆಳೆಸಿದ ಪತ್ರಿಕೆಯೆಂಬ ಹೆಗ್ಗಳಿಕೆ ನಾಗಮಣಿಯದು. + +ಭಾರತವಲ್ಲದೆ ಪಾಕಿಸ್ತಾನದ ಜನರ ಪ್ರೀತಿ ಅಭಿಮಾನವೂ ಅಮೃತಾ ಅವರಿಗೆ ಅಪಾರವಾಗಿ ದಕ್ಕಿದೆ. ಲಾಹೋರಿನ ಜನ ಅಮೃತಾರನ್ನು ಈಗಲೂ ಪ್ರೀತಿಯಿಂದ ನೆನೆಯುತ್ತಾರೆ. ಲಾಹೋರ್ ಆಕಾಶವಾಣಿಯಲ್ಲಿನ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮವನ್ನು ಮರೆತಿಲ್ಲ. ಅಮೃತಾರ ಮನೆಯೆದುರಿನ ಪಾನ್ ಅಂಗಡಿಯಲ್ಲಿ ಸಾಹಿರ್ ಸಿಗರೇಟ್ ಸೇದುತ್ತ ತಾಸುಗಟ್ಟಲೆ ನಿಂತಿರುತ್ತಿದ್ದರಂತೆ. ಅಮೃತಾ ಕಿಟಕಿ ತೆರೆಯುವವರೆಗೂ ಕದಲುತ್ತಿರಲಿಲ್ಲವಂತೆ. ಕಿಟಕಿ ತೆರೆದ ಅವಳನ್ನು ಕ್ಷಣಕಾಲ ಕಣ್ಣಲ್ಲಿ ತುಂಬಿಕೊಂಡ ನಂತರವೇ ಅಲ್ಲಿಂದ ಹೋಗುತ್ತಿದ್ದ ಹುಚ್ಚುಪ್ರೇಮ ಸ್ಥಳೀಯ ಜನಮಾನಸದಲ್ಲಿ ಈಗಲೂ ಹಚ್ಚಹಸಿರು. ಆ ಪಾನ್ ಅಂಗಡಿಯ ಜಾಗದಲ್ಲಿ ದೊಡ್ದ ಶಾಪಿಂಗ್ ಕಾಂಪ್ಲೆಕ್ಸ್ ತಲೆ ಎತ್ತಿರುವ ಸಂಗತಿಯನ್ನು ಇಮರೋಜ್ ನನ್ನೊಂದಿಗೂ ಹಂಚಿಕೊಂಡಿದ್ದರು. + +ಅಮೃತಾರ ಕವಿತೆಗಳು ಬಿಂಬವಾದ (ಕನ್ನಡದ ನವೋದಯ ಕಾವ್ಯದಂತೆ ಛಾಯಾವಾದ, ಬಿಂಬವಾದಗಳು ಹಿಂದಿ ಸಾಹಿತ್ಯ ಪ್ರಾಕಾರಗಳು) ವಿಧಾನದಲ್ಲಿ ಹೊಸ ಭಾಷೆ, ಹೊಸ ರೂಪಕ, ನವನವೀನ ಪರಿಕರಗಳನ್ನು ಅಮೃತಾ ಬಳಸುತ್ತಾರೆ. ಭಾಷೆಯ ಲಾಲಿತ್ಯವಿದೆ, ಚೆಲುವಿದೆ, ದರ್ಶನವಿದೆ, ಆಧ್ಯಾತ್ಮವಿದೆ, ಸತ್ಯದ ಶೋಧನವೂ ಇದೆ. ಆಕೆ ಬಳಸುವ ಅನೇಕ ರೂಪಕಗಳು ಪ್ರತಿಮೆಗಳನ್ನು ಕನ್ನಡದ ಸಾಹಿತ್ಯದ ಸಂದರ್ಭದಲ್ಲಿಟ್ಟು ನೋಡಿದರೆ ಹೊಸ ಹೊಳಹುಗಳನ್ನು ಮೂಡಿಸುತ್ತವೆ. ವಾರಿಸ್ ಷಾ, ಬುಲ್ಲೇ ಷಾ ಸೂಫಿ ಸಂತರ ಪ್ರಭಾವವನ್ನೂ ಅವರ ಕೃತಿಗಳಲ್ಲಿ ಕಾಣುತ್ತೇವೆ. ಕವಿತೆ ಹುಟ್ಟಲು ಕವಿಯ ದೇಹದ ಅಗತ್ಯವಿದೆಯೆನ್ನುವ ಅಮೃತಾ, ಸ್ವಯಂ ದೇಹವಾಗಿ ಕವಿತೆಗಳಿಗೆ ಜನ್ಮ ನೀಡಿದ್ದಾರೆ. ಅಪ್ಪಟ ಸ್ತ್ರೀ ಸಂವೇದನೆಗಳನ್ನು ಕಾದಂಬರಿಗಳಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ತಮ್ಮ ಸಮಕಾಲೀನರಲ್ಲಿ ಭಿನ್ನರಾಗಿ ಗುರುತಿಸಲ್ಪಡುತ್ತಾರೆ. ವಿಭಜನೆ ದೇಶದ್ದಾಯಿತು ಆದರೆ ಬಲಿಯಾಗಿದ್ದು, ಉಲ್ಲಂಘನೆಯಾಗಿದ್ದು ಹೆಣ್ಣುದೇಹಗಳು. ಎಲ್ಲ ಯುದ್ಧ, ಎಲ್ಲ ಸಾಮ್ರಾಜ್ಯಗಳ ವಿಜಯೋತ್ಸವಕ್ಕೂ ಬಲಿಯಾಗಿದ್ದು ಹೆಣ್ಣುದೇಹಗಳೇ. ಈ ಮಾತಿಗೆ ಅವರ ‘ಪಿಂಜರ್’ ಕಾದಂಬರಿ ಸುಡು ಸುಡುವ ಉದಾಹರಣೆ. + +(ಅಮೃತಾ ಮತ್ತು ಸಾಹಿರ್ ಲೂಧಿಯಾನ್ವಿ) + +ಅಮೃತಾ ಜೀವ ಸಂಗಾತಿ ಇಮರೋಜ್ ಅವರೊಂದಿಗಿನ ನನ್ನ ಒಡನಾಟದಲ್ಲಿ ಅನೇಕ ಬಾರಿ ಅವರ ಮನೆಗೆ ಹೋಗಿದ್ದೇನೆ. ಅವರ ಕುರಿತು ಗಂಟೆಗಟ್ಟಲೆ ಮಾತಾಡಿದ್ದೇನೆ. ಹೆಚ್ಚಾಗಿ ಭಾನುವಾರದ ರಜೆಯ ನಡುಮಧ್ಯಾಹ್ನಗಳಲ್ಲಿ ಇಮರೋಜರೊಂದಿಗೆ ಹರಟೆ ಹೊಡೆದು ಅವರೇ ತಯಾರಿಸಿದ ಚಹ ಕುಡಿದ ಕ್ಷಣಗಳು ನನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳು. ಪಡಸಾಲೆ ತುಂಬ ಅಮೃತಾರ ಫೋಟೋಗಳಿವೆ. ಮುದ್ದಾದ ಅಕ್ಷರಗಳಲ್ಲಿ ಬರೆದು ಫೋಟೋ ಫ್ರೇಮ್ ಹಾಕಿಟ್ಟ ಕೆಲ ಕವಿತೆಗಳಿದ್ದವು. ಬದುಕು ಏಕಾಂಗಿ ಕವಿತೆಯಂತೆ ಅಲ್ಲಿ ಹರಡಿಕೊಂಡಿತ್ತು. ಆ ಸಮಯದಲ್ಲಿಯೇ ಅಮೃತಾರ ಕವಿತೆಗಳನ್ನು ಯಾಕೆ ಕನ್ನಡಕ್ಕೆ ಅನುವಾದಿಸಬಾರದು ಎಂಬ ಆಲೋಚನೆ ಬಂದಿತ್ತು. ನಾನು ಅಯ್ದುಕೊಂಡಿದ್ದು ಭಾರತೀಯ ಜ್ಞಾನಪೀಠ ಸಂಸ್ಥೆ ಪ್ರಕಾಶಿಸಿದ ‘ಚುನಿ ಹುಯೀ ಕವಿತಾಯೇಂ’ ಎಂಬ ಅವರ ಅತ್ಯುತ್ತಮ ಆಯ್ದ ಕವಿತೆಗಳ ಸಂಗ್ರಹವನ್ನು. ಅಮೃತಾ ಈ ಹಿಂದೆ ಕನ್ನಡಕ್ಕೆ ತರ್ಜುಮೆ ಆಗಿದ್ದಾರೆಯೇ? 1984 ರಲ್ಲಿ ಡಾ. ಹಾ.ಮಾ ನಾಯಕ ಅನುವಾದಿಸಿದ್ದ ‘ಸುನೇರಿ’ ಎಂಬ ಕವಿತಾ ಸಂಕಲನದ ವಿನಾ ಇನ್ನೊಂದಿಲ್ಲ ಎನ್ನಲಾಗಿದೆ. ಈ ಸಂಕಲನ ಹೆಚ್ಚು ಚರ್ಚೆಗೆ ಬಂದಿಲ್ಲವೆನಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಮೃತಾ ಪ್ರೀತಮ್ ಹೆಸರು ಚಿರಪರಿಚಿತ. + + + +ಅವರನ್ನು ಪ್ರತ್ಯಕ್ಷವಾಗಿ ಕಾಣಲಿಲ್ಲವೆಂಬ ವಿಷಾದ ನನ್ನನ್ನು ಕಡೆಯ ತನಕ ಕಾಡಲಿದೆ. ಆದರೆ ಇಮರೋಜರನ್ನಾದರೂ ಕಂಡ ಸಂತಸವಿದೆ. ನಾನು ದೆಹಲಿಗೆ ಬಂದಾಗಿನ ಎಂಭತ್ತರ ದಶಕದಲ್ಲೇ ಅಮೃತಾರನ್ನು ಓದುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರ ಕಾದಂಬರಿ ಕತೆಗಳನ್ನು ಓದಿದ್ದೆ. ಕಾಡಿನ ಬೇರಿನ ‘ಅಂಗೂರಿ’ ಪಾತ್ರವೇ ನಾನಾಗಿ ಬದುಕಿದ್ದೇನೆಂದು ಈಗಲೂ ಅನಿಸುತ್ತದೆ. ಒಂದು ಬಹುದೀರ್ಘ ಮೂಕ ಸಂವಾದದಂತೆ ಅಮೃತಾರೊಂದಿಗೆ ಬಹುಕಾಲ ಬಾಳಿದ್ದೇನೆ ಅನ್ನುವ ಭಾವನೆಯೇ ಈ ದೆಹಲಿಯನ್ನು ದೆಹಲಿಯೊಂದಿಗಿನ ನನ್ನನ್ನು ಪರಸ್ಪರ ಬೆಸೆದಿದೆ ಅನಿಸುತ್ತದೆ. ಅವರನ್ನು ಕನ್ನಡ ಸಾಹಿತ್ಯ ವಲಯಕ್ಕೆ ಕಾಣಿಸಬೇಕೆಂಬ ನನ್ನ ಬಹುಕಾಲದ ಕನಸೊಂದು ನನಸಾಗುವಂತಿದ್ದರೆ ಅದು ‘ಪಲ್ಲವ ಪ್ರಕಾಶನ’ ದ ವೆಂಕಟೇಶ್ ಅವರು ಈ ಪುಸ್ತಕವನ್ನು ಪ್ರಕಟಿಸುವ ಭರವಸೆಯನ್ನು ನೀಡಿದ್ದರಿಂದ. ಅವರಿಗೆ ನನ್ನ ಮನಃಪೂರ್ವಕ ಕೃತಜ್ಞತೆಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_336.txt b/Kenda Sampige/article_336.txt new file mode 100644 index 0000000000000000000000000000000000000000..ddbc62c952d7295501ea140fdf3f30b726fbe8fd --- /dev/null +++ b/Kenda Sampige/article_336.txt @@ -0,0 +1,119 @@ + + +ಆಗತಾನೇ, ತನ್ನ ಮಗನೂ ತಾನು ಪ್ರೀತಿಸುವ ಹುಡುಗಿಯನ್ನೇ ಮೆಚ್ಚಿರುವುದನ್ನು ತಿಳಿದ ಅಗಸ್ತ್ಯನಿಗೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಆಯಿತು. ಅದಕ್ಕೆ ಕಾರಣಗಳು ಮೂರು. ಮೊದಲನೆಯದು- ಬದುಕಿನಲ್ಲಿ ಅವನೆಂದೂ ಸೋಲನ್ನು ಕಂಡವನಲ್ಲ. ಎರಡನೆಯದು- ಶರ್ಮಿಷ್ಠೆಯಲ್ಲಿ ಅವನಿಗೆ ಎಂಥಾ ಪ್ರೇಮವಿದೆಯೆಂದರೆ, ಮಗನಿಗೋಸ್ಕರವಾಗಿಯಾದರೂ ಅವಳನ್ನು ತ್ಯಾಗ ಮಾಡಿ ಬದುಕುವುದು ಸಾಧ್ಯವಿಲ್ಲವೆನ್ನುವುದು. ಮೂರನೆಯದು-ತನ್ನ ಮಗನನ್ನು “ಮಗ” ಎಂದು ಕರೆಯಬಹುದೇ ಎಂಬ ಪ್ರಶ್ನೆಗೆ 21 ವರ್ಷಗಳ ನಂತರವೂ ಅವನಿಗೆ ಉತ್ತರ ಸಿಕ್ಕಿಲ್ಲ. + +ಅಸ್ಸಾಮಿನ ತಿನ್ ಸುಖಿಯಾದ ಹತ್ತಿರದ ಅನೇಕ ಟೀ ಪ್ಲಾಂಟೇಶನ್ ಗಳ ಒಡೆಯ ರಮಾನಂದ. ಅವರ ಐಶ್ವರ್ಯವನ್ನು ದಿನೇ ದಿನೇ ಮತ್ತಷ್ಟು ಹೆಚ್ಚಿಸಲು, ಪ್ರತಿವರ್ಷವೂ ಯೂರೋಪು, ಅಮೆರಿಕಾ ಪ್ರವಾಸಗಳಿಗೆ ಅನುವು ಮಾಡಿಕೊಡಲು, ಹತ್ತಾರು ದೊಡ್ಡ ದೊಡ್ಡ ಕಾರುಗಳನ್ನು ಮನ ಬಂದಾಗ ಬದಲಾಯಿಸುವುದನ್ನು ಸಾಧ್ಯವಾಗಿಸಲು ಅವರ ವಿಶಾಲವಾದ ಬಂಗಲೆಯನ್ನು ಏರ್ ಕಂಡಿಶನರ್ ಗಳೂ, ಸ್ಟೀರಿಯೋ, ವೀಡಿಯೋಗಳಲ್ಲದೆ ಅನೇಕ ಅತ್ಯಾಧುನಿಕ ಗ್ಯಾಡ್ಜೆಟ್ ಗಳಿಂದ ಸಜ್ಜುಗೊಳಿಸಲು-ಅಗಲವಾದ ಬಿದಿರಿನ ಹ್ಯಾಟುಗಳ ಕೆಳಗೆ ತಲೆ ಬಗ್ಗಿಸಿ, ತಮ್ಮ ಜೀವಮಾನವೆಲ್ಲಾ ದುಡಿಯುತ್ತಿದ್ದರು ನೂರಾರು ಕೂಲಿಗಳು. ರಮಾನಂದರ ಒಬ್ಬನೇ ಮಗ ಅಗಸ್ತ್ಯ. ಅವನು ಹುಟ್ಟಿದಾಗ ಜಾತಕ ನೋಡಿದ್ದ ಪಂಡಿತರು ರಮಾನಂದರಿಗೆ ಹೇಳಿದ್ದರಂತೆ “ನಿಮ್ಮ ಮಗನ ಜಾತಕ ಅಂತಿಂಥಾದ್ದಲ್ಲ. ತುಂಬಾ ಮೇಲೆ ಬರುವಂಥವನ ಜಾತಕ ಇದು. ಈ ರೀತಿ ಗ್ರಹಕೂಟಗಳು ಚಕ್ರವರ್ತಿಗಳ, ಮಹರ್ಷಿಗಳ ಜಾತಕಗಳಲ್ಲಿ ಮಾತ್ರ ಇರುತ್ತವೆ. ಅಗಸ್ತ್ಯ ಗೋತ್ರದಲ್ಲಿ ಹುಟ್ಟಿದ್ದ ತಮ್ಮ ಒಬ್ಬನೇ ಮಗನಿಗೆ ಅಗಸ್ತ್ಯನೆಂದೇ ಹೆಸರಿಟ್ಟಿದ್ದರು ರಮಾನಂದ-ಸುಭದ್ರ. ಆದರೆ ದುರ್ದೈವವೆಂದರೆ, ಮಗನ ಮಹತ್ಸಾಧನೆಗಳನ್ನು ನೋಡಿ ಸಂತೋಷಪಡುವಷ್ಟು ವರ್ಷ ಅವರು ಬದುಕಿರಲೇ ಇಲ್ಲ. ಅವನು 20ನೇ ವಯಸ್ಸಿನಲ್ಲಿ ಅಮೆರಿಕಾದಲ್ಲಿ ಓದುತ್ತಿದ್ದಾಗ, ಯೂರೋಪು ಪ್ರವಾಸ ಮುಗಿಸಿ ವಾಪಸ್ಸು ಬರುತ್ತಿದ್ದ ರಮಾನಂದ, ಸುಭದ್ರಾ ವಿಮಾನ ಅಪಘಾತದಲ್ಲಿ ಪ್ರಾಣಬಿಟ್ಟರು. + +ಆದರೆ ಪಂಡಿತರ ಮಾತನ್ನು, ತನ್ನ 25ನೆಯ ವಯಸ್ಸಿಗೇ ಅಕ್ಷರಶಃ ನಿಜ ಮಾಡಿಸಲೋ ಎಂಬಂತೆ ಬೆಳೆದು ನಿಂತಿದ್ದ ಅಗಸ್ತ್ಯ. ಆರಡಿ ಎತ್ತರದ, ಅದಕ್ಕೆ ಸರಿದೂಗುವ ಮೈಕಟ್ಟಿನ ದೃಢಕಾಯ. ಎಂಥವರೂ ಮೋಹಗೊಳ್ಳುವ ರೂಪ. ಅಪ್ಪ ಬಿಟ್ಟು ಹೋಗಿದ್ದ ಎಸ್ಟೇಟುಗಳು, ಬಂಗಲೆ, ಲಕ್ಷಾಂತರ ರೂಪಾಯಿಗಳ ಆಸ್ತಿಯ ಒಡೆಯ. ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯದಿಂದ ಜನೆಟಿಕ್ ಎಂಜಿನಿಯರಿಂಗ್ ನಲ್ಲಿ ಡಾಕ್ಟರೇಟ್. ಅವನು ಬರೆದ ರಿಸರ್ಚ್ ಪೇಪರ್ ಗಳಿಂದ ಅಷ್ಟು ಚಿಕ್ಕ ವಯಸ್ಸಿನಲ್ಲೇ ಜಗದ್ವಿಖ್ಯಾತಿ. ಜೊತೆಗೆ ವಯೋಲಿನ್ ನುಡಿಸುವುದರಲ್ಲಿ ಪರಿಣಿತ, ಈಜುವುದರಲ್ಲಿ ನಿಸ್ಸೀಮ. ಇದಕ್ಕೆಲ್ಲಾ ಮೆರುಗು ಕೊಡುವಂತೆ ಮಿಮಿಯಂಥಾ ಹೆಂಡತಿ. ಅಮೆರಿಕಾದಲ್ಲಿ ತನ್ನ ಜೊತೆಗೇ ರಿಸರ್ಚ್ ಮಾಡುತ್ತಿದ್ದ ಹೂಗೂದಲಿನ ಚೆಲುವೆ ಮಿಮಿಯೊಡನೆ ಪರಿಚಯ, ಸ್ನೇಹ, ಪ್ರೇಮ, ಮದುವೆ. ಭಾರತಕ್ಕೆ ಆಗಮನ. ಅವನು ಆಗಾಗ ತಮಾಷೆ ಮಾಡುತ್ತಿದ್ದ “ಯೂ ನೋ ಸಮ್ಥಿಂಗ್, ಮಿಮಿ? ಅಗಸ್ತ್ಯ ಮಹರ್ಷಿ ತನಗೆ ತಕ್ಕ ಹುಡುಗಿ ಸಿಕ್ಕಲಿಲ್ಲಾಂತ, ಪ್ರಪಂಚದಲ್ಲಿರುವ ಎಲ್ಲಾ ಸುಂದರ ವಸ್ತುಗಳಿಂದ ಒಂದೊಂದಂಶ ತೆಗೆದು, ಲೋಪಾಮುದ್ರೇನ ಸೃಷ್ಟಿಸಿ ಮದುವೆ ಆದಾಂತ ನಮ್ಮ ಪುರಾಣ ಹೇಳುತ್ತೆ. ಆ ಕಾಲದಲ್ಲಿ ನೀನೇನಾದ್ರೂ ಇದ್ದಿದ್ರೆ ಅಗಸ್ತ್ಯನಿಗೆ ಅಂಥಾ ಸಮಸ್ಯೆ ಬರುತ್ತಿರಲಿಲ್ಲ.” ಒಟ್ಟಿನಲ್ಲಿ ಅಗಸ್ತ್ಯ ಪರಿಪೂರ್ಣ. ಇಷ್ಟೆಲ್ಲಾ ಗುಣಗಳನ್ನು ಹೊಂದಿರುವ ಯಾವ ಯುವಕನಲ್ಲಿಯೂ ಇರಬಹುದಾದಷ್ಟು ಹೆಮ್ಮೆ, ಸ್ವಾಭಿಮಾನ ಅವನಲ್ಲಿಯೂ ಇತ್ತು. ತನ್ನ ಹೆಸರು, ರೂಪ, ಪ್ರತಿಭೆ, ಸಾಮರ್ಥ್ಯ, ಹಣ, ಯಶಸ್ಸು, ಸ್ಕೂಲಿನಲ್ಲೇ ಇದ್ದ 206ರ “ಐಕ್ಯು,” ಮಿಮಿ-ಎಲ್ಲದರ ಬಗ್ಗೆ ಅವನ ಹೆಮ್ಮೆ, ಮೋಹಕ್ಕೆ ತಿರುಗಿ ದಿನೇದಿನೇ ಹೆಚ್ಚು ಹೆಚ್ಚು ಬೆಳೆದು ಅವನ ಮೈ ಮನಸ್ಸುಗಳ ಕಣ ಕಣಗಳಲ್ಲಿಯೂ ಮಿಡಿಯತೊಡಗಿತ್ತು. ಆ ಮೋಹವೇ ಅವನನ್ನು ಅಮರತ್ವದ ಹಂಬಲದೆಡೆಗೆ ಎಳೆಯತೊಡಗಿತ್ತು. + +ಅಮರನಾಗಲು ಅಗಸ್ತ್ಯ ಕನಸು ಕಾಣತೊಡಗಿದ. ಅಸಾಧ್ಯವಾದುದನ್ನು ಸಾಧ್ಯವಾಗಿಸುವ ಪಣತೊಟ್ಟ. ಅವನ ಆ ಉತ್ಕಟ ಬಯಕೆಗೆ ಉತ್ತರವೋ ಎಂಬಂತೆ ದಿನವೆಲ್ಲಾ ಅವನ ತಲೆಯಲ್ಲಿ ಮಿಡಿಯಲು ಪ್ರಾರಂಭ ಮಾಡಿತು ಏಕತಾನ. + +If the nucleus is knocked off from the fertilized ovum, and replaced by the nucleus of a body cell of the father, and planted back in to the uterus of the mother the baby to be born will be the `clone’ of the father. + +ಫಲೀಕರಣಗೊಂಡ ಅಂಡದಿಂದ ಜೀವಕಣ ಕೇಂದ್ರವನ್ನು ಹೊರಹಾಕಿ ಅಲ್ಲಿ ತಂದೆಯ ಜೀವಕಣ ಕೇಂದ್ರದ ಒಂದು ಜೀವಕೋಶವನ್ನು ಸ್ಥಳಾಂತರ ಮಾಡಿ ಮತ್ತೆ ತಾಯಿಯ ಗರ್ಭಕೋಶದಲ್ಲಿ ಕೂಡಿಸಿದರೆ ಮುಂದೆ ಹುಟ್ಟುವ ಮಗು ತಂದೆಯ ತದ್ರೂಪಿ ಶಿಶುವಾಗಿರುತ್ತದೆ. + +-ಹಾಗೆ ಮಾಡಿದರೆ, ತಾಯಿಯಿಂದ ಒಂದಂಶವನ್ನೂ ಪಡೆಯದೆ, ಕೇವಲ ಗರ್ಭದಲ್ಲಿ ಬೆಳೆದು ಹುಟ್ಟುವ ಮಗ ತನ್ನ ಪಡಿಯಚ್ಚಾಗುತ್ತಾನೆ. ಪೂರ್ಣವಾಗಿ ತನ್ನ ಪ್ರತಿಯಾಗುತ್ತಾನೆ. ಪೀಳಿಗೆಯಿಂದ ಪೀಳಿಗೆಗೆ ಹೀಗೇ ಮುಂದುವರಿಸಿದರೆ ತಾನು ಸಾವಿಲ್ಲದವನಾಗುತ್ತೇನೆ. ಇದುವರೆಗೂ ಕೇವಲ ಸಸ್ಯಗಳಲ್ಲಿ, ಕೆಲವು ಪ್ರಾಣಿಗಳಲ್ಲಿ ವಿಜ್ಞಾನ ಸಾಧಿಸಿರುವುದನ್ನು, ತಾನು ಮನುಷ್ಯನಲ್ಲಿ ಮೊದಲಬಾರಿ ಸಾಧಿಸುತ್ತೇನೆ. “ಕುಂಭ ಸಂಭವ”ವನ್ನು ಸೃಷ್ಟಿಸಿ ಅಗಸ್ತ್ಯ ಮಹರ್ಷಿಯನ್ನು ಮೀರಿ ಪ್ರಖ್ಯಾತನಾಗುತ್ತೇನೆ. + +ತಕ್ಷಣ ಮಿಮಿಯೊಂದಿಗೆ ಅಮೆರಿಕಾಗೆ ಪ್ರಯಾಣ. ಅಲ್ಲಿನ ಲ್ಯಾಬೊರೇಟರಿಗಳಲ್ಲಿ ನಡೆದದ್ದೆಲ್ಲಾ ತುಂಬಾ ಗೋಪ್ಯ. ಅದನ್ನು ಬಹಿರಂಗಪಡಿಸುವುದು ಅಗಸ್ತ್ಯನಿಗೆ ಸ್ವಲ್ಪವೂ ಇಷ್ಟವಿಲ್ಲ. ಮಿಮಿಯ ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ವಿಷಯ ಅವನು, ಮಿಮಿ ಮಾತ್ರ ತಿಳಿದಿರುವ ನಿಗೂಢ ರಹಸ್ಯ. ಅವಳ ಮಗು ಹುಟ್ಟುವವರೆಗೂ ಅಮೆರಿಕಾದಲ್ಲೇ ಇರಲು ನಿರ್ಧಾರ.ಹೊಟ್ಟೆಯಲ್ಲಿ ಮಗು ಬೆಳೆದಂತೆ, ದೈಹಿಕವಾಗಿ ಆರೋಗ್ಯವಾಗಿದ್ದರೂ ಮಿಮಿ ದಿನೇ ದಿನೇ ಕಳೆಗುಂದಿದ್ದಳು. ಬಿಳಿಚಿಕೊಂಡಿದ್ದಳು. ಯಾವಾಗಲು ಹಕ್ಕಿಯಂತೆ ಉತ್ಸಾಹದಿಂದ ಇರುತ್ತಿದ್ದವಳು ಮೂಕಿಯಾಗಿದ್ದಳು. ತಾಯ್ತನ ಅವಳಿಗೆ ಮೆರುಗು ಕೊಡುವುದರ ಬದಲು ಸಾರಗುಂದಿಸಿತ್ತು. ಹೆರಿಗೆಯ ನೋವು ತಿನ್ನುತ್ತಾ, ಒದ್ದಾಡುತ್ತಾ ಲೇಬರ್ ವಾರ್ಡಿನಲ್ಲಿ ಮಲಗಿದ್ದಾಗ ಅವಳಲ್ಲಿ ಸ್ವಲ್ಪ ನಲಿವು ತರಿಸಲು ಅಗಸ್ತ್ಯ ಹೇಳಿದ್ದ “ನೋಡು… ಇನ್ನು ಸ್ವಲ್ಪ ಹೊತ್ತಷ್ಟೆ. ನಿನ್ನ ಮಗನ ಮುಖ ನೋಡಿದ ತಕ್ಷಣ ಎಲ್ಲಾ ಸರಿ ಹೋಗುತ್ತೆ… ಆಮೇಲೆ ನಿನ್ನ ಹಿಡಿಯೋರೇ ಇಲ್ಲ…” + +ಮಿಮಿ ನೀರವ ನಗೆ ನಕ್ಕಿದ್ದಳು. “ನನ್ನ ಹೊಟ್ಟೇಲಿ ಹುಟ್ಟಿದ ಮಾತ್ರಕ್ಕೆ, ಅವನು ನನ್ನ ಮಗ ಅನ್ನೋದು ತಮಾಷೆ ಅಲ್ವೇ? ನನ್ನ ಒಂದು ಅಂಶವೂ ಇಲ್ಲದ ಆ ಜೀವಕ್ಕೆ, ನಾನು ತಾಯಿ ಹೇಗಾದೇನು?” + +ಆರೋಗ್ಯವಾಗಿದ್ದು ಅತ್ಯಾಧುನಿಕ ಆಸ್ಪತ್ರೆಯಲ್ಲಿದ್ದು, ಏನೂ ತೊಂದರೆಯಿಲ್ಲದಿದ್ದರೂ ಇದ್ದಕ್ಕಿದ್ದಂತೆ ಅತಿ ರಕ್ತಸ್ರಾವವಾಗಿ, ಮಗ ಹುಟ್ಟಿದ ಕೆಲವೇ ಗಂಟೆಗಳಲ್ಲಿ ಪ್ರಾಣಬಿಟ್ಟಿದ್ದಳು ಮಿಮಿ. ಅಪ್ಪಿತಪ್ಪಿ ಕೂಡ ಹೀಗೇನಾದರೂ ಅನಾಹುತ ಆಗಬಹುದೆಂದು ಸಂಶಯವೂ ಇಲ್ಲದ ಅಗಸ್ತ್ಯ ತಲೆಯ ಮೇಲೆ ಕೈಹೊತ್ತು ಕೂತಿದ್ದ. ಮನದಾಳದಿಂದ ಪ್ರಶ್ನೆಯೊಂದು ಹೆಡೆ ಎತ್ತಿತ್ತು. “ನನ್ನನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳುತ್ತಿದ್ದ ಗಂಡ, ಕೇವಲ ಒಂದು ಸಾಧನವಾಗಿ ಬಳಸಿಕೊಂಡ. ಅವನು ಅಮರತ್ವದೆಡೆಗೆ ಹೆಜ್ಜೆ ಹಾಕಲು ನಾನೊಂದು ಮೆಟ್ಟಿಲು ಮಾತ್ರ”-ಎಂದು ಮಿಮಿ ಕೊರಗಿ, ತನಗೆ ಇದೆಲ್ಲದರ ಬಗ್ಗೆ ಇದ್ದ ಅಸಮ್ಮತಿ ತೋರಿಸುವ ರೀತಿ ಅವಳ ಸಾವೇ? ತಾನೇ ಅವಳನ್ನು ಕೊಂದೆನೇ? + +“ನಾನ್ಸೆನ್ಸ್, ಅಗಸ್ತ್ಯ. ಮಿಮಿ ಸತ್ತಿದ್ದು ಅನೆಕ್ಸ್ಪೆಕ್ಟೆಡ್ ಡೆಲಿವರಿ ಕಾಂಪ್ಲಿಕೇಶನ್ಸ್ ನಿಂದ. ಅಸಂಬದ್ಧ ವಿಷಯಗಳನ್ನೆಲ್ಲಾ ತಲೆಗೆ ತುಂಬಿಕೊಂಡು ಸುಮ್ಮನೆ ಯಾಕೆ ಕೊರಗ್ತೀಯಾ? ಡೋನ್ಟ್ ಅಲೋ ಯುವರ್ ಗಿಲ್ಟ್ ಟು ಸ್ವಾಲೋ ಯೂ ಅಪ್. ಮಿಮಿ ವಿಷಯ ಸುಮ್ಮನೆ ಯೋಚನೆ ಮಾಡೋದು ಬಿಟ್ಬಿಡು. ಆದದ್ದು ಆಗಿಹೋಯ್ತು. ನಿನ್ನ ಮುಂದಿನ ಬದುಕನ್ನು ನೋಡು. ಥಿಂಕ್ ಆಫ್ ವಾಟ್ ಈಸ್ ರೈಟ್ ಇನ್ ಫ್ರಂಟ್ ಆಫ್ ಯೂ- ಥಿಂಕ್ ಆಫ್ ಯುವರ್ ಫ್ಯಾನ್ಟಾಸ್ಟಿಕ್ ಫೀಟ್-ಥಿಂಕ್ ಆಫ್ ಯುವರ್ ಫಸ್ಟ್ ಸ್ಟೆಪ್ ಟುವರ್ಡ್ಸ್ ಇಮ್ಮಾರ್ಟ್ಯಾಲಿಟಿ.” + +ತನ್ನ ಒಳದನಿಗೆ ಓಗೊಟ್ಟು, ತನ್ನನ್ನ ತಾನೇ ಸಮಾಧಾನ ಮಾಡಿಕೊಂಡು ತನ್ನ ಹೊಸ ಬದುಕಿಗೆ ನಾಂದಿ ಹಾಕಲೋ ಎಂಬಂತೆ, ಅಗಸ್ತ್ಯ ಎದ್ದು ಬಂದು ತನ್ನ ಮಗನನ್ನು ಎತ್ತಿಕೊಂಡ, ಬಾಚಿ ತಬ್ಬಿಕೊಂಡ. ಕೆಲವೇ ದಿನಗಳಲ್ಲಿ ಭಾರತಕ್ಕೆ ಮರಳಿದ. + +ವರುಣ ಹುಟ್ಟಿದಂದಿನಿಂದ ಅಗಸ್ತ್ಯನ ಪ್ರಪಂಚ ಒಂದೇ. ಅವನು, ಮಗು. ಅವನಿಗೆ ತನ್ನ ಸೃಷ್ಟಿಯಲ್ಲಿದ್ದ ಮೋಹ, ಹುಚ್ಚು, ಅವನನ್ನು ಹೊರಜಗತ್ತಿನಿಂದ, ಜನರಿಂದ, ಕೊನೆಗೆ ತನ್ನ ಸಂಶೋಧನೆಯಿಂದ ಕೂಡ ದೂರಮಾಡಿತು. ತನ್ನದೇ ಆದ ಪ್ರಪಂಚವನ್ನು ಕಲ್ಪಿಸಿ ಕೊಟ್ಟಿತು. + +ಅಗಸ್ತ್ಯ ಮಗುವಾಗಿದ್ದಾಗ ಅವನನ್ನು ನೋಡಿಕೊಳ್ಳುತ್ತಿದ್ದ ಆಯಾ, ಇಷ್ಟು ವರ್ಷಗಳೂ ಮನೆಯ ಉಸ್ತುವಾರಿಯ ಜವಾಬ್ದಾರಿ ಹೊತ್ತಿದ್ದಳು. ಈಗ ಮತ್ತೆ ವರುಣನನ್ನು ನೋಡಿಕೊಳ್ಳಲು ಅವಳನ್ನೇ ನೇಮಿಸಿದ ಅಗಸ್ತ್ಯ. ಸ್ಕೂಲಿಗೆ ಸೇರಿಸುವ ವಯಸ್ಸು ಬಂದಂತೆ, ತಾನು ಓದಿದ್ದ ಡೂನ್ ಸ್ಕೂಲಿಗೆ ವರುಣನನ್ನೂ ಕಳಿಸಿದ. + +ಅಸ್ಸಾಮಿನ ಟೀ ಪ್ಲಾಂಟೇಶನ್ ಗಳಲ್ಲಿ, ನಾಗರಿಕತೆಯಿಂದ ದೂರವಾದ ಗಿರಿಧಾಮಗಳಲ್ಲಿ, ಅರಣ್ಯಗಳು, ಮರಳುಗಾಡುಗಳಲ್ಲಿ, ಕಾಲ ನಿಧಾನವಾಗಿ ಸಾಗುತ್ತದೆ. 20ನೇ ಶತಮಾನದ ನಾಗರಿಕತೆ. ಫಾಸ್ಟ್ ಲೈಫ್, ಬೃಹನ್ನಗರಗಳ ಮೇಲೆ ಒತ್ತಿದಂತೆ ಈ ಸ್ಥಳಗಳ ಮೇಲೆ ಅಷ್ಟು ಬೇಗ ತನ್ನ ಅಚ್ಚು ಒತ್ತಿರಲಿಲ್ಲ. ಜನರನ್ನು ರೋಬೋಟ್ ಗಳಾಗಿ ಮಾಡಿರಲಿಲ್ಲ. 25 ವರ್ಷಗಳಲ್ಲಿಯೂ ಅಲ್ಲಿನ ಬದುಕಿನ ರೀತಿ ಹೆಚ್ಚು ಬದಲಾಯಿಸಿಯೇ ಇರಲಿಲ್ಲ. ಆದ್ದರಿಂದ ಹೆಚ್ಚು ಕಡಿಮೆ ತಂದೆ ಬೆಳೆದ ಪರಿಸರದಲ್ಲಿ ಬೆಳೆದ ವರುಣನ ವ್ಯಕ್ತಿತ್ವ, ಅಗಸ್ತ್ಯನ ವ್ಯಕ್ತಿತ್ವಕ್ಕಿಂತ ಹೆಚ್ಚು ಬೇರೆಯಾಗಲಿಲ್ಲ. + +ವರುಣನ ಮೂಲಕ ಅಗಸ್ತ್ಯ ಮತ್ತೆ ತನ್ನ ಬಾಲ್ಯಕ್ಕೆ ಮರಳಿದ. ಅವನೊಡನೆ ಮತ್ತೆ ಬೆಳೆಯತೊಡಗಿದ. ವರುಣ ಮಿಂಚುಹುಳುಗಳನ್ನು ಹಿಡಿಯಲು ಅವುಗಳ ಹಿಂದೆ ಹುಚ್ಚು ಮೋಹದಿಂದ ಓಡಿದಾಗ, ಮಧ್ಯಾಹ್ನದ ಹೊತ್ತು ಒಬ್ಬನೇ ಮನೆಯ ಹಿಂದೆ ಮರದ ಕೆಳಗಿದ್ದ ಕಲ್ಲುಬೆಂಚಿನ ಮೇಲೆ ಕುಳಿತು ಹಗಲುಗನಸು ಕಂಡಾಗ, 10 ವರ್ಷದವನಾಗಿದ್ದಾಗಲೇ ತನ್ನನ್ನು ಚೆಸ್ ನಲ್ಲಿ ಸೋಲಿಸಿದಾಗ, “ಜಂಗಲ್ ಬುಕ್” ಪ್ರತಿದಿನವೂ ಓದಿದಾಗ ವಿಜ್ಞಾನದಲ್ಲಿ ವಯಸ್ಸಿಗೆ ಮೀರಿದ ಆಸಕ್ತಿ ತೋರಿಸಿದಾಗ, ಗಂಟೆಗಟ್ಟಲೆ ಈಜು ಕೊಳದಲ್ಲಿ ಮೈಮರೆತಾಗ, ಕಪ್ ಸಾಸರ್ ಹಿಡಿದಾಗ, ಸೋಫಾದ ಮೇಲೆ ಕುಸಿದಾಗ, ನಡೆದಾಗ, ನಿಂತಾಗ ನಕ್ಕಾಗ-ತನ್ನಂತೆಯೇ, ತಾನೇ ಆಗಿ ಬೆಳೆಯತೊಡಗಿದ ಮಗನನ್ನು ನೋಡಿ ಅವನಿಗೆ ವರ್ಣನೆಗೆ ಮೀರಿದ ಆನಂದ, ವಿಚಿತ್ರ ತೃಪ್ತಿ. + +ಅವನು ಸ್ಕೂಲಿಗೆ ಸೇರಿದ ಮೇಲೆ, ಪ್ರತಿ ರಜಾದಲ್ಲೂ, ಅವನು ಊರಿಗೆ ಬರುವುದನ್ನೇ ಕಾತರದಿಂದ ಕಾಯುತ್ತಿದ್ದ ಅಗಸ್ತ್ಯ. ಅವನು ತನ್ನೊಡನೆ ಇದ್ದಷ್ಟು ದಿನಗಳೂ, ಪ್ರತಿಯೊಂದು ನಿಮಿಷವನ್ನೂ ಅವನೊಡನೆ ಕಳೆಯುತ್ತಿದ್ದ. ಅವನು ಊರಲ್ಲಿಲ್ಲದಾಗ ಅಗಸ್ತ್ಯನ ಪ್ರಪಂಚವೆಂದರೆ ಪುಸ್ತಕಗಳು, ಪಕ್ಷಿಗಳು, ಈಜುಗೊಳ, ವಯೋಲಿನ್. + +ಹಿಂದಿನ ದಿನವೇ ರಜಕ್ಕೆಂದು ಊರಿಗೆ ಬಂದಿದ್ದ ವರುಣ, ಅಂದು ಸಂಜೆಯೂ ಮ್ಯಾನೇಜರ್ ಮಗ ನಂದುವಿನೊಡನೆ ಮಿಂಚುಹುಳು ಹಿಡಿಯುತ್ತಾ ಆಟವಾಡುತ್ತಿದ್ದ. ಕಿಲಕಿಲನೆ ನಗುತ್ತಾ ಅಡ್ಡ ಬಂದ ರೆಂಬೆಗಳನ್ನು ಸರಿಸುತ್ತಾ, ಟೀ ಗಿಡಗಳ ಮಧ್ಯೆ ಓಡುತ್ತಿದ್ದ ಅವರನ್ನು ನೋಡುತ್ತಾ ಮೈ ಮರೆತು ಕಲ್ಲುಬೆಂಚಿನ ಮೇಲೆ ಕುಳಿತಿದ್ದ ಅಗಸ್ತ್ಯ ಯಾವುದರ ಪರಿವೆಯೂ ಇಲ್ಲದೆ, ಮಿಂಚುಹುಳುವೊಂದನ್ನು ಅಟ್ಟಿಸಿಕೊಂಡು ಅದರ ಹಿಂದೆ ಓಡುತ್ತಿದ್ದವರು, ಅವನು ನೋಡುತ್ತಿದ್ದಂತೆಯೇ ದೂರ ದೂರ ಹೋಗಿದ್ದರು. ಅಲ್ಲಿಂದ ಸ್ವಲ್ಪ ದೂರದಲ್ಲಿದ್ದ ಕೊಳದಂಚಿನವರೆಗೂ. ಆ ಕ್ಷಣದಲ್ಲಿ ವರ್ಷಗಳ ಹಿಂದಿನ ನೆನಪೊಂದು ಧುತ್ತೆಂದು ಅವನ ಮನಸ್ಸಿಗೆ ರಾಚಿತ್ತು, ಅವನನ್ನು ಮಂಜುಗಡ್ಡೆಯಾಗಿಸಿತ್ತು… + +…ಅಗಸ್ತ್ಯ, ರಾಮ ನಗುನಗುತ್ತಾ, ತಮಾಷೆ ಮಾಡುತ್ತಾ ಮಿಂಚು ಹುಳುಗಳ ಹಿಂದೆ ಓಡುತ್ತಿದ್ದಾರೆ, ಬೊಗಸೆಯಲ್ಲಿ ಹಿಡಿದು ಪುಟ್ಟ ಡಬ್ಬಿಯೊಂದರಲ್ಲಿ ತುಂಬುತ್ತಿದ್ದಾರೆ. ರಾತ್ರಿಯಾಗುತ್ತಿದೆ. ಕತ್ತಲು ಹರಡುತ್ತಿದೆ. ಆ ಮಿಂಚುಹುಳುಗಳನ್ನು ಹಿಡಿದು, ತಾನೇ ಮಾಡಿಕೊಂಡಿದ್ದ ಲ್ಯಾಬೋರೇಟರಿಯಲ್ಲಿದ್ದ ಗಾಜಿನ ಜಾಡಿಯಲ್ಲಿ ತುಂಬಿಡುವ ಹುಚ್ಚು ಅಗಸ್ತ್ಯನಿಗೆ. ತನ್ನ ಮನೆಯ ಮೂಲೆಯಲ್ಲಿ ಬೆಂಕಿಪೊಟ್ಟಣ ಒಂದರಲ್ಲಿ ತುಂಬಿಟ್ಟುಕೊಳ್ಳುವ ಆಸೆ ರಾಮನಿಗೆ. ಯಾವ ಪರಿವೆಯೂ ಇಲ್ಲದೆ ಮಿಂಚುಹುಳದ ಹಿಂದೆ ಓಡುತ್ತಾ ಅವರು ಕೊಳದಂಚು ತಲುಪುತ್ತಾರೆ. ಒಂದು ಹುಳು ಇವರ ತಲೆಯ ಮೇಲೆಯೇ ಹಾರುತ್ತಿದೆ-ಕೆಳಗೆ ಮೇಲೆ ಜೋರಾಲಿಯಾಡಿ, ಇವರ ಕೈಗೆ ಸಿಗದೆ, ಇವರೊಂದಿಗೆ ಕಣ್ಣುಮುಚ್ಚಾಲೆಯಾಡುತ್ತಿದೆ. ಅದನ್ನು ಹಿಡಿಯಲು ಇಬ್ಬರೂ ಪಣತೊಟ್ಟಿದ್ದಾರೆ. ಅದರ ಹಿಂದೆ ಓಡುತ್ತಿದ್ದಾರೆ. ಆ ಒಂದು ಹುಳಕ್ಕೋಸ್ಕರ ಅವರಿಗೇ ಅರಿವಿಲ್ಲದಂತೆ, ನಿಧಾನವಾಗಿ ಅವರಿಬ್ಬರ ಮನಸ್ಸಿನಲ್ಲಿ ಸ್ಪರ್ಧೆ ಉಂಟಾಗಿದೆ-ಅಗಸ್ತ್ಯನ ಮನಸ್ಸು ಗಟ್ಟಿಯಾಗುತ್ತಿದೆ, ಏನಾದರೂ ಮಾಡಿ ತಾನೇ ಅದನ್ನು ಹಿಡಿಯಬೇಕು, ರಾಮನಿಗೆ ಬಿಡಬಾರದು. ಆದರೆ ಈಗ ಹುಳು ಕೊಳದ ನೀರಿನ ಮೇಲೆ ಹಾರತೊಡಗಿದೆ-ಬೇಕೆಂದೇ ಇವರನ್ನು ಆಟವಾಡಿಸಲೋ ಎಂಬಂತೆ ಅಲ್ಲೇ ಸುತ್ತು ಹೊಡೆಯುತ್ತಿದೆ. ಹಿಡಿಯಬೇಕಾದರೆ ಕೊಚ್ಚೆ ನೀರಿನಲ್ಲಿ ಕಾಲಿಡಬೇಕು. ನೀರೊಳಗೆ ನಡೆಯಬೇಕು, ಮೆಲ್ಲನೆ ಒಂದೆರಡು ಹೆಜ್ಜೆ ನೀರಿನಲ್ಲಿ ನಡೆದಿದ್ದಾರೆ-ಕಣ್ಣೆಲ್ಲಾ ಆ ಹುಳದ ಮೇಲೇ. ಈಗ ಅದು ಅವರ ತಲೆಯ ಮೇಲೆಯೇ ಹಾರುತ್ತಿದೆ. ಸುತ್ತುತ್ತಿದೆ. ಒಂದು ಕ್ಷಣ ಇಬ್ಬರೂ ಅದರತ್ತ ದಿಟ್ಟಿಸುತ್ತಾರೆ. ಫಕ್ಕನೆ ಇಬ್ಬರೂ ಅದಕ್ಕಾಗಿ ಕೈ ಬೀಸುತ್ತಾರೆ, ಥಟ್ಟನೆ ಗಾಳಿಯಲ್ಲಿ ಅವರಿಬ್ಬರ ಕೈಗಳೂ ಸೇರುತ್ತವೆ-ಬೆಸೆದುಕೊಳ್ಳುತ್ತವೆ. ಇದರ ಮಧ್ಯೆ ಮಿಂಚು ಹುಳು ಸಿಕ್ಕಿಹಾಕಿಕೊಂಡಿದೆ-ಅಗಸ್ತ್ಯ ಕೂಗುತ್ತಾನೆ. + +“ಇದು ನಾನು ಹಿಡಿದದ್ದು… ಬಿಟ್ಬಿಡು…” + +“ಇಲ್ಲ ನಾನು ಮೊದಲು ಹಿಡಿದದ್ದು…” + +“ರಾಮ… ಬಿಡು…” + +ರಾಮ ಕೈ ಬಿಡುವುದಿಲ್ಲ. ಅಗಸ್ತ್ಯನಿಗೆ ಸೋಲಿನ ಪರಿಚಯವಿಲ್ಲ. + +“ರಾಮ… ನಾನು ಹೇಳ್ತಿದೀನಿ, ಮಿಂಚುಹುಳು ನಂದು…” + +ರಾಮ ಜಗ್ಗುವುದಿಲ್ಲ. ಆ ಕ್ಷಣದಲ್ಲಿ ಇದ್ದಕ್ಕಿದ್ದಂತೆ ಅಗಸ್ತ್ಯನಿಗೆ ತನ್ನ, ರಾಮನ ನಡುವಿನ ಅಂತರ ಗೋಚರವಾಗಿದೆ. ತಮ್ಮ ಎಸ್ಟೇಟಿನಲ್ಲಿ ದುಡಿಯುವವರ ಮಗ, ತನ್ನೊಡನೆ ಸ್ಪರ್ಧಿಸುವುದು ಸರಿಯೆನಿಸುವುದಿಲ್ಲ. ಆದರೆ, ರಾಮನ ಬಾಲ್ಯದ ಉತ್ಸಾಹ ತಮ್ಮಿಬ್ಬರ ನಡುವಿನ ಅಂತರವನ್ನು ಅವನ ಮಟ್ಟಿಗೆ ಮರೆಮಾಡಿದೆ. ಅದನ್ನು ಬಿಟ್ಟುಕೊಡಲು ಅವನು ತಯಾರಿಲ್ಲ. + +“ರಾಮ… ಅದು ನಂದು… ಬಿಟ್ಬಿಡು…” + +“ಇಲ್ಲ… ಅದು ನನ್ನ ಕೈಲಿದೆ…” + +“ಬಿಡ್ತೀಯೋ ಇಲ್ವೋ…” ಅವನು ಗರ್ಜಿಸುತ್ತಾನೆ. + +ರಾಮ ಅಲ್ಲಾಡುವುದಿಲ್ಲ. ಅವನ ಹಿಡಿತ ಜೋರಾಗುತ್ತಿದೆ. ಅಗಸ್ತ್ಯ ತನ್ನ ಶಕ್ತಿಯನ್ನೆಲ್ಲಾ ಉಪಯೋಗಿಸಿ, ಎಡಗೈಯಿಂದ ಅವನನ್ನು ತಳ್ಳುತ್ತಾನೆ. ರಾಮ ತತ್ತರಿಸಿ ಬೀಳುತ್ತಾನೆ, ಕೊಚ್ಚೆ ನೀರಿನಲ್ಲಿ ಮಗುಚಿಕೊಳ್ಳುತ್ತಾನೆ. ತನ್ನ ಬಲಗೈ ಮುಷ್ಠಿ ನಿಧಾನವಾಗಿ ಬಿಡಿಸಿದಾಗ, ಅದರಲ್ಲಿ ಸತ್ತ ಮಿಂಚುಹುಳು ಮಲಗಿದೆ. ಆ ಕ್ಷಣದಲ್ಲಿ ರಾಮನಿಗೆ ಪಾಠ ಕಲಿಸಿದ ಮಿಂಚುಹುಳು ತನ್ನದಾದ ತೃಪ್ತಿ, ಅವನನ್ನು ಖುಷಿಯಾಗಿಸುತ್ತದೆ. ಆದರೆ ಬೋರಲಾಗಿ ಬಿದ್ದಿದ್ದ, ರಾಮನ ಬಾಯಿಯಿಂದ ಏನೂ ಸ್ವರ ಹೊರಡುತ್ತಿಲ್ಲ. ಕೇವಲ ಕಾಲುಗಳು ಎರಡು ನಿಮಿಷ ಪಟಪಟನೆ ಬಡಿದುಕೊಳ್ಳುತ್ತಿವೆ. “ಸರಿಯಾಗಿ ಆಯ್ತು” ಎಂದು ಅಗಸ್ತ್ಯ ಗೆಲುವಿನ ನಗೆಬೀರಿ ರಾಮನತ್ತ ನೋಡುತ್ತಾನೆ. ಆದರೆ, ರಾಮನ ಕಾಲ್ಬಡಿತ ನಿಧಾನವಾಗಿ ಕೆಲವೇ ಕ್ಷಣಗಳಲ್ಲಿ ಸ್ತಬ್ಧವಾಗುತ್ತದೆ… ಆಗ ಅಗಸ್ತ್ಯ ಕಲ್ಲು ಗೊಂಬೆಯಾಗುತ್ತಾನೆ. ಹೆದರಿಕೆಯಿಂದ ನಡುಕ ಹುಟ್ಟಿ, ಮೈ ಬೆವರಿನಿಂದ ತೊಯ್ದುಹೋಗತೊಡಗುತ್ತದೆ. + +ಏದುತ್ತಾ ಮನೆಗೆ ಬಂದು ಅಗಸ್ತ್ಯ ತಂದೆಗೆ ಹೇಳುತ್ತಾನೆ “ನಾವಿಬ್ಬರೂ ಕೊಳದ ಹತ್ತಿರ ಆಟಕ್ಕೆ ಹೋಗಿದ್ವಿ, ರಾಮ ಕಾಲು ಜಾರಿ ಬಿದ್ದು ಬಿಟ್ಟ. ನಾನೆಷ್ಟು ಪ್ರಯತ್ನಪಟ್ರೂ ತೆಗೆಯೋಕೆ ಆಗ್ಲಿಲ್ಲ..” + +ತಕ್ಷಣ ಆಳುಗಳು ಲಾಂದ್ರ ಹಿಡಿದು ಕೊಳದತ್ತ ಓಡಿಹೋಗುತ್ತಾರೆ. ಸ್ವಲ್ಪ ಹೊತ್ತಿನನಂತರ, ಮಾತಿಲ್ಲದೆ ರಾಮನ ದೇಹವನ್ನು ಹೊತ್ತು ತರುತ್ತಾರೆ. ರಾಮನ ತಾಯಿ ಎದೆ ಹೊಡೆದು ಕೊಳ್ಳುತ್ತಾಳೆ… + +ಏರು ದನಿಯಲ್ಲಿ ಅಳತೊಡಗುತ್ತಾಳೆ. + +“ವರುಣಾ… ವರುಣಾ…” ಕಿರುಚುತ್ತಾ ಓಡಿಬಂದ ತಂದೆಯನ್ನು ನೋಡಿ, ಕೊಳದಂಚಿನಲ್ಲಿ ನಿಂತಿದ್ದ, ವರುಣ-ನಂದೂ ಬೆಚ್ಚಿಬಿದ್ದರು. ಅವರ ತಲೆಯ ಮೇಲೆ ಮಿಂಚು ಹುಳುವೊಂದು ಹಾರಾಡುತ್ತಿದೆ… + +“ಆಟ ಸಾಕು, ಕತ್ತಲಾಯಿತು… ಬೇಗ ಬನ್ನಿ… ಮನೆಗೆ ಹೋಗೋಣ…” ತಂದೆಯಿಂದ ಅಪರೂಪಕ್ಕೆ ಬಂದ ಗದರಿಕೆ ಕೇಳಿ ವರುಣ ತತ್ತರಿಸಿದ. ಆದರೆ, ಹಿಂತಿರುಗಿ ಬರುವ ಮುಂಚೆ, ಒಂದು ಕ್ಷಣ ಅಚ್ಚರಿಯಿಂದ ತಂದೆಯ ಕಣ್ಣಿನಾಳದಲ್ಲಿ ದಿಟ್ಟಿಸಿದ, ಏನೋ ಹುಡುಕುವವನಂತೆ. + +ಮನೆಗೆ ಬಂದು, ಅಗಸ್ತ್ಯ ಎಷ್ಟೋ ಹೊತ್ತು ಶಾಕ್ ಹೊಡೆದವನಂತೆ ಕಣ್ಣುಮುಚ್ಚಿ ಕುಳಿತಿದ್ದ. ಅಂದು ರಾತ್ರಿಯೆಲ್ಲಾ ಅವನಿಗೆ ನಿದ್ದೆ ಇಲ್ಲ. ತನ್ನ ಎಲ್ಲಾ ಜೀನ್ ಗಳನ್ನೂ ಅನುವಂಶಿಕವಾಗಿ ಪಡೆದಿರುವ ವರುಣ, ತನ್ನ ನೆನಪುಗಳನ್ನೂ ಅನುವಂಶಿಕವಾಗಿ ಪಡೆದಿರುತ್ತಾನೆಯೇ? ತಾನು ಕೊಲೆಗಾರನೆನ್ನುವ ಸತ್ಯ, ಅವನ ಮನದಾಳದಲ್ಲಿ ಅಡಗಿದೆಯೇ? ಕೆಲವು ನೆನಪುಗಳು ಅದನ್ನು ಹೊತ್ತವರೊಂದಿಗೇ ಸತ್ತರೆ ಒಳ್ಳೆಯದಲ್ಲವೇ? ಪೀಳಿಗೆಯಿಂದ ಪೀಳಿಗೆಗೆ, ಬೇಡದ ನೆನಪುಗಳನ್ನು, ದೌರ್ಬಲ್ಯಗಳನ್ನು ಅಳಿಸದೆಯೇ ಮುಂದುವರಿಸುತ್ತಿ ದ್ದೇನೆಯೇ ತಾನು? ಇದುವರೆಗೂ ತಮ್ಮಿಬ್ಬರ ಏಕತೆ ಅವನಿಗೆ ಕೊಡುತ್ತಿದ್ದ ಆನಂದ, ತೃಪ್ತಿ ಅದೇಕೋ ಇಂದು ವಿಕರಾಳರೂಪ ತಾಳಿದಂತೆ ಭಾಸವಾಗುತ್ತಿದೆ. + +17ನೇ ವಯಸ್ಸಿನಲ್ಲಿ, ಮುಂದಿನ ಓದಿಗಾಗಿ ಮಗನನ್ನು ಅಮೆರಿಕಾಗೆ ಕಳಿಸಿದ ಅಗಸ್ತ್ಯ ಪೂರಾ ಏಕಾಕಿಯಾದ. ದಿನವೆಲ್ಲಾ ತನ್ನ ಪುಸ್ತಕಗಳ, ಪಕ್ಷಿಗಳ ಪ್ರಪಂಚದಲ್ಲಿ ಮುಳುಗಿರುತ್ತಿದ್ದ. ಅವನಿಗೆ, ಅಪರೂಪವಾಗಿ ಅವನು ಹೋಗಿದ್ದ ನ್ಯೂಇಯರ್ ಪಾರ್ಟಿ ಯೊಂದರಲ್ಲಿ, ಹತ್ತಿರದ ಎಸ್ಟೇಟಿನಿಂದ ಬಂದಿದ್ದ ಘನಶ್ಯಾಮನ ಮಗಳು ಶರ್ಮಿಷ್ಠಾಳ ಪರಿಚಯವಾಗಿತ್ತು. 19 ವರ್ಷದ ಮಿಂಚಿನಂತಹ ಹುಡುಗಿ ಶರ್ಮಿಷ್ಠಾ ಆಗತಾನೇ ಗ್ರಾಜುಯೇಶನ್ ಮುಗಿಸಿ ಊರಿಗೆ ಬಂದಿದ್ದಳು. ದಿನೇ ದಿನೇ ಅವರಿಬ್ಬರನ್ನೂ ಹತ್ತಿರ ತಂದಿತ್ತು-ಇಬ್ಬರ ಆಕರ್ಷಕ ವ್ಯಕ್ತಿತ್ವ, ಈಜುವ ಹುಚ್ಚು, ಪಕ್ಷಿಗಳ ಮೋಹ, ಪುಸ್ತಕ ಪ್ರೇಮ ಮತ್ತು ಸಾಧಾರಣತೆ ಹಾಗೂ ವ್ಯವಸ್ಥೆಯ ಬಗ್ಗೆ ಅವರಿಗಿದ್ದ ಜಿಗುಪ್ಸೆ, ಮಿಮಿಯ ನಂತರ ಹೆಣ್ಣಿನ ಸಂಪರ್ಕವನ್ನೇ ಹೊಂದಿಲ್ಲದ ಅವನ ಜೀನವದಲ್ಲಿ ಶರ್ಮಿಷ್ಠಾ ಬೆಳಕಾಗಿ, ತಂಗಾಳಿಯಾಗಿ, ಪರಿಮಳವಾಗಿ ಬಂದಿದ್ದಳು. ಅವಳೊಡನೆ ಸಂಬಂಧ ಆಳವಾದಂತೆ, ಪ್ರೀತಿ ಬೇರೂರಿದಂತೆ, ಅಗಸ್ತ್ಯ ಹೊಸ ಮನುಷ್ಯನಾಗಿದ್ದ. + + + +ವಿಚಿತ್ರ ಸ್ವಭಾವದ, ಯಾರೊಡನೆಯೂ ಬೆರೆಯದ ಬುದ್ಧಿಜೀವಿಯೆಂದು ಹೆಸರಾಗಿದ್ದ, ಇನ್ನೂ ತಾರುಣ್ಯದ ಮೆರುಗು ಮಾಸದಿದ್ದರೂ 20 ವರ್ಷದ ಹುಡುಗನ ತಂದೆಯಾದವನೊಡನೆ ಬೆಸೆಯತೊಡಗಿದ್ದ ತಮ್ಮ ಮಗಳ ಬದುಕನ್ನು, ಅವಳ ತಂದೆ ತಾಯಿಗಳು ಮೆಚ್ಚದಿದ್ದುದು ಆಶ್ಚರ್ಯವೇನಿಲ್ಲ. ಶರ್ಮಿಷ್ಠಾಳನ್ನು ಅಗಸ್ತ್ಯನಿಂದ ದೂರ ಮಾಡಲು, ಅಂತಹ ಸಂಬಂಧದಿಂದ ಉಂಟಾಗಬಹುದಾದ ಅಸಂತೋಷ, ಸಮಸ್ಯೆಗಳನ್ನು ವಿವರಿಸಿ ಹೇಳಿದರು, ಹೆದರಿಸಿದರು. ಏನಾದರೂ ಮಾಡಿ ಅವಳ ಮನವೊಲಿಸಲು ಪ್ರಯತ್ನಿಸಿದರು. ಯಾವುದಕ್ಕೂ ಅವಳ ಮನಸ್ಸು ಅಲ್ಲಾಡದಾಗ, ಅವರ ಸಂಬಂಧದ ಗಟ್ಟಿತನದ ಅರಿವು ಅವರಿಗಾಗಿತ್ತು. ಆಗ ಎಂದೂ ತನಗೆ ಬೇಕಾದದ್ದನ್ನು ಮಾಡಿಯೇ ತೀರುವ ಶರ್ಮಿಷ್ಠಾಳ ಮನಸ್ಸು ಬದಲಾಯಿಸುವ ಪ್ರಯತ್ನ ಬಿಟ್ಟುಕೊಟ್ಟರು. ಎಂದಿನಂತೆಯೇ ಶರ್ಮಿಷ್ಠಾ ಗೆದ್ದಿದ್ದಳು. + +ಶರ್ಮಿಷ್ಠಾ-ಅಗಸ್ತ್ಯ ಒಲವು ಮಾತ್ರ ಸೃಷ್ಟಿಸಬಹುದಾದ ಸುಂದರ ಪ್ರಪಂಚದಲ್ಲಿ ಮುಳುಗಿಹೋದರು. ಪ್ರತಿದಿನ ಸಂಜೆ, ಸೂರ್ಯ ಮುಳುಗುವ ಹೊತ್ತಿಗೆ ಕೊಳದಂಚಿನಲ್ಲಿ, ಕಣ್ಣೋಟ ಸಾಗುವವರೆಗೂ ಹರಡಿದ್ದ ಟೀ ಗಿಡಗಳ ಹಚ್ಚ ಹಸುರಿನ ನಡುವೆ, ಕೈಹಿಡಿದು ಗಂಟೆಗಟ್ಟಲೆ ತಿರುಗಾಡುತ್ತಿದ್ದಾಗ, ತನ್ನೆಲ್ಲಾ ಭಾವನೆಗಳನ್ನೂ, ಕನಸುಗಳನ್ನೂ ಅವಳೊಡನೆ ಹಂಚಿಕೊಂಡಾಗ, ಅಗಸ್ತ್ಯನಿಗೆ ಇದುವರೆಗೂ ಏನೋ ಒಂದು ಕೊರತೆಯಿದ್ದ ಬದುಕು ಈಗ ತುಂಬಿಕೊಂಡ ಭಾವನೆ, ಮತ್ತೆ ಪರಿಪೂರ್ಣತೆ ಪಡೆದ ಅನುಭವ. + +ಅಂದು ಬೆಳಗ್ಗೆ ಒಂದು ತಿಂಗಳ ರಜಕ್ಕಾಗಿ ವರುಣ ಊರಿಗೆ ಬರುವವನಿದ್ದ. ಅಗಸ್ತ್ಯನಿಗೆ ಅವನನ್ನು ಯಾವಾಗ, ನೋಡುವೆನೋ ಎಂದು ಕಾತರ. ಅಗಸ್ತ್ಯನಿಂದ ಮಗನ ವಿಷಯವನ್ನೆಲ್ಲಾ ಕೇಳಿದ್ದ ಶರ್ಮಿಷ್ಠಾಗೆ ತಡೆಯಲಾರದಷ್ಟು ಕುತೂಹಲ. + +ಏರ್ ಪೋರ್ಟಿಗೆ ಹೊರಡುವ ಮೊದಲು ಟೀ ಕುಡಿಯುತ್ತಾ ಕುಳಿತಿದ್ದಾಗ ಅಗಸ್ತ್ಯ ಅವಳ ಕಣ್ಣಲ್ಲಿ ಕಣ್ಣಿಟ್ಟು, “ಶಮಿ, ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಗೊತ್ತಾ? ನೀನು ನನ್ನ ಲೈಫ್ ನಲ್ಲಿ ಬರುವ ಮುಂಚೆ ಎಂಥಾ ಕೊರತೆ ಇತ್ತೂಂತ ನಂಗೆ ಈಗ ಅರ್ಥ ಆಗ್ತಾ ಇದೆ! ಯೂ ಹ್ಯಾವ್ ಗಿವನ್ ಏ ನ್ಯೂ ಡೈಮೆನ್ಷನ್ ಟು ಮೈ ಲೈಫ್” ಎಂದು ಹೇಳಿ ಮುತ್ತಿಟ್ಟಿದ್ದ. ಹಾಗೆಯೇ ಕೆಂಪಾಗಿದ್ದ, “ನಾನೊಬ್ಬ ಲವ್-ಸ್ಟ್ರಕ್ ಟೀನೇಜರ್ ನ ಹಾಗೆ ಮಾತಾಡ್ತಾ ಇದೀನಿ” ಅಂತ.ವರುಣನನ್ನು ಕರೆದುಕೊಂಡು ಬರಲು ಏರ್ ಪೋರ್ಟಿಗೆ ಇಬ್ಬರೂ ಹೊರಟರು. ಪ್ಲೇನ್ ನೆಲ ಮುಟ್ಟುತ್ತಿದ್ದಂತೆಯೇ ವರುಣ ಇವರಿಬ್ಬರತ್ತ ನಡೆದು ಬಂದ. ಅಗಸ್ತ್ಯ ಅವರಿಬ್ಬರನ್ನೂ ಪರಿಚಯ ಮಾಡಿಸಿದ. + +“ವರುಣ” + +“ಶರ್ಮಿಷ್ಠಾ… ನಮಗೆ ಶಮಿ.” + +ವರುಣನ ಕಣ್ಣುಗಳು ಹೊಳಪೇರಿದುವು. ನಗುತ್ತಾ ಹೇಳಿದ “ನಿಮ್ಮ ವಿಷಯ ಎಲ್ಲಾ ಕಾಗದದಲ್ಲಿ ಓದೀ, ಓದೀ ನಿಮ್ಮನ್ನ ಮೀಟ್ ಮಾಡೋಕೆ ಕಾಯ್ತಾ ಇದ್ದೆ…”ಶಮಿ ಬೆಚ್ಚಿದಳು. ಇದುವರೆಗೂ, ಅಗಸ್ತ್ಯನನ್ನೇ ಅಚ್ಚು ಹೊಡೆದು, ಕೇವಲ ಕೆಲವು ವರ್ಷಗಳು ಚಿಕ್ಕವನನ್ನಾಗಿ ಮಾಡಿದಂತಿದ್ದ ಅವನ ರೂಪವನ್ನು ನೋಡಿ ದಿಗ್ಭ್ರಮೆಗೊಂಡಿದ್ದ ಶಮಿ, ಈಗ ಅವನ ಧ್ವನಿ ಕೇಳಿ, ಅಗಸ್ತ್ಯನೇ ಮಾತಾಡುತ್ತಿದ್ದಾನೆನ್ನುವಂತೆ ಅವನತ್ತ ನೋಡಿದಳು. ಇವಳ ಗಲಿಬಿಲಿ ನೋಡಿ ಅವರಿಬ್ಬರೂ ಬಿದ್ದು ಬಿದ್ದು ನಗತೊಡಗಿದರು. ಶಮಿ ನಗಲು ಪ್ರಯತ್ನ ಮಾಡಿದಳು. ಆದರೆ ಅವರ ಹೋಲಿಕೆಯಲ್ಲಿ ಅದೇಕೋ ಅವಳಿಗೆ ತಮಾಷೆ ಕಾಣಲಿಲ್ಲ. ಬದಲು ಮನದಾಳದಲ್ಲಿ ಅರ್ಥವಾಗದ ದುಗುಡದ ನೆರಳು ಹಾದುಹೋಯಿತು. + +ವರುಣ ಊರಿಗೆ ಬಂದಮೇಲೆ ಮನೆಯ ವಾತಾವರಣಕ್ಕೆ ಕಳೆಯೇರಿತ್ತು. ದಿನವೆಲ್ಲಾ ವರುಣ, ಅಗಸ್ತ್ಯ, ಶಮಿ ಒಟ್ಟಿಗೆ ಕಳೆಯುತ್ತಿದ್ದರು. ವರುಣ, ಅಗಸ್ತ್ಯ ಮೈಮರೆತು ಜಿನೆಟಿಕ್ ಎಂಜಿನಿಯರಿಂಗ್ ನಲ್ಲಿ ಆಗುತ್ತಿರುವ ಬ್ರೇಕ್-ಥ್ರೂಗಳ ಬಗ್ಗೆ ಚರ್ಚಿಸುತ್ತಿದ್ದರು. ಅಮೆರಿಕಾ, ಅಲ್ಲಿನ ಯೂನಿವರ್ಸಿಟಿಗಳು. ಹುಡುಗಿಯರು, ಕಂಪ್ಯೂಟರ್, ಕಲ್ಚರ್, ನ್ಯೂಟ್ರಾನ್ ಬಾಂಬ್, ನೈಟ್ ಕ್ಲಬ್ ಗಳು, ಪೀಟ್ಸಾ, ಡ್ರಗ್ ಅಡಿಕ್ಷನ್, ರೋನಾಲ್ಡ್ ರೀಗನ್ ಜೀವನದ ರೀತಿ-ಎಲ್ಲದರ ಬಗ್ಗೆ ವರುಣ ರಸವತ್ತಾಗಿ ಗಂಟೆಗಟ್ಟಲೆ ಮಾತಾಡುತ್ತಿದ್ದ. ಮೂರು ಜನವೂ ಈಜುವುದಕ್ಕಾಗಿ, ಬರ್ಡ್ ವಾಚಿಂಗಿಗೆ, ಪಿಕ್ನಿಕ್ಗಳಿಗೆ ಒಟ್ಟಿಗೆ ಹೋಗು ತ್ತಿದ್ದರು. ರಾತ್ರಿ ಊಟವಾದ ಮೇಲೆ ವರುಣ ವಯೋಲಿನ್ ನುಡಿಸಿದಾಗ ಮೈಮರೆತು ಕೇಳುತ್ತಿದ್ದರು. ಆದರೆ ಯಾವುದಾದರೂ ಗಹನವಾದ ವಿಷಯ ಮೂರು ಜನರಲ್ಲೂ ಚರ್ಚೆಗೆ ತಿರುಗಿದಾಗ ವರುಣ-ಅಗಸ್ತ್ಯರ ಅಭಿಪ್ರಾಯಗಳು ಅಚ್ಚು ಹೊಡೆದಂತೆ ಒಂದೇ ಆಗಿರುತ್ತಿದ್ದುವು. ತಂದೆ-ಮಗ ಒಬ್ಬರನ್ನೊಬ್ಬರು ಮೆಚ್ಚಿಸಲು ಹಾಗೆ ಮಾಡುವವರಲ್ಲ. ಅವರಿಬ್ಬರೂ ತುಂಬಾ ದೃಢ ವ್ಯಕ್ತಿತ್ವ ಉಳ್ಳವರೆನ್ನುವುದು ಶಮಿಗೆ ಚೆನ್ನಾಗಿ ಗೊತ್ತು. ಹೆಚ್ಚು ಸಲ ಅಂತಹ ಚರ್ಚೆಗಳಲ್ಲಿ ಶಮಿ ಇವರಿಗೆ ಎದುರಾಗುತ್ತಿದ್ದಳು. ಅವರಿಬ್ಬರನ್ನೂ ನೋಡು ನೋಡುತ್ತಾ, ಒಂದೇ ಶ್ರುತಿಯ ಎರಡು ತಂತಿಗಳಂತೆ ಮಿಡಿಯುವ ಅವರ ಪ್ರಜ್ಞೆಯನ್ನು ನೋಡಿ ಅಚ್ಚರಿಯಾಗುತ್ತಿತ್ತು. ಜೊತೆಗೆ ಏನೋ ಕಸಿವಿಸಿಯಾಗುತ್ತಿತ್ತು. ಎಲ್ಲೋ ಏನೋ ತನಗೆ ಅರ್ಥವಾಗದ, ತನ್ನ ತಿಳಿವಳಿಕೆಗೆ ಮೀರಿದ ತಂತು ಒಂದಿದೆ ಎನ್ನಿಸುತ್ತಿತ್ತು. + +ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದ. ಆದರೆ ಶಮಿ-ವರುಣನ ನೋಟ ಸೇರಿದಾಗ ಅವರ ಕಣ್ಣುಗಳಲ್ಲಿ ಕಾಣುವ ತನ್ಮಯತೆ, ಹೊಳಪು ಅವನನ್ನು ಹೆದರಿಸುತ್ತಿತ್ತು. ಮನಸ್ಸಿನ ಮೂಲೆಯಲ್ಲಿ ತಲೆ ಎತ್ತತೊಡಗಿದ್ದ ತನ್ನ ಶಂಕೆ ನಿಜವಾಗಬಾರದು ಎಂದು ಕಂಗೆಡುವಂತೆ ಮಾಡುತ್ತಿತ್ತು. + +ವರುಣ ಊರಿಗೆ ಹೊರಡಲು ಒಂದು ವಾರ ಉಳಿದಿತ್ತು. ಅಂದು ಸಂಜೆ ಶಮಿ-ವರುಣ ತಿರುಗಾಡಲು ಎಸ್ಟೇಟಿನತ್ತ ಹೊರಟಿದ್ದರು. ಅವರು ಕರೆದರೂ, ಏನೋ ಓದುತ್ತಿದ್ದ ಅಗಸ್ತ್ಯ ಸ್ವಲ್ಪ ಹೊತ್ತಾದ ಮೇಲೆ ಬಂದು ಅವರನ್ನು ಸೇರುವುದಾಗಿ ಹೇಳಿದ್ದ. ಒಂದು ಗಂಟೆಯ ನಂತರ ಅವರಿಬ್ಬರನ್ನೂ ಹುಡುಕಿಕೊಂಡು ಹೊರಟಿದ್ದ. ದಿನಾ ಸಂಜೆ ಮೂವರೂ ಕುಳಿತುಕೊಳ್ಳುತ್ತಿದ್ದ ಕೊಳದಂಚಿನತ್ತ ಕಾಲುಹಾಕಿದ. ಆದರೆ ಅವರು ಸುತ್ತಮುತ್ತಲೂ ಎಲ್ಲೂ ಕಾಣಲಿಲ್ಲ. ಅವರಿಗಾಗಿ ಕಣ್ಣು ಹಾಯಿಸುತ್ತಾ ನಡೆಯತೊಡಗಿದ. ಸುತ್ತುವರಿದ ಹಸಿರು ಹಸಿರು, ಪಚ್ಚೆತೆನೆ, ಹಕ್ಕಿಗಳ ಕೂಗು ಇವುಗಳಲ್ಲಿ ಮೈಮರೆತು ಅವರನ್ನು ಹುಡುಕುತ್ತಾ ನಿಧಾನವಾಗಿ ಹೆಜ್ಜೆ ಹಾಕತೊಡಗಿದ. ಇದ್ದಕಿದ್ದಂತೆ ಎದುರಿಗಿದ್ದ ಬೃಹಾದಾಕಾರದ ಮರದ ಹಿಂದಿನಿಂದ ಅವರ ಧ್ವನಿ ಕೇಳಿ ಬೆಚ್ಚಿ ಬಿದ್ದ. ಅವರಿಬ್ಬರೂ ಮರದ ಹಿಂದಿದ್ದರಿಂದ ಅವನು ತುಂಬಾ ಹತ್ತಿರ ಬರುವವರೆಗೂ ಕಣ್ಣಿಗೆ ಬಿದ್ದಿರಲಿಲ್ಲ. ಒಂದು ಹೆಜ್ಜೆ ಮುಂದಿಟ್ಟವನು, ಹಾಗೇ ಕಲ್ಲಾಗಿ ನಿಂತ. ಶಮಿ, ವರುಣ ಅಪ್ಪುಗೆಯಲ್ಲಿ ಮೈಮರೆತಿದ್ದರು. ವರುಣನ ಒಲವಿನ ಮೆಲುನುಡಿ ಇವನತ್ತ ತೇಲಿಬಂದಿತು. “ಶಮಿ, ನಾನು ನಿನ್ನನ್ನು ಎಷ್ಟು ಪ್ರೀತಿಸ್ತೀನಿ ಗೊತ್ತಾ. ಇದುವರೆಗೂ ನನ್ನ ಲೈಫ್ ನಲ್ಲಿ ಎಂಥಾ ಕೊರತೆ ಇತ್ತೂಂತ ಈಗ ಗೊತ್ತಾಗ್ತಾ ಇದೆ. ಯೂ ಹ್ಯಾವ್ ಗಿವನ್ ಎ ನ್ಯೂ ಡೈಮೆನ್ಷನ್ ಟು ಮೈ ಲೈಫ್.” + +ಅಲ್ಲಾಡದೆ ಎಷ್ಟೋ ಹೊತ್ತು ಹಾಗೇ ನಿಂತಿದ್ದ ಅಗಸ್ತ್ಯ. ಆಮೇಲೆ ದಿಕ್ಕುಗಾಣದವನಂತೆ ಸರ ಸರನೆ ಮನೆಯತ್ತ ವಾಪಸ್ಸು ಹೆಜ್ಜೆ ಹಾಕತೊಡಗಿದ.“ಶಮಿ, ಯೂ ಹಾವ್ ಗಿವನ್ ಎ ನ್ಯೂ ಡೈಮೆನ್ಷನ್ ಟು ಮೈ ಲೈಫ್…” + +ಅವನ ಮನದಲ್ಲಿ ಚಂಡಮಾರುತ್ತ ಏಳತೊಡಗಿತ್ತು. ಆದರೆ ನಿಧಾನವಾಗಿ ಅರಿವು ಮೂಡತೊಡಗಿತ್ತು. ಹೌದು ಶಮಿ ವರುಣನನ್ನು ಪ್ರೀತಿಸುತ್ತಾಳೆ, ತನಗಿಂತ ಹೆಚ್ಚಾಗಿ ಅವನನ್ನು ಪ್ರೀತಿಸುತ್ತಾಳೆ, ಅವನನ್ನು ಬಯಸುತ್ತಾಳೆ. ತನ್ನಲ್ಲಿ ಅವಳು ಮಾರುಹೋದ, ಮೋಹಿಸಿದ ಎಲ್ಲಾ ಗುಣಗಳ ಜೊತೆ, ಅವಳ ವಯಸ್ಸಿನ ಸಂಗೀತಕ್ಕೆ ತಾಳ ಹಾಕುವ ಯೌವನ ಅವನಲ್ಲಿದೆ. ಅವಳು ವರುಣನನ್ನು ಪ್ರೀತಿಸುವುದು ಅವಳ ಕೈಮೀರಿದ ವಿಷಯ, ಪ್ರಕೃತಿದತ್ತವಾದ ವಿಷಯ.ಏದುತ್ತಾ ಮನೆಗೆ ಬಂದು, ತನ್ನ ರೂಮಿನ ಬಾಗಿಲನ್ನು ಬಡಿದು ಹಾಸಿಗೆಯ ಮೇಲೆ ಧೊಪ್ಪನೆ ಕುಕ್ಕರಿಸಿದ ಅಗಸ್ತ್ಯ, ತನಗೆ ವಿಪರೀತ ತಲೆನೋವು ಎಂದೂ, ರಾತ್ರಿ ಊಟಕ್ಕಾಗಿ ಕಾಯಬಾರದೆಂದೂ ವರುಣನಿಗೆ ಹೇಳಲು ಅಡಿಗೆಯವನಿಗೆ ಹೇಳಿದ. + +ಅಗಸ್ತ್ಯನಿಗೆ ಬದುಕಿನಲ್ಲಿ ಮೊದಲ ಬಾರಿ ಆಯಾಸವೆನಿಸಿತ್ತು. ತನ್ನ ಜೀವನದುದ್ದಕ್ಕೂ, ಹೆಜ್ಜೆ ಹೆಜ್ಜೆಗೂ ತನ್ನೊಡನೇ ತಾನು ಎದುರಾಗುತ್ತಾ ಸ್ಪರ್ಧಿಸುತ್ತಾ ನಡೆಯುತ್ತಿದ್ದೇನೆನಿಸಿತ್ತು. ತುಂಬಾ ದಣಿವೆನಿಸಿತ್ತು. ತಾನು ಕೇವಲ ವರುಣನ ಭೂತಕಾಲವಾಗಿ ನೆನಪುಗಳು ಮಾತ್ರವಾಗಿ ಮಾರ್ಪಾಡಾಗುತ್ತಿದ್ದೇನೆಯೇ ಎಂಬ ಭಯ ಮನಸ್ಸನ್ನು ನಿಧಾನವಾಗಿ ಆವರಿಸತೊಡಗಿತು. + +ತಲೆಯ ಮೇಲೆ ಕೈಹೊತ್ತು ಗಂಟೆಗಟ್ಟಲೆ ಕೂತಿದ್ದ ಅಗಸ್ತ್ಯನಿಗೆ ಸಮಯ ಹೋದದ್ದೇ ತಿಳಿಯದು. ಮನಸ್ಸಿಲ್ಲದೆ ಹಾಸಿಗೆಯ ಮೇಲೆ ಉರುಳಿಕೊಂಡಾಗ, ಅರ್ಧರಾತ್ರಿಯಾದರೂ ನಿದ್ದೆಬಾರದು. ತಲೆಯ ತುಂಬಾ ಭಾವನೆಗಳ ಕಥಕ್ಕಳಿ, ಬದುಕಿನ ಘಟನೆಗಳೆಲ್ಲಾ ತುಣುಕು ತುಣುಕಾಗಿ ಅವನನ್ನು ಅಪ್ಪಳಿಸತೊಡಗಿದೆ. ತಲೆ ಸಿಡಿಯುತ್ತಿದೆ. ತಾನು ಒಂಟಿ ತುಂಬಾ ಒಂಟಿ, ಎನಿಸುತ್ತಿದೆ-ಅದರಿಂದ ಏನೋ ವಿಚಿತ್ರ ಹೆದರಿಕೆ ಅವನನ್ನು ಕಾಡತೊಡಗಿದೆ. ತನ್ನ ಇಷ್ಟು ವರ್ಷಗಳ ಸಂತಸ ತೃಪ್ತಿ ಎಲ್ಲಾ ಭ್ರಮೆ ಎನಿಸತೊಡಗಿದೆ. + +ಹಾಗೆಯೇ ಒದ್ದಾಡುತ್ತಾ, ಚಡಪಡಿಸುತ್ತಾ, ಹೊರಳಾಡುತ್ತಿದ್ದ ಅಗಸ್ತ್ಯನಿಗೆ ಮುಂಜಾವಿನ ಹೊತ್ತಿಗೆ ಸ್ವಲ್ಪ ಮಂಪರು… ಕನಸು… + +…ಒಂದು ಮರಳುಗಾಡು… ಮೊದಲು, ಕೊನೆಯಿಲ್ಲದ ಮರಳುಗಾಡು… ಸಂಜೆಗತ್ತಲು ಹರಡುತ್ತಿದೆ. ಅಲ್ಲಿ ತಾನೊಬ್ಬನೇ ನಿಂತಿದ್ದೇನೆ. ಕಷ್ಟಪಟ್ಟು, ಕಣ್ಣುಜ್ಜಿ ನೋಡಿದಾಗ ಮಸುಕು ಕತ್ತಲಿನಲ್ಲಿ ಎಲ್ಲಾ ಸ್ವಲ್ಪ ಸ್ವಲ್ಪವಾಗಿ ಸ್ಪಷ್ಟವಾಗತೊಡಗಿದೆ. ಆಗ ದೂರದಲ್ಲಿ, ತುಂಬಾ ದೂರದಲ್ಲಿ ಜೋಡಿಯೊಂದು ಕೈಹಿಡಿದು ನಡೆಯುತ್ತಿರುವುದು ಕಾಣಬರುತ್ತಿದೆ… ಹೌದು… ಅವರು ವರುಣ-ಶಮಿ… ಶಮಿ-ವರುಣ… ಅವರಿಬ್ಬರೂ ಜೊತೆಯಾಗಿ ನಡೆಯುತ್ತಿದ್ದಾರೆ… ತನಗೆ ಭಯವಾಗತೊಡಗಿದೆ. ಹೆದರಿಕೆಯಿಂದ ಮೈಬೆವರಿ, ಕೈಕಾಲು ನಡುಗತೊಡಗಿದೆ… ತಾನು ಒಂಟಿಯಾಗಿ ಉಳಿಯಬಾದರು. ಕತ್ತಲಾಗುವ ಮುಂಚೆ ಅವರನ್ನು ಸೇರಬೇಕು… ಕಪ್ಪು ಕತ್ತಲು ತನ್ನನ್ನು ನುಂಗಿ ಅವರಿಂದ ಬೇರೆ ಮಾಡುವ ಮುಂಚೆ ಅವರನ್ನು ಮುಟ್ಟಲೇಬೇಕು… ತಾನು ಬೇಗ ಬೇಗ ಹೆಜ್ಜೆ ಹಾಕುತ್ತೇನೆ.. ಆದರೆ ಕಾಲುಗಳು ಭಾರವಾಗಿ ಸೀಸದಂತಾಗಿವೆ… ಅವರಿಬ್ಬರೂ ಅತ್ತಿತ್ತ ನೋಡದೆ ಸೀದಾ ನಡೆಯುತ್ತಿದ್ದಾರೆ… ತಮ್ಮ ಪ್ರಪಂಚದಲ್ಲೇ ಮಗ್ನರಾಗಿ ಬೇರೆ ಯಾತರ ಅರಿವೂ ಇಲ್ಲದೆ ಹೆಜ್ಜೆ ಹಾಕುತ್ತಿದ್ದಾರೆ… + +ಈಗ ತಾನು ನಡಿಗೆಯ ವೇಗ ಹೆಚ್ಚು ಮಾಡಿದಂತೆ, ತಮ್ಮ ನಡುವಿನ ಅಂತರ ಸ್ವಲ್ಪ ಕಡಿಮೆಯಾಗಿದೆ… ತಾನು ಮತ್ತಷ್ಟು ಬೇಗ ಬೇಗ ನಡೆಯುತ್ತೇನೆ… ಅಂತರ ಇನ್ನೂ ಕಡಿಮೆಯಾಗಿದೆ… ಈಗ ಅವರು ಕೇವಲ ಹತ್ತು ಹೆಜ್ಜೆ ದೂರದಲ್ಲಿ ನಡೆಯ ತೊಡಗಿದ್ದಾರೆ… ಅವರ ಆಕೃತಿಗಳು ಸ್ಪಷ್ಟವಾಗಿ ಕಾಣತೊಡಗಿದೆ… ಬಿಗಿಯಾಗಿ ಒಬ್ಬರ ಕೈ ಒಬ್ಬರು ಹಿಡಿದು, ಮೈಗೆ ಮೈ ತಾಕಿಸುತ್ತಾ, ಏನೋ ಮಾತನಾಡುತ್ತಾ, ನಡೆಯುತ್ತಿದ್ದಾರೆ… ಮಧ್ಯೆ ಮಧ್ಯೆ ನಗುತ್ತಿದ್ದಾರೆ… ತಾನು ನಡಿಗೆಯ ವೇಗ ಹೆಚ್ಚಿಸಿದಂತೆ ತನಗೆ ಮೇಲುಸಿರು ಬರತೊಡಗಿದೆ… ತಲೆ ಸುತ್ತು ಬರತೊಡಗಿದೆ… ಕಣ್ಣು ಕತ್ತಲಿಡುತ್ತಿದೆ… ಎಲ್ಲಾ ಮಂಜಾಗತೊಡಗಿದೆ… ಉಹೂಂ… ತಾನು ಹಿಂದುಳಿಯಬಾರದು… ಒಂಟಿಯಾಗಬಾರದು… ಮತ್ತೆ ತಲೆಕೊಡವಿ, ಕಣ್ಣುಜ್ಜಿ ಅವರತ್ತ ನೋಡಿದಾಗ ಅವರು ಎದುರು ಬದುರು ನಿಂತಿದ್ದಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಪ್ರಪಂಚವನ್ನೇ ಮರೆತಿದ್ದಾರೆ. ಅರೆ! ಆದರೆ ಇದೇನು? + +ಅಲ್ಲಿರುವುದು ಶಮಿ ಅಲ್ಲ… ಮಿಮಿ! ಹೌದು, ತನ್ನ ಮಿಮಿ! ಶರ್ಮಿಷ್ಠಾಳ ಜಾಗದಲ್ಲಿ ಮಿಮಿ ನಿಂತಿದ್ದಾಳೆ… ಸುತ್ತಲೂ ನೋಡಿದಾಗ ಶಮಿಯ ಪತ್ತೆಯೇ ಇಲ್ಲ, ಅವಳು ಅದೃಶ್ಯಳಾಗಿದ್ದಾಳೆ. ಕೆಂಪು ಡ್ರೆಸ್ಸಿನಲ್ಲಿ ಚೆಲುವಾಗಿ ಕಾಣುತ್ತಿರುವ ಮಿಮಿಯ ಹೊಂಗೂದಲು ಹಾರಾಡುತ್ತಿದೆ… ನೀಲಿ ಕಣ್ಣುಗಳು ಹೊಳೆಯುತ್ತಿವೆ… ವರುಣ ಬಾಗಿ ಮಿಮಿಯ ಕಿವಿಯಲ್ಲಿ ಹೇಳುತ್ತಿದ್ದಾನೆ- “ಯೂ ಹ್ಯಾವ್ ಗಿವನ್ ಎ ನ್ಯೂ ಡೈಮೆನ್ಷನ್ ಟು ಮೈ ಲೈಫ್…” ಹೇಳಿ ಮುತ್ತಿಡುತ್ತಿದ್ದಾನೆ. ಮತ್ತೆ ಇಬ್ಬರೂ ನಗುತ್ತಾ ತನ್ನತ್ತ ಬೆನ್ನು ತಿರುಗಿಸಿ ನಡೆಯತೊಡಗಿದ್ದಾರೆ… ತಾನು ಏದುತ್ತಾ ಅವರ ಹಿಂದೆ ಓಡುತ್ತಿದ್ದೇನೆ… ಆದರೆ ಅವರು ದೂರ ದೂರ ಹೊರಟು ಹೋಗುತ್ತಿದ್ದಾರೆ… ದೂರದಲ್ಲಿ ಒಂದು ಚುಕ್ಕೆ ಮಾತ್ರವಾಗುತ್ತಿದ್ದಾರೆ… ಆದರೆ ಅವನ ನಗು ಮಾತ್ರ ಕೇಳಿ ಬರುತ್ತಿದೆ… ಅವರ ಒಲವಿನ, ಸಂತಸದ ನಗು… ಅದು ತನ್ನನ್ನು ಸುತ್ತುವರಿದು, ವಾತಾವರಣವನ್ನೆಲ್ಲಾ ತುಂಬಿ, ಕಿವಿಯಲ್ಲಿ ಭೋರ್ಗರೆಯುತ್ತಿದೆ… ಮಿಮಿ-ವರುಣರ ನಗು… + +ಧಡಕ್ಕನೆ ಅಗಸ್ತ್ಯ ಎದ್ದು ಕೂತಾಗ, ಅವನ ತಲೆಯಿಂದ ಕಾಲ್ಬೆರಳವರೆಗೂ ಬೆವರಿನಿಂದ ತೋಯ್ದುಹೋಗಿತ್ತು. ಎದೆ ಧಡಧಡನೆ ಹೊಡೆದುಕೊಳ್ಳುತ್ತಿತ್ತು. ಗಂಟೆ ಐದು ಹೊಡೆಯುತ್ತಿತ್ತು. ತುಂಬಾ ದಣಿವೆನಿಸುತ್ತಿತ್ತು. ನಿಧಾನವಾಗಿ ತಲೆ ತಗ್ಗಿಸಿದ ಅಗಸ್ತ್ಯ, ಜೀವನದಲ್ಲಿ ಮೊದಲಬಾರಿ ಅಸಹಾಯಕತೆಯಿಂದ ತಲೆತಗ್ಗಿಸಿದ. ಸ್ವಲ್ಪ ಹೊತ್ತಿನ ನಂತರ ಏನೋ ನಿಶ್ಚಯ ಮಾಡಿಕೊಂಡಂತೆ, ಟೇಬಲ್ ಲ್ಯಾಂಪಿನ ಸ್ವಿಚ್ ಒತ್ತಿದ ರೂಮೆಲ್ಲಾ ಬೆಳಕಾಯಿತು. + + + +ಪಕ್ಕದಲ್ಲೇ ಟೇಬಲ್ ಮೇಲೆ ಇದ್ದ ನಿದ್ರೆ ಗುಳಿಗೆಗಳ ಬಾಟಲ್ ಗಾಗಿ ಕುಡಿದವನಂತೆ ತಡಕಾಡಿದ, ಮುಚ್ಚಳ ತೆಗೆದು, ಬೊಗಸೆ ತುಂಬಾ ಮಾತ್ರೆಗಳನ್ನು ಸುರಿದುಕೊಂಡ, ಹೂಜಿಯಿಂದ ಒಂದು ಲೋಟ ತಣ್ಣೀರು ಬಗ್ಗಿಸಿಕೊಂಡು, ಒಂದೊಂದಾಗಿ ಮಾತ್ರೆಗಳನ್ನು ನುಂಗತೊಡಗಿದ, ಹೊಟ್ಟೆ ಭಾರವಾಗಿ ಒಡೆದುಹೊಗುತ್ತಿದೆ ಎನಿಸುವವರೆಗೂ, ತನ್ನ ಬೊಗಸೆ ಖಾಲಿಯಾಗುವವರೆಗೂ… + +ಖ್ಯಾತ ಕಥೆಗಾರ್ತಿ ಮತ್ತು ಅಂಕಣಗಾರ್ತಿ. ಹುಟ್ಟಿದ್ದು ಮತ್ತು ಈಗ ಇರುವುದು ಬೆಂಗಳೂರು.‘ಅಗಸ್ತ್ಯ , ಕಡಲ ಹಾದಿ, ಸಿಲೋನ್ ಸುಶೀಲ ಕಥಾ ಸಂಕಲನಗಳು. ‘ನೂರು ಸ್ವರ’ ಕಾದಂಬರಿ. ‘ಮುಂಬೈ ಡೈರಿ’ ಅಂಕಣ ಬರಹಗಳ ಸಂಕಲನ. ‘ರಾಕೀ ಪರ್ವತಗಳ ನಡುವೆ ಕ್ಯಾಬರೆ’ ಪ್ರವಾಸ ಕಥನ.‘ಬಿಸಿಲು ಕೋಲು’, ಖ್ಯಾತ ಸಿನೆಮಾ ಛಾಯಾಗ್ರಾಹಕ ವಿ. ಕೆ ಮೂರ್ತಿಯವರ ಜೀವನ ಚರಿತ್ರೆ. \ No newline at end of file diff --git a/Kenda Sampige/article_337.txt b/Kenda Sampige/article_337.txt new file mode 100644 index 0000000000000000000000000000000000000000..d6f54b38b2a41afa2067dde8d9286abad0b70507 --- /dev/null +++ b/Kenda Sampige/article_337.txt @@ -0,0 +1,103 @@ + + +ನಮ್ಮ ಮನೆಯಾಚೆಗಿರುವುದು ಗಂಗಾಧರ ಶಾಸ್ತ್ರಿಗಳ ಮನೆ. ಆ ಮನೆಯಲ್ಲಿ ಸುಮಾರು 80-85 ವರ್ಷ ಪ್ರಾಯದ ಒಬ್ಬ ಮುದುಕಿ ಇದ್ದಳು. ಅವಳು ಶಾಸ್ತ್ರಿಗಳ ಅಜ್ಜಿ. ನಮಗೂ ಅಜ್ಜಿ! ಎಲ್ಲರೂ ಅವಳನ್ನು ಅಜ್ಜಿ ಅಜ್ಜಿ ಎಂದು ಕರೆವರು. ಅವಳು ಸಾಮಾನ್ಯ ಅಜ್ಜಿ ಆಗಿರಲಿಲ್ಲ. ಪುರಾಣ ಕಾಲದ ಕಥಾಸಾಹಿತ್ಯದಲ್ಲಿರುವ ಅಡುಗೂಲಜ್ಜಿಯಂತೆ ಅವಳಿದ್ದಳು. ತಾರುಣ್ಯದಲ್ಲಿ ಮಹಾ ಮಹಾ ಕಾರುಭಾರು ಮಾಡಿದವಳೆಂದು ಅವಳೇ ಹೇಳಿಕೊಳ್ಳುತ್ತಿದ್ದಳು. ಈಗ ಎನ್ಸೈಕ್ಲೊಪಿಡಿಯಗಳಿವೆಯಲ್ಲ ಅವುಗಳ ಹಾಗೆ ನಮ್ಮ ಅಜ್ಜಿಗೆ ಶಾಸ್ತ್ರ ಪುರಾಣ ಎಲ್ಲವೂ ತಿಳಿದಿದ್ದುವು. ಪ್ರತಿದಿನ ರಾತ್ರಿ ಮಲಗುವ ಮೊದಲು ಒಂದು ಒಂದೂವರೆ ತಾಸು ಅವಳೊಡನೆ ಮಾತನಾಡಿ, ಸತ್ಯಯುಗದಲ್ಲಿ ಹುಟ್ಟಿದ ಅವಳಿಂದ ನಾವು ಕಲಿಯುಗದವರೆಂದು ಬೈದು ಭಂಗಿಸಿಕೊಳ್ಳದೆ ನಮಗೆ ನಿದ್ದೆಯೇ ಬೀಳುತ್ತಿರಲಿಲ್ಲ. + +ಆ ದಿನ ರಾತ್ರಿ ಅಜ್ಜಿ ಚಾವಡಿಯಲ್ಲಿ ಹಾಸಿದ್ದ ಚಿಕ್ಕ ಚಾಪೆಯ ಮೇಲೆ ಕೂತು ಎಲೆಯಡಿಕೆ ಗುದ್ದುತಿದ್ದಳು. ನಾವು ಫಕ್ಕನೆ ಹೋಗಿ `ಅಜ್ಜಿ ಅಜ್ಜಿ’ ಎಂದು ಕರೆದೆವು. + +ಎಲೆಯಡಿಕೆಯ ಮೇಲೆ ಬೀಳಬೇಕಾಗಿದ್ದ ಅಜ್ಜಿಯ ಒನಕೆ ಪೆಟ್ಟು ಕೈಮೇಲೆ ಬಿದ್ದಿತು. ಅವಳು ನೋವು ಸಹಿಸಲಾರದೆ -`ಥೂ! ಕಲಿಯುಗದ ಮಕ್ಕಳು!’ ಎಂದು ಮಾತಿನ ಪ್ರಾರಂಭಕ್ಕೆ ಆಶೀರ್ವಾದ ಕೊಟ್ಟಳು. + +“ಅಜ್ಜೀ! ಅನಂತಶಯನದಲ್ಲಿ ಹೊಲೆಯರ ಮಕ್ಕಳು ದೇವಸ್ಥಾನಕ್ಕೆ ಹೋದರಂತೆ!” + +“ಕಲಿಯುಗವಪ್ಪಾ, ಕಲಿಯುಗ” + +“ಅಜ್ಜೀ, ನೀವು ಅಂದು ಯಾತ್ರೆಗೆ ಹೋಗಿದ್ದಿರಲ್ಲ. ಅನಂತಶಯನದ ಅನಂತಪದ್ಮನಾಭ ದೇವಸ್ಥಾನಕ್ಕೆ, ಅದರೊಳಗೆ ಹೊಲೆಯರ ಮಕ್ಕಳು ಹೋದರಂತೆ. ಹಿಂದಿನ ಕಾಲದಂತೆ ಗಲಭೆ ಗಲಾಟೆ ಯಾವುದೂ ಆಗಲಿಲ್ಲ ಅಜ್ಜಿ!” + +“ಕಲಿಯುಗ, ಕಲಿಯುಗ!” + +“ಅನಂತಶಯನದ ಅರಸರೇ ಹೀಗೆ ಮಾಡಬೇಕೆಂದು ಅಪ್ಪಣೆ ಕೊಟ್ಟಿದ್ದರು.” + +“ಅದೇ ನಾನು ಹೇಳುವದು, ಕಲಿಯುಗವೆಂದು. ಯಥಾ ರಾಜ ತಥಾ ಪ್ರಜಾ!” + +“ಇನ್ನೇನು ಅಜ್ಜಿ?” + +“ಕಲಿಯುಗ, ಕಲಿಯುಗ, ಕಲಿಯುಗ! ಧರ್ಮವೇ ಮುಳುಗಿತು ಈ ಕಲಿಯುಗದಲ್ಲಿ. ಅಯ್ಯೋ ಯಾಕೆ ಬದುಕಿದೆನಪ್ಪಾ ಈ ಕಲಿಯುಗದಲ್ಲಿ?” + +“ದೇವಸ್ಥಾನಕ್ಕೆ ಹೋಗಬೇಕಾದವರು ಹೋಗುವುದಿಲ್ಲ. ಹೋಗಬೇಕೆನ್ನುವವರು ಹೋದರೆ ಅದಕ್ಕೆ ಅಡ್ಡಿ ಮಾಡುವದೇಕೆ ಮತ್ತೆ ಅಜ್ಜಿ?” + +“ನಿಮ್ಮ ಮಾಡು ಸುಡಲಿಕ್ಕೆ, ತೋಟೀ ಕೆಲಸಕ್ಕೆ ನೀವು ಹೋಗುತ್ತೀರಾ? ಹೋಗೀ ಹೋಗೀ, ಬಾಲ್ದಿ ಕುಂಟೆ ಹಿಡಿದು ಈಗಲೇ ಹೋಗಿ.” + +“ಅಜ್ಜೀ, ನೀವು ತೋಟೀ ಕೆಲಸ ಮಾಡಲಿಲ್ಲವೇ? ಎಲ್ಲರೂ ಮಾಡುವುದಿಲ್ಲವೆ? ಹಾಗೆ ಮಾಡದಿದ್ದರೆ ಮಕ್ಕಳು ಹೇಗೆ ದೊಡ್ಡವರಾಗುತ್ತಾರೆ?” + +“ನಿಜ, ನಿಜ, ನಿಜಕ್ಕೂ ನೀವು ಕಲಿಯುಗದ ಮಕ್ಕಳು. ಇಲ್ಲವಾದರೆ ಹಿರಿಯರ ಮಾತಿಗೆ ಹೀಗೆ ಪ್ರತಿಯಾಡುತ್ತೀರಾ?” + +“ಹಾಗಲ್ಲ ಅಜ್ಜೀ! ಕರ್ಕಶವಾಗಿ ಕೂಗುವ ಕಾಗೆಗಳೂ ಅನ್ಯಾಯವಾಗಿ ಬಗಳುವ ನಾಯಿಗಳೂ ದೇವಸ್ಥಾನಕ್ಕೆ ಹೋಗಬಹುದಂತೆ. ಹೊಲೆಯರು ಹೋಗಬಾರದೇ? ಎಷ್ಟಾದರೂ ಅವರು ಮನುಷ್ಯರಲ್ಲವೇ?” + +“ಇನ್ನೂ ಪ್ರತಿಯಾಡುತ್ತೀರಾ? ಕಲಿಯುಗದ ಮಕ್ಕಳು!” + +“ಹಾಗಲ್ಲ ಅಜ್ಜಿ! ಯೇಸು ಯೇಸು ಎನ್ನುವ ಕ್ರಿಸ್ತಾನರೂ, ಅಲ್ಲಾ ಅಲ್ಲಾ ಎನ್ನುವ ಮುಸಲ್ಮಾನರೂ ದೇವಸ್ಥಾನಕ್ಕೆ ಹೋಗಬಹುದಂತೆ. ರಾಮಾ, ಕೃಷ್ಣಾ ಎನ್ನುವ ಹೊಲೆಯರು ಹೋಗಬಾರದೇ?” + +“ಥೂ ! ಥೂ! ಎಷ್ಟು ಹೇಳಿದರೂ ಇಲ್ಲ!” + +“ಪೀಕದಾನಿ ತಂದು ಕೊಡಬೇಕೆ, ಅಜ್ಜೀ?” + +“ಕಲಿಯುಗವಪ್ಪಾ ಕಲಿಯುಗ! ಎಷ್ಟು ಹೇಳಿದರೂ ಕೇಳುವುದಿಲ್ಲ. ನಮ್ಮ ಶಾಸ್ತ್ರಗಳಲ್ಲಿ ಹಾಗೆ ಮಾಡಬೇಕೆಂದು ಹೇಳಿಯದೆ, ಕಂಡಿರಾ?” + +“ನಿಮ್ಮ ಶಾಸ್ತ್ರಗಳು ಯಾವುವು ಅಜ್ಜೀ?” + +“ಆ ಸಂಗತಿ ನಿಮಗೆ ಯಾಕೆ? ಕಲಿಯುಗದ ಮಕ್ಕಳು!” + +“ಶಾಸ್ತ್ರಗಳಲ್ಲಿ ನ್ಯಾಯ, ನೀತಿ, ಮನುಷ್ಯತ್ವ ಮರೆತು ಕೆಲಸ ಮಾಡಬೇಕೆಂದು ಹೇಳಿದೆಯೇ ಅಜ್ಜಿ?” + +“ಹೌದು! ನಿಮ್ಮದು ಕೊಳ್ಕೆಬೈಲು ಕಾನೂನು! ಕುತರ್ಕ ಮಾಡುವವರೊಡನೆ ಯಾರು ಮಾತನಾಡುತ್ತಾರೆ? ನಾನು ನಿಮ್ಮೊಡನೆ ಮಾತನಾಡುವುದಿಲ್ಲ ಹೋಗಿ, ಇಲ್ಲಿಂದ ಈಗಲೆ ಹೊರಡಿ.” + +ಉತ್ತರ ಕೊಡಲಿಕ್ಕಾಗದಾಗ ಅಜ್ಜಿ ಮಾತು ಮಾತಿಗೆ “ಕಲಿಯುಗದ ಮಕ್ಕಳು, ಕೊಳೈಬೈಲು ಕಾನೂನು, ಸುಗ್ಗಿಬೈಲು ಕಾನೂನು, ಕಾರ್ತಿಬೈಲು ಕಾನೂನು” ಎನ್ನುತ್ತಿದ್ದಳು. ನಾವು ಅಜ್ಜಿಯ ಹತ್ತಿರ ಕೇಳಿದೆವು. + +“ಅಜ್ಜೀ, ನೀವು ಕೊಳ್ಕೆಬೈಲು, ಸುಗ್ಗಿಬೈಲು, ಕಾರ್ತಿಬೈಲು ಎನ್ನುತ್ತೀರಲ್ಲ. ಅದು ಏನು ಅಜ್ಜಿ?” + +ಅಜ್ಜಿ ಹೇಳತೊಡಗಿದಳು: + +ಬಹು ಪುರಾತನ ಕಾಲದಲ್ಲಿ ನಾಲ್ಕೂರಿನಲ್ಲಿ ನ್ಯಾಯಬುದ್ಧಿ ಎಂಬ ಅರಸು ಇದ್ದ. ಅವನು ಧರ್ಮದಿಂದಲೂ, ನ್ಯಾಯದಿಂದಲೂ ರಾಜ್ಯವನ್ನು ಪರಿಪಾಲಿಸುತ್ತಿದ್ದ. ಕಾಲಕಾಲಕ್ಕೆ ಮಳೆ ಬೆಳೆ ಎಲ್ಲಾ ಸರಿಯಾಗಿ ಆಗಿ ಎಲ್ಲೆಲ್ಲಿಯೂ ಸುಭಿಕ್ಷ ಇರುತ್ತಿತ್ತು. ಪ್ರಜೆಗಳು ರಾಮರಾಜ್ಯದ ಸುಖವನ್ನು ಅನುಭವಿಸುತ್ತಿದ್ದರು. + +ನೆರೆಯೂರಾದ ಆರೂರಿನಲ್ಲಿ ಅನ್ಯಾಯಬುದ್ಧಿ ಎಂಬ ಇನ್ನೊಬ್ಬ ಅರಸು ಇದ್ದ. ಅವನ ಹೆಸರಿಗೆ ತಕ್ಕಂತೆ ಅನ್ಯಾಯದಿಂದಲೂ ಅಧರ್ಮದಿಂದಲೂ ರಾಜ್ಯವನ್ನಾಳುತ್ತಿದ್ದ. ಅವನ ದುಷ್ಟ ವರ್ತನೆಯಿಂದ ಕ್ಷುಬ್ಧರಾದ ಪ್ರಜೆಗಳು ಅವನ ಸರ್ವನಾಶವಾಗಲಿ ಎಂದು ಶಪಿಸುತ್ತ ನಾಲ್ಕೂರಿಗೆ ಪಲಾಯನ ಮಾಡಿದರು; ಅವರು ಅಲ್ಲಿಯೇ ಮನೆಮಾರು, ಗುಡಿಗೋಪುರ ಕಟ್ಟಿಕೊಂಡು ನೆಮ್ಮದಿಯಿಂದ ಇರತೊಡಗಿದರು. + +ಪ್ರಜೆಗಳು ನ್ಯಾಯಬುದ್ಧಿಯ ರಾಜ್ಯಕ್ಕೆ ಓಡಿಹೋಗಿ ಅನ್ಯಾಯಬುದ್ಧಿಗೆ ನಷ್ಟ ಮಾಡುವುದು ಅವನ ಗೂಢಾಚಾರರು ಬಂದು ಅವನಿಗೆ ತಿಳಿಸಿದರು. ಅವನು ಸಿಟ್ಟಿನಿಂದ ಸಂತಪ್ತನಾದ. ತನ್ನ ರಾಜ್ಯದ ಪ್ರಜೆಗಳನ್ನು ನ್ಯಾಯಬುದ್ಧಿಯ ಪುಸಲಾಯಿಸಿ ಕರಕೊಂಡು ಹೋಗಿರುವನೆಂದು ಅವನ ಮೇಲೆ ಆರೋಪವನ್ನು ಹೊರಿಸಿದ. ಕಾನೂನು ಮೇರೆಗೆ ಅಪರಾಧವನ್ನು ಸಾಬೀತು ಮಾಡಲಿಕ್ಕೆ ವಕೀಲರು ಬರುವರಾಗಿಯೂ, ಅವರನ್ನು ತರ್ಕದಲ್ಲಿ ಸೋಲಿಸದಿದ್ದರೆ, ಅಪರಾಧಕ್ಕೆ ತಕ್ಕ ದಂಡ ಕೊಡಬೇಕಾಗುವದೆಂದೂ ಅವನು ನ್ಯಾಯಬುದ್ಧಿಗೆ ತಿಳಿಸಿದ. + +ಅನ್ಯಾಯ ಬುದ್ಧಿಯ ವಕೀಲರು ನ್ಯಾಯಬುದ್ಧಿಯ ರಾಜಸಭೆಗೆ ಬಂದರು. ಬರುವಾಗ ಮೂರು ಎತ್ತಿನ ಹೊರೆ ಕಾನೂನು ಪುಸ್ತಕಗಳನ್ನು ಸಂಗಡ ತಂದಿದ್ದರು. ನ್ಯಾಯ ಬುದ್ಧಿ ಅದನ್ನು ಕಂಡು ಅಂಜಿದ. ಅವನ ರಾಜ್ಯದಲ್ಲಿ ಕಾನೂನು ಕಾಯಿದೆಗಳು ಇರಲಿಲ್ಲ. ಸತ್ಯ ಅಹಿಂಸೆಗಳೇ ಅವರ ಕಾನೂನು. ಪ್ರಜೆಗಳು ಯಾವಾಗಲೂ ನ್ಯಾಯನೀತಿಗಳಿಗೆ ಅನುಸಾರವಾಗಿ ನಡೆಯುತ್ತಿದ್ದರು. ಆದರೆ ಕಾನೂನಿನಲ್ಲಿ ನ್ಯಾಯ ನೀತಿ ಸತ್ಯ ಅಹಿಂಸೆಗಳಿಗೆ ಸ್ಥಾನವಿಲ್ಲ. ಅರಸನಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಮಂತ್ರಿಗಳು, ಸೇನಾಪತಿಗಳು ಅರಸನಿಗೆ ಯಾವ ಸಲಹೆಯನ್ನೂ ಕೊಡಲಾರದಾದರು. ಅರಸನು ದುಃಖಭವನದಲ್ಲಿ ಹೋಗಿ ಮಲಗಿದ. ಅನ್ನ ನೀರುಗಳನ್ನು ತೆಗೆದುಕೊಳ್ಳಲಿಲ್ಲ. ಹೆಂಡತಿ ಮಕ್ಕಳು – ಬಂಧುಗಳು ಬಾಂಧವರು ಬಹು ವಿಧವಾಗಿ ಸಮಜಾಯಿಸಿದರು. ಆದರೂ ಅವನು ಪಿಟ್ಟೆಂದು ಮಾತನಾಡಲಿಲ್ಲ. + +ಈ ವರ್ತಮಾನವು ಹಳ್ಳಿ ಹಳ್ಳಿಗೂ ಹರಡಿತು. ಪ್ರಜೆಗಳು ವ್ಯಾಕುಲರಾದರು. ಇದನ್ನು ತಿಳಿದ ಒಂದು ಹಳ್ಳಿಯ ಒಬ್ಬ ರೈತನು ಓಡೋಡಿ ಬಂದು, ಅರಸನಿಗೆ ಸಾಷ್ಟಾಂಗವೆರಗಿ ತಾನು ಆತನ ದುಃಖ ಸಮಾಧಾನ ಮಾಡುವೆನೆಂದು, ಮಾತಿಗೆ ತಪ್ಪಿದರೆ ಪ್ರಾಣ ಕೊಡಲಿಕ್ಕೂ ಸಿದ್ಧನೆಂದು ತಿಳಿಸಿದನು. ಅರಸನು ಒಪ್ಪಿದ. ಎಲ್ಲರಿಗೂ ಸಂತೋಷವಾಯಿತು. + +ಮರುದಿನ ಸಭೆ ಜರುಗಿತು. ಅನ್ಯಾಯಬುದ್ಧಿಯ ವಕೀಲರು ತಮ್ಮ ದೊಡ್ಡ ದೊಡ್ಡ ಕಾನೂನು ಪುಸ್ತಕಗಳೊಂದಿಗೆ ಉಚಿತಾಸನಗಳಲ್ಲಿ ಬಂದು ಕೂತರು. ಹಳ್ಳಿಯ ರೈತನು ವಕೀಲರ ಉಡುಗೆಯನ್ನು ಉಟ್ಟು ಬಂದಿದ್ದನು. ಅವನ ಹತ್ತಿರವೂ ಕೊಳ್ಕೆ, ಕಾರ್ತಿ ಮತ್ತು ಸುಗ್ಗಿ ಬೆಳೆಯ ಹುಲ್ಲನ್ನು ತುಂಬಿಸಿ ಪುಸ್ತಕಾಕಾರವಾಗಿ ಕಟ್ಟಿದ ಮೂರು ದೊಡ್ಡ ಹೊರೆಗಳಿದ್ದವು. ಈ ವಿಚಿತ್ರ ಪುಸ್ತಕಗಳನ್ನು ಕಂಡು ಆಶ್ಚರ್ಯಭರಿತರಾದ ಅನ್ಯಾಯಬುದ್ಧಿಯ ವಕೀಲರು ರೈತನೊಡನೆ ಕೇಳಿದರು –“ಇದು ಯಾವ ಕಾನೂನು?” + + + +“ಕೊಳ್ಕೆ ಬೈಲ್!” + +“ಇದು?” + +“ಕಾರ್ತಿಬೈಲ್!” + +“ಮತ್ತೆ ಇದು?” + +“ಇದೊ? ಸುಗ್ಗಿಬೈಲ್ ಕಾನುನು!” + +ಅದುವರೆಗೆ ಕಾಣದ ಪುಸ್ತಕಗಳನ್ನು ಕಂಡೂ, ಕೇಳದ ಹೆಸರುಗಳನ್ನು ಕೇಳಿಯೂ ಅನ್ಯಾಯಬುದ್ಧಿಯ ವಕೀಲರು ಭ್ರಾಂತರಾದರು. + +“ಈಗ ಹೊರಗೆ ಹೋಗಿ ಬರುತ್ತೇವೆ” ಎಂದು ಹೋದವರು ಪುನಃ ಹಿಂದಿರುಗಲಿಲ್ಲ. + +ನ್ಯಾಯಬುದ್ಧಿಯ ಮಾನರಕ್ಷಣೆಯಾಯಿತು. ನಾಲ್ಕೂರು ರಾಜ್ಯವೂ ಸುರಕ್ಷಿತವಾಯಿತು. ಎಲ್ಲರೂ ಸುಖ ಸಂತೋಷದಿಂದ ಇರುತ್ತಿದ್ದರು. + +“ಅಜ್ಜಿ!” + +“ಏನು ಮಕ್ಕಳೇ?” + +“ನಮ್ಮದು ಕೊಳ್ಕೆಬೈಲ್, ಸುಗ್ಗಿಬೈಲ್, ಕಾರ್ತಿಬೈಲ್ ಕಾನೂನು ಹೌದು ಅಜ್ಜಿ!” + +“ಏನು ಹುಚ್ಚು ಮಾತು? ಕಲಿಯುಗದ ಮಕ್ಕಳು!” + +“ಅಜ್ಜಿ! ಅನ್ಯಾಯದಿಂದಲೂ, ಅಧರ್ಮದಿಂದಲೂ ನಾಲ್ಕೂರು ಅರಸನನ್ನು ಕಾಪಾಡಲಿಕ್ಕೆ ಇದೇ ಕಾನೂನುಗಳು ಬೇಕಾದವು. ಈಗ ನಿಮ್ಮ ಶಾಸ್ತ್ರಗಳಿಂದ ಬೋಳೇಸ್ವಭಾವದ ಜನರನ್ನು ಕಾಪಾಡಲಿಕ್ಕೆ ಇವೇ ಕಾನೂನುಗಳು ಬೇಕು ಅಜ್ಜಿ!” + + + +“ಹೋಗಿ, ಹೋಗಿ, ಎದುರು ನಿಲ್ಲಬೇಡಿ. ಕಲಿಯುಗದ ಮಕ್ಕಳು, ಕಲಿಯುಗದ ಮಕ್ಕಳು” ಎಂದು ಅಜ್ಜಿ ನಮ್ಮನ್ನು ಓಡಿಸಲಿಕ್ಕೆ ಬಂದಳು. ಅವಳು ಎದ್ದು ನಿಲ್ಲಬೇಕಾದರೆಯೇ ನಾವು ನಮ್ಮ ಮನೆಗಳನ್ನು ಸೇರಿದ್ದೆವು! + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_338.txt b/Kenda Sampige/article_338.txt new file mode 100644 index 0000000000000000000000000000000000000000..25b7b440c3dd962ff4d0499d44d50c42f0f3ecac --- /dev/null +++ b/Kenda Sampige/article_338.txt @@ -0,0 +1,49 @@ + + +ಮುಖದ ಮುಂದಿನ ನಕಾಬು ಸರಿಸಿ, ನಮಾಜು ಮಾಡಲು, ಪ್ರಸನ್ನಳಾಗಿ ಕುಳಿತ ಮಮ್ತಾಜ್ ಬೇಗಂಳಂತೆ; ಮುಂಜಾನೆಯ ಮುಂಬೆಳಗು ಆಗ ತಾನೇ ಕ್ರಮೇಣ ಮಲ್ಲಿಗೆಯಂತೆ ಅರಳುತ್ತಿತ್ತು. ನಸುಕಿಲ್ಲಿ ಲಗುಬಗೆಯಿಂದ ಎದ್ದು; ಮೀನು ಹಿಡಿಯುವ ದಾವಂತದಿಂದ, ಬಿದಿರು ಬಡಿಗಿಗೆ ಎಳೆದು ಕಟ್ಟಿದ ಗಾಳವನ್ನು ಹೆಗಲ ಮೇಲಿರಿಸಿಕೊಂಡು, ಪ್ಲಾಸ್ಟಿಕ್ ಡಬ್ಬದಲ್ಲಿ ಎರೆಹುಳುಗಳನ್ನು ಸಂಗ್ರಹಿಸಿಕೊಂಡು, ಕೊರೆಯುವ ಚಳಿಯನ್ನೂ ಲೆಕ್ಕಿಸದೇ ಅಮೀನಸಾಬರು ಕೃಷ್ಣಾ ನದಿಗೆ ಕೋಟೆಯಂತೆ ಕಟ್ಟಿದ ಆಲಮಟ್ಟಿ ಹಿನ್ನೀರಿನ ದಂಡೆಯ ಮೇಲೆ ತದೇಕ ಚಿತ್ತದಿಂದ ಮೀನಿನ ಹೆಜ್ಜೆಯನ್ನು ಗುರುತಿಸುವ ನಿಪುಣ ಮೀನುಗಾರನಂತೆ ಉಸಿರು ಬಿಗಿ ಹಿಡಿದು ಜಪ್ಪಿಸಿ ಕುಳಿತಿದ್ದರು. ಆದರೆ, ನಸುಕಿಂದಲೇ ಹಳೆಯ ಲಡಕಾಸು ಗಾಳಕ್ಕೆ ಮಳೆಹುಳು(ಎರೆಹುಳು) ಸಿಕ್ಕಿಸಿ ಗಾಳವನ್ನು ನೀರಿಗೆ ಬಿಟ್ಟು ಮೀನು ಹಿಡಿಯಲು ಹರ ಸಾಹಸ ಪಡುತ್ತಲೇ ಇದ್ದರೂ ಹೇಳಿಕೊಳ್ಳುವಷ್ಟು ಮೀನು ಸಿಕ್ಕಿರಲಿಲ್ಲ. ಅಮೀನ ಸಾಹೇಬರು ನೀರಿಗೆ ಬಿಟ್ಟಿದ್ದ ಗಾಳವು ಅಲೆಗಳಿಗೆ ಒಂದಿಷ್ಟು ಅತ್ತಿತ್ತ ನಲುಗಿದರೆ ಸಾಕು ಗಾಳಕ್ಕೆ ಮೀನು ಬಿದ್ದಿರಬೇಕೆಂಬ ಹಳವಂಡದಿಂದ ಬರ್ರನೇ ಗಾಳವನ್ನು ಮೇಲಕ್ಕೆತ್ತಿ ಪರಿಶೀಲನೆ ಮಾಡುತ್ತಿದ್ದರು. ಆದರೆ ಗಾಳಕ್ಕೆ ಸಿಕ್ಕಿಸಿದ ಹುಳುವನ್ನು ಮೀನುಗಳು ಬಹಳ ಚಾಣಾಕ್ಷತೆಯಿಂದ ತಿಂದು ಬರೀ ಗಾಳವನ್ನು ಬಿಟ್ಟು ಹೋಗುತ್ತಿದ್ದರಿಂದ, ನಿರಾಸೆಯಿಂದ ಕಳ್ಳ ಮೀನಿಗೆ ಮತ್ತು ನೀರ ಅಲೆಗಳ ಕುಚೇಷ್ಟೆಗೆ ಶಪಿಸುತ್ತಿದ್ದರು. “ಅರೇ.. ಅಲ್ಲಾ!!.. ನಂದಕ್ಕೂ ತಕದೀರ ಬಹುತ ಖರಾಬ ಐತಿ.. ನೀರಿನ ತೆರೆಗಳೂ ನನಗೆ ಹುಚು ಪ್ಯಾಲಿ ಮಾಡಾಕತ್ಯಾವು..” ಎಂದು ಲೊಚಗುಡುತ್ತಾ ಆಶಾವಾದಿಯಾಗಿ ಮತ್ತೆ ಗಾಳಕ್ಕೆ ಹುಳು ಸಿಗಿಸಿ ಮೀನು ಶಿಕಾರಿಗೆ ಗಾಳ ಹಾಕುತ್ತಿದ್ದರು. + +ಇಲ್ಲಿಯ ತನಕ ಅನ್ನ ನೀರು ಕೊಟ್ಟು ಸಾಕಿ ಸಲುಹಿದ ಕೃಷ್ಣೆಯು ಕಳೆದ ತಿಂಗಳು ಇದ್ದಕ್ಕಿದ್ದಂತೆ ಮುನಿಸಿಕೊಂಡಿದ್ದಳು. ಮನುಷ್ಯರ ಮುಠ್ಠಾಳತನಕ್ಕೆ ರೌದ್ರಾವತಾರ ತಾಳಿದ ಕೃಷ್ಣಾ ನದಿ ತಾಯಿಯು ಮನುಷ್ಯ ಕುಲದ ಮೇಲೆ ಫತ್ವಾ ಹೊರಡಿಸಿ ಪ್ರವಾಹದಿಂದ ಉಕ್ಕಿ ಜಲಾಘಾತದಿಂದ ಜನ ಜಾನುವಾರಗಳನ್ನು ಆಪೋಶನ ತೆಗೆದುಕೊಂಡ ನಂತರ ಅಮೀನ ಸಾಹೇಬರ ಬದುಕಿನ ದಿಕ್ಕು ಸೂತ್ರ ಹರಿದ ಗಾಳಿಪಟದಂತೆ, ರಂದ್ರವಾಗಿ ಮುಳುಗಿ ಹೋಗುತ್ತಿರುವ ತೆಪ್ಪದಂತೆ ಮೂರಾಬಟ್ಟಿಯಾಗಿತ್ತು. ರಂಜಾನ್ ಹಬ್ಬ ಬಂದರೆ ಸಾಕು ಅಸಹಾಯಕರಿಗೆ ಜಕಾತ ನೀಡುವದು, ಕೈಲಾದ ಮಟ್ಟಿಗೆ ಬಡ ಬಗ್ಗರಿಗೆ ಮಾಂಸದ ದಾನ(ಗೋಷ್) ಮಾಡುವದರಲ್ಲಿ ಸಂತಸ ಪಡುತ್ತಿದ್ದ ಅಮೀನ ಸಾಹೇರ ಬಗ್ಗೆ ಜಮಾತನಲ್ಲಿ ವಕೆಲವು ಮಂದಿ ಗುಟ್ಟಾಗಿಯೇ ಹೊಗಳುತ್ತಿದ್ದರು. ಅಮೀನಸಾಹೇಬರಿಗೆ ಅವರ ಸಮಾಜದ ಜನರು ಯಾವಾಗಲೂ ಪ್ರೀತಿ, ಗೌರವಗಳಿಂದ ನಡೆದುಕೊಳ್ಳುತ್ತಿದ್ದರು. ಆದರೆ, ಹನುಮವ್ವ ಎಂಬ ಪರಧರ್ಮದ ಯುವತಿಯನ್ನು ಮದುವೆಯಾಗಿದ್ದಕ್ಕೆ “ಕಾಫೀರ” ಎಂದು ಘೋಷಣೆ ಮಾಡಿದ್ದರಿಂದ, ಅಮೀನಸಾಹೇಬರ ಮನೆತನವನ್ನು ಜಮಾತನಿಂದ ಬಹಿಷ್ಕರಿಸಲಾಗಿತ್ತು. ಹನುಮವ್ವ ಎನ್ನುವ ಕೆಳಜಾತಿಯ ಯುವತಿಯನ್ನು ಮದುವೆಯಾಗಿ ಆಕೆಗೆ ಹುಸೇನಬೀ ಎಂದು ಹೆಸರಿನಿಂದ ಕರೆಯಲಾಗುತ್ತಿತ್ತು. ಕ್ರಮೇಣ ರೂಢಿಯಲ್ಲಿ ಹುಸೇನವ್ವಳೆಂದು ಕರೆಯಲಾಯಿತು. + +ಬಾಲ್ಯದಿಂದಲೂ ತಂದೆ ಹಜರತ್ ಸಾಹೇಬರೊಂದಿಗೆ ಕೃಷ್ಣಾ ನದಿಗೆ ಇಳಿದು ಹಿಂದಿನ ರಾತ್ರಿ ಬಲೆ ಬೀಸಿ ಮಾರನೆಯ ದಿನ ನೂರಾರು ಕಿಲೋ ಮೀನು ಸಂಗ್ರಹಿಸಿ, ಕೈ ತುಂಬಾ ಕಾಂಚಾಣ ಎಣಿಸುತ್ತಿದ್ದ ಆಗಿನ ದೌಲತ್ ಅಮೀನ ಸಾಹೇಬರಿಗೆ ಇನ್ನು ನೆನಪು ಮಾತ್ರ. ಜಾಗತೀಕರಣ, ಉದಾರೀಕರಣಗಳ ಬ್ರಹ್ಮ ರಾಕ್ಷಸರು ನೆಲ ಜಲಗಳ ಮೇಲೆ ತಮ್ಮ ದಾಳಿಯನ್ನು ಮಾಡಿದ್ದರಿಂದ… ಕಾಲ ಕಾಲಕ್ಕೆ ಬಂದ ಆಯಾ ಸರಕಾರಗಳು ಮೀನುಗಾರಿಕೆಯನ್ನು ದೇಶೀ ಮತ್ತು ವಿದೇಶೀ ಬಂಡವಾಳಶಾಹಿಗಳಿಗೆ ಟೆಂಡರ್ ಕೊಟ್ಟಿದ್ದರಿಂದ, ಬಂಡವಾಳ ಶಾಹಿಗಳ ಯಾಂತ್ರೀಕೃತ ದೋಣಿಗಳು ನೀರಿಗಿಳಿದು ಮೀನಿನ ರಾಶಿಯನ್ನೇ ರಾಕ್ಷಸನಂತೆ ಹೊತ್ತು ದಡಕ್ಕೆ ತಂದು ಹಾಕಿ ಮಾರು ಕಟ್ಟೆಗೆ ಸಾಗಿಸುತ್ತಿದ್ದುದರಿಂದ ಅಮೀನಸಾಹೇಬರಂತ ಚಿಕ್ಕ ಪುಟ್ಟ ಮೀನುಗಾರರು ಆಣೆಕಟ್ಟೆಯ ಹಿನ್ನೀರಿನಲ್ಲಿ ಮೀನುಗಾರಿಕೆಯನ್ನು ನಡೆಸುವದು ಅಪರಾಧವಾಗಿತ್ತು. + +ಮೀನುಗಾರಿಕೆಯು ಕೈ ತಪ್ಪಿದ ನಂತರ ಅಮೀನಸಾಹೇಬರ ಆರ್ಥಿಕ ಪರಿಸ್ಥಿತಿಯು ತೀರಾ ಖರಾಬ ಆಗಿತ್ತು. ಮದುವೆಯಾಗಬೇಕಾದ ಮಗಳು ರೆಹನಾ ಬೇಗಂ ಅಮೀನ ಸಾಬರ ಪಾಲಿಗೆ ಬಹುದೊಡ್ಡ ಸವಾಲ್ ಆಗಿದ್ದಳು. ಮನೆಯಲ್ಲಿ ಹೆಂಡತಿ ಹುಸೇನಬಿ(ಹುಸೇನವ್ವ) ಮತ್ತೆ ಮತ್ತೆ ಮಗಳ ಮದುವೆಯ ವಿಷಯದ ಬಗ್ಗೆ ತಗಾದೆ ತೆಗೆದು.. ಆರ್ಥಿಕ ಪರಿಸ್ಥಿತಿಯನ್ನು ಹಂಗಿಸಿ ಹೇಳುತ್ತಲೇ ಬೇರೆ ಬೇರೆ ವಿಷಯಗಳ ಬಗ್ಗೆಯೂ ಕೆದಕುತ್ತಲೇ; ಅಮೀನಸಾಹೇಬರ ತಲೆಯಲ್ಲಿ ಚಿಂತೆಯ ಗುಂಗೀ ಹುಳುವನ್ನು ಬಿಡುತ್ತಲೇ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದುದರಿಂದ; ಅಮೀನ ಸಾಹೇಬರು ಕೃಷ್ಣಾ ನದಿಯ ದಡದಲ್ಲಿ ಮೀನಿಗೆ ಗಾಳ ಹಾಕಿ ಕೃಷ್ಣೆಯ ನೀರಿನಲ್ಲಿ ತನ್ನ ಜಲಬಿಂಬವನ್ನು ನೋಡಿಕೊಳುತ್ತಲೇ ಕಳೆದು ಹೋದ ಬದುಕಿನ ದರ್ಬಾರವನ್ನು ಇಣುಕಿ ನೋಡುತ್ತ ತಮ್ಮ ಬೇಸರವನ್ನು ಕಳೆಯುತ್ತಿದ್ದರು. ಮೊನ್ನೆಯ ದಿನ ನದಿಯ ದಡದಲ್ಲಿಯೇ ಮೀನು ಹಿಡಿಯಲು ಗಾಳ ಹಾಕಿ ಕುಂತಿದ್ದ ಸ್ಥಳದಲ್ಲಿಯೇ ಇಚ್ಚಾಮರಣಿಯಂತೆ ಜೀವವನ್ನು ದೇಹದಿಂದ ತ್ಯಜಿಸಿಕೊಂಡು ಹೋಗಿಬಿಟ್ಟಿದ್ದರು. + +ಕುಳಿತಲ್ಲಿಯೇ ಜೀವ ಬಿಟ್ಟಿದ್ದ ಅಮೀನ ಸಾಹೇಬರ ಸಾವು ಪುಣ್ಯದ ಸಾವು ಎಂದು, ಜಾತಿ ಬೇಧ ಮರೆತು ಭಜನೆ ಮಾಡಿ ಊರ ತುಂಬಾ ಮೆರವಣಿಗೆ ಮಾಡಿದ್ದರು. ಅಮೀನ ಸಾಹೇಬರು ಬದುಕಿರುವವರೆಗೂ ಯಾವ ಜಾತಿ, ಧರ್ಮಗಳ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಲಾರದೇ ಕೇವಲ ಮಾನವೀಯತೆಗೆ ಬೆಲೆ ಕೊಟ್ಟು ಬಾಳಿದವರಾಗಿದ್ದರು. ಗಂಡನ ಮಾನವೀಯತೆ ಮತ್ತು ಉದಾರತೆಯನ್ನು ಸ್ಮರಿಸುತ್ತಲೇ ಬಳಬಳನೇ ಕಣ್ಣೀರು ಸುರಿಸುತ್ತ, ಅಮೀನ ಸಾಹೇಬರು ಪ್ರಾಣ ತ್ಯಜಿಸಿದ ಸ್ಥಳದಲ್ಲಿಯೇ ಕುಳಿತು, ಕೃಷ್ಣ ನದಿಯ ನೀರ ಅಲೆಗಳಲ್ಲಿ ಗಂಡನ ನೆನಪಿನ ಹೆಜ್ಜೆ ಗುರುತನ್ನು ಪತ್ತೆ ಹಚ್ಚುತ್ತ ಹುಸೇನವ್ವ ಕಣ್ಣೀರು ಸುರಿಸುತ್ತಿದ್ದಾಗ, ಗತಿಸಿಹೋದ ಗಂಡ ಅಮೀನಸಾಹೇಬರು ಆಕೆಯ ಕಣ್ಣೀರು ವರೆಸಿ ಸಾಂತ್ವನ ಹೇಳಿದಂತಾಗಿ ಹುಸೇನವ್ವ ಭಾವಪರವಶಳಾಗಿ ನಿಟ್ಟುಸಿರು ಬಿಟ್ಟು ನದಿಯ ದಡದಲ್ಲಿ ಕುಳಿತು.. ಗಂಡನೊಂದಿಗೆ ಬದುಕಿದ ಕ್ಷಣಗಳನ್ನು ನೆನೆಯುತ್ತಿದ್ದಳು.. + +*************** + +ಹುಸೇನಬಿಯ(ಹುಸೇನವ್ವ) ಕೋಳಿ ಮೈಗಳ್ಳಿಯಂತೆ ಮೂಲಿ ಹಿಡಿದು ಕಾವಿಗೆ ಕುಂತು, ಮೂರು ವಾರ ಆಗಿತ್ತು. ತತ್ತಿ ಕೂಡಿಸಿ ಅದರ ಹೊಟ್ಟಿ ಕೆಳಗೆ ಕಾವಿಗೆ ಇಟ್ಟಿದ್ದರೆ ಇಷ್ಟೊತ್ತಿಗಾಗಲೇ ಡಜನ್ ಗಟ್ಟಲೇ ಮರಿ ಮಾಡಿಸುತ್ತಿತ್ತೋ ಏನೋ, ಆದರೆ ಮರಿ ಮಾಡಿದರೆ ಮೂರು ತಿಂಗಳ ತನಕ ಮರಿಗೋಳಿ ತತ್ತಿ ಹಾಕೋದಿಲ್ಲ. ಹಿಂಗಾಗಿ ಕೈ ಖರ್ಚು ನಡೆಯೋದಿಲ್ಲಂತ ಮರಿಗೆ ಇಟ್ಟಿರಲಿಲ್ಲ. ಅಂಗಳದಲ್ಲಿ ಹಿಂಡು ಕೋಳಿಗಳೊಂದಿಗೆ ಆಡುತ್ತಿದ್ದ ಹುಂಜದ ಎದುರಿಗೆ ತನ್ನ ಕೋಳಿಯನ್ನು ತಂದು ಬಿಟ್ಟರೆ, ಅದನ್ನು ಕಂಡು ಬೆದೆಯಿಂದ ಹುಂಜ ಮೆಟ್ಟಬಹುದೆಂದು ಇಚ್ಚಿಸಿ ತನ್ನ ಮೈಕಾವಿನಲ್ಲಿ ಮೈಮರತು ಮೂಲಿಯಲ್ಲಿ ಕಾವಿಗೆ ಕುಂತ ಕೋಳಿಯನ್ನು ಎಳಕೊಂಡು ಬಂದು… ಅಂಗಳದಲ್ಲಿ ಹಿಂಡು ಕೋಳಿಗಳೊಂದಿಗೆ ಆಡುತ್ತಿದ್ದ ಹುಂಜದ ಎದುರಿಗೆ ಬಿಟ್ಟಳು. ಕೋಳಿ ತನ್ನ ಬಾಣಂತಿ ಭವಣೆಯನ್ನು ಬಿಂಬಿಸುತ್ತಿತ್ತೋ ಏನೋ… ರೆಕ್ಕೆ ಉಬ್ಬಿಸಿ ಶರಣಾಗತ ಭಂಗಿಯಿಂದ “ಕೊರ..ಕೊರ”ಎಂದು ಕೊರಗುಡುತ್ತ ಅತ್ತಿತ್ತ ಗಿರಕಿ ಹೊಡೆಯಿತು. ಹುಸೇನವ್ವಳ ಕೋಳಿಯನ್ನು ಎದೆ ಉಬ್ಬಿಸಿ ಕಣ್ಣು ಕೊಂಕಿಸಿ ಒಂದು ಸಲ ನೋಡಿ ಸುಮ್ಮನೇ ಹಿಂದೆ ಸರಿಯಿತು.. ಹುಂಜ ತನ್ನ ಕೋಳಿಯನ್ನು ಮೆಟ್ಟಲಾರದೇ(ಸುಖಿಸಲಾರದೇ) ನರಸತ್ತ ನಾಮರ್ಧನಂತೆ ಸುಮ್ಮನೇ ಹೋಗಿದ್ದಕ್ಕೆ ಹುಸೇನವ್ವ ತಲೆ ಬಡಿದುಕೊಂಡು ಲೊಚಗುಡುತ್ತ, ನಿರಾಸೆಯಿಂದ ತನ್ನ ಗಮನವನ್ನು ಮನೆ ಎದುರಿಗೆ ಕಟ್ಟಿದ್ದ ಮುದಿ ದನದ ಕಡೆ ತಿರುಗಿಸಿ ವಟ ವಟ ವಟಗುಡುತ ಯಾರನ್ನೋ ಶಪಿಸುತ್ತಿದ್ದಳು. + +ಆಕೆಯ ಲೊಚಗುಡುವಿಕೆಗೆ ಕಿವಿಗೊಟ್ಟು, ಅಲ್ಲೇ ಉಚುಗೊಡ್ಡ ಹೊಡೆಯುತ್ತಿದ್ದ ಬಡಿಗೇರ ಕಾಳಪ್ಪ ಅಸಂತುಷ್ಟನಾಗಿ, ಸಿಡುಕು ಮೋರೆಯಿಂದ ಆಕೆಯ ಕಡೆ ಬಿರುಗಣ್ಣು ಬಿಟ್ಟು ನೋಡಿದ್ದು ಆಕೆಯ ಗಮನಕ್ಕೆ ಬಂತು. “ಅಯ್ಯ.. ಯಪ್ಪಾ ನಿನಗ ಬೈಲಿಲ್ಲೋ ಯಪ್ಪಾ ಮ್ಯಾಲಿನವರಿಗೆ ಬೈಯಾಕತ್ತೇನಿ. ಹೊಲಾ ಮನೀ ನೀರಾಗ ತೇಲಿ ಹೋದರೂ ಇನ್ನೂ ಪರಿಹಾರ ಸಿಗಲಿಲ್ಲ” ಎಂದು ಸಮುಜಾಯಿಸಿಕೊಟ್ಟಳು. ಮುದಿ ದನಾ ಹೊಟು ಮೇವಿಗೆ ಭಾರ ಆಗಿ ದಂದಕ್ಕಿಯಲ್ಲಿ ಮೆಲುಕು ಆಡಸ್ತಾ ನಿಂತಿತ್ತು. ತನಗೂ ಕಣ್ಣು ಮಂಜು ಮಂಜು ಆಗಿದ್ದರಿಂದ ಅದರ ಆಗ ಜೋಗು ನೋಡಿಕೊಳ್ಳೋದು ಅಗದೀ ದುಸ್ತರ ಆಗಿತ್ತು. ಹಿಂಗಾಗಿ ದಲಾಲರ ಗಿಡ್ಡೂ ಸಾಬನಿಗೆ ಬಂದಷ್ಟು ದುಡ್ಡಿಗೆ ಮಾರಾಟ ಮಾಡಿಬಿಡಬೇಕಂದ್ರ ಕಾಯ್ದೆ ಕಾನೂನ ಅಡ್ಡ ಬರತಾವಂತ ಮಂದಿ ಮಾತಾಡಕೊಳ್ಳೋದು ಕೇಳಿ ಹುಸೇನವ್ವಳಿಗೆ ದಿಗಲು ಬಡಿದಂಗಾಗಿತ್ತು. + +ಗಂಡ ಅಮೀನಸಾಬ್ ತೀರಿಕೊಂಡಾಗ ಮುಲ್ಲಾಸಾಬ್ ಖಬರಸ್ಥಾನದಾಗ ದಫನ್ ಮಾಡಾಕ ಕಬೂಲಾತಿ ಕೊಟ್ಟಿರಲಿಲ್ಲ. ಹಂಗಾಗಿ ವಿಧಿಯಿಲ್ಲದೇ ಅವನ ಹೆಣಕ್ಕ ತಾನು ಹುಟ್ಟಿ ಬೆಳೆದ ಜಾತಿಯ ಪದ್ಧತಿಯಂತೆ ಸಿಂಗಾರ ಮಾಡಿ, ಇಮಾನ ಕಟ್ಟಿಸಿ ಅದರಾಗ ಹೆಣಾ ಹೊತಗೊಂಡು ಹೋಗರೀ ಅಂತಾ ತನ್ನ ಸೆರಿಗಿನ್ಯಾಗ ಕಟಗೊಂಡಿದ್ದ ನೂರರವು ಐದು ನೋಟುಗಳನಾ ಬಿಚ್ಚಿ ಕೇರಿ ಹರ್ಯಾ ಮನುಸ್ಯಾ ಬಡಿಗ್ಯಾರ ಕಾಳಪ್ಪನಿಗೆ ಕೊಟ್ಟಿದ್ದಳು. ಆದರs…“ನೀ ಅದರ ಚಿಂತೀ ಬಿಟ್ಟು ಬಿಡು ಬೇ…ನೀ ಹೇಳಿದ ಹಂಗss.. ಇಮಾನ ಕಟ್ಟಿಸಿ ಆ ಇಮಾನದಾಗ ನಿನ್ನ ಗಂಡನ ಹೆಣಾ ಕೂಡ್ರಿಸಿ ಮೆರವಣಿಗಿ ಮಾಡಿ ಸಮಾಧೀ ಮಾಡ್ತೇವಿ ಬಿಡಬೇ” ಅಂತಾ ಹೇಳಿ ಎಲ್ಲಾ ರೊಕ್ಕಾದಾಗ ಸೇರಿದ ನಾಲ್ಕಾರು ಕುಡುಕ ಮಂದಿಗೆ ಸೆರೆ ಕುಡಿಸಿ ನಿಕಾಲಿ ಮಾಡಿ, ಅಮೀನಸಾಬ್ ರ ಹೆಣಕ್ಕ ಸಿದಗಿ ಕಟ್ಟಿ ದಿಕ್ಕಿಲ್ಲದ ಪರದೇಸಿಯಂಗ ಗೋಣಿ ಚೀಲದ ತಟ್ಟಿನ್ಯಾಗ ಹೊತಗೊಂಡು ಹೋಗಿದ್ದಕss.. ಬಾಳಾ ಬ್ಯಾಸರ ಮಾಡಕೊಂಡಿದ್ದ ಹುಸೇನವ್ವ “ಯಾಕss .. ಯಪ್ಪಾ!! ನನ ಗಂಡ ಹೊಲ ಮನಿ ಇದ್ದ ರೊಕ್ಕಿಷ್ಟ ಮನುಸ್ಯಾ ಅದಾನ. ಅಂವುನ್ನ ದಿಕ್ಕಿಲ್ಲದ ಪರದೇಸಿಯಂಗ ಗೋಣಿ ಚೀಲದ ತಟ್ಟಿನ್ಯಾಗ ಸುಡುಗಾಡಕ ಹೊತಗೊಂಡು ಹೊಂಟೀರಲ್ಲ..?!!” ಅಂತಾ ಸೂತಕದಲ್ಲಿಯೂ ಸಿಡುಕುತ್ತ ಗಂಡನ ಹೆಣದ ಮುಂದ ಹಾಡ್ಯಾಡಿಕೊಂಡು ತಾರೀಪು ಮಾಡಿ ಅಳತ್ತಿದ್ದಳು. ಆವಾಗಿನಿಂದ ಕಾಳಪ್ಪನನ್ನು ಕಂಡರೆ ಆಕಿಗೇ ಆಟಕ ಆಟss… ಆಗಿತ್ತು. ಅಮೀನಸಾಬ್ ರು ತಂದೆ ಹಜರತ್ ಸಾಬರೊಂದಿಗೆ ಕೃಷ್ಣಾ ನದಿಯ ದಡದಲ್ಲಿ ವಾಸ ಮಾಡುತ್ತಿದ್ದರು. ಹುಸೇನವ್ವ ಕೆಳಜಾತಿಯ ಹಿಂದು ಹುಡುಗಿಯನ್ನು ಮದುವೆಯಾಗಿದ್ದಕ್ಕೆ ಜಮಾತದಿಂದ ಹೊರಗೆ ಹಾಕಿ ಅಮೀನಸಾಹೇಬರ ಮನೆತನ ಕಾಫೀರ ಮನೆತನ ಎಂದು ಘೋಷಣೆಯಾಗಿದ್ದರಿಂದ ಹುಸೇನವ್ವ ತನ್ನ ತವರೂರು ಪಡಸಲಗಿಯಲ್ಲಿ ಬಂದು ವಾಸ ಮಾಡಿದ್ದಳು. + +*************** + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಊರಿನ ಕನ್ನಡ ಸಾಲಿಯೊಳಗ ಸರಕಾರದವರು ತೆರದಿದ್ದ ಗಂಜೀಕೇಂದ್ರದೊಳಗೆ ನೀಡುವ ಊಟಕ್ಕಾಗಿ ಜನರು ಸಾಲು ಸಾಲಾಗಿ ಕೈಯಲ್ಲಿ ಅಲ್ಯೂಮಿನಿಯಂ ತಾಟು ಹಿಡಿದುಕೊಂಡು ಮಂಕು ಬಡಿದಂತೆ ನಿಂತಿದ್ದರು. ಆ ಜನರ ಮನೋಸ್ಥಿತಿ ಹೇಗಿತ್ತಂದರೆ, ಜಲ ಕಾಳಿಯ ಎದುರು ನಿಂತು ಜೀವ ಭಿಕ್ಷೆ ಬೇಡಿಕೊಂಡು ಬಚಾವ್ ಆಗಿ ಓಡಿ ಬಂದ ಸಾರ್ಥಕತೆ ಒಂದು ಕಡೆಯಾದರೆ, ಜೀವಗಳ ಆಪೋಶನ ತೆಗೆದುಕೊಳ್ಳಲು ಮೋಡದ ಮರೆಯಲ್ಲಿ ಅವಿತುಕೊಂಡಿರುವ ಜಲದುರ್ಗೆ ಯಾವಾಗ ಹೂಂಕರಿಸುತ್ತಾಳೆಯೋ ಎಂದು ಕಂಗಾಲಾಗಿದ್ದರು. ಬಂಧುಗಳನ್ನು ಕಳೆದುಕೊಂಡವರ ಆಕ್ರಂದನ, ಮನೆ ಮಠ ಜಾನ-ಜಾನುವಾರಗಳನ್ನು ಪ್ರವಾಹದಲ್ಲಿ ಕಳೆದುಕೊಂಡವರ ಜನರ ರೋಧನ ಮುಗಿಲು ಮುಟ್ಟಿತ್ತು. + +ಕಿರಿಯ ಮಗ ಸುಲೇಮಾನ್ ಮತ್ತು ಮಗಳು ರೆಹನಾ ಬೇಗಂ ಹೊಟ್ಟೆ ಹಸಿದುಕೊಂಡು ಗಂಜೀ ಕೇಂದ್ರದಲ್ಲಿ ಸಿಲಾವರ ತಾಟು ಹಿಡಿದು, ಊಟಕ್ಕಾಗಿ ಕೈಯೊಡ್ಡಿ ನಿಂತಿರುವದನ್ನು ನೋಡಿ ತಾಯಿ ಹುಸೇನಬಿಯ ಕರಳು ಹಿಂಡಿದಂತಾಯಿತು. + +ಅಮೀನಸಾಹೇಬರ ಹೆಂಡತಿ ಹುಸೇನಬೀ ತೀವ್ರ ಭಾವುಕಳಾಗಿ ಕಣ್ಣೊರಿಸಿಕೊಳ್ಳುತ್ತ ತಲೆ ತಲೆಮಾರುಗಳಿಂದ ಕೃಷ್ಣಾ ನದಿಯ ಮತ್ಸ್ಯರಾಶಿಯ ಮಡಿಲನ್ನೇ ನಂಬಿ ಬದುಕಿದ ಕುಟುಂಬ ಅಮೀನ ಸಾಹೇಬರದಾಗಿತ್ತು. ರಾತ್ರಿ ಬಲೆ ಹಾಕಿ ಬೆಳಿಗ್ಗೆ ಆ ಬಲೆಯನ್ನು ಎತ್ತಿದರೆ ಸಾಕು ರಾಶಿ ರಾಶಿ ಮೀನು ಅಮೀನ ಸಾಹೇಬರ ಕಣ್ಣೆದುರಿಗೆ ಬೆಳ್ಳಿ ನಾಣ್ಯಗಳಂತೆ ಕಂಗೊಳಿಸುತ್ತಿದ್ದವು. ಮೀನಿನ ರಾಶಿಯನ್ನು ಖರೀದಿಸಲು, ಸಾಂಗ್ಲೀ, ಹೈದ್ರಾಬಾದ್, ಬೆಂಗಳೂರು ಅಲ್ಲದೇ ಸ್ಥಳೀಯವಾಗಿ ಬೇರೆ ಬೇರೆ ಕಡೆಯಿಂದ ಸಗಟು ವ್ಯಾಪಾರಿಗಳು ಬರುತ್ತಿದ್ದರು. ತೆಪ್ಪದ ಮುಖಾಂತರ ನದಿಗೆ ಬೇರೆ ಬೇರೆ ಕಡೆ ವಿಸ್ತಾರದ ಬಲೆಗಳನ್ನು ಹಾಕಲು, ಬಲೆಗೆ ಬಿದ್ದ ಮೀನುಗಳನ್ನು ಬಲೆಯಿಂದ ವಿಂಗಡಿಸಲು, ಬಲೆಗೆ ಬಿದ್ದ ಮೀನುಗಳ ಬೇಟೆಯಾಡುತ್ತಿದ್ದ ದೆವ್ವ ಮೀನಿನ (ಮೀನಿನ ಬಲೆ ಕತ್ತರಿಸಿ ಮೀನು ತಿನ್ನುವ (ರಾಕಸಿ ಮೀನು) ದಾಳಿಯಿಂದ ಹರಿದ ಬಲೆಗಳನ್ನು ಹೊಲೆಯಲು ಇತ್ಯಾದಿ ಕೆಲಸಕ್ಕೆ ಮೂವತ್ತು ನಲವತ್ತು ಕೆಲಸಗಾರರನ್ನು ಇರಿಸಿಕೊಂಡು ಅಮೀನಸಾಹೇಬರು ಉದ್ಯೋಗದಾತರಾಗಿದ್ದರು. + +ಮೀನುಗಾರರಿಗೆ ಇತ್ತೀಚಿಗೆ ವಲಸೆ ಬಂದಂತ ದೆವ್ವ ಮೀನಿನ ಕಾಟವು ಹೆಚ್ಚಾಗಿತ್ತು. ಚಿಕ್ಕ ಪುಟ್ಟ ಮೀನುಗಾರರು ಹಾಕಿದ ಬಲೆಗಳನ್ನು ಕತ್ತರಿಸಿ ಬಲೆಗೆ ಬಿದ್ದ ಮೀನುಗಳನ್ನು ಬೇಟೆಯಾಡುತ್ತಿದ್ದ ದೆವ್ವ ಮೀನಿನ ದಾಳಿಯಿಂದ ಬಸವಳಿದ ಅನೇಕ ಮೀನುಗಾರರ ಕಾಟ, ಇಲಾಖೆಯ ಅಧಿಕಾರಿಗಳ ಉಪಟಳದಿಂದ ಮೀನುಗಾರರು ಮೀನು ಹಿಡಿಯಲು ಹಿಂಜರಿಯುತ್ತಿದ್ದರು. ಕೆಲವೊಮ್ಮೆ, ಇತರೆ ಮೀನುಗಾರರು ದೆವ್ವ ಮೀನುಗಳನ್ನೂ ಹಿಡಿದು ಮಾರಾಟ ಮಾಡುತ್ತಿದ್ದದ್ದೂ ಉಂಟು. ಆದರೆ, ಮೀನುಗಾರಿಕೆ ಇಲಾಖೆಯವರು ದೆವ್ವ ಮೀನು ತಿನ್ನಲು ಯೋಗ್ಯವಲ್ಲ, ಅದರ ಮಾರಾಟವನ್ನು ಮಾಡದಂತೆ ಮೀನುಗಾರಿಕೆ ಇಲಾಖೆಯವರು ತಕರಾರು ತಗದಿದ್ದರಿಂದ ಅದರ ಮಾರಾಟಕ್ಕೆ ತಡೆಯಾಗಿತ್ತು. ಅಮೀನಸಾಹೇಬರು ಜಿಂಗೀ ಮೀನು ಹಾಗೂ ಇತರೆ ಚಿಕ್ಕಪುಟ್ಟ ಮೀನುಗಳನ್ನು ತೀರಾ ಕಡಿಮೆ ದರಕ್ಕೆ ಬಡ ಬಗ್ಗರಿಗಾಗಿಯೇ ಮಾರುತ್ತಿದ್ದರು. ಕೆಲವು ಸಾರೆ ಅಸಹಾಯಕರಿಗೆ ಪುಕ್ಕಟೆಯಾಗಿಯೂ ಕೊಡಲು ಮೀನು ಮೀಸಲಿರಿಸಿದ ಉದಾರಿಯಾಗಿದ್ದರು. “ಕೃಷ್ಣಾತಾಯಿ ಯಾವ ಫಲಾಪೇಕ್ಷೆ ಇಲ್ಲದೇ ನಮಗೆ ಪುಕ್ಕಟೆಯಾಗಿ ಮತ್ಸ್ಯ ಸಂಪತ್ತು ನೀಡಿ ಸಲುಹುತ್ತಾಳೆ, ಆ ತಾಯಿಯ ಮಕ್ಕಳು ನಾವೂ ದಾನ ಧರ್ಮ ಮಾಡಿ ಸಾರ್ಥಕ ಬದುಕು ನಡಿಸಬೇಕು…” ಎಂದು ಆಗಾಗ ಹೇಳುತ್ತಿದ್ದರು. + +ರಂಜಾನ್ ಹಬ್ಬ ಬಂದರೆ ಸಾಕು ಅಮೀನಸಾಹೇಬರ ಆಳುಗಳಿಗೆ ಒಂಥರಾ ಸಂತಸ ಉಂಟಾಗುತ್ತಿತ್ತು. ಆಳುಗಳಿಗೆ ಹೊಸಬಟ್ಟೆ ದಾನ ಮಾಡುವುದಲ್ಲದೇ ಜಕಾತ ನೀಡುವದು, ಎಲ್ಲಾ ಆಳುಗಳಿಗೆ ಬಿರಿಯಾನಿ ಊಟ ಮಾಡಿಸಿ ಸಂತಸಪಡಿಸುತ್ತಿದ್ದರು. ಅಮೀನಸಾಹೇಬರ ಆಳುಗಳು ಕೇವಲ ಒಂದೇ ಜಾತಿ, ಧರ್ಮಕ್ಕೆ ಸೇರಿದವರಾಗಿರದೇ ಎಲ್ಲಾ ವರ್ಗಕ್ಕೂ ಸೇರಿದವರಾಗಿದ್ದರು. ಅಮೀನಸಾಹೇಬರ ಬಲಗೈ ಬಂಟನಾಗಿ ಈಜುಗಾರಿಕೆಯಲ್ಲಿ ಮೀನುಗಳಿಗೇ ಸ್ಪರ್ಧೆ ಒಡ್ಡುತ್ತಿದ್ದ ಉಪ್ಪಾರ ಸಂಗ್ಯಾ ಮೊಸಳೆಯೊಂದಿಗೆ ದಾಳಿಗಿಳಿದು ಕಾದಾಟ ಮಾಡಿ ವೀರೋಚಿತ ಸಾವು ಕಂಡ ನಂತರ ಅಮೀನಸಾಹೇಬರು ಕಂಗಾಲಾಗಿದ್ದರು. ಅವರಿವರ ಒತ್ತಾಯಕ್ಕೆ ಮಣಿದು ಸಂಗ್ಯಾನ ಹೆಂಡತಿ ಮಕ್ಕಳು, ಸಾಹೇಬರ ನಿರ್ಲಕ್ಷ್ಯದಿಂದಲೇ ಸಂಗ್ಯಾ ಮೊಸಳೆಗೆ ಬಲಿಯಾಗಬೇಕಾಯಿತೆಂದು ಅಮೀನಸಾಹೇಬರ ಮೇಲೆ ಕೇಸ್ ಹಾಕಿಸಿದ್ದರಿಂದ ಅಮೀನಸಾಹೇಬರು ಕಂಗಾಲಾಗಿದ್ದರು. + +ಆಲಮಟ್ಟಿ ಜಲಾಶಯ ಕಟ್ಟಿದ ನಂತರ ಮೀನುಗಾರಿಕೆಗೆ ತೊಡಕಾಯಿತು… ನದಿಯಲ್ಲಿ ಮತ್ತು ಹಿನ್ನೀರಿನಲ್ಲಿ ಪರವಾನಿಗೆ ಇಲ್ಲದೇ ಮೀನುಗಾರಿಕೆಯನ್ನು ನಡೆಸುವಂತಿರಲಿಲ್ಲ.. ಲಕ್ಷಾಂತರ ರೂಪಾಯಿಗಳಿಗೆ ಹರಾಜು ಹಿಡಿದು ಮೀನುಗಾರಿಕೆಯನ್ನ ನಡಿಸಬೇಕಾದ ಪರಿಸ್ಥಿತಿಯು ಬಂದಿತು. ಬಹುತೇಕ ಮೀನುಗಾರಿಕೆಯು ಬಂಡವಾಳಶಾಹಿಗಳ ಪಾಲಾಗಿದ್ದರಿಂದ ಅಮೀನಸಾಹೇಬರಂತ ಮೀನುಗಾರರಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಯಿತು. ಬಂಡವಾಳಶಾಹಿ ದೊಡ್ಡ ಮೀನುಗಾರರ ಸುಧಾರಿತ ಯಾಂತ್ರಿಕ ದೋಣಿಗಳ ಎದುರಿಗೆ ಅಮೀನಸಾಹೇಬರ ದೇಶೀಯ ದೋಣಿಗಳು ಕುಂಟುತ್ತ ಸಾಗುವ ದುರ್ಬಲ ವೃದ್ಧರಂತೆ ಅಸಹಾಯಕವಾಗಿದ್ದರಿಂದ, ಅವುಗಳು ಸ್ಪರ್ಧೆಗಿಳಿಯದೇ ಮಂಕಾದವು. ಕ್ರಮೇಣ ಗಲ್ಲಿಗೊಂದು ಮಾರಾಟ ಮಳಿಗೆಗಳು.. ಮಾಲ್ ಗಳು, ಸೂಪರ್ ಮಾರ್ಕೆಟ್ ಗಳ ಶೈತ್ಯಾಗಾರಗಳಲ್ಲಿ ಮೀನುಗಳು ಶೇಕರಣೆಯಾಗಿದ್ದರಿಂದ, ಅಮೀನಸಾಹೇಬರ ಮೀನು ವ್ಯಾಪಾರಕ್ಕೆ ಬರೆ ಬಿದ್ದಂತಾಗಿ, ಎಲ್ಲಾ ತಮ್ಮ ದೇಶೀಯ ದೋಣಿ ಮತ್ತು ತೆಪ್ಪಗಳನ್ನು ಮಾರಾಟ ಮಾಡಿ ಇದ್ದಕ್ಕಿದ್ದಂತೆ, ಅಮೀನ ಸಾಹೇಬರು ಮೀನುಗಾರಿಕೆಯನ್ನು ನಿಲ್ಲಿಸಿಬಿಟ್ಟರು. ಅಮೀನ ಸಾಹೇಬರನ್ನೇ ನಂಬಿದ ಅನೇಕ ಆಳುಗಳು ಬೀದಿಗೆ ಬಿದ್ದದನ್ನು ನೋಡಲಾರದೇ ತನ್ನಲ್ಲಿಯ ಅಳಿದುಳಿದ ಅಲ್ಪಸ್ವಲ್ಪ ಹಣವನ್ನು ನೀಡಿ ಕೃತಜ್ಞತೆಯಿಂದ ಕೈ ಜೋಡಿಸಿ ಕೆಲಸಗಾರರಿಗೆ ಪ್ರಾಮಾಣಿಕ ವಿದಾಯ ಹೇಳಿದರು. + +ಮೀನುಗಾರಿಕೆಯನ್ನೇ ನಂಬಿ ಜೀವನ ನಡೆಸುತ್ತಿದ್ದ ಅಮೀನಸಾಹೇಬರು ಕುಟುಂಬ ನಿರ್ವಹಣೆಗಾಗಿ ಮತ್ತದೇ ಮೀನು ಮಾರಾಟಕ್ಕೆ ಶರಣಾಗಬೇಕಾಯಿತು. ಯಾಂತ್ರೀಕೃತ ದೋಣಿಯ ಮುಖಾಂತರ ಮೀನು ಹಿಡಿದು ಮಾರು ದೊಡ್ಡ ವ್ಯಾಪಾರಸ್ಥರ ಕಡೆಯಿಂದ ಮೀನು ಖರೀದಿಸಿ.. ತಮ್ಮ ಹಳೆಯದಾದ ಲಡಕಾಸಿ ಮೋಟರ್ ಬೈಕ್ ಏರಿ ಮೀನು ಮಾರಾಟಕ್ಕೆ ಅವರು ಅಣಿಯಾದರು. ಗಲ್ಲಿ ಗಲ್ಲಿಗೆ ಹೋಗಿ “ಮೀನು!.. ಮೀನು ತಾಜಾ ಮೀನು..!!” ಎಂದು ಶಹರದಲ್ಲಿ ಮಾರಾಟಕ್ಕೆ ಹೋಗುತ್ತಿದ್ದ ಸಾಹೇಬರಿಗೆ ಪ್ರಾರಂಭಿಕವಾಗಿ ಸಮಸ್ಯೆಗಳುಂಟಾದವು.. ಯಾವ ಏರಿಯಾದಲ್ಲಿ ಮೀನು ತಿನ್ನುವವರು ನೆಲೆಸಿದ್ದಾರೆಂದು ಗೊತ್ತಾಗಲಾರದೇ ಬ್ರಾಹ್ಮಣರ ಓಣಿಯಲ್ಲಿ ಹೋಗಿ “ಮೀನು..!! ಮೀನು ತಾಜಾ ಮೀನು.!.” ಎಂದು ಕೂಗುತ್ತ ಮಾರಾಟದ ಸವಾರಿ ಹೊಂಟಾಗ, ಅನೇಕ ಮಡಿವಂತ ಬ್ರಾಹ್ಮಣರು ತಕರಾರು ತೆಗೆದು ತಮ್ಮ ಗಲ್ಲಿಯಲ್ಲಿ ಮೀನು ತೆಗೆದುಕೊಂಡು ಹೋಗದಂತೆ ಎಚ್ಚರಿಕೆಯನ್ನು ನೀಡಿದ ನಂತರ ಅಮೀನಸಾಹೇಬರು ಫಜೀತಿಯಿಂದ “ತೋಬಾ ತೋಬಾ” ಎಂದು ಕ್ಷಮೆ ಕೇಳಿದ್ದ ಪ್ರಸಂಗಗಳೂ ನಡೆದು ಹೋದವು. ನಂತರ ಮೀನು ತಿನ್ನುವವರ ವಾಸವನ್ನು ಹುಡುಕಿ ಮಾರಾಟ ಮಾಡುವದು ಬಹಳ ದುಸ್ತರ ಆಗಿದ್ದರಿಂದ ಹೆಂಡತಿ ಹುಸೇನಬಿಯ ಸಲಹೆಯಂತೆ, ಶಹರದ ಬಜಾರದಲ್ಲಿ ಸಣ್ಣದೊಂದು ಗೂಡಂಗಡಿಯನ್ನು ಇಟ್ಟು ಮೀನು ಮಾರಾಟಕ್ಕಿಳಿದರೂ.. ಹೇಳಿಕೊಳ್ಳುವಷ್ಟು ಲಾಭಾಂಶ ಬರಲಾರದೇ ಅಮೀನಸಾಹೇಬರು ಗಾಢ ಚಿಂತೆಗೊಳಗಾದರು. ಕುಟುಂಬವನ್ನು ಸಲುಹುತ್ತಲೇ ಮಗಳು ರೆಹನಾಬೇಗಂಳ ಮದುವೆ ಮಾಡುವದು ಅವರಿಗೆ ಬಹು ದೊಡ್ಡ ಸವಾಲ್ ಆಗಿತ್ತು. + +೨೦೦೬ ರಲ್ಲಿ ಆಷಾಡ ಕಳೆದು ಶ್ರಾವಣ ಮಾಸದ ಹೊಸ್ತಿಲಲ್ಲಿದ್ದ ಆ ದಿನಗಳಲ್ಲಿ ಇದ್ದಕ್ಕಿದ್ದಂತೆ ಕುಂಭದ್ರೋಣ ಮಳೆ ಬಿದ್ದರಿಂದ, ಆಲಮಟ್ಟಿ ಆಣೆಕಟ್ಟು ತಂಬಿದ್ದರಿಂದ ಹೆಚ್ಚುವರಿ ೪ ಲಕ್ಷ ೫೦ ಸಾವಿರ ಕ್ಯುಸೆಕ್ಸ್ ನೀರನ್ನು ಹೊರ ಬಿಟ್ಟಿದ್ದರಿಂದ ಕೃಷ್ಣಾ ನದಿಯು ಉಕ್ಕಿ ಹರಿದು; ನದಿ ದಡಕ್ಕೆ ಹತ್ತಿರವಿರುವ ಅಮೀನ ಸಾಹೇಬರ ಮನೆಯನ್ನು ತನ್ನ ಜಲ ಮಡಿಲಲ್ಲಿ ಕೃಷ್ಣೆ ಬಾಚಿ ತಬ್ಬಿಕೊಂಡಳು. ಕೃಷ್ಣೆಯ ಕೋಪಕ್ಕೆ ಇನ್ನೂ ಅನೇಕ ಹಳ್ಳಿಗಳು ಜಲಾವೃತವಾಗಿದ್ದವು. ಕೃಷ್ಣೆಯು ಜಲಕಾಳಗದ ರಣ ಕೇಕೆ ಹಾಕಿ ಜನ ಜಾನುವಾರಗಳನ್ನು ತನ್ನ ಒಡಲ ತುಂಬಿಕೊಂಡು ವ್ಯಗ್ರಳಾಗಿ ಹರಿದಾಗ ಕುಟುಂಬವನ್ನು ಜಿಲ್ಲಾಡಳಿತವು ರಕ್ಷಿಸಿ ಜೀವಗಳನ್ನು ಉಳಿಸಿತು; ಆದರೆ ಅಮೀನಸಾಹೇಬರ ಮನೆ ಮತ್ತು ಸಾಕಿದ ಕುರಿ ಹಾಗೂ ದನ ಕರುಗಳು ಜಲ ದೇವತೆಯ ಕೋಪಕ್ಕೆ ಆಹುತಿ ನೀಡಲೇಬೇಕಾಯಿತು. ಆಗ ಅಮೀನಸಾಹೇಬರು ಮತ್ತಷ್ಟು ಆರ್ಥಿಕ ಸಂಕಷ್ಟದ ಸುನಾಮಿಗೆ ಸಿಕ್ಕು ನಲುಗಿದಂತಾಯಿತು. ನೆರೆಹಾವಳಿ ಕಡಿಮೆಯಾದ ನಂತರ ಬಗ್ನಾವಶೇಷಗಳಾಗಿ ನಿಂತಿದ್ದ ಅಮೀನಸಾಹೇರ ಮನೆಯು ಮತ್ತೆ ವಾಸಕ್ಕೆ ಯೋಗ್ಯವಾಗಿರಲಿಲ್ಲ. ಆದರೆ ವಲ್ಲದ ಮನಸ್ಸಿನಲ್ಲಿ ಸರಕಾರ ತೋರಿಸಿದ ಸ್ಥಳದಲ್ಲಿ ನಿರಾಶ್ರಿತರು ವಾಸವಾಗಿದ್ದರು. + +*************** + +ಸರಕಾರವು ದೂರದ ಬೋಳು ಗುಡ್ಡದ ಎತ್ತರದ ಪ್ರದೇಶದಲ್ಲಿ ಭೂಮಿಯನ್ನು ಸಮತಟ್ಟಗೊಳಿಸಿ ನಿರಾಶ್ರಿತರಿಗೆ ಹಂಚಿಕೆ ಮಾಡಿತ್ತು. ಮುಳುಗಡೆಯಿಂದ ನಿರಾಶ್ರಿತರಾದವರಿಗೆ ಪ್ರಮಾಣ ಪತ್ರವನ್ನೂ ನೀಡಲಾಗಿತ್ತು. ಹಂಚಿಕೆ ಮಾಡಿದ ಭೂಮಿಯನ್ನು ಬಿರಾದಾರ ಬಸಪ್ಪನಿಗೆ ಮಾರಾಟ ಮಾಡಲು ಅಮೀನಸಾಹೇರು ಮುಂದಾದರು.. ಹೀಗೆ ಹಂಚಿಕೆಯಾದ ಭೂಮಿಯನ್ನು ಕನಿಷ್ಟ ೧೫ ವರ್ಷ ಮಾರಾಟ ಮಾಡುವಂತಿರಲಿಲ್ಲವೆಂದು ನಿಯಮವಿದ್ದರೂ ನಂತರ ಅನೇಕ ನಿರಾಶ್ರಿತರ ಒತ್ತಾಯದಿಂದ ಅದು ಸರಳಿಕೃತವಾಯಿತು. ಕೃಷ್ಣಾ ನದಿಯ ದಂಡೆಯ ಮೇಲೆ ವಾಸವಾಗಿ ಮನೆ ಕಟ್ಟಿಕೊಂಡು ತಲತಲಾಂತರ ವಾಸವಾಗಿದ್ದ ಅಮೀನಸಾಹೇಬರು ಮಾತ್ರ “ನಮ್ಮ ಜೀವ ಹೋದರೂ ಕೃಷ್ಣೆಯ ಮಡಿಲಲ್ಲಿ ಹೋಗಲಿ ಆದರೆ, ನಾವು ಇಲ್ಲಿಯೇ ವಾಸಿಸೋಣ” ವೆಂದು ಅಮೀನಸಾಹೇಬರು ತಮ್ಮ ಹಳೆಯ ಮನೆಯನ್ನು ಜೀರ್ಣೋದ್ಧಾರಗೊಳಿಸಿ ಬಹಳ ವರ್ಷಗಳಿಂದ ಅಲ್ಲಿಯೇ ಕುಟುಂಬ ಸಮೇತ ವಾಸಮಾಡುತ್ತಿದ್ದರು. ಆದರೆ ಇದೇ ವರ್ಷ ಆಗಸ್ಟ್ ೨೦೧೯ರಂದು ಮಹಾರಾಷ್ಟ್ರದಲ್ಲಿ ಮಹಾ ಮಳೆಯಾಗಿದ್ದರಿಂದ ಕೃಷ್ಣಾ ನದಿಗೆ ನೀರು ಬಿಟ್ಟದ್ದರಿಂದ ಮತ್ತು ಉತ್ತರ ಕರ್ನಾಟಕದಲ್ಲಿ ಮಹಾ ಮಳೆಯಾಗಿದ್ದರಿಂದ ರಾತ್ರೋರಾತ್ರಿ ನೀರು ಅನೇಕ ಗ್ರಾಮಗಳಿ ಜಲ ಬಲೆಯನ್ನು ಬೀಸಿ ಕಣ್ಣುರೆಪ್ಪೆಯನ್ನು ಪಿಳಿಕಿಸುವಷ್ಟರಲ್ಲಿ ಜಲಾಸುರ ಇಡೀ ಉತ್ತರ ಕರ್ನಾಟಕವನ್ನು ತನ್ನ ಸ್ವಾದೀನ ಪಡಿಸಿಕೊಂಡು ಶವಗಳ ಎಣಿಕೆಯನ್ನು ಮಾಡಿ ದಡಕ್ಕೆ ಎಸೆಯುತ್ತಿದ್ದ.. + + + +ನಿನ್ನೆ ಮೊನ್ನೆ ಆದ ಜಲಪ್ರವಾಹದಿಂದಾಗಿ.. ಅಮೀನಸಾಹೇಬರ ಕುಟುಂಬ ಬೀದಿಗೆ ಬಿದ್ದಿತ್ತು. ಕಳೆದ ಬಾರಿ ಆಗಿದ್ದ ಜಲಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ನೀಡಿದ ಅಮೀನಸಾಹೇಬರ ಭೂಮಿಯು ಬಿರಾದಾರ ಸಂಗಪ್ಪನ ಸ್ವತ್ತಾಗಿದ್ದರಿಂದ, ಹುಸೇನಬಿಯ ಮನಸ್ಸು ಕಳವಳ ಮತ್ತು ಕ್ರೋಧದಿಂದ ಕುದಿಯುತ್ತ ದಿನವಿಡೀ ಅಮೀನಸಾಹೇಬರ ದುಡುಕಿನ ನಿರ್ಧಾರಕ್ಕೆ ಕಿವಿ ಹಿಂಡುತ್ತಿದ್ದುದರಿಂದ, ಅಮೀನಸಾಹೇಬರು ಮನೆಯಿಂದ ಹೊರಹೋಗಿ ಸದಾ ನದೀ ದಡದಲ್ಲಿ ಖಿನ್ನತೆಯಿಂದ ಗಾಳ ಹಾಕಿ ಮೀನು ಹಿಡಿಯುವದರಲ್ಲಿ ಕಾಲಕ್ಷೇಪ ಮಾಡುತ್ತಿದ್ದಾಗ; ವಿಧಿಯು ಅವರ ಪ್ರಾಣ ಪಕ್ಷಿಗೆ ಗಾಳ ಹಾಕಿ ಅವರ ಪಾಣ ಪಕ್ಷಿಯನ್ನೇ ಕುಕ್ಕಿ ತಿಂದಿತ್ತು. ಎಲ್ಲವನ್ನು ನೆನಪಿಸುತ್ತ ಕುಳಿತಿದ್ದ ಹುಸೇನವ್ವಳ ಮನಸ್ಸು ವಾಸ್ತವಕ್ಕೆ ತಿರುಗಿದಾಗ ಮಗ ಸಲೀಮಾ “ಮಾ…!!” ಎಂದು ಕರೆದಂತಾಯಿತು. + +ವೈ.ಎಸ್. ಹರಗಿ ಮೂಲತಃ ರೋಣ ತಾಲ್ಲೂಕಿನ ಹುಲ್ಲೂರಿನವರು. ೧೯೯೯ನೇ ಸಾಲಿನಲ್ಲಿ ಕೆ. ಪಿ. ಎಸ್. ಸಿ. ಮುಖಾಂತರ ನೇರ ನೇಮಕಾತಿ ಹೊಂದಿ ನಂಜನಗೂಡು ಮೈಸೂರು ಜಿಲ್ಲೆಯಲ್ಲಿ ಅಧಿಕಾರಿಯಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರ “ಉರಿವ ಜಲ” ಕಾದಂಬರಿಗೆ ೨೦೧೪ರ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(ಚದುರಂಗ ದತ್ತಿ ನಿಧಿ)ಯ ಜೊತೆ ಹಲವು ಪ್ರಶಸ್ತಿಗಳು ದೊರೆತಿವೆ. ಕವಡೆಪುರದ ಕೌರವರು (ಕಾದಂಬರಿ), ಕವಡೆಪುರದ ಕೌರವರು(ಕಾದಂಬರಿ), ಮೂಕ ಹಕ್ಕಿ ನಕ್ಕಾಗ (ಕಥಾ ಸಂಕಲನ), ಬಾರಪ್ಪಾ ಬಾರೋ ಮಳೆರಾಯ (ಕಥಾಸಂಕಲನ) ದೇವ್ರು ಬರ್ತಾನೆ ದಾರಿಬಿಡಿ (ಕಥಾ ಸಂಕಲನ), ಸ್ವಪ್ನಗೆಜ್ಜೆ (ಕಾದಂಬರಿ), ಕವಡೆಪುರದ ಕೌರವರು (ಕಾದಂಬರಿ), ಮ್ಯಾಕ್ಸ್ ಮುಲ್ಲರ್ (ಜೀವನ ಚರಿತ್ರೆ) ಕಲ್ಲರಳಿ ಹೂವಾಗಿ ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_339.txt b/Kenda Sampige/article_339.txt new file mode 100644 index 0000000000000000000000000000000000000000..db8d46a29d54abb1ba1ef2c273ac64f95eeae7dc --- /dev/null +++ b/Kenda Sampige/article_339.txt @@ -0,0 +1,47 @@ + + +‘ವಿಮುಕ್ತೆ’ ಎಂಬ ಈ ಕಥಾಸಂಕಲನ ಓಲ್ಗಾ ಎನ್ನುವ ಕಾವ್ಯನಾಮದಿಂದ ಸುಪರಿಚಿತರಾಗಿರುವ ಆಂಧ್ರದ ಪ್ರಸಿದ್ಧ ಲೇಖಕಿ ಪೋಪೂರಿ ಲಲಿತಕುಮಾರಿ ಅವರ ‘ವಿಮುಕ್ತ’ ಎಂಬ ತೆಲುಗು ಕೃತಿಯ ಕನ್ನಡಾನುವಾದ. ಈ ಸಂಕಲನಕ್ಕೆ ದೆಹಲಿಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿರುವುದರಿಂದ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳೆಲ್ಲಕ್ಕೂ ಅದು ನಿಯಮಿತವಾಗಿಯೇ ಅನುವಾದಗೊಂಡಿರುತ್ತದೆ. ಆದರೆ ಯುವ ಬರಹಗಾರರಾದ ಅಜಯ್ ವರ್ಮಾ ಅಲ್ಲೂರಿಯವರು ಮೂಲದ ಕಥೆಗಳ ಸೊಗಸಿಗೆ ಮನಸೋತು ಅದನ್ನು ಕನ್ನಡದಲ್ಲೂ ಹಿಡಿದುಕೊಡುವ ಆಸಕ್ತಿಯಿಂದ ಈ ಅನುವಾದ ಮಾಡಿರುತ್ತಾರೆ. ಈ ಕಥೆಗಳೆಲ್ಲ ಕನ್ನಡದಲ್ಲಿಯೇ ರಚಿತವಾದವು ಎನ್ನುವಷ್ಟು ಸಹಜವಾಗಿ ಕಾವ್ಯಗುಣವುಳ್ಳ ಭಾಷೆಯನ್ನು ಧ್ವನಿಪೂರ್ಣವಾಗಿ ಬಳಸಿರುವುದು ಅಲ್ಲೂರಿಯವರ ಅನುವಾದವನ್ನು ಮಹತ್ವದ್ದಾಗಿಸಿರುತ್ತದೆ. + +ಓಲ್ಗಾ ಅವರನ್ನು ಕನ್ನಡಿಗರು ಕಂಡಿರುವುದು ಒಬ್ಬ ಸ್ತ್ರೀವಾದಿ ಲೇಖಕಿ ಮತ್ತು ಸೋಷಿಯಲ್ ಆಕ್ಟಿವಿಸ್ಟ್ ಎಂದೇ ಆಗಿದೆ. ಮೊದಲ ಹಂತದ ಸ್ತ್ರೀವಾದದ ವಿಚಾರಗಳನ್ನು ನಂಬುವ ವೋಲ್ಗಾ ‘ಸೋದರಿತ್ವ’ವೇ ಮಹಿಳೆಯರ ವಿಮೋಚನೆಯ ಪರಿಣಾಮಕಾರಿ ವಿಧಾನ ಎಂದು ದೃಢವಾಗಿ ನಂಬುವವರು. ಈ ಸಂಕಲನದ ಕಥೆಗಳ ಪ್ರಧಾನ ತಾತ್ವಿಕ ತಳಹದಿ ಕೂಡ ಅದೇ ಆಗಿದೆ ಎನ್ನುವುದನ್ನು ಕಾಣಬಹುದು. + +(ಅಜಯ್  ವರ್ಮಾ ಅಲ್ಲುರಿ) + +ರಾಮಾಯಣದ ಕೆಲವು ಅಪ್ರಮುಖ ಮಹಿಳಾ ಪಾತ್ರಗಳಾದ ಶೂರ್ಪನಖಿ, ಅಹಲ್ಯೆ, ರೇಣುಕೆ, ಊರ್ಮಿಳೆ ಹಾಗೂ ಒಂದು ಮುಖ್ಯಪಾತ್ರ ಮಂಡೋದರಿ- ಇವರುಗಳ ಸುತ್ತಲೂ ಇಲ್ಲಿಯ ಕಥೆಗಳು ಹಬ್ಬಿರುತ್ತವೆ. ರಾಮ-ಸೀತೆಯರ ಚರಿತ್ರೆಯ ಬೇರೆ ಬೇರೆ ಸಂದರ್ಭಗಳಲ್ಲಿ ಬರುವ ಈ ಮಹಿಳೆಯರೆಲ್ಲರನ್ನೂ ಒಂದು ಬಲವಾದ ಪಿತೃಪ್ರಧಾನ ಸಂಸ್ಕೃತಿಯು ಆವರಿಸುತ್ತದೆ. ಅದರ ನಿರೀಕ್ಷಿತ ಪತ್ನೀಧರ್ಮ, ಮಾತೃಧರ್ಮಗಳನ್ನು ತಮ್ಮದಾಗಿಸಿಕೊಂಡು ಗಂಡ, ಮಕ್ಕಳು, ಕುಟುಂಬಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಇವರೆಲ್ಲರೂ ಅದೇ ಸಂಬಂಧಗಳ ಮೂಲಕವೇ ಅಪಮಾನ, ಹಿಂಸೆ, ಸಂಕಟಗಳಿಗೆ ಒಳಗಾದವರೂ ಹೌದು. ಈ ಅಂಶಕ್ಕೆ ಒತ್ತುಕೊಟ್ಟು ಓಲ್ಗಾ ಗೌಣ ಪಾತ್ರಗಳನ್ನು ಕತೆಗಳ ಕೇಂದ್ರಕ್ಕೆ ತಂದು ಅವರನ್ನು ವ್ಯಕ್ತಿಗಳನ್ನಾಗಿ ಅವರದೇ ನಿಟ್ಟಿನಿಂದ ಅವರ ಬದುಕಿನ ರೂಪವನ್ನು ಆಧುನಿಕ ಹೆಣ್ಣಿನ ಪ್ರಜ್ಞೆಯಿಂದ ಪರಿಶೀಲಿಸುತ್ತಾರೆ. + +ಈ ಪರಿಶೀಲನೆ ನಡೆದಿರುವುದು ಸೀತೆಯ ಮನದಾಳದಿಂದ ಮೇಲೆದ್ದು ಬರುವ ಸ್ಮೃತಿಗಳ ಮೂಲಕ, ಅವಳ ಅಂತರಂಗದಲ್ಲಿ ಎಂಬುದು ಇಲ್ಲಿನ ಮುಖ್ಯ ತಂತ್ರವಾಗಿದೆ. ಅಯೋಧ್ಯೆಯಿಂದ ರಾಮ ಅವಳನ್ನು ಹೊರದೂಡಿದ. ಅವಳು ಈಗ ವಾಲ್ಮೀಕಿ ಆಶ್ರಮದಲ್ಲಿ ಮಕ್ಕಳನ್ನು ಹಡೆದು ಅವರನ್ನು ಬೆಳೆಸುತ್ತಾ ಬದುಕುತ್ತಿದ್ದಾಳೆ. ಈ ಮಕ್ಕಳು ಈಗ ತಮ್ಮ ತಂದೆಯ ಬಗೆಗೆ ತಿಳಿಯಲು, ಆತನನ್ನು ಕಾಣಲು ತವಕಿಸುವ ಹಂತಕ್ಕೆ ಬಂದಿದ್ದು ಅವರು ಇನ್ನು ತನ್ನಲ್ಲಿ ಉಳಿಯಲಾರರು ಎನ್ನುವ ಅರಿವು ಅವಳಿಗೆ ಇದೆ. ಈಗ ಅವಳು ತನ್ನ ಬದುಕನ್ನು ಮತ್ತೆ ಮತ್ತೆ ಚಿಂತಿಸಿ ವಿಮರ್ಶಿಸತೊಡಗಿದ್ದಾಳೆ. ಈ ಮನೋಮಂಥನದಲ್ಲಿ ಹಿಂದೆ ರಾಮನೊಂದಿಗೆ ವನವಾಸದ ಕಾಲದಲ್ಲಿ ತಾನು ಭೇಟಿಯಾಗಿದ್ದ ಅಹಲ್ಯೆ, ರೇಣುಕೆಯಂತ ಸ್ತ್ರೀಯರು ಮನದಾಳದಿಂದ ಮೇಲೆದ್ದು ಬರುತ್ತಾರೆ. ಎಂದೋ ಅವರನ್ನು ಕಂಡಾಗ ಅವರ ಬಾಳಿನಲ್ಲಿ ಕಂಡುಂಡ ಮಾತಿನ ಸತ್ಯ ಅವಳಿಗೆ ಅರ್ಥವಾಗದಿದ್ದರೂ ಈಗ ಎಲ್ಲವೂ ತಿಳಿಯಾಗಿ ಸ್ಪಷ್ಟವಾಗಿ ಅರಿವಾಗುತ್ತದೆ. + +ಅಗ್ನಿಪರೀಕ್ಷೆಯ ಅವಮಾನ, ರಾಮನ ಬದುಕಿನಿಂದಲೇ ಹೊರದೂಡಿಸಿಕೊಂಡ ಕ್ರೂರತೆಗಳಿಂದ ಯಾತನೆಗೆ ಒಳಗಾಗಿರುವ ಈ ಹೊತ್ತಿಗೆ ಸೀತೆಗೆ ಪತ್ನೀಧರ್ಮ, ಮಾತೃಧರ್ಮ, ಪಾತಿವ್ರತ್ಯಗಳು ಗಂಡಸರ ಹಿತಕ್ಕಾಗಿ ಕಟ್ಟಲಾಗಿರುವ ಮೌಲ್ಯಗಳಷ್ಟೇ. ನಿಜವೆಂದರೆ ಹೆಣ್ಣಿನ ಶೀಲದ ಶುದ್ದಿಯ ಬಗೆಗಿನ ಅಪನಂಬಿಕೆ ಅಹಲ್ಯೆ, ರೇಣುಕೆಯರಿಗಷ್ಟೇ ಅಲ್ಲದೆ ತನ್ನ ಸಂಕಟಕ್ಕೆ ಮೂಲವಾಗುತ್ತದೆ ಎನ್ನುವ ಸತ್ಯ ತಿಳಿಯುತ್ತದೆ. ಈಗ ಅವಳು ತನ್ನ ಇರುವಿಕೆಯ ಅರ್ಥವೇನೆಂದು, ತಾನೇ ತಾನಾಗಿರುವುದೆಂದರೆ ಏನೆಂದು ಚಿಂತಿಸುತ್ತಾಳೆ. + +ಯಾರಿಗಾಗಿ ತಾನು ಬದುಕುತ್ತಿದ್ದೇನೆ ಎಂದು ತಿಳಿದಿದ್ದಳೋ, ಯಾರಿಂದ ತನಗೆ ಜನಕರಾಜನ ಮಗಳು, ರಾಜ ರಾಮಚಂದ್ರನ ಧರ್ಮಪತ್ನಿ, ಮತ್ತೀಗ ರಾಜಕುಮಾರರಾದ ಲವ-ಕುಶರ ಮಾತೆ ಎಂಬ ಅಂಕಿತಗಳಿವೆಯೆಂದು ಹೆಮ್ಮೆ ಪಟ್ಟಿದ್ದಳೋ ಅವು ಯಾವುವೂ ತನ್ನದೇ ಗುರುತುಗಳಲ್ಲ. ಅವೆಲ್ಲವನ್ನೂ ಮೀರಿದ, ತಾನು ತಾನೇ ಆಗಿರುವ ನೆಲೆಯೆಂದರೆ ತಾನು ಮೂಲಭೂತವಾಗಿ ‘ಭೂಪುತ್ರಿ’ ಎನ್ನುವುದೇ ಎಂಬ ಅರಿವಾಗುತ್ತದೆ. ಈ ಹೊಸದಾದ ಅರಿವನ್ನು ಸೀತೆಯೊಳಗೆ ಹೊಳೆಯಿಸಲು ಆ ಎಲ್ಲಾ ಹಿಂದಿನ ಮಹಿಳೆಯರ ಅನುಭವ, ವಿಚಾರಗಳು ದಾರಿದೀಪವಾಗುವಂತೆ ಕಲ್ಪಿಸುತ್ತಾರೆ ಲೇಖಕಿ. ಈ ಸ್ತ್ರೀಯರು ಅವಳಲ್ಲಿ ಸ್ನೇಹ ಅಂತಃಕರಣಗಳಿಂದ ತಿಳಿಹೇಳುವುದನ್ನು ಕಾಣುತ್ತೇವೆ. ಸೀತೆಯ ಓರಗೆಯವರೇ ಆದ ಶೂರ್ಪನಖಿ ಮತ್ತು ಊರ್ಮಿಳೆಯರು ನೇರವಾಗಿಯೇ ಅವಳಿಗೆ ಈಗ ತಮ್ಮ ಅನುಭವವನ್ನು ತಿಳಿಸುವ ಸನ್ನಿವೇಶಗಳು ಇಲ್ಲಿವೆ. ಆ ಒಬ್ಬೊಬ್ಬರ ನಿಜವೂ ಹೊಳೆಯುತ್ತಿರುವ ಹಾಗೆ ಸೀತೆಯೂ ಒಳಗಿನಿಂದ ದೃಢವಾಗುತ್ತಾ ಬೆಳೆಯುವುದನ್ನು ಓಲ್ಗಾ ಅವರು ತುಂಬಾ ಕಲಾತ್ಮಕವಾಗಿ ಪ್ರತ್ಯಕ್ಷೀಕರಿಸುವ ಬಗೆ ಮಹತ್ವದ್ದಾಗಿದೆ. ಪರಂಪರೆ ಹೇಳುವ ಸಹೋದರತ್ವಕ್ಕೆ ಪರ್ಯಾಯವಾಗಿ ಸೋದರಿತ್ವವನ್ನು ಹೀಗೆ ಹೆಣ್ಣಿನ ಬಿಡುಗಡೆಗೆ ದಾರಿಯಾಗಿ ಕಥೆಗಳ ಒಳಗಿನಿಂದಲೇ ಧ್ವನಿ ಪಡೆಯುತ್ತದೆ. + +(ಓಲ್ಗಾ) + +ಇಲ್ಲಿ ಬರುವ ವಿಮುಕ್ತೆಯರ ಸ್ವರೂಪವೇನೆಂದು ನೋಡೋಣ- + +ಪರಂಪರೆಯು ಹೇಳುವ ಶೂರ್ಪನಖಿ ಒಬ್ಬ ರಕ್ಕಸಿ, ಸುಂದರಿಯ ರೂಪದಲ್ಲಿ ಬಂದು ರಾಮ ಲಕ್ಷ್ಮಣರನ್ನು ಕಾಮಿಸಲು ಯತ್ನಿಸಿದ ಕುತ್ಸಿತ ಹೆಣ್ಣು. ಅವಳ ಈ ಉದ್ಧಟತನಕ್ಕಾಗಿ ಲಕ್ಷ್ಮಣ ಅವಳ ಕಿವಿಮೂಗುಗಳನ್ನು ಕತ್ತರಿಸಿ ದಂಡಿಸಿ ತನ್ನ ಸಂಯಮವನ್ನು ಮೆರೆಸುವವನು. ಆದರೆ ಓಲ್ಗಾ ಕಥೆಯ ನಾಯಕಿ ಶೂರ್ಪನಖಿ ತುಂಬು ಹರೆಯವೇ ಸೌಂದರ್ಯವಾಗಿದ್ದು ಬದುಕಿನ ಸವಿಯನ್ನು ಅನುಭವಿಸಲು ಹಾತೊರೆದು ಆ ಕಾರಣಕ್ಕಾಗಿ ಕಿವಿಮೂಗುಗಳೇ ಇರದ ಕುರೂಪಿತನದಲ್ಲಿ ಹೇಗೆ ಬದುಕಿರಬಹುದು ಎಂಬುದರ ಅವಳ ಕಥೆಯನ್ನು ಎತ್ತಿಕೊಳ್ಳುತ್ತಾರೆ. ಪ್ರಕೃತಿ ಸಹಜವಾಗಿದ್ದ ರೂಪ ಕಳೆದು ಹೋಗುವುದರ ಜೊತೆಗೇ ಯಾರಿಗೂ ಬೇಡದವಳಾಗಿ, ಎಲ್ಲರ ಅಪಹಾಸ್ಯದ ಗುರಿಯಾಗಿ, ತನ್ನ ಬಗೆಗೆ ತಾನೂ ಹೇಸುವಂತಾದ ಅಪಾರವಾದ ದುಃಖ, ಅವಮಾನಗಳಿಂದ ಹೊರಬರಲು ನಿರಂತರವಾಗಿ ಅವಳು ನಡೆಸಿದ ಮನೋಮಂಥನವೇ ಕಾರಣವಾಗುತ್ತದೆ. ಶೂರ್ಪಣಖಿಯ ಈ ಯಾತನೆಯ ಚಿತ್ರಣವೇ ಮನೋವೇದಕ. ಆದರೆ ಅದನ್ನು ಗೆದ್ದು ಅಸಾಧಾರಣ ಪ್ರಕೃತಿ ಪ್ರೇಮಿಯಾಗಿ ಸಾವಿರಾರು ಸುಂದರ ಹೂಗಳ ತೋಟ ಬೆಳೆಸಿ ಆತ್ಮ ಸೌಂದರ್ಯದಿಂದ ಬೆಳಗುವ ಶೂರ್ಪಣಖಿ, ಹೆಣ್ಣಿಗೆ ದೇಹ ಸೌಂದರ್ಯವೇ ಸರ್ವಸ್ವವೆನ್ನುವ ದೃಷ್ಟಿಕೋನವನ್ನೇ ಪಲ್ಲಟಗೊಳಿಸುತ್ತಾಳೆ! + +ಅಹಲ್ಯೆಯ ಕಥೆಯಾದ ‘ಮೃಣ್ಮಯನಾದ’, ರೇಣುಕೆಯ ಕಥೆ ಹೇಳುವ ‘ಮರಳ ಮಡಕೆ’ ಹೆಸರುಗಳೇ ಮಹತ್ವದ ಧ್ವನಿಹೊಂದಿವೆ. ಎರಡೂ ಮಣ್ಣನ್ನು ಸೂಚಿಸುತ್ತವೆ. ಇವರಿಬ್ಬರ ಕಥೆಗೂ ತಳಹದಿಯಾಗಿರುವುದು ಹೆಣ್ಣಿನ ಲೈಂಗಿಕನಿಷ್ಠೆಯ ಬಗೆಗೆ ಯುಗಯುಗಗಳಿಂದಲೂ ಗಂಡು ಬೆಳೆಸಿಕೊಂಡು ಬಂದಿರುವ ಅಪನಂಬಿಕೆಯೇ. ಅಹಲ್ಯೆ ತನ್ನ ತಪ್ಪಿಲ್ಲವಾದರೂ, ತನ್ನ ಒಪ್ಪಿಗೆಯೂ ಇಲ್ಲದಿದ್ದರೂ ಪರಗಂಡಸೊಬ್ಬನು ವಂಚಿಸಿ ಕೂಡಿ ಹೋದದ್ದಕ್ಕಾಗಿ ಗೌತಮನಿಂದ ದೂಷಿತೆಯಾಗಿ ಲೋಕದ ದೃಷ್ಟಿಗೆ ಕಲ್ಲಾಗಿ ಕಾಡಿನೊಳಗೆ ಹೋಗಿರುವವಳು. + +ರೇಣುಕೆಯು ಕರಕುಶಲ ಕಲೆಯಲ್ಲಿ ನುರಿತಿದ್ದವಳು. ಪರಮ ಏಕಾಗ್ರತೆಯಲ್ಲಿ ಮರಳಲ್ಲೂ ಮಡಕೆ ಮಾಡುವ ನಿಪುಣೆ. ಹಾಗೆ ಮರಳ ಮಡಿಕೆ ಮಾಡುವಾಗ ಒಬ್ಬ ಗಂಡಸಿನತ್ತ ನೋಡಿದುದೆ ಗಂಡನಿಗೆ ದಂಡನಾರ್ಹ ಅಪರಾಧವಾಗಿ ಕಾಣುತ್ತದೆ. ಕೃದ್ಧನಾದ ಅವನು ರೇಣುಕೆಯ ತಲೆ ಕಡಿಯುವಂತೆ ಮಗನಿಗೆ ಆಜ್ಞೆ ಮಾಡಿದರೆ, ಪರಶುರಾಮ ಅವಿಚಾರವಾಗಿ ಕೊಡಲಿಯೆತ್ತಿ ಕೊರಳಿಗೆ ಹೊಡೆದೂ ಬಿಡುತ್ತಾನೆ. ಗಂಡನ ಕೋಪವಿಳಿದಾಗ ಮಗನಿಗೆ ತಲೆ ಕಡಿಯದಿರಲು ಹೇಳಿದರೂ ಅರ್ಧ ಸೀಳಿದ್ದ ಕೊರಳಿನಿಂದ ಸಾಯ ತೊಡಗಿದ್ದ ರೇಣುಕೆಗೆ ಬೇರೆ ಸ್ತ್ರೀಯರು ಮಾಡಿದ ಚಿಕಿತ್ಸೆಯಿಂದ ಅವಳು ಬದುಕಿಕೊಳ್ಳುತ್ತಾಳೆ. ಈ ಮೃಣ್ಮಯ ಹೆಣ್ಣುಗಳಿಗೂ ನೆಲದ ಮಗಳೇ ಆಗಿರುವ ಸೀತೆಗೂ ಮಣ್ಣಿನ ಸಂಬಂಧವಷ್ಟೇ ಅಲ್ಲ ಇರುವುದು, ಲೈಂಗಿಕವಾದ ಅಪವಿತ್ರತೆಯ ದೋಷಾರೋಪಕ್ಕೆ ಸೀತೆಯೂ ಇವರಂತೆಯೇ ಕಾಲಾಂತರದಲ್ಲಿ ಗುರಿಯಾಗುತ್ತಾಳೆ. ಇವರೆಲ್ಲರೂ ಒಂದೇ ವ್ಯವಸ್ಥೆಯ ಒಂದೇ ಬಗೆಯ ಮೌಲ್ಯಗಳಿಂದಾಗಿ ಅವಮಾನ, ಸಂಕಟಗಳಿಗೆ ಒಳಗಾಗಿರುವುದೂ ಎದ್ದು ಕಾಣುವ ಸಂಗತಿ. ಆದರೆ ಓಲ್ಗಾ ಹೆಣ್ಣುಗಳನ್ನು ವ್ಯವಸ್ಥೆಯ ಬಲಿಪಶುಗಳೆಂದು ತೋರಿಸುತ್ತಿಲ್ಲ. ಬದಲಾಗಿ ಆ ಹೆಣ್ಣುಗಳು ಅನುಮಾನಿಸುವವರ ಪರಂಪರೆಯ ಸಂಕೋಲೆಗಳಿಂದ ಮುಕ್ತರಾಗಿ ತಮಗೆ ತಾವೇ ಆಗಿ ಹೊಸ ಜೀವನಗಳನ್ನು ನಡೆಸಬಲ್ಲ ಸ್ವಾಯತ್ತ ನೆಲೆಗಳಲ್ಲಿರುವುದನ್ನು ಮುನ್ನೆಲೆಗೆ ತಂದಿರುತ್ತಾರೆ. + + + +ಮೇಲೆ ಪ್ರಸ್ತಾಪಿಸಿರುವ ‘ಬಂಧನದಿಂದ ಬಿಡುಗಡೆಗೆ’ ಎನ್ನುವ ರೀತಿಯ ಮಾದರಿಗೆ ವೈದೃಶ್ಯದ ಹಾಗಿರುವ ಇನ್ನೆರಡು ಕಥೆಗಳ ಬಗೆಗೆ ಕೊಂಚ ಹೇಳಲೆಬೇಕು. ‘ಅಶೋಕ’ ಮತ್ತು ‘ಬಂಧಿತ’ ಎಂಬ ಕಥೆಗಳಲ್ಲಿ ಮೊದಲಿನದು ಮಂಡೋದರಿಯನ್ನೂ ಎರಡನೆಯದು ರಾಮನನ್ನು ಕುರಿತದ್ದಾಗಿವೆ. ‘ಅಶೋಕ’ ಎನ್ನುವ ಹೆಸರು ಕೇವಲ ರಾವಣನು ಹೆಂಡತಿಗೆ ಕಾಣಿಕೆಯಾಗಿ ಕೊಟ್ಟ ಉದ್ಯಾನವನದ ಹೆಸರು ಅಲ್ಲ. ಅದು ಮಂಡೋದರಿಯ ಸಮಗ್ರ ವ್ಯಕ್ತಿತ್ವಕ್ಕೇ ಕೊಟ್ಟಿರುವ ಧ್ವನಿಪೂರ್ಣ ಹೆಸರು. ಈ ಮಂಡೋದರಿ ಸೀತೆಯಂಥ ಆರ್ಯಮೌಲ್ಯದೊಳಗೆ ಉಳಿಯುವ ಸ್ತ್ರೀ ಮಾದರಿಯಲ್ಲ. ಇವಳು ಓಲ್ಗಾ ಅವರ ಕೈಯಲ್ಲಿ ಅಪ್ಪಟ ದ್ರಾವಿಡ ಮಹಿಳೆ ಮಾತ್ರವಲ್ಲದೆ ತನ್ನ ಆ ಸಂಸ್ಕೃತಿಯನ್ನೇ ದೃಢವಾಗಿ ಅಭಿಮಾನದಿಂದ ಎತ್ತಿ ಹಿಡಿಯುವ ವಿಚಾರವಾದಿಯೂ ಆಗಿದ್ದಾಳೆ! + +ಆರ್ಯರ ಸಂಸ್ಕೃತಿಯ ಮುಖ್ಯ ಲಕ್ಷಣವೆಂದರೆ ಹೆಣ್ಣನ್ನು ಶೋಷಿಸುವುದು ಮತ್ತು ಪ್ರಕೃತಿಯನ್ನು ನಾಶ ಮಾಡುವುದು ಎಂದು ನಂಬಿರುವ ಅವಳಿಗೆ ತನ್ನ ಗಂಡ ಆರ್ಯರನ್ನು ಸದೆಬಡಿಯಲೆಂದು ಅವರಂತೆಯೇ ತಾನೂ ಕಾಡುಗಳನ್ನು ಕಡಿದು ಲಂಕೆಯಂಥ ನಗರ ಸಂಸ್ಕೃತಿ ಮರೆಸುವುದು ಮೂರ್ಖತನವಾಗಿ ಕಾಣುತ್ತದೆ. ತನ್ನದೇ ಆದ ಸ್ವಾತಂತ್ರಜಾಗ ಎಂದುಕೊಂಡಿದ್ದ ಅಶೋಕವನದೊಳಗೂ ಹೆಣ್ಣೊಬ್ಬಳ ಅಳು ಕೇಳತೊಡಗುವುದು, ಲಂಕೆಗೆ ಹಚ್ಚಿದ ಬೆಂಕಿ ಅಶೋಕವನಕ್ಕೂ ಸೋಂಕುವುದು ತಮ್ಮ ದ್ರಾವಿಡ ಸಂಸ್ಕೃತಿಯ ವಿನಾಶದ ಸಂಕೇತವಾಗಿ ಮಂಡೋದರಿಗೆ ಭಾಸವಾಗುತ್ತದೆ. ಅದು ಸತ್ಯವೇ ಆಗಿ, ರಾವಣ ಯುದ್ಧದಲ್ಲಿ ಹತನಾದಾಗ ಅವಳು ಆರ್ಯ ವಿಧವೆಯರ ರೀತಿ ತನ್ನ ಮಂಗಳದ ಅಲಂಕಾರಗಳನ್ನು ತೊರೆಯಲು ಒಪ್ಪುವುದಿಲ್ಲ. ತಮ್ಮ ಸಂಪ್ರದಾಯದಂತೆ ರಾವಣನ ದೇಹವನ್ನು ಕಾಡಿಗೆ ಅರ್ಪಿಸಬೇಕೆಂದೂ, ಅಗ್ನಿಸಂಸ್ಕಾರ ಮಾಡಕೂಡದೆಂದೂ ವಿರೋಧಿಸುತ್ತಾಳೆ. + +ನಿತ್ಯವೂ ತನ್ನನ್ನೂ, ತನ್ನ ಅರಮನೆಯನ್ನೂ, ಇಡೀ ಆವರಣವನ್ನೂ ಬಗೆಬಗೆಯ ಪುಷ್ಪಾಲಂಕಾರಗಳಿಂದ ಸುಂದರವೂ ಪರಿಮಳಭರಿತವೂ ಆಗುವಂತೆ ಮಾಡುವ ಕಲೆ ತಿಳಿದಿರುವ ಈಕೆಗೆ ರಾವಣನೊಂದಿಗೆ ಸಂಗೀತ ಸಾಧನೆಯಲ್ಲಿ, ಪಾನಗೋಷ್ಠಿಯಲ್ಲಿ ಸಂಭ್ರಮಸುವುದರಲ್ಲಿಯೇ ಬದುಕಿನ ಸಕಲ ಸಾರವನ್ನು ಹೀರುವ ಸಂತೋಷ ಸಿಗಬಲ್ಲದು. ಬಹುಶಃ ಓಲ್ಗಾ ಅವರ ಕಲ್ಪನೆಯ ಪೂರ್ಣ ವಿಮುಕ್ತ ಮಹಿಳೆಯ ನೆಲೆ ಇದೇನೋ ಎನ್ನುವ ಅನುಮಾನ ಬಂದರೆ ಅಚ್ಚರಿಯಿಲ್ಲ. ಏಕೆಂದರೆ ಅಷ್ಟು ತನ್ಮಯತೆಯಿಂದ ಅವರು ಈ ಪಾತ್ರವನ್ನು ಕಡೆದಿರುತ್ತಾರೆ. + +ಈ ಸಂಕಲನ ಕಟ್ಟಿಕೊಡುವ ವಿಮುಕ್ತಿಯ ಚಿತ್ರಕ್ಕೆ ವೈದೃಶ್ಯವಾಗಿರುವುದು ‘ಬಂಧಿತ’ ಕಥೆಯ ರಾಮನ ಚಿತ್ರ.ಪಿತೃಪ್ರಾಧಾನ್ಯದ, ಆರ್ಯ ಧರ್ಮದ, ರಾಜತ್ವದ, ಪುರುಷಾಧಿಕಾರದ ಎಲ್ಲ ಮೌಲ್ಯಗಳ ಪರಮ ರಕ್ಷಕನಾಗುವ ಹಠದಲ್ಲಿ ರಾಮನು ಕೌಟುಂಬಿಕವಾದ ಪ್ರೀತಿಯ ಸಂಬಂಧಗಳಿಂದ, ಮಾನವೀಯ ಅಂತಃಕರಣದಿಂದಲೂ ಮುಕ್ತನಾಗಿಬಿಡುವ ಮತ್ತು ತಾನೇ ಕಟ್ಟಿಕೊಂಡ ದುಃಖ ಮತ್ತು ಪಶ್ಚಾತಾಪಗಳ ಕೋಟೆಯಲ್ಲಿ ಬಂಧಿತನಾಗಿರುವ ಬಗೆಯನ್ನು ಮರುಕ ಮತ್ತು ವಿಡಂಬನೆಗಳಿಂದ ಮುಂದಿಡುತ್ತದೆ ಈ ಕಥೆ. ರಾಮನ ಈ ಬಂಧಿತ ಅವಸ್ಥೆ ಇಡೀ ಪುರುಷಕುಲಕ್ಕೊಂದು ಎಚ್ಚರಿಕೆಯೂ ಆಗಬಲ್ಲದು. ಇದರಲ್ಲಿ ಸೀತೆಯು ಹೇಳುವ ನುಡಿಯು ಮನನೀಯವಾಗಿದೆ- “ನಾನು ಭೂಪುತ್ರಿ ರಾಮಾ! ನಾನು ಯಾರೆಂದು ಈಗ ಅರಿತುಕೊಂಡಿದ್ದೇನೆ. ಈ ಇಡೀ ಲೋಕವೆಲ್ಲ ನನ್ನದೇ. ಯಾವ ಕೊರತೆಯೂ ಇಲ್ಲ ನನಗೆ.” + +(ಬಿ.ಎನ್.ಸುಮಿತ್ರಾಬಾಯಿ) + +ಮಂಡೋದರಿಯ ಕಥೆ ಬರೆದಾಗ ಓಲ್ಗಾಗೆ ಆ ರೀತಿ ಪುರಾಣ ಪಾತ್ರಗಳನ್ನು ಬದಲಾಯಿಸಕೂಡದು ಎಂದು ಅನೇಕ ನಿಟ್ಟಿನ ಬೆದರಿಕೆಗಳು ಬಂದಿದ್ದವಂತೆ. ಅಂತಹ ಬೆದರಿಕೆಗಳಿಗೆ ಜಗ್ಗದೆ ಅವರು ಬರೆದು ಪ್ರಕಟಿಸಿದರು. ಒಂದು ಸಂದರ್ಶನದಲ್ಲಿ ಅವರು ತಮ್ಮ ನಿಲುವನ್ನು ವಿವರಿಸಿಯೂ ಇದ್ದಾರೆ- “ಇಂದಿನ ಸ್ತ್ರೀಯರು ಯಾತನೆ, ಶೋಷಣೆ, ಹಿಂಸೆಗಳನ್ನು ಸುಮ್ಮನೆ ಬಾಯಿಮುಚ್ಚಿಕೊಂಡು ಸಹಿಸಲಾರರು ಎನ್ನುವುದು ಸ್ಪಷ್ಟವಾಗಿಯೇ ಕಾಣುತ್ತದೆ. ರಾಮಾಯಣವನ್ನು ಮೇಲ್ಜಾತಿಗಳು ಸ್ತ್ರೀಯರ ದಮನಕ್ಕೆ ಅಸ್ತ್ರವೆಂಬಂತೆ ಶತಶತಮಾನಗಳಿಂದಲೂ ಬಳಸುತ್ತಲೇ ಬಂದಿರುತ್ತವೆ. ಗಂಡಸರಿಗೆ ಅವರ ಬಲ ಪ್ರದರ್ಶನಕ್ಕೆ, ಅಹಂಕಾರ ಬೆಳೆಸಲಿಕ್ಕೆ, ಯುದ್ಧ ದಾಹಕ್ಕೆ, ರಾಜಕೀಯ ಅಧಿಕಾರಕ್ಕೆ ಎಲ್ಲಕ್ಕೂ ಹೆಣ್ಣಿನ ದೇಹ ಒಂದು ಉಪಕರಣವಾಗಿ ಹೇಗೆ ಬಳಕೆಯಾಗುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿಸಲು ಪುರಾಣ ಕಥೆಗಳು ನೆರವಾಗಬಲ್ಲವು. ಇವತ್ತಿನ ಪರಿಸ್ಥಿತಿಯಲ್ಲಿ ಪುರಾಣಗಳನ್ನು, ರಾಮಾಯಣದಂತಹ ಪಾರಂಪರಿಕ ಬಲವುಳ್ಳ ಗ್ರಂಥಗಳನ್ನು ಪುನಃಶೋಧಿಸುವುದು ಅಗತ್ಯವಿದೆ.” + +ರಾಮಾಯಣವು ಎಲ್ಲಾ ಕಾಲಕ್ಕೂ ಪುನಃಶ್ಚಿಂತನೆಗಳಿಗೆ ಆಕರವಾಗುತ್ತಲೇ ಬಂದಿರುತ್ತದೆ. ಕನ್ನಡದಲ್ಲಿ, ಕಳೆದ ಶತಮಾನದಲ್ಲಿ ಕುವೆಂಪು ಅವರು ಸಮಾಜಶಾಸ್ತ್ರ, ಮನೋವಿಜ್ಞಾನಿಗಳನ್ನು ಬಳಸಿಕೊಂಡು ತಮ್ಮ ವಿಚಾರಗಳನ್ನು ರಾಮನ ಕಥೆಯ ಮೂಲಕ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯದಲ್ಲಿ ಹೇಳಿರುತ್ತಾರೆ. ಎಚ್.ವಿ.ಸಾವಿತ್ರಮ್ಮ ಅವರು ಇಡೀ ರಾಮಾಯಣವನ್ನು ಅದರ ಸ್ತ್ರೀಪಾತ್ರಗಳ ಅನುಭವಗಳ ದೃಷ್ಟಿಯಿಂದ ಮರುವ್ಯಾಖ್ಯಾನಿಸುವ ‘ಸೀತೆ ರಾಮ ರಾವಣ’ ಮತ್ತು ‘ವಿಮುಕ್ತಿ’ ಎನ್ನುವ ಎರಡು ಸ್ತ್ರೀವಾದಿ ಕಾದಂಬರಿಗಳನ್ನು ಕನ್ನಡಿಗರಿಗೆ ನೀಡಿರುತ್ತಾರೆ. + + + +ಬಹಳ ಹಿಂದೆಯೇ ಮುಪ್ಪಾಳ್ಳ ರಂಗನಾಯಕಮ್ಮನವರು ತೆಲುಗಿನಲ್ಲಿ ರಚಿಸಿದ ‘ರಾಮಾಯಣ ವಿಷವೃಕ್ಷಮು’ ಎನ್ನುವ ಮಾರ್ಕ್ಸವಾದಿ ಕೃತಿಯು ದೇಶದುದ್ದಗಲಕ್ಕೂ ವಿವಾದಗಳನ್ನು ಎಬ್ಬಿಸಿದ್ದುದು ಸುಪರಿಚಿತ. ಇಂತಹ ವೈಚಾರಿಕ ಪರಂಪರೆಗೆ ಸೇರುವ ಅತ್ಯಂತ ಸಮಕಾಲೀನ ಔಚಿತ್ಯವಲ್ಲ ‘ವಿಮುಕ್ತೆ’ ಯನ್ನು ರಚಿಸಿರುವ ಓಲ್ಗಾ ಅವರಂತೆಯೇ ಅದನ್ನು ಸೊಗಸಾಗಿ ಕನ್ನಡಕ್ಕೆ ತಂದುಕೊಟ್ಟ ಅಜಯ್ ವರ್ಮಾ ಅಲ್ಲೂರಿಯವರೂ ಅಭಿನಂದನಾರ್ಹರಾಗಿದ್ದಾರೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_34.txt b/Kenda Sampige/article_34.txt new file mode 100644 index 0000000000000000000000000000000000000000..ca38f70306ca5a7a6399db7a548557b95ca02d95 --- /dev/null +++ b/Kenda Sampige/article_34.txt @@ -0,0 +1,75 @@ +ಪುಟ್ ಮಗ, ಎದೆಗೂಡಲ್ಲಿ ಬೆಚ್ಚಗೆ ಇರಬೇಕಾದ ಮಡದಿ, ಅಷ್ಟೇನೂ ಹೇಳಿಕೊಳ್ಳುವಂತಹ ಸ್ಥಿತಿ ಅಲ್ಲ. ಸಣ್ ಸಿಡುಕು, ಪಟಕ್ಕನೇ ಸಾರೀ ಕೇಳೊಮನ್ಸು. ಎದುರಿಗಿರಬೇಕಾದ ಅಪ್ಪಟ ಮನುಷ್ಯ ಏನೇನೂ ಹೇಳದೆ ಎದ್ದು ಹೋಗಿ ಎರಡು ವರ್ಷದ ಮೇಲಾಯ್ತು. + +ಅನಿಲ..-ನ ಪದ್ಯ ಓದತಿದ್ರೆ ಈ ಹುಡುಗನಿಗೆ ಮೊದಲೇ ತಾನು ಬೇಗ ಈ ಲೋಕದಿಂದ ಬಿಡುಗಡೆ ಹೊಂದತಿನಿ ಅಂತಾ ಗೊತ್ತಿತ್ತಾ ಅನ್ನೊ ಸಂಶಯ ಕಾಡುತ್ತೆ; ಅದಕ್ಕೆ ಪುರಾವೆ ಒದಗಿಸೊ ಸಾಕಷ್ಟು ಕವಿತೆಗಳು ಇದರಲ್ಲಿವೆ. + +“ಸಂತೈಸಿ ಬೆರಸಿದರ ಸಡಗರದ ಜಾತ್ರಿಮುತ್ತಿನ ತೇರಿಗೆ ನತ್ತನು ಹಾಕಿಎಳಿತೈತಿ ಬಹುದೂರಕಾಣದ ಅಂಚಿಗೆ ಕರ್ಕೊಂಡು ಹೊಕ್ಕೇತಿ.” + +ಯಾವ ಜಾತ್ರಿ!?ಯಾವ ಅಂಚಿಗೆ!? + +(ಅನಿಲ ಹುಲಮನಿ) + +ಇವತ್ತು ಅನಿಲ ನಮ್ಮೊಂದಿಗಿದ್ದಿದ್ದರೆ ಈ ಸಡಗರದ ಜಾತ್ರಿ ಸುದ್ದಿ ಮತ್ತೇನೊ ಆಗತಿತ್ತೇನೊ. ಆದರ ಅಂವಾ ಜಾತ್ರಿ ಮುಗಿಸಿ ನತ್ತ ಕಳಚಿ ಎದ್ದ ಹೋಗ್ಯಾನ ಬಹುದೂರ. ಈ ರೂಪಕ ಜೀವನ ಜಾತ್ರಿಯ ಚಕ್ಕಡಿ ಮೂಕ ಹರಕೊಂಡ ನೆಲಕ್ಕ ಬಿದ್ದ ಕತಿ ಹೇಳತೈತಿ. + +ಇತರೆ ಇತರೆ ಇತರೆಗಳಿಗೂ- ಪದ್ಯದೊಳಗೊಬ್ಬ ಬಾಯಾಗ ಹಲ್ಲಿಲ್ಲದ ಮುದಕ ಬರ್ತಾನ. ಬಾವಿ ಕಟ್ಟಿ ಮ್ಯಾಲ ಕುಂತಾನ ತನ್ನ ಕೊನೆ ದಿನ ಕೆತ್ತುತ್ತಿದ್ದಾನ- ಅನ್ನುವಾಗ ಯಾರೀ ಮುದುಕಾ ಇಲ್ಯಾಕ ಬಂದಾ ಅನ್ನೊ ಪ್ರಶ್ನೆ.. ಈ ಇತರೆಗಳೊಳಗ ಯಾರಯಾರ ಇದ್ದೀವಿ ಅನ್ನೊ ದುಗುಡ, ಹುಡುಗಾ ಏನು ಹೇಳ್ತಿದ್ದಿ ಎಂತಾ ಒಗಟಿದು ಉತ್ತರಿಸೊ ಅನಿಲಾ ಅನಬೇಕು. ಜೋರಾಗಿ ಅವ ನಾ ಎಲ್ಲೂ ಹೋಗಿಲ್ ಇಲ್ಲೆ ರಾಜಣ್ಣನ ಅಂಗಡ್ಯಾಗ ಸಖೀಗೀತ ಓದ್ಕೊಂತ ಕೂತಿದ್ದೆ, ಚಾ ಕುಡದ ಬರ್ತೇನಿ ಅನಬೇಕು. + +ಹಿಂಗೆಲ್ಲ ಅನಸ್ತದ… ಅನಿಲ ಡಿಗ್ರಿ ಕಾಲೇಜದಾಗ ಅಗದೀ ಸಂಭಾವಿತ ಗೆಳೆಯ, ಸುಮ್ಮನ ಕ್ಲಾಸ್ ಕೇಳಿ ಎದ್ದು ಹೋಗತಿದ್ದ ಹುಡುಗರ ನಡುವೆ ತಾನು ಇದ್ದವ. ಆದರ ಈ ಸಂಭಾವಿತ ಅನಿಸಿಕೊಂಡವ ಎಂತಾ ಕವಿತೆ ಬರ್ದಾನೋಪಾ, ಅನಿಲ ನೀ ಭಾರಿ ಇದ್ದೀ ಬಿಡು! ನಿನ್ನ ಬಾಳ ಸಂಭಾವಿತ ಅಂತ ತಿಳದಿದ್ದೆ ಅಂತ ಹಂಗಿಸಬೇಕು. ಅಂಥಾ ಕವಿತೆ ಬರದಬಿಟ್ಟಾನ ಈ ನಮ್ ಅನಿಲ. + +“ಕಚ್ಚಿದರೂನಂಜಾಗದ ಕಲೆಗಳು ಅಲ್ಲಲ್ಲಿಇವತ್ತುಅದೂ’ ಮುಗಿದ ಮೇಲೂಮೆಲ್ಲಗೆ ಪಿಸುಗುಟ್ಟುತ್ತಿದ್ದಾಳೆನೀನೊಬ್ಬ ‘ಶಂಕಿತ ಉಗ್ರಗಾಮಿ’ + +ಇಂತಾ ಪದ್ಯ ಬರೆದ ಉಢಾಳ ಕವಿಯನ್ ಕುಂದರ್ಸಿ ಕಾಲೆಳೆದು ಮಾತಿನಲ್ಲಿ ಸಿಗಸಬೇಕಿತ್ತು. ಅವನು ನಾಚಿ ಮಾತು ತಪ್ಪಿಸೋದನ್ ಕಾಣಬೇಕಿತ್ತು, ನಮ್ಮ ಜಿ ಡಿ(ಗಟರ ದಂಡಿ) ಕಟ್ಟಿ ದಂಡು. + +ನಡೆದ ಹಾದಿಗೆ ಜೋಡು ಗಾಳಿಹದಹದದ ಲಯದ ಮಾತುಸುಣ್ಣ ಬಣ್ಣ ಕೊಂಚ ತಣ್ಣ + +ನಾನು ನೀನು ಮತ್ತೆ ನೀನುಹಗುರ ಬಾನಲಿ ತೇಲಿ ಹೋದರು + +ಹೀಗೆ ತೇಲಿ ಹೋದ ಮತ್ತು ಕವಿತೆಯಾಗಿ ಉಳಿದು ಹೋದ ಜೀವ ಕೆತ್ತಿದ ಮೆತ್ತನೆ ಪದಗಳು ಬದುಕನ್ನ ಅವನು ಪಳಗಿಸ ಹೊರಟ ದಾರಿ ನಡುವೆ ನಿಂತು ನಕ್ಕ ದಾರಿಗಲ್ಲು. ಆ ಕಲ್ಲಿಗೂ ಕರುಳುಂಟು ಎನ್ನುವ ಅವನೊಳಗಿನ ಜೀವನಪ್ರೀತಿ. ಈ ಪದ್ಯಗಳು ಹೇಳುವ ಎದೆಹೊಕ್ಕ ಗಾಳಿ ಜೀವಾನಿಲ ಆಗದಿರುವುದಕ್ಕೊ ಏನೊ ನನಗಂತು ಪ್ರತಿ ಪದದೊಂದಿಗೂ ಗುದ್ದಾಟ ಮರು ಕ್ಷಣವೇ ಮರುಕ. + +ಕವಿ ತಾನು ಇಲ್ಲದಾಗ ನಾವು ಅವನ ಮನೆಗೆ ಹೋದ್ರೆ ಏನು ಮಾಡಬೇಕು ಅಂತ ಹೇಳಿದ್ದಾನೆ, ಹೇಳಿ ಹೋಗಿದ್ದಾನೆ. ಅವನು ಇದನ್ನೆಲ್ಲ ಯಾಕೆ ಮೊದಲೇ ಇಷ್ಟು ನಿಖರವಾಗಿ ಹೇಳಿದ ಅನ್ನೊ ಪ್ರಶ್ನೆ ನನ್ನದು, ಆದರೆ ಅವನು ಹೇಳಿದ ಮಾತಿಗೆ ಬೆರಗೂ ಹಿಂಬಾಲಿಸೋದು ಕಂಡು ಆಶ್ಚರ್ಯವೂ.. + +ಟಿ ವಿ ಸ್ಟಾಂಡಿನ ಮೇಲೋಅಥವ…ಮೇಜಿನ ಮೇಲೊಪುಸ್ತಕಗಳು ಸಿಕ್ಕರೆಸ್ವಲ್ಪ ಹೊತ್ತು ಓದಿ.ತುದಿ ಮಡಚಿಟ್ಟಪುಟಗಳುಅಥವ…ಅಂಡರ್-ಲೈನ್ ಹಾಕಿದಪದಗಳು, ವಾಕ್ಯಗಳು ಕಂಡರೆತಲೆ ಕೆಡಿಸಿಕೊಳ್ಳಬೇಡಿ. + +….…. + +ಹೀಗೆ ಸಾಗುವ ಪದ್ಯಕೊನೆಯ ಸಾಲಿನಲ್ಲಿಖುಷಿ ಕೊಟ್ಟ ವಾಕ್ಯಗಳು ಸಿಕ್ಕರೆಅಲ್ಲೊಂದು ಸಣ್ಣಗುರುತು ಮಾಡಿನಾನು ಮರಳಿ ಬರಲು ಅಷ್ಟೇಸಾಕು… + +ಈ ಪದ್ಯ ಓದಿ ಮುಂದೆ ಹೋಗಲು ಎಂತ ಓದುಗನಿಗೂ ತುಸು ಸಮಯಬೇಕು. ಮರಳಿ ಬಾರದ ಗೆಳೆಯನ ಪದ್ಯಕ್ಕೆ ಮೌನವೇ ವಿಮರ್ಶೆ. + + + +ಅನಿಲನಿಗೆ ಒಂದು ಲಯ ದಕ್ಕಿತ್ತು ಅಂತ ಅನಿಸ್ತದ. ಅವನ ಪದ್ಯಗಳನ್ನ ಓದ್ತಾ ಹೋದಹಾಗೆ ನಾದ ಒಂದು ಎದೆಯ ಎಳೆಹಿಡಿದು ನಾದುವ ಸದ್ದು ಪಕ್ಕನೆ ಸಿಗುತ್ತೆ. + +ಒಂದು ಪದ್ಯದ ಎರಡು ವಾಕ್ಯ ಹೀಗಿವೆ- + +ಹದದ ತೊಗಲಿನಲಿ ನಾದ ಕೇಳುಅರೇ… ರೆ..ರೆ..ರೆ..ರೆ..ಅಲೆಗಳು ತೇಲಿ ತೇಲಿ ತತರೆ ತಾ ಇಲ್ಲಿ + +ಅಬ್ಬಾ ಎಂತಾ ನಾದ ಒಲದೈತೊ ಗೆಳೆಯಾ ನಿನಗ!! + +ಜೀಕ್ಯಾಡತಾವ ಅನ್ನೊ ಪದ್ಯ ಒಮ್ಮೆ ಮ್ಯಾಲಿಂದ ಕೆಳಗತನಕ ಓದಿದೆ. ಏನ ಸಿಕ್ಕತು ಅನಸ್ತು ಹಿಂದಗೂಟನ ಮತ್ ಕೆಳಗಿಂದ ಮ್ಯಾಲ ತನಕ ಓದಿದೆ. ಒಂದು ಮ್ಯಾಜಿಕ್ ಪದ್ಯ ಇದು ಅನಸ್ತು. ಅಂದ್ರ ಕವಿಗೆ ಈ ಮ್ಯಾಜಿಕ್ ಗೊತ್ತಿತ್ತು. + +ಜೀಕ್ಯಾಡತಾವ ಜೋತುಬಿದ್ದುಟೊಂಗೆಗೆ ಗಿಡದ ಹುಣಸೆ-ತೂಗಾಡಿ ಸವರಿದಾಗಾಹಿಂದಿನವನು ಮುಂದಿನವನುಬಂದವನು ದಾಟಿದವನುಅವನೊಳಗಿನವನು ಅವನಲ್ಲ ಅವನುನಿನ್ನೊಳಗಿನವನು ನೀನಲ್ಲ ನೀನು + +ಇದು ಮೂಲಪದ್ಯ ಅಲ್ಲ. ಪದ್ಯದ ಹಿಮ್ಮುಖವಾಗಿ ನಾನು ಬರೆದ ಪದ್ಯ. ಆದರೆ ಅರ್ಥದೊಳಗ ಇನ್ನೂ ಅಪಾರ ಸಿಕ್ಕಿದ್ದು ಇಲ್ಲೆ ನನಗ, ಇಲ್ಲಿಂದ ಮ್ಯಾಲ ಮತ್ ಪದಗಳನ್ನ ಹಿಂದಿಲಿಂದನ ಮೊದಲ ತನಕ ಓದಿದ್ರ ಒಂದು ಗಮ್ಮತ್ ಐತಿ. + +ನೋಡಾಕ ಬಂದಿ ಹಾಡಾಕ ಬಂದಿಮತ್ಯಾಕ ಸರೀತಿ ಕಿರಿ ತೀರದ ಅಲೆಗೆಹಂಗಿಲೇ ಹಚ್ಚು ನುಂಗಿದ ಬತ್ತಿಗೆಆರದಿರಲಿ ಬೆಳಕು ಕಟ್ಟ ಕಡೆಯವರೆಗೂ + +ಯಾವ ದೀಪದ ಬೆಳಕು ಬಯಸಿದ್ಯೋ ನಾಕಾಣೆ ಬೆಳಕೀಯಲಿ ನಿನ್ನಾತ್ಮ ನಮ್ಮೊಳಗ.“ಹಸಿವಿಗಾಗಿ ಹ್ಯಾವ” ಪದ್ಯ ಓದಿದೆ ಮತ್ ಓದಿದೆ ಮತ್ತಮತ್ತ ಓದಿದೆ ಎಷ್ಟ ಸಲ ಓದಿದೆ ಅಷ್ಟೂಸಲ ಕಣ್ಣು ತೇವ ಎದಿವಜ್ಜಿ. + +“ಲೇಖನಿ ನಡುಗುತ್ತಿದೆ” ಪದ್ಯನ ಅವನ ಹೆಂಡ್ತಿ ಓದಿದ್ರ ಅಕೀ ಎದೆಯೊಳಗಿಂದ ಉಕ್ಕಿಬರು ತೆರಿ ಅದೆಷ್ಟ ಎತ್ತರಕ್ಕ ಚಿಮ್ಮಿ ಹಿಂದಕ್ಕಹೋಗಬಹುದು ಅನ್ನೊ ದುಗುಡ. + +ಅವಳಿಗೆ ಏನೂ ಬರೆಯಲಾಗಲಿಲ್ಲ ಅನ್ನೊ ಇವನ ಬಿಳಿ ಹಾಳಿನ ಶುಭ್ರ ಅಂತ ತಿಳದು ಅಪ್ಪುವ ಅಕಿಗೆ ದೇವರು ಅನ್ಯಾಯ ಮಾಡಿದ ಅಂತ ನಿರಂತರ ಅನಸ್ತದ ಇನ್ನ ನನಗ. + +ಇಲ್ಲೆ ಗಾಂಧಿ ಕವಿತೆ, ಬುದ್ಧನ ಕವಿತೆ, ಕವಿತೆಯ ಕವಿತೆ, ಕಾಮನ ಕವಿತೆ, ಮಗನ ಕವಿತೆ, ಕನಸು ಕವಿತೆ,ಯಾವ ಯಾವ ಕವಿತೆ ಉಲ್ಲೇಖಿಸಲಿ ಐವತ್ತಕ್ಕ ಐವತ್ ಮಾರ್ಕಸ್ ಒಂದೂ ಕಳೆಯೂ ಹಂಗಿಲ್ಲಾ. + +ಇನ್ನ ಒಂದ ಕವಿತೆ “ವಿಳಾಸ ಕೇಳಲು”.ಗಮನ ಇಟ್ಟಿದ್ದಾರೆಲೆಕ್ಕ ಮಾಡುತ್ತಿದ್ದಾರೆಗುಣಿಸಿ ಭಾಗಿಸಿ ಕಳೆದು ಕೂಡಿಸಿಹಳೆಯ ಹಾಳೆಯಲಿಗೀಚಿದ ಅಂಕಿಗಳನು ಆಯ್ದುಕೊಂಡುಹುಟ್ಟಿದ ದಿನ ಹುಡುಕುತ್ತಿದ್ದಾರೆ ಸಾಯಲುತಯಾರಿಲ್ಲ. + +“ನಾನು ಸತ್ತರೆ” + +ಅಕಸ್ಮಾತ್ನಾನು ಸತ್ತರೆಒಬ್ಬ ಒಳ್ಳೆಯ ಕವಿ ಸತ್ತನೆಂದುಊರಿನಲ್ಲಿಯ ಎಲ್ಲಸಾಹಿತಿಗಳು ಸೇರಿಸ್ಮರಣೆಗೋಸ್ಕರನನ್ನ ಮನೆಯ ಮುಂದಿನಚಿಕ್ಕ ಗಾರ್ಡನ್ನಿನಲ್ಲಿಹಾಕಿದಪೆಂಡಾಲ್ ಕೆಳಗೆ ಕುಳಿತುನನ್ನೆಲ್ಲಾ ಕವಿತೆಗಳನ್ನು ಓದಬೇಡಿ + +ನನ್ನ ಹೆಂಡತಿಗೂಪಕ್ಕ ಕುಳಿತ ಅವಳ ಸವತಿಗೂಗೊಂದಲವಾಗಬಹುದು.. + + + +ಅಪ್ಪಟ ಕವಿ ಮತ್ತು ಒಳ್ಳೆಯ ಕವಿಯೊಬ್ಬ ನಮ್ಮೊಂದಿಗಿಲ್ಲದ ದಿನವಿದು. ಬೇಬರ್ಷಿ ಬದುಕು ಅಂತ ಒಂದು ಪದ್ಯ ಐತಿ ಅದನ್ನ ಬರಿಯೋದಕ್ಕ ಯಾಕೋ ಮನಸ್ಸು ಒಪ್ತಿಲ್ಲ. ಗೆಳೆಯ ಇವತ್ತು ಜೊತೆಗಿದ್ದಿದ್ರೆ ಹಠ ಮಾಡಿಯಾದ್ರು ಪುಸ್ತಕದ ಬಿಡುಗಡೆಗೆ ನನ್ನ ಕರೆಸ್ಕೊತಿದ್ದ. ನಾನು ಹಿಂಗ ನೆಪಹೇಳಿ ಉಳಿದುಕೊಳ್ಳತಿರಲಿಲ್ಲವೇನೊ. ಇಲ್ಲದ ಗೆಳೆಯನ ಇರುವಿಕೆ ಬಯಸಿ ಗೆಳೆಯರೆಲ್ಲ ನಿಂತು ಪುಸ್ತಕ ಮಾಡ್ತಿದ್ದಾರೆ. ಅವರೆಲ್ಲರ ಎದೆಯೊಳಗ ಅನಿಲ ಇದ್ದಾನೆ ಇರ್ತಾನೆ. ಅವನ ಮಡದಿ ಮತ್ತ್ ಮಗನಿಗೆ ದೇವರು ಶಕ್ತಿ ತುಂಬಲಿ. ಕವಿತೆಗಳು ಅವನ ಹೆಸರನು ಉಸಿರಲಿ.“ಹೊಸ ಅಧ್ಯಾಯ”ದ ಕವಿತೆಗಳಿಗೆ ಶುಭಾಶಯ. + +ದೀಪಾ ಗೋನಾಳ ಪೋಸ್ಟ್‌ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ತಿರುಗಾಟ, ಇಷ್ಟ. ಕವಿತೆ ಅಂದ್ರೆ ಹುಚ್ಚು, ಕತೆ ಅಂದ್ರೆ ಪ್ರಾಣ. “ತಂತಿ ತಂತಿಗೆ ತಾಗಿ” ಪ್ರಕಟಿತ ಕವನ ಸಂಕಲನ \ No newline at end of file diff --git a/Kenda Sampige/article_340.txt b/Kenda Sampige/article_340.txt new file mode 100644 index 0000000000000000000000000000000000000000..68dc007aac221c4e61b90387380bc601c95ecfd9 --- /dev/null +++ b/Kenda Sampige/article_340.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|Nov 3, 2019|ವಾರದ ಕಥೆ,ಸಾಹಿತ್ಯ| 0 Comments + +“ಚೀಂಕ್ರನು ಯೋಚಿಸಿ ಯೋಚಿಸಿ ಕೊನೆಗೊಂದು ಸಂಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳುಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರಾಗುತ್ತ ಹೋದರು. ಹಿರಿಯವನಾದ ಸುಂದರನು ಬಿ.ಎ. ಬಿ.ಎಲ್. ಆಗಿ ಮದ್ರಾಸಿನಲ್ಲೆ ಪ್ರಖ್ಯಾತ ವಕೀಲನೆನಿಸಿಕೊಂಡ.” + +byಕೆಂಡಸಂಪಿಗೆ|Oct 28, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಇಪ್ಪತ್ತರ ದಶಕದಲ್ಲಿ ಈ ಮಳಿಗೆ ಎಂತಹ ಖ್ಯಾತಿಯನ್ನು ಪಡೆದಿತ್ತೆಂದರೆ ಇಲ್ಲಿ ಜೇಮ್ಸ್ ಜಾಯ್ಸ್, ಎಜ್ರಾ ಪೌಂಡ್, ಹೆಮಿಂಗ್ವೆ, ಫೋರ್ಡ್ ಮ್ಯಾಡಾಕ್ಸ್ ಫೋರ್ಡ್, ಎಫ್. ಸ್ಕಾಟ್ ಫಿಟ್ಜೆರಾಲ್ಡ್ ಮೊದಲಾದ ಲೇಖಕರು ಒಂದೆಡೆ ಕೂತು ಪಾನೀಯ ಸೇವಿಸುತ್ತ ಚರ್ಚೆ ನಡೆಸುತ್ತಿರುವ ದೃಶ್ಯ ಮಾಮೂಲಾಗಿತ್ತು. ಜೇಮ್ಸ್ ಜಾಯ್ಸ್ ಈ ಮಳಿಗೆಯಲ್ಲಿ ತನ್ನ ಆಫೀಸನ್ನೆ ಸ್ಥಾಪಿಸಿಕೊಂಡುಬಿಟ್ಟಿದ್ದ.” + +byನಾರಾಯಣ ಯಾಜಿ|Oct 27, 2019|ವಾರದ ಕಥೆ,ಸಾಹಿತ್ಯ| 0 Comments + +“ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ ಪೊಸೆಸಿವ್ ನೆಸ್ ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ.” + +byಕೆಂಡಸಂಪಿಗೆ|Oct 21, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಈ ಎಲ್ಲಾ ಕರಾಳ ಅಧ್ಯಾಯಗಳನ್ನು ತಿಳಿದಿದ್ದರಿಂದ ಸಾಕಾನೆಗಳ ಬಗ್ಗೆಯಾಗಲಿ, ಮಾವುತರ ಬಗ್ಗೆಯಾಗಲಿ ನಮಗೆ ಹೆಚ್ಚು ಆಸಕ್ತಿ ಮೂಡಿರಲಿಲ್ಲ. ಆದರೆ, ಮಾವುತ ಮಾರ ಮತ್ತು ಮುದುಮಲೈ ಆನೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾಗ ನಮ್ಮ ನಿಲುವು ಸ್ವಲ್ಪ ಬದಲಾಯಿತು. ಮುದುಮಲೈ ಆನೆ ತಮಿಳುನಾಡಿನ ಮುದುಮಲೈ ಕಾಡಿನ ಸಾಕಾನೆ ಶಿಬಿರದಲ್ಲಿದ್ದ ಒಂದು ಅಪರೂಪದ ಆನೆ.” + +byಡಾ. ಬಿ. ಜನಾರ್ದನ ಭಟ್|Oct 20, 2019|ವಾರದ ಕಥೆ,ಸಾಹಿತ್ಯ| 0 Comments + +“ಮೇಲ್ಜಾತಿಯ ಹಿಂದುಗಳನ್ನೇ ದೇವರೆಂದು ನಂಬಿ, ಅವರ ಸೇವೆಯನ್ನು ಮಾಡಿಕೊಂಡಿರುವಷ್ಟು ಕಾಲ ಹೊಲೆಯರು! ಹೊಲತಿಯರು! ಧಿಕ್ಕಾರವಿರಲಿ – ಒಡಹುಟ್ಟಿದ ಹಿಂದೂ ಮಾತೆಯ ಮಕ್ಕಳನ್ನು ಈ ಪ್ರಕಾರ ದೂರ ನಿಲ್ಲಿಸುವ ಈ ಸಮಾಜ ಪದ್ಧತಿಗೆ ಧಿಕ್ಕಾರವಿರಲಿ. ಹಿಂದೂ ಮತವನ್ನು ತಿರಸ್ಕರಿಸಿ, ಕ್ರೈಸ್ತ ಅಥವಾ ಮಹಮ್ಮದೀಯ ಮತವನ್ನು…” + +byಆಶಾ ಜಗದೀಶ್|Oct 14, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಬಹಳ ಗಮನದಲ್ಲಿಟ್ಟುಕೊಳ್ಳಬೇಕಾದದ್ದು. ಕಾರಣ ಕವಿ ತನ್ನ ಒಳಗಿನ ಪ್ರಪಚಂದಲ್ಲಿ ಕಣ್ಣು ತೆರೆದುಕೊಂಡ ಸಮಯದಲ್ಲಿಯೇ ಹೊರಗಿನ ಪ್ರಪಂಚಕ್ಕೂ…” + +byಡಾ. ಬಿ. ಜನಾರ್ದನ ಭಟ್|Oct 13, 2019|ವಾರದ ಕಥೆ,ಸಾಹಿತ್ಯ| 0 Comments + +“ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ.” + +byಕೆಂಡಸಂಪಿಗೆ|Oct 7, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಇಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ.” + +byಧನಪಾಲ ನಾಗರಾಜಪ್ಪ|Oct 6, 2019|ವಾರದ ಕಥೆ,ಸಾಹಿತ್ಯ| 1 Comment + +“ದಿಗಿಲುಗೆ ಪರ್ಯಾಯ ಪದದಂತೆ ನೀನು ಮುಖವನ್ನು ಹಾಗೆ ಯಾಕೆ ಮಾಡಿಕೊಂಡೆ? ಮೊದಲು ನೀನು ನನ್ನ ಬದುಕಿನ ವಿಷಮವಾದ ಸಂಗತಿಗಳಿಂದ ಹೊರಗೆ ಬಂದುಬಿಡು. ನಾವು ಹೀಗೆ ನೋವಿನಲ್ಲಿ ಕಳೆದುಕೊಂಡ ಯಾವ ನಿಮಿಷವೂ ಮತ್ತೆ ಮರಳಿ ಬರುವುದಿಲ್ಲ. ಜೀವನ ದೇವರ ಕೊಟ್ಟ ವರ. ಹಾಗೆಂದು ನನಗೆ ನೋವೇ ಇಲ್ಲ ಎಂದುಕೊಳ್ಳಬೇಡ. ಎದೆಯಾಳದಲ್ಲಿ ಮಡುಗಟ್ಟಿರುವ ನೋವು ಹರಿತವಾಗಿ ಸದಾ ಚುಚ್ಚುತ್ತಲೇ ಇರುತ್ತದೆ.” \ No newline at end of file diff --git a/Kenda Sampige/article_341.txt b/Kenda Sampige/article_341.txt new file mode 100644 index 0000000000000000000000000000000000000000..d8fffb4f9974b5df87f0c9cdeab3518b9502661c --- /dev/null +++ b/Kenda Sampige/article_341.txt @@ -0,0 +1,225 @@ + + +ನಾನು ಮನೆಗೆ ಬರುವ ವೇಳೆಗಾಗಲೇ ನಿರ್ಧಾರ ಮಾಡಿದಂತಿದೆ. ಇದಕ್ಕೆ ಮೊದಲು ಇಲ್ಲಿ ಯಾವುದೋ ಯುದ್ಧ ನಡೆದಂತೆ ಭಾಸವಾಗುತ್ತಿದೆ. ನನ್ನ ಭಾವಮೈದುನ ಕೂಡಾ ಇಲ್ಲೇ ಇದ್ದಾನೆ. ಆತನ ಮುಖದಲ್ಲಿ ಏನೋ ಸಾಧಿಸಿದಂತಹ ತೃಪ್ತಿ ಎದ್ದುಕಾಣುತ್ತಿದೆ. ಸುಧಾ ಮಾತ್ರ ಆತಂಕದಿಂದಿದ್ದಾಳೆ. ನನ್ನ ಚಿಕ್ಕ ಮಗಳು ಶೃತಿ ರಾಜನ ಕೈಲಿ ಸಿಕ್ಕಿಹಾಕಿಕೊಂಡ ಸೈನಿಕನಂತಿದ್ದಾಳೆ. ಅವಳು ಗೋಡೆಗೆ ಅಂಟಿಕೊಂಡು ಭಯದಿಂದ ಮುದುರಿ ಕುಳಿತಿದ್ದಾಳೆ. + +ನನ್ನನ್ನು ನೋಡಿದ ಮೇಲೆ ವಾತಾವರಣ ಮತ್ತಷ್ಟು ಗಂಭೀರವಾಯಿತು. ಏನು ನಡೆಯಿತೆಂದು ನಾನು ಕೇಳಲಿಲ್ಲ. ನನಗೆ ಕೇಳಬೇಕೆನಿಸಲಿಲ್ಲ. ಮೂವರು ನನ್ನತ್ತ ವಿಚಿತ್ರವಾಗಿ ನೋಡಿದರು. + +ನನ್ನ ಮೌನ ಒಬ್ಬೊಬ್ಬರಿಗೆ ಒಂದೊಂದು ರೀತಿ ಅರ್ಥವಾದಂತಿದೆ. ಶೃತಿ ತಲೆ ಬಗ್ಗಿಸಿದಳು. ನನ್ನ ಮೈದುನನ ಮುಖದಲ್ಲಿ ಕೋಪ ಎದ್ದು ಕಾಣುತ್ತಿದೆ.ಸುಧಾ ಮಾತ್ರ ತನ್ನ ದುಃಖವನ್ನು ನನ್ನೊಂದಿಗೆ ಹಂಚಿಕೊಳ್ಳುತ್ತ ‘ಹೊರಗೆ ಹೋದರೆ ತಲೆಯೆತ್ತಿ ಮಾತನಾಡದ ಹಾಗಾಗಿದೆ. ಯಾರಿಗೆ ಏನು ಹೇಳಲಿ?ʼ ಎಂದಳು ನೋವಿನಿಂದ. + +ನನ್ನ ಪಾಡಿಗೆ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿಕೊಳ್ಳುತ್ತಿದ್ದೆ. ಮೈದುನ ಜೋರಾಗಿ, ‘ಅಕ್ಕಾ ನಾನು ಹೋಗುತ್ತಿದ್ದೇನೆ. ಯಾವುದಕ್ಕೂ ನನಗೆ ಫೋನ್ ಮಾಡಿ ಹೇಳು. ಒಂದು ಮಾತ್ರ ನೆನಪಿಟ್ಟುಕೋ.. ಕೈ ಮೀರಿದ ಮೇಲೆ ಬಾಧೆಪಟ್ಟರೆ ಪ್ರಯೋಜನವಿಲ್ಲ. ಕೆಲವು ನಿರ್ಧಾರಗಳನ್ನು ನೀನು ಮಾತ್ರ ತೆಗೆದುಕೊಳ್ಳಬೇಕುʼ ಒತ್ತಿ ಹೇಳುತ್ತ ಹೊರಟನು. + +ಆ ನಿರ್ಧಾರ ಏನೆಂದು ತಿಳಿಯದಿದ್ದರೂ ಏನೋ ತಲೆ ಮೇಲೆ ಚಪ್ಪಡಿ ಎಳೆಯುವಂತಹುದೇ ಇರುತ್ತದೆ ಎಂದು ಮಾತ್ರ ಗ್ರಹಿಸಿದೆ. ನನ್ನ ಜೀವನದಲ್ಲಿ ನನಗಿಂತಲೂ ಅವನಿಗೇ ಅಧಿಕಾರ ಜಾಸ್ತಿ. ಈ ವಿಷಯ ನನಗೆ ತಿಳಿಯುವ ವೇಳೆಗೆ ಪರಿಸ್ಥಿತಿ ನನ್ನ ಕೈ ಜಾರಿತ್ತು. + +ಹಿಂದೆ ಒಮ್ಮೆ ಇವನು ಇದೇ ರೀತಿ ನನ್ನನ್ನು ನೋಡಿ, ಸುಧಾಳಿಗೆ ಹೀಗೇ ಗಟ್ಟಿಯಾಗಿ ಕೂಗಿ ಹೇಳಿ ಹೋಗಿದ್ದನು. + +‘ಇವನ ಮುಖ.. ನನ್ನನ್ನು ಬಿಟ್ಟು ಇವನೇನು ನಿರ್ಧಾರ ತೆಗೆದುಕೊಳ್ಳುವುದುʼ ಎಂದುಕೊಂಡೆ. ಆದರೆ ನನ್ನ ಅನಿಸಿಕೆ ತಲೆಕೆಳಗಾಗಿ ಅವನ ನಿರ್ಧಾರದಂತೆಯೇ ನಮ್ಮ ಸಂಸಾರದ ದಿಕ್ಕು ಬದಲಾಯಿತು. ಶೃತಿಯನ್ನು ಖಾಸಗಿ ಶಾಲೆಗೆ, ದೊಡ್ಡ ಮಗಳನ್ನು ಕಾರ್ಪೊರೇಟ್ ಕಾಲೇಜಿಗೆ ಸೇರಿಸಲಾಯಿತು. ನನ್ನ ಏಳು ಕಿಲೋಮೀಟರ್ ಪ್ರಯಾಣ ಮೂವತ್ತು ಕಿಲೋಮೀಟರ್ ಗೆ ಏರಿತು. + +ತಕ್ಷಣ ಎಲ್ಲ ನೆನಪಾಯಿತು. ಗಾಬರಿಯಿಂದ ಆತುರಾತುರವಾಗಿ ಲುಂಗಿ ಸುತ್ತಿಕೊಂಡು ‘ಸುಧಾ.. ಏನಾಯಿತು? ಅವನೇನೋ ನಿರ್ಧಾರವೆನ್ನುತ್ತಿದ್ದಾನೆʼ ಎನ್ನುತ್ತ ಹೊರಗೆ ಬಂದೆ. + +ಸುಧಾ ಏನೂ ಹೇಳಲಿಲ್ಲ, ಮತ್ತೊಮ್ಮೆ ಒತ್ತಿ ಕೇಳಿದೆನು. + +ಪ್ರೋಗ್ರೆಸ್ ಕಾರ್ಡ್ ನನ್ನ ಮುಂದೆ ಇಟ್ಟಳು. + +ನಾನು ವಿಚಿತ್ರವಾಗಿ ನೋಡಿದೆನು. ಸುಧಾ ನನ್ನತ್ತ ನೋಡುತ್ತ, ‘ಥರ್ಟಿ ಫಿಫ್ತ್ ರಾಂಕ್… ಔಟ್ ಆಫ್ ಫಾರ್ಟಿ.. ಹೀಗಾದರೆ ಹೇಗೆ? ಹೋದ ವರ್ಷ ಹೇಗೋ ಆಯಿತು. ಈಗ ಎಸ್.ಎಸ್.ಎಲ್.ಸಿʼ ಬೇಸರದಿಂದ ಹೇಳಿದಳು. + +ಶೃತಿ ಒಮ್ಮೆ ನನ್ನತ್ತ, ಮತ್ತೊಮ್ಮೆ ಪ್ರೋಗ್ರೆಸ್ ಕಾರ್ಡ್ ನತ್ತ ಭಯದಿಂದ ನೋಡುತ್ತಿದ್ದಾಳೆ. + +ಸುಧಾ ಸ್ವಲ್ಪ ಸಮಾಧಾನ ಮಾಡಿಕೊಂಡು ‘ಹೋದ ಸಲ ಏನು ಪ್ರಾಮಿಸ್ ಮಾಡಿದ್ದಳು..? ಸೆಕೆಂಡ್ ಯುನಿಟ್ ನಲ್ಲಿ ಒಳ್ಳೆ ಮಾರ್ಕ್ಸ್ ತೆಗೆಯುತ್ತೀನೆಂದು ಹೇಳಿರಲಿಲ್ಲವಾ..! ಎಲ್ಲಿ..? ಈಗಲೂ ಅಷ್ಟೆ! ಯಾವುದರಲ್ಲೂ ಹತ್ತು ದಾಟಿಲ್ಲʼ ಎಂದಳು. + +ನಾನು ಮಾರ್ಕ್ಸ್ ನೋಡಿದೆ. ಅದು ನಿಜವೇ! + +ಒಂದು ಕ್ಷಣಕ್ಕೆ ನನಗೆ ಕೋಪ ನೆತ್ತಿಗೇರಿ ತೆಗದು ಕೆನ್ನೆಗೆ ಬಾರಿಸಬೇಕೆನಿಸಿತು. ಈಗಾಗಲೇ ಆ ಕೆಲಸ ಆದಂತಿದೆ. ಅವಳು ಕಣ್ಣೀರಿನಿಂದ ತೊಪ್ಪೆಯಾಗಿದ್ದಾಳೆ. ನನ್ನಲ್ಲಾದ ಬದಲಾವಣೆ ಕಂಡು ಮತ್ತಷ್ಟು ಬೆದರುತ್ತಿದ್ದಾಳೆ. + +ಸುಧಾ ‘ಈ ವಾರವೇ ಪೇರೆಂಟ್ಸ್ ಮೀಟಿಂಗ್. ಫಸ್ಟ್ ಮೀಟಿಂಗ್ ನಲ್ಲಿ ಹೇಗೋ ನಿಭಾಯಿಸಿದೆ. ಮಗಳನ್ನು ಏಕೆ ಓದಿಸಲಿಲ್ಲವೆಂದು ಮುಖಕ್ಕೆ ಹೊಡೆದಂತೆ ಕೇಳುತ್ತಾರೆ. ಏನೆಂದು ಹೇಳೋದು? ಎಲ್ಲರೆದುರು ಮರ್ಯಾದೆ ಹೋಗುತ್ತದೆʼ ಎಂದಳು. + +ಮೊದಲ ಮೀಟಿಂಗ್ ದಿನವೂ ಹೀಗೇ ಗಲಾಟೆ. + +‘ನಾನು ಒಂದು ತೊಟ್ಟು ನೀರೂ ಮುಟ್ಟುವುದಿಲ್ಲ. ಮರ್ಯಾದೆ ಹೋದಮೇಲೆ ಜೀವನವೇಕೆ.. ನಮ್ಮ ಅಣ್ಣನ ಮಗಳು ಐಶ್ವರ್ಯ ಸ್ಕೂಲಿಗೇ ಫಸ್ಟ್ ಅಂತೆ. ಅವರು ಎಷ್ಟು ಸಂತೋಷವಾಗಿದ್ದಾರೆ ಗೊತ್ತಾ. ಎರಡು ದಿನ ಅತ್ತಿಗೆ ಹಬ್ಬಕ್ಕೆ ಊರಿಗೆ ಹೋಗಿದ್ದರೂ ಅವಳು ಮನೆಯಲ್ಲಿ ಒಬ್ಬಳೇ ಇದ್ದು ಓದಿಕೊಂಡಳಂತೆ. ಮತ್ತೆ ಇವಳು.. ನಾನು ಯಾವಾಗಲಾದರೂ ಊರಿಗೆ ಹೋಗುತ್ತೇನೆಂದರೆ ಸಾಕು.. ನನಗಿಂತ ಮೊದಲು ರೆಡಿಯಾಗಿರುತ್ತಾಳೆʼ ಎಂದಳು ಕೋಪದಿಂದ. + +‘ಅಮ್ಮ ಪ್ಲೀಸ್.. ತಿನ್ನಮ್ಮಾ! ನೀನು ತಿನ್ನದಿದ್ದರೆ ಅಪ್ಪ ಕೂಡ ತಿನ್ನುವುದಿಲ್ಲ.. ನಾನೂ ತಿನ್ನುವುದಿಲ್ಲʼ ಶೃತಿ ಗೋಗರೆದಳು. + +‘ತಿನ್ನದಿದ್ದರೆ ಸಾಯಿ.. ನಿನಗೆ ಓದಲ್ಲ, ತಿನ್ನೋದು ಮಖ್ಯ.. ನನಗೆ ಓದೇ ಮುಖ್ಯ. ನಿನಗೇನು ಕಡಿಮೆ ಮಾಡಿದ್ದೇನೆ..? ಕೇಳಿದ್ದೆಲ್ಲ ಕ್ಷಣದಲ್ಲಿ ನಿನ್ನೆದುರಿಗಿಡುತ್ತಿದ್ದೇನೆʼ ಸುಧಾ ಕೋಪದಿಂದ ಮತ್ತಷ್ಟು ಕೂಗಾಡಿದಳು. + +ಶೃತಿ ಅಳುತ್ತಾ ‘ಅಮ್ಮ.. ಪ್ಲೀಸ್ ಅಮ್ಮಾ.. ನೆಕ್ಸ್ಟ್ ಟೆಸ್ಟ್ ಗೆ ಚೆನ್ನಾಗಿ ಓದುತ್ತೀನಮ್ಮಾ..ʼ ಎಂದಳು. + +‘ಪ್ರಾಮಿಸ್ʼ ಎನ್ನುತ್ತ ಶೃತಿಯತ್ತ ಕೈ ಚಾಚಿದಳು ಸುಧಾ. + +ನಡುಗುತ್ತಿದ್ದ ಕೈಗಳಿಂದ ಶೃತಿ ‘ಪ್ರಾಮಿಸ್ʼ ಎನ್ನುತ್ತ ಕಣ್ಣೀರು ಒರೆಸಿಕೊಂಡಳು. ಅವಳು ಸ್ವಲ್ಪವಾದರೂ ಬದಲಾಗುತ್ತಾಳೆಂದು ಸುಧಾ, ಅಮ್ಮನಿಗೆ ಸಮಾಧಾನವಾಗಿದೆಯೆಂದು ಶೃತಿ ಸ್ವಲ್ಪ ಹೊತ್ತಿಗೆ ಮಾಮೂಲಾಗಿಬಿಟ್ಟರು. ನನಗೆ ಆ ರಾತ್ರಿಯಿಡೀ ನಿದ್ದೆ ಹತ್ತಲಿಲ್ಲ. + +ಈಗ ಶೃತಿಯನ್ನು ನೋಡಿದ ಮೇಲೆ ನನ್ನ ಕೋಪ ಇಳಿಯಿತು. ಅವಳ ಎಳೆ ಕೆನ್ನೆಗಳು ಕಣ್ಣೀರ ಕರೆಗಟ್ಟಿವೆ. ಸುಧಾಳ ಮಾತುಗಳಿಗೆ ನಗಬೇಕೋ ಅಳಬೇಕೋ ಅರ್ಥವಾಗಲಿಲ್ಲ.ಏನೋ ಒಂದು ಹೇಳಬೇಕೆಂದು ‘ಸರಿ ಬಿಡು! ಕ್ವಾರ್ಟರ್ಲಿ ವೇಳೆಗೆ ಚೆನ್ನಾಗಿ ಓದುತ್ತಾಳೆʼ ಎಂದೆನು. + +ಅಷ್ಟೇ! ಸುಧಾ ಕಣ್ಣುಗಳು ಕೆಂಡದುಂಡೆಗಳಾದವು. ನಾನು ಸುಧಾಳಿಂದ ಶೃತಿಯತ್ತ ದೃಷ್ಠಿ ಹರಿಸಿದೆ. ಒಂದು ಕ್ಷಣ ಹೊಳೆದಂತಿದ್ದ ಅವಳ ಮುಖ ಮತ್ತೆ ಬಾಡಿತು.ಸುಧಾ ಕೋಪದಿಂದ ಒಳಗೆ ಹೋದಳು. ಶೃತಿ ಈಗ ಸ್ವಲ್ಪ ಭಯ ಬಿಟ್ಟು ಕುಳಿತಳು. ಹೋಗುವಾಗ ನನ್ನತ್ತ ದುರುಗುಟ್ಟಿಕೊಂಡು ನೋಡುತ್ತ ಹೋದಳು ಸುಧಾ. ಅದುವರೆಗೂ ಅವಳಿಗೆ ಈ ಮೊದಲು ಕೊಟ್ಟಿದ್ದ ಮಾತು ನೆನಪಾಗಲಿಲ್ಲ ನನಗೆ. + +‘ಮಕ್ಕಳನ್ನು ಮುದ್ದುಮಾಡುವುದಕ್ಕೂ ಒಂದು ಸಮಯವಿದೆ. ಯಾವಾಗಲೂ ಮುದ್ದುಮಾಡಿದರೆ ತಲೆ ಮೇಲೆ ಕುಳಿತುಕೊಳ್ಳುತ್ತಾರೆʼ ಒಮ್ಮೆ ಸುಧಾ ನನ್ನನ್ನು ದಂಡಿಸುತ್ತ ಹೇಳಿದಳು. + +‘ನನಗೆ ಇನ್ಯಾರಿದ್ದಾರೆ ಸುಧಾ.. ದೊಡ್ಡವಳು ಹಾಸ್ಟೆಲಿನಲ್ಲಿದ್ದಾಳೆ! ಇನ್ನೊಂದು ವರ್ಷವಾದರೆ ಇವಳು ಕೂಡಾ ಹೊರಟುಹೋಗುತ್ತಾಳೆ. ಅದುವರೆಗಾದರೂ ಖುಷಿಯಾಗಿರಲಿʼ ನಾನು ಹೇಳಿದೆ. + +ಅದಕ್ಕವಳು ‘ನಿಮಗೆ ಗೊತ್ತಿಲ್ಲ, ಇದು ಶಿಸ್ತಿಗೆ ಸಂಬಂಧಪಟ್ಟ ವಿಚಾರ. ಮಕ್ಕಳ ಒಳಿತನ್ನು ಬಯಸುವ ಪಾಲಕರು ಹಾಗೆ ಯೋಚಿಸುವುದಿಲ್ಲ. ಮಕ್ಕಳ ವಿದ್ಯಾಭ್ಯಾಸದ ಕುರಿತು ನೀವು ಜವಾಬ್ದಾರಿ ತೆಗೆದುಕೊಳ್ಳಿ, ನಾನು ಮೌನವಾಗಿರುತ್ತೇನೆ. ಇಲ್ಲವೇ ನಾನು ಜವಾಬ್ದಾರಿ ತೆಗೆದುಕೊಳ್ಳುತ್ತೇನೆ, ನೀವು ಮೌನವಾಗಿರಬೇಕುʼ ಕಡ್ಡಿ ಮುರಿದಂತೆ ಹೇಳಿದ್ದಳು. + +ಆಕೆ ಬಹಳ ಗಂಭೀರವಾಗಿ ಹೇಳಿದಾಗ ಯಾಕಪ್ಪ ಇಲ್ಲದ ಫಜೀತಿಯೆಂದು ‘ಸರಿ.. ನಾನೇ ಮೌನವಾಗಿರುತ್ತೇನೆʼ ಎಂದು ಹೇಳಿದೆ.‘ಮೌನವಾಗಿ ಅಲ್ಲ ಓದಿನ ವಿಚಾರವಾಗಿ ಬೈಯ್ಯುವಾಗ ನೀವು ನನ್ನನ್ನು ಬೆಂಬಲಿಸಬೇಕುʼ ಮಾತು ತೆಗೆದುಕೊಂಡಿದ್ದಳು. ಈಗ ನಾನು ಆ ಮಾತು ತಪ್ಪಿದ್ದಕ್ಕಾಗಿ ಅವಳ ಕೋಪ ಮತ್ತಷ್ಟು ಹೆಚ್ಚಾಗಿದೆ. + +ಸುಧಾಳನ್ನು ಈಗ ಸಮಾಧಾನ ಪಡಿಸುವುದು ಹೇಗೆಂದು ಯೋಚಿಸುತ್ತಿರುವಾಗಲೇ ಹೊರಗಿನಿಂದ ಹಾರನ್ ಸದ್ದು. ನನ್ನ ಸ್ನೇಹಿತ ವಾಸು ಒಳಗೆ ಹೆಜ್ಜೆಯಿಡುತ್ತಲೇ ‘ಹೋರಾಟಗಳ ಕಾಲವೆಲ್ಲ ಹೋಗುತ್ತಿದೆ ಕಣೋ.. ಹೆಸರಿಗೆ ಫೆಡರೇಷನ್… ಸದಸ್ಯರು.. ಕೈಮಗ್ಗದ ಕಾರ್ಮಿಕರಿಗೆ ನೈತಿಕ ಬೆಂಬಲವಾಗಿ ರ್ಯಾಲಿ ಮಾಡೋಣವೆಂದುಕೊಂಡೆ. ಬೇಕೆಂದಾಗ ಯಾರೂ ಮುಂದೆ ಬರುವುದಿಲ್ಲ.. ಕೇಬಲ್ ಟಿ.ವಿ. ಹಾಕು ನೋಡೋಣ’ ಎನ್ನುತ್ತ ರಿಮೋಟ್ ತೆಗೆದುಕೊಂಡು ಚಾನೆಲ್ ಬದಲಾಯಿಸಿದನು. + +ನ್ಯೂಸ್ ಗೆ ಸ್ವಲ್ಪ ಸಮಯವಿತ್ತು. + +‘ಅಬ್ಬಾ ಸರಿಯಾದ ಸಮಯಕ್ಕೇ ಬಂದೆʼ ಮನಸಿನಲ್ಲಿ ಅಂದುಕೊಳ್ಳುತ್ತ ಅವನೊಂದಿಗೆ ಮಾತಿಗಿಳಿದೆ. ಶೃತಿ ಒಳಗೆ ಹೋದಳು. + +‘ನಾವು ಒಂದು ದೃಢ ನಿರ್ಧಾರ ತೆಗೆದುಕೊಂಡಿದ್ದೇವೆ..ʼ ಟಿ.ವಿ. ನೋಡುತ್ತ ಹೇಳಿದನು ವಾಸು. + +ಏನೆಂದು ನಾನು ಕೇಳುವ ಮೊದಲೇ ‘ರಾಜು ಪರೀಕ್ಷೆ ಮುಗಿಯುವವರೆಗೂ ಎಲ್ಲಿಗೂ ಹೋಗಬಾರದು, ಯಾರನ್ನೂ ಮನೆಗೆ ಕರೆಯಬಾರದು ಎಂದುಕೊಂಡಿದ್ದೇವೆ. ಅವನಿಗೆ ತ್ರಿಬಲ್ ಐಟಿ ಟಾರ್ಗೆಟ್ ಇಟ್ಟಿದ್ದೇವೆ. ಹೋಂ ಟ್ಯೂಷನ್ ವ್ಯವಸ್ಥೆ ಮಾಡಿದ್ದೇವೆ..’ ಎಂದನು. + +ಆ ಮಾತು ಕೇಳಿ ‘ಹಾಗೆ ಹೇಳಿ ಅಣ್ಣಾ..ʼ ಎನ್ನುತ್ತ ಅವನೆದುರೇ ಸುಧಾ ಎಲ್ಲಿ ನನಗೆ ಕ್ಲಾಸ್ ತೆಗೆದುಕೊಳ್ಳುವಳೋ ಎಂದುಕೊಂಡೆನು. ಸದ್ಯ ಹಾಗೇನೂ ಆಗಲಿಲ್ಲ. ನಮ್ಮಿಬ್ಬರಿಗೂ ಟೀ ತಂದಿಟ್ಟು ಒಳಗೆ ಹೋದಳು. + +‘ನಿಮಗೇನಪ್ಪಾ.. ನೀನೇ ಒಬ್ಬ ಮೇಷ್ಟ್ರು.. ಅದೃಷ್ಟ. ಏನು, ಹೇಗೆ, ಎಲ್ಲಿ ಓದಿಸಬೇಕು ಎಲ್ಲ ತಿಳಿದಿರುತ್ತದೆ. ನಮಗೆ ಅವೆಲ್ಲ ಹೇಗೆ ತಿಳೀಬೇಕು ಹೇಳು..’ ಎಂದೆ. + +‘ತಿಳಿದವರು ಹೇಳಿದರೆ ಕೇಳಬೇಕಲ್ಲವಾ!ʼ ಸುಧಾ ಗೊಣಗಿದಳು. + +ವಾಸು ನಗುತ್ತ ‘ರೆವಿನ್ಯೂ ಡಿಪಾರ್ಟ್ಮೆಂಟ್ ಚೆನ್ನಾಗಿ ಸಂಪಾದಿಸುತ್ತೀರಿ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿಯೇ ಅಲ್ಲವಾ, ಜೀವನವಿಡೀ ಹಾಯಾಗಿರಬಹುದು!ʼ ಎಂದು ಕೊಂಕಾಗಿ ಹೇಳಿದನು. + +‘ಹಾಗಾದರೂ ಇದ್ದಿದ್ದರೆ ಚೆನ್ನಾಗಿತ್ತುʼ ಎಂದಳು ಸುಧಾ. + +ಟೀ ಕುಡಿಯುತ್ತ ಅವನು ಚಾನೆಲ್ ಬದಲಾಯಿಸುತ್ತಿದ್ದಾನೆ. + +ಸುಧಾ ಅಡುಗೆ ಮಾಡುತ್ತಿದ್ದಾಳೆ. + +ವಾಸು ನಾನು ಅದೂ ಇದೂ ಹರಟುತ್ತಿದ್ದಾಗ ಮಾತು ನಮ್ಮ ಸ್ನೇಹಿತ ಸುರೇಂದ್ರನ ಮಗನತ್ತ ಹೊರಳಿತು. + +‘ಅವನು ತುಂಬಾ ದೊಡ್ಡವನಾಗಿಬಿಟ್ಟನಪ್ಪಾ.. ಕಾಲೇಜಿನಲ್ಲಿ ಯಾವುದೋ ಹುಡುಗಿಗೆ ಲೆಟರ್ ಬರೆದು, ಅದೇ ದೊಡ್ಡ ಗಲಾಟೆಯಾಯಿತು…ʼ ಎಂದನು. + +ನನಗೆ ತಕ್ಷಣ ಸುರೇಂದ್ರ ಸಿಕ್ಕಾಗೆಲ್ಗ, ‘ಈ ಕಂಡಕ್ಟರ್ ಕೆಲಸದಲ್ಲಿ ಏನೂ ಉಳಿತಾಯ ಮಾಡಲಾಗಲಿಲ್ಲ ಕಣೋ.. ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಅದೊಂದೇʼ ಎಂದು ಹೇಳುವುದು ನೆನಪಾಯಿತು. + +‘ಪಾಪ ಸುರೇಂದ್ರ ಅಮಾಯಕ ಕಣೋ.. ಅವನು ಎಷ್ಟೋ ಆಸೆ ಇಟ್ಟುಕೊಂಡಿದ್ದ. ತಂದೆ ಮಾನ ಕಳೆಯೋ ಮಕ್ಕಳು ಯಾಕಾದರೂ ಹುಟ್ಟುತ್ತಾರೋʼ ವಾಸು ಬೇಸರದಿಂದ ಹೇಳಿದ. + +‘ಕಷ್ಟಪಟ್ಟು ಓದುವ ನಮ್ಮ ಮಕ್ಕಳು ಹೇಗೆ ಕೆಟ್ಟವರಾಗುತ್ತಾರೆ’ ಎಂದು ನಾನು ಬಾಯಿ ತೆಗೆಯುವಷ್ಟರಲ್ಲೇ ಸುಧಾ ಹೊರಗೆ ಬಂದು ‘ಓದು.. ಓದು ಮುಖ್ಯ..ಯಾರಾದರೂ ಎಷ್ಟು ಪರ್ಸೆಂಟ್ ಬಂದಿದೆಯೆಂದು ಕೇಳುತ್ತಾರೇ ಹೊರತು ಏನು ಮಾಡಿದನೆಂದು ಕೇಳುವುದಿಲ್ಲ ಅಲ್ಲವಾ..ʼ ಎಂದಳು.ಇನ್ನು ನಾನು ಈಗ ಮಾತನಾಡಿದರೆ ಜಾಡಿಸಿಬಿಡುತ್ತಾಳೆಂದುಕೊಂಡು ತೆಪ್ಪಗಾದೆ. + +ಈಗ ಮತ್ತೆ ವಾಸು ಶಂಕರನ ಕತೆ ತೆಗೆದ. ‘ನಮ್ಮ ಶಂಕರ್ ಮಗ ಕೂಡ ಅಷ್ಟೇ! ಅವನ ಕಣ್ಣಿಗೆ ಬಿದ್ದದ್ದೆಲ್ಲ ಮಾಯ. ನೆಂಟರಿಷ್ಟರ ಮನೆಗೆ ಹೋದಾಗ ಎಲ್ಲರೂ ನೇರವಾಗಿಯೇ ಹೇಳುತ್ತಾರಂತೆ. ಅವರ ಅಪ್ಪನ ಪರ್ಸಿನಲ್ಲಿರುವ ಹಣ ಕೂಡಾ…’ + +ಒಮ್ಮೆ ಶಂಕರ್ ಅಮ್ಮನಿಗೆ ದುಡ್ಡು ಕೊಡಲು ಮಗನ ಕೈಲಿ ಕೊಟ್ಟು ಕಳುಹಿಸಿದರೆ ಆ ದುಡ್ಡಿನಿಂದ ಅವನು ಪಟ್ಟಣದ ಬಸ್ ಹತ್ತಿದ ಘಟನೆ ನೆನಪಾಯಿತು. ಪಾಪವೆನಿಸಿ ‘ಈಗ ಅವನು ಚಿಕ್ಕವನಲ್ಲ, ಇಂಟರ್ ಓದುತ್ತಿದ್ದಾನೆ. ಇನ್ನೂ ಅವನು ಆ ಗುಣ ಬಿಟ್ಟಿಲ್ಲವೆಂದರೆ ಅವನ ಭವಿಷ್ಯತ್ತನ್ನು ಊಹಿಸಿಕೊಂಡರೆ ಭಯವಾಗುತ್ತದೆʼ, ಎಂದೆನು. + +ಆದರೆ ವಾಸು ನನ್ನನ್ನು ಹುಚ್ಚನನ್ನು ನೋಡಿದಂತೆ ನೋಡಿ ‘ಅವನು ಕಾಲೇಜಿಗೇ ಫಸ್ಟ್ ಕಣೋ.. ದಟ್ ಈಸ್ ಗ್ರೇಟ್’ ಎಂದನು. ಹಾಗಲ್ಲವೆಂದು ನಾನು ಏನು ಹೇಳಿದರೂ ವಾಸುವಿನ ವಾದದ ಮುಂದೆ ನನ್ನ ವಿಶ್ಲೇಷಣೆ ಬಿದ್ದುಹೋಯಿತು. + +ಟಿವಿಯಲ್ಲಿ ಜಾಹೀರಾತು ಮುಗಿದು ಹುಟ್ಟಿದ ಹಬ್ಬದ ಶುಭಾಶಯಗಳ ಕಾರ್ಯಕ್ರಮ ಪ್ರಸಾರ ಶುರುವಾಯಿತು. + +ಸುಧಾಳ ಅಕ್ಕನ ವಿಚಾರದಲ್ಲಿ ತಿಂಗಳ ಹಿಂದೆ ನಮ್ಮಿಬ್ಬರಿಗೆ ಹೀಗೆ ವಾದ ಮೊದಲಾಯಿತು. ಅವಳ ಅಕ್ಕ ಬಾತ್ ರೂಮಿನಲ್ಲಿ ಜಾರಿ ಬಿದ್ದು ಮಂಚ ಹಿಡಿದಾಗ ಇಂಜಿನಿಯರಿಂಗ್ ಓದುತ್ತಿದ್ದ ಅವರ ಮಗಳು ಅಮ್ಮನ ಸೇವೆ ಮಾಡಿಕೊಂಡು ಇಲ್ಲೇ ಇದ್ದಳು. + +‘ನನಗೇನೂ ಪರವಾಗಿಲ್ಲ ನೀನು ಹಾಸ್ಟೆಲಿಗೆ ಹೋಗು..ʼ ಎಂದು ಅವಳ ಅಮ್ಮ ಹೇಳಿದರೂ, ಮಗಳು ‘ಅಮ್ಮಾ ನನಗೆ ನೀನು ಮುಖ್ಯ.. ನೀನು ಚೇತರಿಸಿಕೊಂಡ ಮೇಲೆ ನಾನು ಹೋಗುತ್ತೇನೆʼ ಎಂದು ಹಠ ಹಿಡಿದಿದ್ದಳಂತೆ. + +ಕೂಡಲೇ ಅಕ್ಕನಿಂದ ಸುಧಾಳಿಗೆ ಫೋನ್. ಅವರ ಮಗಳು ಸರಿಯಾಗಿಯೇ ಯೋಚಿಸಿದ್ದಾಳೆ ಎಂದು ನಾನು ಸುಧಾಳಿಗೆ ಹೇಳಿದೆ. ಇತ್ತ ನನ್ನ ಬಾಯಿ ಮುಚ್ಚಿಸಿ, ಅಕ್ಕನ ಮಗಳನ್ನು ತರಾಟೆಗೆ ತೆಗೆದುಕೊಂಡು ಹಾಸ್ಟೆಲಿನಲ್ಲಿ ಬಿಟ್ಟುಬಂದಳು. + +ವಾರ್ತೆಗಳು ಶುರುವಾಗಿ ಎಲ್ಲರ ಗಮನ ಅತ್ತ ಹರಿಯಿತು. + +ಕೈಮಗ್ಗ ಕಾರ್ಮಿಕರ ರ್ಯಾಲಿ ಪ್ರಸಾರವಾಯಿತು. ವಾಸು ಬ್ಯಾನರ್ ಹಿಡಿದು ಮುಂದೆ ನಿಂತಿದ್ದಾನೆ. ನಂತರ ಸೆಪ್ಟೆಂಬರ್ ೫ರ ಉಪವಾಸ ಕುರಿತ ವಾಸು ಹೇಳಿಕೆ, ಶಿಕ್ಷಕರ ಬೇಡಿಕೆಗಳನ್ನು ನೆರವೇರಿಸದಿದ್ದರೆ ಪ್ರತಿಭಟನೆ ಖಚಿತ ಎಂದು ಎಚ್ಚರಿಸುತ್ತಿದ್ದಾನೆ. + +ವಾಸು ಟಿ.ವಿ. ಯಲ್ಲಿ ತನ್ನನ್ನು ನೋಡಿಕೊಂಡು ಹುಮ್ಮಸ್ಸಿನಿಂದ ಬೀಗಿ ಹೊರಟನು. + +ಆ ವೇಳೆಗೆ ಸುಧಾ ಸಮಾಧಾನವಾಗಿದ್ದಳು. ‘ನಾವು ಕೂಡ ಟಿ.ವಿ. ಕಟ್ಟಿ ಹಾಕಿಬಿಡೋಣ. ಇವಳೂ ಎಸ್.ಎಸ್. ಎಲ್. ಸಿ ಅಲ್ಲವಾ, ನಮಗೆ ಮಾತ್ರ ಟಾರ್ಗೆಟ್ ಇರುವುದಿಲ್ಲವಾ.. ತ್ರಿಬಲ್ ಐ.ಟಿ. ಅಲ್ಲದಿದ್ದರೂ ಕನಿಷ್ಠ ಪಕ್ಷ ೫೦೦ ಅಂಕ ದಾಟಿದರೆ ಫೀಸ್ ಕನ್ಸೆಷನ್ ಸಿಗುತ್ತದೆ. ಒಂದು ಟೈಮ್ ಟೇಬಲ್ ಇಟ್ಟುಕೊಳ್ಳೋಣ. ನೀವು ಇಂಗ್ಲಿಷ್ ಹೇಳಿಕೊಡಿ, ಸೈನ್ಸ್, ಮ್ಯಾಥ್ಸ್ ಗೆ ನಾನು ಸಹಾಯ ಮಾಡುತ್ತೇನೆ. ನೀವೇನು ಮಾಡುವಿರೊ ನನಗೆ ಗೊತ್ತಿಲ್ಲ, ಕ್ವಾರ್ಟರ್ಲಿ ಪರೀಕ್ಷೆಯಲ್ಲಿ ಇಂಗ್ಲಿಷ್ ೫೦ ಪರ್ಸೆಂಟ್ ಬರಬೇಕು. ಸೈನ್ಸ್, ಮ್ಯಾಥ್ಸ್ ನನಗೆ ಬಿಡಿ. ಅರ್ಧವಾರ್ಷಿಕ ಪರೀಕ್ಷೆ ವೇಳೆಗೆ ಎಲ್ಲ ಸಬ್ಜೆಕ್ಟ್ ಕವರ್ ಮಾಡೋಣʼ ಎನ್ನುತ್ತ ಎಮರ್ಜೆನ್ಸಿ ಘೋಷಿಸುವ ನಿಬಂಧನೆಗಳನ್ನು ಹೇಳಿದಳು. ಆದರೆ ಅದು ಜಾರಿಯಾಗಲಿಲ್ಲ. + +ಸದ್ಯ ಸುಮ್ಮನಿದ್ದಾಳಲ್ಲ ಎಂಬಂತೆ ನಾನು ಗಾಢ ಮೌನಕ್ಕೆ ಶರಣಾದೆ. ಆದರೆ ಮನಸ್ಸಿನಲ್ಲಿ ಶೃತಿಯದೇ ಚಿಂತೆ. ಶೃತಿ ಹಾಸಿಗೆ ಮೇಲೆ ಮುದುರಿಕೊಂಡು ಮಲಗಿದ್ದಾಳೆ. ಅವಳು ಹುಟ್ಟಿದ ಮೇಲೆ ಉದ್ಯೋಗ ಸಿಕ್ಕಿದ್ದು, ಜೀವನ ಒಂದು ಸ್ಥಿರ ಹಂತಕ್ಕೆ ಬಂದದ್ದು ನನಗೆ ಭಾವನಾತ್ಮಕವಾಗಿ ಉಳಿದುಹೋಗಿದೆ. ಎಲ್ಲ ನನ್ನ ಅಪ್ಪನ ಹೋಲಿಕೆಯೇ ಅವಳಿಗೆ! ನಮ್ಮ ಕುಟುಂಬದಲ್ಲಿ ಯಾರೇ ನೋವಿನಲ್ಲಿದ್ದರೂ ಮೊದಲು ಸಂಕಟ ಪಡುವವಳು ಅವಳೇ! ಸುಧಾ ಹಾಸ್ಟೆಲಿಗೆ ಸೇರಿಸೋಣ ಎಂದು ನಿಧಾನವಾಗಿ ಪ್ರಸ್ತಾಪ ಮಾಡಿದಳು. + +ನನ್ನ ಉತ್ತರಕ್ಕಾಗಿ ಎದುರು ನೋಡುತ್ತಿದ್ದಾಳೆ. ನಾನು ಊಂ, ಉಹುಂ ಏನೂ ಹೇಳಲಿಲ್ಲ. ಏನೂ ಹೇಳಬೇಕೆನಿಸಲಿಲ್ಲ. ಹೋಗಿ ಶೃತಿಯನ್ನು ಊಟಕ್ಕೆ ಎಬ್ಬಿಸಿದೆನು. + +ಸುಧಾ ನನ್ನನ್ನು ಗಮನಿಸುತ್ತಲೇ ಇದ್ದಾಳೆ. ಕೋಪದಿಂದ ‘ಒಂದು ಹೊತ್ತು ತಿನ್ನದಿದ್ದರೆ ಏನೂ ಆಗುವುದಿಲ್ಲʼ ಎಂದಳು.ಶೃತಿ ಮತ್ತಷ್ಷು ಮುದುರಿ ಮಲಗಿದಳು. + + + +ಆ ರಾತ್ರಿ ಶೃತಿ ನನ್ನ ಎದೆಗೊರಗಿ ನಿದ್ರಿಸಿದಳು. ಸುಧಾ ಮುಖ ಗಂಟಿಕ್ಕಿಕೊಂಡು ಚಾಪೆ ಹಾಸಿ ಕೆಳಗೆ ಮಲಗಿದಳು. + +ಮಧ್ಯರಾತ್ರಿ ನನ್ನ ಕೆನ್ನೆ ತೇವವಾದಂತಾಗಿ ಲೈಟ್ ಆನ್ ಮಾಡಿ ನೋಡಿದರೆ ಶೃತಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಮುತ್ತಿನಂತೆ ಉದುರುತ್ತಿವೆ. + +‘ನನ್ನನ್ನು ಹಾಸ್ಟೆಲಿಗೆ ಕಳುಹಿಸ ಬೇಡಪ್ಪಾ… ರಾತ್ರಿ ನೀನು ಪಕ್ಕದಲ್ಲಿಲ್ಲದಿದ್ದರೆ ನನಗೆ ಭಯವಾಗುತ್ತದೆ. ಪ್ರಾಮಿಸ್ ಅಪ್ಪಾ.. ಕ್ವಾರ್ಟರ್ಲಿ ಯಲ್ಲಿ ತೊಂಭತ್ತು ಅಂಕ ತೆಗೆದುಕೊಳ್ಳುತ್ತೇನೆ.. ಪ್ಲೀಸ್ ಅಪ್ಪಾ..’ ಬಿಕ್ಕುತ್ತಾ ಹೇಳಿದಳು. + +ಅವಳ ಕಣ್ಣಿನಲ್ಲಿ ಭಯ. ಮಾತಿನಲ್ಲಿ ನಡುಕ. + +ಅವಳು ಗೋಗರೆಯುತ್ತಿದ್ದರೆ ನನ್ನ ಹೃದಯ ಕಲಕಿದಂತಾಗಿ ಭಾರವಾಗುತ್ತಿದೆ. ‘ಇದೇ ನಿಮ್ಮ ಬಲಹೀನತೆʼ ಎಂದು ಸುಧಾ ಹೇಳಿದ ಮಾತುಗಳು ನೆನಪಾಗಿ ಕಟುವಾಗಿರಲು ಪ್ರಯತ್ನಿಸಿದೆನು. + +‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ. ಸುಧಾಳ ಹಿತಬೋಧನೆ, ನನ್ನ ನಿರ್ಧಾರಗಳು, ಅವಳು ಓದುತ್ತಿಲ್ಲವೆಂಬ ಭಯ, ಆವೇಶ…. ಎಲ್ಲವೂ ಅವಳ ಕಣ್ಣೀರಿಗೆ ಕರಗಿ, ನನ್ನ ಕಣ್ಣು ತುಂಬಿಬಂದವು. ಅವಳನ್ನು ಬಿಗಿಯಾಗಿ ಎದೆಗಪ್ಪಿಕೊಂಡೆ. ಚೆನ್ನಾಗಿ ಓದದಿದ್ದರೆ ಹಾಸ್ಟೆಲಿಗೆ ಹಾಕುತ್ತೇನೆಂದು, ಹಾಸ್ಟೆಲಿನ ಜೀವನ ಭಯಂಕರವಾಗಿರುತ್ತದೆಂದು ಈಗಾಗಲೇ ಸುಧಾ ಅವಳಿಗೆ ಹೇಳಿ ಭಯಪಡಿಸಿದ್ದಾಳೆ. + +ನಾನು ಸಮಾಧಾನಪಡಿಸುತ್ತಿದ್ದೇನೆ. ಶೃತಿ ಅಳುತ್ತಿದ್ದಾಳೆ. ಸುಧಾ ಎಚ್ಚರಗೊಂಡು ಕೋಪದಿಂದ ಹೊದಿಕೆ ಜಾಡಿಸಿ ಪಕ್ಕಕ್ಕೆ ತಿರುಗಿ ಮಲಗಿದಳು. ಪೇರೆಂಟ್ಸ್ ಮೀಟಿಂಗಿಗೆ ನಾನು ಬರುತ್ತೇನೆಂದು ಮಾತು ಕೊಡುವವರೆಗೂ ಶೃತಿ ಅಳು ನಿಲ್ಲಿಸಲಿಲ್ಲ. + +ಬೆಳಗಾಯಿತು. ಸುಧಾಳ ಮುಖದಲ್ಲಿ ಗಂಭೀರ, ಆತಂಕ ಎದ್ದು ಕಾಣುತ್ತಿದೆ. ರಾತ್ರಿ ನಾನು ಕೊಟ್ಟ ಮಾತಿನಿಂದ ಶೃತಿ ಸ್ವಲ್ಪ ಧೈರ್ಯವಾಗಿದ್ದಾಳೆ. ಅಮ್ಮನೊಂದಿಗೆ ಮಾತನಾಡಲಿಲ್ಲ. ಬ್ಯಾಗ್ ಸಿದ್ಧಪಡಿಸಿಕೊಂಡು, ಜಡೆ ಹಾಕಿಕೊಂಡು ಅಮ್ಮನ ಕಡೆ ತಲೆಯೆತ್ತಿಯೂ ನೋಡದೆ ತನ್ನ ಪಾಡಿಗೆ ರೆಡಿಯಾಗುತ್ತಿದ್ದಾಳೆ. + +ಇದೆಲ್ಲವನ್ನೂ ಗಮನಿಸಿದ ಸುಧಾ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿದ್ದಾಳೆ. ನಾನು ರೆಡಿಯಾಗಿ ‘ಸುಧಾ ಪೇರೆಂಟ್ಸ್ ಮೀಟಿಂಗಿಗೆ ನೀನು ಹೋಗುತ್ತೀಯಾ.. ನಾನು ಹೋಗಲಾ..?ʼ ಕೇಳಿದೆ. + +ನನ್ನತ್ತ ನೋಡದೆಯೇ ‘ಅಗತ್ಯವಿಲ್ಲ. ನಾಳೆ ಹೋಗಿ ಟಿ.ಸಿ. ತರುತ್ತೇನೆ. ಕರೀಂನಗರ್ ಹಾಸ್ಟೆಲಿಗೆ ಹಾಕೋಣ. ಒಳ್ಳೆ ರ್ಯಾಂಕ್ ಸ್ಕೂಲ್ʼ ಎಂದಳು ಸುಧಾ.ಶೃತಿ ಗಾಬರಿಯಿಂದ ನನ್ನನ್ನು ನೋಡಿದಳು. + +‘ಸುಧಾ.. ಅಗತ್ಯವಾ.. ಅದಲ್ಲದೆ ಫೀಸು ಜಾಸ್ತಿʼ ಗೊಣಗಿದೆ. + +ಇಷ್ಟುಹೊತ್ತು ತಡೆದುಕೊಂಡಿದ್ದ ಕೋಪ ಒಮ್ಮೆಗೇ ಕಟ್ಟೆಯೊಡೆದು ಆವೇಶದಿಂದ ‘ನಿಮಗೆ ವಿದ್ಯೆ ಮುಖ್ಯವಾ.. ಹಣ ಮುಖ್ಯವಾ. ಈಗಾಗಲೇ ನಿಮ್ಮಿಂದಾಗಿ ಮಕ್ಕಳು ಸಾಕಷ್ಟು ನಷ್ಟ ಹೊಂದಿದ್ದಾರೆ. ಮನೆ, ಅಮ್ಮ ಎಂದುಕೊಂಡು ಊರು ಬಿಟ್ಟು ಕದಲಲಿಲ್ಲ. ಅವಳು ಹತ್ತನೇ ತರಗತಿಯಲ್ಲಿ ಸಾಧಾರಣವಾಗಿ ಪಾಸಾದಳು. ಇವಳು ಹೀಗೆ ತಯಾರಾಗುತ್ತಿದ್ದಾಳೆ. ಅದೇನೇ ಆಗಲಿ ಇವಳನ್ನು ಹಾಸ್ಟೆಲಿಗೆ ಸೇರಿಸುವುದು ಗ್ಯಾರಂಟಿ’ ಎಂದು ಕಡ್ಡಿ ಮುರಿದಂತೆ ಹೇಳಿದಳು.ಶೃತಿ ನನ್ನನ್ನೇ ನಂಬಿ ಅವಳ ಭಾರವೆಲ್ಲ ನನ್ನ ಮೇಲೆ ಹಾಕಿ ಭಯಭೀತಳಾಗಿ ದಿಕ್ಕುಗಳನ್ನು ನೋಡುತ್ತಿದ್ದಾಳೆ. + +ಸುಧಾ ಹೋದ ವರ್ಷ ಹೀಗೇ ‘ನಿಮಗೆ ಮಕ್ಕಳ ವಿದ್ಯೆ ಮುಖ್ಯವಾ ಮನೆ ಮುಖ್ಯವಾʼ ಎಂದು ಹಠ ಸಾಧಿಸಿದ್ದಳು. ಈಗಲೂ ಅದೇ ನಂಬಿಕೆಯಲ್ಲಿದ್ದಾಳೆ.ನಾನು ತಿಂಡಿಗೆ ಕುಳಿತೆ. ಸುಧಾ ಎದ್ದು ಹೊರಗೆ ಹೋದಳು. ಶೃತಿಯೇ ನನಗೆ ತಿಂಡಿ ಹಾಕಿಕೊಟ್ಟಳು. ತಿನ್ನುವಾಗ ನೆತ್ತಿ ಹತ್ತಿದರೆ ಶೃತಿ ಓಡಿ ಬಂದು ನೀರು ಕೊಟ್ಟು ತಲೆ ತಟ್ಟಿದಳು. + +ಇಬ್ಬರೂ ಶಾಲೆಗೆ ಹೋದೆವು. ಇದುವರೆಗೂ ಶಾಲೆಯ ಆಯ್ಕೆಯಿಂದ ಹಿಡಿದು ಮೀಟಿಂಗ್ ವರೆಗೂ ಎಲ್ಲವೂ ಸುಧಾಳೇ ನೋಡಿಕೊಂಡು ಬಂದಿದ್ದಾಳೆ. ಇಂದು ನನಗೆ ಇದೆಲ್ಲ ಹೊಸದಾಗಿದೆ. ಪ್ರಾಂಶುಪಾಲರ ಕೊಠಡಿಗೆ ಹೋಗಿ ನನ್ನನ್ನು ನಾನು ಪರಿಚಯಿಸಿಕೊಂಡೆ. ಅವರು ನನ್ನತ್ತ ನಿರಾಸಕ್ತಿಯಿಂದ ನೋಡಿ ‘ಜಾಸ್ತಿ ಕಷ್ಟಪಡಬೇಕು ಸರ್.. ನಿಮ್ಮ ಮಗಳು ಸ್ವಲ್ಪವೂ ಇಂಪ್ರೂವ್ ಆಗಿಲ್ಲ..’ ಎಂದರು. + +ಶೃತಿ ಪೆಚ್ಚುಮೋರೆ ಹಾಕಿದಳು. ಏನು ಹೇಳಬೇಕೋ ನನಗೆ ತೋಚದೆ ಸುಮ್ಮನೆ ನಿಂತೆ. + +ನಂತರ ಬಂದ ಪೋಷಕರನ್ನು ಪ್ರಾಂಶುಪಾಲರು ನಗುತ್ತಾ ಆಹ್ವಾನಿಸಿ ಕುಳಿತುಕೊಳ್ಳಲು ಹೇಳಿದರು. ಆ ವಿದ್ಯಾರ್ಥಿಯ ತಂದೆ ತನ್ನ ಮಗನನ್ನು ಹೇಗೆ ಓದಿಸುತ್ತಿದ್ದೇನೆಂದು ಹೇಳುತ್ತಿದ್ದರೆ, ಪ್ರಾಂಶುಪಾಲರು ತಮ್ಮ ಶಾಲೆಯ ಕೋಚಿಂಗ್ ವಿವರ ನೀಡುತ್ತಿದ್ದಾರೆ. + +ನಾವು ಹೊರಗೆ ಬಂದೆವು. ಅಲ್ಲಿ ಪೋಷಕರು ಎರಡು ಗುಂಪುಗಳಾಗಿ ಕಂಡರು. ಕೆಲವರು ಹೆಮ್ಮೆಯಿಂದ ಓಡಾಡುತ್ತಿದ್ದರೆ, ಕೆಲವರು ಗಾಬರಿಯಿಂದಿದ್ದಾರೆ.ಶೃತಿ ನನ್ನ ಹಿಂದೆ ಬೆಕ್ಕಿನ ಮರಿಯಂತೆ ಓಡಾಡುತ್ತಿದ್ದಾಳೆ. ಅವಳಿಗೆ ಹೆಚ್ಚು ಫ್ರೆಂಡ್ಸ್ ಇದ್ದಂತೆ ಕಾಣಲಿಲ್ಲ. ಒಂದಿಬ್ಬರು ಮಾತನಾಡಿದರಷ್ಟೆ! ಕೆಲವು ಮಕ್ಕಳು ಇಡೀ ಶಾಲೆ ತಮ್ಮದೆಂಬಂತೆ ಗುಂಪುಕಟ್ಟಿಕೊಂಡು ಓಡಾಡುತ್ತಿದ್ದರೆ, ಇನ್ನು ಕೆಲವರು ಪೋಷಕರ ಹಿಂದೆಯೇ ಬಾಲವಾಗಿದ್ದಾರೆ. + +ಎಲ್ಲರೂ ಕುಳಿತುಕೊಳ್ಳಬೇಕೆಂದು ಮೈಕಿನಲ್ಲಿ ಘೋಷಣೆ ಕೇಳಿಸಿತು. ನಾನು ಶೃತಿ ಕುಳಿತುಕೊಂಡೆವು. ಪ್ರಿನ್ಸಿಪಲ್ ಮೈಕ್ ಬಳಿ ಬಂದು ‘ಈ ಬಾರಿ ಪೇರೆಂಟ್ಸ್ ಮೀಟಿಂಗ್ ನ್ನು ವಿನೂತನವಾಗಿ ಆಚರಿಸಬೇಕೆಂದುಕೊಂಡಿದ್ದೇವೆ. ನೀವು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಿದ್ದೀರ. ಆದರೂ ಕೆಲವರು ಓದುತ್ತಿಲ್ಲ. ನಿಮಗೂ, ಮಕ್ಕಳಿಗೂ ಮಾರ್ಗದರ್ಶನ ಅಗತ್ಯವಿದೆ. ಇಂದು ವ್ಯಕ್ತಿತ್ವ ವಿಕಸನ ಕೋರ್ಸ್ ನ ನಿಷ್ಣಾತರಾದ ಇಬ್ಬರು ಪ್ರೊಫೆಸರ್ ಗಳನ್ನು ಕರೆಸಿದ್ದೇವೆ,’ ಹೇಳುತ್ತ ಹೋಗುತ್ತಿದ್ದಾರೆ ಪ್ರಾಂಶುಪಾಲರು… + +ನನಗೆ ಇತ್ತೀಚೆಗೆ ನಡೆದ ಲೀಡ್ ಇಂಡಿಯಾ ೨೦೨೦ ಕಾರ್ಯಕ್ರಮ ನೆನಪಾಯಿತು. ಜಿಲ್ಲಾಧಿಕಾರಿಗಳ ಆದೇಶದನ್ವಯ ವಿಭಾಗೀಯ ಶಿಕ್ಷಕರಿಗೆ ರೆಸಿಡೆನ್ಷಿಯಲ್ ಕಾರ್ಯಕ್ರಮವಾಗಿ ರೆವಿನ್ಯೂ ಇಲಾಖೆಯ ಪರವಾಗಿ ನಾವೇ ಆ ಕಾರ್ಯಕ್ರಮವನ್ನು ನಿರ್ವಹಿಸಿದೆವು. ಅಬ್ದುಲ್ ಕಲಾಂ ಪರಿಕಲ್ಪನೆಯದೆಂದು ನನಗೂ ಆಸಕ್ತಿ ಮೂಡಿತು. ತಪ್ಪದೆ ಕೇಳಬೇಕೆಂದುಕೊಂಡೆನು. ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸುತ್ತ ಒಬ್ಬ ಉಪನ್ಯಾಸಕ ‘ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಮಕ್ಕಳನ್ನು ಹೆರುವ ತಾಳ್ಮೆ, ಸಮಯ ಇಲ್ಲವೆಂದು, ಮಾನವ ಸಂಪನ್ಮೂಲಕ್ಕಾಗಿ ಅವರೆಲ್ಲ ಭಾರತವನ್ನೇ ಅವಲಂಬಿಸುವರು. ಮುಂಬರುವ ದಿನಗಳಲ್ಲಿ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಭಾರತದ ಮಕ್ಕಳಿಗೆ ಸಾಕಷ್ಟು ಅವಕಾಶಗಳಿರಲಿದ್ದು, ಮಕ್ಕಳು ಚೆನ್ನಾಗಿ ಓದಿ ಬೆಳೆಯಬೇಕೆಂದುʼ ಹೇಳಿದರು. + +ಎಲ್ಲರೂ ಜೋರಾಗಿ ಚಪ್ಪಾಳೆ ತಟ್ಟಿದರು. + +ನನಗೂ ನನ್ನಿಬ್ಬರು ಮಕ್ಕಳನ್ನು ದೊಡ್ಡಉದ್ಯೋಗ ಸಿಗುವಂತೆ ಚೆನ್ನಾಗಿ ಓದಿಸಬೇಕೆಂಬ ಉತ್ಸಾಹ ಮೂಡಿತು. + +ಆಗ ಶಿಕ್ಷಕರೊಬ್ಬರು ಎದ್ದು ನಿಂತು ‘ಬಹು ರಾಷ್ಟ್ರೀಯ ಕಂಪನಿಗಳ ಕೈಗೊಂಬೆಗಳನ್ನು ತಯಾರು ಮಾಡುವುದಕ್ಕಾ ನಮ್ಮ ಶಿಕ್ಷಣ. ಇದು ಲೀಡ್ ಇಂಡಿಯಾನಾ.. ಲಿವ್ ಇಂಡಿಯಾನಾ..’ ಎಂದು ಪ್ರಶ್ನಿಸಿದರು. + +ಆ ಕುರಿತೇ ಬಹಳ ದೊಡ್ಡ ಚರ್ಚೆ ನಡೆಯಿತು. ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. + +‘ದೊಡ್ಡ ಉದ್ಯೋಗ ಸಿಗುತ್ತದೆಂದರೆ ಕೈಗೊಂಬೆ ಎನ್ನುತ್ತಿದ್ದಾನಲ್ಲʼ ಎಂದು ಆ ಶಿಕ್ಷಕನ ಮೇಲೆ ನನಗೆ ಕೋಪ ಬಂದಿತು. + +ಎರಡನೆ ದಿನ ‘ಆಪ್.. ಬಡೋ… ದೇಶ್ಕೋ ಬಡಾವೋʼ ಎಂದು ಘೋಷಣೆ ಕೂಗಿದನು ಆ ಪ್ರೊಫೆಸರ್. + +‘ಬಡೋʼ ಎಂಬ ಪದದ ಕುರಿತು ಶಿಕ್ಷಕರಲ್ಲಿ ಚರ್ಚೆ ಆರಂಭವಾಯಿತು. ಬೆಳೆಯುವುದು ಎಂದರೇನು..? ತಿಂಗಳಿಗೆ ಎರಡು ಮೂರು ಲಕ್ಷ ಸಂಪಾದಿಸುವುದೇ ಬೆಳವಣಿಗೆಯಾ..? ಎಂಬುದು ಅವರ ವಾದ. ಕೆಲವರು ಹೌದು ಎಂದು, ಕೆಲವರು ಅಲ್ಲವೆಂದರು. ಹೌದು-ಅಲ್ಲವೆಂಬ ವಾದ ಪ್ರತಿವಾದಗಳ ಗೊಂದಲದಿಂದಲೇ ಆ ಕಾರ್ಯಕ್ರಮ ಮುಗಿಯಿತು. + +ಈಗ ಮೊದಲಿಗೆ ವ್ಯಕ್ತಿತ್ವ ವಿಕಸನದ ಹಿರಿಯ ಪರಿಣಿತರು ಭಾಷಣ ಮಾಡುತ್ತ ಏನು ಓದಿದರೆ ಯಾವ ಉದ್ಯೋಗಾವಕಾಶವಿದೆ.. ಎಷ್ಟು ಸಂಪಾದಿಸಬಹುದೆಂದು ಹೇಳುತ್ತಿದ್ದಾರೆ. ಹೇಗೆ ಕಷ್ಟಪಟ್ಟು ಓದಬೇಕು.. ಹಾಗೆ ಓದಿ ಪ್ರಸಿದ್ಧರಾದವರು ಏನನ್ನು ಕಳೆದುಕೊಂಡು ಏನನ್ನು ಸಾಧಿಸಿದರೆಂದು ಉದಾಹರಣೆ ನೀಡುತ್ತಿದ್ದಾರೆ. + +ಶೃತಿಯನ್ನು ನೋಡಿದೆನು. ಶ್ರದ್ಧೆಯಿಂದ ಕೇಳುತ್ತಿದ್ದಾಳೆ. ಪೋಷಕರು, ಮಕ್ಕಳು ನಿಶ್ಯಬ್ಧವಾಗಿದ್ದಾರೆ. ಆಸಕ್ತಿಯಿಂದ ಕೇಳುತ್ತಿದ್ದಾರೆ. ಪ್ರೊಫೆಸರ್ ಮಾತುಗಳು ಹಣ, ಅವಕಾಶಗಳ ಸುತ್ತಲೂ ಗಿರಕಿ ಹೊಡೆಯುತ್ತಿವೆ. + +ನನಗೆ ಕಿರಿಕಿರಿಯೆನಿಸಿ ಪಕ್ಕದಲ್ಲಿದ್ದ ವ್ಯಕ್ತಿಯತ್ತ ತಿರುಗಿ ‘ಯಾವ ಓದು ಓದಿದರೆ ಎಷ್ಟು ಸಂಪಾದಿಸಬಹುದೆಂದು ಹೇಳುತ್ತಿರುವರೇ ವಿನಃ ಪ್ರಜೆಗಳಿಗೆ ಹೇಗೆ ಒಳ್ಳೆಯದನ್ನು ಮಾಡಬಹುದೋ ಒಂದು ಮಾತು ಹೇಳಲಿಲ್ಲʼ ಎಂದೆನು. + +ಆತ ನನ್ನತ್ತ ಅಸಡ್ಡೆಯಿಂದ ನೋಡಿದನು. + +ಕೊನೆಯದಾಗಿ ಎಷ್ಟು ಮಕ್ಕಳು ವೈದ್ಯರಾಗಬೇಕೆಂದುಕೊಳ್ಳುತ್ತಿರುವಿರೋ ಕೈಯೆತ್ತಿ ಎಂದರು. ಬಹಳ ಮಕ್ಕಳು ಕೈ ಎತ್ತಿದರು. ಶೃತಿ ನನ್ನತ್ತ ನೋಡಿ ತಲೆ ತಗ್ಗಿಸಿದಳು. + +ನಂತರ ಮಕ್ಕಳ ಪರೀಕ್ಷಾ ತಯಾರಿಗೆ ಪೋಷಕರು ತೆಗೆದುಕೊಳ್ಳಬೇಕಾದ ಕಾಳಜಿಯ ಕುರಿತು ಮಾತನಾಡಿದರು. + +ಸಭೆ ಮುಗಿದು ವಾಪಸು ಬರುವಾಗ ಪ್ರಾಂಶುಪಾಲರು ಕರೆದರೆಂದು ಒಳಗೆ ಹೋದೆನು. ಶೃತಿ ಹೊರಗೆ ನಿಂತಳು. ತಪ್ಪೆಲ್ಲ ನನ್ನದೆಂಬಂತೆ ಹಿತಬೋಧನೆ ಮಾಡಿದ ಪ್ರಾಂಶುಪಾಲರು, ಕ್ವಾರ್ಟರ್ಲಿ ಯಲ್ಲಿ ಸೆಕೆಂಡ್ ಕ್ಲಾಸ್ ಬರದಿದ್ದರೆ ಮುಂಗಡವಾಗಿ ಪ್ರೈವೇಟ್ ಶುಲ್ಕ ಕಟ್ಟಬೇಕೆಂದು ಎಚ್ಚರಿಸಿದರು. ನನಗೆ ಅವಮಾನವೆನಿಸಿತು. + +ಹೊರಗೆ ಬಂದೆನು. ಮಕ್ಕಳು, ಪೋಷಕರು ಆತ್ಮಸ್ಥೈರ್ಯ ತುಂಬಿಕೊಂಡು ಹೋಗುತ್ತಿದ್ದಾರೆ. ಶೃತಿ ಭಯದಿಂದ ನನ್ನತ್ತ ನೋಡಿದಳು.ಮನೆಗೆ ಬರುವ ವೇಳೆಗೆ ಗಂಟೆ ಮೂರು ದಾಟಿತ್ತು. ನನಗೆ ಸಣ್ಣದಾಗಿ ತಲೆ ನೋಯತೊಡಗಿತು. ಸುಧಾ ನಮ್ಮ ಮುಖ ನೋಡಲೇ ಇಲ್ಲ. ಯಾರೂ ಯಾರನ್ನೂ ಮಾತನಾಡಿಕೊಳ್ಳಲಿಲ್ಲ. ನನ್ನ ಒದ್ದಾಟ ನೋಡಿ ಶೃತಿ ಟೀ ಮಾಡಿಕೊಟ್ಟಳು. + +ನಾನು ಹೊರಗೆ ಹೋಗಿ ಸಣ್ಣಪುಟ್ಟ ಕೆಲಸ ಮುಗಿಸಿಕೊಂಡು ಸಂಜೆ ಮನೆಗೆ ಬಂದೆನು. ವಾತಾವರಣದಲ್ಲಿ ಏನೋ ಬದಲಾವಣೆ, ಟೀ ಗ್ಲಾಸುಗಳು, ನೀರಿನ ಬಾಟಲ್ ನೋಡಿ ನನ್ನ ಭಾವಮೈದುನ ಬಂದಿರಬಹುದೆಂದು ಊಹಿಸಿದೆನು. + +ಸುಧಾ ಗೆಲುವಾಗಿದ್ದಾಳೆ. ನೋಡಿದರೆ ನಗುತ್ತಾ ಮಾತನಾಡುವ ಉತ್ಸಾಹದಲ್ಲಿರುವಂತಿದೆ. ಶೃತಿ ಮಾತ್ರ ಭಯದಿಂದ ಹೋಂವರ್ಕ್ ಮಾಡಿಕೊಳ್ಳುತ್ತಿದ್ದಾಳೆ. ಕಾರಣ ತಿಳಿಯಲಿಲ್ಲ. + +ನನಗೆ ತಲೆ ನೋವು ಇನ್ನೂ ಕಡಿಮೆಯಾಗಿರಲಿಲ್ಲ. ಜಂಡೂ ಬಾಂ ಹುಡುಕತೊಡಗಿದಾಗ ಶೃತಿ ಹುಡುಕಿಕೊಟ್ಟಳು. ಆ ರಾತ್ರಿ ಸುಧಾ ಏನಾದರೂ ಮಾತು ತೆಗೆಯುತ್ತಾಳೆಂದುಕೊಂಡೆ. ಹಾಗೇನೂ ಆಗಲಿಲ್ಲ. ಅವರಷ್ಟಕ್ಕೆ ಅವರು ಊಟ ಮುಗಿಸಿ ಮಲಗಿದೆವು. ಶೃತಿ ನನ್ನ ಪಕ್ಕ ಮಲಗಿ ಕಣ್ಣು ಮುಚ್ಚಿದಳು, ಆದರೆ ನಿದ್ದೆ ಮಾಡಲಿಲ್ಲ. ತಲೆನೋವಿನಿಂದಾಗಿ ನನಗೆ ನಿದ್ದೆ ಬರುತ್ತಿಲ್ಲ. ಸುಧಾ ಮಾತ್ರ ಗೊರಕೆ ಹೊಡೆಯುತ್ತಿದ್ದಾಳೆ. + +ಸುಧಾ ನಿದ್ದೆ ಮಾಡಿದ ಮೇಲೆ ಮೆಲ್ಲನೆ ‘ಅಪ್ಪಾʼ ಎಂದಳು ಶೃತಿ. + +ಬಹಳ ವೇದನೆಯಿಂದ ಕರೆದಂತಾಗಿ ಎದೆ ಕಲುಕಿದಂತಾಯ್ತು. ಏನೆಂಬಂತೆ ನೋಡಿದೆನು. + +‘ಚೆನ್ನಾಗಿ ಓದುತ್ತಿದ್ದೀನಪ್ಪಾ.. ಯಾಕೋ ನೆನಪಿರುವುದಿಲ್ಲʼ ಎಂದಳು, ದುಃಖವನ್ನು ಅದುಮಿಟ್ಟುಕೊಂಡಂತಿತ್ತು ಅವಳ ಧ್ವನಿ. + +ನಾನು ಮೌನವಾಗಿ ಹತ್ತಿರಕ್ಕೆ ಕರೆದು ತಲೆ ನೇವರಿಸಿದೆನು. ಮಾತನಾಡಲು ನನ್ನ ಬಳಿ ಮಾತುಗಳಿರಲಿಲ್ಲ. ಅವಳು ಸ್ವಲ್ಪ ಹೊತ್ತು ಮೌನವಾಗಿ ನನ್ನ ಎದೆ ಮೇಲೆ ಹಾಗೇ ಮಲಗಿ, ನಂತರ ಸಮಾಧಾನದಿಂದ ‘ಅಪ್ಪಾ.. ನಾನು ಹಾಸ್ಟೆಲಿಗೆ ಹೋಗುತ್ತೇನೆ. ನಾಳೆ ಮಾವ ಕರೆದುಕೊಂಡು ಹೋಗುತ್ತಾರಂತೆʼ ಎಂದಳು. + +ನನ್ನ ಎದೆ ಧಸಕ್ಕೆಂದಿತು, ಕ್ಷಣಕ್ಕೆ ಚಡಪಡಿಕೆಯಿಂದ ಕಣ್ಣು ತುಂಬಿ ಬಂತು. ಅವಳನ್ನು ಬಿಗಿದಪ್ಪಿದೆ, ಜೀವನದಲ್ಲಿ ಮತ್ತೊಮ್ಮೆ ಆ ಅವಕಾಶ ಬರುವುದಿಲ್ಲವೆಂಬಂತೆ ಅವಳ ಕೈಗಳು ನನ್ನನ್ನು ಮತ್ತಷ್ಟು ಗಟ್ಟಿಯಾಗಿ ಹಿಡಿದವು. ಅಕ್ಕರೆಯಿಂದ ಅವಳು ನನ್ನ ಕೆನ್ನೆ ನೇವರಿಸುತ್ತ ‘ನನ್ನಿಂದ ನಿನಗೆ ಅವಮಾನ, ಇಕ್ಕಟ್ಟು ಅಲ್ಲವಾ ಅಪ್ಪಾʼ ಎಂದಳು. + +ಇಲ್ಲಮ್ಮಾ, ಏಕೆ ಹಾಗೆ… ಎಂದು ಕೇಳುವಷ್ಟರಲ್ಲಿ ‘ಅಮ್ಮ ಇನ್ನು ಮೇಲೆ ಶಾಲೆಗೂ ಬರುವುದಿಲ್ಲ, ಮನೆಯಲ್ಲಿ ಕೂಡ ಇರುವುದಿಲ್ಲ ಎಂದಳು. ನಮ್ಮಿಬ್ಬರನ್ನೂ ಮಾತನಾಡಿಸುವುದಿಲ್ಲವಂತೆʼ ನೋವಿನಿಂದ ಹೇಳಿದಳು. + +ಅಮ್ಮನ ಮಾತು ಗಂಭೀರವಾಗಿ ಯೋಚಿಸಿ ನಿರ್ಧರಿಸಿದಂತಿತ್ತು ಶೃತಿಯ ಧ್ವನಿ. ಒಂದೊಂದು ಮಾತು ನನ್ನ ಹೃದಯ ಚುಚ್ಚಿದಂತಾಯಿತು. ಮೈ ಜುಮ್ಮೆಂದಿತು. ಅವಳನ್ನು ಎರಡು ಕೈಗಳಿಂದ ಬಿಗಿದಪ್ಪಿ ‘ನೀನೆಲ್ಲೂ ಹೋಗುವ ಅಗತ್ಯವಿಲ್ಲ ಪುಟ್ಟೀ… ಇಲ್ಲೇ ಇರುತ್ತೀಯʼ ಎಂದೆನು ಆದರದಿಂದ. + +ಯಾವಾಗ ಎದ್ದಳೋ ಸುಧಾ. ನನ್ನ ಮಾತಿಗೆ ‘ನಿಮಗೆ ವಿದ್ಯೆಯ ಬೆಲೆ ಗೊತ್ತಿಲ್ಲ. ನನಗೆ ಮಾತ್ರ ಅವಳ ಮೇಲೆ ಪ್ರೀತಿಯಿಲ್ಲವಾ! ನಮಗೆ ಮಕ್ಕಳ ಭವಿಷ್ಯತ್ತು ಮುಖ್ಯ. ವಿದ್ಯೆ ಇಲ್ಲದೆ ಅವರಿಗೆ ಭವಿಷ್ಯತ್ತೆಲ್ಲಿಯದು. ಹುಚ್ಚು ಹುಚ್ಚಾಗಿ ಮಾತನಾಡಿ ಅವಳ ಮನಸ್ಸು ಕೆಡಿಸಬೇಡಿ. ಅವಳನ್ನು ಒಪ್ಪಿಸಲು ಪ್ರಾಣ ಹೋಗಿ ಪ್ರಾಣ ಬಂದಂತಾಯಿತುʼ ಎಂದಳು ಕೋಪದಿಂದ. + +ತಕ್ಷಣ ಬೆಚ್ಚಿಬಿದ್ದರೂ, ಶೃತಿ ತನ್ನ ನಿರ್ಧಾರಕ್ಕೆ ಬದ್ದಳಾದಂತಿದೆ. + +ನಾನು ಸುಧಾಳತ್ತ ನೋಡಿದೆ. ಕೋಪದಿಂದ ಎದ್ದು ಕೂತಳು. ನಾನೂ ಎದ್ದು ಕುಳಿತೆ. + + + +‘ನಾಳೆ ನಮ್ಮ ಮಗಳು ದೊಡ್ಡ ದೊಡ್ಡ ಉದ್ಯೋಗ ಮಾಡದಿರಬಹುದು. ಒಬ್ಬ ಒಳ್ಳೆಯ ಮನುಷ್ಯಳಾಗಿ ಬದುಕುತ್ತಾಳೆ. ನೀನಂದಂತೆ ಸ್ಕೂಲ್ ಪ್ರೋಗ್ರೆಸ್ನಲ್ಲಿ ಸಬ್ಜೆಕ್ಟ್ ಗಳ ಜೊತೆ ಸ್ಪಂದನೆಗೆ, ಮೌಲ್ಯಗಳಿಗೆ ಕೂಡ ಅಂಕಗಳಿದ್ದಿದ್ದರೆ ಶೃತಿಗೆ ಮೊದಲ ರ್ಯಾಂಕ್ ಬರುತ್ತಿತ್ತುʼ ಎಂದೆನು. + +ಅವಳನ್ನು ಹಿಡಿದಿದ್ದ ನನ್ನ ಕೈಗಳು ಮತ್ತಷ್ಟು ಬಿಗಿದುಕೊಂಡವು. + +ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ. \ No newline at end of file diff --git a/Kenda Sampige/article_342.txt b/Kenda Sampige/article_342.txt new file mode 100644 index 0000000000000000000000000000000000000000..f7fb792296ce7abdd56bd8811dc46738b20759cb --- /dev/null +++ b/Kenda Sampige/article_342.txt @@ -0,0 +1,169 @@ + + +ಆಲೆಮನೆಯಲ್ಲಿ ರಾಧಾಕೃಷ್ಣ ಮೂರು ತಿಂಗಳ ಕಾಲವನ್ನು ಕಳೆದುದಾಯಿತು. ಚಾವಡಿಯಲ್ಲೇ ಶಾಲೆ ನಡೆಯುತ್ತಿರುವಾಗ, ಸಮಯ, ಪಾಠ ಹೇಳಿಕೊಡುವುದರಲ್ಲಿ ಹೇಗೂ ಹೋಗುತ್ತಿದೆ. ಸಂಜೆ ಅವರೊಡನೆ ಸೇರಿ ಆಟವಾಡುತ್ತಾನೆ. ಬೆಳಿಗ್ಗೆ ಒಬ್ಬಂಟಿಗನಾಗಿ ಊರಲ್ಲಿ ಅಲೆದಾಡಿ ಗ್ರಾಮಸ್ಥರ ಪರಿಚಯ ಮಾಡಿಕೊಳ್ಳುತ್ತಾನೆ. ಅವರಿಗೆ “ನೀವಿಷ್ಟು ಹತ್ತಿಯ ಗಿಡ ನೆಟ್ಟು, ನೂಲು ಮಾಡುತ್ತ ಬಂದರೆ ನಿಮ್ಮ ಖರ್ಚಿಗೆ ಬೇಕಾದ ಅರಿವೆಯನ್ನು ಮಾಡಿಕೊಳ್ಳಬಹುದಲ್ಲಾ” ಎಂದು ಉಪದೇಶಿಸುತ್ತಾನೆ. ಈ ನಡುವೆ ಊರಿನ ಬಳಿ ಯಾರಾದರೂ ಜೇಡರಿದ್ದಾರೆಯೇ ಎಂದು ವಿಚಾರಿಸುತ್ತಿದ್ದಾನೆ. ಅಲ್ಲಿಗೆ ಬಂದು ಹರಿದಾರಿ ದೂರದಲ್ಲಿ ಒಬ್ಬ ನೇಕಾರನಿರುವುದನ್ನು ತಿಳಿದುಕೊಂಡು, ಅವನ ಮನೆಗೆ ಹೋಗಿಬರುತ್ತ ನೇಯ್ಗೆಯನ್ನು ಕಲಿಯಲು ಪ್ರಯತ್ನಿಸುತ್ತಿದ್ದಾನೆ. ದಿನಗಳು ಹೀಗೆ ಸರಿದರೆ, ಕತ್ತಲು ಸಮಯ, ಮಂಜಯ್ಯನವರ ತಾಯಿ ಶೇಷಮ್ಮನೊಡನೆ ಕುಳಿತು ಲೋಕಾಭಿರಾಮವಾಗಿ ಹರಟೆ ಕೊಚ್ಚುತ್ತಾನೆ. ಅವರ ಜತೆಗೆ ಮನೆಯ ಮಕ್ಕಳು ಕುಳಿತಿರುವುದುಂಟು. + +ಅವರೆದುರಿಗೆ ನಿತ್ಯವೂ ದೇಶದ ಪರಿಸ್ಥಿತಿಯನ್ನು ಕುರಿತು ರಾಧಾಕೃಷ್ಣ ಮಾತನಾಡುತ್ತಿದ್ದ. ಅನೇಕ ವಿಷಯಗಳಲ್ಲಿ ಆ ಮುದುಕಿ ಆತನ ಅಭಿಮತವನ್ನು ಒಪ್ಪುತ್ತಿದ್ದಳು. “ಜನ ಬರಿದೆ ಹೊತ್ತು ಕಳೆಯುವುದಕ್ಕಿಂತ ನೂತದರಿಂದ ಹಾನಿ ಇಲ್ಲ” ಎಂದು ಒಪ್ಪುತ್ತಾಳೆ. ಆದರೆ, ಒಂದು ವಿಷಯದಲ್ಲಿ ಖಂಡಿತವಾಗಿ ತೀರ್ಮಾನ “ನೀನೇನೂ ಹೇಳು ಮಗು – ನಿನ್ನ ಗಾಂಧಿ ಬ್ರಾಹ್ಮಣರನ್ನೂ ಹೊಲೆಯರನ್ನೂ ಒಂದುಮಾಡುವುದನ್ನು ಮಾತ್ರ ನಾನು ಒಪ್ಪುವುದಿಲ್ಲ” ಎಂದು ಬಿಡುತ್ತಾಳೆ. + +“ಒಂದು ಮಾಡುವುದೆಂದರೆ, ಒಂದೇ ಮನೆಯಲ್ಲಿರುವುದಲ್ಲ.” + +“ಅವರನ್ನು ಮುಟ್ಟುವುದು, ಮಾಡುವುದು ಸಮವೇ? ಕೊರಗರು, ಕೂಸಾಳು ಎಂದು ಯಾರು ಮಾಡಿದ್ದು? ದೇವರೇ ಅಲ್ಲವೇ? ಯಾವ ಪಾಪ ಮಾಡಿ ಆ ಜನ್ಮ ಬಂದಿದೆಯೋ ಅವಕ್ಕೆ.” + +“ಅದನ್ನು ದೇವರೆಲ್ಲಿ ಮಾಡುತ್ತಾನೆ ಅಜ್ಜೀ? ಮನುಷ್ಯ ಮಾಡುವುದು ಅದನ್ನೆಲ್ಲ. ದೇವರಿಗೆ ತನ್ನ ಮಕ್ಕಳಲ್ಲಿ ಭೇದವಿದ್ದೀತೇ? ವೇದಗಳಲ್ಲಿ ಈ ಅಸ್ಪೃಶ್ಯತೆಗೆ ಆಧಾರವಿಲ್ಲ.” + +“ಹಾ, ವೇದ ಗೀದ ನನಗೇನು ಗೊತ್ತು. ನಮ್ಮ ಹಿರಿಯರ್ಯಾರಿಗೂ ವೇದ ಗೊತ್ತಿಲ್ಲ ಅನ್ನುತ್ತಿಯ? ವೇದ, ಶಾಸ್ತ್ರ ನಿನ್ನ ಗಾಂಧಿ ಒಬ್ಬನಿಗೇ ಗೊತ್ತು ಎನ್ನುತ್ತೀಯಾ” ಎಂದು ಮುದುಕಿ ತನ್ನ ಹಟ ಹಿಡಿದರೆ, ಆತನ ಹಟ ಮುಣ್ಣು ಮುಕ್ಕುವುದು. + +ಅವನು ನಿರುತ್ತರನಾಗುತ್ತಾನೆ. ಕೊನೆಗೆ ಉಪಾಯವಾಗಿ “ಒಂದೊಂದು ಕಾಲದಲ್ಲಿ ಒಂದೊಂದು ತರಹ ಅಜ್ಜಿ; ಆಗಿನ ಕಾಲಕ್ಕೆ ಅದು ಸಮನಾಗಿರಬಹುದು. ಈಗಿನ ಕಾಲಕ್ಕೆ ಅದು ಒಪ್ಪುವುದಿಲ್ಲ” ಎಂದು ಹೇಳುತ್ತಾನೆ. ಅಲ್ಲಿಂದ ಮಾತು ಬೇರೆ ಕಡೆಗೆ ಹೊರಳುತ್ತದೆ. ಹಾಗೇನೆ ಒಂದು ದಿವಸ ಆಚೀಚೆ ಮೊಮ್ಮಕ್ಕಳಿಲ್ಲದ್ದನ್ನು ಕಂಡು ಮುದುಕಿಯು ಪ್ರಸ್ತಾಪಿಸಿದಳು: “ಹೌದಾ ಇವರೇ, ನಾನು ಒಂದು ಸಂಗತಿ ಕೇಳುತ್ತೇನೆ, ಕೂಡದು ಎನ್ನಬಾರದು” ಎಂದಳು.“ಏನು ಹೇಳಿ; ನನ್ನಿಂದಾಗುವುದಾದರೆ ಮಾಡುತ್ತೇನೆ” ಎಂದನು. + +“ಆಮೇಲೆ ಅಲ್ಲ ಅಂದರೆ?’’ + +“ಆಯಿತು ಅಂದ ಮೇಲೆ ಇಲ್ಲ ಅನ್ನುತ್ತೇನೆಯೇ? ಆಗುವ ಕೆಲಸವಾದರೆ ಮಾಡಬಹುದಲ್ಲ’’ ಎಂದನು. ಅವನ ಮನಸ್ಸಿನಲ್ಲಿ ಆ ಮುದುಕಿ ತನ್ನ ಬೇನೆಯ ವೇಳೆಯಲ್ಲಿ ಮಾಡಿದ ಉಪಚಾರಗಳನ್ನು ನೆನೆದು, ಕೃತಜ್ಞತೆ ಸಲ್ಲಿಸುವ ಸಂದರ್ಭ ದೊರಕಿದರೆ ಸಂತೋಷ ಅನಿಸಿತು. + +ಮುದುಕಿ ತುಸು ಸಮಯ ಬಾಯಿ ಬಿಗಿ ಹಿಡಿದು, “ಅಲ್ಲ ಮಗು, ನೀನೇನೆಂದು ತಿಳಿಯುತ್ತೀಯೋ! ನಮ್ಮ ಸತ್ಯನಿಗೆ ನೀನೆಂದರೆ ತುಂಬಾ ಆಸೆ. ಅವಳಿಗೆ ಲಗ್ನವಾಗುವ ಪ್ರಾಯ ಮೀರಿತು. ನಮಗೂ ಈ ಒಂದು ಸಂಬಂಧ ದೇವರು ನಡೆಯಿಸಿದರೆ ಆಗುತ್ತಿತ್ತು’’ ಎಂದಳು. ರಾಧಾಕೃಷ್ಣ ವಿಚಾರಮಗ್ನನಾಗಿ ಕುಳಿತನು. ಆಯಿತೆಂದು ಸುಲಭದಲ್ಲಿ ಉತ್ತರಿಸುವ ಪ್ರಶ್ನೆ ಅದಲ್ಲ. + +“ಏನು, ಬೇಸರವಾಯಿತೇ?’’ ಎಂದು ಆಕೆ ಕೇಳಿದಳು. + +“ಬೇಸರವಿಲ್ಲ. ಹೆಣ್ಣು ಮಕ್ಕಳಿದ್ದವರು ಆ ಮಾತನ್ನು ಎತ್ತುವುದರಲ್ಲಿ ಆಶ್ಚರ್ಯವೂ ಇಲ್ಲ. ಆದರೆ ನಾನು ಮಾತ್ರ ಥಟ್ಟನೆ ಉತ್ತರ ಹೇಳುವುದು ಕಷ್ಟದ ಕೆಲಸ.’’“ಆಗಲಿ, ಯೋಚಿಸಿ, ಮನೆಯವರನ್ನು ಕೇಳಿ ಹೇಳು.’’ + +••• + +ಆ ರಾತ್ರಿಯ ಸಭೆಯಲ್ಲಿ ಶೇಷಮ್ಮನವರ ಬಯಕೆಗೆ ಪರಿಪೂರ್ಣ ವಿಜಯ. ಮಂಜಯ್ಯನವರು ಈ ಸಂಧಾನದ ಫಲಿತಕ್ಕೆ ಕಿವಿ ನಿಮಿರಿಸಿಕೊಂಡು ಕಾದಿದ್ದರು. ಹಾಗೂ ಹೀಗೂ, ಈ ಒಬ್ಬ ಮಗಳನ್ನು ನೀಗಿಸಿಕೊಂಡರೆ ಮುಂದೆ ಕಷ್ಟ ಬರಲಾರದು. ಉಳಿದ ಮಕ್ಕಳ ಜಾತಕಗಳು ಒಳ್ಳೆಯವು – ಎಂದು ಉಸಿರುಗರೆದರು. ಹಿರಿಯಾಕೆ ಸತ್ಯ ಅವರ ಮೆಚ್ಚಿನ ಹುಡುಗಿ. ಅವಳ ಮದುವೆಯನ್ನು ಬಹಳ ವಿಜೃಂಭಣೆಯಿಂದ ಜರುಗಿಸಬೇಕೆಂದು ಅವರ ಆಪೇಕ್ಷೆ. ಆದರೆ ಶೇಷಮ್ಮಗೂ, ರಾಧಾಕೃಷ್ಣನಿಗೂ ನಡೆದ ಸಂಭಾಷಣೆಯ ರೀತಿ ಬೇರೆಯೇ ಹಾದಿಯನ್ನು ಹಿಡಿದಿತ್ತು. + +“ಮದುವೆಗೇನೋ ಒಪ್ಪಿಗೆ. ಆದರೆ ಲಗ್ನ ನನ್ನಿಷ್ಟದಂತೆ ಆಗಬೇಕು. ನಾನು ತಂದೆಯನ್ನು ಕೇಳುವುದಿಲ್ಲ. ಅವರನ್ನು ಒಲಿಸುವ, ಇಲ್ಲವೆ ಬಿಡುವ ಕೆಲಸ ಮಂಜಯ್ಯನವರದ್ದು.’’ + +“ಅದಿರಲಿ’’ + +“ಇನ್ನು ಲಗ್ನದ ವಿಚಾರ. ಅದನ್ನು ಎಷ್ಟು ಸುಲಭದಲ್ಲಿ, ಎಷ್ಟು ಕಡಿಮೆ ಖರ್ಚಿನಲ್ಲಿ ಮಾಡುತ್ತೀರೋ ಮಾಡಬೇಕು. ಹಾಗೆ ಮಾಡಿ ಆದ ಉಳಿತಾಯವನ್ನೆಲ್ಲ ಗಾಂಧೀ ಫಂಡಿಗೆ ಕೊಡಬೇಕು. ಮದುವೆಯ ಮನೆಗೆ ಸಕ್ಕರೆ ಬರಕೂಡದು. ಮದುಣವಣಿಗಿತ್ತಿಗೆ ಖಾದಿ ಉಡಿಸಬೇಕು’’ ಎಂದು ಒಂದೊಂದಾಗಿ ಗಾಂಧಿ ಕರಾರುಗಳನ್ನು ಹಾಕಿದನು. ಮುದುಕಿ ಅದನ್ನೆಲ್ಲ ಸುಲಭದಲ್ಲಿ ಒಪ್ಪಿಕೊಂಡರೂ, ಈ ನಿರ್ಣಯಗಳೆಲ್ಲ ಮಂಜಯ್ಯನವರ ಉತ್ಸಾಹವನ್ನು ಮುಕ್ಕಾಲು ಮೂರು ವೀಸದಷ್ಟು ಅಪಹರಿಸಿದುವು. ಆಲೆಮನೆಯವರ ಹಿರಿಯ ಮಗಳ ಲಗ್ನವಲ್ಲವೇ! ಅದು ಇಷ್ಟು ಸಪ್ಪೆಯಾಗಿ ನಡೆಯಬೇಕೆಂಬ ವಿಚಾರ ಅವರ ಗಾಂಭೀರ್ಯಕ್ಕೆ ಕಡಿಮೆ. `ಇಂಥ ನೂರು ಅಳಿಯಂದಿರನ್ನು ಕ್ರಯಕ್ಕೆ ಕೊಂಡೇನು,’ ಎನ್ನುವ ಠೀವಿ ಮಗಳ ಜಾತಕದ ಕೇಡು ನಕ್ಷತ್ರದಿಂದ ನಿಮಿತ್ತವಾಗಿ ನಮ್ರವಾಗಬೇಕಾಯಿತು. + +••• + +ರಾಧಾಕೃಷ್ಣನ ಬೇಸರದ ದಿವಸಗಳು ಹೊಸ ದಾಂಪತ್ಯದಿಂದಾಗಿ ಹರ್ಷವಾಗಿಯೇ ಸಾಗಿದುವು. ಪ್ರತಿದಿನ ಕೆಲವು ಸಮಯವನ್ನಾದರೂ ಸತ್ಯಳೊಡನೆ ಕುಳಿತು ಭವಿಷ್ಯ ಚಿಂತನೆ ಮಾಡುವುದರಲ್ಲಿ ಕಳೆಯುತ್ತಾನೆ, ನವಯುಗಕ್ಕೆ ತಕ್ಕಂತೆ ತನ್ನ ಜೀವನ ಸಂಗ್ರಾಮದ ಪಾಲುಗಾರ್ತಿಯಾಗಲು, ಅವಳಲ್ಲಿ ತನ್ನ ಏನೇನು ಬಯಕೆಗಳಿವೆಯೋ, ಅವನ್ನು ಪ್ರಕಟಿಸುತ್ತಿದ್ದ. ಬಾಹ್ಯಜಗತ್ತಿಗೆ, ಹೊಸಬಳಾದ ಅವಳು, ಅವನೆನ್ನುವುದೆಲ್ಲವನ್ನೂ ಕುತೂಹಲದಿಂದ ಕೇಳುತ್ತಾಳೆ. ಸ್ವತಃ ಅವಳಿಗೆ ಏನು ಅನ್ನುವುದಕ್ಕೂ ಬಾರದು. ಅವನ ಮನವನ್ನು ಒಲಿಸುವುದರ ಸಲುವಾಗಿ ದಿನದಲ್ಲಿ ತಾಸು, ಎರಡು ತಾಸು ಕಾಲ ನೂಲು ಮಾಡುತ್ತಾಳೆ. ಅದನ್ನು ಹೆಗ್ಗಳಿಕೆಯಿಂದ ಅವನ ಮುಂದಕ್ಕೆ ಇರಿಸುತ್ತಾಳೆ. ಅದನ್ನು ರಾಧಾಕೃಷ್ಣ ಮಾವನಿಗೆ ತೋರಿಸಿ “ನಾಳೆ ನಿಮ್ಮ ಹುಣಿಸೆ ಬೆಟ್ಟಿನ ಜೇಡರವನಿಂದ ಇದನ್ನು ನೇಯಿಸಿ ನಿಮ್ಮ ಮಗಳಿಗೆ ಇದರಿಂದ ಒಂದು ಸೀರೆ ಮಾಡಿಸುತ್ತೇನೆ” ಎನ್ನುತ್ತಾನೆ. “ಇಷ್ಟು ಸ್ವಲ್ಪ ನೂಲಲ್ಲೇ” ಎಂದು ಅವರು ವಿಸ್ಮಯಪಟ್ಟರೆ “ಇನ್ನೂ ಒಂದು ತಿಂಗಳ ಕಾಲ ಅವಳು ಹೀಗೇ ನೂಲಬೇಕು. ಮಗ್ಗ ಸಿಕ್ಕಿದರೆ ನಾನೇ ನೆಯ್ದೇನು. ಆದರೆ ಮಗ್ಗಕ್ಕೆ ಎಲ್ಲಿ ಹೋಗಲಿ” ಅನ್ನುತ್ತಾನೆ. ಮಗ್ಗದ ನೆನಪಾಗುವಾಗ ಇನ್ನೊಂದು ನೆನಪಾಗುತ್ತದೆ. ಅದು ಗಿರಣಿ ಹಿಂಜಿದ ಹತ್ತಿ. ಅದನ್ನು ನಂಬಿದರೆ ಕೆಲಸ ಅರ್ಧಕ್ಕೆ ಅರ್ಧ. ಈಗ ಕಲಿಯುತ್ತಿರುವ ಮಕ್ಕಳಿಗೆ ಕೊಡುವುದಕ್ಕೆ ಹತ್ತಿ ಇಲ್ಲ. ಸಾಕಷ್ಟು ನೂಲು ಜಮಾಯಿಸದೆ ಬಟ್ಟೆ ಆಗುವಂತಿಲ್ಲ. ನೂತ ನೂಲು ಅಭ್ಯಾಸದ ನೂಲು. ಒಂದೊಂದು ಒಂದೊಂದು ತೆರ. ನೇಯುವುದಕ್ಕೂ ಕಷ್ಟ. + +“ಹತ್ತಿಗೇನು ಬರಗಾಲ? ನಮ್ಮ ಊರಲ್ಲಿಯೇ ಎಷ್ಟೋ ಗಿಡಗಳಿವೆಯಲ್ಲ’’ ಎನ್ನುತ್ತಾರೆ ಮಂಜಯ್ಯನವರು. + +“ಗಿಡ ಇವೆ. ಈ ವರ್ಷ ಹಲವರು ನಟ್ಟಿದ್ದಾರೆ. ಆದರೆ, ಗಿಡ ಬೆಳೆದು ಹತ್ತಿ ಆಗುವುದಕ್ಕೆ ಇನ್ನೂ ಒಂದು ವರ್ಷ ಬೇಕು. ಊರಿನ ಹತ್ತಿ ಜನಿವಾರಕ್ಕೋ, ದೇವರ ದೀಪಕ್ಕೋ ಸಾಕಾಗಬಹುದು. ನೂಲು ಮಾಡುವುದಕ್ಕೆ ಸಾಲದು’’ ಎಂದು ಉತ್ತರವೀಯುತ್ತಾನೆ. + +ಅಂತೂ, ನೂಲುವ ಒಂದೇ ವಿಷಯದೊಳಗೆ ಅವನ ಗ್ರಾಮ ಸುಧಾರಣೆಯ ಕೆಲಸ ನಿಂತುಬಿಟ್ಟಿದೆ. ಅವನ ಮನಸ್ಸಿಗೇನೇ ತಾನು ಬರಿಯ `ಹೆಣ್ಣು ಕೆಲಸ’ದಲ್ಲಿ ಇದ್ದೇನೆ ಎಂದು ಅನಿಸುತ್ತಿದೆ. ತನ್ನಂತಹ ಓದು ಬಲ್ಲವ – ಬರಿಯ ಒಂದೆರಡು ತಾಸು ನೂತರೇ ಸಾಕೇ, ಇತರರಿಗೆ ನೂಲಲು ಹೇಳಿಕೊಟ್ಟರೆ ಸಾಕೇ – ಎಂಬ ವಿಚಾರ ತಾಳುತ್ತಾನೆ. ಅದಕ್ಕೂ ಹೆಚ್ಚಿಗೆ ಏನು ಮಾಡಲಿ – ಎಂದು ಯೋಚಿಸಿ, ಯೋಚಿಸಿ ಬಟ್ಟೆಗೆಡುತ್ತಾನೆ. ಅವನ ಹಂಬಲ – ಒಂದು ಪಂಚಮರ ಶಾಲೆಯನ್ನೂ, ರಾಷ್ಟ್ರೀಯ ಶಾಲೆಯನ್ನೂ ತೆರೆಯಬೇಕೆಂದು. ಹೊಲೆಯರ ಹುಡುಗರಿಗೆ ಬರಗಾಲವಿಲ್ಲ. ಶಾಲೆ ಎಲ್ಲರಿಗೂ ಬೇಕು. ಆದರೆ, ಆಲೆಮನೆಯಲ್ಲಿ ಅವರ ಆಶೆ ಸಫಲವಾಗುವುದುಂಟೇ? ಅಲ್ಲಿ ರಾಷ್ಟ್ರೀಯ ಶಾಲೆಯನ್ನು ತೆರೆದರೂ ಅಷ್ಟರಮಟ್ಟಿಗೆ ಜನ ದೂರಗಾಲಿಟ್ಟಾರು. ಊರಿನ ಸ್ಥಿತಿ ತಿಳಿದೇ ಆ ತೆರನ ಹಂಬಲ ಪ್ರಯೋಜನವಿಲ್ಲವೆಂದು ಚಿಂತಿಸುತ್ತಾನೆ. + +“ಇಲ್ಲ, ಒಮ್ಮೆ ಮಂಗಳೂರಿಗೆ ಹೋಗಿ, ದಯಾನಂದರಾಯರನ್ನು ಸಂಧಿಸಿ, ಮುಂದಿನ ದಾರಿ ನಿಶ್ಚಯಿಸಿ ಬರುತ್ತೇನೆ. ತಮ್ಮ ತಾಲೂಕಿನಲ್ಲಿ ಯಾವುದಕ್ಕೂ ಸಹಾಯ ದೊರೆಯದು’’ ಎಂದು ಬೇಸರಿಸುತ್ತಾನೆ. ಮಾವನ ಆದರ, ಅಜ್ಜಿಯ ಒತ್ತಾಯ, ಸತ್ಯಳ ಮೋಹದ ಸೆರೆಯಲ್ಲಿ ಸಿಲುಕಿ, ಅವನ ವಿಚಾರ, ನಿರ್ಧಾರಗಳು ಆರು ತಿಂಗಳ ಅವಧಿಯಲ್ಲಿಯೂ ತಡಿಯನ್ನು ಸೇರದೆ ಹೋದುವು. ಈ ನಡುವೆ ಒಂದು ದಿನ ಅವನಿಗೆ ತೀರ ಎಚ್ಚರವಾಯಿತು. ತಾನು ಇದಿರು ಕಾದ ವರ್ಷಾಂತ್ಯ ಬಂದಿದೆ. ಪ್ರಪಂಚ ಹೇಗಿದ್ದರೂ – ಭರತಖಂಡಕ್ಕೆ ಸ್ವರಾಜ್ಯವನ್ನು ದೊರಕಿಸಿಕೊಡುವ ದಿನ ಸನ್ನಿಹಿತವಾಗಿದೆ. ಎಲ್ಲ ದಿನಗಳಂತೆ ಆ ದಿನವೂ ಬಂದು ಸರಿಯಿತು; ವಾರ ಸಂದಿತು; ತಿಂಗಳೊಂದಾಯಿತು ಶುಭದ ಒಸಗೆ ಬರಲೇ ಇಲ್ಲ. ಕೃಷ್ಣಪ್ಪನವರೆಂದ ನುಡಿಗೆ ಅವನ ಕಣ್ಣು ತೆರೆಯಿತು. ಅಷ್ಟು ಸುಲಭದಲ್ಲಿ ಅಷ್ಟು ತೀವ್ರದಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕೀತೇ ಎಂಬ ಕಟು ಸತ್ಯ ಅವನ ಕಣ್ಣ ಮುಂದೆ ಹಾಯ್ದಿತು. ಗಾಂಧೀಜಿಯವರ ಆಶ್ವಾಸನೆ ಬೆಳಗಿನ ಮಂಜಿಗಿಂತ ಸುಲಭವಾಗಿ ಮಾಯವಾಯಿತು. “ಇಲ್ಲ, ಅವರೆಂದಂತೆ ಜನರೆಲ್ಲರೂ ಒಮ್ಮತವಾಗಿ ಅಸಹಕಾರ ಹೂಡಿದ್ದರೆ, ಆ ಸುದಿನ ಬರುತ್ತಿತ್ತೋ ಏನೋ! ಹಾಗೆ ಯಾರೂ ಮಾಡಲಿಲ್ಲ. ಬೆರಳಿಂದೆಣಿಸುವಷ್ಟು ಮಂದಿ ಮಾಡಿರಬೇಕು. ಆಲೆಮನೆಯವರಂತೆ, ತಮ್ಮ ತಾಲೂಕಿನರವಂತೆ, ಹೊಸ ಕೆರೆಗೆ ಹಾಲು ತುಂಬಿಸುವ ಬದಲು ನೀರನ್ನು ತುಂಬಿಸಿದವರೇ ಬಹಳ, ಪತ್ರಿಕೆಗಳಲ್ಲಿ ತಾನು ಓದಿ ತಿಳಿದ ಚಳವಳಿ, ಕೋಲಾಹಲ ತೀರ ಮೇಲಿನ ಬರುಗು. ಆದುದರಿಂದ, ನಮ್ಮ ಕೆರೆ ಹಾಲಿನ ಕೆರೆಯಾಗುವ ಬದಲು ನೀರಿನ ಕೆರೆಯೇ ಆಗಿ ಉಳಿದಿದೆ’’ ಎಂದು ತನಗೆ ತಾನೇ ಸಮಾಧಾನವನ್ನು ತಂದುಕೊಳ್ಳುವ ಪಾಡು ಬಂತು. + +ರಾಧಾಕೃಷ್ಣನದೇ ಒಂದು ದಾರಿ. ಸೋಲಿನ ಕಾರಣಗಳನ್ನು ಅಳೆಯುವ ಶೀಲ ಅವನದು. ಅವನ ಮಾರ್ಗದರ್ಶಕರೂ, ಮುಖ್ಯಗುರುಗಳೂ ಆದ ಮಹಾನುಭಾವರು ಮಂಗಳೂರಿನ ದಯಾನಂದ ರಾಯರು. ಅವರು ನಾಡಿನ ಧುರೀಣರು. ಹಲವರ ಆದರ್ಶರು. ದೇವರು ಅವರಿಗೆ ಸಂಪತ್ತು, ಸಂತಾನ, ಸುಖ ಎಲ್ಲವನ್ನೂ ಕೊಟ್ಟಿದ್ದಾನೆ. ಅಂಥ ಜೀವನದಿಂದ ಅವರ ಮನಸ್ಸು ಸೇವಾಜೀವನಕ್ಕೆ ಹರಿಯಿತು. ತ್ಯಾಗಕ್ಕೆ ಮುಂದುವರಿಯಿತು. ಗಾಂಧೀಜಿಯವರ ಪ್ರಿಯ ದರ್ಶನದಿಂದ, ಸಂಭಾಷಣೆಗಳಿಂದ ಮೈಯಲ್ಲಿ ರಾಷ್ಟ್ರೀಯತೆಯ ಹುರುಪು ಉದಯಿಸಿತು. ಅದರ ಜತೆಯಲ್ಲಿ ನೂರಾರು ತರುಣರು ಕಲೆತರು. ಔದಾರ್ಯ ಹೀನರು ಉದಾರಿಗಳಾದರು. ಮಂಗಳೂರಿನಲ್ಲಿ ಅವರು ಯುವಗಾಂಧಿಯವರೇ ಆದರು. ತೆರೆಗೈಯ್ಯ ಕರ್ಣನಂತೆ, ತಮ್ಮ ಬೊಕ್ಕಸವನ್ನು ರಾಷ್ಟ್ರ ಸೇವೆಗೆ ಮೀಸಲಿತ್ತರು. ಅವರ ವರ್ಚಸ್ಸು ಮೇರೆವರಿಯಿತು. ಹಲಸಿನ ತೊಳೆಗೆ ಮುತ್ತುವ ಸೊಳ್ಳೆಗಳಂತೆ ಸೋಮಾರಿಗಳೂ, ಸೋಗಿನವರೂ ಅವರನ್ನು ಸುತ್ತುವರಿದರು. ಜನತೆಯ ಮಾತಿಗೂ ಮನಕ್ಕೂ ಇರುವ ಅಂತರವನ್ನು ಅರಿಯದ ಅವರು ಎಲ್ಲರನ್ನೂ ನಂಬಿದರು. “ಅಲ್ಲಿ ಹತ್ತುನೂರು ಜನ ಶಾಲೆಗಾಗಿ ಕಾದಿದ್ದಾರೆ. ಅಲ್ಲಿ ಐನೂರು ಹೊಲೆಯರು ಮದ್ಯಪಾನ ತ್ಯಾಗದ ಪ್ರತಿಜ್ಞೆ ಮಾಡಿದ್ದಾರೆ. ಮತ್ತೊಂದು ಕಡೆ ಊರಿನ ಪ್ರಮುಖರೆಲ್ಲರೂ ಕಾಯಿದೆ ಭಂಗಕ್ಕೆ ಅನುವಾಗಿದ್ದಾರೆ’’ ಎಂದರೆ, ಎಲ್ಲವನ್ನೂ ನಂಬಿದರು. ಅಲ್ಲಿ, ಇಲ್ಲಿ ಓಡಾಡಿದರು. ತಮ್ಮ ಸಂಪತ್ತು ತಮ್ಮದಲ್ಲವೆಂಬಷ್ಟು ಉದಾರವಾಗಿ ಹಣ ವ್ಯಯಿಸಿದರು.ಅವರಿಗೆ ವರ್ಷಾಂತ್ಯದಲ್ಲಿ ಸ್ವರಾಜ್ಯ ಕರಗತವಾಗುತ್ತದೆ – ಎಂಬುದರಲ್ಲಿ ಅಖಂಡ ವಿಶ್ವಾಸವಿತ್ತು. + +ಯಾವನಾದರೂ ತರುಣ, ದೇಶಭ್ರಮಣದಿಂದ ನಿರಾಶನಾಗಿ ಬಂದರೆ, ಯಾವನಾದರೂ ವಿದ್ಯಾರ್ಥಿ ಮನೆಯವರ ಒತ್ತಾಯಕ್ಕೆ ಬಿಟ್ಟ ಶಾಲೆಯನ್ನು ತಿರುಗಿ ಸೇರುವೆನೆಂದರೆ – ಅವರದು ಒಂದೇ ಮಾತು :“ಇನ್ನೆಷ್ಟು ಸಮಯವಿದೆ. ಆರು ತಿಂಗಳಾಯಿತು. ಇನ್ನು ಆರು ತಿಂಗಳು ಉಳಿದಿದೆ. ಅಲ್ಲಿಯ ತನಕ ನಡೆಯಿಸಿ. ಶಾಲೆಗೆ ಆ ಮೇಲೆ ಸೇರುವುದಂತೆ. ಅಷ್ಟರೊಳಗೆ ದೇಶದ ಎಲ್ಲ ಶಾಲೆಗಳೂ ರಾಷ್ಟ್ರೀಯ ಶಾಲೆಗಳು ಆಗಿಯೇ ಆಗುತ್ತವೆ’’ ಎಂದು ಅವರ ಆಸೆಯ ದೀವಿಗೆಯನ್ನು ಪೋಷಿಸುತ್ತಿದ್ದರು. ಅಂಥವರ ಪತ್ರಮುಖದ ಪ್ರೇರಣೆ, ಬೆಂಬಲ – ರಾಧಾಕೃಷ್ಣನಿಗಿತ್ತು. ಆತ ಹಣಕಾಸಿನ ಅಭಾವವನ್ನು ತೋರಿಸಿಕೊಂಡಿದ್ದರೆ ಅವರು ಸಹಾಯ ಮಾಡುತ್ತಿದ್ದರೋ ಏನೋ. ಆದರೆ, ಅವರ ಸುತ್ತಲೂ ಸ್ತುತಿಪಾಠಕರು, ಕೊರಗು ನಟಿಸುವವರು, ಕೆಲಸದ ನೆಪದಿಂದ ಹಣ ಸುಲಿಯುವವರು ಸೇರಿಕೊಂಡಿರುವಾಗ, ದೂರದಲ್ಲಿ ಬಾಯಿ ಮುಚ್ಚಿ ಕುಳಿತ ಕೆಲಸಗಾರನೊಬ್ಬನ ಕಡೆಗೆ ಅವರ ಗಮನ ಹರಿಯುವುದು ಸಾಧ್ಯವಿದ್ದಿಲ್ಲ. + +ಗಾಂಧಿ ಭವಿಷ್ಯದ ಕೊನೆಗಾಲ ಬಂದಾಗಲಂತೂ ದಯಾನಂದ ರಾಯರು ತುದಿಗಾಲಿನ ಮೇಲೆ ನಿಂತು ಅನುಪಮದ ಪವಾಡವನ್ನು ನಿರೀಕ್ಷಿಸುತ್ತಿದ್ದಾರೆ. ಆಶೆಯ ಆ ದಿವಸ ಬಂದು ಹೋಯಿತು. ಪವಾಡ ಮಾತ್ರ ಸಂಭವಿಸಲಿಲ್ಲ. ಯಾಕೆ ಹಾಗಾಯಿತು – ಎಂದು ಅವರೂ ಯೋಚಿಸಿದರು. ಕೊನೆಗೆ ಒಂದು ದಿವಸ ಗಾಂಧಿಯವರ ನುಡಿಗಳನ್ನು ಎತ್ತಿಕೊಂಡು ಅವರ ಸಂದೇಶದಂತೆ ಯಾವತ್ತು ಜನ ನಡೆಯದಿದ್ದುದರಿಂದ ಹಾಗಾಗಿರಬೇಕೆಂಬ ತೀರ್ಮಾನಕ್ಕೆ ಬಂದರು. “ಓಹೋ, ಅದರ ಅರ್ಥ ಹಾಗಿತ್ತೇ? ನಿಜ, ಅವರ ಮಾತೇ ಸಮ. ನಾವು ಅರ್ಥಮಾಡಿದುದೇ ತಪ್ಪು” ಎಂದುಕೊಂಡರು. + +ಸರಿ, ಪವಾಡ ನಿರೀಕ್ಷಣೆಯಿಂದ ಕಾದು ಕುಳಿತ ಶಾಲೆ, ನೇಯಿಗೆ ಶಾಲೆ, ಚಿಕಿತ್ಸಾ ಶಾಲೆಗಳು ಬರಿದೆ ನಡೆಯುತ್ತವೆಯೇ? ಕೆಲವು ದಿನ ಅವು ಜನರ ಬೆಂಬಲದಿಂದ ನಡೆದುದು ನಿಜ. ಬಹು ದಿನ ಮುಂದೆ ಸಾಗಿದ್ದು ರಾಯರ ಔದಾರ್ಯದಿಂದ ಅಳತೆ ಮೀರಿದ ಔದಾರ್ಯ ಮಾತಿನ ಉರುಳಿಗೆ ಬಲಿಯಾಗುವ ಅವರ ಸರಳತನ, ಅವರನ್ನು ಬಹುಬೇಗ ಸಾಲಿಗರ ಕೈಗೆ ಒಪ್ಪಿಸಿದುವು. ಆದರೂ ಎಲ್ಲವನ್ನೂ ನಡೆಯಿಸಿಕೊಂಡು ಹೋಗುವೆನೆಂಬ ಧೈರ್ಯ. ದಿನ ಸರಿಯಿತು, ತಿಂಗಳು ಸರಿಯಿತು. ಇವರಿಂದ ಹಣ ಸರಿಯಿತು, ಜನರಿಂದ ಉತ್ಸಾಹ ಸರಿಯಿತು. ತಮ್ಮ ಅನುಯಾಯಿಗಳನ್ನು ಜನರಲ್ಲಿ ಧನಸಹಾಯಕ್ಕಾಗಿ ಕಳುಹಿಸಿದರು. ಕಾಲ ಸರಿದಂತೆ ಅವರೂ ಕಣ್ಮರೆಯಾದರು. ಜನರ ಸಹಾಯವೂ ಕಾಣದಾಯಿತು. ಅವರ ದೇಶಪ್ರೇಮ, ಹಡೆದ ಕೂಸುಗಳೆಲ್ಲವೂ – ಕಾಮಾಲೆ, ಗ್ರಹಿಣಿ, ಅಪಸ್ಮಾರ ಬೇನೆಗಳಿಗೆ ಬಲಿಯಾದವು. + +ಮಂಗಳೂರಿನಲ್ಲಿ ಧೂಮಕೇತುವಿನಂತೆ ಬೃಹದಾಕಾರವನ್ನು ತಾಳಿ ಬಾಲ ಬೆಳೆಯಿಸಿ ಮೆರೆದ ರಾಷ್ಟ್ರೀಯ ಚಳವಳದ ಅಬ್ಬರ, ಮಳೆ ಕಳೆದ ಬಾನಿನಂತೆ ಬರಿದಾಯಿತು. ದಯಾನಂದರಾಯರು ತಮ್ಮ ಭೂಮಿ, ಮನೆಗಳನ್ನೆಲ್ಲ ಅಡವು ಮಾಡಿಕೊಂಡು ಸಾಲಕ್ಕೆ ಸಿಕ್ಕಿದ್ದೇ ಬಂದಿತು. ಅವರ ದೇಶಭಕ್ತಿಯ ಈ ಘಟ್ಟದಲ್ಲಿ ಹತ್ತಿರದ ಪರಿಚಿತನಾದ ರಾಧಾಕೃಷ್ಣ ಅವರಲ್ಲಿಗೆ ಯೋಚನೆಗಾಗಿ ಬಂದನು. ತುಂಬ ನೆಚ್ಚಿನ ಗೆಳೆತನ ಅವರದ್ದು. ಇಬ್ಬರದೂ ನಿಷ್ಕಲ್ಮಶ ಹೃದಯ. ಬಹುಕಾಲದ ಬಳಿಕ ಆದ ದರ್ಶನ. + +ಮೊದಲಿನ ಸುದ್ದಿಯೆಂದು ಅಳುಕಿನಿಂದ ರಾಧಾಕೃಷ್ಣ ಅವರಿಗೆ ತನ್ನ ವಿವಾಹದ ವಾರ್ತೆಯನ್ನು ತಿಳಿಸಿದನು. ಅವರು “ನೀವು ಹೊಸತಾಗಿ ಆ ತಪ್ಪು ಮಾಡಿದಿರೆ? ಸಂಸಾರಿಯಾಗಿದ್ದ ನಾನೇ ದೇಶಸೇವೆಗೆ ಸಂಸಾರವೆಂಬುದು ಒಂದು ಬಂಧನ – ಎಂದು ಮನಗಾಣುತ್ತಿದ್ದೇನೆ” ಎಂದರು. + +ರಾಧಾಕೃಷ್ಣನ ಮುಖ ಸಪ್ಪಗಾಯಿತು. ಅವನು ನೊಂದುಕೊಂಡನೆಂದು ತಿಳಿದು, ತಮ್ಮ ಮಾತಿನ ಉದ್ದೇಶವನ್ನು ವಿವರಿಸತೊಡಗಿದರು. “ನೋಡಿ, ನಾನು ಬೇರೆ ಅರ್ಥದಲ್ಲಿ ಹೇಳಿದ್ದಲ್ಲ. ನನಗೂ ಸಂಸಾರ ಇದೆ. ದೇವರು ಚೆನ್ನಾದ ಅನುಕೂಲತೆ ಕೊಟ್ಟುದರಿಂದ ಮೊನ್ನೆಮೊನ್ನೆಯ ತನಕ ಯಾವ ಯೋಚನೆಯೂ ಇಲ್ಲದೇನೆ ಇದ್ದೆ. ದೇಶಸೇವೆಯೇ ನನ್ನ ಸರ್ವಸ್ವವಾಗಿತ್ತು. ಅದಕ್ಕಾಗಿ ಹಣ ವ್ಯಯಿಸಿದೆ. ನನ್ನ ಎಲ್ಲವನ್ನೂ ವೆಚ್ಚಮಾಡಿದೆ. ಬರಿಯ ಸ್ವಲ್ಪ ಕಾಲ, ತಾನು ಪ್ರೇರಿಸಿದ ಸಂಸ್ಥೆಗಳನ್ನೆಲ್ಲ ತಾನು ಸಾಕಿ ಬಂದರೆ, ಮುಂದೆ ಅವನ್ನು ಸಾಕುವ ಭಾರ ಸ್ವರಾಜ್ಯ ಸರಕಾರದ್ದು ಎಂದು ತಿಳಿದೆ. ಈಗ ನೋಡಿ. ನನ್ನ ಹಣ ಬರಿದಾಯಿತು. ಜನಸಹಾಯಕ್ಕೆ ಕಟ್ಟು ಬಿದ್ದುದಾಯಿತು. ಈಗ ಎಲ್ಲದಕ್ಕೂ ನಿಸ್ಸಹಾಯನಾಗಿ ಕುಳಿತಿದ್ದೇನೆ. ಸಂಸಾರದ ಹೊರೆ ಏನು ಎಂಬುದು ಈಗ ಒಂದೊಂದಾಗಿ ಕಾಣುತ್ತಿದೆ” ಎಂದರು. “ಹೋಗಲಿ, ಆ ಮಾತು, ಈಗ ಏನು ಬಂದಿರಿ? ಇನ್ನೇನು ವಿಶೇಷ? ನಿಮ್ಮೂರಲ್ಲಿ ಈಗ ಏನೇನು ನಡೆದಿದೆ” ಎಂದು ವಿಚಾರಿಸಿದರು. ಅವನಿಗೆ, ಹಿಂದುಳಿದ ಕುಂದಾಪುರದಲ್ಲಿ ಚೈತನ್ಯ ತುಂಬಿಸಬೇಕೆಂಬ ಪ್ರೇರಣೆ ಅವರಿಂದ ಆಗಾಗ ಬರುತ್ತಲೇ ಇತ್ತು. `ಯಾಕೆ ರಾಷ್ಟ್ರೀಯ ಶಾಲೆಯನ್ನು ತೆರೆಯಬಾರದು? ಯಾಕೆ ಖಾದೀ ಕೇಂದ್ರ ನಡೆಯಿಸಬಾರದು? ಹಿರಿಯಡ್ಕದವರು ಮಾಡಿದ್ದಾರೆ. ಉಡುಪಿಯವರು ಮಾಡಿದ್ದಾರೆ. ನೀಲೇಶ್ವರದಲ್ಲಿ ಜೋರಾವರಿಯಿಂದ ಕೆಲಸ ನಡೆಯುತ್ತಿದೆ’ ಎಂದು ಬರೆಯುತ್ತಲೇ ಇದ್ದರು. ಅಂಥವರ ಮುಂದೆ ತನ್ನ ಕ್ಷುದ್ರ ಊರಿನ ವಿಚಾರ ಏನು ಹೇಳಬೇಕು? ಅವರ ಪತ್ರಕ್ಕೆ ಉತ್ತರ ಬರೆಯುವುದೇ ನಾಚಿಕೆಯಾಗುತ್ತಿತ್ತು. + +ಈಗ ಅವನ ಮನಸ್ಸಿನ ಚಾಂಚಲ್ಯ ತುರೀಯಕ್ಕೇರಿದೆ. ಪರರ ಸಹಾಯ ನಿರೀಕ್ಷಿಸಿ ಆಯಿತು. ಹೆರವರ ಮುಖದ ಮುಂದೆ ಕತ್ತು ಬಗ್ಗಿಸಿ ಬೇಡಿ ಆಯಿತು. ಇನ್ನು ಒಬ್ಬಂಟಿಗನಾಗಿ ಆದರೂ, ಒಂದು ಸಂಸ್ಥೆಯನ್ನು ತೆರೆಯಬೇಕೆಂಬ ನಿರ್ಧಾರಕ್ಕೆ ಬಂದಿದ್ದಾನೆ. ಬರಿಯ ನೂಲುವ, ನೇಯುವ ಕೆಲಸಗಳಿಂದ ಅವನ ಮನಸ್ಸಿಗೆ ತೃಪ್ತಿ ಬರುವಂತಿರಲಿಲ್ಲ. ಮನುಷ್ಯ ಕುಲದ ಸ್ನೇಹವನ್ನು ಅದು ಸದಾ ಬಯಸುತ್ತಿತ್ತು. ಆಲೆಮನೆಯಲ್ಲಿದ್ದು, ಹತ್ತು ಜನ ಬಡಬಗ್ಗರ ಮನೆಯನ್ನು ಹೊಕ್ಕು ಹೊರಟ ಪರಿಣಾಮವಾಗಿ, ಅವನ ಮನಸ್ಸು ಅವರ ದಾರಿದ್ರ್ಯವನ್ನು ಕುರಿತು ಚಿಂತಿಸುತ್ತಿತ್ತು. ಹೊಲೆಯರ ತುಂಬು ದಾರಿದ್ರ್ಯಕ್ಕಾಗಿ, ಅಜ್ಞಾನಕ್ಕಾಗಿ ಅವನ ಮನಸ್ಸು ನೋಯುತ್ತಿತ್ತು. ಅಜ್ಜಿಗೂ, ಮಾವನಿಗೂ ತಿಳಿಸದಂತೆ ಅವರ ಗುಡಿಸಲುಗಳಿಗೆ ಕದ್ದು ಹೋಗಿ “ಮದ್ಯಪಾನ ಬಿಡಿ, ಮಾಂಸಾಹಾರ ಬಿಡಿ. ಉಚ್ಚಿಷ್ಟ ಭೋಜನ ಬಿಡಿ” ಎನ್ನುತ್ತಿದ್ದ ಅವನ ಕೂಗು ಯಾವ ಪರಿಣಾಮವನ್ನೂ ಮಾಡಲಿಲ್ಲ. ಅದಕ್ಕೆಲ್ಲ ಕಾರಣ, ಅವರ ಅಪಾರ ಅಜ್ಞಾನವೆಂದು ತಿಳಿದ. ಈ ಜನಕ್ಕೆ ತಮ್ಮ ಬಾಳುವೆಯನ್ನು ಸಾಗಿಸುವ ಆರ್ಥಿಕ ಪುಷ್ಟಿಯನ್ನು ಕೊಡದ ಹೊರತು, ಉಳಿದೆಲ್ಲ ಮಾತುಗಳು ಅರಣ್ಯರೋದನ ಎಂಬ ಅಸ್ಪಷ್ಟ ಕನಸಿನ ತಂದೆಯಾದ, ಆ ಕನಸಿನ ಕೂಸನ್ನು ಹೊತ್ತುಕೊಂಡು ರಾಯರೊಡನೆ ಚರ್ಚಿಸಲು ಬಂದಿದ್ದಾನೆ. ತನ್ನ ಆ ಯೋಚನೆಗೆ ಅವರ ಆರ್ಥಿಕ ಬೆಂಬಲ ದೊರೆತೀತೆಂದು ನಂಬಿ ಬಂದಿದ್ದಾನೆ. ಅದು ಫಲಿಸುವ ದಾರಿ ಕಾಣಸಲಿಲ್ಲ. “ಏನು ಬಂದಿರಿ” ಎಂದು ಅವರು ಕೇಳಿದ್ದಕ್ಕೆ ಮನಸ್ಸನ್ನು ಬಿಚ್ಚಿ ಹೇಳಿದ. + +ದಯಾನಂದ ರಾಯರು ಉತ್ಸಾಹಶೀಲರು. ಉತ್ಸಾಹ ತುಂಬಿದ ಗಳಿಗೆಯಲ್ಲಿ ನೆಲಬಿಟ್ಟು ಮುಗಿಲಾಗಿ, ಬಾನಲ್ಲಿ ತೇಲುವುದು ಅವರ ಸ್ವಭಾವ. “ಅಯ್ಯೋ, ಈ ನಿಮ್ಮ ಯೋಚನೆಗಳನ್ನು ನನಗೆ ಮೊದಲೇ ತಿಳಿಸಿದ್ದರೆ! ನೂರಾರು ಮಂದಿ ಠಕ್ಕರನ್ನು ನಂಬಿ, ನನ್ನ ಹಣ ಸುರಿಯುವ ಬದಲು ಅಂಥ ಆಶ್ರಮಕ್ಕೆ ಸುರಿಯುತ್ತಿದ್ದೆ. ಆಗಲಿ ನೋಡುವ. ಯಾರೋ ಒಬ್ಬನಿಂದ ಸಾವಿರ ರೂಪಾಯಿ ಸಾಲ ಬರುವುದು ಇದೆ. ಇನ್ನೂ ಮೂರು ತಿಂಗಳಲ್ಲಿ ಅದು ಬಂದೇ ತೀರಬೇಕು. ನೀವು ನೆನಪು ಮಾಡಿ ಕಾಗದ ಬರೆದರೆ, ನೆಟ್ಟಗೆ ಅದನ್ನು ನಿಮಗೆ ಕಳುಹಿಸುತ್ತೇನೆ. ಆ ಸಾವಿರ ರೂಪಾಯಿಯಿಂದ ಎರಡು ವರ್ಷದ ಖರ್ಚು, ವೆಚ್ಚ ಹೇಗೂ ಸಾಗಿಸಬಹುದು. ಮುಂದೆ ದೇವರು ಇದ್ದಾನೆ, ನೋಡುವ” ಎಂದರು. ಅವನೊಡನೆ ಭಾವೀ ಆಶ್ರಮದ ನಾಮಕರಣ, ಸ್ಥಳ, ಕಾರ್ಯಕ್ರಮಗಳನ್ನು ಕುರಿತಾಗಿ ಚರ್ಚೆ ನಡೆಯಿಸಿದರು. ಮೂರು ದಿವಸಗಳ ಕಾಲ, ಅವನನ್ನು ಜತೆಯಲ್ಲಿ ಇರಿಸಿಕೊಂಡರು. ಎಂಥೆಂಥವರನ್ನು ನಂಬಿದ ಅವರಿಗೆ ರಾಧಾಕೃಷ್ಣನಂತಹ ಸರಳ ವ್ಯಕ್ತಿಯು ಮೆಚ್ಚುಗೆಯಾದುದರಲ್ಲಿ ಸೋಜಿಗವಿಲ್ಲ. “ಛೀ, ಛೀ, ಇಂಥ ಅಮೂಲ್ಯ ಕೆಲಸಗಾರನೊಬ್ಬ ಇದ್ದೂ ನನಗೆ ತಿಳಿಯದೆ ಹೋಯಿತೇ” ಎಂದು ನೊಂದುಕೊಂಡರು. + +ನಾಲ್ಕನೆಯ ದಿನ ರಾಧಾಕೃಷ್ಣನು ಕುಂದಾಪುರಕ್ಕೆ ಹೊರಡಲು ಸಿದ್ಧನಾದನು. ರಾಯರ ಆರ್ಥಿಕ ಸ್ಥಿತಿಯ ಚೆನ್ನಾದ ಅರಿವು ಇಲ್ಲದ ಅವನಿಗೆ ಅವರ ಬೆಂಬಲದಲ್ಲಿ ಅವಿಶ್ವಾಸ ಇರಲಿಲ್ಲ. ತನ್ನದೇ ಅವಿಶ್ವಾಸ ಅವನಿಗೆ. ತನ್ನ ಕಾರ್ಯಕ್ಕೆ ರಂಗ ಯಾವುದು ಎಂದು ತೋರಿರಲಿಲ್ಲ. ಪರಿಚಿತವಾದ ಊರಿನಿಂದ ಅಪರಿಚಿತವಾದ ಊರಿಗೆ ಹೋಗಲು ಧೈರ್ಯವಿರಲಿಲ್ಲ. ಅಲ್ಲದೆ ತನ್ನೂರಿನ ವಿಷಯವಾದ ಅಭಿಮಾನ ಬೇರೆ. ತನ್ನ ಗ್ರಾಮಗಳ ಉದ್ಧಾರವನ್ನು ತಾನು ಮಾಡದೆ, ಪರರು ಮಾಡುವುದುಂಟೇ ಎಂಬ ತರ್ಕ. “ಇಲ್ಲ, ಮಾವನಿಂದ ಭೂಮಿಯ ಒಂದು ತುಣುಕನ್ನು ಗೇಣಿಗೆ ಪಡೆದು ಅಲ್ಲಿಯೇ ಕೆಲಸ ತೊಡಗುತ್ತೇನೆ. ತಂದೆಯಿಂದ ಪಾಲು ಪಡೆದಾದರೂ ತನ್ನ ಆಶ್ರಮ ಕಟ್ಟುತ್ತೇನೆ. ತಾನೇನು ಮಾಡುವುದು ಇದೆಯೋ ಅದನ್ನು ತನ್ನ ಊರಿನಲ್ಲೇ ಮಾಡುತ್ತೇನೆ” ಎಂಬ ನಿರ್ಧಾರವನ್ನು ಆತ ಮಾಡುತ್ತಿರುವ ಗಳಿಗೆಯಲ್ಲೇ ಅವನ ಮಾರ್ಗದರ್ಶಿಗಳಾದ ದಯಾನಂದ ರಾಯರಿಗೆ ಬೇರೆಯೇ ಯೋಚನೆ ಹೊಳೆಯುತ್ತಿದೆ. ಯಾವ ದೊಡ್ಡ ಕೆಲಸವಾಗುವುದಿದ್ದರೂ, ಮುಖ್ಯ ನಗರವಾದ ಮಂಗಳೂರಿನಲ್ಲಿಯೇ ಆಗಬೇಕೆಂಬುದು ಅವರ ತರ್ಕ ಸರಣಿ. + +ಜಾಗದ ವಿಚಾರ ಬಂದಾಗ, ರಾಧಾಕೃಷ್ಣ ಅನುಮಾನಿಸುತ್ತಿದ್ದುದನ್ನು ಕಂಡು, ಒಮ್ಮೆಗೇ ನಿದ್ರೆಯಿಂದ ಎಚ್ಚೆತ್ತವರಂತೆ ಅಂದರು. “ಅದಕ್ಕೆ ಇಷ್ಟು ಗೊಂದಲವೇ, ಕಿರಿಪದವಿನಲ್ಲಿ ನನ್ನದೇ ಒಂದು ಭೂಮಿ ಇದೆ. ಸುಮಾರು ಐವತ್ತು ಮುಡಿ ಗೇಣಿ ಬರುವ ಒಮ್ಮಟ್ಟಾದ ಜಾಗ. ತುಂಬ ಬೆಟ್ಟು ಭೂಮಿಯೂ ಇದೆ. ನೀರಿನ ಆಶ್ರಯವಿದೆ. ಒಂದು ಕಡೆ ಎತ್ತರವಾದ ಗುಡ್ಡ, ಬಹಳ ಸುಂದರವಾದ ಸ್ಥಳ. ಆಶ್ರಮಕ್ಕೆ ಹೇಳಿ ಮಾಡಿದ್ದು. ಬಹಳ ದೂರವೂ ಇಲ್ಲ” ಎಂದು ತಿಳಿಸಿದರು. ಅದೇ ದಿನವೇ ಒಂದು ಬಾಡಿಗೆ ಮೋಟಾರಿನಲ್ಲಿ ಕುಳಿತುಕೊಂಡು ಮಂಗಳೂರಿನಿಂದ ಆರು ಮೈಲು ದೂರದಲ್ಲಿರುವ ಆ ಸ್ಥಳಕ್ಕೆ ರಾಧಾಕೃಷ್ಣನನ್ನು ಕರೆದೊಯ್ದರು. ಮೋಟಾರು, ಉನ್ನತವಾದ ಪದವು ಒಂದರ ಮೇಲೆ ಹೋಗಿ ನಿಂತಿತು. ಅಲ್ಲಿಂದ ನಾಲ್ಕು ಸುತ್ತಲೂ ಸುಂದರವಾದ ಗುಡ್ಡಗಳ ಸಾಲು ಕಾಣಿಸುತ್ತಿದೆ. ತೆಂಕು ದಿಕ್ಕಿನಲ್ಲಿ ಬರಿಯ ಒಂದು ಮೈಲು ದೂರದಲ್ಲಿ, ಮಂದಗಮನೆ ನೇತ್ರಾವತಿಯ ನೋಟವಿದೆ. ಪದವಿನಿಂದ ನೇರ ಕೆಳಕ್ಕಿಳಿದೊಡನೆಯೇ ಬರುವುದು ಅವರ ಭೂಮಿ. + +ಅಲ್ಲಿನ ಹೊಲದ ಬಳಿ ಕಾಲಿಡುತ್ತಲೇ, ದಯಾನಂದರಾಯರ ಒಕ್ಕಲು ಬಿರುಮ ಮರಕಾಲ ಅವರನ್ನು ಸಂಧಿಸಿದ. ಬಿರುಮ ವಂದಿಸಿದ, ಮರ ಏರಿ ಏರಡು ಎಳನೀರುಗಳನ್ನು ತಂದಿರಿಸಿದ. ರಾಯರನ್ನು ಕಂಡಾಗಲೆಲ್ಲಾ ವಂದಿಸಿ, ಎಳನೀರು ಸಲ್ಲಿಸಿ, ತನ್ನ ದುಃಖದ ಹಾಲಾಹವಾಲೆಗಳನ್ನು ಹೇಳಿಕೊಂಡು ಗೇಣಿ ಸಲ್ಲಿಸದೆ ಇರುವ ಕದೀಮ ಆತ. ಆತನಲ್ಲಿ ರಾಯರಿಗೆ ತುಂಬಾ ನಂಬುಗೆ. ಆ ದಿನವೂ ಅವರ ಮುಂದೆ ತನ್ನ ತಾಪತ್ರಯಗಳನ್ನು ತೋಡಿಕೊಳ್ಳಲು ಹಿಂದಾಗಲಿಲ್ಲ. ರಾಧಾಕೃಷ್ಣನು ಆ ಸ್ಥಳದಲ್ಲಿ ತುಂಬಾ ಅಡ್ಡಾಡಿದ. ಅಲ್ಲಿನ ಜಲಾಶ್ರಮ, ಕೃಷಿಗೆ ಅನುಕೂಲವಾದ ಭೂಮಿ, ಈಗಾಗಲೇ ಉತ್ತು ಬಿತ್ತಿದ ಹೊಲ ನೆಲಗಳನ್ನು ಕಂಡನು. ತನ್ನ ಉದ್ದೇಶಕ್ಕೆ ಇದು ಪ್ರಶಸ್ತ ಸ್ಥಳವೆಂದು ಒಪ್ಪಿಕೊಳ್ಳಬೇಕಾಯಿತು. ಆ ಸ್ಥಳದಲ್ಲಿ ಒಂದೆರಡು ಪುಟ್ಟ ಗುಡಿಸಲುಗಳು ಇದ್ದವು. ಆಶ್ರಮ ನಿರ್ಮಾಣಕ್ಕೆ ಹೆಚ್ಚೇನು ಬೇಕು? ಅವನ ಮನಸ್ಸು ಪರಿವರ್ತನೆಗೊಂಡಿತು. ಆ ಜಾಗಕ್ಕೆ ಒಲಿಯಿತು. ಈ ತೆರನ ಅನುಕೂಲ ಪ್ರದೇಶ, ರಾಯರ ಬೆಂಗಾವಲು ಸುಲಭದಲ್ಲಿ ದೊರೆಯುವಾಗ ಅವನ್ನು ಅಲ್ಲಗಳೆಯುವುದು ತಪ್ಪೆಂದು ತೋರಿತು. ಮಂಗಳೂರು ಒಂದು ಪರದೇಶವಲ್ಲವಷ್ಟೆ. ಅವನ ಎದುರಿಗೇನೆ ರಾಯರು ಮರಕಾಲನನ್ನು ಕರೆದು “ಬಿರುಮ, ಎಂಟು ವರ್ಷಗಳಿಂದ ನೀನು ಗೇಣಿಯನ್ನು ಬಾಕಿ ಇರಿಸಿಕೊಂಡೆ, ಅದನ್ನು ನೀನು ಕೊಡುತ್ತೀ ಎಂದು ನಾನು ನಂಬುವುದೂ ಇಲ್ಲ. ಕೊಡಬೇಕೆಂದರೂ ನಿನ್ನಲ್ಲಿ ಅದು ಇರಲಿಕ್ಕಿಲ್ಲ. ನನಗೆ ಮೊದಲಿನ ಅನುಕೂಲತೆ ಈಗ ಉಳಿದಿಲ್ಲ. ನಾನೂ ಸೋತವನೇ. ಈ ತಿಂಗಳಿನಿಂದ ಈ ರಾಯರಿಗೆ ಒಂದು ಒಳ್ಳೆಯ ಕೆಲಸಕ್ಕೆ ಈ ಭೂಮಿಯನ್ನು ಕೊಡುತ್ತೇನೆ ಅಂದಿದ್ದೇನೆ. ನೀನು ಬೇರೆಯೇ ಜಾಗವನ್ನು ಹುಡುಕಬೇಕಾಗುತ್ತದೆ. ಕೂಡಲೇ ಈ ಸ್ಥಳವನ್ನು ಬಿಡಬೇಕೆಂದು ನಾನು ಹೇಳುವುದಿಲ್ಲ. ಆದರೆ ಈ ವರ್ಷದಿಂದ, ಈ ಭೂಮಿ ಸಾಗುವಳಿಗೆ ನಿನಗೆ ಸಿಗುವ ಹಾಗಿಲ್ಲ” ಎಂದುಬಿಟ್ಟರು. + +ಅಲ್ಲಿಂದ ಅವರು ಮರಳಿ ಮಂಗಳೂರಿಗೆ ಬಂದರು. ರಾಧಾಕೃಷ್ಣನ ಮನಸ್ಸು ಸವಿಗನಸುಗಳಲ್ಲಿ ತೇಲತೊಡಗಿತು. ತನ್ನ ಕೆಲಸ ಕೈಗೂಡುವುದೆಂದು ತಿಳಿದನು. ಇನ್ನು ಹೆಂಡತಿಯನ್ನು, ಮಾವನನ್ನು ಒಲಿಸಿಕೊಳ್ಳಬೇಕಾದುದು ಮುಂದಿನ ಕೆಲಸ. ಸತ್ಯ ತನ್ನ ಗಾನಕ್ಕೆ ತಕ್ಕಂತೆ ಹೆಜ್ಜೆ ಹಾಕಲು ಕಲಿತೇ ಇದ್ದಾಳೆ ಎಂಬ ವಿಶ್ವಾಸ. ಮಾವನನ್ನು ಕೇಳುವುದು ಕೇವಲ ಔಪಚಾರಿಕ – ಎಂದುಕೊಂಡನು. ಆತ ಮುಂದಿನ ಸಿದ್ಧತೆಗಾಗಿ ಆಲೆಮನೆಗೆ ಮರಳಿ ಬಂದನು. + +ಇತ್ತ ದಯಾನಂದ ರಾಯರು, ತಮ್ಮ ನಷ್ಟವಾದ ಎಲ್ಲ ಸಾಹಸ, ನೋವುಗಳನ್ನು ಮರೆಯುವುದಕ್ಕೆ ಎಂಬಂತೆ, ಈ ಹೊಸ ಕನಸನ್ನೇ ಮೆಲುಕಾಡುತ್ತಿದ್ದರು. ಮನಸ್ಸಿನ ಯಾವ ವಿಚಾರವನ್ನೂ ಬಹಳ ಹೊತ್ತು ಬಚ್ಚಿಟ್ಟುಕೊಳ್ಳುವ ಸ್ವಭಾವ ಅವರದ್ದಲ್ಲ. ಅವರಲ್ಲಿಗೆ ಕಾಲಯಾಪನೆಗಾಗಿಯೋ, ಸ್ವಕಾರ್ಯಸಾಧನೆಗಾಗಿಯೋ ಬಂದು ಹೋಗುತ್ತಿದ್ದ ಅನೇಕ ದೇಶಭಕ್ತರು ಇದ್ದಾರೆ. ಅವರೊಡನೆ ತಮ್ಮ ಯೋಚನೆಗಳನ್ನು ಹಂಚಿ ಉಣ್ಣುವುದು ರಾಯರ ಸ್ವಭಾವ. ಅದರಂತೆ, ಈ ವಿಷಯವನ್ನೂ ಅವರ ಮುಂದಕ್ಕೆ ಇರಿಸಿದರು. ರಾಯರು ಮುಗಿಲ ಅರಮನೆ ಕಟ್ಟುವುದರಲ್ಲಿ ಮೊದಲೇ ನಿಪುಣರು. ಸಣ್ಣಪುಟ್ಟ ಯೋಚನೆಗಳು ಅವರ ಮುಂದೆ ಹಾಯುವುದೆಂದೇ ಇಲ್ಲ. ಆದುದರಿಂದ, ಮುಂದೆ ತೆರೆಯಲಿರುವ ತಮ್ಮ “ದಲಿತಾಶ್ರಮದಲ್ಲಿ ಕನಿಷ್ಠ ಐವತ್ತು ಬಡ ಜನರಿಗೆ ಉದ್ಯೋಗ ಕಲ್ಪಿಸಬೇಕು. ವಿದ್ಯೆ ಒದಗಿಸಬೇಕು” ಎಂಬ ಹವಣಿಕೆ ಹಾಕಿದರು. “ಅಷ್ಟು ಸ್ವಲ್ಪ ಭೂಮಿಯಿಂದ ಅಷ್ಟೊಂದು ಕೆಲಸ ಸಾಧ್ಯವೇ” ಎಂದು ಗೆಳೆಯರು ಅನುಮಾನಿಸಿದರೆ, `ಆಚೀಚೀನ ಭೂಮಿಗಳನ್ನು ಕೊಂಡರಾಯಿತು’ ಎನ್ನುತ್ತಾರೆ. `ಗೇಣಿ ಕೊಟ್ಟು ಬರುವ ಉಳಿತಾಯದಲ್ಲಿ ಏನು ಸಾಧ್ಯ’ ಎಂಬ ಅನುಮಾನವಿತ್ತರೆ, `ಈಗ ಎಷ್ಟೆಲ್ಲ ಆಶ್ರಮಗಳು ಜಮೀನು ಇಲ್ಲದೆಯೆ ನಡೆಯುತ್ತಲಿಲ್ಲ?’ ಎನ್ನುತ್ತಾರೆ. ಯಾವೊಂದು ಆಶ್ರಮದ ಸ್ಪಷ್ಟವಾದ ಪರಿಚಯವೂ ಅವರಿಗಿರಲಿಲ್ಲ. ಅವರಿಗೆ ಗೊತ್ತಿದ್ದ ಖಂಡಿತವಾದ ಒಂದು ಮಾತು ಎಂದರೆ, ಅವರ ತಾಯಿ ಹೇಳುತ್ತಿದ್ದ ಮಾತು : “ಕಿರಿ ಪದವಿನ ಆಸ್ತಿ ಬಂಗಾರದಂಥ” ದ್ದೆಂದು. ಅದರ ಮೇಲೆ ನಿಂತಿದೆ, ಅವರ ಮುಗಿಲ ಗೋಪುರ. + +ತಮ್ಮ ಈ ಕನಸು ಕೃತಿಗೆ ಬರಲು ಹತ್ತೆಂಟು ಮಂದಿ ಕೆಲಸಗಾರರಾದರೂ ಬೇಡವೇ – ಎಂದು ತೋರಿತು. ಈ ತನಕ ಅವರ ಆಶ್ರಯದಲ್ಲಿ ದುಡಿದದ್ದು, ಕೆಲಸ ನೆರವೇರಿಸಲಾರದೆ, ಹೊಸ ಉದ್ಯೋಗ ದೊರಕಿಸಿಕೊಳ್ಳಲಾರದೆ ಮಾತಿನಲ್ಲೇ ಕಾಲ ಕಳೆಯುತ್ತಿದ್ದ ಕೆಲವು ಸ್ವಯಂ ಸೇವಕರು. ಮನಸ್ಸಿಗೆ ಯೋಚನೆ, ಹೊಳೆದ ಒಡನೆಯೇ ರಾಯರು ಅಂಥ ನಾಲ್ಕಾರು ಮಂದಿಯನ್ನು ಕರೆಯಿಸಿ ಕೆಲಸಕ್ಕೆ ನೇಮಕ ಮಾಡಿಯೂ ಆಯಿತು. ಅವರಾದರೂ, ನಾಳೆ ಬೇರೊಂದು ಉದ್ಯೋಗ ಸಿಗುವ ತನಕ ಇದಾದರೂ ಇದು ಎಂದುಕೊಂಡರು. ಈ ಯಾವ ಏರ್ಪಾಡುಗಳೂ ರಾಧಾಕೃಷ್ಣಗೆ ತಿಳಿದಿರಲಿಲ್ಲ. + +ರಾಧಾಕೃಷ್ಣ ಊರನ್ನು ಬಿಟ್ಟು ದಲಿತಾಶ್ರಮವನ್ನು ಸೇರಿದ್ದಾನೆ. ಬಂದು ಸೇರಿ ನಾಲ್ಕು ತಿಂಗಳ ಕಾಲ ಕಳೆದಿದೆ. ಅವನ ಪ್ರತಿಯೊಂದು ದಿನವೂ ನೆನೆಯುವಂತಿತ್ತು. ಕೂಸು ಹುಟ್ಟುವ ಮೊದಲೇ, ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿಕೊಂಡು ಬಂದರೆ ಹೇಗಿರಬಹುದೋ – ಹಾಗಿತ್ತು ಅವನ ಸಂಸಾರ. ತಂದೆಯ ಮರಣದಿಂದಾಗಿ, ಆತ ಅಲ್ಲಿಗೆ ಬಂದು ಸೇರಲು ತುಸು ನಿಧಾನವಾಯಿತು. ಬರುವುದರೊಳಗಾಗಿ, ದಯಾನಂದರಾಯರು ತಮಗೆ ತಿಳಿದಂತೆ ಎಲ್ಲಾ ಕೆಲಸ ನಡೆಯಿಸಿದ್ದರು. ಅವನು ಅಲ್ಲಿಗೆ ಬಂದು ಸೇರುವಾಗ ಆ ಜಾಗದಲ್ಲಿದ್ದ ಎರಡು ಹುಲ್ಲು ಚಾವಣಿಯ ಮನೆಗಳಲ್ಲಿ ಜನ ತುಂಬಿದ್ದರು. ಒಂದರಲ್ಲಿ ಹತ್ತೆಂಟು ಮಂದಿ ಬಾಲಕರು; ಇನ್ನೊಂದರಲ್ಲಿ ಮೂರು ಮಂದಿ ಸಹ ಅಧ್ಯಾಪಕರು. ಈತ ಆ ಬಳಗಕ್ಕೆ ಮುಖ್ಯ ಆಚಾರ್ಯ. ಸಪತ್ನಿಕನಾಗಿ ಬಂದಿದ್ದಾನೆ. ಬಂದವರಿಗೆ ನೆಲೆಸಲು ಬೇರೆ ಜಾಗವಿಲ್ಲ. ಇವರು ಬಂದು ಹೋಗುವಾಗಲೆಲ್ಲ, ಮನೆಯ ಜನ ಎದ್ದು, ಕುಳಿತು, ಸರಿಯುವುದಾಯಿತು. ತಾನು ಅಲ್ಲಿಗೆ ಒಮ್ಮೆಗೇ ಸಂಸಾರಿಯಾಗಿ ಬಂದುದು ತಪ್ಪಾಯಿತು – ಎಂದು ಅವನಿಗೆ ತೋರಿತು. ಆದರೆ, ಅವರಿಬ್ಬರ ಆಗಮನದಿಂದ ಉಳಿದವರಿಗೆ ಅಷ್ಟೊಂದು ತೊಂದರೆ ಆಗಿರಬೇಕಿಲ್ಲ. ಕಾರಣವಿಷ್ಟೆ, ಆಶ್ರಮ ಪ್ರಾರಂಭವಾದ ಬಹು ದಿವಸಗಳ ತನಕ ಅಲ್ಲಿನ ಮುಖ್ಯ ಚಟುವಟಿಕೆ ಎಂದರೆ ಅಡುಗೆಯ ಕೆಲಸ. ಹತ್ತಾರು ಮಂದಿಗೆ ಅಡುಗೆ ಮಾಡಿಸಿ, ಬಡಿಸಿ ಉಣ್ಣುವಾಗ ಉಪಾಧ್ಯಾಯರ ಉತ್ಸಾಹ ಬರಿದಾಗುತ್ತಿತ್ತು. ಈಗ ಇನ್ನಿಬ್ಬರು ಹೆಚ್ಚಿಗೆ ಸೇರಿದರು. ಹೆಂಗಸು ಒಬ್ಬಳು ಬಂದುದರಿಂದ ಅಡುಗೆಯ ಪಟ್ಟವನ್ನು ಅವಳಿಗೆ ಒಪ್ಪಿಸಿ, ತಾವು ಹಾಯಾಗಿ ಇರಬಹುದಲ್ಲಾ ಎಂದು ಇವರು ಯೋಚಿಸಿದರು. + +ರಾಧಾಕೃಷ್ಣನಿಗೆ ಏನು ಮಾಡುವುದಕ್ಕೂ ತೋಚಲಿಲ್ಲ. ಕುಳಿತಿರಲು ಜಾಗವಿಲ್ಲದೇನೇ ಇಷ್ಟೊಂದು ಜನರನ್ನು ಪ್ರಾರಂಭದಲ್ಲಿಯೇ ತುಂಬಿಸಬಾರದಿತ್ತು – ಎಂದುಕೊಂಡ. ಅಧ್ಯಾಪಕರು ಒಬ್ಬರು “ನೀವೇಕೆ ಹೇದರುತ್ತೀರಿ? ದಯಾನಂದ ರಾಯರು ಹೇಳಲಿಲ್ಲವೇ -ಶಾಲೆಗಾಗಿ ಬೇರೆಯೇ ಒಂದು ದೊಡ್ಡ ಚಾವಣಿಯನ್ನು ಹಾಕಿಸುತ್ತೇನೆ – ಎಂದು. ನಿಮಗೇನೂ ಯೋಚನೆ ಬೇಡ” ಎಂದರು. ಈತ ಬಂದೊಡನೆಯೆ, ಉಳಿದವರು ತಮ್ಮ ಶೈಕ್ಷಣಿಕ ಠೀವಿಯನ್ನು ಚಲಾಯಿಸಿದರು. ಪಾಕಶಾಲೆಯಲ್ಲಿ ಸತ್ಯಳ ಶ್ರಮವನ್ನು ತಗ್ಗಿಸುವ ಕೆಲಸ ರಾಧಾಕೃಷ್ಣನಿಗೆ ಸಂದಿತು. ಮೂವರು ಉಪಾಧ್ಯಾಯರು ತಮ್ಮ ಕೆಲಸಗಳನ್ನು ತಾವೇ ನಿರ್ಣಯಿಸಿಕೊಂಡಿದ್ದರು. ಒಬ್ಬರು ಚರಖಾ ಮಾಸ್ತರರು, ಒಬ್ಬರು ಹಿಂದೀ ಅಧ್ಯಾಪಕರು; ಮತ್ತೊಬ್ಬರು ಸರ್ವತ್ರ ಉಪನ್ಯಾಸಕರು. ಅಷ್ಟು ಮಂದಿ ಬಾಲಕರಲ್ಲಿ ವಿಭಿನ್ನ ವಯಸ್ಸಿನವರೂ ಸೇರಿದ್ದರು. ತಿಳಿವಿನಲ್ಲಿಯೂ ಅದೇ ಬಗೆಯ ಅಂತರವಿತ್ತು. ಇವರೆಲ್ಲರನ್ನು ಗುಂಪು ಕೂಡಿಸಿಯೋ, ಸಂದರ್ಭಕ್ಕೆ ಸಮನಾಗಿ ಗುಂಪು ಬಿಡಿಸಿಯೋ, ಪಾಠ ಕಲಿಸುವ ವ್ಯವಸ್ಥೆ ಆಗಬೇಕಾಗಿದೆ. + +ನೂಲುವ ಮಾಸ್ತರರು, ಅಷ್ಟಕ್ಕೆ ಮಾತ್ರ ಪಂಡಿತರು. ಸುಮಾರು ಐವತ್ತು ವಯಸ್ಸಾಗಿರಬಹುದು. ಉಬ್ಬಸದಿಂದ ಮಾತನಾಡುವುದಕ್ಕೆ ಆಗುತ್ತಿರಲಿಲ್ಲ. ಹೆಂಡತಿ ಮಕ್ಕಳನ್ನು ಕಳೆದುಕೊಂಡ ಸಂಸಾರಿಗಳು. ಯಾವುದೋ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ತುಸು ನಂಬುಗೆ ಕೆಡಿಸಿಕೊಂಡು, ಅಲ್ಲಿಗೆ ಬಂದು ಸೇರಿದರು. ತಮ್ಮ ಉಳಿದ ಉಸಿರನ್ನು ದಯಾನಂದ ರಾಯರ ಗುಣಗಾನದಲ್ಲಿ ಕಳೆಯಲು ಶಕ್ತರಾದುದರಿಂದ, ಈ ಕೆಲಸ ದೊರೆಯಿತು. ರಾಯರ ದೃಷ್ಟಿಯಲ್ಲಿ ನಮ್ಮ “ಜಾರಪ್ಪ ಮಾಸ್ತರರು ನಂ -1 ಜನ! ಹಿಂದೀ ಅಧ್ಯಾಪಕರು ಕರ್ರಗಿನ, ತೆಳ್ಳಗಿನ ತರುಣರು. ಉದ್ಧಾಮ ರಾಷ್ಟ್ರಭಕ್ತಿ ಅವರದು. ಆಶ್ರಮದ ಗಿಡ ಮರಗಳು ಸಹ ಹಿಂದೀ ಭಾಷೆಯನ್ನು ಕಲಿಯಬೇಕೆಂದು ಅವರ ಮತ. ಅಲ್ಲಿನ ಮೂಲನಿವಾಸಿಯಾದ ಬಿರುಮ ಮರಕಾಲನೊಡನೆಯೂ ಅವರು “ಆಯಿಯೇ ಜನಾಬ್” ಎಂದು ಮಾತನಾಡುವರೇ ಹೊರತು, ಮನೆಯ ಮಾತಾದ ತುಳುವನ್ನಾಗಲೀ, ನಾಡುನುಡಿಯಾದ ಕನ್ನಡವನ್ನಾಗಲೀ ಮಾತನಾಡಿ, ನಾಲಿಗೆ ಕೆಡಿಸಿಕೊಂಡವರಲ್ಲ. ಯಾವಾಗ ಕೇಳಿದರೂ – ತುಳಸೀದಾಸ ರಾಮಾಯಣ, ಪ್ರೇಮಚಂದ್ರರ ಕಾದಂಬರಿಗಳ ವಿಚಾರ ಅವರ ನಾಲಿಗೆಯ ಮೇಲೆ ನಲಿಯುತ್ತಿದ್ದುವು. ದಯಾನಂದ ರಾಯರ ಗತ ಇಲ್ಲವೆ ಮೃತ ರಾಷ್ಟ್ರೀಯ ಪಾಠಶಾಲೆಯಲ್ಲಿ ದುಡಿದು ಕೀರ್ತಿ ತಾಳಿದವರು. ಕ್ಷಣಕಾಲಕ್ಕೂ ಅವರು ತಮ್ಮ ಖಾದಿ ಟೋಪಿಯನ್ನು ಬಿಟ್ಟವರಲ್ಲ. ಬಿಟ್ಟರೆ, ಅವರ ಉಸಿರೇ ಅಲುಗಾಡದು. ತುಂಬಿದ ಜುಟ್ಟನ್ನು ಮುಚ್ಚುವರೆ, ರಾತ್ರಿಯೂ ಅದನ್ನು ಬಳಸುತ್ತಾರೆ. ನಖಶಿಖಾಂತ ಅವರು ಖಾದೀಮಯರು, ಉಳಿದವರಂತಲ್ಲ. ಅವರು ಬಂದ ದಿವಸವೇ ಪಾಠ, ಪ್ರವಚನ ತೊಡಗಿದರು. ರಾಧಾಕೃಷ್ಣ ಬಂದು ಸೇರುವಾಗ ಮಕ್ಕಳಿಗೆ ಪಹಿಲಿ ಕಿತಾಬ್ ಮುಗಿದು ಹೋಗಿತ್ತು. ದೂಸರೀ ಕಿತಾಬು ಸಿಗದೆ ಒದ್ದಾಡುತ್ತಿದ್ದರು. + +ಅವರು ತಮ್ಮ ಊರಲ್ಲಿ ಶೀನಪ್ಪ ಎಂಬ ಹೆಸರು ಪಡೆದವರಾದರೂ, ರಾಷ್ಟ್ರೀಯತೆಯಿಂದ ಬೀಗಿ, ಶ್ರೀ ಪಂಡಿತ್ ನಿವಾಸ್ ಜೀ ಎಂದು ಕರೆಯಿಸಿಕೊಂಡಿದ್ದಾರೆ. ಬಾಲಕರು `ಪಂಡಿತ್ ಜೀ’ ಎಂದು ಸಂಬೋಧಿಸಲೇ ಬೇಕು. ಅವರ ಮನಸ್ಸಿಗೆ ನಿಜವಾದ ಆಶ್ರಮ ಆಗಬೇಕಾದರೆ, ತನ್ನಂತೆ ರಾಷ್ಟ್ರೀಯತೆಯಲ್ಲಿ ಅದ್ದಿ ತೇಲಿದ ಜನ ಬೇಕೇ ಹೊರತು, ಯಾವುದೋ ಹಳ್ಳಿ ಮೂಲೆಯ ರಾಧಾಕೃಷ್ಣ ತಕ್ಕವನೆಂದು ತೋರಿಬರಲಿಲ್ಲ. ಗಾಂಧೀಜಿಯವರೇ – ಪರದೇಶೀಯ ವಿದ್ಯೆಯಿಂದ ನಮಗೆ ಉಪಯೋಗವಿಲ್ಲ ಎಂದು ಸಾರಿರುತ್ತ, ಅರ್ಧ ಇಂಗ್ಲಿಷ ವಿದ್ಯಾವಂತನಾದ ರಾಧಾಕೃಷ್ಣ ಆಚಾರ್ಯ ಪಟ್ಟಕ್ಕೆ ಬರುವುದು ಏನೂ ಸಮವೆನಿಸಲಿಲ್ಲ. ಬಂದ ಮೇಲೆಯೂ, ಅವನನ್ನು ಒಪ್ಪುವುದು ಅವರ ಮನಸ್ಸಿಗೆ ತುಂಬ ಕಷ್ಟವಾಗಿತ್ತು. ಇನ್ನು, ಮೂರನೆಯ ಮಾಸ್ತರರ ವಿಚಾರ; ಅವರು ಇಂಟರ್ ಓದಿದ್ದಾರಂತೆ. ಹಲವರಿಗೆ ದೇಶಸೇವೆಯಲ್ಲಿ ಬೇಸರ ಬಂದಿರುವಾಗ, ಇವರು ಹೊಸತಾಗಿ ಸೇರಿದವರು. ಅವರ ಮನೆ, ಮಠ ಯಾರಿಗೂ ತಿಳಿಯದು. ಒಂದು ದಿನ ಅವರಾಗಿ ದಯಾನಂದರಾಯರಲ್ಲಿಗೆ ಹೋಗಿದ್ದರು. ನಾಲ್ಕು ದಿವಸಗಳ ಹಿಂದೆ ತಾವು ಓದಿದ್ದ, ಹರಬಿಲಾಸ ಶಾರದಾ ಇವರ ಗ್ರಂಥದ ನೆನಪಿನಿಂದ ಒಂದೇ ಸಮನೆ ಎರಡು ತಾಸು ಮಾತಾಡಿದರು. ಅದರ ಫಲವಾಗಿ `ಸಾಂಸ್ಕೃತಿಕ ಶಿಕ್ಷಣಕ್ಕೆ ಅವರನ್ನು ಬಿಟ್ಟು ಇನ್ನಾರೂ ಸಲ್ಲ’ ಎಂಬ ತೀರ್ಮಾನಕ್ಕೆ ರಾಯರು ಬಂದರು. ಈ ಮೂವರ ಮೇಲೆ ಆಚಾರ್ಯ ರಾಧಾಕೃಷ್ಣನಿದ್ದಾನೆ. ಇವರುಗಳಿಂದ ತಮ್ಮ ದಲಿತಾಶ್ರಮ ಗುರುಕುಲದ ಮಟ್ಟವನ್ನು ಬಹುಬೇಗನೆ ಸೇರುವುದೆಂದು ರಾಯರು ತಿಳಿದಿದ್ದರು. + +ಇನ್ನು, ಅಲ್ಲಿ ಕಲೆತ ಬಾಲಕರ ವಿಚಾರ. ಅವು ಆಯ್ದ ಕುಸುಮಗಳು. ಅವರಲ್ಲಿ ಮೂವರು ಐದಾರು ವರ್ಷದ ಮೊದ್ದುಗಳು. ಮಂಗಳೂರಿನ ಬಡ ತಾಯಿತಂದೆಯರಿಂದ ಎರವಲಾಗಿ ತಂದ ವಸ್ತುಗಳು. ಉಳಿದ ಎಂಟು ಮಂದಿಯಲ್ಲಿ ಎಂಟು ವರ್ಷದಿಂದ ತೊಡಗಿ ಹದಿನಾಲ್ಕು ವರ್ಷದ ತನಕ ಇರುವ ಸಮೀಪದ ಗ್ರಾಮಸ್ಥರ ಮಕ್ಕಳು. ರಜೆ ಬಂದರೆ, ಹಬ್ಬ ಬಂದರೆ, ಬೇಸರ ಬಂದರೆ, ಮನೆಯ ನೆನಪು ಬಂದರೆ – ಹೇಳಿಯಾಗಲೀ, ಹೇಳದೆ ಆಗಲೀ ತಮ್ಮ ಮನೆಗೆ ಹೋಗಿ ಬರುವ ಮಕ್ಕಳು. ಅವರಲ್ಲಿ ಹಿರಿಯರಾದ ಇಬ್ಬರು ವರ್ಷ ಹದಿನಾಲ್ಕೆಂದರೂ, ಹದಿನಾರು, ಹದಿನೆಂಟರ ಗಾತ್ರದವರು. ಅವರು ಶಾಲೆಗೆ ಹೋಗಿ ಆಗಬೇಕಾದುದು ಏನಿಲ್ಲ. ಆದರೆ, ಅವರ ಆವಾಂತರ ಸಹಿಸಲಾರದ ತಂದೆತಾಯರು, ಅವರನ್ನು ದಲಿತಾಶ್ರಮಕ್ಕೆ ದಾನಮಾಡಿದ್ದಾರೆ. ಈ ಹನ್ನೊಂದು ಮಂದಿ ಹನ್ನೊಂದು ಜಾತಿಗೆ ಸೇರಿದವರು. ಅವರಲ್ಲಿ ‘ದಲಿತರು’ ಅಂದರೆ ಅಸ್ಪೃಶ್ಯರು ಯಾರೂ ಇರಲಿಲ್ಲ. ಅದಕ್ಕಾಗಿಯೇ ಆಶ್ರಮದ ತೆರೆಯೋಣವನ್ನು ಮುಂದುವರಿಸಲು ರಾಯರಿಗೆ ಇಷ್ಟವಾಗಲಿಲ್ಲ. ದಲಿತಾಶ್ರಮವೆಂದು ಮೊದಲೇ ನಾಮಕರಣ ಮಾಡಿಯಾಗಿತ್ತು. ದಲಿತ ಜನ ಸಿಗುವ ತನಕ, ರಾಯರ ಆತುರ ತಡೆದು ನಿಲ್ಲುವಂತಿಲ್ಲ. ಆಶ್ರಮವನ್ನು ತೆರೆದ ಮೇಲೆ, ಅವರು ಬಂದೇ ಬರುತ್ತಾರೆ ಎಂಬ ಧೈರ್ಯದಿಂದ ಆ ಕೆಲಸವನ್ನು ಪ್ರಾರಂಭಿಸಿಬಿಟ್ಟರು. + +ರಾಧಾಕೃಷ್ಣ ಅಲ್ಲಿಗೆ ಬಂದ ಮೊದಲನೆಯ ದಿನ, ಸುತ್ತಲೂ ಬಾಲಕರನ್ನು ಕುಳ್ಳಿರಿಸಿಕೊಂಡು, ಪಂಡೀತಜೀಯವರು ಮಕ್ಕಳಿಗೆ ರಾಷ್ಟ್ರಗೀತೆಯ ಪಾಠ ಮಾಡಿಸುತ್ತಿದ್ದರು. ಇವನ ಗುರುತು ಅವರಿಗೆ ಇರಲಿಲ್ಲ. “ಇದರ್ ರಾಸ್ತಾ ನಹೀಂ” ಎಂದು ಅವನನ್ನು ಕಂಡು ಹೇಳಿದರು. ಆತ ಮೆಲ್ಲಗೆ ಬಂದು “ನಾನೂ ಇಲ್ಲಿಗೆ ಬಂದವನೇ, ದಯಾನಂದರಾಯರ ಹೇಳಿಕೆ ಮೇರೆಗೆ” ಎಂದ ಮೇಲೆ ಸುಮ್ಮನಾಗಿ, ಹೆಚ್ಚಿಗೆ ಮಾತನಾಡದೆ ತಮ್ಮ ಪಾಠವನ್ನು ಮುಂದುವರಿಸಿದರು.ಒಂದು ವಾರದ ತನಕ ಅವನು, ಯಾರೊಡನೆಯೂ ಅಲ್ಲಿನ ಶಿಕ್ಷಣವನ್ನು ಕುರಿತು ಚರ್ಚೆ ಮಾಡಲಿಲ್ಲ. ಬದಲು, ತಮ್ಮಿಬ್ಬರಿಗಾಗಿ ತೆಂಗಿನ ಸೋಗೆಗಳಿಂದ ಗುಡಿಸಲೊಂದನ್ನು ಕಟ್ಟುವುದರಲ್ಲಿ ಸಮಯ ಕಳೆದ. ಸತ್ಯ ಆರಂಭದಲ್ಲಿ ಅಡುಗೆ ಮಾಡುತ್ತಿದ್ದ ಮಕ್ಕಳಿಗೆ ನೆರವಾದಳು. ಮುಂದೆ ಅವರ ನೆರವನ್ನು ಕೊಂಡು ತಾನೇ ಅಡುಗೆ ಕೆಲಸ ತೊಡಗಿದಳು. ಆ ಕೆಲಸಕ್ಕೆ ಬೇಕಾದ ಸಾಮಗ್ರಿಗಳಾಗಲಿ, ಜಿನಸುಗಳಾಗಲೀ ಅಲ್ಲಿ ಸಮವಾಗಿರಲಿಲ್ಲ. ಅಡುಗೆಯ ಕೆಲಸ ಆಕೆಗೆ ತಿಳಿದುದೂ ಅಷ್ಟರಲ್ಲಿಯೇ. ಆದರೂ ಹೇಗೆ ಹೇಗೆಯೋ ದಿನ ಸಾಗಿಸಿದಳು. ಒಂದು ಪಕ್ಷ ಕಳೆದರೂ ಬರುತ್ತೇನೆ ಎಂದಿದ್ದ ದಯಾನಂದರಾಯರು ಬರಲೇ ಇಲ್ಲ. + + + +ರಾಧಾಕೃಷ್ಣನು ಕಾತರನಾದನು. ಸಮನಾದ ವ್ಯವಸ್ಥೆ ಇಲ್ಲದೆ ಇದೇ ರೀತಿಯಲ್ಲಿ ಕೆಲಸ ಮಾಡಿದರೆ, ಬಟ್ಟೆಗೆಟ್ಟೀತೆಂದು ತರ್ಕಿಸಿ, ಅದಕ್ಕೊಂದು ಯೋಜನೆ ಮಾಡುವ ಸಲುವಾಗಿ, ಉಳಿದ ಅಧ್ಯಾಪಕರ ಸಹಾಯವನ್ನು ಕೋರಿದ. “ಇಷ್ಟು ಹುಡುಗರಿದ್ದಾರೆ. ಎಲ್ಲರಿಗೂ ಬೇರೆ, ಬೇರೆ ವಯಸ್ಸು, ಒಂದೊಂದು ತರಗತಿ. ಅವರನ್ನು ಹೇಗೆ ಹಂಚಬೇಕು, ಯಾವ ಪಾಠ ಹೇಳಿಕೊಡಬೇಕು, ಯಾರಿಗೆ ಏನೇನು ಕೆಲಸ, ಅದನ್ನೆಲ್ಲ ನಿಷ್ಕರ್ಷಿಸಬೇಡವೇ?” ಎಂದು ಅವರನ್ನು ಕರೆದ.ಚರ್ಚೆಗೆ ಆ ನಾಲ್ಕು ಮಂದಿಯೂ ಕುಳಿತರು. ಪಂಡಿತಜೀಯವರು ಅಖಂಡ ಹಿಂದಿಯಲ್ಲಿ ಭಾಷಣ ಮಾಡಿದರು. ಅದೇ ರಾಷ್ಟ್ರೀಯ ಶಿಕ್ಷಣಕ್ಕೆ ಮೂಲ ಮಂತ್ರ – ಎಂದರು. ರಾಧಾಕೃಷ್ಣನಿಗೆ ತಡೆಯದಾಯಿತು. “ಪಂಡಿತರೇ ಸಿಟ್ಟಾಗಬೇಡಿ; ಈ ಮಕ್ಕಳಿಗೆ ಮೊದಲು ಅವರ ಊರಿನ ಮಾತು ಬರಲಿ. ಬಿಡುವಿನಲ್ಲಿ ಸ್ವಲ್ಪ ಇಂಗ್ಲಿಷನ್ನೋ, ಹಿಂದಿಯನ್ನೋ ಕಲಿಸುವ, ಮೊದಲು ಈ ಮಕ್ಕಳನ್ನು ಯಾವ ಕೆಲಸಕ್ಕೆ ತಯಾರಿಸುವುದೆಂದು ನಿಷ್ಕರ್ಷೆ ಮಾಡುವ” ಎಂದರು.ಪಂಡಿತ್ಜೀಯವರು, “ಆಶ್ರಮವನ್ನು ತೆರೆದ ದಯಾನಂದರಾಯರು ಅದನ್ನು ಹೇಳಲಿಲ್ಲವೇ? ಈ ಮಕ್ಕಳನ್ನು ರಾಷ್ಟ್ರಸೇವೆಗೆ ತಯಾರಿಸಬೇಕೆಂದು” ಎಂದರು.ರಾಧಾಕೃಷ್ಣ “ಈ ಆರೇಳು ವರ್ಷದ ಮಕ್ಕಳನ್ನು ರಾಷ್ಟ್ರಸೇವೆಗೇನು ತಯಾರಿಸುತ್ತೇವೆ? ಈ ಕೆಲಸ ನಾವು ದೊಡ್ಡವರು ಮಾಡಿದರೆ ಸಾಕು. ಅವರನ್ನು ಕಳುಹಿಸಿದ ಹಿರಿಯರು ಏನು ತಿಳಿದುಕೊಂಡಿದ್ದಾರೆಯೋ ಇವರು ನಾಳೆ ಹಳ್ಳಿಯಲ್ಲಿ ಬದುಕಿಕೊಂಡಿರಬೇಕಾದ ಮಕ್ಕಳು. ಅಲ್ಲಿನ ಜೀವನಕ್ಕೆ ಹೊಂದುವಂತೆ ಮಾಡಬೇಕಾದುದು ನಮ್ಮ ಕೆಲಸ.” + +ನಿವಾಸಜೀಯವರು ತಾಳ್ಮೆಗೆಟ್ಟು ಎದ್ದು ನಿಂತರು. “ಯಾವುದಕ್ಕೂ ದಯಾನಂದರಾಯರು ಬಂದು ಇತ್ಯರ್ಥಪಡಿಸಲಿ. ಹಿಂದೀ ಪಾಠಗಳ ವಿಷಯದಲ್ಲಿ ನನ್ನನ್ನು ಕೇಳಿ. ಉಳಿದ ವಿಷಯಗಳಿಗೆ ನಾನಿಲ್ಲ” ಎಂದರು. + +ದಯಾನಂದರಾಯರು ಮಾತ್ರ ಇನ್ನೂ ಹತ್ತು ದಿವಸ ಕಳೆದರೂ ಅಲ್ಲಿಗೆ ಬರಲಿಲ್ಲ! ಪ್ರಾಯಶಃ ಎ.ಐ.ಸಿ.ಸಿ., ಕೆ.ಪಿ.ಸಿ.ಸಿ. ಸಭೆಗಳಿಗೆ ಅಲೆದಾಡುತ್ತಿರಬೇಕು. ಇಲ್ಲಿ ಮಾತ್ರ ಉಗ್ರಾಣದಲ್ಲಿ ಅಕ್ಕಿಯೂ ಉಳಿದಿರಲಿಲ್ಲ. ಅದನ್ನು ಕುರಿತು ರಾಧಾಕೃಷ್ಣ ಯೋಚಿಸಿ, “ಪಂಡಿತರೇ, ಪಾಠದ ವಿಚಾರ ಹಾಗಿರಲಿ, ಇಲ್ಲಿನ ದಿನದಿನದ ಕೆಲಸಗಳಿವೆಯೆಲ್ಲಾ, ಅವನ್ನು ಹಂಚಿಕೊಳ್ಳುವ. ಇಲ್ಲಿಗೆ ಬೇಕಾಗುವ ಖರ್ಚು ಎಷ್ಟು? ಇದನ್ನು ಹೇಗೆ ಕೂಡಿಸಬೇಕು? ಆರ್ಥಿಕ ದೃಷ್ಟಿಯಿಂದ ಇದು ಆದಷ್ಟು ಸ್ವತಂತ್ರ ಆಗುವ ಹಾಗೆ ಹೇಗೆ ಮಾಡಬೇಕು” ಎಂದನು. ಅದಕ್ಕೆ ಕೆಮ್ಮುತ್ತ, ಕೆಮ್ಮುತ್ತ ಜಾರಪ್ಪ ಮಾಸ್ತರರು, “ಆ ಚಿಂತೆ ನಿಮಗೆ ಯಾಕೆ? ದಯಾನಂದರಾಯರು ಅದನ್ನೆಲ್ಲ ತಾವೇ ಮಾಡುತ್ತೇವೆ ಅಂದಿಲ್ಲವೇ?” ಅಂದರು. ಈತ ಅಸಮಾಧಾನಗೊಂಡು “ಅವರು ಬಂದು ಮಾಡುವ ತನಕ ನಾವು ನಿದ್ರಿಸುತ್ತ ಕುಳಿತಿರುವುದೇ? ಇಷ್ಟು ಮಕ್ಕಳನ್ನು ಇರಿಸಿಕೊಂಡು, ಸಾಕಬೇಡವೇ? ಇಲ್ಲಿರುವ ಅಕ್ಕಿ ನಾಳೆಗೆ ಸಾಲದು. ಇಲ್ಲಿ ಒಂದು ತೊಟ್ಟು ಹಾಲಿಗೂ ವ್ಯವಸ್ಥೆ ಇಲ್ಲ. ಯಾರ ಮಕ್ಕಳಾದರೂ ಸರಿಯೇ, ನಮ್ಮ ಜವಾಬ್ದಾರಿ ಇರುವಷ್ಟು ದಿನ, ಅವರಿಗೆ ಸಮನಾಗಿ ಹೊಟ್ಟೆಗೆ ಹಾಕಬೇಡವೇ?” ಎಂದು ಕೇಳಿದ.“ಅಕ್ಕಿ ಇಲ್ಲ” ಎಂಬ ಮಾತನ್ನು ಕೇಳಿ ಜಾರಪ್ಪನವರು ಯೋಚನೆಗೆ ಈಡಾದರು. ಸತ್ಯ ಪಾಕಶಾಲೆಯನ್ನು ಹೊಕ್ಕಂದಿನಿಂದ ಅವರು ಅಲ್ಲಿ ಸುಳಿದವರಲ್ಲ. ಈಗ ತುಸು ಗಾಬರಿಯಲ್ಲಿ “ರಾಯರೇ, ನನ್ನ ಆರೋಗ್ಯ ನೋಡಿದಿರಿ. ಖಂಡಿತ, ಓಡಾಟಕ್ಕೆ ನಾನು ಆಳಲ್ಲ. ಇಲ್ಲಿನ ಮಕ್ಕಳ ಮೇಲು ವಿಚಾರಣೆ ನನಗಿರಲಿ. ಅವರಿಗೆ ಸದಾ ನೂಲು ಮಾಡುವುದನ್ನು ಹೇಳಿಕೊಡುವ ಕೆಲಸ ನನ್ನದು” ಎಂದರು. ಅದಕ್ಕೆ ರಾಧಾಕೃಷ್ಣ “ನೂಲು ಮಾಡುವುದನ್ನು ಹೇಳುವುದಕ್ಕೆ ಎಷ್ಟು ಸಮಯ ಬೇಕು – ವರ್ಷವೇ, ತಿಂಗಳೆ? ಒಮ್ಮೆ ಹೇಳಿತು ಎಂದರೆ ಮುಂದೆ ಅವರಷ್ಟಕ್ಕೆ ಅವರೇ ಮಾಡಲಾರರೆ? ಇಲ್ಲಿರುವ ಮಕ್ಕಳಲ್ಲಿ ದೊಡ್ಡವರಿಗೆ ನಾವು ನೇಯುವುದನ್ನೋ, ಕೃಷಿಯನ್ನೋ ಹೇಳಿಕೊಡಬಹುದು. ಬೇರೆ ಯಾವ ಪಾಠ ಹೇಳಬೇಕು, ಹೇಗೆ – ಎಂಬುದರ ತೀರ್ಮಾನ ಮಾಡಬೇಡವೇ? ಒಬ್ಬರ ಗಮನ ಇಲ್ಲಿನ ವರಮಾನವನ್ನು ಹೆಚ್ಚಿಸುವುದಕ್ಕೇ ಇರಬೇಕು. ಮೊದಲನೆಯ ವರ್ಷ ನಾವು ಹೊರಗಿನಿಂದ ವಂತಿಗೆ, ವರಾಡಗಳನ್ನು ಬೇಡಬೇಕಾದೀತು. ಆದರೆ ಆ ಕಟ್ಟಿಕೊಟ್ಟ ಬುತ್ತಿ ಬಹುದಿನಕ್ಕೆ ಬರಲಿಕ್ಕಿಲ್ಲ. ಇಲ್ಲಿ ಇಷ್ಟು ಚೆನ್ನಾದ ಗದ್ದೆಗಳಿವೆ, ನೀರಿದೆ. ನಮಗೆ ಬೇಕೆನ್ನುವಷ್ಟು ಅಕ್ಕಿಯನ್ನು ನಾವೇ ಬೆಳೆಯಿಸಲು ಸುಲಭ” ಎಂದನು. + +ಅಂಥ ಆಪತ್ತೇನಾದರೂ ತಮ್ಮ ಮೇಲೆ ಬಿದ್ದೀತು – ಎಂದು ಅಂಜಿ ಸಂಸ್ಕೃತಿ ಅಧ್ಯಾಪಕರಾದ ದತ್ತಪ್ಪನವರು “ಬೌದ್ಧಿಕ ಶಿಕ್ಷಣದ ಸಂಪೂರ್ಣ ವ್ಯವಸ್ಥೆ ನನಗೆ ಇರಲಿ. ನನ್ನಿಂದ ಬೇಸಾಯ ಗೀಸಾಯ ಆಗುವಂತಿಲ್ಲ” ಎಂದರು. ಇನ್ನು ಜಾರಪ್ಪನವರಿಂದಲೂ ಮಾತು ಬರಲಿಲ್ಲ. ಪಂಡಿತಜೀಯವರು ಸುಮ್ಮಗೇ ಇದ್ದಾರೆ. ಆದುದರಿಂದ ದತ್ತಪ್ಪನವರು “ಹೋಗಲಿ, ಇನ್ನು ಒಂದುಕೆಲಸ ಹೆಚ್ಚಿಗೆ ಮಾಡುತ್ತೇನೆ, ಅಡುಗೆಯ ಮನೆ, ಉಗ್ರಾಣ, ಭೋಜನಶಾಲೆಗಳ ಮೇಲು ತನಿಖೆ ನಾನು ನೋಡಿಕೊಂಡಿರುತ್ತೇನೆ” ಎಂದರು. + +“ಮೇಲು ತನಿಖೆಯೇನೂ ಬೇಕಿಲ್ಲ. ಅಂದರೆ, ನಾವೇ ಮಾಡಿ ಮುಗಿಸಬೇಕಾದ ಕೆಲಸಗಳು ಎಲ್ಲ. ನನ್ನ ಹೆಂಡತಿ ಏನೋ ಒಳಗಿನ ಕೆಲಸ ಮಾಡುತ್ತಾಳೆ. ಇಷ್ಟೊಂದು ಚಿಕ್ಕ ಮಕ್ಕಳಿದ್ದಾರೆ. ಅವರನ್ನು ನಿತ್ಯ ಮೀಯಿಸುವವರು ಬೇಕು. ಅಡುಗೆ ಮಾಡುವವರು ಬೇಕು, ಚಿಕ್ಕವರ ಬಟ್ಟೆಗಳನ್ನು ಒಗೆದು ಕೊಡಬೇಕು. ತಲೆಯ ಹೇನನ್ನು ಸಹ ತೆಗೆಯಬೇಕು, ಅಡುಗೆ ಆದ ಮೇಲೆ ಬಡಿಸುವವರು ಬೇಕು. ನೀರು ತರುವ ಕೆಲಸ, ಕಟ್ಟಿಗೆ ತರುವ ಕೆಲಸ – ಇನ್ನೂ ಹತ್ತೆಂಟು ಸಣ್ಣಪುಟ್ಟ ಕೆಲಸಗಳಿಗೆ ನಾವೇ ಕೈ ಹಾಕಿ ಮಾಡಿದರೆ, ಮಕ್ಕಳು ನಮಗೆ ಸಹಾಯವಾದಾರು. ಇದಕ್ಕೆಲ್ಲ ನಾವು ಇನ್ನೊಬ್ಬರ ಮುಖ ನೋಡಿ ಪ್ರಯೋಜನವಿಲ್ಲ” ಎಂದನು. + +ಆ ಎಲ್ಲ ವಿಚಾರಗಳೂ ಕಮಿಟಿಯಲ್ಲಿಯೇ ನಿರ್ಧಾರವಾಗಬೇಕೆಂದೂ, ಅಧ್ಯಕ್ಷ ದಯಾನಂದರು ಇಲ್ಲದೇ ಅದು ಆಗುವಂತಿಲ್ಲವೆಂದೂ ಅಂದಿನ ಸಭೆಯು ಬರ್ಕಾಸ್ತು ಆಯಿತು. ಆ ಸಂಜೆ ರಾಧಾಕೃಷ್ಣನು ಮಂಗಳೂರಿನ ತನಕ ಹೋಗಿ, ರಾಯರ ದಾರಿಯನ್ನು ಕಾದನು. ರಾಯರು ಊರಲ್ಲಿ ಇದ್ದಿರಲಿಲ್ಲ. ಎಂದು ಬರುವರೆಂದೂ ತಿಳಿಯಲಿಲ್ಲ. ಕಲ್ಕತ್ತೆಗೆ ಹೋದ ಹಾಗಿದೆ ಎಂದು ಯಾರೋ ಅಂದದ್ದನ್ನು ಕೇಳಿ ಆಶ್ರಮಕ್ಕೆ ಬಂದನು. ಈ ಸುವಾರ್ತೆ ಎಲ್ಲರ ಕಿವಿಗೂ ಮುಟ್ಟಿತು. ಮರುದಿವಸ ಪಂಡಿತ್ ಜೀಯವರು ತಮಗೆ ಬೇರೆ ತಂಟೆ ಬೇಡವೆಂದು, ಎಲ್ಲ ಬಾಲಕರನ್ನು ಸುತ್ತು ಕುಳ್ಳರಿಸಿಕೊಂಡು, ಹಿಂದೀ ಸಂಭಾಷಣೆ ತೊಡಗಿದರು. ರಾಧಾಕೃಷ್ಣ ಅಲ್ಲಿಗೆ ಬಂದ. ಅವರನ್ನು ಈಚೆ ಕರೆದು “ನೀವು ಕನ್ನಡ ಚೆನ್ನಾಗಿ ಬಂದ ಹುಡುಗರಿಗೆ ಹಿಂದೀ ಪಾಠವನ್ನು ಹೇಳಿ; ಯಾವ ಪರ ಭಾಷೆಯನ್ನೂ ಹೇಳಿ. ಕನ್ನಡವೇ ಬಾರದ ಮಕ್ಕಳಿಗೆ ಯಾವ ಪರ ಭಾಷೆಯ ಪೀಡೆಯೂ ಬೇಡ” ಎಂದ. ಅವರು ಆತನನ್ನು ದುರುದುರನೆ ನೋಡುತ್ತ. ತಿರುಗಿ ನಮ್ಮ ಹಟವನ್ನು ನಡೆಯಿಸಿಯೇ ಬಿಟ್ಟರು. + +ರಾಧಾಕೃಷ್ಣನು ಬಂದ ಹದಿನೈದು ದಿವಸಗಳಲ್ಲಿ, ತನ್ನ ಗುಡಿಸಲಿನ ಸಲುವಾಗಿ ಸಾಮಗ್ರಿಗಳನ್ನು ದೊರಕಿಸಿಕೊಳ್ಳಲು ಊರಲ್ಲಿ ಅಲೆದಾಡಿದನು. ಒಬ್ಬಿಬ್ಬರ ಪರಿಚಯವೂ ಆಯಿತು. ಆಗ ಅವರಲ್ಲಿ ಹೋಗುವ ಎಂದು ಹೊರಟನು. ಆ ದಿನದ ಗ್ರಾಸಕ್ಕೆ ಬೇರೆ ದಾರಿ ಇದ್ದಿರಲಿಲ್ಲ. ಅದಕ್ಕಾಗಿ ಹೊರಟಿದ್ದ ಅವನು ಹಿಂದೀ ರಣಾಗ್ರದಲ್ಲಿ ಸಿಲುಕಿಕೊಂಡನು. ಕೊನೆಗೆ ಶ್ಯಾಮ, ನೀಲ ಎಂದು ಇಬ್ಬರು ಹಿರಿಯ ಹುಡುಗರನ್ನು ಕರೆದುಕೊಂಡು ಗ್ರಾಮದಲ್ಲಿ ಭಿಕ್ಷಾಟನೆಗೆ ಹೊರಟನು. ಮೊದಲ ಬಾರಿ ಅಲ್ಲವೇ? ಹೋದ ಇವರಿಗೆ ಭಿಕ್ಷೆ ಎತ್ತಲು ಸಂಕೋಚವಾದರೂ, ತಮ್ಮ ಊರಿನ ಹೊಸ ಸಂಸ್ಥೆಗಾಗಿ ದಾನ ಮಾಡುವುದರಲ್ಲಿ ಊರವರಿಗೆ ಉತ್ಸಾಹವೇ ಬಂತು. ಆದರಿಂದ ಹತ್ತೆಂಟು ಸೇರು ಅಕ್ಕಿ ಸಂಪಾದನೆ ಆಯಿತು. ಹೆಚ್ಚಿನ ದೂರ ಅವರು ನಡೆಯಲಿಲ್ಲವಾದರೂ ಹೆಚ್ಚಿನ ವೇಳೆಯನ್ನು ಮಾತುಗಳಲ್ಲಿ ಕಳೆಯದೆಯೇ ಅಷ್ಟೆಲ್ಲ ದೊರೆಯಲಿಲ್ಲ. ಆ ಅಕ್ಕಿಯನ್ನು ತಂದು, ಸತ್ಯಗೆ ಒಪ್ಪಿಸಲು, ಆಕೆಯು ಸಣ್ಣಗೆ ಮುಖ ಮಾಡಿಕೊಂಡು “ಏನು ಹತ್ತು ಸೇರು ಇದೆಯೇ! ಇರಬಹುದೆ? ಊಟಕ್ಕೆ ಹದಿನೈದು ಬಾಯಿಗಳಿವೆ. ಬೇರೆ ಏನೂ ಇಲ್ಲದಿದ್ದರೂ ಬರಿಯ ಅನ್ನವನ್ನಾದರೂ ಬಡಿಸಬೇಕಲ್ಲ. ಇದು ಎರಡು ದಿವಸಕ್ಕೆ ಬಂದೀತು. ಇದೇ ರೀತಿ ನಿತ್ಯವೂ ಜೋಳಿಗೆ ಹಾಕಿಕೊಂಡು ಹೊರಡಬೇಕಾದೀತೇ” ಎಂದು ನುಡಿಯುತ್ತಲೇ ರಾಧಾಕೃಷ್ಣ ನಕ್ಕನು. “ಯಾಕೆ ಹೆದರುತ್ತೀಯೆ? ಏನಾದರೂ ಒಂದು ವ್ಯವಸ್ಥೆ ಮಾಡದಿರುತ್ತಾರೆಯೇ? ನೀನು ಅವಸರ ಮಾಡಿದರೆ ಹೇಗೆ” ಎಂದ. + +ಆತ ಭಿಕ್ಷಾವೃತ್ತಿಗೆ ಎರಡು ದಿನಕ್ಕೊಮ್ಮೆ ಓಡಬೇಕಾಯಿತು. ರಾಧಾಕೃಷ್ಣ ಅವನ ಜತೆಗೆ ಪಾಠಕ್ಕಿಂತ ತಿರುಗಾಟದ ಮೇಲೆ ಪ್ರೀತಿ ಇರುವ ಒಬ್ಬಿಬ್ಬರು ಬಾಲಕರು ಹೋಗುತ್ತಿದ್ದರು. ಹೀಗೆ ಹದಿನೈದು ದಿವಸಗಳ ಕಾಲ ಸರಿಯಿತು. ರಾಯರು ಮಂಗಳೂರಿಗೆ ಬಂದ ವರ್ತಮಾನ ದೊರೆಯಿತು. ಅದನ್ನು ಕೇಳುತ್ತಲೇ ಪಂಡಿತಜೀಯವರು “ನಾನು ಅವರನ್ನು ಇಲ್ಲಿಗೆ ಕರೆದುಕೊಂಡು ಬರುತ್ತೇನೆ” ಎಂದು ಓಡಿದರು. ಅಲ್ಲಿ ಹೋಗಿ ರಾಧಾಕೃಷ್ಣನನ್ನು ದೂರುವಷ್ಟೆಲ್ಲಾ ದೂರಿದರು. ತಮ್ಮಿಬ್ಬರ ಭಿನ್ನ ಆದರ್ಶಗಳನ್ನು ಅವರಿಗೆ ಬಣ್ಣಿಸಿ ಹೇಳಿದರು. “ನೀವು ಬಂದು ಎಲ್ಲವನ್ನು ಖಂಡುತುಂಡು ಮಾಡದೆ ಹೋದರೆ ಎಂಟು ದಿವಸಗಳಲ್ಲಿ ಈ ಆಶ್ರಮ ಮುಚ್ಚುವ ಸ್ಥಿತಿಯು ಬಂದೀತು” ಎಂದು ಬೆದರಿಕೆ ಹಾಕಿದರು. ದಯಾನಂದರಾಯರು ಬಿಡುವಲ್ಲಿ ಬಿಡುವು ಮಾಡಿಕೊಂಡು, ಮರುದಿನವೇ ಅಲ್ಲಿಗೆ ಬಂದರು. ಮೊದಲು ಅಂಥವರನ್ನು ನಂಬುವ ಪದ್ಧತಿ ಅವರದು. ಹೀಗಾಗಿ, ಹಿಂದೀ ಪಂಡಿತರು ಹೇಳಿದ ಎಲ್ಲಾ ಮಾತುಗಳನ್ನು ಹದಿನಾರಾಣೆ ಸತ್ಯವೆಂದು ನಂಬಿಯೇ ಬಂದಿದ್ದರು. + +ಅವರು ಬರುತ್ತಲೇ ಜಾರಪ್ಪ ಮಾಸ್ತರರು, ಅವರೊಡನೆ ಅಲ್ಲಿನ ಆಹಾರ ಪರಿಸ್ಥಿತಿಯನ್ನು ಬಣ್ಣಿಸಿದರು. ಈ ಹದಿನೈದು ದಿವಸಗಳ ಕಾಲ ಭಿಕ್ಷೆಯೆತ್ತಿ ತಮಗೆ ಅನ್ನ ಹಾಕಿದ ರಾಧಾಕೃಷ್ಣನ ವಿಷಯದಲ್ಲಿ ತುಂಬ ಆದರವನ್ನು ವ್ಯಕ್ತಪಡಿಸಿದರು. ದತ್ತಪ್ಪ ಮಾಸ್ತರರದ್ದು ಕೇವಲ ಬೌದ್ಧಿಕ ಪ್ರಪಂಚವಷ್ಟೆ. “ಮೊದಲಿಗೆ ಕರಿಕ್ಯುಲಂ ಮಾಡದೆ ತೊಂದರೆಯಾಗಿಬಿಟ್ಟಿದೆ. ಕೆಲಸ ಮಾಡುವ ಹಾಗೆಯೇ ಇಲ್ಲ” ಎಂದು ಅವರು ತೀರ್ಮಾನವಿತ್ತರು. ಪಂಡಿತರು – ಎದುರಿನಲ್ಲಿ ಯಾವ ಮಾತನ್ನೂ ಆಡಲಿಲ್ಲ. ರಾಧಾಕೃಷ್ಣನು ಬಹಳ ಹೊತ್ತು ಮೌನವಾಗಿದ್ದ. ಉಳಿದವರ ಮಾತುಗಳು ಮುಗಿದುವು. ಜಾರಪ್ಪ ಮಾಸ್ತರರೊಡನೆ ರಾಯರು “ನನಗೆ ಈ ಮೊದಲು ಆಕಸ್ಮಾತ್ ಹೊರಗೆ ಹೋಗಬೇಕಾಗಿದ್ದು, ಇಲ್ಲಿಗೆ ಬರಲು ಆಗಲಿಲ್ಲ. ಇನ್ನು ಅಂಥ ಸ್ಥಿತಿ ಬರಲಾರದು, ಆರು ತಿಂಗಳ ಸಾಮಗ್ರಿಗಳನ್ನು ದಾಸ್ತಾನು ಇರಿಸುವ. ಮಕ್ಕಳ ಹಾಲಿಗಾಗಿ ಒಂದೆರಡು ಎಮ್ಮೆಗಳನ್ನು ಕಟ್ಟಲೇಬೇಕು. ಕೇಳಿದರೆ, ಯಾರೂ ದಾನ ಮಾಡಿಯಾರು” ಎಂದು ಸುಲಭವಾದ ಭರವಸೆ ಕೊಟ್ಟರು. ರಾಧಾಕೃಷ್ಣನು ಅವರನ್ನು ತನ್ನ ಪರ್ಣಕುಟೀರಕ್ಕೆ ಕರೆದೊಯ್ದನು. ಅಲ್ಲಿ ಕ್ರಮವಾಗಿ ತನ್ನ ಮನಸ್ಸಿನ ಅಭಿಪ್ರಾಯಗಳನ್ನು ಅವರ ಮುಂದೆ ಬಿಡಿಸಿ ಹೇಳಿದನು. “ರಾಯರೇ, ನೀವು ಇದರ ಪೂರ್ಣವಾದ ಜವಾಬ್ದಾರಿ ವಹಿಸಿದರೆ ಚೆನ್ನ. ಈ ಆಶ್ರಮದ ಉದ್ದೇಶ ಹೀಗೆ; ಇಲ್ಲಿನ ಕಾರ್ಯಕ್ರಮ ಹೀಗೆ, ಯಾರು ಯಾರು ಯಾವ್ಯಾವ ಕೆಲಸ ಮಾಡಬೇಕು – ಎಂಬ ವಿವರವನ್ನು ಹಾಕಿಕೊಟ್ಟಲ್ಲಿ, ಅದರಂತೆ ನಾವು ನಮ್ಮ ಕೆಲಸವನ್ನು ಮಾಡುವುದು ಸುಲಭವಾಗುತ್ತದೆ. ಇಲ್ಲಿನ ಅನುಭವ ನನಗಿರುವುದು ಬರಿಯ ಸ್ವಲ್ಪ ಸಮಯದ್ದು. ಅದರ ಮೇಲಿಂದ ಹೇಳುವುದಾದರೆ, ಇಲ್ಲಿರುವ ನಾಲ್ಕು ಮಂದಿಯಲ್ಲಿ, ನಾಲ್ಕು ದಾರಿ, ನಾಲ್ಕು ಗುರಿಗಳು ಇದ್ದ ಹಾಗೆ ಕಾಣುತ್ತದೆ. ನಮ್ಮ ಅಭಿಪ್ರಾಯ ಭೇದಗಳಿಂದ ಶಾಲೆಯ ಕೆಲಸ ಕೆಡಬಾರದಷ್ಟೆ. ಇದರ ಶ್ರೇಯಸ್ಸು ನಿಮಗೆ. ನೀವು ಮುಂದಾಳಾದರೆ ಆಗ ನಮಗೆ ಚರ್ಚೆ ಮಾಡುವ ಕೆಲಸವಿಲ್ಲ. ಹೇಳಿದ್ದನ್ನು ಒಪ್ಪಿಸಿ ಮಾಡುವ ಕೆಲಸ ಮಾತ್ರ” ಎಂದು ಸಂಗತಿಗಳನ್ನು ವಿವರಿಸಿದನು. + +“ರಾಧಾಕೃಷ್ಣ, ನಾನು – ಈ ಜವಾಬ್ದಾರಿಗೆ ನೀವು ತಕ್ಕವರೆಂದು ಯೋಚಿಸಿ ಕೆಲಸ ತೊಡಗಿದ್ದೇನೆ. ನನ್ನ ನೂರಾರು ತಾಪತ್ರಯಗಳಲ್ಲಿ ಇದರ ಕಡೆಗೆ ಹೆಚ್ಚಿನ ಗಮನ ಕೊಡುವುದಕ್ಕೆ ಆಗಲಾರದು. ಇದರ ಆಚಾರ್ಯಪಟ್ಟ ನಿಮಗೆ. ಇದಕ್ಕೆ ಏನೇನು ಸಲಕರಣೆ ಆಗಬೇಕು? ಎಷ್ಟು ಹಣ ಬೇಕು? ಅಷ್ಟನ್ನು ತಿಳಿಸಿದರೆ ನನ್ನಿಂದ ಆಗುವಷ್ಟು ಬೆಂಬಲ ಕೊಡುತ್ತೇನೆ.” + +“ನೀವು ನನ್ನನ್ನು ಬರಲು ಹೇಳಿದ್ದಂತೂ ಸರಿಯೇ. ನಾನೂ ಬಂದಿದ್ದೇನೆ; ಸಂಸಾರ ಸಹಿತನಾಗಿ, ಕೆಲಸ ಮಾಡಬೇಕೆಂಬ ಉದ್ದೇಶದಿಂದಲೇ ಬಂದಿದ್ದೇನೆ. ನಾನು ಬರುವ ಮೊದಲೇ ನೀವು ಅವಸರ ಮಾಡಿ ಇಲ್ಲಿನ ಸಹಾಯಕರನ್ನು ನೇಮಿಸಿದಿರಿ. ನಮ್ಮ ಕೆಲಸದ ರೂಪ ನಿಶ್ಚಯವಾಗದೆ ಜನರನ್ನು ಕೊಟ್ಟರೆ ಏನು ಪ್ರಯೋಜನ? ಉದ್ದೇಶಕ್ಕೆ ತಕ್ಕ ಜನ ದೊರಕಬೇಕೇ ಹೊರತು ಜನಕ್ಕೆ ಒಪ್ಪುವ ಉದ್ದೇಶವಾಗಬಾರದಲ್ಲ? ಅಲ್ಲದೆ, ಹಣಕಾಸಿನ ವಿಚಾರ ಮುಖ್ಯವಾದದ್ದು. ಇಷ್ಟೊಂದು ಮಂದಿಯ ಜೀವನ ಹೋಗಬೇಕು. ಈ ಹದಿನೈದು ದಿವಸ, ಬೇರೆ ದಾರಿ ಕಾಣದೆ, ಭಿಕ್ಷೆಯನ್ನು ಎತ್ತಿ ದಿನ ಕಳೆಯಬೇಕಾಯಿತು. ಆ ರೀತಿಯಿಂದ ಬಹಳ ದಿನ ಗ್ರಾಮಸ್ಥರ ಸಹಾಯ ದೊರಕೀತು – ಎನ್ನುವ ಹಾಗಿಲ್ಲ. ಅಲ್ಲದೆ, ಈಗಾಗಲೇ – “ನಮ್ಮ ಮಕ್ಕಳಿಗೆ ಮನೆ, ಮನೆ ಬೇಡುವ ಪಾಠ ಬೇಡ” ಎಂಬ ದೂರೂ ಬಂದಿದೆ. + +“ಹಣಕಾಸಿನ ವಿಚಾರ ನಾನು ಮಾಡುತ್ತೇನೆಂದೆನಲ್ಲ. ಮಂಗಳೂರಿನಲ್ಲಿ ಒಂದು ರೌಂಡು ಸುತ್ತಿದರೆ ಜನ ಎಷ್ಟೂ ಕೊಟ್ಟಾರು, ಏನೂ ಕೊಟ್ಟಾರು; ಮೊದಲಾದರೆ ನಾನೇ ತೆರುತ್ತಿದ್ದೆ.” + +“ನೀವು ಹಾಗೆ ಹೇಳುತ್ತಿದ್ದೀರಿ. ನನಗೆ ಆ ಧೈರ್ಯವಿಲ್ಲ. ಅದು ಸಾಧ್ಯವಿದ್ದರೆ ನಿಮ್ಮ ಮಂಗಳೂರಿನ ಶಾಲೆಯನ್ನು ಮುಚ್ಚುವ ಅಗತ್ಯ ಬೀಳುತ್ತಿರಲಿಲ್ಲ. ನನ್ನ ವಿಚಾರ ಹೀಗೆ – ಆರಂಭದಲ್ಲಿ ಪರರಿಗೆ ಕೈಯೊಡ್ಡುವುದು ಅನಿವಾರ್ಯವಾದರೂ, ಮುಂದೆ ಈ ಸಂಸ್ಥೆ ತನ್ನ ಕಾಲಿನ ಮೇಲೆ ತಾನು ನಿಲ್ಲಬೇಕು.” + +“ಅದು ಯೋಗ್ಯವಾದ ವಿಚಾರ. ನಾವು ಅಮೇರಿಕದ ಟಸ್ಕೆಜಿ ಇನ್ಸ್ಟಿಟ್ಯೂಟಿನ ಆದರ್ಶ ಇರಿಸಿಕೊಳ್ಳುವ. ಅದರ ವಿವರಗಳೂ ಕಾರ್ಯಭಾರಗಳೂ ನಿಮ್ಮವು. ಇಲ್ಲಿನ ಒಳ ಆಡಳಿತಕ್ಕೆ ಕೈಹಚ್ಚುವ ಇಷ್ಟವು ನನಗಿಲ್ಲ. ಅದು ಚೆನ್ನಾಗಿ ನಡೆಯಬೇಕು, ಬಹಳ ಕಾಲ ನಡೆಯಬೇಕು; ಇಷ್ಟೇ ನನ್ನ ಆಶೆ.” + +“ಹಾಗಿದ್ದರೆ, ನೀವು ಎಲ್ಲರನ್ನೂ ಕರೆಯಿಸಿ ಆ ಮಾತನ್ನು ಹೇಳಬೇಕು.” + +“ಸರಿಯಲ್ಲವೇ!” + +“ಇಲ್ಲಿ ಈ ಸ್ಥಳದ ಅನುಕೂಲತೆಯನ್ನು ನೋಡಿದರೆ ಕೃಷಿಯನ್ನು ಮುಖ್ಯವಾಗಿ ನಾವು ಇರಿಸಿಕೊಳ್ಳಬಹುದು. ಅದರಿಂದ ಆರ್ಥಿಕ ಸ್ಥಿತಿಗೂ ಸಹಾಯವಾದೀತು. ಇಲ್ಲಿಗೆ ಬರುವ ಮಕ್ಕಳೂ ನಾಳೆ ತಮ್ಮ ಹಳ್ಳಿಗಳಿಗೆ ಹೋಗಿ, ತಮ್ಮ ತಮ್ಮ ಪಾಡಿನ ಜೀವನ ನಡೆಯಿಸಬೇಕಾದವರು. ಅದಕ್ಕೆ ನಮ್ಮಿಂದಾದ ರೂಪ ಕೊಡಬೇಕು. ನಮ್ಮ ಹಿಂದೀ ಪಂಡಿತರು ಅನ್ನುತ್ತಾರೆ. ಇಲ್ಲಿ ರಾಷ್ಟ್ರಸೇವಕರನ್ನು ನಾವು ನಿರ್ಮಿಸಬೇಕೆಂದು. ಈ ಮಕ್ಕಳಿಗೆ ಅಷ್ಟು ದೊಡ್ಡ ಯಾವ ಮಾತೂ ಬೇಡ. ನಮ್ಮ ಜೀವನದಿಂದ ಮಕ್ಕಳು ತನ್ನಂತೆಯೇ ಆ ಆದರ್ಶವನ್ನು ಕಲಿಯಬೇಕಾಗಿದೆ. ಅದೇನು ಹೇಳಿಕೊಟ್ಟು ಬರುವ ಪಾಠವಲ್ಲ. ಬೇಡ, ಇನ್ನೂ ಮಕ್ಕಳಿಗೆ ಕನ್ನಡ ಬರುವ ಮೊದಲೇ, ಹಿಂದೀ ಭಾಷೆಯ ಒತ್ತಾಯ. ತಮ್ಮ ಆವರಣದ ಪರಿಚಯ ಆಗುವ ಮೊದಲೇ ಆಕಾಶ ಪುರಾಣಗಳನ್ನು ಹೇಳಿ, ಗೊಂದಲ ಎಬ್ಬಿಸಿ ಪ್ರಯೋಜನವಿಲ್ಲ. ನಮ್ಮ ಉಪಾಧ್ಯಾಯರು ಬರಿಯ ಉಪನ್ಯಾಸಕರಾದರೆ, ಕಾಲೇಜು ನಢೇಯಿಸಬಹುದೇ ಹೊರತು, ಮಕ್ಕಳಿಗೆ ಪ್ರಯೋಜನವಾಗಲಾರದು. ದಿನದಲ್ಲಿ ಸ್ವಲ್ಪ ಸಮಯವನ್ನು ಶರೀರ ಶ್ರಮಕ್ಕಾಗಿ ವಿನಿಯೋಗಿಸದೆ ಕೆಲಸ ಸಾಗುವ ಹಾಗಿಲ್ಲ.” + +“ನಿಮಗೆ ಯಾಕೆ ಅಂಥ ಅನುಮಾನ? ನಿಮ್ಮ ವಿಚಾರಗಳೆಲ್ಲ ನನಗೆ ಒಪ್ಪುತ್ತವೆ. ನಮ್ಮ ಪಂಡಿತರಿಗಾಗಲೀ, ದತ್ತಪ್ಪನವರಿಗಾಗಲೀ, ಶಿಕ್ಷಣದ ವಿಷಯದಲ್ಲಿ ಸಾಕಷ್ಟು ವಿಚಾರ ತಿಳಿದಿದೆ. ಆದರೂ ಈ ಮಾತನ್ನು ಒಪ್ಪುವವರೇ.” + +“ಅದನ್ನು ತಿಳಿದೇ ಈ ಮಾತು ಹೇಳುತ್ತಿದ್ದೇನೆ.” + +“ಹಾಗಾದರೆ, ನಿಮಗೆ ಏನೇನು ಆಗಬೇಕೆಂದು ಹೇಳಿ.” + +“ಇಲ್ಲಿ ಈ ಸಂಸ್ಥೆ ಬೆಳೆಯಬೇಕಾಗಿದ್ದರೆ, ಈ ಭೂಮಿಯ ಸಂಪೂರ್ಣ ಉಪಯೋಗವನ್ನು ನಾವು ಪಡೆಯುವಂತಿರಬೇಕು. ಈ ಜಮೀನು ನಿಮ್ಮದೇ ಆದರೂ, ಅದು ತಾತ್ಕಾಲಿಕವಾಗಿ ಪರರಿಗೆ ಅಡವು ಆಗಿದೆ ಎಂದು ಕೇಳಿದೆ.” + +ರಾಧಾಕೃಷ್ಣನ ಈ ಮಾತು ರಾಯರನ್ನು ಅಸಮಾಧಾನಗೊಳಿಸಿತು. + +“ನಿಮಗೆ ನನ್ನಲ್ಲಿ ಅಪನಂಬಿಕೆಯೇ?” ಎಂದು ಕೇಳಿದರು ಅವರು. + +“ಹಾಗಲ್ಲ ನಾಳೆ ಅಡವುದಾರರು ನಮ್ಮನ್ನು ಏಕಾಏಕಿ ಓಡಿಸುವ ಸ್ಥಿತಿ ಬರಬಾರದು ಎಂಬುದಕ್ಕೆ ಹೇಳುತ್ತಿದ್ದೇನೆ.” + +“ಹಾಗೆ ಓಡಿಸುವವರು ಯಾರು? ಅವರ ಸಾಲವನ್ನು ನಾನು ಮುಟ್ಟಿಸುವುದಿಲ್ಲವೆಂದು ತಿಳಿಯುತ್ತೀರಾ? ಭೂಮಿ ಅವರ ಸ್ವಾಧೀನ ಆಗುತ್ತದೆಂದು ತಿಳಿಯುತ್ತೀರಾ? ನನಗೆ ಇನ್ನೂ ಇಲ್ಲಿಯೇ ಹಣ ಸುರಿಯುವ ಯೋಚನೆ ಇದೆ. ಒಂದೆರಡು ಕಟ್ಟಡಗಳನ್ನು ಕಟ್ಟಿಸಬೇಕು ಎಂದಿದೆ. ಯಾವುದಕ್ಕೂ ಆ ದಿನ ಹೇಳಿದ್ದೆನಲ್ಲಾ – ಅದೊಂದು ಸಾಲದ ವಸೂಲಿಯಾಗದೆ ಕಾದು ಕುಳಿತಿದ್ದೇನೆ.” + +“ನನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳುತ್ತೇನೆ. ಆ ಮೇಲೆ ತೊಡಕು ಬರಬಾರದು ಎಂಬುದು ನನ್ನ ಉದ್ದೇಶ. ನೀವೂ ಅಡವುದಾರರೂ ಸೇರಿ ಈ ಆಶ್ರಮವನ್ನು, ಇಲ್ಲಿಂದ ಹತ್ತು ವರ್ಷ ಕಾಲವಾದರೂ ಕದಲಿಸುವುದಿಲ್ಲ ಎಂಬ – ಭರವಸೆ ನಮಗಿರಬೇಕು. ಆಗ ಮಾತ್ರ ನಾನು ಇಲ್ಲಿ ಇರಬಲ್ಲೆ. ಇಲ್ಲವಾದರೆ ಏನು ಮಾಡುವುದೂ ಕಷ್ಟದ ಕೆಲಸ – ಎಂದು ನನಗೆ ಅನಿಸುತ್ತದೆ.” + +ರಾಯರು ವಿಚಾರಪರರಾದರು. ಅವರಿಗೆ ತಮ್ಮ ಜವಾಬ್ದಾರಿಯ ಜ್ಞಾನವಾದಂತೆ ಕಂಡಿತು. “ನೀವು ಅನ್ನುವುದು ತೀರ ಸಮ. ಹಾಗೆಯೇ ಮಾಡುವೆ” ಎಂದು ನುಡಿದು, ಉಳಿದವರನ್ನು ಕರೆಯಿಸಿಕೊಂಡರು. ಪಂಡಿತರು ಮರೆಯಲ್ಲಿ ಇದ್ದು, ಮಾತನ್ನು ಕೇಳುತ್ತಿದ್ದವರು, ಈಗ ಸಮ್ಮುಖಕ್ಕೆ ಬಂದರು. ಅವರೆಲ್ಲರ ಎದುರಿಗೆ ರಾಯರು, “ನೋಡಿ, ನನಗೆ ನೂರಾರು ಕೆಲಸಗಳೆಂಬುದು ನಿಮಗೆ ಗೊತ್ತು . ನಿಮಗೆ ಮಿಸ್ಟರ್ ರಾಧಾಕೃಷ್ಣರ ಪರಿಚಯ ಇಲ್ಲದೆ ಹೋದರೂ, ನನಗೆ ತುಂಬಾ ಸಮಯದಿಂದ ಗೊತ್ತು. ಅವರ ಮೇಲಿನ ವಿಶ್ವಾಸದಿಂದ, ನಾನು ಈ ಕೆಲಸವನ್ನು ತೊಡಗಿದ್ದೇನೆ. ಅವರು ಇಲ್ಲಿನ ಆಚಾರ್ಯರಾಗಿ ನಿಂತು, ಕೆಲಸ ಮಾಡಿಸಬೇಕಾದವರು. ನೀವು ಅವರಿಗೆ ಬೆಂಬಲವಾಗಿ ನಿಂತು ಕೆಲಸ ಮಾಡಬೇಕಾದ್ದು ಕರ್ತವ್ಯ. ಅವರು ಹಾಕಿದ ಹಂಚಿಕೆಗೆ ನೀವು ಬದ್ಧರಾಗಿರಬೇಕು” ಎಂದರು. + +ಆಗ ನಿವಾಸ್ ಜೀಯವರು “ಅವರ ಪ್ಲೇನಿನಲ್ಲಿ ರಾಷ್ಟ್ರಭಾಷೆಗೇ ಜಾಗವಿಲ್ಲ” ಎಂದರು. + +“ಎಳೆಯ ಮಕ್ಕಳಿಗೆ ಅದು ಬೇಡ – ಎಂದಿಷ್ಟೇ ನನ್ನ ಅಭಿಪ್ರಾಯ. ಸರಿಯಾದ ವಯಸ್ಸಿನವರಿಗೆ ಆ ಪಾಠವನ್ನು ಹೇಳಲಿ. ಬರಿಯ ಎರಡು ಇಲ್ಲವೆ ಮೂರು ನಾಲ್ಕು ಮಂದಿಗೆ ಪಾಠ ಹೇಳುವುದರಲ್ಲಿ ಮಾತ್ರ ಕೆಲಸ ಮುಗಿಯಬಾರದು. ಇತರ ಕೆಲಸಗಳ ಹೊಣೆಯನ್ನು ಅವರು ಹೊರಬೇಕು” ಎಂದ ರಾಧಾಕೃಷ್ಣ.“ಅದು ಸರಿಯಾದ ಮಾತು ಅಲ್ಲವೇ?” ಎಂದರು ರಾಯರು. ರಾಯರ ಒಲವು ಬದಲಾದುದನ್ನು ನೋಡಿ, ಪಂಡಿತರು ಸುಮ್ಮಗಾದರು. ಎದುರಿನಲ್ಲಿ ಚರ್ಚಿಸಿ ಫಲವಿಲ್ಲ ಎಂದು ಕಂಡಿತು ಅವರಿಗೆ. + +ರಾಧಾಕೃಷ್ಣ ರಾಯರ ಬೆನ್ನನ್ನು ಬಿಡಲಿಲ್ಲ. ಮಂಗಳೂರಿಗೆ ಅವರೊಂದಿಗೇನೆ ಹೋದನು. ಅವರನ್ನು ಜಿಗಣೆಯಂತೆ ಅಂಟಿಕೊಂಡನು. ಭೂಮಿಯ ಅಡವುದಾರನನ್ನು ಮಾತನಾಡಿಸಿದನು. ಯಾರು ಯಾರನ್ನೋ ದಾಕ್ಷಿಣ್ಯಕ್ಕೆ ಕೆಡವಿ, ಕಿರಿ ಪದವಿನ ಆಸ್ತಿಯನ್ನು ಹತ್ತು ವರುಷಗಳ ವಾಯಿದೆ ಗೇಣಿಗೆ ಪಡೆದುಕೊಂಡೇ ತನ್ನ ಸ್ಥಳಕ್ಕೆ ಮರಳಿ ಬಂದನು. ಇಷ್ಟೆಲ್ಲ ಮಾಡಿ ಅವನು ತನ್ನ ಗುಡಿಸಲನ್ನು ಸೇರುವಾಗ, ನಿವಾಸಜೀಯವರು ಕುಪಿತರಾಗಿ ಹೊರಟೇ ಹೋಗಿದ್ದರು. ಜಾರಪ್ಪನವರೂ ಹೊರಡುವವರಿದ್ದರು. ಉಬ್ಬಸ ಜೋರಾದುದರಿಂದ ಅದು ಗುಣವಾಗುವ ತನಕ ಹೊರಡಲಾಗಲಿಲ್ಲ. ದತ್ತಪ್ಪನವರಿಗೆ ಸಂದಿಗ್ಧ ಮನಸ್ಸು; ಅವರನ್ನು ಹೊರಡಿಸುವುದರಲ್ಲಿ ರಾಧಾಕೃಷ್ಣ ಆತುರಪಡಲೂ ಇಲ್ಲ. ಒಬ್ಬನಿಂದ ಈ ಕೆಲಸ ಸಾಧಿಸದಷ್ಟೆ. ಪಂಡಿತರು ತಾವು ಹೊರಡುವಾಗ, ಇಬ್ಬರು ಬಾಲಕರನ್ನು ತಪ್ಪಿಸಿಯೇ ಹೊರಟರು. ರಾಧಾಕೃಷ್ಣನು ಮಕ್ಕಳನ್ನು ಕಟ್ಟಿಕೊಂಡು, ತೆಂಗಿನ ಗಿಡಕ್ಕೆ ನೀರು ಎರೆಯಲು ತೊಡಗಿದೊಡನೆಯೇ, ಇನ್ನಿಬ್ಬರು ಬಾಲಕರು `ನಮ್ಮ ಮನೆಯ ಗಿಡಕ್ಕೆ ನೀರು ಹಾಕಬಾರದೇ’ ಎಂದು ಹೊರಟು ಹೋದರು. ಆ ಗ್ರಾಮದ ಕೆಲವು ಹಿರಿಯರು “ಅಲ್ಲಿಯೂ ದುಡಿದು ಉಣ್ಣುವುದಾದರೆ ಮನೆಯಲ್ಲೇ ಅಷ್ಟು ಕೆಲಸ ಮಾಡಬಹುದಲ್ಲ” ಎಂದು ನುಡಿಯತೊಡಗಿದರು. + +••• + +ಈಗ ಆತನ ಆಶ್ರಮದ ನಾಲ್ಕು ತಿಂಗಳ ಬಾಳುವೆ ಸಾಗಿದೆಯಷ್ಟೇ. ಮುಂದಿನ ತಿಂಗಳು, ಜೂನು. ಬೇಸಾಯದ ಸಮಯ. ಆಶ್ರಮದಲ್ಲಿ ರಾಧಾಕೃಷ್ಣನು ಏಕ ಮಾತ್ರ ನಾಯಕ. ಅವರ ಜತೆಗೆ ಇಬ್ಬರು ಅರೆಮನಸ್ಸಿನ ಅಧ್ಯಾಪಕರು, ಹೆಸರು ಉಳಿಸುವುದಕ್ಕೆ ಐವರು ಮಂದಿ ಬಾಲಕರು ಉಳಿದಿದ್ದಾರೆ. ಸಹಾಯಕಿಯಾಗಿ, ಅಭ್ಯಾಸವಿಲ್ಲದೆ, ಮನೆಗೆಲಸದಲ್ಲಿ ಸೋತು ನುಗ್ಗಾಗುತ್ತಿರುವ ಸತ್ಯ ಹೇಗೂ ಜತೆಗೆ ಇದ್ದಾಳೆ. + +ಹೆಚ್ಚೇನು, ಸತ್ಯ ಅಲ್ಲಿ ದಣಿದು ಹೋಗುವುದರಲ್ಲಿ ಆಶ್ಚರ್ಯವಿರಲಿಲ್ಲ, ಗಂಡುಸೆನಿಸಿದ ರಾಧಾಕೃಷ್ಣನೂ ಆ ತೆರನ ದುಡಿತಕ್ಕೆ ಆಳಲ್ಲ. ಅವನ ಸಹಾಯಕ್ಕೆ ದೊರೆತ ಇಬ್ಬರು ಅಧ್ಯಾಪಕರು, ಮಾತಿನ ಬುರುಡೆಗಳು. ದತ್ತಪ್ಪ ಮಾಸ್ತರರು ಅಲ್ಲಿಗೆ ಬರುವ ಹಳ್ಳಿಯವರೊಡನೆ ಕರ್ಣಾಟಕ ಗತ ವೈಭವ, ಭಾರತೀಯರ ಮೇಲ್ಮೆಗಳನ್ನು ಕುರಿತಾಗಿ ತಾಸು ತಾಸು ಉಪನ್ಯಾಸ ಮಾಡುತ್ತಾರೆ. ಹುಡುಗರ ಮುಂದೆ ಕುಳಿತರೂ ಹಾಗೇನೆ. ಅದರಿಂದ ಅವರನ್ನು ತಪ್ಪಿಸಿ, ದಿನಕ್ಕೆ ಒಂದೆರಡು ತಾಸು ಬರಿಯ ಓದು ಬರಹಗಳನ್ನು ಹೇಳಿಕೊಡುವುದು ಕಷ್ಟವಾಗುತ್ತಿತ್ತು. ಜಾರಪ್ಪ ಮಾಸ್ತರರು ಮಳೆಗಾಲ ಕಾಲು ಇರಿಸಿದಂದಿಗೆ ಶರತಲ್ಪಶಾಯಿಗಳಾದರು. ಉಬ್ಬಸ ಕೆಮ್ಮುಗಳಿಂದ ಉಳಿದವರಿಗೂ ಭಯಭೀತಿಗಳನ್ನು ಹುಟ್ಟಿಸಿದರು. ರಾಧಾಕೃಷ್ಣ ತಾನು ಹೊತ್ತ ಹೊಣೆಯನ್ನು ಮರೆಯಲಾರನಷ್ಟೆ! ಮರೆತು, ಮನೆಯಲ್ಲಿ ತುಂಬಿದ ಐದಾರು ಮಕ್ಕಳನ್ನು ಉಪವಾಸ ತಳ್ಳಲೇ? ಅವರಲ್ಲಿ, ಇಬ್ಬರು, ಮೂವರು ರಜೆ ಬಂದಾಗ, ಬಂಧುಗಳ ಮನೆಗೆ ಹೋಗಿ ಬರುತ್ತಾರೆ. ಇನ್ನಿಬ್ಬರು ಯಾರಿಗೂ ಬೇಡವಾದ ಮಕ್ಕಳು. + +ಆತ ನಿರ್ಧರಿಸಿಯೇ ಬಿಟ್ಟನು! ಇದು ದಲಿತಾಶ್ರಮವೋ? ವಿದ್ಯಾಪೀಠವೋ? ಇನ್ನೇನೋ? ಆ ಹೆಸರು ಕೊಟ್ಟವರಿಗೇನೋ ಆ ಹೊಣೆ. ಮೊದಲು ತಾನು, ಅಲ್ಲಿ ಆದಷ್ಟು ಕಡಿಮೆ ಪರಾವಲಂಬನದಿಂದ ಜೀವನ ಸಾಗಿಸಬಲ್ಲ ದಾರಿಯನ್ನು ಹುಡುಕಬೇಕಾಗಿದೆ. ಸಮಯ ಬಂದರೆ ಇದ್ದ ಉಪಾಧ್ಯಾಯರನ್ನು ಓಡಿಸಿ ತನ್ನ ಕೆಲಸಕ್ಕೆ ಒದಗುವವರನ್ನು ಹುಡುಕಬೇಕಾಗಿದೆ. ಅದಕ್ಕಾಗಿ, ಒಮ್ಮೆ ಮನೆಗೆ ಮಿಂಚಿನ ಓಟ ಹೂಡಿದ. ಊರಿಗೆ ಹೋಗಿ ತಮ್ಮನಿಂದ ಐನೂರು ರೂಪಾಯಿಗಳಷ್ಟು ಹಣವನ್ನು ಸಾಲವಾಗಿ ತಂದನು. ಅದರಲ್ಲಿ ಬಹುಭಾಗವನ್ನು ಆಪತ್ತಿಗೆಂದು ಕಾದಿರಿಸಿ, ಸ್ವಲ್ಪ ಅಂಶದಿಂದ ಬೇಸಾಯಕ್ಕೆ ಬೇಕಾಗುವ ಬಿತ್ತು, ಗೊಬ್ಬರ, ಒಂದು ಜತೆ ಕೋಣಗಳನ್ನು ಬೆಲೆಗೆ ಕೊಂಡುಕೊಂಡನು. ಮಳೆ ಹನಿಯುತ್ತಲೇ ಕಿರಿಪದವಿನ ಮೂಲದ ಒಕ್ಕಲಾದ ಬಿರುಮ ಮರಕಾಲನನ್ನು ಅಂಗಲಾಚಿ ಬೇಡಿ, ಆಳಾಗಿ, ದುಡಿಸಿಕೊಂಡನು. ಮರಕಾಲನಿಗೂ ಅದೇ ಬೇಕಿತ್ತು. ತಾನು ಇದ್ದ ಸ್ಥಿತಿಯಲ್ಲಿ ಆತ ಸ್ವಂತ ಬೇಸಾಯವನ್ನು ಮಾಡಲಾರ. ಗೇಣಿಯನ್ನು ಉಳಿಸಿಕೊಂಡೇ ಜೀವನ ಸಾಗಿಸಿದ ಅವನು, ದುಡಿಯಲು ಕಲಿತವನಲ್ಲ. ಅವನ ರೀತಿಗೆ ಜಿಗುಪ್ಸೆಗೊಂಡು, ಅವನ ಹೆಂಡತಿ, ಮಕ್ಕಳನ್ನು ಕಟ್ಟಿಕೊಂಡು ತವರುಮನೆಗೆ ಹೋಗಿದ್ದಳು. ಒಬ್ಬಂಟಿಗನಾಗಿ ಉಳಿದ ಅವನನ್ನು, ಈಗ ಶಾಲೆಯವರೂ ಓಡಿಸಿಬಿಟ್ಟರೆ “ತಾನು ಎಲ್ಲಿಗೆ ಹೋಗಬೇಕು?” ಎಂದು ಆತ ಕಂಗಾಲಾದ ಗಳಿಗೆಯಲ್ಲೇ, ರಾಧಾಕೃಷ್ಣ ಅವನನ್ನು ಕೆಲಸಕ್ಕೆ ನೇಮಿಸಿಕೊಂಡನು. ಆತನ ಕಾವಲುಗಣ್ಣಿನಲ್ಲಿ ಪರಮಾಲಸಿಯಾದ ಬಿರುಮ ಶಪಿಸುತ್ತ ದುಡಿಯಬೇಕಾಯಿತು. + +ಆದರೆ ಆ ದುಡಿತದಿಂದ ಅವನ ದಿನದ ಊಟ ಹೋಗಿ, ಎರಡಾಣೆ ಸಂಬಳ ದೊರೆಯುತ್ತದೆ ಎಂದು ಖಂಡಿತವಾಯಿತು. ಮರಕಾಲನ ಜತೆಗೆ ರಾಧಾಕೃಷ್ಣನೂ ಬಯಲಿಗೆ ಇಳಿದನು. ಐದು ಮಂದಿ ಬಾಲಕರಲ್ಲಿ ಕಿರಿಯರಾದ ಇಬ್ಬರನ್ನು ಬಿಟ್ಟು, ಉಳಿದ ಮೂವರನ್ನು ದಿನಕ್ಕೆ ತಾಸೆರಡು ತಾಸು ತೋಟಗಾರಿಕೆಗೆ ಎಳೆದುಕೊಂಡನು. ಈ ಮಳೆಗಾಲ ಕಳೆದರೆ – ಅನ್ನ, ತರಕಾರಿ, ಮೆಣಸುಗಳ ಮಟ್ಟಿಗೆ ತಾನು ಸ್ವತಂತ್ರನಾದೇನು ಎಂದು ತೋರಿತು. ಈ ಸ್ವಾತಂತ್ರ್ಯ ಅವನಿಗೆ ಬಹಳ ಮುಖ್ಯವಾಗಿತ್ತು. ಅಂತರಂಗದಲ್ಲಿ ಅವನಿಗೆ – ರಾಯರ ಸಹಾಯದ ವಿಶ್ವಾಸ ಹೋಗಿದೆ. ತನ್ನ ಎದೆಗಾರಿಕೆಯ ಮೇಲೆಯೇ ತಾನು ಬದುಕಬೇಕೆಂದು ನಿಶ್ಚಯ ತೋರಿದೆ. + +ಬೇಸಾಯದ ಈ ದಿನಗಳಲ್ಲಿ ಅವನಿಗೆ ಬಿಡುವು ಎಂದರೆ, ಸಂಜೆ ಊಟವಾದ ಬಳಿಕ. ಸಂಜೆಗೆ ಮುಂಚೆಯೇ ಆ ಊಟ, ಸಾಬರ್ಮತಿ ಆಶ್ರಮದ ಮಾದರಿಯಲ್ಲಿ. ಅದರಿಂದ ಸತ್ಯಳಿಗೆ ತುಸು ಹೆಚ್ಚಾಗಿ ವಿಶ್ರಾಂತಿ ಸಿಗುತ್ತಿತ್ತು. ಆಗ ಪತ್ನಿಯನ್ನು ಜತೆಗೆ ಕುಳ್ಳಿರಿಸಿಕೊಂಡು, ಆಶ್ರಮದ ಬಾಲಕರಿಗೆ ಏನಾದರೂ ಕತೆ ಹೇಳುತ್ತಾನೆ.ಶ್ಯಾಮ, ನೀಲ, ನಾಗಪ್ಪ ಇವರು ಮಕ್ಕಳಲ್ಲಿ ಹಿರಿಯರು. ಅವರು, ತಮ್ಮಿಂದ ಕೆಲಸ ಮಾಡಿಸಿಕೊಂಡರೂ, ದೊಡ್ಡ ಮಾಸ್ತರರ ಬಳಿಯಲ್ಲಿಯೇ ಹೆಚ್ಚಾಗಿ ಕಲೆಯುತ್ತಾರೆ. ಕೆಮ್ಮುತ್ತ ಕುಳಿತಿರುವ ಜಾರಪ್ಪನವರಿಗೆ ಮಕ್ಕಳು ಸಮೀಪ ಬಾರದಿದ್ದರೇ ಕ್ಷೇಮ. ಅವರ ರಾಟಿಯ ಶಿಕ್ಷಣ ನಡೆದಾಗ ನಡೆಯುತ್ತದೆ; ಇಲ್ಲವಾದರೆ ಇಲ್ಲ. ಬಾಲಕರು ವೇಳೆ ಇದ್ದಾಗ ನೂಲು ಮಾಡಿಯೇ ಮಾಡುತ್ತಾರೆ. + + + +ದತ್ತಪ್ಪ ಮಾಸ್ತರರಿಗೆ ಸಭೆ ನೆರೆಯಿಸುವಾಗ ಬರುವ ಸ್ಫೂರ್ತಿ ಉಳಿದ ಗಳಿಗೆಯಲ್ಲಿ ಬರುವುದಿಲ್ಲ. ಅವರಿಗೆ ಆಶ್ರಮದ ವಿಷಯದಲ್ಲಿ ತುಂಬ ಅಸಮಾಧಾನ. ಆಗಾಗ ದಯಾನಂದರಾಯರಲ್ಲಿಗೆ ಹೋಗಿ- “ಹುಡುಗರಿಗೆ ಬೌದ್ಧಿಕ ಶಿಕ್ಷಣವಾಗಲೀ ರಾಷ್ಟ್ರೀಯ ಶಿಕ್ಷಣವಾಗಲಿ ಇಲ್ಲದೆ ಬರಿಯ ಬೇಸಾಯದ ಕೆಲಸಕ್ಕೆ ಹಾಕಿದ್ದಾರೆ” ಎಂದು ದೂರು ಹೇಳುತ್ತಾರೆ. ದೂರನ್ನು ಕೇಳಿ ರಾಯರಿಗೆ ಮನಸ್ಸು ಚಂಚಲವಾದರೂ ಹೆಚ್ಚಿನ ಗಮನ ಕೊಡುವ ವಿರಾಮ ಇರಲಿಲ್ಲ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_343.txt b/Kenda Sampige/article_343.txt new file mode 100644 index 0000000000000000000000000000000000000000..8a6965885878c4c7f0c622762368234a58626a0c --- /dev/null +++ b/Kenda Sampige/article_343.txt @@ -0,0 +1,57 @@ + + +ಆಧುನಿಕ ಕನ್ನಡ ಕಥಾ ಪ್ರಕಾರವು ಅನೇಕ ಜಿಗಿತಗಳನ್ನು ಕಂಡು ಹೊಸ ಅನುಭವಗಳನ್ನು ಶೋಧಿಸಿದೆ. ಈ ಶೋಧನೆಯ ಮೂಲಕ ಭಾಷೆಯ ಸಾಧ್ಯತೆಗಳನ್ನು ತೋರಿಸಿದೆ. ನವ್ಯ ಪೂರ್ವ ಕಾಲದಲ್ಲಿ ಕೆಲವೇ ಕೆಲವು ವರ್ಗದ ಕತೆಗಾರರು ಚಾಲ್ತಿಯಲ್ಲಿದ್ದು, ನವ್ಯ ಮತ್ತು ದಲಿತ ಬಂಡಾಯ ಕಾಲ ಘಟ್ಟದ ನಂತರ ವಚನ ಚಳವಳಿಯಲ್ಲಿ ಕಂಡಂತೆ ಹೊಸ ಪ್ರತಿಭೆಗಳು ಇಲ್ಲಿಯ ತನಕ ದಾಖಲಾಗದಂತಹ ಅನುಭವಗಳನ್ನು ನಿರೂಪಿಸಿ ಭಾಷೆಗೆ ಒಂದು ಹಿಗ್ಗನ್ನು ತಂದು ಕೊಡುವುದರ ಮೂಲಕ ಕನ್ನಡ ಸಾಹಿತ್ಯದ ಕ್ಯಾನ್ವಾಸನ್ನು ವಿಸ್ತರಿಸಿದರು. + +ನವ್ಯ-ದಲಿತ-ಬಂಡಾಯೋತ್ತರ ಕಾಲಘಟ್ಟದಲ್ಲಿ ಅಂದರೆ ಜಾಗತಿಕ ಸಾಹಿತ್ಯದ ಸಂದರ್ಭದಲ್ಲಿ ಹೇಳುವುದಾದರೆ ಪೋಸ್ಟ್-ಮಾಡ್ರನ್, ಪೋಸ್ಟ್-ಸ್ಟ್ರಕ್ಚರಲಿಸಮ್ ಎಂದು ಕರೆಯಿಸಿಕೊಳ್ಳುವ ಆಧುನಿಕೋತ್ತರ ಕಾಲಘಟ್ಟದ ಜಾಗತಿಕ ಕಥಾ ಸಾಹಿತ್ಯದಲ್ಲಿ ಒಂದು ತೆರನಾದ ರೆವಲುಷನ್ ಎನ್ನುವಂತೆ ಪ್ರಯೋಗ ಶೀಲತೆ, ಕಥನ ಕ್ರಮ, ನಿರೂಪಣಾ ಶೈಲಿ, ಅನುಭವಗಳ ಶೋಧನೆಗಳು ಅನೇಕ ರೀತಿಯ ಬದಲಾವಣೆಗಳನ್ನು ಕಂಡಿವೆ. ಆಧುನಿಕೋತ್ತರ ಸಂದರ್ಭದಲ್ಲಿ ‘ವಿಸ್ಮೃತಿ’, ‘ಸಾಂಸ್ಕೃತಿಕ ನಿರೂಪಣೆಗಳು’, ‘ಅಲಕ್ಷಿತ ಸಮುದಾಯದ ಅನುಭವಗಳು’ ಪ್ರಭಾವಿಸಿದ್ದರೆ, ಆಧುನಿಕೋತ್ತರ ಕಾಲದ ಮುಂದುವರೆದ ಭಾಗವಾದ ಇಂದಿನ ಪೋಸ್ಟ್ ಟ್ರುಥ್/ಸತ್ಯೋತ್ತರ ಕಾಲವು ‘ಮತೀಯವಾದ’ವನ್ನು, ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಸುತ್ತಿರುವ ‘ಸರ್ವಾಧಿಕಾರಿ ಧೋರಣೆಯುಳ್ಳ ಪ್ರಭುತ್ವ’ ಮತ್ತು ‘ಫ್ಯಾಸಿಸ್ಟ್ ಮನಸ್ಥಿತಿ’ಗಳನ್ನು ಕುರಿತು ತೀವ್ರಗತಿಯ ಟೀಕೆ-ವಿಮರ್ಶೆಗಳನ್ನು ಮಾಡುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತಿದೆ. + +ಇತ್ತೀಚೆಗೆ ಬರುತ್ತಿರುವ ಕತೆಗಳು ತಮ್ಮದೇ ರೀತಿಯಲ್ಲಿ ಸ್ಪಂದಿಸುತ್ತಿವೆ. ನವ್ಯ ಮತ್ತು ನವ್ಯೋತ್ತರದ ದಲಿತ-ಬಂಡಾಯ ಸಾಹಿತ್ಯಕ್ಕೆ ಇದ್ದಂತಹ ಒಂದು ಖಚಿತ ಸೈದ್ಧಾಂತಿಕ ಪ್ರಭಾವ ಇಂದಿನ ಸಾಹಿತ್ಯದಲ್ಲಿ ಕಾಣದಿದ್ದರೂ ವರ್ತಮಾನದ ಸ್ಥಿತ್ಯಂತರ ಮತ್ತು ಕಾಲದಲ್ಲಾಗುತ್ತಿರುವ ಪಲ್ಲಟಗಳನ್ನು ತಮ್ಮದೇ ವಿಶಿಷ್ಟ ರೀತಿಯಲ್ಲಿ ಅನಾವರಣಗೊಳಿಸುತ್ತಿವೆ. ಕೆಲವು ಬರಹಗಾರರು ನಗರ-ಕೇಂದ್ರಿತ ಜೀವನದ ಮೂಲಕ, ಕಾರ್ಪೋರೇಟ್ ಜಗತ್ತಿನ ಮೂಲಕ ಬದುಕು ಮತ್ತು ಮನುಷ್ಯ ಸಂಬಂಧಗಳನ್ನು ಹಾಗೂ ಸಮಾಜವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟರೆ, ಮತ್ತೆ ಕೆಲವರು ಗ್ರಾಮೀಣ ಬದುಕಿನ ಹಿನ್ನಲೆಯಲ್ಲಿ ನೋಡಲು ಪ್ರಯತ್ನಪಡುತ್ತಿವೆ. ಕೆಲವರು ಎರಡೂ ನೆಲೆಯಲ್ಲಿ ಹೇಳುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಎಸ್.ಗಂಗಾಧರಯ್ಯ ಅವರ ಇತ್ತೀಚಿನ ಕಥಾಸಂಕಲನ ‘ದೇವರ ಕುದುರೆ’ಯನ್ನು ನೋಡುವುದಾದರೆ, ಅವರು ತಮ್ಮ ಕತೆಗಳನ್ನು ಗ್ರಾಮೀಣ ಹಿನ್ನೆಲೆಯನ್ನು ಇಟ್ಟುಕೊಂಡು ಕತೆಗಳನ್ನು ಬರೆಯುತ್ತಿರುವುದು ಕಂಡುಬರುತ್ತದೆ. ಆರ್ ಕೆ ನಾರಾಯಣ್ ಅವರ ಕತೆಗಳು ಮಾಲ್ಗುಡಿಯಲ್ಲಿ ನಡೆಯುವಂತೆ, ದೇವರ ಕುದುರೆಯಲ್ಲಿನ ಎಲ್ಲ ಕತೆಗಳು- ಊರುಗಳು ಬೇರೆಬೇರೆಯಾಗಿದ್ದರೂ -ನಡೆಯುವುದು ಒಂದೇ ಊರಿನಲ್ಲೆಂಬಂತೆ ಇವೆ. + +(ಎಸ್. ಗಂಗಾಧರಯ್ಯ) + +ಎಸ್.ಗಂಗಾಧರಯ್ಯ ಅವರು ತಮ್ಮ ವಾರಗೆಯ ಕತೆಗಾರರಲ್ಲಿ ತುಸು ಭಿನ್ನವಾಗಿಯೇ ಬದುಕಿಗೆ ಮುಖಾಮುಖಿಯಾಗುತ್ತ ವಿಶಿಷ್ಟವಾದ ನಿರೂಪಣಾ ಕ್ರಮವನ್ನು ಸಾಧ್ಯವಾಗಿಸಿಕೊಂಡು ಕತೆಗಳನ್ನು ನಿರೂಪಿಸುತ್ತಿರುವುದು ಗಮನ ಸೆಳೆಯುವಂತಹದ್ದಾಗಿದೆ. ‘ಕತೆಯ ಬಲ’ದಿಂದ ಗಂಗಾಧರಯ್ಯ ಅವರು ನಿರೂಪಣೆ ಮತ್ತು ಭಾಷೆ ಈ ಎರಡನ್ನು ಹೊಸದಾಗಿ ಸಮ್ಮಿಶ್ರಗೊಳಿಸಿ ಒಂದು ಛಂದದ ಕಥನ ಕ್ರಮವನ್ನು ಕಟ್ಟುತ್ತಿರುವುದು ಕುತೂಹಲ ಮತ್ತು ಆಸಕ್ತಿದಾಯಕವಾಗಿದೆ. ಹೀಗೆ ಮಾಡುವುದರ ಮೂಲಕ ತಮ್ಮದೇ ಆದಂತಹ ಒಂದು ಶೈಲಿ ಮತ್ತು ನಿರೂಪಣಾ ಕ್ರಮವನ್ನು ಸೃಷ್ಟಿಮಾಡಿಕೊಂಡಿದ್ದಾರೆ. ಇಲ್ಲಿಯ ತನಕ-ಈ ಹಿಂದೆ ಒಂದು ಕಥಾಸಂಕಲನವನ್ನು ಹೊರ ತಂದಿದ್ದರೂ-ಕೇವಲ ಅನುವಾದಕರಾಗಿಯಷ್ಟೇ ಪರಿಚಿತವಾಗಿದ್ದ ಮತ್ತು ಗಮನಸೆಳೆದಿದ್ದ ಗಂಗಾಧರಯ್ಯ ಅವರು ತಮ್ಮ ಇತ್ತೀಚಿನ ‘ದೇವರ ಕುದುರೆ’ ಸಂಕಲನದ ಮೂಲಕ ತಮ್ಮೊಳಗೂ ಒಬ್ಬ ಒರಿಜಿನಲ್ ಎನ್ನಬಹುದಾದ, ಸತ್ವಯುತವಾದ ಕತೆಗಾರ ಇದ್ದಾನೆ ಎಂಬುದನ್ನು ಸಾಬೀತುಪಡಿಸಿದ್ದಾರೆ. + +ಪ್ರಸ್ತುತದ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಈ ಕಥಾಸಂಕಲನ ಅನೇಕ ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಇವು ಶುದ್ಧ ಗ್ರಾಮೀಣ ಬದುಕಿನ ಸೊಗಡಿರುವ ಕತೆಗಳು. ಇಲ್ಲಿಯ ಕತೆಗಳಿಗೆ ಯಾವ ಇಸಮ್ಮುಗಳ ಸೋಂಕು ಇಲ್ಲದೆ, ಕೇವಲ ಕತೆಗಾರ ತಾನು ಕಂಡದ್ದನ್ನು, ಅನುಭವಿಸಿದ್ದನ್ನು, ಬದುಕಿಗೆ ನಿಷ್ಠವಾಗಿ, ಪ್ರಕೃತಿಗೆ ನಿಷ್ಠವಾಗಿ ಧ್ಯಾನಸ್ಥ ರೀತಿಯಲ್ಲಿ ಬರೆದಿರುವುದು ಪ್ರತಿಸಾಲುಗಳಲ್ಲಿ ಮನವರಿಕೆಯಾಗುತ್ತದೆ. ಯಾವತ್ತಿಗೂ ಸಹ ಹಳ್ಳಿಯ ಸೆರಿನಿಟಿ ಮತ್ತು ಟ್ರಾಂಕ್ಯುಲಿಟಿಯನ್ನು ಹಾಳು ಮಾಡುತ್ತಿರುವುದು ಮನುಷ್ಯನ ದುರಾಸೆಗಳೇ ಆಗಿವೆ. ಗ್ಲೋಬಲೈಸೇಷನ್ನಿನ ನೇರ ಎಫೆಕ್ಟ್ ಆಗುತ್ತಿರುವುದು ಹಳ್ಳಿಯ ಮೇಲೆಯೇ. ಹಾಗಾಗಿ ಹಳ್ಳಿಗಳು ಒಂದು ರೀತಿಯ ವಲ್ನರಬಲ್ ಆಗುತ್ತಿವೆಯೇನೋ ಅನ್ನಿಸುತ್ತದೆ. ಆದರೆ ಅಲ್ಲಿಯ ಸಾಮಾಜಿಕ ವಾತಾವರಣ- ಮುಖ್ಯವಾಗಿ ಜಾತಿ ವ್ಯವಸ್ಥೆ-ಸುಧಾರಿಸಿಲ್ಲ. ಭಾರತದಂತಹ ದೇಶದಲ್ಲಿ ಇದು ಕಷ್ಟಸಾಧ್ಯವೆನ್ನಿಸುತ್ತದೆ?! + +ಇಲ್ಲಿಯ ಕತೆಗಳು ಸಾಮಾಜಿಕ ವಾತಾವರಣದ ಅನಾವರಣಕ್ಕಿಂತಲೂ ಮನುಷ್ಯನ ಸಣ್ಣತನಗಳನ್ನು ತೋರಿಸುವುದರಲ್ಲಿ ಮತ್ತು ಬದುಕಿನ ಪ್ರೀತಿಯನ್ನು ಎತ್ತಿಹಿಡಿಯುವುದರಲ್ಲಿ ತಮ್ಮ ಗಮನವನ್ನು ಹರಿಸುತ್ತವೆ. ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಗುತ್ತಿ ತದೇಕ ಚಿತ್ತದಿಂದ ಒಂದು ಪುಟ್ಟ ಸಗಣಿಹುಳ ಉಂಡೆಮಾಡಿಕೊಂಡು, ಅದನ್ನು ತಳ್ಳಿಕೊಂಡು ಹೋಗುವುದನ್ನು ನೋಡುತ್ತಾನಲ್ಲ ಹಾಗೆ ಇಲ್ಲಿಯ ನಿರೂಪಕ ಬದುಕು ಮತ್ತು ನಿಸರ್ಗದ ಒಳಗೆ ಬೆರೆತು ನಿರುದ್ವಿಗ್ನವಾಗಿ, ಧ್ಯಾನಸ್ಥರೀತಿಯಲ್ಲಿ ಕತೆಗಳನ್ನು ಹೇಳುತ್ತ ಹೋಗಿರುವುದು ಇಂದಿನ ಧಾವಂತದ ಯುಗದಲ್ಲಿ ಪ್ರಶಂಸಾರ್ಹ. ಇಲ್ಲಿಯ ಪಾತ್ರಗಳು ಹೇಗೆಲ್ಲ ವರ್ತಿಸುತ್ತವೆ, ಮತ್ತು ಹೇಗೆ ಬದುಕನ್ನು ಹಾಳುಮಾಡಿಕೊಳ್ಳುತ್ತವೆ, ಕಟ್ಟಿಕೊಳ್ಳುತ್ತವೆ ಎಂಬುದನ್ನು ಗಂಗಾಧರಯ್ಯ ಅವರು ವಾಸ್ತವವಾದಿ ನೆಲೆಯಲ್ಲಿ ಹೇಳಿದ್ದಾರೆ. ಬದುಕಿನ ಬಗೆಗೆ ಅದಮ್ಯವಾದಂತಹ ಕುತೂಹಲವಿದ್ದುದರಿಂದಲೇ ಅವರಿಗೆ ಇಲ್ಲಿ ಪಕ್ವಗೊಂಡಿರುವ ಭಾಷೆ ದಕ್ಕಿದೆ. + +ಈಗಾಗಲೇ ಪ್ರಸ್ತಾಪಿಸಿದಂತೆ, ಯಾವ ಇಸಮ್ಮುಗಳಿಗೆ ಮತ್ತು ಐಡಿಯಾಲಾಜಿಗಳ ನೆರಳಲ್ಲಿ ಕೂರದೆ, ಇಲ್ಲಿಯ ಕತೆಗಾರ ತನ್ನ ಸುತ್ತಮುತ್ತಲ ಕಂಡ, ಅನುಭವಿಸಿದ ಬದುಕನ್ನು ತನಗೆ ದಕ್ಕಿದಷ್ಟನ್ನು ಹಿಡಿದಿಡುವ ಪ್ರಯತ್ನವನ್ನು ಮಾಡಿರುವುದು ಈ ಸಂಕಲನದ ವೈಶಿಷ್ಟ್ಯ. ಮನುಷ್ಯರ ಸಣ್ಣತನ, ಅವರ ಬವಣೆ, ಯಾತನೆಗಳು ಇಲ್ಲಿ ಮುಖ್ಯ ಕಥಾವಸ್ತುಗಳಾಗಿ ಬಂದಿವೆ. ಪ್ರತಿ ಕತೆಯಲ್ಲೂ ಸಹ ಆರ್ಡಿನರಿ ಎನ್ನಬಹುದಾದ ಘಟನೆಗಳು, ಅನುಭವಗಳು ಕತೆಗಾರನ ಸೃಜನಶೀಲತೆಯಲ್ಲಿ ಹೊಳೆವ ಹೂವುಗಳಂತೆ ನಳನಳಿಸುತ್ತವೆ. ಅದಮ್ಯ ಬದುಕನ್ನು ಮೆಚುರ್ಡ್ ಆದಂತಹ ಭಾಷೆಯಲ್ಲಿ ಹಿಡಿದಿಡುವ ಸಂದರ್ಭದಲ್ಲಿ, ಇಲ್ಲಿಯ ಕತೆಗಾರನಿಗೆ ‘ಈರ್ಕಾಟ’, ‘ಸಣ್ಣಾಲಿ’, ‘ಚಂದ್ರಪ್ಪ’, ‘ರಾಮಾಂಜಿ’, ‘ವೆಂಕಟಗಿರಿ’, ‘ಹೌಳಿಚಿಕ್ಕ’, ‘ನವೀನ’, ‘ಪುಡ್ಕಯ್ಯ’, ‘ಬಿಲ್ಲೂರ’, ‘ಸಣ್ಣಾಲಜ್ಜಿ’, ‘ವಿಶ್ವನಾಥ’, ‘ಗ್ಯಾರಜ್ಜ’, ‘ಕಣಿವೆ ಕಲ್ಲಪ್ಪ’, ‘ಬುಡೇನ್ ಸಾಬ್ರು’, ‘ಧರ್ಮಪ್ಪ’, ‘ಅಲ್ಕೂರಯ್ಯ’, ‘ಹೂಟ್ಗಪ್ಪ’ ನಂತಹ ಪಾತ್ರಗಳು ಸಿಗುತ್ತವೆ. + +‘ಕರ್ಪಾಲು’ ಕತೆಯ ಪ್ರಾರಂಭದ ಕೆಲವೇ ಕೆಲವು ಸಾಲುಗಳಲ್ಲಿ- ‘ತಲೆಣಿಸಿದರೆ ಮುವ್ವತ್ತು ಮನೆಗಳನ್ನು ಮೀರದ ಕಾಡ್ನಳ್ಳಿಯ ಕೊನೆಕಾರ ಈರ್ಕಾಟನ ಕಪ್ಪೆಂಚಿನ ವಪ್ಪಾರು ಮನೆಯ ಮುಂದೆ ಇದ್ದಕ್ಕಿದ್ದಂತೆ ಎದ್ದ ದೊಡ್ಡ ಸದ್ದಿಗೆ ಇನ್ನೂ ನಿದ್ದೆಯ ಮಂಪರಿನಲ್ಲೇ ಮುರುಟಿಕೊಂಡಿದ್ದ ಮಂದಿ ಮೈಕೊಡವಿಕೊಂಡು ಈರ್ಕಾಟನ ಮನೆಯಂಗಳಕ್ಕೆ ದೌಡಾಯಸಿದಾಗ ಮೂಡಲ ದಿಕ್ಕಿನ ದಿಬ್ಬದಲ್ಲಿ ಕುಳಿತಿದ್ದ ಗಾಮದೇವತೆ ಕರಿಯವ್ವನ ಗುಡಿಯ ಕಳಸದ ಮೇಲಿಂದ ಸೂರ್ಯ ಊರ ದಿಟ್ಟಿಸುತ್ತಿದ್ದ’ – ಊರಿನ ಚಿತ್ರಣವನ್ನು ಮತ್ತು ಸೂರ್ಯೋದಯದ ಚಿತ್ರಣವನ್ನು ತುಂಬಾ ಸುಂದರವಾಗಿ ಕಟ್ಟಿಕೊಡಲಾಗಿದೆ. ಈ ನಿರೂಪಣೆಯಲ್ಲಿ ಬರುವ ಪ್ರತಿ ಪದಗಳು ಕೀಟ್ಸ್ ನ ಕಾವ್ಯದಲ್ಲಿ ಕಾಣುವಂತೆ ಅಳೆದು ತೂಗಿ ಇಟ್ಟಂತೆ ಕಾಣುತ್ತವೆ. ಯಾವುದೇ ಒಂದನ್ನು ಹೊರ ತೆಗೆದರೂ ಅದು ಕೊಡುವ ಅರ್ಥಕ್ಕೆ ಮುಕ್ಕಾಗುವಂತೆ ಇದೆ. ಎಷ್ಟು ಬೇಕೋ ಅಷ್ಟನ್ನು ಒಳಗೊಂಡು ಕತೆಗೆ ವಿವರಣೆಯೂ ಸಾಥ್ ಕೊಟ್ಟಿರುವುದು ಮೋಹಕವಾಗಿದೆ. ಇಂಥಹ ಸುಮಾರು ಉದಾಹರಣೆಗಳನ್ನು ಸಂಕಲನದ ಬಹುಪಾಲು ಕತೆಗಳಲ್ಲಿ ಕಾಣಬಹುದು. + +ಕುಸುಮಬಾಲೆಯಲ್ಲಿ ದಾರಂದವನ್ನು ತೆಗೆದಾಗ ಹೊರಗಿನ ಕತ್ತಲು ಒಳ ನುಗ್ಗಿಬಂದಂತೆ ಎಂಬಂತಹ ಸಾಲುಗಳು ಇದನ್ನು ಓದುವಾಗ ನೆನಪಾಗುತ್ತವೆ. ಈರ್ಕಾಟನಿಗೆ ಕರ್ಪಾಲಿಗೆಂದು ಕೊಟ್ಟ ಹಸುವನ್ನು ಅದು ಗಬ್ಬಾಗುತ್ತಿದ್ದಂತೆ ವಾಪಸ್ಸು ತೆಗೆದುಕೊಂಡು ಹೋಗುವ ಚಂದ್ರಪ್ಪನ ಗೋಸುಂಬೆತನವನ್ನು ತುಂಬಾ ಮಾರ್ಮಿಕವಾಗಿ ಚಿತ್ರಿಸಲಾಗಿದೆ. ‘ಮನೇಲಿ ಮಕ್ಳು ಮರಿ ಇದಾವೆ, ಒಂಚೂರು ಕರೇವು ಅಂತಾದ್ರೆ ಅವ್ಕೂ ಅನ್ಕೂಲ ಆಗುತ್ತೆ’ ಎಂದು ದೊಡ್ಡ ಮಾತುಗಳನ್ನು ಹೇಳಿ ಈರ್ಕಾಟನಿಗೆ ಚಂದ್ರಪ್ಪ ತನ್ನ ಹಸುವನ್ನು ಕೊಟ್ಟು, ಅದು ಗಬ್ಬಾಗುತ್ತಿದ್ದಹಾಗೆ ವಾಪಾಸ್ಸು ಹೊಡಕೊಂಡು ಹೋಗುವನು. ನಂತರ ಅದನ್ನು ಮಾರಾಟ ಮಾಡಲು ತಯಾರಿ ನಡೆಸುವನು. ಇದೇ ಹೊತ್ತಿನಲ್ಲಿ ಒಂದು ಕಡೆ ಚಂದ್ರಪ್ಪನಂತಹ ಮನುಷ್ಯನಲ್ಲಿ ಪೊಳ್ಳುತನವನ್ನು ತೋರಿಸುತ್ತ ನಿಜವಾದ ಮನುಷ್ಯ ಸಂಬಂಧವೆಂದರೆ ಏನು ಎಂದು ನಮ್ಮೊಳಗೆ ಪ್ರಶ್ನೆಗಳನ್ನು ಉಂಟುಮಾಡಿದರೆ, ಮೂಕ ಪ್ರಾಣಿ ಹಸುವಿನ ಮೂಲಕ ಸಂಬಂಧದ ಮೌಲ್ಯವನ್ನು ತೋರಿಸಲಾಗಿದೆ. ಈ ಕತೆಯಲ್ಲಿ ಬರುವ ಚಂದ್ರಪ್ಪನ ನೀಚತನವನ್ನು ತೋರಿಸುವುದರ ಮೂಲಕ ಕತೆಗಾರರು ನಿಜದ ಸ್ನೇಹ ಯಾವುದು ಮತ್ತು ತೋರಿಕೆಯ ಸ್ನೇಹ ಯಾವುದು ಎಂಬುದನ್ನು ಹೇಳಲು ಪ್ರಯತ್ನಿಸಿದ್ದಾರೆ. + +ಸಣ್ಣದಾಗಿನಿಂದ ಸಾಕಿದ್ದ ಹಸು-ಅದಕ್ಕೆ ಈರ್ಕಾಟನ ಮಕ್ಕಳು ಗೌರಿಯೆಂದು ಹೆಸರಿಟ್ಟಿರುತ್ತಾರೆ-ತನ್ನ ವಾರಸುದಾರ ಚಂದ್ರಪ್ಪ ಬಂದು ಹೊಡೆದುಕೊಂಡು ಹೋದರೂ ಕೊನೆಗೆ ಅದು ತನ್ನನ್ನು ಸಾಕಿ, ಬೆಳೆಸಿ, ಪ್ರೀತಿ ಕಾಳಜಿಗಳನ್ನು ತೋರಿಸಿದ್ದ ಈರ್ಕಾಟನ ಮನೆಗೆ ವಾಪಸ್ಸು ಬರುವ ದೃಶ್ಯ ಕನ್ನಡ ಕಥಾ ಸಾಹಿತ್ಯದಲ್ಲಿ ವ್ಯಕ್ತಗೊಂಡಿರುವ ಅಪರೂಪದ ಹೃದಯಮೀಟುವ ದೃಶ್ಯಗಳಲ್ಲಿ ಒಂದು ಎಂದೇ ಹೇಳಬಹುದು. ಕರ್ಪಾಲಿಗೆಂದು ಕೊಟ್ಟ ಹಸುವಿನ ಮೂಲಕ ಮನುಷ್ಯತ್ವದ ನಿಜದರ್ಶನವನ್ನು ಕತೆಗಾರ ಮಾಡುತ್ತಾರೆ. ಈರ್ಕಾಟ ದನದ ಸಂತೆಯಲ್ಲಿ ಮತ್ತೊಂದು ಹಸುವನ್ನು ಕೊಂಡುತರಲು ಹೊರಟು ನಸುಕಿನಲ್ಲಿ ಹೊರಟಾಗ ಅವನ ಮನೆಯ ಹಿತ್ತಲಿನಲ್ಲಿ anti climax ಎನ್ನುವ ರೀತಿಯಲ್ಲಿ ಈರ್ಕಾಟ ಸಾಕು ಸಲುಹಿದ್ದ ಕರ್ಪಾಲಿನ ಹಸು ಗೌರಿ ಕಾಣಿಸಿಕೊಳ್ಳುತ್ತದೆ. ಇದನ್ನು ಓದುವಾಗ ಮಜೀದ್ ಮಜೀದಿ ಅವರ ಸಿನೆಮಾ ‘ಫಾದರ್’ ನ ಕಥಾನಾಯಕ ಹದಿನಾಲ್ಕು ವರ್ಷದ ಯುವಕ ಮಹ್ರೆಲ್ಲೋ ಮಲತಂದೆಯನ್ನು ತಂದೆಯೆಂದು ಒಪ್ಪಿಕೊಳ್ಳುವ ಮನಕಲಕುವ ದೃಶ್ಯ ನೆನಪಾಯಿತು. ಅಂದರೆ ಒಪ್ಪಿಕೊಳ್ಳಲೇಬೇಕಾದಂತಹ ಪರಿಸ್ಥಿತಿ ಅವನಿಗೆ ಬರುತ್ತದೆ. + + + +ಈ ‘ಪಿತೃವಾತ್ಯಲ್ಯ’ ಎನ್ನುವುದು ಕೇವಲ ಹುಟ್ಟಿಸಿದ ತಂದೆಯಿಂದಲೇ ದಕ್ಕಬೇಕಾಗಿಲ್ಲ, ಅದನ್ನು ಕೊಡುವವರಿಂದಲೂ ಪಡೆಯಬಹುದು ಎನ್ನುವ ಅರ್ಥದಲ್ಲಿ ಈ ದೃಶ್ಯವಿದೆ. ಚಂದ್ರಪ್ಪನ ಮನೆಯನ್ನು ಬಿಟ್ಟು ಈರ್ಕಾಟನ ಮನೆಯನ್ನು ಹರಸಿ ಮತ್ತೆ ವಾಪಾಸ್ಸು ಬರುವ ಹಸುವಿನ ಮೂಲಕ ಸಂಬಂಧದ ಮೌಲ್ಯವನ್ನು ಎತ್ತಿಹಿಡಿಯಲಾಗಿದೆ. ಚಂದ್ರಪ್ಪನಿಗೆ ಅದೊಂದು ಕೇವಲ ಸರಕು. ಅದನ್ನು, ಈಗಾಗಲೇ ಗಬ್ಬಾಗಿರುವುದರಿಂದ ದುಪ್ಪಟ್ಟು ಬೆಲೆಗೆ ಮಾರುವ ಹುನ್ನಾರ ಮಾಡುತ್ತಾನೆ. ಆದರೆ ಅದೇ ಹಸು ಈರ್ಕಾಟನಿಗೆ ವಾತ್ಯಲ್ಯದ, ಪ್ರೀತಿಯ ದ್ಯೋತಕ. ಅದೊಂದು ಕುಟುಂಬದ ಭಾಗವೇ ಆಗಿಬಿಟ್ಟಿದೆ. ಅದನ್ನು ಚಂದ್ರಪ್ಪ ಹೊಡೆದುಕೊಂಡು ಹೋದ ಮೇಲೆ ಈರ್ಕಾಟನ ಮನೆಯಲ್ಲಿ ಆವರಿಸುವ ದುಗುಡ, ಮೌನ ಅದರ ಜೊತೆಗೆ ಈರ್ಕಾಟನ ಕುಟುಂಬ ಹೊಂದಿದ್ದ attachment ಅನ್ನು ತೋರಿಸುತ್ತದೆ. + +‘ಪದುಮದೊಳಗೆ ಬಿಂದು ಸಿಲುಕಿ’ ಕತೆಯಲ್ಲಿ ದುಃಖ ಮತ್ತು ಸಂಭ್ರಮ ಮನುಷ್ಯ ಅನುಭವಿಸುವ ಎರಡು ಮುಖ್ಯ ಅನುಭವಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ಅಲೆಮಾರಿ ಸಮುದಾಯಕ್ಕೆ ಸೇರಿದ ರಾಮಾಂಜಿಯನ್ನು ಅವನ ತಾಯಿ ಶಿಕ್ಷಣವೊಂದೇ ಬದುಕಿನ ಸಂಕಷ್ಟಗಳಿಂದ ಪಾರಾಗುವ ದಾರಿ ಎಂದು ತುಂಬಾ ಕಷ್ಟಪಟ್ಟು ಸ್ಕೂಲಿನ ಕಾವಲು ಕಾಯುವ ಜವಾನ ವೆಂಕಟಗಿರಿಯ ಸಹಾಯದಿಂದ ಸ್ಕೂಲಿಗೆ ಸೇರಿಸುತ್ತಾಳೆ. ಕತೆಯು ತನ್ನ ವಸ್ತುವಿನಿಂದಾಗಿ ಗಮನಸೆಳೆಯುತ್ತದೆ. ರಾಮಾಂಜಿಯೆನ್ನುವ ಅಲೆಮಾರಿ ಹುಡುಗನ ಮೂಲಕ ಶಿಕ್ಷಣ ಎನ್ನುವುದು ವಿಮೋಚನೆಯ ದಾರಿ ಎನ್ನುವುದನ್ನು ತುಂಬಾ ಮನೋಜ್ಞವಾಗಿ ಚಿತ್ರಿಸಲಾಗಿದೆ. ಮಕ್ಕಳಿಲ್ಲದ ವೆಂಕಟಗಿರಿ ಮತ್ತವನ ಹೆಂಡತಿ ರಾಮಾಂಜಿಯಲ್ಲಿ ಮಕ್ಕಳಿಲ್ಲದ ನೋವು, ಯಾತನೆಗಳನ್ನು ಮರೆಯುತ್ತಾರೆ. ರಾಮಾಂಜಿಯ ತಬ್ಬಲಿತನ ಕತೆಯ ಜೀವಾಳ. ಇವನು ಆಲಿವರ್ ಟ್ವಿಸ್ಟ್ ಥರ. ಇದಕ್ಕೆ ಕತೆಯ ಕೊನೆಯ ಸಾಲುಗಳನ್ನು ನೆನೆಪಿಸಿಕೊಳ್ಳಬಹದು: ‘ಅವ್ವ ನಾನು ಓದಲೂ ಬೇಕು, ನಂಗೆ ನೀನೂ ಬೇಕು.’ + +‘ದೇವರ ಕುದುರೆ’ ಇಲ್ಲಿನ ಎಲ್ಲ ಕತೆಗಳಂತೆ ವಾಸ್ತವವಾದಿ ನಿರೂಪಣಾ ಕತೆಯಾದರೂ ಅದಕ್ಕೆ ಒಂದು ಸ್ವಲ್ಪ ಮ್ಯಾಜಿಕಲ್ ರಿಯಲಿಸಮ್ಮಿನ ಸ್ಪರ್ಶ ಸಿಕ್ಕಿದೆ. ಕತೆಯ ಮುಖ್ಯಪಾತ್ರಗಳಲ್ಲಿ ಒಂದಾದ ನವೀನನಿಗೆ ಕುದುರೆಗಳ ಮೇಲೆ ವಿಚಿತ್ರವಾದಂತಹ ವ್ಯಾಮೋಹ. ಕನಸಲ್ಲೂ ಕುದುರೆಗಳನ್ನು ಕಾಣವನು. ಕುದುರೆ ಸಾಕುವ ಇಂಗಿತವನ್ನು ತನ್ನ ಅಪ್ಪ ಪುಡ್ಕಯ್ಯನಿಗೆ ಹೇಳಿ ಬೈಯಿಸಿಕೊಳ್ಳುತ್ತಾನೆ. ಮಗನ ಕುದುರೆಯ ಹುಚ್ಚನ್ನು ಕಂಡು ಪುಡ್ಕಯ್ಯ ದಿಗಿಲುಗೊಳ್ಳುವನು. ಇದೇ ಸಂದರ್ಭದಲ್ಲಿ ಅದೇ ಊರಿನ ಕಾಬುಳ್ಳ ಮತ್ತವನ ಹೆಂಡತಿಗೆ ಸಂತಾನ ಪ್ರಾಪ್ತಿಯಾಗದೆ, ಒಬ್ಬ ಸ್ವಾಮೀಜಿಯನ್ನು ಭೇಟಿ ಮಾಡುವರು. ಅದಕ್ಕೆ ಸ್ವಾಮೀಜಿ ಅಶ್ವದೋಷದ ಪರಿಣಾಮದಿಂದ ಅವರಿಗೆ ಮಕ್ಕಳಾಗಿಲ್ಲ, ಅದಕ್ಕೆ ಒಂದು ಕುದುರೆಯನ್ನು ದೇವರಿಗೆ ಬಿಡಬೇಕೆಂದು, ಅದು ಕಾಮ ಸ್ವರೂಪಿಯಾದ್ದರಿಂದ ಹಾಗೆ ಬಿಡುವಾಗ ತಟವಟ ಚಟ್ಟುಮುಟ್ಟು ಆಗಕೂಡದೆಂದೂ, ಮತ್ತೂ, ಇಷ್ಟಾರ್ಥ ಪ್ರಾಪ್ತಿಯಾಗುವವರೆಗೂ ಕುದುರೆಯನ್ನು ಸವಾರಿಮಾಡದಂತೆ ಕಣ್ಣಿಟ್ಟಿರಬೇಕೆಂದು ಹೇಳುವರು. ಆದರೆ ಇದಕ್ಕೆ ತದ್ವಿರುದ್ದ ಎನ್ನುವ ರೀತಿಯಲ್ಲಿ ಕತೆಯ ಕೊನೆಯಲ್ಲಿ ಈ ಕುದುರೆಯನ್ನು ನವೀನ ಸವಾರಿಮಾಡಿಕೊಂಡು ಹೋಗುತ್ತಾನೆ. + +ನವೀನನಿಗೆ ಇದರ ಹಿನ್ನಲೆ ಯಾವುದೂ ಗೊತ್ತಿರುವುದಿಲ್ಲ, ಬದಲಿಗೆ, ತನ್ನ ಕುದುರೆಯ ಮೇಲಿನ ವ್ಯಾಮೋಹದಿಂದಾಗಿ ಅದರ ಮೇಲೆ ಸವಾರಿ ಮಾಡುತ್ತಾನೆ. ಇದನ್ನು ಯಾರೂ ಸವಾರಿಮಾಡದಿದ್ದಲ್ಲಿ ಅವರಿಗೆ ಸಂತಾನ ಪ್ರಾಪ್ತವಾಗುತ್ತಿತ್ತು ಎನ್ನುವುದಕ್ಕಿಂತ, ಕತೆಗಾರ ಈ ವೈರುಧ್ಯವನ್ನು ವ್ಯಂಗ್ಯದಲ್ಲಿ ಹೇಳಿರುವುದು ಕತೆಯಲ್ಲಿ ತುಂಬಾ ಇಂಟರೆಸ್ಟಿಂಗ್ ಆಗಿ ಮೂಡಿ ಬಂದಿದೆ. ಕತೆಯಲ್ಲಿ ಬರುವ ಘಟನೆಗಳ ಮೂಲಕ ಕತೆಗಾರ ಕೆಲವು ಮಿಂಚಿನಂತಹ ಜೀವನ ದರ್ಶನಗಳನ್ನು ಮಾಡುತ್ತಾರೆ. ಕತೆಗಿಂತಲೂ ಮಿಗಿಲಾಗಿ ಘಟನೆಗಳು ಮತ್ತು ಅವುಗಳನ್ನು ಸುತ್ತುವರೆದಿರುವ ವಿವರಣೆಗಳು ಹೆಚ್ಚು ಅರ್ಥಪೂರ್ಣವಾಗಿವೆ. + +‘ಕೋರು’ ಕತೆಯು ಕತೆ ಮತ್ತು ನಿರೂಪಣೆ, ಭಾಷೆ ಹಾಗೂ ಲೋಕದೃಷ್ಟಿಗಳ ನೆಲೆಯಲ್ಲಿ ಕತೆಗಾರನಿಗೆ ಸಿಕ್ಕಿರುವ ಒಂದು ಮಾದರಿ ಕತೆಯೆಂದೇ ಹೇಳಬಹದು. ಗೇಣಿಯ ಆಧಾರದ ಮೇಲೆ ಸಣ್ಣಾಲಜ್ಜಿಯ ಹೊಲವನ್ನು ಉಳುಮೆ ಮಾಡುತ್ತಿದ್ದ ಬಿಲ್ಲೂರ ಕೊನೆಗೆ ಅದನ್ನು ಅವಳಿಗೆ ಕೊಡದೆ ಉಲ್ಟಾ ಹೊಡಿಯುತ್ತಾನೆ. ಆದರೆ ಸಣ್ಣಾಲಜ್ಜಿ ಕೋರ್ಟ್ ಮೂಲಕ ಮತ್ತೆ ಅದನ್ನು ವಾಪಸ್ಸು ಪಡೆಯುತ್ತಾಳೆ. ಇದು ಕತೆಯ ಬಿತ್ತಿ. ಆದರೆ ನಿರೂಪಣೆ ಮತ್ತು ವಿವರಗಳು ಇದನ್ನೊಂದು ಕನ್ನಡದ ಶ್ರೇಷ್ಠ ಕತೆಗಳ ಸಾಲಿಗೆ ಸೇರಿಸುತ್ತದೆ. + +‘ಬೇರಿಲ್ಲದ ಗಿಡ’ ಕತೆಯ ಶೀರ್ಷಿಕೆಯೇ ಸೂಚಿಸುವಂತೆ ಸೂಚ್ಯಾರ್ಥವಾಗಿದೆ. ತಂದೆ-ತಾಯಿರನ್ನು ಕಳೆದುಕೊಂಡ ಒಬ್ಬ ಕಪಿನಿ ಎನ್ನುವ ತಬ್ಬಲಿ ಹುಡಗನ ಕತೆ. ಓದಬೇಕು ಎನ್ನವ ಅಚಲವಾದ ಕನಸನ್ನು ಇಟ್ಟುಕೊಂಡಿರುವಂತಹ ಹುಡುಗ. ಅಪ್ಪ ಅಮ್ಮ ಸತ್ತ ಬಳಿಕ ತನ್ನ ಅಜ್ಜಿಯ ಮನೆಗೆ ಬಂದು ಸೋದರ ಮಾವನ ಮನೆಯಲ್ಲಿ ಉಳಿಯುತ್ತಾನೆ. ತನ್ನ ಮಾಮನಿಗೆ ತನ್ನ ಓದುವ ಬಯಕೆಯನ್ನು ವ್ಯಕ್ತಪಡಿಸುತ್ತಾನೆ. ಆದರೆ ಅದಕ್ಕೆ ಪ್ರೋತ್ಸಾಹ ಕೊಡುವುದಿಲ್ಲ ಅವನು. ಕೊನೆಗೆ ಮನೆಯನ್ನು ಬಿಟ್ಟು ಹೋಗುತ್ತಾನೆ. ಅದರ ಚಿತ್ರಣ ಹೀಗಿದೆ: ‘ರೂಮಿನ ಬಾಗಲು ಅರೆ ತೆರೆದಿತ್ತು. ಲೈಟು ಉರಿಯುತ್ತಿತ್ತು. ಗೋಡೆಯ ಗೂಟದಲ್ಲಿ ಕೊಟ್ಟಗೆಯ ಬಾಗಿಲ ಬೀಗದ ಕೀ ನೇತಾಡುತ್ತಿತ್ತು. ಮೂಲೆಯಲ್ಲಿದ್ದ ಕಪಿನಿಯ ಟ್ರಂಕು ನಾಪತ್ತೆಯಾಗಿತ್ತು’. ಈ ಕತೆಯ ವಸ್ತು ಈಗಾಗಲೇ ಅನೇಕ ಕತೆಗಳಲ್ಲಿ ವ್ಯಕ್ತಗೊಂಡಿದ್ದು ಮತ್ತು ಕತೆಯ ನಿರೂಪಣೆ ನಿರೀಕ್ಷಿತ ಜಾಡಿನಲ್ಲಿ ಸಾಗುವುದರಿಂದ ಹಾಗೂ ತುಸು ಮೆಲೋ ಡ್ರಮೆಟಿಕ್ ಎನ್ನ ಬಹುದಾದ ಧಾಟಿಯಲ್ಲಿ ಇರುವುದರಿಂದ ಅವರ ಈ ಸಂಕಲನದಲ್ಲಿಯೇ ಇರುವ ಇತರೆ ಉತ್ಕೃಷ್ಟ ಕತೆಗಳ ಸಾಲಿಗೆ ಸೇರುವುದಿಲ್ಲ. + +‘ಮುರ್ಕಲಸಿನ ಮರ’ ಕತೆಯು ಚಿಕ್ಕದಾದರೂ ಅದು ಹೊಮ್ಮಿಸುವ ಅರ್ಥಸಾಧ್ಯತೆಗಳಿಂದಾಗಿ ಗಮನ ಸೆಳೆಯುವಂತಹ ಕತೆಯಾಗಿದೆ. ಈ ಕತೆಗೆ ವ್ಯಂಗ್ಯವೇ ಜೀವಾಳವಾಗಿದೆ. ಒಂದು ಸಣ್ಣ ಘಟನೆ ಕಥನದ ಮಾಂತ್ರಿಕತೆಯ ಸ್ಪರ್ಶದಲ್ಲಿ ಕತೆಯಾಗಿರುವುದು ಇದರ ವಿಶೇಷ. ಮುರ್ಕಲಸಿನ ಮರವನ್ನು ಧರ್ಮಪ್ಪ ತನ್ನ ಅಪ್ಪ ಬಾಳಪ್ಪನ ಅರಿವಿಗೆ ಬರದೆ ಬುಡೇನ್ ಸಾಬ್ರಿಗೆ ಮಾರಿರುತ್ತಾನೆ. ನಂತರ ಈ ವಿಷಯ ಬಾಳಪ್ಪನಿಗೆ ಗೊತ್ತಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಾನೆ. ಆದರೆ ಬುಡೇನ್ ಸಾಬರು ಅದನ್ನು ಕಡೆದು ಉರುಳಿಸಲು ಅದರ ಬಳಿ ಹೋದಾಗ ಅದರ ಬುಡದಲ್ಲಿ ಇದ್ದ ಅಸ್ಪಷ್ಟ ದೇವರ ವಿಗ್ರಹ ಮತ್ತ ಅದಕ್ಕೆ ಹಚ್ಚಿದ್ದ ಅರಿಷಿಣ, ಕುಂಕುಮವನ್ನು, ಮುಡಿಸಿದ್ದ ಹೂವುಗಳನ್ನು ನೋಡಿ, ಕಡಿಯದೆ ಧರ್ಮಪ್ಪನ ಬಳಿಹೋಗಿ ತನಗೆ ಮೋಸಮಾಡಿರುವುದಾಗಿ ಬೈಯುತ್ತಾನೆ. ಒಂದು ಪುಟ್ಟ ಘಟನೆಯಲ್ಲಿ ಧರ್ಮ ಇಣುಕಿನೋಡಿ , ಘಟನೆಯನ್ನು ಸಂಕೀರ್ಣಮಾಡುವುದನ್ನು ತುಂಬಾ ಮಾರ್ಮಿಕವಾಗಿ ಕತೆಗಾರರು ಚಿತ್ರಿಸಿದ್ದಾರೆ. ಆದರೆ ಕೊನೆಯ ಎರಡು ಸಾಲುಗಳು ಕತೆಯ ಒಳಗಡೆ ನಿರೂಪಕ ನೇರವಾಗಿ ಪ್ರವೇಶಮಾಡಿ ಕತೆಗೆ ಒಂದು ಅಭಿಪ್ರಾಯವನ್ನು ಕೊಡುವುದು-‘ನಿನ್ನೆ ಸಂಜೆ ಅಪ್ಪನ ತರಾತುರಿಯ ಹಿಂದಿನ ಮರ್ಮದ ಅರವಾಗುತ್ತಲೇ ಧರ್ಮಪ್ಪ ಬಿಳುಚಿಕೊಂಡ’- ಕತೆಯು ಪಡೆಯಬಹುದಾಗಿದ್ದ ಅರ್ಥಸಾಧ್ಯತೆಗಳನ್ನು ಮುರಿಟಿದಂತಾಗಿದೆ. + +‘ಜೇನು ಬೇಲಿ’ ಕತೆಯು ಒಬ್ಬ ಮನುಷ್ಯನ ಸಾಧನೆಯ ವರದಿಯನ್ನು ಮಾಡಿದಂತಿದೆ. ಓದುತ್ತ ಇದು ತೇಜಸ್ವಿಯ ಕತೆಗಳನ್ನು ನೆನಪಿಸಿದರೂ, ಅವರ ಕತೆಗಳಲ್ಲಿನ ನಿಗೂಢತೆ, ಸಂಕೀರ್ಣತೆಗಳು ಇದಕ್ಕೆ ದಕ್ಕದೆ, ಕೇವಲ ಒಂದು ನಿರೂಪಣೆಯಾಗಿ ತೋರುತ್ತದೆ. ಕಥನವಾಗಿ ಅಷ್ಟೊಂದು ಯಶಸ್ಸು ಗಳಿಸುವುದಿಲ್ಲವೆನ್ನಬಹುದು. ಆದಾಗ್ಯೂ ಇಲ್ಲಿ ಬಳಕೆಯಾಗಿರುವ ಸಂಯಮದ ಭಾಷೆ ಓದುಗರನ್ನು ತನ್ನ ಸಮ್ಮೋಹನ ತೆಕ್ಕೆಗೆ ಎಳೆದುಕೊಳ್ಳುತ್ತದೆ. ವಿಶ್ವನಾಥನೆಂಬ ವಿದ್ಯಾವಂತ ಯುವಕ ಹಳ್ಳಿಯನ್ನು ತೊರೆಯದೇ ಅಲ್ಲಿಯೇ ಒಂದು ಸುಂದರವಾದ ಮತ್ತು ತುಸು ಭಿನ್ನವಾದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುತ್ತಾನೆ. ತನ್ನ ಹೊಲದ ಸುತ್ತ ತಂತಿ ಬೇಲಿಯನ್ನು ತೆಗೆಸಿ, ಸುತ್ತೂರ ವಿವಿಧ ರೀತಿಯ ಹೂಗಿಡ, ಮರಗಳನ್ನು ನೆಟ್ಟು ಅಲ್ಲಿ ಸ್ವಾಭಾವಿಕ ಜೇನು ಕೃಷಿಯನ್ನು ಮಾಡಲು ಮುಂದಾಗುವುದೇ ಕತೆಯ ಮುಖ್ಯ ಅಂಶ. ಕತೆಯ ಆಶಯ ಮೆಚ್ಚವಂತಹದ್ದಾದರೂ ಕತೆಯಾಗಿ ಸಂಕೀರ್ಣತೆಯನ್ನು ಪಡೆದುಕೊಳ್ಳುವಲ್ಲಿ ಸ್ವಲ್ಪ ಮಂಕಾಗುತ್ತದೆ. + +ಗುಡ್ಡದ ಕೂಸು ಕತೆಯಲ್ಲೂ ಸಹ ಕತೆಗಾರ ರಾಜಕೀಯವಾಗಬಹುದಾಗಿದ್ದ ಕತೆಯನ್ನು ತುಂಬಾ ಸೂಕ್ಷ್ಮವಾಗಿ ಕೇವಲ ಅದನ್ನು ಧ್ವನಿಸುವಂತೆ ಮಾಡಿರುವುದು ಕತೆಯ ಒಂದು ಹೆಗ್ಗಳಿಕೆ. ಆಧುನಿಕತೆ ಹೆಸರಿನಲ್ಲಿ ಪ್ರಕೃತಿಯ ಮೇಲೆ ನಡೆಯುತ್ತಿರುವ ಆಕ್ರಮಣಗಳು ಮನುಷ್ಯನ ನಾಶದ ಆರಂಭ. ಕತೆಯ ಆಶಯವು ಪ್ರಾರಂಭದ ಪ್ಯಾರಾದಲ್ಲಿ ಚಿತ್ರಿತವಾಗಿದೆ. ಗುಡ್ಡದ ಮಲ್ಲೆದೇವರಿಗೆ ಪೂಜೆ ಮಾಡಿಕೊಂಡು ಪ್ರಕೃತಿಯ ಜೊತೆ ಸಾಮರಸ್ಯದ ಜೀವನವನ್ನು ನಡೆಸುತ್ತಿರುವ ಹೊತ್ತಲ್ಲಿ ಕಲ್ಲ ಗಣಿಗಾರಿಕೆಯು ಅವನ ಬದುಕಿನ ಪ್ರಶಾಂತತೆಯನ್ನೇ ಹಾಳು ಮಾಡುತ್ತದೆ. + +ವಸ್ತು ಮತ್ತು ನಿರೂಪಣೆಯ ದೃಷ್ಟಿಯಿಂದ ಅದು ಕಾರಣ ಕತೆಯು ಸಂಕಲನದಲ್ಲಿಯೇ ಭಿನ್ನವಾಗಿ ನಿಲ್ಲುತ್ತದೆ. ಒಂದೇ ತೆಕ್ಕೆಯಲ್ಲಿ ಜಾತಿ, ಧರ್ಮ, ಈರ್ಷೆ, ಒಳರಾಜಕೀಯ, ಹುನ್ನಾರಗಳನ್ನು ಇಟ್ಟುಕೊಂಡಿದೆ. ಮತ್ತು ಕತೆಯ ನಿರೂಪಣಾ ಶೈಲಿಯೂ ಸಹ ಎಲ್ಲಿಯೂ ತನ್ನ ಸ್ಥಿಮಿತತೆಯನ್ನು ಕಳೆದುಕೊಳ್ಳುವುದಿಲ್ಲ. ಕತೆಗಾರ ಇಲ್ಲಿ ನಿರುಮ್ಮಳವಾಗಿ ಕತೆಯನ್ನು ಹೇಳಿದ್ದಾರೆ. ಗಂಗಾಧರಯ್ಯ ಅವರ ಸೊಗಸಾದ ಗದ್ಯ ಇಲ್ಲಿ ತನ್ನ ಪರಕಾಷ್ಟೆಯನ್ನು ಮುಟ್ಟಿದೆ ಎಂದೇ ಹೇಳಬೇಕು. ಗದ್ಯಕ್ಕೆ ಕಾವ್ಯಾತ್ಮಕ ಗುಣವಿರುವ ಸಾಲುಗಳು ಕತೆಯ ಅಂದವನ್ನಷ್ಟೇ ಅಲ್ಲದೆ ಪಾತ್ರಗಳ ಮನೋಭೂಮಿಕೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತವೆ. ಉದಾಹರಣೆಗೆ ಸಂಜೆಯ ವರ್ಣನೆ: ‘ಸಂಜೆ ಗತ್ತಲು ತಳವೂರುತ್ತಿತ್ತು’ ಎನ್ನುವುದು ಮತ್ತು ‘ಮಂಡಿಯುದ್ದಕ್ಕೆ ಬೆಳೆದಿದ್ದ ಹೊಲದೊಳಗಿನ ರಾಗಿ ಪೈರು ತಿಂಗಳುಗಟ್ಟಲೆ ಮಳೆಯ ಮುಖವನ್ನು ಕಾಣದೆ ಬಾಡಿ ನಿಂತಿತ್ತು. ಭೋಗವಾಗಿ ಬಿರಿದಿದ್ದ ತೆನೆಗಳೆಲ್ಲಾ ಒಡೆಬತ್ಲಾಗಿ ಗೋಣು ಬಗ್ಗಿಸಿದ್ದವು’ ಎನ್ನುವ ಸಾಲುಗಳು. ಈಗಾಗಲೇ ನಡೆದು ಹೋಗಿರುವ ಘಟನೆಗಳನ್ನು ಹಿಮ್ಮುಖ ಚಲನೆಯಲ್ಲಿ ಕತೆಯ ಕಥಾನಾಯಕ ಚನ್ವೀರ ಮತ್ತು ಅವನ ಹೆಂಡತಿ ಟೀನಾ ನೆನಪಿಸಿಕೊಳ್ಳುವುದರ ಮೂಲಕ ಸಾಗುತ್ತದೆ. + +ಕತೆಯಲ್ಲಿ ಜರುಗುವ ಘಟನಾವಳಿಗಳು ಕ್ಷಣ ತೇಜಸ್ವಿಯ ‘ಚಿದಂಬರ ರಹಸ್ಯ’ವನ್ನು ನೆನಪಿಸುತ್ತವೆ. ಇವೆರಡರ ಕಥಾಭಿತ್ತಿ ಅಂತರ್ ಧರ್ಮೀಯ ವಿವಾಹವಾಗಿದ್ದರೂ ಅವುಗಳು ಪಡೆದಿರುವ ಆಯಾಮಗಳು ಬೇರೆಯದೇ ಆಗಿವೆ. ಚಿದಂಬರ ರಹಸ್ಯಕ್ಕೆ ಅನೇಕ ಜ್ಞಾನ ಶಾಖೆಗಳ ಅಧ್ಯಯನದ ಅವಶ್ಯಕತೆ ಇದ್ದಹಾಗೆ ಈ ಕತೆಗೆ ಇಲ್ಲದಿದ್ದರೂ, ಸಮಾಜಶಾಸ್ತ್ರೀಯ ನೆಲೆಯಲ್ಲಿಯೇ ಸಾಗುವ ಕತೆ ಚನ್ವೀರನ ಹಳ್ಳಿಯಲ್ಲಿ ಜರುಗುವ ಮತ್ತು ತನಗೆ ಸುತ್ತಿಕೊಂಡು ನಡೆಯುವ ಘಟನೆಗಳು ಮತ್ತು ಅನುಭವಗಳು ತುಂಬಾ ಸಾಂದ್ರವಾಗಿ ಮೂಡಿಬಂದಿವೆ. + +ಭಾರತದ ಸಂದರ್ಭದಲ್ಲಿ ಅಂತರ್ ಜಾತಿ ಮತ್ತು ಅಂತರ್ ಧರ್ಮೀಯ ವಿವಾಹವಾಗುವುದೆಂದರೆ ಅದೊಂದು ಕ್ರಾಂತಿಕಾರಕ ಹೆಜ್ಜೆಯೇ ಸರಿ. ಅಂತಹ ಒಂದು ಪ್ರಯತ್ನವನ್ನು ಇಲ್ಲಿಯ ಕಥಾನಾಯಕ ಚನ್ನ್ವೀರ ಮಾಡುತ್ತಾನೆ. ಮೊದಲಿಗೆ ತನ್ನ ತಾಯಿಯ ವಿರೋಧವನ್ನು ಎದುರಿಸಬೇಕಾದರೂ ಅದನ್ನು ಹೇಗೋ ನಿಭಾಯಿಸುತ್ತಾನೆ. ಆದರೆ ಮುಂದೆ ತನ್ನ ಹಳ್ಳಿಯ ಪಟ್ಟಭದ್ರಹಿತಾಸಕ್ತಿಗಳು ಮತ್ತು ಮತೀಯ ಭಾವನೆಯ ಮನಸ್ಸುಗಳು ಅವನನ್ನು ವಿನಾಕಾರಣ ಜಾತಿ ಮತ್ತು ಧರ್ಮದ ವಿಷಯಕ್ಕೆ ಎಳೆದು ತಂದು ಅವನು ಕಟ್ಟಿಕೊಂಡಿರುವ ಸುಂದರ ಬದುಕನ್ನು ನಾಶಮಾಡುವ ಹುನ್ನಾರ ಮತ್ತು ಮನುಷ್ಯನ ಒಳಗೆ ಅಡಗಿರುವ ಕೇಡನ್ನು ತುಂಬಾ ನಿರುಮ್ಮಳವಾಗಿ ಚಿತ್ರಿಸಲಾಗಿದೆ. ಕೊನೆಗೆ ಅವನು ಊರನ್ನೇ ಬಿಡುವ ಪ್ರಸಂಗ ಬರುತ್ತದೆ. ಪ್ರಾಣ ಉಳಿಸಿಕೊಳ್ಳುವ ಸಲುವಾಗಿ ಅವರು ಊರು ಬಿಟ್ಟು ಹೋಗುವ ಪ್ರಸಂಗ ಕತೆಯಲ್ಲಿ ಒಂದು ಧ್ವನಿಪೂರ್ಣವಾದ ಅರ್ಥವನ್ನು ಕೊಡುವುದರ ಮೂಲಕ ಮುಕ್ತಾಯವಾಗುತ್ತದೆ: ಚನ್ವೀರನ ಬೆನ್ನಲ್ಲಿ ಮುಖ ಹುದುಗಿಸಿದ ಟೀನಾ ಬಿಕ್ಕಿದಳು. ಅದು ಚನ್ವೀರನನ್ನೂ ಅಳುವಿನ ದಾರಿಗೆಳೆಯಿತು. ಅವರಿಬ್ಬರ ಅಳು ಆ ಕಾಡು ದಾರಿಯಲ್ಲಿ ಅನಾಥವಾಗಿ ಅಸುನೀಗುತ್ತಿತ್ತು. + +‘ಅಜ್ಜಿಯ ಕೋಲು’ ಕತೆಯು ವಾಸ್ತವವಾದಿ ನಿರೂಪಣೆಯಾದರೂ ಅದಕ್ಕೆ ಮಾಂತ್ರಿಕ ವಾಸ್ತವತೆ ಸೇರಿಕೊಂಡು ವಿಶಿಷ್ಟಕತೆಯಾಗಿ ಮೂಡಿಬಂದಿದೆ. ಅಜ್ಜಿಯ ಕೋಲು ಕಾಲವನ್ನು ಅರಿಯಲು, ನೆನಪುಗಳನ್ನು ಮೊಗೆಯಲು ಸಂಕೇತವಾಗಿದೆ. ಅಜ್ಜಿಯ ಕೋಲು ಮೊಮ್ಮಗಳಿಗೆ ಅನೂಹ್ಯ ಕುತೂಹಲ ಮತ್ತು ಕಾಲ್ಪನಿಕ ಜಗತ್ತಿಗೆ ಹಾರಿಹೋಗುವ ಸಾಧನವಾದರೆ, ಅವಳ ಪೋಷಕರಿಗೆ ಅದು ಅವಳ ಹುಚ್ಚುತನದ ಪರಮಾವಧಿಯಾಗಿ ತೋರುವುದು ವಿಪರ್ಯಾಸ. ಇದೆ ಥರದ ಇನ್ನೊಂದು ಕತೆ ‘ಚಿಕ್ಕನ ನವಿಲ ಮರಿಗಳು’. ಚಿತ್ತದ ಗೊತ್ತ ಮುಟ್ಟದೆ ಕತೆಯು ಅಲೌಕಿಕ ಬದುಕನ್ನು ಹಿಡಿಯುವ ಒಂದು ಪ್ರಯತ್ನಮಾಡುತ್ತದೆ. + + + +ಹೀಗೆ ಗಂಗಾಧರಯ್ಯ ತಮ್ಮ ಕತೆಗಳಲ್ಲಿ ಡಿಕೆನ್ಸ್ ಥರ ಪಾತ್ರಗಳನ್ನು ಮತ್ತು ಹಾರ್ಡಿ ಥರ ನಿಸರ್ಗ, ಬದುಕಿನ ಛಿದ್ರ ಮುಖಗಳನ್ನು, ಮನುಷ್ಯಲೋಕದ ಸಣ್ಣತನ, ತಲ್ಲಣಗಳನ್ನು ತಮ್ಮದೇ ಆದಂತಹ ಭಾಷೆಯನ್ನು ದಕ್ಕಿಸಿಕೊಂಡು ಚಿತ್ರಿಸಿ, ಕನ್ನಡದ ಕಥಾ ಸಾಹಿತ್ಯದಲ್ಲಿ ಒಂದು ಗಟ್ಟಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_344.txt b/Kenda Sampige/article_344.txt new file mode 100644 index 0000000000000000000000000000000000000000..b9f09286f95b992c00c1f2c3ae247595f6d271c2 --- /dev/null +++ b/Kenda Sampige/article_344.txt @@ -0,0 +1,31 @@ + + +Where is human nature so weak as in the bookstore? – Henry Ward Beecher + +ಯಾವುದೇ ಪುಸ್ತಕದ ಮಳಿಗೆಯೊಳಗೆ ಇಲ್ಲವೇ ಪುಸ್ತಕ ಸಂತೆಗೆ ನುಗ್ಗಿ, ಅಲ್ಲಿ ನಿಮಗೆ ಕಾಣ ಸಿಗುವ ಹೆಚ್ಚಿನವರು ಒಂದೇ ಸಂತತಿಯವರು.. ಅಲ್ಲಿರುವ ಪುಸ್ತಕಗಳೆಲ್ಲವೂ ತಮ್ಮದಾಗುವ ಹಾಗಿದ್ದರೆ ಎಂಬಂತಹ ಬಯಕೆ ಇವರದ್ದಾಗಿರುತ್ತದೆ. ಒಂದೇ ಪುಸ್ತಕವನ್ನು ಕೊಳ್ಳಲು ಹೋದವರು ನಾಲ್ಕು ಕೊಳ್ಳುತ್ತಾರೆ.. ಹೆಚ್ಚು ಕೊಳ್ಳಲಾಗಲಿಲ್ಲವಲ್ಲ ಎಂದು ಹಪಹಪಿಸುತ್ತ ವಾಪಸಾಗುತ್ತಾರೆ.. ಗೆಳೆಯರ ಹತ್ತಿರ ತಮ್ಮಲ್ಲಿಲ್ಲದ ಪುಸ್ತಕ ಕಂಡಿತೆಂದರೆ ಖಿನ್ನರಾಗುತ್ತಾರೆ. ಎರವಲು ಪಡೆದ ಪುಸ್ತಕಗಳನ್ನು ಮರಳಿಸಲು ಇವರಿಗೆ ಬಲು ಖೇದವಾಗುತ್ತದೆ. ಕೆಲವರಂತೂ ಅಮೂಲ್ಯ ಪುಸ್ತಕಗಳು ಕಂಡರೆ ಕದಿಯಲು ಸಹ ಹಿಂಜರಿಯರು. + +(ಟೀನಾ ಶಶಿಕಾಂತ್) + +ಲೈಬ್ರರಿಗಳಿಂದ ಪುಸ್ತಕ ಮಂಗಮಾಯ ಮಾಡುವುದರಲ್ಲಿ, ತಮಗೆ ಬೇಕಾದ ಪುಸ್ತಕಗಳು ತಮಗೆ ಮಾತ್ರ ತಿಳಿದಿರುವ ಜಾಗಗಳಲ್ಲಿ ಸಿಗುವಹಾಗೆ ಅದಲಾಬದಲಿ ಮಾಡುವದರಲ್ಲಿ ಇವರು ನಿಪುಣರು. ತಮ್ಮ ಮೆಚ್ಚಿನ ಪುಸ್ತಕ/ಲೇಖಕ/ಲೇಖಕಿಯ ಬಗ್ಗೆ ಇವರು ಗಂಟೆಗಟ್ಟಲೆ ಚರ್ಚಿಸಬಲ್ಲರು, ಸಮಯಬಂದರೆ ವಾಗ್ವಾದಕ್ಕೂ ತಯಾರಾಗುವರು! ಇವರ ಪ್ರಪಂಚದಲ್ಲಿ ಪುಸ್ತಕಗಳಿಗೆ ಸಾಟಿಯಾದುದು ಇನ್ನೇನೂ ಇಲ್ಲ. “ನನ್ನ ಹತ್ತಿರ ಸ್ವಲ್ಪ ಹಣವಿದ್ದಾಗ, ನಾನು ಪುಸ್ತಕಗಳನ್ನು ಕೊಂಡುಕೊಳ್ಳುತ್ತೇನೆ; ಆಮೇಲೆ ಏನಾದರೂ ಹಣ ಉಳಿಯಿತೆಂದರೆ ಆಹಾರ, ಬಟ್ಟೆಗಳ ಮೇಲೆ ಖರ್ಚುಮಾಡುತ್ತೇನೆ” ಎಂದು ಹದಿನಾರನೇ ಶತಮಾನದ ಡಚ್ ನವೋದಯಕಾಲದ ಮಾನವತಾವಾದಿ ಪಂಡಿತ ಎರಾಸ್ಮಸ್ ಹೇಳಿಕೊಂಡಿದ್ದಾನೆ. + +ಇವತ್ತು ವಿಶ್ವ ಪುಸ್ತಕ ದಿನ. 1995ರಲ್ಲಿ UNESCO ಈ ದಿನವನ್ನು ವಿಶ್ವ ಪುಸ್ತಕ ಮತ್ತು ಕಾಪಿರೈಟ್ ದಿನವೆಂದು ಆಚರಿಸುವುದಾಗಿ ಘೋಷಿಸಿತು. ವಿಶ್ವದಾದ್ಯಂತ ನೂರಕ್ಕೂ ಹೆಚ್ಚು ದೇಶಗಳಲ್ಲಿ ಈ ದಿನದಂದು ಪುಸ್ತಕಗಳಿಗೆ ಸಂಬಂಧಿಸಿದ ಹಲವಾರು ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾರೆ. ಪ್ರತೀ ವರ್ಷವೂ ವಿಶ್ವದ ಒಂದು ನಗರವನ್ನು ‘ವರ್ಲ್ಡ್ ಬುಕ್ ಕ್ಯಾಪಿಟಲ್’ ಆಗಿ ಆಯ್ಕೆಮಾಡಲಾಗುವುದಲ್ಲದೆ ವರ್ಷವಿಡೀ ಆ ಸ್ಥಳದಲ್ಲಿ ಪುಸ್ತಕದಿನದ ಸಂಭ್ರಮಾಚರಣೆಗಳು, ಪುಸ್ತಕಗಳನ್ನು ಜನಪ್ರಿಯಗೊಳಿಸುವ ಯೋಜನೆಗಳು ಜಾರಿಯಲ್ಲಿರುತ್ತವೆ. 2003ರಲ್ಲಿ ನಮ್ಮ ನವದೆಹಲಿ ವರ್ಲ್ಡ್ ಬುಕ್ ಕ್ಯಾಪಿಟಲ್ ಆಗಿತ್ತು. ಈ ಬಾರಿಯ ಸರದಿ ಬ್ಯಾಂಕಾಕ್ ನಗರದ್ದು. ಈ ದಿನ ಪ್ರಖ್ಯಾತ ಲೇಖಕ ದಿಗ್ಗಜರಾದ ಸರ್ವಾಂಟೆಸ್, ಶೇಕ್ಸ್ ಪಿಯರ್, ವ್ಲಾದಿಮಿರ್ ನಬಾಕೊವ್ ಮೊದಲಾದವರು ಮರಣ ಹೊಂದಿದ ದಿನವಾಗಿರುವುದೂ ಇನ್ನೊಂದು ವಿಶೇಷ. + +ಈ ಹೊತ್ತಿನಲ್ಲಿ ಪ್ರಪಂಚದ ಅತ್ಯಂತ ಪ್ರಸಿದ್ಧ ಪುಸ್ತಕಮನೆಯ ಬಗ್ಗೆ ಹೇಳದೆ ಇರಲಾರೆ. ಸಿಲ್ವಿಯಾ ಬೀಚ್ ಎಂಬಾಕೆ ‘ಶೇಕ್ಸ್ ಪಿಯರ್ ಎಂಡ್ ಕಂಪನಿ’ ಎಂಬ ಪುಸ್ತಕಮಳಿಗೆಯನ್ನು 1919ರಲ್ಲಿ ಪ್ಯಾರಿಸಿನಲ್ಲಿ ಆರಂಭಿಸಿದಳು. ಇಪ್ಪತ್ತರ ದಶಕದಲ್ಲಿ ಈ ಮಳಿಗೆ ಎಂತಹ ಖ್ಯಾತಿಯನ್ನು ಪಡೆದಿತ್ತೆಂದರೆ ಇಲ್ಲಿ ಜೇಮ್ಸ್ ಜಾಯ್ಸ್, ಎಜ್ರಾ ಪೌಂಡ್, ಹೆಮಿಂಗ್ವೆ, ಫೋರ್ಡ್ ಮ್ಯಾಡಾಕ್ಸ್ ಫೋರ್ಡ್, ಎಫ್. ಸ್ಕಾಟ್ ಫಿಟ್ಜೆರಾಲ್ಡ್ ಮೊದಲಾದ ಲೇಖಕರು ಒಂದೆಡೆ ಕೂತು ಪಾನೀಯ ಸೇವಿಸುತ್ತ ಚರ್ಚೆ ನಡೆಸುತ್ತಿರುವ ದೃಶ್ಯ ಮಾಮೂಲಾಗಿತ್ತು. ಜೇಮ್ಸ್ ಜಾಯ್ಸ್ ಈ ಮಳಿಗೆಯಲ್ಲಿ ತನ್ನ ಆಫೀಸನ್ನೆ ಸ್ಥಾಪಿಸಿಕೊಂಡುಬಿಟ್ಟಿದ್ದ. ಪ್ರಪಂಚದ ಯಾವುದೇ ದೇಶದಲ್ಲಿ ಬ್ಯಾನ್ ಆದ ಪುಸ್ತಕಗಳು ಇಲ್ಲಿ ಆರಾಮವಾಗಿ ದೊರಕಿಬಿಡುತ್ತಿದ್ದವು. ಹೆಮಿಂಗ್ವೆ ತನ್ನ ‘ಎ ಮೂವಬಲ್ ಫೀಸ್ಟ್’ನಲ್ಲಿ ಈ ಸ್ಥಳದ ಕುರಿತಾಗಿ ಉಲ್ಲೇಖಿಸಿದ್ದಾನೆ. ಇಷ್ಟೇ ಅಲ್ಲ, ಜಾಯ್ಸನ ಬಹುಚರ್ಚಿತ ಕೃತಿ ‘ಯೂಲಿಸಿಸ್’ನ ಮೊದಲ ಆವೃತ್ತಿಯ ಪ್ರಕಾಶನದ ಜವಾಬ್ದಾರಿಯನ್ನು ಕೂಡ ಸಿಲ್ವಿಯಾ ಬೀಚ್ ಹೊತ್ತಳು. + + + +ಇಂಥ ಅದ್ಬುತ ಇತಿಹಾಸವುಳ್ಳ ಅಂಗಡಿಯನ್ನು 1940ರಲ್ಲಿ ಜರ್ಮನರು ಫ್ರಾನ್ಸ್ ಅನ್ನು ಆಕ್ರಮಿಸಿಕೊಂಡಾಗ ಸಿಲ್ವಿಯಾ ಮುಚ್ಚಬೇಕಾಗಿ ಬಂತು. ಮುಂದೆಂದೂ ಆಕೆ ಇದನ್ನು ತೆರೆಯಲು ಸಾಧ್ಯವಾಗಲೇ ಇಲ್ಲ. + +1951ರಲ್ಲಿ ಜಾರ್ಜ್ ವಿಟ್ಮನ್ ಎಂಬಾತ ಪುರಾತನ ಆಶ್ರಮವೊಂದಿದ್ದ ಕಟ್ಟಡದಲ್ಲಿ ‘ಲೆ ಮಿಸ್ತ್ರಾಲ್’ ಎಂಬ ಹೆಸರಿನ ಪುಸ್ತಕಮಳಿಗೆಯೊಂದನ್ನು ಆರಂಭಿಸಿದವನು 1962ರಲ್ಲಿ ಸಿಲ್ವಿಯಾ ಬೀಚಳ ಮರಣದ ನಂತರ ಆಕೆಯ ಇಚ್ಛೆಯಂತೆಯೇ ತನ್ನ ಪುಸ್ತಕಮನೆಯ ಹೆಸರು ಬದಲಾಯಿಸಿ ‘ಶೇಕ್ಸ್ ಪಿಯರ್ ಎಂಡ್ ಕಂಪನಿ’ ಎಂದಿಟ್ಟ. ಅಷ್ಟೇ ಅಲ್ಲ, ತನ್ನ ಮಗಳಿಗೆ ಸಿಲ್ವಿಯಾ ಬೀಚ್ ಎಂದೇ ಹೆಸರಿಟ್ಟ!! ಈ ಪುಸ್ತಕಮನೆಯೂ ಹಳೆಯದರಷ್ಟೇ ಪ್ರಖ್ಯಾತಿ ಪಡೆಯಿತು. ಈ ಮಳಿಗೆಯಲ್ಲಿ ಯುವಲೇಖಕರು, ಪ್ರವಾಸಿಗರು ಉಳಿದುಕೊಳ್ಳಲು 13 ಹಾಸಿಗೆಗಳ ವ್ಯವಸ್ಥೆಯೂ ಇದೆ. ಇಂದು ಈ ಅಂಗಡಿ ಪ್ಯಾರಿಸಿನ ಪ್ರಮುಖ ಟೂರಿಸ್ಟ್ ಆಕರ್ಷಣೆಗಳಲ್ಲೊಂದು. ಇಲ್ಲಿ ಚಹಾಕೂಟಗಳು, ಕವಿಗೋಷ್ಠಿಗಳು, ಲೇಖಕರ ಭೇಟಿಗಳು ನಡೆಯುತ್ತವೆ. ಹಗಲುಹೊತ್ತಿನಲ್ಲಿ ಪುಸ್ತಕದಂಗಡಿಯಾಗಿರುವ ಈ ಸ್ಥಳ ರಾತ್ರಿಯ ಹೊತ್ತು ಜಾರ್ಜನೇ ಹೆಸರಿಟ್ಟಹಾಗೆ ‘ಹೊಟೆಲ್ ಟಂಬಲ್ ವೀಡ್’ ಆಗಿ ಬದಲಾವಣೆ ಹೊಂದುತ್ತದೆ. ಅಲ್ಲಿ ಉಳಿದುಕೊಳ್ಳುವವರು ಲೇಖಕರೋ, ಕಲಾಕಾರರೋ ಆಗಿರಬೇಕಾದ್ದು, ಅವರು ತಮ್ಮ ಕೃತಿಯ ಮ್ಯಾನುಸ್ಕಿಪ್ಟ್ ತೋರಿಸಬೇಕಾದ್ದು ಕಡ್ಡಾಯ. ಫ್ರೀಯಾಗಿ ಉಳಿದುಕೊಳ್ಳುವವರು ಅಂಗಡಿಯ ಕೆಲಸದಲ್ಲಿ ನೆರವಾಗಬೇಕು. + +ಜಾರ್ಜ್ 2011ರ ಡಿಸೆಂಬರಿನಲ್ಲಿ ತನ್ನ 98ನೇ ವಯಸ್ಸಿನಲ್ಲಿ ತೀರಿಕೊಂಡರು. ಅಂಗಡಿಯಿದ್ದ ಕಟ್ಟಡವನ್ನು ಕೆಲವು ಬಿಲ್ಡರುಗಳು ವಶಪಡಿಸಿಕೊಳ್ಳುವ ಯತ್ನ ನಡೆಸಿದರಾದರೂ ಜಾರ್ಜರ ಮಗಳು ಸಿಲ್ವಿಯಾ ಹಾಗಾಗಲು ಬಿಡಲಿಲ್ಲ. ಈವತ್ತು ಇಡೀ ಕಟ್ಟಡವೇ ಆಕೆಯ ಹೆಸರಿನಲ್ಲಿದ್ದು ತಂದೆಯಿದ್ದಾಗ ಹೇಗೆ ನಡೆಯುತ್ತಿತ್ತೋ ಎಲ್ಲವೂ ಹಾಗೆಯೇ ನಡೆಯುತ್ತಿದೆ. + +ನನಗೆ ನಮ್ಮಲ್ಲಿ ಮುಚ್ಚಿಹೋದ ಹಲವಾರು ಪ್ರಸಿದ್ಧ ಪುಸ್ತಕಮನೆಗಳು ನೆನಪಾಗುತ್ತಿವೆ. ಪ್ರೀಮಿಯರ್, ಗಂಗಾರಾಮ್ಸ್, ಅತ್ರೀ… ಪ್ರತಿಯೊಂದು ಪುಸ್ತಕಮನೆ ಮುಚ್ಚುವಾಗಲೂ – ಕಾರಣವೇನೇ ಇದ್ದಿರಲಿ – ಪುಸ್ತಕಪ್ರೇಮಿಗಳಿಗೆ ಅಪಾರ ನೋವುಂಟಾಯಿತು. ಆ ಹೊತ್ತಿಗೆ ಜನರಲ್ಲಿ ಪುಸ್ತಕಗಳ ಬಗ್ಗೆ ಅವಜ್ಞೆ ಹೆಚ್ಚಾಗುತ್ತಿದೆಯೆ ಎಂಬ ಪ್ರಶ್ನೆ ಎದ್ದಿದ್ದರಲ್ಲಿ ಅಚ್ಚರಿಯೇನೂ ಇಲ್ಲ. + +ಕಳೆದ ಶನಿವಾರ ಬೆಂಗಳೂರಿನ ಕಲಾಗ್ರಾಮದಲ್ಲಿ ‘ಮಲೆಗಳಲ್ಲಿ ಮದುಮಗಳು’ ನಾಟಕದ ಪ್ರದರ್ಶನಕ್ಕೆ ಹೋಗಿದ್ದೆ. ಪ್ರೇಕ್ಷಕರು ಕಿಕ್ಕಿರಿದು ಕೂರಲೂ ಜಾಗವಿರಲಿಲ್ಲ. ಅಲ್ಲಿಗೆ ನಾಟಕ ನೋಡಲು ಬಂದಿದ್ದ ಅನೇಕರು ತಮ್ಮ ಮನೆಯ ಮಕ್ಕಳನ್ನೂ ಜತೆಗೆ ಕರೆದುಕೊಂಡು ಬಂದಿದ್ದರು, ನಾಟಕದಲ್ಲಿ ಅವರಿಗೆ ಅರ್ಥವಾಗದ್ದನ್ನು ವಿವರಿಸುತ್ತಿದ್ದರು. ಅಲ್ಲಿನ ಹೆಚ್ಚಿನವರು ಕಾದಂಬರಿಯನ್ನು ಓದಿದವರೆಂದು ಚರ್ಚೆಗಳಿಂದ, ಕಮೆಂಟುಗಳಿಂದ ಸ್ಪಷ್ಟವಾಗುತ್ತ ಇತ್ತು. ನೆಟ್ಟಗೆ ಅರ್ಧಘಂಟೆಯ ಒಂದು ಸೀರಿಯಲ್ಲನ್ನೂ ನೋಡುವ ಸಮಯವಿಲ್ಲದ ಧಾವಂತದ ನಗರಿಯಿಂದ ಹೆಚ್ಚೂಕಮ್ಮಿ ಒಂದುಸಾವಿರಕ್ಕೂ ಮಿಕ್ಕಿದ ಸಂಖ್ಯೆಯ ಜನ ಒಂಭತ್ತು ಘಂಟೆಗಳ ಕಾಲ ಕಾದಂಬರಿಯೊಂದನ್ನು ಆಧರಿಸಿದ ನಾಟಕವನ್ನು ಹುಮ್ಮಸ್ಸಿನಿಂದ ನೋಡಿ ಆನಂದಿಸಿದರು. + + + +ಪುಸ್ತಕಗಳು ಎಂದಿಗೂ ಸಾಯುವುದಿಲ್ಲ. ಅವು ತಮ್ಮಷ್ಟಕ್ಕೆ ತಾವೇ ವಿಕಾಸ ಹೊಂದುತ್ತಿರುತ್ತವೆ. ಫ್ರೆಂಚ್ ಕವಿ ಸ್ತೆಫಾನ್ ಮಲಾರ್ಮ್ ಹೇಳುವ ಹಾಗೆ “ಜಗತ್ತಿನಲ್ಲಿ ಎಲ್ಲವೂ ಅಸ್ತಿತ್ವದಲ್ಲಿರುವುದೇ ಪುಸ್ತಕರೂಪ ಪಡೆದುಕೊಳ್ಳುವ ಸಲುವಾಗಿ.” + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_345.txt b/Kenda Sampige/article_345.txt new file mode 100644 index 0000000000000000000000000000000000000000..1045c75336e9a163a8dddb2d4416be6baa60a7f5 --- /dev/null +++ b/Kenda Sampige/article_345.txt @@ -0,0 +1,35 @@ +byಕೆಂಡಸಂಪಿಗೆ|Sep 30, 2019|ದಿನದ ಪುಸ್ತಕ,ಸಾಹಿತ್ಯ| 3 Comments + +“ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ. ಪ್ಯಾಬ್ಲೊ ನೆರೂಡ ಹೇಳುತ್ತಾನೆ.” + +byಡಾ. ಬಿ. ಜನಾರ್ದನ ಭಟ್|Sep 29, 2019|ವಾರದ ಕಥೆ,ಸಾಹಿತ್ಯ| 0 Comments + +“ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೊ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. ‘ಬರ್ತೇನೆ, ಕೆಲಸವಿದೆ’ ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು.” + +byಎಚ್ ಆರ್ ರಮೇಶ್|Sep 23, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು.” + +byಸಚೇತನ ಭಟ್|Sep 22, 2019|ವಾರದ ಕಥೆ,ಸಾಹಿತ್ಯ| 0 Comments + +“ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. “ + +byಕೆಂಡಸಂಪಿಗೆ|Sep 16, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ.” + +byಡಾ. ಬಿ. ಜನಾರ್ದನ ಭಟ್|Sep 15, 2019|ವಾರದ ಕಥೆ,ಸಾಹಿತ್ಯ| 1 Comment + +“ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ.” + +byಎಚ್ ಆರ್ ರಮೇಶ್|Sep 9, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ.” + +byಸುನೈಫ್ ವಿಟ್ಲ|Sep 8, 2019|ವಾರದ ಕಥೆ,ಸಾಹಿತ್ಯ| 1 Comment + +“ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು.” + +byಕೆಂಡಸಂಪಿಗೆ|Sep 2, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ…” \ No newline at end of file diff --git a/Kenda Sampige/article_346.txt b/Kenda Sampige/article_346.txt new file mode 100644 index 0000000000000000000000000000000000000000..713c1b53905ad0df84e937f012b5a873c78b1bae --- /dev/null +++ b/Kenda Sampige/article_346.txt @@ -0,0 +1,61 @@ + + +ಪತ್ರ ಒಂದು:- + +ಹನೀ,ಈ ಪತ್ರ ನನ್ನ confession ಎಂದು ತಿಳಿಯಬೇಡ. ಆತ್ಮ ವಂಚನೆ ಮಾಡಿಕೊಳ್ಳಲಾರೆದೇ ನಡೆದದ್ದನ್ನು ನಡೆದ ಹಾಗೇ ವಿವರಿಸುತ್ತಿರುವೆ. ನಿನ್ನನ್ನು ಎದುರಿಗೇ ಕುಳಿಸಿಕೊಂಡು ಹೇಳಬೇಕೆಂದುಕೊಂಡೆ. ಆದರೆ ಭಾವದ ತೀವ್ರತೆಯಲ್ಲಿ ನಾನು ಹದ ತಪ್ಪುವೆನೆಂಬ ಅನುಮಾನದಿಂದ ಪತ್ರದ ಮಾಧ್ಯಮವನ್ನು ಆರಿಸಿಕೊಂಡಿರುವೆ. + +ಹನೀ,ನಿನ್ನ ಕಳ್ಳಾಟ ಎಷ್ಟು ದಿನದಿಂದ ನಡೆಯುತ್ತಿತ್ತೋ ಏನೋ. ಆ ದಿನ ನನ್ನ ಕಣ್ಣಿಗೆ ಬಿತ್ತು. ಬಹುಶ ಅಂಶು ನನ್ನೊಟ್ಟಿಗೆ ಇಲ್ಲದೇ ಇದ್ದಿದ್ದರೆ ನಿಮ್ಮಿಬ್ಬರ ಮಾನವನ್ನು ಅದೇ ಹೊತ್ತಿಗೆ ಅದೇ ರಸ್ತೆಯಲ್ಲಿ ನಿಲ್ಲಿಸಿ ನಿವಾಳಿಸಿಬಿಡುತ್ತಿದ್ದನೋ ಏನೋ! ಕಂಪನಿಯ ನಮ್ಮ ಪ್ರಾಜೆಕ್ಟಿನ ಚರ್ಚೆಮಾಡಲೆಂದು ಅಂಶು ಮತ್ತು ನಾನು ನಗರದ ಹೊರವಲಯದ ಕೆಫೆಗೆ ಬಂದು ಮಾತನಾಡುತ್ತಿದ್ದೆವು. ಯಾಕೋ ಇಷ್ಟು ದೂರ ಎಂದಿದ್ದಕ್ಕೆ ತಣ್ಣಗೆ ಕೂತು ಇಲ್ಲಿ ಎಲ್ಲ ಚರ್ಚಿಸಬಹುದು ಎಂದು ಅವ ಎಂದಿದ್ದ. + +ಬಾಲ್ಕನಿಯಲ್ಲಿ ಕುಳಿತು ಚರ್ಚಿಸುತ್ತಾ ಕಾಫಿ ಹೀರುತ್ತಿರುವಾಗ ಅಂಶುವಿನ ದೃಷ್ಟಿ ಪದೇ ಪದೇ ಆ ಮನೆಯತ್ತ ಇರುತ್ತಿತ್ತು. ಕುತೂಹಲದಿಂದ ತಿರುಗಿ ನೋಡುವಷ್ಟರೊತ್ತಿನಲ್ಲೇ ಯಾವದನ್ನು ನೋಡಬಾರದಾಗಿತ್ತೋ ಅದನ್ನೇ ನೋಡಿಬಿಟ್ಟೆ. ಅದೇನು ನೀನು ಆಕೆಯ ಕೈ ಹಿಡಿದು ತಲೆ ನೇವರಿಸುವದು, ಮನೆಯ ಒಳಗಿನ ನಾಟಕ ಸಾಕಾಗಲಿಲ್ಲವೆಂದು ಹೊರಗೆ ಬಂದು… ಛೇ ಊಹಿಸಲೂ ಆಗದಾಗಿತ್ತು ಅದು. ಕೆಳಗೆ ಬಂದು ನಿಮ್ಮಿಬ್ಬರಿಗೂ ಮಂಗಳಾರತಿ ಮಾಡಬೇಕೆನ್ನುವಷ್ಟರಲ್ಲಿ ನೀನು ಕಾರಿನಲ್ಲಿ ಭರ್ರನೇ ಹೋಗಿಬಿಟ್ಟೆ. ಆಕೆಯೂ ಅಟೋಹಿಡಿದು ನಿನ್ನ ವಿರುದ್ಧದಿಕ್ಕಿಗೆ ತಿರುಗಿಬಿಟ್ಟಳು. ನಿನ್ನನ್ನು ಎಷ್ಟೊಂದು ಆಳವಾಗಿ ಪ್ರೀತಿಸುತ್ತಿದ್ದೇನೆ ಎನ್ನುವದು ನಿನಗೇ ಗೊತ್ತಿದೆ. ನಿನ್ನದೊಂದು ನೋಬಲ್ ವ್ಯಕ್ತಿತ್ವ ಎಂದು ತಿಳಿದವಳಿಗೆ ನೀನೂ ಓರ್ವ ವಂಚಕ ಎನ್ನುವದು ಆಗ ತಿಳಿಯಿತು. ಬಿಲ್ ಕೊಡಲು ಬಂದ ವ್ಹೇಟರನ ಹತ್ತಿರ ಆ ಮನೆಯವರು ನಿನಗೆ ಗೊತ್ತಾ ಎಂದು ಅಂಶು ಕೇಳಿದರೆ “ಅಯ್ಯೋ, ನಮಗ್ಯಾಕೇ ಸಾರ್” ಎಂದು ಮುಸಿಮುಸಿ ನಗುತ್ತಿರುವನನ್ನು ನೋಡಿ ನಾನು ಕಂಪಿಸುತ್ತಿದ್ದೆ. ಆಗಲೇ ನಿನಗೆ ಫೋನ್ ಮಾಡಬೇಕು ಎನ್ನುವಷ್ಟರಲ್ಲಿ ಅಂಶು ನನ್ನ ಫೋನ್ ನನ್ನು ಕಸಿದು ಎಲ್ಲ ಅರ್ಥವಾದವನಂತೆ ‘ಕೂಲ್ ಬೇಬಿ ಕೂಲ್’ ಎಂದು ಸಮಾಧಾನಿಸುತ್ತಿದ್ದ. ಮನೆಗೆ ಬಂದು ನಿನ್ನನ್ನು ವಿಚಾರಿಸಿಕೊಳ್ಳಬೇಕೆನ್ನುವಳಿಗೆ ಅವ ಈಗ ಹೋಗುವದು ಬೇಡ ಎಂದ. ಯಾಕೆ ಎಂದು ಕೇಳಿದಾಗ ಸುಮ್ಮನಿರು ಎಂದು ತನ್ನ ಕಾರಿನಲ್ಲಿ ಅವನ ಮನೆಗೇ ನನ್ನನ್ನು ಕರೆದುಕೊಂಡು ಬಂದ. “ಆಕೆಯಿಲ್ಲ ನಿಮಗೆ ಸ್ವಲ್ಪ ರಿಲಾಕ್ಸ್ ಆಗಲಿ ಎಂದು ಇಲ್ಲಿಗೆ ಕರೆದುತಂದೆ” ಎಂದವನಿಗೆ ನಾನು ಈಗಲೇ ಮನೆಗೆ ಹೋಗಬೇಕು ಎಂದೆ. ಕೇಳಲಿಲ್ಲ, “ಈಗ ಹೋಗಿ ನೀವು ಜಗಳ ಕಾಯುತ್ತೀರಿ, ನಿಮ್ಮ ಮಾತಿಗೆ ಅವ ಏನೇನೋ ಉತ್ತರಿಸುತ್ತಾನೆ, ಸಿಟ್ಟು ಸೆಡವು ಮುಂದುವರಿದು ಡೈವೋರ್ಸ್ …” ಎಂದವ ಮಾತನ್ನು ಸ್ವಲ್ಪ ನಿಲ್ಲಿಸಿ ನನ್ನ ಮುಖ ನೋಡಿದ. + +‘ಇಂತವನೊಟ್ಟಿಗೆ ಇನ್ನೆಂತ ಬದುಕು ಮುಗಿದೇ ಹೋಯಿತು’ ಎಂದವಳಿಗೆ “ಮದುವೆಯಾಗಿ ಇಷ್ಟುದಿನವಾದ ಮೇಲೆ ಬದುಕು ನಮಗಲ್ಲ. ಮಕ್ಕಳಿಗಾಗಿ, ಮಿಹಿಕಾಳ ಕುರಿತು ಆಲೋಚನೆ ಮಾಡಿ, ಆಕೆಯ ಬದುಕು ಬೆಳಗಲು ನೀವೊಂದಿಷ್ಟು ಸಹನೆ ತಂದುಕೊಳ್ಳಬೇಕು. ಅಷ್ಟಕ್ಕೂ ಇದೇನು ದೊಡ್ಡ ವಿಷಯ ಅಂತ, ಈಗೆಲ್ಲಾ ಇದು ಕಾಮನ್” ಎಂದವನ ಮಾತು ಆಲೋಚಿಸುವಂತೆ ಮಾಡಿತು. ಹಾಗೇ ಕಣ್ಣುಕತ್ತಲೆ ಬಂದಂತಾಯಿತು. ಎಚ್ಚರಾದಾಗ ತಲೆ ನೇವರಿಸುತ್ತಿದ್ದ. ತಡೆಯಲಾರದೇ ಭೋರೆಂದು ಅತ್ತುಬಿಟ್ಟೆ. ಮನೆಗೆ ಹೋಗುತ್ತೇನೆಂದು ಹಠಹಿಡಿದವಳಿಗೆ “ಸರಿ, ಹೋಗಬಹುದು ಈ ವಿಷಯ ಅವರಲ್ಲಿ ಎತ್ತುವದಿಲ್ಲ ಎಂದು ಭಾಷೆ ಕೊಡಿ, ನಿಮ್ಮ ಮಗಳ ಸಲುವಾಗಿಯಾದರೂ” ಎಂದವನಿಗೆ “ನಾನೂ ಮನುಷ್ಯಳು ಕಣ್ರೀ, ಮರೆಯಲೆಂದರೆ ಹ್ಯಾಗ್ರೀ” ಎಂದು ಕೂಗಿದ್ದೆ. “ನನಗೆ ಗೊತ್ತು, ನಿಮ್ಮ ಈ ಆವೇಶ ಕಡಿಮೆಯಾಗ ಬೇಕಾದರೆ ಒಂದು ಮಾರ್ಗವಿದೆ” ಎಂದವ ನನ್ನ ಮುಖನೋಡಿ ಮೌನವಾಗಿದ್ದವನಿಗೆ ಏನು ಎಂತ ಕೇಳಿದರೆ “ಆ ತಪ್ಪನ್ನು ನೀವೂ ಮಾಡಿದರೆ….” ಎಂದು ನಿಲ್ಲಿಸಿದ. ಹೌದು ಅನಿಸಿತು. ಹೀಗೆ ಹೋದರೆ ನಿನ್ನೊಟ್ಟಿಗೆ ಜಗಳ ಖಾತ್ರಿ ಎಂದುಕೊಂಡವಳನ್ನು ಅರ್ಥಮಾಡಿಕೊಂಡವನಂತೆ ಸಂಪೂರ್ಣವಾಗಿ ಆವರಿಸಿಕೊಂಡ. + +ಹನೀ,ನಿನ್ನ ಮೇಲಿನ ಸೇಡು ಮತ್ತು ಸಿಟ್ಟು ಎಷ್ಟಿತ್ತೆಂದರೆ ಅವನನ್ನು ನಾನೇ ಮತ್ತೆ ಮತ್ತೆ ಎಳೆದುಕೊಂಡೆ. ಸುಖ ಸಿಕ್ಕಿತಾ ಎಂದು ಕೇಳಬೇಡ, ಆ ಕ್ಷಣದಲ್ಲಿ ನನ್ನ ತಲೆಯಲ್ಲಿದ್ದಿದ್ದು ನೀನೇ ಆಗಿದ್ದೆ, ನಾನು ಕೂಗಿಕೊಂಡದ್ದು ನಿನ್ನ ಮೇಲಿನ ಸಿಟ್ಟಿನಲ್ಲಿಯೇ ಹೊರತು ಮತ್ತೇನು ಅನುಭವಿಸಲಿಲ್ಲ. ಎಲ್ಲ ಮುಗಿದ ಮೇಲೆ ಅಂಶು ಮನೆಯಲ್ಲಿ ವಿಷಯ ತಗೆಯದೇ ಮಾಮೂಲಿನಂತಿರಬೇಕು ಎಂದು ಭಾಷೆ ತೆಗೆದುಕೊಂಡ. ಮನೆಯೊಳಗೆ ನೀನು ನನಗೋಸ್ಕರ ಅಡಿಗೆಯನ್ನು ಮಾಡಿ ಕಾಯುತ್ತಿದ್ದೆ. “ಲೇಟಾಯಿತಲ್ಲ ಹೇಗೆ ಬಂದೆ” ಎಂದು ಕೇಳಿದ್ದಕ್ಕೆ ಯಾಕೋ ಅಂಶುವಿನ ಹೆಸರು ಹೇಳಲು ಸಾಧ್ಯವಾಗಿರಲಿಲ್ಲ. ಕಂಪನಿಯ ಕ್ಯಾಬ್ ನಲ್ಲಿ ಎಂದೆ. ಸುಮ್ಮನಿರುವ ನಿನ್ನನ್ನು ನೋಡಿ ಎಷ್ಟು ಚನ್ನಾಗಿ ನಾಟಕವಾಡುತ್ತಿರುವೆ ಎನಿಸಿತು. ನಾನೂ ನಿನ್ನೊಟ್ಟಿಗೆ ನಾಟಕವಾಡಬೇಕು ಎಂದುಕೊಂಡೆ. ರಾತ್ರಿಯಿಡೀ ನಿದ್ರೆ ಬರದೇ ಅಂಶು ಮತ್ತು ನಿನ್ನ ಕುರಿತು ಹೊರಳಾಡುತ್ತಿರುವಳಿಗೆ ನಿದ್ದೆ ಬರುತ್ತಿಲ್ಲವಾ ಏನಾಯಿತು ರಮೀ ಎಂದು ನಿನ್ನ ತೆಕ್ಕೆಗೆ ತೆಗೆದುಕೊಂಡರೆ ನಾನು ಕೊರಡಿನಂತೆ ಬಿದ್ದುಕೊಂಡಿದ್ದೆ. ನಿನ್ನ ಅಭಿನಯ ಸಾಮರ್ಥ್ಯಕ್ಕೆ ಮನಸ್ಸಿನಲ್ಲಿಯೇ ಭೇಷ್ ಎಂದೆ. + +ಹನೀ,ನನ್ನ ನಿನ್ನ ನಾಟಕ ಜಾಸ್ತಿಯಾದಷ್ಟು ನೀನು ನನ್ನೆದೆಯೊಳಗಿಂದ ಮರೆಯಾಗುತ್ತಿಲ್ಲ. ಇಷ್ಟು ಗಾಢವಾಗಿ ನನ್ನೆದೆಯೊಳಗೆ ನೀನು ಮಿಳಿತವಾಗಿದ್ದಿಯಾ ಎಂದು ನಾನು ಅಂದುಕೊಂಡಿರಲಿಲ್ಲ. ಈ ಕೆಲ ದಿನಗಳಿಂದ ನಿನ್ನ ಕುರಿತಾಗಿ ವಿಲೋಮ ಭಾವಗಳೇ ನನ್ನ ಮನಸ್ಸಿನಲ್ಲಿ ತುಂಬಿಕೊಂಡಿವೆ. ಇಂತಹ ಹೊತ್ತಿನಲ್ಲೆಲ್ಲಾ ನಿನ್ನನ್ನು ಬಿಟ್ಟೇ ಬದುಕಬೇಕೆಂದು ಆಲೋಚಿಸಿದ್ದೆ. ಹೊಟ್ಟೆ ಪಾಡಿಗಾಗಿ ನಿನ್ನೊಟ್ಟಿಗೆ ಬದುಕಬೇಕಾದ ಅನಿವಾರ್ಯತೆ ನನಗೇನೂ ಇಲ್ಲ. ನಾನು ನಮ್ಮ ಮಿಹಿಕಾಳನ್ನು ನೀನಲ್ಲದೆಯೂ ಸಾಕಬಲ್ಲೆ. ಆದರೆ ಮಿಹಿಕಾ ನಿನ್ನನ್ನು ಎಷ್ಟು ಹಚ್ಚಿಕೊಂಡಿದ್ದಾಳೆ ಎನ್ನುವದನ್ನು ಕಂಡಾಗ ಈ ಆಲೋಚನೆಯನ್ನು ದೂರ ಮಾಡಿದೆ. ಅದೂ ಅಲ್ಲದೇ ನಿನ್ನ ಮತ್ತು ಆಕೆಯ ಪ್ರೀತಿಯಲ್ಲಿ ನಾನು ವಂಚನೆಯನ್ನು ಕಂಡವಳಲ್ಲ. ಈ ಹಂತದಲ್ಲಿ ನಿನ್ನನ್ನು ಏಕೆ ಬಿಟ್ಟೆ ಎಂದು ಆಕೆ ಕೇಳಿದರೆ ಏನೆಂದು ಹೇಳಲಿ ಹೇಳು. ನಿನ್ನ ಈ ಘನಂದಾರೀ ಕೆಲಸವನ್ನು ಆಕೆಗೆ ತಿಳಿಸಿ ಹೇಳಬೇಕೆ, ಹಾಗೊಂದುವೇಳೆ ಹೇಳಿದೆ ಎಂತಲೇ ಇಟ್ಟುಕೊಳ್ಳೋಣ, ಆಕೆಯ ಮೃದು ಮನಸ್ಸಿಗೆ ಎಷ್ಟೊಂದು ಆಘಾತವಾಗಬಹುದೆಂದು ಆಲೋಚಿಸಬಲ್ಲೆಯಾ. ನಿನ್ನೊಡನೆ ಆಕೆಯನ್ನು ಮಾತಾಡಲು ಬಿಡಬಾರದು ಎಂದು ಎಷ್ಟೋ ಸಲ ಅಂದುಕೊಂಡಿದ್ದೆ. ನೀನು ಆಫೀಸಿನಿಂದ ಬರುವಾಗಲೆಲ್ಲಾ ಇತ್ತೀಚೆಗೆ ಉದ್ದೇಶಪೂರ್ವಕವಾಗಿಯೇ ಅವಳನ್ನು ನಾನು ಆಡಲು ಕಳುಹಿಸುತ್ತಿದ್ದುದ್ದು. ಬೆಳಿಗ್ಗೆಯೂ ಅಷ್ಟೇ, ಕೆಲಸಕ್ಕೆ ಹೋಗುವಾಗ ನಿನಗೆ ಆಕೆಯಹತ್ತಿರ ಬಾಯ್, ಟಾಟಾ ಎನ್ನದೇ ಹೋಗಲು ಸಾಧ್ಯವಾಗುವದಿಲ್ಲ ಎನ್ನುವದು ಗೊತ್ತಿದ್ದೂ ನಾನು ಆಕೆ ಏಳದಂತೆ ತಡೆದಿದ್ದೆ. ಆದರೆ ಏನು ಮಾಡಲಿ ಹೇಳು, ಮಿಹಿಕಾ ಸಹ ನಿನ್ನನ್ನು ನೋಡದೇ ಸ್ಕೂಲಿಗೆ ಹೋಗಲಾರಳು. + +ಅದೊಂದು ದಿವಸ ನಿನ್ನನ್ನು ನೋಡದೇ ಅವಳು ಸ್ಕೂಲಿಗೆ ಹೋದವಳು ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಬಿದ್ದು ಗಾಯ ಮಾಡಿಕೊಂಡಾಗ ನೀನು ಗಾಬರಿಯಾಗಿ ಓಡಿಬಂದದ್ದು ರಾತ್ರಿಯಿಡೀ ಆಕೆಯನ್ನು ತಬ್ಬಿ ಹಿಡಿದುಕೊಂಡು ಕಣ್ಣೀರು ಸುರಿಸಿದ್ದು ವಂಚನೆಯಿಂದಲ್ಲ, ಹೃದಯಾಂತರಾಳದ ಪ್ರೀತಿಯಿಂದ ಎನ್ನುವದನ್ನು ಬಲ್ಲೆ. ಆಕೆಯೂ ‘ಪಪ್ಪಾ ನೀನ್ಯಾಕೆ ಇಂದು ನನಗೆ ಟಾಟಾ ಮಾಡದೇ ಹೋದೆ? ಅದಕ್ಕೆ ಹೀಗಾಯಿತು’ ಎಂದು ನಿನ್ನನ್ನು ತಬ್ಬಿಕೊಂಡಾಗ ನನ್ನ ಕಣ್ಣಿನಲ್ಲೂ ನೀರು ಜಿನುಗಿದ್ದು ಸತ್ಯ. ಎಷ್ಟೆಂದರೂ ಹೆಣ್ಣಿಗೇ ರಾಜಿಯಾಗಿ ಜೀವಿಸಬೇಕಾದ ಅನಿವಾರ್ಯತೆ ಇದೆಯಲ್ಲ. ಅಂದೇ ನಿನಗೆ ಡೈವೋರ್ಸ್ ಕೊಡುವ ಆಲೋಚನೆಯನ್ನು ಕೈಬಿಟ್ಟೆ. + +ಹನೀ,ಒಮ್ಮೆ ನಮ್ಮ ಬದುಕು ಪ್ರಾರಂಭವಾದ ಘಳಿಗೆಯನ್ನು ತೆರೆದು ನೋಡು. ಆಕಸ್ಮಿಕವಾಗಿ ಏನೂ ನಾನು ನಿನಗೆ ಸಿಕ್ಕವಳಲ್ಲ. ಹಾಗೆಂತ ನನ್ನನ್ನು ಒಲಿಸಿಕೊಳ್ಳಲು ನೀನು ನನ್ನ ಹಿಂದೆ ಸುತ್ತುತ್ತಾ ರಾಶೀ ರಾಶೀ ಪತ್ರಗಳನ್ನು ಬರೆದದ್ದಂತೂ ಅಲ್ಲವೇ ಅಲ್ಲ. ಈ ಮಹಾನಗರದ ಯಾವುದೋ ಒಂದು ಮೂಲೆಯಿಂದ ಇನ್ನೊಂದು ಮೂಲೆಗೆ ಉದ್ಯೋಗದ ನಿಮಿತ್ತ ತಿರುಗಾಡಬೇಕಾದ ನಾನು ವೀಕೆಂಡ್ ನಲ್ಲಿ ಕೆಲಸದ ಒತ್ತಡವನ್ನು ಕಳೆಯಲು ಬಯಸುತ್ತಿದ್ದ ತಾಣ ಎಂದೋ ಒಂದು ಕಾಲದಲ್ಲಿ ನಗರದ ಅಂಚಿನಲ್ಲಿದ್ದು ಇದೀಗ ನಗರೀಕರಣದ ಹೊಡೆತಕ್ಕೆ ಮುಖ್ಯಭಾಗದಲ್ಲಿ ಹರಡಿಕೊಂಡಿರುವ ಸ್ಲಂ ಗಳಲ್ಲಿ. ಕೊಳಚೆನೀರಿನಲ್ಲಿಯೇ ಆಟವಾಡುತ್ತಾ ಅದೇ ನೀರನ್ನು ಬಟ್ಟೆಯಿಂದ ಸೋಸಿ ಕುಡಿಯುತ್ತಿರುವ ಪುಟ್ಟ ಪುಟ್ಟ ಮಕ್ಕಳನ್ನು ನೋಡಿದ ನನಗೆ ಅವರ ಕುರಿತು ಏನಾದರೂ ಮಾಡಬೇಕೆನ್ನುವ ಬಯಕೆ ಹುಟ್ಟಿತ್ತು. ನಾನೇನು ಸಿರಿವಂತರ ಮನೆಯಲ್ಲಿ ಹುಟ್ಟಿದವಳಲ್ಲ. ಬಯಲು ಸೀಮೆಯ ನನ್ನೂರಿನಲ್ಲಿ ಇವತ್ತಿಗೂ ಹೆಣ್ಣುಮಕ್ಕಳು ದೇಹಬಾಧೆಗೆ ಬಯಲನ್ನೇ ಆಶ್ರಯಿಸಿರುವದನ್ನು ನೋಡಿದವಳು. ನನ್ನದೂ ಅದೇ ಸ್ಥಿತಿಯಾಗಿತ್ತೆನ್ನು. ಮನೆಯೊಳಗೆ ಹೇಲುವ ಕೋಣೆ ಎನ್ನುವದೇ ಅಸಹ್ಯವೆನ್ನುವ ಹಿರಿಯರ ನಡುವೆ ನಮ್ಮದೆನ್ನುವ ಧ್ವನಿಯೇ ಅಡಗಿಹೋಗಿತ್ತು. + +ಸರಕಾರದ ಸಬ್ಸಿಡಿಯ ಆಸೆಗಾಗಿ ಅಪ್ಪ ಮತ್ತು ನನ್ನ ನೆರೆಯವರೆಲ್ಲ ಅಂತಹ ಒಂದು ಶೌಚಾಲಯವನ್ನು ಕಟ್ಟಿಕೊಳ್ಳಲು ಮನಸ್ಸು ಮಾಡಿದಾಗ ಅಮ್ಮನ ಮಡಿಲಲ್ಲಿ ನಾನು ನೆಮ್ಮದಿಯಲ್ಲಿ ಮುಖವನ್ನು ಹುದುಗಿಸಿದ್ದೆ. ಮುಂದೆ ಮಂತ್ರಿಗಳೋ ಎಮ್ಮೆಲ್ಲೆಗಳೋ ಬಂದು ಎಲ್ಲರ ಮನೆಗಳಲ್ಲಿ ಇಂತಹ ಸಾಲು ಸಾಲು ಶೌಚಾಲಯಗಳನ್ನ ಉದ್ಘಾಟಿಸಿ ನಮ್ಮಂತಹ ಪುಟ್ಟ ಹುಡುಗಿಯರ ಕಡೆ ದಿಟ್ಟಿಸಿ ತಮ್ಮ ಸರಕಾರದ ಸಾಧನೆ ಇವು ಎಂದು ಭಾಷಣವನ್ನು ಬಿಗಿದದ್ದನ್ನು ಬೆರಗಿನಿಂದ ನೋಡಿದ್ದೆವು. ನಮ್ಮೂರ ಪಡ್ಡೆ ಹೈಕಳು ಇನ್ನು ನಮಗೆ ಚಾನ್ಸ್ ಇಲ್ಲವಲ್ಲೋ ಎಂಬ ಸಂಭಾಷಣೆಯ ಅರ್ಥಗೊತ್ತಾಗದೇ ಇದ್ದರೂ ಯಾಕೋ ‘ಥೂ ಇವರಾ’ ಎಂದು ಮನಸ್ಸಿನಲ್ಲಿಯೇ ಉಗಿದಿದ್ದೆವು. ಮಾರನೆಯ ದಿನ ನಾವೆಲ್ಲಾ ಮುಂಜಾನೆ ಎದ್ದು ಇನ್ನೇನೂ ಮನೆಯಂಚಿನ ಆ ಕೋಣೆಗೇ (!!!!) ಹೋಗಬೇಕೆಂದರೆ ಅಲ್ಲಿ ಒಂದು ದೊಡ್ಡ ಬೀಗ ಹಾಕಿತ್ತು. ನೋಡಿದರೆ ನನ್ನೂರಿನ ಎಲ್ಲರ ಮನೆಯಲ್ಲಿಯೂ ಅದೇ ಅವಸ್ಥೆ. ಅಮ್ಮನಲ್ಲಿ ಕೇಳಿದರೆ ನನ್ನನ್ನು ತಬ್ಬಿಕೊಂಡು ಆಕೆ ಒಂದು ನಿಟ್ಟುಸಿರು ಬಿಟ್ಟಿದ್ದಳು. ಅಜ್ಜಿಯರಂತೂ ‘ನಾವೆಲ್ಲಾ ಇಷ್ಟು ದಿನ ಹೀಗೇ ಬದುಕಿಲ್ಲವಾ, ಮನೆ ಪಾಯಖಾನೆ ಆದರೆ ಶಿವ ಹ್ಯಾಗೆ ಮೆಚ್ಯಾನು, ನಮ್ಮ ಕಾಲಕ್ಕೆ ಕಾಲ ಕೆಡುವದು ಬ್ಯಾಡ’ ಎಂದು ಬಿಡುವದೇ. + +ಆ ಕೋಣೆಗಳೆಲ್ಲ ಮನೆಗೊಂದು ಉಗ್ರಾಣವಾಗಿ ಪರಿವರ್ತಿತವಾಗಿಬಿಟ್ಟಿತ್ತು. ಅಮ್ಮನ ಮೂಕ ಪ್ರೋತ್ಸಾಹದಲ್ಲಿ ಎಂಜಿನಿಯರ್ ಕಲಿಯಲು ಈ ಊರಿಗೆ ಬಂದು ಓದಿನಲ್ಲಿ ಒಳ್ಳೆಯ ಮಾರ್ಕ್ಸ್ ತೆಗೆಯುತ್ತಿರುವಾಗಲೇ ಅಮ್ಮ ಭೇದಿಯಿಂದ ನನ್ನನ್ನು ಬಿಟ್ಟು ಹೋಗಿ ಬಿಟ್ಟಿದ್ದಳು. ಮನೆಯವರೆಲ್ಲರ ಪಾಲಿಗೆ ಶಿವನ ಪಾದ ಸೇರಿದ ಅಮ್ಮ ನನ್ನ ಪಾಲಿಗೆ ಇಲ್ಲವಾಗಿಬಿಟ್ಟಳು. ಮತ್ತೆ ಊರಿಗೆ ಹೋಗಬೇಕೆನ್ನುವ ಮನಸ್ಸೇ ಆಗಿರಲಿಲ್ಲ. ಹಾಗಂತ ಅಪ್ಪನನ್ನು ನಾನು ತಿರಸ್ಕರಿಸಲೂ ಇಲ್ಲ. ಇವತ್ತಿಗೂ ಆ ಮುಗ್ಧ ಜೀವ ನನ್ನನ್ನು ನೋಡಲು ‘ಮಗಾ’ ಎಂದು ಬಂದಾಗ ನಾನು ಸಹಾ ಮಿಹಿಕಾಳೇ ಆಗಿಬಿಡುತ್ತೇನೆ. ಊರ ಸುದ್ದಿಯನ್ನೆಲ್ಲಾ ಕೇಳಿ ನನ್ನೊಟ್ಟಿಗೇ ಇರು ಎಂದರೆ ತನ್ನ ಬೇಸಾಯದ ಬದುಕಿನ ವರಾತ ತೆಗೆದು ಹಿಂತಿರುಗುವ ಅವನನ್ನು ನೋಡಿ ಸಂಕಟವಾಗಿ ಅತ್ತುಬಿಡುತ್ತೇನೆ. ಹಾಗಾಗಿಯೇ ಈ ಸ್ಲಂಗಳಲ್ಲಿ ನನ್ನ ಬಾಲ್ಯವನ್ನು ಹುಡುಕಲು ಪ್ರಯತ್ನಿಸುತ್ತಿದ್ದೆ ಅನಿಸುತ್ತಿದೆ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ನನ್ನ ಅನೇಕ ಸಹೋದ್ಯೋಗಿಗಳಲ್ಲಿ ಇವರಿಗೆಲ್ಲಾ ಏನಾದರೂ ಮಾಡೋಣ ಎಂದು ಕೇಳಿದರೆ ಅವರೆಲ್ಲಾ ವೀಕೆಂಡು ಇರುವದು ಮೋಜು ಮಸ್ತಿಗೆ ಎಂದು ತಿಳಿದವರು. ನಾರ್ತಿಗಳದ್ದಂತೂ ಬೇರೆಯೇ ಲೋಕ. ಇಂತಹ ಹೊತ್ತಿನಲ್ಲಿಯೇ ನನಗೆ ಸಹಕಾರಿಯಾಗಿ ಬಂದವ ಅಂಶು. ಕಂಪನಿಯಲ್ಲಿ ನಾವಿಬ್ಬರೂ ಒಂದು ಪ್ರಾಜೆಕ್ಟನ್ನು ಒಟ್ಟಿಗೇ ಮಾಡುತ್ತಿದ್ದೆವು. ಏನೇ ಇರಲಿ ನಾವಾದರೂ ಏನನ್ನಾದರೂ ಮಾಡೋಣ ಎಂದು ಅಲ್ಲೆಲ್ಲಾ ಬಂದರೆ ಅಲ್ಲಿನವರಿಗೂ ಬದಲಾವಣೆಯ ಅವಶ್ಯವಿಲ್ಲವಾಗಿತ್ತು. ಆದರೂ ನಮ್ಮ ಪ್ರಾಜೆಕ್ಟ್ ಒಂದು ಯಶಸ್ಸಾಗಿ ಕಂಪನಿಯಿಂದ ಒಂದಿಷ್ಟು ಹಣ ಬಂದಾಗ ಅದೇ ರೇಲ್ವೆ ಹಳಿಯಿಂದ ಅನತಿ ದೂರದಲ್ಲಿ ಶೌಚಾಲಯ ಕಟ್ಟಿಸಲು ಬಯಸಿದಾಗ ಸಿಂಬಳತುಂಬಿದ ಇದೇ ಹೈಕಳು, ಅವರ ಅಮ್ಮಂದಿರು ಸಂತೋಷ ಪಟ್ಟಿದ್ದಂತೂ ಸತ್ಯ. ನಗರ ಸಭೆಯವರೋ ರೇಲ್ವೆ ಇಲಾಖೆಯವರೋ ಇದು ಅತಿಕ್ರಮಣವೆಂದು ಅದನ್ನು ಕೆಡವಲು ಬಂದಾಗ ಇದೇ ಹೆಣ್ಣುಮಕ್ಕಳೆಲ್ಲಾ ಸೇರಿ ಸ್ಟ್ರೈಕ್ ಮಾಡಿ ಅದನ್ನು ಉಳಿಸಿಕೊಂಡ ದಿನ ನನಗೆ ಮತ್ತು ಅಂಶುಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. + +ಆ ಶೌಚಾಲಯವನ್ನು ಶುಚಿಯಾಗಿಡಬೇಕೆಂದು ಅವರಲ್ಲಿ ಕರಾರು ಹಾಕಿದಾಗ ಅವರೆಲ್ಲಾ ಒಪ್ಪಿಕೊಂಡರೂ ವಾರಕಳೆಯುವಷ್ಟರಲ್ಲಿ ಬಂದು ನೋಡಿದರೆ ಗಬ್ಬೆದ್ದು ಹೋಗಿತ್ತು. ಅಂಶು ಮುಖ ಸಿಂಡರಿಸಿ ಇಂಗ್ಲೀಷಿನಲ್ಲಿ ಏನೋ ಗೊಣಗುತ್ತಿದ್ದ. ನನಗಂತೂ ಎಲ್ಲಿಂದ ರೋಷ ಬಂತೋ ತಪ್ಪು ಮಾಡಿದವರಂತೆ ತಲೆ ತಗ್ಗಿಸಿ ನಿಂತ ಆ ಹೆಣ್ಣುಮಕ್ಕಳ ಮನೆಯಿಂದ ಬಕೆಟನ್ನು ಇಸಿದುಕೊಂಡವಳೇ ಒಂದು ಕಸಬರಿಗೆಯನ್ನು ಸೆಳೆದು ಆ ಸಂಡಾಸನ್ನು ತೊಳೆಯಲು ಪ್ರಾರಂಭಿಸಿದೆ. ಮುಖಕ್ಕೆ ಕರ್ಚೀಪನ್ನು ಕಟ್ಟಿಕೊಂಡಿರಲಿಲ್ಲ. ಅಂಶುವೂ ಓಡೋಡಿ ನನ್ನ ಜೊತೆ ಬಂದಿದ್ದ. ನನ್ನ ಆವೇಶವನ್ನು ನೋಡಿದವರೇ, ಒಂದು ಕ್ಷಣ ಅಲ್ಲಿನ ನಿವಾಸಿಗಳೆಲ್ಲಾ ದಂಗಾಗಿ ಹೋಗಿದ್ದರು. ಎಲ್ಲ ಮುಗಿಸಿ ಮೌನವಾಗಿ ನಾವಿಬ್ಬರೂ ಅಲ್ಲಿಂದ ಹೊರಟರೆ ಇಡೀ ಸ್ಲಮ್ಮೇ ದಂಗು ಬಡಿದಂತೆ ನಿಂತಿತ್ತು. ನಿನಗೆ ಗೊತ್ತಾ ಹನೀ, ಸ್ಲಂ ಎಂದರೆ ಎಂತೆಂತಹ ರೌಡಿಗಳನ್ನು, ಸಮಾಜಘಾತುಕರನ್ನು ಹುದುಗಿಸಿಕೊಟ್ಟಂತಹ ಲೋಕವೆನ್ನುವದು. ಅವರೆಲ್ಲ ನನ್ನ ಈ ಕೆಲಸಕ್ಕೆ ದಂಗಾಗಿ ಹೋಗಿದ್ದರು. ತಲೆ ತಗ್ಗಿಸಿ ಕೈಮುಗಿದಿದ್ದರು. ಅದೇ ಹೊತ್ತಿನಲ್ಲಿ ಅಲ್ಲೇ ರಸ್ತೆಯ ಪಕ್ಕದ ಸ್ಲಮ್ಮೊಂದರಲ್ಲಿ ನೀನು ಕ್ಯಾಮರಾವೊಂದನ್ನು ಹಿಡಿದು ಆಲ್ಲಿನ ಮಕ್ಕಳ ಫೋಟೋ ವನ್ನು ತೆಗೆಯುತ್ತಿದ್ದೆ. ಗೂಢ ಲೋಕದ ಪರಮ ಸತ್ಯವನ್ನು ಅನಾವರಣಗೊಳಿಸುವ ನಿನ್ನನ್ನು ಕಂಡಾಗ ಸಿರಿಯಾದ ನಿರಾಶ್ರಿತ ಮಗುವಿನ ಫೋಟೋ, ಇಥಿಯೋಪಿಯಾದ ಬರಗಾಲದ ಬವಣೆಯನ್ನು ಫೋಟೋಕರಿಸಿ ಪ್ರಸಿದ್ಧಿಗೆ ಬಂದ ಸ್ಯುಡೋ ಚಳುವಳಿಗಾರರ ನೆನಪು ಬಂತು. + +ನಾನೇ ನಿನ್ನನ್ನು ಮಾತಾಡಿಸಿದೆ “ಇದೇನು ನಿಮ್ಮ ಕೆಲಸ” ನೀನು ಸುಮ್ಮನೆ ಕಿರುನಗೆಯಿಂದ ಮುಗುಳ್ನಕ್ಕು ನಿನ್ನ ಕೆಲಸ ಮುಂದುವರಿಸಿದೆ. ಆ ಮೇಲೆ ಆ ಮಕ್ಕಳಿಗೆಲ್ಲಾ ಐಸ್ಕ್ರೀಂ ಕೊಡಿಸಿದೆ. ಮುದುಕರನ್ನೆಲ್ಲ ಮಾತಾಡಿಸುತ್ತಾ ಅವರಿಗೆಲ್ಲಾ ಏನೋ ಔಷಧವನ್ನು ಕೊಟ್ಟೆ. ನೀನೂ ಸಹ ಅದೇ ರೀತಿ ಯಾವುದೋ ಪತ್ರಿಕೆಯವನೋ ಫ್ರೀ ಲಾನ್ಸರ್ ಫೋಟೋಗ್ರಾಫರನೋ ಎಂದು ತಿಳಿದು “ಇವರ ಬಡತನವೇ ನಿಮ್ಮಂತವರ ಬಂಡವಾಳ” ಎಂದು ನಿನ್ನನ್ನು ಹಂಗಿಸಿದೆ. ಉತ್ತರಿಸಲಿಲ್ಲ ನೀನು. ಅದೇ ಹೊತ್ತಿನಲ್ಲಿ ಬಂದ ಆ್ಯಂಬ್ಯೂಲೆನ್ಸ್ ನಲ್ಲಿಂದ ಇಳಿದ ಒಂದು ಮುದುಕನನ್ನು ನೀನೇ ಅನಾಮತ್ತಾಗಿ ಎತ್ತಿಕೊಂಡು ಅದೇ ಕೊಳಚೆಯಲ್ಲಿ ನಡೆದು ಗೂಡೊಂದರಲ್ಲಿ ಮಲಗಿಸಿ ಮತ್ತೆ ಕಾರಿಗೆ ಹೋಗಿ ಒಂದು ರಗ್ಗೊಂದನ್ನು ತಂದು ಹೊದೆಸಿ ಮಲಗಿಸಿದೆ. ಅಲ್ಲಿದ್ದವರ ಹತ್ತಿರ ಹಣಕೊಟ್ಟು ಆ ಮುದುಕನ ಆರೋಗ್ಯದ ಕುರಿತು ತಗೆದುಕೊಳ್ಳಬೇಕಾದ ವಿವರವನ್ನು ಹೇಳುತ್ತಿದ್ದೆ. “ಈವಯ್ಯಾ ಹಾಗೇ, ವಾರಕ್ಕೊಮ್ಮೆ ಬರುತ್ತಾರೆ. ಗತಿಯಿಲ್ಲದೇ ಸೀಕು ಗೀಕು ಆದವರನ್ನು ಆಸ್ಪತ್ರೆಗೆ ಸೇರಿಸಿ ಮತ್ತೆ ಮನೆಗೆ ತಂದು ಹಣ ನೀಡಿ ಹೋಗುತ್ತಾರೆ. ತಣ್ಣಗಿರಲಿ ತಾಯೀ ಈವಯ್ಯನ ಹೊಟ್ಟೆ” ಎಂದು ಅವರೆಲ್ಲ ಹರಸುತ್ತಿದ್ದರೆ ನಾನು ಮೌನವಾಗಿದ್ದೆ. ಕೊನೆಗೆ ಹೋಗುವಾಗ “ನಿಮ್ಮ ಕೆಲಸ ನಿಜಕ್ಕೂ Great, I admire you” ಎಂದು ಎಂದು ಹೊರಟಿದ್ದೆ. + +ಹನೀ,ರಜಾ ಅವಧಿಯಲ್ಲಿ ನಮ್ಮನಮ್ಮ ಕೆಲಸದಲ್ಲಿ ಬಿಜಿಯಾಗುತ್ತಿರುವ ಕಾಲದಲ್ಲೊಮ್ಮೆ ನಮ್ಮ ನಡುವೆ ಅನೇಕ ಮಾತುಕತೆಗಳಾಗುತ್ತಿತ್ತು. ಅಂಶು ಅದೂ ಇದು ಕೆಲಸ ಎಂದು ಬ್ಯುಸಿಯಾಗಿರುತ್ತಿದ್ದ. ನನ್ನೊಟ್ಟಿಗೆ ಬರುವದನ್ನು ಕಡಿಮೆ ಮಾಡುತ್ತಿದ್ದ. ಯಾಕೋ ಬೇರೆ ರೀತಿ ಸೇವೆ ಯಾಕೆ ಮಾಡಬಾರದು ಎನ್ನುತ್ತಿದ್ದ. ನಾನು ಮೊದಲಿನಿಂದಲೂ ನನ್ನ ಅಭಿಪ್ರಾಯಗಳನ್ನು ಯಾರ ಮೇಲೂ ಹೇರುತ್ತಿರಲಿಲ್ಲವಾದದ್ದರಿಂದ ಅವನಿಗೆ ಒತ್ತಾಯಿಸುತ್ತಿರಲಿಲ್ಲ. ನಿನ್ನದು ಇಂತಹದೇ ಒಂದು ಸ್ಲಮ್ಮು ಎಂದೇನೂ ಇರುತ್ತಿರಲಿಲ್ಲ. ಒಮ್ಮೊಮ್ಮೆ ಸ್ಮಶಾನ, ಇನ್ನೊಮ್ಮೆ ಇಸ್ಕಾನಿನ ಎದುರಿನ ಬಿಕ್ಷುಕರು, ಮಗದೊಮ್ಮೆ ಸರಕಾರೀ ಆಸ್ಪತ್ರೆ ಎಂದೆಲ್ಲ ಹುಡುಕುತ್ತಾ ಹೋಗುತ್ತಿದ್ದೆ. “ಏನೇ ಇದ್ದರೂ ಸಾಯಂಕಾಲದೊಳಗಾಗಿ ಸ್ಲಮ್ಮಿನಿಂದ ಹೊರಡಿ ಕುಡುಕರ ಕಾಟವಿರುತ್ತದೆ ಸುಮ್ಮನೆ ಯಾಕೆ ರಿಸ್ಕ್” ಎಂದಿದ್ದೆ. ಒಮ್ಮೆ ಸ್ಲಮ್ಮಿನ ಅಣ್ಣಮ್ಮ ನೀನು ಪ್ರತೀ ರಜೆಯಲ್ಲೂ ಸಾಯಂಕಾಲದ ಹೊತ್ತಿಗೆ ಇಲ್ಲಿಗೆ ಬಂದು ‘ನಾನು ಬಂದಿದ್ದೆನಾ, ಎಷ್ಟು ಹೊತ್ತಿಗೆ ಹೊರಟಳು ಎಂದು ವಿಚಾರಿಸುತ್ತಿದ್ದೆ’ ಎಂದಿದ್ದಳು. ಒಮ್ಮೆ ಅವರಲ್ಲಿ ಮಾತನಾಡುತ್ತಾ ಇರುವಾಗ ಹೊತ್ತಾಗಿ ಹೋಗಿತ್ತು. ನಿನ್ನ ಮಾತು ಜ್ಞಾಪಕಕ್ಕೆ ಬಂದು ಹೊರಡಬೇಕೆನ್ನುವದರಲ್ಲಿ ನಿನ್ನ ಕಾರು ಎದುರಾಗಿತ್ತು. ‘ಬನ್ನಿ ನಿಮ್ಮನ್ನು ನಿಮ್ಮ ಪೀಜಿ ಗೆ ಬಿಡುತ್ತೇನೆ’ ಎಂದಿದ್ದೆ. ಕಾರಿನಲ್ಲಿ ಕುಳಿತು ಬರುವಾಗ ಸಹಜವಾಗಿ ಎನ್ನುವಂತೆ ನನ್ನ ನಿನ್ನ ಪೂರ್ವಾಪರಗಳೆಲ್ಲದರ ವಿನಿಮಯವಾಯಿತು. ‘ಪ್ರತೀ ಆಸಕ್ತಿಯ ಹಿಂದೆಯೂ ಅನುಭವದ ಭೂತವಿರುತ್ತದೆ’ ಎಂದಿದ್ದೆ. ಸಿಲ್ಕ್ ಬೋರ್ಡಿನ ತಿರುವಿನಲ್ಲಿ ಸಾಗುತ್ತಿರುವಾಗ ಒಮ್ಮೆಲೇ “ಸ್ವಲ್ಪ ಮಾತಾಡೋಣ ಅನಿಸುತ್ತಾ ಇದೆ, ನಿಮ್ಮ ಅಭ್ಯಂತರವಿಲ್ಲದಿದ್ದರೆ…” ಎಂದ ನಿನ್ನ ಮಾತಿಗೆ ಒಪ್ಪಿಗೆ ಸೂಚಿಸಿದ್ದೆ. ಕತ್ತಲು ನಿಧಾನವಾಗಿ ಹೊದೆದುಕೊಳ್ಳುತ್ತಿತು. ದೂರದ ನಗರದ ಬೆಳಕಿನ ಪ್ರಭೆಯಲ್ಲಿ ಆಕಾಶದ ನಕ್ಷತ್ರಗಳೇ ಕಾಣಿಸುತ್ತಿರಲಿಲ್ಲ. ಕಾರನ್ನು ನಿಲ್ಲಿಸಿ ಮಾರ್ಗದ ಬದಿಯಲ್ಲಿರುವ ಸಾರದ ಮೇಲೆ ಕುಳಿತಾಗ ಮೌನವೇ ನಿನ್ನ ಧ್ವನಿಯಾಗಿತ್ತು. ನಾನು ಏನೂ ಎಂದು ನಿನ್ನ ಮುಖ ನೋಡಿದರೂ ತಲೆ ತಗ್ಗಿಸಿ ಕುಳಿತಿದ್ದೆ. ನಿನ್ನ ಬಳಿ ಸಾರಿ ಭುಜ ಹಿಡಿದು ಅಲುಗಾಡಿಸಿದರೆ ಒಮ್ಮೆಲೇ ಎಚ್ಚರಾದವನಂತೆ Will you please marry me ಎಂದಿದ್ದೆ. ಶಾಕ್ ಹೊಡೆದಂತಾಗಿ ನಾನು ಹಿಂದೆ ಸರಿದೆ. “ಯಾರೂ ಇಲ್ಲದ ನನ್ನ ಬದುಕಿಗೆ ನೀನು ಸಂಗಾತಿಯಾಗಬಹುದು” ಎಂದು ಕೇಳಿದೆ, “ಒಪ್ಪಿಗೆಯಿಲ್ಲದಿದ್ದರೆ no regret, ನಾವು ಸ್ನೇಹಿತರಾಗೇ ಇರೋಣ” ಎಂದವ ನನ್ನನ್ನು ಕಾರಿನಲ್ಲಿ ಕುಳಿಸಿಕೊಂಡು ಪೀಜಿಗೆ ಬಿಟ್ಟಿದ್ದೆ. + +ಇಳಿಯುವಾಗ ನಾಳೆ ಫೋನ್ ಮಾಡಲೇ ಎಂದಿದ್ದೆ. ಮಾತಾಡದೇ ನನ್ನ ಫೋನ್ ನಂಬರನ್ನು ನಿನಗೆ ಕೊಟ್ಟು ಬಂದವಳಿಗೆ ರಾತ್ರಿಯೆಲ್ಲಾ ನಿದ್ರೆ ಇಲ್ಲ. ಮದುವೆಯ ಬಗೆಗೆ ವಿಚಾರವನ್ನೇ ಮಾಡದಿದ್ದ ತಾನು ಈಗ ಹೀಗೆ ಧುತ್ತೆಂದು ಎದುರಾದ ವಿಷಯದ ಕುರಿತು ಆಲೋಚಿಸಲಾಗದಾಗಿದ್ದೆ. ಆದರೆ ನಿನ್ನ ಫೋನ್ ಆದಿನ ಸಂಜೆಯಾದರೂ ಬರದೇ ಇದ್ದಾಗ ಯಾಕೋ ತಡಬಡಾಯಿಸಿದ್ದೆ. ವಾರವಿಡೀ ಬರದೇ ಇದ್ದಾಗ ಶನಿವಾರ ಯಾವಾಗ ಬಂತು ಎಂದು ಕಾಯುತ್ತಾ ಸ್ಲಮ್ಮಿಗೆ ಓಡಿಹೋಗಿ ನಿನಗಾಗಿಯೇ ಕಾಯುತ್ತಿದ್ದೆ. ಎಂದಿನಂತೆ ಯಾವುದೋ ಆಂಬ್ಯುಲೆನ್ಸಿನ ಹಿಂದೆ ನೀನು ಬಂದಾಗ ಹಾಯ್ ಎಂದು ನಾನೇ ವಿಶ್ ಮಾಡಿದ್ದೆ. ನೀನು ಮಾತನಾಡದೇ ಇದ್ದರೂ ನಿನ್ನ ಕಣ್ಣು ನನ್ನಲ್ಲಿ ಉತ್ತರವನ್ನು ಹುಡುಕುತ್ತಿತ್ತು. ಯಾವ ಭಾವವೂ ಇಲ್ಲವೆಂದು ಭಾವಿಸಿದ ನಾನು ನಿನ್ನೊಟ್ಟಿಗೆ ಕಾರಿನಲ್ಲಿ ಕುಳಿತಾಗ ನಿನ್ನ ಕೈಹಿಡಿದು ಅದುಮಿದ್ದೆ. ನಮ್ಮ ನಿಶ್ಚಿತಾರ್ಥ ಅಲ್ಲೇ ಸ್ಲಮ್ಮಿನ ಘ್ಹಂ ಎನ್ನುವ ನೊಣಗಳ ಮಧ್ಯೆ ಆಗಿಹೋಗಿತ್ತು. ಹೆಸರಿಗಾಗಿ ನಾವು ಈ ಸ್ಲಮ್ಮಿನಲ್ಲಿ ಕೆಲಸ ಮಾಡುತ್ತಿಲ್ಲ. ಹಾಗಾಗೀ ನಮ್ಮಿಬ್ಬರ ಮಧ್ಯೆ ಕರೆಯಲು ಹೆಸರಿನ ಹಂಗೇಕೆ ಎಂದಿದ್ದೆ. ಹನೀ ಎಂದು ನಿನ್ನ ಕಿವಿಯಲ್ಲಿ ಪಿಸುಗುಟ್ಟಿದಾಗ ಇದೇ ನಿನಗೆ ನನ್ನ ಗುರುತಾಗಲಿ, ನೀನು ನನ್ನ ರಮಣೀ ಆದರೆ ಅಷ್ಟು ಉದ್ದಬೇಡ ‘ರಮೀ’ ಎನ್ನುತ್ತೇನೆ ಎಂದಿದ್ದೆ. + +ಹನೀ,ಅಂಶು ಏಕೋ ಸಪ್ಪಗಿದ್ದವ ಕೆಲದಿನಗಳಲ್ಲೇ ಅವನ ಮದುವೆಗೆ ನಗುನಗುತ್ತಲೇ ನಮ್ಮನ್ನು ದೂರದ ಕೋಲ್ಕೊತ್ತಾಕ್ಕೆ ಕರೆದಿದ್ದ. ನನ್ನನ್ನು ಎಷ್ಟೊಂದು ಪ್ರೀತಿಯಿಂದ ನೋಡಿಕೊಂಡಿದ್ದೆ ನೀನು. ನಮ್ಮಿಬ್ಬರ ಫಲವನ್ನು ಹೊತ್ತಾಗ ನೀನು ನನ್ನನ್ನು ತಬ್ಬಿಕೊಂಡ ರೀತಿ ನನ್ನ ಅಮ್ಮನನ್ನು ನೆನಪಿಸಿತ್ತು. ನಿನ್ನ ಎದೆಯಲ್ಲಿ ಅಪ್ಪ, ಊರು, ಅಜ್ಜಿ ಎಲ್ಲರನ್ನೂ ಮರೆತಿದ್ದೆ. ಆಸ್ಪತ್ರೆಯಲ್ಲಿ ಮುದ್ದಾದ ಮಗುವನ್ನು ನೋಡಿದಾಗ ಇದಕ್ಕೂ ಹೆಸರು ಬೇಡವಾ ಎಂದು ತಮಾಷೆ ಮಾಡಿದ್ದೆ. ನಿನ್ನಂತೆ ಕೂಲಾಗಿರುವ ಹೆಸರು ಬೇಕು ಎಂದರೆ, ನಿನ್ನ ಬಿಸಿಯುಸಿರಿನ ನೆನಪೂ ಅದಕ್ಕಿರಲೀ ಎಂದಿದ್ದೆ ನೀನು. ನೀನೇ ಆಯ್ಕೆ ಮಾಡಿದ ಹೆಸರು ‘ಮಿಹಿಕಾ’ ಎಂದು. ಮಂಜುಗಡ್ಡೆಯಂತೆ ಮೇಲೆ ತಂಪು ಒಳಗಡೆ ಬಿಸಿ ಎಂದ ನಿನ್ನ ಆಯ್ಕೆಗೆ ನಾನು ತಲೆಬಾಗಿದ್ದೆ. ನಿನ್ನ ಪ್ರೀತಿಯೆಲ್ಲ ಈಗ ನಾಟಕವಾಗಿಯೇ ಕಾಣುತ್ತಿದೆ. ನೀನು ಅವಳ ಹತ್ತಿರ ಆಗಾಗ ಭೇಟಿಯಾಗುವ ವಿಷಯವನ್ನು ಅಂಶು ನನ್ನಲ್ಲಿ ಪಿಸುಗುಡುತ್ತಿದ್ದ. ನನ್ನ ಸಂಸಾರ ಒಡೆಯಬಾರದಂತೆ ಅವನೇ ಬುದ್ಧಿವಾದ ಹೇಳುತ್ತಿದ್ದ. ನನ್ನ ಆವೇಶವನ್ನು ಕಡಿಮೆಮಾಡಿ ಮನೆಗೆ ಬಾರದಿದ್ದರೆ ನಾನು ಸ್ಪೋಟವಾಗಿಬಿಡುವ ಆ ಕಾರಣಕ್ಕೆ ಮಿಹಿಕಾಳ ಭವಿಷ್ಯದ ಕುರಿತು ಚಿಂತಿಸುತ್ತಿದ್ದೆ. ಇಂತಹ ಹೊತ್ತಿನಲ್ಲಿ ಒಮ್ಮೆ ಆತ ಕಾರಿನಲ್ಲಿ ಮನೆಯ ತಿರುವಿನಲ್ಲಿ ನಿಲ್ಲಿಸಿ ಇಳಿದು ಹೊರಟವಳನ್ನು ಕೈ ಹಿಡಿದು “ಏನೇ ಆದ್ರೂ ಕದ್ದು ತಿಂದದಕ್ಕೆ ರುಚಿ ಜಾಸ್ತಿ ಅಲ್ಲವಾ” ಎಂದು ಕೆನ್ನೆಯನ್ನು ತಟ್ಟಿದ. ಯಾಕೋ ಪಿಚ್ಚೆನಿಸಿತು. ನಿನ್ನ ಹೆಂಡತಿ ಹೀಗೆ ಕದ್ದು ತಿಂದರೆ ಏನೆನಿಸುತ್ತದೆ ಎಂದಿದ್ದಕ್ಕೆ “ಕಳ್ಳ ಪೋಲಿಸನಿಗೆ ಸಿಕ್ಕಿದರೆ ಜೈಲೇ ಗತಿ” ಎಂದು ಕಾರನ್ನು ಓಡಿಸಿದ್ದ. ಅದರ ಧೂಳು ನನ್ನ ಮುಖಕ್ಕೆ ರಾಚಿತ್ತು. + +ಹನೀ,ರಾತ್ರಿಯೆಲ್ಲ ನಿದ್ರೆಯಿಲ್ಲದೇ ಹೊರಳಾಡಿದೆ. ಬಳಸಲು ಬಂದ ನಿನ್ನನ್ನು ದೂರ ತಳ್ಳಿದ್ದು ನನ್ನೆದೆಯಲ್ಲಿನ ಜ್ವಾಲಾಮುಖಿಯಲ್ಲಿ ನೀನು ಅಪ್ಪಚ್ಚಿಯಾಗಬಾರದೆಂದು. ಮಿಹಿಕಾ ನಿದ್ರಿಸುವಾಗಲೆಲ್ಲ ನಮ್ಮಿಬರ ಕೈಗಳನ್ನು ತನ್ನ ಮುಖದಮೇಲೆ ಇರಿಸಿ ನಿದ್ರಿಸುತ್ತಿದ್ದಳು. ಅವಳನ್ನು ಆ ಸ್ಥಿತಿಯಲ್ಲಿ ದಿಟ್ಟಿಸಿ ನೋಡಿದಾಗ ಅಳುವೇ ಬಂತು. ಅಂಶುವಿನ ಮಾತು ನೆನಪಿಗೆ ಬಂದು ದುಃಖವೇ ಉಮ್ಮಳಿಸಿತು. ಅವನ ಚರ್ಯೆಗಳೆಲ್ಲದರ ಹಿಂದೆ ಏನೋ ಇರುವ ಸಂಚು ಕಂಡಿತು. ನಿನ್ನ ಮೇಲಿನ ನನ್ನ possessiveness ಅನ್ನು ಅವ ಚನ್ನಾಗಿಯೇ ಉಪಯೋಗಿಸಿಕೊಂಡಿದ್ದ, ನಿನ್ನ ಮೋಸಕ್ಕೆ ನನ್ನದೂ ಮೋಸವೇ ಉತ್ತರವಾಗಬೇಕೆ. ನನ್ನ ಅರಿಯದ ಕಂದಮ್ಮ ನಾಳೆ ತಾನೂ ಹೀಗೆ ಮೋಸದ ಹಾದಿಯಲ್ಲಿ ಹೆಜ್ಜೆಯಿಟ್ಟರೆ ಅನಿಸಿತು. ನಿಧಾನಕ್ಕೆ ಎದ್ದು ನನ್ನ ಹತ್ತಿರಕ್ಕೆ ಬಂದು ತಬ್ಬಿಕೊಂಡು ತಲೆನೇವರಿಸುತ್ತ “ರಮೀ ಏನಾಗಿದೆ, ಯಾಕೆ ಗುಟ್ಟು ನಮಗೆ ನಮ್ಮಿಬ್ಬರನ್ನು ಬಿಟ್ಟು ಯಾರಿದ್ದಾರೆ” ಎಂದ ನಿನಗೆ you cheater ಎಂದು ಕೆನ್ನೆಗೆ ಥಟಾರ್ ಅಂತ ಬಾರಿಸಿಬಿಟ್ಟೆ. ಜೋರಾಗಿಯೇ ಬಿದ್ದಿರಬೇಕು. ನೀನು ಒಮ್ಮೆ ಮಂಚದ ಮೂಲೆಯಲ್ಲಿ ಮುಖ ತಿರುಗಿಸಿ ಬೆಡ್ ಶೀಟಿನ ತುದಿಯಿಂದ ಕಣ್ಣುಜ್ಜಿಕೊಳ್ಳುವದು ಕೆಂಪನೆಯು ತಣ್ಣಗಿನ ಬೆಳಕಿನಲ್ಲಿ ಕಾಣಿಸಿತು. ಯಾಕೋ ಮನಸ್ಸು ತಡೆಯದಾಯಿತು ನಾನೇ ನಿನ್ನನ್ನು ಅಪ್ಪಿಕೊಂಡು “ನನ್ನನ್ನು ಕ್ಷಮಿಸೋ” ಎಂದದ್ದಕ್ಕೆ ನೀನು ಮಿಹಿಕಾಳ ಮತ್ತು ನನ್ನ ತಲೆ ಹಿಡಿದು ನೀನು ಒಮ್ಮೆಲೇ ಭೋರೆಂದು ಅತ್ತು ಬಿಟ್ಟೆ. ನಿನ್ನ ಎದೆಯ ಬಡಿತ ಇವತ್ತು ಆಪ್ಯಾಯವೆನಿಸಿದಂತಾಗಿ ಒಮ್ಮೆಲೆ ನನ್ನನ್ನು ನಾನೇ ಅವನತಗೊಳಿಸಿಕೊಂಡೆ. + +ಹನೀ,ವಿಚಾರಿಸು, ನಮ್ಮ ಬದುಕಿನಲ್ಲಿ ಈ ರೀತಿ ಆಗಬೇಕಿತ್ತಾ, ನೀನು ಈಗಲಾದರೂ ನನ್ನ ಹನಿಯಾಗು. ಪೆಟ್ಟಿಗೆಯಲ್ಲಿನ ಜೇನು ಹನಿಯನ್ನು ಸಂಗ್ರಹಿಸಿದ್ದು ಪರರ ಪಾಲಾದರೂ ಮತ್ತೆ ಮತ್ತೆ ಹನಿಯನ್ನು ಸಂಗ್ರಹಿಸುವಂತೆ ನಾವ್ಯೇಕೆ ಹೊಸ ಬಾಳನ್ನು ಕಟ್ಟಬಾರದು ಹೇಳು. ನನ್ನ ಮನಸ್ಸಿನಲ್ಲಿರುವದನ್ನು ನಿನ್ನಲ್ಲಿ ತೋಡಿಕೊಂಡಿದ್ದೇನೆ. ಮುಂದಿನ ನಿರ್ಧಾರ ನಿನ್ನದು. + +ನಿನ್ನರಮೀ + +********ಪತ್ರ ಎರಡು:- + +ಪ್ರೀತಿಯ ……. + +ಏನಂತ ಕರೆಯಲೀ ನಿನ್ನನ್ನ ಅರ್ಥವೇ ಆಗುತ್ತಿಲ್ಲ. ನನ್ನ ಬದುಕಿನಲ್ಲಿ ನನ್ನದಲ್ಲದ ತಪ್ಪಿಗೆ ಈ ಶಿಕ್ಷೆಯನ್ನು ಕೊಟ್ಟ ದೇವರನ್ನ ನಾನು ಅವನಿಲ್ಲವೆಂದು ಒಪ್ಪಲಾರೆ, ಅವನಿದ್ದೇ ನಾನು ಅವನನ್ನು ದ್ವೇಷಿಸುತ್ತಿರಬೇಕು. ಅವನ ವಿಷಯವೇಕೆ ಈಗ ಹೇಳು. + +ಹೌದು, ನನ್ನ ಗಂಡ ನನಗೆ ಮೊದಲು ಮೈತ್ರಿಯನ್ನ ಕೊಟ್ಟ. ಆಮೇಲೆ ಈ ರೋಗವನ್ನೂ ಕೊಟ್ಟು ಹೋದ. ನೀನು ಆ ದಿನ ಸಿಗದೇ ಇದ್ದಿದ್ದರೆ ನಾನು ಮೈತ್ರಿಯೊಟ್ಟಿಗೇ ಆ ಹೊಳೆಯ ಪಾಲಾಗುತ್ತಿದ್ದೆ. ನನ್ನ ಅಪ್ಪ ಕಲಿಯುವಾಗ ನಿನಗೆ ಮಾಡಿದ ಯಾವುದೋ ಸಣ್ಣ ಸಹಾಯವನ್ನು ನೆನಪಿಸಿಕೊಂಡು ನೆರವಿನ ಹಸ್ತ ಚಾಚಿದೆ. ಮೈತ್ರಿಯ ಮುಖ ನೋಡಿದಾಗ ಆಕೆಗೊಂದು ಆಸರೆಯನ್ನು ನಿನ್ನಲ್ಲಿ ಕಂಡೆ. ಅವಳ ಬದುಕು ಭದ್ರವಾಗಿರಲೀ ಎನ್ನುವದೇ ನನ್ನ ಆಸೆ. ಒಳೊಗೊಳಗೇ ಲಡ್ಡಾಗಿರುವ ಗಿಡ ನಾನು, ಯಾವಾಗ ಬೀಳುತ್ತೇನೆಂದು ಗೊತ್ತಿಲ್ಲ. + +ಮೊನ್ನೆ ಲ್ಯಾಬಿನಿಂದ ಅಂತಿಮ ರಿಪೋರ್ಟ್ ಬಂತು. ಮೈತ್ರಿಯ ಕುರಿತು ಏನೂ ತೊಂದರೆ ಇಲ್ಲವಂತೆ. ಈ ಮೂರುವರ್ಷದಲ್ಲಿ ಮೊದಲ ಬಾರಿ ನಾನು ಹರ್ಷದಿಂದ ಕುಣಿದಾಡಿದೆ ಗೊತ್ತಾ. ಹೆದರಿಕೆ ಮಾರಾಯಾ, ಎಲ್ಲಿಯಾದರೂ ನನ್ನಿಂದ ಅವಳಿಗೆ ಮತ್ತೆ ತಾಗಿದರೆ! ಎರಡುದಿನ ಪೂರ್ತಿ ವಿಚಾರ ಮಾಡಿ ಈ ತೀರ್ಮಾನ ಕೈಗೊಂಡೆ. ದಯವಿಟ್ಟು ಈ ಪತ್ರವನ್ನು ನಿನ್ನ ರಮೀಯೊಬ್ಬಳನ್ನು ಬಿಟ್ಟು ಯಾರಿಗೂ ತೋರಿಸಬೇಡ. ನನ್ನೊಳಗಿನ ಈ ದರಿದ್ರ ರೋಗ ನನ್ನೊಡನೇ ಮುಚ್ಚಿಹೋಗುವ ಉಪಾಯವೆಂದರೆ ಅದು ಈ ನಗರದಲ್ಲಿ ವೇಗವಾಗಿ ಚಲಿಸುವ ಯಾವುದೋ ಬಸ್ಸಿಗೆ ನನ್ನ ಸ್ಕೂಟಿಯನ್ನು ಅಪ್ಪಳಿಸುವದು. ನನ್ನ ಪಾಲಿಗೆ ಸಾವು ಎನ್ನುವದು ಈಗ ಕರ್ತೃ, ಕರ್ಮಗಳಿಲ್ಲದ ಕ್ರಿಯೆ ಮಾತ್ರ. + + + +ಮೈತ್ರಿಯ ಬದುಕಿಗಾಗುವಷ್ಟು ಹಣಕಾಸಿಗೆ ಅವಳನ್ನು ಹುಟ್ಟಿಸಿದವನ ಆಸ್ತಿ ಇದೆ. ದಯವಿಟ್ಟು ನೀನೆ ಕೋರ್ಟಿನಲ್ಲಿ ಬೇಕಾದ ಕಾಗದ ಪತ್ರ ತಯಾರಿಸಿ ಅವಳ ಬದುಕಿಗೆ ಒಂದು ನೆಲೆ ಕಲ್ಪಿಸು. ಅವಳಿಗೆ ಅವಳಮ್ಮನಲ್ಲಿ ಇರುವ ಪ್ರೀತಿ ಮಸುಕಾಗದಂತೆ ನೋಡಿಕೋ. + +ನಿನ್ನನ್ನೇ ನಂಬಿದಮೈತ್ರಿಯ ಅಮ್ಮ + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_347.txt b/Kenda Sampige/article_347.txt new file mode 100644 index 0000000000000000000000000000000000000000..98ea85c92cba06481d003f47ceff4d076f5421e1 --- /dev/null +++ b/Kenda Sampige/article_347.txt @@ -0,0 +1,49 @@ + + +ದೀರ್ಘ ಕಾಲ ಕಾಡಿನಲ್ಲೇ ಇದ್ದ ನಮಗೆ ಸಾಕಾನೆಗಳಾಗಲಿ, ಮಾವುತರಾಗಲಿ ನಮ್ಮ ಆಸಕ್ತಿಯನ್ನು ಕೆರಳಿಸಿರಲಿಲ್ಲ. ಕಾಡಿನಲ್ಲಿ ಆನೆಗಳ ಸಂಕೀರ್ಣ ಬದುಕನ್ನು ಸ್ವಲ್ಪಮಟ್ಟಿಗೆ ಅರ್ಥಮಾಡಿಕೊಂಡಿದ್ದರ ಹಿನ್ನೆಲೆ ಇದಕ್ಕೆ ಕಾರಣವಿರಬಹುದು. + +ಚರಿತ್ರೆಯುದ್ದಕ್ಕೂ ಮಾನವ ಈ ಸಂಕುಲವನ್ನು ನಿರಂತರವಾಗಿ ಶೋಷಿಸಿದ. ಕ್ರಿ. ಪೂ. 300ರಿಂದಲೂ ಇದಕ್ಕೆ ದಾಖಲೆಗಳಿವೆ. ಬಹುಶಃ ಅವು ಕೆಲಸ ನಿರ್ವಹಿಸುವ ಸಾಮರ್ಥ್ಯಕ್ಕೋ ಅಥವಾ ಬುದ್ಧಿವಂತಿಕೆಗೋ ಅವುಗಳನ್ನು ಬಂಧಿಯಾಗಿಸಿದ. ಯುದ್ಧಗಳೆಂಬ ಕ್ರೌರ್ಯ ಚಟುವಟಿಕೆಗಳಲ್ಲಿ ಆನೆಗಳನ್ನು ಬಳಸಿದ. ಮರಮುಟ್ಟುಗಳನ್ನು ದೋಚುವ ಪ್ರಯತ್ನದಲ್ಲಿ ಆನೆಗಳು ಬದುಕುವ ನೆಲೆಯನ್ನು ಆನೆಗಳಿಂದಲೇ ಧ್ವಂಸ ಮಾಡಿದ. + +(ನಾಗರಾಜ್ ನವೀಮನೆ) + +ಈ ಎಲ್ಲಾ ಕರಾಳ ಅಧ್ಯಾಯಗಳನ್ನು ತಿಳಿದಿದ್ದರಿಂದ ಸಾಕಾನೆಗಳ ಬಗ್ಗೆಯಾಗಲಿ, ಮಾವುತರ ಬಗ್ಗೆಯಾಗಲಿ ನಮಗೆ ಹೆಚ್ಚು ಆಸಕ್ತಿ ಮೂಡಿರಲಿಲ್ಲ. ಆದರೆ, ಮಾವುತ ಮಾರ ಮತ್ತು ಮುದುಮಲೈ ಆನೆಯನ್ನು ಹತ್ತಿರದಿಂದ ಗಮನಿಸುತ್ತಿದ್ದಾಗ ನಮ್ಮ ನಿಲುವು ಸ್ವಲ್ಪ ಬದಲಾಯಿತು. ಮುದುಮಲೈ ಆನೆ ತಮಿಳುನಾಡಿನ ಮುದುಮಲೈ ಕಾಡಿನ ಸಾಕಾನೆ ಶಿಬಿರದಲ್ಲಿದ್ದ ಒಂದು ಅಪರೂಪದ ಆನೆ. ಜೇನುಕುರುಬ ಮಾರ ಅದರ ಮಾವುತನಾಗಿದ್ದ. ಮಾರನ ಆಜ್ಞೆಗಳನ್ನು ಅದು ಸ್ಪಷ್ಟವಾಗಿ ಅರ್ಥ ಮಾಡಿಕೊಳ್ಳುತ್ತಿತ್ತು ಮತ್ತು ಪಾಲಿಸುತ್ತಿತ್ತು. ಮಾರನಿಗೂ ಆ ಆನೆಯ ಜಾಣತನ ಮತ್ತು ಸಾಮರ್ಥ್ಯದ ಅರಿವಿತ್ತು. + +ತನ್ನ ಆನೆಯನ್ನು ನಿಯಂತ್ರಿಸಲು ಆತ ಎಂದೂ ಅಂಕುಶವನ್ನು ಬಳಸುತ್ತಿರಲಿಲ್ಲ. ತನ್ನ ಸಂಜ್ಞೆಯನ್ನು ಆನೆಗೆ ತಿಳಿಸಲು ಸಣ್ಣನೆಯ ಬೆತ್ತದ ಕಡ್ಡಿಯನ್ನು ಮಾತ್ರ ಬಳಸುತ್ತಿದ್ದ. ಅವರಿಬ್ಬರ ವಿಚಿತ್ರ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟವಾಗಿತ್ತು. + +ಒಮ್ಮೆ ಮಾರ ವಲಯ ಅರಣ್ಯಾಧಿಕಾರಿ ಕಚೇರಿಯ ಬಳಿ ತನ್ನ ಆನೆಯೊಂದಿಗೆ ನಿಂತಿದ್ದ. ಅಲ್ಲಿ ಇನ್ನು ಹಲವು ಮಾವುತರು ತಮ್ಮ ಆನೆಗಳೊಂದಿಗೆ ಬಂದಿದ್ದರು. ಶಾಲೆಗೆ ರಜೆ ಇದ್ದುದರಿಂದ ಅಧಿಕಾರಿಯ ಮಗನು ಊರಿನಿಂದ ಬಂದಿದ್ದ. ಹುಲ್ಲಿನ ಮೈದಾನದಂತಿದ್ದ ಸ್ಥಳದಲ್ಲಿ ಆತ ಫುಟ್ಬಾಲ್ ಒದೆಯುತ್ತಾ ಆಟವಾಡುತ್ತಿದ್ದ. ಒದ್ದ ಚೆಂಡು ಆನೆಗಳ ಬಳಿ ಹೋದಾಗ ಬೆಚ್ಚುತ್ತಿದ್ದ. ಅವುಗಳನ್ನು ಕಂಡು ಆನಂದಿಸುತ್ತಿದ್ದ. ಆದರೆ, ಆನೆಗಳು ಮಾತ್ರ ತಾಳ್ಮೆಯಿಂದ ನಿಂತಿದ್ದವು. + +ಮಾರ ಸಂಬಳ ಹಿಡಿದು ಅಧಿಕಾರಿಯ ಕಚೇರಿಯಿಂದ ಹೊರಬಂದ. ಅಧಿಕಾರಿಯೊಂದಿಗೆ ಏನು ಕಿರಿಕಿರಿಯಾಗಿತ್ತೋ ಗೊತ್ತಿಲ್ಲ. ಮಾರ ಸಿಟ್ಟಿನಲ್ಲಿದ್ದ. ಅಷ್ಟರಲ್ಲಿ ಹುಡುಗ ಒದ್ದ ಚೆಂಡು ಮುದುಮಲೈ ಆನೆಯ ಬಳಿಗೆ ಉರುಳಿ ಬಂತು. ಮಾರ ಮುದುಮಲೈನತ್ತ ನೋಡಿದ. ಮರುಕ್ಷಣದಲ್ಲಿ ಮುದುಮಲೈ ಆನೆ ತನ್ನ ಬೃಹದಾಕಾರದ ಪಾದವನ್ನು ಉರುಳುತ್ತಿದ್ದ ಚೆಂಡಿನ ಮೇಲೆ ಮೃದವಾಗಿ ಊರಿತು. ಅನಂತರ ಮಾರನತ್ತ ನೋಡಿದಂತಾಯಿತು. ಚೆಂಡು ಸಿಡಿದು ಹಾಳೆಯಂತೆ ಅಪ್ಪಚ್ಚಿಯಾಗಿ ಮಲಗಿತ್ತು. ಬಾಲಕ ಅಳಲು ಪ್ರಾರಂಭಿಸಿದ. + +(ಕೃಪಾಕರ ಸೇನಾನಿ) + +ಆನೆ ಮತ್ತು ಮಾವುತನ ನಿಗೂಢ ಸಂಬಂಧಗಳನ್ನು ತಿಳಿಸಲು ಈ ಘಟನೆಯನ್ನು ಹೇಳಬೇಕಾಯಿತು. ಪತ್ರಕರ್ತ ಮಿತ್ರ ನಾಗರಾಜ್ ನವೀಮನೆ ಈ ಪುಸ್ತಕದಲ್ಲಿ ಸಾಕಾನೆ ಮತ್ತು ಮಾವುತರ ಬದುಕು ಹಾಗೂ ಒಡನಾಟವನ್ನು ಚಿತ್ರಿಸಿದ್ದಾರೆ. ಅಷ್ಟೆ ಅಲ್ಲದೆ; ಆನೆ ಡಾಕ್ಟರ್, ಆನೆ ಡಾಕ್ಯುಮೆಂಟರಿ ಮತ್ತು ಇನ್ನಿತರ ವಿವರಗಳನ್ನು ದಾಖಲಿಸುತ್ತಾ ಹೋಗುತ್ತಾರೆ. ಅವರ ಬರವಣಿಗೆಯಲ್ಲಿ ಕಳಕಳಿ ಇದೆ. ವ್ಯವಹಾರಿಕ ಸಮಾಜದ ಅರಿವಿಗೆ ಬಾರದ ಇಲ್ಲಿನ ಅನೇಕ ಸಂಗತಿಗಳು ಓದುಗರನ್ನು ವಿಸ್ಮಯಗೊಳಿಸಬಹುದು. ನೀರಸವಾಗಬಹುದಾದ ಸಂಗತಿಯನ್ನು ಸ್ವಾರಸ್ಯಕರವಾಗಿ ಬರೆದಿದ್ದು, ವನ್ಯಜೀವಿಯೆಡೆಗಿನ ಅವರ ಪ್ರೀತಿ, ಕಾಳಜಿ ಹೀಗೆ ಮುಂದುವರಿಯಲಿ. + +********************** + +ಆನೆ ಮತ್ತು ಮೈಸೂರು + +`ಯಾಕೋ ಕೊಂಚ ಸೊರಗಿದ್ದಾನಲ್ಲ ಅರ್ಜುನ’ + +`ಮೊನ್ನೆ ಬಂದಾಗ ಇದ್ದುದಕ್ಕಿಂತ ಈಗ ಚೆನ್ನಾಗಿ ಆಗಿದ್ದಾನೆ ಬಿಡು’ + +`ಯಾಕೋ ಈಶ್ವರನ ಮುಖ ಅಷ್ಟು ಶಾಂತವಾಗಿಲ್ಲ. ಈ ಸದ್ದುಗದ್ದಲಕ್ಕೆ ಅವನಿನ್ನೂ ಹೊಂದಿಕೊಂಡಿಲ್ಲ ಅನ್ನಿಸುತ್ತೆ.’ + +– ದಸರಾ ಆನೆಗಳ ಬಗೆಗೆ ಮೈಸೂರಿನ ಮನೆಗಳಲ್ಲಿ ಕೇಳಿಬರುವ ಮಾತುಗಳಿವು. ಮೈಸೂರಿಗರಿಗೆ ಆನೆಗಳೆಂದರೆ ಹೀಗೆ, ಮನೆ ಮಕ್ಕಳ ಹಾಗೆ. ಮನೆಗೆ ಬಂದ ಕರುಳುಬಳ್ಳಿಯ ಹಾಗೆ. ನಮ್ಮದೇ ಮನೆಯ ಹುಡುಗರೇನೋ ಎಂಬಂತೆ ಆನೆಗಳ ನಡೆ, ಮನಃಸ್ಥಿತಿ ಎಲ್ಲವನ್ನೂ ಗಮನಿಸಬೇಕು, ಕಾಳಜಿಯ ಮಾತುಗಳನ್ನು ಆಡಬೇಕು. ಇದು ಇಂದು ನಿನ್ನೆಯ ಮಾತಲ್ಲ, ಹಲವು ವರ್ಷಗಳಿಂದ ನಡೆದುಬಂದಿರುವ ರೂಢಿ. ಪ್ರತಿ ವರ್ಷವೂ ದಸರಾ ನೆಪದಲ್ಲಿ ಮೈಸೂರಿಗೆ ಬರುತ್ತಾರೆ ಈ ಮುದ್ದಾದ ನೆಂಟರು. ಹೂವಾಡಗಿತ್ತಿಯಿಂದ ಹಿಡಿದು ಟೀ ಅಂಗಡಿ ವ್ಯಾಪಾರಿ, ರಿಕ್ಷಾ ಚಾಲಕ, ದಾರಿಯಲ್ಲಿ ವಾಕಿಂಗ್ ಹೋಗುತ್ತಿರುವ ನಾಗರಿಕರು… ಎಲ್ಲರನ್ನೂ ಮೋಡಿ ಮಾಡುತ್ತಾರೆ. + + + +ಈ ನೆಂಟರನ್ನು ನೋಡಲೆಂದೇ ಎದುರು ಮನೆಯ ಆ ತಾತ ತಿಂಗಳಿಂದ ದಿನವೂ ಅದೇ ಸಮಯಕ್ಕೆ ಮನೆಯಿಂದ ಹೊರಬಂದು ನಿಲ್ಲುತ್ತಾರೆ. ಅವರಷ್ಟೇ ಅಲ್ಲ; ಪಕ್ಕದ ಬೀದಿಯ ಅಜ್ಜಿ, ಹಿಂದಿನ ರಸ್ತೆಯ ಅಕ್ಕ, ಎಲ್ಲಾ ರಸ್ತೆಗಳ ಮಕ್ಕಳು ಮನೆ ಮುಂದೆ ಬಂದು ನಿಲ್ಲುತ್ತಿದ್ದಾರೆ. ಕಾರಣವಿಷ್ಟೆ, ಆನೆಗಳ ಸಾಲು ಬರುತ್ತಿದೆ. ನೋಡಬೇಕು, ಕಣ್ತುಂಬಿಕೊಳ್ಳಬೇಕು. ಮೈಸೂರಿಗರಿಗೆ ದಸರಾ ಎಂದರೆ ಎಷ್ಟು ಪ್ರೀತಿಯೋ ಆನೆಗಳ ಮೇಲೂ ಅಷ್ಟೇ ಮೆಚ್ಚು. ಆನೆಗಳು ಸಾಲುಸಾಲಾಗಿ ನಗರದ ಬೀದಿಗಳಲ್ಲಿ ತಾಲೀಮು ಮಾಡುವಾಗ ಕಣ್ತುಂಬಿಕೊಳ್ಳದವರೇ ಇಲ್ಲವೇನೋ. ಒಂದರ್ಥದಲ್ಲಿ ದಸರಾದ ಸಂಭ್ರಮ ಪಸರಿಸುವ ಸಾಂಸ್ಕೃತಿಕ ರಾಯಭಾರಿಗಳು ಇವರು. + +ಆನೆಗಳು ಮತ್ತು ಮೈಸೂರಿಗೆ ಇರುವ ಸಂಬಂಧವೇ ಅಂತಹದ್ದು. ಇಲ್ಲಿನ ನಿವಾಸಿಗಳಿಗಷ್ಟೆ ಅಲ್ಲ, ಪ್ರವಾಸಿಗರಿಗೂ ಆನೆಗಳಿಗೂ ಅನುಪಮ ನಂಟು. ರಾಜ್ಯದ ಮೂಲೆಮೂಲೆಯಲ್ಲಿ ಕುಳಿತು ಟಿವಿ, ಪತ್ರಿಕೆ ನೋಡುವವರಿಗೆಲ್ಲರಿಗೂ ಈ ಆನೆಗಳ ಚಿತ್ರ ಕಂಡರೆ ಏನೋ ಖುಷಿ. ಮೈಸೂರು ಅಂದ್ರೆ ರಾಜರು. ರಾಜರು ಅಂದರೆ ಅರಮನೆ. ಅರಮನೆ ಅಂದರೆ ದಸರಾ. ದಸರಾ ಅಂದ್ರೆ ಜಂಬೂಸವಾರಿ. ಜಂಬೂಸವಾರಿ ಅಂದ್ರೆ ಆನೆಗಳು. ಹೀಗೆ ಯಾವ ಬಿಂದುವಿನಿಂದ ಮೈಸೂರನ್ನು ನೋಡಿದರೂ ಅದು ಸುತ್ತುವ ಪಥದಲ್ಲಿ ಆನೆಗಳು ಎದುರುಗೊಳ್ಳುತ್ತವೆ! ಎಲ್ಲಾ ಕಾಲಕ್ಕೂ ನಮ್ಮನ್ನು ಕಾಡುತ್ತವೆ! + +ಕನ್ನಡಿಗರ ಪಾಲಿಗೆ ಇವುಗಳು ಕೇವಲ ಪ್ರಾಣಿಗಳಲ್ಲ, ನಮ್ಮ ಸಂಸ್ಕೃತಿ, ಐಕ್ಯತೆ ಸಾರುವ ಪ್ರತಿರೂಪಗಳು. ಮನುಷ್ಯರಂತೆ ಹೆಸರುಳ್ಳ ಪಾತ್ರಗಳು. ನಮಗೆ ಈ ಆನೆಗಳ ಸಾಲಿನಲ್ಲಿ ಮಹಾಭಾರತದ ಪಾತ್ರಗಳ ಹೆಸರಿರುವ ಆನೆಗಳು ಕಾಣಸಿಗುತ್ತವೆ. ಬಲರಾಮ, ಅರ್ಜುನ, ಅಭಿಮನ್ಯು, ಭೀಮ ಇತ್ಯಾದಿ. ಮೇರಿ, ಸರಳ ಎಂಬ ಹೆಸರಿನ ಆನೆಗಳೂ ಇವೆ. ಮಾವುತರು, ಕಾವಾಡಿಗರು ಬಹುಪಾಲು ಗಿರಿಜನರು ಮತ್ತು ಮುಸ್ಲಿಮರು. ಹಾಗಾಗಿ ಜಾತ್ಯತೀತ ಭಾವನೆಗಳನ್ನು ಆನೆಗಳು ಸಾರುತ್ತವೆ. ಅದಕ್ಕೆ ಹಿರಿಯರು ಹೇಳುವುದು- ಆನೆಗಳಿಲ್ಲದೆ ಮೈಸೂರನ್ನು ಊಹಿಸಿಕೊಳ್ಳುವುದು ಕಷ್ಟ ಎಂದು! + + + +`ಇದು 60 ವರ್ಷದ ಹಿಂದಿನ ನೆನಪು. ಅರಮನೆ ಆನೆಗಳು ರಸ್ತೆಯ ಮೇಲೆ ಬರುತ್ತಿದ್ದರೆ ನಮಗೆ ಮಹಾರಾಜರೇ ಬರುತ್ತಿರುವಂತೆ ಭಾಸವಾಗುತ್ತಿತ್ತು. ರಾಜಗಾಂಭೀರ್ಯದಿಂದ ಆನೆಗಳು ಬರುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಸೊಗಸು. ಆನೆಗಳಿಗೆ ಏನಾದರೂ ಪೆಟ್ಟಾಯಿತು ಎಂಬ ವಾರ್ತೆ ಅರಮನೆ ಅಂಗಳದಿಂದ ಬಂದರೆ ನಮಗೆ, ನಮ್ಮ ಮನೆ ಮಕ್ಕಳಿಗೆ ನೋವಾಯಿತೇನೋ ಎಂಬಂತೆ ಬೇಸರವಾಗುತ್ತಿತ್ತು. ಆನೆ ನಮ್ಮ ಪಾಲಿಗೆ ಕೇವಲ ಪ್ರಾಣಿಯಲ್ಲ. ಅದು ನಮ್ಮೊಳಗಿನ ಒಂದು ಜೀವ. ಅದಕ್ಕೆ ಏನಾದರೂ ಆದರೆ ನೋವಾಗದೆ ಇರುತ್ತದೆಯೇ,’ ಎಂದು ಇವತ್ತಿಗೂ ಮೈಸೂರಿನ ಹಿರಿಯ ಜೀವಗಳು ಗದ್ಗದಿತರಾಗುತ್ತಾರೆ. + + + +ವರ್ಷದಲ್ಲಿ ಎರಡು ತಿಂಗಳಾದರೂ ಹತ್ತಾರು ಆನೆಗಳು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ ಹೆಜ್ಜೆ ಹಾಕುತ್ತವೆ. ದಸರಾಗೆ ಮುಂಚೆಯೇ ಇಲ್ಲಿ ಬಂದು ಬಿಡಾರ ಹೂಡುತ್ತವೆ. ದಸರಾ ಮಹೋತ್ಸವಕ್ಕಾಗಿ ಅರಮನೆ ಅಂಗಳಕ್ಕೆ ಎರಡು ಗುಂಪುಗಳಾಗಿ ಆನೆಗಳು ಬಂದಿಳಿಯುತ್ತವೆ. ಬಂಡೀಪುರದಲ್ಲಿರುವ ರಾಂಪುರ, ಬಿ. ಆರ್. ಹಿಲ್ಸ್ ನ ಕೆ. ಗುಡಿ, ನಾಗರಹೊಳೆಯ ಬಳ್ಳಿಮತ್ತಿಗೋಡು ಕೊಡಗಿನ ದುಬಾರೆ ಸೇರಿದಂತೆ ನಾನಾ ಕ್ಯಾಂಪ್ ಗಳಿಂದ ಸುಮಾರು 12 ಅಥವಾ 14 ಆನೆಗಳು ಬಂದಿಳಿಯುತ್ತವೆ. ದಸರಾ ಮುಗಿಸಿ ಸ್ವಸ್ಥಾನಕ್ಕೆ ಮರಳುತ್ತವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_348.txt b/Kenda Sampige/article_348.txt new file mode 100644 index 0000000000000000000000000000000000000000..6b48e01a0f2c25e620ff4524ca45556d97a47697 --- /dev/null +++ b/Kenda Sampige/article_348.txt @@ -0,0 +1,167 @@ + + +‘ಅವ್ವ ಮತ್ತು ಅಬ್ಬಲಿಗೆ’ ಎಂಬ ಈ ಕವನ ಸಂಕಲನದಲ್ಲಿ ಒಟ್ಟಿಗೆ ನಲವತ್ತು ಬಿಡಿಗವನಗಳಿವೆ. + +ಒಂದೇ ಮಾತಿನಲ್ಲಿ ಈ ಸಂಕಲನದ ಬಗ್ಗೆ ಹೇಳಿ ನೋಡೋಣ ಎಂದು ಯಾರಾದರೂ ನನ್ನೆದೆಗೆ ಗುಂಡಿಟ್ಟಂತೆ ಆದೇಶಿಸಿದಲ್ಲಿ, ನಾನು ಹೇಳಬಹುದಾದ ಮಾತು, ಇದೊಂದು ದೇಸಿ ಚಿಂತನೆಯ ನೆಲಮುಖೀ ಕವನ ಗುಚ್ಚ ಎಂಬುದಾಗಿದೆ. + +ಇಲ್ಲಿ ಒಟ್ಟಾರೆಯಾಗಿ ಬಳಕೆಯಾದ ಸರಳವೂ ಸುಂದರವೂ ಆದ ಪದಪ್ರಯೋಗದಿಂದಾಗಿ ಸಂಕೀರ್ಣತೆಯ ಭಾರದಿಂದ ಈ ಸಂಕಲನ ನಲುಗುವುದಿಲ್ಲ. ಆದ್ದರಿಂದ ಪ್ರತಿ ಪದ್ಯವೂ ಅಪ್ಯಾಯಮಾನವಾಗಿಯೇ ಮನಸ್ಸಿಗೆ ತಟ್ಟುತ್ತದೆ. ಸಂಕೀರ್ಣ ಕವನಗಳಲ್ಲಿಯ ಒಳಪ್ರವೇಶ ಕೆಲವರಿಗೆ ತುಸು ಪ್ರಯಾಸದ್ದೆನಿಸುತ್ತದೆ. ಇಲ್ಲಿ ಆ ಸಮಸ್ಯೆ ಇಲ್ಲ ಎಂದೇ ನನ್ನೆಣಿಕೆ. + +ಹಾಗಂತ, ಸಂಕೀರ್ಣ ಕವನಗಳಿಗೆ ಬೆಲೆ ಕಡಿಮೆ ಎನ್ನುವಂತೆಯೂ ಇಲ್ಲ; ಅಂಥ ಕವನಗಳನ್ನು ಸಹೃದಯನಾದವನು ಯಶಸ್ವಿಯಾಗಿ ಒಳ ಪ್ರವೇಶ ಮಾಡಿದಾಗ ಉಂಟಾಗುವ ಆನಂದವೇ ಬೇರೆ! ಇರಲಿ. + +2. ಮೊದಲಿಗೆ ‘ಅವ್ವ ಮತ್ತು ಅಬ್ಬಲಿಗೆ’ ಕವನವನ್ನೇ ಎತ್ತಿಕೊಳ್ಳೋಣ: ಇಲ್ಲಿ ಅಭಿವ್ಯಕ್ತಿ ಪಡೆಯುವ ಒಂದು ನುಡಿ ಹೀಗೆ ಹೇಳುತ್ತದೆ: + +ಇಲ್ಲಿಗೇಣೆರಡು ಅಂತರವಿಟ್ಟುಅವ್ವ ನೆಟ್ಟ ಅಬ್ಬಲಿಗೆ ಓಳಿತಿಂಗಳ ಮೊದಲೇ ಮೈನೆರೆಯುತ್ತದೆ.ಮತ್ತು ಮಿಂದ ಹುಡುಗಿಯರಮುಡಿಯೇರಿ ರಂಗಾಗುತ್ತವೆ. + +ಇಲ್ಲಿ ಬಳಕೆಯಾದ ‘ಮೈನೆರೆ’, ‘ಮಿಂದ ಹುಡುಗಿಯರು’ ಎಂಬ ಪದವನ್ನು ಕೂಲಂಕುಷವಾಗಿ ಗಮನಿಸಬೇಕು. ಆಗ ಅವು ಕೇವಲ ಅಬ್ಬಲಿಗೆಯಾಗಿ ಮಾತ್ರ ಉಳಿಯುವುದಿಲ್ಲ. ‘ಕಂಪಿಲ್ಲದ ಆ ಕೆಂಪು ಹೂವಿನ/ ಕತೆ ಕೇಳಿ ನಗರದ ಈ/ ನಾಜೂಕು ಗಿಡಗಳು ಸಹ / ಆ ಮಣ್ಣಿಗಾಗಿಯೇ ಹಂಬಲಿಸುತ್ತವೆ’- ಇದು ಕವಯಿತ್ರಿಯ ಪರಿಕಲ್ಪನೆ. + +ಈ ಅಬ್ಬಲಿಗೆಯ ಬೆಳವಣಿಗೆಯ ಮೇಲೆ ಅವ್ವನ ಕಣ್ಣು ನಿಚ್ಚಳವಾಗಿದೆ. ಆದ್ದರಿಂದ ಆಗಾಗ ಚೀಲ ತುಂಬಿ ಕಳಿಸುತ್ತಾಳವ್ವ/ ಅದೇ ಮಣ್ಣ ಘಮಹೊತ್ತ/ ಅಮಟೆ ಪಲ್ಯ, ಏಡಿ ಪಳದಿ ಇತ್ಯಾದಿ. + +ಇತ್ತ,ಹಳ್ಳಿ ಗುಗ್ಗಂತೆ ಅಬ್ಬಲಿಗೆ ಮುಡಿಯುತ್ತೀಯಪ್ಪ!ಎಂದು ಮೂಗು ಸೊಟ್ಟಾಗಿಸಿ ಹೇಳಿದ/ ಹಳೆ ಗೆಳತಿಯ ನೆನಪಾಗಿಹುಸಿ ಕೋಪದ ಮುದ್ದುಕ್ಕಿ ದಪ್ಪದ ದಂಡೆಯನ್ನು ಇನ್ನೂಹಿಗ್ಗಿಸಿ, ಉದ್ದಾಗಿಸಿ/ ಅರ್ಧ ಎತ್ತಿಡುತ್ತೇನೆ ನಾಳೆಗೆಂದು + +ಎನ್ನುತ್ತಾಳೆ ಯಾಕೆಂದರೆ, ಅದು ಅವ್ವ ನೆಟ್ಟು ಬೆಳೆಸಿದ ಅಬ್ಬಲಿಗೆ ದಂಡೆ. ಇಲ್ಲಿಯ ಬಾಲ್ಯ ಯವ್ವನ, ಬದುಕಿನ ಬೆಳವಣಿಗೆ ಕೂಡ ಅರ್ಥಪೂರ್ಣವಾಗಿದೆ. ಹೆಚ್ಚೆಂದರೇನು ಮಾಡಿಯೇನು? ಎಂಬುದು ಅಯ್ಯಪ್ಪನ ಸುತ್ತ ಹೆಣೆದ ಕವನ. ನಿರೂಪಕಿ ಹೇಳುತ್ತಾಳೆ: + +ಬಾಲಕನಾಗಿಹೆ ಅಯ್ಯಪ್ಪ ಈಹಾಡು ಕೇಳಿ- ಕೇಳಿಇತ್ತೀಚೆಗೆ ನಿನ್ನ ಹಳೆಯದೊಂದುಪಟ ನೋಡಿದ ಮೇಲೆನನ್ನ ಮಗನಿಗೂ ನಿನಗೂಯಾಪ ಪರಕ್ಕೂ ಉಳಿದಿಲ್ಲ ನೋಡು + +ನಿರೂಪಕಿ ಅಯ್ಯಪ್ಪನಿಗೆ, “ಎಷ್ಟು ವರುಷ ನಿಂತೇ ಇರುವೆಬಾ ಮಲಗಿಕೋ ಎಂದು/ ಮಡಿಲ ಚೆಲ್ಲಿ /ನನ್ನ ಮುಟ್ಟಿನ ಕಥೆಯ/ ನಡೆಯುತ್ತಿರುವಒಳ ಯುದ್ಧಗಳ ವ್ಯಥೆಯ ನಿನಗೆ ಹೇಳಿಯೇನು.ಹುಲಿಹಾಲನುಂಡ ನಿನಗೆ ತಾಯ ಹಾಲ ರುಚಿ ನೋಡಿ/ಹುಳಿಯಾಗಿದೆಯೇನೋ… ಎನ್ನುತ್ತಲೇ….ತೇಗಿಸಲು ಬೆನ್ನ ನೀವಿಯೇನು” –ಇವೆಲ್ಲ ಪಂಕ್ತಿಗಳು ಜೀವನಾನುಭವದ ಸಾಲುಗಳಾಗಿ ಕಾಣುತ್ತವೆ- ಓದುಗನಿಗೆ. + +ನಿರೂಪಕಿ (ಕವಯತ್ರಿ) ಅಯ್ಯಪ್ಪನೆಂಬ ತನ್ನ ಮಗನೋಪಾದಿ ಹುಡುಗನಿಗೆ ಕೊನೆಯಲ್ಲೊಂದು ಪ್ರಶ್ನೆ ಕೇಳುತ್ತಾಳೆ: ‘ಈಗ ಹೇಳು ನನ್ನ ಮುಟ್ಟು ನಿನಗೆ ಮೈಲಿಗೆಯೇನು?’ ಎಂಬುದು ಆ ಪ್ರಶ್ನೆ. ಆ ಪ್ರಶ್ನೆಗೆ ಮೊದಲು, + +ದೃಷ್ಟಿ ತೆಗೆದು ನಟಿಗೆ ಮುರಿದುಎದೆಗೊತ್ತಿಕೊಂಡು, ಹಣೆಗೆ ಮುತ್ತಿಕ್ಕಿ,ಥೇಟ್ ನನ್ನ ಮಗನಂತೆ ಎನ್ನುತ್ತಹದಿನೆಂಟನೆಯ ಕೊನೆಯ ಮೆಟ್ಟಿಲಕೆಳಗಿಳಿದ ಮೇಲೂಮತ್ತೊಮ್ಮೆ ಮಗದೊಮ್ಮೆ ನಿನ್ನತಿರುತಿರುಗಿ ನೋಡಿಯೇನು. + +ಎಂಬ ವಿವರಣೆಯಿದೆ. ಈ ಹಂತದಲ್ಲಿ ಕೇಳುವ ಪ್ರಶ್ನೆ “ಈಗ ಹೇಳು ನನ್ನ ಮುಟ್ಟು ನಿನಗೆ ಮೈಲಿಗೆಯೇನು?” + +ಕೇರಳ ಮಾತ್ರವೇ ಅಲ್ಲ. ಈ ದೇಶದ ಆಸ್ತಿಕ ವರ್ಗವನ್ನೂ ವೈಚಾರಿಕ ವರ್ಗವನ್ನೂ ಕೆರಳಿಸಿದ ‘ಮುಟ್ಟಿನ ಹೆಣ್ಣಿಗೆ ಅಯ್ಯಪ್ಪನ ದರ್ಶನ ನಿಷಿದ್ಧ’ ಎಂಬ ಮೂಢನಂಬಿಕೆ. ಅದಕ್ಕೆ ಸುಪ್ರೀಂ ಕೋರ್ಟ್ ನೀಡಿದ ಆದೇಶ, ಅದರ ಹಿನ್ನೆಲೆಯಲ್ಲಿ ನಡೆದ (ಕೇರಳದ) ನರ ಹೋಮದ ಈ ಸನ್ನಿವೇಶದಲ್ಲಿ ಹುಟ್ಟಿದ ಈ ಕವನ ಮನೋಜ್ಞವಾಗಿದೆ. ಈ ಸಂಕಲನಕ್ಕೆ ನನಗೇ ಹೆಸರಿಡುವ ಸ್ವಾತಂತ್ರ್ಯ ಸಿಕ್ಕಿದ್ದರೆ, ‘ಮುಟ್ಟು ಮತ್ತು ಅಯ್ಯಪ್ಪ’ ಎಂದೇ ಇಡುತ್ತಿದ್ದೆನೇನೋ!. + +‘ತವರು ತಾರಸಿಯಾಗುತ್ತಿದೆ’ ಈ ಸಂಕಲನದ ಇನ್ನೊಂದು ಉತ್ತಮ ಕವನವಾಗಿದೆ. + +ತವರೆಂದರೆ ಬರಿ ಹೆಂಚಿನದೊಂದು ಮಾಡೆ?ಯಾವುದಕ್ಕೂಹಳೆ ಮನೆಯ ಕೋಳಿಳಿಸುವ ಮೊದಲೊಮ್ಮೆಹೋಗಿ ಬರಬೇಕುಅಟ್ಟವನ್ನೊಮ್ಮೆ ಏರಿಕೋಳುಗಂಬಕ್ಕೆ ಕಟ್ಟಿದ ನನ್ನ ಸಿರಿತೊಂಡಲಿನ ಮುತ್ತುಮಣಿಗಳನ್ನೆಲ್ಲಒಂದೊಂದೂ ಬಿಡದೆಆರಿಸಿ ತರಬೇಕು + +ಸಾರಾಂಶವಿಷ್ಟೆ: ಕಾಲ ಬದಲಾಗಿ, ಹಂಚಿನಮನೆ ತಾರಸಿ ಮನೆಯಾಗುತ್ತಿದೆ. ಅಲ್ಲೊಂದು ಬೈನೆ ಅಟ್ಟ; ಆ ಅಟ್ಟದಲ್ಲಿ ಕಾವ್ಯ ನಿರೂಪಕಿಯ ನೂರು ನೆನಪುಗಳು ತುಂಬಿವೆ. ಅಣ್ಣನಿಗೋ ತಾರಸಿಮನೆ ಅನಿವಾರ್ಯ. ಹಾಗಂತ ಈವರೆಗೆ ಇದ್ದ,ಅಜ್ಜನ ಕೋಲು ಅಜ್ಜಿಯ ಕುಟ್ಟೊರಳುಮಜ್ಜಿಗೆ ಕಡೆಗೋಲು ಬತ್ತದ ಕಣಜಕೆಅಲ್ಯಾವ ಮೂಲೆಬೀಸೋ – ತೀರಿಸೋ ಕಲ್ಲು ಸೇರಿಅವ್ವನ ಈಚಲು ಚಾಪೆಯಒಪ್ಪಿಕೊಂಡಿತೇ ಅಣ್ಣನ ಗ್ರಾನೈಟು ನೆಲ.ಒಂದು ಕಾಲಕ್ಕೆ ‘ಅವ್ವ ಹಂಚಿನ ಮನೆ’ ಕೋಳು / ಕಂಡಕ್ಷಣ / ಈ ಜನ್ಮಕ್ಕಿಷ್ಟು ಸಾಕು” ಎಂದಿದ್ದ ಹಂಚಿನ ಮನೆಯೀಗ ತಾರಸಿ ಮನೆಯಾಗುವ ಅನಿವಾರ್ಯತೆಯನ್ನು ನುಂಗಿಕೊಳ್ಳುವ ಹಂತದಲ್ಲಿ ಕುಟುಂಬ ಎಂಬ ಕುಟುಂಬ ಸಜ್ಜಾಗಬೇಕಾದ ಸ್ಥಿತಿ, ಆ ಸಂದರ್ಭದ ನಿರೂಪಕಿಯ ಎದೆಯ ತಲ್ಲಣ – ಅದರ ಅನಿವಾರ್ಯತೆಗಳೆಲ್ಲ ಇಲ್ಲಿ ಕಾಣಿಸಿಕೊಂಡಿವೆ.ಕಡಲು ಪದವೇ ರೋಮಾಂಚನ!ನೆನೆದಾಗಲೇಳುವ ಒಲವಿನಲೆಗಳಿಗೆತಡೆಗೋಡೆಯುಂಟೆ? + +ತುಂಬಾ ಸಾಂಕೇತಿಕವಾದ ಪದ ಸಂಯೋಜನೆಗೆ ಕಾರಣವಾದ ‘ಕಡಲು ಮತ್ತು ನದಿ’ ಕವನದ ಸಾಲುಗಳಿವು. + +ಕವಯತ್ರಿ (ನಿರೂಪಕಿ) ಹೇಳುತ್ತಾಳೆ – + +ನಾನೋ ಕಾಡೂರವಳು,ಬ್ಯಾಗು ಹೆಗಲಿಗೇರಿಸಿಕೊಂಡ ದಿನಗಳಿಂದಲೂತುಂಬಿದ ಹಳ್ಳಕೊಳ್ಳ ದಾಟಿಗುಡ್ಡ-ಬೆಟ್ಟ ಹತ್ತಿಳಿದುದಡದೀಚೆ ಬಂದವಳು + +ಇದೇ ಹೊಳೆಯಲ್ಲಿ ಎರಡು ಹೆಣಗಳ ಹೊತ್ತಿಯ್ದಿದ್ದನದಿಯ ಕಣ್ಣಾರೆ ಕಂಡುನಾಲ್ಕು ದಿನದ ಮುನಿಸು ಬಿಟ್ಟರೆ,ನನಗೂ ನದಿಗೂ ಜನ್ಮ ಜನ್ಮಗಳ ನಂಟುಈ ಹಿನ್ನೆಲೆಯಲ್ಲಿ ನಿರೂಪಕಿ ಕವಯಿತ್ರಿಗೆ, ತನ್ನೂರ ಹೊಳೆಯೇ ಕಡಲಾಗಿ ಬಿಡಬೇಕೆಂಬ ಆಶೆ. ಅದೇ ವೇಳೆಗೆ ತನ್ನವನ ಮೈಬೆವರು ಇರುವ ಹಾಗೆ, ಈ ಹೊಳೆ ಉಪ್ಪಾಗಲಾರದು ಎಂಬ ವಾಸ್ತವದ ಅರಿವು ಉಂಟು. + +ಕವಯಿತ್ರಿ ವಾಂಛೆ ಎಷ್ಟು ಆಳದ್ದೆಂದರೆ, ಕಡಲೂರಿಗೆ (ಕರಾವಳಿಗೆ?) ಹೋಗಿ ಬಂದ ನೆನಪಿಗಾಗಿ,“ದಂಡೆಯ ಮರಳಿನ ಮೇಲೆಹೊಸತಾವೊಂದು ಹುಡುಕಿನನ್ನ ಹೆಜ್ಜೆಯನ್ನೊಮ್ಮೆ ಊರಿ ಬರಬೇಕು”ಅಂದುಕೊಳ್ಳುತ್ತಾಳೆ. + +‘ಮಸುಕಾಗುವ ಸಂಕಟ’ ಇಲ್ಲಿ ಸಾಂಕೇತಿಕ. ಅದನ್ನೆ ಕಾವ್ಯದ ನಿರೂಪಕಿ ಮುಕ್ತವಾಗಿ ಹೇಳುತ್ತಾಳೆ. “ಈಗೀಗ ನನಗೂ ಗೊತ್ತಾಗುತ್ತಿದೆ / ಮಸುಕಾಗುವ ಸಂಕಟವೆಂದು. ಅಭಿಪ್ರಾಯದಲ್ಲಿ ಹೊಂದಾಣಿಕೆಯಾದಾಗ ಯಾವುದನ್ನು ಎತ್ತಿ ಇಡುವುದು. ಯಾವುದನ್ನು ಬಿಡುವುದು? ಇದೆಲ್ಲದಕ್ಕೆ ಮೂಲ ಕಾರಣ: + +‘ಪಕ್ಕ ಇಷ್ಟೇ ಇಷ್ಟಿವೆ ನೋಡು’ ಎಂದುನಾನುಟ್ಟ ಸೀರೆ ನಿರಿಗೆಯ ಲೆಕ್ಕನೀ ಕೊಟ್ಟ ದಿನವೇ …ಆ ಸೀರೆ ಪಂಚ ಪ್ರಾಣವಾಯಿತು ನೋಡುಉಳಿದವಕ್ಕೂ…’ + +ಈ ಕವನದಲ್ಲಿ ಒಡೆದ ಮನಸುಗಳ ಅನಾವರಣವನ್ನಷ್ಟೇ ನಾನು ಕಾಣಬಲ್ಲೆ. ‘ಮೀಯುವುದೆಂದರೆ’ – ಗಮನಿಸಬೇಕಾದ ಕವನಗಳಲ್ಲಿ ಒಂದು. ಈ ನಿರೂಪಕಿಯ ದೃಷ್ಟಿಯಲ್ಲಿ, + +ಮೀಯುವುದೆಂದರೆ ಬುರುಗು ನೊರೆಯಲ್ಲಿ ನೆಂದುಮೈಯುಜ್ಜಿ ಬರುವುದಲ್ಲ ನನಗೆಬದಲು ಹರೆಯವನ್ನೇ…ಚಂಬುಚಂಬಾಗಿ ಮೊಗೆದುಮೈಮನಕ್ಕೆರೆದುಕೊಳ್ಳುವುದುಥೇಟ್ ಇವನ ಪ್ರೀತಿಯಂತೆ– ಇದೊಂದು ಸುಂದರ ಪ್ರತಿಮೆ ಮತ್ತು ಉಪಮೆ ಕೂಡ. + +ಕೊನೆಯಲ್ಲಿ ಕವಯಿತ್ರಿ ಹೇಳುತ್ತಾಳೆ – ಬಚ್ಚಲೇ ಆಪ್ತ ಮತ್ತೆಲ್ಲವೂ ಗುಪ್ತ ಗುಪ್ತ. ಇಲ್ಲಿಯ ರೂಪಕ ಕೂಡ ಖುಷಿ ಕೊಡುತ್ತದೆ. + +‘ನನ್ನ ಕವಿತೆ’ -ಚೆನ್ನಾಗಿದೆನನ್ನೀ ಕವಿತೆ,ದಿನವಿಡಿ ಬೆವರ ಮಿಂದುಸಂಜೆ ಬೆನ್ನ ನೋವಿಗೆಂದುಕೊಂಚ ಗುಟುಕೇರಿಸಿ, ಮಾತಿಲ್ಲದೆಜಗುಲಿ ಕಟ್ಟೆಗೊರಗಿ ಬಿಡುವನನ್ನಪ್ಪನಂತೆ ಅಪ್ಪಂದಿರಿಗಾಗಿ. + +ಹಾಡು-ಹಸೆ, ಕಸ-ಮುಸುರೆ ಮುಗಿಸಿಹಂಡೆನೀರು ಮಿಂದು ಹಗುರಾಗಿಬಣ್ಣದ ಲೋಕದಗ್ಲಿಸರಿನ್ ಹನಿಗೂಗೋಳೋ ಎಂದು ಅತ್ತೇ ಬಿಡುವನನ್ನವ್ವನಂಥ ಅವ್ವಂದಿರಿಗಾಗಿ + +ಎದೆಸಿಗಿದರೂನಾಲ್ಕಕ್ಷರ ಕಾಣದೆಕರಿಕಂಬಳಿ ಎಳೆಯಲ್ಲಿಬದುಕು ಕಟ್ಟುತ್ತಿರುವಅಣ್ಣ ಕರಿಯಣ್ಣನಂಥವರಿಗಾಗಿ…. + +ಇವರಲ್ಲಿ ದೃಷ್ಟಿಯಲ್ಲಿ ಇವರೆಲ್ಲ ಈ ನೆಲದ ‘ಜೀವಂತ ಕವಿಗಳು’. ಒಟ್ಟಾರೆಯಾಗಿ ಈ ಕವನ ಯಾರನ್ನು ಉದ್ದೇಶಿಸಿ ಬರೆಯಲಾಗಿದೆಯೋ- ಅವರೇ ಕವನದ ವಸ್ತುವೂ ಆಗಿರುವುದು ಕೂಡ ವಿಶೇಷ!. ‘ಋಣದ ಪತ್ರ’ದಲ್ಲಿ ಕವಯಿತ್ರಿಗೆ + +‘ಗಾಳಿ-ನೀರು, ಬೆಳಕು ಬದುಕುಕೊಟ್ಟ ಭೂಮಿಗೆಋಣದ ಪತ್ರ ಬರೆದು ಇಟ್ಟುಮರಳಬೇಕಿದೆ’. ಎಂಬ ಪ್ರಜ್ಞೆ ಋಣಪ್ರಜ್ಞೆಯಾಗಿಯೇ ನಿಲ್ಲುತ್ತದೆ. + +ಇದೇ ಪದ್ಯದಲ್ಲಿ , ‘ಹರಿದ ಚಂದ ಕವದಿಯನ್ನು ಹೊಲಿಯಬೇಕಿದೆ’ ಎಂಬ ಮಾತೂ ಕೂಡ ಕರ್ತವ್ಯ ಪ್ರಜ್ಞೆಯನ್ನೇ ಧ್ಯಾನಿಸುತ್ತದೆ. ‘ಒಡಲ ಬಂಧ’ : ಕವನದಲ್ಲಿ ಒಂದಷ್ಟು ಮನಮುಟ್ಟುವ ಸಾಲುಗಳಿವೆ: + +ಕುಡಿ ಕನಸು ಚಿಗುರೊಡೆವಹೊತ್ತದೇ ಇರಬೇಕು.ಮುಟ್ಟಿಗೂ ಕಾಗೆ ಮುಟ್ಟಿಗೂಸಂಬಂಧವಿಲ್ಲವೆಂದರಿತಾಗಮುಖದ ಮೊಡವೆಗಳಲ್ಲೇಮೂಡಿತ್ತು ಕಾಮನಬಿಲ್ಲು. + +ಪ್ರತಿ ಮಾಸವೂ ಥೇಟ್ಹೆರಿಗೆಯದ್ದೇ ನೋವುಂಡರೂಜೀವ ಜಕ್ಕಾಗಲಿಲ್ಲ ಬದಲುಕೆಂಪು ಮೈಮನದಿ ಅರಳಿತ್ತುಹೆಣ್ತನದ ಹೂವಾಗಿ. + +ಹಳೆಯ ಹೆಂಗಸರು ಮಕ್ಕಳು ಕೇಳಿದಾಗ (ಮುಟ್ಟಾಗಿ ದೂರ ಕುಳಿತಾಗ) ಕಾಗೆ ಮುಟ್ಟಿತು ಎಂದು ಕೊಡುವ ಕಾರಣ ಇಲ್ಲಿ ‘ವಾಸ್ತವ’ ವಾಗಿ ‘ರೂಪಕ’ ವಾಗಿ ಧ್ವನಿ ಪಡೆದಿದೆ. + +‘ಸುಮ್ಮನಿರುವೆ ಏಕೆ ಹೇಳು?’: – ಈ ಕವಿತೆ ಈ ಪ್ರಶ್ನೆ ಅನೇಕ ಸಂಭಾವ್ಯ ಉತ್ತರಗಳನ್ನು ಹೆರಬಲ್ಲದು. ಅದು, ಅತಿಯಾದ ನಿರ್ಬಂಧದ ಬಿಗುಮಾನವಾಗಿರಲು ಸಾಧ್ಯ. ಅದು, ವಧುವಿಗೆ ಮದುವೆ ಗೊತ್ತಾದ ಸಂದರ್ಭ ಇರಬಹುದು. ಅದು, ಮುಟ್ಟಿನ ಒಳನೋವಿನ ಸಂದರ್ಭವೂ ಆಗಿರಬಹುದು. ಅದು ಅಂತರಂಗದ ಬೇರಾವುದೊ ತುಮುಲವೂ ಇರಬಹುದು. ಅದು, ಹೇಳಲಾಗದ – ಹೇಳಬಾರದ ನಿಗೂಢ ಸನ್ನಿವೇಶವೇ ಇರಬಹುದು. + + + +ಕೊನೆಗೂ ಕರುಣಾಳು ಕವಯಿತ್ರಿ ಮೌನಮುರಿದೊಮ್ಮೆ ‘ಮಾತಾಡೆ ಮುಗುದೆ’ ಎನ್ನುತ್ತಾಳೆ. ಅಧ್ಯಯನ ಯೋಗ್ಯವಿದು.‘ಕಲ್ಲಾದವಳಿಗೆ’ ಕವನ ತಟ್ಟನೆ ನೆನಪಿಗೆ ತರುವುದು ಅಹಲ್ಯೆಯನ್ನು. ಇದರ ಮೊದಲ ನುಡಿಯೇ ಅದನ್ನು ಸಾರುತ್ತದೆ. ಮೋಸ ಮಾಡಿದವನೊಬ್ಬ, ಶಾಪ ಕೊಟ್ಟವನೊಬ್ಬ. ಪರಿಹಾರಕ್ಕೆಂದು ಕಾಯಬೇಕಾದದ್ದು ಇನ್ನೊಬ್ಬನಿಗಾಗಿ. ಇದು ಸಹನೆಯ ಕಟ್ಟೆ ಒಡೆದಾಗ ಇದಿರು ನಿಲ್ಲುವ ಅಸಹನೆ. ಕೊನೆಯ ಮಾರ್ಮಿಕ ಪ್ರಶ್ನೆ ನೋಡಿ: ಮತ್ತೆ ಅದೇ ಪಾದದ ಅದೇ ಧೂಳಿಗೆ ಕಾದೆಯಲ್ಲವೇ? + +ನನ್ನದೊಂದು ಕವನವಿದೆ: ಅದು ನನ್ನ ನಾಲ್ಕನೆಯ ಸಂಕಲನ ‘ಹೊಸಬತ್ತ’ದಲ್ಲಿ ಬಂದಿದೆ: + +ನೆಲತಾಯಿ ನಿಲುಮೆಯೇ ನನ್ನದಾಗಲೀ ಎನುವೆನೆಲಮುಗಿಲೆ ಮಾದರಿಯು ಈ ಲೋಕಕೆನನ್ನ ನೆರೆಮನೆಯಲ್ಲಿ ಹಸಿದವರು ಇರುವಾಗಉಣಲಾರೆ ಎಂಬುದೇ ಎದೆಯ ಬಯಕೆ! + +ಈ ನಿರೂಪಕಿ ಬರೆದ ಕವನದ ಒಳಗಡೆಯೂ ಅದೇ ಭಾವ- ಅದೇ ಜೀವ ಮಿಡಿದಿದೆ. ಹಸಿದವರಿಗೆ ಹಂಚೋಣ ಒಂದು ತುತ್ತು: ಅನ್ನಕ್ಕಿಂತಲೂ ಹೆಚ್ಚೆ ಎಣ್ಣೆ ದೀಪ? ರೈತನನ್ನು ‘ಇಲ್ಲಿ ಕೃಷಿಋಷಿ’ ಎಂದು ಕರೆದಿರುವುದು ಅಪೂರ್ವ ಕಲ್ಪನೆಯಾಗಿದೆ. ಅವನ ಬವಣೆಗೆ ಒದಗದೆ ಲಕ್ಷದೀಪ ಉರಿಸಿದರೇನು ಬಂತು. -ಹೀಗೆ …. + +‘ಬರಗಾಲದ ದೀಪಾವಳಿ?’ಅದನ್ನೂ ಆಚರಿಸಬಾರದೇಕೆ? + +‘ಪಂಜರದ ಪಕ್ಷಿ’ ನನ್ನ ಕರುಳು ಮಿಡಿದ ಕವನವಾಗಿದೆ. ಕವಿತೆ ಬೇಡುತ್ತದೆ: + +ಬಿಟ್ಟು ಬಿಡು ನನ್ನೊಲವೆಬಂಧಿಸದೆ ನನ್ನನ್ನುಹಾರಾಡಿ ಬರುವೆ ನಾ ಗಗನ ತುಂಬಾ + +ರೆಕ್ಕೆಪುಕ್ಕದ ಒಳಗೆಹೊಸಕನಸ ನಾ ಹೊತ್ತುಮುಟ್ಟಿ ಬರುವೆನು ಆ ಚಂದ್ರಬಿಂಬ. + +ನಿಬಿಡ ಸರಳುಗಳ ಬಂಧಿಯಾದ ಜೀವ ಚಂದ್ರನ ಮುಟ್ಟುವ ತವಕದಿಂದ ಸಣ್ಣದೊಂದೇ ಸರಳ ಸರಿಸಲು ಕೇಳುತ್ತಾಳೆ. ಯಾಕೆ ಈ ನಿರ್ಬಂಧ. ಯಾಕೆ ಪಂಜರ ಪಕ್ಷಿಯಾಗಿಬೇಕು. ಎಲ್ಲರೂ ಈ ಗೋಳನ್ನು ಅನುಭವಿಸುತ್ತಾರೆಂದಲ್ಲ: ಕೆಲವೆಡೆ ಮಾತ್ರ ಕಟ್ಟುಪಾಡುಗಳಿವೆ. ಪಂಜರ ಪಕ್ಷಿ ಕವಿತೆ ಅದನ್ನು ಪ್ರಶ್ನಿಸುತ್ತದೆ-ಮಾರ್ಮಿಕವಾಗಿ. ತೌರಿನ ನೆನಪೂ ಇಲ್ಲಿ ಸಾಕಷ್ಟು ಕಾಡುತ್ತದೆ. + +ಯುದ್ಧ-ಬದ್ಧ: ಹೆರವರ ಮಕ್ಕಳನ್ನು ಬಲಿಕೊಡುವ ಪೀಠಕ್ಕೆ ಸಿದ್ಧಗೊಳಿಸುವುದೇ ಯುದ್ಧ ಎನ್ನುತ್ತದೆ ಈ ಕವನ. ತಮ್ಮ ಖುರ್ಚಿಯ ಕಾಲುಗಳನ್ನು ಗಟ್ಟಿಮಾಡಿಕೊಳ್ಳಲೆಂದೂ ಕೆಲವರು ಯುದ್ಧ ಸಾರುತ್ತಾರೆ. ‘ಯುದ್ಧ ಮಾನವ ಲೋಕದ ಆರದ ಗಾಯ’ ಎಂದು ಭಕ್ತ ಕನಕನ ಬಾಯಿಂದ ಹೇಳಿಸಿದ್ದಿದೆ- ನಮ್ಮ ಹಿರಿಯ ವಿಮರ್ಶಕ ಕೀ.ರಂ. ನಾಗರಾಜ. ಯುದ್ಧದಲ್ಲಿ ಎರಡೂ ಕಡೆ ಸಾವು ನೋವುಗಳಾಗುತ್ತವೆ. ಎರಡೂ ಕಡೆ ಅನಾಥ ಮಕ್ಕಳು-ತಾಯ್ತಂದೆಯರು. ಆದ್ದರಿಂದ ಬುದ್ಧನ ಆಗಮನಕ್ಕಾಗಿ ಕವಯಿತ್ರಿ ಕಾತರಿಸುತ್ತಾರೆ. + +ಬಂಜೆಯಾಯಿತೆ ಭೂಮಿ: ಹೆಣ್ಣೆಗೂ ಬಂಜೆತನದ ಭಯಪ್ರಜ್ಞೆಗೂ ರಾಶಿರಾಶಿ ಸಾಲಾವಳಿ, ಒಂದೆರಡು ಸೊಗಸಾದ ಅರ್ಥಪೂರ್ಣ ನುಡಿಗಳು ಈ ಕವನದ ಮಧ್ಯ ಹರಿದಾಡಿವೆ. + +ಉಕ್ಕಿಹರಿಸದೇ ನಿನ್ನೊಡಲಕಡಲನ್ನುಬರೆದ ಹಳೆಯ ದೋಣಿಯದೆಲ್ಲಿ ಬಿಡಲೇ?ಬಸಿರ ಕಟ್ಟದೆ ನೀನುಹಸಿರು ಹುಟ್ಟಿತು ಹೇಗೆ?ಉಸಿರ ನೀಡದ ನಿನ್ನೀಪರಿಯು ಸರಿಯೇ? ಮಿದು ಮಣ್ಣಿಗೂ ಇಂಥಕಾಠಿಣ್ಯವೇ?… + +‘ಬದಿಗಿಟ್ಟ ಬಟ್ಟೆ’ : ಕೆಲವರ ಬಾಳಿನಲ್ಲಿ ಅವರಿಗೆ ಸಲ್ಲುವುದು ಬದಿಗಿಟ್ಟ ಮುಟ್ಟಿನ ಬಟ್ಟೆಯ ಸ್ಥಿತಿ. ಒಮ್ಮೆ ಒಣ ಹಾಕಿ ಪಟ ಪಟ ಹಾರಿಬಿಟ್ಟರೆ ಮತ್ತು ಒಂದು ತಿಂಗಳ ಮಟ್ಟಿಗೆ ಅದು ‘ಸಂದಿಯೊಳಗಿನ ಬಂಧಿ’! + +ಅವನ ಭಾವನೆಗೂ ಇವಳ ಒಳತುಮುಲಕ್ಕೂ ಅಜಗಜಾಂತರ. ಬಯಲ ಗಾಳಿಯಲೊಮ್ಮೆ ಉಸಿರಾಡಬೇಕೆನ್ನುವ ಅವಳ ಕನಸುಗಳಿಗೆ ಕರ್ಪೂ-ಅಘೋರ ಕರ್ಪೂ! ಉಂಡುತಿಂದು ಸದ್ದಿಲ್ಲದೆ ಎದ್ದು ಹೋಗುವ ಅವನೊಬ್ಬ ‘ತಿಂಗಳ ಪ್ರವಾದಿ ಯಾದರೆ ಇವಳ ಖೈದಿ. + +‘ಉಯಿಲೊಂದ ಬರೆಯುವೆ’: ಕವಯಿತ್ರಿ ಇಲ್ಲಿ ಉಯಿಲೊಂದು ಬರೆದಿಡಲು ನಿರ್ಧರಿಸಿದ್ದಾರೆ. ಯಾಕೆಂದರೆ ಧರ್ಮ-ಧರ್ಮ ಎಂದೊದರುವವರ ಮಧ್ಯೆ ಅವಳಿಗೆ ಮರೆತೇ ಹೋಗಿದೆ ಅವಳ ಜಾತಿ, ಧರ್ಮ, ಅವಳೂರ ಕೃಷಿ ಕೂಲಿಗಳೂ ಕೂಡ ಇದಾವುದರ ಅರಿವೂ ಇಲ್ಲದೆ ಎರಡು ಹನಿಗಳಿಗಾಗಿ ಮೋಡಗಳಾಚೆ ದಿಟ್ಟಿ ನೆಟ್ಟಿದ್ದಾರೆ. ಆ ಧರ್ಮ-ಈ ಧರ್ಮ ಇವೆಲ್ಲ ಹೊಟ್ಟೆತುಂಬಿದವರ ಚಿಂತೆ.ಕವಯಿತ್ರಿ ಹೇಳುತ್ತಾರೆ : + +ಹೀಗೇ ನಡೆದರೆ ಈ ಧರ್ಮಗಳ ಮೆರವಣಿಗೆಮುಂದೊಂದು ದಿನರಕ್ತದ ಸೀಸೆಗಳ ಮೇಲೆಲ್ಲಧರ್ಮದ ಛಾಪು ಅಚ್ಚಾಗಬಹುದುಇದು ಈ ಧರ್ಮದವರಿಗೇ ಸೇಲಾಗಬೇಕೆಂದು. + +ಆದ್ದರಿಂದ ಈ ಹೆಣ್ಣಿಗೆ ಆಶೆ- ‘ಎಲ್ಲಾ ಧರ್ಮಗಳ ಬಾಟಲಿಗಳ ಮೇಲೆ/ ಕಾಲಕಾಲಗಳಾಚೆಯಾದರೂ ಪ್ರೇಮಧರ್ಮವೊಂದು ಹುಟ್ಟಿಬಿಡಲಿ ಎಂದು ತನ್ನ ರಕ್ತದಿಂದ ಉಯಿಲೊಂದ ಬರೆಯುವ ಆಶೆಯವಳಿಗೆ. + +‘ಯಶೋಧರೆಯ ಸ್ವಗತ’ : ಅವಳದೊಂದು ಮಾರ್ಮಿಕ ಪ್ರಶ್ನೆಯಿದೆ: + +ಮಗನೀಗ ಮಾತು ಕಲಿತುಕತೆ ಕೇಳುತ್ತಿದ್ದಾನೆಯಾರ ಕತೆ ಹೇಳಲಿರಾತ್ರೋ ರಾತ್ರಿ ಎದ್ದುಹೋದ ನಿನ್ನದೋ?ನಿದ್ದೆಯಿರದ ನನ್ನದೋ? + +ಬದುಕ ಸಿಹಿಯ ಕಡಲಿನಲ್ಲಿಈಜಾಡಿಸಿ ದಡ ಸೇರುವುದರೊಳಗೆಹೊರಟು ಹೋದೆಯಲ್ಲಾ?ಹೊದೆದ ಹೊದಿಕೆಯನ್ನೂ ಅಲುಗಾಡಿಸದಂತೆ. + +ನಿರೂಪಕಿ ಕವಿ ಈ ಪಠ್ಯದ ಜೊತೆಗೆ ವರ್ಷದಾಚೆ ಹೊರಬಂದ ಡಾ. ಎಚ್.ಎಸ್. ಅನುಪಮಾರವರ ಹೊಸತೇ ಆದ-ಬುದ್ಧನ ಕುರಿತ ನಾಟಕವೊಂದನ್ನು ಓದಲು ನಾನು ಸಲಹೆ ಕೊಡುತ್ತಿದ್ದೇನೆ. ಅಲ್ಲಿ ಸಿಗುವ ಬುದ್ಧ, ಯಶೋಧರಾ ಮುಂತಾದವರು ಹೊಸ ಹೊಳಪಿನಿಂದ ಕಂಗೊಳಿಸುತ್ತಾರೆ. + +‘ನಿನ್ನ ಬರುವಿಗೆ ಕಾದು’ : ಕನಸುಗಳು ಬಣ್ಣ ಹಚ್ಚಿಕೊಳ್ಳುವುದೊಂದು ಅಪೂರ್ವ ಕಲ್ಪನೆ. ಆದರೆ ನಿರೂಪಕಿ ಹೇಳುತ್ತಾಳೆ ನೀ ಬರುವುದು ಖಾತ್ರಿಯಾದೊಡನೆ ಕನಸುಗಳೂ ಬಣ್ಣ ಹಚ್ಚಿಕೊಳ್ಳುವಂತೆ. + +ಗುಲಾಬಿ ಗಿಡದ ಚಿಗುರುಗಳುಮಾತಾಡಿಕೊಳ್ಳುತ್ತವೆ.ನೀ ಬಂದ ದಿನವೇ…ಮೊಗ್ಗೊಡೆದು ಅರಳುವುದೆಂದು,ಇದೊಂದು ಸುಂದರ ಕವನ-ಮಳೆಬಿಲ್ಲನ್ನೂ ಕರೆಯುವ ಇನ್ನೂ ಖುಷಿಕೊಡುವ ಕವನ. + +‘ನಾವು ಮತ್ತು ಅವರು’: ಇಲ್ಲಿ ಅಭಿವ್ಯಕ್ತಿಗೊಂಡ ವಸ್ತುವಿಗೆ ವಿಶೇಷ ಬೆಲೆಯಿದೆ. ಇಂಡಿಯಾದಲ್ಲಿ. ನಾವು ಕೆಲವು ದುಡಿಮೆಯ ವರ್ಗವನ್ನು ಹಂಗುಹರಕೊಂಡವರಂತೆ ದುಡಿಸಿಕೊಳ್ಳುತ್ತೇವೆ. ಆ ಕಾರಣಕ್ಕಾಗಿ ಅವರಿಗೆ ಕೂಲಿ ಕೊಡುತ್ತೇವಲ್ಲ ಅಂದುಕೊಳ್ಳಬಹುದು. ನಿಜ, ಕೊಡುತ್ತೇವೆ. ಆದರೆ ಆ ಕಾರಣಕ್ಕಾಗಿ ಅವರ ದೇಹ ನುಗ್ಗಾಗುವುದೆಂಬ ಅಳತೆಯ ಅರಿವಿಲ್ಲ ನಮಗೆ. ಅವರ ಬೆವರಿಗೆ ನಾವು ಕಟ್ಟಿದ ಬೆಲೆ ಸಾಲದು. ಅವರು ಕಳಕೊಂಡ ದೇಹದ ತೂಕದ ಅರಿವಿಲ್ಲ ನಮಗೆ. ಅವರು ನಮಗಾಗಿ ನಿದ್ದೆಯನ್ನೂ ಮಾರುತ್ತಾರೆಂಬ ಅಂದಾಜಿಲ್ಲ ನಮಗೆ. ಒಂದೇ ಮಾತಿನಲ್ಲಿ ಹೇಳುವುದಾದರೆ ಶ್ರಮ ಸಂಸ್ಕೃತಿಯನ್ನು ಗೌರವಿಸುವ ಕಲೆ ನಮಗೆ ತಿಳಿಯದು. + +‘ಋಣಮುಕ್ತೆ’: ಇಡೀ ವ್ಯವಸ್ಥೆ ಅಂದರೆ ನೆಲದ ಮಕ್ಕಳು ಹಸಿದೊಡಲ ಶಿಶುವಾಗುವ ಬೆರಗನ್ನು ಕಟ್ಟಿಕೊಡುವ ಕವನವಿದು. + +ಕಡಲಿನೊಲವಲಿ ನೀನುತಾಯಾದೆ ಕಾಣವ್ವಬಯಲು ಗಾಳಿಯನ್ನೊಮ್ಮೆಕರೆದು ಕೇಳು.ಎಲ್ಲ ಮರೆತಿಂದೇಕೆಮುನಿಸು ನಮ್ಮಲಿ ತಾಯಿಕಾಣದೇನು ನನ್ನೀ ಮಗುವ ಪಾಡು-ಇಲ್ಲಿ ಮೂಡಿಬಂದ ಕೊನೆಯ ನುಡಿಯ ಅರ್ಥ ಗ್ರಹಿಸಬೇಕು. + +ಪಡೆದುದೆಲ್ಲವ ಮತ್ತೆಮರಳಿ ಮಣ್ಣಿಗೆ ನೀಡೋಋಣಮುಕ್ತೆ ನೀನವ್ವಮಳೆಯಾಗಿಸು. + +ನೆಲಮಹಿಮೆಯನ್ನು ಕೊಂಡಾಡುತ್ತಲೇ ಬೇಡುವ ಶಿಶುಗಳಾಗಿರುವ (ಅಂಗಲಾಚುವ) ಇಲ್ಲಿಯ ಪರಿ ಅನನ್ಯವಾಗಿದೆ. + +‘ನಲವತ್ತರಂಚಿನ ಸ್ವಗತ’: ನಲವತ್ತಕ್ಕೆ ಕಣ್ಣಿಗೆ ಕನ್ನಡಕ ಬರುತ್ತದೆ. ಫ್ಯಾಶನ್ನಿಗಾಗಿ ಅಲ್ಲ. ಅನಿವಾರ್ಯವಾಗಿ. ನಲವತ್ತಾದೊಡನೆ ಮೈಗೆ ಬೊಜ್ಜು ಬರುತ್ತದೆ. ಮುಖದಲ್ಲಿ ನೆರಿಗೆ ಕಾಣಿಸಿಕೊಳ್ಳುತ್ತದೆ. ಆದ್ದರಿಂದ ನಿರೂಪಕಿ ಕವಿ ಒಂದು ಪರಿಹಾರ ಸೂತ್ರ ಸೂಚಿಸುತ್ತಾಳೆ. ‘ಒಂದು ಹೊಸ ಕೀಲಿ ತಂದು ಯಾರಾದರೂ ಜಡಿದು ಬಿಡಲಿ- ಈ ಕಾಲವೆಂಬ ಕೊಲೆಗಾರ ಮಿಣುಕಾಡದಂತೆ!’ ಎಂದು. + +ಕಾರು-ಗೀರು: ನನ್ನದೊಂದು ಅಂಕಣ ಬರಹ ಇತ್ತು. ಅದು ‘ಸಕಾಲಿಕ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. ‘ಬಿದ್ದು ಬಂದ ಪರಿಮಳ’ ಎಂಬ ಹೆಸರಿನಲ್ಲಿ 2004 ರಲ್ಲಿ ಬರೆದಿದ್ದೆ. ಹಿರಿಯ ಸಾಹಿತಿ ಯಶವಂತ ಚಿತ್ತಾಲರು ಆ ಪುಟ್ಟ ಲೇಖನ ಓದಿ, ‘ನಿರ್ಜೀವ ವಸ್ತುವಿಗೆ ಜೀವ ತುಂಬಿದ ಲೇಖನ’ ಎಂದು ಪ್ರತಿಕ್ರಿಯಿಸಿದ್ದರು. + +ಈ ಕವನ ಸಂಕಲನದಲ್ಲಿ ಮೂಡಿಬಂದ ‘ಕಾರು-ಗೀರು’ ಎಂಬ ಪದ್ಯ ನನ್ನ ‘ಪರಿಮಳ’ವನ್ನು ನೆನಪಿಸಿತು. ಇಲ್ಲಿ ಬರುವ ಪ್ರತಿಯೊಂದು ಸಾಲುಗಳೂ ಜೀವಂತವಾಗಿವೆ. + +‘ಗೋವಿನ ಹಾಡು’: ಒಂದು ಕಥನ ಕವನ. ಗೋವಿನ ಕೆಚ್ಚಲು ತುಂಬಿದಾಗ ನಮಗಿರುವ ಪ್ರೀತಿ-ಮಮತೆ ಆನಂತರ ಇರುವುದಿಲ್ಲ. ಮನುಷ್ಯ ಗೋವನ್ನು ತನ್ನ ಇಷ್ಟಕ್ಕೆ ತಕ್ಕಂತೆ ಬಳಸಿಕೊಂಡಿದ್ದಾನೆಂಬುದನ್ನು ಸರಿಯಾಗಿಯೇ ಇಲ್ಲಿ ಗುರುತಿಸಲಾಗಿದೆ. + +“ಜೀವದೊಳು ಕಸುವಿಲ್ಲಎದೆಯೊಳಗೆ ಹಾಲಿಲ್ಲದೇಹದೊಳಗೀಗ ಬರೀ ಮಾಂಸಮೂಳೆ” + +ಇದು ಆಕಳ ಕೊರಗು. ಆ ಕೊರಗು ಮನುಷ್ಯನ ಸಾಂತ್ವನ ಬಯಸುತ್ತದೆ. ಆದರೆ ಸಿಕ್ಕಿಲ್ಲ. + +‘ಹೆತ್ತವ್ವ ಗೊಂದೋಲೆ’ : ಇಡೀ ಕವನ ಕೆ.ಎಸ್.ನರಸಿಂಹಸ್ವಾಮಿಯವರ ಹಾಡಿನ ಧಾಟಿಯಲ್ಲಿ ಸಾಗುತ್ತದೆ. ಹಾಗಂತ ಅವರ ವಸ್ತುವಿನ ಅನುಕರಣೆ ಇಲ್ಲಿಲ್ಲ.‘ದೇವನಳಲು’:“ಕಟ್ಟಿದಿರಿ ನನಗೆ ಗುಡಿಯನಿಮ್ಮ ಮನೆಯ ದೈವ ಬಿಟ್ಟು” + +(ವಿಷ್ಣು ನಾಯ್ಕ) + +“ತುಂಬಿದಿರಿ ಹುಂಡಿಯನ್ನುಕಂತೆ ಕಂತೆ ಕಟ್ಟನಿಟ್ಟು-ನಾನೇನು ಬಡವನೇ?ನಿಮ್ಮಲ್ಲಿ ಬೇಡುವಷ್ಟು” + +ಇವೆಲ್ಲ ಮತ್ತು ಮುಂದೆ ಬರುವ ನುಡಿಗಳೆಲ್ಲ, ದಿನಕರ ದೇಸಾಯರ ‘ದೇವಗಿಂತ ದೀನ ಬಡವ’ ಎಂಬ ಕವನದ ಆಶಯವನ್ನು ನೆನಪಿಸುತ್ತವೆ. + +3. ಇಲ್ಲಿಯ 40 ಕವನಗಳಲ್ಲಿ ಸುಮಾರು ಅರ್ಧದಷ್ಟಕ್ಕೆ ನಾನು ಕಂಡುಕೊಂಡ ಅರ್ಥ ಇಟ್ಟುಕೊಂಡು ವಿವರಿಸಿದ್ದೇನೆ. ‘ಮುನ್ನುಡಿ’ ಬೆಳೆಯುತ್ತಿರುವ ಪ್ರಮಾಣ ನೋಡಿ ನಾನೇ ಹೌಹಾರಿ ಉಳಿದ ಕೆಲವು ಪದ್ಯಗಳನ್ನು ಬಿಟ್ಟಿದ್ದೇನೆ. ಇಲ್ಲಿಯ ಕವನಗಳಲ್ಲಿ ಭಾವ ನಿರ್ಭರತೆ ಇದೆ. ಇಲ್ಲಿ ಬಹಳಷ್ಟು ಕವನಗಳು ಮನಸ್ಸನ್ನುಥ ಬರಸೆಳೆದುಕೊಳ್ಳುತ್ತವೆ. ಕೆಲವು ಪದ್ಯಗಳಂತೂ ಅಪರೂಪದ್ದೆನಿಸುತ್ತವೆ. ಇನ್ನು ಕೆಲವು ತೀರಾ ಸರಳ ಜಾತಿಗೆ ಸೇರಿದವುಗಳಾಗಿವೆ. + +ಒಟ್ಟಿನಲ್ಲಿ ಇದೊಂದು ಯಶಸ್ವಿ ಕವನ ಸಂಕಲನ. ನಾನು ಮಾತನಾಡದೆ ಬಿಟ್ಟ ಕವನಗಳಲ್ಲೂ ಕೆಲವು ಉತ್ತಮ ತಳಿಯವಾಗಿವೆ. ಮೂರ್ನಾಲ್ಕು (ಹೆಸರು ಹೇಳುವುದಿಲ್ಲ) ಸಾಮಾನ್ಯ ಕವನಗಳಾಗಿ ನನಗೆ ಕಂಡಿವೆ. + + + +ಈ ಸಂಕಲನವನ್ನು ದಿಟ್ಟತನದಲ್ಲಿ ನನ್ನ ಪೂರ್ವಾನುಮತಿಯಿಲ್ಲದೆ ಕಳಿಸಿ ನನ್ನಿಂದ ಇದಕ್ಕೆ ‘ಮುನ್ನುಡಿ’ ಲೇಖನ ಪಡೆದ ಶ್ರೀಮತಿ ಶೋಭ ನಾಯ್ಕರಿಗೆ ಅಭಿನಂದನೆಗಳು. ‘ಮುನ್ನುಡಿ’ ಯೆಂದರೆ ಕೇವಲ ಹೊಗಳಿಕೆಯ ಮಾತಲ್ಲ; ಅದೂ ಒಂದು ವಿಮರ್ಶೆಯಾಗಿರಬೇಕೆಂಬುದು ನನ್ನ ಹಂಬಲ. ಆ ದೃಷ್ಟಿಯಲ್ಲಿ ಮುಟ್ಟದೆ ಬಿಟ್ಟ ಕೆಲವು ಕವನಗಳ ಕ್ಷಮೆ ಕೋರಿ ವಿರಮಿಸುವೆ.. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_349.txt b/Kenda Sampige/article_349.txt new file mode 100644 index 0000000000000000000000000000000000000000..04a4e490140574db5e10c2dff8663e8612085e72 --- /dev/null +++ b/Kenda Sampige/article_349.txt @@ -0,0 +1,49 @@ + + +ಪ್ರಕಟಣೆ + +ಧರ್ಮೋದ್ಧಾರಕ ಸಂಘ ಪ್ರ. ನಂ. 5 + +ಈ ದಿನ ಇಲ್ಲಿಯ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಹೊರಪೌಳಿಯಲ್ಲಿ ಧರ್ಮವೀರರಾದ ಶ್ರೀ ಗೋಪೀನಾಥಶರ್ಮರು ಅಸ್ಪೃಶ್ಯರೊಡನೆ ಉಂಡ ತಮ್ಮ ಮಗನನ್ನು ಕರ್ತವ್ಯಪಾಲನೆಗಾಗಿ ಮನೆಯಿಂದ ಹೊರಡಿಸಿದ ಬಗ್ಗೆ ಧರ್ಮಪ್ರೇಮಿಗಳ ಪರವಾಗಿ ಅವರಿಗೆ ಧನ್ಯವಾದ ಕೊಡುವುದಕ್ಕಾಗಿ ಸಾರ್ವಜನಿಕ ಸಭೆ ಜರಗಲಿರುವುದು. ಪಂಡಿತವರ್ಯ ಮಾಧವಾಚಾರ್ಯರು ಅಧ್ಯಕ್ಷರಾಗಲೊಪ್ಪಿರುವರು. + +ಉಡುಪಿ,ಪ್ರಧಾನಮಂತ್ರೀ,3-9-1932ಧರ್ಮೋದ್ಧಾರಕ ಸಂಘ + +ಪ್ರಜಾಬಂಧು + +2-11-1932 + +ಉಡುಪಿ : ಇಲ್ಲಿಯ ಸನಾತನಿಗಳ ನೇತೃಗಳಾದ ಮಾಧವಾಚಾರ್ಯರ ಮೇಲೆ ಸ್ಥಳೀಯ ಕೋರ್ಟಿನಲ್ಲಿ, ಮೊದಲು ಅಸ್ಪೃಶ್ಯಜಾತಿಯವಳಾಗಿದ್ದು ಈಗ ವೇಶ್ಯಾವೃತ್ತಿಯಲ್ಲಿರುವ ದುರ್ಗಾಬಾಯಿಯು ಒಂದು ವಿಚಿತ್ರ ದಾವೆ ಹೂಡಿದ್ದಾಳೆ. ತನಗೆ ಇತ್ತೀಚೆಗೆ ಹುಟ್ಟಿದ ಹೆಣ್ಣು ಮಗುವೊಂದು ಶ್ರೀ ಆಚಾರ್ಯರಿಂದಾದುದೆಂದೂ ಆ ಮೇಲೆ ಅವರು ತನ್ನನ್ನು ತ್ಯಜಿಸಿ ಬೇರೊಬ್ಬಳನ್ನು ಹಿಡಿದುದರಿಂದ ತನಗೆ ಅವರು ರೂಪಾಯಿ 25/-ರ ಮಾಸಿಕ ವೇತನವನ್ನು ತೆರಬೇಕೆಂದೂ ಆಕೆಯ ವಾದ. + +ಪ್ರಜಾಬಂಧು + +4-8-1933 + +ಉಡುಪಿ : ಕೆಲವು ತಿಂಗಳುಗಳ ಹಿಂದೆ ಶ್ರೀ ಮಾಧವಾಚಾರ್ಯರ ಮೇಲೆ ದುರ್ಗಾಬಾಯಿ ಎಂಬವಳು ಹೂಡಿದ ಪರಿಹಾರದ್ರವ್ಯದ ದಾವೆಯು ಆಚಾರ್ಯರಿಗೆ ವಿರುದ್ಧ ತೀರ್ಮಾನವಾಗಿ ಅವರು ರೂಪಾಯಿ 500/-ರ ಪರಿಹಾರ ದ್ರವ್ಯವನ್ನು ಒಂದೇ ಗಂಟಿನಿಂದ ತೆರಬೇಕೆಂದಾಯಿತು. + +ಮಾನಪತ್ರ + +ಪತಿತೋದ್ಧಾರಕ ಶ್ರೀ ಕೃಷ್ಣಶರ್ಮರ ಸನ್ನಿಧಿಯಲ್ಲಿ: + +ಇಂದು ತಮ್ಮ ಹುಟ್ಟೂರಾದ ಉಡುಪಿಯಲ್ಲಿ ತಮ್ಮನ್ನು ಎದುರುಗೊಳ್ಳುತ್ತಿರುವಾಗ ನಮ್ಮ ಹೃದಯವು ಬಡಿಯುತ್ತಿದೆ. 13 ವರ್ಷಗಳ ಕೆಳಗೆ ತಮ್ಮನ್ನು ಇದೇ ನಾಡಿನಿಂದ ನಾವು ಹೊರಡಿಸಿದ್ದೆವು. ಆದರೆ ಕ್ಷಮಾಮಯರಾದ ತಾವು ಈ ತಪ್ಪನ್ನು ಕ್ಷಮಿಸಿ ತಮ್ಮ ದರ್ಶನವನ್ನು ನಮಗೆ ಕರುಣಿಸಿದುದಕ್ಕೆ ನಮ್ಮ ಧನ್ಯವಾದಗಳನ್ನು ಹೇಳಲು ಬಾಯಿ ಸಾಲದಾಗಿದೆ. + +ಪತಿತರ ಉದ್ಧಾರಕ್ಕಾಗಿ ತಾವು ತಮ್ಮ ಜೀವನವನ್ನು ಅರ್ಪಿಸಿದ್ದೀರಿ. ಅದಕ್ಕಾಗಿ ದೇಶತ್ಯಾಗಿಗಳಾದಿರಿ. ಸರ್ವ ಕಷ್ಟಗಳನ್ನು ಅನುಭವಿಸಿದಿರಿ. ತಮ್ಮ ವಿರೋಧಿಗಳಾಗಿದ್ದ ನಮ್ಮ ಹೃದಯಗಳನ್ನು ಪರಿವರ್ತಿಸಿದಿರಿ. ಇಂದು ಸಾರ್ವಜನಿಕ ಸಮ್ಮತಿಯಿಂದ ನಮ್ಮ ನಾಡಿನ ಈ ಮಹಾಲಿಂಗೇಶ್ವರ ದೇವಸ್ಥಾನವನ್ನು ಅಸ್ಪೃಶ್ಯರಿಗಾಗಿ ತೆರೆದಿಕ್ಕಿ ನಮ್ಮ ನಾಡಿನಲ್ಲಿ ತಮ್ಮ ಹೆಸರನ್ನು ಸ್ವರ್ಣಾಕ್ಷರಗಳಿಂದ ಕೆತ್ತಿಸುವ ಕೃಪೆ ಮಾಡಬೇಕು. + +ನಾವು ಮಾಡಿದ ಅಪಕಾರಗಳಿಗಾಗಿ ಕ್ಷಮೆ ಬೇಡಲು ನಾಲಗೆ ಬಾರದು. ಆದರೆ ತಾವು ನಮ್ಮನ್ನು ಕ್ಷಮಿಸಿದ್ದೀರಿ. ಶ್ರೀ ಮಹಾಲಿಂಗೇಶ್ವರನು ತಮಗೆ ಚಿರಾಯುರಾರೋಗ್ಯಗಳನ್ನು ದಯಪಾಲಿಸಿ ತಮ್ಮಿಂದ ದೀನೋದ್ಧಾರ ಕಾರ್ಯಗಳನ್ನು ಇನ್ನೂ ಮಾಡಿಸಲೆಂದು ಹೃತ್ಪೂರ್ವಕವಾಗಿ ಹಾರೈಸುತ್ತೇವೆ. + +ಉಡುಪಿಇತಿ, + +ತಾ. 15-3-1945 ಪುರಜನರು + +ಪತಿತೋದ್ಧಾರಕ ಶ್ರೀ ಕೃಷ್ಣಶರ್ಮರ ಆತ್ಮವೃತ್ತ + +ನನಗೆ ಆಗ ಎಂಟು ವರ್ಷಗಳು ತುಂಬುತ್ತಾ ಬಂದಿದ್ದವು. ನಮ್ಮೂರಲ್ಲಿ ಇದ್ದ ಒಂದು ಶಾಲೆಯಲ್ಲಿ ನಾನು ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದೆ. ನಮ್ಮ ತರಗತಿಯಲ್ಲಿ ಅಸ್ಪೃಶ್ಯ ಹುಡುಗನೊಬ್ಬನು ವಿದ್ಯಾಭ್ಯಾಸ ಮಾಡುತ್ತಿದ್ದನು. ಆತನ ಹೆಸರು ತಿಮ್ಮು. ಅವನನ್ನು ಪ್ರತ್ಯೇಕವಾದ ಬೆಂಚಿನ ಮೇಲೆ ಕುಳ್ಳಿರಿಸುವುದನ್ನು ನೋಡಿ ನನಗೆ ಸಹಜವಾಗಿಯೇ ಕುತೂಹಲವಾಗುತ್ತಿತ್ತು. ನಮ್ಮ ತಂದೆಯವರು ಒಮ್ಮೊಮ್ಮೆ “ಶಾಲೆಗಳಿಗೆಲ್ಲ ಹೊಲೆಯರನ್ನು ಬರಗೊಳಿಸುತ್ತಾರೆ. ಈ ನೀಚರು ಬಂದು ಧರ್ಮವೆಲ್ಲಾ ಹಾಳಾಗುತ್ತೆ” ಎನ್ನುತ್ತಿದ್ದುದು ನನಗೆ ನೆನಪಿದೆ. ಹೊಲೆಯರನ್ನು ಮುಟ್ಟುವುದು ಅಷ್ಟೊಂದು ಹೀನವೇನೆಂದು ನನಗೆ ಗೊತ್ತಾಗುತ್ತಿರಲಿಲ್ಲ. ನಾನು ತಾಯಿಯನ್ನು ಕೇಳಿದೆ. ಸಮರ್ಪಕ ಉತ್ತರ ದೊರೆಯಲಿಲ್ಲ. “ಬೆಕ್ಕು ನಾಯಿಗಳನ್ನು ಮುಟ್ಟುತ್ತೇವಲ್ಲಾ” ಎಂದು ನಾನು ಪ್ರಶ್ನಿಸಿದೆ. ಆಕೆ ಹೇಳಿದಳು: “ಹಾಗೆಲ್ಲಾ ಮಾತಾಡಬಾರದು. ಅವರು ಹೊಲೆಯರು, ಮಧು-ಮಾಂಸ ತಿನ್ನುತ್ತಾರೆ, ಕರ್ರಗಿದ್ದಾರೆ, ಬ್ರಹ್ಮ ವರ್ಚಸ್ಸಿಲ್ಲ, ಅವರನ್ನು ಮುಟ್ಟಿದರೆ ಬ್ರಾಹ್ಮಣ್ಯ ಕೆಟ್ಟು ಹೋಗುತ್ತದೆ” ಎಂದು. ನಾನು ಕೇಳಿದೆ:- “ಹಾಗಾದರೆ ಬೇರೆ ಶೂದ್ರರು ತಿನ್ನುತ್ತಾರಲ್ಲ” – ಅವಳು ಸಿಟ್ಟುಗೊಂಡು “ಮುಟ್ಟಿದರೆ ಕಣ್ಣು ಹೊಟ್ಟಿಹೋಗುತ್ತದೆ” ಎಂದು ಬೆದರಿಕೆ ಹಾಕಿದಳು. ನಾನು ಸುಮ್ಮನಾದೆ. + +ಹೊಲೆಯ ತಿಮ್ಮು ಒಂದು ದಿನ ನಮ್ಮಲ್ಲಿಗೆ ಉಪ್ಪಿನಕಾಯಿ ಬೇಡುವುದಕ್ಕೆ ಬಂದಿದ್ದ. ನಮ್ಮ ತಾಯಿ ಹುಳುವಾದ ಸ್ವಲ್ಪ ಉಪ್ಪಿನಕಾಯಿಯನ್ನು ಕುದಿಸಿ ಒಂದು ಎಲೆಯಲ್ಲಿ ಹಾಕಿ ಅಂಗಳದ ಮೂಲೆಯಲ್ಲಿಟ್ಟು ತೆಗೆದುಕೊಂಡು ಹೋಗೆಂದಳು. ನಾನು ಅವನ ಎದುರಿನಲ್ಲಿಯೇ “ಹುಳುವಾದ ಉಪ್ಪಿನಕಾಯಿ ಏಕೆ ಕೊಟ್ಟೆ” ಎಂದು ಕೇಳಿಬಿಟ್ಟೆ. ತಾಯಿಯು ಸಿಟ್ಟುಗೊಂಡು ನನಗೆ ಹೊಡೆಯಬಂದರು. ನಾನು ನಗುತ್ತಾ ತೋಟಕ್ಕೆ ಓಡಿದೆ. ಓಡುವ ಭರದಲ್ಲಿ ಫಕ್ಕನೆ ತೋಟದಲ್ಲಿಯ ಕೆರೆಯಲ್ಲಿ ಬಿದ್ದುಬಿಟ್ಟೆ. ನನ್ನ ತಾಯಿಗೆ ಈಜು ಬರುತ್ತಿರಲಿಲ್ಲ. ತಂದೆ ಮನೆಯಲ್ಲಿರಲಿಲ್ಲ. ಹತ್ತಿರದಲ್ಲಿ ಮನೆಗಳೂ ಇರಲಿಲ್ಲ. ತಿಮ್ಮುವು ಅತ್ತಿತ್ತ ನೋಡಿ ಕೆರೆಯಲ್ಲಿ ಹಾರಿಕೊಂಡು ಬಹಳ ಪೇಚಾಟದಿಂದ ನನ್ನನ್ನು ಎತ್ತಿ ಮೇಲೆ ತಂದ. + +ನನಗೆ ಅನೇಕ ದಿನಗಳವರೆಗೆ ಕಣ್ಣು ಹೊಟ್ಟಿ ಹೋಗುವುದೋ ಎಂದು ಹೆದರಿಕೆ ಇತ್ತು! ಆದರೆ ಹಾಗೆ ಆಗದಿದ್ದುದನ್ನು ನೋಡಿ ಆಶ್ಚರ್ಯವಾಯಿತು. ಆಮೇಲೆ ನಾನು ತಿಮ್ಮುವನ್ನು ಸರಾಗವಾಗಿ ಮುಟ್ಟುವುದಕ್ಕೆ ಮೊದಲು ಮಾಡಿದೆ. ಒಂದೆರಡು ವರ್ಷ ಈ ವಿಷಯವು ನಮ್ಮ ತಂದೆ ತಾಯಿಗಳಿಗೆ ತಿಳಿದಿರಲಿಲ್ಲ. ಅವರಿಗೆ ಗೊತ್ತಾದಾಗ ಅವರು ನನ್ನನ್ನು ಹೊಡೆದು ಮೃತ್ತಿಕೆ ಹಾಕಿ ಸ್ನಾನ ಮಾಡಿಸಿ ಬೇರೆ ಯಜ್ಞೋಪವೀತ ಹಾಕಿಸಿದರು. ಇದರಿಂದಾಗಿ ನನ್ನ ಅಪನಂಬಿಕೆಯೇನೂ ಕಡಿಮೆಯಾಗಲಿಲ್ಲ. ಅಷ್ಟರಲ್ಲಿ ಎಲ್ಲೆಲ್ಲಿಯೂ ಅಸ್ಪೃಶ್ಯತಾ ನಿವಾರಣೆಯ ಚಳವಳವು ಹೂಡಲ್ಪಟ್ಟಿತ್ತು. ನಮ್ಮಲ್ಲಿನ ಬ್ರಾಹ್ಮಣರಲ್ಲಿ ಮುಕ್ಕಾಲು ಪಾಲು ಈ ಚಳವಳಕ್ಕೆ ವಿರುದ್ಧವಾಗಿದ್ದರು. ಅಲ್ಲದೆ ಬ್ರಾಹ್ಮಣೇತರರಲ್ಲಿಯೂ ತುಂಬಾ ಜನರು ವಿರೋಧಿಗಳಿದ್ದರು. ಮಧ್ಯಜಾತಿಯ ಈ ಬ್ರಾಹ್ಮಣೇತರರು ತಾವು ತಮ್ಮಿಂದ ಕೀಳುಜಾತಿಯವರನ್ನು ತಿರಸ್ಕರಿಸುತ್ತಿದ್ದರೂ ಕೂಡ ಬ್ರಾಹ್ಮಣರು ಮಾತ್ರ ತಮ್ಮನ್ನು ಕೊಂಚ ತಿರಸ್ಕರಿಸಿದರೆ ಸಿಟ್ಟುಗೊಳ್ಳುತ್ತಿದ್ದರು. ಇದೆಲ್ಲಾ ನನಗೆ ದೊಡ್ಡ ಸಮಸ್ಯೆಯಾಗಿತ್ತು. ಆಗ ಅಸ್ಪೃಶ್ಯತಾ ನಿವಾರಣೆಯ ಚಳವಳವು ಉನ್ನತ ಸ್ಥಿತಿಯಲ್ಲಿತ್ತು. ನನಗಾಗ ಹದಿನೈದು ವರುಷ. + + + +ಅಸ್ಪೃಶ್ಯರಲ್ಲೊಬ್ಬನು ಸ್ವಲ್ಪ ಕಲಿತಿದ್ದವನು ಒಂದು ದಿನ ಸುಧಾರಕರ ಬೆಂಬಲದಿಂದ ಒಂದು ಸಾರ್ವಜನಿಕ ಸಭೆಯಲ್ಲಿ ಭಾಷಣ ಮಾಡಿದನು. ಆತನು ತಿಮ್ಮುವಿನ ಚಿಕ್ಕಪ್ಪನಾಗಿದ್ದನು. ಅವನು ಭಗವದ್ಗೀತೆಯ ಕೆಲವು ಶ್ಲೋಕಗಳನ್ನು ಎತ್ತಿ ಮಾತನಾಡಿದೊಡನೆಯೇ ನಮ್ಮ ಸನಾತನಿಗಳ ಕೋಪವು ಮಿತಿ ಮೀರಿ ಅವನನ್ನು ಕಲ್ಲುಗಳಿಂದಲೂ ಇಟ್ಟಿಗೆಗಳಿಂದಲೂ ಹೊಡೆದು ಗಾಯಗೊಳಿಸಿದರು. ಅಲ್ಲಿನವರೆಗೆ ನಾನು ಈ ಚಳವಳದ ವಿಷಯ ತಟಸ್ಥನಾಗಿದ್ದೆ. ಈ ಅತ್ಯಾಚಾರವನ್ನು ಕಂಡು ನನ್ನ ಲಕ್ಷ್ಯವನ್ನು ನಾನು ನಿರ್ಧರಿಸಿದೆ. ಅದೇ ತಿಂಗಳಲ್ಲಿ ನಮ್ಮೂರಿನ ಸುಧಾರಕರು ಮಾಡಿದ ಸಹಪಂಕ್ತಿ ಭೋಜನದಲ್ಲಿ ಅದೇ ಅಸ್ಪೃಶ್ಯನು ತಯಾರಿಸಿದ ಅಡಿಗೆಯನ್ನು ನಾನೂ ಉಂಡೆ. ನಮ್ಮ ತಂದೆಯವರಿಗೆ ಇದು ತಿಳಿದು ಬಂದ ಕೂಡಲೇ ಅವರು ನನ್ನನ್ನು ಮನೆಯಿಂದ ಹೊರಡಿಸಿದರು. ಆಮೇಲೆಯೇ ನನ್ನ ನಿಜವಾದ ಜೀವನವು ಪ್ರಾರಂಭವಾಯಿತೆನ್ನಬಹುದು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_35.txt b/Kenda Sampige/article_35.txt new file mode 100644 index 0000000000000000000000000000000000000000..40adcc0ac1725c182237db472f221c1659d6ed98 --- /dev/null +++ b/Kenda Sampige/article_35.txt @@ -0,0 +1,7 @@ +(ಡಾ. ಆರ್ ಸುನಂದಮ್ಮ) + +ಕಾದಂಬರಿ ಪ್ರಾರಂಭವಾಗುವುದೇ ಪಿತೃವಾಕ್ಯ ಪರಿಪಾಲನೆಗಾಗಿ ರಾಮ ಹದಿನಾಲ್ಕು ವರ್ಷ ವನವಾಸಕ್ಕೆ ಹೊರಡುವಲ್ಲಿಂದ. ಹಿರಿಯ ಮಗನಾದ ರಾಮನಿಗೆ ಪಟ್ಟಕಟ್ಟಬೇಕೆನ್ನುವ ಸಂಭ್ರಮದಲ್ಲಿದ್ದ ಅಯೋಧ್ಯೆ ಮತ್ತು ಅರಮನೆಗೆ ರಾಮನು ವನವಾಸಕ್ಕೆ ಹೊರಟಿರುವುದು ಅರಗಿಸಿಕೊಳ್ಳಲಾರದ ನೋವಿಗೆ ದಿಗಿಲಿಗೆ ಕಾರಣವಾಗುತ್ತದೆ. ಹಿಂದೆ ಕೈಕೆ ದಶರಥನಿಂದ ಪಡೆದ ವರದ ಕಾರಣದಿಂದ ರಾಮನು ವನವಾಸಕ್ಕೆ ಹೋಗುವ ಸನ್ನಿವೇಶದಲ್ಲಿ, ತಾಯಿ ಕೈಕೆಯು ವರ ಪಡೆದಿರುವ ಪ್ರಕಾರ ಭರತ ಅಯೋಧ್ಯೆಯ ರಾಜನಾಗಿ ಅಧಿಕಾರದಲ್ಲಿ ಇರಬೇಕಿತ್ತು. ಆದರೆ ಅವನು ಹಾಗೆ ಮಾಡದೆ ಅಣ್ಣನ ಆಣತಿಯಂತೆ ಅವನ ಪರವಾಗಿ ಹದಿನಾಲ್ಕು ವರ್ಷಗಳ ಕಾಲ ಅಧಿಕಾರ ಇದ್ದೂ ಇಲ್ಲದ ಹಾಗೆ ರಾಜ್ಯವನ್ನು ನೋಡಿಕೊಳ್ಳಬೇಕಾಗುತ್ತದೆ. ಇಂತಹ ಸನ್ನಿವೇಶದಲ್ಲಿ, ಎದುರಾದ ಸಂದಿಗ್ಧ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಭರತ ವಿಚಲಿತನಾದರೂ ಎದೆಗುಂದದೆ, ಅರಮನೆಯಿಂದ ಹೊರಗಿದ್ದು, ನಂದಿಗ್ರಾಮದಿಂದ ರಾಜ್ಯದ ಜವಾಬ್ದಾರಿಯನ್ನು ನಿಭಾಯಿಸುತ್ತಾನೆ. ಈ ಹದಿನಾಲ್ಕು ವರ್ಷ ಅವನು ಎದುರಿಸಿದ ಸವಾಲು, ಇಕ್ಕಟ್ಟು ಯಾವುವು ? ಅವನ್ನೆಲ್ಲ  ತಾಳ್ಮೆಯಿಂದ, ತನ್ನ ಸಾಮರ್ಥ್ಯದಿಂದ, ಹೇಗೆ ಎದುರಿಸಿ ಜಯಿಸುತ್ತಾನೆ ಹಾಗೂ ಎಲ್ಲರನ್ನು ಒಡಗೂಡಿಕೊಂಡು ರಾಜ್ಯವನ್ನು ಮುನ್ನಡೆಸುತ್ತಾನೆ ಎನ್ನುವುದೇ ಕಾದಂಬರಿಯ ಹೂರಣ. + +ತಾನು ಸೀತೆ-ಲಕ್ಷ್ಮಣರೊಂದಿಗೆ ವನವಾಸಕ್ಕೆ ಹೋಗುವಾಗ ಕಂಡಿರುವ ಅಯೋಧ್ಯೆಯ ಪರಿಸರವು, ತಾವು ಅರಣ್ಯವಾಸ ಮುಗಿಸಿ ಹಿಂದಿರುಗುವ ಹೊತ್ತಿಗೆ ಕೃಷಿಪ್ರಧಾನವಾಗಿ ಬದಲಾಗಿರುವುದನ್ನು ಕಾಣುತ್ತಲೇ ತುಸುಮಟ್ಟಿಗೆ ಚಿಂತಿತನಾಗುವ ರಾಮನ ಪ್ರತಿಕ್ರಿಯೆಯ ಮೂಲಕ ಭರತನ ಆಳ್ವಿಕೆಯ ವಿಧಾನದ ಇತ್ಯಾತ್ಮಕ ಮುಖವನ್ನು ಅನಾವರಣಗೊಳಿಸುತ್ತದೆ ಕೃತಿ. ʻರಾಮರಾಜ್ಯʼ ಎನ್ನುವ ಪ್ರಚಲಿತ ಕಲ್ಪನೆಗೆ ವಿಭಿನ್ನವಾದ ಒಂದು ಪರಿಕಲ್ಪನೆಯನ್ನು ಸಕಾರಣವಾಗಿ ಮಂಡಿಸಿರುವ ಕೃತಿಯು ಪ್ರಭುತ್ವವು ಇರಬೇಕಾಗಿರುವ ನೆಲೆಯನ್ನು ಶೋಧಿಸುವ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎನಿಸುತ್ತದೆ. + +ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ. \ No newline at end of file diff --git a/Kenda Sampige/article_350.txt b/Kenda Sampige/article_350.txt new file mode 100644 index 0000000000000000000000000000000000000000..83ea5d9cd9278971c7ce97588b98c7356ab21d48 --- /dev/null +++ b/Kenda Sampige/article_350.txt @@ -0,0 +1,33 @@ + + +ಪಡು ಬೈಲಲ್ಲಿ ಒಮ್ಮಿಂದೊಮ್ಮೆ ದೊಡ್ಡ ಬೊಬ್ಬೆ ಎದ್ದಿತು, “ಪಿಜಿನ ಪೂಜಾರಿ ಬಿದ್ದ! ಮರದಿಂದ ಬಿದ್ದ!” ಎಂದು. ಉಳುತ್ತಿದ್ದ ಬೊಗ್ಗು ಕೋಣಗಳನ್ನು ನಿಲ್ಲಿಸದೆ ಓಡಿದ; ನೀರು ಮೊಗೆಯುತ್ತಿದ್ದ ಜಾರು ಮುಳುಗಿಸಿದ ಮರಿಗೆಯನ್ನು ಅಲ್ಲೇ ಬಿಟ್ಟೋಡಿದ; ಗದ್ದೆಯ ಅಂಚಿನಲ್ಲಿ ಹುಲ್ಲು ಕೆರೆಯುತ್ತಿದ್ದ ರಂಗು ಕೈಯಲ್ಲಿದ್ದ ಮುಷ್ಟಿ ಹುಲ್ಲನ್ನು ಹಿಡಿದುಕೊಂಡೇ ಹಾರಿದಳು. ಹೀಗೆ ಬೈಲಿನ ನಾಲ್ಕು ಕಡೆಗಳಿಂದಲೂ ಜನರು ಓಡುತ್ತಿದ್ದರು. ಧಾನ್ಯದ ಗದ್ದೆಗೆ ಇಳಿದು, ಬಿತ್ತಿದ ಗದ್ದೆಯನ್ನು ತುಳಿದು, ಕಬ್ಬಿನ ಏರಿಯನ್ನು ಜರಿದು, ನೇರಾಗಿ ಪಿಜಿನ ಪೂಜಾರಿಯ ಮನೆತೋಟದ ಕಡೆಗೆ ಧಾವಿಸುತ್ತಿದ್ದರು ಬೈಲಿನ ಜನರೆಲ್ಲ . ಮುದಿ ಉಮ್ಮಕ್ಕ ಶೆಡ್ತಿಯೂ ಊರುಗೋಲು ಊರಿಕೊಂಡು ತನ್ನ ಅಂಗಳದ ತುದಿಗೆ ಬಂದು ಓಡುವವರನ್ನು ಕರೆದು “ಯಾರಪ್ಪಾ ಬಿದ್ದುದು? ಪಿಜನನೆ? ಹೋಗಿಯಪ್ಪಾ ಬೇಗ, ಗಡಿಮದ್ದು ಹಾಕಿ” ಎಂದು ಕೂಡಿದಷ್ಟು ಕೂಗಿ ಹೇಳಿದಳು. “ಅಯ್ಯೋ, ಪಿಜನಾ, ಅಮಲು ತಕ್ಕೊಂಡು ಮರಕ್ಕೇರ ಬೇಡಾ ಎಂದು ಹೇಳಲಿಲ್ಲವೇ ನಾನು ಎಷ್ಟೋ ಸಲ? ಹಿಂದೊಮ್ಮೆ ಬಿದ್ದೂ ಬುದ್ಧಿ ಬಾರದೆ ಹೋಯಿತೆ ನಿನಗೆ?” ಎಂದು ನಿಟ್ಟುಸಿರು ಬಿಡುತ್ತಾ ಏನು ಸುದ್ದಿ ಬರುವುದೆಂದು ಅಲ್ಲೇ ಅಂಗಳದ ತುದಿಯಲ್ಲಿ ಕಾದು ಕುಳಿತಳು; ಕುಳಿತು ಕಾದಳು. + +ಪಿಜಿನ ಪೂಜಾರಿಯನ್ನು ಎತ್ತಿಕೊಂಡು ಹೋಗಿ ಚಾವಡಿಯಲ್ಲಿ ಮಲಗಿಸಿದರು. ಅವನ ಪಕ್ಕೆಲುಬು ಮುರಿದಿತ್ತು. ತಲೆಗೆ ಪೆಟ್ಟಾಗಿತ್ತು. ನೆರೆದ ನೂರಾರು ಮಂದಿ ಸಾವಿರಾರು ಮದ್ದು ಹೇಳಿದರು. ಸಿಕ್ಕಿದ ಏನೇನೋ ಮದ್ದು ಹಾಕಿ ಕಟ್ಟಿದರು. ‘ಏನೋ ದೈವದ ಪೆಟ್ಟಲ್ಲದೆ ಹೀಗೆ ಬೀಳುವುದೆಂದರೇನು? ಕೋಳಿ ಸುಳಿದುಬಿಡಿ’ ಎಂದರು ಹಲವರು. ಪಿಜಿನನು ಕ್ಷೀಣಸ್ವರದಿಂದ ತನ್ನ ಮಗನನ್ನು ಕರೆದನು; ‘ಚೀಂಕ್ರಾ, ನನ್ನನ್ನು ನೋಡು; ಆಣೆ ಇಡು ಹೆಂಡ ಕುಡಿಯುವುದಿಲ್ಲ ಎಂದು, ಸ್ಥಳದ ಆಣೆಯಿಡು!’ ಎಂದನು. ಚೀಂಕ್ರನು ಪ್ರತಿಜ್ಞೆ ಮಾಡಿದ; ತಂದೆಯು ತೀರಿಕೊಂಡ. + +ಚೀಂಕ್ರನು ತಂದೆಯ ನುಡಿಯಂತೆ ನಡೆದನು. ಮುರ್ತೆಯನ್ನು ಬಿಡಲಿಲ್ಲ; ಆದರೆ ಹೆಂಡ ಕುಡಿಯಲಿಲ್ಲ . ಚಿಕ್ಕ ಗುತ್ತಿಗೆಯನ್ನು ವಹಿಸಿಕೊಂಡು ಒಂದು ದಾರಿಗೆ ಬರುವಂತಿದ್ದ. ಆದರೆ ಮಾಡುವುದೇನು? ಪಿಜಿನನು ಸತ್ತು ನಾಲ್ಕು ವರ್ಷಗಳಾಗಿಲ್ಲ; ನಿರಪರಾಧಿ ಚೀಂಕ್ರನು ಅಬ್ಕಾರಿ ಮೊಕದ್ದಮೆಯೊಂದರ ತಿಕ್ಕಿನಲ್ಲಿ ಸಿಕ್ಕಿಬಿದ್ದು ಆರು ತಿಂಗಳು ಜೈಲನ್ನು ಸೇರಿದ. ಹಿಂತಿರುಗಿ ಬರುವಷ್ಟರಲ್ಲಿ ಅವನ ತಾಯಿಯು ತೀರಿಕೊಂಡಿದ್ದಳು. ಇದ್ದ ಮನೆಜಾಗ ಗುತ್ತಿಗೆಯ ಹಣಕ್ಕೆ ಏಲಂ ಆಗಿ ಹೋಗಿತ್ತು! ಇದನ್ನೆಲ್ಲಾ ಕಂಡು ಚೀಂಕ್ರನಿಗೆ ತಡೆಯಲಾರದ ದುಃಖವಾಯಿತು. ಸ್ವಲ್ಪ ಸಮಯ ಅಲ್ಲಿ ಇಲ್ಲಿ ತನ್ನವರೆಂಬವರಲ್ಲೆಲ್ಲಾ ಅಲೆದಲೆದು ಕೊನೆಗೆಲ್ಲೊ ಮಾಯವಾದ. + +*********** + +ಅಂದಿನಿಂದ ಇಂದಿಗೆ ಇಪ್ಪತ್ತು ವರುಷಗಳು ಹಾರಿ ಹೋಗಿವೆ! ನೋಡಿರಿ, ಚೀಂಕ್ರನು ತಿರುಗಿ ಊರಿಗೆ ಬಂದಿದ್ದಾನೆ. ಈಗ ಚೀಂಕ್ರನ ರೀತಿಯೇ ಬೇರೆ. ತಾನು ಚೀಂಕ್ರನೆಂದು ಹೇಳಿಕೊಳ್ಳದಿರುತ್ತಿದ್ದರೆ ಅವನ್ಯಾರೋ ಮೇಲು ಜಾತಿಯ ದೊಡ್ಡ ಮನುಷ್ಯನೆಂದು ಆ ಹಳ್ಳಿಯವರೆಲ್ಲ ಅವನೊಡನೆ ಬೆರೆಯುತ್ತಿದ್ದರೋ ಏನೋ! ಹಾಗಿತ್ತು ಅವನ ನಡೆ ನುಡಿ ವೇಷ! ಈಗ ಅವನಿಗೆ ಹೆಂಡತಿ, ಎರಡು ಗಂಡು ಮಕ್ಕಳು ಇವೆ. ಹೇರಳ ಹಣವನ್ನು ಸಂಪಾದಿಸಿಕೊಂಡು ಬಂದಿದ್ದನು. ಊರು ಬಿಟ್ಟವನು ದೂರದ ಸಂಬಂಧಿಕನೊಬ್ಬನಿದ್ದ ರಂಗೂನಿಗೆ ಅವನೊಡನೆ ಹೋಗಿದ್ದನಂತೆ. ಅಲ್ಲೊಂದು ಕಾಮಗಾರಿಕೆಯಲ್ಲಿದ್ದು ದುಡ್ಡು ಗಂಟುಕಟ್ಟಿಕೊಂಡು ಬಂದಿದ್ದನಂತೆ. + +ಊರಿಗೆ ಬಂದ ಚೀಂಕ್ರನು ಅದೇ ತನ್ನ ಹಿರಿಯರ ಮನೆಜಾಗವನ್ನು ಕೊಂಡುಕೊಂಡ. ದೊಡ್ಡ ಮಹಡಿಯ ಮನೆಯನ್ನು ಕಟ್ಟಿಸಿದ; ಆಸ್ತಿಪಾಸ್ತಿ ಮಾಡಿದ. ಈಗ ಚೀಂಕ್ರನು ಊರಲ್ಲೊಬ್ಬ ದೊಡ್ಡ ಮನುಷ್ಯ. ಅವನ ಹಣ, ಅವನ ಸಹಾಯ, ಮೇಲು ಜಾತಿಯವರಿಗೂ ಬೇಕು; ಅವಕ್ಕೆಲ್ಲಾ ಅವನು ಹತ್ತಿರದವ, ಆದರೆ ಹತ್ತು ಕೂಡಿದಲ್ಲಿ ಅವನು ದೂರದವ! ಅನೇಕರಲ್ಲಾಗುವ ಮದುವೆ ಮುಂಜಿಗಳಿಗೆ ಸಾಲಕೊಡಬೇಕು ಚೀಂಕ್ರ ಪೂಜಾರಿ. ಊರಲ್ಲಿ ವರಾಡ ವಂತಿಗೆಯಲ್ಲಿ ಚೀಂಕ್ರ ಪೂಜಾರಿಯ ಅಂಕೆ ದೊಡ್ಡದು. ಆದರೆ ಅಂತಹ ಕಾರ್ಯಕಲಾಪಗಳಲ್ಲಿ ಮಾತ್ರ ಚೀಂಕ್ರ ಪೂಜಾರಿಯು ದೂರದಲ್ಲಿ, ಚಪ್ಪರದೊಳಗೆ ತಲೆ ಹಾಕಲಿಕ್ಕೂ ಆಯೋಗ್ಯ! ಅಷ್ಟೇಕೆ? ಆ ಹಳ್ಳಿಯ ಎಲ್ಲರಿಗಿಂತ ಹೆಚ್ಚು ತೀರ್ವೆ ತೆರುವ ದೊಡ್ಡ ವರ್ಗಾದಾರ ಚೀಂಕ್ರ ಪೂಜಾರಿ; ಆದರೆ ಬ್ರಾಹ್ಮಣ ಪಠೇಲರಲ್ಲಿ ಸರಕಾರದ ಹಣ ತೆರಲಿಕ್ಕೆ ಹೋದಾಗ ಅವನು ನಿಂತು ಕಾಯಬೇಕು ಹೊರಗಿನ ಅಂಗಳದಲ್ಲಿ. ಆದರೆ ಚೀಂಕ್ರನು ಇದನ್ನೆಲ್ಲಾ ಸಹಿಸಿಕೊಂಡನು. ಊರ ಕಟ್ಟಲೆಯೆಂದು ತಲೆ ಬಗ್ಗಿಸಿದನು. ಸಂದು ಬಂದ ರೂಢಿಯೆಂದು ಸುಮ್ಮಗಿದ್ದನು. + + + +ಒಂದು ದಿನ ಚೀಂಕ್ರನ ಹೆಂಡತಿಯು ಊರ ಜಾತ್ರೆಯ ಸಂತೆಗೆ ಬಳೆಯಿಡಿಸಿಕೊಳ್ಳಲು ಹೋಗಿದ್ದಳು. ಗಾಳಿಗೆ ಅವಳ ಸೆರಗು ಹಾರಿತು. ಅಲ್ಲಿ ಬಳೆಯಿಡಿಸಿಕೊಳ್ಳುತ್ತಿದ್ದ ಮೇಲು ಜಾತಿಯವಳೊಬ್ಬಳ ಮೈಗೆ ತಾಗಿತು! ಕೂಡಲೆ ಗದ್ದಲವೆದ್ದಿತು. ಮೇಲು ಜಾತಿಯ ಹೆಂಗಸರೆಲ್ಲಾ ಒಟ್ಟಾದರು; ಅವಳನ್ನು ಬೈದು ಹಂಗಿಸಿದರು – ‘ದುಡ್ಡಿನ ಸೊಕ್ಕು, ಹೆಂಡದ ಸೊಕ್ಕು!’ ಎಂದರು. ಚೀಂಕ್ರನ ಹೆಂಡತಿ ಮಾನವಂತೆ. ರಂಗೂನಿಲ್ಲಿ ಗೌರವಸ್ಥರ ಸ್ತ್ರೀಯರೊಂದಿಗೆ ತಿರುಗಿದವಳು. ಈ ಅವಮಾನವನ್ನು ಸಹಿಸಲಾರದೆ ನೆಟ್ಟಗೆ ಮನೆಗೆ ಬಂದು ನಡೆದ ವಿಚಾರವನ್ನೆಲ್ಲ ತನ್ನ ಗಂಡನೊಡನೆ ಹೇಳಿ ಗೊಳ್ಳೆಂದು ಅತ್ತುಬಿಟ್ಟಳು. ನಮ್ಮಲ್ಲಿ ಇಷ್ಟು ಸಂಪತ್ತಿದ್ದರೂ, ನಾವಿಷ್ಟು ನಿರ್ಮಲವಾಗಿದ್ದರೂ, ನಾಯಿಗಿಂತ ಕೀಳಾದೆವಲ್ಲಾ!’ ಎಂದು ಕಣ್ಣೀರಿಟ್ಟಳು. ಈ ಮಾತು ಚೀಂಕ್ರನ ಎದೆಗೂ ನಾಟಿತು. + +ಚೀಂಕ್ರನು ಯೋಚಿಸಿ ಯೋಚಿಸಿ ಕೊನೆಗೊಂದು ಸಂಕಲ್ಪ ಮಾಡಿದನು. ತನ್ನ ಇಬ್ಬರು ಮಕ್ಕಳನ್ನು ಮಿಶನ್ ಶಾಲೆಗೆ ಕಳುಹಿಸತೊಡಗಿದ. ತಿಂಗಳು ವರ್ಷಗಳು ಕಳೆದುವು. ಮಕ್ಕಳಿಬ್ಬರೂ ವಿದ್ಯಾಭ್ಯಾಸದಲ್ಲಿ ನಿಪುಣರಾಗುತ್ತ ಹೋದರು. ಹಿರಿಯವನಾದ ಸುಂದರನು ಬಿ.ಎ. ಬಿ.ಎಲ್. ಆಗಿ ಮದ್ರಾಸಿನಲ್ಲೆ ಪ್ರಖ್ಯಾತ ವಕೀಲನೆನಿಸಿಕೊಂಡ. ಚೀಂಕ್ರನ ಊರಿನ ಹಲವು ಮೇಲು ಜಾತಿಯವರೂ ಅವನಲ್ಲಿಗೆ ಹೋಗಿ ‘ಅಪ್ಪೀಲು ನಂಬ್ರ’ ಗಳನ್ನು ಕೊಟ್ಟು ಬರುತ್ತಿದ್ದರು.ಚೀಂಕ್ರನ ಕಿರಿಯ ಮಗ ರಾಮವು ಇಂಗ್ಲೆಂಡಿಗೆ ಹೋಗಿ ಐ.ಸಿ.ಎಸ್. ಪಾಸಾಗಿ ಬಂದನು. ಮದ್ರಾಸಿನಲ್ಲಿ ತನ್ನ ಸಹಪಾಠಿಯಾಗಿದ್ದ ಕ್ರಿಶ್ಚನ್ ತರುಣಿಯೊಬ್ಬಳಲ್ಲಿ ಅವನಿಗೆ ಪ್ರೀತಿ ಬಿತ್ತು. ಕೊನೆಗೆ ಅವಳನ್ನು ಮದುವೆಯಾಗಲೂ ಬೇಕಾಯಿತು. ಪರಿಣಾಮವಾಗಿ ಈಗ ಅವನ ಹೆಸರು ಆರ್. ಜೋರ್ಜ್ ರೋಬರ್ಟ್ಸ್ ಐ.ಸಿ.ಯಸ್. ಕೆಲವು ಸಮಯ ಮಧುರೆಯಲ್ಲಿ ಕಲೆಕ್ಟರನಾಗಿದ್ದು ತನ್ನೂರಾದ ಚಂದ್ರಪುರಿಗೆ ವರ್ಗವಾಗಿ ಬಂದನು. + +ಚಂದ್ರಪುರಿಯಲ್ಲಿ ಮೊದಲ ಸಲ ಬಂದಾಗ ಆ ಕಲೆಕ್ಟರರನ್ನು ಇದಿರುಗೊಳ್ಳುವ ಸಂಭ್ರಮವೇನು? ಮಠದಿಂದ ಗಗ್ಗರ, ಡೋಲು, ಮಕರ ತೋರಣ, ಆನೆ, ಬ್ಯಾಂಡು ಮುಂತಾದ ಬಿರುದಾವಳಿಗಳು ಜೋಡುಕಟ್ಟೆಯಲ್ಲಿ ಎದುರುಗೊಳ್ಳಲು ಸಜ್ಜಾಗಿ ನಿಂತಿದ್ದುವು. ಆಚಾರವಂತರು ವಿಚಾರವಂತರು ಊರ ಪ್ರಮುಖರು ಸಾಹುಕಾರರು ಎಲ್ಲರೂ ಅಲ್ಲಿ ನರೆದಿದ್ದರು. + +ಕಲೆಕ್ಟರರು ಬರುವಾಗ ಮೂರು ಗಂಟೆಯ ಸಮಯವಾಯಿತು. ಎಲ್ಲರೂ ಕುತ್ತಿಗೆ ಎತ್ತಿ ಎತ್ತಿ ದಾರಿನೋಡುತ್ತಿದ್ದರು. ಅಷ್ಟರಲ್ಲಿ ಬಂತೇ ಬಂತು ನಾಗಯ್ಯ ಶೆಟ್ರ ಜಟ್ಕಾ ಕಂಪೆನಿಯ ದೊಡ್ಡ ಜಟ್ಕ. ಎದುರಲ್ಲಿ ಕುಳಿತಿದ್ದರು ಕಲೆಕ್ಟರ್ ದೊರೆಗಳು! ದೊರೆಗಳು ಜಟ್ಕದಿಂದ ಇಳಿದರು. ಅಲ್ಲೇ ಸಮೀಪ ತನ್ನ ತಂದೆಯು ಇತ್ತೀಚೆಗೆ ಕೊಂಡುಕೊಂಡಿದ್ದ ಬಂಗಲೆಗೆ ಎಲ್ಲರನ್ನೂ ಕರೆದುಕೊಂಡು ಸಾಗಿದರು. ಆಚಾರವಂತರೂ ವಿಚಾರವಂತರೂ ತಾನು ಮುಂದು ತಾನು ಮುಂದು ಎಂದು ನಡೆದೇ ಬಿಟ್ಟರು ಚೀಂಕ್ರಪೂಜಾರಿಯ ಬಂಗ್ಲೆಗೆ! + +ಬಂಗ್ಲೆಯ ಮುಂಭಾಗದಲ್ಲಿ ಅಂದವಾದ ದೊಡ್ಡ ಚಪ್ಪರ. ಅದರಲ್ಲಿ ದೊಡ್ಡ ಸಭೆಗೂಡಿತು. ಚೀಂಕ್ರ ಮತ್ತು ತಹಶೀಲ್ದಾರರ ನಡುವೆ ಕಲೆಕ್ಟರರು ಸುತ್ತು ತಿರುಗಿ ಸಭಿಕರ ಪರಿಚಯ ಮಾಡಿಕೊಂಡರು. ಅನಂತರ ಚೀಂಕ್ರನು (ಈಗ ಚೀಂಕ್ರಪ್ಪನವರು!) ತನ್ನ ಕೈಯಿಂದ ಸಭಿಕರಿಗೆಲ್ಲಾ ಪನ್ನೀರು ಚಿಮುಕಿಸಿ ತಾಂಬೂಲ ಫಲ ಪುಷ್ಪ ಕೊಟ್ಟು ಉಪಚರಿಸಿದನು. + +ನಾಲ್ಕು ತಿಂಗಳು ಕಳೆದುವು. ಮಠದಲ್ಲಿ ದೊಡ್ಡ ರಥೋತ್ಸವ. ಚಂದ್ರಪುರಿಯಲ್ಲಿ ಅಂತಹ ರಥೋತ್ಸವವಾಗುವುದು ಏಳು ವರ್ಷಕ್ಕೊಮ್ಮೆ. ಭಾರಿ ಜನ ಕೂಡುವುದು. ಅದೊಂದು ದೊಡ್ಡ ಜಾತ್ರೆ. ನೆಮ್ಮದಿ ಭಂಗವಾಗದಂತೆ ನೋಡಿಕೊಳ್ಳುವುದಕ್ಕೆ ಕಲೆಕ್ಟರರು ಬರುವ ಪದ್ಧತಿ. ಎಂದ ಮೇಲೆ ಮಠದಿಂದ ಮುಂಚಿತವಾಗಿ ಆಮಂತ್ರಣ ಹೋಗಿತ್ತು. ಹಿಂದಿನಿಂದ ನಜರು ಕಾಣಿಕೆ ಒಲಿಪೆಯೂ ಸಾಗಿದ್ದವು. ಬೇಸಿಗೆಯ ರಜೆಗೆಂದು ಮದ್ರಾಸಿನಿಂದ ವಕೀಲ್ ಸುಂದರನ್ ರವರೂ ಅವರ ಪತ್ನಿಯೂ ಬಂದಿದ್ದರು. ಎಲ್ಲರೂ ಕಲೆಕ್ಟರರ (ಚೀಂಕ್ರ ಪೂಜಾರಿಯರ) ಬಂಗ್ಲೆಯಲ್ಲಿದ್ದರು. + + + +ಚೀಂಕ್ರಪ್ಪನವರು ರಥೋತ್ಸವ ನೋಡಲಿಕ್ಕೆ ತನ್ನ ಮಗಂದಿರಿಬ್ಬರೊಡನೆ ಹೊರಟರು. ಹೆಂಗಸರು ಹೊರಟರು, ಮಕ್ಕಳು ಹೊರಟರು, ಎಲ್ಲರೂ ಹೊರಟರು! ಕಲೆಕ್ಟರರ ಮನೆಯ ಹೆಂಗಸರೆಂದಾದ ಮೇಲೆ ಅಲ್ಲಿ ಅವರಿಗೆ ಸನ್ಮಾನವೇನು! ರಥದ ಎದುರಿಗೆ ಎಲ್ಲರಿಗೆ ಮುಂದಾಗಿ ಅವರಿಗೆ ನಿಲ್ಲಲು ಮಠದಿಂದ ಜಾಗಮಾಡಿಕೊಡುವ ಸಂಭ್ರಮವೇನು! ಮಠದ ಆಚಾರವಂತರಿಬ್ಬರು “ಅಮ್ಮಾ ಅಮ್ಮ!” ಎಂದು ಅವರ ಬಳಿಯಲ್ಲೇ ನಿಂತು ಎಲ್ಲವನ್ನೂ ವಿವರಿಸಿ ಹೇಳುವ ರೀತಿಯೇನು! ರಥವು ಸುತ್ತು ಬಂದು ಗುತ್ತಿನಲ್ಲಿ ನಿಂತಿತು. ಬಲಿಮೂರ್ತಿ ಒಳಗೆ ಹೋಯಿತು. ಆಗ ‘ನಾವೂ ಒಳಗೆ ಹೋಗಿ ನೋಡೋಣವೇ?’ ಎಂದಳು ಕಲೆಕ್ಟರರ ಪತ್ನಿ. “ಅದಕ್ಕೇನು? ಮೊನ್ನೆ ನನಗೆ ಎಲ್ಲ ತೋರಿಸಿದ್ದರು. ನಾನು ಹೋಗಿ ನೋಡಿದ್ದೆ; ಅಲ್ಲೆಲ್ಲ ಬಹಳ ಚಂದ ಉಂಟು. ಬಾ,” ಎಂದು ಮುಂದಾದರು. ತಂದೆಯನ್ನೂ, ತಮ್ಮನನ್ನೂ ಬನ್ನಿಯೆಂದರು. ಅಕ್ಕಾ ಬನ್ನಿ, ಅತ್ತೇ ಬನ್ನಿ, ಎಲ್ಲಾ ಬನ್ನಿ! ಎಂದು ತನ್ನೊಡನಿದ್ದ ಹೆಂಗಸರು ಮಕ್ಕಳನ್ನೆಲ್ಲ ಕರೆದುಕೊಂಡು ಕಲೆಕ್ಟರರ ಪತ್ನಿಯು ಗಂಡಸರನ್ನು ಹಿಂಬಾಲಿಸಿದಳು. ಗಲಭೆಯಿಲ್ಲದೆ ಆಯಿತು ದೇವಸ್ಥಾನ ಪ್ರವೇಶ! + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_351.txt b/Kenda Sampige/article_351.txt new file mode 100644 index 0000000000000000000000000000000000000000..4253347f3814ac6643bc80391c6b59750eed7ce6 --- /dev/null +++ b/Kenda Sampige/article_351.txt @@ -0,0 +1,43 @@ + + +ಈ ಹೊತ್ತಿನಲ್ಲಿ ರಾಜ್ಯದ ಕೆಲವೇ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳು ಜಲಪ್ರಳಯಕ್ಕೀಡಾಗಿವೆ. ಕಣ್ಣಿಗೆ ಕಾಣಿಸಿದಷ್ಟೂ ನೀರು… ನೀರು ನೀರೆಂಬ ಹಾಹಾಕಾರ… ಎದೆಗೆ ಬೈರಿಗೆಯನಿಟ್ಟು ಕೊರೆದು ಕುಡಿದ ನೀರೆಲ್ಲ ಸೇಡು ತೀರಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಸಧ್ಯಕ್ಕೆ ಪ್ರಕೃತಿಯ ಅಟ್ಟಹಾಸಕ್ಕೆ ಸಿಕ್ಕಿ ನಲುಗುತ್ತಿರುವ ಮನುಷ್ಯನ ಬಗ್ಗೆ ಅನುಕಂಪದಿಂದ ಸಂತಾಪ ಸೂಚಿಸಬೇಕೋ, ಅವರದೇ ಸ್ವಯಂಕೃತ ಅಪರಾಧವಿದೆಂದು ನ್ಯಾಯ ತೀರ್ಮಾನ ಮಾಡಬೇಕೋ ಅಥವಾ ಪ್ರಕೃತಿಯ ಮೇಲೆ ಮನುಷ್ಯ ಮಾಡಿದ ಅತ್ಯಾಚಾರದ ಪರಿಣಾಮವನ್ನು ಅವನೇ ಉಣ್ಣಬೇಕಿತ್ತು ಮತ್ತು ಉಣ್ಣುತ್ತಿದ್ದಾನೆ ಎಂದು ಕೈಚೆಲ್ಲುವುದೋ…. ಏನೂ ಮಾಡಲಾಗದ, ಮಾತಾಡಲಾಗದ, ದಿಕ್ ಕಾಣದ ಸ್ಥಿತಿ… + +ನಮ್ಮ ಸಾಹಸ, ಮಹತ್ವಾಕಾಂಕ್ಷೆ, ಸಾಧನೆ ಎಂಬೆಲ್ಲವೂ ಶೂನ್ಯವಾಗುವ ಏನೂ ಅಲ್ಲವೆನ್ನಿಸಿಕೊಳ್ಳುವ ಪರಿಸ್ಥಿತಿ… ಇದಕ್ಕೆ ಸ್ಪಂದಿಸುವುದಾದರೂ ಹೇಗೆ… ಬರಹ ಒಂದು ಸಾಧ್ಯತೆ ಅನಿಸುತ್ತಿದೆ. ಒಂದು ಕವಿತೆ, ಒಂದು ಕತೆ ತಪ್ಪು ಮಾಡುವವರಿಗೊಂದು ಪಾಠ ಹೇಳಬಹುದು, ಇತಿಹಾಸ ತಿರುವು ಹಾಕುವವರಿಗೆ ಸಾಕ್ಷಿ ಹಿಡಿಯಬಹುದು,  ನೊಂದ ಮನಸುಗಳಿಗೆ ಸಾಂತ್ವನದ ಮುಲಾಮು ಹಚ್ಚಬಹುದು…. + +(ರಾಜು ಸನದಿ) + +ಇಂತಹ ತೀವ್ರ ಮರುಗುವ ಮನಸ್ಥಿತಿಯಲ್ಲಿ ರಾಜು ಸನದಿಯವರ ಕವಿತೆಗಳನ್ನು ಓದಲು ಕೂತದ್ದು. ಹಿನ್ನಲೆಯಷ್ಟೇ ರಾಜುರವರ ಕವಿತೆಗಳೂ ಭಾವುಕ ನೆಲೆಯಲ್ಲಿ ಹುಟ್ಟಿದ ಹೂಗಳಾಗಿದ್ದವು. ತಾವು ಕಂಡದ್ದು ಮತ್ತು ಅನುಭವಿಸಿದ್ದನ್ನು ಕವಿತೆಯಾಗಿಸುವ ಹಸಿಹಸಿ ಪ್ರಯತ್ನ ಇಲ್ಲಿ ಕಾಣುತ್ತದೆ. ಕವಿಯಾದವನು ಸುತ್ತಲ ಆಗುಹೋಗುಗಳಿಗೆ ಸ್ಪಂದಿಸಲೇ ಬೇಕಿರುತ್ತದೆ. ಹಾಗಂತ ಕಂಡದ್ದನ್ನು ಕಂಡಂತೆ ಬರೆದರೆ ಅದು ಕಾವ್ಯವಾಗುತ್ತದಾ ಅಥವಾ ಕಾವ್ಯ ಮತ್ತೇನನ್ನೋ ಬೇಡುತ್ತದಾ ಮತ್ತೆ ಕವಿತೆಯೇ ಏಕೆ ಬೇಕು ಎನ್ನುವುದನ್ನು ಕವಿಯಾದವನು ಸೂಕ್ಷ್ಮಗ್ರಾಹಿಯಾಗಿ ತಿಳಿದಿರಬೇಕು. + +ಕವಿತೆ ಏಕೆ ಬೇಕು ಹಾಗಾದರೆ… ನಮ್ಮೆಲ್ಲ ಹೇಳಿಕೊಳ್ಳಲಾಗದ ನೋವು ಸಂಕಟ ತಕರಾರು ಬಾಗಿಲು ಪಡೆದುಕೊಳ್ಳಲು ಕವಿತೆ ಬೇಕು. ರಾಜೂರವರೂ ಸಹ ತಮ್ಮ ಈ ಸಂಕಲನದಲ್ಲಿ ತಮ್ಮದೊಂದು ಬಾಗಿಲು ಹುಡುಕಿಕೊಂಡಿದ್ದಾರೆ. + +ಈ ಸಂಕಲನದ ಮೊದಲ ಕವಿತೆಯಲ್ಲಿ ರಾಜುರವರು ಮಹಾದೇವಿ ಅಕ್ಕನನ್ನು ತನ್ನಕ್ಕನ ಜೊತೆಗಿಟ್ಟುಕೊಂಡು ಹೋಲಿಸುವ ರೀತಿ ಹೃದ್ಯವಾಗಿದೆ. ಸಣ್ಣ ಪುಟ್ಟ ವಿವರಣೆ ಕ್ಲೀಷೆ ಅನ್ನಿಸಿದರೂ ಹೊಸ ನೋಟ ಮತ್ತು ಹೊಳಹಿನಿಂದಾಗಿ ಇದೊಂದು ವಿಶೇಷವಾದ ಕವಿತೆ. ವಸ್ತ್ರದ ಹಂಗನ್ನು ತೊರೆದ ಅಕ್ಕ ಮತ್ತು ಬುರ್ಖಾ-ನಕಾಬ್ ನೊಳಗೆ ಆತ್ಮವನ್ನು ಬಚ್ಚಿಟ್ಟುಕೊಂಡ ಅಕ್ಕ ಇಲ್ಲಿ ಕಂಡುಬರುವ ಎರೆಡು ಎಕ್ಸ್ಟ್ರೀಮ್ ಗಳು. ಇವು ಹಲವು ಸ್ಪಷ್ಟ ವ್ಯತ್ಯಾಸ ಮತ್ತು ಸಾಧ್ಯತೆಗಳನ್ನು ಬಗೆದು ತೋರುತ್ತವೆ ಮತ್ತು ಯೋಚಿಸಲು ಹಚ್ಚುತ್ತವೆ. + +“ಮಾಳಿಗೆಯ ಮೇಲಿರುವ ಪಾರಿವಾಳಗಳುಕಾತರಿಸುತ್ತವೆಅಕ್ಕನನ್ನು ಹೊರಬರುವಳೆಂದುಕಾಳು ಹಾಕುವಳೆಂದು + +ಅಕ್ಕ ಕಾಣೆಯಾಗಿದ್ದಾಳೆಸಕಲ ಜೀವರಾಶಿಯ ಕಣ್ಣಿಗೆ ಕಾಣದಂತೆ”(ಅಕ್ಕ ಕಾಣೆಯಾಗಿದ್ದಾಳೆ ೧) + +“ಕನ್ನಡಿಯಲ್ಲಿ ಕನಸ ಕಾಣುವಳುಹೊರ ಕಾಲಿಟ್ಟಾಗಆಕೆಯ ಸುತ್ತಲೂಮತ್ತೇ ಬರಿ ಕತ್ತಲು…”(ಅಕ್ಕ ಕಾಣೆಯಾಗಿದ್ದಾಳೆ ೨) + + + +ಅಕ್ಕ ಐಹಿಕ ಬಂಧನದ ಕುರುಹೆಂದು ಭಾವಿಸಿ ವಸ್ತ್ರದ ಸಮೇತ ಎಲ್ಲವನ್ನೂ ತೊರೆದು ತನ್ನ ಮಲ್ಲಿಕಾರ್ಜುನನನ್ನು  ಹುಡುಕಿ ಹೊರಟವಳು. ಆಗಿನ ಕಾಲಕ್ಕೆ ಇದೊಂದು ಕ್ರಾಂತಿಕಾರಿ ನಡೆಯೇ. ಆದರೆ ರಾಜೂರವರ ಅಕ್ಕ ಇಂದಿನ ಪರಿಸ್ಥಿತಿಯಲ್ಲೂ ಆಳೆತ್ತರದ ಗೋಡೆಗಳ ನಡುವೆ ಬುರ್ಖಾ ನಕಾಬು ತೊಟ್ಟು ತನ್ನ ಆತ್ಮಿಕ ಮತ್ತು ದೈಹಿಕ ಅಸ್ತಿತ್ವವನ್ನು ಮರೆಮಾಚುತ್ತಾ ಬದುಕುತ್ತಿರುವವಳು. + +ಅವಳು ಬೆಳಕಿಗೆ ಬಂದರೂ ಅವಳ ಸುತ್ತಲೂ ಕವಿದಿದೆ ಕತ್ತಲು! ತನಗಿರುವ ಸಣ್ಣ ಕಿಂಡಿಯಲ್ಲಿಯೇ ಜೈವಿಕ ಬದುಕಿಗೆ ಬೇಕಾಗುವಷ್ಟು ಹಿಡಿ ಬೆಳಕು ತುಣುಕು ಗಾಳಿಯನ್ನು ಬೊಗಸೆಯಲ್ಲಿ ತುಂಬಿಕೊಳ್ಳುವವಳು… ಈ ಕವಿತೆ ಯೋಚಿಸಿದಷ್ಟೂ ಚಿಂತನೆಗೆ ಹಚ್ಚಿದ ಕವಿತೆ… + +ಮತ್ತೆ ಧಾರ್ಮಿಕ ಕಟ್ಟುಪಾಡುಗಳು ಹೇಗೆಲ್ಲ ಹೆಣ್ಣನ್ನು, ಬಲಹೀನರನ್ನು ತನ್ನ ಕಪಿಮುಷ್ಠಿಯಲ್ಲಿ ಬಂಧಿಸುತ್ತದೆ ಎನ್ನುವುದನ್ನು ರಾಜುರವರ ಕವಿತೆಗಳು ಸರಳ ಭಾಷೆಯಲ್ಲಿ ಮನಮುಟ್ಟುವಂತೆ ಹೇಳುತ್ತಾ ಹೋಗುತ್ತವೆ. ತನ್ನ ಸುತ್ತಮುತ್ತಲ ಸಂವೇದನೆಗಳಿಗೆ ಕವಿಯಾದವನು ಹೇಗೆ ಪ್ರತಿಸ್ಪಂದಿಸುತ್ತಾನೆ ಎಂಬುದು ಬಹಳ ಗಮನದಲ್ಲಿಟ್ಟುಕೊಳ್ಳಬೇಕಾದದ್ದು. ಕಾರಣ ಕವಿ ತನ್ನ ಒಳಗಿನ ಪ್ರಪಚಂದಲ್ಲಿ ಕಣ್ಣು ತೆರೆದುಕೊಂಡ ಸಮಯದಲ್ಲಿಯೇ ಹೊರಗಿನ ಪ್ರಪಂಚಕ್ಕೂ ದೃಷ್ಟಿ ಹಾಯಿಸುತ್ತಾ ಎರಡರ ನಡುವಿನ ತುಲನೆ ಮತ್ತು ಸಂತುಲನೆಯ ನ್ಯಾಯಬದ್ಧ ತಕ್ಕಡಿಯಲ್ಲಿಟ್ಟು ತೂಗಿನ ಮುಳ್ಳ ಇಶಾರೆಯಂತೆ ನಡೆಯಬೇಕಿರುತ್ತದೆ. ಈ ಎಲ್ಲ ತಿಳುವಳಿಕೆಯೂ ಕಲಿಕೆ ಎನ್ನುವುದಕ್ಕಿಂತ ಹೃದ್ಗತವಾದದ್ದರ ಒಟ್ಟಾರೆ ಫಲಿತಾಂಶ ಎನ್ನಬಹುದೇನೋ…. ಇವೆಲ್ಲ ರಾಜುರವರ ಮುಂದಿನ ಕವಿತೆಯ ಹಾದಿಯಲ್ಲಿ ಅವರನ್ನು ಬಹಳ ದೂರ ನಡೆಸಬಹುದು. + +ಧಾರ್ಮಿಕ ಕಟ್ಟುಪಾಡುಗಳು, ಮನುಷ್ಯನ ಇಬ್ಬಗೆಯ ನೀತಿ, ಆತ್ಮವಂಚನೆ, ದೌರ್ಜನ್ಯ, ಪ್ರೀತಿ, ಪ್ರೇಮ ಎಲ್ಲವೂ ರಾಜುರವರನ್ನು ಕಾಡಿವೆ. “ನನ್ನ ಕವಿತೆ” ಕವಿಯ ಮನಸಿಗೆ ಹಿಡಿದ ಕನ್ನಡಿ. ಏನೆಲ್ಲ ಆಶೋತ್ತರಗಳಿವೆ ಈ ಕವಿತೆಗೆ… ಉದಾತ್ತವೆನಿಸುತ್ತದೆ. ಇದು ಕವಿ ಮನಸಿನ ಪ್ರಾಮಾಣಿಕ ದನಿ. ಹಾಗಾಗಿ ಇದು ನೆರವೇರಲಿ ಎಂದು ಹಾರೈಸುತ್ತದೆ ಓದುಗರ ಮನಸ್ಸು. + +ಮಲಾಲ, ಸ್ವಾಗತ, ಪ್ರಜಾಪ್ರಭುತ್ವ… ಕವಿತೆಗಳು ವ್ಯವಸ್ಥೆಯೆಡೆಗಿನ ಆಕ್ರೋಶವನ್ನು ದಾಖಲಿಸ ಹೊರಟು ಕವಿತೆಯಾಗಿ ಸ್ವಲ್ಪ ಹಿಂದೆ ಉಳಿದಿವೆ ಅನಿಸುತ್ತದೆ. ಕವಿತೆಯ ವಿಷಯದಲ್ಲಿ ವಾಚ್ಯತೆ ಇಣುಕದಂತೆ  ಜಾಗ್ರತೆ ವಹಿಸುವುದು ಬಹಳ ಮುಖ್ಯ. ಕವಿತೆ ಯಾವಾಗಲೂ ಸೂಚ್ಯವಾಗಿರಬೇಕು. ಹೊಡೆದರೂ ನವಿಲುಗರಿಯ ಹೊಡೆತದಂತಿರಬೇಕು. ಎಲ್ಲವನ್ನೂ ಹೇಳುವುದಾದರೆ ಅದಕ್ಕೆ ಕವಿತೆಯೇ ಆಗಬೇಕಿಲ್ಲ. ಗದ್ಯದಲ್ಲಿ ಸಮಂಜಸವಾಗಿ ಹೇಳಬಹುದು. ಆದರೆ ಕವಿತೆ ಇರುವುದು ಅದಕ್ಕಲ್ಲ. ಕವಿತೆ ಒಂದು ಭಾಷೆಯ ಸೌಂದರ್ಯ ಸಾಧನ. ಕಡಿಮೆ ಪದಗಳಲ್ಲಿ ಹೆಚ್ಚಿನದನ್ನು ಹೇಳಬೇಕು ಕವಿತೆ. + +ರಾಜು ಅವರ ಕವಿತೆಗಳೂ ಅದನ್ನು ಪ್ರಾಮಾಣೀಕರಿಸುತ್ತವೆ. ಇನ್ನಷ್ಟು ಮಾಗಬೇಕು ಪ್ರಬುದ್ಧತೆ ಬೇಕು ಎನ್ನುವ ಸಣ್ಣ ತಕರಾರಿದ್ದರೂ ಅದು ಅವರ ಕವಿತೆಗಳನ್ನು ಮೆಚ್ಚಿದ ಮನಸುಗಳ ಪ್ರೀತಿಯ ತಕರಾರು ಎನ್ನುವುದನ್ನು ಗಮನದಲ್ಲಿಡಬೇಕು. + + + +ಕೊನೆಗೆ ಏನೆಲ್ಲ ಹೇಳಿಯಾದ ಮೇಲೂ ಹೃದಯದ ಮಾತುಗಳನ್ನು ಮೀರಿದ್ದೊಂದು ಜಗತ್ತಿನಲ್ಲಿ ಇಲ್ಲವೇ ಇಲ್ಲ. ಅಂತಿಮಶಕ್ತಿಯ ಎದುರು ನಿಂತು ಅನಾಯಾಚಿತವಾಗಿ ಮಂಡಿಯೂರಿ ಶರಣಾದಾಗ ಹೊರಬರುವ ಮಾತುಗಳನ್ನೇ ಜಗತ್ತು ವಿಶ್ವಮಾನವ ಸಂದೇಶವೆಂದು ಬಗೆಯುತ್ತದೆ. ಇದು ನಮ್ಮೆಲ್ಲ ಶಾಸ್ತ್ರಗಳನ್ನು ಮೀರಿದ್ದು. ಇದೇ ನಮ್ಮೆಲ್ಲರಿಗೂ ದೀಪವಾಗಬೇಕು. ಕೊನೆಗೂ + +ಪ್ರೀತಿಯನ್ನುನಾ ದೈವವೆಂದು ನಂಬಿದ್ದೆದೈವದ ಎದುರು ವಾದಿಸಲಿಕ್ಕಾಗದುಕೈಯೊಡ್ಡಿ ಕಣ್ಣೀರ ಸುರಿಸಿಪ್ರಾರ್ಥಿಸಬಹುದಷ್ಟೇ…(ಕಣ್ಣೀರ ರಕ್ತ) + +ಎಂಬುದೇ ಸತ್ಯ. + +ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.” \ No newline at end of file diff --git a/Kenda Sampige/article_352.txt b/Kenda Sampige/article_352.txt new file mode 100644 index 0000000000000000000000000000000000000000..61cd37e19cfe877b9a5b856fc74d89341111e393 --- /dev/null +++ b/Kenda Sampige/article_352.txt @@ -0,0 +1,149 @@ + + +ಅಂದು ಒಂದು ಹೆಸರಾಂತ ಕಾಲೇಜಿನ ವಾರ್ಷಿಕೋತ್ಸವದ ಸಮಾರಂಭ. ನಾನು ಅದರಲ್ಲಿ ಉಪನ್ಯಾಸವನ್ನು ಮಾಡಬೇಕಿದೆ. ವ್ಯಕ್ತಿತ್ವ ವಿಕಸನದ ಪುಸ್ತಕಗಳ ಲೇಖಕನಾಗಿ, ಉತ್ತಮ ವಾಗ್ಮಿಯಾಗಿ ನಾನು ತುಂಬಾ ಜನಪ್ರಿಯ. ದಿಲ್ಲಿಯ ಟ್ರಾಫಿಕ್ ನ ಮಹಾಸಾಗರವನ್ನು ಈಸಿಕೊಂಡು ಹೋಗಬೇಕೆಂದರೆ ಮನೆಯಿಂದ ಕನಿಷ್ಠ ಒಂದೆರಡು ಗಂಟೆಗಳು ಮುಂಚಿತವಾಗಿಯೇ ಹೊರಡುವುದು ಒಳಿತೆಂದು ಕಾಲೇಜಿನ ಕಾರ್ಯಕ್ರಮಕ್ಕೆ ಹೋಗಲು ಸಿದ್ಧನಾಗುತ್ತಿರುವಾಗ ಚರವಾಣಿ ಮೊಳಗಿತು. ಯಾವುದೋ ಹೊಸ ಸಂಖ್ಯೆಯಿಂದ ಕರೆ ಬರುತ್ತಿದೆ. ನನ್ನ ಪುಸ್ತಕಗಳನ್ನು ಓದಿದವರಲ್ಲಿ ಕೆಲವರು ಅಭಿಮಾನದಿಂದ ನನಗೆ ಕರೆ ಮಾಡಿ ಅಭಿನಂದನೆಗಳನ್ನು ತಿಳಿಸುವುದು ಸಾಮಾನ್ಯವಾದ ಸಂಗತಿ. ಕರೆಯನ್ನು ಸ್ವೀಕರಿಸಿ “ಹಲೋ, ಇತ್ತ ಕಡೆಯಿಂದ ರಾಮ್ ಪ್ರಸಾದ್. ಹೇಳಿ” ಎಂದೆ. + +“ನಾನು ಸುಧಾಕರ್. ನಿನಗೆ ನೆನಪಿದೆಯಾ?” ಎಂದ ಕರೆ ಮಾಡಿದಾತ. + +“ಯಾವ ಸುಧಾಕರ್?” + +“ಕರ್ನೂಲ್ ವಜ್ರ ಮಹೋತ್ಸವದ ಕಾಲೇಜಿನಲ್ಲಿ ನಾವು ಒಟ್ಟಿಗೆ ಓದಿದೆವು. ನಾನು ನಿನ್ನ ಜೊತೆ ಒಂದೇ ಕೊಠಡಿಯಲ್ಲಿದ್ದೆನಲ್ಲಾ. ಈಗ ನೆನಪಾಯಿತೆ? ತುಂಬಾ ದೊಡ್ಡ ಲೇಖಕನಾಗಿಬಿಟ್ಟಿರುವೆಯಲ್ಲಾ. ಹಳೆಯ ದಿನಗಳನ್ನು, ಹಳೆಯ ಗೆಳೆಯರನ್ನು ಮರೆಯುವುದು ಸಹಜ. ನಿನ್ನ ಕಾಲಡಿಯ ಕಾರ್ಪೆಟ್ ಎತ್ತಿ ನೋಡು. ಅಲ್ಲಿ ಜಮೆಯಾಗಿರುವ ದುಮ್ಮು, ಧೂಳಿನಲ್ಲಿ ನನ್ನ ನೆನಪುಗಳು ಎಲ್ಲಾದರೂ ಕಾಣಿಸಬಹುದು.” + +ಥಟ್ಟಂತ ಕಾಲೇಜಿನ ದಿನಗಳಲ್ಲಿನ ಆಪ್ತ ಸ್ನೇಹಿತ ಸುಧಾಕರ್ ನ ನೆನಪು ನನಗೆ ಬಂತು. ಬಿ.ಎ. ಓದುವಾಗ ಆತ ನನ್ನ ಸಹಪಾಠಿ. ಹಾಸ್ಟಲ್ ನಲ್ಲಿ ನಾವಿಬ್ಬರೂ ಒಂದೇ ಕೊಠಡಿಯಲ್ಲಿ ಇರುತ್ತಿದ್ದೆವು. ಆತ ತುಂಬಾ ಚೆನ್ನಾಗಿ ಹಾಡುತ್ತಿದ್ದ. ಆತನ ಕಂಠದಲ್ಲಿ ಘಂಟಸಾಲರವರ ಹಾಡುಗಳಿಗಿಂತ ಎಸ್.ಪಿ.ಬಿ. ಅವರ ಹಾಡುಗಳು ಚೆನ್ನಾಗಿ ಹೊರಹೊಮ್ಮುತ್ತಿದ್ದವು. ಯಾವಾಗಲೂ ನಗುನಗುತ್ತಾ, ನಗಿಸುತ್ತಾ ಲವಲವಿಕೆಯಿಂದ ಇರುತ್ತಿದ್ದ. ನನಗೆ ಒಂದು ಘಟನೆ ಚೆನ್ನಾಗಿ ನೆನಪಿದೆ. ಹಾಸ್ಟಲ್ ಗೆ ಸೇರಿದ ನಂತರ ಹತ್ತು ದಿನಗಳಾದ ಮೇಲೆ ನನಗೆ ವಿಪರೀತವಾದ ಜ್ವರ ಬಂತು. ನೀರಸದೊಂದಿಗೆ ನಿಶ್ಶಕ್ತಿಯೂ ಕೂಡ ಆವರಿಸಿತು. ಸುಧಾಕರ್ ರಾತ್ರಿ ಮೆಸ್ ನಿಂದ ಹಾಲು, ಬ್ರೇಡ್ ತಂದು ತಿನಿಸಿದ. ತಿಂದ ಮೇಲೆ ಹತ್ತು ನಿಮಿಷಗಳಿಗೆ ಎಲ್ಲವನ್ನು ವಾಂತಿ ಮಾಡಿಬಿಟ್ಟೆ. ನಮ್ಮ ಕೊಠಡಿಯ ತುಂಬಾ ಕೆಟ್ಟ ವಾಸನೆ ಹಬ್ಬಿತು. ನಾನು ಕಂಗಳನ್ನು ಮುಚ್ಚಿಕೊಂಡು ಮಲಗಿದೆ. + +ಸುಧಾಕರ್ ಒಂದು ಬಕೇಟಿನ ತುಂಬಾ ನೀರನ್ನು ತೆಗೆದುಕೊಂಡು ಬಂದು ಪೊರಕೆಯಿಂದ ಕೊಠಡಿಯನ್ನು ಸ್ವಚ್ಛ ಮಾಡಿದ. ಇಂತಹ ಕೆಲಸವನ್ನು ಯಾರು ಮಾಡುತ್ತಾರೆ! ನಮ್ಮ ಅಮ್ಮನೋ, ಅಕ್ಕನೋ ಬಿಟ್ಟರೆ ಬೇರೆ ಯಾರೂ ಸಹ ಇಂತಹ ಕೆಲಸವನ್ನು ಮಾಡುವುದಿಲ್ಲ. ಆವಾಗಿನಿಂದ ಸುಧಾಕರ್ ನನಗೆ ಬಹಳ ಆಪ್ತನಾಗಿಬಿಟ್ಟ. ಪದವಿಯ ವ್ಯಾಸಂಗ ಮುಗಿದ ಮೇಲೆ ಆತ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಎಂ.ಎ.ಗೆ ಸೇರಿದ. ನಮ್ಮ ಅಪ್ಪನಿಗೆ ದಿಲ್ಲಿಗೆ ವರ್ಗಾವಣೆ ಆಗಿದ್ದರಿಂದ ನಾನು ದಿಲ್ಲಿ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಎಂ.ಎ.ಗೆ ಸೇರಿದೆ. ನಾವು ಆಗಾಗ ಪರಸ್ಪರ ಪತ್ರಗಳನ್ನು ಬರೆಯುವ ಮೂಲಕ ನಮ್ಮ ಸ್ನೇಹವನ್ನು ಕಾಪಿಟ್ಟುಕೊಂಡಿದ್ದೆವು. ಮುಂದೆ ಸುಧಾಕರ್ ಆಧೋನಿಯ ಕಾಲೇಜಿನಲ್ಲಿ ಉಪನ್ಯಾಸಕನಾದ. ನಾನು ಡಾಕ್ಟ್ರೇಟ್ ಗಾಗಿ ಅಮೇರಿಕಾಗೆ ಹೋದೆ. ಆಮೇಲೆ ನಮ್ಮ ನಡುವಿನ ಪತ್ರಗಳ ನಂಟು ಕಡಿಮೆಯಾಗತೊಡಗಿತು. ಹೊಸ ವರ್ಷ ಬಂದಾಗ ಶುಭಾರೈಕೆಗಳನ್ನು ಕೋರುವ ಕಾರ್ಡ್ ಗಳನ್ನು ಪರಸ್ಪರ ಕಳುಹಿಸುವುದಕ್ಕೆ ನಮ್ಮ ಪತ್ರ ವ್ಯವಹಾರ ಪರಿಮಿತವಾಗಿ ನಿಧಾನವಾಗಿ ಅದೂ ಸಹ ನಿಂತೇ ಹೋಯಿತು. + +ನಾನು ದಿಲ್ಲಿಗೆ ಹಿಂತಿರುಗಿದ ಮೇಲೆ ಕೆಲವು ದಿನಗಳ ಕಾಲ ಕಾಲೇಜಿನಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡಿದೆ. ಅದರೊಡನೆ ಇಂಗ್ಲೀಷ್ ನಲ್ಲಿ ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಬರೆಯಲು ಆರಂಭಿಸಿದೆ. ನನ್ನ ಮೊದಲನೇ ಪುಸ್ತಕಕ್ಕೆ ಬಹಳ ಒಳ್ಳೆಯ ಹೆಸರು ಬಂತು. ಅದು ಆ ವರ್ಷದ ಅತಿ ಹೆಚ್ಚು ಮಾರಾಟವಾದ ಕೃತಿಯಾಗಿ ದಾಖಲೆಯನ್ನು ಮಾಡಿತು. ಆ ನಂತರ ಉದ್ಯೋಗವನ್ನು ಬಿಟ್ಟು ಪುಸ್ತಕಗಳ ರಚನೆಯಲ್ಲೇ ಸಂಪೂರ್ಣವಾಗಿ ತೊಡಗಿಸಿಕೊಂಡೆ. ಇದರೊಡನೆ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಣ ನೀಡುವ ಕೆಲಸವನ್ನು ಆರಂಭಿಸಿದೆ. + +“ಇನ್ನೂ ನನ್ನ ನೆನಪಾಗಲಿಲ್ಲವೆ?” ನಾನು ಕೆಲವು ಕ್ಷಣಗಳ ಕಾಲ ಮೌನವಾಗಿದ್ದರಿಂದ ಮತ್ತೆ ಆತ ಕೇಳಿದ. + +“ನಿನ್ನನ್ನು ಹೇಗೆ ಮರೆಯಬಲ್ಲೆ ಸುಧಾಕರ್? ನಮ್ಮ ನಡುವೆ ಬಹಳ ವರ್ಷಗಳು ವಿರಾಮದ ಚಿಹ್ನೆಗಳಾಗಿ ತಡೆಯೊಡ್ಡಿದವಲ್ಲಾ. ಆದ್ದರಿಂದಲೇ ಬೇಗ ನಿನ್ನ ನೆನಪಾಗಲಿಲ್ಲ” ಎಂದೆ ಚೂರು ತಪ್ಪಿತಸ್ಥಭಾವದಿಂದ. + +“ನಾನು ಮಾತ್ರ ನಿನ್ನ ಪ್ರತಿ ಪುಸ್ತಕವನ್ನು ತಪ್ಪದೇ ಓದುತ್ತೇನೆ ಗೊತ್ತಾ? ಅದರಲ್ಲಿನ ಪ್ರತಿ ವಾಕ್ಯವನ್ನು ಓದುತ್ತಾ ನೀನು ನನ್ನೊಡನೆ ಮಾತಾಡುತ್ತಿರುವಂತೆ ಅನುಭೂತಿ ಪಡೆಯುತ್ತೇನೆ. ಆದ್ದರಿಂದಲೇ ನೀನು ಸದಾ ನನ್ನ ಹೃದಯಕ್ಕೆ ಸನಿಹವಾಗಿರುವೆ. ಅದು ಬಿಡು, ಈಗ ಸದ್ಯ ಏನು ಬರೆಯುತ್ತಿರುವೆ?” + +“ದುಃಖದ ಸಮುದ್ರವನ್ನು ಒಂದೇ ಕೈಯಿಂದ ಈಜುತ್ತ ಹೇಗೆ ಸಂತೋಷವಾಗಿ ಇರಬಹುದೆಂದು ಸಾರುವ ಪುಸ್ತಕವನ್ನು ಬರೆಯುವ ಸಂಕಲ್ಪ ಮಾಡಿರುವೆ. ಮೊದಲು ಆ ಕೃತಿಗೆ ಅಗತ್ಯವಾದ ಕಚ್ಚಾ ಸರಕನ್ನು ಸಂಗ್ರಹಿಸಬೇಕಲ್ಲಾ. ಅದೇ ಕೆಲಸದಲ್ಲಿ ನಾನೀಗ ಮುಳುಗಿಹೋಗಿದ್ದೇನೆ. ನೀನು ದಿಲ್ಲಿಗೆ ಬರಬಾರದೆ? ನಾವು ಭೇಟಿಯಾಗಿ ಬಹಳ ವರ್ಷಗಳೇ ಆಗಿದೆ.” + +“ನಿನ್ನನ್ನು ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಆಹ್ವಾನಿಸಲು ನಾನು ನಿನಗೆ ಕರೆ ಮಾಡಿದೆ. ನಮ್ಮ ಕಾಲೇಜಿನಲ್ಲೂ ನಿನ್ನ ಸಾಹಿತ್ಯದ ಅಭಿಮಾನಿಗಳು ಬಹಳ ಮಂದಿ ಇದ್ದಾರೆ ಗೊತ್ತಾ? ನಿನ್ನ ಪುಸ್ತಕಗಳನ್ನು ನಾನು ಓದಿದ ಮೇಲೆ ನನ್ನ ವಿದ್ಯಾರ್ಥಿಗಳಿಂದಲೂ ಓದಿಸುತ್ತಿರುತ್ತೇನೆ. ಇನ್ನೊಂದು ವರ್ಷದಲ್ಲಿ ನಾನು ನಿವೃತ್ತನಾಗಲಿದ್ದೇನೆ. ಅಷ್ಟರೊಳಗೆ ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನದ ಕುರಿತು ನಿನ್ನದೊಂದು ಉಪನ್ಯಾಸವನ್ನು ಏರ್ಪಡಿಸಬೇಕೆನ್ನುವುದು ನನ್ನ ಆಸೆ. ಅದರೊಂದಿಗೆ ನಿನ್ನೊಡನೆ ಒಂದೆರಡು ದಿನಗಳನ್ನು ಕಳೆದು, ನಮ್ಮ ಹಳೆಯ ನೆನಪುಗಳನ್ನು, ಮಧುರವಾದ ಆ ಅನುಭೂತಿಗಳನ್ನು ಮತ್ತೆ ತಾಜಾಗೊಳಿಸಿಕೊಳ್ಳುವ ಆಸೆ ನನಗೆ. ದಯಮಾಡಿ ಆಗುವುದಿಲ್ಲವೆಂದು ಮಾತ್ರ ಹೇಳಬೇಡ.” + +ನನಗೂ ಸುಧಾಕರ್ ನನ್ನು ಭೇಟಿಯಾಗಬೇಕೆಂದು ಆ ಕ್ಷಣದಲ್ಲಿ ಆಸೆಯಾಯಿತು. “ಸದ್ಯಕ್ಕೆ ಒಂದು ಕೆಲಸದ ಮೇಲೆ ಹೊರಗೆ ಹೋಗುತ್ತಿದ್ದೇನೆ. ಹಿಂತಿರುಗಿ ಬಂದ ಮೇಲೆ ಆರಾಮವಾಗಿ ಮಾತಾಡೋಣ. ಟ್ರಾವೆಲ್ ಏಜೆಂಟ್ ನ ಜೊತೆ ಮಾತಾಡಿ ಪಯಣಕ್ಕೆ ರಿಸರ್ವೇಷನ್ ಮಾಡಿಸಿಕೊಳ್ಳುತ್ತೇನೆ. ನಿಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಎರಡು ದಿನಗಳು ಮುಂಚಿತವಾಗಿಯೇ ಬರುವೆ ಸರಿಯಾ?” ಎಂದೆ ಉತ್ಸಾಹದಿಂದ. + +* * * * + +ರೈಲುಗಾಡಿಯಿಂದ ಇಳಿದೊಡನೆ ಸುಧಾಕರ್ ಎದುರಾಗಿ ಬಂದು ಅಪ್ಪಿಕೊಂಡ. ಎಷ್ಟು ವರ್ಷಗಳಾಗಿಯಿತೋ ನೋಡಿ. ಮನುಷ್ಯ ಬಹಳ ಬದಲಾಗಿಹೋಗಿದ್ದೇನೆ. ಆತ ನನ್ನನ್ನು ಗುರುತುಹಿಡಿದಿದ್ದರಿಂದ ಸರಿಹೋಯಿತು. ಅದೇ ನಾನಾಗಿದ್ದಿದ್ದರೆ ಗುರುತು ಹಿಡಿಯಲಾಗುತ್ತಿರಲಿಲ್ಲ. ಆತ ತಾನು ಇರಬೇಕಾದ ತೂಕಕ್ಕಿಂತ ಸುಮಾರು ಹತ್ತು ಕೇಜಿಗಳಷ್ಟು ಹೆಚ್ಚಿಗೆ ಇರುತ್ತಾನೆ ಅಂತ ಅನಿಸುತ್ತಿದೆ. ಹೊಟ್ಟೆ ಮುಂದಕ್ಕೆ ಉಬ್ಬಿದೆ. ಕೂದಲು ಬೆಳ್ಳಗಾಗಿವೆ.ತನ್ನ ಕಾರಿನಲ್ಲೇ ಮನೆಗೆ ಕರೆದುಕೊಂಡು ಹೋದ. + +“ಅದು ಸ್ನಾನದ ಕೊಠಡಿ. ಗೀಸರ್ ಆನ್ ಮಾಡಿಟ್ಟಿದ್ದೇನೆ. ಮೊದಲು ಸ್ನಾನ ಮಾಡು. ಆಮೇಲೆ ನಿನಗೆ ನಾನು ಬಿಸಿಬಿಸಿ ದೋಸೆಗಳನ್ನು ಮಾಡಿಕೊಡುವೆ.” + +“ಮನೆಯಲ್ಲಿ ನೀನು ಒಬ್ಬನೇ ಇರುವೆಯಾ ಸುಧಾಕರ್? ತಂಗಿ ಮತ್ತು ಮಕ್ಕಳು ಎಲ್ಲಿ? ಅವರು ಊರಿಗೆ ಹೋಗಿರುವರೆ? ಅಯ್ಯೋ! ನಾನು ಬರಬಾರದ ಸಮಯದಲ್ಲಿ ಬಂದು ನಿನಗೆ ಕಷ್ಟ ಕೊಡುತ್ತಿದ್ದೇನೆ. ಹೀಗೆಂದು ಮೊದಲೇ ಹೇಳಿದ್ದಿದ್ದರೆ ನಾನು ಪ್ರಯಾಣವನ್ನು ಮುಂದೂಡುತ್ತಿದ್ದೆನಲ್ಲಾ” ಎಂದೆ. + +“ನಿನ್ನ ತಂಗಿಯಿಲ್ಲ ಅಂತ ಕಾಲೇಜಿನ ವಾರ್ಷಿಕೋತ್ಸವ ನಿಲ್ಲುವುದಿಲ್ಲವಲ್ಲಾ. ನೀನು ಮೊದಲು ಸ್ನಾನಾದಿಗಳನ್ನು ಮುಗಿಸಿಕೋ. ನನ್ನ ಅಡುಗೆ ಚೆನ್ನಾಗಿಯೇ ಇರುತ್ತದೆ. ನೀನೇನೂ ಭಯಪಡಬೇಡ” ಎಂದ ಮತ್ತೆ ನಗುತ್ತಾ. ನಾವು ಜೊತೆಯಲ್ಲಿ ಓದುತ್ತಿದ್ದಾಗ ಹೇಗೆ ಹಾಯಾಗಿ ನಗುತ್ತಿದ್ದನೋ ಹಾಗೆಯೇ ಈಗಲೂ ನಗುತ್ತಿದ್ದಾನೆ. ಎಳೆಯ ಮಗುವಿನಂತಹ ನಗು! + +ಸ್ನಾನ ಮಾಡಿ ಬರುವಷ್ಟರಲ್ಲಿ ಊಟದ ಮೇಜಿನ ಮೇಲೆ ತಟ್ಟೆಗಳನ್ನಿಟ್ಟು ದೋಸೆಗಳು, ಕಡಲೇಬೀಜದ ಚಟ್ನಿಯನ್ನು ಬಡಿಸಿದ. ಆಹಾ ಎಷ್ಟು ರುಚಿ! + +“ತಂಗಿಗಿಂತಲೂ ನೀನೇ ಚೆನ್ನಾಗಿ ಅಡುಗೆ ಮಾಡುವೆ ಅಂತ ಅನಿಸುತ್ತದೆ. ಹೌದು, ಇಷ್ಟಕ್ಕೂ ತಂಗಿ ಯಾವ ಊರಿಗೆ ಹೋಗಿದ್ದಾಳೆ? ಯಾವಾಗ ವಾಪಸ್ಸು ಬರುತ್ತಾಳೆ? ನಾನು ಹಿಂತಿರುಗಿ ಹೋಗುವುದರೊಳಗೆ ಬರುವಳೆ?” ಎಂದು ಕೇಳಿದೆ. + +“ಆ ವಿಷಯಗಳನ್ನು ಸಾವಕಾಶವಾಗಿ ಹೇಳುವೆ. ಮೊದಲು ನೀನು ನಿನ್ನ ಬಗ್ಗೆ ಹೇಳು? ನಿನಗೆ ಎಷ್ಟು ಜನ ಮಕ್ಕಳು? ಏನು ಮಾಡುತ್ತಿದ್ದಾರೆ?” + +“ನನಗೆ ಇಬ್ಬರು ಮಕ್ಕಳು. ಮಗ ಸಿ.ಎ ಮಾಡಿ, ಬ್ಯಾಂಕಿನಲ್ಲಿ ಉದ್ಯೋಗ ಮಾಡುತ್ತಿದ್ದಾನೆ. ಮಗಳು ಇಂಜಿನೀಯರಿಂಗ್ ಮಾಡಿದ್ದಾಳೆ. ಅವರಿಬ್ಬರಿಗೂ ಮದುವೆ ಆಗಿದೆ. ಅವರಿಗೂ ಕೂಡ ಮಕ್ಕಳಾಗಿವೆ. ಐದು ವರ್ಷಗಳ ಹಿಂದೆಯೇ ನಾನು ತಾತನಾದೆ ಗೊತ್ತಾ? ಜೀವನ ಸರಾಗವಾಗಿ ಸಾಗುತ್ತಿದೆ ಎನ್ನುವುದಕ್ಕಿಂತ ಸಂತೋಷವಾಗಿ, ಸಂತೃಪ್ತಿಯಿಂದ ಸಾಗುತ್ತಿದೆ ಎಂದರೆ ತಪ್ಪೇನಲ್ಲ. ಯಾವುದೇ ಚಿಂತೆ ಗಿಂತೆ ಇಲ್ಲದ ಅದ್ಭುತವಾದ ಜೀವನ ನಮ್ಮದೆಂದು ಚೂರು ಹೆಮ್ಮೆ ನನಗೆ. + +“ಹೀಗೆ ಕೇಳುತ್ತಿದ್ದರೆ ಎಷ್ಟು ಸಂತೋಷವಾಗಿದೆಯೋ.” + +“ಸುಧಾಕರ್, ನೀನು ಹೇಳು.” + +“ನೀನು ನೋಡುತ್ತಿರುವೆಯಲ್ಲಾ ನಾನೂ ಸಹ ಸಂತೋಷವಾಗಿರುವೆ. ಭಯ, ಬೇಸರಗಳು ಇಲ್ಲದ ಜೀವನವಾಗಿರುವುದರಿಂದಲೇ ಚೆನ್ನಾಗಿ ತಿಂದು ಹೊಟ್ಟೆಯನ್ನು ಬೆಳೆಸಿಕೊಳ್ಳುತ್ತಿದ್ದೇನೆ” ಎನ್ನುತ್ತಾ ಜೋರಾಗಿ ನಕ್ಕನು. + +“ನಿನಗೆ ಮಕ್ಕಳು ಎಷ್ಟು ಮಂದಿ? ಅವರು ಏನು ಮಾಡುತ್ತಿದ್ದಾರೆ? ಸ್ವಲ್ಪ ವಿವರವಾಗಿ ಹೇಳು?” ಎಂದೆ. + +“ಅಷ್ಟು ಆತುರ ಯಾಕೆ? ನೀನು ಇನ್ನೂ ಎರಡು ದಿನಗಳು ನನ್ನ ಜೊತೆಯೇ ಇರುತ್ತೀಯಲ್ಲಾ. ಅದನ್ನೆಲ್ಲಾ ಮಾತಾಡಲು ಬಹಳ ಸಮಯವಿದೆ. ಮೊದಲು ನಿನಗೆ ಬಿಸಿಬಿಸಿ ಕಾಫಿ ಮಾಡಿಕೊಂಡು ಬರುವೆಯಿರು” ಎನ್ನುತ್ತಾ ಆತ ಎದ್ದು ಅಡುಗೆ ಮನೆಯೊಳಕ್ಕೆ ಹೋದ. + +ಎರಡು ಕಪ್ಪುಗಳಲ್ಲಿ ಹಬೆಯಾಡುತ್ತಿರುವ ಕಾಫಿಯನ್ನು ತಂದು ನನ್ನ ಕೈಗೊಂದನ್ನು ಕೊಟ್ಟು ತಾನೊಂದನ್ನು ತೆಗೆದುಕೊಂಡ. + +“ನಮ್ಮ ಕಾಲೇಜಿನ ಸಿಬ್ಬಂದಿಯೆಲ್ಲಾ ಇಂದು ನೀನು ಬರುವೆಯೆಂದು ಕಾತರದಿಂದ ಕಾಯುತ್ತಿದ್ದಾರೆ. ನಾವು ಮೊದಲು ಕಾಲೇಜಿಗೆ ಹೋಗೋಣ. ನೀನು ಒಂದು ಗಂಟೆಯ ಕಾಲ ನಮ್ಮ ಕಾಲೇಜಿನ ಸಿಬ್ಬಂದಿಗೆ ವ್ಯಕ್ತಿತ್ವ ವಿಕಸನದ ಕುರಿತು ಕ್ಲಾಸ್ ತೆಗೆದುಕೋ. ಪ್ರಾಂಶುಪಾಲರ ಅನುಮತಿಯನ್ನು ನಾನು ಮೊದಲೇ ತೆಗೆದುಕೊಂಡಿದ್ದೇನೆ. ನಮ್ಮ ಪ್ರಾಂಶುಪಾಲರೂ ಸಹ ನಿನ್ನ ಅಭಿಮಾನಿಗಳೇ. ನಿನ್ನನ್ನು ಭೇಟಿಯಾಗಲು ಅವರೂ ಸಹ ಕಾತರದಿಂದ ಕಾಯುತ್ತಿದ್ದಾರೆ. ನೀನೊಬ್ಬ ತಾರೆಯಲ್ಲವೆ” ಎನ್ನುತ್ತಾ ನಕ್ಕನು. + +ಕಾಫಿ ಕುಡಿಯುತ್ತಾ ಗೋಡೆಯ ಮೇಲಿನ ಭಾವಚಿತ್ರದ ಮೇಲೆ ದೃಷ್ಟಿ ಹರಿಯಿತು. ಟೆನ್ನಿಸ್ ರಾಕೇಟ್ ಹಿಡಿದುಕೊಂಡು ವೈಯ್ಯಾರವಾಗಿ ನಿಂತಿರುವ ಸುಮಾರು ಇಪ್ಪತ್ತು ವರ್ಷಗಳ ಯುವತಿಯ ಭಾವಚಿತ್ರ. ಬೆಳ್ಳನೆಯ ಉಡುಗೆಯಲ್ಲಿ ದೇವಕನ್ಯೆಯಂತೆ ಇದ್ದಾಳೆ. + +“ಈಕೆ ನಿನ್ನ ಮಗಳೆ? ಎಷ್ಟು ಅಂದವಾಗಿದ್ದಾಳೆ! ಈಗ ಏನು ಮಾಡುತ್ತಿದ್ದಾಳೆ?” ಎಂದು ಕೇಳಿದೆ. + +“ಕಂಪ್ಯೂಟರ್ ಇಂಜಿನೀಯಂರಿಂಗ್ ಮಾಡಿದ್ದಳು. ಈಗ ಸದ್ಯಕ್ಕೆ ಪುಣೆಯಲ್ಲಿ ಕೆಲಸ ಮಾಡುತ್ತಿದ್ದಾಳೆ.” + +“ಮದುವೆ ಆಯಿತೆ?” + +“ಮದುವೆ ಆಗಿದೆ. ಅವಳಿಗೆ ಒಂದು ಪಾಪೂ ಕೂಡ.” + +“ಅಷ್ಟಕ್ಕೆ ಯಾಕೆ ನಿಲ್ಲಿಸಿದೆ. ಮತ್ತೆ ಏನಾದರೂ ಹೇಳು. ಅಭಿನಂದನೆಗಳು, ನೀನೂ ಸಹ ತಾತನಾಗಿ ಬಡ್ತಿ ಪಡೆದುಕೊಂಡಿರುವೆ” ಎನ್ನುತ್ತಾ ಆತನ ಭುಜವನ್ನು ಪ್ರೀತಿಯಿಂದ ತಟ್ಟಿದೆ. + +ವಸಂತ ವರಿಸಿದ ಮಳೆಯಂತೆ ಆತ ನಕ್ಕನು. ಗಾಳಿಗೆ ಅಲುಗಾಡುವ ಕಾಡು ಮಲ್ಲಿಗೆಯ ಗಿಡದಂತೆ ನಕ್ಕನು. + +“ಆ ಪಕ್ಕದ ಭಾವಚಿತ್ರದಲ್ಲಿರುವ ಹದಿನೆಂಟು ವರ್ಷದ ಹುಡುಗ ನಿನ್ನ ಮಗನಾಗಿರಬೇಕಲ್ಲಾ. ಅವನಲ್ಲಿ ನಿನ್ನ ಹೋಲಿಕೆಗಳು ಎದ್ದು ಕಾಣುತ್ತವೆ. ಅವನ ಹಿಂದೆ ಕಾಣುತ್ತಿರುವ ಕಟ್ಟಡ ತಾನು ಓದಿದ ಕಾಲೇಜಿನ ಕ್ಯಾಂಪಸ್ ನಲ್ಲಿನದ್ದಿರಬೇಕು.” + + + +“ಹೌದು ನೀನು ಹೇಳಿದ್ದು ನಿಜ. ಇದು ಮದರಾಸಿನ ಐಐಟಿ ಕ್ಯಾಂಪಸ್ ನಲ್ಲಿ ಮೊದಲ ವರ್ಷದ ಕೆಮಿಕಲ್ ಇಂಜಿನೀಯರಿಂಗ್ ಓದುತ್ತಿದ್ದಾಗಿನ ಭಾವಚಿತ್ರ.” + +“ನೋಡಿದೆಯಾ ನೀನು ಹೇಳದಿದ್ದರೂ ಈ ಭಾವಚಿತ್ರಗಳೇ ನಿನ್ನ ಮಕ್ಕಳ ಬಗ್ಗೆ ಎಲ್ಲವನ್ನೂ ಹೇಳಿಬಿಟ್ಟವು. ನನ್ನ ಜೀವನದಂತೆಯೇ ನಿನ್ನ ಜೀವನವೂ ಸಹ ಸುಖ-ಸಂತೋಷಗಳಿಂದ ತುಂಬಿ, ಹೂವು, ಹಣ್ಣುಗಳಿಂದ ಕಳೆಗಟ್ಟಿದ ಬನದಂತೆ ಶೋಭಿಸುತ್ತಿದೆ ಅಂತ ನನಗೆ ಅನಿಸುತ್ತಿದೆ. ನಿನ್ನದೂ ಕೂಡ ಸಂತೃಪ್ತಿಕರವಾದ ಜೀವನವೆಂದು ನಿನ್ನ ಮುಖದಲ್ಲಿ ಸದಾ ತುಳುಕುವ ಕಿರುನಗೆಯಿಂದಲೇ ತಿಳಿಯುತ್ತದೆ.” + +ಸುಧಾಕರ್ ಈ ಸಲ ಜೋರಾಗಿ ನಕ್ಕನು. “ನಮ್ಮ ಸೊಲ್ಲನ್ನು ಆಮೇಲೆ ಮುಂದುವರೆಸೋಣ. ಬೇಗ ಕಾಲೇಜಿಗೆ ಹೋಗೋಣ ನಡೆ. ಈಗಾಗಲೇ ತಡವಾಗಿದೆ” ಎಂದ. + +“ಇಷ್ಟಕ್ಕೂ ತಂಗಿಯ ಭಾವಚಿತ್ರವೆಲ್ಲಿ?” ಎಂದು ಕೇಳುತ್ತಾ ಎಲ್ಲಾ ಗೋಡೆಗಳ ಮೇಲೆ ಕಣ್ಣಾಯಿಸಿದೆ. + +“ಅವಳು ನನ್ನ ಎದೆಯಲ್ಲಿ ಜೋಪಾನವಾಗಿದ್ದಾಳೆ. ಆದ್ದರಿಂದಲೇ ನನಗೆ ಇನ್ನೂ ಅವಳ ಭಾವಚಿತ್ರವನ್ನು ಗೋಡೆಗೆ ಏರಿಸುವ ಅಗತ್ಯ ಬರಲಿಲ್ಲ” ಎನ್ನುತ್ತಾ ನನ್ನ ಕೈ ಹಿಡಿದುಕೊಂಡು ಆ ಕೊಠಡಿಯಿಂದ ಹೊರಗೆ ಎಳೆದುಕೊಂಡುಹೋದ. + +ಪ್ರಾಂಶುಪಾಲರು ನನ್ನನ್ನು ಅತ್ಯಂತ ಪ್ರೀತ್ಯಾದರಗಳಿಂದ ಬರಮಾಡಿಕೊಂಡರು. ಕಾಲೇಜಿನ ಉಪನ್ಯಾಸಕರೆಲ್ಲರೂ ಸಭಾಂಗಣದಲ್ಲಿ ಆಸೀನರಾದ ಮೇಲೆ ಅವರು ನನ್ನನ್ನು ಗೌರವಯುತವಾಗಿ ಸಭಾಂಗಣದೊಳಕ್ಕೆ ಕರೆದುಕೊಂಡು ಹೋದರು. ನನ್ನನ್ನು ಕುರಿತಾದ ಪರಿಚಯದ ಮಾತುಗಳನ್ನು ಆಡುವಾಗ ಸುಧಾಕರ್ ನನ್ನನ್ನು ಹೊಗಳಿ ಆಕಾಶಕ್ಕೆ ಏರಿಸಿಬಿಟ್ಟ. ವಿದ್ಯಾರ್ಥಿಗಳ ಭವಿಷ್ಯತ್ತನ್ನು ಬಂಗಾರವಾಗಿಸುವ ಉಪನ್ಯಾಸಕರ ಹೊಣೆಯ ಬಗ್ಗೆ ನಾನು ಸುಮಾರು ಒಂದು ಗಂಟೆಯ ಕಾಲ ಲೀಲಾಜಾಲವಾಗಿ ಮಾತಾಡಿದೆ. ಹಾಗೆ ಮಾತಾಡುತ್ತಲೇ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಅಂಶಗಳನ್ನೂ ಅದರಲ್ಲೇ ಸೇರಿಸಿದೆ. ಎಲ್ಲರೂ ನನ್ನನ್ನು ಬಹಳ ಮೆಚ್ಚಿಕೊಂಡರು. ನನ್ನಂತಹ ದೊಡ್ಡ ವ್ಯಕ್ತಿ ತನ್ನ ಗೆಳೆಯನಾದುದ್ದು ಅದೃಷ್ಟವೆಂದು ಸುಧಾಕರ್ ನನ್ನೂ ಕೂಡ ಅಲ್ಲಿದ್ದವರೆಲ್ಲಾ ಪ್ರಶಂಸಿದರು. + +ಅದರ ಜೊತೆಗೆ “ಸುಧಾಕರ್ ನಂತಹ ವ್ಯಕ್ತಿಯೊಂದಿಗಿನ ಸ್ನೇಹವೇ ದೊಡ್ಡ ವರ. ಆತನು ನಮ್ಮ ಕಾಲೇಜಿಗೆಲ್ಲಾ ಒಂದು ಉತ್ಸಾಹ, ಉತ್ತೇಜನ. ಸದಾ ನಗು ನಗುತ್ತಾ, ನಗಿಸುತ್ತಾ ಜೀವನದಲ್ಲಿ ಪ್ರತಿ ಕ್ಷಣವನ್ನು ಎಳೆಯ ಮಗುವಿನಂತೆ ಆಸ್ವಾದಿಸುತ್ತಾ ಆನಂದವಾಗಿ ಬದುಕುವುದು ಆತನಿಗಷ್ಟೇ ಸಾಧ್ಯವಾಗಬಲ್ಲದು. ನಮಗೂ, ನಮ್ಮ ವಿದ್ಯಾರ್ಥಿಗಳಿಗೆ ಆತನೇ ಒಂದು ಪ್ರೇರಣಾಶಕ್ತಿ. ಆತ ಎಷ್ಟು ಓದಿದರೂ ಇನ್ನೂ ಉಳಿದುಹೋಗುವ ಶ್ರೇಷ್ಠ ಪುಸ್ತಕವಿದ್ದಂತೆ. ನಿಮಗೆ ಆತನು ಗೆಳೆಯನಾದುದ್ದು ನಿಮ್ಮ ಅದೃಷ್ಟವೂ ಕೂಡ” ಎಂದು ಅನೇಕರು ಹೇಳಿದರು. + +ಮಧ್ಯಾಹ್ನ ಹೊಟೇಲಿನಲ್ಲಿ ಊಟ ಮಾಡಿದ ಮೇಲೆ ಆಧೋನಿಯ ಕೋಟೆಯನ್ನು ನೋಡಲು ಹೋದೆವು. ಅಲ್ಲಿಂದ ಮಹಾಲಕ್ಷ್ಮೀ ಅಮ್ಮನವರ ಆಲಯಕ್ಕೆ ಕರೆದುಕೊಂಡು ಹೋದ. ಅದು ಅಮೃತಶಿಲೆಯಿಂದ ಕಟ್ಟಿರುವ ದೊಡ್ಡ ದೇವಾಲಯ. “ಆಧೋನಿಯ ಜನರಿಗೆ ಈಕೆಯೆಂದರೆ ಬಹಳ ಭಕ್ತಿ ಗೊತ್ತಾ? ಈಕೆಯನ್ನು ಎಲ್ಲರೂ ಪ್ರೀತಿಯಿಂದ ಅವ್ವ ಅಂತಲೂ ಕರೆಯುತ್ತಾರೆ ಗೊತ್ತಾ?” ಎಂದ ಸುಧಾಕರ್. + + + +ಮೊಘಲರ ಕಾಲದಲ್ಲಿ ಜನರ ನೀರಡಿಕೆಯನ್ನು ತಣಿಸಲು ಕಟ್ಟಿಸಿದ ವೆಂಕಣ್ಣನ ಬಾವಿಯನ್ನೂ ಕೂಡ ತೋರಿಸಿದ. ಅದು ತುಂಬಾ ದೊಡ್ಡದಾದ ಬಾವಿ. ಸುಮಾರು ನೂರು ಅಡಿಗಳಷ್ಟು ವ್ಯಾಸವಿರುವ ಬಾವಿ. ಈಗ ಒಣಗಿಹೋಗಿದೆ. “ನಮ್ಮ ಆಧೋನಿಯಲ್ಲಿ ನೋಡಬಹುದಾದ ಸ್ಥಳಗಳು ಇಷ್ಟೇ. ಇದು ನಿಮ್ಮ ದಿಲ್ಲಿಯಂತೆ ಅಲ್ಲ. ತುಂಬಾ ಚಿಕ್ಕ ಊರು” ಎನ್ನುತ್ತಾ ಸುಧಾಕರ್ ಉಲ್ಲಾಸವಾಗಿ ನಕ್ಕನು. + +ಅಷ್ಟು ಹೊತ್ತಿಗಾಗಲೇ ಸಮಯ ಸಂಜೆ ಆರು ಗಂಟೆಯಾಗುತ್ತಿತ್ತು. ನಾವಿಬ್ಬರೂ ಮನೆಗೆ ಮರಳಿದೆವು. ಮತ್ತೊಮ್ಮೆ ಆತ ಕಾಫಿ ಮಾಡಿಕೊಟ್ಟು “ರಾತ್ರಿಗೆ ನೀನು ಏನು ಊಟ ಮಾಡುವೆ ಹೇಳು? ಫ್ರಿಡ್ಜ್ ನಲ್ಲಿ ಏನೇನು ತರಕಾರಿಗಳಿವೆಯೋ ನೋಡಬೇಕು. ನಮಗೆ ಅವುಗಳನ್ನು ಬಿಟ್ಟು ಬೇರೆ ಏನಾದರೂ ಅಗತ್ಯವಾದರೆ ಮಾರುಕಟ್ಟೆಗೆ ಹೋಗಿ ತೆಗೆದುಕೊಂಡು ಬರಬೇಕು” ಎಂದ. + +“ನೀನು ಯಾಕೆ ಅಷ್ಟು ಕಷ್ಟಪಡುವೆ. ನಾವು ರಾತ್ರಿ ಹೊಟೇಲಿಗೆ ಹೋಗಿ ಊಟ ಮಾಡೋಣ” ಎಂದೆ. + +“ಬೇಡ ಮಧ್ಯಾಹ್ನ ಹೊಟೇಲಿನಲ್ಲೇ ತಿಂದೆವಲ್ಲಾ. ಆ ತಿಂಡಿಗಳು ಹುಲ್ಲನ್ನು ಜಗಿದಂತೆ ಅನಿಸುವುದಿಲ್ಲವೆ? ನೀನು ನನ್ನ ಅತಿಥಿ. ನಿನಗೆ ನಳಪಾಕದ ರುಚಿ ತೋರಿಸದಿದ್ದರೂ ಕನಿಷ್ಠ ಪಕ್ಷ ಸುಧಾ ಮಧುರವಾದ ಸ್ವಾದಿಷ್ಟವಾದ ಭೋಜನವನ್ನು ನೀಡಬೇಕಲ್ಲಾ. ಮೊದಲು ಏನು ಅಡುಗೆ ಮಾಡಲಿ ಹೇಳು?”“ಏನಾದರೂ ಮಾಡು, ನಿನ್ನ ಇಷ್ಟ. ಆದರೆ ಹೆಚ್ಚಿಗೆ ಮಾಡಬೇಡ. ಸಾರು ಒಂದು ಪಲ್ಯ ಅಷ್ಟೇ ಸಾಕು” ಎಂದೆ. + +ಸೌತೇಕಾಯಿಯ ಪಲ್ಯ, ಆಲೂಗಡ್ಡೆಯ ಗೊಜ್ಜು, ಮೆಣಸಿನ ಸಾರು, ಕೆನೆಭರಿತ ಮೊಸರು ಎಲ್ಲಾ ಎಷ್ಟು ರುಚಿಯಾಗಿವೆ! ನನ್ನ ಹೆಂಡತಿಯೂ ಕೂಡ ಇಷ್ಟು ರುಚಿಯಾದ ಅಡುಗೆಯನ್ನು ಮಾಡಲಾರಳು. + +“ಅಡುಗೆ ಮಾಡುವುದರಲ್ಲಿ ನೀನು ಬಹಳ ಪ್ರಾವೀಣ್ಯತೆಯನ್ನು ಸಂಪಾದಿಸಿರುವೆ” ಎಂದೆ ತೃಪ್ತಿಯಿಂದ ತೇಗುತ್ತಾ. + +“ನೀನು ಚೆನ್ನಾಗಿ ಕೈ ಪಳಗಿದ ಲೇಖಕ. ನಾನು ರುಚಿಕರವಾಗಿ ಅಡುಗೆ ಮಾಡಬಲ್ಲ ಭಟ್ಟ” ಎಂದ ನಗುತ್ತಾ. + +“ಹತ್ತು ವರ್ಷಗಳಿಂದ ನನ್ನದು ಸ್ವಯಂಪಾಕವಲ್ಲವೆ? ಇಂಗ್ಲೀಷ್ ಸಾಹಿತ್ಯವನ್ನು ಅರಗಿಸಿಕೊಂಡಂತೆ ಪಾಕಶಾಸ್ತ್ರವನ್ನೂ ಸಹ ಅರಿತುಕೊಂಡಿರುವೆ ಅಷ್ಟೇ” ಮತ್ತೊಮ್ಮೆ ಆತ ನಕ್ಕನು. + +“ಏನಾಯಿತು? ನನ್ನ ತಂಗಿ ಏನಾದಳು?” + +“ಅವಳಿಗೆ ಯಾವಾಗಲೂ ಆತುರವೇ. ರಾತ್ರಿ ಹತ್ತು ಗಂಟೆಯ ರೈಲಿಗೆ ಹೋಗಬೇಕೆಂದರೆ ಎಂಟು ಗಂಟೆಗೆಲ್ಲಾ ರೈಲ್ವೇ ನಿಲ್ದಾಣಕ್ಕೆ ಹೋಗಿ ಕಾದು ಕುಳಿತುಕೊಳ್ಳುವ ಸ್ವಭಾವದವಳು. ಹತ್ತು ವರ್ಷಗಳ ಹಿಂದೆಯೇ ಸಾವನ್ನು ಹುಡುಕಿಕೊಂಡು ಹೊರಟುಹೋದಳು” ಎಂದನು ತಣ್ಣಗೆ. ಆತನ ಮುಖದಲ್ಲಿ ವಿಷಾದದ ಛಾಯೆಗಳೇನೂ ಕಾಣಿಸಲೇ ಇಲ್ಲ. + +“ಅಷ್ಟು ದುಃಖಕರವಾದ ವಿಷಯವನ್ನು ಯಾವುದೋ ತಣ್ಣನೆಯ ಸುದ್ದಿಯನ್ನು ಹೇಳುವಂತೆ ಹೇಳುತ್ತಿರುವೆಯಲ್ಲಾ” ಎಂದೆ ಆಶ್ಚರ್ಯದಿಂದ. + +“ನಾನು ಏನು ಮಾಡಲಿ ಹೇಳು? ಸತ್ತುಹೋದವರ ಜೊತೆಯಲ್ಲಿ ಬದುಕಿರುವವರು ಹೋಗಲಾಗುವುದಿಲ್ಲ. ಉಸಿರಿರುವ ತನಕ ಬದುಕಲೇಬೇಕು. ಕಾಲವಾದವರ ಕುರಿತು, ಬದುಕಿನಲ್ಲಿ ನಡೆದ ಕಹಿ ಘಟನೆಗಳ ಕುರಿತು ಚಿಂತಿಸುತ್ತಾ ಉಳಿದ ಚೂರು ಜೀವನವನ್ನು ದುಃಖಮಯವನ್ನು ಮಾಡಿಕೊಳ್ಳುವುದರಿಂದ ಏನು ಪ್ರಯೋಜನ? ದಿನವೂ ಓದುವ ಭಗವದ್ಗೀತೆಯಲ್ಲಿ ಹೇಳಿರುವುದು ಇದನ್ನೇ ಅಲ್ಲವೆ?” ಎಂದ. + +“ಹತ್ತು ವರ್ಷಗಳ ಹಿಂದೆ ಅಂದರೆ ಆಗ ನಿನಗೆ ಸುಮಾರು ನಲವತ್ತೈದು ವರ್ಷಗಳು ವಯಸ್ಸಿರಬಹುದಲ್ಲಾ. ಆಕೆಗೆ ಏನಾಯಿತು? ಏನಾದರೂ ಅನಾರೋಗ್ಯದ ಸಮಸ್ಯೆಯೆ?” + +“ಹೌದು ಅದೂ ಕೂಡ ಅನಾರೋಗ್ಯವೇ. ಮಾನಸಿಕ ಅನಾರೋಗ್ಯ. ಅದಕ್ಕೆ ಮದ್ದು ಇಲ್ಲವಲ್ಲಾ!” + +“ಸ್ವಲ್ಪ ಬಿಡಿಸಿ ಹೇಳು.” + +“ಮಗಳಿಗೆ ಮದುವೆಯಾದ ಎರಡು ವರ್ಷಗಳಿಗೆಲ್ಲಾ ವಿಚ್ಛೇದನವಾಯಿತು. ಅಳಿಯನಿಗೆ ಒಳ್ಳೆಯ ಉದ್ಯೋಗ, ವ್ಯಕ್ತಿ ನೋಡಲು ಚೆನ್ನಾಗಿಯೇ ಇದ್ದಾನೆಂದು ಮದುವೆ ಮಾಡಿದೆವು. ಅವನು ಹೆಂಡತಿಯನ್ನು ಕಿತ್ತು ತಿನ್ನುವ ವಿಕೃತ ಮನಸ್ಕನೆಂದು ನಾವು ಮೊದಲೇ ಗುರುತಿಸಲಾಗಲಿಲ್ಲ. ಅದು ತಿಳಿಯುವಷ್ಟರಲ್ಲಿ ಅವಳಿಗೆ ಒಂದು ವರ್ಷದ ಮಗು. ಎಲ್ಲಾ ಕಷ್ಟವನ್ನು ನನ್ನ ಮಗಳು ಧೈರ್ಯದಿಂದಲೇ ಎದುರಿಸಿದಳು. ತಾನು ಮಾಡುವ ಕೆಲಸದಲ್ಲೇ ಮಗುವಿನ ಲಾಲನೆ-ಪಾಲನೆ ಮಾಡುತ್ತಾ ಮನಃಶ್ಶಾಂತಿಯನ್ನು ಕಂಡುಕೊಂಡಳು. ಆದರೆ ನನ್ನ ಮಡದಿಯೇ ತನ್ನ ಮಗಳಿಗಾದ ಅನ್ಯಾಯವನ್ನು ಸಹಿಸಿಕೊಳ್ಳಲಿಲ್ಲ. ಅವಳು ಮಗಳದ್ದೇ ಕೊರಗಿನಲ್ಲಿ ದಿನೇ ದಿನೇ ಕುಗ್ಗಿ ಹೋದಳು. ಅದೇ ಸಮಯದಲ್ಲಿ ಐಐಟಿಯಲ್ಲಿ ಮೂರನೇ ವರ್ಷದ ಇಂಜಿನೀಯರಿಂಗ್ ಓದುತ್ತಿದ್ದ ಮಗ ಹಾಸ್ಟಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಯಹತ್ಯೆಯನ್ನು ಮಾಡಿಕೊಂಡ. ನನಗೆ ಸುದ್ದಿ ತಿಳಿಯಿತು. ನಾನು ಬೇಡ ಎಂದರೂ ನನ್ನೊಡನೆ ಮದರಾಸಿಗೆ ಬಂದಳು. ಬೆಳದ ಮಗನನ್ನು ಹೆಣವಾಗಿ ನೋಡಿ ಭರಿಸಲಾಗದೆ ಪ್ರಜ್ಞೆಯನ್ನು ಕಳೆದುಕೊಂಡು ಕುಸಿದು ಬಿದ್ದಳು. ಆಮೇಲೆ ಅವಳು ಆರು ತಿಂಗಳುಗಳು ಕೂಡ ಬದುಕಲಿಲ್ಲ. ತಾನೂ ಕೂಡ ಸತ್ತುಹೋದರೆ ತನ್ನ ಮಗನನ್ನು ಆ ಲೋಕದಲ್ಲಿ ಭೇಟಿಯಾಗಬಹುದು ಎಂದುಕೊಂಡಳೇನೋ ಹುಚ್ಚಿ!” + +“ದಿಗಿಲುಗೆ ಪರ್ಯಾಯ ಪದದಂತೆ ನೀನು ಮುಖವನ್ನು ಹಾಗೆ ಯಾಕೆ ಮಾಡಿಕೊಂಡೆ? ಮೊದಲು ನೀನು ನನ್ನ ಬದುಕಿನ ವಿಷಮವಾದ ಸಂಗತಿಗಳಿಂದ ಹೊರಗೆ ಬಂದುಬಿಡು. ನಾವು ಹೀಗೆ ನೋವಿನಲ್ಲಿ ಕಳೆದುಕೊಂಡ ಯಾವ ನಿಮಿಷವೂ ಮತ್ತೆ ಮರಳಿ ಬರುವುದಿಲ್ಲ. ಜೀವನ ದೇವರ ಕೊಟ್ಟ ವರ. ಹಾಗೆಂದು ನನಗೆ ನೋವೇ ಇಲ್ಲ ಎಂದುಕೊಳ್ಳಬೇಡ. ಎದೆಯಾಳದಲ್ಲಿ ಮಡುಗಟ್ಟಿರುವ ನೋವು ಹರಿತವಾಗಿ ಸದಾ ಚುಚ್ಚುತ್ತಲೇ ಇರುತ್ತದೆ. ಆದರೆ ಅದು ನನ್ನ ದೈನಂದಿನ ಬದುಕಿಗೆ ತೊಡಕಾಗದಂತೆ ನನ್ನ ನೋವನ್ನು ಎದೆಯ ಪಾತಾಳದಲ್ಲಿ ಹುದುಗಿಸಿಟ್ಟಿದ್ದೇನೆ. ಜೀವನ ಒಂದು ಪ್ರವಾಹವಿದ್ದಂತೆ. ಅದು ನಮ್ಮನ್ನು ತನ್ನೊಡನೆ ಎಳೆದುಕೊಂಡು ಹೋಗುತ್ತಿರುತ್ತದೆ. ಮಡದಿ, ಮಕ್ಕಳು ಕೆಲ ಕಾಲ ನಮ್ಮೊಡನೆ ಪ್ರಯಾಣ ಮಾಡುತ್ತಾರೆ. ಅವರ ನಿಲ್ದಾಣ ಬಂದಾಗ ಬದುಕಿನ ಬಂಡಿಯಿಂದ ಕೆಳಗಿಳಿದು ನಮ್ಮಿಂದ ಬೇರೆಯಾಗಿ ಕಾಲ ಗರ್ಭದಲ್ಲಿ ಕರಗಿಹೋಗುತ್ತಾರೆ. ಇಲ್ಲಿ ಯಾರೂ ಶಾಶ್ವತವಲ್ಲ. ಒಬ್ಬರು ಸ್ವಲ್ಪ ಮುಂದೆ ಹೋದರೆ ಇನ್ನೊಬ್ಬರು ಆಮೇಲೆ ಹೋಗುತ್ತಾರೆ ಅಷ್ಟೇ. ಅನಿವಾರ್ಯವಾದುದ್ದಕ್ಕೆ ಎಷ್ಟು ಕಾಲ ನೋವುಣ್ಣಬೇಕು?” ಎನ್ನುತ್ತಾ ನಕ್ಕನು. + +“ಜಾತಸ್ಯ ಹಿ ಧ್ರುವೋ ಮೃತ್ಯು. . . ನ ತ್ವಂ ಶೋಚಿತು ಮರ್ಹಸಿ” ಎಂಬ ಭಗವದ್ಗೀತೆಯಲ್ಲಿರುವ ಶ್ಲೋಕ ನನ್ನ ಎದುರೇ ಸಾಕಾರವಾಗಿ ನಿಂತಿರುವಂತೆ ಭಾಸವಾಯಿತು. + +* * * * + +ಸುಧಾಕರ್ ಅವರ ಕಾಲೇಜಿನ ವಾರ್ಷಿಕೋತ್ಸವ ಮುಗಿದುಹೋಯಿತು. ನಾನು ದಿಲ್ಲಿಗೆ ವಾಪಸ್ಸು ಹೋಗಲು ಸಿದ್ಧನಾದ ಮೇಲೆ ನನ್ನನ್ನು ಬಿಳ್ಕೊಡಲು ಆತ ರೈಲು ನಿಲ್ದಾಣದ ತನಕ ನನ್ನೊಡನೆ ಬಂದ. + +ರೈಲುಗಾಡಿ ಅಂಕಣಕ್ಕೆ ಬಂದ ಮೇಲೆ ನನ್ನನ್ನು ಬಿಳ್ಕೊಳ್ಳುವಾಗ “ನೀನು ಈಗ ಬರೆಯಬೇಕೆಂದು ಸಂಕಲ್ಪಿಸಿರುವ ಪುಸ್ತಕವನ್ನು ಆದಷ್ಟೂ ಬೇಗ ಬರೆದು ಮುಗಿಸು. ನನಗೊಂದು ಪ್ರತಿಯನ್ನು ಕಳುಹಿಸುವುದು ಮಾತ್ರ ಮರೆಯಬೇಡ” ಎಂದ ಆತ. + +“ನಾನು ಆ ಪುಸ್ತಕ ಬರೆಯುವ ಆಲೋಚನೆಯನ್ನೇ ಕೈ ಬಿಟ್ಟಿದ್ದೇನೆ” ಎಂದೆ. + +“ಯಾಕೆ?” ಎಂದ ಆತ ಆಶ್ಚರ್ಯದಿಂದ. + +“ಹಾಗೆ ಆಲೋಚಿಸಲು ಎರಡು ಕಾರಣಗಳಿವೆ. ಮೊದಲನೇ ಕಾರಣ ಏನೆಂದರೆ ನನ್ನಂತೆ ಸುಖಕರವಾದ ಜೀವನವನ್ನು ನಡೆಸುತ್ತಿರುವ ವ್ಯಕ್ತಿಗೆ ದುಃಖ ಸಮುದ್ರವನ್ನು ಸಂತೋಷವಾಗಿ ಹೇಗೆ ಈಸಬಹುದೆಂದು ವಿವರಿಸುವ ಪುಸ್ತಕವನ್ನು ಬರೆಯುವ ಅರ್ಹತೆ ಇಲ್ಲ. ಅದಕ್ಕೆ ಅಗತ್ಯವಾದ ಅನುಭವ, ಅರ್ಹತೆ ನಿನ್ನಂತಹವರಿಗೆ ಮಾತ್ರವೇ ಇದೆ. ಎರಡನೇ ಕಾರಣ ಏನೆಂದರೆ ಭಗವದ್ಗೀತೆ ಇರುವಾಗ ಅಂತಹ ಪುಸ್ತಕ ಬರೆಯಬೇಕಾದ ಅಗತ್ಯವೇನೂ ಇಲ್ಲ ಎಂದು ನನಗೀಗ ಅರಿವಾಗಿದೆ. ಶೋಖ ರಾಹಿತ್ಯತೆ, ಆನಂದ ಪ್ರಾಪ್ತಿಗಳೇ ಗೀತೆಯ ಪ್ರಧಾನ ಲಕ್ಷ್ಯ. ನಿನಗೆ ನಾನು ಕೃತಜ್ಞನಾಗಿದ್ದೇನೆ” ಎಂದೆ. + + + +ಬಿಳಿಯ ಕಮಲಗಳು ಅರಳಿದಾಗ ಮೂಡುವ ಕಾಂತಿಯಂತಹ ತಿಳಿ ನಗೆಯನ್ನು ಬೀರುತ್ತಾ ಸುಧಾಕರ್ ನನ್ನನ್ನು ಬಿಳ್ಕೊಟ್ಟನು. + +ಧನಪಾಲ ನಾಗರಾಜಪ್ಪ ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯವರು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ನೆಲವಾಗಿಲು ಗ್ರಾಮದ ನಿವಾಸಿಯಾಗಿರುವ ಇವರು ಭಾರತೀಯ ವಾಯು ಸೇನೆಗೆ ಸೇರ್ಪಡೆಯಾಗಿ, ವೈದ್ಯಕೀಯ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾರೆ. ನಿವೇದನೆ (ಕವನ ಸಂಕಲನ), ಮಿತ್ರವಾಣಿ (ಪ್ರಧಾನ ಸಂಪಾದಕತ್ವದ ಕವನ ಸಂಕಲನ) ಕಾಡುವ ಕಥೆಗಳು (ಸಲೀಂ ಅವರ ತೆಲುಗು ಕಥೆಗಳ ಅನುವಾದ) ತಣ್ಣೀರ ಬಟ್ಟೆಯ ಬಿಸಿ (ಆಯ್ದ ತೆಲುಗು ಕಥೆಗಳ ಅನುವಾದ), ಜೀವನ್ಮೃತರು (ಅನುವಾದಿತ ಕಾದಂಬರಿ ), ಮೇಧ-017 (ಅನುವಾದಿತ ಕಾದಂಬರಿ), ಅಪರಾಜಿತ (ಅನುವಾದಿತ ಮಕ್ಕಳ ಕಾದಂಬರಿ) ಇವರ ಪ್ರಕಟಿತ ಕೃತಿಗಳು \ No newline at end of file diff --git a/Kenda Sampige/article_353.txt b/Kenda Sampige/article_353.txt new file mode 100644 index 0000000000000000000000000000000000000000..82d9537f4df5cd1bd642f355906d011edf18aeb3 --- /dev/null +++ b/Kenda Sampige/article_353.txt @@ -0,0 +1,25 @@ + + +(ಚೌಕಾರು ಯಾನೆ ಮೇರಿಬಾಯಿಯು ಒಂದು ಬುಟ್ಟಿ ಸಾಮಾನನ್ನು ಹೊತ್ತುಕೊಂಡು ಬರುವಳು) + +ಚೌಕಾರುಮೇರಿ : ಅಮ್ಮಾ, ಹಿಂಗಾರ, ಕೇದಿಗೆ, ಮಲ್ಲಿಗೆ, ತುಲಸಿ, ಹಾಲು, ಜೇನು, ಸೀಯಾಳ – ಇವೆಲ್ಲಾ ನನ್ನಲ್ಲಿವೆ. ಎಲ್ಲವೂ ನಿಮ್ಮ ದೇವರಿಗೆ ಯೋಗ್ಯವಾಗಿದೆ. ದೇವಸ್ಥಾನಕ್ಕೆ ಹೋಗುವಾಗ ಏನಾದರೂ ತೆಗೆದುಕೊಳ್ಳಬಾರದೇ? ಗಂಗಮ್ಮನವರೇ – + +ಗಂಗಮ್ಮ : ಕೇದಿಗೆ, ಜೇನು, ಹಿಂಬಾರ, ಸೀಯಾಳ- ಇವನ್ನು ಮಾತ್ರ ನಿಮ್ಮಿಂದ ನಾವು ಪಡೆಯಬಹುದು. ತುಲಸಿ, ಮಲ್ಲಿಗೆ, ಹಾಲು- ಇವನ್ನು ನಿಮ್ಮಿಂದ ಪಡೆಯಲಾಗದೆಂದು ನಿನಗೆ ಗೊತ್ತಿಲ್ಲವೇ? + +ಚೌಕಾರುಮೇರಿ : ಅದೇನಮ್ಮ ನಿಮ್ಮ ಕ್ರಮ? ಕೆಲವು ಮಾತ್ರ ಆಗಬಹುದು. ಕೆಲವು ಮಾತ್ರ ಆಗಲಾರದು – ಇದೆಂತಹ ಅಕ್ರಮ ಧರ್ಮ? + +ಗಂಗಮ್ಮ : ಮುಳ್ಳಿನ ಮರದ ಕೇದಿಗೆ, ‘ಟೊಳ್ಳಿನ’ ಮರದ ಹಿಂಗಾರ, ಕಳ್ಳಿನ ಮರದ ಸೀಯಾಳ, ಗೆಲ್ಲಿನ ಮೇಲಿನ ಜೇನು ಇವನ್ನು ತೆಗೆಯುವುದಕ್ಕೆ ಎಷ್ಟು ಕಷ್ಟ ಉಂಟು! ಮರಕ್ಕೆ ಹತ್ತಬೇಕು. ಅಪಾಯಕ್ಕೆ ಗುರಿಯಾಗಬೇಕು, ಈ ಕಷ್ಟ ಯಾರಿಗೆ ಬೇಕು! ಅದುದರಿಂದ ಇಂತಹವನ್ನು ‘ಹೊಲೆಯ’ರಿಂದಾದರೂ ಪಡೆಯಬಹುದೆಂದು ಬುದ್ದಿವಂತರಾದ ನಮ್ಮ ಹಿರಿಯರು ನಿಯಮವನ್ನು ಹೇಳಿರುವರು. ಎಷ್ಟಾದರೂ ನಮ್ಮ ಹಿರಿಯರು ಜಾಣರಲ್ಲವೇ? ಯಾರಾದರೂ ಅಪಾಯಕ್ಕೆ ಗುರಿಯಾಗಬಾರದಲ್ಲವೇ? ಮತ್ತೆ ತುಲಸಿ, ಮಲ್ಲಿಗೆ, ಹಾಲು – ಇವುಗಳ ಸಂಗ್ರಹದಲ್ಲಿ ಏನೂ ಅಪಾಯವಿಲ್ಲ. ಅದಕ್ಕೆ ಪರರ ಸಹಾಯ ಬೇಕಾಗಿಲ್ಲ. ಇಷ್ಟಾದರೂ ನಮ್ಮ ನಮ್ಮ ಕೆಲಸಗಳನ್ನು ನಾವು ನಾವೇ ಮಾಡಬೇಕಲ್ಲವೇ? ಆದುದರಿಂದ ಪೂರ್ವಾಚಾರ ಧರ್ಮ ಪ್ರಕಾರ ನಾವು ಹೊಲತಿಯರಿಂದ ಪಡೆಯಬಹುದಾದ – ದೇವರಿಗೂ ಆಗಬಹುದಾದ – ಕೇದಿಗೆ, ಹಾಲು, ಹಿಂಗಾರ, ಸೀಯಾಳ, ಜೇನುಗಳನ್ನು ದೂರವಿಡು. ನಾನು ತೆಗೆದುಕೊಳ್ಳುತ್ತೇನೆ. ದುಡ್ಡು ನಾಳೆ ಕೊಡುತ್ತೇನೆ ಇಡು ಅಲ್ಲಿ. + +ಚೌಕಾರುಮೇರಿ : ಗಂಗಮ್ಮನವರೇ, ಏನು ನಾನು ಹೊಲತಿಯೆಂದು ತಿಳಿದಿರೇ? ನಾನು ಕ್ರೈಸ್ತ ಜಾತಿಗೆ ಸೇರಿರುವುದು ನಿಮಗೆ ಗೊತ್ತಿಲ್ಲವೇ? ಈ ‘ಕುರುಸು’ ನಿಮ್ಮ ಕಣ್ಣಿಗೆ ಕಾಣುವುದಿಲ್ಲವೇ? ಗಂಗಮ್ಮನವರೇ, ನಾನು ಆ ಚೌಕಾರು ಅಲ್ಲ , ಈ ಮೇರಿ ಗೊತ್ತಾಯಿತೇ? ಬಾಯಿಗಳಾದವರು ತಮ್ಮ ಬುಟ್ಟಿಯಲ್ಲಿ ಸಾಯಂಕಾಲ ಮಾತ್ಸ್ಯ, ಮಾಂಸ, ಮೊಟ್ಟೆಗಳನ್ನು ಮೀನು ಮಾರ್ಕೇಟಿನಿಂದ ಕೊಂಡುಹೋಗಿ, ಅದೇ ಬುಟ್ಟಿಯಲ್ಲಿ ಮರುದಿನ ಜಾಜಿ, ಮಲ್ಲಿಗೆ, ಸಂಪಿಗೆಯನ್ನು ಹೂ ಮಾರ್ಕೇಟಿಗೆ ತಂದರೂ ಬೇಡ ಎಂದು ಹೇಳುವ ಬ್ರಾಹ್ಮಣರುಂಟೇ? ಜಾಜಿಮಲ್ಲಿಗೆಯ ಹೂಮಾಲೆಯನ್ನು ಹಲ್ಲಿನಿಂದ ಕಚ್ಚಿ ತುಂಡು ಮಾಡಿ ಕೊಟ್ಟರೂ ಬಿಟ್ಟು ಹೋಗುವ ಭಟ್ಟರುಂಟೇ? ಇವುಗಳು ಬೇಡವೆಂದು ಹೇಳುವ ದೇವರುಂಟೇ? ಈ ಬುಟ್ಟಿಯು ಆ ಹಿಂದಿನ ಮರಿಯಮ್ಮನ ಕಾಲದಿಂದ ಕಾಯಿಪಲ್ಯ, ಹೂ, ಗೇರುಬೀಜಗಳನ್ನು ಹೂ ಮಾರ್ಕೇಟಿಗೆ ತರುವುದು, ಸಂಜೆ ಮಾಂಸ, ಮೊಟ್ಟೆ, ಮತ್ಸ್ಯಗಳನ್ನು ಮೀನು ಮಾರ್ಕೇಟಿನಿಂದ ಹೊರುವುದು – ಈ ಪ್ರಕಾರ ತನ್ನ ಮನೆಯ ಹಾಗೂ ಪರರ ಮನೆಯ ಆಹಾರಗಳನ್ನು ತುಂಬಿಸಿಕೊಳ್ಳುತ್ತಿದ್ದು, ಇಂದು ಈಗ ನನ್ನನ್ನು ಕ್ರೈಸ್ತಜಾತಿಗೆ ಸೇರಿಸಿದ ಅಮ್ಮನ ದಯದಿಂದ ಈ ಮೇರಿ ಬಾಯಿಯ ಕೈಗೆ ಬಂದಿರುವುದು. ಎಷ್ಟು ಪರಿಶುದ್ಧಳಾದ ನನ್ನಮ್ಮನ ಕೈಯಿಂದ ನನಗೆ ಸಿಕ್ಕಿರುವುದೆಂದು ನಿಮಗೆ ಗೊತ್ತೇ? ಏನು ಹೇಳುವಿರಿ? ನೋಡಿರಿ ಕುರುಸು – ನಾನು ಮೇರಿಬಾಯಿ. + +ಗಂಗಮ್ಮ : ಓಹೋ! ನೀನು ಕ್ರೈಸ್ತಳಾದ ಸಂಗತಿ ನನಗೆ ಗೊತ್ತಿರಲಿಲ್ಲ, ಮೇರಿಬಾಯಿ, ಸಂತೋಷವಾಯಿತು. ತಿಳಿಯದೆ ನೂಕಾಡಿದೆನು. ಕ್ಷಮಿಸಬೇಕು. ನಿನ್ನಂತಹ ಬಾಯಿಗಳಿಲ್ಲದಿದ್ದರೆ ಈ ಊರ ಜನರ ಬಾಯಿಗೆ ಮಣ್ಣಾಗುತ್ತಿತ್ತು. ದೇವರಿಗೆ ಹೂವೇ ಇಲ್ಲವಾಗಿತ್ತು. ಮಂಗಳೂರಿನಂತಹ ಪಟ್ಟಣದ ಜನರ ಮತ್ತು ದೇವರ ಜೀವನವು ಬಾಯಿಗಳ ಕೈಯಲ್ಲಿದೆ. ಮೇರಿಬಾಯಿ, ಎಲ್ಲಿ? ನಿನ್ನ ಬುಟ್ಟಿಯಲ್ಲಿರುವ ಎಲ್ಲಾ ವಸ್ತುಗಳನ್ನೂ ತೆಗೆದುಕೊಂಡು ನನ್ನೊಡನೆ ಬಾ. ದೇವರ ಮಂಟಪದಲ್ಲಿ ತಂದಿಡು. ದುಡ್ಡು ನಾಳೆ ಕೊಡುತ್ತೇನೆ. ಹೋಗುವಾ. (ಎಂದು ಹೊರಡುವಳು) + +ಚೌಕಾರುಮೇರಿ : ಆಗಬಹುದಮ್ಮಾ. (ಸ್ವಗತಂ) ಇದೀಗ ಹಿಂದೂಶಾಸ್ತ್ರ. ಬಡವಳಾದ ನಾನು ಹೊಲತಿ ಚೌಕಾರುವಾಗಿದ್ದರೆ ಇಂದು ಈ ಗಂಗಮ್ಮನವರು ಈ ಮಾತನ್ನು ಹೇಳುತ್ತಿದ್ದರೇ? ಮೇಲ್ಜಾತಿಯ ಹಿಂದುಗಳನ್ನೇ ದೇವರೆಂದು ನಂಬಿ, ಅವರ ಸೇವೆಯನ್ನು ಮಾಡಿಕೊಂಡಿರುವಷ್ಟು ಕಾಲ ಹೊಲೆಯರು! ಹೊಲತಿಯರು! ಧಿಕ್ಕಾರವಿರಲಿ – ಒಡಹುಟ್ಟಿದ ಹಿಂದೂ ಮಾತೆಯ ಮಕ್ಕಳನ್ನು ಈ ಪ್ರಕಾರ ದೂರ ನಿಲ್ಲಿಸುವ ಈ ಸಮಾಜ ಪದ್ಧತಿಗೆ ಧಿಕ್ಕಾರವಿರಲಿ. ಹಿಂದೂ ಮತವನ್ನು ತಿರಸ್ಕರಿಸಿ, ಕ್ರೈಸ್ತ ಅಥವಾ ಮಹಮ್ಮದೀಯ ಮತವನ್ನು ಆದರಿಸಿ, ಅಲ್ಲಿ ಗೋಮಾಂಸಗಳನ್ನು ತಿಂದು ಬಂದರೆ, ಅದೇ ಪಂಚಮರು, ಪಾವನರಾದರು! ಪರಿಶುದ್ಧರಾದರು! ಅಂಥವರನ್ನು ಹಿಂದುಗಳು ಮುಟ್ಟಬಹುದು. ಆತಂಕವಿಲ್ಲ. ಶಾಸ್ತ್ರ ವಿರೋಧವಿಲ್ಲ. + +ಹುಲಿ, ಬೆಕ್ಕು, ಹಂದಿ, ಕೋಣಗಳೂ ಸ್ವಜಾತಿಯ ಮೃಗಗಳನ್ನು ಮುಟ್ಟುತ್ತವೆ, ಒಂದಾಗಿ ಕೂಡುತ್ತವೆ. ಆದರೆ ಮಾನವ ವರ್ಗದಲ್ಲಿ ಒಂದೇ ರೀತಿಯ ರಕ್ತ, ನರ, ನಾಡಿಗಳುಳ್ಳ ಮನುಷ್ಯ ವರ್ಗದಲ್ಲಿ , ಹಿಂದೂ ಜಾತಿಯಲ್ಲಿ ಒಬ್ಬರನ್ನೊಬ್ಬರು ಮುಟ್ಟಕೂಡದಂತೆ. ಜಾತಿಗೆ ಜಾತಿ ಪಗೆ! ಅಯ್ಯೋ! ಏನನ್ಯಾಯವಿದು? ಎಂತಹ ಅನೀತಿಯಿದು? ಹಿಂದೂ ಸಮಾಜಪದ್ಧತಿಯೆ! ಇದನ್ನು ಕಂಡೇ ನಾನು ಕ್ರೈಸ್ತಜಾತಿಗೆ ಸೇರಲಿಕ್ಕೆ ಕಾರಣ. ಪಂಚಮಳಾಗಿದ್ದವರೆಗೆ ಸತ್ರಸಾಲೆಗಳಲ್ಲಿ , ದಾರಿ ಕೇರಿಗಳಲ್ಲಿ ಚೌಕಾರುವಿಗೆ ಎಲ್ಲಿಯೂ ಪ್ರವೇಶವಿಲ್ಲ. ಆದರೆ ಈ ಮೇರಿಬಾಯಿಗೆ ಎಲ್ಲಿ ಹೋಗುವುದಕ್ಕೂ ಆತಂಕವಿಲ್ಲ. + + + +ಆದುದರಿಂದಲೇ ಈ ಸಾಮಾಗ್ರಿಗಳನ್ನೆಲ್ಲಾ ದೇವಸ್ಥಾನದೊಳಗೆ ತಂದಿಡು – ಎಂದು ಗಂಗಮ್ಮನವರ ಅಪೇಕ್ಷೆ. ಆಗಲಿ, ದೇವಾಲಯಕ್ಕೆ ಹೋಗಿ ಇವುಗಳನ್ನು ಇಟ್ಟು ಬರುವೆನು. (ಎಂದು ಗಂಗಮ್ಮನೊಡನೆ ಹೋಗುವಳು.) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_354.txt b/Kenda Sampige/article_354.txt new file mode 100644 index 0000000000000000000000000000000000000000..3de5cae3ab934f01174bc89c1c6da1ce6f099ce7 --- /dev/null +++ b/Kenda Sampige/article_354.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|Sep 1, 2019|ವಾರದ ಕಥೆ,ಸಾಹಿತ್ಯ| 0 Comments + +“ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ.’ + +byಕೆಂಡಸಂಪಿಗೆ|Aug 26, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ.” + +byಎಂ.ಜಿ. ಶುಭಮಂಗಳ|Aug 25, 2019|ವಾರದ ಕಥೆ,ಸಾಹಿತ್ಯ| 0 Comments + +“ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು…” + +byಕೆಂಡಸಂಪಿಗೆ|Aug 19, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ…” + +byಡಾ. ಬಿ. ಜನಾರ್ದನ ಭಟ್|Aug 18, 2019|ವಾರದ ಕಥೆ,ಸಾಹಿತ್ಯ| 0 Comments + +“ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು.” + +byಕೆಂಡಸಂಪಿಗೆ|Aug 12, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ.” + +byಆಶಾ ಜಗದೀಶ್|Aug 11, 2019|ವಾರದ ಕಥೆ,ಸಾಹಿತ್ಯ| 0 Comments + +“ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು. ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು.” + +byಕೆಂಡಸಂಪಿಗೆ|Aug 5, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ.” + +byಡಾ. ಬಿ. ಜನಾರ್ದನ ಭಟ್|Jul 31, 2019|ವಾರದ ಕಥೆ,ಸಾಹಿತ್ಯ| 0 Comments + +“ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು…” \ No newline at end of file diff --git a/Kenda Sampige/article_355.txt b/Kenda Sampige/article_355.txt new file mode 100644 index 0000000000000000000000000000000000000000..8157fdefd1002a72b98b8cab5a90dbd2a2ae02fe --- /dev/null +++ b/Kenda Sampige/article_355.txt @@ -0,0 +1,541 @@ + + +ಹಲವಷ್ಟು ಬಾರಿ ಮಹಿಳಾ ಚಾಲಕರ ಜೊತೆ ಕಾರಿನಲ್ಲಿ ತಿರುಗಾಡಿದ್ದರಿಂದ ಕಾಫುಕು ಕಂಡುಕೊಂಡಿದ್ದೇನೆಂದರೆ ಹೆಂಗಸರು ಒಂದೋ ಅತಿ ವೇಗವಾಗಿ ಗಾಡಿ ಚಲಾಯಿಸುತ್ತಾರೆ ಇಲ್ಲ ತುಂಬಾ ನಿಧಾನವಾಗಿ ಚಲಾಯಿಸುತ್ತಾರೆ. ಅದೃಷ್ಟವಷಾತ್ ಬಹುತೇಕ ಹೆಂಗಸರು ಎರಡನೇ ಪ೦ಗಡಕ್ಕೆ ಸೇರುತ್ತರಾದ್ದರಿಂದ ನಾವಷ್ಟು ಚಿ೦ತಿಸಬೇಕಾದುದ್ದಿಲ್ಲ. ನಿಜ ಹೇಳಬೇಕು ಅಂದರೆ ಮಹಿಳಾ ಚಾಲಕರು ಪುರುಷರಿಗಿಂತ ಹೆಚ್ಚು ಜಾಗರೂಕರಾಗಿರುತ್ತಾರೆ, ಆದರೂ ಅದು ಹೇಗೋ ಹೆಂಗಸರು ಗಾಡಿ ಚಲಾಯಿಸುವದು ರಸ್ತೆಯಲ್ಲಿರುವ ಇತರರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬಹುತೇಕ ಜಗಳಗಂಟಿ ಹೆಂಗಸರು ತಮ್ಮನ್ನು ತಾವು ಶ್ರೇಷ್ಠ ಚಾಲಕರು ಅಂದುಕೊಂಡಿರುತ್ತಾರೆ. ಕ್ಷಣಾರ್ಧದಲ್ಲಿ ಅವರು ರಸ್ತೆಯಲ್ಲಿನ ಲೇನುಗಳನ್ನು ಬದಲಿಸುವುದು, ಇದ್ದಕಿದ್ದ ಹಾಗೆ ಬ್ರೇಕು ಹಾಕಿ ಗಾಡಿ ನಿಲ್ಲಿಸುವದು ಇತ್ಯಾದಿಗಳನ್ನು ಮಾಡುವಾಗ ಅವರು ಗಾಡಿಯ ಹಿಂದೆ ಬೈಯುತ್ತಿರುವ ಯಾವ ದನಿಗೂ ಕಿವಿಗೊಡುವದಿಲ್ಲ. ಹಾಗಂತ ಖಂಡಿತವಾಗಿಯೂ ಎಲ್ಲ ಮಹಿಳೆಯರೂ ಒಂದಲ್ಲ ಒಂದು ಗು೦ಪಿಗೆ ಸೇರಿದವರು ಎಂದಲ್ಲ. ಅತಿ ವೇಗವೂ ಅಲ್ಲದ ಅತೀ ನಿಧಾನವೂ ಅಲ್ಲದ ಸಹಜವಾಗಿ ಗಾಡಿ ಓಡಿಸುವ ಮಹಿಳಾ ಚಾಲಕರೂ ಇದ್ದಾರೆ. + +ಹೆಂಗಸರಲ್ಲಿ ಕೆಲವರು ಅಪರೂಪಕ್ಕೆ ಕಾಣಸಿಗುವ ಅತ್ಯಂತ ನುರಿತ ಚಾಲಕರೂ ಇದ್ದಾರೆ. ಎಷ್ಟೇ ನುರಿತ ಚಾಲಕರಾಗಿದ್ದರೂ ಹೆಂಗಸರು ಗಾಡಿ ಓಡಿಸುವಾಗ ಸಾಧಾರಣವಾಗಿ ಸ್ವಲ್ಪವಾದರೂ ಉದ್ವೇಗಕ್ಕೆ ಒಳಗಾಗುವದನ್ನು ಕಾಫುಕು ಗಮನಿಸಿದ್ದ. ಹೀಗಾಗುವದಕ್ಕೆ ಇಂತಹುದೇ ಎನ್ನುವ ಯಾವುದೇ ಕಾರಣವೂ ಕಾಫುಕುನ ಬಳಿ ಇಲ್ಲವಾಗಿದ್ದರೂ, ಅವನು ಕಾರಿನಲ್ಲಿ ಹಿಂದಿನ ಸೀಟಿನಲ್ಲಿ ಕುಳಿತಾಗಲೆಲ್ಲ, ಕಾರಿನೊಳಗೆ ತುಂಬಿರುತ್ತಿದ್ದ ಸಣ್ಣನೆಯ ಉದ್ವೇಗ ಅವನ ಗಮನಕ್ಕೆ ಬಂದು ಬೇಡ ಬೇಡವೆಂದುಕೊಂಡರೂ ಕಾಫುಕು ಸ್ವಲ್ಪಮಟ್ಟಿಗಿನ ಒತ್ತಡಕ್ಕೆ ಒಳಗಾಗುತ್ತಿದ್ದ. ಅವನ ಗಂಟಲು ಒಣಗುತಿತ್ತು ಅಥವಾ ಅವನು ಕಾರಿನಲ್ಲಿನ ನಿಶ್ಶಬ್ದದಲ್ಲಿ ಹರಡಿರುವ ಸಣ್ಣನೆಯ ಒತ್ತಡವನ್ನು ಮುರಿಯಲು ಮೂರ್ಖನಂತೆ ಅಸಂಬದ್ಧವಾದ ಯಾವುದೋ ವಿಚಾರವನ್ನು ಮಾತನಾಡಲು ಪ್ರಾರಂಭಿಸುತ್ತಿದ್ದ.ಖಂಡಿತವಾಗಿಯೂ ಪುರುಷರಲ್ಲೂ ಸಹ ಒಳ್ಳೆಯ ಮತ್ತು ಕೆಟ್ಟ ಚಾಲಕರಿದ್ದರು. ಆದರೂ ಅವರ ವಾಹನ ಚಾಲನೆ ಕಾರಿನೊಳಗೆ ಯಾವುದೇ ಕಂಪನವನ್ನು೦ಟು ಮಾಡುತ್ತಿರಲಿಲ್ಲ. ಹಾಗಂತ ಅವರೇನು ಅತ್ಯಂತ ಆರಾಮವಾಗಿ ಗಾಡಿ ಚಲಾಯಿಸುತ್ತಿದ್ದರು ಎಂದೇನಲ್ಲ. ನಿಜ ಹೇಳಬೇಕೆಂದರೆ ಅವರೂ ಸಹ ಸಣ್ಣ ಮಟ್ಟಿನ ಒತ್ತಡಕ್ಕೆ ಒಳಗಾಗಿದ್ದರೂ ಅತ್ಯಂತ ಸಹಜವಾಗಿ ಪುರುಷರು ಯಾವುದೇ ಒತ್ತಡವಿಲ್ಲದವರಂತೆ ಗಾಡಿ ಚಲಾಯಿಸುತ್ತಿದ್ದುದು ಹೌದು. ಅವರು ರಸ್ತೆಯ ಮೇಲೆ ದೃಷ್ಟಿಯನ್ನು ಕೇಂದ್ರೀಕರಿಸುತ್ತ ಸಣ್ಣಗೆ ಹರಟೆಯನ್ನೂ ಹೊಡೆಯುತ್ತಿದ್ದರು. ನೋಡಿದರೆ ವಾಹನ ಚಲಾಯಿಸುವದೇ ಬೇರೆ ಇವರು ಮಾಡುತ್ತಿರುವದೇ ಬೇರೆ ಅನ್ನುವಂತೆ ಭಾಸವಾಗುತ್ತಿತ್ತು. + +ಪುರುಷ ಮತ್ತು ಮಹಿಳಾ ಚಾಲಕರ ನಡುವಿನ ಈ ವ್ಯತ್ಯಾಸಕ್ಕೆ ಕಾರಣವೇನೆಂಬುದು ಕಾಫುಕುಗೆ ಖಂಡಿತವಾಗಿಯೂ ಗೊತ್ತಿರಲಿಲ್ಲ. ದೈನಂದಿನ ಜೀವನದಲ್ಲಿ ಕಾಫುಕು ಯಾವತ್ತಿಗೂ ಹೆಣ್ಣು ಗಂಡು ಎಂದು ಭೇದಭಾವ ಮಾಡಿದವನಲ್ಲ ಅಥವಾ ಗಂಡು ಹೆಣ್ಣುಗಳ ಸಾಮರ್ಥ್ಯದಲ್ಲಿ ವ್ಯತಾಸವಿರಬಹುದೆಂದು ಅವನಿಗೆ ಅನ್ನಿಸಿರಲಿಲ್ಲ. ಕಾಫುಕುನ ವೃತ್ತಿಯಲ್ಲಿ ಗಂಡಸರಿದ್ದಷ್ಟೇ ಸಂಖ್ಯೆಯಲ್ಲಿ ಹೆಂಗಸರಿದ್ದರು. ಹಲವಷ್ಟು ಸಲ ಅವನಿಗೆ ಹೆಂಗಸರ ಜೊತೆಯಲ್ಲಿಯೇ ಸುಲಭವಾಗಿ ಕೆಲಸ ಮಾಡಬಹುದು ಅನ್ನಿಸುತಿತ್ತು. ಹೆಂಗಸರು ಸಣ್ಣಸಣ್ಣ ವಿವರಗಳಿಗೂ ಗಮನಕೊಡುತ್ತಿದ್ದರು ಮತ್ತು ಸಮಾಧಾನದಿಂದ ಹೇಳಿದ್ದನ್ನು ಆಲಿಸುತ್ತಿದ್ದರು. ಕಾಫುಕುಗೆ ಹೆಂಗಸರೊಟ್ಟಿಗೆ ಸಮಸ್ಯೆ ಶುರುವಾಗುತ್ತಿದ್ದುದು ಕಾರಿನಲ್ಲಿ ಅವನು ಪಕ್ಕದಲ್ಲೋ, ಹಿಂದಿನ ಸೀಟಿನಲ್ಲೋ ಕುಳಿತಿದ್ದು ಸ್ಟೈರಿಂಗ್ ಮುಂದೆ ಹೆಂಗಸೊಬ್ಬಳು ಕುಳಿತಾಗ ಮಾತ್ರ. ಈ ಸಮಸ್ಯೆಯನ್ನು ಕಾಫುಕು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ. ಹಾಗೆಂದು ಈ ವಿಷಯವನ್ನು ಅವನು ಯಾರೊಟ್ಟಿಗೂ ಯಾವತ್ತೂ ಚರ್ಚಿಸಿದವನಲ್ಲ. ಅದು ಚರ್ಚೆಗೊಳಪಡುವಂತಹ ವಿಷಯವೇ ಅಲ್ಲವೇನೋ ಎನ್ನುವದು ಅವನ ಸಂದೇಹ. ಆದ್ದರಿಂದಲೇ ಗ್ಯಾರೇಜಿನ ಒಬಾ, ಹುಡುಗಿಯೊಬ್ಬಳನ್ನು ಡ್ರೈವರ್ ಆಗಿ ಸೂಚಿಸಿದಾಗ ಕಾಫುಕನಿಗೆ ಅಂತಹ ಉತ್ಸಾಹವೇನೂ ಆಗಲಿಲ್ಲ. + +“ನಿನಗೆ ಹೇಗೆ ಅನ್ನಿಸುತ್ತಿದೆ ಎಂದು ನನಗೆ ಗೊತ್ತು.” ಒಬಾ ನಗುತ್ತ ನುಡಿದ “ಅವಳು ಅದ್ಭುತ ಡ್ರೈವರ್. ನಾನು ಆಶ್ವಾಸನೆ ಕೊಡುತ್ತೇನೆ. ಒಮ್ಮೆ ಅವಳನ್ನು ಭೇಟಿ ಮಾಡಿ ನೋಡು.” + +“ನೀನು ಅಷ್ಟು ಹೇಳ್ತಿದ್ದೀಯ ಅಂದ ಮೇಲೆ ಸರಿ.” ಕಾಫುಕು ನುಡಿದ. ಅವನಿಗೆ ಒಬ್ಬ ಡ್ರೈವರಿನ ಅವಶ್ಯಕತೆಯಿತ್ತು. + +ಕಳೆದ ಸುಮಾರು ಹದಿನೈದು ವರುಷಗಳಿಂದ ಕಾಫುಕುಗೆ ಪರಿಚಯವಿದ್ದ ಈ ಗ್ಯಾರೇಜಿನ ಓಬಾ ಆಟೋಮೊಬೈಲ್ ವಿಷಯದಲ್ಲಿ ಏನು ಹೇಳಿದರೂ ತೆಗೆದು ಹಾಕುವ ಹಾಗಿಲ್ಲ. ಅಂತಹ ಪರಿಣಿತಿ ಓಬಾನದು. + +“ಇನ್ನೊಂದು ಸಲ ನಿನ್ನ ಕಾರಿನ ಚಕ್ರಗಳ ಜೋಡಣೆ ಸರಿಯಾಗಿದೆಯೇ ಎಂದು ಪರೀಕ್ಷಿಸಬೇಕು. ಅದಾದ ಮೇಲೆ ಸಣ್ಣ ಪುಟ್ಟ ಕೆಲಸಗಳು. ನಾಡಿದ್ದು ಮಧ್ಯಾಹ್ನ ಎರಡು ಎರಡೂವರೆ ಹಾಗೆ ಬಂದು ಕಾರನ್ನು ಒಯ್ಯಬಹುದು. ಒಂದು ಕೆಲಸ ಮಾಡೋಣ, ಆ ಹುಡುಗಿಯನ್ನೂ ಅದೇ ಸಮಯಕ್ಕೆ ಬರಲು ಹೇಳುತ್ತೇನೆ. ಒಂದು ಸಲ ಮಾತನಾಡಿಸಿ ನೋಡು. ಬಹುಶ: ಅವಳ ಜೊತೆಗೆ ಕಾರಿನಲ್ಲಿ ಒಂದು ರೌಂಡ್ ಹೋಗಿ ಬರಬಹುದೇನೋ. ನಿನಗೆ ಅವಳ ಚಾಲನೆ ಹಿಡಿಸಿದರೆ ಅವಳನ್ನು ಕೆಲಸಕ್ಕೆ ತೆಗೆದುಕೊಳ್ಳಬಹುದು. ಇಲ್ಲವಾದರೆ ಇಲ್ಲ. ನನ್ನದೇನೂ ಅಭ್ಯ೦ತರವಿಲ್ಲ.” + +“ಎಷ್ಟು ವರ್ಷ ಅವಳಿಗೆ?” + +“ಅದನ್ನು ಕೇಳಲಿಕ್ಕೆ ಅವಕಾಶವೇ ಸಿಗಲಿಲ್ಲ. ಬಹುಶ: ಇಪ್ಪತ್ತೈದರ ಆಸುಪಾಸು ಇರಬಹುದೇನೋ. “ಓಬಾ ಒಂದು ಕ್ಷಣ ಯೋಚಿಸಿದ “ಅವಳು ನುರಿತ ಡ್ರೈವರ್, ಆದರೆ … ” + +“ಆದರೆ?” + +“ಆದರೆ ಅವಳು ಎಲ್ಲರೊಟ್ಟಿಗೂ ಹೊಂದಿಕೊಳ್ಳುವ ಸ್ವಭಾವದವಳಲ್ಲ.” + +“ಹಾಗಂದರೆ ಯಾವ ಥರ?” + +“ಮಾತು ಆಡುವದೇ ಕಡಿಮೆ ಆಡಿದಾಗಲೆಲ್ಲ ಒರಟು ಮಾತು. ಅನ್ನಿಸಿದ್ದನ್ನ ಮುಲಾಜಿಲ್ಲದೆ ತಕ್ಷಣ ಹೇಳಿಬಿಡ್ತಾಳೆ. ಸದಾ ಕಾಲ ಚಿಮಣಿಯ ಹಾಗೆ ಸಿಗರೇಟಿನ ಹೊಗೆ ಬಿಡುತ್ತಾ ಇರುತ್ತಾಳೆ. “ಓಬಾ ಹೇಳಿದ. “ನಾಡಿದ್ದು ನಿನಗೆ ಸಿಗುತ್ತಾಳಲ್ಲ. ನೀನೇ ನೋಡುವಿಯಂತೆ. ನಿಜ ಹೇಳಬೇಕು ಎಂದರೆ ತುಂಬಾ ಸುಂದರವಾಗಿದ್ದಾಳೆ ಎಂದಲ್ಲ ಆದರೂ ಒಂಥರ ಸರಳವಾಗಿ ಸೀದಾ ಸಾದಾ.” + +“ಅದೇನು ಚಿ೦ತಿಸುವ ವಿಷಯವಲ್ಲ. ಹಾಗೆ ನೋಡಿದರೆ ತುಂಬಾ ಚೆನ್ನಾಗಿರುವ ಹುಡುಗಿಯೊಟ್ಟಿಗೆ ಓಡಾಡಿದರೆ ಏನಾದರೂ ಬೇಡವಾದ ವದಂತಿಗೆ ಕಾರಣವಾಗಬಹುದು.” + +“ಆಯ್ತಲ್ಲ, ನಿನಗೆ ಸರಿಯಾದ ಜೋಡಿಯೇ ಅವಳು.” + +“ಅದೆಲ್ಲ ಸರಿ ಅವಳು ಒಳ್ಳೆ ಡ್ರೈವರ್ ಹೌದು ಅಲ್ಲವೇ ?” + +“ಖಂಡಿತ. ನಾನು ಇದುವರೆಗೆ ನೋಡಿದ ಕೆಲವೇ ಪರಿಣಿತ ಡ್ರೈವರ್ ಗಳಲ್ಲಿ ಇವಳೂ ಒಬ್ಬಳು.” + +“ಈಗ ಅವಳು ಎಲ್ಲಿ ಕೆಲಸ ಮಾಡುತ್ತಿದ್ದಾಳೆ?” + +“ನನಗೂ ಸರಿಯಾಗಿ ಗೊತ್ತಿಲ್ಲ. ಬಹುಶ : ಯಾವೂದೋ ಸೂಪರ್ ಮಾರ್ಕೆಟ್ ನಲ್ಲಿ ಕ್ಲರ್ಕ್ ಆಗಿಯೋ, ಕೊರಿಯರ್ ಕಂಪನಿಯಲ್ಲಿ ಡ್ರೈವರ್ ಆಗಿಯೋ ಕೆಲಸ ಮಾಡುತ್ತಿದ್ದಾಳೆ ಅನ್ನಿಸುತ್ತದೆ. ಎಲ್ಲಿಯೂ ಖಾಯ೦ ಅಲ್ಲ. ಯಾವಾಗ ಬೇಕಿದ್ದರೂ ಬಿಟ್ಟು ಬರುವಂತಹವು. ನನ್ನ ಪರಿಚಯದವರೊಬ್ಬರ ಮುಖಾ೦ತರ ಇಲ್ಲಿಗೆ ಕೆಲಸ ಹುಡುಕಿಕೊಂಡು ಬಂದಿದ್ದಳು. ಆದರೆ ಸದ್ಯಕ್ಕೆ ನಾನು ಯಾವುದೇ ಖಾಯಂ ನೌಕರರನ್ನು ತೆಗೆದುಕೊಳ್ಳುವ ಪರಿಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನನ್ನಲ್ಲಿ ಜಾಸ್ತಿ ಕೆಲಸವಿದ್ದಾಗಲೆಲ್ಲ ಅವಳಿಗೆ ಹೇಳಿ ಕಳುಹಿಸುತ್ತಿದ್ದೆ. ಒಳ್ಳೆ ಕೆಲಸಗಾರ್ತಿ ಅವಳು. ಜೊತೆಯಲ್ಲಿ ಕುಡಿತದಂತಹ ಯಾವುದೇ ಚಟಗಳೂ ಇಲ್ಲ.” + +ಕುಡಿಯುವ ವಿಷಯ ಕೇಳಿದೊಡನೆ ಅಯಾಚಿತವಾಗಿ ಕಾಫುಕುನ ಕೈಬೆರಳುಗಳು ತುಟಿಯನ್ನು ಸವರಿದವು. + +“ಸರಿ ನಾಡಿದ್ದು ಎರಡು ಘಂಟೆಗೆ ಹಾಗಾದರೆ.” ಕಾಫುಕು ಹೇಳಿದ. ಒರಟು, ಕಡಿಮೆ ಮಾತಿನವಳು, ಅಷ್ಟೇನೂ ಸುಂದರಿಯಲ್ಲ- ಕಾಫುಕುನ ಕುತೂಹಲ ಕೆಣಕಲು ಇಷ್ಟು ಸಾಕಿತ್ತು . + +ಎರಡು ದಿನಗಳ ನಂತರ ಮಧ್ಯಾನ್ಹ ಎರಡು ಘ೦ಟೆಗೆಲ್ಲ ಕಾಫುಕುನ ಹಳದಿ ಕಾರು ಗ್ಯಾರೇಜಿನಲ್ಲಿ ರಿಪೇರಿಗೊಂಡು ಓಡಿಸಲು ಸಿದ್ಧವಾಗಿ ನಿಂತಿತ್ತು. ನೆಗ್ಗಿದ್ದ ಕಾರಿನ ಮುಂಭಾಗವನ್ನು ಕುಟ್ಟಿ ಸರಿ ಮಾಡಲಾಗಿತ್ತು. ಬಣ್ಣ ಮಾಸಿದೆಡೆಯಲ್ಲಿ ಹೊಸತಾಗಿ ಪೈ೦ಟ್ ಮಾಡಲಾಗಿತ್ತು. ಇಂಜಿನ್ ಗೆ ಆಯಿಲ್ ಬಿಟ್ಟು, ಬ್ರೇಕಿಗೆ ಹೊಸ ರಬ್ಬರ್ ಹೊದಿಕೆ ಹಾಕಿ, ಕಾರಿನ ಚಕ್ರಗಳನ್ನು ಪಾಲಿಷ್ ಮಾಡಿ, ಮುಂಭಾಗದಲ್ಲಿ ಎರಡು ಹೊಸ ವೈಪರ್ ಹಾಕಲಾಗಿತ್ತು. ಓಬಾನ ಕೆಲಸವೆಂದರೆ ಹಾಗೆ ಮರು ಮಾತಿಲ್ಲ. ಹನ್ನೆರಡು ವರುಷಗಳ ಹಿಂದೆ ಖರೀದಿ ಮಾಡಿದ್ದ ಈ ಕಾರಿನಲ್ಲಿ ಕಾಫುಕ ಸಾವಿರಾರು ಮೈಲಿ ಅಡ್ಡಾಡಿದ್ದ. ಕಾರಿನ ಮೇಲ್ಛಾವಣಿಗೆ ಹಾಕಿದ್ದ ಕ್ಯಾನ್ವಾಸ್ ನೋಡಿದರೆ ಕಾರಿಗಾದ ವಯಸ್ಸು ತಿಳಿಯುತ್ತಿತ್ತು. ಮಳೆಗಾಲದಲ್ಲಿ ಕ್ಯಾನ್ವಾಸ್ ನ ತೂತುಗಳನ್ನು ದಾಟಿ ಮಳೆ ನೀರು ಒಳಗೆ ಬಂದರೆ ಎಂದು ಕಾಫುಕ ಆಗಾಗ ಆತಂಕಗೊಳ್ಳುತ್ತಿದ್ದ. + +ಆದರೆ ಈ ಹಳೆಯ ಕಾರನ್ನು ಮಾರಿ ಹೊಸತನ್ನು ಕೊಳ್ಳುವ ಯಾವ ಯೋಚನೆಯು ಅವನಿಗಿರಲಿಲ್ಲ. ಹೇಳಬೇಕೆಂದರೆ ಇಷ್ಟು ವರ್ಷಗಳಿಂದ ಓಡಿಸುತ್ತಿರುವ ಕಾರಿನ ಮೇಲೆ ಕಾಫುಕುಗೆ ಸಣ್ಣಗಿನ ವ್ಯಾಮೋಹ. ಕಾರಿನ ಮೇಲ್ಚಾವಣಿಯ ಕ್ಯಾನ್ವಾಸ್ ಅನ್ನು ತೆಗೆದು, ಸುಂಯ್ಯನೆ ಒಳ ಬರುವ ಗಾಳಿಯನ್ನು ಆಸ್ವಾದಿಸುತ್ತ ಕಾರನ್ನು ಓಡಿಸುವದೆಂದರೆ ಅವನಿಗೆ ಅತ್ಯಂತ ಪ್ರಿಯವಾದ ಹವ್ಯಾಸ. ಚಳಿಗಾಲದಲ್ಲಿ ಕಾರನ್ನು ಓಡಿಸುವಾಗ ದಪ್ಪನೆಯ ಕೋಟನ್ನೂ, ಕುತ್ತಿಗೆ ಮುಚ್ಚುವಂತೆ ಸ್ಕಾರ್ಫ್ ಧರಿಸುತ್ತಿದರೆ, ಬೇಸಿಗೆಯಲ್ಲಿ ಒಂದು ಕಪ್ಪು ಕನ್ನಡಕವನ್ನೂ, ತಲೆಯ ಮೇಲೊ೦ದು ಟೊಪ್ಪಿಯನ್ನೂ ಧರಿಸುತ್ತಿದ್ದ. ಕಾರಿನ ಗೇರನ್ನು ಬದಲಿಸುತ್ತಾ, ಗೇರು ಒಂದರಿಂದ ಇನ್ನೊಂದಕ್ಕೆ ಜಿಗಿಯುವಾಗ ಸಣ್ಣನೆಯ ಆನಂದವನ್ನು ಅನುಭವಿಸುತ್ತ, ಆಗಾಗ ತಲೆಯೆತ್ತಿ ಆಕಾಶದಲ್ಲಿ ಚಲಿಸುತ್ತಿದ್ದ ಬಿಳಿ ಮೋಡಗಳನ್ನು ದಿಟ್ಟಿಸುತ್ತಲೋ, ಸಿಗ್ನಲ್ ಬಳಿ ಕಾರು ನಿಂತಾಗ ಪಕ್ಕದ ವಿದ್ಯುತ್ ತಂತಿಗಳ ಮೇಲೆ ಕುಳಿತ ಯಾವುದೋ ಹಕ್ಕಿಯನ್ನು ಗಮನಿಸುತ್ತಲೋ ನಗರದ ಬೀದಿ ಬೀದಿಗಳಲ್ಲಿ ಕಾಫುಕ ಹಳದಿ ಕಾರನ್ನು ಓಡಿಸುತ್ತಿದ್ದ. ಮತ್ತೆ ಮತ್ತೆ ಪುನರಾವರ್ತನೆಗೊಳ್ಳುತ್ತಿದ್ದ ಈ ಕ್ಷಣಗಳು ಅವನ ಜೀವನದ ಭಾಗವೇ ಆಗಿದ್ದವು. + +ಕಾಫುಕ ಈ ಕಾರನ್ನು ಖರೀದಿಸಿದ್ದಾಗ ಅವನ ಹೆಂಡತಿ ಇನ್ನು ಬದುಕಿದ್ದಳು. ಹಳದಿ ಬಣ್ಣವನ್ನು ಆಯ್ಕೆ ಮಾಡಿದ್ದೂ ಅವಳೇ. ಕಾರು ಕೊಂಡ ಮೊದಲಿಗೆಲ್ಲ ಅವರು ಆಗಾಗ ದೂರ ಪ್ರವಾಸಕ್ಕೆ ಹೋಗುತ್ತಿದ್ದುಂಟು. ಅವನ ಹೆಂಡತಿಯ ಬಳಿ ಲೈಸೆನ್ಸ್ ಇಲ್ಲದ ಕಾರಣ ಯಾವಾಗಲೂ ಕಾಫುಕನೇ ಕಾರನ್ನು ಚಲಾಯಿಸುತ್ತಿದ್ದ. ಆದರೆ ಕಳೆದ ಹತ್ತು ವರುಷಗಳಲ್ಲಿ ಕಾಫುಕ ಒಂಟಿಯಾಗಿಯೇ ಗಾಡಿ ಓಡಿಸಿದ್ದ. ಅವನ ಹೆಂಡತಿಯ ಮರಣದ ನಂತರ ಹಲವಷ್ಟು ಹೆಂಗಸರೊಟ್ಟಿಗೆ ಓಡಾಡಿದ್ದರೂ ಅವರು ಯಾರೂ ಕಾರಿನಲ್ಲಿ ಕಾಫುಕನ ಪಕ್ಕ ಕುಳಿತಿರಲಿಲ್ಲ. ಅದು ಹೇಗೋ ಕಾಫುಕನ ಹೆಂಡತಿಯನ್ನು ಬಿಟ್ಟರೆ ಬೇರೆ ಹೆಂಗಸನ್ನು ಕಾರಿನಲ್ಲಿ ಪಕ್ಕ ಕುಳ್ಳರಿಸಿಕೊಳ್ಳುವ ಪ್ರಸಂಗವೇ ಬಂದಿರಲಿಲ್ಲ. ಅಲ್ಲದೇ ಇಷ್ಟು ವರ್ಷಗಳಲ್ಲಿ ಕೆಲಸದ ನಿಮಿತ್ತ ಬಿಟ್ಟರೆ ಕಾಫುಕ ಕಾರಿನಲ್ಲಿ ಯಾವತ್ತೂ ನಗರವನ್ನು ದಾಟಿ ಹೋಗಿರಲಿಲ್ಲ. + +“ಕೆಲವೊಂದಿಷ್ಟು ಸಣ್ಣ ಪುಟ್ಟ ಸವಕಳಿ ಬಂದಿರುವದು ಬಿಟ್ಟರೆ ಕಾರು ಚೆನ್ನಾಗಿಯೇ ಇದೆ.” ಓಬಾ ಕಾರಿನ ಮುಂಭಾಗವನ್ನು ನಾಯಿಯ ಕುತ್ತಿಗೆ ಸವರುವಂತೆ ಕೈಯಿಂದ ಸವರುತ್ತ ನುಡಿದ . “ಸ್ವೀಡನ್ನಿನಲ್ಲಿ ತಯಾರಾದ ಈ ಮಾಡೆಲ್ ಕಾರುಗಳೇ ಹಾಗೆ, ಬಾಳಿಕೆ ಜಾಸ್ತಿ. ಎಲೆಕ್ಟ್ರಿಕ್ ಬೋರ್ಡ್ ಕಡೆಗೆ ಸ್ವಲ್ಪ ಗಮನ ಇರಲಿ, ಅಷ್ಟು ಬಿಟ್ಟರೆ ಮಿಕ್ಕವೆಲ್ಲ ಏನು ತೊಂದರೆ ಇಲ್ಲ.” + +ಕಾಫುಕು ಓಬ ಕೊಟ್ಟ ಬಿಲ್ ಪರಿಶೀಲಿಸುತ್ತಿರುವಾಗ ಸುಮಾರು ಐದೂವರೆ ಅಡಿಯೆತ್ತರದ, ಭುಜದ ಹುಡುಗಿಯೊಬ್ಬಳು ಹುಡುಗಿಯೊಬ್ಬಳು ಒಳಗೆ ಬಂದಳು. + +ಅವಳ ಕುತ್ತಿಗೆಯ ಬಳಿ ಮೊಟ್ಟೆಯಾಕಾರದ ಹುಟ್ಟು ಕಲೆಯೊಂದಿತ್ತು. ಅವಳಿಗೆ ಅದರ ಬಗ್ಗೆ ಯಾವುದೇ ಹಿಂಜರಿಕೆಯಿಲ್ಲದಿದ್ದರೂ ಅವಳ ಕಡುಗಪ್ಪು ಕೂದಲು ಕಲೆಯನ್ನು ಮುಚ್ಚಿಡುವಂತೆ ಆವರಿಸಿತ್ತು. ಓಬ ಹೇಳಿದಂತೆ, ಹೇಗೆ ನೋಡಿದರೂ ಆಕರ್ಷಕ ಅನ್ನಿಸದ, ನೋಡುಗರಲ್ಲಿ ಸಣ್ಣನೆಯ ಕ್ಷೋಭೆಯನ್ನು ಹುಟ್ಟುಹಾಕುವಂತಿದ್ದ ಅವಳ ಮುಖದಲ್ಲಿ ಯೌವನದ ಕುರುಹುಗಳಾಗಿ ಸಣ್ಣನೆಯ ಮೊಡವೆಗಳು ತುಂಬಿಕೊಂಡಿದ್ದವು. ಅಗಲವಾದ ಎದ್ದು ಕಾಣುವ ಅವಳ ಕಣ್ಣುಗಳು ಹೊರ ಜಗತ್ತನ್ನು ಅನುಮಾನದಿಂದ ನೋಡುತ್ತಾ ಅತ್ತಿತ್ತ ಸರಿದಾಡುತ್ತಿದ್ದವು. ಅವಳ ಅಗಲವಾದ ಕಿವಿಗಳು ಯಾವುದೋ ಸ್ಯಾಟಲೈಟಿನ ರೆಕ್ಕೆಗಳಂತೆ ಕಾಣುತ್ತಿದ್ದವು. ಅವಳು ಬೇಸಿಗೆಗೆ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ದಪ್ಪನಾದ ಗಂಡಸರ ಜಾಕೆಟ್, ಕಡು ಬಣ್ಣದ ಪ್ಯಾ೦ಟ್, ಕಡುಗಪ್ಪು ಬಣ್ಣದ ಚಪ್ಪಲಿ ಧರಿಸಿದ್ದಳು. ಅವಳ ಜಾಕೆಟಿನ ಒಳಗಿನ ಉದ್ದನೆಯ ಕೈತೋಳಿನ ಬಿಳಿ ಶರ್ಟಿನ ಒಳಗೆ ತುಸು ಜಾಸ್ತಿಯೇ ಅನ್ನಿಸುವಷ್ಟು ಉಬ್ಬಿರುವ ಎದೆ ಕಾಫುಕುಗೆ ಕಾಣುತಿತ್ತು. + +ಒಬಾ ಕಾಫುಕುಗೆ ಅವಳನ್ನು ಪರಿಚಯಿಸಿದ. ಅವಳ ಹೆಸರು ವಟಾರಿ. ಮಿಸಾಕ ವಟಾರಿ. + +“‘ಟ’ ದೊಡ್ಡ ‘ಠ’ ಅಲ್ಲ.” ಅವಳು ನುಡಿದಳು. “ನಿನಗೆ ನನ್ನ ಬಯೋ ಡಾಟಾ ಬೇಕು ಅಂದರೆ ಕೊಡಬಲ್ಲೆ”. ಕಾಫುಕ ಅವಳ ಸ್ವರದಲ್ಲಿನ ಸಣ್ಣನೆಯ ಪ್ರತಿಭಟನೆಯ ಚಿಹ್ನೆಯನ್ನು ಗಮನಿಸಿದ. + +“ಅವೆಲ್ಲ ಬೇಕಿಲ್ಲ.” ಕಾಫುಕ ತಲೆಯಾಡಿಸಿದ. “ನಿನಗೆ ಮಾನ್ಯುಲ್ ಗೇರ್ ಗಾಡಿಯನ್ನು ಓಡಿಸಲು ಬರುತ್ತದೆ ಅಲ್ಲವೇ?” + +“ಬರುತ್ತೆ.” ಅವಳು ತಣ್ಣಗೆ ನುಡಿದಳು. + +“ಕಾರು ಸ್ವಲ್ಪ ಹಳೆಯದು ಜಿಪಿಎಸ್ ಮುಂತಾದವು ಇಲ್ಲ.” + +“ಅದು ಬೇಕಿಲ್ಲ. ನಾನು ಕೊರಿಯರ್ ಕಂಪನಿಯಲ್ಲಿ ಕೆಲಸ ಮಾಡಿದ್ದರಿಂದ ನಗರದ ಎಲ್ಲ ರಸ್ತೆಗಳ ವಿವರಗಳು ನನ್ನ ತಲೆಯಲ್ಲಿದೆ.” + +“ಸರಿ ಹಾಗಾದರೆ ಒಂದು ರೌಂಡ್ ಹೋಗಿ ಬರೋಣ. ಹೇಗಿದ್ದರೂ ತಂಪು ಹವೆಯಿದೆ. ಕಾರಿನ ಮೇಲ್ಚಾವಣಿಯನ್ನು ಕೆಳಗಿಳಿಸೋಣ.” + +“ಯಾವ ಕಡೆಗೆ?” + +ಕಾಫುಕ ಒಂದು ಕ್ಷಣ ವಿಚಾರ ಮಾಡಿದ. ಅವರು ಶಿನೋಹಶಿಗಿಂತ ತುಂಬಾ ದೂರದಲ್ಲೇನೂ ಇರಲಿಲ್ಲ. + +“ಟೆಂಜೇಂಜಿ ಕ್ರಾಸಿನ ಬಳಿ ಬಲಗಡೆ ತಿರುಗಿ ಮೇಜಿಯ ಸೂಪರ್ ಮಾರ್ಕೆಟಿನ ನೆಲಮಾಳಿಗೆ ಪಾರ್ಕಿಂಗ್ ಕಡೆ ಹೋಗೋಣ, ಅಲ್ಲಿ ನಾನು ಒಂದಷ್ಟು ಸಾಮಾನುಗಳನ್ನು ಖರೀದಿ ಮಾಡಲಿಕ್ಕಿದೆ. ಅದಾದ ಮೇಲೆ ಅರುಸುಗಾವಾ ಪಾರ್ಕಿನ್ನು ಬಳಸಿ ಫ್ರೆಂಚ್ ರಾಯಬಾರ ಕಛೇರಿಯ ಹಿಂದೆ ಸಾಗಿ ಗೈಯೆನ್ ನಿಶಿ ಡೋರಿ ತಲುಪಿ ಅಲ್ಲಿಂದ ವಾಪಾಸ್ ಇಲ್ಲಿಗೆ ಬರೋಣ.” + +“ಸರಿ” ಅವಳು ತಲೆಯಾಡಿಸಿದಳು. ಅವಳು ಹೋಗಬೇಕಾದ ರೂಟಿನ ಬಗ್ಗೆ ಮತ್ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ಓಬಾನ ಬಳಿ ಕಾರಿನ ಕೀ ತೆಗೆದುಕೊಂಡು ಚಕಚಕನೆ ಡ್ರೈವರ್ ಸೀಟ್ ಮತ್ತು ಕನ್ನಡಿಗಳನ್ನು ತನಗೆ ಬೇಕಾದ ಹಾಗೆ ಹೊಂದಿಸಿಕೊಂಡಳು. + +“ಕ್ಯಾಸೆಟ್ ಪ್ಲೇಯರ್!” ಕಾರಿನಲ್ಲಿ ಕೂರುತ್ತಾ ತನ್ನಷ್ಟಕ್ಕೆ ತಾನೇ ಎಂಬಂತೆ ಹೇಳಿಕೊಂಡಳು. + +“ನನಗೆ ಕ್ಯಾಸೆಟ್ ಇಷ್ಟವಾಗುತ್ತೆ.” ಕಾಫುಕ ಹೇಳಿದ. “ಸಿಡಿಗಿಂತ ಕ್ಯಾಸೆಟ್ ಬಳಸುವದೇ ಸುಲಭ. ನಾಟಕದ ಸಾಲುಗಳ ತಾಲೀಮಿಗೆ ಅವುಗಳನ್ನು ಬಳಸುತ್ತೇನೆ.” + +“ಕ್ಯಾಸೆಟ್ ಗಳನ್ನು ನೋಡದೆಯೇ ಎಷ್ಟೋ ಸಮಯವಾಗಿತ್ತು.” + +“ನಾನು ಡ್ರೈವಿಂಗ್ ಶುರು ಮಾಡಿದಾಗ ಬರಿ ಎಂಟು ಟ್ರಾಕಿನ ಕ್ಯಾಸೆಟ್ ಗಳೇ ಇದ್ದವು.” + +ಮಿಸಾಕಿ ಉತ್ತರಿಸಲಿಲ್ಲ, ಆದರೆ ಅವಳ ಮುಖಭಾವ ಅವಳು ಎಂಟು ಟ್ರಾಕಿನ ಕ್ಯಾಸೆಟ್ ಅನ್ನು ಮೊದಲ ಬಾರಿಗೆ ಕೇಳಿದ್ದು ಎನ್ನುವದನ್ನು ಸೂಚಿಸುತ್ತಿತ್ತು.ಓಬಾ ಹೇಳಿದ ಹಾಗೆ ಅವಳು ನುರಿತ ಡ್ರೈವರ್ ಆಗಿದ್ದಳು. ಅವಳು ಕಾರನ್ನು ಸರಾಗವಾಗಿ ಸ್ವಲ್ಪವೂ ಕುಲುಕಿಸದೆ ಗಾಡಿ ಓಡಿಸುತ್ತಿದ್ದಳು. ತುಂಬಿದ್ದ ರಸ್ತೆಯ ಮೇಲೆಲ್ಲಾ ಜನ ಅಡ್ಡಾದಿಡ್ಡಿ ಓಡಾಡುತ್ತಿದ್ದರೂ ಸಹ ಅವಳು ಸಲೀಸಾಗಿ ಗೇರನ್ನು ಬದಲಿಸುತ್ತಾ ಕಾರನ್ನು ಲೀಲಾಜಾಲವಾಗಿ ಚಲಾಯಿಸುತ್ತಿದ್ದಳು. ಕಾಫುಕ ಕಣ್ಣು ಮುಚ್ಚಿ ಅವಳು ಗೇರನ್ನು ಬದಲಿಸಿದಳೋ ಇಲ್ಲವೋ ಎನ್ನುವದನ್ನು ಊಹೆ ಮಾಡುವ ಪ್ರಯತ್ನ ಮಾಡುತ್ತಿದ್ದ. ಕೇವಲ ಕಾರಿನ ಇಂಜಿನ್ ನ ಶಬ್ದದಿಂದ ಮಾತ್ರ ಗೇರು ಬದಲಾಗಿದ್ದು ತಿಳಿಯುತ್ತಿತ್ತು. ಕಾರಿನ ಆಕ್ಸಲರೇಟರ್ ಮತ್ತು ಬ್ರೇಕಿನ ಮೇಲೆ ಅವಳು ಅತ್ಯಂತ ಜಾಗರೂಕತೆಯಿಂದ ಹೌದೋ ಅಲ್ಲವೋ ಅನ್ನುವಂತೆ ಕಾಲಿಟ್ಟಿದ್ದಳು. ಅವೆಲ್ಲಕ್ಕಿಂತ ಹೆಚ್ಚಾಗಿ ಅವಳು ಯಾವುದೇ ಉದ್ವೇಗಕ್ಕೊಳಗಾಗಿರಲಿಲ್ಲ. ಹೇಳಬೇಕೆಂದರೆ ಅವಳನ್ನು ನೋಡಿದರೆ ಕಾರನ್ನು ಚಲಾಯಿಸುತ್ತಿರುವಾಗಲೇ ನಿಶ್ಚಿ೦ತೆಯಿಂದಿರುವಳೇನೋ ಅನ್ನಿಸುತಿತ್ತು. ಸದಾ ನಿರ್ವಿಕಾರವಾಗಿರುತ್ತಿದ್ದ ಅವಳ ಮುಖ ಶಾಂತವಾಗಿತ್ತು. ಕಾರನ್ನು ಚಲಾಯಿಸುವಾಗಲೂ ಅವಳು ಮಾತೆ ಇಲ್ಲದಂತೆ ಮೌನವಾಗಿದ್ದಳು. ಕಾಫುಕ ಏನಾದರು ಕೇಳಿದರೆ ಉತ್ತರ ಹೇಳಿಯಾಳೆ ವಿನಃ ಬೇರೆ ಮಾತಿಲ್ಲ. + +ಮಾತಿನ ಅನುಪಸ್ಥಿತಿ ಕಾಫುಕನಿಗೇನು ತೊಂದರೆ ಅನಿಸಲಿಲ್ಲ. ಇತರರನ್ನು ಮಾತಿಗೆಳೆಯುವದರಲ್ಲಿ ಅವನೇನು ಚತುರನಲ್ಲ. ಬೇರೆಯವರೊಟ್ಟಿಗೆ ಮಾತನಾಡಲೇಬಾರದು ಎಂದಲ್ಲ, ಆದರೆ ಮಾತನಾಡಲು ವಿಷಯವಿಲ್ಲದಾಗ ಮಾತನಾಡದೆ ಸುಮ್ಮನೆ ಇರುವದು ಒಳಿತು ಎನ್ನುವದು ಅವನಿಗೆ ತಿಳಿದಿತ್ತು. ಅವನು ಕಾರಿನ ಹಿಂದಿನ ಸೀಟ್ ನಲ್ಲಿ ಆರಾಮವಾಗಿ ಕುಳಿತು ಕಿಟಕಿಯ ಮೂಲಕ ಹಿಂದಕ್ಕೆ ಸಾಗುತ್ತಿದ್ದ ರಸ್ತೆಗಳನ್ನು ದಿಟ್ಟಿಸುತ್ತಿದ್ದ. ಯಾವತ್ತೂ ಕಾರಿನ ಡ್ರೈವರಿನ ಸೀಟಿನಲ್ಲಿ ಕುಳಿತಿರುತ್ತಿದ್ದ ಅವನಿಗೆ ಹಿಂದಿನ ಸೀಟಿನಲ್ಲಿ ಕುಳಿತು ಹೊರಗೆ ನೋಡುವುದು ವಿಶೇಷವಾಗಿ ತೋರುತ್ತಿತ್ತು. + +ಅವನು ಅನೇಕ ಬಾರಿ ಇಕ್ಕಟ್ಟಾದ ಜಾಗೆಗಳಲ್ಲಿ ಇನ್ನೊಂದು ಕಾರಿಗೆ ಸಮಾನಾಂತರವಾಗಿ ನಿಲ್ಲಿಸಲು ಹೇಳಿ ಅವಳ ಕೌಶಲ್ಯವನ್ನು ಪರೀಕ್ಷಿಸಿದ. ಅವಳಿಗೆ ಕಾರನ್ನು ಚಲಾಯಿಸುವದರ ಮೇಲೆ ಅದ್ಭುತ ಹಿಡಿತವಿದ್ದಿತ್ತು. ಕಾರನ್ನು ಸಿಗ್ನಲ್ ಗಳಲ್ಲಿ ನಿಲ್ಲಿಸಿದಾಗ ಮಾತ್ರ ಅವಳು ಸಿಗರೇಟು ಸೇದುತ್ತಿದ್ದಳು.ಮಾಲ್ಬರೋಸ್ ಅವಳ ಆಯ್ಕೆಯ ಸಿಗರೇಟೆಂದು ತೋರುತ್ತಿತ್ತು. ಸಿಗ್ನಲ್ ಬಿಟ್ಟ ತಕ್ಷಣ ಅವಳು ಸಿಗರೇಟನ್ನು ನಂದಿಸಿಬಿಡುತ್ತಿದ್ದಳು. ಅವಳ ತುಟಿಗೆ ಯಾವುದೇ ಲಿಪ್ಸ್ಟಿಕ್ ಇರಲಿಲ್ಲ. ಕೈ ಉಗುರುಗಳನ್ನು ನೀಟಾಗಿ ಕತ್ತರಿಸಿರಲಿಲ್ಲ. ಹಾಗೆ ನೋಡಿದರೆ ಅವಳು ಯಾವುದೇ ಅಲಂಕಾರವನ್ನು ಯಾವತ್ತೂ ಮಾಡಿಕೊಂಡಂತೆ ತೋರುತ್ತಿರಲಿಲ್ಲ. + +“ನೀನು ತಪ್ಪು ಭಾವಿಸುವದಿಲ್ಲವೆಂದಾದರೆ ನಿನಗೆ ಒಂದಷ್ಟು ಪ್ರಶ್ನೆ ಕೇಳಬಹುದೇ?” ಅವರು ಅರುಸುಗಾವಾ ಪಾರ್ಕಿಗೆ ಹತ್ತಿರವಾಗುತ್ತಿದ್ದಂತೆ ಕಾಫುಕ ಕೇಳಿದ. + +“ಹ್ಮ್” + +“ನೀನು ಗಾಡಿ ಚಲಾಯಿಸುವದನ್ನು ಕಲಿತಿದ್ದೆಲ್ಲಿ?” + +“ನಾನು ಬೆಳೆದಿದ್ದು ಹೊಕೈದೋ ಎನ್ನುವ ಪರ್ವತ ಪ್ರದೇಶದಲ್ಲಿ. ಚಿಕ್ಕವಳಿದ್ದಾಗಲೇ ಗಾಡಿ ಓಡಿಸಲು ಕಲಿತೆ. ಅಂತಹ ಸ್ಥಳಗಳಲ್ಲಿ ಕಾರು ಅತ್ಯವಶ್ಯಕ. ವರ್ಷದಲ್ಲಿ ಅರ್ಧದಷ್ಟು ದಿನ ರಸ್ತೆಗಳು ಹಿಮಾಚ್ಚಾದಿತವಾಗಿರುತ್ತವೆ. ಅಲ್ಲಿ ಗಾಡಿ ಓಡಿಸಿದವರು ಬೇಡವೆಂದರೂ ಒಳ್ಳೆಯ ಚಾಲಕರಾಗುತ್ತಾರೆ.” + +“ಅದು ಸರಿ, ಆದರೆ ಅಲ್ಲಿ ಕಾರನ್ನು ನೀನು ಮಾಡುವಂತೆ ಕರಾರುವಕ್ಕಾಗಿ ಪಾರ್ಕ್ ಮಾಡುವದನ್ನು ಕಲಿಯಲಿಕ್ಕೆ ಸಾಧ್ಯವಿಲ್ಲ ಅಲ್ಲವೇ?”ಅವಳು ಉತ್ತರಿಸಲಿಲ್ಲ. + +“ನನಗೆ ಇದ್ದಕಿದ್ದ ಹಾಗೆ ಚಾಲಕರ ಅವಶ್ಯಕತೆ ಯಾಕೆ ಬಂದಿತು ಎಂದು ಓಬ ನಿನಗೆ ಹೇಳಿದ್ದಾನೆಯೇ?” + +ಮಿಸಾಕಿ ನಿರ್ಭಾವುಕ ದನಿಯಲ್ಲಿ ರಸ್ತೆಯನ್ನು ನೋಡುತ್ತಾ ಉತ್ತರಿಸಿದಳು. “ನೀನೊಬ್ಬ ನಟ. ವಾರದ ಆರು ದಿನ ಸ್ಟೇಜಿನ ಮೇಲಿರುತ್ತಿಯ. ಮೊದಲೆಲ್ಲ ನಿನ್ನ ಕಾರನ್ನು ನೀನೇ ಚಲಾಯಿಸಿಕೊಂಡು ಥಿಯೇಟರಿಗೆ ಬರುತ್ತಿದ್ದೆ. ನಿನಗೆ ಟ್ಯಾಕ್ಸಿಯಲ್ಲಾಗಲಿ, ಮೆಟ್ರೋದಲ್ಲಾಗಲೀ ಅಡ್ಡಾಡುವದು ಇಷ್ಟವಿಲ್ಲ. ಯಾಕೆಂದರೆ ಹಾದಿಯಲ್ಲಿ ನಾಟಕದ ಸಾಲುಗಳನ್ನು ಉರುಹೊಡೆಯುವದು, ತಾಲೀಮು ಮಾಡುವುದು ನಿನ್ನ ಅಭ್ಯಾಸ. ಕೆಲ ವಾರಗಳ ಹಿಂದೆ ನೀನು ಕುಡಿದು ಕಾರು ಚಲಾಯಿಸಿ ಇನ್ನೊಂದು ಗಾಡಿಗೆ ಡಿಕ್ಕಿ ಹೊಡೆದುದರಿಂದ ನಿನ್ನ ಲೈಸೆನ್ಸ್ ಅನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಅಪಘಾತವಾದಾಗ ಡಾಕ್ಟರು ನಿನ್ನ ದೃಷ್ಟಿ ಮಂದವಾಗಿದೆ ಎಂದು ಪೊಲೀಸರಿಗೆ ವರದಿ ಮಾಡಿದ್ದಾರೆ. + +ಮಿಸಾಕಿ ತಲೆಯಾಡಿಸಿದ. ಕ್ಷಣಕಾಲ ಅವನಿಗೆ ಯಾರೋ ಒಬ್ಬರು ಕನಸಿನಲ್ಲಿ ವರದಿಯನ್ನು ಒಪ್ಪಿಸಿದಂತೆ ಇತ್ತು. + +“ಡಾಕ್ಟರು ದೃಷ್ಟಿ ಪರೀಕ್ಷೆ ಮಾಡಿದಾಗ ಗ್ಲುಕೊಮಾ ಇರಬಹುದು ಅಂದರು. ನನ್ನ ಬಲಗಣ್ಣಿನಲ್ಲಿ ದೃಷ್ಟಿ ದುರ್ಬಲವಾಗಿದೆಯಂತೆ.” + +ರಕ್ತ ಪರೀಕ್ಷೆಯಲ್ಲಿ ಸಿಕ್ಕಿದ ಆಲ್ಕೋಹಾಲ್ ಪ್ರಮಾಣ ಹೆಚ್ಚೇನೂ ಇರಲಿಲ್ಲ. ಹೀಗಾಗಿ ಪ್ರಕರಣವನ್ನು ಅಲ್ಲಿಗೆ ಮುಚ್ಚಿ ಹಾಕಲಾಗಿತ್ತು. ಅದೃಷ್ಟವಶಾತ್ ಮಾಧ್ಯಮದವರಿಗೆ ಯಾರೂ ವಿಷಯ ತಿಳಿಸಿರಲಿಲ್ಲ. ಆದರೆ ಥಿಯೇಟರಿನ ಆಡಳಿತ ಮಂಡಳಿ ಕಾಫುಕನ ದೃಷ್ಟಿ ದೋಷವನ್ನು ನಿರ್ಲಕ್ಷ್ಯ ಮಾಡುವ ಹಾಗಿರಲಿಲ್ಲ. ಬಲಗಡೆಯಿಂದ ಬರುವ ವಾಹನಗಳು ತೀರಾ ಹತ್ತಿರ ಬರುವವರೆಗೂ ಕಾಫುಕನಿಗೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಹೀಗಾಗಿ ಆಡಳಿತ ಮಂಡಳಿಯವರು ಕಾಫುಕನಿಗೆ ವಾಹನ ಚಲಾಯಿಸುವದನ್ನು ನಿಲ್ಲಿಸಲು ಕೇಳಿಕೊಂಡರು. + +“ಮಿಸ್ಟರ್ ಕಾಫುಕ..” ಮಿಸಾಕಿ ಕೇಳಿದಳು. “ನಿನ್ನನ್ನು ಹಾಗೆ ಕರೆಯಬಹುದೇ? ಅದು ನಿನ್ನ ಸ್ಟೇಜಿನ ಹೆಸರು ಅಲ್ಲ ತಾನೇ?” + +“ಇದೊಂದು ಬಳಕೆಯಲ್ಲಿಲ್ಲದ ಹೆಸರು. ಆದರೆ ಅದು ನನ್ನ ನಿಜವಾದ ಹೆಸರು. ಕಾಫುಕ ಎಂದರೆ ಅದೃಷ್ಟ ದೇವತೆಯ ಮನೆ ಎಂದರ್ಥ. ಹಾಗೆಂದು ನನಗೆ ಅದೃಷ್ಟದ ಬಾಗಿಲು ತೆರೆದಿದೆ ಎಂದಲ್ಲ.” + +ಒಂದು ಕ್ಷಣದ ಮೌನದ ನಂತರ ಕಾಫುಕ ಅವಳಿಗೆ ಸಂಬಳವೆಷ್ಟು ಕೊಡಬಹುದೆಂದು ಹೇಳಿದ. ಅಂತಹ ದೊಡ್ಡ ಮೊತ್ತವೇನಲ್ಲ. ಆದರೆ ಥಿಯೇಟರಿನ ವತಿಯಿಂದ ಕೊಡಬಹುದಾಗಿದ್ದು ಅಷ್ಟೇ ಹಣ. ಕಾಫುಕನ ಹೆಸರು ಬಹುತೇಕ ಎಲ್ಲರಿಗೂ ತಿಳಿದಿದ್ದರೂ ಅವನೇನು ಟಿವಿ ಅಥವಾ ಸಿನಿಮಾ ತಾರೆಯರಂತೆ ಯಥೇಚ್ಛ ಸಂಭಾವನೆ ಪಡೆಯುವ ನಟನಾಗಿರಲಿಲ್ಲ. ಅವನಂತಹ ನಟರಿಗೆ ಕೆಲವೇ ಕೆಲವು ತಿಂಗಳುಗಳ ಮಟ್ಟಿಗೆ ಸ್ವ೦ತ ಡ್ರೈವರನ್ನು ಇರಿಸಿಕೊಳ್ಳುವದೂ ಸಹ ಯೋಗ್ಯತೆಗೆ ಮೀರಿದ ಐಷಾರಾಮಿಯೇ ಆಗಿತ್ತು. + +“ನಿನ್ನ ಕೆಲಸದ ವೇಳಾಪಟ್ಟಿ ಆಗಾಗ ಬದಲಾಗಬಹುದು. ಆದರೆ ಬಹುತೇಕ ನಾನು ಕೆಲಸ ಮಾಡುವದು ಥಿಯೇಟರಿನಲ್ಲೇ. ಹಾಗಾಗಿ ಬೆಳಗಿನ ವೇಳೆ ನಿನಗೆ ಸಂಪೂರ್ಣ ಬಿಡುವು. ಬೇಕಿದ್ದರೆ ಮಧ್ಯಾನ್ಹದವರೆಗೂ ನೀನು ಮಲಗಬಹುದು. ರಾತ್ರಿ ಹನ್ನೊಂದರ ಒಳಗಾಗಿ ನಿನ್ನ ಕೆಲಸ ಮುಗಿಯುವ ಹಾಗೆ ನಾನು ನೋಡಿಕೊಳ್ಳುತ್ತೇನೆ. ಒಂದು ವೇಳೆ ನನ್ನ ಕೆಲಸ ಅಷ್ಟರೊಳಗಾಗಿ ಮುಗಿಯದಿದ್ದರೆ ನೀನು ಹೊರಡಬಹುದು. ನಾನು ಟ್ಯಾಕ್ಸಿ ಮಾಡಿಕೊಂಡು ಮನೆಗೆ ಹೋಗುತ್ತೇನೆ. ವಾರದಲ್ಲಿ ಒಂದು ದಿನ ರಜೆ.” + +“ಸರಿ.” ಮಿಸಾಕಿ ತಲೆಯಾಡಿಸಿದಳು. + +“ಕೆಲಸ ಅಂಥ ಕಷ್ಟಕರವೇನಲ್ಲ. ಆದರೆ ನಾನು ಥಿಯೇಟರಿನ ಒಳಗಿರುವಾಗ ಎರಡು ಮೂರು ತಾಸು ಏನು ಮಾಡದೆ ಕಾಯಬೇಕಲ್ಲ ಅದು ನಿನಗೆ ಕಷ್ಟವಾಗಬಹುದು.” + +ಮಿಸಾಕಿ ಮಾತನಾಡಲಿಲ್ಲ. ಅವಳ ಮುಖದಲ್ಲಿನ ಭಾವನೆ ಅವಳು ಇದಕ್ಕೂ ಕಷ್ಟಕರವಾದ ಹಲವು ಕೆಲಸಗಳನ್ನು ಮಾಡಿದ್ದಳೆಂದು ಹೇಳುವಂತಿತ್ತು. + +“ದಯವಿಟ್ಟು ಕಾರಿನ ಮೇಲ್ಛಾವಣಿ ಮುಚ್ಚಿದ್ದಾಗ ಸಿಗರೇಟು ಸೇದಬೇಡ. ಬೇಕಿದ್ದರೆ ಅದನ್ನು ಕೆಳಗಿಳಿಸಿದಾಗ ಸೇದಬಹುದು.” + +“ಆಯಿತು.” + +“ನಿನ್ನದೇನಾದರೂ ಕರಾರು ಇದೆಯೇ.” + +“ಅಂತಹದೇನೂ ಇಲ್ಲ.” ಅವಳು ದೃಷ್ಟಿಯನ್ನು ಹರಿತಗೊಳಿಸಿ ಕಾರಿನೊಳಗೆ ಏನನ್ನೋ ದಿಟ್ಟಿಸಿದಳು. “ನನಗೆ ಈ ಕಾರು ಇಷ್ಟವಾಗಿದೆ.”ಅಷ್ಟೇ, ತದನಂತರ ಇಬ್ಬರೂ ಮಾತನಾಡದೆಯೇ ಉಳಿದ ಮಾರ್ಗವನ್ನು ಕ್ರಮಿಸಿದರು. ಅವರು ಮರಳಿ ಗ್ಯಾರೇಜಿನ ಕಾಫುಕ ಮಿಸಾಕಿಯನ್ನು ಕೆಲ್ಸಕ್ಕೆ ತೆಗೆದುಕೊಳ್ಳುವ ತನ್ನ ನಿರ್ಧಾರವನ್ನು ಓಬಾನಿಗೆ ತಿಳಿಸಿದನು. + +ಮಿಸಾಕಿ ಮಾರನೇ ದಿನದಿಂದಲೇ ಕಾಫುಕನ ಬಳಿ ಕೆಲಸ ಪ್ರಾರಂಭಿಸಿದಳು. ಸರಿಯಾಗಿ ಮಧ್ಯಾನ್ಹ ಮೂರೂವರೆಗೆ ಅವಳು ಕಾಫುಕನ ಅಪಾರ್ಟಮೆ೦ಟ್ ಬಳಿ ಬಂದು ತಳಮಹಡಿಯಲ್ಲಿದ್ದ ಕಾರನ್ನು ಹೊರತೆಗೆದು ಕಾಫುಕನನ್ನು ಗಿಂಜಾದಲ್ಲಿನ ಅವನ ಥಿಯೇಟರಿನ ಬಳಿ ಬಿಡುತ್ತಿದ್ದಳು. ಮಳೆಯಿಲ್ಲದಿದ್ದರೆ ಹೊರಡುವ ಮೊದಲು ಮಿಸಾಕಿ ಕಾರಿನ ಮೇಲ್ಛಾವಣಿಯನ್ನು ಕೆಳಗಿಳಿಸುತ್ತಿದ್ದಳು. ಕಾಫುಕ ಚೆಕೋವನ ಅಂಕಲ್ ವಾನ್ಯ ನಾಟಕದಲ್ಲಿ ಅವನು ಮಾಡುತ್ತಿದ್ದ ಅಂಕಲ್ ವಾನ್ಯನ ಪಾತ್ರದ ಸಾಲುಗಳನ್ನು ಮನನ ಮಾಡಿಕೊಳ್ಳುತ್ತಿದ್ದ. ನಾಟಕದ ಪ್ರತಿ ಸಾಲೂ ಅವನಿಗೆ ಬಾಯಿಪಾಠವಾಗಿದ್ದರೂ, ಎಷ್ಟೋ ವರ್ಷಗಳಿ೦ದ ಅಭ್ಯಾಸ ಮಾಡಿಕೊಂಡ, ಈ ಪ್ರಯಾಣ ಕಾಲದ ಮನನ ಕಾಫುಕನ ಉದ್ವಿಗ್ನತೆಯನ್ನು ಕಡಿಮೆ ಮಾಡುತ್ತಿತ್ತು. + +ಸಾಮಾನ್ಯವಾಗಿ ಮನೆಗೆ ವಾಪಾಸಾಗುವಾಗ ಕಾಫುಕ ಬೆಥ್ಯುವೆನ್ ನ ಕ್ಯಾಸೇಟುಗಳನ್ನು ಕೇಳುತ್ತಿದ್ದ. ದೀರ್ಘವಾಗಿ ಆಲೋಚಿಸಲು ಅಥವಾ ಏನನ್ನೂ ಆಲೋಚಿಸದಿರಲು ಬೆಥ್ಯುವೆನ್ ಹಾಡುಗಳು ಸಹಕಾರಿ ಎನ್ನುವದು ಕಾಫುಕನ ಬಲವಾದ ನಂಬಿಕೆಯಾಗಿತ್ತು. ಕೆಲವೊಮ್ಮೆ ಲಘು ಮನಸ್ಥಿತಿಯಲ್ಲಿದ್ದಾಗ ಅವನು ಬೀಚ್ ಬಾಯ್ಸ್, ರಾಸ್ಕಲ್, ಸಿಸಿಆರ್ ಮುಂತಾದ ಅಮೇರಿಕನ್ ರಾಕ್ ತಂಡಗಳ ಸಂಗೀತವನ್ನೂ ಕೇಳುತ್ತಿದ್ದ. ಕಾಫುಕ ಕೇಳುತಿದ್ದ ಬಹುತೇಕ ಕ್ಯಾಸೆಟುಗಳು ಅವನ ಯೌವ್ವನದ ದಿನಗಳಲ್ಲಿ ಜನಪ್ರಿಯವಾದ ಹಾಡುಗಳಾಗಿದ್ದವು. ಮಿಸಾಕಿ ಯಾವತ್ತೂ ಅವನ ಆಯ್ಕೆಯ ಹಾಡುಗಳ ಬಗ್ಗೆ ಯಾವುದೇ ತೆರನಾದ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿರಲಿಲ್ಲ. ಸಂಗೀತ ಅವಳಿಗೆ ಸಂತೋಷವನ್ನುಂಟು ಮಾಡುತ್ತದೆಯೋ ಅಥವಾ ನೋವನ್ನುಂಟು ಮಾಡುತ್ತದೆಯೋ ಎನ್ನುವದನ್ನು ಅವನು ತೀರ್ಮಾನಿಸದಾಗಿದ್ದ. ಹೇಳಬೇಕೆಂದರೆ ಅವಳು ಈ ಹಾಡುಗಳನ್ನು ಕೇಳಿಸಿಕೊಳ್ಳುತ್ತಿದ್ದಳೋ ಇಲ್ಲವೋ ಎನ್ನುವದು ಅವನಿಗೆ ಗೊತ್ತಿರಲಿಲ್ಲ. ಅವಳು ಯಾವತ್ತೂ ತನ್ನ ಭಾವನೆಗಳನ್ನ ತೋರ್ಪಡಿಸುತ್ತಿರಲಿಲ್ಲ. + +ಕಾರಿನಲ್ಲಿ ಮತ್ತೊಬ್ಬರ ಉಪಸ್ಥಿತಿಯಲ್ಲಿ ನಾಟಕದ ಸಾಲುಗಳನ್ನು ಹೇಳಿಕೊಳ್ಳುವದು ಕಾಫುಕನಿಗೆ ಹಿಂಸೆಯ ಕೆಲಸವಾಗಿತ್ತು. ಆದರೆ ಮಿಸಾಕಿಯ ಉಪಸ್ಥಿತಿ ಅವನಿಗೆ ಯಾವುದೇ ತೆರನಾದ ಮುಜುಗರವನ್ನುಂಟು ಮಾಡುತ್ತಿರಲಿಲ್ಲ. ಒಂದು ರೀತಿಯಲ್ಲಿ ಅವಳ ಭಾವನಾರಹಿತ ವರ್ತನೆ ಕಾಫುಕನಿಗೆ ಒಳ್ಳೆಯದೇ ಆಗಿತ್ತು. ಕೆಲವೊಮ್ಮೆ ಅವನು ಮಿಸಾಕಳ ಕಿವಿಯದುರಿ ಹೋಗುವಂತೆ ಸಾಲುಗಳನ್ನು ಹೇಳಿದರೂ ಅವಳು ಮಾತ್ರ ಯಾವುದೇ ಶಬ್ದ ಕೇಳಿಸಿಯೇ ಇಲ್ಲವೆಂಬಂತೆ ಕುಳಿತಿರುತ್ತಿದ್ದಳು. ಬಹುಶಃ ಅವಳ ಗಮನವೆಲ್ಲ ಡ್ರೈವಿಂಗ್ ಮೇಲೆ ಕೇಂದ್ರೀಕೃತವಾಗಿತ್ತೇನೋ. ಕಾರು ಚಲಾಯಿಸುವಾಗ ಮಿಸಾಕಿ ಝೆನ್ ಸಂತರ ಮನಸ್ಥಿತಿ ತಲುಪುತ್ತಿದ್ದಳೇನೋ ಅನ್ನಿಸುತಿತ್ತು. + +ಮಿಸಾಕಿ ತನ್ನ ಮೇಲೆ ಅಭಿಪ್ರಾಯ ಇದೆ ಎನ್ನುವದರ ಬಗ್ಗೆ ಕಾಫುಕನಿಗೆ ಎಳ್ಳಷ್ಟೂ ತಿಳಿದಿರಲಿಲ್ಲ. ಅವನನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವಿಲೇವಾರಿ ಮಾಡುವ ಸರಕೆಂದುಕೊಂಡಿದ್ದಳೋ ಅಥವಾ ಅವಳಿಗೆ ಅವನ ಬಗ್ಗೆ ತಿಳಿಯುವ ಯಾವ ಕುತೂಹಲವೂ ಇರಲಿಲ್ಲವೋ ಅಥವಾ ಕೆಲಸ ಉಳಿದರೆ ಸಾಕು ಎಂದು ಅವನನ್ನು ಸಹಿಸಿಕೊಂಡಿದ್ದಳೋ ಎನ್ನುವದನ್ನು ಅವನು ತಿಳಿಯದಾಗಿದ್ದ. ಹೇಳಬೇಕೆಂದರೆ ಅವನ ಬಗ್ಗೆ ಅವಳು ಏನು ಅಂದುಕೊಂಡಿದ್ದಾಳೆ ಎನ್ನುವದು ಅವನಿಗೂ ಅಂತಹ ಮಹತ್ವವುಳ್ಳದ್ದಾಗಿರಲಿಲ್ಲ. ಅವನಿಗೆ ಅವಳ ಸರಾಗ ಕಾಲು ಚಾಲನೆ, ಮೌನ, ಹೊರ ಪ್ರಪಂಚದ ಬಗೆಗಿನ ನಿರಾಸಕ್ತಿ ಎಲ್ಲವೂ ಇಷ್ಟವಾಗುತಿತ್ತು. + +ರಾತ್ರಿ ಷೋ ಮುಗಿದ ಕೂಡಲೇ ಕಾಫುಕ ಮೇಕ್ ಅಪ್ ಅಳಿಸಿ, ವೇಷಭೂಷಣಗಳನ್ನು ತೆಗೆದಿಟ್ಟು ಸಾಧ್ಯವಾದಷ್ಟೂ ಬೇಗ ಥಿಯೇಟರಿನಿಂದ ಹೊರಟುಬಿಡುತ್ತಿದ್ದ. ಕೆಲಸ ಮುಗಿದ ಕೂಡಲೇ ಅಲ್ಲಿ ಇಲ್ಲಿ ಅಡ್ಡಾಡುವದು ಅವನಿಗೆ ಸೇರುತ್ತಿರಲಿಲ್ಲ. ಅವನ ಜೊತೆಗಿರುವ ಬಹುತೇಕ ನಂತರದ ಪರಿಚಯವೇ ಅವನಿಗಿರಲಿಲ್ಲ. ನಾಟಕ ಮುಗಿದ ತಕ್ಷಣ ಅವನು ಮಿಸಾಕಿಯ ಮೊಬೈಲ್ ಗೆ ಕರೆ ಮಾಡಿ ಅವಳನ್ನು ಸ್ಟೇಜಿನ ಹತ್ತಿರದ ದ್ವಾರದ ಬಳಿ ಬರಲು ಹೇಳುತ್ತಿದ್ದ. ಅವನು ಹೊರ ಬಂದ ತಕ್ಷಣ ಹಳದಿ ಬಣ್ಣದ ಕಾರು ಅವನಿಗಾಗಿ ಕಾದಿರುತ್ತಿತ್ತು. ಅವನು ತನ್ನ ಅಪಾರ್ಟ್ ಮೆ೦ಟನ್ನು ತಲುಪಿದಾಗ ೧೦.೩೦ ಆಗುತ್ತಿತ್ತು ಮತ್ತು ಪ್ರತಿ ದಿನವೂ ಇದೆ ವೇಳಾಪಟ್ಟಿ ಪುನರಾವರ್ತನೆಯಾಗುತ್ತಿತ್ತು. + +ಕಾಫುಕ ವಾರದಲ್ಲೊಮ್ಮೆ ಒಂದು ಪತ್ತೇದಾರಿ ಟಿವಿ ಧಾರಾವಾಹಿಯ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದ. ಈ ಒಂದು ದಿನದ ಕೆಲಸಕ್ಕೆ ಅವನಿಗೆ ಚೆನ್ನಾಗಿಯೇ ಕಾಸು ಕೊಡುತ್ತಿದ್ದರು. ಧಾರಾವಾಹಿಯಲ್ಲಿ ಕಾಫುಕ ಮಹಿಳಾ ಪೊಲೀಸೊಬ್ಬಳಿಗೆ ಕಳ್ಳರನ್ನು ಹಿಡಿಯಲು ಸಹಾಯ ಮಾಡುವ ಜ್ಯೋತಿಷಿಯೊಬ್ಬನ ಪಾತ್ರ ಮಾಡುತ್ತಿದ್ದ. ಪಾತ್ರದ ತಯಾರಿಗಾಗಿ ಹಲವಷ್ಟು ಬಾರಿ ಅವನು ಜ್ಯೋತಿಷಿಯಂತೆ ವೇಷ ಧರಿಸಿ ರಸ್ತೆಯ ಪಕ್ಕ ಕುಳಿತು ಭವಿಷ್ಯ ಹೇಳುವ ಕೆಲಸವನ್ನೂ ಮಾಡಿದ್ದ. ಹಲವರ ಪ್ರಕಾರ ಅವನು ಹೇಳಿದ ಬಹುತೇಕ ಭವಿಷ್ಯ ಸತ್ಯವೇ ಆಗುತ್ತಿತ್ತು. ಧಾರಾವಾಹಿಯ ಚಿತ್ರೀಕರಣ ಮುಗಿದ ನಂತರ ಅವನು ಅಲ್ಲಿಂದ ನೇರವಾಗಿ ನಾಟಕದ ಥಿಯೇಟಿರಿಗೆ ಹೋಗುತ್ತಿದ್ದ. ಕೆಲವೊಂದು ದಿನ ಅವನು ಹತ್ತಿರದಲ್ಲೇ ಇದ್ದ ನಟನಾ ಶಾಲೆಯಲ್ಲಿ ಪಾಠ ಮಾಡುತ್ತಿದ್ದ. ಯುವ ನಟ-ನಟಿಯರ ಜೊತೆಗೆ ಬೆರೆಯುವದು ಅವನಿಗೆ ಪ್ರಿಯವಾದ ಕೆಲಸವಾಗಿತ್ತು. ಇವೆಲ್ಲ ತಿರುಗಾಟಗಳಲ್ಲಿ ಮಿಸಾಕಿ ಒಂದಷ್ಟು ಕೊಸರಾಡದೆ ಅವನ ಜೊತೆಗೆ ತಿರುಗುತ್ತಿದ್ದಳು. ಅವಳ ಮೌನದ ಸರಾಗ ಚಾಲನೆಗೆ ಕ್ರಮೇಣ ಹೊಂದಿಕೊಂಡ ಕಾಫುಕನಿಗೆ ಅವಳ ಪಕ್ಕ ಕುಳಿತುಕೊಳ್ಳುವದಾಗಲಿ, ಅಲ್ಲಿಯೇ ತೂಕಡಿಸುವದಕ್ಕಾಗಲಿ ಸ್ವಲ್ಪವೂ ಮುಜುಗರವಾಗುತ್ತಿರಲಿಲ್ಲ. + +ಬೇಸಿಗೆ ಶುರುವಾದಂತೆ ಮಿಸಾಕಿ ದಪ್ಪನೆಯ ಜಾಕೆಟಿನ ಬದಲಿಗೆ ತೆಳ್ಳನೆಯ ಜಾಕೆಟನ್ನು ಧರಿಸಲು ಪ್ರಾರಂಭಿಸಿದಳು. ಅವಳು ಕಾರಿನಲ್ಲಿರುವಷ್ಟು ಕಾಲ ಒಂದಿಲ್ಲೊಂದು ಜಾಕೆಟನ್ನು ಧರಿಸಿರುತ್ತಿದ್ದಳು. ಬಹುಶಃ ಜಾಕೆಟ್ ಅವಳ ಸಮವಸ್ತ್ರವಾಗಿತ್ತೇನೋ. ಮಳೆಗಾಲವಿರುವಷ್ಟು ಕಾಲ ಕಾರಿನ ಮೇಲ್ಛಾವಣಿ ಮುಚ್ಚಿಯೇ ಇರುತ್ತಿತ್ತು. + +ಕಾರಿನೊಳಗೆ ಕುಳಿತಾಗಲೆಲ್ಲ ಕಾಫುಕನಿಗೆ ತೀರಿಹೋದ ಅವನ ಹೆಂಡತಿಯ ನೆನಪಾಗುತ್ತಿತ್ತು. ಯಾವುದೋ ಅವ್ಯಕ್ತ ಕಾರಣಕ್ಕೆ ಅವನಿಗೆ ಕಾರು ಚಲಾಯಿಸುತ್ತಿದ್ದಾಗ ಯಾವತ್ತೂ ಬಾರದ ಅವನ ಹೆಂಡತಿಯ ನೆನಪು ಕಾರಿನಲ್ಲಿ ಪ್ರಯಾಣಿಕರ ಸೈಟಿನಲ್ಲಿ ಸುಮ್ಮನೆ ಕುಳಿತಿದ್ದಾಗ ಕಾಡುತ್ತಿತ್ತು. ಅವನ ಹೆಂಡತಿಯೂ ನಟಿಯಾಗಿದ್ದಳು, ಅವನಿಗಿಂತ ಎರಡು ವರ್ಷಕ್ಕೆ ಚಿಕ್ಕವಳಾದ ಅವಳು ಅದ್ಭುತ ಹೆಂಗಸಾಗಿದ್ದಳು. ಕಾಫುಕ ಯಾವತ್ತೂ ಪೋಷಕ ಪಾತ್ರವನ್ನು ಮಾಡಿದವನು. ಅವನಿಗೆ ಉದ್ದನೆಯ ಕೋಲು ಮುಖವಿತ್ತು. ಸಣ್ಣ ವಯಸ್ಸಿನಲ್ಲೇ ಅಲ್ಲಲ್ಲಿ ಉದುರಿ ಹೋಗಿದ್ದ ತಲೆಗೂದಲಿನಿಂದ ತಲೆಯ ಹಿಂಭಾಗ ವಯಸ್ಸಿಗೆ ಮೊದಲೇ ಬೋಳಾಗಿತ್ತು. ಆದರೆ ಅವನ ಹೆಂಡತಿ ಮುಖ್ಯಪಾತ್ರಕ್ಕೆ ಹೇಳಿ ಮಾಡಿಸಿದ ರೂಪವತಿಯಾಗಿದ್ದಳು. ಅವಳಿಗೆ ಬರುತ್ತಿದ್ದ ಸಂಭಾವನೆ, ಅವಳ ಜನಪ್ರಿಯತೆ ಎರಡೂ ಅದನ್ನು ಸಾರುತ್ತಿತ್ತು. ವರುಷಗಳು ಉರುಳಿದಂತೆ ಕಾಫುಕ ಅವನ ಪಾತ್ರ ನಟನೆಯ ಕೌಶಲ್ಯಕ್ಕೆ ಹೆಸರುಮಾತಾಗಿದ್ದ. ಕಾಲದ ಸುಕ್ಕು ಮುಖದ ಮೇಲೆ ಕಾಣಿಸಿದಂತೆ ಅವನ ಹೆಂಡತಿಯ ಜನಪ್ರಿಯತೆ ಕ್ರಮೇಣ ಕುಂದತೊಡಗಿತ್ತು. ಆದರೂ ಅವರು ಪರಸ್ಪರರ ಕೆಲಸವನ್ನು, ಕೌಶಲ್ಯವನ್ನು ಅಪಾರವಾಗಿ ಗೌರವಿಸುತ್ತಿದ್ದರು. ಹೀಗಾಗಿ ಸಂಭಾವನೆಯಾಗಲಿ, ಜನಪ್ರಿಯತೆಯಾಗಲಿ ಅವರಿಬ್ಬರ ಮಧ್ಯೆ ಯಾವತ್ತಿಗೂ ಯಾವುದೇ ಸಮಸ್ಯೆಯನ್ನು ತಂದಿರಲಿಲ್ಲ. + +ಕಾಫುಕ ತನ್ನ ಹೆಂಡತಿಯನ್ನು ಆರಾಧಿಸುತ್ತಿದ್ದ. ಅವಳನ್ನು ತನ್ನ ೨೯ ನೇ ವರ್ಷದಲ್ಲಿ ಮೊಟ್ಟಮೊದಲ ಬಾರಿಗೆ ನೋಡಿದಾಗಲಿಂದ, ಅವಳು ಸಾಯುವ ಕೊನೆಯ ಕ್ಷಣದವರೆಗೂ ಕಾಫುಕ ಅವಳನ್ನು ಅಪಾರವಾಗಿ ಪ್ರೀತಿಸಿದ್ದ. ಅವಳು ಸತ್ತಾಗ ಅವನಿಗೆ ೪೯ ವರ್ಷಗಳಾಗಿತ್ತು. ಅವಳೊಟ್ಟಿಗಿದ್ದ ಅಷ್ಟೂ ವರ್ಷಗಳಲ್ಲಿ ಕಾಫುಕ ಯಾವತ್ತೂ ಬೇರೊಂದು ಹೆಂಗಸರ ಬಗ್ಗೆ ಯೋಚಿಸಿದವನೂ ಅಲ್ಲ. + +ಆದರೆ ಅವನ ಹೆಂಡತಿ ಹಲವಾರು ಬಾರಿ ಪರ ಪುರುಷರೊಟ್ಟಿಗೆ ಮಲಗಿದ್ದಳು. ಅವನಿಗೆ ತಿಳಿದಂತೆ ಇಲ್ಲಿಯವರೆಗೆ ಅವಳಿಗೆ ಒಟ್ಟು ನಾಲ್ಕು ಸಂಬಂಧಗಳಿದ್ದವು. ಇನ್ನೂ ಬಿಡಿಸಿ ಹೇಳುವುದಾದರೆ ಅವಳು ಅವನಲ್ಲದೆ ಬೇರೆ ನಾಲ್ವರ ಜೊತೆಗೂ ಮಲಗಿದ್ದಳು. ಹಾಗೆಂದು ಅವಳು ಈ ವಿಷಯವನ್ನು ಅವನಿಗೆ ಯಾವತ್ತೂ ಹೇಳಿದವಳಲ್ಲ. ಆದರೂ ಅದು ಹೇಗೋ ಕಾಫುಕನಿಗೆ ಈ ವಿಷಯ ತಿಳಿಯುತ್ತಿತ್ತು. ಇಂತಹ ವಿಷಯಗಳಲ್ಲಿ ಕಾಫುಕನ ಆರನೆಯ ಇಂದ್ರಿಯ ಅವನಿಗರಿವಿಲ್ಲದಂತೆ ಈ ವಿಷಯ ತಿಳಿಯುವಂತೆ ಮಾಡುತ್ತಿತ್ತು. ಅಲ್ಲದೇ ಹೆಂಡತಿಯ ಬಗೆಗಿನ ಅಪಾರ ಪ್ರೀತಿ ಇಂತಹ ವಿಷಯವನ್ನು ನಿರ್ಲಕ್ಷಿಸುವದನ್ನು ಅಸಾಧ್ಯವನ್ನಾಗಿ ಮಾಡುತಿತ್ತು. ಆಕೆ ಮಾತನಾಡುವ ವಿಧಾನದಲ್ಲೇ ಅವಳು ಯಾರೊಟ್ಟಿಗೆ ಸಂಬಂಧ ಹೊಂದಿದ್ದಾಳೆ ಎನ್ನುವದನ್ನು ಹೇಳಬಹುದಿತ್ತು. ಬಹುತೇಕ ಸಂದರ್ಭದಲ್ಲಿ ಅವಳ ಪ್ರಿಯಕಾರರು ಅವಳ ಸಹನಟರೆ ಆಗಿರುತ್ತಿದ್ದರು ಮತ್ತು ಅವಳಿಗಿಂತ ವಯಸ್ಸಿನಲ್ಲಿ ಸಣ್ಣವರಾಗಿರುತ್ತಿದ್ದರು. + +ಈ ಸಂಬಂಧ ಚಿತ್ರೀಕರಣ ನಡೆಯುತ್ತಿದ್ದಷ್ಟೂ ದಿನ ಸರಾಗವಾಗಿ ಸಾಗುತ್ತಿತ್ತು. ಚಿತ್ರೀಕರಣ ಮುಗಿದ ತಕ್ಷಣ ಅದು ಇದ್ದಕ್ಕಿದ್ದಂತೆ ಅನಾಥವಾಗಿ ಸಾಯುತ್ತಿತ್ತು. ಇಷ್ಟು ವರ್ಷಗಳಲ್ಲಿ ಒಟ್ಟೂ ನಾಲ್ಕು ಸಲ ಹೀಗಾಗಿತ್ತು ಮತ್ತು ಪ್ರತಿ ಸಲವು ಇದೆ ಮಾದರಿ ಪುನರಾವರ್ತನೆಯಾಗುತ್ತಿತ್ತು. + +ಕಾಫುಕನಿಗೆ ಅವನ ಹೆಂಡತಿ ಆಗಾಗ ಯಾಕೆ ಮತ್ತೊಬ್ಬರ ಜೊತೆಗೆ ಮಲಗುತ್ತಿದ್ದಳು ಎನ್ನುವದು ಕೊನೆಯವರೆಗೂ ಅರ್ಥವಾಗಿರಲಿಲ್ಲ. ಗಂಡ ಹೆಂಡತಿಯಾಗಿ, ಸಂಗಾತಿಗಳಾಗಿ ಅವರಿಬ್ಬರ ಸಂಬಂಧ ಮೊದಲಿನಿಂದ ಕೊನೆಯವರೆಗೂ ಮಧುರವಾಗಿಯೆ ಇತ್ತು. ಸಮಯ ಸಿಕ್ಕಾಗಲೆಲ್ಲ ಪರಸ್ಪರರು ಕೂತು ಹಲವಷ್ಟು ವಿಷಯಗಳ ಬಗ್ಗೆ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು. ಒಬ್ಬರನ್ನೊಬ್ಬರು ಅವರು ಅಪಾರವಾಗಿ ನಂಬುತ್ತಿದ್ದರು. ಅವನ ಪ್ರಕಾರ ಅವರಿಬ್ಬರೂ ಮಾನಸಿಕವಾಗಿ ಹಾಗೂ ದೈಹಿಕವಾಗಿ ಅತ್ಯಂತ ಹೊಂದಾಣಿಕೆ ಇರುವ ಜೋಡಿಯಾಗಿದ್ದರು. ಸುತ್ತಲಿನವರು ಸಹ ಹಾಗೆ ತಿಳಿದಿದ್ದರು.ಅವಳು ಬದುಕಿದ್ದಾಗಲೇ ಅವಳನ್ನು ಈ ವಿಷಯದ ಬಗ್ಗೆ ಯಾಕೆ ಪ್ರಶ್ನಿಸಿಲ್ಲವೆಂದು ಅವನಿಗೆ ಪಶ್ಚಾತ್ತಾಪವಾಗುತ್ತಿತ್ತು. ಇದೊಂದು ವಿಷಾದ ಅವನ ಮನಸ್ಸಿನಲ್ಲಿ ಆಗಾಗ ಹಾದುಹೋಗುತ್ತಿತ್ತು. ಅವಳಿದ್ದಾಗ ಒಂದು ಸಲ ಇನ್ನೇನು ಅವಳನ್ನು ಪ್ರಶ್ನಿಯೇ ಬಿಡುವಂತಿದ್ದ. ಅವಳ ಬಳಿ “ಅವರಲ್ಲಿ ನೀನು ಏನನ್ನು ಹುಡುಕುತ್ತಿದ್ದೆ? ನನ್ನಲ್ಲಿ ಏನು ಕಡಿಮೆಯಾಗಿತ್ತು?” ಎಂದು ಕೇಳುತ್ತಿದ್ದನೇನೋ, ಆದರೆ ಅಷ್ಟರಲ್ಲಾಗಲೇ ಅವಳು ಸಾವಿನಂಚಿಗೆ ತಲುಪಿಯಾಗಿತ್ತು. ಆ ಸಮಯದಲ್ಲಿ ಅವಳನ್ನು ಪ್ರಶ್ನಿಸುವಷ್ಟು ಗಟ್ಟಿ ಹೃದಯ ಅವನದಾಗಿರಲಿಲ್ಲ. ಕೊನೆಗೊಂದು ದಿನ, ವಿವರಣೆಯೇ ಇಲ್ಲದೆ, ಉತ್ತರಗಳೇ ಇಲ್ಲದ ಪ್ರಶ್ನೆಯನ್ನು ಬಿಟ್ಟು ಅವಳು ಕಾಫುಕನ ಬದುಕಿನಿಂದ ದೂರ ಹೋಗಿಬಿಟ್ಟಳು. ಈಗ ಅವನ ಬಳಿ ಉಳಿದಿದ್ದು ಯಾವತ್ತಿಗೂ ಉತ್ತರವಿಲ್ಲದ ಪ್ರಶ್ನೆ. ಅವಳ ಅಂತ್ಯಕ್ರಿಯೆ ಮುಗಿದು ಚಿತಾಭಸ್ಮವನ್ನು ಕೊಂಡೊಯ್ಯುವಾಗಲು ಅವನಲ್ಲಿ ಈ ಪ್ರಶ್ನೆಯೇ ತುಂಬಿತ್ತು. + +ಕಾಫುಕ ಕಣ್ಣು ಮುಚ್ಚಿದಾಗಲೆಲ್ಲ ಅವನ ಹೆಂಡತಿ ಬೇರೊಬ್ಬನ ಜೊತೆ ಪ್ರೇಮಿಸುತ್ತಿರುವ ದೃಶ್ಯ ಕಣ್ಣ ಮುಂದೆ ಸುಳಿದು ಮಾಯವಾಗುತ್ತಿತ್ತು. ಪ್ರಯತ್ನಪೂರ್ವಕವಾಗಿ ಚಿತ್ರವನ್ನು ಹೊಡೆದೋಡಿಸಲು ಯತ್ನಿಸಿದರೆ, ಇನ್ನೇನು ಆ ದೃಶ್ಯ ಮರೆಯಾಗಿ ಹೋಯಿತು ಎನ್ನುವಷ್ಟರಲ್ಲಿ ಮತ್ತೆ ಅಲೆ ಅಲೆಯಾಗಿ ಎದ್ದು ಬರುತ್ತಿತ್ತು. ಅವನಿಗೆ ಈ ವಿಷಯವನ್ನು ಕಲ್ಪಿಸಿಕೊಳ್ಳುವದು ಇಷ್ಟವಿರದಿದ್ದರೂ, ಅಪ್ರಯತ್ನಪೂರ್ವಕವಾಗಿ ಅವನ ಹೆಂಡತಿಯು ಮತ್ತೊಬ್ಬರೊಟ್ಟಿಗಿರುವ ಚಿತ್ರ ಅವನ ಮನೋ ಹಿಡಿತವನ್ನು ದಾಟಿ ಹೊರಗೆ ಬಂದು ತಣ್ಣಗಿನ ಹರಿತ ಚಾಕುವಿನಂತೆ ಅವನೆದೆಯನ್ನು ಕೊರೆಯುತ್ತಾ ಇಳಿಯುತ್ತಿತ್ತು. ಹಲವಷ್ಟು ಬಾರಿ ಅವನಿಗೆ ಬಗೆಗಿನ ಇದೊಂದು ವಿಷಯ ತಿಳಿಯದಿದ್ದರೆ ಒಳ್ಳೆಯದಿತ್ತೆಂದು ಅನಿಸುವುದುಂಟು. ಆದರೂ ಏನನ್ನೂ ತಿಳಿಯದೇ ಇರುವದಕ್ಕಿಂತ ಯಾವುದೇ ಸಂದರ್ಭದಲ್ಲಿ ವಿಷಯದ ಬಗೆಗಿನ ಅರಿವು ಒಳ್ಳೆಯದು ಎಂದು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುತ್ತಿದ್ದ. ಎಷ್ಟೇ ಆಘಾತಕಾರಿಯಾದರು ಸತ್ಯವೆಂಬುದು ಸತ್ಯವೇ ಹೌದು. ಸತ್ಯವನ್ನು ಒಪ್ಪಿಕೊಳ್ಳುವದೊಂದೇ ಸತ್ಯದ ಹೊಡೆತವನ್ನು ಸಹಿಸಿಕೊಳ್ಳುವ ಏಕೈಕ ಮಾರ್ಗ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಳ್ಳುತ್ತಿದ್ದ. + +ಅವನ ಹೆಂಡತಿಯ ಈ ನಡವಳಿಕೆಯ ಬಗ್ಗೆ ಅರಿವಿದ್ದೂ ಏನೂ ತಿಳಿದಿಲ್ಲವೆಂಬಂತೆ ಬದುಕುವುದು ಕಾಫುಕನಿಗೆ ಅತ್ಯ೦ತ ಯಾತನೆಯ ಕೆಲಸವಾಗಿತ್ತು. ಒಳಗೆ ಸಣ್ಣಗೆ ಸೋರುತ್ತಿದ್ದ, ಗಾಸಿಗೊಂಡ ಹೃದಯ, ಹೊರಗೆ ತಣ್ಣಗೆ ನಗೆ. ಇಬ್ಬರಿಗೂ ಗೊತ್ತಿದ್ದ ವಿಷಯವನ್ನು ಇಬ್ಬರೂ ಮುಚ್ಚಿಟ್ಟು, ಪರಸ್ಪರರನ್ನು ನಂಬಿಸುತ್ತ, ಎಲ್ಲವೂ ಸಹಜವಾಗಿದೆ ಎಂಬಂತೆ ಅವರಿಬ್ಬರೂ ನಗುತ್ತ, ಮಾತನಾಡುತ್ತ, ರಾತ್ರಿ ಒಬ್ಬರನ್ನೊಬ್ಬರು ತಬ್ಬಿ ಮಲಗುತ್ತಾ ದಿನಗಳನ್ನು ದೂಡುತ್ತಿದ್ದರು. ಬಹುಶಃ ಸಾಧಾರಣ ಜನರಿಗೆ ಇದು ಅಸಾಧ್ಯವಾಗಿರಬಹುದು, ಆದರೆ ಕಾಫುಕ ಒಬ್ಬ ಅಸಾಮಾನ್ಯ ನಟನಾಗಿದ್ದ. ತನ್ನತನ, ತನ್ನ ರಕ್ತ ಮಾಂಸಗಳನ್ನು ತಾನೇ ಕಳೆದುಕೊಳ್ಳುತ್ತ, ತಾನು ತೊಟ್ಟ ಪಾತ್ರದ ಆಕಾರವೇ ಆಗಿ ಕೊನೆಗೆ ಆ ಪಾತ್ರವೇ ತಾನಾಗುವದು ಕಾಫುಕನೊಳಗಿನ ನಟನ ಅಸಾಮಾನ್ಯ ಪ್ರತಿಭೆಯಾಗಿತ್ತು ಮತ್ತು ತನ್ನ ಸರ್ವ ಶಕ್ತಿಯನ್ನೂ ಧಾರೆಯೆರೆದು ಕಾಫುಕ ಪ್ರತಿ ದಿನದ ಈ ಪಾತ್ರವನ್ನು ನಿಭಾಯಿಸುತ್ತಿದ್ದ. ಪ್ರೇಕ್ಷಕರೇ ಇಲ್ಲದ ನಾಟಕದಲ್ಲಿ ಅವನು ಪ್ರತಿದಿನದ ಪ್ರತಿಕ್ಷಣದ ಅಭಿನಯಿಸುತ್ತಿದ್ದ. + +ಇಷ್ಟಾದರೂ ಅವನ ಹೆಂಡತಿಯ ಇದೊಂದು ಗುಣ- ಕೆಲ ಸಂದರ್ಭದಲ್ಲಿ ಬೇರೊಬ್ಬರೊಟ್ಟಿಗೆ ಸಂಬಂಧ ಬೆಳೆಸುವದನ್ನು ಹೊರತು ಪಡಿಸಿದರೆ ಅವರ ದಾಂಪತ್ಯ ಅತ್ಯ೦ತ ಸುಖಮಯವೂ, ಖುಷಿಯದೂ ಆಗಿತ್ತು. ಯಾವುದೇ ಆರ್ಥಿಕ ತೊಂದರೆಯಿಲ್ಲದೆ ಅವರ ವೃತ್ತಿಜೀವನವು ಸಲೀಸಾಗಿ ಮುಂದುವರೆಯುತ್ತಿತ್ತು. ಇಪ್ಪತ್ತು ವರ್ಷಗಳಷ್ಟು ಸುದೀರ್ಘ ದಾಂಪತ್ಯ ಜೀವನದಲ್ಲಿ ಅವರು ಲೆಕ್ಕವಿಲ್ಲದಷ್ಟು ಸಲ ಪರಸ್ಪರರನ್ನು ಕೂಡಿದ್ದರು. ಅವರಿಬ್ಬರ ಸಮಾಗಮ ಅವನ ಪಾಲಿಗೆ ಯಾವತ್ತಿಗೂ ತೃಪ್ತಿಕರವಾಗಿತ್ತು. ಮೂತ್ರಕೋಶದ ಕ್ಯಾನ್ಸರಿನಿಂದ ಅವಳು ತೀರಿಕೊಂಡ ನಂತರ ಕಾಫುಕ ಅನೇಕ ಮಹಿಳೆಯೊರೊಟ್ಟಿಗೆ ಕೂಡಿದ್ದರೂ ಅವನ ಹೆಂಡತಿಯೊಟ್ಟಿಗಿದ್ದ ಭಾವ ತೀವ್ರತೆ ಯಾರೊಟ್ಟಿಗೂ ಬಂದಿರಲಿಲ್ಲ. + +ಕಾಫುಕನ ಆಫೀಸಿನವರು ಮಿಸಾಕಿಗೆ ಸಂಬಳವನ್ನು ಪಾವತಿಸುವ ಮೊದಲು ಅವಳ ಹಲವು ವಿವರಗಳನ್ನು ಕೇಳಿದ್ದರು. ಹೀಗಾಗಿ ಕಾಫುಕ ಅವಳ ಹುಟ್ಟಿದ ಊರು, ಜನ್ಮ ದಿನಾ೦ಕ, ಸಧ್ಯಕ್ಕೆ ವಾಸವಾಗಿರುವ ಸ್ಥಳದ ವಿಳಾಸ, ಡ್ರೈವಿಂಗ್ ಲೈಸೆನ್ಸ್ ನಂಬರ್, ಬ್ಯಾ೦ಕ್ ಅಕೌ೦ಟ್ ನಂಬರ್ ಮುಂತಾದವುಗಳನ್ನು ಕೇಳಿದ್ದ. ಮಿಸಾಕಿ ಅಕ್ಬನೆ ಬೀದಿಯಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದಳು. ಅವಳು ಹುಟ್ಟಿದ್ದು ಹೊಕ್ಕೈಡೋ ದ್ವೀಪದ ಜುನಿಟಾಕಿಚೊ ಎನ್ನುವ ಊರು ಮತ್ತು ಕೆಲ ದಿನಗಳ ಹಿಂದಷ್ಟೇ ಅವಳಿಗೆ ೨೪ ವರ್ಷ ತುಂಬಿದ್ದವು. ಹೊಕ್ಕೈಡೋ ದ್ವೀಪವಾಗಲೀ ಅದರಲ್ಲಿನ ಜುನಿಟಾಕಿಚೊ ಎನ್ನುವ ಊರಾಗಲಿ ಎಲ್ಲಿದೆ ಎನ್ನುವದರ ಬಗ್ಗೆ ಕಾಫುಕನಿಗೆ ಎಳ್ಳಷ್ಟೂ ವಿವರ ಇರದಿದ್ದರೂ ಅವಳಿಗೆ ಕೇವಲ ಇಪ್ಪತ್ನಾಲ್ಕು ವರ್ಷ ಎನ್ನುವದು ಅವನ ಗಮನ ಸೆಳಿದಿತ್ತು.ಕಾಫುಕನ ಹೆಂಡತಿ ಕೇವಲ ಮೂರು ದಿನಗಳ ಕಾಲ ಜೀವಿಸಿದ್ದ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹುಟ್ಟಿದ ಮೂರನೇ ರಾತ್ರಿ ಮಗುವಿನ ಹೃದಯ ಸ್ವಲ್ಪವೂ ಸುಳಿವು ನೀಡದೆ ಸ್ಥಬ್ದವಾಗಿತ್ತು. ಮಾರನೆಯ ದಿನ ಬೆಳಿಗ್ಗೆ ಅವರು ಮಗುವನ್ನು ಎತ್ತಿಕೊಂಡಾಗ ಮಗುವಿನ ದೇಹ ತಣ್ಣಗೆ ಕೊರೆಯುತ್ತಿತ್ತು. ಆಸ್ಪತ್ರೆಯವರು ಹುಟ್ಟುವಾಗಲೇ ಮಗುವಿನ ಹೃದಯದಲ್ಲಿ ನ್ಯೂನತೆಯಿತ್ತು ಎಂದಿದ್ದರು. ಆಸ್ಪತ್ರೆಯವರ ಮಾತನನ್ನು ಹೌದೋ ಅಲ್ಲವೋ ಎನ್ನುವದನ್ನು ಪರೀಕ್ಷೆ ಮಾಡಲಿಕ್ಕೆ ಯಾವುದೇ ದಾರಿಯಿರಲಿಲ್ಲ. ಹಾಗಂತ ಸಾವಿನ ನೈಜ ಕಾರಣ ಕಾಫುಕ ಮತ್ತು ಅವನ ಹೆಂಡತಿಯ ದುಃಖವನ್ನು ಕಡಿಮೆ ಮಾಡುತಿತ್ತು ಎಂದೇನೂ ಅಲ್ಲ. ಒಳ್ಳೆಯದೋ ಕೆಟ್ಟದ್ದೋ ಅವರು ಮಗುವಿಗೆ ಯಾವುದೇ ಹೆಸರಿಟ್ಟಿರಲಿಲ್ಲ. + +ಮಗು ಬದುಕಿದ್ದಿದ್ದರೆ ಈಗ ಅವಳಿಗೂ ಮಿಸಾಕಿಯ ಹಾಗೆ ಇಪ್ಪತ್ನಾಲ್ಕು ವರ್ಷಗಳಾಗುತಿತ್ತು. ಪ್ರತಿ ವರ್ಷ ಮಗು ಹುಟ್ಟಿದ ದಿನದಂದು ಕಾಫುಕ ಅವಳ ನೆನಪಿನಲ್ಲಿ ಎರಡು ಕೈಗಳನ್ನು ಜೋಡಿಸಿ ಮೌನವಾಗಿ ಪ್ರಾರ್ಥಿಸುವ ಮೂಲಕ ಹೆಸರಿಡುವ ಮೊದಲೇ ತೀರಿಕೊಂಡ ಪುಟ್ಟ ಹೃದಯವನ್ನು ನೆನಪಿಸಿಕೊಳ್ಳುತ್ತಿದ್ದ. ಆಮೇಲೆ ಬದುಕಿದಿದ್ದರೆ ಈಗ ಅವಳಿಗೆ ಎಷ್ಟು ವರ್ಷಗಳಾಗಿರುತ್ತಿದ್ದವು ಎಂದು ಲೆಕ್ಕ ಹಾಕುತ್ತಿದ್ದ. + +ಮಗುವಿನ ಹಠಾತ್ ಸಾವು ಕಾಫುಕ ಮತ್ತವನ ಹೆಂಡತಿಯನ್ನು ತೀವ್ರವಾಗಿ ಘಾಸಿಗೊಳಿಸಿತ್ತು. ಈ ಆಘಾತದಿಂದ ಹೊರಬರಲು ಅವರು ಸಾಕಷ್ಟು ಸಮಯವನ್ನು ತೆಗೆದುಕೊಂಡರು. ಬಹುತೇಕ ಸಮಯವನ್ನು ಅವರು ಅಪಾರ್ಟ್ ಮೆ೦ಟಿನ ಮುಚ್ಚಿದ ಬಾಗಿಲಿನ ಏಕಾಂತದಲ್ಲಿ ಕಳೆಯುತ್ತಿದ್ದರು. ಮಾತು ಅವರ ದುಃಖವನ್ನು ಅಗ್ಗಗೊಳಿಸುತ್ತವೆಯೇನೋ ಎನ್ನುವ ಹಾಗೆ ಅವರು ಮೌನಿಗಳಾದರು. ಅವಳು ಎಡಬಿಡದೆ ವೈನನ್ನು ಕುಡಿಯಲು ಶುರುಮಾಡಿದರೆ ಅವನು ಸದಾ ಕಾಲ ಕ್ಯಾಲಿಗ್ರಾಫಿಯಲ್ಲಿ ಮುಳುಗಿರುತ್ತಿದ್ದ. ಪೆನ್ನಿನ ಚೂಪು ತುದಿಯಿಂದ ಹೊರಬರುತ್ತಿದ್ದ ಕಪ್ಪು ಶಾಯಿ ಅವನ ಹೃದಯದ ದುಃಖವನ್ನು ಕಾಗದದ ಮೇಲೆ ಶಬ್ದಗಳಾಕಾರದಲ್ಲಿ ಚಿತ್ರಿಸುತ್ತಿದ್ದವೇನೋ ಎನ್ನುವಂತೆ ತೀವ್ರವಾಗಿ ಬರೆಯುತ್ತಿದ್ದ. + +ಒಟ್ಟಿನಲ್ಲಿ ಒಬ್ಬರಿಗೊಬ್ಬರು ಆಸರೆಯಾಗುತ್ತ ನಿಧಾನವಾಗಿ ಅವರು ಮಗುವಿನ ಸಾವನ್ನು ಹಿಂದಕ್ಕೆ ತಳ್ಳಲಾರಂಭಿಸಿದರು. ಕೆಲಸದ ಮೇಲೆ ಅವರ ಗಮನ ಇನ್ನಷ್ಟು ತೀವ್ರವಾಯಿತು. ಹೊಸ ಪಾತ್ರಗಳು ಅಭಿನಯಿಸುವಾಗ ಪಾತ್ರದ ಆಳಕ್ಕಿಳಿದು ಪ್ರತಿ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತೆ ಅಭಿನಯಿಸುತ್ತಿದ್ದರು. ಅವಳು ಇನ್ನೊಮ್ಮೆ ಮಗು ಬೇಡವೆಂದಳು. ಕಾಫುಕ ಮರು ಮಾತನಾಡದೆ ಒಪ್ಪಿದ. + +ಈಗ ಹಿಂದಿನದೆಲ್ಲ ನೆನಪಿಸಿಕೊಂಡರೆ ಅನ್ನಿಸುತ್ತದೆ – ಮಗು ತೀರಿದ ದುರ್ಬಲ ಕ್ಷಣದಲ್ಲೇ ಅವನ ಹೆಂಡತಿಗೆ ಇನ್ನೊಂದು ಸಂಬಂಧ ಶುರುವಾಗಿದ್ದಿರಬೇಕು. ಪ್ರಾಯಶಃ ಮಗುವಿನ ಮರಣದ ಸಂಕಟ ಅವಳಲ್ಲಿನ ಸುಪ್ತ ಕಾಮವನ್ನು ಬಡಿದೆಬ್ಬಿಸಿರಬೇಕು. ಆದರೆ ಅದು ಕೇವಲ ಅವನ ಊಹೆ ಮಾತ್ರ.“ನಾನೊಂದು ವಿಷಯ ಕೇಳಬಹುದೇ?” ಮಿಸಾಕಿ ಕೇಳಿದಳು. + +ಕಾಫುಕ ಕಿಟಕಿಯ ಮೂಲಕ ಹೊರಗಿನ ದೃಶ್ಯಗಳನ್ನು ನೋಡುತ್ತಾ ಯಾವುದೋ ಯೋಚನೆಯಲ್ಲಿ ಮುಳುಗಿದ್ದ. ಅವನು ಆಶ್ಚರ್ಯಚಕಿತನಾಗಿ ಅವಳೆಡೆಗೆ ತಿರುಗಿದ. ಅವಳು ಕೆಲಸಕ್ಕೆ ಸೇರಿದ ಕಳೆದ ಎರಡು ತಿಂಗಳುಗಳಲ್ಲಿ ಇದೆ ಮೊದಲ ಸಲ ಅವಳಾಗಿಯೇ ಮಾತನ್ನು ಆರಂಭಿಸಿದ್ದಿರಬೇಕು.“ಸರಿ.” ಕಾಫುಕ + +“ನೀನ್ಯಾಕೆ ನಟನಾಗಿದ್ದು”? + +“ನಾನು ಕಾಲೇಜಿನಲ್ಲಿದ್ದಾಗ ನನ್ನ ಗೆಳತಿಯೊಬ್ಬಳು ಅವಳ ನಾಟಕದ ತಂಡಕ್ಕೆ ಸೇರುವಂತೆ ಆಹ್ವಾನಿಸಿದ್ದಳು. ನಿಜ ಹೇಳಬೇಕೆಂದರೆ ನನಗೆ ಬೇಸ್ ಬಾಲ್ ಆಟಗಾರನಾಗಬೇಕು ಎಂದಿತ್ತು. ಆದರೆ ಕಾಲೇಜಿನ ಬೇಸ್ ಬಾಲ್ ತಂಡಕ್ಕೆ ಆಯ್ಕೆಯಾಗುವಷ್ಟು ಕೌಶಲ್ಯ ನನ್ನಲ್ಲಿರಲಿಲ್ಲ. ಆದರೇನು ಬೇಸ್ ಬಾಲ್ ಇಲ್ಲದಿದ್ದರೆ ಇನ್ನೊಂದು. ಅಲ್ಲದೇ ನನಗೆ ಆ ಹುಡುಗಿಯ ಜೊತೆಗಿರುವದು ಇಷ್ಟವಾಗಿತ್ತು. ಹೀಗಾಗಿ ನಾಟಕದಲ್ಲಿ ಪಾತ್ರವಹಿಸಲು ಒಪ್ಪಿಕೊಂಡೆ. ನಟಿಸಲು ಶುರುಮಾಡಿದ ಸ್ವಲ್ಪ ದಿನಗಳಲ್ಲೇ ನಾನು ನಟನೆಯನ್ನು ಇಷ್ಟಪಡಲಾರಂಭಿಸಿದೆ. ನಟನೆ ನಾನಲ್ಲದ ಇನ್ನೊಬ್ಬನಾಗುವ ಅವಕಾಶ ಕೊಡುತಿತ್ತು ಮತ್ತು ಒಮ್ಮೆ ನಾಟಕ ಮುಗಿದ ಕೊಡಲೇ ನಾನಲ್ಲದ ಇನ್ನೊಬ್ಬನಿಂದ ಮತ್ತೆ ನಾನು ಬಿಟ್ಟು ಹೋದ ನಾನು ಆಗಬಹುದು. + +“ನೀನಲ್ಲದ ಇನ್ನೊಬ್ಬನಾಗುವದು ನಿನಗೆ ಇಷ್ಟವಾಗುತಿತ್ತೋ?” + +“ಹೌದು, ಎಲ್ಲಿಯವರೆಗೆ ಮತ್ತೆ ನಾನಾಗಿ ವಾಪಸಾಗಬಹುದೋ ಅಲ್ಲಿಯವರೆಗೆ” + +“ಯಾವತ್ತಾದರೂ ಮತ್ತೆ ವಾಪಸು ಹೋಗುವದು ಬೇಡವೆಂದು ಅನ್ನಿಸಿತ್ತಾ?” + +ಕಾಫುಕ ಒಂದು ಕ್ಷಣ ಸುಮ್ಮನಾದ. ಇಲ್ಲಿಯವರೆಗೆ ಅವನಿಗೆ ಇಂತಹ ಪ್ರಶ್ನೆಯನ್ನು ಯಾರೂ ಕೇಳಿರಲಿಲ್ಲ. ಅವರು ಟೋಕಿಯೋ ನಗರದ ಮುಖ್ಯರಸ್ತೆಯ ಕಡೆಗೆ ಹೋಗುತ್ತಿದ್ದರು. ರಸ್ತೆ ವಾಹನಗಳಿಂದ ತುಂಬಿತ್ತು. + +“ಬೇರೆಡೆಗೆ ಹೋಗಲಿಕ್ಕೆ ಬೇರೆ ಯಾವ ಸ್ಥಳವೂ ಇಲ್ಲ, ಅಲ್ಲವೇ?” ಕಾಫುಕ ಕೇಳಿದ.ಮಿಸಾಕಿ ಉತ್ತರಸಲಿಲ್ಲ. + +ಮತ್ತೆ ಹಲವಷ್ಟು ಸಮಯ ಇಬ್ಬರೂ ಮೌನವಾಗಿ ರಸ್ತೆಯನ್ನು ದಿಟ್ಟಿಸಿದರು. ಕಾಫುಕ ತಲೆಯ ಮೇಲಿದ್ದ ಬೇಸ್ ಬಾಲ್ ಕ್ಯಾಪನ್ನು ಒಮ್ಮೆ ತೆಗೆದು ಅದರ ಆಕಾರವನ್ನು ಪರೀಕ್ಷಿಸುವಂತೆ ಕಣ್ಣಾಡಿಸಿದ. ಅವರ ಕಾರಿನ ಪಕ್ಕದಲ್ಲಿ ಬೃಹಾದಾಕಾರದ ಟ್ರ್ಯಾಕ್ಟರ್ ನಿಂತಿತ್ತು. + +“ಬಹುಶ: ನಾನು ಎಲ್ಲೆಯನ್ನು ಮೀರುತ್ತಿರಬಹುದು.” ಮಿಸಾಕಿ ನುಡಿದಳು ‘ಆದರೆ ಹಲವಷ್ಟು ದಿನಗಳಿಂದ ಈ ಪ್ರಶ್ನೆ ನನ್ನ ತಲೆಯಲ್ಲಿದೆ. ನಾನು ಕೇಳಬಹುದೇ?” + +“ಕೇಳು.” ಕಾಫುಕ + +“ನಿನಗೆ ಯಾಕೆ ಯಾರು ಸ್ನೇಹಿತರಿಲ್ಲ?” + +ಕಾಫುಕ ಪ್ರಶ್ನಾರ್ಥಕವಾಗಿ ಅವಳ ಮುಖವನ್ನು ದಿಟ್ಟಿಸಿದ “ನನಗೆ ಯಾರು ಸ್ನೇಹಿತರಿಲ್ಲವೆಂದು ನಿಂಗೆ ಹೇಗೆ ಗೊತ್ತು?” + +ಮಿಸಾಕಿ ಹೆಗಲು ಕುಣಿಸಿದಳು. “ಇಷ್ಟು ದಿನವಾಯ್ತು ನಿನ್ನ ಕಾರಿಗೆ ಡ್ರೈವರ್ ಆಗಿ, ಅಷ್ಟೂ ತಿಳಿಯದೆ” + +ಕೆಲ ಕ್ಷಣ ಕಾಫುಕ ಪಕ್ಕದಲ್ಲಿದ್ದ ಟ್ರ್ಯಾಕ್ಟರಿನ ಅಗಲ ಚಕ್ರಗಳನ್ನು ತದೇಕ ದಿಟ್ಟಿಸಿದ. “ಆತ್ಮೀಯ ಸ್ನೇಹಿತರು ಎಂದು ಬಹಳಷ್ಟು ಜನರಿಲ್ಲ. ಯಾಕೋ ಗೊತ್ತಿಲ್ಲ.” + +“ನೀನು ಚಿಕ್ಕವನಾಗಿದ್ದಾಗಲಿಂದಲೂ ಹೀಗೆಯಾ?” + +“ಉಹೂ೦ ನಾನು ಸಣ್ಣವನಾಗಿದ್ದಾಗ ನನಗೆ ತುಂಬಾ ಜನ ಸ್ನೇಹಿತರಿದ್ದರು. ಆದರೆ ದೊಡ್ಡವನಾದಂತೆಲ್ಲ, ಇನ್ನೂ ನಿರ್ದಿಷ್ಟವಾಗಿ ಹೇಳಬೇಕೆಂದರೆ ಮದುವೆಯಾದ ಮೇಲೆ ಸ್ನೇಹಿತರ ಅವಶ್ಯಕತೆ ಇದೆ ಅನ್ನಿಸಲಿಲ್ಲ.” + +“ಅಂದರೆ ಹೆಂಡತಿಯಿರುವದರಿಂದ ನಿನಗೆ ಸ್ನೇಹಿತರು ಬೇಕು ಅನ್ನಿಸಲೇ ಇಲ್ಲವೇ?” + +“ಹೌದು. ಇಷ್ಟಕ್ಕೂ ನಾನು ಮತ್ತು ಅವಳು ಅತ್ಯುತ್ತಮ ಸ್ನೇಹಿತರೂ ಕೂಡ.” + +“ಮದುವೆಯಾದಾಗ ನಿನಗೆ ವಯಸ್ಸೆಷ್ಟಾಗಿತ್ತು.” + +“ಮೂವತ್ತು. ನಾನು ಮತ್ತು ಅವಳು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದೆವು. ಅವಳಿಗೆ ಮುಖ್ಯ ಪಾತ್ರವಿತ್ತು. ನನಗೆ ಒಂದು ಸಣ್ಣ ಪಾತ್ರ.” + +ವಾಹನ ದಟ್ಟಣೆ ಕಡಿಮೆಯಾದಂತೆ ತೋರಿತು. ಕಾರು ನಿಧಾನವಾಗಿ ಮುಂದಕ್ಕೋಡಿತು. ಕಾರಿನ ಮೇಲ್ಚಾವಣಿಯನ್ನು ಕೆಳಗಿಳಿಸಿದ್ದರು. + +“ನೀನು ಯಾವತ್ತೂ ಕುಡಿಯುವದೇ ಇಲ್ಲವೇ.?” ಕಾಫುಕ ವಿಷಯವನ್ನು ಬದಲಾಯಿಸಿದ + +“ನನ್ನ ದೇಹಕ್ಕೆ ಆಲ್ಕೋಹಾಲ್ ಆಗುವುದಿಲ್ಲ.” ಮಿಸಾಕಿ ಉತ್ತರಿಸಿದಳು. “ಅಲ್ಲದೆ ನನ್ನಮ್ಮ ಅತಿಯಾಗಿ ಕುಡಿಯುತ್ತಿದ್ದಳು. ನಾನು ಕುಡಿಯದೆ ಇರುವದಕ್ಕೆ ಬಹುಶಃ ಅದು ಒಂದು ಕಾರಣವಿರಬಹುದು.” + +“ಅವಳ ಕುಡಿತದ ತೊಂದರೆ ಈಗಲೂ ಇದೆಯೇ?” ಕಾಫುಕ + +ಮಿಸಾಕಿ ಅಡ್ಡಡ್ಡ ತಲೆಯಾಡಿಸಿದಳು. “ನನ್ನ ತಾಯಿ ಸತ್ತು ಹೋಗಿದ್ದಾಳೆ. ಒಂದು ದಿನ ಅತಿಯಾಗಿ ಕುಡಿದು ಕಾರನ್ನು ಚಲಾಯಿಸುವಾಗ ಅಪಘಾತವಾಗಿ ಸ್ಥಳದಲ್ಲೇ ಮೃತಪಟ್ಟಳು. ನನಗಾಗ ಹದಿನೇಳು ವರ್ಷ.” + +“ಅಯ್ಯೋ, ಹಾಗಬಾರದಿತ್ತು.” ಕಾಫುಕ ಖೇದ ವ್ಯಕ್ತಪಡಿಸಿದ. + +“ಮಾಡಿದ ಮೇಲೆ ಪ್ರತಿಫಲ ಅನುಭವಿಸಲೇಬೇಕು.” ಮಿಸಾಕಿ ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ನುಡಿದಳು. “ಒಂದಲ್ಲಒಂದು ದಿನ ಹಾಗೆ ಸಾಯುತ್ತಾಳೆ ಎನ್ನುವದು ನನಗೆ ಖಾತ್ರಿಯಿತ್ತು. ಆದರೆ ಯಾವಾಗ ಎನ್ನುವದು ಗೊತ್ತಿರಲಿಲ್ಲ.” + +ಅವರು ಕ್ಷಣಕಾಲ ಮೌನವಾಗಿ ಕುಳಿತರು.“ಮತ್ತೆ ನಿನ್ನ ಅಪ್ಪ?” + +ಅವನು ಎಲ್ಲಿದ್ದಾನೆ ಎನ್ನುವದು ನನಗೆ ಗೊತ್ತಿಲ್ಲ. ನನಗೆ ಎಂಟು ವರ್ಷವಾಗಿದ್ದಾಗ ಅವನು ಮನೆ ಬಿಟ್ಟು ಹೋದ. ಮತ್ತೆ ಯಾವತ್ತೂ ಅವನ ಬಗ್ಗೆ ಯಾವ ವಿಷಯವೂ ನಮಗೆ ತಿಳಿಯಲಿಲ್ಲ. ಅಪ್ಪ ಮನೆ ಬಿಟ್ಟಿದ್ದಕ್ಕೆ ನಾನೇ ಕಾರಣ ಎಂದು ಅಮ್ಮ ಪ್ರತಿ ದಿನ ನನ್ನನ್ನು ದೂಷಿಸುತ್ತಿದ್ದಳು.” + +“ಯಾಕೆ?” + +“ನಾನು ಅವರಿಬ್ಬರ ಒಬ್ಬಳೇ ಮಗು. ಅಮ್ಮನ ಪ್ರಕಾರ ನಾನು ಸುಂದರವಾಗಿಲ್ಲ. ಇಲ್ಲದಿದ್ದರೆ ಅಪ್ಪ ನಮ್ಮನ್ನು ಯಾವತ್ತಿಗೂ ಬಿಟ್ಟು ಹೋಗುತ್ತಿರಲಿಲ್ಲ. ನಾನು ಹುಟ್ಟು ಕುರೂಪಿಯಾಗಿದ್ದೇ ಅಪ್ಪ ಮನೆ ಬಿಟ್ಟದ್ದಕ್ಕೆ ಕಾರಣ.” + +“ನೀನೇನೂ ಕುರೂಪಿಯಲ್ಲ. ಆದರೆ ನಿನ್ನ ಅಮ್ಮನಿಗೆ ಮಾತ್ರ ಹಾಗೆ ಅನಿಸಿರಬಹುದು.” + +ಮಿಸಾಕಿ ಹೆಗಲು ಕುಣಿಸಿದಳು. “ಅಮ್ಮ ಯಾವಾಗಲೂ ಹಾಗೆ ಹೇಳುತ್ತಿರಲಿಲ್ಲ. ಅವಳು ಅತಿಯಾಗಿ ಕುಡಿದಾಗ ಮಾತ್ರ ಈ ರೀತಿಯ ಚುಚ್ಚು ನುಡಿಗಳನ್ನು ಮತ್ತೆ ಮತ್ತೆ ಆಡುತ್ತಿದ್ದಳು. ನನಗೆ ನೋವಾಗುತ್ತಿತ್ತು. ನಾನು ಹೀಗೆ ವಿಚಾರ ಮಾಡುವದು ತಪ್ಪೇನೋ, ಆದರೆ ಅವಳು ಸತ್ತಾಗ ನನಗೆ ಒಂದು ರೀತಿಯ ನೆಮ್ಮದಿ ಅನಿಸಿತ್ತು.” + +ಇಬ್ಬರು ಒಂದು ಸುದೀರ್ಘ ಮೌನದ ಮೊರೆ ಹೊಕ್ಕರು. + +“ನಿನಗೆ ಸ್ನೇಹಿತರಿದ್ದಾರೆಯೇ?” ಕಾಫುಕ ವಿಚಾರಿಸಿದ. + +“ಒಬ್ಬರೂ ಇಲ್ಲ.” ಮಿಸಾಕಿ“ಯಾಕೆ?” + +ಅವಳು ಉತ್ತರಿಸಿಲ್ಲ. ದೃಷ್ಟಿಯನ್ನೆಲ್ಲ ರಸ್ತೆಯ ಮೇಲೆ ಕೇಂದ್ರೀಕರಿಸಿ ಕಾರನ್ನು ಮುಂದಕ್ಕೆ ಓಡಿಸಿದಳು. + +ಕಾಫುಕ ಕಣ್ಮುಚ್ಚಿ ಸಣ್ಣ ನಿದ್ರೆಯನ್ನು ಮಾಡಲು ಯತ್ನಿಸಿದ. ಆದರೆ ನಿದ್ರೆ ಹತ್ತಿರವೆಲ್ಲೂ ಸುಳಿಯಲಿಲ್ಲ. ಕಾರು ಸ್ವಲ್ಪ ಮುಂದಕ್ಕೆ ಚಲಿಸುವದು ಮತ್ತೆ ನಿಲ್ಲುವದು ಕಣ್ಮುಚ್ಚಿದ ಅವನ ಅನುಭವಕ್ಕೆ ಬಂದಿತು. ಪಕ್ಕದಲ್ಲಿದ್ದ ಟ್ರ್ಯಾಕ್ಟರ್ ಸ್ವಲ್ಪ ಮುಂದಕ್ಕೆ ಹೋಗಿ ಮತ್ತೆ ನಿಂತಿತು. ಅದರ ಬೃಹಾದಾಕಾರದ ನೆರಳು ಯಾವುದೋ ನಿಯತಿಯಂತೆ ಅವರ ಕಾರನ್ನು ಆವರಿಸಿತ್ತು. + +ಕಾಫುಕ ನಿದ್ರೆ ಮಾಡುವ ವ್ಯರ್ಥ ಪ್ರಯತ್ನವನ್ನು ಕೈಬಿಟ್ಟ. “ನಾನು ಕೊನೆಯದಾಗಿ ಬೇರೊಬ್ಬರೊಟ್ಟಿಗೆ ಸ್ನೇಹ ಬೆಳೆಸಿದ್ದು ಹತ್ತು ವರ್ಷಗಳ ಹಿಂದೆ.” ಕಣ್ಣು ಬಿಡುತ್ತ ಅವನು ಹೇಳಿದ. “ಬಹುಶ: ಸ್ನೇಹಿತನ ಹಾಗೆ ಎನ್ನುವದು ಸರಿಯೇನೋ? ಅವನು ನನಗಿಂತ ಆರೋ ಏಳೋ ವರ್ಷಕ್ಕೆ ಚಿಕ್ಕವನು. ಒಳ್ಳೆ ಮನುಷ್ಯ. ಅವನಿಗೆ ಕುಡಿಯುವದು ಅತ್ಯಂತ ಪ್ರಿಯವಾದ ಕೆಲಸವಾಗಿತ್ತು. ಹಾಗಾಗಿ ನಾವು ಸಾಕಷ್ಟು ಸಲ ಕುಡಿಯುತ್ತ ಹರಟೆ ಹೊಡೆಯುತ್ತಿದ್ದೆವು.” + +ಮಿಸಾಕಿ ತಲೆಯಾಡಿಸಿದಳು. ಕಾಫುಕ ಒಂದು ಕ್ಷಣ ಮಾತನ್ನು ಮುಂದುವರೆಸಲು ಹಿಂಜರಿದ. + +“ನಿಜ ಹೇಳಬೇಕು ಎಂದರೆ ಅವನು ನನ್ನ ಹೆಂಡತಿಯ ಪ್ರಿಯಕರರಲ್ಲಿ ಒಬ್ಬನಾಗಿದ್ದ. ಆ ವಿಷಯ ನನಗೆ ಗೊತ್ತಿದೆ ಎನ್ನುವದರ ಬಗ್ಗೆ ಅವನಿಗೆ ಅರಿವಿರಲಿಲ್ಲ.”ಕಾಫುಕ ಹೇಳಿದ ಈ ವಿಷಯವನ್ನು ಜೀರ್ಣಿಸಿಕೊಳ್ಳಲು ಮಿಸಾಕಿಗೆ ಸಾಕಷ್ಟು ಸಮಯ ಬೇಕಾಯಿತು. “ಅಂದರೆ ಆ ಮನುಷ್ಯ ನಿನ್ನ ಹೆಂಡತಿಯೊಟ್ಟಿಗೆ ಮಲಗಿದವನು.” + +“ಹೌದು. ಬಹುಶಃ ಅವನಿಗೆ ನನ್ನ ಹೆಂಡತಿಯೊಟ್ಟಿಗೆ ಐದು ಆರು ತಿಂಗಳ ಕಾಲ ಸಂಬಂಧವಿತ್ತೇನೋ.” + +“ನಿನಗೆ ಹೇಗೆ ಗೊತ್ತು?” + +“ನನ್ನ ಹೆಂಡತಿಯೇನೂ ಈ ವಿಷಯವನ್ನು ಬಾಯಿ ಬಿಟ್ಟು ಹೇಳಿರಲಿಲ್ಲ. ಆದರೆ ಅದು ಹೇಗೋ ನನಗೆ ಈ ವಿಷಯ ಅರಿವಿಗೆ ಬಂದಿತ್ತು. ಹೇಗೆ ಅನ್ನುವದನ್ನು ವಿವರಿಸಲು ತುಂಬಾ ಸಮಯವೇ ಬೇಕಾದೀತು. ಒಬ್ಬರೊಟ್ಟಿಗೆ ದೀರ್ಘಕಾಲ ಬಾಳ್ವೆ ಮಾಡಿದರೆ ಅದು ಗೊತ್ತಾಗುತ್ತದೆ. ಆದರೆ ಒಂದಂತೂ ನಿಜ, ಅದು ಕೇವಲ ನನ್ನ ಕಲ್ಪನೆಯಾಗಿರಲಿಲ್ಲ.” + +ಕಾರನ್ನು ಸಿಗ್ನಲಿನ ಬಳಿ ನಿಲ್ಲಿಸಿದಾಗ ಮಿಸಾಕಿ ಕಾರಿನ ಕನ್ನಡಿಯನ್ನು ಸರಿ ಪಡಿಸಿದಳು. “ಆ ವಿಷಯ ನಿಮ್ಮ ಸ್ನೇಹಕ್ಕೆ ಅಡ್ಡಿಯಾಗಲಿಲ್ಲವೇ?” + +“ಒಂದರ್ಥದಲ್ಲಿ ಅದಕ್ಕೆ ವಿರುದ್ಧವಾದದ್ದು.” ಕಾಫುಕ ಹೇಳಿದ. “ನಾನು ಅವನನೊಟ್ಟಿಗೆ ಸ್ನೇಹ ಬೆಳೆಸಿದ್ದೆ ಅವನು ನನ್ನ ಹೆಂಡತಿಯೊಟ್ಟಿಗೆ ಮಲಗಿದ್ದಕ್ಕಾಗಿ.”ಮಿಸಾಕಿ ಮಾತನಾಡಲಿಲ್ಲ. ಅವಳು ಅವನು ಮುಂದುವರೆಸಲಿ ಎಂದು ಕಾಯ್ದಳು. + +“ನನಗೆ ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ನನ್ನ ಹೆಂಡತಿ ಯಾಕೆ ಅವನೊಟ್ಟಿಗೆ ಮಲಗುತ್ತಿದ್ದಾಳೆ, ಅವನನ್ನೇ ಯಾಕೆ ಆರಿಸಿಕೊಂಡಳು ಎನ್ನುವದನ್ನು ಅರ್ಥ ಮಾಡಿಕೊಳ್ಳಲು ಬಯಸುತ್ತಿದ್ದೆ. ಕನಿಷ್ಠಪಕ್ಷ ನಮ್ಮ ಪರಿಚಯದ ಆರಂಭದಲ್ಲಿ ಅದು ನನ್ನ ಉದ್ದೇಶವಾಗಿತ್ತು.” + +ಮಿಸಾಕಿ ದೀರ್ಘವಾಗಿ ಉಸಿರೆಳೆದುಕೊಂಡಳು. ಅವಳ ಎದೆ ಜಾಕೆಟಿನಿಂದ ಮೇಲಕ್ಕೇರಿ ಕೆಳಕ್ಕಿಳಿಯಿತು. “ಕಷ್ಟವಲ್ಲವೇ? ಹೆಂಡತಿಯೊಟ್ಟಿಗೆ ಮಲಗಿದವನ ಜೊತೆ ಕುಡಿಯುವದು, ಹರಟೆ ಹೊಡೆಯುವದು?” + + + +“ಖಂಡಿತವಾಗಿಯೂ ಅದು ಸುಲಭದ ಕೆಲಸವಲ್ಲ” ಕಾಫುಕ ನುಡಿದ. “ನಾನು ಮರೆತುಬಿಡಬೇಕೆಂದುಕೊಂಡ ವಿಷಯಗಳನ್ನು ಮತ್ತೆ ಆಲೋಚಿಸಬೇಕಾಯಿತು. ನಾನು ಹೂತು ಹಾಕಿದ ನೆನಪುಗಳನ್ನು ಮತ್ತೆ ಹೊರಗೆಳೆಯಬೇಕಾಯಿತು. ಆದರೆ ನಾನು ನಟಿಸುತ್ತಿದ್ದೆ. ಏನೇ ಅಂದರೂ ನಟಿಸುವದು ನನ್ನ ವೃತ್ತಿಯಲ್ಲವೇ?” + +“ನೀನಲ್ಲದ ಬೇರೊಬ್ಬರಾಗುವದು.” ಮಿಸಾಕಿ + +“ಹೌದು.” + +“ಆಮೇಲೆ ಮತ್ತೆ ನೀನಾಗುವದು.” + +“ನಿಜ” ಕಾಫುಕ ಹೇಳಿದ. “ನಾವು ಇಷ್ಟಪಡುತ್ತೇವೋ ಇಲ್ಲವೋ, ಆದರೆ ನಾವು ಮರಳಿದ ಜಾಗ ಯಾವತ್ತಿಗೂ ನಾವು ಬಿಟ್ಟುಹೋದ ಸ್ಥಳಕ್ಕಿಂತ ಸ್ವಲ್ಪವಾದರೂ ಭಿನ್ನವಾಗಿರುತ್ತದೆ. ಅದು ನಿಯಮ. ಎರಡು ಜಾಗಗಳು ಯಾವತ್ತಿಗೂ ಒಂದೇ ಸಮನಾಗಿರಲು ಸಾಧ್ಯವಿಲ್ಲ” + +ಮಳೆ ಸುರಿಯಲು ಪ್ರಾರಂಭವಾಯಿತು. ಮಿಸಾಕಿ ಕಾರಿನ ವೈಪರ್ ಗಳನ್ನು ಹಾಕಿದಳು. “ಕೊನೆಗಾದರೂ ವಿಷಯ ಗೊತ್ತಾಯಿತೇ : ನಿನ್ನ ಹೆಂಡತಿ ಅವನೊಟ್ಟಿಗೆ ಮಲಗಿದ್ದು ಯಾಕೆಂದು?” + +“ಇಲ್ಲ” ಕಾಫುಕ ತಲೆಯಾಡಿಸಿದ. “ಕೊನೆಗೂ ಅದೊಂದು ವಿಷಯ ತಿಳಿಯಲಿಲ್ಲ. ನನ್ನಲ್ಲಿಲ್ಲದ ಕೆಲವು ಗುಣಗಳು ಅವನಲ್ಲಿದ್ದವು. ಆದರೆ ಅವುಗಳಲ್ಲಿ ಯಾವ ಗುಣ ನನ್ನ ಹೆಂಡತಿಯನ್ನು ಆಕರ್ಷಿಸಿತ್ತು ಎಂದು ತಿಳಿಯಲಿಲ್ಲ. ನಮ್ಮ ಎಲ್ಲ ಕ್ರಿಯೆಗಳಿಗೂ ಕಾರಣಗಳಿರುವುದಿಲ್ಲ. ಈ ಕೆಲಸವನ್ನು ಇಂತಹದೇ ಕಾರಣಕ್ಕೆ ಮಾಡಿದೆ ಎಂದು ಪ್ರತಿ ಬಾರಿಯೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಗಂಡು ಹೆಣ್ಣುಗಳ ಸಂಬಂಧವೂ ಹಾಗೆ, ಎಲ್ಲ ಬಾರಿಯೂ ಅಂತಹ ಕಟ್ಟುನಿಟ್ಟಾಗಿರುವುದಿಲ್ಲ. ಹಲವಷ್ಟು ಬಾರಿ ಈ ಸಂಬಂಧದ ಎಳೆಗಳು ಸ್ವಯಂ ಕೇಂದ್ರಿತವಾಗಿರುತ್ತವೆ.” + +ಮಿಸಾಕಿ ಒಂದು ಕ್ಷಣ ಯೋಚಿಸಿದಳು. “ಆದರೂ ಕಾರಣ ಏನೆಂದು ತಿಳಿಯದಿದ್ದರೂ ಕೊನೆಯವರೆಗೂ ನೀನು ಅವನೊಟ್ಟಿಗೆ ಸ್ನೇಹವನ್ನು ಉಳಿಸಿಕೊಂಡೆಯಲ್ಲವೇ?” + +ಕಾಫುಕ ತಲೆಯ ಮೇಲಿದ್ದ ಕ್ಯಾಪನ್ನು ತೆಗೆದು ಒಂದು ಕ್ಷಣ ಸವರಿ ಮಡಿಲಲ್ಲಿ ಇಟ್ಟುಕೊಂಡ. “ಅದನ್ನು ವಿವರಿಸುವದು ಕಷ್ಟ” ತಲೆಯನ್ನು ಸವರುತ್ತ ನುಡಿದ. + +“ಒಂದು ಸಲ ಪಾತ್ರದಾಳಕ್ಕೆ ಇಳಿದರೆ ಮತ್ತೆ ಅದರಿಂದ ಹೊರಬರಲು ಸರಿಯಾದ ಸಂದರ್ಭ ಸಿಗುವದು ಕಷ್ಟ. ಪಾತ್ರವೊಂದರ ಪರಿಧಿ ನಿನ್ನ ಭಾವನೆಗಳನ್ನು ಎಷ್ಟೇ ಘಾಸಿಗೊಳಿಸುತ್ತಿದ್ದರೂ ಪಾತ್ರದೊಟ್ಟಿಗಿನ ಪ್ರವಾಹದಲ್ಲಿ ಒಂದಾಗಿ, ಪಾತ್ರಕ್ಕೆ ತನ್ನದೇ ಆದ ಸ್ವರೂಪ ಸಿಗುವವರೆಗೆ ಕಾಯುಬೇಕು. ಆಗಲೇ ಪಾತ್ರದ ನಿಜವಾದ ಅರ್ಥ ವಿಸ್ತಾರ ಗೋಚರವಾಗುತ್ತದೆ. ಅದು ಸಂಗೀತದಂತೆ. ಸಂಗೀತವೊಂದು ಕೊನೆ ತಲುಪಬೇಕಾದರೆ ಮೊದಲೇ ನಿರ್ಧರಿಸಿದ ರಾಗವೊಂದರ ತುತ್ತತುದಿಯ ಶೃ೦ಗವನ್ನು ತಲುಪಬೇಕಲ್ಲವೇ? ಇದು ಹಾಗೆಯೇ. ನಾನು ಹೇಳುವುದು ನಿನಗೆ ಅರ್ಥವಾಗುತ್ತಿದೆಯಾ?” + +ಮಿಸಾಕಿ ಜೇಬಿನಿಂದ ಸಿಗರೇಟೊಂದನ್ನು ತೆಗೆದು ತುಟಿಗಳ ನಡುವೆ ಇಟ್ಟುಕೊಂಡಳು. ಅವಳು ಸಿಗರೇಟನ್ನು ಹೊತ್ತಿಸಲಿಲ್ಲ. ಕಾರಿನ ಮೇಲ್ಛಾವಣಿ ಮುಚ್ಚಿದ್ದಾಗ ಅವಳು ಯಾವತ್ತೂ ಸಿಗರೇಟನ್ನು ಸೇದುತ್ತಿರಲಿಲ್ಲ. + +“ನೀನು ಆ ಮನುಷ್ಯನನ್ನು ಭೇಟಿಯಾದ ದಿನಗಳಲ್ಲಿ ಅವನು ನಿನ್ನ ಹೆಂಡತಿಯೊಟ್ಟಿಗೆ ಮಲಗುತ್ತಿದ್ದನೆ?” + +“ಇಲ್ಲ.” ಕಾಫುಕ ಉತ್ತರಿಸಿದ. “ಹಾಗೇನಾದರೂ ಆಗಿದಿದ್ದರೆ ವಿಷಯ ಇನ್ನು ಜಟಿಲವಾಗುತ್ತಿತ್ತು. ನನ್ನ ಹೆಂಡತಿ ಸತ್ತ ಕೆಲ ದಿನಗಳ ನಂತರವಷ್ಟೇ ನಾನು ಅವನನ್ನು ಭೇಟಿಯಾದದ್ದು.” + +“ನೀವಿಬ್ಬರೂ ನಿಜವಾಗಿಯೂ ಸ್ನೇಹಿತರಾಗಿದ್ದೀರಾ? ಅಥವಾ ಅದು ಕೇವಲ ನಟನೆಯಷ್ಟೇ ಆಗಿತ್ತೆ?” + +ಕಾಫುಕ ಕೆಲ ಸೆಕೆಂಡುಗಳ ಕಾಲ ಆಲೋಚಿಸಿದ. “ಎರಡೂ ಆಗಿತ್ತು. ನಾನು ಆ ಪಾತ್ರದೊಳಗೆ ಅದೆಷ್ಟು ಇಳಿದಿದ್ದೆನೆಂದರೆ ಕೊನೆ ಕೊನೆಗೆ ಪಾತ್ರ ಯಾರು, ನಿಜವಾದ ನಾನು ಯಾರು ಎನ್ನುವದನ್ನು ಗುರುತಿಸಲು ನನಗೆ ಕಷ್ಟವಾಗುತ್ತಿತ್ತು. ಇಷ್ಟಕ್ಕೂ ನೈಜ ಅಭಿನಯವೆಂದರೆ ಅದೇ ಅಲ್ಲವೇ?” + +ಮೊದಲಿನಿಂದಲೂ ಕಾಫುಕನಿಗೆ ಆ ಮನುಷ್ಯನ ಬಗ್ಗೆ ಒಂದು ರೀತಿಯ ಆಸ್ಥೆ ಬೆಳೆಯುತ್ತಿರುವದು ಲಕ್ಷ್ಯಕ್ಕೆ ಬಂದಿತ್ತು. ಎತ್ತರ ನಿಲುವಿನ, ಸ್ಪುರದ್ರೂಪಿಯಾದ ಅವನ ಹೆಸರು ತಕತ್ಸುಕಿ. ಪ್ರಣಯ ಪಾತ್ರಗಳಿಗೆ ಹೇಳಿ ಮಾಡಿಸಿದ ರೂಪ. ಅವನಿಗೆ ಸುಮಾರು ನಲವತ್ತು ವರ್ಷಗಳಾಗಿತ್ತು. ಅಂತಹ ಒಳ್ಳೆಯ ಅಭಿನಯ ಕೌಶಲ್ಯವೇನಿರಲಿಲ್ಲ. ಸಾಮಾನ್ಯವಾಗಿ ಅವನು ಒಳ್ಳೆಯ ಪಾತ್ರಗಳನ್ನೇ ಮಾಡುತ್ತಿದ್ದ. ಮುಖದಲ್ಲಿನ ಸಣ್ಣ ವಿಷಣ್ಣತೆಯನ್ನು ಹೊರತುಪಡಿಸಿದರೆ ಅವನದು ಉಲ್ಲಾಸಭರಿತ ವ್ಯಕ್ತಿತ್ವವೇ. ಯಾವುದೋ ಟಿವಿ ಜಾಹಿರಾತಿನ ಸಂದರ್ಭದಲ್ಲಿ ಕಾಫುಕನಿಗೆ ಅವನ ಭೇಟಿಯಾಗಿತ್ತು. ಕಾಫುಕ ಹೆಂಡತಿಯ ಸಾವಿಗೆ ಸಂತಾಪ ವ್ಯಕ್ತಪಡಿಸಲು ಅವನ ಬಳಿ ತಕತ್ಸುಕಿ ಬಂದಿದ್ದ. + +“ನಿನ್ನ ಹೆಂಡತಿ ಮತ್ತು ನಾನು ಸಿನಿಮಾವೊಂದರಲ್ಲಿ ಒಟ್ಟಿಗೆ ಅಭಿನಯಿಸಿದ್ದೆವು. ನಾನು ಅವಳಿಗೆ ಬಹುವಾಗಿ ಋಣಿಯಾಗಿದ್ದೇನೆ.” + +ಕಾಫುಕ ಅವನಿಗೆ ಧನ್ಯವಾದಗಳನ್ನು ತಿಳಿಸಿದ. ಕಾಫುಕ ಲೆಕ್ಕ ಹಾಕಿದ ಹಾಗೆ ಅವನ ಹೆಂಡತಿ ಸಂಬಂಧ ಬೆಳೆಸಿದವರಲ್ಲಿ ಈ ಮನುಷ್ಯನೇ ಕೊನೆಯವನು. ತಕತ್ಸುಕಿ ಜೊತೆಗಿನ ಸಂಬಂಧ ಕೊನೆಯಾದ ಕೆಲವೇ ದಿನಗಳ ನಂತರ ಅವಳಿಗೆ ಮೂತ್ರಕೋಶದ ಕ್ಯಾನ್ಸರ್ ಆಗಿತ್ತು. + +“ಕ್ಷಮಿಸಿ, ನಿಮ್ಮಿ೦ದ ಒಂದು ಸಣ್ಣ ಸಹಾಯ ಆಗಬೇಕಿತ್ತು.” ಔಪಚಾರಿಕ ಮಾತುಕತೆ ಮುಗಿದ ನಂತರ ಕಾಫುಕ ಕೇಳಿದ. ಅವನ ಮನಸ್ಸಿನಲ್ಲಿದ್ದುದನ್ನು ಕಾರ್ಯಗತಗೊಳಿಸುವದಕ್ಕೆ ಇದು ಅವನ ಕೊನೆಯ ಅವಕಾಶವಾಗಿತ್ತು. + +“ಹೇಳಿ, ನನ್ನಿಂದ ಏನಾಗಬೇಕು?” ತಕತ್ಸುಕಿ + +“ನಿಮಗೆ ಅಭ್ಯ೦ತರವಿಲ್ಲದಿದ್ದರೆ, ನಿಮ್ಮ ಬಿಡುವಿನ ಸಮಯದಲ್ಲಿ ನಾವಿಬ್ಬರೂ ಭೇಟಿಯಾಗಬಹುದೇ? ಎಲ್ಲಿಯಾದರೂ ಏಕಾಂತದಲ್ಲಿ ಕುಳಿತು ಕುಡಿಯುತ್ತ, ತೀರಿಹೋದ ನನ್ನ ಹೆಂಡತಿಯನ್ನು ಜ್ಞಾಪಿಸಿಕೊಳ್ಳಬಹುದೇನೋ. ಅವಳು ಬಹಳಷ್ಟು ಸಲ ನಿಮ್ಮ ಬಗ್ಗೆ ಹೇಳಿದ್ದಳು.” + +ತಕತ್ಸುಕಿ ಒಂದು ಕ್ಷಣ ತಲ್ಲಣಿಸಿದ. ಅವನು ಎಚ್ಚರಿಕೆಯಿಂದ ಕಾಫುಕನ ಮುಖವನ್ನು ದಿಟ್ಟಿಸಿದ. ಅವನು ಕಾಫುಕನ ಈ ಅನಿರೀಕ್ಷಿತ ಆಹ್ವಾನದ ಹಿಂದಿನ ಉದ್ದೇಶವೇನಿರಬಹುದೆಂದು ಊಹಿಸಲು ಪ್ರಯತ್ನಿಸಿದ. ಆದರೆ ಕಾಫುಕನ ಮುಖದಲ್ಲಿ ಯಾವುದೇ ಕುತ್ಸಿತ ಉದ್ದೇಶವಿರುವ ಹಾಗೆ ಕಾಣಿಸಲಿಲ್ಲ. ಅವನ ಮುಖದಲ್ಲಿ ಬಹುಕಾಲದ ಸಂಗಾತಿಯನ್ನು ಕಳೆದುಕೊಂಡಿದ್ದ ದುಃಖದ ವಿನಃ ಬೇರೇನಿರಲಿಲ್ಲ. + +“ನಿಜ ಹೇಳಬೇಕೆಂದರೆ ನನ್ನ ಹೆಂಡತಿಗೆ ಪರಿಚಿತರಾಗಿದ್ದ ಯಾರೊಟ್ಟಿಗಾದರು ಮಾತನಾಡಬೇಕೆಂದು ಅಂದುಕೊಳ್ಳುತ್ತಿದ್ದೆ. ಮನೆಯಲ್ಲಿ ಒಂಟಿಯಾಗಿ ಕುಳಿತು ಅವಳ ಬಗ್ಗೆ ಯೋಚಿಸುವದು ಕಷ್ಟಕರ ಕೆಲಸ. ನನ್ನ ಬೇಡಿಕೆಯಿಂದ ನಿಮಗೆ ಕಸಿವಿಸಿಯಾಯಿತೇನೋ?” + +“ಛೇ ಛೇ ಹಾಗೇನು ಇಲ್ಲ. ಖಂಡಿತವಾಗಿಯೂ ನಾನು ಬಿಡುವು ಮಾಡಿಕೊಳ್ಳುತ್ತೇನೆ.” ಸಣ್ಣನೆಯ ಕಿರುನಗು ಅವನ ತುಟಿಯ ಮೇಲೆ ಸುಳಿಯಿತು. ಕಣ್ಣಿನ ಅಂಚಿನಲ್ಲಿ ಅನುಕಂಪ ತುಂಬಿತ್ತು. ಆಕರ್ಷಕ ವ್ಯಕ್ತಿತ್ವ. ತಾನೇನಾದಾರು ಮಧ್ಯ ವಯಸ್ಕ ಮಹಿಳೆಯಾಗಿದಿದ್ದರೆ ಈತನಿಗೆ ತಾನು ಮರುಳಾಗುತ್ತಿದ್ದೆನೇನೋ ಎಂದು ಕಾಫುಕ ಯೋಚಿಸಿದ. + +ತಕತ್ಸುಕಿ ಒಂದು ಕ್ಷಣ ಮನಸ್ಸಿನಲ್ಲೇ ತನ್ನ ವೇಳಾಪಟ್ಟಿಯನ್ನು ತಿರುವು ಹಾಕಿದ. “ನಾಳೆ ಸಂಜೆ ನಾನು ಬಿಡುವಾಗಿದ್ದೇನೆ. ನಿಮಗೂ ಬಿಡುವಿದ್ದರೆ ಎಲ್ಲಿಯಾದರೂ ಭೇಟಿಯಾಗಬಹುದು.” + +ಕಾಫುಕ ಒಪ್ಪಿದ. ತಕತ್ಸುಕಿಯ ಭಾವನೆಗಳನ್ನು ಸುಲಭವಾಗಿ ಊಹಿಸಬಹುದು ಎನ್ನುವದು ಅವನಿಗೆ ಅರಿವಾಯಿತು. ಪಾರದರ್ಶಕ ವ್ಯಕ್ತಿತ್ವ. ಈ ಮನುಷ್ಯನ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಬಹುಶಃ ಕೆಲವೇ ಕ್ಷಣದಲ್ಲಿ ಅವನ ಮನಸ್ಸಿನಲ್ಲಿರುವುದೆನೆಂದು ಸುಲಭವಾಗಿ ಕಂಡುಹಿಡಿಯಬಹುದೆಂದು ಕಾಫುಕನಿಗೆ ಅನಿಸಿತು. + +‘ಎಲ್ಲಿ ಭೇಟಿಯಾಗೋಣ ?’ ತಕತ್ಸುಕಿ ಕೇಳಿದ. + +“ಯಾವ ಜಾಗವಾದರೂ ಸರಿ. ನೀನು ಎಲ್ಲಿ ಎಂದು ಹೇಳಿದರೆ ನಾನು ಅಲ್ಲಿಗೆ ಬರುತ್ತೇನೆ” ಕಾಫುಕ. + +ತಕತ್ಸುಕಿ ಜಿಂಜಾದಲ್ಲಿನ ಒಂದು ಹೆಸರುವಾಸಿ ಬಾರಿನಲ್ಲಿ ಸಿಗುವುದಾಗಿ ಹೇಳಿದ. ಅಲ್ಲಿ ಒಂದು ಏಕಾಂತದಲ್ಲಿ ಕುಳಿತು ಕುಡಿಯುತ್ತ ಮಾತನಾಡಲು ಸಾಧ್ಯವಾಗುವಂತಹ ಟೇಬಲನ್ನು ಕಾಯ್ದಿರಿಸುವುದಾಗಿ ತಿಳಿಸಿದ. ಕಾಫುಕನಿಗೆ ಆ ಜಾಗದ ಪರಿಚಯವಿತ್ತು. ಅವರು ಪರಸ್ಪರರ ಕೈ ಕುಲುಕಿ, ವಿದಾಯ ಹೇಳಿ ಹೊರಡಲನುವಾದರು. ತಕತ್ಸುಕಿಯ ಉದ್ದ ಬೆರಳಿನ ಮೃದುವಾದ ಅಂಗೈನಲ್ಲಿ ಬೆವರಿನ ಸೆಲೆಗಳೆದಿದ್ದವು. ಬಹುಶಃ ಅವನು ಒತ್ತಡಕ್ಕೊಳಗಾಗಿದ್ದನೇನೋ. + +ಅವನು ಹೋದ ಎಷ್ಟೊ ಹೊತ್ತಿನ ಮೇಲೂ ಕಾಫುಕ ಗ್ರೀನ್ ರೂಮಿನಲ್ಲಿ ಕುಳಿತು ತನ್ನ ಅಂಗೈಯನ್ನು ದಿಟ್ಟಿಸುತ್ತಲೇ ಇದ್ದ. ತಕತ್ಸುಕಿಯ ಕೈ ಕುಲುವಿಕೆಯಿಂದಾದ ಅನುಭೂತಿ ಅವನಲ್ಲಿ ಇನ್ನು ಹಸಿಯಾಗಿತ್ತು. ಅದೇ ಕೈ, ಅದೇ ಬೆರಳುಗಳಲ್ಲವೇ ತನ್ನ ಹೆಂಡತಿಯ ಬೆತ್ತಲೆ ಶರೀರವನ್ನು ತಡಕಾಡಿ ಮುದ್ದಿಸಿದ್ದು. ಆ ಬೆರಳುಗಳು ನಿಧಾನವಾಗಿ ಅವಳ ದೇಹದ ಮೂಲೆ ಮೂಲೆಯನ್ನು ಹುಡುಕಾಡಿರಬಹುದು. ಅವನು ಕಣ್ಣು ಮುಚ್ಚಿ ಆಳವಾಗಿ ಉಸಿರಾಡಿದ. ತಾನು ಮಾಡಲಿಕ್ಕೆ ಹೊರಟಿರುವಾದದರೂ ಏನು? ತಾನು ಮಾಡುತ್ತಿರುವದು ಏನೇ ಇದ್ದರೂ ಅದಕ್ಕೆ ಹೊರತಾದ ಅನ್ಯ ಮಾರ್ಗವಿಲ್ಲವೆಂದು ಅವನಿಗೆ ಅನಿಸಿತು. + +ತಕಾತ್ಸುಕಿ ಜೊತೆ ಬಾರಿನಲ್ಲಿ ಕುಳಿತು ವಿಸ್ಕಿಯ ಹನಿ ಗಂಟಲೊಳಗಿಳಿಯುತ್ತಿರುವಾಗ ಕಾಫುಕ ಒಂದು ತೀರ್ಮಾನಕ್ಕೆ ಬಂದ. + +ತಕಾತ್ಸುಕಿ ಇನ್ನೂ ತನ್ನ ಹೆಂಡತಿಯನ್ನು ಗಾಢವಾಗಿ ಹಚ್ಚಿಕೊಂಡಿದ್ದಾನೆ. ಒಂದು ಕಾಲದಲ್ಲಿ ತಾನು ಪ್ರೀತಿಸಿದ್ದ, ಜೊತೆಗೆ ತಬ್ಬಿ ಮಲಗಿದ್ದ ರಕ್ತ ಮಾಂಸಗಳಿಂದ ತುಂಬಿದ್ದ ಸುಂದರ ದೇಹ ಇವತ್ತು ಕೇವಲ ಬೂದಿ ಎನ್ನುವದನ್ನು ಜೀರ್ಣಿಸಿಕೊಳ್ಳುವದು ತಕತ್ಸುಕಿಯ ಶಕ್ತಿ ಮೀರಿದ ಕಾರ್ಯವಾಗಿತ್ತು. ಕಾಫುಕ ಈ ಶೂನ್ಯವನ್ನು ಚೆನ್ನಾಗಿ ಬಲ್ಲವನಾಗಿದ್ದ. ತಕಾತ್ಸುಕಿಯ ಕಣ್ಣುಗಳು ಅವಳ ನೆನಪಿನಿಂದ ಮಂಜಾದಾಗ ಕಾಫುಕನಿಗೆ ಅವನನ್ನು ತಬ್ಬಿಕೊಂಡು ಸಂತೈಸಬೇಕೆನಿಸಿತ್ತು. ಅವನು ತನ್ನ ಭಾವನೆಗಳನ್ನು ಮುಚ್ಚಿಡಲಾರದ ಮನುಷ್ಯನೆನಿಸಿತು. ಒಂದಷ್ಟು ಜಾಣ್ಮೆಯ ಪ್ರಶ್ನೋತ್ತರಗಳಿಂದ ಈ ಮನುಷ್ಯನ ಅಂತರಾಳವನ್ನು ಹೊಕ್ಕು ಹಿಂದಿನ ಇತಿಹಾಸವನ್ನು ಕೆದಕಿ ಅವನು ಮಾಡಿದ ಕಾರ್ಯದ ಬಗ್ಗೆ ತಪ್ಪೊಪ್ಪಿಕೊಳ್ಳುವಂತೆ ಮಾಡಬಹುದು ಎಂದು ಕಾಫುಕನಿಗೆ ಅನಿಸಿತು. + +ತಕತ್ಸುಕಿ ಮಾತನಾಡಿದ್ದನ್ನು ನೋಡಿದರೆ ಕಾಫುಕನ ಹೆಂಡತಿಯೇ ಅವರಿಬ್ಬರ ಸಂಬಂಧವನ್ನು ಕೊನೆಗಾಣಿಸಿದ್ದಿರಬೇಕು. “ಮತ್ತೆ ನಾವು ಭೇಟಿಯಾಗುವದು ಬೇಡ.” ಎಂದಿರಬೇಕು ಮತ್ತು ಅವಳು ಕೊನೆಯವರೆಗೂ ಹಾಗೆ ನಡೆದುಕೊ೦ಡಳು. ಹಲವು ತಿಂಗಳುಗಳ ಸಂಬಂಧಕ್ಕೆ ಇದ್ದಕ್ಕಿದ್ದ ಹಾಗೆ ಮುಕ್ತಾಯ. ಕಾಫುಕನಿಗೆ ತಿಳಿದ ಹಾಗೆಯೇ ಅವಳ ಎಲ್ಲ ಪ್ರಣಯ ಸಂಬಂಧಗಳೂ ಹೀಗೆಯೇ ಕೊನೆಯಾಗಿದ್ದವು. ಆದರೆ ತಕತ್ಸುಕಿಗೆ ಇದನ್ನು ಜೀರ್ಣಿಸಿಕೊಳ್ಳಲು ಆಗಿರಲಿಲ್ಲವೇನೋ. ಅವನು ದೀರ್ಘ ಕಾಲ ಅವರ ಸಂಬಂಧವನ್ನು ಮುಂದುವರೆಸುವ ಇರಾದೆ ಹೊಂದಿದ್ದನೇನೋ. + +ತಕತ್ಸುಕಿ ಅವಳ ಕೊನೆಯ ದಿನಗಳಲ್ಲಿ ಅವಳನ್ನು ಭೇಟಿಯಾಗಲು ಸಾಕಷ್ಟು ಬಾರಿ ಪ್ರಯತ್ನಿಸಿದ್ದ. ಆದರೆ ಅವಳು ಅವನನ್ನು ನಿರಾಕರಿಸಿದ್ದಳು. ಆಸ್ಪತ್ರೆ ಸೇರಿದ ನಂತರ ಅವಳು ಹೊರ ಜಗತ್ತಿನೊಟ್ಟಿಗಿನ ಸಂಪರ್ಕವನ್ನು ಬಹುತೇಕ ಕಡಿದುಕೊಂಡಿದ್ದಳು. ಆಸ್ಪತ್ರೆಯ ಹೊರತಾಗಿ ಅವಳ ವಾರ್ಡಿಗೆ ಹೋಗಲು ಅನುಮತಿಯಿದ್ದುದು ಅವಳ ಅಮ್ಮ, ತಂಗಿ ಮತ್ತು ಕಾಫುಕನಿಗೆ ಮಾತ್ರ. ಅವಳ ಕೊನೆಯ ದಿನಗಳಲ್ಲಿ ಅವಳನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲವೆನ್ನುವದು ತಕತ್ಸುಕಿಯನ್ನು ಕಾಡುತ್ತಿರಬೇಕು. ಹೇಳಬೇಕೆಂದರೆ ಅವಳಿಗೆ ಕ್ಯಾನ್ಸರ್ ಇರುವದು ಅವನಿಗೆ ತಿಳಿದಿದ್ದೆ ಅವಳು ಸತ್ತ ಹಿಂದಿನ ವಾರ. ಅವಳ ಅನಾರೋಗ್ಯದ ಸುದ್ದಿ ಅವನಿಗೆ ಸಿಡಿಲಿನಂತೆ ಬಡಿದಿತ್ತು. ಇವತ್ತಿಗೂ ಅವನಿಗೆ ಅದನ್ನು ಒಪ್ಪಿಕೊಳ್ಳುವದು ಅಸಾಧ್ಯವಾಗಿ ತೋರುತಿತ್ತು. ಕಾಫುಕ ಅವನನ್ನು ಅರ್ಥೈಸಿಕೊಳ್ಳಬಲ್ಲವನಾಗಿದ್ದ. ಇಷ್ಟಾದರೂ ಅವರಿಬ್ಬರ ಭಾವನೆಗಳು ಸಂಪೂರ್ಣವಾಗಿ ಬೇರೆಯವೇ ಆಗಿದ್ದವು. ಕಾಫುಕ ಅವನ ಹೆಂಡತಿ ದಿನದಿಂದ ದಿನಕ್ಕೆ ಕ್ಷೀಣವಾಗುತ್ತ ಸಾವಿಗೆ ಕಾಯುತ್ತಿದ್ದುದನ್ನೂ ನೋಡಿದ್ದ , ಅವಳ ಶವ ಸಂಸ್ಕಾರದ ನಂತರ ಅಳುದುಳಿದ ಮೂಳೆಯನ್ನು ಹೆಕ್ಕಿ ಗಂಟು ಕಟ್ಟಿ ತಂದಿದ್ದ. ಅವನು ಎಲ್ಲದರ ಭಾಗವಾಗಿದ್ದ ಮತ್ತು ಅದು ಅಗಾಧ ವ್ಯತ್ಯಾಸವನ್ನು ಕಲ್ಪಿಸಿತ್ತು. ಅವರಿಬ್ಬರು ಕುಳಿತು ಅವನ ಹೆಂಡತಿಯನ್ನು ನೆನಪಿಸಿಕೊಳ್ಳುತ್ತಿದ್ದಾಗ ಕಾಫುಕನಿಗೆ ಇದ್ದಕ್ಕಿದ್ದ ಹಾಗೆ ಹೊಳೆಯಿತು : ಅವರಿಬ್ಬರ ಮಾತುಕತೆಯಲ್ಲಿ ಬಹುತೇಕ ಕಾಫುಕನೇ ತಕತ್ಸುಕಿಯನ್ನು ಸಮಾಧಾನ ಮಾಡುತ್ತಿದ್ದ. ಕಾಫುಕನ ಹೆಂಡತಿಯೇನಾದರೂ ಈ ರೀತಿ ಇವರಿಬ್ಬರೂ ಒಟ್ಟಿಗೆ ಕುಳಿತಿರುವದನ್ನು ನೋಡಿದರೆ ಏನೆ೦ದುಕೊಳ್ಳುತ್ತಾಳೆ? ಕಾಫುಕನಿಗೆ ಆ ವಿಚಾರ ವಿಚಿತ್ರ ತಳಮಳವನ್ನುಂಟು ಮಾಡಿತು. ಆದರೆ ಸತ್ತವರಿಗೆ ಭಾವನೆಗಳಿರುವದಕ್ಕೆ ಸಾಧ್ಯವಿಲ್ಲವೆಂದು ಅವನಿಗೆ ಅವನೇ ಜ್ಞಾಪಿಸಿಕೊಂಡ. + +ಇವೆಲ್ಲದರ ಮಧ್ಯೆ ಇನ್ನೊಂದು ವಿಷಯ ಸ್ಪಷ್ಟವಾಗಿತ್ತು. ಈ ತಕತ್ಸುಕಿ ತುಂಬಾ ಕುಡಿಯುತ್ತಿದ್ದ. ಕಾಫುಕನಿಗೆ ತಿಳಿದ ಹಾಗೆ ಸಿನಿಮಾದಲ್ಲಿನ ಹಲವಷ್ಟು ಮಂದಿಗೆ ಕುಡಿತದ ಚಟವಿತ್ತು. ಸಿನಿಮಾದ ಮಂದಿ ಯಾಕೆ ಬಹುಬೇಗ ಕುಡಿತದ ಚಟ ಅಂಟಿಸಿಕೊಳ್ಳುತ್ತಾರೆ ? ಕಾಫುಕನ ಅಭಿಪ್ರಾಯದಂತೆ ಕುಡಿಯುವವರಲ್ಲಿ ಎರಡು ಮಂದಿ : ಕೆಲವರು ತಮ್ಮನ್ನು ತಾವು ಇನ್ನಷ್ಟು ಮೇಲಕ್ಕೆ ಕೊಂಡೊಯ್ಯಬೇಕೆಂದು ಕುಡಿಯುವವರು, ಇನ್ನೊಬ್ಬರು ತಮ್ಮನ್ನು ತಾವು ಮರೆಯುವದಕ್ಕೋಸ್ಕರ ಕುಡಿಯುವವವರು. ತಕತ್ಸುಕಿ ಎರಡನೇ ವರ್ಗಕ್ಕೆ ಸೇರಿದವನಾಗಿದ್ದ. ಕಾಫುಕನಿಗೆ ತಕತ್ಸುಕಿ ಮರೆಯಲು ಪ್ರಯತ್ನಿಸುತ್ತಿರುವದು ಏನೆಂದು ಸ್ಪಷ್ಟವಾಗಿರಲಿಲ್ಲ. ಅವನ ವ್ಯಕ್ತಿತ್ವದ ಯಾವುದೋ ದುರ್ಬಲತೆಯಿರಬಹುದು ಅಥವಾ ಹಳೆಯ ವಿಷಯವೊಂದು ಅವನನ್ನು ಕೆಣಕುತ್ತಿರಬಹುದು. ಅಲ್ಲದಿದ್ದರೆ ವರ್ತಮಾನದ ಯಾವುದೋ ಘಟನೆ ಅವನನ್ನು ಘಾಸಿಗೊಳಿಸುತ್ತಿರಬಹುದು. ಏನೇ ಇದ್ದರೂ ಅವನು ಹೊರಗೆ ಹೇಳಲಾಗದ ಯಾವುದೋ ಅಸ್ಪಷ್ಟತೆಯನ್ನು ಮರೆಯಲು ಕುಡಿಯುತ್ತಿದ್ದ. ಕಾಫುಕ ಒಂದು ಗ್ಲಾಸ್ ಕುಡಿದು ಮುಗಿಸುವದರೊಳಗಾಗಿ ತಕತ್ಸುಕಿ ಎರಡು, ಮೂರು ಕುಡಿದಿರುತ್ತಿದ್ದ. + +ಕಾಫುಕ ಎಚ್ಚರಿಕೆಯಿಂದ ಸಾವಕಾಶವಾಗಿ, ಅವನ ಜೊತೆಗಾರನನ್ನು ಗಮನಿಸುತ್ತ ಕುಡಿಯುತ್ತಿದ್ದ. ಹಲವಾರು ಸುತ್ತುಗಳು ಮುಗಿದ ನಂತರ ಕಾಫುಕ ಅವನಿಗೆ ಮದುವೆಯಾಗಿದೆಯೋ ಎಂದು ವಿಚಾರಿಸಿದ. ‘ಮದುವೆಯಾಗಿ ಹತ್ತು ವರ್ಷಗಳಾದವು ಮತ್ತು ಏಳು ವರ್ಷದ ಒಬ್ಬ ಮಗನಿರುವುದಾಗಿ ತಕತ್ಸುಕಿ ಉತ್ತರಿಸಿದ. ಆದರೆ ಕೆಲವೊಂದು ಸರಿ ಪಡಿಸಲಾರದ ಮನಸ್ತಾಪಗಳಿಂದ ತಕತ್ಸುಕಿ ಮತ್ತವನ ಹೆಂಡತಿ ಕಳೆದ ವರ್ಷದಿಂದ ಬೇರೆ ಬೇರೆ ವಾಸಿಸುತ್ತಿದ್ದರು. ಇಬ್ಬರ ವಿಚ್ಛೇದನ ಕೇಸು ಕೋರ್ಟಿನಲ್ಲಿ ನಡೆಯುತ್ತಿತ್ತು. ತಕತ್ಸುಕಿಗೆ ಕೋರ್ಟು ಮಗನನ್ನು ತನ್ನಿಂದ ದೂರ ಮಾಡಿದರೆ ಎನ್ನುವ ಭಯ ಕಾಡುತ್ತಿತ್ತು. ಅವನು ಕಾಫುಕನಿಗೆ ಮಗನ ಫೋಟೋ ತೋರಿಸಿದ. + +ಸ್ವಲ್ಪ ಸಮಯದ ನಂತರ ಬಹುತೇಕ ಕುಡುಕರು ಮಾಡುವಂತೆ ತಕತ್ಸುಕಿ ಸಹ ಒಂದೇ ಸಮನೆ ಮಾತನಾಡಲು ಪ್ರಾರಂಭಿಸಿದ. ಅವನು ಇನ್ನೊಬ್ಬರ ಸಮಕ್ಷಮದಲ್ಲಿ ಹೇಳಬಾರದ ವಿಷಯಗಳನ್ನು ಯಾವುದೇ ಅಡೆ ತಡೆಯಿಲ್ಲದೆ ಬಿಚ್ಚಿಡಲಾರಂಭಿಸಿದ. ಆಗಾಗ ಹಾಂ ಹೂಂ ಎಂದು ಸಂಭಾಷಣೆಗೆ ಉತ್ತೇಜನ ಕೊಡುವ ಮಾತುಗಳನ್ನು ಬಿಟ್ಟರೆ ಕಾಫುಕ ಏಕಾಗ್ರಚಿತ್ತದಿಂದ ಎಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ. ತಕತ್ಸುಕಿಯ ಬಗ್ಗೆ ಅಪಾರ ಸ್ನೇಹಭಾವವಿದ್ದಂತೆ ಕಾಫುಕ ಅಭಿನಯಿಸುತ್ತಿದ್ದ. ಕಾಫುಕನಂತ ನಟನಿಗೆ ಈ ಅಭಿನಯ ಕಷ್ಟಕರವಾಗಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಬ್ಬರಲ್ಲೂ ಒಂದು ಸಾಮಾನ್ಯ ಅಂಶವಿತ್ತು: ಇಬ್ಬರೂ ಸಹ ಅದೇ ಸುಂದರ ಆದರೆ ಬದುಕಿಲ್ಲದ ಒಂದೇ ಹೆಂಗಸನ್ನು ಇನ್ನೂ ಪ್ರೀತಿಸುತ್ತಿದ್ದರು. ಅವಳೊಟ್ಟಿಗಿದ್ದ ಅವರಿಬ್ಬರ ಸಂಬಂಧದ ಸ್ವರೂಪ ಬೇರೆ ಬೇರೆಯಾಗಿದ್ದರೂ ಇಬ್ಬರಿಗೂ ಅವಳ ಸಾವಿನಿಂದ ಹೊರಬರುವದು ಕಷ್ಟವಾಗಿತ್ತು. ಮಾತನಾಡುವುದಕ್ಕೆ ಇಬ್ಬರಲ್ಲೂ ಸಾಕಷ್ಟು ವಿಷಯವಿತ್ತು. + +“ಬಹುಶ: ನಾವು ಮತ್ತೊಮ್ಮೆ ಭೇಟಿಯಾಗಬಹುದೇನೋ?” ರಾತ್ರಿ ಕಂದುತ್ತಿದ್ದಂತೆ ಕಾಫುಕ ಹೇಳಿದ. ಅಷ್ಟರಲ್ಲಾಗಲೇ ಅವನು ಬಾರಿನ ಬಿಲ್ಲನ್ನು ಚುಕ್ತಾ ಮಾಡಿದ್ದ. + +“ಖಂಡಿತ” ತಕತ್ಸುಕಿ ಗ್ಲಾಸನ್ನು ನೋಡುತ್ತ ಹೇಳಿದ. “ನಿಜ ಹೇಳಬೇಕೆಂದರೆ ನಿನ್ನೊಟ್ಟಿಗೆ ಮಾತನಾಡಿದ್ದು ನನ್ನ ಎದೆಯ ಮೇಲಿದ್ದ ಎಷ್ಟೊಂದು ಭಾರವನ್ನು ಇಳಿಸಿದ೦ತಾಗಿದೆ.” + +“ನನಗನಿಸುತ್ತದೆ ನಾವಿಬ್ಬರು ಭೇಟಿಯಾಗುವದು ಪೂರ್ವನಿರ್ಧಾರಿತವಾಗಿತ್ತೋ ಏನೋ? ಕಾಫುಕ ಹೇಳಿದ “ಬಹುಶಃ ನನ್ನ ಸತ್ತ ಹೆಂಡತಿಯೇ ಇದನ್ನು ಮಾಡಿಸಿರಬೇಕು” + +ಕಾಫುಕ ಹೇಳಿದ್ದು ಒಂದು ರೀತಿಯಲ್ಲಿ ಸತ್ಯವೇ ಆಗಿತ್ತು. + +ಅವರಿಬ್ಬರೂ ಪರಸ್ಪರರ ಕೈ ಕುಲುಕಿ, ಮೊಬೈಲ್ ನಂಬರ್ ಗಳನ್ನು ವಿನಿಮಯ ಮಾಡಿಕೊಂಡು ಅಲ್ಲಿಂದ ಹೊರಟರು. + +ಹೀಗೆ ಇಬ್ಬರಲ್ಲಿಯೂ ಸಲುಗೆ ಬೆಳೆಯಿತು. ಒಂದರ್ಥದಲ್ಲಿ ಕುಡಿಯಲು ಸಿಗುವ ಸ್ನೇಹಿತರು. ಹಲವಷ್ಟು ಸಲ ಅವರಿಬ್ಬರೂ ಯಾವುದೋ ಬಾರಿನಲ್ಲಿ ಭೇಟಿಯಾಗುತ್ತಿದ್ದರು ಮತ್ತು ಕುಡಿಯುತ್ತ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದರು. ಅವರು ಕೇವಲ ಬಾರಿನಲ್ಲಿ ಮಾತ್ರ ಭೇಟಿಯಾಗುತ್ತಿದ್ದರು. ಅವರಿಬ್ಬರೂ ವೈವಿಧ್ಯಮಯವಾದ ವಿಷಯಗಳನ್ನು ಚರ್ಚಿಸುತ್ತಿದ್ದರು, ಆದರೆ ಚರ್ಚೆಯ ಯಾವುದೋ ಹಂತದಲ್ಲಿ ಮಾತು ಕಾಫುಕನ ಹೆಂಡತಿಯ ಕಡೆಗೆ ತಿರುಗುತಿತ್ತು. ಕಾಫುಕ ಅವಳ ಯೌವನದ ವಿಷಯಗಳನ್ನು ಹೇಳುತ್ತಿದ್ದ. ಆಗಲೆಲ್ಲ ತಕತ್ಸುಕಿ ತದೇಕ ಚಿತ್ತದಿಂದ ಮತ್ಯಾರದೋ ನೆನಪುಗಳನ್ನು ಹೆಕ್ಕಿ ರೂಪುರೇಷೆಗಳನ್ನು ನಿರ್ಮಿಸಲಿಕ್ಕೆ ಹೊರಟ ಸಂಶೋಧಕನಂತೆ ಕೇಳಿಸಿಕೊಳ್ಳುತ್ತಿದ್ದ ಮತ್ತು ಈ ಕ್ಷಣಗಳು ಕಾಫುಕನಿಗೆ ಅತ್ಯಂತ ಸಂತೋಷದಾಯಕವಾಗಿದ್ದವು. + +ಒಂದು ಸಂಜೆ ಇಬ್ಬರೂ ನೇಜು ಮ್ಯೂಸಿಯಮ್ಮಿನ ಹಿಂದಿನ ಇಕ್ಕಟ್ಟಾದ ಓಣಿಯಲ್ಲಿರುವ ಯಾವುದೋ ಬಾರೊಂದರಲ್ಲಿ ಕುಡಿಯುತ್ತ ಕುಳಿತಿದ್ದರು. ಬಾರಿನ ಯಜಮಾನನಿಗೆ ಸುಮಾರು ನಲವತ್ತು ವರ್ಷಗಳಾಗಿದ್ದಿರಬಹುದು. ಬಾರಿನ ಷೋಕೇಸಿನ ಬಳಿ ಕಡು ಬಣ್ಣದ ಬೆಕ್ಕೊಂದು ಕುಳಿತಿತ್ತು. ಬಹುಶಃ ಬೆಕ್ಕು ಕೆಲವು ದಿನಗಳ ಮಟ್ಟಿಗೆ ಬಾರಿನೊಳಗೆ ಸೇರಿದ್ದ ಹಾಗಿತ್ತು. ಹಿನ್ನೆಲೆಯಲ್ಲಿ ಸಣ್ಣಗೆ ಝಾಜ್ ಸಂಗೀತ ಕೇಳಿಬರುತ್ತಿತ್ತು. ಬಾರಿನ ಹಿತವಾದ ಈ ವಾತಾವರಣ ಇಬ್ಬರಿಗೂ ಬಹುವಾಗಿ ಹಿಡಿಸಿದ್ದರಿಂದ ಇಬ್ಬರೂ ಹಿಂದೆಯೂ ಅನೇಕ ಸಲ ಇಲ್ಲಿಗೆ ಬಂದಿದ್ದರು. ಕಾಕತಾಳೀಯವೆಂಬಂತೆ ಅವರು ಭೇಟಿಯಾದಾಗಲೆಲ್ಲ ಮಳೆ ಸುರಿಯುತಿತ್ತು. ಇವತ್ತೂ ಸಹ ಹೊರಗೆ ಸಣ್ಣನೆಯ ಮಳೆ. + +‘ಅವಳೊಬ್ಬಳು ಅಧ್ಭುತ ಮಹಿಳೆ’ ತಕತ್ಸುಕಿ ಮೇಜಿನ ಮೇಲಿಟ್ಟಿದ್ದ ತನ್ನ ಕೈಯನ್ನು ಪರಿಶೀಲಿಸುತ್ತಾ ಹೇಳಿದ. ಮಧ್ಯವಯಸ್ಕರಿಗೆ ಹೋಲಿಸಿದರೆ ಅವನ ಚರ್ಮವಿನ್ನೂ ಕಾಂತಿಯುತವಾಗಿತ್ತು. ಅವನ ಕಣ್ಣಿನ ಸುತ್ತಲೂ ಒಂದೇ ಒಂದು ಸುಕ್ಕುಗಳಿರಲಿಲ್ಲ. “ಅವಳನ್ನು ಜೀವನ ಸಂಗಾತಿಯಾಗಿ ಪಡೆದಿದ್ದು ನಿನ್ನ ಅದೃಷ್ಟವೇ ಸರಿ.” + +“ಹೌದು, ಅವಳೊಟ್ಟಿಗಿದ್ದ ಸಮಯದಲ್ಲಿ ನಾನು ಅತ್ಯಂತ ಸಂತೋಷದಿಂದ ಇದ್ದೆ. ಆದರೆ ಅತಿಯಾದ ಸಂತೋಷ ಕೊನೆಗೊಳ್ಳುವದು ನೋವಿನಲ್ಲಿಯೇ” ಕಾಫುಕ ನುಡಿದ. + +“ಅದು ಹೇಗೆ?” + +ಕಾಫುಕ ಗ್ಲಾಸನ್ನು ಎತ್ತಿ ಅದರೊಳಗೆ ಕಣ್ಣಾಡಿಸಿದ. “ಯಾವತ್ತಾದರೂ ಅವಳು ನನ್ನಿಂದ ದೂರವಾದರೆ ಎನ್ನುವ ಯೋಚನೆ ನನ್ನಲ್ಲಿ ಸುಳಿದಾಗಲೆಲ್ಲ ನನಗೆ ಬಹಳ ನೋವಾಗುತ್ತಿತ್ತು.” + +“ನನಗೆ ಆ ನೋವು ಅರ್ಥವಾಗುತ್ತದೆ.” + +“ಅದು ಹೇಗೆ?” + +“ಹಾಗಲ್ಲ .. ಅಂದರೆ ..” ತಕತ್ಸುಕಿ ತಡವರಿಸಿದ. “ಅಷ್ಟು ಪ್ರೀತಿಪಾತ್ರರನ್ನು ಕಳೆದುಕೊಳ್ಳುವದು ಎಂದರೆ . . .” + +“ಅಲ್ಲವೇ?” + +“ಹೌದು..” ತಕತ್ಸುಕಿ ತನ್ನನ್ನು ತಾನೇ ಒಪ್ಪಿಸುವಂತೆ ಹಲವಾರು ಬಾರಿ ತಲೆಯಾಡಿಸಿದ. “ನಿನಗೆ ಅದೆಷ್ಟು ನೋವಾಗಿರಬಹುದು ಎಂದು ನಾನು ಊಹಿಸಬಲ್ಲೆ”. ಅಷ್ಟು ಹೇಳಿ ಸುಮ್ಮನಾದ. + +ಕಾಫುಕ ಮಾತನಾಡಲಿಲ್ಲ. ಇಬ್ಬರ ನಡುವೆ ಒಂದು ಸುದೀರ್ಘ ಮೌನ ಮೈದಳೆಯಿತು. ಕೊನೆಗೆ ಕಾಫುಕನೇ ಹೇಳಿದ. + +“ಕೊನೆಗೂ ನಾನು ಅವಳನ್ನು ಕಳೆದುಕೊಂಡೆ. ಮೊದಮೊದಲು ಸ್ವಲ್ಪ ಸ್ವಲ್ಪವಾಗಿ ಕೊನೆಗೆ ಪೂರ್ತಿಯಾಗಿ. ಹಂತ ಹಂತವಾಗಿ ಒಳಗೊಳಗೇ ಕೊರೆದಂತೆ. ಈ ಪ್ರಕ್ರಿಯೆ ನನಗರಿವಿಲ್ಲದಂತೆ ಸಾವಕಾಶವಾಗಿ ಶುರುವಾಗಿತ್ತು. ಕೊನೆಗೊಮ್ಮೆ ಪ್ರವಾಹವೊಂದು ಇದ್ದಕ್ಕಿದ್ದಂತೆ ಬುಡಸಮೇತ ಎಲ್ಲವನ್ನೂ ಕೊಚ್ಚಿಕೊಂಡು ಹೋಯಿತು. ನಾನು ಹೇಳುತ್ತಿರುವದು ಅರ್ಥವಾಗುತ್ತಿದೆಯಾ?” + +“ಹೌದು, ನನಗೆ ಅರ್ಥವಾಗುತ್ತದೆ.” + +ನಿನ್ನ ತಲೆ ನಿನಗೇನು ಅರ್ಥವಾಗುತ್ತದೆ ಎಂದು ಕಾಫುಕ ಮನಸ್ಸಿನಲ್ಲೇ ಅಂದುಕೊಂಡ. + +“ಆದರೆ ಒಂದು ವಿಷಯ ನನಗೆ ಅತ್ಯಂತ ನೋವು ಕೊಡುತ್ತದೆ.” ಕಾಫುಕ ಹೇಳಿದ. “ನನಗೆ ಅವಳು ಕೊನೆಯವರೆಗೂ ಪೂರ್ತಿಯಾಗಿ ಅರ್ಥವಾಗಲೇ ಇಲ್ಲ ಅಥವಾ ಅವಳ ವ್ಯಕ್ತಿತ್ವದ ಯಾವುದೋ ಒಂದು ಮಹತ್ವದ ಭಾಗ ನನಗೆ ತಿಳಿಯಲೇ ಇಲ್ಲ. ಈಗ ಅವಳು ಇಲ್ಲವಾದ್ದರಿಂದ ನನಗೆ ಅದರ ಬಗ್ಗೆ ತಿಳಿಯುವ ಅವಕಾಶವೇ ಇಲ್ಲ. ಸಮುದ್ರದ ತಳದಲ್ಲಿ ಬೀಗ ಹಾಕಿದ ಸಣ್ಣ ಪೆಟ್ಟಿಗೆಯೊಂದು ಮುಳುಗಿದ ಹಾಗೆ. ಒಳಗೇನಿದೆ ಎನ್ನುವದು ಕೊನೆಯವರೆಗೂ ನಿಗೂಢ.”ತಕತ್ಸುಕಿ ಮಾತನಾಡುವ ಮುನ್ನ ಸ್ವಲ್ಪ ಯೋಚಿಸಿದ. “ಹಾಗೆ ನೋಡಿದರೆ ನಾವೆಷ್ಟೇ ಪ್ರೀತಿಸಿದರು ಬಹುಶಃ ನಾವು ಯಾರನ್ನಾದರೂ ಸಂಪೂರ್ಣ ಅರ್ಥ ಮಾಡಿಕೊಳ್ಳುವದು ಅಸಾಧ್ಯವೇ ಅಲ್ಲವೇ.” + +“ಇಪ್ಪತ್ತು ವರ್ಷ ಜೊತೆಗಿದ್ದೆವು.” ಕಾಫುಕ ಉತ್ತರಿಸಿದ “ಗಂಡ ಹೆಂಡಿರಂತೆ. ಸ್ನೇಹಿತರಂತೆ. ಯಾವುದೇ ಬಿಗುಮಾನ, ನಿರ್ಭ೦ದ ಇಲ್ಲದೆಯೇ ನಾವಿಬ್ಬರೂ ಎಲ್ಲ ವಿಷಯಗಳನ್ನೂ ಹಂಚಿಕೊಳ್ಳುತ್ತಿದ್ದೆವು ಅಥವಾ ನಾನು ಹಾಗೆ ಭಾವಿಸಿದ್ದೆ ಅಥವಾ ನಿಜವಾಗಿಯೂ ನಾವು ಹಾಗೆ ಇರಲಿಲ್ಲವೇ? ನನಗೆ ಇದನ್ನು ಹೇಗೆ ಹೇಳಬೇಕು ಅನ್ನುವದೆ ತಿಳಿಯುತ್ತಿಲ್ಲ. ಕೊನೆಯವರೆಗೂ ನನಗೆ ನಮ್ಮ ಸಂಬಂಧದಲ್ಲಿದ್ದ ಕಪ್ಪು ಚುಕ್ಕೆಯೊಂದು ಕಾಣಿಸಲೇ ಇಲ್ಲ. + +“ಕಪ್ಪು ಚುಕ್ಕೆ” ತಕತ್ಸುಕಿ ಪುನರುಚ್ಛರಿಸಿದ. + +“ಅವಳೊಳಗೆ ಏನೋ ಹುದುಗಿತ್ತು. ನನಗದು ಕಾಣಿಸಲೇ ಇಲ್ಲ ಅಥವಾ ಕಾಣಿಸಿದ್ದರೂ ನಾನು ನಿರ್ಲಕ್ಷಿಸಿದೆನೇನೋ.” + +ತಕತ್ಸುಕಿ ಅವನ ಕೆಳತುಟಿಯನ್ನು ಒಮ್ಮೆ ಕಚ್ಚಿಕೊಂಡ. ಗ್ಲಾಸಿನಲ್ಲಿದ್ದುದನ್ನು ಗಟಗಟನೆ ಕುಡಿದ. ಬಾರಿನ ಪರಿಚಾರಕನ ಬಳಿ ಗ್ಲಾಸನ್ನು ತುಂಬಲು ಸನ್ನೆ ಮಾಡಿದ. + +“ನೀನು ಹೇಳುತ್ತಿರುವದು ಏನೆಂದು ನನಗೆ ಗೊತ್ತು.” + +ಕಾಫುಕ ತಲೆಯೆತ್ತಿ ಅವನನ್ನು ದಿಟ್ಟಿಸಿದ. ತಕತ್ಸುಕಿಯ ಕಣ್ಣುಗಳು ಕಾಫುಕನನ್ನು ಒಮ್ಮೆ ನೋಡಿ ಮತ್ತೆ ಬೇರೆಡೆಗೆ ಚಲಿಸಿದವು. + +“ಅದು ಹೇಗೆ ನಿನಗೆ ಗೊತ್ತು?” ಕಾಫುಕ ಕೇಳಿದ. + +ಬಾರಿನ ಪರಿಚಾರಕ ವಿಸ್ಕಿಯನ್ನು ತಂದು ಗ್ಲಾಸಿಗೆ ಸುರಿದ. ಅವನು ಅಲ್ಲಿಂದ ಹೋಗುವವರೆಗೂ ಅವರಿಬ್ಬರೂ ಸುಮ್ಮನೆ ಕುಳಿತಿದ್ದರು.“ಅದು ಹೇಗೆ ನಿನಗೆ ಗೊತ್ತು?” ಕಾಫುಕ ಮತ್ತೆ ಕೇಳಿದ. + +ತಕತ್ಸುಕಿ ಒಂದು ಕ್ಷಣ ಪರ್ಯಾಲೋಚಿಸಿದ. ಕಾಫುಕ ಅವನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ. ಅವನು ಅನಿಶ್ಚಿತನಾಗುತ್ತಿದ್ದಾನೆ ಅನಿಸಿತು. ತಕತ್ಸುಕಿ ಏನನ್ನೋ ಬಹಿರಂಗಗೊಳಿಸಬೇಕು ಎನ್ನುವ ಪ್ರಚೋದನೆಯನ್ನು ಬಲವಂತವಾಗಿ ಹತ್ತಿಕ್ಕುತ್ತಿರವಂತೆ ಭಾಸವಾಯಿತು. ಕೊನೆಯಲ್ಲಿ ತಕತ್ಸುಕಿ ತನ್ನನ್ನು ತಾನು ಸ್ಥಿಮಿತಕ್ಕೆ ತಂದುಕೊಂಡ. + +“ಒಬ್ಬ ಹೆಂಗಸಿನ ಮನಸ್ಸಿನಲ್ಲಿ ಏನಿದೆ ಎನ್ನುವದು ನಮಗೆ ಕೊನೆಯವರೆಗೂ ಗೊತ್ತಾಗುವದೇ ಇಲ್ಲವೇನೋ.” ಅವನು ಉತ್ತರಿಸಿದ. “ನಾನು ಹೇಳುವದಕ್ಕೆ ಹೊರಟಿರುವದು ಇಷ್ಟೇ. ಅವಳು ಯಾರೇ ಇರಬಹುದು. ಎಷ್ಟೇ ಆತ್ಮೀಯಳಾಗಿರಬಹುದು. ಅಂತರಂಗವೆಲ್ಲವೂ ಬಹಿರಂಗವಾಗಲಿಕ್ಕೆ ಅಸಾಧ್ಯ. ಹಾಗಾಗಿ ನಿನಗೆ ತೋರಿದ ಆ ಕಪ್ಪು ಚುಕ್ಕೆ ನಿನ್ನೊಬ್ಬನದಷ್ಟೇ ಅಲ್ಲ. ನಮ್ಮೆಲರದೂ ಕೂಡ. ನಾವು ಗಂಡಸರೆಲ್ಲರೂ ಒಂದಲ್ಲ ಒಂದು ಅರ್ಥೈಸಲಾಗದ ಕಪ್ಪು ಚುಕ್ಕೆಯ ಹೊತ್ತು ಬದುಕುತ್ತೇವೆ. ಹಾಗಾಗಿ ನೀನು ನಿನ್ನೊಬ್ಬನದೇ ತಪ್ಪು ಎಂದು ತಿಳಿಯುವದು ಅನಾವಶ್ಯಕ.” + +“ಹಾಗೆ ಎಲ್ಲರಿಗೂ ಅನ್ವಯವಾಗುವಂತೆ ಹೇಳುವದು ಸುಲಭ.” ಕಾಫುಕ ಸ್ವಲ್ಪ ಹೊತ್ತು ಯೋಚಿಸಿ ಹೇಳಿದ. + +“ಅದು ನಿಜ.” + +“ಆದರೆ ನಾನು ಮಾತನಾಡುತ್ತಿರುವದು ನನ್ನ ಸತ್ತ ಹೆಂಡತಿ ಮತ್ತು ನನ್ನ ಬಗ್ಗೆ. ಹಾಗಾಗಿ ಒಂದು ಸಾರ್ವತ್ರಿಕವಾದ ಭಾವಕ್ಕೆ ಒಳಗಾಗಲು ನನಗೆ ಸಾಧ್ಯವಿಲ್ಲ.”“ನನಗೆ ತಿಳಿದಂತೆ…” ತಕತ್ಸುಕಿ ಗಂಟಲನ್ನು ಸರಿ ಪಡಿಸಿಕೊಳ್ಳುತ್ತ ನುಡಿದ. “ನಿನ್ನ ಹೆಂಡತಿ ಒಬ್ಬ ಅದ್ಭುತ ಮಹಿಳೆಯಾಗಿದ್ದಳು. ಅವಳ ಬಗ್ಗೆ ನಿನಗೆ ಗೊತ್ತಿದ್ದಷ್ಟು ನನಗೆ ಗೊತ್ತಿಲ್ಲದೇ ಇದ್ದರೂ ಅವಳೊಬ್ಬಳು ಸದಾ ನೆನಪಿನಲ್ಲಿ ಉಳಿಯುವ೦ತವಳು ಎನ್ನುವದು ನನ್ನ ಧೃಡ ನಂಬಿಕೆ. ಮತ್ತೇನಲ್ಲದಿದ್ದರೂ ನಿನ್ನ ಜೀವನದ ಅತ್ಯಮೂಲ್ಯ ಇಪತ್ತು ವರ್ಷಗಳನ್ನು ಅವಳೊಟ್ಟಿಗೆ ಕಳೆದೆ ಎನ್ನುವದಕ್ಕೆ ನೀನು ಸದಾ ಕಾಲ ಕೃತಜ್ಞನಾಗಿರಬೇಕು. ಆದರೆ ಪರಸ್ಪರ ಅರಿತಿದ್ದೆವು ಎಂದುಕೊಂಡು ಇನ್ನೊಬ್ಬರ ಹೃದಯದಾಳದಲ್ಲಿರುವದು ಏನಿರಬಹುದು ಎನ್ನುವದನ್ನು ಸ್ಪಷ್ಟವಾಗಿ ತಿಳಿಯಬಹುದು ಎಂದುಕೊಂಡರೆ ಅದು ಮೂರ್ಖತನ. ನಾನು ಇನ್ನೊಬ್ಬರನ್ನು ಎಷ್ಟು ಅರಿತುಕೊಳ್ಳಬೇಕು ಅಥವಾ ಎಷ್ಟು ಪ್ರೀತಿಸಬೇಕು ಎನ್ನುವದು ನನಗೆ ಮುಖ್ಯವಲ್ಲ. ಆ ತರದ ಯೋಚನೆಗಳು ನಮಗೆ ನೋವನ್ನೇ ತರುತ್ತವೆ. ಆದರೆ ನಮ್ಮ ನಮ್ಮ ಅಂತರಾಳವನ್ನು ಪರಿಶೀಲಿಸಿಕೊಳ್ಳುವದು ಇನ್ನೊಂದು ಬಗೆ. ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ನಮ್ಮ ಹೃದಯಲ್ಲಿರುವದೇನು ಎನ್ನುವದು ನಮಗೆ ಅರಿವಾಗುತ್ತದೆ. ಹಾಗಾಗಿ ಕೊನೆಯಲ್ಲಿ ನಮಗೆಲ್ಲ ಎದುರಾಗುವದು ಒಂದೇ ಸವಾಲು: ನಮ್ಮ ನಮ್ಮ ಅಂತರಾತ್ಮವನ್ನು ಪ್ರಶ್ನಿಸಿ, ಪ್ರಾಮಾಣಿಕವಾಗಿ ಸಿಕ್ಕ ಉತ್ತರವನ್ನು ಗ್ರಹಿಸಿ, ಸಿಕ್ಕ ಉತ್ತರದೊಟ್ಟಿಗೆ ಸಮಚಿತ್ತದಿಂದ ಬದುಕುವದು. ನಾವು ಇನ್ನೊಬ್ಬರನ್ನು ಅರಿತುಕೊಳ್ಳುವದಕ್ಕೆ ಮೊದಲು ನಮ್ಮನ್ನು ನಾವು ಅರಿತುಕೊಳ್ಳಬೇಕು.” + +ತಕತ್ಸುಕಿಯ ಮಾತು ನಿಜಕ್ಕೂ ಹೃದಯದ ಅಂತರಾಳದಿಂದ ಬಂದಂತಿತ್ತು. ತಾತ್ಕಾಲಿಕವಾದರೂ, ಮುಚ್ಚಿದ್ದ ಒಂದು ಬಾಗಿಲು ಇದ್ದಕ್ಕಿದ್ದ ಹಾಗೆ ತೆರೆದುಕೊಂಡಿತ್ತು. ಅವನ ಮಾತುಗಳು ಸ್ಪಷ್ಟವಾಗಿದ್ದವು. ಖಂಡಿತವಾಗಿಯೂ ಅವನು ನಟಿಸುತ್ತಿರಲಿಲ್ಲ. ಹೇಳಬೇಕೆಂದರೆ ಇಷ್ಟೊಂದು ತನ್ಮಯನಾಗಿ ಅಭಿನಯಿಸುವಷ್ಟು ಶಕ್ತಿ ಅವನಿಗಿರಲಿಲ್ಲ. ಕಾಫುಕ ಮಾತನಾಡಲಿಲ್ಲ. ಸುಮ್ಮನೆ ತಕತ್ಸುಕಿಯ ಕಡೆ ನೋಡಿದ. ಕ್ಷಣ ಕಾಲ ಇಬ್ಬರ ದೃಷ್ಟಿ ಕಲೆತವು. ಪರಸ್ಪರರ ಕಣ್ಣುಗಳಲ್ಲಿನ ಕಿಡಿ ಇಬ್ಬರಿಗೂ ಕಾಣಿಸಿತು. + +ಹೊರಡುವಾಗ ಇಬ್ಬರೂ ಕೈಕುಲುಕಿದರು. ಹೊರಗೆ ಮಳೆ ಧಾರಾಕಾರವಾಗಿ ಸುರಿಯುತಿತ್ತು. ತಕತ್ಸುಕಿ ರೈನ್ ಕೋಟನ್ನು ತೊಟ್ಟು ಮಳೆಯಲ್ಲಿ ನಡೆದ. ಕಾಫುಕ ಅಭ್ಯಾಸದಂತೆ ಅವನ ಬಲಗೈ ಹಸ್ತವನ್ನು ದಿಟ್ಟಿಸಿದ. ‘ಇದೆ ಕೈ ಅಲ್ಲವೇ ನನ್ನ ಹೆಂಡತಿಯ ಬೆತ್ತಲೆ ದೇಹದ ಮೇಲೆ ಕೈಯಾಡಿಸಿದ್ದು?’ ಎಂದು ಯೋಚಿಸಿದ. ಆದರೆ ಆವತ್ತು ಅವನಿಗೆ ಆ ಯೋಚನೆಯಿಂದ ಯಾವುದೇ ನೋವಾಗಲಿಲ್ಲ. ಬದಲಾಗಿ ಇಂತಹ ಘಟನೆಗಳು ನಡೆಯುತ್ತವೆ ಎಂದು ತನ್ನಷ್ಟಕ್ಕೆ ತಾನೇ ಹೇಳಿಕೊಂಡ. ಎಲ್ಲದಕ್ಕಿಂತ ಹೆಚ್ಚಾಗಿ ದೇಹವೆಂದರೆ ಬರಿ ರಕ್ತ ಮಾಂಸದಿಂದ ತುಂಬಿದ ಮುದ್ದೆ ಅಷ್ಟೇ. ಎಲ್ಲ ಮುಗಿದಾಗ ಕೊನೆಗೆ ಉಳಿಯುವದು ಬೂದಿ. ಸಂಬಂಧವೆಂದರೆ ಇವುಗಳನ್ನು ಮೀರಿದ ಬೇರೆ ಏನೋ ಇರಬೇಕಲ್ಲವೇ? + +“ನಾವು ಗಂಡಸರೆಲ್ಲರೂ ಒಂದಲ್ಲ ಒಂದು ಅರ್ಥೈಸಲಾಗದ ಕಪ್ಪು ಚುಕ್ಕೆಯ ಹೊತ್ತು ಬದುಕುತ್ತೇವೆ.” ತಕತ್ಸುಕಿಯ ಮಾತುಗಳು ತುಂಬಾ ಹೊತ್ತಿನ ತನಕವೂ ಅವನ ಕಿವಿಗಳಲ್ಲಿ ಗುಂಯ್ ಗುಡುತಿತ್ತು. + +“ಕೊನೆಗೇನಾಯಿತು ನಿಮ್ಮ ಗೆಳೆತನ ಇನ್ನೂ ಉಳಿದುಕೊಂಡಿದೆಯೋ?” ಮಿಸಾಕಿ ಕೇಳಿದಳು + +“ಅದಾದ ಮೇಲೆ ಸುಮಾರು ಆರು ತಿಂಗಳುಗಳ ಕಾಲ ನಾವಿಬ್ಬರು ಪ್ರತಿ ಎರಡು ವಾರಕ್ಕೊಮ್ಮೆ ಭೇಟಿಯಾಗುತ್ತಿದ್ದೆವು” ಕಾಫುಕ ಉತ್ತರಿಸಿದ.” ಯಾವುದೋ ಬಾರಿನಲ್ಲಿ ಕುಡಿಯುತ್ತ ಮಾತನಾಡುವದು. ಕೊಡು ಕೊಳ್ಳುವದು. ಕೊನೆಗೊಮ್ಮೆ ನಾನು ಅವನನ್ನು ಭೇಟಿಯಾಗುವದನ್ನು ನಿಲ್ಲಿಸಿದೆ. ಅವನ ಫೋನು ಕರೆಗಾಗಲಿ, ಮೆಸೇಜಿಗಾಗಲಿ ಉತ್ತರಿಸಲಿಲ್ಲ. ಸ್ವಲ್ಪ ಸಮಯದ ನಂತರ ಅವನು ಮತ್ತೆ ನನ್ನನು ಸಂಪರ್ಕಿಸುವ ಪ್ರಯತ್ನವನ್ನು ನಿಲ್ಲಿಸಿದ.” + +“ಅವನಿಗೆ ವಿಚಿತ್ರ ಅನ್ನಿಸಿರಬಹುದು.” + +“ಇರಬಹುದೇನೋ.” + +“ಅವನ ಭಾವನೆಗಳಿಗೆ ಘಾಸಿಯಾಯಿತೇನೋ.” + +“ಹೌದು ಅನಿಸುತ್ತದೆ.” + +“ನೀನ್ಯಾಕೆ ಇದ್ದಕ್ಕಿದ್ದ ಹಾಗೆ ಸಂಬಂಧವನ್ನು ಕಡಿದು ಹಾಕಿದೆ.” + +“ಯಾಕೆಂದರೆ ಅಲ್ಲಿ ಮತ್ತೆ ಅಭಿನಯಿಸುವಂತದ್ದು ಬೇರೇನೂ ಉಳಿದಿರಲಿಲ್ಲ.” + +“ಅಂದರೆ ಒಂದು ಸಲ ಅಭಿನಯಿಸಲಿಕ್ಕೆ ಏನು ಇಲ್ಲವೆಂದ ಮೇಲೆ ಸ್ನೇಹಿತರಾಗಿ ಉಳಿಯುವದು ಅವಶ್ಯವಿಲ್ಲವೆಂದೇ?” + +“ಅದು ಹೌದು” ಕಾಫುಕ ಉತ್ತರಿಸಿದ. “ಇನ್ನೊಂದು ಕಾರಣವೂ ಇದೆ.” + +“ಏನು?” + +ಕಾಫುಕ ಮೌನವಾದ. ಮಿಸಾಕಿ ಆಗೊಮ್ಮೆ ಈಗೊಮ್ಮೆ ಅವನೆಡೆಗೆ ದೃಷ್ಟಿ ಹಾಯಿಸಿದಳು. ತುಟಿಯ ನಡುವೆ ಹೊತ್ತಿಸದ ಸಿಗರೇಟು ಒದ್ದೆಯಾಗುತ್ತಿತ್ತು. + +“ಕಾರಿನೊಳಗೆ ಸಿಗರೇಟು ಸೇದು ಅಡ್ಡಿಯಿಲ್ಲ.” ಕಾಫುಕ ಹೇಳಿದ + +“ಹಾಂ?”“ಸಿಗರೇಟು ಸೇದಬಹುದು.” + +“ಆದರೆ ಕಾರಿನ ಮೇಲ್ಛಾವಣಿ ತೆರೆದಿಲ್ಲ.” + +“ಪರವಾಗಿಲ್ಲ.” + +ಮಿಸಾಕಿ ಸಿಗರೇಟನ್ನು ಹೊತ್ತಿಸಿದಳು. ಸುದೀರ್ಘವಾಗಿ ಹೊಗೆಯನ್ನು ಎಳೆದುಕೊಂಡು, ಪಪ್ಪುಸ ಸೇರಿದ ಹೊಗೆಯನ್ನು ಕಾರಿನ ಕಿಟಕಿಯಿಂದ ಹೊರಗೆ ಬಿಟ್ಟಳು.“ತಂಬಾಕು ಸಾಯಿಸುತ್ತದೆ.” ಕಾಫುಕ + +“ಜೀವಂತವಾಗಿರುವದೇ ಸಾಯಲಿಕ್ಕೆ.” ಮಿಸಾಕಿ + +ಕಾಫುಕ ನಗೆಯಾಡಿದ. “ಅದು ಬದುಕನ್ನು ನೋಡುವ ಇನ್ನೊಂದು ದೃಷ್ಟಿ…” + +“ನೀನು ನಗುವದನ್ನು ನಾನು ಇದೆ ಮೊದಲು ನೋಡಿದ್ದು.” ಮಿಸಾಕಿ + +ಅವಳು ಹೇಳಿದ್ದು ನಿಜವೇ. ಕಾಫುಕ ಅಭಿನಯದ ಹೊರತಾಗಿ ಸಹಜವಾಗಿ ನಕ್ಕು ಅದೆಷ್ಟೋ ವರ್ಷಗಳಾಗಿದ್ದವು. + +“ನೀನು ಹುಟ್ಟಿದ್ದು ನನ್ನಪ್ಪ ಹುಟ್ಟಿದ ವರ್ಷದಲ್ಲೇ, ನಾನು ನಿನ್ನ ರೆಕಾರ್ಡ್ ನೋಡಿದ್ದೆ…” ಮಿಸಾಕಿ + +ಕಾಫುಕ ಮಾತನಾಡದೆ ಕಾರಿನಲ್ಲಿದ್ದ ಕ್ಯಾಸೆಟ್ಟುಗಳನ್ನು ತೆಗೆದುಕೊಂಡು ಎಲ್ಲವನ್ನೂ ಒಮ್ಮೆ ಪರಿಶೀಲಿಸಿದ. ಯಾವ ಕ್ಯಾಸೆಟನ್ನೂ ಹಾಕಲಿಲ್ಲ. ಕಾರಿನ ಕಿಟಕಿಯಿಂದ ಹೊರಗೆ ಇಟ್ಟುಕೊಂಡಿದ್ದ ಮಿಸಾಕಿಯ ಕೈಯಲ್ಲಿ ಸಿಗರೇಟು ಉರಿಯುತ್ತಿತ್ತು. ಕಾರು ಮತ್ತೆ ಚಲಿಸುವವರೆಗೆ ಅವಳು ಎರಡೂ ಕೈಯಲ್ಲಿ ಸ್ಟೇರಿಂಗ್ ಹಿಡಿಯಲಿಲ್ಲ. + +“ನಿಜ ಹೇಳಬೇಕು ಎಂದರೆ ನನಗೆ ಆ ಮನುಷ್ಯನನ್ನು ಶಿಕ್ಷಿಸಬೇಕು ಎಂದಿತ್ತು.” ಕಾಫುಕ ತಪ್ಪೊಪ್ಪಿಕೊಳ್ಳುವವನಂತೆ ಹೇಳಿದ. “ನನ್ನ ಹೆಂಡತಿಯೊಟ್ಟಿಗೆ ಮಲಗಿದ್ದ ಮನುಷ್ಯ…” ಕಾಫುಕ ಕ್ಯಾಸೆಟುಗಳನ್ನು ಮರಳಿ ಒಂದೊಂದಾಗಿ ಇಡತೊಡಗಿದ. + +“ಶಿಕ್ಷೆ?” + +“ಅವನು ಮಾಡಿದ ತಪ್ಪಿಗೆ ಶಿಕ್ಷೆ. ಅವನೊಟ್ಟಿಗೆ ಸ್ನೇಹಿತನಂತೆ ನಟಿಸಿ, ಅವನ ರಹಸ್ಯಗಳನ್ನು ತಿಳಿದುಕೊಂಡು ಕೊನೆಯವರೆಗೂ ಅವನನ್ನು ಆಟವಾಡಿಸಬೇಕು ಎಂದುಕೊಂಡಿದ್ದೆ.” + +“ಯಾವ ಥರದ ರಹಸ್ಯ?” + +“ಇಂತಹುದೇ ಅಂಥ ಅಲ್ಲ. ಆದರೆ ಅವನು ಕುಡಿದ ಮತ್ತಿನಲ್ಲಿ ಏನಾದರು ವಿಷಯ ಬಾಯ್ಬಿಟ್ಟಾಗ ಅದನ್ನು ಉಪಯೋಗಿಸಿ ಯಾವುದೋ ಹಗರಣವನ್ನು ಸೃಷ್ಟಿಸಿ ಅವನ ಘನತೆ ಗೌರವಕ್ಕೆ, ಅವನ ಅಭಿನಯದ ವೃತ್ತಿಜೀವನಕ್ಕೆ ಮಸಿ ಬಳಿಯುವಂತೆ ಮಾಡಬೇಕು. ಆಗ ಅವನ ವಿಚ್ಛೇದನ ಸಮಯದಲ್ಲಿ ಕೋರ್ಟು ಅವನನ್ನು ಮಗನಿಂದ ದೂರ ಮಾಡುತ್ತದೆ. ಅವನನ್ನು ಘಾಸಿಗೊಳಿಸಲು ಅಷ್ಟು ಸಾಕು ಅಂದುಕೊಂಡಿದ್ದೆ.” + +“ತುಂಬಾ ಕ್ರೂರ ಯೋಜನೆ.” + +“ಹೌದು ಕ್ರೂರ.” + +“ಮತ್ತು ಇಷ್ಟೆಲ್ಲಾ ಮಾಡುವದು ಯಾಕೆಂದರೆ ಅವನು ನಿನ್ನ ಹೆಂಡತಿಯ ಜೊತೆಗೆ ಮಲಗಿದ್ದ ಎನ್ನುವ ಒಂದೇ ಕಾರಣಕ್ಕಾಗಿ?” + +“ಇದು ಹಗೆ ಸಾಧಿಸುವುದಕ್ಕಿಂತ ಭಿನ್ನವಾದದ್ದು.” ಕಾಫುಕ ಉತ್ತರಿಸಿದ. “ಅವರಿಬ್ಬರ ನಡುವೆ ಏನು ನಡೆದಿರಬಹುದು ಎನ್ನುವ ಯೋಚನೆಯನ್ನು ನನ್ನ ಮನಸ್ಸಿನಿಂದ ಕಿತ್ತು ಹಾಕಲು ನನಗೆ ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಅವಳು ಜೀವಂತವಾಗಿದ್ದಾಗಿನ ಅವಳ ಚಿತ್ರಣ ಹೇಗೆ ನನ್ನ ಮನಸ್ಸಿನಲ್ಲಿ ಕೂತಿದೆಯೋ ಹಾಗೆಯೇ ಅವಳು ಮತ್ತೊಬ್ಬ ಮನುಷ್ಯನ ತೋಳಿನಲ್ಲಿರುವ ಚಿತ್ರವೂ ಅಷ್ಟೇ ಸ್ಪಷ್ಟವಾಗಿ ನನ್ನಲ್ಲಿ ಅಚ್ಚಾಗಿತ್ತು. ಅದೊಂದು ಭೂತ ಸದಾ ಕಾಲ ನನ್ನನ್ನು ದುರುಗುಟ್ಟಿಕೊಂಡು ನೋಡುತ್ತಿತ್ತು. ಅವಳ ಸಾವಿನ ನಂತರ ಸಮಯ ಸರಿದಂತೆ ಈ ಭೂತ ಅವಳೊಟ್ಟಿಗೆ ಮರೆಯಾಗುತ್ತದೆ ಎಂದುಕೊಂಡಿದ್ದೆ. ಆದರೆ ಹಾಗಾಗಲಿಲ್ಲ. ಬದಲಾಗಿ ದಿನದಿಂದ ದಿನಕ್ಕೆ ಆ ಭೂತ ನನ್ನ ಅಸ್ತಿತ್ವವನ್ನೂ ಮೀರಿ ಬೆಳೆಯುತಿತ್ತು. ಅದನ್ನು ಕಿತ್ತು ಹಾಕುವುದಾದರೆ ಇದೊಂದೇ ದಾರಿ ಅನಿಸಿತು.” + +ಕಾಫುಕು ತಾನು ಇದನ್ನೆಲ್ಲಾ ತನ್ನ ಮಗಳಿನ ವಯಸ್ಸಿನ ಈ ಹುಡುಗಿಗೆ ಯಾಕೆ ಹೇಳುತ್ತಿದ್ದೇನೆ ಎಂದು ಒಂದು ಕ್ಷಣ ಯೋಚಿಸಿದ. ಇಷ್ಟಾದರೂ ತನ್ನನ್ನು ತಾನು ತೆರೆದಿಡದಂತೆ ತಡೆಯಲಿಕ್ಕಾಗಲಿಲ್ಲ. + +“ಹಾಗಾಗಿ ಅವನ ಮೇಲೆ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದೆ?” ಮಿಸಾಕಿ + +“ಹೌದು.” + +“ಆದರೆ ನೀನು ಹಾಗೆ ಮಾಡಲಿಲ್ಲ ಅಲ್ಲವೇ?” ಮಿಸಾಕಿ ಕಾತುರತೆಯಿಂದ ಕೇಳಿದಳು. + +“ಇಲ್ಲ.” ಕಾಫುಕ ತಲೆಯಾಡಿಸಿದ + +ಮಿಸಾಕಿ ಒಂದು ಸಮಾಧಾನದ ನಿಟ್ಟುಸಿರು ಬಿಟ್ಟಳು. ಕಿರುನಕ್ಕು ಸಿಗರೇಟಿನ ಹೊಗೆ ಎಳೆದುಕೊಂಡಳು. + +“ಹೇಗೆ ವಿವರಿಸಬೇಕು ಎಂದು ಗೊತ್ತಾಗುತ್ತಿಲ್ಲ. ಆದರೆ ಯಾವುದೋ ಒಂದು ಹಂತದಲ್ಲಿ ನನಗೆ ಗತಿಸಿ ಹೋದ ಯಾವ ಘಟನೆಯೂ ಮುಖ್ಯವಲ್ಲ ಅನ್ನಿಸುವದಕ್ಕೆ ಶುರುವಾಯಿತು. ಇದ್ದಕಿದ್ದ ಹಾಗೆ ನನ್ನನ್ನು ಕಾಡುತ್ತಿದ್ದ ಭೂತ ಮಾಯವಾಗಿತ್ತು.” ಕಾಫುಕ ಹೇಳಿದ ಪ್ರತಿಕಾರದ ಭಾವನೆ ಮರೆಯಾಗಿತ್ತು ಅಥವಾ ನನ್ನಲ್ಲಿದ್ದುದು ಪ್ರತಿಕಾರವೇ ಅಲ್ಲವೇನೋ?” + +“ಏನೇ ಆಗಿರಬಹುದು ನೀನು ಅದನ್ನು ಅಲ್ಲಿಯೇ ಬಿಟ್ಟಿದ್ದು ಒಳ್ಳೆಯದೇ ಆಯಿತು.” + +“ನನಗೂ ಹಾಗೆ ಅನಿಸುತ್ತದೆ.” + +“ಆದರೆ ನಿನಗೆ ನಿನ್ನ ಹೆಂಡತಿ ಯಾಕೆ ಅವನೊಟ್ಟಿಗೆ ಮಲಗಿದ್ದಳು ಎನ್ನುವದಕ್ಕೆ ಉತ್ತರವೇ ಸಿಗಲಿಲ್ಲ ಅಲ್ಲವೇ?” + +“ಇಲ್ಲ. ಆ ಪ್ರಶ್ನೆಗೆ ಉತ್ತರ ಸಿಗಲಿಲ್ಲ. ಇವತ್ತಿಗೂ ಅದು ನನಗೆ ದೊಡ್ಡ ಪ್ರಶ್ನೆಯೇ. ಅವನೊಬ್ಬ ಒಳ್ಳೆಯ, ಸರಳ ಮನುಷ್ಯ. ಅವನೂ ಸಹ ನನ್ನ ಹೆಂಡತಿಯನ್ನು ಅಪಾರವಾಗಿ ಪ್ರೀತಿಸಿದ್ದ. ಅವಳೊಟ್ಟಿಗಿನ ಸಂಬಂಧ ಅವನಿಗೆ ಚೆಲ್ಲಾಟವಾಗಿರಲಿಲ್ಲ. ಅವಳ ಸಾವು ಅವನನ್ನು ಘಾಸಿಗೊಳಿಸಿತ್ತು ಅದಕ್ಕಿಂತ ಹೆಚ್ಚಾಗಿ ಅವಳು ಅವನನ್ನು ಕೊನೆಯ ದಿನಗಳಲ್ಲಿ ನೋಡಲು ನಿರಾಕರಿಸಿದ್ದು ಅವನಿಗೆ ಸಹಿಸಲಸಾಧ್ಯ ನೋವನ್ನುಂಟು ಮಾಡಿತ್ತು. ಹಾಗೆ ನೋಡಿದರೆ ಆ ಮನುಷ್ಯ ನನಗೂ ಸಹ ಇಷ್ಟವಾದ.” + +ಕಾಫುಕ ಗದ್ಗದಿತನಾದ. ಅವನು ತನ್ನ ಭಾವನೆಗಳಿಗೆ ಮಾತಿನ ರೂಪ ಕೊಡಬಲ್ಲ ಶಬ್ದಗಳಿಗಾಗಿ ತಡಕಾಡುತ್ತಿದ್ದ. + +“ಅವನಿಗೆ ತನ್ನ ಕ್ರಿಯೆಯ ಪರಿಣಾಮವೇನಿರಬಹುದು ಎನ್ನುವುದರ ಬಗ್ಗೆ ಕಿಂಚಿತ್ತೂ ಲಕ್ಷ್ಯವಿರಲಿಲ್ಲ. ಆದರೂ ಒಟ್ಟಾರೆಯಾಗಿ ಅವನದು ಒಳ್ಳೆಯ ವ್ಯಕ್ತಿತ್ವ. ನೋಡಲಿಕ್ಕೆ ಸುಂದರವಾಗಿದ್ದ. ಎಲ್ಲರೊಟ್ಟಿಗೆ ಬೆರೆತು ಸಂತೋಷದಿಂದ ಮಾತನಾಡುತಿದ್ದ. ಅವನನ್ನು ನೋಡಿದಾಗ ಅಪಾರ ಗೌರವವೇನೂ ಹುಟ್ಟದಿದ್ದರೂ ಒಳ್ಳೆಯ ಮನುಷ್ಯ ಅನಿಸುತಿತ್ತು. ಒಳಗೊಳಗೇ ದುರ್ಬಲ ಮನುಷ್ಯ. ಪರಿಣಿತ ನಟನೂ ಅಲ್ಲ. ನನ್ನ ಹೆಂಡತಿ ಅಪಾರ ಇಚ್ಚಾಶಕ್ತಿಯುಳ್ಳವಳು. ಅದ್ಭುತ ನಟಿ. ಇಷ್ಟಾದರೂ ಸಹ ಅವಳು ಅವನಂತಹ ಮನುಷ್ಯನನ್ನು ಬಯಸಿದ್ದು ಏಕೆ? ಈ ಪ್ರಶ್ನೆ ಇವತ್ತಿಗೂ ನನ್ನ ಹೃದಯವನ್ನು ಕೊರೆಯುತ್ತಿದೆ. + +“ಅಹ೦ಗೆ ಹೊಡೆತ ಬಿದ್ದಂತೆ?” + +ಕಾಫುಕ ಅವಳು ಹೇಳಿದ್ದನ್ನು ಒಂದು ಕ್ಷಣ ಯೋಚಿಸಿದ. “ಇರಬಹುದೇನೋ” + +“ಹೀಗೂ ಇರಬಹುದಲ್ಲವೇ. ನಿನ್ನ ಹೆಂಡತಿ ಅವನ ವ್ಯಕ್ತಿತ್ವಕ್ಕೆ ಮಾರುಹೋದಳು ಎಂದೇಕೆ ಭಾವಿಸುತ್ತೀಯಾ? ಅವಳು ಅವನೊಟ್ಟಿಗೆ ಮಲಗಿರುವದಕ್ಕೆ ಯಾವುದೇ ಕಾರಣಗಳು ಇಲ್ಲದಿರಬಹುದು.” + +ಕಾಫುಕ ಮಿಸಾಕಿಯನ್ನು ಅವಕ್ಕಾಗಿ ದಿಟ್ಟಿಸಿದ. ಅವಳು ಕಾರಿನ ಮುಂದು ಬದಿಯ ಗಾಜನ್ನು ಒರೆಸುತ್ತಿದ್ದಳು. + +“ಹೆಂಗಸರು ಹಾಗೂ ಇರುತ್ತಾರೆ.” ಅವಳು ಮತ್ತೆ ನುಡಿದಳು. + +ಕಾಫುಕನಿಗೆ ಏನು ಹೇಳಬೇಕು ಎಂದು ತಿಳಿಯಲಿಲ್ಲ. ಅವನು ಸುಮ್ಮನೆ ಕುಳಿತ. + +“ನನಗೆ ಅದೊಂದು ಕಾಯಿಲೆ ಕಾರಣ ಅನಿಸುತ್ತದೆ. ಅದರ ಬಗ್ಗೆ ಯೋಚಿಸಿ ಪ್ರಯೋಜನವಿಲ್ಲ. ನನ್ನಪ್ಪ, ನನ್ನ ಮತ್ತು ಅಮ್ಮನ ಬದುಕಿನಿಂದ ಇದ್ದಕಿದ್ದ ಹಾಗೆ ಎದ್ದು ಹೋದದ್ದು, ಅಮ್ಮ ನನ್ನನ್ನು ಯಾವತ್ತೂ ಮೂದಲಿಸಿ ಮಾತನಾಡುತ್ತಿದ್ದುದು – ಎಲ್ಲದಕ್ಕೂ ನಾನು ಯಾವುದೋ ಒಂದು ಕಾಯಿಲೆಯನ್ನು ದೂಷಿಸುತ್ತೇನೆ. ಹೌದು. ನಾನು ನಂಬಿರುವದರಲ್ಲಿ, ನಾನು ದೂಷಿಸುವ ಕಾಯಿಲೆಗೆ ಅರ್ಥ ತರ್ಕಗಳಿಲ್ಲ. ಅದು ಏನೆಂದೂ ನನಗೆ ಗೊತ್ತಿಲ್ಲ . ಆದರೆ ಘಟಿಸಿದನ್ನು ಸ್ವೀಕರಿಸಿಕೊಂಡು ಏನೂ ಆಗಿಲ್ಲವೆಂಬಂತೆ ವರ್ತಮಾನದ ಜೊತೆಗೆ ಬದುಕುವುದಷ್ಟೇ ನನ್ನ ಕೈಯಲ್ಲಿ ಸಾಧ್ಯವಿರುವ ಕೆಲಸ.” + +“ಹಾಗಾದರೆ ಒಂದಲ್ಲ ಒಂದು ರೀತಿಯಲ್ಲಿ ನಾವೆಲ್ಲರೂ ನಟರು..” + +“ಒಂದರ್ಥದಲ್ಲಿ ಅದು ನಿಜ.” + +ಕಾಫುಕ ಹಿಂದಕ್ಕೆ ಒರಗಿ ಸೀಟ್ ಬೆಲ್ಟ್ ಸರಿಪಡಿಸಿಕೊಂಡು ಕಣ್ಣು ಮುಚ್ಚಿ ಕಾರಿನ ಇಂಜಿನಿನ ಶಬ್ದದ ಮೂಲಕ ಮಿಸಾಕಿ ಯಾವಾಗ ಗೇರನ್ನು ಬದಲಿಸುತ್ತಾಳೆ ಎಂದು ಕಂಡು ಹಿಡಿಯಲು ಯತ್ನಿಸಿದ. ಆದರೆ ಯಾವ ಸಮಯದಲ್ಲಿ ಮಿಸಾಕಿ ಗೇರನ್ನು ಬದಲಿಸಿದಳು ಎಂದು ತಿಳಿಯುವದು ಸಾಧ್ಯವಾಗಲಿಲ್ಲ. ಎಲ್ಲವೂ ನಯವಾಗಿ, ರಹಸ್ಯವಾಗಿ ನಡೆಯುತಿತ್ತು. ಇಂಜಿನ್ನಿನ ಏಕತಾನದ ಶಬ್ದದ ನಡುವೆ ಗೇರನ್ನು ಬದಲಿಸಿದಾಗ ಸಣ್ಣನೆಯ ಶಬ್ದ ವ್ಯತ್ಯಾಸ ಮಾತ್ರ. ಮತ್ತೆ ಎಲ್ಲವೂ ಮೊದಲಿನಂತೆಯೇ. ಹಾರುತ್ತಿರುವ ಹುಳವೊಂದರ ರೆಕ್ಕೆ ಕಣ್ಣಿಗೆ ಬಿದ್ದು ಮಾಯವಾದ ಹಾಗೆ. + +ಒಂದು ಸಣ್ಣ ನಿದ್ರೆ ಮಾಡಬೇಕು ಎಂದು ಕಾಫುಕ ಯೋಚಿಸಿದ. ಆಳ ನಿದ್ರೆ. ಹತ್ತು ಹದಿನೈದು ನಿಮಿಷ ಸಾಕಾಗಬಹುದು. ಮತ್ತೆ ರಂಗದ ಮೇಲೆ ಅಭಿನಯ. ಕಣ್ಣು ಕೋರೈಸುವ ಬೆಳಕಿನ ನಡುವೆ ಪೂರ್ವನಿರ್ಧಾರಿತ ಸಾಲುಗಳನ್ನು ಹೇಳುವದು. ಪೆರೇಡ್ ಬಿದ್ದೊಡನೆ ಚಪ್ಪಾಳೆ. ಕೆಲವು ಕ್ಷಣಗಳ ಮಟ್ಟಿಗೆ ನಾವು ಯಾರಾಗಿದ್ದೇವೋ ಅದನ್ನು ಮರೆಯುವದು. ಮತ್ತೆ ವರ್ತಮಾನಕ್ಕೆ, ಮೂಲಕ್ಕೆ ಮರಳುವಿಕೆ. ಮತ್ತೆ ಮರಳಿದಾಗ ಬಿಟ್ಟು ಹೋಗಿದ್ದ ‘ತಾನು’ ಮತ್ತೆ ಮೊದಲಿನ ‘ತಾನು’ ಆಗಿಯೇ ಸಿಗುವದು ಅಸಾಧ್ಯ. ನಾವು ಮರಳಿದ ಜಾಗ ಯಾವತ್ತಿಗೂ ನಾವು ಬಿಟ್ಟುಹೋದ ಸ್ಥಳಕ್ಕಿಂತ ಸ್ವಲ್ಪವಾದರೂ ಭಿನ್ನವಾಗಿರುತ್ತದೆ. ಅದು ನಿಯಮ. ಎರಡು ಜಾಗಗಳು ಯಾವತ್ತಿಗೂ ಒಂದೇ ಸಮನಾಗಿರಲು ಸಾಧ್ಯವಿಲ್ಲ. + +“ನಾನು ಸ್ವಲ್ಪ ಕಣ್ಣು ಮುಚ್ಚುತ್ತೇನೆ.” ಕಾಫುಕ ಹೇಳಿದ. + + + +ಮಿಸಾಕಿ ಮಾತನಾಡಲಿಲ್ಲ. ಅವಳು ಸೂಕ್ಷ್ಮ ದೃಷ್ಟಿಯಿಂದ ರಸ್ತೆಯನ್ನು ದಿಟ್ಟಿಸಿದಳು. ಕಾಫುಕ ಅವಳ ಮೌನಕ್ಕೆ ಕೃತಜ್ಞನಾಗಿದ್ದ. + +ಸಚೇತನ ಭಟ್ ಮೂಲತಃ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಚಿಕ್ಕ ಹಳ್ಳಿ ಶೇಲೂರಿನವರು. ಓದಿದ್ದು ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ. ಬೆಂಗಳೂರ ವಾಸಿ. ಸಾಫ್ಟ್ವ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಸಚೇತನ ಅವರಿಗೆ ಓದುವುದರಲ್ಲಿ ಅಪಾರ ಆಸಕ್ತಿ. \ No newline at end of file diff --git a/Kenda Sampige/article_356.txt b/Kenda Sampige/article_356.txt new file mode 100644 index 0000000000000000000000000000000000000000..631009d29d272e4a3d8736ba045a1e495cfc97ae --- /dev/null +++ b/Kenda Sampige/article_356.txt @@ -0,0 +1,41 @@ + + +‘ಇಂತಿ ನಮಸ್ಕಾರಗಳು’ ಕನ್ನಡದ ಅಪರೂಪದ ಪುಸ್ತಕಗಳಲ್ಲೊಂದು. ನನ್ನ ಮತ್ತು ಕೊಂಚ ನನ್ನ ಹಿರಿಯ ತಲೆಮಾರಿನ ಸಂವೇದನೆಯ ಭಾಗವಾಗಿದ್ದ ಲಂಕೇಶ್ ಮತ್ತು ಡಿ.ಆರ್. ಬಗೆಗೆ ಹುಳಿಯಾರ್ ಅವರು ತಾವು ಅವರೊಟ್ಟಿಗೆ ಒಡನಾಡಿದ ಕ್ಷಣಗಳನ್ನು ಬಹಳ ಆಪ್ತಾವಾಗಿ ಸ್ಪಂದಿಸಿ, ಅವರ ಜೊತೆಗಿನ ಕ್ಷಣಗಳನ್ನು ಮರೆಯುವುದಕ್ಕೆ ಆಗುವುದೇ ಇಲ್ಲ ಎನ್ನುವ ಸಂದರ್ಭದಲ್ಲಿ ಹುಟ್ಟಿದಂತಹ ಬರಹ ಈ ಪುಸ್ತಕ. ಕೇವಲ ಅಭಿಪ್ರಾಯ, ಅನಿಸಿಕೆ, ಹಳವಂಡಗಳನ್ನು ಹೇಳಿಕೊಳ್ಳದೆ ತಮ್ಮ ಪ್ರಜ್ಞೆಯನ್ನು ಲಂಕೇಶ್ ಮತ್ತು ಡಿ.ಆರ್ ಅವರು ಆವರಿಸಿ ವಿಸ್ತರಿಸಿದ್ದನ್ನು ಕುರಿತು ಪರ್ಸನಲ್ ಆಗಿದ್ದರೂನು ಎಲ್ಲಿಯೂ ಅಹಂ ಆಗಿ ತೋರದೆ ತುಂಬಾ ಲವ್ಲಿಯಾಗಿ ಬಿಚ್ಚಿಟ್ಟಿದ್ದಾರೆ. + +(ಪಿ. ಲಂಕೇಶ್) + +ಇದು ಕೇವಲ ಇಬ್ಬರು ವ್ಯಕ್ತಿಗಳ ಚಿತ್ರಣವಾಗಿರದೆ ಅನೇಕ ಆಯಾಮಗಳಿರುವ ಒಂದು ವಂಡರ್ ಫುಲ್ ಕಥನವಾಗಿ ರೂಪಗೊಂಡಿದೆ. ಇಲ್ಲಿ ಲಂಕೇಶ್ ಮತ್ತು ಡಿ.ಆರ್ ಅವರ ಬರಹಗಳು ರೂಪುಗೊಂಡ ಸಂದರ್ಭ ಮತ್ತು ಅವುಗಳು ಕನ್ನಡದ ಪ್ರಜ್ಞಾವಲಯದಲ್ಲಿ ಮೂಡಿಸಿದ ಸಂಚಲಗಳನ್ನು ತುಂಬಾ ಸ್ವಾರಸ್ಯವಾಗಿ ಬಿಚ್ಚಿಡುತ್ತಾರೆ. ಅವರಿಬ್ಬರ ಬದುಕನ್ನಷ್ಟೇ ಅಲ್ಲದೆ ಅವರ ಬರಹಗಳನ್ನು ಕುರಿತ ಒಂದು ವಿಶಿಷ್ಟ ವಿಮರ್ಶೆಯೂ ಈ ಬರಹದಲ್ಲಿ ಮೂಡಿಬಂದಿರುವುದು ಕನ್ನಡಕ್ಕೆ ಸಿಕ್ಕಿದ ಹೊಸ ವಿಮರ್ಶಾ ಕಥನ. + +ಲಂಕೇಶ್ ಮತ್ತು ಡಿ.ಆರ್ ಅವರ ಸಂಕೀರ್ಣ ವ್ಯಕ್ತಿತ್ವವವನ್ನು ಅರ್ಥಮಾಡಿಕೊಳ್ಳುತ್ತ ತಾವು ಬೆಳೆದುದನ್ನು ಇಲ್ಲಿ ನಿರೂಪಿಸುವ ಹುಳಿಯಾರ್ ಅವರು ಒಂದು ರೀತಿಯಲ್ಲಿ ಅಲ್ಪಸ್ವಲ್ಪ ತಮ್ಮ ಆತ್ಮಕಥನವನ್ನೇ ಬರೆದಂತಿದೆ. + +ಅನೇಕರಿಗೆ ಗೊತ್ತಿಲ್ಲದ ಅನೇಕ ಸ್ವಾರಸ್ಯಕರ ಸಂಗತಿ, ಕ್ಷಣಗಳನ್ನು ಹೇಳುತ್ತ ಅವರು ಅವರಿಬ್ಬರ ಒಳಗನ್ನು ಮತ್ತು ಹೊರಗನ್ನು ಬಿಚ್ಚಿಡುವ ಈ ನಿರೂಪಣೆಯನ್ನು ಓದುವುದು ಒಂದು ರೀತಿಯಲ್ಲಿ ಪತ್ತೇದಾರಿ ಕಾದಂಬರಿಯನ್ನು ಓದುತ್ತಿದ್ದೇವೇನೋ ಎಂಬ ರೀತಿಯಲ್ಲಿ ತೀವ್ರತೆ ಮತ್ತು ಕುತೂಹಲ ಓದುಗರಲ್ಲಿ ಮೂಡುತ್ತದೆ. + +ನ್ಯಾಷನಲ್ ಮತ್ತು ಇಂಟರ್ ನ್ಯಾಷನಲ್ ಮಟ್ಟದಲ್ಲಿ ಖ್ಯಾತಿ ಗಳಿಸುತ್ತ ಅಪಾರ ಓದು, ಹೊಳಹು, ಪಾಂಡಿತ್ಯಗಳಿದ್ದಂತಹ ಡಿ.ಆರ್ ಅಂಥಾ ಡಿ.ಆರ್ ಅವರೇ ತಮ್ಮ ಪ್ರತಿ ಬರಹದಲ್ಲು ಮತ್ತು ಪ್ರತಿಕ್ರಿಯೆಯಲ್ಲೂ ಲಂಕೇಶ್ ಯಾವರೀತಿ ರೆಸ್ಪಾಂಡ್ ಮಾಡುತ್ತಾರೆ ಎನ್ನುವ ಎಚ್ಚರ ಇಟ್ಟುಕೊಂಡಿದ್ದರು ಎಂಬುದನ್ನು ಹುಳಿಯಾರ್ ಅವರು ತಮ್ಮ ಇಡೀ ನಿರೂಪಣೆಯಲ್ಲಿ ತುಂಬಾ ಸೊಗಸಾಗಿ ಹಿಡಿದಿಟ್ಟಿದ್ದಾರೆ. ಎಲ್ಲೂ ಸಹ ಹುಳಿಯಾರ್ ಅವರು ಇವರಿಬ್ಬರ ಬಗ್ಗೆ ಬರೆಯುವಾಗ ಯಾವುದೇ ವ್ಯಕ್ತಿಪೂಜೆಯನ್ನು ಮಾಡದೆ ಲಂಕೇಶರಿಂದಲೇ ಕಲಿತಿರುವ ವ್ಯಂಗ್ಯ, ಟೀಕೆಗಳನ್ನು ಹಾಗು ಡಿ.ಆರ್ ಅವರಿಂದ ಇಂಟಲೆಕ್ಚುಯಲ್ ಕನೆಕ್ಷನ್ ಗಳನ್ನು ಬಳಸಿಕೊಂಡು ಅವರಿಬ್ಬರ ವ್ಯಕ್ತಿತ್ವಗಳನ್ನು ತೆರೆದಿಡುತ್ತಾರೆ. + +(ಡಿ.ಆರ್. ನಾಗರಾಜ್) + +ಇಡೀ ಪುಸ್ತಕದ ಹಿಂದೆ ಪ್ರೀತಿ ಮತ್ತು ಪ್ರೀತಿ ಮಾತ್ರ. ಯಾವಾಗಲೋ ಚಿಕ್ಕ ವಯಸ್ಸಿನಲ್ಲಿ ನೋಡಿದ ಒಂದು ಸಾವನ್ನು ಬಿಟ್ಟರೆ ಮತ್ತೆ, ಮತ್ತೊಂದು ಸಾವನ್ನು ನೋಡುವುದು 1998 ರ ಆಗಸ್ಟ್ ನಡುರಾತ್ರಿಯ ಡಿ.ಆರ್ ಅವರ ಸಾವು. ಇದರ ಬಗ್ಗೆ ಬರೆಯುವಾಗ ಹುಳಿಯಾರ್ ತಮ್ಮ ಕರುಳ ಬಳ್ಳಿಯ ಯಾವುದೋ ಒಂದು ಕುಡಿ ಕಡಿದು ಹೋದಾಗ ಆಗುವಷ್ಟೇ ನೋವು, ವಿಷಾದ, ಖಾಲಿತನ, ತೀವ್ರವಾಗಿ ಅವರಿಗೂ ಆಗುವುದನ್ನು ಕಾಣಬಹುದು. ಅದೇ ಥರ 2000 ರ ಇಸ್ವಿಯಲ್ಲಿ ಜರುಗಿದ ಲಂಕೇಶ್ ಸಾವು. ತಮ್ಮ ಕೃತಿಯ ಉದ್ದಕ್ಕೂ ಅವರಿಬ್ಬರ ಅಗಲಿಕೆಯ ನಂತರ ಅವರು ಬಿಟ್ಟು ಹೋಗಿರುವ ನೆನಪುಗಳು ಈ ಕಾಲ ದೇಶವನ್ನು ಆವರಿಸಿರುವುದು ಹುಳಿಯಾರ್ ಅವರ ಈ ನಿರೂಪಣೆಯಲ್ಲಿ ನೋಡಬಹುದು. ಈ ‘ಇಂತಿ ನಮಸ್ಕಾರಗಳು’ ಎನ್ನುವ ನೆನಪಿನ ನಿರೂಪಣಾ ಕಥನವು ಒಂದು ಕಾಲ ಘಟ್ಟದ ಕನ್ನಡದ ಸಾಂಸ್ಕೃತಿಕ, ರಾಜಕೀಯ ಹಾಗು ಸಾಹಿತ್ಯಕ ಚರಿತ್ರೆಯಂತೆ ತೋರುತ್ತದೆ. + +ಈ ಪುಸ್ತಕದಲ್ಲಿ ಈ ಹಿಂದೆ ಎಂದೂ ಕೇಳಿರದಂತಹ ಮತ್ತು ಲಂಕೇಶ್ ಮಾತ್ರ ಹೇಳಬಹುದಾದಂತಹ ಮಾತುಗಳು ಇಲ್ಲಿ ದಾಖಲಾಗಿರುವುದು ಮನಸ್ಸಿಗೆ ಖುಷಿ, ಅಚ್ಚರಿ ಆಗುವುದರ ಜೊತೆಗೆ ಲಂಕೇಶರ ಸಂಕೀರ್ಣ ವ್ಯಕ್ತಿತ್ವ ಗೊತ್ತಾಗುತ್ತದೆ. + +ಇಡೀ ಲಂಕೇಶರ ಬರಹಗಳನ್ನು, ಒಂದು ಮಿನಿ ಥೀಸಿಸ್ ಆಗುವ ನಿಟ್ಟಿನಲ್ಲಿ, ಕೇಡಿನ ಕಲ್ಪನೆಯನ್ನು ಇಟ್ಟುಕೊಂಡು ಗ್ರಹಿಸಿರುವುದು ಕನ್ನಡ ವಿಮರ್ಶಾ ಲೋಕಕ್ಕೆ ಸಿಕ್ಕಿರುವ ಹೊಸ ದೃಷ್ಟಿಕೋನ. ಮುಂದೆ ಯಾರಾದರು ಇದನ್ನು ತುಂಬಾ ವಿಸ್ತೃತವಾಗಿ ಅಧ್ಯಯನ ಮಾಡಬಹುದು. ಮುಖ್ಯವಾಗಿ ಅವರ ‘ಗುಣಮುಖ’ ಕೃತಿ, ಸ್ವಲ್ಪ ಮಟ್ಟಿಗೆ, ಸಮಗ್ರ ವ್ಯಕ್ತಿತ್ವವನ್ನು ಚಿತ್ರಿಸುವುದನ್ನು ತುಂಬಾ ವಿವರವಾಗಿಯೇ ಹುಳಿಯಾರ್ ಅವರು ಚರ್ಚಿಸಿದ್ದಾರೆ. + + + +ಲಂಕೇಶ್ ಅವರದ್ದು ತುಂಬಾ ನಿಷ್ಠುರದ ಮತ್ತು ಖಡಕ್ ಆದಂತಹ ವ್ಯಕ್ತಿತ್ವವೆನ್ನುವುದು ಅವರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಗೊತ್ತಿರುವ ವಿಷಯ. ಎಂಬತ್ತು ಮತ್ತು ತೊಂಬತ್ತನೇ ದಶಕಗಳಲ್ಲಿ ಯಾವೊಬ್ಬ ರಾಜಕಾರಣಿಯೂ ಸಹ ಅವರಿಂದ ಟೀಕೆಗೊಳಗಾಗದೆ ಪಾರಾಗಿಯೇ ಇಲ್ಲವೆಂಬುದನ್ನು ಯಾರಾದರೂ ಸಹ ಹೇಳುತ್ತಾರೆ. ಅದೇ ರೀತಿ ಸಾಹಿತ್ಯವಲಯದಲ್ಲಿಯೂ ಸಹ. ಅವರು ಎಷ್ಟು ಪ್ರಖರ ಖಚಿತ ಮತ್ತು ಖಂಡಿತವಾದಿ ಎನ್ನವುದನ್ನು, ತೇಜಸ್ವಿ ಅವರ ‘ಅಣ್ಣನ ನೆನಪು’ ಮತ್ತು ‘ಜುಗಾರಿ ಕ್ರಾಸ್’ ಪ್ರಕಟಣೆಗೊಂಡ ಸಂದರ್ಭದಲ್ಲಿ ನಡೆದಂತಹ ವಾಗ್ವಾದಗಳನ್ನು ನೆನಪಿಸಿಕೊಳ್ಳಬಹುದು. ಅದೇ ರೀತಿ ಹುಳಿಯಾರ್ ಅವರೇ ಲಂಕೇಶ್ ಪತ್ರಿಕೆಯ ‘ಬರೆವ ಬದುಕು’ ಅಂಕಣದಲ್ಲಿ ಡಿ.ಆರ್ ಬಗ್ಗೆ ಬರೆದುದಕ್ಕೆ ಪ್ರತಿಕ್ರಿಯೆಯಾಗಿ ನಡೆದ ಡಿ.ಆರ್, ಲಂಕೇಶ್ ಹಾಗು ಹುಳಿಯಾರ್ ನಡುವೆ ನಡೆದ ವಾಗ್ವಾದಗಳನ್ನು ಇಲ್ಲಿ ನೋಡಬಹುದು. + +ಒಮ್ಮೆ ಲಂಕೇಶರ ಬಳಿ ಅವರ ಅಭಿಮಾನಿಯೊಬ್ಬ ಪತ್ರಿಕೆಯ ಅಂಕಣಗಳನ್ನು, ಮತ್ತಿತರ ಬರಹಗಳನ್ನು ಹೊಗಳುತ್ತಾನೆ. ಅವರು ಮರಳಿದ ಬಳಿಕ, ಹುಳಿಯಾರ್ ಅವರಿಗೆ, ಆ ವ್ಯಕ್ತಿಯ ಮತ್ತು ಆ ಹೊಗಳಿಕೆಯನ್ನು ಕುರಿತು ಹೀಗೆ ಹೇಳುತ್ತಾರೆ: ನಾಯಿಗಳು ಎಷ್ಟು ಲವ್ಲಿ ಎಂದರೆ, ಅವಕ್ಕೆ ಅಫೆಕ್ಷನೇಟ್ ಆಗಿ ಇರೋದು ಮಾತ್ರ ಗೊತ್ತಿರುತ್ತದೆ. ಭಟ್ಟಂಗಿತನ ಗೊತ್ತಿರಲ್ಲ. + +(ನಟರಾಜ್ ಹುಳಿಯಾರ್) + +ಮತ್ತೊಂದು ಸನ್ನಿವೇಶದಲ್ಲಿ, ಡಿ.ಆರ್. ಅವರ ಸುತ್ತಾಟ ಮತ್ತು ವಿದೇಶಿ ಪ್ರವಾಸಗಳನ್ನು ಕುರಿತು ‘ಅಮೇರಿಕಾದ ಒಬ್ಬ ಅಡಿಗೆಯವನು ಕೂಡ ಇಲ್ಲಿಗೆ ಬರಲು ಇಷ್ಟಪಡದೆ ಇರುವಾಗ ಇಲ್ಲಿಯ ಜಗದ್ಗುರುಗಳು, ಪ್ರಧಾನಿ, ಅಧ್ಯಕ್ಷರು ಅಲ್ಲಿಗೆ ಹೋಗಲು ಕ್ಯೂ ನಿಂತಿರುತ್ತಾರೆ. ಭಾರತೀಯರು ಹೋಗಬೇಕಾದಾಗ, ಹೋಗಬೇಕಾದ ಕಾರಣಕ್ಕೆ ವಿದೇಶಕ್ಕೆ ಹೋಗಲಿಲ್ಲ; ಅಲ್ಲಿಯ ವಿಜ್ಞಾನವನ್ನು ತರಲಿಲ್ಲ. ಜಾತಿವಾದಿಗಳ ಕೈಯಲ್ಲಿ ಈ ದೇಶ ಗಬ್ಬೆದ್ದು ಹೋಯಿತು; ಆದರೆ ನಿನ್ನಂಥವರು ಅಲ್ಲಿಗೆ ಹೋಗಿ ಉಜ್ವಲ ಭಾರತೀಯ ಪರಂಪರೆ, ಸಂಸ್ಕೃತಿಯ ಬಗ್ಗೆ ಸುಳ್ಳು ಹೇಳುತ್ತೀರಿ; ಆ ಬಗ್ಗೆ ಭಾಷಣ ಮಾಡಿ ಹೆಮ್ಮೆ ಪಡುತ್ತೀರಿ. ಮೊನ್ನೆ ಮೊನ್ನೆಯವರೆಗೂ ತಾಳೆಗರಿಯ ಮೇಲೆ ಬರೆಯುತ್ತಿದ್ದ, ಪ್ರಯೋಗಶಾಲೆ ಎಂದರೇನೆಂದು ಅರಿಯದ, ಮೌಢ್ಯದಲ್ಲಿ ಹೂತುಹೋಗಿದ್ದ ಈ ನಾಡಿನ ಬಗ್ಗೆ ಭ್ರಮೆಗಳನ್ನು ಬೆಳೆಸುತ್ತೀರಿ’ ಎಂದು ಹೇಳುತ್ತಾ ಟೀಕೆಯನ್ನು ಮಾಡುತ್ತಾರೆ. ಇದನ್ನೆಲ್ಲಾ ಹುಳಿಯಾರ್ ಅವರು ತುಂಬಾ ಸೂಕ್ಷ್ಮವಾಗಿ ಗ್ರಹಿಸಿ ಇಲ್ಲಿ ದಾಖಲುಮಾಡುವುದರ ಮೂಲಕ ಲೇಖಕನೊಬ್ಬನ ‘ಆಫ್ ದ ರೆಕಾರ್ಡ್’ ಎನ್ನಬಹುದಾದ ಮಾತುಗಳನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುತ್ತಾರೆ. + +ಡಿ.ಆರ್ ಕನ್ನಡ ಕಂಡ ಅತ್ಯಂತ ವಿಶಿಷ್ಟ ಚಿಂತಕ. ಅವರ ಅಲ್ಲಮಪ್ರಭುವಿನ ಮೇಲಿನ ಪುಸ್ತಕದ ಬಗ್ಗೆ ಅಷ್ಟಾಗಿ ವಿಸ್ತೃತವಾಗಿ ಚರ್ಚೆಯಾಗಿಲ್ಲ. ಆದರೆ ಮೊದಲಬಾರಿಗೆ ಎಂಬಂತೆ ತುಂಬಾ ಸುದೀರ್ಘವಾಗಿ ಅದರ ಬಗ್ಗೆ ಮತ್ತು ಅದು ಹುಟ್ಟಿದ ಸಂದರ್ಭವನ್ನು ಹುಳಿಯಾರ್ ಅವರು ಬಿಚ್ಚಿಡುತ್ತಾರೆ. + +ಲಂಕೇಶ್ ಅಗಲಿದ ಬಳಿಕ ಪತ್ರಿಕೆಯಲ್ಲಿ ಹುಳಿಯಾರ್ ಅವರು ಸ್ವರಕ ಎನ್ನುವ ಬರಹದಲ್ಲಿ ಈ ಇಬ್ಬರನ್ನು ಮುಖಾಮುಖಿಯಾಗಿಸಿ ಕಾಲ್ಪನಿಕ ಕಥನಬರೆಯುತ್ತಾರೆ. ಇದರ ನಿರೂಪಣಾ ತಂತ್ರವನ್ನು ಹುಳಿಯಾರ್ ಅವರು ತಮ್ಮ ಗುರು ಡಿ.ಆರ್ ಅವರ ಗಾಂಧಿ ಮತ್ತು ಅಂಬೇಡ್ಕರ್ ಒಂದು ಸ್ವರ್ಗೀಯ ಕಥನದಿಂದ ನೇರವಾಗಿ ಕಾಪಿ ಮಾಡಿದ್ದಾರೆ ಎಂದು ಹೇಳುವುದು ಟೀಕೆಯಲ್ಲ. ಹಾಗೂ ಲಂಕೇಶ್ ಬಗ್ಗೆ ಎಮೋಷನಲ್ ಆಗಿ ಬರೆಯುವ ಹುಳಿಯಾರ್ ಅವರ ಪೆನ್ನು ಡಿ.ಆರ್ ಬಗ್ಗೆ ಬರೆಯುವಾಗ ತುಸು ಡ್ರೈ ಆಗಿಬಿಡುತ್ತೆ! + + + +ಈ ಕೃತಿಯ ಮೂಲಕ ಮತ್ತೊಮ್ಮೆ ಲಂಕೇಶ್ ದಿನಗಳನ್ನು ನೆನಪಿಸಿದ್ದಕ್ಕೆ ಹುಳಿಯಾರ್ ಸರ್ ಗೆ ಒಂದು ಪ್ರೀತಿಯ ಕೃತಜ್ಞತೆ. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_357.txt b/Kenda Sampige/article_357.txt new file mode 100644 index 0000000000000000000000000000000000000000..a5472ff87811bd713615b60922dd13c44956f8a8 --- /dev/null +++ b/Kenda Sampige/article_357.txt @@ -0,0 +1,39 @@ + + +ಸಂಬಂಧಗಳಲ್ಲಿ ತೀವ್ರತೆ ಇಲ್ಲದಿದ್ದರೆ ಅದು ಬಹಳ ದಿನ ಗಟ್ಟಿಯಾಗಿ ನಿಲ್ಲಲಾರದು. ಅರ್ಥಪೂರ್ಣವೂ ಆಗಲಾರದು. ಒಳ ಹೊಕ್ಕಷ್ಟು ಹೃದಯ ತೆರೆದುಕೊಳ್ಳುತ್ತದೆ. ಹಾಗೂ ಒಮ್ಮೊಮ್ಮೆ ಸಂಬಂಧವೆನ್ನುವುದು ಬಂಧನವೂ ಆಗಿ ಪರಿಣಮಿಸಿ ಅದರಿಂದ ಬಿಡುಗಡೆಗಾಗಿ ಹಂಬಲಿಸಬೇಕಾಗುತ್ತದೆ. ಸಂಬಂಧದ ತೀವ್ರತೆಯಲ್ಲಿ ಕಂಡುಬರುವ ವೈರುಧ್ಯತೆ ಇದು. ಸಂಬಂಧಗಳಲ್ಲಿ ಮುಲಾಜುಗಳಿದ್ದರೆ ತಮ್ಮ ತನಗಳನ್ನು ಕಳೆದುಕೊಳ್ಳಬೇಕಾಗುತ್ತದೆ; ನಿರ್ದಾಕ್ಷಣ್ಯತೆ ಇದ್ದರೆ ನಿಷ್ಠುರತೆಯನ್ನು ಕಟ್ಟಿಕೊಳ್ಳಬೇಕಾಗುತ್ತದೆ. ನಿಷ್ಟುರತೆಯಿಲ್ಲದ ಸಂಬಂಧದಲ್ಲಿ ಆತ್ಮವಂಚನೆ, ಬೋಳೇತನ ಆಕ್ರಮಿಸಿಬಿಡುತ್ತವೆ. ಶೂದ್ರ ಅವರ ಇತ್ತೀಚಿನ ಪುಸ್ತಕ “ಲಂಕೇಶ್:ಮೋಹಕ ರೂಪಕಗಳ ನಡುವೆ” ಓದಿದಾಗ ಇದು ಮನಸ್ಸಿಗೆ ಬಂದಿತು. + +ಶೂದ್ರ ಅವರು ತಮ್ಮ ಗುರು, ಗೆಳೆಯ, ಒಡನಾಡಿ ಲಂಕೇಶರ ಸಂಗಡ ಸಾಕಷ್ಟು ಅನುಭವಿಸಿದ್ದಾರೆ, ಪಡೆದಿದ್ದಾರೆ, ಕಳೆದುಕೊಂಡಿದ್ದಾರೆ, ಪಡೆದು ಕಳಕೊಂಡಿದ್ದಾರೆ, ಕಳೆದು ಪಡಕೊಂಡಿದ್ದಾರೆ. ತಮ್ಮ ಆತ್ಮ ಚರಿತ್ರೆಯ ಅರ್ಧಭಾಗವನ್ನು ಲಂಕೇಶರೇ ಆವರಿಸಿಕೊಂಡಿರುವುದು ಸೋಜಿಗ ಮತ್ತು ವಿಸ್ಮಯ. ಹಾಗೂ ಇದು ಅವರಿಗೆ ಒದಗಿಬಂದದ್ದು. ಲಂಕೇಶರ ಜೊತೆಯ ತಮ್ಮ ಸುದೀರ್ಘ ಪಯಣದಲ್ಲಿ ನಿಷ್ಠುರತೆಯನ್ನು ಕಾಪಾಡಿಕೊಂಡು ಹೋಗುತ್ತಲೇ ಅವರಿಂದ ಸಾರಾಸಗಟಾಗಿ ಬಿಡಿಸಿಕೊಂಡು ಹೋಗದೆ ಮುನಿಸು, ಜಗಳ, ಟೀಕೆಗಳನ್ನು ಸಹಜವಾಗಿಯೇ ಸ್ವೀಕರಿಸಿ ಕೇವಲ ಸ್ವಚ್ಛಂದ ಪ್ರೀತಿ-ಸ್ನೇಹಗಳನ್ನಷ್ಟೇ ನೆಚ್ಚಿ ಮುನ್ನಡೆದುದರಲ್ಲಿ ಅವರ ತಾಳ್ಮೆ ಹಾಗೂ ಝೆನ್ ತತ್ವದಲ್ಲಿ ಕಾಣುವಂತಹ ಸುಮ್ಮನೆ ಬದುಕುತ್ತ ಇರುತ್ತ ಹೋಗುವ ಕ್ರಮ ಗಮನಸೆಳೆಯುತ್ತದೆ. ಈ ಸುಮ್ಮನೆ ನೋಡುತ್ತ, ಗ್ರಹಿಸುತ್ತ, ಪ್ರತಿಯೊಂದನ್ನೂ ಒಂದು ಅನುಭವವಾಗಿ ಸ್ವೀಕರಿಸುತ್ತ ಹೋಗಿದ್ದುದರ ಹಿಂದೆ ಅವರ ಮನಸ್ಸಿನಷ್ಟೇ ಅವರ ಗುರು ಲಂಕೇಶರು ಹೇಳಿಕೊಟ್ಟಂತಹ ಖಾಸಗೀ ಸಲಹೆಯೂ ಇದೆ. + +ತಮ್ಮ ನಿರುದ್ವಿಗ್ನವಾದ ನಿರೂಪಣೆಯಲ್ಲಿ ಸಂಬಂಧದಲ್ಲಿ ಬದ್ಧತೆ ಮತ್ತು ತೀವ್ರತೆಯನ್ನು ಇಟ್ಟುಕೊಂಡೇ attachment ಮತ್ತು detachment ಗಳನ್ನು ತುಂಬಾ ಸೂಕ್ಷ್ಮವಾಗಿ, ಎಚ್ಚರದಿಂದ ಕಾಪಾಡಿಕೊಂಡು ಹೋಗಿದ್ದಾರೆ. ಈ ಕೃತಿಗೆ ಜೀವನಚರಿತ್ರೆ ಮತ್ತು ಆತ್ಮಕಥನ ಈ ಎರಡೂ ಪ್ರಕಾರಗಳ ಆಯಾಮಗಳು ಸಿಕ್ಕು ಇದನ್ನೊಂದು ವಿಶಿಷ್ಟ ಕೃತಿಯಾಗಿಸಿವೆ. ಲಂಕೇಶರನ್ನು ಬೇರೆಯವರಿಂದ ಕೇಳಿ, ಓದಿ ತಿಳಿದುಕೊಂಡಿದ್ದವರಿಗೆ ಶೂದ್ರ ಅವರ ಈ memoir ‘ಇನ್ನೂ ಸ್ವಲ್ಪ ಹೇಳಬೇಕಿತ್ತು..’ ಎಂದು ಅನ್ನಿಸುವಂತೆ ಮಾಡಿದರೂ, ನಿರೂಪಣೆಯಲ್ಲಿ ಸ್ಥಾಯಿಭಾವವಾಗಿ ಹರಿದಿರುವ unprejudiced ಧೋರಣೆ ನಮ್ಮನ್ನು ತಿವಿದು ಸುಮ್ಮನಿರಿಸುತ್ತೆ. + +ಒಬ್ಬ ಶ್ರೇಷ್ಠ ಬರಹಗಾರನ ಬಗ್ಗೆ ಬರೆಯುತ್ತಿದ್ದೇನೆ ಎನ್ನುವ ಹಮ್ಮು ಬಿಮ್ಮು ಇಲ್ಲ; ಆತ್ಮರತಿಯೂ ಇಲ್ಲ. ಅವರ ಜೊತೆ ಕಳೆದ, ಮತ್ತು ಬೆಳೆದ ಕ್ಷಣಗಳನ್ನು ತುಂಬಾ ಆಪ್ತವಾಗಿ ನಿಷ್ಠುರತೆಯನ್ನು ಬಿಟ್ಟುಕೊಡದೆ ಪರಿಶುದ್ಧ ಪ್ರೀತಿಯಲ್ಲಿ ಮತ್ತೊಮ್ಮೆ ತಮಗೆ ತಾವೆ ಇಣುಕಿ ನೋಡಿದ್ದಾರೆ. ಇಲ್ಲಿ ಸರಿ ಮತ್ತು ತಪ್ಪುಗಳನ್ನು ತಕ್ಕಡಿಯಲ್ಲಿ ಇಟ್ಟು ನೋಡದೆ, ತಾನು ಹೇಗೆ ಸಾಗಿಬಂದೆ, ಅವರು ಹೇಗೆ ಸಾಗಿಬಂದರು, ಮತ್ತು ಲೋಕ ಹೇಗೆ ಗ್ರಹಿಸುತ್ತಿತ್ತು , ನೋಡುತ್ತಿತ್ತು ಎನ್ನುವುದನ್ನು ತಮ್ಮ matured ಆದಂತಹ ನಿರೂಪಣಾ ಶೈಲಿಯಲ್ಲಿ ಹಿಡಿದಿಡಲು ಪ್ರಯತ್ನಪಟ್ಟಿದ್ದಾರೆ. ಇದನ್ನು ಬಹಳ ಎಚ್ಚರದಿಂದ ಗಳಿಸಿಕೊಂಡಿದ್ದಲ್ಲ; ಬದಲಿಗೆ, ಲಂಕೇಶರ ಒಡನಾಟದಲ್ಲಿ ಸಾಗುತ್ತ ಬೆಳೆಸಿಕೊಂಡಿದ್ದು. + +It is a saga of a great writer of our time and , at the same time, many lives! ಒಂದು ಕಾಲಘಟ್ಟದ ಮತ್ತು ಸಮಾಜದ ಸಾಕ್ಷಿಪ್ರಜ್ಞೆಯಂತಿದ್ದ ಲಂಕೇಶ್ ತಮ್ಮ ಆಪ್ತ ವಲಯದಲ್ಲಿನ ಕೆಲವರ ಬದುಕಿನಲ್ಲಿಯೂ ಒಂದು ಭಾಗವಾಗಿ ಮಿಳಿತಗೊಂಡಿದ್ದರು ಎಂಬುದು ಈ ಕೃತಿಯ ಉದ್ದಕ್ಕೂ ಸಾಗಿದೆ. ಎಲ್ಲಿಯೂ ಊಹೆಗೆ ಅವಕಾಶಕೊಡದೆ, ‘ಕಂಡದ್ದನ್ನು ಕಂಡಹಾಗೆ’ ಘಟನೆಗಳನ್ನು ಯಾವ ಮುಲಾಜು, ಮರ್ಜಿಗೆ ಹೋಗದೆ ಒಂದು ಕಾಲಘಟ್ಟದ ರಾಜಕೀಯ-ಸಾಂಸ್ಕೃತಿಕ ಬದುಕನ್ನು ಅಥೆಂಟಿಕ್ ಎನ್ನಬಹುದಾದ, ಡಾಕ್ಯುಮೆಂಟ್ ಥರವೂ ಕಾಣುವಂತೆ ದಾಖಲಿಸಿದ್ದಾರೆ. ಕನ್ನಡದ ಮಟ್ಟಿಗೆ ಇದೊಂದು ತುಂಬಾ ಮಹತ್ವವಾದ ಕೃತಿಯಷ್ಟೇ ಅಲ್ಲ, ತುಂಬಾ interesting ಆದ ಬಲು ಚೇತೋಹಾರಿಯಾದಂತಹ ಕೃತಿ. + +ಲಂಕೇಶರ ಬರಹಗಳಿಂದ ಪ್ರಭಾವಗೊಂಡ ಅನೇಕ ಪ್ರಜ್ಞಾವಂತ ಮನಸ್ಸುಗಳಿಗೆ ಇದೊಂದು ಸೋಜಿಗದ ಸಂಚಿಯಾಗಿ ಕಾಣುತ್ತದೆ. ಅವರ ಸಂಕೀರ್ಣ ವ್ಯಕ್ತಿತ್ವವನ್ನು ಬಹಳ ಸೂಕ್ಷ್ಮವಾಗಿ ಗ್ರಹಿಸಿ ರಚಿಸಲಾಗಿದೆ ಈ memoir ಅನ್ನು. ತಮ್ಮ ಬರಹಗಳ ಮೂಲಕ ಟೀಕಿಸದೆ, ವ್ಯಂಗ್ಯಮಾಡದೆ, ಚೇಡಿಸದೆ ಯಾರನ್ನೂ ಬಿಡದ ಲಂಕೇಶರ ವಿಕ್ಷಿಪ್ತ ಮನಸ್ಥಿತಿಯನ್ನೂ ಸಹ ಅನಾವರಣಗೊಳಿಸಿದ್ದಾರೆ ಶೂದ್ರ ಅವರು. ಅದು ಹೇಗಿದೆ ಅಂದರೆ ಈ ವಿಕ್ಷಿಪ್ತ ಮನಸ್ಥಿತಿಯೂ ಎಲ್ಲ ಮನುಷ್ಯರಲ್ಲೂ ತುಂಬಾ ಸಹಜವಾಗಿಯೇ ಇರುತ್ತದೆ ಎಂಬಂತೆ ಚಿತ್ರಿಸಿದ್ದಾರೆ. + +ಇದನ್ನು ಓದುವಾಗ, ಲಂಕೇಶರ ಬಗ್ಗೆ ಇಲ್ಲ ಸಲ್ಲದನ್ನು ತಿಳಿದುಕೊಂಡವರಿಗೆ ‘sorry ಮೇಷ್ಟ್ರೇ, ನಾವು ಆಥರ ತಿಳಿದುಕೊಳ್ಳಬಾರದಿತ್ತು, ತಮ್ಮ ಅವಸರದ , ದುಡುಕಿನ ತೀರ್ಮಾನಕ್ಕೆ ಕ್ಷಮೆಯಿರಲಿ’ ಎಂದು ಕೇಳುವಂತೆ ಮಾಡುತ್ತದೆ. ಯಾಕೆಂದರೆ, ಅವರೆ ಸ್ವತಃ ಬಹಳ ಸಂದರ್ಭದಲ್ಲಿ , ಮುಖ್ಯವಾಗಿ ಅನಂತಮೂರ್ತಿ ಮತ್ತು ಶೂದ್ರ ಅವರನ್ನು ಟೀಕೆ, ನಿಂದನೆ, ವ್ಯಂಗ್ಯಮಾಡಿ, ನಂತರ ನೊಂದು ಕೊಳ್ಳುತ್ತಿದ್ದ ಪ್ರಸಂಗಗಳನ್ನು ದಾಖಲಿಸಲಾಗಿದೆ. ಅಂತಹ ಪ್ರಸಂಗಗಳನ್ನು ನೋಡಿದರೆ, ಅವರೂ ಸಹ ನಮ್ಮಂತೆ, ಸಹಜ ಹುಲುಮಾನವ , ಅವರ ಆ ತಪ್ಪುಗಳು excusable ಅನ್ನಿಸುತ್ತೆ. ಇವರ ವ್ಯಕ್ತಿತ್ವವನ್ನು ಅರಿಯಲು ಶೂದ್ರ ಅವರು ತುಂಬಾ ಪರಿಣಾಮಕಾರಿಯಾದಂತಹ ಹೋಲಿಕೆಗಳನ್ನು ಕೊಡುತ್ತಾರೆ. ಅದು: ಲಂಕೇಶರಲ್ಲಿ ಗಾಂಧಿ, ಹಿಟ್ಲರ್, ಸ್ಟಾಲಿನ್ ಮೂರು ಮಿಕ್ಸ್ ಆಗಿದ್ದಾವೆ ಎನ್ನುವುದು. + +ಶೂದ್ರ ಅವರ ಜೊತೆ ಜಗಳ, ಮುನಿಸು ಆದಮೇಲೆ ಸ್ವಲ್ಪ ದಿನ ಮಾತು ಬಿಟ್ಟು ಮತ್ತೆ ಯಾವುದೋ ಒಂದು ದಿನ ಫೋನ್ ಮಾಡಿ ‘ನಾನು ಹಿಟ್ಲರ್ ಮಾತಾಡ್ತಾ ಇರೋದು, ಇವೋತ್ತು ಸಂಜೆ ಬಾ, ಒಂದು ಗ್ಲಾಸ್ ನಿನಗಾಗಿ ಕಾಯುತ್ತಾ ಇರುತ್ತೆ’ ಎಂದು ಹೇಳುತ್ತಿದ್ದರು ಎನ್ನುವುದನ್ನು ಶೂದ್ರ ಅವರು ತುಂಬಾ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಾರೆ. ಈ ಕೃತಿಯನ್ನು ಓದುತ್ತಾ ಲಂಕೇಶರನ್ನು ರೂಪಿಸಿದ, ಪ್ರಭಾವಿಸಿದ ಅನೇಕ ಸಿನಿಮಾ, ಪುಸ್ತಕಗಳ ಪರಿಚಯವಾಗುತ್ತದೆ. ಜೊತೆಗೆ ಕಾಲೆಳೆಯವ ಜೋಕು, ಮುನಿಸು, ಜಗಳ, ಟೀಕೆ, ಕಾಮೆಂಟ್ಸ್ ಗಳು… ವಾವ್ ತುಂಬಾ ಸೊಗಸಾಗಿದೆ. + +ಕೃತಿಯನ್ನು ತಮ್ಮ ನಂಬಿಕೆ, ಸಿದ್ಧಾಂತ, ಆದರ್ಶ, ಚಿಂತನೆ, ಗ್ರಹಿಕೆಗಳನ್ನು ಅದೊಂದು ರೀತಿಯ ‘ಜೀವನ್ಮರಣದ ವಿಷಯ’ವಾಗಿ ಮನಸ್ಸಿಗೆ ತೆಗೆದುಕೊಂಡು, ಕಟ್ಟುತ್ತಿದ್ದರು. ಮನುಷ್ಯನ ಮೂಲಭೂತ ಪ್ರವೃತ್ತಿ ಹಾಗೂ ಮನುಷ್ಯ ಸಂಬಂಧಗಳನ್ನು ಕನ್ನಡದ ಸಂದರ್ಭದಲ್ಲಿ ವಾಸ್ತವತೆಗೆ ಹತ್ತಿರವಾಗಿ ಇವರಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿರುವವರು ಕಡಿಮೆ ಎಂದೇ ಹೇಳಬಹುದು (ಈ ಗ್ರಹಿಕೆ ನನ್ನ ವೈಯಕ್ತಿಕ ಮಟ್ಟದ್ದು). ಇದು ಅವರ ಒಟ್ಟು ಬರಹದ ಮುಖ್ಯ ಧಾರೆ. ‘ಸಂಕ್ರಾಂತಿ’ ನಾಟಕ ಮೊದಲು ಪ್ರದರ್ಶನಗೊಂಡ ಸಂದರ್ಭದಲ್ಲಿ ನಟಿ ವೈಶಾಲಿಯವರು ಬಸವಣ್ಣನವರನ್ನು ‘ಯಾಕೆ ಆ ಥರ ಚಿತ್ರಿಸಿದ್ದೀರಾ?’ ಎಂದು ಕೇಳಿದ್ದುದಕ್ಕೆ ಲಂಕೇಶರು ಕೊಡುವ ಉತ್ತರವನ್ನು ಒಂದು ಚಳವಳಿಯ ನಾಯಕನ ಅಂತರಂಗದ ತುಮುಲಗಳು ಹೇಗೆ ಇರುತ್ತವೆ, ಹಾಗೂ ಅವನ ಒಳ ಸಂಘರ್ಷಗಳು ಹೀಗೆ ಡಿಕ್ಕಿ ಹೊಡೆದುಕೊಳ್ಳುತ್ತಿವೆ ಎಂಬುದನ್ನು ಶೂದ್ರ ನೆನಪಿನಲ್ಲಿಟ್ಟುಕೊಂಡು ದಾಖಲಿಸುವ ಪರಿ ಇದೆಯಲ್ಲ ಅದು ನಮ್ಮನ್ನು ವಿಸ್ಮಿತರನ್ನಾಗಿಸುತ್ತದೆ. + + + +ಒಮ್ಮೊಮ್ಮೆ ಶೂದ್ರ ಅವರು ಲಂಕೇಶರ ಬಗೆಗಿನ ಈ ಥರ ದಟ್ಟವಾದ, ವ್ಯಾಪಕವಾದ ವಿವರಗಳನ್ನು ಮತ್ತು ಘಟನೆಗಳನ್ನು ಕೊಡುವುದಕ್ಕಾಗಿಯೇ ‘ಈ ಥರ ಅವರ ಜೊತೆ ಸಾಗಿದರಾ, ಬದುಕಿದರಾ?’ ಎನ್ನುವಂತೆ ಮಾಡಿಬಿಡುತ್ತದೆ. ಲಂಕೇಶರ ಮಾತುಗಳಲ್ಲಿ ಒಡಮೂಡುವ ಸತ್ಯ ಮುಖಕ್ಕೆ ರಪ್ಪಂಥ ರಾಚುತ್ತದೆ. ಅವರ ಆ ಮಾತುಗಳು ಅವರ commitment ಅನ್ನು ತೋರಿಸುವುದರ ಜೊತೆಗೆ, ಅವರ ಯೋಚನೆ, ಚಿಂತನೆಗಳು ಎಷ್ಟು original ಆಗಿದ್ದವು ಎಂಬುದನ್ನು ತೋರಿಸುತ್ತದೆ. ಈ ಕಾರಣಕ್ಕಾಗಿಯೇ ಅನ್ನಿಸುತ್ತೆ ಖ್ಯಾತ ಚಿಂತಕ ಜಿ.ರಾಜಶೇಖರ ಅವರು ಹೇಳುವುದು ‘ಲಂಕೇಶ್ ಈಸ್ ದ ಬೆಸ್ಟ್ ಪ್ರೋಸ್ ರೈಟರ್’ ಎಂದು. + +ಅವರ ಗದ್ಯ ಬರಹಗಳಲ್ಲಿ ರಾಜಕೀಯ ಮತ್ತು ಸಾಂಸ್ಕೃತಿಕ ಆಯಾಮಗಳು ಒಂದಕ್ಕೊಂದು ಬೆಸೆದುಕೊಂಡಿರುವುದಷ್ಟೇ ಅಲ್ಲದೆ, ಅವುಗಳನ್ನು ತಮ್ಮ ಹರಿತವಾದ ಟೀಕೆಗೆ ಒಳಪಡಿಸುವ ಕ್ರಮ ಸ್ಥಾಯಿಭಾವವಾಗಿ ಇರುವುದ ಕಾಣಬಹುದು. ವೈಶಾಲಿ ಅವರಿಗೆ ಕೊಟ್ಟ ಉತ್ತರವನ್ನು ಶೂದ್ರ ಅವರು ನೆನಪಿಟ್ಟುಕೊಂಡು ಈ ರೀತಿ ದಾಖಲಿಸುತ್ತಾರೆ: ಯಾಕೆಂದರೆ, ಒಬ್ಬ ಅನೈತಿಕ ವ್ಯಕ್ತಿಗೆ ಯಾವುದೂ ಸಂಘರ್ಷವಲ್ಲ; ಸುಮ್ಮನೆ ಬದುಕಿನ ಘಟನೆಗಳನ್ನು ತೆಗೆದುಕೊಳ್ಳುತ್ತಲೋ, ಅದನ್ನು ಪಕ್ಕಕ್ಕೆ ತಳ್ಳುತ್ತಲೋ ಹೋಗುತ್ತಿರುತ್ತಾನೆ. ಆದರೆ ಬಸವಣ್ಣನ ರೀತಿಯ ನೈತಿಕತೆಯ ದಟ್ಟತೆಯಿಂದ ಕೂಡಿರುವಂಥವನಿಗೆ, ಯಾವುದೂ ಸರಳವಲ್ಲ. ಎಲ್ಲವೂ ದುರಂತವಾಗಿ ಪರಿಣಮಿಸುತ್ತಿರುತ್ತದೆ. ಈ ಅಬ್ಸರ್ವೇಷನ್ ಅನ್ನು ಗಮನಿಸಿದಾಗ ಶೂದ್ರರಿಗಾದ ತಲ್ಲಣ, ಮಿಂಚುಸಂಚರಿಸಿದಂತ ಅನುಭವ ನಮಗೂ ಆಗುತ್ತದೆ. + +ಬರಹಗಾರನೊಬ್ಬ ಹೇಗೆ ಕೆಲಸ ಮಾಡುವನು, ಚಿಂತಿಸುವನು, ಎಂಬುದರ ಬಗೆಗಿನ ಕುತೂಹಲ ಅವನನ್ನು ಓದಿಕೊಂಡು ಬಂದಿರುವ , ಇಷ್ಟಪಡುವ ಅನೇಕರಿಗೆ ಇರುತ್ತದೆ. ಇದು ಮಾಕ್ರ್ವೇಜ್, ಶೇಕ್ಸ್‍ಪಿಯರ್, ಬೇಂದ್ರೆಯವರ ಬಗೆಗೆ ಹರಡಿಕೊಂಡಿರುವ ದಂತ ಕತೆಗಳನ್ನು ನೆನಪಿಸುತ್ತದೆ. ಲೇಖಕರ ಬಗೆಗಿನ ಕತೆಗಳು, ಅಭಿಪ್ರಾಯಗಳು, ಗ್ರಹಿಕೆಗಳು ಕಾಲ ಸರಿದಂತೆ ದಂತಕತೆಗಳಾಗುವುವು. ಈ ಥರದ ಬೆರಗಿನ ಕಣ್ಣು ಲಂಕೇಶ್ ಮತ್ತು ದೇವನೂರರ ಮೇಲೂ ಇದೆ. ಶೂದ್ರ ಅವರು ಸಂಗ್ರಹಿಸಿ ಕೊಟ್ಟಿರುವ ಲಂಕೇಶರ ಬಗೆಗಿನ ಪ್ರಸಂಗಗಳು ಮುಂದೊಂದು ದಿನ ನಂಬಲಸಾಧ್ಯದಂತೆ ದಂತಕತೆಗಳಾದರೆ ಆಶ್ಚರ್ಯವೇನಿಲ್ಲ! + +ಒಬ್ಬ ಬರಹಗಾರ great writer ಆಗುವುದು ಈ ಥರಹದ ದಂತಕತೆಗಳಿಂದಲೇ ಅನ್ನಿಸುತ್ತೆ. ಯಾಕೆಂದರೆ ಅವರ ಬರಹ, ಬದುಕು, ಚಿಂತನೆಗಳಿಗೆ ಕಾಲದೇಶವನ್ನು ಮೀರುವ ಶಕ್ತಿ ದಕ್ಕಿಬಿಡುತ್ತದೆ. ಲಂಕೇಶರು ಹೇಗೆ ಸ್ನೇಹಿತರ ವಲಯವನ್ನು ಇಷ್ಟಪಡುತ್ತಿದ್ದರೋ ಅಷ್ಟೇ ಖಾಸಗೀತನ ಮತ್ತು ಒಂಟಿತನವನ್ನು ಇಷ್ಟಪಡುತ್ತಿದ್ದರು. ಶೂದ್ರ ಅವರು ಹೇಳುವ ಹಾಗೆ ಅವರು ಒಮ್ಮೊಮ್ಮೆ ತಮ್ಮೆಲ್ಲ ಒಂಟಿತನವನ್ನು ಪಕ್ಕಕ್ಕೆ ಸರಿಸಿ; ತುಂಟತನದಲ್ಲಿ ಭಾಗಿಯಾಗಿ ಬಿಡುತ್ತಿದ್ದರು. ಅದು ಕೇವಲ ಒಂದಷ್ಟು ಕಾಲ ಮಾತ್ರ. ಮತ್ತೆ, ಅವರನ್ನು ಆಪ್ತವಾಗಿ ಬಂಧಿಸಿಡುತ್ತಿದ್ದುದು, ಓದು, ವರ್ಲ್ಡ್ ಮೂವಿಸ್ ನೋಡುವುದು, ಸಿಗರೇಟು, ಮತ್ತು ಸ್ಟೆಫಿಗ್ರಾಫ್‍ ಳ ಟನಿಸ್ ಆಟ. ಸ್ಟೆಫಿಗ್ರಾಫ್ ಟೆನಿಸ್ ಕೋರ್ಟ್‍ ನಲ್ಲಿ ಇದ್ದಾಳೆ ಎಂದರೆ, ಟಿ.ವಿ ಫ್ರೇಮ್ ಮೇಲೆ ಅವರ ದೃಷ್ಟಿ ಬಂಧಿಯಾಗಿ ಬಿಡುತ್ತಿತ್ತು. ಆಗ ಯಾರೂ ಮಾತಾಡುವಂತಿರಲಿಲ್ಲ. ಕುದುರ ರೇಸಿನಷ್ಟೇ ಅವಳ ಆಟದ ಬಗ್ಗೆ ತಾದಾತ್ಮ್ಯತೆ ಇತ್ತು. ಅವರು ಎಷ್ಟೊಂದೆಲ್ಲ, ಸಿನಿಮಾ, ಸಂಗೀತ, ರಾಜಕೀಯ, ಕ್ರೀಡೆ, ತರಲೆ, ಪೋಲಿ ಜೋಕುಗಳು, ತಮಾಷೆ, ಕೀಟಲೆ, ಟೀಕೆ-ವ್ಯಂಗ್ಯಗಳು, ಜಾಗತೀಕ ಸಾಹಿತ್ಯ ಅಂತೆಲ್ಲ ಮಾತಾಡಿದರೂ, ಅವರು ಎಂದಿಗೂ ತಮ್ಮ ಸೃಜನಶೀಲ ಬರಹದ ವಸ್ತುವನ್ನು ಕುರಿತು ಹೆಚ್ಚಾಗಿ ಚರ್ಚಿಸುತ್ತಿರಲಿಲ್ಲವಂತೆ. ಇದನ್ನು ಕುರಿತು ಶೂದ್ರ ಅವರು ಕೇಳಿದ್ದಕ್ಕೆ ಅವರು ಕೊಡುತ್ತಿದ್ದ ಉತ್ತರ ಸೃಷ್ಟಿಕ್ರಿಯೆ ಹಾಗೆ ಬರೆಯುವುದಕ್ಕೂ ಮುನ್ನ ಚರ್ಚಿಸಿದರೆ, ಅದು ತನ್ನ ವ್ಯಾಪಕತೆಯನ್ನು ಕಳೆದುಕೊಳ್ಳುತ್ತದೆ ಎಂಬುದು. + +ಅವರ ವ್ಯಕ್ತಿತ್ವವನ್ನು ಬುದ್ಧ, ಬಸವಣ್ಣ, ಗಾಂಧಿ ಹಾಗೂ ವ್ಯಾಸ ವ್ಯಾಪಕವಾಗಿ ಆವರಿಸಿಕೊಂಡಿದ್ದರು ಎಂದು ಬರೆಯುವ ಶೂದ್ರ ಅವರು ಅವರ ಕೆಲವು ಸಂದರ್ಭಗಳಲ್ಲಿನ ವರ್ತನೆಗಳನ್ನು ಕುರಿತು ಹೇಳುವಾಗ ಅವರಲ್ಲಿ ಸ್ಟಾಲಿನ್, ಹಿಟ್ಲರ್ ಮತ್ತು ಗಾಂಧಿ ಮಿಶ್ರಣಗೊಂಡಿದ್ದರು ಎಂದು ಬರೆಯುತ್ತಾರೆ. ಬಹುಷಃ ಇದು ಅವರ ವ್ಯಕ್ತಿತ್ವದ ವೈರುಧ್ಯತೆ ಇರಬಹುದು. ಹಾಗೂ, ಇದಕ್ಕೆ ಲಂಕೇಶರದೇ ಸಾಲುಗಳನ್ನು ನೆನೆಸಿಕೊಂಡರೆ, ವ್ಯಕ್ತಿತ್ವದ ವೈರುಧ್ಯತೆ ಮತ್ತು ವಿಲಕ್ಷಣತೆಗೆ ಅವರದೇ ಸಾಲುಗಳು ಉತ್ತರದಂತಿವೆ- ಜನಸಾಮಾನ್ಯರಲ್ಲಿ ಎಂದೂ ಖ್ಯಾತರಾಗಲು ಇಷ್ಟಪಡದೆ ತಮ್ಮ ಮನೆ, ಕೆಲಸ, ಕರ್ತವ್ಯ ನೋಡಿಕೊಂಡು ಹೋಗುವ ಜನರಲ್ಲಿ ಆಳವಾಗಿ ಬೇರುಬಿಟ್ಟ ಒಳ್ಳೆಯತನದ ಬಗ್ಗೆ ನಂಬಿಕೆ ಇದ್ದವರು, ಗಾಂಧೀಜಿಯಂಥ, ಥೋರೋನಂತ, ಕ್ರಿಸ್ತನಂಥ ಜನ. ಮನುಷ್ಯ ಚಳಿಗಾಲಕ್ಕೆ ಬದಲು ಬೇಸಿಗೆ ಸೃಷ್ಟಿಸಬಹುದು, ಹಿಮಾಲಯಕ್ಕೆ ಕಂಬಳಿ ಹೊದಿಸಬಹುದು, ಆದರೆ ಪ್ರಕೃತಿಯ ವಸ್ತುನಿಷ್ಠ ಕ್ರೌರ್ಯ ಅಥವಾ ನಿರ್ಲಿಪ್ತತೆಯನ್ನು ಬದಲಿಸಲಾರ. ಹಾಗೆಯೇ, ಮನುಷ್ಯ ಎಷ್ಟೇ ಕ್ರೂರವಾಗಿ ಕಂಡರೂ ಆತ ತನ್ನ ಮೂಲಭೂತ ಮನುಷ್ಯತ್ವ ಮತ್ತು ಪ್ರೇಮದಿಂದ ಹೊರಬರಲಾರ. + +ಶೂದ್ರ ಅವರು ಲಂಕೇಶ್ ಅವರ ಜೊತೆಗೆ ಕಳೆದ ಕೆಲವು ಕ್ಷಣಗಳನ್ನು ಹೇಗೆ ದಾಖಲಿಸಿದ್ದಾರೆ ಎಂದರೆ ಯಾವುದಾದರು ಒಂದು ಗ್ರೇಟ್ ಮೂವಿಯಲ್ಲಿ ಕ್ಲೋಸ್-ಅಪ್ ಶಾಟ್ ನಲ್ಲಿ ಸುಂದರ ದೃಶ್ಯವನ್ನು ಸೆರೆಹಿಡಿದಿರುವ ಹಾಗೆ. ಡಿ.ಆರ್ ತಮ್ಮ ಬೌದ್ಧಿಕ ಉಚ್ಛ್ರಾಯ ಸ್ಥಿತಿಯಲ್ಲಿದ್ದಂತಹ ಸಂದರ್ಭದಲ್ಲಿ, ಉಡುಪಿಯಲ್ಲಿ ಭಾಷಣವೊಂದನ್ನು ಕೊಡಬೇಕಾಗಿರುತ್ತದೆ. ಡಿ. ಆರ್ ಅವರ ಭಾಷಣವನ್ನು ಕೇಳುವ ಸಲುವಾಗಿಯೇ ಶೂದ್ರ ಅವರು ಉಡುಪಿಗೆ ಹೋಗಿರುತ್ತಾರೆ. ಭಾಷಣದ ನಂತರ ಹತ್ತಿರದ ಮಣಿಪಾಲ್ ನಲ್ಲಿ ವೈದೇಹಿಯವನ್ನು ಅವರ ಮನೆಯಲ್ಲಿ ಭೇಟಿ ಮಾಡಿದ ನಂತರ ವಾಪಸ್ಸು ಬರುವಾಗಿನ ದೃಶ್ಯ ಆ ಥರ ಮೂಡಿಬಂದಿದೆ. ಶೂದ್ರ ಅವರು ಹೇಳುತ್ತಾರೆ-“ನಾವು ವೈದೇಹಿಯವರ ಮನೆಯಿಂದ ಹೊರಬಂದಾಗ, ಆ ಕುಟುಂಬದ ನಾಲ್ಕು ಮಂದಿಯೂ ಹಸನ್ಮುಖಿಗಳಾಗಿ ಹೊರಗೆ ನಿಂತಿದ್ದರು; ನಗುತ್ತಿರುವ ವೈದೇಹಿಯವರ ಪತಿ, ಮಂದಸ್ಮಿತರಾಗಿ ನಿಂತಿದ್ದ ವೈದೇಹಿ, ತಾಯಿಯ ಹೆಗಲ ಮೇಲೆ ನಯನ ಮತ್ತು ಪಲ್ಲವಿಯವರು ಗಲ್ಲವಿಟ್ಟು ನಿಂತಿದ್ದ ಚಿತ್ರ ಈಗಲೂ ನನ್ನ ಮನಸ್ಸಿನಲ್ಲಿ ಅಚ್ಚೊತ್ತಿದಂತಿದೆ.” + + + +ಲಂಕೇಶ್ ಸತ್ತ ನಂತರ ಅವರ ಸಮಾಧಿಯ ಅವಸ್ಥೆಯನ್ನು ನೋಡಿದರೆ gone with the wind ಎನ್ನಿಸುತ್ತೆ. ಅವರೇ ಒಂದು ಪ್ರಸಂಗದಲ್ಲಿ ಹೇಳಿದಂತೆ, ಕಾಲದ ಕನ್ನಡಿಯ ಮೇಲೆ ಬಿದ್ದಿರುವ ಧೂಳನ್ನು ಒರೆಸಿಕೊಂಡು, ನಮ್ಮನ್ನು ನಾವು ನೋಡಿಕೊಂಡು ಮುಂದೆ ಸಾಗಲೇ ಬೇಕು. ಅದು ಬದುಕಿನ ನಿಯಮ. ಇಲ್ಲಿ ಯಾವುದು ಶಾಶ್ವತವಲ್ಲ. + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_358.txt b/Kenda Sampige/article_358.txt new file mode 100644 index 0000000000000000000000000000000000000000..f4de72605050b2a43c7f5a6fd9a50affdf3c07c8 --- /dev/null +++ b/Kenda Sampige/article_358.txt @@ -0,0 +1,53 @@ + + +ಯುವ ಮಿತ್ರ ಕಪಿಲ ಹುಮನಾಬಾದಿ ಉತ್ತಮ ಓದುಗ, ಸೂಕ್ಷ್ಮಗ್ರಾಹಿ, ಸಾಹಿತ್ಯದ ಅಪಾರ ಕೂತೂಹಲಿಗ. ಅವರ ಮೊದಲ ಕಾದಂಬರಿಗೆ ಮುನ್ನುಡಿ ಪರ ನಾಲ್ಕು ಮಾತು ಬರೆಯುವದು ನನಗೆ ಸಂತಸದ ವಿಷಯ. ಕನ್ನಡದ ಸಂದರ್ಭದಲ್ಲಿ ಕೆಲವು ವರ್ಷಗಳ ಹಿಂದೆ ‘ಈಗ ಕಾದಂಬರಿ ಯುಗ ಮುಗಿಯಿತು. ಈಗ ಏನಿದ್ದರೂ ಚುಟುಕಾಗಿ ಓದುವ ಬರೆಹಗಳ ಕಾಲ. ದೀರ್ಘವಾದ ಬರೆಹಗಳನ್ನು ಯಾರು ಓದುತ್ತಾರೆ ?’ ಎನ್ನುವ ಸಿನಿಕತನದ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದೆವು. ಆದರೆ ಈಗ ಅದೆಷ್ಟು ಕಾದಂಬರಿಗಳು ಬರುತ್ತಿದ್ದಾವೆ ಎಂದರೆ ಮನಸ್ಸಿಗೆ ಆನಂದವಗುವಷ್ಟು. ಕನ್ನಡದಲ್ಲಿ ಹೆಸರು ಮಾಡಿದ ಹಿರಿಯ ಕಾದಂಬರಿಕಾರರ ಜೊತೆಗೆ ಹೊಸ ಯುವ ಬರೆಹಗಾರರು ಕಾದಂಬರಿ ಪ್ರಕಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಈಗ ಇದು ಕಾದಂಬರಿಗಳ ಕೆನೆಫಸಲಿನ ಕಾಲವಾಗಿದೆ. ಕನ್ನಡದ ಮಟ್ಟಿಗೆ ಇದೊಂದು ಸ್ವಾಗತಾರ್ಹವಾದ ಸಂಗತಿ. + +ಕಪಿಲ ಅವರ ಈ ಕಾದಂಬರಿ ‘ಹಾಣಾದಿ’ ಹೊಸ ರೀತಿಯ ಬರೆಹವಾಗಿದೆ. ಹಾಣಾದಿ ಎಂದರೆ ಎತ್ತಿನ ಬಂಡಿಯ ಹಾದಿ. ಈ ಕಾದಂಬರಿ ಕೂಡಾ ಅಂತಹ ಹಾದಿಯ ಗಮ್ಯದಲ್ಲಿಯೇ ಓಡಾಡುತ್ತದೆ. ಏರು ಇಳಿಯು, ಅಂಕು ಡೊಂಕು, ಓರೆ ಕೋರೆ, ಮುಂದೇನು ಎಂದು ಸವಾಲೊಡ್ಡುವ ನಿಗೂಢ ಹಾದಿಯ ಹಾಗೆ ಹಾಣಾದಿ ಕಾದಂಬರಿಯ ಕತೆ ಸಾಗುತ್ತದೆ. ಇಡೀ ಕಾದಂಬರಿ ಮಾಂತ್ರಿಕ ವಾಸ್ತವವಾದದ ಛಾಯೆಯಲ್ಲಿ ನಡೆಯುತ್ತದೆ. ಅಲ್ಲಲ್ಲಿ ಕಥನ ಶೈಲಿ ಸರ್ ರಿಯಲಾಸ್ಟಿಕ್ ಶೈಲಿಗೆ ಹೊರಳುತ್ತ ಹೊರಳುತ್ತಿರುವಾಗಲೇ ಫ್ಯಾಂಟಸಿ ಕಥನ ಕ್ರಮವನ್ನು ಮೈದಾಳಿಸಿಕೊಳ್ಳುತ್ತದೆ. ಈ ಬಗೆಯ ಶೈಲಿಯಿಂದ ಕಾದಂಬರಿಯ ನಡೆಗೆ ಎಲ್ಲೋ ಒಂದು ಕಡೆ ಹಿನ್ನೆಡೆ ಅನ್ನಿಸಿದರೂ ಕಾದಂಬರಿಕಾರ ಕಪಿಲ ಅದನ್ನು ಚೆನ್ನಾಗಿಯೇ ನಿರ್ವಹಿಸಿದ್ದಾರೆ. ಹಾಗಾಗಿ ಓದುಗ ಶೈಲಿಯನ್ನು ಮರೆತು ಕಥೆಯಲ್ಲಿ ಗರ್ಕಾಗುತ್ತಾನೆ. ಕಾದಂಬರಿಯು ಓದಿನ ಪ್ರಜ್ಞೆಯ ಸಿದ್ಧಮಾದರಿಗಳನ್ನು ಮುರಿಯುತ್ತಲೇ ನೆನಪುಗಳನ್ನು ದಾಟಿ ಪ್ರಜ್ಞೆಯ ಭಾಗವಾಗಿ ಬೆಳೆಯುತ್ತದೆ. ಇದರಿಂದಾಗಿ ಕಾದಂಬರಿಗೆ ಒಂದು ಬಗೆಯ ಚಲನೆ ಸಿಕ್ಕಂತಾಗಿದೆ. + +ಕಾದಂಬರಿ ಒಂದು ರಚನೆ ಆಗಿರುವದರಿಂದ ಇಲ್ಲಿ ಕಟ್ಟುವ ಕೆಲಸ ನಾಜೂಕಾಗಿ ನಡೆಯಬೇಕು. ಉಪಮೆಗಳು, ಮಹೋಪಮೆಗಳು, ನೆನಪುಗಳು, ವಿವರಗಳು, ವ್ಯಕ್ತಿಗತ ತಳಮಳಗಳು ಹೀಗೆ ಭಾವಾಭಿವ್ಯಕ್ತಿ ನಿರಂತರ ಕಥೆಯ ಓಘವನ್ನು ಮುರಿದು ಕಟ್ಟುತ್ತಾ ಹೋಗಬೇಕು. ಅದಕ್ಕಾಗಿ ಕಥೆ ಸರ್ವಸಾಕ್ಷಿ ಪ್ರಜ್ಞೆಯಲ್ಲಿ ಸಾಗಬೇಕು. ಇನ್ನೊಬ್ಬ ವ್ಯಕ್ತಿಯ ಅಂತರಂಗದ ತಳಮಳವನ್ನು ಚಿತ್ರಿಸಲು ತೀರ ಸರಳವಾಗುತ್ತದೆ. ಆದರೆ ಕಪಿಲ ಅವರು ಪ್ರಥಮಾ ವಿಭಕ್ತಿಯಲ್ಲಿ ಕತೆಯನ್ನು ಪ್ರಾರಂಭ ಮಾಡಿದ್ದಾರೆ. ಇದರಿಂದ ಕಥಾ ರಚನೆಯಲ್ಲಿ ಬಿಕ್ಕಟ್ಟುಗಳನ್ನು ಅವರು ಎದುರಿಸಿದ್ದಾರೆ. + +ಇನ್ನೊಂದು ವಾದವೆಂದರೆ ಕಾದಂಬರಿಗೆ ಒಂದು ಕೇಂದ್ರ ಇರಬೇಕು ಎನ್ನುವದು. ಬಹಳ ಹಿಂದೆಯೇ ಕುವೆಂಪು ಅವರು ತಮ್ಮ ಕಾದಂಬರಿಗೆ ಕೇಂದ್ರ ಎನ್ನುವದೇನು ಬೇಕಿಲ್ಲ ಎನ್ನುವಂತೆ ಬರೆದು ನಮಗೆ ಕಥೆ ಹೇಳಿದ್ದಾರೆ. ಕಥನ ಕೇಂದ್ರದಿಂದ ಬಾಹ್ಯದ ಬಹುಮುಖಿ ಸಮಾಜದ ಆಗು ಹೋಗುಗಳಿಗೆ ಮುಖಾಮುಖಿ ಆಗುವದು ಒಂದು ಬಗೆಯಾದರೆ ಬಾಹ್ಯ ಘಟನೆಗಳಿಂದ ಕಥನ ಕೇಂದ್ರಕ್ಕೆ ಮೈ ಚಾಚುವದು ಇನ್ನೊಂದು ಕ್ರಮ. ಇದನ್ನೇ ನಾವು ‘ಗೋಪುರ ಮಾದರಿ’ ಎನ್ನುವದು. ಕಪಿಲ ಅವರ ಹಾಣಾದಿ ಈ ಬಗೆಯ ಕಾದಂಬರಿಯಾಗಿದೆ. + +ಹಾಣಾದಿಯ ಕಥೆ ಸರಳವಾಗಿದೆ. ಕಾದಂಬರಿ ನಡೆಯುವದು ಕೇವಲ ಒಂದು ಹಗಲು ಒಂದು ರಾತ್ರಿ ಮಾತ್ರ. ಆದರೆ ಇಲ್ಲಿಯ ಘಟನೆಗಳು ನಿರೂಪಕನ ಬಾಲ್ಯದ ಅಖಂಡ ಅನುಭವಗಳನ್ನು ತಣ್ಣಗೆ ವಿವರಿಸುತ್ತ ಸಾಗುತ್ತದೆ. ಕಥೆ ನಡೆಯುವದು ಒಂದು ಹಳ್ಳಿಯಲ್ಲಿ. ಅಲ್ಲಿಯ ಒಂದು ಮನೆಯ ಮುಂದಿನ ಬಾದಾಮಿ ಗಿಡದ ಸುತ್ತ ಘಟನಾವಳಿಗಳು ಬಿಚ್ಚಿಕೊಳ್ಳುತ್ತವೆ. ಬಹುತೇಕ ಕತೆ ಮಾತಿನ ರೂಪದಲ್ಲಿ ನಡೆಯುವದು ಕಾದಂಬರಿಯ ವಿಶೇಷವಾಗಿದೆ. ಗುಬ್ಬಿ ಆಯಿ ಎನ್ನುವ ನಿಗೂಡವಾದ ಮುದುಕಿ ಒಬ್ಬಳು ನಿರೂಪಕನಿಗೆ ಕಥೆ ಹೇಳುತ್ತ ಹೋಗುವ ವಿವರಗಳೇ ಕಾದಂಬರಿಯ ಹಂದರವಾಗುತ್ತ ಸಾಗುತ್ತದೆ. ಈ ಗುಬ್ಬಿ ಆಯಿ ಹೇಗಿದ್ದಳೆಂದರೆ ‘ಕಟ್ಟಿಗೆ ಒಂದಕ್ಕೆ ಸೀರೆ ಸುತ್ತಿಟ್ಟಂತೆ ಇದ್ದಳು ಆಯಿ’ ಎಂದು ಕಾದಂಬರಿಯಲ್ಲಿ ವರ್ಣಿತವಾಗಿದೆ. ಮನೆ ಮುಂದಿನ ಬಾದಾಮಿ ಗಿಡದ ಮೇಲಿನ ಅಪ್ಪನ ಪ್ರೇಮ ಅದನ್ನು ಪರಿಸರ ಪ್ರೇಮ ಎಂದೇನು ಸುಳ್ಳು ಸುಳ್ಳೆ ವಿಜ್ರಂಭಿಸುವದು ಲೇಖಕನಿಗೆ ಇಷ್ಟವಿಲ್ಲ. ಅದು ಕೇವಲ ಅವನ ಬಾದಾಮಿ ಗಿಡದ ಮೇಲಿನ ಪ್ರೀತಿ ಮಾತ್ರ ಆಗಿ ಉಳಿಯುವದರಿಂದ ಕಾದಂಬರಿ ಸಾಚಾ ಎನ್ನಿಸಿಕೊಳ್ಳುತ್ತದೆ. + +ಬಾದಾಮಿ ಗಿಡದ ಮೇಲಿನ ಊರವರ ಅಕಾರಣ ದ್ವೇಷ ಮತ್ತು ಸಿಟ್ಟು, ಗಿಡದಲ್ಲಿ ದೆವ್ವ ಸೇರಿಕೊಂಡಿದೆ ಮತ್ತು ಊರಲ್ಲಿ ನಡೆಯುವ ಅವಘಡ ಮತ್ತು ಸಾವುಗಳಿಗೆಲ್ಲಾ ಆ ಶಾಪಗ್ರಸ್ತ ಬಾದಾಮಿ ಗಿಡವೇ ಕಾರಣ ಎನ್ನುವ ಊರ ರಾಮಯ್ಯನಂತವರು ಹುಟ್ಟಿಸುವ ಪುಕಾರಗಳು, ಅದನ್ನು ಕಡಿದು ಚೆಲ್ಲು ಎನ್ನುವ ಜನರ ಒತ್ತಾಯ, ಅದಕ್ಕೆ ಮಣಿಯದ ಅಪ್ಪ, ಊರಲ್ಲಿ ನಡೆಯುವ ಸಾಲು ಸಾಲು ಸಾವುಗಳು, ಭಯದಿಂದ ಊರನ್ನೇ ಬಿಟ್ಟು ಹೋದ ಊರವರು, ಒಂದು ರಾತ್ರಿ ಯಾರೋ ಬಾದಾಮಿ ಗಿಡವನ್ನು ಕಡಿದು ಚೆಲ್ಲಿದ್ದು ಹೀಗೆ ಕತೆ ನಿಗೂಢತೆಯನ್ನು ಸಂಘರ್ಷವನ್ನು ಎದುರು ಹಾಕಿಕೊಳ್ಳುತ್ತ ಬದುಕು ಗೆರೆ ಕೊರೆದಂತೆ ಅಲ್ಲ. ಅದು ಎತ್ತಿನ ಗಾಡಿಯ ಹಾಣಾದಿಯ ಹಾಗೆ ಎನ್ನುವದನ್ನು ಸಾಕ್ಷೀಕರಿಸುತ್ತ ಹೋಗುತ್ತದೆ. + +ಇದರೊಂದಿಗೆ ಈ ಘಟನೆಗಳಿಗೆ ಈಡಾಗುವ ಭಿನ್ನ ಭಿನ್ನ ನೆನಪಿನ ತುಂಡುಗಳು, ಓದುವ ದಾರಿಯಲ್ಲಿ ಎದುರಾಗುವ ವಿವೇಕದ ಮಿಂಚು ಸಾಲುಗಳು, ನಿಗೂಢಕ್ಕೆ ಸಾಗುವ ಕಥನ, ಗುಬ್ಬಿ ಆಯಿ ನಿರೂಪಕನೊಂದಿಗೆ ನಿರಾಳ ಕಥೆ ಹೇಳುತ್ತ ರಾತ್ರಿಯಲ್ಲಾ ಅಡ್ಡಾಡುವದು, ತ್ಯೊತ್ಯಾನ ಮಗಳ ಮಕ್ಕಳಾಟ ಇವೆಲ್ಲ ಘಟನೆಗಳು ಕಾದಂಬರಿಗೆ ನಿಗೂಢತೆಯನ್ನು ತಂದಿವೆ. + + + +ವಾಸ್ತವವಾದಿ ಕಾದಂಬರಿ ಪ್ರಕಾರಕ್ಕೆ ಒಗ್ಗಿಕೊಂಡಿರುವ ಓದುಗರಿಗೆ ಈ ಕಾದಂಬರಿಯ ನಡೆ ಒಂದು ನಿಗೂಢಲೋಕದ ಅನೂಹ್ಯ ಅಘೋರಿ ವಿವರಗಳಿಂದಾಗಿ ವಿಸ್ಮಯವನ್ನು ಉಂಟು ಮಾಡುತ್ತವೆ. ಇಲ್ಲಿಯೇ ಓದುಗನಲ್ಲಿ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅಪ್ಪ ಸತ್ತದ್ದು ಕಥಾನಾಯಕನಿಗೆ ಹೇಗೆ ತಿಳಿಯಲಿಲ್ಲ ಎನ್ನುವದನ್ನು ಹಿಡಿದು , ಗುಬ್ಬಿ ಆಯಿ ನಿರೂಪಕನನ್ನು ರಾತ್ರಿಯೆಲ್ಲ ಹೊಲದಲ್ಲಿ ಅಡ್ಡಾಡಿಸುತ್ತ ಕತೆ ಹೇಳುತ್ತ ಹೊಗುವದು ಇತ್ಯಾದಿಗಳ ಒಗಟನ್ನು ತಿಳಿಯಲು ಕಾದಂಬರಿಯಲ್ಲಿ ಇನ್ನಷ್ಟು ವಿವರಗಳು ಸೇರಬೇಕಿತ್ತು ಎನ್ನಿಸದೆ ಇರದು. ಮಿಲನ ಕುಂದೇರಾ ಹೇಳುವಂತೆ ‘ಕಾದಂಬರಿಗಳ ಜಗತ್ತು ಸರ್ವಾಧಿಕಾರಿಗಳ ಜಗತ್ತು ಅಲ್ಲಿ ಉತ್ತರಗಳಿಗೆ ಜಾಗವಿಲ್ಲ’ ಅಂದರೆ ಕಾದಂಬರಿಯಲ್ಲಿ ಹುಟ್ಟುವ ಪ್ರಶ್ನೆಗಳಿಗೆ ಕಾದಂಬರಿಯಲ್ಲಿಯೇ ಉತ್ತರ ಸಿಗಲಾರದು ಲೋಕಪ್ರಜ್ಞಪ್ತಿಯ ನಿರಧಾರ ಸೂತ್ರಗಳೆ ಅದಕ್ಕೆ ಉತ್ತರ ಕೊಡಬೇಕು. ಹಾಣಾದಿ ಓದಿದಾಗಲೂ ಅಷ್ಟೆ. + +(ಡಾ. ಬಾಳಾಸಾಹೇಬ ಲೋಕಾಪುರ) + +ನಮಗೆ ಮಾಂತ್ರಿಕ ವಾಸ್ತವವಾದವನ್ನು ಕಲಿಸಿದವನು ಅದರ ಹರಿಕಾರನಾದ ಮಾರ್ಕವೇಜ್. ನಾವು ಅವನಂತೆ ಬರೆಯಲು ಹೋದಾಗ ಅದು ಸುಳ್ಳು ಕತೆಯಂತಾಗುವ ಅಪಾಯ ಇದ್ದೇ ಇದೆ. ಪ್ರಜ್ಞೆ ಮತ್ತು ನೆನಪಿನ ಸಮಸ್ಸೆ ಇದು. ನೆನಪನ್ನು ಅಳಿಸಿ ಹಾಕಿ ಪ್ರಜ್ಞೆಯಲ್ಲಿ ಸೇರಿದ್ದನ್ನು ಬರೆಯಬೇಕು ಎನ್ನುವದು ಯಾವುದೇ ಬರೆಹದ ಮೂಲ ಪಾಠವಾಗಿದೆ. + +ಕಾದಂಬರಿಯಲ್ಲಿ ಸೇರಿಕೊಂಡಿರುವ ಅಪರೂಪದ ಮಿಂಚು ಮಾತುಗಳು ಖಂಡಿತವಾಗಿಯೂ ನಮ್ಮನ್ನು ಆನಂದ ಪಡಿಸುತ್ತವೆ. + +1 ಕ್ರಿಸ್ತನಿಗೆ ವಯಸ್ಸಾದಂತೆ ಕಂಡಿತು.2 ನನ್ನೂರು ಸುತ್ತುವರೆಯಲ್ಪಟ್ಟ ಗುಡ್ಡಗಳ ಮಧ್ಯೆ ಗುಬ್ಬಿ ಮರಿಯಂತೆ ಮುದುಡಿ ಕುಂತಿತ್ತು.3 ಮುಗಿಲು ನೀಲಿಯೆಲ್ಲ ಟಪ್ಪನೆ ಸೇರಿ ಕಣ್ಣಲ್ಲಿ ಬಿತ್ತು.4 ಯಾರೋ ಗದರಿಸಿ ಹೋದಂತೆ ಮುಗಿಲು ಗಂಭೀರವಾಗಿತ್ತು.5 ಫ್ಯಾಕ್ಟರಿಯ ಕೊಳವೆಗಳು ಯಾರೋ ಮಲಗಿ ಸಿಗರೇಟು ಸೇದುತ್ತಿರುವಂತೆ ಹೊಗೆ ಬಿಡುತ್ತಿದ್ದವು.6 ಉಣ್ಣೋ ಅನ್ನಕ್ಕ ದೇವರು ಬೆಳಸಿದ ಗಿಡಕ್ಕ ಎಲ್ಲಿಂದ ಜಾತಿ? + +ಇಂತಹ ಮಿಂಚು ಸಾಲುಗಳು ಕಾದಂಬರಿಯ ತುಂಬ ಇಡುಕುಗೊಂಡಿವೆ. + +ಕಾದಂಬರಿಕಾರ ಕಪಿಲ ಅವರ ಬಾಲ್ಯದ ಅನುಭವಗಳು ಬಹಳ ಗಟ್ಟಿಯಾಗಿವೆ. ನಾಜೂಕಾಗಿವೆ. ಈ ಕಾದಂಬರಿ ಅವರು ಬರೆಯಬಹುದಾದ ಅದೆಷ್ಟೊ ಸಾಹಿತ್ಯದ ಬೀಜರೂಪವಾಗಿದೆ. ನಿರಂತರ ಓದುವವರಾದ ನಾವು ನಮ್ಮ ಸಾಹಿತ್ಯ ರಚನಾ ಕಾಲದಲ್ಲಿ ವಿಸರ್ಜನಾ ಸಾಮರ್ಥ್ಯವನ್ನು ಬೆಳಸಿಕೊಳ್ಳಬೇಕಾಗುತ್ತದೆ. ಆಗ ಮಾತ್ರ ನೆನಪು ಮರೆಯಾಗಿ ನಮ್ಮ ಪ್ರಜ್ಞೆಯ ಭಾಗವಾಗಿ ನಮ್ಮ ಸಾಹಿತ್ಯ ಹುಟ್ಟುತ್ತದೆ. ಯುವ ಗೆಳೆಯ ಕಪಿಲ ಅವರಿಗೆ ಆ ಸಾಮರ್ಥ್ಯವಿದೆ. ಕಪಿಲ ಇನ್ನಷ್ಟು ಮತ್ತಷ್ಟು ಬರೆಯಲಿ ಒಂದು ಕೃತಿಯನ್ನು ಹೊರತರದೆ ಮುಂದಿನ ಕೃತಿಯ ಸ್ವವಿಮರ್ಶೆ ನಮಗೆ ದಕ್ಕಲಾರದು. ಹೊರಗಿನ ವಿಮರ್ಶೆಯ ಮಾತುಗಳಿಗೆ ಯಾವ ಯಾವದೋ ಆಮಿಶಗಳು ಇರಬಹುದು. ಆದರೆ ಸ್ವತಃ ಲೇಖಕನೆ ತನ್ನ ಕೃತಿಗೆ ತಾನೆ ಮುಖಾಮುಖಿ ಆಗುವದು ಆ ಮೂಲಕ ಬರಬಹುದಾದ ನಮ್ಮ ಮುಂದಿನ ಕೃತಿಗೆ ನಾವೆ ಜವಬ್ದಾರಿಗಳಾಗುವದು ಸರಿಯಾದ ಮಾರ್ಗ. ಅದನ್ನು ಕಪಿಲ ಮಾಡಲಿ ಎಂದು ಆಶಿಸುತ್ತೇನೆ. ಕಪಿಲ ಇನ್ನಷ್ಟು ಮತ್ತಷ್ಟು ಬರೆಯಲಿ ಎಂದು ಹಾರೈಸುತ್ತ ಕನ್ನಡ ಸಾಹಿತ್ಯ ಲೋಕಕ್ಕೆ ಅವರನ್ನು ಹೃದಯಪೂರ್ವಕ ಬರಮಾಡಿಕೊಳ್ಳುತ್ತೇನೆ. + +-ಡಾ. ಬಾಳಾಸಾಹೇಬ ಲೋಕಾಪುರ + +******* + +`ಹಾಣಾದಿ’ ಕಾದಂಬರಿ ತನ್ನ ಕಥಾವಸ್ತು, ನಿರೂಪಣಾ ವಿಧಾನ ಮತ್ತು ಲೇಖಕ ಹೀಗೆ ಹಲವು ಕಾರಣಗಳಿಂದ ಗಮನ ಸೆಳೆಯುವ ಕೃತಿ. ವರ್ತಮಾನ ಮತ್ತು ಭೂತಕಾಲ ಜತೆಜತೆಗೆ ಸಾಗುವ, ನೆನಪುಗಳ ಸಿಕ್ಕುಗಳಲ್ಲಿ ಓದುಗನನ್ನು ಸಿಲುಕಿಸುವ ಕಾದಂಬರಿ. `ಗಾರುಡಿ ವಾಸ್ತವತೆ’ಯ ತಂತ್ರವನ್ನು ಬಳಸುತ್ತದೆ. ಕಥೆಯೊಳಗೆ ಕಥೆ, ಅದರೊಳಿನ್ನೊಂದು ಕಥೆ ಎಂಬಂತೆ ಇದರ ನಿರೂಪಣೆ. ಕಾದಂಬರಿಯಲ್ಲಿ ಜನಪದ ರಮ್ಯಾದ್ಭುತ ಕಥೆಗಳಲ್ಲಿನಂತೆ ಗುಬ್ಬಿ ಆಯಿ ಎಂಬ ಅಡಗೂಳಜ್ಜಿ ಇದ್ದಾಳೆ. ಬೇತಾಳವನ್ನು ಬೆನ್ನಿಗೆ ಹಾಕಿಕೊಂಡಿರುವ ರಾಜಾ ತ್ರಿವಿಕ್ರಮನಂತೆ ನೆನಪುಗಳ ಪಾಥೇಯವನ್ನು ಹೊತ್ತ ಕಥಾನಿರೂಪಕನಿದ್ದಾನೆ. ಅವರ ಮಾತುಕತೆ, ನೆನಪು, ಉಪಕಥೆಗಳು ಭ್ರಮ-ವಿಭ್ರಮ ಲೋಕವನ್ನು ಸೃಷ್ಟಿಸುತ್ತವೆ. ಒಂದು ಗ್ರಾಮದ ಅವನತಿ, ಸಾವು-ನೋವು, ವಿಷಮ ಸಂಸಾರ, ಸಂಬಂಧಗಳು, ಮಾನವ ಸಹಜ ದ್ವೇಷಾಸೂಯೆ, ಬದುಕು ಬಲಿ ಕೊಡುವ ನಂಬಿಕೆ ಇತ್ಯಾದಿಗಳು ಈ ಗಾರುಡಿ ಲೋಕದಲ್ಲಿ ಬಿಚ್ಚಿಕೊಳ್ಳುತ್ತವೆ. + +ಕಥಾನಾಯಕ ಭೂತಕಾಲದ ನೆನಪುಗಳ ಆಶ್ರಿತ. ಈ ನೆನಪುಗಳು ಮತ್ತೆ ಮತ್ತೆ ಬಾಲ್ಯಕ್ಕೆಳೆದು ಸಿಹಿಕಹಿಯನ್ನು ಉಣಬಡಿಸುತ್ತದೆ. ಗುಬ್ಬಿ ಆಯಿ, ಒಮ್ಮೆ ಸಾಕ್ಷಿಯಾದರೆ, ಮಗದೊಮ್ಮೆ ದುರಂತಗಳಲ್ಲಿ ಭಾಗಿ. ಕಾದಂಬರಿಯಲ್ಲಿ, ಅಪ್ಪ, ಪುಟ್ಟ ಬಾಲಕಿ, ಅಡವಿ, ಗುಡ್ಡ, ಹೊಲ, ಹಳ್ಳಿಯ ಉಳಿದ ಪಾತ್ರಗಳಂತೆಯೇ ಬಾದಾಮಿ ಮರ ಕೂಡ ಪ್ರಮುಖ ಪಾತ್ರ. ಮಾತ್ರವಲ್ಲ, ಆ ಹಳ್ಳಿಯಲ್ಲಿ ನಡೆಯುವ ಎಲ್ಲ ದುರಂತಗಳಿಗೆ ಸಾಕ್ಷಿಯಾಗಿ ಕೊನೆಗೆ ಗುರುತು ಕೂಡ ಉಳಿಸದೆ ಮರೆಯಾಗುವ ಪ್ರತಿಮೆ. + +(ಕೇಶವ ಮಳಗಿ) + +ಲೇಖಕನ ಕಾರಣದಿಂದ ಗಮನ ಸೆಳೆವ ಕೃತಿಯೆಂದು ಹೇಳಿದೆ. ಇನ್ನೂ ವಿದ್ಯಾರ್ಥಿಯಾಗಿರುವ ಇಪ್ಪತ್ತರ ಆಸುಪಾಸಿನ ಕಪಿಲ ಹುಮನಾಬಾದೆ ಕಾದಂಬರಿ ರಚನೆಯಲ್ಲಿ ತೋರಿರುವ ಶ್ರದ್ಧೆ, ತಂತ್ರ, ಆಯ್ದುಕೊಂಡ ಕಥಾವಸ್ತು ಮತ್ತು ಅದನ್ನು ನಿಭಾಯಿಸಿರುವ ದೃಷ್ಟಿಯಿಂದ ಅಭಿನಂದನೆಗೆ ಅರ್ಹರು. ಸಾಗಬೇಕಾದ ದಾರಿ ದೂರವಿರಬಹುದು. ಆದರೆ, ಅವರ ಮೊದಲ ಹೆಜ್ಜೆ ಅಳೆದು-ತೂಗಿ, ವಿಚಾರಿಸಿ ಇಟ್ಟಿರುವಂಥದ್ದು. ಹಾಗೆಂದೇ, ತನ್ನ ಸೀಮಿತಾರ್ಥದಲ್ಲಿ ಹಾಣಾದಿ ಒಂದು ಯಶಸ್ವಿ ಕಾದಂಬರಿ. + + + +ವಿಕ್ರಮ-ಬೇತಾಳ ಕಥೆಯ ಅಂತ್ಯವನ್ನು ನಾವೆಲ್ಲ ಬಲ್ಲೆವು. ಹಾಣಾದಿ ಕೃತಿಯ ಅಂತ್ಯವನ್ನು ಓದಿಯೇ ಅರಿತುಕೊಳ್ಳಬೇಕು. + +-ಕೇಶವ ಮಳಗಿ + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_359.txt b/Kenda Sampige/article_359.txt new file mode 100644 index 0000000000000000000000000000000000000000..efe0a81c52366295cb53a77064185ca6d1b07ad6 --- /dev/null +++ b/Kenda Sampige/article_359.txt @@ -0,0 +1,103 @@ + + +‘ಧೀರನೂ ಸ್ವತಂತ್ರನೂ ಎಲ್ಲಕ್ಕಿಂತ ಮಿಗಿಲಾಗಿ ಸೃಜನಶೀಲನೂ ಆದ ಮನುಷ್ಯಶಿಶು ಅರುವತ್ತೋ ಎಪ್ಪತ್ತೋ ವರ್ಷಗಳೊಳಗೆ ಭೀರುವೂ ಪರತಂತ್ರನೂ ಆಗಿಬಿಟ್ಟು ಸ್ವಂತ ಸೃಷ್ಟಿಸಾಮಥ್ರ್ಯವನ್ನು ವಂಶಾಭಿವೃದ್ಧಿಗಾಗಿ ಮಾತ್ರ ವ್ಯಯಿಸಿ ಕೊನೆಗೆ ವೃದ್ಧ ಪಾತ್ರ ಧರಿಸಿದ ಒಂದು ದೊಡ್ಡ ಮಗುವಾಗಿ ಮರಣ ಹೊಂದುವುದನ್ನೇ ಮನುಷ್ಯಜೀವನ ಎನ್ನುವುದಾದರೆ, ಪ್ರೀತಿಪಾತ್ರಳೇ, ಮನುಷ್ಯನಾಗಿ ಹುಟ್ಟಿದುದರಲ್ಲಿ ನಾನು ಅಭಿಮಾನ ಪಡುವಂತಹದ್ದೇನೂ ಇಲ್ಲ.” + +ಜಿತೇಂದ್ರನ್ ಆನ್ಮೇರಿಗೆ ಕಳಿಸಿದ ಒಂದು ಪತ್ರದ ಸಾಲುಗಳು + +1.ವಿಳಾಸ + +ಮರಣಾನಂತರ ಕಾರ್ಯಗಳು ಮುಗಿದು, ಬಂಧುಗಳು ಮಕ್ಕಳೆಲ್ಲ ತೆರಳಿ ಆ ಫ್ಲಾಟ್ ನಲ್ಲಿ ವಿಧವೆಯಾಗಿ ಒಬ್ಬೊಂಟಿಯಾದ ಮೊದಲ ದಿವಸ, ತನಗೊಬ್ಬಳಿಗೇ ಅಮೂಲ್ಯವೆಂದೆನಿಸಿದ್ದ, ತನ್ನ ಗಂಡ ಕಾಲು ಶತಮಾನದ ಹಿಂದೆ ನೋವುದುಂಬಿದ ತಿರಸ್ಕಾರದಿಂದ ತ್ಯಜಿಸಿದ್ದ ಒಂದು ಹಿಂಡು ಅಕ್ಷರಗಳನ್ನು ಅವಳು ಹುಡುಕಿ ತೆಗೆದಳು. ಒಮ್ಮೆ ಚರಂಡಿ ನೀರಿನಲ್ಲಿ ಒದ್ದೆಯಾದ ಪುಸ್ತಕದ ಕಟ್ಟುಗಳ ಮಧ್ಯದಿಂದ ಅವಳು ಕಾಪಾಡಿ ತೆಗೆದು ಒಣಗಿಸಿ ಜತನವಾಗಿರಿಸಿದ್ದ ಕೆಲವು ಕಾಗದಗಳು ಮತ್ತು ಯೌವನದಲ್ಲಿ ಆತ ಬರೆಯಬೇಕೆಂದು ತೀವ್ರವಾಗಿ ಹಂಬಲಿಸಿದ್ದ ಒಂದು ಪುಸ್ತಕದ ಸಂಕ್ಷೇಪ ರೂಪದ ಟಿಪ್ಪಣಿಗಳೇ ಅವು. + +ತನ್ನನ್ನು ಭಾವೀವಧುವೆಂದು ನಿರ್ಧರಿಸಿದ ಮೇಲೆ ತಮ್ಮ ವಿವಾಹದವರೆಗೆ ಮನ್ವಂತರದ ಹಾಗೆ ದೀರ್ಘವಾಗಿಬಿಟ್ಟ ಆರು ವರ್ಷಗಳ ಕೊನೆಯ ಹತ್ತು ತಿಂಗಳುಗಳಲ್ಲಿ-ಸಾವಿರದಒಂಬೈನೂರತೊಂಬತ್ತೊಂಬತ್ತರ ಮಾರ್ಚ್ ನಿಂದ ಎರಡುಸಾವಿರದ ಜನವರಿ ತನಕ-ಆತ ಕಳುಹಿಸಿದ ಹಲವು ಗಾತ್ರಗಳ ನಲವತ್ತು ಪತ್ರಗಳದೇ ಅವುಗಳಲ್ಲಿ ಸಿಂಹಪಾಲು. ಅವುಗಳಲ್ಲಿ, ಯಾವೊಬ್ಬ ಪ್ರಿಯಕರನೂ ತನ್ನ ಹುಡುಗಿಗೆ ಬರೆಯುವ ರೀತಿಯಲ್ಲಿದ್ದ ಪ್ರಣಯ ನಾರುವ ನುಡಿಗಳೇ ಹೆಚ್ಚಿನವು. ಮೊದಲ ಬಾರಿ ಓದಿದಾಗ ಕೈಬೆರಳುಗಳನ್ನೂ ಹೃದಯವನ್ನೂ ಏಕಪ್ರಕಾರವಾಗಿ ನಡುಗಿಸುತ್ತಿದ್ದ ಆ ಭಾಗಗಳನ್ನು ಈಗ, ತನ್ನ ಐವತ್ತನೇ ವಯಸ್ಸಿನಲ್ಲಿ, ಬೇರೆ ಯಾರೋ ಇನ್ನಾರಿಗೋ ಕಳಿಸಿದ ನುಡಿಗಳೆಂಬಂತೆ ನಿಸ್ಸಂಗತೆಯಿಂದ ಓದಲು ಅವಳಿಗೆ ಸಾಧ್ಯವಾಯಿತು. ಆದರೆ ಮನುಷ್ಯನ ಮಹತ್ವದ ಬಗ್ಗೆ ಒಬ್ಬ ಯುವಕನಾಗಿದ್ದಾಗಲೇ ಆತ ಬರೆದಿರಿಸಿದ್ದ, ಕೆಲವು ವ್ಯಾಕುಲತೆಗಳು ಉರಿದು ನಂದಿಹೋಗದಂತೆ ಆ ಪತ್ರದಲ್ಲಿ ಅಲ್ಲಲ್ಲಿ ತಲೆಯೆತ್ತಿ ನಿಂತಿದ್ದವು. ಅವು ಹಿಂದೆ ಅನುಭವವಾಗದಿದ್ದ ರೀತಿಯಲ್ಲಿ ಈಗ ಅವಳನ್ನು ಮಥಿಸತೊಡಗಿದವು. ಹಲವು ಪತ್ರಗಳಿಂದ, ಇನ್ನೆಂದಿಗೂ ಯಾವ ಯುವಕನೂ ತನ್ನ ಪ್ರಣಯಿನಿಗೋ ಗೆಳೆಯನಿಗೋ ಬರೆಯುವ ಸಾಧ್ಯತೆಯಿಲ್ಲದ ಆ ಸಾಲುಗಳನ್ನು ಅವಳು ಅನೇಕ ಸಾರಿ ಓದಿದಳು. + +ಇಪ್ಪತ್ತೆಂಟನೇ ವಯಸ್ಸಿನಲ್ಲೇ ಆತ ಬರೆಯದೆ ತೊರೆದು ಬಿಟ್ಟ ಕಾದಂಬರಿಯ ಭಾಗಗಳನ್ನು ಅವಳು ಡವಗುಟ್ಟುವ ಎದೆಯೊಂದಿಗೆ ಹಿಂಬಾಲಿಸಿದಳು. ಅದನ್ನು ಬರೆಯುತ್ತಿರುವಾಗ ಇದ್ದ ಆತನ ಮನೋಸಂಘರ್ಷಗಳು ಕಾಲು ಶತಮಾನದ ಈಚೆಗೂ ಅದರಲ್ಲಿ ಅಂಟಿಕೊಂಡು ನಿಂತಿರುವ ಹಾಗೆ ಅವಳಿಗೆ ತೋರಿತು. ಅಕ್ಷರಗಳ ಮೇಲೆ ಬೆರಳೋಡಿಸುವಾಗ ಅವಳ ಬೆರಳು ಸುಟ್ಟಿತು. ಭವಿಷ್ಯಕ್ಕೋಸ್ಕರ ಜೋಪಾನವಾಗಿರಿಸಲ್ಪಟ್ಟ ಮಹಾವೃಕ್ಷಗಳ ಬೀಜಗಳ ಹಾಗೆ ಭಾಸವಾದಂತಹ ಅವು ಈಗ ಪೂರ್ಣರೂಪದಲ್ಲಿ ಅವಳ ಒಳಬಗೆಯಲ್ಲಿ ಸೊಂಪಾಗಿ ಹೊಮ್ಮ ತೊಡಗಿದವು. ಕಾಲು ಶತಮಾನದ ತನಕ ಅವನ್ನು ಮುಟ್ಟಲು ಅವಳಿಗೆ ಅನುಮತಿ ಇರಲಿಲ್ಲ. ಅದರ ಬಗ್ಗೆ ನೆನೆಯುವುದಾಗಲಿ ನುಡಿಯುವುದಾಗಲಿ ಮಾಡದೆ ಸ್ವಸ್ಥನಾಗಿ ಬಾಳುವುದರಲ್ಲಿ ಆಶ್ಚರ್ಯಕರವಾದ ಜಾಣ್ಮೆಯನ್ನು ಆತ ಮೆರೆದಿದ್ದ. ಕಾದಂಬರಿಯಂತೆ ಅರಳಿಸಿ ತೆಗೆಯಬಹುದಾಗಿದ್ದ ಸಂಕ್ಷಿಪ್ತ ಟಿಪ್ಪಣಿಗಳ ಬಗೆಗೆ ಮಧ್ಯೆ ಯಾವಾಗಲೋ ಸೂಚಿಸಿದಾಗ ಮಾತ್ರ, ಅದು ಬೇರೆ ಯಾರದೋ ತಮಾಷೆಯ ಬದುಕು ಎಂಬ ಧಾಟಿಯಲ್ಲಿ ಆತ ಗಹಗಹಿಸಿ ನಕ್ಕು ಬಿಟ್ಟಿದ್ದನಷ್ಟೆ. ಜೀವನದಲ್ಲಿ ಆತ ಬಾಯ್ತುಂಬ ನಕ್ಕದ್ದನ್ನು ಕಂಡ ಅಪರೂಪದ ಸಂದರ್ಭಗಳಲ್ಲಿ ಖಂಡಿತ ಅದೂ ಒಂದು. ಆದರೆ ಈಗ ಅವೆಲ್ಲವೂ ತನ್ನ ಉಳಿದ ವೈಧವ್ಯ ಜೀವನದ ನಿಸ್ಸಹಾಯವಾದ ಏಕಾಂತತೆಯಲ್ಲಿ ಮತ್ತೆ ಮೆಲುಕು ಹಾಕಿ ಸ್ಮರಿಸಲೂ, ಬೇರಾರಿಗೋಸ್ಕರವೋ ಅಲ್ಲದೆ, ಅಕ್ಷರಬೀಜಗಳನ್ನು ಮಾಮರಗಳಾಗಿ, ಬಿರುಗಾಳಿಗಳಾಗಿ, ಬದಲಾಯಿಸಲೂ ಅವಳಿಗೆ ಧಾರಾಳವಾಗಿ ಸಮಯಾವಕಾಶವಿರುವುದು. + +ಒಬ್ಬ ವ್ಯಕ್ತಿಯ ಮರಣದ ಬಳಿಕವೂ ನೆಲೆನಿಲ್ಲಬಲ್ಲ ಸಾಮರ್ಥ್ಯವು, ಆತ ಹೊರಡಿಸುವ ಯಥಾರ್ಥ ಮಾತುಗಳಿಗೆ ಇರುವುದು ಎಂದು ಅವಳಿಗೆ ಅರಿವಾಗತೊಡಗಿತು: ಚಿತೆಗಳಿಗೂ ಸಹ ಸುಡಲು ಸಾಧ್ಯವಿಲ್ಲದಂತಹ ಆ ನುಡಿಗಳನ್ನು ಇಡೀ ಮನುಷ್ಯ ಜೀವನದ ಮುನ್ನುಡಿಯಾಗಿ ತೆಗೆದುಕೊಂಡು ಆದರಿಸಬೇಕಾಗಿದೆ. + +“ಚೊಕ್ಕಾಂಪೆಟ್ಟಿ, ಪಾಚ್ಚಿ, ಸುಂದರಮಲೆ, ಕೋಮಲೆವಳ್ಳಿ ಹಾಗೂ ಕಾಳಿ ನಾಗರಮಲೆ ಕ್ರಮದಲೆ” + +*ಪೆರಿಯಾರ್ ಹೊಳೆಯನ್ನು ಹೆತ್ತು ಪೋಷಿಸಿದ ಮಲೆಗಳ ಹೆಸರುಗಳನ್ನು ಪೋಣಿಸಿ ಕಟ್ಟಿದ ದ್ವಿಪದಿಯನ್ನು ಅಜ್ಜ ಜಿತನಿಗೆ ಹೇಳಿಕೊಟ್ಟ. ಪಶ್ಚಿಮ ಘಟ್ಟದಲ್ಲಿ ಹಸಿರಿನ ಹೊದಿಕೆ ಹೊದ್ದು ನಿಂತ ಭವ್ಯವಾದ ಏಳು ಪರ್ವತಗಳು: ಅವುಗಳಲ್ಲಿ ನಾಲ್ಕು ಹೆಣ್ಣು, ಮೂರು ಗಂಡು. ಇನ್ನೂ ಸ್ವಲ್ಪ ದೊಡ್ಡವನಾದ ಮೇಲಷ್ಟೇ ಜಿತನಿಗೆ ಅರ್ಥವಾಗುವಂತಹ ಏನೋ ಒಂದು ಪ್ರಯತ್ನದಲ್ಲಿ ಅವು ಬೆವೆತು ಹರಿಯುತ್ತಿವೆ. ಬೆವರ ಕಾಲುವೆಗಳು ಸಂಗಮಿಸಿ ಒಂದು ಹೊಳೆಯಾಗುತ್ತಿದೆ. + +‘ಹೇಳ್ತೀಯಾ ಹೈದಾ, ಯಾವುದು ಗಂಡು ಯಾವುದು ಹೆಣ್ಣೂಂತ?’ ಕಾಫಿಗಿಡಗಳ ನೆರಳಲ್ಲಿ ಕುಕ್ಕರು ಕುಳಿತು ಮುಲುಕುತ್ತಿರುವುದರ ಮಧ್ಯೆ ಹೊತ್ತು ಕಳೆಯುವುದಕ್ಕೆ ಅಜ್ಜ ಕೇಳಿದ. + +ಕೈಯಲ್ಲಿದ್ದ ಕಂಚಿನ ಗಿಂಡಿಯನ್ನು ಅವನು ಕೆಳಗಿರಿಸಿ ಬೆರಳಲ್ಲಿ ಎಣಿಸಲಾರಂಭಿಸಿದ. ಚೊಕ್ಕಾಂಪೆಟ್ಟಿಮಲೆ, ಸುಂದರಮಲೆ, ಕೋಮಲೆ ಗಂಡುಗಳು, ಪಾಚ್ಚಿಮಲೆ, ವಳ್ಳಿಮಲೆ, ಕಾಳಿಮಲೆ…. ಆಮೇಲಿನ್ನೊಂದೇನು, ಹಾಂ, ನಾಗಮಲೆ ಹೆಣ್ಣುಗಳು.’ + +‘ಜಾಣ!’ ಅಜ್ಜ ಅವನನ್ನು ಅಭಿನಂದಿಸಿ ಬಲು ನೀಳವಾಗಿ ಒಂದು ಕೆಳಶ್ವಾಸ ಬಿಟ್ಟ. ಅನಂತರ ಬೆನ್ನ ಮೇಲಿನ ರೋಮಗಾಡನ್ನು ಗರಿಗೆದರಿಸುವ ಹಾಗೆ ಇನ್ನೊಮ್ಮೆ ಮುಕ್ಕಿದ. ಭಾರವಿಳಿದ ನಿರಾಳದಿಂದ ಅಜ್ಜನ ಬಿಗಿದುಕೊಂಡಿದ್ದ ಕಪ್ಪು ಮುಖ ಸಡಿಲಾಗಿ ಬೆಳಗಿತು. + +ಕೆಂಪಗೆ ಹಣ್ಣಾಗಿದ್ದ ಕಾಫಿ ಬೀಜದ ಅಂಟಂಟಾದ ಸಿಹಿಯನ್ನು ಉಗುಳಿ ಜಿತನ್ ಬೆರಳನ್ನು ನಿಕ್ಕರಿಗೆ ಒರೆಸಿಕೊಂಡ. ಕಬ್ಬಿನ ತೋಟಗಳಂತೆ ಕಳ್ಳವೇಷ ಧರಿಸಿ ಹೊಳೆಯ ಕರೆಯಲ್ಲಿ ದಟ್ಟವಾಗಿ ಬೆಳೆದಿದ್ದ ಜೊಂಡು ಹುಲ್ಲುಗಳು ಗಾಳಿ ಬೀಸಿ ಬಂದಾಗ ಚೀತ್ಕಾರ ಹುಟ್ಟಿಸಿದವು. ಕಾಫಿಗಿಡಗಳ ಮತ್ತು ಜೊಂಡು ಹುಲ್ಲುಗಳ ನಡುವೆ ಇದ್ದ ಇಟ್ಟಿಗೆ ಭಟ್ಟಿಯು ಜಿತನ ದೃಷ್ಟಿಯಲ್ಲಿ ಹನುಮಂತ ಸುಟ್ಟು ಉರಿಸಿದ ಲಂಕಾನಗರವೇ ಆಗಿತ್ತು. ಉರಿಬಿಸಿಲಿನಲ್ಲಿ ಕೆಲಸ ಮಾಡುವ ಆಳುಗಳು ಸುಟ್ಟು ಕರಿಕಾದ ಅರಮನೆ ಸಾಲುಗಳಿಂದ ರಕ್ಕಸ ಕೂಸುಗಳನ್ನು ಕಾಪಾಡಲು ಹೆಣಗುತ್ತಿರುವವರು. + +ಎದ್ದು ನಿಂತು ಖಾಲಿ ಗಿಂಡಿಗಾಗಿ ಕೈ ಚಾಚಿದ ಅಜ್ಜ ವಾಡಿಕೆಯಿಲ್ಲದ ಹಾಗೆ ನಕ್ಕ, ‘ಅದು ಯಾರ ಪದ್ಯ ಗೊತ್ತಾ?’ + +ಪ್ರಶ್ನೆ ಯಾವುದರ ಬಗ್ಗೆ ಎಂದು ತಿಳಿಯದೆ ಜಿತನ್ ಅಜ್ಜನು ಹಿಂದುಗಡೆ ತ್ಯಜಿಸಿದ್ದ ಪೀತ ನಾಗವನ್ನು ಕಳ್ಳನೋಟದಿಂದ ನೋಡಿದ. ಬಳಿಕ ಕಾಫಿಗಿಡಗಳಾಚೆ ಜೊಂಡು ಹುಲ್ಲುಗಳು ನಿಂತಿರುವಲ್ಲಿನ ಸ್ಥಿರವಾದ ಶೌಚಸ್ಥಾನದವರೆಗೆ ನಿಶ್ಶಬ್ದವಾಗಿ ಅಜ್ಜನನ್ನು ಹಿಂಬಾಲಿಸತೊಡಗಿದ. + +ಕೆಸರಿನ ಬಣ್ಣದ ಗೆರೆಯಂಚುಳ್ಳ ಬೈರಾಸನ್ನುಟ್ಟುಕೊಂಡೇ ಅಜ್ಜ ಬಹಿರ್ದೇಶಕ್ಕೆ ಕೂರಲು ಬರುವುದು. ನಿತ್ಯಕರ್ಮ ಮುಗಿಸಿ ತೊಳೆದುಕೊಳ್ಳಲೆಂದು ಹೊಳೆ ದಡಕ್ಕೆ ನಡೆವಾಗ ಉಟ್ಟಬಟ್ಟೆ ಆಸನಕ್ಕೆ ತಾಗದಿರುವಂತೆ ಹಿಂದಕ್ಕೆ ಚಾಚಿಕೊಂಡ ಕೈ ಪೊರೆಯುವುದು. ಖಾಲಿ ಗಿಂಡಿಯ ಬಾಲವನ್ನು ಹಿಡಿದ ಬಲಗೈಯನ್ನು ಮುಂದಕ್ಕೆ ಚಾಚಿ ಹಿಡಿದಿರುತ್ತಿದ್ದ. ಇಬ್ಬದಿಗೂ ಬಿರಿದು ನಿಂತ ಕಾಲ್ಬೆರಳುಗಳನ್ನು ಮರಳಿನಲ್ಲಿ ಬಲವಾಗಿ ಊರಿ ಮೆಲ್ಲಗೆ ನಡಿಗೆ. ಹೊಳೆಗೆ ಇಳಿದು ನೀರನ್ನು ಮೊಗೆಯುವಾಗ ಗಿಂಡಿಯು ‘ಬ್ಲುಧಂ’ ಎನ್ನುವುದು. ಹೊಳೆಯ ‘*ಕಡವಿ’ನಲ್ಲಿ ಹೆಚ್ಚಿನ ವೇಳೆ ಕೆನ್ನೆ ಮೇಲೆ ಕರಿದುಂಬಿಯುಳ್ಳ ಮಡಿವಾಳ್ತಿ ಅಮ್ಮು ಬೇರೆಲ್ಲ ಜನರ ಕೊಳೆಬಟ್ಟೆಗಳನ್ನು ತೊಳೆಯುತ್ತಿರುತ್ತಿದ್ದಳು. ಹೊಳೆಗೆ ಇಳಿದು ಶುಚಿ ಮಾಡಿಕೊಳ್ಳುವುದರ ಬದಲಿಗೆ ಅಜ್ಜ ನೀರು ತೆಗೆದುಕೊಂಡು ಜೊಂಡಿನ ಮರೆಗೆ ಹೋಗಲು ಅದೇ ಕಾರಣ. ಅಜ್ಜ ಮರಳಿ ಬರುವ ತನಕ ತನ್ನ ತಾಯಿಗಿಂತ ಹೆಚ್ಚಿನ ಪ್ರಾಯವಿರುವ ಅಮ್ಮುವಿನ ಮೊಲೆಮಲೆಗಳಿಂದ ಜಿನುಗಿ ಹರಿಯುವ ಎಂಟನೆಯ ಬೆವರ ಹೊಳೆಯನ್ನು ಜಿತನ್ ಅಚ್ಚರಿಯಿಂದ ನೋಡುತ್ತ ನಿಲ್ಲುವನು. ಒಗೆಯುವ ಕಲ್ಲುಬಂಡೆಯ ಎದೆಮೇಲಿನ ಸವೆದು ನೆಗ್ಗಾದ ಹಳದಿ ನಾಮದಗೆರೆಯ ಮೇಲೆ ಬಟ್ಟೆ ಅಪ್ಪಳಿಸುವ ಸದ್ದು ಒಂದು ನಿಮಿಷದ ಬಳಿಕ ಆಚೆ ದಡದಿಂದ ಪ್ರತಿಧ್ವನಿಸುವುದು. + +‘ಹೇಳಲಿಲ್ಲಲ್ಲೋ ನೀನು’, ಅಜ್ಜ ನಿರ್ಮಲನಾಗಿ ಮತ್ತೆ ಪದ್ಯದತ್ತ ಮರಳಿಬಂದ, ‘ಹಾಗಾದ್ರೆ ನಾ ಹೇಳ್ತೀನಿ. ನಿನ್ನ ಮುತ್ತಜ್ಜ, ಅಂದ್ರೆ ನನ್ನ ಅಪ್ಪ, ಬರೆದದ್ದು ಅದು. ಬರೆದದ್ದು ಅಂದ್ರೆ ಹಾಗೆ ತಾಳೆ ಓಲೆಯಲ್ಲೇನಲ್ಲ, ಮನಸ್ಸಲ್ಲೇ!’ + +‘ಅಜ್ಜನ ಅಪ್ಪನ ಹೆಸರೇನಿತ್ತು?’ ಜಿತನ್ ಕೇಳಿದ. + +‘ಓ!’, ಅಜ್ಜ ಕೈಯಗಲಿಸಿ ಬಿಟ್ಟು ನಕ್ಕ, ‘ಹಾಗೆ ಹೆಸರೆಲ್ಲ ನೆನಪಿಡೋಕೆ ಆತ ಯಾರು ಅಂತ ಗೊತ್ತಿರಬೇಕಲ್ಲ. ನಾನು ನೋಡಿಲ್ಲ. ನನ್ನ ಅಮ್ಮ ಹೇಳಿ ತಿಳಿದದ್ದು. ನಮ್ಮ ಅಯ್ಯಾಟ್ಟುಂಪಿಳ್ಳಿ ಕುಟುಂಬಕ್ಕೆ *ಸಂಬಂಧಕ್ಕೆಂದು ಬಂದ ಯಾರೋ ಒಬ್ಬ ಬಡಪಾಯಿ!’ + +ಹಿಂತಿರುಗುವ ಮುನ್ನ ಅಜ್ಜ ತಲೆ ಕೊಂಕಿಸಿ ಒಲೆದಾಡುವ ನೆರಳನ್ನು ತಲೆಕೆಳಗಾಗಿಸಿಕೊಂಡಿರುವ ಅಮ್ಮುವನ್ನು ನೋಡಿ ಒಮ್ಮೆ ಗಟ್ಟಿಯಾಗಿ ಹೂಂಕರಿಸಿದ. ಅಮ್ಮು ತನ್ನ ಚೌಕಳಿ ಲುಂಗಿಯ ಚುಂಗನ್ನು ಎಳೆದು ಮೊಲೆಗಳ ನಡುವಿನ ಭಂಡಾರದಿರುಕಿನಲ್ಲಿ ಸಿಕ್ಕಿಸಿದಳು. + +ಹೊಗೆಸೊಪ್ಪಿನ ಕರೆ ಅಂಟಿದ್ದ ದೊಡ್ಡ ಹಲ್ಲುಗಳನ್ನು ಕಿಸಿದು ಕಾರಣವೇನೂ ಇಲ್ಲದೆ ಅಜ್ಜ ಗಹಗಹಿಸಿ ನಕ್ಕ, ‘ದಡ್ಡಾ’, ಅಜ್ಜ ಹೇಳಿದ, ‘ಅಯ್ಯಾಟ್ಟುಂಪಿಳ್ಳಿ ಮನೆತನದಲ್ಲಿ ಮೊದಲು ಹುಟ್ಟಿದ್ದು ಅಯ್ಯಾ ಪಿಳ್ಳೆ!’ + +ಕಾಲೆಳೆದುಕೊಂಡು ದೂರ ಸಾಗುತ್ತಿದ್ದ ದುಷ್ಟ ಮುದುಕನನ್ನೂ ಆತನಿಗೆ ಕಾವಲಾಗಿ ಬಂದ ಆರು ವಯಸ್ಸಿನವನನ್ನೂ ನೋಡಿ ಮಡಿವಾಳ್ತಿ ಅಮ್ಮು ತನಗೆ ತಾನೇ ಹೇಳಿಕೊಂಡಳು, ‘ಹ್ಞುಂ, ಅಯ್ಯಾಟ್ಟುಂಪಿಳ್ಳಿ!’ + +‘ಥೂ!’ ಅಯ್ಯಾಪಿಳ್ಳೆ ಅತಿ ಭಯಂಕರವಾಗಿ ಬೈದಟ್ಟಿದ. + +ಜನದಟ್ಟಣೆಯ ಹೆದ್ದಾರಿಯಲ್ಲಿ ಆಕಾಶದೆತ್ತರಕ್ಕೆ ಬೆಳೆದ ಮಾಮರದ ತುದಿಯಲ್ಲಿ ಮನುಷ್ಯಾಕೃತಿಯ ಕಬ್ಬಿಣದ ಪಂಜರದ ಸೆರೆಯಲ್ಲಿ ನೇತು ಬಿದ್ದಿರುವ ಐವತ್ತಾರು ವಯಸ್ಸಿನ ಅಯ್ಯಾಪಿಳ್ಳೆ: *ವಂಜೀಶ ಕೋಪದ ಬಲಿ. ಶಿಕ್ಷೆ ಜಾರಿಗೆ ತಂದು ಅಂದಿಗೆ ಇಪ್ಪತ್ತೇಳನೇ ದಿನ ತುಂಬಿತ್ತು. ಅನ್ನ ನೀರುಗಳಿಲ್ಲದೆ ದಿನಗಳೊಳಗೇ ಅಪರಾಧಿ ಮರಣವನ್ನೈದುವ ವಾಡಿಕೆಯನ್ನು ಅಯ್ಯಾಪಿಳ್ಳೆ ತಪ್ಪಿಸಿದ್ದ. + +ಶಿಕ್ಷೆಯನ್ನು ಜಾರಿಗೊಳಿಸಿದ್ದು ಕುಂಭ ಮಾಸದ ಮೊದಲ ವಾರದಲ್ಲಿ. ಕಬ್ಬಿಣದ ಪಟ್ಟಿಗಳನ್ನು ಬೆಸುಗೆ ಮಾಡಿ ನಿರ್ಮಿಸಿದ ಮನುಜಪಂಜರವನ್ನು ನೋಡಲು ತಿರುವಿತಾಂಕೂರು ಸಂಸ್ಥಾನಕ್ಕೆ ಹೊಸದಾಗಿ ಸೇಪರ್ಡೆಯಾಗಿದ್ದ ‘ಪರವೂರ್’ ಪ್ರಜೆಗಳೂ ‘ಆಲಂಗಾಡ್’ ನಿವಾಸಿಗಳೂ ಮರದ ಸುತ್ತಲೂ ಕಿಕ್ಕಿರಿದು ನೆರೆದಿದ್ದರು. ಮರದ ರಾಟೆಗೆ ಸಿಕ್ಕಿಸಿದ್ದ ಹಗ್ಗದಲ್ಲಿ ಜೋತು ಬಿದ್ದ ಅಯ್ಯಾಪಿಳ್ಳೆ ಮೇಲೇರಿ ಹೋಗುತ್ತಿದ್ದಾಗ ಮಹಾರಾಜರಿಗೆ ಜೈ ಎಂದು ಕೂಗುತ್ತ ಅವರು ಮುಷ್ಟಿಗಳನ್ನು ಅಪರಾಧಿಯ ಕಡೆಗೆ ಎತ್ತಿದರು. ವಧೆ ಶಿಕ್ಷೆಯನ್ನು ಕಾಣಲು ಬಂದು ತಲುಪಿದ್ದವರು ಅಂಗಾತ ಅರಳಿದ ಹಲವು ತಲೆಗಳ ಎಸಳುಗಳಾಗಿ ಚದುರುವುದನ್ನು ಅಯ್ಯಾಪಿಳ್ಳೆ ಕಂಡನು. ಒಳಸುತ್ತಿನಲ್ಲಿ *ಅನಂತಪುರದ ಅರಮನೆಯಿಂದ ಬಂದಿದ್ದ ಸಚಿವ ಮತ್ತು ವಿಚಾರಣಾಧಿಕಾರಿಗಳು, ಎರಡನೆ ಸಾಲಿನಲ್ಲಿ ಮಾಂಡಲಿಕರು ಮತ್ತು ಸೀಮೆಯ ಗಣ್ಯರು ಮತ್ತವರ ಹಿಂಬಾಲಕರು, ಬಳಿಕ ಮೈಲಿಗೆ ಕಾಯ್ದು ದೂರ ನಿಂತ ಚಾತುರ್ವರ್ಣದವರು, ಅದಕ್ಕೂ ಹೊರಗೆ ರೋದನದನಿಯೆಬ್ಬಿಸಿ ಬೊಬ್ಬಿರಿಯುತ್ತಿರುವ ತನ್ನ ಕುಟುಂಬದವರು…. + +ಹಗ್ಗದ ಹೊಸೆತದೊಂದಿಗೆ ಮೊದಲು ಗಡಿಯಾರ ಕ್ರಮದಲ್ಲೂ ಅನಂತರ ಅದೇ ಸುತ್ತಳತೆಯಲ್ಲಿ ಹಿಂದಕ್ಕೂ ಕ್ರಮಿಸಿ ತಿರುತಿರುಗುತ್ತ ಅಯ್ಯಾಪಿಳ್ಳೆ ಹೊಮ್ಮಿ ಮೇಲಕ್ಕೇರಿ ಕೊನೆಗೆ ಲಕ್ಷ್ಯಸ್ಥಾನದಲ್ಲಿ ದೃಢಗೊಂಡ. ಅಷ್ಟು ಹೊತ್ತೂ ಮರದ ಮೇಲೆ ಬೆವೆತು ಕ್ಲೇಶಪಟ್ಟಿದ್ದ ಮೂರು ಜನರು ಆ ಬಳಿಕ ಕೆಳಕ್ಕಿಳಿದರು. ಅಷ್ಟೆತ್ತರದಿಂದ ಅಪರಾಧಿಯು ಹೊರಚೆಲ್ಲಬಹುದಾದ ಮಲಮೂತ್ರಾದಿಗಳಿಗೋಸ್ಕರ ನೇರ ಕೆಳಗೆ ಎರಡು ಅಡಿ ವರ್ತುಲದಲ್ಲಿ ಮಣ್ಣನ್ನು ಅಗೆದು ತೆಗೆವ ಕೆಲಸವನ್ನು ಸಹ ಮುಗಿಸಿದ ಮೇಲೆ ಅವರು ಕೈಕಾಲು ತೊಳೆದರು. ಪಹರೆಯವನನ್ನು ನೋಡಿ ಅವರಲ್ಲೊಬ್ಬನು ಹೇಳಿದ, ‘ ಭಾರೀ ಮೈಯ ಆಸಾಮಿ ಮೇಲಿರೋನು. ಆದರೂನೂ ಹತ್ತು ದಿನದೊಳಗೆ ಗೊಟಕ್ ಅಂತಾನೆ!’ + + + +ದಿಕ್ಕುಗಳು ಕತ್ತಲಿಸಿದಾಗ ಮತ್ತೆ ಮತ್ತೆ ಹಿಂದಕ್ಕೆ ತಿರುಗಿ ನೋಡುತ್ತಲೇ ಜನಸಂದಣಿ ಚದುರಿ ಹಲದಾರಿಗಳಲ್ಲಿ ಕರಗಿ ಇಲ್ಲವಾಯಿತು. ಚಿನ್ನದಂಥ ಮಹರಾಜರ ಇಬ್ಬರು ಭಟರು ಮಾತ್ರ ಹಸಿವೆಮರಣಕ್ಕಾಗಿ ತೂಗುಹಾಕಲ್ಪಟ್ಟ ಅಯ್ಯಾಪಿಳ್ಳೆಯ ಕೆಳಗೆ ಉಳಿದುಕೊಂಡರು. + +ಅವರು ಅಯ್ಯಾಪಿಳ್ಳೆ ಅಸು ನೀಗುವವರೆಗೆ ಮರದ ನೆರಳಿನಲ್ಲಿ ಮಲಮೂತ್ರಗಳು ಬೀಳದ ದೂರದಲ್ಲಿ ರಾತ್ರಿ ಹಗಲು ಸರದಿಯಂತೆ ಕಾವಲುಕೆಲಸಕ್ಕೆ ತೊಡಗಿದರು. + +ಅಯ್ಯಾಪಿಳ್ಳೆಯನ್ನು ನೋಡಲು ಪ್ರೇಕ್ಷಕರು ಗಾವುದಗಳ ದೂರದಿಂದ ನಡೆದು ಬರುತ್ತಿದ್ದುದರಿಂದ ಹಗಲಿನ ಪಹರೆಗಾರರಿಗೆ ಏಕಾಂತತೆ ಸೋಂಕಲಿಲ್ಲ. ಆದರೆ ರಾತ್ರಿಕಾವಲುಗಾರನಾದರೋ, ಮರೋಟಿ ಎಣ್ಣೆ ಹಾಕಿ ಹೊತ್ತಿಸಿರಿಸಿದ ದೊಂದಿಯ ಪಕ್ಕದಲ್ಲಿ ನಿದ್ರೆ ಬಾರದೆ ಒಬ್ಬಂಟಿಯಾಗಿ ಕುಳಿತು ಹೈರಾಣಾದ. ಆಗ ಎತ್ತರದಲ್ಲಿನ ಕತ್ತಲಿನಲ್ಲಿ ಅಯ್ಯಾಪಿಳ್ಳೆ ನೇತಾಡುತ್ತಿರುವ ದೂರವನ್ನು ಊಹಿಸಿಕೊಂಡು ಅವನು ಪ್ರಶ್ನೆಗಳನ್ನು ಎಸೆದನು. + +‘ಮಾಪಾಪೀ!’ ಆಕಳಿಸುತ್ತ ತಲೆ ತುರಿಸುತ್ತ ಗಟ್ಟಿಯಾಗಿ ಗುಟ್ಟಿನ ಮಾತಾಡಬೇಕಾದ ದುರ್ಗತಿಯಿಂದ ಖಿನ್ನನಾಗಿ ಅವನು ತಲೆಯರಳಿಸಿ ಕೇಳಿದ, ‘ಅನ್ನ ನೀರು ಸಿಗದಂತಾದಾಗ ಮಾಡಿದ ಘನಂದಾರಿ ತಪ್ಪೇನಂತ ತಿಳೀತೇನೋ?’ + +ಮೇಲುಗಡೆಯಿಂದ ಪ್ರತಿಕ್ರಿಯೆ ಬಾರದೆ ನಿರಾಶನಾದ ಪಹರೆಗಾರ ಪಂಜನ್ನೆತ್ತಿ ಮೇಲಕ್ಕೆ ಚಾಚಿ ಕಣ್ಣನ್ನು ಚೂಪುಗೊಳಿಸಿದನು. ಎಲೆ ತೊಂಗಲಿನ ನಡುವಿನಿಂದ ಕೈ ಹಾಕಿ ಕುಂಭ ಮಾಸದ ಬೆಳುದಿಂಗಳು ಅಯ್ಯಾಪಿಳ್ಳೆಯನ್ನು ಒಂದು ಶಿಲಾಪ್ರತಿಮೆಯಂತೆ ಎತ್ತಿ ಹಿಡಿದಿರುವುದನ್ನು ಕಂಡು ಅವನು ಬೆಚ್ಚಿದನು. ಆಗಲೂ ಆಗಿಂದಾಗ ಎವೆತೆರೆದಿಕ್ಕುತ್ತಿರುವ ಎರಡು ಜ್ವಲಿಸುವ ಕಣ್ಣುಗಳು ತನ್ನ ಮೇಲ್ಗಡೆ ಇವೆಯೆಂಬುದನ್ನು ನೆನೆದಾಗ ತಾನು ಅಯ್ಯಾಪಿಳ್ಳೆಗೆ ಅಲ್ಲ, ಅಯ್ಯಾಪಿಳ್ಳೆ ತನಗೆ ಕಾವಲು ನಿಂತಿರುವನು ಎಂಬ ವಿಚಿತ್ರವಾದ ಅನಿಸಿಕೆಯುಂಟಾಗಿ ಪಹರೆಯವನು ಬಸವಳಿದ. + +ದಿನಗಳು ಉರುಳಿದಂತೆಲ್ಲ ಮಲಮೂತ್ರಗಳು ಕೆಳಕ್ಕೆ ಜಾರುವುದು ಕಮ್ಮಿಯಾಗುತ್ತ ಬಂದಿತು. ಚಿನ್ನದಂಥ ಮಾರಾಜರ ಇಂಗಿತ ನೆರವೇರುವುದನ್ನು ಕಾಣಲು ಆಕಾಶದ ಕಡೆಗೆ ಕಣ್ಣೆತ್ತರಿಸಿ ನಿಂತ ಇಬ್ಬರು ಪಹರೆಯಾಳುಗಳು ಅಯ್ಯಾಪಿಳ್ಳೆ ಇನ್ನೂ ಸತ್ತಿಲ್ಲವೆಂದರಿತು ಅಸಹನೆಗೊಂಡರು. ಕೈಕಾಲುಗಳನ್ನು ಅಲುಗಿಸಲಾಗದ ಮರಣದಂಗಿಯೊಳಗೂ ಅಯ್ಯಾಪಿಳ್ಳೆ ಅಕ್ಷೋಭ್ಯನಾಗಿದ್ದ. ಒಂಬತ್ತನೇ ದಿನ ಮೊದಲ ರಣಹದ್ದು ಒಂದು ಬೊಟ್ಟಿನ ಹಾಗೆ ಪಡುವಣ ಬಾನಿನಲ್ಲಿ ಪ್ರತ್ಯಕ್ಷವಾದಾಗ ಅದೊಂದು ಪಾರಿವಾಳವಾಗಿರಬಹುದು ಮತ್ತು ಅದರ ಕಾಲಿನಲ್ಲಿ ಸುರುಳಿ ಸುತ್ತಿ ಹಿಡಿದ ಒಂದು ಸಂದೇಶ ಪತ್ರ ಇರಬಹುದು ಎಂದೂ ಆತ ವ್ಯಾಮೋಹಿಸಿದ. ಅಯ್ಯಾಪಿಳ್ಳೆ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡನು. ಆಗ ಒಂದು ಗಿಂಡಿ, ಹಸೆಮಣೆ ಮತ್ತು ಕಿರುಕೊಪ್ಪರಿಗೆ ಒಳಗಣ್ಣಿನಲ್ಲಿ ನಿಚ್ಚಳವಾದವು. ಮರುಕ್ಷಣದಲ್ಲಿ ಅವು ಅಂತರ್ಧಾನವಾದವು. ಹಸಿವೆ ಸೃಷ್ಟಿಸುವ ಮಾಯಾಜಾಲಗಳಲ್ಲಿ ಮುಂದಿನದು ಇನ್ನೂ ಹೆಚ್ಚು ವಿಚಿತ್ರವಾಗಿತ್ತು. ವಿದೂಷಕ ವೇಷಧಾರಿಯಾದ ಒಬ್ಬ ವೃದ್ಧನು ನರ್ತನಶಾಲೆಯಂತಹ ಸ್ಥಳದ ಮುಂದೆ ನಿಂತು ಬಾಡಿದ ಎಲೆಯಲ್ಲಿ ಅನ್ನ ಚಾಚಿ ಹೀಗೆ ಹೇಳಿದ, ‘ಅಯ್ಯಾ! ನೀನೇಕೆ ಬಂದೆ!’ + +‘ಶಾಲೆಯೊಳ್ ಉಣಿಸಿಹುದೆಂಬುದ ಕೇಳಿದಂತಿರಲೆನಗುಂ ದೊರೆಯಲೆಂದೆಣಿಸಿ ಬಂದೆಂ!’, ಅಯ್ಯಾಪಿಳ್ಳೆ ಕನಸಿನಲ್ಲೋ ಎಂಬಂತೆ ನುಡಿದನು.ಮೇಲಿನಿಂದ ಅಯ್ಯಾಪಿಳ್ಳೆಯ ವಿಚಿತ್ರ ಭಾಷೆ ಕೇಳಿಬಂದಾಗ ಹಗಲ ಪಹರೆಗಾರ ಗಾಬರಿಗೊಂಡ. ಅವನು ಕಿವಿಯಾನಿಸಿ ಹಿಡಿದ. ಆಗ ಕಣ್ಣು ತೆರೆದು ರಣಹದ್ದನ್ನು ನೋಡಿ ಅಯ್ಯಾಪಿಳ್ಳೆ ಹಲುಬತೊಡಗಿದ, ‘ಜುಟ್ಟು ಬಿಟ್ಟು ಮೇಲೂ ಕೆಳಗೂ ಕೂದಲು ತೆಗಿ. ಬಿಳಿ ಬಟ್ಟೆ ತೊಟ್ಟು ಉಪಾಸಕನಾಗು. ಪಂಚಶಿಕ್ಷಾ ಪಾಠವ ಕಲಿ. ಜನಿವಾರ ಕಾಲಾಚೆ ಕಳಚಿ ಜುಟ್ಟು ಕತ್ತರಿಸಿ ಕೈಲಿ ಹಿಡಿ. ಊಧ್ರ್ವಲೋಕಂ ಗಚ್ಛಂ ಎಂದೆನ್ನು! ಥೂ!’ + +ಮರಣದ ವಾಸನೆ ಲಭಿಸದೆ ಸಂಶಯಾತ್ಮನಾಗಿ ರಣಹದ್ದು ಮರವನ್ನು ಸುತ್ತು ಹಾಕಿ ಹಾರತೊಡಗಿತು. ಸತತವಾದ ಮೂರು ದಿನಗಳ ಪ್ರದಕ್ಷಿಣೆಯಲ್ಲಿ ಸಮೀಪಿಸಲು ಯತ್ನಿಸಿದಾಗಲೆಲ್ಲ ಕಬ್ಬಿಣದ ಕವಚದೊಳಗಿನ ಮನುಷ್ಯನ ಉಗ್ರವಾಗಿ ಬೈದಟ್ಟುವ ಥೂಕಾರ ಕೇಳಿ ರಣಹದ್ದು ಕಂಗೆಟ್ಟಿತು. + +ಹನ್ನೆರಡನೇ ದಿವಸ ಕುಂಭ ಮಾಸವು ಅಯ್ಯಾಪಿಳ್ಳೆಗೆ ಸಾವನ್ನು ಮುಂದಕ್ಕೆ ಹಾಕಲು ಒಂದು ಅವಕಾಶ ಕಲ್ಪಿಸಿತು. ಧಗಧಗಿಸುತ್ತಿದ್ದ ಮಧ್ಯಾಹ್ನದ ವೇಳೆ ಹಠಾತ್ತನೆ ಮೋಡಗಳು ಕಪ್ಪಾಗಿ ಮಳೆ ಸಿಡಿಯಿತು. ಮೂರು ದಿನಗಳಿಂದ ಆಹಾರ ಸಿಗದೆ ದಣಿದಿದ್ದ ರಣಹದ್ದು ಅಯ್ಯಾಪಿಳ್ಳೆಯನ್ನು ತೂಗು ಹಾಕಿದ್ದ ಕೊಂಬೆಗೆ ಹಾರಿಬಂದು ಆತನನ್ನೇ ದುರುಗುಟ್ಟಿ ನೋಡುತ್ತ ಕುಳಿತುಕೊಂಡಿತು. + +ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ. ಹಿಂಗತ್ತಿನ ಸುತ್ತುಬಳೆಯಿಂದ ಪೋಣಿಸಿ ಕಟ್ಟಲಾಗಿದ್ದ ಲೋಹ ಸರಪಳಿಯ ನೀಳದ ಪ್ರಯೋಜನ ಪಡೆದು ಅಯ್ಯಾಪಿಳ್ಳೆ ಶರೀರವನ್ನು ಮೆಲ್ಲಗೆ ಮುಂದಕ್ಕೂ ಹಿಂದಕ್ಕೂ ಅಲುಗಾಡಿಸಿ ನೋಡಿದ. ನಿಧಾನವಾಗಿ ಅದನ್ನೊಂದು ಜೀಕುವ ಆಟವಾಗಿಸಲು ಆತನಿಗೆ ಸಾಧ್ಯವಾಯಿತು. ಹೊಯ್ದಾಟ ಬಿಗಿಯಾದಾಗ ಒಂದೊಂದು ಬಾರಿಯೂ ಮುಖ ಮೇಲಕ್ಕಾಗುವ ಹೊಂಚಿನಲ್ಲಿ ತುಸುತುಸುವೇ ಆತ ನಾಲಿಗೆ ನೀಡಿ ತೆರೆದ ಬಾಯೊಳಕ್ಕೆ ಮಳೆನೀರನ್ನು ಹಿಡಿದ. ಹತ್ತು ದಿನಗಳ ಒಣದೇಹಕ್ಕೆ ತೇವ ತಗುಲಿದಾಗ ಇಡೀ ದೇಹವನ್ನು ನಡುಗಿಸುತ್ತ ಪ್ರಾಣವು ನುಲಿಯಿತು. ಲೋಹ ಪಟ್ಟಿಗಳಿಗೆ ಉಜ್ಜಿ ಚರ್ಮ ಕಿತ್ತ ಗಾಯಗಳಲ್ಲಿ ಹರಿಯಲು ಚೈತನ್ಯವಿಲ್ಲದೆ ಹೆಪ್ಪುಗಟ್ಟಿದ್ದ ರಕ್ತ, ಮಳೆ ಸೋಕಿದಾಗ ಚರ್ಮದಲ್ಲಿ ಕೆಂಪು ಬೇರುಗಳನ್ನು ಬರೆಯುತ್ತ ತೇವದಲ್ಲಿ ಹಬ್ಬಿತು. ಅತ್ಯಾಶೆಯ ಚಡಪಡಿಕೆಯಲ್ಲಿ ಅಯ್ಯಾಪಿಳ್ಳೆ ಕಣ್ಣುಗಳ, ಬಾಯಿಯ, ಕಿವಿಗಳ ಮೂಲಕವೆಲ್ಲ ಕುಡಿದ. ಆತನಿಗೆ ಹುರುಪು ಹೆಚ್ಚುತ್ತ ಬಂತು. ಕುಂಭ ಮಾಸ ಕಳೆದು ಮೀನ ಮಾಸಕ್ಕೆ ಬೇಕಾದುದನ್ನು ಸಹ ಕುಡಿದು ಆತ ಹೊಟ್ಟೆಯೊಳಗೆ ಮಳೆಯನ್ನು ತುಂಬಿಸಿಕೊಂಡ. ನಾಲ್ಕು ಗಳಿಗೆ ಎಡೆಬಿಡದೆ ಸುರಿದ ಮಳೆ ಅಯ್ಯಾಪಿಳ್ಳೆಯ ದಾಹ ತೀರಿಸಿ ಹಿಂತೆಗೆಯಿತು. + +ಹದಿನೆಂಟನೆಯ ದಿನ ಎರಡನೆಯ ರಣಹದ್ದು ಬಂದು ಸೇರಿತು. ಸರಳಿನ ಅಂಗಿಯ ಎಡೆಯಿಂದ ತನ್ನ ಮಾಂಸವನ್ನು ಕುಕ್ಕಿ ಎಳೆಯಲು ಹಾತೊರೆಯುತ್ತಿರುವ ರಣಹದ್ದುಗಳನ್ನು ದೂರಕ್ಕಟ್ಟಲು ದುರುಗುಟ್ಟುವ ಕಣ್ಣುಗಳು ಸಾಲುವುದಿಲ್ಲವೆಂದೆನಿಸಿದಾಗ ಆತ ಉಳಿದಿದ್ದ ಸರ್ವಶಕ್ತಿಯನ್ನೂ ಒಗ್ಗೂಡಿಸಿ ಅತ್ಯುಗ್ರ ದನಿಯಲ್ಲಿ ಅಟ್ಟತೊಡಗಿದನು, ‘ಥೂ! ಥೂ!’ + +ಪಾಪದ ಧ್ವಜಸ್ತಂಭದಲ್ಲಿ ಹಾರುತ್ತಿರುವ ಪತಾಕೆಯ ಹಾಗೆ ಅಷ್ಟೆತ್ತರದಲ್ಲಿ ತೂಗಿಬಿದ್ದಿರುವ ಆ ಮನುಷ್ಯನ ಪ್ರಾಣದೊಳಗಿಂದ ಕಿತ್ತು ಬಂದ ಶಬ್ದ ರಾತ್ರಿಯೂ ಹಗಲೂ ಬಿಟ್ಟೂ ಬಿಟ್ಟೂ ಮೊಳಗುತ್ತಲೇ ಇತ್ತು. ಪರಲೋಕದಿಂದ ಧ್ವನಿಸುತ್ತಿರುವಂತಹ ಅದನ್ನು ಕೇಳಿ ಮಕ್ಕಳು ಭಯಪಡದೆ ಇರಲು, ಸುತ್ತಮುತ್ತಲಿನ ಒಂಟಿಯಾದ ಮನೆಗಳಲ್ಲಿ ತಾಯಂದಿರು ಹಳೆ ಬಟ್ಟೆ ಹರಿದು ಚಿಕ್ಕ ಉಂಡೆಗಳನ್ನಾಗಿಸಿ ಮಕ್ಕಳ ಎಳೆಗಿವಿಗಳೊಳಕ್ಕೆ ತುರುಕಿದರು. + +ಅಯ್ಯಾಪಿಳ್ಳೆಯ ಅಟ್ಟುವ ಥೂಕಾರವು ಕುಂಭ ಮಾಸ ಕಳೆದು ಮೀನ ಮಾಸವನ್ನು ದಾಟಲಿಲ್ಲ. ಪಂಚೇಂದ್ರಿಯಗಳೂ ಕೊಳೆತು ಆತ ನಿಶ್ಚೇತನನಾದ ಸಂಗತಿ ಭೂಮಿಯಲ್ಲಿರುವ ಪಹರೆಯಾಳುಗಳಿಗಿಂತಲೂ ಮುನ್ನ ಆಗಸದ ಹಕ್ಕಿಗಳು ಅರಿತವು. ಹಸಿವೆಯಿಂದ ತಾಳ್ಮೆಗೆಟ್ಟಿದ್ದ ರಣಹದ್ದುಗಳು ಒಣಗಲಾರಂಭಿಸಿದ್ದ ಅಯ್ಯಾಪಿಳ್ಳೆಯ ಕಿಬ್ಬೊಟ್ಟೆ ಚರ್ಮವನ್ನು ಸೀಳಲು ಕೊಕ್ಕನ್ನು ತಾಗಿಸಿದ ನಿಮಿಷ, ಕಚಗುಳಿಯಲ್ಲಿ ಸುತ್ತಲ್ಪಟ್ಟ ಮರಣವು ತನ್ನ ಪ್ರಾಣವನ್ನು ಚುಂಬಿಸುತ್ತಿರುವುದನ್ನರಿತುಕೊಂಡ ಅಯ್ಯಾಪಿಳ್ಳೆಯು ಅಂತಿಮ ಅಟ್ಟುವ ದನಿ ಹೊರಹಾಕಿದ. + +ಅದರ ಉಗ್ರತೆಯು ಒಂದು ಕುಲಕ್ಕೆ ಹೆಸರು ನೀಡಿತು: *’ಅಯ್ಯಾಟ್ಟುಂಪಿಳ್ಳಿ’. + +ಇಟ್ಟಿಗೆ ಭಟ್ಟಿಯ ಕೆಲಸದಾಳುಗಳು ಮಧ್ಯಾಹ್ನದೂಟಕ್ಕೆ ಮೊದಲು ಕೈ ಕಾಲು ತೊಳೆಯಲು ಬರುವ ಮುನ್ನ ಬಟ್ಟೆ ಒಗೆಯುವುದನ್ನು ಮುಗಿಸಿ ಹೊರ ಬರಲು ಅಮ್ಮು ಅವಸರ ಪಟ್ಟಳು. ಅವರುಗಳೆಲ್ಲ ಬಂದು ಹೊಳೆಗಿಳಿದರೆ ನೀರೆಲ್ಲ ತಿಳಿಹಾಲೆರೆದ ಚಹಾದಂತೆ ಕದಡಿ ಹೋಗುವುದು. ಮಡಿ ಮಾಡಿರಿಸಿದ ಬಟ್ಟೆಗಳ ಮೇಲೆಲ್ಲ ಕೆಸರಿನ ಗೋಪೀಚಂದನ ಗೆರೆಗಳು ಸಿಡಿಯುವುವು. + +ಅಷ್ಟರೊಳಗೆ ತಂಡಾಂಬಾಟ್ ಶಾರದೆ ಮತ್ತು ನಾಟುಕುಳಂ ಭವಾನಿಯಮ್ಮ ಒಂದೊಂದು ಬಟ್ಟೆ ಗಂಟು ಹಿಡಿದು ಅಲ್ಲಿಗೆ ಬಂದರು. + +‘ಆ ನಾರಾಪಿಳ್ಳಣ್ಣ ಹೇತು ತೊಳಕೊಂಡು ಹೋದನಾ ಅಮ್ಮೂ?’ ಶಾರದೆ ಬಟ್ಟೆ ಗಂಟನ್ನು ಕೆಳಗಿಟ್ಟು ಬೇರಾರೋ ಒಗೆದಾದಮೇಲೆ ಕಲ್ಲಿನಲ್ಲಿ ಅಂಟಿಕೊಂಡು ಉಳಿದಿದ್ದ ಹಳದಿ ಪಟಿಕಾರದಲ್ಲಿ ಹಿಮ್ಮಡಿಯ ಬಿಸಿ ಬಿರುಕುಗಳನ್ನು ಉಜ್ಜಿ ತೊಳೆಯುತ್ತ ಕೇಳಿದಳು. + +‘ಅಯ್ಯಾಟ್ಟುಂಪಿಳ್ಳಿಯ ಹಿರಿಮನುಷಾ ಅಲ್ಲೇನು? ಈಗಷ್ಟೇ ಹೋದ ನೋಡು.’ ಅಮ್ಮು ಹೇಳಿದಳು. + +‘ಓಹ್! ಸಮಾಧಾನ!’ ಶಾರದೆ ಕಾಲನ್ನುಜ್ಜುತ್ತಲೇ ಜಂಪರಿನ ಪಿನ್ನುಗಳನ್ನು ಕಳಚಿ ಚೌಕಳಿ ಲುಂಗಿಯನ್ನು ಮೇಲಕ್ಕೆ ಎಳೆದು ಕಟ್ಟಿ ಮೊಲೆಕಚ್ಚೆಯಾಗಿಸಿದಳು.‘ಆತಂಗೆ ಅದೇನು ರೋಗಾಂತ? ಅಯ್ಯಾಟ್ಟುಂಪಿಳ್ಳೀಲಿ ಪಾಯಖಾನೆ ಇಲ್ಲೇನು?’ ಭವಾನಿಯಮ್ಮ ಕಿಲುಬುಹಿಡಿದ ಹಲ್ಲುಗಳನ್ನು ಬೀರಿ ಸಹತಾಪ ತೋರಿದಳು. + +‘ಅದಲ್ಲ ವಿಷ.’ ಅಮ್ಮು ಕಣ್ಣು ಮಿಟುಕಿಸಿ ಹೇಳಿದಳು, ‘ಕೆಲವರಿಗೆ ಹುಲ್ಲು ತಾಕಿದ್ರೇನೆ ಹೊರಕ್ ಬರೋದು!’ + + + +ಕೆನ್ನೆ ಮೇಲೆ ಕರಿದುಂಬಿಯಿರುವ ಅಮ್ಮುವಿನ ದ್ವಂದ್ವಾರ್ಥದಲ್ಲಿ ಮುಳುಗಿದ ಹೆಣ್ಣುಗಳ ನಗೆ ಹೊಳೆಯಲ್ಲಿ ಕುದಿದು ಚಿಮ್ಮಿತು. + +***** + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_36.txt b/Kenda Sampige/article_36.txt new file mode 100644 index 0000000000000000000000000000000000000000..3ebaa6b0a24438bb5a2ee6d0721a060df7aa0dc2 --- /dev/null +++ b/Kenda Sampige/article_36.txt @@ -0,0 +1,49 @@ +ದುಡಿದು ದಣಿದು, ಮರುಬೆಳಗಿನ ಧಾವಂತದ ದಿನಚರಿಗೆ ಅಣಿಯಾಗಬೇಕಾದ ತುರ್ತಿನೊಂದಿಗೆ ಗಾಢ ಕತ್ತಲ ನಡುರಾತ್ರಿ ದಿಂಬಿಗೆ ತಲೆಯಿಟ್ಟಾಗೆಲ್ಲ… ಜೋಗುಳದಂತೆ ಸಾಂತ್ವನಿಸುತ್ತ ಬಂದದ್ದು ನಾಯಿಗಳ ಬೊಗಳು! ಹಳ್ಳಿಮನೆಯಲ್ಲಿ ವಿಧ ವಿಧ ಇರುಳ ಸದ್ದುಗಳನ್ನು ಕೇಳುತ್ತ ನಿದ್ದೆಹೋಗಿ ಬೆಳೆದ ಹಲವರಿಗೆ ಇದು ಸಹಜ. ಅಂದರೆ, ಮನುಷ್ಯನದ್ದಲ್ಲದ; ನಿಸರ್ಗಕ್ಕೆ ಸಂಬಂಧಿಸಿದ ಬೊಗಳು, ಬೊಳ್ಳು, ಗುಟುರು ಯಾವುದಾದರೊಂದು ಕಿವಿಗೆ ತಾಕುತ್ತಿದ್ದರೆ ಏನೋ ಸಮಾಧಾನ! ಪ್ರಕೃತಿಯ ಮಟ್ಟೆಯಲ್ಲೇ ಸ್ವಸ್ಥವಾಗಿ, ಸುರಕ್ಷಿತವಾಗಿ ಮಲಗಿದ್ದೇವೆಂಬ ನೆಮ್ಮದಿಯ ಭಾವ; ನಿದ್ದೆ! ಹೀಗೆ ನಮಗೇ ಅರಿಯದಂತೆ ರಾತ್ರಿಗಳನ್ನು ನಿರುಮ್ಮಳಗೊಳಿಸುವುದು ನಾವೆಲ್ಲ ಯಃಕಶ್ಚಿತ್ ಎಂದೆಣಿಸುವ ನಾಯಿಗಳು; ಅದರಲ್ಲೂ ಬೀದಿ ನಾಯಿಗಳು! ಗೊಣಗುತ್ತ, ಬಯ್ಯುತ್ತ, ರೇಗುತ್ತ, ಕೆಲವೊಮ್ಮೆ ಬಾಯಿಗೆ ಬಂದಂತೆ ಒದರುತ್ತ ಕತ್ತಲೊಂದಿಗೆ ಸಂಭಾಷಿಸುವ ನಾಯಿಗಳ ಧ್ವನಿ ಹೃದಯವಂತರಿಗೆ ಸಾಂತ್ವನದಂತೆ ಕಾಣುವುದು ಅಚ್ಚರಿಯೇನಲ್ಲ. + +(ವಿಜಯಶ್ರೀ ಹಾಲಾಡಿ) + +ನಾಯಿಗಳ ಕುರಿತು ಬರೆಯಲು ಕುಳಿತ ಈ ರಾತ್ರಿಯಲ್ಲಿ ಸುತ್ತ ಬೀದಿಗಳಿಂದ ಆಗಾಗ ಅವುಗಳದ್ದೇ ವಿವಿಧ ಸ್ವರ ತೇಲಿ ಬರುತ್ತಿದೆ. ಹಾಗೇ ಎಷ್ಟೋ ನೆನಪುಗಳು, ಘಟನೆಗಳು, ಪದಗುಚ್ಛಗಳು ನಾನು ತಾನೆಂದು ಮುಂದೊತ್ತಿ ಬಂದು ನಿಲ್ಲುತ್ತಿವೆ. ಯಾವುದನ್ನು ಹೇಗೆ ನಿಮ್ಮ ಮುಂದಿಡುತ್ತೇನೋ ನಾನೇ ಕಾದು ನೋಡಬೇಕಾಗಿದೆ. ಯಾಕೆಂದರೆ ಸಾವಿರಾರು ವರ್ಷಗಳಿಂದ ಮನುಷ್ಯನ ಜೊತೆ ವಾಸಿಸುತ್ತ ಸುಖಕ್ಕಿಂತ ಕಷ್ಟವನ್ನೇ ಉಂಡು ಬದುಕುತ್ತಿರುವ ಜೀವವೊಂದರ ಬಗ್ಗೆ ಏನೇ ಹೇಳಿದರೂ ಅದು ಕಡಿಮೆಯೇ. ಅದಲ್ಲದೆ ಬರೀ ಮಾತು, ಬರಹಗಳು ನ್ಯಾಯ ಒದಗಿಸಲಾರವು ಎಂಬ ಎಚ್ಚರಿಕೆಯೊಂದಿಗೇ ಮುಂದುವರಿಯುತ್ತಿದ್ದೇನೆ. + +ಐದರಿಂದ ಏಳನೇ ತರಗತಿಗೆ ಹಾಲಾಡಿ ಶಾಲೆಗೆ ಹೋಗುತ್ತಿದ್ದಾಗ ಅಲ್ಲೊಂದು ನಾಯಿಯಿತ್ತು. ನಾವದನ್ನು ‘ಚೆನ್ನಿ’ ಎಂದು ಕರೆದಿದ್ದೆವು. ನಸುಕಂದು ಬಣ್ಣದ, ಚೆಲುವಿನ ಹೆಣ್ಣುನಾಯಿ. ಮಧ್ಯಾಹ್ನ ಊಟ ಮಾಡುವಾಗ ಚೆನ್ನಿಗೆಂದು ಪಾಲು ತೆಗೆದಿಟ್ಟು, ಬಾವಿಕಟ್ಟೆಗೆ ಬುತ್ತಿ ತೊಳೆಯಲು ಹೋಗುವಾಗ ಒಯ್ದು ಕೊಡುತ್ತಿದ್ದವು. ಅದು ನಮ್ಮೆಲ್ಲರ ಮನೆಯ ವಿಧ ವಿಧ ಊಟ ತಿಂಡಿಗಳ ರುಚಿ ನೋಡಿ ತಿಂದು ಹೇಗೋ ಅರಗಿಸಿಕೊಂಡಿತ್ತು ಪಾಪ! ನಾನು ಚೆನ್ನಿಯನ್ನು ತುಂಬಾ ಹಚ್ಚಿಕೊಂಡಿದ್ದೆ. ಮನೆಗೆ ಬಂದು ಅದರದ್ದೇ ಗುಣಗಾನ. ಆ ನಾಯಿ ನಮ್ಮನ್ನು ಕಂಡೊಡನೆ ಬಳುಕಾಡಿ ಪ್ರೀತಿ ತೋರಿಸುವ ಪರಿ ಆತ್ಮೀಯ. ಆವತ್ತೊಂದಿನ ಬೆಳಿಗ್ಗೆ ಶಾಲೆಗೆ ಹತ್ತಿರದ ರಸ್ತೆಯಲ್ಲಿ ಚೆನ್ನಿ ಕಂಡಳು. ನಾನು ಮುಗುಳ್ನಕ್ಕೆ… ಅಂದರೆ ಪರಿಚಿತ ಮನುಷ್ಯರು ಎದುರಾದಾಗ ನಸುನಗುತ್ತೇವಲ್ಲ; ಹಾಗೆ! ಈ ಕ್ರಿಯೆ ಸಹಜವಾಗಿ ನಡೆದುಹೋಗಿತ್ತು. ಆ ಕಡೆಯಿಂದ ಚೆನ್ನಿಯೂ ನಕ್ಕಿರಬೇಕು! ಮರುಕ್ಷಣ ‘ಇದೆಂತದಪ್ಪಾ’ ಎಂದು ನನಗೇ ನಾಚಿಕೆ, ಅಚ್ಚರಿಯಾಗಿ ಸುಮ್ಮನಿರಲಾರದೆ ಗೆಳತಿಯರಲ್ಲಿ ಹೇಳಿಕೊಂಡಾಗ ‘ನಾಯಿನ್ ಕಂಡ್ ನಗಾಡ್ತಾಳಂಬ್ರ್’ ಎಂದು ತಮಾಷೆ ಮಾಡಿದರು. ಈ ಘಟನೆ ಯಾವತ್ತೂ ಮರೆಯುವುದಿಲ್ಲ. ಈಗಲೂ ನಾಯಿಗಳನ್ನು ಕಂಡಾಗ ಮುಗುಳ್ನಗುವುದು ನನ್ನ ಅಭ್ಯಾಸ. ಎದುರಿಗಿದ್ದವರು ತಪ್ಪು ತಿಳಿದುಕೊಂಡರೆ ಅವರಿಗೇ ನಷ್ಟವೆಂದು ನನಗೆ ನಾನೇ ಧೈರ್ಯ ಹೇಳಿಕೊಂಡಿದ್ದೇನೆ. ಆದರೀಗ ಮಾಸ್ಕಿನ ಮರೆಯಲ್ಲಿರುವುದರಿಂದ ನಮ್ಮಷ್ಟಕ್ಕೆ ನಕ್ಕರೂ ಯಾರಿಗೂ ತಿಳಿಯುವುದಿಲ್ಲ! + +ಆಗ ಮನೆಯಾಟ ಆಡುತ್ತಿದ್ದೆವು. ಮೂರ್ನಾಲ್ಕು ಮಕ್ಕಳು ಒಟ್ಟಿಗೆ ಸೇರಿದರಂತೂ ಆಟಕ್ಕೆ ಒಳ್ಳೇ ಹುರುಪು ಕೂಡುತ್ತಿತ್ತು. ಕೆಲವು ಸಲ ಅಮ್ಮನ ಸೀರೆ ಉಟ್ಟುಕೊಂಡು ದೊಡ್ಡ ಹೆಂಗಸರಂತೆ ನಡೆದುಕೊಳ್ಳುತ್ತಿದ್ದೆವು! ಪ್ರತೀ ಮನೆಯಾಟದ ಮುಖ್ಯ ಥೀಮ್ ‘ನೆಂಟರು ಬರುವುದು’! ನೆಂಟ್ರಿಗೆ ಚಾ, ಕಾಫಿ, ಅಡುಗೆ ತಯಾರಿಸುವುದು, ನೀಡುವುದು. ಮಣ್ಣಿನ ಊಟ, ಚಂಡ್ಪಳೆಯ ಲೋಟ, ಬೀಜಗಳ ತಿಂಡಿ… ಹೀಗೆ! ನೆಂಟರು ಮನೆ ಮುಂದೆ ಬಂದಾಗ ಒಬ್ಬರು ನಾಯಿಯ ಹಾಗೆ ಕೂಗಿ ಗಮನ ಸೆಳೆಯಬೇಕಿತ್ತು. ಸುಮಾರು ಹೊತ್ತು ಬೌ ಬೌ ಕೇಳಿದ ನಂತರ ‘ಮನೆಯೊಡತಿ’ ಹೋಗಿ ಬಾಗಿಲು ತೆಗೆದು “ಬಂದ್ರ್ಯಾ, ಬನಿ ಬನಿ” ಎಂದು ಸ್ವಾಗತಿಸುವುದು! ಈಗಿನ ಮಕ್ಕಳೂ ಇಂತಹ ಆಟ ಆಡುತ್ತ ‘ಟ್ರಿಣ್‌ ಟ್ರಿಣ್‌ʼ ಎನ್ನುತ್ತ ಕಾಲಿಂಗ್ ಬೆಲ್ ಶಬ್ದವನ್ನು ಅನುಕರಿಸುವುದನ್ನು ಗಮನಿಸಿದಾಗ ಬದಲಾದ ಸನ್ನಿವೇಶ; ಬದಲಾಗದ ಮೂಲದ್ರವ್ಯ ಸೋಜಿಗ ತರಿಸಿತು. + +ಮಲೆನಾಡು, ಕರಾವಳಿ ಭಾಗದ ಹಳ್ಳಿಯ ಮನೆ ಮನೆಗಳಲ್ಲಿ ನಾಯಿಗಳಿರುವುದು ಕಡ್ಡಾಯ. ಕಾಡು, ಹಾಡಿ, ಗುಡ್ಡ, ಬಯಲುಗಳ ನಡುವೆ ಫರ್ಲಾಂಗುಗಳ ಅಂತರದಲ್ಲಿ ಅವಿತುಕೊಂಡಿರುವ ಮನೆಗಳ ರಕ್ಷಣೆಗೆ, ಜೀವಂತಿಕೆಗೆ ನಾಯಿಗಳು ಅನಿವಾರ್ಯ. ಕಳ್ಳಕಾಕರು, ಜೀವಾದಿಗಳು, ದೆವ್ವ-ಭೂತ-ಪೀಡೆ-ಕುಲೆಗಳನ್ನು ಕೂಡಾ ನಾಯಿಗಳು ದೂರವಿಡುತ್ತವೆಂಬ ನಂಬಿಕೆಯಿದೆ! ಮನುಷ್ಯರ ಕಣ್ಣಿಗೆ ಕಾಣದ ದೆವ್ವ ಭೂತಗಳು ನಾಯಿಗಳಿಗೆ ಕಾಣುತ್ತವಂತೆ, ಇದರಿಂದಾಗಿಯೇ ಅವು ರಾತ್ರಿಯಿಡೀ ಬೊಗಳುವುದಂತೆ! ನಮ್ಮ ಹಳ್ಳಿಯವರ ಈ ತರದ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲವಾದರೂ ಇಂತವುಗಳನ್ನು ಕೇಳುವುದು ರೋಮಾಂಚನಕಾರಿಯಾಗಿತ್ತು. ಬ್ರಹ್ಮರಕ್ಕಸ, ಉಮ್ಮಲ್ತಿ, ಬೊಬ್ಬರ್ಯ, ಭೂತ, ಪ್ರೇತ ಮುಂತಾದವುಗಳು ಮನೆ ಜನರಿಗೆ, ಜಾನುವಾರುಗಳಿಗೆ ತೊಂದರೆ ಕೊಡಲು ಬಂದಾಗ ನಾಯಿಗಳು ಕಾಳಗ ಹೂಡಿ ಪೆಟ್ಟು ಮಾಡಿಕೊಂಡು ರಕ್ಷಣೆ ಕೊಟ್ಟ ಕಥೆಗಳನ್ನು ವರ್ಣಿಸುತ್ತಿದ್ದರು. ಈ ಘಟನೆಗಳ ಸತ್ಯಾಸತ್ಯತೆಗಳನ್ನು ಹೇಳಬಲ್ಲ ಮೊದಲ ಸಾಕ್ಷಿಯಾದ ನಾಯಿಗಳಿಗೆ ಬೊಗಳಲು ಬಿಟ್ಟರೆ ಬೇರೆ ಮಾತು ಬರುವುದಿಲ್ಲವಾದ್ದರಿಂದ ಏನೂ ಮಾಡುವಂತಿಲ್ಲ. ಎರಡನೆಯ ಸಾಕ್ಷಿಯಾದ ದೆವ್ವ ಭೂತಗಳು ಕಾಣಲೇ ಸಿಗುವುದಿಲ್ಲವಾದ್ದರಿಂದ; ಸಿಕ್ಕರೂ ಆತ್ಮಾಭಿಮಾನ ಬಿಟ್ಟು ತಾವು ಸೋತದ್ದನ್ನು ಒಪ್ಪಿಕೊಳ್ಳುವ ಸಂಭವ ಇಲ್ಲವಾದ್ದರಿಂದ ಕಥೆ ಹೇಳಿದವರು ಬಚಾವಾದರು! + +ಹಳೆಯ ಕಾಲದ ಹಳ್ಳಿಮನೆಗಳ ಬದುಕನ್ನು ನಾವಿಂದು ಊಹಿಸಲೂ ಅಸಾಧ್ಯ. ವಿದ್ಯುತ್ತಿಲ್ಲದ ಕಾಳ ರಾತ್ರಿಗಳು, ಯಂತ್ರದ ಸಹಾಯವಿಲ್ಲದ ಜೀವನಶೈಲಿಯ ರಾಶಿ ರಾಶಿ ಕೆಲಸ ಕಾರ್ಯಗಳು, ಕೃಷಿ ಇವೆಲ್ಲದರ ನಡುವೆ ಪ್ರಾಣಿ, ಪಕ್ಷಿ, ಕೀಟಸಂಕುಲ, ವಿಷಜಂತುಗಳಿಂದ ಜೀವ-ಜೀವನವನ್ನು ರಕ್ಷಿಸಿ ಭದ್ರಪಡಿಸಿಕೊಳ್ಳಬೇಕಾದ ಸವಾಲುಗಳು! ಈ ಸಂದರ್ಭದಲ್ಲಿ ಮುಖ್ಯವಾಗಿ ಮನುಷ್ಯರ ನೆರವಿಗೆ ಒದಗುತ್ತಿದ್ದುದು ಸಾಕುಪ್ರಾಣಿಗಳೇ. ನಾಯಿ, ಬೆಕ್ಕು, ಜಾನುವಾರುಗಳು ಅನಿವಾರ್ಯವೆನಿಸಿದ್ದವು. ಮನೆಯಲ್ಲಿ ನಾಯಿ ಬೆಕ್ಕುಗಳಿದ್ದರೆ ಸಾಕಷ್ಟು ಧೈರ್ಯ. ‘ನಾಯಿಯೊಂದಿದ್ದರೆ ಒಂದಾಳು ಬಲ’ ಎಂಬ ಮಾತೇ ಇತ್ತು. ಜೋರಿನ ನಾಯಿಗಳಿರುವ ಮನೆ, ತೋಟದ ಕಡೆಗೆ ಹೆಜ್ಜೆ ಹಾಕಲು ಎಂತವರೂ ಹೆದರುತ್ತಾರೆ. ನಾಯಿ ಹೊರಗಿನ ಕಾವಲಿಗಾದರೆ, ಬೆಕ್ಕು ಒಳಗಿನ ಬಂದೋಬಸ್ತಿಗೆ! ಮೊದಲೇ ಹೇಳಿದಂತೆ ಕಳ್ಳರು, ದೆವ್ವ ಭೂತಗಳೊಂದಿಗೆ ಜೀವಾದಿಗಳನ್ನು ಓಡಿಸುವ ಜವಾಬ್ದಾರಿಯೂ ಇವುಗಳ ಮೇಲಿದೆ. ಹಂದಿ, ಹುಲಿ, ಚಿರತೆ, ಮುಂತಾದ ದೊಡ್ಡ ಮೃಗಗಳ ಜೊತೆಗೆ ಮಂಗ, ಗುಡ್ಡೆಹೆಗ್ಳ, ವಿಷದ ಹಾವುಗಳು, ಚೇಳುಗಳಿಂದಾಗುವ ಅಪಾಯ, ಬೆಳೆ ಹಾನಿಗಳನ್ನು ನಾಯಿಗಳು ತಪ್ಪಿಸುತ್ತವೆ. ಬೆಕ್ಕು ಮನೆಯೊಳಗಿನ ಇಲಿ ಮತ್ತು ವಿಷಜಂತುಗಳ ಭಯವನ್ನು ದೂರ ಮಾಡುತ್ತದೆ. ಹಾಗಾಗಿ ನಾಯಿ, ಬೆಕ್ಕುಗಳಿಲ್ಲದ ಮನೆಗಳೇ ಮೊದಲು ಇರಲಿಲ್ಲ. ನಮ್ಮನೆಯಲ್ಲಿ ಮೂರ್ನಾಲ್ಕು ಬೀಚು, ಮ್ವಾಳ ಬೆಕ್ಕುಗಳು ಸದಾ ಇದ್ದರೂ ಅಟ್ಟದಲ್ಲಿನ ಇಲಿಯನ್ನು ಹಿಡಿಯಲು ಹಂಯ್ಸಾರ್ ಹಾವು (ಕೇರೆ) ಆಗಾಗ ಬರುತ್ತಿತ್ತು. ಉಪ್ಪರಿಗೆಯಲ್ಲಿ ಮಲಗಿದ್ದಾಗ ಅಟ್ಟದಿಂದ ಹಾವಿನ ಪೊರೆ ನೇತಾಡುವುದನ್ನು ಕಂಡು ಹೆದರಿದ್ದು ಎಷ್ಟೋ ಸಲ. ಆದರೂ ಬೆಕ್ಕುಗಳಿವೆ ಎಂಬ ಸಮಾಧಾನ. + +ಅಮ್ಮಮ್ಮ “ಅದ್ ಹಂಯ್ಸಾರ್ ಹಾವಿನ್ ಪೊರಿ ಮಕ್ಳೇ, ಅದೆಂತ ಮಾಡುದಿಲ್ಲೆ. ದೇವ್ರ್ ಹಾವ್ ಹಾಂಗೆಲ್ಲ ಮನೆಯೊಳ್ಗೆ ಬತ್ತಿಲ್ಲೆ” ಎನ್ನುತ್ತಿದ್ದರು. ನಾವೂ ಹಾಗೇ ನಂಬಿದ್ದೆವು. ಯಾವತ್ತೂ ಯಾವ ಅವಘಡಗಳೂ ಸಂಭವಿಸಲಿಲ್ಲ. ಆದರೆ ದೇವ್ರಹಾವು (ಸರ್ಪ) ಮನೆಯ ಹೊರಗೆ ಆಗಾಗ ಬರುತ್ತಿತ್ತು. ಆಗ ನಾಯಿ ಬೆಕ್ಕುಗಳು ಅದನ್ನು ಹೆದರಿಸದಂತೆ, ಕಚ್ಚಿ ಎಳೆಯದಂತೆ ಗಮನಿಸುತ್ತ ಆ ಹಾವಿಗೆ ಎಲ್ಲವೂ ಅರ್ಥವಾಗುತ್ತದೆ ಎಂಬಂತೆ ಗೌರವದಿಂದ “ಈ ಬದಿಗ್ ಎಂತಕ್ ಬಂದದ್ದ್ ನೀವ್, ಹೋಯ್ನಿ ಬದಿಮ್ಯಾಲೆ… ಇಲ್ಲೆಲ್ಲ ಎಂಜ್ಲ್, ಮುಸ್ರಿ, ಗೌಲ್ ಇತ್ತ್. ಮಕ್ಕಳ್ ಇದ್ದೋ ಇಲ್ಲ್… ಹೋಯ್ನಿ…” ಎನ್ನುತ್ತಿದ್ದರು. ನಿಧಾನಕ್ಕೆ ಹರಿದು ಹೋಗಿ ತನ್ನ ಪಾಡಿಗೆ ಮರೆಯಾಗುವ ತನಕ ಸರ್ಪವನ್ನು ಕಾಯುತ್ತಲೇ ಇರಬೇಕಿತ್ತು. ಒಂದು ವೇಳೆ ಅದು ಕಚ್ಚಿದರೆ ಜೀವನ್ಮರಣದ ಪ್ರಶ್ನೆ ತಾನೇ?! ಈಗ ಮುದೂರಿಯಲ್ಲಿ ನಾಯಿಕುರ್ಕಗಳ ಹಾವಳಿ ಅತಿಯಾಗಿದೆ. ಎಷ್ಟೆಂದರೆ ನಾಯಿಗಳಿಗೆ ಗೂಡು ಮಾಡಿ ರಾತ್ರಿ ಹೊತ್ತು ಅದರೊಳಗೆ ಹಾಕಿ ಭದ್ರಪಡಿಸುವಷ್ಟು! ರಾತ್ರಿ ಕಾವಲು ಕಾಯಬೇಕಾದ ನಾಯಿ ಈಗ ಗೂಡಿನೊಳಗೆ! ಬೆಕ್ಕುಗಳನ್ನೂ ಕುರ್ಕಗಳು ಕಚ್ಚಿಕೊಂಡು ಹೋಗುವುದರಿಂದ ಅವುಗಳನ್ನು ಕೋಣೆಯೊಳಗೆ ಬಂಧಿಸಿ ಇಡಬೇಕಾಗಿದೆ.! + +ಒಂದು ವಿಶೇಷ ಸಂಗತಿಯೆಂದರೆ, ನಮ್ಮೂರಲ್ಲೂ ‘ನಾಯಿಗುತ್ತಿ’ ಮತ್ತು ‘ಹುಲಿಯ’ ಇದ್ದದ್ದು! ನಮ್ಮೂರು ಮುದೂರಿಗೆ ಹೊಂದಿಕೊಂಡು ಇರುವ ಚೇರ್ಕಿಯಲ್ಲಿ ‘ಗುತ್ತಿ’ ಎಂದರೆ ಹೂಹಾಂಡರ ಮನೆ ಇತ್ತು. ಚೇರ್ಕಿಯ ‘ಹುಲಿಯ’ ಕೆಂಪು (ಕಂದು) ಬಣ್ಣದ, ಜೂಲು ರೋಮ ಹೊಂದಿದ ದಷ್ಟಪುಷ್ಟವಾದ ಎತ್ತರದ ನಾಯಿ. ಇಲ್ಲಿಯ ಗುತ್ತಿ ಕುಳ್ಳು ಆಳಲ್ಲ; ಒಳ್ಳೇ ಆಳ್ತನ ಹೊಂದಿದ ವ್ಯಕ್ತಿ. ಈ ಇಬ್ಬರೂ ದಿನವೂ ಎರಡೂವರೆ ಮೈಲಿ ದೂರದ ಹಾಲಾಡಿ ಪೇಟೆಗೆ ಹೋಗಿ ಬರುವುದು ಮಾಮೂಲಾಗಿತ್ತು. ಆಳೆತ್ತರ ಪೈರು ಬೆಳೆದ ಗದ್ದೆಗಳ ನಡುವಿನ ಕಂಟದಲ್ಲಿ ಈ ಜೋಡಿ ನಡೆದುಹೋಗುವುದನ್ನು ಕಾಣುವುದು ನಮಗೆಲ್ಲ ವಿಸ್ಮಯ. ಹೂಹಾಂಡರ ಒಂದು ಕೈಯ್ಯಲ್ಲಿನ ಮೂರು ಬೆರಳುಗಳು ಇರಲಿಲ್ಲ. ಯಾವುದೋ ಬಸ್ಸಿನ ಅಪಘಾತದಲ್ಲಿ ಬೆರಳು ಕಳೆದುಕೊಂಡದ್ದಾಗಿ ಊರಿನವರು ಮಾತಾಡುತ್ತಿದ್ದರು. ಆದರೆ ಅದೇ ಕೈಯ್ಯಲ್ಲಿ ಮಡಕೆ ತಯಾರಿಸುವ ನೈಪುಣ್ಯದ ಕೆಲಸವನ್ನು ಮಾಡುತ್ತಿದ್ದುದು ನಿಜಕ್ಕೂ ಹೆಚ್ಚುಗಾರಿಕೆ. ಶ್ರಮದ ಕೆಲಸವನ್ನು ಮಾಡಿ ಮುಗಿಸಿ ದಿನವೂ ಸಂಜೆ ಪೇಟೆಗೆ ತಿರುಗಲು ಹೋಗುವುದು ಹೂಹಾಂಡ ಮತ್ತು ಕೆಂಪರ ದಿನಚರಿ. ಆ ಕಾಲದಲ್ಲಿ ಹೀಗೆ ನಾಯಿಯನ್ನು ಮುಂದಿಟ್ಟುಕೊಂಡು ಅಲೆಯುವ ಜನ ಸುತ್ತಮುತ್ತಲಲ್ಲಿ ಬೇರೆ ಯಾರೂ ಇದ್ದಿರಲಿಲ್ಲ. + +ಹೆಚ್ಚಿನವರು ನಾಯಿಗಳನ್ನು ಕಟ್ಟಿಹಾಕಿ ಹೊರ ಹೊರಡುತ್ತಿದ್ದರು. ಕೆಂಪನಿಗಂತೂ ಒಡೆಯನ ಜೊತೆ ಓಡಾಡುವುದೆಂದರೆ ಬಹಳ ಖುಷಿ; ಬಾಲ ಕುಣಿಸುತ್ತ ಸಾಗುತ್ತಿತ್ತು. ಎಲ್ಲಾ ನಾಯಿಗಳೂ ಹೀಗೇ. ಮನೆಯವರು ಹೊರ ಹೊರಟರೆ ಸಾಕು, ಅವರೊಂದಿಗೆ ಹೋಗುವ ಉಮೇದು. ಅಪರೂಪಕ್ಕಾದರೂ ಜೊತೆಗೆ ಬರಲು ಬಿಟ್ಟರೆ ಎಂಥಾ ಸಂಭ್ರಮ… ಕುಣಿದು ಕುಪ್ಪಳಿಸುತ್ತಾ, ಅಲ್ಲಿ ಇಲ್ಲಿ ಓಡಾಡುತ್ತಾ, ಮೂಸುತ್ತ ಜಗತ್ತಿನ ದಾರಿಗಳೆಲ್ಲ ತನಗೇ ತಿಳಿದಿದೆ ಎನ್ನುವಂತೆ ಮುಂದೆ ಮುಂದೆ ಓಡುವುದು! ಹಿಂದಕ್ಕೆ ಬಂದು, ನಿಧಾನಕ್ಕೆ ನಡೆಯುತ್ತಿರುವ ಮನೆಯವರಿಗೆ ಬೇಗ ಬೇಗ ಬನ್ನಿ ಎಂದು ಒತ್ತಾಯಿಸುವುದು! ಬಸ್ಸಿಗೆ ಹತ್ತುವ ಮನೆಮಂದಿಯನ್ನು ಬೀಳ್ಕೊಡಲು ಬಂದು ಅವರು ತೆರಳುವಾಗ ಸಪ್ಪೆ ಮುಖದೊಂದಿಗೆ ನಿಲ್ಲುವ ನಾಯಿಗಳ ದೃಶ್ಯ ಆಗಾಗ ಕಾಣಲು ಸಿಗುತ್ತಿರುತ್ತದೆ. ಕೆಲವು ನಾಯಿಗಳಂತೂ ತಾವೂ ಬಸ್ಸಿನೊಳಗೆ ಹೋಗಲು ಕಾತರಿಸುತ್ತವೆ. ಆಗ ಮನೆ ಜನರಿಗೂ ಅಗಲಿಕೆಯ ನೋವು; ಇರುಸುಮುರುಸು! ನಮ್ಮ ಪಾಪಣ್ಣ (ಪಪ್ಪು) ಮನೆ ಮಕ್ಕಳು ಶಾಲೆಗೆ ಹೋದಾಗ ಅವರ ಹಿಂದೇ ಹೋಗಿ ಕ್ಲಾಸಿನಿಂದ ಹೊರಗೆ ಜಗಲಿಯಲ್ಲಿ ಕಾಯುತ್ತಾ ಕುಳಿತಿರುತ್ತಿತ್ತು. ಆಗಾಗ ಕಿಟಕಿಯಲ್ಲಿ ನೋಡಿ ನೋಡಿ ಮಕ್ಕಳು ಅಲ್ಲೇ ಇದ್ದಾರೆಂದು ಖಾತ್ರಿ ಪಡಿಸಿಕೊಳ್ಳುತ್ತಲೂ ಇತ್ತಂತೆ! ನಮ್ಮ ಮುದೂರಿ-ಚೇರ್ಕಿ ಬೈಲಿನ ಗುತ್ತಿ, ಕೆಂಪರು ಊರಿಗೊಂದು ರೂಪಕದಂತೆ ಇದ್ದದ್ದಂತೂ ಸುಳ್ಳಲ್ಲ. ಸ್ನೇಹಮಯಿ ವ್ಯಕ್ತಿತ್ವದ ಇವರಿಬ್ಬರು ನೆನಪಿನ ಚಿತ್ರಗಳಲ್ಲಿ ಉಳಿದುಬಿಟ್ಟಿದ್ದಾರೆ. + + + +ಆಗೆಲ್ಲ ಮನೆಗೆ ಎರಡರಂತೆ ನಾಯಿಗಳಿರುತ್ತಿದ್ದುದು ಸಾಮಾನ್ಯ. ಧೈರ್ಯಕ್ಕೆ ಜೊತೆಯಿರಲಿ ಎಂದು ಸಾಕುತ್ತಿದ್ದರು. ಇಂಥಾ ನಾಯಿಗಳ ಕೂಗು ಬಯಲು, ಕಾಡಲ್ಲೆಲ್ಲ ಮೊಳಗಿ ರಾತ್ರಿಯ ನಿರ್ಭೀತ ನಿದ್ದೆ ಸಾಧ್ಯವಾಗಿತ್ತು. ನಮ್ಮನೆಯಲ್ಲಿ ನಾಯಿ ಸಾಕುವುದು ಅಮ್ಮಮ್ಮನಿಗೆ ಯಾಕೋ ಇಷ್ಟವಿರಲಿಲ್ಲ. ನಮಗೆ ಮಕ್ಕಳಿಗಾದರೋ ತಡೆಯಲಾಗದ ಆಸೆ. ಕಾಡಿ, ಬೇಡಿ ಒಪ್ಪಿಸಿ ಕಾಲಾನುಕಾಲಕ್ಕೆ ಮೂರು ನಾಯಿಮರಿಗಳನ್ನು ತಂದು ಇನ್ನಿಲ್ಲದಂತೆ ಆರೈಕೆ, ಪ್ರೀತಿ ಮಾಡಿ ಪೋಷಿಸಿದ್ದೆವು. ನಾಯಿಗಳಿಗೆ ಇಡುತ್ತಿದ್ದ ಸಾಮಾನ್ಯ ಹೆಸರುಗಳೆಂದರೆ, ಕರಿಯ, ಕಾಳ, ಹಂಡ, ಹುಂಡ, ಗುಂಡ, ಮೋತಿ, ಕೆಂಪ, ಟೀಪು, ಕಾಳಿ, ಜೂಲಿ, ಬೆಳ್ಳಿ ಮುಂತಾದವು. ಇದರಲ್ಲಿ ಹೆಚ್ಚಿನವು ಬಣ್ಣ, ಆಕಾರಗಳಿಗೆ ಅನ್ವಯವಾಗುವಂತವು. ಆದರೆ ಟೀಪು ಎಂಬ ಹೆಸರನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಈ ಹೆಸರಿನ ಮೂಲ ‘ಟಿಪ್ಪು’ ಎನ್ನುವುದು ಹೌದಾದರೆ ಧಾರ್ಮಿಕ ಅಸಹಿಷ್ಣುತೆಯ ಒಂದು ಉದಾಹರಣೆಯಾಗಿ ಇದು ತೋರುತ್ತದೆ; ಇದಕ್ಕೆ ಪೂರಕವಾಗಿ ಕೀಳು (ಮೇಲು ಪದದ ವಿರುದ್ಧಾರ್ಥವಾಗಿ) ಅರ್ಥ ಕೊಡುವ ನಾಯಿಸೋಣೆ, ನಾಯಿಸೊಲಂಕೆ (ತುಳು), ನಾಯಿಕೊಡೆ, ನಾಯಿಸಂಪಿಗೆ ಮುಂತಾದ ಪದಗಳನ್ನು ನೋಡಬಹುದು. ನಮ್ಮದೊಂದು ನಾಯಿಯ ಹೆಸರು ಕಾಳ. ಒಮ್ಮೆ ಊರಿಗೆ ಹುಚ್ಚುನಾಯಿಯೊಂದು ಬಂದು ಹೆಚ್ಚಿನ ನಾಯಿಗಳಿಗೆಲ್ಲ ಕಚ್ಚಿ ಹೋಗಿದೆ ಎಂಬ ಸುದ್ದಿ ಹಬ್ಬಿತು. ಆ ಹುಚ್ಚು ನಾಯಿಯನ್ನು ನೋಡಿದವರೂ ಇದ್ದರು. ಅದೇ ಸಂದರ್ಭದಲ್ಲಿ ಕಾಳನಿಗೆ ಹುಷಾರಿಲ್ಲದಾಗಿ ಊಟ ಬಿಟ್ಟಿತು. ನಾನದನ್ನು ಸದಾ ಮುದ್ದು ಮಾಡುತ್ತಿದ್ದೆ; ಬೇಗನೇ ಗುಣವಾಗಲಿ ಎಂದು ಹಾರೈಸುತ್ತಿದ್ದೆ. ಆದರೆ ಮೂರ್ನಾಲ್ಕು ದಿನದಲ್ಲಿ ಅದಕ್ಕೂ ಹುಚ್ಚು ನಾಯಿ ಕಚ್ಚಿರಬಹುದೆಂದು ಶಂಕಿಸಿ, ಮಾವಿನ ಮರದಡಿ ಕಟ್ಟಿ ಹಾಕಿದರು. ಅದರ ಹತ್ತಿರ ಹೋಗದಂತೆ ಹಿರಿಯರು ನಿರ್ಬಂಧಿಸಿದರು. ಆದರೆ ಕಾಳ ಸರಿಯಾಗಿಯೇ ಇತ್ತು; ಅದಕ್ಕೆ ನಮ್ಮೆಲ್ಲರ ಪರಿಚಯವೂ ಸಿಗುತ್ತಿತ್ತು. ವೇದನೆಯ ಕಣ್ಣುಗಳಿಂದ ನೋಡುತ್ತಿತ್ತು. ದೂರದಿಂದ ನೀರು ಕೊಟ್ಟರೆ ಚೂರೇ ಚೂರು ಚಪ್ಪರಿಸುತ್ತಿತ್ತು. ಆಮೇಲೆ ನೀರನ್ನೂ ತಿರಸ್ಕರಿಸಿತು. ಆ ಕಾಲದಲ್ಲಿ ಹುಚ್ಚುನಾಯಿ ಕಚ್ಚಿದ ನಾಯಿಗಳಿಗೆ ಚಿಕಿತ್ಸೆ ಕೊಡಿಸುವ ಮಾತು ನಮ್ಮ ಹಳ್ಳಿಗಳಲ್ಲಿ ಇರಲಿಲ್ಲ. ಹೀಗೇ ಐದಾರು ದಿನ ಕಳೆಯುವಷ್ಟರೊಳಗೆ ಊರಿನ ಕೆಲವರು ಸೇರಿ ಒಂದು ನಿರ್ಧಾರಕ್ಕೆ ಬಂದರು; ಈಗಾಗಲೇ ಮೂರ್ನಾಲ್ಕು ನಾಯಿಗಳಿಗೆ ಮಾಡಿದ್ದನ್ನು ಕಾಳನಿಗೂ ಮಾಡುವುದು ಎಂದು. + +ಮುಂದಾಗುವ ದುಷ್ಪರಿಣಾಮಗಳನ್ನು ಚಿಂತಿಸಿ ಇಂಥಾ ನಿರ್ಧಾರ ಕೈಗೊಂಡಿದ್ದರು. ಹುಚ್ಚುನಾಯಿಯ ಎಂಜಲು ತಾಕಿದರೂ ಮನುಷ್ಯರಿಗೆ ಆ ಕಾಯಿಲೆ ಬರುತ್ತದೆ ಎಂಬ ಅಪಾರ ಹೆದರಿಕೆಯಿತ್ತು. ಹುಚ್ಚುನಾಯಿ ಕಚ್ಚಿದರೆ ನಾಯಿಯಂತೆಯೇ ಬೊಗಳಿ ಬೊಗಳಿ ಹುಚ್ಚರಾಗಿ ನರಳಿ ಮನುಷ್ಯರು ಸಾಯುತ್ತಾರೆಂಬ ಪ್ರತೀತಿ ಊರಿನಲ್ಲಿ ಹರಡಿತ್ತು. ಹಾಗಾಗಿ ಕಾಳನನ್ನು ಉಸಿರುಕಟ್ಟಿಸಿ ಕೊಲ್ಲುವುದೆಂದು ಯೋಚಿಸಿದರು. “ಅಯ್ಯೋ, ಬೇಡ ಬೇಡ” ಎಂದು ಎಷ್ಟು ಅತ್ತರೂ ನಿರ್ಧಾರ ಬದಲಾಗಲಿಲ್ಲ. ಒಂದು ದಿನ ಹತ್ತಿರದ ಮನೆಯ ಅನುಭವಿ ವ್ಯಕ್ತಿಯೊಬ್ಬರು ಬಲವಾದ ಕೋಲುಗಳ ಮೂಲಕ ಉಸಿರುಕಟ್ಟಿಸಿ ಕಾಳನನ್ನು ಕೊಂದರು! ಸುಮಾರು ಮೂವತ್ತು ವರ್ಷಗಳ ನಂತರವೂ ಅಂದಿನ ನೋವು ನನ್ನೊಳಗೆ ಚೂರೇ ಚೂರೂ ತೆಳುವಾಗುತ್ತಿಲ್ಲ. ಆ ದಿನ ಮನೆಯೊಳಗೆ ಓಡಿ ಹೋಗಿ ಬಿಕ್ಕಿ ಬಿಕ್ಕಿ ಅತ್ತ ಕ್ಷಣಗಳು ಈಗಲೂ ಕಣ್ಣನ್ನು ತೇವಗೊಳಿಸುತ್ತವೆ…. ಆಮೇಲೆ ಸುಮಾರು ಸಮಯದ ನಂತರ ಅಪ್ಪಯ್ಯ ಆಂಧ್ರದಿಂದ ತಂದು ಸಾಕಿದ ‘ಟೈಗರ್’ ಮನೆಯ ಸದಸ್ಯನಾಗಿ ಹದಿಮೂರು ವರ್ಷಗಳ ಕಾಲ ನಮ್ಮನ್ನು ಸಂತಸದಲ್ಲಿಟ್ಟಿತ್ತು. + +ಜಿಲ್ಲಾ ಕೇಂದ್ರವಾಗಿರುವ ಊರೊಂದರಲ್ಲಿ ಇದ್ದ ದಿನಗಳು. ಮಗನಿಗೆ ಎಂಟ್ಹತ್ತು ತಿಂಗಳಾಗಿತ್ತಷ್ಟೇ. ಆಗ ತಾನೇ ಅಲ್ಲಿಗೆ ಹೋಗಿದ್ದೆವು. ಹೊಸ ಪರಿಸರ, ಜನಜೀವನಕ್ಕೆ ಹೊಂದಿಕೊಳ್ಳುತ್ತಿದ್ದ ದಿನಗಳು. ಅಚಾನಕ್ಕಾಗಿ ಮನೆಯ ಎಲ್ಲರಿಗೂ ಜ್ವರ ಬಂತು. ಅದು ವಿಚಿತ್ರ ಜ್ವರ. ಎಷ್ಟು ಸಲ ಡಾಕ್ಟ್ರಿಗೆ ತೋರಿಸಿದರೂ ಗುಣವಾಗಲಿಲ್ಲ. ಮಗುವಿನ ಮೈ ಮುಟ್ಟಲಾಗದಷ್ಟು ಸುಡು ಜ್ವರ. ನಮಗೆ ಗಾಬರಿ, ಆತಂಕ. ಗಂಜಿ ಬೇಯಿಸಿ ತಿನ್ನಲೂ ಆಗದಷ್ಟು ನಿಶ್ಯಕ್ತಿ. ಹೀಗೆ ಹದಿನೈದು ಇಪ್ಪತ್ತು ದಿನ ಸತಾಯಿಸಿದ ಜ್ವರ ಕೊನೆಗೆ ಪಾಪುಗೂ, ನನಗೂ ಸ್ವಲ್ಪ ಬಿಡುಗಡೆ ನೀಡಿತು. ಆದರೆ ಇವರಿಗೆ ಜ್ವರ ಬಿಡಲೇ ಇಲ್ಲ. ಟೆಸ್ಟ್‌ಗಳನ್ನು ಮಾಡಿಸಿದರೂ ಮಲೇರಿಯಾ, ಟೈಫಾಯ್ಡ್ ಮುಂತಾದುವೇನೂ ಕಾಣಲಿಲ್ಲ. ಯಾವಾಗಲೂ ಆರೋಗ್ಯವಾಗಿ ದಷ್ಟಪುಷ್ಟವಾಗಿದ್ದ ಅವರ ಜೀವ ಸೊರಗಿ ಗುರುತೇ ಸಿಗದಂತಾದರು. ಇಂಥಾ ಪರಿಸ್ಥಿತಿಯಲ್ಲಿ ಒಂದು ದಿನ ನಡುರಾತ್ರಿ ಕಳೆದ ಸಮಯ. ಎಲ್ಲರೂ ಜ್ವರದ ನಿದ್ದೆಯಲ್ಲಿದ್ದೆವು! ಆಗ ನೀರವವನ್ನು ಸೀಳಿಕೊಂಡು ಬೀದಿಯಲ್ಲಿ ವಿಚಿತ್ರ ಅಟ್ಟಹಾಸದ ಕೂಗೊಂದು ಕೇಳಿಸಿತು! ಆ ಕೂಗು ಹೇಗಿತ್ತೆಂದರೆ, ಕಿವಿಯಿಂದ ಮೆದುಳೊಳಗೆ ಹೊಕ್ಕು ಇಡೀ ಮೈಯ್ಯನ್ನು ಆಕ್ರಮಿಸಿ ಚಳಿ ಹುಟ್ಟಿಸಿತು. ಹಾರಿಬಿದ್ದು ಚಾಪೆಯಲ್ಲಿ ಎದ್ದು ಕುಳಿತೆ. ಎಲ್ಲ ಕಡೆ ಕಡುಕತ್ತಲು. ಮಗುವನ್ನು ಬಿಗಿಯಾಗಿ ಅಪ್ಪಿಕೊಂಡೆ. ಎದ್ದು ದೀಪ ಹಾಕಬೇಕೆಂದರೆ ಕೈಕಾಲೇ ಆಡಲಿಲ್ಲ. ಕೂಗು ವಿಧವಿಧವಾಗಿ ಮುಂದುವರಿದಿತ್ತು. ಪಕ್ಕದ ಮನೆಯ ಜಯರಾಜಮ್ಮ ಹೇಳುತ್ತಿದ್ದ; ಮನೆ ಮುಂದಿನ ನೀರಿನ ತೊಟ್ಟಿಯ ಆಸುಪಾಸಿನ ಹೊಂಗೆ, ಬೇವಿನ ಗಿಡಗಳಲ್ಲಿ ‘ನೆಲೆಸಿರುವ’ ದೆವ್ವ, ಭೂತಗಳೇ ಕೂಗುತ್ತಿರಬೇಕು ಎಂಬ ಭ್ರಮೆಯಾಯಿತು! ಎಂದೂ ಭೂತಗಳನ್ನು ನಂಬದೇ ಇರುವವಳು ಆವತ್ತಿನ ಸ್ಥಿತಿಯಲ್ಲಿ ಹೆದರಿಕೆಯಿಂದ ನಡುಗಿಹೋದೆ! ನಿಜವಾಗಿಯೂ ಆ ಸಂದರ್ಭದಲ್ಲಿ ಧೈರ್ಯ ತಂದದ್ದು ಬೀದಿನಾಯಿಗಳ ಬೊಗಳು! ಆರಂಭದಲ್ಲಿ ರೌರವ ಕೂಗಿಗೆ ಅವೂ ಮರಗಟ್ಟಿದವೋ ಏನೋ! ಆದರೆ ಆಮೇಲೆ ಗುಂಪು ಗುಂಪಾಗಿ ಕೂಗತೊಡಗಿ ಸಮಾಧಾನ ತಂದವು. ಸುಮಾರು ಗಂಟೆಯ ಕಾಲ ಆಗಾಗ ಕೇಳಿಬರುತ್ತಿದ್ದ ಕೂಗು ಕ್ರಮೇಣ ದೂರಾಯಿತು. ಕೂಗಿನ ಸತ್ಯಾಸತ್ಯತೆ ಏನಿರಬಹುದೆಂದು ಆನಂತರ ಯೋಚಿಸಿದಾಗೆಲ್ಲ ಮನುಷ್ಯ ಜಗತ್ತಿನ ಕಾಳ ವ್ಯವಹಾರದ; ಸಭ್ಯ ನಾಗರಿಕರಿಗೆ ಭಯ ಹುಟ್ಟಿಸುವ ಇರಾದೆಯ… ವಿವಿಧ ಸಾಧ್ಯತೆಗಳು ತೆರೆದುಕೊಂಡು ಬೆಚ್ಚಿಬೀಳುವಂತಾಯಿತು! + +ಹಳ್ಳಿಗಳಲ್ಲಿ ನಾಯಿಗಳಿಗೆ ವಿಶೇಷ ಮರ್ಯಾದೆಯಿತ್ತು; ಈಗಲೂ ಇದೆ. ಒಂದು ನಾಯಿಮರಿ ಅಥವಾ ಬೆಕ್ಕಿನಮರಿಯನ್ನು ದೊಡ್ಡ ಮಾಡಬೇಕಾದರೆ ಎಷ್ಟು ಕಷ್ಟವಿದೆ ಎಂದು ಹಳ್ಳಿಗರಿಗೇ ಗೊತ್ತು! ಮೊದಲನೆಯದಾಗಿ ವಿಧ ವಿಧ ಕಾಯಿಲೆಗಳು. ಒಂದೊಂದು ಸಮಯದಲ್ಲಿ ನಾಯಿ-ಬೆಕ್ಕುಗಳಿಗೆ ಕಾಯಿಲೆ ಬರುವುದು ವಿಪರೀತ. ಇದನ್ನು “ಅವರ ಮನೆಯಲ್ಲಿ ನಾಯಿ ಆಗುವುದಿಲ್ಲ”, “ಬೆಕ್ಕು ಆಗುವುದಿಲ್ಲ” ಮುಂತಾಗಿ ನಂಬಲಾಗುತ್ತದೆ! ಆಗೆಲ್ಲ ಮನುಷ್ಯರಿಗೇ ಸರಿಯಾದ ಆಸ್ಪತ್ರೆಗಳು ಲಭ್ಯವಿರಲಿಲ್ಲ; ಇನ್ನು ನಾಯಿ ಬೆಕ್ಕುಗಳಿಗೆಲ್ಲಿರುತ್ತದೆ? ನಾಯಿಗಳಿಗೆ ಆಗಾಗ ‘ಟೀ ಕಣ್ಣ್’ ಹಾಕುತ್ತಿದ್ದರು. ಇದರಿಂದ ಅವುಗಳ ಹೊಟ್ಟೆನೋವು, ಹೊಟ್ಟೆಹುಳ ಕಮ್ಮಿಯಾಗುತ್ತದೆಂದು ತಿಳುವಳಿಕೆ. ಬೆಕ್ಕುಗಳ ಅನ್ನಕ್ಕೆ ತೆಂಗಿನೆಣ್ಣೆ ಮಿಶ್ರಮಾಡಿ ಕೊಡುತ್ತಿದ್ದರು, ಕಾಯಿತುರಿಯನ್ನು ತಿನ್ನಲು ಪ್ರೇರೇಪಿಸುತ್ತಿದ್ದರು. ಈ ನಾಯಿ ಬೆಕ್ಕುಗಳೂ ಏನೂ ಕಮ್ಮಿ ಪೈಕಿಯಲ್ಲ. ಹೊರಗಡೆ ಹೋದೊಡನೆ ಒಳ್ಳೇ ಎಳೇ ಹುಲ್ಲನ್ನು ಹುಡುಕಿ ಹುಡುಕಿ ತಿಂದು ದುಳ್ಸಿ ದುಳ್ಸಿ ವಾಂತಿ ಮಾಡಿಕೊಂಡು ಸ್ವಯಂ ವೈದ್ಯ ಮಾಡುವುದನ್ನು ಬಲ್ಲವು! ಹೊಟ್ಟೆನೋವು ಇದ್ದಾಗ ಹೀಗೆ ಮಾಡುತ್ತವಂತೆ! ‘ಹಾಗಾದರೆ ಬೆಕ್ಕಿನ ಜಾತಿಯ ಹುಲಿಯೂ ಇದೇ ತರ ಹುಲ್ಲು ತಿಂದು ವಾಂತಿ ಮಾಡುತ್ತದಾ?, ‘ಹುಲಿಯೂ ಹುಲ್ಲು ತಿನ್ನುತ್ತದಾ?’ ಎಂಬ ಕೀಟಲೆಯ ಪ್ರಶ್ನೆ ಆಗಾಗ ತಲೆಯೊಳಗೆ ಓಡಾಡುತ್ತಿತ್ತು! + +ನಾಯಿ, ಬೆಕ್ಕುಗಳಿಗೆ ಅವುಗಳ ಆಹಾರವಾದ ಮೀನು, ಮಾಂಸವನ್ನು ಹಾಕುವುದು ಸರಿಯಾದ ಕ್ರಮ. ಆದರೆ ಸಸ್ಯಾಹಾರಿಗಳ ಮನೆಯಲ್ಲಿ ಇವು ಇರುವುದಿಲ್ಲವಾದ್ದರಿಂದ ಅನ್ನ, ಸಾರು, ಸಾಂಬಾರು, ಪಲ್ಯ, ಕಡುಬು, ದೋಸೆ ಹೀಗೆ ಹಾಕಿದ್ದನ್ನು ತಿಂದು ಹೋಗುವುದನ್ನು ಇವು ಒತ್ತಾಯಪೂರ್ವಕವಾಗಿ ರೂಢಿ ಮಾಡಿಕೊಂಡಿವೆ. ನಮ್ಮನೆಯಲ್ಲಿದ್ದ ನಾಯಿಯೊಂದು ಹಲಸು, ಮಾವು ಹೀಗೆ ಹೆಚ್ಚಿನ ಹಣ್ಣುಗಳನ್ನು ತಿನ್ನುತ್ತಿತ್ತು. ಬೆಕ್ಕುಗಳು ಕೂಡಾ ದೊಣ್ಣೆಮೆಣಸು, ದಿವ್‌ಹಲಸು, ಅಲಸಂದೆ, ಬಸಳೆ ಹೀಗೆ ತರಕಾರಿಗಳನ್ನು ಆಸೆಪಟ್ಟು ತಿನ್ನುವುದನ್ನು ಕಂಡು ಕೇಳಿದ್ದೇನೆ! ಎಷ್ಟೋ ಜನರು ತಮ್ಮ ಊಟದ ಪಾಲಿನಲ್ಲೇ ನಾಯಿ, ಬೆಕ್ಕುಗಳಿಗೂ ಸ್ವಲ್ಪ ಹಾಕಿ ಅಪಾರ ಪ್ರೀತಿಯಿಂದ ಸಾಕುತ್ತಾರೆ. ಬೇಕು ಬೇಕಾದಂತೆ ಅವುಗಳಿಗೆ ಮೀನು ಮಾಂಸ ತಂದುಹಾಕುವಷ್ಟು ಆರ್ಥಿಕ ಚೈತನ್ಯ ಇರುವುದಿಲ್ಲ. ಬೆಕ್ಕುಗಳಾದರೆ ಪರವಾಗಿಲ್ಲ, ತಾವೇ ಇಲಿ, ಕಪ್ಪೆ, ಹಾವು, ಹರಣೆ ಮುಂತಾದುವನ್ನೆಲ್ಲ ಬೇಟೆಯಾಡಿ ಸಾಕಷ್ಟು ಸಂಪಾದಿಸುತ್ತವೆ. ಕೆಲವು ನಾಯಿಗಳೂ ಕಾಡಿಗೆ ಹೋಗಿ ಮೊಲ, ಹಕ್ಕಿ, ಮನೆಹತ್ತಿರದ ಗುಡ್ಡೆಹೆಗ್ಣ ಮೊದಲಾದುವನ್ನು ಹಿಡಿದು ತಿನ್ನುತ್ತವೆ. ಏನೇ ಕೊಟ್ಟರೂ ಬಿಟ್ಟರೂ ನಾಯಿಗಳಂತೂ ತಮ್ಮ ಒಡೆಯರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತವೆ. ಮನೆಮಂದಿ ಸತ್ತಾಗ ತಾನೂ ಊಟಬಿಟ್ಟು ಮರಣಿಸಿದ ನಾಯಿಗಳ ಉದಾಹರಣೆಗಳನ್ನೂ ಆಗಾಗ ಕೇಳಿದ್ದೇವೆ! ಒಂದು ಸಲ ಒಬ್ಬ ವ್ಯಕ್ತಿಯ ವಾಸನೆಯನ್ನು ಸರಿಯಾಗಿ ಗ್ರಹಿಸಿಕೊಂಡರೆ ಮತ್ತೆ ಕೊನೆಯ ತನಕವೂ ಅದನ್ನು ಮರೆಯುವುದಿಲ್ಲವಂತೆ ಇವು! ನಾಯಿಗಳ ಗ್ರಹಣ ಶಕ್ತಿ, ವಾಸನಾ ಶಕ್ತಿ, ನಿಷ್ಠಾವಂತ ಗುಣ ಅದ್ಭುತ! ಹಾಗೇ ಬುದ್ಧಿವಂತ, ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಪ್ರಾಣಿ. ನಾಯಿಗಳ ಆಟ, ಚಿನ್ನಾಟಗಳೂ, ಮೈಯ್ಯನ್ನೆಲ್ಲ ನೆಕ್ಕಿ ಮುದ್ದು ಮಾಡುವ ಸ್ವಭಾವವೂ ವಿಶಿಷ್ಟ! ಆದರೆ ನಾಯಿಯ ಪ್ರಾಮಾಣಿಕತೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಈ ಜೀವವನ್ನು ಮೂಲೆಗುಂಪು ಮಾಡಿ ದಯನೀಯ ಪರಿಸ್ಥಿತಿಗೆ ದೂಡಿದ ಕೀರ್ತಿ(ಅಪ) ಬುದ್ಧಿವಂತನಾದ ಮನುಷ್ಯನಿಗೆ ಸಲ್ಲುತ್ತದೆ! + +ಮನುಷ್ಯ ಪಳಗಿಸಿದ ಪ್ರಾಣಿಗಳಲೆಲ್ಲಾ ಪ್ರಾಚೀನವಾದದ್ದು ನಾಯಿ. (Canis lupus familiaris) ಮೊಟ್ಟಮೊದಲು ಮಧ್ಯ ಯುರೋಪಿನಲ್ಲಿ ನಾಯಿಯನ್ನು ಪಳಗಿಸಿ ಸಾಕಲಾಯಿತೆಂದು ನಂಬಲಾಗಿದೆ. ಡೆನ್ಮಾರ್ಕಿನಲ್ಲಿ ಸಿಕ್ಕಿದ ಸುಮಾರು ಏಳು ಸಾವಿರ ವರ್ಷಗಳ ಹಿಂದಿನ ನಾಯಿಯ ಮೂಳೆಗಳ ಪಳೆಯುಳಿಕೆ ಅತ್ಯಂತ ಹಳೆಯದು. ಅನಂತರದ್ದು ಮೆಸಪೊಟೇಮಿಯಾದ ಕಣಿವೆ, ಅದರ ಪೂರ್ವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮಧ್ಯಶಿಲಾಯುಗ ಕಾಲದಲ್ಲೇ ಮನುಷ್ಯ ನಾಯಿಯನ್ನು ಸಾಕಲಾರಂಭಿಸಿದ್ದ. ಮಾನವ ಹೋದಲ್ಲೆಲ್ಲ ತಾನೂ ಹಿಂಬಾಲಿಸುತ್ತ ಅವನ ಒಡನಾಡಿಯಾಗಿ, ಸೇವಕನಾಗಿ ಗುರುತಿಸಿಕೊಂಡಿದೆ. ನಾಯಿಗಳು ತೋಳ ಮತ್ತು ಗುಳ್ಳೆನರಿಗಳ ಹತ್ತಿರದ ಸಂಬಂಧಿಗಳು. ಕಾಡುನಾಯಿಗಳ ಕೆಲವು ತಳಿಗಳಿಗೂ ಈಗಿನ ಊರು ನಾಯಿಗಳ ತಳಿಗೂ ಹೋಲಿಕೆಯಿದೆ. ನಾಯಿಗಳು ಪ್ರಾಚೀನ ಕಾಲದಿಂದಲೂ ಪಶುಸಂಗೋಪನೆ, ಹೊಲಗದ್ದೆಗಳ ಕಾವಲು, ಮನೆ-ಜನರ ರಕ್ಷಣೆ, ದರೋಡೆಕೋರರು, ಕಳ್ಳರ ಭಯ ನಿವಾರಣೆ ಹೀಗೆ ಸಹಕರಿಸುತ್ತಾ ಬಂದಿವೆ. + +ಕಂಡ ಕಂಡ ಪ್ರಾಣಿ ಪಕ್ಷಿ ಜೀವಜಂತುಗಳಿಗೆ ಕಾರಣವೇ ಇಲ್ಲದೆ ಹಿಂಸೆ ಕೊಡುವುದು ಮನುಷ್ಯನಲ್ಲಿ ಹುದುಗಿರುವ ಮೂಲ ಗುಣ. ಬಾಲ್ಯದಲ್ಲಿ ಇಂತವೆಲ್ಲ ನೋಡಿದಾಗ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಪ್ರಾಣಿಗಳಿಗೆ ಮಾತು ನಿಂತುಹೋಗುವಂತೆ ದೇವತೆಯೊಬ್ಬಳು ಶಾಪ ಕೊಟ್ಟ ಕತೆ ನೆನಪಾಗುತ್ತಿತ್ತು. ಅದು ಕತೆಯೆಂದಲ್ಲದೆ, ನಿಜವಾಗಿ ನಡೆದದ್ದೇ ಎಂದು ನಂಬಿದ್ದೆ! ಛೇ ಯಾಕಾದರೂ ಹೀಗಾಯಿತೋ, ಪ್ರಾಣಿಗಳು ಮರಳಿ ಯಾವಾಗ ಮಾತಾಡಿ ತಮ್ಮ ಸುಖ ದುಃಖ ಹೇಳಿಕೊಳ್ಳುತ್ತವೋ, ಹೊಡೆತ ಬಡಿತಗಳನ್ನು ಪ್ರತಿಭಟಿಸಿ ನಿಲ್ಲುತ್ತವೋ ಅನ್ನಿಸುತ್ತಿತ್ತು! ಪಟಾಕಿ ಪುಟ್ಟ ಎಂಬ ವ್ಯಕ್ತಿಯೊಬ್ಬರಿದ್ದರು. ಅವರಿಗೆ ಆ ಹೆಸರು ಬಂದದ್ದು ಹೇಗೆಂದು ಕೇಳಿದಾಗ ತಿಳಿದುಬಂದ ವಿಷಯವೆಂದರೆ, ಅವರೊಮ್ಮೆ ದೀಪಾವಳಿಗೆಂದು ತಂದ ಸರ ಪಟಾಕಿಯನ್ನು ನಾಯಿಯ ಬಾಲಕ್ಕೆ ಕಟ್ಟಿ ಬೆಂಕಿಕೊಟ್ಟರಂತೆ. ಆಗ ಆದ ಗಲಾಟೆ, ಗಡಿಬಿಡಿಯಲ್ಲಿ ಅವರ ಹೋಟ್ಲಿನ ಮುಳಿಹುಲ್ಲಿನ (ಕರಡದ ಹುಲ್ಲು) ಮಾಡಿಗೆ ಬೆಂಕಿ ಹಿಡಿದು ಇಡೀ ಹೋಟ್ಲೇ ಸುಟ್ಟುಹೋಯಿತು. ಇದನ್ನು ಕಂಡ ಹಳ್ಳಿಯ ಜನರು ‘ಇಂಥಾ ದುರ್ಬುದ್ಧಿಯ ಮನುಷ್ಯನಿಗೆ ಹೀಗೇ ಆಗಬೇಕು’ ಎಂದುಕೊಂಡು ಪಟಾಕಿಯನ್ನು ಆ ವ್ಯಕ್ತಿಯ ಹೆಸರಿಗೆ ಶಾಶ್ವತವಾಗಿ ಅಂಟಿಸಿ ಪಟಾಕಿ ಪುಟ್ಟ ಎಂದು ಕರೆಕರೆದು ತೃಪ್ತಿಪಟ್ಟರು! ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಘಟನೆ. ಈಗಲೂ ಕರುಳು ಕೊರೆಯುವ ಇಂಥಾ ಪೈಶಾಚಿಕ ಕೃತ್ಯಗಳನ್ನು ಆಗಾಗ ನೋಡುತ್ತ, ಕೇಳುತ್ತಾ ಇರುತ್ತೇವೆ! + +ಸೋಶಿಯಲ್ ಮೀಡಿಯಾಗಳಲ್ಲಿ ಬೀದಿ ನಾಯಿಗಳ ಕುರಿತು ಚರ್ಚೆಗಳಾದಾಗ; ಮನುಷ್ಯರನ್ನು ಅದರಲ್ಲೂ ಚಿಕ್ಕ ಮಕ್ಕಳನ್ನು ಅಟ್ಟಿಸಿಕೊಂಡು ಹೋಗಿ ಗಾಯಗೊಳಿಸಿದ ಅಥವಾ ಕೊಂದ ಪ್ರಕರಣಗಳನ್ನು ಪ್ರಸ್ತಾಪಿಸಲಾಗುತ್ತದೆ. ಹುಚ್ಚುನಾಯಿ ಕಚ್ಚುವ ಆತಂಕಕಾರಿ ಘಟನೆಗಳು, ನಾಯಿಗಳ ಬೊಗಳಿನಿಂದಾಗಿ ಆಗುವ ಕಿರಿ ಕಿರಿ ಮುಂತಾದುವೆಲ್ಲ ಮುನ್ನೆಲೆಗೆ ಬರುತ್ತವೆ. ನಿಜ, ಇಂತಹ ಆಘಾತಕಾರಿ ಘಟನೆಗಳು ನಡೆಯುವುದು ನಮ್ಮ ವ್ಯವಸ್ಥೆಯ ಲೋಪದೋಷಗಳಿಗೆ ಹಿಡಿದ ಕನ್ನಡಿ. ಇವುಗಳನ್ನು ಯಾರೂ ಸಹಿಸುವುದು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ಬೀದಿನಾಯಿಗಳ ಮೇಲೆ ರೊಚ್ಚು ತೋರಿಸಿ ಪ್ರಯೋಜನವಿಲ್ಲ, ಸರಿಯೂ ಅಲ್ಲ. ಇಂತಹ ಪ್ರಕರಣಗಳಲ್ಲಿ ಬೀದಿನಾಯಿಗಳ ತಪ್ಪು ಏನು ಮತ್ತು ಎಷ್ಟು ? ಬುದ್ಧಿವಂತ ಪ್ರಾಣಿಯಾದ ಮನುಷ್ಯನ ಅಪರಾಧ ಎಷ್ಟು… ಎಂದು ನಿಷ್ಪಕ್ಷಪಾತವಾಗಿ ಯೋಚಿಸಬೇಕಾಗುತ್ತದೆ. ಶತಮಾನಗಳ ಹಿಂದೆ ಕಾಡಿನಿಂದ ಹಿಡಿದು ತಂದು ಮನುಷ್ಯ ಪಳಗಿಸಿದ ಪ್ರಾಣಿ ನಾಯಿ. ತನ್ನ ಉಪಯೋಗ, ಸ್ವಾರ್ಥಕ್ಕಾಗಿ ಅದರ ಬದುಕನ್ನು ಛಿದ್ರಗೊಳಿಸಿದ್ದು ಮಾನವವೇ. ಈಗ ನಾಯಿ, ಮನುಷ್ಯನಿಲ್ಲದೆ ಬದುಕಲಾಗದಷ್ಟು ಅವಲಂಬಿತವಾಗಿದೆ. ಅಡ್ಡಾದಿಡ್ಡಿ ಬೆಳೆದ ನಮ್ಮ ನಗರಗಳು, ನಾಗರಿಕತೆಯ ಸುಳ್ಳು ಭ್ರಮೆಗಳು, ಐಷಾರಾಮಿ ಜೀವನದ ಮಹದಾಸೆಗಳು ನಮ್ಮ ಜೊತೆಗೇ ಬದುಕುತ್ತಿರುವ ಇತರ ಜೀವಿಗಳ ಮೇಲೆ ಅಪಾರ ದುಷ್ಪರಿಣಾಮ ಬೀರಿವೆ; ಇದರಲ್ಲಿ ನಾಯಿಗಳು ಮುಖ್ಯವಾದವು. ಹಸಿವಿನಿಂದ ಕಂಗೆಟ್ಟು, ತುತ್ತಿಗಾಗಿ ಅಲೆಯುತ್ತ ಹೊಡೆಸಿಕೊಂಡು, ಬಡಿಸಿಕೊಂಡು ನರಕ ಸದೃಶ ಬದುಕು ನಡೆಸುತ್ತಿವೆ. ಈ ಪರಿಸ್ಥಿತಿಯನ್ನು ಸರಿಪಡಿಸಬೇಕಾದ ಕರ್ತವ್ಯ ನಮ್ಮದೇ. ತಮ್ಮ ಶ್ರೀಮಂತಿಕೆಯ ಕುರುಹಿಗಾಗಿ ದೊಡ್ಡ ಜಾತಿಯ ನಾಯಿಗಳನ್ನು ಅದರ ಆರೋಗ್ಯಕ್ಕೆ ಸರಿಹೊಂದದ ಜಂಕ್ ಫುಡ್‌ಗಳನ್ನು ತಿನ್ನಿಸಿ ಬೆಳೆಸಿ ಅದರ ಜೀವ-ಜೀವನವನ್ನು ಹಾಳು ಮಾಡುವುದು ಕೂಡಾ ಮತ್ತೊಂದು ತರದ ವ್ಯಸನವಾಗಿದೆ. ಇನ್ನು, ಬೀದಿ ನಾಯಿಗಳಿಗೆ ವ್ಯಾಕ್ಸಿನೇಶನ್, ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ, ಸೂಕ್ತ ಆಹಾರ, ಆಶ್ರಯ ಕಲ್ಪಿಸಬೇಕಾದದ್ದು ನಮ್ಮ ಆಡಳಿತ ಯಂತ್ರದ ಜವಾಬ್ದಾರಿ. ವಿಶೇಷ ತಳಿಯ ಸಾಕು ನಾಯಿಗಳ ಆಸೆ ಬಿಟ್ಟು ಬೀದಿನಾಯಿ ಮರಿಗಳನ್ನು ತಂದು ಪೋಷಿಸಬೇಕಾದದ್ದು ನಾಗರಿಕರ ಬದ್ಧತೆಯಾಗಿದೆ. + +ಕೊರೋನಾ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರ, ಶೋಷಿತರ, ಬಡಜನರ ಬದುಕಿನಲ್ಲಿ ಗುಣಪಡಿಸಲಾಗದ ದೊಡ್ಡ ಗಾಯಗಳಾದವು. ಊಹಿಸಿಯೇ ಇರದಿದ್ದ ಬಿಕ್ಕಟ್ಟಿನ ಪರಿಸ್ಥಿತಿ, ಗೊಂದಲ ತಲೆದೋರಿತು. ವಲಸೆ ಕಾರ್ಮಿಕರ ದಿನಗಳು ನುಚ್ಚುನೂರಾದವು. ಇದೇ ಸಮಯದಲ್ಲಿ ಜನರಹಿತ ಬೀದಿಗಳಲ್ಲಿ ಹಸಿವಿನಿಂದ ಒದ್ದಾಡಿ ಅನೇಕ ನಾಯಿಗಳೂ ಪ್ರಾಣಬಿಟ್ಟವು. ಆಗ ಸ್ವಯಂ ಸೇವಾ ಸಂಸ್ಥೆಗಳು, ಇತರ ನಾಗರಿಕರು ಅವುಗಳಿಗೆ ಒಂದಷ್ಟು ಸಹಾಯ ಮಾಡಿದರು. ಹೀಗೆ ಬೀದಿನಾಯಿಗಳ ಸಮಸ್ಯೆ ತೀವ್ರವಾಗಿರುವುದನ್ನು ಅರಿತು ಕೆಲಸ ಮಾಡುವ ಟ್ರಸ್ಟ್‌ಗಳು, ಜನರು ನಮ್ಮ ಸಮಾಜದಲ್ಲಿದ್ದಾರೆ ಎನ್ನುವುದು ತುಸು ನೆಮ್ಮದಿಯ ವಿಷಯ. ನಾವೆಲ್ಲರೂ ಅಂತವರಿಗೆ ಋಣಿಯಾಗಿರಬೇಕಾಗುತ್ತದೆ. ಇನ್ನು, ಹೆಣ್ಣುನಾಯಿಯ ಪರಿಸ್ಥಿತಿಯಂತೂ ಚಿಂತಾಜನಕ. ಮರಿಯಿಡುತ್ತದೆ ಎಂಬ ಕಾರಣಕ್ಕಾಗಿ ಹೆಣ್ಣುನಾಯಿಯನ್ನು ಸಾಕುವವರು ತುಂಬಾ ಕಡಿಮೆ. ಬೀದಿನಾಯಿಯಾಗಿ ಪರಿವರ್ತನೆಯಾಗುವ ಅದು ಮರಿಗಳನ್ನಿಟ್ಟಾಗ ಪಡುವ ಕಷ್ಟ, ಮರಿಗಳ ಹಸಿವು, ಆಕ್ರಂದನ ಸಲಸಲವೂ ಎದೆಯಲ್ಲಿ ನೋವೊಂದನ್ನು ನೆಟ್ಟು ಶಾಶ್ವತವಾಗಿಸಿದೆ. ರಸ್ತೆ ದಾಟುವಾಗ ಪಾಡು ಪಡುವ, ಆಘಾತಕ್ಕೆ ಒಳಗಾಗುವ ನಾಯಿಗಳ ನೋವು ಇನ್ನೊಂದು ಬಗೆಯದು. ನಮ್ಮ ನಾಗರಿಕತೆಯ ಎಲ್ಲ ರೋಗಗಳಿಗೂ ನಾವೇ ಮದ್ದನ್ನರೆಯುವ ವಿವೇಕ ಮಾಡಬೇಕಾಗಿದೆ. ಅದು ಬಿಟ್ಟು, ಮತ್ತೆ ಮೂಕಪ್ರಾಣಿಗಳ ಮೇಲೇ ತಪ್ಪು ಹೊರಿಸುವುದು ಪಲಾಯನವಾದವಾಗುತ್ತದೆ. + +ನಮ್ಮ ಪಪ್ಪು ಬೀದಿನಾಯಿಯ ಮರಿ. ಒಂದು ದಿನ ಕಾಯಿ ಹೆರೆಯುತ್ತ ನೆಲದಲ್ಲಿ ಕುಳಿತಿದ್ದಾಗ ನನ್ನ ಪಕ್ಕದಲ್ಲೇ ಧುತ್ತೆಂದು ಪ್ರತ್ಯಕ್ಷವಾದ ಆಸಾಮಿಯದು! ಆಹಾರ, ಆಶ್ರಯ ಅರಸಿ ಹಿಂಬಾಗಿಲಿನಿಂದ ಒಳಬಂದಿತ್ತು. ಅದರ ಮುಗ್ಧ ಮೂತಿಯನ್ನು ಕಂಡು ಮುದ್ದು ಉಕ್ಕಿಬಂದು ನಾವೇ ಇಟ್ಟುಕೊಳ್ಳೋಣವೆಂದು ನಿರ್ಧರಿಸಿದೆವು. ಅವು ನಮ್ಮನೆಯ ಸಂತಸದ ಚೈತ್ರಕಾಲ. ಏಕೆಂದರೆ ಮೊದಲೇ ಮನೆತುಂಬಾ ಓಡಾಡಿಕೊಂಡಿದ್ದ ಬೆಕ್ಕುಗಳ ಜೊತೆಗೆ ಈಗೊಂದು ದಡ್ಡ ಮುಖಭಾವದ ನಾಯಿ. ಎಲ್ಲರೂ ಸೇರಿ ಆಟವಾಡುತ್ತ ನಗುವನ್ನು ತುಂಬಿಕೊಂಡೆವು. ನಾಯಿ-ಬೆಕ್ಕುಗಳ ಸಲುಗೆ ಆಶ್ಚರ್ಯಕರವಾಗಿತ್ತು. ಒಂದರ ಮೇಲೊಂದು ಬಿದ್ದು ಆಟವಾಡುವುದು, ಹಾಗೇ ಮಲಗಿ ನಿದ್ರಿಸುವುದು, ಹಸಿವಾದಾಗ ಎದ್ದು ಒಂದೇ ತಟ್ಟೆಯಲ್ಲಿ ಉಣ್ಣುವುದು. ಆದರೆ ಏಳೆಂಟು ತಿಂಗಳುಗಳ ಬಳಿಕ ಮಿಂಚಿ ಮರಿ ಮಾಯವಾಯಿತು, ಅದರ ಬೆನ್ನಿಗೇ ಫುಟ್ಬಾಲ್ ಎಂಬ ಗುಂಡು ಮರಿಯೂ…. ಇದೆಲ್ಲ ಹೇಗಾಯಿತೆಂದು ಯೋಚಿಸುವಷ್ಟರಲ್ಲೇ ಮುಸುವ ಬೆಕ್ಕು ಶವವಾಗಿ ಬಿದ್ದು ಸಿಕ್ಕಿತು! ಅದರ ಪುಟ್ಟ ಮರಿಗಳು ಅನಾಥವಾದವು. + +ಈ ಘಟನೆಗಳೆಲ್ಲ ಯಾಕಾಗುತ್ತಿವೆ ಎಂದೇ ತಿಳಿಯದೆ ನೋವಿನಲ್ಲಿ ಮುಳುಗಿದೆವು. ಇದೆಲ್ಲ ನಡೆದು ಸ್ವಲ್ಪ ಸಮಯ ಕಳೆದಿತ್ತು. ಎಲ್ಲ ದೂರವಾಯಿತು ಅಂದುಕೊಳ್ಳುವಷ್ಟರಲ್ಲಿ ಒಂದು ದಿನ ಪಪ್ಪು ಅಂಗಳದಲ್ಲಿ ಬಿದ್ದು ಹೊರಳಾಡುತ್ತಿತ್ತು. ಹಾವೇನಾದರೂ ಮುಟ್ಟಿತೋ, ಯಾರೋ ಹೆಗ್ಗಣಕ್ಕೆಂದು ಇಟ್ಟು ವಿಷ ತಿಂದಿತೋ ಎಂದೆಲ್ಲ ಶಂಕಿಸಿ ಗಡಿಬಿಡಿಯಲ್ಲಿ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಆಸ್ಪತ್ರೆಗೆ ಕರೆದೊಯ್ದೆ. ಸೂಕ್ತ ಸಮಯಕ್ಕೆ ದೊರೆತ ಚಿಕಿತ್ಸೆಯಿಂದಾಗಿ, ಒಂದು ವಾರ ಹೋರಾಡಿದರೂ ಕೊನೆಗೂ ಪಾಪಣ್ಣ ಸಾವನ್ನು ಗೆದ್ದಿತು. ಆದರೆ ಇನ್ನೂ ಮುಗಿದಿರಲಿಲ್ಲ! ಸ್ವಲ್ಪ ಸಮಯದಲ್ಲೇ ಇನ್ನೂ ಎರಡು ಬೆಕ್ಕಿನ ಮರಿಗಳು ಸತ್ತು ಗಡ್ಡೆ ಕಟ್ಟಿದ ಸ್ಥಿತಿಯಲ್ಲಿ ಪಕ್ಕದ ಮನೆಯ ಕಾಂಪೌಂಡಿನಲ್ಲಿ ಕಂಡವು. ಆಗ ಆದ ಮಾತಿನ ಚಕಮಕಿಯಲ್ಲಿ ನಿಗೂಢವಾಗಿದ್ದ ವಿಷಯ ಬಿಚ್ಚಿಕೊಂಡಿತು. ಪಾಪಣ್ಣ ಸುಮಾರು ಸಮಯದಿಂದ ಪಕ್ಕದ ಮನೆಯವರ ಮೂರ್ನಾಲ್ಕು ಜೊತೆ ಚಪ್ಪಲಿ ಕದ್ದಿತ್ತಂತೆ. ಸದ್ಯ, ವಾರದ ಹಿಂದೆ ಮತ್ತೊಂದು ಜಾಸ್ತಿ ಬೆಲೆಯ ಚಪ್ಪಲಿಯನ್ನೂ ಕಳ್ಳತನ ಮಾಡಿದೆಯಂತೆ. ಹೀಗಾಗಿ ಅದನ್ನು ‘ತೆಗೆಯಲು’ ಆಗಾಗ ವಿಷ ಇಟ್ಟಿದ್ದರಂತೆ! “ನಿಮಗೆ ಈ ನಾಯಿ ಬೆಕ್ಕುಗಳೆಲ್ಲ ಯಾಕೆ ಬೇಕಮ್ಮಾ” ಎಂಬ ಉಪದೇಶವೂ ಅಲ್ಲಿ ನನಗೆ ಸಿಕ್ಕಿತು! ಅವರು ಯಾರಿಗೂ ತೊಂದರೆ ಕೊಡದ ಸಭ್ಯ ನಾಗರಿಕರೇ; ಪ್ರಾಣಿಗಳ ವಿಷಯದಲ್ಲಿ ಮಾತ್ರ ಅಸಹನೆ ತುಂಬಿಕೊಂಡಿದ್ದರು! ಆದರೆ ಪಾಪಣ್ಣ ಚಪ್ಪಲಿ ತಂದ ವಿಷಯದಲ್ಲಿ ನಾವೂ ಅಸಹಾಯಕರಾಗಿದ್ದೆವು. ಸಣ್ಣದಿರುವಾಗ ಚಪ್ಪಲಿ ಕದ್ದು ಕಚ್ಚಿ ತುಂಡು ಮಾಡಿ ಜೂಲು ಜೂಲು ಮಾಡಿ ರೂಪ ಕೆಡಿಸಿ ಬಿಸಾಕುವುದು ನಾಯಿಗಳ ಒಂದು ಆಟ ಅಥವಾ ಅಭ್ಯಾಸ. ಬೆಳೆಯುತ್ತಿರುವ ಹಲ್ಲು ‘ಚೀಂಕಿ’ ಬರುವುದಕ್ಕೋ; ಚಪ್ಪಲಿಯ ವಾಸನೆಗೋ ಪ್ರಚೋದನೆಗೊಂಡು ಅವು ಹೀಗೆ ಮಾಡುವುದಿರಬಹುದು. ಸ್ವಲ್ಪ ದೊಡ್ಡದಾದ ನಂತರ ಈ ಅತಿರೇಕವನ್ನು ಮರೆತು ಸರಿಯಾಗುತ್ತವೆ. ಆದರೆ ನಮಗೆ ಮನುಷ್ಯರಿಗೆ ಅರ್ಥವಾಗುವುದಿಲ್ಲ. ನಾವೇ ಭೂಮಿಯ ಒಡೆಯರು ಎಂಬ ಮನೋಭಾವ ಬೇರೂರಿ ಹೋಗಿದೆ. ಜೀವಜಂತುಗಳ ಬದುಕುವ ಹಕ್ಕು ನಮಗೆ ಅಪರಾಧವೆನಿಸುತ್ತದೆ. + + + +ತೇಜಸ್ವಿ ಅವರ ಮುದ್ದು ನಾಯಿ ʼಕಿವಿʼ ಚಪ್ಪಲಿ ಕದ್ದ ಪ್ರಸಂಗ ನೆನಪಾಗುತ್ತದೆ. ಮಾರ ಚಪ್ಪಲಿಯನ್ನು ಅದಲು ಬದಲಾಗಿ ಇಟ್ಟು ‘ದೆಯ್ಯದ ಮೆಟ್ಟುʼ ಎಂದು ಭಾವಿಸಿ ಇನ್ನು ಮುಂದೆ ಕದಿಯುವುದಿಲ್ಲ’ ಅಂತ ತೀರ್ಮಾನಿಸುತ್ತಾನೆ. ಪದೇ ಪದೇ ಎಡಗಾಲಿನ ಚಪ್ಪಲಿ ಬಲಕ್ಕೆ, ಬಲಗಾಲಿನದ್ದು ಎಡಕ್ಕೆ ಇರುತ್ತಿದ್ದುದರಿಂದ ಕಿರಿಕಿರಿಗೊಂಡ ಲೇಖಕರು ಪ್ರಶ್ನಿಸಿದಾಗ ಮಾರ ತನ್ನ ತರ್ಕವನ್ನು ಮುಂದಿಡುತ್ತಾನೆ! ಒಂದು ವೇಳೆ ಇದು ನಿಜವೇ ಆಗಿದ್ದರೆ ಕಿವಿಗೆ ಎಷ್ಟೊಂದೆಲ್ಲ ‘ಜ್ಞಾನ’ ಇರಬೇಕಾಗುತ್ತದೆ ಎಂದು ಅವರು ಪಟ್ಟಿಮಾಡುತ್ತಾರೆ! ಮೊದಲನೆಯದಾಗಿ ಅದಕ್ಕೆ ಮನುಷ್ಯರ ಕಾಲಿನ ರಚನೆ ಗೊತ್ತಿರಬೇಕು, ಇನ್ನೊಂದೆಂದರೆ ದೆವ್ವಗಳ ಕಾಲು ಇದಕ್ಕೆ ವ್ಯತಿರಿಕ್ತವಾಗಿರುತ್ತದೆ ಎಂದು ತಿಳಿದಿರಬೇಕು… ಎಲ್ಲಕ್ಕಿಂತ ಹೆಚ್ಚಾಗಿ ದೆವ್ವಗಳು ಇವೆ ಎಂಬ ವಿಷಯವನ್ನು ಮಾರನಂತೆ ಕಿವಿಯೂ ನಂಬಬೇಕು!! ಈಗ ನನಗನ್ನಿಸುತ್ತಿರುವುದು, ಕಿವಿಯ ಈ ಎಲ್ಲ ಜ್ಞಾನಗಳ ತರಹ ನಮ್ಮ ಪಪ್ಪುವಿಗೂ ಚಪ್ಪಲಿ ಕದ್ದದ್ದಕ್ಕಾಗಿ ವಿಷವುಣಿಸುವ ವ್ಯಕ್ತಿಗಳೂ ಇರುತ್ತಾರೆಂಬ ಜ್ಞಾನ ಇದ್ದಿದ್ದರೆ; ಮನುಷ್ಯರ ಸಹವಾಸವೇ ಬೇಡವೆಂದು ತೀರ್ಮಾನಿಸಿ ‘ದೆಯ್ಯದ ಚಪ್ಪಲಿ’ಯನ್ನೇ ಹುಡುಕಿಕೊಂಡು ಹೋಗಿ ಕದಿಯುತ್ತಿತ್ತೋ ಏನೋ ಎಂದು! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_360.txt b/Kenda Sampige/article_360.txt new file mode 100644 index 0000000000000000000000000000000000000000..26c99a14470c2f7621639b2bafb1b74736d97cb5 --- /dev/null +++ b/Kenda Sampige/article_360.txt @@ -0,0 +1,143 @@ + + +ಮಾಸ್ತರು, ಸಂಜೆ ಶಾಲೆಯಲ್ಲಿ ಪತ್ರಿಕೆಯನ್ನೋದಿ ಹೇಳುವ ಪರಿಪಾಠವನ್ನು ಆರಂಭಿಸಿದರು. ಅದು ಚರ್ವತ್ತೂರು ರೈಲ್ವೆ ನಿಲ್ದಾಣದಿಂದ ಅವರು ದಿನವೂ ತರಿಸುತ್ತಿದ್ದ ಪತ್ರಿಕೆ. ಮೊದಮೊದಲು ಯಾರಿಗೂ ಆಸಕ್ತಿ ಇರಲಿಲ್ಲ. ಆದರೆ ನಡುನಡುವೆ ಯಾವುದೋ ಕತೆ – ಯಾವುದೋ ಹರಟೆ – ನುಸುಳಿಕೊಂಡು, ಪತ್ರಿಕೆಯ ವಾಚನ ಕಾಲಯಾಪನೆಗೊಂದು ಸಾಧನವಾಯಿತು. ಕೆಲಸವಿಲ್ಲದೇ ಇದ್ದಾಗ ರೈತರು ಬೀಡಿ ಸೇದುತ್ತಲೋ ಎಲೆ ಅಡಿಕೆ ಜಗಿಯುತ್ತಲೋ ಶಾಲೆಯ ಜಗಲಿಯಲ್ಲಿ ಕುಲಿತು ಮಾಸ್ತರರ ಮಾತುಗಳಿಗೆ ಕಿವಿಗೊಟ್ಟರು. + +ಆ ಊರಿನ ಪ್ರಮುಖ ಜಮೀನ್ದಾರರು ಇಬ್ಬರು. ಒಬ್ಬರು ಮಹಾ ಬ್ರಾಹ್ಮಣ ನಂಬೂದಿರಿ. ಅವರ ಮನೆಯ ಹೆಂಗಸರು, ಬಾಗಿಲಿನಿಂದ ಹೊರಕ್ಕೆ ಮುಖವಿಡುತ್ತಲೇ ಇರಲಿಲ್ಲ. ಇನ್ನೊಬ್ಬರು ನಂಬಿಯಾರ್. ಹೊಲೆಯರನ್ನಾದರೂ ಸರಿಯೆ, ಮೈ ಮುಟ್ಟಿಯೋ ಬೆನ್ನು ತಟ್ಟಿಯೋ ಕೆನ್ನೆಗೆ ಏಟುಬಿಗಿದೋ ಮಾತನಾಡಿಸುವ ಸಮರ್ಥ. ವಯಸ್ಸಿನಲ್ಲಿ ಅವರು ನಂಬೂದಿರಿಗಿಂತ ಕಿರಿಯ. ಮಾಸ್ತರು ಅಲ್ಲಿಗೆ ಬರುವುದಕ್ಕೆ ಮುಂಚೆ ಆ ಊರಿಗೆ ಪತ್ರಿಕೆ ಇರುತ್ತಿದ್ದುದು ಅವರೊಬ್ಬರ ಮನೆಯಲ್ಲೇ. ಪತ್ರಿಕೆ ತರಿಸುತ್ತಿದ್ದ ತಾವು ಆಧುನಿಕರೆಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು. + +ಮಾಸ್ತರು ಪತ್ರಿಕೆ ತರಿಸುತ್ತಿದ್ದರೆಂದು ತಿಳಿದಾಗ ನಂಬಿಯಾರರು ಭುಜ ಕುಪ್ಪಳಿಸಿದರು. ‘ಹೋಗಲಿ, ವಿದ್ಯಾವಂತ. ಓದುವ ಚಟವಾದರೂ ಮರೀಬಾರದಲ್ಲ. ಇಲ್ದಿದ್ರೆ ಹುಡುಗರಿಗೆ ಪಾಠ ಏನು ಹೇಳಿಕೊಡ್ತಾನೆ?’ ಎಂದು ಸುಮ್ಮನಾಗಿದ್ದರು. + +ಆದರೆ, ಶಾಲೆಯ ಜಗಲಿಯ ಮೇಲೆ ಸಂಜೆ ರೈತರೂ ಬಂದು ಕುಳಿತುಕೊಳ್ಳತೊಡಗಿದುದು ತಿಳಿದಾಗ, ನಂಬಿಯಾರರಿಗೆ ರೇಗಿತು. ಶಾಲೆಯ ವಿಶ್ವಸ್ಥ ಸಮಿತಿಯ ಮುಖ್ಯಸ್ಥರಾದ ಅವರು ಮಾಸ್ತರಿಗೆ ಕರೆಕಳುಹಿಸಿದರು. + +ಮಾಸ್ತರು ಜಮೀನ್ದಾರರೆದುರು ಬೀರಿದುದು ಸ್ವಾಭಾವಿಕವಾದ ಮಗುಳುನಗೆ. + +ಕೆತ್ತನೆಯ ಕುರ್ಚಿಯ ಮೇಲೆ ಮೆತ್ತನೆಯ ಗಾದಿಗೊರಗಿ ಕುಳಿತಿದ್ದ ನಂಬಿಯಾರರು ತಮ್ಮೆದುರು ದೂರದಲ್ಲಿದ್ದ ಬೆಂಚನ್ನು ತೋರಿಸುತ್ತ , ಸಿಗರೇಟಿಗೆ ಬೆಂಕಿಕಡ್ಡಿ ಅಂಟಿಸುತ್ತ, ಹೇಳಿದರು : + +“ಕೂತ್ಕೊಳ್ಳಿ.” + +ಮಾಸ್ತರು ವಿನಯದಿಂದಲೆ ಕುಳಿತರು. ಅವರ ಕೈಯಲ್ಲಿ ಆ ದಿನದ ‘ಮಾತೃಭೂಮಿ’ ಪತ್ರಿಕೆಯ ಸುರುಳಿ ಇತ್ತು. ನಂಬಿಯಾರರು ಅದನ್ನೊಮ್ಮೆ ಕಡೆಗಣ್ಣಿನಿಂದ ದಿಟ್ಟಿಸಿ ನೋಡಿ, ಹುಬ್ಬು ಮೇಲಕ್ಕೇರಿಸಿ, ಕೆಳಕ್ಕಿರಿಸಿ ಸಿಗರೇಟಿನ ಹೊಗೆಯುಗುಳಿ, ಒಂದು ಕ್ಷಣ ಮೌನವಾಗಿದ್ದು ಕೇಳಿದರು : + +“ಶಾಲೆಯ ಕೆಲಸ ಕಾರ್ಯಗಳೆಲ್ಲ ಸರಿಯಾಗಿ ನಡೀತಾ ಇವೆಯೋ?” + +“ಓಹೋ” + +“ನೀವು ಸೊಗಸಾಗಿ ಪಾಠ ಹೇಳ್ತೀರಂತೆ. ನಮ್ಮ ಹುಡುಗ ದಿನಾಲೂ ನಿಮ್ಮನ್ನು ಹೊಗಳ್ತಾನೇ ಇರ್ತಾನೆ.” + +ಈ ಸೊಗಸು ಮಾತಿನ ಹಿಂದೆ, ಬೇರೇನೋ ಮುಖಮರೆಸಿಕೊಂಡಿದೆ ಎಂದು ಮಾಸ್ತರು ತಿಳಿಯದಿರಲಿಲ್ಲ. ಅವರು ನಕ್ಕು ಹೇಳಿದರು:“ಅದೇನು ಹೇಳ್ತಾನೋ…. ಅಂತೂ ಹುಡುಗರು ತಪ್ಪಿಸ್ಕೊಳ್ಳೋದು ಬಹಳ ಕಡಿಮೆ.” + +ಇಷ್ಟು ಮೃದುವಾಗಿ ಈತನೊಡನೆ ಮಾತನಾಡುವ ಅಗತ್ಯವಾದರೂ ಏನು ಎಂದು ಜಮೀನ್ದಾರರು ತಮ್ಮ ವರ್ತನೆಯ ವಿಷಯದಲ್ಲಿ ತಾವೇ ಅಸಹನೆ ತೋರಿ ಕತ್ತು ಕುಲುಕಿದರು. ಮನಸ್ಸಿನಲ್ಲಿದ್ದುದನ್ನು ನೇರವಾಗಿ ಹೇಳಬೇಕೆನಿಸಿತು. ಆದರೆ ಕಟುಮಾತು, ತಮ್ಮ ಉದ್ದೇಶ ಸಾಧನೆಗೆ ಪ್ರತಿಕೂಲವಾಗಬಹುದೆಂದು, ಸಿಟ್ಟು ನುಂಗಿಕೊಂಡು, ಮೌನವಾಗಿಯೇ ಇದ್ದು ಸಿಗರೇಟು ಸೇದಿದರು. + +ಕರೆಕಳುಹಿಸಿದ ಕಾರಣವನ್ನು ಮಾಸ್ತರು ಆಗಲೇ ಊಹಿಸಿದ್ದರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಎಚ್ಚರದಿಂದಿರಲು ತೀರ್ಮಾನಿಸಿಯೇ ಅವರು ಬಂದಿದ್ದರು. ಆಡಬೇಕಾದ ಮಾತುಗಳನ್ನು ಮೊದಲೇ ತೂಗಿನೋಡಿ ಸಂವಾದ ಬೆಳೆಸಲು ಸಿದ್ಧರಾಗುತ್ತ, ಅವರೆಂದರು :“ಅದೇನೋ ಮಾತನಾಡಬೇಕು ಎಂದಿರಂತೆ.” + +ಆ ಮಾತಿನ ಧ್ವನಿಯಿಂದ ಮಾಸ್ತರನ್ನು ಅಳೆಯಲೆತ್ನಿಸುತ್ತ ನಂಬಿಯಾರರೆಂದರು :“ಅವಸರವೇನೂ ಇಲ್ಲವಷ್ಟೆ?” + +“ಹೌದು, ಹೌದು. ಆಟಗಳನ್ನು ಆಡಿಸಿ ಮಕ್ಕಳನ್ನು ಕಳಿಸ್ಬಿಟ್ಟೆ.” + +“ಅಂದಮೇಲೆ ಬೇಕಾದಷ್ಟು ಬಿಡುವಿದೆ ಅಂತಾಯ್ತು.” + +ರೈತರಿಗೆ ಪತ್ರಿಕೆಯೋದಿ ಹೇಳುವ ಕೆಲಸವಿದೆಯೆಂದು ಮಾಸ್ತರರ ಬಾಯಿಯಿಂದಲೇ ಹೊರಡಿಸಲು ನಂಬಿಯಾರರು ಯತ್ನಿಸಿದರು. ಆದರೆ ಆ ಮಾಸ್ತರು ಅಷ್ಟು ಸುಲಭವಾಗಿ ಬಲೆಯ ಬಳಿಗೆ ಸುಳಿಯುವ ಮೀನಾಗಿರಲಿಲ್ಲ. ಅವರು ಎಂದರು: + +“ನೀವು ಸರಿಯಾಗಿ ಹೇಳಿದಿರಿ. ಹೊತ್ತು ಕಳೆಯೋದು ಕಷ್ಟ ಅಂತ ಪತ್ರಿಕೆ ತರಿಸ್ಕೊಂಡು ಓದ್ತಾ ಇರ್ತೇನೆ.” + +“ಎಲಾ!” ಎಂದರು. ನಂಬಿಯಾರರು ಮನಸ್ಸಿನೊಳಗೇ. ‘ನನಗೇ ಇಟ್ಟನಲ್ಲ!’ ಬಹಿರಂಗವಾಗಿ ಗಾಂಭೀರ್ಯದ ಮುಖವಾಡ ಧರಿಸುತ್ತ , ಅವರು ಹೇಳಿದರು:“ಆ ವಿಷಯವಾಗಿಯೆ ಮಾತನಾಡೋಣಂತ ನಿಮ್ಮನ್ನು ಕರೆಸ್ದೆ. ರೈತರೆಲ್ಲ ಸಾಯಂಕಾಲದ ಹೊತ್ತು ಶಾಲೆಯ ಜಗಲೀಲಿ ಸೇರ್ತಾರಂತೆ. ಅವರಿಗೇನೊ ಬುದ್ದಿ ಇಲ್ಲ. ಹೊಲಸು ಜನ. ನೀವು ಪಾಪ, ಏನೂ ತೀಳೀದೆ ಅವರ ಜತೇಲಿ ಮಾತಾಡ್ತಾ ಇರ್ತೀರಿ. ಅವರೆಂಥವರು ಅನ್ನೋದು ನಿಮಗೆ ಗೊತ್ತಿಲ್ಲ. ಬೆಟ್ಟು ಕೊಟ್ಟರೆ ಸಾಕು, ಕೈಯನ್ನೇ ನುಂಗೋ ಜಾತಿ.” + +ಮುಖ ಕೆಂಪೇರುವ ಹಾಗಾದರೂ ಮಾಸ್ತರು ತಾಳ್ಮೆಯಿಂದಿದ್ದು, ಸದ್ದಿಲ್ಲದೆ, ಜಮೀನ್ದಾರರ ಕಣ್ಣು ತಪ್ಪಿಸಿ ಉಗುಳು ನುಂಗಿದರು.“ಹಾಗೇನೂ ಇಲ್ಲ” ಎಂದು ಅವರ ನಾಲಿಗೆ ಮೆಲ್ಲನೆ ನುಡಿಯಿತು. + +“ನಿಮಗೆ ತಿಳಿಯೋದಿಲ್ಲ ಮಾಸ್ತರೆ. ಈ ಜನ ಎಂಥವರು ಅನ್ನೋದು ನನಗೆ ಗೊತ್ತಿದೆ! ನಾವು ಅವರನ್ನು ದೂರವಿಟ್ಟರೆ ಮಾತ್ರ ಅವರು ನಮ್ಮನ್ನು ಗೌರವಿಸುತ್ತಾರೆ. ವಿದ್ಯೆ ಇಲ್ಲದೋರು – ವಿದ್ಯಾವೀಹೀನಂ ಸಂಸ್ಕೃತದಲ್ಲಿ ಗಾದೆ ಇದೆಯಲ್ಲ ಹಾಗೆ – ಬರೇ ಮೃಗಗಳು. ಅವರನ್ನು ಮೃಗಗಳೆಂದೇ ನೋಡ್ಬೇಕು. ಅವಕ್ಕೆ ಅರ್ಥವಾಗೋದು ಒಂದು ಭಾಷೆ, ಬಾರುಕೋಲಿನ ಭಾಷೆ. ಏನು ಹೇಳ್ತೀರಾ?” + +ಮಾಸ್ತರು ಏನೂ ಹೇಳಲಿಲ್ಲ. ಅವರ ಮುಖ ಮತ್ತೂ ಕೆಂಪಗಾಯಿತು. ತುಟಿಗಳು ಸೂಕ್ಷ್ಮವಾಗಿ ಕಂಪಿಸಿದುವು. ಪತ್ರಿಕೆಯನ್ನು ಹಿಡಿದಿದ್ದ ಮುಷ್ಟಿ ಬಿಗಿಯಾಯಿತು. ದ್ವೇಷದಿಂದ, ತಿರಸ್ಕಾರದಿಂದ ಕಟುವಾಗಿ ಉತ್ತರ ಕೊಡುವಂತೆ ಪ್ರೇರೇಪಿಸುತ್ತ, ಮೆದುಳು ತಪ್ತವಾಯಿತು. ಆದರೂ ಮಾಸ್ತರು ಶಾಂತಿ ಮಂತ್ರ ಜಪಿಸಿದರು. ಮೌನವಾಗಿ ‘ಮೈಮರೆತು ಮೂರ್ಖನಾಗಬೇಡ’ ಎಂದು ತನಗೆ ತಾನೇ ವಿವೇಕ ಹೇಳಿದರು. + +ಸುಮ್ಮನೆ ಕುಳಿತ ಮಾಸ್ತರನ್ನು ನಂಬಿಯಾರರ ದೃಷ್ಟಿ ಪರೀಕ್ಷಿಸಿ ನೋಡಿತು. ತಮ್ಮ ಮಾತಿನ ಪ್ರಭಾವಕ್ಕೆ ಒಳಗಾಗಿ ಬೆದರಿದ ಮಗುವಿನಂತೆ ಮಾಸ್ತರು ಕಂಡರೇ ಹೊರತು ಬೇರೆ ಯಾವ ಸಂದೇಹವೂ ಅವರಲ್ಲಿ ಮೂಡಲಿಲ್ಲ. ತಾವು ಆಡಿದ ಮಾತುಗಳ ಬಗೆಗೆ ತಾವೇ ಹೆಮ್ಮೆಪಡುತ್ತ ಅವರು, ಕೊನೆಯ ಬಾರಿ ಸಿಗರೇಟಿನ ಉಸಿರೆಳೆದು ಹೊಗೆ ಬಿಟ್ಟರು. ಬಳಿಕ ಮುಗುಳು ನಕ್ಕು ಅವರೆಂದರು : + +“ನಿಮಗೊಂದು ರಹಸ್ಯ ಹೇಳ್ತೇನೆ. ನನ್ನ ಮಾವ ಇದ್ದಷ್ಟು ಕಾಲವೂ ಇಲ್ಲಿ ಶಾಲೆ ತೆರೆಯೋದನ್ನು ವಿರೋಧಿಸಿದ್ರು. ಆಡುವವರ ಮಕ್ಕಳು ಆಡ್ಬೇಕು; ಬೇಡುವವರ ಮಕ್ಕಳು ಬೇಡ್ಬೇಕು ಅನ್ನೋದು ಅವರ ಸ್ಪಷ್ಟ ಅಭಿಪ್ರಾಯವಾಗಿತ್ತು. ಆದರೆ ಅವರ ತಲೆಮಾರು ಬೇರೆ, ನಮ್ಮ ತಲೆಮಾರು ಬೇರೆ. ನಾನು ಒಪ್ಪಿಲ್ಲ.” + +ಮೆಚ್ಚುಗೆ ಸೂಚಿಸಿ ಉಸಿರಾಡಲು ಒಂದು ಅವಕಾಶ ದೊರೆಯಿತೆಂದು ಮಾಸ್ತರೆಂದರು :“ನಿಮ್ಮ ವಿಚಾರ ಸರೀಂತ ಯಾರು ಬೇಕಾದರೂ ಹೇಳಿಯಾರು.” + +ನಂಬಿಯಾರರಿಗೆ ಆ ಪ್ರಶಂಸೆ ಕೇಳಿ ಸಂತೋಷವಾಯಿತು. ಆ ಸಂತೋಷದ ಭರದಲ್ಲಿ ಗೋಪ್ಯವಾಗಿ ಮಾತನಾಡುವಂತೆ, ಸ್ವರ ತಗ್ಗಿಸಿ ಅವರೆಂದರು :“ಆ ನಂಬೂದಿರಿಗೂ ಶಾಲೆ ತೆರೆಯೋದು ಇಷ್ಟವಿರ್ಲಿಲ್ಲ. ನಾನು ಮತ್ತು ಆತ ಸ್ನೇಹಿತರಾದ್ರೂ – ನಿಮ್ಮಲ್ಲಿ ಹೇಳೋದಕ್ಕೇನಂತೆ?-ಅವನು ಮಹಾ ಖದೀಮ. ಶೂದ್ರರು ಯಾರಿಗೂ ವಿದ್ಯೆ ಅಗತ್ಯವಿಲ್ಲಾಂತ ಅವನ ಅಭಿಪ್ರಾಯ. ನನಗೆ ಗೊತ್ತಿಲ್ಲವಾ ಅದೆಲ್ಲ? ಹಟತೊಟ್ಟು ಶಾಲೆ ತೆರೆಯೋ ಹಾಗೆ ಮಾಡ್ದೆ. ಹೊರಗಿನಿಂದ ಅಧಿಕಾರಿಗಳು ದೊಡ್ಡವರು ಯಾರಾದರೂ ಬಂದಾಗ ಶಾಲೇನೆಲ್ಲ ನೋಡಿ, ಕೊಂಡಾಡೋದು ಯಾರನ್ನು ಹೇಳಿ?” + +ತುಟಿ ಪಿಟ್ಟೆನ್ನದಿದ್ದರೂ ನಂಬಿಯಾರರ ಮಾತನ್ನು ನಾನು ಕೇಳುತ್ತಿದ್ದೇನೆ ಎಂಬುದಕ್ಕೆ ಸೂಚನೆಯಾಗಿ ಮಾಸ್ತರು ತಲೆಯಾಡಿಸಿದರು. ಮೈಯೆಲ್ಲ ಬೆವೆತು ಬೇಯುತ್ತಿದ್ದಂತೆ ಕಂಡೂ ಅವರು ಸ್ಥೈರ್ಯದಿಂದ ಕುಳಿತರು. + +ಆದರೆ ಮಾಸ್ತರ ಇರುವಿಕೆಯನ್ನೇ ಅಣಕಿಸುವ ಹಾಗೆ ಇನ್ನೊಂದು ಮಾತು ಬಂತು: + +“ಈ ರೀತಿ ಶಾಲೆಯ ಸ್ಥಾಪನೆಗೆ ನಾನೇ ಮೂಲ ಕಾರಣನಾದರೂ ರೈತರ ಮಕ್ಕಳಿಗೆಲ್ಲ ವಿದ್ಯೆ ಕೊಡೋ ವಿಷಯದಲ್ಲಿ ನನ್ನದೇ ಆದ ಅಭಿಪ್ರಾಯವುಂಟು. ಈ ಜನ ಯಾರೂ ಕಾಲೇಜಿಗೆ ಹೋಗಬೇಕಾಗಿಲ್ಲ ; ಹೈಸ್ಕೂಲು ಇವರಿಗೆ ಅಗತ್ಯವಿಲ್ಲ. ರೈತರ ಮಕ್ಕಳು ಸಹಿ ಹಾಕೋದಕ್ಕೆ ಕಲಿತರೆ ಸಾಕು. ಇಷ್ಟು ವಿದ್ಯೆಯಾದರೂ ಯಾಕೆ ಗೊತ್ತೆ? ಬರೇ ಹೆಬ್ಬಿಟ್ಟಿನ ರುಜುವೇ ಇದ್ದರೆ, ಏನೂ ತೀಳೀದೋರಿಗೆ ಮೋಸಮಾಡ್ತಾ ಇದ್ದಾರೇಂತ ಇವರು ಬಡ್ಕೋಬಹುದು. ಮುಂದೆ ಹಾಗಲ್ಲ. ಕರಾರು ಪತ್ರ ಏನಿದ್ದರೂ, ಬರೆದದ್ದು ಪೂರ್ತಿ ಅರ್ಥವಾಗಿದೆ ಅಂತ ಹೇಳಿ, ಅವರು ಅಕ್ಷರದಲ್ಲೇ ಸಹಿ ಹಾಕ್ಬಹುದು, ಏನು ಹೇಳ್ತೀರಾ?” + +ಈ ಸಲವೂ ಏನನ್ನೂ ಹೇಳುವುದು ಮಾಸ್ತರಿಂದಾಗಲಿಲ್ಲ. ಅವರು ಅವಾಕ್ಕಾದರು. ಉಳ್ಳವರ ವಿಷಯ ಅವರೆಷ್ಟೊ ತಿಳಿದಿದ್ದರೂ ಈ ವಿಚಾರಸರಣಿಯ ವಿಶಿಷ್ಟತೆಯನ್ನು ಕಂಡು ಬೆರಗಾದರು. ಅವರ ಎದೆಯೊಳಗೆ ಸಂಕಟವಾಯಿತು. ಆತ್ಮಾಭಿಮಾನಿಯಾದ ಮನುಷ್ಯ. ಇಂಥ ಮಾತುಗಳನ್ನು ಕೇಳಲು ಇಷ್ಟವಿಲ್ಲದಿದ್ದರೆ ಎದ್ದು ಹೋಗಬಹುದು. ‘ಬರ್ತೇನೆ, ಕೆಲಸವಿದೆ’ ಎಂದು ಹೇಳಿ ಎದ್ದು ಹೋಗಲೇಬೇಕು, ಎನ್ನಿಸಿತು. ಆದರೆ ಹಾಗೆ ವಿರಸಕ್ಕೆ ಎಡೆ ಕೊಡುವುದರ ಪರಿಣಾಮವೇನೆಂದು ಊಹಿಸುವುದು ಕಷ್ಟವಾಗಿರಲಿಲ್ಲ. ಬಹಿರಂಗವಾಗಿ ನಂಬಿಯಾರರನ್ನು ಕೆಣಕುವುದೆಂದರೆ, ತನ್ನ ಕೆಲಸಕ್ಕೆ ತಾನೇ ಸಂಚಕಾರ ತಂದುಕೊಂಡ ಹಾಗೆ. ಉಪಾಧ್ಯಾಯ ವೃತ್ತಿಯಿಂದ ಹೊರಬಿದ್ದ ಬಳಿಕ ರೈತರ ಬಿಡುವಿನ ತನ್ನ ದುಡಿಮೆಯೂ ಕೊನೆಗಂಡಹಾಗೆ. ಇದು ಸ್ಪಷ್ಟವಾಗಿದ್ದ ಮಾಸ್ತರು, ಭಾವನೆಗಳನ್ನು ತನ್ನ ಹತೋಟಿಯೊಳಗಿಟ್ಟು ತಣ್ಣಗಿರಲು ಯತ್ನಿಸಿದರು. ನೇರವಾಗಿ ಕುಳಿತರಲಾರದೆ ಸ್ವಲ್ಪ ಕುಗ್ಗಿ, ಒಣಗಿಹೋಗಿದ್ದ ತುಟಿಗಳನ್ನು ನಾಲಿಗೆಯಿಂದ ಸವರಿದರು. + +ಮಾಸ್ತರ ಮೌನವನ್ನು ಕಂಡು ಜಮೀನ್ದಾರರಿಗೆ, ತಮ್ಮ ಮಾತು ಪರಿಣಾಮಕಾರಿಯಾಯಿತೆಂಬ ಅಭಿಪ್ರಾಯ ಹೆಚ್ಚು ದೃಢವಾಯಿತು. ಅವರು ಊಳಿಗದವನನ್ನು ಕರೆದು ಚಹ ತರಲು ಹೇಳಿದರು. ಮಾಸ್ತರ ಸುಖದುಃಖ ವಿಚಾರಿಸುತ್ತ ಅವರೆಂದರು: + +“ಶಾಲೆಯಲ್ಲಿ ನೀವು ಇರೋದಕ್ಕೆ ಎಲ್ಲ ಅನುಕೂಲವಾಗಿದೆಯೋ?” + +“ಇದೆ” ಎಂದು ಮಾಸ್ತರು ಉತ್ತರ ಕೊಟ್ಟರು. ಸ್ವರ ಕ್ಷೀಣವಾಗಿತ್ತು. + + + +“ಬೇಕಾದರೆ ಆ ಹಿತ್ತಿಲಲ್ಲೇ ಒಂದಿಷ್ಟು ತರಕಾರಿ ಬೆಳೆಸ್ಬಹುದು. ನಮ್ಮ ರೈತರಿಗೆ ಹೇಳ್ತೇನೆ. ಬಂದು ಕೆಲಸ ಮಾಡ್ತಾರೆ.” + +“ಅಯ್ಯೋ ಬೇಡಿ! ಒಬ್ಬನಿಗೆ ಎಷ್ಟು ಬೇಕು? ಈ ಊರಲ್ಲಿ ತರಕಾರಿಗೇನು ಕಡಿಮೆಯೇ? ಧಾರಾಳವಾಗಿ ಸಿಗ್ತದೆ.” + +ಸಾಮಾನ್ಯವಾಗಿ ಮಾಸ್ತರಿಗೆ ಬೇಕಾದ ತರಕಾರಿಯನ್ನೆಲ್ಲ ವಿದ್ಯಾರ್ಥಿಗಳೇ ತಂದುಕೊಡುತ್ತಿದ್ದರು; ಮಾಸ್ತರು ಬೇಡವೆಂದರೂ ತರುತ್ತಿದ್ದರು. ದುಡ್ಡು ಕೊಡಹೋದರೂ ತೆಗೆದುಕೊಳ್ಳುತ್ತಿರಲಿಲ್ಲ. + +ತರಕಾರಿಯ ನಂತರ, ಅಕ್ಕಿಯ ವಿಷಯ ಜಮೀನ್ದಾರರು ಪ್ರಸ್ತಾಪಿಸಿದರು. + +“ನಿಮಗೆ ಅಕ್ಕಿದೇನಾದರೂ ತೊಂದರೆ ಇದ್ರೆ ಹೇಳಿ ಕಳಸ್ತೇನೆ, ಸಂಕೋಚ ಪಡಬೇಡಿ.” + +“ಛೆ! ಛೆ! ಸಂಕೋಚ ಯಾತರದು? ಅಕ್ಕಿಯೂ ದಾಸ್ತಾನಿದೆ, ಬೇಕಾದ್ರೆ ಖಂಡಿತ ಬಂದು ಕೇಳ್ತೇನೆ.” + +ಅಷ್ಟರಲ್ಲಿ ಮನೆಯ ತಲೆಬಾಗಿಲಲ್ಲಿ ಜಮೀನ್ದಾರರ ಹುಡುಗನ ಕಾಣಿಸಿಕೊಂಡು ಮಾಸ್ತರನ್ನು ನೋಡಿ ಮುಗುಳ್ನಕ್ಕ. ಆತನ ತಾಯಿಯೋ ಮಲ ತಾಯಿಯೋ ಹಿರಿಯಕ್ಕನೋ – ಅಂತೂ ಕೆಲ ಹೆಂಗಸರೂ ಹುಡುಗನ ಹಿಂದೆ ಬಾಗಿಲ ಮರೆಯಲ್ಲಿ ನಿಂತು ಮಾಸ್ತರನ್ನು ನೋಡಿದರು. ಆ ದೃಷ್ಟಿಯ ಶಾಖ ತಗಲಿದಂತೆ ಮಾಸ್ತರು ಅತ್ತಿತ್ತ ಮಿಸುಕಿದರು. + +ಈ ದೃಷ್ಟಿಸಂಚಾರವನ್ನು ಗಮನಿಸಿದ ಜಮೀನ್ದಾರರು ಕರೆದರು. + +“ಕರುಣಾಕರ, ಇಲ್ಲಿ ಬಾ!” + +ಹುಡುಗ ಶರಟಿನೊಂದು ಕೊನೆಯನ್ನು ಕಚ್ಚುತ್ತ , ಮುದ್ದಾದ ದೊಡ್ಡ ಕಣ್ಣುಗಳನ್ನು ಹೊರಳಿಸುತ್ತ , ನಡೆದು ಬಂದು ತಂದೆಯ ಪಕ್ಕದಲ್ಲಿ ನಿಂತ.“ಮಾಸ್ತರಿಗೆ ನಮಸ್ಕಾರ ಮಾಡಿದೆಯಾ?” ಎಂದು ನಂಬಿಯಾರರು ಕೇಳಿದರು. ಹುಡುಗ “ನಮಸ್ಕಾರ ಸರ್” ಎಂದ. + +ನಂಬಿಯಾರರು ಅರ್ಥವಾಗುದುದೇನನ್ನೋ ಗೊಣಗಿ, ಮಗನ ಶರಟಿನತ್ತ ಕೈಹಾಕಿ, ಕಚ್ಚಿಕೊಂಡಿದ್ದನ್ನು ತಪ್ಪಿಸಿ, ಶರಟನ್ನು ಬಿಡಿಸಿದರು. ಮಾಸ್ತರತ್ತ ನೋಡಿ ಅವರೆದರು : + +“ಬಹಳ ದಿವಸದಿಂದ ನಿಮ್ಮನ್ನು ಕೇಳ್ಬೇಕೂಂತಿದ್ದೆ . ನಮ್ಮ ಕರುಣಾಕರನಿಗೆ ದಿನಾಲೂ ಸ್ವಲ್ಪ ಹೊತ್ತು ನೀವು ಹೆಚ್ಚಿಗೆ ಪಾಠ ಯಾಕೆ ಹೇಳಿಕೊಡ್ಬಾರ್ದು?” + +ಬಿಕ್ಕಟ್ಟಿನಲ್ಲಿ ಸಿಲುಕಿದ ಹಾಗಾಯಿತು ಮಾಸ್ತರಿಗೆ. ಈ ಹೊಸ ಭಾರವನ್ನು ಹೊತ್ತುಕೊಳ್ಳುವುದು ಅವರಿಗೆ ಏನೇನೂ ಇಷ್ಟವಿರಲಿಲ್ಲ. ಅವರು ಒಮ್ಮೆಲೆ ಉತ್ತರ ಕೊಡಲಾರದೆ ಹೋದರು. ಆದರೆ ನಿರುತ್ತರವಾಗಿ ಸುಮ್ಮನಿರುವುದೂ ಸಾಧ್ಯವಿರಲಿಲ್ಲ. ಕಳೆದುಹೋಗಿದ್ದ ಸ್ವರವನ್ನು ಮರಳು ಹುಡುಕಿ ಪಡೆಯುತ್ತ ಅವರೆಂದರು: + +“ಆಗಲಿ, ಅದಕ್ಕೇನಂತೆ?” + +“ಹಾಗಾದರೆ ಸಾಯಂಕಾಲದ ಹೊತ್ತು ಯಾವಾಗಲೂ ಇಲ್ಲಿಗೆ ಬರ್ತಾ ಇರಿ ಆಗದೆ?” + +ಸಾಯಂಕಾಲವನ್ನೆಲ್ಲಾ ತಮ್ಮಿಂದ ಕಸಿದುಕೊಳ್ಳುವ ಯತ್ನ ಬಲು ಕ್ರೂರವಾಗಿ ಮಾಸ್ತರಿಗೆ ತೋರಿತು. ಒಪ್ಪಿಗೆ ಸೂಚಿಸದೆ ಸುಮ್ಮನಿದ್ದ ಮಾಸ್ತರನ್ನು ಜಮೀನ್ದಾರರು ಅರೆಕ್ಷಣ ಹುಬ್ಬು ಗಂಟಿಕ್ಕಿ ನೋಡಿ, ವೇಗವಾಗಿ ಮಾತನಾಡುತ್ತ ಅಂದರು : + +“ನನಗೆ ಬ್ಯಾಡ್ಮಿಂಟನ್ ಅಂದರೆ ಇಷ್ಟ. ನಾನು ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಬಹಳ ಪ್ರಸಿದ್ಧನಾಗಿದ್ದೆ. ಇಲ್ಲಿ ಯಾರೂ ಜತೆ ಇಲ್ಲದೆ ಬೇಜಾರಾಗಿತ್ತು. ಇಲ್ಲೇ ಎದುರಿಗೆ ಕೋರ್ಟು ಹಾಕಿಸ್ತೇನೆ. ನನಗೆ ಪುರುಸೊತ್ತು ಆದಾಗಲೆಲ್ಲ ಸಾಯಂಕಾಲ ಒಂದೊಂದು ಆಟವೂ ಆಡ್ಬಹುದು.”ಮಾಸ್ತರು ಉತ್ತರವಿತ್ತರು : “ನನಗೆ ಬ್ಯಾಡ್ಮಿಂಟನ್ ಬರೋದಿಲ್ಲ.” + +“ಆಶ್ಚರ್ಯ! ಈಗಿನ ಕಾಲದ ನೀವೇ ಹೀಗಿರೋದು ಮಹದಾಶ್ಚರ್ಯ!” + +“ಹೇಳೋದಕ್ಕೆ ನಾಚಿಕೆಯಾಗ್ತದೆ. ಪಂದ್ಯಾಟ ಅಂದರೆ ನನಗೆ ಅಷ್ಟಷ್ಟೇ.”ಜಮೀನ್ದಾರರು ನಕ್ಕರು. + +“ಹಾಗಾದರೆ, ಜೋಡು ನಳಿಗೆ ಬಂದೂಕೆತ್ತಿ ನೀವು ಬೇಟೆಯಾಡೋದೆಲ್ಲ ಅಷ್ಟರಲ್ಲೇ ಇದೆ!”ಮಾಸ್ತರು ನಗೆಯ ಉತ್ತರವಿತ್ತರು. + +“ಹೋಗಲಿ, ಇಸ್ಪೀಟಾದರೂ ಆಡ್ತೀರೊ?” + +“ಅದೂ ಇಲ್ಲ.” + +“ಹಾಗಾದರೆ ನೀವು ಪುಸ್ತಕ ಕೀಟ ಅಂತ ತೋರ್ತದೆ.” + +ಆ ಮಾತನ್ನು ತಮ್ಮ ಉಪಯೋಗಕ್ಕೆ ತಿರುಗಿಸಿಕೊಂಡು ಮಾಸ್ತರರೆಂದರು: + +“ನಿಜ ಹೇಳಿದ್ರಿ. ನಾನು ಮೊದಲಿನಿಂದಲೂ ಅಷ್ಟೆ. ಪುಸ್ತಕದ ಹುಚ್ಚ. ಈಗ ಸಹ ಬಿಡುವು ಸಿಕ್ಕಿದರೆ ಸಾಕು, ಪುಸ್ತಕ ಹುಡುಕಿಕೊಂಡು ನೀಲೇಶ್ವರಕ್ಕೋ ಹೊಸದುರ್ಗಕ್ಕೋ ಓಡ್ತಿರ್ತೇನೆ.” + +ಈ ಓಡಾಟದ ಗೂಡಾರ್ಥವನ್ನು ತಿಳಿಯದ ಜಮೀನ್ದಾರರು ನಕ್ಕು ತಲೆ ಅಲ್ಲಾಡಿಸಿ ಅಂದರು : + +“ಈ ಪುಸ್ತಕದ ವಿಷಯ ನನಗೆ ಎಣ್ಣೆ ಸೀಗೆ ಇದ್ದ ಹಾಗೆ!” + +ಆಳು ಚಹ ತಂದ. ಚೀಣಿ ಪಿಂಗಾಣಿಯ ಕಪ್ ಮತ್ತು ಸಾಸರು; ಹಳ್ಳಿಯ ಬಡ ಹೋಟಲಿನ ಗಾಜಿನ ಲೋಟವಲ್ಲ. + +“ಒಳಗೆ ಓಡು” ಎಂದು ನಂಬಿಯಾರರು ಮಗಗಿನಿಗೆ ಆಜ್ಞೆ ಇತ್ತರು. ಮಾಸ್ತರರ ದೃಷ್ಟಿ, ಓಡುತ್ತಿದ್ದ ಹುಡುಗನನ್ನು ಹಿಂಬಾಲಿಸಿತು. ಬಾಗಿಲ ಬಳಿ ಈಗ ಹೆಂಗಸರಿರಲಿಲ್ಲ. + +ಒಂದು ಸಿಗರೇಟು ಹಚ್ಚಿ ಜಮೀನ್ದಾರರು ಚಹಾವನ್ನೆತ್ತಿಕೊಂಡ ‘ತಗೊಳ್ಳಿ’ ಎಂದು ಮಾಸ್ತರಿಗೆ ಹೇಳಿದರು. + +ಕಪ್ಪಿನಷ್ಟೇ ಸೊಗಸಾಗಿತ್ತು ಪಾನೀಯ ಕೂಡಾ. ಶ್ರೀಮಂತ ಚಹ ಮತ್ತೇರುವಷ್ಟು ರುಚಿಕರ.ಒಂದು ಗುಟುಕನ್ನು ಹೀರಿದ ಬಳಿಕ ಜಮೀನ್ದಾರರೆಂದರು: + +“ಕರುಣಾಕರನಿಗೆ ಮುಂದೆ ಕಾಲೇಜು ಓದಿಸ್ಬೇಕೂಂತ ನಿರ್ಧಾರ ಮಾಡಿದ್ದೇನೆ. ಮಾವನ ಕಡೆಯಿಂದ ಅವನಿಗೆ ಆಸ್ತಿಯೂ ಬರ್ತದೆ. ವಕೀಲನಾಗಿ ಆತ ರಾಜಕೀಯಕ್ಕೆ ಇಳೀಬೇಕೂಂತ ನನ್ನ ಆಪೇಕ್ಷೆ.” + + + +ಚಹ ಕುಡಿಯುತ್ತ ಮಾಸ್ತರು ತನ್ನ ಬಡ ವಿದ್ಯಾರ್ಥಿಗಳನ್ನು ಸ್ಮರಿಸಿಕೊಂಡರು. ಜಮೀನ್ದಾರರ ಮಗನಷ್ಟೇ ಅಂತಸ್ತು ಇದ್ದ ಬೇರೆ ಇಬ್ಬರು ಹುಡುಗರೆಂದರೆ ನಂಬೂದಿರಿಯ ಮಕ್ಕಳು – ತಾವು ಮಡಿ ಬ್ರಾಹ್ಮಣರೆಂದು ಯಾವಾಗಲೂ ಪ್ರತ್ಯೇಕವಾಗಿಯೇ ಕುಳಿತು, ಮನೆಗೆ ಹೋದೊಡನೆ ಸ್ನಾನ ಮಾಡಿ ಮೈಲಿಗೆ ಕಳೆಯುತ್ತಿದ್ದ ಎಳೆಯರು. ನಂಬಿಯಾರರ ಹಾಗೆಯೇ ಮಕ್ಕಳಿಗೆ ಕಾಲೇಜು ವಿದ್ಯಾಭ್ಯಾಸ ಕೊಡಿಸುವ ಮಾತನ್ನಾಡುವ ಸಾಮರ್ಥ್ಯ ಆ ಹಳ್ಳಿಯಲ್ಲಿ ಬೇರೆಯೂ ಒಬ್ಬ ವ್ಯಕ್ತಿಗಿದ್ದುದೆಂದರೆ ನಂಬೂದಿರಿಗೆ ಮಾತ್ರ. ಇತರರು ಯಾರೂ ಅಂಥ ಕನಸನ್ನು ಕೂಡ ಕಾಣುವ ಸ್ಥಿತಿಯಲ್ಲಿರಲಿಲ್ಲ. + +(ಚಿರಸ್ಮರಣೆ – 1955 – ಕಾದಂಬರಿಯ ಕೆಲವು ಪುಟಗಳು) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_361.txt b/Kenda Sampige/article_361.txt new file mode 100644 index 0000000000000000000000000000000000000000..809d12fa3688c38ec2e4af2e3cbb5d80d9892c49 --- /dev/null +++ b/Kenda Sampige/article_361.txt @@ -0,0 +1,217 @@ + + +ಬಾಳೂರು ಗ್ರಾಮದಲ್ಲಿ ಮೊತ್ತಮೊದಲಾಗಿ ಚಿಕ್ಕ ಪ್ರಾಥಮಿಕ ಶಾಲೆಯೊಂದನ್ನು ತೆರೆಯಬೇಕೆಂದು ಸರಕಾರದ ಅಪ್ಪಣೆ ಹೊರಟಾಗ ಒಕ್ಕಲು ಸೋಮನ ಮುಖದಲ್ಲಿ ಮೂಡಿಬಂದ ನಗುವನ್ನು ಯಾರೂ ಕಂಡಿರಲಾರರು. ನಗುವ ಅಧಿಕಾರ ಆ ಮುಖಕ್ಕೆ ಎಲ್ಲಿಯದು? ಮೂರು ಬಳ್ಳ ಭತ್ತಕ್ಕಾಗಿ ದುಡಿಯುವಾತನಿಗೆ ಗ್ರಾಮ ಶಾಲೆಯಿದ್ದರೇನು? ಇಲ್ಲದಿದ್ದರೇನು? ದುಡಿತಕ್ಕೆ ಓದು ಬರಹ ಬೇಕೆ? ಕಲಿಯುವ ಮಕ್ಕಳಿಗಾಗಿ ಶಾಲೆ. ಅಂತಹ ಮಕ್ಕಳು ಪಣ್ಯಮಾಡಿ ಹುಟ್ಟುತ್ತಾರೆ. ಸೋಮಪ್ಪನಂತಹ ಜೀತದಾಳಿನ ಸಂತತಿಯಾಗಿ ಹುಟ್ಟುವುದುಂಟೆ? + +ತಿಮ್ಮಣ್ಣ ನಾಯಕರ ಮೂಲದ ಒಕ್ಕಲು ಸೋಮ – ಸೋಮಪ್ಪನೆಂದೂ ಅವನನ್ನು ಕರೆಯುವ ವಾಡಿಕೆಯಿತ್ತು. ಅವನ ಮೂಲ ಎಲ್ಲಿ? ಅವನ ಮೂಲ ಪುರುಷರಲ್ಲಿ ಯಾರು, ಎಂದು ನಾಯಕರ ಪೂರ್ವಜರನ್ನು ಆಶ್ರಯಿಸಿದರು? ಎಂಬ ಸಂಗತಿ ಸ್ಥಳ ಪುರಾಣಕ್ಕೆ ತಿಳಿಯದು. ಹಲ ವರ್ಷಗಳಿಂದ ಬಹುಶಃ ಆ ಕಾಲದಲ್ಲಿ ಬಾಳುತ್ತಿದ್ದ ಹಳಬರಿಗೆ ನೆನಪಿರುವಷ್ಟು ಸಮಯದಿಂದ ಆ ಒಕ್ಕಲುಮನೆ ಹಾಗೆಯೇ ಇತ್ತು. ಸೋಮಪ್ಪನ ಪೂರ್ವ ಪರಂಪರೆ ಅವನಿಗೇ ತಿಳಿಯದು; ನಾಯಕರಿಗೆ ತಿಳಿಯಬೇಕಾದ ಅವಶ್ಯಕತೆಯಂತೂ ಇಲ್ಲ. ನಾಯಕರಿಗೆ ವಿಸ್ತಾರವಾದ ನೆಲಹೊಲಗಳಿವೆ. ಅವುಗಳಲ್ಲಿ ಬೆವರು ಸುರಿಸುವ ಸೋಮಪ್ಪನೂ ಇದ್ದಾನೆ. ಹಟ್ಟಿ ಕೊಟ್ಟಿಗೆಯಲ್ಲಿರುವ ದನಕರುಗಳಿಗೆ ಅನುದಿನವೂ ಮೇವು ಸಲ್ಲುತ್ತದೆ. ಅದರಂತೆ ಸೋಮಪ್ಪನಿಗೂ ಸಲ್ಲುತ್ತದೆ. ಹುಟ್ಟಿಯಲ್ಲೊಂದು ಕರು ಹುಟ್ಟುತ್ತದೆ. ಒಕ್ಕಲು ಮನೆಯಲ್ಲೊಂದು ಮಗು ಜನ್ಮ ತಾಳುತ್ತದೆ. ವ್ಯತ್ಯಾಸವೇನುಂಟು? ಸೋಮಪ್ಪನ ಮಗ ಲಿಂಗಪ್ಪ ಪ್ರಪಂಚದ ಬೆಳಕನ್ನು ಕಂಡಾಗ ವಿದ್ಯಾರ್ಜನೆಗೆ ಬೇಕಾದ ಅರ್ಹತೆಯುಳ್ಳವನಾಗಿ ಹುಟ್ಟಲಿಲ್ಲವೆಂಬುದು ನಿಶ್ಚಯ. ಹೀಗಿದ್ದರೂ ಗ್ರಾಮಶಾಲೆಯ ಹೆಸರನ್ನು ಕೇಳಿದೊಡನೆ ಸೋಮನಿಗಾದ ಸಂತೋಷ ಬೇರೆ ಯಾರಿಗೂ ಆಗಿರಲಿಲ್ಲ. ಕತ್ತಲೆಮನೆಯಲ್ಲಿ ಹಣತೆಯುರಿದಂತೆ, ಅವನ ಮುಖದಲ್ಲಿ ಆಶೆಯ ಬೆಳಕು ಮೂಡಿತು; ಅದನ್ನು ಅವನ ಹೆಂಡತಿ ಕೆಂಚಿಯಲ್ಲದೆ ಬೇರೆ ಯಾರೂ ಕಂಡಿರಲಾರರು. + +“ಏನಿದು ಹುಚ್ಚರಂತೆ ನಗುತ್ತೀರಿ?” ಎಂದು ಕೆಂಚಿ ಕೇಳಿದಳು. + +“ನಮ್ಮ ಮನೆಯೊಳಗೂ ಬೆಳ್ಳಿ ಮೂಡಬಹುದೆಂಬ ಸಂತೋಷದಿಂದ ನಗು ಬಂತು” ಎಂದು ಸೋಮ ನುಡಿದ. + +ಕೆಂಚಿಗೆ ಅರ್ಥವಾಗಲಿಲ್ಲ. ಗ್ರಾಮದಲ್ಲಿ ಬೇಗನೆ ಶಾಲೆಯೇರ್ಪಡುವುದು. ಅದರ ಕಟ್ಟಡವನ್ನು ಕಟ್ಟುವುದಕ್ಕೆ ತಾನೇ ಮಣ್ಣು ಹೊತ್ತಿದ್ದಾನೆ. ಒಂದರ ಮೇಲೊಂದಾಗಿ ಏರಿ ಕುಳಿತ ಪ್ರತಿಯೊಂದು ಗೋಡೆಕಲ್ಲಿಗೂ ಅವನ ಆಯಾಸದ ಉಸಿರಿನ ಬಿಸಿ ತಿಳಿದಿದೆ. ಧನಿಗಳ ಪಾರುಪತ್ಯದಲ್ಲಿ ನಡೆಯಬೇಕಾದ ಶಾಲೆ. ಅವರಿಗೆ ಕೈಮುಗಿಯಬಹುದು; ಕಾಲಿಗೆ ಅಡ್ಡ ಬೀಳಬಹುದು; ಕೊಟ್ಟರೆ ಎರಡೇಟನ್ನು ಸಹಿಸಿಕೊಳ್ಳಲೂಬಹುದು; ಧನಿಗಳಲ್ಲಿ ಒಪ್ಪಿಗೆ ಕೇಳಿ ಮಗನನ್ನು ಶಾಲೆಗೆ ಕಳುಹಿಸಬಹುದಲ್ಲ! ತನ್ನ ಆಯುಷ್ಯವಂತೂ ಮಣ್ಣಿನಲ್ಲಿಯೇ ಸವೆದುಹೋಯಿತು. ಲಿಂಗಪ್ಪನದೂ ಹಾಗಾಗಬೇಕೆ? ಅವನ ಆಕಾರ ದುಡಿತದ ಆಳಿನದರಂತೆ ಇದೆಯೆ? ಅವನನ್ನು ಕಂಡರೆ ಒಕ್ಕಲುಮಗನೆಂದು ಯಾರಾದರೂ ಹೇಳಬಹುದೆ? ಅಂತಹ ಮಗುವಿಗೆ ಎರಡಕ್ಷರ ಬಂದರೆ, ಸೋಮ – ಕೆಂಚಿಯರ ಭಾಗ್ಯಕ್ಕೆ ಮತ್ತೇನು ಕುಂದು? – ಹೀಗಿದ್ದ ತನ್ನ ಯೋಚನೆಗಳನ್ನು ಬಿಚ್ಚಿ ಕೆಂಚಿಗೆ ಹೇಳುತ್ತಿದ್ದಾಗ ಸೋಮಪ್ಪನ ಸ್ವರ ನಡುಗಿತು. ಕಣ್ಣು ಒದ್ದೆಯಾಗಿದ್ದಿರಬೇಕು. + +“ಕನಸಿನ ಗಂಟು!” – ಎನ್ನುತ್ತಾ ಕೆಂಚಿ ವಿಕಟವಾಗಿ ನಕ್ಕಳು. + +“ಆಗಲಿ, ನೋಡೋಣ!” ಎಂದು ಸೋಮಪ್ಪ ಬಾವಿಯ ಕಡೆಗೆ ಸಾಗಿದ. + +ಕತ್ತಲಾಗುವ ಮುಂಚೆ ದನಿಗಳ ತೋಟದ ಕೆಲ ಅಡಿಕೆ – ತೆಂಗಿನ ಮರಗಳಿಗೆ ನೀರು ಹೊಯ್ಯಬೇಕಿತ್ತು. ಆ ಕಾಲದ ಬೇಸಿಗೆ ಬಲು ಬಿರುಸಾಗಿದ್ದು ಕುಡಿಯುವ ನೀರಿನ ಬಾವಿಗಳು ಕೂಡ ಆರಿಹೋಗಿದ್ದವು. ಒಕ್ಕಲಿಗೆ ನೀರಿಲ್ಲದಿದ್ದರೂ ಧನಿಗಳ ತೋಟ ಒಣಗಿ ಹೋಗಬಾರದು. ಮಣಭಾರದ ಕೊಡವನ್ನು ಹೆಗಲ ಮೇಲಿಟ್ಟುಕೊಂಡು ನೀರನ್ನು ಹೊತ್ತು ಹೊಯ್ಯುತ್ತಿದ್ದಾಗ, ಅವನ ಮನಸ್ಸು ಎಷ್ಟೋ ವರ್ಷಗಳ ಹಿಂದಿನ ಘಟನೆಯೊಂದರ ಕಡೆಗೆ ಹಾರಿಹೋಯಿತು. + +••• + +1 + +ಸೋಮ ಹುಡುಗ. ಕಲ್ಲು ತಿಂದು ಕರಗಿಸುವ ಪ್ರಾಯ. ಕೆಂಚಿ ಅವನಿಗೊಪ್ಪಿದ ಹೆಣ್ಣು; ತಾನಾಗಿ ಒಲಿದು ವರಿಸಿದ ಸೊಗಸುಗಾರ್ತಿ. ಪರಸ್ಪರವಾಗಿ ಒಲುಮೆಯುಳ್ಳವರು ಹೇಗೆ ಮದುವೆಯಲ್ಲಿ ಒಂದಾಗಬೇಕೋ ಹಾಗೆಯೇ ಅವರೂ ಆದುದು. + +ಧನಿಗಳ ಗದ್ದೆಯಲ್ಲಿ ಕೈನೆಡುವ ಸಮಾರಂಭವೆಂದರೆ, ಊರಿನ ದೊಡ್ಡಜಾತ್ರೆಯೆಂದರೂ ಸರಿಯೆ. ಹರೆಯದ – ಹರೆಯ ಮೀರಿದ ಗಂಡು ಹೆಣ್ಣುಗಳು ಅಲ್ಲಿ ಕಲೆಯುತ್ತವೆ. ಹೇಳುವ ‘ಓಬೇಲೆ’ ಪ್ರಾಯಮೀರಿದವರಿಗೆ ಪೂರ್ವಾನುಭವದ ರಸಾಯನವನ್ನು ಊಡಿಸುತ್ತಿದ್ದರೆ, ಪ್ರಾಯದ ಮೊದಲ ಮೆಚ್ಚಿನಲ್ಲಿ ಕಾಲಿಟ್ಟವರಿಗೆ ಭವಿಷ್ಯ ಜೀವನದ ವರ್ಣರಂಜಿತ ಚಿತ್ರವನ್ನು ಕಣ್ಣಮುಂದೆ ಕಾಣಿಸುವಂತಿತ್ತು. ಅಂತಹ ಒಂದು ಸನ್ನಿವೇಶವದು. ಸೋಮಪ್ಪ ಒಂದು ಗದ್ದೆಯಲ್ಲಿ ಉಳುತ್ತಿದ್ದ. ಪಕ್ಕದ ಗದ್ದೆಯಲ್ಲಿ ಅಗೆ ನೆಡುತ್ತಿದ್ದ ಹೆಂಗಸರ ಮಧ್ಯದಿಂದ ಒಂದು ಕಲನಾದವೆದ್ದು ಅವನ ಕಿವಿಯನ್ನು ಹೊಡೆಯಿತು; ಎದೆಯನ್ನು ಅಲುಗಾಡಿಸಿತು; ಹಾಡಿನ ವ್ಯಕ್ತಿಯ ಕಡೆಗೆ ದೃಷ್ಟಿಯನ್ನು ಸೆಳೆಯಿತು. ಸೆಳೆದ ದೃಷ್ಟಿಯನ್ನು ಹಿಂತಿರುಗಬಿಡಲಿಲ್ಲ. ಹೀಗೆ ಪ್ರೇಮದ ಸುಲಿಗೆ ಮಾಡಿದವಳು ಮತ್ತಾರೂ ಅಲ್ಲ – ಕೆಂಚಿ! ಸೋಮಪ್ಪನಂತಹ ಜವ್ವನಿಗ-ಹೊಂತಗಾರ – ದುಡಿಯುವ ಶಕ್ತಿಯುಳ್ಳ ಗಂಡಿನ ನೋಟ ಕೆಂಚಿಯ ಮೇಲೆ ಬಿದ್ದಿರಲು, ಅವಳನ್ನು ಕೈಗೆ ನೀರೆರೆದು ಕೊಡುವುದು ವಾಸಿಯೆಂದು ಕೆಂಚಿಯ ತಂದೆಗೆ ಗೋಚರವಾದರೆ ತಪ್ಪುಂಟೆ? ಕೆಂಚಿಯ ತಂದೆ ತಾನಾಗಿ ಮಾತಾಡಿಸಿ ಹುಡುಗಿಯನ್ನು ಮದುವೆ ಮಾಡಿಕೊಟ್ಟ. + +ಅವನಾದರೂ ಗಟ್ಟದ ಆಳು; ಹೆಂಡತಿ ಮಕ್ಕಳನ್ನು ಹಿಂದೆ ಬಿಟ್ಟು ವರ್ಷದಲ್ಲಿ ಆರು ತಿಂಗಳು ಗಟ್ಟದ ತೋಟಗಳಲ್ಲಿ ಮೈಮುರಿದು ಕೆಲಸ ಮಾಡಬೇಕು. ಆದುದರಿಂದ ಎಳೆಯ ವಯಸ್ಸೂ ಬಲವಾದ ರಟ್ಟೆಗಳೂ ಉಳ್ಳ ಸೋಮನಲ್ಲಿ ಅಳಿಯನಾಗುವ ಸಕಲ ಯೋಗ್ಯತೆಗಳೂ ಗೋಚರಿಸಿದುದರಲ್ಲಿ ಆಶ್ಚರ್ಯವಿಲ್ಲ. + +ಗಂಡ – ಹೆಂಡಿರೋ! ನಾಲ್ಕು ಜನರ ಮಧ್ಯದಲ್ಲಿ ಎದ್ದು ಕಾಣಿಸುವಂಥವರೇ…. ಹೀಗಿರುವ ಸೌಭಾಗ್ಯ ತಮಗುಂಟೆ? ಎಂದು ನೋಡುವವರಲ್ಲಿ ನಿಟ್ಟುಸಿರಿಗೆ ಕಾರಣವಾಗುವ ಸರಿಯಾದ ಜೋಡಿಯದು. ಅವರ ಅನ್ಯೋನ್ಯ ಪ್ರೇಮಕ್ಕೆ ಆಗಲಿಕೆಯ ಅರಿವಿರಲಿಲ್ಲ. ಇಬ್ಬರೂ ಶ್ರಮಪಟ್ಟು ಹೊಟ್ಟೆ ತುಂಬಿಸಬೇಕು. ಒಟ್ಟಾಗಿಯೇ ಕೂಡಿ ದುಡಿಯಬೇಕು, ಅವನು ನೇಗಿಲಿಗೆ ಕೈ ಕೊಟ್ಟರೆ ಇವಳು ‘ಓಬೇಲೆ’ಗೆ ದನಿ ಕೂಡಿಸಬೇಕು. ಅವನು ಗೊಬ್ಬರದ ಹೆಡಿಗೆಗಳನ್ನು ತಲೆಗೇರಿಸುವುದಿದ್ದರೆ ಈಕೆ ಏರಿಸುವುದಕ್ಕೆ ಕೈ ಕೊಡಬೇಕು. ಪ್ರಪಂಚದ ಪ್ರತಿಯೊಂದು ಕಾರ್ಯವೂ ಹಾಗೆಯೇ ಗಂಡಿಗೆ ಅರೆಪಾಲು; ಹೆಣ್ಣಿಗೆ ಅರೆ ಪಾಲು; ಈ ವಿಭಾಗವನ್ನು ಯಾರೂ ಮಾಡಿದುದಲ್ಲ; ವಿಧಿಸಿದುದಲ್ಲ; ಕಲಿಸಿದುದಲ್ಲ – ಪ್ರಕೃತಿಯಲ್ಲಿ ತನ್ನಿಂದ ತಾನೇ ನಡೆದು ಬಂದುದು. ಹೀಗೆ ಪ್ರಕೃತಿಯ ಸಂವಿಧಾನದಂತೆ ತಾನಾಗಿ ನಡೆದು ಬಂದ ಸಂಪ್ರದಾಯದ ಪ್ರತೀಕಗಳಾಗಿ ಆ ಗಂಡೂ ಆ ಹೆಣ್ಣೂ ತಮ್ಮ ವ್ಯಕ್ತಿತ್ವವನ್ನೂ ಭಿನ್ನತೆಯನ್ನೂ ಮರೆತು, ಒಂದಾಗಿ ದುಡಿದು ತೃಪ್ತಿಯ ಜೀವನವನ್ನು ನಡೆಸುತ್ತಿದ್ದರು. + +ಧನಿಗಳ ಗದ್ದೆಯಲ್ಲಿ ನಾಟಿ ಮಾಡುವ ಉತ್ಸವದಲ್ಲಿ ಭಾಗವಹಿಸುವುದೆಂದರೆ ಇಬ್ಬರಿಗೂ ಪರಮಾನಂದ. ಸೋಮಪ್ಪ ಆ ದಿನದ ವೀರನಾಗುತ್ತಿದ್ದ. ಧನಿಗಳ ಕೋಣಗಳಿಗೆ ಹಲಗೆಕಟ್ಟಿ ಏರುವುದೆಂದರೆ ಸಾಮಾನ್ಯದ ಕೆಲಸವಲ್ಲ. ಅದಕ್ಕೆ ಅವನೊಬ್ಬನೆ ಶಕ್ತ. ಅವನ ಓಟ ಮುಗಿಸಿ, ಹಲಗೆಯಿಂದಿಳಿದು ನೋಡಿದ ಕೂಡಲೇ, ಬಳಿಯಲ್ಲೇ ಕೈ ನೀಡುತ್ತಿರುವ ಕೆಂಚಿ ಕಿರುನಗುವಿನ ಪ್ರೇಮದ ಕಾಣಿಕೆಯನ್ನಿತ್ತರೆ, ಸೋಮಪ್ಪನ ಜೀವನಕ್ಕೆ ಸೌಭಾಗ್ಯ ಕಲಶವಿಟ್ಟ ಹಾಗೆ. + +ಎಂದಿನಂತೆ ಒಮ್ಮೆ ಕೆಂಚಿ ನೇಜಿ ನೆಡುತ್ತಿದ್ದಳು. ಸೋಮಪ್ಪ ತುಂಟ ಕೋಣಗಳಿಗೆ ಹಲಗೆ ಕಟ್ಟಿ ಏರುವುದಕ್ಕೆ ಅಣಿಮಾಡುತ್ತಿದ್ದ. ಅಷ್ಟರಲ್ಲಿ ಗದ್ದೆಯ ಅಂಚಿನಲ್ಲಿ ಹಾದುಬಂದ ಅಂಚೆಪೇದೆ ಅಣ್ಣಯ್ಯ ಸ್ವಲ್ಪ ದೂರದಲ್ಲಿ ನಿಂತು “ತಿಮ್ಮಣ್ಣ ನಾಯಕರ ಒಕ್ಕಲು ಸೋಮಪ್ಪ – ನೀನೇ?” ಎಂದು ಕೇಳುತ್ತ ದಫ್ತರಿನೊಳಗೆ ಕೈಹಾಕಿ ಪತ್ರವೊಂದನ್ನು ಎತ್ತಿಹಿಡಿದ. ಪತ್ರ ಬರೆಯಿಸಿಕೊಳ್ಳುವಷ್ಟು ಯೋಗ್ಯತೆ ನನಗೆ ಬಂತೆ? ಎಂದು ತನ್ನಲ್ಲಿ ತಾನೇ ಬೆಪ್ಪುಗೊಂಡು, ಕೋಣಗಳನ್ನು ಇದ್ದಲ್ಲಿಯೇ ಬಿಟ್ಟು ಅಣ್ಣಯ್ಯನ ಕಡೆಗೆ ಓಡಿ, ಕೈಚಾಚಿ ನಿಂತ. ಅಣ್ಣಯ್ಯ ಪತ್ರಕೊಟ್ಟ; ಪತ್ರ ಕೈಗೆ ಬಂದೊಡನೆ ಎದೆ ಬಡಿಯಿತು. ಮೈ ಬಿಸಿಯೇರಿತು. ಇದರೊಳಗೆ ಏನಿರಬಹುದೋ? ಇದರೊಳಗಿನ ಅಕ್ಷರಗಳ ಜೋಡಣೆಯಲ್ಲಿ ಯಾವ ಎದೆಯ ಯಾವ ಸುಖವೊ ದುಃಖವೊ ಯಾರು ಬಲ್ಲರು? ಇದರ ಅರ್ಥವನ್ನು ತಿಳಿಯುವುದು ಈ ಜನ್ಮದಲ್ಲುಂಟೆ? ಹೀಗೆ ಯೋಚನೆ ಬಂದು ಅಣ್ಣಯ್ಯನಿಂದಲೇ ಓದಿಸಿ ಕೇಳಿದರಾಗಬಹುದೆಂದು ತೋರಿತು. “ಅಯ್ಯಾ ಅಣ್ಣಯ್ಯನವರೇ” ಎಂದಾತ ಪೇದೆಯನ್ನು ಸಂಬೋಧಿಸಿದುದೇ ತಡ, ಪೇದೆಗೆ ಅದರರ್ಥ ತಿಳಿಯಿತು. “ಅಣ್ಣಯ್ಯ! ಗಿಣ್ಣಯ್ಯ! ಎದೆ ಸೀಳಿದರೆ ಎರಡಕ್ಷರ ಕಾಣಿಸುವ ಹಾಗಿಲ್ಲ; ಅಂಥವರಿಗೆ ಪತ್ರವೇಕೆ? ಬಟವಾಡೆಯೇಕೆ? ಬೇಕಿದ್ದರೆ ಕಾಗದವನ್ನಿಟ್ಟುಕೋ; ಯಾರಿಂದಲಾದರೂ ಓದಿಸಿ ತಿಳಿದುಕೋ. ನಮಗೆ ಬಡವಾಡೆಗೆ ಮಾತ್ರ ಸಂಬಳ ಕೊಡುವುದು ಸರಕಾರ!” ಎಂದು ಅಣ್ಣಯ್ಯ ಗದ್ದೆಯಂಚಿನಲ್ಲಿ ಬಿರುನುಡಿಯನ್ನು ಬಿಕ್ಕಿ, ಸಿಡಿಮಿಡಿಗೊಂಡ, ಸರ್ಪದಂತೆ ಸರ್ರನೆ ಓಡಿಹೋದ. ಸೋಮಪ್ಪನ ಮುಖಕ್ಕೊಂದು ಏಟು ಕೊಟ್ಟ ಹಾಗಾಯಿತು. ಬರಹ ಬಾರದವರಿಗೆ ಖಾಲಿ ಕಾಗದ ಕೂಡ ತನ್ನಲ್ಲಿರುವ ಗುಟ್ಟನ್ನು ಬಿಚ್ಚಿ ಹೇಳುವುದಿಲ್ಲ ಎಂದ ಮೇಲೆ ಯಾವ ಪ್ರಾಣಿ ಮರ್ಯಾದೆಯನ್ನು ಕೊಟ್ಟೀತು? ಕೊಡಬೇಕು? ತನ್ನಂತಹ ನೀಚರಿಗೆ ಆಗಬೇಕಾದುದೇ ಹೀಗೆ ಎಂಬ ಆತ್ಮನಿಂದೆಯ ಭಾವ ಒಂದೆಡೆ. ಪತ್ರದೊಳಗೆ ಏನೋ ಒಂದು ಸೋಜಿಗವಿದೆ. ಯಾರೋ ಬಂಧುಗಳ ಮೂಕಧ್ವನಿ ಅದರೊಳಗೆ ಅಡಗಿ ಕುಳಿತಿದೆ; ಅದೇನೆಂದು ಕೇಳಬೇಕಾಗಿತ್ತು; ಎನ್ನುವ ಕುತೂಹಲ ಒಂದೆಡೆ. ಹೀಗೆ ಅವನ ಮನಸ್ಸು ತೂಗುಯ್ಯಾಲೆಯಂತೆ ಅತ್ತಿತ್ತ ತೊನೆಯುತ್ತಿತ್ತು. + +ಆದರೆ ಮಾಡುವುದೇನು? ಧನಿಯ ಸೇವೆ ಎಲ್ಲ ಕೆಲಸಕ್ಕಿಂತಲೂ ಮೇಲು, ಸೂರ್ಯದೇವ ನೆತ್ತಿಗೆ ಮುಟ್ಟಿದ್ದಾನೆ. ನೆರಳು ಪೂರ್ವಕ್ಕೆ ವಾಲುವ ಮೊದಲು ಎತ್ತುಗಳನ್ನು ಬಿಚ್ಚಿ, ಮೈತೊಳೆದು, ಮಾಲೀಸುಮಾಡಿ, ಹಟ್ಟಿಯಲ್ಲಿ ಕಟ್ಟಿ ಹುಲ್ಲು ಹಾಕಬೇಡವೆ? ಸುಬ್ರಹ್ಮಣ್ಯದ ಸಂತೆಯಿಂದ ತಂದ ಜೋಡಿ. ದೇವರನ್ನು ಕಾಣುವಂತೆ ಕಂಡಿದ್ದಾರೆ, ತಿಮ್ಮಣ್ಣ ನಾಯಕರು. ಒಳ್ಳೆಯ ಸೊಕ್ಕಿನ ಕೋಣಗಳು. ಸೋಮಪ್ಪನಲ್ಲದೆ ಇತರರ ನೆರಳನ್ನು ಕೂಡ ಸಮೀಪಕ್ಕೆ ಆನಿಸಬಿಡವು. ಇಂತಹ ಸ್ಥಿತಿಯಲ್ಲಿ ಪತ್ರದ ‘ವಾಚಕ’ವೇನೆಂದು ಇತರರೊಡನೆ ಕೇಳಿ ಸಮಯ ಹಾಳು ಮಾಡುವುದಕ್ಕಿಂತ ಹಿಡಿದ ಕೆಲಸವನ್ನು ಮುಗಿಸುವುದೇ ಯುಕ್ತವಾಗಿ ತೋರಿತು. + +ಇದೇನು ಹೀಗೆ! ಸೋಮಪ್ಪ ಎತ್ತುಗಳನ್ನು ಬಿಟ್ಟು ಗದ್ದೆಯಂಚಿನಲ್ಲಿ ನಿಂತಿರುವುದೇಕೆ? ಎಂದು ಶಿಲಾಮೂರ್ತಿಯಂತೆ ಸ್ತಬ್ಧಳಾಗಿ ಎವೆಯಿಕ್ಕದ ನೋಟದಿಂದ ನೋಡುತ್ತಿದ್ದಳು ಕೆಂಚಿ. ಎತ್ತುಗಳಾದರೋ ತಮಗೂ ಸೋಮಪ್ಪನಿಗೂ ಇರುವ ಕೂಡುಕಟ್ಟನ್ನು ಯಾರು ಕಡಿದು ಹಾಕಿದರು? ತಮ್ಮ ಹಿಂದೆ ಹಲಗೆಯೇರುವ ವೀರ ಏಕೆ ಬರಲಿಲ್ಲ? ಬಂದಿದ್ದರೆ ತಮ್ಮ ಓಟದ ಬಲವನ್ನು ತೋರಿಸಿಬಿಡುತ್ತಿದ್ದೆವಲ್ಲ! ಎನ್ನುವಂತೆ ಗದ್ದೆಯ ನಡುವೆ ಕಿವಿಯನ್ನು ಅಲ್ಲಾಡಿಸದೆ ಏನನ್ನೋ ಆಲಿಸುವಂತೆ, ಏನನ್ನೋ ನಿರೀಕ್ಷಿಸುವಂತೆ, ಕದಲದೆ ನಿಂತಿದ್ದುವು. ಈ ಸ್ಥಿತಿ ಹೀಗೆಯೇ ಇರುವುದು ಸರಿಯಲ್ಲವೆಂದು ಸೋಮಪ್ಪ ಕೂಡಲೆ ಎತ್ತುಗಳ ಕಡೆಗೆ ಓಡಿಬಂದು ಹಲಗೆ ಹತ್ತಿ “ಓಓಓ” ಎಂದು ರಾಗ ಎಳೆಯುತ್ತಾ, ಓಡುವ ಹುರುಪು ಹುಟ್ಟಿಸುವುದಕ್ಕಾಗಿ ಬಾಲ ಹಿಡಿದು, ಎತ್ತುಗಳ ಬೆನ್ನಿಗೆ ಎರಡೇಟುಗಳನ್ನು ಕೊಟ್ಟುದೇ ತಡ! ಅವು ಯಾವ ವೇಗದಿಂದ ಓಡಿದುವು? ಹೇಗೆ ಹಾರಿದುವು? ಏನು ಮಾಡಿದುವು? ಎಂದು ನೋಡುವುದಕ್ಕೂ ಅವಕಾಶವಿರಲಿಲ್ಲ. ಸೋಮಪ್ಪ ಗದ್ದೆಯ ಕೆಸರಲ್ಲಿ ಉದ್ದಂಡವಾಗಿ ಬಿದ್ದಿದ್ದ. ಕೋಣಗಳು ಕಟ್ಟಿದ ಹಲಗೆ ನೊಗಗಳೊಂದಿಗೆ ಗದ್ದೆಯಲ್ಲಿ ಬತ್ತದ ಸಸಿ ನೆಡುತ್ತಿದ್ದ ಹೆಂಗಸರ ಮಧ್ಯಕ್ಕೆ ಹಾರಿ, ಅಂಚನ್ನು ದಾಟಿ ತೋಡಿಗೆ ಇಳಿದು ಪಕ್ಕದ ಮಜಲು ಗದ್ದೆಗೆ ಸಾಗಿದ್ದುವು. ಇತ್ತ ಈ ದೃಶ್ಯವನ್ನು ಕಂಡು ನೂರಾರು ಕಂಠಗಳು ಅಯ್ಯೋ! ದೇವರೇ! ಎಂದು ಕೂಗಿದವು. ಎಲ್ಲ ಸ್ವರಗಳಲ್ಲಿ ಕೆಂಚಿಯದು ಉಚ್ಚವಾಗಿತ್ತೆಂದೂ ಕರುಣಾದ್ರ್ರವಾಗಿತ್ತೆಂದೂ ಹೇಳಬೇಕಾಗಿಲ್ಲ. ಕೆಲವರು ಅತ್ತ ಓಡಿದರು. ಕೆಲವರು ಜಿಗಿದರು. ಕೆಂಚಿ ಸೋಮಪ್ಪ ಬಿದ್ದಿದ್ದ ಗದ್ದೆಯ ಕೆಸರಿನಲ್ಲಿ ಓಡುತ್ತಾ ಬಂದು “ದೇವರೇ! ನನ್ನ ಕೊರಳ ನೂಲನ್ನು ಕಡಿದು ಹಾಕಬೇಡ” ಎಂದು ಎದೆಯೊಡೆಯುವಂತೆ ಬೇಡುತ್ತಾ ಸೋಮಪ್ಪನನ್ನು ಎತ್ತುವುದಕ್ಕೆ ಬಗ್ಗಿದಳು. ಬಗ್ಗಿ ನೋಡಿದಳು; ಎಬ್ಬಿಸುವುದಕ್ಕೆ ಕೈಕೊಟ್ಟಳು; ಕೈಯನ್ನು ಎತ್ತಿದಳು; ಕಾಲನ್ನು ಕುಲುಕಿದಳು, ಏನು ಮಾಡಿದರೂ ಎತ್ತಿ ಎಬ್ಬಿಸುವುದಕ್ಕಾಗಲಿಲ್ಲ. ಕಣ್ಣೀರು ಹರಿದು ಸೋಮಪ್ಪನ ಮೈಯ ಕೆಸರನ್ನು ತೊಳೆಯಿತು. ಇಷ್ಟರಲ್ಲಿ ನಸುನಿದ್ದೆಯಿಂದ ಎಚ್ಚತ್ತವನಂತೆ ಸೋಮಪ್ಪ ಮೈಕೈಗಳನ್ನು ಅಲ್ಲಾಡಿಸಿ ಹೊರಳಿದ ಕಣ್ಣನ್ನು ಮುಚ್ಚಿದ ಕೆಸರನ್ನು ಒರಸಿಕೊಂಡು, “ನನಗೇನಾಯಿತು ಕೆಂಚಿ? ನೀನೇಕೆ ಕೈ ನೆಡುವುದನ್ನು ಬಿಟ್ಟು ಇಲ್ಲಿಗೆ ಬಂದೆ?” ಎಂದು ಪ್ರಶ್ನಿಸಿದ. ಉತ್ತರ ಅವಶ್ಯವಿರಲಿಲ್ಲ. ಸೋಮಪ್ಪನಿಗೆ ತಿಳಿವು ಬಂತು. ಮಲಗಿದ ಚಾಪೆಯಿಂದ ಏಳುವವನಂತೆ ಗದ್ದೆಯಿಂದೆದ್ದು “ಎತ್ತುಗಳೆಲ್ಲಿ?” ಎಂದು ಕೇಳಿದ. “ನೋಡಿ ಅಲ್ಲಿವೆ! – ಆ ಮಜಲು ಗದ್ದೆಯಲ್ಲಿ!” ಎಂದು ಕೆಂಚಿ ಬೆರಳೆತ್ತಿ ತೋರಿಸಿದಳು. “ನಿಮಗೇನಾಗಿದೆ?” ಎಂದು ಕೇಳಬೇಕಾದ ಅವಶ್ಯಕತೆಯಿರಲಿಲ್ಲ; ಅವಕಾಶವೂ ಇರಲಿಲ್ಲ. ಮೈಯಲ್ಲಿ ಅಂಟಿಕೊಂಡಿರುವ ಕೆಸರನ್ನು ಉಜ್ಜಿಕೊಳ್ಳುತ್ತಾ ಅಲ್ಲೇ ಕೆಸರಲ್ಲಿ ಬಿದ್ದು ಭಾರವಾಗಿದ್ದ ಚಾಟಿಯನ್ನು ಕಂಕುಳಿಗೆ ಸೇರಿಸಿಕೊಂಡು ಸೋಮಪ್ಪ ಎತ್ತುಗಳನ್ನು ಬೆಂಬತ್ತಿಕೊಂಡು ಓಡಿದ. ಸೋಮಪ್ಪನ ಬರವನ್ನು ಕಂಡ ಎತ್ತುಗಳು ಮುಖ ತಿರುಗಿಸಿ ಅವನನ್ನೇ ನೋಡುತ್ತಾ ನಿಂತುವು. ಹೂಟೆಬಿಡುವ ಕಾಲವಾಗಿತ್ತು. ಎತ್ತುಗಳು ಹಸಿದಿದ್ದುವು. ಅವುಗಳ ಹೆಗಲಿನಿಂದ ನೊಗವನ್ನೂ ಹಲಗೆಯನ್ನೂ ಬಿಚ್ಚಿ – ಎರಡನ್ನೂ ಹೊಡೆದು ಕೊಂಡು, ತೋಟದ ಒತ್ತಿನಲ್ಲಿದ್ದ ಹಳ್ಳದಲ್ಲಿ ಮೈತೊಳೆದಾಯಿತು. ಧನಿಗಳ ಹಟ್ಟಿಯಲ್ಲಿ ಕಟ್ಟಿ ಆಯಿತು. ತಿನಿಸು ಹಾಕಿಯೂ ಆಯಿತು. ಆ ಮೇಲೆ ಸೋಮಪ್ಪ ಹಿಂದೆ ಬಂದು ಮಜಲು ಗದ್ದೆಯಲ್ಲಿ ಬಿಟ್ಟಿದ್ದ ನೊಗ ಹಲಗೆಗಳನ್ನು ತಂದು ಹಟ್ಟಿಯ ಅಟ್ಟದಲ್ಲಿ ಇಟ್ಟು ತನ್ನ ಮನೆಗೆ ನಡೆದ. + +ಎತ್ತುಗಳ ಓಟದ ರಭಸದಲ್ಲಿ ಸೋಮಪ್ಪನಿಗೆ ಮೈನೋವು ಮರೆತು ಹೋಗಿತ್ತು. ಈಗ ಮೈಯನ್ನು ಅತ್ತಿತ್ತ ಚಾಚುತ್ತಾನೆ. ಒಂದು ಅಳ್ಳೆ ನೋಯುತ್ತದೆ. ಕಾಲಸಂದಿಗೆ ಪೆಟ್ಟಾದಂತೆ ತೋರುತ್ತದೆ. ಇಷ್ಟರಲ್ಲಿ ಕೆಂಚಿಯೂ ಮನೆಗೆ ಬಂದಿದ್ದಳು “ವಿಶೇಷವೇನಾದರೂ ಇದೆಯೇ?” ಎಂದು ಕೆಂಚಿ ಕೇಳಿದಳು. “ಹಾಗೇನೂ ಇಲ್ಲ, ಮೈಗೇನೂ ನೋವಾಗಲಿಲ್ಲ. ಆದರೆ ಧನಿಗಳು ಇನ್ನು ಮುಂದೆ ಈ ಕೋಣಗಳನ್ನು ಮುಟ್ಟಬೇಡ ಎಂದು ತಾಕೀತು ಮಾಡಿದರು. ಅದರಿಂದ ಎದೆಗೆ ಅದೆಷ್ಟು ನೋವು ಮೈಗೆ ಆಗಲಿಲ್ಲ” ಎಂದ ಸೋಮಪ್ಪ ಕೆಂಚಿಯ ಕಣ್ಣರೆಪ್ಪೆಗಳಿಂದ ಎರಡು ಹನಿಗಳು ಉದುರಿದವು. “ಮಾಡುವುದೇನು? ಗ್ರಹಚಾರ” ಎಂದಳು. + +ಅಂದು ಗ್ರಹಚಾರ ಹಿಡಿದು ಮಲಗಿದ ಸೋಮಪ್ಪ ಎರಡು ದಿನ ಅರೆ ಕನಸು ಅರೆ ನನಸುಗಳಲ್ಲಿ ಮಲಗಿದ ಚಾಪೆಯನ್ನು ಬಿಡಲಿಲ್ಲ. ಕೆಂಚಿ ಗಾಬರಿಗೊಂಡಿದ್ದಳು. ಆದರೆ ಸುತ್ತು ಮುತ್ತಲಿನ ಗಾಳಿ ಬೆಳಕುಗಳ ಉಪಚಾರದಿಂದ ಸೋಮಪ್ಪ ಬೇಗನೆ ಗುಣಹೊಂದಿ ಗೈಮೆಗೆ ಹೋಗುವಷ್ಟು ಬಲವುಳ್ಳವನಾದ. ಆದರೆ ಆ ಪತ್ರದ ವಿಷಯ…. ಮರೆತೇ ಹೋಗಿತ್ತು. + +ಹದಿನೈದು ದಿವಸಗಳು ಅನಂತರ ಗಟ್ಟದಿಂದ ಬಂದ ಯಾರೋ ಒಬ್ಬರು ಕೆಂಚಿಯ ತಂದೆ ಮರದಿಂದ ಬಿದ್ದು ಕಠಿನವಾಗಿ ಗಾಯ ಗೊಂಡನೆಂದೂ, ಆಸ್ಪತ್ರೆಗೆ ಸಾಗಿಸಲಾಯಿತೆಂದೂ, ಅಲ್ಲಿ ಹತ್ತು ದಿನಗಳಲ್ಲಿ ತೀರಿ ಹೋದನೆಂದೂ, ಅಳಿಯನಿಗೆ ಪತ್ರ ಬರೆದಿದ್ದರೂ ಮುಖ ತೋರಿಸಲಿಲ್ಲ – ಎಂಬ ಚಿಂತೆಯಲ್ಲೇ ಕಣ್ಣು ಮುಚ್ಚಿದನೆಂದೂ ಹೇಳಿದರು. ಇದನ್ನು ಕೇಳಿ ಸೋಮಪ್ಪನ ತಲೆಗೆ ಸಿಡಲೆರಗಿದಂತಾಯಿತು. ಕೆಂಚಿಯ ಆಳುವಿಗೆ ಕೊನೆಯಿರಲಿಲ್ಲ. + +ಅದೇ ದಿನ ರಾತ್ರಿ ಮಲಗುವಾಗ ಸೋಮಪ್ಪ “ಕೆಂಚಿ! ಸಾಯುವ ತಂದೆಯನ್ನು – ಮಾವನನ್ನು ಕಣ್ಣಿನಿಂದ ನೋಡುವ ಪುಣ್ಯ ನಿನಗೂ ನನಗೂ ಇಲ್ಲದಂತಾಯಿತಲ್ಲ. ಇದಕ್ಕೆ ಕಾರಣವೇನು ಬಲ್ಲೆಯಾ?” ಎಂದು ಕೇಳಿದ. + +“ಇಲ್ಲ” ಎಂದಳು ಕೆಂಚಿ. + +“ನಮಗೆ ಅಕ್ಷರವಿಲ್ಲದುದು. ಅಂದು ಆ ಅಣ್ಣಯ್ಯ ತಂದು ಕೊಟ್ಟ ಕಾಗದವೇ ಅದು ನಿನ್ನ ಅಪ್ಪನದು. ಹಲಗೆಯೇರಿ ಕೋಣಗಳ ನ್ನೋಡಿಸಿದಾಗ ಕೆಸರಿನಲ್ಲಿ ಬಿದ್ದೆನಲ್ಲ! ಆ ಗದ್ದೆಯ ಕೆಸರು ಕಾಗದವನ್ನು ತಿಂದು ಬಿಟ್ಟಿತ್ತು. ಅಕ್ಷರ ಬರುತ್ತಿದ್ದ ಕೂಡಲೇ ಓದುತ್ತಿದ್ದೆನಲ್ಲವೆ? ದೇವರು ಹಾಗೆ ಹಣೆಯಲ್ಲಿ ಬರೆಯಲಿಲ್ಲ. ನಮ್ಮ ಜೀವನ ಈ ಕೆಸರಿನ ಪಾಲಿಗೆ! ಗೊಬ್ಬರದ ಪಾಲಿಗೆ!” ಎಂದು ಸೋಮಪ್ಪ ನುಡಿದಾಗ ಕೆಂಚಿಯ ಮುಖವೂ ಬಣ್ಣ ಕೆಟ್ಟಿತು. + +“ಕಾಗದ ಮರೆತು ಹೋಯಿತೆ?” ಎಂದು ಕೇಳಿದಳು ಕೆಂಚಿ. + +“ಮರೆಯದಿರುತ್ತಿದ್ದರೆ, ಕೂಡಲೇ ಹುಡುಕುತ್ತಿದ್ದೆನಲ್ಲವೆ?” ಎಂದ ಸೋಮಪ್ಪ. + +ಇಬ್ಬರಿಗೂ ಒಂದು ವಿಷಯ ಖಚಿತವಾಯಿತು. ಓದುಬಲ್ಲ ಮನುಷ್ಯರಿಗಿರುವ ಪ್ರಪಂಚದ ಹಲವು ಅನುಭವಗಳು ನಿರಕ್ಷರರಿಗಿಲ್ಲ! “ಕೆಂಚಿ! ದೇವರು ದಯಮಾಡಲಿ! ನಮಗೊಂದು ಗಂಡುಮಗುವನ್ನು ಕೊಡಲಿ! ಅದಕ್ಕೆ ನಾಲ್ಕು ಅಕ್ಷರ ಕಲಿಸದಿದ್ದರೆ ನಾನು ಗಂಡೇ?” ಎಂದು ಸೋಮಪ್ಪ ಮೂವತ್ತು ವರ್ಷಗಳ ಹಿಂದೆ ಮಾಡಿದ ಪ್ರತಿಜ್ಞೆ ಇಂದೂ ಅವನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. + +ಕೆಂಚಿ ನಾಲ್ಕಾರು ಮಕ್ಕಳನ್ನು ಹೆತ್ತಳು. ಮೂರು ನಾಲ್ಕು ವರ್ಷ ಪ್ರಾಯ ಆಗುವುದರೊಳಗಾಗಿ ಎಲ್ಲ ಮಕ್ಕಳನ್ನು ದೇವರು ಕರೆಯಿಸಿಕೊಂಡರು. ಕೊನೆಗೆ ದೇವರಿಗೂ ಕರೆಯಿಸಿಕೊಳ್ಳುವ ಕಷ್ಟ ಸಾಕಾಯಿತೆಂದು ತೋರುತ್ತದೆ. ಲಿಂಗಪ್ಪ ಹನ್ನೆರಡು ವರ್ಷದ ಹುಡುಗನಾಗಿದ್ದಾನೆ. ತಂದೆಯ ಗಟ್ಟಿಮುಟ್ಟಾದ ದೇಹ, ತಾಯಿಯ ಬಣ್ಣ, ನುಣುಪು – ಎಲ್ಲ ಲಿಂಗಪ್ಪನಲ್ಲಿ ಕಾಣಿಸಿಕೊಂಡಿವೆ. ಇದುವರೆಗೆ ಧನಿಯ ಮನೆಗೆ ಒಂದು ಹೊರೆ ಹುಲ್ಲನ್ನೊ ಒಂದು ಬುಟ್ಟಿ ತರಕಾರಿಯನ್ನೊ ಕೊಂಡೊಯಿದು ಅಲ್ಲಿ ದೊರೆತುದನ್ನು ಬಗಲೊಳಗೆ ಸೇರಿಸಿಕೊಂಡು ಬರುವ ಕ್ರಮವಿತ್ತು. + +ಇನ್ನು ಹಾಗಿರಬೇಕಾಗಿಲ್ಲ. ಲಿಂಗಪ್ಪ ಓದಿ ಕಲಿತು ಗಟ್ಟಿಗನಾಗುತ್ತಾನೆ. ಮತ್ತೆ ತನ್ನಂತೆ ಅಡಿಕೆ ಹಾಳೆಯನ್ನು ತಲೆಗಿಡಬೇಕೆ? ಉಪಾಧ್ಯಾಯರ ಟೊಪ್ಪಿಯೋ! ಮಣೆಗಾರರ ಮುಂಡಾಸೋ! ನಾಲ್ಕು ಅಕ್ಷರವೋದಿ ಕೆಲಸ ಸಂಪಾದಿಸಿದರೆ ಯಾವುದೆನ್ನಿಡುವುದು ಅಸಾಧ್ಯ? – ಹೀಗೆ ಸೋಮಪ್ಪನ ಕಲ್ಪನೆಗಳು ಒಂದರ ಮೇಲೊಂದು ಏಳುತ್ತಿದ್ದುವು. + +ಬಾಳೂರಿನಲ್ಲಿ ಶಾಲೆಯ ಸ್ಥಾಪನೆಯಾಗುವುದೆಂದು ತಿಳಿದಾಗ ಸೋಮಪ್ಪ ಉಲ್ಲಾಸದಿಂದ ನಕ್ಕುದಕ್ಕೆ ಇದೇ ಕಾರಣ, ಸೋಮಪ್ಪ – ಕೆಂಚಿಯರ ಹಿನ್ನೆನಪಿನ ಆಳದಿಂದ ಎದ್ದು ಬಂದ ಆತ್ಮ ಸಂತೋಷವು ಸೋಮಪ್ಪನ ಮುಖದಲ್ಲಿ ನಗುವಾಗಿಯೂ ಕೆಂಚಿಯ ತುಟಿಯಲ್ಲಿ ಗಂಭೀರ ಪ್ರಶ್ನೆಯಾಗಿಯೂ ಕಾಣಿಸಿಕೊಂಡಿತು! + +2 + +ಜೀತದಾಳಿಗೂ ಒಂದು ‘ಜೀವನ’ ಇದ್ದರೆ, ಆ ಜೀವನದಲ್ಲಿಯೂ ಸಂಧಿಕಾಲ ಎನ್ನುವಂತಹ ಕಾಲ ಇದ್ದರೆ – ಸೋಮಪ್ಪನ ಜೀವನಕ್ಕೂ ಆ ಸಂದು ಕಟ್ಟು ಬಂದಿತೆನ್ನಬಹುದು. ಶಾಲೆ ತೆರೆಯಿತು. ಆ ದಿನದ ಸಮಾರಂಭಕ್ಕೆ ತಿಮ್ಮಣ್ಣ ನಾಯಕರು ಅಧ್ಯಕ್ಷರಾಗಿದ್ದರು. ಪೇಟೆಯಿಂದ ದೊಡ್ಡ ಮನುಷ್ಯರು ಬಂದಿದ್ದರು. ವಿದ್ಯಾಧಿಕಾರಿಗಳು ಭಾಷಣ ಕೊಟ್ಟಿದ್ದರು. ಎಲ್ಲರೂ ತಿಮ್ಮಣ್ಣ ನಾಯಕರಿಗೂ ಒಕ್ಕೊರಳಿನ ಪ್ರಶಂಸೆಯನ್ನು ಸಲಿಸಿದ್ದರು. ಅವರ ಧುರೀಣತೆಯಲ್ಲಿ ಬಾಳೂರು ಗ್ರಾಮವು ಆದರ್ಶ ಗ್ರಾಮವಾಗಬಹುದೆಂದು ಕೋರಿದ್ದರು. ದೊಡ್ಡ ಸಭೆ ಸೇರಿತ್ತು. ಊರಿನ ಹತ್ತು ಸಮಸ್ತರೆಲ್ಲ ನೆರೆದಿದ್ದರು. ಶಾಲಾ ಸಮಾರಂಭದ ದಿನ, ಹಿರಿಯರೂ ಕಿರಿಯರೂ ಮುದುಕರೂ ಮಕ್ಕಳೂ ಎಲ್ಲರೂ ಒಂದಾಗಿ ಸೇರಿ, ಗ್ರಾಮ ದೇವಸ್ಥಾನಕ್ಕೆ ಮೆರವಣಿಗೆಯಿಂದ ನಡೆದು, ಗಂಧ ಪ್ರಸಾದವನ್ನು ಸ್ವೀಕರಿಸಿ ತಂತಮ್ಮ ಮನೆಗಳಿಗೆ ಮರಳಿದ್ದರು. ಎಲ್ಲದರಲ್ಲಿಯೂ ತಿಮ್ಮಣ್ಣ ನಾಯಕರ ಕೈ; ತಿಮ್ಮಣ್ಣ ನಾಯಕರ ಮುತುವರ್ಜಿ; ತಿಮ್ಮಣ್ಣ ನಾಯಕರ ಶಿಸ್ತು; ತಿಮ್ಮಣ್ಣ ನಾಯಕರ ಮೇಲ್ಮೆ! ಸೋಮಪ್ಪ ದೂರದಲ್ಲಿ ನಿಂತು ತನ್ನ ಧನಿಯ ಹೆಮ್ಮೆಯನ್ನು ಕಂಡು ಹಿಗ್ಗಿದ. ಊರ ಮಕ್ಕಳಿಗೆ ವಿದ್ಯಾದಾನ ಮಾಡಿಸುವ ಪುಣ್ಯ ಕಟ್ಟಿಕೊಂಡವರು ಮೂಲದ ಒಕ್ಕಲು ಹುಡುಗನನ್ನು ಆ ಪುಣ್ಯದಿಂದ ಹೊರಗಾಗಿಸುವರೇ? ಖಂಡಿತವಾಗಿಯೂ ಇಲ್ಲ – ಎಂದು ಸೋಮಪ್ಪನ ಅಂತರಾತ್ಮ ಹೇಳಿತು. ಸೋಮಪ್ಪನಿಗೆ ಕೂಡ ಒಂದು ಅಂತರಾತ್ಮ ಇದ್ದಿತೆಂಬುದನ್ನು ಮರೆಯಬಾರದು. ಧನಿಗಳ ದೊಡ್ಡಸ್ತಿಕೆ, ಹೊರಗೆ ನಿಷ್ಠುರವಾದರೂ ಒಳಗೆ ಮೃದುವಾದ ಮನಸ್ಸು, ಹೊಟ್ಟೆಗೆ ಹೊಡೆಯಲಾರದ ಔದಾರ್ಯ, ಅವರ ಆಶ್ರಯ ತಪ್ಪಿದರೆ ತನಗೆ ಗತಿಯಿಲ್ಲವೆಂಬ ಸತ್ಯ ಸ್ಥಿತಿ ಪರಿಜ್ಞಾನ….. ಇವೆಲ್ಲ ಒಂದಾಗಿ ಸೋಮಪ್ಪನ ಅಂತರಾತ್ಮವನ್ನು ಒಂದಿಷ್ಟು ಮಸುಕು ಮಾಡಿಬಿಟ್ಟುವೆಂದರೆ ತಪ್ಪಲ್ಲ. ಬಂದುದೆಲ್ಲ ಬರಲಿ ಎಂಬ ಭಾವದಿಂದ ಅವನು ಒಂದು ದಿನ ಪ್ರಾಂತಃಕಾಲ ಮುಂಜಾವದ ನೆರಳು ಕಾಣಿಸುವ ಮುಂಚೆಯೇ ಧನಿಗಳ ಚಾವಡಿಯ ಮುಂದೆ ಕಾಣಿಸಿಕೊಂಡ. + +ಸೂರ್ಯೋದಯಕ್ಕೆ ಮುಂಚಿತವಾಗಿ ಏಳುವ ಅಭ್ಯಾಸವುಳ್ಳ ನಾಯಕರು ಚಾವಡಿಯ ಹಾಸುಹಲಗೆಯ ಮೇಲೆ ಕುಳಿತಿದ್ದರು. ಸೊಂಟಕ್ಕೊಂದು ಲುಂಗಿ; ಭುಜದ ಮೇಲೆ ಬಹಿರ್ವಾಸ; ಬೀಗದಕ್ಕೆ ಗೊಂಚಲಲ್ಲಿ ಸಿಕ್ಕಿಸಿಕೊಂಡಿದ್ದ ಹಲ್ಲು ಕಡ್ಡಿಯನ್ನು ತೆಗೆದು ಹಲ್ಲೆಡೆಗೆ ತುರುಕಿಸುತ್ತಾ, ಇದಿರಲ್ಲಿಯೇ ಚಾಪೆಯ ಮೇಲೆ ಕುಳಿತಿದ್ದ ಶೀನಪ್ಪಯ್ಯ ಮಾಸ್ತರರ ಕೂಡ ಏನೋ ಪ್ರಸ್ತಾಪವೆತ್ತಿ ಮಾತಾಡುತ್ತಿದ್ದರು. ಅವರ ಕೆಂಪೇರಿದ ಮುಖ, ಉಬ್ಬಿದ ಕಣ್ಣು, ಚೂಪಾದ ಹುಲಿಮೀಸೆ…. ಇವುಗಳನ್ನು ಕಂಡರೆ ಒಕ್ಕಲುಗಳಿಗೆ ಒಂದಿಷ್ಟು ತಳ್ಳಂಕ ಆಗದಿರದು. ಆದರೆ ಸೋಮಪ್ಪನಿಗೆ ಹೆಚ್ಚು ಕಡಿಮೆ ಹುಟ್ಟಿದಂದಿನಿಂದ ಕಾಣಿಸಿಕೊಂಡಿದ್ದ ಮುಖ ಇದೊಂದೇ ಆದುದರಿಂದ ಮುಖ ತಾರತಮ್ಯ…. ಸ್ವಭಾವ ವ್ಯತ್ಯಾಸ….. ಇವೊಂದೂ ತಿಳಿದಿರಲಿಲ್ಲ. ಏನಾದರೂ ಕೇಳಿದರೆ ಒಮ್ಮೆ ಗದರಿಸುತ್ತಾರೆ. ಕೆಡು ಮಾತುಗಳನ್ನಾಡುತ್ತಾರೆ. ಅವುಗಳನ್ನು ಕೇಳಿ ತನಗೆ ಬೇಸರಾಗಲಿಲ್ಲ; ಸಂತೋಷವೇ ಆಗಿದೆ ಎಂದು ತೋರಿಸಿಕೊಂಡರೆ ಕೇಳಿದುದರ ಎರಡು ಪಾಲು ಕೊಡುತ್ತಾರೆ. ಬಿರುನುಡಿಗಳನ್ನಾಡಿ ಅತ್ಯಂತ ಕರುಣಾಶಾಲಿಗಳಂತೆ ನಡೆದುಕೊಳ್ಳುತ್ತಾರೆ; ಎಂಬುದೊಂದೇ ಅವನಿಗೆ ಗೊತ್ತು. ನಾಯಕರ ಅನುಗ್ರಹ ಸಂಪಾದಿಸಲು ಹೇಗೆ ನಿಲ್ಲಬೇಕು? ಹೇಗೆ ಆಡಬೇಕು? ಏನು ಮಾಡಬೇಕು? ಸೋಮಪ್ಪನಿಗಾರೂ ತಿಳಿಸಬೇಕಾಗಿರಲಿಲ್ಲ. ಚಾವಡಿಯಿಂದ ಕೆಳಗೆ ಕಿರುಜಗಲಿ; ಕಿರುಜಗಲಿಯಿಂದಾಚೆಗೆ ಹತ್ತು ಗಜ ದೂರದಲ್ಲಿ ಸೋಮಪ್ಪನ ಆರಡಿಯುದ್ದದ ಲೋಹದಲ್ಲಿ ಕಡೆದು ಮಾಡಿದಂತಹ ಭುಜ, ಎದೆ, ತೊಡೆ, ಮಡ, ಕೈ ಕಾಲು ಕೊರಳುಗಳ ಏರು ತಗ್ಗಿನ ರೂಪರೇಖೆಯನ್ನು ಒಳಗೊಂಡ ಗಟ್ಟಿ ಮುಟ್ಟಿನ ಶರೀರ ಕಾಣಿಸಿತು. ಎದೆಯ ಮೇಲೆ ಕೈಗಳನ್ನಿಟ್ಟು ತಲೆಬಾಗಿ ಭಯದಿಂದ ಮುಚ್ಚಿ ಹೋದಂತಿದ್ದ ನಗುವೊಂದನ್ನು ಮುಖದಲ್ಲಿ ಅರಳಿಸುತ್ತಾ, ನಾಯಕರ ಮುಂದೆ ಆತ ನಿಂತಿದ್ದ. + +ಶೀನಪ್ಪಯ್ಯನವರೊಡನೆ ಆಡುತ್ತಿದ್ದ ಮಾತನ್ನು ನಡುವಿನಲ್ಲಿಯೇ ನಿಲ್ಲಿಸಿ ನಾಯಕರು “ಏನೋ ಸೋಮ! ಬೆಳಗಾತವೇ ಏಕೆ ಬಂದೆ? ತೋಟಕ್ಕೆ ಏತಹಾಕಿ ನಾರು ಹೊಯ್ಯಬೇಕು ಎಂದು ನಿನ್ನೆಯೇ ಹೇಳಿದ್ದೆನಲ್ಲ!” ಎಂದರು. + +“ಹೌದು ಬುದ್ಧಿ!” ಎಂದವನು ಲಜ್ಜೆಯಿಂದಲೋ ಎಂಬಂತೆ ತಲೆಬಾಗಿಸಿ ಸುಮ್ಮನೆ ನಿಂತ. + +“ಮತ್ತೇನಾಗಬೇಕು? ಹೇಳು”ಸೋಮ ಹೇಳಲಿಲ್ಲ. + +“ಈ ದರಿದ್ರ ಜಾತಿಯ ಸ್ವಭಾವವೇ ಹೀಗೆ ಶೀನಪ್ಪಯ್ಯ! ಇಕ್ಕುಳ ಹಾಕಿ ನಾಲಗೆಯನ್ನು ಹೊರಗೆಳೆಯದೆ ಮಾತಾಡಲಾರರು” ಎಂದು ಶೀನಪ್ಪಯ್ಯನ ಗಮನವನ್ನೂ ಆ ಕಡೆಗೆಳೆದರು. + +“ಎಲ್ಲ ಒಕ್ಕಲುಗಳ ಸ್ವಭಾವವೂ ಒಂದೇ” ಎಂದು ಶೀನಪ್ಪಯ್ಯನವರು ತಲೆಯಲ್ಲಾಡಿಸಿದರು. + +“ಹೇಳೋ! ಹೇಳಬೇಕಾದುದನ್ನು ಬೊಗಳೊ….. ಬೊಗಳದಿದ್ದರೆ ನಡುಬೆನ್ನಿಗೆ ಗುದ್ದಿ ಎದೆಯೊಳಗಿನಿಂದ ಮಾತನ್ನು ಕಾರಿಸುತ್ತೇನೆ ನೋಡು!” ಎಂದು ಕೃತಕ ದರ್ಪದಿಂದ ಆಡಿ, ಮಾಸ್ತರ್ ಶೀನಪ್ಪಯ್ಯನವರಲ್ಲಿ ಇದರಿಂದ ಯಾವ ಪರಿಣಾಮವಾಗುವುದೆಂಬುದನ್ನು ನಿರೀಕ್ಷಿಸುವಂತೆ, ಅವರನ್ನು ನಸುನಗುತ್ತಾ ನೋಡಿದರು. ಆದರ ಆಶ್ಚರ್ಯಗಳನ್ನು ಮುಖಭಾವದಿಂದ ತೋರಿಸುವ ಸಂದರ್ಭ ಇದು…. ಎಂದು ಶೀನಪ್ಪಯ್ಯನಿಗೆ ತಿಳಿದೇ ಇತ್ತು! + +“ಬೇರೇನೂ ಇಲ್ಲ” ಎಂದು ಹಣೆ ತುರಿಸುತ್ತಾ ಹೇಳತೊಡಗಿದ ಸೋಮಪ್ಪ. + +“ಬೊಗಳೋ ಬೊಗಳು ಬೇಗನೆ…..” ಎಂದರು ನಾಯಕರು. + +“ಲಿಂಗಪ್ಪ…. ಸಾಲೆ…..” ಈ ಎರಡೇ ಶಬ್ದಗಳು ಸೋಮಪ್ಪನ ಬಾಯಿಯಿಂದ ಹೊರಟವು. + +ನಾಯಕರಿಗೆ ಅರ್ಥವಾಯಿತು. ಲಿಂಗಪ್ಪನನ್ನು ಶಾಲೆಗೆ ಕಳುಹಿಸುವ ಯೋಚನೆ! ಕಲಿಕಾಲ ಮೀರಿದೆ…. ಹೊಟ್ಟೆ ತುಂಬಿಸುವುದಕ್ಕೂ ಗತಿಯಿಲ್ಲದವರಿಗೂ ಬರಹಬೇಕು! ಬರಹ ಅನ್ನ ಕೊಡುತ್ತದೆಯೇ? ನಾಯಕರು ಸೋಮಪ್ಪನಲ್ಲಿ ಗದರಿಸುವ ಸ್ವರದಲ್ಲಿ ಆಡಿದರು. “ಸೋಮ! ನೀನು ಎಲ್ಲಿರುವೆ? ಯಾರಲ್ಲಿ ಮಾತಾಡುತ್ತಿರುವೆ? ಯೋಚಿಸಿಕೊ. ಧನಿಯ ಮಗನೂ ಕಲಿಯುವುದು! ನಿನ್ನ ಮಗನೂ ಕಲಿಯುವುದು! ನಿಮ್ಮ ಮಕ್ಕಳೂ ಶಾಲೆಗೆ ಹೋಗಿ ಕಲಿತು ಮಾಸ್ತರಿಕೆ ಮಾಡುವಂತಾದರೆ ಗೊಬ್ಬರ ಹೊರುವ ಮಕ್ಕಳಾರು? ಎತ್ತುಗಳನ್ನು ಕಟ್ಟುವವರಾರು? ಸೌದೆಸೊಪ್ಪು ತರುವವರಾರು? ಉಳುವವರಾರು? ಕೊಯ್ಯುವವರಾರು? ಹಿಂದೆ ಮುಂದೆ ನೋಡದೆ ಹೀಗೆಲ್ಲ ಆಡುವುದೇ?…. ಏನು ಮಾಸ್ತರರೆ?” ಎಂದು ಶೀನಪ್ಪಯ್ಯನ ಕಡೆಗೆ ಮುಖ ತಿರುಗಿಸಿ ಅವರ ತೀರ್ಮಾನವನ್ನು ನಿರೀಕ್ಷಿಸಿದರು. ಶೀನಪ್ಪಯ್ಯನವರು “ನೀವು ಹೇಳುವುದೇನೋ ಸರಿ ನಾಯಕರೆ….. ಆದರೆ ಕಾಲ ಧರ್ಮವಲ್ಲವೇ? ನೇಗಿಲಿಗೆ ಯಾರ ಕೈಯೂ ಹೋಗುವುದಿಲ್ಲ” ಎಂದು ಉತ್ತರ ಕೊಟ್ಟರು. + +“ಎಲ್ಲರೂ ಓದಿ ಮಾಡುವುದೇನು” ಎಂದು ನಾಯಕರ ದೊಡ್ಡ ಪ್ರಶ್ನೆ. ಇದಕ್ಕೆ ಶೀನಪ್ಪಯ್ಯನವರ ಉತ್ತರವೇ ಇಲ್ಲ. + +ನಾಯಕರು ಎರಡು ನಿಮಿಷ ಮೌನವಾಗಿದ್ದರು. ಮತ್ತೆ ಬಹುಶಃ ಮಾಸ್ತರ್ ಶೀನಪ್ಪಯ್ಯನವರೇ ಸೋಮಪ್ಪನನ್ನು ಪುಸಲಾಯಿಸಿದುದು ಎಂದೆಣಿಸಿ, ಹೀಗೆಂದರು : “ಶಾಲೆಯಲ್ಲಿ ಮಕ್ಕಳ ಲೆಕ್ಕ ಭರ್ತಿಯಾಗಬೇಕಲ್ಲ. ಅದಕ್ಕಾಗಿ ಈ ರೀತಿಯ ತಂತ್ರ; ಅಲ್ಲವೇ ಮಾಸ್ತರರೆ? ಆಗಲಿ; ನಾನು ಒಂದು ವಿಷಯವನ್ನು ಒತ್ತಿ ಹೇಳುತ್ತೇನೆ. ನೀವೇ ನೋಡಿ. ಗೊಬ್ಬರ ಹೊರುವ ತಲೆ ಗೊಬ್ಬರವನ್ನೆ ಹೊರಬೇಕಲ್ಲ? ಈ ವಿಧಿಯನ್ನು ತಪ್ಪಿಸುವ ಅಧಿಕಾರ ಯಾರಿಗಿದೆ? ಆಗಲಿ…. ಲಿಂಗಪ್ಪ ಶಾಲೆಗೆ ಹೋಗಲಿ…. ಕಲಿಯಲಿ. ಎಷ್ಟು ಕಲಿಯುತ್ತಾನೋ ನಾನು ನೋಡುವೆನಲ್ಲ! ಆದರೆ ಒಂದು ಎಚ್ಚರದ, ಮಾತಿದೆ. ನಾಲ್ಕು ಅಕ್ಷರ ಕಲಿತವರಿಗೆ ಹೆಮ್ಮೆ ನೆತ್ತಿಗೇರುತ್ತದೆ. ಅದಾಗದಂತೆ ನೋಡಿಕೊಳ್ಳವುದು ಕಷ್ಟ. ಇದಕ್ಕೆ ನೀವು ಹೊಣೆಯಾದರೆ….. ಅವನು ಹೋಗಲಿ. ಶಾಲೆಯಲ್ಲಿ ಎಲ್ಲ ಮಕ್ಕಳೂ ಒಂದೆ…. ಹಿಟ್ಟು ಬೂದಿಯೆಲ್ಲ ಒಂದೆ…. ಕಿಟ್ಟ ಧನಿಯ ಮಗ ಲಿಂಗಪ್ಪ ಒಕ್ಕಲ ಮಗ…. ಇಬ್ಬರೂ ಒಂದೇ ದರ್ಜೆಯಲ್ಲಿದ್ದಾರೆ….. ಎಂಬುದನ್ನು ಮರೆಯಬಾರದು ನೀವು! ಊರ ಶಾಲೆಯಲ್ಲಿ ಕಲಿಯುವುದನ್ನೆಲ್ಲ ಕಲಿತ ಮೇಲೆ ಮತ್ತೂ ಹೊಟ್ಟೆ ತುಂಬಿಸಬೇಕಲ್ಲ; ಹೊಟ್ಟೆ ತುಂಬಿಸುವುದಕ್ಕೆ ಈ ಮನೆ ಬಾಗಿಲಿಗೇ ಬರಬೇಕಲ್ಲ! ವಸ್ತುಸ್ಥಿತಿಯನ್ನು ಮರೆತರೆ ಯಾರಿಗೇನು ಲಾಭವಿದೆ?’’ ಎಂದು ನಾಯಕರು ತಡೆದರು. + +‘ಹೌದು’ ಎಂದು ಶೀನಪ್ಪಯ್ಯನವರು ಒಪ್ಪಿಗೆ ಕೊಟ್ಟರು. + +ಸ್ವಲ್ಪ ಕಾಲ ಯೋಚಿಸುವಂತೆ ನಟಿಸಿ – “ಹಾಗಾದರೆ ನಾನು ಹೇಳುತ್ತೇನೆ” ಎಂದು ನಾಯಕರು ಮುಂದುವರಿಸಿದರು :- “ಆಗಲಿ; ಲಿಂಗಪ್ಪ ನಮ್ಮ ಕಿಟ್ಟನೊಂದಿಗೆ ಶಾಲೆಗೆ ಹೋಗಲಿ. ಕಿಟ್ಟನ ಚೀಲ ಹೊರಲು ಜನ ಬೇಕು. ದಾಟುವ ತೋಡುಗಳಿವೆ; ಏರಿಳಿಯುವ ಊರು ಬೇಲಿಗಳಿವೆ. ಚಿಕ್ಕ ಹುಡುಗ ಕೈ ಕೊಡಬೇಕಾಗುತ್ತದೆ. ನಮ್ಮ ಅನ್ನ ತಿಂದು ದಪ್ಪವಾಗಿ ಲಿಂಗಪ್ಪ ಬೆಳೆದಿದ್ದಾನೆ. ಅದರ ಪ್ರಯೋಜನ ನಮಗೆ ಸಿಕ್ಕಲಿ. ಶಾಲೆಯೊಳಗೂ ಧನಿ ಒಕ್ಕಲುಗಳು ಹೇಗೆ ಇರಬೇಕೊ ಹಾಗೆಯೇ ಇರುವುದು ಸಾಧ್ಯವಾದರೆ…. ಇಬ್ಬರೂ ಒಟ್ಟಾಗಿ ಹೋಗುತ್ತಾ ಬರುತ್ತಾ ಇರಬಹುದು.” “ಸಾಧ್ಯವಾಗದೆ ಏನು!” ಶೀನಪ್ಪನವರು ಹಿಗ್ಗಿ ಉದ್ಗರಿಸಿದರು. + +ಇಷ್ಟಾದರೆ ಸಾಕೆಂದು ಸೋಮಪ್ಪ “ದಮ್ಮಯ್ಯ ಬುದ್ಧಿ …. ನೀವು ನಮ್ಮ ಒಡೆಯರೆಂಬುದನ್ನು ಮರೆತರೆ ತನ್ನ ತಲೆ ನೂರು ಹೋಳಾಗಿ ಬೀಳದೆ? ನನಗೆ ಬೇಕಾದುದು ಅಷ್ಟೆ …. ಚಿಕ್ಕ ಧನಿ ಒಬ್ಬರೇ ಹೋಗುತ್ತಾರೆ. ಅವರ ಹಿಂದೆ ಕಾಯುವ ನಾಯಿಯಾಗಿರಲಿ ಲಿಂಗಪ್ಪ ….. ಇಷ್ಟೆ” ಎಂದು ನಗುತ್ತಾ ಹಣೆ ತುರಿಸುತ್ತಾ ನುಡಿದ. + +ತಾವು ಎಂದಂತೆ ಎಲ್ಲವೂ ನಡೆದ ಕಾರಣದಿಂದ ನಾಯಕರು ಮುಂದೆ ಆಗಬೇಕಾದುದನ್ನೂ ತಾನೇ ವಿವರಿಸಿ ಹೇಳಿದರು. “ಹೌದು; ಲಿಂಗಪ್ಪ ಶಾಲೆಗೆ ಹೋಗಲಿ …. ಹೋಗುವಾಗ ಉಟ್ಟುಕೊಳ್ಳುವುದಕ್ಕೆ ಬಟ್ಟೆಯೂ ಇಲ್ಲದಿರಬಹುದು. ಸೋಮಪ್ಪ! ಅಮ್ಮ (ನಾಯಕರ ಪತ್ನಿ) ನಲ್ಲಿ ಕೇಳಿ ಹಳೆಯ ಅಂಗಿ ಬಟ್ಟೆಗಳಿದ್ದರೆ ಪಡೆದುಕೊಳ್ಳಬೇಕು. ಶಾಲೆಯಿರುವ ದಿನಗಳಲ್ಲಿ ಶಾಲೆಯಾಯಿತು. ಇಲ್ಲದ ದಿನಗಳಲ್ಲಿ ಎಂದಿನಂತೆ ಲಿಂಗಪ್ಪ ಒಂದು ಹೊರೆಹುಲ್ಲನ್ನು ತಂದು, ಹುರುಳಿ ಬೇಯಿಸಿ ಎತ್ತುಗಳ ಹೊಟ್ಟೆ ತುಂಬಿಸಬೇಕು. ಮನುಷ್ಯ ಬೇರೇನನ್ನು ಮರೆತರೂ ತಾನು ಯಾವುದಕ್ಕಾಗಿ ಜನನಕ್ಕೆ ಬಂದುದು ಎಂಬುದನ್ನು ಮರೆಯಬಾರದು”. ನಾಯಕರ ಕೋಣಗಳ ಆರೈಕೆಗಾಗಿ ಅಲ್ಲದೆ ಬೇರಾವ ಕರ್ತವ್ಯವನ್ನು ಮಾಡುವುದಕ್ಕಾಗಿಯೂ ಲಿಂಗಪ್ಪನನ್ನು ದೇವರು ಈ ಪ್ರಪಂಚಕ್ಕೆ ಕಳುಹಿಸಿರಲಾರ. ಕುಲದ ವೃತ್ತಿ – ಕರ್ತವ್ಯ ಕರ್ಮ ಮರೆಯಬಾರದಷ್ಟೆ! ರಜೆಯ ದಿನಗಳಲ್ಲಿ ಕೂಲಿ ಕೆಲಸ ಮಾಡಲೇಬೇಕು ಲಿಂಗಪ್ಪ ….. ಹೀಗೆ ಸೋಮಪ್ಪ ಸ್ವತಃ ಕೇಳಿ ಪಡೆಯಬೇಕಾಗಿದ್ದ ಅನುಗ್ರಹಗಳನ್ನು ನಾಯಕರು ಸ್ವತಃ ಕರುಣಿಸಿದರು. + +ನಾಯಕರ ಇಂಗಿತವನ್ನು ತಿಳಿದು ಅನುವರ್ತಿಸುವುದರಲ್ಲಿ ಶೀನಪ್ಪಯ್ಯನವರು ಅತಿ ಚತುರರು; ಆದುದರಿಂದಲೇ ಶೀನಪ್ಪಯ್ಯನವರು ನಾಯಕರ ಎರಡನೆಯ ಪ್ರಾಣ. ಸೋಮಪ್ಪನಿಗೆ ಪ್ರೇರಣೆ ಕೊಟ್ಟುದು ಶೀನಪ್ಪಯ್ಯ ಎಂಬ ಸಹಜವಾದ ಸಂದೇಹವೂ ಇತ್ತು. ನಾಯಕರಿಗೆ ಪ್ರೇರೇಪಿಸಿದರೆ ತಪ್ಪೇನು? ಬಡ ಮಾಸ್ತರನಲ್ಲವೆ? ಹೇಗಾದರೂ ಹೊಟ್ಟೆ ತುಂಬಿಸಿಕೊಳ್ಳ ಬೇಕಷ್ಟೆ? ಎನ್ನುವ ಸಹಾನುಭೂತಿಯೂ ಇತ್ತು. ಹೀಗಾಗಿ ಒಕ್ಕಲಮಗ ಧನಿಯ ಮಗನೊಡನೆ ಕಲಿಯುವುದು ಮಹಾ ಪಾಪವಾಗಿದ್ದರೂ ಈ ಪಾಪಕ್ಕೆ ಒಪ್ಪದೆ ನಿರ್ವಾಹವಿರಲಿಲ್ಲ. ಕೊನೆಗೆ ನಾಯಕರು “ಶೀನಪ್ಪಯ್ಯ, ಕಲಿಸುವುದು ಗಿಲಿಸುವುದೆಲ್ಲ ಸರಿಯೆ…. ಅಲ್ಪನಿಗೆ ಐಶ್ವರ್ಯ ಬಂದರೇನಾಗುತ್ತದೆ? ನಾಯಿಯನ್ನು ದಂಡಿಗೆಗೇರಿಸುವುದರ ಪರಿಣಾಮವೇನು? ನಿಮಗೆ ನಾನು ಪ್ರತ್ಯೇಕ ಹೇಳಬೇಕಾಗಿಲ್ಲ. ಓದು ಕಲಿವ ಮಕ್ಕಳಿಗೆ ಫಕ್ಕನೆ ಅನ್ನ ಸೊಕ್ಕುತ್ತದೆ ನೋಡಿ. ಅದಾಗದಂತೆ ಎಷ್ಟು ಜಾಗ್ರತೆ ವಹಿಸಿದರೂ ಸಾಲದು” ಎಂದು ನಾಯಕರು ಎಚ್ಚರಿಸಿದರು. + +“ಅದನ್ನೆಲ್ಲ ನನಗೆ ಬಿಟ್ಟು ಕೊಡಿ” ಎಂದು ಶೀನಪ್ಪಯ್ಯನವರು ಗೆಲುವಿನ ದನಿಯಲ್ಲಿ ಆಡಿದರು. + +“ಹಾಗಾದರೆ ಸರಿ; ಮತ್ತೇನು?” ಎಂದರು ನಾಯಕರು. + +ಸೋಮಪ್ಪ ಕುರುಬಾಗಿಲಿನತ್ತ ಸಾಗಿದ. ಅಮ್ಮನವರಲ್ಲಿ ಹಳೆಯ ಅಂಗಿ ಚಲ್ಲಣಗಳಿಗಾಗಿ ಅರ್ಜಿ ಮಾಡಬೇಕಾಗಿತ್ತು! + +3 + +ಲಿಂಗಪ್ಪ ಶಾಲೆಗೆ ಸೇರಿ ಎಷ್ಟೋ ದಿನಗಳು ಸಂದವು. ಇಷ್ಟರಲ್ಲಿ ಒಕ್ಕಲು ಮನೆಯಲ್ಲಿ ಹಲವು ಪರಿವರ್ತನೆಗಳಾಗಿದ್ದುವು. ಇದುವರೆಗೆ ಧನಿಗಳ ಮನೆಯನ್ನೆ ತನ್ನದೆಂದು ಭಾವಿಸುತ್ತಿದ್ದ ಸೋಮಪ್ಪನ ಹೃದಯಕ್ಕೆ ಈಗ ತನ್ನ ಮನೆಯೇ ಕೇಂದ್ರವಾಯಿತು. ಎರಡು ವರ್ಷಕ್ಕೊಮ್ಮೆ ಹೊದಿಕೆಯನ್ನು ನೋಡದ ಮನೆಗೆ ಹೊಸ ಮಳೆಗಾಲ ಬರುವ ಮುಂಚೆ ಚಂದವಾಗಿ ಹುಲ್ಲನ್ನು ಹೊದಿಸಿದ್ದಾನೆ. ಧನಿಗಳಲ್ಲಿ ಕೇಳಿ, ಬಿದಿರನ್ನು ಕಡಿದು, ಅಲ್ಲಿ ಇಲ್ಲಿ ಮುರಿದು ಹೋಗಿ ಕುಪ್ಪರಿಸಿ ಬೀಳಲು ಸಿದ್ಧವಾಗಿದ್ದ ಮಾಡನ್ನು ಹೊಸತು ಮಾಡಿದ್ದಾನೆ. ಎಲ್ಲ ಲಿಂಗಪ್ಪನಿಗಾಗಿ! ತಾನಾದರೊ ಹಳೆಯ ಜೀವ, ಸೊಪ್ಪು ತಿಂದು, ನೀರು ಕುಡಿದು ಬಾಳಬಲ್ಲಾತ. ಲಿಂಗಪ್ಪನು ಹಾಗಾಗ ಬೇಕಾದುದಿಲ್ಲ. ಅವನ ಜೀವನಕ್ಕಾದರೂ ನಯ ನಾಜೂಕು ಏಕೆ ಇರಬಾರದು? ಮಳೆ ಜಡಿದು ಬರುವಾಗ ಮನೆಯೊಳಗೆ ನೀರು ಸೋರಿ ಲಿಂಗಪ್ಪನ ಮೈ ಒದ್ದೆಯಾಗಿ ಶೀತ ಜ್ವರ ಹಿಡಿದರೆ ಶಾಲೆ ತಪ್ಪೀತಲ್ಲ! ಶಾಲೆ ತಪ್ಪಿದರೆ ತನ್ನ ಮಗ ಎಲ್ಲರಂತೆ ಒಂದು ಜನವಾಗಿ ಹೇಗೆ ಮೆರೆಯಬಲ್ಲ? ಆದುದರಿಂದ ಹಳೆಯ ಮಾಡನ್ನು ಸರಿಮಾಡಬೇಕಾಯಿತು. ಇದುವರೆಗೆ ಮನೆಯ ಜಗಲಿಯೂ ಅಂಗಳವೂ ಒಂದೇ ರೀತಿಯಲ್ಲಿದ್ದುವು. ಅಲ್ಲಿ ಕಸ, ಇಲ್ಲಿ ಕೋಳಿಯ ಪಿಟ್ಟೆ; ಇನ್ನೊಂದೆಡೆ ಏರು. ಈಗ ಆ ಸ್ಥಿತಿ ಹೋಗಿ ನೆಲ ನುಣ್ಣಗಾಗಿದೆ. ಸೋಮಪ್ಪ ಕೆಂಚಿಯರು ಹಗಲಿರುಳು ಪ್ರಯತ್ನ ಪಟ್ಟು ಉರುಟಾದ ಕಲ್ಲಿನ ಗುಂಡಿನಿಂದ ಒರೆದು ನೆಲವನ್ನು ಕೆಮ್ಮಣ್ಣ ಸಾರಣೆಯಿಂದ ಕನ್ನಡಿಯ ಹಾಗೆ ಮಾಡಿದ್ದಾರೆ. ಲಿಂಗಪ್ಪ ಬತ್ತಲೆಯಾಗಿ ನೆಲದ ಮೇಲೆ ಹೊರಳಾಡಿದರೂ ಮೈಗೆ ಒಂದಿಷ್ಟು ಕೊಳೆಯಾಗುವಂತಿಲ್ಲ. ಈ ಮೊದಲು ಮನೆಯ ಹೊರ ಜಗಲಿಯ ಮೂಲೆಯೊಂದರಲ್ಲಿ ಎತ್ತರವಾದ ಮಣ್ಣ ತಿಟ್ಟೆಯಿತ್ತು. ಅದರ ಅಡಿಯಲ್ಲಿ ಕೋಳಿಯ ಗೂಡು; ಮೇಲೆ ಹರಕು ಬಟ್ಟೆ, ಮೆಟ್ಟುಕತ್ತಿ, ಚಾಪೆ ಚಕ್ಕಣ ಮನೆಯೊಳಗೆ ಹಿಡಿಯದ ಸಾಮಾನುಗಳ ಪ್ರದರ್ಶನಾಲಯ ಅದಾಗಿತ್ತು. ಈಗ ಅವೊಂದೂ ಇಲ್ಲ. ಆ ಸ್ಥಳದಲ್ಲಿ ಲಿಂಗಪ್ಪನಿಗೆ ಓದುವ ವ್ಯವಸ್ಥೆ. ಪುಸ್ತಕಗಳನ್ನಿಡುವುದಕ್ಕೆ ದೇವದಾರದ ಪೆಟ್ಟಿಗೆಯೊಂದು. ಗೋಡೆಯಲ್ಲಿ ಎತ್ತರವಾಗಿ ಹೊಡೆದ ಕೀಲುಗಳೆರಡು ಅಂಗಿ ಬಟ್ಟೆಗಳನ್ನಿಡುವುದಕ್ಕೆ. ಮೊಳೆಯೊಂದು ದೀಪವನ್ನು ನೇಲಿಸುವುದಕ್ಕೆ. ಕುಳಿತುಕೊಳ್ಳುವುದಕ್ಕೆ ಹುಲ್ಲು ಚಾಪೆ. ಮನೆಯೊಳಗೂ ಹೊರಗು ‘ಕೊಕ್ ಕೊಕ್’ ಎಂದು ಸುಳಿದಾಡುತ್ತಿದ್ದ ಕೋಳಿಗಳನ್ನೆಲ್ಲ ನಿರ್ನಾಮ ಮಾಡಿದ್ದಾನೆ – ಲಿಂಗಪ್ಪನು ಓದುವ ಕಾಲದಲ್ಲಿ ಸದ್ದು ಮಾಡುತ್ತವೆ – ಎಂಬ ಕಾರಣದಿಂದ. ಮನೆಯೊಳಗೆ ಪರಿಷ್ಕಾರವಾಗಿತ್ತು. ಹಕ್ಕಿ ಗೂಡಿನಂತೆ ಎಲ್ಲ ಕಡೆಗಳಲ್ಲಿಯೂ ತೂಗಾಡುತ್ತಿದ್ದ ಸಾಮಾನುಗಳು ಒಂದು ಮೂಲೆಯಲ್ಲಿ ಚೊಕ್ಕಟವಾಗಿ ಬಿದ್ದಿವೆ. ತಾನು ಕೆಲಸಕ್ಕೆ ಹೋಗುವಾಗ ಉಟ್ಟುಕೊಳ್ಳತಕ್ಕ ಚಿಂದಿ, ತಲೆಯ ಮೇಲೆ ಧರಿಸುವ ಮುಟ್ಟುಹಾಳೆ – ಇವುಗಳನ್ನು ಒಟ್ಟಾಗಿ ಹುರಿಹಗ್ಗದಿಂದ ಕಟ್ಟಿ ಕುರುಬಾಗಿಲಿನಿಂದಾಚೆಗೆ ಗಳುವಿಗೆ ನೇತಾಡಿಸಿದ್ದಾನೆ. ನೆಲ ಸ್ವಚ್ಛವಾಗಿದೆ. ಅಡಿಗೆ ಮಾಡುವ ಮಣ್ಣಿನ ಮಡಿಕೆಗಳು ಕೂಡ ಶುಚಿಯಾಗಿವೆ. ಹೆಚ್ಚೇನು? ಸೋಮಪ್ಪನಿಗೆ ಈಗ ತನ್ನ ಮನೆಯೇ ಒಂದು ದೇವಾಲಯವಾಗಿದೆ. ಅಲ್ಲಿಯ ದೇವರು ಲಿಂಗಪ್ಪ. + +ಮುಂಜಾನೆ ಕೋಳಿ ಕೂಗುವ ಮುಂಚೆ ಗಂಡ ಹೆಂಡತಿ ಇಬ್ಬರೂ ಏಳುತ್ತಾರೆ. ನಿದ್ದೆ ಹೊಡೆವ ಲಿಂಗಪ್ಪನ ಮೈಯನ್ನು ಕುಲುಕಿಸಿ ಎಬ್ಬಿಸುತ್ತಾರೆ. ಅವನು ಮುಖ ತೊಳೆದು ಓದಬೇಕು. ಇವರು ಗೃಹಕೃತ್ಯಕ್ಕೆ ತೊಡಗಬೇಕು. ಲಿಂಗಪ್ಪ ತಂಗಳನ್ನು ತಿನ್ನುವ ಸಂಪ್ರದಾಯ ಈಗ ಇಲ್ಲವಾಗಿದೆ. ಅವನಂತೆ ಶಾಲೆಗೆ ಹೋಗುವ ನಾಯಕರ ಮನೆ ಮಕ್ಕಳು ಗಂಜಿಯೂಟ ಮಾಡುತ್ತಿವೆ. ಲಿಂಗಪ್ಪನೂ ಹಾಗೆ ಮಾಡಬೇಡವೆ? ಹಿಂದೆ ನಟ್ಟಿಗೆ ನೀರು ಹೊಯ್ಯುವ ಸಂಪ್ರದಾಯವಿತ್ತು. ಈಗ ಓದಿಗೆ ಭಂಗ ಬರಬಹುದೆಂಬ ಕಾರಣದಿಂದ ಅದು ಕೂಡದೆಂದು ಸೋಮಪ್ಪನ ಹುಕುಂ. ಲಿಂಗಪ್ಪ ಗುದ್ದಲಿ – ಹಾರೆಗಳಿಗೆ ಕೈ ಹಾಕಿದರೆ …. ನಿನ್ನ ಕೈ ಆ ಕೆಲಸಕ್ಕೆ ಇರುವುದಲ್ಲ ಎಂದು ಕೈಯಿಂದ ಕಿತ್ತು ತೆಗೆಯುತ್ತಾನೆ ಸೋಮಪ್ಪ. ಸಂಜೆ ಆಕಳನ್ನು ಧನಿಯ ಹಟ್ಟಿಗೆ ಓಡಿಸುವ ಕೆಲಸವಿಲ್ಲ. ರಜೆಯ ಸಮಯದಲ್ಲೂ ಹುಲ್ಲನ್ನು ಹೆರೆದು ತರುವ ಸಂಪ್ರದಾಯವಿಲ್ಲ. ಬಿಡುವಿರುವಾಗ ಈ ಕೆಲಸವನ್ನು ಮಾಡಲೇಬೇಕೆಂದು ಧನಿಗಳು ಹೇಳಿದುದೇನೋ ನಿಜ. ಆದರೆ ಸೋಮಪ್ಪ ಕೆಂಚಿ ಇಬ್ಬರೂ ಸೇರಿ ಮಗನ ಕೆಲಸವನ್ನು ತಾವೇ ಮಾಡುತ್ತಿದ್ದ ಕಾರಣ ಆಗಬೇಕಾದ ಕೆಲಸದಲ್ಲಿ ಲೋಪವಿರುತ್ತಿರಲಿಲ್ಲ ಎಂದ ಮೇಲೆ ಧನಿಗಳಾಗಲಿ ಯಜಮಾನಿಯಾಗಲಿ ದೂರುವುದಕ್ಕೆ ಅವಕಾಶವೆಲ್ಲಿ? ಅಷ್ಟು ಮಾತ್ರವಲ್ಲ ತನ್ನ ಮಗನನ್ನು ಶಾಲೆಗೆ ಕಳುಹಿಸುವ ವಿಷಯದಲ್ಲಿ ನಾಯಕರೆಂದು ಉದಾರ ಮನಸ್ಕರಾದರೋ ಅಂದಿನಿಂದ ಸೋಮಪ್ಪ ದ್ವಿಗುಣಿತವಾದ ಹುರುಪಿನಿಂದ ಧನಿಗಳ ಬಿಟ್ಟಿ ಬಿರಾಡಗಳನ್ನು ತಾನೇ ಕೇಳಿ ಕೇಳಿ ಮಾಡುತ್ತಿದ್ದ. ಇದರಿಂದ ಧನಿಗಳಿಗೆ ಲಿಂಗಪ್ಪನೆಂಬ ಪ್ರಾಣಿಯ ಮರವೆಯಾಗುವುದಕ್ಕೆ ಅನುಕೂಲವಾಯಿತು. ತನ್ನ ಮಗನನ್ನು ಹೀನ ಕಾರ್ಯಗಳಿಂದ ದೂರವಿರಿಸುವುದಕ್ಕೆ ಸೋಮಪ್ಪನಿಗೂ ಅನುಕೂಲವಾಯಿತು. + +ಆದರೆ, ಧನಿಯ ಮಗ ಕಿಟ್ಟಣ್ಣನ ಹಿಂದೆ ಲಿಂಗಪ್ಪ ಚೀಲ ಹೊತ್ತು ಹೋಗಬೇಕಾಗುತ್ತಿತ್ತು. ಮೊದಮೊದಲು ಧನಿಯ ಮನೆಗೆ ಲಿಂಗಪ್ಪ ಸ್ವತಃ ಹೋಗಿ ಕಿಟ್ಟನನ್ನು ಕರೆತರುತ್ತಿದ್ದ. ಮತ್ತೆ ಮತ್ತೆ ಹೋಗುವುದು ಕಷ್ಟವಾಯಿತು. ಸಕಾಲದಲ್ಲಿ ಬೇಯದ ‘ಗಂಜಿ’ ಅಡ್ಡಿ ಮಾಡಿತು. ಕಿಟ್ಟ ಮನೆಯ ಮುಂದೆ ನಿಂತು ‘ಕೂ’ ಹಾಕಬೇಕು. ಲಿಂಗಪ್ಪ ಹೊರಟು ಬಂದು ಚೀಲಕ್ಕೆ ಕೈಕೊಟ್ಟು ಬೆನ್ನಹಿಂದೆ ಓಡಬೇಕು. ಒಮ್ಮೊಮ್ಮೆ ಈ ನೋಟವನ್ನು ಸೋಮಪ್ಪನೂ ನೋಡುವ ಸಂದರ್ಭ ಬರುತ್ತಿತ್ತು. ತಾನು ಹುಟ್ಟಿದ ಗಳಿಗೆಯೇನು? ಲಿಂಗಪ್ಪ ಹುಟ್ಟಿದ ಗಳಿಗೆಯೇನು? ತಾನು ಲಿಂಗಪ್ಪನ ವಯಸ್ಸಿನಲ್ಲೆ ಇದ್ದಾಗ ಧನಿಗಳ ಮಕ್ಕಳನ್ನು ಹೆಗಲಮೇಲೆ ಹೊತ್ತು ಕೊಂಡು ಹೋಗಬೇಕಾಗುತ್ತಿತ್ತು. ಲಿಂಗಪ್ಪನಾದರೋ ಹಾಗಲ್ಲ…. ಚಿಕ್ಕ ಧನಿಗಳ ಹಿಂದೆಯೇ ಹೋಗುತ್ತಾನೆ. ಕೆಲ ಸಂದರ್ಭದಲ್ಲಿ ಅವರ ಹೆಗಲಿಗೆ ಕೈಹಾಕಿ ನಡೆಯುತ್ತಾನೆ. ಮೈ ಮುಟ್ಟಿ ಮಾತಾಡಿಸುತ್ತಾನೆ. ಅವನ ಮೈಗಿಂತ ಇವನ ಮೈ ಸ್ವಚ್ಛವಾಗಿದೆ. ಅವನ ಬಟ್ಟೆಗಿಂತ ಇವನ ಬಟ್ಟೆ ಬೆಳ್ಳಗಾಗಿದೆ. ಓದುವುದರಲ್ಲಿಯೂ ಹಾಗೆಯೇ – ಚಿಕ್ಕ ಧನಿಯ ನಾಲಗೆಯಿಂದ ಒಂದಕ್ಷರ ಹೊರಡುವುದಿಲ್ಲ. ಲಿಂಗಪ್ಪ ಇಡೀ ಶಾಲೆಯಲ್ಲಿ ಗಟ್ಟಿಗನಂತೆ! ಶೀನಪ್ಪಯ್ಯನವರೂ ತನ್ನಲ್ಲಿ ಗುಟ್ಟಾಗಿ ಈ ಮಾತನ್ನು ಹೇಳಿದ್ದಾರೆ! ಒಂದೋ ಎರಡೋ ವರ್ಷ ಹೀಗೆಯೇ ಇದ್ದರಾಯಿತು. ಲಿಂಗಪ್ಪ ಓದುಬರಹದಲ್ಲಿ ಪಾರಂಗತನಾಗಿ ಸರಕಾರಿ ನೌಕರನಾಗುತ್ತಾನೆ. ಮತ್ತೆ ಎತ್ತುಗಳ ಬಾಲ ಹಿಡಿವ ಕೆಲಸ ತನಗಾದರೂ ಏಕೆ? ತಂದೆ ತಾಯಂದಿರನ್ನು ಮಗನೇ ನೋಡಿಕೊಳ್ಳುವನಲ್ಲವೆ? ಹೀಗೆ ಸೋಮಪ್ಪನ ಮನಸ್ಸಿನಲ್ಲಿ ಯೋಚನೆ ಮೂಡುವುದು; ಕಣ್ಣು ಒದ್ದೆಯಾಗುವುದು; ಮುಖ ಕೆಂಪೇರುವುದು. + + + +ಒಂದು ವರ್ಷದ ಓದಿನ ಪರಿಣಾಮವು ಲಿಂಗಪ್ಪನಲ್ಲಿ ಬಲವಾಗಿ ಕಾಣಿಸಿಕೊಂಡಿತು. ತಾನು ಒಕ್ಕಲ ಮಗ; ಕಿಟ್ಟ ಧನಿಯ ಮಗ; ಎನ್ನುವುದೇನೋ ನಿಜ. ಆದರೆ ಶಾಲೆಯೊಳಗೆ ಹಾಗೇನೂ ಇಲ್ಲ. ಮಗ್ಗಿ ಹೇಳುವುದರಲ್ಲಿ ತಾನೇ ಮೊದಲು; ಪಾಠ ಓದುವುದರಲ್ಲಿ ತಾನೇ ಗಟ್ಟಿಗ; ಶಾಲಾ ಪರೀಕ್ಷಕನು ಬಂದು ಪರೀಕ್ಷೆ ಮಾಡಿದಾಗಲೂ ತನಗೆ ಎಲ್ಲರಿಗಿಂತ ಮೊದಲನೆಯ ಸ್ಥಾನ ದೊರೆಯುತ್ತಿತ್ತು. ಚಿಕ್ಕಧನಿಗಳು ಬೆಂಚಿನ ಕೊನೆಯಲ್ಲಿ ಕುಳಿತು ಕೊಳ್ಳಬೇಕಾಗಿತ್ತು. ಆಟದಲ್ಲಿಯೂ ಅಷ್ಟೆ! ತಾನು ದನ – ಕಿಟ್ಟ ಹುಲಿಯಾದ ದಿನ ಹುಲಿಗೆ ದನ ಸಿಕ್ಕುವುದೇ ಇಲ್ಲ. ತಾನು ಹುಲಿಯಾದರೆ ಕೇಳುವುದೇನು? ಕಿಟ್ಟ ದನವಾಗಿ ಬದುಕುವ ಹಾಗಿಲ್ಲ. ಆದರೆ, ಧನಿಗಳ ಮನೆಯ ಮುಂದೆ ತಾನು ನಿಂತಿರುವಾಗ ಆ ಕ್ರಮವೇ ಬೇರೆ. ಚಿಕ್ಕಧನಿ ಹೊಡೆದರೆ ನೋವಾಗಲಿಲ್ಲ; ಎನ್ನಬೇಕು. ಓಟದ ಪಂಥದಲ್ಲಿ ತಾನಾಗಿ ಹಿಂದುಳಿಯಬೇಕು. ಅವನು ನಕ್ಕರೆ ತಾನೂ ನಗಬೇಕು. ಅವನು ಅತ್ತರೆ ತಾನೂ ಅಳಬೇಕು. ಈ ಕಾರಣದಿಂದ ಧನಿಯ ಮನೆಯಿಂದ ಸಾಧ್ಯವಾದಷ್ಟು ಕಾಲ ದೂರ ಇರುವುದೇ ಲೇಸೆಂದು ಲಿಂಗಪ್ಪನಿಗೆ ತೋರಿತು. ಅನಿರ್ವಾಹ ಪಕ್ಷದಲ್ಲಿ ಮಾತ್ರ ಅಲ್ಲಿ ಮುಖ ಕಾಣಿಸಿಕೊಳ್ಳಬೇಕಾಗುತ್ತಿತ್ತು. ತಾಯಿತಂದೆಗಳು ಉಪಾಯದಿಂದ ಇಂತಹ ಅನಿರ್ವಾಹಗಳನ್ನು ತಪ್ಪಿಸುತ್ತಲೂ ಇದ್ದರು. ಕಿಟ್ಟನಿಗಿಂತ ತಾನು ಕಡಿಮೆಯೆ? ಅವನು ಚಿವುಟಿದರೆ ತಾನೇಕೆ ಚಿವುಟಬಾರದು? ಅವನ ಗುದ್ದಿಗೆ ತಾನೇಕೆ ಗುದ್ದು ಕೊಡಬಾರದು? ಎಂದು ಒಮ್ಮೊಮ್ಮೆ ತೋರುತ್ತಲೂ ಇತ್ತು. ಈ ಕಾರಣದಿಂದ ಶೀನಪ್ಪಯ್ಯನವರು ಒಂದೆರಡು ಬಾರಿ ಲಿಂಗಪ್ಪನ ಕಿವಿಯವರೆಗೆ ಕೈಯನ್ನು ಕೊಂಡುಹೋಗಿದ್ದರು. ಇದು ಅನ್ಯಾಯವೆಂದು ಕಂಡಿದ್ದರೂ ಲಿಂಗಪ್ಪ ಮರುಮಾತಾಡದೆ, ಮುಖ ಮುರಿದುಕೊಂಡು ವೇದನೆಯನ್ನು ಸಹಿಸಿದ್ದ. ಧನಿಗಳ ಮನೆಗೆ ಹೋಗದೆ ಇರಲೂಬಹುದು. ಆದರೆ ಮಾಸ್ತರರ ಶಾಲೆ ಬಾಗಿಲಿಗೆ ಹೋಗದೆ ಅಕ್ಷರ ಬರುತ್ತದೆಯೇ? ಅವರು ಶಾಲೆಯಿಂದ ಓಡಿಸಿದರೆ ತಂದೆಯ ಹಾಗೆ ಗೊಬ್ಬರ ಹೊಂಡದಲ್ಲಿ ಹೊರಳಾಡುವುದೊಂದೇ ಗತಿ. ಆದುದರಿಂದ ಮಾಸ್ತರರಲ್ಲಿ ‘ದಮ್ಮಯ್ಯ!’ ಎಂದು ಬೇಡಿ, ಚಿಕ್ಕ ಧನಿಗಳಲ್ಲಿ ಕ್ಷಮೆ ಬೇಡಿ ಲಿಂಗಪ್ಪ ಹೇಗೂ ಕಾಲ ಕಳೆಯುತ್ತಿದ್ದ. + +ಒಮ್ಮೆ ಯಾರಿಗೂ ತಿಳಿಸದೆ ಪರೀಕ್ಷಾಧಿಕಾರಿಗಳು ಶಾಲಾ ಸಂದರ್ಶನಕ್ಕೆ ಬಂದಿದ್ದರು. ಆ ದಿನ ಶೀನಪ್ಪಯ್ಯ ಮಾಸ್ತರರು ಮಾತ್ರ ಅರ್ಧ ಘಂಟೆ ತಡ. ಪರೀಕ್ಷಾಧಿಕಾರಿಗಳನ್ನು ಕಂಡೊಡನೆ ಅವರ ಮುಖ ಬಿದ್ದು ಹೋದಂತಾಯಿತು. ಅಧಿಕಾರಿಗಳು ಏನೂ ಹೇಳಲಿಲ್ಲ. ಮಾಸ್ತರರ ಹೃದಯದಲ್ಲಿ ಸಮುದ್ರಮಥನ ಆಗದೆಯೂ ಇರಲಿಲ್ಲ. ಬಂದ ಅಧಿಕಾರಿಗಳು ಸುಮ್ಮನೆ ಕುಳಿತಿರಲಿಲ್ಲ. ಸಹಾಯಕ ಶಿಕ್ಷಕರನ್ನು ಕರೆದು, ಪಾಠಗಳನ್ನು ತೊಡಗಹೇಳಿ ಲಿಂಗಪ್ಪನ ದರ್ಜೆಗೆ ಬಾಯಿಲೆಕ್ಕದ ಪ್ರಶ್ನೆಗಳನ್ನು ಹಾಕುತ್ತಿದ್ದರು. ಲಿಂಗಪ್ಪ ಎಲ್ಲದಕ್ಕೂ ಸರಿಯಾದ ಉತ್ತರಕೊಟ್ಟ, ಚಿಕ್ಕಧನಿ ಎಲ್ಲವನ್ನೂ ತಪ್ಪು ಮಾಡಿದ. ಉಳಿದ ಮಕ್ಕಳು ಕೆಲವು ಸರಿ; ಕೆಲವು ತಪ್ಪು. ಪರೀಕ್ಷಕರು ಲಿಂಗಪ್ಪನನ್ನು ಕರೆದು ಎಲ್ಲ ತಪ್ಪು ಮಾಡಿದ ಮಕ್ಕಳಿಗೆ ಲೆಕ್ಕ ಕಲಿಸಹೇಳಿದರು. ಎಲ್ಲವನ್ನೂ ತಪ್ಪು ಮಾಡಿದ ‘ಖ್ಯಾತಿ’ ನಾಯಕರ ಮಗನಿಗೆ ಮಾತ್ರ! ಧನಿಯ ಮಗನಿಗೆ ಒಕ್ಕಲ ಮಗ ಕಲಿಸುವುದು! ಏನನ್ಯಾಯ! ಲಿಂಗಪ್ಪನ ನಾಲಗೆಯೂ ಒಮ್ಮೆ ತಡವರಿಸಿತು. ಪರೀಕ್ಷಕರು ‘ಕಲಿಸೊ’ ಎಂದು ಗದರಿಸಿದರು; ಉಪಾಯವಿಲ್ಲ. ಇಡೀ ಶಾಲೆಯ ಎಲ್ಲ ಮಕ್ಕಳು ನೋಡುತ್ತಿರುವಂತೆ ತಿಮ್ಮಣ್ಣ ನಾಯಕರ ಮೂಲದ ಒಕ್ಕಲ ಮಗ ಲಿಂಗಪ್ಪ – ನಾಯಕರ ಮಗನಿಗೆ ಗುರುವಾದ. ಇದನ್ನು ನೋಡಿ ಕೆಲವರು ನಕ್ಕರು; ಕೆಲವರು ಮನಸ್ಸಿನೊಳಗೆ ಹಿಗ್ಗಿದರು. ಹಲಮಕ್ಕಳಿಗೆ ಅಸೂಯೆಯಾಯಿತು. ಮಾಸ್ತರ್ ಶೀನಪ್ಪಯ್ಯನವರ ರಕ್ತವೇ ಹೆಪ್ಪುಗಟ್ಟಿದಂತಾಯಿತು. ಈ ಸುದ್ದಿ ನಾಯಕರ ಕಿವಿಗೆ ಮುಟ್ಟಿದರೇನಾದೀತು? ಅವರು ಅಂದು ಹೇಳಿದ ಮಾತೇನು? ತಾವು ಕೊಟ್ಟ ಭರವಸೆಯೇನು? ಈಗ ಆದುದೇನು? ಈ ಶನಿ ಲಿಂಗಪ್ಪ ಇಂದು ಶಾಲೆಗೆ ಗೈರು ಹಾಜರಿಯಾಗಲಿಲ್ಲವೇಕೆ? ಅಥವಾ ತಾವಾದರೂ ಸಕಾಲದಲ್ಲಿ ಬಂದು ಯಾವುದಾದರೊಂದು ಉಪಾಯದಿಂದ ಈಗ ಆದ ಸಂಭವವನ್ನು ತಪ್ಪಿಸಲಿಲ್ಲವೇಕೆ? ಪರೀಕ್ಷಕರು ಬಂದಾರು! ಹೋದಾರು! ಆದರೆ ಬಾಳೂರು ಗ್ರಾಮದ ಪಠೇಲರೂ ನಿಗ್ರಹಾನುಗ್ರಹ ಸಮರ್ಥರೂ ಅನ್ನದಾತರೂ ಆದ ನಾಯಕರು ಮುನಿದರೆ ಮಾಸ್ಟರ್ ಶೀನಪ್ಪಯ್ಯನವರು ಹೋಗುವುದಾದರೂ ಎಲ್ಲಿಗೆ? ಪರೀಕ್ಷಕರು ಕಣ್ಣ ಮುಂದೆ ನಿಂತಿದ್ದಂತೆಯೇ ಶೀನಪ್ಪಯ್ಯನವರ ಮುಖ ಮುದುಡಿಹೋಯಿತು. ಭವಿಷ್ಯ ಮಸುಕಾಗಿ ಹೋಯಿತು. + +ಇನ್ನೊಂದು ದರ್ಜೆಯ ಪರೀಕ್ಷಣಕ್ಕಾಗಿ ಅವರ ದೃಷ್ಟಿಯನ್ನೆಳೆಯುವುದಕ್ಕೆ ಪ್ರಯತ್ನಿಸಿದರು. ಪರೀಕ್ಷಕರು ಹೀಗೆಂದರು :- “ಮಾಸ್ತರೇ! ಕಲಿಸುವ ಉಪಾಧ್ಯಾಯರಿಗೆ ಪುಸ್ತಕವನ್ನು ಓದಲು ತಿಳಿದಿದ್ದರಾಯಿತೇ? ಮನಸ್ಸನ್ನು ಓದುವ ವಿದ್ಯೆ ಗೊತ್ತಿರ ಬೇಡವೇ? ಈ ಹುಡುಗನನ್ನೂ (ಲಿಂಗಪ್ಪನನ್ನೂ) ಆ ಹುಡುಗನನ್ನೂ (ಕಿಟ್ಟನನ್ನೂ) ಒಂದೇ ದರ್ಜೆಯಲ್ಲಿ ಇರಿಸಿದವರ ಬುದ್ಧಿಗೆ ಏನೆನ್ನಬೇಕು? ಹಿಟ್ಟು ಬೂದಿಗಳನ್ನು ಒಟ್ಟಾಗಿ ಕಲಸಬಹುದೆ?” + +ಈ ಮಾತಿನಿಂದ ಶೀನಪ್ಪಯ್ಯನವರ ಗಲಿಬಿಲಿ ಮತ್ತಷ್ಟು ಹೆಚ್ಚಿತು. ಹಿಟ್ಟು ಬೂದಿಗಳನ್ನು ಒಂದು ಮಾಡಬಾರದೆಂದು ನಾಯಕರು ಎಚ್ಚರ ಕೊಟ್ಟಿದ್ದರು; ಅದೇ ಎಚ್ಚರವನ್ನು ಇಂದು ಪರೀಕ್ಷಕರೂ ಕೊಟ್ಟರಲ್ಲ! ನಾಯಕರಿಗೆ, ಮಗ ಹಿಟ್ಟು; ಒಕ್ಕಲ ಮಗ ಬೂದಿ. ಪರೀಕ್ಷಕರಿಗೆ ಅದರ ವಿಪರೀತ. “ಸ್ವಾಮೀ! ಹಳ್ಳಿಯ ಸಮಸ್ಯೆಗಳೇ ಬೇರೆ” ಎಂದು ಮಾಸ್ತರರು ವಿನಯದಿಂದ ಆಡಿದರು. “ಏನು ದೊಡ್ಡ ಶಬ್ದ ಪ್ರಯೋಗ ಮಾಡುತ್ತೀರಿ? ಮಕ್ಕಳ ಮೆದುಳಿನ ಶಕ್ತಿಯನ್ನು ಪರೀಕ್ಷಿಸದೆ ವರ್ಗದಲ್ಲಿ ಸೇರಿಸುವುದೇ? ಶಿಕ್ಷಣ ಶಾಸ್ತ್ರದ ಕಾಬಳ್ಳಿ ಗೊತ್ತಿಲ್ಲದವರಂತೆ ಆಡುತ್ತೀರಲ್ಲ? ಈ ಹುಡುಗನನ್ನು – ಲಿಂಗಪ್ಪನನ್ನು ಇಂದೇ ಮೇಲಿನ ದರ್ಜೆಗೆ ಹಾಕಿರಿ; ನೋಡೋಣ” ಪರೀಕ್ಷಕನು ಕೊಟ್ಟ ಸುಗ್ರೀವಾಜ್ಞೆ ಹೀಗಿತ್ತು. + +ಶೀನಪ್ಪಯ್ಯನವರು ಬೆಪ್ಪಾದರೂ ಮನಸ್ಸಿನೊಳಗೆ ಒಂದಿಷ್ಟು ಸಮಾಧಾನವಾಯಿತು. ಲಿಂಗಪ್ಪ ಮೇಲಿನ ವರ್ಗಕ್ಕೆ ಅರ್ಹನೆಂಬುದು ಅವರಿಗೆ ತಿಳಿಯದ ವಿಷಯವಾಗಿರಲಿಲ್ಲ. ಆದರೆ, ಅದು ಹೇಳುವ ವಿಷಯವಾಗಿ ಮಾತ್ರ ಇರಲಿಲ್ಲ. ತಿಮ್ಮಣ್ಣ ನಾಯಕರ ಸಿಡುಕಿನ ಮೋರೆಯನ್ನು ನೋಡುವುದು ಹೇಗೆ ? ಎನ್ನುವ ಭೀತಿಯಿಂದ ಆಗಬೇಕಾದುದನ್ನವರು ಮಾಡಿರಲಿಲ್ಲ. ಇಂದು ಪರೀಕ್ಷಕರು ಅವರ ಅಭಿಪ್ರಾಯವನ್ನೇ ಸಮರ್ಥಿಸಿ, ಬಹಿರಂಗವಾಗಿ ಹೇಳಿ ಅವರ ನಿಷ್ಠುರ ಕಾರ್ಯದ ಹೊಣೆಯನ್ನು ತಾವೇ ಹೊತ್ತರು. “ಕಿಟ್ಟ ಅದೇ ವರ್ಗದಲ್ಲಿರುವಾಗ ಲಿಂಗಪ್ಪನನ್ನು ಮೇಲೆ ಹಾಕಿದಿರಲ್ಲ?” ಎಂಬ ಪ್ರಶ್ನೆ ಬಂದರೆ ಪರೀಕ್ಷಕರನ್ನು ಬೆರಳೆತ್ತು ತೋರಿಸಿ ತಮ್ಮ ಪರಾಧವೇನೂ ಇಲ್ಲವೆಂದು ಹೇಳಿಬಿಡಬಹುದಲ್ಲ? ಆದರೆ, ಇದೆಲ್ಲ ತಾತ್ಕಾಲಿಕ ಸಮಾಧಾನವನ್ನು ಹೊಂದುವ ಕ್ರಮವಲ್ಲದೆ ಮತ್ತೇನೂ ಅಲ್ಲ. ನಾಯಕರನ್ನು ಇದಿರಿಸುವಾಗಲೇ ಪರಿಸ್ಥಿತಿಯ ಭೀಕರತೆ ಅನುಭವಕ್ಕೆ ಬಂದೀತಷ್ಟೆ. ಮಾಸ್ತರರ ಎದೆ ಕುದಿಯುತ್ತಲೆ ಇತ್ತು. + +ಸಂಜೆಯ ಆಟದ ಸಮಯಕ್ಕೆ ಇನ್ನೊಂದು ಘಟನೆ ನಡೆಯಿತು. ಪರೀಕ್ಷಕರು ಮಕ್ಕಳ ಆಟವನ್ನು ನೋಡಬೇಕೆಂದರು. ಆಟಗಳು ಹಳ್ಳಿಯ ಆಟಗಳೇ ಆಗಿರಬೇಕೆಂದರು. ಶೀನಪ್ಪಯ್ಯನವರು ಹುಲಿ ದನಗಳ ಆಟದಲ್ಲಿ ಅಪಾಯವುಂಟೆಂದು ಭಾವಿಸಿ ಕೊರಡೆಯಾಟವನ್ನು ಆಡಿಸಿದರು. ಮಕ್ಕಳೆಲ್ಲ ವರ್ತುಲವಾಗಿ ಕುಳಿತಿರಬೇಕು. ಒಬ್ಬನು ಸುತ್ತಲೂ ಓಡುತ್ತಾ ಬಂದು ಒಬ್ಬನ ಬೆನ್ನ ಹಿಂದೆ ಕೊರಡೆಯನ್ನಿಟ್ಟು ಹೋಗಬೇಕು. ತನ್ನ ಬೆನ್ನ ಹಿಂದೆ ಕೊರಡೆಯಿದೆ ಎಂದು ತಿಳಿಯದವನ ಬೆನ್ನಿಗೆ ಎರಡೇಟು ಬೀಳುತ್ತದೆ. ತಿಳಿದ ಪಕ್ಷದಲ್ಲಿ ಅವನು ಎದ್ದು ಹೋಗಿ ಕೊರಡೆಯಿಡುವ ಕೆಲಸವನ್ನು ತಾನೇ ಮಾಡುತ್ತಾನೆ. ಇನ್ನೊಬ್ಬರ ಬೆನ್ನಿಗೆ ಹೊಡೆಯುವ ಹಂಚಿಕೆ ಹೂಡುತ್ತಾನೆ. ಶೀನಪ್ಪಯ್ಯನವರಿಗೆ ಈ ಆಟದಲ್ಲಾದರೂ ಕಿಟ್ಟನ ಕೈಯಿಂದ ಲಿಂಗಪ್ಪನ ಬೆನ್ನಿಗೆ ಬಲವಾಗಿ ಎರಡೇಟು ಕೊಡಿಸಬೇಕೆಂಬ ಉದ್ದೇಶವಿತ್ತು. ಓದುವ ವಿಷಯದಲ್ಲಿ ಅಪಮಾನ ಹೊಂದಿದ ಕಿಟ್ಟನಿಗೆ ಆಟದಲ್ಲಾದರೂ ಕೌಶಲವುಂಟೆಂದು ತೋರಿಸುವುದು ಮಾತ್ರವಲ್ಲ; ಒಕ್ಕಲು ಮಗನಿಂದಾದ ಅಪಮಾನಕ್ಕೆ ಪ್ರತೀಕಾರವೂ ಆಗಬೇಕಾಗಿದ್ದಿತು. ಅದೂ ಪರೀಕ್ಷಕರ ಸನ್ನಿಧಿಯಲ್ಲಿ! ಆದರೆ ಈ ಸಂದರ್ಭದಲ್ಲಿಯೂ ಆದುದು ವಿಪರೀತ. ತನ್ನ ಬೆನ್ನ ಹಿಂದೆ ಇಟ್ಟ ಕೊರಡೆಯನ್ನು ಲಿಂಗಪ್ಪ ಬೇಗನೆ ಕಂಡುಕೊಂಡ. ಕಿಟ್ಟನು ಬೆಪ್ಪನಂತೆ ಎಲ್ಲಿಗೋ ನೋಡುತ್ತಾ ಕುಳಿತು, ಲಿಂಗಪ್ಪನ ಬಲವಾದ ಕೊರಡೆಯೇಟನ್ನು ತಿಂದು ಮುಖವನ್ನು ಹುಳ್ಳಗೆ ಮಾಡಿಕೊಂಡ! ಶೀನಪ್ಪಯ್ಯನ ಪ್ರಾಣಪಕ್ಷಿಯ ರೆಕ್ಕೆ ಮುರಿದಂತಾಯಿತು. ತಿಮ್ಮಣ್ಣ ನಾಯಕರ ಹುಲಿಮೀಸೆ ಕಣ್ಣಮುಂದೆ ಹೊಳೆಯುತ್ತಿತ್ತು. ಆಟವೆಲ್ಲ ಮುಗಿದ ಮೇಲೆ ಪರೀಕ್ಷಕರು ಶಾಲೆಯನ್ನು ಕೊಂಡಾಡಿದರು. ಶೀನಪ್ಪಯ್ಯನವರ ಕಾರ್ಯಶ್ರದ್ಧೆಯನ್ನು ಹೊಗಳಿದರು. ಈ ಗುಡ್ಡಗಾಡಿನಲ್ಲಿ ಶಾಲೆಯನ್ನು ಸ್ಥಾಪಿಸಿದ ನಾಯಕರನ್ನು ಮುಕ್ತಕಂಠವಾಗಿ ಸ್ತುತಿಸಿ, ನಾಯಕರನ್ನು ನೋಡಬೇಕೆಂಬ ಅಪೇಕ್ಷೆಯನ್ನು ಪ್ರಕಟಿಸಿದರು. ಆದರೆ ನಾಯಕರು ಊರಲ್ಲಿ ಇರಲಿಲ್ಲ. ಇನ್ನೊಮ್ಮೆ ಬಂದಾಗ ಕಾಣುತ್ತೇನೆ ಎಂದರು. ಈ ಹುಡುಗನ ವಿಷಯದಲ್ಲಿ – ಲಿಂಗಪ್ಪನ ವಿಷಯದಲ್ಲಿ – ಹೆಚ್ಚು ಆಸಕ್ತಿ ವಹಿಸಿರಿ ಎಂದು ಶೀನಪ್ಪಯ್ಯನವರಿಗೆ ಪ್ರತ್ಯೇಕ ಸುಚನೆ ಕೊಟ್ಟರು. ಸೂಚನೆಗೇನೋ ಹುಂ ಎಂದರು ಶೀನಪ್ಪಯ್ಯ. ಆದರೆ ಮನಃಪಟದಲ್ಲಿ ಲಿಂಗಪ್ಪ ಕಿಟ್ಟನಿಗೆ ಕಲಿಸಿದ ಚಿತ್ರ! ಕೊರಡೆಯಿಂದ ಏಟು ಕೊಟ್ಟ ಚಿತ್ರ! ಇದರ ಫಲವಾದ ಅನೇಕ ಭಯಾನಕ ಪರಿಸ್ಥಿತಿಗಳ ಚಿತ್ರ. ಎಂದೂ ಕೆಡದ ಶೀನಪ್ಪಯ್ಯನ ತಲೆ ಆ ದಿನ ಸಂಪೂರ್ಣ ಕೆಟ್ಟುಹೋಯಿತು. + +ಶಾಲೆಯಲ್ಲಿ ನಡೆದ ಸಂಗತಿ ಲಿಂಗಪ್ಪನಿಗಿಂತ ಮುಂಚಿತವಾಗಿ ಅವನ ಮನೆಗೆ ತಲುಪಿತ್ತು. ಕೆಂಚಿ, “ಲಿಂಗ! ಚಿಕ್ಕ ದನಿಗಳಿಗೆ ಏನುಮಾಡಿಬಿಟ್ಟೆ?” ಎಂದು ಕಣ್ಣೀರು ಸುರಿಸಿದಳು. ಸೋಮಪ್ಪನಿಗೆ ಮಗನ ನಡತೆಯಲ್ಲಿ ತಪ್ಪೇನೂ ತೋರಲಿಲ್ಲ. ಪರೀಕ್ಷಕರು ಎಂದರೆ ಸರಕಾರದವರಲ್ಲವೇ? ಸರಕಾರದವರು ಹೇಳಿದಂತೆ ಮಾಡಿದರೆ ತಪ್ಪೇನು? ಆದರೆ ಎಲ್ಲ ಸಮಯದಲ್ಲಿಯೂ ಹೇಳುವುದಕ್ಕೂ ಕೇಳುವುದಕ್ಕೂ ಸರಕಾರದವರು ಇರುವುದಿಲ್ಲ. ತಿಮ್ಮಣ್ಣ ನಾಯಕರು ಸೋಮಪ್ಪನನ್ನು ಸಜೀವವಾಗಿ ಹೂಳಿದರೂ ಈ ಗ್ರಾಮದಲ್ಲಿ ಕೇಳುವ ಸರಕಾರವಿಲ್ಲ; ನಾಯಕರ ಸರಕಾರವಲ್ಲದೆ ಬೇರೆ ಸರಕಾರ ಇಲ್ಲಿಲ್ಲ! ಸೋಮಪ್ಪನ ರಕ್ತ ಕಣಗಳಲ್ಲಿಯೂ ಭಯ ಅಡಸಿತು. “ಅನ್ನ ಕೊಡುವ ಧನಿಯಲ್ಲವೆ ಲಿಂಗು! ನೀನು ಹಾಗೆ ಮಾಡಬಹುದೆ? ” ಎಂದು ಮಾತ್ರ ಕೇಳಿದ ಸೋಮಪ್ಪ. ಲಿಂಗಪ್ಪನಿಂದು ಒಕ್ಕಲ ಮಗನಾಗಿರಲಿಲ್ಲ. “ನನಗೆ ಅವರ ಅನ್ನ ಬೇಕಾಗಿಲ್ಲ” ಎಂದು ಒಂದು ಬಗೆಯ ಠೇಂಕಾರದಿಂದ ಲಿಂಗಪ್ಪ ಉತ್ತರ ಕೊಟ್ಟ. ಉತ್ತರದಲ್ಲಿ ತಪ್ಪೇನೂ ತೋರಲಿಲ್ಲ. ಆದರೆ, ಅವನ ಹಾವಭಾವ ಸೋಮಪ್ಪನಿಗೆ ಮೆಚ್ಚಲಿಲ್ಲ. ಮಾಡುವುದೇನು? ಓದಿನ ಕಷ್ಟಸುಖ ಅವನಿಗಲ್ಲದೆ ತನಗೆ ಗೊತ್ತ್ತೆ? ಶಾಲೆಗೆ ಹೋದ ಮೇಲೆ ಅಲ್ಲಿಯ ರಿವಾಜಿಯಂತೆ ನಡೆದುಕೊಳ್ಳಬೇಕಾಗುತ್ತದೆ. ಲಿಂಗಪ್ಪ ಮಾಡಿದುದು ಅಷ್ಟನ್ನೇ! ಆದುದು ಆಗುತ್ತದೆ! ಎಂದಿಷ್ಟೆ ಮನಸ್ಸಿನಲ್ಲಿ ಯೋಚಿಸಿದ. + +ಮರುದಿನ ನಾಯಕರು ಮಂಗಳೂರಿನಿಂದ ಬಂದರು. ಶೀನಪ್ಪನವರನ್ನು ಬರಮಾಡಿದರು. ಎಲ್ಲವನ್ನೂ ವಿವರ ವಿವರವಾಗಿ ಕೇಳಿದರಂತೆ. ಅವರೊಳಗೆ ಏನೆಲ್ಲ ನಡೆಯಿತೆಂದು ಯಾರಿಗೂ ತಿಳಿದಿಲ್ಲ. ಶೀನಪ್ಪಯ್ಯ ನಾಯಕರ ಮನೆಯಿಂದ ಹೊರಟು ಬರುವಾಗ ಅವರ ಮುಖ ಕಪ್ಪಾಗಿದ್ದುದನ್ನು ಕಂಡವರಿದ್ದಾರೆ. ಅಂದಿನಿಂದ ನಾಯಕರು ಸೊರಗಿ ಹೋಗಿದ್ದರು. ಗ್ರಾಮದಲ್ಲಿ ಶಾಲೆಯನ್ನು ತೆರೆಯುವಾಗ ತಮ್ಮ ಮಗನಿಗೂ ವಿದ್ಯೆ ದೊರಕುವುದಲ್ಲ – ಎನ್ನುವ ಉದ್ದೇಶವಿತ್ತು ಅವರಲ್ಲಿ. ಆದರೆ ಈಗ ವಿಚಾರಿಸುವಲ್ಲಿ ಶಾಲೆಯನ್ನು ತೆರೆದುದೇ ತಪ್ಪಾಗಿ ತೋರಿತು. ತಮ್ಮ ಮಕ್ಕಳನ್ನು ಮಂಗಳೂರಿಗೋ ಪುತ್ತೂರಿಗೋ ಕಳುಹಿಸಿಕೊಡಬಹುದಾಗಿತ್ತು. ಇಡೀ ಗ್ರಾಮವನ್ನೇ ತಮ್ಮ ಸಂಸಾರವೆಂದು ಭಾವಿಸಿದ ಕಾರಣ ಅಲ್ಲವೆ ಹೀಗಾಯಿತು? ಊರಲ್ಲೀಗ ಮುಖ ತೋರಿಸುವ ಹಾಗಿಲ್ಲ. ಸೋಮಪ್ಪನನ್ನು ದೂರಿ ಫಲವಿಲ್ಲ. ಹುಡುಗನನ್ನು ಶಾಲೆಗೆ ಕಳುಹಿಸಲು ತಮ್ಮ ಒಪ್ಪಿಗೆಯನ್ನಾತ ಪಡೆದಿದ್ದನಲ್ಲವೆ? ಲಿಂಗಪ್ಪನಿಗೂ ಎಷ್ಟು ಬುದ್ದಿ ಇದ್ದೀತು? ತಪ್ಪು ಮಾಡಿದವರು ಮಾಸ್ತರ್ ಶೀನಪ್ಪಯ್ಯ – ಮತ್ತು ಶಾಲಾ ಪರೀಕ್ಷಕರು. ಕಲಿಯುವದರಲ್ಲಿ ಯಾರೆಷ್ಟು ಹೆಡ್ಡರು ಅಥವಾ ಗಟ್ಟಿಗರಾಗಿದ್ದರೂ ಧನಿಯ ಮುಖಕ್ಕೆ ಏಟು ಕೊಡುವಂತೆ ಒಕ್ಕಲಿನಿಂದ ಪಾಠ ಹೇಳಿಸಬಹುದೇ? ಸಾಲದುದಕ್ಕೆ ಕೊರಡೆಯಾಟದ ನೆವದಲ್ಲಿ ಹೊಡೆಯಿಸಬಹುದೇ? ಒಕ್ಕಲು ಇಂದೂ ಒಕ್ಕಲು ನಾಳೆಯೂ ಒಕ್ಕಲೆ. ಅವನನ್ನು ಎಂದೂ ಏನೂ ಮಾಡಬಹುದು. ಆದರೆ ಈ ಇಬ್ಬರನ್ನು? ಪರೀಕ್ಷಕರು ಬಾಯಿಗೆ ಬಂದಂತೆ ಬೊಗಳಿಯಾರು. ಶೀನಪ್ಪಯ್ಯ ಅವರ ತಾಳಕ್ಕೆ ತಕ್ಕಂತೆ ಕುಣಿದಾರು. ಆದರೆ ಈ ಗ್ರಾಮದಲ್ಲಿ ಮುಖ ಎತ್ತಿ ನಡೆಯಬೇಕಾದವರು ತಾವು! ನೋಡೋಣ! ಇನ್ನೆಷ್ಟು ಕಾಲ ಈ ಆಟ ನಡೆಯುತ್ತದೆ? ಗ್ರಾಮಕ್ಕೆ ಇನ್ಸ್ಪೆಕ್ಟರರು ಹೇಗೆ ಬಂದಾರು? ಮಾಡಿದ ಅಪಮಾನಕ್ಕೆ ಪ್ರಾಯಶ್ಚಿತ್ತ ಮಾಡದೆ ಶೀನಪ್ಪಯ್ಯನವರು ಹೇಗೆ ಕಾಲಕ್ಷೇಪ ಮಾಡಿಯಾರು? ನೋಡೋಣ! ಎಂದು ನಾಯಕರು ತಮ್ಮ ಆಪ್ತರೊಬ್ಬರಲ್ಲಿ ಹೇಳಿದರೆಂದೂ ಗುಜ ಗುಜ ಸುದ್ದಿಯಿತ್ತು. + +ಎಲ್ಲರೂ ಕೇಳುವ ಮಟ್ಟಿಗೆ ನಾಯಕರು ಇಷ್ಟೇ ಹೇಳುತ್ತಿದ್ದರು. ತಮ್ಮ ಗುತ್ತಿನ ಮನೆ ಅತಿ ಪುರಾತನದ ಮನೆ. ಅಂದಿನಿಂದ ಇಂದಿನವರೆಗೆ ನಡೆವಳಿ ತಪ್ಪಲಿಲ್ಲ. ಹಟ್ಟಿ ತುಂಬ ದನಕರುಗಳು. ಹೊಲ ತುಂಬ ಒಕ್ಕಲುಗಳು. ಇವು ಎಷ್ಟೋ ಸತ್ತಿವೆ, ಸತ್ತಂತೆ ಹುಟ್ಟುತ್ತ ಬಂದಿವೆ. ಗೋಪೂಜೆಯ ದಿನ ಆಕಳಿಗೆ ಹಬ್ಬ , ವಿಷುವಿನ ಕಣಿಯ ದಿನ ಒಕ್ಕಲುಗಳಿಗೆ ಪಾಯಸ. ಇದಕ್ಕಿಂತ ಹೆಚ್ಚಿನ ರಿವಾಜಿಯನ್ನು ಮಾಡಬಾರದಿತ್ತು. ದುಡಿಯುವವರಿಗೆ ಕೈಗೆ ಹಾರೆ ಕೊಡ ಬೇಕಾಗಿತ್ತಲ್ಲದೆ ಬಳಪ ಕೊಡಬಾರದಿತ್ತು. ಮಾಡಿದುದು ತಪ್ಪಾಯಿತು. ಇನ್ನು ಇತರರನ್ನು ದೂರಿ ಫಲವುಂಟೆ?ನಾಯಕರ ಸ್ವಭಾವ ಗೊತ್ತಿದ್ದವರಿಗೆ ಇಂತಹ ಮಾತಿನ ಅರ್ಥವೇನೆಂಬುದು ಚೆನ್ನಾಗಿ ಗೊತ್ತು. + +4 + +ತಿಂಗಳು ಕಳೆದು ಹೋಯಿತು. ಶೀನಪ್ಪಯ್ಯ – ನಾಯಕರ ಭೆಟ್ಟಿ ನಡಿಯದೆ ಎಷ್ಟೋ ದಿನವಾಗಿತ್ತು . ಶೀನಪ್ಪಯ್ಯ ತಾನಾಗಿ ಹಾರಯಿಸಿ ಹೋಗಲಿಲ್ಲ. ನಾಯಕರು ಕರೆಯಿಸಲಿಲ್ಲ. ಮೈಗೆ ಹಚ್ಚಿಕೊಂಡ ಕೆಸರನ್ನು ತೊಳೆಯದೆ ನಾಯಕರ ಮುಖ ನೋಡುವುದು ಹೇಗೆ? ಎಂದು ಶೀನಪ್ಪಯ್ಯ; ನೋಡೋಣ ಹೊಟ್ಟೆ ಹೊರೆಯುವುದಕ್ಕಾಗಿ ವೇಷ ಹಾಕಿಕೊಳ್ಳುವ ಉಪಾಧ್ಯಾಯನಿಗೆ ತನ್ನ ದೋಷದ ಅರಿವಾಗುವುದೊ? ಅರಿತ ಮೇಲೆ ಏನು ಮಾಡುತ್ತಾನೆ ನೋಡೋಣ …. ತಾವು ಸ್ವತಃ ಕಾರ್ಯಕ್ರಮ ಕೈಕೊಳ್ಳುವುದಿದ್ದರೆ ಮತ್ತೆ ಅಲ್ಲವೆ? ಎಂದು ನಾಯಕರು. ಹೀಗೆ ಒಬ್ಬರು ಇನ್ನೊಬ್ಬರ ಸಂಪರ್ಕವನ್ನು ತಾತ್ಕಾಲ ದೂರ ಮಾಡಿದ್ದರು. + +ಈ ಮಧ್ಯದಲ್ಲಿ ನಾಯಕರ ಮಗ ಕಿಟ್ಟಣ್ಣ ಒಮ್ಮೊಮ್ಮೆ ಮಾತ್ರ ಶಾಲೆಗೆ ಬರುತ್ತಿದ್ದ. ಫಕ್ಕನೆ ಬರುವುದನ್ನು ನಿಲ್ಲಿಸಿದರೆ ಒಕ್ಕಲಿಗ ಸೋತನೆಂಬ ಅರ್ಥವಾಗುವುದಿಲ್ಲವೇ? ಆದುದರಿಂದ ವಾರಕ್ಕೆ ಎರಡು ಮೂರು ಬಾರಿ ಬರುವುದು; ಅಷ್ಟೇ ಬಾರಿ ಗೈರ್ ಹಾಜರಿಯಾಗುವುದು ರೂಢಿಯಾಗಿತ್ತು. ಯಾಕೆ ಸರಿಯಾಗಿ ಬರುವುದಿಲ್ಲ? ಎಂದು ಕೇಳುವ ಉಪಾಧ್ಯಾಯರಿಲ್ಲ. ಕಾರಣ ಎಲ್ಲರಿಗೂ ಗೊತ್ತಿದೆ. ಮೊದಲೇ ಕಲಿಯುವುದರಲ್ಲಿ ದಡ್ಡ. ಇತ್ತೀಚೆಗೆ ಶಾಲೆಗೆ ಬಂದು ತಂಟೆಯನ್ನಲ್ಲದೆ ಬೇರೇನೂ ಮಾಡದ ಕಿಟ್ಟಣ್ಣನಲ್ಲಿ ಆಕ್ಷೇಪಿಸಿ ಮಾತಾಡುವವರೂ ಇಲ್ಲ. ಹಿಂದೆ – “ನಮ್ಮ ಹುಡುಗ ಮಹಾಪೋಕರಿ, ಜಾಗ್ರತೆ ನೋಡಿಕೊಳ್ಳಿ ಮಾಸ್ತರರೇ!” ಎಂದು ನಾಯಕರು ಎಚ್ಚರಿಸಿದ್ದರು. ಇಂದು ಪೋಕರಿಯಲ್ಲಿ ಪಿಟ್ಟೆಂದು ಮಾತಾಡುವ ಎದೆಯುಳ್ಳವರು ಶಾಲೆಯಲ್ಲಿ ಯಾರೂ ಇಲ್ಲ. ಶಾಲೆ ನಾಯಕರದು ; ಆ ನೆಲ ನಾಯಕರದು; ಶಾಲೆಯೊಳಗಿರುವ ಪ್ರತಿಯೊಂದು ಒಡವೆ ಅವರದು. ಉಪಾಧ್ಯಾಯರ ಕೈಮೈಗಳು ಮಾತ್ರ ನಾಯಕರಿಗೆ ಸೇರಿದುದಲ್ಲ. ಇಂತಹ ಸ್ಥಿತಿಯಲ್ಲಿ ನಾಯಕರ ಮಗ ಒಂದಿಷ್ಟು ಹೆಚ್ಚು ಕಡಿಮೆ ಮಾಡಿದರೆ ಹೇಳುವುದಕ್ಕೇನಿದೆ? + +ಲಿಂಗಪ್ಪನ ಮನಸ್ಸೂ ಈಗ ಬಹಳ ಬದಲಾವಣೆ ಹೊಂದಿದೆ. ಧನಿಗಳ ಮಗನಾಗಿ ಹುಟ್ಟಿದುದರಿಂದ ಕಿಟ್ಟನಿಗೆ ಮರ್ಯಾದೆ ಕೊಡದೆ ನಿರ್ವಾಹವಿಲ್ಲ ಎನ್ನುವ ಅಭಿಪ್ರಾಯ ಹೋಗಿ, ಅವನಿಗೇನು ಕೋಡು ಬಂದಿದೆಯೆ? ಎನ್ನುವಂತೆ ರೂಪಾಂತರ ಹೊಂದಿತ್ತು. ಶಾಲಾ ಪರೀಕ್ಷೆ ನಡೆದು ತನಗೆ ಇನ್ಸ್ಪೆಕ್ಟರರ ಪ್ರಶಂಸೆ ದೊರೆತ ಮೇಲಂತೂ ಅವನು ಬೇರೆ ಹುಡುಗನಾಗಿದ್ದ. ಮಾತಿಗೆ ಮಾತು; ಕೈಗೆ-ಕೈ! ಏಕೆ ಹೆದರಬೇಕು? ಎಂಬ ದಿಟ್ಟತನವನ್ನು ಕೆಲವೊಮ್ಮೆ ಹೊರಗೆ ಕಾಣಿಸಿಕೊಳ್ಳಲು ಪೇಚಾಡಿದಾಗ ನಾಯಕರ ಮನೆತನದ ಮರ್ಯಾದೆಯನ್ನು ಕಾಪಾಡುವ ಕಾವಲುಗಾರ ಶೀನಪ್ಪಯ್ಯನವರು, ಬೆಚ್ಚಗೆ ಬೆನ್ನಿಗೆ ಎರಡೇಟು ಕೊಡುತ್ತಿದ್ದರು. ಇದರಿಂದ ಲಿಂಗಪ್ಪನಿಗೆ ತನ್ನ ನೆಲೆಯೇನೆಂದು ತಿಳಿದು ಬರುತ್ತಿತ್ತು. ನಾಯಕರು ತಮಗೆ ಉಪಕಾರ ಮಾಡಿದ್ದಾರೆ, ಅವರ ಉಪಕಾರಕ್ಕೆ ತಮ್ಮಿಂದ ಅಪಕಾರವಾಗಿದೆ. ಇದನ್ನು ಹೋಗಲಾಡಿಸುವುದಕ್ಕಾಗಿ ನೆವ ಇದ್ದೂ ಇಲ್ಲದೆಯೂ ಶೀನಪ್ಪಯ್ಯನವರು ಲಿಂಗಪ್ಪನ ಮೇಲೆ ತಮ್ಮ ಕೋಪದ ಮುದ್ರೆಯನ್ನು ಹೊಡೆಯುತ್ತಲೇ ಇದ್ದರು. ವಾರಕ್ಕೆ ಒಮ್ಮೆಯಾದರೂ ಮೈಯೆಲ್ಲ ನೋವು ಎಂದು ಲಿಂಗಪ್ಪ ಹುಯಿಲಿಡದೆ ಇರುತ್ತಿರಲಿಲ್ಲ. ಕೆಂಚಿ ಎಣ್ಣೆ ಕಾಯಿಸಿ ಮೈಗೆ ಉಜ್ಜಿ ಬಿಸಿನೀರಿನಲ್ಲಿ ಸ್ನಾನ ಮಾಡಿಸುತ್ತಿದ್ದಳು. ಇವೆಲ್ಲ ಓದಿನಲ್ಲಿರುವ ಕಷ್ಟಗಳೆಂದೂ ಇವುಗಳನ್ನು ಸಹಿಸದೆ ಓದು ಬರುವುದೇ? ಎಂದೂ ಆ ಗಂಡ ಹೆಂಡಿರು ಭಾವಿಸುತ್ತಿದ್ದರು. ಲಿಂಗಪ್ಪ ಹೀಗೆ ಎಣಿಸಿದ – ಎಲ್ಲರೂ ಧನಿಗಳ ಪಕ್ಷಪಾತಿಗಳು. ಒಕ್ಕಲಾಗಿ ಹುಟ್ಟಿದವನು ಪಾಠ ಕಲಿಯಬೇಕಾದ ಕ್ರಮವೇ ಇದು. ಶಾಲೆಗೆ ಹೋಗುವುದಿಲ್ಲ ಎಂದು ಕುಳಿತರೆ ಆದೀತೆ? ಶಾಲೆಗೆ ಹೋದ ಮೇಲೆ ಎಲ್ಲವನ್ನೂ ಸಹಿಸಲೇಬೇಕು! ಆಗಲಿ; ಇನ್ನೆಷ್ಟು ವರ್ಷ ಈ ಕಷ್ಟವಿದ್ದೀತು! + +ಇನ್ನೊಮ್ಮೆ ಪರೀಕ್ಷಕರು ಬರುವಾಗ ಇನ್ನೆರಡು ದರ್ಜೆ ಮೇಲಕ್ಕೆ ಹಾರಿಬಿಟ್ಟರೆ ಎರಡೇ ವರ್ಷಗಳೊಳಗೆ ಇಲ್ಲಿ ಕಲಿಯ ಬೇಕಾದುದನ್ನೆಲ್ಲ ಮುಗಿಸಿಬಿಡಬಹುದಲ್ಲ! ಮತ್ತೆ ಯಾರ ಮುಲಾಜಿಯೇನು? ಗದ್ದೆಯುಳುವಾಗ ಓಡಲಾರದ ಕೋಣದೊಡನೆ ಓಡುವ ಕೋಣದ ಬೆನ್ನಿಗೂ ಚಡಿ ಬೀಳುತ್ತದೆ. ಇದರಿಂದ ಓಡುವ ಕೋಣ ಇನ್ನಷ್ಟು ಓಡಿ ಗದ್ದೆಯನ್ನು ಬೇಗನೆ ಉತ್ತು ಬಿಡುವುದಲ್ಲವೆ? ಅದೇ ರೀತಿಯಲ್ಲಿ ತನಗೂ ಪೆಟ್ಟು ಬಿದ್ದರೇನಾಯಿತು? ಇದರಿಂದ ಪಾಠ ಕಲಿತು ಬೇಗನೆ ಗಟ್ಟಿಗನಾಗಬಹುದು. ಗಟ್ಟಿಗನಾದಷ್ಟು ಬೇಗನೆ ಪೆಟ್ಟಿನಿಂದ ದೂರವಾಗಬಹುದು. ಅಂತೂ ಶಾಲೆಯನ್ನು ಬಿಡುವ ಹಾಗಿಲ್ಲ! ಕಿಟ್ಟಣ್ಣನ ಅಧಿಕಪ್ರಸಂಗವನ್ನು ಸಹಿಸುವಂತೆಯೂ ಇಲ್ಲ. + +ಮಕ್ಕಳೆಲ್ಲ ಶಾಲೆಯೊಳಗಿರುವಾಗಲೆ ಯಾರೇನು ಮಾಡಿದರೆಂದು ಪರಾಂಬರಿಸಿ, ಅವರವರ ತಪ್ಪಿಗೆ ತಕ್ಕಂತೆ ಶಿಕ್ಷೆಯನ್ನು ವಿಧಿಸುವುದು ಕಷ್ಟ. ಅವರು ಹೊರಗೆ ಮಾಡಿದುದನ್ನೆಲ್ಲ ವಿಚಾರಿಸಲಾಗುತ್ತದೆಯೇ? ಹೀಗಿದ್ದರೂ, ನಾಯಕರ ಮಗ ಕಿಟ್ಟಣ್ಣ ಗುತ್ತಿನ ಮನೆಯಿಂದ ಹೊರಗೆ ಕಾಲಿಟ್ಟು ಪುನಃ ಬಂದು ಸೇರುವವರೆಗೆ ಅವನ ಮಾನರಕ್ಷಣೆಯ ಭಾರ ತಮ್ಮದು ಎನ್ನುವಂತೆ ಶೀನಪ್ಪನವರು ಪ್ರತಿದಿನ ಅವನ ದೂರುಗಳನ್ನು ಕೇಳುವರು. ಒಂದು ದಿನ ಅಣಕಿಸಿದ ಕತೆ; ಇನ್ನೊಂದು ದಿನ ಕಲ್ಲೆಸೆದ ದೂರು; ಮಗದೊಂದು ದಿನ ಗದ್ದೆಯ ಅಂಚಿನಲ್ಲಿ ಬರುವಾಗ ಲಿಂಗಪ್ಪ ದಾರಿಯನ್ನು ಬಿಟ್ಟು ಕೊಡಲಿಲ್ಲ ಎಂಬ ಚಾಡಿ! ತಪ್ಪಿಗೆ ತಕ್ಕಂತೆ ಪ್ರಾಯಶ್ಚಿತ್ತ ವಿಧಿಸುತ್ತಿದದರು ಶೀನಪ್ಪಯ್ಯನವರು. ಒಂದು ದಿನ ಬಲುದೊಡ್ಡ ಫಿರ್ಯಾದಿಯೊಂದು ಬಂತು. + +ಮಳೆಗಾಲವದು. ಗುತ್ತಿನ ಮನೆಯಿಂದ ಶಾಲೆಗೆ ಹೋಗುವ ದಾರಿಯ ನಡುವೆ ಒಂದು ತೋಡು ಹಾದುಹೋಗುತ್ತಿದೆ. ಮಳೆ ಬಂದರೆ ನಿಮಿಷದಲ್ಲಿ ಆ ತೋಡು ತುಂಬಿ ಹರಿಯುತ್ತದೆ. ಅದನ್ನು ದಾಟುವುದಕ್ಕೆ ಎರಡು ಅಡಿಕೆ ಮರದ ತುಂಡುಗಳ ಸಂಕ. ಒಬ್ಬ ನಡೆಯುವಾಗಲೂ ಅದು ತಕಪಕ ಕುಣಿಯುತ್ತದೆ. ಜಾಗ್ರತೆಯಿಂದ ಎಡಬಲಗಳ ಭಾರವನ್ನು ಸಮ ತೂಕದಲ್ಲಿಟ್ಟು ಸಂಕದ ಮೇಲೆ ಹೆಜ್ಜೆಯಿಡಬೇಕು. ಮಳೆಯಿಲ್ಲದಾಗ ಸಂಕದಿಂದ ತೋಡಿನ ತಳದಲ್ಲಿರುವ ಮರಳರಾಶಿಗೆ ಮಕ್ಕಳು ಹಾರಿ ಏರಿಹೋಗುತ್ತಿದ್ದರು. ಮಳೆಗಾಲದಲ್ಲಿ ಮಾತ್ರ ಜಾಗರೂಕತೆ ಎಷ್ಟಿದ್ದರೂ ಸಾಲದು. ಆ ದಿನ ಸ್ವಲ್ಪ ಮಳೆ ಬಂದಿತ್ತು. ತೋಡಿನಲ್ಲಿ ಮೊಣಕಾಲಿನವರೆಗೆ ಕೆಂಪುನೀರು ಹರಿದಿರಬಹುದು. ಸಂಜೆಗೆ ಪಾಠ ಬಿಟ್ಟು ಮನೆಯ ಕಡೆಗೆ ಬರುವ ಮಕ್ಕಳು ಒಂದೊಂದಾಗಿ ಅವಸರದಿಂದ ಸಂಕದಾಟಿ ಹೋದುವು. ಕಿಟ್ಟಣ್ಣ ಹಾದುಹೋಗುವ ಠೀವಿಯೇ ಬೇರೆ. ಅವನು ಬಲು ಜಾಗ್ರತೆಯಿಂದ ದಾಟುವವನಂತೆ ನಟಿಸುತ್ತಿದ್ದ. ಬೆನ್ನ ಹಿಂದೆ ಲಿಂಗಪ್ಪನಂತೂ ಇದ್ದನೆಂದರೆ ಆ ಜಾಗ್ರತೆಗೆ ಮಿತಿಯೇ ಇಲ್ಲ. ಲಿಂಗಪ್ಪನನ್ನು ಹಿಂದೆ ತಡೆದಷ್ಟು ಆತನಿಗೆ ಸಂತೋಷ. ಬೇರೆ ಮಕ್ಕಳು ಜೊತೆಯಲ್ಲಿ ಬಂದರೆ ಅಕ್ಷೇಪವಿಲ್ಲ. ಲಿಂಗಪ್ಪನು ಮಾತ್ರ ಬರಕೂಡದು. ಬರಲೇ ಕೂಡದು! ಆ ದಿನ ಕಿಟ್ಟಣ್ಣ ನಡುಸಂಕದಲ್ಲಿ ನಿಂತು ಕೈ ತಾಂಗನ್ನು ಆಧರಿಸಿಕೊಂಡು ಹರಿಯುವ ಬೊಳ್ಳದ ಚಂದವನ್ನು ನೋಡುತ್ತಾ ನಿಂತಿದ್ದ ; ಒಮ್ಮೊಮ್ಮೆ ಹಿಂದೆ ನಿಂತಿದ್ದ ಲಿಂಗನ ಮುಖನೋಡಿ – ಅವನ ಹೆಮ್ಮೆಗಿದು ಪ್ರತೀಕಾರ ಎಂಬ ಅರ್ಥವನ್ನು ಹೊಳೆಯಿಸುತ್ತಿದ್ದ. ಹೀಗೆ ಹತ್ತೆಂಟು ನಿಮಿಷಗಳು ಕಳೆದುವು. ಮಳೆ ಹೊಡೆಯುವುದಕ್ಕೆ ಆರಂಭವಾಯಿತು. ಲಿಂಗಪ್ಪ ತಾಳ್ಮೆ ಕೆಟ್ಟ. ಚಿಕ್ಕ ಧನಿ ನಿಂತಿದ್ದಂತೆಯೇ ಹಿಂದೆ ಸಂಕಕ್ಕೆ ಕಾಲಿಟ್ಟ. ಚಿಕ್ಕ ಧನಿ ಸಿಡಿಮಿಡಿಗೊಂಡು “ಏ! ನಿಲ್ಲಲ್ಲಿ?” ಎಂದು ಆರ್ಭಟಿಸಿದುದೂ ಸುಂಕ ಅಲುಗಾಡಿ ಕೆಳಗೆ ಬಿದ್ದುದೂ ಏಕ ಕಾಲದಲ್ಲಾಯಿತು. ಅಯ್ಯೊ! ಎಂದು ಕಿಟ್ಟಣ್ಣ ತೋಡಿಗೆ ಬಿದ್ದ. ಲಿಂಗಪ್ಪ ತಟ್ಟನೆ ಜೂಲು ನಾಯಿಯಂತೆ ಕೆಳಗೆ ಹಾರಿ ಅವನನ್ನು ಎಬ್ಬಿಸಿ ಮೇಲಕ್ಕೆ ತಂದ. ಕೊಚ್ಚಿಕೊಂಡು ಹೋಗುವಷ್ಟು ಪ್ರವಾಹವಿರಲಿಲ್ಲ. ತನ್ನ ದೋಷದಿಂದ ತಾನು ಬಿದ್ದೆನೆಂದೂ ಲಿಂಗಪ್ಪ ಎತ್ತಿದನೆಂದೂ ಹೇಳುವುದಾದರೂ ಹೇಗೆ? ಸಂಕದಲ್ಲಿ ಬರುತ್ತಿದ್ದಾಗ, ಲಿಂಗಪ್ಪ ಹಿಂದಿನಿಂದ ದೂಡಿದ; ತಾನು ಬಿದ್ದು ಬದುಕಿ ಬರುವುದೇ ಕಷ್ಟವಾಯಿತೆಂದು ಕಿಟ್ಟ ತಂದ ವಾರ್ತೆಯನ್ನು ಕೇಳಿ ನಾಯಕರು ರೋಷಾವೇಶದಿಂದ ಅಳೆತ್ತರ ನೆಗೆದು – ಶೀನಪ್ಪಯ್ಯ ಮಾಸ್ತರರೇನು ಬದುಕಿದ್ದಾರೆಯೇ? ಸತ್ತಿದ್ದಾರೆಯೇ? ಎಂದು ಗರ್ಜಿಸಿದರು. + +ಶೀನಪ್ಪಯ್ಯನವರು ಖಂಡಿತವಾಗಿಯೂ ಸತ್ತಿರಲಿಲ್ಲ. ಸಜೀವವಾಗಿಯೇ ಇದ್ದರು. ಮರುದಿನ ಶಾಲೆಗೆ ಬರುವ ಮುಂಚೆಯೇ ಕಿಟ್ಟಣ್ಣನಿಗೆ ಲಿಂಗಪ್ಪ ಮಾಡಿದ ಘೋರ ಹಿಂಸೆಯ ಕತೆ ಅವರ ಕಿವಿಗೆ ತಲುಪಿತ್ತು. ಆ ದಿನ ಅರ್ಧ ಗಂಟೆಗೆ ಮುಂಚಿತವಾಗಿಯೇ ಶಾಲೆಗೆ ಬಂದಿದ್ದರು; ದೂರದಿಂದ ಬರುತ್ತಿದ್ದಾಗಲೇ ಲಿಂಗಪ್ಪನನ್ನು ಕಂಡು, ಹಳೆಯ ಪೆಟ್ಟಿಗೆಯೊಂದರಲ್ಲಿದ್ದ ನಾಲ್ಕು ಬೆತ್ತಗಳನ್ನು ಹೊರ ತೆಗೆದು ಮೇಜಿನ ಮೇಲೆ ಇಟ್ಟುಕೊಂಡರು. ಕಣ್ಣಿನಿಂದ ಕಡಿದು ತಿನ್ನುವಂತೆ ಲಿಂಗಪ್ಪನನ್ನು ನೋಡುತ್ತಲೇ ಇದ್ದರು. ಅವನು ಬಂದು ತನ್ನ ಸ್ಥಳಕ್ಕೆ ಹೋಗುವ ಮುಂಚೆಯೇ “ಏ ಮುಟ್ಠಾಳ! ಇಲ್ಲಿಗೆ ಬಾರೋ” ಎಂದು ಶೀನಪ್ಪಯ್ಯನವರು ಕರೆದು. ಲಿಂಗಪ್ಪ ಸಮೀಪಕ್ಕೆ ಬಂದ. ‘ಹಿಡಿಕೈ’ ಎಂದರು. ‘ಯಾಕೆ?’ ಎಂದು ಕೇಳಿದ ಲಿಂಗಪ್ಪ. “ತೊತ್ತಿನ ಮಗನೆ! ಯಾಕೆ ಎಂದು ಕೇಳುತ್ತೀಯ? ಧನಿಗಳಲ್ಲಿ ತಿಂದ ಅನ್ನ ಸೊಕ್ಕಿದೆ” ಎನ್ನುತ್ತ ಮತ್ತೂ ಬೆನ್ನಿಗೆ ಬಲವಾಗಿ ಹೊಡೆದರು. ಲಿಂಗಪ್ಪನ ಮೈಮೇಲೆ ಪೆಟ್ಟಿನ ಮಳೆ ಸುರಿದುದಲ್ಲದೆ ಮತ್ತೇನೂ ತಿಳಿಯಲಿಲ್ಲ. “ದಮ್ಮಯ್ಯ ಮಾಸ್ತರರೇ ನಾನೇನು ತಪ್ಪು ಮಾಡಲಿಲ್ಲ. ಯಾಕೆ ನನಗೆ ಹೊಡೆಯತ್ತೀರಿ?” ಎಂದು ಲಿಂಗಪ್ಪ ಮಾಸ್ತರರ ಕೈಯನ್ನು ಬಲವಾಗಿ ಹಿಡಿದುಕೊಂಡ. ಇದು ಮತ್ತೂ ದೊಡ್ಡ ಅಪರಾಧ. ನಾಯಕರ ಮಗನನ್ನು ಹಿಂದಿನ ಸಾಯಂಕಾಲ ತೋಡಿಗೆ ತಳ್ಳಿದುದಲ್ಲದೆ, ಇಂದು ಮಾಸ್ತರರ ಮೇಲೆಯೂ ಕೈ ಮಾಡುತ್ತಾನೆ! ಎನ್ನುತ್ತಾ ಶೀನಪ್ಪಯ್ಯನವರು “ಇವನನ್ನು ಪಿಚಂಡಿ ಬಿಗಿಯಿರೋ!” ಎಂದು ಕೂಗಿದರು. ಹೆಚ್ಚಿನ ಮಕ್ಕಳು ಹೊರಗೆಯೇ ನಿಂತು ಈ ದೃಶ್ಯವನ್ನು ನೋಡುತ್ತಿದ್ದರು. ಎರಡನೆಯ ಮಾಸ್ತರ್ ರಾಮಣ್ಣನವರು ಒಂದು ಹುರಿ ಹಗ್ಗವನ್ನು ತಂದರು. ಕೈಯನ್ನು ಪಿಚಂಡಿ ಬಿಗಿದ ಕೆಲಸ ಸಾಂಗವಾಗಿ ಜರುಗಿತು. + +ಏನೂ ಅಪರಾಧ ಮಾಡದೆ ಇಂತಹ ಶಿಕ್ಷೆ ಯಾಕೆ? ತಾನೂ ಮನುಷ್ಯನಲ್ಲವೆ? ಎಂದು ಲಿಂಗಪ್ಪನಿಗೂ ತೋರಿರಬೇಕು. ಅವನು ಒದ್ದಾಡಿದ. ಪ್ರಯೋಜನವಾಗಲಿಲ್ಲ. ಎಲ್ಲರ ಮುಂದೆ ಚರ್ಮ ಸುಲಿಯುವುದು ಬೇಡವೆಂದೇನೋ, ಶಾಲೆಯಲ್ಲಿದ್ದ ಒಂದೇ ಒಂದು ಕತ್ತಲೆ ಕೋಣೆಗೆ ಲಿಂಗಪ್ಪನನ್ನು ಒಯಿದು ಕೊಂಡುಹೋದರು. ಅವನು ಹೋಗಲೊಪ್ಪಲಿಲ್ಲ. ಒಬ್ಬ ಉಪಾಧ್ಯಾಯರು ಒಳಗೆ ನಿಂತು ಎಳೆದರು; ಇನ್ನೊಬ್ಬರು ಬಲವಾಗಿ ದೂಡಿ ಕೋಣೆಯೊಳಗೆ ತಳ್ಳಿದರು, ಬಹಿರಂಗವಾಗಿ ಕೊಡದಿದ್ದ ಶಿಕ್ಷೆಯನ್ನು ಕತ್ತಲೆ ಕೋಣೆಯೊಳಗೆ ಕೊಟ್ಟರು. ಅನಂತರ ಕೋಣೆಯ ಬಾಗಿಲು ಬಿಗಿದು ಪಾಠವನ್ನು ಆರಂಭಿಸಲಾಯಿತು. ಲಿಂಗಪ್ಪ ಒಂದೆರಡು ಬಾರಿ ಉಚ್ಚಧ್ವನಿಯಲ್ಲಿ ಅಯ್ಯೋ! ಎಂದು ಕೂಗಿದ್ದ. ಇದೇನೂ ಆಶ್ಚರ್ಯವಲ್ಲ. ಹೆಚ್ಚಿನ ಶಾಲೆಗಳಲ್ಲಿಯೂ ಬೆತ್ತದ ಭಯವೇ ಜ್ಞಾನದ ಆರಂಭ! ಶಾಲೆಯ ಹೊರಗೆ ಹೋಗುತ್ತಿದ್ದವರು – “ಇದರಲ್ಲೇನೂ ಹೊಸತಿಲ್ಲ” ಎಂದು ಭಾವಿಸಿ ಯಾವ ಗೊಡವೆಯೂ ಇಲ್ಲದೆ ಹೊರಗಿನಿಂದ ಹೊರಗೇ ದಾಟಿ ಹೋದರು. ಮಕ್ಕಳಿಗೆ ಆ ದಿನ ಉಪಾಧ್ಯಾಯರಲ್ಲಿ ವಿಶೇಷ ಭಕ್ತಿ, ಭಾವವಿತ್ತು. “ಇಂದು ಲಿಂಗಪ್ಪನ ಸರತಿ! ಇನ್ನು ಯಾವಾಗ ನಮ್ಮದೋ” ಎಂದು ಹೆದರಿ ತಮ್ಮ ತಮ್ಮ ಪಾಠ ಪ್ರವಚನದಲ್ಲಿಯೇ ಮಗ್ನರಾಗಿದ್ದರು. + +ಪಾಠಗಳ ಮಧ್ಯೆದಲ್ಲಿಯೂ ಶೀನಪ್ಪಯ್ಯನವರು, ಕೆಲಬಾರಿ ನರಳುವ ಶಬ್ದಕೇಳಿ ಕೋಣೆಯ ಬಾಗಿಲು ತೆರೆದು ಒಳಗೆ ಹೋಗಿ ಹೊರಗೆ ಬಂದರು. ಕೋಪದಿಂದ ಕದಡಿಹೋಗಿದ್ದ ಅವರ ಮುಖಭಾವ ಶುದ್ಧವಾಗಿರದ ಕಾರಣ ಒಳಗೆ ಹೊರಗೆ ಹೋಗುತ್ತಾ ಬರುತ್ತಾ ಇದ್ದ ಅವರ ಮನಸ್ಸಿನಲ್ಲಿ ಏನಿತ್ತು ಎಂದು ಯಾರಿಗೂ ತಿಳಿಯಲಿಲ್ಲ. ಹೀಗಿದ್ದರೂ ಏನೋ ಒಂದು ಭಯ, ಏನೋ ಒಂದು ಅಶಾಂತಿ ಇದ್ದಿತೆನ್ನುವುದರಲ್ಲಿ ಸಂದೇಹವಿರಲಿಲ್ಲ. ಆ ದಿನ ಅರ್ಧ ಘಂಟೆಗೆ ಮುಂಚೆಯೇ ಪಾಠ ಮುಗಿದು ಘಂಟೆ ಹೊಡೆಯಿತು. ಮಧ್ಯಾಹ್ನ ರಜೆಯಿರುವುದಾಗಿಯೂ ತಿಳಿಸಲಾಯಿತು. ಕಟ್ಟವನ್ನೊಡೆದು ಹರಿಯುವ ಪ್ರವಾಹದಂತೆ ಮಕ್ಕಳು ನಾಲ್ಕು ದಿಕ್ಕಿಗೆ ಚೆದರಿ ಓಡಿಹೋದರು! + +5 + +ಸೋಮಪ್ಪನಿಗೆ ಆ ದಿನ ಮನಸ್ಸಿಗೇನೋ ಮಂಕು ಹಿಡಿದಂತಿತ್ತು. ಯಾವ ಕೆಲಸಕ್ಕೂ ಮನಸ್ಸು ಒಗ್ಗುವುದಿಲ್ಲ. ತನ್ನ ಜೀವನದಲ್ಲಿ ಇಂತಹ ಜಾಡ್ಯ ಹಿಡಿದುದು ಅವನಿಗರಿಯದು. ಮಧ್ಯಾಹ್ನ ಕೆಲಸವಿಟ್ಟು ಬಂದವನು ಕೆಲಸಕ್ಕೆ ಹೋಗಲೇ ಇಲ್ಲ. ಹುಡುಗ ಬರುವ ಹೊತ್ತಾಯಿತು. ಬರಲಿಲ್ಲ! ಇದರಿಂದ ಮತ್ತಷ್ಟು ವ್ಯಥೆ ಹೆಚ್ಚಿತು. ಏಕೆ ಬರಲಿಲ್ಲ? ಶಾಲೆಯವರೆಗೆ ಹೋಗಿಬರೋಣವೆ? ಎಂದು ತೋರಿತು. ಅದೂ ತಪ್ಪಾದೀತು. ಶೀನಪ್ಪಯ್ಯ ಒಳ್ಳೆಯ ಕರುಣಾಳು. ಅವರ ಶಾಲೆ ಅದು. ಅವರ ಶಿಷ್ಯ ಲಿಂಗಪ್ಪ ಸಕಾಲದಲ್ಲಿ ಹುಡುಗ ಮನೆಗೆ ಬರಲಿಲ್ಲವೆಂದು ಹುಡುಕುತ್ತಾ ಹೋದರೆ ಶೀನಪ್ಪಯ್ಯನವರನ್ನು ಅಪಮಾನಿಸಿದಂತಾಗಲಿಲ್ಲವೆ? ಇದಕ್ಕಿಂತಲೂ ದೊಡ್ಡ ಚಿಂತೆ ನಿನ್ನೆ ನಡೆದ ಸಂಗತಿಯದು. ಲಿಂಗಪ್ಪ ಕಿಟ್ಟನನ್ನು ತೋಡಿಗೆ ದೂಡಿ ಹಾಕಿದನಂತೆ. ಲಿಂಗಪ್ಪ ತಾನು ಹಾಗೆ ಮಾಡಿಲ್ಲ ಎನ್ನುತ್ತಾನೆ. ಧನಿಗಳ ಮನೆಯವರು ಅವನೇ ತಪ್ಪುಗಾರನೆಂದು ಹೇಳುತ್ತಾರೆ. ತಪ್ಪು ಯಾರದೂ ಇರಲಿ, ಏನೇ ಆಗಿರಲಿ ಅದರ ಪರಿಣಾಮವನ್ನು ಅವನೇ ಅನುಭವಿಸಬೇಕಾಗಿತ್ತು. ಇದನ್ನೆಲ್ಲಾ ಯೋಚಿಸಿ ಸೋಮಪ್ಪನಿಗೆ ಹುಚ್ಚು ಹಿಡಿದಂತಾಯಿತು.ಒಮ್ಮೆ ಮನೆಯೊಳಗೆ ಹೋಗುತ್ತಾನೆ. ಒಮ್ಮೆ ಹೊರಗೆ ಬರುತ್ತಾನೆ. ಕೊನೆಗೆ ಹೀಗೆ ಗುರಿಯಿಲ್ಲದೆ ಓಡಾಡಿ ಬೇಸತ್ತು ಮನೆಯ ಮುಂಗಡೆಯಲ್ಲಿ ಎತ್ತರವಾದ ನೆಲದಲ್ಲಿ ತಾನೇ ಕಟ್ಟಿದ ಅಶ್ವತ್ಥದ ಕಟ್ಟೆಯ ಮೇಲೆ ಮರಕ್ಕೆ ಬೆನ್ನೊರಗಿಸಿ ಮಗನು ಬರುವ ದಾರಿಯಲ್ಲೆ ಕಣ್ಣಿಟ್ಟುಕೊಂಡು ಮನಸ್ಸನ್ನು ಆಲೋಚನೆಗೆ ಬಿಟ್ಟುಕೊಟ್ಟಿದ್ದಾನೆ. + +ಧನಿಗೆ ಸಿಟ್ಟಾಗಿರಬಹುದೆ? ಸಿಟ್ಟಾದರೆ, ತಾನೀ ಮನೆಯನ್ನು ಬಿಡಬೇಕಾಗುವುದೇ? ಎನ್ನುವುದಕ್ಕೆ ಮೊದಲು ಉತ್ತರಬೇಕಾಗಿತ್ತು. ಸೋಮಪ್ಪ ಇಂದು ನಿನ್ನೆಯ ಜನವಲ್ಲ. ಅವನ ಪೀಳಿಗೆ ಇಂದು ನಿನ್ನೆಯದಲ್ಲ. ಅವನು ಊರಲ್ಲಿ ಹುಟ್ಟಿದ ಸಸಿಯಲ್ಲ. ತಂದು ನಟ್ಟು ಸಾಕಿದ ಸಸಿ. ಹಲವು ತಲೆ ಮೊರೆಯಿಂದ ಅಲ್ಲಿಯೆ ಬಾಳಿ ಬಂದ ಸಂಸಾರ ಅವನದು. ಅವನಿಂದಲಾದರೂ ಏನೆಲ್ಲ ಕೆಲಸ ನಡೆದಿಲ್ಲ! ನಾಯಕರ ಮತ್ತು ಅವರ ಮನೆಗದ್ದೆ ಹೊಲಗಳ ಚಿಕ್ಕ ಚರಿತ್ರೆಯನ್ನು ಯಾರಾದರೂ ಬರೆದಲ್ಲಿ , ಮುಕ್ಕಾಲುಪಾಲು ಅವನ ಸಾಹಸ ಕೃತಿಗಳಿಂದಲೆ ತುಂಬಿಹೋದೀತು. ನಾಯಕರು ಚಿಕ್ಕವರಾಗಿದ್ದರು. ಆಗ ಒಮ್ಮೆ ಗದ್ದೆಯ ಬಿಳಿಯ ನೀರ ಗುಂಡಿಗೆ ಬಿದ್ದಿದ್ದರು. ಆಳವಾದ ಹೊಂಡ; ಇಳಿಯುವ ಧೈರ್ಯ ಯಾರಿಗೂ ಇರಲಿಲ್ಲ. ಉಳಿದವರು ಗಂಟಲೊಯುವಷ್ಟು ಬೊಬ್ಬೆ ಹೊಡೆದರಲ್ಲದೆ ಮತ್ತೇನನ್ನೂ ಮಾಡಲಿಲ್ಲ. ಚಿಕ್ಕ ಹುಡುಗನಾಗಿದ್ದರೂ, ಧೊಪ್ಪನೆ ಹಾರಿ ತೇಲಿ ಮುಳುಗುತ್ತಿದ್ದ ನಾಯಕರನ್ನು ಹಿಡಿದು ಮೇಲೆತ್ತಿ ತಂದವನು ಸೋಮಪ್ಪ. ನಾಯಕರ ಮನೆಯ ಮುಖಮಂಟಪವನ್ನು ಕಟ್ಟುತ್ತಿದ್ದಾಗ ತೊಲೆಯೊಂದನ್ನು ಮೇಲಕ್ಕೇರಿಸಲಾರದೆ ದಡಿಗ ಆಳುಗಳೆಲ್ಲ ಬೆವರು ಸುರಿಸುತ್ತಿದ್ದರು. ಸೋಮಪ್ಪ ಹೆಗಲು ಕೊಟ್ಟುದೇ ತಡ. ಹಗುರ ಗರಿಯಂತದು ಮೇಲೇರಿತು! + +ಅವನು ನೇಗಿಲು ಹಿಡಿದು ಒಂದು ಸಾಲನ್ನಾದರೂ ಉಳದಿದ್ದರೆ ನಾಯಕರ ಗದ್ದೆಯಲ್ಲಿ ಆಗಬೇಕಾದ ಬೆಳೆ ಆಗದು. ಅವನ ಹೆಂಡತಿ ಕೆಂಚಿಯ ಓಬೇಲೆಯನ್ನು ಕೇಳದೆ ಬತ್ತದ ಸಸಿಯಲ್ಲಿ ತನೆ ತುಂಬದು. ಕಣ್ಣಿಗೆ ಕಾಣದಷ್ಟು ವಿಸ್ತಾರವಾದ ಹೊಲದಲ್ಲಿ ಅವನ ಕೈವಾಡವನ್ನು ಕಂಡು ಮೆಚ್ಚದವರಾರು? ಗದ್ದೆಯಂಚುಗಳಲ್ಲಿ ನೆಟ್ಟ ತೆಂಗಿನ ಸಾಲು; ತೋಟದಲ್ಲಿ ಉರಿದ ಸಸಿಬಾಳೆ; ಗುಡ್ಡದ ಬದಿಯಲ್ಲಿ ಕುಳಿ ಮಾಡಿ ಇಟ್ಟ ಹಲಸು; ಮಾವಿನ ಗಿಡಗಳು; ಅಗೆದ ಅಗಳು; ತೋಡಿದ ಕೆರೆ ಬಾವಿ; ಎಲ್ಲದರಲ್ಲಿಯೂ ಅವನ ಕೈಗುಣ; ಎಲ್ಲದರಲ್ಲಿಯೂ ಅವನ ಕರ್ತೃತ್ವ; ಎಲ್ಲದರಲ್ಲಿಯೂ ಅವನ ಶ್ರಮ! ಅವನ ಬಾಳು ಬೇರೆ – ಈ ಹೊಲದ ಸೊಗಸು ಬೇರೆ ಎಂದು ಹೇಳುವ ಧೈರ್ಯ ಯಾರಿಗೆ? ಸೋಮಪ್ಪನಿಗಂತೂ ಅವುಗಳ ಸಮೀಪಕ್ಕೆ ಹೋದರೆ ಲೋಕವೇ ಇಲ್ಲವೆಂದಾಗುವುದು. ಸ್ಮರಿಸಿದರೆ ಸಾಕು; ಸಕಲ ದುಃಖಗಳೂ ಮರೆತು ಹೋಗುವುವು. ತನಗೂ ಈ ಹೊಲಕ್ಕೂ ಅಭೇದ ಸಂಬಂಧ. ತನ್ನ ಗೈಮೆಯಿಲ್ಲದೆ ತೆಂಗಿನ ಸಸಿಯಲ್ಲಿ ಹೇಗೆ ಕೊಂಬು ಹೊಡೆದೀತು? ಹಲಸು ಹೇಗೆ ಕಳ್ಳಿಕೆ ಬಿಟ್ಟೀತು? ಮಾವು ಹೇಗೆ ಚಿಗುರೀತು ದ ಹೀಗೆಲ್ಲ ಯೋಚನೆ ಬಂದಾಗ ಧನಿಗೆ ತನ್ನ ಮೇಲೆ ಸಿಟ್ಟಾದರೂ ಎಬ್ಬಿಸುವ ಮನಸ್ಸು ಬಾರದೆಂದೆ ನಂಬಿಕೆ ಹುಟ್ಟುವುದು. ಒಂದು ವೇಳೆ ಕಷ್ಟವೇ ಬಂತೆನ್ನೋಣ. ಧನಿಗಳು ಹೊಡೆಯಲಿ, ಬಡಿಯಲಿ, ಗುಂಡು ಕಲ್ಲಿನಂತೆ ಬಿದ್ದುಕೊಂಡರಾಯಿತು. ಕೋಣಗಳನ್ನು ತೊಳೆಯುವಾಗ ಅವುಗಳ ಮೈಗೆ ಅಂಟಿಕೊಳ್ಳುವ ಉಣ್ಣೆಗಳಿಂದ ಅವನು ಪಾಠ ಕಲಿತಿದ್ದಾನೆ. ಎಷ್ಟು ಉಜ್ಜಿದರೂ ಅವು ಕಚ್ಚಿದ ಕಡಿತವನ್ನು ಬಿಡುವುದಿಲ್ಲ. ಹಾಗೆ ಧನಿಯೇನು ಮಾಡಿದರೂ ಕದಲದಿದ್ದರಾಯಿತು. ಒಂದು ವರ್ಷ ಹೋಗುತ್ತದೆ, ಎರಡು ವರ್ಷ ಹೋಗುತ್ತದೆ. ದೇವರು “ಬಿಸಾಡಿ” ಹೋದರೆ, ಲಿಂಗಪ್ಪ ಕಲಿತು ಗಟ್ಟಿಗನಾಗುತ್ತಾನೆ. ಕೈ ಬಾಯಿಗೆ ಹೋಗುವಷ್ಟು ಸಂಪಾದನೆ ಮಾಡಲು ಶಕ್ತನಾಗುತ್ತಾನೆ. ಆಗ ಒಂದು ವೇಳೆ, ಇಚ್ಚೆಗೆ ವಿರುದ್ಧವಾಗಿ ಬುಡ ಕೀಳಬೇಕಾಗಿ ಬಂದರೂ, ಲಿಂಗಪ್ಪನ ಹೆಗಲ ಮೇಲೆ ಕೈಯಿಟ್ಟು ಅವನು ಕರೆದೊಯ್ಯುವಲ್ಲಿಗೆ ಹೋದರಾಯಿತು! ಅಶ್ವತ್ಥದ ಕಟ್ಟೆಯಲ್ಲಿ ಕುಳಿತು ಸುತ್ತಲೂ ಕಣ್ಣು ಹಾಯಿಸುವಾಗ ತನ್ನ ಮತ್ತು ಧನಿಗಳ ಸಂಬಂಧ ಅಭೇದ್ಯವಾದುದೆಂಬ ಅರಿಕೆಯಾಗಿ, ಒಮ್ಮೆ ಆನಂದ ಸಾಮ್ರಾಜ್ಯದಲ್ಲಿ ಅಲೆದಾಡಿದಂತಾಯಿತು! + +ಕುಳಿತಲ್ಲೇ ಕುಳಿತು ಸೋಮನಿಗೆ ಸಮಯ ಕಳೆದುದು ತಿಳಿಯಲಿಲ್ಲ. ಸಂಜೆ ಆಯಿತು; ಆಗಿದೆ! ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಹಸುಗಳು ಹೊಲಬಿಟ್ಟು ಮರಳಿವೆ; ಹಕ್ಕಿಗಳು ಗೂಡನ್ನು ಸೇರಿವೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ. ಹುಡುಕಲೇ ಬೇಕು; ಕೂಡಲೇ ಹೊರಡಬೇಕು; ಎಂದು ತಟ್ಟನೆ ಎದ್ದುನಿಂತು ಸೋಮಪ್ಪ ದಾರಿಯ ಕಡೆಗೆ ಕಣ್ಣಿಟ್ಟು ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ದೂರದಲ್ಲಿ ಯಾರೋ ಬರುತ್ತಿದ್ದಂತೆ ತೋರಿತು; ಹೌದು ಛಾಯೆಯೊಂದು ಬಂದ ಹಾಗೆ ತೋರಿತು. “ಒಂದಲ್ಲ ಎರಡು ನೆರಳುಗಳು … ಮೆಲ್ಲಮೆಲ್ಲನೆ ಬರುತ್ತಿವೆ; ಹೌದು ಬಲು ಮೆಲ್ಲನೆ! ಆಯಾಸದಿಂದ ಬರುವಂತೆ ಬರುತ್ತಿವೆ. ಆಯಾಸವೇಕೆ? ಬರುವವರು ಯಾರು? ಇಬ್ಬರ ನಡುವೆ ಏನೋ ಒಂದು ಭಾರವಾದ ವಸ್ತು ತೊನೆಯುವಂತೆ ತೋರುತ್ತಿದೆಯಲ್ಲ ! ಸ್ವಲ್ಪ ಹತ್ತಿರಕ್ಕೆ ಬರುತ್ತಾರೆ. ಕತ್ತಲೆಯ ಮರೆಯಲ್ಲಿಯೂ ಒಂದು ಮುಖದ ರೇಖೆ ಎದ್ದು ಕಾಣಿಸುತ್ತದೆ. ಇದು ಯಾರು? ಶೀನಪ್ಪಯ್ಯ ಮಾಸ್ತರು! ಅವರು ಒಬ್ಬರೇ ಅಲ್ಲ ! ಹಿಂದೆ ರಾಮಣ್ಣನವರೂ ಇದ್ದಂತೆ ತೋರುತ್ತದೆ. ಇವರು ಏನನೋ ಎತ್ತಿಕೊಂಡು ಬರುತ್ತಿದ್ದಾರೆ. ಏನನ್ನು ? ಮರದ ತುಂಡಿನಂತಹ ಜಡವಸ್ತುವನ್ನಲ್ಲ ! ಜಡ ಪದಾರ್ಥವಾಗಿದ್ದರೆ ಇಷ್ಟೇಕೆ ಜತನ! ಶಾಲೆಬಿಟ್ಟು ಎಷ್ಟೋ ಹೊತ್ತಾಯಿತು. ಮಕ್ಕಳೆಲ್ಲ ಮನೆ ಸೇರಿ ತಮ್ಮ ತಾಯಿ ತಂದೆಗಳ ಪಕ್ಕದಲ್ಲಿ ದಿನದ ಸಂಗತಿಯನ್ನು ಹೇಳುತ್ತ ಕುಳಿತಿರಬಹುದು. ಬೇರೆ ಮಕ್ಕಳು ಹೇಗೋ …. ತನ್ನಮಗ ಲಿಂಗಪ್ಪ ಹಾಗೆ ಮಾಡದಿರುತ್ತಿರಲಿಲ್ಲ. ಇಂದು ಇದುವರೆಗೂ ಅವನೊಬ್ಬನೇ ಮನೆಗೆ ಬರಲಿಲ್ಲ. ಏಕೆ? ಅವನಿಗೆ ಏನಾದರೂ ಆಗಿರಬಹುದೆ? ಸಜೀವ ಪ್ರಾಣಿಯಂತೆ ತೋರುತ್ತದಲ್ಲ ಅವರು ಹೊರುವ ವಸ್ತು! ಲಿಂಗಪ್ಪನಲ್ಲವಷ್ಟೆ! ದೇವರೇ! ಲಿಂಗಪ್ಪನಿಗೆ ಕೇಡು ಬಾರದಿರಲಿ! ಮಾಸ್ತರ್ ಶೀನಪ್ಪಯ್ಯನ ಮುಖ ಸ್ಪಷ್ಟವಾಗುತ್ತಿದೆ. ಹಿಂದೆ ರಾಮಣ್ಣಯ್ಯ….ಇಬ್ಬರ ಹೆಜ್ಜೆಗಳೂ ಮನೆಯ ಕಡೆಗೇ ತಿರುಗುತ್ತಿವೆ. ನಡುವೆ ಜೋತಾಡುವ ದೇಹ ಲಿಂಗಪ್ಪನದು ಅಲ್ಲವೆಂದು ಯಾರು ಹೇಳಿದರು? ಅದೇ ಮುಖ, ಅದೇ ಕಣ್ಣು , ಅದೇ ಬಾಯಿ, “ಅಯ್ಯೊ! ಲಿಂಗಪ್ಪ ನಿನಗೇನಾಯಿತು! ಮಗು?” ಎನ್ನುತ್ತಾ ಸೋಮ ಬರುವವರಿಗೆ ಇದಿರಾಗಿ ಓಡಿದ. + +“ಸಮಾಧಾನ! ಸಮಾಧಾನ!” ಎಂದು ಎರಡು ಕಂಠಗಳು ಗಂಭೀರವಾಗಿ ಕೂಗಿದವು. + +ಸೋಮಪ್ಪ ಹೋಗಿ ಲಿಂಗಪ್ಪನ ಶರೀರವನ್ನು ಎತ್ತುವುದಕ್ಕೆ ಪ್ರಯತ್ನಿಸಿದ. “ಬೆಳಿಗ್ಗೆ ಶಾಲೆಗೆ ಹೋಗುವಾಗ ಹೇಗಿದ್ದೆ ಮಗು! ಈಗ ಏನಾದೆ?’ ಎಂದು ಹಲುಬುವುದಕ್ಕೆ ತೊಡಗಿದ ಸೋಮಪ್ಪ. + +“ಸಮಾಧಾನ! ಗಾಬರಿಗೆ ಕಾರಣವಿಲ್ಲ !” ಎಂದರು ಶೀನಪ್ಪಯ್ಯನವರು… + +“ಇವನ ಬಾಯಿಯಿಂದ ಒಂದು ಮಾತು ಹೊರಡುವುದಿಲ್ಲ ! ನೀವು ಸಮಾಧಾನ ಹೇಳುತ್ತೀರಿ!” ಎಂದು ಬಿರುಸಾದ ಧ್ವನಿಯಲ್ಲಿ ಆಡುತ್ತ ಸೋಮಪ್ಪ ಅವರ ಕೈಯಿಂದ ತನ್ನ ಮಗನನ್ನು ಬಿಡಿಸಬೇಕೆಂದಿದ್ದ. ಆಗ ಕೆಂಚಿಯೂ ಓಡಿಬಂದು ರಾಗವನ್ನು ಸೇರಿಸಿದಳು. + +“ಗಡಿಬಿಡಿ ಮಾಡಬೇಡ ಸೋಮ. ಆದುದು ಆಗಿಹೋಯಿತು.” ಎಂದರು ಶೀನಪ್ಪಯ್ಯನವರು. + +“ಆದುದು ಏನು ?” ಎಂದು ಇಬ್ಬರೂ ಗಟ್ಟಿಯಾಗಿ ಕೂಗಿ ಮಗನನ್ನು ತಾವೆ ಎತ್ತಿಕೊಂಡರು. + +“ಹೆಚ್ಚೇನೂ ಇಲ್ಲ . ಮಧ್ಯಾಹ್ನ ಮನೆಗೆ ಹೊರಟಿದ್ದ . ಶಾಲೆಯ ಪಕ್ಕದ ಬಿದಿರು ಹಿಂಡಿನ ಸಮೀಪಕ್ಕೆ ಬಂದವನೇ ಅಯ್ಯೋ ಎಂದು ಕೂಗುತ್ತಾ ಅಲ್ಲೆ ಬಿದ್ದುಬಿಟ್ಟ” … ತಾಯಿತಂದೆಗಳು ಚಿಕ್ಕ ಮಕ್ಕಳಂತೆ ಅಳುತ್ತಿದ್ದರು. + +“ಏನೋ ಸೋಂಕು ತಗಲಿದಂತೆ ತೋರುತ್ತದೆ. ಅಲ್ಲಿ ಈ ಮೊದಲು ಹಾಗಾದುದುಂಟು. ” + +“ಹಗಲಲ್ಲೆ?….” ಎಂದು ಸೋಮಪ್ಪ ಸಂದೇಹ ಧ್ವನಿಯಲ್ಲಿ ಪ್ರಶ್ನಿಸಿದ. + +“ದೈವ ಮುನಿದರೆ ಹಗಲೆಂದೇನು ರಾತ್ರಿಯೆಂದೇನು?” ಎಂದು ಶೀನಪ್ಪಯ್ಯ ಮಾಸ್ತರರು ಅಂಜುಕುಳಿಯಂತೆ ನಡುಗುವ ಸ್ವರದಲ್ಲಿ ಪ್ರಶ್ನಿಸಿದರು. ಮಾತನ್ನು ನಿಲ್ಲಿಸದೆ ಮುಂದುವರಿಸಿದರು. ಶಾಲೆಗೆ ಬಂದಿದ್ದ ಹುಡುಗನ ಶರೀರವನ್ನು ತಾಯಿತಂದೆಗಳ ವಶಕ್ಕೊಪ್ಪಿಸಿದರೆ ಉಪಾಧ್ಯಾಯರ ಹೊಣೆಗಾರಿಕೆ ತಪ್ಪಿತು. ಆ ಕೆಲಸವನ್ನು ಬೇಗನೆ ಮುಗಿಸೋಣ ಎಂದು ಭಾವಿಸುತ್ತ ಇಬ್ಬರು ಉಪಾಧ್ಯಾಯರೂ ಒಟ್ಟಾಗಿ ಬೋಧಿಸಿದರು. “ಬಹಳ ಜಾಗ್ರತೆಯಿಂದ ಶಾಲೆಗೆ ಎತ್ತಿ ತಂದೆವು; ಬೋಧ ಬರುವುದೋ ಎಂದು ನೋಡಿದೆವು. ನಮ್ಮಿಂದ ಏನೂ ಆಗಲಿಲ್ಲ. ಮಂತ್ರವಾದಿ ಶಿವಣ್ಣನವರಿಂದ ಏನಾದರೂ ಮಾಡಿಸು. ಬೇಕಿದ್ದರೆ ಪರಮೇಶ್ವರಯ್ಯನವರಲ್ಲಿಗೆ ಹೋಗು. ನಾರು ಬೇರುಗಳನ್ನು ಕೊಟ್ಟಾರು. ನಾವೂ ಹೇಳುತ್ತೇವೆ. ವೆಚ್ಚವಿಲ್ಲದೆ ಮದ್ದುಕೊಟ್ಟಾರು. ನಾಲ್ಕು ದಿನಗಳಲ್ಲಿ ಗುಣವಾಗುತ್ತದೆ. ಮತ್ತೇನು? ಗಾಬರಿಗೇನಾಗಿದೆ ?” ಎಂದು ಅವಸರವಾಗಿ ಹೇಳುತ್ತಾ ತಮ್ಮ ಹೆಗಲ ಮೇಲೇರಿದ ಭಾರವೊಂದನ್ನು ಕೆಳಗಿಳಿಸಿದಷ್ಟು ನಿರ್ಭೀತಿಯಿಂದ ಅವರಿಬ್ಬರೂ ಅಲ್ಲಿಂದ ಕಾಲು ಕಿತ್ತರು. + +ಶಿವಣ್ಣ ಬಂದ. ಪರಮೇಶ್ವರಯ್ಯನವರ ಬೇರುಗಳು ಬಂದವು. ಶಿವಣ್ಣ ನಾಯಕರು ಸ್ವತಃ ಹುಡುಗನ ಸ್ಥಿತಿಗತಿಯನ್ನು ವಿಚಾರಿಸಬಂದರು. ಒಕ್ಕಲು ಮನೆಯೊಳಗೆ ಆಗಬೇಕಾದ ಶುಶ್ರೂಷೆಯೆಲ್ಲ ನಡೆಯಿತು. ಬರಬೇಕಾದುದೆಲ್ಲ ಬಂತು. ಆದರೆ, ಲಿಂಗಪ್ಪನ ಮುಖದಲ್ಲಿ ಜೀವಕಳೆಯೊಂದು ಬರಲಿಲ್ಲ. ಬೆಳಿಗ್ಗೆ ಮಕ್ಕಳೆಲ್ಲ ಶಾಲೆಗೆ ಹೊರಡುವ ಕಾಲಕ್ಕೆ ಲಿಂಗಪ್ಪನ ಶರೀರದಲ್ಲಿದ್ದ ಪ್ರಾಣವಾಯು ಹೊರಟುಹೋಗಿತ್ತು. ಸೋಮಪ್ಪ ಕೆಂಚಿಯರು ಸ್ವಲ್ಪಕಾಲ ಹೀಗಾದುದನ್ನು ಒಪ್ಪಿಕೊಳ್ಳಲಿಲ್ಲ. ನಾಯಕರು ಬಂದು ತಿಳಿಯಹೇಳಿದ ಮೇಲೆ ಲಿಂಗಪ್ಪನ ಶವಸಂಸ್ಕಾರವನ್ನು ಮಾಡಬೇಕಾಯಿತು. ಸೋಮಪ್ಪನ ಹೃದಯದಲ್ಲಿ ಆಶಾನಿರಾಶೆಗಳ ಮಧ್ಯದಲ್ಲಿ ಬೆಳೆದು ಬಂದಿದ್ದ ಬಯಕೆ ಅಂದು ಸಮೂಲವಾಗಿ ಕಿತ್ತುಹೋಯಿತು. ತಾನು ಮನಸ್ಸಿನಲ್ಲಿಯೇ ಕಲ್ಪಿಸಿಕೊಂಡಿದ್ದ ಮಗನ ದೊಡ್ಡಸ್ತಿಕೆಯ ಚಿತ್ರ ಉಜ್ಜಿ ಒರಸಿಹೋಯಿತು. ಆ ಹರಕು ಗುಡಿಸಲು ಎಂದಿನಂತೆಯೇ ಅಲ್ಲಿಯೇ ನಿಂತಿದ್ದರೂ ಅದರೊಳಗೆ ಕೆಲವರ್ಷಗಳಿಂದ ಕಳೆಯೇರಿ ಬೆಳಗುತ್ತಿದ್ದ ಜೀವ ಹಾರಿಹೋದ ಕಾರಣ ಎಲ್ಲ ಕಡೆ ಕತ್ತಲೆ, ಮೌನ; ನಿರಾಶೆ! + +ಶೀನಪ್ಪಯ್ಯ ಮಾಸ್ತರರು ಅವಿವೇಕ ಮಾಡಿದರೆಂದು ನಾಯಕರು ತಮ್ಮಲ್ಲಿ ತಾವೇ ಉದ್ಗರಿಸಿಕೊಂಡಿರಬಹುದು. ಆ ಒಕ್ಕಲು ಹುಡುಗನ ಬದಲಾಗಿ ಇನ್ನೊಬ್ಬ ಹುಡುಗನಾಗಿದ್ದರೆ ನಮ್ಮ ಅವಸ್ಥೆಯೇನಾಗುತ್ತಿತ್ತು? ಎಂದು ಉಪಾಧ್ಯಾಯರಿಬ್ಬರೂ ತಮ್ಮ ದಶಾನಾಥನನ್ನು ಕೊಂಡಾಡಿರಬಹುದು. ಆದರೆ, ಆ ಮನೆಯೊಳಗೆ ಆಶೆಯನ್ನೂ, ಉತ್ಸಾಹವನ್ನೂ ಪುನಃ ತುಂಬಿಸುವ ದಶೆಯೂ ಬರಲಿಲ್ಲ; ನಾಥವೂ ಇರಲಿಲ್ಲ. + +ಒಂದೆರಡು ತಿಂಗಳು ಕಳೆಯಿತು. ಸೋಮಪ್ಪ ಗೈಮೆಗೆ ಬರುವುದಿಲ್ಲ. ಬಾರದಿದ್ದರೇನು? ನಾಯಕರ ಧಾರಾಳ ಮರ್ಜಿ ಅವನನ್ನು ಉಪವಾಸ ಬೀಳಬಿಡುವುದೇ? ಏಕೆ ಬರುವುದಿಲ್ಲ? ಎಂದು ನಾಯಕರು ಕೇಳಲಿಲ್ಲ. ಧನಿಗಳ ಮನೆಯಿಂದ ಪಡಿಯಿಕ್ಕಿ ಬರುತ್ತಿದ್ದಷ್ಟು ಕಾಲ, ಸೋಮಪ್ಪ ತನ್ನ ಕಷ್ಟವನ್ನು ನೆನೆದು ಗೋಳಿಡುವುದಕ್ಕೆ ಆತಂಕವೂ ಬಂದಿರಲಿಲ್ಲ. + +ಒಂದು ದಿನ ಸಂಧ್ಯಾಕಾಲ ಲಿಂಗಪ್ಪನ ಒಡಲು ಮಲಗಿದ್ದ ಬೆಟ್ಟು ಗದ್ದೆಯ ಕಡೆಗೆ ಸೋಮಪ್ಪನ ಭಾರವಾದ ಹೆಜ್ಜೆಗಳು ಸಾಗುತ್ತಿದ್ದುವು. ಕಂಕುಳಲ್ಲಿ ಒಂದು ಹೊರೆಯನ್ನು ಇಟ್ಟುಕೊಂಡಂತೆಯೂ ತೋರುತ್ತಿತ್ತು. ಹೆಗಲ ಮೇಲೆ ಹಾರೆಯಿತ್ತು. ಹಿಂದೆ ಮುಂದೆ ಯಾರಾದರೂ ಸುಳಿಯುತ್ತಿದ್ದಾರೋ ಎಂದು ಸ್ತುಲೂ ಕಣ್ಣು ತಿರುಗಿಸಿ ನೋಡುತ್ತಾ ಸೋಮಪ್ಪನ ಆ ಸ್ಥಳಕ್ಕೆ ಬಂದ. ಮೆಲ್ಲಗೆ ಕಂಕುಳಲ್ಲಿದ್ದ ಕಟ್ಟನ್ನು ತೆಗೆದು ಅದನ್ನು ಅಲ್ಲೇ ನೆಲದಲ್ಲಿರಿಸಿದ. ಹಾರೆಯಿಂದ ಚಿಕ್ಕದೊಂದು ಕುಳಿಯನ್ನು ಅಗೆದ. ಆ ಗಂಟನ್ನು ಅದರೊಳಗಿಟ್ಟ. ಅದರ ಮೇಲೆ ಮಣ್ಣು ಕಲ್ಲುಗಳನ್ನು ಅಡಕಿದ. ತಾನು ಹೂಳಿದ ವಸ್ತು ಅದೇ ಆಗಿರಬಹುದೇ? ಎಂಬುದನ್ನು ದೃಢಪಡಿಸುವುದಕ್ಕಾಗಿ ಮತ್ತೊಮ್ಮೆ ಮಣ್ಣು ಕಲ್ಲುಗಳನ್ನು ಅಗೆಯ ತೆಗೆದು ಗಂಟನ್ನು ಮೇಲೆತ್ತಿ ಬಿಚ್ಚಿನೋಡಿ ಮುತ್ತಿಟ್ಟ. ಮೊದಲಿನಂತೆಯೇ ಗಂಟು ಮಾಡಿ, ಅದೇ ಕುಳಿಯಲ್ಲಿಟ್ಟು ಹಿಂದಿನಂತೆಯೇ ಮುಚ್ಚಿದ. ನಸು ಕತ್ತಲಾಗಿದ್ದ ಕಾರಣ ಅವನ ಮುಖವಿಕಾರ ಯಾರಿಗೂ ಗೋಚರಿಸಿರಲಿಲ್ಲ. ಆದರೆ ತಡೆಯಲಾರದೆ ಉಕ್ಕಿ ಹರಿಯುವ ಈ ದುಃಖೋದ್ಗಾರವನ್ನು ಸಮೀಪದಲ್ಲಿ ನಿಂತವರು ಕೇಳಬಹುದಾಗಿತ್ತು. + +ಲಿಂಗು! ನೀನಿದ್ದಾಗ ಇದೆಲ್ಲವೂ ಬೇಕಿತ್ತು ಮಗು! ಇನ್ನು ನಮಗೇಕೆ? ಆ ಚೀಲವನ್ನು ಕಂಡರೆ ಅದನ್ನು ಹಿಡಿಯುತ್ತಿದ್ದವನ ನೆನಪಾಗುತ್ತದೆ. ಅದರೊಳಗಿದ್ದ ಪುಸ್ತಕಗಳು ನಿನ್ನೊಡನೆ ಮಾತಾಡುತ್ತಿದ್ದುವಲ್ಲವೆ? ನೀನು ಅವುಗಳೊಡನೆ ಮಾತಾಡುತ್ತಿದ್ದೆಯಲ್ಲವೆ? ನಿನ್ನ ಜೀವವಿತ್ತು ಅವುಗಳಲ್ಲಿ, ನಿನ್ನೊಳಗೆ ಅವುಗಳ ಜೀವವಿತ್ತು … ಮಗು! ನೀನು ಎದ್ದು ಹೋದ ಮೇಲೆ ಅವೇಕೆ ಇರಬೇಕು? ಮಂಗನ ಕೈಯಲ್ಲಿ ಮಾಣಿಕ್ಯವೇಕೆ ಮಗು? ನಿನ್ನನ್ನು ತಿಂದ ನೆಲ ಈ ಗಂಟನ್ನೂ ಕೊಳ್ಳಲಿ! ನಿನ್ನ ಶರೀರ ಮಲಗಿದಲ್ಲಿಯೇ ನಿನ್ನ ತಿಳಿವಿನ ಗಂಟಲೂ ಮಲಗಲಿ. ನಮಗೆ ಅದರ ಮೇಲೆ ಅಧಿಕಾರವೇನು?… ಎಂದು ಗದ್ಗದ ಸ್ವರದಲ್ಲಿ ಅವನಾಡುತ್ತಿದ್ದಾಗ ಯಾರದೋ ಕಾಲ ಸಪ್ಪಳವಾಯಿತು. + +ಸೋಮಪ್ಪ ಸ್ವಲ್ಪ ಬೆಚ್ಚಿದವನಂತೆ ಕಂಪಿತನಾದ. ಹತ್ತಿರದಲ್ಲೇ ನಾಯಕರು ನಿಂತಿದ್ದರು. ಎಷ್ಟೋ ತಿಂಗಳಿನಿಂದ ದುಡಿತಕ್ಕೆ ಹೋಗದಿದ್ದರೂ ಅನ್ನ ಕೊಡುತ್ತಿದ್ದ ಧನಿಗಳ ಮುಂದೆ, ತಾನು ಮಹಾಪರಾಧಿಯೆಂಬ ಮನೋಭಾವದಿಂದ ಮುಖ ತಗ್ಗಿಸಿ ನಿಂತಿದ್ದ ಸೋಮಪ್ಪ. ಅವನ ಬಾಯಿಯಿಂದ ಒಂದು ಶಬ್ದವೂ ಹೊರಡಲಿಲ್ಲ. + +ನಾಯಕರು ಸಹ ಏನನ್ನೂ ಆಡದೆ ಒಂದೆರಡು ನಿಮಿಷ ಸುಮ್ಮನೆ ನಿಂತಿದ್ದು , ಮತ್ತೆ ನಿಟ್ಟುಸಿರೊಂದನ್ನು ಎಳೆಯುತ್ತಾ “ಆದುದೆಲ್ಲ, ಆಗಿಹೋಯಿತು. ಇನ್ನು ವ್ಯಸನಪಟ್ಟು ಫಲವೇನು ಸೋಮಪ್ಪ?” ಎಂದರು, + +“ಹೌದು ಧನಿ!” ಎಂದು ಸೋಮಪ್ಪ ನುಡಿದ. + +“ಸಾಯುವವರು ಸಾಯುತ್ತಾರೆಂದು ಬದುಕುವವರು ಸಾಯಲಾಗುವುದೆ?” + +“ಇಲ್ಲ ಧನಿ!” ಎಂದ ಸೋಮಪ್ಪ .“ಇದೆಲ್ಲ ಪ್ರಪಂಚದಲ್ಲಿ ಇರುವುದೇ.”“ಹೌದು ಧನಿ!” ಎಂದ ಸೋಮಪ್ಪ“ಎಲ್ಲವನ್ನೂ ಮರೆತುಬಿಡು; ಹೋದವನಿಗಾಗಿ ಗೋಳಿಡಬೇಡ!”“ಇಲ್ಲ ಧನಿ” ಎಂದ ಸೋಮಪ್ಪ. + +“ಹಾಗಾದರೆ ನಾಳೆಯ ಕೆಲಸಕ್ಕೆ ಬಾ. ತೋಟದಲ್ಲಿ ಸಸಿ ನಡುವ ಕೆಲಸ ಹಿಂದೆ ಬಿದ್ದಿದೆ. ಮಳೆ ಮುಗಿಯುತ್ತಾ ಬಂತು. ಇನ್ನಾದರೂ ನೆಡಬೇಡವೇ?” ಎಂದು ನಾಯಕರು ನಯವಾಗಿ ಪ್ರಶ್ನಿಸುತ್ತಾ ಅವನ ಕರ್ತವ್ಯ ಲೋಪವನ್ನು ಉಪಾಯದಿಂದ ಸೂಚಿಸಿದರು. + + + +“ಹೌದು ಧನಿ! ನಾಳೆಯೇ ಬರುತ್ತೇನೆ ; ಸಸಿಗಳನ್ನು ಮಾತ್ರವಲ್ಲ ಈ ಹಳೆಯ ಮರವನ್ನೂ – ಈ ಸೋಮಪ್ಪನ ಶರೀರವನ್ನೂ ನಿಮ್ಮ ನೆಲದಲ್ಲಿಯೇ ನೆಟ್ಟು ಬಿಡುತ್ತೇನೆ – ಒಡೆಯಾ!” ಎಂದು ಸೋಮಪ್ಪ ಬಿಕ್ಕಿ ಬಿಕ್ಕಿ ಅಳತೊಡಗಿದ. + +***** + +( 1953 ) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_362.txt b/Kenda Sampige/article_362.txt new file mode 100644 index 0000000000000000000000000000000000000000..3fbf4c0fc23e4e50e4f3ddd6aef7ad5489639123 --- /dev/null +++ b/Kenda Sampige/article_362.txt @@ -0,0 +1,57 @@ + + +ಈ ಹುಡುಗ ಎಷ್ಟು ಹಠಮಾರಿ ಎಂದರೆ ನಾನು ಬರೆಯುವುದಿಲ್ಲ ಎಂದರೆ ಕೇಳುವವನಲ್ಲ. ನೀವು ನಮ್ಮ ಊರಿನ ಕವಿ, ನನ್ನ ಕವಿತೆಗಳ ಬಗ್ಗೆ ಯಾಕೆ ಬರೆಯೋಲ್ಲ? ಎಂದು ಮತ್ತೆ ಪ್ರಶ್ನೆ ಮಾಡುತ್ತಾನೆ! ಹೀಗೆ ಎರಡು ವರ್ಷಗಳಿಂದ ಜಗಳ ಮಾಡುತ್ತಿದ್ದಾನೆ. ಹಾಗೆಂದು ಈತ ಯಾವುದೇ ಬಗೆಯ ವಿನಾಯಿತಿ ಬಯಸುವ ಕವಿಯಲ್ಲ. ನಮ್ಮೂರಿನ ಈ ಯುವಕನ ಬಗ್ಗೆ ನನಗೆ ಹೆಮ್ಮೆ ಇದೆ. ಈತನ ಓದಿನ ಹರವು ಅಚ್ಚರಿ ಮೂಡಿಸುತ್ತದೆ. ಈ ವಯಸ್ಸಿಗೆ ತನ್ನ ಸರೀಕರಿಗಿಂತ ಹೆಚ್ಚು ಓದಿಕೊಂಡಿದ್ದಾನೆ ಎನ್ನಬಹುದು. + +ಹೊಸ ತಲೆಮಾರಿನ ಲೇಖಕರಿಗೆ ಹಳಗನ್ನಡ ಪಥ್ಯವಾಗುವುದಿಲ್ಲ ಎನ್ನುತ್ತಿರುವಾಗಲೇ ಈತ ಪಂಪ, ಲಕ್ಷ್ಮೀಶ, ಕುಮಾರವ್ಯಾಸ ಮುಂತಾದ ಪೂರ್ವಸೂರಿ ಕವಿಗಳನ್ನು ತಳಸ್ಪರ್ಶಿಯಾಗಿ ವಿಶ್ಲೇಷಿಸಬಲ್ಲ. ಮೊದಲಿಗೆ ವಿಮರ್ಶೆಯಲ್ಲಿ ತೊಡಗಿದ್ದವನು ಈಗ ಕವಿತೆಗೆ ಹೊರಳಿದ್ದಾನೆ. ವಿದ್ವತ್ತಿನ ಬೆನ್ನು ಹತ್ತಿದ ನಿನಗೆ ಅದು ಸೂಕ್ತ ಕ್ಷೇತ್ರ ಎಂದು ನಾನು ಹರಸಿ, ಹಾರೈಸಿದ್ದೂ ಉಂಟು. ಆದರೆ ಈಗ ಕವಿತೆಗಳ ಗುಚ್ಛವೊಂದು ‘ಹಾರುವ ಹಂಸೆ’ ಯಾಗಿ ಕೊರಳಿಗೆ ನುಡಿಹಾರ ಬಯಸಿ ನನ್ನ ಮೇಜಿನ ಮೇಲೆ ಬಂದು ಕೂತಿದೆ. + +(ದಿಲೀಪ್ ಕುಮಾರ್) + +ಹೆಚ್ಚಿನವರಲ್ಲಿ ಶಾಸ್ತ್ರಾಧ್ಯಯನವು ಸೃಜನಶೀಲತೆಗೆ ತೊಡಕಾಗಿ ಪರಿಣಮಿಸುತ್ತದೆ. ಅದು ತನ್ನನ್ನು ತಾನೆ ಒರೆಗೆ ಹಚ್ಚಿ ನೋಡಿಕೊಳ್ಳುವುದನ್ನು ಕಲಿಸುವುದರಿಂದ ಹಾಗಾಗುತ್ತದೆ. ಹಾಗೆಂದ ಮಾತ್ರಕ್ಕೆ ಸೃಜನಶೀಲನಾದವನಿಗೆ ಅಧ್ಯಯನದ ಅವಶ್ಯಕತೆ ಇಲ್ಲವೆಂದಲ್ಲ. ಅದಿಲ್ಲದಿದ್ದರೆ ಅಭಿವ್ಯಕ್ತಿಯು ಸೊರಗುತ್ತದೆ. ಕಾವ್ಯವನ್ನು ಸತ್ಯ ಮತ್ತು ಸೌಂದರ್ಯಗಳ ಯುಗಳ ದರ್ಶನ ಎಂದು ನಾನು ತಿಳಿದಿದ್ದೇನೆ. ಸತ್ಯ ಅಂದರೆ ಕಣ್ಣು ಕಂಡದ್ದು ಮತ್ತು ಮನಸ್ಸು ಉಂಡದ್ದು. ಇದನ್ನೆ ಅನುಭವ ಪ್ರಾಮಾಣಿಕತೆ ಎಂದು ಕರೆಯುತ್ತಾರೆ. ಸೌಂದರ್ಯ ಅದರ ಅಭಿವ್ಯಕ್ತಿ. ಅದೊಂದು ಕುಸುರಿ ಕೆಲಸ. ಕಾವ್ಯದ ಶಿಲ್ಪವನ್ನು ಕೆತ್ತುವುದು ಅಷ್ಟು ಸುಲಭವಲ್ಲ. ಭಾಷೆಯನ್ನು ರಸಾತ್ಮಕವಾಗಿ ಕುಟ್ಟಿ ಹದಮಾಡಿ ಎರಕ ಹೊಯ್ದು ನಿಲ್ಲಿಸಬೇಕು. ಅನುಗಾಲವೂ ನಿಲ್ಲುವಂತೆ ನಿಲ್ಲಿಸಬೇಕು. ಆದ್ದರಿಂದ ಮೂಲವಸ್ತುವೂ (ಅನುಭವವೂ) ಮುಖ್ಯ, ಕುಸುರಿಕಲೆಯೂ (ಅಭಿವ್ಯಕ್ತಿಯೂ) ಮುಖ್ಯ. ಶಬ್ದಾರ್ಥಸಹಿತವಾಗಿಯೂ ಕಾವ್ಯ ದಕ್ಕದೇ ಹೋಗಬಹುದು. + +ಆದರೆ ಸತ್ಯ ಮತ್ತು ಸೌಂದರ್ಯಗಳ ದರ್ಶನವಿಲ್ಲದೇ ಕಾವ್ಯವಿಲ್ಲ. ಬೇಂದ್ರೆ ಅದನ್ನು ಇನ್ನೊಂದು ಬಗೆಯಲ್ಲಿ “ಸ್ಫೂರ್ತಾ, ಅಮೂರ್ತಾ, ಆವಿರ್ಭೂತಾ ಭವಮಂಥನ ಮಂತ್ರಾ” ಎಂದು ಹೇಳುತ್ತಾರೆ. ನುಡಿಗಾರುಡಿಗ, ಎಂದಿಗೂ ಕಾವ್ಯಪ್ರೇಮಿಯ ಸಖ, ಸ್ಫೂರ್ತಿ ಮಂತ್ರವಾಗುವ ಬಗೆಯನ್ನು ಅನನ್ಯವಾಗಿ ವರ್ಣಿಸಿದ್ದಾರೆ. ಅದು ಅಮೂರ್ತವೂ ಆಗಿರಬೇಕು, ಭವಮಂಥನವೂ ಆಗಿರಬೇಕು! + +***** + +ದಿಲೀಪ್ ಕುಮಾರ್ ಅವರ ಈ ಚೊಚ್ಚಲ ಕವಿತಾಸಂಕಲನ ಕಾದ ಭೂಮಿಯ ಮೇಲೆ ಬಿದ್ದ ಮೊದಲ ಮಳೆಯಂತೆ ಚೈತನ್ಯದಾಯಕವಾಗಿದೆ ಎಂದು ನನಗನಿಸುತ್ತಿದೆ. ಹಸಿ ಮಣ್ಣಿನ ಕಂಪು ಸೂಸುತ್ತಿದೆ. ‘ತದ್ವಿದಹ್ಲಾದಕಾರಿಣಿ’ ಯಾಗಿದೆ. ಇದಕ್ಕಿಂತ ಇನ್ನೇನು ಬೇಕು? ಪ್ರತಿಯೊಬ್ಬ ಕವಿಯ ಅಂತರಂಗದಲ್ಲಿಯೂ ಒಳದನಿಯೊಂದು ಗುಪ್ತಗಾಮಿನಿಯಾಗಿ ಹರಿಯುತ್ತಿರುತ್ತದೆ. ಅದನ್ನೆ ಸ್ಥಾಯಿಭಾವ ಎಂದು ಅಲಂಕಾರಿಕರು ಕರೆದಿದ್ದಾರೆ. ಕವಿಯೊಬ್ಬನ ಸ್ಥಾಯಿಭಾವ ಏನೆಂಬುದು ಮೊದಲ ಸಂಕಲನದಲ್ಲಿ ಸಿಕ್ಕುವುದಿಲ್ಲ. ಅದನ್ನು ನಿರೀಕ್ಷಿಸಲೂಬಾರದು. ಆದ್ದರಿಂದ ವಿಭಾವಾನುಭಾವ ಸಂಚಾರಿ ಭಾವಗಳ ಕುರಿತ ಜಿಜ್ಞಾಸೆ ಇಲ್ಲಿ ಅನಗತ್ಯ. ಹರೆಯದ ಸೌಮ್ಯ ಉನ್ಮಾದದಲ್ಲಿ ಕವಿಮನಸ್ಸು ಇಲ್ಲಿ ಸ್ವೈರವಿಹಾರ ನಡೆಸಿದೆ. ಕವಿ ನನಗೆ ‘ಕಟ್ಟುವಿಕೆ’ಯ ಸಾಮರ್ಥ್ಯವಿದೆ ಎಂಬುದನ್ನು ದಾಷ್ಟ್ರ್ಯದಿಂದಲೇ ನಿರೂಪಿಸಿದ್ದಾನೆ. + +ಜನಪದ ಸಂಸ್ಕೃತಿಯ ತವರೂರಾದ ಚಾಮರಾಜನಗರ ಜಿಲ್ಲೆಯ ಹೈಕಳು ಹಾಡುತ್ತಾ, ಕಟ್ಟುತ್ತಾ ಬೆಳೆಯುತ್ತಾರೆ. ಮಲೆಮಹಾದೇಶ್ವರ ಮತ್ತು ಮಂಟೇಲಿಂಗಯ್ಯ ಎಲ್ಲ ಜಾತಿ, ವರ್ಗದ ಜನರಿಗೂ ಅದ್ಭುತ ರೂಪಕಗಳಾಗಿ ಕಾಡುತ್ತಾರೆ. ಸಂವೇದನಾಶೀಲನಾದ ಸಾಹಿತ್ಯದ ವಿದ್ಯಾರ್ಥಿಗೆ ಅದೊಂದು ಫಲವತ್ತು ನೆಲ, ಮುಗಿಯದ ಹಾಡುಗಬ್ಬದ ರಸದೌತಣ. ಈ ಸಂಕಲನದ ಕವಿತೆ ‘ಉರಿಗದ್ದಿಗೆ’ ಅದನ್ನು ಹೇಳುತ್ತಿದೆ. ‘ಸಿದ್ದಯ್ಯಾ ಸ್ವಾಮಿ ಬನ್ನಿ, ಮಂಟೇದಾ ನಿಂಗಯ್ಯಾ ನೀವು ಬನ್ಯೋ’ ಎಂಬ ಸಾಲುಗಳನ್ನು ಗುನುಗದ ನಮ್ಮ ಕತ್ತಲ ರಾಜ್ಯದ ಪ್ರಜೆಯೇ ಇಲ್ಲ ಎನ್ನಬಹುದು. + +ದಿಲೀಪ್ ಗಂಭೀರ ಕಾವ್ಯಾಭ್ಯಾಸಿಯಾಗಿರುವುದರಿಂದ ಭಾಷೆಯು ಸಲಿಲವಾಗಿ ಹರಿದಿದೆ ಮತ್ತು ಒಂದು ರೀತಿಯ ನವಿರುತನ ಪ್ರಾಪ್ತವಾಗಿದೆ. ಕೆಲವು ಸಾಲುಗಳು ರೇಶಿಮೆಯನ್ನು ತುದಿಬೆರಳಿನಲ್ಲಿ ಸ್ಪರ್ಶಿಸಿದ ಹಾಗೆ ಭಾಸವಾಗುತ್ತವೆ. ಉದಾಹರಣೆಗೆ ಈ ಸಾಲುಗಳನ್ನು ಗಮನಿಸಬಹುದು. + + + +ಅವಳಂಥ ಬಳ್ಳಿಯೊಂದು ತೊಡರಿದಾಗಒಳಗೆಲ್ಲಾ ನಾಗಲಿಂಗ ಪುಷ್ಪದ ಘಮಲು – ಒಂದು ಸಂಜೆ + +ಅವಳು ಬಳಿ ಸುಳಿದಂತೆಲ್ಲಾಒಳಗೊಳಗೆ ಕ್ಷೀರಸಾಗರ ಮಥನಪಾರಿಜಾತದ ಪರಿಮಳಕೊಳ್ಳದ ತುಂಬ ತುಂಬಿ ಹರಿವ ನೀರು – ಹರಿವ ನೀರು + +ಎಲ್ಲವೂ ಇದೆ ಈ ಹಾಳು ಎದೆಯಲ್ಲಿನಿನ್ನ ಬಗೆಗಿನ ಕೋಪವೊಂದನ್ನು ಬಿಟ್ಟು – ಕೊಡು + +ನಾನು ಆಗಲೇ ಹೇಳಿದ ಹಾಗೆ ಈತ ಮುಗ್ಧನಲ್ಲ. ಕಾವ್ಯದ ಒಳ ಹೊರಗನ್ನು ಬಲ್ಲವನು. ಆದ್ದರಿಂದ ಭಾವಕ್ಕಿಂತ ಬುದ್ಧಿಯ ತೂಕ ಸ್ವಲ್ಪ ಹೆಚ್ಚಾಗಿರುವುದು ಸಹಜವೇ ಆಗಿದೆ. ‘ಬೆಂಕಿ ಹೊರಗಿಲ್ಲ’ ಕವಿತೆ ಇಲ್ಲಿನ ಉತ್ತಮ ರಚನೆಗಳಲ್ಲೊಂದು. ಅದು ಹೀಗೆ ಶುರುವಾಗುತ್ತದೆ. + +ಮನೆಯ ಮುಂದಿನ ಚಪ್ಪಲಿಯ ಹಾಗೆಕಾದು ಕೂತಿದೆ ಅದುವೂ ನನ್ನಂತೆಗಮ್ಯದ ಗಮನ ನೀಡುತ್ತಾ + +ಮೊದಲೆರಡು ಸಾಲುಗಳು ರೂಪಕವಾಗಿ ಗಮನ ಸೆಳೆಯುತ್ತವೆ. ಮೂರನೆಯ ಸಾಲು ಬುದ್ಧಿಪೂರ್ವಕವಾಗಿದೆ. ಅದರ ಮುಂದಿನ ಸ್ಟ್ಯಾಂಜಾ ನೋಡಿ. + +ಬೆಂಕಿಯ ಮುಂದೆ ಚಳಿ ಕಾಯುವ ಹಾಗೆಕಾಯುತ್ತಿದ್ದೇನೆ ನಿನಗಾಗಿಬೆಂಕಿ ಹೊರಗಿಲ್ಲ + +ಇದೊಂದು ಮಾತನಾಡುತ್ತಿರುವ ಚಿತ್ರ. ಅವನು ಚಳಿ ಕಾಯಿಸಿಕೊಳ್ಳಲು ಬೆಂಕಿಯ ಮುಂದೆ ಕೂತಿದ್ದಾನೆ. ಸುಮ್ಮನೆ ಕುಳಿತಿಲ್ಲ; ಎದೆಯೊಳಗೆ ಬೆಂಕಿ ಇಟ್ಟುಕೊಂಡು ಕಾಯುತ್ತಿದ್ದಾನೆ. ಆ ಕಾಯುವಿಕೆಯ ತೀಕ್ಷ್ಣತೆಯನ್ನು ‘ಬೆಂಕಿ ಹೊರಗಿಲ್ಲ’ ಎಂಬ ಮಾತು ಮಿಂಚಿನಂತೆ ಹೊಳೆಯಿಸುತ್ತದೆ. ಉತ್ತಮ ಕಾವ್ಯ ಮಾಡುವ ಕೆಲಸ ಇಷ್ಟೆ. ಶಬ್ದವಿದೆ, ಅದಕ್ಕೊಂದು ಅರ್ಥವಿದೆ. ಅದರಿಂದಾಚೆ ಆ ಶಬ್ದಾರ್ಥಗಳು ಇನ್ನೇನಿನ್ನೇನನ್ನೋ ಧ್ವನಿಸುತ್ತವೆ. ಅದು ಕಾವ್ಯ. + +ಕವಿಗೆ ದಕ್ಕದ ವಸ್ತುವೇ ಇಲ್ಲ. ಪ್ಯಾಬ್ಲೊ ನೆರೂಡ ಹೇಳುತ್ತಾನೆ. ಒಂದು ಮರದ ತುಂಡು, ಪಿಂಗಾಣಿ ತಟ್ಟೆ, ಬ್ರೆಡ್ಡು ಇಂಥವು ಕಾವ್ಯಕ್ಕೆ ಅತಿ ಹತ್ತಿರವಾಗಬೇಕಂತೆ. ಕವಿ ಮುಟ್ಟಿದನೆಂದರೆ ಅವಕ್ಕೆ ಪ್ರಾಶಸ್ತ್ಯ ಸಿಕ್ಕಿಬಿಡುತ್ತದೆ. ‘ಆರದ ಕೆಂಡ’ ಅಂತಹ ಒಂದು ಪ್ರಯೋಗ. + +ಇಲ್ಲೆ ಈ ಜಾಗದಲ್ಲೆ ಆರದೆಲೆ ಉಳಿದಿದ್ದಸಿಗರೇಟಿನ ಕೆಂಡ ಆರಿದ್ದುಮೂಗಿಗೆ ಘಮಟು ಹಿಡಿವಂತೆ ಉಲಿದಿದ್ದುಬೆರಳುಗಳ ಮಧ್ಯೆ ನಲಿದಿದ್ದಕೆಂಡ ಆರಿದ್ದು ಅಲ್ಲೆ + +ಕವಿತೆಯ ಹೊರಮೈಯಲ್ಲಿ ಸಿಗರೇಟಿನ ಕೊನೆಯ ತುಂಡಿನ ಕೆಂಡ ಆರದೆ ಹೊಗೆಯಾಡಿಸುತ್ತಿದೆ (ನಾನಾಗಿದ್ದರೆ ಮೋಟು ಬೀಡಿಯ ಚಿತ್ರ ಕೊಡುತ್ತಿದ್ದೆ. ನನ್ನ ಹಳ್ಳಿಗಾಡಿನ ಬಂಧುಗಳು ಬೀಡಿಯನ್ನು ಅರ್ಧ ಸೇದಿ ಆರಿಸಿ, ಸ್ಟೈಲಾಗಿ ಹೂವಿಡುವಂತೆ ಕಿವಿಯ ಮೇಲಿಟ್ಟುಕೊಂಡು ಮತ್ತೊಮ್ಮೆ ಧಮ್ಮೆಳೆದು ಆರಿಸಲು ಕಷ್ಟ ಪಡುತ್ತಿದ್ದುದನ್ನು ನಾನು ನೋಡಿದ್ದೇನೆ.) ಆದರೆ ಒಳಮೈಯಲ್ಲಿ ಅವಳ ಚಿತ್ರವಿದೆ. ಆದ್ದರಿಂದ ‘ಹೊರಗೆಲ್ಲಾ ಹೊಗೆಯಾಡುವ ಕೆಂಡ/ ಒಳಗೆಲ್ಲಾ ತಂಪಾದ ಹಿಮಾಲಯ’. ಎಂದು ಕವಿಗನಿಸುತ್ತದೆ. ಇಂತಹ ಸುಕೋಮಲ ಚಿತ್ರಗಳನ್ನು ಕಟ್ಟಿಕೊಡುವುದರಲ್ಲಿ ದಿಲೀಪ್ ಯಶಸ್ವಿಯಾಗಿದ್ದಾರೆ. + +(ಡಾ. ಮೂಡ್ನಾಕೂಡು ಚಿನ್ನಸ್ವಾಮಿ) + +ಗಮ್ಯ, ನಿನ್ನ ನೆನಪು, ಕಣಿವೆಯ ದಾರಿ, ಸತ್ತಿಗೆ, ವಸುಂಧರೆ, ಮುಗುಳು ನಗಳು, ಅಲ್ಲಮನಿಗೆ, ಹಾರುವ ಹಂಸೆ ಮುಂತಾದ ಉತ್ತಮ ರಚನೆಗಳು ಈ ಸಂಕಲನದಲ್ಲಿವೆ. ಬುದ್ಧ, ಸಾಕ್ರೆಟಿಸ್ ರಿಂದ ಹಿಡಿದು ಕನಕ, ಪುರಂದರ, ಅಕ್ಕ, ಅಲ್ಲಮನವರೆಗೂ ಕವಿತೆಗಳಿವೆ. ಹೊಳೆದಂಡೆಯಲ್ಲಿ ಭೇಟಿಯಾದ ತಾವೋ ಹೆಗಲ ಮೇಲೆ ಕೈಯಿಟ್ಟು ‘ಬಿಡಬಾರದು ಹೆಜ್ಜೆ ಗುರುತು’ ಎಂದು ಉಪದೇಶಿಸಿದರೆ ಈತ ಬಸವನಹುಳುವನ್ನು ಪರಿಚಯಿಸಿ ತಾನು ಗೆದ್ದೆನೆಂದು ಬೀಗುತ್ತಾನೆ! ಇಲ್ಲಿ ಕವಿಯ ಆತ್ಮವಿಶ್ವಾಸವೂ ಗೆಲ್ಲುತ್ತದೆ. ಕವಿ ಮಹತ್ವಾಕಾಂಕ್ಷಿಯಾಗಿದ್ದಾನೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ದಿಲೀಪ್ ತನ್ನನ್ನು ತಾನೇ ಪ್ರಯೋಗಕ್ಕೆ ಒಡ್ಡಿಕೊಂಡಿರುವುದು ಇಲ್ಲಿನ ಕೆಲವು ಕವಿತೆಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. + +‘ಉಪ್ಪು ಸಮುದ್ರದ ತುಂಬ ಸಕ್ಕರೆಯ ಸ್ವಾದ ಅರಸಿ ನಡೆದಿದ್ದೇನೆ’ ಎಂಬ ಬೆಡಗಿನ ಸಾಲು ಇವರ ಕಾವ್ಯ ದೃಷ್ಟಿಯನ್ನು, ಲೋಕದೃಷ್ಟಿಯನ್ನು ಹೇಳತ್ತಿದೆ. + +ಆಡದೆ ಹೋದರೂ ಮಾತಿನ ಗಂಧವ ತೇಯುತ ಹೋದವ ನಾನುಒಲವಿನ ಚಿತ್ರಕೆ ಭಾವದ ಗೆರೆಗಳ ಎಳೆಯುತ ಹೋದವ ನಾನು – ಒಂದು ಭಾವ + + + +ಕಾವ್ಯವನ್ನು ಕುರಿತು ಇಷ್ಟು ಸ್ಪಷ್ಟವಾದ ಗ್ರಹಿಕೆ ಇರುವ ಕವಿಯ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವೇನಿದೆ? ವಿದ್ವತ್ತು ಮತ್ತು ಪ್ರತಿಭೆಯ ಜೋಡೆತ್ತಿನ ಬಂಡಿಯನೇರಿ ಸವಾರಿ ನಡೆಸಿರುವ ದಿಲೀಪ್ ಕುಮಾರ್ಗೆ ಎಲ್ಲ ಶ್ರೇಯಸ್ಸು ಒದಗಿ ಬರಲಿ ಎಂದಷ್ಟೆ ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_363.txt b/Kenda Sampige/article_363.txt new file mode 100644 index 0000000000000000000000000000000000000000..13c492fb83088204c50c1a6929177a9c8906c8b2 --- /dev/null +++ b/Kenda Sampige/article_363.txt @@ -0,0 +1,33 @@ + + +ಅಮಾವಾಸ್ಯೆ ಕಳೆದ ಆ ಐದನೇ ದಿನ ಬಿದ್ದ ಕನಸು ಮೊದಲಿಗೆ ಭಯ ಹುಟ್ಟಿಸಲಿಲ್ಲ. ಬದಲಾಗಿ ಚಂದಿರನ ಕಂಡರೆ ಕುಣಿದು ಕುಪ್ಪಳಿಸುವ ಕಡಲಿನಂತೆ ಖುಷಿಯಿಂದ ತುಳುಕುತ್ತಿದ್ದೆ. ಕನಸಿನಲ್ಲಿ ಅದೇ ಆ ಬಾಲಚಂದ್ರ ಬಾನ ಇಳಿದು ಬಂದು ಹೆಗಲ ಏರಿ ಕೂತು ಬಿಟ್ಟಿದ್ದ. ಅಮ್ಮ ತುತ್ತು ತಿನ್ನಿಸುವಾಗ ಆಗಸಕ್ಕೆ ಬೆರಳು ನೀಡಿ ತೋರಿಸುತ್ತಿದ್ದ ನೆನಪು ಅದ್ಯಾವುದೋ ಮೂಲೆಯಿಂದ ಸುರುಳಿ ಬಿಚ್ಚಿತು. ಬಾಲಕಾಲದ ನೆನಪಿನಿಂದ ರೋಮಾಂಚನಗೊಂಡು ಮುಖ ಅರಳುತ್ತಿತ್ತು. ಅದನ್ನು ಅವನ ಕಿವಿಗೆ ಉಸುರಿದೆ. ಮುಗುಳ್ನಕ್ಕ. ಮತ್ತೆ ಸುಖ ದುಃಖ ಮಾತಾಡುತ್ತಾ ಕೂತ ನೆನಪು. ಅಷ್ಟರಲ್ಲಿ ನಿಧಾನಕ್ಕೆ ಗಂಟಲು ಗೀರಿದ ಅನುಭವ. ನೋವು ಎದೆಗಿಳಿಯಿತು. ಉಸಿರು ನಿಂತಿತು. ಮರು ಗಳಿಗೆ ಬೆನ್ನ ಹಿಂದೆ ಚೀರಿದ ಆ ಅಟ್ಟಹಾಸಕ್ಕೆ ಬೆಚ್ಚಿ ಎಚ್ಚರ ಆಗಿ ಅದೆಷ್ಟು ಕಾಲ ಕಳೆದರೂ ಆ ಕನಸು ಕಾಡುತ್ತಲೇ ಇತ್ತು. ಸಾಕ್ಷಾತ್ ಶಿವನೇ ಮುದ್ದಿಸಿ ಮುಡಿದ ಆ ಚಂದಿರ ಅದೇಕೆ ನನ್ನ ಕತ್ತು ಸೀಳಿ ಎದೆಗಿರಿದುಬಿಟ್ಟ! ಬೆನ್ನ ಹಿಂದೆ ಬೊಬ್ಬಿರಿದ ಆ ಧ್ವನಿ ಯಾರದ್ದು? + +ಕನಸಿನ ವ್ಯಾಖ್ಯಾನ ಹೇಳಬಲ್ಲ ಪಂಡಿತರೆಲ್ಲ ಆಳಿಗೊಂದು ಕತೆ ಕಟ್ಟತೊಡಗಿದರು. ವರ್ಷಗಳು ಉರುಳಿದಂತೆ ಕನಸುಗಳು ನೆನಪಿನ ಯಾವುದೊ ಮೂಲೆಗೆ ಸೇರಿಬಿಡಬೇಕು. ಆದರೆ ನನ್ನ ಕತೆ ಹಾಗಾಗಲಿಲ್ಲ. ಒಂದಲ್ಲ ಒಂದು ರೀತಿಯಲ್ಲಿ ನೆನಪಿನ ಮನೆಯ ಆ ಮೂಲೆಗೆ ಯಾರಾದರೂ ಬೆಳಕು ಹರಿಸುತ್ತಾರೆ. ಆಗ ಮತ್ತೆ ಕೆಲವು ದಿನಗಳು ಕೈ ಜಾರುತ್ತವೆ. ಕೈ ಜಾರುತ್ತವೆ ಎಂದರೆ ಮೋಸದ ಮಾತಾಗಬಹುದು. ಆ ದಿನಗಳಲ್ಲಿ ನನ್ನ ಚಟುವಟಿಕೆಗಳು ಬಹಳ ಚುರುಕಾಗಿರುತ್ತವೆ. ಪಟ್ಟಿಯಲ್ಲಿ ಬಾಕಿ ಉಳಿಸಿಕೊಂಡಿದ್ದ ಬೆಟ್ಟ ಗುಡ್ಡಗಳ ಸುತ್ತುವುದು. ರೈಲ್ವೇ ಸ್ಟೇಷನ್ ಗಳಲ್ಲಿ ರಾತ್ರಿ ನಿದ್ದೆ ಬಿಟ್ಟು ಪುಸ್ತಕ ಓದುವುದು. ಊರಿಂದೂರಿಗೆ ಅಲೆಯುವುದು. ಹೀಗೆ ದಿನಗಳು ಅನಾಯಾಸವಾಗಿ ಕಳೆಯುತ್ತವೆ. ಹೋದ ಊರಲ್ಲೆಲ್ಲ ಜನರು ಹುಡುಕಾಟದಲ್ಲಿ ತೊಡಗಿರುವುದು ಕಾಣಿಸುತ್ತದೆ. ಯಾಕೋ ಅವರ ಹುಡುಕಾಟದಲ್ಲಿ ನಾನು ಪಾಲುದಾರನಾಗುವುದಿಲ್ಲ. ಕಾಣೆಯಾದ ಆಟಿಕೆ ಹುಡುಕುವ ಮಗುವಿನಂತೆ ತುಟಿ ಮಡಚಿ ಬಿಕ್ಕಳಿಸುತ್ತಾ ನನ್ನದೇ ಹುಡುಕಾಟವನ್ನು ಮುಂದುವರಿಸುತ್ತೇನೆ; ಕಳೆದುಕೊಂಡದ್ದೇನು ಎಂಬುದರ ಪರಿವೆಯೇ ಇಲ್ಲದೆ! + +ಹೀಗಿರುವಾಗ ಕೆಲ ದಿನಗಳ ಹಿಂದೆ ಒಬ್ಬ ದಾಯಿರದ ಮುದುಕನನ್ನು ಕಂಡೆ. ಆಗ ಮನಸ್ಸು ಮತ್ತೆ ಬುಗುರಿಯಾಗಿತ್ತು. ಊರ ಸಂತೆಯ ದೊಡ್ಡ ಮರದ ನೆರಳಿನಲ್ಲಿ ಅವ ನಿಂತು ಹಾಡುತ್ತಿದ್ದ. ಹತ್ತಿರ ಹೋಗಿ ಅವನ ಹಾಡಿನಲ್ಲಿ ಮೈಮರೆತು ನಿಂತು ಬಿಟ್ಟೆ. ಅಹದಾನವನೇ ಯಾ ಅಲ್ಲಾಹ್… ಸಮದನಾವನೆ ಯಾ ಅಲ್ಲಾಹ್.. ಅರಬ್ಬೀ ಮಿಶ್ರಿತ ತಮಿಳು ಹಾಡು ಮುಗಿದಾಗ ಎದೆಬುಗುರಿಯೂ ತಿರುಗುವುದ ಮರೆತು ಒಂದು ಕಡೆ ನಿಂತು ಬಿಟ್ಟಿತ್ತು. ದಣಿದ ಎದೆ ಏದುಸಿರು ಮುಗಿಸಿ ತಣಿಯುತ್ತಿತ್ತು. ಸೇರಿದ್ದ ಜನರು ಜೋಳಿಗೆಗೆ ಚಿಲ್ಲರೆ ಹಾಕಿದರು. ಹಿಂದೆಯೆಲ್ಲ ಮನೆ ಮನೆ ತಿರುಗಿ ಜೋಳಿಗೆ ತುಂಬಾ ಅಕ್ಕಿ ತುಂಬಿಸಿಕೊಳ್ಳುತ್ತಿದ್ದ ಈ ದರವೇಶಿಗಳು ಈಗ ಪುಡಿಗಾಸಿಗೆ ಹಾಡುತ್ತಾರಲ್ಲಾ ಎಂದೆನಿಸಿತು. ಸಂದಣಿ ಚದುರಿದ ಮೇಲೆ ಮೆಲ್ಲ ಅವನ ಹತ್ತಿರ ಹೋದೆ. + +‘ಅಸ್ಸಲಾಂ ಅಲೈಕುಂ’. ತಲೆಯೆತ್ತಿ ಮುಖ ನೋಡಿದ. ಗಂಭೀರ ಮುಖಭಾವ ನಿಧಾನಕ್ಕೆ ಅರಳಿ ‘ವಅಲೈಕುಂ ಸಲಾಂ ಕಂದಾ’ ಎಂದ. “ಯಾವೂರು?” ಎಂದು ಕೇಳಬೇಕೆನಿಸಿತು. ದರವೇಶಿ ನಡೆದದ್ದೇ ದಾರಿ, ನಿಂತದ್ದೇ ಊರು ಎಂದು ನೆನಪಾಗಿ ಸುಮ್ಮನಾದೆ. ಈಗವನ ಮುಖದಲ್ಲಿ ಚಂದಿರ ಮೂಡಿದ್ದ. ‘ನಿನ್ನ ಚಿಂತೆ ನಾ ಬಲ್ಲೆ, ಬಾ ನನ್ನೊಂದಿಗೆ.’ ಎಂದು ಬಿರಬಿರನೆ ನಡೆದ. ಮಂತ್ರಮುಗ್ದನಂತೆ ಹಿಂಬಾಲಿಸಿದೆ. ಸುಮಾರು ಎರಡೂವರೆ ಕಿಲೋ ಮೀಟರ್. ಅವ ನಿಂತದ್ದು ಅರೆ ಬತ್ತಿದ ನದಿಯೊಂದರ ಬದಿಯಲ್ಲಿ. + +‘ಈ ನದಿಯ ಕತೆ ಗೊತ್ತೇನು ನಿನಗೆ. ಮಳೆಗಾಲದಲ್ಲಿ ಮೈದುಂಬಿ ಹರಿಯುತ್ತದೆ. ಈಗ ನೋಡು, ಈ ನಡುಬೇಸಗೆಗೆ ಹೀಗೆ ಬಡಕಲಾಗುತ್ತದೆ. ಆದರೆ ಹರಿಯುತ್ತದೆ ನಿಧಾನಕ್ಕೆ.’ ಎಂದು ಹೇಳಿ ನನ್ನನ್ನೇ ನೋಡತೊಡಗಿದ. “ಇದನ್ನು ತೋರಿಸಲು ಇಷ್ಟು ದೂರ ನಡೆಸಿದನಾ ಈ ಮುದುಕ?” ಎಂದು ಅಂದುಕೊಳ್ಳುತ್ತಿರುವಾಗಲೇ ಅವ ಮಾತು ಮುಂದುವರಿಸಿದ. + + + +‘ನಿನ್ನ ಕತೆ ಇದಕ್ಕಿಂತ ಭಿನ್ನವೆಂದು ಅನಿಸುತ್ತದೆಯೇ? ಎಂದೋ ಬಿದ್ದ ಕನಸೊಂದು ನೆನಪಾಗಿ ಮಳೆಗಾಲದ ನದಿಯಂತೆ ನೀನು ಭೋರ್ಗರೆಯುವೆ. ಅದು ಮರೆವಿನ ಪರದೆಯೊಳಗೆ ಮಾಯವಾದಾಗ ನಿನ್ನ ಮನಸು ಬತ್ತಿ ಹೋಗುತ್ತದೆ. ನಿನ್ನ ಮನಸ್ಸು ತಳಮಳಗೊಳ್ಳುವ ಆ ದಿನಗಳಲ್ಲಿ ನೀನು ಉತ್ಸಾಹದ ಚಿಲುಮೆಯಾಗಿರುವೆ. ಉಳಿದ ದಿನಗಳಲ್ಲಿ ತಿಂದುಂಡು ಬದುಕುವ ಬರಿಯ ಯುವಕನಾಗಿರುವೆ. ಈಗ ನೀನೇ ಹೇಳು. ಈ ಎರಡು ಅವಸ್ಥೆಗಳ ನಡುವೆ ನಿನ್ನ ನೆಮ್ಮದಿ ಯಾವುದರಲ್ಲಿದೆ?’ + +‘ಅಜ್ಜಾ, ನನ್ನ ಕನಸಿನ ಗುಟ್ಟು ನಿಮಗೆ ಹೇಗೆ ತಿಳಿಯಿತೆಂದು ನನಗೆ ಗೊತ್ತಿಲ್ಲ. ನನಗಿಷ್ಟು ಮಾತ್ರ ಹೇಳಿ ಸಾಕು. ಆ ಕನಸಿನ ಒಗಟು ಬಿಡಿಸಲು ನಿಮ್ಮಿಂದ ಸಾಧ್ಯವೇ?’ ಸಂತೆಯ ಮರದಡಿಯಲ್ಲಿ ಈ ಮುದುಕನನ್ನು ಕಂಡಾಗಿನಿಂದ ಒಳಗಡೆ ಕುದಿಯುತ್ತಿದ್ದ ಪ್ರಶ್ನೆ ಇದೊಂದೇ. ಆತನ ಉಳಿದ ಮಾತುಗಳೆಲ್ಲ ನನ್ನ ತಲೆಗೆ ಇಳಿಯಲೇ ಇಲ್ಲ. + +‘ಇಲ್ಲಿ ಬಾ’ ಎಂದು ಹೆಗಲಿಗೆ ಕೈ ಹಾಕಿದ ಆ ದರ್ವೇಶಿ ನಿಡುಗಾಲದ ಗೆಳೆಯನೆಂಬಂತೆ ಮಾತು ಮುಂದುವರಿಸಿದ. + +‘ನೀನು ಈ ಕಾಲವೆಲ್ಲ ಪಟ್ಟ ಸಂಕಟ ನನಗೆ ತಿಳಿದಿದೆ. ನೀನು ಅದರಿಂದ ಮುಕ್ತಿ ಪಡೆಯಬೇಕೆಂದು ಇನ್ನಿಲ್ಲದ ಸಾಹಸವನ್ನೂ ಮಾಡಿರುವೆ. ಈಗ ನಿನಗೆ ತೃಪ್ತಿಯಾಗುವಂತಹ ಅರ್ಥವನ್ನು ಕಟ್ಟಿಕೊಡಲೂ ನನಗೆ ಸಾಧ್ಯವಿದೆ.’ ನನ್ನ ದೇಹ ಪೂರ್ತಿ ಕಿವಿಯಾದ ಕ್ಷಣವದು. ವರ್ಷಗಳ ಕಾಲದ ಹುಡುಕಾಟಕ್ಕೆ ಸಿಗುತ್ತಿರುವ ಬಹುಮಾನ. ಬೇಸಗೆಯ ಆ ನದಿಯಂತೆಯೇ ಆತನ ಮಾತುಗಳು ಸಾವಧಾನವಾಗಿ ಹರಿಯತೊಡಗಿತು. + +‘ಆದರೆ ಮಗೂ, ಅದರ ನಂತರ ನೀನೇನಾಗುವೆ? ನಿನಗೆ ಬೇಕಾಗಿರುವುದನ್ನು ನನ್ನಿಂದ ನೀನು ಪಡೆದುಕೊಳ್ಳುವೆ ಎಂದಲ್ಲದೆ ನೀನು ನಿಜದಲ್ಲಿ ನಿನಗೆ ಬೇಕಾಗಿರುವುದನ್ನು ಗಳಿಸಿಕೊಳ್ಳುವುದಿಲ್ಲವಲ್ಲ. ನಾನು ಹೇಳಿದ್ದೇ ನಿಜವೆಂದು ನೀನು ನಂಬಿ ಬಿಡುತ್ತೀಯ ಎಂದಾದರೆ ನೀನೆಂತ ಮೈಗಳ್ಳನಾಗುತ್ತೀಯಾ! + +ನಿನ್ನ ಸತ್ಯವನ್ನು ನೀನೇ ಕಂಡುಕೊಳ್ಳಬೇಕು. ಹುಲ್ಲಿನ ಬಣವೆಗೆ ಬಿದ್ದ ಬೆಂಕಿಯನ್ನು ಆರಿಸುವಂತ ಕೆಲಸ ಅದು. ಬೆಂಕಿ ಆರಿದ ಮೇಲೆ ಉಳಿದದ್ದು ನಿನ್ನ ಪಾಲು; ನಿನ್ನ ಬಾಳು.’ + +ಹೆಗಲ ಮೇಲಿದ್ದ ಕೈ ತಲೆ ನೇವರಿಸಿತು. ಮಾತುಗಳು ಕಿವಿಗೆ ಬೀಳುತ್ತಿದ್ದವು. ಆದರೆ ದೇಹ ದಣಿದಂತೆಣಿಸಿ ತಲೆ ಸುತ್ತು ಬಂದು ಕಣ್ಣು ಕತ್ತಲಾಗತೊಡಗಿತು. ಒಂದು ಕ್ಷಣ ನನಗೇನಾಗುತ್ತಿದೆ ಎಂದು ಯೋಚಿಸಲೂ ಆಗದಷ್ಟು ದಣಿವು. ಸುತ್ತಲೂ ಕತ್ತಲು. ನಿದ್ದೆ. ಕನಸು. ಚಂದಿರ. ತುಂಬಿ ಹರಿವ ನದಿ. ರಕ್ತ. ಬಡಕಲಾದ ನದಿ. ಆದರೂ ಹರಿಯುತ್ತಿದೆ. ನಿಧಾನಕ್ಕೆ. ಆವೇಶವಿಲ್ಲದೆ. ಉದ್ರೇಕವಿಲ್ಲದೆ. ಈಗ ಕಾಡುವ ಕನಸು ನನ್ನ ಮುಂದೆ ತಿಳಿಯಾಗಿ ಹರಿಯುತ್ತಿತ್ತು. ಬೊಬ್ಬಿರಿದ ಆ ಧ್ವನಿ ಮಮತೆಯಿಂದ ಎದೆ ಬಡಿತದೊಂದಿಗೆ ಮಿಂದಿತ್ತು. + + + +ಎಚ್ಚರ ಆದಾಗ ನಾನಿನ್ನೂ ಆ ನದಿ ದಡದಲ್ಲೇ ನಿಂತಿದ್ದೆ. ಬಲಗೈಯಲ್ಲೊಂದು ದಾಯಿರವಿತ್ತು, ತೋಳಿನಲ್ಲೊಂದು ಜೋಳಿಗೆ ನೇತು ಬಿದ್ದಿತ್ತು. ಮುದಿ ದರ್ವೇಶಿ ಕಾಣೆಯಾಗಿದ್ದ. + +ಊರು ದಕ್ಷಿಣ ಕನ್ನಡದ ವಿಟ್ಲ. ಹೊಟ್ಟೆಪಾಡು ಕೇರಳದ ಕಲ್ಲಿಕೋಟೆಗೆ ಕಟ್ಟಿ ಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ \ No newline at end of file diff --git a/Kenda Sampige/article_364.txt b/Kenda Sampige/article_364.txt new file mode 100644 index 0000000000000000000000000000000000000000..b283513b7c01daebb1ce0afd8bd0ded40a2d13e2 --- /dev/null +++ b/Kenda Sampige/article_364.txt @@ -0,0 +1,67 @@ + + +ಕನ್ನಡ ಜಿಲ್ಲೆಯ ಜೈನ ಜಮೀನ್ದಾರರಲ್ಲಿ ಉಂಡಾಡಿ ನಾಗಪ್ಪ ಆರಿಗರು ಗ್ರಾಮದ ಒಂದನೇ ಗುರಿಕಾರರೂ, ಪಠೇಲರೂ ಆದ್ದರಿಂದ ಅಲ್ಲಿನ ನಿವಾಸಿಗಳೆಲ್ಲರೂ ಅವರನ್ನು ರಾಜರಂತೆ ಕಾಣುತ್ತಿದ್ದರು. ಆರಿಗರು ಸುಮಾರು ಇಪ್ಪತ್ತು ಕೋರ್ಜಿ ಬತ್ತ ಬೆಳೆಯುವ ಜಮೀನಿನ ಸ್ವಾಮಿಗಳು. ಆದರೆ ಕೇವಲ ಹಸ್ತಾಕ್ಷರ ಮಾಡುವಷ್ಟೇ ವಿದ್ಯಾವಂತರಾದ್ದರಿಂದ ಮನೆಯ ಶ್ಯಾನುಭೋಗರೂ, ಆಳುಗಳೂ ಮನೆಯಲ್ಲಿ ಸಿಕ್ಕಿದ ವಸ್ತುಗಳನ್ನು ಗುಟ್ಟಾಗಿ ಕತ್ತರಿಸುತ್ತಿದ್ದರು. ಆರಿಗರು ಎಲ್ಲಾ ವಿಷಯಗಳಲ್ಲಿ ನಿಶ್ಚಿಂತೆಯಾಗಿದ್ದರು. ಕುಲದೀಪಕ, ವಂಶವರ್ಧಕ ಪುತ್ರರತ್ನದ ಅಭಾವದುಃಖವು ಆಗಾಗ್ಗೆ ಪೀಡಿಸುತ್ತಿತ್ತು. ಚಿತೆ, ಚಿಂತೆಗಳಲ್ಲಿ ಕೇವಲ ಅನುಸ್ವಾರ ಮಾತ್ರವೇ ಹೆಚ್ಚು ಕಡಿಮೆ. ಚಿತೆಯೂ ನಿಯತ ಸಮಯದಲ್ಲಿ ಉರಿಯುವುದು, ಆದರೆ ಚಿಂತೆ ಎಂಬ ಅಗ್ನಿಯು ಸದೈವ ಕಾಯವನ್ನು ಕೃಶಮಾಡುತ್ತಾ ನಷ್ಟಭ್ರಷ್ಟವಾಗಿ ಮಾಡುವುದು ದೈವದೇವರುಗಳಿಗೆಷ್ಟೋ ಹರಿಕೆ ಹೇಳಿಕೊಂಡ ನಂತರ ಆರಿಗರ ಧರ್ಮಪತ್ನಿ ಕುಸುಮಾಜಮ್ಮನು ಗರ್ಭಿಣಿಯಾದಳು. + +ಆಪ್ತಬಂಧುಗಳ ಸಂತೋಷಕ್ಕೆ ಪಾರವಿಲ್ಲ. ಅವರು ಕಳುಹಿಸಿದ ಬಗೆಬಗೆಯ ಕಜ್ಜಾಯಗಳು ತಿನ್ನುವವರಿಲ್ಲದೆ ಆರಿಗರ ಮನೆಯಲ್ಲಿ ಕೊಳೆಯುತ್ತಿದ್ದವು. ಶನಿವಾರ ಮಧ್ಯಾಹ್ನ ಸುಮಾರು 12 ಗಂಟೆಯಾಗಿರಬಹುದು. ಅಮ್ಮನು ಗಂಡು ಶಿಶುವನ್ನು ಹೆತ್ತಳು. ಆರಿಗರು ಸಾಕ್ಷಾತ್ ದೈವದೇವರೇ ಶಿಶುವಿನ ರೂಪವಾಗಿ ಆವತರಿಸಿದರೆಂದು ಬಹಳವಾಗಿ ಹಿಗ್ಗಿ ದಾನಾದಿಗಳನ್ನು ಮಾಡಿದರು. ನಾಮಕರಣದ ದಿನ ಶಿಶುವಿಗೆ `ಸುಕುಮಾರ’ ನೆಂಬ ಶುಭನಾಮವನ್ನಿಟ್ಟರು. ಆದರೆ ನೆರೆಹೊರೆಯವರೂ, ಮನೆಯವರೂ `ಅಣ್ಣಿ’ ಎಂಬ ಉಪನಾಮದಿಂದ ಕರೆಯುತ್ತಿದ್ದುದರಿಂದ ನಾವು ಹಾಗೆಯೇ ಕರೆಯುವ. + +ಅಣ್ಣಿಯು ಶುಕ್ಲ ಪಕ್ಷದ ಚಂದ್ರನಂತೆ ವೃದ್ಧಿಯಾಗುತ್ತಾ ಒಂಭತ್ತನೇ ವರ್ಷದವನಾದನು. ಆರಿಗರು ಅಣ್ಣಿಯನ್ನು ಗ್ರಾಮದ ಸ್ಕೂಲಿಗೆ ಕಳುಹಿಸಬೇಕೆಂದರು. ಅದನ್ನು ಕೇಳಿ ಆರಿಗರ ತಾಯಿ ಚೆಲುವಮ್ಮನವರು `ನಮ್ಮ ಅಣ್ಣಿಗೇನು ಕಮ್ಮಿ? ವಿದ್ಯಾವಂತನಾಗಿ ಕಲ್ಲೇಕಟ್ಟರ ಪದವಿಯನ್ನು ಪ್ರಾಪ್ತಮಾಡಿ ಜೀವಿಸಿರಬೇಕೆ? ಸಾಧಾರಣ ಮನೆಗೆ ಬಂದ ಕಾಗದ ಪತ್ರಗಳನ್ನು ಓದುವಷ್ಟು ಅಕ್ಷರಾಭ್ಯಾಸ ಮಾಡಿಸಿದರೆ ಸರಿ. ವಿದ್ಯಾಲಯಕ್ಕೆ ಕಳುಹಿಸಿ ಮಾಸ್ಟರರಿಂದ ನಮ್ಮ ಮುದ್ದು ಅಣ್ಣಿಗೆ ಹೊಡೆಯಿಸಬೇಕೇ? ಮನೆಯಲ್ಲಿಯೇ ಕಲಿಯಬಾರದೇ? + +ಆರಿಗರು `ಮನೆಯಲ್ಲಿ ಕಲಿಯುವುದು ಗೊತ್ತೇ ಇದೆ’ ಎಂದು ಒತ್ತಾಯದಿಂದ ಅಣ್ಣಿಯನ್ನು ಶಾಲೆಗೆ ಕರೆದುಕೊಂಡು ಹೋದರು. ಮನೆಯಿಂದ ಒಂದು ಮೈಲು ದೂರವಿರುವ ಶಾಲೆಗೆ ಹೋಗುತ್ತಾ ನಾಲ್ಕೈದು ದಿನಗಳು ಕೂಡಾ ಆಗಲಿಲ್ಲ. ಆಗಲೇ ತನಗೆ ಸೈಕಲ್, ಕುದುರೆಗಾಡಿ ತೆಗೆಸಿಕೊಡಬೇಕೆಂದು ಅಣ್ಣಿಯು ಆರಿಗರೊಡನೆ ಹಟ ಮಾಡುತ್ತಿದ್ದನು. ಆರಿಗರು ಆತನನ್ನು ಹೆಗಲ ಮೇಲಿಟ್ಟು ಹೋಗಿ ಬರುವುದಕ್ಕೆ ಒಬ್ಬ ಆಳನ್ನು ನಿಯತಮಾಡಿದರು. ಹಾಗಿದ್ದರೂ ಮುದ್ದು ಅಣ್ಣಿಗೆ ಶಾಲೆಗೆ ಹೋಗುವುದಕ್ಕೆ ಇಚ್ಚೆಯಿಲ್ಲ. ಒತ್ತಾಯದಿಂದ ಎಷ್ಟೋ ಪ್ರಾರ್ಥನೆ ಮಾಡಿದ ನಂತರ ಸವಾರಿಯು ಹೋಗುತ್ತಿತ್ತು. ಶಾಲೆಗೆ ಹೋಗುತ್ತಾ ಆರು ತಿಂಗಳಾಯಿತು. ಅಕ್ಷರಮಾಲೆಯೇ ಇನ್ನೂ ಚೆನ್ನಾಗಿ ಬರಲಿಲ್ಲ. ಬರುವುದು ಹೇಗೆ? ಇಚ್ಛೆಯಿದ್ದರೆ ತಾನೇ? ಜರತಾರಿ ಟೊಪ್ಪಿ, ಮಕ್ ಮಲ್ ಅಂಗಿ, ಜರಿಯ ದೋತ್ರಗಳನ್ನು ಉಟ್ಟುಕೊಂಡು ಮದುಮಗನಂತೆ ಹೋಗುವ ಜರಬೇ ಹೊರತು, ಕಲಿತು ಯೋಗ್ಯ ವಿದ್ಯಾವಂತನಾಗಬೇಕೆಂಬ ಇಚ್ಚೆಯಿಲ್ಲ. + +ಉಪಾಧ್ಯಾಯರು ಸ್ವಲ್ಪ ಗದರಿಸಿದರಂತೂ `ಶೃಂಗಾರ ರಾಮಣ್ಣ’ ನಮ್ಮ ಅಣ್ಣಿಗೆ ಕಣ್ಣೀರು ಬರುತ್ತಿತ್ತು. ಇನ್ನೂ ಸ್ವಲ್ಪ ಜೋರಾಗಿ ಗದರಿಸಿದರಂತೂ `ಅಯ್ಯಯ್ಯೋ! ಅಯ್ಯಯ್ಯೋ!’ ಎಂದು ಬೊಬ್ಬೆ ಹಾಕುತ್ತಿದ್ದನು. ಅಣ್ಣಿಯ ಆ ಪರಿಸ್ಥಿತಿಯನ್ನು ನೋಡಿ `ಲೆಕ್ಕಕ್ಕಾದರೂ ಬರುತ್ತಿರ’ ಲೆಂದು ಉಪಾಧ್ಯಾಯರು ಸುಮ್ಮನಿದ್ದರು. + +ಅಣ್ಣಿಯು ಹದಿನೈದು ವರ್ಷ ಪ್ರಾಯದವನಾದನು. ಶಾಲೆಗೆ ಹೋಗುತ್ತಾ ಐದಾರು ವರ್ಷಗಳಾದುವು. ಪ್ರತಿ ವರ್ಷ ಫೈಲಾಗುತ್ತಾ ಹಾಗೂ ಹೀಗೂ ಎರಡನೇ ಕ್ಲಾಸಿನಲ್ಲಿ ನಾಮ ಮಾತ್ರಕ್ಕೆ ಓದುತ್ತಿದ್ದನು. ಈ ವಿದ್ಯಕ್ಕೆ ವ್ಯತಿರಿಕ್ತವಾಗಿ ಅಣ್ಣಿಯು ಇನ್ನೊಂದು ವಿದ್ಯದಲ್ಲಿ ಪ್ರವೀಣನಾದನು. ಅದಾವುದು? ಇನ್ನಾವುದಲ್ಲ. ಗ್ರಾಮದ ಶಾಲೆಯಲ್ಲಿ ಹುಡುಗಿಯರೂ ಓದುತ್ತಿದ್ದುದರಿಂದ ಅಣ್ಣಿಯ ದೃಷ್ಟಿಯು ಅವರ ಮೇಲೆ ಬೀಳುತ್ತಿತ್ತು. ಗುಪ್ತವಾಗಿ ಅದೆಷ್ಟೋ ಅತ್ಯಾಚಾರ ಮಾಡಿದ್ದನ್ನು ಕೇಳಿ ಉಪಾಧ್ಯಾಯರು ಅಣ್ಣಿಯನ್ನು ಶಾಲೆಗೆ ಬಾರದಂತೆ ಮಾಡಿದರು. + +ಆರಿಗರು, `ಅಣ್ಣಿಯು ದೇಶಭಾಷೆ ಕನ್ನಡದಲ್ಲಿ ಮನೆಯ ಶ್ಯಾನುಭೋಗರಷ್ಟು ಕಲಿತಿರುವನು. ಇನ್ನು ಕೆಲವು ವರ್ಷ ಮಂಗಳೂರಲ್ಲಿ ಇಂಗ್ಲೀಷ್ ಕಲಿತರೆ ಸುಯೋಗ್ಯ ವಿದ್ಯಾವಂತನಾದಾನು’ ಎಂದು ವಿಚಾರಿಸುತ್ತ ಮಂಗಳೂರಿಗೆ ಕರಕೊಂಡು ಹೋಗಿ ಜೈನ ಹೊಟೇಲಿನಲ್ಲಿ ಊಟದ ಏರ್ಪಾಡು ಮಾಡಿ, ಹಾಯ್ ಸ್ಕೂಲಿನಲ್ಲಿ ಎರಡನೇ ಕ್ಲಾಸಿನಲ್ಲಿ ಸೇರಿಸಿ, ಐನೂರು ರೂಪಾಯಿ ಆತನ ಕೈಯಲ್ಲಿ ಕೊಟ್ಟು ಆಗಾಗ್ಗೆ ಕಾಗದ ಬರೆಯುತ್ತಿರು, ಬೇಕಾದಷ್ಟು ಕಳುಹಿಸುತ್ತೇನೆಂದೂ, ಚೆನ್ನಾಗಿ ಓದಿ ಪ್ರಸಿದ್ಧ ವಿದ್ಯಾವಂತನಾಗಬೇಕೆಂದೂ ಹೇಳಿ ಊರಿಗೆ ಬಂದರು. + +ಅಣ್ಣಿಯ ಕ್ಲಾಸಿನಲ್ಲಿ ಆತನೊಬ್ಬನೇ ಶರೀರಪ್ರಾಯದಲ್ಲಿ ದೊಡ್ಡನಾದ್ದರಿಂದ ಬಾಕಿ ಸಣ್ಣ ಹುಡುಗರೆಲ್ಲರೂ ಹಾಸ್ಯ ಮಾಡುತ್ತಿದ್ದುದನ್ನು ನೋಡಿ ಅವನಿಗೆ ಸರಿಬೀಳಲಿಲ್ಲ. ಸರಿಯಾಗಿ ಪ್ರತಿದಿನ ಸ್ಕೂಲಿಗೆ ಹೋಗದಿದ್ದುದರಿಂದ ಉಪಾಧ್ಯಾಯರು ಆತನ ಹೆಸರನ್ನು ತೆಗೆದು ಹಾಕಿದರು. + +ಅಣ್ಣಿಯು ಸಂಪೂರ್ಣ ಸ್ವತಂತ್ರನಾದನು. ಆ ವೇಳೆಗೆ ಸರಿಯಾಗಿ ಅವನಂತಹ ಕೆಲವು ಪೋಲಿ ಹುಡುಗರು ಅವನ ಜತೆಗೆ ಸೇರಿದರು. ಅಣ್ಣಿಯು ಕೇವಲ ಊಟಕ್ಕೆ ಹೊಟೇಲಿಗೆ ಹೋಗುತ್ತಿದ್ದನು. ಅಡಿಗೆಯವನೂ ಅಣ್ಣಿ ಹಗಲು ಸ್ಕೂಲಿಗೆ ಹೋಗುತ್ತಾ ರಾತ್ರೆ ಉಪಾಧ್ಯಾಯರ ಗೃಹದಲ್ಲಿ ಓದುತ್ತಿರಬಹುದೆಂದು ಯೋಚಿಸಿ ಸುಮ್ಮನಿದ್ದನು. + +ಅಣ್ಣಿಯು ತನ್ನ ಮಿತ್ರರೊಡನೆ ರಾತ್ರಿ ದಿನ ಪೇಟೆಯ ಸಿನೆಮಾ ಮಂದಿರ, ನಾಟಕಗೃಹ, ವೇಶ್ಯಾ ಗೃಹದಲ್ಲಿಯೇ ತಿರುಗಾಡುತ್ತಿದ್ದನು. ಶಹರ್ ನಿವಾಸಿಗಳ ಪೈಕಿ ಹೆಚ್ಚು ಜನರು ಇಂಗ್ಲೀಷ್ ಮಾತನಾಡುವುದನ್ನು ಕಂಡು ಪ್ರಾಯಃ ವ್ಯವಹಾರದಲ್ಲಿ ಬರುವ ಐವತ್ತರವತ್ತು ಇಂಗ್ಲೀಷ್ ಶಬ್ದವನ್ನು ಕಂಠಸ್ತ ಮಾಡಿದನು. ತೀರ್ಥಸ್ಥಾನಗಳಿಗೆ ಹೋದವರು ಪ್ರಥಮ ಶಿರವನ್ನು ನುಣ್ಣಗೆ ಬೋಳಿಸುವಂತೆ ಅಣ್ಣಿಯು ಪೇಟೆಗೆ ಬಂದು ಕ್ರೊಪ್ ಕಟ್ಟಿಂಗ್ ಮಾಡಿಸಿದನು. + +ಮಿತ್ರರು ಅಣ್ಣಿಯನ್ನು ಸಂಪೂರ್ಣ `ಜಂಟಲ್ಮೆನ್’ ಆಗುವಂತೆ ಆವಶ್ಯಕ ಸಾಮಗ್ರಿಗಳ ಹೆಸರನ್ನೆಲ್ಲಾ ವಿವರವಾಗಿ ಹೇಳಿದರು. ಆಗಲೆ ಕಾಲಿಗೆ `ಬೂಟ್’ ತಲೆಗೆ `ಹೆಟ್’ ಮೈಗೆ `ಕೋಟ್’, ಕಾಲಿಗೆ `ಪೆಂಟ್’, ಸೊಂಟಕ್ಕೆ `ಬೆಲ್ಟ್’, ಕುತ್ತಿಗೆಗೆ `ನೆಕ್ ಟಯಿ’, ಕಣ್ಣಿಗೆ `ಸ್ಪೆಕ್ಟಿಕಲ್’, ಕೈಗೊಂದು `ವಾಕಿಂಗ್ ಸ್ಟಿಕ್’ ಇತ್ಯಾದಿ ಸಾಮಗ್ರಿಗಳನ್ನು ಪಡೆದನು. ವ್ಯಾಪಾರಿಗಳು ಈತನು ಹಳ್ಳಿಯ ಬೆಪ್ಪ ಬೇತಾಳನೆಂದು ಒಂದಕ್ಕೆರಡರಷ್ಟು ಕ್ರಮ ವಸೂಲು ಮಾಡಿದರು. + +ಆತನ ದಿನ ಕ್ರಮ (Time table) ಹೀಗಿತ್ತು. ಪ್ರಾತಃ ಕಾಲ 7 ಗಂಟೆವರೆಗೆ ವೇಶ್ಯೆಯ ಗೃಹದಲ್ಲಿ ಇದ್ದು, ನಂತರ ಎದ್ದು `ಮಹಾನಂದ ಕಾಫಿ ಕ್ಲಬ್ಬಿಗೆ’ ಪ್ರಯಾಣ. ಅಲ್ಲಿಂದ ಮಿತ್ರರ ಸಂಘದಲ್ಲಿ ಸೇರಿ ಹನ್ನೊಂದು ಗಂಟೆವರೆಗೆ ಹುಚ್ಚಾಬಟ್ಟೆ ಮಾತಾಡುತ್ತಿರುವುದು. ಆನಂತರ ಹೊಟೇಲಿಗೆ ಹೋಗಿ ಊಟಮಾಡಿ ಮಧ್ಯಾಹ್ನ ಅಲ್ಲಿಯೇ ಮಲಗಿದ್ದು ಸಾಯಂಕಾಲ ಐದು ಗಂಟೆಗೆ ಪುನಃ ಊಟ ಮಾಡಿ ಸಿನೆಮಾ ಗೃಹಗಳಿಗೆ ಆಗಮನ. ಅಲ್ಲಿಂದ ಸೀದಾ ಕಲಿಯುಗ ಕುಲದೇವಿಗಳಾದ ವೇಶ್ಯಾ ಗೃಹಗಳಿಗೆ ದಯಮಾಡುತ್ತಿದ್ದನು. + +ಅಣ್ಣಿಯು ಮಂಗಳೂರಿಗೆ ಬಂದು ಮೂರು ನಾಲ್ಕು ತಿಂಗಳು ಕೂಡಾ ಪೂರಾ ಆಗಲಿಲ್ಲ. ಅಷ್ಟರೊಳಗೆ ಪಿತನಿಗೆ ಐದಾರು ಕಾಗದ ಬರೆದು ತಾನು ಮನೆಯಲ್ಲಿ ಮಾಸ್ಟರನ್ನು ಇಟ್ಟುಕೊಂಡು ಓದುತ್ತಿದ್ದೇನೆಂದು ಸುಳ್ಳು ಬರೆದು ಐನೂರು ರೂಪಾಯಿ ಪುನಃ ಪಡೆದು, ವ್ಯರ್ಥವಾದ ಕಾರ್ಯದಲ್ಲಿ ನೀರಿನಂತೆ ಹಣ ವ್ಯಯಮಾಡುತ್ತಿದ್ದನು. ಇದು ಸಾಲದೆ ಹೊಟೇಲಿನ ದರ್ಣಪ್ಪನಿಂದ ಇನ್ನೂರು ರೂಪಾಯಿ ಸಾಲ ಮಾಡಿದನು. + + + +ಆತನ ಶರೀರ ಸ್ಥಿತಿಯನ್ನು ನೋಡಿ ಅಡಿಗೆಯವನಿಗೆ ಸಂಶಯವಾಯಿತು. ಗುಟ್ಟಾಗಿ ಆತನ ಹಿಂದೆ ಹೋಗುತ್ತಾ ಆತನ ದಿನಚರ್ಯವನ್ನು ತಿಳಿದು ಕೂಡಲೇ ಆರಿಗರು ಬಂದು ಆತನನ್ನು ಶೀಘ್ರ ಕರೆದುಕೊಂಡು ಹೋಗುವಂತೆ ಆತನ ದಿನಚರ್ಯಗಳನ್ನೂ, ಶರೀರಿಸ್ಥಿತಿಯನ್ನೂ ವಿಸ್ತಾರವಾಗಿ ಬರೆದನು. ಪತ್ರ ತಲುಪುತ್ತಲೇ ಆರಿಗರು ಶ್ಯಾನುಭೋಗರಿಂದ ಓದಿಸಿದರು. ಅದನ್ನು ಕೇಳಲು ತಲೆಯ ಮೇಲೆ ಸಿಡಿಲು ಬಡಿದಂತಾಯಿತು. ಅದೇ ದಿನ ಶ್ಯಾನುಭೋಗರನ್ನು ಮಂಗಳೂರಿಗೆ ಕಳುಹಿಸಿ ಅಣ್ಣಿಯನ್ನು ಶೀಘ್ರ ಕರೆದುಕೊಂಡು ಬರುವಂತೆ ಆಜ್ಞಾಪಿಸಿದರು. + +ಮರುದಿನ ಸಾಯಂಕಾಲವೇ ಅಣ್ಣಿಯು ಮನೆಗೆ ಬಂದನು. ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು. ಅಣ್ಣಿಯು ವಿವಾಹಕ್ಕೆ ಯೋಗ್ಯನಾಗಿರುವುದರಿಂದ ಶೀಘ್ರದಲ್ಲಿಯೇ ಮದುವೆ ಮಾಡಿದಲ್ಲಿ ಮನೆಯಲ್ಲಿ ಇದ್ದಿರಬಹುದೆಂದು ನಿಶ್ಚಯಿಸಿ ಆತನಿಗೆ ಯೋಗ್ಯಕುಮಾರಿಯನ್ನು ಹುಡುಕಲು ಹೊರಟರು. + +ಕೊಡಿಂಬಾಡಿ ಜಾರು ಪಕಳರಿಗೆ `ರತಿದೇವಿ’ ಎಂಬೊಬ್ಬಳೇ ರೂಪವತಿ, ವಿದ್ಯಾವತಿ, ಯವ್ವನವತಿ ಕನ್ಯೆಯಿದ್ದಾಳೆಂಬುದನ್ನು ಕೇಳಿ ಆರಿಗರು ಅಲ್ಲಿ ಹೋಗಿ ನಿಶ್ಚಯಿಸಿದರು. + +ಆರಿಗರ ಗೃಹದಲ್ಲಿ ಮದುವೆ ಚಪ್ಪರಾದಿ ಸಕಲ ಸನ್ನಾಹಗಳು ತಯಾರಾಗುತ್ತಿದ್ದವು. ಅತ್ತ ಮಿತ್ರರಿಗೆ ವಿವಾಹ ಪತ್ರಿಕೆಗಳು ತಲುಪುತಿದ್ದುವು. ಆರಿಗರು ತನ್ನ ನಿಕಟಮಿತ್ರರನ್ನು ಮನೆಯಲ್ಲಿಯೇ ಕೂಡಿಸಿ ವಿವಾಹದಲ್ಲೆಷ್ಟು ಖರ್ಚು ಮಾಡತಕ್ಕುದೆಂಬುದನ್ನು ಪ್ರಸ್ತಾಪಿಸಿದರು. ಒಬ್ಬರು ಒಂದು ಸಾವಿರವೆಂದೂ, ಇನ್ನೊಬ್ಬರು ಎರಡು ಸಾವಿರವೆಂದೂ ನಾನಾರೂಪವಾಗಿ ಹೇಳಿದರು. ಅಷ್ಟರಲ್ಲಿ ಆರಿಗರ ತಾಯಮ್ಮನು ಬಂದು `ನಮಗೇನು ನೂರಾರು ಮರಿಮಕ್ಕಳುಗಳು ಇದ್ದಾವೆ! + +ಅಣ್ಣಿಯ ವಿವಾಹ ಬಹಳ ಸಂಭ್ರಮದಿಂದ ಇಷ್ಟರವರೆಗೆ ಯಾವ ಗುತ್ತಿನವನೂ ಇಷ್ಟು ಖರ್ಚು ಮಾಡಿ ವಿವಾಹ ಮಾಡಿಸಲಿಲ್ಲವೆಂಬಂತಿರಬೇಕು. ಮೂರು ನಾಲ್ಕು ಸಾವಿರ ರೂಪಾಯಿ ಖರ್ಚಾದರೂ ಚಿಂತೆಯಿಲ್ಲ’ ಎಂದರು. ಸಾಯಲಿಕ್ಕೆ ಹತ್ತಿರವಾದ ಮುದುಕರ ಮಾತನ್ನು ಮೀರುವುದು ಸರಿಯಲ್ಲವೆಂದು ಅವರು ಹೇಳಿದ್ದಷ್ಟೆ ಖರ್ಚು ಮಾಡತಕ್ಕುದೆಂದು ನಿಶ್ಚಯವಾಯಿತು. + +ಕಲಿಯುಗ ಕುಲದೇವಿ ವೇಶ್ಯಾ ಸ್ತ್ರೀಯರಿಗೆ ಆಯಂತ್ರಣ ತಲುಪುತ್ತಲೇ ಮದುವೆಯ ಒಂದೆರಡು ದಿನಗಳ ಮುಂಚೆಯೇ ಸಂಘ ಸಹಿತ ಆರಿಗರ ಗೃಹಕ್ಕೆ ಚಿತ್ತೈಸಿದರು. ನೂರಾರು ಗರ್ನಲ್ ಇತ್ಯಾದಿ ತರತರದ ಸಿಡಿಮದ್ದುಗಳ ಗೋಣಿಗೋಣಿಗಳೇ ಒಂದು ಕಡೆ ರಾಶಿ ಹಾಕಲ್ಪಟ್ಟಿದ್ದುವು. ಸಮಯಕ್ಕೆ ಸರಿಯಾಗಿ ನಾಲ್ಕಾರು ಮೇಳ ಬೇಂಡ್, ವಾಲಗದವರು ಬಂದು; ಮದುಮಗಳನ್ನು ಕರಕೊಂಡು ಬರುವುದಕ್ಕೆ ಮಹಾ ಸಂಭ್ರಮದಿಂದ ದಿಬ್ಬಣ ಹೊರಟಿತು. + +ದೇವಿದೇವತೆಗಳ ಭಕ್ತರು ತಂಡೋಪತಂಡವಾಗಿ ದೇವಿಯನ್ನು ಪೂಜಿಸುವರೆ ದೇವಸ್ಥಾನಕ್ಕೆ ಹೋಗುವಂತೆ ದಿಬ್ಬಣದಲ್ಲಿದ್ದ ಕುಲದೇವಿಗಳ ದರ್ಶನಕ್ಕೆ ಅಲ್ಲಲ್ಲಿ ಸಾವಿರಾರು ಭಕ್ತರು ಸುತ್ತುಕಟ್ಟಿಕೊಂಡು ಅವರ ಗಾನ, ನರ್ತನ, ಹಾವಭಾವಗಳನ್ನು ನೋಡಿ ತಮ್ಮನ್ನು ತಾವೆ ಮರೆಯುತ್ತಿದ್ದರು. ಸಿಡಿಮದ್ದುಗಳ ಆರ್ಭಟವು, ಬೇಂಡ್, ವಾಲಗಗಳ ಶಬ್ದವನ್ನು ಮಬ್ಬೊತ್ತಿತು. ಒಂದು ಗ್ರಾಮದ ಮಧ್ಯದಲ್ಲಿ ದಿಬ್ಬಣ ಹೋಗುತ್ತಿದ್ದಾಗ ಆಕಸ್ಮಾತ್ ಸಿಡಿಮದ್ದು ಹಾರಿ ಮೂರು ನಾಲ್ಕು ದೊಡ್ಡ ದೊಡ್ಡ ಒಣಹುಲ್ಲು ರಾಶಿಗಳಿಗೆ ತಗಲಿ ಜೋರಾಗಿ ಉರಿಯಲಿಕ್ಕೆ ಪ್ರಾರಂಭವಾಗಿ ಸ್ವಲ್ಪ ಕಾಲದಲ್ಲಿಯೇ ಭಸ್ಮವಾಯಿತು. ಮಾಲಿಕರು ಆರಿಗರ ಮುಂದೆ ಬಂದು ಅವರಿಗೆಷ್ಟೊ ಪೀಡಿಸಿ ಒಣಹುಲ್ಲಿನ ಮೌಲ್ಯರೂಪವಾಗಿ ನಾಲ್ಕು ನೂರು, ಐನೂರು ರೂಪಾಯಿ ಪಡೆದರು. ಹೇಗೂ ದಿಬ್ಬಣವು ಮದುಮಗಳನ್ನು ಆರಿಗರ ಗೃಹಕ್ಕೆ ಕರಕೊಂಡು ಬಂತು. + +ವಿವಾಹ ಪ್ರಾರಂಭವಾಯಿತು. ಸಭೆಯಲ್ಲಿ ಸಾವಿರಾರು ಮಾನ್ಯ ಗೃಹಸ್ಥರು ಕೂತಿದ್ದರು. ಸಭೆಯ ಮಧ್ಯದಲ್ಲಿ ಕಲಿಯುಗ ಕುಲದೇವಿಗಳ ನರ್ತನ ಪ್ರಾರಂಭವಾಯಿತು. ಆರಿಗರು ದೇವಿಗಳ ಹರಿವಾಣದಲ್ಲಿ ಐವತ್ತು ರೂಪಾಯಿ ಪ್ರಥಮ ಹರಿಕೆ ಹಾಕಿ ಮಾನ್ಯ ಗೃಹಸ್ಥರಿಗೆಲ್ಲಾ `ದವಲತ್ ಜಾದ’ ಗಳಿಂದ ಸತ್ಕರಿಸಿದರು. ಕೂಡಲೇ ಸೇಮಿತರು ಭಂಗರಿಗೆ, ಹೆಗ್ಗಡೆಯವರು ಸೆಟ್ಟರಿಗೆ, ಚೌಟರು ಕಂಬಳಿಯವರಿಗೆ, ಅಜಿಲರು ಬಲ್ಲಾಳರಿಗೆ ಸ್ಪರ್ಧೆಯಿಂದ ದವಲಜ್ಜಾದಗಳನ್ನು ಮಾಡಿಸಿದರು. ಒಂದೆರಡು ಗಂಟೆಗಳವರೆಗೆ `ದವಲಜ್ಜಾದ’ ಮಳೆಯ ಹೊಡೆತವೊ ಎಂಬಂತೆ ಐನೂರಕ್ಕಿಂತಲೂ ಹೆಚ್ಚಾದ ರೂಪಾಯಿ ಸೇರಿತು. ಆ ಮಧ್ಯೆ ಶಿಕ್ಷಿತ ಮಹಾಶಯರೊಬ್ಬರು ಕೋಣಗಳ ಮುಂದೆ ಕಿನ್ನರಿ ಬಾರಿಸಿದಂತೆ `ಬಂಧುಗಳೇ! ಶಿಕ್ಷಿತ ಉತ್ತರ ಹಿಂದೂಸ್ಥಾನದ ಜೈನಬಂಧುಗಳೂ, ಈ ಕಡೆಯ ಶಿಕ್ಷಿತ ಜೈನೇತರರೂ ವೇಶ್ಯಾನರ್ತನದಿಂದಾಗುವ ಹಾನಿಯನ್ನು ಕಂಡು ನಿಲ್ಲಿಸಿರುವುದರಿಂದ ಕೂಡಲೇ ನರ್ತನವನ್ನು ನಿಲ್ಲಿಸಬೇಕು. ನಿಲ್ಲಿಸದಿದ್ದರೆ ಶಿಕ್ಷಿತ ಸಮಾಜವು ಸಭಿಕರನ್ನು ಮಹಾಮೂರ್ಖರೆಂದು ನಿಂದಿಸದಿರದು’ ಎಂದು ಲೆಕ್ಚರ್ ಮಾಡಿದರು. ಅಷ್ಟರಲ್ಲಿ ಪೇಟೆಯ ಸೆಟ್ಟಿಗಳೂ, ಇನ್ನು ಕೆಲವು ಧೂರ್ತರೂ ತೋಳಗಳಂತೆ ಆ ಶಿಕ್ಷಿತರನ್ನು ಹೊಡೆಯಲು ಓಡಿದರು. ಅವರಂತು ಕೂಡಲೇ ಹೇಳದೆ ಕೇಳದೆ ಓಡಿಹೋದರು. + +ವಿವಾಹ ಕಾರ್ಯಗಳೆಲ್ಲಾ ಸಮಾಪ್ತವಾಗುತ್ತಾ ಬಂದುವು. ಅಷ್ಟರಲ್ಲಿ ಮೈಸೂರು ಜೈನ ವಿದ್ಯಾವರ್ಧಕ ಸಂಘದ ಪ್ರಚಾರಕರೊಬ್ಬರೂ, ಮಂಗಳೂರಿನ ಅನಾಥಾಲಯದ ಕಾರ್ಯಕರ್ತರೊಬ್ಬರೂ ಆರಿಗರ ಮುಂದೆ ಬಂದು ಸಂಸ್ಥೆಗಳಿಗೆ ಉದಾರ ಸಹಾಯ ಮಾಡಬೇಕೆಂದು ಪ್ರಾರ್ಥಿಸಿದರು. ಆರಿಗರು ಅದೆಷ್ಟೋ ಅಡ್ಡಿಗಳನ್ನು ಹೇಳಿ ಒಂದೆರಡು ತಿಂಗಳು ದಾಟಿದ ನಂತರ ಬರುವಂತೆ ಆಜ್ಞಾಪಿಸಿದರು. ಅವರೆಷ್ಟೋ ಪೀಡಿಸಿದ ನಂತರ ಎರಡು ಸಂಸ್ಥೆಗಳಿಗೆ ಎರಡೆರಡು ರೂಪಾಯಿ ಸಹಾಯ ಮಾಡಿದರು. ಮೂರ್ಖ ಶಿರೋಮಣಿ ಆರಿಗರೇ! ಕುಲದೇವಿಗಳಿಗೆ ನೂರಾರು ರೂಪಾಯಿ ಹರಿಕೆ ಹಾಕುವರೇ, ಕಿಂಚಿತ್ ಕೂಡ ಪ್ರಯೋಜನವಿಲ್ಲದ ಸಿಡಿಮದ್ದುಗಳಿಗೆ ಸಾವಿರಾರು ರೂಪಾಯಿ ಖರ್ಚು ಮಾಡುವರೇ, ರೈತರಿಗೆ ನಾಲ್ಕು ನೂರು ರೂಪಾಯಿ ಐನೂರು ರೂಪಾಯಿ ಜುಲ್ಮಾನೆ ಕೊಡುವರೇ ನಿಮ್ಮಲ್ಲಿ ಯಥೇಷ್ಟ ರೂಪಾಯಿಗಳಿವೆ. ಆದರೆ ಸಾರ್ವಜನಿಕ ಸರ್ವೋಪಯೋಗ ಸಂಸ್ಥೆಗಳಿಗೆ ಉದಾರ ಸಹಾಯ ಮಾಡುವರೇ ನಿಮ್ಮಲ್ಲಿ ಹಣವಿಲ್ಲ. ಧಿಕ್ಕಾರ! + +ರತಿದೇವಿಯನ್ನು ಮನ್ಮಥನ ರತಿಯಂತಿದ್ದರೂ, ಮೂರ್ಖ ಅಣ್ಣಿಯ ಕಣ್ಣಿಗೆ ಸರಿಬೀಳಲಿಲ್ಲ. ಅಂದಿನಿಂದ ಆಗಾಗ್ಗೆ ವೇಶ್ಯಾಗೃಹದ ಬಾಗಿಲಲ್ಲಿಯೇ ಬೀಳುತ್ತಿದ್ದನು. ಪತಿಯು ತನ್ನನ್ನು ಪ್ರೇಮದಿಂದ ಕಾಣದಿದ್ದುದರಿಂದ ಪಿತನ ಗೃಹದಲ್ಲಿದ್ದು, ಮಾನ್ಯ ಕೆಲವು ಮಹಾಶಯರಿಂದ ಗೃಹಕ್ಕೆ ಕರೆಯಿಸಿಕೊಂಡರೂ ಅಣ್ಣಿಯು ಒಂದೆರಡು ದಿನಗಳವರೆಗೆ ಮನೆಯಲ್ಲಿದ್ದು ಪುನಃ ಆ ವೇಶ್ಯೆಯರ ಗೃಹಕ್ಕೇನೆ ಹೋಗಿ ಬೀಳುತ್ತಿದ್ದನು. ಒಂದೆರಡು ತಿಂಗಳಲ್ಲಿಯೇ ಅಣ್ಣಿಯು ಅರವತ್ತು ವರ್ಷದ ಮುದುಕನಂತಾದನು. ಕೈಕಾಲುಗಳೆಲ್ಲ ಒಣ ಕಟ್ಟಿಗೆಯಂತಾದುವು. ಮುಖದಲ್ಲಿ ಯೌವನ ಕಾಂತಿಯು ನಷ್ಟವಾಗಿ ಎಲುಬುಗಳು ಕಾಣುತ್ತಿದ್ದವು. ತಲೆ ನರೆಯಿತು. ಬೆತ್ತವಿಲ್ಲದೆ ಸ್ವಲ್ಪ ದೂರ ನಡೆಯುವುದು ಅಶಕ್ಯವಾಯಿತು. ಸ್ವಲ್ಪ ಆಹಾರವನ್ನುಂಡು ಕರಗಿಸುವ ಮಾತು ಹಾಗಿರಲಿ, ಕುಡಿದ ಸ್ವಲ್ಪ ಹಾಲನ್ನು ಜೀರ್ಣಮಾಡುವ ಶಕ್ತಿಯಿಲ್ಲದೆ ಅಜೀರ್ಣವಾಗುತ್ತಿತ್ತು. + +ಆರಿಗರ ಮಿತ್ರರೊಬ್ಬರು ಈ ದೃಶ್ಯವನ್ನು ನೋಡಿ ಅಣ್ಣಿಯನ್ನು ಆತನ ಗೃಹಕ್ಕೆ ಕರೆದುಕೊಂಡು ಹೋದರು. ಆರಿಗರ ಮನೆಯವರು ಅಣ್ಣಿಯ ಸ್ಥಿತಿಯನ್ನು ನೋಡಿ ಹಾಹಾಕಾರ ಮಾಡಲು ಪ್ರಾರಂಭಿಸಿದರು. ಆರಿಗರು ಅಣ್ಣಿಯು ಪತ್ನಿಯ ಗೃಹದಲ್ಲಿಯೇ ಇದ್ದಾನೆಂದು ಸುಮ್ಮನಿದ್ದುದರಿಂದ ಈ ವಿಷಯವು ಅವರಿಗೆ ಗೊತ್ತಿದ್ದಿಲ್ಲ. ಅಣ್ಣಿಯು ಬಹಳ ಕಾಯಿಲೆಯಲ್ಲಿದ್ದಾನೆಂದು ವರ್ತಮಾನ ತಲುಪುತ್ತಲೇ ಪಕಳರು ಮಗಳ ಸಹಿತ ಆರಿಗರ ಗೃಹಕ್ಕೆ ಬಂದರು.ಅಣ್ಣಿಗೆ ಕ್ಷಯರೋಗ ಪ್ರಾರಂಭವಾಗಿದೆ, ಇನ್ನೇನು ಬದುಕುವುದು ಅಸಂಭವವೆಂದು ಎಷ್ಟೋ ಅನುಭವಿಗಳು ಹೇಳುತ್ತಿದ್ದರು. ಆರಿಗರು ಸಾವಿರಾರು ರೂಪಾಯಿ ಖರ್ಚು ಮಾಡಿ ಒಬ್ಬ ಪ್ರಸಿದ್ಧ ವೈದ್ಯರನ್ನು ಕರೆಯಿಸಿ ಔಷಧಿ ಕೊಡಿಸಿದರು. ರೋಗವು ವೃದ್ಧಿಯಾಗುತ್ತಾ ಅಂತಿಮ ಶೀಘ್ರ ಶ್ವಾಸೋಚ್ಛ್ವಾಸವು ಪ್ರಾರಂಭವಾಗುತ್ತಾ ಸ್ವಲ್ಪ ಕಾಲದಲ್ಲಿಯೇ ಅಣ್ಣಿಯು ಸರ್ವರನ್ನು ಬಿಟ್ಟು ಏಕಾಕಿಯಾಗಿ ಇಹಲೋಕವನ್ನು ತೊರೆದನು. + +ಅಬಲೆ ರತಿದೇವಿಯ ಮತ್ತು ತಮ್ಮ ಜೀವನಕ್ಕಿಂತಲೂ ಹೆಚ್ಚಾಗಿ ಅಣ್ಣಿಯನ್ನು ಕಾಣುತ್ತಿದ್ದ ಆರಿಗರ ಸ್ಥಿತಿಯು ಹೇಗಿರಬೇಕೆಂಬುದನ್ನು ವಾಚಕರೇ ಊಹಿಸಲಿ. ಆ ಸುತ್ತಮುತ್ತಲಿನ ಹಾಹಾಕಾರವನ್ನು ಕೇಳುತಿದ್ದ ಎಂತಹ ಧೈರ್ಯಸ್ಥರ ಕಲ್ಲು ಹೃದಯವೂ ಕೂಡ ಕರಗುತಿತ್ತು. + +ಅಶಿಕ್ಷಿತ ಆರಿಗರೂ, ಅವರ ಬಂಧುಗಳೂ ರತಿದೇವಿಯನ್ನು ಕುರಿತು, `ನಮ್ಮ ರತ್ನದ ಕೈಹಿಡಿದು ಒಂದು ವರ್ಷವೂ ಕೂಡ ಆಗಲಿಲ್ಲ. ಆಗಲೇ ಕೊಂದು ಬಿಟ್ಟೆ. ಮಹಾಪಾಪಿನಿಯೇ ನಮ್ಮಲ್ಲಿರಬೇಡ’ ಎಂದು ಮನೆಯಿಂದ ಹೊರಗೆ ಮಾಡಿದರು. + +ರತಿದೇವಿ ತಂದೆಯ ಗೃಹದಲ್ಲಿದ್ದಳು. ಪಕಳರು ಮಗಳ ದುಃಖವನ್ನು ಸಹಿಸದೆಯೋ ಎಂಬಂತೆ ಒಂದೆರಡು ತಿಂಗಳಲ್ಲಿ ಸ್ವರ್ಗಸ್ಥರಾದರು. ಅವರಿಗೆ ಎರಡು ಜನ ಗಂಡು ಮಕ್ಕಳು; ರತಿಯೊಬ್ಬಳೇ ಹೆಣ್ಣು ಮಗಳು. ಆ ಇಬ್ಬರು ಪುತ್ರರಿಗೂ ಐದಾರು ಮಕ್ಕಳಿದ್ದರು. + +ಆಗಾಗಲೇ ಆ ಧೂರ್ತರು `ವಿವಾಹಿತಳಾಗಿ ಒಂದು ವರ್ಷವೂ ಕೂಡ ಆಗಲಿಲ್ಲ, ಆಗಲೇ ಪತ್ನಿಯನ್ನೂ ಪಿತನನ್ನೂ ಕೊಂದುಬಿಟ್ಟೆ, ಮೂರನೆಯವರಾರನ್ನು ಕೊಲ್ಲುತ್ತೀ?’ ಇತ್ಯಾದಿ ಮಹಾಕ್ರೂರ ವಚನದಿಂದ ದೇವಿಯನ್ನು ನಿಂದಿಸಿದರು. ದೇವಿಯು ಕಣ್ಣೀರಿನಲ್ಲಿ ಕೈತೊಳೆಯುತ್ತಾ ಮನಸ್ಸಿನಲ್ಲಿಯೇ – `ಮೂರನೆಯವಳು ನಾನೇ ಆಗಿದ್ದೇನೆ’ ಎಂದಳು. + +ಪತಿಗಳು ಈ ರೀತಿ ನಿಂದಿಸುವುದನ್ನು ಕಂಡು ಅವರ ಹೆಂಡತಿಯರೂ ಮಕ್ಕಳೂ ಸದೈವ ನಾರಕಿಗಳಂತೆ ಪೀಡಿಸುತ್ತಿದ್ದರು. ತನ್ಮಧ್ಯೆ ಧೂರ್ತ ಯುವಕರು ಸುತ್ತು ಮುತ್ತು ಸೇರಿ ದೇವಿಯ ಸತೀತ್ವವನ್ನು ನಷ್ಟ ಮಾಡುವ ಪ್ರಯತ್ನ ಮಾಡುತ್ತಿದ್ದರು. ಆದರೆ ದೇವಿಯು ಧೈರ್ಯಸ್ಥಳಾಗಿ `ಸಹೋದರರೇ, ನಾನು ನಿಮ್ಮ ಭಗಿನಿಯಾಗಿರುವೆನು, ಕಾಮಾಂಧರಾಗಿ ಸ್ಪರ್ಶಿಸಿದರೆ ಈಗಲೇ ಆತ್ಮಹತ್ಯೆ ಮಾಡಿಕೊಂಡು ನಿಮಗೆಲ್ಲಾ ಜೈಲಿನ ಅನ್ನ ತಿನ್ನಿಸದಿರೆನು’ ಎಂದಳು. + + + +ಅಮಾವಾಸ್ಯೆಯ ರಾತ್ರಿ ಸುಮಾರು ಒಂಭತ್ತು ಗಂಟೆಯಾಗಿರಬಹುದು. ಕಗ್ಗತ್ತಲು ಸರ್ವತ್ರ ವ್ಯಾಪಿಸಿತ್ತು. ನಾಲ್ಕು ಕಡೆಯ ತೀವ್ರ ಅಗ್ನಿ ಜ್ವಾಲೆಯ ಮಧ್ಯೆ ಸಿಕ್ಕಿದ ಅನಾಥ ಹರಿಣದಂತೆ ಅನಿರ್ವಚನೀಯ ದುಃಖಗಳ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದ ರತಿದೇವಿಯು ಏಕಾಕಿಯಾಗಿ ಬಾವಿಕಟ್ಟೆಯ ಸಮೀಪಕ್ಕೆ ಬಂದು, `ಹೇ! ಅಶಿಕ್ಷಿತ ಜೈನ ಸಮಾಜದ ಕರ್ಣಧಾರರೇ! ಇಂತಹ ನೂರಾರು ದೃಶ್ಯಗಳನ್ನು ನೋಡಿಯೂ ನಿಮ್ಮ ಕಣ್ಣಿನಲ್ಲಿ ನೀರು ಬರಲಿಲ್ಲವಲ್ಲಾ! ಒಂದು ಕಡೆ ಅವಿದ್ಯಾ, ಇನ್ನೊಂದು ಕಡೆ ಅಳಿಯಕಟ್ಟು ಸಮಾಜದ ಸಂತಾನಗಳನ್ನು ನಷ್ಟಭ್ರಷ್ಟವಾಗಿ ಮಾಡುತ್ತಿರುವುದನ್ನು ಕಣ್ಣಾರೆ ಕಂಡೂ ನಿಮ್ಮ ಹೃದಯ ಕರಗಲಿಲ್ಲವಲ್ಲಾ! ನಿಮ್ಮ ಸ್ವಾರ್ಥ ಜನ್ಮಕ್ಕೆ ಧಿಕ್ಕಾರವಿರಲಿ! ನನ್ನಂತಹ ಅನಾಥರ ದುಃಖಾಗ್ನಿಯು ನಿಮ್ಮ ಶಿರಸ್ಸಿನಲ್ಲಿ ಸದೈವ ಉರಿಯುತ್ತಿರಲೆಂದು’ ಹೇಳಿ, ಮನಸ್ಸಿನಲ್ಲಿ ಪಂಚ ನಮಸ್ಕಾರವನ್ನು ಚಿಂತಿಸುತ್ತಾ ಬಾವಿಗೆ ಧುಮುಕಿದಳು. ಕ್ರೂರ ಸಹೋದರರೂ `ಮಾರಿ ಹೋಯಿತೆಂದು’ ಸ್ವಲ್ಪ ಕಾಲದವರೆಗೆ ಸುಮ್ಮನಿದ್ದು, ನಂತರ ಹೆಣವನ್ನು ಮೇಲಕ್ಕೆ ತೆಗೆದು ಕಾಯಿಲೆಯಿಂದ ಸತ್ತಳೆಂದು ಹೇಳಿ ದಹನಕ್ರಿಯೆ ಮಾಡಿದರು.(ಸುವಾಸಿನಿ, ಜುಲೈ, 1927) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_365.txt b/Kenda Sampige/article_365.txt new file mode 100644 index 0000000000000000000000000000000000000000..a1fad7df5d91dac8d4e918c4369c4a19245a06bd --- /dev/null +++ b/Kenda Sampige/article_365.txt @@ -0,0 +1,61 @@ + + +ಡಾ. ಕೆ. ಚಿನ್ನಪ್ಪ ಗೌಡರು ಸಂಶೋಧಕರಾಗಿ ಪ್ರಾಧ್ಯಾಪಕರಾಗಿ ಸಂಘಟಕರಾಗಿ ಆಡಳಿತಗಾರರಾಗಿ ಕನ್ನಡಿಗರಿಗೆ ಚಿರಪರಿಚಿತರು. ಈಗ ಅವರು ಕವಿಗಳಾಗಿ ತಮ್ಮ ಮೊದಲ ಕವನ ಸಂಕಲನ `ಕಿತ್ತಳೆ ಹಣ್ಣಲ್ಲ’ವನ್ನು ಸುಲಿದು ಅದರ ತೊಳೆಗಳನ್ನು ನಮ್ಮ ರುಚಿಕಟ್ಟಿಗೆ ಬಿಡಿಸಿ ಇಟ್ಟಿದ್ದಾರೆ. ಇದು ಇಂದ್ರಜಾಲದಲ್ಲಿ ಸೃಷ್ಟಿಸಿದ ಕಿತ್ತಳೆ ಹಣ್ಣು ಅಲ್ಲ; ಇದರ ಹಿಂದೆ ಅನೇಕ ವರ್ಷಗಳ ಸತತ ಅಭ್ಯಾಸದ ಅನುಭವಗಳ ಸಂವೇದನೆಗಳ ಪರಂಪರೆ ಇದೆ. ನಿಜವಾದ ಒಬ್ಬ ಸಂಶೋಧಕ ಒಬ್ಬ ಒಳ್ಳೆಯ ಕವಿಯೂ ಆಗಿರುತ್ತಾನೆ. ಸಂವೇದನಾಶೀಲತೆ ಇಲ್ಲದ ಯಾರೂ ಸಂಶೋಧಕರು ಆಗಲಾರರು. ಚಿನ್ನಪ್ಪ ಗೌಡರ ಅನೇಕ ಸಂಶೋಧನೆಗಳ ಅನುಭವಗಳ ಉತ್ಪನ್ನಗಳಾಗಿ ಇಲ್ಲಿನ ಅನೇಕ ಕವನಗಳು ರೂಪು ತಾಳಿವೆ. + +ಈ ಸಂಕಲನದ ಶೀರ್ಷಿಕೆಯ ಕವನ `ಕಿತ್ತಳೆ ಹಣ್ಣಲ್ಲ’. ಈ ಕವನವೇ ಇಲ್ಲಿನ ಒಟ್ಟು ಕವನಗಳ ಸಂರಚನೆಯ ಬಗ್ಗೆ ಸೂಚನೆಯನ್ನು ಕೊಡುತ್ತದೆ. `ಹಣ್ಣು ಮಾರುವ ಹರೇಕಳ ಹಾಜಬ್ಬರಿಗೆ ಕಿತ್ತಳೆ ಬರಿಯ ಹಣ್ಣಲ್ಲ’ ಎಂದು ಆರಂಭವಾಗುವ ಕವನವು ಅಷ್ಟರ ಸಂತ ಹಾಜಬ್ಬನವರ ಬದುಕಿನ ದರ್ಶನವನ್ನು ಕಟ್ಟಿಕೊಡುತ್ತದೆ. ಹಾಗಾಗಿ ಹೊರಗಣ್ಣಿಗೆ ಕಾಣುವ ರೂಪ ಒಂದಾದರೆ, ಅದು ಬದುಕಿನ ರೂಪಕವಾಗುವ ಬಗೆ ಬೇರೆಯೇ ಆಗಿರುತ್ತದೆ. ಆ ರೀತಿಯ ರೂಪಾಂತರ ಮಾಡಬಲ್ಲವರು ಮಾತ್ರ ಸಂತರಾಗುತ್ತಾರೆ ಹಾಜಬ್ಬನವರ ಹಾಗೆ. ಚಿನ್ನಪ್ಪ ಗೌಡರ ಕವನಗಳು ಕೂಡಾ ಹಾಜಬ್ಬನವರ ಕಿತ್ತಳೆಗಳ ಹಾಗೆಯೇ. ಅವುಗಳ ಹೊರನೋಟ ಒಂದಾದರೆ ಒಳ ಅರ್ಥಗಳು ಹತ್ತಾರು. ಕವನಗಳ ಅರ್ಥಗಳು ಕಿತ್ತಳೆ ಹಣ್ಣಿನ ಸಿಪ್ಪೆ ಸುಲಿದು ಅವುಗಳ ತೊಳೆಗಳನ್ನು ಒಂದೊಂದಾಗಿ ಬಿಚ್ಚುತ್ತಾ ಹೋದ ಹಾಗೆಯೇ ಅವನ್ನು ಸವಿಯುತ್ತಾ ಹೋದಂತೆಯೇ ಅನುಭವಕ್ಕೆ ಬರುವ `ಕಿತ್ತಳೆಪಾಕ’ದಂತೆ. + +(ಡಾ. ಕೆ. ಚಿನ್ನಪ್ಪ ಗೌಡ) + +ಡಾ. ಚಿನ್ನಪ್ಪ ಗೌಡರು `ಭೂತಾರಾಧನೆ : ಜಾನಪದೀಯ ಅಧ್ಯಯನ’ ಎಂಬ ವಿಷಯದ ಬಗ್ಗೆ ಸಂಶೋಧನೆ ನಡೆಸಿ ಪಿ.ಎಚ್.ಡಿ. ಪಡೆದವರು. ಅವರ ಸಂಶೋಧನೆಯ ಮಾನವೀಯ ಮುಖಗಳು ಕವನಗಳ ರೂಪದಲ್ಲಿ ಇಲ್ಲಿ ಕಾಣಿಸಿಕೊಂಡಿವೆ. `ಪರವ ನನ್ನಯ-ಕುರುಡು ಹಸಿವು’, `ನಿತ್ಯೋತ್ಸವ ಪರತಿ’, `ಈ ಕುಣಿತ ಯಾಕೆ’, `ಭೂತದಿಂದ ವರ್ತಮಾನಕೆ’ : ಈ ನಾಲ್ಕು ಕವನಗಳು ಭೂತ ಕಟ್ಟುವ ಪರವನಂಥವರು, ಅವರ ಜೊತೆಗಿನ ಪರತಿಯರು ವಾಸ್ತವ ಜಗತ್ತಿನಲ್ಲಿ ಬದುಕುವ ಪರಿಗಳನ್ನು ಅನಾವರಣ ಮಾಡುತ್ತವೆ. `ಭೂತದಿಂದ ವರ್ತಮಾನಕೆ’ ಎನ್ನುವ ಕವನ ಉಳಿದ ಕವನಗಳ ಆಶಯದ ಸಾರರೂಪದಂತಿದೆ. ಈ ದೃಷ್ಟಿಯಿಂದ ಎರಡು ಅವಳಿ ಕವನಗಳ ಹಾಗೆ ಇರುವವು : `ಪರವ ನನ್ನಯ-ಕುರುಡು ಹಸಿವು’ ಮತ್ತು `ನಿತ್ಯೋತ್ಸವ ಪರತಿ’. ಕಿರುಕಥನದ ಮಾದರಿಯ ಈ ಕವನಗಳ ವಿನ್ಯಾಸವನ್ನು ಗಮನಿಸಬೇಕು. ಪರವ ಅಥವಾ ಪರತಿ ಪಾಲುಗೊಳ್ಳುವ ದೈವದ ಆರಾಧನೆಯ ಜನಪದಪುರಾಣದ ಕಥನಕ್ಕಿಂತ ಭಿನ್ನವಾದ ಜನಪದ ಕಲಾವಿದರ ಲೌಕಿಕ ಬದುಕಿನ ಕಥನಗಳು ಇಲ್ಲಿ ಬಿಚ್ಚಿಕೊಳ್ಳುತ್ತಾ ನಮ್ಮನ್ನು ವಿಷಾದದ ಲೋಕಕ್ಕೆ ಕೊಂಡೊಯ್ಯುತ್ತವೆ. ಪರವ ನನ್ನಯನ ಚಿತ್ರಗಳು ಒಂದರ ಬಳಿಕ ಇನ್ನೊಂದು ಕಾಣಿಸುತ್ತಾ ಬೆರಗು ಉಂಟುಮಾಡುತ್ತಾ, ಕೊನೆಗೆ + +`ಒಳಗೆ ಅಳುವಂತಿದ್ದ ಎಲ್ಲವನು ಕಳಚಿನೋಡುತ್ತಿದ್ದಂತೆ ಕಂಡ ಸಂಜೆಯವನಂತಾದಪರವ ನನ್ನಯ ನನ್ನಂತಾದ ನಿಜದಒಂದು ಚಿತ್ರ’ + +ಎಂದು ಮುಗಿತಾಯ ಆಗುವಾಗ ಮಾಯ ಜೋಗಗಳನ್ನು ಮೀರಿದ ಕಟುವಾಸ್ತವದ ಚಿತ್ರವೊಂದು ವಿಷಾದವ್ಯಂಗ್ಯವಾಗಿ ಉಳಿದುಬಿಡುತ್ತದೆ. `ನಿತ್ಯೋತ್ಸವ ಪರತಿ’ ಕವನವು ಲಿಂಗು ಪರತಿಯ ಪಾಡು ಹಾಡುಗಳ ಸಂಕಥನ. `ನಿತ್ಯೋತ್ಸವ’ ಎನ್ನುವ ಸಂಭ್ರಮದ ನುಡಿಗಟ್ಟು ಪರತಿಯ ಪಾಲಿಗೆ ದಿನದಿನದ ಹೊಟ್ಟೆತುಂಬಿಸುವ ಯಾಚನೆಯ ಬದುಕಿನ ವ್ಯಂಗ್ಯದ ಅಭಿವ್ಯಕ್ತಿ. + +“ಇರುವುದೆಲ್ಲವು ಇಂದಿಗೆ ನಾಳೆಗಿಲ್ಲನಾಳೆ ಎಂಬುದೆ ನಮ್ಮಂಥವರಿಗೆ ಇಲ್ಲ ಎಂದುಕೊರಗುತ್ತಲೇ ತಲೆಹೊರೆ ಮಾಡಿದ್ದುಪರತಿಗೆ ಹಳತಲ್ಲ ನಿತ್ಯ ಹೊಸತುನಗುವ ತಾಯಿಗೆನಿತ್ಯೋತ್ಸವ” + +ಎಂದು ಕೊನೆಯಾಗುವ ಕವನದ ಸಾಲುಗಳು ಒಂದು ಹೆಣ್ಣಿನ ನಿತ್ಯಬದುಕಿನ ಸೂತ್ರವಾಕ್ಯಗಳಾಗಿವೆ. + +`ಈ ಕುಣಿತ ಯಾಕೆ?’ ಕವನದಲ್ಲಿ ಕೇಳುವ ಪ್ರಶ್ನೆಗಳು ಮಾರ್ಮಿಕವಾಗಿವೆ. ಭೂತ ಕಟ್ಟುವ ಕಲಾವಿದರ ನಿಜದ ಬದುಕಿನ ಚಿತ್ರವನ್ನು ತೋರಿಸುತ್ತಾ ಕವಿ ಕೇಳುವ ಪ್ರಶ್ನೆ ಇಡೀ ವ್ಯವಸ್ಥೆಯನ್ನು ಬಯಲುಮಾಡುತ್ತದೆ: “ಭಯದ ನೆರಳಲಿ ಉಸಿರ ಹಿಡಿದು ಮಾಯಬಿಟ್ಟು ನಿತ್ಯ ಸಾವ ಈ ಕುಣಿತ ಯಾಕೆ?” + +ಈ ಆಶಯವನ್ನು ಹೆಚ್ಚು ಗಂಭೀರವಾಗಿ ವೈಚಾರಿಕವಾಗಿ ಮಂಡಿಸುವ ಕವನ `ಭೂತದಿಂದ ವರ್ತಮಾನಕೆ’. ಜಾತಿ ಭೇದ, ಲಿಂಗ ಭೇದ, ವರ್ಣಭೇದಗಳನ್ನು ಇನ್ನೂ ಪಾಲಿಸಿಕೊಂಡು ಬರುವ ಸಮಾಜದಲ್ಲಿ ಭೂತಗಳು ನುಡಿಕೊಡುವ ಸತ್ಯದ ಮದಿಪು ಹೇಗೆ ಅಸಂಗತವಾಗುತ್ತದೆ ಎನ್ನುವ ಎಚ್ಚರವನ್ನು ಹೇಳುವ ಈ ಕವನ ಸಾಮಾಜಿಕ ವಿಮರ್ಶೆಯ ಒಳ್ಳೆಯ ನಿದರ್ಶನ.“ಸತ್ಯಕ್ಕೆ ಗೋರಿ ಕಟ್ಟಬಾರದು ಬಾರದು ಬಾರದುಆಗಬಾರದು ನನ್ನಿಂದನಿಮ್ಮಿಂದಲೂ”ಎಂದು ಕೊನೆಯಾಗುವಾಗ ಸಂಪ್ರದಾಯದ ಬೇಲಿಗಳನ್ನು ಮುರಿಯುವ ಛಲ ಇದೆ. + +ತುಳುನಾಡಿನ ಆರಾಧನಾ ಸಂಸ್ಕೃತಿಯಲ್ಲಿ ಹೆಣ್ಣುಗಳು ಅತಿಮಾನುಷ ಪಾತ್ರಗಳಾಗಿ ಪಾಡ್ದನಗಳಲ್ಲಿ ಮತ್ತು ಆರಾಧನೆಗಳಲ್ಲಿ ಕಾಣಿಸಿಕೊಳ್ಳುವ ಎರಡು ಮಾದರಿಗಳು : ಸಿರಿ ಮತ್ತು ಕಲ್ಲುರ್ಟಿ. ಸಿರಿ ಕಾವ್ಯ ಮತ್ತು ಸಿರಿಜಾತ್ರೆಗಳನ್ನು ವಿಶೇಷವಾಗಿ ಅಧ್ಯಯನ ಮಾಡಿರುವ ಚಿನ್ನಪ್ಪ ಗೌಡರು ತಮ್ಮ `ಹತ್ತು ಮಕ್ಕಳ ತಾಯಿ’ ಕವನದಲ್ಲಿ ಸಿರಿಯ ಕತೆಯನ್ನು ಕಥನವಾಗಿಸಿದ್ದಾರೆ. ಪಾಡ್ದನದ ನುಡಿಗಟ್ಟುಗಳನ್ನು ಬಳಸಿಕೊಂಡು ಅವುಗಳ ಮೂಲಕ ಸಿರಿಯಂತಹ ಹೆಣ್ಣೊಬ್ಬಳ ಬದುಕಿನ ಯಾತನೆ ಮತ್ತು ಯೋಚನೆಗಳಿಗೆ ಹೊಸ ಧ್ವನಿಗಳನ್ನು ಜೋಡಿಸಿದ್ದಾರೆ. ತಾಯಿ ಆಗುವ ಸಂತಸ ಮತ್ತು ಸಂಕಟಗಳು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತವೆ. ಅದಕ್ಕೆ ಮುಕ್ತಾಯ ಇಲ್ಲ. ಆದ್ದರಿಂದಲೇ ಕವನ ಕೊನೆಯಾಗುವುದು: “ಹತ್ತು ಮಕ್ಕಳ ತಾಯಿ ನೀನು, ತಾಯ ದಾರಿ ಇನ್ನೂ ಕಾಣಲಿಲ್ಲ…” + +ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ. ಆದರೆ ಇಲ್ಲಿ ಕವಿ ಹೇಳುವುದು ಆಕೆ ಇಂದಿಗೂ ಪ್ರಸ್ತುತವಾಗುತ್ತಾಳೆ ಎಂದು. `ತರಾಟೆಗೆ ತಲೆದಂಡ ಕೇಳು’ ಎನ್ನುವ ನುಡಿಗಟ್ಟು ಈ ಕವನಕ್ಕೆ ಸಮಕಾಲೀನ ಧ್ವನಿಯನ್ನು ತಂದುಕೊಡುತ್ತದೆ. ಕಲ್ಲುರ್ಟಿ ಕಲ್ಲಿನಲ್ಲಿ ಉರಿದ ಬೆಂಕಿ ಆದಕಾರಣವೇ ಕಲ್ಲುಹೃದಯದ ಮಂದಿಗೆ ಆಕೆ ಈಗಲೂ ಬೆಂಕಿಯಾಗಿ ಸುಡಬೇಕು ಎನ್ನುವ ಆಶಯ ಇಲ್ಲಿ ಪ್ರಕಟವಾಗಿದೆ. + + + +ತುಳುನಾಡಿನ ಜನಪದ ಕ್ರೀಡೆಗಳು ಎಂಬ ಖ್ಯಾತಿ ಪಡೆದ ಕೋಳಿ ಅಂಕ ಮತ್ತು ಕಂಬಳದ ಬಗ್ಗೆ ಎರಡು ಕವನಗಳಿವೆ : ಅಂಕ ಮತ್ತು ಕರೆ ಕರೆ ಕಂಬಳ. ಈ ಕವನಗಳಲ್ಲಿ ಕೂಡ ಚಿನ್ನಪ್ಪ ಗೌಡರ ಒಳನೋಟ ಇರುವುದು ತೋರಿಕೆಯ ಈ ವೈನೋದಿಕ ಕ್ರೀಡೆಗಳ ಒಳಗೆ ಹುದುಗಿರುವ ಸಾವುನೋವುಗಳ ಕಡೆಗೆ, ಕೋಳಿ-ಕೋಣಗಳ ದುರಂತದ ವಿಷಾದದ ಕಡೆಗೆ. ಎಂದಿನಂತೆ ಇಲ್ಲಿ ಕೂಡಾ ಕವಿ ಒಂದು ವಿಷಯವನ್ನು ಕಥನದ ಮಾದರಿಯಲ್ಲಿ ವರ್ಣನೆಗಳ ಮೂಲಕ ಮಂಡಿಸುತ್ತಾ ಹೋಗಿ ಕವನದ ಕೊನೆಯಲ್ಲಿ ವಿಷಾದದ ವ್ಯಂಗ್ಯದಲ್ಲಿ ತಮ್ಮ ನಿಲುವನ್ನು ಧ್ವನಿಸುತ್ತಾರೆ. ಹಣದ ಜೂಜು ಮತ್ತು ಪ್ರಾಣಿಪಕ್ಷಿಗಳ ಪಣದ ಜೂಜು ಉಳ್ಳವರ ಲೋಕದಲ್ಲಿ ಸಾವುಗೆಲುವಿನ ಆಟ. `ಅಂಕ’ ಕವನ ಹೇಳುವುದು: + +“ಬಾಳು ಕಟ್ಟಿದ ಕಾಲಿಗೆ ಏನು ಬೇಡಿಕೆಸಾವಲ್ಲ ವೀರಮರಣಭೋಜನ” + +`ಕರೆ ಕರೆ ಕಂಬಳ’ ಕವನ ಕೂಡ ಕೋಣಗಳ ಓಟದ ಕಂಬಳದ ದೀರ್ಘ ಕಥನವನ್ನು ಬಿತ್ತರಿಸುತ್ತಾ ಅದರ ಚಾಕ್ಷುಷ ಚಿತ್ರಗಳನ್ನು ಕಟ್ಟಿಕೊಡುತ್ತಾ ಅದರ ಜೊತೆಗಿನ ಐತಿಹ್ಯಗಳ ಆಶಯವನ್ನು ಒಡೆಯುತ್ತಾ ಹೋಗುತ್ತದೆ. ಕೊನೆಗೂ “ಕಂಬಳ ಆಳುಗಳ ಕೈ ಕೆಸರು, ಆಳುವವರ ಬಾಯಿ ಮೊಸರು”. ಆಳುವವರ ಪ್ರತಿಷ್ಠೆಯ ಸ್ಪರ್ಧೆಯಲ್ಲಿ ಕೋಣಗಳು ಮತ್ತು ಅವುಗಳನ್ನು ಓಡಿಸುವವರು ಪ್ರದರ್ಶನದ ವಸ್ತುಗಳಾಗುವ ವ್ಯಂಗ್ಯ ಇಲ್ಲಿ ಅಭಿವ್ಯಕ್ತವಾಗಿದೆ. + +(ಡಾ. ಬಿ.ಎ. ವಿವೇಕ ರೈ) + +ಚಿನ್ನಪ್ಪ ಗೌಡರ ಈ ಸಂಕಲನದ ಕವನಗಳಲ್ಲಿ ಇನ್ನೊಂದು ಬಗೆಯೆಂದರೆ ಸುಕುಮಾರತೆಯನ್ನು ದ್ರವ್ಯವಾಗಿ ಉಳ್ಳ ಅಕ್ಕರೆಯ ಕವನಗಳು. ಇವು ಕವನವನ್ನು ಕಟ್ಟುವ ಬಗೆಯ ಸುಂದರ ರೂಪಕಗಳು. ಲಯಬದ್ಧವಾದ ಪದಪುಂಜಗಳ ಜೋಡಣೆಯ ಒಳಗೆ ಬದುಕಿನ ಚಂದವನ್ನು ಹೂರಣವಾಗಿ ತುಂಬಿಸಿ ಮೆಲುಬಗೆಯಲ್ಲಿ ಆಸ್ವಾದಿಸಲು ದೊರಕುವ ನೇಯ್ಗೆಗಳು. ಆರಂಭದ ಕವನ `ಕಾಡು ಹಕ್ಕಿ’ ಇದಕ್ಕೆ ಉತ್ತಮ ನಿದರ್ಶನ.: + +“ನಿಮ್ಮ ಮನೆ ಮೂಲೆಯಲಿ ಗೂಡು ಕಟ್ಟಿಹೆ ನಾನುಎಸೆಯದಿರಿ ಚಿಂದಿಚಿಂದಿ ಮಾಡಿನಿಮ್ಮ ಮನದೊಳಗೊಂದು ಕನಸ ತಂದಿಹೆ ನಾನುಹಕ್ಕಿಯಂದದಿ ಇರಲದುವೆ ಹಾಡಿ” + +ಕವನವನ್ನು ಪುಟ್ಟಮರಿ / ಮಗುವಿಗೆ ಹೋಲಿಸುವ ಕವಿ ಹಸುಳೆಯ ಎಲ್ಲ ಲೀಲೆಗಳಲ್ಲಿ ಕವನವನ್ನು ಅರಸುತ್ತಾರೆ. `ಕವನ ಅಡಗಿ … ಜೀವ ಬೆಳಗಿ’ ಕವನ ಇದೇ ಆಶಯವನ್ನು ಸುಕುಮಾರ ರೂಪಕಗಳ ಮೂಲಕ ಚಿತ್ರಿಸುತ್ತಾ ಹೋಗುತ್ತದೆ : + +“ಗುಬ್ಬಿ ಹಕ್ಕಿಯ ಪುಟಿವ ರೆಕ್ಕೆಯಪುಳಕ ಗರಿಗಳ ಕಣ್ಣ ಮಾತಿನಪದದ ಸೆರಗಲಿ ಕವನ ಅಡಗಿತ್ತಅದರಲ್ಲಿ ಜೀವ ಬೆಳಗಿತ್ತ”…“ತಾಯ ಬಳ್ಳಿಯ ಮೊಗ್ಗು ಮಗುವಿನಜೊಲ್ಲು ಹಾಲಲಿ ಕವನ ಅಡಗಿತ್ತಅದರಲ್ಲಿ ಜೀವ ಬೆಳಗಿತ್ತ” + +`ಸರ್ಪಗಾವಲಿನೊಳಗೆ’ ಕವನದಲ್ಲಿ ಪುಟ್ಟ ಹೆಣ್ಣುಮಗುವಿನ ಸುತ್ತ ಕಟ್ಟಿದ ನವುರಾದ ಪ್ರೀತಿಯ ಪಕಳೆಗಳಿವೆ : + +“ಹೀಗೆ ತೊಟ್ಟಿಲು ತಾವರೆಗೊಳ ಕೋಗಿಲೆಗಂಧವೀಳ್ಯ ರಾಜಕುವರಿ ಮಲ್ಲಿಗೆಸುತ್ತ ಕಟ್ಟಿರುವೆನಾನುಸರ್ಪಗಾವಲು” + +ಇಲ್ಲಿ ಬಳಸಿರುವ ಒಂದೊಂದು ಪದವೂ ಸುಕುಮಾರತೆಯ ಅಕ್ಕರೆಯ ಅನುಭವವನ್ನು ಸಾಧಾರಣೀಕರಣಗೊಳಿಸುತ್ತವೆ. + +`ಗುಟ್ಟು’, `ಎನ್ನದಿರು’ ಮುಂತಾದ ಕವನಗಳಲ್ಲೂ ಒಂದು ಶಬ್ದಚಿತ್ರವನ್ನು ಕಟ್ಟಿ ಆಮೂಲಕ ಒಂದು ಆಪ್ತಭಾವವನ್ನು ಸಂವಹನ ಮಾಡುವ ಕಲೆಗಾರಿಕೆ ಇದೆ.`ಹಾದಿಗೆ ಬಿದ್ದ ಹಾಡು’ ಕವನವು ಉಳ್ಳವರ ಮತ್ತು ಬಡವರ ವೈರುಧ್ಯವನ್ನು ಅವರವರ ಬದುಕಿನ ನೆಲೆಗಳಲ್ಲಿ ಕಟ್ಟಿಕೊಡುತ್ತಾ ದುಡಿಯುವವರ ಹಾಡಿನ ಪರವಾಗಿ ನಿಲ್ಲುತ್ತದೆ. ಇದೇ ಬಗೆಯ ತಾತ್ವಿಕತೆ ಉಳ್ಳ ಇನ್ನೊಂದು ಕವನ `ಅವರು ಮತ್ತು ನಾವು’. ಇಲ್ಲಿ ವೈರುಧ್ಯದ ರೂಪಕಗಳ ಮೂಲಕ ಎರಡು ವರ್ಗಗಳ ಅಂತರವನ್ನು ಕಾವ್ಯವಾಗಿಸಲಾಗಿದೆ: + +“ಅವರು ದೀಪ ಹಚ್ಚುವ ಮಂದಿನಾವು ಉರಿದು ಸುಡುವ ದೊಂದಿ” + +`ಹಾಡಿ ಭಾಗವತರೇ ಹಾಡಿ’ ಯಕ್ಷಗಾನದ ಚಾಕ್ಷುಷ ವರ್ಣನೆಯನ್ನು, `ಗುಟ್ಟು’ ಸೌಂದರ್ಯಾನುಭೂತಿಯ ಒಳಮರ್ಮವನ್ನು, `ಜಾತ್ರೆ’ ಊರಿನ ತೇರಿನ ಸಂಭ್ರಮವನ್ನು, ‘ಪ್ರೀತಿಗೆ’ ನಿಸರ್ಗದ ಸೊಬಗಿನ ಆಸ್ವಾದವನ್ನು, `ಎನ್ನದಿರು’ ವೈರುಧ್ಯಗಳ ಅರ್ಥವಂತಿಕೆಯನ್ನು, `ನೆಂಟರು ಬರುತ್ತಾರೆ’ ನಂಟಿನ ಅಂಟನ್ನು, `ನಿಜ’ ಒಳಗಿನ ಸತ್ಯಗಳನ್ನು, `ದಿನದಾಟ’ ಮಕ್ಕಳ ಆಟದ ದಾರ್ಶನಿಕತೆಯನ್ನು, `ಪೀಠಿಕೆಯ ಬಂಧುಗಳು’ ಪ್ರೀತಿಸಿದ ಹುಡುಗಿಯ ದುರಂತವನ್ನು, `ಬರಿಯ ಪಗರಣ’ ಹಗಲುವೇಷದ ಆತ್ಮವಂಚನೆಯನ್ನು, ‘ನೆಲಸಮ ಸಲ್ಲ’ ಆಧುನಿಕತೆ ಸಹಜ ಬದುಕನ್ನು ನೆಲಸಮ ಮಾಡುವುದನ್ನು, `ಕೆಡಹು ಕಟ್ಟು’ ಬದುಕಿನ ಹೊಸತನದ ಹಂಬಲವನ್ನು ಬಗೆಬಗೆಯಲ್ಲಿ ಕವನಗಳಾಗಿ ಚಿತ್ರಿಸುತ್ತವೆ. + + + +ಚಿನ್ನಪ್ಪ ಗೌಡರ ಈ ಕವನಸಂಕಲನ ಅವರ ಮೊದಲನೆಯದಾದರೂ ಅದು ಒಂದು ಪರಂಪರೆಯ ಎಲ್ಲ ಮಜಲುಗಳನ್ನು ದಾಟಿಕೊಂಡು ಬಂದದ್ದು. ಹಾಗಾಗಿಯೇ ಅದು ಚಿರಂತನ. ಕವಿತ್ವದ ಮನಸ್ಸನ್ನು ಸದಾ ಜೀವಂತವಾಗಿ ಇಟ್ಟುಕೊಂಡಿರುವ ಅವರು ತಮ್ಮ ಸಂಶೋಧನೆ, ಅನುವಾದದಂತಹ ಶ್ರಮದ ಕೆಲಸಗಳ ನಡುವೆ ತಮ್ಮ ಕವನದ ಕಾಯಕವನ್ನು ಮುಂದುವರಿಸುವುದು ಅವರಿಗೆ ಮತ್ತು ಕನ್ನಡ ಕಾವ್ಯಲೋಕಕ್ಕೆ ಹಿತಕರ ಎಂದು ಭಾವಿಸುತ್ತೇನೆ. ಕವಿಯಲ್ಲದ ನನ್ನಿಂದ ಅವರ ಕವನಸಂಕಲನಕ್ಕೆ ಮುನ್ನುಡಿ ಬರೆಸಿದ ಅವರ ಧೈರ್ಯಕ್ಕೆ ಮೆಚ್ಚುಗೆ ಸೂಚಿಸುತ್ತಾ, ಅವರ ಮುಂದಿನ ಕವನಸಂಕಲನಕ್ಕಾಗಿ ಕುತೂಹಲದಿಂದ ಕಾಯುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_366.txt b/Kenda Sampige/article_366.txt new file mode 100644 index 0000000000000000000000000000000000000000..f3d11e9bc07fceb590217923e38fe02390b709c4 --- /dev/null +++ b/Kenda Sampige/article_366.txt @@ -0,0 +1,75 @@ + + +ಅಜಂತಾ (25.12.1929 – 2.5.1998) ಅವರ ನಿಜನಾಮ ಪೆನುಮರ್ತಿ ವಿಶ್ವನಾಥ ಶಾಸ್ತ್ರಿ. `ಆಂಧ್ರ ಪ್ರಭ’ ದೈನಿಕದ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಜಂತಾ ಅವರು 1948ರಿಂದ 1992ರವರೆಗಿನ ಅವಧಿಯಲ್ಲಿ ಸುಮಾರು ನಲವತ್ತಕ್ಕಿಂತ ಹೆಚ್ಚು ಪದ್ಯಗಳನ್ನು ಬರೆದಿರುವುದಾಗಿ ಹೇಳಿಕೊಂಡಿದ್ದಾರೆ. ನಲವತೈದು ವರ್ಷಗಳಲ್ಲಿ ಅವರು ಬರೆದಿದ್ದು 40+ ಪದ್ಯಗಳನ್ನಷ್ಟೇ ಎಂಬುದು ಗಮನಾರ್ಹ ಸಂಗತಿಯಾಗಿದೆ. ಅದರಲ್ಲೂ ಒಂದಷ್ಟು ಪದ್ಯಗಳನ್ನು ಕೈ ಬಿಟ್ಟು ಕೇವಲ ಇಪ್ಪತ್ತೊಂಬತ್ತು ಪದ್ಯಗಳ ಈ ಸಂಕಲನವನ್ನು ಅವರು ಪ್ರಕಟಿಸಿದ್ದು 1993ರಲ್ಲಿ. ಅದೂ ತೆಲುಗಿನ ಮತ್ತೊಬ್ಬ ಪ್ರತಿಭಾಶಾಲಿ ಕವಿ ತ್ರಿಪುರನೇನಿ ಶ್ರೀನಿವಾಸ್ ರ ಒತ್ತಾಸೆಯ ಫಲವಾಗಿ. + +`ಕವಿತೆಗಳನ್ನು ಬರೆದು ಸಮಾಜದ ಮೇಲೆ ತೂರಿಬಿಡುವುದಷ್ಟೇ ನನ್ನ ಕೆಲಸ’ ಎಂದು ಹೇಳಿಕೊಂಡಿರುವ ಅಜಂತಾರ ಸಂಕಲನವೊಂದನ್ನು ಪ್ರಕಟಿಸುವುದೆಂದು ತ್ರಿಪುರನೇನಿಯವರು ಆಲೋಚಿಸಿ ಅಜಂತಾರನ್ನು ಎಡತಾಕಿದರೆ ಅವರ ಹತ್ತಿರ ಪ್ರಕಟಿತ ಪದ್ಯದ ಒಂದು ಪ್ರತಿಯೂ ಇರಲಿಲ್ಲ. ಆದರೆ ಪ್ರತಿಯೊಂದು ಪ್ರಕಟಿತ ಪದ್ಯದ ಶೀರ್ಷಿಕೆ, ಸಾಲುಗಳು ಯಾವಾಗ ಬರೆದುದೆಂಬುದರ ವಿವರವೂ ಸೇರಿದಂತೆ, ಪ್ರತಿಯೊಂದು ಪದ್ಯಕ್ಕೆ ಅವರು ಬರೆದ ಹಲವು ವರ್ಷನ್ ಗಳೂ ಅವರ ಭಾವಕೋಶದಲ್ಲಿ ಭದ್ರವಾಗಿ ದಾಖಲಾಗಿದ್ದವು. ಸಂಕಲನಕ್ಕಾಗಿ ಮತ್ತೊಮ್ಮೆ ಈ ಎಲ್ಲ ಪದ್ಯಗಳನ್ನು ಅವರು ತಮ್ಮ ನೆನಪಿನ ಬಲದಿಂದ ಬರೆದುಕೊಟ್ಟದ್ದೊಂದು ವಿಶೇಷ ಸಂಗತಿಯೇ ಸರಿ. ಭಾರತೀಯ ಸಾಹಿತ್ಯದಲ್ಲಿ ಇಂಥ ಇನ್ನೊಂದು ಪ್ರಕರಣ ಇದ್ದಿರಲಿಕ್ಕಿಲ್ಲವೆನಿಸುತ್ತದೆ. + +ಸಾಕಷ್ಟು ಗ್ರ್ಯಾಂಡ್ ಆಗಿಯೇ ಪ್ರಕಟವಾಗಿರುವ ಈ ಕೃತಿಯ ಅಕ್ಷರ ಜೋಡಣೆ ವಿಜಯವಾಡದಲ್ಲೂ, ಮುದ್ರಣ ಹೈದರಾಬಾದಿನಲ್ಲೂ ಆಗಿದ್ದರೆ; ಮುಖಪುಟ ಚಿತ್ರವನ್ನು ಅಮೇರಿಕಾದ ಜಾನ್ ಉನ್ ರೂ; ಸೆಂಟರ್ಸ್ಪ್ರೆಡ್ ಚಿತ್ರವನ್ನು ಭಾರತದ ಲಕ್ಷ್ಮಾಗೌಡ ಹಾಗೂ ಒಳಚಿತ್ರಗಳನ್ನು ಜರ್ಮನಿಯ ಮಾಕ್ರ್ಸ್ ಅರ್ನೆಸ್ಟ್ ರಚಿಸಿದ್ದಾರೆ. ಕೇವಲ ಅರವತ್ತೈದು ಪುಟಗಳ ಈ ಚಿಕ್ಕ ಹೊತ್ತಿಗೆಯ ಬೆಲೆ 1993ರಲ್ಲೇ ಒಂದು ನೂರು ರೂಪಾಯಿಯಾಗಿದೆ! ಹಾಗೆ 1993ರಲ್ಲಿ ಪ್ರಕಟವಾದ ಈ ಸಂಕಲನಕ್ಕೆ 1997ರ ಸಾಲಿನ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಲಭಿಸಿದ್ದು 1998ರಲ್ಲಿ. ಅದೇ ವರ್ಷ ಅಜಂತಾ ತಮ್ಮ ಅರವತ್ತೊಂಬತ್ತನೇ ವಯಸ್ಸಿನಲ್ಲಿ ತೀರಿಕೊಂಡರು. + +“1948ರಲ್ಲಿ ಪ್ರಕಟವಾದ ಮೊದಲ ಪದ್ಯ `ಮರಗಳು ಉರುಳುತ್ತಿರುವ ದೃಶ್ಯ’ದಿಂದಲೇ ತೆಲುಗಿನ ಪ್ರಮುಖ ಕವಿಯಾಗಿ ಚರ್ಚೆಗೊಳಗಾದ ಕವಿ ಅಜಂತಾ” ಎಂದು ‘ಸ್ವಪ್ನಲಿಪಿ’ಯನ್ನು ಇಂಗ್ಲೀಷಿಗೆ ಅನುವಾದಿಸಿರುವ ತೆಲುಗಿನ ಮತ್ತೊಬ್ಬ ಕವಿ, `ಮೋ’ ಎಂದೇ ಖ್ಯಾತರಾಗಿರುವ ವೇಗುಂಟ ಮೋಹನ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಆದರೆ ಈ ಸಂಕಲನದಲ್ಲಿ ಪ್ರಕಟವಾದ ಆ ಕವಿತೆಯ ಕೆಳಗೆ ಅದರ ಕಾಲವನ್ನು 1954 ಎಂದು ನಮೂದಿಸಲಾಗಿದೆ. ಹಾಗಾದರೆ ಇಲ್ಲಿ ಪ್ರಕಟವಾಗಿರುವುದು ಆ ಕವಿತೆಯ ಎಷ್ಟನೇ ಪರಿಷ್ಕೃತ ಪ್ರತಿಯೋ! + +(ಅಜಂತಾ) + +ಅಜಂತಾರ ಕಾವ್ಯನಿಷ್ಠೆ ಅಚಲವಾದುದು. ನಲವತೈದು ವರ್ಷಗಳ ಸಾಹಿತ್ಯಿಕ ಜೀವನದಲ್ಲಿ ಅವರು ಬರೆದದ್ದು ಕವಿತೆಯನ್ನು ಮಾತ್ರ. ಪ್ರಕಟಿಸಿದ್ದು `ಸ್ವಪ್ನಲಿಪಿ’ ಎಂಬ ಒಂದೇ ಸಂಕಲನವನ್ನು ಮಾತ್ರ. ನಾನ್ ಅಕಾಡೆಮಿಕ್ ಹಿನ್ನೆಲೆಯ ಅಜಂತಾ ಆವರೆಗಿನ ತೆಲುಗು ಕಾವ್ಯ ಹಿಡಿದಿದ್ದ ದಿಕ್ಕನ್ನು ಬದಲಿಸಿದ ಪಥ ನಿರ್ಮಾತೃ ಕವಿ ಎಂದೇ ಪರಿಗಣಿತವಾಗಿದ್ದಾರೆ. ಅವರಿಗಿಂತ ಮೊದಲು ತೆಲುಗು ಕಾವ್ಯಶರಧಿಯಲ್ಲಿ ಒಂದು ಹೆದ್ದೊರೆಯಾಗಿ ಮೂಡಿ ಬಂದ ಮಹಾಕವಿ ಶ್ರೀಶ್ರೀ (ಶೀರಂಗಂ ಶ್ರೀನಿವಾಸರಾವು) (1910-1983) ಅವರ ಶೈಲಿಯ ಪ್ರಭಾವವನ್ನು ಅಜಂತಾ ಅವರ `ಬಹುಪಾಲು ಸಂಸ್ಕೃತಭೂಯಿಷ್ಠ’ವಾದ ಭಾಷೆ ಮತ್ತು ಮುಖ್ಯವಾದ `ಬೀಜಪದ ಹಾಗೂ ಘೋಷವಾಕ್ಯಗಳ ಪುನರುಚ್ಛರಣೆ’ಯ ಶೈಲಿಗಳಲ್ಲಿ ಗುರುತಿಸಲು ಅವಕಾಶವಿದೆ. ಶ್ರೀಶ್ರೀ ಅವರ ಕುರಿತಾಗಿಯೇ ಅಜಂತಾ ಬರೆದಿರುವ ಪದ್ಯವು, ಅಜಂತಾರ ಶೈಲಿಗೆ ಹೊರತಾದ ಅಭಿಮಾನ ಭಾವದಲ್ಲಿ ಮೂಡಿ ಬಂದಿರುವುದನ್ನು ಈ ಮಾತಿಗೆ ಸಾಕ್ಷಿಯಾಗಿ ಗಮನಿಸಬಹುದಾಗಿದೆ. ಅಕಾಡೆಮಿಕ್ ಹಿನ್ನೆಲೆಯ ತೆಲುಗಿನ ಜ್ಞಾನಪೀಠ ಲೇಖಕ ಡಾ. ಸಿ. ನಾರಾಯಣರೆಡ್ಡಿ (1931-2018) ಗಜಲ್, ಸಿನಿಮಾ ಹಾಡು ಮುಂತಾದ ಸಾಂಗೀತಿಕ ಗುಣ ಪ್ರಧಾನವಾದ ಕಾವ್ಯಮಾರ್ಗ ಹಿಡಿದು ಲಯದ ಬೆನ್ನು ಹತ್ತಿದ್ದಾಗ, ನಾನ್ ಅಕಾಡೆಮಿಕ್ ಹಿನ್ನೆಲೆಯ ಅಜಂತಾ ಅತಿ ಭಾರದ ಸಂಸ್ಕೃತಮಯ ಭಾಷೆಯಲ್ಲಿ ಜೀವನ ಬೀಭತ್ಸದ ಶೋಧನೆಯಲ್ಲಿ ತೊಡಗಿದ್ದರು. ಇವರಿಬ್ಬರೂ ಒಂದೇ ಓರಗೆಯವರು. ಒಂದೇ ಕಾಲಘಟ್ಟದಲ್ಲಿ ಪ್ರಕಟಗೊಂಡ ಕಾವ್ಯದ ಎರಡು ಬೇರೆ ಬೇರೆ ದಿಕ್ಕುಗಳಿವು. + +`ಮನುಷ್ಯ ಸತ್ತರೂ ದೇಹ ಅವನದು ಮಣ್ಣಲಿ ಮಣ್ಣಾಗಿ ಕೊಳೆಯುವುದು;ಮೃಗವು ಸತ್ತರೂ ಚರ್ಮವದರದು ಮೃದಂಗವಾಗಿ ನುಡಿಯುವುದು’ + +ಎಂದು ಹೇಳುವ ಸಿನಾರೆ ಮನುಷ್ಯನ ಅಹಮಿಕೆಯ ಪೊಳ್ಳುತನವನ್ನು ಮೆಲುದನಿಯಲ್ಲಿಯೇ, ಲಯಪ್ರಧಾನ ಸಾಲುಗಳಲ್ಲೇ ಹಿಡಿದುಕೊಟ್ಟರೆ; + +`ಕತ್ತಲ ಹೊಳಪಲ್ಲಿ ನಿರ್ಜೀವ ಪ್ರತಿಮೆಯ ಖಡ್ಗನಾಟ್ಯ ನೋಡಿದೆ;ಮತ್ತೊಂದು ಬದುಕಿನ ಬಾಗಿಲು ತೆರೆದುಕೊಳ್ಳುವುದೇನಾ ಸಾವೆಂದರೆ?’ + +ಎಂದು ಕೇಳುವ ಅಜಂತಾ ವಿಚಿತ್ರವಾಗಿ ಸಾವಿನಲ್ಲಿ ಬದುಕನ್ನು ಅರಸುತ್ತಾರೆ. ಕತ್ತಲಿನಲ್ಲಿ ಹೊಳಪನ್ನು ಕಾಣುತ್ತಾರೆ. ಭಿನ್ನ ಧ್ವನಿ, ವಿಶಿಷ್ಟ ಶೈಲಿ, ಆತ್ಮಛೇದಕವಾದ ಕ್ರೂರ ವಿಮರ್ಶೆ ಮತ್ತು ಬೀಭತ್ಸ ಚಿತ್ರಣಗಳ ಮೂಲಕ ಅಜಂತಾ ತೆಲುಗು ಕಾವ್ಯಕ್ಕೆ ಒಂದು ಹೊಸದನಿ ನೀಡಿದರು. ಒಂದರ್ಥದಲ್ಲಿ ಅವರು ಬೀಭತ್ಸ ಜೀವನದ ಪ್ರತಿರೂಪವಾದ ಒಂದೇ ಕವಿತೆಯನ್ನು ಹಲವು ರೂಪಗಳಲ್ಲಿ ಇಲ್ಲಿ ಹಿಡಿದಿದ್ದಾರೆ. `ವಚನಕವಿತ್ವಕ್ಕೆ ಗೌರವಯುತ ಸ್ಥಾನ ಕಲ್ಪಿಸಬೇಕೆಂಬುದೇ ನನ್ನ ಕಾವ್ಯದ ಗುರಿ’ ಎಂದು ಘೋಷಿಸಿದ ಅವರು ಅದಕ್ಕೆ ಬೇಕಾದ ಭದ್ರ ಅಡಿಪಾಯವನ್ನು ಸರಿಯಾಗೇ ಹಾಕಿದರು. ಅವರ ಸಮಕಾಲೀನರಾದ ಮತ್ತೊಬ್ಬ ಮುಖ್ಯ ಕವಿ ದೇವರಕೊಂಡ ಬಾಲಗಂಗಾಧರ ತಿಲಕ್ (1921-1966)ರಂಥವರಿಂದ ಹಿಡಿದು ಮುಂದೆ ಆ ಪರಂಪರೆಯನ್ನು ಸಶಕ್ತವಾಗಿ ಮುಂದುವರಿಸಿದ ಕೆ. ಶಿವಾರೆಡ್ಡಿಯವರವರೆಗೆ (1943- ) ಹಲವರ ಮೇಲೆ ಅಜಂತಾರ ಶೈಲಿಯ ಪ್ರಭಾವವಾಗಿರುವುದಕ್ಕೆ ಪುರಾವೆಗಳು ನಮ್ಮ ಕಣ್ಮುಂದೆಯೇ ಇವೆ. ದೇವರಕೊಂಡ ಬಾಲಗಂಗಾಧರ ತಿಲಕ್ ರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತವಾದ ಏಕಮಾತ್ರ ಕವನ ಸಂಕಲನ `ಅಮೃತ ಸುರಿದ ರಾತ್ರಿ’ಯಲ್ಲಿನ `ನಿನ್ನೆ ರಾತ್ರಿ’ ಎಂಬ ಪದ್ಯದ ಮೇಲೆ, ಅಜಂತಾರ `ಸ್ವಪ್ನಲಿಪಿ’ ಸಂಕಲನದ `ಎಲ್ಲ ಒಂದೇ ಶಬ್ದ’ ಎಂಬ ಪದ್ಯದ ಸಾಲುಗಳು ಮತ್ತು ಶೈಲಿಯ ಪ್ರಭಾವವನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಶಿವಾರೆಡ್ಡಿಯವರ ಕೇಂದ್ರ ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಕವನ ಸಂಕಲನ `ಮೋಹನಾ ಓ ಮೋಹನಾ!’ವೂ ಒಳಗೊಂಡು ಅವರ ಎಲ್ಲ ಇಪ್ಪತೈದು ಕವನ ಸಂಕಲನಗಳ ಶೈಲಿಸಂವಿಧಾನ ಒಂದೇ ತೆರನಾಗಿದ್ದು (`ಅಂತರ್ಜನಂ’ ಎಂಬ ವಿಶಿಷ್ಟ ಶೈಲಿಯ ಸಂಕಲನವೊಂದನ್ನು ಹೊರತುಪಡಿಸಿ), ಅದು ಅಜಂತಾ ಕನಸಿದ `ವಚನ ಕವಿತ್ವಕ್ಕೆ ಗೌರವ ತಂದುಕೊಡುವ ಹಂಬಲ’ಕ್ಕೆ ಇಂಬಾಗಿ ದುಡಿಯುತ್ತ ಬಂದಿದೆ ಮತ್ತು ಪರಿಣಾಮಕ್ರಮದಲ್ಲಿ ತನ್ನದೇ ಆದ ಸ್ಪಷ್ಟ ಹೆಜ್ಜೆಗುರುತುಗಳನ್ನು ಮೂಡಿಸುತ್ತ ವಿಕಾಸಗತಿಯಲ್ಲಿ ಸಾಗಿದೆ. ಹಾಗೆ ಶಿವಾರೆಡ್ಡಿಯವರ ಪ್ರಭಾವವೂ ಅವರ ಓರಗೆಯವರಿಂದ ಹಿಡಿದು ಕಿರಿಯರವರೆಗೆ ತುಂಬಾ ಕವಿಗಳ ಮೇಲಾಗಿದೆ. + +ಶಿವಾರೆಡ್ಡಿಯವರ ಕಾವ್ಯವನ್ನು ಹೇಗೆ ಅನಾಥ ಬಾಲ್ಯದ ಅನುಭವಗಳ ನೆಲೆಯಿಂದ ಒಂದು ವಿಭಿನ್ನ ಅಧ್ಯಯನಕ್ಕೆ ಒಳಪಡಿಸಿ ಅಭ್ಯಸಿಸಬೇಕಾದ ಅಗತ್ಯವಿದೆಯೋ ಹಾಗೆಯೇ ಅಜಂತಾರ ಪದ್ಯಗಳನ್ನು ಮನೋವೈಜ್ಞಾನಿಕ ನೆಲೆಯಿಂದ ಬೇರೊಂದು ಬಗೆಯ ಓದಿಗೆ ಒಳಪಡಿಸಿ ಅಭ್ಯಸಿಸಬೇಕಾದ ಅಗತ್ಯವಿದೆ. ಅವರ ಕಾವ್ಯಪರಿಶೀಲನೆಗೆ ಅದೊಂದು ಸೂಕ್ತವಾದ ಮಾರ್ಗವಾಗಿ ಒದಗಿಬರುವುದರಲ್ಲಿ ಅನುಮಾನವೇ ಇಲ್ಲ. ತೀವ್ರವಾದ ನಗರಪ್ರಜ್ಞೆಯ ಅಜಂತಾ ಕಾರ್ಯನಿರ್ವಹಿಸಿದ ಹೈದರಾಬಾದು ನಗರವು, ಅವರು ಬದುಕಿದ್ದ ಕಾಲಕ್ಕೆ ಈಗಿನಷ್ಟೂ ಆಧುನಿಕವಾಗಿರಲಿಲ್ಲ. ಈಗಲೂ ಕೂಡ ಹೈದರಾಬಾದು ನಗರವು ಅವರ ಪದ್ಯಗಳು ಪ್ರಕಟಿಸುವ ಅತಿನಾಗರ ಮತ್ತು ಅಮಾನುಷ ಲೋಕದಷ್ಟು ದೊಡ್ಡದೂ ಇಲ್ಲ, ಬೀಭತ್ಸವೂ ಅಲ್ಲ. ಇಂದಿನ ಮುಂಬೈ, ದೆಹಲಿ, ಬೆಂಗಳೂರುಗಳಂಥ ಮೆಟ್ರೊಪಾಲಿಟನ್ ಸಿಟಿಗಳ ಚಿತ್ರಣವನ್ನು ಅರ್ಧ ಶತಮಾನದ ಹಿಂದೆಯೇ ಅಜಂತಾ ಅವರು ಅದು ಹೇಗೆ ಹೈದರಾಬಾದಿನ ಮೂಲಕ ಪರಿಭಾವಿಸಿಕೊಂಡರೆಂಬುದು ಆಶ್ಚರ್ಯಕ್ಕೆ ಕಾರಣವಾಗಿದೆ. + +`ಪರಿಭಾವನೆ’ ಎಂಬ ಪದವೇಕೆಂದರೆ, ಇದೇ ಹೈದರಾಬಾದನ್ನು `ಅತ್ತರಿನಂಥ ಜೀವನವಿಧಾನ’ ಎಂದು ವಿವರಿಸುವ ಮತ್ತೊಬ್ಬ ಕವಿ ಆಶಾರಾಜು(1954- )ವಯಸ್ಸಿನಲ್ಲಿ ಅಜಂತಾರಿಗಿಂತ ಕಾಲು ಶತಮಾನದಷ್ಟು ಚಿಕ್ಕವರು. ಈ ನಗರದೊಂದಿಗಿನ ತಮ್ಮ ಕಳ್ಳು-ಬಳ್ಳಿ ಸಂಬಂಧದ ಕುರಿತೇ ಆಶಾರಾಜು ಅಭಿಮಾನದ ದನಿಯಲ್ಲಿ ಎರಡು ಕವನಸಂಕಲನಗಳನ್ನು ಪ್ರಕಟಿಸಿದ್ದಾರೆ. ಆದರೆ ಅಜಂತಾ ಮಹಾನಗರಗಳು ಹೇಗೆ ಕಾಲಕ್ರಮೇಣ ನಡೆದಾಡುವ ಶವಗಳ ಸ್ಮಶಾನಗಳಾಗಿ ಬದಲಾಗುವವೆಂಬುದನ್ನು ಮೊದಲೇ ಮುನ್ನೂಹೆ ಮಾಡಿದಂತೆ ಅವುಗಳ ಬೀಭತ್ಸ ಚಿತ್ರವನ್ನು ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಅವರ ಕಾವ್ಯದಲ್ಲಿ, ಕತ್ತರಿಸಿದ ಕೈಗಳ ಮನುಷ್ಯ ಅವನದೇ ಕಡಿದ ತಲೆಯನ್ನು ಹಿಡಿದುಕೊಂಡು ನಗರಾರಣ್ಯದ ಬೀದಿಗಳಲಿ ಓಡಾಡುತ್ತಿದ್ದಾನೆ; ಕೊಲೆಯಾದವನೂ ಅವನೇ, ಕೊಲೆಗಾರನೂ ಅವನೇ ಎಂಬ ಚಿತ್ರವನ್ನವರು ರಕ್ತದಲ್ಲಿ ಬಿಡಿಸಿದ್ದಾರೆ. ಸಾವು, ಬೆಂಕಿ, ಭಯ, ಉದ್ವಿಗ್ನತೆ, ಏಕಾಕಿತನ, ಅಸಹಾಯಕತೆ, ಗಾಯ, ಗಾಯಾಳು, ರಕ್ತ, ಛಿದ್ರ ವಿಚ್ಛಿದ್ರವಾದ ದೇಹ, ಮಸುಕಾದ ಕನ್ನಡಿ, ಅಸ್ಪಷ್ಟ ಬಿಂಬ ಮುಂತಾದ ಪ್ರತಿಮೆಗಳು ಇವರ ಕಾವ್ಯದುದ್ದಕ್ಕೂ ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತವೆ. + +ಅತಿ ಎನಿಸುವಷ್ಟು ಸಂಸ್ಕೃತಭೂಯಿಷ್ಠವಾದ ಭಾಷೆ ಅಜಂತಾರ ಶೈಲಿ. ಎಷ್ಟೋ ಅಚ್ಚತೆಲುಗು ಪದಗಳಿರುವಾಗಲೂ ಅವರು ಅತಿ ಕಠಿಣವೆನಿಸುವ ಸಂಸ್ಕೃತ ಪದಗಳ ಮೊರೆಹೋಗುತ್ತಾರೆ. ಉದಾಹರಣೆಗೆ ಸಾವಿಗೆ `ಮೃತ್ಯು’ವನ್ನು; ಹೋರಾಟಕ್ಕೆ `ಸಂಗ್ರಾಮ’ವನ್ನು; ಬೋಳುತಲೆಗೆ `ಇಂದ್ರಲುಪ್ತಕ’ವನ್ನು; ಹೆಜ್ಜೆಸಪ್ಪಳಕ್ಕೆ `ಪದಘಟ್ಟನ’ವನ್ನು; ರಾಜರಿಗೆ `ರಾಜ್ಯಾಧಿಪತಿ’ಯನ್ನು; ಚೌಕಕ್ಕೆ `ಚತುರಶ್ರ’ವನ್ನು; ತೋರುಬೆರಳಿಗೆ `ತರ್ಜನಿ’ಯನ್ನು; ಒಗಟಿಗೆ `ಪ್ರವಲ್ಹಿಕ’ವನ್ನು ಬಳಸುತ್ತಾರೆ. ಈ ಎಲ್ಲ ಪದಗಳಿಗೆ ಸಂವಾದಿಯಾಗಿ ಅಚ್ಚತೆಲುಗು ಪದಗಳು ಇದ್ದೇ ಇವೆ. + +ಹಾಗೆಯೇ ಪುನರುಚ್ಛರಣೆ ಅಜಂತಾರ ಒಂದು ವಿಶಿಷ್ಟ ಶೈಲಿ. `ಎಲ್ಲ ಒಂದೇ ಶಬ್ದ’ ಪದ್ಯದಲ್ಲಿನ `ಹೇಳಲಿಲ್ಲವೆ, ನಾನು ಹೇಳಲಿಲ್ಲವೆ?’ ಎಂಬ ಸಾಲು ಆರು ಸಲ; `ಸುಷುಪ್ತಿ’ ಪದ್ಯದಲ್ಲಿನ `ಎಲ್ಲೂ ಯಾರೂ ಇಲ್ಲ, ಎಲ್ಲ ಮನೆ ಸೇರಿಕೊಂಡಿದ್ದಾರೆ’ ಎಂಬ ಸಾಲು ಹನ್ನೆರಡು ಸಲ; `ಕಫ್ರ್ಯೂ ನೆರಳಲ್ಲಿ’ ಪದ್ಯದಲ್ಲಿನ `ಎಲ್ಲಿದ್ದೇನೆ, ನಾನು ಎಲ್ಲಿದ್ದೇನೆ?’ ಎಂಬ ಸಾಲು ಆರು ಸಲ; `ದಿನಾ ನೋಡ್ತಲೇ ಇದ್ದೀನಿ’ ಪದ್ಯದ ಶೀರ್ಷಿಕೆ ಸಾಲು ನಾಲ್ಕು ಸಲ; `ಅನಾಮಿಕ’ ಪದ್ಯದ `ಮಹಾಸರ್ಪಗಳು ಮಾತಾಡವು/ ಮಹಾವೃಕ್ಷಗಳು ಮಾತಾಡವು’ ಎಂಬ ಇಡೀ ಎರಡು ಸಾಲಿನ ನುಡಿ ಮೂರು ಸಲ ಪುನರಾವರ್ತನೆಯಾಗಿವೆ. `ಅನಾಮಿಕ’ ಪದ್ಯದಲ್ಲಿ ಇರುವುದೇ ಹದಿನೈದು ಸಾಲು, ಅದರಲ್ಲಿ ಆರು ಸಾಲುಗಳು ಈ ಪುನರಾವೃತ್ತಿಗೇ ಹೋಗಿವೆ. ಇದು ಅವರ ಶೈಲಿ ಎಂಬುದೇನೋ ನಿಜ, ಆದರೆ ಈ ಶೈಲಿಯ ನಿರ್ಮಾಣದ ಹಿಂದೆ ಪ್ರೇರಣೆಯಾಗಿ ಕೆಲಸ ಮಾಡಿರುವ ಸಂಗತಿಗಳೇನು ಎಂಬುದನ್ನೂ ಗಮನಿಸಬೇಕಾಗಿದೆ. + + + +ಒಬ್ಬ ಕವಿಯಾಗಿ ಅಜಂತಾ ತಮ್ಮನ್ನು ರೂಪಿಸಿದ ಕಾವ್ಯ ಪರಿಕರಗಳಿಗಾಗಿ, ತಾವು ರೂಪಿಸಿದ ಕವಿಸಮಯಗಳಿಗಾಗಿ ತೆಲುಗಿಗಿಂತ ಹೆಚ್ಚು ಪಾಶ್ಚಾತ್ಯ ಕವಿಗಳಿಂದ ಪ್ರೇರಣೆಗಳನ್ನು ಪಡೆದಿರುವಂತೆ ಕಾಣಿಸುತ್ತದೆ. ಮಹಾಕವಿ ಶ್ರೀಶ್ರೀ ಮತ್ತು ಕಥೆಗಾರ ರಾಚಕೊಂಡ ವಿಶ್ವನಾಥ ಶಾಸ್ತ್ರಿಯವರನ್ನು ಕುರಿತು ಇರುವ ಎರಡು ಪದ್ಯಗಳನ್ನು ಬಿಟ್ಟರೆ ಇವರ ಕಾವ್ಯದಲ್ಲೆಲ್ಲೂ ತೆಲುಗಿನ ಪೂರ್ವಸೂರಿ ಕವಿಗಳ ಉಲ್ಲೇಖವಾಗಲಿ, ಪ್ರಭಾವವಾಗಲಿ ಕಾಣಸಿಗುವುದೇ ಇಲ್ಲ. ಆದರೆ `ಸ್ಲಂ ಕ್ಲಿಯರೆನ್ಸ್’ ಪದ್ಯದ ಮೊದಲಿಗೆ ಪೀಟರ್ ರಿಲೇಯ ಕವಿತೆಯ ಸಾಲನ್ನು ಉಲ್ಲೇಖಿಸುತ್ತಾರೆ. `ನಿನ್ನ ರೂಮಿನ ಗೋಡೆಗಳ ಮೇಲಿನ ಬೆಂಕಿಕಣ್ಣು ನಾನೇ’ ಪದ್ಯದ + +`ಕಾಲಮೇಘದಂಚುಗಳ ಮೇಲೆ ಬರುತ್ತಿರುವಸಾವಿನ ರಥದ ಸಾರಥಿಯಾಗಿರಬಹುದು’ + +ಎಂಬ ಸಾಲಿನಲ್ಲಿ ಮ್ಯಾಥ್ಯೂ ಅರ್ನಾಲ್ಡ್ ನ + +`At my back I always hearTime’s winged chariot is arriving near’ + +ಎಂಬ ಸಾಲುಗಳನ್ನು ನೆನಪಿಸುತ್ತಾರೆ. `ಪರಿತ್ಯಾಗಿ ಪರಿವೇದನೆ’, `ಬೇರುಗಳು ಇಲ್ಲೇ’ ಪದ್ಯಗಳಲ್ಲಿ ಆತ್ಮಕಥನಾತ್ಮಕ ವಸ್ತುಗಳನ್ನೂ; `ಮಂತ್ರವಾದಿ’ ಪದ್ಯದಲ್ಲಿ ಮೆಟಫಿಸಿಕಲ್ ವಸ್ತುವನ್ನೂ; `ಆತ್ಮಘೋಷ’, `ರಾಜಕೀಯ ಕೂಳುಬಾಕ’ ಪದ್ಯಗಳಲ್ಲಿ ರಾಜಕೀಯ ವಸ್ತುಗಳನ್ನೂ ನಿರ್ವಹಿಸುತ್ತ ತಮ್ಮ ಕಾವ್ಯಕ್ಕೆ ವಸ್ತುಪರವಾಗಿ ನಿರ್ದಿಷ್ಟ ಗಡಿಯಿಲ್ಲವೆಂದು ಸಾಬೀತುಪಡಿಸಿದ್ದಾರೆ. ವಸ್ತುವೇನೇ ಇದ್ದರೂ ಶೈಲಿ ಮಾತ್ರ ಮತ್ತದೇ ಬೀಭತ್ಸ, ಬೀಭತ್ಸ, ಬೀಭತ್ಸ. + +(ಚಿದಾನಂದ ಸಾಲಿ) + +ಹಾಗಾಗಿ ಇದು ಐವತ್ತು ವರ್ಷ ಹಿಂದೆ ಪ್ರಕಟವಾದ, ಈ ಕಾಲದ ಮಹಾನಗರದ ಮನುಷ್ಯನ ಛಿದ್ರೂಪವನ್ನು ಪ್ರಕಟಿಸುತ್ತಿರುವ ಒಂದು ಬೀಭತ್ಸ ಕಾವ್ಯ. + +ಕಾವ್ಯಾನುವಾದ ಒಡ್ಡುವ ಸವಾಲುಗಳನ್ನು ಎದುರಿಸುವ ಖುಷಿಯೇ ಬೇರೆ. ಅದಕ್ಕೆ ಬೇರೊಂದು ಹೋಲಿಕೆ ಸಿಗಲಾರದು. ಗದ್ಯಾನುವಾದದಲ್ಲಿ ಪದದ ಅರ್ಥ ಸೀಮಿತವಾಗಿದ್ದು, ಎಷ್ಟೋ ಅರ್ಥವಾಗದ ಪದಗಳ ಅರ್ಥವು ಆ ವಾಕ್ಯ, ಆ ಪ್ಯಾರಾ, ಆ ಸಂದರ್ಭಗಳು ಹೊರಡಿಸುವ ಅರ್ಥಗಳಲ್ಲೇ ಅಡಕವಾಗಿರುತ್ತದೆ. ಆದರೆ ಕಾವ್ಯಾನುವಾದದಲ್ಲಿ ಹಾಗಲ್ಲ. ಪ್ರತಿ ಪದವೂ ಒಂದು ವಾಕ್ಯದ, ಒಂದು ನುಡಿಯ ಘಟಕವಾಗಿರುತ್ತಲೇ; ತನ್ನ ಸ್ವತಂತ್ರ ಅಸ್ತಿತ್ವವನ್ನು, ಅಸ್ಮಿತೆಯನ್ನು ಬಿಟ್ಟುಕೊಡದೆ ಅನನ್ಯತೆಯನ್ನೂ ಉಳಿಸಿಕೊಂಡಿರುತ್ತದೆ. ಎರಡು ಭಾಷೆಗಳ ನಡುವೆ ಸುಲಭ ಗೋಚರವಾದ ಶಾರೀರಿಕ ರಚನೆಗಳ ವ್ಯತ್ಯಾಸವಿರುವಂತೆಯೇ; ಅಗೋಚರವಾದ ಸಾಂಸ್ಕೃತಿಕವೂ, ಜಾಯಮಾನದವೂ ಆದ ಆತ್ಮಸಂಬಂಧಿ ವ್ಯತ್ಯಾಸಗಳೂ ಇರುತ್ತವೆ. ಹಾಗಾಗಿ ಪ್ರತಿ ಸಲದ ಕಾವ್ಯಾನುವಾದದಲ್ಲೂ ಎದುರಾಗುವ ತೊಡಕುಗಳು, ಅರ್ಥಸಮಸ್ಯೆಗಳು, ಧ್ವನಿಸಮಸ್ಯೆಗಳು ಬೇರೆ ಬೇರೆಯೇ ಆಗಿರುತ್ತವೆ. ಅದರಲ್ಲೂ ತುಂಬಾ ಶಕ್ತಿಶಾಲಿ ಕವಿಯೊಬ್ಬರು ತಮಗೇ ವಿಶಿಷ್ಟವಾದ ಶೈಲಿಯಲ್ಲಿ ಸೃಷ್ಟಿಸಿದ ವಿನೂತನ ಪದಪುಂಜಗಳನ್ನು, ಉದ್ದೇಶಿತ ಭಾಷೆಯ ಜಾಯಮಾನಕ್ಕೆ, ಹೊರಗಿನದೆನ್ನಿಸದಂತೆ ತಂದುಕೊಳ್ಳುವ ಸಮಸ್ಯೆಯು ತುಂಬಾ ಜಟಿಲವಾದುದು. ಉದಾಹರಣೆಗೆ `ರಾಜಕೀಯ ಕೂಳುಬಾಕ’ ಪದ್ಯದಲ್ಲಿನ `ಕ್ರಕಚಶ್ಮಶ್ರು’ ಎಂಬ ಪದಪುಂಜ. ಇಂಥ ಸಂದರ್ಭಗಳಲ್ಲಿ ಅನುವಾದಕನು ಅನಿವಾರ್ಯವಾಗಿ ಮೂಲಾನುಸಾರಿಕೆಯನ್ನು ಬದಿಗಿಟ್ಟು ಸ್ವಲ್ಪ ಮಟ್ಟಿಗಿನ ಸ್ವಾತಂತ್ರ್ಯವನ್ನು ತೆಗೆದುಕೊಳ್ಳಬೇಕಾಗುತ್ತದೆ. + +`ನಡುಸ್ತುನ್ನ ರೊಡ್ಡು ಮಧ್ಯಲೋ ಮಟಮಾಯ ಕಾವಡಂ ಮೃತ್ಯುವು’ ಎಂಬ ಸಾಲನ್ನು ಪದಶಃ ಅನುವಾದಿಸಿದರೆ `ನಡೆಯುತ್ತಿರುವ ರಸ್ತೆ ನಡುವೆಯೇ ಮಟಮಾಯ ಆಗುವುದು ಸಾವು’ ಎಂದಾಗುತ್ತದೆ. ಇಲ್ಲಿ ಮಟಮಾಯ ಆಗುವುದು ನಡೆಯುತ್ತಿರುವ ರಸ್ತೆಯೋ, ಅದರ ಮೇಲೆ ನಡೆಯುತ್ತಿರುವ ವ್ಯಕ್ತಿಯೋ- ಹೀಗೆ ಹಲವು ಅರ್ಥ ಪದರುಗಳಿರುವಂತೆ ಸಾಲುಗಳನ್ನು ಬಳಸುತ್ತಾರೆ ಅಜಂತಾ. ಮಟಮಾಯ ಆಗುವು`ದೇ’ ಸಾವು ಅಂತ ಮಾಡಿದರೂ ಅರ್ಥಸಂಕೋಚ ಉಂಟಾಗಿಬಿಡುವ ಸಾಧ್ಯತೆಯಿರುತ್ತದೆ. ಇಲ್ಲಿ ಮೂಲಾನುಸಾರಿಕೆ ಮುಖ್ಯವಾಗುತ್ತದೆ. ಆದರೆ `ಹತುಡು ಹಂತಕುಡು ಅತಡೇ’ ಎಂಬುದನ್ನು `ಕೊಲೆಯಾದವನೂ ಅವನೇ, ಕೊಲೆಗಾರನೂ ಅವನೇ’ ಎಂದು ಮಾಡಿಕೊಳ್ಳಲಾಗಿದೆ. ಮೂಲದಲ್ಲಿ ಅವನೇ ಎಂಬುದು ಒಂದೇ ಸಲ ಬಂದಿದ್ದು, ಹಾಗೆಯೇ ಅದು ಅಲ್ಲಿ ಧ್ವನಿಪೂರ್ಣವಾಗಿ ಕೇಳಿಸುತ್ತದೆ. ಆದರೆ ಕನ್ನಡದಲ್ಲಿ `ಕೊಲೆಯಾದವನೂ, ಕೊಲೆಗಾರನೂ ಅವನೇ’ ಎಂಬುದಕ್ಕಿಂತ `ಕೊಲೆಯಾದವನೂ ಅವನೇ, ಕೊಲೆಗಾರನೂ ಅವನೇ’ ಎಂಬುದೇ ಹೆಚ್ಚು ಧ್ವನಿಪೂರ್ಣವಾಗಿ ಕೇಳಿಸುತ್ತದೆ. `ಹಂತಕುಡಿಕಿ ಬಲಿಪಶುವಿಕಿ ಇಪ್ಪುಡು ತೇಡಾ ಲೇದು’ ಎಂಬ ಸಾಲು ಪದಶಃ ಅನುವಾದದಲ್ಲಿ `ಕೊಲೆಗಾರನಿಗೂ ಕೊಲೆಯಾದವನಿಗೂ ಈಗ ಅಂತರವಿಲ್ಲ’ ಎಂದಾಗುತ್ತದೆ. ಆದರೆ ಇಲ್ಲಿ `ಕೊಲೆಗಾರನಿಗೂ ಕೊಲೆಯಾದವನಿಗೂ ಈಗ `ಅಂಥ’ ಅಂತರವಿಲ್ಲ’ ಎಂದು ಮಾಡಿಕೊಂಡು ಮೂಲದಲ್ಲಿ ಇಲ್ಲದ `ಅಂಥ’ ಎಂಬ ಪದವನ್ನು ಸೇರಿಸಿಕೊಳ್ಳಲಾಗಿದೆ. ಇದು ಮತ್ತು ಇಂಥ ಹಲವು ಸಂಗತಿಗಳು ಅನುವಾದಕರನ್ನು ಮುಖ್ಯ ಸಮಸ್ಯೆಗಳಾಗಿ ಕಾಡಿಬಿಡುತ್ತವೆ. ಕೆಲವು ಮೇಲ್ನೋಟಕ್ಕೆಬಾಲಿಶವೆನ್ನಿಸಿದರೂ ದಿನಗಟ್ಟಲೇ ಕೆಲಸ ಸಾಗದಂತೆ ನಿಲ್ಲಿಸಿಬಿಡುತ್ತವೆ. ಥಾಮಸ್ ಮೂರ್ ನ `ತ್ರೀ ಹಾರ್ಸಸ್’ ಮತ್ತು ವಿಲಿಯಂ ಬ್ಲೇಕ್ ನ `ಎ ಪಾಯ್ಸನ್ ಟ್ರೀ’ ಪದ್ಯಗಳನ್ನು ಎಷ್ಟೊಂದು ಜನ ಎಷ್ಟೊಂದು ಬಗೆಗಳಲ್ಲಿ ಅನುವಾದಿಸಿದ್ದಾರೆ. ಗುರುದೇವ ರವೀಂದ್ರನಾಥ ಟ್ಯಾಗೊರರ ‘ಗೀತಾಂಜಲಿ’ ಸಂಕಲನದ ಕನ್ನಡಾನುವಾದಗಳೇ ಈವರೆಗೆ ಇಪ್ಪತ್ತೆಂಟರಷ್ಟು ಬಂದಿವೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಇವೆಲ್ಲವು ಅನುವಾದವೂ ಒಂದು ಸೃಜನಶೀಲ ಕ್ರಿಯೆಯಾಗಿದೆ ಎಂಬುದನ್ನು ಸಾರಿ ಹೇಳುತ್ತಿವೆ ಎನಿಸುತ್ತದೆ. + +ಕೊನೆಗೆ ಒಂದು ತಕರಾರೆಂದರೆ `ಬೇರುಗಳು ಇಲ್ಲೇ..’ ಎಂಬ ಆತ್ಮಕಥನಾತ್ಮಕ ಪದ್ಯದಲ್ಲಿ, ದೊಡ್ಡ ಮಗ `ಎಲ್ಲೋ ಶೋಷಿತ ಜನರ ಹೃದಯಗಳಲ್ಲಿ ಸಂಚರಿಸುತ್ತಿರುವುದಾಗಿ ಹರಡಿದ ಸುದ್ದಿ’ ಕೇಳಿ ಕವಿ ಕಂಪಿಸಿಹೋಗ್ತಾರೆ. ಇದೆಂಥ ಪ್ರತಿಗಾಮಿ ಧೋರಣೆ ಎಂದುಕೊಳ್ಳುವ ಹೊತ್ತಿಗೆ `ಯಾವಾಗ, ಎಲ್ಲಿ, ಯಾವ ದುರ್ವಾರ್ತೆ ಮುರಕೊಂಡು ಬೀಳುವುದೋ ಎಂಬ ಭಯ’ ಎಂಬ ಸಾಲಿನಲ್ಲಿ ಕವಿ ಕಣ್ಮರೆಯಾಗಿ ಒಬ್ಬ ತಂದೆ ಕಾಣಿಸಿಕೊಳ್ಳುತ್ತಾನೆ. ಕಟ್ಟಾ ಮಾಕ್ರ್ಸಿಸ್ಟ್ ಆದ ಮಹಾಕವಿ ಶ್ರೀಶ್ರೀ ಅವರನ್ನು ಅಭಿಮಾನದಿಂದ ಕಾಣುವ, `ಕಾವ್ಯ ನಿಜವಾಗಿ ಒಂದು ರಹಸ್ಯ ಕ್ರಾಂತಿ’ ಎಂದು ಗಾಢವಾಗಿ ನಂಬುವ ಕವಿ, ನಿಜದ ಕ್ರಾಂತಿಯೆಡೆಗೆ ಮಗ ಆಕರ್ಷಿತನಾದ ಸುದ್ದಿ ಕೇಳಿ ಎಲ್ಲಿ ಎನ್ ಕೌಂಟರ್ ಆಗಿಬಿಡುವನೋ ಎಂದು ಹೆದರಿಕೆ ವ್ಯಕ್ತಪಡಿಸುತ್ತಾರೆ. ಕವಿಯ ಬರೆಹದ ತಾತ್ವಿಕತೆ ಮತ್ತು ಅವನು ಬದುಕಿನಲ್ಲಿ ನಿರ್ವಹಿಸುತ್ತಿರುವ ಪಾತ್ರಗಳು ಮುಖಾಮುಖಿಯಾದಾಗ ಬದುಕಿನ ಹಳವಂಡವೇ ಮೇಲುಗೈಯಾಗುವುದನ್ನು ಕವಿತೆ ತುಂಬಾ ಧ್ವನಿಪೂರ್ಣವಾಗಿ ಹಿಡಿದಿಟ್ಟಿದೆ. ಇಂಥ ಕವಲಿನ ಸಂದರ್ಭಗಳಲ್ಲಿ ಸಿದ್ಧಾಂತವನ್ನು ತ್ಯಜಿಸಿ, ಬದುಕಿನ ಪಾತ್ರಕ್ಕೆ ಶರಣಾದವರ ಅನೇಕ ಉದಾಹರಣೆಗಳು ವಾಸ್ತವದಲ್ಲಿ ನಮ್ಮ ಮುಂದಿರುವುದು ನಿಜವಾದರೂ; ಆಶಯದ ದೃಷ್ಟಿಯಿಂದಲಾದರೂ ಕವಿ ತಾನು ನೆಚ್ಚಿದ ಜನಹಿತ ಸಿದ್ಧಾಂತವನ್ನೇ ತನ್ನ ಕಾವ್ಯದಲ್ಲಿ ಕೊನೆಗೆ ಗೆಲ್ಲಿಸಿದ್ದರೆ ಚೆನ್ನಾಗಿತ್ತು ಎಂಬ ಪ್ರಶ್ನೆ ಉಳಿಯುತ್ತದೆ. + +ಅದೇನೇ ಇದ್ದರೂ ಇಲ್ಲಿನ ಕವಿತೆಗಳು ಕನ್ನಡದ ಓದುಗರಿಗೆ ಇಷ್ಟವಾದರೆ ಅದು ಕವಿ ಅಜಂತಾರ ಕಾವ್ಯದ ದೇಶಕಾಲಾತೀತ ಗುಣದ ಶಕ್ತಿಯೆಂದೂ; ಹಾಗಲ್ಲದೆ ಯಾವುದೋ ಒಂದು ಪದ ಶುಷ್ಕವಾಗಿ ಉಳಿದಿದ್ದು ರಸಾಭಾಸಕ್ಕೆ ತೊಡಕುಂಟು ಮಾಡಿದರೆ ಅದು ಅನುವಾದದ ದೋಷವೇ ಎಂದೂ ವಿನಮ್ರಪೂರ್ವಕವಾಗಿ ತಿಳಿಸಲಿಚ್ಛಿಸುವೆ. + +ತಾವು ಮತ್ತು ಲಂಕೇಶರು `ಅಜಂತಾ’ ಬಗ್ಗೆ ಮಾತನಾಡಿಕೊಂಡಿದ್ದನ್ನು ಸ್ಮರಿಸಿ, `ಸ್ವಪ್ನಲಿಪಿ’ಯನ್ನು ಅನುವಾದಿಸಲು ಸೂಚಿಸಿ ಸಲಹೆ ನೀಡಿದ ಕನ್ನಡದ ಮುಖ್ಯ ಕವಿಗಳೂ, ಕೇಂದ್ರ ಸಾಹಿತ್ಯ ಅಕಾದೆಮಿಯ ಅಧ್ಯಕ್ಷರೂ ಆದ ಡಾ. ಚಂದ್ರಶೇಖರ ಕಂಬಾರರಿಗೆ; ಅಜಂತಾ ಅವರ `ಸ್ವಪ್ನಲಿಪಿ’ಯ ಕುರಿತು ತಿಳಿಸಿದ ತೆಲುಗಿನ ಏಕೈಕ ಕಬೀರ್ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಕವಿ ಕೆ. ಶಿವಾರೆಡ್ಡಿಯವರಿಗೆ; ಈ ಕಾರ್ಯವನ್ನು ನನಗೆ ನೀಡಿದ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸಂಚಾಲಕರಾದ ಹಿರಿಯ ವಿಮರ್ಶಕರೂ, ಆತ್ಮೀಯರೂ ಆದ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ಮತ್ತು ಆತ್ಮೀಯರಾದ ಸಾಹಿತ್ಯ ಅಕಾದೆಮಿಯ ದಕ್ಷಿಣ ಭಾರತ ವಲಯ ಕಚೇರಿಯ ಪ್ರಾದೇಶಿಕ ಕಾರ್ಯದರ್ಶಿಗಳಾದ ಶ್ರೀ ಎಸ್. ಪಿ. ಮಹಾಲಿಂಗೇಶ್ವರ ಭಟ್ ಅವರಿಗೆ, ಅಜಂತಾರ ಪದ್ಯಗಳನ್ನು ನಾನು ಅನುವಾದಿಸಿದ್ದನ್ನು ಕೇಳಿ, ಕೂಡಲೇ ಇದರ ಪ್ರಕಟಣೆಗೆ ಒತ್ತಾಸೆಯಾಗಿ ನಿಂತ ಕನ್ನಡದ ಮುಖ್ಯ ಕವಿಗಳೂ, ಸದ್ಯ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಸಮಿತಿಯ ಸಂಚಾಲಕರೂ ಆಗಿರುವ ಡಾ. ಸಿದ್ಧಲಿಂಗಯ್ಯ ಅವರಿಗೆ ಗೌರವಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುವೆ. + +ಈ ಸಂಕಲನದ ಶೋಧಕಾರ್ಯದಲ್ಲಿ ನೆರವಾದ ನವದೆಹಲಿಯ ಕವಿ ರಮೇಶ್ ಅರೋಲಿ, ಹೊಸಪೇಟೆಯ ಕಲಾವಿದ ಸೃಜನ್, ಹೈದರಾಬಾದಿನ ಹಿರಿಯ ಅನುವಾದಕ ರಂಗನಾಥ ರಾಮಚಂದ್ರರಾವ್, ಕಡೆಗೆ ನವದೆಹಲಿಯ ಸಾಹಿತ್ಯ ಅಕಾದೆಮಿ ಪ್ರಧಾನ ಕಚೇರಿಯ ಗ್ರಂಥಾಲಯದ `ಸಾಹಿತ್ಯ ಅಕಾದೆಮಿ ಪ್ರಶಸ್ತಿ ಪುರಸ್ಕೃತ ಕೃತಿಗಳ ವಿಭಾಗ’ದಿಂದ ಒಂದು ಪ್ರತಿ ದೊರಕಿಸಿಕೊಟ್ಟ ಅಕಾದೆಮಿಯ ಸಿಬ್ಬಂದಿ, ಗೆಳೆಯ ಎಲ್. ಸುರೇಶಕುಮಾರ್ ಅವರಿಗೆ ವಿಶೇಷ ಧನ್ಯವಾದಗಳನ್ನರ್ಪಿಸುವೆ. ಅನುವಾದದ ಗೊಂದಲಗಳನ್ನು ಪರಿಹರಿಸಿದ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಹಿರಿಯ ಅನುವಾದಕ ಮಿತ್ರರಾದ ಬಿ. ಸುಜ್ಞಾನಮೂರ್ತಿ, ಕಲಬುರ್ಗಿಯ ಬೋಡೆ ರಿಯಾಜ್ ಅಹ್ಮದ್, ಕೋಲಾರದ ಸ. ರಘುನಾಥ, ಪ್ರಜಾವಾಣಿಯ ಎಸ್. ಸೂರ್ಯಪ್ರಕಾಶ್ ಪಂಡಿತ್ ಮತ್ತು ಮಡದಿ ಎನ್. ಕೆ. ನಂದಿನಿ; ಅನುವಾದದಲ್ಲಿ ಈ ಪದ್ಯಗಳು ಹೇಗೆ ಕೇಳಿಸುತ್ತವೆ ಎಂದು ಪ್ರತಿಕ್ರಿಯೆ ನೀಡಿದ ಮೊದಲ ಓದಿನ ಕೇಳುಗ, ಕವಿಮಿತ್ರ ಆರಿಫ್ ರಾಜಾ ಹಾಗೂ ಅಕಾದೆಮಿಯ ಸಿಬ್ಬಂದಿ ಮಿತ್ರ ಷಣ್ಮುಖಾನಂದ ಇವರೆಲ್ಲರಿಗೆ ಪ್ರೀತಿಪೂರ್ವಕ ನೆನೆಕೆಗಳನ್ನು ಸಲ್ಲಿಸುವೆ. + + + +ಚಿದಾನಂದ ಸಾಲಿ ಅನುವಾದಿಸಿದ ಅಜಂತಾ ಅವರ ಒಂದು ಕವಿತೆ + +ಮಂತ್ರವಾದಿ + +ಗೋಡೆಗೆ ನೇತಾಡುತ್ತಿರುವ ದೇಹವಲ್ಲ ಕನ್ನಡಿಯೆಂದರೆ!ಅದು ನಿನ್ನ ಅಂತರಂಗ + +ಕನ್ನಡಿಯಲ್ಲಿ ನಿನ್ನ ಪ್ರತಿಬಿಂಬದ ಹಿಂದೆಸದಾ ಒಬ್ಬ ಮಂತ್ರವಾದಿ ಇರುತ್ತಾನೆಕುದುರೆ ಮೇಲೆ ಕುಳಿತಿರುವ ಒಬ್ಬ ಸಾಹಸಿ ಇರುತ್ತಾನೆಹೊರಪ್ರಪಂಚದ ರಹಸ್ಯಗಳಮುರಿದುಕೊಂಡು ತಿನ್ನುತ್ತಿರುವ ಒಬ್ಬ ವಿದೂಷಕನಿರುತ್ತಾನೆ + +ಕನ್ನಡಿಯೆಂದರೆ ನಿನ್ನೊಳಗಿನೊಳಗಿನ ಪ್ರಪಂಚ + +ಕನ್ನಡಿಯೊಳಗೆಅಲೆಗಳ ಮೇಲೆ ಕದಲುತ್ತಿರುವಪ್ರತಿಬಿಂಬಗಳ ಅಡೆತಡೆ ನಿವಾರಣೆ ಸಾಧ್ಯವಿಲ್ಲವಾಗಿನೇರವಾಗಿ ನಾನೇ ಒಂದು ಕ್ಷಣ ಕನ್ನಡಿಯೊಳಗೆ ಪ್ರವೇಶಿಸಿದೆ + +ಕನ್ನಡಿಯಲ್ಲಿ ಈಗ ನನ್ನ ಪ್ರತಿಬಿಂಬವಿಲ್ಲ;ನಾನು ಮಾತ್ರ ಅಲ್ಲೇ ಇದ್ದೇನೆ ಅಶರೀರಿಯಾಗಿ.1990 + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_367.txt b/Kenda Sampige/article_367.txt new file mode 100644 index 0000000000000000000000000000000000000000..20b4081b6b09d88c8101d3b93db8fe8d7daeee04 --- /dev/null +++ b/Kenda Sampige/article_367.txt @@ -0,0 +1,77 @@ + + +ಸಮ್ಮೇಳನದ ಉದ್ಘಾಟನೆ ನಾಳೆ ಸಂಜೆಯಿದ್ದರೂ ಸ್ಥಳೀಯ ಪತ್ರಿಕೆಗಳಲ್ಲಿ ವಿಪರೀತ ಸುದ್ದಿ ಮಾಡಿತ್ತು. ವಿಶೇಷ ಪುರವಣಿಗಳನ್ನು ಎಲ್ಲ ಪತ್ರಿಕೆಗಳು ಹೊರಡಿಸಿದ್ದವು. ರೈತ ಬಂಧು, ಮಣ್ಣಿನ ಧ್ವನಿ, ರಣಭೇರಿ, ಉದಯಗೀತೆ, ಕೊಳಲು, ಪೌರವಾಣಿ, ಜನತಾ ಮಾಧ್ಯಮ ಎಲ್ಲ ಪತ್ರಿಕೆಗಳಲ್ಲೂ ಪುರವಣಿ, ಹೆಚ್ಚಿನ ಪುಟಗಳು. ಬೆಂಗಳೂರಿನ, ಕೊರಿಯಾದ, ಅಮೆರಿಕದ ಪ್ರಸಿದ್ಧ ಸಾಫ್ಟ್ ವೇರ್ ಕಂಪನಿಗಳು, ಟೆಲಿವಿಶನ್ ಕಂಪನಿಗಳು, ಸ್ಟಾರ್ ಹೊಟೇಲ್ ಗಳು, ಜಾಹಿರಾತು ನೀಡಿದ್ದವು. ಒಂದು ಸೋಪಿನ ಕಂಪೆನಿಯಂತೂ ಚರ್ಮರೋಗ ತಜ್ಞರ ಅಭಿಪ್ರಾಯವನ್ನೂ ಪ್ರಕಟಿಸಿತ್ತು. ಸಲಿಂಗರತಿಯಲ್ಲಿ ಚರ್ಮದ ನುಣುಪಿನ ಆಕರ್ಷಣೆಯೇ ಮುಖ್ಯ ಎಂದು ಸೂಚಿಸಿದ್ದ ತಜ್ಞ ರಾಜೇಂದ್ರ ಕುಮಾರರ ಬರಹದಲ್ಲಿ ಅಂತಹ ನುಣುಪನ್ನು ತಮ್ಮ ಕಂಪೆನಿಯ ಸೋಪಿನ ಬಳಕೆ ಹೇಗೆ ವೃದ್ಧಿಸುತ್ತದೆ, ಸದಾ ಕಾಂತಿಯುಕ್ತವಾಗಿ ಇಡುತ್ತದೆ ಎಂದು ಕೂಡ ವಿವರಿಸಿದ್ದರು. ಸ್ನಾನ ಮಾಡಿ, ತಿಂಡಿ ತಿಂದು, ಎಲ್ಲ ಪತ್ರಿಕೆಗಳನ್ನೂ ಹಾಸಿಗೆಯ ಮೇಲೆ ಹರಡಿಕೊಂಡು, ಒಂದೊಂದಾಗಿ ಓದುತ್ತಾ ಹೋದೆ. ಒಂದು ಬರಹ ಇನ್ನೊಂದರಂತೆ, ಒಂದು ಸಂದರ್ಶನ ಮತ್ತೊಬ್ಬರದಂತೆಯೇ ಇದ್ದುದು ನಿಜವಾದರೂ, ಕೆಲವಾದರೂ ಮನಸ್ಸಿನ ಮೇಲೆ ಪರಿಣಾಮ ಬೀರಿದವು. ಸಲಿಂಗರತಿಯ ಬಗ್ಗೆ ಕುತೂಹಲ, ಗೌರವ ಮೂಡಿಸುವುದರ ಜೊತೆಗೆ ಕೆಲ ಬರಹಗಳಾದರೂ ಬೇರೆ ಸಮಸ್ಯೆಗಳನ್ನು ಚರ್ಚಿಸಿದ್ದವು. ತುಂಬಾ ಜನ ಇದು ಇನ್ನೊಬ್ಬರ ಸಮಸ್ಯೆ, ನೋವು ಎನ್ನುವ ತೃತೀಯ ಪುರುಷ ನಿರೂಪಣೆಯಲ್ಲಿ ಬರೆದಿದ್ದರೆ, ಕೆಲವರದು ಪ್ರಾಂಜಲ ನಿವೇದನೆಯಾಗಿತ್ತು. ಸ್ವಲ್ಪ ವಿವರವಾಗಿ ಗಮನಿಸಬೇಕಾಗಿ ಬಂದು, ಎರಡನೆಯ ಸಲವೂ ಓದಿದ ಕೆಲವು ಬರಹಗಳು ಹೀಗಿದ್ದವು: + +ಮೊದಲನೆಯದು ಸಭ್ಯ, ಮೃದುವಾದ ಪ್ರತಿಭಟನೆಯ ಪತ್ರ. ಇದು ವಾಚಕರ ವಾಣಿಗೆ ಬರೆದ ಪತ್ರವಾಗಿದ್ದರೂ, ವಿಶೇಷ ಪುಟಗಳಲ್ಲಿ Box Item ನಂತೆ ಪ್ರಕಟವಾಗಿತ್ತು. + +******** + +(ಕೆ.ಸತ್ಯನಾರಾಯಣ) + +ಈ ಕೋದಂಡರಾಮಪುರವೆಂದರೆ ಸಾಕ್ಷಾತ್ ಶ್ರೀರಾಮಚಂದ್ರನೇ ಬಂದು ಸಂವತ್ಸರದ ಆಶ್ವಯುಜ ಮಾಸದುದ್ದಕ್ಕೂ ಸೀತಾ-ಲಕ್ಷ್ಮಣ-ಹನುಮಾನ್ ಸಮೇತನಾಗಿ ತಂಗಿದ್ದ ಪವಿತ್ರ ಸ್ಥಳ. ಮಾಂಡವ್ಯ ಮಹರ್ಷಿಗಳು ತಪಸ್ಸು ಮಾಡಿದ ಜಾಗವೂ ಹೌದು. + +ಈ ಸೀಮೆಯಲ್ಲಿ ಎಷ್ಟೊಂದು ದತ್ತ ಪೀಠಗಳು, ಔದುಂಬರ ವೃಕ್ಷಗಳು. ಇಡೀ ಉತ್ತರ ಭಾರತದ ಮೇಲೆಲ್ಲಾ ಯವನರ ಆಕ್ರಮಣ ನಡೆಯುತ್ತಿದ್ದಾಗ ಇಲ್ಲಿ ಭಕ್ತಿ, ಅಧ್ಯಾತ್ಮ, ಸಂಗೀತದ ಹೊಳೆ. ಕಿಂಚಿತ್ತೂ ಸಂಕರವಾಗದ ಸ್ಥಳ ಮಹಾತ್ಮೆ. ಇಂತಹ ಪವಿತ್ರ ಪರಂಪರೆಯಿರುವ ಸನ್ನಿಧಿಯಲ್ಲಿ ಈ ರೀತಿಯ ಸಮ್ಮೇಳನ ನಡೆಯಬೇಕೇ? ಸಮ್ಮೇಳನಕ್ಕೆ ಬರುತ್ತಿರುವವರೆಲ್ಲ ಬಹುಪಾಲು ಬೆಂಗಳೂರಿನವರು. ಬೆಂಗಳೂರಿಗಿಂತ ನಗರ ಬೇಕೆ ಸಮ್ಮೇಳನ ನಡೆಸಲು? ಸಮ್ಮೇಳನದಲ್ಲಿ ಕೇಂದ್ರವಾಗಿ ಪ್ರಸ್ತಾಪಿಸಲ್ಪಡುವ ಐಟಂ ಕೋದಂಡರಾಮಪುರದ ಸೀಮೆಯ ಗಂಡಸರಲ್ಲೂ ಇರಬಹುದು. ಆದರೆ ಸಭ್ಯರು, ಸುಸಂಸ್ಕೃತರೂ ಆದ ಇಲ್ಲಿಯವರು ಇದನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡಿರಬಹುದು. + +ಮಕ್ಕಳ ಮುಗ್ಧ ಮನಸ್ಸಿನ ಮೇಲೆ ಕೆಟ್ಟ ಪರಿಣಾಮವಾಗಬಾರದು. ಯೌವ್ವನಕ್ಕೆ ಕಾಲಿಡುತ್ತಿರುವವರಿಗೆ ವಿಕ್ಷಿಪ್ತ ಆಕರ್ಷಣೆಯಾಗಬಾರದು ಎಂಬ ಕಾಳಜಿಯಿಂದ, ರೋಷ, ಒಳಗುದಿಯನ್ನೆಲ್ಲ ಮನಸ್ಸಿನಲ್ಲೇ ಇಟ್ಟುಕೊಂಡು, ಸಂವೇದನಾಶೀಲರಾಗಿ ಬದುಕುತ್ತಿರುವ ಇಲ್ಲಿಯ ಸಮಾಜದ ಬಗ್ಗೆ ನಮಗೆ ಗೌರವವಿದೆ. ಆದರೆ ಸಮ್ಮೇಳನದವರು ನಮ್ಮ ಮನೆ ಬಾಗಿಲಿಗೆ ಬಂದಿದ್ದಾರೆ. ಆತಿಥ್ಯ, ಗೌರವ ತೋರಬೇಕಾದ್ದು ನಮ್ಮ ಕರ್ತವ್ಯ. ಸಂತೋಷದಿಂದ ಮಾಡೋಣ. ಆದರೆ ಒಂದೇ ಬೇಡಿಕೆ. ಈ ಸಮ್ಮೇಳನ, ಇದರ ಪ್ರಚಾರವೆಲ್ಲ ಅತಿಯಾಗದಿರಲಿ, ಯುವಕರನ್ನು ಆಕರ್ಷಿಸದಿರಲಿ ಎಂಬ ಕಾಳಜಿಯೂ ಅಷ್ಟೇ ಮುಖ್ಯ. ಸಮ್ಮೇಳನ ನಡೆದಮೇಲೆ ಇದೆಲ್ಲ ನಡೆಯಲೇ ಇಲ್ಲ ಎನ್ನುವಂತೆ ಮರೆತುಬಿಡೋಣ. + +******** + +ಇನ್ನೊಂದು ಬರಹ – ಶಾಲಿನಿ-ಮಾಲಿನಿ ದಂಪತಿಯದ್ದು. ದಂಪತಿ ಫೋಟೋ, ವೃತ್ತಿಯ ವಿವರಗಳನ್ನು ಕೂಡ ಜೊತೆಯಲ್ಲಿ ನೀಡಲಾಗಿತ್ತು. ಶಾಲಿನಿ ಸಫಾರಿ ಸೂಟಿನಲ್ಲಿದ್ದರು. ಮಾಲಿನಿ, ಈಗಿನ ಕಾಲದ ಹುಡುಗಿಯರ ತರಹ ಬಾಬ್ ಮಾಡಿಸಿಕೊಂಡ ಕೂದಲನ್ನು ಬೆನ್ನು, ಭುಜದ ಮೇಲೆಲ್ಲಾ ಹರಡಿಕೊಂಡಿದ್ದಳು. ಇಬ್ಬರೂ ಕನ್ನಡಕ ಹಾಕಿಕೊಂಡಿದ್ದರೂ, ಶಾಲಿನಿಯ ಕನ್ನಡಕದ ಫ್ರೇಮ್ ಚೆನ್ನಾಗಿತ್ತು. ಶ್ರೀಗಂಧದ ಬಣ್ಣದ್ದು. + +ಶಾಲಿನಿ ಹೆಲ್ವೆಟ್ ಕಂಪನಿಯ ದಕ್ಷಿಣ ಏಷ್ಯಾ ವಿಭಾಗದ ಮುಖ್ಯಸ್ಥೆಯೆಂದು, ಮಾಲಿನಿ ಡೈನಾಮಿಕ್ ವಿಸ್ಟಾ ಕಂಪನಿಯ ತರಬೇತಿ ವಿಭಾಗದ ಉಪಾಧ್ಯಕ್ಷೆಯೆಂದು ನಮೂದಿಸಲಾಗಿತ್ತು. ಇಬ್ಬರ ಬಣ್ಣವೂ ಕೆಂಪಗಿದ್ದರೂ ಮಾಲಿನಿಯದು ಒಂದು ಸುತ್ತು ಜಾಸ್ತಿ ಎಂದೇ ಹೇಳಬಹುದಾಗಿತ್ತು. + +******** + +ಸಮ್ಮೇಳನದ ಸಂಘಟಕರು, ಸ್ವಾಗತ ಸಮಿತಿಯವರು ಯಾವ ಶತಮಾನದಲ್ಲಿ ಬದುಕುತ್ತಿದ್ದಾರೆ? ಇಪ್ಪತ್ತೊಂದನೆಯ ಶತಮಾನದ ಎರಡನೆಯ ದಶಕವೂ ಮುಗಿಯುತ್ತಿದೆ. ಸಲಿಂಗರತಿ ಸಮ್ಮೇಳನ ಅಂತ ಹೇಳಿ ಬರೇ ಗಂಡಸರನ್ನು ಏಕೆ ಕೂಗಿದ್ದೀರಾ? ಸ್ತ್ರೀ ಸಲಿಂಗಿಗಳ ಸಮಸ್ಯೆ ಏಕೆ ಮುಖ್ಯವಲ್ಲ? ನಮಗೆ ಯಾವ ಆಂತರಿಕ ಸಮಸ್ಯೆಗಳೇ ಇಲ್ಲ ಎಂದು ನಂಬಿದ್ದೀರೋ? + +ಏನಪ್ಪಾ, ಏನೇ ಮಾಡಲು ಹೊರಟರೂ, ಎಲ್ಲದರಲ್ಲೂ ಪ್ರಾತಿನಿಧ್ಯದ ಪ್ರಶ್ನೆಯನ್ನೇ ಮುಂದೆ ಮಾಡುತ್ತಾರಲ್ಲಾ ಎಂದು ಪ್ರಶ್ನಿಸಬೇಡಿ. ಇದು ಹೊಸ ಕಾಲ. ಹೊಸ ಕಾಲದ ಭಾರತ. ಪ್ರಶ್ನೆ ಇರಲಿ, ಉತ್ತರವಿರಲಿ, ದೃಷ್ಟಿಕೋನವಿರಲಿ, ಎಲ್ಲದಕ್ಕಿಂತ ಮುಂಚೆ ಪ್ರಾತಿನಿಧ್ಯದ ಪ್ರಶ್ನೆಗೆ ಮೊದಲು ಉತ್ತರ ಇರಲೇಬೇಕು. ಇಲ್ಲದಿದ್ದರೆ, ಯಾವ ವಿಚಾರ, ಯಾವ ಘಟನೆಯ ರಥದ ಗಾಲಿಯೂ ಒಂದೇ ಒಂದು ಹೆಜ್ಜೆ ಕೂಡ ಮುಂದೆ ಹೋಗಲು ಬಿಡುವುದಿಲ್ಲ. ಪ್ರಾತಿನಿಧ್ಯದ ಗಡಿಬಿಡಿ ಮುಖ್ಯವೇ ಸಂಗತಿಯ ಮೌಲಿಕತೆ- ಪ್ರಸ್ತುತತೆಗಿಂತ ಎಂದು ಕೇಳಿದರೆ, ಹೌದು ಎಂದು ಇನ್ನಷ್ಟು ಗಟ್ಟಿ ದನಿಯಲ್ಲಿ ಕೂಗುತ್ತೇವೆ. ಗಟ್ಟಿಮೇಳದ ಮಾತೇಕೆ? ಸಂಗತಿಯ ಮಾತುಕತೆಗೇ ಬಂದರೂ ಈಗಾಗಲೇ ಅಧ್ಯಯನಗಳು ಗುರುತಿಸಿರುವ ಹಾಗೆ ಸ್ತ್ರೀಯರಲ್ಲಿ ಸಲಿಂಗರತಿ ಎನ್ನುವುದು ಮಧುರವಾದದ್ದು, ಸಂಗೀತಮಯವಾದದ್ದು, ಕೋಮಲವಾದದ್ದು, ಭಾವಶ್ರೀಮಂತವಾದದ್ದು. + +ಇದಕ್ಕೆ ಹೆಂಗಸರ ದೇಹ ಮತ್ತು ಮನಸ್ಸೇ ಕಾರಣ. ಎಲ್ಲವೂ ಮೃದುವಾದದ್ದು, ಸಪೂರವಾದದ್ದು, ಹೂವಿನ ಸ್ವಭಾವದ್ದು. ಇಂತಹ ಸ್ವಭಾವದ ನೆಲೆಯಿಂದ ಕೂಡುವುದಕ್ಕೂ ಚೆಂದ, ಪಡೆಯುವುದಕ್ಕೂ ಚೆಂದ. ನಾವಿಬ್ಬರೂ ಗಂಡ-ಹೆಂಡತಿಯರಾಗಿದ್ದರೂ ನಮ್ಮದು ತಾಯಿ-ಮಕ್ಕಳ ಸಂಬಂಧ. ಸೋದರಿಯಿಬ್ಬರ ಸಂಬಂಧ. ಗೆಳೆತಿಯರ ಒಡನಾಟ. ನಾವು ಪರಸ್ಪರ ಕೂಡಿದಾಗ ಸುಮಧುರವಾದ ಪಿಯಾನೊ ಸಂಗೀತವನ್ನು ಕೇಳಿದ ಅನುಭವವಾಗುತ್ತದೆ. ಸ್ವಲ್ಪ ಊಹಿಸಿಕೊಳ್ಳಿ. ಗಂಡಸೇ ಗಂಡಸಿನ ದೇಹದಲ್ಲಿ ಬಯಸುವಂತಹದ್ದು ಏನಿದೆ. ಎಲ್ಲವೂ ಒರಟುತನವೇ. ಬಲ ಪ್ರದರ್ಶನದ ಹಂಬಲ. ಗಂಡುಗಳ ನಡುವೆ ಸಂಬಂಧ ಏರ್ಪಡಬೇಕಾದರೂ ಒಬ್ಬರು ಸ್ತ್ರೀ ಪಾತ್ರ ವಹಿಸಲೇಬೇಕು. ಆಳವಾದ ಸಂಬಂಧಕ್ಕೆ ಬೇಕಾದ ಭಾವನಾತ್ಮಕತೆ, ಮೃದುತ್ವ ಗಂಡಸಿನ ದೇಹಕ್ಕೆ ಸಾಧ್ಯವೇ ಇಲ್ಲ. + +ಶ್ರೀನಿವಾಸರಿಗೆ ಇದೆಲ್ಲ ಗೊತ್ತಿಲ್ಲವೆಂದಲ್ಲ. ಅವರ ಬರಹಗಳನ್ನೂ, ಕತೆ ಕಾದಂಬರಿಗಳನ್ನೂ ಓದಿದರೆ, ಎಷ್ಟೊಂದು ಆತ್ಮಾನುಕಂಪ ತುಂಬಿದೆ. ತನ್ನ ಲಾವಣ್ಯವನ್ನು ಸದಾ ತಾನೆ ಮೆಚ್ಚುವ ಸ್ವರತಿಯ ಭಾವುಕ ಬರಹದಂತೆ ಕಾಣುತ್ತದೆ. ಬರಹಗಾರರಾಗಿ ಅವರಿಗೆ ನಮ್ಮ ಭಾವನೆಗಳೂ ಅರ್ಥವಾಗಬೇಕಿತ್ತು ಅಥವಾ ಅರ್ಥವಾಗಿಯೂ… + +ಸಲಿಂಗರತಿಯ ವಿಷಯಕ್ಕೆ ಬಂದಾಗಲೂ ಮತ್ತೆ ಅದೇ ಪುರುಷ ಪ್ರಾಧಾನ್ಯತೆಯ ಗೋಳು. ನಮಗೆ ಸುಸ್ತಾಗಿದೆ. ಕೋರ್ಟು, ಕಚೇರಿ, ಪಾರ್ಲಿಮೆಂಟ್, ಕಾಲೇಜು, ಸಂಗೀತ ಕಛೇರಿ, ಸಾಹಿತ್ಯ ಸಮ್ಮೇಳನ ಎಲ್ಲ ಕಡೆಯೂ ಯಾವಾಗಲೂ ನಮ್ಮ ಬೇಡಿಕೆಯನ್ನು ದಪ್ಪ ದನಿಯಲ್ಲಿ ಹಿಂಸಾತ್ಮಕವಾಗಿಯೇ ಮಂಡಿಸಬೇಕು. ಇಲ್ಲಿ ಕೂಡ ಹಾಗೇ ಆಯಿತು. ಇದು ದುರಾದೃಷ್ಟಕರ ಸಂಗತಿ. + +ಉದಯಗೀತೆ ಪತ್ರಿಕೆ ಕೆಲವು ಪ್ರಸಿದ್ಧ ಸಲಿಂಗ ಕಾಮಿಗಳ ವ್ಯಕ್ತಿಚಿತ್ರ ಪ್ರಕಟಿಸಿತ್ತು. ಆದರೆ ಶಾಲಿನಿ-ಮಾಲಿನಿ ಸರಿಯಾಗಿ ದೂರಿದಂತೆ ಎಲ್ಲ ವ್ಯಕ್ತಿಚಿತ್ರಗಳು ಪುರುಷರದ್ದೇ ಆಗಿದ್ದವು. ಆದರೆ ಇದೇ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿಲ್ಲಪುರಂ ರಾಜಗೋಪಾಲ್ ಲೇಖನ ಆರೋಗ್ಯಕರವಾಗಿದ್ದರೂ ಸಂದರ್ಭ, ಔಚಿತ್ಯ ಅರ್ಥವಾಗಲಿಲ್ಲ. ನಲವತ್ತು ವರ್ಷಗಳ ಹಿಂದೆ ಯಾವುದಾದರೂ ಡೈಜೆಸ್ಟ್ ನಲ್ಲಿ ಪ್ರಕಟವಾಗಬಹುದಾಗಿದ್ದ ವಿಪರೀತ ಸಮತೋಲನದ ಲೇಖನ. ಯಾರು ಯಾರ ಪರವೂ ಇಲ್ಲ. ವಿರೋಧವೂ ಇಲ್ಲ. + +ಸಾರಾಂಶ ಹೀಗಿತ್ತು: + +`ನಮಗೆ ಬೇಕಾದದ್ದು ಸಲಿಂಗರತಿ ಸಮ್ಮೇಳನವಲ್ಲ, ಲೈಂಗಿಕ ಜಾಗೃತಿಯ ಸಮ್ಮೇಳನ. ಲೈಂಗಿಕ ಪ್ರವೃತ್ತಿ ಎನ್ನುವುದು ಜಡವೂ ಅಲ್ಲ, ನಿರ್ದಿಷ್ಟವೂ ಅಲ್ಲ. ಒಬ್ಬ ವ್ಯಕ್ತಿಯಲ್ಲೇ ಜೀವನದುದ್ದಕ್ಕೂ ಬದಲಾಗುತ್ತಾ ಹೋಗುತ್ತದೆ. ಉದ್ದೇಶದಲ್ಲಿ, ಸ್ವರೂಪದಲ್ಲಿ. ಕೊನೆಗೆ ಇದು ಪ್ರತಿಯೊಬ್ಬ ಮನುಷ್ಯನಿಗೂ ಸಂಬಂಧಪಟ್ಟ ಆತ್ಮೀಯ ವಿಚಾರ. ಅವರವರೇ ಏಕಾಂತದಲ್ಲಿ ಯೋಚಿಸಿ, ಪರಿಭಾವಿಸಿ ಉತ್ತರ ಕಂಡುಹಿಡಿದುಕೊಳ್ಳಬೇಕು. ಆದರೂ ಸಮ್ಮೇಳನ ಚೆನ್ನಾಗಿ ನಡೆಯಲಿ’ ಎಂದು ಹಾರೈಸಿ. ಹಾರೈಕೆಗೆ ದಿನಚರಿಯ ಭಾಗಗಳಂತೆ ಕಾಣುವ ವಿವರಗಳನ್ನು ಲಗತ್ತಿಸಲಾಗಿತ್ತು. + +ಮುಚ್ಚು ಮರೆ ಏಕೆ? ಸ್ವಂತದ್ದನ್ನು ಹೇಳಿಬಿಡ್ತೀನಿ. ಸ್ವಂತದ್ದನ್ನೇ ಹೇಳಬೇಕು. ಈಗ ನನಗೆ ಎಪ್ಪತ್ತು ವರ್ಷ. ನನಗೆ ಅರವತ್ತಾಗಿದ್ದಾಗ ಹೆಂಡತಿ ಗೋದಾಬಾಯಿ ತೀರಿಕೊಂಡಳು. ನನಗೂ ಅವಳಿಗೂ ಹದಿನೇಳು ವರ್ಷ ವಯಸ್ಸಿನ ವ್ಯತ್ಯಾಸ. ಇದರಲ್ಲಿ ನಮ್ಮ ತಪ್ಪೇನಿಲ್ಲ. ನಾವು ಮದುವೆಯಾದ ದಿನಗಳ ಕಾಲಧರ್ಮ ಹಾಗಿತ್ತು. ಗೋದಾಬಾಯಿಯ ತಾಯಿ ಅಲಮೇಲಮ್ಮನಿಗೆ ಹನ್ನೊಂದು ಮಕ್ಕಳು. ಹತ್ತು ಹೆಣ್ಣು, ಕೊನೆಯವ ಗೋಪಾಲಕಣ್ಣನ್-ಗಂಡು. ಇವಳು ಎಂಟನೆಯವಳು. ಅಲಮೇಲಮ್ಮ ಐವತ್ತೊಂದನೆಯ ವರ್ಷಕ್ಕೆ ತೀರಿಕೊಂಡರೆ, ನನ್ನ ಹೆಂಡತಿ ಅದಕ್ಕಿಂತ ಚಿಕ್ಕ ವಯಸ್ಸಿಗೇ ತೀರಿಕೊಂಡಳು. ಅದಕ್ಕೆ ನನ್ನ ಮಗ ವರದರಾಜು ಮಹೇಶ್ ಗೊಲೇಚಾನನ್ನು ಮದುವೆ ಆದದ್ದೇ ಕಾರಣ. ಚೆನ್ನಾಗಿ ಓದಿದ. ಸ್ನಾನ-ಸಂಧ್ಯಾವಂದನೆ, ಜಪ-ತಪ, ಎಲ್ಲವನ್ನೂ ನಿಷ್ಠೆಯಿಂದ ಮಾಡತಾಯಿದ್ದ. ಎಲ್ಲರ ಕೈಲೂ ಒಳ್ಳೆಯ ಹುಡುಗ ಅನಿಸಿಕೊಂಡಿದ್ದ. + + + +ಪ್ರತಿ ತಿಂಗಳೂ ಮನೆಗೆ ಸರಿಯಾಗಿ ದುಡ್ಡು ಕಳಿಸ್ತಾಯಿದ್ದ. ಶ್ರೀರಂಗಂಗೆ ನಾಲ್ಕಾರು ಸಲ ಕರೆದುಕೊಂಡು ಹೋಗಿದ್ದ. ಅಲ್ಲೇ ಸೈಟು ಕೊಂಡು, ಮನೆ ಕಟ್ಟಿಸಿ, ನಮ್ಮನ್ನು ಅಲ್ಲೇ ಇಡುವತನಕ ತನಗೆ ಸಮಾಧಾನವಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ. ನಮ್ಮ ಗ್ರಹಚಾರಕ್ಕೆ ಮನಸ್ಸಿನ ಅದು ಯಾವ ಮೂಲೆಯಲ್ಲಿ ಮಗನಿಗೆ ಗಂಡನ್ನೇ ಮದುವೆಯಾಗುವೆ ಆಸೆ ಮೂಡಿತೋ? ಇವನಿಗೇ ಆಸೆ ಮೂಡಿತೋ, ಇಲ್ಲ, ಮಹೇಶ್ ಗೊಲೇಚಾನೆ ಮೂಡಿಸಿದನೋ? ಇಷ್ಟಾಗಿ ನಮ್ಮ ಸೊಸೆಯಾಗಿ ಬಂದ ಗೊಲೇಚಾ ಒಳ್ಳೆಯ ಹುಡುಗನೇ (ಹುಡುಗಿಯೇ) ಎಂದು ಹೇಳಬೇಕು. ಏನು ಒಳ್ಳೆಯತನವಾದರೇನು? ಮನೆಗೆ ಬಂದು, ಇಬ್ಬರೂ ಗಂಡಸರು ರಾತ್ರಿಯಾದ ಮೇಲೆ ಬಾಗಿಲು ಹಾಕಿಕೊಂಡು ರೂಮೊಳಗೆ ಹೋಗ್ತಾರೆ. ಕುಲಕುಲ ನಗು, ಸರಸ ಸಂಭಾಷಣೆ ಎಲ್ಲ ಕೇಳಿಸುತ್ತೆ. ಗೋದಾ ಇದನ್ನೆಲ್ಲ ಕೇಳಿಸಿಕೊಂಡು ನಡುರಾತ್ರಿಯತನಕ ತಲೆ ಚಚ್ಚಿಕೊಳ್ಳುತ್ತಿದ್ದಳು. ನನಗೂ ಇದೆಲ್ಲ ರೋಸಿಹೋಗಿತ್ತು. ಹಾಗಂತ ಇಬ್ಬರೂ ತಲೆ ಚಚ್ಚಿಕೊಳ್ಳಕ್ಕೆ ಆಗುತ್ತದೆಯೆ? ನಾನು ಕೈ ಕೈ ಹಿಸುಕಿಕೊಳ್ಳುತ್ತಿದ್ದೆ. + +ಗೋದಾ ಸಾಯುವ ಹಿಂದಿನ ವರ್ಷ ಮಗ-ಸೊಸೆ ಬಂದಿದ್ದಾಗ ದೊಡ್ಡ ರಾದ್ಧಾಂತವೇ ಆಗಿಹೋಯಿತು. ಒಂದು ದಿನ ಸೊಸೆ ಗೊಲೇಚಾ ಮಧ್ಯಾಹ್ನ ನಾಲ್ಕು- ನಾಲ್ಕೂವರೆ ಘಂಟೆ ಹೊತ್ತಿನಲ್ಲಿ ರೂಮಿಂದ ಈಚೆಗೆ ಬಂದ(ಳು). ಸಾಲಂಕೃತ ವಧು. ನೋಡಿದರೆ ಕಣ್ಣು ತುಂಬಿ ಬರುವ ಹಾಗೆ. ನಮ್ಮ ಶ್ರೀ ವೈಷ್ಣವ ಹುಡುಗಿಯರ ರೀತಿಯೇ. ಕೆಂಪಂಚು ಇರುವ ಹಸಿರು ಸೀರೆ, ಬಿಳಿ ಬಣ್ಣದ ತುಂಬು ತೋಳಿನ ರವಿಕೆ, ಲೋಲಾಕು, ದೊಡ್ಡ ಹೆರಳು, ಹೀಗೆ. ಬಂದೀಗೌಡ ಬಡಾವಣೆ ಕಡೆ ವಾಕಿಂಗ್ ಹೋಗಿ ಬರ್ತೀವಿ ಅಂತ ಮಗ-ಸೊಸೆ ಹೊರಟರು. ಗೋದಾ ಬಿದ್ದು ಹೊರಳಾಡಿದಳು. + +`ನಿಮ್ಮ ಕೈ ಮುಗಿದು ಕೇಳ್ಕೊಳ್ತೇನೆ – ಹೀಗೆ ಹೊರಗಡೆ ಹೋಗಬೇಡಿ, ಸರೀಕರ ಎದುರಿಗೆ ಮಾನ ಮರ್ಯಾದೆ ತೆಗೀಬೇಡಿ. ನೀವೇನೋ ನಾಲ್ಕು ದಿನ ಇದ್ದು ಹೋಗ್ತೀರಿ. ಆಮೇಲೆ ನಾವು ಕಂಡ ಕಂಡವರ ಟೀಕೆ-ಟಿಪ್ಪಣೆ ಎದುರಿಸಬೇಕಲ್ಲ.’ ಸ್ವಂತ ಮಗನೇ ನಮ್ಮ ಎದೆಯುದ್ದಕ್ಕೂ ನಿಂತು ಏರುದನಿಯಲ್ಲಿ ವಾದಿಸಿದ. + +`ಯಾರೂ ಏನೂ ಅಂದ್ಕೊಳೋಲ್ಲ. ಹಾಗೆ ಅಂದುಕೊಂಡರೂ ಅಂದುಕೊಳ್ಳಲಿ, ನಮಗೇನು?’ ವಾಕಿಂಗ್ ಹೊರಟೇಬಿಟ್ಟರು. + +ಬರುವಾಗ ಅಕ್ಕರಾಸ್ಥೆಯ ಮಗ-ಸೊಸೆ ತರುವ ಹಾಗೆ ಹಣ್ಣು-ಹಂಪಲು, ತರಕಾರಿ ತಂದರು. ಗೊಲೇಚಾ ತನ್ನ ಬಟ್ಟೆ-ಬರೆ ಬದಲಾಯಿಸಲಿಲ್ಲ. ಈಳಿಗೆ ಮಣೆ ಮುಂದೆ ಕೂತು ತರಕಾರಿ ಹೆಚ್ಚೋಕೆ ಶುರುವಾಯಿತು. ಆಮೇಲೆ ಅಡುಗೆ ಬಿಸಿ ಮಾಡಿ, ಊಟ ಬಡಿಸುವುದಕ್ಕೂ ಮುಂದೆ ಬಂದ(ಳು). ಗೋದಾ ಅಡುಗೆ ಮನೆ ಪಾತ್ರಿ-ಪಗಡಿ, ದೇವರ ಮನೆ ಸಾಮಾನು ಎಲ್ಲವನ್ನೂ ಕಿತ್ತು ಬಿಸಾಡಿ, ರಂಪ ಮಾಡಿ, ರೂಮಿಗೆ ಹೋಗಿ ಮಲಗಿಬಿಟ್ಟಳು. + +ಒಂದು ವಾರ ಆದಮೇಲೆ ಗೋದಾನ ಜೀವನದ ಕೊನೆಯ ಅಂಕ ಎನ್ನುವಂತೆ, ನಮ್ಮವರದ ಒಂದು ದಿನ ಸ್ತ್ರೀ ವೇಷ ಹಾಕಿಕೊಂಡು ಸಾಲಂಕೃತವಾಗಿ ಈಚೆಗೆ ಬಂದ(ಳು). ಚಿಕ್ಕವನಾಗಿದ್ದಾಗ ಅವನಿಗೆ ಮೊಗ್ಗಿನ ಜಡೆ ಹಾಕುತ್ತಿದ್ದಳು ಗೋದಾ. ಬಲು ಆಸೆಪಟ್ಟು ಹಾಕಿಸ್ಕೋತಾಯಿದ್ದ. ಬೀದಿ ತುಂಬಾ ಓಡಾಡಿ ತೋರಿಸಿಕೊಂಡು ಬರುತ್ತಿದ್ದ. ಮನೆಗೆ ಬಂದ ಮೇಲೆ ದೃಷ್ಟಿ ತೆಗೆದರೆ, ಭೂಕಂಪ ಆಗುವ ರೀತಿಯಲ್ಲಿ ಹಂಚಿಕಡ್ಡಿ ಸಿಡಿಯುವುದು. `ನೋಡಿ, ನಾನು-ಅವನು ಇಬ್ಬರೂ ಒಂದೇ ರೀತಿಯ ಕಾಡಿಗೆ ಹಾಕ್ಕೊಂಡಿದೀವಿ. ಆದರೂ ನಿಮ್ಮ ಮಗನ ಕಣ್ಣುಗಳು ಸುರಸುಂದರಿಯ ಮಿಂಚಿನ ಕಣ್ಣುಗಳಂತೆ’ ಎಂದು ಗೋದಾ ಬೀಗುತ್ತಿದ್ದಳು. ಮೂಗು, ಕಿವಿ, ಕಣ್ಣು, ಹಣೆ ಎಲ್ಲವೂ ಹಿಂದಿನಂತೆಯೇ ಕಾಣುತ್ತಿದ್ದವು. ನನಗೇ ಒಂದು ತರ ಅಸಹ್ಯವಾಯಿತು. + +ಗೋದಾ ಹಿತ್ತಲಿನಲ್ಲಿದ್ದಳು. `ಏನೋ ಇದು ಅವತಾರ’ ಎಂದು ಕೇಳುತ್ತಿರುವಾಗಲೇ ಆರಾಮ ಕುರ್ಚಿಯ ಮೇಲೆ ಕುಳಿತುಕೊಂಡು ನಾನು ಓದುತ್ತಿದ್ದ ದಿನಪತ್ರಿಕೆ ಕೈಯಿಂದ ಬಿದ್ದು ಹೋಯಿತು. `ಏನಿಲ್ಲ ಅಪ್ಪಾ. ಈಗ ನನ್ನ ಸರದಿ. ಕೆಲವು ದಿವಸ ಗೊಲೇಚಾ ಹೆಂಗಸರ ತರ ಇರಬೇಕು. ಇನ್ನು ಕೆಲವು ದಿವಸ ನಾನು ಇರಬೇಕು.’ ಗೊಲೇಚಾ ಟ್ರಿಂ ಆಗಿ ಸೂಟ್ ಹಾಕಿಕೊಂಡು ರೂಮಿಂದ ಈಚೆಗೆ ಬಂದ. ವರದನ ಪಕ್ಕದಲ್ಲಿ ನಿಂತು ` you are looking so stunning’ ಎನ್ನುತ್ತಾ ಮೆಚ್ಚುಗೆ ತುಂಬಿದ ಕಣ್ಣುಗಳಿಂದ ನೋಡಿದ. + +ಹಿತ್ತಲಿಂದ ಬಂದು ಈ ವರಸೆಗಳನ್ನು ನೋಡಿದ ಗೋದಾಗೆ ಎಷ್ಟೋ ಹೊತ್ತು ಮಾತೇ ಹೊರಡಲಿಲ್ಲ. ಬಿದ್ದು ಬಿದ್ದು ಬಿಕ್ಕಳಿಸಲು ಶುರುಮಾಡಿದಳು. ಜಡೆ ಬಿಚ್ಚಿ, ಕೂದಲು ಹರಡಿಕೊಂಡು, ಕೂದಲನ್ನೆಲ್ಲ ಬಲವಾಗಿ ಕಿತ್ತು ಹಾಕಲು ಪ್ರಾರಂಭಿಸಿದಳು. ಕೂದಲು ಅಷ್ಟು ಸಲೀಸಾಗಿ ಈಚೆಗೆ ಬರಬೇಕಲ್ಲ. ಹಿಂಸೆಯಿಂದ ಕೂದಲು ಕೀಳಲು ಪ್ರಾರಂಭಿಸಿದಳು. `ನಿನ್ನಂತಹ ಮಗನನ್ನು ಹೆತ್ತದ್ದಕ್ಕೆ ಸಾರ್ಥಕವಾಯಿತು. ಮನೆ ತುಂಬಾ ಮೊಮ್ಮಕ್ಕಳು ಬೇಕು ಅಂತಾ ತುಂಬಾ ಆಸೆಪಟ್ಟಿದ್ದೆ. ಈಗ ನಿನ್ನಂಥವನು ಮಗನಾಗಿ ಏಕೆ ಹುಟ್ಟಿದ ಎಂದು ಕೊರಗಬೇಕು.’ ಮೂರು ನಾಲ್ಕು ದಿನ ದೊಡ್ಡ ರಾಮಾಯಣ. ಆಮೇಲೆ ಇನ್ನೂ ದೊಡ್ಡದಾದ ಮಹಾಭಾರತ. + +`ನಾನು ನಿಮಗೆ ಏತಕ್ಕೆ ಕಡಿಮೆ ಮಾಡಿದೀನಿ. ಪ್ರತಿ ತಿಂಗಳೂ ಮೊದಲ ವಾರದಲ್ಲೇ ದುಡ್ಡು ಕಳಿಸ್ತಾಯಿಲ್ಲವಾ? ಎಷ್ಟು ಸಲ ನೀವು ಇಷ್ಟಪಟ್ಟಂತೆಯೇ ತೀರ್ಥಯಾತ್ರೆ ಮಾಡಿಸಿಲ್ಲ? ಬದರಿ-ಕೇದಾರ ಯಾತ್ರೆಗೆ ನಾನು ಜೊತೆಯಲ್ಲೇ ಬಂದಿರಲಿಲ್ಲವಾ? ಏನೋ ನನಗೆ ಹೀಗಿರೋದ್ರಿಂದ್ಲೇ ಸಂತೋಷ. ನನ್ನ ಕೆಲಸ, ಕಾರ್ಯ, ಸಂಬಳ ಎಲ್ಲವನ್ನೂ ಸಂತೋಷದಿಂದ ಒಪ್ಪಿಕೊಂಡ ನೀವು ಇದನ್ನು ಕೂಡ ಒಪ್ಪಿಕೋಬೇಕು’ ಎಂದು ವಿನಯವಾಗಿಯೇ ವಾದಿಸಿದ. `ಇನ್ಮೇಲೆ ನಮ್ಮ ಮನೆಗೆ ಬರಲೇಬೇಡ’ ಎಂದು ಆಣೆ ಪ್ರಮಾಣ ಮಾಡಿಸಿಕೊಂಡು ಮನೆಯಿಂದ ವರದನನ್ನು ಹೊರಗೆ ಅಟ್ಟಿಬಿಟ್ಟಳು. + +ಒಂದೊಂದೂವರೆ ತಿಂಗಳು ಕಳೆಯಿತು. ಒಂದು ದಿವಸ ಕೊರಿಯರ್ ನಲ್ಲಿ ದೊಡ್ಡ ಕವರ್ ಬಂತು. ಎರಡು ಮಕ್ಕಳ ಫೋಟೋ. `ಅಮ್ಮ ನೀನು ಬಯಸಿದಂತೆ ಮೊಮ್ಮಕ್ಕಳನ್ನು ದತ್ತು ತೆಗೆದುಕೊಂಡಿದೀವಿ. ವೀರೇಂದ್ರ ಮತ್ತು ದಾಕ್ಷಾಯಿಣಿ ಅಂತಾ. ಇವರೇ ನಿಮ್ಮ ಮೊಮ್ಮಕ್ಕಳು. ಮನಃಪೂರ್ವಕ ಆಶೀರ್ವಾದ ಮಾಡಿ ಸರ್ಕಾರದ ರಿಮ್ಯಾಂಡ್ ಹೋಮಿನಿಂದ, ಕಾನೂನು ಪ್ರಕಾರ, ಮನಃಶಾಸ್ತ್ರಜ್ಞರ ಸಲಹೆ ಪಡೆದು ದತ್ತು ತೆಗೆದುಕೊಂಡ ನಿರ್ಗತಿಕ ಮಕ್ಕಳು ಅವು. ಇಬ್ಬರನ್ನೂ ಚೆನ್ನಾಗಿ ಓದಿಸಿ ಒಳ್ಳೆ ನಾಗರಿಕರನ್ನಾಗಿ ತಯಾರು ಮಾಡಬೇಕು.’ + +ಗೋದಾ ಕಾಗದವನ್ನೂ ಫೋಟೋಗಳನ್ನೂ ಹರಿದು ಚೂರು ಚೂರು ಮಾಡಿ ಹಂಡೆ ನೀರು ಕಾಯಿಸುವ ಒಲೆಗೆ ಹಾಕಿದಳು. `ವರದನ ದ್ರೋಹಕ್ಕೆ ಮಕ್ಕಳು ಏನು ಮಾಡುತ್ತವೆ’ ಎಂದು ನಾನು ಸಮಾಧಾನ ಹೇಳಿದರೂ ಕೇಳಲಿಲ್ಲ. + +ಅಲ್ಲಿಂದ ಶುರುವಾಯಿತು ಕೊನೆಯ ಪ್ರಯಾಣ-ನಾನಾ ರೂಪದಲ್ಲಿ. ಇತಿಹಾಸವೇ ಇಲ್ಲದ ರಕ್ತದೊತ್ತಡ ಹೆಚ್ಚಾಯಿತು. ಸರಿಯಾಗಿ ಊಟ ತಿಂಡಿ ಮಾಡುತ್ತಿರಲಿಲ್ಲ. ವಾಂತಿ ಮಾತ್ರ ನಿತ್ಯ ನಿರಂತರ. ಅದೆಲ್ಲಿತ್ತೋ ಯಾವಾಗಲೂ ಬಿಳಿನೀರು ಹೊಟ್ಟೆಯಿಂದ ಈಚೆಗೆ ಬರೋದು. ಮೈ ನಿಧಾನವಾಗಿ ಹಳದಿಗಟ್ಟುತ್ತಾ ಹೋಯಿತು. ಗೋದಾ ತೀರಿಕೊಂಡಾಗ ಮಗ-ಸೊಸೆ ಇಬ್ಬರೂ ಬಂದು ಹದಿನೈದು ದಿನ ಇದ್ದರು. ಗೊಲೇಚಾ ನಮ್ಮ ಯಾವ ಆಚಾರ-ವಿಚಾರಕ್ಕೂ ಅಡ್ಡಿಯಾಗದೆ, ಮಡಿ, ಮೈಲಿಗೆ ಅನುಸರಿಸಿ ಎಲ್ಲ ಕರ್ಮಾಂತರಗಳಿಗೂ ನೆರವಾದ(ಳು). ಹನ್ನೊಂದು ದಿವಸವೂ ಒಪ್ಪತ್ತು ಊಟ. ಹೊರಗಿನ ಸುತ್ತು ಕೆಲಸವನ್ನೆಲ್ಲ ಚೆನ್ನಾಗಿ ನೋಡಿಕೊಂಡ(ಳು). ನಮ್ಮವರು ಯಾರೂ ವಿಶೇಷವಾಗಿ ಹಚ್ಚಿಕೊಳ್ಳದೆ ಹೋದಾಗ, ನಡುಮನೆಯಲ್ಲಿ ಕೂರಿಸಿಕೊಂಡು ವೀರೇಂದ್ರ-ದಾಕ್ಷಾಣಿಯರಿಗೆ ಕತೆ ಹೇಳುತ್ತಿದ್ದ(ಳು). + +ನಾನು ಯಾಕೆ ಈಗ ಇದನ್ನೆಲ್ಲ ಹೇಳುತ್ತಿದ್ದೇನೆಂದರೆ, ನಮ್ಮ ಮನೆ ಒಳಗೆ ಹೀಗೆಲ್ಲ ಆದಾಗ ಇದನ್ನೆಲ್ಲ ಎದುರಿಸೋದು ಹೇಗೆ ಅಂತನೂ ಈ ಸಮ್ಮೇಳನದವರು ಚರ್ಚಿಸಬೇಕು. ಯಾವುದೇ ವಿಚಾರವನ್ನಾದರೂ ಒಂದು ಲೋಕಸಂಗತಿ ಅಂತ ಮಾತನಾಡುವುದು ಸುಲಭ. ಆದರೆ ನಾಲ್ಕು ಗೋಡೆಯೊಳಗೆ ನಿತ್ಯವೂ ಎದುರಿಸುವುದು ಕಷ್ಟ. ನಮ್ಮ ಮನೆಯಲ್ಲಂತೂ ಎದುರಿಸಲಿಲ್ಲ. ಹಾಗೆ ಎದುರಿಸುವುದು ಗೊತ್ತಿದ್ದರೆ ಗೋದಾ ಯಾಕೆ ಹಾಗೆ ತೀರಿಹೋಗುತ್ತಿದ್ದಳು. + +ಇಷ್ಟೆಲ್ಲ ರಾಮಾಯಣ ಆದ ಮೇಲೆ, ನನಗೂ ಹೆಂಗಸರೆಲ್ಲ ಹೊಸ ರೀತಿಯಲ್ಲಿ ಕಾಣಿಸಲು ಶುರುವಾದರು. ಯಾರು ಚೆನ್ನಾಗಿದ್ದಾರೆ, ಯಾರು ಚೆನ್ನಾಗಿಲ್ಲ, ಯಾರಿಗೆ ಯಾವ ಬಣ್ಣದ ಸೀರೆ ಒಪ್ಪುತ್ತೆ ಅಂತ ಮನಸ್ಸಿನಲ್ಲಿ ಜಿಜ್ಞಾಸೆ. ಪ್ರತಿಯೊಬ್ಬ ಹೆಂಗಸೂ ಯಾವ ಯಾವ ರೀತಿಯಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಬಹುದು, ಗಂಡಂದಿರ ಜೊತೆ ಯಾವ ಯಾವ ರೀತಿ ಮಲಗಬಹುದು ಎಂಬ ಲೆಕ್ಕಾಚಾರ ಪ್ರಾರಂಭವಾಯಿತು. + + + +ಹೀಗೆಲ್ಲಆಗುತ್ತಿರುವುದು ತುಂಬಾ ತಪ್ಪು ಅಂತ ಗೊತ್ತಾದಮೇಲೂ ಮನಸ್ಸಿಗೆ ಯಾವಾಗಲೂ ಇದೇ ಯೋಚನೆ. ವರದ-ಗೊಲೇಚಾ ಎಷ್ಟೇ ಬಲವಂತ ಮಾಡಿದರೂ ನಾನು ಅವರ ಮನೆಗೆ ಹೋಗಲೇ ಇಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_368.txt b/Kenda Sampige/article_368.txt new file mode 100644 index 0000000000000000000000000000000000000000..5c558962d804f11a12b4e92c04ada8a419faa901 --- /dev/null +++ b/Kenda Sampige/article_368.txt @@ -0,0 +1,85 @@ + + +ನಲವತ್ತು ವರ್ಷಗಳ ಹಿಂದಿನ ಮಾತು, ಹರಿಯಾಣ ಉತ್ತರ ಭಾಗದಲ್ಲಿ ಇರುವ ರೇವಾರಿ ಒಂದು ಕುಗ್ರಾಮ; ಅದರಲ್ಲಿ 400 ಕುಟುಂಬಗಳಿದ್ದವು. ಮಳೆಗಾಲದ ಒಂದು ರಾತ್ರಿ. ದಿನವಿಡೀ ಕೆಲಸ ಮಾಡಿ ದಣಿದಿದ್ದ ಮೋತಿಬಾಯಿಗೆ ಕಣ್ಣೆಳೆದಂತಾಗಿ, ಒಂದು ಮೂಲೆಯಲ್ಲಿ ಚಾಪೆ ಹಾಸಿ, ಸೊಂಟ ನೆಲಕ್ಕೆ ಹಾಕಿ ಮಲಗಿದ್ದೇತಡ, ಕ್ಷಣದಲ್ಲೇ ಗಾಢನಿದ್ರೆ ಆವರಿಸಿತು. ಆಕೆಯ ಎದೆಗೊತ್ತಿಕೊಂಡು ಆರು ತಿಂಗಳ ಮಗು ನಿದ್ದೆ ಮಾಡುತ್ತಿದೆ. ಎದುರಿಗೆ ಹಾಸಿದ ಮತ್ತೊಂದು ಚಾಪೆಯ ಮೇಲೆ ಆಕೆಯಗಂಡ ಬಾಬೂಲಾಲ್ ಮತ್ತು ದೊಡ್ಡ ಮಗ ಮಲಗಿದ್ದಾರೆ. ಆಕಾಶದಲ್ಲಿ ಚಲಿಸುತ್ತಿದ್ದ ಮೋಡ ಅಕಸ್ಮಾತ್ತಾಗಿ ಸೀಳಿ ದ್ವೇಷದಿಂದ ಆ ಗ್ರಾಮದ ಮೇಲೆ ಬಿದ್ದಂತೆ ಧಾರಾಕಾರವಾಗಿ ಮಳೆ ಸುರಿಯಲಾರಂಭಿಸಿತು. + +ಆ ಚಿಕ್ಕ ಹೆಂಚಿನ ಮನೆ ಆ ಕುಂಬರಿಸುವ ಮಳೆಗೆ ತಡೆಯುವಂತಹದ್ದಲ್ಲ. ಹೆಂಚಿನ ಹೊದಿಕೆಯ ಸಂದಿಯಲ್ಲಿ ಮಳೆ ನೀರು ಸೇರಿಕೊಳ್ಳಲಾರಂಭಿಸಿತು. ತೊಟಕ್ ತೊಟಕ್ ಎಂದು ತೊಟ್ಟಿಕ್ಕುತ್ತಿದ್ದ ಹನಿ ಸ್ವಲ್ಪ ಸಮಯದಲ್ಲೆ ಜೋರಾಗಿ ಜಿನುಗತೊಡಗಿತು. ಅಮ್ಮನನ್ನು ಅಪ್ಪಿ ಮಲಗಿದ್ದ ಮಗು ಎಚ್ಚರಗೊಂಡು, ಸಣ್ಣಗೆ ಅಳು ಶುರು ಮಾಡಿ ಬಿಕ್ಕಿ ಬಿಕ್ಕಿ ಅಳಲಾರಂಭಿಸಿತು. ಥಟ್ಟನೆಎಚ್ಚರಗೊಂಡ ಮೋತಿಬಾಯಿಗೆ ಮಗು ನೆನೆದಿರುವುದು ಅರಿವಾದಕೂಡಲೆ, ಒಲೆಯ ಮೇಲಿನ ಗೂಡಿನಲ್ಲಿದ್ದ ಸೀಮೆಎಣ್ಣೆ ಬುಡ್ಡಿಯನ್ನು ಕಡ್ಡಿಗೀರಿ ಹಚ್ಚಿ, ನೆಲವನ್ನು ಪರೀಕ್ಷಿಸಿದಳು. ಒಂದು ಮೂಲೆಯಲ್ಲಿ ತೇವವಿರದ ಸ್ವಲ್ಪಜಾಗದಲ್ಲೇ ಚಾಪೆಹಾಸಿ, ಪುಟ್ಟ ಕಂದನ ಬಟ್ಟೆ ಬದಲಿಸಿ ತಟ್ಟಿ ಮಲಗಿಸಿದಳು. ಉಳಿದ ಕಡೆಯೆಲ್ಲ ಸೋರುತ್ತಿದ್ದುದರಿಂದ ಇವಳ ಬೆನ್ನ ಮೇಲೆ ಹನಿ ಸುರಿಯುತ್ತಿದ್ದರೂ, ಮಗುವನ್ನುತನ್ನ ಮೈ ಶಾಖದಿಂದ ಬೆಚ್ಚಗೆ ಮಾಡತೊಡಗಿದಳು ಮೋತಿಬಾಯಿ. ಆಕೆಯ ಗಂಡ, ದೊಡ್ಡ ಮಗ ನೆನೆಯುತ್ತಿರುವ ಪರಿವೆಯಿಲ್ಲದೆ ಗಾಢ ನಿದ್ರೆಯಲ್ಲಿದ್ದಾರೆ. + +ಸುರಿಯುತ್ತಿರುವ ಮಳೆ ಬಿಡದೆ ಆಕೆಯನ್ನು ನೆನೆಸುತ್ತಲೇ ಇದೆ. ಚಳಿಗೆ ನಡುಕ ಬರುತ್ತಿದ್ದರೂ, ಮಗನಿಗೆ ಆ ಸ್ವಲ್ಪಜಾಗ ಸಿಕ್ಕಿದ್ದುದಕ್ಕೆ ಆಕೆಗೆ ಸಂತೋಷ. ಸ್ವಲ್ಪ ಹೊತ್ತಿಗೆ ದೀಪ ಅದಷ್ಟಕ್ಕದೇ ಆರಿತು. ಮನೆಯ ಹೊದಿಕೆಯ ಮೇಲೆ ಸುರಿಯುತ್ತಿದ್ದ ಮಳೆಯ ಶಬ್ದ ಬಿಟ್ಟರೆ ಎಲ್ಲೆಡೆ ನಿಶ್ಯಬ್ದ. + +ಬೆಳಗಾದ ಕೂಡಲೇ ಎಂದಿನಂತೆ ಮನೆ ಸ್ವಚ್ಛಗೊಳಿಸಿ, ಅಡುಗೆ ಮಾಡಿ, ಬಟ್ಟೆ ಒಗೆದಳು. ರಾತ್ರಿ ಸುರಿದ ಮಳೆಯಿಂದ ನೆನೆದಿದ್ದ ಅವಳಿಗೆ ಜ್ವರಬಂದು ಮೈ ಸುಡುತ್ತಿದ್ದರೂ ಲೆಕ್ಕಿಸದೆ ಕೆಲಸ ಮಾಡುತ್ತಿದ್ದಾಳೆ, ಹಾಗೆ ಮಾಡದೆ ಅವಳಿಗೆ ವಿಧಿಯಿಲ್ಲ. ಆಕೆಯ ಜೀವನದಲ್ಲಿ ರಜೆಗಳಿಲ್ಲ. ವಿಧಿಯ ಗಡಿಯಾರ ಟಿಕ್ ಟಿಕ್ ಎಂದು ಮುಂದೆ ಸಾಗುತ್ತಿದೆ; ದಿನದಿನಕ್ಕೆ ಮುದುಕಿಯಾದಳು ಆಕೆ. + +******** + +ನಲವತ್ತು ವರ್ಷಗಳ ನಂತರ, ನಡು ಚಳಿಗಾಲದ ಒಂದು ಮುಂಜಾನೆ. ರೇವಾರಿ ಪಟ್ಟಣವಿಡೀ ಗಾಢ ನಿದ್ರೆಯಲ್ಲಿ ಮುಳುಗಿದೆ. ಅರೆ-ಗ್ರಾಮೀಣ ಮನೆಯೊಂದು ಮುದುಕಿಯ ಸೀನು, ಕೆಮ್ಮುಗಳಿಂದ ಪ್ರತಿಧ್ವನಿಸುತ್ತಿದೆ. ಇಂದ್ರಿಯ ಸುಖಭೋಗ ಅನುಭವಿಸಿ ಮತ್ತೆ ನಿದ್ರೆಗೆಜಾರಿ ಹಗಲುಗನಸು ಕಾಣುತ್ತಿದ್ದ ಮಧ್ಯವಯಸ್ಸಿನ ದೇಹವೊಂದು ಈ ಸದ್ದಿನಿಂದ ಎಚ್ಚರಗೊಂಡು ಕಟುಮಾತುಗಳಾಡಲಾರಂಭಿಸಿತು. + +“ಏನು ದರಿದ್ರ ತಾಯಿ! ನಿನ್ನನ್ನು ಮದುವೆ ಮಾಡಿಕೊಳ್ಳುವ ಮೊದಲೇ ನನಗೆ ತಿಳಿಯಬೇಕಿತ್ತು- ಇಂತಹ ನಿದ್ರೆಗೆ ಭಂಗತರುವ ಭವಿಷ್ಯತ್ತಿಗೆ ಹೆಜ್ಜೆಯಿಡುತ್ತಿದ್ದೇನೆಂದು. ಅಬ್ಬಾ ಈ ಕೊಂಪೆಯಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ. ದಿನವಿಡೀ ಕತ್ತೆಯಂತೆ ಚಾಕರಿ ಮಾಡಿ, ಸ್ವಲ್ಪ ನಿದ್ದೆ ಮಾಡೋಣವೆಂದರೂ ಆಗುವುದಿಲ್ಲ. ಮದುವೆಯಲ್ಲಿ ಅಗ್ನಿಸಾಕ್ಷಿಯಾಗಿ ಜೀವನಪರ್ಯಂತ ನನ್ನನ್ನು ಸುಖವಾಗಿಟ್ಟುಕೊಳ್ಳುತ್ತೇನೆಂದು ಎಲ್ಲರೆದುರು ಮಾತುಕೊಟ್ಟಿದ್ದೀಯಲ್ಲವಾ, ಏನಾಯಿತು?” ಕಟುವಾದ ಮಾತುಗಳು ನನ್ನ ಕಿವಿಗೆ ತಾಕಿತು. ಆ ಮಾತುಗಳು ನನ್ನ ಕಿವಿ ಆಲಿಸಿತೋ ಇಲ್ಲವೋ, ಅದು ನನ್ನ ತಲೆಗೆ ಹತ್ತಿದೆಯೋ ಇಲ್ಲವೋಎಂದು ತಿಳಿದುಕೊಳ್ಳಲು ತೊಡೆ ಚಿವುಟಿತು. + +ಅಸ್ತವ್ಯಸ್ತವಾಗಿ ನಿದ್ದೆಮಾಡುತ್ತಿರುವಂತೆ ಇರುವ ಪಟ್ಟಣ ರೇವಾರಿ. ರಾಜಧಾನಿ ದೆಹಲಿಗೆ ಕೆಲವು ಮೈಲಿ ದೂರ, ಪ್ರಿಯಕರನ ಮೇಲೆ ಗಾಢ ಪ್ರೀತಿಯಿದ್ದರೂ, ಗಂಡನನ್ನು ಬಿಟ್ಟು ಹೋಗಲಾರದ ಮನಸ್ಸುಳ್ಳ ಹೆಣ್ಣಿನಂತಿದೆ. ಗ್ರಾಮೀಣತೆ ಮತ್ತು ಮೋಹಕತೆಯ ಸಮ್ಮಿಲನ ಇಲ್ಲಿದೆ. ಈ ಪಟ್ಟಣದಲ್ಲಿ ವಿಲಾಸಿ ಬಂಗಲೆಗಳು ಧೂಳು ತುಂಬಿ ರಸ್ತೆ ಬದಿಯಲ್ಲಿ ತಮ್ಮ ಅಹಂಕಾರಪೂರಿತ ಅಸ್ತಿತ್ವವನ್ನು ಮೆರೆಯುತ್ತವೆ. ಒಂದು ಕಡೆ ರೈತರು ತಮ್ಮ ಹೊಲದಲ್ಲಿ ದುಡಿಯಲು ಸಿದ್ಧರಾಗುತ್ತಿದ್ದರೆ ಮತ್ತೊಂದು ಕಡೆ ಟೊಯೊಟಾ, ಸಿಯಲೋಗಳು ದೆಹಲಿಯಲ್ಲಿ ತಮ್ಮ ಬೆಳಗಿನ ವ್ಯವಹಾರಗಳಲ್ಲಿ ತೊಡಗಲು ಸ್ಪರ್ಧಿಸತೊಡಗುತ್ತವೆ. + +ಅಲ್ಲಿ ಆದರ್ಶ ಮಧ್ಯಮವರ್ಗದವರಿದ್ದಾರೆ. ದೆಹಲಿಯ ವರ್ಗೀಕರಿಸಲಾಗದ ವಿವಿಧ ಕಚೇರಿಗಳಲ್ಲಿ ಕೆಲಸ ಮಾಡುವ ಗುಮಾಸ್ತರು, ಸಹಾಯಕರಾಗಿ ಇಲ್ಲವೇ ದೆಹಲಿಯ ಪೊಲೀಸ್ ಕಚೇರಿಯಲ್ಲಿ ಕಾನ್ಸ್ಟೇಬಲ್ ಗಳಾಗಿ, ಇಲ್ಲವೇ ಡಿಟಿಸಿ ಬಸ್ ಗಳಲ್ಲಿ ಕಂಡಕ್ಟರ್ ಗಳಾಗಿ ಕೆಲಸ ಮಾಡುತ್ತಾರೆ. ಅವರೆಲ್ಲರೂ ಮನೆ ಬಿಟ್ಟುಚಲಿಸುವ ರೈಲುಗಳನ್ನು ಹತ್ತಿ, ತಮ್ಮ ಕಲ್ಪನೀಯ ಆಸನಗಳನ್ನು ಆಕ್ರಮಿಸಲು ಹಿಂಡುಹಿಂಡಾಗಿ, ರೈಲ್ವೆಸ್ಟೇಷನ್ ನತ್ತ ಧಾವಿಸುತ್ತಾರೆ. ದೆಹಲಿಗೆ ಹೋಗುವ ಯಾವ ರೈಲಾದರೂ, ರಿಸರ್ವ್ ಕಂಪಾರ್ಟ್ಮೆಂಟ್ ಇರಲಿ, ಜನರಲ್ ಬೋಗಿಯಿರಲಿ… ಹತ್ತಿ ಸಹ ಪ್ರಯಾಣಿಕರ ಬಾಧೆಯನ್ನು ಲೆಕ್ಕಿಸದೆ ದೊರೆತ ಜಾಗ ಆಕ್ರಮಿಸಿ ಕುಳಿತುಬಿಡುತ್ತಾರೆ. ಅವ್ಯವಸ್ಥಿತತೆಗೆ ಜಗ್ಗದ ಸಾಮಾನ್ಯಜೀವನ ಎಂದಿನಂತೆ ಅಚಲವಾಗಿ ಸಾಗುತ್ತಿದೆ. + +ನನ್ನ ಹುಟ್ಟೂರು ರೇವಾರಿ. ದೆಹಲಿ ಈಗಿನಂತೆ ಅಲ್ಲದೆ ಬಹುದೂರವಾಗಿದ್ದ ದಿನಗಳು, ನಮ್ಮ ಅಪ್ಪ ಒಬ್ಬ ಚಿಕ್ಕ ರೈತ. ಆಗಿನ್ನೂ ದಯಾರಹಿತ ನಾಗರಿಕತೆಯ ದಾಳಿ ಗ್ರಾಮದ ಬಾಗಿಲುಗಳನ್ನು ತಟ್ಟಿರಲಿಲ್ಲ; ಅಂದಿಗೆ ನಾಲ್ಕು ನೂರು ಕುಟುಂಬಗಳು ವಾಸಿಸುತ್ತಿದ್ದ ಚಿಕ್ಕ ಹಳ್ಳಿ. ಆಗಿನ್ನು ಎತ್ತಿನ ಗಾಡಿಯಲ್ಲಿ ದೆಹಲಿ ಪ್ರಯಾಣ ಊಹಿಸಲಾಗದಷ್ಟು ತ್ರಾಸದಾಯಕವಾಗಿತ್ತು. ನನ್ನ ಬಾಲ್ಯದ ದಿನಗಳು ನನಗಿನ್ನೂ ಚೆನ್ನಾಗಿ ನೆನಪಿದೆ; ಬಹಳ ಸ್ವಚ್ಛಂದವಾಗಿ ಬಿಸಿಲು, ಗಾಳಿ, ಮಳೆಯನ್ನು ಲೆಕ್ಕಿಸದೆ ಓಡಾಡುತ್ತಿದ್ದೆವು, ಬೆಲೆಗಳ ಬಾರವಿಲ್ಲದ ಗ್ರಾಮೀಣ ಜೀವನ; ಊರಕೆರೆಯಲ್ಲಿ ಗಂಟೆಗಟ್ಟಲೆ ಸ್ನಾನ ಮಾಡುವುದು ಆಗ ವಿಲಾಸಿಯಾಗಿರಲಿಲ್ಲ; ಶಿಕ್ಷಕರು ಆಗಿನ್ನೂ ಹೋಂವರ್ಕ್ ಕಂಡುಹಿಡಿದಿರಲಿಲ್ಲ. ನನ್ನಅಪ್ಪ ಹಠಾತ್ತನೆ ಇಹಲೋಕ ತ್ಯಜಿಸಿದ. ಸಂಸಾರದ ನೊಗ ಅಮ್ಮನ ಹೆಗಲೇರಿ ವಯಸ್ಸಿಗೆ ಮೀರಿದ ಮುಪ್ಪು ಅವಳನ್ನು ಆವರಿಸಿತು. ಅಪ್ಪ ಸತ್ತಾಗ ಅಣ್ಣನಿಗೆ ಹದಿನೆಂಟು ವರ್ಷ. ಅವನು ಮರು ವರ್ಷವೇ ಮದುವೆ ಮಾಡಿಕೊಂಡು, ಆಸ್ತಿಯನ್ನು ಅರ್ಧ ಭಾಗ ಮಾಡಿ ಬೇರೆಯಾದನು. ಸಹಜವಾಗಿಯೇ ಮಧ್ಯೆಗೋಡೆಯೆದ್ದು ಮನೆ ಇಬ್ಬರಿಗೂ ಸಮ ಭಾಗವಾಯಿತು. ಆಗ ನನ್ನ ಅತ್ತಿಗೆಯ ಕಣ್ಣಿನಲ್ಲಿ ಹೊಳೆದ ತಿರಸ್ಕೃತ ಸಂತೋಷ, ಮೇಸ್ತ್ರಿ ಇಟ್ಟಿಗೆಯ ಮೇಲೆ ಇಟ್ಟಿಗೆ ಪೇರಿಸುತ್ತಿದ್ದಾಗ ಅಸಹಾಯಕಳಾಗಿ ನೋಡುತ್ತಿದ್ದ ನಮ್ಮ ಅಮ್ಮನ ಚಿತ್ರ ಈಗಲೂ ಕಣ್ಣಿಗೆ ಕಟ್ಟಿದಂತಿದೆ. + +ನಮ್ಮಿಬ್ಬರಿಗೆ ಎರಡು ಕೋಣೆಗಳು, ಒಂದು ಅಡುಗೆ ಮನೆ, ಅರ್ಧ ಆವರಣ ಸಿಕ್ಕಿತು. ಅಮ್ಮ ನನ್ನ ಬಳಿಯೇ ಇರಲು ಇಷ್ಟಪಡುತ್ತಿದ್ದಳು. ನಮ್ಮಅತ್ತಿಗೆಯಾಡುವ ತೀಕ್ಷ್ಣ ಮಾತುಗಳನ್ನು ತಾನು ಸಹಿಸಲಾರೆನೆಂದು ಆಕೆಗೆ ಗೊತ್ತು, ಅದಕ್ಕೂ ಮೇಲಾಗಿ ನಾನಿನ್ನೂ ಆಗ ಬ್ರಹ್ಮಚಾರಿ. + +******** + +ಬೆಳಗ್ಗೆ ಅಮ್ಮನನ್ನು ನೋಡಿದೆ. ವಯೋಸಹಜವಾಗಿ ಆಕೆಯ ಸೊಂಟ ಬಾಗಿದೆ. ಮನೆಯ ಕಾಂಪೌಂಡಿನಲ್ಲೇ ಅವಳಿರಲು ಒಂದು ತಾತ್ಕಾಲಿಕ ಗುಡಿಸಲನ್ನು ಏರ್ಪಾಟು ಮಾಡಿದ್ದೆ. ಇಟ್ಟಿಗೆಯಿಂದ ಎದ್ದಿದ್ದ ಅರ್ಧಗೋಡೆ ಮೇಲೆ, ದಪ್ಪವಾಗಿ ಟಾರ್ಪಾಲಿನ್ ಹಾಕಿ ಮೇಲ್ಚಾವಣಿ ಹಾಕಿಸಿದ್ದೆ. ಕೆಮ್ಮುತ್ತ, ನಿಧಾನವಾಗಿ ತನ್ನ ಗುಡಿಸಲಿಗೆ ಹೋಗುತ್ತಿದ್ದಳು ಅಮ್ಮ. ಅಮ್ಮ ಕ್ಷಯ ವ್ಯಾಧಿಯಿಂದ ಬಳಲುತ್ತಿದ್ದಾಳೆ. ಆ ಭಯಂಕರ ವ್ಯಾಧಿ ತನ್ನ ಮಗನಿಗೆ ಎಲ್ಲಿ ಸೋಕುತ್ತದೆಯೋ ಎಂಬುದು ನನ್ನಾಕೆಯ ಭಯ. ಅದಕ್ಕೇ ಅಮ್ಮನನ್ನು ಆಕೆಯ ಮನೆಯೊಳಗೆ ಬರಗೊಡುವುದಿಲ್ಲ. + +ಬೇವಿನ ಕಡ್ಡಿಯಿಂದ ಹಲ್ಲುಜ್ಜುತ್ತಿದ್ದ ನನ್ನತ್ತ ನಿರಾಸಕ್ತಿಯಿಂದ ನೋಡಿ, ಬೆನ್ನು ಮಾಡಿ ಗುಡಿಸಲೊಳಗೆ ಹೋದಳು. ಗಂಭೀರ ಗೊಣಗಾಟದಲ್ಲಿ ತೊಡಗಿ, ಅರ್ಥವಿಲ್ಲದ ಶಾಪ ಹಾಕುತ್ತ ನನ್ನ ಹೆಂಡತಿ ಭಾರತಿ ಒಂದು ಕಡೆ ಪಾತ್ರೆ ತೊಳೆಯುತ್ತಿದ್ದಾಳೆ. ಆಕೆಯ ಶಾಪಗಳು ನನ್ನನ್ನೋ, ನಮ್ಮ ಅಮ್ಮನನ್ನೋ ಉದ್ದೇಶಿಸಿರುವುವಾಗಿರುತ್ತದೆ. + +“ನಿಮ್ಮ ಕೆಲಸಕ್ಕೆ ಬಾರದ ಅಮ್ಮನನ್ನು ಸ್ವಲ್ಪ ದಿನವಾದರೂ ಭರಿಸುವ ಪುಣ್ಯ ಕಟ್ಟಿಕೊಳ್ಳುವಂತೆ ನಿಮ್ಮ ಅಣ್ಣನಿಗೆ ಏಕೆ ಕೇಳುವುದಿಲ್ಲ? ನಿಮ್ಮ ಪೊಲೀಸ್ ಕಾನ್ಸ್ಟೇಬಲ್ ಉದ್ಯೋಗದಿಂದ ನಮಗೆ ಮೂರು ಹೊತ್ತು ಕಳೆಯುವುದೇ ಕಷ್ಟವಾಗಿದೆ. ರಘು ಶಾಲೆಗೆ ಹೋಗುವ ವಯಸ್ಸಿಗೆ ಬಂದಿದ್ದಾನೆ. ನನಗೇನೋ ತಿಂಗಳು ತುಂಬುತ್ತಿದೆ. ಮುಂದೆ ಖರ್ಚುಗಳು ಇನ್ನೂ ಹೆಚ್ಚಾಗುತ್ತವೆ. ನಿಮ್ಮ ಅಮ್ಮ ಇನ್ನೂ ನಮ್ಮ ಬಳಿಯೇ ಇದ್ದರೆ ನನ್ನ ಮಗನಿಗೆ ಹೊಟ್ಟೆತುಂಬಾ ಅನ್ನಕೊಡುವುದೇ ಕಷ್ಟವಾಗುತ್ತದೆ.” ನಾನು ಸಂಜೆ ಕೆಲಸ ಮುಗಿಸಿ ಮನೆಗೆ ಬಂದಮೇಲೆ ಭಾರತಿ ಎಂದಿನ ಗೊಣಗಾಟ ಮೊದಲಿಟ್ಟಳು. ನನ್ನಣ್ಣ ಅಮ್ಮನನ್ನು ಸಾಕುತ್ತಿಲ್ಲ ಎಂದು ನನ್ನನ್ನು ಇಕ್ಕಟ್ಟಿಗೀಡು ಮಾಡುತ್ತಿದ್ದಳು. ನನ್ನಣ್ಣನ ಪರಿಸ್ಥಿತಿ ನನಗಿಂತಲೂ ದಾರುಣವೆಂದು ಅವಳಿಗೂ ತಿಳಿದಿದೆ. + +ಜೀವನದಲ್ಲಿ ಏರುಗತಿಕಾಣದೆ ನಮ್ಮ ತಂದೆಕೊಟ್ಟ ಹೊಲದ ದುಡಿಮೆಯಲ್ಲಿ ಹೇಗೋ ಜೀವನ ಸಾಗಿಸುತ್ತಿದ್ದಾನೆ. ಅವನಿಗೆ ಮೂವರು ಹೆಣ್ಣು ಮಕ್ಕಳು. ಅವರ ಮದುವೆಗಳಿಗೆ ವರದಕ್ಷಿಣೆಗೆ ಹಣ ಹೊಂದಿಸಬೇಕಾಗಿದೆ. ದೊಡ್ಡ ಮಗಳು ಈಗಾಗಲೇ ಮದುವೆ ವಯಸ್ಸಿಗೆ ಬಂದಿದ್ದಾಳೆ. ಅವನು ನನ್ನ ಜೊತೆ ಮಾತನಾಡುವುದು ಬಿಟ್ಟು ಯಾವ ಕಾಲವೋ ಆಗಿದೆ, ಆದರೂ ಅವನ ಪರಿಸ್ಥಿತಿಯ ಕುರಿತು ನನಗೆ ಮರುಕವಿದೆ. ಅವನನ್ನು ಹಣ ಕೇಳುವ ಮನಸ್ಸು ನನಗಿಲ್ಲ. + +ಅಡುಗೆ ಸಿದ್ಧವಾಗಿದೆ, ಭಾರತಿ ಎರಡು ರೊಟ್ಟಿಗಳ ಮೇಲೆ ಒಂದು ಈರುಳ್ಳಿ ಇಟ್ಟು, ನಮ್ಮ ಮಗ ರಘುವನ್ನುಕರೆದು, “ಏಯ್, ಇದನ್ನು ನಿಮ್ಮ ಅಜ್ಜಿಗೆ ಕೊಟ್ಟು ಬಾ. ಅಲ್ಲಿ ಕೂತು, ಅವಳು ಹುಟ್ಟಿಸಿಕೊಂಡು ನಿನಗೆ ಹೇಳುವ ಕಥೆಗಳನ್ನು ಕೇಳುತ್ತ ಕುಳಿತುಕೊಳ್ಳಬೇಡ. ನಿಮ್ಮಂತ ಚಿಕ್ಕವರಿಗೆ ಅದು ಕೇಳುವುದು ಒಳ್ಳೆದಲ್ಲವೇ ಅಲ್ಲ. ಕೂಡಲೇ ಬಂದುಬಿಡು. ತಿಂದಮೇಲೆ, ತಟ್ಟೆಯನ್ನು ನೀಟಾಗಿ ಬೂದಿ ಹಾಕಿ ಉಜ್ಜಿ ತೊಳೆಯುವಂತೆ ಹೇಳು, ಮರೆಯಬೇಡ”ಎಂದು ಹೇಳಿದಳು. ನಂತರ ನನ್ನತ್ತ ಗುರ್ರ್ ಎಂದು ನೋಡುತ್ತ, “ನನ್ನ ಮಕ್ಕಳಿಗೆ ಕ್ಷಯದ ಸೋಂಕು ನಾನು ಸಹಿಸಲಾರೆ” ಎಂದಳು. ನಂತರ ಏನೋ ಮುಳುಗಿಹೋಗುತ್ತಿದೆಯೆಂಬಂತೆ ನನ್ನ ಪ್ಲೇಟಿಗೂ ಒಂದುರೊಟ್ಟಿ ಬಡಿದಳು. + +ನನ್ನ ಊಟವಾದಮೇಲೆ, ಭಾರತಿ ನನ್ನ ತಟ್ಟೆ ತೆಗೆದುಕೊಂಡು, ನನ್ನ ಸ್ನೇಹಿತ ಮೊನ್ನೆ ತಂದುಕೊಟ್ಟಿದ್ದ ತುಪ್ಪವನ್ನು ಧಾರಾಳವಾಗಿ ಸುರಿದುಕೊಂಡು ತಿನ್ನಲಾರಂಭಿಸಿದಳು. ಮೋಹನ ಹಸುಗಳನ್ನು ಸಾಕಿದ್ದಾನೆ. ದೆಹಲಿಯಲ್ಲಿ ಹಾಲು, ಬೆಣ್ಣೆ, ತುಪ್ಪ ಮಾರುತ್ತ ರಾತ್ರಿ ಬೆಳಗಾಗುವುದರಲ್ಲಿ ಸಿರಿವಂತನಾದನು. ಆಧುನಿಕ ಪ್ರಪಂಚದಲ್ಲಿ ಹೇಗೆ ಇರಬೇಕೆಂಬುದನ್ನು ಬಹಳ ಚೆನ್ನಾಗಿ ಅರಿತಿದ್ದನು. ಸಣ್ಣ ಪ್ಲಾಸ್ಟಿಕ್ ಕವರುಗಳಲ್ಲಿ ತುಂಬಿ, ಮನೆಗೆ ಬಂದ ಅತಿಥಿಗಳಿಗೂ, ಅಪರಿಚಿತರಿಗೆ ಕೂಡ ಧಾರಾಳವಾಗಿ ಕೊಡುವಂತಹ ಆ ಮಜ್ಜಿಗೆಯನ್ನು ಲಾಭದಾಯಕ ವ್ಯಾಪಾರಿ ಸರಕಾಗಿ ಮಾಡುತ್ತಾನೆಂದು ನಾನೆಂದಿಗೂ ಊಹಿಸಿರಲಿಲ್ಲ. ಪ್ರತಿ ತಿಂಗಳು ಒಂದು ಕೆ.ಜಿ. ತುಪ್ಪ ಹಣ ತೆಗೆದುಕೊಳ್ಳದೆ ಕಾಣಿಕೆ ಎಂಬಂತೆ ಕೊಡುತ್ತಿದ್ದಾನೆ. ಭಾರತಿ ಮತ್ತಷ್ಟು ಶ್ರದ್ಧೆಯಿಂದ ಪ್ರತಿ ತಿಂಗಳು ಅದನ್ನು ಕರಗಿಸುತ್ತಿದ್ದಾಳೆ. + +“ಅಪ್ಪಾ! ಮುಂದಿನ ವಾರ ಅಲಹಾಬಾದಿನಲ್ಲಿ ಕುಂಭಮೇಳ ಶುರುವಾಗುತ್ತದೆಂದು ಅಜ್ಜಿ ಹೇಳಿದರು. ಅಜ್ಜಿ ಕುಂಭಮೇಳದ ಒಂದು ಶುಭದಿನ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಬೇಕಂತೆ. ತಾನು ಪರಲೋಕಕ್ಕೆ ಹೋಗುವ ಮೊದಲು ತನ್ನ ಪಾಪಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಂತೆ. ಪರಲೋಕ ಎಲ್ಲಿದೆ ಅಪ್ಪಾ? ಇಲ್ಲಿನಂತೆ ಅಲ್ಲಿಯೂ ಚೆನ್ನಾಗಿ ಮತ್ತು ದೊಡ್ಡದಾಗಿ ಇದೆಯಾ? ಅಲ್ಲಿಕೂಡ ಹಸುಗಳು, ನಾಯಿಗಳು ಇರುತ್ತವಾ? ಅಜ್ಜಿ ಯಾಕೆ ಪರಲೋಕಕ್ಕೆ ಹೋಗಬೇಕು ಎನ್ನುತ್ತಿದ್ದಾರೆ? ನೀನು ಅಜ್ಜಿಯನ್ನು ಮಾತನಾಡಿಸುವುದಿಲ್ಲ; ನೀನು ಇಲ್ಲದಿರುವಾಗ ಅಮ್ಮ ಅಜ್ಜಿಯ ಮೇಲೆ ಜೋರಾಗಿ ಕಿರುಚಾಡುತ್ತಿರುತ್ತಾಳೆ. ಅದಕ್ಕೇ ಹೋಗುತ್ತೇನೆನ್ನುತ್ತಿದ್ದಾಳಾ?” ಒಂದು ದಿನ ಸಂಜೆ ರಘು ನನ್ನ ಬಳಿ ಬಂದು, ನಮ್ಮ ಅಮ್ಮ ಕುಂಭಮೇಳಕ್ಕೆ ಹೋಗಬೇಕೆಂದುಕೊಳ್ಳುತ್ತಿರುವ ಕೋರಿಕೆಯನ್ನು ನನಗೆ ಕೇಳಿಸುವುದರೊಂದಿಗೆ, ಹಾಗೆ ಅಮಾಯಕ, ನಿಗೂಢ ಪ್ರಶ್ನೆಗಳೊಂದಿಗೆ ನನ್ನ ಬಳಿ ಬಂದನು. + +ಅವನ ಪ್ರಶ್ನೆಗಳಿಗೆ ನನ್ನ ಬಳಿ ಉತ್ತರವಿಲ್ಲ. ನಾನು ಮೌನವಾಗಿದ್ದೆನು. ಭಾರತಿಯ ಒಪ್ಪಿಗೆಯಿಲ್ಲದೆ ಅಂತಹ ವಿಷಯಗಳಲ್ಲಿ ತಕ್ಷಣ ನಿರ್ಧಾರ ತೆಗೆದುಕೊಳ್ಳುವ ಧೈರ್ಯವಿಲ್ಲ ನನಗೆ. + +“ಸರಿ ಬಿಡೋ, ನಿಮ್ಮ ಅಮ್ಮನೊಂದಿಗೆ ನಾನು ಈ ವಿಷಯ ಮಾತನಾಡುತ್ತೇನೆ. ಅಮ್ಮ ಒಪ್ಪಿದರೆ ನಿಮ್ಮ ಅಜ್ಜಿಯನ್ನು ಕರೆದುಕೊಂಡು ಹೋಗೋಣ” ನಿಧಾನವಾಗಿ ಹೇಳಿದೆ. ತನ್ನ ಪ್ರಶ್ನೆಗಳಿಗೆ ಉತ್ತರ ಸಿಗುವುದಿಲ್ಲವೆಂದು ಅವನಿಗೆ ಗೊತ್ತು, ಅದಕ್ಕೆ ಕಾಯದೆ ಅವನು ಹೊರಟುಹೋದನು. + +“ನಿನಗೆ ಗೊತ್ತಾ–ಅಮ್ಮ ಕುಂಭಮೇಳಕ್ಕೆ ಹೋಗಬೇಕೆಂದುಕೊಳ್ಳುತ್ತಿದ್ದಾಳಂತೆ!”ಅವಳು ಅಡುಗೆ ಮಾಡುತ್ತಿದ್ದಾಗ ವಿಷಯ ಪ್ರಸ್ತಾಪಿಸಿದೆನು. ಆ ಸಮಯದಲ್ಲಿ ಸ್ವಲ್ಪ ಶಾಂತವಾಗಿರುತ್ತಾಳೆ, ಬಹುಶಃ ಅಡುಗೆ ಕೆಲಸದಲ್ಲಿ ತಲ್ಲೀನಳಾಗಿರುವುದರಿಂದ ಇರಬಹುದು. ಹಾಗೆ ಹೇಳಿ, ಆಕೆಯ ಉತ್ತರಕ್ಕಾಗಿ ನಿರೀಕ್ಷಿಸಿದೆ. ಆದರೆ, ಭಾರತಿ ಒಲೆಯಲ್ಲಿದ್ದ ಇದ್ದಿಲಿನ ಕೆಂಡವನ್ನು ವಿಚಿತ್ರವಾಗಿ ನೋಡುತ್ತ, ಏನೂ ಮಾತನಾಡಲಿಲ್ಲ. ಹಾಗೆ ಮಾತನಾಡದಿರುವುದು ಅವಳ ಸ್ವಭಾವಕ್ಕೆ ವಿರುದ್ಧ. ಬಹುಶಃ ಬರಲಿರುವ ಖರ್ಚು ವೆಚ್ಚದ ಆತಂಕವಿರಬಹುದು, ಆ ದಿಗ್ಭ್ರಮೆಯಲ್ಲಿ ಮಾತುಗಳು ಸಿಗದೆ ಮಾತನಾಡದಿರಬಹುದು. ಹಾಗೆ ಬಯಸಿದ ಅಮ್ಮನ ದುಸ್ಸಾಹಸದ ಕುರಿತಾಗಿಯೂ ಆಕೆಗೆ ಕೋಪ ಬಂದಿರಬಹುದು. + +“ನೀನು ಕೂಡ ಇತ್ತೀಚೆಗೆ ಯಾವ ತೀರ್ಥಯಾತ್ರೆ ಮಾಡಿಲ್ಲ. ನಮ್ಮ ಅಮ್ಮನ ಬಯಕೆಯನ್ನು ಈಡೇರಿಸುವ ನೆಪದಲ್ಲಿ ನಿನ್ನನ್ನೂ ಕುಂಭಮೇಳಕ್ಕೆ ಕರೆದುಕೊಂಡು ಹೋಗುವ ಅವಕಾಶ ಸಿಗುತ್ತದೆ ನನಗೆ. ಅದು ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮೇಳ” ಹಾಗೆ ಆಕೆಯನ್ನು ಉತ್ತೇಜಿಸುವ ಪ್ರಯತ್ನ ಮಾಡುತ್ತ, ಆಕೆಯ ಅನುಗ್ರಹ ಸಂಪಾದಿಸುವ ಅಸ್ತ್ರ ಪ್ರಯೋಗ ಮಾಡಿದೆ. + +ಆಕೆ ಆಗಲೂ ಮಾತನಾಡಲಿಲ್ಲ. ನನಗೆ ಬಡಿಸಿ, ತಾನೂ ಊಟ ಮಾಡಿದಳು. ಆಕೆಯ ಮೌನ ನನಗೆ ಎಷ್ಟು ಭಯ ಮೂಡಿಸಿತೆಂದರೆ, ಮತ್ತೊಮ್ಮೆ ಆ ಪ್ರಸ್ತಾಪವನ್ನು ಮಾಡುವ ಧೈರ್ಯ ಇಲ್ಲದೆ ಹೋಯಿತು. ಎಂದಿಗಿಂತ ನಿಧಾನವಾಗಿ ನಿದ್ದೆ ಮಾಡಿದಳು. ಬಹಳ ಹೊತ್ತು ಅತ್ತಿತ್ತ ಹೊರಳಾಡುತ್ತ ಕಳೆದಳು. ಆಕೆಯ ಮನಸ್ಸಿನ ನೆಮ್ಮದಿ ಹಾಳು ಮಾಡಿದೆನೇನೋ ಎಂದು ನಾನಂದುಕೊಂಡೆ. + +ಆಶ್ಚರ್ಯಕರವಾಗಿ, ಮರುದಿನ ಆಕೆ ಅದಕ್ಕೆ ಅಂಗೀಕರಿಸಿದಳು. + +“ನಿಮ್ಮಅಮ್ಮನನ್ನು ಕುಂಭಮೇಳಕ್ಕೆ ಕರೆದುಕೊಂಡುಹೋಗಬೇಕೆಂದೇನೋ ಹೇಳಿದಿರಿ, ನಿಜಕ್ಕೆ ಈಗ ಈ ಖರ್ಚುಗಳು ದುಬಾರಿಯಾಗಬಹುದು, ಆದರೂ ಏನೂ ಮಾಡಲಾಗುವುದಿಲ್ಲ. ಪರಲೋಕಕ್ಕೆ ಹೋಗುವ ಮೊದಲು ಪವಿತ್ರಸಂಗಮ ಸ್ನಾನ ಅತ್ತೆಗೂ ಒಳ್ಳೆಯದೇ. ಹಾಗೇ ಮಾಡೋಣ, ರಘೂನ್ನ ನಮ್ಮಅಪ್ಪ-ಅಮ್ಮನ ಬಳಿ ಬಿಟ್ಟು ಹೋಗೋಣ.” ಬೆಳಗ್ಗೆ ನಾನು ಸ್ನಾನ ಮಾಡಿ, ಕೆಲಸಕ್ಕೆ ಹೊರಡುವ ಮೊದಲು ಬಹಳ ಖುಷಿಯಿಂದ ಆಕೆ ಆ ವಿಷಯ ಹೇಳಿದಳು. ಆಕೆಯ ಉತ್ಸಾಹಕ್ಕೆ ಕಾರಣ ತಿಳಿದುಕೊಳ್ಳಲಾಗಲಿಲ್ಲ, ಅದಕ್ಕೆ ಆಶ್ಚರ್ಯಗೊಂಡೆನು. + +******** + + + +ಉತ್ತರ ಭಾರತದ ಜನವರಿ ಚಳಿ ಅಲಹಾಬಾದಿನಲ್ಲಿ ಜೋರಾಗಿಯೇ ಇತ್ತು. ನಾವು ಮಧ್ಯಾಹ್ನ ಬಸ್ ಇಳಿಯುವ ವೇಳೆಗೆ, ಮರುದಿನ ಬೆಳಗ್ಗೆ ಮಂಜುಗಟ್ಟುವ ಆ ಗಂಗೆಯಲ್ಲಿ ಮುಳುಗೇಳಬೇಕೆಂಬುದನ್ನು ನೆನೆಸಿಕೊಂಡೇ ನಾನು ನಡುಗಿದೆ. ಅಮ್ಮನಿಗೆ ಬಹಳ ಸಂತೋಷವಾದಂತೆನಿಸುತ್ತಿದೆ. ಅಲಹಾಬಾದಿಗೆ ಕರೆದುಕೊಂಡು ಬಂದುದಕ್ಕೆ ಭಾರತಿಯನ್ನು, ನನ್ನನ್ನೂ ಹೊಗಳುತ್ತಿದ್ದಾಳೆ. ನಾವು ನಿಧಾನವಾಗಿ ತ್ರಿವೇಣಿ ಸಂಗಮಕ್ಕೆ ಹೊರಟೆವು. ಲಗ್ಗೇಜನ್ನು ನಮ್ಮ ಬಳಿಯೇ ಇಟ್ಟುಕೊಂಡು ಅಲ್ಲಿಯೇ ಕಳೆಯಲು ನಿರ್ಧರಿಸಿದೆವು. ಅದರಿಂದ ಹಣ ಉಳಿತಾಯವಾಗುತ್ತದೆ. + +ಅರೆನಗ್ನ ಸಾಧುಗಳು ಆ ಪ್ರದೇಶವನ್ನು ನಿಜವಾಗಿಯೂ ಆಕ್ರಮಿಸಿದ್ದಾರೆ; ಬಹುತೇಕರು ಸಂಗಮದ ತೀರದಲ್ಲಿ ಮೈ ಚಾಚಿ ಮಲಗಿದ್ದಾರೆ. ವಿಶಾಲವಾದ ಆ ತೀರ ವಿಭಿನ್ನ ಸಾಧುಗಳಿಂದ ತುಂಬಿಹೋಗಿದೆ; ಅವರು ಗಾಂಜಾ ಸೇವನೆಯಲ್ಲಿ ಮುಳುಗಿದ್ದಾರೆ; ಅವರ ಕಾಮವಾಂಛೆಯ ಕಣ್ಣುಗಳು ಕನ್ನಿಕೆಯರಿಗಾಗಿ ಹುಡುಕಾಡುತ್ತಿವೆ. ದೇಹಬಾಧೆ ತೀರಿಸಿಕೊಳ್ಳಲು, ತೇವದ ಬಟ್ಟೆ ಬದಲಾಯಿಸಲು ತಕ್ಕಜಾಗವನ್ನು ಹುಡುಕುತ್ತಿದ್ದ ಹೆಂಗಸರ ಮೇಲೆ ಓರೆಗಣ್ಣಿನಿಂದ ದೃಷ್ಟಿ ಹಾಯಿಸುತ್ತಿದ್ದಾರೆ. ಮತ್ತೆ ಕೆಲವರ ದೃಷ್ಟಿ ಚಿಕ್ಕಹುಡುಗರ ಮೇಲೆ, ಯುವಕರ ಮೇಲೆ ಆಸಕ್ತಿ ತೋರುತ್ತಿವೆ. ಸುಂದರವಾದ ಹುಡುಗ ಕಂಡರೆ ತಮ್ಮ ವಾಂಛೆಪೂರಿತ ಕಾಮುಕತೆಯನ್ನು ಮುಚ್ಚಿಡಲು ಪ್ರಯತ್ನಿಸದೆ ನೋಡುತ್ತಲೇಇದ್ದಾರೆ. ಆ ನಿರ್ಲಜ್ಜ, ನೀಚ ನಡವಳಿಕೆಯಿಂದ ಅವರ ಕುರಿತು ನನಗೆ ಅಸಹ್ಯವಾಗುತ್ತಿದೆ. + +ನಮ್ಮಂತಹ ದುರುದೃಷ್ಟ ಜೀವಿಗಳಿಗಾಗಿ ಒಂದು ಜನ ಹಿತೈಷಾ ಸಂಸ್ಥೆ ನಿರ್ಮಿಸಿದ ಒಂದು ದೊಡ್ಡ ಷೆಡ್ ಅಲ್ಲಿ ಕಾಣಿಸಿತು. ನಾಲ್ಕು ರುಪಾಯಿ ನೆಪಮಾತ್ರದ ಬಾಡಿಗೆ ಸಲ್ಲಿಸಿ ನಾವು ಒಳಗೆ ಪ್ರವೇಶ ಗಿಟ್ಟಿಸಿದೆವು. ಊಟ ಉಚಿತ ಎಂದು ಹೇಳಿದರು. + +ಹಾಗೆ ನಾವು ವಿಶ್ರಾಂತಿ ಮಂದಿರದಲ್ಲಿ, ಸ್ವಲ್ಪಜಾಗದಲ್ಲಿ ವಸತಿ ಸಿಕ್ಕ ಮೇಲೆ, ತಂದಿದ್ದ ಚಾಪೆಯನ್ನು ಹಾಸಿ ನಾನು, ಭಾರತಿ, ಅಮ್ಮ ಮಲಗಿದೆವು. ಕಿಕ್ಕಿರಿದಿದ್ದ ಗುಡಾರದಲ್ಲಿ ಬೆವರಿನಿಂದ ತೊಪ್ಪೆಯಾಗಿದ್ದ ದೇಹಗಳಿಂದ ಬರುವ ವಾಸನೆಯಿಂದ ಹೊಟ್ಟೆಯಲ್ಲಿ ತೊಳೆಸಿದಂತಾಗಿ, ನನಗೆ ನಿದ್ದೆ ಹತ್ತಲಿಲ್ಲ. ಮರುದಿನ ಪವಿತ್ರ ಸಂಗಮಸ್ನಾನದ ನೆನಪಿನಲ್ಲಿ ಪುಳಕಿತಳಾದ ಅಮ್ಮ ಪ್ರಶಾಂತವಾಗಿ ನಿದ್ದೆ ಮಾಡಿದಳು; ಆ ಸ್ನಾನ ತನ್ನ ಪಾಪಗಳನ್ನು ತೊಳೆದು, ಮುಂದಿನ ಜೀವನದಲ್ಲಿ ಸುಖಜೀವನವನ್ನು ಪ್ರಸಾದಿಸುತ್ತದೆಯೆಂಬುದು ಅವಳ ನಂಬಿಕೆ. ಕಪ್ಪಗಿನ ಕತ್ತಲನ್ನು ಸೀಳಿಕೊಂಡು ಬರುವ ಸೂರ್ಯೋದಯಕ್ಕಾಗಿ ಎದುರುನೋಡುತ್ತ, ನಾನು ಹೊರಳಾಡುತ್ತ ಕಳೆದೆ. ಬೆಳಿಗ್ಗೆ ಗಂಗೆಯಲ್ಲಿ ಮುಳುಗಿ, ಮತ್ತೆ ಮನೆಗೆ ಪ್ರಯಾಣ ಬೆಳೆಸಬೇಕೆಂದು ನನ್ನ ಆತುರ, ಈಗ ನನಗೆ ನಮ್ಮ ಮನೆ ಒಂದು ಇಂದ್ರಭವನವೆನಿಸಿತು. + +ಎರಡು ಗಂಟೆ ನಂತರ, ನಿದ್ದೆ ಹತ್ತುವ ವೇಳೆಗೆ ಯಾರೋ ನನ್ನ ಭುಜವನ್ನು ಹಿಡಿದು ಎಳೆದಂತಾಯಿತು. ಎಲ್ಲ ಕತ್ತಲುಮಯ. ನನಗೇನೂ ಕಾಣಿಸುತ್ತಿಲ್ಲ. ಅದನ್ನು ಲೆಕ್ಕಿಸದೆ, ನಾನು ನಿದ್ದೆ ಮಾಡಲು ಪ್ರಯತ್ನಿಸಿದೆ. ಆದರೆ, ಆ ಎಳೆತ ನಿಲ್ಲಲಿಲ್ಲ. ಕೂಡಲೇ ತಾನು ಏನೋ ಮಾತನಾಡಬೇಕೆಂದು ಭಾರತಿ ಪಿಸುಗುಟ್ಟಿದಳು. ನನ್ನನ್ನು ಎಬ್ಬಿಸಿ, ನನ್ನ ಕೈ ಹಿಡಿದುಕೊಂಡು ಹೊರಗೆ ಕರೆದೊಯ್ದಳು. ಹೊರಗೆ ಆಕಾಶ ನಿರ್ಮಲವಾಗಿದೆ. ಹೊರಗೆ ಬೆಳದಿಂಗಳ ಕಾಂತಿಯಲ್ಲಿ, ಬೆಳಗಿನವರೆಗೆ ಕಾದು ನೋಡಲಾರದಂತಹ ಅವಸರದ ವಿಷಯವೇನೆಂದು ತಿಳಿಯದೆ ಆಶ್ಚರ್ಯದಿಂದ ಆಕೆಯತ್ತ ನೋಡಿದೆನು. + +“ನಾವು ಕೂಡಲೇ ರೇವಾರಿಗೆ ಹೊರಟುಹೋಗಬೇಕು. ಈ ಚಳಿಗೆ ನಾನು ಇಲ್ಲಿ ಇರಲಾರೆ. ನನಗೆ ತುಂಬಾ ಆಯಾಸವಾಗಿದೆ. ಜ್ವರ ಬರುವಂತಿದೆ. ಆದಷ್ಟು ಬೇಗ ನಾವು ಮನೆಗೆ ಹೊರಟುಹೋಗಬೇಕು”ಆತುರಾತುರವಾಗಿ ನನಗೆ ಮಾತ್ರ ಕೇಳಿಸುವಂತೆ ಹೇಳಿದಳು ಭಾರತಿ. + +“ಆದರೆ, ಹೇಗೆ? ಬೆಳಗಿನವರೆಗೂ ತಡೆದರೆ ಏನಾಗುತ್ತದೆ? ನದಿಯಲ್ಲಿ ಸ್ನಾನ ಮಾಡಲು ನಿನಗಿಷ್ಟವಿಲ್ಲದಿದ್ದರೆ ಬೇಡ ಬಿಡು, ಕೊರೆಯುವ ನೀರಿನಲ್ಲಿ ಮುಳುಗಲು ನನಗೂ ಧೈರ್ಯ ಸಾಲುತ್ತಿಲ್ಲ. ಆದರೆ ಅಮ್ಮನ ಬಯಕೆ ತೀರಿಸಿಕೊಳ್ಳಲು ಬಿಡು. ರೇವಾರಿಯಿಂದ ಇಷ್ಟುದೂರ ನಾವು ಬಂದಿರುವುದು ಅದಕ್ಕೇ ಅಲ್ಲವಾ?” ಎಂದೆ ನಾನು, ಅತಿದಾರುಣ ಪ್ರಸ್ತಾಪದ ತಲ್ಲಣವನ್ನು ತೋರ್ಪಡಿಸಿಕೊಳ್ಳದೆ. + +“ನಿಜ, ನಿಮ್ಮ ಅಮ್ಮನನ್ನು ಕರೆದುಕೊಂಡು ಹೊರಟುಹೋಗೋಣವೆಂದು ನಾನು ಹೇಳುತ್ತಿಲ್ಲ. ತನಗಿಷ್ಟವಿರುವಷ್ಟು ದಿನ ಆಕೆ ಇಲ್ಲಿ ಇರಬಹುದು. ಆಕೆಗೆ ಹೇಳದೆ ನಾವು ಹೊರಟುಹೋಗೋಣ. ಆಕೆಗೀಗ ನಿದ್ರಾ ಭಂಗ ಮಾಡುವುದು ಒಳ್ಳೆಯದಲ್ಲ”ಆಕೆಯ ಮಾತುಗಳು ರಾತ್ರಿಯ ಕೊರೆಯುವ ಚಳಿಗಾಳಿಗಿಂತಲೂ ತಣ್ಣಗಿದೆ. + +“ಆದರೆ, ಆಕೆಯನ್ನು ಯಾರು ನೋಡಿಕೊಳ್ಳುತ್ತಾರೆ? ಮತ್ತೆ ಬಂದಾಗ, ಆಕೆಯನ್ನು ನಾನು ಎಲ್ಲಿಅಂತ ಹುಡುಕುವುದು? ಆಕೆಗೆ ಇಲ್ಲಿ ಇರಲು ಕಷ್ಟವಾಗುತ್ತದೆ.” ಆಕೆಯ ಮಾತಿನ ಉದ್ದೇಶ ನನಗೆ ಅರ್ಥವಾಯಿತಾದರೂ, ಈ ಮೂರ್ಖ ಪ್ರಶ್ನೆ ಹಾಕದಿರಲಾಗಲಿಲ್ಲ. + +“ಆಕೆಯನ್ನು ಕರೆದುಕೊಂಡು ಹೋಗಲು ನೀನು ಮತ್ತೆ ಬರುವ ಅಗತ್ಯವಿಲ್ಲ. ಆಕೆ ಇಲ್ಲಿಯೇ ಇರಲಿ, ಇಂತಹವರಿಗೆ ಅದ್ಭುತವಾಗಿ ಸೇವೆ ಮಾಡುವ ದಯಾಪರ ಸಂಸ್ಥೆಗಳು ಇಲ್ಲಿ ಸಾಕಷ್ಟಿವೆ. ಆಕೆಯೂ ತನ್ನನ್ನು ಸಂಭಾಳಿಸುವವರನ್ನು ಹುಡುಕಿಕೊಳ್ಳುತ್ತಾಳೆ. ಅವಳು ಇಲ್ಲಿಯೇ ಉಳಿದುಕೊಳ್ಳಬಹುದು ತನ್ನ..” ಭಾರತಿ ಒಮ್ಮೆಗೇ ಮಾತು ನಿಲ್ಲಿಸಿದಳು. ಮಾತಿನಲ್ಲಿ ತನ್ನ ಅಭಿಪ್ರಾಯ ಪೂರ್ತಿ ವ್ಯಕ್ತಪಡಿಸುವ ಅಗತ್ಯವಿಲ್ಲ, ಆಕೆಯ ಅಭಿಪ್ರಾಯವೇನೋ ನನಗೆ ಸುಲಭವಾಗಿಯೇ ಅರ್ಥವಾಯಿತು. “ನಮ್ಮ ಸಾಮಾನುಗಳನ್ನು ಗಂಟುಕಟ್ಟಿ ಕೂಡಲೇ ಹೊರಡೋಣ. ಚಾಪೆ, ರಜಾಯಿ ಆಕೆಗೇ ಬಿಟ್ಟು ಹೋಗೋಣ. ನಮಗೆ ತಂದಿರುವ ಊಟದ ಪೊಟ್ಟಣಗಳನ್ನು ಕೂಡ ಇಲ್ಲಿಯೇ ಬಿಡೋಣ” ಸಾಧ್ಯವಾದಷ್ಟು ಭಾರತಿ ತನ್ನ ಉದಾರತೆ ಮತ್ತು ಹೃದಯ ವೈಶಾಲ್ಯವನ್ನು ಮೆರೆಯಲು ಪ್ರಯತ್ನಿಸಿದಳು. + + + +ಆತುರಾತುರವಾಗಿ ನಾವು ಆ ವಿಶಾಲವಾದ ಮರಳು ರಾಶಿಯ ಭೂಭಾಗವನ್ನು ಹಾದು, ಬಸ್ ಸ್ಟ್ಯಾಂಡ್ ತಲುಪಿದೆವು. ಅಮ್ಮ ಮೋತಿಬಾಯಿಯನ್ನು ದೇವರು ಮತ್ತು ದಯಾಳು ಗಂಗಾಮಾತೆಯ ರಕ್ಷಣೆಯಲ್ಲಿ ಬಿಟ್ಟು ಬಂದೆವು. ಬೆಳದಿಂಗಳ ಬೆಳಕಿನಲ್ಲಿ ನಾನು ಭಾರತಿಯ ಮುಖ ನೋಡಿದೆ. ನನಗೆ ಆಕೆಯ ಮುಖದಲ್ಲಿ ಸಂಪೂರ್ಣ ಬಿಡುಗಡೆಯ ಸಂತಸದ ಹೊಳಪು ಎದ್ದು ಕಾಣಿಸಿತು. + +********************** + +ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ. \ No newline at end of file diff --git a/Kenda Sampige/article_369.txt b/Kenda Sampige/article_369.txt new file mode 100644 index 0000000000000000000000000000000000000000..72b09b2887a47456802885415023477059af731c --- /dev/null +++ b/Kenda Sampige/article_369.txt @@ -0,0 +1,155 @@ + + +“ರಾಯರೇ ಈ ಜಾಗ ಮೆಟ್ಟಬೇಡಿರಿ. ಹತ್ತು ವರ್ಷಗಳ ಹಿಂದೆ ಇಲ್ಲೊಂದು ಹಾವು ತೀರಿಹೋಗಿದೆ. ಅದನ್ನಿಲ್ಲಿ ಸುಟ್ಟು ಅದರ ಗುರುತಿಗಾಗಿ ಇಲ್ಲಿ ಕಲ್ಲುರಾಶಿ ಹಾಕಿದ್ದೇವೆ. ಅಲ್ಲಿ ಕಾಲಿಡಬೇಡಿ. ಜಾಗ್ರತೆ! ಅದರ ನಂಜು ತಲೆಗೆ ಏರಿ ಹೋದೀತು!” + +“ಅದೇನಪ್ಪ ಅಂತಹ ಭಾರೀ ಹಾವು?” + +“ಹಾವೆಂದರೆ ಅದಕ್ಕೆ ಒಂದೇ ತಲೆ. ಎರಡೇ ಕಣ್ಣು. ಎರಡೆರಡೇ ಕೈಕಾಲು. ಎಂದರೆ ನೋಡಿ ಅದೊಂದು ಮನುಷ್ಯ ರೂಪದ ಹಾವು ಅಷ್ಟೆ!” + +“ಅರೆ! ಬಹಳ ಸ್ವಾರಸ್ಯವಾಗಿದೆಯಲ್ಲ ಈ ಪ್ರಕರಣ.” + +“ಅದರಲ್ಲಿ ಮತ್ತೂ ಸ್ವಾರಸ್ಯದ ಸಂಗತಿ ಏನೆಂದರೆ ಅದನ್ನು ಸುಟ್ಟಾಗ ಅದರ ಮೈಯೊಡೆದು ಹಾಲೇ ಹಾಲು ಹೊರಟು ಬಂದದೆ. ಅದರಲ್ಲಿ ಒಂದು ತೊಟ್ಟಾದರೂ ರಕ್ತ ಬೇಕೆ? ಅದು ಕಣ್ಣಿನಲ್ಲಿ ಕೂಡಾ ರಕ್ತವಿಲ್ಲದ ಪ್ರಾಣಿ!” + +“ಏನಪ್ಪಾ! ಏನೋ ಒಂದು ದೊಡ್ಡ ಒಗಟು ಹೇಳಿದಂತಿದೆಯಲ್ಲ?” ಎಂದೆನು. + +ಈಗ ಹಲವು ವರ್ಷಗಳಿಂದಲೂ ಹಳ್ಳಿಗರೊಡನೆ ಬಳಕೆಯನ್ನು ಇಟ್ಟುಕೊಂಡಿರುವ ನನಗೆ ಹಳ್ಳಿಯ ಕುರುಬನಾದರೂ ಒಂದು ಚೆಲೋ ಒಗಟನ್ನು ಸ್ವಾರಸ್ಯವಾಗಿ ಯಾರಿಗೂ ಸಂಶಯಬಾರದ ರೀತಿಯಲ್ಲಿ ಸಮರ್ಪಿಸಬಲ್ಲನೆಂಬುದು ಸುಸೂತ್ರವಾಗಿ ತಿಳಿದಿದೆ. ಇಂತಹ ಸಂಗತಿಗಳಲ್ಲಿ ಆತನು ಯಾವ ಪೇಟೆಯ ಪಟಾಕಿಯವನಿಗೂ ಹಿಂದೆ ಬೀಳಲಾರನೆಂಬುದು ತೀರಾ ಖಚಿತ. ಆದುದರಿಂದ ಅವರ ಸಂದರ್ಭವನ್ನು ವಿರಳವಾಗಿ ತಿಳಿಯಬೇಕೆಂಬ ಕುತೂಹಲದಿಂದ ಅಲ್ಲೇ ಕಿರುದಾರಿಯ ಪಕ್ಕದಲ್ಲಿ ಹುಲುಸಾಗಿ ಬೆಳೆದು ಬೇರುಬಿಟ್ಟಿದ್ದ ಆಲದ ಮರದಡಿ ಒಂದು ಶಿಲೆಯ ಮೇಲೆ ಕಾಲಿಟ್ಟು ಇರಲಿ, ಇಲ್ಲಿ ಕೊಂಚ ಕುಳಿತು ದಣಿವಾರಿಸಿಕೊಳ್ಳೋಣ. ನಮಗೆ ಪೇಟೆಯವರಿಗೆ ಇಂತಹ ಮಾರ್ಗಗಳಲ್ಲಿ ಕಾಲಿಡುವಾಗ ಊಧ್ರ್ವಶ್ವಾಸವೇ ಮೇಲೇಳುತ್ತದೆ. ಆದುದರಿಂದ ಆ ತನಕ ನಿನ್ನ ಒಗಟಿನ ಅರ್ಥವನ್ನು ತುಸು ಬಿಡಿಸಿಹೇಳು ನೋಡೋಣ ಎಂದೆನು. + +ಅವನು ಮೊದಮೊದಲಿಗೆ ಸ್ವಲ್ಪ ಸಂಕೋಚದಿಂದ ಮತ್ತೆ ನನ್ನ ಒತ್ತಾಯದಿಂದ ಕೊನೆಗೆ ಆತ್ಮಸಂತೋಷದಿಂದ ತಲೆಗೆ ಸುತ್ತಿದ್ದ ರುಮಾಲೆಯನ್ನು ಅಂಗಿಗೆ ತುರುಕಿಕೊಂಡು ಕುಳಿತು ಕಿಸೆಯೊಳಗಣ ಚಂಚುವಿನಿಂದ ಎಲೆಯಡಿಕೆ ತೆಗೆದು ಪರಿಷ್ಕಾರವಾಗಿ ನೈಮಿಷಾರಣ್ಯದ ವೈಶಂಪಾಯರಂತೆ ಹೇಳತೊಡಗಿದನು. ಎಂದಮೇಲೆ ನಾನು ಕೂಡ ಒಂದು ಹೊಗೆಬತ್ತಿಯನ್ನು ಸೇದತೊಡಗಿ ಮಾಹರಿಯ ಶೌನಕರಾಯರಂತೆ ಕಾಲುನೀಡಿ ಸುಖಾಸೀನನಾಗಿ ಕೇಳತೊಡಗಿದೆನು. + +“ರಾಯರೇ! ನೀವೀಗ ಹೋಗುವುದು ಗೋಪಾಲಕೃಷ್ಣಯ್ಯನವರಲ್ಲಿಗಲ್ಲವೆ?” + +ನಾನು ಗಾಬರಿಯಿಂದ ಅವನನ್ನೇ ನೋಡುತ್ತ `ಏನೋ ಇದು? ಹುಚ್ಚಪ್ಪ! ಗೋಪಾಲಕೃಷ್ಣರಾಯರಲ್ಲಿಗೆ ಕರೆದುಕೊಂಡು ಹೋಗೆಂದು ಅಂದೇ ಹೇಳಿದ್ದೆ. ಈಗ ಮಧ್ಯೆ ಅರ್ಧದಾರಿಗೆ ಬಂದು ಹೋಗುವುದೆಲ್ಲಿಗೆ ಎಂದು ಕೇಳುತ್ತಾಯಿದ್ದಿ! ಹಾಗಾದರೆ ನಾವೀಗ ಯಾವ ಸುಡುಗಾಡಿಗೆ ಹೋಗುತ್ತಾಯಿದ್ದೇವೋ?’ + +“ಹಾಗಲ್ಲ ಸ್ವಾಮಿ. ನಾವಂತೂ ಈಗ ಹೋಗುವುದು ಅಲ್ಲಿಗೇನೇ. ಆದರೆ ನಾನು ಕೇಳಿದ ಸಂಗತಿ, ನೀವು ಅಲ್ಲಿಗೆ ಹೋಗುವುದಾದರೆ ನಿಮಗೆ ಅವರ ಪರಿಚಯ ತುಂಬಾಯಿರಬೇಕಲ್ಲ ಎಂತ ಅಭಿಪ್ರಾಯ ಅಷ್ಟೆ.” + +“ಹೋ, ಹಾಗೋ! ಅವರ ಪರಿಚಯ ತುಂಬಾಯಿಲ್ಲ. ಆದರೆ ಅವರ ಮಗ ..” + +“ಯಾರು? ವಕೀಲರೇ?” + +“ಅಲ್ಲ. ಈಗ ಬೆಂಗಳೂರಲ್ಲಿ ಇದ್ದಾರಲ್ಲ.” + +“ಹಾಂ. ಅವರ ಕಡೇ ಮಗ ಶೇಖರಯ್ಯ!” + +“ಹೌದು. ನಾನೂ ಅವನೂ ಕ್ಲಾಸು ಮೇಟುಗಳು. ಆದುದರಿಂದ ಈ ರಾಜ್ಯಕ್ಕೆ ಬಂದಾಗ ಅವನನ್ನು ವಿಚಾರಿಸಿ ಹೋಗೋಣಾಂತ ಬಂದಿದ್ದೇನೆ.” + +“ಹಾಗಾದರೆ ನಿಮಗೆ ರಾಯರ ಹಿರಿಯ ಮಗಳು ಅವರ ವಿಚಾರ ಗೊತ್ತಿರಬಹುದು.” + +“ಇಲ್ಲ, ನಮಗೆ ಅವರ ಪೈಕಿ ಮತ್ತಾರ ವಿಚಾರವೂ ಗೊತ್ತಿಲ್ಲ.” + +“ಸರಿ ಹಾಗಾದರೆ. ನಾನು ಈಗ ಹೇಳಲಿರುವುದು ಅವರ ಹಿರಿಯಮಗಳು ಚಂದ್ರಾವತಿಯಮ್ಮನ ವಿಷಯ. ಚಿಕ್ಕ ಕೂಸಾಗಿರುವಾಗ ನಾನೇ ಅವರನ್ನು ಹೆಗಲಮೇಲೆ ಕೂಡ್ರಿಸಿ ಸುತ್ತು ತೆಗೆಯುತಿದ್ದವ. ಪುತ್ತಳಿ ಬಂಗಾರದ ಗೊಂಬೆ ನೋಡಿ ಸ್ವಾಮಿ! ಆಹಾ – ಈಗಲೂ ಕಣ್ಣ ಮುಂದೆ ನೆನಪು ಬಂದಾಗ ಅಳು ಬರುತ್ತದೆ.” + +ಮುದುಕ ಎರಡು ಹನಿ ಕಣ್ಣೀರು ಸುರಿಸಿ ತನ್ನ ಕಚ್ಚೆಯ ವಸ್ತ್ರದ ತುದಿಯಿಂದ ಒರೆಸಿಕೊಂಡು ಒಂದು ಕ್ಷಣದ ಮೇಲೆ ಮತ್ತೆ ಹೇಳತೊಡಗಿದನು. + +“ನೋಡಿಕೊಳ್ಳಿ. ಓ ಅಲ್ಲಿ ಮಾವಿನ ತೋಪಿನ ಮಧ್ಯ ಮಾಡಿನ ತುದಿ ಕಾಣುತ್ತಿದೆಯಲ್ಲ. ಅದು ನಮ್ಮ ಊರಿನ ಶ್ಯಾನುಭಾಗರು ತಮ್ಮಣ್ಣಯ್ಯನವರ ಮನೆ. ನಿಜವಾಗಿಯಾದರೆ ಅದು ನಮ್ಮ ರಾಯರದೇ ಮನೆಜಾಗ. ಆದರೆ ಶ್ಯಾನುಭಾಗರು ಬದಲಿ ನೋಡಲಿಕ್ಕೆಂದು ಈ ಹಿಂದೆ ಬಂದಾಗ ಅವರ ವಾಸ್ತವ್ಯಕ್ಕಾಗಿ ಅದನ್ನು ಅವರಿಗೆ ಒಪ್ಪಿಸಿಬಿಟ್ಟಿದ್ದರು. ಆ ಮನೆಯಲ್ಲೇ ಒಂದು ಹಕ್ಕಿ ಮೊಟ್ಟೆಯಿಟ್ಟು ಒಂದು ಹಾವು ಹೊರಟುಬಂದದೆ!” + +“ಹಾಂ! ಏನದು?” + +“ಅದೇ ಹೇಳುತ್ತೇನೆ ಕೇಳಿ. ಈ ಶ್ಯಾನುಭಾಗರು ಇಲ್ಲಿಗೆ ಬಂದಾಗ ಅವರಿಗೆ ಯಾರೂ ದಾತಾರರಿರಲಿಲ್ಲ. ಮನೆಬಾಗಿಲು ಇರಲಿಲ್ಲ. ಕೈಯ್ಯಲ್ಲಿ ಕಾಸೂ ಇರಲಿಲ್ಲ. ಅವರು ಅವರ ಹೆಂಡತಿ – ಮತ್ತೊಂದು ವಿಧವೆ ತಂಗಿ ಈ ಮೂವರು ತಮ್ಮತಮ್ಮ ಮೈಕೈ ಮಾತ್ರ ಹಿಡಿದುಕೊಂಡು ಇಲ್ಲಿಗೆ ಬಂದವರು. ಇವರಿಗೆಲ್ಲಾ ನಮ್ಮ ಗೋಪಾಲಯ್ಯನವರೇ ಆಶ್ರಯಕೊಟ್ಟು ಉದ್ಧಾರ ಮಾಡಿದರು.” + +“ಎಲ್ಲಿಯಾದರೂ ಶ್ಯಾನುಭಾಗರ ಬಗೆಯವರಿಗೆ ಬೇರುಬಿಡಲು ಕಷ್ಟವಿದೆಯೆ?” + +“ಹಾಂ. ಇದು ಇನ್ನೂ ಸಾವಿರ ಸಾರಿ ಹೇಳಿರಿ. ಇಲ್ಲಿಗೆ ಮೊದಲು ಬಂದಾಗ ಶ್ಯಾನುಭಾಗರ ಹೆಂಡತಿ ಬಸುರಿ. ನಂತರ ಒಂದು ಗಂಡು ಕೂಸು ಇಲ್ಲೇ ಹುಟ್ಟಿತು. ಅದೇ ಸಮಯಕ್ಕೆ ನಮ್ಮೀ ರಾಯರಲ್ಲಿ ಹೆರುಗೆಯಾಗಿ ಮೊದಲಿನ ಮಗ ಈಗಿನ ವಕೀಲರು ಅವತಾರಮಾಡಿದರು. + +ಮಕ್ಕಳಿಬ್ಬರೂ ಒಟ್ಟೊಟ್ಟಿಗೆ ಬೆಳೆಯತೊಡಗಿದರು. ಶ್ಯಾನುಭಾಗರ ಮಗ ಹುಟ್ಟಿದ್ದೇನೋ ಅವರಲ್ಲಿ ಯಾದರೂ ಅವರ ಆರೈಕೆ ಎಲ್ಲಾ ಇಲ್ಲೇ ನಡೆಯುತ್ತಿತ್ತು. ಬೆಳಿಗ್ಗಿನ ಹಾಲು ಕುಡಿಯಲಿಕ್ಕೆ ಮಗು ಸೀದಾ ಇವರಲ್ಲಿಗೇ ಓಡಿಬರುತಿತ್ತು. ಅದು ತನ್ನ ಮನೆಯಲ್ಲಿ ಕುಡಿದ ನೀರಿಗಿಂತ ಹೆಚ್ಚು ಹಾಲನ್ನು ಇವರಲ್ಲಿ ಕುಡಿದಿದೆ. ನಮ್ಮ ರಾಯರೆಂದರೆ ಧರ್ಮರಾಯ! ಅವರ ಹೆಂಡತಿ ಅನ್ನಪೂರ್ಣಾದೇವಿ! + +ಈ ಎರಡು ಮಕ್ಕಳನ್ನೂ ಇಲ್ಲೆ ಒಂದು ಸಣ್ಣ ಶಾಲೆಯಲ್ಲಿ ಹಾಕುವವೇಳೆ ರಾಯರಿಗೆ ಮತ್ತೊಂದು ಹೆಣ್ಣು ಮಗು ಹುಟ್ಟಿತು. ಹೀಗೆ ಸಂಸಾರ ಸಾಗುತ್ತಿರುವಾಗ ಹಿರಿಮಕ್ಕಳು ಇಲ್ಲಿಯ ಶಾಲೆಯ ಪಾಠ ಮುಗಿದು ಪೇಟೆಗೆ ಹೋಗಬೇಕಾಯಿತು. ಆಗ ಪೇಟೆಯಲ್ಲಿ ಬಿಡಾರ ಇಟ್ಟಿದ್ದ ರಾಯರ ಭಾವನ ಮನೆಯಲ್ಲಿ ಈ ಇಬ್ಬರು ಹಾಡುಗರೂ ಬಿಡಾರ ಇಟ್ಟು ಕಲಿಯತೊಡಗಿದರು. + +ಶ್ಯಾನುಭಾಗರ ಮಗನ ಅಭ್ಯಾಸದ ಖರ್ಚು ರಾಯರ ಕಿಸೆಯಿಂದಲೇ ಹೋಗುತಿತ್ತೆಂದು ಬೇರೆ ಹೇಳಬೇಕಾಗಿಲ್ಲ ತಾನೆ! ರಾಯರು ಅಂತಹ ಸಣ್ಣ ವಿಚಾರಗಳನ್ನೆಲ್ಲಾ ಲೆಕ್ಕಹಾಕಿ ಕೆಲಸಮಾಡುವವರಲ್ಲ. ಈ ಶ್ಯಾನುಭಾಗರು ಅವರ ಸಂಸಾರ ಬಂದಣಿಕೆಯಂತೆ ರಾಯರ ಮನೆಯನ್ನೇ ಹೊಂದಿ ಬೆಳೆಯುತ್ತಿದ್ದುದರಿಂದ ಅವುಗಳ ವಿಷಯ ಚರ್ಚೆಯೇ ಬರಲಿಲ್ಲ. + +ಆಗ ರಾಯರ ಮಗಳು ಚಂದ್ರಾವತಿಯಮ್ಮನಿಗೂ ಹುಡುಗಾಟಿಕೆ ಕಳೆದು ಪೇಟೆಯಲ್ಲಿ ಓದಿಸಬೇಕಾಯಿತು. ಈ ಎಲ್ಲಾ ಜನರನ್ನು ತನ್ನ ಭಾವನ ಮನೆಯಲ್ಲಿ ಕೂಡಹಾಕುವುದು ಸರಿಯಲ್ಲವೆಂದು ಗೋಪಾಲಯ್ಯನವರು ತಾನೇ ಪೇಟೆಗೆ ಬಿಡಾರಸಾಗಿರುವ ಯೋಚನೆ ಮಾಡಿದರು. + +ಅದೇ ನಮ್ಮ ಶ್ಯಾನುಭಾಗರ ಪ್ರಸನ್ನಕಾಲ! ಈ ಮನೆಗೆ ಬಿಡಾರ ಇಟ್ಟು ರಾಯರು ಪೇಟೆಗೆ ಹೋದಮೇಲೆ ಆಗಾಗ ಮಾತ್ರ ಇಲ್ಲಿಗೆ ಬಂದು ಹೋಗುತ್ತಿದ್ದರು. ಮತ್ತೆ ಅವರ ವಹಿವಾಟಿನ ಸುಧಾರಣೆಯ ಭಾರವೆಲ್ಲ ಶ್ಯಾನುಭಾಗರ ಹೆಗಲಮೇಲೆಯೇ ಬಂದಿತು. ಅದರಿಂದಾಗಿ ಶ್ಯಾನುಭಾಗರಿಗೇನೂ ನಷ್ಟ ಬರಲಿಲ್ಲ. ಅವರ ಕಿಸೆ ಚೆನ್ನಾಗಿ ತುಂಬಿತಿದ್ದಿತು. ಅಂದಿಗೂ ಮಗನ ವಿದ್ಯೆಯ ಖರ್ಚನ್ನು ರಾಯರೇ ಹೊತ್ತು ಇವರೊಡನೆ ಕೇಳದಿದ್ದುದರಿಂದ ಅವರ ಹಣವೆಲ್ಲಾ ಬಡ್ಡಿಯ ಮೇಲೆ ಊರಕಡೆ ತಿರುಗುತಿದ್ದಿತೇ ಹೊರತು ಅನ್ಯಥಾ ಆಗಲಿಲ್ಲ. + +ಸ್ವಾಮಿ, ಪೇಟೆಯ ವಿಚಾರವೆಂದರೆ ಅದೇನು ಸಣ್ಣ ತಾಪತ್ರಯವೆ? ಕೂತದ್ದಕ್ಕೆ ಎದ್ದದ್ದಕ್ಕೆ ತಿರುಗಿದ್ದಕ್ಕೆ ಎಲ್ಲಾ ದುಡ್ಡು ಕೊಟ್ಟು ಹೆಜ್ಜೆ ಹೆಜ್ಜೆಗೂ ದುಡ್ಡು ಸುರಿಯಬೇಕು ತಾನೆ? ಅದರಲ್ಲೂ ಈಗಿನ ಹುಡುಗರೊ. ಮೇಲಾಗಿ ಏನೋ ಕೆಳಗಿನ ವಿದ್ಯೆ ಮುಗಿದು ಮುಂದೆ ಏನು ಕಲಿಯಬೇಕೂಂತ ಬಹಳ ಚರ್ಚೆ ಬಂದಿತಂತೆ. ನಂತರ ಎರಡು ಗಂಡುಗಳು ವಕಾಲತ್ತು ಪಾಸು ಮಾಡುವುದಂತ ನಿರ್ಣಯಿಸಿ ಹಾಗೆಯೇ ಮುಂದುವರಿಯುತ್ತಾ ಹೋಯಿತು. + +ಆಗಲಾಗ ರಾಯರ ಮಗಳು ಚಂದ್ರಮ್ಮನವರೇನು ಚಿಕ್ಕವರೆ? ಅದೂ ಪೇಟೆ ಸೇರಿದ ಮೇಲೆ ಹೇಗೆ ಕಡಿಮೆಯಾದೀತು? ಈ ಮೂವರು ಸಿನೇಮಾ ನಾಟಕ ಹೊಟೇಲುಗಳೆಂತ ಯಾವುದನ್ನೂ ಬಿಡದಿರುವಾಗ ಪ್ರಾಯಕ್ಕೆ ಬರುತ್ತಿದ್ದ ಹುಡುಗಿ; ಅದರ ವಿಚಾರ ಮನೆಯವರಿಗೆ ಏನೂ ಗೋಚರವಿರದಿದ್ದರೂ ಊರವರ ಕಣ್ಣು ಅವರ ಮೇಲೇಯಿರುತ್ತದೆ ನೋಡಿ! ಊರವರಿಗೆ ಕಣ್ಣು ಇರುವುದು ಅವರವರ ಹಿಂದೆ ನೋಡಿಕೊಳ್ಳಲಿಕ್ಕಲ್ಲ. ಹಿಂದೆ ನೋಡಿಕೊಳ್ಳಲು ಸಾಧ್ಯವೇ ಇಲ್ಲ. ದೇವರೇ ಹಾಗೆ ಮಾಡಿದ್ದಾನೆ. ಆದರೆ ತನ್ನ ಮುಂದೆ ಹೋಗುವವರ ವಿಷಯ ಬೇಕಾದ ಹಾಗೆ ತಿಳಿದುಕೊಂಡು ಹಿಂದಿನಿಂದ ನಾಲಗೆ ಉದ್ದ ಬಿಡಲು ನಮಗೆಲ್ಲಾ ಕಣ್ಣು ಇರುವುದು. ಅದರ ಉಪಯೋಗವನ್ನು ಯಥೇಷ್ಟ ಮಾಡಿಕೊಳ್ಳುವುದರಲ್ಲಿ ಯಾರದ್ದೂ ಅಡ್ಡಿಯಿಲ್ಲ. ಹಾಗೇನೇ ಆ ಶ್ಯಾನುಭಾಗರ ಮಗ – ಆ ಸುಟ್ಟವನ ಹೆಸರು ಸಹ ಈಗ ನನಗೆ ಮರೆತುಹೋಗಿದೆ. ಅವನೊಡನೆ ಬೆಳೆದ ಹೆಣ್ಣು ಮಗಳು ಅಡ್ಡಾಡುವುದು ಸಿನೇಮಾ ಗಿನೇಮಾ ನೋಡುವುದು ಇದಕ್ಕೆಲ್ಲಾ ಏನು ಅರ್ಥ ಕಟ್ಟಬಹುದು. ತೊಂದರೆಯಿಲ್ಲ. ಇನ್ನು ಕೆಲವರು ಅದಕ್ಕಾಗಿಯೇ ರಾಯರು ಆ ಹುಡುಗನನ್ನು ಸಾಕಿ ಬೆಳೆಸಿದ್ದಾರೆ. ಹೇಗೂ ಆ ಹೆಣ್ಣು ಆ ಹುಡುಗನಿಗೇನೇ ಗಂಟು – ಎಂತ ನಾಲಗೆ ಬೀಸುತಿದ್ದರು. ನಾಯಿ ಬಾಲ ಬೀಸಿದ ಹಾಗೆ! + +ಮೊದಮೊದಲಿಗೆ ರಾಯರು ಅವರ ಹೆಂಡತಿ ಸಹ ಇದರ ವಿಚಾರ ಹೆಚ್ಚು ಗಮನಕೊಡಲಿಲ್ಲ. ನಂತರ ಹಾಗೋ ಹೀಗೋ ಸಂದರ್ಭ ಬಂದಾಗ ಆ ಹುಡುಗ ಹುಡುಗಿ ತಾವೇ ತಾವೇ ಅಡ್ಡಾಡುತ್ತಾ ಗುಣುಗುಟ್ಟುತ್ತಿರುವಾಗ – “ಅದರಲ್ಲೇನೀಗ? ಎಲ್ಲಾ ದೇವರ ಇಷ್ಟದಂತೆ ನಡೆಯುತ್ತದೆ. ಹುಡುಗನಲ್ಲಿ ಏನೂ ಕೊರತೆಯಿಲ್ಲ. ಎಂದ ಮೇಲೆ ಆದರೂ ಆಗಬಹುದಲ್ಲಾ” ಎಂದುಕೊಂಡು ಸುಮ್ಮನಿರುತ್ತಿದ್ದರು. ಪಾಪ! ಇಂತಹ ಯೋಚನೆ ಬಂದಾಗಲೇ ಅದನ್ನು ಹೇಗಾದರೂ ಒಳ್ಳೆದರಲ್ಲೋ ಕೆಟ್ಟದರಲ್ಲೋ ಮುಗಿಸಿಬಿಡುತಿದ್ದರೆ ಎಷ್ಟು ಚೆನ್ನಾಗುತಿತ್ತು! ನಿಜವಾಗಿಯಾದರೆ ಕಲಿತವರು ಇಂತಹ ಸಂದರ್ಭದಲ್ಲೇ ಜಾರಿಬೀಳುವುದು. ನಾವು ಹಳ್ಳಿಯವರು ಹೀಗೆಲ್ಲ ಸುಲಭವಾಗಿ ಸಿಕ್ಕಿಬೀಳುವುದಿಲ್ಲ. ನಮಗೆ ಮೈಮೇಲೆ ಅಂಗಿ ಅರಿವೆಯೇ ಇರುವುದಿಲ್ಲ. ಆದುದರಿಂದ ನಮ್ಮ ನಮ್ಮ ದೋಷ ನಮಗೆ ಚೆನ್ನಾಗಿ ಕಂಡುಬಂದು ಅದಕ್ಕೆ ಕೂಡಲೇ ಮದ್ದುಮಾಡುತ್ತೇವೆ. ನೀವಾದರೆ ಅಂಗಿ ಕೋಟು ತೊಟ್ಟು ಲಾಟು ಬೂಟು ಹೊಡೆಯುವವರಿಗೆ ನಿಮ್ಮ ಕೋಟಿನ ಒಳಗಡೆ ಇರುವ ಕೊಳೆ ಕಂಡೇ ಬರುವುದಿಲ್ಲ!” + +ಆ ಹಳ್ಳಿಗನ ವೇದಾಂತಕ್ಕೆ ನಾನು ಬೆಚ್ಚುಬೆರಗಾದೆ. ಆದುದರಿಂದ ತುಸು ದೀರ್ಘವಾಗಿ ವಿಚಾರ ಮಾಡುತ್ತ ಮತ್ತೊಂದು ಸಿಗರೇಟು ಹೊತ್ತಿಸಿದೆನು. + +“ಸರಿ, ಈ ಪ್ರಕರಣ ಎಷ್ಟು ಬೆಳೆಯಿತೆಂದರೆ ಮೈಬೆಳೆದ ಹುಡುಗಿ ಇದ್ದ ಮನೆಗೆ ಯಾರೂ ಹುಡುಗಿ ಕೇಳಲು ಸಂಭಾವಿತರು ಬರಲೇಯಿಲ್ಲ. ಅದು ಹೇಗೂ ನಿಶ್ಚಯವಾದ ಸಂಬಂಧ ಎಂದುಕೊಳ್ಳುತ್ತ ಅವರವರು ಆ ಕಡೆಯೇ ಸರಿದುಹೋಗುತಿದ್ದರು. ಅದನ್ನಾರು ಅಲ್ಲಗಳೆದವರಿಲ್ಲ. ನಮ್ಮ ಈ ಶ್ಯಾನುಭಾಗರಂತೂ ಅದನ್ನೆ ಹೌದೆಂದು ಸಾರುತ್ತ ತಮ್ಮ ಕಿಸೆಯನ್ನು ಚೆನ್ನಾಗಿ ತುಂಬಿಸಿಕೊಳ್ಳುತಿದ್ದರು. ಇದರಿಂದಾಗಿ ನೀವೇನೂ ನಮ್ಮ ಚಂದ್ರಮ್ಮ ಅಷ್ಟು ದಿಂಡೆ ಎಂತ ಭಾವಿಸಬಾರದು. ಅದು ಅಷ್ಟು ನಾಜೂಕಾದ ಹೆಣ್ಣು. ಯಾರಾದರೂ ಒಮ್ಮೆ ಅದನ್ನು ಕಂಡರೆ ಅದರ ಕಾಲ ಬುಡದಲ್ಲೆ ಕುಳಿತುಕೊಳ್ಳಬೇಕು. ಆದರೆ ದಿನ ನಿತ್ಯ ನೋಡುವ ಹುಡುಗನ ಕಡೆ ಪ್ರಾಯದ ಕಣ್ಣು ವಾಲುವುದು ಎಷ್ಟೆಂದರೂ ಸಹಜವೇ! + +ಹೀಗಿರುವಾಗ ಆ ಎರಡು ಹುಡುಗರ ವಕೀಲಿ ಪರೀಕ್ಷೆ ಸಮ ಸಮವಾಗಿಯೇ ಮುಗಿಯಿತು. ಇಬ್ಬರೂ ಪಾಸುಮಾಡಿದರು. ಆಮೇಲೆ? ಇನ್ನಾದರೆ ನಮ್ಮ ಹುಡುಗಿಯ ಮದುವೆಯ ಪ್ರಸ್ತಾಪ ಮಾಡಬಹುದೆಂದು ರಾಯರು ಹೆಂಡತಿಯೊಡನೆ ಸೂಚಿಸಿದರು. ಅಂತೆಯೇ ಒಂದು ದಿನ ಶ್ಯಾನುಭಾಗರು ಬಂದಾಗ ಅದರ ಸೂಚನೆ ಬಂದಿತು. ಆದರೆ ಶ್ಯಾನುಭಾಗರ ಜಾತಿಗೂ ಗುಳ್ಳೆನರಿಗೂ ಏನೋ ಸಂಬಂದವಿದೆಯಂತೆ. ಆದುದರಿಂದ ಅವರು ಸಂದರ್ಭದ ಬೆಲೆಯನ್ನು ಮತ್ತಷ್ಟು ಹೆಚ್ಚಿಸುವುದಕ್ಕಾಗಿ –“ ಈಗ ಸ್ವಲ್ಪ ಸಮಯ ಹೋಗಲಿ. ನಮ್ಮ ಹುಡುಗ ಒಂದು ಸ್ವಂತ ಆಫೀಸುಮಾಡಿ ನಾಲ್ಕು ಕೈಕೋಟು ಸಿಕ್ಕಿಸಿಕೊಂಡು ಕೋರ್ಟಿಗೆ ಹೋಗಿ ನಾಲ್ಕು ಕಾಸು ಹೊಡೆಯುವಷ್ಟು ತರಬೇತಾಗಲಿ. ಅಲ್ಲವಾದರೆ ಎಷ್ಟು ದಿನ ನಿಮ್ಮ ಉದಾರತೆಗೆ ನಾವು ಉಪದ್ರಕೊಡುವುದು?” ಎಂದರು. + +ಬಹಳ ಚೊಕ್ಕವಾದ ಚೆಲೋ ಮಾತು! ಯಾರಾದರೂ ಸೈ ಎಂತಲೇ ತಲೆದೂಗಬೇಕು. ಆದುದರಿಂದ ರಾಯರ ಮನೆಯಲ್ಲಿ ಪರಮಾನ್ನ ತಿಂದು ಹೊಕ್ಕಿ ಹೊರಡುವುದಕ್ಕೆ ಶ್ಯಾನುಭಾಗರಿಗೇನೂ ತೊಂದರೆ ಬರಲಿಲ್ಲ. + +ಹೊಸ ವಕೀಲರಿಬ್ಬರೂ ರಾಯರ ಮನೆ ವಾರ್ತೆಯ ಹೆಸರುವಾಸಿಯಾದ ಹಳೆ ವಕೀಲರಲ್ಲಿ ತರಬೇತು ಹೊಂದಬೇಕೆಂದು ಮೊದಲು ನಿರ್ಣಯವಾಯಿತು. ಅಂತೆಯೇ ಒಂದು ಅಥವಾ ಎರಡು ತಿಂಗಳು ಹೋಯಿತೋ ಇಲ್ಲವೊ ಒಂದು ದಿನ ಶ್ಯಾನುಭಾಗರು ಬೆಳಿಗ್ಗೆ ಉದಯವಾಗಿ `ನೋಡಿ ರಾಯರೆ! ನಮ್ಮ ಹುಡುಗನಿಗೆ ಸಿವಿಲ್ ಏನೂ ತಲೆಗೆ ಹತ್ತುವುದಿಲ್ಲವಂತೆ. ಆದುದರಿಂದ ಕ್ರಿಮಿನಲ್ಲಿನಲ್ಲೇ ಸ್ವಲ್ಪ ಮುಂದರಿಸೋಣ ಎಂತ ಹೇಳುತ್ತಾನೆ. ಆದುದರಿಂದ ನಮ್ಮ ಕ್ರಿಮಿನಲ್ ಲಾಯರು ಲಕ್ಷ್ಮಣ ರಾಯರಲ್ಲಿ ಸ್ವಲ್ಪಹೋಗಿ ಬರುತ್ತಾಯಿರಲೋ ಎಂತ ನಿಮ್ಮ ಕೂಡೆ ಕೇಳಲಿಕ್ಕೆ ಹೇಳಿದ್ದಾನೆ’. + + + +`ಏಕೆ? ಅವನಿಗೇ ಕೇಳಬಹುದಿತ್ತಲ್ಲ? ಅದಕ್ಕೇನಡ್ಡಿ. ಸಿವಿಲ್ ಆದರೇನು ಕ್ರಿಮಿನಲ್ ಆದರೇನು?’ ಎಂದರು ನಮ್ಮ ಬೋಳೆ ಸ್ವಭಾವದ ಧರ್ಮರಾಯರು. + +`ನಮ್ಮ ಹುಡುಗನಿಗೆ ನಿಮ್ಮ ಎದುರು ನಿಂತು ಮುಖ ನೋಡುವುದೆಂದರೆ ಅಷ್ಟು ಭೀತಿ ನೋಡಿ! ಆದುದರಿಂದ ನಾನೇ ಬಂದೆ’ ಎಂದರು ವಿನಯವಾಗಿ ಶ್ಯಾನುಭಾಗರು. + +ಈ ನಯದ ಪರಿಣಾಮವಾಗಿ ಶ್ಯಾನುಭಾಗರ ಮಗ ಲಕ್ಷ್ಮಣ ರಾಯರಲ್ಲಿಗೆ ಕಾಲಿಟ್ಟನು. ಇವರಲ್ಲಿಗೆ ಕೆಲವೊಮ್ಮೆ ಬಂದು ಹೋಗುವುದೂ ನಿಂತುಬಿಡುತಿದ್ದಿತು. ಕೆಲವು ರಾತ್ರಿಗಳನ್ನು ಆ ವಕೀಲರಲ್ಲೇ ಕಳೆಯುತ್ತಿದ್ದನು. ಹೀಗಿರುವಲ್ಲಿ ಒಂದು ದಿನ ರಾತ್ರಿ ರಾಯರ ಮಗ ತಂದೆಯೊಡನೆ ಕೇಳಿದರು – `ಪಪ್ಪಾ! ನಮ್ಮ ಕ್ರಿಮಿನಲ್ ವಕೀಲರೇನು ಇತ್ತೀಚೆಗೆ ಬರುವುದು ಬಹಳ ಕಡಿಮೆ?’ + +`ಅದು ನಿನಗೇ ಗೊತ್ತು ಮಗ! ನಿನ್ನ ದೋಸ್ತಿಯಲ್ಲವೆ?’ + +“ದೋಸ್ತಿ ಹೇಗೂ ಬೇಕಾದಂತೆ ತಿರುಗಬಹುದು. ಆದರೆ ಇವತ್ತು ಸಂಜೆ ಅವನನ್ನು ಲಕ್ಷ್ಮಣರಾಯರ ದೊಡ್ಡ ಮಗಳೊಡನೆ ಸಿನೇಮಾಕ್ಕೆ ಹೋಗುವುದನ್ನು ಕಂಡೆ…” + +ರಾಯರು ದಿಗಿಲುಬಿದ್ದು ತನ್ನ ಹೆಂಡತಿಯ ಮುಖನೋಡಿದರು. ಆ ಪುಣ್ಯ ತಾಯಿ ಮನೆಯ ಮುಂದುಗಡೆಯ ಗೋಪಾಲಕೃಷ್ಣನ ಪಟದ ಕಡೆ ನೋಡಿ ದೇವರೇ ಗತಿ! – ಎಂದರು. + +ಆದರೆ ಈ ಕಲಿಯುಗದಲ್ಲಿ ದೇವರು ಸಹ ಸತ್ಯಸಂಧರ ಕೈಬಿಡುತ್ತಾನೆ! ಶ್ಯಾನುಭಾಗರ ಮಗ ರಾಯರಲ್ಲಿಗೆ ಕಾಲಿಟ್ಟು ಬರುತ್ತಿರಲಿಲ್ಲ. ಊರವರ ಮಾತು ಹಲವು ಹನ್ನೆರಡಾಗಿ ಹಬ್ಬಿತು. ಅದರ ಹೊಗೆಯಲ್ಲಿ ಪಾಪ! ಆ ಹೆಣ್ಣುಮಗಳು ಕಣ್ಣುಬಿಟ್ಟು ಬೀದಿಗಿಳಿಯದಂತಾಯಿತು! + +ಮೂರು ತಿಂಗಳ ನಂತರ ಒಂದು ರಾತ್ರಿ ಚಂದ್ರಮ್ಮ, ಆ ಮುದ್ದು ಚಂದ್ರಾವತಿಯಮ್ಮ, ಮಧ್ಯರಾತ್ರಿ ಕುಳಿತು ಕಿಟಿಕಿಟಿ ನಗುವುದರಲ್ಲಿ ಅಟ್ಟವೇ ಹಾರಿಹೋದಂತಾಯಿತು. ಅವಳ ಬಲಗೈಯಲ್ಲಿ ಎರಡು ತುಂಡು ಕಾಗದವಿತ್ತು. ಅದೇ ರಾಯರು ಹರಿದು ಬಿಸುಟ ಶ್ಯಾನುಭಾಗರ ಮಗನ ಮದುವೆಯ ಕಾಗದ! + +‘ಅಯ್ಯೋ ಪಾಪ!’ ಎಂದು ಆ ಮುದುಕನು ಬಹಳಹೊತ್ತು ಮೌನವಾಗಿ ಕುಳಿತು ಕಣ್ಣೀರು ಸುರಿಸತೊಡಗಿದನು. ನಾನು ಸುಮ್ಮನಿದ್ದು ಕೊನೆಗೆ –“ಮುಗಿಯಿತೇ?” ಎಂದೆನು. + +“ಮುಗಿಯುವುದೇ? ಹೇಗೆ ಮುಗಿಯಬೇಕು? ಹಾಲುಕೊಟ್ಟ ಪಾತ್ರದಲ್ಲಿ ಹೇತ ಆ ದುರ್ಬುದ್ಧಿ” ಆ ಹಳಬನ ಕಣ್ಣು ಕೆಂಡದಂತೆ ಕಾದು ಕೆಂಪೇರಿದ್ದಿತು. ಅದುದರಿಂದ ತಡವರಿಸುತ್ತ “ರಾಯರೆ! ಕ್ಷಮಿಸಬೇಕು. ನಾವು ಹಳ್ಳಿಯವರು, ಈ ಪೇಟೆಯವರ ರೀತಿನೀತಿ ನಮಗೆ ತಿಳಿಯದು. ನಮ್ಮ ಮಾತು ಬಹಳ ಒರಟು. ಆದರೆ ನ್ಯಾಯಕ್ಕೆ ನಮ್ಮ ಎದೆ ಹಾಸುಕಲ್ಲಿನಂತೆ ಯಾವಾಗಲೂ ತೆರೆದಿದೆ! ಯಾರು ಏನು ಮಾಡಿದರೂ ನೋಡುವ ದೈವ ಉಂಟು. ಆ ಹೆಣ್ಣುಮಗಳ ಗೋಳಿನ ಶಾಪ ಆ ಪ್ರಾಣಿಗೆ ತಟ್ಟದಿರಲಿಲ್ಲ. ಹೇಳುತ್ತೇನೆ ಕೇಳಿ. + +ಗೋಪಾಲಯ್ಯನವರು ಆರು ತಿಂಗಳು ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಹೋದರು. ಆದರೆ ಆ ಅಮ್ಮಣ್ಣಿ ತಲೆಗೆಟ್ಟಿದ್ದು ಸರಿಯಾಗಲಿಲ್ಲ. ಯಾವಾಗಲೂ ಮಂಕು ಕವಿದಂತಿತ್ತು. ಮತ್ತೆ ಬೇರೆ ಮದುವೆ ಮಾಡಿದರೆ ಸರಿಯಾದೀತೆಂದು ಭಾವಿಸಿ ಗಂಡು ಹುಡುಕಾಡತೊಡಗಿದರು. ಆದರೆ ಯಾರು ಬರಬೇಕು ಸ್ವಾಮಿ! ಆ ಹುಡುಗಿಯ ಗುಣ ಅವರಿಗೆ ಗೊತ್ತು – ನಮ್ಮೆಲ್ಲರಿಗೆ ಗೊತ್ತು. ದೇವರಾಣೆ! ಅದೇನೂ ಒಂದಿಷ್ಟೂ ಮಾನ ಮೀರಿ ಕೆಟ್ಟರಲಿಕ್ಕಿಲ್ಲ. ಆದರೆ ಈ ಮಾತನ್ನು ನಂಬುವವರಾರು? ಕಟ್ಟಕಡೆಗೆ ಪೇಟೆಯ ಮನೆಯಲ್ಲಿ ಮಗನನ್ನು ಇಟ್ಟು ಈ ಹಳ್ಳಿಯ ಮನೆಗೇ ಹೆಂಡತಿ ಮಗಳೊಂದಿಗೆ ಹೊರಟುಬಂದರು. + +ಮೂರು ತಿಂಗಳ ಮೇಲೆ ದೊಡ್ಡ ಗಂಡಾಂತರ ಬಂದುಹೋಯಿತು. ರಾಯರ ಮಗಳು ಮಧ್ಯರಾತ್ರಿ ಎದ್ದು ಬಾವಿಗೆ ಹಾರಿ ತೀರಿಹೋದಳು. ಆ ರಾತ್ರಿ ನಾವೆಲ್ಲಾ ಆ ಕಡೆ ಓಡಿದ್ದೆವು. ಆದರೆ ಅಯ್ಯೋ! ಬಾವಿಯ ದಂಡೆ ತಲೆಗೆ ತಾಗಿ ಆ ಹುಡುಗಿ ಚಿನ್ನದಂತಹ ಹುಡುಗಿ ತೀರಿಯೇ ಹೋದಳು! ಅಯ್ಯೋ – ದೇವರೆ! ನಾನು ನನ್ನ ಇದೇ ಹೆಗಲಮೇಲೆ ಕೂಡ್ರಿಸಿ ಕುದುರೆಯಾಡಿಸಿದ ಮಗು – ನನ್ನನ್ನು ಕಂಡಾಗಲೆಲ್ಲ ಎಷ್ಟು ಪ್ರೀತಿ! ಸಲುಗೆ! ಅಯ್ಯೋ! ಹೋಯಿತು ಸ್ವಾಮಿ-ಹೋಯಿತು!ಆ ಸಮಯ ಇದೇ ಶಾನುಭಾಗ ಹೆಣದ ಬಗ್ಗೆ ಏನೆಲ್ಲಾ ಪಿಕಲಾಟಮಾಡಿದ ಗೊತ್ತೆ? ಆದರೆ ಅದರ ಫಲ ಅವನ ತಲೆಯ ಮೇಲೆ ಬೀಳದೆ ಹೋಗಲಿಲ್ಲ. ಬೀಳುವಾಗ ಮಾತ್ರ ದೊಡ್ಡ ಬಂಡೆಕಲ್ಲಿಗಿಂತಲೂ ಭಾರವಾಗಿ ಬಿದ್ದೇಬಿಟ್ಟಿತು! + +ಶ್ಯಾನುಭಾಗರ ಮಗನಿಗೆ ಕರುಳು ಬಾತುಹೋಯಿತು. ಹೊಟ್ಟೆನೋವು – ಹೊಟ್ಟೆನೋವು! ಯಾವಾಗಲೂ ಅದೇ ರೋಗ. ಏನುಮಾಡಿದರೂ ನಿಲ್ಲಲಿಲ್ಲ. ಕಡೆಗೆ ಅದರ ಒಳಗಿನ ಪಟತೆಗೆಸಿ ನೋಡಿದಾಗ ಬಾರಿ ಹುಣ್ಣು ಅದೇನೋ ಹೇಳುತ್ತಾರೆ ನೋಡಿ- + +`ಕೆನ್ಸರಾ’- + +ಹಾಂ, ಅದೇ ನೋಡಿ. ಅದಕ್ಕೆ ಇಲ್ಲಿ ಮದ್ದೇಯಿಲ್ಲವಂತೆ. ನಿಜವಾಗಿಯೂ ಅದು ನಮ್ಮ ಅಮ್ಮಣ್ಣಿಯ ಶಾಪ! + +ಅಳಿಯನನ್ನು ಹಿಡಿದುಕೊಂಡು ವಕೀಲರು ಗಯನ ಹಾಗೆ ಮೂರು ಲೋಕ ಸುತ್ತಿ ಬಂದರು. ಆದರೆ ಇನ್ನೊಬ್ಬರಿಗೆ ಕೊಟ್ಟ ವಿಷ ತನ್ನ ಹೊಟ್ಟೆಯೊಳಗೇ ಎದ್ದು ಬಂದಿದೆ. ಆ ದ್ರೋಹ ಹೇಗೆ ಹೋಗಬೇಕು? ಕೊನೆಗೆ ಆಶೆ ಬಿಟ್ಟುಬಿಟ್ಟರು. ಹುಡುಗನನ್ನು ಇದೇ ಮನೆಗೆ ತಂದೆಯ ಬಳಿಗೆ ತಂದರು. ಮತ್ತೆ ಒಂದು ತಿಂಗಳಲ್ಲಿ ಅವ ನಾಯಿಯ ಹಾಗೆ ಕೂಗಿಕೂಗಿ ರಾಯರ ಕೈಕಾಲು ಹಿಡಿದು- + +“ಏನು? ಯಾವ ರಾಯರು?” + +ಇದೇ ರಾಯರು ಸ್ವಾಮಿ – ಧರ್ಮರಾಯರು! ‘ಎಲ್ಲವನ್ನೂ ನಾನು ಕ್ಷಮಿಸಿ ಬಿಟ್ಟಿದ್ದೇನೆ ಮಗ’ – ಎಂದುಬಿಟ್ಟರು ಇವರು. ಆದರೆ ಆ ಹೆಣ್ಣಿನ ಕಣ್ಣೀರು ಶಂಖ ಪಾಷಾಣವಾಗಿ ಅಲ್ಲಿ ಉಳಿದಿದೆಯಲ್ಲ? ಅದಕ್ಕೇನು ಮಾಡಬೇಕು? + +ಈ ಕಿರುದಾರಿ 10 ವರ್ಷಗಳ ಮೊದಲ ಇಲ್ಲಿ ಹಾಯ್ದು ಹೋಗುತ್ತಿರಲಿಲ್ಲ. ಆ ಕಡೆ ಬಳಸಿ ಹೋಗುತಿತ್ತು. ಓ ಅಲ್ಲೇ ಆ ಹಾಲುತಿಂದು ವಿಷಕಕ್ಕಿದ ಹಾವನ್ನು ತಂದು ಬೂದಿಮಾಡಿದರು. ನೋಡಿ ಅಲ್ಲೇ – ಎಂದು ಚಿಕ್ಕ ಕಲ್ಲನ್ನು ತೆಗೆದು ಮುಂದಿನ ಕಲ್ಲಿನ ರಾಶಿಯ ಮೇಲೆ ಆ ಮುದುಕ ಒಗೆದು ತೋರಿಸಿದನು.ಕಲ್ಲುತಾಗಿ ಅಲ್ಲಿ ಕಿಡುಹಾರಿತು. ಮುದುಕನು ಅದನ್ನೇ ನೋಡುತ್ತ – ‘ನೋಡಿ ಬೆಂಕಿ! – ಇನ್ನೂ ಅದರ ನಂಜು ತೀರಲಿಲ್ಲ!’ ಎಂದು ತಲೆದೂಗಿದನು. + +“ಮತ್ತೆ?” + +“ಮತ್ತೇನು? ಆ ಕೊಂಡಿ ಜಾತಿಯ ಶ್ಯಾನುಭಾಗ ನಂತರ ಒಂದೇ ತಿಂಗಳಲ್ಲಿ – ನೀವು ನಂಬಿದರೆ ನಂಬಿ ಸ್ವಾಮಿ – ಒಂದೇ ತಿಂಗಳಲ್ಲಿ ನಾಗರ ಹಾವು ಕಚ್ಚಿ ಸತ್ತು ಮಣ್ಣು ತಿಂದು ಹೋದ! ಅಬ್ಬಾ! ಹೆಣ್ಣಿನ ಕಣ್ಣೀರಿಗೆ ಯಾವುದು ಎಣೆಯುಂಟು ಸ್ವಾಮಿ? ಅದು ಈಶ್ವರನ ಪಾಶುಪತಾಸ್ತ್ರ! ಅಲ್ಲಿಗೆ ಸರ್ವನಾಶವಾಗಿ ಹೋಯಿತು. ಈ ಮನೆ ಖಾಲಿಯಾಯಿತು! ಆದರೆ..” + +`ಆದರೇನು? ಹೇಳು.’ + +“ಅಲ್ಲ, ನಿಮಗೆ ಈ ವಿಚಾರ ತಿಳಿದೇಯಿಲ್ಲವೇನು?” + +“ಇಲ್ಲ. ನನಗೂ ಶೇಖರನಿಗೂ ಇತ್ತೀಚಿನ ಬಳಕೆ. ಆದುದರಿಂದ..” + +ಸಹಜ, ಈ ದುಃಖದ ಕತೆಯನ್ನು ಅವರು ಯಾರೊಡನೆಯೂ ಬಿಚ್ಚಿ ಹೇಳುವುದಿಲ್ಲ. ಅದು ಅವರ ಮನಸ್ಸಿನಲ್ಲೇ ಕುದಿಯುತ್ತಿದೆ. ಅಷ್ಟೆ. + +ನಾನು ದೀರ್ಘವಾಗಿ ಉಸಿರುಬಿಟ್ಟು ಪಡುಗಡೆ ನೋಡಿದೆ. ಸಂಜೆಯು ಸಿಂಗಾರವಾಗಿ ಮೇಲೆದ್ದು ನಿಂತು ಯಾರನ್ನೋ ಅನುಸರಿಸಲು ಕಾದಂತೆ ಇದ್ದಿತು. ಇನ್ನು ಒಂದು ಗಳಿಗೆಯಲ್ಲಿ ಕತ್ತಲಾಗುವ ಸಂಭವವಿದೆಯೆಂದು ತಂಗಾಳಿ ಸಮೀಚೀನವಾಗಿ ಸಾರಿ ಹೇಳಿ ಸುಳಿಯತೊಡಗಿತು. ನಾನು ನೀರಿನೊಳಗೆ ಕಲ್ಲು ತುಂಬಿಸಿಕೊಂಡವನಂತೆ ಭಾರಭಾರವಾಗಿ ವಿಚಾರಗಳ ಸುಳಿಯಲ್ಲಿ ಮುಳುಗುತಿದ್ದೆನೆನ್ನುವಾಗ ಆ ಮುದುಕ ಮತ್ತೊಮ್ಮೆ `ಸ್ವಾಮೀ – ನಾವು ಗೋಪಾಲಯ್ಯನವರಲ್ಲಿಗೆ ತಾನೇ ಹೋಗುವುದು?’ ಎಂದನು. + +ನಾನು ಹೌಹಾರಿ ಎದ್ದು ನಿಂತು `ಹೌದಯ್ಯ ತಾತ! ಹೌದು ಸಹಜವಾಗಿಯೂ ಹೌದು!’ + +ಆತನೂ ಎದ್ದು ನಿಂತು ನಿಧಾನವಾಗಿ `ರಾಯರೇ! ಈ ಪ್ರಸ್ತಾಪವನ್ನು ಅವರ ಮನೆಯಲ್ಲಿ ತರಬೇಡಿರಿ.’ + +“ನಾನೇಕೆ ತರಬೇಕು?” + +“ಮತ್ತೆ ನೀವು ಶೇಖರಯ್ಯನವರ ತಂಗಿ ಆ ಚಲೋ ಹುಡುಗಿಯನ್ನು ಇನ್ನೂ ಕಂಡಿಲ್ಲವೇನು?” + +“ಇಲ್ಲ ನೋಡು.” + +“ಹಾಗಾದರೆ ಜಾಗ್ರತೆಯಾಗಿ ನೋಡಿರಿ. ಪಾಪ! ಆ ಮೊದಲಿನ ಸಂಗತಿ ನಡೆದಂದಿನಿಂದ ನಮ್ಮ ರಾಯರು ಹೆದರಿ ಹಪ್ಪಳವಾಗಿ ಹೋಗಿದ್ದಾರೆ. ಮದುವೆಯೆಂದರೆ ಮೂರು ಗಾವುದ ಹಾರುತ್ತಾರೆ! ಮತ್ತೆ ನಿಮಗೆ ಮದುವೆಯಾಗಿಲ್ಲ ತಾನೆ?” + +ನಾನು ಮಾತಾಡದೆ ಸುಮ್ಮನಿದ್ದೆ. + +“ಇಲ್ಲ ಸ್ವಾಮಿ! ಹೇಳಿಬಿಡಿ. ನಮಗೆ ಹಳ್ಳಿಯವರಿಗೆ ಅದರಲ್ಲೇನೂ ದಾಕ್ಷಿಣ್ಯವಿಲ್ಲ. ನಾವು ಹಾಗೆಲ್ಲ ಚಿಕ್ಕದರಲ್ಲಿ ಸಿಕ್ಕಿ ಬೀಳುವಂತೆಯೂ ಇಲ್ಲ. ಇನ್ನೂ ನಿಮಗೆ ಮದುವೆಯಾಗಿರದಿದ್ದರೆ ಸರಿಯಾಯಿತು. ಆಗಿದ್ದರೆ ಆ ಹುಡುಗಿ ನಿಮ್ಮ ತಂಗಿ ನನ್ನಾಣೆ!” + + + +ನನಗೆ ಅವನ ಮಾತು ಕೇಳಿ ಹಿಡಿಸಲಾರದಷ್ಟು ನಗೆಬಂದಿತು. ಅವನು ಕೊಂಚ ವ್ಯಸ್ತನಾಗಿ `ನೀವೆಲ್ಲ ಪ್ರಾಯದ ಹುಡುಗರು ನಗಬಹುದು. ಹೀಗೆಲ್ಲ ನಕ್ಕು ನಕ್ಕು ಒಡನಾಡಿದವರು ನಂತರ ಹೊಗೆಯಾದುದನ್ನೇ ನಾನೇ ನನ್ನ ಕಣ್ಣಾರೆ ಇಲ್ಲಿ ಕಂಡಿದ್ದೇನೆ. ಅಂತಹ ಅನುಭವದ ಮೇಲಿಂದ ನಾನು ಈ ಮಾತು ಹೇಳುತ್ತಿದ್ದೇನೆ ಸ್ವಾಮಿ. ಬೇಸರಮಾಡಬೇಡಿ.’ ಎಂದು ಮತ್ತೊಂದು ಗುಂಡುಕಲ್ಲನ್ನು ಆ ಕಲ್ಲು ರಾಶಿಯ ಮೇಲೆ ಎಸೆದು ಬಿಟ್ಟನು. + +ಕತ್ತಲಾಗುತ್ತ ಬರುತ್ತಿದ್ದ ಆ ವೇಳೆಯಲ್ಲಿ ಅದರ ಕಿಡಿಯು ಮತ್ತಷ್ಟು ಜ್ವಲಂತವಾಗಿ ಕಂಡಿತು! + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_37.txt b/Kenda Sampige/article_37.txt new file mode 100644 index 0000000000000000000000000000000000000000..682656ef32f5817f59cdf9862194f8a5591ff704 --- /dev/null +++ b/Kenda Sampige/article_37.txt @@ -0,0 +1,23 @@ +ವಾರಾಹಿ ನದಿ ಯೋಜನೆಯಿಂದಾಗಿ ಮುಳುಗಡೆಯಾದ ಊರುಗಳ ಜನರ ನೋವಿನ ಕಥನ ಪ್ರಭಾಕರ ಕಾರಂತರ “ಮುಳುಗಡೆ ಒಡಲಾಳ”. ವಾರಾಹಿ ನದಿ ಹರಿವಿನ ಪ್ರದೇಶವು ದಟ್ಟ ಹಸಿರು ಕಾನನದ ಅತ್ಯಮೂಲ್ಯವಾದ ಮರಗಳು, ಜೀವನೋಪಾಯಕ್ಕೆ ಸಮೃದ್ಧವಾಗಿ ಪೂರಕವಾಗಿದ್ದ ಕಾಡುತ್ಪನ್ನಗಳು, ಅಸಂಖ್ಯ ವಿಧವಿಧದ ಮೃಗ-ಪಕ್ಷಿಗಳು ಎಂದು ಜೀವ ವೈವಿಧ್ಯತೆಯಿಂದ, ಸುಂದರ ಜಲಪಾತಗಳಿಂದ ನಿಸರ್ಗ ಬರೆದ ವರ್ಣಚಿತ್ರದಂತಿದ್ದ ಪ್ರದೇಶವಾಗಿತ್ತು. ಈ ಪ್ರಕೃತಿ ರಮ್ಯ ಸ್ಥಳದಲ್ಲಿ ವಾಸಿಸುತ್ತಿದ್ದ ಜನರಾದರೂ ಹರಿವ ನೀರಿನ ತಂಪಿನಂತೆಯೇ ತಣ್ಣಗೆ ತಮ್ಮ ಬದುಕನ್ನು ಶಾಂತವಾಗಿ ಸಂತೃಪ್ತಿಭರಿತವಾಗಿ ರೂಪಿಸಿಕೊಂಡಿದ್ದವರು‌. ಪರಸ್ಪರರಲ್ಲಿ ಸೌಹಾರ್ದತೆ, ಸ್ನೇಹ, ಸಾಂಪ್ರದಾಯಕ ಜೀವನ ಶೈಲಿ, ಹಬ್ಬಗಳು, ಹುಲಿವೇಷ, ಕೋಲಾಟ, ಅಂಟಿಗೆ ಪಂಟಿಗೆ, ವಾದ್ಯ ತಂಡಗಳು, ಇಸ್ಪೀಟು ಮಂಡಲಗಳು, ಸಂಭಾವನೆ ಭಟ್ಟರುಗಳು, ಕಮಲಶಿಲೆ ಯಕ್ಷಗಾನ ಮೇಳದ ಆಟಗಳ ಸಂಭ್ರಮ, ಕೊನೆಗೆ ಪರಸ್ಪರರ ಜಗಳಗಳು ಕೂಡ ಬದುಕಿನ ಅವಿಭಾಜ್ಯ ಅಂಗವೆಂಬಂತೆ ಸಂತೃಪ್ತ ಬಾಳು ಬಾಳುತ್ತಾ ಪ್ರಕೃತಿ ಮಾತೆಯ ಮಡಿಲ ಮಕ್ಕಳಂತೆ ನೆಮ್ಮದಿಯಿಂದ ಬಾಳುತ್ತಿದ್ದವರು. ಈ ಭಾಗದ ಪ್ರಭಾವಿ ಶೀರ್ನಾಳಿ ಮನೆತನ ಸುತ್ತಮುತ್ತಲಿನವರೆಲ್ಲರ ಗೌರವಾದರಗಳಿಗೆ ಪಾತ್ರವಾಗಿತ್ತು. ಎತ್ತಿನ ಗಾಡಿಗಳೇ ಬದುಕಿನ ಲಕ್ಷುರಿಯಾಗಿದ್ದವು. + +(ಎಂ. ಎಂ. ಪ್ರಭಾಕರ ಕಾರಂತ್) + +ಕೃತಿಯ ಪ್ರಾರಂಭದಲ್ಲಿ ಪ್ರಭಾಕರ ಕಾರಂತರು ವಾರಾಹಿ ಸಮೀಪದ ತಮ್ಮ ಊರು ಮರಸೂರು ಮತ್ತು ಅದರ ಸಮೀಪದ ದೊಡ್ಡಿನಮನೆ ಜಡ್ಡು, ಇವುಗಳ ಚಿತ್ರಣ ನೀಡುತ್ತಾ, ತಮ್ಮ ತಂದೆ ದೊಡ್ಡಿನಮನೆ ಜಡ್ಡುವಿನಲ್ಲಿ ಶಾಲೆ ಪ್ರಾರಂಭಿಸುವುದರೊಂದಿಗೆ ಮುಂದೆ ಅಂಗಡಿ ಹೋಟೆಲು ಯುವಕಸಂಘ ಇತ್ಯಾದಿಗಳು ತಲೆಯೆತ್ತುತ್ತಾ ಅದೊಂದು ಚಟುವಟಿಕೆ ಪುಟಿಪುಟಿವ ಊರಾಗಿ ರೂಪುದಳೆಯುವುದನ್ನು ಆಪ್ತವಾಗಿ ಚಿತ್ರಿಸುತ್ತಾರೆ. ಆ ಪ್ರದೇಶ, ಅಲ್ಲಿನ ಜನರು, ಅವರ ಬಾಳುವೆಯ ಶೈಲಿಯನ್ನು, ಪರಿಸರವನ್ನು ನೆನಪಿನಾಳದಿಂದ ಹೆಕ್ಕಿ ತೆಗೆದು ನೂರಾರು ಜನರನ್ನು ಹಳ್ಳಿಗಳನ್ನು ಕಲ್ಪನೆ ಅಲಂಕಾರಗಳ ಮೆರುಗಿಲ್ಲದೆ ವಾಸ್ತವಿಕವಾದ ಚಿತ್ರಣಗಳನ್ನು ನೈಜ ಘಟನೆಗಳಿಂದ ದಾಖಲಿಸುತ್ತಾ ಹೋಗುತ್ತಾರೆ. ತಣ್ಣಗೆ ಮೌನವಾಗಿದ್ದು ಮುಂದೆ ಕಾಯಕಲ್ಪ ಪಡೆದಿದ್ದ ಅದೇ ದೊಡ್ಡಿನಮನೆ ಜಡ್ಡು ಊರಿಗೆ ಊರೇ ಇಡಿಯಾಗಿ ನೀರಿನಲ್ಲಿ ಮುಳುಗಿ ಹೋಗುವುದು ಮುಂದಿನ ಅಧ್ಯಾಯಗಳಲ್ಲಿ ಲೇಖಕರು ವಿವರಿಸುವ ಮುಳುಗಡೆಗೊಳಗಾದ ಅಂತಹ ಹಲವು ಸ್ಥಳಗಳಿಗೆಲ್ಲಾ ಸಾಂಕೇತಿಕವಾಗಿದೆ ಎಂದು ಪರಿಗಣಿಸಬಹುದು. ಹೀಗೆ ಊರು ಬೆಳೆದುದನ್ನೂ ಕಣ್ಮುಂದೇ ಅವು ಅಳಿದುದನ್ನೂ ನೋಡಿದ ನತದೃಷ್ಟ ತಾನು ಎಂದು ಮರುಗುತ್ತಾ ಪರಿತಪಿಸುವಾಗ ಓದುಗರೂ ಅವರೊಂದಿಗೆ ನಿಟ್ಟುಸಿರಿಡುವಂತಾಗುತ್ತದೆ. + +ಮುಳುಗಡೆ ಬರಿಯ ಭೂಮಿಯ ಕಾಡಿನ ಮುಳುಗಡೆಯಲ್ಲ. ಅಲ್ಲಿ ಬದುಕಿ ಬಾಳಿದ ಜನರು ತಮ್ಮದೇ ಜೀವನ ಶೈಲಿ, ಆಪ್ತ ಬಾಂಧವ್ಯ, ಪ್ರಕೃತಿಯೊಂದಿಗಿನ‌ ಒಡನಾಟ, ಸಾಕುಪ್ರಾಣಿಗಳೊಂದಿಗೆ ಬೆಸೆದಂತಹ ಬದುಕು, ಕೃಷಿ ಇವೆಲ್ಲವನ್ನೂ ಒಳಗೊಂಡು ಒಂದು ಸಂಸ್ಕೃತಿಯನ್ನೇ ಪೋಷಿಸಿಕೊಂಡು ಬಂದಿರುತ್ತಾರೆ. ಅಭಿವೃದ್ಧಿಯ ಕಾರಣಕ್ಕಾಗಿ ಆಗುವ ಮುಳುಗಡೆ ಈ ಎಲ್ಲ ಮಾನವೀಯ ಬಂಧಗಳನ್ನು, ಭಾವನಾತ್ಮಕ ಬೆಸುಗೆಗಳನ್ನು, ಜೀವನ ಶೈಲಿಯನ್ನು, ಜನರು ರೂಪಿಸಿಕೊಂಡ ಸಂಸ್ಕೃತಿಯನ್ನು ನುಂಗಿ ನೊಣೆದು ನೀರು ಕುಡಿಯುವುದು ಬೆಲೆ ಕಟ್ಟಲಾಗದ ಒಂದು ನಷ್ಟವೇ ಸರಿ. + +ಊರ ಜನರು ವಾರಾಹಿಗೆ ಡ್ಯಾಂ ಕಟ್ಟಿ ತಮ್ಮ ಊರು ಮುಳುಗಡೆಯಾಗುತ್ತದೆ ಎಂಬುದನ್ನು ಪ್ರಾರಂಭದಲ್ಲಿ ಕಲ್ಪಿಸಿಕೊಳ್ಳಲಾಗದಷ್ಟು ಮುಗ್ಧರಾಗಿದ್ದವರು. ನೋಡನೋಡುತ್ತಿದ್ದಂತೆ ಜಾಗ ಗುರ್ತಿಸುವಿಕೆ, ಕಾಡು ಕಡಿತಲೆ, ಬಂಡೆ ಬ್ಲಾಸ್ಟ್, ಲಾರಿ ಸಂಚಾರ ಆರಂಭವಾದಾಗಲೇ ತಾವು ಕೇಳಿದ್ದ ಮುಳುಗಡೆ ಖಚಿತ ಎಂಬುದರ ಅರಿವಾದವರು. ಕೃಷಿಯ ವಿನಃ ಬೇರೆ ಕೆಲಸ ಗೊತ್ತಿಲ್ಲದ ಎರಡು ಸಾವಿರದ ಇನ್ನೂರು ಕುಟುಂಬಗಳ ಇಪ್ಪತ್ತು ಸಾವಿರ ಮುಗ್ಧ ಗ್ರಾಮೀಣ ಜನರು ತಾವು ಮುಳುಗಡೆಗೊಳಗಾಗಲಿರುವವರೆಂಬುದರ ಅರಿವಾದಾಗ ಕಂಗಾಲಾದರು. ಕೆಲವರು ಕಾಯಿಲೆಗೆ, ಮನೋ ವೈಕಲ್ಯಕ್ಕೆ ಒಳಗಾದರು. ಹಲವರು ಆತ್ಮಹತ್ಯೆಗೂ ಶರಣಾದರು. ಮನೆಮಾರು ತೋಟ ಗದ್ದೆ ಜಾನುವಾರುಗಳನ್ನೆಲ್ಲ ತೊರೆದು ಹೋಗಬೇಕಾದರೂ ಎಲ್ಲಿಗೆ ಮುಂದೇನು ಮಾಡಬೇಕು ಎಂದೇ ತೋಚದೆ ದಿಕ್ಕೆಟ್ಟರು. ಈ ದಿಗಿಲು ಆ ತಲೆಮಾರಿನ ಜನರ ಬದುಕಿನ ನೆಮ್ಮದಿಗೇ ಸಂಚಕಾರ ತಂದಿತ್ತು. + + + +ಪರಿಹಾರವಾಗಿ ದೊರೆಯಲಿದ್ದ ಹಣವನ್ನು ಪಡೆಯುವುದೇನು ಸುಲಭದ ಸಂಗತಿಯಾಗಿರಲಿಲ್ಲ. ಮುಗ್ಧ ಜನ ತಮಗೆ ಬರಬೇಕಾದುದಷ್ಟನ್ನೇ ನ್ಯಾಯಯುತವಾಗಿ ಕೇಳಿದ್ದರು. ಕೇಳುವಾಗ ಜಾಸ್ತಿ ಕೇಳಬೇಕೆಂಬ ಲೋಕ ಜ್ಞಾನವೂ ಇಲ್ಲದ ಪ್ರಾಂಜಲ ಮನದವರು. ಕೇಳಿದ್ದ ಅರ್ಧದಷ್ಟು ಕೂಡ ಸಿಕ್ಕಿಲ್ಲದ ಪಡಿಪಾಟಲಿಗೊಳಗಾದರು. ಹಾಗೆ ಸಿಕ್ಕಿದ್ದರಲ್ಲೂ ಭ್ರಷ್ಟ ಅಧಿಕಾರಿಗಳಿಗೆ ಪಾಲು ಕೊಡಲೇಬೇಕಿದ್ದ ಸನ್ನಿವೇಶಗಳು. ಮುಳುಗಡೆ ಜನರು ಬೇರು ಕಿತ್ತ ಮರದಂತೆ ತತ್ತರಗೊಂಡು ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ ಎಂಬುದರ ಕಿಂಚಿತ್ತೂ ಅರಿವಿಲ್ಲದೆ ಪರಿಹಾರದ ಹಣ ಸಂದಾಯ ಮಾಡಲು ಜನರನ್ನು ಪೀಡಿಸುತ್ತಾ ಕೊನೆಗೂ ದಾನ ಕೊಟ್ಟಂತೆ ಕೊಟ್ಟಂತಹ ಸಂವೇದನಾರಹಿತ ಅಧಿಕಾರಿಗಳು. ಹಾಗೆ ಪರಿಹಾರದ ಹಣ ಪಡೆಯಲು ಕೂಡ ಹೋರಾಟಗಳನ್ನೇ ಮಾಡಬೇಕಾಗಿ ಬಂದಂತಹ ಸಂದರ್ಭಗಳು ಸಾಕಷ್ಟು. ಕಾನೂನು ಓದಿದ್ದ ಕಾರಂತರು ಇಂತಹ ಅನೇಕ ಸನ್ನಿವೇಶಗಳಲ್ಲಿ ಊರುಮನೆಯವರಾದ ಸಂತ್ರಸ್ತರಿಗೆ ಸಹಾಯಕರಾಗಿ ನಿಂತು ಅವರಿಗೆ ಬರಬೇಕಿದ್ದ ಹಣ ಪಡೆದುಕೊಳ್ಳಲು ಸಹಾಯ ಹಸ್ತ ಚಾಚಿದ್ದ ಹಲವಾರು ಸಂದರ್ಭಗಳಿದ್ದು, ಇದಕ್ಕಾಗಿ ಅವರು ಅಧಿಕಾರಿಗಳ ಅವಕೃಪೆಗೂ ಪಾತ್ರರಾಗುತ್ತಾರೆ. ಆದರೆ ಹುಟ್ಟೂರು ಬಿಟ್ಟಮೇಲೂ ಅಲ್ಲಿನ ಮಂಡಲ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಎದುರಾಳಿಗಳು ಜಾತಿಯ ವಿಷಬೀಜ ಬಿತ್ತಲು ಮಾಡಿದ್ದ ಪ್ರಯತ್ನಗಳನ್ನೂ ಮೀರಿ ಊರವರು ನಿರ್ಮಲ ಮನದಿಂದ ಇವರಿಗೆ ಗೆಲುವಿನ ಉಡುಗೊರೆ ನೀಡಿ ತಾವು ಪಡೆದಿದ್ದ ಸಹಾಯಕ್ಕೆ ಕೃತಜ್ಞತೆ ತೋರಿದ್ದರು. + +ಮುಳುಗಡೆಗೊಳಗಾದ ಜನರು ಪರಿಹಾರದ ಹಣ ಪಡೆದು ಬೇರೆಡೆಗೆ ನೆಲೆ ನಿಲ್ಲಲು ಹೋದಾಗ, ಆ ಊರಿನ ನೆರೆಯವರು, ಊರವರು ದಾರಿಗಾಗಿ ನೀರಿಗಾಗಿ ಬೇಲಿಗಾಗಿ ಕಿರುಕುಳ ನೀಡುತ್ತಾ ಜಗಳ ಮಾಡುತ್ತಾರೆ. ಅವರಿಗೆ ಬದುಕು ಸಮಸ್ಯೆಗಳನ್ನು ಮುಂದಿಡುತ್ತಲೇ ಇತ್ತು. ಪರಿಹಾರದ ಹಣ ಕೈಗೆ ಬರುತ್ತಲೇ ಕೆಲವರು ಕೃಷಿ ವಿಚಾರ ಕೈಬಿಟ್ಟು ಬಸ್ ಅಂಗಡಿ ಹೋಟೆಲ್ ತೆರೆದಿದ್ದು ಅಭ್ಯಾಸವಿಲ್ಲದ ಈ ಉದ್ಯಮಗಳಲ್ಲಿ ಕೈಸುಟ್ಟುಕೊಂಡಿದ್ದರು. ಬಡ್ಡಿ ಆಸೆಗೆ ಬಿದ್ದು ಇದ್ದ ಹಣವನ್ನೆಲ್ಲ ಕಳೆದುಕೊಂಡಿದ್ದರು. ಕೆಲವರು ಅಂದಾದುಂದಿ ವೆಚ್ಚಮಾಡಿ ಸಾಲಗಾರರಾಗಿ ಬರಿಗೈಯಾದರು. ಇಷ್ಟಾಗಿಯೂ ನಾಲ್ಕು ದಶಕಗಳ ನಂತರವೂ ಇನ್ನೂ ಪರಿಹಾರದ ಹಣ ಬರದಿರುವ ಪ್ರಸಂಗಗಳೆಷ್ಟೋ ಇವೆ ಎನ್ನುತ್ತಾರೆ ಲೇಖಕರು. ವರ್ಷಗಳುರುಳಿದಂತೆ ಅಂತೂ ಹೇಗೋ ಒಂದೆಡೆ ನೆಲೆ ನಿಂತು ಕ್ರಮೇಣ ಊರವರ ಪ್ರೀತಿಗೂ ಪಾತ್ರರಾದರಾದರೂ ಎದೆಯಲ್ಲಿ ಅಚ್ಚೊತ್ತಿ ನಿಂತ ತಮ್ಮ ಮೂಲನೆಲೆಯಾಗಿದ್ದ ವಾರಾಹಿ ಹರಿವಿನ ಆ ಪ್ರದೇಶದ ಆಪ್ತ ಚಿತ್ರಣ‌ ಇನ್ನು ನೋಡಲು ಕೂಡ ಸಿಗದೆಂಬ ವೇದನೆ ಮಾತ್ರ ಸದಾ ಜ್ವಲಂತವಾಗಿರುತ್ತದೆ. + +ಮುಳುಗಡೆ ಪೂರ್ವದ ತಮ್ಮೂರು ಮತ್ತು ಸುತ್ತಮುತ್ತಲಿನ ಜನರಲ್ಲಿ ಹಲವಾರು ವ್ಯಕ್ತಿ ಚಿತ್ರಣಗಳ ಕುರಿತ ಅಧ್ಯಾಯಗಳಿವೆ. ಘಟ್ಟದ ಕೆಳಗಿಂದ ಬಂದಿದ್ದ ಕುಡುಬಿ ಜನಾಂಗದ “ಪುರುಷನಾಯ್ಕ” ಅಧ್ಯಾಯ ಮನಸ್ಸನ್ನು ಆರ್ದ್ರವಾಗಿಸುತ್ತದೆ. ತನ್ನ ತುಂಟತನ ಕೀಟಲೆಗಳಿಂದ ಜನರನ್ನು ಮಂಗ ಮಾಡುತ್ತಿದ್ದ “ಊರ ಹೀರೋ ಸೋಮ” ನಗುವುಕ್ಕಿಸುತ್ತದೆ. “ಸಾವಿತ್ರಮ್ಮನವರು” ಅಧ್ಯಾಯದ ಸಾವಿತ್ರಮ್ಮನ ದಿಟ್ಟತನ, ವೈಚಾರಿಕತೆ, ಕ್ರಿಯಾಶೀಲತೆ ನಮ್ಮನ್ನು ಚಕಿತಗೊಳಿಸುತ್ತದೆ. “ನಿಗರ್ವಿ ಕೃಷ್ಣಮೂರ್ತಿ” ಅಧ್ಯಾಯ ಬದುಕಿಗೆ ಭರವಸೆ ಮೂಡಿಸುತ್ತದೆ. + + + +ಮುಳುಗಡೆಯಾದ ನಾಲ್ಕು ದಶಕಗಳ ನಂತರದಲ್ಲೂ ಲೇಖಕರು ಆಗಿನ ಜನರು, ಅವರವರ ಬಾಂಧವ್ಯ ಊರು ಹಳ್ಳಿಗಳ ಕರಾರುವಾಕ್ಕಾದ ಚಿತ್ರಣವನ್ನು ನೆನಪಿನ ಆಧಾರದಿಂದ ಹೇಳಿರುವುದು ಅಚ್ಚರಿ ಮೂಡಿಸುತ್ತದೆ. ಆದರೆ ಈ ಸುದೀರ್ಘ ಕಾಲದ ಅಂತರವು ನಿರ್ಮಮತೆಯಿಂದ ನಿರುಕಿಸಬಲ್ಲ ಸಾಮರ್ಥ್ಯ ನೀಡಿ ವಸ್ತುನಿಷ್ಠತೆಯ ನಿರೂಪಣೆಗೆ ಸಹಾಯಕವಾಗಿದೆ. ಒಂದು ರೀತಿಯಲ್ಲಿ ಮುಳುಗಡೆ ಪೂರ್ವದ ನಿರುಮ್ಮಳ ಸ್ಥಿತಿ, ಮುಳುಗಡೆಯ ಹಂತದ ತವಕತಲ್ಲಣಗಳ ತುರೀಯಾವಸ್ಥೆ, ಮುಳುಗಡೆ ನಂತರದ ಪಡಿಪಾಟಲುಗಳು, ಕೊನೆಗೂ ಮನದಲ್ಲಿ ನೆಲೆನಿಂತ ಊರ ಕುರಿತ ವಿಷಾದ, ಅಂದಿನ ಮಲೆನಾಡು, ಮಲೆನಾಡಿಗರ ಜನಜೀವನ ಶೈಲಿ ಇವೆಲ್ಲದಕ್ಕೂ ಒಂದು ಅಧಿಕೃತತೆ ತಂದುಕೊಟ್ಟಿದೆ ಈ ವಸ್ತುನಿಷ್ಠತೆ. ಹಿರಿಯ ಸಾಹಿತಿ ಶರತ್ ಕಲ್ಕೋಡರ ಸುದೀರ್ಘ ಮುನ್ನುಡಿಯ ಈ ಪುಸ್ತಕದ ಲೋಕಾರ್ಪಣೆಯನ್ನು ಕೂಡ ಕಾರಂತರು ಮುಳುಗಡೆ ಪ್ರದೇಶದಲ್ಲಿದ್ದು ಮುಳುಗಡೆಯಾಗದೆ ಉಳಿದುಕೊಂಡ ಸಂಚಾರ ಸಂಪರ್ಕ ವ್ಯವಸ್ಥೆಯಿಲ್ಲದ ನಿರ್ಜನ ಪ್ರದೇಶ ಎನ್ನಬಹುದಾದ ಮೇಲುಸುಂಕ ಎಂಬಲ್ಲಿನ ಅಂದಿನ ಜನರ ಆರಾಧ್ಯ ದೈವವಾಗಿದ್ದ ದುರ್ಗಾಪರಮೇಶ್ವರಿ ದೇಗುಲದಲ್ಲಿ ನೆರವೇರಿಸಿ ನೂರಾರು ಮಂದಿ ನಾಡಿನಾದ್ಯಂತದಿಂದ ಬರುವಂತೆ ಮಾಡಿದ ಸಾಹಸಕ್ಕೆ ಕಾರಣರಾದರು. + +ಉಮಾದೇವಿ ನಿವೃತ್ತ ಉಪನ್ಯಾಸಕಿ. ಹಲವು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟಗೊಂಡಿವೆ. “ಮುಂಬೆಳಕಿನ ಮಿಂಚು”, “ಮಕ್ಕಳಿಗಿದು ಕಥಾ ಸಮಯ”, “ಮುಳ್ಳುಬೇಲಿಯ ಹೂಬಳ್ಳಿ”, ಬಾನಾಡಿ ಕಂಡ ಬೆಡಗು, “ಗ್ರಾಮ ಚರಿತ್ರ ಕೋಶ” ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_370.txt b/Kenda Sampige/article_370.txt new file mode 100644 index 0000000000000000000000000000000000000000..ecf9b540d08ecf2e5fd3bca75c9151e86c392da1 --- /dev/null +++ b/Kenda Sampige/article_370.txt @@ -0,0 +1,115 @@ + + +ಕಸಗುಡಿಸುವ ಹುಡುಗ ಬಾಗಿಲಿಗೆ ನೇತುಹಾಕಿದ್ದ ಪರದೆಯ ಮೇಲೆ ನೀರೆರೆಚಿದ. ಒಂದು ಕ್ಷಣ ಗಾಳಿ ತಣ್ಣಗಾಯಿತು. + +ನಾನು ನನ್ನ ಮಂಚದ ತುದಿಯಲ್ಲಿ ಕುಳಿತು ತೆರೆದ ಕಿಟಕಿಯನ್ನೇ ನಿಟ್ಟಿಸುತ್ತಿದ್ದೆ. ಧೂಳು ತುಂಬಿದ ರಸ್ತೆ ಮಧ್ಯಾಹ್ನದ ಉರಿಬಿಸಿಲಿಗೆ ಹೊಳೆಯುತ್ತಿತ್ತು. + +ಕಾರೊಂದು ಅಲ್ಲಿಂದ ಸಾಗಿ ಹೋಯಿತು. ಅದು ಎಬ್ಬಿಸಿದ ಧೂಳು ಬಾಗಿದ ಮೋಡಗಳಲ್ಲಿ ಹಬ್ಬಿತು. + +ನನ್ನ ತಂದೆ ಮಲೇರಿಯಾದಿಂದಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಕಾರಣ ನನ್ನನ್ನು ನೋಡಿಕೊಳ್ಳಲು ಒಂದಷ್ಟು ಸೇವಕರನ್ನು ನೇಮಿಸಲಾಗಿತ್ತು. ಅವರೆಲ್ಲ ರಸ್ತೆಯ ಆ ಬದಿಯಲ್ಲಿ ವಾಸವಾಗಿದ್ದರು. ನಾನು ಅವರೊಂದಿಗೇ ಇರಬೇಕಿತ್ತು, ಮಲಗಬೇಕಿತ್ತು. ಆದರೆ ನಾನು ಯಾವುದೇ ಕಾರಣಕ್ಕೂ ಅವರೊಂದಿಗೆ ಊಟ ಮಾಡುತ್ತಿರಲಿಲ್ಲ. ನನಗೆ ಅವರು ಇಷ್ಟವಾಗುತ್ತಿರಲಿಲ್ಲ ಮತ್ತು ಅವರಿಗೆ ನಾನು ಇಷ್ಟವಾಗುತ್ತಿರಲಿಲ್ಲ. + +ಒಂದು ವಾರ.. ಬಹುಶಃ ಅದಕ್ಕೂ ಹೆಚ್ಚಿರಬಹುದು… ನಾನೊಬ್ಬನೇ ಊರಿನ ಹೊರಭಾಗದಲ್ಲಿ, ಕಾಡಿನ ಪರಿಧಿಯಲ್ಲಿದ್ದ ಆ ಕೆಂಪು ಇಟ್ಟಿಗೆಯ ಬಂಗಲೆಯಲ್ಲಿ, ವಾಸಮಾಡಬೇಕಿತ್ತು. ರಾತ್ರಿಯ ಹೊತ್ತಿನಲ್ಲಿ ನನ್ನ ಪಹರೆಗಾಗಿ ಕಸಗುಡಿಸುವ ಹುಡುಗ ಅಡುಗೆ ಕೋಣೆಯಲ್ಲಿ ಮಲಗುತ್ತಿದ್ದ. ಅವನನ್ನು ಬಿಟ್ಟು ನನಗ್ಯಾವ ಜೊತೆಗಾರರೂ ಇರಲಿಲ್ಲ. ಬರೀ ಅಕ್ಕಪಕ್ಕದ ಮನೆಯ ಮಕ್ಕಳು ಮಾತ್ರ ಇದ್ದರು. ಆದರೆ ಅವರಿಗೆ ನಾನು ಇಷ್ಟವಾಗುತ್ತಿರಲಿಲ್ಲ ಮತ್ತು ನನಗೆ ಅವರು ಇಷ್ಟವಾಗುತ್ತಿರಲಿಲ್ಲ. + +(ರಸ್ಕಿನ್ ಬಾಂಡ್) + +ಅವರ ತಾಯಿ ಒಮ್ಮೆ, “ನೋಡು ಆ ಕಸಗುಡಿಸುವ ಹುಡುಗನೊಂದಿಗೆ ಆಟವಾಡಬೇಡ, ಅವನು ಮಹಾ ಕೊಳಕ. ಮೇಲಾಗಿ ಅವ ನಿಮ್ಮ ಮನೆಯ ಕೆಲಸದವ. + +ಅದನ್ನು ನೆನಪಿಡು. ಒಂದು ವೇಳೆ ನಿನಗೇನಾದರೂ ಆಟವಾಡಬೇಕೆನಿಸಿದರೆ ಬಂದು ನಮ್ಮ ಮಕ್ಕಳೊಂದಿಗೆ ಮಾತ್ರ ಆಟವಾಡು” ಎಂದು ಹೇಳಿದರು. + +ಆದರೆ ನನಗೆ ಕಸಗುಡಿಸುವ ಹುಡುಗನೊಂದಿಗೂ ಆಟವಾಡಲು ಇಷ್ಟವಿರಲಿಲ್ಲ ಮತ್ತು ಪಕ್ಕದ ಮನೆಯ ಮಕ್ಕಳೊಂದಿಗೂ… ನಾ ಆ ವಾರವೆಲ್ಲಾ ಹಾಸಿಗೆಯ ತುದಿಯಲ್ಲಿ ಕೂತಿರುತ್ತಿದ್ದೆ ಮತ್ತು ನನ್ನ ತಂದೆ ಆಸ್ಪತ್ರೆಯಿಂದ ಮನೆಗೆ ಮರಳಿ ಬರುವುದನ್ನೇ ಕಾಯುತ್ತಿದ್ದೆ. + +ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು.ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. + +ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು. ಅವನ ಹಲ್ಲುಗಳು ಬಹಳ ಬಿಳುಪಾಗಿದ್ದವು ಮತ್ತು ಅವನ ಕೈ, ಕಾಲು, ಮುಖ ಯಾವಾಗಲೂ ಮಣ್ಣಾಗಿರುತ್ತಿದ್ದವು. ಅವ ಒಂದೇ ಒಂದು ಖಾಕಿ ಚಡ್ಡಿಯನ್ನು ಧರಿಸಿರುತ್ತಿದ್ದ ಮತ್ತು ಸುಟ್ಟ ಕಪ್ಪು ಬಣ್ಣಕ್ಕಿದ್ದ ಅವನ ದೇಹದ ಮೇಲ್ಭಾಗ ಯಾವಾಗಲೂ ಬೆತ್ತಲೆಯಾಗಿರುತ್ತಿತ್ತು. + +ಪ್ರತಿ ಬಾರಿ ನೀರನ್ನು ಹೊತ್ತು ತರುವಾಗಲೂ ಅವನಿಗೆ ಸ್ನಾನ ಮಾಡಿದಂತಾಗುತ್ತಿತ್ತು. ಅಡಿಯಿಂದ ಮುಡಿಯವರೆಗೂ ನೆಂದ ಅವನ ಮೈ ಹೊಳೆಯುತ್ತಿತ್ತು.ನನಗೆ ಬೆವರು ಸುರಿಯುತ್ತಿತ್ತು… + +ಕೆಳ ಜಾತಿಯ ಜನ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು. ಮಾಲಿಗಳು, ನೀರು ಹೊರುವವರು, ಅಡುಗೆಯವರು, ದಾದಿಯರು, ಕಸ ಗುಡಿಸುವವರು ಮತ್ತು ಅವರ ಮಕ್ಕಳು ಎಲ್ಲರೂ ಅಲ್ಲಿ ಸೇರುತ್ತಿದ್ದರು. ನಾನು “ಸಾಹೇಬ”ರ ಮಗ ಮತ್ತು ಸಮಾಜದ ರೀತಿ ರಿವಾಜುಗಳ ಪ್ರಕಾರ ನಾನು ಕೆಳಜಾತಿಯ ಮಕ್ಕಳೊಂದಿಗೆ ಆಡುವಂತಿರಲಿಲ್ಲ. + +ಆದರೆ ನಾನು ಇತರೆ ಸಾಹೇಬರ ಮಕ್ಕಳೊಂದಿಗೂ ಆಡುತ್ತಿರಲಿಲ್ಲ. ಕಾರಣ ನನಗೆ ಅವರು ಇಷ್ಟವಾಗುತ್ತಿರಲಿಲ್ಲ ಮತ್ತು ಅವರಿಗೆ ನಾನು ಇಷ್ಟವಾಗುತ್ತಿರಲಿಲ್ಲ.ನಾನು ಕಿಟಕಿಯ ಗಾಜಿನ ಮೇಲೆ ನೊಣಗಳು ಗುಯ್ ಗುಟ್ಟುವುದನ್ನು ನೋಡುತ್ತಿದ್ದೆ. ಹಲ್ಲಿಯೊಂದು ಮರದ ಜಂತಿಯನ್ನು ಕೊರೆಯುತ್ತಿತ್ತು. ಗಾಳಿಗೆ, ಒಣಗಿದ ತರಗೆಲೆಗಳು, ಹೂ ಪಕಳೆಗಳು ತೂರಾಡುತ್ತಿದ್ದವು. + +ಕಸಗುಡಿಸುವ ಹುಡುಗ ನಕ್ಕ ಮತ್ತು ನಮಸ್ಕಾರ ಮಾಡಿದ. ನಾನವನ ಕಣ್ಣು ತಪ್ಪಿಸುತ್ತಾ “ದೂರ ಹೋಗು” ಎಂದೆ. + +ಅವ ಅಡುಗೆ ಕೋಣೆಯೊಳಕ್ಕೆ ಹೋದ. + +ನಾನು ಎದ್ದು ಕೋಣೆಯನ್ನು ದಾಟಿ, ಟೊಪ್ಪಿಗೆಗಳ ಸ್ಟ್ಯಾಂಡಿನಿಂದ ನನ್ನ ಟೊಪ್ಪಿಯೊಂದನ್ನು ತೆಗೆದೆ. + +ಶತಪದಿಯೊಂದು ಗೋಡೆಯ ಮೇಲಿಂದ ಕೆಳಕ್ಕೆ ಹರಿದು ನೆಲದ ಮೇಲೆ ತೆವಳಿತು. ನಾನು ಚೀರುತ್ತಾ ಹಾಸಿಗೆಯ ಮೇಲಕ್ಕೆ ಎಗರಿ, ಸಹಾಯಕ್ಕಾಗಿ ಕೂಗಿದೆ. + +ಕಸಗುಡಿಸುವ ಹುಡುಗ ಮಿಂಚಿನಂತೆ ಓಡಿಬಂದ. ನಾನು ಮಂಚದ ಮೇಲೆ ನಿಂತಿರುವುದನ್ನು ಮತ್ತು ನೆಲದ ಮೇಲೆ ಇದ್ದ ಶತಪದಿಯನ್ನು ನೋಡಿದ. ತಕ್ಷಣವೇ ಪುಸ್ತಕವೊಂದನ್ನು ಎತ್ತಿ ತಪ್ಪಿಸಿಕೊಳ್ಳಲು ಹೊರಟ ಕೀಟವನ್ನು ಬಿಡದೆ ಅದರ ಮೇಲೆ ಅಪ್ಪಳಿಸಿದ. + +ನಾನಿನ್ನೂ ಹಾಸಿಗೆಯ ಮೇಲೇ ಹೆದರುತ್ತಾ, ನಡುಗುತ್ತಾ, ಭಯವಿಹ್ವಲನಾಗಿ ನಿಂತಿದ್ದೆ. + +ಅವನು ತನ್ನ ಹಲ್ಲು ತೋರಿಸುತ್ತ, ನನ್ನನ್ನು ನೋಡಿ ನಕ್ಕ. ನನಗೆ ನಾಚಿಕೆಯಾಯಿತು. “ಹೋಗಿಲ್ಲಿಂದ..” ಎಂದು ಗದರಿದೆ. + +ಟೊಪ್ಪಿ ಮತ್ತು ಟೊಪ್ಪಿಯ ಸ್ಟ್ಯಾಂಡನ್ನು ನಾನು ಮುಟ್ಟಲೇ ಬಾರದಿತ್ತು… ಯಾಕಾದರೂ ಮುಟ್ಟಿದೆನೋ ಎನಿಸಿಬಿಟ್ಟಿತು ನನಗೆ. ಆ ಕ್ಷಣ ಅಪ್ಪ ಇದ್ದಿದ್ದರೆ… ಎಂದು ನೆನೆಯುತ್ತಾ ಹಾಸಿಗೆಯ ಮೇಲೆ ಅವರು ಮನೆಗೆ ಬರುವುದನ್ನೇ ಕಾಯುತ್ತಾ ಕುಳಿತೆ. + +ಸೊಳ್ಳೆಯೊಂದು ಬಹಳ ಹತ್ತಿರದಲ್ಲಿ, ಕಿವಿಯ ಬಳಿ ಗುಯ್ ಗುಟ್ಟುತ್ತಾ ಹಾರಿ ಹೋಯಿತು. ಅರೆ ಮನಸಿನಿಂದ ನಾನದನ್ನು ಹೊಡೆದು ಸಾಯಿಸಲು ಪ್ರಯತ್ನಿಸಿದೆ. ಆದರದು ತಪ್ಪಿಸಿಕೊಂಡು ಡ್ರೆಸ್ಸಿಂಗ್ ಟೇಬಲ್ಲಿನ ಹಿಂಭಾಗದಲ್ಲಿ ತಪ್ಪಿಸಿಕೊಂಡಿತು. + +ಖಂಡಿತ ಇದು ನನ್ನ ಅಪ್ಪನಿಗೆ ಮಲೇರಿಯ ಬರುವಂತೆ ಮಾಡಿದ ಸೊಳ್ಳೆಯೇ ಇರಬೇಕು. ಮತ್ತೀಗ ನನ್ನನ್ನೂ ಕಚ್ಚಿ ನನಗೂ ಮಲೇರಿಯಾ ಹರಡಲು ಪ್ರಯತ್ನಿಸುತ್ತಿದೆ! ಅನಿಸಿತು. + +ಪಕ್ಕದ ಮನೆಯ ಹೆಣ್ಣುಮಗಳು ಕಾಂಪೌಂಡ್ ಮುಂದೆ ನಡೆದು ಹೋಗುವಾಗ ಕಿಟಕಿಯಿಂದ ನನ್ನನ್ನು ನೋಡಿ ತೆಳುವಾಗಿ ನಕ್ಕಳು. ನಾನೂ ಮರಳಿ ಅವಳತ್ತ ಕಣ್ಣು ಹಾಯಿಸಿದೆ. + +ಕಸಗುಡಿಸುವ ಹುಡುಗ ಬಕೆಟ್ ಹಿಡಿದು ಓಡಾಡುತ್ತಾ ನನ್ನನ್ನು ನೋಡಿ ಹಲ್ಲು ಕಿಸಿದ. ನಾನು ತಿರುಗಿ ಕೂತೆ. + +ರಾತ್ರಿ ಮಲಗುವ ಮುಂಚೆ ಲೈಟ್ ಹಚ್ಚಿಕೊಂಡು ಕೂತು ಓದಲು ಪ್ರಯತ್ನಿಸಿದೆ. ‘ಪುಸ್ತಕಗಳಿಗೂ ನನ್ನ ಆತಂಕವನ್ನು ಅಡಗಿಸಲು ಸಾಧ್ಯವಾಗಲಿಲ್ಲ. + +ಕಸಗುಡಿಸುವ ಹುಡುಗ ಮನೆಯೆಲ್ಲ ಓಡಾಡುತ್ತಾ ಬಾಗಿಲು ಕಿಟಕಿಗಳ ಚಿಲಕಗಳನ್ನು ಭದ್ರಪಡಿಸಿದ. ನಂತರ ನನ್ನ ಆದೇಶಗಳೇನಾದರೂ ಇವೆಯಾ ಎಂದು ಕೇಳಿದ. + +ನಾನು ನನ್ನ ತಲೆಯನ್ನು ಅಡ್ಡಡ್ಡಲಾಗಿ ತೂಗಿದೆ. + +ನಂತರ ಅವ ಸ್ವಿಚ್ ಬಳಿ ತೆರಳಿ, ಲೈಟ್ ಆಫ್ ಮಾಡಿ ತನ್ನ ಕೋಣೆಗೆ ತೆರಳಿದ. ಒಳಗೂ ಹೊರಗೂ ಎಲ್ಲೆಲ್ಲು ಕತ್ತಲು. ಒಂದೇ ಒಂದು ಬೆಳಕಿನ ಕಿರಣ ಕಸಗುಡಿಸುವ ಹುಡುಗನ ಕೋಣೆಯ ಬಾಗಿಲ ಬಿರುಕಿನಿಂದ ಕಿವುಚಿ ಹೊರಬರುತ್ತಿತ್ತು… ನಂತರ ಅದೂ ನಿಂತು ಹೋಯಿತು. + +ನನಗೀಗ ಹೀಗೆ ಕಷ್ಟ ಪಡುವ ಬದಲು ಪಕ್ಕದ ಮನೆಯವರೊಂದಿಗೆ ಇದ್ದಿದ್ದರೆ ಚಿನ್ನಿತ್ತು ಎಂದು ಅನಿಸಿತು. ಕತ್ತಲು ನನ್ನನ್ನು ಹೆದರಿಸತೊಡಗಿತ್ತು. ನಿಗೂಢ ನೀರವ ನಿಶ್ಯಬ್ಧತೆಗೆ ಅಂಜಿಕೆಯಾಯಿತು. + +ಬಾವಲಿಯೊಂದು ಹೊರಗಿಂದ ನೇರ ಕಿಟಕಿಯ ಗಾಜಿಗೆ ಬಂದು ಬಡಿದು ನೆಲದ ಮೇಲೆ ಬಿತ್ತು. ಗೂಬೆಯೊಂದು ಗೂಕ್ ಗೂಕ್ ಎಂದಿತು. ನಾಯಿಯೊಂದು ಬೊಗಳಿತು. ಬಂಗಲೆಯ ಹಿತ್ತಲಿನ ಕಾಡಿನೊಳಗಿಂದ ಗುಳ್ಳೆನರಿಯೊಂದು ಊಳಿಡುವ ಸದ್ದು ಕೇಳಿಸಿದಾಗ ನಾನು ಇನ್ನಷ್ಟು ಮುದುರಿ ಕುಳಿತೆ. ಆದರೆ ಕತ್ತಲ ಆ ನಿಶ್ಯಬ್ಧ ಸ್ಥಿರಚಿತ್ರಣವನ್ನು ಯಾವುದರಿಂದಲೂ ಬೇಧಿಸಲಾಗಲಿಲ್ಲ. + +ಒಂದು ಒಣ ಗಾಳಿಯ ಊದುವಿಕೆಯ ಹೊರತಾಗಿ… + +ಅದು ಸರಪರ ಶಬ್ದ ಮಾಡಿತು. ಅದು ನನ್ನ ತಲೆಯಲ್ಲಿ ಹಾವೊಂದು ತಣ್ಣಗೆ ಒಣ ಎಲೆಗಳು ಮತ್ತು ರೆಂಬೆಕೊಂಬೆಗಳ ನಡುವೆ ತೆವಳುತ್ತಿರುವ ಹಾಗೆ ಭಾಸವಾಗುವಂತೆ ಮಾಡಿತು. ನನಗೊಂದು ಕತೆ ನೆನಪಾಯಿತು. ಬಹಳ ದಿನಗಳ ಹಿಂದಿನದ್ದೇನಲ್ಲ, ಹೊರಗೆ ಮಲಗಿದ್ದ ಹುಡುಗನೊಬ್ಬನನ್ನು ನಾಗರಹಾವೊಂದು ಕಚ್ಚಿಬಿಟ್ಟಿತ್ತು. + +ನನ್ನಿಂದ ಇನ್ನು ಮಲಗಲಾಗಲಿಲ್ಲ. ಈಗಲೇ ಅಪ್ಪ ಬೇಕೆಂದು ಹಂಬಲಿಸತೊಡಗಿದೆ. + +ಶಟರ್ ಗಳು ಪತರಗುಟ್ಟಿದವು, ಬಾಗಿಲುಗಳು ಕೀರ್ ಕಿರ್ ಶಬ್ದ ಮಾಡಿದವು, ಅದು ಖಂಡಿತ ದೆವ್ವಗಳ ರಾತ್ರಿಯಾಗಿತ್ತು.. ದೆವ್ವಗಳದ್ದು!ದೇವರೇ ನಾನವುಗಳ ಬಗ್ಗೆ ಏಕೆ ಯೋಚಿಸಿದೆ?! + +ದೇವರೇ?! ಅದು ಅಲ್ಲಿ ಬಚ್ಚಲ ಬಾಗಿಲ ಮುಂದೆ ನಿಂತಿದೆ… + +ಅದು ನನ್ನ ತಂದೆ! ನನ್ನ ತಂದೆ ಮಲೇರಿಯಾದಿಂದ ಸತ್ತು… ನನ್ನನ್ನು ನೋಡಲು ಇಲ್ಲಿಗೆ ಬಂದುಬಿಟ್ಟರಾ… ನಾನು ಒಂದೇ ಜಿಗಿತಕ್ಕೆ ಸ್ವಿಚ್ಚಿನ ಬಳಿಗೆ ಹಾರಿದೆ. ಕೋಣೆ ಬೆಳಗಿತು. ನಾನು ಭಯದಿಂದ ಹಾಸಿಗೆಯೊಳಗೆ ಮುದುರಿಕೊಂಡೆ. ಬೆವರು ನನ್ನ ನೈಟ್ ಡ್ರೆಸ್ಸನ್ನು ತೋಯ್ಸಿಬಿಟ್ಟಿತ್ತು. + +ಅದು ನನ್ನಪ್ಪ ಆಗಿರಲಿಲ್ಲ, ಅದನ್ನು ನಾನು ನೋಡಿದೆ. ಅದು ಅವನ ಡ್ರೆಸ್ಸಿಂಗ್ ಗೌನ್ ಆಗಿದ್ದು, ಬಚ್ಚಲ ಬಾಗಿಲಿಗೆ ಅದನ್ನು ನೇತು ಹಾಕಲಾಗಿತ್ತು. ಅದನ್ನವರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿರಲಿಲ್ಲ. + +ನಾನು ಲೈಟನ್ನು ಆರಿಸಿದೆ. + +ಹೊರಗಿನ ಸುಯ್ ಎನ್ನುವ ಶಬ್ದ ಇನ್ನಷ್ಟು ಆಳ ಮತ್ತು ಹತ್ತಿರವಾದಂತೆ ತೋರಿತು. ನನಗೆ ಆ ಕ್ಷಣ ಶತಪದಿ, ಬಾವಲಿ, ನಾಗರಹಾವು ಮತ್ತು ಮಲಗಿದ್ದ ಹುಡುಗ.. ಎಲ್ಲ ನೆನಪಾದವು. ತಲೆ ಮುಚ್ಚುವಂತೆ ರಗ್ಗೆಳೆದುಕೊಂಡೆ. ನಾನು ಏನನ್ನೂ ನೋಡುತ್ತಿಲ್ಲ ಎಂದಾದರೆ, ಯಾವುದೂ ನನ್ನನ್ನು ನೋಡುತ್ತಿಲ್ಲ ಎನ್ನುವ ಹಾಗೆ… + +ಈ ಕತ್ತಲ ಸ್ಥಿರ ಚಿತ್ರಣಕ್ಕೆ ಜೋರಾದ ಗುಡುಗೊಂದು ಅಪ್ಪಳಿಸಿತು. + + + +ಆಕಾಶವನ್ನು ಸೀಳುವಂಥ ಮಿಂಚಿನ ಸಳುಕೊಂದು ಎಷ್ಟು ಹತ್ತಿರದಲ್ಲಿ ಮಿಂಚಿ ಮಾಯವಾಯಿತೆಂದರೆ ಹೊರಭಾಗದ ಮರ ಮತ್ತು ಎದುರು ಮನೆಯ ರೇಖಾಚಿತ್ರ ಹೊಂಬಣ್ಣದ ಕ್ಯಾನ್ವಾಸಿನ ಮೇಲೆ ಮೂಡಿದವು. + +ನಾನು ಇನ್ನಷ್ಟು ಪಲ್ಲಂಗದ ಆಳಕ್ಕಿಳಿದೆ, ಕಿವಿ ಮುಚ್ಚುವಂತೆ ದಿಂಬನ್ನು ಅವಚಿಕೊಂಡೆ. + +ಆದರೆ ಮತ್ತೊಮ್ಮೆ ಅಪ್ಪಳಿಸಿದ ಗುಡುಗು ಹಿಂದಿಗಿಂತಲೂ ಹಿಂದೆಂದಿಗಿಂತಲೂ ಜೋರಾಗಿತ್ತು. ಇದುವರೆಗೂ ನಾನಂತಹ ಗುಡುಗನ್ನು ಕೇಳಿರಲೇ ಇಲ್ಲ. ನಾನು ನನ್ನ ಹಾಸಿಗೆಯಿಂದ ಎಗರಿದೆ. ಸರಿಯಾಗಿ ನಿಲ್ಲಲೂ ಆಗಲಿಲ್ಲ. ಹಾರಿದವನೇ ಕ್ಷಣಾರ್ಧದಲ್ಲಿ ಅರಿವಿಲ್ಲದೆ ಕಸಗುಡಿಸುವ ಹುಡುಗನ ಕೋಣೆಗೆ ಹೋಗುವ ತಪ್ಪು ಮಾಡಿಬಿಟ್ಟೆ. + +ಆ ಹುಡುಗ ಬರಿ ನೆಲದ ಮೇಲೆ ಎದ್ದು ಕೂತ. + +“ಏನಾಗುತ್ತಿದೆ?” ಕೇಳಿದ. + +ಮಿಂಚೊಂದು ಫಳಗುಟ್ಟಿತು ಮತ್ತು ಅದರೊಂದಿಗೆ ಅವನ ಕಣ್ಣು ಹಲ್ಲುಗಳೂ ಮಿಂಚಿದವು. ಆ ಕತ್ತಲಲ್ಲಿ ಅವ ಮಸಕು ಮಸುಕಾಗಿ ಕಾಣುತ್ತಿದ್ದ. + +“ನನಗೆ ಭಯವಾಯಿತು” ಎಂದೆ. + +ನಾನವನ ಬಳಿ ಹೋದೆ ಮತ್ತು ನನ್ನ ಕೈ ತಣ್ಣನೆಯ ಭುಜವೊಂದನ್ನು ಸ್ಪರ್ಷಿಸಿತು. + +“ಇಲ್ಲೇ ಇರು, ನನಗೂ ಭಯವಾಗುತ್ತಿದೆ” ಎಂದ ಅವನು. + +ನಾನು ನೆಲದ ಮೇಲೆ ಕೂತೆ… ಗೋಡೆಗೆ ಒರಗಿಕೊಂಡು, ಅಸ್ಪೃಷ್ಯನ ಪಕ್ಕದಲ್ಲಿ, ಆ ಕೆಳಜಾತಿಯವನೊಂದಿಗೆ…. ನಂತರ ಗುಡುಗು ಮಿಂಚು ನಿಂತಿತು, ಮಳೆ ಬಂದಿತು. ಶ್… ಎಂದು ಹೊಯ್ಯುತ್ತಾ , ಚಿಟಪಟ ಸದ್ದು ಮಾಡುತ್ತಾ ಸುಕ್ಕುಗಟ್ಟಿದ ಸೂರಿನ ಮೇಲೆ ಮಳೆ ಸುರಿಯಿತು. + +ಹೊರಗೊಮ್ಮೆ ನೋಡಿ ನನ್ನ ಕಡೆ ತಿರುಗುತ್ತಾ “ಮಳೆಗಾಲ ಶುರುವಾಯಿತು…” ಎಂದು ಹೇಳಿದ ಕಸಗುಡಿಸುವ ಹುಡುಗ. ಅವನ ನಗು ಕತ್ತಲಿನೊಂದಿಗೆ ಆಟವಾಡಿತು. ಅವನು ನಕ್ಕ. ನಾನೂ ನಕ್ಕೆ… ಸಣಕಲಾಗಿ… + + + +ಆದರೆ ನಾನು ಸಂತೋಷವಾಗಿದ್ದೆ ಮತ್ತು ಸುರಕ್ಷಿತವಾಗಿದ್ದೆ. ಆಕಾಶದ ಬೆಳಕಲ್ಲಿ ಮಣ್ಣಿನ ವಾಸನೆ ಮನೆಯೊಳಕ್ಕೆ ನುಗ್ಗಿತು. ಮಳೆ ಮತ್ತಷ್ಟು ಜೋರಾಗಿ ಸುರಿಯಿತು. + +ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.” \ No newline at end of file diff --git a/Kenda Sampige/article_371.txt b/Kenda Sampige/article_371.txt new file mode 100644 index 0000000000000000000000000000000000000000..7ec73ab6496802a4df7aa12be4bdabf379670f89 --- /dev/null +++ b/Kenda Sampige/article_371.txt @@ -0,0 +1,91 @@ + + +ಗೇಣಯ್ಯ ಆ ಊರಿನ ತಾಲೂಕ್ ಆಫೀಸಿನ ಪೇದೆ. ಅವನಿಗೊಬ್ಬ ಮಗ – ಮಾರಯ್ಯ. ಹೀಗೆ ಗೇಣಯ್ಯ – ಮಾರಯ್ಯ ತಂದೆ ಮಕ್ಕಳು. ಇವರ ವಂಶಸ್ಥರಾಗಿ ಯಾರಾದರೂ ಫರ್ಲಾಂಗಯ್ಯ, ಹರದಾರಯ್ಯ ಎಂದೂ ಇದ್ದರೇನೋ ತಿಳಿಯದು. + +ಮಾರಯ್ಯ ಭಾರಿ ಆಳು; ಉದ್ದದಲ್ಲಿ ಭರ್ತಿ. ಹಾಗಾಗಿ `ಲಾಂಗ್ಮ್ಯಾನ್’ ಕಂಪೆನಿ ಎಂಬ ಆ ಹೆಸರು ಬರಲಿಕ್ಕೆ ಕಾರಣ ಇವನಾಗಿರಬಹುದೇ ಎಂದು ಹಲವರಿಗೆ ಸಂದೇಹ. + +ಮಾರಯ್ಯ ಅಲ್ಲಿನ ಹೆಡ್ ಕಾನ್ಸ್ಟೇಬಲ್. ಆದರೆ ಕೆಲವರು, `ಹೆಡ್ಡ ಕನಿಷ್ಠಬಿಲ್ಲ ಯಾರಯ್ಯ’ ಎಂದೋ, `ಹೆಡ್ಡ ಕೋಣಸ್ಟೇಬಲ್ ಸುಮಾರಯ್ಯ’ ಎಂದೋ ಕರೆಯುವರು. ಬುದ್ಧಿಯಲ್ಲಿ ಹೆಡ್ಡ; ನೋಡಿದರೆ ಕೋಣ; ಇವನಿಗಿರಲು ಸ್ಥಳ ಲಾಯ, ಕೊಟ್ಟಿಗೆ ಎಂದು ಮಾರಯ್ಯನನ್ನು ಸುಮಾರು ಮಾಡಲಿಕ್ಕೆ ಅವರು ಆ ಟಾೈಟಲ್ (ಬಿರುದು) ಅವನಿಗೆ ಕೊಟ್ಟದ್ದಲ್ಲ. ಜನರಿಗೆ ಆ ಹೆಡ್ ಕಾನ್ಸ್ಟೇಬಲ್ ಶಬ್ದ ಉಚ್ಚರಿಸಲು ಬಾರದಿದ್ದುದೇ ಕಾರಣ. + +ಮಾರಯ್ಯನಿಗೆ ಬರಾಸರಾ ಕಡಿಮೆ. ಸರಾಬರಾ ಹೆಚ್ಚು. ಅಂದರೆ ವಿದ್ಯೆ ಕಡ. ನೇವಿದ್ಯ ಅದರಲ್ಲಿಯೂ ಪರಮಾನ್ನ ಸುರಿಯುವ ಸರಾಬರಾ ಬರಾಬರಿ. ಆದರೆ ಬಾಯಿ ಪಕ್ಕಾ; ಮಾತು ಮಜಬೂತು – ಎಲ್ಲಾ ಜಂಗಲಿ ಕಾನೂನಿನಂತೆ ಪಟಾಕಿ ಪೆಟ್ಟಿಗೆಗಳು. ಈ ನಮೂನೆಯ ಕಾನೂನಿನ ಪಾಂಡಿತ್ಯ ಯಾವ ಲಾ ಮೆಂಬರರಿಗೂ ಇಲ್ಲವೆಂದು ಊರವರಾಡುತ್ತಿದ್ದರು. + +ಇದ್ದಕ್ಕಿದ್ದ ಹಾಗೆ, ಒಂದು ದಿನ, ಮಾರಯ್ಯನನ್ನು, ಪೋಲೀಸ್ ಇನ್ಸ್ಪೆಕ್ಟರರು ಕರೆದು, `ದೊರೆಗಳು ಬರುತ್ತಾರೆ. ಬುಧವಾರ. ಇನ್ಸ್ಪೆಕ್ಷನ್. ಸರಬರಾಯಿ ಸ್ಟೇಶನ್ ಕೆಲಸ ಕವಾತು ಎಲ್ಲವನ್ನೂ ನೋಡಿಕೋ! ಹುಷ್ಯಾರ್’ ಎಂದರು. + +ಮಾರಯ್ಯ ಗಡಿಬಿಡಿಯಲ್ಲಿ ಬಿದ್ದ. ಪಾಪ! ತಿಂಗಳಿಗೆ ಮೊದಲೇ ಅವನು ಆ ಊರಲ್ಲಿ ಎರಡು ತಾಳಮದ್ದಳೆಗಳಾಗಬೇಕೆಂದು ಏರ್ಪಡಿಸಿ ದಿನವಿಡಿಸಿದ್ದ. ಆ ಸಮಯದಲ್ಲಿಯೇ ದೊರೆಗಳ ಇನ್ಸ್ಪೆಕ್ಷನ್ – ಸರಬರಾಯಿ -ಸ್ಟೇಶನಿನ ಕೆಲಸ – ಕವಾತು ಗಿವಾತು – `ನೋಡಿಕೋ -ಹುಷ್ಯಾರು’ ಎಂದರೆ ಎಲ್ಲಿಯ ಗ್ರಹಚಾರ! + +ಮಾರಯ್ಯನ ತಾಳಮದ್ದಲೆಯ ಕುರಿತು ಎರಡು ಮಾತು. ವಸ್ತುತಃ ಮಾರಯ್ಯನಿಗೆ ಅರ್ಥ ಹೇಳುವ ಹುಚ್ಚು ವಿಪರೀತ. ಪ್ರಸಂಗ ಓದಲೂ ಬಾರದಾದರೂ, ಅವನ ಅರ್ಥ ಅನರ್ಥಕ್ಕೆ ಅನ್ವರ್ಥವಾಗುವಂತೆ ಇತ್ತು. ಅವನ ಅಮರಕೋಶದಲ್ಲಿ `ಹಸ್ತಿರಥಪದಾತಿ’ ಗಳ ಬದಲು ಆಸ್ತಿವ್ರತ ಪದಾರ್ತಿಗಳಂಥ ಶಬ್ದಗಳೇ ತುಂಬಿದ್ದುವಾದರೂ, ತಾಳಮದ್ದಳೆಗಳಾಗುವಲ್ಲಿ ಅವನನ್ನು ಕರೆಯದಿದ್ದರೆ, ಕರೆದೂ ಮುಖ್ಯ ಪಾತ್ರಗಳಲ್ಲಿ ಒಂದನ್ನು ಕೊಡದಿದ್ದರೆ, ತಯಾರ್ ಅವರ ಮೇಲೆ ಪ್ರಕರಣ 144. ಅಷ್ಟೇ ಅಲ್ಲ. ಮಾರಯ್ಯನಿಗೆದುರಾಗಿ ಅರ್ಥ ಹೇಳತಕ್ಕವನಿಗೆ, ಅವನ ಎಲ್ಲ ಪದಗಳ ಅರ್ಥವನ್ನೂ ಹೇಳುವ `ಲಾೈಸನ್ಸು’ ಮಾರಯ್ಯನದು ಇರಲೇ ಇಲ್ಲ. + +ಉದಾಹರಣೆಗಾಗಿ, ವಾಲಿ ಸುಗ್ರೀವರ ಕಾಳಗ; ಮಾರಯ್ಯ ರಾಮ ಅನ್ನುವ, ಆಗ ವಾಲಿ `ರಾಮಾ! ಮಂಗನ ಮಾಂಸ ತಿನ್ನುವವನೇ!’ ಎಂದು ಮುಂತಾಗಿ, ರಾಮನನ್ನು ಜರಿದು ಮಾತಾಡಲೇಕೂಡದು; ಆ ಮೂಲಕ ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು ಮುಂದರಿಸಿ ವಾಲಿಗೆ ಜ್ಞಾನೋದಯವಾದ ಪದಗಳನ್ನು ಮಾತ್ರ ಹಾಡಬೇಕು. ವಾಲಿಯೂ, ಆಗ ಒಂದೊಂದು ಪದಕ್ಕೂ ಅರ್ಧರ್ಧ ಗಂಟೆ ಉಸಿರು ಕಟ್ಟಿಕೊಂಡು ಅರ್ಥ ಹೇಳಿ, ರಾಮನನ್ನು ತುಂಬಾ ಕೊಂಡಾಡಬೇಕು. ಇದು ಮಾರಯ್ಯನ ತಾಳಮದ್ದಳೆಯ ಕ್ರಮ. ಇಂಥದೇ ಎರಡು ತಾಳಮದ್ದಳೆಯ ಕೂಟಗಳೇ ಅದೇ ಸಮಯದಲ್ಲಿ! ಏನು ಗ್ರಹಚಾರ!ಆದರೂ, ಮಾರಯ್ಯ ಬಿಡಲಿಲ್ಲ. ಆಗಲೇ ತಾಳಮದ್ದಳೆಯ ಕೂಟಗಳನ್ನು ಜರುಗಿಸಿಯೇ ಬಿಟ್ಟ. `ಕುಂತೀಪುತ್ರೋ ವಿನಾಯಕ’ ಎಂದಾದರೂ ಮುಖ್ಯ ಪಾತ್ರದ ಅರ್ಥ ಬೆಳಗಾಗುವವರೆಗೂ ಬಜಾಯಿಸಿಯೇ ಬಿಟ್ಟ. + +••• + +ಬೆಳಗಿನ ಹೊತ್ತು. ವಿನೋದಪ್ರಿಯರೂ, ಜನಪ್ರೀತರೂ ಆದ ಮ್ಯಾಜಿಸ್ಟ್ರೇಟ್ ರಾಮಪ್ಪಯ್ಯನವರು, ನಮ್ಮ ಮನೆಯ ಚಾವಡಿಯಲ್ಲಿ ಕುಳಿತಿದ್ದಾರೆ. ಮಾರಯ್ಯನು ಒಬ್ಬನನ್ನು ಮುಂದೆ ಮಾಡಿಕೊಂಡು ಅಲ್ಲಿಗೆ ಬಂದು, ಮ್ಯಾಜಿಸ್ಟ್ರೇಟರಿಗೆ ಕೈ ಮುಗಿದು, ಚಾವಡಿ ಹತ್ತಿ ದೂರ ನಿಂತ. + +“ಏನು, ಮಾರಯ್ಯ! ನ್ಯೂಯಿಸೆನ್ಸ್ ಕೇಸೋ?” + +“ಅಲ್ಲ ಖಾವಂದ್ರೆ! ನಾಯಿಸೆಸ್ ಅಲ್ಲ ; ದೊಡ್ಡ ತಸ್ಕೀರು.” + +“ಖೂನಿ?” + +“ಅದಕ್ಕಿಂತಲೂ ದೊಡ್ಡದು ಖಾವಂದ್ರೆ, ಅದು ಕಿರುನಾಲಿಗೆ (ಕ್ರಿಮಿನಾಲು) ಸೆಕ್ಷನ್ ಸಾಡೇಸಾತ್.” + +ಮ್ಯಾಜಿಸ್ಟೇಟರಿಗೆ ಮಾರಯ್ಯನ ಈ ಸೆಕ್ಷನ್ ಸಾಡೇಸಾತ್ ಪಕ್ಕನೆ ಅರ್ಥವಾಗಲಿಲ್ಲ. `ನಿನ್ನ ಸೆಕ್ಷನ್ ಹಾಗಿರಲಿ. ಸಂಗತಿ ಏನು ಹೇಳು’ ಅಂದರು. + +“ಸಂಗತಿ ಇಷ್ಟೇ. ಈಗ ಉತ್ತರ ಹಿಂದುಸ್ಥಾನದಲ್ಲಿ ಸ್ವದೇಶೀ ಪರ್ದೇಶಿ ಗಲಾಟೆಯಂತೆ, ನಮ್ಮ ಗವಣರಮೆಂಟಿಗೆ ಎದುರು ನಿಲ್ಲಿ ಎಂತ ಜನರಿಗೆ ಕೇಡಿಗಳು ಲೋಟೀಸು ಹಂಚುತ್ತಾರಂತೆ. ಪೈಕಿ ಸದ್ರಿ ಒಬ್ಬನನ್ನು ಅವನು ಲೋಟೀಸ್ ಹಂಚುವಾಗ ಕೈದು ಮಾಡಿ ತಂದಿದ್ದೇನೆ – ಸನ್ನಿಧಾನಕ್ಕೆ.” + +ಮ್ಯಾಜಿಸ್ಟ್ರೇಟರಿಗೆ ಈಗ ಆ `ಸಾಡೇಸಾತಿನ’ ಅರ್ಥವಾಯಿತು. `ಸಾಡೇಸಾತ್’ ಎಂದರೆ ಸೆಡೀಸಿಯಸ್ (ರಾಜದ್ರೋಹಾತ್ಮಕ) ಎಂದು. ಅವರು ಆಶ್ಚರ್ಯಪಡಲಿಲ್ಲ. ಮಾರಯ್ಯನ ಗುಟ್ಟು ಅವರಿಗೆ ಗೊತ್ತು. ಸ್ವಲ್ಪ ವಿನೋದ ಮಾಡೋಣವೆಂದು : – + +`ಆ ನೋಟೀಸು ಇದೆಯೋ?’ + +`ಉಂಟು’ + +`ಹಾಗಾದರೆ ದೊಡ್ಡ ಫಡಾವ್ ಹೊಡದಿ; ಮಾರಯ್ಯಾ. ಅದು ರಾಜದ್ರೋಹದ ಪ್ರಕರಣ. ದೊಡ್ಡ ತಕ್ಸೀರು. ಇದು ರುಜುವಾತಾದರೆ, ನಮ್ಮ ಸಂಸ್ಥಾನದ ಪೋಲೀಸ್ ಶಾಖೆಗೇ ದೊಡ್ಡ ಕೀರ್ತಿ, ನಿನಗೂ ಬೇಗನೇ ಭಡ್ತಿ.’ + +`ಏನೋ, ಖಾವಂದ್ರೆ! ನನ್ನ ಹೆಂಡರ ಮಕ್ಕಳ ಪುಣ್ಯ. ಇಷ್ಟು ವರ್ಷಗಳಿಂದಲೂ ಸರಕಾರದ ಚಾಕರಿ ತಮ್ಮಂಥವರ ಆಶ್ರಯ ಮಾಡುತ್ತಿದ್ದೇನೆ. ಖಾವಂದರ ಶಿಫಾರಸು ಆದರೆ.’ + +`ಶಿಫಾರಸು ಮತ್ತೆ. ಆ ನೋಟೀಸು ತೆಗಿ, ನೋಡುವ.’ + + + +ಮಾರಯ್ಯ ಆ ನೋಟೀಸನ್ನು ಜೇಬಿನಿಂದ ತೆಗೆದು ಮ್ಯಾಜಿಸ್ಟ್ರೇಟರಲ್ಲಿ ಕೊಟ್ಟ. ಮ್ಯಾಜಿಸ್ಟ್ರೇಟರು ಓದಿಕೊಂಡು, ನಗುತ್ತಾ, “ಇದು ದ್ರೋಹದ ನೋಟೀಸು ಎಂದು ನಿನಗೆ ಹ್ಯಾಗೆ ಗೊತ್ತಾಯಿತು. ಮಾರಯ್ಯಾ!” + +`ಗುಮಾನೀ ಮೇಲೆ; ಆದ್ದರಿಂದ ಅಪರಾಧಿಯನ್ನು ಅರಿಸ್ಟ (ಅರೆಸ್ಟ್ = ಕೈದು)ವೂ ಮಾಡಲಾಗಿದೆ. ನಾನಿರುವಾಗ ಅಗತ್ಯವಿಲ್ಲ. ಆದರೂ ಈತನಿಗೆ ಹಂಡೆಕಪ್ಪು (ಹ್ಯಾಂಡ್ಕಫ್= ಕೈಕೋಳ) ಹಾಕಬೇಕು. + +`ಮಾರಯ್ಯ! ಹಾಗಾದರೆ ನಿನ್ನ ಗುಮಾನಿ ತಪ್ಪು, ಇವನು ಬೆಪ್ಪ ಕೆಪ್ಪ; ಇವನಿಗೆ ಪುಣ್ಯಾತ್ಮರು ಧರ್ಮ ಕೊಡಬೇಕಂತ ಈ ನೋಟೀಸಿನಲ್ಲಿ ಬರೆದಿದೆ. ಅದನ್ನೇ ಹಂಚಿ ಹೊಟ್ಟೆ ತುಂಬಿಸುತ್ತಿರುವವನಿವನು. ಆದ್ದರಿಂದ ಹೋಗಲಿ, ಬಿಟ್ಟುಬಿಡು ಅವನನ್ನು.’ + +ಮಾರಯ್ಯ ಇಷ್ಟರಲ್ಲಿ ಮನಸ್ಸಿನಲ್ಲಿಯೇ ಇನ್ಸ್ಪೆಕ್ಟರರ ಪಗಡಿಗೆ ಹೊಂದಿದ್ದವನು ಪಾತಾಳಕ್ಕಿಳಿದ. ಮ್ಯಾಜಿಸ್ಟ್ರೇಟರು ಒಂದಾಣೆ ಪಾವಲಿ ತಂದು ಆ ಬಡವನಿಗೆ ಕೊಟ್ಟು ಹೋಗೆಂದು ಕೈಸನ್ನೆ ಮಾಡಿದರು. ಆ ಭಿಕ್ಷುಕ ತನ್ನನ್ನು ಕರೆತಂದು ಒಂದೇ ಸಲಕ್ಕೆ ಈ ಒಂದಾಣೆ ಭಿಕ್ಷೆ ಕೊಡಿಸಿದ ಮಾರಯ್ಯನ ಉಪಕಾರಕ್ಕಾಗಿ ಅವನಿಗೆ ಮೊದಲು ಮನಸ್ಕಾರ ಮಾಡಿ, ಮತ್ತೆ ಮ್ಯಾಜಿಸ್ಟ್ರೇಟರಿಗೆ ಕೈಮುಗಿದು ನಡೆದ. + +`ಹೌದೋ ಮಾರಯ್ಯ! ನಿನ್ನ ಹತ್ತಿರ ಒಂದು ಸಂಗತಿ ವಿಚಾರಿಸಬೇಕಂತ ಇದ್ದೆ.’ + +`ಅಪ್ಪಣೆಯಾಗಲಿ, ಖಾವಂದರೆ!’ + +`5 – 6 ದಿನಗಳ ಕೆಳಗೆ ದೊರೆಗಳು ಬಂದಿದ್ದರು. ನೀನು ಕವಾತ್ ಮಾಡಿಸಿದೆ. ಆಗ ನಾನೂ, ನಿಮ್ಮ ಇನಸ್ಪೆಕ್ಟರರೂ ದೊರೆಗಳ ಹತ್ತರ ಮಾತಾಡುತ್ತಾ ನಿಂತಿದ್ದೆವು.’ + +`ಹೌದು; ಖಾವಂದ್ರೆ!’ + +`ಆದರೆ ಮಾರಯ್ಯ! ನಿನ್ನ ಕವಾತಿನ ಮಾತು, ಸಂಕೇತ ಏಂಥಾದ್ದು? ಬಹಳ ವಿಚಿತ್ರವಾಗಿತ್ತು.’ + +`ಖಾವಂದರೆ! ತಮ್ಮೆದುರು ನಾನು ಯಾಕೆ ಸುಳ್ಳು ಹೇಳಲಿ? ನನಗೆ ಇಂಗ್ಲೀಸು ಬಾರದು, ಬಂದದ್ದೂ ಬರೇ ಪೊಟ್ಟು ಪೊಟ್ಟು. ಹಾಗೇ ನಮ್ಮ ಪೋಲೀಸಿನವರಿಗೂ ಇಂಗಲೀಸು ಸೊನ್ನೆ. ಅನ್ನುವಾಗ ನಾನೇನು ಮಾಡಲಿ? ದೊರೆಗಳ ಎದುರು ಕವಾತು ಮಾಡಿಸದಿದ್ದರೆ ನಿರ್ವಾಹವುಂಟೆ? ಅದಕ್ಕಾಗಿ ಕೆಲವು ಸಂಕೇತಗಳನ್ನು ನಾನೇ ಏರ್ಪಡಿಸಿಕೊಂಡು, ತಮ್ಮ ಪೋಲೀಸರಿಗೂ ಅವನ್ನೇ ಹೇಳಿಕೊಟ್ಟು, ಕವಾತಿನ ಕೆಲಸ ಪೂರೈಸಿದೆ.’ + +`ಆ ಕವಾತಿನ ಸಂಕೇತ ಹೊಸದೋ, ಹಳತೋ, ಎಂಥಾದ್ದದು?’ + +`ಖಾವಂದ್ರೆ! ಅದು ನಮ್ಮೂರಿನದೇ, `ಸ್ವದೇಶೀ’. + +ಮ್ಯಾಜಿಸ್ಟ್ರೇಟರು ನಗುತ್ತಾ `ಎಲ್ಲಿ ನೋಡುವ! ಇನ್ನೊಮ್ಮೆ – ನಿನ್ನ ಸ್ವದೇಶೀ ಕವಾತಾಗಲಿ!’ + +`ಬೇಡ ; ಖಾವಂದ್ರೆ!’ + +`ಚಿಂತಿಲ್ಲ ; ಮಾರಯ್ಯ! ನಮ್ಮ ಹುಡುಗರೂ ಒಂದಿಷ್ಟು ಕೇಳಲಿ! ನಿನ್ನ ಕವಾತು ಭಾರೀ ಸ್ವಾರಸ್ಯವುಂಟು.’ + +`ಖಾವಂದರೆ, ಹಾಗಾದರೆ ನನ್ನ ಕವಾತಿನ ಗುಟ್ಟು ಇಷ್ಟೆ! `ದುಂಬು ಪೋ’ (ಮುಂದೆ ಹೋಗು), `ಬಲಕ್ ತಿರ್ಗ್’ (ಬಲಕ್ಕೆ ತಿರುಗು), `ಮೋಣೆ ದೆರ್ಪ್’(ಮುಖವೆತ್ತು), ‘ಪಾರ್ ವೋ’ (ಬೇಗ ನಡೆ), `ತಿರ್ತ್ ಪಾಡ್’ (ಕೋವಿ ನೆಲದ ಮೇಲಿಡು), `ದಂಬೂಕ್ ದೆಪ್’ (ಬಂದೂಕ್ ಮೇಲಕ್ಕೆತ್ತು), `ಸರ್ತ್ ಪತ್’ (ನೆಟ್ಟಗೆ ಹಿಡಿ) – ಇದೇ ನನ್ನ ತುಳು ಕವಾತಿನ ಕ್ರಮ. ಕಡೆಯ ಅಕ್ಷರ ಅರ್ಧವಾಗಿ ಒದರಿದರೆ ಸರಿ. ಇಂಗ್ಲೀಸ್ ಕವಾತಾಯಿತು.’`ಅಲ್ಲ, ಮಾರಯ್ಯ, `ಚತ್ತ್ ಪೋಯ್’ ಅಂದರೇನು? ನಿನ್ನ ಕವಾತಿನಲ್ಲಿ ಅಂದು ಅದೂ ಇದ್ದ ಹಾಗಿತ್ತಲ್ಲಾ!’ + +`ಅದು ಮತ್ತೇನಿಲ್ಲಾ, ಖಾವಂದ್ರೆ! ಒಬ್ಬ ಹೊಸಬ ಪೋಲೀಸಿನವ. ಬರೇ ದಡ್ಡ. ನಾನು `ದುಂಬ್ ಪೋ’ ಅನ್ನುವಾಗ, ಅವನು ಹಿಂದೆ ಬಂದ. ನನಗೆ ಸಿಟ್ಟು ನೆತ್ತಿಗೇರಿತು. ಅದಕ್ಕೆ ನಾನು `ಸೈತ್ ಪೋ’ ನೀನು ಸತ್ತೇ ಹೋಗು ಎಂದು ಒದರಿಬಿಟ್ಟದ್ದು. ಪುಣ್ಯಕ್ಕೆ ದೊರೆಗಳು ಈಚೆಗೆ ಕಿವಿ ಕೊಡದೆ, ತಮ್ಮ ಹತ್ತಿರ ಮಾತನಾಡುತ್ತಾ ಇದ್ದ ಕಾರಣ, ನಾನು ಬಚಾವಾದೆ.’ + +`ಒಳ್ಳೆಯ ಮಾರಯ್ಯ; ಪಸಂದು ಕವಾತು! `ದುಂಬು ಪೋ’ `ಪಿರ ಪೋ’ `ಸೈತ್ ಪೋ!’ ಹ್ಯಾಗೂ ಕೆಲಸ ಸುಧಾರಿಸಿದೆ. ಗಟ್ಟಿಗ, ಇನ್ನು ನೀನು ಮಾರಯ್ಯನಲ್ಲ; ಮಹಾರಾಯ!’ + + + +`ಖಾವಂದರೆ! ನನಗಿನ್ನು ಪೆನ್ಶನಿಗೆ ಹೆಚ್ಚು ಸಮಯವಿಲ್ಲ. ಅಷ್ಟರವರೆಗೆ ಬದುಕಬೇಕಲ್ಲ! ಅಷ್ಟಕ್ಕೇ ಇಷ್ಟೆಲ್ಲ ಪೇಚಾಟ. ಬರುತ್ತೇನೆ. ಅಪ್ಪಣೆಯಾಗಲಿ.’’ + +(ಕಂಠೀರವ, 1936) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_372.txt b/Kenda Sampige/article_372.txt new file mode 100644 index 0000000000000000000000000000000000000000..bde760739dbacd78baf49bca6d9d44935631dbad --- /dev/null +++ b/Kenda Sampige/article_372.txt @@ -0,0 +1,41 @@ + + +ಕನ್ನಡ ಕಾವ್ಯಪರಂಪರೆ ಕಾಲದಿಂದ ಕಾಲಕ್ಕೆ ಶಕ್ತಿತ್ರಯಗಳಿಗೆ ಸಿಕ್ಕು ಇತ್ಯಾತ್ಮಕ ನೇತ್ಯಾತ್ಮಕವಾಗಿ ಪ್ರತಿಸ್ಪಂದಿಸುತ್ತಲೇ ಬಹುದೊಡ್ಡ ಪಲ್ಲಟ ಘಟಿಸಿದೆ. ಕಾವ್ಯ ಪ್ರಕಾರದಲ್ಲಿನ ಭಾಷೆ, ಬಂಧ, ಸತ್ವದ, ಅನಾವರಣದ, ಅಭಿವ್ಯಕ್ತಿಯ ಮಟ್ಟದಲ್ಲಿಯಂತೂ ಇದು ಸಾಕ್ಷಿಯಾಗಿ ನಿಂತಿರುವುದು ಸಾಹಿತ್ಯದ ಓದುಗನಿಗೆ ತಿಳಿದಿರುವುದೇ ಆಗಿದೆ. 1991ರ ನಂತರದ ನವ್ಯೋತ್ತರ ಕಾಲಘಟ್ಟವಂತೂ ಅತೀಸಂಕೀರ್ಣವಾದ ಸಂವೇದನೆಗಳ ಮಹಾಪೂರವಾಗಿದೆ. + +ಕಾಲವೊಂದರಲ್ಲಿ ನಿಂತು ಸೂಕ್ಷ್ಮ ಕುಸುರಿ ಕೆಲಸದಿಂದ ಅತೀ ಸಶಕ್ತವಾಗಿ ನಡೆದು ತೊಡಗಿಕೊಂಡೇ ಕಾಲಾತೀತವಾಗಿ ನಿಂತು ಮಾತನಾಡಿಸುವ ಹಿಂದಿನ ಕಾವ್ಯಗಳೊಂದಿಗೆ ತಮ್ಮನ್ನು ಕಾವ್ಯಗಳ ಮೂಲಕ ಸೇರಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯ ಕಾಲಘಟ್ಟವಿದು. ಈ ಮಹತ್ವಾಕಾಂಕ್ಷೆಯ ಸಿದ್ದಿಯ ಹಿಂದೆ ಸಾಧನೆಯ ದಾರಿ ಕಡಿದಾದದ್ದೆಂದು ಮತ್ತು ಕೇವಲ ಓದು-ಬರಹಗಳಿಂದ ಮಾತ್ರ ಸಾಧ್ಯವಾಗದೆ ಅದಾಗದೇ ಘಟಿಸುವಲ್ಲಿ ಪ್ರತಿಭೆಯ ಮತ್ತು ನೈತಿಕ ಕೆಡುಕನ್ನು ಗುರುತಿಸಿ ಹೊರಹಾಕುವಲ್ಲಿ ಮನುಷ್ಯನ ಪ್ರಜ್ಞೆಯ ಪಾತ್ರ ಕಾರ್ಯ ಮಹತ್ತರವಾದದ್ದು. ಅದರ ಸಾಕಾರಕ್ಕೆ ಹಾದಿ ಪೂರ್ವಸೂರಿಗಳ ಕಾವ್ಯದೊಂದಿಗಿನ ಅನುಸಂಧಾನದಂತೆ ಸದ್ಯದಲ್ಲಿ ಜೀವಂತವಾಗಿರುವುದು ಭೂಮಿ ಕಣ್ಣು-ಮಣ್ಣುಗಳಲ್ಲಿ ನಿರಂತರವಾಗಿ ನೆಟ್ಟ ದೃಷ್ಟಿಯಿಂದ ಕಾವ್ಯ ಸೃಷ್ಟಿಯ ಸಾಧ್ಯತೆಯಿದೆ. + +(ವಾಸುದೇವ ನಾಡಿಗ್) + +ಸಮಕಾಲೀನ ಕನ್ನಡ ಸಾಹಿತ್ಯದ ಕಾವ್ಯಕಥೆ ಪ್ರಕಾರಗಳೆರಡರಲ್ಲೂ ಪ್ರತಿಭಾವಂತ ಎನಿಸಿಕೊಂಡಿರುವ ಹಾಗೇ ಯುವ ತಲೆಮಾರಿನ ತಲ್ಲಣಗಳಿಗೆ ಸ್ಪಂದಿಸುತ್ತಿರುವವರಲ್ಲಿ ಶ್ರೀವಾಸುದೇವ ನಾಡಿಗರೂ ಪ್ರಮುಖರು. ಕಾವ್ಯದಿಂದಲೇ ಜೀವಂತಿಕೆಯ ಇರುವನ್ನು ಸ್ಥಾಪಿಸಿರುವ ಎಲ್ಲವನೂ ಕಾವ್ಯವಾಗಿಸುವ ಮಹತ್ವಾಕಾಂಕ್ಷೆಯ ಕವಿ. ಹಿಂದಿನ ನವೋದಯ – ನವ್ಯ ಚಳವಳಿಯ ಕಾವ್ಯದ ಮಾದರಿ-ಸಾಧ್ಯತೆಯನ್ನು ನೋಡಿ ಅದರೊಂದಿಗೆ ಅನುಸಂಧಾನ ಮಾಡುತ್ತಲೇ ಮತ್ತೊಂದು ಪರ್ಯಾಯ ದಾರಿಯನ್ನು ಕಾವ್ಯದ ಮೂಲಕ ಹುಡುಕುತ್ತಿರುವವರು. ನವೋದಯದಲ್ಲಿನ ಸೂಕ್ಷ್ಮತೆ, ಅಡಿಗರಲ್ಲಿನ ಪ್ರತಿಮೆ ಮತ್ತು ನೆಲಕ್ಕೆ ನೆಟ್ಟ ಕಣ್ಣು ಇವರ ಕಾವ್ಯಕ್ಕೆ ಪ್ರಭಾವಬೀರಿದೆ. ಮತ್ತಿದಕ್ಕೆ ಇವರ ಕಾವ್ಯಗಳೇ ಸಾಕ್ಷಿಯಾಗಿದೆ. + +ಕಾವ್ಯದಲ್ಲಿ ಜೀವಂತಿಕೆಯ ಇರುವು ಸಾಕಾರಗೊಳ್ಳುವುದು ಕವಿಯೊಬ್ಬ ಸದ್ಯ ಶಾಶ್ವತಕ್ಕೆ ಬಾಯಾಗಿ ಮಾತಾಡುತ್ತಲೇ ತನ್ನೊಂದಿಗೆ ಎಲ್ಲವನೂ ಎಲ್ಲರನೂ ಕರೆದುಕೊಂಡು ಹೋಗುವುದರಿಂದ. ಸದ್ಯದ ಅಲೆಗಳು ಧಡಕ್ಕೆ ಹೊತ್ತೊಯ್ಯುತ್ತಿದ್ದರೂ ಅನಂತದ ಕಡೆಗಿನ ಚಲನೆಯ ಹಂಬಲ ಪ್ರತಿಕ್ಷಣದ ನೌಕಾಯಾನವನ್ನು ಕ್ರಿಯಾಶೀಲ-ಸೃಜನಶೀಲವಾಗಿಡುವಲ್ಲಿ ತೊಡಗಿಸುತ್ತದೆ. ಈ ತೊಡಗುವಿಕೆ ಕಾವ್ಯದ ಆವಿರ್ಭಾವಕ್ಕೆ ಕಾರಣವಾದಂತೆ ಸಮುದ್ರಯಾನದ ನೌಕೆಯ ಚಲನೆಗೆ ಕಾರಣವಾದ ಅಲೆಗಳಂತೆ ಕಾವ್ಯ ನಿತ್ಯವಿನೂತನವೂ ಹೌದು. + +ಈ ನಿತ್ಯ ಸತ್ಯದ ದಾರಿಯ ಪಯಣದಲ್ಲಿ ಹಲವಾರು ಸೃಜನಶೀಲ ಪ್ರತಿಭೆಗಳು ಇಂದಿಗೆ ಕಾರ್ಯೋನ್ಮುಖವಾಗಿದ್ದರೂ ಅದರ ಸಾಕಾರ ಯಶಸ್ವಿಯ ಚಿಹ್ನೆಗಳು ಓದುಗನಲ್ಲಿರುವ ಎದೆನೆಲದ ಪಸೆಯಲ್ಲಿ ಗರಿಕೆಚಿಗುರಿದಾಗಲೇ. ಅಂತಹ ಕಾರ್ಯಮಾಡುತ್ತಿರುವವರಲ್ಲಿ ಇವರೂ ಒಬ್ಬರು. ಹೊರ ನಾಡಿಗರಾಗಿ ಕಳೆದ ಕಾಲದಲ್ಲಿ ಜೊತೆಗಿದ್ದುದು ತಮ್ಮ ವೃತ್ತಿಯೊಂದಿಗೆ ಅಕ್ಷರಗಳ ಸಾಸತ್ಯದ ಮತ್ತು ಎನ್ನುವುದು ಹತ್ತಿರದಿಂದ ಬಲ್ಲ ಎಲ್ಲರಿಗೂ ತಿಳಿದೇ ಇದೆ. ಪ್ರತಿಸಾಲುಗಳಲ್ಲಿಯೂ ಸಿಕ್ಕಿರುವುದು ಮತ್ತೂ ಸೂಜಿಗವೇ ಸರಿ. + +ಸಹಜವಾಗಿ ಪ್ರಾರಂಭವಾಗುವ ಕಾವ್ಯ ಕೊನೆಯಲ್ಲಿ ಧುತ್ತೆಂದು ಘಟಿಸುವ ಕಾವ್ಯ ತೆರೆದು ತೋರುವ ಹಾದಿ ಪರಂಪರೆಯನ್ನು ನೆನಪಿಸುತ್ತಲೇ ನಡೆದ ನೆಲವನ್ನು ನೆನಪಿಸುವ ಕಾರ್ಯ ಅದ್ಭುತವೆನಿಸುತ್ತದೆ. ವ್ಯಕ್ತಿಗತವಾಗಿ ಕಂಡುಕೊಂಡ ಸತ್ಯಕ್ಕೆ ನಿಷ್ಟವಾಗಿ ಅಭಿವ್ಯಕ್ತಿಗೆ ತರುವಾಗಿನ ಮಾರ್ಗ ಕಡಿದಾದರೂ ಶ್ರಮ ಬೇಡುವಂತಹದ್ದು. ಅದರಲ್ಲಿ ಯಶಸ್ವಿಯ ನಡಿಗೆಯಲ್ಲಿದ್ದಾರೆನ್ನುವುದಕ್ಕೆ ಈ ಸಂಕಲನವೇ ಸಾಕ್ಷಿ. ತನ್ನನ್ನು ಅಲ್ಲೆ ಗುರುತಿಸಿಕೊಳ್ಳುತ್ತಲೇ ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ. ಕೇವಲ ಬಾಯಾರಿಕೆಯ ಬಾಟಲಿ ನೀರಾಗಿರದೆ ಕಾವ್ಯ ಎಲ್ಲವನು ತೊಳೆದು ಕಳೆವ ಗಂಗೆಯಾದಾಗ ಜೀವದ ನಿರಂತ ಯಾನದ ಹಸಿವೆಯ ಇಂಗಿಸುತ್ತದೆ. + +ಕಾವ್ಯದಲ್ಲಿ ಭಾಷೆಯ ಬಳಕೆ ಮುಖ್ಯವಾದ ಅಭಿವ್ಯಕ್ತಿಯ ಅಂಶ. ಇವುಗಳಲ್ಲಿ ಒಂದು ಕಾಲಘಟ್ಟದ, ಮನಸ್ಥಿತಿಯ, ಅಭಿವ್ಯಕ್ತಿಯ ಉದ್ದೇಶದಿಂದ ಬಳಕೆಯಾಗಿದೆ. ಪೂರ್ಣದೃಷ್ಟಿಯೆಂದು ಹೇಳಲು ಸಾಧ್ಯವಿಲ್ಲದೇಹೋದರೂ ತಕ್ಷಣದ ಸಣ್ಣ ಅನುಭವವನ್ನೂ ಪ್ರವಾಹದೋಪಾದಿಯ ಜೀವನದ ಮುಂದೆ ಮುಖ್ಯ-ಅಮುಖ್ಯವೆಂದು ಪರಿಗಣಿಸದೆ ಒಂದು ಔಚಿತ್ಯದಲ್ಲಿ ಓದುಗರ ಮುಂದೆ ಹಿಡಿದಿಡುವಾಗ ಭಾಷೆಯಲ್ಲಿನ ಹೊಸತನ, ತೀವ್ರತೆಗೆ ಸಹಕಾರಿಯಾಗುವ ಪದಗಳನ್ನು ಕಡೆದು ನಿಲ್ಲಿಸುವ ಕ್ರಿಯೆಯಲ್ಲಿನ ಭಾಷೆಯ ಸಾಧ್ಯತೆ ಮರು ಓದನ್ನು ಕೇಳುತ್ತಲೇ ಶಾಶ್ವತವಾಗುವ ದಾರಿಯನ್ನ ಹಿಡಿದಿದೆ. ಎಲ್ಲಾ ಕಾಲದಲ್ಲಿಯೂ ತನ್ನಿರುವಿಕೆಯನ್ನ ಸಾಧಿಸುವಲ್ಲಿ ಕೆಲಸ ಮಾಡಿರುವ ಪ್ರಜ್ಞೆಯ ಬಗೆಗೆ ನಿಜವಾಗಿ ಬೆರಗಾಗಿಸುತ್ತಲೇ ಅನುಮಾನವನ್ನೂ ಮೂಡಿಸುತ್ತದೆ. ಇಲ್ಲಿನ ಕಾವ್ಯಗಳು ಬದುಕಿನ ಕೆಲವು ಘಟನೆಗಳನ್ನು ಪರಿಶೀಲಿಸಿ ನೋಡಿಕೊಳ್ಳುವ ಕ್ರಿಯೆಗೆ ತೆರೆದುಕೊಳ್ಳುವ ಕಿಟಕಿಯಂತೆ ಕೆಲಸ ಮಾಡುತ್ತಿವೆ. ಇದು ಪೂರ್ಣವೂ ಹೌದು-ಖಂಡವೂ ಹೌದು. ಹೀಗೆ ಸದ್ಯ ಶಾಶ್ವತಕ್ಕೆ ಬಾಯಾಗುವಲ್ಲಿ ಕವಿಯಲ್ಲಿನ ಕಸುಬುದಾರಿಕೆ ಕಲಾಕುಸುರಿತನಗಳು ನವೀನತೆಯಿಂದ ಕೂಡಿದೆ. ಈ ಕಾಲ ಮತ್ತು ಮನಸ್ಥತಿಯ ಮಿತಿಗೆ ಒಳಪಟ್ಟು ನಿಲುಗಡೆಯನ್ನು ಬಯಸುತ್ತಲೇ ಸೂಕ್ಷ್ಮವಾಗಿ ಓದುಗರಿಗೆ-ವಿಮರ್ಶಕನಿಗೆ ಸವಾಲೆಸೆಯುವ ಗುಣವೂ ಇವುಗಳಲ್ಲಿದೆ. ಸದ್ಯದ ಸಂಚಲನದಲ್ಲಿ ಮುಕ್ತತೆಯ ಹೆಸರಿನಲ್ಲಿ ನಡೆಯುತ್ತಿರುವ ಅಶ್ಲೀಲ-ಹೊಲಸುಗಳ ನಡುವೆ ಇದು ಉತ್ತಮವಾದ ಜೀವಪರವಾದ ಕಾಳಜಿಯಿಂದಲೂ, ಹಿಂದಿನ ಪರಂಪರೆಯ ನಡೆಯ ಬಗೆಗೆ ಪ್ರೀತಿಯೊಂದಿಗೆ ಅನುಮಾನವನ್ನು ಇಟ್ಟುಕೊಂಡು ಅರಸುತ್ತಾ ಗಮಿಸುತ್ತಿರುವ ಕಾವ್ಯಗಳಾಗಿದೆ. + +ವಾಸ್ತವದ ಹೊಲಸಿನಿಂದ ಬಿಡುಗಡೆ ಬಯಸಿರುವವರು ಇಲ್ಲಿ ನೆಲೆ ಕಾಣುವ ಸಾಧ್ಯತೆ ಇದ್ದೇಇದೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಸಮಸ್ಯೆಗಳೇ ಇಲ್ಲವೆಂದಲ್ಲ; ಹೊಸ ಹೊಸ ಪದಗಳನ್ನು ಕಾವ್ಯದಲ್ಲಿ ಬಳಸಿದಾಗ ತೆರೆವ ದಾರಿ ಕೆಲವೊಮ್ಮೆ ಬೆರಗಾದಂತೆ ಅನುಮಾನವನ್ನೂ ಹುಟ್ಟು ಹಾಕುತ್ತದೆ. ಸತ್ವದೊಂದಿಗೆ ಆ ಪದಗಳು ಕೂಡುವಾಗಿನ ಸಮಯದಲ್ಲಿ ಕೆಲಸ ಮಾಡುವ ಕಟ್ಟುವ ಪ್ರಜ್ಞೆ ಅನುಮಾನಗಳಿಂದ ಬಿಡುಗಡೆಗೆ ಜೀವನಾನುಭವದ ಪರಿಧಿಯನ್ನು ಓದುಗ ಗ್ರಹಿಸುತ್ತಲೇ ಕಾವ್ಯದೊಂದಿಗಿನ ಅನುಸಂಧಾನಕ್ಕೆ ತಯಾರಾದಲ್ಲಿ ಇದು ಸರಳವಾಗಿ ದೊಡ್ಡ ತತ್ವವನ್ನು ನಮ್ಮ ಮುಂದೆ ಇಡುತ್ತದೆ. ನಾವೀನ್ಯತೆ-ಕುತೂಹಲ-ಮಾರ್ದವತೆ-ಓದುಗನೊಂದಿಗೆ ಸಂಬಂಧ ಬೆಸೆಯುವಲ್ಲಿ ಪ್ರಮುಖ ಪಾತ್ರ ಭಾಷೆಯ ಮೂಲಕವೇ ವಹಿಸುತ್ತಿದೆ. + +ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ. ಈ ಬಹುದೊಡ್ಡ ಪಲ್ಲಟ ಆಗಿರುವುದಕ್ಕೆ ‘ಅಲೆ ತಾಕಿದರೆ ದಡ’ಕ್ಕಿಂತ ಹಿಂದೆ ಬಿಡುಗಡೆ ಆಗಿರುವ “ವಿರಕ್ತರ ಬಟ್ಟೆಗಳು” ಸಂಕಲನದ ಕೊನೆಯ ಕಾವ್ಯ “ಸಂತೆ ಬಯಲಿನ ಹಾಡು” ಇಂದ ಎಂದು ನನ್ನ ಗ್ರಹಿಕೆ. ಅಲ್ಲಿಯವರೆವಿಗೂ ಇದ್ದ ಅಭಿವ್ಯಕ್ತಿಯ ಕ್ರಮ ಅದರ ಪೋಷಕ ಅಂಶಗಳು ಅಲ್ಲಿಂದ ಮುಂದಕ್ಕೆ ಚಲನಶೀಲವಾಗಿದೆ ಎನ್ನುವುದಾದರೆ ಅದು ಕರವಸ್ತ್ರದಲ್ಲಿ. ಸಂತೆ ಬಯಲಿನ ಹಾಡು ಕಾವ್ಯದ ಭಾವವೇ ಇಂದಿನ ಕಾವ್ಯದ ನಿರ್ಮಾಣಕ್ಕೆ ಕಾರಣೀಭೂತವಾಗಿದೆ ಎಂದರೆ ಅಚ್ಚರಿಯಲ್ಲ. ಅದರೆ ಅದು ಕೇವಲ ಮುಂದುವರಿಕೆಯಾಗದೆ ಪಲ್ಲಟಗೊಳ್ಳುತ್ತಲೇ ಹಿಂದಿನದಕ್ಕೂ ಇಂದಿನದಕ್ಕೂ ಸಂಬಂಧ ಕಲ್ಪಿಸಿಕೊಳ್ಳುತ್ತಿದೆ. ಆ ಕಾವ್ಯ ಸಹಜವಾಗಿ ಪ್ರಾರಂಭವಾಗಿ ತನ್ನಲ್ಲಿ ಸಣ್ಣ ಸಣ್ಣ ಪದಗಳ ಮುಖಾಂತರ ಸೃಜಿಸಿಕೊಳ್ಳುವ ಅರ್ಥವೈಶಾಲ್ಯತೆ – ಪರಂಪರೆಯೊಂದಿಗೆ ಸಾಧಿಸುವ ಸಹಜ ಸಂಬಂಧದ ಕ್ರಮ ಇಲ್ಲಿ ಇನ್ನೂ ಹೆಚ್ಚಾಗಿದೆ ಮತ್ತು ವಿನೂತನವಾಗಿದೆ. + + + +ಪ್ರತಿಮೆಗಳ ಭರಾಟೆ ಕಾಲಘಟ್ಟವಿದು, ಕರವಸ್ತ್ರದ ಕಾವ್ಯಗಳ ಯಶಸ್ಸಿಗೆ ದಾರಿ ಮಾಡುವ ಅತೀ ಸಶಕ್ತ ಶಬ್ಧಚಿತ್ರಗಳ ನಿರಂತರ ಪ್ರವಾಹದ ಚಲನೆ ಕಾವ್ಯದ ಉದ್ದೇಶವನ್ನ ಯಶಸ್ವಿಗೊಳಿಸುವಲ್ಲಿ ಪ್ರಮುಖಪಾತ್ರ ವಹಿಸುತ್ತಿದೆ. ಅದರಂತೆ ಓದುಗನು ಗೊಂದಲಗೊಳ್ಳುವ ಸಾಧ್ಯತೆಯೂ ಇದೆ. ಪ್ರತಿಭೆಯನ್ನ ಗುರುತಿಸುವಲ್ಲಿ ಪರಂಪರೆಯನ್ನ ನೆನಪಿಸುತ್ತಲೇ ಅದರಿಂದ ಬಿಡುಗಡೆಹೊಂದಿ ಸದ್ಯಕ್ಕೆ ಬಯಲಾಗುವದಾರಿ ಸೂಕ್ಷ್ಮವಾಗಿದೆ. ಮೇಲು ನೋಟಕ್ಕೆ ಸರಳ ಎನಿಸಿದರೂ ಹೆಚ್ಚು ತಲ್ಲೀನತೆಯನ್ನ ಮತ್ತು ಸೂಕ್ಷ್ಮತೆಯನ್ನ ಓದುಗನಿಂದ ಬೇಡುತ್ತದೆ. ಕೆಲವೊಮ್ಮೆ ಪ್ರತಿಮೆಗಳ ಭರಾಟೆ ಗಂಭೀರ ವಿಮರ್ಶೆಗೆ ಅಪಾಯವನ್ನೂ, ಸೋಮಾರಿ ವಿಮರ್ಶಕನಿಗೆ ಸಹಜ ಸಂವಹನಕ್ಕೆ ದಾರಿ ಮಾಡಿಕೊಡುವಲ್ಲಿ ಮಹತ್ತರ ಪಾತ್ರವಹಿಸಿದೆ. ಭ್ರಮೆಯನ್ನು ಸೃಜಿಸಿಬಿಡುವರೇನೋ ಎಂದು ನೋಡು ನೋಡುತ್ತಿದ್ದಂತೆ ಹೊಸಹೊಳಹನ್ನು ಕಟ್ಟಿಕೊಡುವ ಕವನಗಳೂ ಈ ಸಂಕಲನದಲ್ಲಿದೆ. ಈ ವಿಮರ್ಶಾ ಅಪಾಯದಿಂದ ಬಿಡುಗಡೆಹೊಂದಲು ಒಂದು ಅಂತರವನ್ನು ಕಾಯ್ದುಕೊಳ್ಳುವ ಅಗತ್ಯತೆಯಂತೂ ಓದುಗನ ಜವಾಬ್ದಾರಿಯಾಗಿದೆ. ಕಾವ್ಯದ ಗಮ್ಯದ ಕಡೆಗೆ ಓದುಗ ಚಲಿಸುವಲ್ಲಿ ಗಮನಿಸಬೇಕಾದ, ವಹಿಸಬೇಕಾದ ಜಾಗರೂಕತೆ – ಕಾವ್ಯಕ್ಕೆ ಕೊಡುವ ಒತ್ತು ಇವರನ್ನು ವಿಭಿನ್ನವಾಗಿ ನೋಡುವ ಮಾದರಿಗಳನ್ನು ತಾನೇ ಸೃಜಿಸುತ್ತದೆ. ಕಾವ್ಯ ಜೀವದ್ರವ್ಯದ ಬಹುಮುಖೀ ವ್ಯಾಖ್ಯಾನದ ಸಾಧ್ಯತೆಯ ದಾರಿಯೆಂದು, ಗಮ್ಯವೆಂದೂ ಪ್ರತಿಮೆಗಳು ಅನಿಸಿಬಿಡುತ್ತದೆ. ನಿಲ್ಲದ ಕಾಲಕ್ಕೊಂದಿಷ್ಟು ನಿಲುಗಡೆಯ ತಾಣವಾಗಿ ನಕ್ಕುಬಿಡುವ ಪ್ರತಿಮೆಗಳು ಓದುಗನನ್ನು ಸೆಳೆದು ಮಾತನಾಡಿಸಿಬಿಡುತ್ತದೆ ಬೇಡವೆಂದರೂ. + +ಸರಳ – ಸಂಕೀರ್ಣ – ಅಮೂರ್ತ – ವಿರಳ ಪ್ರತಿಮೆಗಳ ಸಶಕ್ತ ಅಭಿವ್ಯಕ್ತಿ ದಾರಿ ಕವನಸಂಕಲನದಲ್ಲಿದ್ದು, ಕೆಲವುಕಡೆ ಒಡೆದ ಸ್ಥತಿಯಲ್ಲಿ ಪ್ರತಿಮೆಗಳು ರಚನೆಯಾದರೂ ಕಾವ್ಯದ ಇತರ ಅಂಗಗಳೊಂದಿಗೆ ಸಾಧಿಸುವ ಸಾಹಚರ್ಯದಿಂದ ಕಾವ್ಯದ ದಿಕ್ಕು ವಿಭಿನ್ನ ಅನಿಸುವುದರ ಜೊತೆಗೆ – ಕೆಲವೊಂದು ಕಡೆ ಉದ್ದೇಶದ ಸಶಕ್ತ ಅಭಿವ್ಯಕ್ತಿಯಲ್ಲಿ ಸಮಸ್ಯೆ ಅನಿಸುವಷ್ಟು ಮಟ್ಟದಲ್ಲಿ ಕಾವ್ಯದ ಹರಿವಿದೆ. ಅಭಿಜ್ಞಾನ, ದ್ವೈತ, ಬೀಗ, ಚಪ್ಪಲಿಗಳು, ನದಿ ಇವುಗಳು ಉತ್ತಮ ಉದಾಹರಣೆಯೊಂದಿಗೇ ಓದುಗನಲ್ಲಿ ವ್ಯುತ್ಪತ್ತಿ – ಶ್ರಮ ಬೇಡುತ್ತವೆ. + +(ಆರ್. ದಿಲೀಪ್ ಕುಮಾರ್) + +ಇಂದ್ರಿಯ ಗ್ರಹಿಕೆಯ ಪ್ರತಿಮೆಗಳು ಸಮಕಾಲೀನ ಕಾವ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತಿದ್ದು ಅದರಿಂದ ಬಿಡುಗಡೆಹೊಂದಿದ ವಿರಳಾತಿವಿರಳ ಪ್ರತಿಮೆಗಳು ಕಾವ್ಯದಲ್ಲಿ ನಿರ್ಮಿಸುವ ಪರಿಸರದೊಂದಿಗೆ ಓದುಗನ ಮೇಲೆ ಬೀರುವ ಪ್ರಭಾವವನ್ನು ಸೂಕ್ಷ್ಮವಿವೇಚನೆಯ ಮೂಲಕ ಅರ್ಧೈಸುವ ಸಾಧ್ಯತೆ ಕರವಸ್ತ್ರದಲ್ಲಿದೆ. ಇದು ಯಶಸ್ವಿ ದಾರಿಯಾಗಿಯೂ ಕೆಲಸ ಮಾಡುತ್ತಿದೆ. + +ಕಾವ್ಯದ ಓದುಗನು ತನ್ನ ಗ್ರಹಿಕೆಯನ್ನು ಸಾಕ್ಷಾತ್ಕರಿಸುವಲ್ಲಿ ಇವರು ಕಟ್ಟಿಕೊಡುವ ರೂಪಕಗಳು ಪರಂಪರೆಯೊಂದಿಗೆ ಸಂವಾದಿಸುತ್ತಲೇ ಅದರಿಂದ ಬಿಡುಗಡೆಹೊಂದಿ ಭಾವನಾತ್ಮಕ ಸಂಬಂಧ ಸೃಜಿಸಿಕೊಳ್ಳುವಲ್ಲಿ ಯಶಸ್ವಿ ಮಾಧ್ಯಮವಾಗಿ ರೂಪಕ ಬಳಕೆಯಾಗಿದೆ. ಪರಂಪರೆಯನ್ನ ಒಪ್ಪಿ ಅದನ್ನು ಮೀರುವಲ್ಲಿ ಕವಿ ವಹಿಸುವ ಜಾಗರೂಕತೆ ಪ್ರತಿಭೆಯ ವಿಭಿನ್ನತೆ – ಸದ್ಯದ ದಾರಿಯನ್ನು ಶೋಧಿಸುವಲ್ಲಿನ ನಿರಂತರ ತುಡಿತ ಅತಿಯಾಗಿದೆ. + +ಎಲ್ಲಿಯೂ ರೂಕ್ಷ ಅನ್ನಿಸದ ಮಟ್ಟದಲ್ಲಿರುವ ಈ ಕಾವ್ಯಗಳನ್ನು ಧೇನಿಸುವ ಸಮಯ ಇದು. ಇದರಲ್ಲಿನ ಮೃದುತ್ವ ಮತ್ತು ಓದುಗನೊಂದಿಗೆ ಸಂವಹಿಸುವ ಕಾವ್ಯದ ಬಗೆಗೆ ಏನೇ ಮಾತಾಡಿದರೂ ಅದು ಆ ಕ್ಷಣದಲ್ಲಿ ಹೊಳೆವ ಹೊಳಹುಗಳು ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಆ ಕಾರ್ಯವನ್ನು ಕೆಲವು ಮಾತುಗಳ ಮುಖಾಂತರ ಆಡುವ ಪ್ರಯತ್ನ ಮಾಡಿದ್ದೇನೆ. ಇದಲ್ಲದೆ ಕಾವ್ಯ ನಿಮ್ಮೊಂದಿಗೆ ಮಾತನಾಡಿದರೆ ಅದಕ್ಕೆ ಸಂಪೂರ್ಣ ಕಾವ್ಯವೇ ಜವಾಬ್ದಾರಿ. ಕಾವ್ಯದೊಂದಿಗೆ ಓದುಗರು ಸ್ಪಂದಿಸಿದರೆ ಅದಕ್ಕಿಂತ ಬಹುದೊಡ್ಡ ಪ್ರಶಸ್ತಿ ಮತ್ತೊಂದಿಲ್ಲ. + + + +ಈ ಕವನ ಸಂಕಲನಕ್ಕೆ ಮುನ್ನುಡಿಯ ರೂಪದಲ್ಲಿ ಕೆಲವು ಮಾತುಗಳನ್ನು ನನ್ನಿಂದ ಆಡಿಸುವ ಧೈರ್ಯಕ್ಕೆ ಮೆಚ್ಚಲೇಬೇಕು. ಅವರ ಎಲ್ಲಾ ಸಂಕಲನಕ್ಕೆ ಸ್ಪಂದಿಸಿದಂತೆ ಇದಕ್ಕೂ ಸ್ಪಂದನೆ ದೊರೆಯಲಿ. ಮುನ್ನುಡಿಯನ್ನು ಬಿಟ್ಟು ಕಾವ್ಯ ಗೆಲ್ಲಲಿ-ಉಳಿಯಲಿ-ಉಲಿಯಲಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_373.txt b/Kenda Sampige/article_373.txt new file mode 100644 index 0000000000000000000000000000000000000000..981f567646aea7e682a8563124e9a7b0826fa512 --- /dev/null +++ b/Kenda Sampige/article_373.txt @@ -0,0 +1,35 @@ +byಕೆಂಡಸಂಪಿಗೆ|Jul 28, 2019|ವಾರದ ಕಥೆ,ಸಾಹಿತ್ಯ| 0 Comments + +“ಅವಳಂತೂ ಸುಮ್ಮಸುಮ್ಮನೆ ಗಾಬರಿ ಮಾಡಿಕೊಳ್ಳುತ್ತಾಳೆ, ತನ್ನ ತಾಯಿ ಹಾಗೇ ಅಲ್ಲವಾ, ನೂರಕ್ಕೆ ನೂರರಷ್ಟು!” ಅವರು ನಸುನಗುತ್ತಾ ಹೇಳುತ್ತಾರೆ, “ಭಾರತದಲ್ಲಿ ಭಾರಿ ಹೊಡೆದಾಟ ಬಡಿದಾಟ ನಡೆದಿದೆ. ಇಡೀ ದೇಶ ರಕ್ತದಿಂದ ತೊಯ್ದು ಹೋಗುತ್ತಿದೆ ಎಂದು ಅಲ್ಲಿ ಎಲ್ಲರಿಗೂ ಅನ್ನಿಸಿದೆಯಂತೆ…. ನಾನು ಕಳೆದ ತಿಂಗಳು ತಾನೆ ಶ್ಯಾಮಾಳ ಮದುವೆಗಾಗಿ ಅಮೃತಸರಕ್ಕೆ ಹೋಗಿದ್ದೆ….” + +byಕೆಂಡಸಂಪಿಗೆ|Jul 22, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಈ ವಯ್ಯ ನನ್ ಕಾಲುಂಗ್ರ ಬುಟ್ಟು ಮ್ಯಾಲಕ್ಕೆ ಯಾವತ್ತೂ ದಿಟ್ಸಿ ನೋಡಿಲ್ಲ. ತಂದೆ ಮಗಳಂಗೆ ನಮ್ ಸಂಬಂಧ. ಎಸ್ಟೊರ್ಸ ಆದ್ರು ಮಕ್ಳಾಗ್ದಿದ್ದಾಗ ಪೂಜೆ ಮಾಡ್ಸಿ ಯಂತ್ರಾನೂ ತಾವ್ ಕಟ್ದೆ ನನ್ ಯಜಮಾನನ್ ಕೈಲಿ ಕಟ್ಸುದ್ರು. ನನ್ನ ಯಾವತ್ತೂ ತಾಯಿ, ಅವ್ವ ಅಂತ, ಕೆಂಪಮ್ಮ ಅಂತ ಕರೆದವ್ರೆ ಒರ್ತು ಸದರ ಅಂತ ಇಲ್ವೇಇಲ್ಲ. ನಮ್ ಅಟ್ಟಿಗ್ ಬಂದ್ರು ಚೌಡೇಸ್ವರಿ ಅಂಕಣ ದಾಟಿ ಒಳಗ್ ಬಂದಿಲ್ಲ.” + +byಡಾ. ಬಿ. ಜನಾರ್ದನ ಭಟ್|Jul 21, 2019|ವಾರದ ಕಥೆ,ಸಾಹಿತ್ಯ| 0 Comments + +“ರಂಗಪ್ಪನ ಖರ್ಚು ಬಹಳ ಕಡಿಮೆ. ಬೀಡಿ, ಸಿಗರೇಟು, ಎಲೆ-ಅಡಿಕೆ, ಕಾಫಿ ಮೊದಲಾದ ಎಲ್ಲಾ ಅಭ್ಯಾಸಗಳು ಅವನಿಗಿದ್ದರೂ ಅವನಾಗಿ ಯಾವುದನ್ನೂ ಹಣಕೊಟ್ಟು ಕೊಂಡುಕೊಳ್ಳುವವನಲ್ಲ. ಹಾಗೆ ಯಾರಾದರೂ ಸಿಗರೇಟೋ, ಬೀಡಿಯೋ ಕೊಟ್ಟರೆ, ‘ಸ್ವಾಮೀ ಈ ದುರಭ್ಯಾಸದಿಂದಾಗಿ ನನ್ನ ಮನೆ ಹಾಳಾಗಿ ಹೋಯಿತು. ಗ್ರಾಮಸಂಚಾರಿಗಳಾದ ನಮಗೆ ಎಲ್ಲರೂ ಮಿತ್ರರೇ.” + +byಓ.ಎಲ್. ನಾಗಭೂಷಣ ಸ್ವಾಮಿ|Jul 15, 2019|ವಾರದ ಕಥೆ,ಸಾಹಿತ್ಯ| 0 Comments + +“ಓದುಗರು ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’” + +byಶ್ರೀದೇವಿ ಕೆರೆಮನೆ|Jul 14, 2019|ವಾರದ ಕಥೆ,ಸಾಹಿತ್ಯ| 2 Comments + +“ಕೊನೆಗೆ ಅದ್ಯಾವ ಮಾಯದಲ್ಲಿ ಕಣ್ಣೋಟ ಮಾತಾಯ್ತೋ. ಮಾತು ಪ್ರೀತಿಯಾಯ್ತೋ ಯಾರಿಗೂ ಗೊತ್ತಾಗಲಿಲ್ಲ. ಮುಂದಿನ ವರ್ಷ ಹತ್ತನೇ ಕ್ಲಾಸಿನಲ್ಲಿ ಫೇಲಾಗಿ ಶಂಕರ ಮೀನು ಹಿಡಿಯಲು ಹೋದರೆ, ಪಾರ್ವತಿಯೂ ಶಾಲೆ ಬಿಟ್ಟು ಅವ್ವಿಯೊಡನೆ ಮೀನು ಮಾರಲು ಹೊರಟಳು.” + +byಕೆ.ವಿ. ತಿರುಮಲೇಶ್|Jul 8, 2019|ದಿನದ ಪುಸ್ತಕ,ಸಾಹಿತ್ಯ| 0 Comments + +ಕಿನಾರ ಬರೆಯುವುದು ಮನುಷ್ಯರ ಬಗ್ಗೆ, ತಾನು ಬರೆಯುವುದಕ್ಕೆ ನ್ಯಾಯ ಒದಗಿಸಬಲ್ಲೆನೇ ಇಲ್ಲವೇ ಎನ್ನುವುದು ಈ ಕತೆಗಾರನನ್ನು ಕಾಡುವ ಆತಂಕ ಎನಿಸುತ್ತದೆ. ಆದ ಕಾರಣ ಅವರ ಕತೆಗಳು ಒಂದೇ ವಸ್ತುವಿನ ಕುರಿತು ಬರೆದ ಬೇರೆ ಬೇರೆ ಕಥಾವೃತ್ತಿಗಳಂತೆ ಅನಿಸಿದರೆ ಆಶ್ಚರ್ಯವಿಲ್ಲ: “ + +byಡಾ. ಬಿ. ಜನಾರ್ದನ ಭಟ್|Jul 7, 2019|ವಾರದ ಕಥೆ,ಸಾಹಿತ್ಯ| 0 Comments + +ಪಟೇಲ ಪದ್ಮರಾಜನಿಗೆ ಮತ್ತೊಬ್ಬ ಅಡಿಗೆಯವನು ಇನ್ನೂ ಸಿಕ್ಕಲಿಲ್ಲ. ಅದು ಕಾರಣದಿಂದ ಹುದ್ದೇದಾರರು ಇದ್ದಷ್ಟು ದಿನ ವೈದ್ಯರು ಒಲೆಯ ಬಳಿ ಹೆಂಗಸಿನಂತೆ ಬೇಯಬೇಕಾಯಿತು. ಮೂರನೆಯ ದಿನ ಮಧ್ಯಾಹ್ನದಲ್ಲಿ ಕೃಷ್ಣ ವೈದ್ಯರು ಯಾವುದನ್ನೋ ನೆನೆಸುತ್ತ ಕುಳಿತಿದ್ದರು. “ + +byಕೆಂಡಸಂಪಿಗೆ|Jul 1, 2019|ದಿನದ ಪುಸ್ತಕ,ಸಾಹಿತ್ಯ| 0 Comments + +ಚಿಣ್ಣಪ್ಪನವರು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ. ಅದರಿಂದ ಒಂದು ರೀತಿಯಲ್ಲಿ ಒಳ್ಳೆಯದಾಯಿತೆಂದೇ ಹೇಳಬೇಕು. ಚಿಕ್ಕ ಮಕ್ಕಳಲ್ಲಿ ನಿಸರ್ಗ-ಪರಿಸರಗಳ ಬಗ್ಗೆ ಅಪಾರ ಕುತೂಹಲವಿರುತ್ತದೆ. ಆ ಕುತೂಹಲವೆಲ್ಲವನ್ನೂ ನಮ್ಮ ಶಾಲೆಗಳ ವಿದ್ಯಾಭ್ಯಾಸ ಕ್ರಮ ಕೊಂದೇಬಿಡುತ್ತದೆ. + +byಶುಭಾ ಎ.ಆರ್.|Jun 30, 2019|ವಾರದ ಕಥೆ,ಸಾಹಿತ್ಯ| 0 Comments + +“ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು.” \ No newline at end of file diff --git a/Kenda Sampige/article_374.txt b/Kenda Sampige/article_374.txt new file mode 100644 index 0000000000000000000000000000000000000000..19b3c07f5a921017cc078e1943cda88c7b7ed136 --- /dev/null +++ b/Kenda Sampige/article_374.txt @@ -0,0 +1,67 @@ + + +ರಂಗಪ್ಪನು ನಮ್ಮ ಗ್ರಾಮದ ಉಗ್ರಾಣಿ. ಅವನ ಪರಿಚಯ ಇಲ್ಲದವರು ನಮ್ಮಲ್ಲಿ ಯಾರೂ ಇಲ್ಲ. ಯಾಕೆಂದರೆ – ತೀರ್ವೆ ಹಣ ವಸೂಲು ಮಾಡಲಿಕ್ಕೆ – ದಾಕು ಹಾಕುವ ಮುಂಚಿತವಾಗಿ ನೋಟೀಸು ಜಾರಿಮಾಡಲಿಕ್ಕೆ, ಜನನ-ಮರಣಗಳನ್ನು ದಾಖಲು ಮಾಡಲಿಕ್ಕೆ – ಹೀಗೆ ವರ್ಷಕ್ಕೆ ನಾಲ್ಕಾರು ಸಲ ಪ್ರತಿಯೊಬ್ಬನ ಮನೆಗೂ ಅವನು ಹೋಗುವನು. ಡೊಂಬಿ, ಖೂನಿ, ಕಳವುಗಳಾದಲ್ಲಿ ಪಟೇಲರ ಒಟ್ಟಿಗೆ ಬಂದು ಜರ್ಬಿನಿಂದ ಜನರ ಗುಂಪನ್ನು ಚದರಿಸಲಿಕ್ಕೆ ಅವನು. ಅಲ್ಲಿಂದ ಪೋಲೀಸು ಸ್ಟೇಶನಿಗೆ – ಪೋಲೀಸು ಸ್ಟೇಶನ್ನಿಂದ ಪಟೇಲರಲ್ಲಿಗೆ – ಪಟೇಲರಲ್ಲಿಂದ ಶ್ಯಾನುಭಾಗರಲ್ಲಿಗೆ ಓಡಾಡಲಿಕ್ಕೆ ಅವನು. ಹೀಗಾಗಿ ನಮ್ಮ ಗ್ರಾಮದಲ್ಲಿನ ಉಗ್ರಾಣಿ ರಂಗಪ್ಪ ಬಹಳ ಪ್ರಸಿದ್ಧ ವ್ಯಕ್ತಿ. + +ನಮ್ಮ ಮೂಡುಬೈಲು ದೊಡ್ಡ ಗ್ರಾಮ, ಸಾಧಾರಣ ಎಂಟು ನೂರು ಮನೆಗಳಿವೆ, ಮೂರು ಸಾವಿರಕ್ಕೆ ಮಿಕ್ಕಿ ಜನಸಂಖ್ಯೆಯಿದೆ. ಗ್ರಾಮಸ್ಥರಲ್ಲಿ ಹೆಚ್ಚಿನವರು ನಿರಕ್ಷರಕುಕ್ಷಿಗಳು. ಬೇಸಾಯ, ಕೂಲಿ ಕೆಲಸ ಇವೇ ಅವರ ಜೀವನೋಪಾಯ. + +ರಂಗಪ್ಪ ಒಳ್ಳೆಯ ಮನುಷ್ಯ, ಯಾರ ತಳ್ಳಿಗೂ ಹೋಗುವವನಲ್ಲ. ಅವನು ತನ್ನ ಸಂಸಾರವನ್ನು ಸಾಕಲಿಕ್ಕಾಗಿಯೇ ಗ್ರಾಮದಲ್ಲೆಲ್ಲಾ ಅಲೆಯುವ ಈ ಉಗ್ರಾಣಿ ಕೆಲಸಕ್ಕೆ ಕೈಕೊಟ್ಟಿರುವನೆಂದು ಹೇಳಿದರೆ ತಪ್ಪಾಗದು. ಯಾಕೆಂದರೆ ನಡೆನಡೆದು ಬೇಸತ್ತು, ಮನೆಬಾಗಿಲಿಗೆ ಬಂದು ತನ್ನ ಕಷ್ಟವನ್ನು ಹೇಳಿಕೊಳ್ಳುವಾಗ “ನನ್ನ ಮಂದಿ ತಂದೆ-ತಾಯಿಗಳಿಗಲ್ಲದಿದ್ದರೆ ಈ ಸುಟ್ಟ ಕೆಲಸಕ್ಕೆ ಯಾವಾಗಲೋ ರಾಜಿ ಕೊಡುತಿದ್ದೆ” ಎಂದು ಹೇಳುತಿದ್ದುದನ್ನು ನಾವು ಎಷ್ಟೋ ಸಲ ಕೇಳಿದ್ದೇವೆ. ಈ ಮಾತು ಸುಳ್ಳಲ್ಲ. ಪಾಪ! ಬೆಳಗ್ಗೆ ಆರು ಗಂಟೆಗೆ ಕಾಲಿಗೆ ಜೋಡು ಸೇರಿಸಿ ಹೊರಟರೆ, ಸಂಜೆಯವರೆಗೆ ತಿರುತಿರುಗಿ ಸಾಕೆನಿಸುತ್ತವೆ. ಅದರಲ್ಲೂ ನಮ್ಮ ಎಂಕು ಭಟ್ಟರಂತಹ ಪಟ್ಟೆದಾರರಿದ್ದರೆ ಕೇಳುವುದೇ ಬೇಡನ್ನಿ. ಮೂರುವರೆ ರೂಪಾಯಿ ತೀರ್ವೆಗೆ ಮಾರ್ಚಿ 1ನೇ ತಾರೀಕಿನಲ್ಲಿ ಅವರ ಮನೆ ಬಾಗಿಲಿಗೆ ಹೋಗಲಾರಂಭಿಸಿದರೆ ಮೇ ಆಖೈರಿಗಾದರೂ ಅವರ ತೆಂಗಿನ ಮರದ ಸೀಯಾಳವನ್ನು ತೆಗೆಯಲಿಕ್ಕೆ ಮರಹತ್ತುವವನನ್ನು ಕರೆತರಿಸಿ, ಮರ ಏರಿಸಿದ್ದಲ್ಲದೆ ಅವರು ಕೊಡುವಹಾಗಿಲ್ಲ. ಕೆಲವರಲ್ಲಿ ದಾಕಿನ ನೋಟೀಸು ಕೊಂಡುಹೋದರೆ `ಮಗು ಇಲ್ಲಿಲ್ಲ. ಅಜ್ಜಿಯ ಮನೆಗೆ ಹೋಗಿದೆ’ ಎಂದು ಅಲ್ಲಿಗೆ ಕಳುಹಿಸುವುದು. ಅಲ್ಲಿಂದ ಇನ್ನೊಂದು ಕಡೆಗೆ ಕಳುಹಿಸುವುದು. ಇದಕ್ಕಾಗಿ ಗುಡ್ಡೆಯ ಕಲ್ಲು ತುಳಿದು ಕಾಲಿದ ಚರ್ಮ ಸವೆದುಹೋದರೂ ರಂಗಪ್ಪನಿಗೆ ತಿಂಗಳಿಗೆ ಸಿಗುವುದು ಒಂಬತ್ತುವರೆ ರೂಪಾಯಿ ಮಾತ್ರ. ಅವನಿಗೆ ತಂದೆತಾಯಿಗಳು, ತಮ್ಮಂದಿರು, ಹೆಂಡತಿ ಎಲ್ಲಾ ಇದ್ದಾರೆ. ಇಷ್ಟು ದೊಡ್ಡ ಕುಟುಂಬನಡೆಸಲಿಕ್ಕೆ ಈ ಒಂಬತ್ತುವರೆ ಎಲ್ಲಿ ಸಾಕಾದೀತು? ಒಂದು ಸ್ವಂತ ಮನೆ, ತೋಟ, ಸ್ವಲ್ಪ ಗದ್ದೆ ಇಷ್ಟು ಇದ್ದುದರಿಂದ ಅವನು ಈ ಹೊತ್ತು ಗ್ರಾಮದಲ್ಲಿ ತಿರುಗಾಡುತ್ತಾನೆ. ಅಲ್ಲದೆ ಹೋದರೆ ಅವನು ಊರುಬಿಟ್ಟು ಓಡಿಹೋಗಬೇಕಾದ ಕಾಲ ಯಾವಾಗಲೋ ಬರುತ್ತಿತ್ತು. + +ರಂಗಪ್ಪನ ಖರ್ಚು ಬಹಳ ಕಡಿಮೆ. ಬೀಡಿ, ಸಿಗರೇಟು, ಎಲೆ-ಅಡಿಕೆ, ಕಾಫಿ ಮೊದಲಾದ ಎಲ್ಲಾ ಅಭ್ಯಾಸಗಳು ಅವನಿಗಿದ್ದರೂ ಅವನಾಗಿ ಯಾವುದನ್ನೂ ಹಣಕೊಟ್ಟು ಕೊಂಡುಕೊಳ್ಳುವವನಲ್ಲ. ಯಾರಾದರೂ ಕೊಟ್ಟರೆ ಮಾತ್ರ ಸೇವಿಸುತ್ತಿದ್ದನು. ಅದು ಒಳ್ಳೆಯ ಗುಣವೆಂದೆನ್ನಿ. ಹಾಗೆ ಯಾರಾದರೂ ಸಿಗರೇಟೋ, ಬೀಡಿಯೋ ಕೊಟ್ಟರೆ, ‘ಸ್ವಾಮೀ ಈ ದುರಭ್ಯಾಸದಿಂದಾಗಿ ನನ್ನ ಮನೆ ಹಾಳಾಗಿ ಹೋಯಿತು. ಗ್ರಾಮಸಂಚಾರಿಗಳಾದ ನಮಗೆ ಎಲ್ಲರೂ ಮಿತ್ರರೇ. ಅವರು ಕೇಳುವಾಗ ಕೊಡದೆ ಇರುವುದು ಹೇಗೆ? ಅವನಿಗೊಂದು ಇವನಿಗೊಂದು ಅಂತ ಹೇಳುವಾಗ ನನಗೆ ದಿನವೊಂದಕ್ಕೆ ಮೂರು ನಾಲ್ಕಾಣೆ ಆಗುತ್ತದೆ, ಸ್ವಾಮೀ’ ಎಂದು ಮೋರೆ ಜೋಲುಹಾಕಿ ಹೇಳುವನು. ಇದು ನಿಜವೋ ಸುಳ್ಳೋ ಎಂದು ನಮಗೆಲ್ಲ ಗೊತ್ತಿದೆ. ನಾವು ತಿಳಿದಿರುವೆವೆಂದು ಅವನಿಗೂ ಗೊತ್ತು. ಆದರೆ ಹೀಗೆ ಬಡಾಯಿ ಕೊಚ್ಚುವುದು ಅವನಿಗೆ ಅಭ್ಯಾಸವೇ ಆಗಿಹೋಗಿದೆ. ಇದೊಂದು ಮಾತ್ರ ಅವನಲ್ಲಿದ್ದ ಕೆಟ್ಟ ಗುಣ. ಅವನು ಮಾತಾಡಲಿಕ್ಕೆ ತೊಡಗಿದನೆಂದರೆ, ಅವನು ಮೈಸೂರು ಮಹಾರಾಜರ ಅರಮನೆಯಲ್ಲಿ ಬೆಳೆದವನೋ ಅಥವಾ ಮಿಲಾಯತಿಯಿಂದ ಚಕ್ರವರ್ತಿಗಳ ಪ್ರತಿನಿಧಿಯಾಗಿ ಬಂದವನೋ ಎಂದು ಕಾಣಿಸುತ್ತದೆ. ಅದರಿಂದ ನಮಗೇನು ಬಾಧಕವಿಲ್ಲದಿದ್ದರೂ ಅವನು ಮಾತ್ರ ಅನೇಕ ವೇಳೆ ಕಷ್ಟದಲ್ಲಿ ಬಿದ್ದುದುಂಟು. + +ನಮ್ಮ ಗ್ರಾಮದಲ್ಲೆ ಎಂಟುನೂರು ಮನೆಗಳಿವೆ ಎಂದು ಹೇಳಿದ ಮೇಲೆ ಅದು ಬಹಳ ದೊಡ್ಡ ಗ್ರಾಮ ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಆದ್ದರಿಂದ ಇಲ್ಲಿ ಎರಡು ಉಗ್ರಾಣಿಗಳು. ಒಂದು ನಮ್ಮ ರಂಗಪ್ಪ. ಇವನಿಗೆ ಓದುಬರಹ ಚೆನ್ನಾಗಿ ಗೊತ್ತುಂಟು. ಹೆಚ್ಚೆಂದರೆ 24 ವರ್ಷ ಪ್ರಾಯ. ಮೈ ಬಣ್ಣ ಬೆಳ್ಳಗೆ. ನೋಡಲಿಕ್ಕೆ ಬಹಳ ಸುಂದರ ಪುರುಷ. ಇನ್ನೊಬ್ಬನಿಗೆ ವಿದ್ಯೆಯಿಲ್ಲ. ಏನಾದರೂ ಪಟೇಲರೊ, ಶ್ಯಾನುಭಾಗರೋ ಹೇಳಿದ ಕೆಲಸ ಮಾಡುತ್ತಿದ್ದ ಅಷ್ಟೆ. ಪಟೇಲರಿಲ್ಲದೆ ಈ ಇಬ್ಬರೂ ಉಗ್ರಾಣಿಗಳು ಎಲ್ಲಿಗಾದರೂ ಹೋಗುವುದಿದ್ದರೆ ರಂಗಪ್ಪನು ಉಗ್ರಾಣಿ ಹೋಗಿ ಪಟೇಲನೇ ಆಗುತ್ತಿದ್ದನು. ಅವನ ಉಡುಗೆ ತೊಡುಗೆಗಳನ್ನು ನೋಡಿದರೆ ಪಟೇಲನಲ್ಲವೆಂದು ಯಾರೂ ಹೇಳಲಿಕ್ಕಿಲ್ಲ. ಪುಸ್ತಕದ ಕಟ್ಟುಗಳನ್ನು ಇನ್ನೊಬ್ಬ ಉಗ್ರಾಣಿಯಿಂದ ಹೊರಿಸಿ, ಅವನು, ತಾನು ಕೈ ಬೀಸಿ ಹೋಗುವನು. ಮನೆಗೆ ಹೋದೊಡನೆ ಗಟ್ಟಿಸ್ವರದಿಂದ ತನ್ನೊಟ್ಟಿಗೆ ಬರುವವನನ್ನು ಕುರಿತು, `ಉಗ್ರಾಣಿ, ಪುಸ್ತಕ ಎಲ್ಲಿ? ಇತ್ತ ಕೊಡು’ ಎಂದು ಕೇಳುವನು. ಇದನ್ನು ಕೇಳಿದ ನಮ್ಮ ಹಳ್ಳಿಯವರಲ್ಲಿ ಕೆಲವರು ಇವನೇ ಪಟೇಲರೆಂದು ತಿಳಿದುಕೊಂಡು ಇವನಿಗೆ ಎಲೆ ಅಡಿಕೆ ಕೊಟ್ಟು ಉಪಚಾರ ಮಾಡುವರು. ಕೆಲವರು `ಎರಡು ದಿನ ಸಮಯ ಕೊಡಬೇಕು ಸ್ವಾಮಿ!’ ಎಂದು ನಮ್ರತಾಭಾವದಿಂದ ಬೇಡುವರು. ಇನ್ನು ಕೆಲವರು ಇವನನ್ನು ಲಕ್ಷ್ಯಕ್ಕೆ ತಾರದೆ ಹೋದರೆ ಅವನು ‘ಈಗಲೇ ನಿಮ್ಮ ಮನೆ ಜಪ್ತಿಮಾಡಿಸುತ್ತೇನೆ’ ಎಂದು ಗದರಿಸುವುದೂ ಉಂಟು. ಕೆಲವರು `ಇದೇನಯ್ಯ? ಕಳೆದ ವರ್ಷಕ್ಕಿಂತ ರೂಪಾಯಿಯಲ್ಲಿ ಅರ್ಧಾಣೆ ಪ್ರಕಾರ ಜಾಸ್ತಿ ಆಗಿದೆ ತೀರ್ವೆ. ಹೆಚ್ಚಿನ ಅಂಶ ಕೊಡುವುದಿಲ್ಲ’ ಎಂದು ವಾದಿಸಿದರೆ `ಹಾಗೆಲ್ಲ ಮಾತಾಡಿದರೆ ಬರುವ ವರ್ಷ ಒಂದಾಣೆ ಪ್ರಕಾರ ಏರಿಸುತ್ತೇನೆ ನೋಡಿ. ರಶೀದಿಯಲ್ಲಿ ಬರೆದಷ್ಟು ಹಣ ಕೊಟ್ಟುಬಿಡಿ. ಇದರಲ್ಲಿ ಚರ್ಚೆ ಮಾಡಲಿಕ್ಕೆ ಸರ್ಕಾರ ಅಂದ್ರೆ ಸಂತೆ ಅಂತ ಭಾವಿಸಿದ್ರಾ’ ಎಂದು ಹೆದರಿಸುವುದೂ ಉಂಟು. + +ಅವನು ಎಲ್ಲವರಲ್ಲಿಯೂ ಹೀಗೆ ಮಾತಾಡುವುದಿಲ್ಲ. ಪರಿಚಯವಿಲ್ಲದ ಕೆಲವರಲ್ಲಿ ಮಾತ್ರ ತಮಾಷೆಗಾಗಿ ಹೀಗೆ ಮಾತನಾಡುತ್ತಿದ್ದನು. ಆದರೆ ಅವನು ಮಾಡಿದ ಕೆಲಸಗಳೆಲ್ಲ ಬಯಲಿಗೆ ಬಂದು ಅವು ಈಗ ಹೆಚ್ಚಿನ ಗ್ರಾಮಸ್ಥರ ಬಾಯಿಯಲ್ಲಿದೆ. + +1931 ನೆಯ ಖಾನೇಶುಮಾರಿಯಲ್ಲಿ ಗ್ರಾಮದ ಕೆಲವು ಮನೆಗಳಿಗೆ ಹೋಗಿ ಜನರ ಲೆಕ್ಕತೆಗೆಯುವ ಕೆಲಸ ನಮ್ಮ ರಂಗಪ್ಪನ ಪಾಲಿಗೆ ಬಿದ್ದಿತ್ತು. ನಮ್ಮ ಗ್ರಾಮದಲ್ಲಿ ತಿಮ್ಮಪ್ಪನೆಂಬ ಒಬ್ಬ ಒಕ್ಕಲಿಗನಿದ್ದಾನೆ. ಅವನು ಇತರರಂತೆ ಕಾಯಿದೆ ಕಾನೂನುಗಳನ್ನು ತಿಳಿದವನಲ್ಲ. ಉಗ್ರಾಣಿ ರಂಗಪ್ಪನು ಅವನಲ್ಲಿಗೆ ಹೋಗಿ `ಅಯ್ಯಾ, ನಿಮ್ಮಲ್ಲಿ ಎಷ್ಟು ಜನರಿದ್ದಾರೆ?’ ಎಂದು ಕೇಳಿದನು. + +“ಒಂಭತ್ತು, ಸ್ವಾಮೀ!”“ನಿಮ್ಮ ಹೆಸರೇನು?”“ತಿಮ್ಮಪ್ಪ”“ನಿಮ್ಮ ಹೆಂಡತಿಯ ಹೆಸರೇನು?”“ನಾಗು”“ಎಲ್ಲಿಂದ ಮದುವೆಯಾದದ್ದು?”“ಹೇರೂರಿನಿಂದ.”“ನಿಮಗೆ ಎಷ್ಟು ಜನ ಮಕ್ಕಳು?”“ಆರು”“ಹೆಣ್ಣೆಷ್ಟು? ಗಂಡೆಷ್ಟು?”“ಮೂರು ಹೆಣ್ಣು, ಮೂರು ಗಂಡು”“ಹೆಣ್ಣುಮಕ್ಕಳಿಗೆ ಮದುವೆಯಾಗಿದೊ?”“ಇಬ್ಬರಿಗೆ ಆಗಿದೆ.”“ಮತ್ತೊಬ್ಬಳಿಗೆ?”“ಆಗಲಿಲ್ಲ. ಅವಳಿಗೆ ಹದಿಮೂರು ವರ್ಷ ಆಗಿದೆಯಷ್ಟೆ.”“ಯಾಕೆ ಮದುವೆ ಮಾಡುವುದಿಲ್ಲ?” + +ಈ ಪ್ರಶ್ನೆ ಯಜಮಾನನಿಗೆ ಬಹಳ ವಿಚಿತ್ರವೆನಿಸಿತು. ಅವನು `ಸ್ವಾಮೀ! ಅದನ್ನೂ ಬರೆದುಕೊಳ್ಳಲಿಕ್ಕಿದೆಯೊ?’ ಎಂದು ಕೇಳಿದನು. + +`ಎಲ್ಲಾ ಇದೆ. ಸರ್ಕಾರದ ಕಾಯಿದೆ ಕಾನೂನುಗಳಿಗೆ ಮಿತಿಯಿಲ್ಲ. ಅದಿರಲಿ, ಈಗ ನೀವು ಹೇಳಿದವರೆಲ್ಲ ಈ ಮನೆಯಲ್ಲೆ ಇದ್ದಾರೋ?’ + +`ಹೌದು, ಉಗ್ರಾಣಿ ದೇವ್ರೆ.’ + +`ಎಲ್ಲಿ? ಹೊರಗೆ ಬರಲಿ, ಅವರನ್ನು ನೋಡದೆ ಬರೆದುಕೊಂಡರೆ ಮತ್ತೆ ನಮ್ಮ ಮೇಲೆ ಬಂದೀತು’ + + + +ಹೀಗೆ ಎಲ್ಲರನ್ನೂ ನೋಡಿಯಾದ ಮೇಲೆ ಇನ್ನೊಂದು ಮನೆಗೆ ಹೋದನು. ಆ ಮನೆಯ ಯಜಮಾನ ಜಾರು. ಯಾವ ಕಾನೂನುಗಳಿಗೂ ಅವನು ಲಕ್ಷ್ಯಮಾಡುವವನಲ್ಲ. ರಂಗಪ್ಪ ಅವನ ಮನೆಗೆ ಹೋದವನೇ ಅಂಗಳದಲ್ಲಿ ನಿಂತು `ಜಾರೂ’ ಎಂದು ಕೂಗಿದನು. + +ಒಳಗಿನಿಂದ ಜಾರು, `ಯಾರು ಉಗ್ರಾಣಿಯೋ? ಏನು ಬಂದದ್ದು?’`ಖಾನೆಶುಮಾರಿ ಲೆಕ್ಕಕ್ಕೆ. ನಿಮ್ಮಲ್ಲಿ ಎಷ್ಟು ಜನರಿದ್ದಾರೆ?’ ಎಂದು ಪುಸ್ತಕಬಿಡಿಸಿ ಬರೆದುಕೊಳ್ಳಲು ಸಿದ್ಧತೆ ನಡೆಸಿದನು.ರಂಗಪ್ಪನು ಪುಸ್ತಕ ಬಿಡಿಸುವುದನ್ನು ನೋಡಿ, ಜಾರುವಿನ ಮುಖ ಕೆಂಪೇರುತ್ತ ಬಂತು. “ಅದೆಲ್ಲ ನಿಮಗೇಕೆ?”“ಸರಕಾರದ ಹುಕುಂ ಆಗಿದೆ.” + +“ಸರಕಾರದ ಹುಕುಂ. ನಿಮ್ಮನ್ನು ಊರಲ್ಲಿಟ್ಟರೆ ಕ್ಷೇಮವಿಲ್ಲ. ಮೊದಲೇ ತೀರ್ವೆ ಜಾಸ್ತಿ ಮಾಡಿದ್ದಾರೆ. ಈಗ ಜನ ಲೆಕ್ಕಮಾಡಿ ಪುನಃ ತೀರ್ವೆ ಏರಿಸಲಿಕ್ಕೆ ಬಂದದ್ದೊ? ನಡೀ ಇಲ್ಲಿಂದ! ನಮ್ಮಲ್ಲಿ ಯಾರೂ ಇಲ್ಲವೆಂದು ಬರಿ. ಸರಕಾರವನ್ನು ದೂರಿ ಪ್ರಯೋಜನ ಇಲ್ಲ. ಇಲ್ಲಿಂದ ಬರೆದು ಕಳುಹಿಸಿ ಒಂದಕ್ಕೆ ಎರಡು ಮಾಡುವುದು ನೀವೇ. ಹಳ್ಳಿಯವನಾದರೂ ನನ್ನಲ್ಲಿ ನಿಮ್ಮ ಠಕ್ಕು ನಡೆಯಲಿಕ್ಕಿಲ್ಲ. ಬಂದ ಹಾದಿ ಹಿಡಿದು ಹೋಗು. ಉಗ್ರಾಣಿ – ಊರಿಗೆ ಮಾರಿ!” + +ಎಡೆಬಿಡದೆ ಸಿಟ್ಟಿನಿಂದ ಮಾತಾಡುವ ಅವನನ್ನು ಸಮಾಧಾನಪಡಿಸಿ ಲೆಕ್ಕ ತೆಗೆದುಕೊಂಡು ಹೋಗಬೇಕಾದರೆ ರಂಗಪ್ಪನಿಗೆ ಮೂಗುಬ್ಬಸವಾಯಿತು. + +ನಮ್ಮ ಗ್ರಾಮದಲ್ಲಿ ಜಾನಕಿ ಎಂಬ ಹೆಂಗಸೊಬ್ಬಳು ಇದ್ದಾಳೆ. ಅವಳ ಗಂಡ ತೀರಿಹೋಗಿ ಎಷ್ಟೋ ಕಾಲ ಆಗಿಹೋಯಿತು. ಅವಳು ಪುನಃ ಮದುವೆಯಾಗಲೇ ಇಲ್ಲ. ಅವಳು ಒಂದು ಮಗು ಹಡೆದಿರುವ ವರ್ತಮಾನ ನಮ್ಮ ರಂಗಪ್ಪನ ಕಿವಿಗೆ ಬತ್ತು. ಕೂಡಲೇ ಜನನವನ್ನು ರಿಜಿಸ್ತ್ರಿಯಲ್ಲಿ ದಾಖಲು ಮಾಡುವುದಕ್ಕಾಗಿ ಅವನು ಅಲ್ಲಿಗೆ ಹೋದನು. + +ಜಾನಕಿ ಚಾವಡಿಯ ಒಂದು ಅರೆಯಲ್ಲಿ ಮಲಗಿಕೊಂಡಿದ್ದಳು. ರಂಗಪ್ಪನು ಅವಳೊಡನೆ ಮಾತಾಡತೊಡಗಿದನು. + +“ಹೆತ್ತು ಎಷ್ಟು ದಿವಸವಾಯಿತು?”“ಇಂದಿಗೆ ಹನ್ನೆರಡು ದಿನವಾಯಿತು”“ಮಗು ಗಂಡೊ? ಹೆಣ್ಣೋ? ”“ಹೆಣ್ಣು”“ಹೆಸರು ಇಟ್ಟದೋ?”“ಹೌದು, ಸುನೀತ ಅಂತ”“ತಾಯಿಯ ಹೆಸರು”“ಜಾನಕಿ”“ತಂದೆಯ ಹೆಸರು?”ಉತ್ತರ ಬರಲಿಲ್ಲ. ಇನ್ನೊಮ್ಮೆ ಕೇಳಿದನು. ನಿರುತ್ತರ.“ತಂದೆಯ ಹೆಸರು ಏನೂಂತ ಬರೆಯೋದು?”“ಅದು ಬರೆಯೋದು ಬೇಡ ದೇವ್ರೂ”“ಅದು ಹೇಗಾಗುತ್ತದೆ? ತಂದೆಯಿಲ್ಲದೆ ಮಗು ಎಲ್ಲಿಂದ ಬಂತು ಅಂತ ಕೇಳಿದ್ರೆ ನಾನೇನು ಹೇಳಲಿ ಜಾನಕಿ. ನಾನು ಹಾಗೆಯೇ ರಿಪೋರ್ಟು ಮಾಡುತ್ತೇನೆ”“ಯಾರದೇ ಆಗಲಿ, ಒಂದು ಹೆಸರು ಹಾಕಿಬಿಡಿರಿ”, ಹೀಗೆ ಹೇಳಿದವಳೆ ಒಂದು ಸಣ್ಣ ಹುಡುಗಿಯ ಹತ್ತಿರ ಎರಡು ರೂಪಾಯಿಗಳನ್ನು ರಂಗಪ್ಪನಿಗೆ ಕೊಟ್ಟು ಕಳುಹಿಸಿದಳು. ರಂಗಪ್ಪನು ಅದನ್ನು ಜೇಬಿನೊಳಗೆ ಸುರುವಿ,“ಇನ್ನು ನಿಮ್ಮಲ್ಲಿ ಗರ್ಭಿಣಿಯರು ಇದ್ದಾರೋ?”“ಹೌದು, ನನ್ನ ತಂಗಿ.”“ಗರ್ಭಕ್ಕೆ ಎಷ್ಟು ತಿಂಗಳಾಯಿತು?”“ಆರು”“ಹಾಗಾದರೆ ಮೂರು ತಿಂಗಳ ಮೇಲೆ ಬರುತ್ತೇನೆ”“ಹೂಂ” + +ಹೀಗೆ ಜಾನಕಿಯನ್ನು ಹೆದರಿಸಿ, ರಂಗಪ್ಪನು ಎರಡು ರೂಪಾಯಿ ಲಂಚ ತೆಗೆದುಕೊಂಡ ಸಂಗತಿ ನಮ್ಮ ಊರವರಿಗೆಲ್ಲ ಗೊತ್ತಿದೆ. + +ರಂಗಪ್ಪನು ವಕೀಲ್ ಕೃಷ್ಣರಾಯರಲ್ಲಿ ಒಮ್ಮೆ ಸಿಕ್ಕಿಬಿದ್ದ ಕಥೆ ಕೇಳಲಿಕ್ಕೆ ತಕ್ಕುದಾಗಿದೆ. + +ಕೃಷ್ಣರಾಯರು ಹೊಸತಾಗಿ ಬಂದ ವಕೀಲರು. ಅವರಿಂದ ತೀರ್ವೆ ಹಣ ವಸೂಲಿಗಾಗಿ ಪಟೇಲರು ಇನ್ನೊಬ್ಬ ಉಗ್ರಾಣಿಯ ಜತೆಗೆ ರಂಗಪ್ಪನನ್ನು ಕಳುಹಿಸಿದರು. ವಕೀಲರು ಇವನ ಹಿಂದೆ ಇನ್ನೊಬ್ಬ ಉಗ್ರಾಣಿ ಇದ್ದುದರಿಂದ ಇವನನ್ನು ಪಟೇಲರೆಂದೇ ತಿಳಿದು – “ಪಟೇಲರೆ – ತೀರ್ವೆ ಹಣ ಎಷ್ಟಾಗುತ್ತದೆ?” ಎಂದು ಕೇಳಿದರು. + +ರಂಗಪ್ಪ : “ಹತ್ತು ರೂಪಾಯಿ ನಾಲ್ಕಾಣೆ, ವಕೀಲರೇ”“ನಿಮ್ಮ ಗ್ರಾಮಕ್ಕೆ ಒಟ್ಟು ಎಷ್ಟು ತೀರ್ವೆ ಇದೆ?”“ಸಾಧಾರಣ ನಾಲ್ಕು ಸಾವಿರ ಸ್ವಾಮಿ!”“ವಸೂಲಿ ಕೆಲಸ ಕಷ್ಟ ಆಗುತ್ತದೋ?”“ಏನು ಮಾಡುವುದು ಸ್ವಾಮಿ! ಕಷ್ಟ ಅಂತ ಬಿಡಲಿಕ್ಕೆ ಆಗುತ್ತದೋ?” + +ವಕೀಲರು ತೀರ್ವೆ ಹಣ ಕೊಟ್ಟರು; ಸೇದಲಿಕ್ಕೆ ಸಿಗರೇಟು ಕೊಟ್ಟರು. ರಂಗಪ್ಪನು ಮಾತಾಡದೆ ಹೊರಟು ಹೋದನು. + +••• + +ವಕೀಲ್ ಕೃಷ್ಣರಾಯರಿಗೆ ಮಾರನೆ ವರ್ಷಕ್ಕೆನೇ ಮಣೆಗಾರರ ಕೆಲಸವಾಯಿತು. ಮೂಡುಬೈಲು ಗ್ರಾಮದಲ್ಲಿ ಒಂದು ಸ್ಥಳ ತನಿಖೆಗೆ ತಾನು ಬರುವುದಾಗಿಯೂ, ಅಲ್ಲಿಗೆ ಉಗ್ರಾಣಿಯನ್ನು ಅಳತೆಕೋಲು ಕೊಟ್ಟು ಕಳುಹಿಸಬೇಕಾಗಿಯೂ ಗ್ರಾಮದ ಪಟೇಲರಿಗೆ ಒಂದು ಹುಕುಂ ಕಳುಹಿಸಿದರು. ರಂಗಪ್ಪನು ಪಟೇಲರ ಹೇಳಿಕೆಯಂತೆ ಮಣೆಗಾರರ ಬರೋಣವನ್ನು ಹಾರೈಸುತ್ತ ಬೆಳಿಗ್ಗೆ ಆ ಸ್ಥಳದಲ್ಲಿ ಅಳತೆಕೋಲು ಪುಸ್ತಕ ಹಿಡಿದು ನಿಂತಿದ್ದನು. ಅಷ್ಟರಲ್ಲಿ ಮಣೆಗಾರರ ಸವಾರಿಯಾಯಿತು. ಅವರು ರಂಗಪ್ಪನನ್ನು ನೋಡಿ, “ಏನು ಪಟೇಲರೆ, ಉಗ್ರಾಣಿಯಲ್ಲಿ? ಎಂದು ಕೇಳಿದರು. + +“ನಾನೇ ಸ್ವಾಮಿ, ಉಗ್ರಾಣ.” + + + +ಇದನ್ನು ಕೇಳಿ ಮಣೆಗಾರರಿಗೆ ನಿಜಾಂಶವು ಗೊತ್ತಾಯಿತು. ಅವರು ನಗುತ್ತ “ನಿಮಗೆ ಪಟೇಲಿಕೆ ಹೋಗಿ ಉಗ್ರಾಣಿ ಕೆಲಸ ಆದದ್ದು ಯಾವಾಗ?” ಎಂದು ಕೇಳಿದರು. + +ರಂಗಪ್ಪನ ಮುಖ ಕಪ್ಪಾಯಿತು. + +(ರಾಷ್ಟ್ರಬಂಧು : 27. 01. 1936) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_375.txt b/Kenda Sampige/article_375.txt new file mode 100644 index 0000000000000000000000000000000000000000..b5c2f5cf52db2ffbfac173c2870ee3e5481f06c5 --- /dev/null +++ b/Kenda Sampige/article_375.txt @@ -0,0 +1,75 @@ + + +1967ರಲ್ಲಿ ನಾನು ನಾಗರಹೊಳೆಗೆ ಮೊದಲ ಬಾರಿ ಬಂದಾಗ ಅಚ್ಚಯ್ಯನವರು ಅಲ್ಲಿ ರೇಂಜರ್ ಆಗಿದ್ದರು. ಆಗ ನಾಗರಹೊಳೆಗೆ ಪ್ರವಾಸಿಗರ ಕಾಟವಿರಲಿಲ್ಲ. ನನಗೆ ವನ್ಯಜೀವಿಗಳ ವಿಷಯದಲ್ಲಿ ಆಸಕ್ತಿಯಿದೆ ಎಂದು ತಿಳಿದ ಅಚ್ಚಯ್ಯನವರು ಕಾಡಿನ ಪರಿಚಯ ಮಾಡಿಕೊಳ್ಳುವುದಕ್ಕೂ, ತಿರುಗಾಡುವುದಕ್ಕೂ ನನಗೆ ತುಂಬ ಸಹಾಯ ನೀಡುತ್ತಿದ್ದರು. ಶ್ರೀ ಚಿಣ್ಣಪ್ಪನವರು 1969ರಲ್ಲಿ ವನ್ಯಜೀವಿ ವಿಭಾಗದ ಫಾರೆಸ್ಟರ್ ಆಗಿ ಬಂದ ಮೇಲೆಯೇ ನನಗೆ ಅವರ ಪರಿಚಯವಾಗಿದ್ದು. ಆದರೆ ಅವರು ಅಲ್ಲಿ ಕೆಲಸಕ್ಕೆ ಸೇರಿದ ಬಹುದಿನಗಳ ತನಕ ನನಗೂ ಅವರಿಗೂ ಭೇಟಿಯಾಗಿರಲಿಲ್ಲ. ಅಚ್ಚಯ್ಯನವರೇನೋ ಯಾವಾಗಲೂ ಹೇಳುತ್ತಿದ್ದರು “ಇನ್ನು ಈ ಕಾಡೂ, ಕಾಡು ಪ್ರಾಣಿಗಳು ಉಳಿಯಬೇಕಾದರೆ ಯಾರು ಎಷ್ಟು ಪ್ರಯತ್ನಪಟ್ಟರೂ ಸಾಲದು. ಈಗ ಚಿಣ್ಣಪ್ಪ ಎಂಬ ಯುವಕನೊಬ್ಬ ಫಾರೆಸ್ಟರ್ ಆಗಿದ್ದಾನೆ, ಅವನೇನಾದರೂ ನಾಳೆಯ ಕಾಲಕ್ಕೆ ರೇಂಜರ್ ಆಗಿ ಇಲ್ಲಿಗೆ ಬಂದರೆ ಕಾಡೇನಾದರೂ ಉಳಿದೀತು. ಇಲ್ಲವಾದರೆ ಎಲ್ಲ ಹಾಳಾಗಿ ಹೋಗುತ್ತದೆ.” ಅಚ್ಚಯ್ಯನವರ ಮಾತು ಕೇಳಿ ನನಗೆ ಚಿಣ್ಣಪ್ಪನೆಂಬ ಆ ವ್ಯಕ್ತಿಯ ಪರಿಚಯ ಮಾಡಿಕೊಳ್ಳಬೇಕೆಂಬ ಆಸೆ ಹುಟ್ಟಿತಾದರೂ ನಾನು ನಾಗರಹೊಳೆಗೆ ಬಂದಾಗಲೆಲ್ಲಾ ಈ ಚಿಣ್ಣಪ್ಪ ಸಿಕ್ಕುತ್ತಲೇ ಇರಲಿಲ್ಲ. ಅವರು ದಿನದ 24 ಗಂಟೆಯೂ ಕಾಡು ಗಸ್ತು ತಿರುಗುತ್ತಾ ಕೆಲಸದಲ್ಲೇ ತೊಡಗಿರುತ್ತಿದ್ದರು. + +1970ರಲ್ಲಿ ನಾನು ನಾಗರಹೊಳೆಗೆ ಬಂದಾಗ ಅಚ್ಚಯ್ಯನವರೇ ಚಿಣ್ಣಪ್ಪನ ಪರಿಚಯ ಮಾಡಿಸಿದರು. ನನ್ನನ್ನು ಕಾಡಿನಲ್ಲಿ ಸುತ್ತಾಡಿಸಿಕೊಂಡು ಬರುವಂತೆ ಹೇಳಿ ಕಳುಹಿಸಿದರು. ನಾನೂ ಚಿಣ್ಣಪ್ಪನವರೂ ಬೆಳಗಿನಿಂದ ಸಂಜೆಯವರೆಗೂ ಕಾಡೆಲ್ಲ ತಿರುಗಾಡಿದೆವು. + +(ಕೆ.ಎಂ.ಚಿಣ್ಣಪ್ಪ) + +ನನಗೆ ಪಕ್ಷಿವೀಕ್ಷಣೆ ಬಗ್ಗೆ ಅಪಾರ ಆಸಕ್ತಿ ಇತ್ತು. ಆದರೆ ಚಿಣ್ಣಪ್ಪನವರಿಗೆ ಪಕ್ಷಿಗಳ ಬಗ್ಗೆ ಆಗ ಹೆಚ್ಚೇನೂ ಗೊತ್ತಿರಲಿಲ್ಲ. ಹೀಗೆ ನನ್ನ ಆಸಕ್ತಿಯ ವಿಷಯದ ಬಗೆಗೆ ಅವರಿಗೆ ವಿವರಣೆ ಕೊಡುತ್ತಲೂ ಅವರಿಂದ ಕಾಡರಿವಿನ ಸೂಕ್ಷ್ಮಗಳನ್ನು ತಿಳಿಯುತ್ತಲೂ ವಿನಿಮಯ ಪೂರ್ವಕವಾಗಿ ನಮ್ಮ ನಡುವೆ ಆತ್ಮೀಯತೆ ಬೆಳೆಯುತ್ತಾ ಬಂದಿತ್ತು. ಚಿಣ್ಣಪ್ಪನವರೊಡನೆ ರಾತ್ರಿಯ ವೇಳೆ ಕಾಡಿನಲ್ಲಿ ತಿರುಗಾಡಲು ಹೋಗುವುದೆಂದರೆ ನನಗೆ ಅದೊಂದು ಅತಿ ವಿಶಿಷ್ಟವಾದ ಅನುಭವ. ಬೇರೆ ಯಾರಾದರೂ ಪ್ರಬಲವಾದ ಟಾರ್ಚು ಮತ್ತಿತರ ಉಪಕರಣಗಳನ್ನು ಒಯ್ದರೆ ಚಿಣ್ಣಪ್ಪನವರು ಅನೇಕ ಬಾರಿ ಕತ್ತಲೆಯಲ್ಲಿ ಅದೂ ಬಹಳ ಸರಾಗವಾಗಿ ನಡೆಯುವರು: ಕೈಯಲ್ಲಿ ಟಾರ್ಚ್ ಇದ್ದರೂ ಅದನ್ನು ಉಪಯೋಗಿಸುವವರಲ್ಲ. ಎಲ್ಲೋ ಒಂದೆಡೆ ಒಂದು ಸಣ್ಣ ಕಡ್ಡಿ ಮುರಿದ ಶಬ್ದವಾದರೆ ಕೂಡಲೆ ನಿಂತು ಅಲ್ಲಿ ಆನೆ ಇದೆ ಎನ್ನುವರು. ಅವರ ಟಾರ್ಚಿನ ಬೆಳಕಿನಲ್ಲಿ ಪ್ರಾಣಿಯನ್ನು ಕಂಡಮೇಲೆ ಮಾತ್ರವೇ ನಮಗೆ ಅದು ನಿಜವೆಂದು ಗೊತ್ತಾಗಬೇಕು. ಇಂಥ ಸೂಕ್ಷ್ಮ ಕಾಡಿನ ಅರಿವು ಉಳ್ಳವರು ಬಲು ಅಪರೂಪ. + +ಚಿಣ್ಣಪ್ಪನವರು ಹೆಚ್ಚು ವಿದ್ಯಾಭ್ಯಾಸ ಮಾಡಿದವರಲ್ಲ. ಅದರಿಂದ ಒಂದು ರೀತಿಯಲ್ಲಿ ಒಳ್ಳೆಯದಾಯಿತೆಂದೇ ಹೇಳಬೇಕು. ಚಿಕ್ಕ ಮಕ್ಕಳಲ್ಲಿ ನಿಸರ್ಗ-ಪರಿಸರಗಳ ಬಗ್ಗೆ ಅಪಾರ ಕುತೂಹಲವಿರುತ್ತದೆ. ಆ ಕುತೂಹಲವೆಲ್ಲವನ್ನೂ ನಮ್ಮ ಶಾಲೆಗಳ ವಿದ್ಯಾಭ್ಯಾಸ ಕ್ರಮ ಕೊಂದೇಬಿಡುತ್ತದೆ. ಚಿಣ್ಣಪ್ಪನವರಲ್ಲಿ ಈ ಕುತೂಹಲ ಜೀವಂತವಾಗಿ ಉಳಿದುದರಿಂದಲೇ ಅವರ ಅರಣ್ಯ ಪರಿಜ್ಞಾನ ಬೆಳೆಯಲು ಸಾಧ್ಯವಾಯಿತು. ಚಿಣ್ಣಪ್ಪನವರು ಅರಣ್ಯ ಇಲಾಖೆಗೆ ಸೇರಿದ ಮೇಲೆ ಅವರಿಗೆ ಕಾಡೇ ಶಾಲೆಯಾಯಿತು. ಅವರು ಅರಣ್ಯದ ಒಡನಾಟದಿಂದ ಅಪಾರ ಜ್ಞಾನವನ್ನು ಸಂಪಾದಿಸಿದರು. ಯಾವುದೇ ಒಂದು ಸನ್ನಿವೇಶದಲ್ಲಿ ಕಂಡುಬರುವ ಕುರುಹು, ಸೂಚನೆಗಳನ್ನೆಲ್ಲಾ ಒಟ್ಟುಗೂಡಿಸಿ ಇದು ಹೀಗೆಯೇ ನಡೆದಿದೆ ಎಂದು ಖಚಿತವಾಗಿ ಹೇಳಬಲ್ಲ ತರ್ಕ ಪ್ರಾವೀಣ್ಯ, ಕಾಡಿನ ಅರಿವು ಚಿಣ್ಣಪ್ಪನವರಿಗೆ ಸಿದ್ಧಿಸಿತ್ತು. ಈ ದೃಷ್ಟಿಯಿಂದ ಅವರನ್ನು ಅರಣ್ಯದ “ಷರ್ಲಾಕ್ ಹೋಮ್ಸ್” ಎಂದು ಕರೆದರೆ ಅತಿಶಯೋಕ್ತಿಯಾಗಲಾರದು. + +ಕ್ಷೇತ್ರ ಕಾರ್ಯದಲ್ಲಿ ಇಂಥ ಪರಿಣಾಮ ಮತ್ತು ಕಾರಣಗಳ ವಿಶ್ಲೇಷಣೆಯನ್ನು ಸಮರ್ಪಕವಾಗಿ ಕೈಗೊಳ್ಳಬಲ್ಲ ಕೌಶಲ ಕೇವಲ ಕೆಲವೇ ಪರಿಣತ ಜೀವಿವಿಜ್ಞಾನಿಗಳಿಗೆ ಮಾತ್ರ ಕೈಗೂಡಿರುತ್ತದೆ. ಜಾರ್ಜ್ ಷಾಲರ್ ಎಂಬ ಪ್ರಖ್ಯಾತ ಜೀವಿವಿಜ್ಞಾನಿಯೊಬ್ಬರು ನನಗೆ ತಿಳಿದಿರುವಂತೆ ಈ ಬಗೆಯ ಪರಿಣತಿ ಉಳ್ಳವರು. ಅವರನ್ನು ಬಿಟ್ಟರೆ ಚಿಣ್ಣಪ್ಪನವರಲ್ಲಿ ಮಾತ್ರವೇ ನಾನು ಕೌಶಲವನ್ನು ಗುರುತಿಸಿದ್ದೇನೆ. ಒಂದು ವೇಳೆ ಚಿಣ್ಣಪ್ಪನವರಿಗೂ ಚಾರ್ಜ್ ಷಾಲರ್ ರವರಿಗೆ ದೊರಕಿದ ಶಿಕ್ಷಣ ಮತ್ತು ಸಂಶೋಧನಾ ಅವಕಾಶಗಳು ದೊರೆತಿದ್ದಲ್ಲಿ ಅವರೂ ಸಹ ಜಾರ್ಜ್ ಷಾಲರ್ ರವರಂತಹ ಖ್ಯಾತ ಜೀವವಿಜ್ಞಾನಿ ಆಗಿರುತ್ತಿದ್ದರೆನ್ನುವುದರಲ್ಲಿ ಯಾವ ಸಂಶಯವೂ ಇಲ್ಲ. + +ನಾನು ಅರಣ್ಯ ಇಲಾಖೆಗೆ ಹೊರಗಿನವನಾದರೂ ನನಗೂ ಇಲಾಖೆಗೂ ಮೂವತ್ತು ವರ್ಷಗಳಿಂದ ಅವಿರತ ಸಂಬಂಧವಿದೆ. ಇಲಾಖೆಗೆ ಸೇರಿದವರ ಸರ್ವೀಸ್ ಹೆಚ್ಚಿದಷ್ಟೂ ಅವರ ಅರಣ್ಯ ವಿಷಯಕ ವೈಜ್ಞಾನಿಕ ಪರಿಜ್ಞಾನ ಅಷ್ಟಷ್ಟಕ್ಕೇ ಸೀಮಿತಗೊಳ್ಳುತ್ತಾ ಹೋಗುತ್ತದೆ. ಅರಣ್ಯಶಾಸ್ತ್ರದ ಬಗೆಗೆ ಅನೇಕರು ಪರಿಣತಿ ಪಡೆದಿದ್ದರೂ ವನ್ಯಪ್ರಾಣಿಗಳ ಬಗೆಗಿನ ಅವರ ತಿಳುವಳಿಕೆ ಮಾತ್ರ “ಅವರು ಹೇಳಿದ್ದು, ಇವರು ಹೇಳಿದ್ದು” ಎಂಬಷ್ಟು ಬಿಟ್ಟರೆ ಹೆಚ್ಚಿನ ಅಧ್ಯಯನಕ್ಕಾಗಲಿ, ಕ್ಷೇತ್ರಕಾರ್ಯಕ್ಕಾಗಲಿ ವಿಸ್ತಾರಗೊಂಡಿಲ್ಲ ಎಂದೇ ನನ್ನ ಭಾವನೆ. ಆದರೆ ಚಿಣ್ಣಪ್ಪನವರು ಹೆಚ್ಚು ಓದಿದವರಲ್ಲದೆ ಇದ್ದರೂ, ಇಂಗ್ಲಿಷಿನಲ್ಲಿ ಹೆಚ್ಚಿನ ಪ್ರಭುತ್ವವಿಲ್ಲದವರಾದರೂ, ವನ್ಯಜೀವಿಗೆ ಸಂಬಂಧಪಟ್ಟ ಗ್ರಂಥಗಳನ್ನೆಲ್ಲ ಯಾರಿಂದಲಾದರೂ ಸಂಪಾದಿಸಿ ಓದಿ ಕಷ್ಟಪಟ್ಟಾದರೂ ವಿಷಯವನ್ನು ಗ್ರಹಿಸುವ ಜ್ಞಾನಾಸಕ್ತಿ ಅವರಲ್ಲಿ ಇದೆ. ಕಾಡಿನೊಳಗೆ ಹೋದಾಗ ವನ್ಯಜೀವಿಗಳ ಬಗೆಗೆ ಅವರು ತಮ್ಮ ಪ್ರತ್ಯಕ್ಷ ಪರಿಶೀಲನೆಯ ಅಂಶಗಳನ್ನು ಹೇಳುತ್ತಿದ್ದರು. + +ಒಂದು ದೃಷ್ಟಾಂತ: ವನ್ಯಜೀವಿಗಳ ಬಗ್ಗೆ ಆಸಕ್ತರಾದ ಪರಿಸರ ಮಂತ್ರಾಲಯದ ಹಿರಿಯ ಅಧಿಕಾರಿ ರಂಜಿತ್ ಸಿಂಹ ನಾಗರಹೊಳೆಗೆ ಬಂದು ಹಿರಿಯ ಅಧಿಕಾರಿಗಳೊಡನೆ ಹರಟುತ್ತಾ “ನಿಮ್ಮಲ್ಲಿ ರಾಟೇಲ್ ಇದೆಯೇ” ಎಂದು ಕೇಳಿದರು. ವನ್ಯಜೀವಿ ಜ್ಞಾನಕ್ಕಿಂತ ತೋರಿಕೆಯ ಆತುರ ಹೆಚ್ಚಿದ್ದ ಹಿರಿಯ ಅಧಿಕಾರಿಯೊಬ್ಬರು ತಟ್ಟನೇ “ಹೌದು-ಹೌದು ನಾನು ಕಂಡಿದ್ದೇನೆ” ಎಂದರು. ಕಿರಿಯ ಅಧಿಕಾರಿ ಚಿಣ್ಣಪ್ಪ ಕೂಡಲೇ “ಆ ಪ್ರಾಣಿ ಇಂತಹ ಕಾಡಿನಲ್ಲಿ ಇರುವುದಿಲ್ಲ. ನಾನೆಂದೂ ಕಂಡಿಲ್ಲ” ಎಂದು ನಿರ್ದಾಕ್ಷಿಣ್ಯವಾಗಿ ಹೇಳಿ ಹಿರಿಯ ಅಧಿಕಾರಿಯ ಪೊಳ್ಳುತನ ಬಯಲು ಮಾಡಬೇಕೆ? + +ನಾವು ಗ್ರಂಥಗಳಲ್ಲಿ ಓದಿದ ಸಂಗತಿಗಳನ್ನು ಹೇಳುತ್ತಿದ್ದೆವು. ತಾವು ಕ್ಷೇತ್ರದಲ್ಲಿ ಕಂಡುಕೊಂಡ ಅಂಶಗಳನ್ನು ಪುಸ್ತಕಗಳ ನಿರೂಪಣೆಯ ಹಿನ್ನೆಲೆಯಲ್ಲಿ ಒರೆಗೆ ಹಚ್ಚುವ ಆಸಕ್ತಿ ಚಿಣ್ಣಪ್ಪನವರಲ್ಲಿ ಅಗಾಧವಾಗಿದೆ. ನಾನಾಗಲಿ, ಮಿತ್ರ ಜೀವನ್ ಆಗಲಿ ತಂದುಕೊಟ್ಟ ಪುಸ್ತಕಗಳನ್ನು ನಿಧಾನವಾಗಿ ಓದಿ, ಅರ್ಥವಾಗದ ವಿಷಯಗಳನ್ನು ನಮ್ಮೊಂದಿಗೆ ಚರ್ಚಿಸಿ ತಿಳಿದುಕೊಳ್ಳುವ ಅವರ ಜ್ಞಾನಾಸಕ್ತಿ ಮೆಚ್ಚುವಂಥದ್ದು. ಹಾಗೆ ನೋಡಿದರೆ ಚಿಣ್ಣಪ್ಪನವರಿಗೆ ಈ ವಿಷಯಗಳ ಅಧ್ಯಯನಕ್ಕೆಲ್ಲಾ ಸಮಯವೇ ಇರುತ್ತಿರಲಿಲ್ಲ. ಅವರ ದಿನದ ಬಹುಭಾಗ ನಾಗರಹೊಳೆಯ ಅವ್ಯವಸ್ಥೆಯನ್ನು ಸರಿಪಡಿಸುವುದರಲ್ಲೇ ಕಳೆದುಹೋಗುತ್ತಿತ್ತು. + +ಆಗೆಲ್ಲ ವನ್ಯಜೀವಿ ಸಂರಕ್ಷಣಾ ಕಾಯಿದೆಯೇನೂ ಇರಲಿಲ್ಲ. ಹಳ್ಳಿಗರಾಗಲಿ, ಪಟ್ಟಣಿಗರಾಗಲಿ ಜನರೆಲ್ಲರಿಗೆ ವಿಚಾರ ಒಂದೇ-ಪ್ರಾಣಿಗಳನ್ನು ಬೇಟೆಯಾಡಿ ಕೊಂದು ತಿನ್ನುವುದು. 1960ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾನು ಏನು ನೋಡಿದೆನೋ 1967ರಲ್ಲಿ ನಾಗರಹೊಳೆಯಲ್ಲಿ ನೋಡಿದ್ದೂ ಅದೇ. ಕಾಡಿನೊಳಗೆ ಎಲ್ಲಿ ನೋಡಿದರೂ ಜನಸಂಚಾರ, ಬೇಸಾಯ, ಬೇಟೆ-ಯಾವುದು ಉಂಟು, ಯಾವುದು ಇಲ್ಲ ಎಂದು ಕೇಳಬೇಕಾಗಿಯೆ ಇರಲಿಲ್ಲ. ಮೊದಲಿಗೆ ನಾನು ನಾಗರಹೊಳೆಗೆ ಬಂದ ಸಂದರ್ಭಗಳಲ್ಲಿ ಒಮ್ಮೆ ಎರಡು ಮೂರು ಜಿಂಕೆಗಳನ್ನು, ಇನ್ನೊಮ್ಮೆ ಒಂದು ಆನೆಯನ್ನು, ಮತ್ತೆ ಯಾವಾಗಲೋ ಒಂದೆರಡು ಸಲ ಕಾಟಿಗಳನ್ನು ನೋಡಿದ ನೆನಪಿದೆ ಅಷ್ಟೇ. ಬೇಟೆಯ ನಿಯಂತ್ರಣವಾದ ಹಾಗೆ ಪ್ರಾಣಿಗಳ ಸಂಖ್ಯೆಯೂ ಹೆಚ್ಚತೊಡಗಿತು. ಕಾಡಿನಲ್ಲಿ ನೆಲಸಿದ್ದವರ ಬೆಳೆಗಳಿಗೆ ಪ್ರಾಣಿಗಳು ಕಾಟ ಕೊಡಲಾರಂಭಿಸಿದಂತೆ ವಿಧಿಯಿಲ್ಲದೆ ಅರಣ್ಯದಿಂದ ಎಷ್ಟೋ ಜನ ತಾವಾಗಿಯೇ ಹೊರಹೋದರು. ಇನ್ನಷ್ಟು ಜನರನ್ನು ಹೊರ ಕಳುಹಿಸಲಾಯಿತು. ಕಾಡು ಕಂಗೊಳಿಸತೊಡಗಿತು; ವನ್ಯಜೀವಿಗಳ ಆದರ್ಶನೆಲೆಯಾಯಿತು. ನಾಗರಹೊಳೆಯನ್ನು ಈ ಸ್ಥಿತಿಗೆ ತರುವಲ್ಲಿ ಚಿಣ್ಣಪ್ಪನವರ ಪಾತ್ರ ಮಹತ್ವದ್ದು. + +ಒಂದೆಡೆ ಬೇಸಾಯ, ಕಳ್ಳಭಟ್ಟಿ ಮೊದಲಾದ ದಂಧೆಗಳಿಗೆ ಕಾಡನ್ನೇ ನೆಲೆಯಾಗಿ ಮಾಡಿಕೊಂಡ ಜನಸಮೂಹ, “ಕಾಡುಮಾಂಸ” ತಿನ್ನುವುದನ್ನು ಒಂದು ಶೋಕಿಯಾಗಿ ಮಾಡಿಕೊಂಡ ಹಳ್ಳಿಗರು, ಜಮೀನುದಾರರು ಮೊದಲಾದವರು; ಮತ್ತೊಂದೆಡೆ ವನ್ಯಜೀವಿಗಳ ರಕ್ಷಣೆಯಲ್ಲಿ ಯಾವುದೇ ಆಸಕ್ತಿ ಇಲ್ಲದೆ ಬೇಟೆಯಾಡುವುದನ್ನೇ ಒಂದು ಉಪವೃತ್ತಿಯಾಗಿ ಮಾಡಿಕೊಂಡ ಇಲಾಖೆಯದೇ ಸಿಬ್ಬಂದಿ-ಇವರೆಲ್ಲರ ವಿರುದ್ಧ ಚಿಣ್ಣಪ್ಪನವರು “ಒನ್ ಮ್ಯಾನ್ ಆರ್ಮಿ” ಆಗಿದ್ದರು. + +ಹಾಗೆ ನೋಡಿದರೆ ನಾಗರಹೊಳೆಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ಜನರ ಒತ್ತುವರಿ, ಅತಿಕ್ರಮ ಪ್ರವೇಶ ಮೊದಲಾದವುಗಳನ್ನು ತಡೆಯುವುದರಲ್ಲಿ ಚಿಣ್ಣಪ್ಪನವರದ್ದು ಒಬ್ಬರದೇ ಕೈವಾಡ ಎಂದೇನೂ ಇಲ್ಲ. ಆಗ ಅರಣ್ಯಾಧಿಕಾರಿಗಳಾಗಿದ್ದ ಎ.ಸಿ.ಲಕ್ಷ್ಮಣ, ಅಪ್ಪಣ್ಣ, ವೆಂಕಟೇಶಯ್ಯ ಮೊದಲಾದವರು ಸತತ ಪ್ರಯತ್ನಗಳಿಂದ ಒತ್ತುವರಿ ತೆರವು ಮಾಡಿಸಿದರು. ಚಿಣ್ಣಪ್ಪ ಮುಖ್ಯವಾಗಿ ಅಕ್ರಮಬೇಟೆಯನ್ನು ತಡೆಯುವ ಕೆಲಸ ಮಾಡಿದರು. ಅರಣ್ಯ ಇಲಾಖೆಯ ಕೆಲಸಕಾರ್ಯಗಳ ಬಗೆಗೂ ನಾನು, ಚಿಣ್ಣಪ್ಪ ಆಗಾಗ ಚರ್ಚಿಸುತ್ತಿದ್ದೆವು. ಅರಣ್ಯ ಉತ್ಪನ್ನಗಳ ಸಂಗ್ರಹವನ್ನು ತಡೆಯುವ ಬಗ್ಗೆ, ಪ್ರವಾಸಿಗರ ವೀಕ್ಷಣೆಗಾಗಿ ಕಾಡನ್ನು ತೆರವು ಮಾಡುವುದರಿಂದ ಕೆಲವು ಬಗೆಯ ಸಸ್ಯಗಳ ಬೆಳವಣಿಗೆಗೆ ಹಾನಿಯಾಗುವ ಬಗೆ-ಹೀಗೆ ಅನೇಕ ವಿಷಯಗಳ ಬಗ್ಗೆ ನಾನೂ ಚಿಣ್ಣಪ್ಪನವರೂ ಮಾತ್ರವಲ್ಲದೆ ಡಿ.ಎಫ್.ಓ ಆಗಿದ್ದ ಎ.ಸಿ.ಲಕ್ಷ್ಮಣ, ಎಂ.ಹೆಚ್.ಷೇಕ್ ಮತ್ತು ಸಿ.ಶ್ರೀನಿವಾಸನ್ ಮೊದಲಾದವರೊಡನೆಯೂ ಚರ್ಚಿಸುತ್ತಿದ್ದೆವು. + +ಹೀಗೆ ಅಧಿಕಾರಿಗಳ ಮಟ್ಟದಲ್ಲಿ ನಡೆಯುತ್ತಿದ್ದ ಪ್ರತ್ಯಕ್ಷ ಚರ್ಚೆಯಿಂದಾಗಿ ಅಭಯಾರಣ್ಯವನ್ನು ಕಾಪಾಡಿಕೊಳ್ಳಲು ಅನೇಕ ಮಹತ್ವದ ನಿರ್ಧಾರಗಳನ್ನು ಕೈಗಳ್ಳುವುದೂ ಸಾಧ್ಯವಾಯಿತು. ಅರಣ್ಯ ಇಲಾಖೆಯ ಕಾರ್ಯನಿರ್ವಹಣೆಯ ವಿವಿಧ ಅಂಶಗಳ ಬಗೆಗಿನ ನಮ್ಮ ಆಳವಾದ ಚರ್ಚೆ ನಿರ್ದಿಷ್ಟ ವಿಷಯಕ್ಕೆ ಸೀಮಿತವಾಗಿರುತ್ತಿದ್ದುದು ಮಾತ್ರವಲ್ಲ, ಚರ್ಚೆಯ ಫಲವಾಗಿ ಮೂಡಿದ ಅಭಿಪ್ರಾಯವನ್ನು ಕಾರ್ಯರೂಪಕ್ಕೆ ತರುವುದಕ್ಕೂ ನಾವು ಪ್ರಯತ್ನಿಸುತ್ತಿದ್ದೆವು. ಈಗಿನ ಪರಿಸ್ಥಿತಿಯಲ್ಲಿ ಸರ್ಕಾರೀ ಅಧಿಕಾರಿ ವರ್ತುಲದ ನಡುವೆ ವೈಜ್ಞಾನಿಕ ಸಂಶೋಧನೆಯ ಸಕಾರಾತ್ಮಕ ಸಲಹೆಗಳನ್ನು ಇಲಾಖೆಯ ಕಾರ್ಯನಿರ್ವಹಣೆಯಲ್ಲಿ ಅಳವಡಿಸಿಕೊಳ್ಳುವುದೆಂದರೆ ಅಸಾಧ್ಯವೇ ಎನ್ನುವಂತಾಗಿದೆ. ಆದರೆ ನಾನೂ ಚಿಣ್ಣಪ್ಪನವರೂ ಆಗಿಂದಾಗ್ಗೆ ಆಗಿನ ಚೀಫ್ ವೈಲ್ಡ್ ಲೈಫ್ ವಾರ್ಡನ್ ಶ್ರೀಯುತ ಜಗನ್ನಾಥಶೆಟ್ಟಿ, ತಾರಾನಾಥ ಆಳ್ವರಂಥ ಸಮರ್ಥರೊಡನೆ ನಡೆಸಿದ ಚರ್ಚೆಗಳು ತುಂಬಾ ಉಪಯುಕ್ತವಾಗಿದ್ದುದು ಮಾತ್ರವಲ್ಲ, ಅರಣ್ಯ ನಿರ್ವಹಣೆಯಲ್ಲಿ ಕಾರ್ಯರೂಪಕ್ಕೆ ಬರಲೂ ತಡವಾಗುತ್ತಿರಲಿಲ್ಲ. ಅರಣ್ಯ ಉತ್ಪನ್ನಗಳ ಸಂಗ್ರಹಣೆಯನ್ನು ತಡೆಗಟ್ಟುವುದು, ಮರಮುಟ್ಟುಗಳ ಸಂಗ್ರಹಕ್ಕೆ ತಡೆ ಮೊದಲಾದವುಗಳನ್ನು ಜಾರಿಗೆ ತಂದಿದ್ದಲ್ಲದೆ ಬೆಂಕಿಯ ಗಡಿ ರೇಖೆಯ ರಚನೆ, ಪ್ರವಾಸಿಗರ ಅನುಕೂಲಕ್ಕಾಗಿ ವೀಕ್ಷಣಾ ತೆರವುಗಳನ್ನು (ವ್ಯೂ ಲೈನ್) ರಚಿಸುವುದು ಮೊದಲಾದವುಗಳ ನಿರ್ವಹಣಾ ವಿಷಯದಲ್ಲಿ ತತ್ ಕ್ಷಣಕ್ಕೆ ಪ್ರಾಯೋಗಿಕ ಕ್ರಮಗಳನ್ನು ಕೈಗೊಳ್ಳುವುದೂ ಸಾಧ್ಯವಾಯಿತು. + +ನಾಗರಹೊಳೆಯಲ್ಲಿ ಸೀಳುದಾರಿ ಗಣತಿಯಿಂದ (ಲೈನ್ ಟ್ರಾನ್ಸೆಕ್ಟ್) ಹಿಡಿದು ರೇಡಿಯೋ ಕಾಲರಿಂಗ್ ವರೆಗೆ ನನ್ನ ಎಲ್ಲ ವೈಜ್ಞಾನಿಕ ಅಧ್ಯಯನ, ಸಂಶೋಧನಾ ಕಾರ್ಯಗಳಿಗೆ ಚಿಣ್ಣಪ್ಪನವರು ನನ್ನ ಬೆನ್ನಿಗೇ ಇದ್ದು ನೆರವಾಗಿದ್ದಾರೆ. ಈ ವೈಜ್ಞಾನಿಕ ಅಧ್ಯಯನಕ್ಕೆ ಅತ್ಯವಶ್ಯಕವಾದ ಕ್ಷೇತ್ರಕಾರ್ಯದ ಮುಂಚೂಣಿಯಲ್ಲಿದ್ದು ಸಹಕರಿಸಿದ್ದಾರೆ. ನನ್ನ ವೈಜ್ಞಾನಿಕ ಅಧ್ಯಯನದ ಪ್ರಾರಂಭದಿಂದಲೂ ಚಿಣ್ಣಪ್ಪನವರು ಅದರ ಒಂದು ಭಾಗವಾಗಿ ನಿಂತರು. ಮೊದಲು ನಾನು ಫಾರ್ಮಿಂಗ್ ಮಾಡುತ್ತಿದ್ದವನು ನನ್ನ ಜೀವನ ಮಾರ್ಗವನ್ನು ಬದಲಿಸಿ ಸಮಗ್ರವಾಗಿ ವನ್ಯಜೀವಿ ಅಧ್ಯಯನಕ್ಕೆ ನನ್ನನ್ನು ತೊಡಗಿಸಿಕೊಳ್ಳಬೇಕೆಂದು ಯೋಚಿಸಿಕೊಂಡೆ. ಫ್ಲೋರಿಡಾ ವಿಶ್ವವಿದ್ಯಾನಿಲಯದಿಂದ ಶಿಷ್ಯವೃತ್ತಿಗೆ ಆಹ್ವಾನ ಬಂದಾಗ ನನ್ನ ಉದ್ದೇಶ, ನಿರ್ಧಾರಗಳನ್ನು ಮೊದಲಿಗೆ ಚಿಣ್ಣಪ್ಪನವರೊಂದಿಗೇ ನಾನು ಚರ್ಚಿಸಿದ್ದು. + +ಮುಂದಿನ ನನ್ನ ಅಧ್ಯಯನಕ್ಕೆ ನಾನು ನಾಗರಹೊಳೆಯನ್ನೇ ಆರಿಸಿಕೊಳ್ಳಲು ಹಲವಾರು ಕಾರಣಗಳಿವೆ. ಇಲ್ಲಿ ಹುಲಿ, ಚಿರತೆ, ಕೆನ್ನಾಯಿಗಳೆಂಬ ಮೂರು ಬೇಟೆಗಾರ ಪ್ರಾಣಿಗಳೂ ಜಿಂಕೆ, ಕಾಟಿ ಮೊದಲಾದ ಒಂಭತ್ತು ಬಗೆಯ ಬೇಟೆಗೆ ಆಹಾರವಾದ ಪ್ರಾಣಿಗಳ ಸಾಂದ್ರತೆಯೂ ಇದೆ. ಈ ಬಗೆಯ ಪ್ರಾಣಿಗಳ ಸಾಂದ್ರತೆ ನಾಗರಹೊಳೆಯೇ ಅಲ್ಲದೆ ಕಾನ್ಹಾ, ಖಾಜಿರಂಗ ಮೊದಲಾದ ಇನ್ನೂ ಹಲವು ಕಡೆಗಳಲ್ಲಿ ಕಾಣಸಿಗಬಹುದು. ಆದರೆ ನಾಗರಹೊಳೆಯೇ ನನ್ನ ಆಸಕ್ತಿಯ ಕೇಂದ್ರವಾಗಲು ಕಾರಣ ನಾನು ಈಗಾಗಲೇ ಹತ್ತು ಹನ್ನೆರಡು ವರ್ಷಗಳಿಂದ ಈ ಪ್ರದೇಶದ ಪರಿಚಯವನ್ನು ಬೆಳೆಸಿಕೊಂಡಿದ್ದೆ. ಎರಡನೆಯದಾಗಿ ನನ್ನ ಅಧ್ಯಯನ ವಿಷಯಕ್ಕೆ ಎಂದರೆ ಬೇಟೆಗಾರ ಪ್ರಾಣಿ ಮತ್ತು ಬೇಟೆಗೆ ಆಹಾರವಾದ ಪ್ರಾಣಿಗಳ ಸಂಬಂಧವನ್ನು ಕುರಿತಂತೆ ನಾಗರಹೊಳೆ ಅತ್ಯಂತ ಆದರ್ಶವೆನ್ನಬಹುದಾದ ನೆಲೆಯಾಗಿತ್ತು. ನಾನು ಆಗ ಮೈಸೂರಿನಲ್ಲಿ ವಾಸವಾಗಿದ್ದುದರಿಂದ ನಾಗರಹೊಳೆಗೆ ಹೋಗಿಬರಲು ಸುಲಭಸಾಧ್ಯವಾಗಿತ್ತು. ಪ್ರಾಣಿಗಳ ಸಾಂದ್ರತೆಯೂ ಸಾಕಷ್ಟು ಹೆಚ್ಚಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಒಣ ಎಲೆ ಉದುರುವ ಕಾಡು (ಡ್ರೈ ಡೆಸಿಡಿಯಸ್) ತೇವಭರಿತ ಎಲೆಯುದುರುವ (ಮಾಯಿಸ್ಟ್ ಡೆಸಿಡಿಯಸ್) ಮತ್ತು ತೇಗದ ನಡುತೋಪು ಅರಣ್ಯ ಮೊದಲಾದ ಕಡೆಗಳಲ್ಲಿ ಪ್ರಾಣಿಗಳ ಆವಾಸನೆಲೆ ಹೇಗಿರುತ್ತದೆ ಎಂಬುದನ್ನು ಹೋಲಿಸಿ ನೋಡುವುದಕ್ಕೂ ನಾಗರಹೊಳೆ ಸೂಕ್ತರಂಗವಾಗಿತ್ತು. ಅಲ್ಲದೆ ಈ ಎಲ್ಲಾ ಕಡೆಗಳಲ್ಲೂ ರಕ್ಷಣಾಕಾರ್ಯ ನಿರ್ವಹಣೆ ಒಂದೇ ಬಗೆಯಾಗಿರುವುದು ಮುಖ್ಯ. ಏಕೆಂದರೆ ಪ್ರಾಣಿಗಳ ಸಂಖ್ಯೆ ಹೆಚ್ಚು ಕಡಿಮೆ ಆಗುವುದಕ್ಕೆ ನೈಸರ್ಗಿಕ ಕಾರಣಗಳಿವೆಯೋ, ಅಥವಾ ಇಲಾಖೆಯ ರಕ್ಷಣಾ ಕಾರ್ಯ ಸಮರ್ಪಕವಾಗಿದೆಯೋ ಇಲ್ಲವೋ ಎನ್ನುವುದು ಗೊತ್ತಾಗುವುದು ಕಷ್ಟ. ನಾಗರಹೊಳೆಯಲ್ಲಿ ಚಿಣ್ಣಪ್ಪನಂಥವರ ಸಮರ್ಥ ರಕ್ಷಣಾಕಾರ್ಯದಿಂದಾಗಿ ನನಗೆ ವಿಭಿನ್ನ ಪರಿಸರಗಳಿರುವ ಪ್ರದೇಶದಲ್ಲಿ ಪ್ರಾಣಿಗಳನ್ನು ಅಭ್ಯಸಿಸುವುದಕ್ಕೆ ನಾಗರಹೊಳೆಯೇ ಅತ್ಯಂತ ಸೂಕ್ತವಾದ ಕ್ಷೇತ್ರವಾಗಿತ್ತು. + +ನಾಗರಹೊಳೆಯೇ ಅಲ್ಲದೆ ಬೇರೆ ಎಲ್ಲಿ ನನ್ನ ಸಂಶೋಧನೆಯನ್ನು ಕೈಗೊಂಡಿದ್ದರೂ ಚಿಣ್ಣಪ್ಪನವರು ಅದಕ್ಕೆ ಖಂಡಿತವಾಗಿ ನೆರವಾಗುತ್ತಿದ್ದರೆನ್ನುವುದರಲ್ಲಿ ಸಂಶಯವಿಲ್ಲ. ವನ್ಯಜೀವಿಗಳ ಬಗೆಗೆ ಜಾರ್ಜ್ ಷಾಲರ್ ನಡೆಸುವಂತಹ ವೈಜ್ಞಾನಿಕ ಸಂಶೋಧನೆಗಳನ್ನು ಭಾರತೀಯರಾದ ನಮ್ಮಂಥವರು ಏಕೆ ಕೈಗೊಳ್ಳಬಾರದು, ನಮ್ಮ ನಾಡಿನ ಅರಣ್ಯಗಳಲ್ಲಿ ಇಂಥದೊಂದು ಸಂಶೋಧನೆ ನಡೆಸಲು ಖಂಡಿತ ಸಾಧ್ಯವಿದೆ ಎಂದು ನಾವು ಮೊದಲಿನಿಂದಲೂ ಚರ್ಚಿಸುತ್ತಲೇ ಇದ್ದೆವು. ಇಲಾಖೆಯವರು ನಡೆಸುತ್ತಿದ್ದ ಪ್ರಾಣಿ ಗಣತಿಯಂಥ ಕೆಲಸಗಳು ಅವೈಜ್ಞಾನಿಕವೆಂದು ಹಿಂದಿನಿಂದಲೂ ಹೇಳುತ್ತಿದ್ದ ಬೆರಳೆಣಿಕೆಯಷ್ಟು ಮಂದಿಯಲ್ಲಿ ಚಿಣ್ಣಪ್ಪನವರು ಒಬ್ಬರು. ಕಳೆದ 20 ವರ್ಷಗಳಲ್ಲಿ ಮೂಡುಮಲೈ ಅಭಯಾರಣ್ಯದಲ್ಲಿ ಒಂದೆಡೆ ವೈಜ್ಞಾನಿಕ ಸಂಶೋಧನೆಗಳು ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದರೂ ಮತ್ತೊಂದೆಡೆ ಅರಣ್ಯಹನನವೂ ಅವ್ಯಾಹತವಾಗಿ ನಡೆಯುತ್ತಲೇ ಇದೆ. ವೈಜ್ಞಾನಿಕ ಸಂಶೋಧನೆಗೂ ಅರಣ್ಯ ಇಲಾಖೆಯ ಕಾರ್ಯನಿರ್ವಹಣೆಗೂ ಸಾಮರಸ್ಯವಿಲ್ಲದ ಕಾರಣ ಹೀಗಾಗಿದೆ. ಆದರೆ ಅದೃಷ್ಟವಶಾತ್ ನಾಗರಹೊಳೆಯಲ್ಲಿ ಹೀಗಾಗದೆ, ನನ್ನ ಸಂಶೋಧನೆಗಳಿಗೂ ಚಿಣ್ಣಪ್ಪನಂಥ ಅಧಿಕಾರಿಗೂ ಇದ್ದ ಹೊಂದಾಣಿಕೆಯಿಂದಾಗಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳುವುದು ಸಾಧ್ಯವಾಯಿತೆಂದು ಭಾವಿಸುತ್ತೇನೆ. + +ಕ್ಷೇತ್ರಕಾರ್ಯ ಕೌಶಲದ ದೃಷ್ಟಿಯಿಂದ ಚಿಣ್ಣಪ್ಪನವರನ್ನು ನನ್ನ ಗುರುಗಳೆಂದೇ ಭಾವಿಸುತ್ತೇನೆ. ಅಷ್ಟೇ ಅಲ್ಲ ಒಬ್ಬ ಮನುಷ್ಯ ನಿಯತ್ತಿನಿಂದ ಹೇಗೆ ಬದುಕಬೇಕು ಎಂಬ ತತ್ವದ ಆಧಾರದಿಂದಲೂ ಚಿಣ್ಣಪ್ಪನವರನ್ನು ನಾನು ಆದರ್ಶ ವ್ಯಕ್ತಿಯೆಂದು ತಿಳಿಯುತ್ತೇನೆ. + + + +ಚಿಣ್ಣಪ್ಪನವರು ಬಹಳ ನಿಷ್ಠುರವಾದಿ. ತಮಗೆ ಸರಿ ಎಂದು ತೋರಿದುದನ್ನು ಇದ್ದದ್ದನ್ನು ಇದ್ದ ಹಾಗೆ ಹೇಳುವರು. ಅವರ ಈ ಗುಣ ಬಹಳಷ್ಟು ಜನರ ಟೀಕೆಗೆ ಕಾರಣವಾಗಿದ್ದು ಸಹಜ. ಇಲಾಖೆಯ ಮೇಲಧಿಕಾರಿಗಳು, ಅವರು ಯಾವ ಇಲಾಖೆಯವರೇ ಆಗಿರಲಿ, ತಮ್ಮ ಕೈಕೆಳಗಿನವರಿಂದ ಅತಿ ವಿನಯ ವಿಧೇಯತೆಗಳನ್ನು ಅಪೇಕ್ಷಿಸುವವರು. ಅವರಿಗೆ ಚಿಣ್ಣಪ್ಪನವರ ಈ ನೇರ ನಡವಳಿಕೆ ಸಹಿಸುತ್ತಿರಲಿಲ್ಲ. ಹೀಗಾಗಿ ಚಿಣ್ಣಪ್ಪನವರು ತಮ್ಮ ಮೇಲಿನವರಿಂದ “ಒರಟ, ಉದ್ಧಟ” ಮೊದಲಾದ ಬಿರುದುಗಳಿಗೆ ಪಾತ್ರರಾಗಿದ್ದರು. + +1988ರಲ್ಲಿ ಒಂದು ಕೊಲೆ ಪ್ರಕರಣದಲ್ಲಿ ಚಿಣ್ಣಪ್ಪನವರನ್ನು ಸಿಲುಕಿಸಿ ದಸ್ತಗಿರಿ ಆಗುವಂತೆ ಮಾಡಿ ನಾಗರಹೊಳೆಯನ್ನು ಅವರ ಮೇಲ್ವಿಚಾರಣೆಯಿಂದ ಮುಕ್ತಗೊಳಿಸುವುದರಲ್ಲೇನೋ ಕೆಲವರು ಯಶಸ್ವಿಯಾದರು. ಆದರೆ ಅನಂತರದ ಒಂದೆರಡು ವರ್ಷಗಳಲ್ಲಿ ನಾಗರಹೊಳೆಯ ಅವಸ್ಥೆ ಹೇಳತೀರದಂತಾಯಿತು. ಈ ಅವನತಿ ಯನ್ನು ಸರ್ಕಾರದ ಗಮನಕ್ಕೆ ತಂದು ಚಿಣ್ಣಪ್ಪನವರನ್ನು ಮತ್ತೆ ಅಲ್ಲಿಗೆ ತರಲು ನಾವು ಅನೇಕರು ಒತ್ತಾಯ ಮಾಡಿದೆವು. + +ಚಿಣ್ಣಪ್ಪ ಕಟ್ಟು ನಿಟ್ಟಿನ ಶಿಸ್ತನ್ನು ಪಾಲಿಸುವ ಅಧಿಕಾರಿಯಾಗಿದ್ದುದರಿಂದಾಗಿ ಅವರ ಮಿತ್ರರಿಗಿಂತ ಶತ್ರುಗಳ ಸಂಖ್ಯೆ ಹೆಚ್ಚಲು ಕಾರಣವಾಯಿತು. ಅವರನ್ನು ಹೇಗಾದರೂ ಮಾಡಿ ನಾಗರಹೊಳೆಯಿಂದ ಎತ್ತಂಗಡಿ ಮಾಡಬೇಕೆಂಬುದೇ ಹಲವರ ಧ್ಯೇಯವಾಗಿತ್ತು. ಸಾಮಾನ್ಯವಾಗಿ ನಾನು ಚಿಣ್ಣಪ್ಪನವರ ಪರ ವಹಿಸುತ್ತೇನೆಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಹೀಗಾಗಿ ಚಿಣ್ಣಪ್ಪನ ಕಾಟವನ್ನು ಕಳೆಯಬೇಕಾದರೆ ಅವರೊಡನೆ ನನ್ನನ್ನೂ ನಾಗರಹೊಳೆಗೆ ಕಾಲಿರಿಸದಂತೆ ಮಾಡಬೇಕಾಗುತ್ತದೆ ಎಂದು ಹಲವರು ಉಪಾಯ ಹೂಡಿದರು. + +ಹುಲಿಯ ರೇಡಿಯೊ ಕಾಲರಿಂಗ್ ಬಗೆಗೆ ನಡೆದ ವಿವಾದ ಕೇವಲ ಇದೇ ಹಿನ್ನೆಲೆ ಹೊಂದಿತ್ತು. ಹುಲಿಯ ಸಾವು ಅಥವಾ ರೇಡಿಯೋ ಕಾಲರ್ ನ ಪ್ರಯೋಜನ ಇಲ್ಲವೇ ವೈಜ್ಞಾನಿಕ ಸಂಶೋಧನೆಯ ಅಗತ್ಯತೆ ಇದೆಲ್ಲಕಿಂತ “ಉಲ್ಲಾಸ್ ಕಾರಂತ್ ನಾಗರಹೊಳೆಯಲ್ಲಿ ಸಂಶೋಧನೆ ನಡೆಸಬಾರದು. ಅವರ ಬೆಂಬಲಕ್ಕಿರುವ ಚಿಣ್ಣಪ್ಪ ಅಲ್ಲಿರಬಾರದು” ಎಂಬುದೇ ಅನೇಕರ `ಜೀವನದ ಗುರಿ’ಯಾಗಿರುವಂತೆ ಕಂಡಿತು. ಅದರ ಫಲವಾಗಿ ಚಿಣ್ಣಪ್ಪನವರನ್ನು ನಾಗರಹೊಳೆಯಿಂದ ಎತ್ತಂಗಡಿ ಮಾಡಿ ಬಳ್ಳಾರಿ ಜಿಲ್ಲೆಯ ಯಾವುದೋ ಊರಿಗೆ ವರ್ಗಾಯಿಸಲಾಯಿತು. ನನ್ನ ಸಂಶೋಧನಾ ಚಟುವಟಿಕೆಗಳನ್ನು ತಡೆಯಲಾಯಿತು. ನಾನು ನ್ಯಾಯಾಲಯದ ಮೊರೆಹೊಕ್ಕು ಮರಳಿ ನನ್ನ ಸಂಶೋಧನಾ ಕಾರ್ಯವನ್ನು ಆರಂಭಿಸಿದೆ. ಸರ್ಕಾರ ಬದಲಾಗುತ್ತಿದ್ದಂತೆಯೇ ಚಿಣ್ಣಪ್ಪ ಮರಳಿ ನಾಗರಹೊಳೆಗೇ ಬಂದರು. + +ಮುಂದೆ 1992ರಲ್ಲಿ ಚಿಪ್ಪನ ಕೊಲೆ ಪ್ರಕರಣದಲ್ಲಿ ಪರಿಸ್ಥಿತಿ ತೀರಾ ಗಂಭೀರವಾಯಿತು. ಚಿಣ್ಣಪ್ಪನವರನ್ನು ಮೊದಲಿನ ಕೊಲೆ ಪ್ರಕರಣದಲ್ಲಿ ಸಿಲುಕಿಸಿದಾಗಲೂ, ರೇಡಿಯೋ ಕಾಲರಿಂಗ್ ವಿವಾದದಲ್ಲಿ ಅವರನ್ನು ಬಲಿಪಶು ಮಾಡಲು ಯತ್ನಿಸಿದಾಗಲೂ, ‘ವೈಲ್ಡ್ ಲೈಫ್ ಫಸ್ಟ್’ ಸಂಘಟನೆಯಲ್ಲಿದ್ದ ಅನೇಕ ಸದಸ್ಯರು ಚಿಣ್ಣಪ್ಪನವರನ್ನು ಸಂದಿಗ್ಧ ಪರಿಸ್ಥಿತಿಯಿಂದ ಪಾರುಮಾಡುವ ವಿಷಯದಲ್ಲಿ ಬೆಂಬಲಕ್ಕೆ ನಿಂತು ಸಹಕರಿಸಿದರು. ಚಿಪ್ಪನ ಕೊಲೆ ಪ್ರಕರಣದನಂತರ ನಡೆದ ದೊಂಬಿಯಲ್ಲಿ ಚಿಣ್ಣಪ್ಪನವರ ರಕ್ಷಣೆ ಮಾತ್ರವಲ್ಲದೆ, ಉದ್ರಿಕ್ತ ಜನರ ಆಕ್ರೋಶಕ್ಕೆ ತುತ್ತಾಗಿ ಬೆಂದುಹೋದ ಕಾಡಿನ ರಕ್ಷಣೆಯೂ ನಮಗೆ ಮಹತ್ವದ್ದಾಗಿತ್ತು. ಇಡೀ ಸಂದರ್ಭವನ್ನು ಪತ್ರಿಕಾ ಮಾಧ್ಯಮಗಳ ಮೂಲಕ ಪರಿಣಾಮಕಾರಿಯಾಗಿ ಪ್ರಚಾರಮಾಡಿ ವಸ್ತುಸ್ಥಿತಿಯನ್ನು ವಿವರಿಸಿ ನಾಗರಹೊಳೆಯ ದಹನಕಾಂಡದ ವಿರುದ್ಧ ಸಾರ್ವಜನಿಕರ ಬೆಂಬಲ ಪಡೆಯುವಲ್ಲಿ ನಮ್ಮ ಗೆಳೆಯರ ಬಳಗ ಯಶಸ್ವಿಯಾಯಿತು. ಅಲ್ಲದೆ ರಾಜಕೀಯ ವಲಯಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮಟ್ಟದಲ್ಲೂ ಒತ್ತಡ ತಂದು ಇಂಥ ಅರಾಜಕ ಪರಿಸ್ಥಿತಿ ಮತ್ತೆ ಬಾರದಂತೆ ನಿಗಾ ವಹಿಸಬೇಕೆಂದು ಒತ್ತಾಯಮಾಡಿದೆವು. ಎರಡೂ ಸರ್ಕಾರಗಳೂ ಕೂಡಲೇ ಕಾರ್ಯಪ್ರವೃತ್ತವಾಗಿ ಎಸ್.ಪಿ., ಜಿಲ್ಲಾಧಿಕಾರಿಗಳ ವರ್ಗಾವಣೆಯಿಂದ ಹಿಡಿದು ಸಿ.ಓ.ಡಿ. ತನಿಖೆಗೆ ಆಜ್ಞಾಪಿಸುವವರೆಗೂ ಕ್ರಮ ಕೈಗೊಳ್ಳುವಂತಾಯಿತು. ಇದಲ್ಲದೆ ವನ್ಯಜೀವಿ ಸಂರಕ್ಷಣಾ ಸಂಘಟನೆಗಳ ವಲಯದಲ್ಲೂ ನಮ್ಮ ಪ್ರಭಾವವನ್ನು ಉಪಯೋಗಿಸಿ ನಾಗರಹೊಳೆಯ ಉಳಿವಿನ ವಿಷಯದತ್ತ ಎಲ್ಲರ ಲಕ್ಷ್ಯ ಹರಿಯುವಂತೆ ಮಾಡುವಲ್ಲಿಯೂ ಯಶಸ್ವಿಯಾದೆವು. + +ಈ ಘಟನೆ ನಡೆಯುವ ಮೊದಲೇ ಇಲಾಖೆಯಲ್ಲಿ ಚಿಣ್ಣಪ್ಪನವರ ಕಾರ್ಯನಿರ್ವಹಣೆ, ಕ್ಷೇತ್ರಕಾರ್ಯ ಪರಿಣತಿಗಳ ಉಪಯೋಗವನ್ನು ಬೇರೆ ರೀತಿಯಲ್ಲಿ ಪಡೆದುಕೊಳ್ಳಲು ಅನುವಾಗುವಂತೆ `ರೀಸರ್ಚ್ ರೇಂಜರ್’ ಎಂಬ ಹುದ್ದೆಯನ್ನು ಸೃಷ್ಟಿಸಿ ಅದಕ್ಕೆ ಚಿಣ್ಣಪ್ಪನವರನ್ನು ನೇಮಿಸಬೇಕೆಂದೂ, ಅವರು ತಮ್ಮ ಪರಿಣತಿಯ ನೆರವಿನಿಂದ ಇತರ ಅಧಿಕಾರಿಗಳಿಗೆ ತರಬೇತಿ ಕೊಡಬಹುದೆಂದೂ ನಾವು ಯೋಚಿಸಿಕೊಂಡಿದ್ದೆವು. ಅಷ್ಟರಲ್ಲಿ ಉಂಟಾದ ಗಲಭೆಯಿಂದಾಗಿ ನಮ್ಮ ಯೋಜನೆಯ ದಿಕ್ಕೇ ಬದಲಾಯಿತು. ಇನ್ನು ಚಿಣ್ಣಪ್ಪನವರು ನಾಗರಹೊಳೆಯಿಂದ ವರ್ಗವಾಗಿ ಬೇರೆ ವಲಯದಲ್ಲಿ ದುಡಿಯಲು ಸಾಧ್ಯವೇ ಎಂದು ಚರ್ಚಿಸುವಾಗ ಚಿಣ್ಣಪ್ಪನವರು “ನನ್ನ ಜೀವಮಾನದ ಬಹುಭಾಗ ಇಲ್ಲೇ ಕಳೆದಿದ್ದೇನೆ. ಇನ್ನು ಹೊರಗೆ ಹೋಗಿ ದುಡಿದು ನಾನು ಸಾಧಿಸುವುದೇನೂ ಇಲ್ಲ” ಎಂದುಬಿಟ್ಟರು. ಇನ್ನು ಸದ್ಯದ ಸ್ಥಿತಿಯಲ್ಲಿ ಚಿಣ್ಣಪ್ಪನವರು ಸ್ವಯಂ ನಿವೃತ್ತಿ ಪಡೆಯುವುದೇ ಮೇಲೆಂದೂ, ಶೈಕ್ಷಣಿಕ ಕಾರ್ಯಕ್ರಮ, ಜನಜಾಗೃತಿ ಮೊದಲಾದವುಗಳ ಮೂಲಕ ವನ್ಯಜೀವಿ ಸಂರಕ್ಷಣೆಗಾಗಿ ಹೊರಗಿನಿಂದ ದುಡಿಯುವದೇ ಮೇಲೆಂದೂ ತೀರ್ಮಾನಿಸಬೇಕಾಯಿತು. + +(ಟಿ.ಎಸ್. ಗೋಪಾಲ್) + +ಈಗ ಅವರ ನೇತೃತ್ವದಲ್ಲಿ ನಡೆಯುತ್ತಿರುವ `ನಾವಿಕೋಯೆಡ್’ ಮತ್ತು `ವೈಲ್ಡ್ ಲೈಫ್ ಫಸ್ಟ್’ ಸಂಘಟನೆಗಳು ಯಶಸ್ಸಿನ ದಾರಿ ಕಂಡಿವೆ. ಚಿಣ್ಣಪ್ಪ ಕೆಲವೊಮ್ಮೆ ದುಡುಕಿ ಮಾತನಾಡಿಬಿಡುವುದುಂಟು. ಅವರ ಮಾತೆಂದರೆ ಹೃದಯದಾಳದಿಂದ ಬರುವಂಥದು. ಹಾಗೆಲ್ಲ ಯಾವಾಗಲೂ `ಹೃದಯಪೂರ್ವಕ’ವಾಗಿಯೇ ಮಾತನಾಡುವ ಅವಶ್ಯಕತೆ ಇರಬೇಕೆಂದಿಲ್ಲ. ಆದರೆ ಚದುರಂಗ ಆಡಿದ ಹಾಗೆ ಒಮ್ಮೆ ಹಿಂದಕ್ಕೆ ಒಮ್ಮೆ ಮುಂದಕ್ಕೆ ಇನ್ನೊಮ್ಮೆ ಅತ್ತಿತ್ತ ಸರಿದು ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಿದರೆ ಒಳ್ಳೆಯದೆಂದು ಯೋಚಿಸಿ ಮಾತನಾಡುವ ಜಾಯಮಾನವೇನೂ ಚಿಣ್ಣಪ್ಪನವರದಲ್ಲ. ಪ್ರಾಮಾಣಿಕವಾಗಿ ತೋಚಿದ್ದನ್ನು ತಟ್ಟನೆ ಹೇಳಿಬಿಡುವರು. ಇದೊಂದು ದೋಷವೆನ್ನುವುದಕ್ಕಿಂತ ದೌರ್ಬಲ್ಯವೆನ್ನುವುದೇ ಸರಿ. + +ಚಿಣ್ಣಪ್ಪನವರ ಇನ್ನೊಂದು ದೌರ್ಬಲ್ಯವೆಂದರೆ ಹಲವರನ್ನು ಸುಲಭವಾಗಿ ನಂಬಿಬಿಡುವುದು. ಒಬ್ಬೊಬ್ಬರ ಅವಗುಣಗಳನ್ನು ನಾವು ಸ್ಪಷ್ಟವಾಗಿ ತೋರಿ ಹೇಳಿದರೂ “ನೀವು ಸುಮ್ಮನಿರಿ, ನಿಮಗೆ ಗೊತ್ತಿಲ್ಲ ಅವರು ಒಳ್ಳೆಯವರು” ಎಂದೇ ಸಾಧಿಸಿಕೊಳ್ಳುವರು. ಇನ್ನಾರೋ ಅಪ್ರಾಮಾಣಿಕನೆಂದು ಕಂಡುಬಂದರೂ ವನ್ಯಜೀವಿ ಸಂರಕ್ಷಣೆಯಂತಹ ಮಹತ್ವದ ಕಾರ್ಯಕ್ಕೆ ಆತನಿಂದ ಪ್ರಯೋಜನವಾಗುವುದಾದರೆ ಇರಲೆಂದು ಅಂಥವನನ್ನು ಪ್ರೀತಿವಿಶ್ವಾಸಗಳಿಂದಲೇ ಕಾಣುವರು. ಆದರೆ ತಮ್ಮ ವ್ಯಕ್ತಿತ್ವ, ನಡತೆಗಳಲ್ಲಿ ಮಾತ್ರ ಚಿಣ್ಣಪ್ಪ ಯಾವುದೇ ಕಾಲಕ್ಕೆ ಯಾವುದೇ ತೋರಿಕೆಯ ಮಾರ್ಪಾಡನ್ನು ಸಹ ಮಾಡಿಕೊಳ್ಳದ ನಿಷ್ಠುರ ವ್ಯಕ್ತಿ. ನನ್ನ ತಂದೆ ಶಿವರಾಮ ಕಾರಂತರಿಗಿಂತ ಮಿಗಿಲಾದ ನಿಷ್ಠುರತೆಯನ್ನು ಚಿಣ್ಣಪ್ಪನವರಲ್ಲಿ ನಾನು ಕಂಡಿದ್ದೇನೆ. ಅವರ ಇನ್ನೊಂದು ಗುಣ: ಅವರ ಅಸಾಮಾನ್ಯ ಧೈರ್ಯ. ಕಾಡಾನೆಯೇ ಆಗಲಿ, ಕತ್ತಿ ಹಿಡಿದ ಹಳ್ಳಿಗರ ಗುಂಪೇ ಇರಲಿ, ಪಾನಮತ್ತ ಪಡ್ಡೆ ಹುಡುಗರ ತಂಡವೇ ಇರಲಿ ಇಲ್ಲಾ ಬಂದೂಕುಧಾರಿ ಕಳ್ಳಬೇಟೆಗಾರರೇ ಸಿಗಲಿ ಚಿಣ್ಣಪ್ಪ ಎಂದೂ ಹೆದರಿ ಹಿಮ್ಮೆಟ್ಟಿದವರಲ್ಲ. + +ಎಂಥ ಪರಿಸ್ಥಿತಿಯನ್ನೂ ಎದುರಿಸುವ ಅವರ ಧೈರ್ಯ ಕೇವಲ ಹುಂಬು ಧೈರ್ಯ ಅಲ್ಲ; ತನ್ನ ಶಕ್ತಿ, ಸಾಮರ್ಥ್ಯ ಮತ್ತು ಚಾಣಾಕ್ಷತೆಗಳ ಬಗ್ಗೆ ಅವರಿಗಿದ್ದ ವಿಶ್ವಾಸದ ದ್ಯೋತಕವಾಗಿತ್ತು. ಅನೇಕ ಸಲ ಯಾವ ಗಡಿಬಿಡಿ ಹೆದರಿಕೆಗಳಿಲ್ಲದೆ ಅವರು ಇಂತಹ ಕಷ್ಟದ ಸನ್ನಿವೇಶಗಳನ್ನು ಎದುರಿಸಿದ್ದನ್ನು ನಾನೇ ಕಂಡಿದ್ದೇನೆ. + +ನಾನು ಕಂಡಿರುವ ಅಸಾಧಾರಣ ವ್ಯಕ್ತಿಗಳಲ್ಲಿ ಚಿಣ್ಣಪ್ಪನವರು ಒಬ್ಬರೆಂಬುದು ನಿಸ್ಸಂಶಯ. ಹಾಗೆಯೇ ನನ್ನ ಮೇಲೆ ಪ್ರಭಾವ ಬೀರಿರುವ ವ್ಯಕ್ತಿಗಳಲ್ಲೂ ಚಿಣ್ಣಪ್ಪನವರನ್ನು ಮುಖ್ಯವಾಗಿ ಹೆಸರಿಸಬೇಕು. ಕಳೆದ ಮೂವತ್ತು ವರ್ಷಗಳಲ್ಲಿ ನಮ್ಮ ಸ್ನೇಹ ಬಲು ಆತ್ಮೀಯವಾಗಿದೆ. ನಮ್ಮ ನಮ್ಮಲ್ಲಿ ಕೆಲವು ಸಂದರ್ಭಗಳಿಗೆ ಸೀಮಿತವಾದಂತೆ “ಹಾಗಲ್ಲ ಹೀಗೆ” ಎಂಬ ವಾದ ವಿವಾದಗಳು ನಡೆದಿರಬಹುದು. ಆದರೆ ತೀವ್ರತರವಾದ ಭಿನ್ನಾಭಿಪ್ರಾಯ, ಜಗಳಗಳೇನೂ ಉಂಟಾಗಿಲ್ಲ. ನಮ್ಮಿಬ್ಬರಲ್ಲೂ ಮುಂಗೋಪದಂಥ ಕೆಲವು ದೌರ್ಬಲ್ಯಗಳಿರಬಹುದು, ನಮ್ಮ ನಮ್ಮ ವ್ಯಕ್ತಿತ್ವ, ಜೀವನವಿಧಾನ ವಿಭಿನ್ನವಾಗಿರಬಹುದು. ಆದರೆ ನಾವು ಪರಸ್ಪರ ತೀರಾ ಸರಳವಾಗಿರುವುದೇ ನಮ್ಮ ಮೈತ್ರಿಯ ಯಶಸ್ಸಿಗೆ ಕಾರಣವೆನ್ನಬಹುದು. ನಾನು ಅವರನ್ನು ಮೆಚ್ಚಿಸುವುದಕ್ಕಾಗಲೀ ಅವರು ನನ್ನನ್ನು ಒಪ್ಪಿಸುವುದಕ್ಕಾಗಲೀ ಎಂದೂ ಮಾತುಗಳನ್ನು ಆಡಿದವರಲ್ಲ, ಭಿನ್ನಾಭಿಪ್ರಾಯಗಳನ್ನು ಮುಚ್ಚಿದವರಲ್ಲ. + +ಚಿಣ್ಣಪ್ಪನವರನ್ನು ಅಸಾಧಾರಣ ವ್ಯಕ್ತಿಯಂದು ಹೇಳಿದೆ. ಅವರಿಗಿರುವ ಯೋಗ್ಯತೆಯನ್ನು ಪಡೆದವರೆಲ್ಲರಿಗೂ ಅಸಾಧಾರಣ ಮಟ್ಟವನ್ನು ತಲುಪಲು ಸಾಧ್ಯವಾಗಲಿಕ್ಕಿಲ್ಲ. ಏಕೆಂದರೆ ಅಂಥ ಜನರೆಲ್ಲರೂ ಸಾಮಾಜಿಕ ಜವಾಬ್ದಾರಿ, ಕೌಟುಂಬಿಕ ಅಗತ್ಯಗಳ ಒತ್ತಡದಿಂದಾಗಿ ಬಳಲುತ್ತಿರುತ್ತಾರೆ. ಆದರೆ ಚಿಣ್ಣಪ್ಪನವರ ವಿಷಯದಲ್ಲಿ ಒಂದು ಗಮನಾರ್ಹ ಸಂಗತಿಯೆಂದರೆ ಅವರು ಶ್ರೀಮತಿ ರಾಧಾರವರಂಥ ಜೀವನ ಸಂಗಾತಿಯನ್ನು ಪಡೆದಿರುವುದಾಗಿದೆ. ಚಿಣ್ಣಪ್ಪನವರ ಜೀವಮಾನದುದ್ದಕ್ಕೂ ಚಿಣ್ಣಪ್ಪನವರಿಗೆ ತಾವು ಸಾಧಿಸಬಹುದಾದುದನ್ನು ಸಾಧ್ಯವಾಗಿಸಲು ಆಗಿದೆಯೆಂದು ನಾನು ತಿಳಿದಿದ್ದೇನೆ. + +(ಡಾ. ಕೆ. ಉಲ್ಲಾಸ ಕಾರಂತ) + +ಕಾಡಿನೊಳಗೆಲ್ಲೋ ಮನೆ ಮಾಡಿಕೊಂಡಿದ್ದು, ಅಲ್ಪಸೌಕರ್ಯಗಳಿಗೇ ತೃಪ್ತಿ ಪಟ್ಟುಕೊಂಡು, ಅವಿದ್ಯಾವಂತ ಆದಿವಾಸಿಗಳ ನೆರೆಹೊರೆಯಲ್ಲಿ ಇದ್ದುಕೊಂಡು, ಬೇಟೆಗಾರರೂ ವಿರೋಧಿಗಳೂ ತನ್ನ ಗಂಡನತ್ತ ಸದಾ ಗುರಿಯಿಟ್ಟುಕೊಂಡೇ ಇರುವ ನಿರಂತರ ಆತಂಕಗಳ ನಡುವೆ ಚಿಣ್ಣಪ್ಪನ ಬೆಂಬಲಕ್ಕೆ ನಿಂತ ರಾಧಾರವರ ವ್ಯಕ್ತಿತ್ವ ಅನುಪಮವಾದುದು. ಈ ಪರಿಸ್ಥಿತಿಯಲ್ಲಿ ಹೆಣ್ಣು ಮಗಳೊಬ್ಬಳು ಬದುಕಲು ಅನುವಾಗುವಂತೆ ಮದುವೆಯ ಹೊಸತರಲ್ಲೇ ಚಿಣ್ಣಪ್ಪನವರು ರಾಧಾಗೆ ಬಂದೂಕಿನಿಂದ ಗುಂಡು ಹೊಡೆಯಲು `ಶಸ್ತ್ರಾಭ್ಯಾಸ’ ಹೇಳಿಕೊಟ್ಟಿದ್ದರು. ಮನೆಯಲ್ಲಿ ಚಿಣ್ಣಪ್ಪ ಇಲ್ಲದಿದ್ದರೂ ಮೂರು ಗುಂಡು ತುಂಬಿರಿಸಿದ ಕೋವಿಗಳನ್ನು ಗುರಿಗಾರ್ತಿ ರಾಧಾ ಇರಿಸಿಕೊಂಡ ವಿಚಾರ ಸಾರ್ವತ್ರಿಕವಾಗಿ ಗುಸು ಗುಸು ಮಾತಿನಿಂದ ಹಬ್ಬಿ ಯಾವ ಕೇಡಿಗನೂ ಅವರತ್ತ ಬರುವ ಧೈರ್ಯಮಾಡಲಿಲ್ಲ-ಮೂವತ್ತು ವರ್ಷ! + +ಐದು ಎಕರೆಗಳಷ್ಟು ಅಲ್ಪವಾದ ತಮ್ಮ ತೋಟಗದ್ದೆಗಳತ್ತ ಕಣ್ಣು ಹಾಯಿಸಲೂ ಬಿಡುವಿಲ್ಲದೆ ಚಿಣ್ಣಪ್ಪ ಕರ್ತವ್ಯನಿರತರಾಗಿದ್ದಾಗ, ಆಸ್ತಿಯನ್ನು ಉಳಿಸಲೂ ಬೆಳೆಸಲೂ ರಾಧಾರವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಯಾವ ಲಂಚ ವಸೂಲಾತಿಗೂ ಕೈ ಹಾಕದ ಅಪರೂಪದ ಅರಣ್ಯಾಧಿಕಾರಿ ಚಿಣ್ಣಪ್ಪ ನಿವೃತ್ತಿಯಲ್ಲಿ ಇಂದು ಆರ್ಥಿಕವಾಗಿ ತೊಂದರೆ ಇಲ್ಲದೆ ಬದುಕುತ್ತಿದ್ದರೆ ಈ ಐದು ಎಕರೆ ತೋಟವನ್ನು 30 ವರ್ಷಕಾಲ ರಾಧಾ ಬೆವರು ಸುರಿಸಿ ಹಸನಾಗಿ ಮಾಡಿದ್ದೇ ಕಾರಣ. + +ಚಿಣ್ಣಪ್ಪನವರಲ್ಲಿ ಕಾಣುವ ಎಲ್ಲ ಒಳ್ಳೆಯ ಗುಣಗಳನ್ನು ರಾಧಾರವರಲ್ಲೂ ಕಾಣಬಹುದು. ಜೊತೆಗೆ ಚಿಣ್ಣಪ್ಪನವರ ದುಡುಕುತನವನ್ನು ನಿಯಂತ್ರಿಸಿ ಸಮಾಧಾನ ಸ್ಥಿತಿಯಲ್ಲಿ ಸಾಗುವ ಪೂರಕ ಶಕ್ತಿಯೂ ಅವರಲ್ಲಿದೆ. ರಾಧಾರವರ ದೃಢತೆ, ಸಂಕಲ್ಪಶಕ್ತಿಗಳು ಚಿಣ್ಣಪ್ಪನವರ ವೃತ್ತಿ ಜೀವನಕ್ಕೆ ಶ್ರೀರಕ್ಷೆಯಾಗಿತ್ತೆಂದು ಹೇಳಿದರೆ ಅತಿಶಯೋಕ್ತಿಯಾಗಲಾರದು. ಹಿರಿಯರ ಒಪ್ಪಿಗೆಯಲ್ಲಿ ನಡೆದ ವಿವಾಹವೊಂದರಲ್ಲಿ ಜೊತೆಯಾದ ಈ ಜೋಡಿ ಜೀವನದ ವೈರುಧ್ಯಗಳ ನಡುವೆ ಅಪೂರ್ವವಾದ ಯಶಸ್ಸನ್ನು ಸಾಧಿಸಿದೆಯೆನ್ನುವುದೇ ಒಂದು ಅಚ್ಚರಿಯ ಸಂಗತಿ. + + + +ಯೋಗಿಯ ಶುದ್ಧಶೀಲ, ನಿರ್ಲಿಪ್ತತೆಗಳನ್ನೂ, ಕಮ್ಯುನಿಸ್ಟ್ `ಕಾಮಿಸಾರ್’ ಒಬ್ಬನ ನಿಷ್ಠುರ ಕಾರ್ಯದಕ್ಷತೆಯನ್ನೂ, ಕೀಟಲೆ ಹುಡುಗನ ವಿನೋದ ಪ್ರಜ್ಞೆಯನ್ನೂ, ಹದವಾಗಿ ಬೆರೆಸಿದ ಪಾಕದಿಂದ ಹುಟ್ಟಿದ ಕೆ.ಎಂ. ಚಿಣ್ಣಪ್ಪ, ನಮ್ಮ ಸುತ್ತಲ ಕಾಡುಗಳಲ್ಲಿ ಓಡಾಡಿದ ಒಂದು ಎತ್ತರದ ಜೀವ. ನಾಗರಹೊಳೆಯಲ್ಲಿ ಅವರ ಕಾಲು ಶತಮಾನದ ಕಾರುಬಾರು ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸ ಪರ್ವಕಾಲದ ಒಂದು ಅಪರೂಪದ ದಾಖಲೆ. ಈ ಘಟನಾವಳಿಗಳನ್ನೂ ಚಿಣ್ಣಪ್ಪನವರ ಉನ್ನತ ವ್ಯಕ್ತಿತ್ವವನ್ನೂ ನಿರೂಪಕ ಟಿ.ಎಸ್.ಗೋಪಾಲ್ ಅತ್ಯಂತ ಸಮರ್ಥವಾಗಿ ಈ ಪುಸ್ತಕದ ರೂಪದಲ್ಲಿ ಕನ್ನಡಿಗರ ಮುಂದೆ ಇಟ್ಟಿದ್ದಾರೆ. `ಕಾಡಿನೊಳಗೊಂದು ಜೀವ’, ವನ್ಯಜೀವಿ ಸಂರಕ್ಷಣೆಯಲ್ಲಿ ಆಸಕ್ತ ಕಾರ್ಯಶೀಲರಿಗೆಲ್ಲಾ ಮುಂದಿನ ದಾರಿ ತೋರುವ ದೀವಟಿಗೆಯಾಗಿ ಬೆಳಗುವು ದೆಂದು ನನ್ನ ನಂಬಿಕೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_376.txt b/Kenda Sampige/article_376.txt new file mode 100644 index 0000000000000000000000000000000000000000..eda8345d598e76afa43ecaf472650e72f075f7b0 --- /dev/null +++ b/Kenda Sampige/article_376.txt @@ -0,0 +1,111 @@ + + +ಸತ್ಯ ಮತ್ತು ಸತ್ಯದ ನಡುವೆಯೂ ಒಂದು ಅಂತರವಿರುತ್ತದೆ. ಇದೇ ಅಂತರ ಒಮ್ಮೊಮ್ಮೆ ಎಷ್ಟು ದೊಡ್ಡ ಸಮಸ್ಯೆ ತಂದೊಡ್ಡುತ್ತದೆ! + +ಅತಿಮಾಳ ಫೋನ್ ಬಂದಿತ್ತು ನೆನ್ನೆ ಅಮೆರಿಕಾದಿಂದ. ಅದೆಷ್ಟು ಗಾಬರಿ ಇತ್ತು ಅವಳ ದನಿಯಲ್ಲಿ! + +“ಕ್ಷಮಿಸಿ ಅಣ್ಣ! ನಿಮ್ಮನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದೀನಿ. ಈಗ ಅಲ್ಲಿ ರಾತ್ರಿ ಮೂರುಗಂಟೆ ಆಗಿರಬಹುದಲ್ಲವಾ! ನೀವು ಮಲಗಿರಬಹುದು. ಅವೇಳೆಯಲ್ಲಿ ಎಬ್ಬಿಸಿದ್ದಕ್ಕೆ…..!” + +“ಅರೆ, ನಾನು ಏಳುವ, ನೀನು ಎಬ್ಬಿಸುವ ಮಾತು ಬಿಡು….. ಅದೇನು ಅಂತ ಹೇಳಾದರೂ ಹೇಳು. ನೀನು ಇಷ್ಟೇಕೆ ಗಾಬರಿಗೊಂಡಂತೆ ಇದ್ದೀಯ? ಅಲ್ಲಿ ಎಲ್ಲ ಕ್ಷೇಮ ತಾನೆ!” + +“ಇಲ್ಲಿ ಎಲ್ಲ ಸರಿಯಾಗಿದೆ ಅಣ್ಣ! ಅಲ್ಲಿಯ ಚಿಂತೆ ನನ್ನನ್ನು ಕಿತ್ತು ತಿನ್ನುತ್ತಿದೆ. ನೆನ್ನೆಯಿಂದ ಎಷ್ಟು ಸಲ ಅಪ್ಪನಿಗೆ ಫೋನ್ ಮಾಡಿದೆ, ಆದರೆ ಪ್ರತಿ ಸಲವೂ `ಎಂಗೇಜ್ಡ್’ ಬರ್ತಾ ಇದೆ.” + +“ಆದರೆ ಇದರಲ್ಲಿ ಆತಂಕಪಟ್ಟುಕೊಳ್ಳುವುದೇನಿದೆ? `ಎಂಗೇಜ್ಡ್’ ಆಗಿರಲೂ ಬಹುದು….” + +“ಹಾಗಾದರೇನು ಇಡೀ ಹಗಲೂ-ರಾತ್ರಿ `ಎಂಗೇಜ್ಡ್’ ಇರುತ್ತಾ? ಅಪ್ಪ-ಅಮ್ಮ ಇಬ್ಬರೇ ಇರುವರಲ್ಲವೇ? ಸಾಮಾನ್ಯವಾಗಿ ಅವರ ಫೋನ್ ಸುಮ್ಮನೆ ಹಾಗೇ ಉಪಯೋಗಿಸದೇ ಬಿದ್ದಿರುತ್ತದೆ. ಅಲ್ಲಿ ಮೀರಾ ಇದ್ದಿದ್ದರೆ ಆಗ ಅರ್ಥ ಮಾಡಿಕೊಳ್ಳಬಹುದಿತ್ತು…. ಆದರೆ ಈಗ ಇದು…. ಇದು….?” ಹೇಳುತ್ತಾ ಹೇಳುತ್ತಾ ಅವಳು ಹಾಗೆಯೇ ನಿಲ್ಲಿಸಿ ಬಿಡುತ್ತಾಳೆ. + +“ಅರೆ, ಅತಿ, ನಿನಗೇನು ತಾನೇ ಹೇಳಲಿ. ಅಯ್ಯೋ ರಾಮ, `ಎಂಗೇಜ್ಡ್’ ಆಗಿಲ್ಲದಿದ್ದರೆ ಕೆಟ್ಟು ಹೋಗಿರಬಹುದು! ಇದೇನು ನಿಮ್ಮ ವಾಷಿಂಗ್ಟನ್ ಅಥವಾ ನ್ಯೂಯಾರ್ಕ್ ಅಲ್ಲವಲ್ಲ! ಇಲ್ಲಂತೂ ದಿನಬೆಳಗೂ ರಸ್ತೆಗಳಲ್ಲಿ ಅಗೆಯುವ ಕೆಲಸ ನಡೆಯುತ್ತಲೇ ಇರುತ್ತದೆ. ಕೇಬಲ್ ಫಾಲ್ಟ್ ಆಗುವುದು ಸರ್ವೇ ಸಾಮಾನ್ಯ.” ನಾನು ಶಾಂತದನಿಯಲ್ಲಿ ಹೇಳುತ್ತೇನೆ. + +ಕಾರಣವಿಲ್ಲದೆ ಗಾಬರಿ ಆಗುವುದು ಅತಿಮಾಳ ಸ್ವಭಾವ, ನನಗೆ ಗೊತ್ತು. ಕಳೆದ ಬಾರಿ ಎರಡು ದಿನಗಳ ಮಟ್ಟಿಗೆ ದೊಡ್ಡಪ್ಪ ಮೀರತ್ ಗೆ ಹೋಗಿದ್ದಾಗಲೂ ಅವಳು ಹೀಗೇ ಗಾಬರಿಗೊಂಡಿದ್ದಳು. ಗಂಟಲಿನಿಂದ ಸರಿಯಾಗಿ ದನಿಯೂ ಹೊರಡುತ್ತಿರಲಿಲ್ಲ! + +“ನಾನು ನಿಮಗೆ ಹೇಗೆ ತಿಳಿಸಿ ಹೇಳಲಿ ಅಣ್ಣಾ….! ಕಳೆದ ವಾರವಷ್ಟೇ ದೆಹಲಿಯಿಂದ ಕೃಷ್ಣಾ ಖರ್ ಬಂದಾ ನ್ಯೂಜರ್ಸಿಗೆ ಬಂದಿದ್ದಳು, ತನ್ನ ಚಿಕ್ಕಮ್ಮನನ್ನು ನೋಡಲು. ಸೌತ್ ದೆಹಲಿಯಲ್ಲಿ ದಿನಬೆಳಗೂ ವೃದ್ಧರ ಕೊಲೆಗಳಾಗುತ್ತಿರುತ್ತವೆ ಎಂದು ಹೇಳುತ್ತಿದ್ದಳು. ಮನೆಕೆಲಸದ ಆಳುಗಳೋ ಅಥವಾ ಕಳ್ಳಕಾಕರೋ ಬಂದು ಕತ್ತುಹಿಸುಕಿ ಹೋಗುತ್ತಾರೆ. ದಿನವೂ ದೆಹಲಿಯ ದಿನಪತ್ರಿಕೆಗಳಲ್ಲಿ ಇಂತಹ ವಾರ್ತೆಗಳು ಬರುತ್ತಿರುತ್ತವೆ. ಈಗಂತೂ ಇಂತಹ ಸಂಗತಿಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ…. ನಾನು ಕಳೆದ ಬಾರಿಯೇ ಫೋನ್ನಲ್ಲಿ ಅಮ್ಮನಿಗೆ ಹೇಳಿದ್ದೆ – ಕೆಲಸದಾಳನ್ನು ಕಳುಹಿಸಿಬಿಡು ಹಾಗೂ ಕಾನ್ಪುರದಿಂದ ಶೀಲೂ ಚಿಕ್ಕಮ್ಮನನ್ನು ಕರೆಸಿಕೊ… ವಿಧವೆ, ಎರಡು ಹೊತ್ತು ಊಟಕ್ಕಿಂತ ಇನ್ನೇನು ಬೇಕು ಅವರಿಗೆ! ಎಂದು.” + +“ಓಹೋ, ಹಾಗಾದರೆ ಮನೆ ಆಳನ್ನು ದೊಡ್ಡಮ್ಮ ಕೆಲಸದಿಂದ ತೆಗೆದಿಲ್ಲ. ಅವನು ಅವರ ಕತ್ತು ಹಿಸುಕಿ ನಾಪತ್ತೆಯಾಗಿದ್ದಾನೆ ಅಲ್ವಾ?” ಸ್ವಲ್ಪ ನಕ್ಕು ನಾನು ಉತ್ತರಿಸುತ್ತೇನೆ. + +ಇದರಿಂದ ಅವಳು ಇನ್ನಷ್ಟು ಸಿಡಿಮಿಡಿಗೊಳ್ಳುತ್ತಾಳೆ. “ಛೆ…. ನಿಮಗ್ಯಾಕೆ ಅರ್ಥವಾಗುವುದಿಲ್ಲ! ವಯಸ್ಸಾದ ತಂದೆ-ತಾಯಿಗಳು ಇಬ್ಬರೇ ಇದ್ದಾರೆ” ಅವಳ ದನಿ ಭಾರವಾಗುತ್ತದೆ, “ನಾನು ಇಲ್ಲಿದ್ದೀನಿ – ಸಾವಿರಾರು ಮೈಲಿಗಳಾಚೆ, ಅಮೆರಿಕದಲ್ಲಿ! ಇನ್ಯಾರಿದ್ದಾರೆ ನಮಗೆ! ನಿಮ್ಮಗಳ ಮೇಲೆ ಭರವಸೆ ಇಟ್ಟು ತಾನೇ ಅವರನ್ನು ಅಲ್ಲಿ ಬಿಟ್ಟಿರುವುದು…. ನಾನು ಎಷ್ಟು ಬಾರಿ ಹಟ ಮಾಡಿದ್ದೀನಿ! ಗ್ರೀನ್ಕಾರ್ಡ್ ಸಹ ಮಾಡಿಸಿಟ್ಟಿದ್ದೀನಿ! ಈ ಮಣ್ಣಿನ ಮನೆಯ ಮೇಲೆ ಅವರಿಗದೇನು ವ್ಯಾಮೋಹವೋ ಗೊತ್ತಿಲ್ಲ! ನಾನು ಯಾವಾಗ ಹಟ ಮಾಡಿದಾಗಲೂ ಅಪ್ಪ `ಇಮೋಷನಲ್’ ಆಗಿಬಿಡುವರು….” + +(ಹಿಮಾಂಶು ಜೋಷಿ) + +ನಾನು ಬೆಳಿಗ್ಗೆ ಸ್ವತಃ ವಸಂತವಿಹಾರ್ ಗೆ ಹೋಗಿ ಪತ್ತೆ ಮಾಡುವುದಾಗಿ ಆಶ್ವಾಸನೆ ಕೊಟ್ಟು ನಾಳೆ ರಾತ್ರಿ ಮತ್ತೆ ಫೋನ್ ಮಾಡಲು ಅವಳಿಗೆ ಹೇಳುತ್ತೇನೆ.“ಇಲ್ಲ, ಇಲ್ಲ ಅಣ್ಣಾ! ರಾತ್ರಿಯವರೆಗೆ ತುಂಬಾ ತಡವಾಗಿ ಬಿಡುತ್ತದೆ, ನಾನು ನಾಲ್ಕಾರು ಗಂಟೆಗಳ ನಂತರ ಮತ್ತೆ ಫೋನ್ ಮಾಡುತ್ತೀನಿ.” + +ಫೋನ್ ಇಟ್ಟ ನಂತರ ನಾನು ವಸಂತವಿಹಾರ್ ನಂಬರಿಗೆ ಫೋನ್ ಮಾಡುತ್ತೇನೆ. + +ನಾನೂ ಈಚಿನ ಮೂರು ನಾಲ್ಕು ದಿನಗಳಿಂದ ಫೋನ್ ಮಾಡಿಲ್ಲ. ದೊಡ್ಡಮ್ಮನ ಕಡೆಯಿಂದಲೂ ಫೋನ್ ಬರಲಿಲ್ಲ. + +ಫೋನ್ ಸಿಗದಿದ್ದಾಗ ನಿಜವಾಗಿಯೂ ಮನಸ್ಸಿನಲ್ಲಿ ಆತಂಕ ಮೂಡುತ್ತದೆ, ಅತಿಮಾ ಹೇಳುತ್ತಿದ್ದುದು ನಿಜವಲ್ಲ ತಾನೇ! + +ಬೆಳಗಾಗುತ್ತಿದ್ದಂತೆಯೇ ನಾನು ವಸಂತವಿಹಾರ್ ತಲುಪುತ್ತೇನೆ. + +ಹೊರಗಿನಿಂದಲೇ ಸ್ಥಿತಿ ಏನು ಎಂಬುದು ತಿಳಿದುಬಿಡುತ್ತದೆ. + +ಮನೆಯ ಮುಂದಿದ್ದ ಯೂಕಲಿಪ್ಟಸ್ ಮರ ಬಿರುಗಾಳಿಯಿಂದ ಕೆಳಗೆ ಬಿದ್ದಿದೆ – ನಡುರಸ್ತೆಯಲ್ಲಿ ಹೆಬ್ಬಾವಿನಂತೆ. ಅದರೊಂದಿಗೇ ಟೆಲಿಫೋನ್ ತಂತಿಗಳು ಸುತ್ತಿಕೊಂಡಿದ್ದ ಕಂಬವೂ. + +ಒಳಗೆ ದೊಡ್ಡಮ್ಮ ದೇವರ ಮನೆಯಲ್ಲಿ ವಿಷ್ಣುಸಹಸ್ರನಾಮ ಜಪ ಮಾಡುತ್ತಾ ಕುಳಿತಿದ್ದಾರೆ ಮತ್ತು ದೊಡ್ಡಪ್ಪ ಬೆಳಗಿನ ದಿನಪತ್ರಿಕೆ ಓದುತ್ತಿದ್ದಾರೆ. ತುಂಬಾ ತನ್ಮಯತೆಯಿಂದ ಕೆಲವು ಸಮಾಚಾರಗಳನ್ನು ಹುಡುಕುತ್ತಾ. + +ನನ್ನನ್ನು ನೋಡುತ್ತಿದ್ದಂತೆಯೇ ಅವರ ಮುಖ ಅರಳುತ್ತದೆ. + + + +“ಅರೆ ಭೀರೂ, ನೀನು! ಇಷ್ಟು ಬೆಳಬೆಳಿಗ್ಗೆ!” + +“ಹೌದು ದೊಡ್ಡಪ್ಪ, ನೆನ್ನೆ ರಾತ್ರಿ ಅತಿಮಾಳ ಫೋನ್ ಬಂದಿತ್ತು. ಎರಡು ದಿನಗಳಿಂದಲೂ `ಟ್ರೈ’ ಮಾಡುತ್ತಿದ್ದೀನಿ, ಮನೆಯ ಫೋನ್ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು…. ಬಹುಶಃ ಅದಕ್ಕೇ ಸ್ವಲ್ಪ ಗಾಬರಿ ಆದಂತಿದ್ದಳು….” + +ಅರೆ, ಅವಳಂತೂ ಸುಮ್ಮಸುಮ್ಮನೆ ಗಾಬರಿ ಮಾಡಿಕೊಳ್ಳುತ್ತಾಳೆ, ತನ್ನ ತಾಯಿ ಹಾಗೇ ಅಲ್ಲವಾ, ನೂರಕ್ಕೆ ನೂರರಷ್ಟು!” ಅವರು ನಸುನಗುತ್ತಾ ಹೇಳುತ್ತಾರೆ, “ಭಾರತದಲ್ಲಿ ಭಾರಿ ಹೊಡೆದಾಟ ಬಡಿದಾಟ ನಡೆದಿದೆ. ಇಡೀ ದೇಶ ರಕ್ತದಿಂದ ತೊಯ್ದು ಹೋಗುತ್ತಿದೆ ಎಂದು ಅಲ್ಲಿ ಎಲ್ಲರಿಗೂ ಅನ್ನಿಸಿದೆಯಂತೆ…. ನಾನು ಕಳೆದ ತಿಂಗಳು ತಾನೆ ಶ್ಯಾಮಾಳ ಮದುವೆಗಾಗಿ ಅಮೃತಸರಕ್ಕೆ ಹೋಗಿದ್ದೆ…. ಅಲ್ಲೇನೋ ಎಲ್ಲೂ ಯಾವ ಆತಂಕವೂ ಕಾಣಲಿಲ್ಲ. ದಾರಿಯುದ್ದಕ್ಕೂ ಹೊಲಗಳಲ್ಲಿ ಪೈರು ಬೆಳೆದು ನಿಂತಿತ್ತು. ತುಂಬಿದ ತೆನೆಗಳು ಕಂಗೊಳಿಸುತ್ತಿದ್ದವು. ಗಿರಣಿ ಕಾರ್ಖಾನೆಗಳಲ್ಲಿ ಮಾಮೂಲಿನಂತೆ ಕೆಲಸ ಸಾಗುತ್ತಿತ್ತು. ರಸ್ತೆಗಳಲ್ಲೂ ಜನರ ಓಡಾಟ ಎಂದಿನಂತಿತ್ತು. ಅಂಗಡಿಗಳಲ್ಲಿ ಸಾಮಾನುಗಳ ವ್ಯಾಪಾರ ನಡೆಯುತ್ತಿತ್ತು. ಶಾಲೆಗಳಲ್ಲಿ ಮಕ್ಕಳ ಓದು ಸಾಗುತ್ತಲಿತ್ತು….” ಸ್ವಲ್ಪ ಯೋಚಿಸಿ ಮತ್ತೆ ಅವರು ಹೇಳುತ್ತಾರೆ, “ಈ ನಮ್ಮ ಅತ್ತೀ ಅಂತೂ ತಲೆಯ ಮೇಲೆ ಬೆಟ್ಟ ಹೊತ್ತುಕೊಂಡಂತಾಡುತ್ತಾಳೆ. ಒಮ್ಮೆ ಫೋನ್ ಸಿಗದಿದ್ದರೆ ಅವಳ ಕೈಕಾಲು ಬಿದ್ದು ಹೋಗುತ್ತವೆ.” + +“ದೂರ ಇರುವುದರಿಂದ ಹೆಚ್ಚು ಚಿಂತೆ ಆಗುತ್ತೆ ದೊಡ್ಡಪ್ಪ.” + +“ಅಯ್ಯೋ ದೇವರೇ, ಇವರಿಗೆ ತಿಳಿಯುವುದಿಲ್ಲ!” ಇಷ್ಟರಲ್ಲಿ ದೊಡ್ಡಮ್ಮ ದೇವರ ಮನೆಯಿಂದ ಹೊರಗೆ ಬರುತ್ತಾರೆ. “ನಮಗೆ ಇವಳೇ ಮಗಳು, ಇವಳೇ ಮಗ! ಇವಳು ಮಾಡುವಷ್ಟು ಸೇವೆ ಶ್ರವಣಕುಮಾರ ಸಹ ಮಾಡಿರಲಾರ, ತನ್ನ ತಂದೆತಾಯಿಯರಿಗೆ. ಇಲ್ಲಿ ಬಂದಾಗ ಅವಳು ನನಗೆ ನೆಲದ ಮೇಲೆ ಕಾಲಿಡಲೂ ಬಿಡುವುದಿಲ್ಲ. `ಅಪ್ಪ, ತಗೋ ಈ ಮಾತ್ರೆ ತಿನ್ನು…. ಅಮ್ಮ, ನಿನಗೆ ಈ ಮಶೀನು ತಂದಿದ್ದೀನಿ, ತಲೆ ಮಾಲಿಶ್ ಮಾಡಿಕೊಳ್ಳಲು’ ಪ್ರತಿವಾರವೂ ಪತ್ರ ಬರೆಯುವಳು… ತಪ್ಪದೆ… ನೀನೇ ನೋಡು, ಈ ಕಪಾಟು ಔಷಧಿಗಳಿಂದ ಹೇಗೆ ತುಂಬಿ ಹೋಗಿದೆ. ಎಲ್ಲೆಲ್ಲಿಂದ ಸಂಗ್ರಹಿಸಿ ತರುತ್ತಾಳೋ ಗೊತ್ತಿಲ್ಲ! ಎಲ್ಲಾ ಕೊಳೆಯುತ್ತಾ ಬಿದ್ದಿವೆ….!” + +ಆಳು ಚಹಾ ಮಾಡಿ ತಂದಾಗ ಈ ಬಾರಿ ನಾನು ದುರುಗುಟ್ಟಿ ಅವನ ಕಡೆಗೆ ನೋಡುತ್ತೇನೆ – ಹದಿನೆಂಟು ಹತ್ತೊಂಬತ್ತು ವರ್ಷದವನು… ಕಟ್ಟುಮಸ್ತಾದ ಶರೀರ…. ಮತ್ತೆ ನಾನು ಅವನ ಬಲಿಷ್ಠ ಕೈಗಳತ್ತ ಕಣ್ಣಾಡಿಸುತ್ತೇನೆ. ದೊಡ್ಡ ದೊಡ್ಡ ಕಣ್ಣುಗಳತ್ತಲೂ. + +ಇದೇ ಮೊದಲ ಬಾರಿ ಈ ದಿನ ಅವನತ್ತ ಏಕೆ ಈ ದೃಷ್ಟಿಯಿಂದ ನೋಡುತ್ತಿದ್ದೇನೋ ಗೊತ್ತಿಲ್ಲ. ನನ್ನ ಬಗ್ಗೆ ನನಗೇ ವಿಷಾದವೂ ಆಗುತ್ತಿದೆ! ನಾನು ಹೀಗೆ ಯೋಚಿಸಬಾರದು! + +“ಈ ಮೊದಲು ನೀನು ಎಲ್ಲಿದ್ದೆಯಪ್ಪಾ?” ಅವನನ್ನು ಕೇಳುತ್ತೇನೆ. + +“ಸ್ವಾಮಿ, ಫತೇಪುರಿಯಲ್ಲಿ, ಚಾಂದನಿಚೌಕ್ ನಲ್ಲಿ, ರಾಮಸೂರತ್ ಢಾಬಾದಲ್ಲಿ!” + +“ಪಿಕ್ ಪಾಕೆಟ್ ನವರ ಜತೆಗಿರಲಿಲ್ಲ ತಾನೆ?” ನಾನು ಹೇಳಿದ ಮಾತು ಬಹುಶಃ ಅವನಿಗೆ ಅರ್ಥವಾಗಿಲ್ಲ. ಅವನು ನನ್ನ ಮುಖವನ್ನು ನೋಡುತ್ತಾನೆ.ಇಷ್ಟರಲ್ಲಿ ದೊಡ್ಡಮ್ಮ ತಿಂಡಿ ತಟ್ಟೆಯನ್ನು ತಾನೇ ತರುತ್ತಾರೆ. + +“ಅತ್ತೀ ಫೋನ್ ಈಗೇನಾದರೂ ಬಂದರೆ, ಎಲ್ಲ ಸರಿಯಾಗಿದೆ ಅಂತ ಹೇಳಿಬಿಡು ಭೀರೂ. ನಾಳೆ ಹೊತ್ತಿಗೆ ಫೋನ್ ಸಹ ಸರಿಯಾಗುತ್ತೆ.” ದೊಡ್ಡಮ್ಮ ಅಲ್ಲೇ ಹತ್ತಿರದಲ್ಲಿದ್ದ `ಮೋಢಾ’ ಮೇಲೆ ಕುಳಿತುಕೊಳ್ಳುವರು. ಮಂಡಿಕೀಲುನೋವು, ಆದ್ದರಿಂದ ಹೆಚ್ಚು ಹೊತ್ತು ನಿಲ್ಲಲಾರರು. + +“ಈ ಪತ್ರಿಕೆಗಳವರಂತೂ ಜೀವ ತೆಗೆದುಬಿಡುತ್ತಾರೆ. ಹತ್ತು ಹದಿನೈದು ಜನರ ಸಾವಿನ ಸುದ್ದಿ ಪ್ರಕಟಿಸದೇ ಇರುವ ದಿನವೇ ಇಲ್ಲ. ಈ ಸುದ್ದಿಗಳೇ ದೇಶ-ವಿದೇಶಗಳಿಗೆ ಹೋಗುತ್ತವೆ…. ವಿದೇಶಗಳಲ್ಲಿರುವ ಭಾರತೀಯರಿಗೆ ಇಲ್ಲಿ ಭಾರತದಲ್ಲಿ ಏನೇನು ನಡೆದು ಹೋಗುತ್ತಿದೆಯೋ ಅನ್ನಿಸುತ್ತದೆ….” + +ಏನೋ ಯೋಚಿಸುತ್ತಾ ದೊಡ್ಡಪ್ಪ ಮಾತು ಮುಂದುವರಿಸುತ್ತಾರೆ. “ಕಳೆದ ವರ್ಷ ಇಂಥ ದುರ್ಘಟನೆಗಳಲ್ಲಿ ಅಮೆರಿಕದಲ್ಲಿ ಸಾವಿರಾರು ಜನ ಸತ್ತಿದ್ದರು ಎಂದು ಈಗ ಹಿಂದಿನ ವಾರವಷ್ಟೆ ಇಂಗ್ಲಿಷ್ ಪತ್ರಿಕೆಯಲ್ಲಿ ಬಂದಿತ್ತು. ನಮ್ಮಲ್ಲಿ ಹಣಕ್ಕಾಗಿ ಅಥವಾ ಮತ್ಯಾವುದೋ ಕಾರಣಕ್ಕಾಗಿ ಜನರ ಹತ್ಯೆ ಮಾಡುತ್ತಾರೆ…. ಆದರೆ ಅಲ್ಲಿ ಏನೂ ಮಾತಿಲ್ಲದೆ, ಹೀಗೇ ಕೂತುಕೂತಂತೆ ಕೊಂದು ಹಾಕಿದ ಪ್ರಸಂಗಗಳು ಎಲ್ಲಕ್ಕಿಂತ ಹೆಚ್ಚು ಎಂದು ಹೇಳುತ್ತಾರೆ. ತಿಂದು ತಿಂದು ಆ ಜನರು ಹುಚ್ಚರಾಗಿರುವಂತೆ ಕಾಣುತ್ತದೆ!” + +ನಾನು ಹೊರಟು ನಿಂತಾಗ ದೊಡ್ಡಮ್ಮ ಒಳಗಿನಿಂದ ಒಂದು ಸ್ವೆಟರ್ ತೆಗೆದುಕೊಂಡು ಬರುತ್ತಾರೆ. “ಅತ್ತಿ ನಿನಗಾಗಿ ಕಳುಹಿಸಿದ್ದಾಳೆ, ಇನ್ನೇನು ಛಳಿಗಾಲ ಬರುತ್ತೆ…. ಉಪಯೋಗಕ್ಕೆ ಬರುತ್ತದೆ….” + +ದೊಡ್ಡಪ್ಪ-ದೊಡ್ಡಮ್ಮ ನನ್ನ ಸ್ವಂತದವರೇನೂ ಅಲ್ಲ, ದೂರದವರು. ನಮ್ಮ ಊರಿನವರಷ್ಟೆ. ಲೋದಿರೋಡ್ ನಲ್ಲಿ ನಾವು ಅಕ್ಕಪಕ್ಕದ ಮನೆಯಲ್ಲಿರುತ್ತಿದ್ದೆವು. ಅದೇ ಆತ್ಮೀಯ ಸಂಬಂಧ ಇಂದಿಗೂ ಹಾಗೇ ಉಳಿದಿದೆ. + +************ + +ಸಂಜೆ ಅತಿಮಾಳ ಫೋನ್ ಬಂದಾಗ, “ನೀನು ಸುಮ್ಮನೆ ಹೀಗೇ ಗಾಬರಿಗೊಳ್ಳುತ್ತೀ. ದೊಡ್ಡಪ್ಪ-ದೊಡ್ಡಮ್ಮ ಎಲ್ಲ ಚೆನ್ನಾಗಿದ್ದಾರೆ. ಏನೇ ಆಗಲಿ ಇಲ್ಲಿನ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ” ಎಂದು ಸಿಡುಕುತ್ತೇನೆ. + +“ಅಣ್ಣಾ, ಅವರನ್ನು ಯಾಕೆ ಇಲ್ಲಿಗೆ ಬರಲು ಹೇಳುವುದಿಲ್ಲ? ಇಲ್ಲಿ ಎಷ್ಟು ಸುರಕ್ಷತೆ ಇದೆ. ಅಲ್ಲಿಯ ಈಗಿನ ವಾತಾವರಣವಂತೂ ವಿಚಿತ್ರವಾಗಿದೆ. ದಿನಬೆಳಗೂ ಅಲ್ಲಿ ಎಷ್ಟು ಜನ ಸಾಯುತ್ತಿದ್ದಾರೆ – ಸುದ್ದಿ ಕೇಳಿ ಕೇಳಿ ಹೃದಯ ಕಂಪಿಸುತ್ತದೆ. ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.” + +ಕೊಂಚ ತಡೆದು ಅವಳು ಮತ್ತೆ ಹೇಳುತ್ತಾಳೆ, ಅಕಸ್ಮಾತ್ ಏನೋ ನೆನಪು ಬಂದವಳಂತೆ. + +“ಅದು ಸರಿ, ಅಣ್ಣಾ! ಕೆಲಸದ ಆಳನ್ನು ಕಳುಹಿಸಿಬಿಟ್ಟರೋ ಇಲ್ಲವೋ….?” + +“ಇಲ್ಲ, ಇನ್ನೂ ಅಲ್ಲೇ ಇದ್ದ. ಕಳೆದ ಬಾರಿ ನಾನು ಹೋಗಿದ್ದಾಗ ದೊಡ್ಡಮ್ಮ ಹೇಳುತ್ತಿದ್ದರು – ಎರಡು ಸಲ ಓಡಿಸಿದ್ದೇವೆ, ಎಲ್ಲ ಲೆಕ್ಕ ಚುಕ್ತಾ ಮಾಡಿ. ಆದರೆ ಅದೇ ರಾತ್ರಿ ಅವನು ವಾಪಸ್ಸು ಬಂದಿದ್ದ. `ನೀವು ಒಂಟಿ ಇದ್ದೀರಿ, ಇಷ್ಟು ವಯಸ್ಸಾದವರು ನಾನು ಹೊರಟು ಹೋದ ಮೇಲೆ ನಿಮ್ಮ ಸೇವೆ ಯಾರು ಮಾಡುವರು?’ ಎಂದು ಅವರಿಗೆ ಹೇಳುತ್ತಿದ್ದನಂತೆ.” + +“ಅಯ್ಯೋ ದೇವರೇ!” ಅವಳು ಫೋನ್ನಲ್ಲಿ ಚೀರಿಕೊಂಡಳು. “ಅವನು ಹೀಗೆ ಹೇಳುವುದರ ಹಿಂದೆ ಖಂಡಿತ ಏನೋ ರಹಸ್ಯವಿರಬೇಕು. ಒಂದಲ್ಲ ಒಂದು ದಿನ ನಿಶ್ಚಯವಾಗಿಯೂ ಅವನು ಏನೋ ಮಾಡಿ ಬಿಡುತ್ತಾನೆ!” + +ಅವಳು ಫೋನ್ ಇಟ್ಟು ಬಿಡುತ್ತಾಳೆ. + +************ + +(ಡಾ. ಜೆ.ಎಸ್.ಕುಸುಮಗೀತ ) + +ಇನ್ನೂ ಒಂದು ವಾರವೂ ಕಳೆದಿರಲಿಲ್ಲ. ಅಷ್ಟರಲ್ಲಿ ಅರ್ಧರಾತ್ರಿ ಮತ್ತೆ ಫೋನ್ ಬಂತು, ಈ ಬಾರಿ ನ್ಯೂಜರ್ಸಿಯಿಂದಲ್ಲ, ನವದೆಹಲಿಯ ವಸಂತವಿಹಾರ್ ನಿಂದ. ದೊಡ್ಡಪ್ಪನ ಗಾಬರಿ ತುಂಬಿದ ನಡುಗುವ ದನಿ – “ನ್ಯೂಜರ್ಸಿಯಿಂದ ಅತ್ತಿ ಪಕ್ಕದ ಮನೆ ಆ್ಯನಿ ಫೋನ್, ಭೀರೂ…!” + +“ಎಲ್ಲ ಕ್ಷೇಮ ತಾನೇ….?” + +“ಏನು ಹೇಳಲಿ ಮಗು… ಏನು ಹೇಳಲಿ…?” ಅವರ ದನಿ ಕಂಪಿಸುತ್ತಿದೆ. “ಆ್ಯನಿ ಹೇಳುತ್ತಿದ್ದಳು-ನೆನ್ನೆ ರಾತ್ರಿ ನ್ಯೂಯಾರ್ಕ್ ನಿಂದ ನ್ಯೂಜರ್ಸಿಗೆ ವಾಪಸಾಗುವಾಗ ಕೆಲವು ಅಪರಿಚಿತರು ಅತ್ತಿಯ ಹತ್ಯೆ ಮಾಡಿಬಿಟ್ಟಿದ್ದಾರೆ, ಸಾಮಾನುಗಳೆಲ್ಲ ಕಾರಿನಲ್ಲಿ ಹೇಗಿದ್ದವೋ ಹಾಗೇ ಬಿದ್ದಿವೆ…! ಹಾಗಾದರೆ ಹಂತಕರು…. ಹತ್ಯೆ ಏಕೆ ಮಾಡಿದರು…. ಪೋಲೀಸರು ತನಿಖೆ ನಡೆಸುತ್ತಿದ್ದಾರೆ…. ಮತ್ತೆ…. ಮ…ತ್ತೆ….!” + + + +ಗಂಟಲು ಬಿಗಿದು ಬರುತ್ತದೆ. ಅವರ ಶಿಥಿಲವಾದ ಕೈಯಿಂದ ರಿಸೀವರ್ ಧಡಾರನೆ ಕೆಳಗೆ ಬೀಳುತ್ತದೆ! + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_377.txt b/Kenda Sampige/article_377.txt new file mode 100644 index 0000000000000000000000000000000000000000..696f141a8f0fb4839f7977776e80c780d8146be1 --- /dev/null +++ b/Kenda Sampige/article_377.txt @@ -0,0 +1,31 @@ + + +ಕೆಲವೇ ಕತೆಗಳನ್ನು ಬರೆದು ಕಥಾಲೋಕದಲ್ಲಿ ಚಿರಸ್ಥಾಯಿಯಾದ ಹಲವಾರು ಕತೆಗಾರರು ಕನ್ನಡದಲ್ಲಿ ಇದ್ದಾರೆ. ರಾಘವೇಂದ್ರ ಖಾಸನೀಸ, ಬಿ.ಸಿ. ದೇಸಾಯಿ, ಜಿ.ಎಸ್. ಸದಾಶಿವ, ಕೆ. ಸದಾಶಿವ, ರಾಜಲಕ್ಷ್ಮಿ ಎನ್. ರಾವ್, ಕೊಡಗಿನ ಗೌರಮ್ಮ, ಬಾಗಲೋಡಿ ದೇವರಾಯ, ವೆಂಕಟರಾಜ ಪಾನಸೆ ಮುಂತಾದವರು. ಅವರು ಯಾರೂ ಈಗ ನಮ್ಮ ಮುಂದೆ ಇಲ್ಲ. ಆದರೆ ಅವರಂತೆಯೇ ಸಂಖ್ಯೆಯ ದೃಷ್ಟಿಯಿಂದ ಕಡಿಮೆ ಬರೆದಿದ್ದರೂ ಮೌಲ್ಯದ ದೃಷ್ಟಿಯಿಂದ ದೊಡ್ಡ ಮೊತ್ತದ ಕತೆಗಳನ್ನು ನೀಡಿರುವ ಹಾಗೂ ಯಾವುದೇ ಪ್ರಸಿದ್ಧಿ ಪ್ರಲೋಭನೆಗಳಿಗೂ ಒಳಗಾಗದೆ ನಮ್ಮ ಮುಂದೆಯೇ ಕಂಡೂ ಕಾಣದಂತೆ ಇರುವ ಶೇಷಾದ್ರಿ ಕಿನಾರ ಅವರು ಇದೇ ಗುಂಪಿಗೆ ಸೇರುತ್ತಾರೆ. + +(ಶೇಷಾದ್ರಿ ಕಿನಾರ) + +ಕಿನಾರ ಇದುವರೆಗೆ ಬರೆದಿರುವುದು ಕಡಿಮೆ, ಬರೆಯದೆ ಇರುವುದೇ ಹೆಚ್ಚು ಎಂದರೆ ಅದರಲ್ಲಿ ಅತಿಶಯೋಕ್ತಿಯಿಲ್ಲ! ಸದ್ಯದ ಸಂಕಲನವೂ ಸೇರಿ ಅವರ ಹೆಸರಿಗಿರುವುದು ಒಟ್ಟು ಮೂರು ಪುಸ್ತಕಗಳು ಮಾತ್ರ. ಇದೇ ಅವರ ಜೀವಮಾನದ ಸಾಧನೆ ಎಂದು ಕಂಡರಾಗದವರು ಹೇಳಬಹುದಾದಂತೆ. 1981ರಲ್ಲಿ ಪ್ರಕಟವಾದ ಅವರ ಮೊದಲ ಕಥಾಸಂಕಲನ “ಛೇದ”ದಲ್ಲಿ ಹನ್ನೆರಡು ಕತೆಗಳಿದ್ದರೆ, 2003ರಲ್ಲಿ ಪ್ರಕಟವಾದ “ಕಂಡ ಜಗತ್ತು”ವಿನಲ್ಲಿ ಇರುವುದು ಹನ್ನೊಂದು ಕತೆಗಳು. ಈಗ, 2018ರಲ್ಲಿ ಪ್ರಕಟವಾಗುತ್ತಿರುವ ಈ ಮೂರನೆಯ ಸಂಕಲನದಲ್ಲಿ ಹತ್ತೊಂಬತ್ತು ಕತೆಗಳಿವೆ. ಎಂದರೆ ಈ ನಲುವತ್ತು ದಶಕಗಳ ದೀರ್ಘಾವಧಿಯಲ್ಲಿ ಕಿನಾರ ಬರೆದುದು ಕೇವಲ ನಲವತ್ತೆರಡು ಸಣ್ಣಪುಟ್ಟ ಕತೆಗಳನ್ನು, ಯಾವಾಗಲೂ ಕತೆಗಳ ಬಗ್ಗೆ ಧ್ಯೇನಿಸುತ್ತಾ, ಎಲ್ಲರ ಕತೆಗಳನ್ನೂ ಓದುತ್ತಾ, ಕೆಲವೊಮ್ಮೆ ಪ್ರತಿಕ್ರಿಯಿಸುತ್ತಾ, ಸಾಧ್ಯವಾದಾಗ ಲೇಖಕರ ಜೊತೆ ಸಂವಾದಿಸುತ್ತಾ, ತಾವು ಮಾತ್ರ ಶಬ್ದದ ಲಜ್ಜೆಯಲ್ಲಿ ಮುಳುಗಿರುವಂತೆ ಯಾಕಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಒಬ್ಬ ಲೇಖಕನ ಕೊಡುಗೆಯಿರುವುದು ಅವನ ಬರಹಗಳ ಸಂಖ್ಯೆಯಲ್ಲಲ್ಲ, ಗುಣಮಟ್ಟದಲ್ಲಿ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ನಾನು ಊಹಿಸುವಂತೆ, ಸೂಕ್ಷ್ಮಸಂವೇದನೆಯ ಕವಿಗಳು ಕವಿತೆ ಬರೆಯಲು ಹಿಂಜರಿಯುವಂತೆ, ಕಥನದ ಮೋಹದಲ್ಲಿರುವ ಕತೆಗಾರರೂ ಕತೆ ಬರೆಯಲು ಅಳುಕುತ್ತಾರೆ. ಬರೆದರೆ ಎಲ್ಲಿ ಕತೆ ಕಳೆದು ಹೋಗುತ್ತದೋ ಎನ್ನುವ ಭಾವ ಅದು. ಬರೆದಾದ ಮೇಲೆಯೂ ಕತೆ ಹೀಗಿರಬೇಕಾದುದಲ್ಲ ಎನ್ನುವ ಒಂದು ಆತಂಕ. ಕಲ್ಪನೆಯ ಪ್ರಜ್ವಲತೆ ಅದರ ಸಾಕಾರದಲ್ಲಿ ಇರುವುದಿಲ್ಲ. ಆದ್ದರಿಂದ ಮನಸ್ಸಿನಲ್ಲಿ ಇರುವುದನ್ನೆಲ್ಲ ಅದೇ ರೀತಿ ಸಾಕ್ಷಾತ್ಕಾರಗೊಳಿಸುವುದಕ್ಕೆ ಆಗುವುದಿಲ್ಲ. ಮಾಧ್ಯಮದೊಂದಿಗೆ ಕಲಾವಿದನಿಗಿರುವ ಸಮಸ್ಯೆ ಇದು. + +ಕಿನಾರ ಹೀಗೆ ಬೆರಗಿನಲ್ಲಿರುವ ವ್ಯಕ್ತಿ. ಆದ್ದರಿಂದಲೇ ಅವರ ನಿರ್ಮಾಣ ಕಡಿಮೆ, ಆದರೆ ಅದರ ಗುಣ ಅಪ್ಪಟ. ಇದನ್ನು ಈಸ್ಥೆಟಿಸಿಸಂ ಎಂದು ಒತ್ತರಿಸುವುದು ಸುಲಭ; ಆದರೆ ನಿಜದಲ್ಲಿ ಹಾಗಲ್ಲ. ಕಿನಾರ ಬರೆಯುವುದು ಮನುಷ್ಯರ ಬಗ್ಗೆ, ತಾನು ಬರೆಯುವುದಕ್ಕೆ ನ್ಯಾಯ ಒದಗಿಸಬಲ್ಲೆನೇ ಇಲ್ಲವೇ ಎನ್ನುವುದು ಈ ಕತೆಗಾರನನ್ನು ಕಾಡುವ ಆತಂಕ ಎನಿಸುತ್ತದೆ. ಆದ ಕಾರಣ ಅವರ ಕತೆಗಳು ಒಂದೇ ವಸ್ತುವಿನ ಕುರಿತು ಬರೆದ ಬೇರೆ ಬೇರೆ ಕಥಾವೃತ್ತಿಗಳಂತೆ ಅನಿಸಿದರೆ ಆಶ್ಚರ್ಯವಿಲ್ಲ: ಸಾಮಾಜಿಕ ಮನುಷ್ಯನ ದಾರುಣತೆಯೇ ಈ ವಸ್ತು. ಇಷ್ಟು ಸಂಕ್ಷಿಪ್ತವಾಗಿ ಹೇಳಿದರೆ ಅವರ ಕತೆಗಳಲ್ಲಿನ ವಿಷಯ ವೈವಿಧ್ಯ, ಜೀವನ ಪ್ರೀತಿ, ಭಾಷಾ ಪ್ರೌಢಿಮೆ ಮತ್ತು ಒಟ್ಟಾರೆ ಶೈಲಿಗೆ ಅಪಚಾರವಾಗುವುದು ಎನ್ನುವುದು ನಿಜ. ಯಾಕೆಂದರೆ ಕಿನಾರ ಅವರ ಕತೆಗಳು ಒಂದು ಪಟ್ಟಿಗೆ ಸಿಗುವಂಥವಲ್ಲ. + +ನಮ್ಮದೇ ಆದ ದಾರುಣ ಜಗತ್ತನ್ನು ಚಿತ್ರಿಸುವ ಕನ್ನಡದ ಆಧುನಿಕ ಕತೆಗಾರರ ಪರಂಪರೆಯೊಂದಿದೆ: ಅನಂತಮೂರ್ತಿ, ಲಂಕೇಶ್, ಕುಂವೀ, ಮೊಗಳ್ಳಿ ಗಣೇಶ್, ವೈದೇಹಿ, ಎಸ್. ದಿವಾಕರ್, ಸಾರಾ ಅಬೂಬಕರ್, ಬೊಳುವಾರು ಮಹಮ್ಮದ್ ಕುಂಞ ಮುಂತಾಗಿ. ಕಿನಾರ ಅದಕ್ಕೆ ಸೇರಿದವರು. ಅವರ ಅಂಥಾ ಪಾತ್ರಗಳನ್ನು ಗಮನಿಸಿರಿ: ಮುದುಕರು, ಮುದುಕಿಯರು, ದುಡಿದು ಹಣ್ಣಾದವರು, ಕೆಲಸವಿಲ್ಲದೆ ಅಲೆಯುವವರು, ಸಟ್ಟಾ ಆಡುವವರು, ನಿರ್ಗತಿಕರು, ನಿಸ್ಸಹಾಯಕರು, ರೋಗಿಗಳು, ನತದೃಷ್ಟರು, ಸ್ವಪ್ನಗಳನ್ನು ಕಾಣುವರು, ಸ್ವಪ್ನಗಳನ್ನು ಕಳೆದುಕೊಂಡವರು. ಇಂದಿನ ವಾರ್ತಾ ಮಾಧ್ಯಮಗಳು ಸಕ್ಸೆಸ್ ಸ್ಟೋರಿಗಳನ್ನು ಹೇಳುತ್ತವೆ: ಯಾರು ಎಂಥಾ ವಿಷಮ ಪರಿಸ್ಥಿತಿಗಳನ್ನು ಎದುರಿಸಿ ಹೇಗೆ ಎಷ್ಟು ಮುಂದೆ ಬಂದರು ಎಂದೆಲ್ಲ. ಸಕ್ಸೆಸ್ ಸ್ಟೋರಿಗಳು ನ್ಯೂಸ್ ವರ್ದಿ ಆಗಿರುತ್ತವೆ, ಫೈಲಿಯರ್ ಸ್ಟೋರಿಗಳು ಆಗಿರುವುದಿಲ್ಲ. ಹಿಸ್ಟರಿಯನ್ನು ಬರೆಯುವುದು ಗೆದ್ದ ಪಾರ್ಟಿಯೇ. ಆದರೆ ಸಾಹಿತ್ಯ ಇದೆಯಲ್ಲಾ, ಅದು ಸೋತ ಮನುಷ್ಯರ ಕತೆಗಳನ್ನು ಹೇಳುತ್ತದೆ. ಇದು ವಿಚಿತ್ರ, ಆದರೂ ನಿಜ. ಹಾಗಿದ್ದರೆ ಯಾಕೆ ನಾವದನ್ನು ಓದಬೇಕು? ಅಂಥ ಕತೆಗಳೇನೂ ನಮಗೆ ಜೀವನದಲ್ಲಿ ಗೆಲ್ಲುವುದು ಹೇಗೆಂದು ಹೇಳಿಕೊಡುವುದಿಲ್ಲ; ಅವಕ್ಕೆ ಯಾವ ಡೈಡಾಕ್ಟಿಕ್ (ಅರ್ಥಾತ್ ಬೋಧನಪರ) ಗುಣವೂ ಇರುವುದಿಲ್ಲ. ಆದರೆ ನಮ್ಮ ಮನಸ್ಸನ್ನು ಅವು ಸ್ಪರ್ಶಿಸುತ್ತವೆ. + +ಶೇಷಾದ್ರಿ ಕಿನಾರ ಅವರು ಕಥಾಕ್ಷೇತ್ರವನ್ನು ಪ್ರವೇಶಿಸಿದ 1980ರ ಆಸುಪಾಸಿನ ಕಾಲ ಕನ್ನಡದ ಅಸಂಗತವಾದದ ಕಾಲವೂ ಆಗಿತ್ತು. ಅಸಂಗತ, ಸರ್ರಿಯಲಿಸಂ, ಮಾಯಾವಾಸ್ತವ ಎಲ್ಲವೂ ಒಂದು ವಿಶಾಲ ಮನಃಸ್ಥಿತಿಯ ಬೇರೆ ಬೇರೆ ಸ್ವರೂಪಗಳು. ಕಿನಾರ ಅವರ ಕತೆಗಳಲ್ಲಿ ಇವುಗಳ ಅಂಶಗಳನ್ನು ಕಾಣಬಹುದು. ಹಾಗೆಂದು ಅವರು ಯಾವುದೇ ಒಂದು ‘ಪಂಥ’ಕ್ಕೆ ಬದ್ಧರಾಗಿ ಬರೆದವರೂ ಅಲ್ಲ. ತಮಗನಿಸಿದುದನ್ನು ಅನಿಸಿದ ಹಾಗೆ ಬರೆಯುವ ಸ್ವಾತಂತ್ರ್ಯವನ್ನು ಅವರು ಉಳಿಸಿಕೊಂಡಿದ್ದಾರೆ. ಆದರೂ ಅಸಂಗತ್ವ ಅವರ ಕಥನದ ಸಾರ್ವತ್ರಿಕ ಗುಣದಂತೆ ಅನಿಸುತ್ತದೆ. ಪ್ರಸ್ತುತ ಸಂಕಲನದಲ್ಲಿನ “ಪಾತ್ರ” ಎಂಬ ಕತೆಯನ್ನು ನೋಡಿ. ಇದರಲ್ಲಿ ರಾಜಾರಾಯರು ರಸ್ತೆಯಲ್ಲಿ ನಡೆದುಹೋಗುತ್ತ ಒಂದು ಮದುವೆ ಮಂಟಪವನ್ನು ಪ್ರವೇಶಿಸುತ್ತಾರೆ. ಇವರು ಯಾರೆನ್ನುವ ವಿವರ ನಮಗಿಲ್ಲ. ವಯಸ್ಸಾದವರು ಎನ್ನುವುದಷ್ಟೇ ಗೊತ್ತು. ಈ ಮದುವೆ ಪರಿಸರದಲ್ಲಿ ಅಲ್ಲಿ ಸೇರಿದ ಹಲವರು ಅವರನ್ನು ತಮಗೆ ಬೇಕಾದ ಹಾಗೆ ಗುರುತಿಸಿಕೊಳ್ಳುತ್ತಾರೆ: ವರನ ದೊಡ್ಡಪ್ಪನಾಗಿ, ಇನ್ನು ಯಾರಿಗೋ ನೀಲಕಂಠ ಜೋಯ್ಸರಾಗಿ, ಆಗ ತಾನೆ ಬಂದಿಳಿದ ಒಬ್ಬಾಕೆಗೆ ಶಾಮಿ ಚಿಕ್ಕಪ್ಪನಾಗಿ. ಹಾಗಿದ್ದರೆ ನಿಜಕ್ಕೂ ರಾಜಾರಾಯರು ಯಾರು? ‘ನಿಜಕ್ಕೂ’ ಎಂಬ ಸ್ಥಿತಿಯೊಂದು ಇದೆಯೇ? ಇದ್ದರೆ ಅದು ಶುಷ್ಕ ದಾಖಲಾತಿಯಲ್ಲವೇ? ವಾಸ್ತವದಲ್ಲಿ ಮನುಷ್ಯ ಎಂದರೆ ಒಂದು ‘ಪಾತ್ರ’; ಅದು ನಾವು ಇತರರ ಜೊತೆ ಹೇಗೆ ಸಂಬಂಧಿಸಿಯೋ ಸಂಬಂಧಿಸದೆಯೋ ಇರುತ್ತೇವೆ ಎನ್ನುವುದರ ಮೇಲೆ ಹೊಂದಿಕೊಂಡಿದೆ. + +ಇದೊಂದು ಬಹು ದೊಡ್ಡ ತಾತ್ವಿಕ ಚಿಂತನೆಯನ್ನು ಒಳಗೊಂಡ ವಿಚಾರ. ಇದೇ ನಿಟ್ಟಿನಲ್ಲಿ ರಾಯರನ್ನು (ಹಾಗೂ ನಮ್ಮನ್ನು) ಚಕಿತಗೊಳಿಸುವ ರಾಧೆ ಎನ್ನುವ ಸ್ತ್ರೀಯನ್ನು ಗಮನಿಸಿ: ವರನ ಸೋದರತ್ತೆ ಅವಳು, ರಾಧಾಬಾಯಿ. ನೆನಪಿನ ಗಣಿಯಿಂದ ರಿಯಾಲಿಟಿಯೇ ಎದ್ದು ಬಂದಂತೆ ಬಂದಿದ್ದಾಳೆ ಅವಳು. ಅವರನ್ನು ತನ್ನ ಹಳೆಯ ಪ್ರೇಮಿಯಂತೆ, ಆದರೆ ಇನ್ನೊಮ್ಮೆ ತನ್ನ ಪ್ರೇಮವನ್ನು ಜೀವಿಸುವಂತೆ, ಮಾತಾಡಿಸುತ್ತಾಳೆ. ರಾಜಾರಾಯರು ‘ನಿಜಕ್ಕೂ’ ಒಂದು ಕಾಲದಲ್ಲಿ ಅವಳ ಪ್ರೇಮಿಯಾಗಿದ್ದು ನಂತರ ತನಗೆ ಅಲಭ್ಯವೆಂದು ಅವಳೇ ಬಿಟ್ಟವರು. ಈಗ ಆಕಸ್ಮಿಕವಾಗಿ ಸಿಕ್ಕಿದಾಗ ಅವಳ ಮನಸ್ಸಿನಲ್ಲಿ ಸಿಕ್ಕಿತು, ಇಲ್ಲ ಪೂರ್ಣ ಕಳೆದು ಹೋಯಿತು ಎನ್ನುವ ಭಾವ. ಕಾಲವನ್ನು ಹಿಡಿಯುವಂತೆ ಏನೇನೋ ನೆನಪುಗಳನ್ನು ಮಾಡುತ್ತ ಹೋಗುತ್ತಾಳೆ. ಇತರರಿಗೆಲ್ಲ ಒಂದೊಂದು ಪಾತ್ರವಾಗಿ ಕಾಣಸಿದ ರಾಜಾ ರಾಯರು ರಾಧೆಗೆ ಮಾತ್ರ ನಿಜವಾದರೇ? ಅವರು ಕ್ಷಮಿಸು ರಾಧ ಎನ್ನುತ್ತಾರೆ. ಇಡೀ ಜೀವನದ ಕ್ಷಮೆ ಅದು. + +ಕಿನಾರರ ಕಥಾಪಾತ್ರಗಳು ಕೇವಲ ಮನುಷ್ಯರು, ಯಾರಿಗೂ ಆದರ್ಶವಲ್ಲ. ಅವು ತಾವು ಅಮೂಲ್ಯವೆಂದು ಪರಿಗಣಿಸುವ ಏನೇನನ್ನೋ ಈಗಾಗಲೇ ಕಳೆದುಕೊಂಡಿರುತ್ತವೆ, ಇನ್ನಿರುವುದು ನೆನಪುಗಳು ಮಾತ್ರ. ಇವಕ್ಕೆ ಅವು ಅಂಟಿನಂತೆ ಅಂಟಿಕೊಂಡಿರುತ್ತವೆ, ಯಾಕೆಂದರೆ ಅವು ಈ ಪಾತ್ರಗಳ ಜೀವನದ ಭಾಗವಾಗಿರುತ್ತವೆ. ಕೆಲವು ಸಲ ಈ ನೆನಪುಗಳೂ ಮಾಯತೊಡಗಿರುತ್ತವೆ. ಆಗ ಉಂಟಾಗುವ ವಿಷಾದ ಅಷ್ಟಿಷ್ಟಲ್ಲ. “ಕಣ್ಮಾಯ ಕಣ್ ಚಿತ್ರ”ದ ಆನಂದರಾಯರು ತಮ್ಮ ಪ್ರೀತಿಯ ಪೆನ್ನು ಕಳೆದುಕೊಂಡಿದ್ದಾರೆ. ಅದು ಅವರ ಜೀವನ ಸಂಗಾತಿಯಂತಿದ್ದ ಪೆನ್ನು. ದಿನದ ಖರ್ಚಿನ ಲೆಕ್ಕ ಬರೆಯುತ್ತ ಅದರ ಜುಮ್ಲಾ ಸರಿಬರದೆ ಅವರು ಪೇಚಾಡುತ್ತಿದ್ದರು. ಕೊನೆಗೂ ತಾವು ಗೆಳೆಯನೊಂದಿಗೆ ಹೋಟೆಲಿಗೆ ಹೋಗಿ ಅವನ ಬಾಯಿಚಪಲ ಪೂರೈಸಿದ ಮೊಬಲಗು ಸೇರಿಸಿದಾಗ ಲೆಕ್ಕ ಸರಿಬರುತ್ತದೆ. ಆದರೆ ಬರೆದಿರಿಸಿದ ಪೆನ್ನು ಎಲ್ಲಿ ಹೋಯಿತು? ಮಧ್ಯಾಹ್ನ ಸೆಕೆಗೆ ಫ್ಯಾನ್ ಹಾಕಲು ಕರೆಂಟ್ ಇಲ್ಲ. ತಮ್ಮ ಸುಂದರ ನವಿಲು ಬೀಸಣಿಗೆ ಹುಡುಕಿದರೆ ಅದೂ ಸಿಗುವುದಿಲ್ಲ. ಅದನ್ನು ಹರಿಯಲು ತೊಡಗಿದವನು ಮೊಮ್ಮಗ; ನಂತರ ಅದರ ಕಣ್ಣುಗಳನ್ನು ಕಿತ್ತು ಮುಕ್ಕಲು ಸುರುಮಾಡಿದ್ದು ಮೊಮ್ಮಗಳು. ಇದನ್ನು ಕಂಡು ಸಹಿಸಲಾರದೆ ರಾಯರು ಮೊಮ್ಮಗಳಿಗೆ ತಪರಾಕಿ ಹಾಕುತ್ತಾರೆ. ಅದರ ಅರಚಾಟಕ್ಕೆ ಅಮ್ಮ ಅಜ್ಜಿ ಬಂದು ಬಿಡಿಸಿ ರಾಯರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. ಇದೆಲ್ಲದರಿಂದ ರೋಸಿಹೋದ ರಾಯರು ಜುಬ್ಬಾ ಹಾಕಿಕಂಡು ಬೀದಿಗಿಳಿದು ನಡೆಯುತ್ತಾರೆ. ಥಟ್ಟನೆ ಅವರಿಗೆ ಕಳೆದುಹೋದ ಪೆನ್ನಿನ ನೆನಪಾಗುತ್ತದೆ. ಅವರನ್ನು ಅತ್ಯಂತವಾಗಿ ಕಾಡುತ್ತಿರುವುದು ಆ ಪೆನ್ನು ಕಳೆದುಹೋದ ಸಂಗತಿ. ಯಾಕೆಂದರೆ ಆನಂದರಾಯರು ಇನ್ನೂ ಆನಂದನಾಗಿದ್ದು ಕಾಲೇಜಿಗೆ ಹೋಗುತ್ತಿದ್ದ ಕಾಲದಲ್ಲಿ ಒಮ್ಮೆ ಲೇಖನಿ ಮರೆತು ಪರೀಕ್ಷೆಗೆ ಬಂದು ಚಡಪಡಿಸುತ್ತಿದ್ದಾಗ ಕ್ಲಾಸ್ಮೇಟ್ ಹರಿಣಿ ಕೊಟ್ಟಿದ್ದ ಪೆನ್ನು ಅದು. ಆ ಕೈಯನ್ನವರು ಹಿಡಿದುಕೊಂಡಿದ್ದರು. ನಂತರ ಅವಳಿಗೆ ಪ್ರೇಮ ಪತ್ರಗಳನ್ನು ಬರೆಯಲು ಸುರುಮಾಡಿದರು. ಬೇಸಿಗೆ ರಜೆಯಲ್ಲಿ ಅವುಗಳ ಸಂಖ್ಯೆ ಜಾಸ್ತಿಯಾಗುತ್ತ ಹೋಯಿತು. ಅವೆಲ್ಲಾ ಚರಿತ್ರೆ-ಭೂಗೋಳ ಪಠ್ಯಪುಸ್ತಕಗಳನ್ನು ಸೇರುತ್ತಿದ್ದುವೇ ಹೊರತು ಹರಿಣಿಯನ್ನಲ್ಲ. ಅವರ ಪ್ರೀತಿಯ ಸಂಗತಿ ಅವಳಿಗೆ ಗೊತ್ತೇ ಇರಲಿಲ್ಲ. “ಆತನೇ ಒಂದು ಪೋಸ್ಟ್ ಡಬ್ಬ ತಯಾರಿಸಿದ. ಅದಕ್ಕೆ ಕಾಗದ ಹಾಕಿ, ಅದರಿಂದ ತೆಗೆದು ‘ಪೋಸ್ಟ್’ ಎಂದು ಕೂಗಿ, ಅದನ್ನು ಒಡೆದು ಓದಿ ಓದಿ ಮರುಳಾದ. ಆ ಮೇಲೆ ಹರಿಣಿ ಎಲ್ಲಿ? ಈತನೆಲ್ಲಿ? ಈ ಜನಸಾಗರದಲ್ಲಿ, ಗೋಲದಂಥ ಪ್ರಪಂಚದಲ್ಲಿ, ಮನೆಯಿಂದ ಮನೆಗೆ ಮನೆಗಳನ್ನು ಬದಲಾಯಿಸುತ್ತ, ಲಾಲಿ ಹೇಳುತ್ತಾ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತ ಅಕ್ಕಿ ಆರಿಸಿ, ಬೇಯಿಸಿ ಕೈ ತುತ್ತು ಹಾಕಿ ಮಕ್ಕಳನ್ನು ಪೊರೆದ ಹರಿಣಿ ಎಲ್ಲಿ? ತಾನೆಲ್ಲಿ? ಆಗ ಆನಂದ ಇದ್ದಾತ ಈಗ ಆನಂದರಾಯ…. ಆನಂದಜ್ಜ…. ಆ ಪೆನ್ನು ಜೀವದ ಹಾಗೆ ಅವರ ಜೀವಕ್ಕೆ ಅಂಟಿಕೊಂಡು ಬಂದಿತ್ತಲ್ಲ, ಅದು ಎಲ್ಲಿ ಕಾಣೆಯಾಗಿದೆ?” + +ದಟ್ಟವಾದ ವಸ್ತುವಿವರಗಳು ಕಿನಾರ ಅವರ ಕಥನದ ಇನ್ನೊಂದು ಆಕರ್ಷಣೆ: ಕತೆಯನ್ನು ಬರೆಯಲು ಅವರು ಅಳುಕುವಂತೆ ಕಂಡರೂ ಒಮ್ಮೆ ಸುರುಮಾಡಿದರೆ ಅವರು ಬಿರುಸಾಗಿ ಕತೆ ಹೇಳುತ್ತಾರೆ. “ದಾನ” ಎಂಬ ಕತೆಯ ನಿರೂಪಣಾ ಕ್ರಮವನ್ನು ಗಮನಿಸಿ: ಒಂದು ಸಾಯಂಕಾಲದಿಂದ ರಾತ್ರಿಯ ತನಕ ನಡೆಯುವ ಈ ಕತೆಯಲ್ಲಿ ದನಗಳ ಹಟ್ಟಿಯಲ್ಲಿ, ಅಡುಗೆ ಕೋಣೆಯಲ್ಲಿ, ಚಾವಡಿಯಲ್ಲಿ ಏಕ ಕಾಲದಲ್ಲಿ ನಡೆಯುವ ಕ್ರಿಯೆಗಳನ್ನು ಅವರು ವಿವರಿಸುತ್ತಾರೆ. ಅವೆಲ್ಲವೂ ಚಿತ್ತಾಕರ್ಷಕವಾದ ವಸ್ತುವಿವರಣೆಗಳು; ನಮ್ಮ ಚಕ್ಷು, ಶ್ರವಣ, ಜಿಹ್ವಾ ಮುಂತಾದ ಎಲ್ಲಾ ಇಂದ್ರಿಯಗಳನ್ನೂ ಅವು ಚುರುಕುಗೊಳಿಸುತ್ತವೆ. ಹಟ್ಟಿಯಲ್ಲಿ ದನ ಕರೆಯುವ ಕ್ರಿಯೆ ನಡೆಯುತ್ತಿದ್ದರೆ, ಅಡುಗೆ ಕೋಣೆಯಲ್ಲಿ ಸಾರಿಗೆ ಒಗ್ಗರಣೆ ಬೀಳುತ್ತದೆ; ಚಾವಡಿಯಲ್ಲಿ ಮಕ್ಕಳು ಕೂತು ಪಾಠ ಓದುತ್ತಲೋ ಬರೆಯುತ್ತಲೋ ಇರುತ್ತವೆ. ಅವರಲ್ಲಿ ರಂಗನೆಂಬ ಹುಡುಗ ಮೊಸಳೆಯೊಂದನ್ನು ಚಿತ್ರಿಸುವುದು ನಿಜಕ್ಕೂ ಚಿತ್ರವತ್ತಾದ ಸಂಗತಿ. ಇದಕ್ಕೆಲ್ಲ ಅಧ್ಯಕ್ಷತೆ ವಹಿಸುವಂತೆ ಜಗನ್ನಾಥ ರಾಯರು ‘ಎಂದಿನಂತೆ’ ಜಗಲಿಯಲ್ಲಿ ದೊಡ್ಡದೊಂದು ಕುರ್ಚಿಯಲ್ಲಿ ಕೂತಿದ್ದಾರೆ. + +ಇಲ್ಲಿ ಕಿನಾರ ಅಸಂಗತವೊಂದನ್ನು ತರುತ್ತಾರೆ: ಈ ದಿವಸ ಜಗನ್ನಾಥ ರಾಯರಿಗೆ ಕುಳಿತಲ್ಲಿಂದ ಏಳಲು ಸಾಧ್ಯವಾಗುತ್ತಿಲ್ಲ. ಅವರ ದೇಹ ಕುರ್ಚಿಗೆ ಅಂಟಿಕೊಂಡಿದೆ, ಹಾಗೂ ಏಳುವ ಶಕ್ತಿಯನ್ನೇ ಅವರು ಕಳೆದುಕೊಂಡಿದ್ದಾರೆ. ಮಕ್ಕಳೆಲ್ಲ ಎದ್ದು ಅವರನ್ನು ಜಗ್ಗಿ ಎಳೆದರೂ ಅವರು ಕುರ್ಚಿಯಿಂದ ಬೇರ್ಪಡುವುದಿಲ್ಲ. ಕತೆಯ ಕೊನೆಯಲ್ಲಿ ಈ ಕುರ್ಚಿಯನ್ನು ಪಂಚಾಯತ್ ಕಚೇರಿಗೆ ದಾನವಾಗಿ ಕೊಡುವ ಪ್ರಸ್ತಾಪವಿದೆ. ಅದರಲ್ಲಿ ಪಂಚಾಯತ್ ಅಧ್ಯಕ್ಷರು ಕುಳಿತುಕೊಳ್ಳುತ್ತಾರೆ, ಹಾಗೂ ಜಗನ್ನಾಥ ರಾಯರಿಗೆ ಕುರ್ಚಿಯಿಂದ ಬಿಡುಗಡೆಯಾಗುತ್ತದೆ. ಇದೊಂದು ಸಂಕೇತದಂತೆ ಬರುತ್ತದೆ. ಆದರೆ ಕತೆ ನಮ್ಮನ್ನು ಸೆಳೆಯುವುದು ಅದರ ವಿವರಣಶಕ್ತಿಯಿಂದ. + +ಇಷ್ಟೇ ಅಥವಾ ಇದಕ್ಕಿಂತಲೂ ದಟ್ಟವಾದ ವಿವರಣೆ “ಅವತಾರ”ದಲ್ಲಿ ಬರುತ್ತದೆ. ಅದರಲ್ಲಿ ಕಪನೀಪತಿ ಮತ್ತು ರಂಗನಾಯಕಮ್ಮ ಎಂಬ ಅನಾಕರ್ಷಕ ದಂಪತಿಗಳಿಬ್ಬರು ದೆವ್ವದ ಮನೆಯಂಥ ಮನೆಗೆ ಬಾಡಿಗೆಗೆ ಬರುವುದು, ಆ ಕೊಳಕು ಮನೆಯನ್ನು, ಹಿತ್ತಿಲನ್ನು, ಮತ್ತು ಮುಖ್ಯವಾಗಿ ಬಾವಿಯನ್ನು ಅವರು ಶುಚಿಪಡಿಸಲು ಯತ್ನಿಸುವುದು ವಸ್ತು. ಆ ಬಾವಿಯದು ಹೊಲಸು ನೀರು; ಅದರ ಆಳವನ್ನು ಕಂಡವರಿಲ್ಲ. ಅದಕ್ಕೆ ಹಿಂದೆ ಯಾರೋ ಬಿದ್ದು ಈಗ ದೆವ್ವವಾದ ಸುದ್ದಿಯಿದೆ. ಯಾಕೆಂದರೆ ಆಗಾಗ ಅಲ್ಲಿಂದ ದೆವ್ವದ ಕೂಗು ಕೇಳಿಸುತ್ತಿರುತ್ತದೆ. ಬಾವಿಯನ್ನು ಶುಚಿಗೊಳಿಸಲು ಕಪನೀಪತಿ ಅದರೊಳಕ್ಕೆ ಇಳಿಯುತ್ತಾರೆ. ಅಲ್ಲಿ ಎದುರಾಗುವುದು ಕೆಸರು, ಹೇಸಿಗೆ, ಕೊಳೆ, ವಾಸನೆ. ಅಲ್ಲದೆ ಅದೇನೇನೋ ವಸ್ತುಗಳು—ಒಡಕು ಪಾತ್ರೆಪಗಡೆಗಳು, ಕೊಡಗಳು, ಆಟಿಕೆಗಳು ಇತ್ಯಾದಿ-ಸಿಗುತ್ತವೆ. + +ಊರವರು ಅದು ತನ್ನದು, ಇದು ತನ್ನದು ಎಂದು ಜಗಳಾಡುತ್ತ ಅಲ್ಲಿ ಸೇರುತ್ತಾರೆ. ಬಾವಿಯೊಳಗೆ ನಿಧಿ ಏನಾದರೂ ಇರಬಹುದು ಎನ್ನುವ ಆಸೆಯೂ ಇರುತ್ತದೆ. ಕೊನೆಗೆ ಕಪನೀಪತಿ ಅಲ್ಲಿಂದ ತರುವ ಮಣ್ಣಿನ ಗುಪ್ಪೆಯೊಂದರಲ್ಲಿ ಅಲುಗಾಡುವ ವಸ್ತುವೊಂದು ಇರುತ್ತದೆ. ಅದು ಮತ್ತೇನಲ್ಲ, ಆದಿಮ ಅವತಾರವನ್ನು ಸೂಚಿಸುವ ಒಂದು ಆಮೆ. ಕತೆ ಹೀಗೆ ಅಂತ್ಯವಾಗುತ್ತದೆ. ಇಲ್ಲೂ ನಮ್ಮನ್ನು ದಿಗ್ಭ್ರಮೆಗೊಳಿಸುವುದು ಕಿನಾರ ಅವರಿಗೆ ವಸ್ತುವಿವರಗಳ ಮೇಲಿರುವ ಹಿಡಿತ. ಈ ನಿಟ್ಟಿನಿಂದ ನೋಡಿದರೆ, “ಅವತಾರ” ಅವರ ಕಥನಶೈಲಿಗೆ ಒಂದು ಮಾದರಿಯಾಗಿದೆ ಎನ್ನಬಹುದು. ತೀರ ಕೆಳಸ್ತರದ ಗಂಡು ಹೆಣ್ಣು; ಆ ಹೆಣ್ಣಿಗೆ ಬದುಕಿನ ದಾರುಣತೆಯಿಂದಾಗಿ ತಲೆಯೂ ಸರಿಯಿಲ್ಲ. ಕೊಳಕು ಪರಿಸರ, ಕೆಸರು, ರಾಡಿ, ಕ್ರಿಮಿ ಕೀಟಗಳು, ಒಡಕು ಪಾತ್ರೆ ಪಗಡೆಗಳು, ಮುರಿದ ಬಾಗಿಲು, ಬೀಗದ ಕೈಯಿಲ್ಲದ ಬೀಗ, ಗಬ್ಬು, ಕತ್ತಲು ಇತ್ಯಾದಿ. ಅರೇ! ತಪಸ್ಸು ಮಾಡಿದರೂ ಸಿಗದ ಇವೆಲ್ಲ ಕತೆಗಾರರಿಗೆ ಎಲ್ಲಿಂದ ಸಿಕ್ಕಿದುವು ಎಂದು ನಾವು ಸೋಜಿಗ ಪಡುತ್ತೇವೆ. ಯಾಕೆಂದರೆ ಕೇವಲ ಕಲ್ಪನೆಯಿಂದ ಮೂಡಿಸುವ ಸಂಗತಿಗಳೂ ಇವಲ್ಲ. ಎಲ್ಲೋ ಇವು ಕತೆಗಾರರು ಪಟ್ಟ ಬವಣೆಗಳ ಅಂಗವೂ ಆಗಿರಬೇಕು ಅನಿಸುತ್ತದೆ. ಕತೆಗಾರ ತನ್ನ ಕಥಾಲೋಕದೊಂದಿಗೆ ಬೆರೆಯುವುದೆಂದರೆ ಇದೇ. + + + +ಕಿನಾರ ಅವರ ಕತೆಗಳನ್ನು ಓದುತ್ತ ನಾನೀ ಕುರಿತು ಯೋಚಿಸುವಂತಾಗಿದೆ. ಈ ಪದಸಂಪದ, ಈ ವಿವರವೈವಿಧ್ಯ, ಈ ತಾದಾತ್ಮ್ಯ ಒಬ್ಬ ಕತೆಗಾರನಿಗೆ ಹೇಗೆ ಸಾಧ್ಯವಾಗುತ್ತದೆ? ಕುಂವೀ, ಆಲನಹಳ್ಳಿ ಶ್ರೀಕೃಷ್ಣ, ದೇವನೂರು ಮಹಾದೇವ ಮುಂತಾದವರಲ್ಲೂ ನಾನಿದನ್ನು ಗಮನಿಸಿದ್ದೇನೆ. ನನಗನಿಸುವುದು ಇದು ಗ್ರಾಮಾಂತರ ಪ್ರದೇಶಗಳ ಮೌಖಿಕ ಸಂಸ್ಕೃತಿಯಿಂದ ಮಾತ್ರವೇ ಸಾಧ್ಯ ಎಂದು. ಕಿನಾರರಂಥ ಕತೆಗಾರರು ಮಾತಾಡಿದಂತೆ ಬರೆಯುತ್ತಾರೆ, ಹಾಗೆ ಬರೆದಾಗಲೇ ಅವರ ಕಥನವೈಭವ ತಾನೇ ತಾನಾಗುವುದು. ಪರಿಷ್ಕೃತ ಅಕ್ಷರ ಸಂಸ್ಕೃತಿ ಇನ್ನೇನನ್ನೋ ಆಗುಮಾಡುತ್ತದೆ, ಇಲ್ಲವೆಂದಲ್ಲ, ಆದರೆ ನಿಜವಾಗಿ ಕತೆ ಹೇಳುವುದು ಮೌಖಿಕ ಸಂಸ್ಕೃತಿಯೇ. ಕಿನಾರ ಈ ಸಂಸ್ಕೃತಿಯ ಒಂದು ಕೊಂಡಿ. ಅಂಥವರು ಕತೆ ಹೇಳುವಾಗ ನಾವು ಕೇಳುತ್ತ ಇರಬೇಕು, ಕೇಳುತ್ತಲೇ ಇರಬೇಕು. ಏನಿದರ ಅರ್ಥ, ಏನು ನಿಮ್ಮ ಉದ್ದೇಶ ಎಂದು ಮುಂತಾಗಿ ಪ್ರಶ್ನಿಸಿದರೆ ಕತೆ ನಿಂತುಬಿಡುತ್ತದೆ. ಕತೆಗಾರರಿಗೆ ನಾವು ಸಭಾಕಂಪನ ಉಂಟುಮಾಡಬಾರದು, ಮಾಡಿದರೆ ಅದೊಂದು ದೊಡ್ಡ ನಷ್ಟ. ಹಾಗಾಗದಿರಲಿ ಎಂದು ಆಶಿಸುತ್ತ ಕಿನಾರರ ಕಥನಕಲೆಗೆ ದೀರ್ಘಾಯಸ್ಸನ್ನು ಕೋರುತ್ತೇನೆ. + +ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು. \ No newline at end of file diff --git a/Kenda Sampige/article_378.txt b/Kenda Sampige/article_378.txt new file mode 100644 index 0000000000000000000000000000000000000000..cc5c8680ab5d68098df23b04808f676495469e47 --- /dev/null +++ b/Kenda Sampige/article_378.txt @@ -0,0 +1,111 @@ + + +ವಲ್ಲಭಾಚಾರ್ಯರು 1862ರಲ್ಲಿ ಕಮಲಪುರದ ಅಮಲ್ದಾರರಾಗಿದ್ದರು. ಆ ಕಾಲದಲ್ಲಿ ಜನಗಳಿಗೆ ಕುಂಪಣಿ ಸರಕಾರದಲ್ಲಿ ಹುದ್ದೆ ದೊರಕುವುದಕ್ಕೆ ಅಷ್ಟೊಂದು ತೊಂದರೆ ಇರಲಿಲ್ಲ. ಜನಗಳಲ್ಲಿ ಸಾಕಷ್ಟು ಅನುಕೂಲತೆ ಇದ್ದಿತ್ತು; ಹೊಟ್ಟೆ ತುಂಬಾ ಉಂಡು ಕೂತುಕೊಳ್ಳಬಹುದಾದಷ್ಟು ಇದ್ದಿತ್ತು. ಸರಕಾರಿ ಹುದ್ದೆಗಳಿಗೋಸ್ಕರ ಮೇಲಾಟ ಇರಲಿಲ್ಲ. ಪೇಚಾಟ ಇರಲಿಲ್ಲ. ಇಂದಿನಂತೆ ಅನೇಕ ಪರೀಕ್ಷೆಗಳೂ ಇರಲಿಲ್ಲ. ಒಂದು ಬಹಿರಂಗ ಪರೀಕ್ಷೆ; ಒಂದು ಅಂತರಂಗ ಪರೀಕ್ಷೆ – ಇಷ್ಟೆ. ವಲ್ಲಭಾಚಾರ್ಯರು ಬಹಿರಂಗ ಪರೀಕ್ಷೆಯನ್ನು ತೇಲಿದ್ದರು. ಕಲೆಕ್ಟರ್ ರೋರಿಂಗ್ ದೊರೆಗಳು ಇವರ ಅಂಗವನ್ನು ತಾನೇ ಸ್ವತಃ ನೋಡಿದ್ದರು. ಇವರ ಸ್ಥೂಲ ದೇಹ; ಗೋಷ್ಪದ ಕೇಶ, ದೀರ್ಘ ನಾಮ, ಕರ್ಣತುಳಸಿ, ಗಂಧಲೇಪನ, ಲಂಬೋದರ – ಇವೇ ಅಮಲ್ದಾರ್ ಹುದ್ದೆಯ ಮುಖ್ಯ ಲಕ್ಷಣಗಳಾಗಿದ್ದುವು. ರೋರಿಂಗ್ ದೊರೆಗಳು ಸಂಸ್ಕೃತ ಭಾಷಾಪ್ರಿಯರು, ದೇಶೀಯರ ಪ್ರಸನ್ನರು. ವಲ್ಲಭಾಚಾರ್ಯರು ಸಂಸ್ಕೃತ ಭಾಷಾಭಿಜ್ಞರೆಂದು ಕಲೆಕ್ಟರ್ ದೊರೆಗಳ ತಿಳುವಳಿಕೆಗೆ ಹೇಗೋ ಬಂದಿತ್ತು. ಆಚಾರ್ಯರು ಚತುರ್ವೇದಗಳ ಸಂಗ್ರಹ ಮಾಡಿ ಇಟ್ಟಿದ್ದರು. ಭಾರತ ರಾಮಾಯಣಗಳ ಕಥಾಭಾಗವನ್ನು ಬಾಲ್ಯದಲ್ಲಿಯೇ ಕೇಳಿದ್ದರು. ಹಾಗೂ ಸಂಸ್ಕೃತ ಸಂಧ್ಯಾವಂದನೆಯ ಪುಸ್ತಕ ಪಾಠವು ಅವರಿಗೆ ನಿರಂತರವೂ ಇದ್ದಿತ್ತು. + +ಕಮಲಪುರದ ಅಮಲ್ದಾರರಲ್ಲಿ ಇವರಷ್ಟು ಮಹಾಕೀರ್ತಿಯನ್ನು ಯಾರೂ ಪಡೆದಿರಲಿಲ್ಲ. ಅವರಿಗೆ ಇಂಗ್ಲೀಸು ಭಾಷಾ ಜ್ಞಾನವೂ ಇತ್ತೋ ಇಲ್ಲವೋ ನಾವು ಅರಿಯೆವು. ಇಂಗ್ಲೀಸು ಮಾತನಾಡಲು ತಿಳಿದಿತ್ತು ಎಂದು ನಮ್ಮ ಮನೆ ಅಜ್ಜಿಯೊಂದು ಈಗಲೂ ಹೇಳುತ್ತಿರುವಳು. ಇವರ ‘ಜಜ್ ಮೆಂಟು’ ಗಳು ಬಹಳ ನೂತನವಾಗಿದ್ದುವೆಂದು ಬಾಜಾರಿನಲ್ಲಿ ಈಗಲೂ ವರ್ತಮಾನವಿದೆ. ವಲ್ಲಭಾಚಾರ್ಯರು ‘ಪೀನಲ್ ಕೋಡನ್ನು’ ಅಷ್ಟು ಚೆನ್ನಾಗಿ ಮನ್ನಿಸುತ್ತಿರಲಿಲ್ಲ. ಆ ಕೋಡು ಬಿಳೇ ಜನರ ತಲೆಯ ಮೇಲೆ ಚೆನ್ನಾಗಿ ತೋರುವುದಲ್ಲದೆ, ನಾವು ಅದನ್ನು ಧರಿಸುವುದಕ್ಕೆ ಎತ್ತುಗಳಲ್ಲವೆಂದು ಅವರ ಅಭಿಪ್ರಾಯವಿತ್ತು. ‘ಜಜ್ ಮೆಂಟು’ಗಳಲ್ಲಿ ಭಾರತ ರಾಮಾಯಣದಿಂದಲೇ ಬೇಕಾದಷ್ಟು ಆಧಾರಗಳನ್ನು ಕೊಟ್ಟು ‘ಕೇಸುಗಳನ್ನು’ (cases) ತೀರಿಸುತ್ತಿದ್ದರು. ಅವರು ನಿರಪರಾಧಿಗಳಿಗೆ ಆಧಾರರಾಗಿದ್ದರು. ದಂಪತಿಗಳ ವಾದವಿವಾದಗಳು ಕಚೇರಿಗೆ ಬಂದರೆ, ಅವರ ಮನಸ್ಸು ಇಂದಿನ ಸಮಾಜ ಸುಧಾರಕರ ಮನಸ್ಸಿನಂತೆ ಹೆಂಗಸಿನ ಪಕ್ಷವಾಗಿ ವಾಲುತ್ತಿರುವುದು. ಹೆಂಗಸರು ಸಾಕ್ಷಿಗಾರರಾಗಿದ್ದರೆ ಅವರನ್ನು ದಯಾದೃಷ್ಟಿಯಿಂದ ನೋಡಿ, ಅದರ ಆಧಾರದಿಂದಲೇ ಕಕ್ಷಿಗಳಿಗೆ ಗುಣ ಮಾಡುತ್ತಿದ್ದರು. + +ಅಮಲ್ದಾರರಿಗೆ ತಿಂಗಳಿಗೆ ಒಂದು ಬಾರಿ ‘ಸರ್ಕಿಟ್’ ತಿರುಗುವ ಸಂಪ್ರದಾಯವಿತ್ತು. ಈ ‘ಸರ್ಕಿಟ್’ ಸುಖಭೋಗದಲ್ಲಿ ಅಮಲ್ದಾರರ ‘ಹೆಡ್ ಮುನಿಶಿ’ ವೈಕುಂಠ ವ್ಯಾಸಾಚಾರ್ಯರಿಗೂ ಪಾಲಿತ್ತು. ‘ಸರ್ಕಿಟಿಗೆ’ ಸರಕಾರಿ ಉದ್ಯೋಗಸ್ಥರೂ ಅವರ ಆಪ್ತ ಮಿತ್ರರೂ – ಯಮನ ಮದುವೆಯ ದಿಬ್ಬಣದಂತೆ – ಏಕತ್ರವಾಗಿ ಹೋಗುತ್ತಿದ್ದರು. ಅಂದು ಸರಕಾರದ ಉದ್ಯೋಗಸ್ಥರಿಗೆ ಸಂಬಳ ಕಡಿಮೆ; ‘ಸರ್ಕಿಟ್ ಹೆಚ್ಚು’. ಅದು ಕಾರಣದಿಂದ, ಉದರ ನಿರ್ವಾಹವು ಒಟ್ಟಾರೆ ಸರಿಹೋಗುತ್ತಲಿತ್ತು. ಗುಮಾಸ್ತ ಶ್ರೀರಂಗ ಸೂರಿಯವರು ಮಗಳ ಮದುವೆಯನ್ನು ನಿಶ್ಚಯಿಸಿ, ಅಮಲ್ದಾರರೊಡನೆ ‘ಜಮಾಬಂದಿ’ ಯ ಸರ್ಕಿಟಿಗೆ ಹೋಗಬೇಕೆಂದಿದ್ದರು. ‘ಮುನಿಶಿ’ ಹಯವದನರ ತಂದೆಯವರು ಬಿದ್ದುಹೋದ ದೇವಸ್ಥಾನದ ಜೀರ್ಣೋದ್ಧಾರ ಮಾಡಲು ಆಲೋಚಿಸಿ, ಈ ವರ್ಷ ಸಪ್ತಗ್ರಾಮದಲ್ಲಿ ನಡೆಯುವ ‘ಜಮಾಬಂದಿ’ಯ ಮಹೋತ್ಸವಕ್ಕೆ ಮಗನೊಡನೆ ಹೊರಡಲಿದ್ದರು. ಆದರೆ ಈ ವರ್ಷ ಅಮಲ್ದಾರರು ಯಾರನ್ನು ಬರಲೀಸದೆ ತನ್ನ ‘ಹೆಡ್ ಮುನಿಶಿ’ ವೈಕುಂಠ ವ್ಯಾಸಾಚಾರ್ಯರ ಸಮೇತರಾಗಿ ‘ಸರ್ಕಿಟಿಗೆ’ ತೆರಳಿದರು. ಸಪ್ತಗ್ರಾಮವು ಕಮಲಪುರದಿಂದ 40 ಮೈಲು ದೂರ. ಈಗ ಸಪ್ತಗ್ರಾಮಕ್ಕೆ ಹೋಗಲು ರಾಜಮಾರ್ಗವಿದೆ. + +30 ವರ್ಷಗಳ ಹಿಂದೆ ಸಪ್ತಗ್ರಾಮಕ್ಕೆ ಹೋಗುವವರು ಮೊದಲು ದೋಣಿ ಹತ್ತಿ, ವೀರಪುರದಲ್ಲಿ ಇಳಿಯಬೇಕಿತ್ತು. ರೋರಿಂಗ್ ದೊರೆಗಳು ಕುದುರೆಯನ್ನು ಏರಿ ವೀರಪುರಕ್ಕೆ ಹೋದರು. ವೀರಪುರದವರು ದೊರೆಗಳನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಕಳುಹಿಸಿದರು. ದೊರೆಗಳು ಮಹಾ ವಾದ್ಯ ಘೋಷದೊಡನೆ ಸಪ್ತಗ್ರಾಮಕ್ಕೆ ಬಂದರು. ಊರಲ್ಲೆಲ್ಲಾ ತೋರಣಗಳ ಶೃಂಗಾರ; ಜೈನರ ಬಸ್ತಿಗಳಲ್ಲೆಲ್ಲಾ ಧ್ವಜಗಳ ಅಲಂಕಾರ. ‘ಜಮಾ ಬಂದಿ’ಗೆ ಬಂದಿದ್ದ ಕಲೆಕ್ಟರ್ ದೊರೆಗಳು ನೋಡಬೇಕಾದ ಶಿಲ್ಪ ಚಿತ್ರಗಳನ್ನೆಲ್ಲಾ ನೋಡಿದರು; ಅವಶ್ಯವಿದ್ದ ಶಾಸನಗಳ ಪ್ರತಿಗಳನ್ನು ಸಂಪಾದಿಸಿದರು. ಬಸ್ತಿಯ ಭಂಡಾರದಲ್ಲಿದ್ದ ಪುಸ್ತಕಗಳನ್ನು ಕುರಿತು ಪ್ರಸ್ತಾಪ ಬಂತು. ಜೈನರ ಮುದಿ ಗುರುಗಳು ಅವನ್ನು ಹೊರಕೊಡುವುದಕ್ಕೆ ಒಪ್ಪಲಿಲ್ಲ. ದೊರೆಗಳು ಪುಸ್ತಕಗಳ ಆಶೆಯನ್ನು ಬಿಟ್ಟು ‘ಜಮಾ ಬಂದಿ’ಯನ್ನು ಮುಗಿಸಿದರು. + +‘ಜಮಾಬಂದ್’ ಎಂಬುದು ಹಿಂದುಸ್ಥಾನಿ ಭಾಷೆಯ ಪದವು. ಸರಕಾರಕ್ಕೆ ವರ್ಷಂಪ್ರತಿ ಬರುವ ಭೂಮಿಯ ತೀರ್ವೆಯ ಜಮೆಯನ್ನು ‘ಬಂದ್’ ಮಾಡುವುದು (ಮುಗಿಸುವುದು) ಎಂಬ ಅರ್ಥವನ್ನು ಕೆಲವರು ಕಲ್ಪಿಸಿರುವರು. ಇದು ಶುದ್ಧ ತಪ್ಪು. ‘ಜಬಾನ್ ಬಂದ್’ ಎಂದರೆ ನಾಲಗೆಯನ್ನು ಕಟ್ಟುವುದು; ಇದುವೆ ಅಪಭ್ರಂಶವಾಗಿ ‘ಜಮಾಬಂದ್’ ಎಂದಾಯಿತು. ಜನಗಳ ‘ಹಾಲ್ ಹವಾಲೆಯನ್ನು’ ಹೇಳುವ ನಾಲಗೆಯನ್ನು ಕಟ್ಟುವುದು ಎಂಬ ಅರ್ಥ. ಈ ಅರ್ಥಕ್ಕೆ ಸರಿಯಾಗಿ ಮುಂಚಿನವರು ಕುಳುವಾರುಗಳ ಸ್ಥಿತಿಗತಿಗಳನ್ನು, ಮೊರೆ, ಗೋಳನ್ನೂ ಕೇಳಿ, ದವಸ ತುಟ್ಟಿಯಾದ ಕಾಲದಲ್ಲಿ ತೀರ್ವೆಯಲ್ಲಿ ಬೇಕಾದಷ್ಟನ್ನು ಮುಜುರೆ ಕೊಟ್ಟು, ಅವರ ಬಾಯನ್ನೂ ಕೂಗನ್ನೂ ತಡೆಸುತ್ತಿದ್ದರು. + +ಅಮಲ್ದಾರರು ಸರ್ಕಿಟಿಗೆ ಬರುವ ಹಾಗಿದ್ದರೆ, ಅವರಿಗೋಸ್ಕರ ಅಡಿಗೆಯವರನ್ನು ಒದಗಿಸುವುದು ಪಟೇಲನ ಕಷ್ಟತರದ ಕೆಲಸವಾಗಿತ್ತು. ವಲ್ಲಭಾಚಾರ್ಯರು ಸ್ತ್ರೀಪಾಕ ನಿಯಮಿಷ್ಟರು; ಅವರಿಗೆ ಹೆಂಗಸರ ಅಡಿಗೆ ಮೆಚ್ಚುತ್ತಿತ್ತಲ್ಲದೆ, ಗಂಡಸರ ಅಡಿಗೆಯು ರುಚಿಸುತ್ತಿರಲಿಲ್ಲ. ಅದು ಕಾರಣದಿಂದ ಆಚಾರ್ಯರು ಹೋಗುವ ಸ್ಥಳಗಳಲ್ಲಿ ಅವರ ಬಗ್ಗೆ ಅಡಿಗೆಯ ಹೆಂಗಸರನ್ನು ಪಟೇಲರು ಗೊತ್ತು ಹಚ್ಚುತ್ತಿದ್ದರು. ಆದರೆ ಒಂದೆರಡು ದಿನಗಳ ‘ಚಾಕ್ರಿಗೆ’ ಹೆಂಗಸರು ನಿಲ್ಲುವುದಕ್ಕೆ ಈಚೀಚೆಗೆ ಒಪ್ಪುತ್ತಿರಲಿಲ್ಲ. ಒಂದೊಂದು ಪ್ರಸಂಗದಲ್ಲಿ – ವಲ್ಲಭಾಚಾರ್ಯರಿಗೆ ಅಡಿಗೆಮಾಡಲು ಹೋದ ಹೆಂಗಸನ್ನು ಗಂಡನು ವಿನಾಕಾರಣವಾಗಿ ಬಿಟ್ಟು ಬಿಡುತ್ತಿದ್ದನು. ಒಂದೊಂದು ಪ್ರಸಕ್ತಿಯಲ್ಲಿ ಅಂಥಾ ಹೆಂಗಸನ್ನು ಬಹಿಷ್ಕಾರ ಪ್ರಕರಣಕ್ಕೆ ಜಾತಿಗೃಹಸ್ಥರು ಒಳಗಾಗಿಸುತ್ತಿದ್ದರು. ಅದೂ ಅಲ್ಲದೆ ಸಪ್ತ ಗ್ರಾಮದಲ್ಲಿ ಬ್ರಾಹ್ಮಣರು ಕಡಿಮೆ. ಪಟೇಲರು ಎಷ್ಟು ಪ್ರಯತ್ನ ಮಾಡಿದರೂ ಅಡಿಗೆಯವಳು ಒಬ್ಬಳಾದರೂ ಸಿಕ್ಕದೆ ಹೋದಳು. ಹೊತ್ತು ಏರಿ ಬಂದಿತು. ಅಮಲ್ದಾರರು ಕಚೇರಿಯಲ್ಲಿ ಹಾಡು ಹಾಡಲು ತೊಡಗಿದರು. ಅಮಲ್ದಾರರು ಕಚೇರಿಯಿಂದ ಕೆಲಸ ಮುಗಿಸಿ ಬರುವ ಮೊದಲು, ಸಂತೋಷಚಿತ್ತರಾಗಿ ಹಾಡುವ ಅಭ್ಯಾಸವಿತ್ತು. ಹೊರಗಿದ್ದ ಪಟೇಲನಿಗೆ ಹಾಡು ಕೇಳಿಸುತ್ತಿತ್ತು- + +ತರಬೇಕು ತರುಣಿಯಳ – ಕಾಮನ ಮುಂಗೈಅರಗಿಣಿಯಂತಿಹಳ ||ಸ್ಮರನ ಸಿಂಗಾಡಿ ಪುರ್ಬಿನ, ನೀರೆ, ಮಲ್ಲಿಗೆಪರಿಮಳಿಸುವ ಮೈಯ್ಯ ವರ ಕರಿಗಮನೆಯ || + +– ಹೀಗೆ ಹಾಡುತ್ತ ಕಟ್ಟಿಟ್ಟ ದಪ್ತರದ ಮೇಲೆ ಕೈ ಬಡಿದು ತಾಳ ಹಾಕುತ್ತಲಿದ್ದರು. + +ಅಮಲ್ದಾರರು ಮನೆಗೆ ಬರುವ ಹೊತ್ತಾಯಿತೆಂದು ಪಟೇಲನು ಅರಿತನು. ಆದರೆ ಅಡಿಗೆಯು ಏನೂ ಸಿದ್ಧವಾಗಲಿಲ್ಲ. ಪಟೇಲನು ಜಾತಿಯಲ್ಲಿ ಜೈನ, ತಾನೇ ಅಡಿಗೆ ಮಾಡುವುದಕ್ಕೆ ಉಪಾಯವಿಲ್ಲ. ಅಮಲ್ದಾರರು ಮಾರ್ಗಕ್ಕೆ ಇಳಿದರು. ಪಟೇಲನು ಎರಡೂ ಕೈಗಳನ್ನು ಸರಿಯಾಗಿ ಜೋಡಿಸಿ ದೊಡ್ಡ ನಮಸ್ಕಾರ ಮಾಡಿದನು. ನಮಸ್ಕಾರ ಮಾಡಿದಷ್ಟಕ್ಕೆ ಅಮಲ್ದಾರರ ಸಿಟ್ಟು ಇಳಿಯುವುದೆಂದು ಪಟೇಲನು ತಿಳಿದಿದ್ದನು. ಅಮಲ್ದಾರರು ಪಟೇಲನನ್ನು ನೋಡಿ “ಪದ್ಮರಾಜಾ! ಈವತ್ತು ಅಡಿಗೆಗೆ ಯಾರು?” ಎಂದು ಕೇಳಿದರು. + +ಪಟೇಲನು ಮತ್ತೊಂದು ನಮಸ್ಕಾರವನ್ನು ಸಮರ್ಪಿಸಿ, “ಬುದ್ಧಿ! ಇಂದು ಎಲ್ಲೆಲ್ಲಿ ಹುಡುಕಿದ್ರೂ ಯಾರೂ ಸಿಕ್ಲಿಲ್ಲಾ” ಎಂದು ಹೇಳಿ ಪುನಃ ಕೈಮುಗಿದನು. + +ಅಮಲ್ದಾರ : “ಅದೇನು ಸಂಗ್ತಿ? ಈಗ ಹೊತ್ತೇರಿತು. ಅನ್ನವಿಲ್ಲದೆ ಉಪವಾಸ ಬೀಳೋದೇನು?” + +ಪಟೇಲನು : “ಅಪ್ಪಣೆಯಾದಂತೆ ನಡಕೊಳ್ಳುತ್ತೇನೆ. ಇಲ್ಲಿ ಬ್ರಾಹ್ಮರು ಯಾರೂ ಇಲ್ಲ ಬುದ್ಧಿ! ಎಲ್ಲರೂ ಶ್ರೀಕಾಂತ ಜಾತ್ರೆಗೆ ನಡೆದುಬಿಟ್ಟಿದ್ದಾರೆ ಬುದ್ಧಿ!” ಎಂದು ಹೇಳಿ, ಕೈಜೋಡಿಸಿ, ಮತ್ತೆ ತನ್ನ ಮಣಿಗಂಟನ್ನು ಸವರುತ್ತಾ ನಿಂತಿದ್ದನು. + +ಅಮಲ್ದಾರ : “ಈಗ ಯಾರನ್ನಾದ್ರೂ ಹಿಡಿಯದಿದ್ರೆ ಉಪಾಯವಿಲ್ಲವಷ್ಟೆ. ಯಾರನ್ನಾದ್ರೂ ಬಿಟ್ಟಿಗೆ ಹಿಡಿದ್ರೆ ಸರಿ.” + +ಪಟೇಲ : “ಹಣ ಕೊಟ್ರೆ ಆಳು ಸಿಕ್ಕೋಲ್ಲ. ಇನ್ನು ಬಿಟ್ಟಿಗೆ ಯಾರು ಬರ್ತಾರೆ?” + +ಪಟೇಲನು ಈ ಸಲ ನಮಸ್ಕಾರ ಮಾಡಲಿಲ್ಲ. ಅಮಲ್ದಾರರು ಸಿಟ್ಟಿಗೆದ್ದರು. ಪಟೇಲನ ಮಾತುಗಳಲ್ಲಿ ‘ಬುದ್ಧಿ; ಖಾವಂದ್ರೆ’ ಎಂಬ ನುಡಿಗಳೂ ಇರಲಿಲ್ಲ. ಅಮಲ್ದಾರರು – “ಎಲಾ! ಯಾರಿಗಾದ್ರೂ ಬಿಟ್ಟಿಗೆ ಹಿಡಿದು ತಂದ್ರೆ ಸರಿ! ಇಲ್ಲಾದ್ರೆ ನಿನ್ನ ಕೆಲ್ಸಕ್ಕೆ ರಾಜೀನಾಮೆ ಕೊಡು, ನಡಿ!” ಎಂದು ಗದರಿಸಿದರು. + + + +ಅಮಲ್ದಾರರಿಗೂ ಪಟೇಲನಿಗೂ ಈ ರೀತಿ ಮಾತು ನಡೆಯುತ್ತಲಿರುವುದನ್ನು ದಾರಿಗನೊಬ್ಬನು ನೋಡಿ, ಅಲ್ಲಿಯೇ ತಳುವಿದನು. ಅವನು ಶ್ರೀಕಾಂತ ಜಾತ್ರೆಗೆ ಹೋಗುವವನು. ಅವನ ವಿಷಯವಾಗಿ ಸವಿಸ್ತಾರವಾಗಿ ಮತ್ತೆ ಹೇಳುವೆವು. ಅವನು ಅಮಲ್ದಾರರನ್ನು ನೋಡಿದನು. ನೋಡಿ ಕೈ ಮುಗಿಯದೆ ಏನೋ ಕಾರಣದಿಂದ ನಗುತ್ತ ಹೋಗುತ್ತಿದ್ದನು. ಅವನ ನಗುವಿನಿಂದ ಅಮಲ್ದಾರರ ಹಸಿದ ಹೊಟ್ಟೆಗೆ ಬಿಸಿ ಕೆಂಡವಿಟ್ಟಂತಾಯಿತು. ಅಮಲ್ದಾರರು ಪಟೇಲನೊಡನೆ “ಇಕೋ! ಪದ್ಮರಾಜಾ! ಅತ್ತ ಹೋಗುವವನನ್ನು ಬಿಟ್ಟಿಗೆ ಹಿಡಿ!” ಎಂದು ಕಟ್ಟಾಜ್ಞೆ ಮಾಡಿದರು. + +ಆ ಕಾಲದಲ್ಲಿ ಪಟೇಲನಿಗೆ ಸರಕಾರದಿಂದ ಪೇದೆ ಸಿಕ್ಕುತ್ತಿರಲಿಲ್ಲ. ‘ಪೇದೆಯ ಚಾಕ್ರಿಯನ್ನು’ ಪಟೇಲನೇ ಮಾಡಬೇಕಾಗಿತ್ತು. ಪ್ರತಿಯಾಗಿ ವರ್ಷಕ್ಕೆ ಒಂದು ವರಹ ಸಂಬಳ ಹೆಚ್ಚು ಸಿಕ್ಕುತ್ತಿತ್ತು. ಪಟೇಲನು ದಾರಿಗನನ್ನು ಮುಂದರಿಸಲೀಸದೆ ತಡೆದನು. + +ದಾರಿಗ : “ಇದೇನಯ್ಯಾ? ನನ್ನನ್ನು ಹೋಗಬಿಡೋದಿಲ್ಲ?”ಪಟೇಲ : “ಹೆಚ್ಚು ಮಾತು ಬೇಡ! ಹೇಳಿದ ಹಾಗೆ ಕೇಳಿದ್ರೆ ಸರಿ!”ದಾರಿಗ : “ಯಾರು ಹೇಳಿದ ಹಾಗೆ ಕೇಳಬೇಕು? ಹಾಗೆ ಕೇಳಲಿಕ್ಕೆ ನಾನು ನಿಮ್ಮ ಅಡಿಗೆ ಭಟ್ಟನೇ?”ಪಟೇಲ : “ಯಾರಾದ್ರೆ ನಮಗೇನು? ಈಗ ನೀನು ಅಡಿಗೆ ಭಟ್ಟನಾಗಲೇ ಬೇಕು.”ದಾರಿಗ : “ನಾನು ಅಡಿಗೆಯವನಲ್ಲಯ್ಯಾ! ನಾನು ವೈದ್ಯ. ನಾನು ಮದ್ದು ಕೊಡುವೆ; ಅಡಿಗೆ ಮಾಡಲಾರೆ! ನನ್ನನ್ನು ಬಿಡಿ, ಅಯ್ಯಾ! ನನಗೆ ಶ್ರೀಕಾಂತ ಜಾತ್ರೆಗೆ ಇಂದು ಹೋಗದೆ ನಿರ್ವಾಹವಿಲ್ಲ.” + +ಪಟೇಲ : “ನಿರ್ವಾಹವಿಲ್ಲ! ಬಾಯ್ಮುಚ್ಚು! ಕಳ್ಳ! ವೈದ್ಯ – ನೀನು ಎಂಥಾ ವೈದ್ಯ? ಸುಮ್ಮನೆ ನನ್ನ ಹಿಂದೆ ಬಂದ್ರೆ ಸರಿ. ಇಲ್ವಾದ್ರೆ ಕೈಗೆ ಕೋಳಾ ಹಾಕಿಸುವೆ.” + +ವೈದ್ಯರು ಸುಮ್ಮನಾದರು; ಗುದ್ದು ಕೊಟ್ಟರೆ ಮದ್ದು ಇಲ್ಲವೆಂದು ಸುಮ್ಮನಾದರು. + +ಸರಕಾರದ ಹುದ್ದೆದಾರರೊಡನೆ ದಂಡೋಪಾಯ ನಡೆಸಿದರೆ ಪ್ರಯೋಜನವಿಲ್ಲವೆಂದು ತಿಳಿದು, ವೈದ್ಯರು ಪಟೇಲನ ಆಜ್ಞೆಗೆ ಒಳಗಾದರು. ವೈದ್ಯರು ಅಮಲ್ದಾರರಿಗೆ ಅಡಿಗೆ ಮಾಡಲು ಒದಗಿಸಿದ ಮನೆಗೆ ಉಸಿರೆತ್ತದೆ ನಡೆದರು. + +ವೈದ್ಯರ ಹೆಸರು ಕೃಷ್ಣ. ಕೃಷ್ಣ ವೈದ್ಯ ಎಂದು ವಾಡಿಕೆಗೆ ಕರೆಯುತ್ತಿದ್ದರು. ಕೃಷ್ಣ ವೈದ್ಯರು ಸ್ವತಃ ಆಯುರ್ವೇದವನ್ನು ಓದಿರಲಿಲ್ಲ. ಇವನ ಮುತ್ತಜ್ಜನು ಮಾತ್ರ ಹಾವಿನ ವಿಷಕ್ಕೆ ಔಷಧ ಬಲ್ಲವನೆಂದು ಖ್ಯಾತಿಗೊಂಡಿದ್ದನು. ಅದು ಕಾರಣದಿಂದಲೇ ಜನಗಳಿಗೆ ಕೃಷ್ಣ ವೈದ್ಯರ ಮೇಲೆ ಸ್ವಲ್ಪ ಅಭಿಮಾನವಿದ್ದಿತು. ಅದಲ್ಲದೆ ಕೃಷ್ಣ ವೈದ್ಯರು ಬಾಲ್ಯದಲ್ಲಿ ಕಮಲಪುರದ ಅನಂತ ವೈದ್ಯರ ಕಾಲಬುಡದಲ್ಲಿ ಕೆಲವು ಕಾಲ ಶಿಕ್ಷಣವನ್ನು ಹೊಂದಿದ್ದರು. ವೈದ್ಯಶಾಸ್ತ್ರವನ್ನು ಕಲಿಯುವ ಮೊದಲು ಸೂಪಶಾಸ್ತ್ರದ ಅನುಭವವು ಅಗತ್ಯವೆಂದು ಗುರುಗಳು ಹೇಳಿದುದರಿಂದ, ಕೃಷ್ಣ ವೈದ್ಯರು ಸುಮಾರು 5 ವರ್ಷಗಳ ವರೆಗೆ ಅನಂತ ವೈದ್ಯರ ಮನೆಯಲ್ಲಿ ಸ್ವಯಂಪಾಕ ವಿಧಿ ವಿಧಾನಗಳನ್ನು ಕಲಿಯಬೇಕಾಯಿತು. ಅಷ್ಟು ಶೀಘ್ರಕಾಲದಲ್ಲಿಯೇ ವೈದ್ಯರು ಸೂಪಶಾಸ್ತ್ರವನ್ನೂ ವೈದ್ಯಶಾಸ್ತ್ರವನ್ನೂ ಕರತಲಾಮಲಕವಾಗಿ ಮಾಡಿದರು. ಪ್ರಕೃತದಲ್ಲಿ ವೈದ್ಯರು ಅನೇಕರಿಗೆ ಪ್ರಯೋಜನಕ್ಕೆ ಬೀಳುತ್ತಿದ್ದರು. ಮದುವೆಯಾಗದವರು, ಗಂಡಸತ್ತವರು, ಧನಿಕರು, ಮಠಾಧೀಶರು ಮೊದಲಾದವರಲ್ಲಿ ಕೆಲವರ ಆಶ್ರಯದಿಂದ ವೈದ್ಯರ ಉದರ ನಿರ್ವಾಹವು ನಡೆಯುತ್ತಲಿತ್ತು. + +ಕ್ಷೇತ್ರದ ಲಿಂಗರಾಜ ಹೆಗ್ಡೆಯವರು ಕೃಷ್ಣ ವೈದ್ಯರನ್ನು ಚಿರಕಾಲ ತನ್ನ ಬಳಿಯಲ್ಲಿರಿಸಿದರು. ಹೆಗ್ಡೆಯವರಿಗೆ ಗುಣಾಂಶ ಸಿಕ್ಕಿತೋ ಇಲ್ಲವೋ ನಾವು ಅರಿಯೆವು. “ಇನ್ನೂ ತನಗೆ ವೈದ್ಯರ ಹಂಗೇನು?” ಎನ್ನುತ್ತಿದ್ದರು ಹೆಗ್ಡೆಯವರು. ಸಾಧಾರಣ ಜನಗಳ ಅನುಭವಕ್ಕೆ ನೋಡಸಿಕ್ಕದ ರೋಗಗಳಿಗೆ ಕೃಷ್ಣವೈದ್ಯರು ಚಿಕಿತ್ಸೆಯನ್ನು ಮಾಡಬಲ್ಲರೆಂದು ಸಮಾಚಾರವಿದ್ದುದರಿಂದ, ಶ್ರೀಕಾಂತ ದೇವಸ್ಥಾನದ ಪಾರುಪತ್ಯಗಾರರು ಇವರನ್ನು ಬರಮಾಡಿದ್ದರು. + +“ಕೃಷ್ಣವೈದ್ಯರನ್ನು ಬಲಾತ್ಕಾರದಿಂದ ಅಡಿಗೆ ಮಾಡುವುದಕ್ಕೆ ಹಿಡಿದುದು ನಮ್ಮ ತಪ್ಪಾಗಬಹುದೇ?” ಎಂದು ‘ಹೆಡ್ ಮುನಿಶಿ’ ವೈಕುಂಠ ವ್ಯಾಸಾಚಾರ್ಯರು ಅಮಲ್ದಾರರೊಡನೆ ಚರ್ಚಿಸಿದರು. ಅದು ತಪ್ಪಲ್ಲವೆಂದು ಅಮಲ್ದಾರರು ಆಧಾರ ಕೊಟ್ಟು ಹೇಳಿದರು. “ವಿರಾಟರಾಯನು ಭೀಮಸೇನನನ್ನು ಅಡಿಗೆಗೆ ನಿಲ್ಲಿಸಿರಲಿಲ್ಲವೇ? ನಳ ಚಕ್ರವರ್ತಿ ಸ್ವಯಂಪಾಕ ಮಾಡಲಿಲ್ಲವೇ? ಶ್ರೀಕೃಷ್ಣದೇವರು ಮೋಹಿನಿ ರೂಪದಿಂದ ದೇವಾಸುರರಿಗೆ ಅಮೃತವನ್ನು ಬಡಿಸಿರಲಿಲ್ಲವೇ?’ ಎಂದು ಅಮಲ್ದಾರರು ತಮ್ಮ ‘ಪೀನಲ್ ಕೋಡಿ’ನಿಂದ ಆಧಾರಗಳನ್ನು ಕೊಟ್ಟು, ತಮ್ಮ ಕಾರ್ಯವನ್ನು ಭದ್ರಪಡಿಸಿದರು. ಇತ್ತ ಕೃಷ್ಣ ವೈದ್ಯರು ಉಪಾಯವಿಲ್ಲದೆ ಅಡಿಗೆ ಮಾಡತೊಡಗಿದರು. ಜಾತ್ರೆ ಹೋಗಿ, ಪಾತ್ರೆ ಎತ್ತಬೇಕಾಯಿತು. ಹೇಗೂ ಹೊತ್ತು ಮುಗಿಯುವುದರೊಳಗೆ ಅಡಿಗೆ ಸಿದ್ಧವಾಗದೆ ಹೋಗಲಿಲ್ಲ. ಅಮಲ್ದಾರರು ಸ್ನಾನಮಾಡಿ ಊಟಕ್ಕೆ ಕೂತುಕೊಳ್ಳುವುದಕ್ಕೆ ಬಂದರು. ಊಟಕ್ಕೆ ಬರುವ ಮೊದಲು ಉಲ್ಲಾಸದಿಂದ – + +“ಮಡದಿ ತಾ ಚೆಲುವಾಗಿ ಅಡಿಗೆ ಮಾಡುವಳು” + +ಎಂದು ನಿತ್ಯವೂ ದಾಸರ ಪದದ ಸೊಲ್ಲು ಹಾಡುವ ಅಭ್ಯಾಸ. ಅದರಂತೆ ಈ ಹೊತ್ತೂ ಅದನ್ನೇ ಹಾಡಿದರು. ಒಡನೆ ಅಡಿಗೆಯವನ ಮುಖವನ್ನು ನೋಡಿ, ತನ್ನ ಹಾಡು ಈ ಹೊತ್ತು ಅನುಚಿತವಾಯಿತೆಂದು ವ್ಯಸನರಾದರು. + +ಎರಡು ದಿನಗಳು ನಿಲ್ಲದೆಯೇ ಕಳೆದುವು. ವಲ್ಲಭಾಚಾರ್ಯರ ‘ಜಮಾಬಂದಿಯ’ ಕೆಲಸವೇನೂ ಮುಗಿಯಲಿಲ್ಲ. ಪಟೇಲ ಪದ್ಮರಾಜನಿಗೆ ಮತ್ತೊಬ್ಬ ಅಡಿಗೆಯವನು ಇನ್ನೂ ಸಿಕ್ಕಲಿಲ್ಲ. ಅದು ಕಾರಣದಿಂದ ಹುದ್ದೇದಾರರು ಇದ್ದಷ್ಟು ದಿನ ವೈದ್ಯರು ಒಲೆಯ ಬಳಿ ಹೆಂಗಸಿನಂತೆ ಬೇಯಬೇಕಾಯಿತು. ಮೂರನೆಯ ದಿನ ಮಧ್ಯಾಹ್ನದಲ್ಲಿ ಕೃಷ್ಣ ವೈದ್ಯರು ಯಾವುದನ್ನೋ ನೆನೆಸುತ್ತ ಕುಳಿತಿದ್ದರು. ಅಮಲ್ದಾರರು ಮನೆಯ ಇನ್ನೊಂದು ಕೊಠಡಿಯಲ್ಲಿ ಇದ್ದರು. ವೈದ್ಯರು ತುಟಿಯೊಳಗೆ ನಗುತ್ತಿದ್ದರು. ಬಲೆಯನ್ನು ಬೀಸಿ ಮೀನನ್ನು ಎದುರು ನೋಡುತ್ತಿದ್ದ ಅಂಬಿಗನ ಮೋರೆಯಲ್ಲಿ ತೋರುವ ನಗುವು ವೈದ್ಯರ ಮುಖದಲ್ಲಿ ಮೊನೆಯೂರಿತ್ತು. ವೈದ್ಯರು ಏನೋ ಉಪಾಯವನ್ನು ಕಂಡು ಹಿಡಿದು ಜಾತ್ರೆಗೆ ತೆರಳಬೇಕೆಂದು ಉಕ್ಕುತ್ತಿದ್ದರು. ಹಗೆಯವನು ವೈದ್ಯನೊಡನೆ ಮದ್ದು ಕೇಳಲು ಬಂದರೆ, ವೈದ್ಯನು ಮನಸ್ಸಿನಲ್ಲಿ ಯಾವ ಪ್ರಕಾರ ಉಲ್ಲಾಸಗೊಳ್ಳುವನೋ, ಆ ಪ್ರಕಾರದಲ್ಲಿ ಕೃಷ್ಣ ವೈದ್ಯರು ಮನಸ್ಸಿನಲ್ಲಿ ತುಳುಕುತ್ತಿದ್ದರು. + +ಅಷ್ಟರಲ್ಲಿ ಯಾರೋ ಒಬ್ಬನು ಬಂದು, “ಎಲಾ! ಬಾ! ಬಾ, ಬಾ! ಏಳೇಳು!” ಎಂದು ಗಾಬರಿಗೊಳ್ಳುವಂತೆ ಹೇಳಿದನು. ಕೃಷ್ಣ ವೈದ್ಯರು ಸಾವಧಾನ ಚಿತ್ತರಾಗಿ, “ಏನು ಸಂಗ್ತಿ? ಅವಸರ ಮಾಡ್ತಿ ಯಾಕೆ?” ಎಂದು ಪ್ರಶ್ನೆ ಮಾಡಿದರು. + +ಬಂದವ : “ಅಯ್ಯೋ! ಬೇಗ ಏಳು! ಅಮಲ್ದಾರರು! ಅಯ್ಯೋ! ಅಮಲ್ದಾರರು….”ವೈದ್ಯ : “ಏನು ಸತ್ತರೇ?”ಬಂದವ : “ಪ್ರಾಣಾಂತಿಕ, ನೀನು ಬಾರದೆ ಆಗದು.”ವೈದ್ಯರು ಸ್ವಲ್ಪ ಅಸಮಾಧಾನಗೊಂಡು, “ನಾನು ಕಾಯಂ ಅಡಿಗೆಯ ಭಟ್ಟ. ನಾನು ಹೆಣ ಹೊರಲಾರೆ” ಎಂದು ಹೇಳಿಬಿಟ್ಟರು.ಬಂದವ : “ಏನು ಹರಟುವೆ ನೀನು? ಅಮಲ್ದಾರರು ನಿನ್ನನ್ನು ಕರಕೊಂಡು ಬರಬೇಕೆಂದು ಹೇಳಿದ್ದಾರೆ. ಬಾ! ಬಾ!” + +ಬಂದವನ ಆಶೆಯ ಪ್ರಕಾರ ಕೃಷ್ಣ ವೈದ್ಯರು ಕೊಠಡಿಗೆ ಹೋದರು. ವಲ್ಲಭಾಚಾರ್ಯರು ನೆಲದ ಮೇಲೆ ಹೊರಳಾಡುತ್ತಿದ್ದರು. ಮೋರೆಯು ನೋವಿನಿಂದ ತಿರುಪಿದಂತಿತ್ತು. ಅಮಲ್ದಾರರು ವೈದ್ಯರನ್ನು ನೋಡಿ “ಅಯ್ಯೋ! ಸತ್ತೇ! ಏ ದೇವ್ರೆ! ಸತ್ತೇ!” ಎಂದು ಗೋಳಿಡುತ್ತಿದ್ದರು. + +ವೈದ್ಯರು : “ರಾಯ್ರೇ! ಏನ್ ಬೇಕು? ಬೆಳಗಿನ ಕೇಶರಾನ್ನ ಇಷ್ಟು ತರಲೇ?” ಎಂದು ಕೈಮುಗಿದು ಬಿನ್ನವಿಸಿದರು. + +ಅಮಲ್ದಾರರು : “ಕೇಶರಾನ್ನ? ಕೇಶರಾನ್ನ ಸುಡು! ನನಗೆ ಒಂದು ಔಷಧ ಕೊಡು, ಮಹಾರಾಯ!” ಎಂದು ಹೇಳುತ್ತ, “ಹೊಟ್ಟೆನೋವು – ಅಯ್ಯೊಯ್ಯೋ! ಉದರ ಶೂಲೆ – ಏನೂ ತಾಳಲಾರೆ” ಎಂದು ತನ್ನ ಅವಸ್ಥೆಯನ್ನು ಒಪ್ಪಿಸಿದರು. + +ವೈದ್ಯ : “ನಾನು ವೈದ್ಯನಲ್ಲ, ಮಹಾಸ್ವಾಮಿ! ನಾನು ಅಡಿಗೆಯವ, ಖಾವಂದರಿಗೆ ವೇದ್ಯವಾಗಿದೆ.” + +ಅಮಲ್ದಾರರು ಹೊರಳುತ್ತ ತೆವಳುತ್ತ, “ನೀನು ಮದ್ದು ಕೊಡದಿದ್ರೆ, ಈಗ ಕೋಳಾ ಹಾಕಿಸುವೆ.” + +ವೈದ್ಯರು ತಲೆಯಲ್ಲಾಡಿಸಿದರು. “ನನ್ನನ್ನು ಅಡಿಗೆಯವನೆಂದು ಇಲ್ಲಿ ಹಿಡಿದಿದ್ದಾರೆ!” ಎಂದು ಮೆಲ್ಲನೆ ಹೇಳಿದರು. + +“ಅಯ್ಯಯ್ಯೋ! ನಾನು ಸಾಯ್ತೇನೆ! ಏನಾದ್ರೂ ಮದ್ದು ಕೊಡು! ಒಂದು ಔಷಧ ಕೊಡು” ಎಂದು ಅಮಲ್ದಾರರು ಹೊರಳಾಡಿದರು. + +ವೈದ್ಯ : “ನನ್ನ ಬಳಿ ಒಂದು ಮದ್ದುಂಟು. ಖರ್ಚು ಹೆಚ್ಚು ಬೀಳುತ್ತೆ. ಹಣ ಕೊಡದೆ ಮಾತ್ರ ಸಿಕ್ಕಲಾರದು?” + +ಅಮಲ್ದಾರ : “ಇಕೊ! 25 ರೂಪಾೈ ಕೊಡ್ತೇನೆ. ಬೇಗ ಮದ್ದು ಕೊಡು. ಅಯ್ಯಯ್ಯೋ! ಓ! ವೈಕುಂಠವಾಸ! ವೈಕುಂಠವಾಸ!” + +ಕೃಷ್ಣ ವೈದ್ಯರು ಸಮೀಪಕ್ಕೆ ಬಂದು “ಮದ್ದು ಪ್ರಾರಂಭಿಸುವ ವೇಳೆಯಲ್ಲಿ ರೋಗಿಗಳು ವೈಕುಂಠವಾಸದ ನೆನಪನ್ನು ಮಾಡಬಾರದು” ಎಂದು ಮೆಲ್ಲನೆ ಸೂಚಿಸಿದರು. + +ಅಮಲ್ದಾರರು ವೈಕುಂಠ ವ್ಯಾಸಾಚಾರ್ಯರನ್ನು ಕೂಗಿ ಕರೆದಿದ್ದರು. ವ್ಯಾಸಾಚಾರ್ಯರು ಸಮೀಪದಲ್ಲಿ ಇದ್ದಿರಲಿಲ್ಲ. + +ವೈದ್ಯ : “ರಾಯರೇ! ನನ್ನ ಔಷಧ ಕಹಿ ಎಂದು ಬೇಸರ ಮಾಡಬಾರದು, ಈ ಒಂದು ಮಾತ್ರೆ ಕೊಟ್ಟು ನಾಳೆಗೆನೇ ಶ್ರೀಕಾಂತ ಜಾತ್ರೆಗೆ ಹೋಗುವ ಹಾಗೆ ಮಾಡುವೆ – ಬಲ್ರೋ?” + +ಅಮಲ್ದಾರರಿಗೆ ಈ ಮಾತು ತಾನೇ ರುಚಿಸಲಿಲ್ಲ. + +ವೈದ್ಯರು ತಮ್ಮ ಕಂತೆಯೊಳಗಿಂದ ಔಷಧವನ್ನು ತೆಗೆದು ರೋಗಿಯ ನಾಡಿಯನ್ನು ಹಿಡಿದು “ಈ ರೋಗವು ಮೇಹೋದರ ಶೂಲೆ” ಎಂದರು. + +ಅಮಲ್ದಾರರು ನಿರಾಶೆಯಿಂದ, “ಮೇಹೋದರವೋ? ಮಹೋದರವೋ? ಇದರಲ್ಲಿ ಜನಗಳು ಬದುಕುತ್ತಾರೋ?” ಎಂದು ಕೇಳಿದರು.ವೈದ್ಯ : “ಅಪಾಯವುಂಟು. ಶೇಕಡಾ ಒಂದ್ರಂತೆ ಬದುಕುತ್ತಾರೆ. ಇದು ಮೇಹೋದರವೇ.”ಅಮಲ್ದಾರ : “ವೈದ್ಯರೇ! ಇದು ಯಾವದ್ರಿಂದ ಉಂಟಾಯಿತು?”ವೈದ್ಯ : “ಕಾಯಿ ಕಿಚಡಿ ತಿಂದ್ರೆ ಉಂಟಾಗುತ್ತೆ. ದುಡ್ಡು ತಿಂದ್ರೆ ಜೀರ್ಣಕ್ಕೆ ಬಾರದೆ ಉಂಟಾಗುತ್ತೆ” ಎಂದು ತನ್ನೊಳಗೇನೆ ಹೇಳಿದರು. + +ಅಮಲ್ದಾರರು ಈ ವಿಧವಾಗಿ ಅವಸ್ಥೆ ಪಡುತ್ತಿರುವಾಗ ಪಟೇಲನು ಬಂದು“ಬೇಗ ಬನ್ನಿ! ಏಳಿ! ಏಳಿ! ವೈಕುಂಠ ವ್ಯಾಸಾಚಾರ್ಯರಿಗೆ ಕಾಹಿಲೆ; ಪ್ರಾಣಾಂತಿಕ ಕಾಹಿಲೆ” ಎಂದು ಅವಸರಗೊಂಡನು. + +ಕೃಷ್ಣ ವೈದ್ಯರು ವ್ಯಾಸಾಚಾರ್ಯರ ಹತ್ತಿರಕ್ಕೆ ಬಂದು “ಏನಯ್ಯಾ! ನಮಗೆ ಯಾಕೆ ತೊಂದರೆ ಕೊಡುತ್ತೀರಿ?” ಎಂದರು.ವ್ಯಾಸಾಚಾರ್ಯರು ಚಾಪೆಯ ಮೇಲೆ ಹೊರಳಾಡುತ್ತಿದ್ದರು. ಅವರು ವೈದ್ಯರನ್ನು ನೋಡಿ “ಒಂದಿಷ್ಟು ಮದ್ದು ಕೊಡಿ! ಸಾಯ್ತೇನೆ” ಎಂದರು. + +ವೈದ್ಯ : “ಹಾಗಾದ್ರೆ ಔಷಧ ಯಾಕೆ? ಕೆಡುವ ಕಾಲಕ್ಕೆ ಬುದ್ಧಿ ಇಲ್ಲ. ಮರಣ ಕಾಲಕ್ಕೆ ಮದ್ದು ಇಲ್ಲ ಎಂದು ಗೊತ್ತಿಲ್ಲವೆ?”ವ್ಯಾಸಾಚಾರ್ಯ : “ಅಕಟಾ! ನಿಮ್ಮ ಮಾತು ಬೇಡ! ಒಂದು ಔಷಧ ಕೊಡಿ.”ವೈದ್ಯ : “ಇದ್ದದ್ದು ಹೋಯಿತು ಮದ್ದಿನ ಗುಣ ಎಂದಾದೀತು. ನಿಮಗೆ ಮಗ್ಗಿ ಬರುವುದೇ?”ವ್ಯಾಸಾಚಾರ್ಯ : “ಇಲ್ಲಪ್ಪಾ ಇಲ್ಲಾ!”ವೈದ್ಯ : “ಮಗ್ಗಿ ಬಾರದವನಿಗೆ ನುಗ್ಗೇಕಾಯಿ ಮದ್ದೇ? ಎಂಬ ಗಾದೆಯುಂಟು. ನುಗ್ಗೆಕಾಯಿ ಆಗೋದಿಲ್ಲ. ನಿಮ್ಮ ನಾಡಿ ನೋಡ್ತೇನೆ. ನಾಡಿ ನೋಡದೆ ಮದ್ದು ಕೊಟ್ಟರೆ, ಕಾಡು ರೋಗ ಬರುವುದೆಂದು ಗಾದೆ ಇದೆ.” + +ವ್ಯಾಸಾಚಾರ್ಯ : “ನಿಮ್ಮ ಗಾದೆ ಸಾಕು ಮಾಡಿ!” + +ವೈದ್ಯರು “ಮದ್ದು ಕೊಟ್ಟರೆ ಎದ್ದು ನಿಲ್ಲಬೇಕು” ಎಂದು ಹೇಳಿ ಕಂತೆಯಿಂದ ಔಷಧ ಕೊಟ್ಟರು. + +ಎರಡು ದಿನಗಳವರೆಗೆ ಅಮಲ್ದಾರರೂ ವ್ಯಾಸಾಚಾರ್ಯರೂ ಕಾಯಿಲೆಯಿಂದ ಬಹಳ ಬೇಸತ್ತರು. ವೈದ್ಯರ ಕಹಿಮದ್ದಿನಿಂದಲೂ ಗಂಜಿನೀರಿನಿಂದಲೂ ಇಬ್ಬರ ನಾಲಿಗೆಯೂ ರುಚಿ ಕೆಟ್ಟುಹೋಯಿತು. ನಡುನಡುವೆ ವೈದ್ಯರು ಇಬ್ಬರ ಹಾಸಿಗೆಯ ಬಳಿಗೆ ಬಂದು, “ಜನಗಳನ್ನು ಬಿಟ್ಟಿಗೆ ಹಿಡಿದರೆ ಉಂಟಾಗುವ ಫಲವನ್ನು ಕುರಿತು” ಸಣ್ಣ ಕತೆಗಳನ್ನು ಹೇಳಿ ಉಲ್ಲಾಸಗೊಳಿಸುತ್ತಿದ್ದರು. ನಾಲ್ಕನೆಯ ದಿನ ಇಬ್ಬರೂ ಪೂರ್ಣ ಗುಣ ಹೊಂದಿದರು. + +ಕೃಷ್ಣ ವೈದ್ಯರು ಇಬ್ಬರ ಅಪ್ಪಣೆಯನ್ನು ಹೊಂದಿ ಶ್ರೀಕಾಂತ ಜಾತ್ರೆಗೆ ಹೊರಟರು. ಹಾದಿಯಲ್ಲಿ ಪಟೇಲ ಪದ್ಮರಾಜನು ಅವರ ಬಳಿಗೆ ಬಂದು “ಹುದ್ದೇದಾರರಿಗೆ ಈ ಅವಸ್ಥೆ ಆಗಲಿಕ್ಕೆ ಕಾರಣವೇನು?” ಎಂದು ಕೇಳಿದನು. + + + +ವೈದ್ಯ : “ಔಷಧಕಾರರನ್ನು ಅಡಿಗೆಗೆ ಹಿಡಿದಿದ್ದರಿಂದ.”ಪಟೇಲ : “ಅದು ಹ್ಯಾಗೆ?”ವೈದ್ಯ : “ನನಗೆ ಅಡಿಗೆಯ ಅನುಭವ ಅಷ್ಟಿಲ್ಲ. ಹಿಂಗಿನ ಒಗ್ಗರಣೆ ಹಾಕಲಿಕ್ಕೆ ಮರೆತು, ಮಣಿಮಂತ ಚೂರ್ಣವನ್ನು ಬೆರೆಸಿಬಿಟ್ಟೆ.” ಹೀಗೆಂದು ಹೇಳಿ ಕೃಷ್ಣ ವೈದ್ಯರು ಶ್ರೀಕಾಂತ ಜಾತ್ರೆಯ ಹಾದಿ ಹಿಡಿದರು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_379.txt b/Kenda Sampige/article_379.txt new file mode 100644 index 0000000000000000000000000000000000000000..45318842fcf0a94d0ba6c28bb6322dc66c2b4651 --- /dev/null +++ b/Kenda Sampige/article_379.txt @@ -0,0 +1,43 @@ + + +ಕೈಗೆ ಸಿಕ್ಕ ದೊಡ್ಡ ದೊಡ್ಡ ನಾಲ್ಕಾರು ಶೆಟ್ಲೆಗಳು ಬಲೆಯಿಂದ ತಪ್ಪಿಸಿಕೊಂಡರೂ ಸುಮ್ಮನೆ ಕುಳಿತೇ ಇದ್ದ ಶಂಕರ. ಅವನಿಗೆ ಈ ಕಡೆ ಬಲೆಯ ಮೇಲೆ ದ್ಯಾಸವೇ ಇರಲಿಲ್ಲ. ಶೆಟ್ಲಿ ನೋಡಲು ಬಂದಾಗ ಗಂಡ ಯಾವತ್ತೂ ಹೀಗೆ ಪರಧ್ಯಾನದಲ್ಲಿರುವಂತೆ ಕುಳಿತವನಲ್ಲ ಎಂದು ಯೋಚಿಸುತ್ತ “ಏನಾಗಿದೂ ನಿಮ್ಗೆ? ಹಿಂಗೆ ಎಲ್ಲಾ ಶೆಟ್ಲೆನು ಬಿಟ್ರೆ ಇಂದೆ ಉಂಬುದು ಬ್ಯಾಡಾಬಲಾ…” ಪಾರ್ವತಿ ರೇಗಿದಂತೆ ನಟಿಸಿದಾಗ ಶಂಕರ ನಿಟ್ಟುಸಿರಿಟ್ಟು “ಯೇನಾಗ್ಲೆಲ್ಲ” ಎನ್ನುತ್ತ ತನ್ನ ಕೆಲಸದೆಡೆಗೆ ಗಮನ ಕೊಟ್ಟ. + +ಕಳೆದ ಎಂಟು ಹತ್ತು ದಿನಗಳಿಂದ ಪಾರ್ವತಿ ಗಮನಿಸುತ್ತಲೇ ಇದ್ದಾಳೆ. ಗಂಡ ಶಂಕರ ಮುಂಚಿನಂತಿಲ್ಲ. ಬೆಳ್ಳಂಬೆಳಗಿಗೇ ತಣ್ಣಿ ಅನ್ನ ಉಂಡು ಗಜನಿಗೆ ಶೆಟ್ಟಿ ಆರಿಸಲು ಬಂದರೆ ಹೆಂಡತಿಗೆ ಒಂದು ಬುಟ್ಟಿ ಶೆಟ್ಲಿ ತುಂಬಿಸಿ ಮತ್ತೆ ತಾನೊಂದಿಷ್ಟನ್ನು ತಂದು ಶೆಡ್ಡಿಗೆ ಮಾರುತ್ತಿದ್ದ. ಅದೂ ನುಸಿಕೋಟೆಯ, ಹಿರೇಗುತ್ತಿಯ ಗಜನಿ ಎಂದರೆ ಶಂಕರ-ಪಾರ್ವತಿ ಇಬ್ಬರಿಗೂ ಪಂಚಪ್ರಾಣ. ಮದುವೆಯಾಗಿ ಆರು ವರ್ಷವಾದರೂ ಮದುವೆಯ ಹೊಸದರಲ್ಲಿದ್ದ ಪ್ರೀತಿಯೇ ಇಬ್ಬರಲ್ಲೂ ಇನ್ನೂ ಉಳಿದಿರುವುದಕ್ಕೆ ಗಜನಿಯೇ ಕಾರಣ. ಹಾಗೆಂದು ಮದುವೆಗೆ ಮೊದಲು ಅವರಿಗೆ ಗಜನಿ ಏನೊ ಗೊತ್ತಿರದ ಸ್ಥಳವಲ್ಲ. ಹಾಗೆ ಅವರಿಬ್ಬರೂ ಒಬ್ಬರಿಗೊಬ್ಬರು ಸಹ. + +ನುಸಿಕೋಟೆಯಿಂದ ಹಿರೇಗುತ್ತಿ ಸ್ಕೂಲಿಗೆ ಬರುತ್ತಿದ್ದ ಪಾರ್ವತಿ ಎಂದರೆ ಅವಳಿಗಿಂತ ಒಂದು ಕ್ಲಾಸು ಮುಂದಿದ್ದ ಶಂಕರ ಮತ್ತವರ ಸ್ನೇಹಿತರಿಗೆಲ್ಲ ಏನೋ ಆಕರ್ಷಣೆ. ಎಳೆಗಪ್ಪಿನ ಪಾರ್ವತಿ ಬಿಗಿಯಾಗಿ ಎರಡು ಜಡೆಕಟ್ಟಿ, ನೀಲಿ-ಬಿಳಿ ಯೂನಿಫಾರ್ಮ ಹಾಕಿಕೊಂಡು ಬರುವುದನ್ನು ಕಾಣುವುದೇ ಒಂದು ಸ್ವರ್ಗ ಎಂದು ಭಾವಿಸಿದವರು ಅವರು. ಅದೂ ಬುಧವಾರ ಒಂದು ದಿನ ಹಾಕಬಹುದಾಗಿದ್ದ ಕಲರ್ ಡ್ರೆಸ್ನಲ್ಲಿದ್ದಾಗ ಇದ್ದ ಕೆಲವೇ ಅಂಗಿಗಳನ್ನು ಚಂದಕ್ಕೆ ತೊಳೆದು ನೀಟಾಗಿ ಧರಿಸಿ ಪೌಡರ್ ಲೇಪಿಸಿ ಬರುವ ಪಾರ್ವತಿ ಎಂದರೆ ಉಳಿದವರಿಗಿಂತ ಶಂಕರನಿಗೆ ಹೆಚ್ಚಿನ ಕಕ್ಕುಲಾತಿ. ತನ್ನ ದೂರದ ಸಂಬಂಧಿಕಳು ಎನ್ನುವ ಹಕ್ಕಿನೊಟ್ಟಿಗೆ, ತನಗೆಂದೇ ಆಕೆಗೆ ತನ್ನ ಹೆಸರಿಗೆ ಮ್ಯಾಚ್ ಆಗುವ ಹಾಗೆ ‘ಪಾರ್ವತಿ’ ಎಂದು ಇಟ್ಟಿದ್ದಾರೆ ಎನ್ನುವ ಉತ್ಸಾಹ. ಎಲ್ಲೋ ತನಗೆ ದೂರದ ಸಂಬಂಧ ಎನ್ನುವುದೂ, ಶಂಕರನ ಅಪ್ಪ ಹೊಲಿಯಪ್ಪನಿಗೆ ಪಾರ್ವತಿಯ ಅವ್ವಿ ಮಂಕಾಳಿ ದೂರದ ಸಂಬಂಧದಲ್ಲಿ ತಂಗಿಯಾಗಬೇಕು ಅನ್ನೋದು ಅದೊಂದು ದಿನ ಶಂಕರನಿಗೆ ಆಕಸ್ಮಾತ್ತಾಗಿ ಗೊತ್ತಾಗಿಬಿಟ್ಟಿತು. + +ಒಂದು ದಿನ ಸಂಜೆ ಮೊರ್ಬಾದ ದೇವಸ್ಥಾನದಲ್ಲಿ ಕುಳಿತು ಶಂಕರ, ಶಿವು, ಮಂಜು, ಕೃಷ್ಣ, ನಾಗೇಶ ಎಲ್ಲರೂ ಪಾರ್ವತಿಯ ಅಂದ ಚಂದ, ಬಡವಳಾದರೂ ಅವಳಮ್ಮ ತಂದುಕೊಡುವ ಅಂಗಿ, ಬಳೆ, ರಿಬ್ಬನ್ನು; ಕಪ್ಪನೆಯ ಕಣ್ಣಿಗೆ ಕಾಡಿಗೆ ಹಚ್ಚುತ್ತಾಳೋ ಇಲ್ಲವೋ ಎನ್ನುವ ಹಾಗೆ ತಲೆ ಬುಡ ಇಲ್ಲದೆ ಚರ್ಚಿಸುತ್ತಿದ್ದಾಗ ಅಲ್ಲಿಗೆ ಬಂದ ಹೊಲಿಯಪ್ಪ, “ಯಾರ್ಲಾ ಅದು ಪಾರ್ವತಿ ಅಂದ್ರೆ? ನಮ್ಮ ಮಂಕಾಳಿ ಮಗಳೇನ್ರೋ…? ಅದಕೇನಾದ್ರೂ ಚಾಳ್ಸಿ ಬಿಟ್ಟಿರಿ. ನಂಗೆ ತಂಗಿ ಮಗೂ ಆತೀದು… ನಡೀರಿ… ನಡಿರಿ… ಓದ್ಕಾಣಿ.” ಎಂದು ಗದರಿಸಿ ಹೋಗಿದ್ದ. + +ಅಪ್ಪನ ಮಾತಿನಿಂದ ರೋಮಾಂಚಿತನಾದ ಶಂಕರ ಮನೆಗೆ ಬಂದವನೇ ಅವ್ವಿಯ ಹತ್ತಿರ ಹೋಗಿ “ಅವ್ವಾ… ಆ ನುಸಿಕೋಟೆ ಮಂಕಾಳಕ್ಕ ನಮ್ಗೆ ಹೆಂಗ್ ಸಂಬಂಧಾ? ಅಪ್ಪಂಗೆ ಅದು ತಂಗಿ ಅತೀದ್ ಕಡಾ… ಹ್ಯಾಂಗದು?” ಕುತೂಹಲ ತೋರಿಸಿದ್ದ. ಮಗ ಒಂಬತ್ತನೇ ಕ್ಲಾಸಿಗೆ ಬಂದ್ರೂ ಇನ್ನೂ ಏನೂ ಅರಿಯದ ಮಗು ಅಂದುಕೊಂಡಿದ್ದ ಬೀರಮ್ಮ ಅಂದು ಮಾತ್ರ ಜಿಗುಪ್ಸೆಯಿಂದ “ನಿಂಗ್ಯಾಕೋ ಅದೆಲ್ಲಾ? ಅವ್ರೆಂಥಾ ಸಂಬಂಧ ನಮ್ಗೆ…? ಇದ್ರೂ ಹೇಳ್ಕಣಾಕೆ ನಾಚ್ಕೆ…” ಎಂದು ಬಿಟ್ಟಿದ್ದಳು. ಸ್ವಲ್ಪ ತಡೆದು ‘ಅಂದ್ರದೊಂದು ಮೊಗ ಇತ್ ಕಂಡಾ… ಇಸ್ಕೂಲ್ಗೆ ಬತ್ತಿದಾ? ಮತ್ತೆ ಮಾತಾಡ್ಸುಕೆ ಹೋಗ್ಬೇಡಾ…’ ಅಂದಳು. ಏನೇನೋ ಯೋಚಿಸಿದಂತೆ ಮಾಡಿ “ಸಾಯ್ಲೆ ಬಿಡು, ಅದೇನ್ ಮಾಡೋದ್ ಅಪ್ಪ ಇಲ್ದೆದ್ ಮೊಗೂ… ಈ ಮಂಕಾಳೀ ಮಾಡ್ಕೋಂಡ ಕೆಲ್ಸಕ್ಕೆ ಪಾಪದವಳು ಏನ್ ಮಾಡುಮೆ?” ಎಂದು ಮಾತು ಮುಗಿದಾಗ ಶಂಕರ ಅಸಹನೆಯಿಂದ “ಅವ್ರು ನಮ್ಗೆ ಹಾಂಗೆ ಸಂಬಂಧ” ಎಂದು ಅವ್ವಿಯನ್ನು ಅಲಗಿಸುತ್ತ ಕೇಳಿದ. “ಹೌದು ಮಾರಾಯ ನಿಮ್ಮಜ್ಜಿಗೆ ಅದು ಏನೋ ಸಂಬಂಧ ಕಂಡಾ… ಒಟ್ಗೆ ನಿಮ್ಮಪ್ಪನಿಗೆ ತಂಗಿಯಾತೀದು.. ಆ ಮಂಕಾಳಿ” ಎಂದು ನಿಟ್ಟುಸಿರಿಟ್ಟು ಒಳನಡೆದಿದ್ದಳು. + +ಅವ್ವಿಯ ಜಿಗುಪ್ಸೆ, ಅನುಕಂಪ, ಅಂತಃಕರುಣೆ, ನಿಟ್ಟುಸಿರು, ಯಾವುದೂ ಶಂಕರನನ್ನು ತಟ್ಟಲಿಲ್ಲ. ಪಾರ್ವತಿ ತನಗೆ ಸಂಬಂಧ, ಅದೂ ಅತ್ತೆಯ ಮಗಳು ಎನ್ನುವುದೇ ಅವನಿಗೆ ಹೆಚ್ಚಿನ ಥ್ರಿಲ್ಲಿಂಗ್ ಎನಿಸಿತ್ತು. ಮಾರನೆ ದಿನ ಶಾಲೆಗೆ ಹೋದವನೇ ಅದನ್ನು ಎಲ್ಲರಿಗೂ ಹೇಳಬೇಕು ಅನಿಸಿದರೂ, ಮೊದಲನೇ ಪೀರಿಯಡ್ ಸಮಾಜ, ಅದೂ ಮೋಹನ ಮಾಸ್ತರ್ದು, ಕ್ಲಾಸಿನಲ್ಲಿ ಮಧ್ಯೆ ಮಾತನಾಡಿದರೆ ಬಡಿದರೂ ಬಡಿದರೇ. ಕವಳ ತುಂಬಿಕೊಂಡು ಬಾಯಿಂದ ಉಗುಳಿ ಬಂದು ಹೊಡೆದರೆ ಮಾತ್ರ ಬೆನ್ನು ಮುರಿಯುವ ಹಾಗಿರುತ್ತಿದ್ದುದರಿಂದ ಈ ಕೆರೆಮನೆ ಮಾಸ್ತರ ಸಹವಾಸನೇ ಬೇಡ ಎಂದು ಕ್ಲಾಸು ಮುಗಿಯುವವರೆಗೆ ಕಾಯತೊಡಗಿದ. ಅಂತೂ ಇಂತೂ ಎರಡು ಕ್ಲಾಸ್ ಮುಗಿಸಿ ರೀಸಸ್ ಅವಧಿಯಲ್ಲಿ ಎಲ್ಲರಿಗೂ ಆ ಸುದ್ದಿ ಬಿತ್ತರಿಸುವವರೆಗೆ ಶಂಕರ, ಶಂಕರನಾಗಿರಲಿಲ್ಲ. + +ಅದಾಗಿ ನಾಲ್ಕು ದಿನ ಮಂಜು, ಕೃಷ್ಣ, ನಾಗೇಶ, ಶಿವು ಎಲ್ಲರ ಕಣ್ಣಲ್ಲಿಯೂ ತಾನು ಹೀರೋ ಆದ ಹಾಗೆ ಮೆರೆಯತೊಡಗಿದ. ಮೊದಮೊದಲು ಎಲ್ಲರೂ ಸೇರಿ ಪಾರ್ವತಿಯ ಕುರಿತು ಚರ್ಚಿಸುತ್ತಿದ್ದವರು ಈಗ ಶಂಕರ ಜೊತೆಯಲ್ಲಿದ್ದಾಗ ಚರ್ಚಿಸಲು ಹಿಂದೆ-ಮುಂದೆ ನೋಡತೊಡಗಿದರು. ಅದು ಗೊತ್ತಾಗಿ ಶಂಕರ ತನಗೆ ಒಂದು ಪ್ರೆಸ್ಟೀಜು ಬಂದಂತೆನಿಸಿ ಹಿಗ್ಗತೊಡಗಿದ. ಇದರೊಟ್ಟಿಗೆ ಒಂದು ದಿನ ಮಂಜ ದಾರಿಯಲ್ಲಿ ಹೋಗುವಾಗ ಶಂಕರ ಇದ್ದುದನ್ನು ಮರೆತು “ನೋಡ್ರೋ.. ಪಾರ್ವತಿ ಹೋಗ್ತಾವ್ಳೆ ನೋಡ್ರೋ, ಒಳ್ಳೆ ನೇರ್ಲಹಣ್ಣು ಇದ್ದಾಂಗೆ…”ಎಂದು ಲೊಟ್ಟೆ ಹೊಡೆದಂತೆ ನಟಿಸಿದಾಗ ಶಂಕರನಿಗೆ ಆತ ತನ್ನ ಸ್ವಂತ ಆಸ್ತಿಯನ್ನೇ ಕದಿಯುತ್ತಿದ್ದಾನೆ ಎನ್ನುವಷ್ಟು ಕೋಪ ಬಂದು, ಮಂಜನ ಕಾಲರ್ ಹಿಡಿದು ಆತನಿಗೆರಡು ತದುಕಿಯೇಬಿಟ್ಟ. ಹೊಡೆಸಿಕೊಂಡ ಮಂಜನೇನು ಸುಮ್ಮನಾಗಲಿಲ್ಲ. ಹಿರೇಗುತ್ತಿಯ ಬ್ರಹ್ಮಜಟಕನ ದೇವಸ್ಥಾನದ ಪಕ್ಕದಲ್ಲಿ ರಸ್ತೆಯು ಒಂದು ರಣರಂಗವಾಗಿ ಹೋಯ್ತು. ಅಲ್ಲಿ ಸಿಮೆಂಟ್ ಬೆಂಚಿನ ಮೇಲೆ ಕುಳಿತವರು, ಇಲ್ಲಿ ಬಸ್ ಸ್ಟಾಂಡಿನ ಒಳಗೆ ಕಾಡು ಹರಟೆಯಲ್ಲಿದ್ದವರು ಕೆ.ಡಿ.ಸಿ.ಸಿ. ಬ್ಯಾಂಕಿನ ಪಕ್ಕದ ಅರಳಿಕಟ್ಟೆಯಲ್ಲಿ ಕುಳಿತ ವಯಸ್ಸಾದವರು, ದೇವಸ್ಥಾನದ ಪಕ್ಕದ ಕಟ್ಟೆಯಲ್ಲಿ ಕುಳಿತ ರಿಟ್ಟೆಯರ್ ಉದ್ಯೋಗಿಗಳು, ಗೂಡಂಗಡಿಯಲ್ಲಿ ನಿಂತುಕೊಂಡು ಹೋಗುವವರನ್ನು-ಬರುವವರನ್ನು ಮಾತನಾಡಿಸುತ್ತಿದ್ದವರು, ನಾಯಕ ಕೋಲ್ಡ್ ಡ್ರಿಂಕ್ಸ್ ನಲ್ಲಿ ಟೈಂಪಾಸ್ ಮಾಡುತ್ತಿದ್ದವರು ಎಲ್ಲರೂ ಒಮ್ಮಲೇ ನುಗ್ಗಿ ಬಂದು ಇಬ್ಬರನ್ನು ಬೇರೆ ಬೇರೆ ಮಾಡಿ ಇಬ್ಬರಿಗೂ ಎರಡೆರಡು ಬಿಗಿದು “ಶಾಲೆಗೆ ಹೋಗೋ ಬೋ… ಮಕ್ಕಳು ಹೊಡ್ದಾಡ್ಕಂತರ” ಎಂದು ಬೈದು ಕಳುಹಿಸಿದ್ದರು. + +ಮಾರನೆ ದಿನ ಶಾಲೆಗೆ ಹೋದರೆ ಗೋಡೆಯ ತುಂಬೆಲ್ಲ “ಶಂಕರ-ಪಾರ್ವತಿ” ಎನ್ನುವ ಹೆಸರು ರಾರಾಜಿಸುತ್ತಿತ್ತು. ಮೊದಲನೆ ಪಿರಿಯಡ್ ನಲ್ಲೇ ಇಬ್ಬರನ್ನೂ ಕರೆಸಿ “ಏನಾ ಶಂಕ್ರಾ ಇದು! ಓದೂದು ಬಿಟ್ಕಂಡು ಏನ್ ಬಾನ್ಗಡಿಯೋ? ನಿಂದೇನೇ ಪಾರ್ವತಿ… ಎಂಟನೇ ಕ್ಲಾಸಿಗೇ ಹಿಂಗಾದ್ರೆ ಮುಂದೆ ಹ್ಯಾಂಗೆ…?” ಎಂದು ಕೆರೆಮನೆ ಮಾಸ್ತರು ಕಣ್ಣು ಕೆಂಪಗೆ ಮಾಡಿ ಅಷ್ಟೇ ಕೆಂಪಾದ ಕವಳದ ಬಾಯಲ್ಲಿ ಕೇಳಿದಾಗ ಶಂಕರನಿಗೆ ಚಡ್ಡಿಯಲ್ಲೇ ಒಂದಾ ಬಂದಂತಾಗಿದ್ದು ಸುಳ್ಳಲ್ಲ. ಆದರೂ ‘ತನಗೇ ಹೀಗೆ ಹೆದ್ರಿಕೆ ಆಗಿರುವಾಗ ಪಾಪ ಪಾರೋತಿಗೆ ಹ್ಯಾಂಗಾಗಿರಬ್ಯಾಡ’ ಎಂದು ಯೋಚಿಸತೊಡಗಿದ. + +ಆದರೆ ಅಷ್ಟರಲ್ಲಾಗಲೇ ಅಳತೊಡಗಿದ್ದ ಪಾರ್ವತಿ “ಗೊತ್ತಿಲ್ಲಾ ಸರ್, ಇಂವಾ ಯಾರೆಂದೇ ನಂಗೊತ್ತಿಲ್ಲ” ಎಂದು ಧ್ವನಿ ತೆಗೆದು ರಾಗ ಮಾಡಿದಾಗ “ಹೋಗ್, ಹೋಗ್.. ಕಡೆಗೆ ಹೇಳೋದೇ ಹೀಗೆ… ಮತ್ತೆ ಹಿಂಗೆ ಮಾಡಬ್ಯಾಡ.” ಎಂದು ಅವಳನ್ನು ಹೊರಕಳುಹಿಸಿ “ಏನಾ ಶಂಕರಾ? ನಿಂದೇನೋ ಕತೆ’ ಎಂದು ಗಟ್ಟಿಯಾಗಿ ಕೇಳಿದಾಗ, ‘ಮೋಹನ ಮಾಸ್ತರಿಗೆ ಸಿಟ್ಟ ಬಂದ್ರೆ ಸತ್ತಾಂಗೆ’ ಎಂದು ತನ್ನ ಹಿರಿಯ ಸಹಪಾಟಿಗಳಿಂದ ಕೇಳಿದ್ದ ಶಂಕರ ನಡುಗುತ್ತ ‘ನಂಗೊತ್ತಿಲ್ಲ ಸರ್, ಅದ್ರವ್ವಿ ನಮ್ಮಪ್ಪಂಗೆ ತಂಗಿಯಾತೀದ ಅಂಡಾ… ಹಾಂಗದ್ಕುಂಡೆ ಆ ಮಂಜ, ಶಿವು, ಕೃಷ್ಣೋರಿಗೆ ಹೇಳಿದ್ದೆ. ನಿನ್ನೆ ಮಂಜಾ ಅದ್ಕೆ ಹಲ್ಕಟ್ ಮಾತಾಡ್ದಾ ಅದ್ಕೂಂಡೆ ಬೈದ್ರೆ ನಂಗೇ ಹೊಡಿಯೋಕೆ ಬಂದ… ಇದು ಅವಂದೇ ಅಕ್ಷರ. ಅಂವನೆ ಹಿಂಗೆ ಬರ್ದೋನು..” ಎಂದು ತೊದಲತೊಡಗಿದ. + + + +“ಓಹೋ! ಹಂಗಾರೆ ನಿನ್ನೆ ಬಸ್ ಸ್ಟ್ಯಾಂಡ್ ಹತ್ರ ಜಗ್ಳಾ ಮಾಡ್ದೋರು ನೀನು ಮಂಜಾನಾ?” ಎಂದು ದೀರ್ಘವಾಗಿ ನೋಡಿ ಮಂಜನನ್ನು ಬರಲು ಹೇಳಿ ಕಳುಹಿಸಿದ್ದರು. ಆತನ ಪಟ್ಟಿಯಲ್ಲಿನ ಅಕ್ಷರ, ಗೋಡೆಯ ಅಕ್ಷರಗಳನ್ನು ಒಂದಕ್ಕೊಂದು ತಾಳೆಯಾಗಿ ಆತನ ಬೆಂಡೆತ್ತಿ ವಾರ್ನಿಂಗ್ ಮಾಡಿ ಕಳುಹಿಸಿದ್ದರು. ಅಂದಿನಿಂದ ಮಂಜ-ಶಂಕರ ಹಾವು ಮುಂಗುಸಿಯಂತಾದದ್ದಲ್ಲದೇ ಮೊರ್ಬಾದಿಂದ ಬರುವ ಹುಡುಗರ ಗುಂಪು ಎರಡಾಗಿ ವಿಭಜನೆ ಆಗಿಹೋಯ್ತು. + +ಆದರೆ ಇದೆಲ್ಲ ಆಗಿದ್ದು ಶಂಕರನಿಗಂತೂ ಲಾಭವಾಯ್ತು. ಇಷ್ಟು ದಿನ ಯಾರೆಂದೇ ಗೊತ್ತಿಲ್ಲದವನ ಕಡೆ ಕಣ್ಣರಳಿಸಿ ನೋಡತೊಡಗಿದಳು ಪಾರ್ವತಿ. ಕೊನೆಗೆ ಅದ್ಯಾವ ಮಾಯದಲ್ಲಿ ಕಣ್ಣೋಟ ಮಾತಾಯ್ತೋ. ಮಾತು ಪ್ರೀತಿಯಾಯ್ತೋ ಯಾರಿಗೂ ಗೊತ್ತಾಗಲಿಲ್ಲ. ಮುಂದಿನ ವರ್ಷ ಹತ್ತನೇ ಕ್ಲಾಸಿನಲ್ಲಿ ಫೇಲಾಗಿ ಶಂಕರ ಮೀನು ಹಿಡಿಯಲು ಹೋದರೆ, ಪಾರ್ವತಿಯೂ ಶಾಲೆ ಬಿಟ್ಟು ಅವ್ವಿಯೊಡನೆ ಮೀನು ಮಾರಲು ಹೊರಟಳು. ಗಜನಿಯ ಹಣ್ಣಿ ಹುಲ್ಲಿನ ಮರೆಯಲ್ಲಿ ಕಾಣದಂತೆ ಮಾತನಾಡುತ್ತ ಕುಳಿತ ಜೋಡಿ ಎರಡೇ ವರ್ಷದಲ್ಲಿ ಎರಡೂ ಮನೆಯವರ ಅಲ್ಪಸ್ವಲ್ಪ ವಿರೋಧದ ನಡುವೆಯೂ ಮದುವೆ ಮಾಡಿಕೊಂಡರು. ಹೆಸರು ಕೆಡಿಸಿಕೊಂಡವಳ ಮಗಳೆಂದು ಮದುವೆಗೆ ಮೊದಲು ವಿರೋಧಿಸಿದರೂ ಮದುವೆಯಾದ ಮೇಲೆ ‘ಒಬ್ನೇ ಮಗ, ಪಿರುತಿ ಮಾಡಿ ಮದ್ವೆ ಆಗಾನೆ’ ಎಂದು ಅತ್ತೆ ಬೀರಮ್ಮ ಸೊಸೆಯನ್ನು ಪ್ರೀತಿಯಿಂದಲೇ ಕಂಡಳು. + +ಇಷ್ಟಾಗಿ ಇದು ಆರನೇ ವರ್ಷ. ನಾಲ್ಕು ವರ್ಷದ ಪುಟ್ಟ ಮಗನೊಬ್ಬನಿದ್ದಾನೆ. ಅಂದು ಜಗಳವಾಡಿದ್ದ ಮಂಜ ಮತ್ತೆ ಗೆಳೆಯನಾಗಿದ್ದಾನೆ. ಹಳೆಯ ಪ್ರೇಮಕಥೆಯನ್ನು ನೆನಪಿಸಲು ಗಜನಿಯಿದೆ, ಹಣ್ಣಿ ಹುಲ್ಲು ಎತ್ತರವಾಗಿ ಬೆಳೆದು ನಿಂತಿದೆ. ಆಗೀಗ ಕೆರೆಮನೆ ಮಾಸ್ತರ್ರೂ ಮೀನು ಮಾರಲು ಹೋದಾಗ ಎದುರಿಗೆ ಸಿಗುತ್ತಾರೆ. “ಏನೆ ಪಾರ್ವತಿ? ಇವ ಯಾರಂದೇ ಗೊತ್ತಿಲ್ಲ ಎಂದಿದ್ಯಲ್ಲೇ. ಈಗ ಅಂವನ್ನೇ ಕಟ್ಟಿಕೊಡ್ಯಲ್ಲೇ…”ಎಂದು ನಗುತ್ತ ಒಂದೋ ಎರಡು ಪಾಲು ಶಟ್ಲೆ ಕೊಂಡುಕೊಳ್ಳುತ್ತಾರೆ. ಹೊಟ್ಟೆಗೆ ಬಟ್ಟೆಗೆ ಬರಗಾಲ ಬೀಳದ ಚಂದ ಬದುಕು. + +ಇಂತಹ ಸುಂದರವಾದ ಬದುಕಿದ್ದೂ ಗಂಡ ಅದೇಕೆ ಇತ್ತೀಚೆಗೆ ಇಡೀ ದಿನ ಯೋಚಿಸುತ್ತ ಕುಳಿತುಕೊಳ್ಳುತ್ತಾನೆ ಎಂಬುದೇ ಪಾರ್ವತಿಗೆ ಅರ್ಥ ಆಗಿರಲಿಲ್ಲ. ಕೇಳಿದರೆ “ತದಡಿ ಉಷ್ಣಸ್ಥಾವರ ಆದ್ರೆ ನಾವು ಹಾಳಾದಂತೆ… ಏನಾದ್ರೂ ಮಾಡ್ಬೇಕು” ಎಂದು ಆಕ್ರೋಶದಿಂದ ಹೇಳುತ್ತಾನೆ. ‘ತದಡೀಲಿ ಕರೆಂಟ ತಯಾರಿಸಲು ಉಷ್ಣ ವಿದ್ಯುತ್ ಘಟಕ ಶುರುವಾಗ್ತದಂತೆ, ಹಂಗಾದ್ರೆ ನಮ್ಮ ಅಘನಾಶಿನಿ ನದಿ ಪೂರ್ತಿ ಬೂದಿ ತುಂಬಿಕೊಳ್ತದಂತೆ. ನದಿ ದಂಡೇಲಿರೋರೆಲ್ಲ ಬೇರೆ ಕಡೆ ಗೂಳೆ ಎದ್ದು ಹೋಗ್ಬೇಕಾಗ್ತದಂತೆ. ಗಜನಿಲಿ ಕಲ್ಲಿದ್ದಲು ತುಂಬ್ತಾರಂತೆ, ಊರಲ್ಲಿ ಎಲ್ಲರ ಮನೇಲು ಹಾರೂಬೂದಿ ತುಂಬಿಕೊಳ್ಳದಂತೆ. ಶೆಟ್ಲಿ ಹೋಗಲಿ, ಚಪ್ಪಿಕಲ್ಲೂ ಸಿಗೋದಿಲ್ಲಂತೆ’ ಎಂದು ಗಂಡ ಹೇಳಿದ್ದನ್ನು ಕೇಳಿದ್ದು ಬಿಟ್ಟರೆ ಬೇರೇನೂ ಗೊತ್ತಿಲ್ಲ ಪಾರ್ವತಿಗೆ. ಈ ಬಗ್ಗೆ ಸುಮಾರು ವರ್ಷಗಳ ಹಿಂದೆ ಬಂದ ಕಾಸ್ಟಿಕ್ ಸೋಡಾ ಯೋಜನೆಲಿ ಕೂಡ ಹಿಂಗೇ ಗಲಾಟೆ ಆಗಿದ್ದು. ಎಲ್ಲ ಒಡೀದೀರ ಗಜನಿಯನ್ನು ಸರ್ಕಾರ ವಶಪಡಿಸಿಕೊಂಡದ್ದು, ಹಾಗೆ ವಶಪಡಿಸಿಕೊಂಡ ಗಜನಿಯಲ್ಲಿ ಇನ್ನೂ ಯಾವ ಯೋಜನೆಯೂ ಆಗದಿದ್ದರೂ ಗಜನಿ ಸರ್ಕಾರದ ವಶದಲ್ಲೇ ಉಳಿದು, ಹಾಳು ಬಿದ್ದುದ್ದು ಗಜನಿಯಲ್ಲಿ ಬೆಳೆಯುತ್ತಿದ್ದ “ಕಗ್ಗ”ದ ಬತ್ತ ಹಾಗೂ ಅದರ ಕರಿ ಅಕ್ಕಿಯ ರುಚಿಯಾದ ಅನ್ನ ಈಗ ಕನಸೇ ಆಗಿ ಹೋಗಿದ್ದ ಪಾರ್ವತಿಗೆ ಸ್ವಲ್ಪ ಸ್ವಲ್ಪ ನೆನಪಿದ್ದರೂ ಮಾವ- ಅತ್ತೆ ಪದೇ ಪದೇ ನೆನಪು ಮಾಡಿಕೊಳ್ಳುತ್ತಿದ್ದರು. + +‘ಇಷ್ಟಾದರೂ ಅದು ದೊಡ್ಡವರು ನೋಡಿಕೊಳ್ಳಬೇಕಾದ ಉಸಾಬರಿ, ತಮಗೇಕೆ?’ ಎಂಬುದೇ ಪಾರ್ವತಿಯ ಯೋಜನೆ. ‘ಇವೊತ್ತು ಹಿರೇಗುತ್ತಿಲಿ ಸ್ಟ್ರೈಕ್ ಉಂಟು. ರಸ್ತೆ ಬಂದ್ ಮಾಡಿ, ಬಸ್ ಎಲ್ಲಾ ನಿಲ್ಸಿ ಘೋಷಣೆ ಕೂಗಬೇಕು’ ಎಂದು ಶಂಕರ ಹೊರಟಾಗ “ದುಡ್ಕಂಡ್ ತಿಂಬೋರಿಗೆಲ್ಲ ಎಂಥಾ ಬಂದ್? ಅದೆಲ್ಲ ಅವ್ರು ದುಡ್ಡಿರೋರು ಮಾಡ್ಕಳ್ಳಿ… ನಮ್ಗೆಂತಕ್ಕೆ?” ಪಾರ್ವತಿ ಗೊಣಗಿದರೂ ಕಿವಿ ಮೇಲೆ ಹಾಕಿಕೊಳ್ಳದ ಶಂಕರ ಹೊರಟೇ ಬಿಟ್ಟಾಗ ಇವಳು ತಲೆ ಮೇಲೆ ಕೈಯಿಟ್ಟು ಕುಳಿತಳು. “ಆ ಶ್ರೀಮಂತ್ರು ಸುಮ್ನೆ ಕೂತ್ಕಂಡ್ರೂ ಹೊಟ್ಟೆ ತುಂಬೂದು. ಹೊಟ್ಟೆಗೆ ಯಾವುದೇ ತಾಪತ್ರಯ ಇಲ್ದೋರು ಕುನಿತರಂದ್ಕಂಡೆ ಇವ್ರೂ ಹೆಜ್ಜೆ ಹಾಕೂದೇ…” ಪಾರ್ವತಿ ಅಸಹಾಯಕಳಾದಳು. + +ಆದರೂ ಇದು ಒಂದೆರಡು ದಿನಗಳಲ್ಲಿ ಮುಗಿಯಲಿಲ್ಲ. ತಿಂಗಳು ಮೂರ್ನಾಲ್ಕು ಬಿಟ್ಟೂ ಬಿಟ್ಟೂ ಸ್ಟ್ರೆಕು, ಬಂದು ನಡೆದವು. ಕೆಲವೊಮ್ಮೆ ಶಂಕರ ರಾತ್ರಿ ಕೂಡ ಮನೆಗೆ ಬರದೇ ಹೊರಗೇ ಕಳೆಯತೊಡಗಿದ. ಹೆಂಡತಿ ಕೇಳಿದರೆ ‘ನಿಮಗ್ಯಾಕೆ ಇದೆಲ್ಲ’ ಎಂದು ಮಾತು ತೇಲಿಸಿದ. ನಿಯತ್ತಿನಿಂದಿದ್ದ ಗಂಡ ಈಗ ರಾತ್ರಿಯೆಲ್ಲ ಹೊರಗುಳಿಯುವುದು ಎಂದರೇನು ಎಂಬುದೇ ಪಾರ್ವತಿಗೆ ಅರ್ಥ ಆಗಿರಲಿಲ್ಲ. ‘ಹೊರಚಾಳಿಗೆ ಬಿದ್ದೀರೇನೋ’ ಎಂದು ಅನುಮಾನಿಸಿದವಳೇ ಮಗನನ್ನೂ ಎತ್ತಿಕೊಂಡು ಅವ್ವಿಯ ಮನೆಗೆ ನಡೆದೇ ಬಿಟ್ಟಳು. + +ಶಂಕರ ಕರೆಯಲು ಬಂದರೆ ಕೇಳುವ ಸ್ಥಿತಿಯಲ್ಲಿ ಪಾರ್ವತಿ ಇರಲಿಲ್ಲ. ಶಂಕರ ಸ್ಟ್ರೆಕು, ಊರ ಹೊರಗೆ ಹೋಗಬೇಕಾಗಿರುವುದನ್ನು ವಿವರಿಸಿದರೂ ಪಾರ್ವತಿಗೆ ಅರ್ಥವಾಗಲಿಲ್ಲ. ಬಿರು ಮಾತನಾಡಿ ಕದವಿಕ್ಕಿ ಕೊಂಡಾಗ ಶಂಕರನಿಗೂ ಏನು ಮಾಡುವುದೆಂದೇ ತೋಚಲಿಲ್ಲ. ಹಾಗೆಂದು ಹೋರಾಟವನ್ನು ಅರ್ಧದಲ್ಲಿ ನಿಲ್ಲಿಸುವಂತೆಯೂ ಇರಲಿಲ್ಲ. ಹೋರಾಟ ನಿಲ್ಲಿಸಿದರೆ ಅದು ಮುಂದಿನ ಬದುಕಿನ ಪ್ರಶ್ನೆ. ಮಕ್ಕಳು, ಮೊಮ್ಮಕ್ಕಳ ಬದುಕಿನ ಪ್ರಶ್ನೆ… ಶಂಕರ ಪೂರ್ತಿಯಾಗಿ ಹೋರಾಟದಲ್ಲಿ ತೊಡಗಿಕೊಂಡ. ಬೆಂಗಳೂರಿಗೆ, ದೆಹಲಿಗೆ ಹೊರಟ ನಿಯೋಗದೊಂದಿಗೆ ಹೋಗಿ ಬಂದ. ಇತ್ತ ಮತ್ತೆ ಬಂದು ಕರೆದು ಅನುನಯಿಸಲಿ ಎಂದು ಕಾದು ಕುಳಿತ ಪಾರ್ವತಿ ಇದ್ದಲ್ಲಿ ಬರಲು ಆತನಿಗೆ ಸಾಧ್ಯವೇ ಆಗಲಿಲ್ಲ. ‘ಅವ್ವಿ ಹಂಗೇ ನಂದೂ ಒಂಟಿ ಜೀವ್ನ ಆಗೋಯ್ತು’ ಎಂದು ಪಾರ್ವತಿ ಕೊರಗತೊಡಗಿದಳು. + +ಯೋಚಿಸುತ್ತ ಕುಳಿತ ಪಾರ್ವತಿಗೆ ಪಕ್ಕದ ಮನೆಯ ಸವಿತಾ ಬಂದು “ಪಾರೋತಕ್ಕ ನೋಡಿಲ್ಲಿ… ಶಂಕ್ರುಣ್ಣನ ಪೋಟೋ ಬಂದೀತು ಪೇಪರ್ನಾಗೆ” ಎಂದು ಪ್ರಜಾವಾಣಿ ಕರಾವಳಿ ಮುಂಜಾವು ಹಿಂಗೆ ಎರಡೆರಡು ಪತ್ರಿಕೆ ಹಿಡಿದು ಓಡೋಡಿ ಬಂದಾಗ ಎದೆ ಬಡಿತವೇ ನಿಂತಂತಾಯ್ತು. “ಅಯ್ಯೋ ಹಿರೇಗುತ್ತಿ ಹಿರೇಹೊಸಬಾ.. ಏನ್ ಮಾಡ್ಕಂಡಿರೋ… ಎಂಥಕ್ಕೆ ಪೋಟೋ ಬಂದಿದೇ ಸವಿ…” ಉಕ್ಕತೊಡಗಿದ್ದ ಕಣ್ಣೀರನ್ನು ಹತೋಟಿಯಲ್ಲಿಡಲು ಪ್ರಯತ್ನಿಸುತ್ತ ಕೇಳಿದಳು. + + + +“ತದಡಿ ಉಷ್ಣಸ್ಥಾವರ ಅಗೂಲಾ ಕಂಡಾ. ಅದ್ಕಾಗೆ ಹೋರಾಟ ಮಾಡ್ದೋರಿಗೆಲ್ಲ ಹಿರೇಗುತ್ತಿ ಬ್ರಹ್ಮಜಟಕ ಯುವಕ ಸಂಘದವರು ಸನ್ಮಾನ ಮಾಡ್ತೀರ ಕಂಡಾ, ಶಂಕ್ರಣ್ಣಂಗೂ ಸನ್ಮಾನ ಈದ ಕಂಡಾ…” ಖುಷಿಯಿಂದ ಸವಿತಾ ಹೇಳಿದಾಗ ಪಾರ್ವತಿಗೆ ಮಾತೇ ಹೊರಡಲಿಲ್ಲ. ಸರಸರನೆ ಒಳಗೆ ಹೋದವಳೇ ತನ್ನ ಹಾಗೂ ಮಗನ ಬಟ್ಟೆಯನ್ನು ಚೀಲದಲ್ಲಿ ತುಂಬ ತೊಡಗಿದಳು. ಅವ್ವ “ಎಲ್ಲಿಗೆ ಹೋತ್ಯೇ? ಈ ಮೂರ್ ಸಂಜೆ ಹೊತ್ನಾಗೆ” ಎಂದರೂ ಕೇಳದೇ ಮೆಟ್ಟಲಿಳಿಯುತ್ತಿದ್ದವಳಿಗೆ ಖುಷಿಯಿಂದ ನಗುತ್ತ ಅಂಗಳದ ದಣಪೆ ದಾಟುತ್ತಿದ್ದ ಶಂಕರ ಕಾಣಿಸಿ “ನಡೀರಿ ಹೋಗ್ವ ನಂ ಮನಿಗೆ” ಎಂದು ಅವನನ್ನು ಒಳಗೂ ಕರೆಯದೇ ಹೊರಡಿಸಿಯೇ ಬಿಟ್ಟಳು.. ಅವ್ವಿಗೆ ಉತ್ತರವನ್ನೇ ಕೊಡದೇ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_38.txt b/Kenda Sampige/article_38.txt new file mode 100644 index 0000000000000000000000000000000000000000..e794ca7d0712c08ec23a37450526506609a14356 --- /dev/null +++ b/Kenda Sampige/article_38.txt @@ -0,0 +1,33 @@ +ಪೈ:ನಿಮ್ಮ ‘ದ್ವೀಪ’ ಚಿತ್ರದ ವಸ್ತು ಮುಳುಗಡೆಯಿಂದಾಗಿ ಸೃಷ್ಟಿಯಾದ ದ್ವೀಪವೊಂದರಲ್ಲಿ ಬದುಕುವ ಒಂದು ಕುಟುಂಬದ ಕತೆಯಾದರೂ ಅದು ಒಳರಚನೆಯಲ್ಲಿ ಪ್ರಕೃತಿ ಮತ್ತು ಮನುಷ್ಯ, ಅಭಿವೃದ್ಧಿ ಮತ್ತು ಅದರ ನೈತಿಕತೆ ಮನುಷ್ಯ ಗುಣ, ಮೃಗೀಯ ಗುಣ- ಹೀಗೆ ಹಲವು ದಿಕ್ಕುಗಳತ್ತ ಕತೆ ಕೈ ಚಾಚುತ್ತಾ ಸಾಗುತ್ತದೆ. ಆದರೆ ಚಿತ್ರದ ಜೀವನಾಡಿ ಮಳೆ. ಅದನ್ನು ಹಲವು ಧ್ವನಿಗಳಲ್ಲಿ ಬಳಸಿದ್ದೀರಿ. + +ಗಿರೀಶ್:ನಾನು ಹುಟ್ಟಿ ಬೆಳೆದದ್ದು ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶಗಳಲ್ಲೊಂದಾದ ಆಗುಂಬೆಯ ಹತ್ತಿರವಿರುವ ಒಂದು ಹಳ್ಳಿಯಲ್ಲಿ. ಬಾಲ್ಯದಲ್ಲಿ ವರ್ಷದ ಐದಾರು ತಿಂಗಳು ಮಳೆಯಲ್ಲೇ ಕಳೆಯುತ್ತಿದ್ದ ಮಲೆನಾಡಿಗ ನಾನು. ಪ್ರಕೃತಿ ಮತ್ತು ಮನುಷ್ಯನ ನಡುವೆ ಸೌಹಾರ್ದಯುತವಾದ ಸಂಬಂಧ ಸದಾ ಇರುತ್ತದೆ ಎನ್ನುವುದೇ ಒಂದು ರಮ್ಯಕಲ್ಪನೆ. ಮಲೆನಾಡಿಗರಾದ ನಮಗೆ ಮಳೆಯ ಸಕಲ ಮುಖಗಳ ಪರಿಚಯವಿರುತ್ತದೆ. ಮಳೆಗಾಲದ ಆರಂಭದಲ್ಲಿ ಅದರ ರಮ್ಯರೂಪ ನೋಡಿದರೆ, ನಡು ಮಳೆಗಾಲದಲ್ಲಿ ಅದರ ರುದ್ರರೂಪ ನೋಡುತ್ತೇವೆ. ಮಳೆ ಹನಿ ಮನಸ್ಸಿಗೆ ಮುದ ಕೊಡುವಷ್ಟೇ ಸಿಡಿಲು, ಗುಡುಗುಗಳ ಆರ್ಭಟ ಭಯ ಹುಟ್ಟಿಸುತ್ತವೆ. ಮನೆಯ ಸೂರನ್ನೇ ಹಾರಿಸಿಕೊಂಡು ಹೋಗುವ ಗಾಳಿ, ಕುಸಿದು ಬೀಳುವ ಧರೆ, ಸಿಡಿಲಿಗೆ ಹೊತ್ತಿ ಉರಿಯುವ ಅಡಿಕೆ ಮರ-ಇವು ಪ್ರಕೃತಿಯ ಎದುರು ಮನುಷ್ಯರು ಎಷ್ಟು ನಗಣ್ಯರು, ತೃಣಸಮಾನರು ಎನ್ನುವುದನ್ನೂ, ಅವರ ಅಸಹಾಯಕತೆಯನ್ನೂ ಅನಾವರಣ ಮಾಡಿ ತೋರಿಸುತ್ತದೆ. ಮಳೆಗೆ ಮನುಷ್ಯನ ಬದುಕನ್ನು ಸುಂದರ ಮಾಡುವ ಶಕ್ತಿ ಇರುವಂತೆಯೇ ಅದನ್ನು ಬುಡಮೇಲು ಮಾಡಿ, ಕುಟುಂಬಗಳನ್ನೇ ನಾಶ ಮಾಡುವ, ಜೀವನ ಶೈಲಿಯನ್ನೇ ಛಿದ್ರ ಮಾಡುವ ಶಕ್ತಿಯೂ ಇರುತ್ತದೆ. ಚಿತ್ರೋದ್ಯಮಕ್ಕೆ ಬಂದಮೇಲೆ ನನಗೆ ಮಳೆಯ ಈ ಎರಡೂ ಮುಖಗಳನ್ನು ತೆರೆಯ ಮೇಲೆ ಸೃಷ್ಟಿಸಬೇಕೆಂಬ ತವಕ ಇತ್ತು. ನಾ. ಡಿಸೋಜಾರ ಒಡ್ಡು, ಮುಳುಗಡೆ, ದ್ವೀಪ ಕಾದಂಬರಿಗಳಲ್ಲಿ ಮತ್ತು ಕೆಲವು ಕತೆಗಳಲ್ಲಿ ಇದಕ್ಕೆ ಅವಕಾಶ ಇರುವುದನ್ನು ಗಮನಿಸಿದ್ದೆ. ಅವುಗಳಲ್ಲಿ ನಾನು ಆರಿಸಿಕೊಂಡ ಕಾದಂಬರಿ ‘ದ್ವೀಪ’. ನನ್ನ ಕಾಳಜಿಯನ್ನು ಬಿತ್ತಿ ಬೆಳೆಸಬಹುದಾದ ಶಕ್ತಿ ಈ ಕಾದಂಬರಿಯಲ್ಲಿ ಇದೆ, ಹಾಗೆಯೇ ಮಳೆಯ ವಿರಾಟ ರೂಪದ ಹಲವು ಮುಖಗಳನ್ನು ಚಿತ್ರಿಸಲೂ ‘ದ್ವೀಪ’ ಒಂದು ಒಳ್ಳೆಯ ಭಿತ್ತಿ ಒದಗಿಸುತ್ತದೆ ಎಂದು ಕಾದಂಬರಿ ಓದಿದಾಗಲೇ ನಾನು ಕಲ್ಪನೆ ಮಾಡಿಕೊಂಡಿದ್ದೆ. + +***** + +ಪೈ:ಸೌಂದರ್ಯ ಅವರು ದಕ್ಷಿಣ ಭಾರತದಲ್ಲೇ ಮೊದಲ ಸ್ಥಾನದಲ್ಲಿದ್ದ ನಟಿಯಾಗಿದ್ದ ದಿವಸಗಳವು. ಜನಪ್ರಿಯ ನಟನಟಿಯರು ಕಲಾತ್ಮಕ ಚಿತ್ರಗಳಲ್ಲಿ ಪಾಲ್ಗೊಳ್ಳುವುದು ಅಪರೂಪ. ಸೌಂದರ್ಯ ನಿಮ್ಮ ದ್ವೀಪ ಚಿತ್ರದ ನಿರ್ಮಾಪಕಿಯಾದದ್ದು ಮಾತ್ರವಲ್ಲ, ನಟಿಸಿಯೂ ಇದ್ದಾರೆ. + +ಗಿರೀಶ್:ಒಂದು ಸಲ ದೆಹಲಿಯಲ್ಲಿ ನಡೆದ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ(I.F.F.I.))ದಲ್ಲಿ ಒಂದು ಚಿತ್ರ ನೋಡಿ ಹೊರಬರುತ್ತಿರುವಾಗ ಕನ್ನಡದ ಖ್ಯಾತ ನಿರ್ಮಾಪಕರಾದ ಎಚ್.ಎನ್. ಮಾರುತಿಯವರು ಸಿಕ್ಕಿ, ‘ಸೌಂದರ್ಯ ಅವರು ನಿಮ್ಮನ್ನು ಒಮ್ಮೆ ಭೇಟಿಯಾಗಬೇಕಂತೆ. ಅವರು ನಿಮ್ಮ ಕೈಯಲ್ಲಿ ಒಂದು ಸಿನಿಮಾ ಮಾಡಿಸಬೇಕೆಂದು ಅಪೇಕ್ಷಿಸಿದ್ದಾರೆ’ ಎಂದರು. ಸೌಂದರ್ಯ ಅವರ ತಂದೆ ಸತ್ಯನಾರಾಯಣರವರು ಮಾರುತಿಯವರ ಸ್ನೇಹಿತರು. ಅವರ ನಿರ್ಮಾಣದ ಚಿತ್ರಗಳಿಗೆ ಸತ್ಯನಾರಾಯಣ್ ಅವರು ಚಿತ್ರಕಥೆ ಬರೆದಿದ್ದರಲ್ಲದೇ ಸ್ವತಃ ಒಂದೆರಡು ಸಿನಿಮಾಗಳನ್ನು ನಿರ್ದೇಶಿಸಿದ್ದರು. ದಕ್ಷಿಣ ಭಾರತದಲ್ಲೇ ಅತ್ಯಂತ ಜನಪ್ರಿಯ ನಟಿಯಾಗಿದ್ದ, ತೆಲುಗಿನಲ್ಲಿ ತಾರಾ ಮೌಲ್ಯ ಪಡೆದಿದ್ದ ನಟಿ, ಹಿಂದಿಯಲ್ಲೂ ಅಮಿತಾಬ್ ಬಚ್ಚನ್ ಅಂತಹವರ ಜೊತೆ ನಟಿಸುತ್ತಿದ್ದ ಸೌಂದರ್ಯ ಅವರು ನನ್ನ ಹತ್ತಿರ ಯಾಕೆ ಸಿನಿಮಾ ಮಾಡಿಸುತ್ತಾರೆ ಎಂದು ಅನುಮಾನಿಸಿದ್ದೆ. ಅಲ್ಲಲ್ಲಿ ಸಿಕ್ಕ ಕೆಲವರು ಸಿನಿಮಾ ಮಾಡೋಣ ಎಂದು ಹೇಳಿದ್ದಿದೆ, ಆದರೆ ಅವು ದೇಶಾವರಿ ಮಾತಾಗಿದ್ದು, ಯಾವತ್ತೂ ಕಾರ್ಯಗತವಾಗಿಲ್ಲ. ಇದೂ ಒಂದು ಅಂತಹದೇ ಶುಷ್ಕ ಯೋಜನೆ ಎಂದು ಭಾವಿಸಿ ಭೇಟಿಯಾಗೋಣ ಎಂದು ಮಾರುತಿಯವರಿಗೆ ಹಾರಿಕೆಯ ಉತ್ತರ ನೀಡಿದೆ. ಫೆಸ್ಟಿವಲ್ ಮುಗಿದ ಒಂದು ವಾರದೊಳಗೆ ಮಾರುತಿಯವರು, ಸೌಂದರ್ಯ ಅವರ ಅಣ್ಣ ಅಮರ್‌ನಾಥ್ ಜೊತೆಗೆ ಮನೆಗೆ ಬಂದಾಗ ನನಗೆ ಆಶ್ಚರ್ಯವೇ ಆಯಿತು. ಅಮರ್‌ನಾಥ್‌ರವರು ‘ನಮ್ಮ ತಂದೆಯ ಹೆಸರಲ್ಲಿ ಒಂದು ನಿರ್ಮಾಣ ಸಂಸ್ಥೆ ಆರಂಭಿಸುತ್ತಿದ್ದೇವೆ. ಆ ಸಂಸ್ಥೆಯ ಮೂಲಕ ನಿಮ್ಮ ನಿರ್ದೇಶನದಲ್ಲಿ ಒಂದು ಸಿನೆಮಾ ಮಾಡಬೇಕೆಂದಿದೆ. ತಂಗಿ ಸೌಂದರ್ಯಳಿಗೆ ಪ್ರಮುಖ ಪಾತ್ರ ಇರಲಿ. ಅದು ನಮ್ಮ ತಂದೆಯವರಿಗೆ ಸೂಕ್ತವಾದ ಒಂದು ಟ್ರಿಬ್ಯೂಟ್ ಆಗುವಂಥ ಚಿತ್ರವಾಗಬೇಕು ಎನ್ನುವುದು ನಮ್ಮ ಮುಖ್ಯ ಉದ್ದೇಶ’ ಎಂದರು. ನನ್ನ ತಲೆಯಲ್ಲಿ ಸಿನಿಮಾಕ್ಕೆ ಸೂಕ್ತವಾದ ಎರಡು ಮೂರು ಕತೆಗಳು ಇದ್ದವು. ಅವುಗಳಲ್ಲಿ ನಾ. ಡಿಸೋಜಾ ಅವರ ಕಿರು ಕಾದಂಬರಿ ‘ದ್ವೀಪ’ವೂ ಒಂದು. ಕತೆ ಕೇಳುತ್ತಿದ್ದ ಹಾಗೇ ಮಾರುತಿಯವರೂ ‘ದ್ವೀಪ’ವನ್ನು ಆಯ್ಕೆ ಮಾಡಿದರು. ಮಳೆಯ ಬಗ್ಗೆ ಒಂದು ಸಿನಿಮಾ ಮಾಡುವ ಹಂಬಲ ಅವರಿಗೂ ಇತ್ತಂತೆ. + + + +ಪೈ:ನಾ. ಡಿಸೋಜರ ಕಾದಂಬರಿಗೂ ದ್ವೀಪ ಚಿತ್ರಕ್ಕೂ ತುಂಬ ವ್ಯತ್ಯಾಸವಿದೆ. ಮುಖ್ಯಪಾತ್ರಗಳ ಜಾತಿಯನ್ನು ಬದಲಿಸಿದ್ದೀರಿ, ತ್ರಿಕೋನ ಸಂಬಂಧವನ್ನು ಕೈ ಬಿಟ್ಟಿದ್ದೀರಿ, ಅಂತ್ಯದಲ್ಲಿ ಎಲ್ಲರೂ ಸಾಯುತ್ತಾರೆ. ಅದನ್ನೂ ಅಡಕ ಮಾಡಿಕೊಂಡಿಲ್ಲ. ಕಿರು ಕಾದಂಬರಿಯಲ್ಲಿ ಮುಖ್ಯವಾಗಿ ಪರಿಹಾರ ಸಿಗದಿರುವುದೇ ಎಲ್ಲ ಸಮಸ್ಯೆಗಳಿಗೆ ಕಾರಣವಾಗಿರುತ್ತದೆ. + +ಗಿರೀಶ್:ಅವುಗಳನ್ನು ಕೈ ಬಿಡಲು ನನ್ನದೇ ಆದ ಕಾರಣಗಳಿದ್ದವು. ಕಾದಂಬರಿಗೆ ದೃಷ್ಟಾಂತ ಕತೆಯ (fable) ಗುಣ ಇದೆ. ಕೈಬೆರಳೆಣಿಕೆಯ ಪಾತ್ರಗಳು, ಘಟನೆಗಳ ಸರಮಾಲೆ ಇಲ್ಲದ ದೃಷ್ಟಾಂತ ಕತೆಗಳ ಸ್ವರೂಪವೇ ಚಿತ್ರಕ್ಕೂ ಸೂಕ್ತ ಎನ್ನಿಸಿತು. ಮುಳುಗಡೆ ತಂದೊಡ್ಡುವ ಸಾಮಾಜಿಕ ಬಿಕ್ಕಟ್ಟನ್ನು ಚಿತ್ರಿಸುತ್ತಲೇ ಅದರ ನಿವಾರಣೆಗೆ ಸರ್ಕಾರ ಸೂಚಿಸುವ ಪರಿಹಾರ ಕ್ರಮ ಎಷ್ಟು ನೈತಿಕ ಎಂಬ ಪ್ರಶ್ನೆಯೂ ಚಿತ್ರದಲ್ಲಿದೆ. ಅಭಿವೃದ್ಧಿಯ ಕಾರಣದಿಂದ ಜನರನ್ನು ಸ್ಥಳಾಂತರ ಮಾಡುವುದು ಅನಿವಾರ್ಯ ಎಂದು ಎಷ್ಟೇ ಸಮಜಾಯಿಷಿ ಕೊಟ್ಟರೂ, ಅದರ ಹಿಂದಿನ ಅಮಾನವೀಯತೆಯನ್ನು ಮುಚ್ಚಿಡುವುದು ಅಸಾಧ್ಯ. ಸರ್ಕಾರ ಪರಿಹಾರ ನಿಗದಿಪಡಿಸಲು ಮನೆ, ಗದ್ದೆ, ತೋಟ ಮುಂತಾದ ಅಳೆಯಬಹುದಾದ ಆಸ್ತಿಯನ್ನು ಅಳತೆಗೋಲಾಗಿ ಬಳಸುತ್ತದೆ. ಆದರೆ ಆ ತಕ್ಕಡಿಗೆ ಸಿಗದ ಎಷ್ಟೋ ವೃತ್ತಿಗಳಿರುತ್ತವೆ. ಆಸ್ತಿ ಇಲ್ಲದಿದ್ದರೂ ಯಾವುದೋ ವೃತ್ತಿ ಮಾಡುತ್ತಾ, ಗೌರವಯುತ ಜೀವನ ನಡೆಸುತ್ತಿರುವವರೂ ಇರುತ್ತಾರಲ್ಲ! ಅಂತಹವರನ್ನು ಸ್ಥಳಾಂತರ ಮಾಡಿ ಹಣದ ರೂಪದಲ್ಲಿ ಕೊಡುವ ಪರಿಹಾರ ನಿಜವಾದ ಪರಿಹಾರವಾದೀತೇ? ಅವರಿಗೆ ಈಗಿರುವ ಗೌರವ ಉಳಿದೀತೇ? ಕತೆಯ ಗಣಪಯ್ಯನನ್ನು ಅಂತಹ ಒಬ್ಬ ವ್ಯಕ್ತಿಯನ್ನಾಗಿ ಮಾಡಿದರೆ, ಆಗ ಸರಕಾರ ಬಳಸುವ ತಕ್ಕಡಿಯನ್ನೇ ಪ್ರಶ್ನಿಸಿ, ಇಡೀ ಅಭಿವೃದ್ಧಿಯ ಹಿಂದಿನ ಕರಾಮತ್ತಿನ ರಾಜಕೀಯವನ್ನು ಪ್ರಕಟ ಪಡಿಸುವ ಸಾಧ್ಯತೆ ಇದೆ ಅನ್ನಿಸಿತು. ಒಂದು ಪರಿಸರದಲ್ಲಿ ಡ್ಯಾಂ ಕಟ್ಟಿದಾಗ ಎರಡು ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಒಂದು ಸ್ಥಳಾಂತರಕ್ಕೆ ಸಂಬಂಧಿಸಿದ್ದು, ಮತ್ತೊಂದು ಮುಳುಗಡೆಗೆ ಸಂಬಂಧಿಸಿದ್ದು. ಇನ್ನೊಂದು ಊರಿನಲ್ಲಿ ಜಮೀನು, ಹಣ ನೀಡಿದರೆ ಸ್ಥಳಾಂತರದ ಸಮಸ್ಯೆಯನ್ನು ಪರಿಹರಿಸಬಹುದು. ಆದರೆ ಮುಳುಗಡೆಯ ಪ್ರಶ್ನೆ ಇನ್ನೂ ಗಹನವಾದದ್ದು. ಮುಳುಗಡೆಯಾದಾಗ ಒಂದು ಭೌಗೋಳಿಕ ಸ್ಥಳ ಮಾತ್ರ ಮುಳುಗುತ್ತಿರುವುದಿಲ್ಲ. ಅದರೊಂದಿಗೆ ಅಲ್ಲಿನ ಜೀವನ ಕ್ರಮ, ಸಾಮುದಾಯಿಕ ಸಂಬಂಧಗಳು, ಸಂಪ್ರದಾಯ, ಕಲೆಗಳೂ ಮುಳುಗಡೆಯಾಗುತ್ತಿರುತ್ತವೆ. ಅವಕ್ಕೆ ಪರಿಹಾರವೇನು, ಅವುಗಳ ಪುನರುಜ್ಜೀವನ ಸಾಧ್ಯವೇ ಎಂಬುದು ನೈತಿಕ ಪ್ರಶ್ನೆ. ಈ ಪ್ರಶ್ನೆಗೆ ಸರ್ಕಾರದ ಬಳಿಯಾಗಲೀ, ಅಧಿಕಾರ ಯಂತ್ರದಲ್ಲಾಗಲೀ, ಸಮಾಜದಲ್ಲಾಗಲೀ ಉತ್ತರ ಸಿಗುವುದಿಲ್ಲ. + + + +ಪೈ:ಚಿತ್ರದಲ್ಲಿ ನಾಲ್ಕು ಪಾತ್ರಗಳ ಜೊತೆ ಮಳೆಯೂ ಒಂದು ಪಾತ್ರವಾಗಿ ಬರುತ್ತದೆ. ಸಿನಿಮಾದ ಅನೇಕ ತಿರುವುಗಳಿಗೆ ಅದೇ ಕಾರಣವಾಗುತ್ತದೆ. + +ಗಿರೀಶ್:ನಮ್ಮ ಹೆಚ್ಚಿನ ಚಿತ್ರಗಳಲ್ಲಿ ಮಳೆ ಬಳಕೆಯಾಗುತ್ತಿದ್ದುದು ಒಂದೋ ಹಾಡು, ನೃತ್ಯದ ಚಿತ್ರಣದಲ್ಲಿ, ಇಲ್ಲವೇ ಫೈಟಿಂಗ್‌ಗೆ ಹಿನ್ನೆಲೆಯಾಗಿ. ಅಲ್ಲೆಲ್ಲಾ ಮಳೆಯು ನಡೆಯುತ್ತಿರುವ ಘಟನೆಗೆ ಹಿನ್ನೆಲೆ ಒದಗಿಸುತ್ತಿತ್ತು ಅಷ್ಟೇ. ಅದು ಪಾತ್ರವಾಗಿ ಬಂದ ಉದಾಹರಣೆ ಕಡಿಮೆ. ಹಾಗೆ ಮಾಡಿದಾಗಲೂ ಮಳೆಯು ಸಿನಿಮಾಕ್ಕೆ ತರುವ ರಮ್ಯತೆಗೇ ಹೆಚ್ಚು ಒತ್ತು ಇರುತ್ತಿತ್ತು. ಹಾಗಾಗದೇ ಮಳೆ ಒಂದು ಪಾತ್ರವೇ ಆಗಬೇಕು ಎಂಬ ಉದ್ದೇಶ ನಮ್ಮದಾಗಿತ್ತು. ಈ ಚಿತ್ರದ ದ್ವಿತೀಯಾರ್ಧದಲ್ಲಿ ಕೇಂದ್ರ ಪಾತ್ರಗಳನ್ನು ಮತ್ತು ಅವುಗಳ ನಿರ್ಧಾರಗಳನ್ನು ನಿಯಂತ್ರಿಸುವುದೇ ಮಳೆ. ಮಳೆಯಿಂದಾಗಿಯೇ ದುಗ್ಗಜ್ಜನ ಸಂಸಾರ ತಮ್ಮ ಮನೆ ಬಿಟ್ಟು ಹೇರಂಭನ ಮನೆಗೆ ಹೋಗಿರಬೇಕಾಗುತ್ತದೆ. ಮಳೆ ಮತ್ತು ಏರುತ್ತಿರುವ ನೀರು ತಂದೊಡ್ಡುತ್ತಿರುವ ಸಮಸ್ಯೆಗಳಿಂದಾಗಿ ಗಣಪ ಮತ್ತು ಕೃಷ್ಣರ ನಡುವೆ ತಮ್ಮ ಸಾಮರ್ಥ್ಯ ತೋರಿಸಿಕೊಳ್ಳುವ ಸಲುವಾಗಿ ಚಿಕ್ಕದಾಗಿ ಪೈಪೋಟಿ ಬೆಳೆಯತೊಡಗುತ್ತದೆ. ಅದು ಈರ್ಷ್ಯೆಗೆ ಎಡೆಮಾಡಿಕೊಡುತ್ತದೆ. ದುಗ್ಗಜ್ಜನ ಸಾವು, ಗಣಪನಲ್ಲಿ ಬೆಳೆಯುವ ಕೀಳರಿಮೆ, ಕೃಷ್ಣನ ಪಲಾಯನ, ಅಂತಿಮವಾಗಿ ನಾಗಿಗೆ ಸಿಗುವ ನಿರಾಳತೆ ಇವೆಲ್ಲವುಗಳ ಹಿಂದೆ ಮಳೆಯ ಪಾತ್ರವಿದೆ. ಅದಕ್ಕೇ ಹೇಳಿದ್ದು, ಮಳೆಯೇ ಒಂದು ಪಾತ್ರವಾಗಿ ಕೆಲಸ ಮಾಡುತ್ತದೆ ಎಂದು. ಚಿತ್ರಕಥೆ ಬರೆಯುತ್ತಿರುವಾಗಲೇ ಐದು ಪಾತ್ರಗಳಿರುವ ಕತೆ ಇದು ಎಂದು ಬೆಳೆಸುವ ನಿರ್ಧಾರ ಮಾಡಿದ್ದೆ. ದುಗ್ಗಜ್ಜ, ಗಣಪ, ನಾಗಿ, ಕೃಷ್ಣ ಮತ್ತು ಮಳೆ. + + + +ಪೈ:ಕೃಷ್ಣ ಮತ್ತು ನಾಗಿಯರ ನಡುವೆ ಪ್ರೇಮ ಸಂಬಂಧ ಇಲ್ಲ ಎನ್ನುವುದು ಚಿತ್ರದಲ್ಲಿ ಬಂದಿದೆ. ಆದರೆ ಕೃಷ್ಣ ಮತ್ತು ಗಣಪನ ನಡುವೆ ಈರ್ಷ್ಯೆಯೂ ಇದೆ. + +ಗಿರೀಶ್:ನಾಗಿ, ಕೃಷ್ಣ ಮತ್ತು ಗಣಪನ ನಡುವೆ ಇರುವ ಸಂಬಂಧ ವಿಲಕ್ಷಣವಾದದ್ದು. ನಾಗಿಗೆ ಕೃಷ್ಣನ ಬಗ್ಗೆ ಆಕರ್ಷಣೆಯಿರುವುದು ಲೈಂಗಿಕ ಕಾರಣಕ್ಕಾಗಿ ಅಲ್ಲ, ಆತ ತನ್ನ ಗಂಡನಿಗಿಂತ ಹೆಚ್ಚು ಸಮರ್ಥ ಎಂಬ ನಂಬಿಕೆಯಿಂದ. ಅದು ಪೊಳ್ಳು ಎನ್ನುವುದು ಚಿತ್ರ ಬೆಳೆದಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ. ಆದರೂ ಎಷ್ಟೋ ವರ್ಷದಿಂದ ಅದೇ ಊರಲ್ಲಿ ಬದುಕು ರೂಪಿಸಿಕೊಂಡು ಬಂದಿದ್ದ ಗಣಪನಿಗಿಂತ ಹೊಸದಾಗಿ ಬಂದ ಕೃಷ್ಣ ಸಮರ್ಥ ಎಂದು ನಾಗಿಗೆ ಅನ್ನಿಸಲು ಕಾರಣ ತಾವಿರುವ ದ್ವೀಪಕ್ಕಿಂತ ಹೆಚ್ಚು ನಾಗರಿಕ ಸಂಪರ್ಕವಿರುವ ಬೊಂಬಾಯಿಂದ ಆತ ಬಂದಿದ್ದಾನೆ ಎಂಬುದು. ಲೋಹಿಯಾ ಅವರು ಭಾರತೀಯ ಸಮಾಜದಲ್ಲಿ ಕೀಳರಿಮೆ ಹುಟ್ಟಿಸುವ ಮೂರು ಅಂಶಗಳು ಜಾತಿ, ಮೈ ಬಣ್ಣ, ಮತ್ತು ಇಂಗ್ಲೀಷ್ ಜ್ಞಾನ ಎಂದು ಹೇಳುತ್ತಾರೆ. ಅದರೊಂದಿಗೇ ನಾಲ್ಕನೆಯದಾಗಿ ನಾಗರಿಕ ಪ್ರಪಂಚದ ನಂಟು ಎಂದೂ ಸೇರಿಸಬಹುದೇನೋ. + + + +ಕೃಷ್ಣ ಇವರ ಜೀವನದೊಳಕ್ಕೆ ಪ್ರವೇಶಿಸುತ್ತಿದ್ದಂತೆಯೇ ಗಣಪ ಒಂದು ರೀತಿಯ ಕೀಳರಿಮೆಯಿಂದ ಕುಗ್ಗಿಹೋಗುವುದು ಇದೇ ಕಾರಣಕ್ಕೆ. ಇದು ನನಗೆ ಹೊಳೆದದ್ದು ಡಾ. ಯು.ಆರ್. ಅನಂತಮೂರ್ತಿಯವರ ಒಂದು ಲೇಖನ ಓದಿದ ಮೇಲೆ. ಅವರು ಪ್ರಾಸಂಗಿಕವಾಗಿ ಅಮೇರಿಕಾದ ಸಿನಿಮಾ ನಿರ್ದೇಶಕ ರಾಬರ್ಟ್ ಫ್ಲಾಹರ್ಟಿಯ ‘ನಾನೂಕ್ ಆಫ್ ದ ನಾರ್ಥ್’ ಸಿನಿಮಾವನ್ನು ತಮ್ಮ ಆ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ರಾಬರ್ಟ್ ಫ್ಲಾಹರ್ಟಿಯನ್ನು ಕಥಾಚಿತ್ರದ ಸ್ವರೂಪ ಇರುವ ಸಾಕ್ಷ್ಯಚಿತ್ರಗಳ ಜನಕ ಎಂದು ಪರಿಗಣಿಸಲಾಗುತ್ತಿದೆ. ಸ್ಥಿರ ಛಾಯಾಗ್ರಾಹಕನಾದ ಆತ ಮೂಲನಿವಾಸಿಗಳಿರುವಲ್ಲಿಗೆ ಹೋಗಿ ಅವರ ಜೊತೆ ಬದುಕಿ ಅವರ ಕತೆಯನ್ನೇ ಸಿನಿಮಾ ಮಾಡಿ ಜಗದ್ವಿಖ್ಯಾತನಾದವನು. ನಾನೂಕ್ ಉತ್ತರ ಧ್ರುವದಲ್ಲಿ ಬದುಕುತ್ತಿರುವ ಒಬ್ಬ ಎಸ್ಕಿಮೋ (ಇನ್ಯೂಟ್) ಜನಾಂಗದವನು. ತನ್ನ ಬದುಕಿನ ಅಗತ್ಯಗಳನ್ನು ಹೇಗೆ ಸಂಭಾಳಿಸಿಕೊಳ್ಳಬೇಕೆನ್ನುವ ವ್ಯಾವಹಾರಿಕ ಪ್ರಜ್ಞೆ ಅವನಿಗಿದೆ. ಪರಿಸರದಲ್ಲಿ ಸಿಗುವ ಮಂಜುಗಡ್ಡೆಯಿಂದಲೇ ತನ್ನ ಮನೆ (Igloo) ಕಟ್ಟಿಕೊಳ್ಳಬಲ್ಲ, ಪ್ರಯಾಣಕ್ಕೆ ಅಗತ್ಯವಾದ ಜಾರು ಗಾಡಿ (Sledge) ಮಾಡಬಲ್ಲ. ಆಹಾರಕ್ಕಾಗಿ ಈಟಿಯಿಂದ ಸೀಲ್ ಮೀನನ್ನು ಬೇಟೆಯಾಡುವ ತಂತ್ರವೂ ಗೊತ್ತು. ಸುಖವಾಗಿ ತನ್ನ ಜೀವನ ನಡೆಸಲು ಬೇಕಾದ ಎಲ್ಲ ಜ್ಞಾನವೂ, ಸಾಮರ್ಥ್ಯವೂ ಅವನಲ್ಲಿದೆ. ಈ ವಿಷಯ ಹೇಳಿದ ನಂತರ ಅನಂತಮೂರ್ತಿಯವರು ‘ಅಲ್ಲಿಗೆ ಕೋವಿ ಹಿಡಿದ ಒಬ್ಬ ಬಿಳಿಯನ ಪ್ರವೇಶವಾಗುತ್ತದೆ ಎಂದು ಭಾವಿಸಿ. ತಕ್ಷಣವೇ ನಾನೂಕ್‌ಗೆ ಕೀಳರಿಮೆ ಹುಟ್ಟುತ್ತದೆ. ಯಾಕೆಂದರೆ ಈ ಅಭ್ಯಾಗತನ ಮೈ ಬಣ್ಣ, ದೂರದಿಂದಲೇ ಮದ್ದು ಸಿಡಿಸಿ ಕೊಲ್ಲಬಲ್ಲ ಅವನ ಕೋವಿ ನೋಡಿ ಆತ ತನಗಿಂತ ಹೆಚ್ಚು ಸಮರ್ಥ, ಬಲಶಾಲಿ ಎಂದು ಭಾವಿಸುತ್ತಾನೆ’ ಎಂದು ಬರೆಯುತ್ತಾರೆ. ಇದು ಅನಂತಮೂರ್ತಿಯವರ ಹೇಳಿಕೆಯ ಭಾವಾನುವಾದ. ಕೃಷ್ಣನ ಪಾತ್ರ ಹುಟ್ಟಿದ್ದು ಈ ಒಳ ನೋಟದಿಂದ. ಕಾದಂಬರಿಯಲ್ಲಿರುವಂತೆ ಕೃಷ್ಣ ಮತ್ತು ನಾಗಿಯರ ಸ್ನೇಹ ಗಣಪನಲ್ಲಿ ಈರ್ಷ್ಯೆ ಹುಟ್ಟಲು ಕಾರಣವಾಗುವ ಬದಲು ತಾನು ಹೆಚ್ಚು ಸಮರ್ಥ ಎಂದು ನಂಬಿಸಲು ಹೊರಟ ಕೃಷ್ಣನ ಧೋರಣೆಯನ್ನು ನಿಜವೆಂದು ನಂಬಿದ ಗಣಪ ಕುಗ್ಗುತ್ತಾ ಹೋಗುವುದು ಹೆಚ್ಚು ಧ್ವನಿ ಪೂರ್ಣ ಎನ್ನಿಸಿತು. ಹಾಗಾಗಿ ನಾಗಿ ಕೃಷ್ಣರ ಸಂಬಂಧ ಪ್ರೇಮ ಸಂಬಂಧವೂ ಅಲ್ಲ, ಗಣಪ ಕೃಷ್ಣರದ್ದು ಘರ್ಷಣಾತ್ಮಕ ಸಂಬಂಧವೂ ಅಲ್ಲ. ಒಂದು ಸಂಸ್ಕೃತಿ ಯಾ ಸಮಾಜದ ಜನ ಇನ್ನೊಂದು ಸಂಸ್ಕೃತಿ ಯಾ ಸಮಾಜದ ಜನರ ಜೊತೆ ತಮಗರಿವಿಲ್ಲದೆಯೇ ಸೃಷ್ಟಿಸುವ ತರತಮ ಸಂಬಂಧದ ಕ್ರೌರ್ಯ ಇಲ್ಲಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_380.txt b/Kenda Sampige/article_380.txt new file mode 100644 index 0000000000000000000000000000000000000000..4e2918067eb7954666c7233f1120f5b15475589f --- /dev/null +++ b/Kenda Sampige/article_380.txt @@ -0,0 +1,59 @@ + + +ಒಂದೆರಡು ನಿಮಿಷ ಧೃತಿಗೆಟ್ಟ ನರಸಪ್ಪನವರು ಚೇತರಿಸಿಕೊಂಡರು. ಬೀರಣ್ಣನನ್ನು ಮನೆಗೆ ಓಡಿಸಿ ಒಂದು ಹೊಸ ಕೆಂಪು ವಸ್ತ್ರ ತರಿಸಿ ಅದನ್ನು ಹರಿದು ಪಟ್ಟಿಯಂತೆ ಮಾಡಿ ಹೆಣದ ಹಣೆಗೆ ಬಿಗಿದರು. ಮತ್ತೊಂದನ್ನುತಲೆಯಿಂದ ಗದ್ದದವರೆಗೆ ಬಿಗಿದು ಕಟ್ಟಿದರು. ಸೂಕ್ಷ್ಮವಾಗಿ ಗಮನಿಸದ ಹೊರತು ತಲೆಗೆ ಗಾಯವಾಗಿರುವುದು ತಿಳಿಯುತ್ತಿರಲಿಲ್ಲ. ಬೀರಣ್ಣನ ಸಹಾಯದಿಂದ ಹೆಣವನ್ನು ಮನೆಯ ಜಗತಿಗೆ ವರ್ಗಾಯಿಸಿದರು. ಬೀರಣ್ಣ ಹೆಣದ ಕೈ ಕಾಲು ಮಡಿಸಿ ಕುತ್ತಿಗೆಗೊಂದು ಕವೆಗೋಲು ಇಟ್ಟು ಅದನ್ನು ಕೂರಿಸಿದ. ಬಳಿಕ ನಾಲ್ಕು ಕೊಡ ನೀರುತಂದು ಕುರ್ಚಿಕಂಬವನ್ನು ತೊಳೆದರು. ಅಲ್ಲೆಲ್ಲೂ ರಕ್ತದ ಕಲೆ ಉಳಿಯದಂತೆ ಮಾಡಿದರು. ಅನಂತರ ಮತ್ತೊಮ್ಮೆ ಗಣಾಚಾರಿಯ ಶವದ ಮುಖ ಒರೆಸಿ, ಅವನದೇ ಒಂದು ಅಂಗಿ, ದಟ್ಟಿ ಪಂಚೆ ಉಡಿಸಿದರು. ಇವೆಲ್ಲವನ್ನು ಮೂಕಳಂತೆ ಗಮನಿಸುತ್ತ ಕೂತಿದ್ದಳು ಕೆಂಪಮ್ಮ. + +(ರಘು ವೆಂಕಟಾಚಲಯ್ಯ) + +ಈಗ ಅವಳ ಬಳಿಸಾರಿದ ನರಸಪ್ಪನವರು, “ಯಾಕೋ ತಾಯಿ ಮನಸ್ಸು ಮಾಡಲಿಲ್ಲ ಕಣವ್ವ. ಅವನ್ನ ಅವಳ ಉಡಿಗೆ ಹಾಕ್ಕೊಂಬುಟ್ಲು…” ಅಂದವರು ಆವರೆಗೆ ತಡೆದಿದ್ದ ದುಃಖ ಸಂಕಟವನ್ನೆಲ್ಲ ಹೊರಹಾಕುವಂತೆ ಜೋರಾಗಿ ಅಳತೊಡಗಿದರು. “ನೀವೇನು ಮಾಡ್ತೀರ ಬುಡಿ ಸಾಮಿ. ಅವನ ಕರ್ಮ ಅವನ್ನ ತಿಂತು… ನನ್ನ ಮುಂಡೆ ಮಾಡಿ ಒಂಟೋದ” ಅಂದವಳೇ ಬಾಯಿ ಬಡಿದುಕೊಂಡು ಅಳಲಾರಂಭಿಸಿದಳು. ಈ ಅಳು, ಚೀರಾಟ ಕೇಳಿ ಊರಜನರೆಲ್ಲ ನಿಧಾನವಾಗಿ ಜಮಾಯಿಸಿದರು. ಬೆಳಗಿನ ಜಾವದ ಹೊತ್ತಿಗೆ ಮನೆಯ ಮುಂದೆ ಅವನ ಕುಲದವರು, ಜಾತಿಯವರೆಲ್ಲ ಸೇರಿಬಿಟ್ಟಿದ್ದರು. ಜನ ಸೇರಿದ ಮೇಲೆ ಮಾತಿಗೆ ಕಡಿಮೆಯೆ? + +“ಹಾರುವಯ್ಯನ ಸಾವಾಸ ಮಾಡಿಕೆಟ್ಟ.”“ಚೌಡೇಶ್ವರಿನ ಸರ್ಯಾಗಿ ಪೂಜಸ್ಲಿಲ್ವಂತೆ ಅದ್ಕೆ ಇಂಗಾಯ್ತಂತೆ.”“ಆ ವಯ್ಯ ಕೆಂಪೀನ ಮಡೀಕ್ಕಂಬುಟ್ಟಿದ್ನಂತೆ…”“ಯಾವ್ದೋ ಶಕ್ತಿ ಒಲಿಸ್ಕಳಾಕ್ ಓಗ್ ಇಂಗಾಯ್ತಂತೆ.” + +ಕಾದ ಸೀಸದಂತಹ ಮಾತುಗಳು. ಎಲ್ಲವನ್ನು ಆಲಿಸುತ್ತ ಮನಸ್ಸು ಕಲ್ಲಾಗಿಸಿ, ಹೃದಯ ನೀರಾಗಿಸಿ ಕಂಬಕ್ಕೊರಗಿ ಕೂತಿದ್ದರು ನರಸಪ್ಪನವರು. ಕೆಂಪಮ್ಮ ಲಾವಾ ರಸದಂತೆ ಕುದಿಯುತ್ತಿದ್ದಳು. ತೀರದ ದುಃಖವೊಂದೆಡೆ, ವಿಷಬಾಣದಂತಹ ಮಾತುಗಳು ಇನ್ನೊಂದೆಡೆ. ಜಾತಿ ಜನರೆಲ್ಲ ಸೇರಿ ಅವರ ಸಂಪ್ರದಾಯದಂತೆ ಚಟ್ಟ ಕಟ್ಟಿದರು. ದೂರದೂರಿನಿಂದ ಯಾರೂ ಬರಬೇಕಿರಲಿಲ್ಲ. ಕುಲಸ್ಥರೆಲ್ಲ ಆಗಲೆ ಸೇರಿದ್ದರು. ಬೆಳಗ್ಗೆ ಹತ್ತುಗಂಟೆಯ ವೇಳೆಗೆ ಹೆಣವನ್ನು ಎತ್ತಲು ಮುಂದಾದರು. ಅಲ್ಲಿಯವರೆಗೆ ಸುಮ್ಮನಿದ್ದ ನರಸಪ್ಪನವರು ದಿಗ್ಗನೆ ಎದ್ದು ಕೇಳಿದರು, + +“ಏನ್ ಮಾಡ್ತೀರಿ, ಗಣಾಚಾರೀನ?”“ಸತ್ತೋರ್ನ ಇನ್ನೇನ್ ಮಾಡ್ತಾರೆ. ಮಣ್ ಮಾಡ್ತಾರೆ ಕಣಯ್ಯ” ಗುಂಪಿನಿಂದ ತೂರಿ ಬಂತು ದನಿ.“ಇಲ್ಲ. ಗಣಾಚಾರಿ ಶವಾನ ಸುಡಬೇಕು. ಮಣ್ಣು ಮಾಡೋದ್ ಬೇಡ.” + +“ಏನೋ ಒಳ್ಳೆ ಹಾರುವ, ಸ್ನೇಇತಅಂತ ಸುಮ್ನಿದ್ರೆ ನಮ್ ರಿವಾಜ್ನೇ ಆಳ್ ಮಾಡ್ತಾವ್ನೆ. ನಮ್ ಜಾತಿ ಪ್ರಕಾರ ನಾವ್ ಹೂಣೋದೇಯ. ಎತ್ರಲಾ ಹೆಣಾನ…” + +ತಂತ್ರದ ಸ್ವಲ್ಪ ಹಿನ್ನೆಲೆ ಉಳ್ಳವರಿಗೂ ಗೊತ್ತು ಇಂತಹ ಹೆಣಗಳಿಗೆ ಆ ಲೋಕದಲ್ಲಿ ಎಂತಹ ಬೆಲೆ, ಈ ಲೋಕದಲ್ಲಿ ಎಷ್ಟು ಉಪಯೋಗ ಅಂತ. ಇಂತಹ ಶಕ್ತಿಸಾಧಕರ ರುಂಡ, ಕಪಾಲ ಎಲ್ಲವನ್ನು ಮಣ್ಣುಮಾಡಿದ ಮೂರು ದಿನದೊಳಗೆ ಕತ್ತರಿಸಿ ಒಯ್ಯುತ್ತಾರೆ. ಬಳಿಕ ದೇಹವನ್ನು ಕ್ಷುದ್ರಶಕ್ತಿಗಳು ಭುಂಜಿಸಿಬಿಡುತ್ತವೆ. ರುಂಡ ಪೀಠಕ್ಕೆ ಉಪಯೋಗ, ಕಪಾಲ ನಾನಾತರಹದ ಉಪಯೋಗ. ಮದ್ಯ, ಮತ್ಸ್ಯಗಳ ನೈವೇದ್ಯಕ್ಕೆ ಅದೇ ಪಾತ್ರ. ಈ ಮುಂಡೆಮಕ್ಳಿಗೆ ಇವೆಲ್ಲ ಹೇಳಿ ಅರ್ಥಮಾಡ್ಸೋಕಾಗಲ್ಲ… ಕ್ಷಣೇಕ್ಷಣೇ ನರಸಪ್ಪನವರ ಕೋಪ ನೆತ್ತಿಗೇರುತ್ತಿತ್ತು. ಕಣ್ಣು ಕೆಂಪಾಯಿತು, ಮೈ ಅದುರತೊಡಗಿತು. ಎತ್ತರದ ದನಿಯಲ್ಲಿ ಗುಡುಗಿದರು. + +“ಯಾವಾನಾದರೂ ಚಟ್ಟ ಮುಟ್ಟಿದರೆ ಅವನ ಕೈ ಸೇದೋಗತ್ತೆ.”“ಈ ವಯ್ಯನ್ದು ಜಾಸ್ತಿಯಾಯ್ತು ಕಣ್ರಲಾ. ದಡಿ ಮುರ್ಕೊಂಡು ನಾಲ್ಕಿಕ್ಕಿದ್ರೆ ಸರೊಯ್ತಾನೆ…” + +ನರಸಪ್ಪನವರು ಕೈಯ ಒಂದು ಹಿಡಿಯಲ್ಲಿ ಕುಂಕುಮವನ್ನು ಮತ್ತೊಂದು ಮುಷ್ಟಿಯಲ್ಲಿ ನಿಂಬೆ ಹಣ್ಣನ್ನು ಹಿಡಿದು ದಡದಡನೆ ಹೋಗಿ ಚಟ್ಟದ ಪಕ್ಕದಲ್ಲಿ ನಿಂತರು. ಅಷ್ಟರಲ್ಲಿ ತಡಿಕೆಯ ಕಡೆಯಿಂದ “ಏಯ್ ಯಾವೋನ್ಲಾ ಅವ್ನು ದಡಿ ಪಡಿ ಅಂತ ಮಾತಾಡೋನು. ಊರ ಪಂಚರು, ಹಿರೀಕರು ಅನ್ನೋ ಗ್ಯಾನ ಮಾನಾ ಇಲ್ವೇನ್ರಲಾ…?” ಪಟೇಲ್ ರುದ್ರೇಗೌಡರ ಧ್ವನಿ ಕೇಳಿಬಂತು. + +“ಏನ್ ಐನೋರಾ. ಈ ನನ್ಮಕ್ಳು ಬುದ್ಧಿ ಗೊತ್ತಿದ್ದು ಇಂಥ ಎಡವಟ್ಕೋರರ್ನ ಮನೆ ಮುಂದೆ ಸೇರ್ಸಕೊತೀರಾ. ನಂಗೊಂದ್ಮಾತ್ ಯೋಳ್ಕಳ್ಸೋದಲ್ವರಾ? ಬನ್ನಿ ಅದೇನ್ ಗಲಾಟೆ ಕುಂತ್ ಮಾತಾಡನ.” ನರಸಪ್ಪನವರನ್ನು ಕರೆದುಕೊಂಡು ಬಂದು ಜಗತಿಯ ಮೇಲೆ ಕುಳಿತರು ರುದ್ರೇಗೌಡರು. + +“ಮಕ ನೋಡ್ ಮಾತಾಡೊ ಪಟೇಲ, ತಿಕ ನೋಡ್ ಮಣೆ ಆಕೋ ಸಾನುಬೋಗ ಪಂಚಾಯ್ತಿಗೆ ಕುಂತವ್ರೆ ನೋಡ್ರಲಾ…” ಗುಂಪಿನ ಗುಸುಗುಸುವಿನ ನಡುವೆಯಿಂದ ಮಾತು, ಕಿಸಕಿಸ ನಗು. ರುದ್ರೇಗೌಡರು ಧ್ವನಿ ಬಂದತ್ತ ದುರುಗುಟ್ಟಿ ನೋಡಿದರು. + +“ನಾಲಗೆ ಕೊಟ್ಟವ್ನೆ ಸಿವ ಅಂತ ಉದ್ದ ಬುಟ್ರೆ ಕತ್ರಿಸೋದು ಎಂಗೆ ಅಂತ ರುದ್ರೇಗೌಡನ್ಗೆ ಗೊತ್ತು. ಸಂತೆ ಸೂಳೆ ಅಂಗೆ ಗುಂಪಿನ್ ಮಧ್ಯದಿಂದ ಮುಲುಕೋದು ಬುಟ್ಟು ಅಪ್ಪನ್ಗುಟ್ದೋನಂಗೆ ಮಕ ತೋರ್ಸಿ ಮಾತಾಡ್ಬೇಕು. ನಿಮ್ ಇರಾದೆ ಏನು ಅಂತ ಕೇಳಾಕೆ ನಾವಿಲ್ಲಿ ಕುಂತಿರೋದು… ಏಯ್ ಲಕ್ಸಮಾಚಾರಿ, ನಿಮ್ ಜಾತಿಕುಲದ್ ಹಿರಿಯ ನೀನು. ಬಾ ಇಲ್ಲಿ, ಕುಂತ್ಕ ನಮ್ ಕೂಡ ಪಂಚಾಯತ್ಕೆಗೆ.” + +“ಈಗ್ ಏಳ್ರಪ್ಪ ನಿಮ್ ಅವಾಲು.” + +“ನಮ್ ಜನಗೋಳಲ್ಲಿ ಎಣ ಊಣೋದು ಪದ್ತಿ. ಆದರೆ ಈ ಹಾರುವಯ್ಯ ಹೂಣೋದು ಬ್ಯಾಡಾ ಸುಡಬೇಕು ಅಂತವ್ನೆ.” + +“ಲೇ, ನೀನು ಗೋವಿಂದ್ನ ಪಾಳ್ಯದ ಹುಚ್ಚಪ್ಪನ ಮಗ ಕರಿಯ ಅಲ್ವೇನ್ಲಾ? ಯಾರ್ ಕುಟ್ಟೆ ಮಾತಾಡ್ತಿದೀಯ ಅಂತ ಗ್ಯಾನ ಐತೇನ್ಲಾ? ಹಾರುವಯ್ಯ ಅಂತ ಜಾತಿ ಇಡಿದು ಕರೀತಿಯಲ್ಲ, ಜೊತೆಗೆ ಅವ್ನು, ಇವ್ನು ಅಂತ ಬ್ಯಾರೆ… ಐನೋರೇನು ನಿಮ್ ಅಟ್ಟಿಗೆ ಭಿಕ್ಸಕ್ ಬಂದವ್ರೇನ್ಲಾ? ನೀವೇಯ ಸುಭ ಅಸುಭ ಅಂತ, ಲಗ್ನ ಕಟ್ಕೊಡಿ, ಆರೂಡಕ್ಕೆ ಯಾವ್ ದಿನ ಚಂದ, ಮಗೀಗ್ ಯಾವ್ ಎಸರ್ ಕಟ್ಬೇಕ್ ಅಂತತ ಕೇಳ್ಕಬರಾದು. ಊರು ಅಂದ್ಮೇಲೆ ಎಲ್ಲಜಾತಿನೂ ಒಂದೇ. ಹೊಲೇರ್ ಗಿರಿಯ, ನಮ್ ತೋಟಿ ತಮಟೆ ತಗೊಂಡ್ ಸಾರಿ, ಮಡಿವಾಳಿ ಗಂಗಮ್ಮ ನಡೆಮುಡಿ ಆಸಿ, ಕುರುಬರ ಕರಿಯ ಉಲಿ ವೇಸ ಆಕಿ, ನಾವೆಲ್ಲ ಸೇರಿಗುಡಿಗೆ ಸುಣ್ಣಒಡೆದು, ಅಯ್ನೋರ್ ಬಂದು ಪೂಜಿದ್ರಲ್ವೇನ್ಲಾ ಊರ್ ಅಬ್ಬಅಂತ ಆಗೋದು?” ರುದ್ರೇಗೌಡರು ಗದರಿದರು. + + + +“ಅವನು ಉಡುಗ ತಿಳಿಯಾಕಿಲ್ಲ ಬುಡಿ ಪಟೇಲ್ರೆ. ಈ ಅಯ್ನೋರು ಗಣಾಚಾರೀನ ಅವನ್ ಮನೆಯಿಂದ ಇಲ್ಲಿ ಕರ್ಕರ್ಂಬಂದು ಮಡಿಕಂಡಿದ್ದು ಅಲ್ದೆ ಈಗ ಅವನ ಎಣಾನ ಅವರ ಪದ್ಧತಿ ಅಂಗೆ ದಫನು ಮಾಡ್ಬೇಕು ಅಂತಾವ್ರೆ.” + +“ನಾನು ಊರಿನ, ಜನರ ಹಿತದೃಷ್ಟಿಯಿಂದ ಹಾಗೆ ಹೇಳ್ತಿದೀನ್ಯೆ ಹೊರತು ನನ್ನ ಸ್ವಾರ್ಥವೇನೂ ಇಲ್ಲ ಪಟೇಲರೆ” ನರಸಪ್ಪನವರು ನುಡಿದರು.“ನೋಡಿದ್ರಾ ಪಟೇಲ್ರೆ ಈ ವಯ್ನೋರ್ ಅಟಾನಾ? ಅವನ ಎಂಡ್ರನ್ನೂ ತಂದ್ ಮಡಿಕ್ಕಂಡವ್ರೆ…” + +ಜಗತಿಯ ಮೂಲೆಯಲ್ಲಿ ಕೂತಿದ್ದ ಕೆಂಪಮ್ಮ ಸರ್ಪದಂತೆ ಫೂತ್ಕರಿಸುತ್ತ ಜಗ್ಗನೆದ್ದು ನಿಂತಳು, “ಯಾವ್ ಮಿಂಡ್ರಗುಟ್ಟಿದ್ ನನ್ಮಗಾನ್ಲಾ ಅಂಗಂದೋನು? ಅಯ್ಯೋ ನಿನ್ ಬಾಯಿಗ್ ನನ್ ಆಟ್ ಉಯ್ಯ. ಈ ಅಯ್ನೋರ್ನ ಅಂದೋರ್ ಬಾಯ್ ಸೇದೋಯ್ತದೆ. ಚೌಡೇಸ್ವರಿ ಗುಡಿಜಮೀನು ಸರ್ಕಾರ ವಸ ಮಾಡ್ಕೋತದೆ ಅಂದಾಗತಿಕ ಬಾಯಿ ಮುಚ್ಕೊಂಡು ಇದ್ರಿ. ಗಣಾಚಾರಿ ಬೀದಿಗ್ ಬೀಳ್ತಾನೆ ಆಟ ನೋಡನ ಅಂತಿದ್ರಿ. ಆಗ ಓಡಾಡಿ ಊರ ಪಂಚರತಾವ ಪತ್ರ ಬರ್ಸಿ, ತಾವೇ ಸ್ವತ ಬೇಡಾಡಿ ನಿಮ್ ಜಾತಿ ದೇವಸ್ಥಾನ, ಜಮೀನು ಉಳಸ್ ಕೊಟ್ಟಿದ್ದು ಇದೇ ಅಯ್ನೋರು. ದೇವಿ ಚೌಡೇಸ್ವರಿ ಆಣೆ ಏಳ್ತೀನಿ. ಈ ವಯ್ಯ ನನ್ ಕಾಲುಂಗ್ರ ಬುಟ್ಟು ಮ್ಯಾಲಕ್ಕೆ ಯಾವತ್ತೂ ದಿಟ್ಸಿ ನೋಡಿಲ್ಲ. ತಂದೆ ಮಗಳಂಗೆ ನಮ್ ಸಂಬಂಧ. ಎಸ್ಟೊರ್ಸ ಆದ್ರು ಮಕ್ಳಾಗ್ದಿದ್ದಾಗ ಪೂಜೆ ಮಾಡ್ಸಿ ಯಂತ್ರಾನೂ ತಾವ್ ಕಟ್ದೆ ನನ್ ಯಜಮಾನನ್ ಕೈಲಿ ಕಟ್ಸುದ್ರು. ನನ್ನ ಯಾವತ್ತೂ ತಾಯಿ, ಅವ್ವ ಅಂತ, ಕೆಂಪಮ್ಮ ಅಂತ ಕರೆದವ್ರೆ ಒರ್ತು ಸದರ ಅಂತ ಇಲ್ವೇಇಲ್ಲ. ನಮ್ ಅಟ್ಟಿಗ್ ಬಂದ್ರು ಚೌಡೇಸ್ವರಿ ಅಂಕಣ ದಾಟಿ ಒಳಗ್ ಬಂದಿಲ್ಲ. ಯಜಮಾನಂಗ್ ಇಂಗಾದಾಗ ತಾವೇ ಗಾಡಿಕಟ್ಟಿಸ್ಕಂಡ್ ಬಂದು ಈ ಮನೆಗ್ ಕರ್ಕಬಂದು ಒಡ ಉಟ್ಟಿದೋರಂಗ್ ಸೇವೆ ಮಾಡವ್ರೆ. ನನ್ ಮಗಿನ್ನ ತಮ್ ಮಗನ್ ಸಮನಾಗಿ ನಡ್ಮಲ್ಲಿ ಕೂರುಸಿ ತುತ್ತಿಕ್ಕವ್ರೆ. ಯಾವ್ ಜಾತಿ ಬಾಂಧವರು ತೋರುಸ್ದೆ ಇರೊ ಇಸ್ವಾಸ ತೋರ್ಸವರೆ, ಇಂತೋರ್ ಕುಟ್ಟ ನನ್ ಎಸರ್ ಕಟ್ತೀರಲ್ಲ… ನಿಮ್…” ಕೆಂಪಮ್ಮ ಉಮ್ಮಳಿಸಿದ ಸಂಕಟದಿಂದ ಕುಸಿದಳು. + +“ನೀ ಕೂತ್ಕೊ ಕೆಂಪಮ್ಮ. ಈ ಅಯ್ನೋರ್ ಎಂತವ್ರು ಅಂತ ಈಗ ಮೀಸೆ ಮೂಡಿರೋ ಬೋಳಿಮಕ್ಳು ಏಳ್ಬೇಕಾಗಿಲ್ಲ. ಏಯ್ ಕರಿಯ, ನೀನು ಮುಂದೆ ಮಾತಾಡಂಗಿಲ್ಲ. ನಿಂಗೆ ಎಲ್ಡು ರೂಪಾಯಿ ದಂಡ ಆಕಿದೀನಿ, ಅಸುದ್ಧ ಮಾತಾಡಿದ್ಕೆ. ಮುಂದ್ಲ್ ಅಮ್ಮನ ಅಬ್ಬದೊತ್ತಿಗೆ ಎಲೆ ಅಡಕೆ ಮೇಲೆ ಎಲ್ಡ್ರುಪಾಯಿ ಮಡಗಿ ಪಂಚಾಯ್ತರಿಗೆ ಒಪ್ಪುಸ್ಬೇಕು. ಅಂಗೆ ಬಾಯೋದಂಗೆ ಮಾತಾಡಂಗಿಲ್ಲ. ಇರೋ ಇಸ್ಯ ಮಾತಾಡ್ಬೇಕು. ಎಣ ಸುದ್ಧ ಮಾಡೋಇಸ್ಯ.” + +“ಆಯ್ತು ಬುಡಿ. ಅದೇ ಮಾತಾಡಾನ. ಅಯ್ನೋರು ಗಣಾಚಾರೀನ ತಮ್ಮನೆಗೆ ಕರಕ ಬಂದು ಇಟ್ಕಂಡ್ರು. ಈಗ ಅವನ ಎಣಾನ ನಮ್ ಜಾತಿ ಅಂಗೆ ಊಣೋದು ಬುಟ್ಟು ಸುಡಬೇಕು ಅಂತ ಕುಂತವ್ರೆ.” + +ರುದ್ರೇಗೌಡರು ನರಸಪ್ಪನವರಕಡೆ ನೋಡಿದರು. ಅವರೇನು ಜಗ್ಗುವಂತೆ ಕಾಣಲಿಲ್ಲ. ಪಟೇಲರು ಕ್ಯಾಕರಿಸಿ ಗಂಟಲು ಸರಿ ಮಾಡಿಕೊಂಡು, “ಗೋವಿಂದಾಚಾರಿ ಏಳೊ ಮಾತು ಸರಿಯಾಗದೆ. ಗಣಾಚಾರಿ ಉಸಾರಿಲ್ದೆ ಮನಗ್ದಾಗ ಅವನ್ನ ಅವರು ಕರ್ಕಬಂದದ್ದು ತೆಪ್ಪು. ಆದ್ರೆ ನೀವೆಲ್ಲ ಓಗಿ ಓಗಿ ನೋಡ್ಕಂಡು ಓದ್ರಿ ಒರತು ಯಾವ್ ನನ್ಮಗಾನೂ ಅವನ್ನ ಎಂಗ್ ನೋಡ್ಕಳದು ಅಂತ ಎದರಿ ನಿಮ್ಮನೆಗೆ ಕರ್ಕ ಓಗಲಿಲ್ಲ. ಅವನು ಮನಗ್ಬುಟ್ನಲ್ಲ. ಅವನ ತ್ವಾಟ, ತುಡಿಕೆಗೆ ನೀವು ಯಾರೂ ಯವಸ್ಥೆ ಮಾಡ್ನಿಲ್ಲ. ಆದ್ರೆ ಅಯ್ನೋರು ಕರ್ಕಬಂದು ತಮಗೊತ್ತಿರೊ ಔಸ್ದಿ, ಪೂಜೆ ಮಾಡ್ಸಿಅವನ್ ಹೇಲು ಉಚ್ಚೆ ವಾಸ್ನೆ ಕುಡುದು, ಅವನ ಹೆಣಾನಾ ತಮ್ಮನೆ ಅಂಗಳದಲ್ಲಿ ಮಡಿಕ್ಕಂಡ್ ಮೇಲೆ, ಅವನ್ ಜೀವ್ ಓದ್ಮೇಲೆ, ನೀವು ಜಾತಿಸೂರರು ಬಂದಿದೀರಿ. ಎಣಒಪ್ಪ ಮಾಡೋದ್ ಎಂಗೆ ಅಂತ ಯೋಳಕ್ಕೆ. ಗಣಾಚಾರಿನೂ ಅಯ್ನೋರು ಬಾರಿ ನ್ಯಾಸ್ತ ಮಾಡಿದ್ರು ಅನ್ನಾದು ಊರೂರ್ಗೆ ಗೊತ್ತಿರೊ ಇಸ್ಯ. ಅಮಾಸೆ ಉಣ್ಣಿಮೆಲಂತೂ ಇವ್ರಿಬ್ರು ಕೈಗೇ ಸಿಗ್ತಿರ್ಲಿಲ್ಲ. ಕುಟುಂಬಸ್ತ್ರಂಗೆ ಅವರೂ ದುಃಖ ಪಟ್ಟವ್ರೆ, ಅವರೂ ಅಕ್ಕುದಾರರೇ. ಜಾತೀಲಿ ಉಟ್ಬುಟ್ಟು ಮೂಸು ನೋಡ್ದೇಇರೋರಿಗಿಂತ ನಿಯತ್ತಿನಿಂದ ನಡ್ಕೊಂಡ್ ಅಯ್ನೋರ್ಗೆ ಅಕ್ಕು ಜಾಸ್ತಿ. ಆದ್ರೆ ಇದು ಖಾಸಾ ಕುಟುಂಬದ ಇಸ್ಯ. ಇದ್ರಲ್ಲಿ ಕೆಂಪಮ್ಮನ ಮಾತೇಕಡೇ ಮಾತು. ಗಣಾಚಾರಿ ಅವಳ ಸೊತ್ತು. ನಿನ್ ಕೊನೇ ಮಾತೇನು ಕೆಂಪಮ್ಮ?” + +“ಅಯ್ನೋರ್ ಏಳ್ದಂಗೆ ಆಗ್ಲಿ. ಯಾವ್ದುಕ್ಕೂ ಅಟ ಇಡಿದೇ ಇರೋರು ಇದಕ್ಕೆ ಅಟ ಇಡಿದವರೆ ಅಂದ್ರೆ ಇದರ ಹಿಂದೆ ಏನೋ ಮರ್ಮಐತೆ. ಅವರು ಯಾವತ್ತೂ ನಮ್ ಕುಟುಂಬಕ್ಕೆ ಕೆಟ್ಟುದ್ ಬಯಸ್ದವರಲ್ಲ. ನಮ್ಮನೆಎಣ ಅವರೇಳ್ದಂಗೆ ಒಪ್ಪ ಆಗ್ಬೇಕು.” ಕೆಂಪಮ್ಮ ಕೈ ಮುಗಿದು ಹೇಳಿದಳು. + +“ಕೇಳಿಸ್ತೇನ್ರಪ್ಪ. ಇಸ್ಯ ಮುಗೀತು. ಗಣಾಚಾರಿ ಎಣಾನ ಅಯ್ನೋರ್ ಏಳ್ದಂಗ್ ಒಪ್ಪ ಮಾಡ್ಬೇಕು. ಯಾವಾನೂ ತಗಾದೆ ತೆಗ್ಯಂಗಿಲ್ಲ. ನಿಮಗಿಷ್ಟವಿಲ್ಲ ಅಂದ್ರೆ ಅದಕ್ಕೂ ಸೈ. ಅಮಿಕ್ಕಂಡು ನಿಮ್ ನಿಮ್ ಅಟ್ಟೀಗೆ ಒಂಟೋಗಿ. ನಮ್ ಅಟ್ಟಿ ಆಳು ಕಳುಸ್ತೀನಿ. ಅವರೇ ಎಲ್ಲ ಮಾಡ್ತಾರೆ.” + +ಗುಂಪಿನ ಗುಜುಗುಜು ಕಡಿಮೆಯಾದ ಮೇಲೆ ನರಸಪ್ಪನವರು ಹೇಳಿದರು, “ನೋಡಿ, ಹೆಣಕ್ಕೆ ನೀವು ನಿಮ್ಮ ಸಂಪ್ರದಾಯದ ಪ್ರಕಾರ ಏನೇನು ಶಾಸ್ತ್ರವಿದೆಯೊ ಅವನ್ನೆಲ್ಲ ಮಾಡಿ. ಮುಗಿದ ಮೇಲೆ ಅದನ್ನು ಚಿತೆಯ ಮೇಲಿಟ್ಟುಕೊಡಿ ಸಾಕು… ಚಿತೆ ತಯಾರಾಗಬೇಕು. ಸೌದೆ ಬೇಕಾರೆ ನಮ್ಮನೆ ಹಿತ್ತಲಲ್ಲಿದೆ. ಆದ್ರೆ ನಿಮ್ಮನೆಗಳಿಂದ್ಲೂ ಒಂದೊಂದು ತುಂಡು ಕೊಡಿ. ಮುನಿಸ್ವಾಮಿ ಗಾಡಿ ತರ್ತಾನೆ. ಅವನಿಗೆ ಹೇಗೆ ಚಿತೆ ಮಾಡಬೇಕು ಅಂತ ನಾ ಹೇಳ್ತೀನಿ. ಅಯ್ಯನಕಟ್ಟೆ ಹಿಂದೆ ಚಿತೆ ತಯಾರಾಗತ್ತೆ. ಇನ್ನರ್ಧ ಘಂಟೆ ಬಿಟ್ಟು ಹೆಣ ಎತ್ತೋಣ.” + + + +ಮನೆ ಒಳಹೊಕ್ಕ ನರಸಪ್ಪನವರು ಮತ್ತೆ ಹೊರಬಂದದ್ದು ಹಿತ್ತಲಬಾಗಿಲಿಂದ. ಅವರಕೈಯಲ್ಲಿ ಒಂದು ದೊಡ್ಡ ಗಂಟಿತ್ತು. ಮುಂದಣ ಅಂಗಳಕ್ಕೆ ಬಂದುನಿಂತು ಕರೆದರು, “ಕೆಂಪಮ್ಮ… ಕರಿ ಸುಬ್ಬನ್ನ…” ಒಳಗೆ ಕೃಷ್ಣಪ್ಪನ ಜೊತೆ ಆಡುತ್ತಿದ್ದ, ಕೊಂಚ ಗಾಬರಿಗೊಂಡಿದ್ದ ಬಾಲಕ ಸುಬ್ಬಾಚಾರಿಯನ್ನು ತಂದು ಅವರ ಎದುರಿಗೆ ನಿಲ್ಲಿಸಿದಳು ಕೆಂಪಮ್ಮ. “ನೋಡು, ಇವ್ನು ನನ್ಜೊತೆ ಬರ್ತಾನೆ. ಹೆದರ್ಕೊಬೇಡ. ಕ್ಷೇಮವಾಗಿ ಕಕೊರ್ಂಬರೊ ಜವಾಬ್ದಾರಿ ನಂದು. ನಾವ್ ಬರೋವರ್ಗು ನೀನು, ಗೌರಿ ಸ್ನಾನ ಮಾಡೋದು ಬ್ಯಾಡ. ನಾವು ಬರುವ ಮುಂಚೆ ಮುನಿಸ್ವಾಮಿ ಬಂದು ಏನ್ ಮಾಡ್ಬೇಕು ಅಂತ ಹೇಳ್ತಾನೆ. ಈಗ ಸುಬ್ಬನ ಬಟ್ಟೆ ಕಳಚು” ಎಂದರು. ಬುಂಡಗೆ ನಿಂತ ನಾಲ್ಕು ವರ್ಷದ ಸುಬ್ಬನ ಕೈ ಹಿಡಿದು ಅಂಗಳದ ಮೂಲೆಯಲ್ಲಿದ್ದ ಬಾವಿಯ ಬಳಿ ಕರೆದೊಯ್ದರು. ಅಲ್ಲಿ ಬೀರಣ್ಣ ನಾಲ್ಕಾರು ಕೊಡ ನೀರು ಸೇದಿಟ್ಟಿದ್ದ. ಒಂದು ಕೊಡ ನೀರನ್ನು ಸುಬ್ಬನ ತಲೆಯ ಮೇಲೆ ಸುರಿದರು. ತಾವೂ ಬಟ್ಟೆಯೆಲ್ಲ ಕಳಚಿ ಕೌಪೀನದಲ್ಲಿ ನಿಂತು ಒಂದು ಬಿಂದಿಗೆ ನೀರನ್ನು ತಲೆಯ ಮೇಲೆ ಸುರುವಿಕೊಂಡರು. ಬಳಿಕ ತಮ್ಮ ಗಂಟು ಬಿಚ್ಚಿ ಹೊಸ ವಸ್ತ್ರವನ್ನು ತೆಗೆದರು. ಅರ್ಧಕ್ಕೆ ಹರಿದು ಒಂದು ತುಂಡನ್ನು ಸುಬ್ಬನಿಗೆ ಉಡಿಸಿದರು. ಮತ್ತರ್ಧವನ್ನು ಹೊದಿಸಿದರು. ಹಾಗೇ ತಾವೂ ಹೊಸ ವಸ್ತ್ರ ಧರಿಸಿ ಮತ್ತೆ ಇಬ್ಬರ ಮೇಲೂ ನೀರು ಸುರುವಿಕೊಂಡರು. ಬಳಿಕ ಅವನ ಕೈ ಹಿಡಿದು ಹೆಣದ ತಲೆಯ ಬಳಿ ನಿಲ್ಲಿಸಿದರು. ಮನೆಯ ಮುಂದೆ ಹಾಕಿದ್ದ ಬೆಂಕಿಯಿಂದ ಆರೆಂಟು ಕೆಂಡವನ್ನು ಮಡಕೆಯೊಂದರಲ್ಲಿ ಹಾಕಿ ಜೊತೆಗೊಂದಿಷ್ಟು ಬೆರಣಿಯನ್ನು ಹಾಕಲಾಯಿತು. ಅದನ್ನು ಒಮ್ಮೆ ಸುಬ್ಬನ ಕೈಲಿ ಎತ್ತಿಸಿ ಬಳಿಕ ತಾವು ಎತ್ತಿಕೊಂಡರು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_381.txt b/Kenda Sampige/article_381.txt new file mode 100644 index 0000000000000000000000000000000000000000..d9d73c42bc48d1f759344d9567253e0a7bafc087 --- /dev/null +++ b/Kenda Sampige/article_381.txt @@ -0,0 +1,35 @@ +byಕೆಂಡಸಂಪಿಗೆ|Jun 24, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ” + +byಡಾ. ಬಿ. ಜನಾರ್ದನ ಭಟ್|Jun 23, 2019|ವಾರದ ಕಥೆ,ಸಾಹಿತ್ಯ| 0 Comments + +“ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು.” + +byಕೆಂಡಸಂಪಿಗೆ|Jun 17, 2019|ದಿನದ ಪುಸ್ತಕ,ಸಾಹಿತ್ಯ| 2 Comments + +“ಕನ್ನಡದ ಕಥೆ-ಕಾದಂಬರಿಗಳಲ್ಲಿ ವಿಜ್ಞಾನದ ವಸ್ತುಗಳನ್ನು ಬಳಸಿಕೊಳ್ಳುವುದು ಅಪರೂಪವೇನಲ್ಲ, ಆದರೂ ಈ ಬಗೆಯ ಕಥೆಗಳಲ್ಲಿ ಪ್ರಯೋಗಶೀಲತೆಗೆ ಅಪಾರ ಅವಕಾಶವಿದೆ. ಎರಡು ಸಾವಿರದ ಒಂದುನೂರನೆಯ ಇಸವಿಯಲ್ಲಿ ನಡೆಯುವ ಈ ಕಥೆ, ಆದರ್ಶ ಲೋಕವನ್ನಲ್ಲ, ಅವನತಿ ಮುಖದ ನಾಗರಿಕತೆಯ ಚಿತ್ರಣವನ್ನು ಮಾಡುತ್ತದೆ. .” + +byಮೀರಾ ಸಂಪಿಗೆ, ಬೆಳ್ಳೂರ್|Jun 16, 2019|ವಾರದ ಕಥೆ,ಸಾಹಿತ್ಯ| 2 Comments + +“ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ.” + +byಕೆಂಡಸಂಪಿಗೆ|Jun 14, 2019|ದಿನದ ಪುಸ್ತಕ,ಸಾಹಿತ್ಯ| 0 Comments + +”ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ” + +byಕೆಂಡಸಂಪಿಗೆ|Jun 11, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ.” + +byಡಾ. ಬಿ. ಜನಾರ್ದನ ಭಟ್|Jun 9, 2019|ವಾರದ ಕಥೆ,ಸಾಹಿತ್ಯ| 0 Comments + +” ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು.” + +byಡಾ. ಗೀತಾ ವಸಂತ|Jun 3, 2019|ದಿನದ ಪುಸ್ತಕ,ಸಾಹಿತ್ಯ| 0 Comments + +ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ. + +byಸರಿತಾ ನವಲಿ|Jun 2, 2019|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 0 Comments + +ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು. \ No newline at end of file diff --git a/Kenda Sampige/article_382.txt b/Kenda Sampige/article_382.txt new file mode 100644 index 0000000000000000000000000000000000000000..a333581bf696183d1e490227abd2882b9ed47668 --- /dev/null +++ b/Kenda Sampige/article_382.txt @@ -0,0 +1,57 @@ + + + + +ಕಣ್ಣೀರ ಸುರಿ ಕೆರಳು ಕಾದು ಕೊಲ್ ಕೊಲ್ಲಿಸಿಕೊಬಿನ್ನಣಿಸು ಹಂಬಲಿಸು ದುಡಿ ಬೆದರು ಬೀಗುಚಿಣ್ಣರಾಟವೆನೆ ನೋಡುತೆ ನಿನ್ನ ಪಾಡುಗಳತಣ್ಣಗಿರುವನು ಶಿವನು – ಮರುಳ ಮುನಿಯ– ಡಿ.ವಿ.ಜಿ. + +ಜೀತೂರಾಮ ದಿಗ್ಭ್ರಾಂತನಾಗಿ ನಿಂತುಬಿಟ್ಟ. ಬಿಳಿಕೋಟು ಹಾಕಿದ ಆಸ್ಪತ್ರೆಯ ಆ ಡಾಕ್ಟರ್ ಸಾಹೇಬ ಲಾಖಿಯ ಬಗ್ಗೆ ಏನು ಹೇಳುತ್ತಿದ್ದಾನೆನ್ನುವುದು ಅವನ ಕಿವಿ ತಮಟೆಯ ಮೇಲೆ ಫಿರಂಗಿ ಗುಂಡಿನಂತೆ ಅಪ್ಪಳಿಸಿದ್ದಷ್ಟೇ ಗೊತ್ತಾದದ್ದು. ಮುಂದಿನದೇನು ಅವನ ತಲೆಗೆ ಹೋಗಲೇ ಇಲ್ಲ. ಲಾಖಿ ಇಲ್ಲ…ತನ್ನ ಲಾಖಿ ..ಹದಿನೈದು ವರ್ಷ ತನ್ನೊಂದಿಗೆ ಈ ಬದುಕಿನ ಎಲ್ಲ ಕಷ್ಟ-ಸುಖಗಳ ಬಂಡಿಗೆ ಮೂಗೆತ್ತಿನಂತೆ ಹೆಗಲು ಕೊಟ್ಟು ಬಸವಳಿದ ಲಾಖಿ ಇನ್ನಿಲ್ಲ… ಯಾವ ಮಾಯದಲ್ಲೋ ಕಣ್ಣೀರಿನಿಂದ ತುಂಬಿಕೊಂಡ ಮಬ್ಬುಗಣ್ಣುಗಳನ್ನಗಲಿಸಿ ಅತ್ತಿತ್ತ ನೋಡಿದ. ಅಲ್ಲಿ ಕೆಲವು ಮಾರಡಿ ದೂರದಲ್ಲಿ ಪುಟ್ಟ ಇಮಲಿ ಕಾಗದದ ತಾಟಿನಲ್ಲಿ ಯಾರೋ ಹಾಕಿಕೊಟ್ಟಿದ್ದ ತುಂಡು ಸಮೋಸಾದ ಚೂರುಗಳನ್ನ ಪುಟ್ಟ ಜಗ್ಯಾನ ಬಾಯಿಗಿಡಲು ಪ್ರಯತ್ನಿಸುತ್ತಿದ್ದಳು. ಜಗ್ಯಾ ಸಮೋಸಾ ಖಾರವಿದ್ದುದರಿಂದಲೋ ಏನೋ ಕಣ್ಣು ಮೂಗಿನಲ್ಲಿ ನೀರಿಳಿಸುತ್ತಾ ತಲೆಯಲುಗಿಸುತ್ತಿದ್ದುದೂ ಇಮಲಿ ಥೇಟು ಲಾಖಿಯಂತೆಯೇ, ತನ್ನ ಹರಿದ ಲಂಗದ ಚುಂಗಿನಿಂದ ಅವನ ಕಣ್ಣು ಮೂಗನ್ನೊರೆಸಿ ಸಮಾಧಾನಪಡಿಸುತ್ತಿದ್ದುದೂ ಕಂಡು ಜೀತೂವಿನ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಯಿತು. ಲಾಖಿ.. ಈ ಪುಟ್ಟ ಮಕ್ಕಳನ್ನ ಬಿಟ್ಟು ಹೋಗಲು ನಿನಗೆ ಮನಸ್ಸಾದರೂ ಹೇಗೆ ಬಂತು? ನೋಡಲ್ಲಿ ಜಗ್ಯಾ ಅಳುತ್ತಿದ್ದಾನೆ, ಇಮಲಿಗೂ ಹಸಿವಾಗಿದೆ .. ಇನ್ನೇನು ಅವರಿಬ್ಬರು ಮಾ… ಎನ್ನುತ್ತಾ ನಿನ್ನನ್ನ ಹುಡುಕಿಕೊಂಡು ಬಂದುಬಿಡುತ್ತಾರೆ… ಲಾಖೀ.. ನಿನಗೇಕೆ ಕೇಳುತ್ತಿಲ್ಲ? ಜೀತೂ ಮೌನದಲ್ಲೇ ಲಾಖಿಯನ್ನ ಮಾತಾಡಿಸುತ್ತಿದ್ದ. ಅಷ್ಟರಲ್ಲೇ ಆ ಡಾಕ್ಟರ್ ಸಾಹೇಬನಿಗೆ ಜೀತೂವಿನ ತುಂಬಿದ ಕಣ್ಣುಗಳನ್ನೂ ಅವನ ದಯನೀಯ ನೋಟಕ್ಕೆ ಗುರಿಯಾಗಿದ್ದ ಇಮಲಿ, ಜಗ್ಯಾರನ್ನೂ ನೋಡಿ ಕನಿಕರವೆನಿಸಿರಬೇಕು. ಮೆಲ್ಲನೆ ಜೀತೂವಿನ ಭುಜ ತಟ್ಟಿ ಎಚ್ಚರಿಸಿದ. ಜೀತೂ ಮತ್ತೆ ಈ ಲೋಕಕ್ಕೆ ಬಂದ. ಆ ಬಿಳಿಕೋಟಿನವನ ಹಿಂದೆ ಗೋಣು ಬಗ್ಗಿಸಿ ಆಸ್ಪತ್ರೆ ಎನ್ನುವ ಆ ಕೊಳಕು ಕಟ್ಟಡದೊಳಗೆ ಮೂಕಪಶುವಿನಂತೆ ನಡೆದ. ಅಲ್ಲಿ ಆ ಉದ್ದಾನುದ್ದದ ಪಡಸಾಲೆಯಲ್ಲೆ ಅಲ್ಲಲ್ಲಿ ಕುಳಿತು ಕೊಳಕು ಬಟ್ಟೆಯಲ್ಲಿ ಕಟ್ಟಿತಂದ ಬುತ್ತಿ ಬಿಚ್ಚಿ ತಿನ್ನುತ್ತಿರುವವರು, ಆಕಾಶಕ್ಕೆ ಕಣ್ಣು ನೆಟ್ಟು ಪ್ರಪಂಚದ ಆಗುಹೋಗುಗಳೇ ಗೊತ್ತಿಲ್ಲದೆ ಕಲ್ಲಿನಂತೆ ಕುಳಿತವರು, ಪಾನಿನ ರಸ ಉಗಿದುಗಿದು ಕೆಂಬಣ್ಣಕ್ಕೆ ತಿರುಗಿದ್ದ ಕಲ್ಲು ಕಂಬಗಳಿಗೊರಗಿ ಕಣ್ಣೀರನ್ನೊರಸಿಕೊಳ್ಳುತ್ತಾ ದಯನೀಯ ನೋಟ ಬೀರುತ್ತಾ ಒಳಗಿರುವವರ ಬಗ್ಗೆ ಸುದ್ದಿ ತಿಳಿಯಲು ಕಾತರರಾಗಿರುವವರು ಒಬ್ಬರೇ ಇಬ್ಬರೇ .. + +ಇವರುಗಳ ಸಂಬಂಧಿಕರು ಯಾರಿದ್ದಾರೋ ಪೋಟ್ ಎನ್ನುವ ಈ ಕುಗ್ರಾಮದ ಸರಕಾರಿ ಆಸ್ಪತ್ರೆಯ ವಾರ್ಡುಗಳಲ್ಲಿ? ಒಳಗೆ ನರಳುತ್ತಿರುವ ತಮ್ಮ ಹೆಂಡತಿಯೋ ಗಂಡನೋ ಮಕ್ಕಳೋ ಅಪ್ಪ ಅಮ್ಮನೋ ಅಜ್ಜಿ ತಾತನೋ … ಜೀತೂರಾಮನ ಕಣ್ಣಮುಂದೆ ಸಂಬಂಧಗಳ ಪಟ್ಟಿ ಸಂಕಟ ಮೋಚನನ ಬಾಲದಂತೆ ಬೆಳೆಯುತ್ತಲೇ ಹೋಯಿತು. ಬಿಳಿಕೋಟಿನ ಸಾಹೇಬ ಅಲ್ಲೇ ಬಿದಿರಿನ ಚಾಪೆ ಅಡ್ಡಗಟ್ಟಿಸಿದ್ದ ಮೂಲೆಯಲ್ಲಿ ನಿಂತ. ಜೀತೂ ತಾನೂ ಯಾಂತ್ರಿಕವಾಗಿ ನಿಂತ ಅಲ್ಲಿ ಆ ಬಿದಿರ ಚಾಪೆಯ ಮರೆಯಲ್ಲಿ ಹರಕು ಜಮಖಾನೆಯ ಮೇಲೆ ಲಾಖಿ ತಣ್ಣಗೆ ಕಣ್ಮುಚ್ಚಿ ಮಲಗಿಬಿಟ್ಟಿದ್ದಳು. ಲಾಖಿಯನ್ನ ಅಲ್ಲಿ ನೋಡಿದ ಜೀತೂ ಕ್ಷಣ ಕಾಲ ಎಲ್ಲ ಮರೆತು ಲಾಖೀ… ನೀನು ಸರಿಹೋಗಿಬಿಟ್ಟೆಯಾ ಏಳು ಮನೆಗೆ ಹೋಗೋಣ ಎಂದು ಆತುರಪಡಿಸಿದ. ಉಹೂಂ ಲಾಖಿ ಕಣ್ತೆರೆಯಲಿಲ್ಲ.. ಮಿಸುಕಾಡಲೂ ಇಲ್ಲ.. ಜೀತೂ ಮತ್ತೆ ಮತ್ತೆ ಕರೆದವ ಅಲ್ಲೇ ಮೊಣಕಾಲೂರಿ ಕುಳಿತು ಅವಳ ಭುಜ ಹಿಡಿದು ಅಲುಗಾಡಿಸಿದ… ತಣ್ಣಗೆ ಕೊರೆವ ಅವಳ ಮೈ ಸೋಕಿದ್ದೇ ಜೀತೂಗೆ ಡಾಕ್ಟರ ಸಾಹೇಬನ ಮಾತು ನೆನಪಾಯಿತು… ಇನ್ನೆಲ್ಲಿಯ ಲಾಖಿ? ಇಲ್ಲಿರುವದು ಬರೀ ಅವಳ ನಿರ್ಜೀವ ದೇಹ ಅಷ್ಟೆ ಲಾಖೀ.. ಲಾಖೀ.. ಒಮ್ಮೆ ಎದ್ದುಬಿಡು. ಇನ್ನುಮೇಲೆ ನೀನು ಹೇಳಿದಂತೆ ನಾನು ಕೇಳುತ್ತೇನೆ, ನಾನು ಶರಾಬು ಕುಡಿಯುವುದು ನಿನಗಿಷ್ಟವಿಲ್ಲ ತಾನೆ… ಇಗೋ ಇನ್ನು ಮುಂದೆ ಶರಾಬಿನ ಬಾಟಲಿ ಮುಟ್ಟಿದರೆ ನಿನ್ನಾಣೆ ಎಂದವನೆ ಅವಳ ತಲೆಯ ಮೇಲೆ ಕೈ ಇರಿಸಿದ. ಎಣ್ಣೆಗಾಣದೆ ಗಂಟುಗಂಟಾದ ಅವಳ ಕೂದಲು ಕೈಗೆ ಸಿಕ್ಕಿತು. + +ಎಷ್ಟು ಚಂದವಿತ್ತು ಒಂದಾನೊಂದು ಕಾಲದಲ್ಲಿ ಲಾಖಿಯ ಕೂದಲು, ಅವಳು ಕೋಪ ಮಾಡಿಕೊಂಡಾಗಲೆಲ್ಲ ವಾರೆ ನೋಟ ಬೀರುತ್ತಾ ಇದೇ ಕೂದಲನ್ನ ತನ್ನ ಬಲಗೈಯ ತೋರು ಬೆರಳಿಗೆ ಸುತ್ತಿಕೊಳ್ಳುತ್ತಿದ್ದಳಲ್ಲ. “ಲಾಖೀ , ನಾನು ಕುಡಿದು ಬಂದು ನಿನ್ನ ಕಾಡಿದಾಗ ನೀನು ಜೋರು ಧ್ವನಿ ತೆಗೆದು ಮಾತಾಡುತ್ತಿದ್ದೆ. ಆಗೆಲ್ಲಾ ನಾನು ಮತಿಗೆಟ್ಟು ನಿನ್ನ ಇದೇ ಕೂದಲು ಹಿಡಿದೆಳೆದು ಎಷ್ಟು ಬಾರಿ ನಿನ್ನ ಕಣ್ಣಲ್ಲಿ ನೀರು ತರಿಸಿದ್ದೇನಲ್ಲವೆ? ಇಲ್ಲ ಇನ್ನು ಮುಂದೆ ಹೀಗೆಲ್ಲಾ ಮಾಡುವುದಿಲ್ಲ ಲಾಖಿ. ಒಮ್ಮೆ ಕಣ್ಣು ಬಿಡು. ನಿನ್ನ ಇಮಲಿ, ಜಗ್ಯಾ ಇಬ್ಬರೂ ಕಾಯುತ್ತಿದ್ದಾರೆ. ಏಳು ಲಾಖಿ… ಈ ಆಸ್ಪತ್ರೆಯಲ್ಲಿ ಎಷ್ಟೆಂದು ಮಲಗುತ್ತೀಯ ನಡೀ” ಎನ್ನುತ್ತಾ ಜೀತೂ ಮೈಮೇಲೆ ಖಬರಿಲ್ಲದವನಂತೆ ಲಾಖಿಯ ಭುಜ ಹಿಡಿದು ಅಲುಗಾಡಿಸುತ್ತಿದುದನ್ನ ನೋಡಿ ಅಲ್ಲೇ ಓಡಾಡುತ್ತಿದ್ದ ಬಿಳಿಸೀರೆಯ ದಾದಿ ಕನಿಕರಗೊಂಡು “ತಮ್ಮಾ ನೀನು ಎಷ್ಟು ಎಬ್ಬಿಸಿದ್ರೂ ಅವಳಿನ್ನ ಏಳಲಾರಳು, ನೋಡಲ್ಲಿ ನಿನ್ನ ಮಕ್ಕಳು ಕಂಗಾಲಾಗಿ ನಿನ್ನನ್ನೇ ನೋಡ್ತಿವೆ” ಎಂದು ಅವನ ಭುಜ ಹಿಡಿದು ಸಂತೈಸಿದಳು. ಜೀತೂ ಮತ್ತೆ ವಾಸ್ತವದಲ್ಲಿ ಬಿದ್ದ. ಲಾಖಿ ಕ್ಯಾರೇ ಎನ್ನದಂತೆ ಮಲಗಿಯೇ ಇದ್ದಳು. ಓ… ಇಷ್ಟು ಹೊತ್ತು ತಾನು ಕೇಳಿದ್ದು ನೋಡಿದ್ದು ಯಾವುದೂ ಕನಸಲ್ಲ. ಲಾಖಿ ನಿಜಕ್ಕೂ ಸತ್ತೇ ಹೋದಳೆ… ಮುಂದೇನು ಗತಿ? ತನ್ನ ಚಿಕ್ಕ ಮಕ್ಕಳ ಗತಿಯೇನು? ಎನ್ನುತ್ತಾ ಮತ್ತೆ ಕಲ್ಲಾದ. ದಾದಿಗೆ ಅವನ ಪರಿಸ್ಥಿತಿ ನೋಡಿ ಅಯ್ಯೋ ಎನಿಸಿದರೂ ಸರಕಾರಿ ಆಸ್ಪತ್ರೆಯ ಈ ಕಾರಿಡಾರಿನಲ್ಲಿ ಇಂತಹ ಎಷ್ಟೋ ಸಾವುಗಳನ್ನೂ, ರೋಧನವನ್ನೂ ದಿನೇ ದಿನೇ ನೋಡಿ ಅಭ್ಯಾಸವಾದ್ದರಿಂದಲೋ ಏನೋ.. “ಸಾಕು ನಿಲ್ಲಿಸು, ಎಳೇ ಮಕ್ಕಳ ಥರ ಆಡಬೇಡ, ಮೊದಲು ಇದನ್ನ ಇಲ್ಲಿಂದ ತಗೊಂಡು ಹೋಗೊ ವ್ಯವಸ್ಥೆ ಮಾಡು. ಬಹಳ ಹೊತ್ತು ನಾವಿಲ್ಲಿ ಹೆಣವನ್ನ ಇಟ್ಟುಕೊಳ್ಳಲು ಆಗಲ್ಲ. ದೊಡ್ಡ ಸಾಹೇಬರು ಬಂದರೆ ನನ್ನನ್ನ ಬೈಯ್ತಾರಷ್ಟೆ” ಎಂದು ಗದರಿದಳು. + +ಜೀತೂ ಎದ್ದು ಕಣ್ಣೊರೆಸಿಕೊಂಡ. ಹೌದಲ್ಲ ಲಾಖಿಯನ್ನ ಊರಿಗೆ ಕರೆದೊಯ್ದು ಸಂಸ್ಕಾರಕ್ಕೆ ವ್ಯವಸ್ಥೆ ಮಾಡಬೇಕಲ್ಲ? ಏನೋ ನೆನಪಾಗಿ ಜೇಬಿನಲ್ಲಿ ಕೈಯಾಡಿಸಿದ. ಹತ್ತುರೂಪಾಯಿ ನೋಟೊಂದು ಹೊರಬಂತು. ಬೇರೆ ಸಂದರ್ಭದಲ್ಲಾಗಿದ್ದರೆ ಆ ಹತ್ತು ರೂಪಾಯಿಯ ನೋಟು ಜೀತೂಗೆ ಸಾವಿರ ರೂಪಾಯಿಯಂತೆ ಕಾಣುತ್ತಿತ್ತೇನೋ. ಈಗ ಅದು ಅಣಕಿಸಿ ನಕ್ಕಂತಾಯಿತು. ಈ ಹತ್ತು ರೂಪಾಯಿ ಸಾಕಾಗುತ್ತದೆಯೇ? ನೆನ್ನೆ ತಾನೆ ಕೂಲಿ ಮಾಡಿ ಬಂದ ನೂರು ರೂಪಾಯಿ ಜೇಬಿನಲ್ಲಿತ್ತು. ಸಂಜೆಯವರೆಗೆ ಹೇಗೋ ನಿಯಂತ್ರಿಸಿಕೊಂಡಿದ್ದ ಜೀತೂವಿನ ಕಾಲ್ಗಳು ಅವನಿಗೇ ಅರಿವಿಲ್ಲದಂತೆ ಶರಾಬುಖಾನೆಯತ್ತ ಒಯ್ದಿದ್ದವಲ್ಲ. ಉಳಿದದ್ದು ಈ ಹತ್ತೇ ರೂಪಾಯಿ. “ಊರಿಗೆ ಹೋದರೆ ಅವರಿವರನ್ನ ಕೇಳಿ ಮಣ್ಣಿಗೆ ವ್ಯವಸ್ಥೆ ಮಾಡಬಹುದು. ನೋಡೋಣ” ಎಂದು ಎದ್ದವನಿಗೆ ಲಾಖಿಯ ಸಾವಿನ ದು:ಖ ತಾತ್ಕಾಲಿಕವಾಗಿ ಕಣ್ಮರೆಯಾಗಿ ಈಗ ಅವಳನ್ನ ಊರಿಗೆ ಕರೆದೊಯ್ಯುವ ಹೊಸ ಸಮಸ್ಯೆ ಎದುರಾಯಿತು. ಲಾಖಿಯನ್ನ ಇಲ್ಲಿಗೆ ಕರೆತರುವಾಗ ಅವಳು ಎದೆನೋವೆಂದು ನರಳುತ್ತಿದ್ದವಳು ಅರೆಬರೆ ಎಚ್ಚರದಿಂದಿದ್ದಳು. ಬಸ್ಸಿನ ಮುಖವನ್ನೇ ಕಾಣದ ತನ್ನ ಕುಗ್ರಾಮದಿಂದ ಸರಿಸುಮಾರು ಎಂಟು ಮೈಲು ದೂರದ ಈ ಸರ್ಕಾರಿ ಪ್ರಾಥಮಿಕ ಚಿಕಿತ್ಸಾಲಯಕ್ಕೆ ಹಾದಿಯಲ್ಲಿ ಹೋಗುತ್ತಿದ್ದ ಯಾವುದೋ ಲಾರಿಗೆ ಕೈಯೊಡ್ಡಿ ಲಾಖಿಯ ಪರಿಸ್ಥಿತಿಯನ್ನ ವಿವರಿಸಿ ಕಾಡಿ ಬೇಡಿ ಡ್ರೈವರನ ಸಹಾಯದಿಂದ ಅವಳನ್ನೆತ್ತಿ ಲಾರಿಯ ಹಿಂಬದಿಯಲ್ಲಿ ಮಲಗಿಸಿದ್ದ. ಮಾನವೀಯತೆಗಾಗಿ ಜೀತೂವಿನ ಬಳಿ ಒಂದು ಕಾಸನ್ನೂ ಕೇಳದ ಆ ಲಾರಿಯವ ಈ ಆಸ್ಪತ್ರೆಯ ಬಳಿ ಅವಳನ್ನ ಇಳಿಸಲು ನೆರವಾದವನೆ, ಭರ್ರನೆ ಹೊರಟುಬಿಟ್ಟಿದ್ದ. + +ಸರ್ಕಾರಿ ಆಸ್ಪತ್ರೆಯಲ್ಲಿ ಶವ ಸಾಗಿಸುವ ವಾಹನ ಇರುತ್ತದೆಂದು ಯಾರೋ ಎಂದೋ ಮಾತನಾಡಿಕೊಂಡದ್ದು ನೆನಪಾಗಿ ಜೀತೂ ಆ ಬಿಳಿ ಸೀರೆಯ ದಾದಿಯ ಹಿಂದೆ ಓಡಿದ. “ಅಕ್ಕಾ ಮತ್ತೆ ನನ್ನ ಹೆಂಡತಿಯನ್ನ ಊರಿಗೆ ಕರೆದುಕೊಂಡು ಹೋಗಬೇಕಲ್ಲ. ಇಲ್ಲಿ ಏನಾದರೂ ಗಾಡಿ ಸಿಗುತ್ತಾ?” ಎಂದವನ ಮುಗ್ಧ ಪ್ರಶ್ನೆಗೆ ಆ ದಾದಿಗೆ ನಗಬೇಕೋ ಅಳಬೇಕೋ ತಿಳಿಯದಾಯಿತು. ಬಾಡಿ ತೆಗೆದುಕೊಂಡು ಹೋಗಬೇಕು ಎಂದೇ ಕೇಳಿ ಅಭ್ಯಾಸವಾಗಿ ಹೋಗಿದ್ದ ಅವಳ ಕಿವಿಗಳಿಗೆ ನನ್ನ ಹೆಂಡತಿಯನ್ನ ಕರೆದುಕೊಂಡು ಹೋಗಬೇಕು ಎನ್ನುವ ಮಾತುಗಳು ಬೆರಗನ್ನುಂಟುಮಾಡಿದವು. “ಅಯ್ಯೋ ಹುಚ್ಚಪ್ಪಾ ಇದು ಬಾಡಿ ಸಾಗಿಸೋ ಗಾಡಿ ಇಡೋ ಅಷ್ಟು ದೊಡ್ಡ ಆಸ್ಪತ್ರೆಯಲ್ಲ, ನೀನೇ ಏನಾದರು ವ್ಯವಸ್ಥೆ ಮಾಡಿಕೋಬೇಕು, ಹೊರಗೆ ವಿಚಾರಿಸು” ಎಂದವಳೇ ಒಳ ನಡೆದಳು. ಜೀತೂನ ಸಣ್ಣ ಆಸೆ ಅಲ್ಲೇ ಮಣ್ಣಾಯಿತು. ಬೇರೆ ವ್ಯವಸ್ಥೆ ಎಂದರೆ ದುಡ್ಡೆಂಬ ದುಡ್ಡು ಕಣ್ಣ ಮುಂದೆ ಕುಣಿಯಲಾರಂಭಿಸಿತು. ಇಮಲಿಯಾಗಲೇ ವಿಷಯದ ಅರಿವಾಗಿ ಅಮ್ಮನ ಮುಂದೆ ಕುಳಿತು ಅಳಲಾರಂಭಿಸಿದ್ದಳು. ಜಗ್ಯಾಗೆ ಸಾವೆಂಬುದಿನ್ನೂ ಅರಿವಾಗದ ವಯಸ್ಸು ಏನೂ ಅರ್ಥವಾಗದೆ ಅಮ್ಮನ ಕೈ ಹಿಡಿದಿಕೊಂಡು ಕುಳಿತುಬಿಟ್ಟಿದ್ದ. ಮಗಳ ತಲೆ ಸವರಿ ‘ಈಗ ಬಂದೆ’ ಎಂದವನೇ ಆಸ್ಪತ್ರೆಯಿಂದ ಹೊರ ಬಂದು ಅಲ್ಲೇ ಮೂಲೆಯಲ್ಲಿದ್ದ ಪಾನ್ ಅಂಗಡಿಯ ಬಳಿ ಹೋಗಿ ನಿಂತ . + +‘ಯಾವ ಪಾನ್ ಕೊಡಲಿ’ ಎಂಬ ಅಂಗಡಿಯಾತನ ಪ್ರಶ್ನೆಗೆ ಜೀತೂನ ಅಸಹಾಯಕ ನೋಟವೆ ಉತ್ತರವಾಗಿ ತನ್ನನ್ನು ತಾನು ಕ್ಷಣ ಸಂಭಾಳಿಸಿಕೊಂಡವನೇ ‘ಅಣ್ಣಾ ಹೀಗೆ ಹೀಗೆ ಆಗಿಹೋಗಿದೆ, ಊರಿಗೆ ಹೋಗಬೇಕು. ಏನಾದರೂ ವ್ಯವಸ್ಥೆ ಮಾಡಿ ಪುಣ್ಯ ಕಟ್ಟಿಕೋ’ ಎಂದು ಗೋಗರೆದ. ಅಂಗಡಿಯವ ಕ್ಷಣ ಯೋಚಿಸಿದವನೇ ‘ನಿನ್ನ ನೋಡಿದರೆ ಪಾಪ ಅನಿಸತ್ತೆ, ಸಾಮಾನ್ಯವಾಗಿ ಇಲ್ಲಿಂದ ನಿನ್ನೂರಿನ ದೂರಕ್ಕೆ ಹೆಣ ಸಾಗಿಸಲು ಒಂದೂವರೆ ಸಾವಿರವಾದರೂ ಕೇಳ್ತಾರೆ, ಆದರೆ ನಿನ್ನ ಹತ್ರ ಅಷ್ಟು ಇರೋ ಹಾಗೆ ಕಾಣಲ್ಲ. ಒಂದೈನೂರು ಕಡಿಮೆ ಮಾಡಿಸಿಕೊಡ್ತೀನಿ. ನನ್ನ ಸ್ನೇಹಿತನದೇ ಗಾಡಿ ಇದೆ. ಅಷ್ಟಾದರೂ ಜೋಡಿಸಿಕೊಂಡು ಬಾ. ನಾನಿಲ್ಲೇ ಇರ್ತೀನಿ” ಎಂದವನು ಕಷ್ಟದಲ್ಲಿರುವ ಒಂದು ಜೀವಕ್ಕೆ ತನ್ನ ಕೈಲಾದ ಸಹಾಯ ಮಾಡಿದ ಭಾವದಲ್ಲಿ ಮತ್ತೆ ತನ್ನ ಗಿರಾಕಿಗಳತ್ತ ತಿರುಗಿದ. ಜೀತೂನ ತಲೆ ಗಿರ್ರೆಂದಿತು. ಸಾವಿರ ರೂಪಾಯಿ? ಎಲ್ಲಿಂದ ತರುವುದು? ತನ್ನನ್ನೇ ತಾನು ಒತ್ತೆ ಇಟ್ಟರೂ ಈ ಊರಿನಲ್ಲಿ ಕಾಸು ಸಿಕ್ಕೀತೆ? ಗುರುತಿಲ್ಲ ಪರಿಚಯವಿಲ್ಲ ಎಂದು ಕಂಗಾಲಾಗಿ ಅಲ್ಲಿಂದಾಚೆ ಬಂದ. + +ಆಸ್ಪತ್ರೆಯ ಮುಂದೆ ಬರುವವರನ್ನೆಲ್ಲಾ ಕರೆದೊಯ್ಯಲಿಕ್ಕಾಗೇ ಇರುವ ಉದ್ದಾನುದ್ದ ರಸ್ತೆಯ ಮೇಲೆ ಥರಾವರಿ ವಾಹನಗಳು ಭರ್ರನೆ ಹೋಗುತ್ತಿದ್ದುದ ನೋಡಿ ಹೊಸ ಆಲೋಚನೆ ಹೊಳೆದಂತೆ ರಸ್ತೆ ಬದಿಗೆ ನಿಂತು ಹೋಗಿ ಬರುವ ವಾಹನಗಳಿಗೆಲ್ಲ ಕೈ ಮಾಡಲಾರಂಭಿಸಿದ. ಜೀತೂನ ಕೆದರಿದ ತಲೆ, ಮಾಸಿದ ಬಟ್ಟೆ, ಚಪ್ಪಲಿಯಿಲ್ಲದ ಬರಿಗಾಲು ನೋಡಿಯೇ ಫಳಫಳನೆ ಹೊಳೆವ ವಾಹನಗಳು ನಿಲ್ಲಿಸಿದರೆಲ್ಲಿ ಮೈಲಿಗೆಯಾಗುವದೋ ಎಂದು ಹೆದರಿ ಧೂಳೆಬ್ಬಿಸುತ್ತಾ ಮರೆಯಾದವು. ಒಂದೆರಡು ಲಾರಿ ಚಾಲಕರು ಕುತೂಹಲದಿಂದ ನಿಲ್ಲಿಸಿದರೂ ಲಾಖಿಯ ಹೆಣ ಹೊತ್ತೊಯ್ಯುವ ವಿಷಯ ಕೇಳಿಯೇ ಹಾವು ಮೆಟ್ಟಿದವರಂತೆ ಬೆಚ್ಚಿ ಜೀತೂನ ಕ್ಷಮೆ ಕೇಳಿ ತಂತಮ್ಮ ದಾರಿ ಹಿಡಿದು ಹೊರಟೇ ಹೋದರು. ಜೀತೂ ಹಠ ಬಿಡದವನಂತೆ ವಾಹನಗಳಿಗೆ ಕೈ ಮಾಡುತ್ತಲೇ ಇದ್ದ.. ಫಕ್ಕನೆ ಯಾರೋ ಕೈಹಿಡಿದು ಎಳೆಯುತ್ತಿರುವ ಅರಿವಾಗಿ ಜೀತೂ ಎಚ್ಚರಗೊಂಡು ನೋಡಿದ. ಇಮಲಿ ಕಣ್ಣೀರಲ್ಲಿ ತೊಯ್ದ ಮುಖ ಹೊತ್ತು ನಿಂತಿದ್ದಳು. ಬೇಗ ಅಮ್ಮನನ್ನ ಕರೆದುಕೊಂಡು ಹೋಗಬೇಕೆಂದೂ ಇಲ್ಲವಾದರೆ ದೊಡ್ಡ ಸಾಹೇಬರು ಬಂದರೆ ಕೂಗಾಡುತ್ತಾರೆಂದೂ ಎಚ್ಚರಿಸಿದ ದಾದಿ, ಅಮ್ಮನನ್ನು ಆ ಆಸ್ಪತ್ರೆಯ ಹೊರಗಿರುವ ಮರದ ಕೆಳಗೆ ತಂದು ಮಲಗಿಸಿದ್ದಾರೆಂದೂ ಅಲ್ಲಿ ಅಮ್ಮ ಮಲಗಲು ಚಾಪೆ ಸಹಾ ಇಲ್ಲದೆ ಮಣ್ಣಿನ ಮೇಲೆ ಮಲಗಿದ್ದಾಳೆಂದೂ ಅಳುತ್ತಳುತ್ತಲೇ ವರದಿ ಒಪ್ಪಿಸಿ, ಜಗ್ಯಾನೊಬ್ಬನೇ ಬಿಟ್ಟು ಬಂದಿರುವ ನೆನಪಾಗಿ ಮತ್ತೆ ಓಡಿಹೋದಳು. + +ಜೀತೂ ಭಾರವಾದ ಹೆಜ್ಜೆ ಹೊತ್ತು ಮತ್ತೆ ಆಸ್ಪತ್ರೆಯತ್ತ ನಡೆದ. ಕನಿಕರದ ಕಣ್ಣುಗಳ ಆ ಬಿಳಿಕೋಟಿನ ಡಾಕ್ಟರ್ ಸಾಹೇಬ ನೆನಪಾದ. ಆತ ದೊಡ್ಡ ಸಾಹೇಬನಂತೂ ಆಗಿರಲಿಕ್ಕಿಲ್ಲ. ತನ್ನ ಬಳಿ ಎಷ್ಟು ನಯವಾಗಿ ಮಾತಾಡಿದ್ದನಲ್ಲ. ಆತನೇನಾದರೂ ಸಹಾಯ ಮಾಡಬಹುದೆ ಎನಿಸಿ ಆಸ್ಪತ್ರೆಯ ಕಾರಿಡಾರಿನ ಉದ್ದಕ್ಕೂ ಓಡಾಡಿದ. ಉಹೂಂ ಆತನೆಲ್ಲೂ ಕಾಣಲಿಲ್ಲ. ಮತ್ತೆ ಅದೇ ಬಿಳಿಯ ಸೀರೆಯ ದಾದಿ ಕಂಡವಳು ಜೀತೂನ ಮುಖದಲ್ಲಿನ ಅಸಹಾಯಕತೆಯನ್ನೂ ಲಾಖಿಯ ಶವದ ಬಳಿ ಏನೂ ಅರಿಯದಂತೆ ಆಡುತ್ತಿರುವ ಜಗ್ಯಾ ಹಾಗೂ ಪೆಚ್ಚುಮೋರೆ ಹಾಕಿಕೊಂಡಿದ್ದ ಇಮಲಿಯನ್ನ ನೋಡಿದವಳಿಗೆ ಪರಿಸ್ಥಿತಿಯ ಅರ್ಥವಾಗಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ರವಿಕೆಯೊಳಗಿಂದ ಬೆವರಿ ಮುದ್ದೆಯಾಗಿದ್ದ ನೂರರ ಒಂದು ನೋಟನ್ನ ಮಾತಾಡದೆ ಜೀತೂನ ಕೈಗಿರಿಸಿ ಬೇಗ ಲಾಖಿಯ ಶವ ಸಾಗಿಸಲು ವ್ಯವಸ್ಥೆ ಮಾಡಲು ಮತ್ತೊಮ್ಮೆ ಎಚ್ಚರಿಸಿ ಮುಂದೆ ಹೋದಳು. ಜೀತೂನ ಕಣ್ಣುಗಳಲ್ಲಿ ಬೆಳಕು ಕಾಣಿಸಿತು. ಮರುಕ್ಷಣ ಈ ಇಷ್ಟು ಕಡಿಮೆ ದುಡ್ಡಿನಿಂದ ಏನಾಗುತ್ತದೆ ಎನಿಸಿ ಪೆಚ್ಚಾದ. ಲಾಖಿಯ ಕಡೆಗೊಮ್ಮೆ ನೋಡಿದ.ಇದಾವುದರ ಪರಿವೆಯೇ ಇಲ್ಲದಂತೆ ಬಿದ್ದುಕೊಂಡಿದ್ದಳವಳು. + +ಇತ್ತೀಚೆಗಷ್ಟೆ ಸಂತೆಯಲ್ಲಿ ಮಾರಾಟಕ್ಕಿಟ್ಟಿದ್ದ ಕೆಂಪು ರಂಗಿನ ಚಮಕಿ ಹಾಕಿದ ಸೀರೆಯನ್ನ ಲಾಖಿ ಅದೆಷ್ಟು ಆಸೆಗಣ್ಣಿನಿಂದ ನೋಡಿದ್ದಳಲ್ಲ ಕೊನೆಗೂ ತನಗೆ ನೂರಾ ಐವತ್ತು ರೂಪಾಯಿಯ ಆ ಸೀರೆಯನ್ನ ಅವಳಿಗೆ ಕೊಡಿಸಲಾಗಲೇ ಇಲ್ಲ ಎನಿಸಿ ಅವನ ಕಣ್ಣುಗಳಲ್ಲಿ ನೀರುಕ್ಕಿತು. ಅಂದು ಅವನ ಕೈಲಿ ಬಿಹಾರಿ ಸಾಹೇಬರ ಗೋಡೋನಿನಲ್ಲಿ ವಾರವಿಡೀ ಲೋಡು ಇಳಿಸಿ ಸಂಪಾದಿಸಿದ್ದ ಐನೂರು ರೂಪಾಯಿಗಳೇನೋ ಇದ್ದವು. ಆದರೆ ಅವನ ಮುಂದೆ ಖರ್ಚಿನ ದೊಡ್ಡ ಪಟ್ಟಿಯೇ ಇತ್ತಲ್ಲ. ಇಮಲಿಗೊಂದು ಅಗ್ಗದ ಲಂಗ ರವಿಕೆ, ಜಗ್ಯಾನಿಗೆ ಶರಟು, ಚಡ್ಡಿ, ರೊಟ್ಟಿಗೆ ಹಿಟ್ಟು,ಎಣ್ಣೆ ತನಗೆರಡು ಕಟ್ಟು ಬೀಡಿ ಎಂದು ಕಾಸು ಖಾಲಿಯಾದದ್ದೇ ತಿಳಿದಿರಲಿಲ್ಲ. ಕೊನೆಗೆ ಲಾಖಿ ಯಾವಾಗಲೂ ಬಾಯಿ ಚಪ್ಪರಿಸಿ ತಿನ್ನುತ್ತಿದ್ದ ಬ್ರೆಡ್ ಪಕೋಡವನ್ನು ಮಾತ್ರಾ ಕೊಡಿಸಲು ಸಾಧ್ಯವಾಗಿದ್ದು ಜೀತೂನಲ್ಲಿ ಲಾಖಿಯ ಬಗ್ಗೆ ಅಪಾರ ಕರುಣೆ ಹುಟ್ಟಿಸಿತ್ತು. ಪಾಪದವಳು ಇಷ್ಟ ಪಟ್ಟ ಒಂದು ಸೀರೆಯನ್ನು ಬೇಕೇ ಬೇಕು ಎಂದು ಹಠ ಮಾಡಲಿಲ್ಲ. ಈ ಸಲ ಕೈಗೆ ದುಡ್ಡು ಬಂದರೆ ಮೊದಲು ಲಾಖಿಗೆ ಆ ಕೆಂಪು ರಂಗಿನ ಚಮಕಿ ಸೀರೆಯನ್ನೇ ಮೊದಲು ತರುವುದು. ಆದರೆ ಅವಳಿಗೆ ಮೊದಲೇ ತಿಳಿಯಬಾರದು. ತಾನು ಇದ್ದಕ್ಕಿದ್ದಂತೆ ಅವಳ ಕಣ್ಮುಂದೆ ಸೀರೆ ಹಿಡಿದಾಗ ಅವಳ ಕಣ್ಣುಗಳು ಖುಷಿಯಿಂದ ಅರಳುವುದನ್ನು ನೋಡಬೇಕು ಎಂದು ಮನಸ್ಸಿನಲ್ಲೇ ತೀರ್ಮಾನ ತೆಗೆದುಕೊಂಡಿದ್ದ ಜೀತೂ ರಾಮನಿಗೆ ಕೊನೆಗೂ ಆ ಘಳಿಗೆ ಒದಗಿ ಬರಲೇ ಇಲ್ಲ. + +ಸಿಕ್ಕರೆ ಕೂಲಿ ಕೆಲಸ ಇಲ್ಲದಿದ್ದರೆ ಅವರಿವರ ಹತ್ತಿರ ಕೂತು ನಿಂತು ಹರಟೆ ಹೊಡೆಯುವ ಜೀತೂರಾಮನಿಗೆ ಎಂದೂ ಇದ್ದ ಜಾಗ ಬಿಟ್ಟು ದೊಡ್ಡ ಶಹರಕ್ಕೆ ಕೆಲಸ ಹುಡುಕಿಕೊಂಡು ಹೋಗಬೇಕೆಂದು ಅನಿಸಿಯೇ ಇರಲಿಲ್ಲ. ಲಾಖಿಯೇ ಆಗಾಗ ಈ ಬಗ್ಗೆ ಮಾತಾಡುತ್ತಿದ್ದಳಾದರೂ ಜೀತೂ ಇದು ನನ್ನ ಅಪ್ಪ, ಅಜ್ಜ, ಮುತ್ತಜ್ಜ ಬಾಳಿದ ಊರು ಬಿಟ್ಟು ನಾನೆಲ್ಲೂ ಬರಲಾರೆ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿ ಮಾತಿಗೆ ಮತು ಬೆಳೆದು ತೀರಾ ಲಾಖಿಯ ಮೇಲೆ ಕೈಯೆತ್ತುವವರೆಗೂ ಹೋಗಿಬಿಡುತ್ತಿದ್ದರಿಂದ ಲಾಖಿಯೇ ಸುಮ್ಮನಾಗಿಬಿಡುತ್ತಿದ್ದಳು. ಇಲ್ಲಿ ಊರಲ್ಲಿ ಸಾಲಕ್ಕೆ ಸಾರಾಯಿಯೂ ಹರಟೆ ಅಡ್ಡದಾರಿಯ ಸ್ನೇಹಿತರೂ ಇದ್ದಾಗ ಜೀತೂರಾಮ ಊರು ಬಿಟ್ಟು ಬಂದಾನಾದರೂ ಹೇಗೆ? ಜೊತೆಗೆ ತೀರಾ ಮೈಮುರಿಯುವ ದುಡಿತವನ್ನ ಅವನೆಂದೂ ಇಷ್ಟ ಪಡುತ್ತಲೇ ಇರಲಿಲ್ಲ. ಲಾಖಿಯೇ ಆಗಾಗ ಅಕ್ಕ ಪಕ್ಕದ ಹಳ್ಳಿಗಳ ಹೊಲದಲ್ಲೋ ಅನುಕೂಲಸ್ತರ ಮನೆಗಳಲ್ಲೋ ಕೆಲಸ ಮಾಡಿ ಸಂಸಾರದ ಹೊಟ್ಟೆ ನೋಡಿಕೊಳ್ಳುತ್ತಿದ್ದಳು. ಹಾಗೆಂದು ಅವಳಿಗೆ ಸಿಗುತ್ತಿದ್ದುದೂ ಪುಡಿಗಾಸೇ ವಿನಃ ಮೂರಂಕಿಯ ಮೊತ್ತವೂ ಅಲ್ಲ. ಮೊದ ಮೊದಲು ಜೀತೂರಾಮ ಹೀಗೆ ಲಾಖಿ ಕೆಲಸಕ್ಕೆ ಹೋಗುವುದನ್ನ ವಿರೋಧಿಸಿ ಕೂಗಾಡಿದರೂ ಮಕ್ಕಳು ಊಟಕ್ಕಾಗಿ ತನ್ನನ್ನು ಕಾಡದೇ ಇರುವುದೂ ಮನೆಯ ಸಣ್ಣ ಪುಟ್ಟ ಖರ್ಚುಗಳೆಲ್ಲ ತನ್ನಿಂದ ಲಾಖಿಯ ಹೆಗಲಿಗೆ ಜರುಗಿದ್ದು ಗಮನಿಸಿ ಒಳಗೊಳಗೇ ಸುಖಿಸುತ್ತಾ ಉಳಿದ ದುಡ್ಡಿನಲ್ಲಿ ಇನ್ನೂ ಒಂದೆರಡು ಬಾಟಲು ಹೆಚ್ಚಾಗಿಯೇ ಏರಿಸುತ್ತಿದ್ದ. ಏನೇ ಇದ್ದರೂ ಲಾಖಿಗೆ ಜೀತೂರಾಮನೇ ದೇವರು, ಜೀತೂಗೆ ಲಾಖಿಯೇ ದೇವತೆ ಎಂದು ಅವರಿವರು ಹಾಸ್ಯ ಮಾಡುವಷ್ಟು ಅನ್ಯೋನ್ಯತೆಯಿದ್ದುದೂ ಸುಳ್ಳಲ್ಲ. ಎಲ್ಲ ಏಳು ಬೀಳುಗಳ ಮಧ್ಯೆಯೂ ಸಂಸಾರ ತೇಲುತ್ತಲೆ ಸಾಗಿತ್ತು. ಅಂತಾದ್ದರಲ್ಲಿ ಈ ಲಾಖಿ ಹೀಗೆ ಎಂದೂ ಇಲ್ಲದವಳೂ ಎದೆ ನೋವೆಂದು ಒದ್ದಾಡಿದವಳೂ ಇದ್ದಕ್ಕಿದ್ದಂತೆಯೇ ಕೈ ಬಿಟ್ಟು ಹೊರಟು ಬಿಡುತ್ತಾಳೆಂದು ಕನಸಲ್ಲೂ ಊಹಿಸದ ಜೀತೂ ರಾಮ ದಿಗ್ಭ್ರಮೆಗೆ ಒಳಗಾಗಿದ್ದ. ಲಾಖಿ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳುವುದೇ ಕಷ್ಟವಾಗಿರುವಾಗ ಈ ದುಡ್ದಿನ ಸಮಸ್ಯೆ ಬೇರೆ! + +“ಯಪ್ಪಾ, ಅಲ್ಲಿ ದಾಗುಟ್ರು ಬೈತಾ ಇದ್ದಾರೆ ಅಮ್ಮನ್ನ ಬೇಗ ಇಲ್ಲಿಂದ ತೆಗೆದ್ಕೊಂಡು ಹೋಗಬೇಕಂತೆ” ಇಮಲಿ + +ಕೈ ಹಿಡಿದು ಜಗ್ಗಿದಾಗ ಜೀತೂರಾಮ ಮತ್ತೆ ಪ್ರಪಂಚಕ್ಕೆ ಬಂದ. ಒಂದು ಕ್ಷಣ ಅವನಿಗೆ ಲಾಖಿಯ ಮೇಲೆ ಭಯಂಕರ ಸಿಟ್ಟು ಉಕ್ಕಿ ಬಂತು. ಹಾಳಾದವಳು ಹೀಗಾ ಮಾಡುವುದು? ಇದ್ದಾಗಲೆಲ್ಲ ಏನೇ ಕಷ್ಟ ಬಂದರೂ ಹೆಗಲು ಕೊಡುತ್ತಿದ್ದವಳು ಹೀಗೆ ಹೆಗಲಿಗೇ ಹೊರೆಯಾಗಿಬಿಟ್ಟಳಲ್ಲ ಎಂದು ಅವುಡುಗಚ್ಚಿದ. ಲಾಖಿಯ ಶಾಂತ ಮುಖ ಕಣ್ಣ ಮುಂದೆ ತೇಲಿ ಬಂದು ಕೂಡಲೇ ಜೀತೂರಾಮ ಗಲ್ಲ ಬಡಿದುಕೊಂಡ. ಇಷ್ಟು ವರ್ಷ ಎಲ್ಲ ಕಷ್ಟಕ್ಕೂ ಜೊತೆಯಾಗಿ ಮಕ್ಕಳು, ಮನೆ, ಗಂಡ ಎಂದು ಜೀವ ತೇಯುತ್ತಾ ಎಲ್ಲಾ ಆಸೆಗಳನ್ನೂ ಅದುಮಿಟ್ಟುಕೊಂಡು ಜೊತೆಗೆ ನಡೆದವಳ ಬಗ್ಗೆ ತಾನು ಸಿಟ್ಟಾಗುವುದೆ? ಅಳುತ್ತಿದ್ದ ಇಮಲಿಯತ್ತ ನೋಡಿದ. ಲಾಖಿಯದೇ ತದ್ರೂಪು. ಅರೇ ತಾನಿಷ್ಟು ದಿನ ಗಮನಿಸಿಯೇ ಇರಲಿಲ್ಲವಲ್ಲ ಎಂದುಕೊಂಡವನೇ ಬಾಗಿ ಅವಳನೆದೆಗಪ್ಪಿ ಹಿಡಿದು ಅಳತೊಡಗಿದ. ಇಮಲಿಗೂ ತಡೆಯಲಾಗಲಿಲ್ಲ. ಲಾಖಿ ಇಲ್ಲ ಎಂದು ಗೊತ್ತಿದ್ದರೂ ಜಗ್ಯಾನ ಮುಖ ನೋಡಿ ಅಪ್ಪನ ಪೆಚ್ಚುಮೋರೆ ನೋಡಿ ತಡೆದುಕೊಂಡಿದ್ದವಳು ಈಗ ಜೀತೂ ರಾಮ ದನಿ ತೆಗೆದು ಅಳುತ್ತಲೇ ತಡೆಯಲಾಗದೆ ತಾನೂ ಅಳತೊಡಗಿದಳು.ಅಲ್ಲೇ ಬಿದ್ದಿದ್ದ ಸಣ್ಣ ಪುಟ್ಟ ಕಲ್ಲಿನ ಚೂರುಗಳನ್ನ ಆಯ್ದುಕೊಂಡು ಅತ್ತಿತ್ತ ಎಸೆಯುತ್ತಾ ಆಗಾಗ ಅಮ್ಮನ ಕಡೆ ನೋಡುತ್ತಾ ಇತ್ತ ಪುಟ್ಟ ಜಗ್ಯಾನಿಗೆ ಏನೊಂದೂ ಅರ್ಥವಾಗದೆ ತಾನೂ ಓಡಿ ಬಂದು ಇಬ್ಬರಿಗೂ ಜೋತು ಬಿದ್ದು ಅಳಲು ಶುರು ಮಾಡಿದ. + +ಅದೆಷ್ಟು ಹೊತ್ತು ಮೂವರೂ ಅದೇ ಸ್ಥಿಯಲ್ಲಿದರೋ ಏನೊ. ದಾರಿಯಲ್ಲಿ ಹೋಗುವವರು ಬರುವವರೆಲ್ಲರ ಕನಿಕರದ ನೋಟಗಳಿಗೂ ಅವರನ್ನು ಸಂತೈಸುವ ಶಕ್ತಿ ಇರಲಿಲ್ಲವಾಗಿ ಆಸ್ಪತ್ರೆಯ ಮುಂದೆ ಇಂತಹಾ ದೃಶ್ಯಗಳು ಸರ್ವೇ ಸಾಮಾನ್ಯ. ಪಾಪ ಇವರ ಕಡೆಯವರಾರೋ ತೀರಿಕೊಂಡಿರಬೇಕೆಂದುಕೊಂಡು ತಲೆ ಬಗ್ಗಿಸಿ ಹಾಗೇ ನಡೆದರು. ಇವರ ಅಳು ಆಸ್ಪತ್ರೆಯ ಒಳಗಿದ್ದ ಆ ಬಿಳಿಕೋಟಿನ ದಾಗಟ್ರಿಗೂ ಕೇಳಿಸಿರಬೇಕು. ದಡಬಡಿಸಿ ಓಡಿಬಂದರೆ ನೊಡುವುದೇನು. ಅತ್ತ ಲಾಖಿ ಹಾಗೇ ಇದ್ದಲ್ಲೇ ಮಲಗಿದ್ದಾಳೆ. ಇತ್ತ ಇವರು ಮೂವರು ಲೋಕದ ಪರಿವೆಯಿಲ್ಲದವರಂತೆ ಅಳುವಿನಲ್ಲಿ ಮುಳುಗಿದ್ದಾರೆ. ಮೆಡಿಕಲ್ ಸೇರಿದಾಗಿನಿಂದ ಸಾವಿನ ಈ ನೋಟಕ್ಕೆ ಒಗ್ಗಿ ಹೋಗಿದ್ದ ಆ ದಾಗುಟ್ರು ಜೀತೂರಾಮನ ಹೆಗಲ ಮೇಲೆ ಕೈಯಿರಿಸಿ ಸಮಾಧಾನ ಹೇಳಲು ಬಾಯ್ತೆರೆಯುವಷ್ಟರಲ್ಲಿ ಅದೆಲ್ಲಿದ್ದಳೋ ಆ ದಾದಿಯೂ ಓಡಿ ಬಂದವಳೇ ಲಾಖಿಯ ಶವ ಸಾಗಿಸಲು ಪರದಾಡುತ್ತಿರುವ ಜೀತೂರಾಮನ ಅಸಹಾಯಕತೆಯನ್ನೂ ಎರೆಡೇ ಮಾತುಗಳಲ್ಲಿ ಹೇಳಿದಳು. ಆತನಿಗೆ ಏನು ಹೇಳಲೂ ತೋಚದಾಯಿತು. ಕೈ ಅನಾಯಾಸವಾಗಿ ಜೇಬಿನತ್ತ ಹೋಯಿತು. ಜೀತೂರಾಮ ಆ ದುಃಖದಲ್ಲೂ ಅದನ್ನ ಗಮನಿಸಿ ಕೊಂಚ ಹುರುಪುಗೊಂಡ. ಆರ್ಥನಾಗಿ ಇನ್ನೇನು ಕೈಯೊಡ್ಡಬೇಕೆನ್ನುವಷ್ಟರಲ್ಲಿ ದಾದಿ ಕೊಟ್ಟ ನೂರರ ನೋಟು ಅವನ ಅಂಗಿಯ ಹರಿದ ಕಿಸೆಯಿಂದ ಹೊರಗಿಣುಕಿದ್ದು ಡಾಕ್ಟರರಿಗೆ ಕಾಣಿಸಿಯೇ ಬಿಟ್ಟಿತು. ಆದರೂ ಖಾಲಿ ಕೈ ಹೊರಬರಲಾರದೆ ಹಾಗೇ ಐವತ್ತರ ನೋಟೊಂದು ಹೊರ ತಂದಿತು. ಸಿಕ್ಕಷ್ಟೇ ಸಾಕು ಎನುವ ಸ್ಥಿಯಲ್ಲಿದ್ದ ಜೀತೂ ರಾಮ ತಟ್ಟನೇ ನೋಟು ಕಸಿದುಕೊಂಡ. ಲಾಖಿಯನ್ನ ನಾನು ಹೇಗಾದರೂ ಕರೆದೊಯ್ಯುತ್ತೇನೆ ಎಂದು ನಿರ್ಧರಿಸಿದ. + +“ಸಾಹೇಬ್ರೆ ಅರ್ಧ ಗಂಟೆ ಟೇಮು ಕೊಡಿ, ನನ್ನ ಮಕ್ಕಳು ಇಲ್ಲೇ ಇರ್ತಾರೆ. ಹೀಗೆ ಹೋಗಿ ಹಾಗೆ ಬಂದು ಇವಳನ್ನ ಕರ್ಕೊಂಡು ಹೋಯ್ತೀನಿ” + +ಜೀತೂರಾಮನ ಕಣ್ಗಳ ಅಸಹಾಯಕತೆಗೆ ಡಾಕ್ಟರೂ ದಾದಿಯೂ ಇಲ್ಲವೆನಲಾಗದಿದ್ದರೂ ಇಂತಹ ಲೆಕ್ಕವಿಲ್ಲದಷ್ಟು ಕೇಸುಗಳನ್ನು ನೋಡಿದ್ದವರು ಕ್ಷಣ ಅನುಮಾನಿಸಿದರು. ಮೊದಲೇ ಕೈಯಲ್ಲಿ ಮೂರು ಕಾಸಿಲ್ಲ ಎನ್ನುತ್ತಿದ್ದಾನೆ ಮತ್ತೆಲ್ಲಿ ತಲೆಗೆ ಬರುತ್ತದೋ.. ಜೀತೂರಾಮನಿಗೆ ಅರ್ಥವಾಯಿತು. + +“ಸಾಹೇಬ್ರೆ ನಾ ಮೋಸ ಮಾಡಿ ಓಡಿ ಹೋಗ್ತೀನಿ ಅಂತಾ ಅಂದುಕೊಂಡಿದೀರಾ? ನಾನು ಬಡವಾ ಸರಿ ಮೋಸಗಾರ ಅಲ್ಲ. ನನ್ನ ಲಾಖೀದು ಒಂದು ಆಸೆ ಇತ್ತು. ಅದಕ್ಕಷ್ಟೇ ಈಗಲೆ ಬರ್ತೀನಿ” ಅಂದವನೇ ಅವರುಗಳ ಉತ್ತರಕ್ಕೂ ಕಾಯದೆ ಭುಜದ ಮೇಲಿದ್ದ ಹರಿದ ಟವೆಲ್ಲಿನಿಂದ ಕಣ್ಣಿರೊರೆಸಿಕೊಂಡು ಓಡಿದ. ಇಮಲಿ ಇನ್ನೂ ಅಳುತ್ತಲೇ ಇದ್ದ ಜಗ್ಯಾನ ಕೈಹಿಡಿದು ಲಾಖಿಯ ಪಕ್ಕ ಕೂತಳು. ಬಿಳಿ ಉಡುಪಿನವರಿಬ್ಬರೂ ಇನ್ನೇನು ಮಾಡಲೂ ತೋಚದೆ ಒಳನಡೆದರು. ಇಮಲಿಗೊಂದೇ ಚಿಂತೆ.ಈ ಅಪ್ಪ ಹೋದದ್ದಾದರೂ ಎಲ್ಲಿಗೆ? ಅಮ್ಮ ನೋಡಿದರೆ ಮತ್ತೇ ಏಳಲಾರದ ಕಡೆ ಹೋಗಿದ್ದಾಳೆ. ಈ ಜಗ್ಯಾನೋ ಇನ್ನೂ ಕೂಸು. ಅಪ್ಪ ಬರದೇ ಇದ್ದರೆ? ಏನು ಮಾಡುವುದು? ಎಂದೇ ತಲೆ ಕೊರೆತ. + +ಇಮಲಿಯೇನೂ ತೀರಾ ದೊಡ್ಡ ವಯಸ್ಸಿನವಳಲ್ಲದಿದ್ದರೂ ಕಷ್ಟದ ಮಧ್ಯೆಯೇ ಬೆಳೆದಿದ್ದವಳಿಗೆ ಎಲ್ಲವೂ ಅರ್ಥವಾಗುತ್ತಿತ್ತು. ಲಾಖಿಗಂತೂ ಇಮಲಿ ಕಣ್ಣೇ ಆಗಿದ್ದಳಲ್ಲ. ಅಮ್ಮನ ದುಡಿತ ಅಪ್ಪನ ಕುಡಿತ ಎಲ್ಲವೂ ಅವಳಿಗೆ ತಿಳಿಯದ್ದೇನಲ್ಲ. ಆದರೂ ಅವರಿಬ್ಬರೂ ಸದಾ ನಗುನಗುತ್ತಾ ಇರೋದನ್ನ ನೋಡಿದಾಗಲೆಲ್ಲ ಅಕ್ಕಪಕ್ಕದ ಮನೆಗಳಲ್ಲಿ ಗಂಡ ಹೆಂಡಿರ ಜಗಳ ಹೊಡೆತದ ಸದ್ದು ಕೂಗಾಟ ಎಲ್ಲದರ ಮಧ್ಯೆ ತನ್ನ ಹರಕು ಜೋಪಡಿ ಸ್ವರ್ಗದಂತೆ ಇಮಲಿಗೆ. ಈ ಅಮ್ಮನಿಗೆ ಸದಾ ಮನೆಯದ್ದೇ ಚಿಂತೆ. ಇತ್ತೀಚೆಗೆಲ್ಲಾ ಬೇಗ ಸುಸ್ತಾಗುತ್ತಿದ್ದವಳು ಆಗಾಗ ಸ್ವಲ್ಪ ಎದೆನೋವೆಂದು ಮೂಲೆ ಹಿಡಿಯುತ್ತಿದ್ದರೂ ಅಪ್ಪ ಬರುವ ಹೊತ್ತಿಗೆ ಏನೂ ಇಲ್ಲದವಳಂತೆ ಎದ್ದು ಬಿಡುತ್ತಿದ್ದಳಲ್ಲ. ನಿಜವಾಗಲೂ ನೋವು ಕಡಿಮೆಯಾಗುತ್ತಿತ್ತೋ ಅಥವಾ ಅಪ್ಪನಿಗೆ ಗೊತ್ತಾಗಬಾರದು ಅಂತ ನಾಟಕವೇ ಮಾಡುತ್ತಿದ್ದಳೋ ಇಮಲಿಗೆ ತಿಳಿಯುತ್ತಿರಲಿಲ್ಲ. + +ಸಣ್ಣ ಪುಟ್ಟ ವಿಚಾರಗಳನ್ನ ಜೀತೂರಾಮನ ಗಮನಕ್ಕೆ ತಂದು ಗಾಬರಿ ಮಾಡುವುದು ಲಾಖಿಗೂ ಬೇಕಿರಲಿಲ್ಲ. ಇನ್ನ ಆಸ್ಪತ್ರೆ ಎಂದರೆ ಮೈಲುಗಟ್ಟಲೆ ದೂರ ಹೋಗಬೇಕು. ಒಮ್ಮೆ ಹತ್ತಿದ ಓಡಾಟ ಹಾಗೇ ಮುಂದುವರೆದರೆ ಮನೆ ನಡೆಯುವುದು ಹೇಗೆ, ಮಕ್ಕಳನ್ನ ನೋಡಿಕೊಳ್ಳುವವರು ಯಾರು ಎಂದೆಲ್ಲ ಲಾಖಿ ಯೋಚಿಸಿರಬೇಕು, ಇಮಲಿಗೂ ಅರ್ಥವಾಗದಂತೆ ಅವಳ ನೋವು ಮಾಯವೆ ಆಗಿಬಿಡುತ್ತಿದ್ದುದು ನೆನೆದು ಇಮಲಿಯ ಕಣ್ಣಲ್ಲಿ ನೀರು ಸುರಿಯಿತು. ಮುಂದೆ? ಅಮ್ಮನಿಲ್ಲದ ಮನೆ! ಪಕ್ಕದ ಮನೆ ಇಚ್ಕೀಯ ಅಮ್ಮ ಅದೇನೊ ಜ್ವರ ಬಂದು ಸತ್ತ ಎರಡೇ ತಿಂಗಳಲ್ಲಿ ಅವಳಪ್ಪ ಹೊಸ ಹೆಂಗಸೊಂದನ್ನು ಕರೆದುಕೊಂಡುಬಂದಿದ್ದ. ದಿನ ಬೆಳಗಾದರೆ ಆಕೆ ಇಚ್ಕೀಯನ್ನು ಬೈಯುವುದು ಹೊಡೆಯುವುದು, ಅವಳು ಅಳುವುದು ಎಲ್ಲ ಸ್ಪಷ್ಟವಾಗೇ ಕೇಳುತ್ತಿತ್ತು. ಇಮಲಿ ಲಂಗದ ತುದಿಯಿಂದ ಕಣ್ಣೀರೊರೆಸಿಕೊಂಡಳು. ಅಪ್ಪನೂ ಬೇರೆ ಹೆಂಗಸನ್ನ ಕರೆತಂದರೆ? ನೆನೆದೇ ಅವಳಿಗೆ ಮತ್ತೆ ಅಳುವುಕ್ಕಿ ಬಂತು. “ಮಾ.. ಏಳು ಏಳು” ಎನ್ನುತ್ತಾ ಲಾಖಿಯ ಭುಜ ಹಿಡಿದು ಅಲುಗಾಡಿಸಿದಳು. ಲಾಖಿಯೇನು ಎದ್ದಾಳು? ಜಗ್ಯಾನಿಗೋ ಅರ್ಥವೇ ಆಗದೆ ಮಾ ಯಾಕೆ ಏಳಲ್ಲ? ಏನಾಗಿದೆ ಇರು ಚೂಜಿ ಚುಚ್ಚಿದ್ರೆ ಏಳ್ತಾಳೆ ಎಂದವನೇ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಸಣ್ಣ ಕಡ್ಡಿಯ ಚೂರೊಂದನ್ನ ತೆಗೆದುಕೊಂಡು ಲಾಖಿಯ ತೋಳಿಗೆ ಚುಚ್ಚುವವನಂತೆ ಮಾಡಿದ. ಇಮಲಿ ತಟ್ಟನೆ ಕೈ ತಡೆದವಳೇ ಜಗ್ಯಾನ ತಲೆ ಸವರಿ ತನ್ನ ಮಡಿಲಲ್ಲಿ ಕುಳ್ಳಿರಿಸಿಕೊಂಡು ಮಾ ಇನ್ನು ಮುಂದೆ ಎಂದೂ ಏಳುವುದಿಲ್ಲ ಮತಾಡುವುದಿಲ್ಲ ಎಂದು ಅವನಿಗೆ ಅರ್ಥ ಮಾಡಿಸಲು ಪ್ರಯತ್ನ ಮಾಡುತ್ತಿರುವಾಗಲೇ ಜೀತೂರಾಮ ದೂರದ ತಿರುವಿನಲ್ಲಿ ಕಾಣಿಸಿ ಸಮಾಧಾನದ ನಿಟ್ಟುಸಿರು ಬಿಟ್ಟಳು. ಅಪ್ಪ ನಮ್ಮನ್ನ ಬಿಟ್ಟು ಹೋಗಿಲ್ಲ ಹಾಗಾದರೆ ನಾನೇ ಭಯಪಟ್ಟೆ ಎಂದು ಜಗ್ಯಾನನ್ನ ಮಡಿಲಿನಿಂದ ಕೆಳಗಿಳಿಸಿ ಎದ್ದು ನಿಂತಳು. + +ಬಿಸಿಲಿಗೆ ಬೆವರು ಧಾರೆಯಾಗಿ ಕಣ್ಣೀರ ಜೊತೆ ಸೇರಿ ಮುಖವನ್ನೆಲ್ಲಾ ತೋಯಿಸಿದ್ದರೂ ಲೆಕ್ಕಿಸದೆ ಜೀತೂರಾಮ ಓಡಿ ಬಂದ. ಕೈಯಲ್ಲಿ ಸಣ್ಣ ಪ್ಲಾಸ್ಟಿಕ್ ಕವರ್. ಜಗ್ಯಾನ ಹೊಟ್ಟೆಯ ಹಸಿವು ಭುಗಿಲ್ಲೆಂದಿರಬೇಕು. ಅಪ್ಪೋ ಅಪ್ಪೋ ಎಂದು ಓಡಿ ಹೋಗಿ ಜೀತೂರಾಮನ ಕಾಲುಗಳನ್ನ ತಬ್ಬಿಹಿಡಿದವನು ಆಸೆಯಿಂದ ಆ ಕವರಿಗೆ ಕೈಯೊಡ್ಡಿದ. ಜೀತೂರಾಮನಿಗೆ ಕರುಳಲ್ಲಿ ಕತ್ತರಿಯಾಡಿಸಿದಂತಾಯ್ತು. “ಲಾಖೀ ನೀನಿದ್ದಿದ್ದರೆ ಈ ಮಕ್ಕಳು ಹೀಗೆ ಹಸಿವಿಂದ ಒದ್ದಾಡ್ತಾ ಇದ್ದರೇನೆ? ಏನೋ ಒಂದು ಹೊಂದಿಸಿ ಹೊಟ್ಟೆ ತಂಪು ಮಾಡ್ತಾ ಇದ್ದೆಯಲ್ಲ” ಎಂದುಕೊಂಡೇ ಕವರಿಗೆ ಕೈ ಹಾಕಿದ ಜಗ್ಯಾನ ಆಸೆದುಂಬಿದ ಕಣ್ಣುಗಳು ಇಮಲಿಯ ಕುತೂಹಲದ ಕಣ್ಣುಗಳಿಗೆ ಕೆಂಪು ಬಣ್ಣದ ಫಳ ಫಳ ಹೊಳೆವ ನಕ್ಕಿ ಹಾಕಿದ ಬಟ್ಟೆ ಕಾಣಿಸಿತು. ಏನೂ ಅರ್ಥವಾಗಲಿಲ್ಲ ಅವರಿಬ್ಬರಿಗೂ. ತಿಂಡಿಯ ಆಸೆಯಲ್ಲಿದ್ದ ಜಗ್ಯಾನ ಮುಖದಲ್ಲಿ ನಿಧಾನವಾಗಿ ನಿರಾಸೆ ಆಕ್ರಮಿಸಿ ಕಣ್ಣುತುಂಬಿಕೊಳ್ಳತೊಡಗಿತು. ಇಮಲಿಗೆ ಆಶ್ಚರ್ಯ. + +ಅಪ್ಪ ಯಾವುದೋ ಗಾಡಿಯ ವ್ಯವಸ್ಥೆ ಮಾಡಲು ಹೋಗಿದ್ದಾನೆಂದುಕೊಂಡರೆ ಇದೇನು ಹೊಸ ಬಟ್ಟೆ ತಂದ ಹಾಗಿದೆಯಲ್ಲ. ಅಮ್ಮ ನೋಡಿದರೆ ಹೀಗೆ! ಅಪ್ಪನ ಮುಖವನ್ನೇ ದಿಟ್ಟಿಸಿದಳು. ಜೀತೂರಾಮನ ಕಣ್ಣಿಗೆ ಕಲ್ಲಿನಂತೆ ಮಲಗಿದ್ದ ಇಮಲಿಯೊಬ್ಬಳೇ ಕಾಣುತ್ತಿದ್ದುದು. ಲೋಕದ ಪರಿವೆಯಿಲ್ಲದವನಂತೆ ನಿಧಾನಕ್ಕೆ ಕೈಲಿದ್ದ ಬಟ್ಟೆ ಬಿಚ್ಚಿದ. ಕೆಂಪು ಬಣ್ಣದ ಹೊಳೆವ ಚಿತ್ತಾರದ ಸೀರೆ ಹೊಳೆಯುತ್ತಿತ್ತು. ಮೆಲ್ಲನೆ ಲಾಖಿಯ ತಲೆಯೆತ್ತಿ ಮಡಿಲಲ್ಲಿರಿಸಿಕೊಂಡ. ಸೀರೆಯನ್ನ ಇಮಲಿಯ ಕೈಗಿತ್ತು ಹಾಸಲು ಹೇಳಿದ. ಅರ್ಥವಾಗದ ಇಮಲಿ ತನಗೆ ಬಂದಂತೆ ನೆಲದ ಮೇಲೆ ಉದ್ದಕ್ಕೂ ಆ ಕೆಂಪು ಬಣ್ಣದ ಸೀರೆಯನ್ನ ಹಾಸಿದಳು. ರಾತ್ರೆ ಹೊತ್ತು ನೀಲಿಯಾಕಾಶದಲ್ಲಿ ನಕ್ಷತ್ರಗಳನ್ನ ನೋಡುತ್ತಿದ್ದ ಇಮಲಿಗೆ ಇಂದೇಕೋ ಆಕಾಶ ಕೆಂಪಾಗಿ ಕಂಡಂತಾಯಿತು. ಜೀತೂರಾಮ ಮೆಲ್ಲನೆ ಲಾಖಿಯನ್ನೆತ್ತಿ ಸೀರೆಯ ಮೇಲೆ ಮಲಗಿಸಿ ತನಗೆ ಬಂದಂತೆ ಸುತ್ತಿದ. ಅಂತೂ ಲಾಖಿ ತನ್ನ ಇಷ್ಟದ ಹೊಳೆವ ಚಿತ್ತಾರದ ಸೀರೆ ಉಟ್ಟು ಮಲಗಿದಳು. ಮುಂದೇನು ಎನ್ನುವಂತೆ ಇಮಲಿ ಅಪ್ಪನ ಮುಖ ನೋಡಿದಳು. ಜಗ್ಯಾನಿಗೆ ತನ್ನ ಹಸಿವು ಮರೆತೇ ಹೋಗಿ ಆ ಕೆಂಪು ಸೀರೆಯಲ್ಲಿ ಅಮ್ಮ ತುಂಬಾ ಸುಂದರವಾಗಿ ಕಂಡಂತಾಗಿ ಬಾಗಿ ಲಾಖಿಯ ಕೆನ್ನೆಗೆ ಮುತ್ತಿಟ್ಟ. ಜೀತೂ ಮುಖ ಅತ್ತ ತಿರುಗಿಸಿದ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಅಂತೂ ಲಾಖಿ ತನ್ನ ಇಷ್ಟದ ಸೀರೆ ಹೊದ್ದು ನೆಮ್ಮದಿಯಿಂದ ಮಲಗಿಬಿಟ್ಟಳು. ಪೇಟೆ ಬೀದಿಗೆ ಹೋಗಿ ಅಲ್ಲಿನ ಒಂದೆರಡು ಅಂಗಡಿಗಳಲ್ಲಿ ಕಾಡಿ ಬೇಡಿ , ಲಾಖಿಯ ವಿಷಯ ತಿಳಿಸಿದ ಜೀತೂರಾಮ ಹಾಗೂ ಹೀಗೂ ನೂರ ನಲವತ್ತು ರೂಪಾಯಿಗೆ ಆ ಕೆಂಪು ಚಿತ್ತಾರದ ಸೀರೆ ತಂದಿದ್ದ. ಈಗವನಿಗೆ ಇನ್ನಾವುದರ ಪರಿವೆಯೂ ಇದ್ದಂತಿರಲಿಲ್ಲ. ಜೇಬಿನಲ್ಲಿ ತಡಕಾಗಿ ಇದ್ದ ಚಿಲ್ಲರೆ, ಸಣ್ಣ ಪುಟ್ಟ ನೋಟು ಸೇರಿಸಿ ಅಲ್ಲೇ ಬಿಸಿಯಾಗಿ ಸಮೋಸ, ಪೂರಿ ಕರಿಯುತ್ತಿದ್ದವನ ಬಳಿ ಹೋಗಿ ನಾಲ್ಕು ಸಮೋಸ, ಎರಡು ಪ್ಲೇಟು ಪೂರಿ ಬಾಜಿ ಕಟ್ಟಿಸಿಕೊಂಡು ಬಂದ. ಜಗ್ಯಾನ ಹೊಟ್ಟೆಯ ಹಸಿವು ಮತ್ತೆ ಕೆರಳಿ ಆತುರಾತುರವಾಗಿ ಕೈಯೊಡ್ಡಿದ. ಮಕ್ಕಳಿಬ್ಬರೂ ತಿಂಡಿ ಹಂಚಿ ಲಾಖಿಯ ತಲೆಯ ಬಳಿ ಕುಳಿತವನ ನೋಡಿ ಇಮಲಿಗೆ ಕರುಣೆಯುಕ್ಕಿ ಬಂತು. ನಿಧಾನಕ್ಕೆ ಪೂರಿ ಮುರಿದು ಬಾಜಿಯಲ್ಲದ್ದಿ ಅಪ್ಪನ ಬಾಯಿಗಿಟ್ಟಾಗ ಜೀತೂರಾಮನಿಗೆ ಬೇಡವೆನ್ನಲಾಗಲಿಲ್ಲ. ಮೂವರೂ ತಿಂದು ಮುಗಿಸಿ ಆಸ್ಪತ್ರೆಯ ಆವರಣದಲ್ಲಿದ್ದ ನಲ್ಲಿಗೆ ಬೊಗಸೆಯೊಡ್ಡಿ ನೀರು ಕುಡಿದರು. ಜೀತೂರಾಮನ ಮೈಯಲ್ಲಿ ಹೊಸ ಶಕ್ತಿ ಬಂದಂತಾಯಿತು. ಮೆಲ್ಲನೆ ಲಾಖಿಯನ್ನ ಎರಡೂ ಕೈಗಳಲ್ಲಿ ಎತ್ತಿಕೊಂಡ. ಅರೇ ಎಷ್ಟು ಹಗುರವಾಗಿದ್ದವಳು ಈಗೆಷ್ಟು ಭಾರವಾಗಿಬಿಟ್ಟಳಲ್ಲ ಎನಿಸಿತು. ಇಲ್ಲ ಲಾಖೀ ನನಗಿಂತ ಜಾಸ್ತಿ ನಮ್ಮೆಲ್ಲರ ಭಾರ ಹೊತ್ತವಳು ನೀನು, ನೀನು ನನಗೆಂದೂ ಭಾರವಾಗಲು ಸಾಧ್ಯವಿಲ್ಲ.. ನೀನು ಭಾರವೇ ಇಲ್ಲ. ಜೀತೂರಾಮ ಭರಭರನೆ ನಡೆದ. ಇಮಲಿ ಅರ್ಥವಾದವಳಂತೆ ಜಗ್ಯಾನ ಕೈ ಹಿಡಿದು ಅಪ್ಪನನ್ನ ಹಿಂಬಾಲಿಸಿದಳು. “ಅಪ್ಪ ನೀನೆಷ್ಟು ಒಳ್ಳೆಯವನು. ಇನ್ನೊಂದು ಅಮ್ಮನ್ನ ಮಾತ್ರ ತರಬೇಡಾ. ಮನೇ ಕೆಲಸ ಎಲ್ಲಾ ನಾನೆ ಮಾಡ್ತೀನಿ. ಕೂಲಿಗೂ ಹೋಗ್ತೀನಿ. ಹೊಸ ಅಮ್ಮನ್ನ ಮಾತ್ರ ತರಬೇಡ…” ಜೀತೂರಾಮನ ಕೆನ್ನೆಗೆ ಹೊಡೆದಂತಾಯ್ತು. ಆದ್ರಭಾವದಿಂದ ಇಮಲಿಯನ್ನೇ ನೋಡಿದ. ಅಷ್ಟೇ ಸಾಕಾಯ್ತು ಇಮಲಿಗೆ. ಅಪ್ಪ ಅಂತಹವನಲ್ಲ ಎಂದು ತೀರ್ಮಾನಿಸಿ ಸಮಾಧಾನದಿಂದ ನಡೆಯಲು ಗೋಳಾಡುತ್ತಿದ್ದ ಜಗ್ಯಾನನ್ನ ಕಷ್ಟಪಟ್ಟು ಸೊಂಟಕ್ಕೇರಿಸಿ ನಿಧಾನವಾಗಿ ಹೆಜ್ಜೆ ಹಾಕಿದಳು. + +ಅಪ್ಪಿ ತಪ್ಪಿ ಎಂದಾದರೂ ತಾನು ಕೆಲಸ ಮಾಡುತ್ತಿದ್ದ ಮನೆಗಳಲ್ಲೋ ಗೋಡೆಗೆ ಮೆತ್ತಿದ್ದ ಸಿನೇಮಾದ ಪೋಸ್ಟರ್‍ ಗಳಲ್ಲೋ ನಾಯಕ ನಾಯಿಕೆಯನ್ನ ಎತ್ತಿಕೊಂಡಿರುವ ಚಿತ್ರ ಕಣ್ಣಿಗೆ ಬಿದ್ದಾಗಲೆಲ್ಲ ಲಾಖಿಗೆ ಮದುವೆಯಾದ ಹೊಸತರಲ್ಲಿ ಜೀತೂರಾಮ ತನ್ನನ್ನೂ ಹೀಗೇ ಎತ್ತಿ ಹಿಡಿದು ಕಾಡುತ್ತಿದ್ದುದು ನೆನಪಾಗಿ ಈಗಲೂ ಯಾವಾಗಲಾದರೂ ಹಾಗೆ ಮಾಡಬಾರದೆ ಎಂದು ಕನಸು ಕಾಣುತ್ತಿದ್ದಳು. ಆದರೆ ಮಕ್ಕಳು ಏನೆಂದುಕೊಂಡಾರು ನಾವು ಹೀಗೆ ಆಡಿದರೆ ಎಂದುಕೊಂಡು ಸುಮ್ಮನಾಗುತ್ತಿದ್ದಳು. ಇವತ್ತು ಮಾತ್ರಾ ಲಾಖಿಗೆ ಅದಾವ ಸಂಕೋಚವೂ ಇರಲಿಲ್ಲ. ತನ್ನಿಷ್ಟದ ಹೊಸ ಸೀರೆಯುಟ್ಟು ಜೀತೂರಾಮನ ಕೈಗಳಲ್ಲಿ ಸ್ವರ್ಗ ಕಾಣುವವಳಂತೆ ನಿಶ್ಚಿಂತೆಯಿಂದ ಮಲಗಿಬಿಟ್ಟಿದ್ದಳು. ಜೀತೂರಾಮನಿಗೂ ಯಾರ ಪರಿವೆಯಿರದೆ ತನ್ನ ಲಾಖಿಯನ್ನೆತ್ತಿಕೊಂಡು ಭರಭರನೆ ಮುನ್ನಡೆದ. ಟಾರು ರಸ್ತೆ ಮುಗಿದು ಹಳ್ಳಿಯ ಕಚ್ಚಾ ರಸ್ತೆ ಪ್ರಾರಂಭವಾಯಿತು. ಜೀತೂರಾಮನ ಕೈ ಸೋಲುತ್ತಾ ಬಂತು. ಲಾಖಿಯನ್ನ ಅಲ್ಲೇ ರಸ್ತೆಯ ಪಕ್ಕ ಮಲಗಿಸಿ ಹತ್ತು ನಿಮಿಷ ಕುಳಿತುಕೊಂಡು ದಣಿವಾರಿಸಿಕೊಂಡ. ಇಮಲಿ ಅಲ್ಲೇ ಯಾವುದೋ ಅಂಗಡಿಯಲ್ಲಿ ಕೇಳಿ ಒಂದು ಹಳೆಯ ಪ್ಲಾಸ್ಟಿಕ್ ಬಾಟಲಿಯಲ್ಲಿ ನೀರು ತಂದು ಅಪ್ಪನಿಗೆ ಕೊಟ್ಟಳು. + + + +ಅಕ್ಕ ಪಕ್ಕ ನಡೆವವರು ಹೊಸ ಸೀರೆಯಲ್ಲಿದ್ದ ಲಾಖಿಯನ್ನೂ ಮಗುವಿನಂತೆ ಅವಳನ್ನೆತ್ತಿಕೊಂಡು ಅತ್ತಿತ್ತ ನೋಡದೆ ನಡೆಯುತ್ತಿರುವ ಜೀತೂರಾಮನನ್ನೂ, ಅವನ ಹಿಂದೆಯೇ ಜಗ್ಯಾನ ಕೈಹಿಡಿದು ಆಗಾಗ ಕಣ್ಣೊರೆಸಿಕೊಳ್ಳುವ ಇಮಲಿಯನ್ನೂ ನೋಡಿ ಏನೂ ಗೊತ್ತಾಗದೆ ಹಾಗೇ ಮುಂದೆ ಸಾಗ ಹತ್ತಿದರು. ನಿಷ್ಕರುಣಿ ಬಿಸಿಲಿಗೆ ಬವಳಿ ಬಂದಂತೆ ಬಿದ್ದಿದ್ದ ರಸ್ತೆ ಜೀತೂರಾಮನ ಸಂಸಾರದ ಈ ಮೆರವಣಿಗೆ ನೋಡಿ ಒಳಗೊಳಗೇ ದುಃಖಿಸತೊಡಗಿತು. + +ಶುಭಾ ಎ. ಆರ್. ಮೂಲತಃ ಬೆಂಗಳೂರಿನವರು. ಇವರ ಕತೆ, ಕವನ, ಪ್ರಬಂಧಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಸರ್ಕಾರಿ ಪ್ರೌಢಶಾಲೆಯಲ್ಲಿ ಗಣಿತ ವಿಜ್ಞಾನ ಶಿಕ್ಷಕಿಯಾಗಿರುವ ಇವರು ವಿಜ್ಞಾನ ಪಠ್ಯಪುಸ್ತಕವೂ ಸೇರಿದಂತೆ ಶಿಕ್ಷಣ ಇಲಾಖೆಯಲ್ಲಿ ಹಲವಾರು ಪುಸ್ತಕಗಳ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ರಾಜಾಜಿನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ವಿಜ್ಞಾನ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ.ಮಕ್ಕಳಿಗಾಗಿ “ಧರೆಯನುಳಿಸುವ ಬನ್ನಿರಿ” ಎಂಬ ವೈಜ್ಞಾನಿಕ ನಾಟಕಗಳ ಪುಸ್ತಕ ಪ್ರಕಟಿಸಿದ್ದು, ‘ತುಂಡು ಭೂಮಿ- ತುಣುಕು ಆಕಾಶ’,(ಕಥಾ ಸಂಕಲನ), ‘ತುಟಿ ಬೇಲಿ ದಾಟಿದ ನಗು’ (ಕವನ ಸಂಕಲನ) ಸದ್ಯದಲ್ಲೇ ಬಿಡುಗಡೆಯಾಗಲಿವೆ. \ No newline at end of file diff --git a/Kenda Sampige/article_383.txt b/Kenda Sampige/article_383.txt new file mode 100644 index 0000000000000000000000000000000000000000..ab104c9dde5f533363f26c9102deee2a67b663e6 --- /dev/null +++ b/Kenda Sampige/article_383.txt @@ -0,0 +1,27 @@ + + +ಕುಂವೀ ಅವರ ಕಾದಂಬರಿಯಲ್ಲಿ ಓದುಗರು ಏನೇನು ನಿರೀಕ್ಷಿಸಬಹುದೋ ಅವೆಲ್ಲವೂ ನಿಜಲಿಂಗದಲ್ಲಿರುವಂತೆಯೇ ನಿರೀಕ್ಷಿಸಿರದ ಸಂಗತಿಗಳೂ ಇದ್ದು, ಇದೇನು ನಯಾಗರವೋ ಜೋಗ್ ಜಲಪಾತವೋ ಎಂಬ ಭ್ರಮೆ ಹುಟ್ಟಿಸುವಂಥ ಅವರ ಟ್ರೇಡ್ ಮಾರ್ಕ್ ಭಾಷೆಯಲ್ಲಿ ಜೆಟ್ ವೇಗಕ್ಕಿಂತ ತುಸು ಹೆಚ್ಚು, ಬೆಳಕಿನ ವೇಗಕ್ಕಿಂತ ತುಸು ಕಡಿಮೆ ಅನ್ನುವ ಸ್ಪೀಡಿನಲ್ಲಿ ಸಾಗುತ್ತ ರೂಪುಗೊಳ್ಳುವ ಕೃತಿಯ ಜೋಡಣೆ, ಕಟ್ಟಣೆ ಇಂಥವುಗಳನ್ನೆಲ್ಲ ಗಮನಿಸುವುದಕ್ಕೆ ಸಾಕಾಗುವಷ್ಟು ವ್ಯವಧಾನವನ್ನು ನೀಡದ ಅವರ ಆಪ್ತ ಒತ್ತಾಯಕ್ಕೆ ಮಣಿದು ಕಾದಂಬರಿಯ ಸ್ಪೀಡೋದಿನಲ್ಲಿ ನನ್ನ ಮನಸ್ಸು ಏನೇನು ಕೆಲವು ಸಂಗತಿಗಳನ್ನು ದಾಖಲಿಸಿಕೊಂಡಿತೋ ಅದಷ್ಟನ್ನೇ ಈ ಕೃತಿಯೊಡನೆ ಸೇರಿಸುತಿದ್ದೇನೆ. ಸಮರ್ಥ ಲೇಖಕರು ಹೇಗೆ ಕೃತಿಯನ್ನು ನಿರೂಪಿಸಿರುತ್ತಾರೋ ಅದೇ ರೀತಿಯಲ್ಲಿ ಅದರ ಬಗ್ಗೆ ಬರೆಯಬೇಕೆಂಬ ಒತ್ತಡವೂ ಮನಸ್ಸಿನಲ್ಲಿ ಮೂಡುತ್ತದೆ ಅನ್ನುವುದಕ್ಕೆ ಇಗೋ ಒಂದು ಕ್ಷಣ ಮೊದಲು ನೀವು ಓದಿ ಮುಗಿಸಿದ, ನನ್ನದಲ್ಲದ ರೀತಿಯಲ್ಲಿ ಬರೆದಿರುವ ಈ ಎರಡು ವಾಕ್ಯಗಳೇ ಸಾಕ್ಷಿ! ಕುಂವೀ ಕಾದಂಬರಿ ಹಾಗೆ ಓದುಗರನ್ನು ಆವರಿಸಿಕೊಂಡು ತಾನು ಜಗತ್ತನ್ನು, ಜನರನ್ನು ಕಂಡಂತೆಯೇ ನಾವೂ ಕಾಣಲು ಒತ್ತಾಯಿಸುತ್ತದೆ. + +ನನ್ನ ತಲೆಮಾರಿನ ಮತ್ತೆ ಯಾವ ಕಥೆಗಾರರೂ ಕುಂವೀಯವರ ಹಾಗೆ ಉಚೃಂಖಲ ಕಲ್ಪನಾವಿಲಾಸವನ್ನೂ ನಿಷ್ಠುರ ವಾಸ್ತವ ಪ್ರಜ್ಞೆಯನ್ನೂ ಪ್ರಖರ ವಿಡಂಬನೆಯನ್ನೂ ಸಂದು ಕಾಣದ ಹಾಗೆ ಬೆಸೆದು ಕುಂವೀಯವರಷ್ಟು ಸಮೃದ್ಧವಾದ ಬರಹವನ್ನು ಮಾಡಿಲ್ಲ. ಈ ಮಾತಿನಲ್ಲಿ ಇರುವ ಎಲ್ಲ ಗುಣಗಳೂ ಕುಂವೀ ಕಾದಂಬರಿಗಳ ಕಿಕ್ಕಿರಿದ ಬದುಕಿನ ವಿಸ್ತಾರ ಕ್ಯಾನ್ ವಾಸಿಗೆ ಕಾರಣವಾಗಿವೆ. ಹಾಗೆಯೇ ವ್ಯವಧಾನವಿರದ ಓದುಗರಿಗೆ ತೊಡಕನ್ನೂ ಒಡ್ಡುತ್ತವೆ. ಹಾಗೆ ನೋಡಿದರೆ ಅದು ತೊಡಕಲ್ಲ, ಕನ್ನಡದ ಓದುಗವರ್ಗ ಪಾಶ್ಚಾತ್ಯ ಮಾದರಿಯ ಕಾದಂಬರಿ ರೂಪದ ಕೃತಕ ಶಿಶು ಆಹಾರಕ್ಕೆ ಒಗ್ಗಿರುವುದರಿಂದ ಪೌರ್ವಾತ್ಯ ಮಾದರಿಯ ಕಥೆಕಟ್ಟುವ ಕ್ರಮಕ್ಕೆ ದೂರವಾಗಿದ್ದಾರೆಯಾದ್ದರಿಂದ ತೊಡಕು ಅಂದುಕೊಳ್ಳುತ್ತಾರೆ. + +ಅದೇನೆಂದರೆ ಹರಿವ ನದಿಗೆ ಮೈಯೆಲ್ಲ ಕಾಲು ಇರುವ ಹಾಗೆ ಕುಂವೀ ತಮ್ಮ ಕಾದಂಬರಿಯ ಕಥನ ಇಡುವ ಒಂದೊಂದು ಹೆಜ್ಜೆಗೂ ಒಂದೊಂದು ನದಿಯನ್ನು ಸೃಷ್ಟಿಯಾಗುವ ಹಾಗೆ ಮಾಡುತ್ತಾರೆ. ಯಾವುದು ನದಿ, ಯಾವುದು ತೊರೆ, ಯಾವುದು ಉಪನದಿ, ಯಾವುದು ಕಿರು ಹಳ್ಳ ಅಂತ ಗೊತ್ತಾಗುವುದು ಕಾದಂಬರಿ ಮುಗಿದ ಮೇಲೆಯೇ. ಈ ನಿಜಲಿಂಗ ಕಾದಂಬರಿಯನ್ನೇ ನೋಡಿ. ಕನಿಷ್ಠಪಕ್ಷ ಮುನ್ನೂರಾದರೂ ಪಾತ್ರಗಳ ಹೆಸರು ಬರುತ್ತವೆ. ಒಂದೊಂದು ಪಾತ್ರದ ವೈಶಿಷ್ಟ್ಯ, ಅದರ ಹಿನ್ನೆಲೆ, ಅದು ಯಾಕೆ ಈ ಕ್ಷಣದಲ್ಲಿ ಹೀಗೆ ವರ್ತಿಸುತ್ತದೆ ಅನ್ನುವ ಕಿರು ಕಥೆಗಳನ್ನು ಮುನ್ನೂರೂ ಪಾತ್ರಗಳಿಗೆ ಕೆಲವೇ ವಾಕ್ಯಗಳಲ್ಲಾದರೂ ಒದಗಿಸುತ್ತಾರೆ. ಈ ಕಾದಂಬರಿಯಲ್ಲಿ, ಮಿಕ್ಕ ಕುಂವೀ ಕಾದಂಬರಿಗಳ ಹಾಗೆಯೇ, ಯಾರೂ ಅಮುಖ್ಯರಲ್ಲ. ವ್ಯಾಸನ ಮಹಾಭಾರತ, ಬಾಣನ ಕಾದಂಬರಿ, ದಶಕುಮಾರ ಚರಿತೆ, ಅಥವ ಅರೇಬಿಯನ್ ನೈಟ್ಸ್ ಗಮನವಿಟ್ಟು ಓದಿದವರಿದ್ದರೆ ಕುಂವೀ ಕಥನ ಆ ಮಾದರಿಯದ್ದು ಅನ್ನುವುದು ಹೊಳೆಯುತ್ತದೆ. ವ್ಯಾಸ ಹೇಳಿದ್ದನ್ನು ಅವನ ಶಿಷ್ಯ ವೈಶಂಪಾಯನ ಕೇಳಿ ಜನಮೇಜಯನಿಗೆ ಹೇಳಿದ್ದನ್ನು ಕೇಳಿ ಉಗ್ರಶ್ರವನು ನೈಮಿಶಾರಣ್ಯದ ಮುನಿಗಳಿಗೆ ಹೇಳಿದ್ದನ್ನು ಲೋಮಹರ್ಷಣ ಕೇಳಿ-ಹೀಗೆ ಕಥೆಯೊಳಗೆ ಕಥೆಹೇಳುವ ಇನ್ನೊಬ್ಬರು ಮತ್ತೊಬ್ಬರು ಮತ್ತಿನ್ನೊಬ್ಬರು ಇರುವ ಹಾಗೆ; ತೆಲುಗಿನ ‘ಕಲಾಪೂರ್ಣೋದಯ’ ಮಹಾಕಾವ್ಯದಲ್ಲಿ ಬ್ರಹ್ಮನ ಸೃಷ್ಟಿ, ಕವಿಯ ಸೃಷ್ಟಿ ಎರಡೂ ಒಂದರೊಳಗೊಂದು ಬೆರೆತು ಹೋಗುವ ಹಾಗೆ, ನಿಜಲಿಂಗ ಕಾದಂಬರಿಯಲ್ಲೂ ಶಂಭುಲಿಂಗಪ್ಪನು ಲೇಖಕನಿಗೆ ಹೇಳುವ ಕಥೆ, ಅವರಿಬ್ಬರೂ ಲಿಂಗದಳ್ಳಿಯ ಗೌಡರಿಂದ ಕೇಳುವ ಕಥೆ, ಲಿಂಗದಳ್ಳಿಯ ಗೌಡರು, ಗಂಡೀಕೋಟೆಯ ಚನ್ನೇಗೌಡರು, ಮೇಷ್ಟರು ಕೃಷ್ಣಮೂರ್ತಿಯ ನೋಟ್ ಬುಕ್ಕು, ದಂಡಪಾಣಿಯ ಮಕ್ಕಳಾದ ದಂಡಪಾಣಿ, ಚಕ್ರಪಾಣಿ, ಶೂಲಪಾಣಿ ಮತ್ತೆ ಇನ್ನೊಮ್ಮೆ ಲೇಖಕ ಇವರೆಲ್ಲ ನಿರೂಪಕರು ಸೇರಿ ಕಾದಂಬರಿಯ ಕಾಯ ನಿರ್ಮಿಸುತ್ತಾರೆ. ಮಧ್ಯೆ ಮಧ್ಯೆ ಒಬ್ಬೊಬ್ಬ ನಿರೂಪಕರೂ ಹೇಳುವ ಭಿನ್ನ ನಿರೂಪಣೆಗಳ ಬಗ್ಗೆ ಲೇಖಕರ ವ್ಯಾಖ್ಯಾನವೂ ಸೇರುತ್ತದೆ. + +ಯಾರು ಯಾರಿಗೆ ಹೇಳಿದರು ಅನ್ನುವುದನ್ನು ಹೀಗೆ ಬರೆಯಲು ಹೊರಟಾಗ ತೊಡಕು ಅನ್ನಿಸಿದರೂ ಓದುವಾಗ ಹಾಗಾಗದು. ಮೊದಲನೆಯ ಭಾಗದಲ್ಲಿ ಸ್ವಾತಂತ್ರಪೂರ್ವದ ತರೀಕೆರೆಯ ಅರಸನ, ಅವನ ದಳವಾಯಿಯ, ಕ್ಯಾಪ್ಟನ್ ಸಿದ್ಧಲಿಂಗನ, ಮತ್ತೆ ಶಂಭುಲಿಂಗಪ್ಪನ ಅಜ್ಜಿಯ ಕಥೆ ಆರಂಭವಾಗಿ, ಎರಡನೆಯ ಭಾಗದಲ್ಲಿ ಬಲುಮಟ್ಟಿಗೆ ಅಜ್ಜಿಯ ಜೀವನ ಚಿತ್ರಣ ನಡೆದು, ಮೂರನೆಯ ಭಾಗದಲ್ಲಿ ಅವಳ ಮಗ ಅಂದರೆ ಶಂಭುಲಿಂಗಪ್ಪನ ತಂದೆ ನಿಜಲಿಂಗನ ಬದುಕಿನ ಅದ್ಭುತ ಚಿತ್ರಣ ತೊಡಗಿ, ಅದು ನಾಲ್ಕು ಐದನೆಯ ಭಾಗದಲ್ಲೂ ಮುಂದುವರೆದು, ಜೊತೆಜೊತೆಗೇ ಸ್ವಾತಂತ್ರೋತ್ತರ ರಾಜಕಾರಣದ ವಿಡಂಬನೆ ಮತ್ತು ಕಳ್ಳರ ಬದುಕಿನ ತೀರ ಅಪರೂಪದ ಕಥನಗಳು ಬೆಳೆದು ಐದನೆಯ ಭಾಗದಲ್ಲಿ ಮಂಗಳ ಮುಖಿಯರು ಊರಲ್ಲಿ ತರುವ ಧನಾತ್ಮಕ ಬದಲಾವಣೆಗಳನ್ನು ಚಿತ್ರಿಸುತ್ತಲೇ ಆ ಮಂಗಳ ಮುಖಿ ನಾಯಕಿಯ ರಹಸ್ಯ ಸ್ಫೋಟವಾಗಿ ಕೊನೆಯ ಭಾಗದಲ್ಲಿ ಇದು ಹಲವು ನಿರೂಪಣೆಗಳನ್ನು ದಾಖಲಿಸಿರುವುದೇ ಹೊರತು ನಿಜವಾದ ಮುಕ್ತಾಯವಲ್ಲ ಅನ್ನುವ ಸಮಾರೋಪವಿದೆ. + +ಅಂದರೆ ತೀರ ಅಂದರೆ ತೀರ ಸ್ಥೂಲವಾಗಿ ಮೂರು ತಲೆಮಾರುಗಳ ಮೂರು ಭಿನ್ನ ಲೋಕಗಳ ಮೂರು ಭಿನ್ನ ಲಿಂಗಗಳ ಕಥೆ ಎಂದು ಒಂದು ಮಾತಿನ ಶರಾ ಹೇಳಿದರೆ ಅದು ಕಾದಂಬರಿಗೆ ಅನ್ಯಾಯ. ಓದುಗರು ಇದನ್ನು ಕಥೆಯ ಏಕಧಾರೆಗಾಗಿ ಓದಬಾರದು, ಪುಟಪುಟದಲ್ಲೂ ತೆರೆದುಕೊಳ್ಳುವ ಕಥಾ ಮಾಲಿಕೆಗಳನ್ನು ಆಲಿಸುತ್ತ, ಆದರೆ ಮೈ ಮರೆಯದೆ, ಈ ಎಲ್ಲ ಬೇರೆ ಬೇರೆ ಬೇರೆ ಕಥೆಗಳನ್ನೆಲ್ಲ ಒಂದಾಗಿ ಬೆಸೆಯುವ ಕಲಾಕೌಶಲವನ್ನು ಆನಂದಿಸುತ್ತ ನಿಧಾನವಾಗಿ ಓದಬೇಕು. ‘ಅಗ್ಗಿರಾಮುಡುವಿನ ನಾಲ್ಕು ಹೆಂಡತಿಯರು ಬಡತನದ ಬಿಸಿಲಗೋಪುರಕ್ಕೆ ಅಸಂಖ್ಯಾತ ಮಕ್ಕಳೆಂಬ ಹಿಮಗಳಸಗಳನ್ನು ಮುಡಿಸಿದ್ದರು’; ‘ಶ್ವೇತಭವನದಂತಿದ್ದ ಆಕೆಯ ಭವತ್ಕೇಶಪಾಶ ಪ್ರಪಂಚಕ್ಕೆ ಗೋದ್ರೇಜ್ ಲೇಪಿಸಿ ಕಪ್ಪು ವರ್ಣಕ್ಕೆ ತಿರುಗಿಸಿದ್ದಳು’; ‘ಸತ್ಯಭಾಮಳಂಥ ಸುಂದರ ಯುವತಿ ತೇಲಲೀಯದ ಗುಂಡೂ ಹೌದು, ಮುಳಗಲೀಯದ ಬೆಂಡೂ ಹೌದು’ ಇಂಥ ಪ್ರಾಚೀನ ನುಡಿಗೋಡಂಬಿಗಳು ಅನಿರೀಕ್ಷಿತವಾಗಿ ಸಿಕ್ಕಾಗ ಮೆಲ್ಲುವುದನ್ನು ಓದುಗರು ತಪ್ಪಿಸಿಕೊಳ್ಳಬಾರದು. ಹಾಗೆ ವ್ಯವಧಾನದಿಂದ ಓದಿದಾಗ ಉಷಾಳ ಸ್ವಪ್ನ ಪ್ರಪಂಚ ಕಾವ್ಯ ಗುಣವೂ ಅರಿವಾಗುತ್ತದೆ: ‘ಫಕ್ಕನೆ ಎಚ್ಚರಗೊಂಡು ನೋಡುತ್ತಾಳೆ ತನ್ನ ಮಗ್ಗುಲು ನೀಳಕಾಯದ ರಾಜಕುಮಾರ! ಉಷಾ ಎಂದು ಪಲುಕುತ್ತಿರುವನು, ತನ್ನೆರಡು ದೀರ್ಘ ಬಾಹುಗಳಿಂದ ಬಿಗಿದಪ್ಪುತ್ತಿರುವನು, ತನ್ನ ಮುಖದ ತುಂಬೆಲ್ಲ ಮುತ್ತುಗಳನ್ನು ಬಿತ್ತುತ್ತಿರುವನು, ನೀಳ ನಾಸಿಕದ ತುದಿಯಿಂದ ತನ್ನ ಮುಖದ ಮೇಲೆ ಪ್ರೇಮಕವಿತೆಯನ್ನು ಬರೆಯುತ್ತಿರುವನು…[ಅದನ್ನು] ವಾಚಿಸಬೇಕೆನ್ನುವಷ್ಟರಲ್ಲಿ ತನ್ನಪ್ಪುಗೆಯಲ್ಲಿ ಎತ್ತಿಕೊಂಡೊಯ್ದು ಪುಷ್ಪಕ ವಿಮಾನದಲ್ಲಿ ಕೂರಿಸಿದ, ಚಾಲಕನ ಹಂಗಿರದ ಆ ವಾಹನ ವಾಯುವೇಗದಲ್ಲಿ ಹಾರಿ ನೋಡುನೋಡುವಷ್ಟರಲ್ಲಿ ಹಲವು ಲೋಕಗಳನ್ನು ಕ್ರಮಿಸಿತು. ಸ್ಪಟಿಕ ಜಲಾಶಯದ ನಟ್ಟನಡುವೆ ಪುಷ್ಟವಿರಚಿತ ದೋಣಿಯಲ್ಲಿ ತಮ್ಮನ್ನು ಮೆಲ್ಲಗೆ ಇಳಿಸಿದ ಬಳಿಕ… ಜಲವಿಹಾರ ಜಲಕೇಳಿ ಜನನಿನಾದ! ನಾಲ್ಕು ಕಾಲಿನ ಪಕ್ಷಿಗಳು! ಕಾಲುಗಳಿಲ್ಲದ ಸಸ್ತನಿಗಳು! ಬಗೆಬಗೆಯ ಕಥೆಗಳನ್ನು ಹೇಳುತ್ತಿರುವ ಉರಗಗಳು! ಪುಷ್ಪಗಳೊಡಲಿನಿಂದ ಮೂಡಿ ಬಂದು ತನ್ನ ಶರೀರದ ಸ್ವೇದ ರಂಧ್ರಗಳಲ್ಲಿ ವಾಸ್ತವ್ಯ ಹೂಡುತ್ತಿರುವ ಶತಕೋಟಿ ಸುಂದರಿಯರು!’ ಇಂಥ ನುಡಿಯೊಳಗೇ ಸೃಷ್ಟಿಯಾಗುವ ಸಿನಿಮಾದಂಥ ದೃಶ್ಯಗಳ ಖುಷಿ ಓದಿನ ವೇಗದಲ್ಲಿ ತಪ್ಪಿಹೋಗಬಾರದು. + + + +ಸತ್ಯಭಾಮೆ, ಅವಳ ಗೆಳತಿ ವಿಕ್ಟೋರಿಯ ಬಾಯಲ್ಲಿ ಸಟ್ ಆಗಿ, ಮತಾಂತರಗೊಂಡು ಸಿದ್ಧಲಿಂಗನ ಹೆಂಡತಿ ಪೌಲೀನ್ ಯಶೋಧಳಾಗಿ, ಮತ್ತೆ ದಿಕ್ಕು ತಪ್ಪಿ, ಪಡಬಾರದ ಪಾಡುಪಟ್ಟರೂ ಸ್ವಾಭಿಮಾನೀ ಅನಂತರಮ್ಮನಾಗಿ, ಮಗು ನಿಜಲಿಂಗನ ತಾಯಿಯಾಗಿ ಬೆಳೆಯುವಂಥ ಗಟ್ಟಿ ಹೆಣ್ಣು ಪಾತ್ರವನ್ನು ಕುಂವೀ ಇತರ ಕಾದಂಬರಿಗಳಲ್ಲಿ ಮಾತ್ರವಲ್ಲ ಕನ್ನಡದ ಇತರ ಕೃತಿಗಳಲ್ಲೂ ಅಪರೂಪಕ್ಕೆ ಮಾತ್ರ ಕಾಣಬಹುದು. ಇನ್ನು ಕಾದಂಬರಿಗೆ ಹೆಸರು ಕೊಟ್ಟಿರುವ ನಿಜಲಿಂಗ ಆಧುನಿಕ ಕಾಲದ ರಾಬಿನ್ ಹುಡ್. ಉಚಲ್ಯಾದಂಥ ಆತ್ಮಕಥೆಗಳು ಕನ್ನಡಕ್ಕೆ ಬಂದಿರಬಹುದು. ಆದರೆ ವಾಸ್ತವದಲ್ಲಿ ಬೇರು ಬಲವಾಗಿ ಬಿಟ್ಟಿದ್ದರೂ ಕಲ್ಪನಾಶೀಲವಾಗಿ ಅರಳುವ ಅಕ್ಷರಶಃ ನೂರಾರು ಕಳ್ಳರು ಅವರ ಸಾಹಸ, ಪ್ರಣಯ, ನೋವು, ನಲಿವು, ಗೆಲುವು, ವೈಫಲ್ಯಗಳು ಕಾದಂಬರಿಯಾಗಿ ರೂಪು ಪಡೆದಿರುವುದು ಮೊದಲೆಂದಾದರೂ ಆಗಿದ್ದು ನನಗೆ ನೆನಪಿಲ್ಲ. ಜೊತೆಗೆ ಈ ಪ್ರಾಮಾಣಿಕ ಸತ್ಯವಂತ ಸಾಹಸೀ ಕಳ್ಳರೊಡನೆ ಮುಖ್ಯಮಂತ್ರಿಯಾದಿಯಾಗಿ ರಾಜಕೀಯ ಜಗತ್ತು, ಸಿನಿಮಾ ಜಗತ್ತುಗಳನ್ನು ಬೆಸೆದು ಹೊಸೆದು ವಿಡಂಬಿಸಿ ಕುಂವೀ ಕಾದಂಬರಿಗೆ ಇನ್ನೊಂದು ಆಯಾಮ ನೀಡುತ್ತಾರೆ. ಕಳ್ಳನ ಮನೆಯಲ್ಲಿ ಗ್ರಾಮವಾಸ್ತವ್ಯ ಮಾಡುವ ಮುಖ್ಯಮಂತ್ರಿ ನಗೆಯುಕ್ಕಿಸುವ ಹಾಗೇ ನಮ್ಮ ಸಮಕಾಲೀನ ರಾಜಕೀಯದ ವಿಷಾದಮಯ ವಿಡಂಬನೆಯೂ ಆಗುತ್ತಾನೆ. ಈ ವಿಡಂಬನೆ ಇದೆಯಲ್ಲ ಅದು ಕುಂವೀ ಬ್ರಾಂಡಿನದ್ದು. + +ಕಾದಂಬರಿಯ ಕೊನೆಯ ಭಾಗದಲ್ಲಿ ತಾವೇ ತಾವಾಗುವ ತೃತೀಯ ಲಿಂಗಿಗಳು-ಬಬಿತಾ, ಹೇಮಮಾಲಿನಿ, ಸಾಧನಾ ಇಂಥವರದ್ದು ಇನ್ನೊಂದು ಲೋಕ. ಶಂಭುಲಿಂಗ, ಸಿದ್ಧಲಿಂಗ, ನಿಜಲಿಂಗ, ತೃತೀಯಲಿಂಗ! ನಿಜವಾಗಿ ಕಳ್ಳರು ಮತ್ತು ತೃತೀಯಲಿಂಗಿಗಳು ಸಮಾಜದ ಹಿತಚಿಂತಕರು ಅನ್ನುವ ಹಾಗೆ ಈ ಭಾಗ ಬೆಳೆಯುತ್ತದೆ. + +ಶಂಭುಲಿಂಗ ತನ್ನ ಮೂಲ ಅರಸಿ ಹೊರಟವನು, ದುರ್ಬಲ. ಸಿದ್ಧಲಿಂಗ ಕ್ರೂರಿ, ದಮನಕಾರಿ. ಇನ್ನು ನಿಜಲಿಂಗ ನಿಜ-ಲಿಂಗ. ಚತುರ, ಮಾನವೀಯ, ಕರುಣಾಮಯಿ ರಾಬಿನ್ ಹುಡ್ ನಂಥ ನಾಯಕ. ಅವನು ತೃತೀಯಲಿಂಗಿಯ ವೇಷಧಾರಣೆ ಮಾಡಿ ಉಷಾ ಪರಿಣಯವನ್ನು ಯಶಸ್ವಿಯಾಗಿ ನೆರವೇರಿಸಿಕೊಳ್ಳುತ್ತಾನೆ. ಅದು ವೇಷಧಾರಣೆ ಎಂದು ಗೊತ್ತಾದಾಗ ತೃತೀಯಲಿಂಗದ ವಿವರಣೆ ಕಾದಂಬರಿಯ ತಾಂತ್ರಿಕ ಅಗತ್ಯ ಮಾತ್ರವೋ ಎಂಬ ಸಂಶಯ ಸಣ್ಣದಾಗಿ ಸುಳಿದು ಹೋಗುತ್ತದೆ. + +ಕಾದಂಬರಿಯ ಆರಂಭದಲ್ಲೇ ಒಂದು ಮಾತು ಬರುತ್ತದೆ. ‘ಚಿಗುರು ವರ್ತಮಾನದಲ್ಲಿದ್ದರೂ ಕಥೆಯ ಮೂಲ ಬೇರುಗಳಿರುವುದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ತ್ರಿಭುಜಾಕೃತಿಯಂಥ ಕಥೆಯ ಒಂದು ಮೂಲೆಯಲ್ಲಿ ಆಂಗ್ಲರ ವಸಾಹತುಶಾಹಿ ಇದ್ದರೆ ಇನ್ನೊಂದು ಮೂಲೆಯಲ್ಲಿರುವುದು ತರಿಕೆರೆಯ ಇತಿಹಾಸದ ಪಳೆಯುಳಿಕೆ. ಅಂತಿಮ ಮೂಲೆಯಲ್ಲಿ ದಾಸ್ಯ ಶೃಂಖಲೆಯ ಪರಿವೇಷದಲ್ಲಿರುವ ಭಾರತ. ಈ ತ್ರಿಕೊನಾಕೃತಿಯ ನಟ್ಟನಡುವೆ ವೇಣುಗೋಪಾಲಭಟ್ಟರ ಕುಟುಂಬದ ಅಸಹಾಯಕತೆಯ ಚಿತ್ರಣ.’ ಈ ಮಾತಿಗೆ ಕಾರಣವಾಗುವುದು ‘ಹೆಣ್ಣು ವೇಷದಲ್ಲಿದ್ದ ಶಂಭುಲಿಂಗಪ್ಪನ ತಂದೆಯ ಚಿತ್ರ’. ಅಂದರೆ ಕುಂವೀಯವರು ಇಡೀ ಕಾದಂಬರಿಯ ವಿನ್ಯಾಸವನ್ನು ಮೊದಲು ಮನಸ್ಸಿನಲ್ಲಿ ಮೂಡಿಸಿಕೊಂಡು ವಿಸ್ತರಿಸುತ್ತ ಹೋಗಿರುವುದು ಸ್ಪಷ್ಟವಾಗುತ್ತದೆ. ಹಾಗೆ ನಿಜಲಿಂಗ ಎಂಬ ಹೆಸರಿನ ಅವರದ್ದೊಂದು ಸಣ್ಣಕಥೆಯೂ ಇದೆ. ಅದರಲ್ಲಿಲ್ಲದ ವಿಸ್ತಾರಗಳೂ ಆಯಾಮಗಳೂ ಈ ಕಾದಂಬರಿಗೆ ಪ್ರಾಪ್ತವಾಗಿವೆ. + +ಯಾರೋ ಒಬ್ಬ ಕವಿ, ಮಹಾಕಾವ್ಯ ಎಂಬುದಿಲ್ಲ, ಇರುವುದೇನಿದ್ದರು ಭಾವಗೀತೆ ಮಾತ್ರ, ಸಾವಿರ ಭಾವಗೀತೆ ಸೇರಿದರೆ ಮಹಾಕಾವ್ಯವಾಗುತ್ತದೆ ಅಂದದ್ದು ನೆನಪಾಗುತ್ತದೆ. ಕುಂವೀ ಕೂಡ ಕಾದಂಬರಿ ಎಂಬುದಿಲ್ಲ, ಇರುವುದು ಸಣ್ಣ ಕಥೆ ಮಾತ್ರವೇ. ಸಾವಿರ ಸಣ್ಣ ಕಥೆಯನ್ನು ಸೇರಿಸಿದರೆ ಕಾದಂಬರಿಯಾಗುತ್ತದೆ ಎನ್ನುವವರೋ ಅನ್ನುವ ಯೋಚನೆ ಬಂದು ಹೋಗುತ್ತದೆ. ಹಾಗೆ ಸೇರ್ಪಡೆ ಮಾಡುವ ಕಲೆಗಾರಿಕೆ ಕಡಮೆಯದ್ದಲ್ಲ. ಉದಾಹರಣೆಗೆ ಕಥೆಯ ಮೊದಲಲ್ಲೇ ಕಾಣಿಸಿಕೊಳ್ಳುವ ಉಷಾ ಬೆಳೆದು ಮುಖ್ಯ ಪಾತ್ರವಾಗುವುದು ಕಾದಂಬರಿ ಮುಕ್ಕಾಲು ಮುಗಿದ ಮೇಲೆ. ವೇಣುಗೋಪಾಲ ಭಟ್ಟರ ಸಂಸಾರದ ದಾರುಣ ಚಿತ್ರ ಸ್ವಾತಂತ್ರಪೂರ್ವದ್ದಾದರೆ, ಕಾಮಲಾಪುರದ ದಿವಾಕರರೆಡ್ಡಿಯ ಕುಟುಂಬದ ಕಥೆಯೇನು ಕಡಿಮೆ ದಾರುಣವೇ? ಒಂದು ಇನ್ನೊಂದರ ಪ್ರತಿಬಿಂಬ. ಹಾಗೆ ಈ ಕಾದಂಬರಿಯಲ್ಲಿ ನಿಜಲಿಂಗನು ಕನ್ನಡಿಯಲ್ಲಿ ತನ್ನನ್ನು ತಾನು ನೋಡಿಕೊಳ್ಳುವ ಪ್ರತಿಮೆಯೊಂದು ಸುಳಿದು ಹೋಗುತ್ತದೆ. ಇಡೀ ಕಾದಂಬರಿಯೇ ಹಾಗೆ ಸ್ವಾತಂತ್ರ್ಯಪೂರ್ವ-ಸ್ವಾತಂತ್ರ್ಯೋತ್ತರ ಭಾರತದ ವಿಷಾದಮಯ ಬದುಕಿಗೆ ಎತ್ತಿಹಿಡಿದ ವಿಡಂಬನೆಯ ಕನ್ನಡಿ. + + + +ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ. \ No newline at end of file diff --git a/Kenda Sampige/article_384.txt b/Kenda Sampige/article_384.txt new file mode 100644 index 0000000000000000000000000000000000000000..d6668c5763d9eb691cae6ae2401ef31d5cd95757 --- /dev/null +++ b/Kenda Sampige/article_384.txt @@ -0,0 +1,37 @@ + + +ಸಮಕಾಲೀನ ಕಥನ ಸಂದರ್ಭದಲ್ಲಿ ತಮ್ಮ ವಿಶಿಷ್ಟ ನೋಟದ ಕ್ರಮದಿಂದಾಗಿ ಗಮನಸೆಳೆದವರು ವಿಕ್ರಮ್ ಹತ್ವಾರ್. ಕಾಲದ ಒಂದು ಬಿಂದುವಿನಲ್ಲಿ ತಟಸ್ಥವಾಗಿ ಕುಳಿತು, ಪುನರಾವಲೋಕನ ಕ್ರಮದಿಂದ ಕಥನ ಕಟ್ಟುವ ಕ್ರಮವೊಂದಿದೆ. ಹಾಗೆಯೇ ವರ್ತಮಾನದಲ್ಲೇ ತನ್ಮಯವಾಗಿ ಆ ಕ್ಷಣಗಳನ್ನಷ್ಟೇ ಸೆರೆಹಿಡಿಯುವಂತಹ ಕಥನ ಮಾದರಿಗಳೂ ನಮ್ಮ ನಡುವೆ ಇದೆ. ಏಕಕಾಲದಲ್ಲಿ ಕಾಲದ ಹಲವು ಬಿಂದುಗಳಲ್ಲಿ ಚಲಿಸುತ್ತ ಅದನ್ನು ಒಂದು ಎಳೆಯಲ್ಲಿ ಕಟ್ಟುವ ಹದವರಿತ ಕತೆಗಾರರು ಹಲವರಿದ್ದಾರೆ. ವಿಕ್ರಮ್ ಹತ್ಪಾರ್ ಕತೆಗಳು ಈ ಮೂರನೆಯ ಬಗೆಯವು. ಅವರ ಕತೆಗಳು ಗತದಲ್ಲಿ ನಿಂತು ವರ್ತಮಾನವನ್ನೂ, ವರ್ತಮಾನದಲ್ಲಿ ನಿಂತು ಗತವನ್ನೂ ಕಾಣುವ ಬೈನಾಕ್ಯುಲರ್ ನಂತೆ ವರ್ತಿಸುವ ಗುಣದಿಂದಾಗಿ ವಿಶಿಷ್ಟವೆನಿಸುತ್ತವೆ. ಗ್ರಾಮೀಣ ಪರಿಸರದ ಹಾಗೂ ಬಾಲ್ಯದ ಹಲವು ಕತೆಗಳು ಒಳಗಿದ್ದರೂ, ಸಮಕಾಲೀನ ಕತೆಗಳೇ ತಮ್ಮಿಂದ ಬರೆಯಿಸಿಕೊಳ್ಳುತ್ತೇವೆ ಎಂದು ಸ್ವತಃ ಅವರೇ ಹೇಳಿಕೊಂಡಿದ್ದಾರೆ. ನಿಜ, ಅವರ ಕತೆಗಳು ಬೆಂಗಳೂರಿನ ಅಥವಾ ಅಂತಹ ಮಹಾನಗರಗಳ ಗರ್ಭದಲ್ಲಿ ಹುಟ್ಟುತ್ತವೆ. ಜಾಗತೀಕರಣವು ಸೃಷ್ಟಿಸಿದ ತ್ರಿಶಂಕುಸ್ವರ್ಗದಲ್ಲಿ ಗಿರಿಗಿಟ್ಲೆಯಾಡುವ ಯುವ ಸಮೂಹವೊಂದರ ಭಾವಭಿತ್ತಿಗಳು ಇಲ್ಲಿ ಬೆಳಕಿಗೆ ಬಂದು ಮಾತನಾಡುತ್ತವೆ. ಕಾರ್ಪೋರೇಟ್ ವಲಯದ ಹವೆಯಲ್ಲೇ ಸೃಷ್ಟಿಯಾಗಿರುವ ಉಳಿವಿಗಾಗಿ ಹೋರಾಟ – ಬಲವೇ ಉಳಿವು ಎಂಬಂಥ ಬೌದ್ಧಿಕ ಸೆಣಸಾಟ ಮನುಷ್ಯ ಸಂವೇದನೆಯನ್ನೇ ಹೀರಿ ನಿತ್ರಾಣಗೊಳಿಸುವ ಚಿತ್ರಗಳು ಇಲ್ಲಿ ಮೂಡುತ್ತವೆ. ಹಾಗಂತ ವಿಕ್ರಮರ ಹಮಾರಾ ಬಜಾಜ್ ಸಂಕಲನದ ಕತೆಗಳು, ಹೊಸ ಜಾತಿಗಳಾಗಿ ತಲೆದೋರಿದ ಟೆಕ್ಕಿ ಸಮುದಾಯದ ಗೊಂದಲಗಳ ನಿರೂಪಣೆಯೋ, ಹಳಹಳಿಯೋ ಮಾತ್ರವಾಗಿ ನಿಲ್ಲುವುದಿಲ್ಲ. ಚರಿತ್ರೆಯ ಹೆಜ್ಜೆ ಗುರುತುಗಳ ಜತೆ, ಬದುಕನ್ನು ಅವ್ಯಕ್ತವಾಗಿ ರೂಪಿಸುತ್ತಿರುವ ಫಿಲಾಸಫಿಗಳನ್ನೂ ತೆಕ್ಕೆಹಾಯುತ್ತ ಜ್ವಲಿಸುತ್ತವೆ. + +ಚರಿತ್ರೆಯೆಂದರೆ ಬರಿಯ ರಾಜಕೀಯ ಚರಿತ್ರೆಯಲ್ಲ. ಬದುಕಿನ ಒಳಸುಳಿಗಳನ್ನು ಅರಳಿಸುವ ಸಾಂಸ್ಕೃತಿಕ ಚರಿತ್ರೆಯೂ ಹೌದು. ಸಣ್ಣಸಣ್ಣ ಸಮುದಾಯಗಳ ವಿಕಾಸ, ವಲಸೆ, ನಾಶ, ನಲುಗುವಿಕೆ ಎಲ್ಲವೂ ಸಾಮೂಹಿಕ ಸ್ಮೃತಿಯಲ್ಲಿ ಕಾಣದಂತೆ ಅಡಗಿರುತ್ತವೆ. ಇಷ್ಟೇ ಅಲ್ಲ ವ್ಯಕ್ತಿಗತ ಚಿಂತನೆಗಳೂ, ವ್ಯಕ್ತಿಯೊಬ್ಬನ/ಳ ಭಾವಕೋಶದ ಆಗುವಿಕೆಯೂ ಚರಿತ್ರೆಯೇ ಸ್ಮೃತಿಗಳಲ್ಲಿ ಮೂಡುವ, ಮುಳುಗುವ ಕುರುಹುಗಳೂ ನಮ್ಮ ಬೆನ್ನುಬಿಟ್ಟಿಲ್ಲ. ಕಥನಕಾರರು ಮತ್ತೆ ಮತ್ತೆ ಇಂಥ ನೆನಪುಗಳ ಹಿಂದೆ ಓಡುವುದು ತಮ್ಮನ್ನು ತಾವು ವರ್ತಮಾನದಲ್ಲಿ ಅರಿಯುವ ಪ್ರಕ್ರಿಯೆಯ ಭಾಗವೇ ಆಗಿರುತ್ತದೆ. ಈಗ ಕಾಣುತ್ತಿರುವ ಸಾಫ್ಟ್ವೇರಿನ ಎ.ಸಿ. ಹವೆಯ ಬದುಕಿನ ಹಿಂದೆ, ಒಂದು ಇಡಿಯ ಜನಾಂಗದ ಬೆವರಿನಿಂದ ತೊಯ್ದು ಎಷ್ಟೊಂದು ಕತೆಗಳು ಹುದುಗಿವೆಯಲ್ಲ! ಎಂದು ಕತೆಯ ಪಾತ್ರವೊಂದು ಉದ್ಘರಿಸುವುದು ಇಲ್ಲಿನ ಕತೆಗಳು ಪರಿಭಾವಿಸುವ ರೀತಿಯನ್ನು ಕಾಣಿಸುತ್ತದೆ. + +ಹಮಾರಾ ಬಜಾಜ್ ಎಂಬ ಶೀರ್ಷಿಕೆಯನ್ನೇ ಹೊತ್ತ ನೀಳ್ಗತೆಯೊಂದು ಸಂಕಲನದಲ್ಲಿದೆ. ಅಲ್ಲಿ ಬರುವ ಎರಡು ರೂಪಕಗಳು ವಿಕ್ರಮ್ ರ ಕತೆಗಳ ನೋಟದ ಕ್ರಮವನ್ನು ತುಂಬ ಸಶಕ್ತವಾಗಿ ಕಟ್ಟಿಕೊಡುತ್ತವೆ. ಒಂದು, ಅಪ್ಪನ ಕಾಲದ ಹಳೆಯ ಬಜಾಜ್ ಸ್ಕೂಟರ್. ಕಥಾನಾಯಕ ನವೀನ ಈ ಸ್ಕೂಟರನ್ನು ಮತ್ತೆ ಪಡೆಯಲು ಹೆಣಗುವುದು ಹಾಗೂ ಕೊನೆಯಲ್ಲಿ ಅದು ಸಿಕ್ಕಾಗ ಅದನ್ನು ನಿರಾಕರಿಸುವುದು ಕಥೆಯ ಕೇಂದ್ರ ಪ್ರಜ್ಞೆಯನ್ನು ಸಾಂಕೇತಿಕವಾಗಿ ಕಾಣಿಸುತ್ತದೆ. ಇನ್ನೊಂದು ರೂಪಕ ಹಾರ್ಡ್ ಡಿಸ್ಕಿನದು. ತನ್ನ ಗತವನ್ನೆಲ್ಲ ಡೈರಿ ಬರಹ, ಫೋಟೋಗಳ ರೂಪದಲ್ಲಿ, ಹಾರ್ಡ್ ಡಿಸ್ಕಿನಲ್ಲಿ ಸೇವ್ ಮಾಡಿರುವ ನವೀನ, ಅವೆಲ್ಲ ಅಳಿಸಿ ಹೋದಾಗ ದಿಗ್ಭ್ರಾಂತನಾಗುತ್ತಾನೆ. ಗಟ್ಟಿಯಾಗಿ ಇದೆಯೆಂದುಕೊಂಡಿದ್ದ ಆಧಾರವೊಂದು ಕಳಚಿಹೋದಂತೆ ವಿಲಿಗುಟ್ಟುತ್ತಾನೆ. ಆದರೆ ನಿಧಾನವಾಗಿ ತನ್ನ ನೆನೆಪಿನಲ್ಲಿ ಅವನ್ನೆಲ್ಲ ಜೀವಂತಗೊಳಿಸುತ್ತ ನೆನೆಪುಗಳೆಂದರೆ ಜಡ ಸಂಕೇತಗಳಲ್ಲ ಎಂಬ ಅರಿವಲ್ಲಿ ಹಗುರಾಗುತ್ತಾನೆ. + +ತೀರಿಹೋದ ಅಪ್ಪನನ್ನು ಅರಿಯುವ ಪಯಣದಂತೆ ತೋರುವ ಈ ಕತೆ, ಆ ಮೂಲಕ ತನ್ನೊಳಗನ್ನೂ ಶೋಧಿಸುವ ಒಳಪಯಣವೂ ಆಗಿದೆ. ಒಳ-ಹೊರಗೆ ಚಲಿಸುವ ಈ ನೆರಳು-ಬೆಳಕಿನ ಆಟಕ್ಕೆ ಕತೆಯ ಭಾಷೆ-ತಂತ್ರಗಳು ಸೂಕ್ತ ನೆಲೆ ಒದಗಿಸುತ್ತಾ ಹೋಗುತ್ತವೆ. ಊರು ಬಿಟ್ಟುಬಂದು ಬದುಕು ಕಟ್ಟಿಕೊಳ್ಳಲು ಸೆಣಸಿ ಸೋತ ಅಪ್ಪ, ಹಠಮಾರಿ ಬೇಜವಾಬ್ದಾರಿಯ ವ್ಯಕ್ತಿಯಾಗಿ ತೋರುತ್ತಿದ್ದವ ಅವನ ಸಾವಿನ ನಂತರ ಮಗನ ಮರುಶೋಧದಲ್ಲಿ ಬೇರೆಯೇ ಆಗಿ ತೋರುತ್ತಾನೆ. ಮತ್ತೊಬ್ಬರ ಹೋಟೆಲಿನಲ್ಲಿ ಲೋಟತೊಳೆದು, ಸ್ವಂತ ಹೋಟೆಲಿಟ್ಟು ಜಯಿಸಲಾಗದೇ ಕೊನೆಗೆ ಧೀರ್ಘ ಅನಾರೋಗ್ಯಕ್ಕೆ ತುತ್ತಾಗಿ, ಡಯಾಲಿಸಿಸ್ ಗಳ ಜೀವ-ಸಾವಿನ ತೂಗುಯ್ಯಾಲೆಯಲ್ಲಿ ಜೀಕುತ್ತ ಕಾಣೆಯಾದ ಅಪ್ಪನ ಸ್ಮೃತಿಗಳು ವಿಷಾದರಾಗದ ಸಣ್ಣ ಸುಯ್ಲುಗಳಂತೆ ಕಥೆಯಲ್ಲಿ ಹರಡಿಕೊಂಡಿವೆ. + +ಮುಂದೆ ಟೆಕ್ಕಿಯಾಗಿ ದೇಶ-ವಿದೇಶಗಳನ್ನು ಸುತ್ತಿ ಬಂದ ಮಗ ಹಾರ್ಡ್ ಡಿಸ್ಕಿನಿಂದ ನೆನಪುಗಳನ್ನು ಟ್ರಾನ್ಸ್ಫರ್ ಮಾಡುತ್ತಾ ಹೋಗುವಾಗ ಸಾಂದ್ರ ನೆನಪುಗಳ ಪಯಣದಲ್ಲಿ ತನ್ನನ್ನೇ ತಾನು ಬೇರೆಯಾಗಿ ಕಾಣುತ್ತಾನೆ. ಇದುವರೆಗೆ ಬರೀ ನೋಡುತ್ತಿದ್ದುದನ್ನು ಕಾಣುವಂತಾದದ್ದು ಅವನ ನೋಟದ ಕ್ರಮದ ಪಲ್ಲಟದಿಂದಾಗಿ. ಹೀಗೆ ಪಲ್ಲಟಗೊಳ್ಳುವ ಕ್ಷಣವೇ ಒಂದು ದಿವ್ಯ ಘಟನೆ. ತರ್ಕಕ್ಕೆ ಮೀರಿದ ಆ ಲೌಕಿಕ ಕ್ಷಣ. ಅಮ್ಮನ ಕಣ್ಣಲ್ಲಿ ಅಸಮರ್ಥ, ಭೋಳೆ, ಬೇಜವಾಬ್ದಾರಿಯಾಗಿ ಕಾಣುವ ಅಪ್ಪನ ಬಿಂಬವನ್ನೇ ತನ್ನದಾಗಿಸಿಕೊಂಡಿದ್ದ ನವೀನ ಈಗ ಬೇರೆಬೇರೆಯವರ ಕಣ್ಣಲ್ಲಿ ಅಪ್ಪನನ್ನು ನೋಡಿದಾಗ ಅಪ್ಪನ ಸ್ವಾಭಿಮಾನ, ಒಳ್ಳೆಯತನ, ಕಾಣುತ್ತಾ ಹೋಗುತ್ತದೆ. ನಂಟಿನ ಸ್ವರೂಪ ಬೇರೆಯಾದಂತೆಲ್ಲ ಬೇರೆಯಾಗಿ ಕಾಣುವ ಅಪ್ಪನ ವ್ಯಕ್ತಿತ್ವ ಅಚ್ಚರಿ ಮೂಡಿಸುತ್ತದೆ. ಇದ್ದಾಗ ಕಂಡಿರದ ಅಪ್ಪ ಅವನ ಸಾವಿನ ನಂತರ ಕಾಣಿಸಲು ಶುರುವಾಗುತ್ತಾನೆ. ಅವನ ಭೋಳೆತನದಲ್ಲಿದ್ದ ಪಾರಮಾರ್ಥಿಕ ಪರಿಮಳವೊಂದು ಲೌಕಿಕದ ಎಲ್ಲೆಗಳನ್ನು ದಾಟಿಸುವಂತೆ ಮಾಡುತ್ತದೆ. ನವೀನ ತನ್ನ ಡೈರಿಯಲ್ಲಿ ಸುಮ್ಮನೆ ದಾಖಲಿಸಿದ ಸಂಗತಿಗಳಲ್ಲೆ ಆಳವಾದ ಅರ್ಥಗಳು ಕಾಣತೊಡಗುತ್ತವೆ. ಒಳ್ಳೆಯ-ಕೆಟ್ಟ, ಕುರೂಪ-ಸೌಂದರ್ಯ, ಸಫಲ-ವಿಫಲ ಹೀಗೆ ಮಾನದಂಡಗಳಲ್ಲಿ ಮರೆಯಾದ ಸತ್ಯವನ್ನು ಕಾಣಲು ಕಣ್ಪೊರೆ ಫಟ್ ಎಂದು ಕಳಚಬೇಕಾಗುತ್ತದೆ. + +ಕಳಚಿಕೊಳ್ಳುವುದು ಎಂದರೆ ಆಘಾತ. ಸಾವು ಕೂಡ ಅಂಥ ಆಘಾತ. ಆದರೆ, ಹಾರ್ಡ್ ಡಿಸ್ಕಿನಲ್ಲಿರುವ ನೆನಪುಗಳ ಸಾವು ನವೀನನ್ನು ಅಪ್ಪನ ಸಾವಿಗಿಂತ ಹೆಚ್ಚು ಅಧೀರಗೊಳಿಸುವುದು ಚೋದ್ಯ. ಇಷ್ಟು ವರ್ಷಗಳು ತಾನು ಬರಿಯ ಅಮ್ಮನ ಬೈನಾಕ್ಯುಲರ್ ಆಗಿದ್ದೆ. ದೂರವಿರುವುದು ಹತ್ತಿರವಿರುವಂತೆ ತೋರಿರುವ ಅದೇ ಬೈನಾಕ್ಯುಲರ್ ಅನ್ನು ತಿರುಗಿಸಿ ನೋಡಿದರೆ ಆಯಿತು. ಹತ್ತಿರವಿರುವುದು ದೂರವಿದ್ದಂತೆ ಕಾಣಿಸುವುದು (ಪು-೧೪೦) ಅಪ್ಪ ತೀರಿ ಹೋದ ಮೇಲೆಯೇ ಈ ಬೈನಾಕ್ಯುಲರ್ ಒಡೆದುಹೋದದ್ದು ಎಂಬ ನವೀನನ ಸ್ವಗತದಲ್ಲಿ ನೋಟದ ಭ್ರಮೆಗಳು ಕಳಚಿಕೊಂಡ ಕುರುಹು ಕಾಣಿಸುತ್ತದೆ. ಬೈನಾಕ್ಯುಲರ್ ಮತ್ತೊಂದು ಕಾಣಿಸುವ ರೂಪಕ!. ಇರುವು ಅರಿವುಗಳ ದ್ವೈತವನ್ನು ಕತೆ ಪರಿಣಾಮಕಾರಿಯಾಗಿ ಕಟ್ಟಿದೆ. + +ವಿಕ್ರಮ್ ಹತ್ವಾರ್ ಕತೆಗಳಲ್ಲಿ ವಿವರಗಳು, ಘಟನೆಗಳ ಮೂಲಕ ತಾತ್ವಿಕ ಆಕೃತಿಯೊಂದನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾರೆ. ಕಥೆಯ ಹಿನ್ನೆಲೆಯಲ್ಲಿ ತಾತ್ವಿಕ ಗ್ರಹಿಕೆಗಳ ಪೂರ್ವಪಕ್ಷವೊಂದು ಕತೆಗೆ ಸಮಾನಾಂತರವಾಗಿ ರೂಪುಗೊಳ್ಳುತ್ತಿರುತ್ತದೆ. ಆ ಗ್ರಹಿಕೆಗಳಲ್ಲೇ ಚಲಿಸುವ ಕತೆ ಮುಂದೆಲ್ಲೋ ಅದನ್ನು ಮೀರಿನಿಂತುಬಿಡುತ್ತದೆ!. ಕತೆಯಲ್ಲಿ ಬರುವ ಮಾಧವ ಪೆಜತ್ತಾಯರ ಪಾತ್ರ ಅಂಥಹದು. ಕೊನೆಯಿಲ್ಲದ ಹುಡುಕಾಟದಲ್ಲಿ ಮಠ, ಕಮ್ಯೂನಿಸಮ್, ಸಮಾಜಸುಧಾರಣೆ, ಆಧ್ಯಾತ್ಮ ಸಾಧನೆ ಎಂದೆಲ್ಲ ಎಲ್ಲೆಲ್ಲೋ ಅಲೆಯುತ್ತ ಎಲ್ಲಿಯೂ ನಿಲ್ಲದಿರು ಎಂಬಂಥ ಪಾತ್ರವದು. ಅಸ್ತಿತ್ವದ ಹುಡುಕಾಟಕ್ಕೆ ಕೊನೆಯ ಉತ್ತರ ಎಂಬುದಿಲ್ಲ. ಆದ್ದರಿಂದ ಮೌನವೇ ಎಲ್ಲಕ್ಕೂ ಉತ್ತರ ಎನ್ನುವ ಪೆಜತ್ತಾಯರು ಅವರ ಬದುಕಿನ ಕೊನೆಯಲ್ಲಿ ಕಾರ್ಪೊರೇಟ್ ವಲಯದಲ್ಲಿ ನಿಂತು ಬದುಕಿನ ಗಹನೆಯ ಬಗೆಗೆ ಉಪನ್ಯಾಸ ಮಾಡುವುದು ಒಂದು ಚೋದ್ಯ ಆದರೆ ಪೆಜತ್ತಾಯರ ಮಾತುಗಳು ನವೀನನ ಅರಿವನ್ನು ವಿಸ್ತರಿಸುವುದು ಸುಳ್ಳಲ್ಲ. + +ತಂದೆಯ ನೆನಪುಗಳನ್ನು ಶೋಧಿಸುತ್ತ ತನ್ನನ್ನೇ ಶೋಧಿಸಿಕೊಳ್ಳತೊಡಗಿದ ನವೀನ ಸಿದ್ಧನೋಟಗಳ ಬೈನಾಕ್ಯೂಲರ್ ಎಸೆದು ತನ್ನ ಮೂಲರೂಪವನ್ನು ಕಾಣುವ ದಾಹಕ್ಕೊಳಗಾಗುತ್ತಾನೆ. ನೆನಪಿನ ಆಳಕ್ಕೆ ಇಳಿಯುತ್ತಲೇ ತನ್ನ ಮೂಲ ವಸ್ತುವನ್ನು ನೆನಪಿಸಿಕೊಳ್ಳುವ ಅವಕಾಶವಿದೆ. ಹೀಗೆ ಮರೆತಿರುವುದರಿಂದಲೇ ಮತ್ತೆ ನೆನಪಾಗುವುದು ನಮ್ಮ ಭಾರತೀಯ ದರ್ಶನಗಳಲ್ಲಿ ಬಹಳ ಮುಖ್ಯವಾದ ವಿಚಾರ. ಮರೆತಿದ್ದು ಮತ್ತೆ ನೆನಪಾದಾಗ ನಮಗೆ ಏನೋ ಒಂದು ಬಗೆಯ ಆನಂದ… ಪೆಜತ್ತಾಯರು ಸೆಮಿನಾರ್ ಹಾಲ್ ನಲ್ಲಿ ನಿಂತು ಮಾತನಾಡುತ್ತಿದ್ದರೆ ನವೀನನೊಳಗೂ ನೆನಪುಗಳ ಜಿಜ್ಞಾಸೆ ಆರಂಭವಾಗುತ್ತದೆ. ನಮ್ಮೊಳಗಿದ್ದ ದಿವ್ಯತೆಯ ಅರಿವಿಲ್ಲದಂತೆ ವಿಸ್ಮೃತಿಯಲ್ಲಿರುವ ನಾವು ಅದನ್ನು ಯಾವಾಗಲೋ ಛಕ್ಕನೆ ಕಾಣುವುದು ಆತ್ಮಸಾಕ್ಷಾತ್ಕಾರ. ಹಾಗೆ ಸ್ಮೃತಿಯಲ್ಲಿ ಅದು ಮತ್ತೆ ಮೂಡುವುದು ಅಭಿಜ್ಞಾನ. ಈ ಅಭಿಜ್ಞಾನಕ್ಕೂ ಹಾರ್ಡ್ ಡಿಸ್ಕ್ ನ ಮೂಲಕ ನೆನಪುಗಳಲ್ಲಿ ಇಳಿದು ಹಿಂದೆಂದೂ ಕಾಣದ್ದನ್ನು ಮತ್ತೆ ಕಾಣುವುದಕ್ಕೂ ಕತೆಯಲ್ಲಿ ಸಂಬಂಧದ ತಂತುಗಳು ರೂಪುಗೊಳ್ಳ್ಳುವುದು ಕತೆಗಾರರ ಜಾಣ್ಮೆಯಿಂದ. + + + +ದರ್ಶನ, ಕಾವ್ಯ, ಉಪನಿಷತ್ತು, ಅವಧೂತರು, ಬುದ್ಧ, ಬೇಂದ್ರೆ…. ಹೀಗೆ ಎಲ್ಲದರ ಕುರಿತು ಮಾತನಾಡುವ ಪೆಜತ್ತಾಯರ ತರ್ಕದೆಳೆಗಳ ಒಳಗೇ ಸಿಕ್ಕಿಹಾಕಿಕೊಳ್ಳದ ಅರಿವೊಂದು ನವೀನನ ಅಪ್ಪನಲ್ಲಿತ್ತು. ಪೆಜತ್ತಾಯರನ್ನೊಮ್ಮೆ ಸಾಯುವುದರೊಳಗೆ ಕಾಣಬೇಕೆಂಬ ಅಪ್ಪನ ಹಂಬಲ ಹಾಗೆ ಉಳಿಯುತ್ತದೆ. ಕೊನೆಯಲ್ಲಿ ಬಡತನ, ಸಂಬಂಧಗಳ ವ್ಯಾಜ್ಯ, ಅವಮಾನ, ಖಾಯಿಲೆ, ನಾಲಗೆ ಚಪಲ ಇದನ್ನೆಲ್ಲ ನಾನೇ ದಾಟಬೇಕು ಅದಕ್ಕೇ ಅವರು ತನ್ನನ್ನು ಕಾಣಲು ಬರದೇ ತನ್ನಪಾಡಿಗೆ ತನ್ನನ್ನು ಬಿಟ್ಟಿರಬೇಕೆಂಬ ಸಮಾಧಾನದಲ್ಲಿ ಆತ ವಿರಮಿಸುತ್ತಾನೆ. ದೇಹ, ಮನಸ್ಸು, ನೆನಪುಗಳ ಬಾಧೆಯನ್ನು ಯಾವ ಆಧ್ಯಾತ್ಮದ ಮಾತುಗಳೂ ನಿವಾರಿಸಲಾರವು ಅದನ್ನು ಅನುಭವಿಸಿಯೇ ಮಾಗಬೇಕು. ತಳಮಳದ ಬುಡಕಾಣಬೇಕು ಎಂಬುದು ಕತೆಯಲ್ಲಿ ಧ್ವನಿಸುತ್ತದೆ. ಕಥಾನಾಯಕ ನವೀನ ಪೆಜತ್ತಾಯರ ಭಾಷಣ ನಡೆವ ಹಾಲಿನಿಂದ ನಿರ್ಗಮಿಸುವುದು ಇದನ್ನು ಸೂಚ್ಯವಾಗಿ ಹೇಳಿದೆ. ಮಗ ನವೀನ ತನ್ನ ನೆನಪುಗಳನ್ನು ಸಂಕೇತಗಳಲ್ಲಿ ಬಂಧಿಸುವ ಅರ್ಥಹೀನ ಪ್ರಯತ್ನವನ್ನು ಕೊನೆಗಾಣಿಸುವ ಮೂಲಕ ಕತೆ ಕೊನೆಯಾಗುತ್ತದೆ. ಅಪ್ಪನ ನೆನಪನ್ನು ಶಾಶ್ವತಗೊಳಿಸುವ ಸ್ಕೂಟರ್ ಬರಿಯ ಸಂಕೇತವಾಗಿ ಕಾಣುತ್ತದೆ. ನೆನಪುಗಳನ್ನು ಸಂಕೇತದ ಹಂಗಿಲ್ಲದೆ ತನ್ನಲ್ಲಿ ಉಜ್ಜೀವಿಸಿಕೊಳ್ಳುವ ಮಗನಿಗೆ, ಅಪ್ಪನಿಗಿಂತ ಅವನ ನೆನಪನ್ನು ಹೊತ್ತು ಹಾರ್ಡ್ ಡಿಸ್ಕ್ ಮುಖ್ಯವಲ್ಲ ಎನಿಸುವುದೂ ಕೂಡ ನೆನಪುಗಳ ಹಂಗಿಂದ ಬಿಡುಗಡೆಯೇ. + +ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ. + +ಪಿತೃಪಕ್ಷ ಎಂಬ ಕತೆಯಲ್ಲಿ ತನ್ನ ಹೆಸರಿನ ಮುಂದೆ ಅಂಟಿಕೊಂಡಿರುವ ಅಪ್ಪನ ಹೆಸರು ತನ್ನ ಅಸ್ತಿತ್ವವನ್ನೇ ಕಬಳಿಸುತ್ತಿದೆಯೆಂಬ ಕಸಿವಿಸಿಗೆ ನಾಯಕ ಒಳಗಾಗುತ್ತಾನೆ. ವಿಮಾನದಲ್ಲಿ ಉದ್ಘೋಷಕಿ ಹೆಸರು ಕೂಗಿದಾಲೂ, ಕೆಲಸದ ಸ್ಥಳದಲ್ಲಿ ತನ್ನ ಸಾಧನೆಯನ್ನು ಎತ್ತಿಹಿಡಿದು ಹೊಗಳಿದಾಗೂ ಹೆಸರಿನ ಮುಂದಿನ ಅಪ್ಪನ ಹೆಸರೇ ಉಚ್ಚರಿಸಲ್ಪಟ್ಟಾಗ ತನ್ನನ್ನು ಹೆಸರಿನೊಂದಿಗೆ ಗುರುತಿಸಿಕೊಳ್ಳಲಾಗದೇ ಹೋಗುತ್ತಾನೆ. ಸಣ್ಣದರ್ಶಿನಿಯಲ್ಲಿ ಕೆಲಸಮಾಡುತ್ತಿದ್ದ ಅಪ್ಪನಿಗೆ ಪ್ಯಾನ್ ಕಾರ್ಡ, ಆಧಾರ್ ಕಾರ್ಡ್ ಗಳ ಅಗತ್ಯವೇ ಇರಲಿಲ್ಲ! ರೇಷನ್ ಕಾರ್ಡ್ ನಲ್ಲಿಯೂ ಸತ್ತ ಒಂದು ವರ್ಷದಲ್ಲಿ ಹೆಸರು ತೆಗೆದುಹಾಕಲಾಯಿತು. ದಾಖಲೆಗಳಿಂದಲೇ ಗುರುತಿಸಲ್ಪಡುವ ಮನುಷ್ಯ ನಿರ್ಮಿತ ನಾಗರೀಕ ಅರ್ಥವ್ಯವಸ್ಥೆಗಳಾಚೆ ಜಿಗಿದು ಹೋಗುವ ‘ಸ್ವ’ ದ ಹುಡುಕಾಟ ಈ ಕತೆಯಲ್ಲೂ ಇದೆ. ಅಪ್ಪನಿಂದ ತಪ್ಪಿಸಿಕೊಳ್ಳುವುದೆಂದರೆ ಇಂಥ ಪೂರ್ವಸ್ಮೃತಿಗಳಿಂದ ಬಿಡುಗಡೆ ಪಡೆವ ಹಂಬಲದ ಮತ್ತೊಂದು ರೂಪ. ತನ್ನ ದೇಹದ ಮೂಲಕ ಅಸ್ತಿತ್ವ ಹುಡುಕುವ ಸ್ವಪ್ನವಿಲಾಸ ಕತೆಯಲ್ಲಿ ದೇಹಾನುಭವಗಳ ದಟ್ಟನಿರೂಪಣೆಯಿದೆ. ದಾಂಪತ್ಯ, ನಿಷ್ಠೆ ಎಂಬೆಲ್ಲ ರೂಢಿಗತ ಪದಗಳಡಿಗೆ ಅದಕ್ಕೆ ಅತೀತವಾಗಿ ಇರುವ ಸುಪ್ತ ಕಾಮನೆಗಳ ಲೋಕದಲ್ಲಿ ತನ್ನ ಜೀವದ ಹಂಬಲಗಳನ್ನು ಕಥಾನಾಯಕ ನಿಜಗೊಳಿಸಲು ತಪಿಸುತ್ತಾನೆ. ಹೆಂಡತಿ ಸುನೀತಾಳೊಂದಿಗೆ ಒಂದಾಗುವಾಗಲೂ ರೋಸಿ, ವಂದನಾ, ಮೃದುಲಾ, ಬೊರ್ನಾಲಿ.. ಯರೆಲ್ಲ ಸ್ಮೃತಿಪಟಲದಲ್ಲಿ ಸುಳಿದು ಒಬ್ಬರಲ್ಲೊಬ್ಬರು ಕರಗುತ್ತಾ ಹೋಗುತ್ತಾರೆ. ಭಿನ್ನ ಹೆಸರು, ಚಹರೆಗಳಳಿಯುತ್ತ ದೇಹದ ಉತ್ಕಂಠ ಉಪಶಮನವೊಂದೇ ಮುಖ್ಯವಾಗಿ, ಆ ಏಕಾಗ್ರದ ತುದಿಯಲ್ಲಿ ತಾನೂ ಇಲ್ಲವಾಗುವ ಹಗುರು ಭಾವವನ್ನು ಆತ ಅನುಭವಿಸುತ್ತಾನೆ. ಅಷ್ಟು ತೀವ್ರವಾಗಿ ಅವನು ಸೇರಿದ್ದು ಯಾರನ್ನು? ಎಂಬ ಪ್ರಶ್ನೆಯ ತಿರುವನ್ನು ಉಳಿಸಿಯೇ ಕತೆ ಕೊನೆಯಾಗುತ್ತದೆ. ಹಲವು ಸಾಧ್ಯತೆಗಳನ್ನು ಓದುಗರಲ್ಲಿ ಹೊತ್ತಿಸಿ ನಿಗಿನಿಗಿಸುತ್ತದೆ. ಇಂಥ ಕಾಮನೆಗಳ ಲೋಕವೊಂದು ಹತ್ವಾರರ ಕತೆಗಳಲ್ಲಿ ನಾಜೂಕಾಗಿ ಉಸಿರಾಡುತ್ತದೆ. ಉನ್ಮಾದದ ಸ್ವರಗಳಲ್ಲಿ ಮುಚ್ಚಳ ತೆರೆದ ಅತ್ತರಿನ ಶೀಷೆಯಂತೆ ನಿಧಾನವಾಗಿ ಹೊಮ್ಮುತ್ತ ಹರವಿಕೊಳ್ಳುತ್ತಿದ್ದಳು… (ಪು-೬೫) ಇಂಥಹ ಕಾವ್ಯಾತ್ಮಕ ನಿರೂಪಣೆ ಕತೆಗೊಂದು ನವಿರಾದ ಆದರೆ ಸಾಂದ್ರವಾದ ಅನುಭೂತಿಯನ್ನು ತಂದುಕೊಡುತ್ತವೆ. + +ಈ ಎಲ್ಲ ತಾತ್ವಿಕ ತಾಕಲಾಟಗಳ ಜೊತೆಗೇ ವಿಕ್ರಮ್ ಕಟ್ಟಿಕೊಡುವ ಕಾರ್ಪೋರೇಟ್ ವಲಯದ ಅನುಭವ ಲೋಕ ಕನ್ನಡ ಕಥನಕ್ಕೆ ಹೊಸದು. ಈಗಾಗಲೇ ವಸುಧೇಂದ್ರರಾದಿಯಾಗಿ ಹಲವರು ಈ ಜಗತ್ತಿನ ತಣ್ಣಗಿನ ಕ್ರೌರ್ಯವನ್ನು ಅನಾವರಣಗೊಳಿಸಿದ್ದಿದೆ. ವಿಕ್ರಮ್ ಈ ಆವರಣದಲ್ಲೂ ತಮ್ಮ ತಾತ್ವಿಕ ಜಿಜ್ಞಾಸೆಯ ಜಿಗುಟುತನವನ್ನು ಬಿಟ್ಟುಕೊಡುವುದಿಲ್ಲ. ಎಷ್ಟೋ ಕಡೆಗಳಲ್ಲಿ ಇದು ಕಥೆಗೆ ಕಸುವು ಕೊಟ್ಟಿದೆ. ಕೆಲವೆಡೆ ಕಥೆಗಳನ್ನೇ ಓವರ ಟೇಕ್ ಮಾಡಿದಂತೆಯೂ ಅನಿಸುತ್ತದೆ. ಅವರ ‘ಕಾಮಸೂತ್ರ’ ಎಂಬ ಕತೆ ಸೆಕ್ಸ್ ಎಂದರೇನು, ಸ್ವಲ್ಪ ವಿವರಿಸ್ತೀರಾ, ಪ್ಲೀಸ್? ಅಂತಲೇ ಆರಂಭವಾಗುತ್ತದೆ. ಹೆಣ್ಣು ಗಂಡಿನ ನಡುವಿನ ರಸಸಂಚಾರದ ಅತಾರ್ಕಿಕ ಘಳಿಗೆಗಳು ಕಾಪೋರೇಟ್ ಆಫೀಸುಗಳಲ್ಲಿ ಹೇಗೆ ಮಾರಾಟದ, ಸ್ಪರ್ಧೆಯ, ಸ್ವಾರ್ಥ ಸಾಧನೆಯ ದಾಳಗಳಾಗಿ ಬಳಕೆಯಾಗುತ್ತವೆ ಎಂಬುದನ್ನು ಕತೆ ಸೂಕ್ಷ್ಮವಾಗಿ ನಿರೂಪಿಸುತ್ತದೆ. ಎಲ್ಲೂ ವಾಚ್ಯ ವಿವರಗಳಿಗಿಳಿಯದೇ ಸಂಭಾಷಣೆಗಳಲ್ಲೆ ಮನುಷ್ಯನ ಇಬ್ಬಂದಿತನವನ್ನೂ, ಚೂಪಾದ ವ್ಯವಹಾರಿಕ ಜಾಣ್ಮೆಯನ್ನೂ ಸಂಭಾಷಣೆಗಳ ಮೂಲಕವೇ ಕಟ್ಟಿಕೊಟ್ಟ ರೀತಿ ಬ್ರಿಲಿಯಂಟ್ ಆಗಿದೆ. ಗಂಡು-ಹೆಣ್ಣೆಂಬ ಭೇದವಿಲ್ಲದೆ ನಡೆಸುವ ಈ ನಾಜೂಕು ಕ್ರೌರ್ಯ ಮಾರುಕಟ್ಟೆ ಸಂಸ್ಕೃತಿಯ ಇನ್ನೊಂದು ಚಹರೆಯಾಗಿ ಕಾಣಿಸುತ್ತದೆ. ಇದರೊಂದಿಗೆ ಮನುಷ್ಯ ಸಂಬಂಧಗಳ ಸಂಕೀರ್ಣತೆ, ಆಳದ ಸ್ವಾರ್ಥ ಒಬ್ಬರನ್ನೊಬ್ಬರು ಬಳಸಿಕೊಂಡು ಮೇಲೇರುವ ಹಾವು-ಏಣಿಯಾಟದ ರೋಚಕತೆ ಅನುಭವವಾಗಿ ತಟ್ಟುತ್ತದೆ. + +ಗ್ರಾಮೀಣ ಪ್ರದೇಶಗಳು ಬೆಂಗಳೂರೀಕರಣಗೊಳ್ಳುವ ಕನಸಲ್ಲಿ ತೇಲುತ್ತಾ, ಇನ್ಸ್ಟಂಟ್ ಜಗತ್ತಿನ ಫ್ಲೇವರುಗಳಲ್ಲಿ ಕಳೆದುಹೋಗುವ ವಿಷಾದವೊಂದು ಹಲವು ಕತೆಗಳಲ್ಲಿ ಮೆಲ್ಲಗೆ ಅನುರಣಿಸುತ್ತದೆ. ಪ್ರೇಮ, ದಾಂಪತ್ಯ… ಹೀಗೆ ಸಂಬಂಧಗಳ ಬಗೆಗಿನ ನಂಬಿಕೆಗಳು ಕುಸಿಯುತ್ತಿರುವ ಈ ಕಾಲಘಟ್ಟದ ಕನವರಿಕೆಗಳು ಹಲವು ಕತೆಗಳಲ್ಲಿ ಧ್ವನಿಸಿವೆ. ದಾಂಪತ್ಯವೆಂಬುದು ತೀರ ವ್ಯವಹಾರಿಕವಾದ ಇಬ್ಬರ ಸಂಬಳದಲ್ಲಿ ಮನೆಸಾಲ ತೀರುವ, ಮಗುವೊಂದು ಬೆಳೆಯುವ ಅಚ್ಚುಕಟ್ಟಾದ ಕ್ರಿಯೆಯಾಗಿದೆ. ಅಂಥ ಸಂಬಂಧದ ಅಂತರ್ಯಕ್ಕಿಳಿದರೆ ಅಲ್ಲಿ ಅರಾಜಕತೆಯಿದೆ. ವಿದ್ರೋಹವಿದೆ ಅಥವಾ ಏನೂ ಅಲ್ಲದ ಶೂನ್ಯವಿದೆ. ಮರಣಕಾಮ, ಕಾಮಸೂತ್ರ, ಸ್ವಪ್ನವಿಲಾಸ, ಏನಾದನು ಚಂದಿರ, ಜೆಜೆ ಬಂದಿದ್ದ, ಯಾವ ಉಡುಗೊರೆ ನೀಡಲಿ.. ಇಂಥ ಕತೆಗಳಲ್ಲಿ ನಂಬಿಕೆಯ ಲೋಕವು ಛಿದ್ರಗೊಳ್ಳುವ ಸೂಕ್ಷ್ಮ ಚಿತ್ರಗಳಿವೆ. + +ಅನುರಣನ ಕತೆಯಲ್ಲಿ ಕ್ಯಾಬ್ ಡ್ರೈವರ್ ಚೆಲುವನಾರಾಯಣ ಸ್ವಾಮಿಯ ಕತೆ ಕೂಡ ಬೆಂಗಳೂರೀಕರಣದಿಂದ ಮನುಷ್ಯನ ಪ್ರಜ್ಞೆಯಲ್ಲಾದ ವಿಘಟನೆಯ ಕತೆಯಿದೆ. ಹಳ್ಳಿಯಲ್ಲಿ ಹೊಲದ ಕೆಲಸ ಒಲ್ಲದೇ ಅರೆಬರೆ ಓದಿ ನಗರ ಸೇರಿದ ಆತ ಮೊಬೈಲು, ವಾಟ್ಸಾಪು, ಫೇಸ್ ಬುಕ್ಕು, ಮೆಸೇಜುಗಳ ಭ್ರಾಮಕ ಲೋಕದಲ್ಲಿ ತನ್ನನ್ನೇ ಕಳೆದುಕೊಳ್ಳುವ ನಡೆ ತಂತ್ರಜ್ಞಾನ ಕೇಂದ್ರಿತ ಆಧುನಿಕತೆಯ ವ್ಯಂಗ್ಯದಂತಿದೆ. ಮೂರು ಹುಡುಗಿಯರೊಂದಿಗೆ ಏಕಕಾಲಕ್ಕೆ ಮೆಸೇಜು ಮಾಡುತ್ತಾ ಚಕ್ಕುಂದವಾಡುವ, ಸುರಳೀತವಾಗಿ ಸುಳ್ಳು ಹೇಳುವ ನಾರಾಯಣಸ್ವಾಮಿ ಈ ಸುಳ್ಳುಗಳಲ್ಲಿ ಬಿಡಿಬಿಡಿಯಾಗಿ ಹಂಚಿಹೋಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ಅಂತರಿಕ್ಷದಲ್ಲಿರುವಂತೆ ಹೊಯ್ದಾಡುತ್ತಾನೆ. ಖಿನ್ನತೆಗೂ ಒಳಗಾಗುತ್ತಾನೆ. ನೈತಿಕ, ಅನೈತಿಕವೆಂಬ ದ್ವಂದ್ವಗಳ ಹೊಯ್ದಾಟದಲ್ಲಿ ಕೊರಗುತ್ತಾನೆ.ಹೊಸ ಸೆಳೆತಗಳಲ್ಲಿ ಗಿರಿಗಿಟ್ಲೆಯಾಡುವ ಚೆಲುವನಾರಾಯಣಸ್ವಾಮಿ, ಪಾಪಪ್ರಜ್ಞೆಯೇ ಇಲ್ಲದ ಸೆಳೆತಗಳ ಸುಳಿಯಲ್ಲಿ ಹಾವು-ಏಣಿಯಾಟ ಆಡುವ ಕಾರ್ಪೋರೇಟ್ ಜಗತ್ತಿನ ಫೇಕು ಮನುಷ್ಯರ ನಡುವೆ ಅರ್ದೃತೆಯ ಸೆಲೆಯನ್ನೇ ಪುಡಿ ಪುಡಿ ಮಾಡುವ ನಗರೀಕರಣದ ಕಬಂಧ ಬಾಹುಗಳ ಹಿಡಿತವನ್ನು ಕತೆಗಳು ಪರೋಕ್ಷವಾಗಿ ಕಾಣಿಸುತ್ತದೆ. + + + +ಕಥೆಯ ಹಲವು ಪಾತ್ರಗಳ ಮೂಲಕ ಮನುಷ್ಯನ ಅಸ್ತಿತ್ವವನ್ನು ಶೋಧಿಸುವ ಪಯಣವೊಂದನ್ನು ಹಮಾರಾ ಬಜಾಜ್ ಮಾಡಿಸುತ್ತದೆ. ಕಾರ್ಪೋರೇಟ್ ಜಗತ್ತಿನ ಕೋರೈಸುವ ಬದುಕಿನ ಜೊತೆ ಜೊತೆಯಲ್ಲೇ ಇರುವ ಗೂಡಂಗಡಿಗಳ ಲೋಕ, ನ್ಯೂಯಾರ್ಕಿನ ಝಗಮಗಿಸುವ ದೀಪಗಳ ಕೆಳಗೇ ಇಣುಕುವ ಮನಸ್ಸಿನಾಳದ ಕತ್ತಲು ಹಾಗೂ ಅನೂಹ್ಯ ನೆರಳಿನ ಹಲವು ಬಗೆಯ ಹೊಯ್ದಾಟಗಳನ್ನು ವಿಕ್ರಮ್ ಹತ್ಪಾರ್ ದ್ವಂದ್ವ ವೈರುಧ್ಯಗಳಲ್ಲಿ ಸೆರೆಹಿಡಿಯುವ ಬಗೆ ಮೋಹಕವಾಗಿದೆ. ಸೂಕ್ಷ್ಮಗೊಂಡ ಭಾಷೆ ವಿಶಿಷ್ಟ ನಿರ್ವಹಣಾ ಶೈಲಿ ಹಾಗೂ ಮನುಷ್ಯನ ಬವಣೆಗಳ ಮೂಲವನ್ನು ತಾಕಬೇಕೆಂಬ ಧ್ಯಾನಶೀಲತೆ ಇಲ್ಲಿನ ಕತೆಗಳನ್ನು ವಿಶಿಷ್ಟಗೊಳಿಸಿದೆ. + +ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ. \ No newline at end of file diff --git a/Kenda Sampige/article_385.txt b/Kenda Sampige/article_385.txt new file mode 100644 index 0000000000000000000000000000000000000000..85e1d9765d8f3ab2968919e287ed2a12df52cb6f --- /dev/null +++ b/Kenda Sampige/article_385.txt @@ -0,0 +1,71 @@ + + +ನಾನು ಆಕೆಯ ಪಕ್ಕದ ಮನೆಯವಳು. ಅವಳ ಮನೆಯ ಆಗು ಹೋಗುಗಳಲ್ಲಿ ಕೊಂಚ ಆಸಕ್ತಳೂ ಸಹ. ನಾನು ಅವರಿವರ ಮನೆಯ ಮಾತು ಕದ್ದು ಕೇಳುವ ಚಟದವಳೊ ಅಥವಾ ಕೇವಲ ಕುತೂಹಲಿ ನೆರೆಯವಳೊ, ನನಗೇ ಅರಿಯದು. ಬಹುಶಃ ಇದ್ದರೂ ಇರಬಹುದು, ಇಲ್ಲದಿರಲೂಬಹುದು, ವಸ್ತುತಃ ನಂಗೆ ಬೇರೆ ಆಯ್ಕೆಗಳೇನೂ ಇರಲಿಲ್ಲಾ, ಏಕೆಂದರೆ ಅವಳ ಪುಟ್ಟ, ಅಟ್ಟದ ಗಾತ್ರದ ಮನೆಗೆ ತಗುಲಿಕೊಂಡೇ ನನ್ನ ಲಿಲಿಪುಟ್ ಗಾತ್ರದ ಮನೆಯಿತ್ತು. ಎರಡೂ ಮನೆಗಳ ನಡುವೆ ಗಾರೆ ಪೂರಾ ಕಿತ್ತು ಹೋಗಿ, ಮುರುಕು ಬಿಟ್ಟಿರುವ, ಬಡಕಲು, ಅಸ್ಥಿಪಂಜರದ ಒಂದು ಗೋಡೆ ಮಾತ್ರ. ಅದು ಹುಟ್ಟಿದ ದಿನವೊಂದನ್ನು ಬಿಟ್ಟರೇ, ಇಷ್ಟು ವರ್ಷಗಳೂ ಸುಣ್ಣ, ಬಣ್ಣ, ಗಾರೆ ಇಲ್ಲದೆ, ಹಸಿವಿನಿಂದ ಕಂಗೆಟ್ಟ ಮೂಳೆ ಚಕ್ಕಳವಾಗಿತ್ತು. ಅಲ್ಲಿ ಜೋರಾಗಿ ಸೀನಿದರೆ, ಇಲ್ಲಿ ನನ್ನ ಮನೆಯಲ್ಲಿ ಕಂಪನ. ನನ್ನ ಮನೆಯ ಶಬ್ದದ ಪರಿಣಾಮಗಳು ಅಲ್ಲಿಯೂ ಆಗುತ್ತಿರಬಹುದು, ಹೀಗಿರುವಾಗ ನಾನು ತಾನೇ ಗೋಡೆಯ ಅತ್ತ ಕಡೆ ಭಾಗದ ವಹಿವಾಟುಗಳನ್ನು ಹೇಗೆ ಆಲಿಸದೇ ಇರಲಿ. + +ದಿನಂಪ್ರತಿ ಬೆಳಗ್ಗೆ ನಾನು ಎಚ್ಚರಗೊಳ್ಳುತ್ತಿದ್ದುದ್ದೇ ಗೋಡೆಯ ಅತ್ತ ಕಡೆಯಿಂದ ಹೊರಡುತ್ತಿದ್ದ ಭಯಂಕರ ಗೊರ್ ಗೊರ್, ಗರ್ ಗರ್ ಅನ್ನುವ ಶಬ್ದದಿಂದ. ಮನುಷ್ಯ ಸಾವಿನ ದವಡೆಯಲ್ಲಿ ಸಿಕ್ಕಿಕೊಂಡಾಗ ಗಂಟಲಲ್ಲಿ ಹೊರಡುವ ಶಬ್ದದ ಹಾಗೆ, ಗಂಟಲು ಕ್ಯಾಕರಿಸಿ, ಕಫ಼ ತೆಗೆಯಾಟ, ಕೆಮ್ಮುವುದು, ಸೀನುಗಳು, ಜಗಳಗಳಿಂದ ಏರಿದ ಧ್ವನಿ, ಇಲ್ಲವೇ ರಾತ್ರಿ ಸಂಭೋಗ ಕ್ರಿಯೆಯ ಆವೇಶ ತುಂಬಿದ ನರಳಾಟ ತಿಣುಕಾಟಗಳು…. ಹೀಗೇ, ಇವೆಲ್ಲಾ ನಿತ್ಯದ ಕ್ರಿಯಾ ಚಟುವಟಿಕೆಗಳೇ. + +ನಾನು, ನನ್ನ ಪತಿ ಈ ಮನೆಗೆ ಬಾಡಿಗೆಗೆ ಬಂದ ಹೊಸದರಲ್ಲಿ, ಈ ವಿವಿಧ ಶಬ್ದಗಳ ಹಾವಳಿಯಿಂದ ಮೊದ ಮೊದಲು ಜಿಗುಪ್ಸೆ, ಮುಜುಗರಗಳಾಯ್ತು. ದಿನ ಕ್ರಮೇಣ, ಈ ಶಬ್ದಗಳು ನಿತ್ಯಕಾರ್ಯಕ್ರಮಗಳಾದ್ದರಿಂದ, ಇವುಗಳಿಗೆ ಒಗ್ಗಿ ಹೋದೆವು. ಇದಲ್ಲದೇ, ಬೀದಿಯಿಂದ ಹೊರಡುತ್ತಿದ್ದ ವಿವಿಧ, ವಿಚಿತ್ರವಾದ ಶಬ್ದಗಳು. ಹೂ, ಹಣ್ಣು, ತರಕಾರಿ ಮಾರಾಟಗಾರರು, ಪ್ಲಾಸ್ಟಿಕ್ ಸಾಮಾನು ಮಾರುವವರು, ಅರ್ಥವೇ ಆಗದಂತೆ, ಕೀಚಲು, ಮೂಗಿನಿಂದ ಏರು ಧ್ವನಿಯಲ್ಲಿ, ಹಾಡಿನ ರೀತಿ ಹಾಡುತ್ತ, ಮಾರಾಟಕ್ಕಿದ್ದ ವಸ್ತುಗಳನ್ನು ಸಾರಿಕೊಂಡು ಸಾಗುವ ಗಲಾಟೆ. + +ಹಳೇ ಕಬ್ಬಿಣ, ಬಾಟ್ಲಿ, ಪೇಪರ್ ಕೊಳ್ಳುವವನ ಕರ್ಕಶ ಗಂಟಲು, ವಾಹನ ಸಂಚಾರದ ಆರ್ಭಟ, ನಾಯಿಗಳ ಬೊಗಳಾಟ, ಮಕ್ಕಳ ಕಿರುಚಾಟ, ಹೀಗೆ ಎಲ್ಲಾ ಗಲಾಟೆಗಳೂ ಅಭ್ಯಾಸವಾಗಿ, ನನ್ನ ದಿನ ನಿತ್ಯದ ಜೀವನ ಈ ಎಲ್ಲಾ ಶಬ್ದಗಳಿಂದ ಸುತ್ತುವರೆದು, ಈ ಗಲಾಟೆಗಳಿಲ್ಲದಿದ್ದರೆ ನನಗೆ ಏನನ್ನೊ ಕಳೆದುಕೊಂಡಂತೆ ಕಸಿವಿಸಿ. ಇವೆಲ್ಲಾ ನಿಜ ಜೀವನದ ರಥಯಾತ್ರೆಯ ತುಣುಕುಗಳಾಗಿ, ಟಿವಿಯಲ್ಲಿ ಬರೋ ಸೀರಿಯಲ್ ಗಿಂತಾ ಹತ್ತು ಪಟ್ಟು ಚಟವಾಗಿತ್ತು, ಇವಿಲ್ಲದಿದ್ದರೆ ನನ್ನ ಬದುಕು ನಿಸ್ಸಾರವೆನಿಸುವಮಟ್ಟಿಗೆ. + +ನನ್ನ ಪಕ್ಕದ ಮನೆಯಾಕೆ ಬಡಕಲು ಶರೀರದ, ಪೀಚು ಮೈಕಟ್ಟಿನ ಹೆಂಗಸು. ಸುಮಾರು ನಾಲ್ಕು ಅಡಿ ಎತ್ತರವಿದ್ದ ಆಕೆ ಮೃದುಭಾಷಿ, ಧ್ವನಿ ಕೇಳಿಸುವುದೇ ಕಷ್ಟ. ಬೆಳಕು ಹರಿಯುವ ಮುಂಚೆ ಎದ್ದು ತಪ್ಪದೆ ಮನೆಯ ಹೊರಗಡೆ ಗುಡಿಸಿ, ನೀರು ಚುಮುಕಿಸಿ, ರಂಗೋಲಿ ಪುಡಿಯಿಂದ ಸರಳವಾದ ರಂಗೋಲಿ ಹಾಕುವುದು ಅವಳ ದೈನಂದಿನ ಚಟುವಟಿಕೆ. ನಂತರ, ಹಿತ್ತಲಿನಲ್ಲಿ ಅವಳು ಬೆನ್ನು ಬಗ್ಗಿಸಿ ಕುಕ್ಕರಗಾಲಲ್ಲಿ ಕುಳಿತು, ಹಿಂದಿನ ರಾತ್ರಿಯ ಪಾತ್ರೆಗಳನ್ನೆಲ್ಲಾ ತೊಳೆದು ಬಟ್ಟೆ ಒಗೆಯುವುದಿಕ್ಕೆ ಶುರು. ನಾವು ವಾಸಿಸುವೆಡೆ ಮುನ್ಸಿಪಾಲಿಟಿಯಿಂದ ನೀರು ಪೂರೈಕೆ ಬೆಳಗ್ಗೆ ಕೇವಲ ಒಂದು ಗಂಟೆ ಮಾತ್ರ ಇರುವುದರಿಂದ, ಅಷ್ಟರಲ್ಲಿ ಎಲ್ಲರೂ ಅವರವರ ಮನೆಗಳ ಪಾತ್ರೆ, ಬಟ್ಟೆ, ಇತ್ಯಾದಿ ಕೆಲಸ ಮುಗಿಸಿ, ಸ್ನಾನ ಪಾನಾದಿಗಳನ್ನು ಪೂರೈಸಬೇಕು. ಇಡೀ ದಿನದ ಬೇರೆ ಬಳಕೆಗಳಿಗೆ, ನೀರು ಸಂಗ್ರಹ ಮಾಡಿಟ್ಟುಕೊಳ್ಳಬೇಕು. ನೀರು ನಿಂತು ಹೋದ ಮೇಲೆ, ಪುನಃ ಮರುದಿನ ಬೆಳಗಿನವರೆಗೂ ನೀರಿನ ಸರಬರಾಜಿಲ್ಲವಾದ್ದರಿಂದ ಧಾವಂತದಿಂದ ಈ ಕೆಲಸಗಳನ್ನೆಲ್ಲ ಮುಗಿಸಿದ ಮೇಲೆಯೇ, ಅವಳ ಮನೆಯಿಂದ ಅಡಿಗೆ ಮಾಡುವ ಶಬ್ದಗಳು ಕೇಳಿ ಬರುವುದು. + +ಪುನಃ ಅವಳನ್ನು ಹೊರಗೆ ಕಾಣುವುದು, ಅವಳು ಕೆಲಸಕ್ಕೆ ಹೊರಟಾಗಲೇ. ಸರಳ ವೇಷ ಭೂಷಣ ಅವಳದು. ತಲೆಗೆ ಎಣ್ಣೆ ಹಚ್ಚಿ, ಕೂದಲು ಅಲ್ಲಾಡದಂತೆ ಹಿಂದಕ್ಕೆ ಬಾಚಿ, ಜಡೆಯನ್ನೊ, ಹೆರಳನ್ನೊ ಹಾಕಿ, ಹೂವನ್ನು ಮುಡಿದು, ಮುಖಕ್ಕೆ ತೆಳುವಾಗಿ ಪೌಡರ್ ಲೇಪಿಸಿ, ಹಣೆಯಲ್ಲಿ ಎದ್ದು ಕಾಣುವಂತೆ ಅಗಲವಾಗಿ ಕೆಂಪು ಪುಡಿ ಕುಂಕುಮವಿಟ್ಟು ಹೊರಡುವಳು. ಕತ್ತಿನಲ್ಲಿ ‘ವಿವಾಹಬಂಧನ’ ದ ಚಿಹ್ನೆಯಾದ ಹಳದಿ ಅರಿಶಿನದ ದಾರ. ಚಿನ್ನದ ಮಂಗಳಸೂತ್ರ ಅವಳ ಕೈಗೆ ಎಟುಕದ ವಸ್ತು. + +ಆಕಾರ ಚಿಕ್ಕದಾದ್ದರಿಂದ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತಾ ಅತ್ತಿಂದಿತ್ತಿಗೆ ಓಲಾಡುತ್ತಾ, ಸಾವಕಾಶದ ನಡಿಗೆ ಅವಳದು, ಪೆಂಗ್ವಿನ್ ಹಕ್ಕಿಗಳು ನಡೆವ ರೀತಿ. ಆದರೂ ಅವಳ ನಡೆಯಲ್ಲಿ ಒಂದು ರೀತಿಯ ರಾಜ ಗಾಂಭೀರ್ಯ. ನಾನೇನಾದರೂ ಆ ಸಮಯ ಹೊರಗೆ ನಿಂತಿದ್ದರೆ, ಅವಳ ಕಡೆಯಿಂದ ಬರೇ ಒಂದು ಮುಗುಳ್ನಗೆ. ಕಾಫಿ ತಿಂಡಿ ಆಯಿತೇ ಎಂಬ ಔಪಚಾರಿಕ ಮಾತು, ಅಲ್ಲಿಗೆ ನಮ್ಮ ಸಂಭಾಷಣೆ ಮುಕ್ತಾಯ. ಸಂಜೆಯಂತೂ ಅವಳನ್ನು ನೋಡುವುದು ಅಪರೂಪವೇ. ಕೆಲಸದಿಂದ ವಾಪಸ್ಸಾದ ಕೂಡಲೇ, ಮನೆ ಒಳಸೇರಿ ಹುದುಗುವಳು. + +ಅವಳ ಗಂಡ ಇವಳ ಇರಸರಿಕೆಗೆ ತದ್ವಿರುದ್ಧವಾದ ಪ್ರಾಣಿ. ಕೊಳಕು ಹರಕು ಬಟ್ಟೆಯಲ್ಲಿ ಶೊಭಚಾಗಿ ಕಾಣುವ, ಇವಳಷ್ಟೇ ಸಣಕಲ ಶರೀರದ, ಎತ್ತರದ ವ್ಯಕ್ತಿ. ಎಣ್ಣೆ-ಬಾಚಣಿಗೆ ಕಾಣದ ಪರಕೆಯ ಹಾಗಿರುವ ಕೆಂಗೂದಲು, ಕ್ಷೌರವಿಲ್ಲದ ಕುರಚಲು ಗಡ್ಡದ ಮುಖ, ರಕ್ತ ಕಾರುವ ಕೆಂಗಣ್ಣು, ಯಾರ ಕಡೆಯೂ ನೋಡದ, ಯಾರನ್ನೂ ಮಾತನಾಡಿಸದ, ನಗುವೇ ಕಾಣದ ಸಿಡುಕು ಮುಖ. ಅವನನ್ನು ನೋಡುವುದೇ ಅಪರೂಪ. ಯಾವತ್ತೂ ಬೆಳಗಿನ ಹೊತ್ತು ಕೆಲಸಕ್ಕೆ ಹೊರಟಿದ್ದು ನೋಡಿಲ್ಲಾ. ಇಳಿ ಸಂಜೆಯಾದ ಮೇಲೆ ಮನೆಯಿಂದ ಹೊರಡುವನು. ರಾತ್ರಿ ಹೊತ್ತು ಗೊತ್ತಿಗೆ ಮನೆಗೆ ಬಂದದ್ದು ಕಂಡಿಲ್ಲಾ. ಅವನು ಮನೆಗೆ ಬಂದಿರುವುದು ಅರಿವಾಗುತ್ತಿದ್ದು ಗೋಡೆಯ ಆ ಬದಿಯಿಂದ ಬರುವ ಶಬ್ದಗಳಿಂದಾಗಿ. ನಾವು ಈ ಮನೆಗೆ ಬಂದು ಕೆಲ ದಿನಗಳಾದ ಮೇಲೆ, ಅವಳ ಮನೆಯಿಂದ ಕೇಳಿ ಬರುತ್ತಿದ್ದ ಶಬ್ದಗಳೇನು ಎಂದು ಅರ್ಥವಾಯ್ತು. + +ಪ್ರತಿ ರಾತ್ರಿ ಜೋರಾಗಿ ಗುದ್ದಿದ ಶಬ್ದ, ಪಾತ್ರೆಗಳನ್ನು ಎಸೆದಾಡುವ ಶಬ್ದ, ಪಟೀರನೆ ಹೊಡೆಯುವ ಶಬ್ದ. ಆತನ ಅವಾಚ್ಯ ಬೈಗುಳಗಳ ನಡುವೆ ಆತನನ್ನು ಸುಮ್ಮನಾಗಿಸಲು ಶ್… ಶ್…. ಎಂದು ಆಕೆಯ ವ್ಯರ್ಥ ಪ್ರಯತ್ನದ ಪಿಸುಧ್ವನಿ. ಕೊನೆಗೊಮ್ಮೆ ಎಲ್ಲಾ ಶಾಂತವಾಯಿತೆಂದ ಮೇಲೆ ಆಕೆಯ ಯಾತನೆಯ, ಏಟು ಬಿದ್ದ ಪುಟ್ಟ ಕುನ್ನಿ ಮರಿಯಂತೆ ಸಣ್ಣ ಭಯದ ಧ್ವನಿಯಲ್ಲಿ ತಡೆತಡೆದು ಕುಯ್ಯೋ, ಮುಯ್ಯೋ ಅಳುವಿನ ಶಬ್ದ. ಮೈ ಮೇಲೆ ನೀಲಿ ಬಾಸುಂಡೆ ಬರುವ ಹಾಗೆ ಬಡಿದ ಗಂಡನ ಹೊಡೆತಗಳಿಗಿಂತ, ನೆರೆಹೊರೆ ತಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆಂಬುದೇ ಆಕೆಗೆ ಚಿಂತೆ. ಎಂತಹ ಸಮಯದಲ್ಲೂ, ಹೊರ ಪ್ರಪಂಚದಿಂದ ತನ್ನ ಜೀವನದ ಭೀಕರ ಸತ್ಯವನ್ನು ಮುಚ್ಚಿಡುವ ಪ್ರಯತ್ನ ಆಕೆಯದು. + +ಮರುದಿನ ಏನೂ ಆಗಿಲ್ಲವೆಂಬಂತೆ, ಯಥಾ ಪ್ರಕಾರ, ಮನೆಗೆಲಸಗಳನ್ನೆಲ್ಲಾ ಮುಗಿಸಿ, ಶಿಸ್ತಿನಿಂದ ಉಡುಗೆ ತೊಟ್ಟು ರಾಜಗಾಂಭೀರ್ಯದ, ಪೆಂಗ್ವಿನ್ ಓಲಾಟದ ನಡಿಗೆಯಿಂದ ತನ್ನ ಕೆಲಸಕ್ಕೆ ಹೊರಡುವಳು. + +ಕುಡುಕ ಗಂಡ ನಿತ್ಯವೂ ಅವಳನ್ನು ಹೊಡೆದು ಬಡಿದು ಹಿಂಸಿಸುತ್ತಿದ್ದ. ಅವನಿಗೆ ಮಾಡಲು ಕೆಲಸವಿಲ್ಲಾ, ಕಾರ್ಯವಿಲ್ಲಾ. ಬೆಳಿಗ್ಗೆಯೆಲ್ಲಾ ಹಿಂದಿನ ದಿನದ ಅಗ್ಗದ ಹೆಂಡದ ಅಮಲಿನಲ್ಲಿ ನಿದ್ರಿಸುವುದು. ಸಂಜೆ, ಅವಳು ಮನೆಗೆ ಬರುವ ವೇಳೆಗೆ ಎದ್ದು, ಅವಳಿಂದ ಎಷ್ಟು ಹಣ ಸಿಗುವುದೊ, ಅಷ್ಟನ್ನೂ ಕಸಿದುಕೊಂಡು, ಅವಳ ಹತ್ತಿರ ಹಣವಿಲ್ಲದಿದ್ದರೆ, ಮನೆಯಲ್ಲಿ ಏನು ಪದಾರ್ಥ ಸಿಗುವುದೋ, ಅದನ್ನು ಕೊಂಡೊಯ್ದು ಮಾರಿ ಆ ಸಂಜೆಯ ಕುಡಿತಕ್ಕೆ ಹಣ ಹೊಂದಿಸಿಕೊಳ್ಳುತ್ತಿದ್ದ. + +ಒಂದು ಸಂಜೆ ಆಕೆ ಏನೋ ಕಾರಣಕ್ಕೆ ಹೊರ ಬಂದಳು. ಇದೇ ಸದಾವಕಾಶ ಎಂದು ಭಾವಿಸಿ, ನಾನು ಎರಡು ಲೋಟ ಕಾಫಿ ಹಿಡಿದು ಹೊರಬಂದೆ. ಅವಳತ್ತ ಒಂದು ಲೋಟ ಕಾಫಿ ನೀಡಿದಾಗ ಒಂದು ಕ್ಷಣ ದಾಕ್ಷಿಣ್ಯದಿಂದ ಲೋಟ ತೆಗೆದುಕೊಳ್ಳುವುದಕ್ಕೆ ಅನುಮಾನಿಸಿದಳು. ನಂತರ ಮಾತಿಲ್ಲದೆ ತೆಗೆದುಕೊಂಡಳು. + +“ನೀವೆಲ್ಲಿ ಕೆಲಸಕ್ಕೆ ಹೋಗ್ತಿರಾ?” ನಾನೇ ಮಾತನ್ನು ಪ್ರಾರಂಭಿಸಿದೆ. + +“ಬುಟ್ಟಿ ಹೆಣೆಯುವ ಒಂದು ಕೈಗಾರಿಕೆಯಲ್ಲಿ.”“ನಿಮ್ಮ ಯಜಮಾನರು ಕೆಲಸಕ್ಕೆ ಹೋಗುವುದಿಲ್ಲವೆ?” ನನ್ನ ನೇರ ಮರು ಪ್ರಶ್ನೆ.“ಇಲ್ಲಾ.” ಸಂಕೋಚದಿಂದ ಗಲಿಬಿಲಿಗೊಂಡು ಕಣ್ಣನ್ನು ಕೆಳಗೆ ಹಾಕಿದಳು. ನಂತರ ಮೌನವಾಗಿಬಿಟ್ಟಳು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ನಾನು ಬಿಡದೇ ಮುಂದುವರೆಸಿ ಮೃದುವಾಗಿ ಹೇಳಿದೆ, “ನಿಮ್ಮ ಗಂಡ, ಕುಡಿದು ಬಂದು ನಿಮ್ಮನ್ನು ಹೊಡೆಯುವುದು ನನಗೆ ತಿಳಿದಿದೆ. ನೀವೇನೂ ಹೇಳಿಕೊಳ್ಳದಿದ್ದರೂ, ನಿಮ್ಮ ಮನೆಯಿಂದ ಬರುವ ಶಬ್ದಗಳೇ ಮತ್ತು ನಿಮ್ಮ ಮೈ ಮೇಲೆ ಕಾಣುವ ನೀಲಿ ಹಸಿರು ಗಾಯಗಳೇ ನಿಮ್ಮ ದುಸ್ತರ ಜೀವನದ ಕಥೆಯನ್ನು ಹೇಳುತ್ತವೆ. ನಿಮ್ಮ ಸಂಕೋಚವೂ ನನಗೆ ಅರ್ಥವಾಗತ್ತೆ.” + +ಆಕೆಯ ಸಂಯಮದ ಕಟ್ಟೆ ಒಡೆಯಿತು. ಬಿಕ್ಕಿ ಬಿಕ್ಕಿ ಅಳಲು ಶುರು ಮಾಡಿದಳು. ಹೆಪ್ಪುಗಟ್ಟಿದ್ದ ವೇದನೆಯೆಲ್ಲಾ ಕಣ್ಣೀರಿನ ರೂಪ ಪಡೆದು ಧಾರಾಕಾರವಾಗಿ ಸುರಿಯತೊಡಗಿತು. ಇದು ಕೆಲವು ನಿಮಿಷಗಳು ಮಾತ್ರ. ತಕ್ಷಣವೇ ಸಾವರಿಸಿಕೊಂಡು ತನ್ನ ಮೇಲೆ ಹತೋಟಿ ತಂದುಕೊಂಡು ಬಿಟ್ಟಳು. ಪುನಃ ಆಕೆ ಮೌನಿ.“ನೀವೇಕೆ ಅಂತಹ ವ್ಯಕ್ತಿಯ ಜೊತೆ ಬಾಳ್ತಿದ್ದೀರಿ. ನಿಮಗೆ ಕೆಲಸವಿದೆ, ದುಡಿಯುವುದರಿಂದ ಹಣಕಾಸಿನ ಸ್ವಾತಂತ್ರ್ಯ ಇದೆ. ನಿಮ್ಮ ಗಂಡನಿಂದ ದೂರಾಗಿ ಕೈ ತೊಳೆದುಕೊಳ್ಳಿ,” ಎಂದು ಸಲಹೆ ಕೊಟ್ಟೆ. + +ಆಘಾತಕ್ಕೆ ಒಳಗಾದಂತೆ ಅವಳ ಶರೀರವೆಲ್ಲಾ ಕಂಪಿಸಿತು. ಕತ್ತೆತ್ತಿ ನನ್ನ ನೋಡಿ, “ಏನು ಮಾತು ಹೇಳ್ತಿದ್ದೀರಾ, ಹಾಗೆ ಬಿಟ್ಟು ಬಿಡೋಕೆ ಆಗುತ್ಯೇ, ಸಮಾಜ ಏನನ್ನತ್ತೆ? ನೆಂಟರಿಷ್ಟರು ಏನನ್ನುತ್ತಾರೆ, ಹೇಗೆ ಮುಖ ತೋರಿಸಲಿ ಆಮೇಲೆ ಅವರಿಗೆಲ್ಲಾ?” + +ಈ ಉತ್ತರವನ್ನು ಎಲ್ಲೊ ನನ್ನ ಮನಸ್ಸಿನ ಮೂಲೆಯೊಂದರಲ್ಲಿ ನಿರೀಕ್ಷಿಸಿಯೇ ಇದ್ದೇ. ನಿಟ್ಟುಸಿರೊಂದು ನನ್ನಿಂದ ಹೊರಟಿತು. ಇಲ್ಲಾ, ಇವಳೆಂದೆಂದಿಗೂ ಹೊರನಡೆಯುವುದಿಲ್ಲಾ. + +ಸುಂಟರಗಾಳಿಯಲ್ಲಿ ಸಿಲುಕಿಕೊಂಡ ಅಸಹಾಯಕವಾದ ಎಲೆಗಳಂತೆ ನನ್ನ ತಲೆಯಲ್ಲಿ ಚಿಂತನೆಗಳು ಬಿರುಸಾಗಿ, ಉಗ್ರತೆಯಿಂದ ಎಡೆಬಿಡದೆ ವೃತ್ತಾಕಾರವಾಗಿ ಸುತ್ತಿದವು. + +‘ಓದಿ ಉನ್ನತ ಶಿಕ್ಷಣವನ್ನು ಪಡೆದವರೂ ಸಹ ಸೇರಿ, ಇಂತಹ ಹೆಂಗಸರು ನೂರಾರು. ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಮದುವೆಯೆಂಬ ದೌರ್ಜನ್ಯದ ಸಂಕೋಲೆಯಲ್ಲಿ ಸಿಕ್ಕಿ ಹಾಕಿಕೊಂಡ ಕೆಲವರಿವರು ಗಂಡನಿಂದ, ಮತ್ತಿತ್ತರರಿಂದ, ಕಿರುಕುಳ, ತಾತ್ಸಾರಗಳನ್ನು ಸಹಿಸುತ್ತಾ, ಎಲ್ಲಾ ನೋವು ಸಂಕಟಗಳನ್ನು ಮೂಕವಾಗಿ ಅನುಭವಿಸುವ ನಿರ್ಭಾಗ್ಯರು. ಆರ್ಥಿಕವಾಗಿ ಸ್ವಾವಲಂಬಿಗಳಾಗಿರದ ಕೆಲವರು. ಇನ್ನಿತರು ಸ್ವಾಲಂಬಿಗಳಾಗಿದ್ದರೂ, ಜೀವನ ಅಸಹನೀಯ ಎನಿಸಿದರೂ ಕಂಡ ಜಗತ್ತಿಗಿಂತ, ಕಾಣದ ಜಗತ್ತಿನ ಬಗ್ಗೆ ಇರುವ ಅಗೋಚರ ಭಯ, ಅನಿಶ್ಚಯತೆಯಿಂದಲೋ ಅಥವಾ ಮಕ್ಕಳ ಸಲುವಾಗಿಯೋ, ಇವೆಲ್ಲಕ್ಕೂ ಮೀರಿ ದಿಗಿಲಾಗುವುದು ಸಮಾಜ ಹಾಗೂ ಬಂಧು ಬಾಂಧವರ ಪ್ರತಿಕ್ರಿಯೆಗೆ. ಈ ಚಕ್ರವ್ಯೂಹದ ಒತ್ತಡಕ್ಕೆ ಸಿಕ್ಕು, ಹೊರಗೆ ಬರಲಾರದೆ, ನಿಷ್ಕ್ರಿಯರಾಗಿ ನಿಸ್ತೇಜವಾದ ಬಾಳನ್ನು ಬಾಳುವರು.’ + +‘ನನ್ನನ್ನು ಸದಾ ಕಾಡುವ ಪ್ರಶ್ನೆ, ‘ಸಮಾಜ’ ಎಂದರೆ ರಕ್ತ ಸಂಬಂಧಿಕರಾ, ಕುಟುಂಬದವರಾ, ನೆರೆಹೊರೆಯವರಾ ಅಥವಾ ಬೀದಿಯಲ್ಲಿ ಹೋಗಿ ಬರುವ ಜನಗಳಾ? ಕ್ರೂರಿ ಗಂಡನ ಕೈಲಿ ಹಿಂಸೆಗೊಳಗಾಗಿ ನರಳುತ್ತಿರುವಾಗ, ಆಕೆಯ ರಕ್ಷಣೆಗೆ ಇವರ್ಯಾರೂ ಯಾಕೆ ಮುಂದಾಗುವುದಿಲ್ಲ? ಮಾತುಗಳ ಕಲ್ಲನ್ನೆಸೆಯುವರೇ ಹೊರತು, ಈ ಕೌಟುಂಬಿಕ ಅತ್ಯಾಚಾರ, ಅನ್ಯಾಯದ ವಿರುದ್ಧ ಯಾಕೆ ಸೊಲ್ಲೆತ್ತುವುದಿಲ್ಲಾ ಈ ಷಂಡ ಸಮಾಜ! ತಮ್ಮ ತಮ್ಮ ಬದುಕನ್ನು ಮಾತ್ರ ನೋಡಿಕೊಳ್ಳುವ ಸ್ವಾರ್ಥಿ ಸಮಾಜ!’ + +ಅವಳ ಸ್ಥಿತಿ ಇಷ್ಟು ಹೀನಾಯವಾಗಿದ್ದರೂ, ಆಕೆ ಇದರೆಲ್ಲದರಿಂದ ಹೊರನಡೆಯುವುದಿಲ್ಲ. ಸಮಾಜದ ಕಟ್ಟಳೆಯನ್ನು ದಾಟಿ ಹೊರಗೆ ಬಂದು ಮುನ್ನಡೆಯುವ ಧೈರ್ಯವಿಲ್ಲಾ.’ ಉಕ್ಕುತ್ತಿರುವ ಕ್ರೋಧ, ಜಿಗುಪ್ಸೆಗಳಿಂದ ನನ್ನ ಮನಸ್ಸು ಆಲೋಚಿಸುತ್ತಾ ಹೋಯಿತು. ‘ಶತ ಶತಮಾನಗಳಿಂದ ತುಳಿತಕ್ಕೆ ಒಳಗಾಗಿ, ತಗ್ಗಿ ಬಗ್ಗಿ ನಡೆದೂ ನಡೆದೂ, ದುಸ್ಸಹನೀಯವಾದುದನ್ನೂ ಮೌನವಾಗಿ ಸಹಿಸಿಕೊಂಡು ಹೋಗುವುದು ನಮ್ಮ ಹೆಂಗಸರ ರಕ್ತದ ಕಣ ಕಣದಲ್ಲೂ ಆಳವಾಗಿ ಸೇರಿಹೋಗಿದೆ. ಹೆಣ್ಣಿನ ವ್ಯಕ್ತಿತ್ವವನ್ನೇ ದುರ್ಬಲಗೊಳಿಸಿಬಿಟ್ಟಿದೆ. ಇತರರ ಸುಖಕ್ಕಾಗಿ, ತನ್ನ ಸರ್ವಸ್ವವನ್ನು ತ್ಯಾಗ ಮಾಡುವುದೇ ಅವಳ ಜಾಯಮಾನ. ಸ್ವಂತ ಸುಖದ ತ್ಯಾಗವೇ ಅವಳೆಲ್ಲಾ ನಿರ್ಧಾರ ಮತ್ತು ಕ್ರಿಯೆಗಳಿಗೆ ಅಡಿಪಾಯ. ಸಮಾಜದ ಪ್ರತಿಕ್ರಿಯೆಗೆ ಹೆದರಿ ಹಣ್ಣಾಗುವಳೇ ಹೊರತು, ತನಗೇನು ಬೇಕು ಎಂದು ನಿರ್ಭಯವಾಗಿ ಯೋಚಿಸಲಾರಳು. ಹುಟ್ಟಿನಿಂದಲೇ ಹೆಣ್ಣುಮಕ್ಕಳಿಗೆ ಗಂಡು ಹೆಂಗಸಿಗಿಂತ ಉತ್ತಮನು, ಸಬಲನು, ಸಶಕ್ತನು. ಹೆಣ್ಣು ದುರ್ಬಲಳು, ಅಸಹಾಯಕಳು, ಗಂಡಿಗೆ ಸರಿಸಾಟಿಯಾಗಿ ನಿಲ್ಲುವುದು ಹೆಣ್ಣಿಗೆ ಸಲ್ಲದು. ಹೆಣ್ಣೇ ಎಲ್ಲಾ ಸಂದರ್ಭಗಳಲ್ಲೂ ಅನುಸರಿಸಿಕೊಂಡು, ಹೊಂದಾಣಿಕೆ ಮಾಡಿಕೊಳ್ಳಬೇಕು, ಎಂದೆಲ್ಲಾ ತಲೆಯಲ್ಲಿ ಬಿತ್ತುವರು. ಮದುವೆ ಆಯಿತೆಂದರೆ ಮುಗಿಯಿತು, ಜೀವಮಾನ ಪೂರ್ತಿಯ ಒಪ್ಪಂದವದು. ತಂದೆ ತಾಯಿಯರ ಮನೆಗೆ ಹಿಂದಿರುಗುವ ಪ್ರಶ್ನೆಯೇ ಏಳುವುದಿಲ್ಲ. ಮದುವೆ ಮಾಡಿಕೊಟ್ಟ ಮೇಲೆ, ತಂದೆ ತಾಯಿಯ ಕರ್ತವ್ಯ ಮುಗಿದ ಹಾಗೆಯೇ, ಸಾಯುವವರೆಗೆ ಗಂಡನ ಮನೆಯಲ್ಲೇ ಅವಳ ಸೌಭಾಗ್ಯ.’ ಯೋಚಿಸಿದಂತೆಲ್ಲಾ ರಕ್ತ ಕುದಿಯಿತಷ್ಟೇ ಹೊರತು, ಸಮಸ್ಯೆಗೆ ಸಮಾಧಾನ ಕಾಣಲಿಲ್ಲ. + +ಜೀವನ ಹಾಗೆಯೇ ಮುಂದುವರೆಯಿತು. ವರ್ಷವೇ ಉರುಳಿತು. ಪಕ್ಕದ ಮನೆಯ ಗಲಾಟೆ, ಹೊಡೆತ, ಬಡಿತಕ್ಕೆ, ನಾನೂ ಒಗ್ಗಿ ಹೋದೆ. ಇದಕ್ಕೆ ಕೊನೆಯೇ ಇಲ್ಲವೆಂದರಿತು ನನ್ನ ಪಾಡಿಗೆ ನಾನಿದ್ದೆ. + +ಒಂದಿನ ಗಂಡನಿಗೆ ಪಿತ್ತಕೋಶದ ಕ್ಯಾನ್ಸರ್ ಬಂದಿದೆ ಎಂದು ಖಿನ್ನಳಾಗಿ ಹೇಳಿದಳು. ಹೆಚ್ಚಿನ ತಪಾಸಣೆಗಾಗಿ ವೈದ್ಯರು ಆಸ್ಪತ್ರೆಗೆ ದಾಖಲು ಮಾಡಲು ಹೇಳಿದ್ದಾರೆಂದಳು. ಕ್ಯಾನ್ಸರ್ ಉಲ್ಬಣಾವಸ್ಥೆ ತಲುಪಿ, ಕೊನೆಯ ಹಂತ ಮುಟ್ಟಿತ್ತು. ಖಾಯಿಲೆ ಗುಣವಾಗುವುದಿಲ್ಲವೆಂಬ ವಿಷಯ ಗೊತ್ತಿದ್ದರೂ, ವೈದ್ಯರೂ ಸಹ ಆ ಬಡಪಾಯಿ ಹೆಂಗಸಿನ ಸ್ಥಿತಿಯನ್ನು ತನ್ನ ಲಾಭಕ್ಕೇ ಬಳಸಿಕೊಂಡರು. ಆ ಪರೀಕ್ಷೆ, ಈ ಚಿಕಿತ್ಸೆ ಎಂದು ಆ ಸಾಯುವ ಮನುಷ್ಯನಿಗೆ ಆಸ್ಪತ್ರೆಗೆ ದಾಖಲು ಮಾಡಿಸಿದರು. ಆಕೆ ಕಂಡ ಕಂಡವರ ಕಾಲು ಹಿಡಿದು ಅವರಿವರಿಂದ ಸಾಲ ಎತ್ತಿ ಹಣ ಖರ್ಚು ಮಾಡಿದಳು. ಕೊನೆಗೆ, ಇನ್ನು ಆಸ್ಪತ್ರೆಯಲ್ಲಿಟ್ಟುಕೊಂಡು ಪ್ರಯೋಜನವಿಲ್ಲವೆಂದು ಕೈ ಅಲ್ಲಾಡಿಸಿ ದೊಡ್ಡ ಮೊತ್ತದ ಬಿಲ್ಲನ್ನು ಆಕೆಗೆ ಕೊಟ್ಟು, ಅವನನ್ನು ಮನೆಗೆ ಕಳುಹಿಸಿದರು. ಕತ್ತಿನವರೆಗೆ ಸಾಲ ಹೊತ್ತು ಮನೆಯಲ್ಲಿ ಗಂಡನ ಸೇವಾ ಶುಶ್ರೂಷೆ ಮೊದಲಾಯಿತು. ನಿತ್ಯ ಕೆಲಸದ ಹೊರೆಯ ಜೊತೆಗೆ, ಹಾಸಿಗೆ ಹತ್ತಿದ ಗಂಡನಿಗೆ ತೊಳೆದೂ ಬಳಿದು ಮಾಡುವುದು, ಊಟ ತಿನ್ನಿಸುವುದೂ ಸೇರಿಕೊಂಡಿತು. ಕೆಲಸಕ್ಕಂತೂ ಹೋಗಲೇಬೇಕು, ಸುಸ್ತಾಯಿತು ಎಂದು ಕೂರುವ ಹಾಗಿಲ್ಲಾ. ಸಂಸಾರದ ನೊಗ ಹೊತ್ತು ಎಳೆದೇ ಎಳೆದಳು. + +ಯಾತನಾಮಯ ರೋಗದ ಸ್ಥಿತಿಯಲ್ಲಿಯೂ ಆ ಗಂಡನಿಗೇನೂ ಪಶ್ಚಾತ್ತಾಪವಾದ ಹಾಗೆ ಕಾಣಲಿಲ್ಲ. ತನ್ನ ನೋವನ್ನೆಲ್ಲಾ ಅವಳ ಮೇಲೆ ದ್ವೇಷದ ರೂಪದಲ್ಲಿ ತೀರಿಸುತ್ತಿದ್ದ. ಊಟದ ತಟ್ಟೆ ಎಸೆಯುವುದು, ಅವಳನ್ನು ಒದೆಯುವುದೂ, ಊಟ ಮಾಡಿಸುವಾಗ ಅವಳ ಬೆರಳನ್ನು ಕಚ್ಚುವುದು, ಮಲಗಿದ್ದಲ್ಲೇ ಇವನ ಈಗಿನ ನಿತ್ಯದ ಹಿಂಸೆಗಳು. + +ಕೊನೆಗೊಂದು ದಿನ ಮಡಿದ ಆ ಮೃಗ. ಇಪ್ಪತ್ಮೂರು ವರ್ಷಗಳ ನರಕಸದೃಶ ಜೀವನದಿಂದ ಅಂತೂ ಇಂತೂ ಆಕೆಗೆ ಬಿಡುಗಡೆಯಾಯಿತು. ಬಂಧು, ಬಳಗ, ಸ್ನೇಹಿತರು ನೆಪ ಮಾತ್ರಕ್ಕೆ ಬಂದು ಬಾಯುಪಚಾರಕ್ಕೆ ಸಂತಾಪ ತೋರಿ ಕೃತಕ ಸಮಾಧಾನದ ಮಾತನ್ನಾಡಿದರು. ಜನಗಳಿಗೆ ಸಾವು ಹಾಗೂ ಹೆಣವನ್ನು ನೋಡಲು ಅದೇನೋ ವಿಲಕ್ಷಣವಾದ ಕುತೂಹಲ. ಹೆಣವನ್ನು ನೋಡಲು ಬೀದಿಯಲ್ಲಿ ಹೋಗೋ, ಬರೋ ಜನಗಳು ಕುತೂಹಲದಿಂದ ಇಣುಕಿದರು. ಸನ್ನಿವೇಶಕ್ಕೆ ತಕ್ಕಂತೆ ಚ ಚ ಅಂತ ಲೊಚಗುಟ್ಟಿ, ಒಣ ವೇದಾಂತ ಒಗೆದರು. ಸಂಬಂಧಿಕರು ಅಲ್ಪಸ್ವಲ್ಪ ಹಣ ಸೇರಿಸಿ, ಆತನ ಅಂತ್ಯಕ್ರಿಯೆ ಮಾಡಿದರು. + +ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ. ಆಗೊಮ್ಮೆ ಈಗೊಮ್ಮೆ ಈ ಬಡಪಾಯಿಯ ನೆನಪಂತೂ ಬರುತ್ತಲೇ ಇತ್ತು. + +ಸುಮಾರು ಒಂದು ವರ್ಷದ ಹತ್ತಿರ ಆಗಿತ್ತೇನೋ ಅವಳನ್ನು ನೋಡಿ. ಧಿಡೀರ್ ಎಂದು ಒಂದಿನ ನನ್ನ ಮನೆಯ ಬಾಗಿಲಲ್ಲಿ ಕಾಣಿಸಿಕೊಂಡಳು. ನನಗೆ ಸಂತೋಷ, ಆಶ್ಚರ್ಯಗಳು ಒಟ್ಟಿಗೇ ಉಂಟಾದವು. ಎಲ್ಲಿರುವಳೋ, ಹೇಗಿರುವಳೋ ಎಂದೂ ಆಗಾಗ್ಗೆ ಯೋಚಿಸಿದ್ದೂ ಇತ್ತಲ್ಲಾ. ಕೆಂಪಗೆ, ಚೆನ್ನಾಗಿ ದುಂಡಗಾಗಿದ್ದಳು. ಮುಖದ ಮೇಲೆ ನಿರಾಳವಾದ ಕಳೆ, ಸಂತೋಷವಾಗಿಯೂ ಕಂಡಳು. ಕೆಲಸದ ಬಗ್ಗೆ ವಿಚಾರಿಸಿದೆ, ಬಹಳ ಆರಾಮವಾಗಿರುವುದಾಗಿಯೂ, ಮನೆಯ ಯಜಮಾನತಿ ತುಂಬಾ ಒಳ್ಳೆಯವರಾಗಿದ್ದು, ಇವಳನ್ನು ಮನೆಯವಳಂತೇ ಕಾಣುತ್ತಿದ್ದರೆಂದು ತಿಳಿಸಿದಳು. ಅಂತಹ ಮನೆ ಸೇರೋಕೆ ಅದೃಷ್ಟ ಮಾಡಿದ್ದೆನೆಂದಳು. ನನಗೂ ತುಂಬಾ ಸಂತೋಷವಾಯ್ತು. ಸಾಲದ ಹೊರೆ ಬಗ್ಗೆ ಕೇಳಿದೆ. ಅದೂ ನಿಧಾನವಾಗಿ ತೀರುತ್ತಿದೆ, ಆದರೂ ಇನ್ನೂ ಹಲವಾರು ವರ್ಷಗಳಾಗುತ್ತದೆ ಎಂದಳು. ‘ಈಗೇನು ಇಲ್ಲೀ ತನಕ ಬಂದದ್ದು’ ಎಂದು ಕೇಳಿದೆ ‘ಗಂಡನ ವರ್ಷಾಬ್ಧಿಕ ಮಾಡುವುದಿತ್ತಲ್ಲಾ’ ಎಂದಳು. ನಾನು ಗರಬಡಿದವಳಂತೆ ಅವಳತ್ತ ನೋಡಿದೆ. ಸುಧಾರಿಸಿಕೊಂಡು “ಇದಕ್ಕೆಲ್ಲಾ ಹಣ?” ಪ್ರಶ್ನಿಸಿದೆ. + +“ನನ್ನ ಸಂಬಳದಿಂದ ಸ್ವಲ್ಪ ಹಣವನ್ನು ಪ್ರತಿ ತಿಂಗಳೂ ಇದಕ್ಕಾಗಿ ಉಳಿಸಿದ್ದೀನಿ.” + +“ಅಲ್ಲಾ ಬದುಕಿರುವಷ್ಟು ಸಮಯ ನಿನ್ನನ್ನು ಗೋಳು ಹುಯ್ದು, ಹುರಿದು ಮುಕ್ಕಿದವನ ಆತ್ಮಕ್ಕೆ ಸ್ವರ್ಗದಲ್ಲಿ ಶಾಂತಿಯ ಸ್ಥಾನ ಕಲ್ಪಿಸೋಕೆ, ನೀನೇಕೆ ಕಷ್ಟ ಪಟ್ಟು ದುಡಿದ ಹಣವನ್ನು ಪೋಲು ಮಾಡ್ತಿಯಾ? ಹಳೇ ಸಾಲವೇ ಇನ್ನೂ ಮುಗಿದಿಲ್ಲಾ!” + + + +“ಹಾಗಂದರೆ ಹೇಗ್ಹೇಳಿ? ತಾಳಿ ಕಟ್ಟಿದ ಗಂಡ, ಹೆಂಡತಿಯಾಗಿ ನನ್ನ ಕರ್ತವ್ಯ ನಾನು ಮಾಡಲೇ ಬೇಕಲ್ಲಾ. ಮಾಡದೇ ಹೋದರೆ, ಸಮಾಜ ಬಂಧು ಬಳಗ ಏನಂತಾರೆ ಹೇಳಿ? ಕಷ್ಟವೋ, ನಷ್ಟವೋ, ಮಾಡಿ ಮುಗಿಸಬೇಕು,” ಅಂದಳು ಶಾಂತ ಭಾವದಿಂದ. + +ನನ್ನ ತಲೆ ದಿಮ್… ಅನ್ನತೊಡಗಿತು. + +ಮೀರಾ ಸಂಪಿಗೆ ಮೈಸೂರಿನವರು. ಹದಿನೇಳು ವರ್ಷ ಅಮೇರಿಕಾದಲ್ಲಿದ್ದವರು ಮತ್ತೀಗ ವಾಪಸ್ಸು ತಮ್ಮೂರಿಗೆ ಮರಳಿದ್ದಾರೆ. ಪ್ರಪಂಚ ಸುತ್ತುವುದು ತೀವ್ರ ಖುಷಿಯ ವಿಷಯ ಮತ್ತು ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ. \ No newline at end of file diff --git a/Kenda Sampige/article_386.txt b/Kenda Sampige/article_386.txt new file mode 100644 index 0000000000000000000000000000000000000000..d0cc6d4e21fb824df6bd155f50d88e43c816e6a6 --- /dev/null +++ b/Kenda Sampige/article_386.txt @@ -0,0 +1,35 @@ +byಕೆಂಡಸಂಪಿಗೆ|May 27, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು …” + +byಡಾ. ಬಿ. ಜನಾರ್ದನ ಭಟ್|May 26, 2019|ವಾರದ ಕಥೆ,ಸಾಹಿತ್ಯ| 0 Comments + +“ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ?” + +byಕೆಂಡಸಂಪಿಗೆ|May 20, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ…” + +byಎಂ.ಜಿ. ಶುಭಮಂಗಳ|May 19, 2019|ವಾರದ ಕಥೆ,ಸಾಹಿತ್ಯ| 0 Comments + +“ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು.” + +byಶ್ರೀದೇವಿ ಕೆರೆಮನೆ|May 13, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು.” + +byಡಾ. ಬಿ. ಜನಾರ್ದನ ಭಟ್|May 12, 2019|ವಾರದ ಕಥೆ,ಸಾಹಿತ್ಯ| 0 Comments + +“ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ.” + +byಕೆಂಡಸಂಪಿಗೆ|May 6, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು.” + +byನಾಗರೇಖಾ ಗಾಂವಕರ|May 5, 2019|ವಾರದ ಕಥೆ,ಸಾಹಿತ್ಯ| 0 Comments + +“ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು.” + +byಆರ್. ವಿಜಯರಾಘವನ್|Apr 29, 2019|ದಿನದ ಅಗ್ರ ಬರಹ,ಸಾಹಿತ್ಯ| 0 Comments + +ತೀರಾ ಮೊನ್ನೆ ಕಾಶ್ಮೀರಿ ಭಾಷೆಯ ಕವಿತೆಯನ್ನು ಆಕೆ ನನಗಾಗಿ ಓದಿ ಹೇಳಿದರು, ಫೋನಿನಲ್ಲೆ. ಒಟ್ಟಿಗೆ ನಾಲ್ಕು. ಒಂದೊಂದೂ ಚೈತನ್ಯದಿಂದ ಪುಟಿಯುವ ಕುಣಿಸುವ ಲಯದವು. ಆ ಲಯ ಕನ್ನಡಕ್ಕೆ ತರುವುದಾದರೆ ಎಷ್ಟು ಚೆನ್ನ ಎಂಬ ಭಾವನೆ ಮೂಡಿಬಿಟ್ಟಿತು ನನ್ನಲ್ಲಿ \ No newline at end of file diff --git a/Kenda Sampige/article_387.txt b/Kenda Sampige/article_387.txt new file mode 100644 index 0000000000000000000000000000000000000000..f5d3282e5b407f491129e35677593f23b3206b55 --- /dev/null +++ b/Kenda Sampige/article_387.txt @@ -0,0 +1,87 @@ + + +1. ಮಣೆಗಾರನ ಗರ್ವಭಂಗ + +ಶ್ಯಾನುಭಾಗ ಶ್ಯಾಮಣ್ಣನವರು ಎರಡು ಗ್ರಾಮದ ಶ್ಯಾನುಭಾಗರು. ಅವರ ಈ ಉದ್ಯೋಗ ಆನುವಂಶಿಕವಾಗಿ ಬಂದದ್ದು. ಶ್ಯಾಮಣ್ಣನವರ ತಂದೆ ರಾಮಕೃಷ್ಣಯ್ಯನವರು, ಅಜ್ಜ ನಾರಾಯಣಯ್ಯನವರು, ಮುತ್ತಾತ ಇಚ್ಚಣ್ಣನವರು – ಇವರೆಲ್ಲ ಶ್ಯಾನುಭಾಗತಿಕೆ ಮಾಡಿ ಸಾಕಷ್ಟು ಹೆಸರು ಪಡೆದವರೇ. 1837ನೇ ಇಸವಿಯಲ್ಲಿ ಬ್ರಿಟಿಷರ ವಿರುದ್ಧವಾಗಿ ನಡೆದ ಕಲ್ಯಾಣಪ್ಪನ ಕಾಟಕಾಯಿ ಎಂಬ ಸ್ವಾತಂತ್ರ್ಯ ಹೋರಾಟದಲ್ಲಿ ಶ್ಯಾಮಣ್ಣನವರ ಹಿರಿಯರು ಸೇರಿದ್ದರು ಎಂದು ಈ ಮನೆತನದ ಶ್ಯಾನುಭಾಗತಿಕೆಯನ್ನು ಆಂಗ್ಲ ಸರಕಾರ ರದ್ದು ಮಾಡಿತ್ತು. ಆದರೂ ಶ್ಯಾಮಣ್ಣನವರ ಅಜ್ಜ ನಾರಾಯಣಯ್ಯನವರು ಸರಕಾರದೊಡನೆ ವ್ಯವಹರಣೆ ನಡೆಸಿ ಉದ್ಯೋಗವನ್ನು ತಿರುಗಿ ಪಡೆಯುವಲ್ಲಿ ಸಫಲರಾಗಿದ್ದರು. ಶ್ಯಾಮಣ್ಣನವರು ಐಗಳ ಮಠದಲ್ಲಿ ಮೂರನೇ ತರಗತಿಯ ತನಕ ಕಲಿತವರಾಗಿದ್ದರೂ ಕುಮಾರವ್ಯಾಸನ ಭಾರತ, ಲಕ್ಷ್ಮೀಶನ ಜೈಮಿನಿ ಭಾರತ, ಕನಕದಾಸನ ನಳಚರಿತ್ರೆ ಮುಂತಾದ ಕಾವ್ಯಗಳನ್ನೂ ಹಲವಾರು ಯಕ್ಷಗಾನ ಪ್ರಸಂಗಗಳನ್ನೂ ಪರಿಚಯ ಮಾಡಿಕೊಂಡಿದ್ದರು. ಚುರುಕು ಬುದ್ಧಿಯವರಾದ ಅವರು ತಾಲೂಕಿನ ಸಮರ್ಥ ಶ್ಯಾನುಭಾಗರಲ್ಲೊಬ್ಬರು ಎಂದು ಸರಕಾರದಲ್ಲೂ ಹೆಸರು ಪಡೆದಿದ್ದರು. + +ಆಟಿ ತಿಂಗಳ ಜಡಿಮಳೆ – ತೋಡು ತೊರೆ, ನದಿ ಕೆರೆ ಎಲ್ಲ ತುಂಬಿ ಹರಿಯುತ್ತಿತ್ತು. ಶ್ಯಾನುಭಾಗರು ಮನೆಯ ಇದಿರಿನ ಗದ್ದೆಗಳಿಗೆ ಬಯಲಿನ ಒತ್ತಿಗೆ ಹರಿಯುತ್ತಿದ್ದ ಪಯಸ್ವಿನೀ ನದಿಯ ನೀರು ದಡಮೀರಿ ಮಗುಚಿ ಬಿಡುತ್ತದೋ ಎಂದು ಅನುಮಾನ ಪಟ್ಟುಕೊಂಡು ಚಾವಡಿಯಲ್ಲಿ ಕುಳಿತುಕೊಂಡು ಎಲೆಯಡಕೆ ಜಗಿಯುತ್ತಿದ್ದರು. ಆಗ ಅವರ ಉಗ್ರಾಣಿ ಉಸ್ಮಾನ್ ಸಾೈಬ ಒದ್ದೆಮುದ್ದೆಯಾಗಿ ಆ ಬಿರುಮಳೆಯಲ್ಲಿಯೇ ಬಂದು ಮಳೆಗೆ ಒದ್ದೆಯಾಗದಂತೆ ಜಾಗ್ರತೆಯಿಂದ ಅಂಗಿ ಕಿಸೆಯಲ್ಲಿ ಒಣಗಿದ ಬಾಳೆ ಎಲೆಯಲ್ಲಿ ಸುತ್ತಿ ಇಟ್ಟಿದ್ದ ಒಂದು ಕಾಗದದ ತುಂಡನ್ನು ಶ್ಯಾಮಣ್ಣನವರ ಕೈಯಲ್ಲಿಟ್ಟ. + +ಶ್ಯಾನುಭಾಗರು ಮೂಗಿಗೆ ಕನ್ನಡಕ ಏರಿಸಿ ಕಾಗದವನ್ನು ಬಿಡಿಸಿ ಓದಿ ನೋಡಿ ಸಾೈಬನಲ್ಲಿ ಹೇಳಿದರು – “ಈ ಹುಡುಗ ಯಾವುದೋ ಆಫೀಸಿನಿಂದ ವರ್ಗವಾಗಿ ಈಗಷ್ಟೆ ಇಲ್ಲಿಗೆ ಮಣೆಗಾರನಾಗಿ ಬಂದಾತ. ಇವನಿಗೆ ನಮ್ಮ ಮಲೆನಾಡಿನ ಜಡಿಮಳೆಯ ಹೊಡೆತ ಏನು ಗೊತ್ತು? ಧರ್ಮಪ್ಪನ ದರಖಾಸ್ತು ತನಿಖೆಗೆ ಸೋಮವಾರ ಬರುತ್ತಾನಂತೆ. ನೋಟೀಸಿನಲ್ಲಿ ಹಾಗಿದೆ. ನಾಳೆ ಬೆಳಗ್ಗೆ ನೀನು ಹೋಗಿ ಅವನಲ್ಲಿ ಹೇಳು. ಈ ದರಖಾಸ್ತು ಸ್ಥಳಕ್ಕೆ ಇಲ್ಲಿಂದ ನಾಲ್ಕು ಮೈಲು ದೂರವಿದೆ. ಅಲ್ಲಿಗೆ ಮುಟ್ಟಬೇಕಾದರೆ ಗುಡ್ಡ ಹತ್ತಬೇಕು. ಎರಡು ತೋಡು ದಾಟಬೇಕು. ಈ ಮಳೆಗೆ ಅವನು ಇಳಿದು ದಾಟಲು ಸಾಧ್ಯವಿಲ್ಲ. ಅವಕ್ಕೆ ಹಾಕಿದ ಪಾಲಗಳು (ಕಾಲು ಸಂಕ) ಈಗ ನೆರೆಯಿಂದಾಗಿ ಉಳಿದಿರಲಿಕ್ಕಿಲ್ಲ. ಕಾಡುದಾರಿ, ಜಿಗಣೆಗಳ ಕಾಟ, ಜಾಗವನ್ನು ಅಳತೆ ಮಾಡುವರೆ ಸಂಕಲೆ ಎಳೆಯಲು ಈ ಮಳೆಗೆ ಸಾಧ್ಯವಿಲ್ಲ, ಯಾವುದಕ್ಕೂ ಮೂರು ತಿಂಗಲು ಕಳೆಯಲಿ.” + +ಉಸ್ಮಾನ್ ಸಾೈಬನು ಶ್ಯಾನುಭಾಗರ ಬಚ್ಚಲ ಮನೆಯತ್ತ ತೆರಳಿ ಒದ್ದೆಯಾದ ಬಟ್ಟೆಬರೆಗಳನ್ನು ಹಿಂಡಿ, ಉರಿಯುತ್ತಿದ್ದ ಒಲೆಯ ಹತ್ತಿರ ಹಿಡಿದು ತಕ್ಕಮಟ್ಟಿಗೆ ಒಣಗಿಸಿಕೊಂಡು ತಿರುಗಿ ತೊಟ್ಟುಕೊಂಡ. ಮನೆಗೆ ಬಂದು ಶ್ಯಾಮಣ್ಣನವರ ಹೆಂಡತಿ ಶಾರದಮ್ಮನವರು ಕೊಟ್ಟ ಕಾಫಿ ತಿಂಡಿಗಳನ್ನು ಹೊಟ್ಟೆಗೆ ಇಳಿಸಿ ತನ್ನ ಮನೆಯತ್ತ ಕಾಲು ಹಾಕಿದ. + +ಮರುದಿನ ಸಂಜೆ ಬಂದ ಉಸ್ಮಾನ್ ಮಣೆಗಾರರು ಬರುವುದು ಖಂಡಿತವಂತೆ, ಅವರಿಗೆ ಆಮೇಲೆ ಬೇರೆ ಗ್ರಾಮಗಳಿಗೆ ಹೋಗುವ ಅರ್ಜೆಂಟು ಕೆಲಸಗಳಿವೆಯಂತೆ, ಇಲ್ಲಿಗೆ ದಾರಿ ತೋರಿಸಲು ನಾನು ಬೆಳಗ್ಗೆ ಅವರಲ್ಲಿಗೆ ಹೋಗಬೇಕಂತೆ – ಎಂಬ ಮಣೆಗಾರರ ಸಂದೇಶವನ್ನು ಶ್ಯಾನುಭಾಗರಿಗೆ ತಲುಪಿಸಿದ. ಅವರು ಒಳಗೊಳಗೆ ಈತನ ತಾಕತ್ತು ಎಷ್ಟಿದೆ ಎಂದು ಪರೀಕ್ಷಿಸಿಯೇ ಬಿಡೋಣ ಎಂದು ನಿಶ್ಚೈಸಿ “ಆಗಲಿ” ಎಂದರು. + +ಮಣೆಗಾರ ಮಾಧವರಾಯ ಇಪ್ಪತ್ತೈದು ವರುಷ ಪ್ರಾಯದ ತರುಣ. ತಾಲೂಕು ಕಛೇರಿಯಲ್ಲಿ ಗುಮಾಸ್ತನಾಗಿದ್ದು ಮಣೆಗಾರ ಹುದ್ದೆಗೆ ಬಂದು ಎರಡು ತಿಂಗಳಾಗಿತ್ತಷ್ಟೆ. ತರುಣನಾದುದರಿಂದ ಹುರುಪಿನಿಂದ ಕೆಲಸ ಮಾಡಿ ಮೇಲಧಿಕಾರಿಗಳ ಮೆಚ್ಚುಗೆ ಪಡೆದು ಆದಷ್ಟು ಬೇಗ ತಹಶಿಲ್ದಾರನಾಗಬೇಕೆಂದು ಕನಸು ಕಾಣುತ್ತಿದ್ದ ವ್ಯಕ್ತಿ . ಶ್ಯಾಮಣ್ಣನವರ ಗ್ರಾಮಗಳಿಗೆ ಈ ತನಕ ಮಾಧವರಾಯ ಕಾಲಿಟ್ಟಿದ್ದಿಲ್ಲ. ಆ ಗ್ರಾಮಗಳ ಒಂದೆರಡು ಕಡತಗಳನ್ನು ಶ್ಯಾಮಣ್ಣನವರನ್ನು ತನ್ನ ಆಫೀಸಿಗೆ ಬರಮಾಡಿಕೊಂಡು ಅವರಿಂದ ಮಾಹಿತಿ ಪಡೆದು ಅಲ್ಲಿಂದಲೇ ವಿಲೇವಾರಿ ಮಾಡಿದ್ದ. + +ಧರ್ಮಪ್ಪನ ದರಖಾಸ್ತು ರಿಕಾರ್ಡಿನಲ್ಲಿ ಒಂದು ಇಕ್ಕಟ್ಟು ಇತ್ತು. ಅವನ ನೆರೆಯಾತ ಆ ಸ್ಥಳ ತನ್ನ ಕುಮ್ಕಿ, ಅದರಲ್ಲಿ ಹಾದು ಹೋಗುವ ಮಾಮೂಲು ದಾರಿ ಇದೆ. ಆದುದರಿಂದ ಧರ್ಮಪ್ಪನಿಗೆ ಆ ಸ್ಥಳವನ್ನು ದುರಖಾಸ್ತಿಗೆ ಕೊಡಬಾರದು ಎಂದೆಲ್ಲ ತಕರಾರು ಹೂಡಿದ್ದ. ಈ ವ್ಯಕ್ತಿಗೆ ತಾಲೂಕು ಕಚೇರಿಯ ಪರಿಚಯವಿದ್ದುದರಿಂದ ದರಖಾಸ್ತಿನ ಕಡತವನ್ನು ಮಣೆಗಾರರೇ ಸ್ವತಃ ತನಿಖೆ ಮಾಡಿ ಕೂಡಲೇ ತಾಲೂಕು ಕಚೇರಿಗೆ ಕಳುಹಿಸಬೇಕೆಂದು ಹುಕುಂ ಮಾಡಿಸುವಲ್ಲಿ ಯಶಸ್ವಿಯಾಗಿದ್ದ. ಇದರಿಂದಾಗಿ ಮಣೆಗಾರರಿಗೆ ಈ ಕೆಲಸವನ್ನು ಬೇಗನೆ ಮಾಡಿ ಮುಗಿಸೋಣವೆಂದು ಕಂಡಿತು. + +ಮಣೆಗಾರನ ಆಫೀಸು ಇರುವ ಪೇಟೆಯಿಂದ ಶ್ಯಾನುಭಾಗರಲ್ಲಿಗೆ ಬರಬೇಕಾದರೆ ಅವರ ಮನೆಯ ಹತ್ತಿರವಿರುವ ಪಯಸ್ವಿನೀ ನದಿಯನ್ನು ದಾಟಬೇಕು. ವರುಷದ ಏಳು ತಿಂಗಳಲ್ಲಿ ಅಭ್ಯಾಸವಿದ್ದವರಿಗೆ ನದಿಯನ್ನು ಇಳಿದು ದಾಟಲು ಸಾಧ್ಯವಾಗುತ್ತದೆ. ಮಳೆಗಾಲದಲ್ಲಿ ನದೀ ಪಾತ್ರ ತುಂಬಿದಾಗ ಸುಮಾರು ಇಪ್ಪತ್ತೈದು ಅಡಿ ಉದ್ದದ ಹನ್ನೆರಡರಿಂದ ಹದಿನಾಲ್ಕು ಬಿದಿರುಗಳನ್ನು ಜೋಡಿಸಿ ತಯಾರು ಮಾಡಿದ ತೆಪ್ಪವೇ ನದಿಯನ್ನು ಹಾಯಲಿಕ್ಕಿರುವ ಸಾಧನ. ಅದನ್ನು ಸುಮಾರು ಹದಿನೈದು ಅಡಿ ಉದ್ದದ ಸಪೂರವಾದ ಬಿದಿರಿನ ಜಲ್ಲೆಯಿಂದ ನಡೆಸಬೇಕು. ಈ ತೆಪ್ಪವನ್ನು ನಡೆಸಲು ಗೊತ್ತಾಗಿದ್ದ ಶ್ಯಾನುಭಾಗರ ಒಕ್ಕಲು ಓಡ್ಯಪ್ಪ ಸಾಧಾರಣ ಮೂವತ್ತೈದು ವರುಷ ಪ್ರಾಯದ, ತುಂಬ ಚಟುವಟಿಕೆಯ ವ್ಯಕ್ತಿ. ಮರ ಏರುವುದರಲ್ಲಿ, ಕಂಬಳದ ಕೋಣಗಳನ್ನು ಓಡಿಸುವುದರಲ್ಲಿ, ಹೊಳೆ ಈಜುವುದರಲ್ಲಿ, ಎತ್ತಿನ ಬಂಡಿ ನಡೆಸುವುದರಲ್ಲಿ ಈತ ಎತ್ತಿದ ಕೈ. ಹೊಳೆಯಲ್ಲಿ ನೆರೆ ಬಂದು ತೆಪ್ಪ ನಡೆಸಲು ಸಾಧ್ಯವಿಲ್ಲದಿದ್ದಾಗ ಅಗತ್ಯಬಿದ್ದರೆ ತಲೆಗೆ ಒಂದು ಬೈರಾಸು ಸುತ್ತಿ ಈಸು ಬಿದ್ದು ಆಚೆ ದಡಕ್ಕೆ ಹೋಗುತ್ತಿದ್ದ. + +ಸೋಮವಾರ ಬೆಳಗ್ಗೆ ಮಣೆಗಾರರು, ಅದರ ಪೇದೆ, ಉಗ್ರಾಣಿ ಉಸ್ಮಾನ್ ಸಾೈಬ ಈ ಮೂವರು ಹೊಳೆಯ ದಡಕ್ಕೆ ಬಂದರು. ಸಾೈಬನು ಈಚೆ ಬದಿಯಿಂದ ಆಚೆ ದಡಕ್ಕೆ ತೆಪ್ಪ ತರಲು ‘ಕೂ’ ಹಾಕಿದ. ಆಚೆ ದಡಕ್ಕೆ ಮಣೆಗಾರರ ಬರೋಣವನ್ನು ನಿರೀಕ್ಷಿಸಿಕೊಂಡಿದ್ದ ಶ್ಯಾಮಣ್ಣನವರು ಮೊದಲೇ ಓಡ್ಯಪ್ಪನನ್ನು ಮನೆಗೆ ಕರೆಸಿಕೊಂಡಿದ್ದರು. ಉಗ್ರಾಣಿಯ ‘ಕೂ’ ಕೇಳಿ ಆತ ನದಿಯ ಕಡೆಗೆ ಹೆಜ್ಜೆ ಇಡುವಾಗ ಶ್ಯಾನುಭಾಗರು ಅವನ ಕಿವಿಯಲ್ಲಿ ಏನೋ ಹೇಳಿದರು. ಓಡ್ಯಪ್ಪ ಆದೀತೆಂದು ತಲೆ ಅಲ್ಲಾಡಿಸಿ ನಸು ನಗುತ್ತಾ ತೆಪ್ಪದ ಕಡೆಗೆ ತೆರಳಿದ. + +ನದಿಯ ದಡದಲ್ಲಿದ್ದ ದೊಡ್ಡ ಚಾಕಟೆ ಮರದ ಬೇರಿಗೆ ಕಬ್ಬಿಣದ ಸಂಕಲೆಯಿಂದ ಬಿಗಿದಿದ್ದ ತೆಪ್ಪವನ್ನು ಬಿಚ್ಚಿ ಜಲ್ಲೆಯನ್ನು ತೆಗೆದುಕೊಂಡು ನಡೆಸುತ್ತಾ ಓಡ್ಯಪ್ಪ ಇದಿರು ದಡವನ್ನು ಮುಟ್ಟಿದ. ತೆಪ್ಪದಿಂದ ಇಳಿದು ಸಂಕಲೆಯನ್ನು ಎಳೆದು ಹೊಳೆಯ ದಂಡೆಗೆ ತಾಗಿ ಅದನ್ನು ನಿಲ್ಲಿಸಿದ. ಮೊದಲು ದಫ್ತರದ ಕಟ್ಟು ಸಹಿತ ಉಸ್ಮಾನ್ ತೆಪ್ಪವನ್ನು ಏರಿದ. ಅನಂತರ ಮಣೆಗಾರರ ಪೇದೆ ತೆಪ್ಪವನ್ನು ಹತ್ತಲು ಬರುವಾಗ ಜಾರಿ ಬಿದ್ದ. ಬಟ್ಟೆಗೆ ತಗಲಿದ ಕೆಸರನ್ನು ತೆಪ್ಪ ಏರಿದ ಮೇಲೆ ತೊಳೆಯ ತೊಡಗಿದ. ಪೇದೆ ಬಿದ್ದದ್ದನ್ನು ನೋಡಿ ಮಣೆಗಾರರಿಗೆ ಒಳಗೆ ತುಸು ಹೆದರಿಕೆಯಾದರೂ ಅಡ್ಡ ಧೈರ್ಯದಿಂದ ತೆಪ್ಪದ ಮೇಲೆ ಕಾಲಿಡುವುದಕ್ಕೂ ಆವರೆಗೆ ಇಲ್ಲದ ಮಳೆ ಹನಿ ಹಾಕಲಿಕ್ಕೂ ಸರಿಯಾಯಿತು. + +ಅಷ್ಟು ಹೊತ್ತಿಗೆ ಶ್ಯಾನುಭಾಗರು ಕೊಡೆ ಬಿಡಿಸಿಕೊಂಡು ಬಂದು ಹೊಳೆಯ ಈಚೆ ಬದಿಯಲ್ಲಿ ನಿಂತರು. ಓಡ್ಯಪ್ಪ ಮಳೆಗೆ ಹೆದರದೆ ತಲೆಗೆ ಬೈರಾಸು ಸುತ್ತಿಕೊಂಡು ಜಲ್ಲೆ ಹಾಕಿ ತೆಪ್ಪವನ್ನು ನಡೆಸಲು ತೊಡಗಿದ. ತೆಪ್ಪದ ಮೇಲಿದ್ದವರು ಕೊಡೆ ಬಿಡಿಸಿದರು. ತೆಪ್ಪ ಹೊರಟಲ್ಲಿಂದ ಮೊದಲು ಪ್ರವಾಹಕ್ಕೆ ಇದಿರಾಗಿ ದಡದ ಬದಿಯಲ್ಲೇ ಅರ್ಧ ಪರ್ಲಾಂಗಿನಷ್ಟು ಮೇಲೆ ಹೋಗಬೇಕು. ಅನಂತರ ನದಿಗೆ ಅಡ್ಡಲಾಗಿ ಅದನ್ನು ತಿರುಗಿಸಿ ಬೇಗ ಬೇಗನೆ ಜಲ್ಲೆ ಹಾಕುತ್ತಾ ವೇಗವಾಗಿ ಹರಿಯುವ ಪ್ರವಾಹದಲ್ಲಿ ನದಿಯ ನಡುಭಾಗವನ್ನು ದಾಟಿಸಿ ತೆಪ್ಪವನ್ನು ಮತ್ತೊಂದು ದಡಕ್ಕೆ ಮುಟ್ಟಿಸಬೇಕು. ತೆಪ್ಪ ನಡೆಸುವವನ ಚಲಾಕು ಗೊತ್ತಾಗುವುದು ಇಲ್ಲಿಯೇ. ಪಳಗದವರು ನಡುನೀರಿನಲ್ಲಿ ಜಲ್ಲೆಯನ್ನು ನದಿಯ ತಳಕ್ಕೆ ಬಾಗಿ ಒತ್ತುವಾಗ ಸಮತೋಲನ ತಪ್ಪಿ ನೀರಿಗೆ ಬಿದ್ದು ಬಿಡುವ ಅಪಾಯವಿದೆ, ಕೆಲವು ಸಲ ಹಾಗೆ ಬಿದ್ದವನ ತಲೆಯ ಮೇಲೆಯೇ ತಲೆ ಎತ್ತಲು ಬಿಡದೆ ತೆಪ್ಪ ತೇಲಿ ಹೋಗುವ ಸಾಧ್ಯತೆ ಇದೆ. ಒಮ್ಮೊಮ್ಮೆ ಜಲ್ಲೆಯೇ ಕೈಯಿಂದ ಜಾರಿ ಬಿಡುತ್ತದೆ. + +ಓಡ್ಯಪ್ಪ ನದಿಯ ದಡದಲ್ಲಿಯೇ ಪ್ರವಾಹಕ್ಕೆ ಇದಿರಾಗಿ ತೆಪ್ಪವನ್ನು ನಡೆಸುತ್ತಾ ಹೋದ. ಗೊತ್ತಾದ ಜಾಗದಲ್ಲಿ ಅದನ್ನು ಅಡ್ಡಲಾಗಿ ತಿರುಗಿಸಲೆಂದು ಜಲ್ಲೆಯನ್ನು ಹೊಳೆಯ ತಳದಲ್ಲಿ ಊರಿದ. ಜಲ್ಲೆಯನ್ನು ಮೇಲೆ ಎಳೆದುಕೊಳ್ಳಬೇಕೆಂದಿರುವಾಗ ಅವನ ಕೈಯಿಂದ ಜಲ್ಲೆ ಜಾರಿ ನೀರಿನಲ್ಲಿ ತೇಲತೊಡಗಿತು. ಓಡ್ಯಪ್ಪ ಅದನ್ನು ಹಿಡಿಯಲು ತಟ್ಟನೆ ನೀರಿಗೆ ಹಾರಿದ. ಪ್ರವಾಹದೊಂದಿಗೆ ತೇಲಿ ಹೋಗುತ್ತಿದ್ದ ಜಲ್ಲೆಯನ್ನು ಹಿಡಿಯಲು ವೇಗವಾಗಿ ಈಜತೊಡಗಿದ. ತೆಪ್ಪ ಪ್ರವಾಹದಲ್ಲಿ ತೇಲತೊಡಗಿತು. + +ಮಣೆಗಾರರ ಭಂಡ ಧೈರ್ಯವೆಲ್ಲ ಹಾರಿಹೋಯಿತು. ಏನು ಮಾಡುವುದೆಂದು ತೋಚದೆ ಅಷ್ಟರವರೆಗೆ ತೆಪ್ಪದಲ್ಲಿ ಕುಳಿತಿದ್ದವರು ಎದ್ದು ನಿಲ್ಲಲು ಹೋದರು. ಮಳೆ ಬರುತ್ತದೆಂದು ಕೊಡೆ ಬಿಡಿಸಿಕೊಂಡಿದ್ದ ಕಾರಣ ಬೀಸುತ್ತಿದ್ದ ಗಾಳಿಯ ರಭಸಕ್ಕೆ ಕೊಡೆಯ ಒಳಗೆ ಗಾಳಿ ಸೇರಿ ಮಣೆಗಾರರು ತೆಪ್ಪದ ಮೇಲೆ ಮುಗ್ಗರಿಸಿದರು. ಕೊಡೆಯ ಒಳ ಬದಿ ಹೊರಬದಿಯಾಗಿ ಎರಡು ಕಡ್ಡಿಗಳು ತುಂಡಾದುವು. ಆಚೆ ದಡದಲ್ಲಿದ್ದ ಶ್ಯಾನುಭಾಗರು “ಗಡಿಬಿಡಿ ಮಾಡಬೇಡಿ, ಕೊಡೆ ಮಡಚಿ ಕುಳಿತುಕೊಳ್ಳಿ. ಕೈಯಲ್ಲಿ ತೆಪ್ಪದ ಬಿದಿರನ್ನು ಗಟ್ಟಿ ಹಿಡಿದುಕೊಳ್ಳಿ” ಎಂದು ಸೂಚನೆ ಕೊಟ್ಟರು. ತೆಪ್ಪ ದಾಟುವ ಕಡವಿನಿಂದ ಎರಡು ಫರ್ಲಾಂಗು ದೂರದಲ್ಲಿ ತೆಂಕು ಬಡಗಾಗಿ ಹರಿಯುವ ಹೊಳೆ ಪೂರ್ವ ದಿಕ್ಕಿಗೆ ತಿರುಗುತ್ತವೆ. ಆ ಭಾಗದ ಹೊಳೆಯ ನಡುವಿನಲ್ಲಿ ಹೆಬ್ಬಂಡೆಯೊಂದು ಎದ್ದು ನಿಂತಿದೆ. ಹತ್ತಿರದಲ್ಲಿ ನೀರಿನ ಭಯಂಕರ ಸುಳಿ ಇದೆ. ಅದು ತುಂಬ ಅಪಾಯದ ಸ್ಥಳ. ಈ ಸಂಗತಿಯನ್ನು ಮಣೆಗಾರರ ಪೇದೆಯ ಹತ್ತಿರ ಉಗ್ರಾಣಿ ಹೇಳುತ್ತಿದ್ದಾಗ ಕೇಳಿಸಿಕೊಂಡ ಮಣೆಗಾರರು “ಶ್ಯಾನುಭಾಗರೇ, ನಾವು ನೀರು ಪಾಲಾಗುತ್ತೇವೆ, ಸರಕಾರದ ದಫ್ತರೂ ಮುಳುಗಿ ಹೋಗುತ್ತದೆ” ಎಂದು ಬೊಬ್ಬಿಟ್ಟರು. ನಿಜದಲ್ಲಿ ಅವರಿಗೆ ಸರಕಾರದ ದಫ್ತರಿಗಿಂತಲೂ ಒಳಗೊಳಗೆ ನೆನಪಾದದ್ದು ತನ್ನ ಮಡದಿ ಮತ್ತು ನಾಲ್ಕು ತಿಂಗಳ ಮುದ್ದು ಮಗುವಿನ ಮುಖಗಳು. + +ಈಗ ಮಣೆಗಾರರ ಮಾತುಗಳು ಸ್ಪಷ್ಟವಾಗಿ ಶ್ಯಾನುಭಾಗರಿಗೆ ಕೇಳಿಸದೆ ಹೋದರೂ ಅವರು ಸಂಪೂರ್ಣವಾಗಿ ಎದೆಗುಂದಿದ್ದಾರೆಂದು ಅರ್ಥಮಾಡಿಕೊಂಡ ಅವರು “ಹೆದರಬೇಡಿ, ಏನೂ ಆಗಲಿಕ್ಕಿಲ್ಲ” ಎಂದು ಗಟ್ಟಿಯಾಗಿ ಬಾಯಿಯಲ್ಲಿ ಹೇಳುತ್ತಾ ಕೈಯಲ್ಲಿಯೂ ಸನ್ನೆ ಮಾಡಿದರು. + +ತೆಪ್ಪ ಮತ್ತೂ ಮುಂದಕ್ಕೆ ಹೋಯಿತು. ಉಸ್ಮಾನ್ ಸಾೈಬನು ತಿಳಿಸಿದ ಭಯಂಕರ ಸುಳಿಯ ಹತ್ತಿರ ತಲುಪಲು ಒಂದು ನೂರು ಮಾರು ಸಹ ಇಲ್ಲ. ತೆಪ್ಪದಲ್ಲಿ ಕಂಗಾಲಾಗಿ ಕುಳಿತಿದ್ದ ಮಣೆಗಾರರಿಗೆ ಉಸ್ಮಾನ್ ಹೇಳಿದ ಸ್ಥಳ ಯಾವುದೆಂದು ತಿಳಿದುಹೋಯಿತು. ಅವರ ಪೇದೆಗೂ ಅದರ ಅರಿವಾಯಿತು. ಅಷ್ಟರ ತನಕ ಮೌನವಾಗಿದ್ದ ಆತ ‘ಬದುಕಿ ಉಳಿದರೆ ಉಳ್ಳಾಗಳು ದೈವಕ್ಕೆ ಒಂದು ಬೊಂಡದ ಗೊನೆಯನ್ನೂ, ಪಾಷಾಣಮೂರ್ತಿಗೆ ಒಂದು ಹುಂಜವನ್ನೂ ಒಪ್ಪಿಸುತ್ತೇನೆ’ ಎಂದು ಗಟ್ಟಿಯಾಗಿ ಹೇಳುತ್ತಾ ಹರಕೆ ಹೊತ್ತ. ತಮ್ಮ ಪೇದೆಯ ಮಾತನ್ನು ಕೇಳಿಸಿಕೊಂಡಾಗ ಮಣೆಗಾರರ ಗಂಟಲ ತೇವ ಸಂಪೂರ್ಣ ಆರಿ ಹೋಯಿತು. ಬೆರಗುಗಣ್ಣಿಂದ ಅವರು ಹೊಳೆ ನೀರನ್ನೇ ನೋಡತೊಡಗಿದರು. + +ಈಗ ಓಡ್ಯಪ್ಪ ಜಲ್ಲೆಯನ್ನು ಹಿಡಿದುಕೊಂಡು ವೇಗವಾಗಿ ಈಜುತ್ತಾ ತೆಪ್ಪವನ್ನು ಏರಿ, ಒಮ್ಮೆಗೇ ಜಲ್ಲೆಯನ್ನು ಎತ್ತಿ ಹಾಕುತ್ತಾ ರಭಸದಿಂದ ತೆಪ್ಪವನ್ನು ಮಣೆಗಾರರು ಮೊದಲು ಬಂದು ನಿಂತಿದ್ದ ದಡದಲ್ಲಿಯೇ ನಿಲ್ಲಿಸಿದ. ತೆಪ್ಪ ನದಿಯ ದಡಕ್ಕೆ ತಾಗಿತು ಎಂಬಷ್ಟರಲ್ಲಿ ಮಣೆಗಾರರು ನದಿಯ ದಂಡೆಗೆ ಹಾರಿದರು, ಪೇದೆಯೂ ಹಾರಿದ. ಉಗ್ರಾಣಿ ಉಸ್ಮಾನ್ ಸಾೈಬನು ದಫ್ತರ ಕಟ್ಟು ಹಿಡಿದುಕೊಂಡು ಮೆಲ್ಲನೆ ಇಳಿದ. ಮಣೆಗಾರರು ಒಣಗಿದ್ದ ಗಂಟಲಲ್ಲೇ “ಶ್ಯಾನುಭಾಗರಲ್ಲಿ ಹೇಳು, ನಾಲ್ಕು ತಿಂಗಳ ಅನಂತರ ಸ್ಥಳ ತನಿಖೆಯ ವಿಚಾರ ಮಾಡುವ” ಎಂದು ಓಡ್ಯಪ್ಪನಲ್ಲಿ ಹೇಳಿ ಮುರಿದ ಕೊಡೆಯನ್ನು ಹಿಡಿದುಕೊಂಡು ತಮ್ಮ ಆಫೀಸಿನತ್ತ ಹೊರಟರು. + +ಅವರ ತಲೆ ಕಾಣುವುದಿಲ್ಲ ಎಂದಾಗ ಓಡ್ಯಪ್ಪ ತೆಪ್ಪವನ್ನು ಸಲೀಸಾಗಿ ನಡೆಸಿಕೊಂಡು ಬಂದು “ನೀವು ಹೇಳಿದಂತೆ ಮಾಡಿದೆ” ಎಂಬ ಮುಖಭಾವದಿಂದ ಶ್ಯಾನುಭಾಗರ ಬಳಿ ನಿಂತ. ಶ್ಯಾನುಭಾಗರು “ಮಣೆಗಾರರಿಗೆ ಈ ಪಾಠ ಹೊಸತು. ಪಕ್ಕನೆ ಮರೆಯುವಂಥಾದ್ದಲ್ಲ. ನಿನಗೆ ಚಳಿಯಾಗುತ್ತಿದೆಯೋ? ಮನೆಗೆ ಬಾ, ಬಿಸಿ ಬಿಸಿ ಕಾಫಿ ಕುಡಿದು ಹೋಗು” ಎಂದು ಹೇಳುತ್ತಾ ಒದ್ದೆ ಮೈಯ ಓಡ್ಯಪ್ಪನನ್ನು ಕರೆದುಕೊಂಡು ಹೋದರು. + +2. ಕಾಡು ಹಂದಿಯೂ ಪಾರ್ಕರ್ ಪೆನ್ನೂ + + + +ಶ್ಯಾನುಭಾಗ ಶ್ಯಾಮಣ್ಣನವರು ಆಗಷ್ಟೆ ಬೆಳಗ್ಗಿನ ಕಾಫಿ ತಿಂಡಿ ಮುಗಿಸಿ ಚಾವಡಿಯಲ್ಲಿ ಕುಳಿತು ಎಲೆಯಡಕೆ ಹರಿವಾಣಕ್ಕೆ ಕೈ ಹಾಕಿದ್ದರು. ಅಷ್ಟರಲ್ಲಿ ಮಣೆಗಾರರ ಪೇದೆ ಪರಮೇಸ್ರ ಬಂದು ಒಂದು ನೋಟೀಸನ್ನು ತಂದು ಅವರ ಕೈಯಲ್ಲಿಟ್ಟ. ಅದರಲ್ಲಿ ಅವರ ಗ್ರಾಮದ ದೇವಪ್ಪ ಗೌಡನ ದರಖಾಸ್ತಿನ ಸ್ಥಳ ತನಿಖೆಗೆ ಆ ತಿಂಗಳ ಹದಿನೈದನೇ ತಾರೀಕಿಗೆ ತಹಸೀಲ್ದಾರರು ಖುದ್ದು ಬರಲಿರುವರು, ಅವರ ಕೇಂಪಿಗೆ ತಕ್ಕ ಏರ್ಪಾಡು ಮಾಡುವುದಲ್ಲದೆ ಅವರು ಬರುವ ದಿವಸ ಗ್ರಾಮದ ಪಟೇಲರು ಅವರ ಉಗ್ರಾಣಿ ಮತ್ತು ದೇವಪ್ಪ ಗೌಡ ಸ್ವತಹ ಹಾಜರಿರತಕ್ಕದ್ದು ಎಂದು ಸೂಚಿಸಲಾಗಿತ್ತು. + +ದೇವಪ್ಪ ಗೌಡನ ದರಖಾಸ್ತಿನ ಹಿಂದೆ ಸಣ್ಣ ಇತಿಹಾಸ ಇದೆ. ಆ ಸ್ಥಳ ಅಮ್ಟಾಜೆ ಗ್ರಾಮದ ಗಡಿ ಪ್ರದೇಶದಲ್ಲಿದ್ದು ಅದಕ್ಕೆ ತಾಗಿಕೊಂಡು ಸರಕಾರದ ಕಾದಿಟ್ಟ ಅರಣ್ಯ ಇತ್ತು. ಗೌಡ ಸುಮಾರು ಎರಡು ಎಕ್ರೆ ಸ್ಥಳದಲ್ಲಿ ಕಷ್ಟಪಟ್ಟು ಗುಡ್ಡ ಕಡಿದು ಒಂದು ಮುಡಿ ಗದ್ದೆ ಮಾಡಿದ್ದ. ತುಂಬ ನೀರಾಶ್ರಯದ ಸ್ಥಳವಾದುದರಿಂದ ಐವತ್ತು ತೆಂಗಿನ ಗಿಡ, ನೂರು ಕಂಗಿನ ಗಿಡಗಳನ್ನು ಹಾಕಿದ್ದಲ್ಲದೆ ಹಲಸು, ಗೇರು, ಮಾವು ಮುಂತಾದವುಗಳನ್ನೂ ನೆಟ್ಟಿದ್ದ. ಅವೆಲ್ಲ ಈಗ ಫಲಕೊಡಲು ಸಿದ್ಧವಾಗಿದ್ದವು. ಇಷ್ಟರಲ್ಲಿ ಅದೇ ಗ್ರಾಮದವನಾಗಿದ್ದ ಫಾರೆಸ್ಟ್ ಗಾರ್ಡ್ ಗೋವಿಂದನಿಗೆ ಆ ಸ್ಥಳದ ಮೇಲೆ ಕಣ್ಣು ಬಿತ್ತು. ಆತ ತನ್ನ ಮೇಲಧಿಕಾರಿಯವರ ಕಿವಿಯೂದಿ ದೇವಪ್ಪ ಗೌಡ ಕೃಷಿ ಮಾಡುವ ಸ್ಥಳ ಅರಣ್ಯ ಇಲಾಖೆಗೂ ಕಂದಾಯ ಇಲಾಖೆಗೂ ಮಧ್ಯೆ ಇರುವ ಕಾಪುತಡೆ (ಃuಜಿಜಿeಡಿ ಚಿಡಿeಚಿ) ಸ್ಥಳವಾದುದರಿಂದ ಗೌಡನಿಗೆ ಆ ಸ್ಥಳವನ್ನು ದರಖಾಸ್ತಿಗೆ ಕೊಟ್ಟರೆ ಅರಣ್ಯ ಇಲಾಖೆಗೆ ತೊಂದರೆಯಾಗುತ್ತದೆ. ಆದುದರಿಂದ ಅವನನ್ನು ಅಲ್ಲಿಂದ ಹೊರ ಹಾಕಬೇಕು ಎಂಬ ತಕರಾರು ಎಬ್ಬಿಸಿದ. ಅರಣ್ಯ ಇಲಾಖೆಯ ಆಕ್ಷೇಪಣಾ ಅರ್ಜಿ ಜಿಲ್ಲಾ ಕಲೆಕ್ಟರರಿಗೂ ಮದ್ರಾಸು ಸರಕಾರದ ರೆವೆನ್ಯೂ ಸೆಕ್ರೆಟರಿಗೂ ಹೋಯಿತು. ಪರಿಣಾಮವಾಗಿ ಸರಕಾರದಿಂದ ತಹಸೀಲ್ದಾರರೇ ಸ್ವತಹ ಸ್ಥಳ ತನಿಖೆ ಮಾಡಿ ರಿಪೋರ್ಟು ಮಾಡಬೇಕು ಎಂಬ ಆದೇಶ ಹೊರಟಿತು. ತಹಸಿಲ್ದಾರರ ಕೇಂಪಿಗೆ ಇದೇ ಕಾರಣ. + +ಹದಿನೈದನೇ ತಾರೀಕಿನ ಸಂಜೆ ಸುಮಾರು ನಾಲ್ಕು ಗಂಟೆಗೆ ತಹಸಿಲ್ದಾರ್ ತೋಮಸ್ಸರು ಶ್ಯಾನುಭಾಗರಲ್ಲಿಗೆ ತಲುಪಿದರು. ಅವರ ಜೊತೆಗೆ ಪೇದೆ ಪುಟ್ಟ, ಅಡುಗೆಯ ಅಂತೋಣಿ, ಮಣೆಗಾರರು, ಅವರ ಪೇದೆ ಇಷ್ಟು ಜನರಿದ್ದರು. ಅವರನ್ನು ಇದಿರುಗೊಳ್ಳಲು ಪಟೇಲ್ ಪದ್ಮನಾಭರಾಯರೂ ತಮ್ಮ ಉಗ್ರಾಣಿಯೊಂದಿಗೆ ಬಂದಿದ್ದರು. ದೇವಪ್ಪ ಗೌಡನಂತೂ ಮಧ್ಯಾಹ್ನವೇ ಶ್ಯಾನುಭಾಗರಲ್ಲಿ ಹಾಜರಿದ್ದ. + +ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು. ತಹಸಿಲ್ದಾರರ ಬಿಡಾರಕ್ಕೆ ಬೇಕಾದ ಅಡುಗೆಯ ಲವಾಜಮೆ ಮತ್ತು ಇತರ ಸಂರಜಾಮುಗಳನ್ನು ಮೊದಲೇ ಅಲ್ಲಿ ಶೇಖರಿಸಿಡಲಾಗಿತ್ತು. + +ಸಂಜೆಯ ಲಘು ಉಪಹಾರದ ಆನಂತರ ತಹಸೀಲ್ದಾರರು ಶ್ಯಾನುಭಾಗರನ್ನು ಕರೆಸಿಕೊಂಡು ದರಖಾಸ್ತು ರಿಕಾರ್ಡನ್ನು ಬಿಡಿಸಿ ತನಿಖೆ ಮಾಡಬೇಕಾದ ಸ್ಥಳದ ದೂರ, ಹೋಗುವ ದಾರಿ, ಸ್ಥಳದ ಮಾಹಿತಿ ಎಲ್ಲವನ್ನೂ ವಿವರವಾಗಿ ಕೇಳತೊಡಗಿದರು. ಶ್ಯಾನುಭಾಗರು ಗೌಡನ ಶ್ರಮದ ಕುರಿತು ಮೊದಲು ತಿಳಿಸುತ್ತಾ 1905ನೇ ಇಸವಿಯ ಕೋಚ್ ಮೇನ್ ದೊರೆಯ ಸೆಟ್ಲ್ಮೆಂಟು ರಿಜಸ್ತ್ರಿಯಲ್ಲಿರುವ ವಿವರಕ್ಕೂ ವಸ್ತುಸ್ಥಿತಿಗೂ ತುಂಬಾ ವ್ಯತ್ಯಾಸವಿದೆ. ಈ ಗ್ರಾಮ ಪುನಃ ಸರ್ವೆಯಾಗಲಿಲ್ಲ. ಸ್ಥಳವನ್ನು ತಾನು ಅಳತೆ ಮಾಡಿರುತ್ತೇನೆ, ಅರಣ್ಯ ಇಲಾಖೆಯವರ ವಾದವನ್ನು ಒಪ್ಪಿಕೊಳ್ಳಲಾಗದು, ಆ ಸ್ಥಳಕ್ಕೆ ಇಲ್ಲಿಂದ ಐದು ಮೈಲು ದೂರವಿದೆ, ಕಾಲುದಾರಿ, ಗುಡ್ಡ ಏರಿ ಇಳಿಯಬೇಕು, ತೋಡು ದಾಟಬೇಕು, ಸಂಚಾರ ಕಾಡಿನಲ್ಲಿಯೇ, ಪ್ರಯಾಣ ಸುಲಭವಲ್ಲ ಎಂದು ಸೇರಿಸಿದರು. ಕೊನೆಯ ಮಾತು ಕೇಳಿ ನಡು ವಯಸ್ಸು ದಾಟಿದ ಸ್ಥೂಲ ಶರೀರದ ತೋಮಸ್ಸರಿಗೆ ಕೆಣಕಿದ ಹಾಗಾಯಿತು. ಅವರು ತುಸು ಏರುದನಿಯಲ್ಲಿ “ಶ್ಯಾನುಭಾಗರೇ, ನಾನು ಕುಂದಾಪುರ, ಕಾರ್ಕಳ ತಾಲೋಕುಗಳಲ್ಲಿ ಕೆಲಸ ಮಾಡಿದವ. ಪಶ್ಚಿಮ ಘಟ್ಟದ ಸೆರಗಿನ ಕೊಲ್ಲೂರು, ಕಬ್ಬಿನಾಲೆ, ಬಚ್ಚಪ್ಪು ಮುಂತಾದ ಸ್ಥಳಕ್ಕೆ ನಡೆದೇ ಹೋದವ, ಒಮ್ಮೆ ಜಿಲ್ಲಾ ಕಲೆಕ್ಟರರ ಜೊತೆಗೆ ಕುದುರೆಮುಖಕ್ಕೂ, ಬಂಗಾಡಿ ಮಿತ್ತಬಾಗಿಲಿಗಾಗಿ ಕಳಸಕ್ಕೂ ಹೋಗಿದ್ದೇನೆ. ನಿಮ್ಮ ಗ್ರಾಮದ ಐದು ಮೈಲು ನನಗೆ ಯಾವ ಲೆಕ್ಕ? ಬೆಳಗ್ಗೆ ಎಂಟು ಗಂಟೆಗೆ ಹೊರಡುವ, ಎಲ್ಲ ಸಿದ್ಧತೆಯಾಗಲಿ” ಎಂದು ಆಜ್ಞೆ ಮಾಡಿದರು. + +‘ಸರಿ’ ಎಂದು ತಲೆ ಅಲ್ಲಾಡಿಸುತ್ತಾ ಶ್ಯಾನುಭಾಗರು ಮನೆಗೆ ತೆರಳಿದರು. ಸೂರ್ಯ ಮುಳುಗುವ ಹೊತ್ತಿಗೆ ತಹಸಿಲ್ದಾರರ ಪೇದೆ ಪುಟ್ಟನನ್ನು ಗುಟ್ಟಿನಲ್ಲಿ ಕರೆದು “ತಹಸೀಲ್ದಾರರ ಮರ್ಜಿ ಹೇಗೆ?” ಎಂದು ಆತನಲ್ಲಿ ಪ್ರಶ್ನೆ ಹಾಕಿದರು. ತಹಸಿಲ್ದಾರರು ಲಂಚಗಿಂಚ ಮುಟ್ಟದೆ ಪ್ರಾಮಾಣಿಕತೆಯಿಂದ ಬ್ರಿಟಿಷ್ ಸರಕಾರದ ಮರ್ಜಿಯನ್ನು ಚಾಚೂ ತಪ್ಪದೆ ಪಾಲಿಸುವವರು, ರಿಟಾಯರ್ ಆಗುವ ಮೊದಲು ಡಿಪ್ಯೂಟಿ ಕಲೆಕ್ಟರ್ ಸ್ಥಾನಕ್ಕೆ ಏರಲು ನಿಷ್ಠೆಯಿಂದ ದುಡಿಯುವವರು ಎಂಬ ಮಾಹಿತಿ ಅವನಿಂದ ಶ್ಯಾನುಭಾಗರಿಗೆ ಸಿಕ್ಕಿತು. ಶ್ಯಾನುಭಾಗರಾದರೋ ತುಂಬ ಅನುಭವಸ್ಥರು, ಚಾಣಾಕ್ಷತೆ ಮತ್ತು ಕೆಲಸದ ಮರ್ಮ ಅವರಿಗೆ ಪರಂಪರೆಯಿಂದ ರಕ್ತಗತವಾಗಿದೆ; ತುಂಬ ಸಾಚಾ ಎನ್ನುವ ದರ್ಪದ ಅಧಿಕಾರಿಗಳಿಗೂ ಏನಾದರೊಂದು ಸಣ್ಣ ದೌರ್ಬಲ್ಯ ಇದ್ದೇ ಇದೆ ಎಂದು ಕಂಡುಕೊಂಡವರು. ಅವರು ಪುಟ್ಟನಲ್ಲಿ ಓರೆಯಾಗಿ “ರಾಯರಿಗೆ ಯಾವ ತಿಂಡಿ ತಿನಸುಗಳಲ್ಲಿ ಇಷ್ಟ? ಸಾಧ್ಯವಾದರೆ ಅದನ್ನು ಮಾಡಿಸುವ ಎಂದು ಕೇಳಿದೆ, ಬೇರೆ ಯಾವುದಕ್ಕೂ ಅಲ್ಲ” ಎಂದರು ನಗುತ್ತಾ. ಪುಟ್ಟ ಮೆಲ್ಲನೆ ಬಾಯಿ ಬಿಟ್ಟ. “ಗೇರು ಹಣ್ಣಿನ ಶರಾಬು ಮತ್ತು ಕಾಡುಹಂದಿಯ ಮಾಂಸ ಎಂದರೆ ತೋಮಸ್ಸರಿಗೆ ಅತ್ಯಂತ ಪ್ರೀತಿ. ವಿಷಯ ತಾನು ತಿಳಿಸಿದ್ದು ಎಂಬುದು ಗೊತ್ತಾಗಬಾರದು” ಎಂದು ಗುಟ್ಟು ಹೊರ ಹಾಕಿದ. + +ಶ್ಯಾನುಭಾಗರು ತಮ್ಮ ಮೀಸೆಯಡಿಯಲ್ಲಿ ನಗುತ್ತಾ ಪಟೇಲರ ಉಗ್ರಾಣಿ ಉಳಿಯಪ್ಪನನ್ನು ಕರೆದು ಕೂಡಲೆ ಪಾಂಡಿ ಪೂಜಾರಿಯಲ್ಲಿಗೆ ಹೋಗಿ ಎರಡು ಬಾಟ್ಳಿ ಗೇರು ಹಣ್ಣಿನ ಊಚು ಶರಾಬನ್ನು ತಾ ಎಂದು ಅಟ್ಟಿದರು. ದೇವಪ್ಪನನ್ನು ಕರೆದು, ‘ನೀನು ಒಳ್ಳೆಯ ಈಜುಗಾರನಲ್ಲವೆ? ಕೋವಿಯನ್ನೂ ತೋಟೆಗಳನ್ನೂ ಕೊಡುತ್ತೇನೆ, ಹೇಗಾದರೂ ಮಾಡಿ ಬೆಳಗಾಗುವುದರೊಳಗೆ ಒಂದು ಕಾಡು ಹಂದಿಯನ್ನು ಗುಂಡು ಹೊಡೆದು ಉರುಳಿಸಿ ತಾ’ಎಂದು ಹೇಳಿ ತನ್ನ ಹನ್ನೆರಡು ಬೋರಿನ ‘ವೆಬ್ಲೀ ಎಂಡ್ ಸ್ಕಾಟ್’ ಕೋವಿಯನ್ನೂ ನಾಲ್ಕು ಒಂಟಿ ಗುಂಡು ಹಾಗೂ ಆರು ಎಲ್.ಜಿ. ತೋಟೆಗಳನ್ನೂ ಕೊಟ್ಟರು. + +ಪಾಂಡಿ ಪೂಜಾರಿಯಲ್ಲಿ ಹೋಗಿದ್ದ ಉಳಿಯಪ್ಪ ಎರಡು ಬಾಟ್ಳಿ ಗೇರು ಹಣ್ಣಿನ ಶರಾಬು ತಂದು ಪೇದೆ ಪುಟ್ಟನ ಕೈಗೆ ಕೊಟ್ಟ. ರಾತ್ರಿಯ ಊಟಕ್ಕೆ ತಹಸಿಲ್ದಾರರಿಗೆ ಉಗ್ರಾಣಿ ಉಸ್ಮಾನ್ ಸಾೈಬನ ಮೆಹನತ್ತಿನಿಂದ ತಯಾರಾದ ಕೋಳಿ ರೊಟ್ಟಿ ಸಿದ್ದವಾಗಿತ್ತು. ಮೂಗಿನ ತನಕ ಕೋಳಿ ರೊಟ್ಟಿ ಹೊಡೆದ ತಹಸಿಲ್ದಾರರು ಆರಾಮ ಕುರ್ಚಿಯಲ್ಲಿ ಕುಳಿತು ತಮ್ಮ ಗುಡಾಣ ಹೊಟ್ಟೆಯ ಮೇಲೆ ಕೈಯಾಡಿಸುತ್ತಿರುವಾಗ ಪೇದೆ ಪುಟ್ಟನ ಮೂಲಕ ಬಂದಿದ್ದ ಗೇರು ಹಣ್ಣಿನ ಶರಾಬು ಬಾಟ್ಳಿಗಳ ಸುದ್ದಿ ಅಡುಗೆಯ ಅಂತೋಣಿ ಅವರ ಕಿವಿಗೆ ಮುಟ್ಟಿಸಿದ. ಶರಾಬು ಎಂದ ಕೂಡಲೇ ತೋಮಸ್ಸರ ಮುಖ ಅರಳಿತು, ಒಂದು ಬಾಟ್ಳಿಯ ಅರ್ಧದಷ್ಟು ಖಾಲಿಯಾಯಿತು. ಕಾಲುಗಂಟೆಯಲ್ಲಿ ಮಂಚದ ಮೇಲಿನ ಹಾಸಿಗೆಯಲ್ಲಿ ಬಿದ್ದುಕೊಂಡ ತಹಸಿಲ್ದಾರರು ಗೊರಕೆ ಹೊಡೆಯತೊಡಗಿದರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಕೋವಿ ಹಿಡಿದುಕೊಂಡು ಹೆಗಲ ಮೇಲಿದ್ದ ತುಂಡು ಬೈರಾಸನ್ನು ತಲೆಗೆ ಸುತ್ತಿ ಹೊರಟ ಗೌಡನಿಗೆ ದಾರಿಯಲ್ಲಿದ್ದ ಕಬ್ಬಿಣದ ಕೆಲಸದ ಕಮ್ಮಾರ ಕಣ್ಣಪ್ಪಾಚಾರಿಯ ನೆನಪಾಯಿತು. ಇದಕ್ಕೆ ಕಾರಣವೂ ಇತ್ತು. ಕೋವಿ ಬ್ರಾಹ್ಮಣ ಶ್ಯಾನುಭಾಗರದ್ದು, ಅದನ್ನು ಅವರು ಭತ್ತದ ಪೈರಿಗೆ ಮಂಗಗಳು ದಾಳಿಯಿಟ್ಟಾಗ ಹುಸಿ ಗುಂಡು ಹಾರಿಸಲು ಮಾತ್ರ ಉಪಯೋಗಿಸುವುದು. ಆದುದರಿಂದ ಕೋವಿಯನ್ನು ಕಮ್ಮಾರನ ಕೈಯಲ್ಲಿ ಕೊಟ್ಟು ನಳಿಗೆ – ಕೊತ್ತುಗಳನ್ನು ಪರೀಕ್ಷಿಸಿ ಅಗತ್ಯಬಿದ್ದರೆ ಎಣ್ಣೆ ಹಾಕಿ ಶುಚಿ ಮಾಡಿಸುವ; ಹಂದಿ, ಹುಲಿ, ಮೊದಲಾದವುಗಳ ಬೇಟೆಗೆ ಕೋವಿ ಸರಿಯಾಗಿರದಿದ್ದರೆ ಅಪಾಯ -ಇದು ಗೌಡನ ಯೋಚನೆ. + +ಕಣ್ಣಪ್ಪಾಚಾರಿ ಗೌಡನ ಕೈಯಲ್ಲಿ ಕೋವಿ ನೋಡಿದವನೇ “ಇದು ಧನಿಗಳ ಕೋವಿ, ಅವರು ಇದನ್ನು ಎಂದೂ ಬೇರೆಯವರ ಕೈಗೆ ಕೊಟ್ಟವರಲ್ಲ, ನಿನ್ನ ಕೈಗೆ ಹೇಗೆ ಬಂತು?” ಎಂದು ಪ್ರಶ್ನಿಸಿದ. ದೇವಪ್ಪಗೌಡ ಇದ್ದ ಸಂಗತಿ ಹೇಳಿದ. ಆಚಾರಿ ಕೋವಿಯ ನಳಿಗೆಯ ಒಳಗೆ ಕಣ್ಣು ಹಾಯಿಸಿ ನೋಡಿದ, ಕುದುರೆ ಎಳೆದ, ಎಲ್ಲ ಸರಿ ಉಂಟು ಎಂದು ಶಿಫಾರಸು ಮಾಡಿ ಕೊನೆಗೆ ಒಂದು ಸಲಹೆ ಕೊಟ್ಟ – ಅವನ ಮನೆಯಿಂದ ಒಂದು ಮೈಲು ದೂರದಲ್ಲಿರುವ ಕಾಟಿಕಜೆ ಕಾಳು ನಾಯ್ಕ ಹತ್ತು ಹದಿನೈದು ಗೆಣಸಿನ ಸಾಲು ನೆಟ್ಟಿದ್ದಾನೆ, ಅದರಲ್ಲಿ ಗೆಡ್ಡೆ ಇಳಿಯುತ್ತಾ ಬಂದಿದೆ. ಹಿಂದಿನ ದಿವಸ ರಾತ್ರಿ ಹಂದಿಗಳು ಒಂದು ಸಾಲು ಗೆಣಸನ್ನು ಒಕ್ಕಿ ಹಾಕಿದ್ದಾವಂತೆ, ಇವತ್ತು ಬೆಳಗ್ಗೆ ಕತ್ತಿಗೆ ಹಿಡಿ ಹಾಕಿಸಲೆಂದು ಬಂದಿದ್ದಾಗ ಹೇಳಿದ್ದ. ನಿನ್ನೆ ಗೆಣಸಿನ ರುಚಿ ಕಂಡ ಹಂದಿಗಳು ಈ ದಿನ ರಾತ್ರಿಯೂ ಬರಬಹುದು. ಒಂದು ಪ್ರಯತ್ನ ಮಾಡಬಹುದು.ಗೌಡ ಕಾಳು ನಾಯ್ಕನ ಮನೆಗೆ ದೌಡಾಯಿಸಿದ. ಅವನಲ್ಲಿ ಕೇಳಿ ಲಾಟಾನು ತೆಗೆದುಕೊಂಡು ಗೆಣಸಿನ ಸಾಲುಗಳಿರುವ ಗದ್ದೆಯ ಬಳಿಗೆ ಹೋಗಿ ಹಿಂದಿನ ದಿವಸ ಹಂದಿಗಳು ಬಂದ ದಾರಿ, ಗುಂಡು ಹೊಡೆಯಲು ನಿಲ್ಲಬೇಕಾದ ಸ್ಥಳ ಮುಂತಾದವನ್ನೆಲ್ಲ ಪರೀಕ್ಷಿಸಿ ರಾತ್ರಿ ಸುಮಾರು ಹತ್ತು ಗಂಟೆಗೆ ಗೆಣಸು ಸಾಲುಗಳಿರುವ ಗದ್ದೆಯ ಹುಣಿಯಲ್ಲಿದ್ದ ಹುಣಿಸೆ ಮರದ ಗೆಲ್ಲಿನಲ್ಲಿ ಕುಳಿತು ಕೋವಿಗೆ ಒಂಟಿ ಗುಂಡು ತೋಟೆಯನ್ನು ತುಂಬಿಸಿ ಕಾದು ಕುಳಿತ. + +ಹುಣ್ಣಿಮೆ ಕಳೆದು ಪಂಚಮಿಯ ದಿನವಾದ ಅಂದು ಚಂದ್ರ ಮೂಡಿ ಒಂದು ಘಳಿಗೆಯಾಗಿರಬಹುದು. ನಾಲ್ಕೈದು ಹಂದಿಗಳು ನಿಧಾನವಾಗಿ ಕಾಳು ನಾಯ್ಕನ ಗೆಣಸಿನ ಸಾಲಿನತ್ತ ಬರತೊಡಗಿದವು. ಒಂದು ಸಲ ಏನಾದರೂ ಸದ್ದು ಕೇಳಿಸುತ್ತದೊ ಎಂದು ಕಿವಿ ನಿಗುರಿಸಿನಿಂತವು. ಮೂಗರಳಿಸಿ ಹೊಸ ವಾಸನೆ ಇದೆಯೋ ಎಂದು ಪರೀಕ್ಷಿಸಿದವು. ಏನೂ ಸಂಶಯವಿಲ್ಲವೆಂಬ ಧೈರ್ಯದಿಂದ ಗೆಣಸಿನ ಸಾಲನ್ನು ಒಕ್ಕತೊಡಗಿದವು. ದೇವಪ್ಪ ಆಯ ನೋಡಿ ಬಂದೂಕಿನ ಕುದುರೆಯನ್ನು ಸಡಿಲಿಸುವ ಕೀಲನ್ನೆಳೆದ. “ಢಂ” ಎಂದು ಒಂಟಿ ಗುಂಡು ಹಾರಿತು. “ಟ್ರೀಂ” ಎಂಬ ಸದ್ದು ಮಾಡಿ ಒಂದು ಹಂದಿ ನೆಗೆಯಿತು. ಉಳಿದ ಹಂದಿಗಳು ಚಲ್ಲಾಪಿಲ್ಲಿಯಾಗಿ ಓಡತೊಡಗಿದವು. ಇನ್ನೊಂದು ಹಂದಿ ಗೌಡ ಕುಳಿತಿದ್ದ ಮರದ ಕಡೆಗೇ ಬಂತು. ಅದಕ್ಕೂ ಒಂದು ಗುಂಡು ಬಿತ್ತು, ಹಂದಿ ಗದ್ದೆಯ ಕಟ್ಟಹುಣಿಯ ಆಚೆಗಿದ್ದ ಸಣ್ಣ ತೋಡಿಗೆ ಹಾರಿತು. + +ಅರೆಪೆಟ್ಟಾದ ಹಂದಿ, ಹುಲಿಗಳು ಬಹಳ ಅಪಾಯದ ಪ್ರಾಣಿಗಳು. ಇದಿರು ಸಿಕ್ಕಿದವರ ಮೇಲೆ ಜೀವದ ಹಂಗು ತೊರೆದು ಆಕ್ರಮಣ ಮಾಡುತ್ತವೆ. ನುರಿತ ಬೇಟೆಗಾರ ದೇವಪ್ಪ ಗೌಡ ಒಂದು ಘಳಿಗೆ ಕಾದು ಸಿಳ್ಳು ಹಾಕಿ ಮೆಲ್ಲಗೆ ಮರದಿಂದ ಇಳಿದ. ಲಾಟಾನು ಹಚ್ಚಿ ಮನೆಯಲ್ಲಿ ಕಾಯುತ್ತಿದ್ದ ಕಾಳು ನಾಯ್ಕ ಗೌಡನ ಗುಂಡಿನ ಸದ್ದು ಕೇಳಿ ಲಾಟಾನು ದೊಡ್ಡದು ಮಾಡಿ ಗೌಡನ ಸಿಳ್ಳಿಗೆ ‘ಕೂ’ ಎಂದು ಉತ್ತರಿಸಿ ಲಾಟಾನು ಸಹಿತ ಗೆಣಸಿನ ಸಾಲಿನತ್ತ ಬಂದ. ಮೊದಲ ಗುಂಡು ತಾಗಿದ ಹಂದಿ ಗೆಣಸಿನ ಸಾಲುಗಳಿಂದ ಇಪ್ಪತ್ತೈದು ಮಾರು ದೂರ ದಾಡೆಯನ್ನು ನೆಲಕ್ಕೆ ಕುತ್ತಿ ಬಿದ್ದು ಸತ್ತಿತ್ತು. ಒಂಟಿ ಗುಂಡು ಅದರ ಕಿವಿಯ ಬದಿಯಿಂದ ಒಳ ನುಗ್ಗಿತ್ತು. ಎರಡನೆಯ ಹಂದಿ ತೋಡಿನಿಂದ ಮೇಲೆ ಏರಲು ಸಾಧ್ಯವಾಗದೆ ನೂರು ಮಾರು ದೂರದಲ್ಲಿ ಹೊರಳಾಡಿ ಪ್ರಾಣ ಬಿಟ್ಟಿತ್ತು. + +ದೇವಪ್ಪ ಸಂತೋಷದಿಂದ ಒಂದೇ ಉಸಿರಿಗೆ ಶ್ಯಾನುಭಾಗರ ಮನೆಗೆ ಕೋವಿ ಸಹಿತ ಓಟಕಿತ್ತ. ನಿದ್ರಿಸುತ್ತಿದ್ದ ಅವರನ್ನು ಎಬ್ಬಿಸಿ ಹಂದಿಗಳು ಬಿದ್ದ ಸುದ್ದಿ ತಿಳಿಸಿದ. ಅವರು ದೊಡ್ಡ ಹಂದಿಯನ್ನು ಬೆಳ ಬೆಳಗ್ಗೆ ಇಲ್ಲಿಗೆ ತಂದು ಹಾಕಬೇಕು. ಬೈಲಿನವರನ್ನು ಹಂದಿ ತಹಸಿಲ್ದಾರರಿಗೆ ಎಂದು ಒಟ್ಟುಗೂಡಿಸು. ತಹಸಿಲ್ದಾರರ ಸುದ್ದಿ ಕೇಳಿ ಜನರು ಬಂದೇ ಬರುತ್ತಾರೆ. ಮತ್ತೊಂದನ್ನು ನೀನೂ ಹಂದಿ ಹೊತ್ತವರೂ ಹಂಚಿಕೊಳ್ಳಿ ಎಂದು ತಾಕೀತು ಮಾಡಿದರು. ಗೌಡ ಹಂದಿ ಬಿದ್ದಲ್ಲಿಗೆ ಹೋದ. ಶ್ಯಾನುಭಾಗರು ಹಾಸಿಗೆಯ ಮೇಲೆ ಉರುಳಿದರು. + +ಯಾವಾಗಲೂ ಬೆಳಗ್ಗೆ ಬೇಗನೆ ಏಳುವ ತಹಸಿಲ್ದಾರರು ಹಿಂದಿನ ರಾತ್ರಿಯ ಕೋಳಿ ರೊಟ್ಟಿ ಶರಾಬುಗಳಿಂದಾಗಿ ಏಳುವಾಗ ಏಳು ಗಂಟೆ ಕಳೆದಿತ್ತು. ಆಕಳಿಸುತ್ತಾ ಹೊರಗೆ ಬಂದಾಗ ಅಂಗಳದ ಬದಿಯಲ್ಲಿ ಗೌಡನವರು ತಂದು ಹಾಕಿದ್ದ ಹಂದಿಯನ್ನು ನೋಡಿದವರೇ ಕಾಲಿನಿಂದ ಅದಕ್ಕೆ ಒಂದು ಒದೆತ ಕೊಟ್ಟು “ಶ್ಯಾನುಭಾಗರೇ ಇದು ಎಲ್ಲಿ ಸಿಕ್ಕಿತು?” ಎಂದು ಕೇಳಿದರು. ಅದು ದೇವಪ್ಪ ಗೌಡನ ಸಾಹಸ ಎಂದು ತಿಳಿದಾಗ ಅವರ ತಲೆಯಲ್ಲಿ ಏನೋ ಯೋಚನೆ ಹೊಳೆಯಿತು. ಬೇಗ ಬೇಗನೆ ನಿತ್ಯ ಕರ್ಮ ಮುಗಿಸಿ ತಹಸಿಲ್ದಾರರು ಹಂದಿಯ ಗಾತ್ರ, ದಾಡೆಗಳ ಉದ್ದಗಳನ್ನು ಪರೀಕ್ಷಿಸಿ ತೂಕದ ಅಂದಾಜು ಮಾಡಿದರು. ಆಂತೋಣಿಯ ಹತ್ತಿರ ಬೇಗ ಉಪಹಾರ ಸಿದ್ದಪಡಿಸಲು ತಿಳಿಸಿ ದೇವಪ್ಪನ ದರ್ಖಾಸ್ತು ರಿಕಾರ್ಡನ್ನು ಬಿಡಿಸಿ ಪೇದೆ ಪುಟ್ಟನನ್ನು ಕರೆದು ಶ್ಯಾನುಭಾಗರನ್ನು ಬರಿಸಿ ಹೇಳಿದರು. “ಶ್ಯಾನುಭಾಗರೇ, ನೀವು ನಮ್ಮ ತಾಲೋಕಿನ ಶ್ಯಾನುಭಾಗರ ಪೈಕಿ ಸಮರ್ಥರು ಎಂದು ಹೆಸರು ಪಡೆದವರು, ಹೊಸತಾಗಿ ಬಂದ ತರುಣ ಡೆಪ್ಯೂಟಿ ಕಲೆಕ್ಟರುಗಳಿಗೆ ಸರ್ವೆ ಕಲಿಸುವವರು. ನಿಮ್ಮ ರಿಕಾರ್ಡುಗಳೂ ಗಟ್ಟಿ. ನಿಜವಾಗಿ ಗೌಡನ ದರ್ಖಾಸ್ತು ರದ್ದಾಗಿ ಬಿಟ್ಟರೆ ಆತನಿಗೆ ತುಂಬಾ ಅನ್ಯಾಯವಾಗುವುದಿಲ್ಲವೇ? ನಾನು ರಿಕಾರ್ಡನ್ನು ಸರಿಯಾಗಿ ಪರಿಶೀಲಿಸಿದ್ದೇನೆ. ನೀವು ತಯಾರಿಸಿದ ನಕ್ಷೆ ಮತ್ತು ರಿಪೋರ್ಟನ್ನು ನೋಡಿದೆ, ಮಣೆಗಾರರ ಟಿಪ್ಪಣಿಯನ್ನೂ ಓದಿದೆ.” + +ಶ್ಯಾನುಭಾಗರಿಗೆ ತಹಸಿಲ್ದಾರರ ಮನಸ್ಸು ಕವಲುದಾರಿಯಲ್ಲಿದೆ ಎಂದು ತಿಳಿದು ಬಿಟ್ಟಿತು. ಅವರು ಅರಣ್ಯ ಇಲಾಖೆಯವರ ತಕರಾರಿನ ಹಿಂದೆ ಇರುವ ನಿಜಸಂಗತಿಯನ್ನು ವಿವರವಾಗಿ ತಿಳಿಸಿ, “ಬಡವನನ್ನು ಬದುಕಿಸಿದರೆ ತಮಗೆ ಪುಣ್ಯ ಬರುತ್ತದೆ. ಕಷ್ಟಪಟ್ಟು ದುಡಿದು ಬೆಳೆಯುವುದು ಒಬ್ಬ, ಧರ್ಮಕ್ಕೆ ತಿನ್ನುವುದು ಇನ್ನೊಬ್ಬ ಎಂದಾದರೆ ದೇವರು ಮೆಚ್ಚಿಯಾನೆ?” ಎಂದು ಮನ ಒಲಿಸುವ ಮಾತನ್ನು ಹೇಳಿದರು. + +ಅಷ್ಟರಲ್ಲಿ ಅಂತೋಣಿ ಉಪಾಹಾರಕ್ಕಾಯಿತು ಎಂದು ತಹಸಿಲ್ದಾರರಲ್ಲಿ ತಿಳಿಸಿದ. ಶ್ಯಾನುಭಾಗರೂ ಕಾಫಿ ಕುಡಿಯಲು ಹೋದರು. ಹತ್ತು ನಿಮಿಷದಲ್ಲಿ ಪಟೇಲರೂ ಉಗ್ರಾಣಿಗಳೂ ಬಂದು ಸೇರಿದರು. ಕಾಫಿ ತಿಂಡಿ ತೀರಿಸಿದ ತಹಸಿಲ್ದಾರರು ಪೇದೆ ಪುಟ್ಟನನ್ನು ಕಳುಹಿಸಿ ಪುನಃ ಶ್ಯಾನುಭಾಗರನ್ನು ಬರಮಾಡಿಕೊಂಡು ಹೇಳಿದರು. “ಶ್ಯಾನುಭಾಗರೇ, ನಾಲ್ಕು ಜನರನ್ನು ತಲಾಷೆ ಮಾಡಿ ಹಂದಿಯನ್ನು ಮಾಂಸ ಮಾಡಬೇಕು, ಚಿಮಿಣಿ ಎಣ್ಣೆ ಖಾಲಿ ಡಬ್ಬಗಳಲ್ಲಿ ಅದನ್ನು ಉಪ್ಪುಹಾಕಿ ತುಂಬಿಸಿಕೊಂಡು ಮಂಗಳೂರಿಗೆ ಹೋಗಬೇಕು, ಅದರ ಉಸ್ತುವಾರಿ ನನ್ನ ಪೇದೆ ಪುಟ್ಟ ನೋಡಿಕೊಳ್ಳುತ್ತಾನೆ.” + +ಶ್ಯಾನುಭಾಗರು ಮುಗುಳು ನಗುತ್ತಾ “ಹಾಗಾದರೆ ಸ್ಥಳ ತನಿಖೆ?” ಎಂದು ಕೇಳಿದಾಗ ತಹಸಿಲ್ದಾರರು ಮೂಗಿಗೆ ಕನ್ನಡಕ ಏರಿಸಿ “ನಾನು ನಿನ್ನೆಯೇ ಹೇಳಿದ್ದೇನಲ್ಲ. ನೀವು ತಯಾರಿಸಿದ ನಕ್ಷೆ ದರ್ಖಾಸ್ತು ರಿಕಾರ್ಡು ತುಂಬ ಅಚ್ಚುಕಟ್ಟಾಗಿದೆ, ಅದರಲ್ಲಿ ಸಂಶಯ ಪಡುವಂಥ ಯಾವ ಅಂಶವೂ ಇಲ್ಲ. ಅರಣ್ಯ ಇಲಾಖೆಯವರದ್ದು ದುರುದ್ದೇಶ. ಏನೋ ಒಳಸಂಚಿನಿಂದ ಈ ಆಕ್ಷೇಪ ಮಾಡಿದ್ದಾಗಿದೆ. ಹತ್ತು ಹದಿನೈದು ವರುಷ ಒಬ್ಬಾತ ಕಷ್ಟಪಟ್ಟು ಕೃಷಿ ಮಾಡಿದ್ದಾನೆ, ಈಗ ಆತನನ್ನು ಸ್ಥಳದಿಂದ ಹೊರ ಹಾಕುವುದು ನ್ಯಾಯವಲ್ಲ. ನಾನು ಸ್ಥಳ ತನಿಖೆ ಮಾಡಿದ್ದೇನೆ ಎಂದು ಶಿಫಾರಸು ಮಾಡುತ್ತೇನೆ. ನೋಡಿ ನನ್ನ ಪಾರ್ಕರ್ ಪೆನ್ನಿನಲ್ಲಿ ಬರೆದ ಶಿಫಾರಸನ್ನು ಜಿಲ್ಲಾ ಕಲೆಕ್ಟರರು ಬಿಡಿ, ಮದ್ರಾಸು ಸರಕಾರದ ರೆವೆನ್ಯೂ ಸೆಕ್ರೆಟರಿಗಳೂ ಎತ್ತಿ ಹಿಡಿಯುತ್ತಾರೆ. ನಾನು ಮಧ್ಯಾಹ್ನದ ಮೇಲೆ ಇಲ್ಲಿಂದ ಹೊರಡುತ್ತೇನೆ, ಪೇಟೆಯ ತನಕ ಮಾಂಸದ ಟಿನ್ನುಗಳನ್ನು ಹೊರಲು ಜನ ಒದಗಿಸಿ,” ಎಂದು ತನ್ನ ಮೆಚ್ಚಿನ ಪಾರ್ಕರ್ ಪೆನ್ನಿನ ಟಾಪನ್ನು ತೆರೆದರು. + +ಹಂದಿಯನ್ನು ಹೊತ್ತುಕೊಂಡು ಹೋಗಿ ಹತ್ತಿರದ ಹೊಳೆಯ ಬದಿಯಲ್ಲಿ ಮಾಂಸ ಮಾಡಲು ತೊಡಗಿದರು. ಶ್ಯಾನುಭಾಗರಲ್ಲಿಂದ, ಪಟೇಲರಲ್ಲಿಂದ, ಪೇಟೆಯಿಂದ ಎಂದು ಮುಂತಾಗಿ ಸಂಗ್ರಹಿಸಿದ ಖಾಲಿ ಚಿಮಿಣಿ ಡಬ್ಬಿಗಳಲ್ಲಿ ನೀರು ತುಂಬಿಸಿ ಸೀಗೆ ಪುಡಿ ಹಾಕಿ ಒಲೆಯಲ್ಲಿಟ್ಟು ಕುದಿಸಿ, ಎಣ್ಣೆಯ ವಾಸನೆಯನ್ನು ತೆಗೆಯಲಾಯಿತು. ಶ್ಯಾನುಭಾಗರು ಮಳೆಗಾಲಕ್ಕೆಂದು ದಾಸ್ತಾನು ಮಾಡಿ ಅಟ್ಟದಲ್ಲಿರಿಸಿದ್ದ ಉಪ್ಪಿನಲ್ಲಿ ಒಂದು ಕುಕ್ಕೆ ಉಪ್ಪು ಹೊರಗೆ ಬಂತು. ಉಪ್ಪು ಬೆರೆಸಿ ಮಾಂಸವನ್ನು ಡಬ್ಬಿಗಳಲ್ಲಿ ತುಂಬಿಸಿ ಆಗುವಾಗ ಮಧ್ಯಾಹ್ನವಾಯಿತು. + +ಎಲ್ಲ ಸಿದ್ಧತೆಯಾಯಿತು ಎಂದು ಗೊತ್ತಾದಾಗ ತಹಸಿಲ್ದಾರರು ಸ್ವತಹ ಮಾಂಸದ ಡಬ್ಬಿಗಳನ್ನು ಪರಿಶೀಲಿಸಿದರು. ಅದನ್ನು ಪೇಟೆಯವರೆಗೆ ಹೊತ್ತು ಬೃಗಾಂಜನ ಬಸ್ಸಿಗೆ ಏರಿಸುವವರು ಯಾರು ಎಂದು ತಿಳಿದುಕೊಂಡರು. ಹಿಂದಿನ ದಿನ ತನಗೆ ಸರಬರಾಜು ಆಗಿ ಉಳಿದಿರುವ ಗೇರು ಹಣ್ಣಿನ ಶರಾಬನ್ನು ಜಾಗ್ರತೆಯಾಗಿ ಪೆಟ್ಟಿಗೆಗೆ ತುಂಬಿಸಲು ಅಂತೋಣಿಯಲ್ಲಿ ಹೇಳಿದರು. ದೇವಪ್ಪ ಗೌಡನ ಹೇಳಿಕೆ ಬರೆದು ಹೆಬ್ಬೆಟ್ಟು ಒತ್ತಿಸಿಕೊಂಡರು. ಪೇದೆ ಪುಟ್ಟನ ಹತ್ತಿರ ಹೇಳಿ ದಫ್ತರು ಕಟ್ಟಿಸಿದರು. ಪಾರ್ಕರ್ ಪೆನ್ನಿನ ಟೋಪನ್ನು ಹಾಕುತ್ತಾ, “ಎಲ್ಲ ಸರಿಯಾಯಿತಲ್ಲ ಶ್ಯಾನುಭಾಗರೇ” ಎಂದು ಮಧ್ಯಾಹ್ನದ ಊಟವನ್ನು ಬೇಗ ಬೇಗನೆ ಮುಗಿಸಿ ಉರಿ ಬಿಸಿಲಿಗೆ ಹೊರಟೇಬಿಟ್ಟರು. + + + +ಶ್ಯಾನುಭಾಗರು ಗೌಡನ ಕಡೆಗೆ ನೋಡಿ ಕಣ್ಣು ಮಿಟುಕಿಸಿ ಮುಗುಳು ನಗೆ ನಕ್ಕು ಮೀಸೆಯ ಮೇಲೆ ಬೆರಳಾಡಿಸಿದರು. ದೇವಪ್ಪ ಗೌಡ ತಾನು ಹೊಡೆದಿದ್ದ ಇನ್ನೊಂದು ಹಂದಿಯ ಮಾಂಸದ ತನ್ನ ಪಾಲನ್ನು ಪಡೆಯಲು ಹೆಜ್ಜೆ ಹಾಕಿದ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_388.txt b/Kenda Sampige/article_388.txt new file mode 100644 index 0000000000000000000000000000000000000000..dae66350e8d4cea3eb88f82056e6735c5c7c7bee --- /dev/null +++ b/Kenda Sampige/article_388.txt @@ -0,0 +1,45 @@ + + +ಗೆಳೆಯ ಜೋಯಪ್ಪ ಅವರ “ ಕಾಟಿ ಬೆಟ್ಟದ ಕಥೆಗಳು” ಒಂದು ಬಾಲ್ಯವನ್ನು ಮಜ್ಜೆ ಮಾಂಸ, ಕರುಳ ಮಿಡಿತದೊಂದಿಗೆ ಸೃಷ್ಟಿಸುವುದಷ್ಟೇ ಅಲ್ಲ, ನಮ್ಮೆಲ್ಲರ ಒಳಗೂ ಇರುವ ಬಾಲ್ಯದ ಸುಖ-ದುಃಖಗಳನ್ನೂ, ಅರಿವು ಚಿಗುರೊಡೆವ ನವಿರು ವಿವರಗಳನ್ನು ಒಂದು ಮೂಸೆಯಲ್ಲಿ ಹಿಡಿದಿದೆ. + +ಕಡು ಬಡತನ, ಹೋರಾಟದ ಬದುಕಿನ ಅಪ್ಪ-ಅಮ್ಮ ಪ್ರಕೃತಿಯೊಂದಿಗೆ ನಡೆಸುವ ಹೋರಾಟ, ಶಿಕ್ಷಣದ ಬೆಳಕಿನ ಹಾದಿಗುಂಟ ಇಡುವ ಹೆಜ್ಜೆಗಳು ಇವೆಲ್ಲಾ ಈಗ ನಡುವಯಸ್ಸು ದಾಟಿದ ಎಲ್ಲರ ಬಾಲ್ಯದ ವಿವರಗಳೇ. ಈ ಬಾಲ್ಯದ ಪರಿಸರ, ಪ್ರಾಕೃತಿಕ ಲೋಕ ಇಂದು ಬಹುತೇಕ ಎಲ್ಲೆಡೆ ಕಣ್ಮರೆಯಾಗಿರಬಹುದು. ಕುವೆಂಪು, ಕಾರಂತರ ತಲೆಮಾರು ಕಂಡ ಗ್ರಾಮಲೋಕ ಆಲನಹಳ್ಳಿ, ಲಂಕೇಶರ ತಲೆಮಾರಿಗೆ ಆಧುನಿಕತೆಗೆ ಹೊರಳಿಕೊಂಡು ಒಂದು ಸಾಮಾಜಿಕ ಸ್ಥಿತ್ಯಂತರಕ್ಕೆ ರೂಪಕ ಸಾಕ್ಷಿಯಾಯಿತು. ಆದರೆ ಅದರ ಭೌತಿಕ ಲೋಕ ಮರಳಿ ಬಾರದಷ್ಟು ಬದಲಾಗಬಹುದು ಎಂಬುದನ್ನು ನಾವು ಊಹಿಸಿರಲಿಲ್ಲ.  ಈಗ 21ನೇ ಶತಮಾನದ ಎರಡನೇ ದಶಕದ ಕೊನೆಯಲ್ಲಿ ನಿಂತು ಹೊರಳಿ ನೋಡಿದರೆ ಆಧುನಿಕತೆ ನಮ್ಮನ್ನು ಸೆಳೆದ ರೀತಿಗೆ ರೋಚಕತೆಯೂ ಇಲ್ಲ; ಮಾದಕತೆಯೂ ಇಲ್ಲ. ಅದೊಂದು ದಾರುಣ ಬದಲಾವಣೆ. + +ಜೋಯಪ್ಪ ಅವರ ಕಥೆ ಮುಗಿಯುವುದು ಅನಿವಾರ್ಯ ಕಾರಣಗಳಿಂದಾಗಿ ಮೈಸೂರಿಗೆ ವಲಸೆ ಹೋಗುವುದರಲ್ಲಿ. ಇಡೀ ಚಿತ್ರ ಸತ್ಯಜಿತ್ ರೇ ಸಿನೆಮಾದ ಒಂದು ದೃಶ್ಯದೋಪಾದಿ ಇದೆ. + +ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ. + +(ಚಿತ್ರಗಳು: ಚರಿತಾ, ಮೈಸೂರು) + +ಮಿಂಚಿ ಮಾಯವಾಗುವ ಬಾಲ್ಯದ ವ್ಯಕ್ತಿಗಳನ್ನು ವಸ್ತು ವಿಶೇಷಗಳನ್ನು ಜೋಯಪ್ಪ ಚಿತ್ರಿಸುವ ಬಗೆ ವಿಶಿಷ್ಟ. ಬುಗುರಿ ಬಗ್ಗೆ ಜೋಯಪ್ಪ ಆಸೆ ಪಟ್ಟು ಅದು ಸಿಕ್ಕಿದಾಗ ಅದನ್ನು ಜೇಬಲ್ಲಿಟ್ಟು ತಿರುಗುತ್ತಾರೆ. ಅದನ್ನು ಅಂಗೈಯಲ್ಲಿಟ್ಟು ಆಡಿಸುವುದನ್ನೂ ಕಲಿಯುತ್ತಾರೆ. ಆದರೆ ಆನೆ ಗದ್ದೆಗೆ ಧಾಳಿ ಇಟ್ಟ ಒಂದು ದಿನ ತಪ್ಪಿಸಿಕೊಳ್ಳಲು ಓಡಿದಾಗ ಅದು ಕಾಣೆಯಾಗುತ್ತದೆ. ಅದೇ ದಾರಿಯಲ್ಲಿ ಮಾರನೇ ದಿನ ಹುಡುಕಿದರೂ ಅದು ಸಿಗುವುದಿಲ್ಲ. ಹಗ್ಗ ಮಾತ್ರಾ ಉಳಿಯುತ್ತದೆ. ಇಡೀ ಕೃತಿಗೆ ನೀಡಿದ ರೂಪಕ ವ್ಯಾಖ್ಯಾನದ ತರ ಈ ಕತೆ ಇದೆ. + +ಊರಿನಲ್ಲೊಬ್ಬ ಅನಾಮಿಕ ಕಾವಲುಗಾರ ಕೊಳಲು ಊದುತ್ತಿರುತ್ತಾನೆ. “ಕೊಳಲೂದುತ್ತಿದ್ದ ಆತನ ಹೆಸರು ಗೊತ್ತಿಲ್ಲ. ಆತನ ಚಹರೆ ನೆನೆದುಕೊಂಡರೂ ಸ್ಮರಣೆಗೆ ಬರುತ್ತಿಲ್ಲ. ಆದರೆ ಆ ನಾದ, ಆ ನಾದ ಬರುತ್ತಿದ್ದ ದಿಕ್ಕು ಇನ್ನೂ ಕಣ್ಣಮುಂದಿದೆ” ಎಂದು ಜೋಯಪ್ಪ ಬರೆಯುತ್ತಾರೆ. ಕೊಳಲಿನ ಮೋಹಕ್ಕೆ ಬಿದ್ದ ಜೋಯಪ್ಪ ಕೊಳಲು ಕಲಿಯಬೇಕೆಂದು ಯಾರಲ್ಲೋ ಕಾಡಿ, ಕೊಳಲು ಸಿಕ್ಕಿದರೂ ಊದಲರಿಯದೇ ಜೋಯಪ್ಪ ಕೊಳಲು ಬದಿಗಿಡಬೇಕಾಗುತ್ತದೆ. ಹೀಗೆ ಬದಿಗಿಟ್ಟ ಕೊಳಲೂ ಈಗಲೂ ಇದೆ ಎನ್ನುತ್ತಾರೆ ಜೋಯಪ್ಪ. ಈ ಕತೆಯ ನಿರೂಪಣೆಗೊಂದು ತೀವ್ರ ವಿಷಾದದ ವ್ಯಂಗ್ಯವಿದೆ. “ನನಗೆ ಕೊಳಲು ಮಾಡಿಕೊಟ್ಟವರೊಡನೆ ಊದುವುದು ಹೇಗೆ ಎಂದು ಕೇಳಿದೆ. ಅವರು ಗೊತ್ತಿಲ್ಲ ಎಂದು ಬಿಟ್ಟರು.” + +ಜೋಯಪ್ಪ ಅದಕ್ಕೆ ಅರ್ಥ ತುಂಬುವುದಿಲ್ಲ. ಆದರೆ ಅದರ ಸಾಂಕೇತಿಕತೆ ನಮ್ಮನ್ನು ಕಾಡುತ್ತದೆ. + +ಜೋಯಪ್ಪ ಶಾಲೆಗೆ ಹೋಗುವಾಗ ಒಬ್ಬರು ಮೇಷ್ಟ್ರು ಜೋಯಪ್ಪನಿಗೆ ದಿನಾ ತಮ್ಮ ಬುತ್ತಿಯಲ್ಲಿ ಪಾಲು ನೀಡುತ್ತಿರುತ್ತಾರೆ. ಅವರು ಶಾಲೆಯಿಂದ ನಿರ್ಗಮಿಸಿದ ಎಷ್ಟೋ ವರ್ಷಗಳ ಬಳಿಕ ಜೋಯಪ್ಪ ಗೋಣಿಕೊಪ್ಪಲಿನಲ್ಲಿ ಓದುವಾಗ ಆ ಮೇಷ್ಟ್ರ ಊರು ಅದೇ ಎಂದು ಗೊತ್ತಾಗಿ ಆ ಮೇಷ್ಟ್ರ ಮನೆಗೆ ಹೋಗುತ್ತಾರೆ. ಮೇಷ್ಟ್ರು ತೀರಿ ಹೋಗಿ ವರ್ಷಗಳೇ ಸಂದಿರುತ್ತದೆ. ಬಾಲ್ಯದ ಅಮೂರ್ತ ಮಮತೆಯ ನೆನಪು ಹದಿಹರೆಯದ ಪ್ರಜ್ಞೆಗೆ ದಕ್ಕುವ ಬಗೆಯನ್ನು ಹಾಗೇ ಇಟ್ಟು, ತಟಕ್ಕನೆ ಜೋಯಪ್ಪ, ‘ಈ ಕೃತಿಯನ್ನು ಅವರಿಗೆ ಅರ್ಪಿಸಿದ್ದೇನೆ’ ಎಂದು ಒಂದು ಸಾಲಲ್ಲಿ ಬರೆದು ಬಿಡುತ್ತಾರೆ. ಯಾವ ಭಾವುಕತೆ ನಾಟಕೀಯತೆಯೂ ಇಲ್ಲದೇ ಎದೆಯೊಳಗೆ ಇಳಿಸಿಕೊಂಡ ಬಗೆ ಇದು. + +ಕೃತಿ ತುಂಬಾ ಇಂಥಾ ಹತ್ತಾರು ಉದಾಹರಣೆಗಳಿವೆ. + + + +ಈ ಕೃತಿ ಮುಗಿಯುವ ಬಗೆ ದಾರುಣ ವಿಷಾದವೊಂದನ್ನು ಗೊಮ್ಮಟನೋಪಾದಿ ಕೆತ್ತಿದಂತಿದೆ. ಈ ಸಾಲುಗಳನ್ನು ನೋಡಿ. + +“ಕಾಟಿಬೆಟ್ಟದ ನಮ್ಮ ಮನೆಯ ಒಂದಷ್ಟು ಭತ್ತ, ನಾಲ್ಕಾರು ಪಾತ್ರೆ, ಒಂಟಿ ಕೈ ಕುರ್ಚಿ, ಒಂದು ದೀಪ, ಎರಡು ಪೆಟ್ಟಿಗೆ, ಬೆಂಚು, ಮಣೆ- ಆಯಿತು- ಕಾಟಿಬೆಟ್ಟದ ಆಸ್ತಿ- ಇದ್ದ ಅಷ್ಟನ್ನು ಸಣ್ಣ ಲಾರಿಗೆ ತುಂಬಿದೆವು. ಅಕ್ಕ ತೋರಿದ ದಾರಿಯಲ್ಲಿ ಲಾರಿ ಹೊರಟಿತು. ಕಾಡು ದಾಟಿತು. ಕಾಟಿಬೆಟ್ಟದ ದುರ್ಗಮ ಕಾಡು ದೂರದೂರವಾಗಿ ಲಾರಿ ಕೊಡಗಿನ ಗಡಿ ದಾಟಿತು. ಮತ್ತಿಗೋಡು, ಆನೆ ಚೌಕೂರು, ಹುಣಸೂರಿನ ಮೂಲಕ ಹಾದುಹೊದ ನಮ್ಮ ಕುಟುಂಬ ಮೈಸೂರು ಮಹಾನಗರದಲ್ಲಿ ಲೀನವಾಯಿತು.” + + + +ಇದನ್ನು ಓದಿ ಮುಗಿಸಿದಾಗ ಬೆನ್ನು ಹುರಿಯಲ್ಲಿ ಸಣ್ಣ ಛಳಕೊಂದು ನನಗೆ ಮೂಡಿತ್ತು, ಮೊನ್ನೆಯ ಕೊಡಗಿನ ದುರಂತದ ಹಿನ್ನೆಲೆಯಲ್ಲಿ- ಅನಾಮಿಕ ದಿಕ್ಕೆಟ್ಟ ಕುಟುಂಬಗಳು ಬಾಳುವೆಯ ಕೊಂಡಿ ಕಡಿದು ನಗರಗಳಲ್ಲಿ ಲೀನವಾಗುವ ದುರಂತ – ವರ್ತಮಾನದ್ದೂ ಆಗಬಹುದು. ಈ ನಿರಂತರ ದುರಂತ ಫಕ್ಕನೆ ಕಣ್ಣಗೆ ಗೋಚರವಾಗುವುದಿಲ್ಲ. ಒಂದು ಅಧ್ಯಯನದ ಪ್ರಕಾರ ಪ್ರತಿದಿನ ಸುಮಾರು 40 ಸಾವಿರ ಮಂದಿ ಗ್ರಾಮ ಭಾರತ ತ್ಯಜಿಸಿ ನಗರ ಸೇರುತ್ತಿದ್ದಾರೆ. ಗ್ರಾಮ ಭಾರತದ ಜೀವನ ದುರ್ಭರವಾಗುತ್ತಿರುವುದು, ಹೊಸ ಉದ್ಯೋಗದ ಅವಕಾಶಗಳು ನಗರದಲ್ಲಿರುವುದು ಈ ವಲಸೆಗೆ ಪ್ರಮುಖ ಕಾರಣ. ಜೋಯಪ್ಪ ಈ ದುರಂತ ಉದ್ಘಾಟನೆ ಆಗುವ ಹಂತದಲ್ಲಿ ತಮ್ಮ ಕಥಾನಕವನ್ನು ನಿಲ್ಲಿಸುತ್ತಾರೆ. ಈ ಸೂಕ್ಷ್ಮತೆಯೇ ಈ ಬರೆವಣಿಗೆಗೆ ಪಕ್ವತೆ ನೀಡಿದೆ. ಜೋಯಪ್ಪನವರ ಪಾಲಿಗೆ ಈ ವಲಸೆ ಹೆಚ್ಚು ದುರ್ಭರವಾಗಿರಲಾರದು. ನಾಲ್ಕು ದಶಕಗಳ ಹಿಂದೆ ನಮ್ಮ ನಗರಗಳೂ ಇಂದಿನಷ್ಟು ರೂಕ್ಷವಾಗಿರಲಿಲ್ಲ. ಗ್ರಾಮೀಣ ಭಾರತದ ಜೊತೆ ಕರುಳುಬಳ್ಳಿ ಕಡಿದುಕೊಂಡಿರಲಿಲ್ಲ. ಅದೊಂದು ಸುಭದ್ರ, ಸುಸಜ್ಜಿತ ಬದುಕಿನ ಆಯ್ಕೆ ಎಂದೇ ಭಾವಿಸಲಾಗಿತ್ತು. ಆದರೆ ನಾಲ್ಕು ದಶಕಗಲ ಬಳಿಕ, ಈ ವರ್ತಮಾನದಲ್ಲಿ ಈ ಆಯ್ಕೆಯ ಬಗ್ಗೆ ನಾವು ಚರ್ಚಿಸಬೇಕಿದೆ. + +******* + +ಈ ಕೃತಿ ಬಾಲ್ಯದ ಅನುಭವದ ನೆನಪಲ್ಲಿ ಮಿಂದೇಳುವ ಚೌಕಟ್ಟು ಹೊಂದಿದೆ. ಸ್ವತಃ ಜೋಯಪ್ಪ ಈ ಭೌಗೋಳಿಕ ಪರಿಸರಕ್ಕೆ ಮರಳಿ, ಅಲ್ಲಿ ಬದುಕು ಕಟ್ಟಿಕೊಂಡಿರುವ ಕಾರಣ ವಲಸೆಯೂ ಅವರ ಮೇಲೆ ಆತ್ಯಂತಿಕ ಪರಿಣಾಮ ಬೀರಿಲ್ಲ. ಆದರೆ ತನ್ನ ಬಾಲ್ಯದ ಪ್ರಪಂಚ ಅದರ ಎಲ್ಲಾ ಉಭ-ಶುಭಗಳೊಂದಿಗೆ ನಿರಸನಗೊಂಡಿರುವುದನ್ನು ಅವರು ಬಲ್ಲರು. ಸ್ವಭಾವತಃ ಸಂಕೋಚದ ಜೋಯಪ್ಪ, ಇದು ತನ್ನ ಬಾಲ್ಯದ ಅನುಭವ ಎಂದು ಸಂಕೋಚದಲ್ಲಿ, ಸರಳ ಶೈಲಿಯಲ್ಲಿಬರೆಯುತ್ತಾರೆ. ಆದರೆ ಇದು ನಮ್ಮದೂ ಎಂಬಂತೆ ಆವರಿಸಿಕೊಳ್ಳುತ್ತದೆ. + +******* + +ನಾಲ್ಕು ದಶಕಗಳ ಹಿಂದೆ ಜೋಯಪ್ಪ ನನಗೆ ಪರಿಚಯವಾಗಿದ್ದು, ಆಂದೋಲನ ಕಛೇರಿಯಲ್ಲಿ. ಇಬ್ಬರೂ ಜೊತೆಗೇ ದುಡಿದಿದ್ದೆವು. ಸಂಕೋಚದ ಅಷ್ಟೇ ಅಪ್ಯಾಯಮಾನ ಸ್ನೇಹದ ಮನುಷ್ಯ ಜೋಯಪ್ಪ. ನನ್ನ ಬಾಲ್ಯ ಇಂಥಾದ್ದೇ ಪರಿಸರದಲ್ಲಿದ್ದರೂ ನಾನು ಇಂಥಾ ಬಡತನದ ಒತ್ತಡ ಅನುಭವಿಸಿರಲಿಲ್ಲ. ಶೂದ್ರ ದಲಿತ ಲೋಕಕ್ಕೆ ನನ್ನನ್ನು ಎಳೆದೊಯ್ದು ನನಗೆ ಮರುಹುಟ್ಟು, ದೃಷ್ಟಿ ಕೊಟ್ಟಿದ್ದು ಮೈಸೂರಿನ ಗೆಳೆಯರು. ಜೋಯಪ್ಪನೂ ಇದರಲ್ಲಿ ಪಾಲುದಾರ. ಗೆಳೆಯರು ನಮ್ಮನ್ನು ಬೆಳೆಸುವ ಪರಿ ಇದು. + + + +ಈ ಕೃತಿ ಮತ್ತೆ ನೆನಪನ್ನು ಅರಳಿಸಿ ವರ್ತಮಾನದ ಕ್ರಿಯಾಶೀಲತೆಗೆ ಇಂಬು ನೀಡಿದೆ. ನೆನಪು ಮತ್ತು ಕಲ್ಪನೆಗಳೇ ಮನುಷ್ಯ ವರ್ಗವನ್ನು ವಿಶಿಷ್ಟವಾಗಿಸಿರುವುದಷ್ಟೇ. ಜೋಯಪ್ಪ ಅವರ ಈ ಕೃತಿ ಮರುಸೃಷ್ಟಿಯ ಸೃಜನಶೀಲ ಕಥನವೂ ಹೌದು. ಕಾಲದ ಗತಿಯಲ್ಲಿ ಹೊಸ ತಲೆಮಾರಿಗೆ ಸಂದ ಜಗತ್ತನ್ನು ಸಾದರಪಡಿಸುವ ಪ್ರಯತ್ನ ಕೂಡಾ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_389.txt b/Kenda Sampige/article_389.txt new file mode 100644 index 0000000000000000000000000000000000000000..ae7a3bc1e3f1c514ff4642ffc5f5fb7bb4b7c756 --- /dev/null +++ b/Kenda Sampige/article_389.txt @@ -0,0 +1,25 @@ + + +ಪ್ರಸನ್ನ ಸಂತೆಕಡೂರು ಇವರು ತೀರ ಇತ್ತೀಚೆಗೆ ಪರಿಚಯವಾದ ಲೇಖಕರು. ಆದರೆ, ಓದುಗರಾಗಿ ಅವರದ್ದು ಸ್ವಲ್ಪ ದೀರ್ಘಕಾಲದ ಪರಿಚಯ. ಹದಿಮೂರು ಕಥೆಗಳಿರುವ ‘ಮಾಯಾಪಂಜರ’ ಸಂಕಲನವನ್ನು ಕೊಟ್ಟು ತಮ್ಮ ರಚನೆಗಳ ಬಗ್ಗೆ ಕೆಲವು ಮಾತು ಹೇಳಬೇಕೆಂದು ಬಯಸಿದ್ದಾರೆ. ಅವರ ವಿಶ್ವಾಸಕ್ಕೆ ಕೃತಜ್ಞ. + +(ಪ್ರಸನ್ನ ಸಂತೆಕಡೂರು) + +ಪ್ರಸನ್ನ ಅವರು ತಮ್ಮ ಉದ್ಯೋಗದ ನಿಮಿತ್ತವಾಗಿ ಒಂದು ದಶಕ ಕಾಲ ಅಮೆರಿಕೆಯಲ್ಲಿ ಬದುಕಿದ್ದವರು. ಇಲ್ಲಿನ ಕಥೆಗಳಲ್ಲಿ ಬಹುಪಾಲನ್ನುಅವರು ಕಳೆದ ಎರಡು ಮೂರು ವರ್ಷಗಳಲ್ಲಿ ಅಮೆರಿಕೆಯಲ್ಲಿರುವಾಗಲೇ ಬರೆದಿದ್ದಾರೆ. ಮಧ್ಯಮ ವರ್ಗದ ಅಮೆರಿಕ ನಿವಾಸಿ ಕನ್ನಡಿಗರೊಬ್ಬರು ತಮ್ಮ ಸ್ಮರಣೆಯ ಕನ್ನಡ ಭಾಷೆ ಮತ್ತು ದಿನದಿನವೂ ಎದುರಾಗುವ, ಏಕತಾನದ್ದೂ ಅನಿಸುವ, ಅಮೆರಿಕೆಯ ಪಟ್ಟಣದ ಬದುಕಿನ ವಾಸ್ತವ ವಿವರಗಳನ್ನು ಕಥೆಗೊಳಿಸಿದ ಹಾಗೆ ಇಲ್ಲಿನ ರಚನೆಗಳಿವೆ. + +ಅಮೆರಿಕದ ಭೌತಿಕ ವಿವರ ಮತ್ತು ಕನ್ನಡ ಸಾಹಿತ್ಯದ ನೆನಪುಗಳು ಈ ಕತೆಗಳಲ್ಲಿ ಬೆರೆತಿವೆ. ವಚನ, ಆಧುನಿಕ ಮತ್ತು ಹಳೆಯ ಕಾಲದ ಕವಿಸೂಕ್ತಿಗಳ ಬಳಕೆ, ಕನ್ನಡನಾಡಿನ ಚರಿತ್ರೆಯ ಘಟನೆಗಳ ನಿರೂಪಣೆ ಇವೂ ಇಲ್ಲಿವೆ. ವಿದೇಶೀ ನೆಲದಲ್ಲಿ ತಮ್ಮ ಊರು, ತಮ್ಮ ಭಾಷೆ ತೀವ್ರವಾಗಿ ಸೆಳೆಯುವಾಗ, ಕಾಡುವಾಗ ಇಂಥ ಕಥೆಗಳು ಹುಟ್ಟುತ್ತವೆ ಅನಿಸುತ್ತದೆ. ಆದರೆ ಪ್ರಸನ್ನ ಅವರ ಆಸಕ್ತಿ ಇರುವುದು ಸಂಸ್ಕೃತಿಯ ನೆನಪಿನಲ್ಲೂ ಅಲ್ಲ, ಅಮೆರಿಕದ ಟೀಕೆ ಅಥವಾ ವಿಜೃಂಭಣೆಗಳಲ್ಲೂ ಅಲ್ಲ. ಕನ್ನಡದ ಮೂಲಕ ತಿದ್ದಿಕೊಂಡ ಮನಸ್ಸೊಂದು ಭಿನ್ನಸಂಸ್ಕೃತಿಯ ವಿವರಗಳ ಮೂಲಕ ಮನುಷ್ಯ ಸಾಮಾನ್ಯ ಅನುಭವಗಳನ್ನು ಪರಿಶೀಲಿಸುವಂತೆ ಇವೆ ಇಲ್ಲಿನ ಕಥೆಗಳು. + +ವಿಚ್ಛೇದನ ಪಡೆದ ದಂಪತಿಗಳ ಚಿತ್ರಣ, ಗತಿಸಿದ ಪತ್ನಿಯ ನೆನಪಿನಲ್ಲೆ ಬದುಕು ಸಾಗಿಸುವ ಗಂಡ, ಭಾರತಕ್ಕೆ ಗಂಡನೊಡನೆ ಮರಳುವ ಪತ್ನಿ ತನ್ನ ವಿವಾಹಪೂರ್ವ ಗೆಳೆಯನ ನೆನಪಿನ ಕುರುಹುಗಳ ಬೆನ್ನುಹತ್ತಿ ಹೋಗುವುದು, ಅವಳ ನೆನಪಿನಲ್ಲಿ ಸುಳಿದುಹೋಗುವ ಚರಿತ್ರೆಯ, ಪುರಾಣದ ವಿವರಗಳು ಇಂಥವೆಲ್ಲ ಪ್ರಸನ್ನ ಅವರ ಕಥೆಗಳ ಸಾಮಗ್ರಿಗಳಾಗಿವೆ. + +ಕನಸು ಅಥವಾ ಕನಸಿನಂಥ ಅನುಭವವೂ ಇವರ ಹಲವು ಕಥೆಗಳಲ್ಲಿ ಎದುರಾಗುತ್ತದೆ ಸ್ಟ್ಯಾಚೂ ಆಫ್ ಲಿಬರ್ಟಿಯಲ್ಲಿ ಬರುವ ಕನಸು, ಮಾಯಾಪಂಜರ ಕಥೆಯಲ್ಲಿ ಬರುವ ಅಲ್ಲಮ-ಕಾಮಲತೆ-ಶಾಂತಲೆಯರ ಸ್ವಪ್ನಸದೃಶ ನೆನಪು, ಅಸ್ಥಿಪಂಜರದ ಬಾಲಕದಲ್ಲಿ ಬರುವ ವಾಸ್ತವದ ಅಂಚಿನ ತುಸು ಆಚೆಯ ಸಂಗತಿಗಳು, ಐಕ್ಯ ಕಥೆಯಲ್ಲಿ ಅಜ್ಜಿಯನ್ನು ಕಾಡುವ ಅಕ್ಕನ ನೆನಪು ಇಂಥ ಉದಾಹರಣೆಗಳು ಸಾಕಷ್ಟು ದೊರೆಯುತ್ತವೆ. ಇಂಥ ವಿವರಗಳ ಕಾರಣದಿಂದಲೇ ಪ್ರಸನ್ನ ಅವರ ಕಥೆಗಳು ಸಾಮಾನ್ಯತೆಯ ಮಟ್ಟದಿಂದ ಮೇಲೇರುತ್ತವೆ. + +ಅತಿಮಾನವನ ವಿಕಾಸ ಮತ್ತು ಅವನತಿ ವೈಜ್ಞಾನಿಕ ಪರಿವೇಶದ ಕುತೂಹಲಕಾರೀ ಕಥೆ. ಕನ್ನಡದ ಕಥೆ-ಕಾದಂಬರಿಗಳಲ್ಲಿ ವಿಜ್ಞಾನದ ವಸ್ತುಗಳನ್ನು ಬಳಸಿಕೊಳ್ಳುವುದು ಅಪರೂಪವೇನಲ್ಲ, ಆದರೂ ಈ ಬಗೆಯ ಕಥೆಗಳಲ್ಲಿ ಪ್ರಯೋಗಶೀಲತೆಗೆ ಅಪಾರ ಅವಕಾಶವಿದೆ. ಎರಡು ಸಾವಿರದ ಒಂದುನೂರನೆಯ ಇಸವಿಯಲ್ಲಿ ನಡೆಯುವ ಈ ಕಥೆ, ಆದರ್ಶ ಲೋಕವನ್ನಲ್ಲ, ಅವನತಿ ಮುಖದ ನಾಗರಿಕತೆಯ ಚಿತ್ರಣವನ್ನು ಮಾಡುತ್ತದೆ. ಕೈಗಾರಿಕಾ ಕ್ರಾಂತಿಯ ಸಮಯದಲ್ಲಿ ರೊಮಾಂಟಿಕ್ ಕವಿಗಳು ವಿಜ್ಞಾನದ ವಿರುದ್ಧವಾದ ಧೋರಣೆಯನ್ನು ತಳೆದಿದ್ದರು. ಅದೇರೀತಿಯಲ್ಲಿ ಇಂದಿನ ಬಹಳಷ್ಟು ವಿಜ್ಞಾನ ವಸ್ತು ಆಧರಿತ ಕಥೆಗಳು ಯಾಕೆ ವಿಜ್ಞಾನ, ತಂತ್ರಜ್ಞಾನದ ಋಣಾತ್ಮಕ ಅಂಶಕ್ಕೇ ಒತ್ತುಕೊಡುತ್ತವೆ ಅನಿಸುತ್ತದೆ. ಮಾನವಿಕ ವಿಷಯಗಳು, ಸಾಹಿತ್ಯ ಇವೆಲ್ಲ ವಿಜ್ಞಾನವನ್ನು ಸಂಶಯದಿಂದಲೇ ನೋಡಬೇಕು, ಅದರ ಧನಾತ್ಮಕ ಅಂಶಗಳನ್ನೇ ಎತ್ತಿ ಹೇಳಬೇಕು ಎಂಬ ಅಲಿಖಿತ ನಿಯಮವಿದೆಯೋ ಅನ್ನುವ ಯೋಚನೆ ಕೂಡ ಬರುತ್ತದೆ. + +ವಂಶವಾಹಿನಿಯಂಥ ಕಥೆಗಳಲ್ಲಿ ವಿಜ್ಞಾನದ ವಿವರ ಬಳಸಿಕೊಂಡರೂ ಮುಖ್ಯವಾಗುವುದು ತುಂಗೆಯ ದಂಡೆಯಲ್ಲಿ ಬ್ರಾಹ್ಮಣರೇ ಹೆಚ್ಚಾಗಿರುವ ಗ್ರಾಮವೊಂದರಲ್ಲಿ ಹೆಣೆದುಕೊಳ್ಳುವ ಸಂಬಂಧಗಳ ಕಥೆ. ಈ ಕಥೆ ಪ್ರಸನ್ನ ಅವರ ಮಹತ್ವಾಕಾಂಕ್ಷೆಯನ್ನೂ ಅವರು ದಾಟಬೇಕಾಗಿರುವ ಮಿತಿಯನ್ನೂ ಒಟ್ಟಿಗೆ ಸೂಚಿಸುತ್ತದೆ. ಆನೆಯು ಸೊಂಡಲಿನಿಂದ ಆಹಾರ ಬಾಯಿಗಿಟ್ಟುಕೊಳ್ಳುವ ಹಾಗೆ ಮೊಬೈಲು ಜೇಬಿಗೆ ಸೇರಿಸಿದ್ದು’ ಅನ್ನುವಂಥ ಕುತೂಹಲಕರ, ಕವಿತೆಗಳಲ್ಲಿ ಕಾಣುವಂಥ ಕಲ್ಪನಾಶೀಲ ಹೋಲಿಕೆಗಳಿವೆ. ಮತ್ತೂರು, ಹೊಸಹಳ್ಳಿ, ಅಮೆರಿಕದ ನಗರಗಳ ಬದುಕನ್ನು ಜೋಡಿಸುವ ಕೌಶಲವೂ ಇದೆ. ಓದುಗರ ಕುತೂಹಲವನ್ನು ಕಾಯ್ದುಕೊಳ್ಳಬೇಕೆಂಬ ತವಕವೂ ತಿಳಿಯುತ್ತದೆ. ಒಲವೇ ಜೀವನ ಸಾಕ್ಷಾತ್ಕಾರದಲ್ಲೂ ವೈರುಧ್ಯಮಯ ಕೌಟುಂಬಿಕ ಚಿತ್ರಣಗಳನ್ನು ನೀಡಿ, ಕೊನೆಯಲ್ಲಿ ದಿವಂಗತ ಸಂಗಾತಿಯ ಬಗ್ಗೆ ಪ್ರೀತಿ ಉಳಿಸಿಕೊಂಡಿರುವ ಗಂಡನ ಚಿತ್ರ ಬರುತ್ತದೆ. ಇಂಥ ಕಥೆಗಳನ್ನು ಓದುವಾಗ ಪ್ರಸನ್ನ ಅವರು ಕುತೂಹಲ ತಣಿಸುವ ಕಥೆಯ ಮಾದರಿಯನ್ನು ಇನ್ನೂ ಮೀರಲಾಗಿಲ್ಲ ಅನಿಸುತ್ತದೆ. + +ಕುತೂಹಲಕರವಾಗಿ ಕಥೆಯನ್ನು ಹೇಳುವುದು ಒಂದು ಮುಖ್ಯವಾದ ಕೌಶಲ. ಅದರ ಸಾಧನೆಗೆ ಪ್ರಸನ್ನ ಅವರು ಇಲ್ಲಿನ ಕಥೆಗಳಲ್ಲಿ ಸಾಕಷ್ಟು ಪ್ರಯತ್ನಪಟ್ಟಿದ್ದಾರೆ. ಆದರೆ ಇನ್ನೊಂದು ಹೆಜ್ಜೆ ಮುಂದೆಹೋಗಿ ಕಥೆಯನ್ನು ಕಟ್ಟುವುದಕ್ಕಿಂತ, ಕಥೆಯನ್ನು, ಆ ಮೂಲಕ ಬದುಕನ್ನು ತೋರಿಸುವ ಹಾಗೆ ಕಥೆಗೆ ಆಕಾರ ಕೊಡುವುದು ಇನ್ನೂ ಗಹನವಾದ, ಹೆಚ್ಚಿನ ತೃಪ್ತಿಯನ್ನು ಕೊಡುವ ಕಥೆಗಳ ಸೃಷ್ಟಿಗೆ ಕಾರಣವಾಗುತ್ತದೆ. ಹಾಗಾಗುವುದಕ್ಕೆ ಬೇಕಾದಂಥ ಸಿದ್ಧತೆಯ ಅಂಶಗಳು ಪ್ರಸನ್ನ ಅವರಲ್ಲಿ ಧಾರಾಳವಾಗಿವೆ. + + + +ಸಾಹಿತ್ಯದ ನಿಕಟ, ಪ್ರೀತಿಪೂರ್ವಕ ಓದು, ಸಣ್ಣಪುಟ್ಟ ಸಂಗತಿಗಳನ್ನು ಗ್ರಹಿಸುವ ಸಾಮರ್ಥ್ಯ, ವಾಸ್ತವದ ವಿವರಗಳನ್ನು ಮರೆಯದ ಎಚ್ಚರ ಇವೆಲ್ಲ ಪ್ರಸನ್ನ ಅವರಲ್ಲಿವೆ. ಮುಖ್ಯವಾಗಿ ಬೇಕಾದದ್ದು ಘಟನೆ ಪ್ರಧಾನವಾದ ಕಥೆಯನ್ನು ಹೇಳಬೇಕೆಂಬ ಹಂಬಲಕ್ಕಿಂತ ಹೆಚ್ಚಾಗಿ ಬದುಕನ್ನು ನೋಡುವ ಕ್ರಮವನ್ನು ಚಿತ್ರಿಸುವ ಧ್ಯಾನಶೀಲತೆ ಮತ್ತು ಅರ್ಥವನ್ನು ದಾಟಿಸುವ ಭಾಷೆಗಿಂತ ಮಿಗಿಲಾಗಿ ಅನುಭವವನ್ನೇ ಕಟ್ಟಿಕೊಡುವ ಭಾಷೆಯನ್ನು ವಶಮಾಡಿಕೊಳ್ಳುವ ಸಾಧನೆ. ಈಗಿರುವಂತೆ ಕಥೆಗಳು ಕುತೂಹಲ ತಣಿಸುವ, ಅರ್ಥಕ್ಕೆ ಹೆಚ್ಚು ಮನ್ನಣೆ ನೀಡುವ ಕಥೆಗಳಾಗಿವೆ. ಶ್ರೀ ಪ್ರಸನ್ನ ಅವರು ಅನುಭವವನ್ನೇ ಭಾಷೆಯಲ್ಲಿ ಕಟ್ಟಿಕೊಡುವ ದಿಕ್ಕಿನಲ್ಲಿ ಸಾಗುತ್ತ ಇನ್ನೂ ಉತ್ತಮ ಕಥೆಗಳನ್ನು ನೀಡಲಿ ಎಂದು ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_39.txt b/Kenda Sampige/article_39.txt new file mode 100644 index 0000000000000000000000000000000000000000..82dca754bfdd05596447512dcdab163e2fed92b1 --- /dev/null +++ b/Kenda Sampige/article_39.txt @@ -0,0 +1,19 @@ +ಕೊನಾರ್ಕ್‌ನ ಸೂರ್ಯದೇಗುಲದಲ್ಲಿ ಯಥೇಚ್ಛವಾಗಿರುವ ಮಿಥುನ ಶಿಲ್ಪಗಳು ಮಡಿವಂತರನ್ನು ಬೆಚ್ಚಿಬೀಳಿಸುತ್ತವೆ. ಪರಸ್ಪರಾಲಿಂಗನದಲ್ಲಿರುವ ಹಾಗೂ ಮೈಥುನದಲ್ಲಿ ನಿರತವಾಗಿರುವ ಶಿಲ್ಪಗಳು ಭಾರತದ ಹಲವಾರು ದೇವಾಲಯಗಳಲ್ಲಿದ್ದರೂ ಸಹ ಕೊನಾರ್ಕ್‌ನ ಮಿಥುನ ಶಿಲ್ಪಗಳು ಹೆಚ್ಚು ವಿಶದವಾಗಿವೆ. ಈ ಮಿಥುನ ಶಿಲ್ಪಗಳು `ಕಪ್ಪು ಪಗೋಡ’ಕ್ಕೆ `ಕುಪ್ರಸಿದ್ಧಿ’ಯನ್ನು ತಂದಿವೆಯೆAದು ಏಷಿಯಾ ನಾಗರಿಕತೆಗಳ ವಿದ್ವಾಂಸ ಎ. ಎಲ್. ಬಾಷಂ ಹೇಳುತ್ತಾರೆ. + +(ಡಾ. ಜೆ. ಬಾಲಕೃಷ್ಣ) + +ಪೂಜಾಸ್ಥಾನಗಳಲ್ಲಿನ ಮಿಥುನ ಶಿಲ್ಪಗಳ ಪ್ರಾಮುಖ್ಯತೆ ಅಥವಾ ಅವಶ್ಯಕತೆಯ ಬಗ್ಗೆ ಹಲವಾರು ವಿವರಣೆಗಳಿವೆ. ಕೆಲವರ ಪ್ರಕಾರ ದೇಗುಲಗಳಲ್ಲಿನ ದೇವದಾಸಿಯರ `ರಂಜನೀಯ’ ಬದುಕನ್ನು ಪ್ರಕಟಿಸುವುದು ಅಂತಹ ಶಿಲ್ಪಗಳ ಉದ್ದೇಶವಾಗಿದ್ದರೆ ಇನ್ನು ಕೆಲವರ ಪ್ರಕಾರ ದೇವಾಲಯದ ಒಳಗಿನ ಪಾರಮಾರ್ಥಿಕ ಪ್ರಪಂಚಕ್ಕೆ ತದ್ವಿರುದ್ಧವಾಗಿ ದೈಹಿಕ ಸುಖಭೋಗಗಳ ಪರಿಚಯ ಮಾಡಿಸುವುದಾಗಿದ್ದಿರಬಹುದು ಅಥವಾ ಲೈಂಗಿಕ ಶಿಕ್ಷಣ ಕೊಡುವುದೂ ಸಹ ಅವುಗಳ ಉದ್ದೇಶವಾಗಿರಬಹುದು. ಕೊನಾರ್ಕ್‌ನ ಸೂರ್ಯ ದೇವಾಲಯ ತಂತ್ರ ಹಾಗೂ ಶಾಕ್ತಾರಾಧನೆಯ ಕೇಂದ್ರವಾಗಿದ್ದಿರಬಹುದೆಂದೂ ಅದರಿಂದಾಗಿ ಆ ದೇವಾಲಯದಲ್ಲಿ ಯಥೇಚ್ಛವಾಗಿ ಮಿಥುನ ಶಿಲ್ಪಗಳಿವೆಯೆಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಆದರೆ ಆ ದೇವಾಲಯದಲ್ಲಿ ತಂತ್ರ ಹಾಗೂ ಶಾಕ್ತ್ಯಾರಾಧನೆಯಿದ್ದ ಯಾವುದೇ ಕುರುಹುಗಳಿಲ್ಲ. ಕೆಟ್ಟ ಕಣ್ಣಿನ `ದೃಷ್ಟಿ’ ಆಗದಿರಲೆಂದೂ ಅಥವಾ ದೈವ ಭಕ್ತರ ಮನೋಬಲವನ್ನು ಪರೀಕ್ಷಿಸಲು ಅಂಥ ಶಿಲ್ಪಗಳಿರುತ್ತಿದ್ದುವೆಂಬ ಕೆಲವರ ವಾದವನ್ನು ಕೊನಾರ್ಕ್‌ ಸೂರ್ಯದೇವಾಲಯದ ಬಗ್ಗೆ ಅಧ್ಯಯನ ನಡೆಸಿರುವ ದೇವಾಲ ಮಿತ್ರ ಒಪ್ಪುವುದಿಲ್ಲ. ಅವರ ಪ್ರಕಾರ ಆ ಮಿಥುನ ಶಿಲ್ಪಗಳು ಯಾವುದೇ `ಕಾಮಶಾಸ್ತç’ದ ವಿವರಣೆಯಲ್ಲ ಅಥವಾ ತಂತ್ರಾರಾಧನೆಯ ಸಂಕೇತಗಳಲ್ಲ. ಶಿಲ್ಪಿ ದೇವಾಲಯದಲ್ಲಿನ ಇನ್ನಿತರ ಶಿಲ್ಪಗಳನ್ನು ರಚಿಸಿದ ರೀತಿಯಲ್ಲಿಯೇ ಮಿಥುನ ಶಿಲ್ಪಗಳನ್ನೂ ರಚಿಸಿದ್ದಾನೆ. ಮಿಥುನ ಶಿಲ್ಪಗಳನ್ನೇನೂ ಆತ ಉನ್ನತ ಮಟ್ಟದ ಅಥವಾ ಕೀಳ್ಮಟ್ಟದ ದೃಷ್ಟಿಯಿಂದ ಕಂಡಿರಲು ಸಾಧ್ಯವಿಲ್ಲ. ಬಹುಶಃ ಅದೇ ಭಾವನೆಯೇ ಆಗಿನ ಸಮಾಜದ್ದೂ ಸಹ ಆಗಿರಬಹುದು. ಆಧುನಿಕ ನೋಟಕ್ಕೆ ಬೆಚ್ಚಿ ಬೀಳಿಸುವ ಆ ಮಿಥುನ ಶಿಲ್ಪಗಳು ಆಗಿನ ಸಮಾಜಕ್ಕೆ ಪ್ರಾಕೃತಿಕ ಕ್ರಿಯೆಯಾದ ಲೈಂಗಿಕತೆಯ ಸಹಜ ಅಭಿವ್ಯಕ್ತಿಯಾಗಿರಬಹುದು.ಮಿಥುನ ಚಿತ್ರಗಳು ಶಕ್ತಿಯ ಸಂಕೇತ. ಎರಡು ಶಕ್ತಿಗಳು ಒಂದೇ ದೇವರಲ್ಲಿ ಮಿಲನವಾಗಿ ದೇವನ ಏಕತೆಯನ್ನು ಸೂಚಿಸುತ್ತದೆ ಹಾಗೂ ಯೋನಿ-ಲಿಂಗ ಇವು ಪ್ರಪಂಚ ಸೃಷ್ಟಿಗೆ ಸಂಕೇತ; ಅವೆರಡರ ಕೂಡುವಿಕೆಯು ಕರ್ಮವನ್ನು ನಿರೂಪಿಸುತ್ತದೆ ಎಂಬುದು ಪ್ರಾಚೀನ ಅಧ್ಯಾತ್ಮಿಕರ ವಿವರಣೆ. + +ಖ್ಯಾತ ಸಮಾಜವಾದಿ, ರಾಜಕಾರಣಿ ಹಾಗೂ ಕಲಾರಸಿಕ ಡಾ.ರಾಮ ಮನೋಹರ ಲೋಹಿಯಾ ತಮ್ಮ ಲೇಖನ `ಮೀನಿಂಗ್ ಇನ್ ಸ್ಟೋನ್’ನಲ್ಲಿ (Meaning in stone) ಕೊನಾರ್ಕ್‌ನ ಮಿಥುನ ಶಿಲ್ಪಗಳ ಬಗ್ಗೆ ಈ ರೀತಿ ಹೇಳಿದ್ದಾರೆ: `ದೆಲ್‌ವಾರ, ಚಿತ್ತೋರ್ ಮತ್ತು ವಾರಂಗಲ್‌ಗಳೂ ಕೂಡಾ ಇಷ್ಟೇ ಸಮೃದ್ಧವಾಗಿವೆಯಾದರೂ ಅವುಗಳಲ್ಲಿ ಖಜುರಾಹೋ, ಕೊನಾರ್ಕ್‌ಗಳ ಶಿಲ್ಪಗಳಲ್ಲಿನ ಲೈಂಗಿಕ ಸಮೃದ್ಧಿ ಕಾಣಸಿಗುವುದಿಲ್ಲ. ಈ ಲೈಂಗಿಕ ಸಮೃದ್ಧಿಯ ಅಭಿವ್ಯಕ್ತತೆಗೆ ಧಾರ್ಮಿಕ ವಿವರಣೆಗಳಿರುವುದರ ಜೊತೆಗೆ ಇಂದ್ರಿಯಾಸಕ್ತಿಯ ಮೂಲ ಪ್ರವೃತ್ತಿಯೂ ಇದ್ದಿರಬಹುದು. ಆಲಿಂಗನದ ಚಿತ್ರಣವಂತೂ ಇಂಡಿಯಾದ ಆರಂಭಿಕ ಕಲೆಯ ಮೂಲಕ್ಕೇ ಹೋಗುತ್ತದೆ. ಇಂಡಿಯಾದ ಶಿಲ್ಪಿಗಳೂ, ಸಂತರೂ ಸೌಂದರ್ಯವೆನ್ನುವುದು ಲೈಂಗಿಕತೆಗೆ ಸಂಬಂಧವುಳ್ಳದ್ದೆಂಬುದನ್ನೂ, ಗಂಡಸಿನ ದೃಷ್ಟಿಗಂತೂ ಈ ಭೂಮಿಯಲ್ಲಿ ಅತ್ಯಂತ ಸುಂದರವಾದದ್ದೆಂದರೆ ಸ್ತ್ರೀ ದೇಹವೇ ಎಂಬುದನ್ನೂ ಚೆನ್ನಾಗಿ ತಿಳಿದಿದ್ದರು. ಬೇರೆ ಬೇರೆ ಕಡೆಗಳಲ್ಲಿನ ವಿಧವಿಧದ ಆಲಿಂಗನ ಭಂಗಿಗಳಲ್ಲಿ ದೇಹದ ಬಾಗುಬಳುಕುಗಳು ಆಗಲೇ ಚಿತ್ರಿತವಾಗಿದ್ದರೂ ಖಜುರಾಹೊ ಮತ್ತು ಕೊನಾರ್ಕ್‌ ರತಿಕ್ರೀಡೆಗಳಲ್ಲಿ ಸ್ತ್ರೀ ದೇಹಕ್ಕೆ ಸಾಧ್ಯವಾಗಬಹುದಾದ ಸಮಸ್ತ ಭಂಗಿಗಳೂ, ಸಮಸ್ತ ಅಂಗೋದ್ರೇಕಗಳೂ ಮೈದಾಳಿಬಿಟ್ಟಿವೆ. ಇದು ಸೌಂದರ್ಯದ ಆತ್ಯಂತಿಕ ಅನ್ವೇಷಣೆಯೇ ಇದ್ದೀತು.’ + + + +ಒರಿಸ್ಸಾದ ದೇವಾಲಯಗಳ ಹೊರಭಾಗದಲ್ಲಿ ಯಥೇಚ್ಛವಾಗಿ ಶಿಲ್ಪಕಲೆ ಇರುವಂತೆ ಅದಕ್ಕೆ ತದ್ವಿರುದ್ಧವಾಗಿ ದೇವಾಲಯಗಳ ಒಳಭಾಗ ಭಣ ಭಣಗುಟ್ಟುವಂತೆ ಖಾಲಿಯಾಗಿರುತ್ತದೆ. ಇದನ್ನು ಗಮನಿಸಿದ ಖ್ಯಾತ ಕಲೆ-ಸಂಸ್ಕೃತಿಯ ವಿದ್ವಾಂಸ ಆನಂದ ಕೂಮಾರಸ್ವಾಮಿ, `ಬದುಕೆಂಬುದು ಒಂದು ಮಾಯಾ ಪರದೆ ಇದ್ದಂತೆ. ಅದರ ಹಿಂಭಾಗದಲ್ಲಿ ದೇವರಿದ್ದಾನೆ. ದೇವಾಲಯದ ಹೊರಭಾಗದಲ್ಲಿ ನಮ್ಮ ಬದುಕಿನ, ಸಂಸಾರದ ಚಿತ್ರಣವಿರುತ್ತದೆ. ಅಲ್ಲಿನ ಕೆತ್ತನೆ, ಚಿತ್ರಣಗಳು ಬದುಕೆಂಬ ಮಾಯಾಲೋಕವನ್ನೂ, ಹುಟ್ಟು-ಸಾವುಗಳ ಬದುಕಿನ ಚಕ್ರಕ್ಕೆ ಮನುಷ್ಯನನ್ನು ಬಂಧಿಸಿರುವ ಆತನ ಆಸೆ ಆಕಾಂಕ್ಷೆಗಳನ್ನೂ, ನೋವು ನಲಿವುಗಳನ್ನೂ ಪ್ರತಿಬಿಂಬಿಸುತ್ತವೆ. ಅದೇ ದೇವಾಲಯದ ಒಳಗೆ, ಸಣ್ಣ ದೀಪಗಳ ಮಬ್ಬಿನ ಕೋಣೆಯಲ್ಲಿ ದೇವರ ಪ್ರತಿಮೆ ಒಂಟಿಯಾಗಿ ದೂರದಿಂದ ಖಾಲಿಕೋಣೆಗಳ ಮೂಲಕ ಹಾದುಬರುವ ವ್ಯಕ್ತಿಗೆ ಕಾಣುತ್ತದೆ. ಈ ರೀತಿ ದೇವರನ್ನು ಕಾಣಬೇಕಾದಲ್ಲಿ ಬದುಕೆಂಬ ಮಾಯಾಪರದೆಯ ಮೂಲಕ ಮನುಷ್ಯ ಹಾದು ಬರಬೇಕೆನ್ನುವುದನ್ನು ಸಾಂಕೇತಿಕವಾಗಿ ತೋರಿಸಬೇಕೆಂಬುದನ್ನು ಒರಿಸ್ಸಾದ ದೇವಾಲಯದ ವಾಸ್ತುಶಿಲ್ಪಿಗಳು ಮೊದಲಿನಿಂದಲೂ ಪ್ರಜ್ಞಾಪೂರ್ವಕವಾಗಿಯೋ, ಅಪ್ರಜ್ಞಾಪೂರ್ವಕವಾಗಿಯೋ ತಿಳಿದಿದ್ದರು’ ಎಂದಿದ್ದಾರೆ. ದೇವಾಲಯದ ಹೊರ ಮೈ ಆವರಣದಲ್ಲಿ ಮನುಷ್ಯನ ಬದುಕಿನ ನೋವು-ನಲಿವುಗಳ, ಆಸೆ-ಆಕಾಂಕ್ಷೆಗಳ ಚಿತ್ರಣವಿದೆ ಎಂದಾದಲ್ಲಿ ಸಹಜವಾಗಿ ಅವುಗಳಲ್ಲಿ ಪ್ರೀತಿ-ಪ್ರೇಮಗಳ, ಮೈಥುನಗಳ ಚಿತ್ರಣವಿರಲೇಬೇಕು. ಮನೋವಿಜ್ಞಾನಿ ಹಾಗೂ ಮನೋವಿಶ್ಲೇಷಣೆಯ ಪಿತಾಮಹ ಸಿಗ್ಮಂಡ್ ಫ್ರಾಯ್ಡ್ ಪ್ರಕಾರ ಲೈಂಗಿಕತೆಯೇ ಮನುಷ್ಯನ ಬದುಕಿನ ಮೂಲ ಚಾಲನ ಶಕ್ತಿ. + +ಮನುಷ್ಯ ಪ್ರಾಚೀನ ಕಾಲದಿಂದಲೂ ಚಿತ್ರ ಹಾಗೂ ಶಿಲ್ಪ ರಚನೆ ಆರಂಭಿಸಿದಾಗಲಿಂದಲೂ ಸಹ ತನ್ನ ಕಲೆಯಲ್ಲಿ ಲೈಂಗಿಕ ವಿಷಯಗಳನ್ನು ಅಭಿವ್ಯಕ್ತಿಪಡಿಸುತ್ತಲೇ ಬಂದಿದ್ದಾನೆ. ಪ್ರಾಚೀನ ಸಾಹಿತ್ಯದಲ್ಲಿಯೂ ಸಹ ಲೈಂಗಿಕತೆಯ ಬಗ್ಗೆ ಮುಚ್ಚುಮರೆ ಇರಲಿಲ್ಲ. 12ನೇ ಶತಮಾನದಲ್ಲಿ ರಚಿತವಾಗಿರುವ ಜಯದೇವನ `ಗೀತಗೋವಿಂದ’ದಲ್ಲಿ ರಾಧಾ-ಮಾಧವರ ಸುರತ ವರ್ಣನೆಯಿದೆ. ಕಲಾವಿದರಿಗೆ ಬೆತ್ತಲೆ ಹಾಗೂ ಮಿಥುನ ಶಿಲ್ಪಗಳು ಬರೇ ವಸ್ತುಗಳಾಗಿರಲಿಲ್ಲ, ಅವು ಕಲೆಯ ಒಂದು ವಿಧಾನವಾಗಿತ್ತು. ಕಲಾವಿದನಿಗೆ ಕಲೆಯಲ್ಲಿ ಅಶ್ಲೀಲತೆ ಎಂಬುದಿಲ್ಲ. + + + +ಬೆತ್ತಲೆ ಕಲೆಗೂ ಮಾನವನ ಕಾಮಾಸಕ್ತಿಗೂ ನಿಕಟವಾದ ಸಂಬಂಧವುಂಟು. `ಬೆತ್ತಲೆ ಚಿತ್ರ-ಶಿಲ್ಪಗಳು ವೀಕ್ಷಕನಲ್ಲಿ ವಿಷಯಾಸಕ್ತಿಯನ್ನು ಮೂಡಿಸಿದರೆ ಅದು ಕೆಟ್ಟ ಕಲೆ ಮತ್ತು ಅನೈತಿಕ’ ಎಂದು ಪ್ರೊ. ಅಲೆಕ್ಸಾಂಡರ್ ಎಂಬ ವೇದಾಂತಿ ಹೇಳಿದರೆ ಅದನ್ನು ವಿರೋಧಿಸಿದ ಕಲಾ ವಿಮರ್ಶಕ ಕ್ಲರ್ಕ್ ಅವರು, `ಯಾವುದೇ ಬೆತ್ತಲೆ ಚಿತ್ರ-ಶಿಲ್ಪ, ಅದು ಅಮೂರ್ತವಾಗಿದ್ದರೂ ಸಹ ವೀಕ್ಷಕನಲ್ಲಿ ಕಿಂಚಿತ್ ರಾಗವನ್ನೂ ಉಂಟು ಮಾಡದಿದ್ದರೆ ಅದು ಕೆಟ್ಟ ಕಲೆ ಮತ್ತು ಸುಳ್ಳು ನೈತಿಕತೆ’ ಎಂದಿದ್ದಾನೆ. ಮಾನವನ ಲೈಂಗಿಕತೆಯನ್ನು ಪ್ರಚೋದಿಸದೆ, ಲೈಂಗಿಕ ಆಕಾಂಕ್ಷೆಯನ್ನು ಉನ್ನತ ಮಟ್ಟಕ್ಕೆ ಒಯ್ಯಬಲ್ಲ ಬೆತ್ತಲೆ ಕಲೆ ತನ್ನದೇ ಆದ ಜೀವನ ವೇದಾಂತವನ್ನು ಒಳಗೊಂಡಿದೆ. ಕೊನಾರ್ಕ್‌ನ ಸೂರ್ಯ ದೇಗುಲದ ಮಿಥುನ ಶಿಲ್ಪಗಳು ಇದಕ್ಕೆ ಉತ್ತಮ ನಿದರ್ಶನವಾಗಬಲ್ಲವು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_390.txt b/Kenda Sampige/article_390.txt new file mode 100644 index 0000000000000000000000000000000000000000..3a6fb3f5f0f638e3b9e1230edec2e14eb1ca10dc --- /dev/null +++ b/Kenda Sampige/article_390.txt @@ -0,0 +1,197 @@ + + +ಆ ಊರಿನಲ್ಲಿ ಅಂದು ಸಂತೆ. ವಾರದಲ್ಲೊಂದು ದಿನ ಸಂತೆಯೆಂದ ಬಳಿಕ ಹಳ್ಳಿಯೆಲ್ಲ ಅಂದು ಗದ್ದಲದಿಂದ ತುಂಬಿಯೇ ಇದ್ದಿತು. ಅದರಲ್ಲೂ ಜಿಲ್ಲಾ ಕಲೆಕ್ಟರರವರು ಖುದ್ದಾಗಿ ಚಿತ್ರೈಸಿದ್ದಾರೆ. ಜಮಾಬಂದಿಯಲ್ಲ, ಸ್ಥಳ ತನಿಖಿಯಲ್ಲ, ಕಚೇರಿಯಲ್ಲ – ಒಬ್ಬರೇ. ಎಂದಿನಂತೆ ಯಾರೂ ಸರಬರಾಯಿಯ ತೊಂದರೆಗೀಡಾಗಬಾರದೆಂದು ಈ ದೊರೆಗಳು ತಮ್ಮ ಬಟ್ಲರನನ್ನೆ ಸಂತೆಗೆ ಕಳುಹಿ ಎಲ್ಲ ಸಾಮಾನನ್ನು ನಗದಾಗಿ ಕ್ರಯಕ್ಕೆ ಕೊಂಡುಬರಲು ತಿಳಿಸಿದ್ದಾರೆ. ಮೊಕ್ಕಾಂ ನಾಲ್ಕು ದಿನವಂತೆ. ಉಗ್ರಾಣಿಗೆ ಮಿಕ್ಕ ಇಂತಹ ಸರ್ಕೀಟು ಕಾಲಗಳಲ್ಲಾದರೆ ಈ ನಾಲ್ಕು ದಿನಗಳೂ ಒಂದೇ ಉದ್ದ ಹಗಲಿನಂತಾಗುತ್ತಿದ್ದಿತು; ಶಾನುಭಾಗರಿಗೆ ಕ್ರೊಸ್ ಸ್ಟಾಪು (Cross staff) ಸಂಕೋಲೆಗಳ ಸನ್ನಾಹದಿಂದ ರಿಕಾರ್ಡು ಲೆಕ್ಕಗಳ ಹಾಗೂ ಅಡಂಗಲುಗಳ ದಫ್ತರಿನಲ್ಲಿ ಅವಿತುಕೊಂಡಂತೆ ಜೀವಿಸುವಂತಾಗುತಿದ್ದಿತು. ಪಠೇಲರ ಮಾತೇ ಬೇಡ. ಗ್ರಾಮದ ಗ್ರಾಮವನ್ನೇ ತನ್ನ ಉದರದಲ್ಲಿಟ್ಟುಕೊಂಡು ಕಾಪಾಡುವ ಗ್ರಾಮದೇವತೆಯಾಗಿರುವ ಗ್ರಾಮೋದರನಾಗಿ ಮೆರೆವಂತಾಗುತಿದ್ದಿತು. ಈ ಸಲ ಮಾತ್ರ, ಉಗ್ರಾಣಿ, ಶಾನುಭಾಗರ ಎಮ್ಮೆಯಿದ್ದ ಹಟ್ಟಿಯ ಮಾಡಿಗೆ ಮುಳಿಛಾವಣಿ ಮಾಡುತಿದ್ದಾನೆ. ಶಾನುಭಾಗರು ಪಠೇಲರ ಒಕ್ಕಲುಗಳಿಗಾಗಿ ಹೊಸ ಚಾಲಗೇಣಿ ಚೀಟುಗಳನ್ನು ಬರೆದು ಅವುಗಳಿಗೆ ಅವರ ಬಲಗೈ (ಎಡಗೈ?) ಹೆಬ್ಬೆಟ್ಟಿನ ಮುದ್ರೆಗಳನ್ನು ಒತ್ತಿಕೊಳ್ಳುತ್ತಾರೆ. ಮತ್ತು ಪಠೇಲರು ವೀಳೆದೆಲೆ ಜಗಿಯುತ್ತ ತೂಗುಮಂಚದ ಹಲಗೆಯ ಮೇಲೆ ಪವಡಿಸಿದ್ದು ಅಡಿಕೆ ಹಾಳೆಯ ಬೀಸಣಿಗೆಯಿಂದ ಗಾಳಿ ಹಾಕಿಕೊಳ್ಳುತ್ತಿದ್ದಾರೆ. + +ಕಲೆಕ್ಟರರ ಸವಾರಿ ಆ ಊರಿಗೆ ಬಂದುದೇಕೆಂದು ಯಾರಿಗೂ ತಿಳಿದಿಲ್ಲ; ಅವರ ಆಫೀಸಿನ ಗುಮಾಸ್ತರಾಗಲಿ, ಪೇದೆಗಳಾಗಲಿ ಇದ್ದಿದ್ದರೆ, ಪಟೇಲರಿಂದ ಸಿಹಿಯಾಳಗಳನ್ನೂ, ಶಾನುಭಾಗರಿಂದ ನಸ್ಯವನ್ನೂ, ಉಗ್ರಾಣಿಯಿಂದ ಧೂಪದೆಣ್ಣೆಯ ಉಂಡೆಗಳನ್ನೂ ಕಾಣಿಕೆ ಪಡೆವಾಗ, ಕಲೆಕ್ಟರರ ಮನಸ್ಸಿನ ಇಂಗಿತವನ್ನು (ತಮಗೇ ತಿಳಿದಿದೆ ಎಂಬಂತೆ) ಮೆಲ್ಲನೆ ನಸುನಗುತ್ತ ಅಥವಾ ತುಸು ಗಂಭೀರವಾಗಿ ಸಣ್ಣ ಸ್ವರದಲ್ಲಿ ಸೂಚಿಸುತ್ತಿದ್ದರು. ಈಗ ದೊರೆಗಳ ಜತೆಯಲ್ಲಿ ಇರುವ ಪರಿವಾರವೆಲ್ಲವೂ ಒಬ್ಬ ಬಟ್ಲರನಲ್ಲೇ ಅಡಕವಾಗಿದ್ದಿತು. ದೊರೆಗಳಿಗೆ ಅಗತ್ಯವಾದುದನ್ನು ತರಲು ಅವನು ಗ್ರಾಮದಲ್ಲಿ ಕಾಣಸಿಗುವನು. ದೊರೆಗಳ ಜತೆಯವನಾಗಿ ಹಲವು ಜಿಲ್ಲೆಗಳಲ್ಲಿ ಇರುತಿದ್ದನಾದ ಕಾರಣ ಅವನ ಮಾತುಗಳು ಎಲ್ಲ ದ್ರಾವಿಡ ಭಾಷೆಗಳ ಒಂದು ಸಮ್ಮಿಲಿತ ಭಾಷೆಯಾಗಿ ಹೊರಡುತ್ತಿದ್ದುವು. ನಮ್ಮ ಶುದ್ಧ ತುಳುವರಿಗೆ ಅವನೊಡನೆ ಸಂಭಾಷಣೆ ಮಾಡುವುದೆಂದರೆ – ಹಕ್ಕಿಗಳೊಡನೆ ಮಾತಾಡಿದ ಹಾಗಾಗುತಿದ್ದಿತು. ಅವನೊಡನೆ ಯಾವ ಭಾಷೆಯಿಂದ ಆಡಿದರೂ ಅವನಿಗೆ ತಿಳಿಯುತಿದ್ದಿತು. ಅವನ ನುಡಿಗಟ್ಟು ಮಾತ್ರ ಯಾವನಿಗೂ ಅರ್ಥವಾಗುತ್ತಿರಲಿಲ್ಲ. ಹೀಗಾಗಿ ಕಲೆಕ್ಟರರು ಬಂದುದೇಕೆಂದು ಯಾರಿಗೂ ತಿಳಿಯಲೇ ಇಲ್ಲ. ತಿಳಿಯದಿದ್ದರೆ ಸುಮ್ಮನಿರುವರೇ? ಊಹಾಪೋಹಗಳಿಗೆ ಪ್ರಾರಂಭವಾಯಿತು. ಯಾರೋ ಒಬ್ಬ ಜೈನ ಶ್ರೀಮಂತನು ಮಡಿದಿರುವನಂತೆ, ಅವನ ಆಸ್ತಿಗೆ ವಾರಸುದಾರರಿಲ್ಲದುದರಿಂದ, ಅವನ ಆಸ್ತಿಯ ನಿಗಾ ನೋಡಲು, ಅದಕ್ಕೆ ಸರಕಾರವೇ ವಾರಸಿನದೆಂದು ತೀರ್ಮಾನಿಸಲು ಅವರು ಬಂದಿರುವರೆಂದರು; ಗುತ್ತಿನ ಮನೆಯವರು ಹೊಸ ಭೂತಗುಡಿಯನ್ನು ಕಟ್ಟಿಸಲು ತೋಡುವಾಗ ಅಲ್ಲಿ ಕೊಪ್ಪರಿಗೆ ದೊರೆತುದನ್ನು ಇವರು ಹೇಗೋ ತಿಳಿದುಕೊಂಡು ಅದರ ಗೊತ್ತು ಹಚ್ಚಲು ಬಂದಿರುವರೆಂದರು; ಸಂಜೆ ಹೊತ್ತಿಗೆ ಕೆಲವರು ಎಮ್ಮೆಗಳನ್ನು ಯಾವುದೋ ಊರಿನಿಂದ ಈ ಗ್ರಾಮದ ಹಾದಿಯಾಗಿ ಸಾಗಿಸಿ ಮಾರುವರಂತೆ; ಅವರು ಕಳ್ಳರೆಂದು ಅವರನ್ನು ಹಿಡಿಯಲು ತಾವೇ ದಯಮಾಡಿಸಿದ್ದಾರೆಂದರು; ಹಲವು ಬೇನಾಮೀ ಅರ್ಜಿಗಳು ಪಠೇಲರ ವಿಷಯವಾಗಿ ಕಲೆಕ್ಟರರಿಗೆ ತಲುಪಿರಲು ಅವುಗಳ ವಿಚಾರಣೆಗಾಗಿ ಸ್ವತಃ ಚಿತ್ತೈಸಿರುವರೆಂದರು; ಪುನಃ ಹೊಸ ಸೆಟ್ಲ್ಮೆಂಟನ್ನು ಜ್ಯಾರಿಗೆ ತರುವರು, ಎಲ್ಲರಿಗೆ ದಾಕು ಹಾಕಿಸುವರು, ಆ ಊರನ್ನು ದೊಡ್ಡ ಶಹರನ್ನಾಗಿ ಮಾಡಿ ಈ ತಾಲೂಕಿನ ರಾಜಧಾನಿಯಾಗಬೇಕೆಂದು ಹೇಳುತ್ತಿರುವರು, ಯುದ್ಧಕ್ಕೆ ಜನ – ಸರಂಜಾಮುಗಳನ್ನು ಇಲ್ಲಿಂದ ಮಾಡುವ ಆಲೋಚನೆಯಲ್ಲಿರುವರು; ಇತ್ಯಾದಿ ಇತ್ಯಾದಿ ವದಂತಿಗಳು ಹರಡಿದುವು – ಪಿಸುಮಾತಿನಲ್ಲೇ. ಇವೆಲ್ಲವೂ ಒಂದೆರಡು ಮೂರು ಒಂದಾಗಿ, ಭೂತ ಗುಡಿಯ ಬಳಿಯಲ್ಲಿ ಕೆಲವರು ಎಮ್ಮೆಗಳನ್ನು ಕೂಡಿಸಿ ಯುದ್ಧದ ಸರಂಜಾಮಿಗಾಗಿ ಕಳುಹುವರಂತೆ – ಜೈನ ಶ್ರೀಮಂತನು ಮಡಿದಿರುವನೆಂದು ಬೇನಾಮೀ ಅರ್ಜಿಗಳನ್ನು ಪಠೇಲರು ಬರೆದುಕೊಂಡು ಮೃತರ ಆಸ್ತಿಯಿಂದ ಒಂದು ಕೊಪ್ಪರಿಗೆಯನ್ನು ಯುದ್ಧದ ಖರ್ಚಿಗೆ ಪಡೆಯುವಂತೆ ಸೂಚಿಸುವುದಕ್ಕಾಗಿ ಬಂದವರಂತೆ – ಎಂದೆಷ್ಟೋ ಹರಟೆಗಳೂ, ಪುರಾಣಗಳೂ, ಅನ್ಯಾಯ ವಾರ್ತೆಗಳೂ ಹಬ್ಬಿದುವು – ಪಿಸುಮಾತಿನಲ್ಲೇ. + +ಪಿಸುಮಾತಿನಲ್ಲೇ, – ಏಕೆಂದರೆ ಈ ದೊರೆಗಳಿಗೆ ತುಳು, ಕನ್ನಡ, ಕೊಂಕಣಿ ಭಾಷೆಗಳು ಚೆನ್ನಾಗಿ ಬರುತಿದ್ದುವು. ಶ್ರೀಮಂತರೊಬ್ಬರ ಮನೆಯಲ್ಲಿ ದೇವಾಲಯಕ್ಕಾಗಿ ಮೋಪನ್ನು ಕಾಡಿನಿಂದ ಕಡಿದು ತರಲು ನಡೆದ ಹಂಚಿಕೆಯೊಂದನ್ನು ಇವರು ವೇಷ ಪಲ್ಲಟಿಸಿ ರಾತ್ರಿ ಹೊತ್ತಿಗೆ ಹೊಂಚಿನಿಂದ ಕೇಳಿ, ಮರುದಿನ ಭಜಕರು ಕಾಡಿನಲ್ಲಿ ಪ್ರವೇಶಿಸುವಾಗ ಅಲ್ಲಿದ್ದು ಅವರನ್ನು ವಿಪರ್ಯಾಸಕ್ಕೊಡ್ಡಿದರೆಂದೂ ಗ್ರಾಮದಲ್ಲೊಂದು ವೃತ್ತಾಂತವು ಹರಡಿದ್ದಿತು. ಅದಲ್ಲದೆ ಆ ಬಟ್ಲರನೂ ಆಗಾಗ ಗ್ರಾಮದಲ್ಲಿ ಸುಳಿದಾಡುತ್ತಿದ್ದನು; ದೊರೆಗಳು ಬೆಳಿಗ್ಗೂ, ಸಂಜೆಗೂ ಒಬ್ಬರೇ ಗ್ರಾಮದಲ್ಲಿ ಯಾರೊಡನೆ ಮಾತಾಡದೆ, ದಡದಡನೆ ಮೂರು ನಾಲ್ಕು ಮೈಲು ಅಡ್ಡಾಡುತ್ತಿದ್ದರು. ಹೀಗಾಗಿ ಉಸಿರಿನೊಳಗೆ ಮಾತುಗಳು ಸುಳಿಯುವಂತೆ ಮಾತ್ರ ಗ್ರಾಮಸ್ಥರು ಪರಸ್ಪರವಾಗಿ ಇಂತಹ ಊಹೆಗಳನ್ನು ಆಡಿಕೊಳ್ಳುತ್ತಿದ್ದರು. + +ಶಾನುಭಾಗರು ಪಠೇಲರ ಬರಹಗಾರರು. ಪಠೇಲರು ಪರಂಪರೆಯಾಗಿ ಬಂದಿದ್ದ ಹುದ್ದೆಯನ್ನು ನೋಡುತ್ತ ತಮ್ಮ ಒಕ್ಕಲುಗಳಷ್ಟೇ ಹೆಬ್ಬೆಟ್ಟಿನ ಮುದ್ರೆಯನ್ನೊತ್ತುವ ವಿದ್ಯಾವಂತರಾಗಿದ್ದರು. ಪಠೇಲರಿಗೆ ಅರ್ಧ ಗ್ರಾಮವೇ ಅಡಿಯಾಳಾಗಿದ್ದಿತು; ಇಂತಹವರ ಹಣೇಬರಹವೇ ಶಾನುಭಾಗರ ಕೈಯಲ್ಲಿದ್ದಿತು. ಉಗ್ಗಪ್ಪ ಶೆಟ್ರು ಪಠೇಲರು, ನಾರಾಯಣ ರಾಯರು ಶಾನುಭಾಗರು – ಆದರೂ ನಾರಾಯಣ ಶೆಟ್ರು ಎಂದು ಪಠೇಲರ ಹೆಸರು ಎಂದು ಚಾಲಗೇಣಿ ಒಕ್ಕಲುಗಳ ಹೇಳಿಕೆಯಿದ್ದಿತು. ಅವರಿಬ್ಬರೊಳಗೆ ಮೈತ್ರಿ, ವಿಶ್ವಾಸ ಅಷ್ಟಾಗಿದ್ದಿತು. ಈ ಒಕ್ಕಲುಗಳಿಗೆ ಜಿನಸಿನ ಅಂಗಡಿಯಾಗಿ ನಾರಾಯಣ ರಾಯರ ಅಂಗಡಿಯೇ ಇದ್ದಿತು. ಚಾಲಗೇಣಿ ಸಲ್ಲಿಸಿ ಒಕ್ಕಲುಗಳು ಏನಾದರೂ ಉಳಿಸಿದ್ದರೆ ಅದನ್ನು ಆ ಅಂಗಡಿ ನುಂಗುತಿದ್ದಿತು. ಈ ಅಂಗಡಿಯಲ್ಲಿ ವ್ಯಾಪಾರ ಮಾಡದಿದ್ದರೆ ಒಕ್ಕಲುಗಳಿಗೆ ಮುಂದಣ ವರ್ಷ ಗೇಣಿಗೆ ಯಾವ ಗದ್ದೆಯೂ ದೊರೆಯುವಂತಿರಲಿಲ್ಲ; ಶಾನುಭಾಗರಿಗೆ ಆಯವು ಹೆಚ್ಚುವಂತಿರಲಿಲ್ಲ. ಗ್ರಾಮ ಉದ್ಯೋಗಸ್ಥನೆಂದು ಗೌರವ ಮಾತ್ರವಿದ್ದರೆ ಸಾಕೇ? ಗೌರವವೆಂಬುದೇನು ಆಹಾರ ಪದಾರ್ಥವಲ್ಲವಷ್ಟೇ? ಅಂಗಡಿ ವ್ಯಾಪಾರವೇ ಶಾನುಭಾಗರ ಜೀವನ ವ್ಯಾಪಾರವಾಗಿದ್ದಿತು. + +ಈ ಸಂತೆಯ ದಿನ ಕಲೆಕ್ಟರರು ಆ ಊರಿನಲ್ಲಿ ಮೊಕ್ಕಾಂ ಮಾಡಿದ ಮೂರನೆಯ ದಿನ. ಶಾನುಭಾಗರ ಮನೆಯಲ್ಲಿ ಶಾನುಭಾಗರೇ ಅಡುಗೆ ಮಾಡುವ ದಿನವಾಗಿ ಬಂದಿದ್ದಿತು. ಶಾನುಭಾಗರ ಕುಟುಂಬ ನಾಗಮ್ಮ ಕೆರೆಗೆ ಹೋಗಿದ್ದರು; ಅವರು ನಾಳಿನ ದಿನ ತಾನೇ ಮನೆಯೊಳಗೆ ಅಡುಗೆ ಮಾಡಬಹುದಾಗಿದ್ದಿತು. ಹೀಗಾಗಿ ಶಾನುಭಾಗರು ಪಠೇಲರ ಚಾವಡಿಯಿಂದ ಗೇಣಿ ಚೀಟುಗಳನ್ನು ಬೇಗನೇ ಬರೆದು ಮುಗಿಸಿ, ದಫ್ತರು ಕಟ್ಟಿ ಹೊರಡುವುದರಲ್ಲಿದ್ದರು. ಅಷ್ಟರಲ್ಲಿ ಪಠೇಲರ ಧರ್ಮಪತ್ನಿಯವರು ಕೆರೆಯಿಂದ ಮಿಂದು ಒಳಕ್ಕೆ ಬಂದವರೇ, “ನನ್ನ ಗೆಜ್ಜೆಟೀಕು ಕಳವಾಗಿದೆ” ಎಂದರು. “ಕೆರೆಗೆ ಮೀಯಲು ಹೋದಾಗ ಅಲ್ಲಿ ನಾಗಮ್ಮನವರೊಡನೆ ಮಾತುಕತೆಯಾಯಿತು. ಮೀಯುತಿದ್ದೆವು. ನಾನು ಬಂದೆ. ನಾಗಮ್ಮ ಅಲ್ಲೇ ಇನ್ನೂ ಮೀಯುತ್ತಿದ್ದರು. ಅರ್ಧ ದಾರಿ ಬರುತ್ತಲೇ ಕೊರಳು ಹಗುರವಾಗಿ ತೋರಿತು. ತಲೆಯ ಮೇಲಕ್ಕೆ ಒಂದು ಕಾಗೆ ಕರ್ರೆಂದು ಕೂಗಿತು. ಕೊರಳು ಮುಟ್ಟಿದಾಗ ಎದೆಯಿಂದೇನೊ ಜೀವ ಹಾರಿತು! ಗೆಜ್ಜೆಟೀಕು ಇರಲಿಲ್ಲ. ಅದಕ್ಕಾಗಿ ಪುನಃ ಕೆರೆಗೆ ಓಡಿದೆ. ನಾಗಮ್ಮ ಮನೆಗೆ ಹಿಂತಿರುಗಿದ್ದರು. ಅವರ ಬೆನ್ನು ಹಿಡಿದು ನಡೆದೆ. ‘ನಿಮ್ಮಾಣೆ ನಾನರಿಯೆ’, ಎಂದರು. ಅಂತೂ ಇನ್ನಾರೂ ಅಲ್ಲಿಗೆ ಮೀಯಬಂದವರಿಲ್ಲ. ದನ ಕಾಯುವ ಹುಡುಗರು ಸಹ ಇದ್ದಿಲ್ಲ. ಭೂತಕ್ಕೊಂದು ತೆಂಗಿನಕಾಯಿ ಒಪ್ಪಿಸಬೇಕು. ಗೆಜ್ಜೆಟೀಕು ಬೇಗನೇ ಪತ್ತೆಯಾಗಬೇಕು,” ಎಂದು ಪಠೇಲರಿಗೆ ಧರ್ಮಪತ್ನಿಯ ದೂರು, ಮೊರೆ, ಕೂಗು. + +ಶಾನುಭಾಗರು ಕಟ್ಟುತಿದ್ದ ದಫ್ತರು ಮೂಟೆಯ ಗಂಟು ಕಡಿದು ಗೇಣಿಚೀಟುಗಳೂ, ಲೆಕ್ಕದ ಪುಸ್ತಕಗಳೂ ಅದರ ಕರುಳಂತೆ ಹೊರಬಿದ್ದುವು. ಪಠೇಲರು ತೂಗುಮಂಚದಿಂದ ಫಕ್ಕನೆ ಏಳಲು ಯತ್ನಿಸಿ, ಹಲಗೆ ತೂಗಿ, ಯಾರೋ ಹಿಂದಣಿಂದ ನೂಕಿದಂತೆ ಜಗಲಿಯ ಮೇಲೆ ಬಿದ್ದರು! ಒಕ್ಕಲುಗಳಿಗೆ ನಗುವೂ ಇಲ್ಲ, ಅಳುವೂ ಇಲ್ಲ – ದಿಗಿಲು! ಕೂಡಲೇ ಕುಪ್ಪಣ್ಣಯ್ಯ (ಮಾರಿಗುಡಿಯ ಅರ್ಚಕ)ನನ್ನು ಕರೆಯಲು ಯಾವನನ್ನೋ ಓಡಿಸಿದ್ದಾಯಿತು. + +ಕುಪ್ಪಣ್ಣಯ್ಯನೂ ತನ್ನನ್ನೇಕೆ ಶೆಟ್ಟಿ – ಅಲ್ಲ, ಪಠೇಲರು – ಕರೆದುದೆಂದು ಕರೆಯಲು ಬಂದಿದ್ದ ಆಳಿನಿಂದ ತಿಳಿದೇ, ಅತ್ತ ಬರುತ್ತಾ ದಾರಿಯಲ್ಲಿ ಒಂದು ಕೇರೆಹಾವು ಕಪ್ಪೆಯನ್ನು ಅಟ್ಟಿಹೋದುದನ್ನೂ, ಒಂದು ಕೋಳಿಪಿಳ್ಳೆಯನ್ನು ಗಿಡುಗನು ಎತ್ತಿಕೊಂಡು ಹಾರಿಹೋದುದನ್ನೂ, ಶಕುನಗಳನ್ನಾಗಿ ತಿಳಿದು ನೆನಪಿನಲ್ಲಿಟ್ಟುಕೊಂಡು, ಚಾವಡಿಗೆ ಬರುವ ಮೊದಲೇ ಕಾಲು ತೊಳೆದುಕೊಂಡೇ ಬಂದನು. + +ಕಾರ್ಯಕಾರಣಗಳನ್ನು ತಿಳಿಸುವ ಮೊದಲೇ ಕುಪ್ಪಣ್ಣಯ್ಯನು ಪಂಚಾಂಗವನ್ನು ತೆಗೆದುಕೊಂಡು, ತಾನು ದಾರಿಯಲ್ಲಿ ಕಂಡ ಶಕುನಗಳಲ್ಲಿ ಭರವಸೆಯನ್ನಿಟ್ಟು, ಕದ್ದವನನ್ನು ಬಲು ವೇಗವಾಗಿ ಹಿಡಿದು ತರುವಂತೆ ಅವನ ಬೆನ್ನಿಗೆ ಮಾರಿಯಮ್ಮನು ಗಣಗಳನ್ನು ಕಳುಹಿರುವಳೆಂದೂ, ಅವನನ್ನು ಒಂದೇ ದಿನದಲ್ಲಿ ಎತ್ತಿಕೊಂಡು ಚಾವಡಿಗೆ ತಂದು ಮುಟ್ಟಿಸಿ ಕೋಳ ಹಾಕುವರೆಂದೂ ಇತ್ಯಾದಿ ಹೇಳಿ, ಕಾಣೆಯಾದ ಗೆಜ್ಜೆಟೀಕಿನ ಮುನ್ನೂರು ರೂಪಾಯಿಗಳ ನಷ್ಟದ ನೋವನ್ನು ಕಡಿಮೆಯಾಗುವಂತೆ ಮಾಡಿದನು. ಎರಡು ಸೇರು ಅಕ್ಕಿ, ಎರಡು ತೆಂಗಿನಕಾಯಿ, ಒಂದು ಕುಂಬಳಕಾಯಿ – ಇಷ್ಟು ಕಾಣಿಕೆ ಪಡೆದು, ವೀಳೆಯ ಜಗಿದು, ಶಾನುಭಾಗರೊಡನೆ ತನ್ನ ಮನೆಯ ದಾರಿ ಹಿಡಿದು ನಡೆದನು. + +ಶಾನುಭಾಗರಿಗೆ ಸಿಡಿಲು ಬಡಿದಂತಾಗಿದ್ದಿತು. ನಾಗಮ್ಮ ಅವರ ಮೂರನೆಯ ಹೆಂಡತಿ. ತಂದೆತಾಯಿ ಇಲ್ಲದ ಆ ಅನಾಥ ಕನ್ಯೆಯನ್ನು ನಾರಾಯಣ ರಾಯರು ವಿವಾಹವಾಗಿ ಎರಡು ವರ್ಷ ಮಾತ್ರ ದಾಟಿದ್ದಿತು. ನಾಗಮ್ಮ ತೀರ ಹಳ್ಳಿಯ ಹುಡುಗಿ – ಹದಿನೈದೇ ವರ್ಷ ವಯಸ್ಸಿನ ಹುಡುಗಿ. ನಾರಾಯಣ ರಾಯರಿಗೆ ಪುತ್ರ ಸಂತತಿಯಿದ್ದಿದ್ದರೆ ಇವಳನ್ನು ಅವರು ವಿವಾಹವಾಗುತ್ತಿದ್ದರೋ ಇಲ್ಲವೋ ಗೊತ್ತಿಲ್ಲ. ಆದರೆ ನಾರಾಯಣರಾಯರ ಪ್ರಥಮ ಪತ್ನಿಯು ಪುತ್ರರತ್ನವನ್ನು ಹಿಂದೆ ಬಿಟ್ಟಿದ್ದರೆ ನಾಗಮ್ಮನು ರಾಯರ ಸೊಸೆಯಾಗಬಹುದೆಂದು ನಾವೂ ನೀವೂ ತಪ್ಪಾಗಿ ಎಣಿಸುವಂತಾಗುತ್ತಿದ್ದಿತು. ಅನಾಥೆ, ಗತಿಹೀನೆ, ಮೂಢೆ. ಅದು ಕಾರಣವೇ ಅವಳಲ್ಲಿ ಠಕ್ಕಿಲ್ಲ, ವಂಚನೆಯಿಲ್ಲ, ಸರಳ ಸ್ವಭಾವ. ತಿಂಗಳಲ್ಲಿ ಅವೇ ಮೂರು ದಿನ ಹಿತ್ತಲ ಹೊರಗೆ ಯಾರೊಡನೆಯಾದರೂ ಮುಕ್ತ ಭಾಷಣ ಮಾಡಬಹುದಾಗಿದ್ದಿತು. ತಿಂಗಳಲ್ಲಿ ಇಪ್ಪತ್ತೇಳು ದಿನವೂ ಹಿತ್ತಲಲ್ಲಿಯೇ ಇರುವಳು. ಯಾರೊಡನೆ ಮಾತಾಡುವುದಕ್ಕೂ ಜಾತಿ ಕಟ್ಟಳೆ ಇದೆ. ಪತಿದೇವನ ಗೌರವ ಸಂರಕ್ಷಣೆಯ ಭಾರ ಬೇರೆ. ಹೀಗಾಗಿ ಹಳ್ಳಿಯ ಹವೆ, ಹಿತ್ತಲ ಹೊರಗೆ ಉಸಿರಾಡಲು ದೊರೆವುದೆಂದರೆ ತಿಂಗಳಲ್ಲಿ ಅವೇ ಮೂರು ದಿನ. ಮನೆಯಲ್ಲಿನ ಬಟ್ಟೆಗಳನ್ನು ಒಗೆದೂ, ತಾನೂ ಸುಖವಾಗಿ ಮಿಂದೂ, ಮನೆಗೆ ಬಂದು – ಅವೇ ಮೂರು ದಿನ ಸ್ವಯಂಪಾಕದ ಕಷ್ಟ, ಹಾಳಾದ ಅಡುಗೆಯ ನಷ್ಟ, ಇವುಗಳನ್ನು ತಿಳಿದ ಸಿಡುಮೋರೆಯ ಗಂಡನಿಕ್ಕುವ ಕೂಳಿಷ್ಟು ಸಂತೋಷವಾಗಿ ಉಣ್ಣುವಳಾದರೂ, ಹೊರಬಯಲಲ್ಲಿ ಕೆರೆಯ ಬಳಿಯಲ್ಲಿ ಕಾಣಿಸಿದ ಇತರ ಹೆಂಗಸರೊಡನೆ ಆಡಿದ ಸಂಭಾಷಣೆಯ ನೆನಪೇ ಈ ಅನ್ನವು ಪರಮಾನ್ನವಾಗುವಂತೆ ಈ ಪದಾರ್ಥಗಳಿಗೆಲ್ಲ ಒಗ್ಗರಣೆ ಹಾಕಿದಂತೆ ಅವಳಿಗೆ ತೃಪ್ತಿಯನ್ನೂ, ರುಚಿಯನ್ನೂ ಉಂಟುಮಾಡುತಿದ್ದಿತು. + +ಸಿಡಿಲು ಬಡಿದಂತಾಗಿದ್ದ ಶಾನುಭಾಗರು ಮನೆಗೆ ಬಂದು ಮುಟ್ಟುತ್ತಲೇ ತನಗೆ ಬಡಿದಂತಾಗಿದ್ದ ಸಿಡಿಲನ್ನು ನಾಗಮ್ಮನ ಮೇಲೆ ಕೆಡವಿದರು. ಎರಡು ಮಾರು ದೂರದಿಂದ, “ಬಂದ ಮನೆಗೆ ಬೆಂಕಿ ಇಟ್ಟಿಯಾ? ಹುಟ್ಟಿದಲ್ಲಿ ಸುಟ್ಟು ಸುಡುಗಾಡು ಮಾಡಿದೆ. ಅಷ್ಟೇ ಸಾಲದಾಗಿದ್ದಿತೆ?” ಎಂದೊಮ್ಮೆಗೇ ಶಾನುಭಾಗರು ನುಡಿದ ಮಾತುಗಳ ಅರ್ಥವು ಅವಳಿಗೆ ತಿಳಿಯಲೇ ಇಲ್ಲ. ಅವಳು ಮನೆಯ ಮಾಡು ನೋಡಿದಳು; ದಿಗಿಲಿನಿಂದ ನೋಡಿದಳು; ಬೆಂಕಿಯ ಮಾತಿರಲಿ, ಹೊಗೆ ಕೂಡ ಏಳುತ್ತಿಲ್ಲ. “ನಾನು ಮನೆಯೊಳಗೆ ಕಾಲಿಡುವುದೇ ನಾಳೆ ಮಿಂದಾದ ಬಳಿಕವಲ್ಲವೆ? ಆಗ ತಾನೆ ಬೆಂಕಿ ಮುಟ್ಟಬಹುದಲ್ಲವೆ?” ಎಂದಳು. ಶಾನುಭಾಗರು ಮೈ ಮುರಿದುಕೊಂಡು ಇವಳು ತನ್ನನ್ನೇ ಹೀಯಾಳಿಸಿದಳೆಂದು ಸಿಟ್ಟಾಗಿ – “ನೀನು ಮನೆಯೊಳಗೆ ಕಾಲಿಡುವುದು ನಾಳೆ! ಮಿಂದಾದಮೇಲೆ! ‘ನಾಳೆ’ಯೆಂದರೆ ಗಣಪತಿಯ ಮದುವೆಯಾದ ‘ನಾಳೆ!’ ನೀನಿನ್ನು ಮೀಯುವುದುಂಟೆ? ನಿನ್ನನ್ನು ಮೀಯಿಸುವುದು, ಅಲ್ಲಿಂದಲೇ ಕೊಂಡೊಯ್ಯುವುದು – ಶ್ಮಶಾನಕ್ಕೆ!” ಎಂದು ಗರ್ಜಿಸಿಬಿಟ್ಟರು – ಒಂದು ಮಾರು ದೂರದಿಂದ. + +ಶಾನುಭಾಗರು ಸಿಡಿಲೆರಗಿದಂತಾಗಿದ್ದರಷ್ಟೆ! ಈ ಹುಡುಗಿಯು (ಶಾನುಭಾಗರ ಪತ್ನಿ) ನಕ್ಷತ್ರಗಳನ್ನೇ ಕಂಡಳು. ಅವಳಿಗೆ ಈ ಮಾತುಗಳ ಅರ್ಥವಾಗಲಿಲ್ಲ. ಆದರೂ ಅಭಿಪ್ರಾಯವಾಯಿತು; ತನ್ನ ಮೇಲೆ ಏನೋ ಭಯಂಕರ ಅಪರಾಧ ಅಥವಾ ಅಪವಾದದ ಆರೋಪವಾಗಿದೆಯೆಂದು. ಅಂಗಳದಲ್ಲಿ ನಿಂತವಳು ಕೂತಳು. ಶಾನುಭಾಗರು ತಮ್ಮ ಎಲ್ಲ ವಸ್ತ್ರ, ಕೈಕೋಲುಗಳನ್ನು ಜಗಲಿಯ ಮೇಲೆ ಮಡಗಿದರು. ಹಟ್ಟಿ ಮಾಡಿಗೆ ಮುಳಿಛಾವಣಿ ಮಾಡುತ್ತಿದ್ದ ಉಗ್ರಾಣಿಯು ಈ ಸಂಭಾಷಣೆಗೆ ಕಿವಿಕೊಟ್ಟನು. + +“ನೀನು ಕರೆಯಲ್ಲಿ ಮೀಯುತ್ತಿದ್ದಾಗ ಮತ್ತಾರಿದ್ದರು?” + +“ಪಠೇಲರ ಹೆಂಡತಿ. ಬೇರೆ ಯಾವ ಹೆಂಗಸರು ಸಹ ಇದ್ದಿಲ್ಲ. ಗಂಡಸರ ಮಾತಿರಲಿ.” + +“ಗಂಡಸರು ಸಾಯಲಿ! ಪಠೇಲರ ಹೆಂಡತಿಯೊಡನೆ ಏನು ಮಾತಾಡುತ್ತಿದ್ದೆ?” + +“ಅವಳು, ಈ ದಿನ ಸಂತೆಯ ದಿನವಲ್ಲ, ಮುಂದಿನ ವಾರ ಸಂತೆಯ ದಿನ, ಅಂದರೆ ಇನ್ನೆಂಟು ದಿನಗಳಲ್ಲಿ ತನ್ನ ತಾಯಿಯ ಮನೆಗೆ ಹೋಗುತ್ತೇನೆಂದಳು. ‘ನನ್ನ ತಂದೆಯ ಮನೆಯೂ ಅಲ್ಲೇ ಹತ್ತಿರ. ಆದರೆ ನನಗೆ ತಂದೆತಾಯಿಯಿಬ್ಬರೂ ಇಲ್ಲ’ ಎಂದೆ. ಅವಳು ಸ್ವಲ್ಪ ಮರುಗಿದಳು. ಹಾಗೇ ಅವಳು ಮಿಂದು ಹೋದಳು. ಅವಳು ಮೀಯುವ ನೀರು ಮಡಿಯಾಗಲೆಂದು ಸ್ವಲ್ಪ ಕಾದು ನಾನು ಮಿಂದು ಬಂದೆ. ಅಷ್ಟೆ.” + +“ಹೆತ್ತವರು ಸತ್ತರೂ ಅವರ ಹೆಸರಿಗೂ ಮಸಿ ಬಳೆಯಲು ಅವರ ನೆನಪೇಕೆ ನಿನಗೆ? ನೀರು ಮಡಿಯಾಗಲೆಂದು ಕಾಯುತಿದ್ದೆಯಾ? ಅಥವಾ ಅವಳು ಅತ್ತ ಹೋಗುತ್ತಲೇ ಅವಳು ಅಲ್ಲಿ ಬಿಟ್ಟುದನ್ನು ಎತ್ತಿ ತರಲು ಕಾಯುತಿದ್ದೆಯಾ?” + +“ಅವಳು ಬಿಟ್ಟುದೇನು? – ಓಹೋ! ನಾನು ಬರುವಾಗ ದಾರಿಯಲ್ಲಿ ನನ್ನನ್ನು ಪುನಃ ಮಾತಾಡಿಸಿ ತನ್ನ ಕೊರಳ ಗೆಜ್ಜೆಟೀಕನ್ನು ಕೆರೆಯ ಬಳಿ ನೋಡಿದೆನೆ? – ಎಂದಳು. ಅವಳ ಕೊರಳಿಗಿದ್ದಾಗ ಸಹ ನಾನು ನೋಡಿದ್ದಿಲ್ಲ ಎಂದೆನು. ಅಷ್ಟೇ, ಅವಳು ಅತ್ತ ಹೋದಳು, ನಾನು ಇತ್ತ ಬಂದೆ.” + +“ ‘ಇತ್ತ ಬಂದೆ’ ಎನ್ನಬೇಡ, ‘ಇತ್ತ ತಂದೆ’ ಎನ್ನು. ಎಲ್ಲಿಟ್ಟಿದ್ದಿ ಅದನ್ನು? ಈಗಲೇ ಕೊಡು. ನಾನು ಬಡವನು. ಈ ಮನೆ, ಹಿತ್ತಿಲು ಎಲ್ಲವೂ ಪಠೇಲರದು. ಅವರ ಪಠೇಲಿಕೆಯೂ, ನನ್ನ ಶಾನುಭೋಗಿಕೆಯೂ ನನ್ನವಾದರೂ, ನಮ್ಮಿಬ್ಬರ ಜೀವನವು ನಡೆಯುತ್ತಿರುವುದು ಅವರ ಅನುಗ್ರಹದಿಂದ. ಬಡತನವಿದ್ದರೆ ಚಿಂತಿಲ್ಲ. ಮೂಗುತಿಯಿದ್ದರೆ ಸಾಕು, ಮಂಗಲ ಸೂತ್ರ ಸಾಕು; ಗೆಜ್ಜೆಟೀಕಿನ ಆಸೆ ಮಾಡಬೇಡ. ಇದಾರಿಗೂ ಗೊತ್ತಿಲ್ಲ. ನಿನ್ನಲ್ಲಿ ಯಾರೂ ತಪ್ಪೆಣಿಸಿಲ್ಲ. ಭೂತಕ್ಕೆ ಹೇಳಿಕೊಂಡಿದ್ದಾರೆ. ಮಾರೀ ಗುಡಿಗೆ ಬಲಿಯಾಗುವೆ. ಅದನ್ನು ಇತ್ತ ಕೊಡು. ಅಥವಾ ಎಲ್ಲಿದೆಯೆಂದು ಹೇಳು. ನಾನು ಅದು ಕೆರೆಯ ಬಳಿಯಲ್ಲೇ ಸಿಕ್ಕಿತೆಂದು ಪಟೇಲರಿಗೆ ಹೇಳಿ ನಂಬಿಸಿ ಬರುತ್ತೇನೆ. ಇತ್ತಕೊಡು. ಮೂರನೆಯವಳು ನೀನು. ನೀನು ಸತ್ತರೆ ನನಗೆ ಬಹಳ ಸಂಕಷ್ಟ. ಇನ್ನೊಂದು ಮದುವೆಯಾಗುವುದೂ ಕಷ್ಟ. ನಾನು ಅಡುಗೆ ಮಾಡಿಕೊಂಡಿರುವುದೂ ಕಷ್ಟ. ಇತ್ತ ಕೊಡು, ಅಯ್ಯೊ – ನಿನ್ನನ್ನು ಮುಟ್ಟುವುದಕ್ಕಿಲ್ಲವಲ್ಲಾ! ಶೂರ್ಪನಖಿಯಂತೆ ನಿನ್ನನ್ನು ಮಾಡಿಬಿಡುತ್ತಿದ್ದೆ. ಆದರೂ ನೋಡು ದಂಡಿಸಬೇಕಾಗುವುದು; ಅನ್ನಾಹಾರ ಕೊಡಲಾರೆ. ಇತ್ತ ಕೊಡು. ಇಲ್ಲದಿದ್ದರೆ ತಲೆಯ ಮೇಲೆ ಕಲ್ಲು ಹೊತ್ತು ಹಾಕುತ್ತೇನೆ. ಬೇಗ ಕೊಡು.” + +ನಾಗಮ್ಮ ಅಂಗಳದಲ್ಲಿ ಬಿಸಿಲಿಗೇ ಕೂತಿದ್ದಳು. ನಕ್ಷತ್ರ ಕಂಡು ಕೂತಿದ್ದವಳು ಈಗ ಆ ನಕ್ಷತ್ರಗಳೆಲ್ಲ ಒಂದಾಗಿ ಚಂದ್ರನಂತಾಗಿ, ಆ ಚಂದ್ರನೇ ಅಡ್ಡವಾಗಿ ಕಪ್ಪು ಮೋಡದಂತಾಗಿ, ಅದರಿಂದ ಜಡಿಮಳೆ ಸುರಿದಂತಾಗಿ….. ಗೊಳೋ ಎಂದು ಅತ್ತಳು. ಮುಟ್ಟಾದವಳು ನೀರನ್ನು, ಮೀಯುವ ಮೊದಲು ಕುಡಿಯಲಾರದೆ, ಹಸಿವು ನೀರಡಿಕೆಗಳಿಂದ ಬೆಳಗ್ಗಿನಿಂದಲೂ ಬಾಡಿದ್ದಳು. ಪತಿದೇವನ ಒಂದೊಂದು ವಾಕ್ಯ, ಅದರೊಡನೆ ಹರಿದ ಬಿಸಿ ಉಸಿರು, ಅವನ ಕೈಕಣ್ಣುಗಳ ಕರಾಳ ಅಭಿನಯ, ಅವನು ಭೂತ, ಮಾರಿ, ಶೂರ್ಪನಖಿಗಳ ಹೆಸರೆತ್ತಿದ ಬಗೆ, ನೋಟಕ್ಕಿಂತ ನಾಲಗೆಯ ತೀಕ್ಷ್ಣತೆ, ಇವುಗಳೆಲ್ಲಕ್ಕೂ ಮೇಲಾಗಿ “ತಲೆಯ ಮೇಲೆ ಕಲ್ಲು ಹೊತ್ತು ಹಾಕುವ” ಹೊಸ ವಾಗ್ದಾನ – ಇವುಗಳಿಂದಾಗಿ “ಇತ್ತಕೊಡು” ಎಂದು ಅವನು ಒಮ್ಮೊಮ್ಮೆ ಹೇಳುತ್ತಿದ್ದಂತೆ, ಒಂದೊಂದಾಗಿ ಅವಳ ಪ್ರಾಣಗಳು ಅವಳ ದೇಹವನ್ನು ಬಿಡುವಂತಾಗಲು, – “ಬೇಗ ಕೊಡು” ಎಂದು ಅವನು ಕೊನೆಯ ಸಲ ಗರ್ಜಿಸಿದ್ದೇ, ಬಿಸಿಯಾದ ಅಂಗಳದ ಧೂಳಿನಲ್ಲಿ ತನ್ನ ಕಣ್ಣೀರ ಧಾರೆಯಿಂದ ತಂಪನ್ನುಂಟು ಮಾಡುತ್ತ ಅಲ್ಲೇ ಮಲಗಿದಳು. + +ಶಾನುಭಾಗರು ಬಿಡುವರೆ? “ಈ ಆಟ ನನ್ನೊಡನೆಯೆ? ಇಷ್ಟರಲ್ಲೇ ಭೂತ ಹಿಡಿಯಿತೆ? ಮಾರಿ ಬಡಿಯಿತೆ?” ಎನ್ನುತ್ತ ನಿಜವಾಗಿಯೂ ಒಂದು ಕಲ್ಲನ್ನೆತ್ತಿಕೊಂಡು ಅವಳ ತಲೆಯನ್ನು ಈಗಲೇ ಜಜ್ಜುವೆನೆಂಬಂತೆ ಅಭಿನಯಿಸಿದರು. ನಾಗಮ್ಮನ ಕೈಮೈಗಳು ರವಷ್ಟೂ ಕದಲಲಿಲ್ಲ. + +ಸಂಭಾಷಣೆಯ ಸ್ವಾರಸ್ಯವನ್ನು ಕೇಳುತ್ತಿದ್ದ ಉಗ್ರಾಣಿ ಪೂವನು ಮೆಲ್ಲನೆ ಮಾಡಿನಿಂದ ಕೆಳಕ್ಕಿಳಿದು, ಸದ್ದಿಲ್ಲದೆ ಶಾನುಭಾಗರ ಹಿಂದಕ್ಕೆ ಬಂದು, ಅವರ ಕೈಗಳಿಂದ ಆ ಕಲ್ಲನ್ನು ಫಕ್ಕನೆ ಕಿತ್ತುಕೊಂಡು ಅದನ್ನು ದೂರಕ್ಕೊಗೆದನು. + +ಬಹುಶಃ ತಾತ್ಕಾಲಿಕ ಉನ್ಮತ್ತತೆಯಿಂದ ನಾಗಮ್ಮನನ್ನು ಕೊಂದುದಕ್ಕೆಂದು ಶಾನುಭಾಗರು ಜನ್ಮಾಂತ್ಯದವರೆಗೂ ಬಂದೀಖಾನೆಗೆ ಹೋಗಬಹುದಾಗಿದ್ದ ಪ್ರಸಂಗದಿಂದ ಅವರನ್ನು ಪೂವನೇ ಉಳಿಸಿದನು. ಉಗ್ರಾಣಿಯೆಂದರೆ ಗ್ರಾಮಪೋಲೀಸಲ್ಲವೆ? ಕೈಯಲ್ಲಿದ್ದ ಕಲ್ಲು ಮಾಯವಾದೊಡನೆ ಶಾನುಭಾಗರಿಗೆ ಹಿಡಿದ ಆವೇಶವು – ಪಾತ್ರಿಯ ಕೈಯ್ಯಲ್ಲಿದ್ದ ಬೆತ್ತಮುದ್ರಿಕೆ ಕಿತ್ತರೆ ಮುಗಿವಂತೆ – ಮುಗಿಯಿತು. + +“ಶಾನುಭಾಗರೆ! ಒಂದು ಕೊಡಪಾನ ನೀರು ತಂದು ಅಮ್ಮನ ಮುಖದ ಮೇಲೆ ಚೆಲ್ಲಬಾರದೆ? ನೀವು ತಡಮಾಡಿದರೆ ಅವರು ಸತ್ತಾರು. ಇಲ್ಲವೇ ನಾನೇ ತಂದು ಚೆಲ್ಲುತ್ತೇನೆ,” ಎಂದನವನು. + +ಪೂವನೇನು ಬ್ರಾಹ್ಮಣನೆ? ಅವನು ಚೆಲ್ಲುವ ನೀರಿನ ಒಂದು ತಟಕಾದರೂ ಅವಳ ತುಟಿಗೆ ಅಂಟಿದರೆ ಅವಳ ಜಾತಿ ಕೆಡುವುದಲ್ಲ! ತಾವೇ ಓಡಿಹೋಗಿ ಒಂದು ಚೆಂಬು ನೀರನ್ನು ತಂದು ಅವಳ ತಲೆಯ ಮೇಲೆ ತಮ್ಮ ನಡುಗುವ ಕೈಗಳಿಂದ ಚೆಲ್ಲಿದರು, ಸುರಿದರು. “ನಿನ್ನನ್ನು ಮೀಯಿಸುವುದು,” ಎಂದು ಅವಳನ್ನು ಬೆದರಿಸಿ ಆಗ ಹೇಳಿದ ಮಾತಿನ ನೆನಪಾಗಿದ್ದಿತೆ ಶಾನುಭಾಗರಿಗೆ? + +ಹುಡುಗಿ ಮೆಲ್ಲನೆ ಕಣ್ತೆರೆದು ನೋಡಿದಳು. ಉಗ್ರಾಣಿಯು, “ಅಮ್ಮಾ! ಏಳಿ ಏಳಿ, ಇಲ್ಲಿ ಬಿಸಿಲು ಬಹಳ. ಹಟ್ಟಿಯ ಛಾವಣಿ ಮುಗಿದಿದೆ. ಅಲ್ಲಿ ಹೋಗಿ ಕೂತಿರಿ. ಊಟಕ್ಕಾದೊಡನೆ ಕರೆಯುವರು,” ಎಂದನು. + +ಶಾನುಭಾಗರ ಮಾತಿಲ್ಲ. ಅಮ್ಮ ಮೆಲ್ಲನೆ ಅಲ್ಲಿಗೆ ಹೋಗಿ ಕೂತಳು. ಶಾನುಭಾಗರ ಅಂದಿನ ಅಡಿಗೆ – ಏನು ಹೇಳಬಹುದು! ನಳಪಾಕ, ಭೀಮಪಾಕ ಕೇಳಿರಬಹುದಷ್ಟೇ – ಇದು ಶಾನುಭಾಗಪಾಕ. ಉಪ್ಪನ್ನು ಬೇಯಿಸಿದರೆ ಅಕ್ಕಿಯನ್ನವಾಗುವುದುಂಟೆ? ಅಕ್ಕಿಯ ತೋವೆಗೆ ಒಗ್ಗರಣೆ ಹಿಡಿದೀತೇ? ಬದನೆ ಸುಟ್ಟದ್ದು ಸುಟ್ಟು ಬೂದಿಯಾಯಿತು. ಬೂದಿಯ ಗೊಜ್ಜು ಆಗುವುದುಂಟೆ? ಹೀಗಿರುವಾಗ ಬಡಿಸುವುದೇನು? ಉಣ್ಣುವುದೇನು? + +ಆದರೆ ಸುಖಸಂತೃಪ್ತಿ ಇಷ್ಟರಲ್ಲೇ ಒದಗಿತು. ಪುಣ್ಯಕ್ಕೆ ಅಂದು ಸ್ಮಾರ್ತ ಏಕಾದಶಿ. ನಾಗಮ್ಮನ ಅಪರಾಧ ಅಪವಾದಗಳೂ, ನಾರಾಯಣ ರಾಯರ ಉನ್ಮಾದಪ್ರಮಾದಗಳೂ ಈ ವಿಪರ್ಯಾಸದಿಂದ ಉಪವಾಸದಿಂದ ಪ್ರಾಯಶ್ಚಿತ್ತ ಹೊಂದಿ ಮಾಯವಾದುವು. + +ಪಠೇಲರ ಮನೆಯಲ್ಲಿ ಗೆಜ್ಜೆಟೀಕು ಸಿಕ್ಕುವ ಹಾಗೆ ಎಷ್ಟೋ ದೇವರಿಗೆ ಎಂತೆಂತಹವೋ ಹರಕೆಗಳಾದವು. ಆದರೂ ಗೆಜ್ಜೆಟೀಕಿನ ಒಂದು ಗೆಜ್ಜೆಯಾದರೂ ಠೀಕಾಗಿ ಎಲ್ಲಿದೆಯೆಂದು ತಿಳಿಯಲೂ ಇಲ್ಲ; ಅದನ್ನು ಪಠೇಲರ ಪತ್ನಿ ಅಬ್ಬಕ್ಕೆ ಹೆಂಗಸು ಏನು ಮಾಡಿರಬಹುದೆಂಬ ಪ್ರಶ್ನೆಗೆ ಯಾವ ಮಂತ್ರವಾದಿ, ಪೂಜಾರಿ, ಜೋಯಿಸ ಮೊದಲಾದವರ ಟೀಕೆಯೂ ಹೊರಡಲಿಲ್ಲ. + +ರಾತ್ರಿಯೂ ನಿರಾಹಾರವೆ! ನಾಗಮ್ಮ ಹಟ್ಟಿಯಲ್ಲೇ! ನಾರಾಯಣ ರಾಯರು ಜಗುಲಿಯಲ್ಲೇ! ಗ್ರಾಮಪೋಲೀಸು – ಉಗ್ರಾಣಿ, ಮನೆ – ಹಟ್ಟಿಗಳಲ್ಲಿನ ಇವರಿಬ್ಬರ ಕಾವಲಿಗಾಗಿ ಇಲ್ಲೇ. + +ನಾರಾಯಣ ರಾಯರಿಗೆ ನಿದ್ದೆ ಹತ್ತದು. ಶೆಟ್ತಿಯ ಮಾತನ್ನು ಪಠೇಲನಂತೂ – ಮುನ್ನೂರು ರೂಪಾಯಿ ಮೌಲ್ಯದ ಸೊತ್ತನ್ನು ಕಳಕೊಂಡ ಉಗ್ರಪ್ಪ ಶೆಟ್ಟಿಯಂತೂ – ನಂಬದಿರಲಾರನು. ತಿಂಗಳಿಗೊಂದು ಮುಡಿ ಅಕ್ಕಿಕೊಟ್ಟು ಆತನು ಚಿಕ್ಕ ಸಾಲೆಯ ಮಾಸ್ತರರನ್ನು ತನ್ನ ಕೆಲಸಕ್ಕೆ ಇಟ್ಟುಕೊಳ್ಳುವನು. ಒಕ್ಕಲುಗಳ ಭತ್ತ (ಕಾಣಿಕೆಗಳು ಸಹ) ತನಗೆ ತಪ್ಪುವುದು. ಇತ್ತ ಅಂಗಡಿ ಮನೆಗಳನ್ನು ಬಿಡಬೇಕೆನ್ನುವನು; ವ್ಯಾಜ್ಯವಾಗಲಿಲ್ಲ – ಅವನ ಅಕ್ಕಿ ದಾಸ್ತಾನು ಇಡುವ ಸ್ಥಳಕ್ಕಾಗಿ. ಅದರಿಂದ ಉಪ್ಪನ್ನದ ಕಾಸುಗಳು ಮಾಯವಾಗುವುವು. ಇಷ್ಟಕ್ಕೆಲ್ಲ ಕಾರಣ ನಾಗಮ್ಮ ಆ ಕೆರೆಗೆ ಮೀಯುವುದಕ್ಕೆ, ಶೆಟ್ತಿ ಹೋದಾಗಲೇ ಹೋದುದರಿಂದಾಯಿತು. ನಾಗಮ್ಮನ ಮೇಲೆ ಖಂಡಿತ ಸಂಶಯವಿದ್ದರೂ ಆತನ ರಿಕಾರ್ಡೆಲ್ಲ ತನ್ನ ಸ್ವಾಧೀನದಲ್ಲಿರುವುದಕ್ಕಿಂತೂ ಆತನ ಒಕ್ಕಲುಗಳ ಗೇಣಿಚೀಟು ರಶೀದಿಗಳೆಲ್ಲ ತನ್ನಿಂದಾಗಬೇಕಾದುದರಿಂದ, ತನ್ನ ಬದಲು ಮತ್ತೊಬ್ಬ ದೊರೆವವರೆಗೆ ನಾಗಮ್ಮನ ಮೇಲೆ ಸಂಶಯವಿಲ್ಲದಂತೆ ಪಠೇಲನು ತೋರಿಸಿಕೊಳ್ಳುವನು. ಆದುದರಿಂದ ತಾನೇ ನಾಗಮ್ಮನಲ್ಲಿ ಸಂಶಯವುಳಿಯದಂತೆ ಪ್ರಮಾಣ ಮಾಡಲು ಸರ್ವ ಪ್ರಯತ್ನಗಳನ್ನು ಮಾಡಬೇಕಾಗಿದೆ, – ಎಂದು ಇಡೀ ರಾತ್ರಿ ಚೆನ್ನಾಗಿ ಆಲೋಚಿಸಿ ನಿಶ್ಚೈಸುತ್ತಲೇ ಮುಂಜಾವಿನ ಹುಂಜವು ಕೂಗಲು, ನಾಗಮ್ಮನನ್ನು – ಅಂತರಿಕ್ಷದಲ್ಲಿ ಗಾಳಿಪಟದಂತೆ (ಪಿಶಾಚಿಯಂತೆ ಎನ್ನಲು ಹೇಸುವೆವು) ಅಲೆದಾಡುತ್ತಿದ್ದ ಕನಸಿನಲ್ಲಿ ಇಡೀ ರಾತ್ರಿಯನ್ನು ಕಳೆದ ನಾಗಮ್ಮನನ್ನು – ಎಬ್ಬಿಸಿ, ಉಗ್ರಾಣಿಯ ಕಾವಲಲ್ಲಿ ಕೆರೆಗೆ ಹೋಗಿ ಮಿಂದುಬಾರೆಂದು ಕಳುಹಿಸಿದನು. + +ನಾಗಮ್ಮನೊಬ್ಬಳೇ ಹೋಗಿದ್ದರೆ – ಇನ್ನಾರೂ ದಾರಿಯಲ್ಲಿ ಸಿಕ್ಕರೆ ಹಿಂದಿನ ದಿನದ ವೃತ್ತಾಂತ ಹೊರಡಬಹುದು; ಅವಳಾದರೂ ನೀರಲ್ಲಿ ಮುಳುಗಿ ಸಾಯುವಂತೆ ಪ್ರಯತ್ನಿಸಲೂಬಹುದು – ಎಂದೇ ಶಾನುಭಾಗರ ಎಚ್ಚರಿಕೆಯಿದು. ಅವಳು ಮಿಂದು ಬರುವುದರೊಳಗೆ ಮುಂದಿನ ಕಾರ್ಯಕ್ರಮವು ಗೊತ್ತಾಗಬೇಕಾಗಿದೆ. + +ಅದೇ ವರ್ಷವೇನೋ ನಮ್ಮ ಸೆಟ್ಲ್ಮೆಂಟು ಆಗಿದ್ದಿತು. ಯುಗ ಯುಗಕ್ಕೆ ಭಗವಂತನು ಅವತಾರವನ್ನೆತ್ತುವ ಹಾಗೆ ತಲಾಂತರಕ್ಕೊಮ್ಮೆ ನಮ್ಮಲ್ಲಿ ಸೆಟ್ಲ್ಮೆಂಟಿನ ಅವತಾರವಾಗುವುದುಂಟು. ಅಧರ್ಮವನ್ನು ಕಿತ್ತು, ಧರ್ಮವನ್ನು ದೃಢಗೊಳಿಸಿ ಭಗವಂತನು ವೈಕುಂಠಕ್ಕೆ ತೆರಳುವನು. ಪ್ರಪಂಚವನ್ನು ಅಳೆದು ಬಲಿಯನ್ನು ಮೆಟ್ಟಿ ವಾಮನನು ಇಂದ್ರನ ಪದವಿಗೆ ಕೊರತೆಯಿಲ್ಲದಂತೆ ಮಾಡಿದನು. ಸೆಟ್ಲ್ಮೆಂಟು ಮಾಡಲು ಬರುವ ಉದ್ಯೋಗಸ್ಥರು ಭೂಮಿಯನ್ನೆಲ್ಲ ಅಳೆದು ಯಾರನ್ನೂ ಮೆಟ್ಟುವುದಿಲ್ಲವೆಂದರೂ, ದೇಶದ ಸುಧಾರಣೆಯ ಖರ್ಚಿಗೆ ಕೊರತೆಯಿಲ್ಲದಂತೆ ಮಾಡುವ ವಾಮನಾವತಾರಿಗಳೇ ಆಗಿ ಮೂವತ್ತು ವರುಷಗಳವರೆಗೆ ತಮ್ಮ ನಿಜಗೃಹವನೈದುವರು. + +ಈ ಅಧಿಕಾರಿಗಳ ಪರಿವಾರದಲ್ಲಿ ಆಗ ನೂರಾರು ಆಳುಗಳು ಬಂದಿದ್ದರು. ಇಲ್ಲಿಯ ಅಲೆದಾಟ ಮುಗಿದ ಬಳಿಕ ಇವರಲ್ಲಿ ಹೆಚ್ಚಿನವರಿಗೆ ಸ್ವದೇಶಕ್ಕೆ ಹಿಂತಿರುಗಲು ಮನವೇತಕ್ಕೆ ಒಡಂಬಡುವುದಿಲ್ಲವೋ ತಿಳಿಯದು. ಇವರ ಜೀವನಕ್ಕೆ ತಾಯ್ನಾಡು ಹಾಲೂಡಿಸದಿರಬಹುದು. ಇಲ್ಲಿಟ್ಟ ಕಾಲು ಹಿಂದೆಗೆಯಲು ಈ ವೀರರಿಗೆ ಮನ ಒಪ್ಪದಿರಬಹುದು. ಆಗಲೇ ಅವರು ತಮ್ಮ ಸರ್ವಾಂಗಪರಿಣತ ಬುದ್ಧಿಯನ್ನು ಪ್ರಕಟಿಸಿರುವರು. ಕೆಲವರು ‘ಬೀಡಾ, ಸೋಡಾ’ ಮಾರುವರು. ಕೆಲವರು ಕಂಚಿನ ಪಾತ್ರೆಗಳನ್ನು ಎರಕ ಹೊಯ್ಯುವರು. ಕೆಲವರು ಜಟ್ಕಾ ಸಾರಥಿಗಳಾಗುವರು. ಕೆಲವರು ನಾರುಹುಣ್ಣಿನ ಕೈಕಾಲುಗಳನ್ನು ಪ್ರದರ್ಶಿಸುವ ಅಭಿನಯ ಮಾಡುತ್ತ, ತೋಡಿ ರಾಗದಲ್ಲಿ ತಮ್ಮ ದುಃಖವನ್ನು ಹಾಡುತ್ತ, ತೋಡುಗಳ ಮಗ್ಗುಲಲ್ಲೂ, ಸಾರಂಗ ರಾಗದಲ್ಲಿ ತಮ್ಮಂತರಂಗವನ್ನು ಬಹಿರಂಗಪಡಿಸುತ್ತ ದಾರಿದಾರಿಗಳಲ್ಲೂ ನಿಂತು ಕಾಸುಗಳನ್ನೂ ಕೂಡಿಸುವರು. ಕೆಲವರು ಉತ್ತಮವಾದ ಕಾವಿಯ ಬಟ್ಟೆ ಧರಿಸಿ ಬೇಸಿಗೆಯಲ್ಲಿ ಉಪ್ಪಾರ ಮೇಸ್ತ್ರಿಗಳಾಗಿಯೂ, ಮಳೆಗಾಲದಲ್ಲಿ ಗೋಕರ್ಣಕ್ಕೆ ಹೋಗುವ ಯಾತ್ರಿಕರಾಗಿಯೂ ಪುರುಷಾರ್ಥ, ಪರಮಾರ್ಥಗಳೆರಡನ್ನೂ ಸಾಧಿಸುವರು. ಯಾವ ಊರಾದರೇನು? ಯಾವ ಜಾತಿಯಾದರೇನು? ಯಾವುದೊಂದು ಉದ್ಯೋಗದಿಂದ ಬದುಕಬಲ್ಲವರೇ ಬಲ್ಲವರು. ಒಂದೊಂದು ವೇಳೆ ರೈಲ್ವೇ ಸ್ಟೇಶನು, ಸಂತೆ, ಮಾರ್ಕೆಟು ಮೊದಲಾದವುಗಳ ಬಳಿಯಲ್ಲಿ ಇವರ ಕೈಯಲ್ಲಿ ಯಾರು ಯಾರ ಕಿಸೆಯಲ್ಲಿಂದ ಮಾಯವಾದ ವಸ್ತುಗಳು ದೊರೆತುದುಂಟು. ಜ್ಯೋತಿಷ್ಯ, ಶಕುನ ಫಲ ಹೇಳುವುದರಲ್ಲಿ ಅಸಾಧಾರಣ ಪಾಂಡಿತ್ಯವುಳ್ಳವರೂ ಇವರಲ್ಲಿರುವರು. + +ಸಂಸ್ಕೃತವನ್ನು ಇವರ ಬಾಯಿಯಿಂದ ಕೇಳಿದರೆ ದೇವತೆಗಳೂ ಮರುಗುವರು, – ಇವರಲ್ಲಿಷ್ಟು ಸಂಸ್ಕೃತಿಯಿಲ್ಲೆಂದು. ಇವರು ಕನ್ನಡವನ್ನಾಡಿದರೂ ಅದು ತುಳು, ತುಳುವನ್ನಾಡಿದರೂ ಅದು ತಮಿಳೋ, ಮಲೆಯಾಳಿಯೋ ಆಗಿ ವಿಚಿತ್ರ ಪ್ರತ್ಯಯಗಳನ್ನೂ, ವಿಶೇಷ ಧ್ವನಿಗಳನ್ನೂ ಕೂಡಿ ಹೊರಡುತಿದ್ದುದರಿಂದ ಇವರು ಯಾವ ಭಾಷೆಯನ್ನಾಡಿದರೂ ಅದು ಆ ಭಾಷೆಯಾಗಿರದೆ ಮನುಷ್ಯಮಾತ್ರರಿಗೆ ಸಂಬಂಧವಿರದ ದೇವಭಾಷಾಸ್ವರೂಪವನ್ನು ಹೊಂದುವಂತಾಗುವುದು. ಇದಕ್ಕಾಗಿಯೇ ಮಾತೆಲ್ಲವೂ ನಾನೇ – ಅಕ್ಷರವೆಲ್ಲವೂ ನಾನೇ – ಎಂದು ಹಿರಿಯರ ಪವಿತ್ರ ವಾಕ್ಯವಿದೆ. + +ಹೀಗೆ ಹಿಂದುಳಿದ ಆಳುಗಳಲ್ಲಿ ಆವೂರಿಗೆ ಸಮೀಪದ ಗ್ರಾಮದಲ್ಲಿ ಕಲ್ಲುಕುಟಿಗ – ಮಂತ್ರವಾದಿ ಕಂಚುಗಾರನೊಬ್ಬನಿದ್ದನು. ಪ್ರೇತಗಳ ಉಚ್ಚಾಟನೆ, ಭೂತಬಾಧಾ ನಿವಾರಣೆ, ಗ್ರಹಪೀಡಾ ಶಾಂತಿ, ಇವುಗಳಿಂದ ಹಣ ಸಂಪಾದನೆಯಾಗದಿದ್ದರೆ ಮಾತ್ರ ಇವನು ಕಂಚುಗಾರನು, ಅದೂ ಸಾಗದಿದ್ದರೆ ಕಲ್ಲುಕುಟಿಗನು. ಆದರೆ ತನಗಾಗಿ ಒಂದು ತೋಟವನ್ನೂ ಮಾಡಿಕೊಂಡಿರಲಿಲ್ಲ. ಅಂತಹ ನಿಪುಣ. ತೋಟಗಾರನಾಗುವ ಬದಲು ಮಾಟಗಾರನಾಗುವುದುತ್ತಮವೆಂದೇ ಇವನ ಅಭಿಪ್ರಾಯವೆಂದು ಗ್ರಾಮದಲ್ಲಿನ ವೀರಭದ್ರಗುಡಿಯ ಕೀಳುಶಾಂತಿ ಮೇಲುಶಾಂತಿಗಳು ಇವನನ್ನು ದೂರುತ್ತ ತಮ್ಮ ಮಾತ್ಸರ್ಯವನ್ನು ಸಮಾಧಾನ ಮಾಡಿಕೊಳ್ಳುತ್ತಿದ್ದರು. + +ಇವನ ನೆನಪು ಶಾನುಭಾಗರಿಗೆ ಆ ದಿನ ಬೆಳಿಗ್ಗೆ ಉಂಟಾಯಿತು. ಪೂವನು ರಾತ್ರೆಗೆ ಮನೆಗೆ ಬಾರದಿರಲು ಕಾರಣವೇನೆಂದು ಸುಖನಿದ್ರೆಯಿಂದೆದ್ದುಬಂದ ಬಾಡಿದ ಮೋರೆಯ ರುಕ್ಕು ಹೆಂಗಸು (ಉಗ್ರಾಣಿಯ ಪತ್ನಿ) ಈ ನೆನಪಿಗೆ ಹಾಯಾಗಿ ಒದಗಿದಳು. ರುಕ್ಕು ಹೆಂಗಸನ್ನು ಒಮ್ಮೆ ಕಂಡಮೇಲೆ ಅವಳ ನೆನಪು ಅಳಿಸಿಹೋಗುವುದು ಕಡಿಮೆ. ಆವೂರಿನಲ್ಲಿ ಯಾವುದೊಂದು ಬಗೆಯಲ್ಲಿ ಗಣನೆಗೆ ಬರುವ ಯಾವ ಗಂಡಸೂ, ಹೆಂಗಸೂ ಇವಳೊಡನೆ ಸಂಭಾಷಿಸದೆ ಇಲ್ಲ. ಕ್ಷತ್ರಿಯರ ಮೈಕಟ್ಟು, ಕುದುರೆಯ ನಡಿಗೆ, ಡ್ರಿಲ್ ಜಮೇದಾರನ ಬಾಯಿ! ಇವನ್ನು ನೋಡಿಯೇ ಕೆಲವರು ಇವಳು “ಗ್ರಾಮಪೋಲೀಸಿ’’ ಎಂದು ಕುಚೋದ್ಯ ಮಾಡುತ್ತಿದ್ದರು. ಆದರೂ ರುಕ್ಕು ನಿಜವಾಗಿಯೂ ರುಕ್ಮಿಣಿಯ ತದ್ಭವರೂಪವಾಗಿದ್ದಳು, ಎಂದರೆ ಅವಳ ಬಣ್ಣನೆ ಮುಗಿವಂತಿದೆ. + +ಶಾನುಭಾಗರು ನಸುನಕ್ಕರು. ರುಕ್ಕುವಿಗೆ ತನ್ನ ಈ ಮನೋರಮಣನ ವಿಷಯವಾಗಿ ಧೈರ್ಯವೂ ನಿಶ್ಚಿಂತೆಯೂ ಆಗಲು, ಅವರು, “ರುಕ್ಕೂ – ಆ ಮಂತ್ರವಾದಿಯನ್ನು ಇಲ್ಲಿಗೆ ಬರಮಾಡಬೇಕು. ಈ ಗಳಿಗೆಯಲ್ಲಿ ನಾಗಮ್ಮ ಮಿಂದುಬರುವಾಗ ಅವನು ಇಲ್ಲಿ ಹಾಜರಿರಬೇಕು,’’ ಎಂದು ಉಗ್ರಾಣಿಗೆ ಕೊಡುವ ಅಪ್ಪಣೆಗಳನ್ನು ಉಗ್ರಾಣೀಪತ್ನಿಗೆ (ವಿನಯದಿಂದ) ಕೊಡುತ್ತ, ಅವಳ ಕುತೂಹಲ ಸಮಾಧಾನಕ್ಕಾಗಿ ಏಕೆಂಬ ಯಾವತ್ತೂ ವಿಷಯಗಳನ್ನು ಸಂಕ್ಷೇಪವಾಗಿ ತಿಳಿಸಿದರು. ರುಕ್ಕು (ಸಿಟ್ಟಾಗಬಾರದು) ಬೆಕ್ಕಿನಂತೆ ಮಂತ್ರವಾದಿಯ ಮನೆಯ ಕಡೆಗೆ ತೆರಳಿದಳು; ಒಂದೆರಡು ಬಾರಿ ಹಿನ್ನೋಟ ಬೀರಿದಳು; ಅದೇಕೆಂದು ಯಾರು ಬಲ್ಲರು? ಇದು ಅವಳ ಪದ್ಧತಿಯೆಂದೇ ಕೆಲವರು, ಇದು ರುಕ್ಕುವಿನ ಸೊಕ್ಕು ಎಂದೇ ಕೆಲವರು ಎನ್ನುವುದಿದ್ದಿತು. ಇರಲಿ, ನಮಗೇನು? + +ರುಕ್ಕು ಮಂತ್ರವಾದಿಯ ಮನೆಗೆ ಹೋಗುವಾಗ – ಅವನು ಹಣೆಗೆ ಭಸ್ಮ ಹಚ್ಚಿಕೊಳ್ಳುತ್ತ, ಕೈಲಾಸದಲ್ಲಿ ಪಾರ್ವತಿಯನ್ನೇ ಅರ್ಧಾಂಗವನ್ನಾಗಿಟ್ಟುಕೊಂಡ ಶಿವಶಂಕರನನ್ನು ಆತನ ಯೋಗನಿದ್ರೆಯಿಂದ ಎಬ್ಬಿಸುವಂತೆ ಕೂಗುತಲಿದ್ದಾನೆ! ರುಕ್ಕುವಿಗೆ ವೀಳೆಯ ಜಗಿಯಕೊಟ್ಟು, ಗ್ರಾಮ ಉದ್ಯೋಗಸ್ಥರಾಗಿರುವ ಶಾನುಭಾಗರು ತನ್ನಂತಹ ಪ್ರಜೆಯನ್ನು ಅಷ್ಟು ತ್ವರೆಯಾಗಿ ಬರಲು ಹೇಳಿಕಳುಹಿಸಿದ ಕಾರಣವೇನೆಂದು ರುಕ್ಕುವು ತಿಳಿಸದೆಯೇ ತಿಳಿದುಕೊಂಡನು. ಕವಡಿಗಳ ಚೀಲ, ಪಂಚಾಂಗದಂತಹದೊಂದು ಪುಸ್ತಕ, ಜೇಡಿಯ ತುಂಡು, ಎಲ್ಲವನ್ನೂ ತೆಗೆದುಕೊಂಡು ಎದ್ದು ರುಕ್ಕುವಿನೊಡನೆಯೇ ಶಾನುಭಾಗರಲ್ಲಿಗೆ ಬಂದನು. ಹಾದಿಯಲ್ಲಿ ನಡೆದು ಬರುತ್ತ ಅವರೊಳಗೆ ನಡೆದ ಮಾತುಕತೆ ಬರೆಯಲು ನಾವು ಸಮರ್ಥರಲ್ಲ. ಅದನ್ನು ಬರೆಯಬೇಕೆಂದಿದ್ದೆವು. ಬರೆದರೆ ಅವನಾಡುವ ಆ ದೇವಭಾಷಾ ಸಾರೂಪ್ಯ ಹೊಂದಿದ ತುಳುಕನ್ನಡಗಳ ಪರಿಚಯವೂ ಸಾಕಷ್ಟಾಗುತಿದ್ದಿತು. ಆದರೆ ಅದಕ್ಕನುಕೂಲವಾದ ಅಕ್ಷರ ಸಾರೂಪ್ಯವುಳ್ಳ ಅಚ್ಚಿನ ಮೊಳೆಗಳು ಇನ್ನೂ ಸಿದ್ಧವಾಗಿಲ್ಲ. ಈ ಮಂತ್ರವಾದಿಯೇ ಮಾತ್ರ ಅದನ್ನು ಕಂಚಿನಲ್ಲಿ ಎರಕ ಹೊಯ್ದು ಕೊಡಬಹುದಾಗಿದ್ದಿತು. ಆದರೆ ಅದಕ್ಕೂ ಅವನಿಗೆ ಪ್ರೋತ್ಸಾಹ ದೊರೆತಿಲ್ಲ. ಈ ದಿನಗಳೇ ಇಂತಹವು. ಉದ್ಯೋಗ ಮಾಡಬಲ್ಲವರು ನಿರುದ್ಯೋಗಿಗಳಾಗುವಂತೆ ನಾವು ಮಾಡುತ್ತೇವೆ. ಕೂಡಲೇ ನಿರುದ್ಯೋಗಿಗಳ ಸಮಸ್ಯೆ ಬಿಡಿಸಲು ಗಂಭೀರ ತರ್ಕಗಳನ್ನು ಮಾಡುತ್ತೇವೆ. ಹೀಗಾಗಿ ಕಂಚುಗಾರನು ಮಂತ್ರವಾದಿಯಾಗಬೇಕಾಯಿತಲ್ಲದೆ ನೂತನ ಭಾಷಾ ಶಬ್ದಗಳನ್ನು ಮುದ್ರಣ ಮಾಡಲು ಯೋಗ್ಯ ಸಹಾಯಕನಾಗಲಾರದೆ ಉಳಿಯುವಂತಾದ ದೋಷವೂ ಇತರರ ಪಾಲಿಗೆ ಬಂದಿತು. + +ಶಾನುಭಾಗರು ಮಂತ್ರವಾದಿಯನ್ನು ಕೂಡಿಸುತ್ತಲೇ ಅವನು ತಾನು ಕಲ್ಲುಕುಟಿಗನಾಗಿದ್ದು ಕಟ್ಟಿದ ಯಾವುದೋ ಒಂದು ಮನೆಯ ಕೋಣೆಗಳ ನಕಾಶವನ್ನು ಜೇಡಿಮಣ್ಣಿನ ತುಂಡಿನಿಂದ ಬರೆದು, ಆಯಾ ಕೋಣೆಯಲ್ಲಿ ಇಷ್ಟಿಷ್ಟು ಕವಡಿಗಳನ್ನಿಟ್ಟು, ನಾಲ್ಕಾರು ದೇವರ ಹೆಸರುಗಳನ್ನು ಉಚ್ಚರಿಸಿ ಪ್ರಶ್ನೆ ಹೇಳತೊಡಗಿದನು. ನಮ್ಮ ಮಾತಿನಲ್ಲಿ ಅದರ ಅಭಿಪ್ರಾಯ ಚಮತ್ಕಾರವು ಹೀಗಾಗಿದೆ:- + +ಬಹು ಬೆಲೆಯದೊಂದು ವಸ್ತು ಕಾಣೆಯಾಗಿದೆ. ಅದನ್ನು ಯಾರೋ ಒಬ್ಬರು ಕದ್ದಿರಬಹುದಾಗಿ ಅನುಮಾನವೂ ಇದೆ. ಕದ್ದಿರಬಹುದಾದ ವ್ಯಕ್ತಿ ಕದ್ದುದಲ್ಲ. ಆದರೆ ಜಲುದುರ್ಗೆಯ ಪ್ರೇರಣೆಯಿಂದ ಆ ವಸ್ತುವನ್ನು ಅಡಗಿಸಿಟ್ಟ ಮಾಯೆಯಾಗಿದೆ. ಆ ವ್ಯಕ್ತಿಯನ್ನು ಹಿಡಿದ ಜಲದುರ್ಗೆಯನ್ನು ಉಚ್ಚಾಟನೆಗೊಳಿಸಬೇಕು. ಆಗ ದುರ್ಗೆ ಬಿಟ್ಟುಹೋಗುವಾಗ ಆ ವಸ್ತುವನ್ನು ವ್ಯಕ್ತಿಯ ಕೈಯಿಂದ ತಂದೊಪ್ಪಿಸುವಳು. ಜಲದುರ್ಗೆಯನ್ನು ಓಡಿಸಲು ಅಗ್ನಿದರ್ಶನವಾಗಬೇಕು. ಅಗ್ನಿಕುಂಡವನ್ನು ಮಾಡಿ ವ್ಯಕ್ತಿಯನ್ನು ಅದರ ಬಳಿ ನಿಲ್ಲಿಸಿ, ಕುಳ್ಳಿರಿಸಿ, ಬೆಂಕಿಯನ್ನು ಮುಟ್ಟಿಸಿ, ಕೆಂಡಗಳಿಂದ ಮೀಯಿಸಿ ವ್ಯಕ್ತಿಯ ಮೈಯಲ್ಲಿ ತುಂಬಿರುವ ಜಲದುರ್ಗೆಯನ್ನು ಓಡಿಸುವ ಪ್ರಯತ್ನ ಮಾಡಿದಲ್ಲಿ ಕಾರ್ಯವು ಕೈಗೂಡುವುದು. + +ಇಷ್ಟು ಚೆನ್ನಾಗಿ ವಿಜ್ಞಾನಶಾಸ್ತ್ರಕ್ಕೆ ಸರಿಯಾಗಿ, ಗ್ರಾಮ್ಯನಂಬಿಕೆಗಳಿಗೆ ಒಪ್ಪುವಂತೆ, ರುಕ್ಕುವಿನೊಡನೆ ನಾಲ್ಕು ಮಾತು ಆಡುವುದರೊಳಗೆ ಇವನು ಹೇಗೆ ಸ್ಪಷ್ಟವಾಗಿ ಪ್ರಶ್ನೆಯನ್ನು ಉತ್ತರಿಸುವನೆಂಬುದು ಚಮತ್ಕಾರವಲ್ಲವೇ! ಮಂತ್ರವಾದಿಯೆಂದರೆ ಸುಮ್ಮನೆ ಮಂತ್ರಬಲದಿಂದಲೇ ಆಗಲಾರನು; ವಾದಿಯೂ ಆಗಿರಬೇಕು. + +ಆಗಲೇ ಮಿಂದು ಬಂದ ನಾಗಮ್ಮನನ್ನೇ ಜಲದುರ್ಗೆಯ ಪ್ರವೇಶ ಹೊಂದಿದ್ದಾಳೆಂದು, ನಾರಾಯಣ ರಾಯರು ಉಗ್ರಾಣಿಯಿಂದ ಒಂದು ಚಿಕ್ಕ ಹೊಂಡ ತೋಡಿಸಿ, ಅದರಲ್ಲಿ ಕಂಟಿಕಡ್ಡಿ ಎಲೆಗಳನ್ನು ಕೂಡಹಾಕಿ, ಬೆಂಕಿ ಹೊತ್ತಿಸಿ, ಆಗಾಗ ಛಾವಣಿಗಾಗಿ ತಂದಿದ್ದ ಹುಲ್ಲನ್ನು ಉರಿಸಿ, ಅಗ್ನಿಕುಂಡವನ್ನು ನಿರ್ಮಿಸಿ ಮಂತ್ರವಾದಿಯು ಕಾರ್ಯಕ್ರಮವನ್ನು ಪ್ರಾರಂಭಿಸಬಹುದೆಂದರು. + +ನಾಗಮ್ಮನಿಗೆ ಕನಸಿನಲ್ಲಿ ಕಂಡುದೆಲ್ಲ ಮಾಯವಾಗಿದ್ದಿತಾದರೂ ಮನಸ್ಸಿನಲ್ಲೇನೂ ಮಾಯವಾಗಿದ್ದಿಲ್ಲವಷ್ಟೆ. “ಕಲ್ಲಿನ ಬದಲಾಗಿ ಕೆಂಡ” ವೆಂದೆಣಿಸಿದಳು. ಬಾಯಿ ಬಾರದು. + +ಮಂತ್ರವಾದಿಯೂ ಗಂಡನೂ ಕೇಳುತ್ತಲೇ ಇದ್ದ ಪ್ರಶ್ನೆಗಳಿಗೆ “ನಾನೊಂದೂ ಅರಿಯೆ”, ಎಂದೇ ಉತ್ತರ ಕೊಡುತ್ತಿದ್ದಂತೆ, – ಕುಂಡದ ಬಳಿ ಅವಳು ಕೂತಿರಬೇಕೆಂದಾಯಿತು. ಮಿಂದುಟ್ಟ ಒದ್ದೆ ಸೀರೆಯು ಮೈಮೇಲೆಯೇ ಒಣಗಹತ್ತಿತು. ಕೂದಲು ಕಟ್ಟಿಕೊಂಡಿರಲಿಲ್ಲ, ಒಣಗಲೆಂದು; ಅದೆಲ್ಲ ಬೆಂಕಿಯ ಧಗೆಗೆ ಒಣಗುತ್ತ ಗಾಳಿಗೆ ತೂಗುತ್ತ, ಬೆಂಕಿಯ ನಾಲಿಗೆಗಳನ್ನು ಸೋಕುತ್ತ, ಅಷ್ಟಷ್ಟೇ ತುದಿಗಳು ಸುಡುತ್ತ ಕರಿಯಾದುವು. ನಿರಾಹಾರ, ದುಃಖ, ಜಾಗರಣ ಇವುಗಳಿಂದಾಗಿ ಕೆಂಪಗೆ ಉರಿಯುತ್ತಿದ್ದ ಕಣ್ಣುಗಳಲ್ಲಿ ಈ ಕುಂಡದಿಂದೇಳುವ ಹೊಗೆಯು ಇನ್ನಷ್ಟು ಉರಿಯನ್ನೂ ಚುರುಕನ್ನೂ ಹಬ್ಬಿಸಿತು. ಬಾಡಿದ ಮುಖ ಒಣಗಿತು ಬಳಲಿದ ದೇಹ ದಣಿಯಿತು. ಜ್ವರವೇರಿತು. + +ಕುಂಡದಲ್ಲಿ ಇನ್ನೂ ಮುಳಿಹುಲ್ಲು, ಕಡ್ಡಿಗಳು ಮತ್ತು ಸೌದೆಯ ಚೂರು ಸುರಿಯಲು, ಪ್ರಶ್ನೆಗಳು ಮಳೆಗರೆಯಲು ಉತ್ತರವು ಹೊರಡದಿರಲು – ನಾಗಮ್ಮನು ಧೊಪ್ಪನೆ ಕುಂಡದೊಳಗೆ ಬಾಗಿ ಬಿದ್ದಳು. ನಾರಾಯಣರಾಯರು ಅವಳನ್ನು ಎತ್ತಲು ಧಾವಿಸಿದರು. ಮಂತ್ರವಾದಿಯು ತಾನೇ ಅವಳನ್ನು ಎತ್ತಿದನು. ತಲೆ, ಮುಖ, ಎದೆಯ ಬಟ್ಟೆ – ಇಷ್ಟೇ ಸ್ವಲ್ಪ ಸ್ವಲ್ಪ ಮಾತ್ರ ಸುಟ್ಟಿದ್ದುವು. ಮಂತ್ರವಾದಿಯು “ಜಲದುರ್ಗೆಯಿನ್ನು ಕೂಡಲೇ ಹೊರಡುವಳು’’ ಎಂದನು. ನಾರಾಯಣ ರಾಯರು, “ಸುಟ್ಟಲ್ಲಿಗೆ ಏನು ಮುಟ್ಟಿಸಬೇಕು?’’ ಎಂದರು. ಬೆಣ್ಣೆಯೆಂದಾಯಿತು; ಅದಿಲ್ಲ, ಸೆಗಣಿಯೆಂದಾಯಿತು. ಈ ವೇಳೆಗೆ ತಕ್ಕ ಬೆಣ್ಣೆ! + +ನಾಗಮ್ಮನ ಮಾತಿಲ್ಲ! ಉಸಿರೇಳುತ್ತಿದೆ! ಬೆದರಿದರು! ಆದರೂ ಮಂತ್ರವಾದಕ್ಕೆ ಆತಂಕವೇ? + +ಅಷ್ಟರಲ್ಲಿ ಪಠೇಲರ ಮನೆಯಿಂದ ಹತ್ತಿಪ್ಪತ್ತು ಮಂದಿ ಒಕ್ಕಲುಗಳು ಶಾನುಭಾಗರಲ್ಲಿಗೆ ಅವರನ್ನು ಕರೆಯಬಂದರು. “ನಿನ್ನೆಯಿಂದ ಶಾನುಭಾಗರೇ ಇಲ್ಲ. ಗೆಜ್ಜೆಟೀಕನ್ನು ಹಿಡಿದು ಗಂಡನು ಮಾಯವಾದನೇ? ನೋಡೋಣ!’’ ಎಂದು ಪಠೇಲರು ಈ ನೆವದಿಂದ ಒಕ್ಕಲುಗಳನ್ನು ಅಲ್ಲಿಗೇ ಕಳುಹಿಸಿದ್ದರು. ಈ ಪರಿಯನ್ನು ನೋಡಿ ಅವರಿಗೆ ಅರ್ಥವಾಗದೇ? ಆದರೂ ಮಂತ್ರವಾದದ ಕಾರ್ಯಕ್ಕೆ ವಿಘ್ನವಾದೀತೆಂದು ಅವರೂ ಸುತ್ತುಗಟ್ಟಿ ನಿಂತರು. + +ಮಂತ್ರವಾದವೇನೋ ಸಾಗಿತು; ನಾಗಮ್ಮನಿಗೆ ಮಾತ್ರ ಪ್ರಜ್ಞೆಯಿಲ್ಲ. + + + +ಮಂತ್ರವಾದಿಯು, “ಇನ್ನು ರಾಹುಕಾಲ, ಇದು ದಾಟುವತನಕ ನನ್ನಿಂದೇನೂ ಸಾಗದು’’ ಎಂದು ದೂರವಾದನು. ಶಾನುಭಾಗರು, “ಇನ್ನೂ ಬಾಯಿ ಬಿಡುವುದಿಲ್ಲಯ್ಯ! ನಿನ್ನದೆಂತಹ ಮಂತ್ರ?’’ ಎಂದು ಗದರಿಸಿದರು; ಅಂತರಂಗದಲ್ಲಿ ಬೆದರಿದರು. ಜನ ಕೂಡಿದುದಕ್ಕೆ ಒಮ್ಮೆ ಹೆದರಿದರು, ಮತ್ತೊಮ್ಮೆ, “ನಾನೆಷ್ಟು ಪಠೇಲರಿಗಾಗಿ ಸೊತ್ತು ಸಿಗುವಂತೆ ಪ್ರಯತ್ನಿಸುತ್ತಿದ್ದೇನೆಂದು ಇವರೂ ಸಾಕ್ಷ್ಯ ನುಡಿಯುವರು. ಚೆನ್ನಾಯಿತು,’’ ಎಂದು ಸಮಾಧಾನ ಮಾಡಿಕೊಂಡರು. + +ಸುಮಾರು ಹನ್ನೆರಡು ಹೊಡೆಯುವ ಹೊತ್ತು. ಕಲೆಕ್ಟರರ ಬಟ್ಲರನು ಶಾನುಭಾಗರಲ್ಲಿಗೆ ಬಂದನು. ಅವನು ಎರಡು ತಾಸುಗಳ ಹಿಂದೆ ಆ ಕಂಚುಗಾರನಲ್ಲಿಗೆ ಹೋಗಿದ್ದನು. ಕಲೆಕ್ಟರರು ಅಂದೇ ರಾಜಧಾನಿಗೆ ಹೊರಡುವರು. ಅವರಿಗೆ ಆ ಊರಲ್ಲಿ ಜನರು ಪೂಜಿಸುವ ದೇವತೆಗಳ ಕಂಚಿನ ವಿಗ್ರಹಗಳಿದ್ದರೆ ಬೇಕಾಗಿದ್ದಿತು. ಅಂತಹವನ್ನು ಅವರೆಷ್ಟೋ ಸಂಗ್ರಹಿಸಿದ್ದಾರೆ. ಕಂಚುಗಾರನು ಇಲ್ಲಿಗೆ ಬಂದುದನ್ನು ತಿಳಿದು ಬಟ್ಲರನೂ ಇಲ್ಲಿಗೇ ಬಂದಿದ್ದನು. + +“ಪಂಜುರ್ಲಿಯದೊಂದು ಚೆಲುವಾದ ವಿಗ್ರಹ ಉಂಟು. ನಾಲ್ಕು ರೂಪಾಯಿಗೆ ಕೊಡಬಹುದು. ಗಿರಾಕಿಗಳಿಲ್ಲದೆ ಒಳಗೇ ಉಳಿದಿದೆ. ಹೊಸ ಭೂತಗುಡಿಯೇ ಆಗಲಿಲ್ಲವಲ್ಲ. ನೀವಾದರೂ ಕೊಂಡುಹೋಗಿರಿ. ಈ ಮಂತ್ರವಾದ ಮುಗಿಯುತ್ತಲೇ ಇನ್ನೆರಡು ತಾಸುಗಳಲ್ಲಿ ಬಂಗಲೆಗೆ ತರುತ್ತೇನೆ,’’ ಎಂದು ಕಂಚುಗಾರನೆಂದನು. ಬಟ್ಲರನು ಅಲ್ಲಿಂದ ಎಲ್ಲವನ್ನೂ ನೋಡಿ ಹೊರಟುಹೋದನು. + +ಕಂಚುಗಾರನ ಮನಸ್ಸು ನಾಲ್ಕು ರೂಪಾಯಿ ಸಿಗುವ ವ್ಯಾಪಾರದ ಮೇಲೆ. ಶಾನುಭಾಗರ ಮನಸ್ಸು ಮಂತ್ರವಾದ ಮುಗಿಸದಿರುವ ಮಂತ್ರವಾದಿ ಕಂಚುಗಾರನ ಮೇಲೆ. ಹೀಗಾಗಿ ಸ್ವಲ್ಪ ಕಲ್ಮಷ ಹುಟ್ಟಿತು. ಮಂತ್ರ ಮುಗಿಸದೆ, ಜಲದುರ್ಗೆಯನ್ನು ಹೊರಡಿಸದೆ ಕಂಚುಗಾರನು ಹೋಗಲಾರನು; ಅವನು ಹೋಗದೆ, ಪಂಜುರ್ಲಿಯ ವಿಗ್ರಹ ಕಲೆಕ್ಟರರ ಕೈಸೇರದು. ಅಂತೂ ರಗಳೆಗಿಟ್ಟಿದೆ. + +ಅರೆತಾಸಿನೊಳಗೆ ಪಠೇಲರು, ಉಗ್ರಾಣಿ ಮತ್ತು ಶಾನುಭಾಗರು ಕಲೆಕ್ಟರರ ಬಂಗಲೆಗೆ ಬರಬೇಕೆಂದೂ, ಕಂಚುಗಾರನೂ ಅಲ್ಲಿಗೆ ಬರಬೇಕೆಂದೂ ದೊರೆಗಳ ಅಪ್ಪಣೆಯಾಗಿದೆಯೆಂದು ಬಟ್ಲರನೇ ಅಲ್ಲಿಗೆ ಬಂದು ತಿಳಿಸಿದನು. ಮೀರುವುದಕ್ಕುಂಟೇ? ಇಷ್ಟೂ ಮಂದಿ ಹೊರಡುವಾಗ ದೊರೆಗಳೇ ಅಲ್ಲಿಗೆ ದಯಮಾಡಿಸಿದರು! + +“ನಿಮಗೆಲ್ಲರಿಗೆ ಅಲ್ಲಿಗೆ ಬರಹೇಳಿದ್ದೆ. ಆದರೆ ಇಲ್ಲಿ ನಿಮ್ಮ ಮತ ಸಂಬಂಧವಾದ ಏನೋ ಕೆಲಸವಾಗುತ್ತಿದೆಯೆಂದು ಪುನರಾಲೋಚಿಸಿ, ಅದನ್ನು ಭಂಗಗೊಳಿಸಬಾರದೆಂದು ನಾನೇ ಇಲ್ಲಿಗೆ ಬಂದೆ. ಇದೇನಾಗುತ್ತಲಿದೆ?’’ ಎಂದು ಅಪ್ಪಣೆ ಕೊಡಿಸಿದರು. + +ತುಳು, ತಮಿಳು, ಕನ್ನಡ ಎಲ್ಲವೂ ಕಲೆಕ್ಟರರಿಗೆ ಗೊತ್ತಾಗುವುದೆಂದು ಎಲ್ಲರಿಗೂ ಗೊತ್ತು. ಮಂತ್ರವಾದಿಯ ಮಾತುಗಳು ಹೀಗಾದುವು :- + +“ಇದು ಜಲದುರ್ಗೆಯ ಉಚ್ಚಾಟನೆ. ಈ ಹೆಂಗಸಿನ ದೇಹವನ್ನು ನಿನ್ನೆ ಇವಳು ಕೆರೆಯಲ್ಲಿ ಮೀಯುವಾಗ ಪ್ರವೇಶಿಸಿ, ಇವಳ ಮೂಲಕ ಪಠೇಲರ ಹೆಂಡತಿಯ ಗೆಜ್ಜೆಟೀಕನ್ನು ಅಡಗಿಸಿಡುವಂತೆ ಆ ದೇವತೆಯು ಮಾಡಿರುವಳು. ಮಂತ್ರದಿಂದ ನೋಡಿದ್ದಲ್ಲಿ ಇವಳೇ ಕದ್ದವಳೆಂದು ತಿಳಿದುಬರುತ್ತಿದೆ.’’ಕಲೆಕ್ಟರರು (ಗಂಭೀರವಾಗಿ ನಕ್ಕು) – “ವಿಚಿತ್ರ ಮಂತ್ರವಾದ! ಇನ್ನೇನು ಮಾಡಬೇಕು?’’ + +ಮಂತ್ರವಾದಿ : “ಅಗತ್ಯವಾದಲ್ಲಿ ಆ ಕುಂಡದಲ್ಲಿ ಇವಳನ್ನು ಕೂಡ್ರಿಸಬೇಕು. ಏನೂ ಅಪಾಯವಿಲ್ಲ.’’ + +ಕಲೆಕ್ಟರರು : “ಇವಳೇ ಕದ್ದಳೆಂದು ಪ್ರಶ್ನೆಯಲ್ಲಿ ಹೇಗೆ ತಿಳಿಯಿತು?’’ + +ಮಂತ್ರವಾದಿ : “ಗ್ರಹಚಾರಫಲದಿಂದ’’ + +ಕಲೆಕ್ಟರರು : “ಆಶ್ಚರ್ಯ! ಇಲ್ಲಿ ಬರಲು ನಿನಗೆ ಹೇಳಿದವರು ಯಾರು?’’ + +ಮಂತ್ರವಾದಿ : “ಏನೂ ತಿಳಿಯದ ಈ ಹೆಂಗಸು’’ + +ಉಗ್ರಾಣಿ : “ಬಡವೆ, ಅವಳ ತಪ್ಪಿಲ್ಲ. ದೇವರೇ! ನನ್ನ ಹೆಂಡತಿಯವಳು.’’ + +ಕಲೆಕ್ಟರರು : “ನಿನ್ನನ್ನು ಇಲ್ಲಿ ಕರೆಕಳುಹಿಸಿದ್ದು ಯಾರು?’’ + +ಶಾನುಭಾಗರು : “ನಾನು ದೇವರೇ! ನನ್ನ ಹೆಂಡತಿ ಒಬ್ಬಳೇ ಮಾತ್ರ ಕೆರೆಯಲ್ಲಿ ಮೀಯುತ್ತಿದ್ದಳಂತೆ. ಆಗ ತಾನೇ ಪಠೇಲರ ಹೆಂಡತಿಯ ಗೆಜ್ಜೆಟೀಕು ಕಾಣೆಯಾಯಿತೆಂದು ತಿಳಿದುಬಂದಿತು. ಇವಳು ಎಷ್ಟು ವಿಚಾರಿಸಿದರೂ ತನಗೆ ತಿಳಿದಿಲ್ಲವೆಂದಳು. ಹೀಗಾಗಿ ಮಂತ್ರವಾದಿಯನ್ನು ಕರೆದುತರಬೇಕಾಯಿತು. ಈಗ ಸತ್ಯ ಹೊರಡುತ್ತಿದೆ.’’ + +ಕಲೆಕ್ಟರರು ಪಠೇಲರ ಹೆಂಡತಿಯನ್ನು ಕರೆಯಿಸಿದರು. ಆಕೆ ಎಲ್ಲವನ್ನೂ ಹಿಂದೆ ಹೇಳಿದಂತೆಯೇ ಹೇಳಿದಳು. + +ಪಠೇಲರನ್ನು ವಿಚಾರಿಸಲು, ತಾನು ಯಾರನ್ನೂ ಅನುಮಾನಿಸಿಲ್ಲವಾದರೂ, ದೇವತೆಗಳಿಗೆಲ್ಲ ಹರಕೆ ಹೇಳಿಕೊಂಡಿದ್ದೇನೆಂದು ಅವರ ಮಾತು. ಖಂಡಿತವಾಗಿಯೂ ಆಭರಣ ಸಿಕ್ಕುವುದೆಂದೇ ಅವರ ವಿಶ್ವಾಸ! + +ಕಲೆಕ್ಟರರು : “ಆಭರಣ ಸಿಕ್ಕಿದರೆ?’’ + +ಪಠೇಲರು : “ನನಗಾಯಿತು. ಇನ್ನು ಅದನ್ನು ನನ್ನ ಹೆಂಡತಿ, ಮೈಮೇಲಿನ ಪರಿವೆಯಿಲ್ಲದ ಹೆಂಡತಿ, ಇಟ್ಟುಕೊಳ್ಳುವುದು ಬೇಡ. ಮುನ್ನೂರು ರೂಪಾಯಿ, ದೇವರೇ!” ಅವರ ಒಂದೊಂದು ನಿಟ್ಟುಸಿರಿಗೂ ಮುನ್ನೂರು ಮುನ್ನೂರು ರೂಪಾಯಿಯ ಬೆಲೆ ಬರುವಂತಿದ್ದಿತು. + +ಪಠೇಲರ ಹೆಂಡತಿ : “ಆದೀತು, ನೀವು ಕೊರಳಿಗಿಟ್ಟುಕೊಳ್ಳಿ. ಹೇಗೂ ತೋಳುಸರಿಗೆ, ಒಂಟಿ, ಕೈ ಬಳೆ ಇತ್ಯಾದಿ ಇವೆ; ಚಾವಡಿಯಲ್ಲಿ ಶೃಂಗಾರವಾದೀತು.’’ + +ಶಾನುಭಾಗರು : “ನನಗಿಷ್ಟು ಕಷ್ಟವಾಗಿದೆ. ದೇವರೇ! ಈ ಖರ್ಚಿನ ಹಣವನ್ನಾದರೂ ಪಡೆಯಬೇಕಲ್ಲವೇ, ಪಠೇಲರಿಂದ? ಇಲ್ಲದಿದ್ದರೆ ಅವರ ಉದ್ಯೋಗಕ್ಕೆ ಸಂಬಂಧಪಟ್ಟ ರಿಕಾರ್ಡು, ಅವರ ಮನೆತನದ ಲೆಖ್ಖಾಚಾರ – ಇವನ್ನೆಲ್ಲ ನಾನೇಕೆ ಮಾಡುತ್ತಿರಬೇಕು? ಇಲ್ಲವೇ, ಆ ಕೆಲಸ, ಈ ಮನೆ ಅಂಗಡಿಗಳಾದರೂ ನನಗೆ ಶಾಶ್ವತ ಸಿಗಬೇಕು.’’ + +ಉಗ್ರಾಣಿಯ ಹೆಂಡತಿ : “ಮಂತ್ರವಾದವು ಕೈಗೂಡುವಂತೆ ಅವನನ್ನು ನಾನೇ ಕರೆದುತಂದವಳು. ನನಗೇನು ಬಹುಮಾನ?’’ + +ಉಗ್ರಾಣಿ : “ಶಾನುಭಾಗರ ಮತ್ತು ಅವರ ಹೆಂಡತಿಯ ಜಾಗ್ರತೆ ನೋಡುತ್ತ ಕಾವಲು ನಿಂತವನು ನಾನು. ಇಲ್ಲದಿದ್ದರೆ ಇಲ್ಲಿ ನಿನ್ನೆ ಒಂದೋ, ಎರಡೋ ಹೆಣ ಬೀಳುತ್ತಿರಲಿಲ್ಲವೇ?’’ + +ಇಷ್ಟಾಗುವಾಗ – ನಾಗಮ್ಮನು ಅತಿ ಕಷ್ಟದಿಂದ, “ಹೂಂ’’ ಎಂದು ಕಣ್ತೆರೆದಳು. + +“ಶಹಭಾಸ್! ಕೊಡು ನನ್ನ ಸೊತ್ತನ್ನು!’’ ಎಂದು ಮಂತ್ರವಾದಿ ವಿಕಾರವಾಗಿ ಆರ್ಭಟಿಸಿದನು! “ಕೂಡಲೆ ಕೊಡು, ಗೊತ್ತಿದೆ ನನಗೆ. ದೇವರಿಲ್ಲಿದ್ದಾರೆ, ಪಂಜುರ್ಲಿಯನ್ನು ಮಾರಬೇಕವರಿಗೆ, ತಡಮಾಡಬೇಡ!” + +ನಾಗಮ್ಮನು ಒಂದು ಮಾತನ್ನೂ ಆಡಲಿಲ್ಲ. ಮಂತ್ರವಾದಿ ಇನ್ನೂ ಇನ್ನೂ ವಿಕಾರವಾಗಿ ಮುಖಮಾಡಿ ಅವಳನ್ನು ಚುರಚುರನೆ ನೋಡಿದನು. + +ಕಲೆಕ್ಟರರು ಮೆಲ್ಲನೆ ದಿಗ್ಭ್ರಾಂತರಾದಂತೆ ಮಾಡಿ, ಮೈಯ್ಯಲೆಲ್ಲ ಹುಡುಕಿದಂತೆ ನಟಿಸಿ, ತಮ್ಮ ಅಂಗಿ ಕಿಸೆಯಿಂದ ಗೆಜ್ಜೆಟೀಕನ್ನು ಹೊರಗೆತ್ತಿ, ಏನೂ ಒಂದು ತಿಳಿಯದವರಂತೆ, “ಇದೆಲ್ಲಿಯದು, ನನ್ನ ಚೀಲದಲ್ಲಿ? ನಾನೇನೋ ಸುರುಳಿಕಟ್ಟಿದ ಹಾವಿನಂತಾಗಿದೆಯೆಂದು ಬೆದರಿದ್ದೆ!’’ ಎಂದರು. + +ಸರ್ವರಿಗೂ ಆಶ್ಚರ್ಯವಾಯಿತು. ದೊರೆಗಳ ಮೇಲಿಂದ ದೇವಿ ದಯೆತೋರಿದಳು. ರಾಜದೈವ, ರಾಜಮರ್ಯಾದೆ ಕೊಟ್ಟಿತು. ಅಂತೂ ಗೆಜ್ಜೆಟೀಕು ದೊರೆಯಿತು. + +ಮಂತ್ರವಾದಿಯ ಮುಖ ಬಹಳವಾಗಿ ಅರಳಿತು. ಇನ್ನೂ ಅದು ಅರಳಿದ್ದಲ್ಲಿ ಅವನ ಬಾಯಿ ಸೀಳಿಹೋಗುತಿದ್ದಿತು. ಪಟೇಲರು ತಮ್ಮ ಬಳೆತೊಟ್ಟ ಕೈಯನ್ನು ಬಹಳ ಮೇಲಕ್ಕೆತ್ತಿ. “ಓ, ಓ’’ ಎಂದರು. ಅವರ ಹೆಂಡತಿ ನಕ್ಕು ಉಕ್ಕಿ, ಬಿಕ್ಕಿ ಅತ್ತಳು. ಶಾನುಭಾಗರು ನಿಂತವರು ಕೂತರು; ಕೂತು ಎದ್ದುನಿಂತರು. ಉಗ್ರಾಣಿಯು ಕೈಬೀಸಿ ಸಂಕೋಲೆಯಿಂದ ಹೊಲವನ್ನು ಅಳೆದಂತೇನೋ ಅಭಿನಯ ಮಾಡಿದನು. ರುಕ್ಕು ಆ ಗೆಜ್ಜೆಟೀಕನ್ನೇ ನೋಡಿ ಕಣ್ಣಿನಿಂದಲೇ ಅದನ್ನು ನುಂಗುವಳೋ ಎಂಬಂತಿದ್ದಳು. + +ಧರ್ಮಾವತಾರಿಗಳಾದ ದೊರೆಗಳ ಸನ್ನಿಧಾನ ಪ್ರಭಾವದಿಂದಲೇ ಈ ಒಡವೆಯು ತಾನಾಗಿ ದೊರೆಯುವಂತಾಯಿತೆಂದು ಅವರ ಮಹಿಮೆಯನ್ನು ಕೊಂಡಾಡಲು ಒಕ್ಕಲ ಕೂಟವು ಬಾಯ್ತೆರೆಯಿತು. ಎಲ್ಲರ ಕಣ್ಣುಗಳೂ ದೊರೆಗಳ ಮೇಲೆಯೇ! + +“ಪಠೇಲರೇ! ನಿಮ್ಮ ಸೊತ್ತು ದೊರೆಯಿತಲ್ಲ! ಇನ್ನೇನೆನ್ನುವಿರಂತೆ?’’ ಎಂದು ದೊರೆಗಳು ಪಠೇಲರನ್ನು ಕೇಳಿದರು. + +“ನಾವು ಹೇಳಿಕೊಂಡ ಹರಕೆಗಳನ್ನು ಆಯಾ ದೇವತೆಗಳಿಗೆ ಸಲ್ಲಿಸುತ್ತೇವೆ. ಇನ್ನು ಈ ಒಡವೆಯ ಮರೆಯಾಗದಂತೆ ಎಚ್ಚರವನ್ನು ತೆಗೆದುಕೊಳ್ಳುತ್ತೇವೆ. ಎಂತೂ ಮಂತ್ರವಾದಿಯವರ ಪ್ರಯತ್ನಗಳಿಗೆ ಅವರಿಗೆ ಬಹುಮಾನ ಕೊಡಬೇಕಾಗಿದೆ.’’ + +“ಪಠೇಲರೇ! ಈ ಹುಡುಗಿಗೆ ತಲೆಮೈ ಸುಟ್ಟಿವೆ. ಬಹಳ ಕಂಗಾಲಾಗಿದ್ದಾಳೆ. ಇವಳ ಮೇಲೆ ಮಂತ್ರವಾದ ನಡೆದೇ ಇದು ದೊರೆವಂತಾಗಿದೆಯಲ್ಲ! ಅವಳಿಗೇನು ಕಷ್ಟಪರಿಹಾರ?’’ + +“ಅವಳಿಗೇನು? ಮಾಮೂಲಿನಂತೆ ಮುತ್ತೈದೆಯರಿಗೆ ನಮ್ಮ ಗುತ್ತಿನಿಂದ ಉಪಚಾರಗಳು ಸಲ್ಲುವುದುಂಟು. ಅದನ್ನು ಕೊಡಿಸುತ್ತೇನೆ. ಅವಳ ಮೇಲೆ ಉಂಟಾದ ಗುಮಾನು ನಿಜವಾದಂತಾಯಿತು. ಈ ಮಂತ್ರವೆಲ್ಲ ಅವಳ ಮೇಲೆ ನಡೆಯದಿರುತ್ತಿದ್ದರೆ ಒಡವೆ ಸಿಗುತ್ತಿತ್ತೇ?” + +“ಶಾನುಭಾಗರೇನಂತೆ?’’ + +“ದೈವ ಹಿಡಿದು ಹೀಗೆಲ್ಲ ನನಗೆ ನಗೆಗೇಡು ಮಾಡುವ ಹೆಂಡತಿಯೆಂದೇನು? ನನ್ನ ಸಂಕಟ ಅಪಾರ, ದೇವರೇ!’’ + +“ಮಂತ್ರವಾದಿ, ಇಷ್ಟು ವಿಚಿತ್ರವಾದ, ಅದ್ಭುತವಾದ ಶಕ್ತಿಯು ನಿನ್ನಲ್ಲಿರುವಾಗ ಈ ಹಾಳು ಗ್ರಾಮದಲ್ಲಿ ನೀನಿನ್ನು ವಾಸಮಾಡುವುದು ಪ್ರಯೋಜನಕರವೇ? ರಾಜಧಾನಿಗೆ ಹೋಗೋಣ.’’ + +“ಅಪ್ಪಣೆಯಾದಂತೆ’’ + +ಪಠೇಲರು, ಶಾನುಭಾಗರು, ಮೊದಲಾದವರು ಮಂತ್ರವಾದಿಯನ್ನು ವರ್ಗಾಯಿಸುವುದು ಬೇಡವೆಂದು ದೊರೆಯನ್ನು ಕೇಳಿಕೊಂಡರು. + +ಆಗ ದೊರೆಯವರು ಅಪ್ಪಣೆ ಕೊಡಿಸಿದುದೇನೆಂದರೆ : + +“ನಿನ್ನ ಬೆಳಿಗ್ಗೆ ಕೆರೆಯಲ್ಲಿ ಮೀನು ಶಿಕಾರಿ ಮಾಡಲು ನಾನು ಹೋಗಿದ್ದೆ. ಹಿಂದಿರುಗುವಾಗ ಒಂದು ಕಡೆ ವೀಳೆಯ ಕಟ್ಟಿದ್ದ ಚಿಕ್ಕ ವಸ್ತ್ರವೊಂದೂ, ಅದರ ಅಡಿಯಲ್ಲಿ ಈ ಆಭರಣವೂ ಅಲ್ಲಿದ್ದುದನ್ನು ಕಂಡೆ. ಅವನ್ನು ಎತ್ತಿಕೊಂಡು ಬಂಗಲೆಗೆ ಬಂದು, ಅವುಗಳ ವಾರಸಿ ಹುಡುಕಿಕೊಡಲು ಪೋಲೀಸ್ ಆಫೀಸರರು ಅವನ್ನು ಅಮಾನತು ಇರಿಸಬೇಕೆಂದು ಸೂಚನೆ ಬರೆದು, ಈ ಹೊತ್ತು ರಾಜಧಾನಿಗೆ ಹೋಗುವಾಗ ಒಡವೆಯನ್ನು ಕೊಂಡುಹೋಗಬೇಕೆಂದು ಚೀಲದಲ್ಲಿ ಮಡಗಿಕೊಂಡಿದ್ದೆ. ಆದರೂ ಇಟ್ಟ ಸ್ಥಳವನ್ನು ಮರೆತು, ಈ ಬಡಹುಡುಗಿಯೇ ಅದನ್ನು ಕದ್ದಿರಬಹುದೆಂದು ನೀವು ಊಹಿಸುವಂತೆ ಆದುದಕ್ಕೆ ಕಾರಣ ಯಾರು? ಪಠೇಲರೂ ಶಾನುಭಾಗರೂ ಕಾಣೆಯಾದುದನ್ನು ಗ್ರಾಮದಲ್ಲಿ ತಲಾಸಿ ಮಾಡುವ ಕ್ರಮವೇನೆಂದು ಕೇಳಿದ್ದೆ. ಈಗ ತಿಳಿದೆ, ಕಣ್ಣಾರೆ ಕಂಡೆ. ಮಂತ್ರಗಾರನಿಗೆ ಹೇಳಿಕೆ ಹೋಗುತ್ತಲೇ ಎಲ್ಲವನ್ನೂ ಅವನು ಈ ಹೆಂಗಸಿನಿಂದ ತಿಳಿದು, ಪ್ರಶ್ನೆಯನ್ನು ಕಂಡಂತೆಯೇ ಹೇಳುವನು. ಸಣ್ಣಹಳ್ಳಿ, ಏನೊಂದು ಸುದ್ದಿ ಮನೆಯಿಂದ ಮನೆಗೆ ಸುಲಭವಾಗಿ ಹರಡುತ್ತದೆ. ಅದೇ “ಗ್ರಹಚಾರಫಲ’’ ವಾಗಿ ತೋರಬಹುದು. ಏನೂ ಅರಿಯದ ಈ ಬಡ ಹುಡುಗಿಯ ಮೇಲೆ ಬಹಳ ಅತ್ಯಾಚಾರ ನಡೆದಿದೆ. ಇದಕ್ಕೆ ಹೊಣೆಗಾರನು ಈ ಮಂತ್ರವಾದಿಯೇ. ಇವನನ್ನು ರಾಜಧಾನಿಗೆ ವರ್ಗಾಯಿಸಿ ಅಲ್ಲಿ ಅವನ ವಿಚಾರಣೆ ನಡೆಯಬೇಕಾಗಿದೆ. + +“ಹಳ್ಳಿಯ ಜನರಲ್ಲಿರುವ ಮೂಢನಂಬಿಕೆಗಳನ್ನು ತನ್ನ ಪ್ರಯೋಜನಕ್ಕೆ ತಿದ್ದಿಕೊಂಡು, ಹಳ್ಳಿಗರನ್ನು ಕೊಳ್ಳೆಹೊಡೆವ ಈ ಮಂತ್ರಗಾರನು ಈಗ ಮಾಡಿರುವ ಈ ತಕ್ಷೀರಿಗೆ ಎರಡು ವರ್ಷ ಕಠಿನ ಸಜೆಯನ್ನಾದರೂ ಅನುಭವಿಸಬೇಕಾದೀತು. ಅವನಿಗೆ ಸಹಾಯಕರಾಗಿದ್ದ ಶಾನುಭಾಗರು, ಈ ಹೆಂಗಸು, ಈ ಉಗ್ರಾಣಿ, ಮೊದಲಾದವರ ಅಪರಾಧವು ಎಷ್ಟಾಗುವುದೆಂದು ನೋಡಿದರೆ, ಶ್ಯಾನುಭಾಗರ ಅನ್ಯಾಯವು ಬಹಳವಾಗಿರುವಂತೆ ತೋರುತ್ತದೆ. ಇವರು ಈ ಕೆಲಸಕ್ಕೆ ಯೋಗ್ಯರಲ್ಲ. ಆದರೆ ಬರ್ತರಫ್ ಮಾಡಿದರೆ ಆ ಬಡ ಹೆಂಗಸು ಇನ್ನೂ ಹೆಚ್ಚಾಗಿ ನರಳುವಂತಾಗುವುದು. ಅದಕ್ಕಾಗಿ ಇವರ ನಡತೆಯನ್ನು ನಜರಿನಲ್ಲಿಟ್ಟುಕೊಳ್ಳುವೆವು. ಇಂತಹವರು ಪಠೇಲರ ಖಾಸಗಿ ಕೆಲಸ ಮಾಡುತ್ತಿದ್ದು, ಪಠೇಲರು ಇವರ ಹಂಗಿನ ಮನುಷ್ಯರಾಗಿರುವ ಕಾರಣ, ಸ್ವತಃ ಓದುಬರಹ ಬಲ್ಲ ಯೋಗ್ಯರು ಯಾರೂ ಪಠೇಲರ ಕುಟುಂಬದಲ್ಲಿದ್ದಾರಾದರೆ, ಅವರನ್ನು ಹುಡುಕಿ, ಪಠೇಲಿಕೆಯನ್ನು ಅವರಿಗೆ ಕೊಡುವುದು ಉತ್ತಮವೆಂದು ತೋರುತ್ತದೆ. ಉಗ್ರಾಣಿ! ನಿನ್ನ ನಜರು ನಿನ್ನ ಹೆಂಡತಿಯ ಮೇಲೂ ಇರತಕ್ಕದ್ದಲ್ಲವೇ?’’ + +ಅತಿ ಸುಲಭವಾಗಿರುವ ಮಾತುಗಳಲ್ಲಿ ಈ ಅಭಿಪ್ರಾಯವನ್ನು ದೊರೆಗಳು ಅಪ್ಪಣೆ ಕೊಡಿಸಿದರು. ಆಗತಾನೇ ಒಕ್ಕಲುಗಳು ಆ ಮಂತ್ರವಾದಿಯ ಕಡೆಗೂ ರುಕ್ಕುವು ಈ ಬಡ ಹುಡುಗಿಯ ಕಡೆಗೂ ಧಾವಿಸಿದರು. ತಮ್ಮನ್ನು ಬಗೆಬಗೆಯಾಗಿ ಸುಲಿದ ಮಂತ್ರವಾದಿಯನ್ನು ಕೊನೆಯ ಬಾರಿ ಕಾಣುವುದಕ್ಕೆಂದು ಒಕ್ಕಲುಗಳು ತವಕಗೊಂಡರು. ರುಕ್ಕುವು ದೊರೆಗಳು ನಾಗಮ್ಮನಲ್ಲಿಟ್ಟ ಕನಿಕರವನ್ನು ತಿಳಿದು, ಎಷ್ಟೆಂದರೂ ಅವಳ ಹೆಂಗರುಳು ಕರಗಿ, ನಾಗಮ್ಮನ ಆರೈಕೆ ಮಾಡತೊಡಗಿದಳು. ತಾನು ಉಗ್ರಾಣಿಯ ಹೆಂಡತಿ, ಅಥವಾ, ತಾನು ಬ್ರಾಹ್ಮಣ ಹೆಂಗಸಲ್ಲವೆಂಬ ವಿಚಾರಗಳಾದರೂ ಅವಳಲ್ಲಿ ಉಂಟಾಗಲಿಲ್ಲ. ಪಠೇಲರು ಐವತ್ತು ರೂಪಾಯಿ ರೊಕ್ಕವನ್ನು, ಎಲವಸ್ತ್ರದ ಸೆರಗಿನಿಂದ ಗಂಟುಬಿಚ್ಚಿ, ಹೆಂಡತಿಯ ಕೈಯಿಂದ ನಾಗಮ್ಮನ ಬಳಿ ಭಕ್ತಿಯಿಂದ ಕಾಣಿಕೆ ಇಡಿಸಿದರು. ಉಗ್ರಾಣಿಯು ಕಂಚುಗಾರನ (ಮಂತ್ರವಾದಿಯ) ಮನೆಗೆ ಓಡಿಹೋಗಿ, ಪಂಜುರ್ಲಿಯ ವಿಗ್ರಹ ತಂದು, ಬಟ್ಲರನ ಕೈಯಲ್ಲಿ ಭಕ್ತಿಯಿಂದ ಕಾಣಿಕೆಯಿಟ್ಟನು. ಶಾನುಭಾಗರು ದೊರೆಗಳು ನಿಂತಲ್ಲಿಯೇ ತಾವು ಕೂತರು. ಹೀಗೊಂದು ಕೊನೆಯ ಅಂಕದ ತೆರೆ ಇಳಿಯುವ ಸನ್ನಿವೇಶವಾಯಿತು. ನಂತರ ದೊರೆಗಳು ಆ ಗೆಜ್ಜೆಟೀಕನ್ನು ಪಠೇಲರಿಗೆ ಕೊಟ್ಟರೆ, ಮಂತ್ರವಾದಿಯನ್ನು, ನಾಲ್ಕು ರೂಪಾಯಿ (ವಿಗ್ರಹದ ಬೆಲೆ) ಕೊಟ್ಟು, ಇನ್ನು ಮಾಟಗಾರನಾಗುವ ಬದಲು ತೋಟಗಾರನಾಗಬೇಕೆಂದು ಬೋಧಿಸಿದರು. ತಮ್ಮ ಚೀಲದಿಂದ ಎಂತಹದೋ ಮುಲಾಮನ್ನು ನಾಗಮ್ಮನ ಸುಟ್ಟಗಾಯಗಳಿಗೆ ಹಚ್ಚಲು ಕೊಡಿಸಿದರು. ಅಲ್ಲಿಂದ ನಸುನಗುತ್ತ ಬಂಗಲೆಗೆ ಹೊರಟರು. + +“ಸುಮ್ಮನೇ ಸೆಟ್ಲ್ಮೆಂಟ್ ಮಾಡುತ್ತಾರೆ, ತೀರ್ವೆ ಹೆಚ್ಚಿಸುತ್ತಾರೆ.’’ ಎಂದು ದೂರುತ್ತಾರಲ್ಲ! ಇವರೇ ದೊರೆಗಳು. ಸೆಟ್ಲ್ಮೆಂಟ್ ಬಾಬುಗಳನ್ನು ವಿಚಾರ ಮಾಡುತ್ತ ತೀರ್ವೆ ಕೂಡಿಸುವವರು ನಿಜ. ಆದರೆ ಏನೂ ಹೇಳಿರಿ. ದೊರೆಗಳು ಎಷ್ಟು ಚೆನ್ನಾಗಿ ನ್ಯಾಯ ತೀರಿಸಿದರು! ಬ್ರಿಟಿಷರಲ್ಲಿರುವ ನ್ಯಾಯಬುದ್ಧಿಯ ಮಂತ್ರಬಲವು ಎಂತಹ ಮಂತ್ರವಾದವನ್ನೂ ಗೆಲ್ಲುವುದಲ್ಲವೇ?’’ ಎಂದು ಶಾನುಭಾಗರು ಪಠೇಲರಿಗೂ ಪಠೇಲರು ಶಾನುಭಾಗರಿಗೂ ಹೇಳುತ್ತಿರುವಾಗ ಒಕ್ಕಲುಗಳು ಕೇಳುತ್ತ ವಿಸ್ಮಿತರಾಗಿದ್ದರು. + +ರುಕ್ಕುವಂತೂ ನಾಗಮ್ಮನನ್ನು ಬಿಟ್ಟಳೆಂಬ ಜಲದುರ್ಗೆಗಿಂತ ನೂರುಮಡಿ ಹೆಗ್ಗಳಿಕೆಯ ನೆಲದುರ್ಗೆಯಾಗಿ, ನಾಗಮ್ಮನ ಪೂರ್ಣ ಸೌಖ್ಯವಾಗುವತನಕವೂ ಅವಳ ಸೇವೆ ಮಾಡಿದಳು. ಶಾನುಭಾಗರ ಹಟ್ಟಿಯಲ್ಲಿ ಮಾತ್ರ ಎಮ್ಮೆಯಿಲ್ಲ. ಅದು ಚೊಕ್ಕವಾಗಿ, ಸುಂದರವಾಗಿ, ಹದವಾಗಿ, ರುಕ್ಕು ಪೂವರ ಸಂಸಾರಕ್ಷೇತ್ರವಾಯಿತು. + +ಯಾವ ಮಂತ್ರವು ಬಲವೂ ಇಲ್ಲದೆ ರುಕ್ಕುವು ಈಗ ಒಂದು ಮಗುವಿನ ತಾಯಿಯಾಗಿದ್ದಾಳೆ. ಮಗುವಿನ ಹೆಸರು ನಾಗಮ್ಮ. ರುಕ್ಕುವು ಈಗ ನಾಗಮ್ಮನನ್ನು ಗೆಜ್ಜೆಟೀಕಿಗಿಂತಲೂ ಬಿಗಿಯಾಗಿ ಕೊರಳಿಗೆ ಕಟ್ಟಿಕೊಂಡಿದ್ದಾಳೆ. + +ಎಂ. ಎನ್. ಕಾಮತರ ಈ ಕತೆಯಲ್ಲಿ ಪಟೇಲ ಶಾನುಭಾಗರು ದಾರಿತಪ್ಪಿದರೆ ಬ್ರಿಟಿಷ್ ಅಧಿಕಾರಿಗಳು ಅಥವಾ ಸರಕಾರ ಜನರಿಗೆ ನ್ಯಾಯ ಒದಗಿಸುತ್ತಿತ್ತು ಎನ್ನುವ ಸೂಕ್ಷ್ಮ ಚಿಂತನೆ ಅಂತರ್ಗತವಾಗಿರುವುದನ್ನು ಕಾಣಬಹುದು. ಎಂ. ಎನ್. ಕಾಮತರು ಸ್ವಾತಂತ್ರ್ಯ ಹೋರಾಟ ತೀವ್ರಗೊಳ್ಳುವುದಕ್ಕಿಂತ ಪೂರ್ವದ, ಬ್ರಿಟಿಷ್ ಪ್ರಭುತ್ವ ನಮಗೆ ಉತ್ತಮ ಸರಕಾರವನ್ನು ನೀಡಿದೆ ಎಂದು ಭಾವಿಸಿದ್ದ ಸಮಾಜದ ಪ್ರತಿನಿಧಿಯಾಗಿದ್ದರು ಎನ್ನುವುದು ಗಮನಾರ್ಹ, + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_391.txt b/Kenda Sampige/article_391.txt new file mode 100644 index 0000000000000000000000000000000000000000..79d6853e3c5f5b03839d04ac4f84b1bd4c4054a0 --- /dev/null +++ b/Kenda Sampige/article_391.txt @@ -0,0 +1,57 @@ + + +ನಿಜ ಜೀವನದ ಕೊನೆಮೊದಲಿಲ್ಲದ ಜಂಜಾಟಗಳ ಗೋಜಲಿನಲ್ಲಿ ಸಿಲುಕಿದ ತೀರ ಸಾಮಾನ್ಯ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ತನಗಷ್ಟೇ ಪ್ರಾಪ್ತವಾಗುವ ದತ್ತ ಸಂವೇದನೆಗೆ, ಪರವಶತೆಗೆ ಹೇಗೆ ಒಳಗಾಗುತ್ತಾನೆ? ಆ ಭಾವೋನ್ಮಾದದ ಸಾರವನ್ನು ಬೇರೊಬ್ಬರಿಗೆ ಅರ್ಥವಾಗುವ ಮಾಧ್ಯಮದಲ್ಲಿ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳಿಗೆ ಗೋಚರಿಸುವಂತೆ ತೆರೆದಿಡುವ ಸಾಮರ್ಥ್ಯವನ್ನು ಪಡೆಯುವ ಬಗೆಯಾದರೂ ಯಾವುದು ಎಂಬ ಪ್ರಶ್ನೆಗಳು ಪುರಾತನವಾದುವು. + +(ಆಕರ್ಷ ರಮೇಶ್ ಕಮಲ) + +ಅತಿ ಸಾಮಾನ್ಯನೊಬ್ಬ ಅಸಾಮಾನ್ಯನಾಗಿ ರೂಪಾಂತರಗೊಳ್ಳುವ ಈ ಸೃಷ್ಟಿಕ್ರಿಯೆಯ ವಿಸ್ಮಯವು ನೂರಾರು ವರ್ಷಗಳಿಂದ ಕಾಡುತ್ತಲೇ ಬಂದಿದೆ. ಈ ಪ್ರತಿಭಾ ವಿಲಾಸವನ್ನು ‘ಭೃಂಗದ ಬೆನ್ನೇರಿ’ ಬಂದ ಕಲ್ಪನೆಗೆ ಕವಿಯೊಬ್ಬ ಹೋಲಿಸಿದರೆ, ಇನ್ನೊಬ್ಬ ಕವಿ ‘ಸುಮಕೆ ಸೌರಭ ಬಂದ ಘಳಿಗೆ ಯಾವುದು ಹೇಳು?’ ಎಂದು ಚಕಿತನಾಗಿ ಕೇಳುತ್ತಾನೆ. ಮೊದಲ ಕವಿಗೆ ಈ ವಿಸ್ಮಯ ಗಳಿಗೆ ಯಾವ ರೂಪ, ಶಬ್ದ, ಗಂಧ, ರಸಗಳಲ್ಲಿ ಬರುತ್ತದೆಂದು ಮಾಗಿದ ಅನುಭವ ಕಲಿಸಿದ್ದರಿಂದಲೇ ಆತ ವರಕವಿಯಾಗಿದ್ದಾನೆ. ಎರಡನೆಯ ಕವಿಗೆ ಆ ಕುರಿತು ಕೊಂಚ ತುಂಟತನದ ಅನುಮಾನ ಕಾಡುತ್ತಿದೆ. ಇದ್ದರೂ, ಅದು ಬರುತ್ತಿರುವುದು ಅನುಭವ ಸಾಂದ್ರವಾಗಿ ‘ನೆಲದ ಮರೆಯ ನಿಧಾನ’ದಂತೆ ಕುಳಿತಿದೆ ಎಂದು ಗೊತ್ತು. ಆತನದು ಬಗೆದು ನೋಡುವ, ಸಂದೇಹದ ನವ್ಯ ವಿಧಾನವಷ್ಟೇ. ಮೇಲಿನಿಬ್ಬರು ಕವಿಗಳಿಗಿಂತ ಭಿನ್ನವಾಗಿ, ಆದರೆ ಅವರು ಹೇಳಿರುವುದನ್ನೆಲ್ಲ ಸಾಂದ್ರವಾಗಿ ಬೇರೊಂದು ರೀತಿಯಲ್ಲಿ ಅರುಹಿದ ಕವಿಯೂ ಇದ್ದಾರೆ. ಸಂವೇದನೆಯ ಗಳಿಗೆ ಮತ್ತು ಪರಿಣಾಮವನ್ನು ಅವರು ಹೇಳುವುದು ಹೀಗೆ: + +ಬಂತು ಬಂತೆಲೆ ಬಂತು ಬಂತು ಘನಸಿರಿ ಬಂತುಬಂತೆಂದರೂ ಇದ್ದುದಿದ್ದೇ ಇತ್ತುಬಂತು ಬೆಳಗೆಂಬಂತೆ ಬಂತು ಹೊಳೆ ಬಂದಂತೆಇದ್ದದ್ದೆ ತುಂಬಿ ತುಳುತುಳುಕುತ್ತಿತ್ತು + +ಬೇಂದ್ರೆ, ರಾಮಚಂದ್ರ ಶರ್ಮ ಮತ್ತು ಮಧುರ ಚೆನ್ನ ಹಲಸಂಗಿಯವರನ್ನು ಸ್ವಲ್ಪ ಪಕ್ಕಕ್ಕಿಟ್ಟು ನಾನು ಅಪಾರವಾಗಿ ಮೆಚ್ಚುವ ಫ್ರೆಂಚ್ ಕವಿ, ತತ್ವಜ್ಞಾನಿ ಮತ್ತು ಸಾಹಿತ್ಯ ಮೀಮಾಂಸಕ ಪಾಲ್ ವಲೇರಿ ಈ ಪ್ರಕ್ರಿಯೆಯ ಕುರಿತು ಹೇಳಿರುವ ಮಾತುಗಳ ಕಡೆಗೆ ಹೊರಳುತ್ತೇನೆ. ನಮ್ಮೊಳಗೆ ಕಾವ್ಯ ರಚನೆಯನ್ನು ಸಾಧ್ಯವಾಗಿಸುವ, ಆಕಸ್ಮಿಕ ಆಘಾತವನ್ನುಂಟುಮಾಡುವ ಅನನ್ಯ ವಸ್ತು ಯಾವುದು ಎಂದು ಕೇಳಿಕೊಳ್ಳುವ ವಲೇರಿ, ಕಾವ್ಯವು ಭಾಷೆಯಲ್ಲಿ ರೂಪುಗೊಳ್ಳುವ ಕಲಾಕೃತಿಯಾಗಿದೆ ಎನ್ನುತ್ತಾನೆ. ಒಬ್ಬ ನಿರ್ದಿಷ್ಟ ಸಂವೇದನಾಶೀಲ ವ್ಯಕ್ತಿ ಉಂಟುಮಾಡುವ ಶಬ್ದಗಳ ಸಂಯೋಜನೆಯು, ಉಳಿದವರು ಸೃಷ್ಟಿಸಲಾರದ ಭಾವನೆಗಳನ್ನು ಹುಟ್ಟು ಹಾಕುತ್ತದೆ. ಅದೇ ‘ಕಾವ್ಯಾತ್ಮಕತೆ’ ಎನ್ನುತ್ತಾನೆ. + +ಸಾಮಾನ್ಯ ಜಗತ್ತಿನ ವಸ್ತು, ಅಂತರಂಗ-ಬಹಿರಂಗದ ಸಂಗತಿ, ಜೀವಿಗಳು, ಭಾವನೆ, ಕ್ರಿಯೆಗಳು, ತಮ್ಮ ನಿಜಸ್ಥಿತಿಯನ್ನು ಉಳಿಸಿಕೊಂಡೇ, ನಮ್ಮ ಸಾಮಾನ್ಯ ಭಾವನೆಯೊಂದಿಗೆ ಅದ್ಭುತವಾದ ಸಂಬಂಧವೊಂದನ್ನು ವಿವರಿಸಲಾಗದಷ್ಟು ಕ್ಷಿಪ್ರವಾಗಿ ಬೆಸೆದುಬಿಡುತ್ತವೆ. ಅಂದರೆ, ಈ ಚಿರಪರಿಚಿತ ವಸ್ತು, ಜೀವಿಗಳು ಅದೆಂತೋ, ಅವುಗಳ ಮೌಲ್ಯವನ್ನು ಬದಲಿಸಿಬಿಡುತ್ತವೆ. ಒಂದನ್ನೊಂದು ಆಕರ್ಷಿಸುತ್ತ ಸಾಮಾನ್ಯ ಸ್ಥಿತಿಗಿಂತ ಭಿನ್ನವಾಗಿರುವ ಇವು ನಾದ ತುಂಬಿ, ಭಾವ ತುಂಬಿ ಸಾವಯವ ಬೆಸುಗೆ ಸಾಧಿಸುತ್ತವೆ. ಇಂತಹ ಕಾವ್ಯಜಗತ್ತು ವಿಸ್ತೃತ ಕನಸಿನಲೋಕವೊಂದನ್ನು ಸಾದೃಶ್ಯಗೊಳಿಸುತ್ತದೆ. + +ಆದರೆ ಇದೊಂದು ಸಾತತ್ಯವಿಲ್ಲದ, ಕ್ಷಣಭಂಗುರ ಸ್ಥಿತಿ. ನಾವದನ್ನು ಇದ್ದಕ್ಕಿದ್ದಂತೆ ಪಡೆದುಕೊಂಡಂತೆಯೇ ಕಳೆದುಕೊಂಡು ಸಾಮಾನ್ಯ ಮನುಷ್ಯರಾಗಿಬಿಡುತ್ತೇವೆ. ಸಂವೇದನಾಶೀಲನೊಬ್ಬ ಮತ್ತೆಮತ್ತೆ ಇಂಥ ಸ್ಥಿತಿಯನ್ನು ಸಾಧಿಸಲು; ನೆಲದ ಮರೆಯ ನಿಧಾನದಂತಿರುವ ಆ ನಿಧಿಯನ್ನು ಹುಡುಕಲು ಹೊಲದಲ್ಲಿ ಹೊಳೆವ ತೆನೆಗಳು, ಮಳೆಯಿಲ್ಲದೆ ಬಿರುಕು ಬಿಟ್ಟು ನಿಂತ ನೆಲ, ಮೃಷ್ಟಾನ್ನದ ರುಚಿ ಮತ್ತು ಹಸಿವಿನ ಚುರುಕು, ನೀರಿನ ದಾಹ, ನರಕದ ಕೂಪಗಳಂತಿರುವ ಕೊಳಗೇರಿಗಳು, ಪ್ರಖರವಾಗಿ ಸುಡುವ ಸೂರ್ಯನ ಬಿಸಿಲು ಸೃಷ್ಟಿಸುವ ಮರೀಚಿಕೆ ಮತ್ತು ಕಾಮನಬಿಲ್ಲುಗಳನ್ನು ಕಾಣುವ ಮನಸ್ಥಿತಿಯನ್ನು ಪಡೆದವನಾಗಿರಬೇಕಾಗಿರುತ್ತದೆ. ಪರವಶನಾಗಿ ಕನಸಿನ ಬೆನ್ನು ಹತ್ತಲು ಸಿದ್ಧನಾಗಿರಬೇಕಾಗುತ್ತದೆ. ಕವಿಯ ಕೆಲಸ ಕಾವ್ಯಾತ್ಮಕ ಸ್ಥಿತಿಯ ಅನುಭವ ಪಡೆಯುವುದಲ್ಲ. ಅದು ಆತನ ಖಾಸಗಿ ಸಂಗತಿ. ತಾನುಂಡ ಅನುಭವವನ್ನು ಭಾಷೆಯ ಮೂಲಕ ಇನ್ನೊಬ್ಬರಲ್ಲಿ ಸೃಷ್ಟಿಸಲು ಯಶಸ್ವಿಯಾದಾಗಲೇ ಆತ ನಿಜವಾದ ಅರ್ಥದಲ್ಲಿ ಕವಿಯಾಗುವುದು. ಕವಿ ಈ ಶಬ್ದಲೋಕದಲ್ಲಿ ಬಂದಿಯಾಗಿದ್ದಾನೆ. ಆತ ಶಬ್ದ ಮತ್ತು ಗ್ರಹಿಕೆಗಳನ್ನು ಒಟ್ಟಿಗೆ ಹಿಡಿದಿಡಬೇಕು. ಸಮರಸ ಸಾಧಿಸಿದಾಗಲೇ ಅರ್ಥಸಾರ್ಥಕತೆ. ಕವಿಯ ಈ ಸಂಕಷ್ಟವನ್ನು ವಲೇರಿ ‘ನಡಿಗೆ ಮತ್ತು ನಾಟ್ಯ’ಕ್ಕೆ ಹೋಲಿಸುತ್ತಾನೆ. ನಡಿಗೆ ಗದ್ಯದಂತಿದ್ದು, ನಿಶ್ಚಿತ ಗುರಿಯನ್ನು ಹೊಂದಿದೆ. + +ನಾಟ್ಯದ ಮಾತೇ ಬೇರೆ. ನಾಟ್ಯದ ಪ್ರತಿಯೊಂದು ಕ್ರಿಯೆಗಳಿಗೆ ನಿಯಮವಿದೆ. ವಸ್ತುವನ್ನು ಶೂನ್ಯದಿಂದ ಗ್ರಹಿಸುವ ಕಲಾವಿದ ಅದರೆಲ್ಲ ಸೊಬಗಿನೊಂದಿಗೆ ಅದನ್ನು ಅಲ್ಲಿಯೇ ಪ್ರಸ್ತುತಪಡಿಸುತ್ತಾನೆ. ಒಂದು ನಿಯಮಿತ ಚಲನೆ, ನಿಯಂತ್ರಿತ ನಾದಗಳ ಮೂಲಕ ಒಂದು ನಿಶ್ಚಿತ ಸ್ಥಿತಿಯನ್ನು ಸೃಷ್ಟಿಸಿ, ನಿರ್ವಹಿಸುತ್ತ ಅಲ್ಲಿಯೇ ಎಲ್ಲವನ್ನೂ ಪ್ರದರ್ಶಿಸುತ್ತಾನೆ. ನಡಿಗೆಯಿಂದ ನಾಟ್ಯವು ಎಷ್ಟೇ ಭಿನ್ನವಾಗಿದ್ದರೂ ಅದೇ ಅಂಗ, ಅದೇ ರಚನೆಗಳನ್ನು ಬಳಸುತ್ತಿದೆ. ಆದರೆ, ವಿಭಿನ್ನ ರೀತಿಯಲ್ಲಿ ಸಂಯೋಜಿಸುವ ಮೂಲಕ ವಿಶಿಷ್ಟ ಅನುಭವವನ್ನು ಸೃಷ್ಟಿಸುತ್ತದೆ. + +ಕವಿ ಮತ್ತೆ ಮತ್ತೆ ಇಂಥ ಅನುಭವಗಳನ್ನು ಭಾಷೆಯ ಕಲಾಕೃತಿಯಲ್ಲಿ ಸೃಷ್ಟಿಸಲು ತ್ರಿಕಾಲಗಳಲ್ಲಿ ಸಂಚಾರಿಯಾಗಿರಬೇಕಿದೆ. ಹಳೆಯ ರೂಪಕಗಳನ್ನು ಹೆಕ್ಕಿ ತೆಗೆಯುವ, ಕಣ್ಣೆದುರು ಕಾಣುತ್ತಿರುವ ಪ್ರತಿಮೆಗಳನ್ನು ಸೋಸಿ ಶುದ್ಧಗೊಳಿಸುವ, ಮುಂದಿನದನ್ನು ಈಗಲೇ ಕಾಣುವ ಒಳಗಣ್ಣನ್ನು ಜತನದಿಂದ ಕಾಪಿಡಬೇಕಿದೆ. ಆತ ನೀರಿನಂತೆ ಆದ್ರವಾಗಿದ್ದರೆ, ಉಪ್ಪು, ಜೇನು, ಬೇವಿನ ರಸಗಳೆಲ್ಲವೂ ಕರಗಿ ನೀರಿಗೆ ಹೊಸರುಚಿ ಬರುವಂತೆ ಮಾಡಬಲ್ಲ. + +ಕವಿ ಭೌತಿಕ ಅನುಭವಗಳನ್ನೇನೋ ನೇರವಾಗಿ ಪಡೆಯಬಲ್ಲ. ಅದಷ್ಟೇ ಸಾಕಾಗದು. ಬೌದ್ಧಿಕ ಅನುಭವ ಅಗತ್ಯ ಮತ್ತು ಅನಿವಾರ್ಯ. ಇಂಥ ಅನುಭವಗಳನ್ನು ವಿವಿಧ ಭಾಷೆಗಳು ಹಿಡಿದಿಡುತ್ತ ಬಂದು ಅದೆಷ್ಟು ಯುಗಗಳಾಗಿವೆಯೋ! ಕವಿ ಮಾಡಬೇಕಿರುವುದೆಂದರೆ, ಬೌದ್ಧಿಕ ಅನುಭವವನ್ನು ಸಾಕಾರಗೊಳಿಸಿಕೊಳ್ಳಲು ಅದರತ್ತ ನಡಿಗೆ ಬೆಳೆಸಬೇಕಿರುವುದು. ಸರಳವಾಗಿ ಹೇಳುವುದಾದರೆ, ಕವಿ ದತ್ತವಾಗಿ ಪಡೆದ ಭಾಷೆಯ ಪರಂಪರೆಯನ್ನು ಒಲಿಸಿಕೊಳ್ಳಬೇಕು, ಅರಿತುಕೊಳ್ಳಬೇಕು. ಅಲ್ಲಿ ಅಡಗಿರುವ ಲಯ, ನಾದ, ಯುಗಧರ್ಮ ಮತ್ತು ಶಬ್ದ ಸೃಷ್ಟಿಸುತ್ತಿರುವ ಅರ್ಥಗಳನ್ನು ತನ್ನ ಕಾಲಮಾನದ ನಿಕಷಕ್ಕೊಡ್ಡಿ ತಿಳಿಯಲು ಯತ್ನಿಸಬೇಕು. + + + +ಇನ್ನೂ ಸರಳವಾಗಿ, ಆಧುನಿಕ ಕನ್ನಡ ಭಾಷೆಗೆ ಸೀಮಿತಗೊಳಿಸಿ ಹೇಳುವುದಾದರೆ, ವಚನಗಳು, ಬೇಂದ್ರೆ, ಕುವೆಂಪು, ಎಕ್ಕುಂಡಿ, ಕೆ ಎಸ್‍ ನ, ಪುತಿನ, ಗಂಗಾಧರ ಚಿತ್ತಾಲ, ಅಡಿಗ, ಶಿವಪ್ರಕಾಶ, ತಿರುಮಲೇಶ, ಇಲ್ಲಿ ಹೆಸರಿಸದ ಇಂಥ ಅನೇಕ ಕವಿಗಳು ಸವೆಸಿದ ಜಾಡನ್ನು ಅಭ್ಯಸಿಸಬೇಕು. ಒತ್ತು ಕೊಟ್ಟು ಹೇಳುವುದಾದರೆ, ತಮ್ಮ ಆಳವಿಸ್ತಾರಗಳ ಅಧ್ಯಯನ ಮತ್ತು ಸತತ ಪರಿಶ್ರಮದಿಂದ ಕೆ.ವಿ. ತಿರುಮಲೇಶ ಮತ್ತು ಎಚ್.ಎಸ್. ಶಿವಪ್ರಕಾಶರು ರೂಪಿಸಿಕೊಂಡ ಕಾವ್ಯಪ್ರಯೋಗಶೀಲತೆಗಳು ಹೊಸ ತಲೆಮಾರಿನ ಕವಿಗಳಿಗೆ ಉಪಯುಕ್ತ ಪಾಠಗಳನ್ನು ಹೇಳಿಕೊಡಬಲ್ಲವು. ಹೊಸ ಕವಿಯೊಬ್ಬ ಕೈಗೊಳ್ಳಬಹುದಾದ ಪಯಣದ ಹಾದಿಗೆ ದಿಕ್ಕನ್ನು ಸೂಚಿಸಬಲ್ಲವು.*ಮಗುವಾಗಿದ್ದಾಗಿನಿಂದ ನಾನು ಬಲ್ಲ ಆಕರ್ಷ ಇದೀಗ ಅಂಥ ಹೊಸ ಹಾದಿಯ ಪಯಣದ ಮೊದಲ ಹೆಜ್ಜೆಯನ್ನಿಡುತ್ತಿರುವ ಕವಿಯಾಗಿದ್ದಾನೆ. ಆತನ ಅಂಬೆಗಾಲು, ಮೊದಲ ನಡಿಗೆ, ಓಟಗಳನ್ನು; ತೊದಲು ನುಡಿ, ಮೊದಲು ಬಾಯಿಪಾಠ ಮಾಡಿದ ಪದ್ಯ, ಬರೆದ ಮೊದಲ ಕವಿತೆ, ವಾದವಾಗ್ವಾದಗಳನ್ನು ನಾನು ಅಕ್ಷರಶಃ ಬಲ್ಲೆ. ಹೀಗಾಗಿಯೇ, ಆತನನ್ನು ಹೊಸ ಕವಿಯೆಂದು ಮಾತ್ರ ಸ್ವೀಕರಿಸಿ ಮೇಲಿನ ಸುದೀರ್ಘ ಮಾತುಗಳನ್ನು ಬರೆಯಬೇಕಾಯಿತು. ಈ ಮಾತುಗಳು ಇಂದಿನ ತಲೆಮಾರಿನ ಎಲ್ಲ ಕವಿಗಳಿಗೆ. + +ಅಪಾರ ಭರವಸೆ ಹುಟ್ಟಿಸುವ ಆತನ ಸಮಕಾಲೀನ ಕೆಲವು ಕವಿಗಳಂತೆ ಆಕರ್ಷನ ಕವಿತೆಗಳು ಕೂಡ ತಾವು ಸೂಸುವ ಭಿನ್ನ ರುಚಿಯಿಂದಾಗಿ ಪ್ರತ್ಯೇಕವಾಗಿ ನಿಲ್ಲುತ್ತವೆ. ಗ್ರಾಮೀಣ ಹಿನ್ನೆಲೆಯುಳ್ಳ ನಗರವಾಸಿ ತಂದೆತಾಯಿಗಳನ್ನು ಪಡೆದ, ನಗರದಲ್ಲಿಯೇ ಹುಟ್ಟಿ, ದೊಡ್ಡವರಾದ ತಲೆಮಾರಿಗೆ ಸೇರಿದ ಈ ಕವಿ ತನ್ನ ಕವಿತೆಗಳಲ್ಲಿ ಅಂಥ ಸಂವೇದನೆಗಳನ್ನೇ ನಿರ್ಮಿಸಲು ಪ್ರಯತ್ನಿಸುತ್ತಿದ್ದಾನೆ. ಕನ್ನಡ ಸಾಹಿತ್ಯದಲ್ಲಿ ನಗರ ಸಂವೇದನೆಗಳಿಲ್ಲ ಎಂದು ಅಳ್ಳಕವಾದ, ಅರೆಪಕ್ವ ಮಾತನ್ನು ನಾವು ಆಗೀಗ ಕೇಳುತ್ತಿರುತ್ತೇವೆ. ಅಂಥವರು ಆಕರ್ಷ ಮತ್ತು ಆತನ ಸಮಕಾಲೀನ ಕವಿಗಳು, ಗದ್ಯಲೇಖಕರು ಬರೆದುದನ್ನು ಓದುತ್ತಿಲ್ಲವೆಂಬುದು ಸ್ಪಷ್ಟವಿದೆ. + +ಈ ತಲೆಮಾರಿನ ಅನುಭವದ ಇನ್ನೊಂದು ವಿಶಿಷ್ಟ ಅಂಶವೆಂದರೆ, ಇವರೆಲ್ಲ ಶಿಕ್ಷಣದಲ್ಲಿ ಮಾನವಿಕ ವಿಷಯಗಳನ್ನು ಆಯ್ದುಕೊಳ್ಳದೆ ವೃತ್ತಿಪರ ವಿಷಯಗಳಲ್ಲಿ ಪರಿಣಿತರಾಗಿ, ವೃತ್ತಿಯ ನಿಮಿತ್ತ ನಮ್ಮ ಸಮಾಜಕ್ಕೆ ತೀರ ಭಿನ್ನವಾದ ವೃತ್ತಿಪರಿಸರ, ದೇಶವಿದೇಶಗಳಲ್ಲಿ ಉದ್ಯೋಗ ಮಾಡುವ ಅವಕಾಶವನ್ನು ಪಡೆದಿರುವುದು. ಮತ್ತು ಅಂಥ ಸಂವೇದನೆಗಳನ್ನು ಭಾಷೆಯ ಮೂಲಕ ಅಭಿವ್ಯಕ್ತಿಸುತ್ತಿರುವುದು. ಆದಾಗ್ಯೂ, ವಿಶಿಷ್ಟ ಹಿನ್ನೆಲೆಯ ಕಾರಣವಾಗಿಯೇ ಇಂಥವರನ್ನು ಸಾಹಿತ್ಯದಲ್ಲಿ ವಿನಾಕಾರಣ ಮೆರೆಸುತ್ತಿರುವುದನ್ನೂ ನಾವು ಕಾಣುತ್ತಿದ್ದೇವೆ. ಇಲ್ಲಿ ಅಭಿವ್ಯಕ್ತಿಗಿಂತ ಅಬ್ಬರವೇ ಹೆಚ್ಚಾಗಿದೆ ಅನ್ನಿಸುವಂತಿದೆ. ಅದೇನೇ ಇರಲಿ, ಸ್ವಭಾವತಃ ಸಂಕೋಚದವನಾದ ಮತ್ತು ಆದ್ರ ಯುವಕನಾದ ಆಕರ್ಷನ ವಿನಯವಂತಿಕೆಯು ಆತನ ಕವಿತೆಗಳಲ್ಲೂ ಪ್ರತಿಫಲನಗೊಳ್ಳುತ್ತಿದೆ. ಈ ಗುಣವೇ ಆತ ವಿಶಿಷ್ಟ ಹಿನ್ನೆಲೆಯ ವ್ಯಕ್ತಿಯಾಗಿಯೂ ಪ್ರತ್ಯೇಕವಾಗಿ ಕಾಣುವಂತೆ ಮಾಡಿದೆ. + +ಆತನ ಬರವಣಿಗೆಯ ಆರಂಭಕಾಲದಿಂದಲೂ ಆಕರ್ಷನ ಬಹುಪಾಲು ಕವಿತೆಗಳನ್ನು ಓದಿರುವ ನಾನು ಆತನಲ್ಲಿ ತಟ್ಟನೆ ಗಮನಿಸಿದ ಅಂಶವೆಂದರೆ, ನಗರಪ್ರಜ್ಞೆಯನ್ನು ವಿಶಿಷ್ಟವಾಗಿ ಕಟ್ಟಿಕೊಡಲು ನಡೆಸಿರುವ ಸೃಜನಶೀಲ ಹುಡುಕಾಟ. ಹಾಗೆ ಮಾಡುವಾಗ ಈಗಾಗಲೇ ಅಭಿವ್ಯಕ್ತಿಗೊಂಡ ರೂಪಕಗಳನ್ನು ಬಿಟ್ಟು ತನ್ನದೇ ಪ್ರತಿಮಾಲೋಕ ಸೃಷ್ಟಿಸಲು ಆತ ಬಳಸುತ್ತಿರುವ ವಿಧಾನಗಳು ಕೂಡ ನನಗೆ ಮೆಚ್ಚುಗೆಯಾಗಿವೆ. + +‘ಮರುಭೂಮಿಯಲ್ಲಿ ಕಳೆದು ಹೋಗಿದ್ದನಗರವನ್ನು ಕಂಡುಹಿಡಿದಿದ್ದಾರೆ’ಸುದ್ದಿಪತ್ರಿಕೆ ನೋಡುತ್ತಿದ್ದ ಅಪ್ಪ ಹೇಳಿದ.ಆ ಕೊನೆಯ ರಾತ್ರಿನಗರದ ಗೋಡೆಗಳ ಒಳಗೆಒಂಟಿಯಾಗಿ ಅಲೆದುಮುಂಜಾವಿನಲ್ಲಿ ನಗರವನ್ನುಸಮಾಧಿಯಾಗಿ ಮಾಡಿ ಹೊರನಡೆದಆ ಕೊನೆಯ ಮನುಷ್ಯನನ್ನು ನೆನೆದೆ + +ಆದರೆ ನಾನು ಅವನನ್ನೂ ನೆನೆಯಬೇಕಿತ್ತುಇಲ್ಲಿ ನೆಲೆಸಿದ ಮೊದಲನೇ ದಿನವೇಮುಂಜಾವಿನಲ್ಲಿ ಮರುಭೂಮಿಯನ್ನುನಗರವಾಗಿಸಬೇಕೆಂಬ ಕನಸುಹೊತ್ತು ನನಸಾಗಿಸಿದ ಆ ಅವನನ್ನುಕೂಡ ನಾನು ನೆನೆಯಬೇಕಿತ್ತು + +ಈ ಕವಿತೆಯ ಅಮೂರ್ತತೆ ಮತ್ತು ಅಸಂಗತತೆ ಬೆರಗು ಮೂಡಿಸುವಂತಿದೆ. ಕವಿತೆಯ ಕೊನೆಯ ಸಾಲುಗಳು ಸೃಷ್ಟಿಸುತ್ತಿರುವ ಹೊಸ ಅರ್ಥ, ಅದರೊಂದಿಗೆ ಬೆರೆತ ತೀವ್ರ ವಿಷಾದ ಅತ್ಯಂತ ಪರಿಣಾಮಕಾರಿಯಾಗಿ ಮೂಡಿಬಂದಿದೆ. + +ನನ್ನ ನಿದ್ರೆಯಲ್ಲಿ, ಯಾವುದೋ ನಕ್ಷೆಯಲ್ಲಿ,ಯಾರಿಗೂ ಗೊತ್ತಿರದ ನಗರಗಳನ್ನು ಹುಡುಕುತ್ತೇನೆ. + +(ಕೇಶವ ಮಳಗಿ) + +ಎನ್ನುವ ಕವಿತೆ ಸೃಷ್ಟಿಸುತ್ತಿರುವ ವಿಸ್ಮಯ, ವಿಸಂಗತತೆಗಳು ಅಪರೂಪದ್ದವು. + +ಗಾಜಾಗಿರುವುದು, ಕನ್ನಡಿ, ಕವಿತೆಗಳ ರೂಪಕ, ‘ಅವನನ್ನು ಕಂಡುಕೊಳ್ಳುವ ಸ್ವಾತಂತ್ರ್ಯ’ ಎನ್ನುವ ಗಪದ್ಯದಲ್ಲಿ ಕಿಕ್ಕಿರಿದ ಪ್ರತಿಮೆಗಳು, ಮುದುಕಿಯ ಸಾರ್ಥಕತೆಯನ್ನು ಹುಡುಕುವ ಕವಿತೆಗಳು ಕಟ್ಟಿಕೊಡುವ ಅನುಭವ ಮತ್ತು ಅರ್ಥಲೋಕ ಕನ್ನಡಕ್ಕೆ ಬರುತ್ತಿರುವ ಹೊಸ ಸಂವೇದನೆಗಳು. + +ಪ್ರತಿ ಕವಿತೆಯನ್ನೂ ಒಡೆದು ಅವುಗಳ ಅರ್ಥವಂತಿಕೆಯನ್ನು ಓದುಗರಿಗೆ ಹೇಳುವುದು ಇಲ್ಲಿನ ಉದ್ದೇಶವಲ್ಲ. ಅದೇನಿದ್ದರೂ ಪ್ರತಿ ಓದುಗನ ಮನಸ್ಸಿನಲ್ಲಿ ನಡೆಯಬೇಕಿರುವ ಕೆಲಸ. ಹೊಸ ತಲೆಮಾರಿನ, ನಗರವನ್ನೇ ಬದುಕಾಗಿಸಿಕೊಂಡ ಕವಿಯೊಬ್ಬನ ಮೂರ್ತಾಮೂರ್ತ ವಸ್ತುಲೋಕ ಸೃಷ್ಟಿಸುತ್ತಿರುವ ಕವಿತೆಗಳ ಕಡೆಗೆ ಗಮನ ಸೆಳೆಯುವುದಷ್ಟೇ ನನ್ನ ಉದ್ದೇಶ. + +ನಗರಗಳ ಅನೂಹ್ಯತೆ, ಅವು ಸೃಷ್ಟಿಸುವ ತಲ್ಲಣ ಮತ್ತು ಉಂಟುಮಾಡುವ ಪಲ್ಲಟ, ಅದರೊಳಗೆ ಹೂತಿರುವ ಆದರೆ ಚದುರಿ ಚೆಲ್ಲಾಪಿಲ್ಲಿಯಾಗಿರುವ ಲೋಕ, ನಗರದ ಅಸ್ತವ್ಯಸ್ತತೆಗಳು, ಇವುಗಳ ನಡುವೆಯೇ ಇರಬಹುದಾದ ಅರ್ಥವನ್ನು ಹೊರ ತೆಗೆಯುವ ಸೃಜನಶೀಲ ಹುಡುಕಾಟ ಈ ಕವಿತೆಗಳ ಮೂಲದ್ರವ್ಯವಾಗಿದೆ. ಆ ನಿಟ್ಟಿನಲ್ಲಿ ಆಕರ್ಷ ತನ್ನ ಅವಕಾಶ, ವ್ಯಾಪ್ತಿ ಮತ್ತು ಇಳಿದಾಣಗಳನ್ನು ಈಗಾಗಲೇ ಗುರುತಿಸಿಕೊಂಡಂತೆ ಕಾಣುತ್ತಿದ್ದಾನೆ. ತನ್ನ ಅಭಿವ್ಯಕ್ತಿಗೆ ಬೇಕಾದ ನುಡಿಗಟ್ಟು, ರೂಪಕ, ಪ್ರತಿಮಾಲೋಕಗಳನ್ನು ಅನುಭವ ಮತ್ತು ಭಾಷೆಗಳ ಟಂಕಸಾಲೆಯಲ್ಲಿ ನಿರ್ಮಿಸಿಕೊಳ್ಳುತ್ತಿದ್ದಾನೆ. ಕವಿಯಾಗಲು ಒಬ್ಬನಿಗೆ ಇದಕ್ಕಿಂತ ಹೆಚ್ಚಿನ ಪರಿಕರಗಳು ಇನ್ನೇನು ಬೇಕು? ಇಂಥದ್ದೇ ಹೊಸ ಲೋಕವನ್ನು ಕಂಡುಕೊಳ್ಳುವ ಪ್ರಯತ್ನದಲ್ಲಿ ಇತ್ತೀಚೆಗಷ್ಟೇ ತಮ್ಮ ಮೊದಲ ಸಂಕಲನಗಳನ್ನು ಪ್ರಕಟಿಸಿಕೊಂಡ ಭುವನ ಹಿರೇಮಠ ಮತ್ತು ವಿನ್ಸೆಂಟ್ ಕಟೀಲ್ ನೆನಪಾಗುತ್ತಿದ್ದಾರೆ. + + + +ಹೊಸ ಲೇಖಕನೊಬ್ಬನನ್ನು ಸಾಹಿತ್ಯಲೋಕಕ್ಕೆ ಸ್ವಾಗತ ಕೋರುವ ಕೆಲಸಕ್ಕಿಂತ ಹರ್ಷದಾಯಕವಾದ ಕೆಲಸ ಬೇರೊಂದು ಇರಲು ಸಾಧ್ಯವಿಲ್ಲ. ಆಕರ್ಷನೂ ತನ್ನ ಮೊದಲ ಸಂಕಲನ ಪ್ರಕಟಿಸುವ ಮೂಲಕ ಪ್ರವೇಶ ಮಾತ್ರವಿರುವ ಆದರೆ ನಿರ್ಗಮನದ ದಾರಿಗಳಿಲ್ಲದ ಅಂಥ ಅನೂಹ್ಯಲೋಕಕ್ಕೆ ಕಾಲಿಡುತ್ತಿದ್ದಾನೆ. ಆತನಿಗೆ ಸ್ವಾಗತ. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_392.txt b/Kenda Sampige/article_392.txt new file mode 100644 index 0000000000000000000000000000000000000000..36f5612530c956e43a61a58bad66ad49db580e89 --- /dev/null +++ b/Kenda Sampige/article_392.txt @@ -0,0 +1,137 @@ + + +ಕಲ್ಲಳ್ಳಿಯ ವೆಂಕಟೇಶದೇವರ ಗುಡಿ ಹಿಂದಿನ ಗುಡ್ಡದಾಗಿನಿಂದ ಸೂರ್ಯ ಮೆಲ್ಲಕ ಮ್ಯಾಲೆ ಏರಲಿಕ್ಕೆ ಹತ್ತಿದ್ದ. ಹಳ್ಳ್ಯಾಗಿನ ಮಂದಿನೂ ಎದ್ದು ತಮ್ಮ-ತಮ್ಮ ಕೆಲಸ ಸುರುಮಾಡಿದ್ರು. ಹೆಣ್ಣು ಮಕ್ಕಳು ಅಂಗಳ ಕಸ ಬಳದು, ನೀರಿನ ಥಳಿ ಹಾಕಿ ರಂಗೋಲಿ ಹಾಕ್ತಿದ್ರ, ಗಂಡಸರು ಕೊಟ್ಟಿಗಿ ಕಸ ಬಳದು, ಬುಟ್ಟಿ ತುಂಬ ಕಸ ತುಂಬಿಕೊಂಡು ತಿಪ್ಪಿಗುಂಡಿಗೆ ಹಾಕಿಬರೋ ತಯಾರಿಲಿದ್ರು. ನಾಗವ್ವ ಹಾಲಿನ ಪಾತ್ರಿ ಹಿಡಕೊಂಡು ಕೊಟ್ಟಿಗಿ ಕಡೆ ಬರೋದನ್ನ ನೋಡಿದ ಆಕಿ ಗಂಡ ನಿಂಗಪ್ಪ ಅವಸರದಿಂದ ಕೈಯಾಗಿದ್ದ ಚುಟ್ಟದ ದಮ್ ಎಳದು, ಅದನ್ನ ನೆಲಕ್ಕ ಒತ್ತಿ ಆರಿಸಿ ಕಸಬರಗಿ ಹಿಡಕೊಂಡು ಕೂತ. ತನ್ನ ಹತ್ರ ಇರೋ ಎರಡು ಆಕಳ, ಮೂರು ಎಮ್ಮಿಗಳ ಹಾಲು ಹಿಂಡಿಕೊಂಡು ವರ್ತನಿ ಮನಿಗೊಳಿಗೆ ಹಾಲು ಹಾಕಿ ಬರೋ ಅವಸರದಲ್ಲಿದ್ದ ನಾಗವ್ವ, ಆಕಳದ ಬೆನ್ನು ಸವರಿಹಾಲಿನ ಪಾತ್ರಿ ಹಿಡಕೊಂಡು ಕೆಳಗ ಕೂತಳು. ಹಾಲು ಹಿಂಡಿ, ಪಾತ್ರಿಯೊಳಗ ಹಾಕಿಕೊಂಡು ವೆಂಕಟೇಶ ದೇವರ ಗುಡಿಯ ಅರ್ಚಕರಾದ ರಾಮಾಚಾರರ ಮನಿಗೆ ಬಂದಳು. + +“ಅವ್ವಾರ, ಹಾಲು…. ಹಾಲು ತಂದೇನ್ರೀ, ಅಡಗಿ ಮನಿ ಒಳಗ ಇದ್ದೀರೇನು? ಹಾಲು ಹಾಕಿಸಿಕೊಳ್ರೀ”, ನಾಗವ್ವನ ಧ್ವನಿ ಕೇಳಿ ಫಕ್ಕನೇ ಕಣ್ಣುಬಿಟ್ಟರು ಸೀತಾಬಾಯಿ. + +“ಅಯ್ಯ ನಮ್ಮವ್ವ… ಆಗ್ಲೇ ಹಾಲಿನ ನಾಗವ್ವ ಬರೋ ಹೊತ್ತಾಗ್ಯದಲ್ಲ, ಎಷ್ಟೊತ್ತು ಮಲಗಿಬಿಟ್ಟೆ. ದಿನಾ ಆ ಮೂಲಿಮನಿ ದುರ್ಗವ್ವನ ಹುಂಜ ಕ್ಕೊ..ಕ್ಕೊ..ಕೋ ಅನ್ನೋ ಧನಿ ಕೇಳೇ ಎದ್ದು ಬಿಡ್ತಿದ್ದೆ, ಇವತ್ತ್ಯಾಕ ಹೀಂಗಾತು?” ಅವಸರದಿಂದ ಹಾಸಿಗಿ ಮ್ಯಾಲೆ ಎದ್ದುಕೂತರು. + +ತನ್ನ ಮುಂಗೈ ನೋಡಿ ಮುಣು-ಮುಣು ಅಂತ ಮಂತ್ರ ಅನಕೋತ ಬಲಗಡೆ ಗ್ವಾಡಿ ಮ್ಯಾಲೆ ಹಾಕಿದ್ದ ವೆಂಕಟೇಶ ದೇವರ ಫೋಟೋಕ್ಕ ಕೈ ಮುಗದು ಎದ್ದು, “ಇಗ ಬಂದೆ.. ತಡಿಯವ್ವ” ಅಂತ ನಾಗವ್ವಗ ಹೇಳಿ, ಹಾಸಿಗಿ ಸುರುಳಿ ಸುತ್ತಿ, ಮೂಲ್ಯಾಗ ಒರಗಿಸಿ, ಮಾರಿ ಮ್ಯಾಲೆ ಬಂದಿದ್ದ ಕೂದಲ ಹಿಂದಕ್ಕ ಸರಿಸಿ, ತಲಿ ಕೂದಲ ಸರಿಮಾಡಿಕೋತ, ಅರ್ಧ ಬಿಚ್ಚಿದ್ದ ಹೆರಳನ್ನು ಎರಡು ಸುತ್ತು ಸುತ್ತಿ ಬುಚುಡ ಕಟ್ಟಿ, ಸೀರಿ ನಿರಿಗಿ ಸರಿಮಾಡಿಕೊಂಡು, ಸೆರಗಿನಿಂದ ಮಾರಿ ಒರೆಸಿಕೋತ ಪಡಸಾಲಿಗೆ ಬಂದು ಬಾಗಲ ತೆಗದರು. + +ಸೀತಾಬಾಯಿ ಬಾಗಲ ತಗೀಲಿಕ್ಕೆ ತಡ ಮಾಡಿದಷ್ಟೂ ಹೊತ್ತು ವರ್ತನಿ ಮನಿಗೊಳಿಗೆ ಹಾಲು ಹಾಕಲಿಕ್ಕೆ ತಡ ಆಗ್ತದಂತ ಚಡಪಡಿಸಿಕೋತ ಆ ಕಡೆ-ಈಕಡೆ ನೋಡಿಕೋತ ನಿಂತಿದ್ದ ನಾಗವ್ವ, ಚಿಲಕ ಸಪ್ಪಳ ಕೇಳ್ಸಿದಕೂಡ್ಲೆ ಬಾಗ್ಲದ ಕಡೆ ತಿರುಗಿ, “ಯಾಕ್ರವ್ವ ಏಟೊತ್ತು ಮಾಡಿದ್ರಿ, ಮೈಯಾಗ ಆರಾಮ ಇಲ್ಲೇನು?” ಕಾಳಜಿಯಿಂದ ಕೇಳಿದಳು. + +ಆಕಿ ಮೈಯಾಗ ಆರಾಮ ಇಲ್ಲೇನು ಅಂತ ಅಂದಿದ್ದೇ ತಡ ಸೀತಾಬಾಯಿಗೆ ತಮ್ಮ ಗಂಡ ರಾಮಾಚಾರ್ರು ರಾತ್ರಿಯೆಲ್ಲ ಮೈ-ಕೈ ಸೂಲಿಯೆಂದು, ಅವ್ರ ಬಲಗೈ ಮತ್ತ ಬಲಗಾಲು ವಿಪರೀತ ಸೆಳಿಲಿಕ್ಕೆ ಹತ್ತ್ಯಾವ ಅಂತ ರಾತ್ರೆಲ್ಲ ಸರಿಯಾಗಿ ನಿದ್ದಿ ಮಾಡಿರಲಿಲ್ಲ, ತಾವೂ ಇಷ್ಟು ಬೇವಿನ ಎಣ್ಣಿ ಬಿಸಿಮಾಡಿ, ಅವರ ಕೈ-ಕಾಲಿಗೆ ಹಚ್ಚಿ ತಿಕ್ಕಿ ಮಾಲೀಶ್ ಮಾಡಿದ್ದು, ಆದ್ರೂ ಆಚಾರರಿಗೆ ಯಾಕೋ ಕಾಲು ಬ್ಯಾನಿ ಕಡಿಮಿ ಆಗಲಾರದೆ ಇದ್ದಿದ್ದರಿಂದ, ತನಗೂ ಇಡೀ ರಾತ್ರಿ ಅವರ ಸೇವಾ ಮಾಡೋದೇ ಆಗಿ, ಬೆಳಗಾಮುಂಜಾನೆ ಸ್ವಲ್ಪ ನಿದ್ದಿ ಹತ್ತಿತ್ತು ಅಂತ ನೆನಪಾಯಿತು. + +“ನಾ ಆರಾಮಾಗೇ ಇದ್ದೀನಿ ನಾಗವ್ವ, ನಮ್ಮನ್ಯಾಗ ಇವರಿಗೆ ಸ್ವಲ್ಪ ಆರಾಮ ಇಲ್ಲ” ಎಂದರು ಸೀತಾಬಾಯಿ. + +“ಯಾಕ್ರವ್ವ, ಏನಾತು ಪೂಜಾರಪ್ಪಗ?” ನಾಗವ್ವ ಗಾಬರಿಯಿಂದ ಕೇಳಿದ್ಲು. + +“ಏ.. ಘಾಬ್ರಿ ಆಗಂಥದ್ದೇನಲ್ಲ. ಕೈಸೂಲಿ, ಕಾಲುಸೂಲಿಯಂತ ರಾತ್ರೆಲ್ಲ ತ್ರಾಸ ಬಟ್ಟರು. ವಯಸ್ಸಾತು ನೋಡು. ಗುಡಿ ಪೂಜೆ ಮಾಡ್ಲಿಕ್ಕೂ ಕೈಲಾಗವಲ್ಲದು. ಹೀಂಗ ನಡದದ ನೋಡು” ಅಂತ ಅನಕೋತ ಹಾಲು ಹಾಕಿಸಿಕೊಳ್ಳಲಿಕ್ಕೆ ಪಾತ್ರಿ ತರಲಿಕ್ಕಂತ ಅಡಗಿಮನೀಗೆ ಹೋದರು. + +“ಇನ್ನಾರ ಮಗ-ಸೊಸಿನ್ನ ಕರಸಕೊಳ್ರೀ ಅವ್ವಾರ, ನಿಮಗೂ ವಯಸ್ಸಾತು.” ನಾಗವ್ವ ಕೂಗಿ ಹೇಳಿದ್ಲು. + +ಹಾಲಿನ ಪಾತ್ರೀನ ಅಡಗಿ ಮನಿಯೊಳಗ ಇಟ್ಟು, ಬಚ್ಚಲಕ್ಕ ಹೋಗಿ ಕೈಕಾಲು ತೊಳಕೊಂಡ ಬಂದ ಸೀತಾಬಾಯಿ, ಹಾಸಿಗೆ ಮ್ಯಾಲೆ ಇನ್ನೂ ಮಲಗೇ ಇದ್ದ ರಾಮಾಚಾರರನ್ನ ಎಬ್ಬಿಸಿದರು. + +“ಅಲ್ರೀ, ಆಗ್ಲೇ ಹೊತ್ತಾಗ್ಯದ, ಏಳಬಕಾಗಿತ್ತು…. ಅಂಧಂಗ ಕಾಲು ಸೂಲಿ ಹೆಂಗದ? ಇನ್ನು ಸ್ನಾನ, ಸಂಧ್ಯಾವಂದನ ಮುಗಿಸಿ, ಗುಡಿಗಿ ಹೋಗಿ ಬಾಗಲ ತಗೀಬಕಲ್ಲರ್ರಿ. ಇವತ್ತು ಶನಿವಾರ, ಇನ್ನೊಂದು ತಾಸು-ಒಪ್ಪೊತ್ತಿನ್ಯಾಗ ಮಂದಿ, ಮಕ್ಕಳು ಅಂತ ಎಲ್ಲಾರೂ ಗುಡಿಗೆ ಬರ್ಲಿಕ್ಕೆ ಸುರು ಮಾಡ್ತಾರ.”ಸೀತಾಬಾಯಿಯ ಮಾತಿಗೆ ಧಡಕ್ಕನೆ ಎದ್ದುಕೂತ ರಾಮಾಚಾರರು, “ಏನ… ಆಗ್ಲೇ ಎಬ್ಬಿಸಬಾರದೇನು? ಹೊತ್ತು ಎಷ್ಟಾಗ್ಯದ? ಬಿಸಿಲೇರದರೊಳಗ ಗುಡಿಗೆ ಹೋಗಿಬಿಡ್ತೀನಿ.” ಅಂದರು. + +“ಅಲ್ಲ … ನಿಮ್ಮ ಕಾಲಬ್ಯಾನಿ ಹೆಂಗದ? ಮತ್ತ …. ಗುಡಿತನಕ ನಡಕೋತ ಹೋಗಬಕಲ್ಲ?” ಸೀತಾಬಾಯಿ ಕಾಳಜಿಯಿಂದ ಪ್ರಶ್ನಿಸಿದರು. + +“ಸ್ವಲ್ಪ ಗುಣ ಆಧಂಗ ಅನ್ನಿಸ್ತದ. ವಯಸ್ಸಾತು. ಒಂದಿನ ಇದ್ದಂಗ ಇನ್ನೊಂದಿನ ಇರಂಗಿಲ್ಲ ನೋಡು.” ಅಂತ ಅನಕೋತ ತಮ್ಮ ಕೈ-ಕಾಲುಗಳನ್ನ ಮಡಚಿ-ಚಾಚಿ ನೋಡಿಕೊಂಡು, ಸಾವಕಾಶಕಾಗಿ ಎದ್ದುನಿಂತರು. ಗ್ವಾಡಿ ಮ್ಯಾಲಿನ ವೆಂಕಟೇಶ ದೇವರ ಫೋಟೋಕ್ಕ ಕೈ ಮುಗುದು, ತಮ್ಮ ಜನಿವಾರನ ಕಿವಿಗೆ ಸುತ್ತಿಗೋತ ಹಿತ್ತಲಕಡಿಗೆ ಹೋದರು. + +* * * + +ಆಚಾರರು ಸ್ನಾನ-ಸಂಧ್ಯಾವಂದನೆ ಮುಗಿಸಿ, ದೇವರ ಪೆಟ್ಟಿಗಿ ತೊಗೊಂಡು, ಮೆಲ್ಲಕ ಹೆಜ್ಜಿ ಹಾಕಿಕೋತ ಊರು ಹೊರಗ ಧೂರದಾಗ ಇರೋ ಗುಡಿ ಕಡೆ ಹೋಗೋದನ್ನ ನೋಡಿದ ಸೀತಾಬಾಯಿಗೆ ಹಾಲಿನ ನಾಗವ್ವ ಹೇಳಿದ “ಇನ್ನಾರ ಮಗ-ಸೊಸಿನ್ನ ಕರಸಕೊಳ್ರೀ ಅವ್ವಾರ, ನಿಮಗೂ ವಯಸ್ಸಾತು.” ಅನ್ನೋ ಮಾತು ನೆನಪಾದವು. + +ಮಗನಿಗೆ ಫೋನ್ ಮಾಡಿ ಮಾತಾಡೋಣ ಅಂತ ಅಂದುಕೊಂಡರೂ, ತಮ್ಮಷ್ಟಕ್ಕ ತಾವೇ ಮಾತಾಡಿಕೊಂಡರು.“ಇನ್ನು ಸ್ನಾನ-ಪೂಜೆ ಆಗಿ, ಮಡೀಲೆ ಅಡಗಿ ಆಗಬಕು. ವಯಸ್ಸಾದ ಮ್ಯಾಲೆ ಜಡ್ಡು-ಜಾಪತ್ತು ಎಲ್ಲ ಇದ್ದಿದ್ದೆ.” ತಮಗ ತಾವೆ ಅವಸರ ಮಾಡಿಕೋತ, ಅಡಗಿ ಮನ್ಯಾಗ ಮ್ಯಾಲೆ ಕೋಲಿಗೆ ತೂಗು ಹಾಕಿದ್ದ ಸೀರೀನ ಎಳಕೊಂಡು, ನಿರಿಗೆ ಹಾಕಿ ಇಟ್ಟುಕೊಂಡು ಮುಂದಿನ ಕೆಲಸದಾಗ ತೊಡಗಿಕೊಂಡರು. + +ಅದೆಷ್ಟೋ ವರ್ಷಗಳಿಂದ ತಮ್ಮ ವಂಶದವರೇ ಪೂಜಾ ಮಾಡಿಕೊಂಡು ಬಂದ ಕಲ್ಲಳ್ಳಿ ವೆಂಕಟರಮಣನ ಗುಡಿಯ ಎಲ್ಲಾ ಜವಾಬ್ದಾರಿಗಳನ್ನೂ ಈಗ ರಾಮಾಚಾರರೇ ವಹಿಸಿಕೊಂಡಿದ್ದರು. ಗುಡಿ ಪೂಜಾದಿಂದ ಬರೋ ಆದಾಯ, ಹಿರೇರಿಂದ ಬಂದ ಆರು ಎಕರೆ ಜಮೀನು ಅವರ ಜೀವನಕ್ಕೆ ಆಧಾರ ಆಗಿದ್ದವು. ತಮ್ಮ ತಂದಿ-ತಾಯಿಗೆ ಒಬ್ಬನೇ ಮಗನಾದ ಅವರು ಸಣ್ಣವರಿದ್ದಾಗಿಂದಲೇ ಸಂಸ್ಕೃತ ಪಾಠ ಎಲ್ಲ ಕಲಿತು ಒಳ್ಳೇ ಪಂಡಿತರಾಗಿದ್ದರು. ಬಳಗ ಅಂತ ಅಕ್ಕ-ಪಕ್ಕದ ಊರಾಗ ಸಂಬಂಧಿಕರಿದ್ದರು. ಊರಿನಿಂದ ಒಂದು ಮೈಲಿ ದೂರದಾಗ ಇರೋ ಮನಿದೇವರಾದ ವೆಂಕಟರಮಣನ ಗುಡಿಗೆ ದಿನಾಲೂ ಹೋಗಿ ಪೂಜಾ ಮಾಡಿಕೊಂಡು ಬರಬೇಕಾಗಿತ್ತು. + +ಆದಿನ ತಡವಾಗಿ ಎದ್ದು, ಮೆಲ್ಲಕ ನಡಕೋತ ಆಚಾರರು ಗುಡಿ ಹತ್ರ ಬರೋದ್ರೊಳಗ ಸಾಕಷ್ಟು ಭಕ್ತಾದಿಗಳು ಬಂದು ಆಚಾರ ಬರೋದನ್ನ ಕಾಯ್ಕೋತ ಕೂತಿದ್ರು. ಮುನ್ನೂರು ವರ್ಷದ ಹಳೇ ಗುಡಿ, ಪ್ರದಕ್ಷಿಣಿ ಹಾಕಲಿಕ್ಕೆ ದೊಡ್ಡದಾಗ ಪ್ರಾಂಗಣ, ಗುಡಿ ಸುತ್ತಲೂ ಹಸಿರು ಗುಡ್ಡಗಳು, ಗಿಡ-ಮರಗಳು, ಪುಟ್ಟದಾದ ವೆಂಕಟ್ರಮಣನ ವಿಗ್ರಹ, ಅಲ್ಲಿನ ಸ್ಥಳ ಮಹಾತ್ಮೆ ಸುತ್ತು-ಮುತ್ತಲಿನ ಜನರನ್ನು ಅಲ್ಲಿಗೆ ಬರೋಹಂಗ ಮಾಡ್ತಿದ್ದವು. ತಾವು ಬರೋದನ್ನೇ ಕಾಯ್ತಾ ನಿಂತಿದ್ದ ಜನರನ್ನು ನೋಡಿದ ರಾಮಾಚಾರರು ಮೈ-ಕೈ ಸೂಲಿ ಮರತು ಗುಡಿ ಬಾಗಿಲು ತಗದು ಒಳಗ ಹೋದರು. ಎಲ್ಲಾರೂ ಪ್ರದಕ್ಷಿಣಿ-ನಮಸ್ಕಾರ ಹಾಕೋದ್ರೊಳಗ ದೇವರ ಪೂಜಾಕ್ಕ ತಯಾರಿ ಮಾಡ್ಕೋಬೇಕು ಅಂತ ಅವಸರದಿಂದ ಮುಂದಿನ ಕೆಲಸಗಳಿಗೆ ಮುಂದಾದರು. + +ಮಧ್ಯಾಹ್ನದ ತನಕ ಗುಡಿಗೆ ಬರೋ ಭಕ್ತರಿಗೆ ಕಾಯಕೊಂಡು ಕೂತಿದ್ದ ಆಚಾರರು ಆ ದಿನ ತಡವಾಗೆ ಮನಿಗೆ ಬಂದು ಊಟ ಮಾಡಿ, ಪಡಸಾಲ್ಯಾಗ ಚಾಪಿ ಹಾಸಿಕೊಂಡು, ಮಳಕಾಲಿಗೆ ಅಮೃತಾಂಜನ್ ನೀವಿಕೊಂಡು, “ಉಶ್….ಉಶ್” ಅಂತ ಅನಕೋತ, ಬೀಸಣಿಕಿ ಬೀಸಿಕೊಂಡು ಮಲಗಿದ್ದನ್ನು ನೋಡಿದ ಸೀತಾಬಾಯಿ, ಅವರ ಫೋನನ್ನ ಅಡಗಿ ಮನಿಗಿ ತೊಗೊಂಡು ಹೋಗಿ ಮಗನಿಗೆ ಫೋನ್ ಮಾಡಿದರು. ಎರಡು ವರ್ಷದ ಹಿಂದ ಸೂಟಿಗಂತ ಬಂದಿದ್ದ ಮೊಮ್ಮಗ, ಮೊಬೈಲ್ ಫೋನನ್ನ ಹೆಂಗ ಉಪಯೋಗಿಸಬಕು ಅನ್ನೋದನ್ನು ಈ ಅಜ್ಜಿಗೆ ಕಲಿಸಿದ್ದ, ನೆನಪಿಸಿಕೊಂಡರು ಸೀತಾಬಾಯಿ.ಸರಿ ಹೊತ್ತಿನ್ಯಾಗ ಫೋನ್ ರಿಂಗಾಗಿದ್ದನ್ನು ಕೇಳಿ ಎಚ್ಚರಗೊಂಡ ಪವಮಾನನ ಹೆಂಡತಿ ಮೇಘಾ ಅವನನ್ನು ಎಬ್ಬಿಸಿದಳು. + +“ಫೋನ್ ರಿಂಗಾಗ್ಲಿಕತ್ತ್ಯದ. ಇಷ್ಟೊತ್ತಿನ್ಯಾಗ ಯಾರು ಮಾಡ್ತಾರ, ಇಂಡಿಯಾದ ಇರಬೇಕು ನೋಡ್ರಿ”. + +ನಿದ್ದಿಯಿಂದ ಎದ್ದು ನೋಡಿದ ಪವಮಾನನಿಗೆ ಫೋನಿನಲ್ಲಿ ಕಂಡ ನಂಬರಿನಲ್ಲಿ ಮೊದಲಿಗೆ ಇಂಡಿಯಾದ ಕೋಡ್ ನಂಬರ್ ಕಾಣಿಸಿ ಗಾಬರಿಯಾಯಿತು.ನಿದ್ದಿಗಣ್ಣಿನ್ಯಾಗ “ಹಲೋ.. ಯಾರು?” ಅಂದಾಗ ಆ ಕಡೆಯಿಂದ ತಾಯಿಯ ಧ್ವನಿ ಕೇಳಿಸಿತು. + +“ಪವಮಾನ… ನಾನೋ…ಅಮ್ಮ ಮಾತಾಡ್ಲಿಕ್ಕೆ ಹತ್ತೀನಿ. ಆರಾಮ ಇದ್ದೀಯಾ? ನಿನ್ನ ಹೆಣ್ತಿ-ಮಕ್ಕಳು ಆರಾಮ ಇದ್ದಾರಾ?” + +“ನಾವೆಲ್ಲ ಆರಾಮ ಇದ್ದಿವೇನು ಅಂತ ಕೇಳ್ಲಿಕ್ಕೆ ಇಷ್ಟೊತ್ತಿನ್ಯಾಗ ಫೋನ್ ಮಾಡ್ಯಾರಂತೇನು?” ಸೀತಾಬಾಯಿಯ ಧ್ವನಿ ಕೇಳಿಸಿಕೊಂಡ ಮೇಘಾ ರೇಗಿಕೊಂಡಳು. + +“ಇಷ್ಟೊತ್ತಿನ್ಯಾಗ ಯಾಕ ಫೋನ್ ಮಾಡಿಯಮ್ಮ, ಏನಾತು? ನಮಗಿಲ್ಲೆ ಈಗ ನಡುರಾತ್ರಿ ಆಗ್ಯದ.” ಆಕಳಿಸಿದ ಪವಮಾನ. + +“ಅಯ್ಯ… ಮರತೇ ಬಿಡ್ತೀನಿ ನೋಡು. ಯಾವಾಗ್ಲೂ ನೀನ ಫೋನ್ ಮಾಡಿರ್ತಿಯಲ್ಲ… ಒಂದು ವಾರದಿಂದ ನಿನ್ನ ಫೋನ್ ಬ್ಯಾರೆ ಬಂದಿರಲಿಲ್ಲ…ಅದಕ್ಕ ಮಾಡಿದೆ. ಪವಮಾನ…. ಈಗೀಗ್ ನಿಮ್ಮಪ್ಪಗ ಗುಡಿ ಪೂಜ, ಕೆಲಸ ಕೈಲಾಗವಲ್ಲದು. ಗುಡಿ ಪೂಜಾ ನಿಂದ್ರಲೂಬಾರದು, ಮತ್ತ ಗುಡಿನೂ ನಮ್ಮ ಕೈಬಿಟ್ಟು ಹೋಗಬಾರದೋ..” ಮಿಡುಕಿದರು. + +“ಅಯ್ಯೋ.. ನಾಳೆ ಫೋನ್ ಮಾಡ್ತೀನಿ ಅಂತ ಹೇಳ್ರಿ. ಅವರಿಗೆ ಮುಂಜಾನೆ ಆದಾಗ ಫೋನ್ ಮಾಡಿದ್ರ ಮಡೀಲೇ ದೇವರಮನ್ಯಾಗ ಕೂತಿರ್ತಾರ, ಇನ್ನ ರಾತ್ರಿ ಮಾಡಿದ್ರ ಟಿ.ವಿ. ಸೀರಿಯಲ್ ನೋಡಿಕೋತ ಕೂತಿರ್ತಾರ. ನಾವು ನೋಡಿದ್ರ ಕ್ಯಾರಿಯೋಕಿ ಪಾರ್ಟಿ ಮುಗಿಸಿಕೊಂಡು ಹೈರಾಣಾಗಿ ಬಂದು ಈಗ ಮಲಗೀವಿ. ನಾಳೆ ಮಾಡೀರಂತ, ಈಗ ಇಡ್ರಿ ಫೋನು.” ಜೋರು ಮಾಡಿದಳು ಮೇಘಾ. + +“ನಾನು ನಾಳೆ ಮುಂಜಾನೆ ಆದಾಗ ಫೋನ್ ಮಾಡ್ತೀನಮ್ಮ… ನಿಮಗ ರಾತ್ರಿ ಆಗಿರ್ತದ” ಮಾತು ಮುಗಿಸಿದ ಪವಮಾನ. + +“ನಾಳೆ ಮುಂಜಾನೆ ಫೋನ್ ಮಾಡ್ತೀನಿ ಅಂದ್ರಿ… ಶನಿವಾರ ಮುಂಜಾನೆ ಪ್ರದ್ಯುಮ್ನಂದು ಬಾಸ್ಕೆಟ್ ಬಾಲ್ ಕ್ಲಾಸ್ ಇರ್ತದ ಅನ್ನೋದನ್ನ ಮರೆತರೇನು?” ಮೇಘಾ ನಿದ್ದಿಯೊಳಗ ಗೊಣಗಿದಳು. + +ಪವಮಾನ ಹೇಳಿದ ‘ನಾಳೆ’ ನಾಲ್ಕು ದಿವ್ಸ ಆದ ಮ್ಯಾಲೆ ಬಂತು. ಹತ್ತು-ಹದಿನೈದು ನಿಮಿಷ ಫೋನು ಮಾಡಿ ಮಾತಾಡಿದ ಮಗ, ಅಪ್ಪ-ಅಮ್ಮನ ಬಗ್ಗೆ ಕಾಳಜಿ ಮಾಡೋದಕ್ಕಿಂತ ಪರದೇಶದೊಳಗ ತನಗಿರೋ ಗೋಳನ್ನೇ ಹೇಳಿಕೊಂಡ. ಅವನ ಮಾತು ಕೇಳಿಸಿಕೊಂಡ ತಾಯಿ ಸೀತಾಬಾಯಿ, “ಪರದೇಶಗೊಳಗ ಮಗ ಎಷ್ಟು ಕಷ್ಟ ಪಡತಾನ, ಅವನಿಗ್ಯಾಕ ಹೆಚ್ಚಿನ ತ್ರಾಸ ಕೊಡಬಕು, ಹೆಂಗಿದ್ರೂ ಆಚಾರರು ತಮ್ಮಷ್ಟಕ್ಕ ತಾವ ಓಡಾಡಿಕೊಂಡಿದ್ದಾರಲ್ಲ…” ಅಂತ ಸುಮ್ಮನಾದರೂ ರಾಮಾಚಾರರ ಆರೋಗ್ಯದಾಗ ಏನಾರ ವ್ಯತ್ಯಾಸ ಆದ್ರ ನೂರಾರು ವರುಷಗಳಿಂದ ಅವರ ಮನಿತನದವರೇ ಮಾಡಿಕೋತ ಬಂದಿರೋ ವೆಂಕಟೇಶ ದೇವರ ಗುಡಿ ಪೂಜಾಕ್ಕೇನು ವ್ಯವಸ್ತಿ ಮಾಡೋದು ಅಂತ ಯೋಚಿಸಿ ಗ್ವಾಡಿ ಮ್ಯಾಲಿನ ದೇವರ ಫೋಟೋಕ್ಕ ಕೈ ಮುಗಿದರು. + +* * * + +ಅಪ್ಪ ರಾಮಾಚಾರರ ಹಂಗೆ ರಾಮಾಚಾರ-ಸೀತಾಬಾಯಿಯ ಒಬ್ಬನೇ ಮಗನಾದ ಪವಮಾನ ಸಣ್ಣ ಹುಡುಗಯಿದ್ದಾಗಿನಿಂದ ಭಾಳ ಚುರುಕ ಇದ್ದ. ಸಾಲಿ ಓದಿನ ಜೋಡಿ, ಮಂತ್ರ-ದೇವರನಾಮ ಎಲ್ಲ ಕಲ್ತಿದ್ದ. ಏಳನೇ ಕ್ಲಾಸ್ ತನಕ ಅವರ ಊರಾಗಿನ ಸಾಲ್ಯಾಗೆ ಓದಿ, ಆಮ್ಯಾಲೆ ಧಾರವಾಡದಾಗ ಸೀತಾಬಾಯಿಯವರ ಅಣ್ಣನ ಮನ್ಯಾಗಿದ್ದು ಓದು ಮುಂದುವರಿಸಿದ್ದ. ಅವನಿಗೆ ಮೆರಿಟ್ಟಿನ್ಯಾಗ ಇಂಜಿನಿಯರಿಂಗ್ ಸೀಟು ಸಿಕ್ಕಾಗ ರಾಮಾಚಾರರು ಸಂತೋಷಪಟ್ಟರೂ ಸೀತಾಬಾಯಿಗೆ ಮನಸಿನ್ಯಾಗ ಅದೇನೋ ಅಳುಕು ಮೂಡಿತ್ತು. ಮಗ ಹೀಂಗೇ ಹೆಚ್ಚಿಗೆ ಓದುಕೋತ ಹೋಗಿ, ದೊಡ್ಡ ನೌಕರಿ ಅಂತ ಊರೂರು ಓಡ್ಯಾಡಿಕೋತ ಇದ್ರ ಮುಂದ ತಮ್ಮ ಹಳ್ಳಿಗೆ ಬಂದು ಇದ್ದು ಗುಡಿ ಪೂಜಾ ಮುಂದುವರೆಸಲಿಕ್ಕೆ ಮನಸು ಮಾಡತಾನೇನು? ಗಂಡನನ್ನು ಪ್ರಶ್ನಿಸಿದ್ದರು. ಮಗನ ಸಾಧನೆ ನೋಡಿ ಸಂತೋಷದಿಂದ ಉಬ್ಬಿಹೋಗಿದ್ದ ಆಚಾರರು, “ಏನ.. ಹೀಂಗ ಪ್ರಶ್ನೆ ಕೇಳ್ತಿಯಲ್ಲ. ನಮ್ಮ ಮಗ ಅಂದ್ರ ಏನು ಅಂದ್ಕೊಂಡಿ, ಅವನು ಎಷ್ಟೇ ವಿದ್ಯಾ ಕಲ್ತ್ರೂ, ಎಂಥಾ ದೊಡ್ಡ ನೌಕರಿ ಮಾಡಿದ್ರೂ, ಅವನಿಗೆ ನಾವು ಕೊಟ್ಟ ಸಂಸ್ಕಾರ ಮರತು ಹೋಗಂಗಿಲ್ಲ..”. ಮಾತು ಮುಂದವರೆಸದೆ ಸೀತಾಬಾಯಿ ಸುಮ್ಮನಾಗಿದ್ದರು. + +ಇಂಜಿನಿಯರಿಂಗ್ ಡಿಗ್ರಿ ಕೈಯಾಗ ಬರೋಕಿಂತ ಮೊದಲೇ ಪವಮಾನನ ಕಣ್ಣುಗಳು ಅಮೆರಿಕಾದ ಕನಸು ಕಾಣಲಿಕ್ಕೆ ಸುರುಮಾಡಿದ್ದವು. ತನ್ನ ಜೊತೆಯ ಹುಡುಗರ ಹಂಗ ತಾನೂ ಅಲ್ಲಿನ ಓದಿನ ಎಲ್ಲ ಮಾಹಿತಿಗಳನ್ನ ತಿಳಕೊಂಡು ಅಪ್ಪ-ಅಮ್ಮನ ಮುಂದೆ ಆ ಬಗ್ಗೆ ಮಾತಾಡಿದ್ದ. ಸಂಪ್ರದಾಯಸ್ಥ ತಂದಿ-ತಾಯಿ ವಿದೇಶಕ್ಕ ಹೋಗಲಿಕ್ಕೆ ಏನಂದಾರು ಅನ್ನೋ ಪ್ರಶ್ನೆನೆ ಬರಲಾರದಂಗ ತನ್ನನ್ನು ತಯಾರಿ ಮಾಡಿಕೊಂಡೇ ಊರಿಗೆ ಬಂದ್ದಿದ್ದ. + +“ಅಮೇರಿಕಾಗೆ ಹೋದ ಮ್ಯಾಲೂ ದಿನಾ ಸಂಧ್ಯಾವಂದನಿ ಮಾಡ್ತೀನಿ. ಶನಿವಾರ ಒಪ್ಪತ್ತು, ಏಕಾದಶಿ ಎಲ್ಲ ಮಾಡ್ತೀನಿ. ನೀವು ತೋರ್ಸಿದ ಹುಡುಗಿನ್ನೇ ಲಗ್ನ ಆಗ್ತೀನಿ. ಸ್ವಲ್ಪ ವರ್ಷ ಅಲ್ಲಿದ್ದು, ಮತ್ತಿಲ್ಲಿಗೇ ವಾಪಸು ಬರ್ತೀನಿ. ನನಗ ಸಿಕ್ಕಿರೋ ಈ ಅವಕಾಶಕ್ಕ ನೀವು ಇಲ್ಲ ಅನ್ನಬಾರದು” ಅಂತ ಭಾವನಾತ್ಮಕವಾಗಿ ಭಾಷಣ ಬಿಗಿದು, ಮುಂದ ನಾಲ್ಕು ತಿಂಗಳದಾಗ “ಅರಿಜೋನಾ ಸ್ಟೇಟ್ ಯುನಿವರ್ಸಿಟಿ” ನ್ಯಾಗ ಸೀಟು ಗಿಟ್ಟಿಸಿಕೊಂಡು ಅಮೆರಿಕಾದ ಫೀನಿಕ್ಸ್ ಗೆ ಹಾರಿದ್ದ. + +* * * + + + +ಮಗ ಮೊದಲಿಗೆ ಒಂದೆರಡು ಸಲ ಊರಿಗೆ ಬಂದು ಹೋದಾಗ ಅವನಲ್ಲಿ ಅಂಥಾ ಬದಲಾವಣೆ ಏನೂ ಕಾಣದ ಸೀತಾಬಾಯಿಗೆ, ಮಗನಿಂದ ಕೇಳಿ ತಿಳಿದಿದ್ದ ಫೀನಿಕ್ಸಿನ ಬರಡು-ಬಂಜರು ಮರುಭೂಮಿಗಿಂತ ಹಸಿರು-ಹಸಿರಾಗಿರೋ ಕಲ್ಲಳ್ಳಿ ಬಗ್ಗೆನೇ ಅವನಿಗೆ ಅಭಿಮಾನ ಅದ ಅಂತ ಅನ್ನಿಸಿತ್ತು. ಮುಂದಿನ ಎರಡು ವರ್ಷದಾಗ ಓದು ಮುಗಿಸಿದ ಮಗನಿಗೆ ನ್ಯೂ ಯಾರ್ಕಿನಲ್ಲಿ ಕೆಲಸ ಸಿಕ್ಕಿತು. ನ್ಯೂ ಜೆರ್ಸಿಯಲ್ಲಿ ಮನಿ ಮಾಡಿ, ಮದುವಿ ಆಗೋ ಯೋಚನೆ ಮಾಡಿದ ಪವಮಾನ. ತಮ್ಮ ವೈನಿ ಕಡೆ ಬಳಗದ ಹುಡುಗಿ ಮೇಘಾಳನ್ನು ಲಗ್ನ ಆಗಲಿಕ್ಕೆ ಒಪ್ಪಿಕೊಂಡ ಪವಮಾನ ಮದುವಿಗಂತ ಬಂದಾಗ ಮಾತ್ರ ಮೊದಲಿನಂತಿಲ್ಲ ಅಂತ ಸೀತಾಬಾಯಿ ಅನಕೊಂಡ್ರು. ಮಗನನ್ನು ನೋಡಿದ ಕೂಡಲೆ ನ್ಯೂ ಜೆರ್ಸಿ ಗಾಳಿ-ನೀರಿನ ರೂಢಿ ಅವನಿಗೆ ಛೊಲೋನೆ ಆಗ್ಯದ ಅನ್ನೋದು ತಾಯಿಗೆ ಗೊತ್ತಾಗಿತ್ತು. ಅವನು ಆಡೋ ಮಾತು, ಮನಿಯೊಳಗ ಚಪ್ಪಲಿ ಹಾಕಿಕೊಂಡು ಓಡಾದೋದು, ಮೈ ಮ್ಯಾಲಿನ ಜನಿವಾರ ಕಾಣಿಸಲಾರದೆ ಇದ್ದದ್ದು ನೋಡಿ ಸೀತಾಬಾಯಿ ಗಾಬರಿಯಾದರು. ಆದ್ರೂ ಮೇಘಾ ಸಂಪ್ರದಾಯಸ್ಥ ಮನಿಯೊಳಗ ಬೆಳೆದ ಹುಡುಗಿ, ಅವನನ್ನು ಹಾದಿಗೆ ತರ್ತಾಳ ಅಂತ ಸಮಾಧಾನ ಪಟ್ಟುಕೊಂಡರು. ಇವ್ರು ಅನ್ಕೊಂಡಿದ್ದು ಒಂದು, ಅಲ್ಲೆ ಆಗಿದ್ದೇ ಬ್ಯಾರೆ. ಲಗ್ನ ಆಗಿ ಮೂರು ವರ್ಷಕ್ಕ ಕೂಸಿನ್ನ ಎತಕೊಂಡು ಬಂದ ಸೊಸಿನ್ನ ಅತ್ತಿ-ಮಾವ ಇಬ್ಬರೂ ಗುರ್ತೇ ಹಿಡೀಲಿಲ್ಲ! ಏನೋ ಅಲ್ಲಿನ ಮಂದ್ಯಾಗ ಬ್ಯಾರೆ ನಮನಿ ಕಾಣಬಾರದೂ ಮತ್ತ ನ್ಯೂ ಜೆರ್ಸಿಯ ಛಳಿಯ ವಾತಾವರಣಕ್ಕ ತಕ್ಕಂಥ ಬಟ್ಟಿ ಹಾಕಿಕೊಳ್ಳುತ್ತಿರಬಹುದು ಅಂತ ಅಂದುಕೊಂಡ ಸೀತಬಾಯಿಗೆ ಮುಂದಿನ ಸ್ವಲ್ಪ ದಿನಗಳೊಳಗೆ ಮಗನ ಜೊತಿಗೆ ಸೊಸೀಗೂ ಪರದೇಶನೇ ಆರಾಮ ಅನ್ಸ್ಯದ ಅಂತ ಗೊತ್ತಾಗಿ ಹೋಯಿತು. ಮೂರು ವರ್ಷದಾಗ ಇಡೀ ಜಗತ್ತನ್ನೇ ನೋಡಿಬಿಟ್ಟೀನಿ ಅನ್ನೋಹಂಗ ಆಕಿ ಆಡ್ತಿದ್ದ ಮಾತುಗಳಿಂದ ಬ್ಯಾಸರ ಆದ್ರೂ, ಏನೋ ಸಣ್ಣ ಹುಡುಗಿ, ಕೂಸಿನ ತಾಯಿ ಅಂತ ಅವರೇ ಸುಧಾರಿಸಿಕೊಂಡು ಹೋದರು. + +ಮುಂದಿನ ಸಲ ಊರಿಗೆ ಬರೋದ್ರಾಗ ನ್ಯೂ ಜೆರ್ಸಿನ್ಯಾಗೆ ಸ್ವಂತ ಅಪಾರ್ಟಮೆಂಟ್, ಕೈಯಾಗ ಗ್ರೀನ್ ಕಾರ್ಡ್ ಹಿಡಕೊಂಡು ಬಂದಿಳಿದರು ಮಗ-ಸೊಸಿ, ಇಬ್ಬರು ಮೊಮ್ಮಕ್ಕಳು. ಗ್ರೀನ್ ಕಾರ್ಡ ಸಿಕ್ಕಮ್ಯಾಲೆ ನ್ಯೂ ಯಾರ್ಕಿನ ಕೆಲಸ ಬಿಟ್ಟು ನ್ಯೂ ಜೆರ್ಸಿಯಲ್ಲೇ ಕೆಲಸಕ್ಕೆ ಸೇರಿಕೊಂಡಿದ್ದೀನಿ ಅಂತ ಹೇಳಿದ ಪವಮಾನ. ಈ ಸಲ ಅವರು ಇಲ್ಲಿ ಹಳ್ಳ್ಯಾಗ ಇದ್ದಿದ್ದೇ ಕಮ್ಮಿ. ಆದ್ರೂ ಮಗ-ಸೊಸಿನ್ನ ತಮ್ಮೆದರು ಕೂಡಿಸಿಕೊಂಡು ರಾಮಾಚಾರರು ಮುಂದಿನ ಜೀವನದ ಬಗ್ಗೆ ಮಾತಾಡಿದರು. + +“ಪರದೇಶಕ್ಕ ಹೋಗಿ ಇಷ್ಟು ವರ್ಷಾತು. ಮತ್ತ ಯಾವಾಗ ವಾಪಾಸು ಬರಬಕು ಅಂದ್ಕೋಂಡೀದಿ ಪವಮಾನ?” + +“ಇನ್ನೊಂದೆರಡು ವರ್ಷ ಆದಮ್ಯಾಲೆ ಯೋಚನಿ ಮಾಡ್ತೀನಿ ಅಪ್ಪ, ಈಗ ಕೆಲಸ ಬದಲಾಯಿಸಿ, ಮನಿ ತೊಗೊಂಡೀನಿ”. + +“ಸರಿನಪ್ಪ… ಈ ಬಗ್ಗೆ ಯೋಚನಿ ಮಾಡು.” ರಾಮಾಚಾರರು ಮಾತು ಮುಗಿಸಿದರು. ಪವಮಾನನೂ ಮಾತು ಮುಂದುವರೆಸಲಿಲ್ಲ. ಆದ್ರ ಅಡಗಿ ಮನಿಯೊಳಗ ಬಂದ ಮೇಘಾ ಸಿಟ್ಟಿನಿಂದ ಮಾತಾಡಿದಳು. + +“ನಿಮಗ ನಿಮ್ಮ ಮಡಿ-ಮೈಲಿಗಿ, ಗುಡಿ-ಪೂಜಾನೇ ಆಯ್ತು. ಬಾಣಂತನಕ್ಕ ಬರಲಿಲ್ಲ, ಗೃಹಪ್ರವೇಶಕ್ಕ ಬರಲಿಲ್ಲ. ನಾವಿಬ್ಬರೇ ಅಲ್ಲಿ ಎಷ್ಟು ಕಷ್ಟಪಡತೀವಿ ಅಂತ ನಿಮಗ ಹೆಂಗ ಅರ್ಥ ಆಗ್ತದ? ನಾನೂ ಇನ್ನು ಕೆಲಸಕ್ಕ ಸೇರಕೋಬೇಕು ಅಂತ ಇದ್ದೀನಿ. ನೀವಂತೂ ಅಲ್ಲಿಗೆ ಬರಂಗಿಲ್ಲ, ಮಕ್ಕಳನ್ನು ಡೇ ಕೇರಿನ್ಯಾಗ ಬಿಡಬಕಾಗ್ತದ. ಆದ್ರ ನಿಮಗೆ ರೊಕ್ಕ ಬೇಕಾದಾಗಮಾತ್ರ ನಾವ ಕಳಿಸಬೇಕಾಗ್ತದ” ದನಿಯೇರಿಸಿದಳು. + +ತಂದಿ-ತಾಯಿ ರೂಢಿಸಿಕೊಂಡ ಬದುಕು ಮತ್ತು ಮಗ-ಸೊಸಿ ಬಯಸಿದ ಬದುಕಿನ ನಡುವೆ ಘರ್ಷಣೆಯಾಗಿತ್ತು. ಇವರು ರೂಢಿಸಿಕೊಂಡಿದ್ದನ್ನು ಅವರು ಬಯಸಲಿಲ್ಲ, ಅವರು ಬಯಸಿದ್ದನ್ನು ಇವರು ರೂಢಿಸಿಕೊಳ್ಳೋದಿಲ್ಲ! ಇವರು ಅವರಿಂದ ಮಗನ ಕರ್ತವ್ಯವನ್ನು ಎದುರು ನೋಡುತ್ತಿದ್ದರು, ಅವರು ಇವರ ಹಿರಿತನದ ಜವಾಬ್ದಾರಿಯನ್ನು ಅಪೇಕ್ಷಿಸುತ್ತಿದ್ದರು! + +ಸೊಸಿ ಮಾತು ಕೇಳಿದ ಸೀತಾಬಾಯಿಗೆ ಅಪ್ಪನ ಹತ್ರ ಪವಮಾನ ಹೇಳಿದ ಆ ಎರಡು ವರ್ಷಗಳು ಎಂದೂ ಬರಂಗಿಲ್ಲ ಅಂತ ಖಾತ್ರಿ ಆಯಿತು. ಪಾಪ, ರಾಮಾಚಾರರು ಮಾತ್ರ ಪಂಚಾಂಗ ತಿರುವಿ ಹಾಕಿದ ಸರತಿಗೊಮ್ಮೆ ತಿಂಗಳಗಳ ಲೆಕ್ಕ ಇಡೋದನ್ನ ಬಿಡಲಿಲ್ಲ. ತಿಂಗಳುಗಳು ಕಳೆದು ಸಂವತ್ಸರಗಳು ತಿರುಗಿದರೂ ಮಗಯೇನು ಊರಿನ ಕಡೆ ತಿರುಗಿ ನೋಡಲಿಲ್ಲ. + +ಈಗೀಗ ಪವಮಾನ ಅಪ್ಪ-ಅಮ್ಮಗ ವಾರಕ್ಕೊಮ್ಮೆ, ಹದಿನೈದು ದಿನಕ್ಕೊಮ್ಮೆ ಫೋನ್ ಮಾಡಿ ಮಾತಾಡ್ತಾನ. ಮೇಘಾನೂ ಕೆಲಸ ಮಾಡ್ಲಿಕ್ಕೆ ಸುರುಮಾಡಿರುವದಾಗಿಯೂ, ಮಕ್ಕಳು ದೊಡ್ಡವರಾದಂಗ ದೊಡ್ಡ ಮನಿ ಇರಬಕಂತ ಐದು ಬೆಡ್ ರೂಮಿನ ಮನಿ ತೊಗೊಬೇಕಂತ ಮಾಡೀನಿ ಅಂತ ಮಗ ಅಂದಿದ್ದನ್ನು ರಾಮಾಚಾರರಿಗೆ ಹೇಳಲೇ ಇಲ್ಲ ಸೀತಾಬಾಯಿ. ಮಗ ಈಗ ತಮಗಷ್ಟೇ ಮಗ ಆಗಿರದೆ, ಅವನ ಎರಡು ಮಕ್ಕಳಿಗೆ ಅಪ್ಪ ಆಗಿದ್ದ ಅನ್ನೋ ಮಾತು ಅವರಿಗೆ ಅರ್ಥ ಆಗಿತ್ತು. “ಅವರವರ ಹಾದಿ ಅವರವರಿಗೆ!” ಮನಸ್ಸು ಮಾತನಾಡಿತು. + +* * * * + +ಕೆಲಸ ಕೈಲಾಗದೆ ಸುಸ್ತಾಗಿ ಕೂಡುತ್ತಿದ್ದ ಆಚಾರ್ರ ಆರೋಗ್ಯದ ಬಗ್ಗೆ ಸೀತಾಬಾಯಿಗೆ ಯೋಚನಿ ಸುರುವಾಯಿತು. ಆಚಾರ್ರಿಗೆ ಹೆಚ್ಚು-ಕಮ್ಮಿಯೇನಾದರೂ ಆದ್ರ ಮುಂದೇನು? ಅನ್ನೋ ಚಿಂತಿಯೊಳಗ ಬತ್ತಿ ಮಾಡಿಕೋತ ಕೂತಿದ್ದಾಗ, ‘ಮಧುಕರಿ ದಾಸರು’ ತಾಳ ಹಾಕಿಕೋತ, ಹಾಡು ಹಾಡಿಕೊಂಡು ಬಂದರು. “ಆವನಾವನು ಕಾಯ್ವ ಅವನಿಯೊಳಗೆ, ಜೀವರಿಗೆ ಧಾತೃ ಶ್ರೀಹರಿಯಲ್ಲದೆ…”. ದಾಸರ ಜೋಳಿಗಿಗೆ ಅಕ್ಕಿ-ಬ್ಯಾಳಿ ಸುರುದು, ದಕ್ಷಿಣಿ ಕೊಟ್ಟು ನಮಸ್ಕಾರ ಮಾಡಿದ ಸೀತಾಬಾಯಿಗೆ ಅಂಗಳದಾಗ ಕಿಟ್ಟಣ್ಣನ ಧ್ವನಿ ಕೇಳಿಸಿತು. + +ಮನಿ ಒಳಗ ಬಂದ ಕಿಟ್ಟಣ್ಣ, “ಆರಾಮ ಇದ್ದಿಯೇನು ಮಾಮಿ? ನಮಸ್ಕಾರ ಮಾಡ್ತೀನಿ”. ಸೀತಾಬಾಯಿಗೆ ನಮಸ್ಕಾರ ಮಾಡಿದ. ಅಲ್ಲೇ ನಿಂತಿದ್ದ ದಾಸರಿಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಕಿಟ್ಟಣ್ಣನಿಗೆ, “ಒಳ್ಳೆದಾಗಲಿ” ಅಂತ ಹೇಳಿದ ದಾಸರು ತಾಳ ಹಾಕಿಕೋತ ತಮ್ಮ ಹಾಡು ಮುಂದುವರೆಸಿ, ಓಣಿಯೊಳಗ ನಡಕೋತ ಹೋದರು. + +“ನಾನು ಆರಾಮ ಇದ್ದೀನಪ್ಪ, ನೀನು ಎಲ್ಲಿದ್ದಿ ಇಷ್ಟು ದಿವಸ? ಮಂತ್ರಾಲಯಕ್ಕ ಪಾದಯಾತ್ರಾ ಹೋಗಿಬರ್ತೀನಿ ಅಂದು ಹೋದಾಂವ, ಆರು ತಿಂಗಳು ಆದಮ್ಯಾಲೆ ಬಂದಿಯಲ್ಲೋ?” ಕಿಟ್ಟಣ್ಣನನ್ನು ವಿಚಾರಿಸಿದರು ಸೀತಾಬಾಯಿ. + +“ನನಗೇನದರಿ ಮಾಮಿ, ಮನಿಯಿಲ್ಲ, ಮನಿಮಂದಿಯಂತ ಯಾರೂ ಇಲ್ಲ….ರಾಯರ ಸೇವಾ ಮಾಡ್ಕೋತ ಮಂತ್ರಾಲಯದೊಳಗೆ ಇದ್ದಬಿಟ್ಟೆ.” ಜೋರಾಗಿ ನಕ್ಕೋತ ಹೇಳಿದ. + +“ರಾಯರು ಏನಾರ ಸದ್ಬುದ್ಧಿ ಅನುಗ್ರಹ ಮಾಡಿದ್ರೋ, ಇಲ್ಲಾ ನೀನು ಬರೀ ನೀರು ಹೊರಲಿಕ್ಕೆ ಲಾಯಕ್ಕು ಅಂತ ಅಂದ್ರೋ?” ದೇವರ ಪೆಟ್ಟಿಗಿ ಗಂಟು ಭುಜಕ್ಕ ಹಾಕ್ಕೊಂಡ ರಾಮಾಚಾರರು ಮನಿ ಒಳಗ ಬಂದ್ರು. + +“ಆರಾಮ ಇದ್ದಿರೇನ್ರಿ ಮಾಮ? ನಮಸ್ಕಾರ ಮಾಡ್ತೀನಿ” ಆಚಾರರಿಗೆ ನಮಸ್ಕಾರ ಮಾಡಿದ ಕಿಟ್ಟಣ್ಣ. + +ಕಿಟ್ಟಣ್ಣ ಸೀತಾಬಾಯಿಗೆ ತವರುಮನಿ ಕಡೆಯಿಂದ ಸಂಬಂಧಿ. ಅವರಪ್ಪ ಎಲ್ಲೋ ದೇಶಾಂತರ ಹೋದ ಮ್ಯಾಲೆ ತಾಯಿ ರಮಾಬಾಯಿ ಒಬ್ಬಕಿನೇ ಈ ಮಗನನ್ನು ಸಾಕಿದ್ದಳು. ತಾನು ನಾಲ್ಕು ಮಂದಿ ಮನಿ ಅಡಗಿ ಕೆಲಸ ಮಾಡಿಕೊಂಡು ಮಗನ ಸಾಲಿಗಿ ಕಳಸಿದ್ರೂ, ಕಿಟ್ಟಣ್ಣಗ ಓದು ಹತ್ತಲಿಲ್ಲ. ತನ್ನ ಮಗನಿಗೆ ದೇಹ ಬೆಳದಿತ್ತೇ ವಿನಃ ಬುದ್ಧಿ ಬೆಳೆದಿಲ್ಲ ಆ ತಾಯಿಗೆ ಗೊತ್ತಾದ ಮ್ಯಾಲೆ ಅವರಿವರ ಕೈಕಾಲು ಹಿಡಕೊಂಡು, ’ಸಾಮೂಹಿಕ ಉಪನಯನ’ ಕಾರ್ಯಕ್ರಮದಾಗ ಮುಂಜವಿ ಮಾಡಿಸಿ ಮಠಕ್ಕ ಸೇರಿಸಿದ್ದಳು. ಅಲ್ಲಿ ಕಿಟ್ಟಣ್ಣನಿಗೆ ಭಾವಿಯಿಂದ ನೀರು ಸೇದಿ ಹಾಕೋ ಕೆಲಸ. ಅದನ್ನು ಹೇಳಿ-ಹೇಳಿ ರಾಮಾಚಾರರು ಆಗಾಗ ಹಾಸ್ಯ ಮಾಡುತ್ತಿದ್ದರು. ತನ್ನ ತಾಯೀನೂ ಹೋದಮ್ಯಾಲೆ ಕಿಟ್ಟಣ್ಣಗ ಯಾರೂ ಇಲ್ಲದಂಗಾಗಿ ತನಗ ಮನಸಿಗೆ ತಿಳದಂಗ ಊರೂರು ತಿರಗ್ತಾ, ಆ ಗುಡಿ-ಈ ಮಠ ಅಂತ ಸೇವಾ ಮಾಡ್ಕೊಂಡು ಇದ್ದುಬಿಟ್ಟಿದ್ದ. ಆಗಾಗ ಕಲ್ಲಳ್ಳಿಗೆ ಬಂದು ಆಚಾರ ಮನ್ಯಾಗ ಠಿಕಾಣಿ ಹೂಡಿ, ಸೀತಾಬಾಯಿಗೆ ಭಾವಿಯಿಂದ ಮಡಿನೀರು ತಂದುಕೊಡ್ತಿದ್ದ. + +ಕಿಟ್ಟಣ್ಣ ಬಂದಮ್ಯಾಲೆ ರಾಮಾಚಾರರಿಗೆ ಸಾಕಷ್ಟು ಸಹಾಯ ಆಯಿತು. ಆದ್ರೂ ಒಂದೂ ಮಂತ್ರ ಬರಂಗಿಲ್ಲ, ಸಂಧ್ಯಾವಂದನಿನೂ ಸರಿಯಾಗಿ ಮಾಡಂಗಿಲ್ಲ ಅಂತ ಆಚಾರ್ರು ಸಿಟ್ಟು ಮಾಡ್ತಿದ್ರು. ನಮ್ಮ ಪವಮಾನ ಎಂಟು ವರ್ಷಕ್ಕೇ ಎಷ್ಟೊಂದು ಮಂತ್ರ ಕಲ್ತಿದ್ದ ಅಂತ ಮಗನನ್ನು ನೆನಪಿಸಿಕೊಳ್ತಾಯಿದ್ದರು.“ನಮ್ಮ ಪವಮಾನ ಅಷ್ಟು ಶಾಣ್ಯಾಯಿದ್ದ…..ನೀನೂ ಇದ್ದಿ ನೋಡು ಧಡ್ಡ ಶಿಖಾಮಣಿ..” ಕಿಟ್ಟಣ್ಣನನ್ನು ಬೈಕೋತ ದೇವರ ಪೂಜಿ ಮಾಡ್ತಿದ್ರು. ಅವನು ಅದನ್ನೆಲ್ಲ ಕಿವಿಗೆ ಹಾಕ್ಕೊಳ್ಳದೇ ಇರ್ತಿದ್ದ. + +ದಿನಾ ಕಳದಂಗೆಲ್ಲ ಮನುಷ್ಯ ಸವದು ಸಣ್ಣಗಾಗ್ತಾನೇ ಹೊರತು ವಯಸ್ಸೇನು ಸಣ್ಣದಾಗಂಗಿಲ್ಲಲ? ಒಂದಿನ ಮುಂಜಾನೆ ರಾಮಾಚಾರರಿಗೆ ಹಾಸಿಗೆಯಿಂದ ಏಳಲಿಕ್ಕೇ ಆಗಲಾರದಂಗ ಆಯ್ತು. ಡಾಕ್ಟರ್ ಬಂದು ನೋಡಿ, ಆಚಾರ್ರಿಗೆ ಎಡಭಾಗಕ್ಕ ಲಕ್ವ ಹೊಡದದ ಅಂತ ಹೇಳಿದಾಗ ಏನೂ ತೋಚದಂಗ ಕೂತಬಿಟ್ಟರು ಸೀತಾಬಾಯಿ. ಕಿಟ್ಟಣ್ಣ ದೇವರ ಸೇವ ಬಿಟ್ಟು ಆಚಾರರ ಸೇವಾಕ್ಕ ನಿಂತ. ಪಕ್ಕದ ಊರಾಗಿನ ರಾಮದೇವರ ಗುಡಿ ರಂಗಾಚಾರರು ತಮ್ಮ ಗುಡ್ಯಾಗಿನ ಪೂಜ ಮುಗಿಸಿ ಬಂದು ವೆಂಕಟೇಶದೇವರ ಪೂಜಾನೂ ಮಾಡ್ಲಿಕ್ಕೆ ಸುರು ಮಾಡಿದರು. ಅವರಿಗೆ ಬ್ಯಾರೆ ಕೆಲಸಯಿದ್ದ ದಿನ ಕಿಟ್ಟಣ್ಣನೇ ತನಗ ತಿಳಿದಂಗ ದೇವರ ಪೂಜಾ ಮುಗಿಸಿ, ಮಂಗಳಾರತಿ ಮಾಡಿ ಬರ್ತಿದ್ದ. + +ಪವಮಾನ ಈ ತಿಂಗಳು ಬರ್ತೀನಿ, ಮುಂದಿನ ತಿಂಗಳು ಬರ್ತೀನಿ ಅಂತ ಹೇಳಿಕೋತ ಆರು ತಿಂಗಳಾದರೂ ಹಾಸಿಗಿ ಹಿಡದಿದ್ದ ಅಪ್ಪನ ನೋಡ್ಲಿಕ್ಕೆ ಬರಲಿಲ್ಲ. ಅಂವ ಅಲ್ಲೆ ಅಮೆರಿಕಾದ ಸಿಟಿಜೆನ್ ಶಿಪ್ ತೊಗೊಳ್ಳೋ ಓಡಾಟದೊಳಗ ಇದ್ದ. ನಾಲ್ಕನೆತ್ತಿತನಕ ಸಾಲಿ ಕಲಿತಿದ್ದ ಸೀತಾಬಾಯಿ ಯೋಚನಿ ಮಾಡಿದರು. “ಪರದೇಶದ ಪ್ರಜೆ ಅಂತಾದ ಮಾತ್ರಕ್ಕ ಹುಟ್ಟಿನ ಮೂಲ ಬದಲಾಯಿಸಿಕ್ಕೆ ಆಗ್ತದೇನು? ಇಲ್ಲ ಮೈ ಬಣ್ಣ ಬದಲು ಆಗ್ತದೇನು?” ಪವಮಾನನಿಗೆ ತನ್ನ ಬದುಕಿನ ಅಸ್ತಿತ್ತ್ವಕ್ಕ ಕಾರಣರಾದವರನ್ನು ಬಿಟ್ಟು ಅಮೆರಿಕಾದ ಪ್ರಜೆ ಅನ್ನೋ ಅಸ್ತಿತ್ವವನ್ನು ಪಡೆಯೋದೇ ಮುಖ್ಯ ಆದಂಗಿತ್ತು. ರಾಮಾಚಾರರ ಆರೋಗ್ಯ ಸುಧಾರಿಸೊ ಹಂಗ ಕಾಣಲಿಲ್ಲ. ಮುಂದೇನು? ಅನ್ನೋ ಸೀತಾಬಾಯಿಯ ಯೋಚನಿಕಿಂತ, ಊರಿನ ಮಂದಿ ಮಾತೇ ಜಾಸ್ತಿಯಾಯಿತು. ನಾಲ್ಕ ಮಂದಿ ಒಂದೇ ಕಡೆ ಸೇರಿದ್ರು ಅಂದ್ರ ಆಚಾರು, ಪವಮಾನನ ಸುದ್ದಿ ಮಾತಾಡಿಕೊಂಡೇ ಹೊತ್ತು ಕಳೀತಿದ್ರು. ವೆಂಕಟೇಶದೇವರ ಗುಡಿಗೆ ವಂಶ ಪಾರಂಪರ್ಯವಾಗಿ ಪೂಜಾ ಮಾಡಿಕೊಂಡು ಬಂದ ಪೂಜಾರರು ಇಲ್ಲದೇ ಹೋದ್ರ, ಮುಜರಾಯಿ ಇಲಾಖೆಯವರು ಬಂದು ಗುಡಿನ್ನ ತಮ್ಮ ವಶಕ್ಕ ತೊಗೊಂಡು, ಅಷ್ಟೋ-ಇಷ್ಟೋ ಸಂಬಳ ಅಂತ ಕೊಟ್ಟು, ಬ್ಯಾರೆ ಯಾರನ್ನಾದ್ರೂ ದೇವರ ಪೂಜಾ ಮಾಡ್ಲಿಕ್ಕೆ ನೇಮಕ ಮಾಡ್ತಾರ ಅನ್ನೋ ಸುದ್ದಿ ಸೀತಾಬಾಯಿಯ ಕಿವಿಗೂ ಮುಟ್ಟಿತು. ಇನ್ನು ಬಳಗದವರು ರಾಮಾಚಾರರನ್ನು ನೋಡ್ಲಿಕ್ಕೆ ಬಂದಂಗ ಮಾಡಿ ತಮ್ಮ ಪುಕ್ಕಟೆ ಸಲಹಾ ಕೊಟ್ಟು ಸೀತಾಬಾಯಿಗೆ ತಲಿಸೂಲಿ ತರಸಿದರು. ಇಂಥಾ ಪರಿಸ್ಥಿತಿಯೊಳಗ ಒಂದು ದಿನ ಆಚಾರ ಆರೋಗ್ಯ ಮ್ಯಾಲೆ-ಕೆಳಗ ಆಯ್ತು. + +ಅವತ್ತು ಶನಿವಾರ ಸಂಜೀಮುಂದ ದೇವರಿಗೆ ದೀಪ ಹಚ್ಚಿ, ಹೂ ಬತ್ತಿ ಮಾಡಿಕೋತ ಕೂತಿದ್ದ ಸೀತಾಬಾಯಿಯವರ ಮನಸ್ಸಿನ್ಯಾಗೂ ಯೋಚನಿಗಳು ಬಂದವು. ಈಗೋ-ಆಗೋ ಅನ್ನಹಂಗ ಇರೋ ರಾಮಾಚಾರರ ಜೀವ ಏನಾದ್ರೂ ಹೋದ್ರ, ಗುಡಿಯೊಳಗ ದೇವರ ಪೂಜಾ ನಿಂದರಬಾರದಂತ ಹೆಚ್ಚು ಹೊತ್ತು ಕಾಯಲಿಕ್ಕೂ ಹೋಗದೇ ಮುಂದಿನ ಕಾರ್ಯ ಮಾಡಬೇಕಾಗ್ತದ. ಬದುಕಿದ್ದಾಗೇ ಬಂದು ನೋಡಲಾರದ ಮಗ ಇನ್ನು ಅಮೆರಿಕಾದಿಂದ ಬಂದು ಅಪ್ಪನ ಮಾರಿ ನೋಡಲಿ ಅನ್ನೋದೇನು ಬಂತು? ತಮ್ಮ ಗುಡಿ ಪೂಜಾ ಮುಂದುವರೆಸಿಕೊಂಡು ಹೋಗೋದೇನು ಬಂತು? ದೇವರ ಪೂಜಾ ಎಂದರ ನಿಂತದೇನು? ಮೈಲಿಗಿ, ವೃದ್ಧಿ ಅಂತ ಬಂದ್ರ ಬ್ಯಾರೆದವರು ಯಾರಾದ್ರೂ ಬಂದು ಪೂಜಾ ಮಾಡಿ ಮಂಗಳಾರತಿ ಮಾಡ್ತಾರಿಲ್ಲೋ? ನೂರಾರು ವರ್ಷಗಳಿಂದ ಇರೋ ಗುಡಿಗೆ ಅದೆಷ್ಟು ಆಚಾರರು ಪೂಜಾ ಮಾಡಿಲ್ಲ? ಅಂದ್ರ ಮನುಷ್ಯನಕಿಂತ ನಾವು ನಂಬಿ ಬದುಕೋ ದೇವರು ಮಹತ್ವಪಡಕೋತಾನ ಅಲ್ಲೇನು? “ನಮ್ಮಿಂದ ಎಲ್ಲ ಕೆಲಸ ಆಗ್ತದ…ನಮ್ಮಿಂದನ ಎಲ್ಲಾ ಕೆಲಸಗಳು ಆಗಬೇಕು” ಅನ್ನೋದೆಲ್ಲ ನಾವು ಮನುಷ್ಯರು ಬಯಸೋ ಮಾತುಗಳು. ಒಂದೆರಡು ಪ್ರಯತ್ನ ನಾವು ಮಾಡಬಹುದು. ಆದ್ರ ಅದು ಆಗ್ಲೇಬೇಕು ಅನ್ನೋದು ನಮ್ಮ ಕೈಯಾಗ ಇಲ್ಲ. ಇವತ್ತು ಇದ್ದು ನಾಳೆ ಇಲ್ಲವಾಗೋ ಮನುಷ್ಯನ ಮಾತಿನಿಕಿಂತ, ನಿತ್ಯನಾದ ಭಗವಂತನನ್ನೇ ಬೇಡಿದರಾಯಿತೆಂದುಕೊಂಡು, “ಎಂಕಪ್ಪ…ನೀನ ದಾರಿ ತೋರಿಸಬಕು” ಅಂತ ಬೇಡಿಕೊಂಡರು. ಅದೆಷ್ಟೋ ಹೊತ್ತು ಕಣ್ಣು ಮುಚ್ಚಿ ಕೂತವರಿಗೆ “ಮಾಮಿ, ಸಂಜಿ ಮಂಗಳಾರತಿ ಮಾಡಿ ಗುಡಿಗೆ ಕೀಲಿ ಹಕ್ಕೊಂಡು ಬಂದೆ” ಅಂದ ಕಿಟ್ಟಣ್ಣನ ಮಾತು ಎಚ್ಚರಿಸಿತು. ಆಗಿಂದಾಗ್ಲೇ ದೇವರಿಗೆ ಮತ್ತೊಂದು ತುಪ್ಪದ ದೀಪ ಹಚ್ಚಿ ಕೈಮುಗಿ ಎದ್ದು ಬಂದು ರಾಮಾಚಾರ ಮಲಗಿದ್ದ ಒಳಮನಿಗೆ ಬಂದ ಸೀತಾಬಾಯಿ, “ಕಿಟ್ಟಣ್ಣ, ಇಲ್ಲೆ ಬಾಪ್ಪ” ಅಂತ ಕರೆದರು. + +“ಏನ್ ಮಾಮಿ, ಕರದ್ರಿ?” ಅನ್ಕೋತ ಒಳಗ ಬಂದ ಕಿಟ್ಟಣ್ಣನ ಕೈಯಾಗಿನ ಕೀಲಿ ಇಸ್ಕೊಂಡು ರಾಮಾಚಾರ ಕೈಯಾಗ ಇಟ್ಟು, “ವೆಂಕಟೇಶ ದೇವರ ಗುಡಿ ಪೂಜಾ ಇನ್ನುಮುಂದ ನೀನೇ ಮಾಡು ಕಿಟ್ಟಣ್ಣ, ನಾನು ನಿನಗ ಮಂತ್ರ ಎಲ್ಲ ಹೇಳಿಕೊಡ್ತೀನಿ, ದೇವರ ಪೂಜಾ ಹೇಳಿಕೊಡ್ತೀನಿ, ನಿನಗ ಎಷ್ಟು ತಲಿಗೆ ಹತ್ತಿತದ ಅಷ್ಟು ಕಲಿ.” ಅಂತ ಹೇಳಿ ತಾವೇ ಆಚಾರರ ಕೈ ಎತ್ತಿಸಿ ಕೀಲಿಕೈಯನ್ನ ಕಿಟ್ಟಣ್ಣನ ಕೈಯಾಗ ಹಾಕಿ ಆಶೀರ್ವಾದ ಮಾಡಿದರು. ಕಣ್ಣಾಗ ನೀರು ತಂದುಕೊಂಡ ಕಿಟ್ಟಣ್ಣ, “ಹಂಗೇ ಆಗಲ್ರಿ ಮಾಮಿ” ಅಂದ. + +ರಾಮಾಚಾರರು ಹೋದ ಮ್ಯಾಲಿನ ಕಾರ್ಯಗಳನ್ನ ಕಿಟ್ಟಣ್ಣ ಮಾಡಿದ್ರೂ, ಎರಡು ದಿನದ ಮ್ಯಾಲೆ ಬಂದ ಪವಮಾನ ಮುಂದಿನ ಕಾರ್ಯಗಳನ್ನೆಲ್ಲ ಮಾಡಿ ಮುಗಿಸಿದ. ಮಕ್ಕಳಿಬ್ಬರನ್ನು ಕರಕೊಂಡು ಮೇಘಾ ಆಮ್ಯಾಲೆ ಬಂದಳು. ಇನ್ನೇನು ನ್ಯೂ ಜೆರ್ಸಿಗೆ ಹೊರಡೊ ದಿನ ಹತ್ರ ಬಂದಕೂಡ್ಲೆ ಪವಮಾನ ಅವರಮ್ಮನ ಹತ್ರ ಮಾತಾಡಿದ. + +“ಅಮ್ಮ…ನೀನಿಲ್ಲಿ ಒಬ್ಬಕಿನೇ ಆಗ್ತಿದಿ. ಈ ಮಡಿ-ಮಡಿ ಅನ್ನೋದನ್ನ ಎಲ್ಲಾ ಬಿಟ್ಟು ನೀನೂ ನ್ಯೂ ಜೆರ್ಸಿಗೆ ಬಂದುಬಿಡು. ನಮ್ಮನಿನೂ ಸಾಕಷ್ಟು ಧೊಡ್ಡದದ, ಆರಾಮಾಗಿರಬಹುದು. ನೀನು ಅಲ್ಲಿಗೆ ಬರಲಿಕ್ಕೆ ಬೇಕಾಗೋ ಎಲ್ಲ ಡಾಕ್ಯುಮೆಂಟ್ಸ್ ವ್ಯವಸ್ಥಾ ನಾನು ಮಾಡ್ತೀನಿ.” + +ರೂಮಿನ ಬಾಗಿಲಿನ ಹತ್ರ ಬಂದು ನಿಂತು ಅಮ್ಮ-ಮಗನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಸೊಸಿಯನ್ನೊಮ್ಮೆ ನೋಡಿ ಸೀತಾಬಾಯಿ ಮಾತನಾಡಿದರು.“ನಾನು ನಮ್ಮ ಮನಿ ದೇವ್ರು ಎಂಕಪ್ಪನ ಸೇವಾ ಮಾಡಿಕೋತ ಇಲ್ಲೇ ಇರ್ತೀನಿ ಪವಮಾನ. ಮನುಷ್ಯರ ಹಂಗಿನ್ಯಾಗ ಇರೋದ್ರಕಿಂತ ದೇವರ ಹಂಗಿನ್ಯಾಗ ಇರೋದು ಛೊಲೋ ಅನ್ಸ್ತದ. ಯಾಕಂದ್ರ, ನನ್ನ ಹಂಗಿನ್ಯಾಗ ಇದ್ದೀ ಅಂತ ಆ ದೇವರು ಯಾವತ್ತೂ ಹಂಗಿಸಿ ಮಾತಾಡೋದಿಲ್ಲ ನೋಡು.” ಅತ್ತಿ ಆಡಿದ ಮಾತು ಕೇಳಿ ಮೇಘಾಗ ಮಾರಿ ಮ್ಯಾಲೆ ಹೊಡದಂಗ ಅನ್ನಿಸಿ ರೂಮಿನೊಳಗ ಹೋದಳು. ಪವಮಾನ ಅಮ್ಮನ್ನನ್ನು ಎದುರಿಸಲಾರದೆ ಸುಮ್ಮನೆ ತಲಿಕೆಳಗ ಹಾಕಿದ. ಸೀತಾಬಾಯಿನೇ ಮಾತು ಮುಂದುವರೆಸಿದರು. + +“ಬ್ಯಾಸರ ಮಡ್ಕೋಬ್ಯಾಡೊ ಪವಮಾನ. ಎಂತೆಂಥಾ ಪರಿಸ್ಥಿತಿಗಳೊಳಗೂ ಆ ದೇವ್ರು ನನ್ನ ಕೈ ಬಿಟ್ಟಿಲ್ಲ. ಈಗ ನಾನು ಆ ಎಂಕಪ್ಪನ್ನ ಹೆಂಗ ಬಿಟ್ಟು ಬರ್ತೀನೋ?” + +* * *ಕಾಲಚಕ್ರ ತಿರುಗಲಾರದೆ ಎಂದಾರ ನಿಂದರ್ತದೇನು? ಮಠದಾಗ ನೀರು ಸೇದಿ ಹಾಕ್ತಿದ್ದ ಕಿಟ್ಟಣ್ಣ ಹತ್ತು ವರ್ಷದ ಹಿಂದ ವೆಂಕಟೇಶ ದೇವರ ಗುಡಿ ಪೂಜಾರಿ ಆದಮ್ಯಾಲೆ, ಎಲ್ಲರೂ ಆತನನ್ನು ಕೃಷ್ಣಾಚಾರ್ ಅಂತ ಕರೀತಾರ. ರಾಮಾಚಾರರು ಹೋದ ಮ್ಯಾಲೆ ‘ಮಡಿ’ ಆದ ಸೀತಾಬಾಯಿ ಗುಡಿಯ ಜವಾಬ್ದಾರಿನೆಲ್ಲ ವಹಿಸಿಕೊಂಡಾರ. ಅಮೆರಿಕಾದ ನ್ಯೂ ಜೆರ್ಸಿನ್ಯಾಗ ಪವಮಾನನ ಮಕ್ಕಳೀಗ ಕಾಲೇಜಿನ್ಯಾಗ ಓದ್ಲಿಕ್ಕತ್ಯಾರ. ಮಕ್ಕಳಿಬ್ಬರೂ ತಮ್ಮ ಪಾಡಿಗೆ ತಾವು ಬ್ಯಾರೆ ಇದ್ದು, ಆಗೊಮ್ಮೆ-ಈಗೊಮ್ಮೆ ಮನಿ ಕಡೆ ಹಣಕಿ ಹಾಕ್ತಾರ. ತಾವು ಬಯಸೋ ಹಂಗ ಜೀವನ ನಡಿಸ್ಲಿಕತ್ತ್ಯಾರ. ಐದು ಬೆಡ್ ರೂಮಿನ ದೊಡ್ಡ ಮನಿ ಈಗ ಖಾಲಿ-ಖಾಲಿಯಾಗಿ, ರಾತ್ರಿ ಹೊತ್ತಂತೂ ಗವ್ವಂತ ಅನ್ನಿಸಲಿಕ್ಕೆ ಸುರುವಾದ ಕೂಡಲೆ, ಪವಮಾನ ಮತ್ತು ಮೇಘಾ ಅದನ್ನು ಮಾರಿ ಅಲ್ಲೇ ಬ್ರಿಡ್ಜವಾಟರ್ ವೆಂಕಟೇಶ ದೇವರ ಗುಡಿ ಹತ್ರನ ಎರಡು ಬೆಡ್ ರೂಮಿನ ಅಪಾರ್ಟಮೆಂಟ್ ತೊಗೊಂಡಿದ್ದಾರ. + +“ನಮ್ಮಪ್ಪ-ನಮ್ಮ ತಾತ ಎಲ್ಲರೂ ದೊಡ್ಡ ಪಂಡಿತರಾಗಿದ್ರು, ನಮ್ಮ ಮನೀದೆ ಒಂದು ವೆಂಕಟೇಶ ದೇವರ ಗುಡಿ ಅದ” ಅಂತ ಎಲ್ಲಾರಿಗೂ ಹೇಳಿಕೋತ, ರೇಷ್ಮಿ ಮಡಿ ಉಟ್ಕೊಂಡು, ದೊಡ್ಡ ಜರತಾರಿ ಶಲ್ಯ ಹೊದ್ಕೊಂಡು, ಗುಡ್ಯಾಗ ದೇವರ ಮುಂದ ಮೊದಲನೆ ಸಾಲಿನಲ್ಲಿ ಕೂತುಕೊಳ್ಳೋ ಪವಮಾನ, ಅಲ್ಲಿನ ಸಂಪ್ರದಾಯಸ್ಥರ ಗುಂಪಿಗೆ ಲೀಡರ್ ಆಗ್ಯಾನ. + +“ಮಕ್ಕಳು ಮನಿಗೆ ಬಂದುಹೋಗಿ ಎಷ್ಟೋ ದಿನಗಳಾದವು, ಫೋನ್ ಆದ್ರೂ ಮಾಡದರಾಯ್ತು” ಅಂದ್ಕೊಂಡು ಮೇಘಾ ಫೋನ್ ಮಾಡಿದಾಗಲೆಲ್ಲ, “ಯಾಕಮ್ಮ ಇಷ್ಟೊತ್ತಿಗೆ ಫೋನ್ ಮಾಡಿ ಡಿಸ್ಟರ್ಬ್ ಮಾಡ್ತಿಯಾ?” ಅಂತ ಮಕ್ಕಳ ಕೈಲಿ ಬೈಸಿಕೊಂಡು ಬ್ಯಾಸರ ಮಾಡ್ಕೋತಾಳ. + + + +ಇಲ್ಲೆ ಕಲ್ಲಳ್ಳಿಯೊಳಗ ಮನಿ ಮುಂದಿನ ಕಟ್ಟಿಮ್ಯಾಲೆ ಹತ್ತಿ-ಬತ್ತಿ ಬುಟ್ಟಿ ಇಟ್ಟಕೊಂಡು ಕೂತು, ಹಾದ್ಯಾಗ ಹೋಗೋ-ಬರೋರನ್ನೆಲ್ಲ ಮಾತನಾಡಿಸುವ ಸೀತಾಬಾಯಿ, ಹೂಬತ್ತಿ ಮಾಡಿಕೋತ ದಾಸರಪದ ಹೇಳ್ತಿರ್ತಾರ. “ಆವನಾವನು ಕಾಯ್ವ ಅವನಿಯೊಳಗೆ, ಜೀವರಿಗೆ ಧಾತೃ ಶ್ರೀಹರಿಯಲ್ಲದೆ…” + +ಸರಿತಾ ನವಲಿ ಮೂಲತಃ ಉತ್ತರ ಕರ್ನಾಟಕದವರು. ಕಾಲೇಜು ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದು, ಸದ್ಯ ನ್ಯೂ ಜೆರ್ಸಿಯಲ್ಲಿ ನೆಲೆಸಿದ್ದಾರೆ. ಇವರ ಬರಹಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ’ಆವನಾವನು ಕಾಯ್ವ’ ಇವರ ಮೊದಲ ಕಥಾಸಂಕಲನ. \ No newline at end of file diff --git a/Kenda Sampige/article_393.txt b/Kenda Sampige/article_393.txt new file mode 100644 index 0000000000000000000000000000000000000000..ed4b0886210162fee40d492c790f6bb2fb9d9671 --- /dev/null +++ b/Kenda Sampige/article_393.txt @@ -0,0 +1,43 @@ + + +ಮೇದಿನಿ ಅವರ ಮೊದಲ ಕವನ ಸಂಕಲನ ‘ಬೀದಿಬದಿ ಬೆಳದಿಂಗಳು’ ಕೃತಿಯನ್ನು ಓದಿದಾಗ ನನಗೆ ಇದರ ಸಹಜ ಅಭಿವ್ಯಕ್ತಿ ಮೊದಲಿಗೆ ಗಮನ ಸೆಳೆಯಿತು. ಇಂದು ಬರೆಯುತ್ತಿರುವ ಅನೇಕ ಹೊಸಬರು ತಮ್ಮ ಸಹಜ ಭಾವನೆ, ಬಯಕೆಗಳನ್ನು ಅದುಮಿಟ್ಟು ಸಾಮಾಜಿಕವಾಗಿ ಪ್ರಸ್ತುತ ಅನ್ನಿಸಿಕೊಳ್ಳಲು ಸಮಂಜಸವಾದ ಎಂಬಂತಹ ವಿಚಾರ, ವಸ್ತುಗಳ ಬಗೆಗೇ ಹೆಚ್ಚು ಕವನಗಳನ್ನು ಬರೆಯುತ್ತಿರುವುದು ಅನೇಕ ಕಡೆಗಳಲ್ಲಿ ಕಾಣಿಸುತ್ತಿವೆ. ಆದರೆ ಮೇದಿನಿ ಅವರ ಕವನಗಳಲ್ಲಿ ಸಾಮಾಜಿಕ ಅನ್ನಿಸಬಹುದಾದ ವಸ್ತು, ವಿಚಾರಗಳು ಅಲ್ಲಿ ಇಲ್ಲಿ ಮೂಲ ಭಾವಕ್ಕೆ ಹೊಂದಿಕೊಂಡಂತೆ ಬರುತ್ತವೆಯೇ ಹೊರತು ಸಹಜ ಅಂತರಂಗ ಭಾವಗಳನ್ನು ಮುಚ್ಚಿಟ್ಟು ಪ್ರಕಟವಾಗುವುದಿಲ್ಲ. ಭಾವನೆಗಳ ಸಹಜ ಭಾಷಾಭಿವ್ಯಕ್ತಿಗಳಾಗಿ ಅವು ಚಿಮ್ಮಲ್ಪಟ್ಟಿವೆ. ವಯೋ ಸಹಜವಾದ ಭಾವಲೋಕದ ಅರಿವು ಹಲವು ರೂಪಕಗಳಲ್ಲಿ ಇಲ್ಲಿ ಹರಳುಗಟ್ಟಿವೆ. + +(ಮೇದಿನಿ) + +ಮೇದಿನಿ ಬೆಂಗಳೂರಿನ ಎಂ.ಇ.ಎಸ್ ಕಾಲೇಜಿನ ಕಲಾ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ವಿದ್ಯಾರ್ಥಿನಿ. ಕನ್ನಡ ಭಾಷೆಯನ್ನು ತನ್ನ ಅಗತ್ಯವಾಗಿ ಒಗ್ಗಿಸಿಕೊಳ್ಳಬಲ್ಲ ಕೌಶಲ್ಯ ಅವರಿಗಿದೆ. ಅಧ್ಯಯನ ಹಾಗೂ ಅಭ್ಯಾಸಗಳಿಂದ ಅದು ಮುಂದೆ ಇನ್ನೂ ಚೆನ್ನಾಗಿ ಕರಗತವಾಗಬಲ್ಲದು ಎಂಬ ಸೂಚನೆಗಳು ಅವರ ಎಲ್ಲಾ ಕವನಗಳಲ್ಲೂ ಗೋಚರಿಸುತ್ತದೆ. ಕಾವ್ಯದಲ್ಲಿ ರೂಪಕಗಳು ಜೀವ ತಳೆಯುವ ವಿಸ್ಮಯ ಅವರನ್ನೇ ಹಲವು ಸಲ ಬೆರಗುಗೊಳಿಸಿರಬಹುದು. ರೂಪಕ ಸೃಷ್ಟಿ ಕವಿ ಸಿದ್ಧಿಸಿಕೊಳ್ಳಬೇಕಾದ ಸಾಧನೆ. ವಸ್ತು, ವಿಚಾರ, ತಾತ್ವಿಕ ಚಿಂತನೆಗಳ ಧ್ಯಾನಗಳಿಂದ ಅದು ಒದಗಿ ಬಂದರೂ ಬರಬಹುದು. ಭಾಷೆಯಲ್ಲಿ ಅದನ್ನು ಮೈಗೂಡಿಸಿಕೊಳ್ಳುವ ಕಲೆ ಕರಗತವಾಗಬಹುದೆಂಬ ಸೂಚನೆಗಳನ್ನು ಇಲ್ಲಿನ ಕವನಗಳು ಉಂಟು ಮಾಡುತ್ತವೆ. ಅದರ ಯಶಸ್ಸು ಕವಿಯ ಭವಿಷ್ಯದ ಸಾಧನೆಗೆ ಸಂಬಂಧ ಪಟ್ಟುದು. + +ಇಲ್ಲಿನ ಕವನಗಳು ಮುಖ್ಯವಾಗಿ ‘ಅವನು’ ಮತ್ತು ‘ಅವಳ’ ಸುತ್ತಲಿನ ನಿರೂಪಣೆಗಳಲ್ಲಿ ಕಟ್ಟಲ್ಪಟ್ಟಿವೆ. ಕವನಗಳ ನಿರೂಪಕಿಯ ಮಾತುಗಳು ಎಲ್ಲಾ ಕಡೆ ಕೇಳಿ ಬರುವುದು. ‘ಅವನು’ ಕೂಡಾ ‘ಅವಳ’ ಮಾತುಗಳಲ್ಲೇ ಕಾಣುವವ. ಆದುದರಿಂದ ಇವೆಲ್ಲಾ ಅಂತರಂಗದ ಅದಮ್ಯ ಒತ್ತಡದಿಂದ ಹುಟ್ಟಿ ಬಂದವು. ‘ಅವನು’ ಯಾರೆಂಬುದು ಇನ್ನೂ ಅವಳಿಗೆ ಸ್ಪಷ್ಟವಾಗಿದೆಯೋ ಇಲ್ಲವೋ. ಹಗಲನ್ನು ಹುಡುಕುವುದು ಸೇರಿ ಹಲವು ಕಡೆ ಹಲವು ಕ್ರಿಯೆಗಳಲ್ಲಿ ಅವನು ವರ್ಣಿಸಲ್ಪಟ್ಟಿದ್ದಾನೆ. ಆತ ಹೊರಗೆ ನಿಜವಾಗಿ ಇರುವವನೋ ಅಥವಾ ‘ಅವಳ’ ಮನೋಜನೋ ಎಂಬುದು ಅಸ್ಪಷ್ಟವಾಗಿ ನಿರೂಪಕಿಯ ಅಂತರಂಗದೊಳಗೆ ಅವನು ಹಾಗೂ ಅವಳು ಪರಸ್ಪರ ಪರೀಕ್ಷಿಸಿಕೊಳ್ಳುವ ರೀತಿ ಸಮಗ್ರ ಕವನಗಳ ರೂಪುರೇಷೆ ಇವೆ. + +“ಕೊರಳ ಇಳಿಜಾರದಲ್ಲೆಲದು |ಬೆನ್ನ ಬೆತ್ತಲೆಗಳಲ್ಲಿಳಿದು|ಕೊಟ್ಟ ಮರೆತ ಮಾಧುರ್ಯವೊಂದು | ಹೊಳೆದ” ರೀತಿ( ಇರುಳ ಇಳಿಜಾರು-ಕವನ) ಅದು ಸುಳಿದು ಸುತ್ತಿ ಹೋಗುತ್ತಿದೆ. ಅದು ಏನು? ಎಂಬುದನ್ನು ಅರಿಯುವ ಕ್ರಮವೇ ಇಲ್ಲಿನ ಕವನಗಳು. ಅವಳಾದರೋ ‘ನಿಂತ ನದಿ; ಹರಿಯುವುದನ್ನು ಮರೆತಾಗಿದೆ.. ಅದಕ್ಕೇ ಅವಳಲ್ಲಿ ಈಜುವವರು ಹೆಚ್ಚು ಎಂಬ ಒಂದು ಭಾವವೂ ಸುಳಿದು ಹೋಗಿದೆ. (ಚಿತ್ರಲೇಖೆ) + +ಪ್ರೇಮದ ಕುಲುಮೆಯೊಳುಬೆಂದೆದ್ದ ಮೇಲೀಗಅರ್ಧರ್ಧ ಬೂದಿ, ಅರ್ಧರ್ಧ ಗೆಲುವುಕೊರಳ ಹಿಸುಕುವ ರಾತ್ರಿಗಳೆಲ್ಲ(ಶಾಪ) + +ಈ ಹಿಂಸೆಯ ಅನುಭವ ಮಧುರ ಭಾವದಿಂದ ಯಾಕೆ ಹುಟ್ಟುತ್ತದೆ ಎಂಬುದರ ಅರಿವು ಬದುಕಿನ ಮತ್ತೊಂದು ಮಗ್ಗುಲನ್ನು ಕಾಣಿಸುತ್ತದೆ. ಕವಿಗೆ ತನ್ನ ಸ್ಥಿತಿಯ ಅರಿವಿದೆ. + +ಅರೆಬೆಂದ ಅನ್ನದಗಳು ನಾನು,ಕುದಿಯುತ್ತೇನೆ.. ಕುದಿಯುತ್ತಲೇ ಇರುತ್ತೇನೆ…ನೀ ಸಿಕ್ಕರೂ ಸಿಗದಿದ್ದರೂ(ಆಕಾಶ ಕೈಗೆಟುಕೀತು ಆಗಲಾದರೂ) + +ಕವಯಿತ್ರಿಗೆ ಈ ಹಿನ್ನಲೆಯಲ್ಲಿ ಸಿದ್ಧಿಸುವ ಭಾಷಾನುಭವ ತನ್ನ ಸಂಕೀರ್ಣ ಭಾವಾಭಿವ್ಯಕ್ತಿಗೆ ಸಹಕಾರಿಯಾಗಿದೆ. + + + +ಹುಡುಗಾ,ದೂರದೂರಿನಲ್ಲಿ ಕೂತುನಗೆಯರಳಿಸುತ್ತೀ ನೀನು…ನನ್ನ ಮೋಹದ ಮಣ್ಣು ಹೊತ್ತದಾರಿ ತುಂಬೆಲ್ಲ ಸೇವಂತಿಗೆ.ಬರುವೆ ನೀನೆಂದು.(ಅಭೋಧ) + +ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ. ಆದುದರಿಂದಲೇ ಇಲ್ಲಿನ ಕವನಗಳು ಭಾವಲೋಲುಪತೆಗೆ ಇಳಿಯುವುದಿಲ್ಲ. ಭಾವ ತೀವ್ರತೆಯನ್ನು ರೂಪಕಗಳಲ್ಲಿ ಕಟ್ಟಲು ಪ್ರಯತ್ನಿಸುತ್ತವೆ. ವಾಸ್ತವ ಸತ್ಯದ ಅರಿವು ಭಾವಲೋಲುಪತೆಯಲ್ಲಿ ಇರುವುದಿಲ್ಲ. + +ಪ್ರೇಮಕ್ಕೆ ಕೈಕಾಲುಗಳಿರುವುದೇಕಾಮದಲ್ಲಿ, ಸ್ವಾರ್ಥದಲ್ಲಿಗೊಂದಲದ ಅತಿಯಾಸೆಯಲ್ಲಿಸಿಟ್ಟು ಸೆಡವುಗಳ ಸೊಕ್ಕಿನಲ್ಲಿ (ಪ್ರೇಮವೆಂದರೆ) + +ಅಕ್ಕಮಹಾದೇವಿ ಚೆನ್ನಮಲ್ಲಿಕಾರ್ಜುನನ್ನು ಒಮ್ಮೆ ‘ಅರಸಿ ಕಾಣದ ಚೆಲುವ’ ಎಂದು ವಿವರಿಸುತ್ತಾಳೆ. ಲೌಕಿಕದ ಮೂಲಕ ಅಲೌಕಿಕ ಅರಿಯುವ ಮನೋಸ್ಥಿತಿ ಅದು. ‘ಅರಸಿ’ ಎಂಬುದು ಶ್ಲೇಷೆಯಾಗುವುದರಿಂದ ಅದು ಸಾಧ್ಯವಾಗುತ್ತದೆ. ಇಲ್ಲಿ ಕವಿ “ಮೈಯೆಲ್ಲ ಅರಸಿ| ಹಾಡು ಬರೆದ ಕೈಗಳ ಪೋಲಿತನಕ್ಕೆ ಪರಿಚಯವಿರಬೇಕೆಂದಿರಲಿಲ್ಲ.” ಎನ್ನುತ್ತಾಳೆ. ಕಾವ್ಯಧ್ಯಾನ ತತ್ವಜ್ಞಾನವನ್ನು ಮುಂದೆ ಒಳಗೊಳ್ಳಲು ಸಾಧ್ಯವಾದಾಗ ಭಾವದ ಬೆರಗು ಬದುಕಿನ ಬಣ್ಣವಾಗಿ ಬೆಳೆದೀತು. ಆದರೆ ಈಗ ಕವಿಯ ಚಿತ್ರ ಸ್ಪಷ್ಟವಾಗಿದೆ. + +ಕಲಿತ ಅಕ್ಷರಗಳೆಲ್ಲಕರಗುವಾಗಕಟೆದ ಕಾವ್ಯದಂಥವ ನೀನು….(ಮಿಲನ) + +(ಎಸ್.ಆರ್.ವಿಜಯಶಂಕರ) + +“ಮುಂದುವರೆಯುತ್ತದೆ”, “ನನ್ನ ಸಾವಿರ ಕಾರಣಗಳು”, “ಹಗಲು ನನ್ನ ಬೆನ್ನಮೇಲಿದೆ” ಮುಂತಾದ ಕವನಗಳು ಇನ್ನೂ ಕೆಲವು ಮಗ್ಗುಲುಗಳನ್ನು ಒಳಗೊಳ್ಳಲು ಪ್ರಯತ್ನಿಸುತ್ತಿವೆ. “ಅರ್ಧ ದಾರಿ ನೀನು, ಮತ್ತರ್ಧ ನಾನೂ| ನಡೆದು ಬಿಡೋಣ| ಕಣ್ಕಣ್ಣ ನಡುವೆ ಕಡಲೊಂದು|ಹುಟ್ಟದಿದ್ದರೆ | ಮತ್ತೆ ನದಿಗಳಾಗೋಣ” ಎಂಬ ಕವಿಭಾವ ಮತ್ತೆ ಹುಡುಕಾಟದ ಕಡೆಗೆ ಸೆಳೆಯುತ್ತಿದೆ. + +ಸಹಜ ಭಾವಗಳನ್ನು ತಮಗೆ ತಾವೇ ಸ್ಪಷ್ಟಪಡಿಸಿಕೊಳ್ಳುವ ರೀತಿ ರೂಪಕಗಳಲ್ಲಿ ಶೋಧಿಸಿ ಹಿಡಿಯಲು ಮಾಡುವ ಪ್ರಯತ್ನ ಮೇದಿನಿಯವರ ಮೊದಲ ಸಂಕಲನದ ಯಶಸ್ಸು. ಇಂದು ಕವಿ ತನಗೆ ತಾನೇ ಪ್ರಾಮಾಣಿಕವಾಗಿ ಮಾತನಾಡಿಕೊಳ್ಳುವ ಧೈರ್ಯ, ಅಂತರಂಗ ಶೋಧನೆಯ ಕಾವ್ಯ ಮಾರ್ಗ ಇನ್ನೊಮ್ಮೆ ಹೊಸದಾಗಿ ರೂಪುಗೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಮೇದಿನಿಯವರದು ಹೊಸ ಪ್ರಯತ್ನ. + + + +ಈಗ ವಿದ್ಯಾರ್ಥಿನಿಯಾಗಿರುವ ಮೇದಿನಿ ಮುಂದೆ ಇವನ್ನೆಲ್ಲಾ ಇನ್ನಷ್ಟು ಯಶಸ್ವಿಯಾಗಿ ಸಾಧಿಸಿಕೊಳ್ಳುವಂತೆ ಆಗಲಿ ಎಂದು ಹಾರೈಸುತ್ತೇನೆ. ಮೇದಿನಿ ಅವರಿಗೆ ಅಧ್ಯಾಪಕರಾಗಿರುವ, ಸ್ವತಃ ಬರಹಗಾರರೂ ಆಗಿರುವ ಪ್ರೋ. ಲೋಕೇಶ್ವರಪ್ಪನವರು ವಿದ್ಯಾರ್ಥಿಗಳ ಸಾಹಿತ್ಯಾಸಕ್ತಿಗಳನ್ನು ಪ್ರೋತ್ಸಾಹಿಸುವವರು. ಅವರ ಅಪೇಕ್ಷೆಯಂತೆ ಈ ಮುನ್ನುಡಿಯನ್ನು ಬರೆದಿದ್ದೇನೆ. ಕರ್ನಾಟಕದ ಎಲ್ಲಾ ಕಾಲೇಜುಗಳಲ್ಲೂ ಈ ರೀತಿಯ ಸಾಹಿತ್ಯಾಸಕ್ತಿ, ಓದು, ಪ್ರಕಟಣೆಗಳ ಆಸಕ್ತಿಯ ವಾತಾವರಣ ಬೆಳೆಯಲಿ ಎಂಬ ಆಸೆ ಉಂಟಾಗುತ್ತದೆ. ಈ ಕವನ ಸಂಕಲನ ಇನ್ನಷ್ಟು ವಿದ್ಯಾರ್ಥಿಗಳು ಕೃತಿಗಳನ್ನು ಪ್ರಕಟಿಸಲು ಇತರ ಕಾಲೇಜುಗಳಿಗೂ ಪ್ರೇರಣೆ ನೀಡುವಂತಾಗಲಿ ಎಂದು ಆಶಿಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_394.txt b/Kenda Sampige/article_394.txt new file mode 100644 index 0000000000000000000000000000000000000000..e57e5b4b602b75db1fea7515777a84a543b14c7c --- /dev/null +++ b/Kenda Sampige/article_394.txt @@ -0,0 +1,131 @@ + + + + +ಶ್ರೀಮತಿ ಸುನೀತಾ ರೈನಾ ಪಂಡಿತ್‌, ಕಾಶ್ಮೀರಿ ಪಂಡಿತ್ ಜನಾಂಗದ ಹೆಣ್ಣು. ಜನಾಂಗ ದ್ವೇಷದ ದಿನಗಳಲ್ಲಿ ಸಾಮೂಹಿಕವಾಗಿ ವಲಸೆ ಬಂದವರಲ್ಲಿ ಈಕೆಯ ಕುಟುಂಬವೂ ಒಂದು. ಈಕೆಯ ಗಝಲ್‌ ಗಳು ಇಂಗ್ಲಿಶ್‌ ಭಾಷೆಗೆ ಅನುವಾದಗೊಂಡಿವೆ. ‘ಲೈಟ್‌ ಅಂಡ್‌ ಶೇಡ್‌’ ಮತ್ತು ‘ಎ ವಾಕ್‌ ಥ್ರೂ ದಿ ಮಿಸ್ಟ್‌’ ಆ ಎರಡು ಸಂಕಲನಗಳು. ಈಕೆ ಕಾಶ್ಮೀರಿ ಅಸ್ಮಿತೆಯನ್ನು ಹುಡುಕುತ್ತಲೇ ಕಳೆದುಕೊಂಡ ಕೊಂಡಿಗಳನ್ನು ಮತ್ತೆ ಬೆಸೆಯುವ ತೊಳಲಾಟದಲ್ಲಿ ಬರೆಯುತ್ತಾರೆ. + +ಸುನೀತಾ ಅವರ ಒಂದು ಹಿಂದಿ ಮತ್ತೆ ಮೂರು ಕಾಶ್ಮೀರಿ ಕವನ ಸಂಕಲನಗಳು ಪ್ರಕಟವಾಗಿವೆ. ಸುನೀತಾ ಕಾಶ್ಮೀರದ ಹಳ್ಳಿಯ ಮಗಳು. ಬಾದಾಮಿಯ ತೋಟಗಳಿಂದ, ಹರಿಯುವ ತೊರೆಗಳಿಂದ ಸಮೃದ್ಧವಾಗಿದ್ದ ಕಣಿವೆಯ ಹಳ್ಳಿಯಿಂದ ದೂರದ ಬಿಸಿಧಗೆಯ ಮರಳುಗಾಡಿನ ವಾಸಕ್ಕೆ ಎತ್ತಿ ಎಸೆಯಲ್ಪಟ್ಟ ಕಾಶ್ಮೀರಿ ಪಂಡಿತರ ಕುಟುಂದವರು ಸುನೀತಾ. ಆಕೆಯ ರೂಪಕಗಳು ವಲಸೆಹೋದ ಕನಸೊಂದರ ಹಾಗೆ ಇವೆ. ಇದ್ದರೂ ಆಕೆಯ ಕವಿತೆ ಕನವರಿಕೆಗಳಿಂದ ದೂರವಿದೆ. ರೂಪಿಸುವ ಚಿತ್ರಗಳು ಪಾರಂಪರಿಕವಾಗಿದ್ದರು ಸಹ, ಸಮಕಾಲೀನ ಸಂವೇದನೆಗಳಿಗೆ ಮತ್ತು ಸೂಕ್ಷ್ಮಗಳಿಗೆ ಅವು ತೆರೆದುಕೊಳ್ಳುತ್ತವೆ. ಆಕೆಯ ಕಾವ್ಯ ತನ್ನ ಸಂಭಾಷಣೆಗಳಲ್ಲಿ ನಮ್ಮನ್ನು ತೊಡಗಿಸಿಕೊಳ್ಳುತ್ತದೆ ಮತ್ತು ಅದರಲ್ಲಿ ವಿಸ್ಮಯಕಾರಿ ಐಕಮತ್ಯ ಇದೆ ಎಂದು ಫಾರೂಕ್ ನ ಝ್ಕಿಎ ವಾಕ್‌ ಥ್ರೂ ದಿ ಮಿಸ್ಟ್‌ ಕೃತಿಗೆ ಬರೆದ ಬೆನ್ನುಡಿಯಲ್ಲಿ ಅಭಿಪ್ರಾಯಪಡುತ್ತಾರೆ. + +ಸುನೀತಾ ರೈನಾ ಏಪ್ರಿಲ್ 25, 1967 ರಂದು ಹುಟ್ಟಿದವರು. ದಕ್ಷಿಣ ಕಾಶ್ಮೀರದ ಹಯಾತ್ಬಗ್ ನಲ್ಲಿ ಹುಟ್ಟಿದ ಆಕೆ ಪದವೀಧರೆ. ವಿವಾಹದ ನಂತರ ಓದುವುದು ಮತ್ತು ಗೀತರಚನೆಗೆ ತನ್ನ ಬಿಡುವಿನ ಸಮಯವನ್ನು ಮೀಸಲಿಟ್ಟ ಆಕೆಯ ಮೊದಲ ಸಂಕಲನ ಹೊರಬಂದದ್ದು ಸಾವಿರದ ಒಂಬೈನೂರ ತೊಂಬತ್ತೆಂಟರಲ್ಲಿ. ‘ಚಿನ್ನಾರ್ ಕೆ ಆಸು’ ಅಂದರೆ ಬಯಲ ಕಣ್ಣೀರು ಎಂಬ ಸಂಕಲನ ಹಿಂದಿ ಭಾಷೆಯಲ್ಲಿದೆ. ಆದರೆ ಆಕೆ ತನ್ನ ಲಯವನ್ನು ಕಂಡುಕೊಂಡಿದ್ದು ಮಾತೃಭಾಷೆ ಕಾಶ್ಮೀರಿಯಲ್ಲಿ. + +‘ಗಾಯಗಳನ್ನು ತೊಳೆದು ವಾಸಿ ಮಾಡಲಾಗುವುದಿಲ್ಲ. ಅದು ಹೊರಗೆ ಮೆತ್ತಿದ ನೆತ್ತರಲ್ಲ. ತೊಳೆಯಲಾಗದ, ಗುಣಪಡಿಸಲಾಗದ ಗಾಯಗಳವು. ಇಂದು ಯಾರಿಗಾದರೂ ಗಾಯಗಳನ್ನು ಮಾಯಿಸುವ ಸಣ್ಣ ಆಲೋಚನೆಯಾದರೂ ಬಂದಿದೆಯೇ’ ಎಂದು ಪ್ರಶ್ನಿಸುವ ಸುನೀತಾ ಅವರಿಗೆ ಇತ್ಯಾತ್ಮಕವಾದ ಪರಿಕಾರ ಕಣ್ಣೆದುರಿಗಿಲ್ಲದೆ ಇರುವಾಗ ಸೋಲುವುದೇ ಪರಿಹಾರವೇ ಎಂಬ ಭಾವನೆಯೂ ಬಂದುದುಂಟು. ಆತ್ಮಗಳು ಸುಟ್ಟ ನಂತರ ಉಳಿವ ಕಲೆಗಳ ಪ್ರಭಾವ ಅವರ ಅಸ್ತಿತ್ವ ಮತ್ತು ಕಾವ್ಯಭಿತ್ತಿಯ ಮೇಲೂ ಆಗಿದ್ದುಂಟು. ಯಾವುದೇ ಕಾಣ್ಕೆಯ ಕ್ಯಾನವಾಸಿನ ಮೇಲೆ ಕಪ್ಪು ಕಲೆಗಳು ಹರಡಿದ್ದರೆ ಯಾವ ಮನೋಹರತೆ ಉಳಿದೀತು? ಆದರೂ ಸುನೀತಾ ಮಡುಗಟ್ಟಿದ ನೋವನ್ನು ಉಳಿಸಿಕೊಂಡೇ ಮನೋಹರ ಕವಿತೆಗಳನ್ನು ಬರೆಯುತ್ತಾರೆ. + +ಕವಿಗೆ ನೋವೂ ಆನಂದದ ವಿಚಾರವೇ. ಅದರ ಅಭಿವ್ಯಕ್ತಿಯಲ್ಲಿ ಕವಿಗೆ ಶಾಂತಿಯನ್ನು, ವ್ಯಕ್ತಿತ್ವವನ್ನು ಕೊಡುತ್ತದೆ. ಸಂಕಟವಿಲ್ಲದ ಮನುಷ್ಯ ಬದುಕು ಬದುಕಲ್ಲ. ಸಮುದಾಯಗಳು ಹಿಂದಿನ ಮಾತನಾಡುವಾಗ ತೊದಲಿದರೇ? ತೊದಲಿದ್ದರ ಫಲಿತವೇ ಇಂದಿನ ಅರಾಜಕತೆ?ಇದು ವ್ಯಾಧಿಯ ರೂಪ ತಳೆದಿದೆ. ಪ್ರಿಯಕರನ ದಮನಿಗಳಲ್ಲಿ ವಿಷದನೆತ್ತರು ಹರಿಯಲು ತೊಡಗಿದೆ. ನೇತಾರರು ಕಣ್ಣೆವೆ ತೆರೆಯುವುದಿಲ್ಲ. ಗತಕ್ಕೆ ನ್ಯಾಯ ಒದಗಿಸುವುದು ಎಂದರೆ ಹುಡುಗಾಟಿಕೆಯಷ್ಟೆ. ಚಿನಾರ್‌ ವೃಕ್ಷದ ನೆರಳ ಕುರಿತು ಮೆಚ್ಚುಗೆ ಮಾಯವಾಗಿದೆ ಎಂದರೆ ಗಾಳಿಯೂ ನಂಬಲರ್ಹವಲ್ಲ. ಕಾಲ ಬೆಂಕಿಯನ್ನು ನುಂಗುತ್ತಿದೆ. ಹಾದಿ ದೂರವಿದೆ. ಗೊಂದಲದ ಸುಂಟರಗಾಳಿಗೆ ಆತ್ಮಗಳು ತರಗೆಲೆಗಳಂತೆ ತೂರಿಹೋಗುವಾಗ ಸೇರಲು ಸ್ಥಳವೇ ಇಲ್ಲದಾಗಿದೆ. ಈ ಸಂಕಟದ ಸಾಗರವನ್ನು ಸುನೀತ ಬಿಂದು ಬಿಂದು ಅಳೆಯುತ್ತಾರೆ. ಅಪನಂಬಿಕೆಯ ವ್ಯವಹಾರಗಳಲ್ಲಿ ಸಂತತನ ಮರೆಗೆ ಸರಿದಿದೆ. ನೆಲದಗಲ ಸಿಡಿಮದ್ದಿನ ಹುಡಿ ಹರಡಿದೆ. + +ಸುನೀತಾ ಅವರ ಕಾವ್ಯ ಕಲ್ಪನೆಯ ಹರವು ದೊಡ್ಡದು. ಆದರೂ ಆಕೆಯ ಕಾವ್ಯ ಪ್ರೀತಿ, ಕಾಯುವಿಕೆ, ಭರವಸೆ, ಸ್ಮೃತಿ, ಭೂತ, ನಿಸರ್ಗ, ಆಧ್ಯಾತ್ಮ, ಏಕಾಕಿತನ, ಬೇಪ್ಪಡುವಿಕೆ, ಅಸಹಾಯಕತೆ, ಹತಾಶೆ, ವಲಸೆ, ಮನುಷ್ಯ, ಪ್ರಪಂಚ ಮತ್ತು ಆಧುನಿಕತೆಯನ್ನು ಕೇಂದ್ರದಲ್ಲಿ ಇರಿಸಿಕೊಂಡಿವೆ. ಬೇರೆ ಬಗೆಯಲ್ಲಿಯೂ ಆಕೆ ಬರೆಯುತ್ತಾರಾದರೂ ಅವರ ಶಕ್ತಿ ವ್ಯಕ್ತಗೊಳ್ಳುವುದು ಗಜಲ್ಗಳಲ್ಲಿಯ ಆಕೆಯ ಕಾವ್ಯಲಯಗಳು ಚಿತ್ರಿತವಾಗುವ ಅಭಿವ್ಯಕ್ತವಾಗುವ ಪರಿಯಲ್ಲಿ. ಎಲ್ಲವೂ ಬೆರೆತು ಸುನಿತಾ ಅವರಿಗೆ ವಿಶೇಷ ತಾಣವೊಂದನ್ನು ಕಾಶ್ಮೀರಿ ಕಾವ್ಯದಲ್ಲಿ ಕಲ್ಪಿಸಲಾಗಿದೆ. + +ಗೌರಿಶಂಕರ್ ರೈನಾ ಎಂಬ ಕಾಶ್ಮೀರಿ ವಿಮರ್ಶಕ ʼಎವಾಕ್‌ ಥ್ರೂದ ಮಿಸ್ಟ್ʼ ಅನ್ನು ಕುರಿತು ಇಂಡಿಯನ್ ಲಿಟರೇಚರ್ ಮ್ಯಾಗಜೀನ್ ನಲ್ಲಿ ‘ದಿ ಸಾಂಗ್‌ ಆಫ್‌ ಹೋಪ್‌’ ಎಂಬ ಒಂದು ಲೇಖನ ಬರೆದಿದ್ದಾರೆ. ಸುನೀತಾ ಅವರ ಕಾವ್ಯದ ಪ್ರವೇಶಕ್ಕೆ ಈ ಮಾತುಗಳು ಸಹಕಾರಿ. ಅವರು ಬರೆಯುತ್ತಾರೆ: ಮಂಜಿನ ಹಾದಿಯನ್ನು ಕ್ರಮಿಸುತ್ತಾ ನಮಗೆ ಕೇಳಿ ಬರುವ ಮಾರ್ದನಿಗಳು ಸಾಯುವುದಿಲ್ಲ, ಬದಲಿಗೆ ಅವು ನಮ್ಮ ಕಾಲದ ಹಾದಿಯನ್ನು ನೆನಪು ಮಾಡಿಸುತ್ತವೆ. ಕಣಿವೆಯನ್ನು ಕವಿದಿರುವ ಮಂಜು ನಮ್ಮ ಕನವರಿಕೆಗಳನ್ನು, ನೆನಪುಗಳನ್ನು, ಚರಿತ್ರೆ ಮತ್ತು ಸಂಘರ್ಷವನ್ನು ಮಾರ್ದನಿಸುತ್ತವೆ. ಕವಿದ ಮಂಜು ಕರಗಲಾರಂಭಿಸಿದಂತೆ ಹೊಸ ಸತ್ಯಗಳು ಅನಾವರಣಗೊಳ್ಳುತ್ತವೆ. + +ಎಷ್ಟೊಂದೆಲ್ಲ ಬದಲಾಗಿದೆವಸಂತ ತಾನು ವಸಂತವೆಂಬುದನ್ನೇ ಮರೆತಿದೆಮತ್ತೆ ನವಪಲ್ಲವವಿಲ್ಲ, ಅದರ ಹರುಷವೂ ಇಲ್ಲಹಳ್ಳಿಗೂ ಪೇಟೆಗೂ ವ್ಯತ್ಯಾಸವುಳಿದಿಲ್ಲಎಲ್ಲವೂ ಬರಡು, ಕವಿದ ಮಂಕು + +ವಾಸ್ತವ ಮತ್ತು ಕಲ್ಪನೆ ಎರಡನ್ನೂ ಬೆಸೆಯುವ ಕಾವ್ಯ ಇವರದು. ನೈಜ ಮನುಷ್ಯರ ವೇದನೆಗಳನ್ನು, ದುರದೃಷ್ಟವನ್ನು ಚಾರಿತ್ರಿಕ ಕ್ಷಣಗಳ ಜೊತೆ ಜೊತೆ ನೆನಪಿಸಿಕೊಳ್ಳುತ್ತಲೇ ಇಂದಿನ ತವಕ ತಲ್ಲಣಗಳ ಕಡೆಗೆ ಬೆಳಕು ಚೆಲ್ಲುವ ಕವಿತೆ ಸುನೀತಾ ಅವರದು. ಅದರಲ್ಲೂ ಅವರನ್ನು ನೋಯಿಸುವುದು, ಹೇಗೆ ಕಾಲವೆನ್ನುವುದು ಪರಸ್ಪರರನ್ನು ಅಪರಿಚಿತರನ್ನಾಗಿಸಿದೆ ಎನ್ನುವ ವಿಚಾರ. + +ನಾನು ನನ್ನ ಬದುಕ ನಾವೆಯನ್ನು ದೂಡುತ್ತಿದ್ದೇನೆ,ನೂಲದ ದಾರದಿಂದಏನೂ ಪ್ರಯೋಜನವಿಲ್ಲನಾನು ನನ್ನ ದಿಕ್ಕನ್ನು ಬದಲಿಸಿಕೊಳ್ಳಬೇಕು ಅಥವಾಸಾಗರದ ಹೊರಮೈ ಚಹರೆಯನ್ನೇ + +ಸುನೀತಾ ಕಡುಕಷ್ಟವನ್ನು, ಯಾತನೆಯನ್ನು ಅನುಭವಿಸಿದವರು. ಆದರೆ ಆಕೆಯ ಬಯಕೆ ಸಂತೋಷವನ್ನು ಹಂಚುವುದು. ಜೀವನದಲ್ಲಿ ಇನ್ನೊಂದು ಜೀವವನ್ನು ಜಾತಿ, ಮತ, ಭಾಷೆ, ವಿಚಾರಗಳ ಹಂಗು ತೊರೆದು ಅಷ್ಟೊಂದು ಪ್ರೀತಿಸುವ ಈಕೆಯ ಗುಣ ನನಗೆ ಬಹಳ ಪ್ರಿಯವಾದುದು. ಮುಳ್ಳು ಗಿಡದಲ್ಲಿ ಪರಿಮಳದ ಹೂಗಳಿರುವಂತೆ ಬದುಕು. ಆದರೆ ಆ ನಂಬಿಕೆಯನ್ನು ರಕ್ತಪಿಪಾಸುಗಳು ಕಸಿದುಕೊಳ್ಳುತ್ತಿದ್ದಾರೆ ಎಂಬುದೇ ಲಕ್ಷಾಂತರ ಕಾಶ್ಮೀರಿಗಳ ಅಳಲು. ಇದು ಸುನೀತಾ ಅವರ ಕಾವ್ಯದ ಧಾತುವೂ ಹೌದು. + +ಮನೆಗಳನ್ನು ಸುಡಲಾಗಿದೆಒಳಗಿನ ಬೆಳಕು ನಂದಿಹೋಗಿದೆಒಳಗೆ ಯಾವ ಚಲನೆಯೂ ಇಲ್ಲಕೇವಲ ಹೊಯ್ದಾಡುವ ಪರದೆಗಳುಕಿಟಕಿಯ ಗಾಜುಗಳು ಛಿದ್ರ ಛಿದ್ರಒಡೆದುಹೋಗಿವೆ + +ಇನ್ನೂ ಏನೋ ಬದುಕಿದೆಯೆಂಬಂತೆಕೆಳಗೆ ನಾಯಿಗಳ ಊಳುಕೆಟ್ಟ ಶಕುನ, ಇನ್ನೂ ಭೀಕರವಾದ್ದುಏನೋ ಸಂಭವಿಸಲಿದೆ + +ಈ ನೆಲದ ಮೇಲಿಳಿದ ದುರದೃಷ್ಟವಾದರೂ ಏನು?ಯಾರ ಶಾಪವಿದು? ದೇವರಷ್ಟೇ ಹೇಳಬಲ್ಲ + +ಈ ಬದುಕು ಕವಿಸಿದ ವಿಷಣ್ಣತೆಯ ತೆರೆ ಕವಿಯನ್ನೇನು, ಜನಾಂಗಗಳನ್ನೇ ಶೋಕಕ್ಕೆ ದೂಡಿದೆ. ಹೊಸ ಬದುಕನ್ನು, ಹೊಸ ಜಗತ್ತನ್ನು ಈ ಸುಡುಗಾಡಿನ ಮೇಲೆ ಕಟ್ಟುವುದು ಹೇಗೆ ಎಂಬುದೇ ಕವಿಯ ಇರಾದೆ. ಹಗಲಿರುಳುಗಳು ತಮ್ಮ ಪಥವನ್ನೇ ಬದಲಿಸಿಕೊಂಡುಬಿಟ್ಟಿವೆ. ಹತ್ಯಾಕಾಂಡವು ಜನರ ಮನಸ್ಸಿನ ಮೇಲೆ ಬದಲಿಸಲಾಗದ ಗಾಯದ ಗುರುತುಗಳನ್ನು ಕೊರೆದಿದೆ. ಆದರೂ ಸುನೀತಾ ಅವರ ಕಾವ್ಯ ಭರವಸೆಯಿಂದಲೇ ಓದುಗರ ಹೃದಯವನ್ನು ಹೊಗುತ್ತವೆ. ಇದು ಒಳ್ಳೆಯ ಮನಸ್ಸಿನ ಕವಿ ಬದುಕು ಸಹ್ಯವೆಂಬ ಭಾವನೆ ಮೂಡಿಸುವ ಹಾಗೆ ಬರೆದ ಕಾವ್ಯ. ಆದರೆ ಸುನೀತಾ ಮನದಾಳವನ್ನು ಬಿಚ್ಚಿಡುವಾಗ ಆ ಹಾಲೋಕಾಸ್ಟ್‌ಗೆ ಹೆದರಿರುವ ಮನಸ್ಸಿನಲ್ಲಿನ ಗಾಯದ ಆಳ ನಮಗೆ ತಿಳಿದುಬರುತ್ತದೆ. ಆದರೂ ಆಕೆಯ ಹೃದಯ ಹೇಗೆ ಶಾಂತಿ, ಪ್ರೀತಿ, ಸೌಹಾರ್ದತೆಯ ವಿಶ್ವಕ್ಕಾಗಿ ಹಂಬಲಿಸುತ್ತದೆ ಎಂಬುದಕ್ಕೆ ಅವರ ಕವಿತೆಗಳನ್ನು ಓದಬೇಕು, ಆಕೆಯಿಂದಲೇ ಕೇಳಬೇಕು. ಆ ಕವಿತೆಗಳು ಮುಂದಿಡುವ ರೂಪಕಗಳು ಜ್ವಲಿಸುತ್ತವೆ, ಏಕೆಂದರೆ ಅವರ ಕಾವ್ಯದ ಆಳದ ತುಡಿತ ಭಯರಹಿತ, ತರತಮ ರಹಿತ, ಪೂರ್ವಗ್ರಹ ರಹಿತ ವಿಶ್ವದ ಪರಿಕಲ್ಪನೆ. + +ನನ್ನ ಕವಿತೆಗಳಲ್ಲಿ ನಾನು ಜನರನ್ನು ಕೇಳುತ್ತೇನೆಲೋಕಕ್ಕೆ ಶಾಂತಿಯನ್ನು ತರುವ ಕೆಲಸಗಳನ್ನು ಮಾಡಿಚರಿತ್ರೆಯ ಹೊಸ ಪುಟಗಳನ್ನು ಬರೆಯಿರಿಆಗಿಹೋದದ್ದಕ್ಕೆ ಆ ದುಷ್ಕೃತ್ಯಕ್ಕೆ ಪಶ್ಚಾತ್ತಾಪ ಪಟ್ಟುರಾಜಿಯಾಗಿರಿ ಹೊಸ ಬದುಕಿಗೆನಾನು ಹಂಬಲಿಸುವುದು ಯುವಜನತೆ ಶಾಂತಿಯಗಾನಕ್ಕೆ ಕಿವಿಗೊಡಲಿ ಎಂದುವೃದ್ಧರು ಮರೆತುಬಿಡಲಿ ಕಹಿನೆನಪುಗಳನ್ನು, ಎಸಗಿದ್ದನ್ನುಸಂಘರ್ಷಕ್ಕೆ ವಿದಾಯ ಹೇಳಿಬಿಡಲಿ + +ತೀರಾ ಮೊನ್ನೆ ಕಾಶ್ಮೀರಿ ಭಾಷೆಯ ಕವಿತೆಯನ್ನು ಆಕೆ ನನಗಾಗಿ ಓದಿ ಹೇಳಿದರು, ಫೋನಿನಲ್ಲೆ. ಒಟ್ಟಿಗೆ ನಾಲ್ಕು. ಒಂದೊಂದೂ ಚೈತನ್ಯದಿಂದ ಪುಟಿಯುವ ಕುಣಿಸುವ ಲಯದವು. ಆ ಲಯ ಕನ್ನಡಕ್ಕೆ ತರುವುದಾದರೆ ಎಷ್ಟು ಚೆನ್ನ ಎಂಬ ಭಾವನೆ ಮೂಡಿಬಿಟ್ಟಿತು ನನ್ನಲ್ಲಿ. ಅದರ ಜೊತೆಗೇ ತನ್ನ ಬಾಲ್ಯದ ಹಳ್ಳಿಯ ನೆನಪು ಮತ್ತು ಮೂವತ್ತಾರು ವರ್ಷಗಳ ಬಳಿಕವಾದರೂ ಅಲ್ಲಿ ಮರಳಿ ಸಿಹಿನೀರು ಸ್ರವಿಸುವ ಚಿನಾರ್ ಮರದ ಹಣ್ಣುಗಳ ರಸವ ಸವಿಯುವ ಆಸೆಯ ಬಗ್ಗೆ ಹೇಳಿದರು. ತನ್ನ ಹಳ್ಳಿ ತನ್ನ ತೆರೆದ ಕಣ್ಣುಗಳಲ್ಲಿ ಸಹ ಇದೆ ಎಂದರು. ಕುವೆಂಪು ಕವಿತೆ ಹೋಗುವೆನು ನೆನಪಾಯಿತು. ಕುವೆಂಪು ಅವರದು ಹೋಗಬಹುದಾದ ಜಾಗವಾಗಿತ್ತು. ಸುನೀತಾ ಹೋಗಬಯಸುವ ಜಾಗಫರ್ ಬಿಡನ್– ನಿಷೇಧಕ್ಕೆ ಒಳಪಟ್ಟಿದ್ದು. ಆಕೆಯ ಗೆಳೆಯನೊಬ್ಬ ಆಕೆಗೆ ಹೇಳಿದನಂತೆ, ನೀವು ಹೋದ ಮೇಲೆ ಸೂರ್ಯೋದಯ ಚಂದ್ರೋದಯದ ಪಥಗಳೇ ಬದಲಾದಂತೆ ಭಾಸವಾಗುತ್ತದೆ ಎಂದು. + + + +ಆಕೆ ಈಗ ಉತ್ತರ ಪ್ರದೇಶದ ಶಾಲಿಮಾರ್‌ ನಲ್ಲಿ ವಾಸವಿದ್ದಾರೆ. ಅದು ಕಾಲನಿ ಇರಬೇಕು. ಹಳ್ಳಿಯ ಒಳಗೊಳ್ಳುವ ಬದುಕಿಗೂ ಇಲ್ಲಿನ ಹಾಯ್‌ ಬಾಯ್‌ ಬದುಕಿಗೂ ಇರುವ ಅಂತರದ ಬಗ್ಗೆ ಹೇಳಿದರು. ಹಾಗೆಯೇ ಎಲ್ಲೂ ಸಲ್ಲದಿರುವ ಕಾಶ್ಮೀರಿ ಪಂಡಿತರ ಸ್ಥಿತಿಯ ಕುರಿತೂ. + +ಸುನೀತಾರ ಕಾವ್ಯ ಶಕ್ತಿ ಸುಂದರವಾಗಿ ಅಭಿವ್ಯಕ್ತವಾಗುವುದು ಗಝಲ್‌ ಗಳಲ್ಲಿ. ಆದರೆ ಅವರ ಕೃತಿಗಳ ಅನುವಾದಕರು ಆ ಬಗೆಯ ಅನುವಾದಕ್ಕೆ ನೆರವಾಗುವಂತೆ ಅನುವಾದ ಮಾಡಿಲ್ಲ. ಅದು ಫ್ರೀ ಅನುವಾದ. ಅವರ ಒಬ್ಬ ಅನುವಾದಕಾರಾದ ಆರ್‌. ಎನ್‌ ಕೌಲ್‌ ಅವರೇ ತನ್ನ ಅನುವಾದ ಪ್ರೊಸಾಯಿಕ್‌ ಮತ್ತು ಲಿಟರಲ್‌ ಎಂದು ಹೇಳಿಕೊಂಡಿದ್ದಾರೆ. ಆದರೂ ಈ ಅನುವಾದಗಳು ತಳಮಳದ ಮನದ ಕವಿಯಕಾವ್ಯ ಶಕ್ತಿಯ ಪರಿಚಯ ಮಾಡಿಕೊಡುವುದು ಸುಳ್ಳಲ್ಲ. + +ಕಾಶ್ಮೀರಿ ಕವಿ ಸುನಿತಾ ರೈನಾ ಪಂಡಿತ್ ಅವರ ಕವಿತೆಗಳು + +೧ನ್ಯಾಯವೆನ್ನುವುದು ಹೇಗೆ ನಿಷ್ಪ್ರಯೋಜಕವಾಯ್ತು ಈಗತೊರೆಗಳೆಮ್ಮ ತೃಷೆ ತಣಿಸಲಾರವು, ಭರವಸೆಯಿಲ್ಲ ಈಗ + +ಗಂಟು ಗಳಿಸುವುದರಲ್ಲುಂಟು ಅತ್ಯಾಸಕ್ತಿ ಉಳಿದವೆಲ್ಲಿದುಡಿದುಂಬುವವರಿಲ್ಲ, ಆತ್ಮವನ್ನಾಸೆ ಕೊಂದಿತು ಗೆಳೆಯ + +ಕಣ್ಣು ಕಣ್ಣು ಕಾಣಲಾರವುಕಾಲವೆಂಬುದರ ಸಂಚು, ನಾವು ನಮಗೇ ಅಪರಿಚಿತರು ಗೆಳೆಯ + +ಎಂಥ ಕಾಲವು ಬಂತು, ನ್ಯಾಯವನು ಕೊಡುವವನುಚಿನ್ನದ ಮಾತುಗಳಲ್ಲಿ ಅವಿಸಿಡುವನು ತನ್ನದೇ ಪಾಪಗಳನು + +ಎಷ್ಟೊಂದು ಸಂದಿಗ್ಧಗಳು ರಾಶಿ ಬಿದ್ದವು ನೋಡುಉತ್ತರಿಸುವುದೇ ಒಳದನಿಯು, ತೊದಲುತಿದೆ ಮಾತು + +ಇಂಥ ಕಾಲಗಳು ಎದ್ದು ಬರುವವು ಬಲ್ಲವರೂ ಬೆರಗಾಗುವಂತೆದೇಶಾಂತರ ಹೊರಡುವವು ಒಂದೊಂದು ಜೀವವೂ ಬರ್ಬರತೆಯ ಕಡೆಗೆ + +೨ಬೇಕು ಹೃದಯ, ಕಣ್ಣು, ಕಾಲುಗಳಿಗೆ ಆಕಾಶದಷ್ಟು ಜಾಗವರವ ಪಡೆಯಲು ಮಾನವಗೆ ಬೇಕು ಶಾಂತ ಸಾಗರದ ಆಳ + +ನಿನ್ನ ಹೆಸರಲ್ಲಿ ಓ ಒಲವೇ ಜಗಕೊಂದುಸಂದೇಶವನು ನೀಡುವೆನು ನಾನು + +ಹುಟ್ಟಬೇಕು ಬೀಸುಗಾಳಿಯು ನಮ್ಮಲ್ಲಿಗುಡಿಸಿಬಿಡಲು ಆ ಕಾಲಾತೀತ ಕವಿದ ಮೋಡಗಳನ್ನು + +ಹೆಜ್ಜೆ ಮುಂದಿಡಬೇಕಿದೆ ನಮಗೆ ಜಿಗಿತದ ಹೆಜ್ಜೆಭೂತವನು ಮರೆತೊಂದು ಜಿಗಿತದ ಹೆಜ್ಜೆ + +ಸೂರ್ಯನೆಂತೇ ಇರಲಿ, ಶಾಂತ, ಉಗ್ರತಮ್ಮ ತುಟಿಯಿರಲಿ ಇಬ್ಬನಿಯಂತೆ + +ಚಂದಿರನ ಕಿರಣಗಳ ವಸ್ತ್ರವನ್ನುಡುವುದುಯಾರಿಗೆ ಬೇಡ; ಎಲ್ಲ ನಿಲ್ಲುವುದುಮನಸಿನ ಮೇಲೆ + +ಕಣ್ಣೀರ ಹಾಗೇ ಇಟ್ಟು ಕದಲದಂತೆಅವನು ಎದೆಯ ತೋಟದತುಂಬ ಹೂವರಳಿಸಿಹನು + +ಶಾಂತ ಸಾಗರದಾಳದಂತಹನೋಟ ಬೇಕಿದೆ ಮನಕೆತೃಷೆಯ ತಣಿಸಲು ಒಂದು ಮಹಾನದಿ + +ನೀನು ಕಾಯುವಿಯಾದರೆ ನಾನುನಿನ್ನ ಹೃದಯದಾಳದ ಗುಟ್ಟ ಹಿಡಿದಿಟ್ಟುಬದುಕಿರುವಂತೆ ನಟಿಸಿಯೇನುನಿನ್ನ ಆಲೋಚನೆಗಳಿಗೆ ಬೇಕಿರುವುದುಪ್ರಚಾರ; ನನ್ನದಕ್ಕೊಂದು ನೆರಳು ಮಾತ್ರ + +೩ಯಾರೊಬ್ಬರೂ ನಗಬೇಕು ತೋರಿಕೆಗೆ ಆದರೂಹೃದಯ ನಗದಿದ್ದರೂ, ಜಗವ ನಂಬಿಸುವಂತೆ ನಗಲೇಬೇಕು + +ವಂಚನೆಯ ನಗು ನಗಬೇಕು ತೋರಿಕೆಗೆ ಆದರೂಭರವಸೆಯು ಕಸಿದ ಹೇಡಿ ನಗು ಅಡಗಿಸಲು ಆದರೂ + +ಯಾರೊಬ್ಬರ ಹೃದಯ ಸಂತಸದಲ್ಲಿ ಇರಬೇಕೇಂದೇನೂ ಇಲ್ಲಉಲ್ಲಸಿತರಂತೆ ನಟಿಸಬೇಕು, ಮರೆಮಾಚಿ ತನ್ನ ದುಃಖವನ್ನು + +ಯಾಂತ್ರಿಕ ಬದುಕು ನಲವ ನುಂಗಿದರೇನುಸಂತಸದ ಪ್ರಯೋಗಕ್ಕಾರ ನಗಬೇಕು ಅವರು + +ಎಷ್ಟು ಜನ ಶ್ರೋತೃಗಳ ನಡುವೆ ಏಕಾಂಗಿಇನ್ನೊಬ್ಬರಿಗೆ ದುಃಖ ಕೊಡಲಾದರೂ ನಗಲೇ ಬೇಕು + +ಈಗ ಕೆಲವು ಸಲ ನಾವು ನಗುತ್ತೇವೆ ಮನಸಾರಜನರ ಕುಹಕಗಳ ನುಂಗಲಿಕ್ಕೆ + +ನಿಜಕ್ಕೂ ಸಂತಸಕೆ ಕಾರಣವಿಲ್ಲಎಲ್ಲ ಸಂತೋಷಗಳೂ ಉದುರಿ ಹೋಗಿವೆ ಚರಟದಂತೆ + +೪ಜಗದ ವ್ಯಾಪಾರಗಳು ಬದಲಾಗಬಹುದುವಿಸ್ಮಯಗಳು ಜರುಗಿದರೆಒಂದು ಕ್ಷಣಕ್ಕಾದರೂ ಉರಿಬೇಸಗೆಯಜುಲೈ ಮಳೆಗಾಲವಾಗಬಹುದೇ?ಮನುಷ್ಯನಿಗೆ ಸಾಧ್ಯ ಸುರಿವ ಬೆವರಿನ ದುಡಿತದಿಂದಬಿಡುಗಡೆಯ ಹೊಂದುವುದು;ಕೆನ್ನೆಯ ಮೇಲೆ ಹೊಳಪೊಂದು ಮೂಡುವುದುಆದರಿದು ಎಂದು? + +ಥಟ್ಟನೆ ಆಗಸದಿಂದ ಮಳೆಯಹೊಳೆಯೊಂದು ಸುರಿದರೆತಾಯಿ ನೆಲಕ್ಕೆ ಪುನಶ್ಚೇತನದ ಪುಳಕ + +ಗಾಳಿಗೆ ಚಿಕಿತ್ಸೆಯ ಗುಣ ಬಂದೀತೆಂದು ಆಶಿಸುತ್ತೇನೆಆಗ ಕತ್ತಿಯೇಟಿನ ಆಳ ಗಾಯಗಳೂ ಮಾಯಬಹುದುಜಗದ ವ್ಯಾಪಾರಗಳು ಇಷ್ಟು ಬೇಗನೆಬದಲಾಗಬಹುದೆಂದು ಆಶಿಸಲು ಬಹುದೇ? + +ತ್ಯಾಗ ತರುವುದು ಸಮಾಧಾನನಮ್ಮ ಹಳೆಯ ಸಂಬಂಧಗಳ ಕಳಚಿಕೊಂಡರೆಹೊಸ ಸಂಬಂಧಗಳ ಬೆಳೆಸಬಹುದುಬಹುಕಾಲ ಬಾಳುವಂತೆ + +ನಾನು ಮೂಕಿಯಾಗಲೂ ಸರಿಯೆಲೋಕವನ್ನೇ ಅಲುಗಿಸಬಲ್ಲೆಕಣ್ಣನೋಟದ ಕಿಡಿಯ ಕಾರಿ + +ನನ್ನ ಹೃದಯ ಮೇಣದಂತೆಮೃದುವಾಗಿರಲಿಎಂದು ಬಯಸುವೆನು ನಾನುಆಗಲಷ್ಟೇ ಅದರೊಳಗೆ ಸಂತಸದಮಧುವ ತುಂಬಬಹುದು + +೫ + +ಎತ್ತಲೋ ಮಾಯವಾಗಿ ಹೋದನೆನ್ನ ಗೆಳೆಯನನ್ನ ಹೃದಯವ ಡವಡವಿಸಿ ದಿಕ್ಕೆಡಿಸಿ ಹೋದ + +ನಾನವಗೆ ಆಶಿಸಿದೆ ನೂರ್ಕಾಲ ಬಾಳುವ ಬದುಕನನ್ನಾತ್ಮ ಉಳಿದಿಹುದು ಉಂಡು ನೋವಿನ ದುರಂತ + +ಎಚ್ಚರವೂ ಅನಸ್ತಿತ್ವವೂ ಇಲ್ಲೇ ಎಲ್ಲೋ ಅಸ್ತಿತ್ವದಲ್ಲಿವೆನನ್ನತನವೆಂಬುದೆಲ್ಲೋ ಸಿಗದಂತೆ ಕಳೆದು ಹೋಗಿದೆ + +ಅವನು ಆದರಿಸುತ್ತಿದ್ದ ನಂಬಿಕೆಯೆಲ್ಲೋ ಆವಿಯಾಗಿದೆಈ ಹಾಡ ದನಿಯು ನಿನ್ನಸ್ತಿತ್ವವನೆಲ್ಲೆಲ್ಲೋ ಬಡಿಯುತ್ತಿದೆ + +ನಾನಲ್ಲ, ನನ್ನ ನಂಬಿಕೆ ನಿನ್ನ ಬರುವಿಕೆಗೆ ಪಿಸುಗುಟ್ಟಿದೆಮರೆಯಾಗಿ ಹೋದ ಮೇಲೆ ಕಾಯುವಿಕೆ ಅತಿಯಾಗಿದೆ + +೬ + +ಈ ಮಣ್ಣಿನಿಂದ ನಾನು ಸ್ವರ್ಗಕ್ಕಾಗಿ ಹಂಬಲಿಸಿದೆತಾರೆಗಳ ಕಾರವಾನು ನನ್ನೆಡೆಗೆ ನಡೆದು ಬಂದಿದೆ + +ನನ್ನ ಸೌಂದರ್ಯದ ರಕ್ಷಣೆಗೆನಗೆ ರಕ್ಷಕನೊಬ್ಬ ಬೇಕಾಗಿದೆನನ್ನ ಹೃದಯದ ಬಡಿತಕ್ಕೆ ಮತ್ತೊಮ್ಮೆ ತಾರುಣ್ಯದುಂಬಿದೆ + +ಕುಡಿ ನನ್ನ ಮುಖಕೆ ಮುಖವೊಡ್ಡಿ ಮನದುಂಬಲಿಮನಸು ನನ್ನದು, ತಡವರಿಸೆ ನಾನೆಂದಿಗೂ ಸ್ಪಷ್ಟವಾಗಿರುವೆ + +ಅವನ ಕೈ ವಿದಾಯ ಹೇಳಿತು ನನಗೆ ನಿನ್ನೆಯ ದಿನಇಂದು ಹುಡುಕುತ್ತಿರುವನು ಅವನು ನನ್ನನ್ನು ಕೂಡೆ + +ಇಂದಿನ ಹುಟ್ಟು ನಾಳೆಯ ಸಾವು ತಿಳಿದುಕೋಅವನಿಗೆಷ್ಟು ಅಪಮಾನಗೊಳಿಸಿದರವರು ನಿನ್ನೆವರೆಗೆ + +ಇಂದವರು ಶೋಕಿಪರು, ವಿದಾಯ ಹೇಳುವರುಅವರವರ ಕಟ್ಟ ಕಡೆಯ ವಿದಾಯವನ್ನು + +ಸುನೀತಾ ರೈನಾ ಪಂಡಿತ್‌ ವಾಚಿಸಿದ ಅವರ ಕೆಲ ಕಾಶ್ಮೀರಿ  ಕವಿತೆಗಳನ್ನು ಕೇಳಲು ಕೆಳಗಿನ ಲಿಂಕ್ ಅನ್ನು ಒತ್ತಿ + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_395.txt b/Kenda Sampige/article_395.txt new file mode 100644 index 0000000000000000000000000000000000000000..d732990c0f7c70c9eb5991d1e394a3c608de1082 --- /dev/null +++ b/Kenda Sampige/article_395.txt @@ -0,0 +1,39 @@ + + +ಕಥೆಗಾರ್ತಿ ದೀಪ್ತಿ ಭದ್ರಾವತಿಯವರ ಎರಡನೆಯ ಕಥಾ ಸಂಕಲನ “ಗೀರು” ಹದಿನಾಲ್ಕು ಕಾಡುವ ಕಥೆಗಳನ್ನು ಸಂಕಲನವಾಗಿಸಿ ಸ್ವತಃ ಪ್ರಕಟಣೆಯ ಹೊಣೆ ಹೊತ್ತಿದ್ದಾರೆ. ಶುಭಾಶಯಗಳು. + +ಕಥೆಗಾರ್ತಿ ಅಂತಿದ್ದ ಹಾಗೆ ಮೊದಲಿಗೆ ಮನಸ್ಸಿಗೆ ಬರುವ ಭಾವ; ಸ್ವಂತದ್ದಾ? ಇದೊಂದು ಮನಸ್ಥಿತಿ. ಗಂಡಸು ಬರೆದರೆ ಲೋಕದ್ದು, ಹೆಣ್ಣು ಬರೆದರೆ ಸ್ವಂತದ್ದು! ಸ್ವಾನುಭವದ ಎಳೆಯಿಲ್ಲದೆ ಒಳ್ಳೆಯ ಕಥೆ ಕಷ್ಟ. ಎಲ್ಲರೂ ಓದುವ ಕಥೆ ಇನ್ನೂ ಕಷ್ಟ. ಪ್ರಾಯಶಃ ಬದುಕಿನ ಅನುಭವಗಳು ಪ್ರಜ್ಞೆ ಮತ್ತು ಸಾರ್ವತ್ರಿಕ ಸಂಸ್ಕಾರದ ಮೂಸೆಯಲ್ಲಿ ಹದವಾಗಿ ಭಿನ್ನರುಚಿಯ ಲೋಕಕ್ಕೆ ಒಂದು ರುಚಿ ಆಗುವುದಾದರೆ ಒಳ್ಳೆಯ ಕಥೆಯಾದೀತು. + +ಇಲ್ಲಿ ಆ ಹದವಿದೆ. + +(ದೀಪ್ತಿ ಭದ್ರಾವತಿ) + +ಪ್ರತಿ ಕಥೆಯ ವಿವರಕ್ಕೆ ನಾನು ಹೋಗುವುದಿಲ್ಲ. ಹವ್ಯಾಸಿ ಓದುಗನಾಗಿ ನಾನು ಕಥೆಯನ್ನು ನನ್ನ ಕಣ್ಣು ಮತ್ತು ಭಾವಗಳ ಮೂಲಕವೇ ಆಸ್ವಾದಿಸಬಯಸುತ್ತೇನೆ. ಮುನ್ನುಡಿಕಾರನ ದಿಕ್ಸೂಚಿ ಮತ್ತು ವ್ಯಂಜನಗಳ ಪ್ರಭಾವವಿಲ್ಲದೆ ಕಥೆ ಓದಿದರೆ ಕಥೆಗಾರ/ಕಥೆಗಾರ್ತಿ ಮತ್ತು ಓದುಗನ ನಡುವೆ ನೇರ ಸಂಬಂಧ ಏರ್ಪಟ್ಟು ಸುಖ ಹೆಚ್ಚಿರುತ್ತೆ. ಓದುಗನಿಗೆ ರುಚಿಯಷ್ಟೇ ಮುಖ್ಯ; ಮುಗಿದ ನಂತರ ಅದು ಉಳಿಸುವ ಭಾವ ಮುಖ್ಯ. ಮುನ್ನುಡಿಕಾರನ ವಿಮರ್ಶಾತ್ಮಕ ದೃಷ್ಟಿಕೋನದಲ್ಲಿ ಮತ್ತವನ ತುಲನಾತ್ಮಕ ಚೈತನ್ಯದಲ್ಲಿ ಸಂಪೂರ್ಣ ಜೀವಸತ್ವಗಳೇ ತುಂಬಿರಬಹುದು. ಆದರೆ ಓದುಗನಿಗೆ ಅದು ಬರೀ ತೌಡು, ರುಚಿಯಿಲ್ಲದ್ದು. ಹಾಗಾಗಿ ಕಥೆಗಳ ವಿವರಕ್ಕೆ ನಾನು ಹೋಗುವುದಿಲ್ಲ. ರುಚಿ ಪೂರ್ಣ ನಿಮಗೆ ದಕ್ಕಲಿ. + +ಕಥೆ ವಾಸ್ತವಕ್ಕೆ ಹತ್ತಿರವಾಗಿರಬೇಕು, ವರ್ತಮಾನದಲ್ಲಿರಬೇಕು. ಇದು ಸಾಮಾನ್ಯವಾಗಿ ಕೇಳಿಬರುವ ಮಾತು. ಆದರೆ ಕಥೆಗೆ ಇಷ್ಟೇ ಸಾಕಾ? ಕೇವಲ ವಾಸ್ತವತೆಯ ದಾಖಲು ಕಥೆಯಲ್ಲ. ನಾಳೆಗೂ ಪ್ರಸ್ತುತ ಅಲ್ಲದ್ದು ಮತ್ತು ಇವತ್ತಿಗೆ ಸೀಮಿತವಾಗಿದ್ದು ಕಥೆ ಹೇಗಾದೀತು? ವಾಸ್ತವದ ಓರೆಕೋರೆಗಳು; ಸರಿ ತಪ್ಪುಗಳ ತುಲನೆ; ಪ್ರಚಲಿತ ಮನಸ್ಥಿತಿಯ ಬದುಕ ಮೇಲಿನ ಪ್ರಭಾವ; ಉಂಟಾಗುವ ದುರಂತಗಳು; ಭವಿಷ್ಯಕ್ಕೆ ಆಶಯ ಎಲ್ಲ ಸೇರಿದರೆ ಕಥೆಯಾದೀತೇನೋ! ತುಲನೆಗೆ ಮಾಪನ ಮತ್ತು ದೃಷ್ಟಿಗೆ ಮಸೂರ ಆದರ್ಶ. ಆದರ್ಶಗಳ ಹಂಗೇ ಇಲ್ಲದೆ ಸಾಹಿತಿಯಿಂದ ಒಳ್ಳೆಯ ಕಥೆ ಹೇಗೆ ಸಾಧ್ಯ? ಆದರ್ಶವಾಗಿ ಉದಾಹರಣೆಯಾಗಿ ಬದುಕುವುದು ಕಷ್ಟವಿರಬಹುದು, ಆದರೆ ಧಿಕ್ಕರಿಸಿ ವೈರುಧ್ಯದ ಬದುಕ ಮನಸ್ಥಿತಿಯಂತೂ ಇರಬಾರದೇನೋ? ದೀಪ್ತಿಯವರು ಸಭ್ಯರು; ಕಥೆಗಳಲ್ಲಿ ಸಭ್ಯತೆಯಿದೆ. + +ಸಾಹಿತ್ಯ ಸಾಹಿತಿಯ ವೈಯಕ್ತಿಕ ತುರ್ತೋ; ತಲ್ಲಣಗಳ ಆವಿಷ್ಕಾರವೋ ಅಥವಾ ಓದುಗನ ಭಾವ ತಲ್ಲಣಗಳ ಸಮತೋಲನಕ್ಕೆ ಇಂಬಾಗುವ ಒಂದು ಹತಾರವೋ; ಹೇಳುವುದು ಕಷ್ಟ. ಪ್ರತಿ ಓದುಗನ ರುಚಿ, ಸಾಹಿತ್ಯಾಭಿರುಚಿ ಅವನವನ ಬೌದ್ಧಿಕಮಟ್ಟ; ಪ್ರಜ್ಞೆ; ಆದರ್ಶ ಮತ್ತು ಸಂಸ್ಕೃತಿಯನ್ನು ಅವಲಂಬಿಸಿರತ್ತೆ. ಸಾಮಾನ್ಯ ಓದುಗನಿಗೆ ಜಾತಿ ಇಲ್ಲ ವರ್ಣ ಭೇದವಿಲ್ಲ; ವರ್ಗ ಭೇದವಿಲ್ಲ; ತರ್ಕಗಳ ಹಂಗಿಲ್ಲ, ಸಿದ್ಧಾಂತಗಳ ಸಂಕೋಲೆಯಿಲ್ಲ. ಅದೇ ಹೃದಯ, ಅದೇ ಮೆದುಳು, ಭಾವಗಳೂ ಅವೇ; ಹಸಿವು ಕೂಡ ಅದೇ! ಈ ಸಾರ್ವತ್ರಿಕ ಸ್ವಭಾವ ಮುಟ್ಟುವುದಾದರೆ ಒಳ್ಳೆಯ ಸಾಹಿತ್ಯವಾದೀತೇನೋ! ಅಲ್ಲಿಗೆ ಸಾಹಿತಿ ಸಾರ್ವತ್ರಿಕ ಸ್ವಭಾವದಲ್ಲಿರಬೇಕು, ಜಾತಿ, ವರ್ಣ, ವರ್ಗ, ಸಿದ್ಧಾಂತಗಳ ಮೀರಿ ನಿಲ್ಲಬೇಕು. ಪ್ರಾಯಶಃ ಅಲ್ಲಿ ಒಳ್ಳೆಯ ಕಥೆ ಇರುತ್ತದೆ. + +ಸಾಹಿತ್ಯ ಸಮ್ಮೇಳನಗಳೇ ಜಾತ್ಯಾವಾರು ಅನ್ನುವುದಾದ್ರೆ, ಸಾಹಿತ್ಯ ಎಲ್ಲಿ ಜಾತ್ಯಾತೀತವಾದೀತು ಮತ್ತು ಜಾತ್ಯಾತೀತವಲ್ಲದ್ದು ಸಾಹಿತ್ಯ ಹೇಗಾದೀತು? ಸದ್ಯದ ಸಮ್ಮೇಳನಗಳ ಕೊಂಬು ಕಹಳೆ, ಹಾರ ತುರಾಯಿ, ಅಲಂಕಾರ ಮೆರವಣಿಗೆ, ಪಾರಿತೋಷಕ ಸವಲತ್ತುಗಳಿಂದ ಸಾಹಿತಿ ದೂರ ಉಳಿಯುವ ಅವಶ್ಯಕತೆ ಇದೆ. ಸಾಹಿತಿಗೆ ಇದೆಯೋ ಇಲ್ಲವೋ ಸಾಹಿತ್ಯಕ್ಕಂತೂ ಇದೆ. ನಿರಂತರ ದಿಬ್ಬಣದ ಸಾಹಿತಿಯಲ್ಲಿ ಕಥೆ ಗಬ್ಬ ಕಟ್ಟುವುದಾದರೂ ಹೇಗೆ? ಕಥೆಗಾರ/ಕಥೆಗಾರ್ತಿ ಅಬ್ಬರ ಆಡಂಬರಗಳ ವೇದಿಕೆಗಳನ್ನು ಬಿಟ್ಟು ಸಾಮಾನ್ಯ ಬದುಕ ಭಾಗವಾಗಿದ್ದುಕೊಂಡು ನೋವು ನಲಿವುಗಳಿಗೆ ಸ್ಪಂದಿಸುತ್ತ ಅಳುವಿನಲ್ಲಿ ಅತ್ತು ನಗುವಿನಲ್ಲಿ ನಗ್ತಾ; ಆತ್ಮಗೌರವಕ್ಕೆ ಚ್ಯುತಿ ಬರದ ಹಾಗೆ ಬದುಕಿದ್ರೆ ಬರೆದದ್ದು ಒಳ್ಳೆಯ ಕತೆಯಾದೀತೇನೋ? ರನ್ನ ಗೋಪುರದಲ್ಲಿ ವಿರಾಜಮಾನರಾದವರಿಗೆ ಭಿನ್ನ ಸ್ವರದ ಅರಿವೆಲ್ಲಿದ್ದೀತು? ವಿಭಿನ್ನ ಅಂತ ತೌಡು ಕುಟ್ಟಬಹುದು, ಪರಸ್ಪರ ಬೆನ್ನು ತುರಿಸಿಕೊಳ್ಳಬಹುದು, ಕೆಸರು ಎರಚಿಕೊಳ್ಳಬಹುದು, ಗ್ರಂಥಾಲಯ ತುಂಬಬಹುದು, ದತ್ತಿಗಳು ಕರಗಬಹುದು, ಇವರದ್ದಕ್ಕೆ ಅವರ ವಿಮರ್ಶೆ ಅವರದ್ದಕ್ಕೆ ಇವರ ಪಾರಿತೋಷಕ. ಕಾಲಾನುಕಾಲ ಪಟ್ಟಗಳ ಅದಲುಬದಲು ಸಾಹಿತಿಗೆ ಸುಖ; ಸರೀನೆ; ಸೊರಗಿದ್ದು ಸಾಹಿತ್ಯ; ಸತ್ತದ್ದು ಓದುಗ! + +ದೀಪ್ತಿಯವರ ವೃತ್ತಿ ವೈದ್ಯಕೀಯ ಇಲಾಖೆಯ ಕಾರಕೂನಿಕೆ! ಮೀರಿ ಗೃಹಿಣಿ! ಎರಡೂ ಪೂರ್ತ ಸಮಯದ ಬೇಡಿಕೆಯ ಜವಾಬ್ದಾರಿಗಳು. ಒಂದರಲ್ಲಿ ಉಸಿರೆಳೆದುಕೊಂಡರೆ ಮತ್ತೊಂದರಲ್ಲಿ ಬಿಡುವುದು, ಮಧ್ಯದ ಕ್ಷಣದಲ್ಲಿ ಸಾಹಿತ್ಯ. ಕಾಡಿದ ಭಾವಗಳನ್ನ ಕಂಡ ಸನ್ನಿವೇಶಗಳನ್ನು ಕೆಣಕಿದ ಪಾತ್ರಗಳನ್ನು ಹಸಿ ಹಸಿಯಾಗಿ ಹೆತ್ತು ಹಗುರಾಗ್ತಾರೆ. ಇವ್ರ ಕಥೆಗಳ ವಸ್ತು ವಿಷಯ ಚೌಕಟ್ಟಿನಲ್ಲಿ ನಿರ್ದಿಷ್ಟ ಆಕಾರವಿಲ್ಲ. ನದಿ ಹರಿದ ಹಾಗೇ, ಓಟ ಸಿಕ್ಕಲ್ಲಿ ಓಡತ್ತೆ. ತೊಡಕಿನಲ್ಲಿ ನಿಧಾನವಾಗಿ ಅವಕಾಶವಾದಷ್ಟು ನಿಂತು ಸುಧಾರಿಸಿಕೊಂಡು ಮತ್ತೆ ಸಾವಕಾಶವಾದಾಗ ಹರಿಯತ್ತೆ. ಸ್ವಚ್ಛ ಮತ್ತು ತಿಳಿ. ಇಲ್ಲಿ ಭಾವಗಳೇ ಪಾತ್ರಗಳು; ಸನ್ನಿವೇಶದ್ದೇ ಚೌಕಟ್ಟು, ಅಲಂಕಾರಗಳಿಲ್ಲ, ಸಹಜ ಸೌಂದರ್ಯ, ಮೆಚ್ಚಿಸುವ ಹಪಾಹಪಿಯಿಲ್ಲ. ಕೆಣಕುವ ಚೈತನ್ಯ ಇಚ್ಛೆ ಇದೆ; ಕೆಣಕತ್ತೆ, ಆದರೆ ಧಾಷ್ಟ್ರ್ಯವಿಲ್ಲ. ಸನ್ನಿವೇಶಗಳು ಘಟನೆಗಳು ಬದುಕಿನ ಪರಿಸ್ಥಿಯನ್ನು ನೈಜವಾಗಿ ಬಿಂಬಿಸಿ ವಿಷಾದ ಹುಟ್ಟಿಸತ್ವೆ, ಅಲ್ಲಲ್ಲಿ ಕಣ್ಣು ತುಂಬಿದರೆ ಆಶ್ಚರ್ಯವಿಲ್ಲ. ಪಾತ್ರಗಳೂ ಕಾಡಿ ಅನುಕಂಪ ಮತ್ತು ಅನುಕರಣೆಯನ್ನು ಬೇಡತ್ವೆ. ಅವರು ಹೆತ್ತು ಹಗುರಾಗುವುದನ್ನು ಹೊತ್ತು ತಿರುಗುವುದು ಸುಲಭವೂ ಹೌದು, ಸುಖವೂ ಹೌದು ಮತ್ತು ಸಂಭ್ರಮ ಕೂಡ. ಅಲ್ಲದೆ ಓದುಗರನ್ನ ವಿಷಾದದ ಭಾವ ಕಾಡಿ ಕ್ಷಣ ನಿರಹಂಕಾರಿಯಾಗಿಸತ್ತೆ! ಅದೂ ಸತ್ಯ. + +ಒಪ್ಪಿ, ಬಿಡಿ; ಸದ್ಯದ ಸಾಮಾಜಿಕ ಪರಿಸ್ಥಿತಿಯಲ್ಲಿ ಕುಟುಂಬಗಳು ಇನ್ನು ಒಂದು ಅವಿಭಾಜ್ಯ ಅಂಗವೇ, ಗಂಡು, ಹೆಣ್ಣು ಸಮ ಅಂತ ಎಷ್ಟೇ ಬೊಬ್ಬೆ ಹೊಡೆದ್ರೂ ಸಮನಾಗಿ ಸಮಚಿತ್ತದಿಂದ ನೋಡುವ ಮನಸ್ಥಿತಿ ಇನ್ನೂ ಬಂದಿಲ್ಲ. ಹೆಣ್ಣೇ ಕೆಡೋದು, ಗಂಡಲ್ಲ! ತಪ್ಪು; ಆದರೆ ಮನಸ್ಥಿತಿ ಅದೇ! ಸ್ತ್ರೀ ಸ್ವಾತಂತ್ರ್ಯದ ಘೋಷಣೆ ಕೂಗಿ ಸಾಂಸಾರಿಕ ಸಂಬಂಧಗಳನ್ನು ಧಿಕ್ಕರಿಸಿ ಸ್ವತಂತ್ರವಾಗಿ ಬದುಕಿ ಕಲೆ ಸಾಂಸ್ಕೃತಿಕ ವಲಯದ ಮುಂಚೂಣಿಯಲ್ಲಿರುವ ಎಷ್ಟೋ ತಾಯಂದಿರು ಕೂಡ ಸ್ವಂತ ಹೆಣ್ಣು ಮಕ್ಕಳಿಗೆ ಕಾಲವೂ ಊರ್ಜಿತವಾಗುವ ಕುಟುಂಬವನ್ನೇ ಹಂಬಲಿಸುವುದೇ ಹೆಚ್ಚು. ಸ್ವಂತಕ್ಕೆ ಧಿಕ್ಕರಿಸಿದ್ದು ಮಗಳಿಗೆ ಯಾಕೆ? + + + +ಅವರ ಬರಹ ಕೃತಿಗಳಿಂದ ಪ್ರೇರೇಪಿತರಾಗಿ ಪ್ರೋತ್ಸಾಹ ಪಡೆದ ಎಷ್ಟೋ ಹೆಣ್ಣು ಮಕ್ಕಳು ಇವರನ್ನು ಆದರ್ಶವಾಗಿಸಿ ಸಂಸಾರ ಮುರಿದುಕೊಂಡ್ರೆ, ಇವರ ಸ್ವಂತ ಮಕ್ಕಳು ಇವರದ್ದೇ ಪ್ರೋತ್ಸಾಹ ಆಸರೆಯಿಂದ ಸಾಂಸಾರಿಕ ಬಂಧನದಲ್ಲಿರ್ತಾರೆ. ಸ್ವಂತ ಮಗಳೆದುರಿಗೆ ಓದಲಾಗದ ಮತ್ತು ಆಕೆಗೆ ಪಥ್ಯವಾಗದ ಸಾಹಿತ್ಯದ ಸೃಷ್ಟಿಯಾದರೂ ಯಾಕೆ? ಸಾಹಿತ್ಯ ಬದುಕನ್ನ ಕಟ್ಟಿ ಕೊಡಬೇಕು. ಇರುವುದನ್ನ ಹಳತು ಅಂತ ಸುಡುವುದಕ್ಕೆ ಸೀಮಿತವಾದರೆ, ಹೊಸತನ್ನು ಕಟ್ಟುವುದರ ಜವಾಬ್ದಾರಿಯಿಂದ ವಿಮುಖರಾದರೆ ಬದುಕು ಮಸಣವಾದೀತು, ಲೆಕ್ಕವಿಲ್ಲದಷ್ಟು ಅತೃಪ್ತ ಮುಕ್ತಿ ಕಾಣದ ಆತ್ಮಗಳು ದಿಕ್ಕು ದೆಸೆಯಿಲ್ಲದೆ ಅಂಡಲೆದಾವು. + +ಮುಕ್ತ ಸಮಾಜದ ಅವಶ್ಯಕತೆ ಇದೆ. ಕಸದಿಂದ ಮುಕ್ತವಾದ ಸಮಾಜದ ಅವಶ್ಯಕತೆ ಇದೆ. ಎಲ್ಲ ವ್ಯವಸ್ಥೆಗಳೂ ಉಂಟಾಗುವುದು ಸ್ವಚ್ಛ ಮತ್ತು ಮುಕ್ತ ಸಮಾಜದ ಆಶಯದಿಂದಲೇ. ಕ್ರಿಯೆಯಲ್ಲಿ ಅದರದ್ದೇ ಆದ ಕಸವನ್ನು ಹುಟ್ಟು ಹಾಕತ್ವೆ. ಕಸದಿಂದ ಸಮಾಜವನ್ನು ಮುಕ್ತವಾಗಿಸುವ ಭ್ರಮೆಯಲ್ಲಿ ವ್ಯವಸ್ಥೆಯನ್ನೇ ತೊಳೆದರೆ ಕಸದ್ದೇ ವ್ಯವಸ್ಥೆಯಾಗಿ ಬದುಕು ಅಸಹನೀಯವಾಗುತ್ತದೆ. ವ್ಯವಸ್ಥೆ ಬೇಕು. ಆದರೆ ಕಾಲಕಾಲಕ್ಕೆ ಬದಲಾಗುವ ಚೈತನ್ಯದ ವ್ಯವಸ್ಥೆ ಬೇಕು. ದೀಪ್ತಿಯವರ ಕಥೆಗಳಲ್ಲಿ ಈ ಆಶಯ ದಟ್ಟವಾಗಿ ವ್ಯಕ್ತವಾಗಿದೆ. + +ಭಾವವಿರಬಹುದು ಅಥವಾ ಬತ್ತಲಿರಬಹುದು! ಅವಶ್ಯಕ ಅನಿವಾರ್ಯ ಅನ್ನುವುದಷ್ಟನ್ನೇ ಮುಚ್ಚಿಕೊಂಡ್ರೆ ಸಾಕಾ? ಅದು ನಾಗರಿಕತೆಯಾ? ಅವಶ್ಯಕ ಅನಿವಾರ್ಯ ಅನ್ನುವುದಷ್ಟನ್ನೇ ಬಿಚ್ಚಿಕೊಳ್ಳುವುದು ನಾಗರೀಕತೆಯೇನೋ? ಮುಚ್ಚಿಕೊಳ್ಳುವುದರ ಮಿತಿ ಅಲ್ಲ; ಬಿಚ್ಚಿಕೊಳ್ಳುವುದರ ಮಿತಿ. ಪ್ರಪಂಚಕ್ಕೆ ಎಷ್ಟು ಪ್ರದರ್ಶಿಸ್ತೀವಿ ಅನ್ನೋದು ನಾವು ಪ್ರಪಂಚವನ್ನ ಎಷ್ಟು ಗೌರವಿಸ್ತೀವಿ ಮತ್ತು ಪ್ರಪಂಚ ನಮ್ಮನ್ನು ಎಷ್ಟು ಗೌರವಿಸಬೇಕು ಅಂತ ಅಪೇಕ್ಷಿಸ್ತೀವಿ ಅನ್ನುವುದರ ಮೇಲಿದೆ. ಕಾಲಕಾಲಕ್ಕೆ ಸನ್ನಿವೇಶಕ್ಕೆ ಅನುಗುಣವಾಗಿ ಸಾಹಿತಿಯ ಬಣ್ಣ, ಭಾಷೆ ಬದಲಾಗಬಾರದು ಅನ್ನುವುದಾದ್ರೆ ಪ್ರದರ್ಶನಕ್ಕೆ ಇಟ್ಟ ಸರಕೇ ಒಳಗೂ ತುಂಬಿರಬೇಕಾಗುತ್ತದೆ. ಅಲ್ಲದಿದ್ರೆ ಅಭಾಸ ಖಂಡಿತ. ದೀಪ್ತಿಯವರ ಕಥೆಗಳಲ್ಲಿ ಸಾಹಿತಿ ಮತ್ತು ಸಾಹಿತ್ಯ ಬೇರೆ ಅನ್ನಿಸಲ್ಲ. ಗುಮಾನಿಗಳಿಲ್ಲದೆ ಓದಿ ದಿಕ್ಕು ತಪ್ಪುವ ಭಾವನೆಗಳಿಲ್ಲದೆ ಸ್ವಂತವೆಂದು ಅಪ್ಪಿಕೊಳ್ಳಬಹುದಾದಂತಹ ಪಾತ್ರಗಳು. ಇಲ್ಲಿಯ ಹೆಣ್ಣು ಪಾತ್ರಗಳು ಸೋತು ನಶಿಸಿದಾಗ ಅಪರಾಧಿ ಮನೋಭಾವ ಓದುಗನನ್ನು ಖಂಡಿತ ಕಾಡತ್ತೆ. ಅಲ್ಲಿ ಕಥೆ ಗೆಲ್ಲತ್ತೆ. + +(ಎಸ್.ಎನ್.ಸೇತುರಾಮ್) + +ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸ್ತ್ರೀಯರಿಗೆ ಬಿಡುಬೀಸಾಗಿ ವ್ಯಕ್ತವಾಗುವ ಅವಕಾಶ ಮತ್ತು ಪರಿಸ್ಥಿತಿ ಕಡಿಮೆ. ಸ್ತ್ರೀ ಪ್ರಾಧಾನ್ಯದ್ದೇ ಸಮ್ಮೇಳನವನ್ನು ಸ್ತ್ರೀಯರೇ ಯಶಸ್ವಿಯಾಗಿ ನಡೆಸಿ “ನಾವು ಗಂಡಸರಿಗೇನು ಕಮ್ಮಿ ಇಲ್ಲ” ಅಂತಂದು ಗಂಡಸರನ್ನ ಮತ್ತೆ ಮುಖ್ಯವಾಗಿಸಿದ್ದೇ ಹೆಚ್ಚು. ಹಾಗಿದ್ದಾಗ ಸ್ತ್ರೀ ಸಾಹಿತ್ಯದ ದಾಖಲಾತಿಯ ಅವಕಾಶಗಳು ಕಮ್ಮಿ. ದೀಪ್ತಿಯವರ ಮೊದಲ ಕಥಾಸಂಕಲನ “ಆ ಬದಿಯ ಹೂವು” ಇದರ ಕಥೆಗಳಲ್ಲಿ ಹಿಂಜರಿಕೆ ಇದೆ. ಆದರೆ ಈ ಸಂಕಲನದಲ್ಲಿ ರೆಕ್ಕೆ ಬಲಿತಿದೆ. ಗರಿಗೆದರಿ ಪುಕ್ಕ ಒದರಿ ಹಿಗ್ಗಿಸಿ ಸ್ವಚ್ಛಂದವಾಗಿದ್ದಾರೆ. ಹೆಣ್ಣು ಪಾತ್ರಗಳು ಗಟ್ಟಿ ಇವೆ. ವಾಸ್ತವಕ್ಕೆ ಹತ್ತಿರವಾಗಿದೆ ಮತ್ತು ಸ್ಪಷ್ಟವಾಗಿದೆ. ಅವಶ್ಯವಾದ ಎಲ್ಲ ಹೊಂದಾಣಿಕೆಗಳನ್ನು ಇಷ್ಟವಿಲ್ಲದಿದ್ದರೂ, ಮನಸ್ಸಿಗೆ ನೋವಾದರೂ, ತುಟಿ ಕಚ್ಚಿ ಮಾಡಿಕೊಳ್ಳುವ ಪಾತ್ರಗಳು ಸ್ವಂತ ಅಸ್ತಿತ್ವಕ್ಕೆ ಧಕ್ಕೆಯಾದಾಗ ಸಿಡಿದು ನಿಲ್ಲುತ್ತವೆ. ಅತಿಯಾದ ಸಂಯಮ ಹೌದು; ಆದರೆ ಕಟ್ಟೆ ಒಡೆದಾಗ ಮಿತಿ ಮೀರಿದ ಶಕ್ತಿಯಲ್ಲಿ ಝಾಡಿಸುತ್ತವೆ. ಗೆದ್ದು ಸೋಲಿಸಲಾಗದ ಅನಿವಾರ್ಯತೆಯಲ್ಲಿ ನಿರಾಕರಿಸಿ, ನಿಕೃಷ್ಟಗೊಳಿಸಿ ಕ್ರಿಯೆಯಲ್ಲಿ ಎಷ್ಟೋ ಬಾರಿ ತಾವೇ ನಶಿಸಿ ಅಪರಾಧಿ ಮನೋಭಾವವನ್ನು ಬಿತ್ತಿ ಸೋಲಿಸುತ್ತವೆ. ಕಥೆಗಳನ್ನು ಓದಿ ಮುಗಿಸಿದ ಮೇಲೆ ಹೆಣ್ತನದ ಬಗ್ಗೆ ಹೆಮ್ಮ ಅನ್ನಿಸಿದರೂ ವಸ್ತು, ಸ್ಥಿತಿ, ಪರಿಸ್ಥಿತಿಯ ಅರಿವಿನಲ್ಲಿ ವಿಷಾದದ ಛಾಯೆ ಢಾಳಾಗಿ ಕಾಡತ್ತೆ. + + + +ಭವಿಷ್ಯದ ಬದುಕು ಹೇಗಿರಬೇಕು, ತನ್ನ ನಂತರದ ಪೀಳಿಗೆಯ ಸುಖ ಸೌಕರ್ಯಕ್ಕೆ ಏನು ಅವಶ್ಯಕ ಅನ್ನುವುದನ್ನು ಮಹಿಳೆಗಿಂತ ಹೆಚ್ಚು ಯಾರು ಬಲ್ಲರು? ಹಾಗಾಗಿ ಬದುಕನ್ನಪ್ಪಿ ಬೀಡುಬಿಟ್ಟು ಚಿಗುರುವ ಚಿಗುರಿಸುವ ಹೆಣ್ಣು ಮಕ್ಕಳ ಸಾಹಿತ್ಯ ಮುಖ್ಯವೇನೋ? ಅದು ಪ್ರಸ್ತುತ ಕೂಡ. ಕಥೆಗಳು ಈ ನಿಟ್ಟಿನಲ್ಲಿ ಪ್ರಸ್ತುತವಾಗುತ್ತವೆ. ಹಿಂದೆ ಹೇಳಿದಂತೆ ಪ್ರತಿ ಕಥೆಯ ಹಂದರ ಪಾತ್ರ ವಿವರಣೆಗಳಿಗೆ ಹೋಗುವುದಿಲ್ಲ. ಮುನ್ನುಡಿಕಾರನಾಗಿ ಓದುಗನ ಕುತೂಹಲ ಕೊಲ್ಲುವುದಿಲ್ಲ ಕೂಡ. ಈ ತರಹದ ಸಾಹಿತ್ಯ ಇನ್ನಷ್ಟು ಬರಲಿ ಅಂತ ಆಶಿಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_396.txt b/Kenda Sampige/article_396.txt new file mode 100644 index 0000000000000000000000000000000000000000..6f52e35d2d389769e2eadd8cdfe6dc6ba0e103ef --- /dev/null +++ b/Kenda Sampige/article_396.txt @@ -0,0 +1,97 @@ + + +ನನ್ನ ಚಿಕ್ಕತಂದೆಯವರಿಗೆ ನನ್ನೊಡನೆ ಉಳುಕೊಳ್ಳುವುದು ಸಮಾಧಾನವಾಗುತ್ತಿರಲಿಲ್ಲ. ನನ್ನ ಅಡಿಗೆಯವನಾದ ಮುದ್ದಣ್ಣನ ಬಲಾತ್ಕಾರಕ್ಕೆ ಅವರು ಒಂದು ತಿಂಗಳುವರೆಗೆ ನಮ್ಮೊಟ್ಟಿಗೆ ಇದ್ದರು. ಮುದ್ದಣ್ಣನು ಎಂದಿನಂತೆ ಅವರ ಪರಿಚಾರಕನಾಗಿದ್ದನು. ಕೊನೆಗೆ ಚಿಕ್ಕತಂದೆಯವರು ಊರುಬಿಟ್ಟು ಹೋಗುವ ಆಲೋಚನೆ ಮಾಡಿದರು. ಇದಕ್ಕೆ ಬಲವಾದ ಕಾರಣವಿತ್ತು. ಊರೊಳಗೆ ಪ್ಲೇಗ್ ರೋಗವು ಅಕಸ್ಮಾತ್ತಾಗಿ ಕಾಲುಹಾಕಿ, ಯುವಕರನ್ನೂ ಬಲಿಷ್ಟರನ್ನೂ ಕೊಂಡುಹೋಗುತ್ತಿತ್ತು. ಮನೆ ಮನೆಯಲ್ಲಿ ಇಲಿಗಳು ಸತ್ತು ಬಿದ್ದವು. ಇಲಿ ಬಿದ್ದ ಮನೆಗಳನ್ನು ಜನರು ಬಿಟ್ಟು ಓಡಿದರು. ಬಾಡಿಗೆ ಇಲ್ಲದೆ ದೊಡ್ಡ ದೊಡ್ಡ ಮನೆಗಳಲ್ಲಿ ಉಳುಕೊಳ್ಳುವುದಕ್ಕೆ ಬಡವರು ಮೊದಲು ಮಾಡಿದರು. ಈ ಸಮಯವನ್ನೇ ನೋಡಿಕೊಂಡು ಮನೆಯ ‘ಮಾಲೀಕರು’ ತಮ್ಮ ಮನೆಯ ಬಾಡಿಗೆಯನ್ನೂ ಕೊಡದೆ ಹಟಹಿಡಿದು ಉಳುಕೊಂಡಿದ್ದ ಜನಗಳನ್ನು ತಮ್ಮ ಮನೆಯಿಂದ ಓಡಿಸಿ ಬಿಡಲಿಕ್ಕೆ ಸತ್ತ ಇಲಿಗಳನ್ನು ಮನೆಯೊಳಗೆ ಹಾಕಿಬಿಟ್ಟರು. ದಿನಕ್ಕೆ ಹತ್ತರ ಪ್ರಕಾರ ಜನರು ಸಾಯತೊಡಗಿದರು. ಒಂದೆರಡು ದಿನಗಳಲ್ಲಿಯೇ ಈ ಸಂಖ್ಯೆ 50ಕ್ಕೆ ಮೀರಿತು. + +ಎಲ್ಲರೂ ಒಕ್ಕಲು ತೆಗೆದರು. ಹಳ್ಳಿಪಳ್ಳಿಗೆ ಪಲಾಯನ ಮಾಡಿದರು. ಅಂಗಡಿಗಳನ್ನು ಮುಚ್ಚಿಬಿಟ್ಟರು. ಒಕ್ಕಲು ಹೋಗುವ ಅಂಗಡಿಕಾರರು ಉಳಿದವರು ಧೈರ್ಯದಿಂದ ವ್ಯಾಪಾರ ಮಾಡುವುದನ್ನು ನೋಡಿ ಸಹಿಸಲಾರದೆ ಕಂಡಕಂಡವರೊಡನೆ ‘ಅಂಗಡಿ ಬೀದಿಯಲ್ಲಿ ಎಲ್ಲಾ ಕಡೆಗಳಲ್ಲಿ ಇಲಿ ಬಿದ್ದಿವೆ’ ಎಂದು ಸಾರುತ್ತ ಹೋದರು. ಶಾಲೆಯ ಉಪಾಧ್ಯಾಯರು ಒಂದೆರಡು ದಿನ ‘ಡೆಸ್ಕುಗಳಿಗೂ’ ‘ಬೆಂಚುಗಳಿಗೂ’ ಪಾಠ ಹೇಳಿ, ಉಪಾಯವಿಲ್ಲದೆ ಹುಡುಗರಿಗೆ ಕೆಲಕಾಲ ರಜೆ ಕೊಟ್ಟರು. ಹೆಂಡತಿಯನ್ನು ತವರು ಮನೆಗೆ ಕಳುಹಿಸಿ ವಿರಹಪಡುತ್ತಿದ್ದ ‘ಹಜೂರ್ ಗುಮಾಸ್ತನು’ ತನ್ನ ಮನೆಯಲ್ಲಿ ಯಾರಿಗೋ ಜ್ವರವೆಂದು ಚೀಟನ್ನು ಕಳುಹಿಸಿ ನಿರಾಯಾಸವಾಗಿ ಹತ್ತು ದಿನಗಳ ರಜಾ ಪಡೆದು ಮಾವನ ಮನೆಗೆ ನಡೆದುಬಿಟ್ಟನು. ದಿನ ಕಳೆದಂತೆ ಬ್ರಾಹ್ಮಣರಿಗೂ ರೋಗ ಸೋಂಕಿತು. ಔಷಧವಿಲ್ಲದ ರೋಗಕ್ಕೆ ಯಾರು ತಾನೇ ಹೆದರದೆ ಇರುವರು? ಕವಿರಾಜ ಗೋವರ್ಧನರು ಈ ರೋಗಕ್ಕೆ ಔಷಧವನ್ನು ಕಂಡುಕೊಂಡಿರುವೆನೆಂದು ಹೇಳಿ, ಕಲ್ಲುಸಕ್ಕರೆ ಬೆರೆಯಿಸಿದ ಹರಳೆಣ್ಣೆಯ ಸೀಸೆಗೆ ‘ಛಾಪೆಯ ಟಿಕೆಟ್’ ಒಂದನ್ನು ಹಚ್ಚಿ, ಮಾರಾಟದಿಂದ 300 ರೂಪಾಯಿ ಕೂಡಿಸಿಬಿಟ್ಟರು. ಜನರೆಲ್ಲರೂ ಭೀತರಾದರು. ದೇವಾಲಯಗಳಲ್ಲಿ ಪೂಜೆ ಪ್ರಸಾದಗಳು ನಡೆದುವು. ದೇವರೊಡನೆ ಮೀಸಲಿಟ್ಟು ಪರಿಹಾರವನ್ನು ಕೇಳಿದರು. “ಸತ್ತು ಹೋದವರೆಲ್ಲಾ ನನ್ನ ಬಳಿಗೆ ಸೇರಿದರು. ಅತ್ತು ಪ್ರಯೋಜನವಿಲ್ಲ” ಎಂದು ದರ್ಶನಕಾಲದಲ್ಲಿ ದೇವರ ಉತ್ತರವು ಸಿಕ್ಕಿತು. ಇಂಗ್ಲೀಷ ಕಲಿತ ಹಲವು ಮಹನೀಯರು ‘ದಾಕು ಹಾಕಿಸಿ’ ಕೊಂಡರು. ಆದರೂ ರೋಗದ ಹಾವಳಿ ಒಂದಿಷ್ಟಾದರೂ ಕಡಿಮೆಯಾಗಲಿಲ್ಲ. ಅಲ್ಲಲ್ಲಿ ‘ಪಾಸ್ ಪೋರ್ಟುಗಳನ್ನು’ ದಾರಿಗರಿಗೆ ಕೊಡುವುದಕ್ಕೆ ಶಿಬಂದಿಯನ್ನು ಒದಗಿಸಿದರು. ಆದರೂ ರೋಗವು ವೃದ್ಧಿಯಾಗುತ್ತ ಹೋಯಿತು. + +ಈ ಆಪತ್ಕಾಲದಲ್ಲಿ ನನ್ನ ಚಿಕ್ಕತಂದೆಯವರು ಏನು ಮಾಡಬೇಕೆಂದು ತಿಳಿಯಲಾರದೆ ಹೋದರು. “ಮುದುಕರಿಗೆ ಈ ರೋಗವು ಸೋಂಕಲಾರದು” ಎಂದು ಒಬ್ಬಿಬ್ಬರು ಅವರನ್ನು ಸಮಾಧಾನಪಡಿಸಿದ್ದರು. ಆದರೆ ತಾನು ಮುದುಕನಲ್ಲವೆಂದು ತಾನು ಆಂತರ್ಯದಲ್ಲಿ ತಿಳಿದುದರಿಂದ, ಅನ್ಯರ ಮಾತುಗಳಿಂದ ಅವರ ಮನಸ್ಸಿಗೆ ಶಾಂತಿ ಉಂಟಾಗುತ್ತಿರಲಿಲ್ಲ. ಕೆಲವರು ಇವರನ್ನು ಸಾಯಂಕಾಲದಲ್ಲಿ ನೋಡಿ, “ಅಯ್ಯಾ! ಮುಖವು ಇಳಿದು ಹೋಗಿದೇನು?” ಎಂದು ಕೇಳುತ್ತಿದ್ದರು. ಪ್ರತ್ಯುತ್ತರವಾಗಿ ಮತ್ತೊಬ್ಬರು “ನನ್ನ ಚಿಕ್ಕಪ್ಪಯ್ಯನವರಿಗೆ ಬೇಸರ. ಹೋದವಾರ ಅವರು ಕಳೆದುಕೊಂಡ ಒಂದು ಆಣೆ ಇನ್ನೂ ಸಿಕ್ಕಲಿಲ್ಲವಂತೆ” ಎಂದು ಹೇಳುತ್ತಿದ್ದರು. ಅವರ ಹಿತಚಿಂತಕರಲ್ಲಿ ಯಾರೊಬ್ಬರು ದೂರದಲ್ಲಿದ್ದು ಇವರೊಡನೆ “ಮೈಯ್ಯಲ್ಲಿ ಆಲಸ್ಯವೇ? ಜ್ವರವುಂಟೇ?” ಎಂದು ಕೇಳುತ್ತಲೇ ನನ್ನ ಚಿಕ್ಕತಂದೆಯವರು ಸಿಟ್ಟಿಗೆದ್ದು ಬಾಯೊಳಗೆ ಅವರನ್ನು ಶಪಿಸುತ್ತಿದ್ದರು. ನಮ್ಮ ಮನೆಗೆ ತಿಂಗಳಿಗೊಮ್ಮೆ ಬರುತ್ತಿದ್ದ ಕಟ್ಟಿಗೆ ಸಾವಕಾರ ಅಣ್ಣಪ್ಪ ಗೌಡರು ನಾನು ಇಲ್ಲದ ವೇಳೆಯಲ್ಲಿ ಮನೆಗೆ ಬಂದು ನನ್ನ ಚಿಕ್ಕತಂದೆಯವರೊಡನೆ, “ಕಟ್ಟಿಗೆ ಬೇಕಿತ್ತೇ?” ಎಂದು ಕೇಳಿ, ಇವರ ಬೈಗಳನ್ನು ತಲೆಯ ಮೇಲೆ ಹೊತ್ತುಕೊಂಡು ಹೋದರಂತೆ. ಆದರೂ ಚಿಕ್ಕತಂದೆಯವರು ಎದೆಗುಂದದೆ ಕೆಲವು ದಿವಸಗಳವರೆಗೆ ಊರಲ್ಲೇ ಇದ್ದರು. ಕೊನೆಗೆ ನಮ್ಮ ಅಗ್ರಹಾರದ ಬಳಿಯಲ್ಲಿ ಗೋಪಿವಲ್ಲಭಾಚಾರ್ಯರು ಎಂಭತ್ತು ವರ್ಷ ಪ್ರಾಯದಲ್ಲಿ ಪ್ಲೇಗ್ ತಗಲಿ ಸತ್ತರೆಂಬ ವರ್ತಮಾನವನ್ನು ಕೇಳುತ್ತಲೇ ನನ್ನ ಚಿಕ್ಕತಂದೆಯವರ ಮರಣ ಭೀತಿಗೆ ಪಾರವಿಲ್ಲದೆ ಹೋಯಿತು. ಈ ಮರಣದ ಮರುದಿನವೇ ನನ್ನ ಚಿಕ್ಕತಂದೆಯವರು ಎಲ್ಲಿಯೋ ಅದೃಶ್ಯರಾದರು. + +ಭಾನುವಾರ ಮಧ್ಯಾಹ್ನ ನಾನು ಸಕಲಾವತಿಯೊಡನೆ ಚಿಕ್ಕತಂದೆಯವರ ಪ್ರಸ್ಥಾನವನ್ನು ಕುರಿತು ವಿಚಾರಿಸುತ್ತ ಕುಳಿತಿದ್ದೆನು. ಅಷ್ಟರಲ್ಲಿ ಮುದ್ದಣ್ಣನು ಒಂದು ಸರಕಾರಿ ಕಾಗದವನ್ನು ನನ್ನ ಕೈಯಲ್ಲಿ ಇಟ್ಟನು. ಕಾಗದವು ಈ ಪರಿಯಾಗಿತ್ತು. + +“ಶನಿವಾರದಿನ ನಿಮ್ಮ ಮನೆಯಿಂದ ಹೊರಟು ಬಂದಿದ್ದ ಚಿಕ್ಕಪ್ಪಯ್ಯ ಯಾನೆ ಜೋಗಪ್ಪಯ್ಯನು ಈ ‘ಸ್ಟೇಶನ್ನಿಗೆ’ ‘ಪಾಸ್ ಪೋರ್ಟ್’ ತೆಗೆದುಕೊಳ್ಳಲಿಕ್ಕೆ ಬಂದ ಕಾಲದಲ್ಲಿ ಪ್ಲೇಗ್ ಸೋಂಕಿದ ಚಿಹ್ನೆಗಳನ್ನು ತೋರಿಸಿದುದರಿಂದಲೂ, ಸೊಂಟವನ್ನು ಮುಟ್ಟಿ ನೋಡುವುದಕ್ಕೆ ಬಿಡದಿದ್ದ ಕಾರಣದಿಂದಲೂ ಅವರನ್ನು ಇಲ್ಲಿ ತಡಸಿರುತ್ತೇವೆ. ಅವರ ಸ್ಥಿತಿಯು ಬಹಳ ಭಯಂಕರವಾಗಿದೆ. ಪ್ಲೇಗಿನ ಗುಡಿಸಲುಗಳಲ್ಲಿ ಯಾರೊಬ್ಬ ಪ್ರಯಾಣಿಕನು ಸತ್ತಪಕ್ಷಕ್ಕೆ ಸತ್ತವನ ವಾರಿಸ್ದಾರರಿಗೆ ಕೂಡಲೇ ವರ್ತಮಾನ ತಿಳಿಸಬೇಕೆಂದು ಸರಕಾರಿ ಹುಕುಂ ಇರುವುದರಿಂದ, ಅವರ ಆಸ್ಥೆಯನ್ನು ಅವರ ಮರಣದ ಮುಂಚೆಯೇ ನಿಮಗೆ ತಿಳಿಸಿರುತ್ತೇವೆ. + +(ಸಹಿ) ಎಸ್. ಪಿ. ಬಂಗರ್ ಸನ್ಡಿಸ್ಟ್ರಿಕ್ಟ್ ಕಲೆಕ್ಟರ್ ಒಫ್ಪಾಸ್ ಪೋರ್ಟ್ಸ್ + +ಈ ಕಾಗದವನ್ನು ಓದುತ್ತಲೇ ನಾನು ‘ಸ್ಟೇಶನ್ನಿ’ಗೆ ಹೊರಟೆನು. ಸಕಲಾವತಿಯು ನಾನು ಹೋಗುವುದನ್ನು ಅಡ್ಡೈಸುತ್ತ, ಮನಸ್ಸಿನಲ್ಲಿಯೇ ಏನನ್ನೋ ಗುಣುಗುಟ್ಟುತ್ತಿದ್ದಳು. ಮುದ್ದಣ್ಣನು ತಾನೂ ಬರುತ್ತೇನೆಂದು ಹೇಳಿ ಹೊರಟನು. + +ನಾನು ‘ಪ್ಲೇಗ್ ಸ್ಟೇಶನನ್ನು’ ಮುಟ್ಟುವಾಗ ಸಾಯಂಕಾಲ ಆರು ಗಂಟೆ ಹೊಡೆದಿತ್ತು. ಚಿಕ್ಕತಂದೆಯವರು ತೆಂಗಿನ ಎಲೆಯ ಗುಡಿಸಲಿನಲ್ಲಿ ಮಲಗಿದ್ದರು. ಅವರನ್ನು ದೂರದಿಂದಲೇ ನಾವು ನಿಂತು ನೋಡಿದೆವು. ಚಿಕ್ಕತಂದೆಯವರು ನಮ್ಮನ್ನು ನೋಡಿ ನಗಾಡಿದರು. “ಈ ಪಾಪಿಗಳು ನನಗೆ ಪ್ಲೇಗ್ ಸೋಂಕಿದೆ ಎಂದು ಸುಳ್ಳುಮಾಡಿ, ನನ್ನನ್ನು ನಾನಾ ರೀತಿಯಲ್ಲಿ ಉಪದ್ರಪಡಿಸುವರು,” ಎಂದು ನನ್ನೊಡನೆ ಮೊರೆಯಿಟ್ಟರು. ಅವರ ಮಾತುಗಳ ಸ್ವರವೇ ಬೇರೆಯಾಗಿತ್ತು. ನನಗೆ ಹತ್ತಿರ ಹೋಗಲು ಧೈರ್ಯಸಾಲಲಿಲ್ಲ. + +“ಜ್ವರವುಂಟೇ?” ಎಂದು ನಾನು ಕೇಳಿದೆನು. + +ಚಿಕ್ಕತಂದೆ :- “ಜ್ವರ? ಯಾರಿಗೆ ಜ್ವರ? ನನಗೆ ಸ್ವಲ್ಪ ಚೈತನ್ಯ ಕಡಿಮೆಯಾಗಿದೆ. ಈ ಬಡ್ಡಿಮಕ್ಕಳು ನನ್ನಿಂದ ಇಪ್ಪತ್ತು ರೂಪಾಯಿ ಹಾರಿಸಬೇಕೆಂದು ಇದ್ದರು. ಅದನ್ನು ನಾನು ಕೊಡದೆ ಹೋದ್ದರಿಂದ, ಇಷ್ಟು ಸಂಕಷ್ಟಕ್ಕೆ ನನ್ನನ್ನು ಗುರಿಮಾಡಿದರು.” + +ಅಷ್ಟರಲ್ಲಿ ಕಾವಲಿದ್ದ ಪೋಲೀಸಿನವನು ನನ್ನ ಹತ್ತಿರ ಬಂದು, “ಅಯ್ಯಾ! ಪ್ಲೇಗ್ ರೋಗದಲ್ಲಿ ಮರಣಕ್ಕೆ ಮೊದಲು ರೋಗಿಯು ಸರಿಯಾಗಿ ಮಾತನಾಡುವನು. ಬುದ್ಧಿ ಭ್ರಂಶತೆ ಏನೇನೋ ಇರುವುದಿಲ್ಲ” ಎಂದನು. + +ಈ ಮಾತುಗಳನ್ನು ಕೇಳಿ ಚಿಕ್ಕತಂದೆಯವರು “ಓಹೋ! ನಾನು ಸಾಯಲಾರೆನು. ನಾನು – ಓ ಕೆಂಪು ಮುಂಡಾಸ್! ನಾನು ನಿಮ್ಮ ಸಾವನ್ನು ನೋಡಿದ ಹೊರತು ಸಾಯಲಾರೆನು” ಎಂದು ಹೇಳಿ ಗುಡಿಸಲಿನ ಹೊರಬರುವುದಕ್ಕೆ ಪ್ರಯತ್ನಿಸುತ್ತಿದ್ದರು. + +“ರೋಗಿಗೆ ವಾಂತಿಯಾಗಿದೆ” ಎಂದು ಹೇಳಿ ಜಮೇದಾರನು ಒಂದು ಬಟ್ಟಲನ್ನು ರೋಗಿಯ ಇದಿರಿಗೆ ತಂದಿಟ್ಟನು. ರೋಗಿಯು ಅದನ್ನು ಬಿಸಾಡಿಬಿಟ್ಟನು; ಬಟ್ಟಲು ಚೂರು ಚೂರಾಯಿತು. “ಜ್ವರವು ರೋಗಿಯ ತಲೆಗೆ ಏರುತ್ತ ಬಂದಿದೆ. ಈಗ ರೋಗಿಯೊಡನೆ ನೀವು ಮಾತನಾಡುವುದು ಸರಿಯಲ್ಲ” ಎಂದು ಪೋಲೀಸಿನವನು ನನಗೆ ಚಿಕ್ಕತಂದೆಯವರೊಡನೆ ಮಾತನಾಡಗೊಡಿಸದೆ ಹೋದನು. + +ನಾನು ಬಂಡಿಯನ್ನು ಹತ್ತಿ ಡಾಕ್ಟರನು ಇದ್ದೆಡೆಗೆ ಹೋಗಿ ವಿಚಾರಿಸಿದೆನು. ಡಾಕ್ಟರನು ಹಿಂದಿನ ರಿಪೋರ್ಟನ್ನು ನೋಡಿ, ಚಿಕ್ಕತಂದೆಯವರಿಗೆ ‘ಪ್ಲೇಗ್’ ಸೋಂಕಿದೆ ಎಂದು ದೃಢಪಡಿಸಿದನು. ಈ ಮಾತಿನಿಂದ ನನಗೆ ಸಂತೋಷವಾಯಿತೋ ಸಂತಾಪವಾಯಿತೋ ಈಗ ಹೇಳಲು ಬರುವುದಿಲ್ಲ. ನಾನು ಓಡತೊಡಗಿದೆನು. ಮನೆಗೆ ಹೋಗಿ ಸಕಲಾವತಿಗೆ ಇದನ್ನೆಲ್ಲಾ ನಾನು ತಿಳಿಸುತ್ತಲೇ, ಅವಳು ಬೆಚ್ಚಿಬಿದ್ದಳು. ನಾನು ಮರಳಿ ಅಲ್ಲಿಗೆ ಹೋಗಬಾರದೆಂದು ತನ್ನ ಮೇಲೆ ಆಣೆ ಇಟ್ಟು ನನ್ನನ್ನು ಬೇಡಿದಳು. + +“ಚಿಕ್ಕತಂದೆ ಬದುಕುವುದೂ ಸಾಯುವುದೂ ದೇವರ ಇಚ್ಛೆ. ಅವರ ಕಡೆಗಾಲದಲ್ಲಿ ನಾನು ಅವರ ಹಾಸಿಗೆಯ ಹತ್ತಿರವಿಲ್ಲದಿದ್ದರೆ, ಜನಗಳು ಏನೆನ್ನುವರು?” + +“ಹಾಸಿಗೆಯ ಹತ್ತಿರ ಹೋಗುವುದುಂಟೇ? ಅಯ್ಯೋ! ಜನಗಳು ಬಾಯಿಗೆ ಬಂದಂತೆ ಹರಟುವರು. ಅದು ಹೋಗಲಿ! ಪರರ ಮರಣವನ್ನು ನೋಡಿದರೆ, ಉಳಿದವರು ವೈರಾಗ್ಯ ಮನಸ್ಕರಾಗುವರಂತೆ. ಇದು ನಿಜವೇ?” ಎಂದು ಸಕಲಾವತಿಯು ಭೀತಿಯಿಂದ ಕೇಳಿದಳು. + +“ವೈರಾಗ್ಯವು ಬರಬೇಕಾದರೆ ಮೊದಲು ಸಂಸಾರ ಜ್ಞಾನವು ಪೂರ್ಣವಾಗಬೇಕು. ಪ್ರಕೃತದಲ್ಲಿ ವೈರಾಗ್ಯವನ್ನು ಹೊದ್ದುಕೊಂಡ ಸಂತ ಪುರುಷರೆಲ್ಲರು ಸಂಸಾರ ಸಾಗರವನ್ನು ಈಸಿಕೊಂಡು, ಸೋತುಹೋಗಿ ವೈರಾಗ್ಯ ತೀರವನ್ನು ಸೇರಿದರು. ಮರಣವನ್ನು ನೋಡಿದರೆ ಶ್ಮಶಾನ ವೈರಾಗ್ಯವು ಕೆಲವರಿಗೆ ಉಂಟಾಗುವುದು. ಅಂಥ ಮರಣದಿಂದ ಧನಪ್ರಾಪ್ತಿಯಾಗುವುದೂ ಉಂಟು. ಅನೇಕರು ಈ ವೈರಾಗ್ಯವನ್ನು ಆಶಿಸುವರು.” + + + +ಇಂತಹ ಸಂಭಾಷಣೆಯಿಂದಲೂ ಸುಖಸಲ್ಲಾಪದಿಂದಲೂ ನಾನು ಸಕಲಾವತಿಯ ಮನಸ್ಸನ್ನು ರಂಜಿಸುತ್ತ, ಅವಳ ಅಪ್ಪಣೆಯನ್ನು ಹೊಂದಿ, ರಾತ್ರಿಯೇ ಚಿಕ್ಕತಂದೆಯವರಿದ್ದ ‘ಪಾಸ್ ಪೋರ್ಟ್ ಸ್ಟೇಶನಿಗೆ’ ನಡೆದೆನು. + +ನನ್ನ ಚಿಕ್ಕತಂದೆಯವರಿಗೆ ಸೋಂಕಿದ ರೋಗವು ಪ್ಲೇಗ್ ಎಂದು ನಿಷ್ಕರ್ಷೆಯಾಯಿತು. ನಾನು ‘ಪ್ಲೇಗ್ ಸ್ಟೇಶನಿಗೆ’ ಮುಟ್ಟಿದಾಗ ರಾತ್ರಿ 8 ಘಂಟೆ ಹೊಡೆದಿತ್ತು. ಚಿಕ್ಕತಂದೆಯವರು ನಿದ್ದೆಹೋಗಿದ್ದರು. ಅದು ಅಲ್ಪ ನಿದ್ರೆಯೋ ದೀರ್ಘ ನಿದ್ರೆಯೋ ಎಂದು ಪರೀಕ್ಷಿಸಲು ಹತ್ತಿರ ಹೋಗುವಷ್ಟು ನಾನು ಧೈರ್ಯಗೊಳ್ಳಲಿಲ್ಲ. ನಾನು ರೋಗಿಯನ್ನು ಮುಟ್ಟಬಾರದೆಂದು ಸಕಲಾವತಿಯು ತನ್ನ ಮೇಲೆ ಆಣೆಯಿಟ್ಟು ನನಗೆ ಅಪ್ಪಣೆ ಮಾಡಿದ್ದಳು. ಮುದ್ದಣ್ಣನು ‘ಸ್ಟೇಶನಿನ’ ಹೊರಕ್ಕೆ ಚಿಂತೆಯಿಂದ ತಲೆಬಗ್ಗಿಸಿಕೊಂಡು ಕುಳಿತಿದ್ದನು. ಮುಪ್ಪಿನಲ್ಲಿ ದತ್ತಕ್ಕೆ ಪಡೆದುಕೊಂಡ, ಗಡ್ಡ ಮೀಸೆ ಬಂದ ಚಿಕ್ಕ ಮಗುವು ಸಾಕುತಂದೆಯ ಅನಿವಾರ್ಯವಾದ ಮರಣವನ್ನು ನೋಡಿ ಕಣ್ಣೀರು ಬಿಡುವಂತೆ, ಮುದ್ದಣ್ಣನು ತನ್ನೊಳಗೇನೇ ಮರುಗುತ್ತಿದ್ದನು. ‘ಪೋಲೀಸ್ ಜಮೇದಾರನು’ ಸಂಸಾರದ ನಶ್ವರತೆಯನ್ನು ಕುರಿತು ಮುದ್ದಣ್ಣನಿಗೆ ಉಪದೇಶ ಮಾಡುತ್ತಿದ್ದನು. “ಚಿಕ್ಕತಂದೆಯವರಿಗೆ ಹೇಗುಂಟು?” ಎಂದು ನಾನು ಜಮೇದಾರನೊಡನೆ ವಿಚಾರಿಸಿದೆನು. “ಸಾಯಂಕಾಲದವರೆಗೆ ಸರಿಯಾಗಿ ಮಾತನಾಡುತ್ತಿದ್ದರು. ಈಗ ಕೊಂಚ ಪ್ರಜ್ಞೆ ತಪ್ಪಿದೆ” ಎಂದು ಜಮೇದಾರರು ಹೇಳಿ ಸುಮ್ಮನಾದನು. “ಎಲ್ಲವೂ ದೈವೇಚ್ಛೆ” ಎಂದು ಹೇಳಿ ನಾನು ಅಲ್ಲಿಯೇ ಕುಳಿತುಬಿಟ್ಟೆನು. ಚಿಕ್ಕತಂದೆಯವರು ನಮ್ಮನ್ನೆಲ್ಲಾ ಬಿಟ್ಟುಹೋಗುವರು ಎಂಬ ಚಿಂತೆ ನನ್ನ ಮನಸ್ಸನ್ನು ತೊಂದರೆಗೊಳಿಸಲಿಲ್ಲ. ಅವರು ಒಂದು ವೇಳೆ ಜಗಲಿ ಬಿಟ್ಟು ಗಗನಕ್ಕೆ ಹಾರಿದರೂ ಅವರ ಶ್ಮಶಾನ ಕ್ರಿಯೆಗಳು ದಯಾಳುವಾದ ಸರಕಾರದಿಂದ ಸಾಗಿಸಲ್ಪಡುವುವು ಎಂಬ ನಿಶ್ಚಯವಿತ್ತು. ಅವರ ಉತ್ತರಕ್ರಿಯೆಗಳಿಗೋಸ್ಕರ ನನ್ನನ್ನು ಭಟ್ಟರು, ಮಾದಿಗರು ಚರ್ಮ ಸುಲಿದಂತೆ ಸುಲಿದುಬಿಡುವರೋ ಎಂಬ ದುಃಖವು ವಿಪರೀತವಾಗಿತ್ತು. “ಗಂಡನ ಸಾವು ಒಂದು, ಮುಂಡೆಯ ಗಾಯ ಒಂದು.” ಅನ್ಯರ ಮರಣದಿಂದ ಮಹತ್ವವುಂಟಾಗುವುದಾದರೆ ಇಂತಹ ಸಂಸ್ಕಾರಗಳಲ್ಲಿ ಹಣವನ್ನು ವೆಚ್ಚಮಾಡಲು ಬೇಸರ ಬರುವುದಿಲ್ಲ. ನಾನು ಹತಭಾಗ್ಯನು, ಮರಣದಿಂದ ಮಹತ್ವ ಎಂಬ ಮಾತು ನನ್ನಲ್ಲಿ ಸರಿಹೋಗುವುದೋ ಇಲ್ಲವೋ ಹೇಳಬರುವುದಿಲ್ಲ. ಇತ್ತಲಾಗೆ ಪರರ ಮರಣದಿಂದ ನಮ್ಮ ಊರಲ್ಲಿ ಅನೇಕರು ಪ್ರಯೋಜನ ಹೊಂದಿದರೆಂಬುದು ನಿಜ. ಮಧ್ವರಾಯರ ಮರಣದಿಂದ ರಾಮಸೆಟ್ಟರಿಗೆ ನಿರಾಯಾಸವಾಗಿ ಸಿಕ್ಕಿತು ಅವರ ‘ವಿಮೆಯ’ ಹೊನ್ನು. ಗಿರಿಧರಾಚಾರ್ಯರ ಮರಣದಿಂದ ಶ್ಯಾಮರಾಯರಿಗೆ ತೊಂದರೆ ಇಲ್ಲದೆ ಸಿಕ್ಕಿತು ವಿಧವೆಯಾದ ಹೆಣ್ಣು. ಹೊನ್ನಾಗಲಿ ಹೆಣ್ಣಾಗಲಿ ನನ್ನ ಪಾಲಿಗೆ ಸಿಕ್ಕುವ ಹಾಗೆ ಇರಲಿಲ್ಲ. ಹೊನ್ನು ಹೆಣ್ಣು ಸಿಕ್ಕದವರಿಗೆ ಮಣ್ಣಾದರೂ ಸಿಕ್ಕುವುದಂತೆ. ಚಿಕ್ಕತಂದೆಯವರು ಸತ್ತರೆ ಮಣ್ಣಿನ ಮನೆ ಯಾರ ಪಾಲಿಗೆ ಹೋಗುವುದು ಎಂಬ ಯೋಚನೆಯಿಂದ ಇರುಳೆಲ್ಲ ನನ್ನ ಕಣ್ಣಿಗೆ ನಿದ್ದೆ ಹತ್ತಲಿಲ್ಲ. + +ಹೆಣದ ಎಂಜಲನ್ನು ಬಯಸುವವನು ಪಾಪಿ ಎಂದು ಪಾಠಕ ಮಹಾಶಯರಲ್ಲಿ ಅನೇಕರು ಮೇಲೆ ಹೇಳಿದ ನನ್ನ ಅವಸ್ಥೆಯನ್ನು ನೋಡಿ ಬಾಯೊಳಗೆನೇ ನಗಾಡಬಹುದು. ಅಂತಹರಿಗೆ ನಾನು ಒಂದು ಮಾತನ್ನು ಹೇಳಬೇಕೆಂದಿರುವೆನು. ಮನುಷ್ಯನ ಮರಣಕ್ಕೋಸ್ಕರವೇ ಮನಮರುಗುವವರು ಈ ಕಾಲದಲ್ಲಿ ಕಡಿಮೆ. ಸತ್ತವನು ನಮಗೇನೂ ಬಿಟ್ಟಿಲ್ಲ, ಕೊಟ್ಟಿಲ್ಲ, ಮುಂದೆ ನಮಗೇನು ಗತಿ? ಎಂದು ಅಳುವರಲ್ಲದೆ, ಸತ್ತವನ ಗತಿಯನ್ನು ಕುರಿತು ಒಬ್ಬರೂ ಲೆಕ್ಕಿಸುವುದಿಲ್ಲ. ಈ ಮಾತನ್ನು ಬಲಗೊಳಿಸುವುದಕ್ಕೆ ಕಾರಣಗಳಿವೆ. ಮನುಷ್ಯನು ಸಾಯುತ್ತಲೇ ಅವನ ನೆಂಟರಿಷ್ಟರು ಅವನನ್ನು ಕುರಿತು ‘ಸತ್ತದ್ದು ಹೇಗೆ? ಹೊತ್ತದ್ದು ಯಾರು?’ ಎಂದು ಕೇಳುವ ಬದಲಾಗಿ ಅವನ ಹೆಂಡತಿಗೆ ಮಕ್ಕಳಿಗೆ “ಸೊತ್ತುಂಟೇ? ವಿತ್ತವುಂಟೇ?” ಎಂದು ಮೊದಲು ಪ್ರಶ್ನೆ ಮಾಡಿ, ‘ಬದುಕುಂಟು, ಭೂಮಿಯುಂಟು’ ಎಂಬ ಉತ್ತರದಿಂದ ಸ್ವಲ್ಪ ಸಮಾಧಾನಚಿತ್ತರಾಗುವರು. ಹೀಗಿದ್ದುದರಿಂದ ನನ್ನ ಚಿಕ್ಕತಂದೆಯವರ ಮರಣ ವಿಷಯದಲ್ಲಿ ನಾನು ಸ್ವಾರ್ಥಬುದ್ಧಿಯನ್ನು ತೋರಿಸಿದುದು ವಿಚಿತ್ರವೇನೂ ಅಲ್ಲ. ಆದುದರಿಂದ ಅವರನ್ನು ಆಗಾಗ ಮುಟ್ಟಿ ನೋಡಿ, ರೋಗಕ್ಕೆ ನಾನು ಬಲಿಬಿದ್ದು, ಮಕ್ಕಳು ಮರಿ ಹುಟ್ಟುವ ಮೊದಲೇ ನನ್ನ ಹೆಂಡತಿಯನ್ನು ಶಾರದಾ ಸದನದ ಸುಂದರ ಯುವತಿಯನ್ನಾಗಿ ಮಾಡಲು ನನಗೆ ಮನಸ್ಸು ಬರಲಿಲ್ಲ. ನಗಾಡುವವರು ನಗಾಡಲಿ; ಅವರು ಹೊತ್ತು ಗೊತ್ತು ಅರಿಯದೆ ನಗಾಡುವರು. ತಾಯಿ ಮಗುವಿಗೆ ಸ್ತನ್ಯಪಾನ ಮಾಡುವುದನ್ನು ನೋಡಿ ಅವರು ನಗಾಡುವರು. ತಂದೆ ಹೊಟ್ಟೆ ತುಂಬಾ ಉಂಡು ತೇಗುವುದನ್ನು ಕೇಳಿ ಅವರು ನಗಾಡುವರು. ಅಣ್ಣನು ಏಕಾಂತದಲ್ಲಿ ಹೆಂಡತಿಯೊಡನೆ ಮುದ್ದು ಮಾತುಗಳನ್ನು ಆಡುವುದನ್ನು ನೋಡಿ ಅವರು ನಗಾಡುವರು. ಬಡವನು ಭಾಗ್ಯ ತೋರಿಸಿದರೆ, ಕುರೂಪಿಯು ಕಾಂಚನ ತೊಟ್ಟುಕೊಂಡರೆ, ಭಟ್ಟರು ಬೂದಿ ಬಳಿದುಕೊಂಡರೆ ಅವರು ನಗಾಡುವರು. ಇದು ನಗಾಡುವುದೋ ಹಲ್ಲು ಕಿರಿಯುವುದೋ ನಾನು ಹೇಳಲಾರೆನು. + +ಮಧ್ಯರಾತ್ರಿ ಕಳೆದುಹೋದ ಬಳಿಕ ‘ಪೋಲೀಸ್ ಜಮೇದಾರನು’ ನನ್ನ ಬಳಿಗೆ ಬಂದು “ಅಯ್ಯಾ! ನಿಮ್ಮ ಚಿಕ್ಕತಂದೆಯವರು ಇನ್ನು ಉಳಿಯುವ ಹಾಗಿಲ್ಲ. ಮುಂದೆ ಏನು ಮಾಡಬೇಕೆಂದಿರುವಿರಿ?” ಎಂದು ಕೇಳಿದನು. + +ಇದಕ್ಕೆ ಉತ್ತರವಾಗಿ “ಏನು ಮಾಡಬೇಕೆಂದು ನಾನರಿಯೆ. ನನಗೆ ಎಲ್ಲವು ವಿಪರೀತವಾಗಿ ಪರಿಣಮಿಸುತ್ತಿದೆ. ಮೊದಲೇ ಸಾಲವು ನನ್ನ ತಲೆಯೇರಿ ಹೋಗಿದೆ” ಎಂದು ನಾನು ಹೇಳಿದೆನು. + +ಜಮೇದಾರ :- “ನಿಮ್ಮ ಚಿಕ್ಕತಂದೆಯವರ ಕೈಯಲ್ಲಿ ಸ್ವಲ್ಪ ಹಣವಿರುವುದಲ್ಲವೇ? ನಿಮ್ಮ ಅಡಿಗೆಯವನು ಇದನ್ನೆಲ್ಲಾ ಬಲ್ಲನು. ‘ಉಯಿಲನ್ನು’ ಕುರಿತು ಮುದ್ದಣ್ಣನು ನಿಮ್ಮ ಚಿಕ್ಕತಂದೆಯವರೊಡನೆ ಆಗಾಗ ವಿಚಾರಿಸುತ್ತಿದ್ದನು.” + +ನಾನು ಮಾತನಾಡದೆ ಜಮೇದಾರನು ಮುಂದರಿಸುವಂತೆ ಸುಮ್ಮನಾದೆನು. + +ಜಮೇದಾರ :- “ಮುದ್ದಣ್ಣನು ಹುಚ್ಚನಂತೆ ತೋರುವನು ನಿಜ. ಆದರೆ ನಿಮಗೆ ಓನಾಮಾ ಹಾಕುವಷ್ಟು ಹುಚ್ಚು ಬುದ್ಧಿಯು ಅವನಲ್ಲಿ ಉಂಟು. ಇಷ್ಟರ ಒಳಗೆ ಅವನು ಉಯಿಲನ್ನು ಜಾರಿಸದೆ ಇರಲಾರನು. ತಾವು ಎಚ್ಚರವಿಲ್ಲದಿದ್ದರೆ ಕೆಲಸವು ಕೆಟ್ಟುಹೋಗುವುದು.” + +ಈತನ ಮಾತುಗಳಿಂದ ನಾನು ಮೋಸಹೋಗಬಹುದೋ ಇಲ್ಲವೋ ಎಂದು ನನ್ನಲ್ಲಿಯೇ ವಿಚಾರಿಸುತ್ತಿದ್ದೆನು. ಅಷ್ಟರಲ್ಲಿ ಜಮೇದಾರನು ಮುದ್ದಣ್ಣನಿದ್ದ ಎಡೆಗೆ ಹೋಗಿಬರುವೆನೆಂದು ಹೇಳಿ, ಕೆಲವು ನಿಮಿಷಗಳ ಬಳಿಕ ನನ್ನ ಹತ್ತಿರಕ್ಕೆ ಬಂದನು. + +ಜಮೇದಾರ :- “ನಾನು ಮುದ್ದಣ್ಣನ ಮೈಯನ್ನು ಹುಡುಕಿ ನೋಡಿದೆನು. ಉಯಿಲನ್ನು ಅವನು ಎಲ್ಲಿಯೋ ಅಡಗಿಸಿರಬಹುದು. ತಮಗೆ ಸಿಕ್ಕುವ ಹಣ ಅನ್ಯರ ಪಾಲಿಗೆ ಹೋಗುವುದೆಂದು ನನಗೆ ಚಿಂತೆ.” + +ನಾನು ಏನು ಹೇಳಬೇಕೆಂದು ತಿಳಿಯದೆ ಸುಮ್ಮನಾದೆನು. ಮುದ್ದಣ್ಣನು ಮೊದಲಿಂದಲೂ ಚಿಕ್ಕತಂದೆಯವರ ಹಣವನ್ನು ಆಶಿಸಿ ಉಪಾಯ ಮಾಡುತ್ತಿದ್ದನು. ಜಮೇದಾರನ ಮಾತುಗಳು ನಿಜವಾದರೆ ಹಣವು ಮುದ್ದಣ್ಣಗೆ; ಹೆಣವು ನನ್ನ ಪಾಲಿಗೆ. ಇದನ್ನು ಕುರಿತು ಮುದ್ದಣ್ಣನೊಡನೆ ವಿಚಾರಿಸಬೇಕೆಂದು ನಾನು ಆಲೋಚಿಸುವಷ್ಟರಲ್ಲಿ, ಮುದ್ದಣ್ಣನು ನಿದ್ದೆಯಿಂದ ಎಚ್ಚರವಾದಂತೆ, ತಲೆಯನ್ನು ತುರಿಸುತ್ತ ನನ್ನ ಬಳಿಗೆ ಬಂದು, “ಅಯ್ಯಾ! ನನ್ನ ಮೈಯಲ್ಲಿ ಹುಳುಹರಿದಂತಾಗುವುದು. ಯಾರೋ ನನ್ನ ಮೈಮೇಲೆ, ಬಂದು ಚಕ್ಕಲಗಲ ಮಾಡಿದಂತೆ ತೋರುವುದು” ಎಂದನು. + +ಜಮೇದಾರನು ಈ ಮಾತನ್ನು ಕೇಳುತ್ತಲೇ “ನಿನಗೆ ಮೈಮೇಲೆ ಬಂತೇ? ಸರಿ! ಸರಿ! ಸತ್ತವರು ನಿಮ್ಮನ್ನು ಹಿಡಿದಿರುವರು. ಅವರು ಉಯಿಲನ್ನು ಕೇಳುವುದಕ್ಕೆ ಬಂದರೋ ಏನೋ?” ಎಂದು ಹೇಳಿದನು. ಮುದ್ದಣ್ಣನು ಅಲ್ಲಿ ನಿಲ್ಲದೆ ಹಿಂದೆಗೆದನು. + +ಮರುದಿನ ಬೆಳಿಗ್ಗೆ ಡಾಕ್ಟರರು ಚಿಕ್ಕತಂದೆಯವರನ್ನು ದೂರದಿಂದ ನೋಡಿ, ‘ಪ್ಲೇಗ್ ಸ್ಟೇಶನ್ ಆಫೀಸರರೊಡನೆ’ ಮಾತನಾಡಿ, “ಚಿಕ್ಕಪ್ಪನವರು ಕಾಲಾಧೀನರಾದರು” ಎಂದು ಹೇಳಿ ಹೋದರು. ಹೆಣವನ್ನು ಎತ್ತುವುದಕ್ಕೆ ಜಾತಿ ಗೃಹಸ್ಥರಾಗಲಿ, ಕುಲಪುರೋಹಿತರಾಗಲಿ ಬರುವ ಸಂಭವ ತೋರಲಿಲ್ಲ. ನಾನು ಮತ್ತು ಮುದ್ದಣ್ಣ ಇಬ್ಬರಿಂದ ಕೆಲಸವು ಸಾಗುವ ಹಾಗೆ ಇರಲಿಲ್ಲ. ಜಮೇದಾರನು ಮುಂದೆ ಬಂದು “ಇನ್ನು ಏನು ಮಾಡಬೇಕು?” ಎಂದು ಮೆಲ್ಲನೆ ಕೇಳಿದನು. ನಾನು ಯೋಚನೆಯಲ್ಲಿ ಬಿದ್ದೆನು. ಅನಾಥ ಪ್ರೇತ ಸಂಸ್ಕಾರದಿಂದ ಕೋಟಿ ಯಜ್ಞ ಫಲವು ಸಿಕ್ಕುವಂತೆ ಸರಕಾರದವರು ತಮ್ಮ ಕಡೆಯಿಂದ ದೀಕ್ಷಿತರಾಗಿ ನಿಯಮಿಸಿದ ಕೃಷ್ಣಕಾಯರಾದ ಪುರೋಹಿತರ ಹಸ್ತದಿಂದ ನಮ್ಮ ಚಿಕ್ಕತಂದೆಯವರಿಗೆ ಪವಿತ್ರವಾದ ಸಮಾಧಿಯು ದೊರೆಯುವುದೋ ಎಂದು ನಾನು ಸಂಶಯ ಪಡುವಷ್ಟರಲ್ಲಿ ನಮ್ಮ ಊರಿನ ಮಾದಣ್ಣನವರು ಅಲ್ಲಿಗೆ ಆಕಸ್ಮಾತ್ತಾಗಿ ಬಂದರು. ಮಾದಣ್ಣನವರು ಏಕೆ ಬಂದರೆಂದು ನನಗೆ ಮೊದಲು ತಿಳಿಯಲಿಲ್ಲ. ಮಾದಣ್ಣನವರು ನಮ್ಮ ಊರಿನ ಬಲಾಢ್ಯರಾದ ಮನುಷ್ಯರು. ಇವರಿಗೂ ನಮ್ಮ ಚಿಕ್ಕತಂದೆಯವರಿಗೂ ಆಂತರಿಕವಾದ ಸ್ನೇಹವಿತ್ತು. ಅದಕ್ಕೋಸ್ಕರ ಅವರು ಚಿಕ್ಕತಂದೆಯವರ ಕಡೆಗಾಲದಲ್ಲಿ ಅವರನ್ನು ದೃಷ್ಟಿಸಬೇಕೆಂದು ಬಂದಿರುವರೆಂದು ನಾನು ತಿಳಿದೆನು. ಮಾದಣ್ಣನವರಿಗೆ ಈಗ ಮೂರು ಜನ ಹೆಣ್ಣು ಮಕ್ಕಳು. ಹಿರಿಯವಳು ಬಾಲವಿಧವೆಯಾಗಿದ್ದಳು. ನಡುವಿನವಳು ಅತಿಸುಂದರಿ. ಗಂಡನು ಅವಳನ್ನು ಬಿಟ್ಟಿದ್ದನೋ, ಅವಳು ಗಂಡನನ್ನು ಬಿಟ್ಟಿದ್ದಳೋ ಇದುವರೆಗೆ ತಿಳಿದು ಬರಲಿಲ್ಲ. ಹೇಗೂ ಹೆಣ್ಣು ತೌರುಮನೆಯಲ್ಲಿಯೇ ಇದ್ದಳು. ಕಿರಿಯವಳು ಮನೆಯಲ್ಲೇ ಇದ್ದರೂ, ಎರಡು ವರ್ಷಗಳಿಗೊಮ್ಮೆ ಗಂಡನ ಮನೆಗೆ ಹೋಗಿ, ಮೂರು ತಿಂಗಳು ಉಳುಕೊಂಡು, ತೊಟ್ಟಿಲ ಮಗುವಿನೊಡನೆ ತೌರುಮನೆಗೆ ಬರುತ್ತಲಿದ್ದಳು. ಇನ್ನೊಬ್ಬಳು ತೀರಿ ಹೋಗಿದ್ದಳು. ಅದು ಕಾರಣದಿಂದ ಮಾದಣ್ಣನವರಿಗೆ ಉಳಿದ ಹೆಣ್ಣುಮಕ್ಕಳ ಮೇಲೆ ಬಹಳ ಪ್ರೇಮ. “ಗೋವಿಂದಾ! ನಿನ್ನ ದಯೆಯಿಂದ ನನಗೇನೂ ಕಡಮೆ ಇಲ್ಲ. ನನಗೆ ಭೂಮಿ ಬೇಡ, ಆಸ್ತಿ ಬೇಡ, ಈ ಹೆಣ್ಣು ಮಕ್ಕಳಿಗೆ ದೀರ್ಘಾಯುವನ್ನು ಕೊಡು!” ಎಂದು ವರ್ಷ ವರ್ಷ ರಥೋತ್ಸವಕಾಲದಲ್ಲಿ ಅವರು ದೇವರೊಡನೆ ಬೇಡುತ್ತಿದ್ದರು. ಈ ಹೆಣ್ಣು ಮಕ್ಕಳು ಹುಟ್ಟಿದಂದಿನಿಂದ ಮಾದಣ್ಣನವರ ಕೀರ್ತಿಯು ದಿಗಂತವಾಗಿ ಪಸರಿಸುತ್ತಲಿತ್ತು. ಸರಕಾರದ ದೊಡ್ಡ ದೊಡ್ಡ ಹುದ್ದೆದಾರರು ಈತನ ಆಜ್ಞೆಗಳನ್ನು ಶಿರಸಾವಹಿಸುತ್ತಿದ್ದರು. ಜಮೀನಿನ ಜವಾಬ್ದಾರಿಯ ಮೇಲೆ ಹಣವನ್ನು ಬಡ್ಡಿಗೆ ಕೊಡದ ಪರಮಲೋಭಿಗಳು ಸಹಾ ಇವನ ಒಂದು ಮಾತಿನ ಮೇಲೆ ಒತ್ತೆ ಕೇಳದೆ, ಇವನಿಗೆ ಧಾರಾಳವಾಗಿ ಸಾಲ ಕೊಡುತ್ತಿದ್ದರು. ಬಿಳೇ ಜನರ ಸಹಾಯವು ಯಾವ ಕಾರ್ಯದಲ್ಲಾದರೂ ದೇಶೀಯರಿಗೆ ಅವಶ್ಯವಿದ್ದರೆ, ಅದನ್ನು ಮಾಡಿಸುವ ಭಾರವು ಇವರ ಹೆಗಲ ಮೇಲೆ ಇತ್ತು. + +ಮಾದಣ್ಣನವರನ್ನು ನಾನು ತಲೆಯೆತ್ತಿ ನೋಡಿ, “ರಾಯರೇ! ನೀವು ಬಂದುದು ಚೆನ್ನಾಯಿತು” ಎಂದೆನು.ಮಾದಣ್ಣನವರು ಸಮೀಪಕ್ಕೆ ಬಂದು, “ನಿಮ್ಮ ಚಿಕ್ಕತಂದೆಯವರಿಗೆ ಹೇಗಿದೆ?” ಎಂದು ಕೇಳಿದನು.ಜಮೇದಾರನು “ಚಿಕ್ಕತಂದೆಯವರೋ? ನೆಟ್ಟಗಿದ್ದಾರೆ” ಎಂದು ಹೇಳಿ ನೆಗಾಡಿದನು.ನಾನು ತಲೆಯಲ್ಲಾಡಿಸಿ ಒಳಗಿನ ಅವಸ್ಥೆಯನ್ನು ಹೊರಡಿಸಿದೆನು. + +ಮಾದಣ್ಣನವರು ತಲೆಯ ಮೇಲೆ ಕಲ್ಲು ಬಿದ್ದಂತಾಗಿ ಸುಮ್ಮನೆ ನಿಂತರು. “ಗೋವಿಂದಾ! ನಮ್ಮ ಹಾಳು ದೆಶೆ. ಏನು ಸ್ವಾಮಿ ಮನುಷ್ಯನ ಅವಸ್ಥೆ? ಎರಡು ದಿನದ ಹಿಂದೆ ನಮ್ಮ ಮನೆಗೆ ಬಂದು ಮಾತನಾಡಿ ಹೋದ ಪುಣ್ಯಾತ್ಮರು ಈ ಹೊತ್ತು ಎಲ್ಲಿಯೋ? ನಿಮ್ಮ ಚಿಕ್ಕತಂದೆಯವರು ಬದುಕಿರಬಹುದೆಂದು ನಾನು ಒಮ್ಮೆ ತಿಳಿದೆನು. ನೀವು ಯಾರೂ ಗೋಳಿಡುವುದನ್ನು ಕೇಳಲಿಲ್ಲ. ಅವರೊಡನೆ ಎರಡು ಮಾತು ಆಡುವುದಕ್ಕೂ ಆಗದೆ ಹೋಯಿತು” ಎಂದು ದುಃಖಿಸಿದರು. + +ಮುದ್ದಣ್ಣನು “ಮನಸ್ಸಿದ್ದರೆ ಅವರು ಇದ್ದಲ್ಲಿಗೆ ಹೋಗಿ ತಾವು ಮಾತನಾಡಬಹುದಲ್ಲವೇ” ಎಂದನು. + +ಮಾದಣ್ಣನವರು ವ್ಯಸನಪಟ್ಟರು; ಅಲ್ಲಿ ನಿಲ್ಲಲಾರದಷ್ಟು ವ್ಯಸನಪಟ್ಟರು. ಅವರು ದುಃಖದಿಂದ ಮನೆಯ ಕಡೆಗೆ ಹೆಜ್ಜೆಯಿಡುವುದನ್ನು ನೋಡಿ “ರಾಯರೇ! ಶವ ಎತ್ತುವುದಕ್ಕೆ ಜನಗಳಿಲ್ಲ. ತಾವೂ ಹೋಗುವಿರೇ?” ಎಂದೆನು. + +ಮಾದಣ್ಣ : – “ನಾನು ಈಗ ಹೋಗದೆ ಉಪಾಯವಿಲ್ಲ; ಅಗತ್ಯವಾದ ಕೆಲಸವಿದೆ. ಇನ್ನೊಂದು ಸಂದರ್ಭದಲ್ಲಿ ನಾನು ಬರುತ್ತೇನೆ. ನನ್ನನ್ನು ಕ್ಷಮಿಸಬೇಕು – ಇನ್ನೊಂದು ಸಲ ನಿಜವಾಗಿ – ” + +ನಾನು ಅವರ ಕೈ ಹಿಡಿದು “ರಾಯರೇ! ನಿಮ್ಮ ಮನೆಗೆ ನಾವು ಆಗಾಗ ಬರುತ್ತಾ ಇರಬೇಕು ಎಂದು ಮನಸ್ಸಿದ್ದರೆ ತಾವು ಈಗ – ” ಎಂದು ಅಲ್ಲಿಯೇ ತಡೆದೆನು. + +ಈ ಮಾತಿನಿಂದ ಮಾದಣ್ಣನವರು ಸ್ವಲ್ಪ ಬೇನೆಗೊಂಡಂತಾಗಿ ಮರಳಿ ಬಂದರು. ಶವಸಂಸ್ಕಾರಕ್ಕೆ ವಿಳಂಬ ಮಾಡುವುದು ನ್ಯಾಯವಾಗಿರಲಿಲ್ಲ. ಪ್ಲೇಗ್ ಗುಡಿಸಲಿಗೆ ಆಧಾರವಾಗಿದ್ದ ಎರಡು ಬಿದಿರುಗಳನ್ನು ಈಚೆಗೆ ಸೆಳೆದು, ಅದನ್ನು ನಿಚ್ಚಣಿಗೆಯಂತೆ ಕಟ್ಟಿ, ಕದಳೀಪತ್ರದ ಬದಲಾಗಿ ಪಾಸ್ ಪೋರ್ಟ್ ಬೂಕುಗಳ ಪತ್ರಗಳನ್ನು ಹಾಸಿ, ಚಿತಿಯನ್ನು ಒದಗಿಸಿದೆವು. ಆ ಮೇಲೆ ನಾವು ಮೂವರು ಇಹಲೋಕದ ಚಿಂತನೆಯನ್ನು ಬಿಟ್ಟು, ನಾರಾಯಣ ಸ್ಮರಣೆಯಿಂದ ಶವವನ್ನು ಹೇಗೋ ಎತ್ತಿಕೊಂಡು, ಹತ್ತಿರದ ಸುಡುಗಾಡಿಗೆ ಹೋದೆವು, ಪುರೋಹಿತರು ಆ ಸ್ಥಾನವನ್ನು ಮೊದಲೇ ಅಲಂಕರಿಸಿದ್ದರು. ಚಿಕ್ಕತಂದೆಯವರ ಆವಶೇಷವನ್ನು ಪುರೋಹಿತರ ಹಸ್ತಕ್ಕೂ ಅಗ್ನಿಯ ಮುಖಕ್ಕೂ ಕೊಟ್ಟು ನಾವು ಈಚೆಗೆ ಸರಿದೆವು. + +ನನ್ನ ಚಿಕ್ಕತಂದೆಯವರ ಅಕಾಲಿಕ ಮರಣದ 3 ತಿಂಗಳವರೆಗೆ ನಾನು ಏನೊಂದೂ ತೊಂದರೆಗೊಳ್ಳದೆ ಇದ್ದೆನು. ಮುದ್ದಣ್ಣನು ನಮ್ಮನ್ನು ಬಿಟ್ಟುಹೋಗದೆ ನಮ್ಮೊಡನೆ ಉಳುಕೊಂಡಿದ್ದನು. ಸಕಲಾವತಿಯು ಅಕಸ್ಮಾತ್ತಾಗಿ ಅಸ್ವಸ್ಥದಲ್ಲಿ ಬಿದ್ದಳು. ಅವಳ ಕಾಯಿಲೆಯು ನೂತನ ತರದ್ದಾಗಿತ್ತು. ಅನೇಕರು ಅನೇಕ ಕಾರಣಗಳನ್ನು ಕೊಟ್ಟರು. ಒಬ್ಬರು “ಇದು ಇಷ್ಟರೋಗ; ಮಕ್ಕಳು ಹುಟ್ಟದಿದ್ದರೆ ಇದು ವಿಪರೀತವಾಗಿ ಪರಿಣಮಿಸುತ್ತದೆ” ಎಂದರು. ನಾನು ಅವರ ಮಾತನು ಕೇಳಿ ಹೆದರಿಕೆಯಿಂದ ಒಂದು ವಾರದವರೆಗೆ ಅವಳನ್ನು ಮನೆಯಲ್ಲಿಯೇ ಮುಚ್ಚಿಟ್ಟೆನು; ಪುರುಷರ ಮುಖವನ್ನು ನೋಡಬಿಡಲಿಲ್ಲ. ಕಾಹಿಲೆ ಏನೂ ಕಡೆಮೆಯಾಗಲಿಲ್ಲ. ಒಬ್ಬಿಬ್ಬರು “ಇದೆಲ್ಲಾ ನಿಮ್ಮ ಚಿಕ್ಕತಂದೆಯವರ ಉಪದ್ರ. ಅವರ ಉತ್ತರಕ್ರಿಯೆಗಳು ಸರಿಯಾಗಿ ನಡೆಯದೆ ಇದ್ದರೆ ಹೀಗಾಗಬಹುದು” ಎಂದು ಹೇಳಿದರು. ಅವರ ಮರಣದ 4 ನೆಯ ತಿಂಗಳಲ್ಲಿ ಚಿಕ್ಕತಂದೆಯವರ ಉತ್ತರಕ್ರಿಯೆಗಳನ್ನು ನಾನು ಮಾಡತೊಡಗಿದೆನು. ನಾನು ಉತ್ತರಕ್ರಿಯೆಗಳನ್ನು ಪ್ರಾರಂಭಿಸಿರುವೆನೆಂದು ಕೇಳಿ ನನ್ನ ಸ್ನೇಹಿತರಲ್ಲಿ ಕೆಲವರು “ರಾಯರೇ! ನಿಮ್ಮ ಚಿಕ್ಕತಂದೆ ಯಾರ ಮೈಮೇಲೆ ಬರುವರಂತೆ?” ಎಂದು ನನ್ನೊಡನೆ ಕೇಳುತ್ತ ನಗುಮೊಗವನ್ನು ತೋರಿಸುತ್ತಿದ್ದರು. ಮನೆಯಲ್ಲಿ ಕಾಹಿಲೆಯಿಂದ ನಾನು ‘ಆಫೀಸಿಗೆ’ ಕ್ರಮವಾಗಿ ಹೋಗುವುದು ತಪ್ಪಿತು. ಸಕಲಾವತಿಯ ದೇಹವು ಕ್ಷೀಣವಾಗುತ್ತ ಬಂತು; ‘ಆಫೀಸ್’ ಕೆಲಸವು ಉಳಿದುಳಿದು ವೃದ್ಧಿಯಾಗುತ್ತ ಹೋಯಿತು. ನಡುವಿನಲ್ಲಿ ಉಪದ್ರವವು ಮೊಳೆಯಿತು. ನಾನು ಚಿಕ್ಕತಂದೆಯವರಿಂದ 500 ರೂಪಾಯಿ ಸಾಲ ಹೊಂದಿದ್ದೆನೆಂದು ಅವರ ಉಯಿಲಿಂದ ತೋರುವುದೆಂಬುದಾಗಿ, ಉಯಿಲಿನ ಹಕ್ಕುದಾರರಾದ ಮಾದಣ್ಣನವರು ನನ್ನ ಮೇಲೆ ದಾವಾ ತಂದರು. ನನಗೆ ಉಗುರು ಹುಣ್ಣಾದ ಕಾಲಮೇಲೆ, ಒನಕೆಯು ಪೆಟ್ಟು ಬಿದ್ದಂತಾಯಿತು. + +ನಾನು ಯಥಾರ್ಥವಾಗಿ ಚಿಕ್ಕತಂದೆಯವರಿಂದ ಸಾಲ ಎತ್ತಿರಲಿಲ್ಲ. ಅವರು ಉಯಿಲಿನಲ್ಲಿ ಏನೇನು ಗೀಚಿಟ್ಟಿದ್ದರೋ ನನಗೆ ತಿಳಿದಿರಲಿಲ್ಲ. ಬಲಾಢ್ಯರಾದ ಮಾದಣ್ಣನವರು ನನ್ನ ಮೇಲೆ ಏಕೆ ಮುನಿದರೋ ನಾನು ಅರಿಯೆನು. ದಶಂಬರ 1 ನೆಯ ತಾರೀಖಿಗೆ ದಾವೆಯು ವಿಚಾರಣೆಗೆ ಇಟ್ಟಿತ್ತು. ಮೊದಲಿನ ಮುನಿಸಿಫರು ಹಳೆಯ ಅಂಗಿ, ಹರಕು ಮುಂಡಾಸು ಇಟ್ಟುಕೊಂಡರೂ, ನ್ಯಾಯಶೀಲರಾಗಿದ್ದರು; ತಾನೇ ಮೂರು ನಾಮಾ ಹಾಕಿದರೂ, ನಮ್ಮಂತಹ ಬಡವರಿಗೆ ನಾಮಾ ಹಾಕುತ್ತಿರಲಿಲ್ಲ. ಹೊಸ ಮುನಿಸಿಫರ ಮರ್ಜಿ ನನಗೆ ಗೊತ್ತಿರಲಿಲ್ಲ. ಅವರು ಇಲ್ಲಿ ಬಂದಕೂಡಲೇ ಮಾದಣ್ಣನವರ ಕ್ಷೇಮಸಮಾಚಾರವನ್ನು ಕೇಳಿದ್ದರಂತೆ; ಮಾದಣ್ಣನವರ ಮನೆಯವರೆಗೆ ಯಾತ್ರೆ ಮಾಡಿ ಬಂದಿದ್ದರೆಂದೂ ಬಾಜಾರಿನಲ್ಲಿ ವರ್ತಮಾನವಿತ್ತು. ಅವರು ಮುಂಡಾಸು ಇಟ್ಟುಕೊಳ್ಳುತ್ತಿರಲಿಲ್ಲ; ಟೊಪ್ಪಿ ಹಾಕುತ್ತಿದ್ದರು. ಇದೆಲ್ಲಾ ನನಗೆ ಸ್ವಲ್ಪ ಅಪಶಕುನವಾಗಿ ಕಂಡು ಬಂತು. ನನಗೆ ಹಾಜರಾಗಲಿಕ್ಕೆ ಕೋರ್ಟಿನ ಕಡೆಯಿಂದ ಅಪ್ಪಣೆ ಬಂದಂತೆ “ಪೂರ್ವಾನ್ಹ 10 ಘಂಟೆಗೆ ಕಮಲಪುರದ ಮುನಿಸಿಫ್ ಕೋರ್ಟಿಗೆ ವಕೀಲರೊಡನೆ ಹೋದೆನು. ಮುನಿಸಿಫರು ಅವರ ಕ್ರಮಕ್ಕೆ ಅನುಸಾರವಾಗಿ 12 ಗಂಟೆಗೆ ಬಂದರು. ಬಂದವರು ಒಳಕ್ಕೆ ಹೋಗುತ್ತಲೇ, ಅಲ್ಲಿ ಮೊದಲೇ ಬಂದಿದ್ದ ಮಾದಣ್ಣನವರು ಎದ್ದು ನಿಂತು, ಸ್ವಲ್ಪ ನಗುಮೋರೆಯಿಂದ ಸಲಾಂ ಮಾಡಿದರು. ಮುನಿಸಿಫರು ತಮ್ಮ ಟೊಪ್ಪಿಯನ್ನು ಎತ್ತಿ ತೋರಿಸಿದರು. ನನ್ನ ಎದೆಯಲ್ಲಿ ಚೂರಿ ಹಾಕಿದಂತಾಯಿತು. ಕೊಂಚ ಹೊತ್ತಿನ ಬಳಿಕ ನನ್ನ ಕಡೆಯ ವಕೀಲರು ನನ್ನ ಬಳಿಗೆ ಬಂದು, ಸ್ವಲ್ಪ ನಶ್ಯವನ್ನು ಕೇಳಿ, ಮುನಿಸಿಫರು ಮೂರು ಗಂಟೆಯವರೆಗೆ ನನ್ನನ್ನು ಕರೆಯಿಸಲಾರರು ಎಂದರು. ನಾನು ಅಲ್ಲಿಯೇ ಕಾದು ಕುಳಿತುಕೊಂಡೆನು. ಪ್ಲೇಗ್ ಹೆಣವನ್ನು ಹೊರುವುದಕ್ಕೆ ಒಬ್ಬನು ಮಾತ್ರವಿದ್ದರೆ, ಆ ಪಾಪಿಯು ಮಿಕ್ಕವರನ್ನು ಕಾದು ನಿಲ್ಲುವಂತೆ, ನಾನು ಕೋರ್ಟಿನ ಹೊರಜಗಲಿಯಲ್ಲಿ ಕಾದುಕುಳಿತೆನು. ಒಡನೆ ನನ್ನ ಕಣ್ಣಿಗೆ ಅಲ್ಲಿಯೇ ಸ್ವಲ್ಪ ಜಂಪು ಹಿಡಿಯಿತು. + +ನಾನು ಎಚ್ಚರವಾದಾಗ ಮುನಿಸಿಫರ ಗುಲ್ಲು ಕೇಳಿಸುತ್ತಿತ್ತು. ವಕೀಲರೆಲ್ಲರು ಅಲ್ಲಲ್ಲಿ ‘ಕಮಿಟಿ’ಯಾಗಿ ನಿಂತುಕೊಂಡು ಅಂತರಂಗದಲ್ಲಿ ಮಾತನಾಡುತ್ತಿದ್ದರು. ಕಕ್ಷಿಗಾರರು ಕಿಟಕಿಯ ಹಿಂದುಗಡೆಯಿಂದ ಇಣಿಕಿ ನೋಡುತ್ತಿದ್ದರು. ಗುಮಾಸ್ತರೆಲ್ಲರೂ ಬೆಪ್ಪರಂತೆ ಸುಮ್ಮನಾಗಿದ್ದರು. “ಈ ರಿಕಾರ್ಡನ್ನು ಯಾರು ತೆಗೆದರು?” “ಉಯಿಲ್ ಏನಾಯಿತು?” “ಕೋರ್ಟಿನಲ್ಲಿ ಕಳುವು” “ಉಯಿಲ್ ಎಲ್ಲಿ ಹೋಯಿತು?” ಎಂದು ಮೊದಲಾಗಿ ಹೇಳುತ್ತ ಮುನಿಸಿಫರು ಗುಮಾಸ್ತರನ್ನೆಲ್ಲಾ ಗಜರಿ ಗರ್ಜಿಸಿ ವಿಚಾರಿಸುತ್ತಿದ್ದರು. ನನ್ನ ಕಡೆಯ ವಕೀಲರು ನನ್ನ ಬಳಿಗೆ ಬಂದು, ಪುನಃ ನಶ್ಯವನ್ನು ಕೇಳಿ “ರಿಕಾರ್ಡಿನಿಂದ ಉಯಿಲ್ ಮಾಯವಾಗಿದೆ; ನಿಮಗೆ ನಂಬ್ರ ಗುಣವಾಯಿತೆಂದು ತಿಳಿಯಿರಿ” ಎಂದು ಹೇಳಿದರು. “ಸುಳ್ಳು ಉಯಿಲ್ ಕಳ್ಳರ ಕೈಲಿ.” ನಾನು ಸಂತೋಷದಿಂದ ಸಕಲಾವತಿಗೆ ತಿಳಿಸುವುದಕ್ಕೆ ಮನೆಗೆ ಓಡಿದೆನು. ದೊಡ್ಡಿಯಲ್ಲಿ ಹುಲ್ಲುಕಡ್ಡಿ ಕೊಡದೆ ಕಟ್ಟಿದ್ದ ಕೋಣವು ಬಿಡುಗಡೆ ಹೊಂದುತ್ತಲೇ ಬಾಲಯೆತ್ತಿ ಮನೆಯ ಕಡೆಗೆ ಓಡುವಂತೆ ನಾನು ಓಡಿಹೋದೆನು. + +ಮನುಷ್ಯನು ಅಲ್ಪಜ್ಞಾನಿ; ಮುಂದೇನು ಸಂಭವಿಸುವುದು ಎಂಬುದನ್ನು ಅವನ ಸಣ್ಣ ಮನಸ್ಸು ಊಹಿಸಲಾರದು. ನಾಳೆ ಆಗುವುದನ್ನು ಈ ಹೊತ್ತು ಅರಿಯದೆ ಸುಖಾಂತರಿಕ್ಷದಲ್ಲಿ ಹಾರುತ್ತಿರುವನು. ಈಸುವವನು ಮುಳುಗಿ ಸಾಯುವನೆಂದು ಅರಿಯದೆ ನೀರ ಮೇಲೆ ನಲಿಯುವನು; ಹೆಚ್ಚೇಕೆ? ಸಾಕ್ಷಾತ್ ಶ್ರೀರಾಮ ದೇವರು ಪ್ರಾತಃಕಾಲದಲ್ಲಿ ಯುವರಾಜರಾದರು. ಸಾಯಂಕಾಲದಲ್ಲಿ ವನಚರಿಯಾದರು. ನಾನು ಮಹಾ ಸಂತೋಷದಿಂದ ದಾವೆಯ ವರ್ತಮಾನವನ್ನು ಸಕಲಾವತಿಗೂ ಮುದ್ದಣ್ಣಗೂ ಹೇಳುತ್ತಿದ್ದಾಗ ‘ಪೋಲೀಸ್ ಇನ್ಸ್ಪೆಕ್ಟರೊಬ್ಬನು’ ಮನೆಯ ಜಗುಲಿಯ ಮೇಲೆ ಕಾಲಿಟ್ಟನು. ‘ಪೋಲೀಸ್ ಇನ್ಸ್ಪೆಕ್ಟರನು’ ನನ್ನ ನಮಸ್ಕಾರವನ್ನು ಸ್ವೀಕರಿಸಿ “ಅಯ್ಯಾ! ನಿಮ್ಮ ಮನೆಯನ್ನು ಜಡ್ತಿಮಾಡಬೇಕೆಂದು ಈಗ ತಾನೇ ಹುಕುಂ ಆಗಿದೆ. ರಿಕಾರ್ಡಿನಲ್ಲಿದ್ದ ಉಯಿಲನ್ನು ನೀವೇ ತಪ್ಪಿಸಿರಬಹುದೆಂದು ಸಾಕಷ್ಟು ರುಜುವಾತು ಸಿಕ್ಕಿದೆಯಾದ್ದರಿಂದ ನಿಮ್ಮ ಮನೆಯನ್ನು ಜಡ್ತಿ ಮಾಡುವುದಕ್ಕೆ ಅಪೇಕ್ಷಿಸುತ್ತೇನೆ” ಎಂದನು. ನಾನು ಅವಾಕ್ಕಾಗಿ ಅಲ್ಲಿಯೇ ನಿಂತುಬಿಟ್ಟೆನು. ‘ಪೋಲೀಸಿನವರು’ ಯಮದೂತರಂತೆ ಮನೆಯನ್ನು ಮುತ್ತಿದ್ದರು. ನಮ್ಮ ಊರಿನ ನಾಲ್ಕು ದೊಡ್ಡ ಮನುಷ್ಯರು ಅಂಗಳದಲ್ಲಿ ಆಸೀನರಾಗಿದ್ದರು. ಇವರ ಇದಿರಿಗೆ ಹೋಗಲು ನನಗೆ ಮೋರೆ ಇರಲಿಲ್ಲ. ಒಂದು ಗಂಟೆಯ ತರುವಾಯ ‘ಇನ್ಸ್ಪೆಕ್ಟರನು’ ಮುದ್ದಣ್ಣನೊಡನೆ ಹೊರಕ್ಕೆ ಬಂದನು. ನನ್ನ ಪ್ರಾಣವು ಕುತ್ತಿಗೆಗೆ ಓಡಿತು. ‘ಇನ್ಸ್ಪೆಕ್ಟರನು’ ಕೈಯಲ್ಲಿದ್ದ ಕಾಗದವನ್ನು ನಾಲ್ಕು ಜನರಿಗೆ ತೋರಿಸಿ “ಈ ಕಾಗದವನ್ನು ಮುದ್ದಣ್ಣನು ಎಲ್ಲಿಯೋ ಅಡಗಿಸಿಡುವ ಹಾಗಿದ್ದನು” ಎಂದನು. ಮುದ್ದಣ್ಣನು ಹೆದರಿಹೆದರಿ “ಇಲ್ಲ ಸ್ವಾಮಿ! ಆ ಕಾಗದವು ಚಿಕ್ಕತಂದೆಯವರು ಮಾಡಿದ ಉಯಿಲು. ಅದನ್ನು ಇದ್ದಲ್ಲಿಯೇ ಇಡಬೇಕೆಂದಿದ್ದೆನು” ಎಂದು ಅಂಗಲಾಚಿ ಹೇಳಿದನು. ‘ಇನ್ಸ್ಪೆಕ್ಟರನು’ ನನ್ನ ಕೈಹಿಡಿದು “ನಿಮ್ಮ ಮನೆಯಲ್ಲಿ ಉಯಿಲು ಸಿಕ್ಕಿತು. ನಿಮ್ಮ ಮೇಲೆ ರುಜುವಾತು ಬಲವಾದುದರಿಂದ ನಿಮ್ಮನ್ನು ಕೈದು ಮಾಡಿರುವೆನು” ಎಂದು ಹೇಳಿದರು. ನನ್ನ ಎದೆಗೆ ಗುಂಡು ಹೊಡೆದಂತಾಯಿತು. ನಡುಕು ನನ್ನ ಮೈಮೀರಿ ಹೋಯಿತು. ನಾನು ನಿರುಪಾಯನಾಗಿ “ಪೋಲೀಸ್ ಲೊಕಪ್ಪಿನಲ್ಲಿ” ಬೀಳಬೇಕಾಯಿತು. + +ನಿರಪರಾಧಿಯಾದ ನಾನು ನಾಲ್ಕನೆಯ ಸಲ ‘ಜೈಲಿಗೆ’ ಹೋಗಬೇಕಾಯಿತು. ನಾಲ್ಕನೆಯ ಸಲವೂ ನನಗೆ ತಾನಾಗಿ ಬಿಡುಗಡೆಯಾಯಿತು. + +ಮರುದಿನ 10 ಗಂಟೆಯಹೊತ್ತಿಗೆ ಪೋಲೀಸ್ ಜಮೇದಾರನು ಬಂದು “ವರ್ಗವಾಗಿ ಹೋದ ಹಳೆಯ ಮುನಿಸಿಫರು ಈ ಉಯಿಲ್ ಪತ್ರವನ್ನು ಕಾರಣಾಂತರದಿಂದ ಭದ್ರವಾದ ಪೆಟ್ಟಿಗೆಯಲ್ಲಿ ಇಟ್ಟಿರುವರೆಂದು ಈ ಹೊತ್ತು ತಾನೆ ತಂತೀ ಮೂಲಕ ವರ್ತಮಾನ ಬಂದಿರುವುದರಿಂದ, ನಿಮ್ಮನ್ನು ಬಿಡುಗಡೆ ಮಾಡಬೇಕು ಎಂದು ಹುಕುಂ ಬಂದಿದೆ” ಎಂದು ಹೇಳಿ ನನ್ನನ್ನು ಬೆನ್ನು ತಟ್ಟಿ ನಗಾಡುತ್ತಾ ಮನೆಗೆ ಕಳುಹಿಸಿದನು. + + + +15 ದಿನಗಳ ನಂತರ ನಂಬ್ರವು ಪುನಃ ವಿಚಾರಣೆಯಾಯಿತು. ಎರಡು ಉಯಿಲಿನ ಕಾಗದಗಳೂ ಮುನಿಸಿಫರ ಕೈಯಲ್ಲಿದ್ದವು. ಒಂದು ಮತ್ತೊಂದರ ಪ್ರತಿಯಾಗಿತ್ತು. ಎರಡರಲ್ಲಿಯೂ ತನ್ನ “ಸ್ಥಿರಚರ ಸೊತ್ತು ಸರ್ವಾದಿಯನ್ನು ಬಸವನ ಗುಡಿ ಮುದ್ದಣಗೆ” ಎಂದು ಚಿಕ್ಕತಂದೆಯವರು ಬರೆದಿದ್ದರು. ನಮ್ಮ ಚಿಕ್ಕತಂದೆಯವರ ಹಸ್ತಾಕ್ಷರವು ಗ್ರಂಥಲಿಪಿಯಾದುದರಿಂದ, ಮಾದಣ್ಣಗೋ ಮುದ್ದಣ್ಣಗೋ ಎಂಬ ವಿವಾದಕ್ಕೆ ಆಸ್ಪದವಾಯಿತು. ಇಬ್ಬರ ತಂದೆಯ ಹೆಸರನ್ನೂ ಉಯಿಲಿನಲ್ಲಿ ಹೇಳಿರಲಿಲ್ಲ. ಇಬ್ಬರಿಗೂ ಬಸವನಗುಡಿ ಎಂಬ ಕುಲನಾಮವಿತ್ತು. ಇದೂ ಅಲ್ಲದೆ ಅದರಲ್ಲಿ ಅಕ್ಷರ ಪರಿಶೋಧನೆಯ ಒಗಟುಗಳು ಹಲವಿದ್ದುವು. ಕೆಲವರು ಒಂದು ಎಡೆಯಲ್ಲಿ ಚಿನ್ನ ಮಾರಿದ್ದು ಎಂದು ಓದಿದರು; ಕೆಲವರು ಅದನ್ನೇ ಜನ್ನ ಮಾಡಿದ್ದು ಎಂದು ಅರ್ಥಿಸಿದರು. ದ್ವಯಾರ್ಥದ ಪದಗಳೂ ಕೇವಲವಿದ್ದುವು. ಮನೆ ಕೊಟ್ಟದ್ದು ಎಂದೂ ಮನೆಕೊಟ್ಟದ್ದು (ಕೊಟ್ಟ ರೋಗ) ಎಂದೂ ಬೇಕುಬೇಕಾದ ಹಾಗೆ ವ್ಯಾಖ್ಯಾನವನ್ನು ಮಾಡಿದರು. ಇದನ್ನೆಲ್ಲಾ ಪರಿಶೋಧಿಸುವುದಕ್ಕೆ ಮದ್ರಾಸಿನ ‘ಸ್ವೊಲ್ಲೋ ಪೇ’ ಎಂಬ ಸಾಹೇಬರ ಬಳಿಗೆ ಕಳುಹಿಸಿದರು. ಇವರು ಈ ಶಬ್ದಗಳಿಗೆ ಅರ್ಥವ್ಯಕ್ತಿವನ್ನು ಕೊಟ್ಟು ಕಳುಹಿಸಿದರು. ಇವರ ಹೇಳಿಕೆಯ ಪ್ರಕಾರ ಉಯಿಲಿನಲ್ಲಿ ಮುದ್ಯಣ್ಣ, ಜನ್ನ ಮದ್ದಿದ್ದು, ಮನೆ ಕಾಟದ್ದು ಎಂದು ನಿಷ್ಕರ್ಷೆಯಾಯಿತು. ಈ ವ್ಯಾಖ್ಯಾನದ ಪ್ರಕಾರ ಹಣವೆಲ್ಲಾ ಸರಕಾರಕ್ಕೆ ಹೋಯಿತು. “ಸ್ವೊಲ್ಲೋ ಪೇ” ಸಾಹೇಬರು ಈ ಉಯಿಲಿನ ಲಿಪಿಯ ಆಧಾರದಿಂದ “ಡ್ರೆವಿಡಿಯನ್ ಪೆಲಿಯೋಗ್ರೆಫಿ” ಎಂಬ ಪುಸ್ತಕವನ್ನು ಬರೆದು ಮಹಾವಿದ್ವಾಂಸರೆನ್ನಿಸಿಕೊಂಡರು. ಚಿಕ್ಕತಂದೆಯವರ ಉಯಿಲಿಂದ ಕೋರ್ಟ್ ಗುಮಾಸ್ತನಿಗೆ ಒಂದು ದಿನದ ಮಟ್ಟಿಗಾದರೂ ‘ಸಸ್ಪೆಂಡ್’ ಆಯಿತು; ಮಾದಣ್ಣನವರಿಗೆ ಒಂದು ಹೊತ್ತಿನ ಮಟ್ಟಿಗಾದರೂ ಸಂಕಷ್ಟವಾಯಿತು; ನನಗೆ ಒಂದು ರಾತ್ರಿ ಮಟ್ಟಿಗಾದರೂ ಸೆರೆಯು ಪ್ರಾಪ್ತವಾಯಿತು. + +(ಸುವಾಸಿನಿ 1900 – 03) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_397.txt b/Kenda Sampige/article_397.txt new file mode 100644 index 0000000000000000000000000000000000000000..4904d7cbfc01fac5436e04a76402c14c68a04793 --- /dev/null +++ b/Kenda Sampige/article_397.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|Apr 28, 2019|ವಾರದ ಕಥೆ,ಸಾಹಿತ್ಯ| 0 Comments + +”ಮನೆಯ ಬಾಗಿಲಿಗೆ ಅಗುಣಿ ಹಾಕಿದರೂ, ಕಿಟಕಿಯ ಕಡೆಯಿಂದ ಒಳನುಗ್ಗಬಹುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಚಿಕ್ಕ ಮನೆಗೆ ಬಂದು, ಅಲ್ಲಿಂದ ಬೀಗದ ಕೈಗಳನ್ನು ಕಳುವು ಮಾಡಿ, ಪೆಟ್ಟಿಗೆಯಲ್ಲಿರುವ ಒಡವೆ ಗಂಟನ್ನು ಮೆಲ್ಲಗೆ ಎತ್ತಿಕೊಂಡು ಅಡಗಿಸಿಟ್ಟು…” + +byಕೆಂಡಸಂಪಿಗೆ|Apr 22, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಒಂದು ಕಳೆದು ಹೋದ ಪ್ರೇಮವೋ ಅದೇ ತರಹದ ಇನ್ನಾವುದೋ ಕೋಮಲ ಭಾವ ಎಲ್ಲಾ ಹೃದಯದಲ್ಲಿ ಇರುವ ಕಾರಣದಿಂದಲೇ ಈ ಹಾಡುಗಳು ನಮ್ಮೆಲ್ಲರ ಹಾಡು ಕೂಡ. ಮೊದಲೇ ಹೇಳಿದಂತೆ ಈ ಕವನಗಳಲ್ಲಿನ ಸ್ಥಾಯಿ ಭಾವ ‘ಪ್ರೇಮ’. ಪ್ರೇಮದ ಹಂಬಲ, ವಿರಹ, ಸಾಂಗತ್ಯದ ಬಯಕೆ, ಅದರ ನಂತರ ಲಭಿಸುವ ಸಂತೃಪ್ತಿ ಇಲ್ಲವೇ ಶೂನ್ಯ.” + +byಎಚ್ ಆರ್ ರಮೇಶ್|Apr 21, 2019|ವಾರದ ಕಥೆ,ಸಾಹಿತ್ಯ| 0 Comments + +“‘ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿಯೇ ಸಂಬಂಧಗಳ ನಿಜ ಮುಖ ದರ್ಶನವಾಗೋದು’ ಮತ್ತೆ ಮುಂದುವರೆಸಿ, ‘ಅಮ್ಮನಿಗೆ ಹೀಗೆ ಅಂದಳಲ್ಲ. ನೀವ್ಯಾರು ಸರಿಯಿಲ್ಲ. ನೀವೆಲ್ಲ ಸಂಬಂಧಗಳ ಹಾಳುಮಾಡೋರು. ನಾನು ಎಲ್ಲರನ್ನೂ ನೋಡಿದೀನಿ. ಮಂಜುಗೆ, ಹೋಗಿನೀವು ಇಲ್ಲದ ಹಳೆಯ ಕತೆಗಳನ್ನು ಹೇಳುವುದು ಬೇಡ ಎಂದಳು.” + +byಆರ್. ವಿಜಯರಾಘವನ್|Apr 15, 2019|ದಿನದ ಪುಸ್ತಕ,ಸಾಹಿತ್ಯ| 2 Comments + +“ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ…” + +byಡಾ. ಬಿ. ಜನಾರ್ದನ ಭಟ್|Apr 14, 2019|ವಾರದ ಕಥೆ,ಸಾಹಿತ್ಯ| 0 Comments + +“ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹೆಂಡತಿಯು ಜೀವದಿಂದುಳಿಯುತ್ತಿದ್ದಿಲ್ಲ. ಹಗಲೆನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ, ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ….” + +byಕೆಂಡಸಂಪಿಗೆ|Apr 8, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ತನ್ನನ್ನು ಹೆಣ್ಣಾಗಿಸಿರುವ, ಆಗಿಸುತ್ತಿರುವ ಲೋಕದ ಮೌಲ್ಯಗಳ ಜೊತೆಗೆ ಜಗಳವಾಡದೆ ತಾನು ‘ಅದಲ್ಲದ’ ಅಸಮ್ಮತಿಯನ್ನು ದಾಖಲಿಸುವ ವಿಧಾನ ಈ ಕವಿತೆಗಳಲ್ಲಿ ‘ನೆಲದ ಮರೆಯ ನಿದಾನ’ದಂತೆ ಹುದುಗಿಕೊಂಡಿದೆ. ಆದರೆ ಹೀಗೆ ಹೆಣ್ಣು ತನ್ನ ಜೀವದಂಬಲವನ್ನು ಗಂಡು ಅರಿಯಬೇಕು…” + +byಬೇಲೂರು ರಘುನಂದನ್|Apr 7, 2019|ವಾರದ ಕಥೆ,ಸಾಹಿತ್ಯ| 0 Comments + +“ತಾತನ ಮಾತುಗಳನ್ನು ಕೇಳಿದ ಪಮ್ಮಿ ‘ಹಾಗಾದರೆ ನೀನೂ ಕೂಡಾ ಅಮ್ಮನ ತರಹ ಯಾರಿಗೂ ಹೇಳದೆ ನೋವನ್ನು ತಡೆದುಕೊಳ್ಳುತ್ತೀಯಾ’ ಎಂದು ಕೇಳಿದಳು. ‘ಹೌದು ಪಮ್ಮಿ, ಒಂದೊಂದು ಸಲ ನೋವು ತಡ್ಕೋತೀನಿ ಇನ್ನೂ ಕೆಲವು ಸಲ ನೋವು ಮರೆಯೋಕೆ ಮನದುಂಬಿ ಹಾಡು ಹೇಳುತ್ತೀನಿ. ಹಾಡು ಕೇಳಿ ಕೆಲವರು ದುಡ್ಡು ಹಾಕುತ್ತಾರೆ.” + +byಅಬ್ದುಲ್ ರಶೀದ್|Apr 1, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ…..” + +byಡಾ. ಬಿ. ಜನಾರ್ದನ ಭಟ್|Mar 31, 2019|ವಾರದ ಕಥೆ,ಸಾಹಿತ್ಯ| 0 Comments + +“ಇಂದಿನ ಅವನ ವರ್ತನೆಯನ್ನು ನೋಡಿದೊಡನೆಯೇ ನಾಗಣ್ಣನು ಏನೋ ಕಿತಾಪತಿಗೆ ಹೊರಟಿದ್ದಾನೆಂದು ಅವರಿಗೆ ದೃಢವಾಯಿತು. ಅಂತೂ ಗುಪ್ತ ಪೋಲೀಸನೊಬ್ಬನು ದೂರದಿಂದ ಅವನನ್ನು ಅನುಸರಿಸತೊಡಗಿದನು. ಇದನ್ನು ಕಂಡು ನಾಗಣ್ಣನು ಮನಸ್ಸಿನಲ್ಲೇ ನಕ್ಕು ನೆಟ್ಟಗೆ ಪಂಚಮಾಲಿಗೆ ಹೋಗಿ ಅಕ್ಕಿ ಧಾರಣೆ ಕೇಳಿದ; ಸರಾಫಕಟ್ಟೆಗೆ ನಡೆದು ಪವನಿಗೆ ಕ್ರಯ ಮಾಡಿದ” \ No newline at end of file diff --git a/Kenda Sampige/article_398.txt b/Kenda Sampige/article_398.txt new file mode 100644 index 0000000000000000000000000000000000000000..2ac3338b33e99cff65be80e403d1be08c05a0f0a --- /dev/null +++ b/Kenda Sampige/article_398.txt @@ -0,0 +1,39 @@ + + +ತಟ್ಟಿಯಲ್ಲಿ ಕಟ್ಟಿದ ಕರು ಒಂದೇ ಸಮನೇ ಅಂಬಾ ಕೂಗುತ್ತಲೇ ಇತ್ತು. ತಾಯಿಯನ್ನು ಮೇಯಲು ಬಿಟ್ಟು ಕರುವನ್ನು ಕಟ್ಟಿ ಹಾಕಲು ಮಗಳು ಸಣ್ಣುಗೆ ಹೇಳಿ ಕುಶಲಿ ಕೆಲಸಕ್ಕೆ ಹೋಗಿದ್ದಾಳೆ. ಉಗಾದಿ ಆಗಿಂದ ಏನಾದರೊಂದು ನೆವ ತೆಗೆದು ತಕರಾರು ಮಾಡುತ್ತಿದ್ದಾನೆ. ಆತನಿಗೆ ನಾಲ್ಕೇಟು ಬಾರಿಸಲೇ ಎನ್ನುವಷ್ಟು ಕೋಪ ಬಂದರೂ ಸಣ್ಣು ತಡೆದುಕೊಂಡೇ ಆತನನ್ನು ಓಲೈಸುತ್ತಿದ್ದಾಳೆ. ‘ಅಂವ ಸಣ್ಣವ, ಅರಿಯದ ಕೂಸು’ ಆಗಾಗ ಅವ್ವ ಹೇಳುತ್ತಲೇ ಇರುತ್ತಾಳೆ. + +ಅವ್ವ ಬರುವ ಮುನ್ನ ಅಂಗಳವನ್ನೆಲ್ಲಾ ಸಾರಿಸಿಡಬೇಕು. ‘ಇಂವನ ಕಾಟ ಬ್ಯಾರೆ’. ಗಂಜಿ ಬೇಯಿಸಲಿಟ್ಟಿದ್ದು ಹದ ಬೆಂದಿಲ್ಲ. ಅದಾದ್ರೂ ಆಗಿದ್ರೆ ಉಗಾದಿಗೆ ಬಡಿಸಿ ಆತನ ಮಲಗಿಸಬಹುದಿತ್ತು. “ಅಕ್ಕಾ ಬಡಿಸ್ತಿಯೇನೇ? ಹಚಿವ್ಯಾತಿದೆ. ತಿನ್ನುಕೆ ಏನಾರು ಕುಡೇ” ನಾಲ್ಕರ ಪೋರ ಪದೇ ಪದೇ ಆಕೆಯ ಪೀಡಿಸುತ್ತಿದ್ದರೆ, ಹನ್ನೆರಡರ ಬಾಲೆ ಸರಿಯಾಗಿ ಹೊತ್ತದ ಒಲೆಯನ್ನು ಪುರ್ ಪುರ್ ಎಂದು ಊದುತ್ತ, ಸ್ವಲ್ಪ ಹೊತ್ತಿದೊಡನೆ ಚರಿಗೆ ಹಿಡಿದು ಬಾವಿಯಿಂದ ಕೊಡ ನೀರು ಸೇದು ತಂದು ಕಲ್ಲಿನ ಬಾನಿ ತುಂಬಿಸುತ್ತಿದ್ದಾಳೆ. + +ಉಗಾದಿ ಹೊಟ್ಟೆಹಿಡಿದು ಪದೇಪದೇ ಹಸಿವೆಂದು ಗೊಣಗುತ್ತ, ಅಳಲು ಶುರು ಮಾಡಿದ. ಆಕೆಗೆ ಬೇರೆ ಉಪಾಯಗಾಣಲಿಲ್ಲ. ಅರೆಬರೆ ಬೆಂದ ಗಂಜಿಯ ತಟ್ಟೆಗೆ ಸುರಿದು ಉಪ್ಪು ಮೆಣಸು ನುರಿದು ಕೊಟ್ಟಳು. ಉಗಾದಿ ಮೃಷ್ಟಾನ್ನದಂತೆ ಚಪ್ಪರಿಸತೊಡಗಿದ. + +“ಮಗಾ, ಬೈಸರಿಗೆ ದ್ಯಾವ್ರ ಮೆರವಣಿಗೆ ಬರುದು, ಆಂಗಳಾ ಚೆಗಣಿ ಹಾಕ್ ಬಗೀಲೆ ಸರ್ಸಿಡು ಆಗಾ.”. ಎಂದು ಅವ್ವ ಹೇಳಿದ್ದು ನೆನಪಾಯ್ತು ಆಕೆಗೆ. + +“ಉಗಾದಿ ಇಕಾ ಇಲ್ಲೆ ಉಣ್ತೆ ಕುತ್ಕಂಡಿರು, ನಾ ಅಂಗ್ಳಾ ಸರ್ಸುಕೆ ಸೆಗಣಿ ತಗಂಬತ್ತಿ, ಏನಾ? ಮತ್ತಿಲ್ಲರೂ ಹೋಗ್ವೆ ಮತ್ತೇ? ಆವ್ವಿಗೆ ಹೇಳ್ತಿ ನೋಡು!” ಸಣ್ಣು ಸಣ್ಣಗೆ ಆತನಿಗೆ ಹೆದರಿಸಿ ಸೆಗಣಿಬುಟ್ಟಿ ಹಿಡಿದು ತಟ್ಟಿ ಕಡೆ ನಡೆದಳು. ನೋಡಿದರೆ ತಟ್ಟಿಯಲ್ಲಿ ಸೆಗಣಿ ಇಲ್ಲ. ಗೊಬ್ಬರಕುಳಿ ಕೆದಕುವುದೆಂದರೆ ಆಕೆಗೆ ಹೇಸಿಗೆ. ಇಷ್ಟುದ್ದದ್ದ ಗೊಬ್ಬರ ಹುಳುಗಳು ಅದರಲ್ಲೆಲ್ಲಾ ಮಿಡುಕಾಡುವುದು ಕಂಡರೆ ಆಕೆಗೆ ಮೈಮೇಲೆಲ್ಲಾ ಮುಳ್ಳುಗಳೇಳುತ್ತವೆ. ಹಂಗೇ ಬಯಲಿಗೆ ಹೋದರೆ ಅಷ್ಟುದ್ದಕ್ಕೂ ಸಾಕಷ್ಟು ಕೊಂಚ ಒಣಗಿದ ಸೆಗಣಿ ಸಿಗುವುದು. + +ಸಣ್ಣು ತಡಮಾಡಲಿಲ್ಲ. ತನ್ನ ಮಾಸಿದ ಲಂಗವ ಎತ್ತಿ ಸೊಂಟಕ್ಕೆ ಸಿಕ್ಕಿಸಿಕೊಂಡು ಕಳೆಬೆಳೆದ ಬಯಲಿನಗುಂಟ ನಡೆದಳು. ಅಲ್ಲಲ್ಲಿ ಬಿದ್ದ ಸೆಗಣಿ ಉಂಡೆಗಳ ಎತ್ತಿ ಬುಟ್ಟಿಗೇರಿಸತೊಡಗಿದಳು. “ಅಕ್ಕೋ, ಬ್ಯಾಗೇ ಬಾರೇ… ಮನಿಕಡೆ ಯಾರೋ ಬಂದಿರು” ಉಗಾದಿ ಕರೆಯುತ್ತಿದ್ದ. ಮನೆಹೊರಗಿನ ಕಲ್ಲುಮರಿಗೆಯ ನೀರಲ್ಲಿ ಕೈಕಾಲು ತೊಳೆದು ಬಂದವಳಿಗೆ ಒಮ್ಮೆಲೆ ಆತನ ಕಂಡು ನಾಚಿಕೆಯಾಯ್ತು. ಅವ ಆಕೆಯ ಶಾಲೆಯ ಗೆಳತಿ ಸುವರ್ಣಳ ಅಣ್ಣ. ಸುವರ್ಣಳ ಅಕ್ಕನ ಮದುವೆ ಗೊತ್ತಾಗಿದೆ ಎಂದು ಆಕೆ ಹೇಳಿದ್ದು ನೆನಪಾಯ್ತು. ಬೇಗಬೇಗ ಬುಟ್ಟಿ ಮನೆ ಹಿಂದೆ ಇಟ್ಟು ಬಂದವಳಿಗೆ ಲಗ್ನ ಪತ್ರಿಕೆ ಕೊಟ್ಟು, ಒಂದು ಮುದ್ದಾದ ನಗೆಯನ್ನೆಸೆದು ಮದುವೆಗೆ ಬರುವಂತೆ ಸಹಜವಾಗಿ ಹೇಳಿ ಹೋದ ಆ ಹುಡುಗ. ಸಣ್ಣುವಿನ ಕಣ್ಣುಗಳಲ್ಲೋ ಮಾಯಕದ ಪೊರೆ ಅವಳಿಗರಿವಿಲ್ಲದೇ ಕಟ್ಟಿಕೊಂಡಿತು. ಮದುವೆಗೆ ಹೋಗುವ ಆಶೆ ಬೆಟ್ಟದಂತೆ ಬೆಳೆಯತೊಡಗಿತು. + +‘ಉಗಾದಿ ಉಂಡ್ಕಂಡೀ ಮಲಿಕಾ, ಹಾ ಏನಾ…. ಅಲ್ಲಿ ಕಂಬಳಿ ಇತ್ತ ನೋಡಾ. ಚಾಪೆ ಹಾಕಂಡಿ ಮಲಿಕಣೋ, ಚುರುಕ ಇಂವಾ ಅಂದ ಹೇಳ್ಬೇಕ್ ನೋಡು ಯಾರರೂವಾ. ನಾ ಸೆಗಣಿ ಹಾಕಿ ಬತ್ತಿ. ಅವ್ವಿ ಬರುವಂಕ್ರಿಗೆ ಸೆಗಣಿ ಸರ್ರ್ಸಿಡುಕೆ ಹೇಳಿದು, ನಾ ಸರ್ರ್ಸಿಕಂಡೇರ್ವೆ. ಕಡೀಗೀ ಮಿಂದೆ ಬಂದ್ ಉಣ್ವೆ, ಮೈಯೆಲ್ಲಾ ಗಲೀಜಾಗೀದು.” ಎನ್ನುತ್ತಾ ಸಣ್ಣು ಅಂಗಳಕ್ಕಿಳಿದಳು. + +ಬುಟ್ಟಿಯಿಂದ ತೊಪ್ಪನೆ ಅಂಗಳಕ್ಕೆ ಸೆಗಣಿ ಸುರಿದ ರಭಸಕ್ಕೆ ಬಾಯಿವರೆಗೂ ಹಾರಿದ ಸೆಗಣಿಯನ್ನು ಕೈಯಿಂದ ಒರೆಸಿಕೊಂಡು, ನೀರು ಹಾಕಿ ಕಾಲಿನಿಂದ ತೊಪತೊಪನೆ ಗುದ್ದಿ ಸೆಗಣಿಯನ್ನು ತೆಳ್ಳಗೆ ಪಾಯಸದಂತೆ ಹದ ಮಾಡಿದಳು. ಕೈಯಲ್ಲಿ ಹಿಡಿಸೂಡಿ ಹಿಡಿದು ಮಣ್ಣು ಎದ್ದಲ್ಲೆಲ್ಲಾ ಮೆತ್ತಿಮತ್ತಿ ಹಾಕತೊಡಗಿದಳು. ಕರಿ ಸೆಗಣಿಯಲ್ಲಿ ಅದ್ದಿ ನಿಂತ ತನ್ನ ಕಪ್ಪುಕಾಲುಗಳು ಇಂದೇಕೋ ಬೆಳ್ಳಬೆಳ್ಳಗೆ ಕಾಣುತ್ತಿರುವುದು ಸೆಗಣಿಯನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿತು. ಮತ್ತೊಮ್ಮೆ ಮದುವೆಗೆ ಹೋಗುವುದಕ್ಕಾಗಿ ಮನ ಕುಣಿಯಿತು. ಆದರೆ ಮದುವೆಗೆ ಹೋಗಲು ತನ್ನಲ್ಲಿ ಯಾವ ಬಟ್ಟೆಯೂ ಇಲ್ಲ. ಮತ್ತೀಗ ತಾನು ದೊಡ್ಡವಳಾಗಿರುವೆ. ಲಂಗ ರವಿಕೆ ಇದ್ದರೆಷ್ಟು ಚೆನ್ನಾಗಿರುತ್ತಿತ್ತು. ಏನು ಮಾಡಲಿ ಎನ್ನುವ ಯೋಚನೆಗೆ ಆಕೆಗೆ ತಟ್ಟನೇ ಹೊಳೆದದ್ದು ಅಮೋಘಳ ಜರಿ ಲಂಗ ರವಿಕೆ. + +ಅಷ್ಟು ದೂರಕ್ಕೆ ಕಣ್ಣು ಹಾಯಿಸಿದಳು. ರಾಮದಾಸ ನಾಯಕರ ಮನೆಬಳಿಗೆ ತಂತಿ ಮೇಲೆ ಹರಹಿದ ರಾಶಿ ಬಟ್ಟೆಗಳು ಕಣ್ಣು ಕುಕ್ಕಿದವು. ಆ ಎಲ್ಲ ಬಟ್ಟೆಗಳ ನಡುವೆ ಅದೊಂದು ಮೊನ್ನೆ ಗಣಪತಿ ಹಬ್ಬದ ಮಾರನೆ ದಿನ ನಾಯಕರ ಒಬ್ಬಳೇ ಮಗಳು ಅಮೋಘ ಹಾಕಿಕೊಂಡು ಬಂದಿದ್ದಳು. ಆಕೆ ಪಕ್ಕದೂರಿನಲ್ಲಿ ಕಲಿಯುತ್ತಿದ್ದಾಳೆ. ತನ್ನಮ್ಮ ಆಕೆಯನ್ನು ನೋಡಿ ಮೆಚ್ಚಿ ಹೇಳುತ್ತಿದ್ದ ಮಾತು ಕಿವಿಯಲ್ಲಿ ಊದಿದಂತಾಗುತ್ತಲೇ ಇರುತ್ತದೆ. “ಆತಕಾಲಕ್ಕೆ ಬೋತಕಾಲಕ್ಕೆ [ಆಗೊಮ್ಮೆ ಈಗೊಮ್ಮೆ]ಬತ್ತೀದು ಮಗಾ. ಪಾಪ. ಅದೆಂಥಕೇ ಹಾಕಿರೇನೋ? ಬ್ಯಾರೇ ಕಡೀಗೆ ಕಲಿಯುಕೆ? ಇಲ್ಲಿ ಇಲ್ಲೂ ಇಲ್ಲಾಗೀತೇ ಶಾಲಿ? ಆ ಮಗಾ ಪಾಪ ಇಡೀ ದೀನೇ ಓದ್ತಿರದು. ಇಲ್ಲಿಗೇ ಬಂದ್ರೂ ಹಾ..” ಎಂದು ಕೊಂಡಾಡಿದಾಗೆಲ್ಲ ತನಗೇಕೆ ಕೋಪಬರುವುದೆಂದು ಆಕೆಗೆ ಗೊತ್ತಿಲ್ಲ. ಆದರೂ ಆ ಬಟ್ಟೆ ತೊಟ್ಟ ದಿನ ಆಕೆ ಎಷ್ಟೊಂದು ಕಳೆ ಕಳೆಯಾಗಿ ಕಾಣುತ್ತಿದ್ದಳು. ಕುಂಕುಮ ಬಣ್ಣದ ಜರಿ ಲಂಗ, ತೆಳುಬಂಗಾರದ ಬಣ್ಣದ ರವಿಕೆ ಮೇಲೊಂದು ಸೆರಗು, ಹೊದ್ದ ಆಕೆ ಆ ದಿನ ಥೇಟ್ ಸಿನಿಮಾ ಹಿರೋಯಿನ್ ಹಾಗೆ ಕಂಡಿದ್ದಳು. ಲಂಗ ತುಸು ಎತ್ತಿಹಿಡಿದು ಆಕೆ ನಡೆಯುತ್ತಿದ್ದರೆ ಜರಿಲಂಗದ ಸುತ್ತ ಇದ್ದ ನವಿಲುಗಳ ಚಿತ್ತಾರ ತಾನಾಗಿಯೇ ಎದ್ದು ಆಡಿದಂತೆ ಕಾಣಿಸುತ್ತಿತ್ತು.ಆ ಲಂಗ ರವಿಕೆ ನನ್ನದಾಗಿದ್ದರೆ, ನಾನೂ ಹಾಗೇ….. + +“ಅಕ್ಕೋ. ಯಾಕೆನೋ ಹೊಟ್ಟೀಲಿ ಕಲಸದಂಗ್ಹೆ ಆತೀದೂ. ಬಯಲಕಡಿಗೆ ಹೋತಿನೇ”…. ಎನ್ನುತ್ತಾ ಉಗಾದಿ ಚೆಂಬು ಹಿಡಿದು ಹೊರಟೇ ಬಿಟ್ಟ. ಸಣ್ಣು ಬೇಗ ಬೇಗನೇ ಸೆಗಣಿ ಹಾಕತೊಡಗಿದಳು. ಸೆಗಣಿ ಹಾಕಿದ ದಿನವೆಲ್ಲ ಮಳೆಗೆ ಹೊಟ್ಟೆಕಿಚ್ಚು ಬಂದಂತೆ ಒಮ್ಮೆ ಹನಿಸಿ ಹೋಗುವುದು ಸಾಮಾನ್ಯ. ಆಗಲೇ ಕರಿ ಮೋಡಗಳು ಬಾನಲ್ಲಿ ಒಟ್ಟಾಗತೊಡಗಿದ್ದವು. + +ಮತ್ತೆ ಸಣ್ಣು ಆ ವಠಾರದೆಡೆಗೆ ದೃಷ್ಟಿ ಬಿಟ್ಟಳು. ಆ ಲಂಗ ಕಾಣುತ್ತ… ಹೇಗಾದರೂ ಸರಿ, ಒಮ್ಮೆ ತೊಟ್ಟುಕೊಳ್ಳದೇ ಇರಲಾರೆ. ಲಂಗ ಆಕೆಯದ್ದಾದರೇನು? ಅದೆಷ್ಟು ಸಲ ಆಕೆಯ ಅಮ್ಮ ನನ್ನವ್ವ ತಂದ ಪಳದಿಗೆ ಹಾಕುವ ಜುಮ್ಮನಕಾಯಿಯನ್ನು ಬೇಡಿಪಡೆದಿಲ್ಲ. ತಾನು ಲಂಗ ಬೇಡಿದರಾಯಿತು. ಆದರೆ ಆಕೆ ಕೊಡದೇ ಹೋದರೆ? ಆಕೆಯ ಅಪ್ಪ ಬೈದು ಹಂಗಿಸಿದರೆ? ಬೇಡ. ಎಂದುಕೊಂಡಳು. + + + +ಮನಸ್ಸು ನಿಲ್ಲುತ್ತಿಲ್ಲ. ಸೆಗಣಿ ಹಾಕಿಯಾಗಿತ್ತು. ಕೈಕಾಲು ತೊಳೆದುಕೊಂಡಳು. ನಿಧಾನವಾಗಿ ತಮ್ಮ ಮನೆಯ ಪಕ್ಕಕ್ಕೆ ಇರುವ ರಾಮದಾಸ ನಾಯಕರ ಮನೆ ಕಡೆ ಪಾಗಾರದ ಹತ್ತಿರ ಬಂದಳು. ರಜಾ ದಿನವಾದ ಕಾರಣ ದೊಡ್ಡ ಮನೆಯ ಜನವೆಲ್ಲ ಟಿ.ವ್ಹಿ. ನೋಡುತ್ತಲೋ, ಅಥವಾ ಗಡದ್ದಾಗಿ ನಿದ್ರಿಸುತ್ತಲೋ ಇರುವುದು ಆಕೆಗೆ ಗೊತ್ತು. ಕೆಲವೊಮ್ಮೆ ಸಿನೇಮಾ ನೋಡಲು, ಧಾರವಾಹಿ ನೋಡಲು ಆಗಾಗ ಹೋಗುತ್ತಿದ್ದ ಮನೆ ಅದು.ತಮ್ಮ ವಠಾರದ ಮೂಲೆಯಲ್ಲಿ ಗೇರುಗಿಡಕ್ಕೆ ತಗುಲಿಸಿಟ್ಟ ಕೊಕ್ಕೆ ತೆಗೆದುಕೊಂಡಳು. ಸದ್ದು ಮಾಡದಂತೆ ಕಳ್ಳ ಹೆಜ್ಜೆಯಲ್ಲಿ ತಂತಿ ತೂಗುತ್ತಿದ್ದಲ್ಲಿ ಬಂದವಳಿಗೆ ನಾಲಿಗೆಯ ಪಸೆಯಾರಿತ್ತು. ಪಾಗಾರದ ಈಚೆ ತಲೆಯನ್ನು ಮರೆ ಮಾಡಿಕೊಂಡೇ ಒಮ್ಮೆ ಲಂಗಕ್ಕೆ ಕೊಕ್ಕೆ ಹಾಕಿದಳು. ಒಂದೇ ಎಳೆತಕ್ಕೆ ಲಂಗ ತಂತಿಯಿಂದೆದ್ದು ಬಂದೇಬಿಟ್ಟಿತು. ಯಾರೂ ನೋಡುತ್ತಿಲ್ಲವೆಂದು ಖಾತ್ರಿಯಾದೊಡನೇ ಆಚೀಚೆ ನೋಡದೇ ಲಂಗವನ್ನು ಮುದ್ದೆಯಾಗುವಂತೆ ಮಡಚಿಕೊಂಡು ಕಂಕುಳಲ್ಲಿಟ್ಟುಕೊಂಡಳು. ಕೊಕ್ಕೆಯನ್ನು ಯಥಾವತ್ತಾಗಿ ಮೊದಲಿದ್ದ ಜಾಗೆಗೆ ಮುಟ್ಟಿಸಿ, ಓಡೋಡಿ ಮನೆಗೆ ಬಂದಳು. + +ಎದೆಯೊಳಗೆ ಗುಟುಕು ನೀರಿರಲಿಲ್ಲ. “ಏ ಸಣ್ಣು ಇದೇನೇ ಮಾಡ್ತೀವೆ, ಯಾರಾರೂ ನೋಡಿ ಹೇಳಕುಟ್ರೆ ಏನ ಮಾಡ್ವೇ? ಮಳ್ಳ ಹಿಡದಿದೆಯೇನೇ?” ಒಳಮನಸ್ಸು ನುಡಿಗೊಡುತ್ತಿದ್ದರೂ ಆಕೆ ಕೇಳುವ ಸ್ಥಿತಿಯಲ್ಲಿರಲಿಲ್ಲ. ಮನೆಯೊಳಗೆ ಹೋಗಲು ಇಷ್ಟವಾಗಲಿಲ್ಲ. ಜೋಪಡಪಟ್ಟಿ ಮನೆಯ ಮುಂದೆ ತೆಂಗಿನ ಗಿಡದ ಬುಡದಲ್ಲಿ ಹಳ್ಳದಿಂದ ತಂದ ಹಾಸುಗಲ್ಲು ಹಾಸಿ ಸುತ್ತೆಲ್ಲಾ ತೆಂಗಿನ ಸೋಗೆ ಹೆಣೆದು ಕಟ್ಟಿದ ಬಡವರ ಮನೆಯ ನಾಣಿಗೆ ಮನೆ. ಆ ಕಡೆ ಹೋದಳು. ನಾಣಿಗೆ ಕಲ್ಲಿನ ಮೇಲೆ ಬಂದು ನಿಂತು ಸಮಾಧಾನಿಸಿಕೊಂಡಳು. ಬಟ್ಟೆ ತೊಡಬೇಕೆನ್ನಿಸಿತು. ಆದರೆ ಮೈಯೆಲ್ಲಾ ಸೆಗಣಿಯ ವಾಸನೆ ಬಡಿಯುತ್ತಿದೆ. ಏನು ಮಾಡೋಣ? ಮಿಂದು ಆಮೇಲೆ ಹಾಕಿನೋಡಬೇಕು ಎಂದೆನ್ನಿಸಿತು. ಆದರೆ ಅಷ್ಟರಲ್ಲಾಗಲೇ ತಡವಾಗಿದೆ. ತಂದೆತಾಯಿ ಬರುವ ಹೊತ್ತು. ಒಮ್ಮೆ ಹೀಗೆ ಹಾಕಿಕೊಂಡು ನೋಡುವೆ ಎನ್ನುತ್ತಾ ತನ್ನ ಹಳೆಯ ಲಂಗ ಬಿಚ್ಚಿ ಜರಿ ಲಂಗ ತೊಟ್ಟಳು. ಆನಂದ ಉಮ್ಮಳಿಸಿ ಬರುತ್ತಿತ್ತು. “ಅಂಯ್ಯ…. ಒಂದ ಕನ್ನಡಿನರೂ ಇದ್ರೆ, ನೋಡ್ಕಂತಿದ್ದೆ.” ಎನ್ನುತ್ತಾ ಒಮ್ಮೆ ಸುತ್ತ ಜೋರಾಗಿ ತಿರುಗಿದಳು. ನವಿಲುಗಳು ತನ್ನ ಮೊಣಕಾಲ ಮೇಲೆ ಕುಣಿದಂತೆ ಅನ್ನಿಸಿತು. + +ಆದರೆ ಆ ಜೋರಿಗೆ ಕಾಲಿನ ಹಿಮ್ಮಡಿ ನಾಣಿಗೆಗೆ ಹಾಸಿದ ಎರಡು ಹಾಸುಗಲ್ಲಿನ ನಡುವಿನ ಸಂದಿನಲ್ಲಿ ಸಿಕ್ಕಿಬಿಟ್ಟಿತು. ವಿಪರೀತ ಗಾಬರಿಯಾಗಿ ಉಲ್ಟಾ ತಿರುಗಿದಳು. ಕಾಲು ಒಳಗೆ ಮುರಿದಂತೆ ಅನ್ನಿಸಿತು, ಹೊರಬರುತ್ತಿಲ್ಲವೆಂದು ಜೋರಾಗಿ ಎಳೆದ ರಭಸಕ್ಕೆ ಎಳೆಎಲುಬು ಲಟಕ್ ಎಂದಿತು. ಶರೀರವೀಡಿ ನೋವು ಸಂಚರಿಸಿದಂತೆ ಸಣ್ಣು ನೋವುತಾಳದೇ “ಅಂಯ್ಯ.. ಅವ್ವಾ.. ಸತ್ತೇಂ..” ಎಂದು ಬೊಬ್ಬಿರಿಯುವಂತೆ ಕೂಗಬೇಕೆಂದುಕೊಂಡವಳು ಮೈಮೇಲಿನ ಲಂಗದ ನೆನಪಾಗಿ ಬಾಯಿತೆರೆದರೂ ಸದ್ದು ಹೊರಬಿಡಲಿಲ್ಲ. ಕಣ್ಣುಗಳಿಂದ ಧಾರಾಕಾರ ನೀರು ಸುರಿಯುತ್ತಿತ್ತು. ಹಾಗೇ ಲಗುಬಗೆಯಿಂದ ಲಂಗವನ್ನು ಹೇಗೋ ಮಾಡಿ ಕಳೆದಳು. ಹಳೆಯ ಲಂಗ ತೊಟ್ಟುಕೊಳ್ಳುತ್ತಿದ್ದಂತೆ ಅವ್ವನ ದನಿ ಕೇಳಿಬಂತು.. “ ಇಬೂ, ಸಣ್ಣುನೇಯಾ ಇಟ್ ಚೆಂದಾಗಿ ಸೆಗಣಿ ಹಾಕೀದು. ಇಳಗುತ್ತಿ ಅಂದ್ಕಂಡ್ರೇ ನನ್ನ ಮಗಳು ಈಗೇ ಹುಷಾರಾಗಿದು. ಮಗಾ ಎಲ್ಲಿಂವ್ಯೇ?” ಎಂದು ಕರೆಯುತ್ತಿದ್ದರೆ, ಸಣ್ಣು ಓಗೊಡಲಿಲ್ಲ. ಕುಶಲಿ ಆಚೀಚೆ ಹುಡುಕತೊಡಗಿದಳು. + +ಅಪ್ಪನ ದನಿ “ಇಲ್ಲೇ ಎಲ್ಲೋ ಆಡುಕೇ ಹೋಗಿರೇನಾ… ಉಗಾದಿನೂ ಕಾಣುಕಲಾ” ಎನ್ನುತ್ತಾ ನಾಣಿಗೆಯ ಕಡೆಯೇ ದ್ವನಿ ಹತ್ತಿರವಾದಂತೆ ಅನ್ನಿಸಿತು. ನಾಣಿಗೆಗೆ ಮರೆಮಾಡಲೆಂದು ಕಟ್ಟಿದ ತೆಂಗಿನ ಸೋಗೆಯ ತೂತುಗಳಿಂದ ಕಣ್ಣು ಹಾಯಿಸಿದಳು. ಆತ ನಾಣಿ ಕಡೆಗೆ ಬರುತ್ತಿದ್ದ. ಆಕೆ ತಡಮಾಡಲಿಲ್ಲ. ನೋವಿನ ಉಸಿರಿಗೆ ಕೈಅದುಮಿ ಹಿಡಿದುಕೊಂಡು ಒಂದೇ ಗುಪ್ಪಿಗೆ ಬಚ್ಚಲಿಂದ ಕೊಟ್ಟಿಗೆ ಹಿಂದಿನ ಗೊಬ್ಬರ ಕುಳಿಯ ಹತ್ತಿರ ಬಂದಿದ್ದಳು. ಬಾಯಿಮುಚ್ಚಿ ಅಳುತ್ತಲೇ ಗೊಬ್ಬರ ಕುಳಿಯಲ್ಲಿ ಕೈಯಿಂದಲೇ ಬೆದಕಿ ಕೆದರಿ ಸಣ್ಣಹೊಂಡ ಮಾಡಿದಳು. ಗೊಬ್ಬರ ಹುಳುಗಳು ಮಿಡುಕಾಡಿ ಹೊರಬರುತ್ತಿದ್ದರೆ ಬೆಳಿಗ್ಗೆ ಚಾ ಜೊತೆ ತಿಂದ ಬಟರು ಹೊರಬರುವಂತೆ ವಾಕರಿಕೆ ಬರುತ್ತಿತ್ತು. ಆದರೆ ಅದನ್ನು ನೋಡುತ್ತಾ ಕುಳಿತರೆ ಆಗದೆಂದು ಕೈತಾಗುತ್ತಲೆ ಮಿಣಿಮಿಣಿ ಎನ್ನುವ ದಪ್ಪಹುಳುಗಳ ಮುಟ್ಟಿಮುಟ್ಟಿಯೇ ಅದೆಷ್ಟು ಬೇಗ ಹೊಂಡ ಬಗೆದಳೆಂದರೆ ನಿಮಿಷಾರ್ಧದಲ್ಲಿ ಚೆಂದದ ಜರಿ ಲಂಗ ಆ ಹೊಂಡದಲ್ಲಿ ಮುದುರಿ ಕುಳಿತಿತು. ಅದರ ಮೇಲೆ ಯಾರಿಗೂ ಊಹೆ ಬರದಂತೆ ಪುನಃ ಕೊಳೆತ ಗೊಬ್ಬರದ ಉಂಡೆಗಳು ಪೇರಿಸಲ್ಪಟ್ಟವು. ಪಸೆಯಾರಿದ ನಾಲಗೆಯನ್ನು ತುಟಿಯಿಂದ ಸವರುತ್ತಾ, ನೋವಿಗೆ ಉಕ್ಕುತ್ತಿರುವ ಕಣ್ಣೀರು ಒರೆಸಿಕೊಳ್ಳುತ್ತಾ ಕುಂಟುತ್ತಾ ನಾಣಿಗೆಗೆ ಬಂದಳು. ನಾಣಿಗೆ ಕಡೆಯೇ ಬರುತ್ತಿದ್ದ ಅಪ್ಪ ಮಳೆಯ ಸುಣುಕು ಸಿಕ್ಕಂತಾಗಿ ಮನೆಕಿಬಳಿಗೆ ಸೌದೆ ಜೋಡಿಸತೊಡಗಿದ್ದನ್ನು ನೋಡಿದಳು. ಈಗ ಅಪಾದಮಸ್ತಕ ನೋವು ಹಿಂಡಲಾರಂಭಿಸಿದಂತೆ ತಡೆಯಲಾಗಲಿಲ್ಲ. + + + +“ಅವ್ವಾ … ನಾ ಸತ್ನೇ… ಅವ್ವಾ.. ಕಾಲು ಉರಿಯಾತೀದೆ.. ಅವ್ವೋ..” ಅನ್ನುತ್ತಾ ಬಚ್ಚಲಿನ ಕಲ್ಲಿನ ಮೇಲೆ ಕುಸಿದು ಕುಳಿತಳು. ಮಕ್ಕಳಿಬ್ಬರೂ ಆಡಲು ಹೋಗಿರಬಹುದೆಂದು ಗೃಹಿಸಿದ ಹೆತ್ತವರು ಒಮ್ಮೆಲೆ ಎದ್ದ ಪ್ರಲಾಪಕ್ಕೆ ಬೆಚ್ಚಿಬಿದ್ದರು. ಓಡೋಡಿ ಬಂದರು. ಆಕೆಯ ಎತ್ತಿ ಉಪಚರಿಸತೊಡಗಿದರು. ಉಗಾದಿಯೂ ಖಾಲಿತಂಬಿಗೆ ಹಿಡಿದು ಬಂದವನು ಅಕ್ಕನ ಆರ್ತನಾದ ನೋಡಿ ಅಳತೊಡಗಿದ.ಗೊಬ್ಬರ ಗುಂಡಿಯಲ್ಲಿ ಚೆಂದದ ಲಂಗದ ಒಳಗೆ ಗೊಬ್ಬರ ಹುಳುಗಳು ಗೂಡುಕಟ್ಟುತ್ತಿದ್ದರೆ, ಸಣ್ಣುವಿನ ಹಿಮ್ಮಡಿಯ ಗಂಟು ಊದುತ್ತಾ ಹೋಗುತ್ತಿತ್ತು. + +ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ) \ No newline at end of file diff --git a/Kenda Sampige/article_399.txt b/Kenda Sampige/article_399.txt new file mode 100644 index 0000000000000000000000000000000000000000..ee6cb3760791ebae5a1f1297c8f9e3e0be3a33e7 --- /dev/null +++ b/Kenda Sampige/article_399.txt @@ -0,0 +1,151 @@ + + +“ನೀನು ಯಾವಾಗಾದರೂ ಬಾ, ಇಲ್ಲೇನೂ ನಿಂತುಹೋಗುವುದಿಲ್ಲ,” ಕೋಪದಿಂದ ಹೇಳಿ ತಂಗಿಯ ಫೋನ್ ಕಟ್ ಮಾಡಿ ಪಕ್ಕಕ್ಕಿಡುತ್ತಿದ್ದರೆ ಆ ಜ್ಯೋತಿ ನೆನಪಿಗೆ ಬಂದಳು. + +ಅವತ್ತು ನಮ್ಮ ಅಂಗಡಿಗೆ ಬಂದಿದ್ದಾಗ ಬಿಟ್ಟರೆ ಆಕೆಯನ್ನು ಎಲ್ಲೂ ನೋಡಿದಂತಿಲ್ಲ. ತಾನು ಮಾತ್ರ ಆ ದಿನ ಬಹಳ ಪರಿಚಿತಳಂತೆ ನಗುತ್ತಾ, “ಅದೇನಣ್ಣಾ, ಹೊಸದಾಗಿ ನೋಡುತ್ತಿದ್ದೀಯ. ನಮ್ಮದು ಎಮುಡಾಲ ಅಲ್ಲವಾ. ತಿಪ್ಪಾರ ಗಡ್ಡೆಯಲ್ಲೇ ಇರೋದು. ನಿಮ್ಮ ಸಿರಿಸಿಲ್ಲ ಮಾರ್ಕೆಟ್ ನಲ್ಲೇ ಕೊತ್ತಂಬರಿ ಮಾರುತ್ತೇನೆ. ನೀನು ಎಷ್ಟು ಸಲ ನನ್ನ ಬಳಿ ಚೌಕಾಶಿ ಮಾಡಿ ಕೊಂಡುಕೊಂಡಿಲ್ಲ,” ಎಂದಳು. + +ನನಗೆ ಅವಳನ್ನು ನೋಡಿದ ನೆನಪು ಬರಲಿಲ್ಲ, “ಹೌದಾ?” ಎಂದು ತಲೆಯಾಡಿಸುತ್ತ ದಿಟ್ಟಿಸಿ ನೋಡಿದೆನು. + +ಅವತ್ತು ಎಂಗಿಲಿಪೂಲ ಬತುಕಮ್ಮ ಹಬ್ಬ. ಇಮಿಟೇಷನ್ ರೇಷ್ಮೆಸೀರೆ, ಮ್ಯಾಚಿಂಗ್ ಬ್ಲೌಸ್ ಪೀಸ್ ತೆಗೆದುಕೊಂಡು ನಮ್ಮ ಟೈಲರ್ ಅಂಗಡಿಗೆ ಬಂದಳು. ಡಿಸೈನ್ ಬುಕ್ ಎದುರಿಗಿಟ್ಟೆ. ಸೆಲೆಕ್ಟ್ ಮಾಡಿಕೊಂಡಳು. ಬ್ಲೌಸಿಗೆ ಮಗ್ಗದ ವರ್ಕ್ ಮಾಡಿಸಿ, ಬಾಕ್ಸ್ ನೆಕ್ ಇಟ್ಟು ಅಲ್ಲಲ್ಲಿ ಸಣ್ಣ ಕನ್ನಡಿಗಳಿಟ್ಟು ಹೊಲಿಯಲು ಹೇಳಿದಳು. ಸೀರೆಗೆ ಮಾತ್ರ ಕಂಪ್ಯೂಟರ್ ಎಂಬ್ರಾಯಿಡರ್ ವರ್ಕ್ ಮಾಡಿ ದೊಡ್ಡ ಕನ್ನಡಿಗಳು, ಅಂಚುಗಳಿಗೆ ನಕ್ಕಿಗಳು ಮತ್ತು ಚಂದನ ಫಾಲ್ ಹಾಕುವಂತೆ ಹೇಳಿದಳು. + +ದೊಡ್ಡ ಗಿರಾಕಿಯೇ. ಮಾಮೂಲಿ ದಿನಗಳಾಗಿದ್ದರೆ ಕಣ್ಮುಚ್ಚಿಕೊಂಡು ತೆಗೆದುಕೊಳ್ಳುತ್ತಿದ್ದೆ. ಬತುಕಮ್ಮ ಹಬ್ಬದ ಸೀಸನ್, ಈಗಾಗಲೇ ಜಾಸ್ತಿ ಬಟ್ಟೆಗಳಿವೆ. ಸಣ್ಣ ಸಣ್ಣ ಬದಲಾವಣೆಗಳನ್ನು ಹೇಳಿದರೂ ಒಪ್ಪಿಕೊಳ್ಳಲಿಲ್ಲ. ಅದಕ್ಕೇ ಯಾವಾಗ ಬೇಕೆಂದು ಕೇಳಿದೆ. + +ಆಕೆ ಹೊಳೆವ ಕಣ್ಣುಗಳಿಂದ ನನ್ನತ್ತ ನೋಡಿ, “ಯಾವಾಗಲೋ ಆದರೆ ಈಗೇಕೆ ಬರುತ್ತಿದ್ದೆ. ಸದ್ದುಲ ಬತುಕಮ್ಮ ಹಬ್ಬದ ದಿನಕ್ಕೇ ಬೇಕು,” ಅಣ್ಣಾ ಎಂದಳು.ನನಗೆ ಕೋಪಬಂದಿತು. ‘ಊಂ.. ಸದ್ಯ.. ನಾಳೆಯೇ ಬೇಕೆನ್ನುತ್ತಿಲ್ಲ. ಎಲ್ಲರೂ ಹಬ್ಬ ಇಂದು ನಾಳೆ ಎನ್ನುವಾಗ ಬಂದು ಒಳ್ಳೊಳ್ಳೆ ಡಿಸೈನ್ ಬೇಕೆನ್ನುತ್ತಾರೆ. ಹೇಗಾಗುತ್ತದೆ,’ ಎಂದುಕೊಳ್ಳುತ್ತ ಆಕೆಗೆ, “ಹಬ್ಬಕ್ಕಾದರೇ ಕೊಡಲಾಗುವುದಿಲ್ಲ. ಬೇರೆ ಎಲ್ಲಾದರೂ ಹೊಲಿಸಿಕೋ,” ಎಂದೆ. + +ಆಕೆ ಮುಖ ಸಪ್ಪಗೆ ಮಾಡಿ, “ನೀನು ಬಿಟ್ಟರೆ ಈ ಊರಿನಲ್ಲಿ ನನಗೆ ಯಾರೂ ಗೊತಿಲ್ಲ ಅಣ್ಣಾ. ಸದ್ದುಲ ಬತುಕಮ್ಮ ಹಬ್ಬದಂದು ಕಸೂತಿ ಮಾಡಿದ ಬಟ್ಟೆ ತೊಟ್ಟುಕೊಳ್ಳಬೇಕೆಂಬುದು ಎಷ್ಟೋ ವರ್ಷಗಳ ಆಸೆ. ಏನಾದರೂ ಒಂದು ಕಾರಣಕ್ಕೆ ಕೂಡಿಟ್ಟ ಹಣ ಖರ್ಚಾಗುತ್ತಿದೆ. ಹಾಗಾಗಬಾರದೆಂದು ಈ ಬಾರಿ ಸೇಟು ಕಡೆಗೇ ಹಣ ಬಿಟ್ಟಿದ್ದೆ. ಅವನು ಇವತ್ತು ಬಾ, ನಾಳೆ ಬಾ ಎಂದು ಸತಾಯಿಸಿ ಸತಾಯಿಸಿ ಇವತ್ತು ಕೊಟ್ಟಿದ್ದಾನೆ. ನೀನು ಆಗುವುದಿಲ್ಲವೆಂದರೆ, ಹಣ ಕರೆಂಟು ಮೋಟರಿಗೇ ಖರ್ಚಾಗಿಬಿಡುತ್ತದೆ. ಇನ್ನು ನನ್ನ ಜೀವನದಲ್ಲಿ ಇಷ್ಟು ಒಳ್ಳೆ ಸಮಯ ಬರುವುದಿಲ್ಲ,” ನೋವಿನಿಂದ ಹೇಳಿದಳು. + +ಅದೆಲ್ಲ ನನಗೆ ಗೊತ್ತಿಲ್ಲ, ಆಗಲ್ಲ ಅಂದ್ರೆ ಆಗಲ್ಲವೆಂದು ಖಚಿತವಾಗಿ ಹೇಳೋಣವೆಂದು ನೋಡಿದಾಗ, ಆಕೆ ದೀನವಾಗಿ ಕೇಳಿಕೊಳ್ಳುವಂತೆ ನನ್ನತ್ತ ನೋಡಿದಳು. ನನ್ನ ಮೇಲೆ ಸಾಕಷ್ಟು ನಂಬಿಕೆಯಿಟ್ಟು ಬಂದಹಾಗಿದ್ದಳು, ನನಗೂ ಪಾಪವೆನಿಸಿತು. + +ಸ್ವಲ್ಪಹೊತ್ತು ಯೋಚಿಸಿ, “ಸದ್ದುಲ ಬತುಕಮ್ಮ ಹಬ್ಬದ ಹಿಂದಿನ ದಿನ ಸಂಜೆ ಐದಾರು ಗಂಟೆಗೆ ಕೊಡುತ್ತೇನೆ. ಅದಕ್ಕೆ ಅರ್ಧ ಗಂಟೆ ಮೊದಲು ಕೇಳಿದರೂ ಆಗುವುದಿಲ್ಲ,” ಎಂದೆ. + +ಅದೇ ಮಹಾಭಾಗ್ಯವೆಂಬಂತೆ ನಕ್ಕು, “ಸರಿ ಅಣ್ಣಾ. ಅವತ್ತು ಹೇಗಿದ್ದರೂ ಮಾರ್ಕೆಟ್ಟಿಗೆ ಬರುತ್ತೀನಲ್ಲವಾ. ಸಂಜೆ ಹೋಗುವಾಗ ತೆಗೆದುಕೊಂಡು ಹೋಗುತ್ತೇನೆ, ಆದರೆ ಚೆನ್ನಾಗಿ ಹೊಲಿಯಬೇಕು. ನನ್ನ ಅಕ್ಕ ಅದನ್ನು ನೋಡಿ ಹೊಟ್ಟೆ ಉರಿದುಕೊಳ್ಳಬೇಕು. ನಿನ್ನ ಬದುಕಿಗೆ ಕಸೂತಿ ಬಟ್ಟೆಗಳಾ ಎಂದು ಗೇಲಿ ಮಾಡುತ್ತಾಳೆ” ಎಂದಳು. + +ಕೇಳಿದರೆ ಹೇಳುತ್ತಿದ್ದಳೇನೋ, ನನಗೇಕೆ ಆ ರಗಳೆ ಎಂದು, ‘ಅಕ್ಕ ಯಾರು, ಏನು ಎತ್ತ,’ ಎಂದು ನಾನು ಕೇಳಲಿಲ್ಲ.ಬಿಲ್ ಬುಕ್ ತೆಗೆಯುತ್ತ ಹೆಸರು ಕೇಳಿದೆ. + +“ಜ್ಯೋತಿ,” ಎಂದು ಹೇಳಿದಳು. + +“ನನ್ನ ತಂಗಿಯ ಹೆಸರೇ. ಅವಳನ್ನೂ ಎಮುಡಾಲಕ್ಕೇ ಕೊಟ್ಟಿದ್ದೇವೆ,” ಎನ್ನುತ್ತ್ತಾ, ಆಕೆ ಕೊಟ್ಟ ಆರು ನೂರು ರೂಪಾಯಿ ತೆಗೆದುಕೊಂಡು ಚೀಟಿ ಹರಿದುಕೊಟ್ಟೆ. ಅದೇ ದಿನ ಸೀರೆಯನ್ನು ಎಂಬ್ರಾಯಿಡರಿಗೆ, ಬ್ಲೌಸ್ ನ್ನು ಮಗ್ಗದ ಕೆಲಸಕ್ಕೆ ನೀಡಿದೆ. + +ಸದ್ದುಲ ಬತುಕಮ್ಮ ಹಬ್ಬ ಇನ್ನೂ ಎಂಟುದಿನ ಇದೆ. ನಾನು ಕೆಲಸದವರಿಗೆ ಅರ್ಜೆಂಟ್ ಮಾಡಿ ನಾಲ್ಕು ದಿನಕ್ಕೇ ಕೊಡಲು ಹೇಳಿದೆ. ಹೇಳಿದಂತೆಯೇ ತಂದು ಕೊಟ್ಟರು. ಆ ದಿನವೇ ಬ್ಲೌಸ್ ಹೊಲಿದು ಯಾವಾಗ ಬಂದರೂ ಕೊಡೋಣವೆಂದು ರೆಡಿಯಾಗಿ ಕವರಿನಲ್ಲಿ ಹಾಕಿಟ್ಟೆ. + +ಅಮ್ಮನಿಗೆ ಹುಷಾರಿಲ್ಲದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರಿಂದ ನೆನ್ನೆ ಅಂಗಡಿ ತೆಗೆಯಲಿಲ್ಲ. ಇವತ್ತು ಅಂಗಡಿ ತೆಗೆಯುತ್ತಿದ್ದಂತೆ ಆಕೆಯ ಕವರು ಕಾಣಿಸಿತು. ‘ಇವತ್ತು ಏಳನೇ ದಿನ, ನಾಳೆ ಬಂದು ತೆಗೆದುಕೊಂಡು ಹೋಗುವಳೇನೋ,’ ಎಂದುಕೊಂಡೆ. + +ಆಗಲೇ ನನ್ನ ತಂಗಿಯ ಫೋನ್. ತೆಗೆಯಬಾರದೆಂದುಕೊಂಡವನು ತೆಗೆದೆ. + +“ಅಣ್ಣಾ.. ಅಮ್ಮನಿಗೆ ಹೇಗಿದೆ. ನಿನ್ನೆ ಆಸ್ಪತ್ರೆಗೆ ಹೋಗಿದ್ದಿರಂತೆ,” ಕೇಳಿದಳು. + +ನನಗೆ ಕೋಪ ಬಂದಿತು. “ಹೇಗಿದ್ದಾಳೆಂದು ಕೇಳುತ್ತಿದ್ದೀಯ. ಒಮ್ಮೆ ಬಂದು ನೋಡಿಕೊಂಡು ಹೋದರೆ ತಪ್ಪಾ. ಸತ್ತಮೇಲೆ ಅಮ್ಮಾ ಎಂದು ಅಳುತ್ತಾ ಬರುತ್ತೀಯಾ. ಅವಳೇನೋ, ‘ನನ್ನ ಮಗಳು ಮಗಳು..’ ಎಂದು ಕನವರಿಸುತ್ತಾಳೆ,” ವ್ಯಂಗ್ಯಮಾಡುತ್ತ ಹೇಳಿದೆ. + +“ಏನು ಮಾಡೋದಣ್ಣಾ… ನಿನ್ನೆ ಮಳೆಗೆ ಪೂರ್ತಿ ಹತ್ತಿ ನೆನೆದುಹೋಗಿದೆ. ಈ ಬಾರಿಯಾದರೂ ಸ್ವಲ್ಪ ಸಾಲ ತೀರುತ್ತದೆ ಎಂದುಕೊಂಡೆ. ಎಲ್ಲ ಹಾಳಾಯಿತು. ಜೀವನ ತುಂಬಾ ಕಷ್ಟವಾಗಿದೆ..” ಇನ್ನೂ ಏನೋ ನೋವು ಹೇಳುವವಳಿದ್ದಳು. + +ಯಾವಾಗಲೂ ಹೀಗೇ.. ಫೋನ್ ಮಾಡುವುದೇ ತಡ, ಇಷ್ಟುದ್ದ ರಾಮಾಯಣ ತೆಗೀತಾಳೆ. + +ಕಿರಿಕಿರಿಯೆನಿಸಿ ನಾನು ಮಧ್ಯಕ್ಕೇ ತಡೆದು, “ಊಂ.. ನಿನಗೆ ಯಾವಾಗ ಬಾಧೆಯಿಲ್ಲ ಹೇಳು. ಒಮ್ಮೆ ಭತ್ತ ನೆನೆಯಿತು ಎನ್ನುತ್ತೀಯ. ಇನ್ನೊಮ್ಮೆ ಪೈರು ಒಣಗಿತು, ಮತ್ತೊಮ್ಮೆ ಮೋಟರ್ ಸುಟ್ಟುಹೋಯಿತು, ಮಗದೊಮ್ಮೆ ಆರೋಗ್ಯ ಸರಿಯಿಲ್ಲ ಎನ್ನುತ್ತೀಯ,” ಎಂದೆ. + +ಏನಂದುಕೊಂಡಳೋ ಅಳುವ ಧ್ವನಿಯಲ್ಲಿ, “ಇವತ್ತು ಸದ್ದುಲ ಬತುಕಮ್ಮ ಹಬ್ಬ ಅಲ್ಲವಾ ಅಣ್ಣಾ. ನಾಳೆ ಬರುತ್ತೀನಿ,” ಎಂದಳು. + +“ಸರಿ, ನಿನಗಿಷ್ಟ ಬಂದಾಗ ಬಾ,” ಎನ್ನುತ್ತ ಫೋನ್ ಕಟ್ ಮಾಡಿದೆ. + +ಅಗೋ.. ಈಗ ನಾನು ಕೋಪದಿಂದ ಫೋನ್ ಕಟ್ ಮಾಡಿ ಪಕ್ಕಕ್ಕೆ ಇಡುತ್ತಿದ್ದಾಗ ತಕ್ಷಣ ಆಕೆ ನೆನಪಾದಳು. ‘ಅರೇ.. ಎಂಥ ಕೆಲಸ ಆಯಿತು ಪಾಪ.. ಎಮುಡಾಲ ಊರಿನಲ್ಲಿ ಹಬ್ಬ ಇವತ್ತೇ,’ ಎಂದುಕೊಂಡು ಟೈಮ್ ನೋಡಿದೆ. ಹನ್ನೆರಡು ದಾಟಿತ್ತು. + +ಎಲ್ಲ ಊರಿನಲ್ಲಿ ಸದ್ದುಲ ಬತುಕಮ್ಮ ಒಂಭತ್ತು ದಿನಗಳಾದರೆ ಎಮುಡಾಲದಲ್ಲಿ ಏಳು ದಿನ ಮಾತ್ರ ಮಾಡುತ್ತಾರೆ. ಎಮುಡಾಲಕ್ಕೆ ತನ್ನ ಮಗಳನ್ನು ಕೊಟ್ಟಿದ್ದ ರಾಜನೊಬ್ಬ ಮಗಳು ತನ್ನೂರಿಗೆ ಹಬ್ಬಕ್ಕೆ ಬರಲೇಬೇಕೆಂಬ ಕಾರಣದಿಂದ ಎಮುಡಾಲದಲ್ಲಿ ಏಳನೇ ದಿನವೇ ಸದ್ದುಲು ಮಾಡಬೇಕೆಂದು ಆದೇಶ ಹೊಡಿಸಿದನಂತೆ. ಆಗಿನಿಂದ ಅದೇ ಸಂಪ್ರದಾಯವಾಯಿತು. + +ನನ್ನ ಮನಸ್ಸಿಗೆ ಬಹಳ ಬೇಸರವಾಯಿತು. ‘ಪಾಪ. ತನ್ನಿಷ್ಟದಂತೆ ಹೊಲಿಸಿಕೊಂಡಿದ್ದಾಳೆ. ನಿನ್ನೆ ಎಷ್ಟು ಬಾರಿ ತಿರುಗಿಹೋದಳೋ.. ಸದ್ದುಲ ಬತುಕಮ್ಮನಿಗೆ ಅಂದರೆ ನಾನು ಒಂಭತ್ತು ದಿನಗಳಲ್ಲವಾ, ಹಣ ಹೊಂದಿಸಿಕೊಂಡಮೇಲೆ ಬರುತ್ತಾಳೆ ಬಿಡು’ ಎಂದುಕೊಂಡೆ. ಇನ್ನು ಎರಡು ಸಾವಿರದ ನಾಲ್ಕು ನೂರು ಕೊಡಬೇಕು. ಕೆಲವರು ಹಬ್ಬ ಮುಗಿದರೂ ಬಟ್ಟೆ ತೆಗೆದುಕೊಂಡುಹೋಗಲು ಬರುವುದಿಲ್ಲ. ಬಂದರೂ ದುಡ್ಡು ಕೊಡುವಾಗ ಕಿರಿಕಿರಿ ಮಾಡುತ್ತಾರೆ. ನನ್ನದೇ ತಪ್ಪೆನ್ನುತ್ತಾರೆ. ಹಾಗೆ ತೆಗೆದುಕೊಂಡು ಹೋಗದೆ ಬಿಟ್ಟಿರುವ ಬಟ್ಟೆಗಳು ನನ್ನ ಬಳಿ ಸಾಕಷ್ಟಿವೆ. + +‘ಅಯ್ಯೋ ದೇವರೇ… ಇವತ್ತು ಕೊಡದಿದ್ದರೆ ನಾನು ಮುಳುಗಿಹೋಗುತ್ತೇನೆ. ಪಟ್ಟ ಕಷ್ಟವೆಲ್ಲ ವ್ಯರ್ಥವಾಗುತ್ತದೆ. ಎಮುಡಾಲ ಎಷ್ಟು ದೂರವಿದೆ, ಅರ್ಧ ಗಂಟೆಗೆಲ್ಲ ಹೋಗಿಬರಬಹುದು. ಹೋದರೆ ಮನೆಗೆ ಬಂದು ಕೊಟ್ಟುಹೋದನೆಂಬ ಹೆಸರಿರುತ್ತದೆ ಮತ್ತು ನನ್ನ ಹಣ ನನಗೆ ಬರುತ್ತದೆ. ಆಕೆ ನೆಂಟರಿಗೋ ಅಕ್ಕಪಕ್ಕದವರಿಗೋ ನನ್ನ ಬಳಿಯೇ ಹೊಲಿಸಿಕೊಳ್ಳುವಂತೆ ಹೇಳುತ್ತಾಳೆ,’ ಎಂದುಕೊಳ್ಳುತ್ತ ಷಟರ್ ಎಳೆದು ಕೆಳಗೆ ಬಂದು ಗಾಡಿಹತ್ತಿದೆ. + +ಆಗಲೇ ವೀರೇಶಂ ನಿಂದ ಫೋನ್. ಮಗಳ ಮದುವೆಗೆ ಬಟ್ಟೆ ಹೊಲಿಸಿದ್ದಾನೆ. ನಾಳೆಯೇ ಮದುವೆ. ಈ ದಿನವೇ ಮುಖ್ಯ ಶಾಸ್ತ್ರಗಳು ಆರಂಭವಾಗುತ್ತದೆ. ನಿನ್ನೆಯಿಂದ ಫೋನ್ ಮಾಡುತ್ತಿದ್ದಾನೆ. ಮತ್ತೆ ಮೇಲೆ ಹತ್ತುವುದು ಕಷ್ಟವೆನಿಸಿತು. + +“ಅಯ್ಯೋ, ಐದು ನಿಮಿಷ ಮೊದಲು ಫೋನ್ ಮಾಡಿದ್ದರೆ ಚೆನ್ನಾಗಿರುತ್ತಿತ್ತು. ಕೆಳಗೆ ಬಂದಿದ್ದೇನೆ, ಒಂದು ಅರ್ಧ ಗಂಟೆ ಬಿಟ್ಟು ಬಾ.” ಫೋನ್ ಕಟ್ ಮಾಡಿ ಗೇರ್ ಬದಲಾಯಿಸಿದೆ. ಊರು ಬೇಗ ದಾಟಿದೆನಾದರೂ ಚಂದ್ರಂಪೇಟೆಗೆ ಬಂದಮೇಲೆ ನಿಜವಾದ ಕಥೆ ಆರಂಭವಾಯಿತು. + +ಡಬಲ್ ರೋಡ್ ಮಾಡುತ್ತಿದ್ದಾರೆನಿಸುತ್ತದೆ. ರಸ್ತೆ ತುಂಬಾ ಜಲ್ಲಿಕಲ್ಲುಗಳು. ರಸ್ತೆಯೆಲ್ಲಾ ಅಗೆದಿದ್ದಾರೆ. ಬಂದುಹೋಗುವ ಗಾಡಿಗಳು. ಮುಂದೆ ಸಾಗುತ್ತಲೇ ಇಲ್ಲ. ನಿನ್ನೆಯ ಮಳೆಗೆ ಗುಂಡಿಗಳಲ್ಲೆಲ್ಲ ನೀರು ತುಂಬಿ ಕೆಸರುಮಯವಾಗಿದೆ. ಕಾಲುಗಂಟೆ ಎಂದುಕೊಂಡೆ ಹೋಗಲು ಅರ್ಧ ಗಂಟೆಯಾಯಿತು. ಅಷ್ಟರೊಳಗೆ ನಾಲ್ಕು ಬಾರಿ ವೀರೇಶಂ ನಿಂದ ಫೋನ್. + +ತಿಪ್ಪಾರಂ ಗಡ್ಡೆ ಮುಂದೆಯೇ ಜ್ಯೋತಿಯ ಮನೆ. ಬೇಗನೆ ಸಿಕ್ಕಿತು. ನಾನು ಹೋಗುವವೇಳೆಗೆ ಮನೆಗೆ ಬೀಗ ಹಾಕುತ್ತಿದ್ದಾಳೆ. ನನ್ನನ್ನು ನೋಡಿ ಹತ್ತಿರ ಬಂದಳು. + +“ಬಂದೆಯಾ ಅಣ್ಣಾ.. ಬಾ. ದೇವರ ಹಾಗೆ ಸಮಯಕ್ಕೆ ಸರಿಯಾಗಿ ಬಂದೆ. ಬಟ್ಟೆ ತಂದಿರುವಂತಿದೆ,” ಎಂದಳು ಕೈ ಚಾಚುತ್ತಾ.ಆಕೆಯನ್ನು ನೋಡಿದರೆ ಮೊನ್ನೆಯಂತಿಲ್ಲ. ಮುಖ ಬಾಡಿದೆ. ಜುಟ್ಟು ಕೆದರಿದೆ. ಆತುರದಲ್ಲಿದ್ದಾಳೆ. ನಾನು, ‘ಅರೆ.. ಹೀಗೇಕಿದ್ದಾಳೆ,’ ಎಂದುಕೊಳ್ಳುತ್ತ ಬಟ್ಟೆಯ ಕವರ್ ನೀಡಿದೆ. + +ಕವರ್ ತೆಗೆದುಕೊಳ್ಳುತ್ತ, “ನಾನು ಆ ಕಡೇನೇ ಬರುತ್ತಿದ್ದೇನೆ. ನನ್ನನ್ನು ಚಂದ್ರಂಪೇಟೆ ಬಳಿ ಇಳಿಸಣ್ಣ, ಎಂದಳು. ನಾನು, ‘ಹಣ’, ಎನ್ನುವಂತೆ ನೋಡಿದೆ. “ಅಲ್ಲೇ ಕೊಡುತ್ತೇನೆ,” ಎನ್ನುತ್ತ ಗಾಡಿ ಹತ್ತಿದಳು. + +ನಾನು ಆಶ್ಚರ್ಯವಾಗಿ, “ಆ ಕಡೆ ಏಕೆ. ಇವತ್ತು ಹಬ್ಬ ಅಲ್ಲವಾ…” ಎಂದೆ. + +“ಹಬ್ಬಾನೇ, ಏನು ಮಾಡೋಣ. ಈ ಬಟ್ಟೆ ನನ್ನ ಅಕ್ಕನ ಮುಖಕ್ಕೆ ಹಾಕಿ ಬರಬೇಕು ಕಳ್ಳಮುಂಡೆ,” ಎಂದಳು ನೋವಿನಿಂದ. + +“ಅಲ್ಲ.. ನೀನು ಅಷ್ಟು ಇಷ್ಟಪಟ್ಟು ಹೊಲಿಸಿಕೊಂಡಿದ್ದೀಯಲ್ಲವಾ, ಆಕೆಗೇಕೆ ನೀಡುವುದು,” ಗೇರು ಬದಲಾಯಿಸುತ್ತಾ ಕೇಳಿದೆ. + +“ಕರ್ಮ ಅಣ್ಣಾ.. ಎಲ್ಲಾ ನನ್ನ ಕರ್ಮ. ಜಗತ್ತಿನಲ್ಲಿ ಎಲ್ಲರಿಗೂ ಒಂದು ರೀತಿಯಾದರೆ, ನನಗೆ ಬೇರೊಂದು ರೀತಿ. ಸುಪ್ಪನಾತಿಗೆ ನಾನು ಹೊಲಿಸಿಕೊಂಡದ್ದು ತಿಳಿಯಿತಲ್ಲವಾ. ನನ್ನ ಬಟ್ಟೆಗಳೇ ಬೇಕೆಂದು ಪಟ್ಟು ಹಿಡಿದಿದ್ದಾಳೆ,” ನೋವಿನಿಂದ ಹೇಳಿದಳು. + +ಆಕೆಯ ನೋವಿಗೆ ಕಾರಣ ಆಗ ಅರ್ಥವಾಯಿತು. ನನಗೂ ಬೇಸರವಾಯಿತು. + +“ಊಂ… ನಿಮ್ಮ ಕಥೆ ಚೆನ್ನಾಗಿಯೇ ಇದೆ. ಆಕೆಯ ಹಠ ಸರಿ, ನೀನು ಕೊಡುವುದು ಸರಿ. ಜಗತ್ತಿನಲ್ಲಿ ನೀವಿಬ್ಬರೇನಾ ಅಕ್ಕತಂಗಿಯರು. ಇಷ್ಟಕ್ಕೂ ಆಕೆ ಏನು ಕೆಲಸ ಮಾಡುತ್ತಾಳೆ,” ಕೇಳಿದೆ. + +“ಅವಳ ಬಾಯಿಗೆ ಮಣ್ಣು ಬೀಳಾ. ಏನು ಮಾಡುತ್ತಾಳೆ. ವ್ಯವಸಾಯವೇ. ಆಗಾಗ ಮಾರ್ಕೆಟ್ ನಲ್ಲಿ ನನ್ನ ಮೇಲೆ ಸ್ಪರ್ಧೆಗೆ ತರಕಾರಿ ಮಾರುತ್ತಾಳೆ. ಒಮ್ಮೆ ಹೀಗೇ ನಾನು ಭತ್ತ ಮಾರಿದಾಗ ಆರು ಸಾವಿರ ಬಂದಿತೆಂದು ಹೇಳಿದೆ ಅಷ್ಟೆ.. ಕೊಡುವವರೆಗೂ ಬಿಟ್ಟಿದ್ದರೆ ಸರಿ,” ಅಳುತ್ತಾ ಹೇಳಿದಳು. + +ನನಗೂ ನೋವಾಯಿತು. “ಊಂ.. ಕೊಡುವವರಿದ್ದರೆ ಹಾಗೇ ಕೇಳುತ್ತಾರೆ. ಅಕ್ಕನೂ ಇಲ್ಲ, ತಂಗೀನೂ ಇಲ್ಲ. ನಿನ್ನ ಸಂಸಾರ ನಿನ್ನದು. ಕೊಡುವುದಿಲ್ಲ ಎಂದು ಹೇಳಬೇಕು,” ಎಂದೆ. + +“ಅಷ್ಟಕ್ಕೂ, ಮೊದಲು ಹೀಗಿರಲಿಲ್ಲ ಅಣ್ಣಾ ಅವಳು. ಒಳ್ಳೆಯ ಗುಣವಿತ್ತು. ನಮಗೆ ಅಪ್ಪ ಇಲ್ಲ, ಅಮ್ಮನೂ ಇಲ್ಲ. ನಾವಿಬ್ಬರೇ. ಅವಳಿಗೆ ನಾನು, ನನಗೆ ಅವಳು. ನನ್ನ ಮದುವೆ ಕೂಡ ಅವಳೇ ಮುಂದೆ ನಿಂತು ಮಾಡಿದಳು. ನಾನೆಂದರೆ ಅವಳಿಗೆ ಪ್ರಾಣ, ಈಗ ಸಾಲಗಾರಳಾಗಿದ್ದಾಳೆ ಹೊರತು ಹಿಂದೆ ತನ್ನದೇ ಜಮೀನಿನಲ್ಲಿ ಸಾಕಷ್ಟು ಬೇಸಾಯ ಮಾಡಿದ್ದಾಳೆ,” ಹೇಳಿದಳು. + +ಜಲ್ಲಿಕಲ್ಲುಗಳನ್ನು ತಪ್ಪಿಸಿ, ತಪ್ಪಿಸಿ ಗಾಡಿ ಓಡಿಸುತ್ತಾ, “ಪರವಾಗಿಲ್ಲವೆ, ಭೂಮಿ ಜಾಸ್ತೀನೇ ಇದ್ದಹಾಗಿದೆ. ಮತ್ತೆ ಅದೇನು ರೋಗ. ಬೇರೆಯವರ ಸೊತ್ತಿಗೆ ಆಸೆಪಡುವುದು,” ಕೇಳಿದೆ. + +ಗಾಡಿಯ ಓಲಾಟಕ್ಕೆ ಅತ್ತಿತ್ತ ಸರಿಪಡಿಸಿಕೊಂಡು ಕೂರುತ್ತ, “ಅವಳಿಗೆ ಇರುವುದಕ್ಕೆ ಮಣ್ಣು ಬೀಳಾ, ಈಗೇನಿದೆ ಎಲ್ಲ ಚಿಪ್ಪೇ. ನಮ್ಮ ಬಾವ ಪಟೇಲನ ಬಳಿ ಜೀತಕ್ಕಿದ್ದರು. ಸಾಲ ಸೋಲ ಮಾಡಿ ಅವರದೇ ನಾಲ್ಕು ಎಕರೆ ಕೊಂಡುಕೊಂಡರು. ಬೆಳೆ ಚೆನ್ನಾಗಿಯೇ ಬಂದಿತು. ನಾಲ್ಕೈದು ವರ್ಷಗಳಲ್ಲಿಯೇ ಸಾಲ ಸೋಲ ತೀರಿ ಕೈಲಿ ಸ್ವಲ್ಪ ಹಣ ಉಳಿಯಿತು. ಕೈಯಲ್ಲಿ ನಾಲ್ಕು ಕಾಸು ಓಡಾಡುವವೇಳೆಗೆ ಹೆಣ್ಣು ಎಲ್ಲೂ ನಿಲ್ಲಲಿಲ್ಲ. ಇದ್ದ ಹಣದ ಜೊತೆಗೆ ಮತ್ತೆ ಸ್ವಲ್ಪ ಸಾಲ ಮಾಡಿ ಮನೆ ಕಟ್ಟಿದಳು. ಅದೃಷ್ಟ ಯಾವಾಗಲೂ ಜೊತೆಗಿರುತ್ತದಾ, ಬರ ಬಂದಿತು. ಬಿಸಿಲಿಗೆ ಬಾವಿ ಒಣಗಿಹೋಯಿತು. ಮೂರು ಬೋರ್ ಹಾಕಿಸಿದರೂ ಪ್ರಯೋಜನವಾಗಲಿಲ್ಲ”. + +ನಾನು ಮಾತಿನ ವರಸೆಗೆ “ಬೆಳೆ ಬೆಳೆಯಬೇಕೇ ಹೊರತು ಬೇಸಾಯಕ್ಕಿಂತ ಮಿಗಿಲಾದ ಕೆಲಸ ಇನ್ಯಾವುದಿದೆ,” ಎಂದೆ. + +ನಿಜ ಅಣ್ಣಾ, “ನಾಲ್ಕನೇ ಬೋರ್ ಮಾತ್ರ ಪಾತಾಳಗಂಗೆಯಾದರೂ, ನಾಲ್ಕು ಎಕರೆ ಸಾಗುವಳಿಯಾಯಿತು. ಬೇಸಿಗೆ, ಮಳೆಗಾಲ ಎರಡು ಬೆಳೆ ಬಂದಿತು. ಬೋರ್ ವೆಲ್ ಬಳಿ ವಿವಿಧ ಬೆಳೆ ಬೆಳೆದರು. ಎರಡು ಮೂರು ವರ್ಷಗಳಲ್ಲಿ ಲಕ್ಷ್ಮಿ ತಾಂಡವವಾಡಿದಳು. ಆಗ ನನ್ನಕ್ಕ ನಾಲ್ಕು ತೊಲ ಚಿನ್ನ ಕೊಂಡಳು. ಅವರು ಯಾವಾಗಿನಂತೆ ಕುದುರಿಕೊಂಡರು.” ಒಂದೇ ಸಮನೆ ಮಾತನಾಡುತ್ತ ಎದೆ ಭಾರ ಹೊರಹಾಕುತ್ತಿರುವಂತೆ ನೋವನ್ನು ಹೇಳುತ್ತಿದ್ದಾಳೆ. + +ನನ್ನ ಮೊಬೈಲ್ ರಿಂಗ್ ಆಯಿತು. ನೋಡಿದರೆ ವೀರೇಶಂ ನಿಂದಲೇ, ಭಯವಾಯಿತು. ಫೋನ್ ತೆಗೆಯಲಿಲ್ಲ. ‘ಪಾಪ.. ಎಷ್ಟು ಆತಂಕವಾಗಿರುತ್ತದೋ. ಅವನಿಗೆ ಬಟ್ಟೆ ಕೊಟ್ಟಾದರೂ ಬರಲಿಲ್ಲ. ರಸ್ತೆ ಹೀಗಿದೆಯೆಂದು ಗೊತ್ತಿದ್ದರೆ ಬರುತ್ತಲೇ ಇರಲಿಲ್ಲ,’ ಎಂದೆ. + +ಕೂಡಲೇ, “ಅಯ್ಯೋ ಅಣ್ಣಾ, ಈ ಮೊದಲಿದ್ದ ಕಲ್ಲು ರಸ್ತೆ ಹೋಗಿ ಟಾರ್ ರಸ್ತೆಗಳಾಗುವ ಹೊತ್ತಿಗೆ ಟ್ರ್ಯಾಕ್ಟರ್ ಗಳ ಓಡಾಟ ಹೆಚ್ಚಾಗಿ ಮನೆಯಲ್ಲಿಟ್ಟಿದ್ದ ಬೀಜಗಳು ಮೊಳಕೆ ಒಡೆಯುತ್ತಿಲ್ಲ. ಸಾವಯವ ಗೊಬ್ಬರ ಕೆಲಸಕ್ಕೆ ಬರುತ್ತಿಲ್ಲ. ಬೆಳೆಗಳಿಗೆ ಇಲ್ಲಸಲ್ಲದ ರೋಗಗಳು ಅಂಟಿಕೊಂಡವು. ಕೈತುಂಬ ಹಣವಿದ್ದರೆ ಮಾತ್ರ ಕೃಷಿ ಎಂಬಂತಾಯಿತು. ನನ್ನಕ್ಕ ಸೇಟು ಹತ್ತಿರ ಖಾತೆ ತೆರೆದಳು. ಗೊಬ್ಬರ, ಬೀಜ, ಕ್ರಿಮಿನಾಶಕಗಳನ್ನು ಲೆಕ್ಕವಿಲ್ಲದಷ್ಟು ಕೊಂಡುಕೊಂಡಳು. ಬೆಳೆದ ಬೆಳೆ ಅವನಿಗೇ ಕೊಟ್ಟಳು. ಬಾಕಿ ಬೆಳೆಯಿತು, ಅವನೂ ಬೆಳೆದ. ಇವಳು ಮಾತ್ರ ನೆಲಕಚ್ಚಿದಳು,” ಹೇಳುತ್ತಲೇ ಇದ್ದಾಳೆ. + +“ಎಲ್ಲಿ ತಗಲಿಕೊಂಡಳಪ್ಪಾ ದೇವರೇ ಇವಳು, ಮನೆ ಸೇರುವವರೆಗೂ ಹೀಗೆ ಅರಳು ಹುರಿದಂತೆ ಪಟಪಟ ಎಂದು ಮಾತು ಸಿಡಿಸುತ್ತೀಯಾ ಹೇಗೆ..?” ಕೇಳಿಸಿಕೊಳ್ಳಲಿ ಎಂದೇ ಜೋರಾಗಿ ಹೇಳಿದೆ. + +ಧೂಳು ಎಬ್ಬಿಸಿ ದಾಟಿದ ಹತ್ತಿಯ ಲಾರಿಯನ್ನು ದಾಟಿ ಮುಂದೆ ಸರಿಯುತ್ತಿದ್ದಂತೆ ಮತ್ತೆ ಶುರುಮಾಡಿದಳು. “ಈ ಹತ್ತಿಯೇ ಅಣ್ಣಾ, ಅವಳ ಕೊಂಪೆ ಮುಳುಗಿಸಿದ್ದು. ನೀರಿಲ್ಲದೆ ಬರ ಬಂದುಬಿಟ್ಟಿತು. ಸುಮ್ಮನಿರಲಾರದೆ ಹತ್ತಿ ಇಟ್ಟಿದ್ದಳು. ಹತ್ತಿ ಮನೆ ಹಾಳಾಗ. ಕೇಳಕ್ಕೇ ಹೊರತು ಮೇಲೇರಲೇ ಇಲ್ಲ. ಬೆಳೆದಾಗ ಬೆಲೆಯಿಲ್ಲ. ಬೆಲೆಯಿದ್ದಾಗ ಬೆಳೆಯಿಲ್ಲ. ಹಾಕಿದ ಬಂಡವಾಳವೆಲ್ಲ ವ್ಯರ್ಥವೇ. ಇರುವ ಭೂಮಿ ಮಾರಿದಳು. ಮಾರಿದ ಭೂಮಿಯನ್ನೇ ಬಾಡಿಗೆಗೆ ತೆಗೆದುಕೊಂಡಳು. ಸ್ವಂತ ಭೂಮಿಯಲ್ಲೇ ಬೇರೆಯವಳಾಗಿಬಿಟ್ಟಳು. ಅಗೋ.. ಆಗಿನಿಂದ ಅವಳು ಮೊದಲಿನ ಅಕ್ಕನಂತಿಲ್ಲ.” + +ನನಗೆ ಕೋಪ ತಡೆಯಲಾಗಲಿಲ್ಲ. “ನೀನು ಬಡಬಡ ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾನು ಕೂಡ ಮೊದಲಿನ ಮನುಷ್ಯನಲ್ಲ?” ಎಂದೆನು ಜೋರಾಗಿ.ನನ್ನ ಮಾತು ಕೇಳಿಸಿಕೊಂಡರೆ ಅಲ್ಲವಾ, ನಿಲ್ಲಿಸದೆ ಮಾತನಾಡುತ್ತಲೇ ಇದ್ದಾಳೆ. + +“.. ಅವಳ ಬಾಯಿಗೆ ಹೆದರಿ ಯಾರೂ ಕೇಳುತ್ತಿಲ್ಲ ಅಣ್ಣಾ.. ಸ್ವಲ್ಪ ನೀನಾದರೂ ಜೋರಾಗಿ ಕೇಳಬೇಕು.. ಕೂಳಿಗೆ ಗತಿಯಿಲ್ಲದಿದ್ದರೂ ದೊಡ್ಡ ರೋಷಗಾರ್ತಿ. ಯಾರಿಂದಲೂ ಮಾತು ಬರಬಾರದೆಂಬ ಹಠ. ಎರಡು ವರ್ಷದಲ್ಲಿ ದೊಡ್ಡ ಮಗಳ ಮಗುವಿನ ನಾಮಕರಣ, ಹೋದ ವರ್ಷ ಚಿಕ್ಕ ಮಗಳು ಮೈನೆರೆದಾಗ ಆರತಿ ಎರಡನ್ನೂ ಯಾವ ಕೊರತೆಯಿಲ್ಲದಂತೆ ಊರೆಲ್ಲರನ್ನೂ ಕರೆದು ಅದ್ಧೂರಿಯಾಗಿ ಮಾಡಿದಳು. ಮತ್ತೆ ಈಗ ನನ್ನನ್ನು ಹೀಗೆ ಮಾಡಿದಳೆಂದು ಗೊತ್ತಾದರೆ ನಾಲ್ಕಾರು ಜನರು ನಗುವುದಿಲ್ಲವಾ.” ಎದುರಿಗೆ ಅವಳ ಅಕ್ಕನ ಜೊತೆ ಜಗಳ ಮಾಡುತ್ತಿರುವಂತೆ ಹೇಳುತ್ತಿದ್ದಾಳೆ. + +ನನಗೆ ತಾಳ್ಮೆ ಸತ್ತುಹೋಯಿತು. ಸುಮ್ಮನಿದ್ದರೆ ಲಾಭವಿಲ್ಲವೆಂದುಕೊಂಡೆ. ಕೂಡಲೇ ಗಾಡಿ ನಿಲ್ಲಿಸಿ ಹಿಂದೆ ತಿರುಗಿ ದುರುಗುಟ್ಟಿಕೊಂಡು ನೋಡಿದೆ. ಆಕೆ ಭಯದಿಂದ ನನ್ನ ಕಡೆ ನೋಡಿದಳು. + +ಗಟ್ಟಿಯಾಗಿ, “ಮೊದಲು ನೀನು ಗಾಡಿಯಿಂದ ಇಳಿ. ಬಾಯಿಮುಚ್ಚದೆ ಒಂದೇ ಸಮನೆ ಬಡಿದುಕೊಳ್ಳುತ್ತಿದ್ದೀಯ,” ಎಂದೆ. + +ಒಮ್ಮೆಗೇ ಬೆದರಿಹೋದಳು, ಪಟಪಟನೆ ಕಣ್ಣೀರು ಸುರಿಯಿತು. ಗಾಡಿ ಇಳಿಯದೆ ಒರೆಸಿಕೊಳ್ಳುತ್ತ, “ಸರಿ ಅಣ್ಣಾ.. ತಪ್ಪಾಯಿತು. ಮಾತನಾಡುವುದಿಲ್ಲ, ಹೋಗೋಣ ನಡಿ..” ಎಂದಳು ದೀನವಾಗಿ ಕೇಳಿಕೊಳ್ಳುತ್ತ. + +ಚಂದ್ರಂಪೇಟೆ ಬರುವವರೆಗೂ ಅವಳು ತುಟಿಕ್ ಪಿಟಿಕ್ ಎನ್ನಲಿಲ್ಲ. ನನಗೆ ಮನಸ್ಸು ನಿರಾಳವಾಯಿತು. ‘ಅಬ್ಬಾ… ಮಳೆ ಬಂದು ನಿಂತಹಾಗಾಯಿತು, ಈ ಕೆಲಸ ಮೊದಲೇ ಮಾಡದೆಹೋದೆ. ಹಣ ಕೊಡದೆ ಸತಾಯಿಸುತ್ತಿದ್ದಾಳೆ. ನನ್ನ ಪಾಡಿಗೆ ಎಲ್ಲಾದರೂ ದಬ್ಬಾಕಿ ಹೋಗುತ್ತಿದ್ದೆ,’ ಎಂದುಕೊಳ್ಳುತ್ತ ಚಂದ್ರಂಪೇಟೆ ಆಂಜನೇಯನ ಗುಡಿಯ ಬಳಿ ಗಾಡಿ ನಿಲ್ಲಿಸಿದೆ. + +ಆಕೆ ಇಳಿದಳು. ಮುಂದೆ ನಡೆಯಹೋದಾಗ, “ಏನಮ್ಮ, ದುಡ್ಡು ಕೊಡಲ್ಲವಾ.. ಸುಮ್ಮನೆ ಹೋಗುತ್ತಿದ್ದೀಯ,” ವ್ಯಂಗ್ಯವಾಗಿ ಹೇಳಿದೆ.ಆಗಿನಿಂದಲೂ ಅಳುತ್ತಲೇ ಇರುವಂತಿದೆ. ನೀರು ತುಂಬಿಕೊಂಡಿತ್ತು. ಕಣ್ಣು ಒರೆಸಿಕೊಂಡು ನನ್ನತ್ತ ಬೇಡಿಕೊಳ್ಳುವಂತೆ ನೋಡಿ, “ಮನೆವರೆಗೂ ಬಾ ಅಣ್ಣಾ.. ಈ ಗುಡಿಯ ಹಿಂದೆಯೇ ಮನೆ,” ಎಂದಳು. + + + +ನನಗೆ ಅನುಮಾನ ಬಂದಿತು. ‘ಇಬ್ಬರ ಜಗಳದಲ್ಲಿ ನನಗೆ ನಾಮ ಹಾಕುತ್ತಾರಾ ಹೇಗೆ?’ ನಾಳೆ ನಾಳಿದ್ದು ಅಂದರೆ ಸುಮ್ಮನಿರುವ ಪ್ರಶ್ನೆಯೇ ಇಲ್ಲ ಎಂದುಕೊಳ್ಳುತ್ತ, ಯಾವುದಕ್ಕೂ ಇರಲಿ ಎಂದು ಆಕೆಯ ಕೈಯಿಂದ ಬಟ್ಟೆಯ ಕವರನ್ನು ಕಿತ್ತುಕೊಂಡು ಗಾಡಿಯಲ್ಲಿಟ್ಟೆ. ಅದನ್ನು ಊಹಿಸಿದಂತಿರಲಿಲ್ಲ. ಪೆಟ್ಟು ತಿಂದವಳಂತೆ ನನ್ನ ಕಡೆ ಪೆಚ್ಚಾಗಿ ನೋಡಿದಳು. + +ಮೆತ್ತಗೆ ಮಾತನಾಡಿದರೆ ಏನಾದರೂ ಕತೆ ಹೇಳುತ್ತಾಳೆಂದು ಕೋಪದಿಂದ, “ಊಂ.. ರೋಷಕ್ಕೇನೂ ಕಡಿಮೆಯಿಲ್ಲ. ಅಯ್ಯೋ ಪಾಪ ಅಂದರೆ ಆರು ವರ್ಷ ಆಯಸ್ಸು ಕಮ್ಮಿ ಎನ್ನುವುದು ಇದಕ್ಕೇ. ಅಲ್ಲಿಗೆ ಹೋದಮೇಲೆ ಅಕ್ಕತಂಗಿಯರಿಬ್ಬರು ಡ್ರಾಮಾಗಳಾಡುವಿರಾ ಹೇಗೆ. ನಿಮ್ಮಂತಹವರನ್ನು ತುಂಬಾ ಜನರನ್ನು ನೋಡಿದ್ದೀನಿ ಹತ್ತು,” ಎಂದು ಕಿರುಚಿದೆ. + +ಗಾಡಿ ಸ್ಟಾರ್ಟ್ ಆಗುತ್ತಲೇ ಮತ್ತೆ ವೀರೇಶಂ ನಿಂದ ಫೋನ್. ನೋಡಿದರೆ ಹನ್ನೆರಡು ಮಿಸ್ಡ್ ಕಾಲ್ಸ್. ಮೈಯೆಲ್ಲ ಬೆವರಿತು. ‘ಆ ಮದುವೆಯಲ್ಲ. ಇವತ್ತು ನನಗೆ ಮದುವೆಯಾಗುತ್ತದೆ. ಬೆಳಗ್ಗೆ ಎದ್ದು ಯಾರ ಮುಖ ನೋಡಿದೆನೋ..’ ಎಂದುಕೊಳ್ಳುತ್ತ ಗಾಡಿ ತಿರುಗಿಸಿದೆ. + +ಸಂದಿಯಿಂದ ನೇರವಾಗಿ ಹೋದರೆ ಎದುರುಗಡೆಯೇ ಮನೆ. ಗಾಡಿ ನಿಲ್ಲಿಸಿ ಇಳಿದೆ. ಮನೆಯ ಮುಂದೆ ಷಾಮಿಯಾನ ಕಾಣಿಸಿತು. + +ನಮ್ಮನ್ನು ನೋಡುತ್ತಿದ್ದಂತೆಯೇ ಯಾರೋ, “ಆಂ.. ಇನ್ನೇನು. ತಾಯಿ ಮನೆಯವರು ಬಂದರು. ಹೊಸ ಬಟ್ಟೆ ಕೂಡ ತಂದಿದ್ದಾರೆ. ಬೇಗಬೇಗನೆ ಮುಗಿಸಿ..” ಎಂದರು. + +ಒಳಗಿನಿಂದ ಸಣ್ಣದಾಗಿ ಅಳು. ನನಗೆ ಬಾಯಿ ಒಣಗಿತು. ತಲೆ ಧಿಮ್ಮೆನ್ನತೊಡಗಿತು. ಏನಾಯಿತೆಂದು ಅರ್ಥವಾಗಲಿಲ್ಲ. ಹುಚ್ಚು ಹಿಡಿದಂತೆ ಸುತ್ತಲೂ ನೋಡಿದೆ.“ಬೇಸಾಯದ ಮನೆ ಹಾಳಾಗ. ಆರು ತಿಂಗಳು ಮಾಡಿದರೂ ಏನೂ ಉಳಿಯಲಿಲ್ಲ. ಪಾಪ ಮಗುವಿಗೆ ಕಷ್ಟಗಳೇ ಆಗಿಹೋಯಿತು. ಮಳೆ ಮನೆ ಹಾಳಾಗ. ನಿನ್ನೆ ಮಳೆ ಬೀಳದಿದ್ದರೆ ಇಷ್ಟು ಕೆಲಸ ಆಗುತ್ತಿರಲಿಲ್ಲ. ಹತ್ತಿ ಇಟ್ಟು, ಇಟ್ಟೂ ಹತ್ತಿಯ ಔಷಧವೇ ಕುಡಿದು ಸತ್ತಳು. ನಮ್ಮಗತಿ ಎಲ್ಲಿಗೆ ತೇಲುತ್ತದೆಯೋ..” ಯಾರೋ ದೊಡ್ಡ ವ್ಯಕ್ತಿ ಬಾಧೆ ಪಡುತ್ತಿದ್ದನು. + +“ನಿನ್ನೆಯ ಮಳೆಯೊಂದೇನಾ ಅಯ್ಯಾ… ಇಪ್ಪತ್ತು ವರ್ಷದಿಂದ ಎಷ್ಟು ಹೊಡೆತಗಳು. ಒಂದಾ ಎರಡಾ. ಮನುಷ್ಯ ಎಷ್ಟೂಂತ ಸಹಿಸುತ್ತಾನೆ, ಹೀಗೆಯೇ ಬಾಯಿ ತೆರೆಯುತ್ತಾನೆ.” ಇನ್ಯಾರೋ ನೋವಿನಿಂದ ಹೇಳಿದರು. + +“ಆಂ.. ಏಕಾದಶಿ ಮರಣವೆಂದು ಬಾವಿಗೆ ಬೀಳ್ತೀವಾ.. ನಾವಿದ್ದು ಸಾಧಿಸಬೇಕು. ಯಾವಾಗಲೂ ಹೀಗೇ ಇರುತ್ತದಾ. ಕತ್ತಲು ಸ್ವಲ್ಪ ದಿನ, ಬೆಳಕು ಸ್ವಲ್ಪ ದಿನ. ಸಹಿಸಿಕೊಳ್ಳಬೇಕು.” ಇನ್ನಾರೋ. + +“ನನ್ನ ಬಾಯಿಗೆ ಮಣ್ಣು ಹಾಕ, ನಿನ್ನೆ ಮಧ್ಯಾಹ್ನ ಆತುರಾತುರವಾಗಿ ನಮ್ಮ ಮನೆಗೆ ಬಂದಿದ್ದಳು ಮಗು. ನಾನೇ ಕೆಲಸದಲ್ಲಿದ್ದವಳು ಕೂರಿಸಿ ಸಮಾಧಾನ ಮಾಡಲಿಲ್ಲ. ನೋವು ಹೇಳಿಕೊಂಡಿದ್ದರಾದರೂ ಭಾರ ಇಳಿದು ಬದುಕುತ್ತಿದ್ದಳೇನೋ,” ಅಳುತ್ತಾ ಹೇಳಿದಳು ಒಬ್ಬ ಮುದುಕಿ. + +ಜ್ಯೋತಿ ನನ್ನ ಮುಂದೆ ಬಂದಳು. ಅಳುವುದಕ್ಕೆ ಕೂಡ ಇಲ್ಲದಂತೆ ಕಣ್ಣೀರು ಬತ್ತಿ, ಅಸಹಾಯಕಳಾಗಿ ಮುಖ ನೋಡಿದಳು. + + + +“ಅಣ್ಣಾ.. ಹೇಳಿಕೊಳ್ಳುವ ದಿಕ್ಕಿಲ್ಲದೆ ನಿನ್ನೆಯಿಂದ ಒದ್ದಾಡುತ್ತಿದ್ದೇನೆ. ಒಡಹುಟ್ಟಿದವನಂತೆ ಸಮಯಕ್ಕೆ ಬಂದೆ. ಅವಳಲ್ಲದೆ ಈ ಲೋಕದಲ್ಲಿ ನನಗ್ಯಾರೂ ಇಲ್ಲ ಅಣ್ಣಾ. ಹೀಗೆ ನನ್ನನ್ನು ಒಂಟಿ ಮಾಡಿ ಹೋಗುತ್ತಾಳಾ. ಕೇಳಣ್ಣಾ, ಅವಳನ್ನು ಕೇಳು,” ಜ್ಯೋತಿಯ ಅದುಮಿಟ್ಟ ದುಃಖವೆಲ್ಲ ಒಮ್ಮೆಗೇ ಕಟ್ಟೆಯೊಡೆಯಿತು. + +ಏಕೋ ನನ್ನ ತಂಗಿ ನೆನಪಿಗೆ ಬಂದಳು. ನನಗೆ ಕಾಲ ಕೆಳಗಿನ ಭೂಮಿ ಅಲುಗಾಡುತ್ತಿದೆ. + +********************** + + + + + +ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ. \ No newline at end of file diff --git a/Kenda Sampige/article_4.txt b/Kenda Sampige/article_4.txt new file mode 100644 index 0000000000000000000000000000000000000000..191fa8980fc6fc9391f27a8ae8eb42b8e16d8dc5 --- /dev/null +++ b/Kenda Sampige/article_4.txt @@ -0,0 +1,19 @@ +ಯುದ್ಧ, ಆಂತರಿಕ ಬಿಕ್ಕಟ್ಟು, ಭಯೋತ್ಪಾದನೆ ಇತ್ಯಾದಿಗಳು ತಾಂಡವವಾಡುತ್ತಿರುವ ಈ ಕಾಲಘಟ್ಟದಲ್ಲಿ ದೇಶದ ರಕ್ಷಾವ್ಯವಸ್ಥೆಗೆ ಸಾಕಷ್ಟು ಮಹತ್ವವನ್ನು ನೀಡಲಾಗುತ್ತಿದೆ. ಅತ್ಯಾಧುನಿಕ ಆಯುಧಗಳು, ಸೈನಿಕರ ತರಬೇತಿ, ಆಂತರಿಕ ಭದ್ರತೆಯ ಜೊತೆಗೆ ಗುಪ್ತಚರ ಸಂಸ್ಥೆಗಳನ್ನು ಸಬಲೀಕರಣಗೊಳಿಸುವಲ್ಲಿ ಎಷ್ಟೋ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತಿದೆ. ಗುಪ್ತಚರ ಸಂಸ್ಥೆ ಎಂದ ಕೂಡಲೇ, ಜೇಮ್ಸ್ ಬಾಂಡ್ ತರಹದ ಸಿನೆಮಾಗಳಲ್ಲಿ ಏಜೆಂಟ್‌ಗಳು ದುಸ್ಸಾಧ್ಯವಾದ ಮಿಷನ್‌ಗಳಲ್ಲಿ ಪಾಲುಗೊಳ್ಳುವುದು ನೆನಪಾಗುತ್ತದೆ. ಮಾರು ವೇಷದಲ್ಲಿದ್ದು ಯಾರಿಗೂ ನಿಲುಕದ ಮಾಹಿತಿಗಳನ್ನು ಕಲೆ ಹಾಕಿ, ದುರುಳರನ್ನು ಮಟ್ಟ ಹಾಕುವ ಅವರ ಚಾಕಚಕ್ಯತೆ ಅದೆಷ್ಟೋ ವರುಷದ ಕಠಿಣ ಪರಿಶ್ರಮದ ಫಲ. ಭಾರತದ ರಾ, ಅಮೇರಿಕಾದ ಸಿಐಎ, ಯುನೈಟೆಡ್ ಕಿಂಗ್ಡಮ್ಮಿನ MI6 ಇಂತಹದೇ ಕೆಲವು ಹೆಸರಾಂತ ಗುಪ್ತಚರ ಸಂಸ್ಥೆಗಳು. ಈ ಪಟ್ಟಿಯಲ್ಲಿ ಅಗ್ರ ಪಂಕ್ತಿಯಲ್ಲಿರುವ ಇನ್ನೊಂದು ಸಂಸ್ಥೆಯಿದೆ. ಅಚ್ಚುಕಟ್ಟಾಗಿ ಪ್ಲಾನ್ ಮಾಡಿ, ಬಲಗೈ ಮಾಡಿದ ಕೆಲಸ ಎಡಗೈಗೆ ಗೊತ್ತಾಗದಂತೆ ಮಿಷನ್‌ಗಳನ್ನು ಪೂರ್ತಿಗೊಳಿಸುವ ಈ ಸಂಸ್ಥೆಯ ಸಕ್ಸಸ್ ರೇಟ್ ನೂರಕ್ಕೆ ನೂರು ಅಂತಲೇ ಹೇಳಬಹುದು. ತನ್ನ ಮಾತೃ ಭೂಮಿಯಾದ ಇಸ್ರೇಲ್ ದೇಶದ ಅಸ್ಮಿತೆಯನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಆ ಸಂಸ್ಥೆಯೇ “ಮೋಸ್ಸಾದ್”. + +ಒಲಿಂಪಿಕ್ಸ್ ಬಗ್ಗೆ ಬರೆಯೋದು ಬಿಟ್ಟು ಯಾವುದೋ ಸ್ಪೆಷಲ್ ಏಜನ್ಸಿ ಬಗ್ಗೆ ಬರೀತಿದ್ದಾನಲ್ಲಾ ಅಂತ ಹುಬ್ಬೇರಿಸಬೇಡಿ. ಮೋಸ್ಸಾದ್ ಹಾಗೂ ಒಲಿಂಪಿಕ್ಸ್‌ಗೆ ಸಂಬಂಧವಿರುವುದರಿಂದಲೇ ಇಷ್ಟೆಲ್ಲಾ ಪೀಠಿಕೆ. ಎತ್ತಣ ಮೋಸ್ಸಾದ್? ಎತ್ತಣ ಒಲಿಂಪಿಕ್ಸ್? ಎತ್ತಣಿಂದೆತ್ತ ಸಂಬಂಧವಯ್ಯಾ?! ತಿಳಿಯೋಣ ಬನ್ನಿ. 1972ರ ಒಲಿಂಪಿಕ್ಸ್ ನಡೆದದ್ದು ಜರ್ಮನಿಯ ಮ್ಯುನಿಕ್‌ನಲ್ಲಿ. ಅದಕ್ಕೂ ಮೊದಲು ಬರ್ಲಿನ್ ನಲ್ಲಿ 1936ರಲ್ಲಿ ಹಿಟ್ಲರಿನ ನಾಜಿ ಆಡಳಿತದಲ್ಲಿಒಲಿಂಪಿಕ್ಸ್ ನಡೆದಿತ್ತು. ನಾಜಿ ಗಳ ಮಿಲಿಟರಿ ಛಾಯೆಯಲ್ಲಿ ನಡೆದಿದ್ದ ಆ ಒಲಿಂಪಿಕ್ಸ್‌ನ ಕರಾಳತೆ, ಈ ಬಾರಿಯ ಒಲಿಂಪಿಕ್ಸ್‌ನಲ್ಲಿರಬಾರದೆಂದು, ಕ್ರೀಡಾಪಟುಗಳು ನಿರ್ಭಯವಾಗಿ ಆಟದಲ್ಲಿ ಭಾಗವಹಿಸುವ ಸಲುವಾಗಿ ಕಣ್ಣಿಗೆ ಕಾಣದಂತೆ ತೀರಾ ಸರಳವಾದ ಭದ್ರತೆಯನ್ನು ಒದಗಿಸಿದ್ದರು. ಎಡವಟ್ಟಾದದ್ದು ಅಲ್ಲೇ. + + + +ಸೆಪ್ಟೆಂಬರ್ 5, 1972. ಮ್ಯುನಿಕ್‌ನ ಒಲಿಂಪಿಕ್ಸ್ ಕ್ರೀಡಾಗ್ರಾಮದಲ್ಲಿ ಎಂದಿನಂತೆ ಅಥ್ಲೀಟ್‌ಗಳು ತಮ್ಮ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿದ್ದರು. ಕ್ರೀಡಾಪಟುಗಳಂತೆ ದಿರಿಸನ್ನು ತೊಟ್ಟ, ‘ಬ್ಲಾಕ್ ಸೆಪ್ಟೆಂಬರ್’ ಎಂಬ ಪ್ಯಾಲೆಸ್ತೀನ್ ಉಗ್ರಗಾಮಿ ಸಂಘಟನೆಯ ಎಂಟು ಮಂದಿ, ತಮ್ಮ ಬಂದೂಕುಗಳನ್ನು ಬಚ್ಚಿಟ್ಟುಕೊಂಡು, ಉಳಿದ ಕ್ರೀಡಾಪಟುಗಳ ನಡುವೆ ಹೇಗೋ ಸೇರಿಕೊಂಡಿದ್ದರು. ತಮ್ಮ ನಡುವೆ ಭಯೋತ್ಪಾದಕರು ಇರುವರೆಂಬ ಸಣ್ಣ ಸುಳಿವೂ ಇರದ ಕ್ರೀಡಾಪಟುಗಳಲ್ಲಿ ಅವರು ಹುಡುಕುತ್ತಿದ್ದದ್ದು ಇಸ್ರೇಲ್ ದೇಶದವರನ್ನು. ಅಂತೂ ಅವರಿದ್ದ ಕ್ವಾರ್ಟರ್ಸ್ ತಲುಪಿದ ಉಗ್ರಗಾಮಿಗಳು ಕೂಡಲೇ ಇಬ್ಬರು ಇಸ್ರೇಲಿಗಳನ್ನು ಕೊಂದು, ಉಳಿದ ಒಂಬತ್ತು ಮಂದಿಯನ್ನು ಒತ್ತೆಯಾಳಾಗಿಸಿರಿಕೊಂಡರು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಉಗ್ರಗಾಮಿಗಳು ಕೆಲ ಬೇಡಿಕೆಗಳನ್ನು ಮುಂದಿಟ್ಟಿದ್ದರು. ಇಸ್ರೇಲ್‌ನಲ್ಲಿ ಬಂಧಿತರಾಗಿರುವ 234 ಪ್ಯಾಲೇಸ್ಟಿನಿಯನ್ ಕೈದಿಗಳು ಮತ್ತು ರೆಡ್ ಆರ್ಮಿ ಫ್ಯಾಕ್ಷನ್‌ನಿಂದ ಇಬ್ಬರು ಜರ್ಮನ್ ಭಯೋತ್ಪಾದಕರ ಬಿಡುಗಡೆಗೆ ಒತ್ತಾಯಿಸಿದರು. ಖೈದಿಗಳನ್ನು ಬಿಡುವುದೆಂದರೆ ಸುಲಭದ ಮಾತೇ? ಭಯೋತ್ಪಾದಕರು ಮತ್ತು ಜರ್ಮನ್ ಅಧಿಕಾರಿಗಳ ನಡುವಿನ ಮಾತುಕತೆ ಜಟಿಲವಾಗುತ್ತಾ ಹೋದಂತೆ, ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಒತ್ತೆಯಾಳುಗಳನ್ನು ಕೊಲ್ಲುವುದಾಗಿ ದಾಳಿಕೋರರು ಬೆದರಿಕೆ ಹಾಕಿದರು. + +ಇಸ್ರೇಲಿ ಕ್ರೀಡಾಪಟುಗಳನ್ನು ಹೇಗಾದರೂ ರಕ್ಷಿಸಬೇಕೆಂದು ಜರ್ಮನ್ ಅಧಿಕಾರಿಗಳು ಫರ್ಸ್ಟೆನ್‌ಫೆಲ್ಡ್‌ಬ್ರಕ್ ವಾಯುನೆಲೆಯಲ್ಲಿ ಒಂದು ರಕ್ಷಣಾ ಕಾರ್ಯಾಚರಣೆಯನ್ನು ಕಾರ್ಯಗತಗೊಳಿಸಿದರು. ಭಯೋತ್ಪಾದಕರು ಮತ್ತು ಒತ್ತೆಯಾಳುಗಳನ್ನು ಆ ವಾಯುನೆಲೆಯಿಂದ ಹೆಲಿಕಾಪ್ಟರ್ ಮೂಲಕ ಸಾಗಿಸುವುದು ಆ ಯೋಜನೆಯ ಭಾಗವಾಗಿತ್ತು. ಆಗ ನಡೆಯಿತು ನೋಡಿ ಮತ್ತೊಂದು ದುರಂತ! ಸಾಕಷ್ಟು ಮುಂಜಾಗ್ರತೆ ವಹಿಸಿದ್ದರೂ, ರಕ್ಷಣಾ ಪ್ರಯತ್ನವು ಕಳಪೆಯಾಗಿ ಕಾರ್ಯಗತಗೊಂಡಿತ್ತು. ಜರ್ಮನ್ ಪೊಲೀಸರು ಅಂತಹ ಕಾರ್ಯಾಚರಣೆಯನ್ನು ನಿಭಾಯಿಸಲು ಶಕ್ತರಾಗಿರಲಿಲ್ಲ. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಅಂತಹ ಕಾರ್ಯಾಚರಣೆಗಾಗಿ ಸಮರ್ಪಕವಾದ ತರಬೇತಿಯನ್ನು ಜರ್ಮನ್ ಪೋಲೀಸರಿಗೆ ನೀಡಲಾಗಿರಲಿಲ್ಲ. ಆಗ ಸಂಭವಿಸದ ಅಚಾತುರ್ಯದಿಂದ ಎಲ್ಲಾ ಒಂಬತ್ತು ಒತ್ತೆಯಾಳುಗಳು ಸೇರಿ ಐವರು ಭಯೋತ್ಪಾದಕರು ಮತ್ತು ಒಬ್ಬ ಜರ್ಮನ್ ಪೊಲೀಸ್ ಅಧಿಕಾರಿ ಕೊನೆಯುಸಿರೆಳೆದ್ದಿದರು. + + + +ದೂರ ದೇಶದಲ್ಲಿ ತನ್ನ ಪ್ರಜೆಗಳು ಒಂದು ಭಯೋತ್ಪಾದಕ ದಾಳಿಯಲ್ಲಿ ಕೊನೆಯುಸಿರೆಳೆದದ್ದನ್ನು ಕಂಡು ಯಾವ ದೇಶ ತಾನೇ ಸುಮ್ಮನಿದ್ದೀತು ಹೇಳಿ? ಅದೂ ಇಸ್ರೇಲ್‌ನಂತ ಬಲಾಢ್ಯ ದೇಶ, ಲೆಕ್ಕವನ್ನುಇತ್ಯರ್ಥ ಮಾಡಲು ಯಾವ ಮಟ್ಟಕ್ಕೆ ಹೋಗಲೂ ತಯಾರಿರುತ್ತದೆ. ಮ್ಯೂನಿಚ್ ಹತ್ಯಾಕಾಂಡದ ಹಿನ್ನೆಲೆಯಲ್ಲಿ, ಪ್ರಧಾನಿ ಗೋಲ್ಡಾ ಮೀರ್ ನೇತೃತ್ವದ ಇಸ್ರೇಲಿ ಸರ್ಕಾರವು ದಾಳಿಗೆ ಕಾರಣರಾದವರನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ ಮಾಡಲು ರಹಸ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಲು ನಿರ್ಧರಿಸಿತು. operation wrath of God (ದೇವರ ಕ್ರೋಧ!) ಎಂದು ಕರೆಯಲ್ಪಡುವ ಈ ಕಾರ್ಯಾಚರಣೆಯನ್ನು ನಡೆಸಿದ್ದು ಇದೇ ಮೊಸ್ಸಾದ್! ಮ್ಯೂನಿಚ್ ದಾಳಿಯ ಹಿಂದಿರುವ ವ್ಯಕ್ತಿಗಳ targeted assassinationsಗಳನ್ನು ಒಳಗೊಂಡಿದ್ದ ಈ ಕಾರ್ಯಾಚರಣೆಯು ಅದೆಷ್ಟು ಕರಾರುವಾಕ್ ಆಗಿತ್ತೆಂದರೆ, ಮೊಸ್ಸಾದ್ ಏಜೆಂಟ್‌ಗಳು ಬ್ಲ್ಯಾಕ್ ಸೆಪ್ಟೆಂಬರ್ ಮತ್ತು ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಸೇಶನ್ (PLO) ಗೆ ಸಂಬಂಧಿಸಿದ ಹಲವಾರು ಪ್ರಮುಖ ವ್ಯಕ್ತಿಗಳನ್ನು ಪತ್ತೆಹಚ್ಚಿ ರಹಸ್ಯವಾಗಿ ಕೊಂದರು. ಕಾರ್ಯಾಚರಣೆಯು ಇಟಲಿ, ಫ್ರಾನ್ಸ್ ಮತ್ತು ಲೆಬನಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಎರಡು ದಶಕಗಳ ಕಾಲ ನಡೆದಿತ್ತು. + +PLO ಸಂಘಟಕ ವೇಲ್ ಜ್ವೈಟರ್, ಈ ಕಾರ್ಯಾಚರಣೆಯ ಮೊದಲ ಟಾರ್ಗೆಟ್. ಆತನನ್ನು ಗುಂಡು ಹಾರಿಸಿ ರೋಮ್‌ನಲ್ಲಿ ಕೊಲ್ಲಲಾಗಿತ್ತು. ಮತ್ತೊಂದು ಮಹತ್ವದ ಕಾರ್ಯಾಚರಣೆಯಲ್ಲಿ, ಪ್ಯಾರಿಸ್‌ನಲ್ಲಿನ PLO ಪ್ರತಿನಿಧಿಯಾದ ಮಹಮೂದ್ ಹಂಶರಿಯನ್ನು ಆತನ ಟೆಲಿಫೋನ್‌ನಲ್ಲಿ ಬಾಂಬ್‌ ಇರಿಸಿ ಕೊಲ್ಲಲಾಗಿತ್ತು. ಎರಡು ದಶಕಗಳವರೆಗೆ ನಡೆದ ಕಾರ್ಯಚರಣೆಯಲ್ಲಿ, ಮೊಸ್ಸಾದ್ ಏಜೆಂಟ್‌ಗಳು ತಮ್ಮ ಗುರಿಗಳನ್ನು ತೊಡೆದುಹಾಕಲು ವಿವಿಧ ವಿಧಾನಗಳನ್ನು ಬಳಸಿದ್ದರು. ಎಷ್ಟೇ ನಾಜೂಕಾಗಿ ಕೆಲಸ ಮಾಡಿದ್ದರೂ, ವಿವಾದವಿಲ್ಲದೆ operation wrath of God ಮುಗಿದಿರಲಿಲ್ಲ. ಈ ಕಾರ್ಯಾಚರಣೆಯು ಇಸ್ರೇಲ್ ಪ್ರಾಯೋಜಿತವಾದುದರಿಂದ ಎಲ್ಲಾ ಹತ್ಯೆ ಮತ್ತು ಉಂಟಾದ ಹಾನಿಯ ಸಂಭಾವ್ಯತೆಯ ಬಗ್ಗೆ ನೈತಿಕ ಮತ್ತು ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕಿತ್ತು. ಎಲ್ಲಕ್ಕಿಂತ ಬೇಸರದ ಸಂಗತಿಯೆಂದರೆ, ಒಮ್ಮೆ ಮೊಸ್ಸಾದ್ ಏಜೆಂಟರು ನಾರ್ವೆಯಲ್ಲಿ ಮುಗ್ಧ ಮೊರೊಕನ್ ಮಾಣಿಯನ್ನು ಭಯೋತ್ಪಾದಕನೆಂದು ತಪ್ಪಾಗಿ ತಿಳಿದು ಕೊಂದಿದ್ದರು. + + + +ಮ್ಯುನಿಕ್ ಹತ್ಯಾಕಾಂಡ ಮತ್ತು operation wrath of God, ಅಂತರಾಷ್ಟ್ರೀಯ ಭಯೋತ್ಪಾದನಾ ನಿಗ್ರಹದ ಮೇಲೆ ಗಮನಾರ್ಹ ಪರಿಣಾಮಗಳನ್ನು ಬೀರಿತು. ಈ ಎರಡು ಘಟನೆಗಳು, ಅಂತಾರಾಷ್ಟ್ರೀಯ ಕೂಟಗಳ ದೋಷಗಳನ್ನು ಎತ್ತಿ ತೋರಿಸಿ, ಮುಂದಿನ ಒಲಂಪಿಕ್ ಗೇಮ್ಸ್‌ಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳಿಗೆ ಕಾರಣವಾಯಿತು. ಈ ಘಟನೆಗಳು ರಾಜಕೀಯ ಸಂಘರ್ಷ ಮತ್ತು ಅಂತರಾಷ್ಟ್ರೀಯ ಸಂಬಂಧಗಳ ನಡುವಿನ ಸಂಕೀರ್ಣ ಸಂಕೇತವಾಗಿ, ಜಾಗತಿಕ ವೇದಿಕೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಬೇಕಾಗಿರುವ ಅನಿವಾರ್ಯತೆಗೆ ನಿದರ್ಶನವಾಗಿ, ರಾಷ್ಟ್ರಗಳು ತಮ್ಮ ನಾಗರಿಕರನ್ನು ರಕ್ಷಿಸಲು ಯಾವ ಮಟ್ಟಕ್ಕೂ ಹೋಗುತ್ತವೆ ಎಂಬುದನ್ನು ಸಾರಿ ಹೇಳಿತ್ತು. \ No newline at end of file diff --git a/Kenda Sampige/article_40.txt b/Kenda Sampige/article_40.txt new file mode 100644 index 0000000000000000000000000000000000000000..d519b0532e9b5b774fc17b0d8bdae8e94958fd1e --- /dev/null +++ b/Kenda Sampige/article_40.txt @@ -0,0 +1,35 @@ +byಕೆಂಡಸಂಪಿಗೆ|Jan 22, 2024|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಭುವನೇಶ್ವರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿದ್ದರೂ ಸಹ ಅವುಗಳಲ್ಲಿ ಲಿಂಗರಾಜ ದೇವಾಲಯ ವಾಸ್ತುಶೈಲಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಒರಿಸ್ಸಾದಲ್ಲಿ ನಿರ್ಮಿತವಾಗಿರುವ ಮೊಟ್ಟಮೊದಲ ಅತಿ ದೊಡ್ಡ ದೇವಾಲಯವಾಗಿರುವುದಲ್ಲದೆ, ಒರಿಸ್ಸಾದ ಶೈವ ದೇವಾಲಯಗಳಲ್ಲಿಯೇ ದೊಡ್ಡ ದೇವಾಲಯವಾಗಿರುವ ಲಿಂಗರಾಜ ದೇವಾಲಯ `ಕಳಿಂಗ ವಾಸ್ತುಶೈಲಿ’ಯ ಅತಿ ಸುಂದರ ಉದಾಹರಣೆಯಾಗಿದೆ. ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ಒರಿಸ್ಸಾ ದೇವಾಲಯಗಳ ವಾಸ್ತು ಶಿಲ್ಪ ನಿರ್ಮಾಣ 11ನೇ ಶತಮಾನದಲ್ಲಿ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಯಿತು.ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 20, 2024|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು.ಅಬ್ದುಲ್‌ ರಶೀದ್‌ ಕವನ ಸಂಕಲನ “ನರಕದ ಕೆನ್ನಾಲಿಗೆಯಂಥ ನಿನ್ನ ಬೆನ್ನ ಹುರಿ”ಗೆ ಎಸ್‌. ಮಂಜುನಾಥ್‌ ಬರೆದ ಮುನ್ನುಡಿ + +byಕೆಂಡಸಂಪಿಗೆ|Jan 15, 2024|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ.ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಮತ್ತೊಂದು ಬರಹ ನಿಮ್ಮ ಓದಿಗೆ + +byಸಂಗೀತ ರವಿರಾಜ್‌ ಚೆಂಬು|Jan 10, 2024|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ. ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ ಎಂಬ ಸಣ್ಣ ಆಸೆಯಿಂದ, ಜೊತೆಗೆ ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ. ಮಾತಿಗಿಂತ ಕಾವ್ಯವೇ ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.ಜಗದೀಶ್‌ ಜೋಡುಬೀಟಿ ಕವನ ಸಂಕಲನ “ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಕುರಿತು ಸಂಗೀತ ರವಿರಾಜ್‌, ಚೆಂಬು ಬರಹ + +byಕೆಂಡಸಂಪಿಗೆ|Jan 5, 2024|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು.ಡಾ. ಚಂದ್ರಮತಿ ಸೋಂದಾ ಹೊಸ ಕಾದಂಬರಿ “ದುಪಡಿ”ಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Jan 1, 2024|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಈಗ ಶಿಖರವೇ ಇಲ್ಲದಿರುವ ಮುಖ್ಯ ದೇಗುಲದ ಉಳಿದಿರುವ ಪೀಠ ಭಾಗದ ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಕ್ಲೋರೈಟ್ ಶಿಲೆಯಿಂದ ನಿರ್ಮಿಸಿರುವ ಸೂರ್ಯನ ಮೂರು ಪಾರ್ಶ್ವ ದೇವತಾ ವಿಗ್ರಹಗಳಿವೆ. ಆ ವಿಗ್ರಹಗಳ ಮೇಲಿನ ಒಡವೆ, ಆಭರಣಗಳ ಕುಸರಿ ಕಲೆಯಂತೂ ಚಿನಿವಾರನ ಕುಸರಿ ಕಲೆಯಷ್ಟೇ ಸೂಕ್ಷ್ಮ ಹಾಗೂ ಸುಂದರವಾಗಿವೆ. ವಿಶೇಷವೆಂದರೆ ಈ ಪಾರ್ಶ್ವ ದೇವತೆಗಳು ಬೂಟುಗಳನ್ನು ಧರಿಸಿವೆ.ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Dec 29, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು.ಡಾ. ಎಂ. ಉಷಾ ಹೊಸ ಕಾದಂಬರಿ “ಬಾಳ ಬಟ್ಟೆ”ಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Dec 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯವಾಗಿದೆ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು, ಆದರೆ ನಂತರ ಅದು ಹೇಗೆ ಒಂದು `ಸಾಂಸ್ಕೃತಿಕ ನಡವಳಿಕೆ’ಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು.ಡಾ. ಜೆ. ಬಾಲಕೃಷ್ಣ ಅವರ ಹೊಸ ಕೃತಿ “ನಡೆದಷ್ಟು ದೂರ” ಪ್ರವಾಸ ಕಥನದ ಕೆಲವು ಬರಹಗಳ ಸರಣಿ ನಿಮ್ಮ ಓದಿಗೆ + +byನಾರಾಯಣ ಯಾಜಿ|Dec 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು.ರಾಜಶೇಖರ ಜೋಗಿನ್ಮನೆ ಕಾದಂಬರಿ “ಕೇಳು ಧನಂಜಯ..” ಕುರಿತು ನಾರಾಯಣ ಯಾಜಿ ಬರಹ \ No newline at end of file diff --git a/Kenda Sampige/article_400.txt b/Kenda Sampige/article_400.txt new file mode 100644 index 0000000000000000000000000000000000000000..29be6bb3fffe9478a0f14b44211b7f92512a9df2 --- /dev/null +++ b/Kenda Sampige/article_400.txt @@ -0,0 +1,63 @@ + + +ಉತ್ತರ ಕನ್ನಡದ ಸಣ್ಣ ಕಥೆಗಾರರ ಒಂದು ದೊಡ್ಡ ಪರಂಪರೆಯೇ ನಮ್ಮ ಸಣ್ಣ ಕಥೆಗಳ ಜಗತ್ತಿಗಿದೆ. ವಿ.ಜಿ. ಶ್ಯಾನಭಾಗರಿಂದ ತೊಡಗಿ ಚಿತ್ತಾಲ, ಶಾಂತಿನಾಥ ದೇಸಾಯಿ, ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ ಮುಂತಾದ ಖ್ಯಾತನಾಮರ ಜೊತೆ ಹೊಸ ತಲೆಮಾರಿಗೆ ಸೇರಿದ ಬಹುದೊಡ್ಡ ಕಥೆಗಾರರ ಪಡೆಯೇ ಉತ್ತರಕನ್ನಡದ ಸೊಗಡನ್ನು ಕನ್ನಡ ಸಣ್ಣಕತೆಗೆ ಧಾರೆ ಎರೆದಿದೆ. ಶ್ರೀಧರ ಬಳಗಾರ, ಅಶೋಕ ಹೆಗಡೆ, ಚಿಂತಾಮಣಿ ಕೊಡ್ಲೆಕೆರೆ, ಸುನಂದಾ ಪ್ರಕಾಶ ಕಡಮೆ, ಸಂದೀಪ ನಾಯಕ, ಅನುಜಯಾ ಎಸ್.ಕುಮಟಾಕರ್, ಕಾವ್ಯಾ ಕಡಮೆ, ಪದ್ಮನಾಭ ಭಟ್ ಶೇವ್ಕಾರ, ಪ್ರಕಾಶ ನಾಯಕ, ಭಾಸ್ಕರ ಹೆಗಡೆ, ಸಚ್ಚಿದಾನಂದ ಹೆಗಡೆ ಮುಂತಾದವರಲ್ಲದೆ ಇನ್ನೂ ಹಲವರು ಸಣ್ಣಕತೆಗಳ ಕ್ಷೇತ್ರದಲ್ಲಿ ಸಾಕಷ್ಟು ಗಮನಾರ್ಹ ಕೊಡುಗೆಯನ್ನಿತ್ತಿದ್ದಾರೆ. ಇವರುಗಳು ನಮಗೆ ದಕ್ಕಿಸಿದ ಹನೇಹಳ್ಳಿ, ಗೋಕರ್ಣ, ಹೊನ್ನಾವರ, ಶಿರಸಿ, ಅಂಕೋಲೆ, ಶರಾವತಿ, ಗಂಗಾವಳಿ, ಪಾಪನಾಶಿನಿ, ಅಘನಾಶಿನಿ, ಅಳಿವೆ ಬಾಗಿಲು, ಯಕ್ಷಗಾನ, ಬಯಲಾಟ, ದೋಣಿ-ಲಾಂಚುಗಳ ಪ್ರಯಾಣ ಎಲ್ಲ ಸೇರಿ ನಮಗೆ ಉತ್ತರ ಕನ್ನಡ ಎಂದರೆ ಇದು ಎಂಬಂಥ ಏನು ಒಂದು ಚಿತ್ರ ಮನಸ್ಸಿನಲ್ಲಿ ನೆಲೆಯಾಗಿದೆ, ಅದು ನಿಜವಾದ ಉತ್ತರ ಕನ್ನಡವೇ ಎನ್ನುವ ಪ್ರಶ್ನೆ ಇದೆ. + +ಭಾರತೀಯ ಇಂಗ್ಲೀಷ್ ಸಾಹಿತ್ಯ ಸೃಷ್ಟಿಸಿದ ಒಂದು ಭಾರತ ನಿಜವಾದ ಭಾರತವಾಗಿರದೆ, ಸಾಮಾನ್ಯವಾಗಿ ಹೊರದೇಶಗಳಲ್ಲೆ ನೆಲೆಯಾದ ಭಾರತೀಯ ಮೂಲದ ಇಂಗ್ಲೀಷ್ ಸಾಹಿತಿಗಳ ಅರೆಬರೆ ನೆನಪು ಮತ್ತು ಕಲ್ಪನೆಯ ಒಂದು ಒಂದು ಭಾರತವಾಗಿದೆ ಎನ್ನುವ ಆರೋಪವಿದೆ. ಭಾರತೀಯ ಭಾಷೆಯಲ್ಲಿ ನಮಗೆ ಸಿಗುವ ಭಾರತದ ಚಿತ್ರವೇನಿದೆ ಅದು ಭಾರತದ ಕತೆಗಳನ್ನು ಹೇಳುವ ಇಂಗ್ಲೀಷ್ ಸಾಹಿತ್ಯದಲ್ಲಿ ಸಿಗುವ ಭಾರತಕ್ಕೆ ಹೋಲಿಸಲಾಗದಷ್ಟು ಭಿನ್ನವಾಗಿರುವುದು ಕೂಡ ನಿಜ, ಇಲೈಟ್ ವರ್ಗಕ್ಕೆ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಗೆ ಸರಿಯಾದ ಐಷಾರಾಮಿ ಭವ್ಯ ಬಂಗಲೆಯಲ್ಲಿ ವಾಸವಿರುವ ಭಾರತದ ಮಧ್ಯಮವರ್ಗದ ಕೌಟುಂಬಿಕ ಕತೆಗಳನ್ನು ಹೇಳುವ, ವಿದೇಶದಲ್ಲಿ ಡ್ಯುಯೆಟ್ಟುಗಳ ಚಿತ್ರೀಕರಣ ಮಾಡುವ ಬಾಲಿವುಡ್ ಸಿನಿಮಾಗಳ ಹಾಗೆಯೇ ‘ಹೊರಗಿನ’ವರಿಗೆ ಹೊರಗಿನವರ ಭಾಷೆಯಲ್ಲಿ ಕಟ್ಟಿಕೊಡುವ ಭಾರತ ಮತ್ತು ನಮ್ಮದೇ ಕನ್ನಡ, ಹಿಂದಿ, ಬಂಗಾಳಿ, ಗುಜರಾತಿ, ತಮಿಳು, ತೆಲುಗು ಭಾಷೆಯ ಕೃತಿಗಳಲ್ಲಿ ನಮಗೆ ಸಿಗುವ ಭಾರತ ಏತಕೆ ಭಿನ್ನ? ವಿದೇಶದಲ್ಲೇ ನೆಲೆನಿಂತ ಸಲ್ಮಾನ ರಶ್ದಿ, ನೈಪಾಲರುಗಳಿಗೆ ದಕ್ಕುವ/ದಕ್ಕದ ಭಾರತ ಯಾವುದು? + +ಇವೇ ಪ್ರಶ್ನೆಗಳನ್ನು ನಾವು ನಗರದಲ್ಲಿ ನೆಲೆನಿಂತ ನಮ್ಮ ಪ್ರಾದೇಶಿಕ ಬಾಲ್ಯ, ತಾರುಣ್ಯಗಳನ್ನು ನೆಚ್ಚಿ ಬರೆಯುತ್ತಿರುವ ಹೊಸ ತಲೆಮಾರಿನ ಕತೆಗಾರರ ವಿಷಯದಲ್ಲಿಯೂ ಎತ್ತುವುದು ಸಾಧ್ಯವಿದೆ. ಗಿರೀಶ್ ಕಾರ್ನಾಡ್ ಅವರು ಬೆಂಗಳೂರನ್ನೇ ಕೇಂದ್ರವಾಗಿರಿಸಿಕೊಂಡ ಒಂದೇ ಒಂದು ಕಾದಂಬರಿ ಕನ್ನಡದಲ್ಲಿ ಬಂದಿಲ್ಲ ಎಂದಿರುವುದರ ಹಿನ್ನೆಲೆ ಬಹುಶಃ ಇದೂ ಆಗಿರುವುದು ಸಾಧ್ಯವಿದೆ. + +ಇಲ್ಲಿ ಸಾಮಾನ್ಯೀಕರಣದ ಅಪಾಯ ಮತ್ತು ಮಿತಿಗಳನ್ನು ಮರೆಯದೇ, ಒಂದು ಸೀಮಿತ ನೆಲೆಯಲ್ಲಿ ಕೆಲವೊಂದು ಅಂಶಗಳನ್ನು ಗುರುತಿಸುವ ಉದ್ದೇಶದಿಂದಷ್ಟೇ ಮುಂದಿನ ಮಾತುಗಳನ್ನಾಡುತ್ತಿದ್ದೇನೆ. ಪ್ರತಿಯೊಬ್ಬ ಲೇಖಕನೂ ಅನನ್ಯ ಮತ್ತು ಅಸ್ಮಿತೆಯ ಪ್ರತಿರೂಪ ಎನ್ನುವುದನ್ನು ಗೌರವಪೂರ್ವಕ ಒಪ್ಪಿಕೊಂಡೇ ಈ ಮಾತುಗಳನ್ನು ಆಡುತ್ತಿದ್ದೇನೆ. ಸ್ಥೂಲವಾಗಿ ಹೇಳುವುದಾದರೆ, ಮೊದಲನೆಯದಾಗಿ, ಈ ಯಾವತ್ತೂ ಕತೆಗಾರರು ಕತೆ ಬರೆಯುವ ಕಾಲಕ್ಕೆ ಉತ್ತರಕನ್ನಡದಿಂದ ದೂರವಾಗಿ ಮುಂಬಯಿ, ಬೆಂಗಳೂರು, ಧಾರವಾಡ ಮುಂತಾದ ಕಡೆ ನೆಲೆಯಾದವರು ಎನ್ನುವುದು. ಹಾಗಿದ್ದೂ ಇವರು ತಮ್ಮ ಬಾಲ್ಯ, ತಾರುಣ್ಯದ ಉತ್ತರ ಕನ್ನಡದ ಸ್ಮೃತಿಯನ್ನೇ ನೆಚ್ಚಿಕೊಂಡು ಕಥಾಜಗತ್ತನ್ನು ಕಟ್ಟುತ್ತ ಬಂದಿದ್ದಾರೆ. ಆದರೆ ಬಹುಶಃ ಶ್ರೀಧರ ಬಳಗಾರ ಒಬ್ಬರನ್ನು ಬಿಟ್ಟರೆ ಪೂರ್ತಿಯಾಗಿ ಉತ್ತರ ಕನ್ನಡದ ಗಡಿರೇಖೆಯ ಒಳಗೇ ತಮ್ಮ ಕಥಾಜಗತ್ತನ್ನು ಸೃಜಿಸಿಕೊಂಡ (ಮತ್ತು ಸ್ವಂತ ನೆಲೆಯಾದ) ಇನ್ನೊಬ್ಬ ಕತೆಗಾರ ಇಲ್ಲಿಂದ ಬಂದಿಲ್ಲ. ಉತ್ತರಕನ್ನಡದ ಕತೆಗಾರರು ಸ್ಪಷ್ಟವಾಗಿ ತಮ್ಮ ಕತೆಗಳಲ್ಲಿ ಪಡಿಮೂಡಿಸಿದ ಕಥಾಜಗತ್ತು ಉತ್ತರ ಕನ್ನಡದ ಗಡಿರೇಖೆಗಳ ಋಣ ಕಟ್ಟಿಕೊಂಡೇ ಹುಟ್ಟಿರುವುದು ಎನ್ನುವುದು ನಿಜವಾಗಿದ್ದೂ ಅದು ಬೇರೆ ಬೇರೆ ಕಾರಣಗಳಿಂದಾಗಿ ಅವರ ಕಲ್ಪನೆ, ಆಸೆ, ನಿರೀಕ್ಷೆಗಳ ಒಂದು ಕಥಾಜಗತ್ತೇ ಹೊರತು ವಾಸ್ತವದ ಉತ್ತರಕನ್ನಡ ಅಲ್ಲ. + +ಬಾಲ್ಯ ತಾರುಣ್ಯದಾಚೆ ಪ್ರಬುದ್ಧನಾದ ಗ್ರಹಸ್ಥ ಜೀವನವನ್ನು ಇಲ್ಲಿಯೇ ಇದ್ದು, ವೃತ್ತಿಗಾಗಿಯೋ ಕೃಷಿಗಾಗಿಯೋ ಇಲ್ಲಿಯೇ ನೆಲೆಯಾಗಿ ತಮ್ಮ ಅನುಭವದ ಕಥಾಜಗತ್ತನ್ನು ಕಟ್ಟಿಕೊಡಬಲ್ಲ ಅವಕಾಶ ಹೆಚ್ಚಿನ ಕತೆಗಾರರಿಗೆ ಇರಲೇ ಇಲ್ಲ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. ಕತೆಗಾರ ಫಿಕ್ಷನಲೈಸ್ಡ್ ವಾಸ್ತವವನಲ್ಲದೆ (ಕಲ್ಪಿತ ವಾಸ್ತವ) ಬೇರೆ ವಾಸ್ತವವನ್ನು ಚಿತ್ರಿಸುವಾಗ ಅದು ವರದಿಯ ಧಾಟಿ ಪಡೆದುಕೊಳ್ಳುವುದಿಲ್ಲವೆ ಎನ್ನುವ ಜಿಜ್ಞಾಸೆಯಿದೆ. ತನ್ನ ನೇರ ಅನುಭವದಾಚೆಯ ಏನನ್ನೂ ಬರೆಯಲಾರೆ ಎನ್ನುವ ಬರಹಗಾರ ಕಂಫರ್ಟ್ ಜೋನ್ ಬಿಟ್ಟು ಬರೆಯುವುದು ಸಾಧ್ಯವಾಗುವುದಿಲ್ಲ ಎನ್ನುವ ಇನ್ನೊಂದು ಜಿಜ್ಞಾಸೆಯೂ ಇದೆ. ಈ ಚರ್ಚೆಗಳನ್ನೆಲ್ಲ ಇಲ್ಲಿ ಬೆಳೆಸದೆ, ಇದಕ್ಕೆ ಬಹುಶಃ ಸೂಕ್ತವಾದ ಉತ್ತರವನ್ನು ಈಗಾಗಲೇ ಕೆ.ಪಿ.ಪೂರ್ಣಚಂದ್ರ ತೇಜಸ್ವಿಯವರು ತಮ್ಮ ಕತೆ-ಕಾದಂಬರಿಗಳ ಮೂಲಕವೇ ಕೊಟ್ಟಿದ್ದಾರೆ ಎಂದಷ್ಟೇ ಸೂಚಿಸಬಯಸುತ್ತೇನೆ. + +ಎರಡನೆಯದಾಗಿ, ಇವರು ಚಿತ್ರಿಸುವ ಉತ್ತರ ಕನ್ನಡದ ನೆಲ ಜಲ ಮಂದಿ ಒಂದು ಬಗೆಯ ಫಿಕ್ಶನಲೈಸ್ಡ್ ರೊಮಾಂಟಿಸಿಸಮ್ ಗೆ ಒಳಪಟ್ಟಿದ್ದು ಎನ್ನುವುದು ಸೂಕ್ಷ್ಮವಾಗಿ ಗಮನಿಸಿದರೆ ಉತ್ತರಕನ್ನಡದ ಕತೆಗಾರರು ಸೃಷ್ಟಿಸುವ ಪಾತ್ರಗಳು, ಮನುಷ್ಯ ಸಂಬಂಧಗಳು, ಕುಟುಂಬಗಳು, ಅಲ್ಲಿನ ಸಂಘರ್ಷಗಳು ನವ್ಯ, ದಲಿತ, ಬಂಡಾಯದಂಥಹ ಚೌಕಟ್ಟಿಗೆ ಸಿಲುಕುವುದೇ ಇಲ್ಲ. ಶಾಂತಿನಾಥ ದೇಸಾಯಿ ಮತ್ತು ಯಶವಂತ ಚಿತ್ತಾಲರನ್ನೂ ಸೇರಿಸಿಯೇ ಈ ಮಾತು ನಿಜ ಎನ್ನವುದನ್ನು ಗಮನಿಸಬಹುದು. ಹಾಗಾಗಿಯೇ ಅದೊಂದು ಬೇರೆಯೇ ಜಗತ್ತಿನ ಸೃಷ್ಟಿ ಎಂಬುದು ವಿಚಿತ್ರವಾದರೂ ನಿಜ. ಮತ್ತು ಇದರಿಂದಾಗಿ ನವ್ಯೋತ್ತರ ಕನ್ನಡ ಕಥಾಸಾಹಿತ್ಯಕ್ಕೆ ಉತ್ತರ ಕನ್ನಡದ ಕತೆಗಾರರೇ ಒಂದು ಮಾದರಿ ಮತ್ತು ಚೌಕಟ್ಟು ಒದಗಿಸಿದರು ಎನ್ನುವುದನ್ನು ಒಪ್ಪಿಕೊಳ್ಳುತ್ತಲೇ ಅಂಥ ಮಾದರಿ, ವಾಸ್ತವ ಚಿತ್ರಣದ ಸೋಗು ಹೊತ್ತಿದ್ದರೂ ಕಲ್ಪನಾವಿಲಾಸವನ್ನೇ ಹೆಚ್ಚು ಹೆಚ್ಚಾಗಿ ಪೋಷಿಸುತ್ತ ಬಂತು ಎನ್ನುವುದನ್ನು ಗುರುತಿಸುವುದು ಮುಖ್ಯ. + +ಮೂರನೆಯದಾಗಿ, ಈ ಕತೆಗಾರರಲ್ಲಿ ತೊಂಬತ್ತು ಶೇಕಡಾಕ್ಕಿಂತ ಹೆಚ್ಚಿನ ಕತೆಗಾರರು ಚಿತ್ರಿಸುವ ಬದುಕಿನಲ್ಲಿ `ಇವಿಲ್’ ಕಣ್ಮರೆಯಾದಂತಿರುವುದು. ಇದನ್ನೇ ಸ್ವಲ್ಪ ಬೇರೆ ರೀತಿ ಹೇಳುವುದಾದರೆ, ನವಿರುತನ, ಭಾವುಕತೆ, ಮಾನವೀಯ ಸಂಬಂಧ, ಕಾವ್ಯಾತ್ಮಕ ನಿರೂಪಣೆ, ರೂಪಕಗಳ ಮಹತ್ವ – ಈ ಹೆಚ್ಚಿನ ಕತೆಗಳ ಸಾಮಾನ್ಯ ಲಕ್ಷಣ ಎಂದು ಸಾಮಾನ್ಯೀಕರಣಗೊಳಿಸಿ ಹೇಳಬಹುದಾದಷ್ಟು ಅತಿಯಾದ ಎದ್ದುಕಾಣುವ ಲಕ್ಷಣ ಆಗಿರುವುದು. ಈ ಮೂರೂ ಅಂಶಗಳು ಪರಸ್ಪರ ಒಂದಕ್ಕೊಂಡು ಪೂರಕವಾಗಿ, ಕೆಲವೊಮ್ಮೆ ಒಂದರಿಂದ ಇನ್ನೊಂದನ್ನು ವಿಂಗಡಿಸಿ ನೋಡಲಾಗದಷ್ಟು ಸೇರಿಹೋದಂತಿರುವುದು ನಿಜ. ಒಂದು ಪುಟ್ಟ ಉದಾಹರಣೆ ನೀಡುವುದಾದರೆ, (ಇದು ನನ್ನ ಒರಿಜನಲ್ ಚಿಂತನೆಯಲ್ಲ) ಜಯಂತ ಕಾಯ್ಕಿಣಿಯವರ `ಒಪೆರಾ ಹೌಸ್’ ಕತೆಯ ಸಿನಿಮಾ ಟಾಕೀಸಿನ ಗೇಟ್ ಕೀಪರ್ ಇಂದ್ರನೀಲ, ಸಿನಿಮಾ ನೋಡಲು ಬಂದು ಮರೆತು ಹೋಗಿರಬಹುದಾದ ಒಂದು ಫ್ಲಾಸ್ಕ್ ನೋಡುತ್ತಲೇ ಅದು ಆಸ್ಪತ್ರೆಗೆ ಹೊರಟಿರಬಹುದಾದ ಒಂದು (ಆಸ್ಪತ್ರೆಯ ನೆನಪೇ) ಮಾನವೀಯ ಸ್ಪಂದವನ್ನುಂಟು ಮಾಡಬಲ್ಲಂಥಹ ಕಲ್ಪನೆಗೆ ತುತ್ತಾಗುತ್ತಾನೆ. ಆದರೆ ಅವನಂಥಹ ಬಡವ ಯಾರೋ ಬಿಟ್ಟುಹೋದ ಫ್ಲಾಸ್ಕ್ ಕಣ್ಣಿಗೆ ಬಿದ್ದರೆ ಯಾರಿಗೂ ಗೊತ್ತಾಗದ ಹಾಗೆ ಅದನ್ನು ಒಳಹಾಕುವ ಬಗ್ಗೆ ಮಾತ್ರ ಯೋಚಿಸುತ್ತಾನೆ ಎನ್ನುವುದು ‘ಇವಿಲ್’. ಇಂಥ ಉದಾಹರಣೆ ನಮ್ಮ ಯಾವುದೇ ಉತ್ತರ ಕನ್ನಡದ ಕತೆಗಾರನ ಯಾವುದೇ ಕತೆಯನ್ನು ಕೈಗೆತ್ತಿಕೊಂಡರೂ ಸಿಗುತ್ತದೆ ಎನ್ನುವುದು ಅಪರೂಪದ ಅಪವಾದಗಳೊಂದಿಗೆ ಸತ್ಯ. + +ನಾಲ್ಕನೆಯದಾಗಿ, ಹೆಚ್ಚಿನ ಎಲ್ಲಾ ಕತೆಗಾರರು ಬರೆದ ಕತೆಗಳಲ್ಲಿ ವ್ಯಕ್ತಿಗತ/ಕೌಟುಂಬಿಕ ಚಿತ್ರ ಸಿಗುತ್ತದೆಯೇ ಹೊರತು ಸಾಮಾಜಿಕ/ರಾಜಕೀಯ ಚಿತ್ರಗಳು, ಅಲ್ಲಿನ ಕೈಗಾ, ಸೀಬರ್ಡ್ , ಉಷ್ಣ ವಿದ್ಯುತ್ ಸ್ಥಾವರ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಡೆದ ಸಾಮಾಜಿಕ/ರಾಜಕೀಯ ಪ್ರತಿಸ್ಪಂದನವನ್ನು ತಿಳಿದುಕೊಳ್ಳಲು ಸಹಾಯ ಮಾಡುವಂಥ ಕಥಾನಕಗಳು ಇಲ್ಲಿಂದ ಬಂದಿಲ್ಲ. ಬಹುಶ; ಅಶೋಕ ಹೆಗಡೆಯವರ ‘ಅಶ್ವಮೇಧ’ ಕಾದಂಬರಿ ಇದಕ್ಕೊಂದು ಅಪವಾದ ಅನಿಸುತ್ತದೆ. ಗಮನಿಸಬೇಕಾದ ಅಂಶವೆಂದರೆ, ರಾಜು ಹೆಗಡೆಯವರ ಕತೆಗಳು ಈ ಅಂಶಗಳಿಂದ ಕಳಚಿಕೊಂಡು ನಿಲ್ಲುತ್ತವೆ ಎನ್ನುವುದು. ಇವರ ಕತೆಗಳಲ್ಲಿ ಬರುವ ಪಾತ್ರಗಳು ಹೆಚ್ಚು ಸಾಚಾ ಆಗಿ, ರೊಮ್ಯಾಂಟಿಸಂ ಇಲ್ಲದ ಒರಟುತನದಿಂದ, ಒಬ್ಬ ಹಳ್ಳಿಗನ ಇವಿಲ್ ಕೂಡ ಸಹಜ ಎಂದು ಅನಿಸುವಂತೆ ಮೂಡಿ ಬರುತ್ತವೆ. ಇಲ್ಲಿ ಕೊಲೆ ಮಾಡಬಲ್ಲ ಭಾವ, ಮೈದುನರು, ಯಕ್ಷಗಾನ ಬಯಲಾಟದ ಟೆಂಟಿಗೆ ಬೆಂಕಿ ಹಚ್ಚಬಲ್ಲ ಕಟ್ಟಾ ಜಿದ್ದಿನ ಊರ ಮಂದಿ, ಕಳ್ಳನಾಟ ಸಾಗಿಸುವ ದಂಧೆಯನ್ನು ಹೊಟ್ಟೆಪಾಡಿನ ಅನಿವಾರ್ಯ ಎಂದು ಕಂಡುಕೊಳ್ಳುವ ಮತ್ತು ಆದರ್ಶದ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳುವ ಯಕಃಶ್ಚಿತ್ ಮನುಷ್ಯರು ಕಾಣಸಿಗುತ್ತಾರೆ. ಇವರು ಎಕ್ಸ್ಟ್ರಾ ಮ್ಯಾರಿಟಲ್ ಸಂಬಂಧವನ್ನು, ಸೆಕ್ಸನ್ನು, ಕುಡಿತವನ್ನು ಒಂದು ಬೇರೆಯೇ ನೆಲೆಯಲ್ಲಿ ಸಂಭ್ರಮಿಸಬಲ್ಲ ಮನುಷ್ಯರು. + +‘ಇಲ್ಲಿ ನಾನು ಮೊದಲೇ ಟುವಾಲು ಇಟ್ಟಿದ್ದೆ’ ಎಂಬ ತಕರಾರು ತೆಗೆದು ಜಗಳ ಮಾಡಬಲ್ಲ ಸಾಮಾನ್ಯ ಮನುಷ್ಯರು ಇವರ ಕತೆಗಳಲ್ಲಿ ನಾಚಿಕೆ ಪಡದೆ ಪಾತ್ರವಹಿಸಿರುತ್ತಾರೆ. ಈ ಸಾಮಾನ್ಯತನ ಸರಳತೆ ವಸ್ತು, ವಿಷಯ ಮತ್ತು ಎರಡರ ಸಾಮಾಜಿಕ, ತಾತ್ವಿಕ ಆಯಾಮಗಳ ಮಟ್ಟದಲ್ಲಿ ಕೂಡಾ ರಾಜು ಹೆಗಡೆಯವರಿಗೆ ಕತೆಯೊಂದು ಆಹ್ವಾನವಾಗುವುದು ನಾವು ಗಮನಿಸಬೇಕಾದ ಸಂಗತಿ. ಇದು ರಾಜು ಹೆಗಡೆಯರಲ್ಲಿ ನಾನು ಗುರುತಿಸುವ ಮಹತ್ವದ ಒಂದು ಅಂಶ. + +ಕಳೆದ ವರ್ಷ 2017 ರಲ್ಲಿ ಭಾರತೀಯ ಇಂಗ್ಲೀಷ್ ಬರಹಗಾರರು ಕಲ್ಕತ್ತಾದ ಅಮಿತ್ ಚೌಧುರಿಯವರ ಮುಂದಾಳ್ತನದಲ್ಲಿ Against Storytelling ಎಂಬ ವಿಚಾರ ಸಂಕಿರಣ, ಕಮ್ಮಟ ಎಲ್ಲ ಹಮ್ಮಿಕೊಂಡಿದ್ದರು. ಸಾಕಷ್ಟು ಹಿಂದಿನಿಂದಲೂ ಇಂಥ ಒಂದು ಪ್ರಕ್ರಿಯೆಯನ್ನು ಅಮಿತ್ ಚೌಧುರಿಯವರು ಪ್ರತಿಪಾದಿಸುತ್ತಲೇ ಬಂದವರು. ಈ ಬಗ್ಗೆ ಅವರು ಮತ್ತು ಅವರ ಕೃತಿಗಳ ಬಗ್ಗೆ ಬರೆದವರು ಸಾಕಷ್ಟು ಚರ್ಚೆ, ಜಿಜ್ಞಾಸೆ ನಡೆಸಿದ್ದಾರೆ. ಈ ನಿಟ್ಟಿನ ಹೆಚ್ಚು ಆಳವಾದ ಚರ್ಚೆಯಲ್ಲಿ ಆಸಕ್ತಿಯುಳ್ಳವರು ಅಮಿತ್ ಚೌಧುರಿಯವರ ಸಂಪಾದಕತ್ವದಲ್ಲಿ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರೆಸ್ ಹೊರತಂದಿರುವ Literary Activism ಎನ್ನುವ ಕೃತಿಯನ್ನು ಗಮನಿಸಬಹುದು. ಆದರೆ ಅತ್ಯಂತ ಸುಂದರವಾಗಿ ಈ ವಿಚಾರವನ್ನು ನಿರೂಪಿಸಿದ್ದು ಮಾತ್ರ ಅರವಿಂದ ಕೃಷ್ಣ ಮೆಹರೋತ್ರ ಅವರೇ. ಅವರು Against Storytelling ಕುರಿತಾಗಿಯೇ ಅಶೋಕಾ ವಿಶ್ವವಿದ್ಯಾಲಯವು ‘ದ ಯೂನಿವರ್ಸಿಟಿ ಆಫ್ ಈಸ್ಟ್ ಆಂಗ್ಲಿಯಾ’ದೊಂದಿಗೆ ಜಂಟಿಯಾಗಿ ಆಯೋಜಿಸಿದ್ದ ನಾಲ್ಕನೇಯ ಅಂತರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಓದಿದ ಪ್ರಬಂಧದ ಪೂರ್ಣ ಪಠ್ಯ ‘ನನಗೆ ರೆಕ್ಕೆಗಳಿಲ್ಲ’ ಈಗಲೂ ಅಂತರ್ಜಾಲದಲ್ಲಿ ಲಭ್ಯವಿದೆ. ಅಲ್ಲಿ ಅವರು ಹಿಂದಿ ಕಥೆಗಾರ, ಕವಿ ವಿನೋದ್ ಕುಮಾರ್ ಶುಕ್ಲ ಅವರನ್ನು ಉದ್ಧರಿಸುತ್ತ ಇದೇ ಅಂಶವನ್ನು ಪ್ರತಿಪಾದಿಸಿದ ಬಗೆ ಅತ್ಯಂತ ಮನೋಜ್ಞವಾಗಿದೆ. + +ನಮಗೆಲ್ಲ ದೊಡ್ಡ ದೊಡ್ಡ ಸಂಗತಿಗಳು ಇಷ್ಟ. ಸಾಮಾಜಿಕವಾಗಿ, ರಾಜಕೀಯವಾಗಿ, ತಾತ್ವಿಕವಾಗಿ ಅತ್ಯಂತ ಸುಸಂಬದ್ಧವಾದ ಅರ್ಥಪೂರ್ಣವೂ, ಸಮಕಾಲೀನವೂ, ಮಹತ್ವವುಳ್ಳದ್ದೂ ಇಶ್ಯೂಗಳ ಬಗ್ಗೆ ಮಾತ್ರ ಕತೆಗಾರರು ಬರೆಯುತ್ತಾರೆ. ಪ್ರಶಸ್ತಿ, ಪುರಸ್ಕಾರ ಎಲ್ಲ ದಕ್ಕಬೇಕಾದರೆ ಬಹುಶಃ ಇದೆಲ್ಲ ಅನಿವಾರ್ಯವೇನೊ, ನೀವು ಗಮನಿಸಿ ಇಂಥ ಬರಹಗಳಿಗೆ ಒಂದು ವಿಚಿತ್ರವಾದ ‘ಭಾರ’ – ಒಜ್ಜೆ ಇರುತ್ತದೆ. ಇವು ಹಾರುತ್ತಲೇ ಇರಬೇಕಾದ ಗರಿಯ ಲಘುತನದಿಂದ ದೂರ. ಆದರೆ ದೂರ ಗಗನದಲ್ಲಿ ಹಾರುವ ಹಕ್ಕಿ ತನಗೆ ರೆಕ್ಕೆ ಇದೆ ಎಂಬ ಕಾರಣಕ್ಕೇ ಭೂಮಿಯನ್ನು ‘ಬಿಟ್ಟು’ ದೂರವಾಗುತ್ತದೆ. ಆದರೆ ಮತ್ತೆ ಮತ್ತೆ ಅದೇ ಭೂಮಿಗೆ ಮರಳಿ ಬರಬೇಕಾಗುತ್ತದೆ. ಅದಕ್ಕೆ ತಾನು ಹೀಗೆ ನೆಲದಿಂದ ದೂರವಾಗುತ್ತಿರುವುದಾಗಲೀ, ಮತ್ತೆ ನೆಲಕ್ಕೆ ಮರಳಿ ಬರುತ್ತಿರುವುದಾಗಲೀ ಅರಿವಿದೆಯೋ ಇಲ್ಲವೊ. ಆದರೆ ಚಿಟ್ಟೆಯೊಂದಕ್ಕೆ ಅಂಥ ರೆಕ್ಕೆಗಳಿಲ್ಲ. ಅದು ಸದಾ ನೆಲಮಟ್ಟದಲ್ಲಿ ಹಾರುತ್ತ ಉಳಿಯುತ್ತದೆ. ಈ ರೂಪಕ ವಿನೋದ್ ಕುಮಾರ್ ಶುಕ್ಲ ಅವರ ಒಂದು ಕವಿತೆಯಿಂದ ಆರಿಸಿದ್ದು, ಮೆಹರೋತ್ರ ಅವರು ಶುಕ್ಲ ಅವರ ಒಂದು ಸುಂದರ ಕತೆಯನ್ನು ಅನುವಾದಿಸಿ ಅಲ್ಲಿ ಓದುತ್ತಾರೆ. + +ಸಂತೆ ಮಾಳಕ್ಕೆ ಬಂದು ಎರಡೂ ಕೈಗಳಲ್ಲಿ ಎರಡು ಕೈಚೀಲ (ಒಂದು ಅಲ್ಲಲ್ಲಿ ಹರಿದಿದೆ ಕೂಡ) ಹಿಡಿದು, ಅವುಗಳಲ್ಲಿ ಒಂದಿಷ್ಟು ಬಟಾಟೆ, ಹೂಕೋಸು, ಹಸಿರು-ಕೆಂಪು ಹಸಿಮೆಣಸು, ಒಂದು ಗರಂಮಸಾಲೆಯ ಪುಟ್ಟ ಪ್ಯಾಕೆಟು ಇತ್ಯಾದಿ ತುಂಬಿಕೊಂಡು ಹೊರಟ ಒಬ್ಬ ಸಾಮಾನ್ಯನ ಕಿಸೆಯಲ್ಲಿ ಒಂದು ಹತ್ತು ರೂಪಾಯಿಯ ನೋಟು ತಾನಾಗಿರಲು ಬಯಸುತ್ತೇನೆ ಎಂದು ಶುಕ್ಲ ಬರೆಯುತ್ತಾರೆ. + + + +ನಮ್ಮ ಬರವಣಿಗೆಗೆ ಒಂದು ವಿಚಿತ್ರವಾದ ಒತ್ತಡ ಇದೆ. ಭಾರ ಇದೆ. ಜ್ಞಾನದ ಒಜ್ಜೆಯೊ, ವಿಚಾರದ ಭಾರವೋ, ಗೊತ್ತಿದೆ ಎಂಬ ಅಹಂಕಾರದ ತೂಕವೋ ಅದರ ಅನಿವಾರ್ಯ ಎಂಬಂತೆ, ಮೂಳೆಗಂಟಿದ ಕೊಬ್ಬಿನಂತೆ ಉಳಿದು ಬಿಡುತ್ತದೆ. ಈ ಭಾರವನ್ನು ಕಳೆಯುವುದು ಒಬ್ಬ ಬರಹಗಾರನ ಗುರಿಯಾಗಬೇಕು ಎಂಬರ್ಥದ ಮಾತನ್ನು ಕೆಲ್ವಿನೊ ಆಡಿದ್ದಾನಂತೆ. ಅರ್ಥದ ಹಂಗಿನಿಂದ ಭಾಷೆಯನ್ನು ಮುಕ್ತಗೊಳಿಸುವುದು ಕಾವ್ಯ ಎನ್ನುವ ಕೀರಂ, ಬೇಂದ್ರೆ ಅದನ್ನು ಮಾಡಿದರು ಎನ್ನುತ್ತಾರೆ. ಬರಹದ ಭಾರ ನಿವಾರಿಸುತ್ತ ಕಥನದ ಬದುಕನ್ನು ಹಗುರಗೊಳಿಸುವ ಕ್ಷಣವೊಂದು ನಮ್ಮ ನಿಮ್ಮ ಬದುಕಿನಲ್ಲೇ ಇರುತ್ತದೆ. ಅದು ನಮಗೆ ಅರ್ಥವಾಗುವುದು ಮುಖ್ಯ. ಆಗ ಚಿಂತೆ-ಬಿಡಿಹೂವ ಮುಡಿದಂತೆ ಅನಿಸಬಹುದು. ಚಿಂತೆ ಬಿಡಿ, ಹೂವ ಮುಡಿದಂತೆ ಎಂದೂ ಅನಿಸಬಹುದು. + +ಅಮ್ಮನ ಬಗ್ಗೆ ಬರೆಯುತ್ತ ಶುಕ್ಲ ಒಂದೆಡೆ ಹೇಳುತ್ತಾರೆ. ಕತ್ತಲಿರುವಾಗಲೇ ಎದ್ದು ಮನೆಗೆಲಸಕ್ಕೆ ತೊಡಗುತ್ತಿದ್ದ ಅಮ್ಮ ಎಲ್ಲರೂ ಮಲಗಿದ ನಂತರ ತಾನು ಚಾಪೆಗೆ ಬೆನ್ನೂರುತ್ತಾಳೆ. ಒಲೆಗೆ ತುರುಕಿದ ಸೆಗಣಿಯ ಬೆರಣಿಯ ಮೇಲೆ ಇರುವೆಯೊಂದು ಹರಿಯುತ್ತಿದ್ದರೆ ಕೈ ಸುಟ್ಟುಕೊಂಡಾದರೂ ಅವಳು ಬೆರಣಿಯನ್ನು ಒಲೆಯಿಂದ ಹೊರತೆಗೆದು ಇರುವೆಯನ್ನು ಉಳಿಸುತ್ತಾಳೆ. ಅವಳ ಕೈ ಬೆರಳ ಸುಟ್ಟುಗಾಯ ಮಾಯುವ ಮೊದಲೇ ಇನ್ನೆಲ್ಲೊ ಸುಟ್ಟುಕೊಳ್ಳುತ್ತಾಳೆ. ತನ್ನ ಕುಟುಂಬವನ್ನು ಎಲ್ಲ ಬಗೆಯ ಬೇಗೆಯಿಂದ ಕಾಪಾಡಲು ಅವಳು ಇದಕ್ಕೆಲ್ಲ ಸದಾ ಸಿದ್ಧಳಾಗಿಯೇ ಇರುತ್ತಾಳೆ. ಯಾಕೆಂದರೆ ಅವಳು ಅಮ್ಮ. ಶುಕ್ಲ ಅವರ ಬರಹಗಳನ್ನು ಓದುವುದೆಂದರೆ ನಮಗೆ ಈಗಾಗಲೇ ಗೊತ್ತಿರುವುದರ ಫಿಕ್ಷನಲೈಸ್ಡ್ ವರ್ಶನ್ ಓದಿದಂತಲ್ಲ. ಬದಲಿಗೆ ನಮ್ಮ ಸ್ಮೃತಿಯ ಮಾರ್ಜಿನ್ನುಗಳಲ್ಲಿ ನಿರಂತರವಾಗಿ ಬರೆದು-ಅಳಿಸಿ ಮಾಡಿದ ಇಂಪಾರ್ಟೆಂಟ್ ಪಾಯಿಂಟುಗಳಿರುತ್ತವಲ್ಲ. ಅವುಗಳನ್ನೇ ಮತ್ತೊಮ್ಮೆ ನೆನೆಯುವಂತೆ-ಎನ್ನುತ್ತಾರೆ ಅರವಿಂದ ಕೃಷ್ಣ ಮೆಹರೋತ್ರ. + +ರಾಜು ಹೆಗಡೆಯವರ ಒಂದು ಕತೆಯಿದೆ. ಚಾವಿ ಅಂತ ಅದರ ಹೆಸರು. ಅಲ್ಲೇನಪ್ಪ ಎಂದರೆ ಗಂಡ ಹೆಂಡತಿ ಇಬ್ಬರೂ ದುಡಿಯುವವರು, ಹೆಂಡತಿಗೆ ಬೇಗ ಹೊರಡಬೇಕು ಗಂಡನಿಗೆ ನಿಧಾನವಾಗಿ ಹೋದರಾಯ್ತು. ಆದರೂ ಇಬ್ಬರೂ ಬೇಗ ಎದ್ದು ಮನೆವಾರ್ತೆಯ ಕೆಲಸಗಳನ್ನೆಲ್ಲ ಹಂಚಿಕೊಂಡು ಲಗುಬಗೆಯಿಂದಲೇ ಮಾಡುತ್ತಾರೆ. ಹೆಂಡತಿ ಮನೆಗೆ ಬೀಗ ಹಾಕಿದರೆ ಅವಳನ್ನು ಬಸ್ಸಿನ ತನಕ ಬಿಡಲು ಶೆಡ್ಡಿನಿಂದ ಗಾಡಿ ಹೊರತೆಗೆಯುವ ಕೆಲಸ ಗಂಡನದು. ಮಳೆ ಬರುತ್ತಿದೆ ಅಂತ ಬೈಕಿನ ಬದಲು ಕಾರು ಹೊರತೆಗೆದ ಗಂಡ ಕೊರಕಲು ಹಾದಿಯಲ್ಲಿ ಬಸ್ಸ್ಟ್ಯಾಂಡ್ ತಲುಪಿದಾಗ ಬಸ್ಸು ಆಗಷ್ಟೇ ಹೊರಟಿದೆ. ಸರಿ ಮುಂದಿನ ಸ್ಟಾಪಿನಲ್ಲಿ ನಿಲ್ಲುತ್ತದೆ ಎಂದು ಅದನ್ನೇ ಹಿಂಬಾಲಿಸುತ್ತಾರೆ. ಆದರೆ ಮತ್ತೆ ಬಸ್ಸು ತಪ್ಪುತ್ತದೆ. ತಮಾಶೆ ಎಂದರೆ ಬೇಕಿದ್ದ ಬಸ್ಸು ಅದಲ್ಲವೇ ಅಲ್ಲ. ಅಂತೂ ಹೆಂಡತಿಯನ್ನು ಮುಂದಿನ ಸ್ಟಾಪಿನಲ್ಲಿ ಇಳಿಸಿ ಮನೆಗೆ ಮರಳಿದರೆ ಮನೆಯ ಬೀಗದ ಕೈ ಹೆಂಡತಿಯ ಬಳಿಯೇ ಉಳಿದಿರಬೇಕೆಂಬುದು ಹೊಳೆಯುತ್ತದೆ. ಫೋನು ಕೂಡ ಮನೆಯೊಳಗಿದೆ. ಬರ್ಮುಡಾದಲ್ಲಿಯೇ ಹೊರಟಿದ್ದರಿಂದ ಡ್ರೆಸ್ಸು ಚೆಂಜ್ ಮಾಡುವುದಕ್ಕೂ ಸಾಧ್ಯವಿಲ್ಲದ ಸ್ಥಿತಿ. ಸರಿ ಮತ್ತೆ ಇಳಿಸಿದಲ್ಲಿಗೇ ಹೋದರೆ ಬಸ್ಸು ಹೊರಟುಹೋಗಿದೆ. ಎಲ್ಲೋ ರೇಂಜು ಸಿಗುತ್ತದೆ ಎಂಬ ಅಸೆಯಿಂದ ಫೋನ್ ಮಾಡುತ್ತಲೇ ಉಳಿಯುವ ಗೂಡಂಗಡಿಯವನಿಗೆ ಕೊನೆಗೂ ಇವನ ಹೆಂಡತಿ ಲೈನಿಗೆ ಸಿಗುವುದಿಲ್ಲ. ಬೇರೆ ದಾರಿಯಿಲ್ಲದೆ ಮನಗೆ ಮರಳಿದರೆ ಹೆಂಡತಿ ಕುಳಿತಲ್ಲೇ ಕಾರಿನ ಸೀಟಿನಲ್ಲಿ ಬೀಗದ ಕೈ ಬೆಚ್ಚಗೆ ಕೂತಿದೆ. + +ಇಷ್ಟೇ ಕತೆ ಇದರಲ್ಲೇನಿದೆ ಅಂಥಾದ್ದು ಎಂದು ಅನಿಸುವುದು ಸಹಜವೇ. ಆದರೆ, ತನ್ನ ಮನೆಯೊಳಗೆ ತಾನೇ ಹೋಗಲಾರದ ಅಸಹಾಯಕತೆಯೊಂದಿಗೆ ನಿಂತ ಒಬ್ಬ ಮನುಷ್ಯನಿಗೆ ಇದ್ದಕ್ಕಿದ್ದಂತೆ ಕಾರಿನ ಸೀಟಿನಲ್ಲಿ ಬೀಗದ ಕೈ ಕಂಡಾಗ ತಕ್ಷಣಕ್ಕೆ ಆಗುವ ಒಂದು ಅನುಭೂತಿ ಏನಿದೆ. ಅದು ಸಣ್ಣದಲ್ಲ. ಅದೆಷ್ಟು ದೊಡ್ಡದು ಎನ್ನುವುದು ಅನುಭವಿಸಿದವರಿಗಷ್ಟೇ ಗೊತ್ತಿರುತ್ತದೆ ಎನ್ನುವುದು ಕೂಡ ಸತ್ಯ. ಕತೆ ಇರುವುದು ಆ ಒಂದು ಕ್ಷಣದ ಕುಶಿಯಲ್ಲಿ, ಸಂಭ್ರಮದಲ್ಲಿ ನಿರಾಳತೆಯಲ್ಲಿ. ಆದರೆ ಈ ಕುಶಿಗೆ ಯಾವ ಸಾಮಾಜಿಕ, ತಾತ್ವಿಕ, ರಾಜಕೀಯ ಆಯಾಮವೂ ಇಲ್ಲ. ಹಾಗಾಗಿ ಅವುಗಳ ಭಾರವಾಗಲೀ, ಕಥನದ ಒಜ್ಜೆಯಾಗಲಿ ಇಲ್ಲ. ಬೀಗದ ಕೈಯಿಲ್ಲ ಎನ್ನುವ ಒತ್ತಡವನ್ನು ಒಮ್ಮೆಗೇ ಎತ್ತುವ ನಿವಾರಿಸುವ ಕೆಲಸವನ್ನಷ್ಟೇ ಈ ಕತೆ ಮಾಡುತ್ತಿದೆ. + +ರಾಜು ಹೆಗಡೆ ನನಗೆ ಮುಖ್ಯ ಎನಿಸುವುದು ಇಂಥ ಕಾರಣಗಳಿಗೆ. ಅವರು ನಮಗೆ ನಾವು ಕಾಣದೇ ಇರುವ ಉತ್ತರ ಕನ್ನಡವನ್ನು ಕಾಣಿಸಿದರು. ಅಲ್ಲಿಯ ಮನುಷ್ಯರ ಸಾಮಾನ್ಯತನವನ್ನು ಭಾರವಿಲ್ಲದ ಸಹಜತೆಯಲ್ಲಿ ಅಕ್ಷರಕ್ಕೆ ಒಗ್ಗಿಸಿದರು. ನೆಲದಿಂದ ಎತ್ತರದಲ್ಲಿ ಹಾರುತಿದ್ದ ಅದರ ಕಥಾಜಗತ್ತನ್ನು ನೆಲಮಟ್ಟದಲ್ಲಿರಿಸಿ ಹೆಚ್ಚು ಆಪ್ತಗೊಳಿಸಿದವರು. ನಮ್ಮದೇ ಜಗತ್ತಿನೊಂದಿಗೆ ಅದನ್ನು ಸಮೀಕರಿಸುವ ಉಪಕಾರ ಮಾಡಿದವರು. ನಿಜ, ಅವರ ಕತಗೆಳಲ್ಲಿ ವಿಮರ್ಶಕರ ಪಾಂಡಿತ್ಯ ಹೊರಸೂಸಲು ಅಗತ್ಯವಾದ ಘನಗಂಭೀರ ಇಶ್ಯೂಗಳೆಲ್ಲ ಸಿಗುವುದು ಕಷ್ಟ. ಅಂಥ ಕೃತಕ ನುಡಿಗಟ್ಟುಗಳಲ್ಲಿ ರಾಜು ಹೆಗಡೆಯವರನ್ನು ಕಟ್ಟಿ ಹಾಕಲು ಬರುವುದಿಲ್ಲ. ರಾಜೂ ಹೆಗಡೆಯವರ ಕಥನ ಪ್ರಕ್ರಿಯೆಯಲ್ಲಿ ಮುಖ್ಯವಾದ ಮೂರು ಘಟ್ಟಗಳನ್ನು ಗುರುತಿಸಬಹುದು. ಈ ಮೂರೂ ಘಟ್ಟದಲ್ಲಿ ಅವರು ಸಮಕಾಲೀನ ಕನ್ನಡ ಸಣ್ಣಕತೆಗಳ ಪಾರಂಪರಿಕ ಮಾದರಿಯನ್ನಾಗಲೀ, ಅದರ ಚೌಕಟ್ಟುಗಳನ್ನಾಗಲೀ ಅನುಸರಿಸಿಲ್ಲ ಎನ್ನುವುದು ಅಚ್ಚರಿ ಹುಟ್ಟಿಸುತ್ತದೆ. ಉತ್ತರ ಕನ್ನಡದ ಕತೆಗಾರನಾಗಿ ಅವರು ಇಂಥ ಆಮಿಷಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳದೇ ಉಳಿದಿದ್ದು ಸ್ಪಲ್ಪ ವಿಚಿತ್ರವಾಗಿಯೂ ಇದೆ. + +ನವ್ಯೋತ್ತರ ಕನ್ನಡ ಸಣ್ಣಕತೆಗಳನ್ನು ಗಮನಿಸಿದರೆ ನಮಗೆ ಇನ್ನೊಂದು ಮಹತ್ವದ ಪಲ್ಲಟ ಕಂಡು ಬರುತ್ತದೆ. ಒಂದು ಆರಂಭ, ಬೆಳವಣಿಕೆ, ಕೇಂದ್ರ ಮತ್ತು ಪಂಚ್ ಇರುವ ಅಂತ್ಯ-ಇದು ಸಣ್ಣಕತೆಯ ಸಾಮಾನ್ಯ ಮಾದರಿಯಾಗಿದ್ದ ಕಾಲವಿತ್ತು. ಒಂದು ಕಾಲದಲ್ಲಿ ಬಹುತೇಕ ಮ್ಯಾಗಝೀನ್ ಗಳೇ ಸಣ್ಣಕತೆಗಳ ಪ್ರಧಾನ ವೇದಿಕೆಯಾಗಿದ್ದು, ಸುಧಾ, ಪ್ರಜಾಮತ, ತರಂಗದಂಥ ವಾರಪತ್ರಿಕೆಗಳು, ಮಯೂರ, ತುಷಾರದಂಥ ಮಾಸಿಕಗಳು ಮತ್ತು ದಿನಪತ್ರಿಕೆಗಳ ಸಾಪ್ತಾಹಿಕ ಪುರವಣಿ ಕತೆಗಾರರನ್ನು ಸೃಷ್ಟಿಸುತ್ತಿದ್ದ ದಿನಗಳವು. ದೀಪಾವಳಿ/ಯುಗಾದಿ ವಿಶೇಷ ಸಂಚಿಕೆಗಳು ವೈಶಿಷ್ಟ್ಯ ಪೂರ್ಣ ಸಣ್ಣಕತೆಗಳನ್ನು ಒದಗಿಸುತ್ತಿದ್ದವು. ಈ ಪತ್ರಿಕೆಗಳು ರೂಪಿಸಿದ ಫಾರ್ಮೆಟ್ ಏನಿದೆ, ಅದನ್ನು ದಾಟಿ ಬಂದ ಕತೆಗಳು ಹೊಸದೊಂದು ಟ್ರೆಂಡ್ ಸೃಷ್ಟಿಸಿದವು ಎಂದರೆ ತಪ್ಪಾಗಲಾರದು. ಇವು ಕಥಾನಕದ ಅಗತ್ಯ ಮತ್ತು ಅವಲಂಬನೆಯನ್ನು ಕಡಿಮೆ ಮಾಡಿ, ನಿರೂಪಣೆಯ ಸೊಗಸು ಮತ್ತು ಅನುಭವವೊಂದರ ಯಶಸ್ವಿಯಾದ ಸಂವಹನಕ್ಕೆ ಅಗತ್ಯವಾದ ಪ್ರೆಸೆಂಟೇಶನ್-ಎರಡರತ್ತ ಹೆಚ್ಚು ಒತ್ತು ನೀಡಿದವು. ಕವಿ ಭಾವ ಪ್ರತಿಮಾ ಪುನರ್ ಸೃಷ್ಟಿಯನ್ನೇ ಸಣ್ಣಕತೆಗಳ ಸಾರ್ಥಕತೆಯನ್ನಾಗಿ ಮರು ವ್ಯಾಖ್ಯಾನಿಸಿಕೊಂಡು ಇಂಥ ಕತೆಗಳು ರೂಪುಗೊಂಡವು. + +ಇಂಥ ಒಂದು ಪಲ್ಲಟದ ಆರಂಭಿಕ ಹಂತವನ್ನು ಪಿ ಲಂಕೇಶರ ‘ಉಮಾಪತಿಯ ಸ್ಕಾಲರ್ ಶಿಫ್ ಯಾತ್ರೆ’ ಯಂಥ ಕತೆಯಲ್ಲೇ ನಾವು ಕಾಣಬಹುದಾಗಿದೆ ಎಂಬುದು ನಿಜವಾದರೂ ಈ ಬಗೆಯ ಕತೆಗಳನ್ನೇ ಬರೆಯುವ ಪರಿಪಾಠ ತೊಡಗಿದ್ದು ಜಯಂತ ಕಾಯ್ಕಿಣಿ, ವಿವೇಕ ಶಾನಭಾಗ, ಅಮರೇಶ ನುಗಡೋಣಿ ಮುಂತಾದವರ ಕಾಲದಲ್ಲಿ. ಮುಂದೆ ಸುಮಂಗಲಾ, ಸುನಂದಾ, ಅನುಜಯಾ, ರಘುನಾಥ ಚ.ಹ, ಸಂದೀಪ ನಾಯಕ, ಅಲಕಾ ತೀರ್ಥಹಳ್ಳಿ ಇದೇ ಪರಂಪರೆಯನ್ನು ಮುಂದುವರಿಸುತ್ತ ಕಾವ್ಯದಂಥ ಕಥೆಗಳನ್ನು ಬರೆಯುತ್ತ ಬಂದರು. ವಸುಧೇಂದ್ರರಾದಿಯಾಗಿ (ನಮ್ ವಾಜೀನೂ ಸೇರಿಸ್ಕೊಳ್ರೋ) ಸರಿಸುಮಾರು ಎಲ್ಲಾ ಕತೆಗಾರರೂ ಇಂಥ ಕತೆಗಳನ್ನು ಪ್ರಯತ್ನಿಸುವ ಆಕರ್ಷಣೆಗೆ ಬಿದ್ದಿದ್ದು ನಿಜವೇ. ಆದರೆ ಸೂಕ್ಷ್ಮ ಕತೆಗಾರನಿಗೆ ಕಟುವಾದ ವಾಸ್ತವ ಮತ್ತು ಎಲ್ಲ ಬಗೆಯ ಸೋಗಿನ ಕೃತಕ ಫ್ಯಾಂಟಸಿ ಎರಡರ ನಡುವೆ ನಿಂತಂತೆ ಕಾಣುವ ತನ್ನದೇ ಬದುಕಿನ ನಿರರ್ಥಕತೆ, ಅರ್ಥಹೀನತೆ ಮತ್ತು ಅದರ ಎಲ್ಲ ಜಂಜಾಟಗಳ ಉದ್ದೇಶ ರಾಹಿತ್ಯ ಕೂಡ ಅನುಭವಕ್ಕೆ ಬರುವ ಕ್ಷಣಗಳಿದ್ದೇ ಇರುತ್ತವೆ. ಇದೊಂದು ಬಗೆಯ ಸ್ಮಶಾನ ವೈರಾಗ್ಯವೇ ಹೌದಾದರೂ ಅದು ಕಾಣಿಸುವ ಒಂದು ದರ್ಶನ ಕೂಡ ಇದ್ದೇ ಇದೆ. + +ಅಲ್ಲಿ ಕೊನೆಗೂ ಮನುಷ್ಯನ ಅಹಂಕಾರದ ವಿಸ್ತರಣೆಯಾದ, ಒಂದು ಅಸಹಜ ಪ್ರಕ್ರಿಯೆಯಾದ, ಪ್ರಸಿದ್ಧಿ-ಗುರುತಿಸುವಿಕೆ ಇತ್ಯಾದಿಯನ್ನೇ ಬಯಸುವ ಬರವಣಿಗೆ ಎಂಬ ಪ್ರಕ್ರಿಯೆಯ, ಅದರ ಬೈಪ್ರಾಡಕ್ಟ್ ಆದ ಸಾಹಿತ್ಯದ ಬಗ್ಗೆ ಹೆಚ್ಚು ಖಚಿತ ನಿಲುವುಗಳು ಮೂಡುವುದು ಸಾಧ್ಯ. ಮತ್ತು ಇದರಾಚೆಗೂ ಒಬ್ಬ ಬರಹಗಾರ ಬರವಣಿಗೆಯಲ್ಲಿ ಕ್ರಿಯಾಶೀಲನಾಗಿ ಉಳಿಯುವುದು ಕೂಡ ಸಾಧ್ಯ. ವಿನೋದ್ ಕುಮಾರ್ ಶುಕ್ಲ ಅವರು ಅಂಥ ಅಪರೂಪದ ವ್ಯಕ್ತಿಯಾಗಿದ್ದರು. + +ರಾಜು ಹೆಗಡೆಯವರೂ ನವ್ಯೋತ್ತರ ಕತೆಗಾರರ ಹೊಸ ತಲೆಮಾರಿಗೆ ಸೇರಿದವರಾದರೂ ಅವರು ಯಾವುದೇ ಮಾದರಿಗೆ ಒಲಿಯಲಿಲ್ಲ ಎನ್ನುವುದನ್ನು ಗಮನಿಸಬೇಕು. ಹೀಗೆ ಕಾವ್ಯದಂಥ ಕತೆಗಳನ್ನು ಬರೆಯುವುದು ಯಾವುದೋ ಒಂದು ಕಥಾನಕದ ಎಳೆ ಹಿಡಿದು, ಕುತೂಹಲಕರವಾಗಿ ಅದನ್ನು ನಿರೂಪಿಸುತ್ತ ಅದಕ್ಕೊಂದು ಆಕೃತಿ, ಅದರಲ್ಲೊಂದು ಮೆಸೇಜು, ಅರ್ಥ ಹುಟ್ಟಿಸುವಷ್ಟು ಸುಲಭದ ಪ್ರಕ್ರಿಯೆಯಾಗಿರಲಿಲ್ಲ. ಈ ಸುಲಭದ ಪ್ರಕ್ರಿಯೆಯನ್ನು ಗಹನಗೊಳಿಸುತ್ತ, ಸಂಕೀರ್ಣಗೊಳಿಸುತ್ತ, ಕಥನದ ಮಹತ್ವವನ್ನು ಪರಾಕಾಷ್ಠೆಗೊಯ್ದ ಕತೆಗಾರರು ಆಗಲೂ ಇದ್ದರು. ಈಗಲೂ ಇದ್ದಾರೆ. ಅಲ್ಲದೆ ಭಿನ್ನ ಮಾದರಿಯನ್ನು ಪೋಷಿಸಿದ ರಾಘವೇಂದ್ರ ಖಾಸನೀಸ, ರಾಘವೇಂದ್ರ ಪಾಟೀಲ, ಆಲನಹಳ್ಳಿ, ದೇವನೂರ ಮಹದೇವ, ಕೇಶವ ಮಳಗಿಯವರಂಥ ಕತೆಗಾರರ ಮಾದರಿಗಳು ತಮ್ಮ ಆಕರ್ಷಣೆಯನ್ನೂ, ಗುರುತ್ವವನ್ನೂ ಪ್ರಖರವಾಗಿಟ್ಟುಕೊಂಡೇ ಇದ್ದ ಕಾಲವದು. + +ರಾಜು ಹೆಗಡೆಯವರು ‘ಅಪ್ಪಚ್ಚಿ’ ಸಂಕಲನದಲ್ಲಿ ಪುರಾಣದ ಪುನರ್ ವ್ಯಾಖ್ಯಾನಕ್ಕೆ ಇಳಿದು ಬರೆದ ಕತೆಗಳನ್ನು ಹೊರತು ಪಡಿಸಿದರೆ ಸುದೀರ್ಘ ಕಾಲಘಟ್ಟದ ಕಥನಗಳಿಗೇ ಹೆಚ್ಚಾಗಿ ಒಲಿದಿದ್ದು ಕಂಡು ಬರುತ್ತದೆ. ‘ಅಪ್ಪಚ್ಚಿ’ ಸಂಕಲನವನ್ನು ಗಮನಿಸಿದರೆ ಎದ್ದು ಕಾಣುವುದು ಪುರಾಣಗಳನ್ನು ಅವರು ಪುನರ್ ವ್ಯಾಖ್ಯಾನಿಸಲು ಪ್ರಯತ್ನಿಸಿದ್ದು, ಅಹಲ್ಯೆಯ ಕತೆಯನ್ನು (ಮಾನಿನಿ ಮಣಿಯೆ ಬಾರೆ!), ಯಕ್ಷಪ್ರಶ್ನೆಯ ಕಥಾನಕವನ್ನು (ಕಾಡಿನ ನಡುವೆ), ಸಾಲ್ವ-ಅಂಬೆಯರ ಪ್ರಸಂಗವನ್ನು (ಸರಸಿಜಾಂಬಕಿಯರೆ ಕೇಳಿ), ಭರತ-ಬಾಹುಬಲಿಯ ಪ್ರಸಂಗವನ್ನು (ಇರುವುದೆಲ್ಲವ ಬಿಟ್ಟು) ರಾಜು ಹೆಗಡೆ ಮತ್ತೆ ಬರೆದಿರುವುದು ಈ ಸಂಕಲನದಲ್ಲಿ ಗಮನಿಸಿದರೆ ಕಥಾನಕದ ನಿರೂಪಣೆಯಲ್ಲಿ ಅವರಿಗಿರುವ ನೈಪುಣ್ಯ ಮತ್ತು ಆಸಕ್ತಿ ನಮಗೆ ಅರ್ಥವಾಗುತ್ತದೆ. + +ಯಕ್ಷಗಾನ ಪ್ರಸಂಗಗಳು ಜನಸಾಮಾನ್ಯರಿಗೆ ಈಗಾಗಲೇ ಚೆನ್ನಾಗಿ ಗೊತ್ತಿರುವ ಕಥಾನಕಗಳನ್ನೇ ಆಡುತ್ತವೆ. ಆಶುಪ್ರಸಂಗದ ಒಂದು ಗುಣವೇ ಪ್ರತಿ ಪ್ರಯೋಗವನ್ನೂ ಅನನ್ಯಗೊಳಿಸುವ ಶಕ್ತಿ ಯಕ್ಷಗಾನದಲ್ಲಿ. ಹಾಗಾಗಿ ಜನ ಎಷ್ಟು ಬಾರಿ ನೋಡಿದರೂ, ಎಷ್ಟು ಚೆನ್ನಾಗಿ ಗೊತ್ತಿರುವ ಕಥಾನಕವೇ ಆದರೂ ಮತ್ತೆ ಮತ್ತೆ ಯಕ್ಷಗಾನವನ್ನು ನೋಡಲು ಹೋಗುತ್ತಿದ್ದರು. ರಾಜು ಹೆಗಡೆಯವರ ಈ ಸಂಕಲನದ ನಾಲ್ಕು ಕತೆಗಳು ಮಾಡುವುದು ಇದನ್ನೇ. ಇದನ್ನು ಹೊರತು ಪಡಿಸಿ ನೋಡಿದರೆ ಇಡೀ ಬದುಕನ್ನು ತಲೆಮಾರುಗಳನ್ನು ಕಟ್ಟಿಕೊಡುವ ‘ಅಪ್ಪಚ್ಚಿ’, ‘ಬಂಧ’, ‘ಕತ್ತಲೆ ಮೌನ ಮತ್ತು…..’, ‘ತಳಿಯ ನೆರಳು’ ಮುಂತಾದ ಕತೆಗಳನ್ನು ಇಲ್ಲಿ ಗಮನಿಸಬಹುದು. ‘ಅಪ್ಪಚ್ಚಿ’ ಸಂಕಲನದ ಉಳಿದ ಆರು ಕತೆಗಳನ್ನು ಗಮನಿಸಿದರೆ ಅವುಗಳದ್ದೇ ಎಳೆ ಈ ಸಂಕಲನದಲ್ಲಿಯೂ ನಮಗೆ ಕಾಣಿಸುವುದು ಸುಳ್ಳಲ್ಲ. + +ಒಂದು ಕೊಲೆಯ ಪ್ರಸಂಗ, ಅದೂ ಭಾವನೆಂಟ-ಮೈದುನರ ಸುತ್ತ ಸುತ್ತಿಕೊಳ್ಳುವಂಥ ಕೊಲೆಯ ಕತೆ. ಹೆಗಡೆಯವರ ರಾಜಕೀಯ ಮತ್ತು ದುಂದುವೆಚ್ಚದ ಬದುಕು ಅವರ ಸಿರಿತನವನ್ನು ಕರಗಿಸುವ ಹಂತದಲ್ಲಿ ಮಗ ಮನೆಯ ವ್ಯವಹಾರವನ್ನು ಕೈಗೆತ್ತಿಕೊಂಡು ನಿಭಾಯಿಸುವ ಕತೆ. ಅಪ್ಪಚ್ಚಿಯಂಥವರ, ಜಟ್ಟಿಯಂಥವರ, ನಾಗು ಥರದವರ ಕತೆ ಎಲ್ಲಿಯೋ ಒಂದೇ ಎಳೆಯನ್ನು ಮತ್ತೆ ಮತ್ತೆ ವ್ಯಾಖ್ಯಾನಿಸುತ್ತಿರುವ ಹೊಳಹುಗಳನ್ನು ಕಾಣಿಸುವುದು ನಿಜ. ಇಲ್ಲಿ ಮಾತ್ರ ನಮಗೆ ರಾಜು ಹೆಗಡೆಯವರ ಕಥಾನಕ-ವಸ್ತು-ಆಕೃತಿ-ನಿರೂಪಣೆಯ ಪಟ್ಟುಗಳನ್ನು ಒರೆಗೆ ಹಚ್ಚಿ ನೋಡುವುದು ಸಾಧ್ಯವಾಗುತ್ತದೆ ಎನ್ನುವ ಕಾರಣಕ್ಕೆ ಈ ಕತೆಗಳು ಮುಖ್ಯವಾದರೂ ರಾಜು ಅವರಲ್ಲಿ ಮೆಚ್ಚುಗೆಯಾಗುವುದೆಲ್ಲ ಇಂಥ ಚೌಕಟ್ಟುಗಳ ಒಳಗೆ ಕೂರಲು ಹವಣಿಸುವ ಕತೆಗಾರಿಕೆಯಲ್ಲ. + +‘ಅಪ್ಪಚ್ಚಿ’ ಸಂಕಲನದ ನಂತರ ಹೆಗಡೆಯವರ ಕತೆಗಳಲ್ಲಿ ಪುರಾಣದ ಪುನರ್ ವ್ಯಾಖ್ಯಾನದ ಹುಮ್ಮಸ್ಸು ಇಳಿಮುಖವಾದಂತೆಯೂ ಕಾಣುತ್ತದೆ ಮಾತ್ರವಲ್ಲ, ಸುದೀರ್ಘಾವಧಿಯ ಕಾಲಘಟ್ಟಕ್ಕೆ ಚಾಚಿಕೊಂಡ ಕತೆಗಳಿಂದಲೂ ಅವರು ಹೊರಳಿಕೊಂಡಂತೆ ಕಾಣುತ್ತದೆ. ಹೀಗಾಗಿ ಮೂರನೆಯ ಘಟ್ಟದ ಕತೆಗಳಲ್ಲಿ ಘಟ್ಟದ ಕತೆಗಳಲ್ಲಿ ವಸ್ತು. ಆಕೃತಿ, ಕಥಾನಕ ಎಂದೆಲ್ಲ ಹುಡುಕಿ ಹೊರಟರೆ ನಿರಾಶೆಯೇ ಗತಿ. + +ಈ ಸಂಕಲನದ ಎಕ್ಸ್ಟ್ರಾ ಮೆರಿಟಲ್ ರಿಲೇಶನ್ನಿನ ರೊಮಾಂಟಿಕ್ ಪ್ರಸೆಂಟೇಶನ್ ಮಾಡುವ ‘ವಿಪ್ರಲಂಭ’, ಮಹಾಬಲ ಹೆಗಡೆ ಮತ್ತು ಶಂಭು ಭಟ್ಟರ ಜಿದ್ದಾಜಿದ್ದಿ, ಅದಕ್ಕಿರುವ ‘ಒಂದು ಕೊಲೆ ಪ್ರಸಂಗ’ದ ಹಿನ್ನೆಲೆ, ಟುವಾಲು ಇಟ್ಟು ಹೋದವರ ಜಗಳದ ಪ್ರಸಂಗ ಎಲ್ಲ ಬರುವ ‘ಕುರುರಾಯ ಇದನೆಲ್ಲ ಕಂಡು’, ದೈನಂದಿನದ ನಡುವೆ ಬೆಳೆಯುವ ಮನೆಗೆಲಸದ ಕಲಾವತಿಯ ಕತೆ, ಅವಳ ತಂದೆಯ ಸಾವು, ಮನೆಯಲ್ಲಿಯ ಹಳೆಯ ಪ್ರಿಜ್ಜಿನ ವಿಲೇವಾರಿ ಪ್ರಸಂಗ ಇರುವ ‘ಫ್ರಿಜ್ಜು’, ಈಗಾಗಲೇ ವಿವರಿಸಿರುವ ‘ಚಾವಿ’, ನಾರಾಯಣ ಮತ್ತು ರವಿ-ಇಬ್ಬರ ಸ್ನೇಹ ನಾರಾಯಣ ಅವರ ಕಾಯಿಲೆ, ಅದರ ಸುತ್ತಣ ಗುಟ್ಟು ಉತ್ಯಾದಿ ಬರುವ ‘ಲೌಕಿಕ’ ವಿಪ್ರಲಂಭ ಕತೆಯ ಇನ್ನೊಂದು ಅಧ್ಯಾಯದಂತೆ ಕಾಣಿಸುವ ‘ಪಾರಿಜಾತದ ಗೀರು’, ನುಡಿ ಚಿತ್ರಗಳೋ. ಪುಟ್ಟ ಪುಟ್ಟ ಪ್ರಸಂಗಗಳೋ ಎಂಬಂತಿರುವ ‘ಲಾಸ್ಟ್ ಪೆಗ್ಗು’, ‘ಎಮ್ಮೆ ಕಳೆದಿದೆ’, ‘ತೇಲುವ ಊರು’ ಮುಂತಾದ ಕಥನಗಳೇ ನಮಗೆ ಒಂದು ನೆಲದ ಜನ, ಪರಿಸರ, ಸಂಸ್ಕಾರ, ನಡವಳಿಕೆ ಇತ್ಯಾದಿಗಳೊಂದಿಗೆ ಹೆಚ್ಚು ಜೀವಂತವಾದ ಕಥಾಜಗತ್ತನ್ನು ಕಟ್ಟಿಕೊಡುತ್ತಿರುವುದು. + +ರಾಜು ಹೆಗಡೆಯವರ ‘ಹಳವಂಡ’ ಸಂಕಲನದಲ್ಲಿ ಕೂಡ ನಾವು ಕಾಣುವುದು ಇಂಥವೇ ಬರಹಗಳನ್ನು ಅಥವಾ ಕತೆಗಳನ್ನು. ಇವು ನುಡಿ ಚಿತ್ರದ ಚೌಕಟ್ಟಿನ್ನು ಮೀರಿವೆ ಮತ್ತು ಶಿಷ್ಟ ಪ್ರಕಾರದ ಕತೆಗಳಾಗುವ ಮಹತ್ವಾಕಾಂಕ್ಷೆಯನ್ನೂ ತೊರೆದಿವೆ. ಪ್ರಕಾರದ ಹಂಗಿಲ್ಲದ ಈ ಕಥನಗಳನ್ನು ಬರೇ ಓದುವ ಕುಶಿಗಾಗಿ ಓದಬಹುದೆನ್ನುವುದೇ ಇವುಗಳ ಹೆಚ್ಚುಗಾರಿಕೆ. ‘ವಿಪ್ರಲಂಭ’ ಮತ್ತು ‘ಪಾರಿಜಾತದ ಗೀರು’ ಎರಡೂ ಕತೆಗಳು ‘ಅಪ್ಪಚ್ಚಿ’ ಸಂಕಲನದಲ್ಲಿಯೇ ಬರುವ ‘ಅವನು’ ಕತೆಯ ನೆಲೆಯಲ್ಲೇ ಸಾಗುತ್ತ ಆತ್ಮರತ ವಿಹಾರದಲ್ಲಿ ಹೆಚ್ಚು ಒಲವು ತೋರುತ್ತಿದೆ ಎನ್ನುವುದು ನಿಜವಾದರೂ ಇವು ಒಪ್ಪಿಕೊಳ್ಳುವ ಮುನುಷ್ಯನ ದೌರ್ಬಲ್ಯ ಕೂಡ ಶಿಷ್ಟ ಜಗತ್ತು ಸದಾ ಅಡಗಿಸಿಡಲು, ನಾಗರಿಕ ಸೋಗಿನಲ್ಲಿ ಮರೆಮಾಚಲು ಬಯಸಿದ್ದು ಎನ್ನುವ ಕಾರಣಕ್ಕಾಗಿ ಇಲ್ಲಿ ಇರಬೇಕು ಅನಿಸುತ್ತದೆ. + + + +ಹೀಗೆ ಇಲ್ಲಿ ಪಾರಂಪರಿಕವಾದ ಬಗೆಯ ಕಥೆಗಳಿಲ್ಲ. ಹಾಗಾಗಿ ಈ ಕತೆಗಳ ಆಶಯ. ಸಾಮಾಜಿಕ-ತಾತ್ವಿಕ ಆಯಾಮ, ವಸ್ತುವಿನ ಸಮಕಾಲೀನತೆ ಹಾಗಿರಲಿ, ಮುಖ್ಯ ಮುದ್ದೆಯಾದ ವಸ್ತುವೇ ಐಡೆಂಟಿಫೈಯಬಲ್ ಮಾನದಂಡಗಳಿಗೆ ಸಿಕ್ಕಿಕೊಳ್ಳದ ಹಾಗಿವೆ. ಅಂಥ ನಿರೀಕ್ಷೆಗಳ ಚೌಕಟ್ಟು ಬಿಟ್ಟುಕೊಟ್ಟು ಸುಮ್ಮನೇ ಓದುವ ಕುಶಿಗಾಗಿ ಓದುವ ಮನಸ್ಸುಗಳಿಗೆ ಈ ಬಗೆಯ ಬರವಣಿಗೆಯ ಸೊಗಸು, ಮಹತ್ವ ಮತ್ತು ಅವು ಮನಸ್ಸನ್ನು ಸೇರಿ ನಿಲ್ಲುವ ಚೋದ್ಯ ಅರಿವಾಗದೇ ಇರದು. ಈ ಸುಮ್ಮನೇ ಓದುವ ಕುಶಿಗಾಗಿ ಓದುವ, ಓದಬೇಕನ್ನಿಸುವ ಬರಹಗಳ ಬಗ್ಗೆ ಹೇಳಿದವರು ಕೂಡ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರೇ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_401.txt b/Kenda Sampige/article_401.txt new file mode 100644 index 0000000000000000000000000000000000000000..a97f50681c240a7125f245c28b3dbe2099a952f8 --- /dev/null +++ b/Kenda Sampige/article_401.txt @@ -0,0 +1,87 @@ + + +ನನ್ನ ಚಿಕ್ಕತಾಯಿ ನಮ್ಮಿಬ್ಬರನ್ನು ತನ್ನ ಮನೆಯಲ್ಲಿ ಬಿಟ್ಟು ಈ ಲೋಕದಿಂದ ದೂರಳಾದಳು. ಅವಳು ಸ್ವರ್ಗಕ್ಕೆ ಹೋದಳೋ ನರಕಕ್ಕೆ ಬಿದ್ದಳೋ ನನ್ನಿಂದ ಹೇಳಲು ಸಾಧ್ಯವಿಲ್ಲ. ಸ್ವರ್ಗದ ಸೋಪಾನಗಳು ಸಾವಿರವಾದರೆ, ಅವನ್ನೆಲ್ಲಾ ಹತ್ತುವಷ್ಟು ದೇಹಶಕ್ತಿ ಅವಳಲ್ಲಿ ಇರಲಿಲ್ಲ. ನರಕದ ನವದ್ವಾರಗಳು ಇಕ್ಕಟ್ಟಾದರೆ ಅವುಗಳನ್ನು ದಾಟಿಹೋಗುವಷ್ಟು ದೇಹ ಕೃಶತ್ವವು ಅವಳಲ್ಲಿ ಇದ್ದಿಲ್ಲ. ಇಹದಲ್ಲಿ ಉಣ್ಣದೆ ಉಡದೆ ಕಾಸಿಗೆ ಕಾಸು ಕೂಡಿಸುವ ಪುಣ್ಯವಂತರು ಸ್ವರ್ಗವನ್ನು ಏರುವುದು ನಿಜವಾದರೆ, ಅವಳು ನರಕದಲ್ಲಿ ಬೀಳಲಿಲ್ಲ. ಸಂತಭಜನೆಯಲ್ಲಿ ದೇಹವನ್ನು ವಿನಿಯೋಗಿಸುವ ‘ಮೊಂಡು ಭಕ್ತಿಯ’ ವೃದ್ಧ ಪತಿವ್ರತೆಯರು ನರಕಕ್ಕೆ ಇಳಿಯುವುದು ಸತ್ಯವಾದರೆ, ಅವಳು ಸ್ವರ್ಗವನ್ನು ಸೇರಲಿಲ್ಲ. ಅವಳು ಎಲ್ಲಿ ಹೋದಳೆಂದು ಈಗ ವಿಚಾರಿಸುವುದು ಅವಶ್ಯವಿಲ್ಲ. ಒಂದು ದಿನ ನಾವೂ ನೀವೂ ಅದನ್ನು ಕಂಡು ಹಿಡಿಯದೆ ಇರಲಾರೆವು. ಹೇಗೂ ನನ್ನ ಚಿಕ್ಕತಾಯಿ ಮಾನವ ಶರೀರವನ್ನು ಬಿಟ್ಟುಹೋದಳು. ಹೋಗುವಾಗ ತನ್ನ ಮನೆಯನ್ನು ತನ್ನೊಡನೆ ಕೊಂಡುಹೋಗಲು ಪ್ರಯತ್ನ ಮಾಡುವುದಕ್ಕೆ ಮರೆತುಬಿಟ್ಟಳು. ಅಂದಿನಿಂದ ಅವಳ ಮನೆ ಮಾತ್ರವೇ (ಅವಳ ಒಡವೆಯ ಗಂಟು ಯಥಾರ್ಥವಾಗಿ ನನಗೆ ಸಿಕ್ಕಲಿಲ್ಲ) ನನ್ನ ಪಾಲಿಗೆ ಬಂದ ಹಾಗಾಯಿತು. ಅಂದಿನಿಂದ ನಾವಿಬ್ಬರು – ನಾನು ಮತ್ತು ನನ್ನವಳು – ಆ ಮನೆಯಲ್ಲಿ, ನನ್ನ ಚಿಕ್ಕತಾಯ ಸ್ಥೂಲ ದೇಹಗಳತ್ಸ್ವೇದ ಜಲಸಮ್ಮಾರ್ಜಿತ ಭಿತ್ತಿಯುಕ್ತವಾದ ಮನೆಯಲ್ಲಿ, ಗಡ್ಡಮೀಸೆಗಳನ್ನು ಗಾಯವಾಗುವಂತೆ ಬೋಳಿಸಿಕೊಂಡು ಹದಿನೆರಡು ದಿನ ತಣ್ಣೀರು ಮಿಂದು ಒಪ್ಪೊಪತ್ತು ಉಂಡುದಕ್ಕೆ ಪ್ರತಿಫಲವಾಗಿ ಸಿಕ್ಕಿದ ಮನೆಯಲ್ಲಿ, ನನ್ನ ಚಿಕ್ಕ ತಾಯ ಪೂರ್ವ ಮಹತ್ವಕ್ಕೆ ಇಹಲೋಕದಲ್ಲಿ ಸ್ಮಾರಕ ಚಿಹ್ನವಾಗಿ ಉಳಿದಂತಹ ಮನೆಯಲ್ಲಿ ನಾವಿಬ್ಬರು ಸ್ವಲ್ಪ ಕಾಲ ಸುಖವಾಗಿದ್ದೆವು. + +ಆದರೆ ಈ ಮನೆಯಲ್ಲಿ ನಾನು ಚಿರಕಾಲವಿರುವಂತೆ ನನ್ನ ಹಣೆಯಲ್ಲಿ ಬರೆಯುವುದಕ್ಕೆ ಬೊಮ್ಮ ದೇವನಿಗೆ ಮಸಿಯೂ ಲೇಖಣಿಯೂ ಇರಲಿಲ್ಲವೆಂದು ತೋರುತ್ತಿದೆ. ಇಲ್ಲವಾದರೆ ಮುದಿ ಗೂಗೆಯ ಗೂಡಿನಲ್ಲಿದ್ದ ಗಿಳಿಮರಿಗಳಂತಿರುವ ನಮ್ಮ ಬಳಿಗೆ ಅಕಸ್ಮಾತ್ ಈ ಮಾರ್ಜಾಲ ಋಷಿ ಏತಕ್ಕೆ ಬಂದನು? ಇದುವರೆಗೆ ಅಜ್ಞಾತವಾಸದಲ್ಲಿದ್ದ ಈ ವೃದ್ಧ ಯುಧಿಷ್ಠಿರನು ಮರಳಿ ಪಟ್ಟಣಕ್ಕೆ ಮೋರೆಯನ್ನು ತೋರಿಸಿದನೇತಕ್ಕೆ? 40 ವರ್ಷ ಊರುಬಿಟ್ಟು ಹೋದ ನನ್ನ ಚಿಕ್ಕತಂದೆಯವರು ತಿರುಗಿ ನನ್ನ – ತನ್ನ – ಮನೆಗೆ ಏತಕ್ಕೆ ಕಾಲಿಟ್ಟರು? + +ನನ್ನ ಚಿಕ್ಕತಂದೆಯವರಿಗೆ ಸುಮಾರು 70 ವರ್ಷ. ಕೆಲವರಿಗೆ ವಾರ್ಧಕ್ಯದಲ್ಲಿ ಯೌವನ ಪ್ರಾಪ್ತಿಯುಂಟಾಗುವುದು. ನಮ್ಮ ಚಿಕ್ಕಪ್ಪನವರಿಗೆ ಹೀಗಿದ್ದಿತು. ಅವರು ಪ್ರಾಯದಲ್ಲಿ ಮುದುಕರಾದರೂ ದೇಹದಲ್ಲಿ ವೃದ್ಧರಾಗಿರಲಿಲ್ಲ; ಹೆಣ್ಣು ಕೊಡುವವರಿದ್ದರೆ ತಲೆಗೆ ಬಾಸಿಂಗ ಸಿಕ್ಕಿಸಿಕೊಳ್ಳಲಿಕ್ಕೆ ಅವರು ಸಿದ್ಧರಾಗಿದ್ದರು. ಅವರು ಬಂದು ಎರಡು ವರ್ಷಗಳಾದರೂ, ತಮ್ಮ ಜಾತಕದ ಪ್ರತಿಯನ್ನು ತಲೆಯ ಮುಂಡಾಸಿನಲ್ಲಿಯೇ ಇಟ್ಟುಕೊಂಡು ದಿನವೆಲ್ಲ ತಿರುಗಿದರೂ, ಹೆಣ್ಣು ಮಕ್ಕಳ ಆಸೆಯಿದ್ದ ಪಾಪಿಗಳು ಯಾರೂ ಅದನ್ನು ಕುರಿತು ವಿಚಾರಿಸಲಿಲ್ಲ. ತಲೆಯ ಕೂದಲೆಲ್ಲಾ ನರೆತಿದ್ದುವು. ಕಣ್ಣುಗಳು ಮಾತ್ರ ಗುಂಡಿಗೆ ಇಳಿದಿರಲಿಲ್ಲ; ಅವುಗಳು ನೋಟಕರನ್ನು ಗುಂಡಿಗೆ ತಳ್ಳುವಂತಿದ್ದವು. ಈ ಕಣ್ಣುಗಳ ನಡುವಿನಿಂದ ಮೂಗಿನ ಮೇಲ್ಭಾಗವು ಉದ್ಭವಿಸಿ, ಗರಿಗಳಿಲ್ಲದ ತೆಂಗಿನ ಸೋಗೆಯಂತೆ ಕೆಳಕ್ಕೆ ಹರಿದು, ಅದರೆ ಮೊಂಡಭಾಗವು ಮೇಲಿನ ತುಟಿಯನ್ನು ಅಂಟಿ ಕೊಂಡಿತ್ತು. ಮೂಗಿನ ಸೊಳ್ಳೆಗಳ ಇಕ್ಕಡೆಗಳಲ್ಲಿಯೂ ಗಲ್ಲಗಳ ತೊಗಲು ಸ್ವಲ್ಪ ಮುದುರಿಕೊಂಡಿತ್ತು. ತುಟಿಗಳು ಸ್ವಲ್ಪ ತೆರೆದಿರುವುದರಿಂದ ಒಳಗಿನ ಹಲ್ಲುಗಳು ಇನ್ನೂ ಬೆಳ್ಳಗಾಗಿ ತೋರುತ್ತಿದ್ದವು. ಮೈಯಲ್ಲಿ ರೋಮವಿಲ್ಲದಿದ್ದರೂ ಒಂದು ಪ್ರಕಾರವಾದ ಕಪ್ಪು ಬಣ್ಣವು ತುಂಬಿ ಹೋಗಿತ್ತು. ಕೆಲದಿನಗಳ ಕೆಳಗೆ ಗಟ್ಟದ ಕಾಫಿತೋಟಗಳಿಗೆ ಆಳುಗಳನ್ನು ಗೊತ್ತು ಹಚ್ಚುವ ‘ಕಂಟ್ರಾಕ್ಟ್ದಾರನು’, ನಮ್ಮ ಚಿಕ್ಕತಂದೆಯವರ ಕೈಹಿಡಿದು ಬಳಿಕ ಅವರ ಕ್ಷಮಾಪಣೆಯನ್ನು ಬೇಡಿಕೊಂಡನಂತೆ. ಅವರ ಮೈ ಬಣ್ಣವು ಹೇಗಿರುವುದೆಂದು ಪಾಠಕ ಮಹಾಶಯರಿಗೆ ಖಚಿತ ಮಾಡುವುದಕ್ಕೆ ಅದಕ್ಕೆ ಸಾದೃಶ್ಯ ಪದಾರ್ಥವನ್ನು ಇನ್ನೂ ಹುಡುಕುತ್ತಲಿರುವೆನು. ನನ್ನ ಚಿಕ್ಕತಂದೆಯವರ ಹೆಸರು ಏನೆಂಬುದು ಈ ತನಕ ಸರಿಯಾಗಿ ನನಗೆ ಗೊತ್ತಾಗಲಿಲ್ಲ. ನನ್ನ ಚಿಕ್ಕತಾಯಿ ಜೀವಂತಳಾಗಿದ್ದಾಗ, ‘ಜೋಗುಳ ಹಾಡು’ ಎನ್ನುವ ಬದಲಾಗಿ ‘ತೊಟ್ಟಿಲು ತೂಗುವ ಪದ’ ಎನ್ನುತ್ತಿದ್ದಳು. ಹಾಗೆಯೇ “ಮೇಲಿಂದ ನೀರು ಹರಿಯುವುದು” ಎನ್ನುವಳಲ್ಲದೆ “ಜೋಗು” ಎಂಬ ಪದವನ್ನು ಉಚ್ಚರಿಸುತ್ತಿದ್ದಿಲ್ಲ. ಈ ಕಾರಣಗಳಿಂದ ನಮ್ಮ ಚಿಕ್ಕತಂದೆಯವರ ಹೆಸರು “ಜೋಗಪ್ಪ” ಎಂದು ನಾನು ಸಾಧಾರಣ ನಿಶ್ಚಯಮಾಡಿದೆನು. ನಾನು ‘ಚಿಕ್ಕಪ್ಪಾ! ಚಿಕ್ಕಪ್ಪಾ!’ ಎಂದು ಯಾವಾಗಲೂ ಕರೆಯುತ್ತಿದ್ದುದರಿಂದ, ನನ್ನ ಸ್ನೇಹಿತರೆಲ್ಲ ಈ ಮಾತನ್ನೆ ಹಿಡಿದು, ಅವರನ್ನು ಚಿಕ್ಕಪ್ಪಯ್ಯ ಎಂದು ಸಂಬೋಧಿಸುತ್ತಿದ್ದರು. ಹಲವು ಜನ ಪಾರಮಾರ್ಥ ಬಲ್ಲವರು ಇದಕ್ಕೆ ಬದಲಾಗಿ ‘ಚಿ! ಕಪ್ಪಯ್ಯ!” ಎಂತಲೂ ಹೇಳುತ್ತಿದ್ದರು. ಅವರು ಹೀಗೆ ಕರೆಯುತ್ತಿದ್ದುದು ನ್ಯಾಯವೋ ಅನ್ಯಾಯವೋ ವಾಚಕರೇ ವಿಚಾರಿಸಬಹುದು. + +ನಮ್ಮ ಚಿಕ್ಕತಂದೆಯವರು ಮತದಲ್ಲಿ ಅದ್ವೈತವನ್ನು ಅವಲಂಬಿಸಿದ್ದರು. ಅವರಿಗೆ ಅನ್ಯ ಹಣ ಬೇರೆ, ತನ್ನ ಹಣ ಬೇರೆ, ಎಂಬ ದ್ವೈತಾಭಿಪ್ರಾಯವಿರಲಿಲ್ಲ; ಎಲ್ಲವೂ ತನ್ನ ಪೆಟ್ಟಿಗೆಯನ್ನೇ ಸೇರಬೇಕೆಂಬ ಸದ್ಧರ್ಮವನ್ನು ಅವರು ವಿಚಾರಿಸುತ್ತಿದ್ದರು. ಅವರು ವಿಚಾರಿಸುವಂತೆ ಅವರ ಬಳಿಯಲ್ಲಿ ಸ್ವಲ್ಪ ಹಣವಿತ್ತು. ಅದು ಎಷ್ಟಿತ್ತೆಂದು ಕಂಡು ಹಿಡಿಯುವುದಕ್ಕೆ ಅನುಕೂಲವಾದ ಸಮಯವು ಇನ್ನೂ ಒದಗಲಿಲ್ಲ ಎಂದು ನಾನು ವ್ಯಸನಪಡುತ್ತೇನೆ. ಹಣದ ಪೆಟ್ಟಿಗೆಯನ್ನು ದಿನಕ್ಕೆ ಎರಡು ಸಲ ಪೂಜಿಸುತ್ತಿದ್ದರು. ಈ ಹಣವು ಅವರೊಡನೆ ಉಂಟೆಂಬ ಪರಿಜ್ಞಾನದಿಂದಲೇ ನಾನು ನಿರಾಯಾಸವಾದ ಎರಡು ಊಟಗಳನ್ನು ಅವರಿಗೆ ಕೊಡುತ್ತಿದ್ದೆನು. ನಾನು ಊಟ ಹಾಕದಿದ್ದರೆ, ಪರರ ಮನೆಯಲ್ಲಿ ಈ ಹಣದ ಪೆಟ್ಟಿಗೆಯ ದರ್ಶನದಿಂದಲೇ ಉಳುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿರಲಿಲ್ಲ. ಈ ಪೆಟ್ಟಿಗೆಯನ್ನು ನೋಡಿಕೊಂಡು ಎಷ್ಟೋ ಜನರು ಅವರ ಕಾಲುಹಿಡಿದು ತಮ್ಮ ಮನೆಯಲ್ಲಿ ಅವರನ್ನು ನಿಲ್ಲಿಸಿಕೊಂಡು ಮೋಸಹೋಗುವುದಕ್ಕೆ ಸಿದ್ಧರಾಗಿದ್ದರು. “ನನ್ನ ತಲೆಯ ಮೇಲೆ ಇನ್ನು ಹೆಚ್ಚು ದಿವಸಗಳು ಹೋಗಲಾವು” ಎಂದು ನನ್ನ ಚಿಕ್ಕ ತಂದೆಯವರು, ನನಗೆ ಕೇಳಿಸುವಂತೆ ಪದೇ ಪದೇ ಹೇಳುತ್ತಿದ್ದುದರಿಂದ, ನಾನು ವೆಚ್ಚದ ವಿಷಯದಲ್ಲಿ ಅಷ್ಟು ವಿಚಾರ ಮಾಡುತ್ತಿದ್ದಿಲ್ಲ. ಆದರೆ ಒಂದೊಂದು ಸಲ “ದಿನ ಹೋಗದಿದ್ದರೂ ವರ್ಷಗಳು ಹೋಗಬಹುದಲ್ಲವೆ” ಎಂದು ಸಂಶಯ ಮನಸ್ಕನಾಗುತ್ತಿದ್ದೆನು. ಅವರಿಗೆ ಇನ್ನೂ ದೀರ್ಘಕಾಲ ಬದುಕಬೇಕೆಂಬ ಆಸೆ ಇತ್ತೋ ಇಲ್ಲವೊ ನನ್ನಿಂದ ಹೇಳಲು ಬರುವುದಿಲ್ಲ. ಆದರೆ ಅಭ್ಯಂಗಸ್ನಾನಗಳಲ್ಲಿ ದಿನ ತಪ್ಪುತ್ತಿದ್ದಿಲ್ಲ; ಊಟಗಳಲ್ಲಿ ಗಂಟೆ ತಪ್ಪುತ್ತಿದ್ದಿಲ್ಲ; ಫಲಾಹಾರ ವಿಷಯದಲ್ಲಿ ನಿಮಿಷ ತಪ್ಪುತ್ತಿದ್ದಿಲ್ಲ. + +ನಮ್ಮ ಚಿಕ್ಕತಂದೆಯವರು – + +ಪಾಠಕಮಹಾಶಯರು ಇನ್ನೂ ತಾಳಲಾರರು. ನನ್ನ ಚಿಕ್ಕತಂದೆಯವರನ್ನು ಕುರಿತು ಓದಿ ಓದಿ ನಿಮ್ಮ ಸಹನಾಶಕ್ತಿಯು ಸಾಕುಸಾಕಾಯಿತು. “ಇನ್ನೂ, ಈತನ ಚಿಕ್ಕತಂದೆಯವರು ಹೋಗಲಿಲ್ಲ” ಎಂದು ಮಹಾಶಯರು ಕೋಪಿಸಿ “ಸತ್ತು ಹೋಗಲಿ” ಎಂದು ಪುಸ್ತಕವನ್ನು ಬಿಸುಡುವರೆಂದು ನಾನು ಸಂಶಯಪಡುತ್ತೇನೆ. ‘ಹಾಗೆ ಆಗಲಿಲ್ಲವಲ್ಲ!’ ಎಂದು ನಾನೂ ವ್ಯಸನಪಟ್ಟರೂ, ನನ್ನ ಚಿಕ್ಕತಂದೆಯವರ ಅಂಥ ಸ್ಥಿತಿಯನ್ನು ನೋಡಲು ನೀವು ಸಂತೋಷಪಡುವುದಾದರೆ ನಾನು ಮುಂದೆ ಹೇಳತೊಡಗುವೆನು. ಆದರೆ ಅಷ್ಟರಲ್ಲಿ ನಮ್ಮ ಮನೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಯನ್ನು ಕುರಿತು ಕೆಲವು ಮಾತುಗಳನ್ನು ಹೇಳಲು ಬಯಸುವೆನು. + +ಈ ವ್ಯಕ್ತಿಯ ಪರಿಚಯವು ಊರಲ್ಲಿ ಎಲ್ಲರಿಗೂ ಇತ್ತು. ಊರಲ್ಲಿ ಹೆಣ್ಣು ಮಕ್ಕಳು ಅಳುತ್ತಿದ್ದರೆ ‘ಮುದ್ದಣ್ಣನಿಗೆ ಮದುವೆ ಮಾಡಿಕೊಡುತ್ತೇವೆ’ ಎಂದು ತಂದೆತಾಯಿಗಳು ಅಣಕಿಸುವುದುಂಟು. ಮುದ್ದಣ್ಣನು ನಮ್ಮೆಲ್ಲರಿಗೂ ಅನ್ನದಾತಾರನಾಗಿದ್ದನು. ಅಡಿಗೆ ಮಾಡುವುದು ಅವನ ಕೆಲಸವಾದರೂ, ‘ಅಡಿಗೆಭಟ್ಟ’ ಎಂದು ಯಾರಾದರೂ ಕರೆದರೆ, ರೇಗುವನು. ರೂಪಲಾವಣ್ಯವು ಅಷ್ಟೊಂದು ವಿಶೇಷವಾಗಿರಲಿಲ್ಲ. ಕಣ್ಣು ಚಿಕ್ಕವು, ಕಿವಿ ಕೊಂಕು, ಮೂಗು ಮೊಂಡ, ಮುಖ ಮಂದ. ಕೆಲವರು ಈತನನ್ನು ಹುಚ್ಚನೆಂದು ನೋಡುತ್ತಲೇ ಹೇಳುತ್ತಿದ್ದರು. ‘ಹುಚ್ಚು ಹೌದು. ಕಂಡವರ ಮೇಲೆ ಕಲ್ಲಿಡುವ ಹುಚ್ಚಲ್ಲ.’ ತ್ರಿದಶ ವರ್ಷಗಳವರೆಗೆ ಧನ ಬಲವಿಲ್ಲದೆ ಕಠೋರ ಬ್ರಹ್ಮಚರ್ಯವ್ರತವನ್ನು ಅವಲಂಬಿಸಿದ ಮಹಾತ್ಮನಿಗೆ ಯಾವ ಬುದ್ಧಿವಿಕಲತೆಯು ಉಂಟಾಗಬಹುದೋ ಆ ಹುಚ್ಚು ಇವನನ್ನು ಹಿಡಿದಿತ್ತು. ಇದು ಕಾರಣದಿಂದ ಅವನು ಮಾತಿನಲ್ಲಿ ಯಾರೊಡನೆಯೂ ತಡವರಿಸುತ್ತಿದ್ದಿಲ್ಲ. ಆಮಂತ್ರಿತರಾದ ಗೃಹಸ್ಥರು ನಮ್ಮ ಮನೆಗೆ ಬಂದ ಕಾಲದಲ್ಲಿ ಮುದ್ದಣ್ಣನು ಅಡಿಗೆ ಮಾಡುವುದನ್ನು ಬಿಟ್ಟು, ಹೊಸ ಧೋತ್ರವನ್ನು ಉಟ್ಟುಕೊಂಡು ತನ್ನ ವಿದ್ಯಾರ್ಜನೆಯನ್ನೂ, ತನ್ನ ಕುಲೀನತೆಯನ್ನೂ, ತನ್ನ ಧನಸಂಪನ್ನತೆಯನ್ನೂ ಕುರಿತು ಅವರ ಮುಂದೆ ವ್ಯಾಖ್ಯಾನ ಮಾಡುವನು. ಅವನಲ್ಲಿ ಇವೆಲ್ಲವು ಕೊಂಚ ಕೊಂಚವಾಗಿ ಇಲ್ಲದೆ ಇರಲಿಲ್ಲ. ನೆರೆಯಲ್ಲಿದ್ದ ಸ್ತ್ರೀಯರು ನಮ್ಮ ಮನೆಯಲ್ಲಿ ಹಾಳುಹರಟೆಗಳನ್ನು ಜಗಿಯುವುದಕ್ಕೆ ಕೂಡಿದರೆ, ಈ ಸುಂದರ ಪುರುಷನು ಅಡಿಗೆಮನೆಯನ್ನು ಬಿಟ್ಟು, ಅವರ ಸಮ್ಮುಖದಲ್ಲಿ ಬಂದು ಗಂಭೀರಭಾವವನ್ನು ಧರಿಸಿ, ಕುರ್ಚಿಯ ಮೇಲೆ ಕುಳಿತುಕೊಳ್ಳುವನು. ಹಾಗೆಯೇ ಮೇಜಿನ ಮೇಲಿದ್ದ ಒಂದು ‘ಸೋಶ್ಯಲ್ ರಿಫೋರ್ಮರ್’ ಸಂಚಿಕೆಯನ್ನು ಕೈಯಲ್ಲಿ ಕೊಂಡು ‘ವಾಂಟೆಡ್ ಏ ಯಂಗ್ ಮೆನ್ ಟು ಮೆರ್ರಿ ಏ ವರ್ಜಿನ್ ವಿಡೊ’ ಎಂದು ಓದಿಕೊಂಡು ಒಮ್ಮೆ ಸ್ತ್ರೀಯರ ಮುಖವನ್ನು ನೋಡುತ್ತಾ, ಒಮ್ಮೆ ‘ವರ್ಜಿನ್ ವಿಡೊ’ ಎಂದು ಹೇಳಿ ತಲೆದೂಗುತ್ತಾ, ಆನಂದಪರವಶನಾಗುವನು. ತಾನು ಇತರರಂತೆ ಸದ್ವಂಶದಲ್ಲಿ ಹುಟ್ಟಿರುವೆನೆಂದು ಮರಳಿಮರಳಿ ನಮ್ಮ ಕಿವಿಗೆ ಹಾಕುತ್ತಿದ್ದನು. ಅವನು ಹೇಳುವಂತೆ ಅವನ ಸೋದರಮಾವನೊಬ್ಬನು ಜಿಲ್ಲಾ ಮುನ್ಸೀಫನಾಗಿದ್ದನು; ಮತ್ತೊಬ್ಬನು ತಾಲೂಕು ಅಮಲ್ದಾರನಾಗಿದ್ದನು. ಆದರೆ ಈ ಪುಣ್ಯಾತ್ಮರಿಗೆ ಅಳಿಯನ ಪರಿಚಯವೇನೋ ಇರಲಿಲ್ಲ. ಅಳಿಯುವ ಮೊದಲೇ ಅಳಿಯನಾಗಬೇಕೆಂಬ ಆಸೆಯಿಂದ ಅವನು ಸ್ವಲ್ಪ ಹಣವನ್ನು ಕೂಡಹಾಕಿದ್ದನು. ಈ ಧನಲೋಲುಪ್ತಿಯ ವಿಷಯದಲ್ಲಿ ಅವನು ನನ್ನ ಚಿಕ್ಕಪ್ಪನವರ ಸಾಕಣೆ ಮಗ ಎಂದು ಕರೆಯಲ್ಪಡುವಷ್ಟು ಅವರ ಪೂರ್ಣ ಅನುವರ್ತಿಯಾಗಿದ್ದನು. ಮೊದಲು ಮೊದಲು ‘ಚಿಕ್ಕಪ್ಪಯ್ಯನ ದತ್ತಕಪುತ್ರ’ ಎಂದು ಸರಸಕ್ಕೆ ಇವನನ್ನು ಯಾರಾದರೂ ಕರೆದರೆ ಈತನು ಉರಿದು ಬೀಳುತ್ತಿದ್ದರೂ, ಕ್ರಮೇಣ ಈ ಹೆಸರು ಹೇಳಿದರೆ ಅವನಿಗೆ ಒಂದು ಪ್ರಕಾರದ ಆನಂದವುಂಟಾಗುತ್ತಲಿತ್ತು. ಯಾವ ಕಾರಣದಿಂದಲೊ ಇವರಿಬ್ಬರೊಳಗೆ ಪರಸ್ಪರ ಗೂಢ ಸ್ನೇಹವುಂಟಾಯಿತು. ಈ ರಹಸ್ಯವಾದ ಅನ್ಯೋನ್ಯ ಮೈತ್ರಿಯೇ ನನ್ನನ್ನು ಇನ್ನೊಮ್ಮೆ ಜೈಲಿಗೆ ಅಟ್ಟಿಬಿಟ್ಟಿತು. ಆದರೂ ಈ ಮುದ್ದಣ್ಣನ ಮೇಲೆ ನನಗೆ ಕೋಪವಿರಲಿಲ್ಲ. ಏಕೆಂದರೆ ಆತನು ಸಜ್ಜನ ಸ್ವಭಾವದವನು, ಸಹನಾ ಶಕ್ತಿಯುಳ್ಳವನು. ಅಡಿಗೆ ಮನೆಯಲ್ಲಿ ಬೆಕ್ಕಿನಂತೆ ಯಾರ ಅಪ್ಪಣೆಯನ್ನೂ ಕೇಳದೆ ಕಣ್ಮುಚ್ಚಿ ತಿನ್ನುವುದಾಗಲೀ. ಚಿಕ್ಕಮನೆಯಲ್ಲಿ ಹಾಸಿದ ಹಾಸಿಗೆಯ ಮೇಲೆ ಅಂತರಂಗದಿಂದ ಬಂದು ಮನೆಯ ಯಜಮಾನನಂತೆ ಮಲಗುವುದಾಗಲೀ, ಅವನ ಕೃತ್ಯಗಳಲ್ಲಿ ಕಾಣಿಸಲಿಲ್ಲ. + +ಸೋಮವಾರ ದಿನ ನನ್ನ ಚಿಕ್ಕತಂದೆಯವರು ನಿತ್ಯ ಕರ್ಮದಂತೆ ಊಟಕ್ಕೆ ಕುಳಿತಿದ್ದರು. ಅಡಿಗೆಯವನು ಪ್ರೇಮಪೂರ್ವಕವಾಗಿ ಸೇವಿಸುತ್ತಿದ್ದನು. ನಾನು ಸ್ನಾನವನ್ನು ತೀರಿಸಿ ಭೋಜನಕ್ಕೆ ಸಿದ್ಧನಾಗಿ ಅಡಿಗೆ ಮನೆಗೆ ಹೋಗುತ್ತಿದ್ದೆನು. ಆದರೆ ಅವರಿಬ್ಬರಿಗೂ ನಡೆಯುವ ಅಂತರಂಗದ ಸಂಭಾಷಣೆಯಲ್ಲಿ ಕೆಲವು ಮಾತುಗಳು ಹಿಂದುಗಡೆಯಲ್ಲಿದ್ದ ನನ್ನ ಕಿವಿಗಳಲ್ಲಿ ಇಳಿದುದರಿಂದ ನಾನು ಕುತೂಹಲಮನಸ್ಕನಾಗಿ ಅಲ್ಲಿಯೇ ತಡೆದೆನು. + +ಚಿಕ್ಕಪ್ಪ – “ನಾನು ನನಗೆ ಬೇಕಾದ ಒಬ್ಬಿಬ್ಬರೊಡನೆ ಹಣವನ್ನೆಲ್ಲಾ ನಿನ್ನ ವಶಮಾಡುವೆನೆಂದು ಹೇಳಿದುದರಿಂದ, ನನ್ನ ಸಾಕಣೆಮಗ ಎಂದು ಎಲ್ಲರೂ ನಿನ್ನನ್ನು ಹೇಳಲು ಕಾರಣವಾಯಿತು.” + +ಮುದ್ದಣ್ಣ – “ಮನೆಯ ಯಜಮಾನರು ನಿಮ್ಮ ಸೋದರ ಮಗನಲ್ಲವೇ? ನಿಮ್ಮ ಹಣವೆಲ್ಲಾ ಅವರ ಪಾಲಿಗೆ ಹೋಗದೆ ನನ್ನ ವಶಕ್ಕೆ ಬರಲು ನ್ಯಾಯವು ಬಿಡುವುದೇ?” + +ನಾನು ನಿಂತಲ್ಲಿಯೇ ಇದರ ಸಂಪೂರ್ಣ ಅರ್ಥವನ್ನು ಗ್ರಹಿಸಿದೆನು. + +ಚಿಕ್ಕಪ್ಪ – “ಹುಚ್ಚಾ! ನೀನರಿಯೆ. ಈ ಮನೆಯ ಯಜಮಾನ ನಾನು; ಅವನಲ್ಲ. ಇದು ಆಗಿಹೋದ ನನ್ನ ಧರ್ಮಪತ್ನಿಯ ಮನೆ. ಆದುದರಿಂದ ಮನೆಯ ಒಂದು ಕಲ್ಲಿನಲ್ಲಿ ಕೂಡ ಆತನಿಗೆ ಹಕ್ಕಿಲ್ಲ. ನನ್ನ ನಗದು ಹಣವು ಸ್ವಾರ್ಜಿತವಾದುದರಿಂದ ಅದನ್ನು ನನ್ನ ಇಚ್ಛಾನುಸಾರವಾಗಿ ನಾನು ವಿನಿಯೋಗಿಸಬಹುದು, ಕಂಡೆಯಾ?” + +ಹೀಗೆಂದು ಹೇಳಿ ಚಿಕ್ಕತಂದೆಯವರು ಭಕ್ಷ್ಯವನ್ನು ಬಡಿಸಲು ಹೇಳಿದರು. ಅಡಿಗೆಯವನು ಭಕ್ಷ್ಯಗಳನ್ನು ಅವರ ಎಲೆಯ ಮೇಲೆ ಧಾರಾಳವಾಗಿ ವರ್ಷಿಸಿದನು. ಕಣ್ಣು ಕಾಣದ ನಷ್ಟವನ್ನು ನೋಡಿ ನಾನು ನನ್ನಲ್ಲಿಯೇ ಬೇಸರಗೊಂಡೆನು. ಆದರೂ ಮಾತುಗಳು ಕೊನೆಮುಟ್ಟಿದುದನ್ನು ನೋಡುವುದಕ್ಕೆ ಸಡಗರಿಸುತ್ತ ಅಲ್ಲಿಯೇ ನಿಂತೆನು. + +ಚಿಕ್ಕಪ್ಪ – “ಮುದ್ದು! ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗನು ಕೂಡ ನನ್ನನ್ನು ಇಷ್ಟು ಪ್ರೀತಿಯಿಂದಲೂ ವಾತ್ಸಲ್ಯದಿಂದಲೂ ನೋಡುತ್ತಿದ್ದಿಲ್ಲ. ನನ್ನ ಹಣವೆಲ್ಲಾ ನಿನಗೆಂದು ನಾನು ‘ಉಯಿಲ್’ ಬರೆದಿಟ್ಟಿರುವೆನು.” + +ಮುದ್ದಣ್ಣ – “ಉಯಿಲ್ ಎಂದರೇನು?”ಚಿಕ್ಕಪ್ಪ – “ಸ್ಥಿರಚರ ಸೊತ್ತನ್ನು ಒಬ್ಬನು ಮತ್ತೊಬ್ಬನಿಗೆ ತನ್ನ ಮರಣದ ಬಳಿಕ ದಾನವಾಗಿ ಬರೆದುಕೊಡುವ ನ್ಯಾಯಪತ್ರ.”ಮುದ್ದಣ್ಣ – “ಹಾಗಾದರೆ ಬರೆದುಕೊಡುವವನು ಸತ್ತ ವಿನಾ ಆ ಸೊತ್ತು ಮತ್ತೊಬ್ಬನ ಪಾಲಿಗೆ ಬರುವುದಿಲ್ಲವೇ?” + +ಚಿಕ್ಕತಂದೆಯವರು ಅಡಿಗೆಭಟ್ಟನ ಮಾತಿನ ಅರ್ಥವನ್ನು ಸರಿಯಾಗಿ ತಿಳಿದುಕೊಂಡರು. ಊರಲ್ಲೆಲ್ಲಾ ವಾಂತಿಭೇದಿಯು ಹಬ್ಬಿದುದರಿಂದ ಈ ಮಾತು ಅವರಿಗೆ ಅಪಶಕುನವಾಗಿ ತೋರಿದ್ದರೂ ಇರಬಹುದು. ಹೇಗೂ ಆ ಮೇಲೆ ಅವರು ಮಾತೆತ್ತದೆ, ಕೈತೊಳೆದು ಹೊರಕ್ಕೆ ಹೋದರು. + +ಸ್ವಲ್ಪ ಹೊತ್ತಿನ ಮೇಲೆ ನನ್ನ ಹೆಂಡತಿಯು ಅಡಿಗೆಮನೆಗೆ ಬಂದು ನನ್ನನ್ನು ಕರೆಯುತ್ತಲೇ ನಾನು ಊಟಕ್ಕೆ ಕುಳಿತುಕೊಂಡೆನು. ಪಾತ್ರೆಗಳಲ್ಲಿ ಶಾಕಪಾಕಗಳು ವಜ್ರ್ಯವಾದುದನ್ನು ನೋಡಿ ಸಕಲಾವತಿಗೂ ಅಡಿಗೆಯವನಿಗೂ ನಿತ್ಯದಂತೆ ಬಾಯ್ಜಗಳವು ನಡೆಯಿತು. ನನಗೆ ‘ಆಫೀಸಿಗೆ’ ಹೋಗುವುದಕ್ಕೆ ವಿಳಂಬವಾದುದರಿಂದಲೂ, ನನ್ನ ಮನಸ್ಸಿಗೆ ಸಮಾಧಾನವಿಲ್ಲದುದರಿಂದಲೂ, ನಾನು ಮನೆಯವಳ ಪಕ್ಷವಾಗಿ ಸಿಟ್ಟಿಗೆದ್ದು “ಇವರ ಕರ್ಮದಿಂದ ಒಂದು ತುತ್ತು ಅನ್ನ ತಿನ್ನುವುದಕ್ಕೆ ಇಲ್ಲ! ಹಾಳಾಗಿ ಹೋಗಲಿ!” ಎಂದು ಶಪಿಸಿ, ಊಟ ಮುಗಿಸದೆ, ನೆಟ್ಟನೆ ಆಫೀಸಿಗೆ ಹೊರಟೆನು. ನಮ್ಮ ಚಿಕ್ಕಪ್ಪನವರು ಸುಖಾಸೀನರಾಗಿ ನಿದ್ರೆಗೆ ಪ್ರಸ್ತಾವನೆಯಾಗಿ ಆಕಳಿಸುವುದನ್ನು ನೋಡಿ, ಮನೆಯನ್ನು ಬಿಟ್ಟು ಹೋಗುವಾಗ ನನ್ನ ಅಸಮಾಧಾನತೆಯು ಕಡಿಮೆಯಾಗಲಿಲ್ಲ. + +ದಾರಿಯಲ್ಲಿ ಬರುತ್ತಿದ್ದಾಗ ನನ್ನ ಮನಸ್ಸಿನಲ್ಲಿದ್ದ ಪೂರ್ವ ಸಂಶಯಗಳೆಲ್ಲಾ ನಿಜವಾಗಿ ಕಂಡುಬಂದುವು. ಅಡಿಗೆಯವನು ಚಿಕ್ಕತಂದೆಯ ಗಂಟಿನ ಆಸೆಗೆ ಒಳಗಾಗಿ, ಊಟ ಉಪಚಾರಗಳಲ್ಲಿ ನಮ್ಮಿಬ್ಬರಿಗೆ ಬರಿದಾದ ಪಾತ್ರೆಗಳನ್ನು ಮಾತ್ರ ನಿಲ್ಲಿಸುವನು ಎಂದು ನನ್ನ ಹೆಂಡತಿಗೂ ಅವನಿಗೂ ದಿನಂಪ್ರತಿ ಕಾಳಗವಾಗುತ್ತಿತ್ತು. ಇವೆಲ್ಲವು ಅಲ್ಪ ಸಂಗತಿಗಳೆಂದು ಬಗೆದು ಅಡಿಗೆಮನೆಯ ಕಲಹವನ್ನು ನನ್ನ ಆಫೀಸ್ ಚಾವಡಿಗೆ ತರಲು ಬಿಡುತ್ತಿರಲಿಲ್ಲ. ಈ ಹೊತ್ತು ನೋಡಿದ ನೋಟದಿಂದ ನನ್ನ ಮನಸ್ಸಿಗೆ ಅವೆಲ್ಲವೂ ಖಚಿತವಾದುವು. ನನ್ನ ಚಿಕ್ಕ ತಂದೆಯವರು ತನ್ನ ಹಣದ ವಾಸನೆಯನ್ನು ಇಟ್ಟು, ಮುದ್ದಣ್ಣನು ತನ್ನ ಹಿಂದುಗಡೆ ತನಗೆ ಬೇಕಾದ ಹಾಗೆ ಬರುವಂತೆ ಮಾಡಿ, ‘ಮನ್ನಣೆಯ ಮನೆಯ ಅಳಿಯನಂತೆ’ ಸರ್ವಸುಖವನ್ನು ಅನುಭವಿಸುವುದಕ್ಕೆ ಅನುಕೂಲ ಪಡಿಸಿರುವರು! ಇವರ ಮನೆಯನ್ನೂ ಧನವನ್ನೂ ಆಶಿಸಿದ ನನಗೆ ಬೂರುಗದ ಮರ ಕಾದ ಗಿಣಿಯಂತೆ ಹತಾಶನಾಗುವ ಕಾಲ ಬಂದೊದಗುವುದು. ಮನೆಯ ಗೋಡೆಯನ್ನು ಅಂಟಿಕೊಂಡ ಈ ಉಡುವನ್ನು ಹೊರಕ್ಕಟ್ಟಿಬಿಟ್ಟ ಹೊರತು ಮನೆಗೆ ಶ್ರೇಯಸ್ಸು ಇಲ್ಲ. ಇನ್ನು ಈ ಹಳೆಯ ಮರವು ಬೇರೂರಿದರೆ ನೆಲವನ್ನು ಬಿಡದೆ ಎಲ್ಲವನ್ನು ಆವರಿಸಿಕೊಳ್ಳುವುದು. ಆದುದರಿಂದ ಈ ವೃದ್ಧ ಶಕುನಿಯಿಂದ ನಾವಿಬ್ಬರು ದೂರರಾಗಿರಬೇಕು ಎಂದು ದೃಢಮನಸ್ಕನಾದೆನು. + +‘ಆಫೀಸಿನಲ್ಲಿ’ ಗುಮಾಸ್ತರು ಒಬ್ಬಿಬ್ಬರು ಅಲ್ಲದೆ ಮತ್ತಾರು ಬಂದಿರಲಿಲ್ಲ. ಊರಲ್ಲೆಲ್ಲ ಭಯಂಕರವಾಗಿ ವಾಂತಿಭೇದಿಯು ಪಸರಿಸಿದುದರಿಂದ, ಅವರು ಇದೇ ನೆವವನ್ನು ಮಾಡಿ ಮನೆಯಲ್ಲಿ ನಿಂತುಬಿಟ್ಟಿದ್ದರು. ರೋಗವು ತಲೆದೋರುವ ಮೊದಲೇ ಹುಡುಗರೆಲ್ಲಾ ಶಾಲೆಗೆ ‘ರಜಾ’ ಎಂದು ತಮ್ಮಷ್ಟಕ್ಕೆ ಖಚಿತ ಮಾಡಿಕೊಂಡು ಊರಿಗೆ ಹೋಗಿಬಿಟ್ಟರು. ಎಂದೂ ಬಂಡಿಯನ್ನು ಹತ್ತದ “ಆಸ್ಪತ್ರೆಯ” ಬಡ ನೌಕರರೆಲ್ಲ ಕುದುರೆಗಾಡಿಯಲ್ಲಿ ಕುಳಿತುಕೊಳ್ಳುವುದಕ್ಕೆ ಮೊದಲು ಮಾಡಿದರು. ‘ಲೋಕಲ್ ಫಂಡ್ ಮೆಂಬರ್ಸ್’ ಎಂದು ಕರೆಯಲ್ಪಡುವ ಲೋಕದ ಪಂಡರು (ಪಂಡ – ಒಬ್ಬ ಅಮುಖ್ಯ ಮನುಷ್ಯ) ಖಜಾನೆಯಲ್ಲಿ ಕಾದಿಟ್ಟ ಹಣವನ್ನು ವ್ಯಯಮಾಡುವುದಕ್ಕೆ ತೊಡಗಿದರು. ಆದರೂ ಕೊಲೆರಾ (ಎಂದರೆ ಕೊಲೆರೋಗ) ಊರಲ್ಲಿ ಶಮನವಾಗಲಿಲ್ಲ. ಶಮನಾರ್ಥವಾಗಿ ಶಾಂತಿಗಳೂ ಪೂಜೆಗಳೂ ನಡೆದುವು. ದೇವಸ್ಥಾನಗಳಲ್ಲಿ ವಿಪ್ರಸಂತರ್ಪಣೆಗಳು ಮಹಾ ಸಂಭ್ರಮದಿಂದ ಜರಗಿದವು. ಕೆಲವು ದಿನಗಳಲ್ಲಿ ಬ್ರಾಹ್ಮಣರ ಅಗ್ರಹಾರದಲ್ಲಿ ಮರಣಗಳು ಸಂಭವಿಸಿದುವು. ಉಪಾಯವಿಲ್ಲ; ಎಲ್ಲರೂ ನಾನಾ ತರದ ಔಷಧಗಳನ್ನು ತರಿಸಿ ಇಟ್ಟುಕೊಂಡರು. ಬಹಿರಂಗವಾಗಿ ಬೀಡಿ ಸೇದುವುದಕ್ಕೆ ಹೆದರುತ್ತಿದ್ದ ಹುಡುಗರು ಹಣವನ್ನು ಹೊಗೆಯಾಗಿ ಮಾಡಿಬಿಟ್ಟರು. ಬ್ರಾಂಡಿ ವ್ಹಿಸ್ಕಿ ಸೀಸೆಗಳ ಕ್ರಯವು ಹೆಚ್ಚಿತು. ಆದರೂ ರೋಗವು ಶಾಂತವಾಗಲಿಲ್ಲ. + +ಆಫೀಸಿನಲ್ಲಿ ನಾನು ಸ್ವಲ್ಪ ಕೆಲಸಮಾಡಿದ ಬಳಿಕ ಫಲಾಹಾರಕ್ಕೋಸ್ಕರ ಮುದ್ದಣ್ಣನ ಹಾದಿಯನ್ನು ಎದುರ್ನೋಡುತಿದ್ದೆನು. ಕೂಡಲೆ ಮುದ್ದಣ್ಣನು ಎಂದಿಗಿಂತ ಮುಂಚೆಯೇ ಬಂದನು; ನನ್ನ ಬೀರುವಿನ ಬೀಗದ ಕೈಯನ್ನು ಮನೆಯಲ್ಲಿ ತರಹೇಳಿದರೆಂದು ಹೇಳಿ, ಹೋಗುವಾಗ ಅದನ್ನು ಕೊಂಡುಹೋದನು. ಆ ದಿನ ಬೇಗನೆ ಹೋಗುವುದಕ್ಕೆ ಅವಕಾಶವಿದ್ದುದರಿಂದ, ನಾನು 7 ಗಂಟೆಗೆ ‘ಆಫೀಸ್’ ಬಿಟ್ಟು ಮನೆಯ ಹಾದಿಯನ್ನು ಹಿಡಿದೆನು. ದಾರಿಯಲ್ಲಿ ನೂತನವಾದ ವರ್ತಮಾನವನ್ನು ಕೇಳಿ ನನ್ನ ತಲೆ ಕೆಳಗಾಯಿತು. ನನ್ನ ಚಿಕ್ಕತಂದೆಯವರು ಅಕಸ್ಮಾತ್ತಾಗಿ ಪ್ರಾಣಾಂತ ಸ್ಥಿತಿಯಲ್ಲಿರುವರೆಂದೂ, ಅವರ ಜೀವಂತ ಶವವನ್ನು ‘ಪೋಲೀಸಿನವರು’ ‘ಆಸ್ಪತ್ರೆಗೆ’ ಒಯ್ದಿರುವರೆಂದೂ ಕೇಳಿ ನನ್ನ ಹೃದಯವು ತಳಮಳಗೊಂಡಿತು. ನಾನು ನಿಂತಲ್ಲಿ ನಿಲ್ಲದೆ ಓಡತೊಡಗಿದೆನು. + +ನಾನು ‘ಆಸ್ಪತ್ರೆಯನ್ನು’ ಸೇರುವುದಕ್ಕೆ ವಿಳಂಬವಾಗಲಿಲ್ಲ. ನಮ್ಮ ಚಿಕ್ಕತಂದೆಯವರು ಮಂಚದ ಮೇಲೆ ಮಲಗಿದ್ದರು ಅಥವಾ ಮಲಗಿಸಲ್ಪಟ್ಟಿದ್ದರು. ‘ಡಾಕ್ಟರರು’ ಬಳಿಯಲ್ಲಿ ನಿಂತು, ಔಷಧದ ದರ್ವಿಯನ್ನು ಅವರ ಹಲ್ಲುಗಳ ನಡುವೆ ತುರುಕುತ್ತಿದ್ದರು. ಚಿಕ್ಕತಂದೆಯವರು ಅವರ ಮೇಲೆ ಕೋಪದಿಂದಲೊ ಎಂಬಂತೆ ಕಣ್ಮುಚ್ಚಿ ಹಲ್ಲು ಮಸೆಯುತ್ತಿದ್ದರು. ಚಿಕ್ಕತಂದೆಯವರಿಗೆ ಪ್ರಜ್ಞೆ ತಪ್ಪಿ ಹೋಗಿದ್ದಿತು; ನಾಲಗೆ ಬಿದ್ದುಹೋಗಿದ್ದಿತು; ಶ್ವಾಸ ಮಾತ್ರ ಮೆಲ್ಲಮೆಲ್ಲನೆ ಹೊರಬರುತ್ತ ಒಳಹೋಗುತ್ತ ಆಡುತಿದ್ದಿತು. ಅವರ ಅಂತ್ಯಸ್ಥಿತಿಯನ್ನು ನೋಡುವುದಕ್ಕೆ ಹಲವು ಜನರು ಅಲ್ಲಿ ನೆರೆದಿದ್ದರು. ಪುರೋಹಿತನೂ ಪೋಲೀಸಿನವನೂ ಎಲ್ಲರಿಗಿಂತಲೂ ಮುಂದೆ ನಿಂತಿದ್ದರು. ಎಲ್ಲಾದರೂ ಅಕಸ್ಮಾತ್ ಮರಣ ಉಂಟಾದರೆ, ಉಳಿದವರಿಗೆ ಮರಣದೋಷವು ತಗಲದಂತೆ ಮಾಡುವ ಸದುದ್ದೇಶವಿದ್ದ ಈ ಇಬ್ಬರು ಪುಣ್ಯಾತ್ಮರು ನಮ್ಮ ಚಿಕ್ಕತಂದೆಯವರ ಅವಸ್ಥೆಯನ್ನು ಕುರಿತು ಕ್ಷಣೇಕ್ಷಣೇ ವಿಚಾರಿಸುತಿದ್ದರು. + +ಸ್ವಲ್ಪ ಹೊತ್ತಿನ ಮೇಲೆ ಪ್ರಾಣವಾಯುವು ಸುಳಿವುದೋ ಎಂದು ಪರೀಕ್ಷಿಸುವುದಕ್ಕೆ ಕನ್ನಡಿಯನ್ನು ಅವರ ಮುಖದ ಇದಿರಿಗೆ ಹಿಡಿದರು. ಅದರ ಬದಲಾಗಿ ರೂಪಾಯಿಯ ಗೊಂಬೆಯನ್ನು ಮೂಗಿನ ಸೊಳ್ಳೆಗೆ ಒರಸಿದರೆ ಸರಿಯಾಗಬಹುದೆಂದು ಅಲ್ಲಿದ್ದವರಲ್ಲಿ ಯಾರೋ ಒಬ್ಬರು ಸೂಚಿಸಿದರು. ‘ಡಾಕ್ಟರರು’ ಮತ್ತೊಮ್ಮೆ ರೋಗಿಯ ನಾಡಿಯನ್ನು ಹಿಡಿದು, ಔಷಧವನ್ನು ಕೊಡಲು ಮನಸ್ಸು ಮಾಡಿ ‘ಆಸ್ಪತ್ರೆಯ’ ಆಳಿನೊಡನೆ ‘ಪೆಟ್ಟಿಗೆಯನ್ನು ಕೊಂಡು ಬಾ!’ ಎಂದು ಆಜ್ಞೆ ಮಾಡಿದರು. ‘ಕ್ರಿಶ್ಚನ್ ಡಾಕ್ಟರನು’ ಈ ಮಾತು ಹೇಳುತ್ತಲೇ ಪುರೋಹಿತನು ತವಕಗೊಂಡನು; ಮತ್ತು ನನ್ನೆಡೆಗೆ ಬಂದು “ಡಾಕ್ಟರನು ಕಟ್ಟಿಗೆ ಎನ್ನುವ ಬದಲಾಗಿ ಪೆಟ್ಟಿಗೆ ಎಂದು ಹೇಳಿದನೋ ನೋಡಿಕೊಳ್ಳು” ಎಂದು ನನ್ನನ್ನು ಎಚ್ಚರಗೊಳಿಸಿದನು. ಆದರೆ ಅಷ್ಟರಲ್ಲಿ ‘ಪೋಲೀಸ್ ಜಮಾದಾರನು’ ಬಂದು ನನ್ನೊಡನೆ ಮಾತನಾಡುತ್ತಿದ್ದುದರಿಂದ ಪುರೋಹಿತನ ಹಿತೋಕ್ತಿಯನ್ನು ನಾನು ಕಿವಿಗೆ ಹಾಕಿಕೊಳ್ಳಲಿಲ್ಲ. + +ಜಮಾದಾರನು ನನ್ನೊಡನೆ “ನಿಮ್ಮ ಚಿಕ್ಕಪ್ಪನವರು ಬದುಕುವ ಸಂಭವ ತೋರುವುದಿಲ್ಲ. ಅಕಸ್ಮಾತ್ತಾಗಿ ನಡೆದಿರುವ ಈ ಸಂಗತಿಯನ್ನು ಕುರಿತು ನಿಮ್ಮೊಡನೆ ವಿಚಾರಿಸಬೇಕೆಂದಿರುವೆವು” ಎಂದನು. ನಾನು ಅದಕ್ಕೆ ಒಪ್ಪಿಕೊಂಡು ವಿಚಾರಣೆಗೆ ಸಿದ್ಧನಾಗಿ ನಿಂತೆನು. ಜಮಾದಾರನು ಚಿಕ್ಕತಂದೆಯವರ ಹೆಸರು, ಪ್ರಾಯ, ವೃತ್ತಿ ಮೊದಲಾದುವನ್ನು ಕೇಳಿಕೊಂಡು, ಕಾಗದದಲ್ಲಿ ಅದನ್ನು ಬರೆದುಕೊಂಡನು. + +ಜಮಾದಾರ – ನಿಮ್ಮ ಚಿಕ್ಕತಂದೆಯವರನ್ನು ನೀವು ಈ ದಿನ ಎಷ್ಟು ಹೊತ್ತಿಗೆ ನೋಡಿದಿರಿ?ನಾನು – ಅವರು ಈ ದಿನ 12 ಗಂಟೆಗೆ ಆರೋಗ್ಯವಂತರಾಗಿದ್ದರು.ಜಮಾದಾರ – ಅಕಸ್ಮಾತ್ತಾಗಿ ಹೀಗಾಗಲು ನಿಮಗೆ ಏನಾದರೂ ಕಾರಣ ತೋರುವುದೇ?ನಾನು – ಇಲ್ಲ.ಜಮಾದಾರ – ಅವರಿಗೂ ನಿಮಗೂ ಪರಸ್ಪರ ವಿರೋಧ ಭಾವವಿದ್ದಿತೇ?ನಾನು – ಇಲ್ಲ.ಜಮಾದಾರ – ಈ ದಿನ ಉಣ್ಣದೆ ನೀವು ಆಫೀಸಿಗೆ ಹೋಗಲು ಕಾರಣವೇನು? + + + +ಈ ಸಂಗತಿಯು ಜಮಾದಾರನಿಗೆ ಹೇಗೆ ತಿಳಿಯಿತೆಂದು ನಾನು ಆಶ್ಚರ್ಯಪಟ್ಟು ಒಂದು ನಿಮಿಷ ಮಾತಿಲ್ಲದವನಾದೆನು. ಆಫೀಸಿಗೆ ಹೋಗುವುದಕ್ಕೆ ವಿಳಂಬವಾದುದರಿಂದ ನಾನು ಉಂಡಂತೆ ಮಾಡಿ ಹೊರಟು ಹೋದೆನೆಂದು ಹೇಳಿದೆನು. + +ಜಮಾದಾರ – ನಿಮ್ಮ ಮನೆಯ ವಿಷಯದಲ್ಲಿ ನಿಮಗೂ ಅವರಿಗೂ ಮಾತು ನಡೆಯುತ್ತಿದ್ದಿತೇ?ನಾನು – ಹೌದು. ಆ ಮಾತುಗಳು ವಿನೋದದಿಂದ ಅಲ್ಲದೆ ವಿರೋಧದಿಂದ ನಡೆಯುತ್ತಿರಲಿಲ್ಲ.ಜಮಾದಾರ – ಅವರೊಡನೆ ಸ್ವಲ್ಪ ಹಣವುಂಟೆಂದು ಸುದ್ದಿ ಇದೆ. ಇದು ನಿಜವೇ?ನಾನು – ಅದನ್ನು ನಾನರಿಯೆ. ಅವರು ಬಂದಂದಿನಿಂದ ಮನೆಯ ವೆಚ್ಚದ ವಿಷಯದಲ್ಲಿ ಒಂದು ಚಿಕ್ಕಾಸೂ ಕೂಡ ಕೊಡದಿದ್ದುದರಿಂದ, ಅವರೊಡನೆ ಹಣವುಂಟು ಎಂದು ಹೇಳಲು ನನಗೆ ಸಂಶಯವಿದೆ. + +ಜಮಾದಾರ – ನಿಮ್ಮ ಚಿಕ್ಕತಂದೆಯವರಿಗೂ ಹಳೆಯ ಪೇಟೆ ಶ್ಯಾಮರಾಯರಿಗೂ ದ್ವೇಷವಿದ್ದಿತೇ?ನಾನು – ಶ್ಯಾಮರಾಯರನ್ನು ಕುರಿತು ಅವರಿಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ.ಜಮಾದಾರ – ಯಾವ ಕಾರಣದಿಂದ? + +ನಾನು – ಚಿಕ್ಕತಂದೆಯವರು ಚಿಕ್ಕದೊಂದು ಹುಡುಗಿಯನ್ನು ಅಂತರಂಗದಿಂದ ಮದುವೆಮಾಡಿಕೊಳ್ಳಲಿಕ್ಕೆ ಎಲ್ಲವನ್ನು ಒದಗಿಸಿದ್ದರು. ಆಗ ಸಮಾಜ ಸುಧಾರಕರಾದ ಶ್ಯಾಮರಾಯರು ಈ ವಿವಾಹ ವಿಷಯವಾಗಿ ‘ಎಪ್ಪತ್ತು ವರ್ಷದ ಮುದುಕ ಇಪ್ಪತ್ತು ದಿವಸ ಬದುಕ’; ‘ಹೆಣ್ಣಿಗೆ ಮನೆಯಾಯಿತು, ಗಂಡಗೆ ಮಸಣವಾಯಿತು’; ‘ಮುಪ್ಪಯ್ಯನ ಮದುವೆಯಲ್ಲಿ ಕಪ್ಪಯ್ಯನ ಮರಣ’; ಮೊದಲಾದ ಮಾತುಗಳನ್ನು ಕಂಡವರೊಡನೆ ಹೇಳಿ, ಆ ಮದುವೆ ನಡೆಯಕೂಡದೆಂದು ಮಾಡಿದರಂತೆ. + +ಜಮಾದಾರ – ನಿಮ್ಮ ಚಿಕ್ಕತಂದೆಯವರಿಗೆ ‘ಅಫೀಮು’ ತಿನ್ನುವ ಅಭ್ಯಾಸವಿದ್ದಿತೇ?ನಾನು – ನಾನರಿಯೆ; ಬಹುಶಃ ಇಲ್ಲವೆಂದು ಹೇಳಬಹುದು. ಕ್ರಯಕ್ಕೆ ಕೊಂಡು ಅದನ್ನು ಸೇವಿಸುವ ದುರಭ್ಯಾಸವಿರಲಿಲ್ಲ.ಜಮಾದಾರ – ನೀವು ಅದನ್ನು ಸೇವಿಸುವಿರೇ?ನಾನು – ಇಲ್ಲ.ಜಮಾದಾರ – ಹಾಗಾದರೆ ಈ ಅಫೀಮಿನ ಸೀಸೆ ನಿಮ್ಮದೇ? + +ಹೀಗೆಂದು ಜಮಾದಾರನು ಒಂದು ಸೀಸೆಯನ್ನು ಎತ್ತಿ ತೆಗೆದು ನನ್ನ ಕೈಗೆ ಕೊಟ್ಟನು. ನಾನು ತಲೆ ಅಪ್ಪಳಿಸಿದಂತಾಗಿ, ಸೀಸೆಯನ್ನು ಹಿಡಿದು ನೋಡುವಂತೆ ಸ್ವಲ್ಪ ಹೊತ್ತು ನಿರುತ್ತರನಾದೆನು. ಉಪಾಯವಿಲ್ಲದವನಾಗಿ ಅದು ನನ್ನದೆಂದು ನಾನು ಒಪ್ಪಿದೆನು. + +ಜಮಾದಾರ – ಅಫೀಮನ್ನು ನೀವು ಇಟ್ಟುಕೊಂಡುದೇಕೆ? + +ನಾನು – ಊರಲ್ಲಿ ವಾಂತಿ ಭೇದಿ ಇದ್ದುದರಿಂದ ತತ್ಕ್ಷಣದ ಪರಿಹಾರಾರ್ಥವಾಗಿ ಅದನ್ನು ಮೊದಲೇ ತಂದು ಇಟ್ಟುಕೊಂಡಿದ್ದೆನು. + +ಜಮಾದಾರನ ಮಾತುಗಳು ಇನ್ನೂ ಬಲವಾಗುತ್ತ ಬಂದುವು. ಇದರ ಪರಿಣಾಮವು ಏನಾಗುವುದೆಂದು ತಿಳಿಯುವುದಕ್ಕೆ ನನ್ನ ಮನಸ್ಸಿನಲ್ಲಿ ಕಳವಳವೂ ಭ್ರಾಂತಿಯೂ ಉಂಟಾದುವು. + +ಜಮಾದಾರ – ನೀವು ನಿಮ್ಮ ಅಡಿಗೆಭಟ್ಟನನ್ನು ಎಲ್ಲಿಗೆ ಕಳುಹಿಸಿರುವಿರಿ?ನಾನು – ಮುದ್ದಣ್ಣನು ಫಲಾಹಾರ ಕೊಂಡುಬಂದು, ಹಿಂತಿರುಗಿದ ಮೇಲೆ ನಾನು ಅವನನ್ನು ನೋಡಲಿಲ್ಲ.ಜಮಾದಾರ – ಆಫೀಸಿಗೆ ಬಂದವನು ನಿಮ್ಮೊಡನೆ ಏನನ್ನಾದರೂ ಹೇಳಲಿಲ್ಲವೇ?ನಾನು – ಈ ವಿಷಯವನ್ನು ಕುರಿತು ಅವನು ಹೇಳಲಿಲ್ಲ. ಬೀರುವಿನ ಬೀಗದ ಕೈ ತರಹೇಳಿದರೆಂದು, ನನ್ನಿಂದ ಅದನ್ನು ಕೊಂಡುಹೋದನು.ಜಮಾದಾರ – ಅಫೀಮಿನ ಸೀಸೆಯು ಬೀರುವಿನೊಳಗೆ ಇದ್ದಿತೇ?ನಾನು – ಹೌದು.ಜಮಾದಾರ – ಮುದ್ದಣ್ಣನು ಈಗ ಎಲ್ಲಿಗೆ ಹೋಗಿರುವನು?ನಾನು – ಅವನು ಮನೆಯಲ್ಲಿ ರಾತ್ರಿ ಮಲಗುವ ಪದ್ಧತಿ ಇಲ್ಲ. + +ವಿಚಾರಣೆ ಆದ ಬಳಿಕ ಜಮಾದಾರನು ಪುನಃ ಚಿಕ್ಕತಂದೆಯವರನ್ನು ನೋಡುವುದಕ್ಕೆ ಹೋದನು. ಚಿಕ್ಕತಂದೆಯವರು ಕಣ್ಣು ಬಿಟ್ಟಿದ್ದರು; ಮಾತನಾಡುವುದಕ್ಕೆ ಪ್ರಯತ್ನಿಸುವಂತೆ ತುಟಿ ಅಲ್ಲಾಡಿಸುತ್ತಿದ್ದರು; ಏನನ್ನೋ ಹುಡುಕುವಂತೆ ತಲೆದಿಂಬಿನ ಬಳಿಯಲ್ಲಿ ಕೈಬೆರಳನ್ನು ಸವರುತ್ತಿದ್ದರು. ದೂರಲೋಕಕ್ಕೆ ಪ್ರಯಾಣ ಮಾಡುವಷ್ಟು ಶಕ್ತಿಯಿಲ್ಲದುದರಿಂದ ಇಲ್ಲಿಯೇ ಉಳಿಯುವ ಸ್ಥಿತಿಯನ್ನು ತೋರಿಸಿದರು. + +ಮೆಲ್ಲಮೆಲ್ಲನೆ ಒಂದೊಂದೇ ಮಾತು ಬಾಯಿಂದ ಹರಿಯುತ್ತ ಬಂತು. ಮೊದಲು ಮೊದಲು ಉಚ್ಚರಿಸಿದ ಅಕ್ಷರಗಳು ಸ್ಪಷ್ಟವಾಗಿ ಕೇಳಿಸಲಿಲ್ಲ. ಬ-ದು-ಕ – ಎಂಬೀ ಅಕ್ಷರಗಳು ಹೊರಟುವು. ಬದುಕಲಾರೆನೆಂದು ಹೇಳುವರೊ ಬದುಕುತ್ತಾರೆ ಎಂದು ಹೇಳುವರೊ ಎಂದು ತಿಳಿಯಲಿಕ್ಕೆ ಕಷ್ಟವಾಯಿತು. ಪುನಃ ಕಣ್ಮುಚ್ಚಿದರು; ಸ್ತಬ್ಧರಾದರು, ಜಮಾದಾರನು ಪಕ್ಕದಲ್ಲಿಯೇ ನಿಂತಿದ್ದನು. ಸ್ವಲ್ಪ ಹೊತ್ತಿನ ಮೇಲೆ ಮು-ಧ-ಣ ಎಂದು ಬಾಯಿಂದ ಉಸುರು ಹೊರಟಿತು. + +ಜಮಾದಾರನು ಮುದ್ದಣ್ಣನ ಹೆಸರನ್ನು ಕಾಗದದಲ್ಲಿ ಬರೆದುಕೊಂಡನು. ಮುದ್ದು ಹಣ ಎಂದು ಬರೆಯಬೇಕಾಗಿ ಮತ್ತೊಬ್ಬ ಪೋಲೀಸಿನವನು ಆಗತಾನೇ ಸೂಚಿಸಿದನು. ಅಷ್ಟರಲ್ಲಿ ‘ಡಾಕ್ಟರರು’ ಸಮೀಪಕ್ಕೆ ಬಂದು ರೋಗಿಯನ್ನು ಆಗತಾನೆ ಮಾತನಾಡಿಸಿದರೆ, ಸ್ಥಿತಿಯು ಕೆಟ್ಟು ಹೋಗುವುದೆಂದು ಹೇಳಿ, ಚಿಕ್ಕತಂದೆಯವರ ಅಂತ್ಯೋಕ್ತಿಗಳನ್ನು ನಾವು ಕೇಳದಂತೆ ಮಾಡಿಬಿಟ್ಟರು. ಕೂಡಲೇ ಜಮಾದಾರನು ನನ್ನ ಬಳಿಗೆ ಬಂದು “ಈ ಅಕಸ್ಮಾತ್ತಾದ ವಿಷಯದಲ್ಲಿ ನಿಮ್ಮ ಮೇಲೆ ಸಂಶಯವಿರುವುದರಿಂದ ನಿಮ್ಮನ್ನು ‘ಕೈದು’ ಮಾಡಿರುವೆನು” ಎಂದು ನಿರ್ದಯೆಯಿಂದ ಹೇಳಿದನು. + +ತನ್ನ ತಲೆಯ ಮೇಲೆ ಸಿಡಿಲು ಬಿದ್ದಂತಾಯಿತು. ನಾಲಗೆಯ ಬಾಯಲ್ಲಿ ಬಿಗಿದುಕಟ್ಟಿದಂತಾಯಿತು. ಹಕ್ಕಿಗಳು ಬಾರದಂತೆ ಗದ್ದೆಯಲ್ಲಿಡುವ ಬೆರ್ಚಪ್ಪನ ಹಾಗೆ ನಾನು ಮಾತಿಲ್ಲದವನಾಗಿ ನಿಂತುಬಿಟ್ಟೆನು. ಚಿಕ್ಕ ತಂದೆಯವರ ಅಂದಿನ ಅವಸ್ಥೆಯೇ ಲೇಸೆಂದು ನನಗೆ ಆಗ ತೋರಿಬಂದಿತು. ನನ್ನನ್ನು ‘ಸ್ಟೇಶನಿಗೆ’ ಕೊಂಡು ಹೋಗುವುದಕ್ಕೆ ಜಮಾದಾರನು ಅಪ್ಪಣೆ ಕೊಟ್ಟನು. ನನ್ನನ್ನು ಅಲ್ಲಿಗೆ ಕೊಂಡೊಯ್ದರು. + +ಮರುದಿನ ಬೆಳಗ್ಗೆ ‘ಸ್ಟೇಶನಿನಲ್ಲಿ’ ಅನೇಕರು ಬಂದು ನೆರೆದರು. ‘ಪೋಲೀಸಿನವರು’ ಮುದ್ದಣ್ಣನನ್ನು ಹಿಡಿದು ತಂದು ವಿಚಾರಿಸಿದರು. ಚಿಕ್ಕತಂದೆಯವರಿಗೆ ‘ಅಫೀಮು’ ತಿನ್ನುವ ಅಭ್ಯಾಸವಿದ್ದಿತೆಂದು ಅವನು ಒಪ್ಪಿದನು. ಹಾಗೂ ದಿನಂಪ್ರತಿ ಅದನ್ನು ಎಲ್ಲಿಂದಲಾದರೂ ಸಂಪಾದಿಸಿಕೊಂಡು ತಾನು ಚಿಕ್ಕತಂದೆಯವರಿಗೆ ಕೊಡುತ್ತಿದ್ದೆನು ಎಂದು ಮುದ್ದಣ್ಣನು ಹೇಳಿದನು. ಅದೂ ಅಲ್ಲದೆ ‘ಕೊಲೆರಾ’ ರೋಗದ ಶಮನಾರ್ಥವಾಗಿ ನಾನು ತಂದಿಟ್ಟ ಸೀಸೆಯ ಸಂಗತಿಯು ಚಿಕ್ಕತಂದೆಯವರಿಗೆ ಗೊತ್ತಿದ್ದಿತೆಂದೂ, ಅವರ ಮಾತಿನಂತೆ ಬೀಗದ ಕೈಯನ್ನು ನನ್ನಿಂದ ಕೊಂಡುಹೋಗಿ, ಸೀಸೆಯನ್ನು ಅವರ ಕೈಗೆ ಕೊಟ್ಟಿದ್ದೆನೆಂದೂ ಮುದ್ದಣ್ಣನು ಹೇಳಿಕೆ ಕೊಟ್ಟನು. + + + +ಸ್ವಲ್ಪ ಹೊತ್ತಿನ ಮೇಲೆ ಚಿಕ್ಕತಂದೆಯವರು ಮರಣಾವಸ್ಥೆಯನ್ನು ಬಿಟ್ಟು ನಿದ್ರಾವಸ್ಥೆಗೂ ಜಾಗೃತಾವಸ್ಥೆಗೂ ಬಂದು ಎಚ್ಚರವಾಗಿ ಅವರ ಹೇಳಿಕೆಯ ಪ್ರಕಾರ ‘ಅಫೀಮನ್ನು’ ದೇಹದ ಅಂದಿನ ಅಜೀರ್ಣ ಪರಿಹಾರಾರ್ಥವಾಗಿ ತಾನೇ ತಿಳಿಯದೆ ಸ್ವಲ್ಪ ಹೆಚ್ಚು ತಿಂದುಬಿಟ್ಟಿದ್ದರೆಂದು ಚಿಕ್ಕತಂದೆಯವರು ಕೊಟ್ಟ ವಾಙ್ಮೂಲದ ಮೇಲೆ ನನಗೆ ಬಿಡುಗಡೆಯಾಯಿತು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_402.txt b/Kenda Sampige/article_402.txt new file mode 100644 index 0000000000000000000000000000000000000000..d9caa75e6cede3efc4e5872aa0ed1a641df7f3d5 --- /dev/null +++ b/Kenda Sampige/article_402.txt @@ -0,0 +1,49 @@ + + +ನನಗೊಂದು ಕೆಟ್ಟ ಗುಣವಿದೆ. ಸಭೆಗಳಲ್ಲಿ ಯಾರಾದರೂ ವೇದಿಕೆಯ ಮೇಲೆ ಭಾಷಣ ಮಾಡುತ್ತಿದ್ದರೆ ಅಥವಾ ಉಪನ್ಯಾಸ ನೀಡುತ್ತಿದ್ದರೆ ಸುಮ್ಮನೆ ಯಾವುದೋ ಪುಸ್ತಕವನ್ನು ತಿರುವಿ ಹಾಕುವುದು. ಅಂದೂ ಹಾಗೇ ಆಯಿತು. ಧಾರವಾಡದ ಸಾಹಿತ್ಯಸಂಭ್ರಮದಲ್ಲಿ. ನಮ್ಮ ಮಾತುಕತೆ ಮುಗಿಸಿ ವೇದಿಕೆಯಿಂದ ಕೆಳಗೆ ಇಳಿದಾಗ ಕೈಗೊಂದಿಷ್ಟು ಪುಸ್ತಕ ಬಂತು. ವೇದಿಕೆಯ ಮುಂಭಾಗದಲ್ಲಿ ಕುಳಿತವಳು ಆಗತಾನೆ ಕೈಗೆ ಬಂದ ಪುಸ್ತಕಗಳನ್ನು ಸುಮ್ಮನೆ ತಿರುವಿ ಹಾಕುತ್ತಿದ್ದೆ. + +ಬಹುದೂರದ ಕನಸು ಕರಗುವ ಮುಂಚೆಕೈ ಚಾಚಿ ತಬ್ಬಿಹಿಡಿ ನಲ್ಲೆ ಬಿಗಿದಪ್ಪಿಬಿಗಿ ಸಡಿಲಿಸಬೇಡ ಹಿತ ಮರುಕಳಿಸಲಿಕೈಗೆರೆಗಳು ಮಾತಾಡಲಿ ಪಿಸುದನಿಯಲಿಸಾಲುಗಳು ತಟ್ಟನೆ ಗಮನ ಸೆಳೆದವು. ಅರೆರೆ ಖಡಕ್ ಖಾಕಿಯೊಳಗೆ ಇಂತಹ ನವಿರು ಭಾವಗಳೇ….!!!?? ಓದುತ್ತ ನನ್ನನ್ನೇ ನಾನುಪ್ರಶ್ನಿಸಿಕೊಂಡೆ. + +ಶಿವಕುಮಾರ್ ದಂಡಿನ ಧಾರವಾಡದ ಲೋಕಾಯುಕ್ತ ಎಸ್ ಪಿ. ಪೋಲಿಸ್ ಇಲಾಖೆಯಲ್ಲೂ ಇಂತಹ ಸಂವೇದನೆ ಇರಲು ಸಾಧ್ಯವೇ ಎಂದು ನಾನು ಕೇಳಲು ಕಾರಣವಿದೆ. ಕೆರೆಮನೆ ಮನೆತನದಲ್ಲಿ ಗಂಡುಮಕ್ಕಳೆಲ್ಲ ಮೃದುಮಾತಿನವರಂತೆ. ಆದರೆ ಸಿಪಿಐ ಆದ ಅಣ್ಣ ಕೃಷ್ಣಾನಂದನ ಮಾತು ಈಗೀಗ ಒರಟಾಗುತ್ತಿರುವುದನ್ನು ಗಮನಿಸಿದ್ದೇನೆ. ಹೀಗಾಗಿ ಎಸ್ ಪಿ ಒಬ್ಬರು ಇಷ್ಟುಸೂಕ್ಷ್ಮ ವಾಗಿ ಬರೆಯುತ್ತಿದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಲೇ ನನಗೆ ಒಂದಿಷ್ಟು ಸಮಯ ಬೇಕಾಯಿತು. ಪೋಲಿಸ್ ಇಲಾಖೆ ಎಂದರೆ ತೀರಾ ಖಡಕ್ಕಾದ ಇಲಾಖೆ. ತಾವಷ್ಟೇ ಸಾಹಿತ್ಯ ರಚಿಸುವವರು ಎನ್ನುವ ಅಕಾಡೆಮಿಕ್ ವಲಯದಂತೆ ಸದಾ ಸಾಹಿತ್ಯದ ಸಾಂಗತ್ಯದಲ್ಲೇ ಇರಬಹುದಾದ ವೃತ್ತಿ ಅಲ್ಲ ಅದು. ತೀರಾ ಸಂವೇದನೆಯನ್ನೂ ನಿರೀಕ್ಷಿಸುವಂತಿಲ್ಲ. ಅದಕ್ಕೇ ಈ ಸಂವೇದನೆ ಹುಬ್ಬೇರಿಸುವಂತೆ ಮಾಡಿತು. + +ಒಂದು ವ್ಯವಸ್ಥೆಯ ಭಾಗವಾಗಿ ಆ ವ್ಯವಸ್ಥೆಯನ್ನು ಹೊರಗೆ ನಿಂತು ಗಮನಿಸುವುದು ಎಲ್ಲರಿಂದಲೂ ಆಗದ ಮಾತು. ಅದರಲ್ಲೂ ವ್ಯವಸ್ಥೆಯನ್ನು ವಿಮರ್ಶಾತ್ಮಕವಾಗಿ ನೋಡುವುದಕ್ಕೆ ಮತ್ತು ಅದನ್ನು ದಾಖಲಿಸುವುದಕ್ಕೆ ಖಂಡಿತಾ ಎಂಟೆದೆ ಬೇಕು. ಎಷ್ಟೋ ಸಲ ಇಷ್ಟವಿಲ್ಲದಿದ್ದರೂ ಆ ವ್ಯವಸ್ಥೆಯೊಳಗೆ ಇಳಿಯಲೇಬೇಕಾಗುತ್ತದೆ. ಮನಸ್ಸಿಲ್ಲದಿದ್ದರೂ ಪ್ರಭುತ್ವದ ಭಾಗವಾಗಬೇಕಾಗುತ್ತದೆ. ಎಷ್ಟೋ ಸಲ ಆ ಪ್ರಭುತ್ವದ ಗುರಾಣಿಯಾಗಿ ಕೆಲಸ ಮಾಡಬೇಕಾಗುತ್ತದೆ. ಕೆಲವೊಮ್ಮೆ ಆತ್ಮ ಸಾಕ್ಷಿಯನ್ನು ಕೊಂದುಕೊಂಡು ಪ್ರಭುತ್ವದ ಆಯುಧವಾಗಬೇಕಾಗುತ್ತದೆ. ಹೀಗಾದಾಗ ಸಹಜವಾಗಿಯೇ ಒಂದು ಪ್ರಭುತ್ವದ ಜೊತೆ ಹೊಂದಾಣಿಕೆ ಮಾಡಿಕೊಂಡು ಸುಖದ ಬದುಕಿರಲಿ ಎಂದು ಹೊರಡಬೇಕು ಅಥವಾ ಪ್ರಭುತ್ವವನ್ನು ಎದುರು ಹಾಕಿಕೊಂಡು ಕೊಡುವ ಕಿರುಕುಳವನ್ನು ಸಹಿಸಿಕೊಳ್ಳಬೇಕು. ಪ್ರಾಣಾಂತಕ ಕಿರಿಕಿರಿಯನ್ನು ಅನುಭವಿಸಲಾಗದೇ ಸೋತು ಸುಣ್ಣವಾಗಬೇಕು. ಆದರೆ ಇಂತಹ ಸ್ಥಿತಿಯಲ್ಲಿಯೂ ಪ್ರಭುತ್ವವನ್ನು ವಿಡಂಬನೆ ಮಾಡುವುದಿದೆಯಲ್ಲ ಅದು ಸಾಮಾನ್ಯವಾದುದಲ್ಲ. + +ರಾಜಕಾರಣವೆಂಬುದುಕಳ್ಳ ಸುಳ್ಳರ ಸಂತೆಇಲ್ಲಿ ವರ್ತಕರೇ ಗ್ರಾಹಕರುಗ್ರಾಹಕರೇ ವರ್ತಕರುಸೌಧವೆಂಬ ಸಂತೆಯಲ್ಲಿಕಂತೆ ಕಂತೆಗಳಿಗಷ್ಟೇ ಬೆಲೆ + +ಎಂದು ಮುಲಾಜಿಲ್ಲದೇ ಹೇಳಿಬಿಡುತ್ತಾರೆ ಇವರು. ಈ ಚುನಾವಣೆ ಬಿಸಿ ಇಡಿ ದೇಶವನ್ನು ಕುಲುಮೆಯಲ್ಲಿಟ್ಟಂತೆ ಸುಡುತ್ತಿರುವ ಸಮಯದಲ್ಲಿ ಈ ಸಾಲುಗಳು ತೀರಾ ಪ್ರಾಮುಖ್ಯತೆ ಪಡೆದುಕೊಳ್ಳುವುದನ್ನು ಗಮನಿಸಬೇಕು. + +ದುಡ್ಡು ಕಳ್ಕೊಂಡುಅಧಿಕಾರ ಹಿಡ್ಕೊದುಡ್ಡು ಮಾಡೋದೇಧರ್ಮ ಅಂದ್ಕೋ + +ಎನ್ನುತ್ತ ಚುನಾವಣೆಗಾಗಿ ದುಡ್ಡು ಖರ್ಚು ಮಾಡಿ ಆರಿಸಿ ಬಂದು ಮತ್ತೆ ಅಧಿಕಾರ ಹಿಡಿದು ಹಣ ಮಾಡುವ ಪ್ರಸ್ತುತ ಸ್ಥಿತಿಗೆ ಕನ್ನಡಿಹಿಡಿಯುತ್ತಾರೆ.ಪ್ರಸ್ತುತ ರಾಜಕಾರಣವು ದುಡ್ಡೇ ದೊಡ್ಡಪ್ಪ ಎನ್ನುವ ಮೌಲ್ಯ ರಹಿತ ರಾಜಕಾರಣದ ಹೀಗಾಗಿಯೇ + +ಕವಿತೆ ಬರೆಯಲೆಂದುಕೂತಾಗಲೆಲ್ಲ ಪೆನ್ನು ಹಾಳೆಗಳುಶತ್ರುಗಳಂತೆ ನೋಡುತ್ತವೆಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ. + +ಬರೆಯುವುದು ಸೃಜನಶೀಲ ಕೆಲಸ. ಕವಿತೆ ಎಂದರೇ ಹೃದಯಗಳು ಬೆರೆಯುವ ಪ್ರಕ್ರೀಯೆ. ಹೀಗಿರುವಾಗ ಜಗವನ್ನೇ ಒಳಗೊಳ್ಳುವ ಕವಿತೆ ಬರೆಯುವಾಗ ಪೆನ್ನು ಹಾಳೆಗಳು ಮುನಿಸಿಕೊಂಡು ಬಿಟ್ಟರೆ ಬರೆಯುವುದಾದರೂ ಏನನ್ನು? ಮುನಿಸಿಕೊಳ್ಳುವ ಮಾತು ಒತ್ತಟ್ಟಿಗಿರಲಿ, ಶತ್ರುಗಳಂತೆ ದ್ವೇಷ ಸಾಧಿಸಿ ಬರೆಯುವುದೇ ಒಂದು, ಹಾಳೆಯಲ್ಲಿ ಮೂಡುವುದೇ ಇನ್ನೊಂದು ಎಂದಾಗಿಬಿಟ್ಟರೆ ಕವಿತೆ ಬರೆಯುವ ಮೂಲ ಉದ್ದೇಶವೇ ನಾಶವಾಗಿ ಬಿಡುವ ಸಾಧ್ಯತೆಗಳನ್ನಿಲ್ಲಿ ಎತ್ತಿ ತೋರಿಸಿದ್ದಾರೆ. ಜಗದ ಶತ್ರುತ್ವವನ್ನು ಕಳೆಯುವ ಕವಿತೆ ಬರೆಯುವ ಸಮಾಧಿತ್ವ ಸ್ಥಿತಿಯಲ್ಲಿಯೇ ಶತ್ರುತ್ವ ಮೊಳಕೆ ಒಡೆಯುತ್ತಿರುವುದು ವರ್ತಮಾನದ ಚೋದ್ಯಗಳಲ್ಲಿ ಒಂದೂ ಕೂಡ. ಹೀಗಾಗಿ ಈ ಸಾಲುಗಳು ನಾನಾ ಅರ್ಥಗಳನ್ನು ಏಕಕಾಲದಲ್ಲಿ ಹೊಮ್ಮಿಸುತ್ತವೆ. ಮುಂದುವರೆದು + +“ಠಾಣೆಯನ್ನು ಎಡತಾಕುವವರ ಮುಖಗಳಲ್ಲಿದ್ವೇಷ, ಅಸೂಯೆ, ಜಿಗುಪ್ಸೆ, ತಾತ್ಸಾರಅಸಹಾಯಕತೆಗಳ ಅನಾವರಣಠಾಣೆಯ ಒಳಗೂ ಹೊರಗೂಲಾಠಿ ಬೂಟಿನ ಸದ್ದುಗದ್ದಲಅಸಹಾಯಕರ ಆಕ್ರಂದನ”ಎಂದು ನೊಂದುಕೊಳ್ಳುತ್ತಾರೆ. + +ಒಬ್ಬ ಪೋಲಿಸ್ ಅಧಿಕಾರಿ ತನ್ನ ಠಾಣೆಗೆ ಬರುವವರ ಅಸಹಾಯಕ ಮುಖಗಳನ್ನು ದಿಟ್ಟಿಸುವುದಿಲ್ಲ ಎಂಬುದು ಸಾರ್ವಜನಿಕ ವಲಯದ ಜನಜನಿತ ಮಾತು. ಅದು ಒಂದಿಷ್ಟರ ಮಟ್ಟಿಗೆ ಸತ್ಯವೂ ಹೌದು. ಪೋಲಿಸ್ ಠಾಣೆಯಲ್ಲಿ ಬಂದವರ ಅಸಹಾಯಕ ಮುಖಗಳನ್ನು ಕಂಡು ಕರುಣೆ ತೋರಿಸುತ್ತ ಕುಳಿತರೆ ಅಪರಾಧಗಳನ್ನು ಪತ್ತೆ ಹಚ್ಚಲು ಸಾಧ್ಯವೇ ಇಲ್ಲ. ಆದರೆ ಅಂತಹ ಕಠಿಣ ಹೃದಯದ ಠಾಣೆಗಳಲ್ಲೂ ಹೀಗೆ ಚಡಪಡಿಸುವ ಅಧಿಕಾರಿಗಳಿರುವುದೇ ಸಮಾಧಾನದ ಸಂಗತಿ. ಹೀಗಾಗಿಯೇ ತನ್ನಠಾಣೆಯ ನೋವನ್ನು ಕಂಡು ಮರಗುತ್ತಾರೆ. ಎಷ್ಟು ಜನರಿಗೆ ಹೀಗೆ ತಮ್ಮ ಇಲಾಖೆಯ ಅದ್ವಾನವನ್ನು ಬಹಿರಂಗವಾಗಿ ಹೇಳಿಕೊಳ್ಳುವಧೈರ್ಯವಿದೆ? + +ಭ್ರಷ್ಟರನ್ನುಜೈಲಿಗೆ ಅಟ್ಟಿಮಂತ್ರಿ ಮಹಾಶಯರ ಸಲಹೆಇಲಾಖೆಗೊಂದುಜೈಲುಕಟ್ಟಿಇಲ್ಲೊಬ್ಬನ ಸಲಹೆ + +ಇದೆಷ್ಟು ಮಾರ್ಮಿಕವಾದದ್ದು. ಭ್ರಷ್ಟಾಚಾರ ಎನ್ನುವುದು ಈ ಸಮಾಜಕ್ಕೆ ಅಂಟಿದ ಬಲಿತ ಕ್ಯಾನ್ಸರ್. ಒಂದು ಕಡೆ ಕತ್ತರಿಸಿ ಎಸೆದರೆ ಇನ್ನೊಂದು ಕಡೆ ಬೃಹದಾಕಾರವಾಗಿ ಬೆಳೆಯುತ್ತದೆ. ಅದಕ್ಕೆ ಮಾಡುವ ಕಿಮೋ ತೆರಪಿಯಲ್ಲಿ ಕ್ಯಾನ್ಸರ್ ಕಣಗಳು ಅಲ್ಲಲ್ಲಿ ನುಣುಚಿಕೊಂಡು ಒಳ್ಳೆಯ ಜೀವಕೋಶಗಳು ಸುಟ್ಟು ಕರಕಲಾಗಿ ಹೋದ ಉದಾಹರಣೆಗಳಿವೆ. + +ಹೀಗಾಗಿಯೇ ಭ್ರಷ್ಟರನ್ನು ಜೈಲಿಗೆಕಳಿಸುವುದಾದರೆ ಪ್ರತಿ ಇಲಾಖೆಗೊಂದು ಜೈಲು ಅನಿವಾರ್ಯವಾದೀತು. ಪ್ರಸ್ತುತ ಸಮಾಜದ ಭ್ರಷ್ಟತೆಗೆ ಈ ಸಾಲುಗಳುಕೈಗನ್ನಡಿಯಂತಿದೆ. + +ಮೃದು ಮಾತಿನ, ಸದಾ ಮುಗುಳ್ನಗೆಯ ಆಭರಣ ತೊಟ್ಟಿರುವ ಶಿವಕುಮಾರ ದಂಡಿನ ಕೇವಲ ತಮ್ಮ ಇಲಾಖೆಗೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಬಗ್ಗೆ, ಚುನಾವಣೆಯ ಬಗ್ಗೆ ಮಾತ್ರ ಬರೆಯಬಲ್ಲರು ಎಂದು ತಿಳಿಯಬೇಕಿಲ್ಲ. + +ಚುಕ್ಕಿ ಚುಕ್ಕಿಗೆ ಕತೆಕಟ್ಟಿ ಹಾಡು ಹಾಡುವ ಪಾಡುನೆನಪುಗಳು ಮಾಸಿಲ್ಲ ಹಳಸಿ ಹೋಗಿವೆಯಷ್ಟೇಪುಳಕ ಬಯಕೆಗಳೆಲ್ಲ ಬತ್ತಿ ಹೋಗಿವೆ + +ಎನ್ನುತ್ತ ವಿರಹದ ಹಾಡಾಗುವ ಪರಿಯನ್ನೂ ಕಾಣಬಹುದು. + +ಪ್ರಿಯತಮೆಯತೆಕ್ಕೆ ಮರೆಯಿಸಿತುದುಃಖ ದುಮ್ಮಾನ + +ಎನ್ನುತ್ತ ಉನ್ಮಾದದ ಪ್ರೇಮದ ಚಿತ್ರವನ್ನೂ ಅಕ್ಷರಗಳಲ್ಲಿ ಕಟ್ಟಿಕೊಡಬಲ್ಲರು. + +ಕಂಡ ಕನಸುಗಳೆಲ್ಲ ಕರಗಿದವುಭುವಿಗೆ ಬಿದ್ದ ಆಲಿಕಲ್ಲಿನಂತೆ + + + +ಎನ್ನುವ ಶಿವಕುಮಾರರ ಕವನದ ಕನಸು ಆಲಿಕಲ್ಲಿನಂತೆ ಕರಗದೇ ಚಿಮ್ಮುವ ಝರಿಯಾಗಿರಲಿ. + +ಕವಯತ್ರಿ ಶ್ರೀದೇವಿ ಕೆರೆಮನೆ ಕಾರವಾರದ ಚಿತ್ತಾಕುಲ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕಿ. ಇವರ ಒಟ್ಟೂ ಹದಿಮೂರು ಪುಸ್ತಕಗಳು ಪ್ರಕಟಗೊಂಡಿವೆ. ಬರೆಹ, ಅದಕ್ಕಿಂತ ಓದು ಇವರ ನೆಚ್ಚಿನ ಹವ್ಯಾಸ. \ No newline at end of file diff --git a/Kenda Sampige/article_403.txt b/Kenda Sampige/article_403.txt new file mode 100644 index 0000000000000000000000000000000000000000..14ecbad2e503e2a3d39302a333acb9eacd340492 --- /dev/null +++ b/Kenda Sampige/article_403.txt @@ -0,0 +1,137 @@ + + +ನಮ್ಮ ದೇಶದ ಎಪ್ಪತ್ತರ ದಶಕ ಅನೇಕ ಕಾರಣಗಳಿಂದ ಮಹತ್ವವಾದುದು. ಸ್ವಾತಂತ್ರ್ಯದ ನಂತರದ ದಶಕದಲ್ಲಿ ಹುಟ್ಟಿದವರು ತರುಣರಾಗಿ ತಮ್ಮ ಭವ್ಯ ಭವಿಷ್ಯದ ಕನಸುಗಳೊಂದಿಗೆ ಸಮಾಜಕ್ಕೆ ಸೇರ್ಪಡೆಗೊಂಡ ಸಮಯ. ಇದು ಅಲಕ್ಷಿತ ಸಮುದಾಯಗಳ ಮೊದಲ ತಲೆಮಾರಿನ ಯುವ ಸಮೂಹ ಅಕ್ಷರಲೋಕಕ್ಕೆ ತೆರೆದುಕೊಂಡ ಪರ್ವಕಾಲವೂ ಹೌದು. ಆದರೆ ಸಮಾಜದಲ್ಲಿ ನಗ್ನನೃತ್ಯದಲ್ಲಿ ತೊಡಗಿದ್ದ ಅಸಮಾನತೆ, ತರತಮ ನೀತಿ, ರಾಜಕೀಯ ಭ್ರಷ್ಟಾಚಾರ, ಜಾತಿವರ್ಗಗಳ ಶೋಷಣೆಯ ಕೂಪ ಇಂಥ ತರುಣರ ಆಶೋತ್ತರ, ಮನೋಕಾಮನೆಗಳನ್ನು ಸುಟ್ಟು ಕರಕಾಗಿಸತೊಡಗಿತ್ತು. ಆ ತಲೆಮಾರಿನ ಯುವಕರು ಈ ಬಗೆಯ ಎಲ್ಲ ದುಷ್ಟಶಕ್ತಿಗಳ ವಿರುದ್ಧ ಬಂಡೇಳುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಆ ದೆಸೆಯಲ್ಲಿಯೇ ದೇಶಾದ್ಯಂತ ಸಾಮಾಜಿಕ-ರಾಜಕೀಯ ಹೋರಾಟಗಳು ರೂಪುಗೊಂಡವು. + +(ಚಲಂ ಬೆನ್ನೂರಕರ್) + +ಸಂಸ್ಕೃತಿಯು ತನ್ನನ್ನು ತಾನೇ ಪುನಾವ್ಯಾಖ್ಯಾನಿಸಿಕೊಂಡಿದ್ದರಿಂದ ಅದರ ಅಕ್ಕರೆಯ ಕೂಸುಗಳಾದ ಭಾಷೆ, ಕಲೆಗಳು ಹೊಸ ಅವತಾರದಲ್ಲಿ ಮರುಹುಟ್ಟು ಪಡೆದವು. ಆವರೆಗೆ ಒಡಲಲ್ಲಿ ಬಿಗಿಯಾಗಿ ಹಿಡಿದಿಟ್ಟಿದ್ದ ಆಕ್ರೋಶ, ಅವಮಾನ, ನಿಂದನೆಗಳು ಕಲಾಭಿವ್ಯಕ್ತಿಯಾಗಿ ಹೊರಹೊಮ್ಮತೊಡಗಿದವು. ಎಲ್ಲವೂ ಅಸ್ತವ್ಯಸ್ತಗೊಂಡಿದ್ದ ದೇಶದಲ್ಲಿ ತಮ್ಮ ಅಸ್ತಿತ್ವಕ್ಕೆ ಹೊಸ ಅರ್ಥವಿದೆ ಎಂದು ಒತ್ತಿ ಹೇಳಿದವು. ಈ ಹಿನ್ನೆಲೆಯಲ್ಲಿಯೇ, ಸಾಹಿತ್ಯ, ರಂಗಭೂಮಿ, ಸಿನೆಮಾ, ಕಲೆ, ಪಾರಂಪರಿಕ ಕುಶಲತೆಗಳು ಆವರೆಗೆ ತಾವು ನಿಭಾಯಿಸುತ್ತಿದ್ದ ಪಾತ್ರಕ್ಕೆ ವಿದಾಯ ಹೇಳಿ ಹೊಸಕಾಲದ, ಹೊಸ ಆಶೋತ್ತರಗಳಿಗೆ ಅಗತ್ಯವಾದ ಭೂಮಿಕೆಗೆ ತಕ್ಕಂತೆ ಪರಿವರ್ತನೆಗೊಂಡವು. ದೇಶದ ಎಲ್ಲ ಕ್ಷೇತ್ರಗಳಲ್ಲೂ ಹೊಸ ದನಿ, ಹೊಸ ಮಾತು, ಹೊಸ ನೋಟಗಳು ಪ್ರಸ್ತಾವನೆಗೊಂಡವು. + +ಚಿತ್ರದುರ್ಗ ಜಿಲ್ಲೆಯ ಪುಟ್ಟ ಪಟ್ಟಣವಾದ ಸಂತೆಬೆನ್ನೂರಿನ ಚಲಂ ಕೂಡ ಈ ಯುಗಧರ್ಮದ ತರುಣ. ಐವತ್ತರ ದಶಕದ ಮಧ್ಯಭಾಗದಲ್ಲಿ ಹುಟ್ಟಿದ ಬಹುಪಾಲು ಜನರಂತೆ ಕ್ರಾಂತಿ, ಹೊಸ ಸಮಸಮಾಜ, ಶೋಷಣೆಯಿಲ್ಲದ, ಸಂಪೂರ್ಣ ಅಭಿವ್ಯಕ್ತಿಗೆ ಅವಕಾಶ ಕಲ್ಪಿಸುವ ಹೊಸ ಸ್ವಾತಂತ್ರ್ಯದ ಕನಸಿನಲ್ಲಿ ತಾರುಣ್ಯದಲ್ಲಿಯೇ ರಾಜಕೀಯ-ಸಾಹಿತ್ಯ ಚರ್ಚೆ, ಚಟುವಟಿಕೆಗಳಲ್ಲಿ ತೊಡಗಿಕೊಂಡು, ಸಣ್ಣ ಪತ್ರಿಕೆ ನಡೆಸುತ್ತ, ಹೊಸ ವಿಚಾರಗಳನ್ನು ಹೊರ ಹಾಕುವ ಲೇಖನ, ಕವಿತೆ, ಕಥೆಗಳನ್ನು ಬರೆಯುತ್ತ ಮಹಾನಗರ ಬೆಂಗಳೂರನ್ನು ತಲುಪಿದವರು. ಆ ಕಾಲದ ಹೊಸ ಬಗೆಯ ಸಿನಿಮಾ, ಸಾಮಾಜಿಕ ಹೋರಾಟ, ಸಾಹಿತ್ಯ ಸೃಷ್ಟಿಯಲ್ಲಿ ತುಂಬು ಹುಮ್ಮಸ್ಸಿನಲ್ಲಿ ಪಾಲ್ಗೊಳ್ಳುತ್ತ ವಯಸ್ಸಿನ ಅಂತರವೇ ಇಲ್ಲದೆ ನೂರಾರು ಗೆಳೆಯರು, ಹಿತೈಷಿಗಳು, ಸಮಾನ ಮನಸ್ಕರನ್ನು ಗಳಿಸಿದವರು. ಆಗ ಪ್ರಚಲಿತವಿದ್ದ ಎಲ್ಲ ಬಗೆಯ ಎಡಪಂಥೀಯ ಮತ್ತು ಪ್ರಗತಿಪರ ಚಳವಳಿಯಲ್ಲಿ ಭಾಗವಹಿಸಿಯೂ ಒಂದು ಸಂಘಟನೆಯೊಂದಿಗೆ ಗುರುತಿಸಿಕೊಳ್ಳದೆ, ಎಲ್ಲರೊಂದಿಗೂ ನವಿರಾದ, ಮುಕ್ತ ಸಂಬಂಧವನ್ನು ಚಲಂ ಉಳಿಸಿಕೊಂಡರು. + +ಪ್ರಚಲಿತ ಸಂಘಟನೆಗಳನ್ನು ಬಿಟ್ಟುಕೊಟ್ಟು ಅದಾಗ ತಾನೇ ಭಾರತದಲ್ಲಿ ಕಾಲೂರಲು ಯತ್ನಿಸುತ್ತಿದ್ದ ಸ್ವಯಂಸೇವಾ ಸಂಸ್ಥೆಗಳ ಪರಿಕಲ್ಪನೆಗೆ ಚಲಂ ಒಲಿದಿದ್ದು ಬಹುಶಃ ತಾವು ಅಂದುಕೊಂಡಿರುವ ಕೆಲಸ ಮಾಡಲು, ಹೊಸ ಬಗೆಯದನ್ನು ಸಾಧಿಸಲು ಅಂಥಲ್ಲಿ ಅನುವಾದೀತು ಎಂದಿರಬೇಕು. ಸ್ವಯಂಸೇವಾ ಸಂಸ್ಥೆಗಳನ್ನು ಅನುಮಾನ, ಅಪನಂಬಿಕೆಗಳ ಕಣ್ಣುಕಿವಿಯುಸಿರುಗಳಿಂದ ನೋಡುತ್ತಿದ್ದ ಸಂಗಾತಿಗಳು ಕೂಡ ಚಲಂರಂಥವರನ್ನು ಮುಕ್ತತೆ ಸ್ವೀಕರಿಸಿದ್ದು ಚಲಂರಲ್ಲಿದ್ದ ಗೆಳೆತನದ ಅಯಸ್ಕಾಂತೀಯ ಗುಣದಿಂದಲೇ ಇರಬೇಕು. + + + +ಚಲಂ ಸಾಮಾಜಿಕ ಹೋರಾಟ, ಸಣ್ಣ ಪತ್ರಿಕೆ ಪ್ರಕಟಣೆ, ಸಾಕ್ಷ್ಯಚಿತ್ರ ನಿರ್ಮಾಣ, ಹೊಸ ಬಗೆಯ ಸಿನೆಮಾ ಉತ್ಸವಗಳ ಸಂಘಟನೆ, ಬ್ಯಾನರ್-ಪೋಸ್ಟರ್ ಸೃಷ್ಟಿ, ಕಥೆ, ಕವಿತೆಗಳ ರಚನೆ ಹೀಗೆ ಅನೇಕ ಮಾಧ್ಯಮಗಳಲ್ಲಿ ತೊಡಗಿಸಿಕೊಂಡು ಸುಮಾರು ಮೂರು ದಶಕಗಳ ಕಾಲ ಕ್ರಿಯಾಶೀಲರಾಗಿದ್ದರು. ಅವರ ಒಂದೆರಡು ಸಾಕ್ಷ್ಯಚಿತ್ರಗಳು ಅಂತಾರಾಷ್ಟ್ರೀಯ ಮಾನ್ಯತೆಯನ್ನು ಪಡೆದಿದ್ದವು. ಆದಾಗ್ಯೂ, ಚಲಂ ಅವರ ಜಾಯಮಾನ ಗಮನಿಸಿದರೆ ಅವರು ಮೂಲತಃ ಕವಿಯಾಗಿದ್ದರು ಎಂದೆನ್ನಿಸುತ್ತದೆ. ಚಲಂ ಬರೆದ ಕವಿತೆಗಳ ಸಂಖ್ಯೆ ನೂರನ್ನು ಮೀರುತ್ತದೆ. ಅನೇಕ ಕವನಗಳ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಬೆಳಕನ್ನೂ ಕಂಡಿದ್ದವು. ಆದರೂ, ಅವರು ಕಾವ್ಯ ಪ್ರಕಾರವನ್ನು ತುಂಬ ಗಂಭೀರವಾಗಿ, ಇದೇ ನನ್ನ ಅಭಿವ್ಯಕ್ತಿ ಮಾಧ್ಯಮವೆಂದು ತೆಗೆದುಕೊಂಡಂತೆ ಕಾಣುವುದಿಲ್ಲ. ಅಷ್ಟೇಕೆ, ನೂರಾರು ಗೆಳೆಯರನ್ನು ಪಡೆದಿದ್ದ, ಅನೇಕ ಪ್ರಕಾಶಕರು ಪರಿಚಯವಿದ್ದ, ಸ್ವತಃ ಪ್ರಕಾಶಕರೂ, ಕಲಾವಿದರೂ ಆಗಿದ್ದ ಚಲಂ ಕಾವ್ಯ ಸಂಕಲನವನ್ನು ಏಕೆ ಪ್ರಕಟಿಸಲಿಲ್ಲವೆನ್ನುವುದು ಅಚ್ಚರಿಯ ವಿಷಯವೇ. + +ಕಾಲ ನಿಗೂಢ ವಿಸ್ಮಯವಾಗಿರುವಂತೆಯೇ ನಿರ್ದಯವೂ ಆಗಿದೆ. ಅದು ಯಾರನ್ನು, ಯಾವಾಗ ಅಪ್ಪಳಿಸುತ್ತದೊ ಯಾರೂ ಅರಿಯರು. ಅನೇಕ ಸಾಕ್ಷ್ಯಚಿತ್ರಗಳ ರಫ್ ಕಟ್ ಗಳ ರಾಶಿಯನ್ನು ಹೊಂದಿದ್ದ, ತಮ್ಮ ನೋಟ್ ಪುಸ್ತಕದಲ್ಲಿ ಅಸಂಖ್ಯ ಅಪೂರ್ಣ ಕವಿತೆಗಳನ್ನು ಪೂರ್ಣಗೊಳಿಸಬೇಕಿದ್ದ, ತಾವು ಕನಸಿದ್ದ ಗೋಹರ ಜಾನ್ ಳ ಕುರಿತು ಚಲನಚಿತ್ರವನ್ನು ಮಾಡಬೇಕಿದ್ದ ಚಲಂ ಕಳೆದ ವರ್ಷ ಹಠಾತ್ತಾಗಿ ನಿರ್ಗಮಿಸಿಬಿಟ್ಟರು. ಭಾವಜೀವಿಯಾಗಿದ್ದ, ಗೆಳೆತನವನ್ನು ಅಪಾರವಾಗಿ ಪ್ರೀತಿಸುತ್ತಿದ್ದ, ಸದಾ ಒಳಿತನ್ನು ಬಯಸುತ್ತಿದ್ದ, ತನ್ನೊಳಗೆ ಯಾರಿಗೂ ಕಾಣದಂತೆ ಕವಿಯನ್ನು ಬಚ್ಚಿಟ್ಟುಕೊಂಡಿದ್ದ ಚಲಂರ ಸಾವು ಅನೇಕರಲ್ಲಿ ಶೂನ್ಯವನ್ನು ಸೃಷ್ಟಿಸಿದೆ. ಅಂಥ ಶೂನ್ಯವನ್ನು ತುಸುವಾದರೂ ತುಂಬಬಹುದೇನೊ ಎಂಬ ಭರವಸೆಯಲ್ಲಿ ಚಲಂ ಸಂಸ್ಮರಣೆಯಾಗಿ ಅವರು ಬರೆದ ಕವಿತೆ, ಕಥೆ, ಲೇಖನ ಇತ್ಯಾದಿಗಳನ್ನು ಒಗ್ಗೂಡಿಸಿ ಈ ಕನ್ನಡ ಪುಸ್ತಕವನ್ನು ಸಿದ್ಧಪಡಿಸಿದ್ದೇವೆ. ಇದು ಚಲಂರ ವ್ಯಕ್ತಿತ್ವದ ಒಂದು ಬದಿಯನ್ನಾದರೂ ಅರ್ಥ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ ಎಂಬ ನಂಬಿಕೆ ನಮ್ಮದು. + +ಕನ್ನಡ ಪುಸ್ತಕವನ್ನು ಸಂಸ್ಮರಣೆ ಎಂದು ಕರೆದಿದ್ದರೂ ಅವರ ಕುರಿತ ಬೇರೆಯವರು ಬರೆದ ಲೇಖನಗಳು ಇಲ್ಲಿಲ್ಲ. ಚಲಂ ಬರೆದಿರುವುದಷ್ಟೇ ಇಲ್ಲಿದೆ. ಚಲಂರ ಚೂರುಪಾರು ಬರಹವನ್ನು ಓದುವುದು ಕೂಡ ಅವರನ್ನು ನೆನಪಿಸಿಕೊಂಡಂತೆಯೇ ಎಂಬ ಅರ್ಥದಲ್ಲಿ ಇದು ಸ್ಮರಣೆ. ಇದರ ಜತೆಗೇ ಇಂಗ್ಲಿಶ್ ನಲ್ಲಿಯೂ ಬೇರೊಂದು ಕೃತಿ ಪ್ರಕಟವಾಗುತ್ತಿದ್ದು ಅದರಲ್ಲಿ, ಬೇರೆ ಬೇರೆ ಕ್ಷೇತ್ರಗಳಲ್ಲಿ ಚಲಂರೊಂದಿಗೆ ಕೆಲಸ ಮಾಡಿದವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. + + + +ಇಂಥ ಕೆಲಸವನ್ನು ಮಾಡುವುದು ಯಾತನಾಮಯ ಮತ್ತು ಪರಿಶ್ರಮದಾಯಕ. ತಮಗೆ ಬೇಕಾದವರನ್ನು ಕಳೆದುಕೊಂಡ ನೋವು ಒಂದೆಡೆ ಇದ್ದರೆ, ಎಲ್ಲವನ್ನೂ ಹುಡುಕಿತಡಕಿ ಒಂದೆಡೆ ಸೇರಿಸುವುದು ಪರಿಶ್ರಮದಾಯಕ. ಅದರಲ್ಲಿ ಕೊಂಚಮಾತ್ರ ಯಶಸ್ವಿಯಾಗಿದ್ದೇವೆ ಎಂದಷ್ಟೇ ಹೇಳಬಹುದು. ಸತತ ಪ್ರಯತ್ನಗಳ ಬಳಿಕವೂ ಚಲಂರ ಒಂದೆರಡು ಕಥೆ ಮತ್ತು ಆರಂಭಿಕ ಕಾಲದಲ್ಲಿ ಬರೆದ ಲೇಖನಗಳು ನಮಗೆ ದೊರಕಿಲ್ಲ. ಏನೇ ಇದ್ದರೂ, ನಿರ್ಗಮಿಸಿದ ಗೆಳೆಯನ್ನು ನೆನಪಿಸಿಕೊಳ್ಳಲು ಇಷ್ಟಾದರೂ ಸಿಕ್ಕಿವೆಯಲ್ಲ ಎನ್ನುವುದೇ ಸಮಾಧಾನ. ಉಳಿದವರು ಈ ಕೆಲಸವನ್ನು ನಮಗಿಂತಲೂ ದಕ್ಷತೆಯಿಂದ ಮಾಡಬಹುದಾಗಿದ್ದರೂ ಚಲಂ ನಮಗೆ ಪರಿಚಯವಿದ್ದರು ಎನ್ನುವುದೇ ಇದನ್ನು ಸಂಪಾದಿಸಲು ನಮಗಿರುವ ಅರ್ಹತೆಯಾಗಿದೆ. + +ಚಂದ್ರಶೇಖರ ತಾಳ್ಯಕೇಶವ ಮಳಗಿ + +ಒಂದು + +ಬಿಳಿಗಿರಿ ರಂಗನ ಬೆಟ್ಟದಲ್ಲಿನವಿಲುಗಳುನನ್ನ ನಿನ್ನ ಹಾಗಲ್ಲ ಕಣೇನನ್ನ ಹುಡುಗಿ + +ನೀಲಿಯಾಗಸಕ್ಕೆಮೋಡ ಕವಿದಾಗಮಲ್ಲಿಗೆಗಳರಳುತ್ತವೆಅವುಗಳಮೈಯ ತುಂಬಾ + +ಆಷಾಢದ ಗಾಳಿಗೂಳಿಯ ಹಾಗೆಮುಸುಗುಡುವ ಹೊತ್ತುಗರಿಬಿಚ್ಚಿ ಕುಣಿತಮನಬಿಚ್ಚಿ ಮೊರೆತಅವಕ್ಕೆ + +ಮುಗಿಲಿನೊಡಲಿಂದಚಿಮ್ಮಿ ಚೆಲ್ಲುವಜೀವ ಜಲರಾಶಿಗೆಮೈಯೊಡ್ಡಿ ಆಡುತ್ತವೆಆ ನಮ್ಮ ನವಿಲುಗಳು + +ಯಾಕಂದರೆಈ ದಿನಗಳಲ್ಲಿಅವಕ್ಕೆ ಮಾತ್ರ ಗೊತ್ತು + +ಆ ಬೆಟ್ಟದಲ್ಲಿಆ ಮೌನದಲ್ಲಿಸುಮ್ಮನೆ ಸುರಿಯುವ ಮಳೆಮಾಗಿಯಲ್ಲುದುರುವ ಎಲೆವರ್ಷದುದ್ದಕ್ಕೂ ಚೆಲ್ಲುವಮುಂಜಾವಿನ ಕೆಂಪುರಂಗೋಲಿಬಯಕೆಯ ಕಾವುವಿರಹದ ನೋವುಗರಿಬಿಚ್ಚಿ ಕುಣಿವಾಗನೀಲಿ ಹಸಿರು ರೇಶಿಮೆಯನಲಿವುಇತ್ಯಾದಿಚಿಲ್ಲರೆ ಸಂಗತಿಗಳನಿಗೂಢ ಭಾವನೆಗಳು + +ಬಿಳಿಗಿರಿರಂಗನ ಬೆಟ್ಟದಲ್ಲಿನವಿಲುಗಳ ರಕ್ತದಲ್ಲಿಇನ್ನೂ ಹರಿಯುತ್ತಿದೆಋತುಗಳೊಂದಿಗಿನ ಬಂಧಶತಶತಮಾನಗಳ ಸಂಬಂಧ + +ನವಿಲುಗಳುನನ್ನ ನಿನ್ನ ಹಾಗಲ್ಲ ಕಣೇನನ್ನ ಹುಡುಗಿ + +ಎರಡು + +ನಾನು ನೀನುಬೆಟ್ಟದ ನವಿಲುಗಳಲ್ಲ ಕಣೇನನ್ನ ಹುಡುಗಿ + +ನಾವೆಲ್ಲನೆಹರೂ ತಾತನಮುದ್ದಿನ ಮೊಮ್ಮಕ್ಕಳುವಿಜ್ಞಾನ ದೇವತೆಯನಿತ್ಯ ಆರಾಧಕರುಇಪ್ಪತ್ತೊಂದನೆಯ ಶತಮಾನಕ್ಕೆ ಇಡೀ ನಾಡನ್ನುಕೊಂಡೊಯ್ಯಲು ಪಣತೊಟ್ಟ ಪರಮವೀರರು + +ನಮಗೆಓದಲು ಪುಸ್ತಕಗಳಿವೆಘೋಷಣೆಗಳಿಗೆ ಬೀದಿಗಳಿವೆಪೋಸ್ಟರುಗಳಿಗೆ ಗೋಡೆಗಳಿವೆಬಾವುಟಗಳುನಮ್ಮಬದುಕಿನಂಗಳದ ರಂಗೋಲೆಗಳು + +ನನಗೆ ನಿನಗೆ ಮತ್ತುನಮ್ಮೆಲ್ಲರಿಗೆ ಇವೆಮಿದುಳನ್ನು ಹಿಂಡುವನೂರೊಂದು ನೋವುಗಳುನೋವುಗಳಿಗೊಂದಿಷ್ಟುಸೈದ್ದಾಂತಿಕ ಅರ್ಥಗಳುನಗುತ್ತೇವೆ ಅಳುತ್ತೇವೆಕೂಗುತ್ತೇವೆ ಕುಣಿಯುತ್ತೇವೆಒಮ್ಮೊಮ್ಮೆ ಅಪರೂಪಕ್ಕೆಎದೆಬಿಚ್ಚಿ ಹಾಡುತ್ತೇವೆ + +ಉರಿಯುವ ಸೂರ್ಯನಬೆಳಕಲ್ಲೇ ತಡಕಾಡುತ್ತೇವೆನಮ್ಮೊಳಗಿನ ಭಾವನೆಗಳಿಗೆಕತ್ತಲಕೋಣೆಯ ಖೈದಿಗಳ ಹಾಗೆ + +ನಮಗೆ ಗೊತ್ತಿಲ್ಲಚೈತ್ರದುಲ್ಲಾಸಮಾಗಿಯ ರಾತ್ರಿಯಲ್ಲಿಕಂಬಳಿಯೊಡನಸರಸ + +ಮೂರು + +ನವಿಲುಗಳು ನಮ್ಮ ಹಾಗಲ್ಲ ಕಣೇನನ್ನ ಹುಡುಗಿನಾವು ನವಿಲುಗಳಲ್ಲ. + + + + + + + + + + + + + + + + + + + +ಇರುಳ ಪ್ರಸ್ತದಲ್ಲಿ ಹರಿದು ಸುರಿಯುವುದೊಂದೆ ಗೊತ್ತುಅಂಡವೇ ಪಿಂಡವನ್ನರಸಿ ಬರಬೇಕುಗರ್ಭಕೋಶಕ್ಕೆ ಸರಿಯಬೇಕು ಭ್ರೂಣ ಬಲಿಯಬೇಕುಘಂಟಾಕರ್ಣನ ಅರಸೊತ್ತಿಗೆಯಲ್ಲಿಹಾಸಿಗೆಯುದ್ದಕ್ಕೂ ಗೊರಕೆಯ ಹತ್ತಿ + +ಮನೆಯ ಮುಂದಿನ ಬೇವು ಹೋಳು ಹೋಳಾಗಿಹಿತ್ತಿಲನು ಸೇರಬೇಕು ತನ್ನಷ್ಟಕ್ಕೆ ತಾನೇ ಒಲೆಗೆ ತೂರಬೇಕು ನಾವುಕೊಡಲಿ ಹಿಡಿಯುವುದಿಲ್ಲಘಂಟಾಕರ್ಣನ ಅರಸೊತ್ತಿಗೆಯಲ್ಲಿರಸ್ತೆಗಳೆಲ್ಲ ಕಪ್ಪು ಕಪ್ಪು ಮೊಲಗಳೋಡುವುದಿಲ್ಲಆಮೆ ನಿಲ್ಲುವುದಿಲ್ಲ + +ನಮಗೆ ಮೈತುಂಬಾ ಗುಳ್ಳೆಗಳುಗುಳ್ಳೆಗಳ ತುಂಬಾ ಹಸಿರು ಕೀವು ತುರಿಸಿಕೊಳ್ಳಲು ಉಗುರೇ ಇಲ್ಲಇಲ್ಲಿಕೊಡಲಿ ಹಿಡಿಯುವುದಿಲ್ಲ ಖಂಡಿತಕ್ಕೂತನ್ನಷ್ಟಕ್ಕೆ ತಾನೆಘಂಟಾಕರ್ಣನ ಅರಸೊತ್ತಿಗೆಯಲ್ಲಿಮರ ಉರಿಯಬೇಕು ಗುಳ್ಳೆ ಒಡೆಯಬೇಕುಕೀವು ಸುರಿಯಬೇಕು ಅಂಡ ಸರಿಯಬೇಕುಅರಸನ ಪ್ರಸ್ತದಲ್ಲಿ ಮಾತ್ರ ಹಾಸಿಗೆಯುದ್ದಕ್ಕೂ ಗೊರಕೆಯ ಹತ್ತಿಕಿವಿಯ ತುಂಬಾ ಲೊಚಗುಟ್ಟುವ ಹಲ್ಲಿಗಳುಆಕಳಿಸುವ ಬೆಕ್ಕುಗಳು + +ಗಾಂಧಿಬಜಾರುಬಸವನಗುಡಿಹೊಸಬಡಾವಣೆಗಳಹೈಕಳುಗಳಲ್ಲ ನಾವುಬತ್ತಲನುಟ್ಟುಗಾಳಿಯನುಂಡುಕನಸುಗಳ ತೇಗಿದಕೂಸುಗಳು ನಾವು + +ಅಂತರಗಂಗೆಯಸಂತರಿಗೆಸರಣು ಎಂದವರು + +ಚಿಂದಿ ಚೂರುಗಳಕೌದಿಯ ಹೊದ್ದುನಾಳೆಗಳೆಂಬಸಂಭ್ರಮದಲ್ಲಿಎದೆಯಾಳದಹಾಡುಗಳ ಹೊಸೆದವರಒಕ್ಕಲು ನಾವು + +ಹಳ್ಳಿ ದಿಲ್ಲಿಗಲ್ಲಿ ಗಲ್ಲಿಗಳಲ್ಲಿನಮ್ಮ ಕಳ್ಳುಬಳ್ಳಿಗಳು + +ಎಲ್ಲೆಡೆ ಇರುವಎಲ್ಲರನು ಸಲಹುವದೇವಿಗೆದೇಗುಲನಮ್ಮ ನೆನಪುಗಳುಹಸಿದ ಕಂದನಕಣ್ಣಂಚಿನಲಿಸುಳಿವ ಮಿಂಚುಕರ್ಪೂರದಾರತಿಇರುವುದಷ್ಟನುಹಂಚಿ ತಿಂಬುವುದುನಮ್ಮ ನಿತ್ಯದಾಸೋಹ + +ಅಲ್ಲಿ ಇಲ್ಲಿ ಎಲ್ಲೆಡೆಯಲ್ಲಿಮೂಸುತಿವೆ ಹೆಜ್ಜೆ ಗುರುತುಕವಿದು ಕೆಂಧೂಳು + +ಹರಿವ ನದಿಗಳು ಇಂಗಿಕಾದ ಮರಳುಕಾಲನರಮನೆಯಲ್ಲಿಕವಿಗಳೆಲ್ಲರುಕಿಕ್ಕಿರಿದುಕಾವ್ಯದೇವಿಯಉಸಿರುಗಟ್ಟಿನಿಟ್ಟುಸಿರ ಬಿಟ್ಟಂತೆನಮ್ಮ ಹಾಡು + +ಬಲ್ಲವರ ಎದೆಯಲ್ಲಿಸಿಡಿವಒಡಲಕಿಚ್ಚು + + + + + + + + + + + + + + + + + +ಹೆದರದಿರು ಗೆಳೆಯಕಾಡುವುದಿಲ್ಲ ನಾನಿನ್ನಸಾವಿತ್ರಿಯಂತೆಹೆಪ್ಪುಗಟ್ಟಿರುವ ಎದೆಯಿಂದಎಲ್ಲ ನೆನಪುಗಳ ಕಡೆದುಎದ್ದ ಬೆಣ್ಣೆಯ ಕಾಸಿಸಿದ್ಧರ ಗದ್ದುಗೆಗೆಎಡೆಯಿಟ್ಟು ಸಣಮಾಡಿ ಬಂದೇನುಕಾದು ನಿಲ್ಲುವೆಯ ಗೆಳೆಯಒಂದು ಗಳಿಗೆ + +ಸತ್ಯವಾನನು ನಾನಲ್ಲಸಾವಿತ್ರಿ ನನ್ನ ಹೆಂಡತಿಯಲ್ಲಪುರಾಣ ಪುಣ್ಯಕಥೆಯಲ್ಲನನ್ನ ಬದುಕು + +ನಿತ್ಯ ಜಂಜಡದಾಚೆಮತ್ತೆ ದೀವಳಿಗೆಹೊಸಲ ಬೆನಕನಿಗಿಷ್ಟುಚೆಂಡು ಹೂವುಗಳನಿಟ್ಟುಹಚ್ಚಿ ಹಣತೆಯ ಬತ್ತಿಬಂದೇನು ಗೆಳೆಯನಿಲ್ಲು ಒಂದು ಗಳಿಗೆ + +ಹೆದರದಿರು ಗೆಳೆಯಇದೆ ಹುಲ್ಲು ಕಲಗಚ್ಚುಕಾಯಿ ಹೊಸ ಬೆಲ್ಲದಚ್ಚುನಿನ್ನ ಎಮ್ಮೆಗೆ ಫಲಹಾರ + +ಚಿತ್ರಗುಪ್ತನಿಗೆ ಕೋಸಂಬರಿಪಾನಕ ಪನಿವಾರಕೂಡಿ ಕಳೆಯಲು ನೂರುಪಾಪ ಪುಣ್ಯಗಳಂಥನೆನಪು ನೆನೆದಷ್ಟು + +ಹಸಿದ ಹೊಟ್ಟೆಗೆಕುಣಿದ ಕಾಲಿಗೆಕುಂತು ಎಲ್ಲವಕಂಡ ಕೇರಿಗೆನಿತ್ಯ ಗೆಳೆಯನು ನೀನುನಿಲ್ಲು ಅರೆಗಳಿಗೆಬರುವೆ ನಿನ್ನ ಬಳಿಗೆ + +ಮಿಂಚು ಗುಡುಗುಗಳಹಿಡಿದು ತರಲೆಂದುಸಂಚುಗಾರರ ಚರಗಚೆಲ್ಲಿ ಬರಲೆಂದುಹೋದ ಮೆರವಣಿಗೆಗಿಂದುಕಾದು ಕುಂತಿದೆ ಗೆಳೆಯನನ್ನ ಕಳ್ಳುಬಳ್ಳಿ + + + +ಬರಲಿ ಮೊದಲೀ ಕೇರಿಗೆಎಲ್ಲರುಣ್ಣುವ ಹೋಳಿಗೆಉಂಡ ಎಲೆಗಳನ್ನೆತ್ತಿಹಿರಿಯರೆಲ್ಲರ ನೆನೆದುಹೊರಟೇನು ನಿನ್ನ ಬೆನ್ನ ಹಿಂದೆ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_404.txt b/Kenda Sampige/article_404.txt new file mode 100644 index 0000000000000000000000000000000000000000..c2465341517ad2352b169d2a5ad0654b1c3f6b76 --- /dev/null +++ b/Kenda Sampige/article_404.txt @@ -0,0 +1,121 @@ + + +‘ಏ ಪಾಪ ಬಾರ ಇಲ್ಲಿ’ ಎಂದು ಮುವತ್ತೊಂಬತ್ತುವರೆ ವರ್ಷದ ಮಹದೇವನನ್ನು ಶಕುಂತ್ಲಜ್ಜಿ ಕರೆದಳು. ಅವಳು ಹಾಗೆ ಅವನನ್ನು ಕರೆಯುವುದಕ್ಕೂ ಮುಂಚೆ, ರಸ್ತೆಗೆ ಡಾಂಬರನ್ನು ತೇಪೆ ಹಾಕುತ್ತಿದ್ದುದನ್ನು ನೋಡುತ್ತಿದ್ದಳು ತನ್ನ ತೊಟ್ಟಿ ಮನೆಯ ಮುಂದಿನ ಅಂಗಳದಲ್ಲಿ ಕುಳಿತು. ಪಕ್ಕದಲ್ಲಿ ಮಧ್ಯಾಹ್ನ ಮಲ್ಲಿಗೆ ನಡು ಹಗಲಲ್ಲಿ ಅರಳಲು ತವಕಿಸುತ್ತಿತ್ತು. ಅವಳ ಮನಸ್ಸಿನಲ್ಲಿ ದೇಶದ ದೊರೆಗಳು, ಮಂತ್ರಿಗಳು ಬುಲ್ಡೋಜರ್ ಅಡಿಯಲ್ಲಿ ಚಪಾತಿ ಥರ ಅಪ್ಪಚ್ಚಿಯಾಗುತ್ತಿದ್ದವು. ರಸ್ತೆಯ ಡಾಂಬರು ಮತ್ತು ಈ ರಾಜಕೀಯ ವ್ಯಕ್ತಿಗಳು ಏಕಕಾಲದಲ್ಲಿ ಬುಲ್ಡೋಜರಿನ ಅಡಿಯಲ್ಲಿ ಚಪ್ಪಟೆಯಾಗುತ್ತಿದ್ದವು. ಅವರು ಥೇಟ್ ದಿನಪತ್ರಿಕೆಗಳಲ್ಲಿ ಬರುವ ಕ್ಯಾರಿಕೇಚರ್ ಚಿತ್ರಗಳಂತೆ ವಕ್ರವಕ್ರವಾಗಿ ವಿಕಾರವಾಗಿ ಸೊಟ್ಟ ಸೊಟ್ಟ ಮೂತಿಗಳಿಂದ ನೋಡಿದವರು ಥಟ್ಟನೆ ನಗುವಂತಿದ್ದವು. ಹೈಕಳುಗಳೇನಾದರು ನೋಡಿದರೆ ಕಿಲಕಿಲ ಅಂತ ನಗದೇ ಇರಲು ಸಾಧ್ಯವೇ ಇರಲಿಲ್ಲ. ಶಕುಂತ್ಲಜ್ಜಿ ಕಾಣುತ್ತಿದ್ದುದು ಹಗಲಲ್ಲಿ ಹಗಲಗನಸಲ್ಲ. ವಾಸ್ತವದಲ್ಲಿ ತನ್ನದೇ ದೇಶದ ರಾಜಕೀಯ ವ್ಯಕ್ತಿಗಳನ್ನು. ಅವಳ ಆ ಸಿಟ್ಟಿನಲ್ಲಿ ಪಕ್ಷಭೇಧವಿಲ್ಲದೆ ಎಲ್ಲರೂ ಸುಟ್ಟು ಹೋಗುತ್ತಿದ್ದರು. + +ಕಳೆದ ಚುನಾವಣೆಯಲ್ಲಿ ಒಂದಿಬ್ಬರು ರಾಜಕಾರಣಿಗಳು ಓಟು ಕೇಳಲು ಅವಳ ಮನೆಗೆ ಬಂದಾಗ ಅವರ ಒಳ ಉಡುಪುಗಳೆಲ್ಲ ಬೆವರಲ್ಲಿ ನೆಂದು ಹೋಗುವಂತೆ ಛೀಮಾರಿ ಹಾಕಿ ಕಳುಹಿಸಿದ್ದಳು. ಬಂದು ಅವರು ಏನು ಮಾಡಿದರು ಅಂದರೆ, ಅವಳ ಕೈಯಿಗೆ ಅಚ್ಚ ಹೊಸದಾದ ಪಿಂಕ್ ನೋಟನ್ನು ಇಡಲು ಹೋದಾಗ, ಶಕುಂತ್ಲಜ್ಜಿ ಸರ್ರನೆ ಮನೆಯ ಒಳಗೆ ಹೋಗಿ, ಕತ್ತಲ ಕೋಣೆಯಲ್ಲಿ ಕೈಗಳನ್ನೇ ಕಣ್ಣುಮಾಡಿಕೊಂಡು ಯಾವುದೋ ಒಂದು ಮೂಲೆಯಿಂದ ಬೊಗಸೆತುಂಬ ಹಳೆಯ ಐನೂರು, ಸಾವಿರ ರುಪಾಯಿಗಳ ನೋಟುಗಳನ್ನು ತಂದು ಅವರ ತಲೆಮೇಲೆ ಸುರುವಿ, ‘ನನ್ನ ಗಂಡ ಕಷ್ಟಪಟ್ಟು ಬಾಳೆ ಬೆಳೆದು ಸಂಪಾದಿಸಿದ ದುಡ್ಡು, ಸಾಯುವಾಗ ಕಷ್ಟಕಾಲಕ್ಕೆ ಆಗುತ್ತೆ ಎಂದು ಇಟ್ಟಿದ್ದ ಇವನ್ನ, ಕಾಲಿ ಕಾಗದ ಮಾಡಿಬಿಟ್ರಲ್ಲೊ ಹಲ್ಕಟ್ ನನ್ ಮಕ್ಕಳಾ, ತಗಳ್ರೋ ಮುಂಡೆ ಮಕ್ಕಳಾ, ಎಷ್ಟು ಬೇಕು ಎಂದು ಬೈದಿದ್ದಲ್ಲದೆ, ಕುಡಿಯಕೆ ನಲ್ಲಿಯಲಿ ನೀರು ಬರದಿದ್ದರೂ ಹೋಗ್ಲಿ, ಅದೆಂತದೋ ಭಾರ್ತ ಮಾಡ್ತಿವಿಯಂತ ರೇಡಿಯೋದಲ್ಲಿ ಬರೀ ಪೂಸಿ ಬಿಡುತ್ತಿರೆನೋ , ಓಟು ಕೇಳಕೆ ಆದರೆ ನಾಯಿ ಬಾಲ ಅಳ್ಳಾಡಿಸಿಕೊಂಡು ಬರುವ ಹಂಗೆ ಬರುತ್ತೀರಾ ಅಮೇಲೇ ಕ್ಯಾರೆ ಅನ್ನಲ, ಕೇರಿ ಅಂಗಳ ಎತ್ತಕಡೆ ಐತೆ ಅಂತ ತಿರುಗಿ ನೋಡಲ್ಲ’ ಎಂದು ಬೈದು ಕಳುಹಿಸಿದ್ದಳು. ಅವರು ಹೋದ ದಾರಿಗೆ ಮಣ್ಣನ್ನು ತೂರುತ್ತ ‘ನನ್ನ ಗಂಡ ದುಡಿದ ದುಡ್ಡನ್ನು ಅನ್ಯಾಯವಾಗಿ ಬರಿ ಕಾಗದ ಮಾಡಿದ್ರಲ್ಲೋ ಮನೆಹಾಳ ನನ್ನ ಮಕ್ಕಳಾ’ ಎಂದು ಕಿರುಚಾಡಿದ್ದಳು. + +ಅಲ್ಲಿಗೆ ಬಂದವರಲ್ಲಿ ಯಾರೋ ಒಬ್ಬ, ‘ಹೊಸ ನೋಟು ಕೊಡುತ್ತಾರ ಬ್ಯಾಂಕಲ್ಲಿ, ಇವುನ್ನ ಕೊಟ್ಟು ಅವುನ್ನ ಇಸಕ ಹೋಗಜ್ಜಿ’ ಎಂದದ್ದಕ್ಕೆ, ‘ಈಗಿರೋ ನಿನ್ನ ಹೆಂಡತಿನೂ ಸಂತೇಲಿ ಮಾರಿ ಬದಲಿಗೆ ಹೊಸಬಳನ್ನು ಕೊಂಡುಕೊ ಹೋಗೋ ಬಾಡ್ಕೋ, ಬೋಸುಡಿ ಮಗನೆ ಬಂದ ಹೇಳಕೆ’ ಎಂದು ತನ್ನ ದೇಹದ ಒಳಗಿನ ಮೂಲೆ ಮೂಲೆಯಲ್ಲಿ ಅಡಗಿದ್ದಂತಹ ಕ್ರೋಧವನ್ನೆಲ್ಲ ಕ್ರೂಢೀಕರಿಸಿಕೊಂಡು ಜೀವಮಾನ ವಿಡೀ ಇಟ್ಟುಕೊಂಡಿದ್ದ ಸಿಟ್ಟನ್ನು ಹೊರಗಡೆ ಚಿಮ್ಮಿ ಖಾಲಿ ಮಾಡುತ್ತಿದ್ದಳು. ಅಜ್ಜಿಗೆ, ಅಂದಾಜಲ್ಲ, ಸರಿಯಾಗಿಯೇ ತೊಬ್ಬಂತ್ತೈದು ವರ್ಷಗಳಾಗಿದ್ದವು. ಬೆಳಗಾವಿಗೆ ಗಾಂಧೀಜಿ ಬರುವುದಕ್ಕೂ ಐದು ವರ್ಷ ಮುಂಚೆ ಹುಟ್ಟಿದ್ದು ಎಂದು ಯಾವಾಗಲೂ ಹೇಳುತ್ತಿದ್ದಳು. ಮಹಾದೇವ ಕೆಮ್ಮುತ್ತ ಶಕುಂತ್ಲಜ್ಜಿ ಹತ್ತಿರ ಬಂದನು. ‘ಆಸ್ಪತ್ರೆಗೆ ತೋರಿಸುವುದಕ್ಕೆ ಆಗಲಿಲ್ಲವೇನೋ ಪಾಪ, ಯಾಕಿಂಗೆ ಒಂದೇ ಸಮ ಕೆಮ್ಮುತ್ತಿದ್ದೀಯ?’ ಎಂದು ಕೇಳಿದಳು. ‘ಹೋಗಿದ್ದೆ ಅಜ್ಜಿ, ಈಗ ಸ್ವಲ್ಪ ಕಡಿಮೆ ಆಗಿದೆ. ಇನ್ನೊಂದೆರೆಡುಮೂರು ದಿನದಲ್ಲಿ ಕಡಿಮೆ ಆಗುತ್ತೆ ಎಂದು ಡಾಕ್ಟರ್ ಹೇಳಿದರು’ ಎಂದ. ‘ವಸಿ ನಿಲ್ಲು ಬರುತ್ತೀನಿ’ ಎಂದು, ಒಳಗೆ ಹೋಗಿ, ಮಡಿಲಲ್ಲಿ ಒಣಗಿರುವ ಯಾವುದೋ ಸೊಪ್ಪನ್ನು ಅವನಿಗೆ ಕೊಟ್ಟು, ಒಂದು ಚಮಚ ಘಾಟು ಇರುವ ಜೇನುತುಪ್ಪದಲ್ಲಿ ಬಿಸಿನೀರಿಗೆ ಹಾಕಿ, ಲೋಟವನ್ನು ಒಂದು ಪ್ಲೇಟಲ್ಲಿ ಮುಚ್ಚಿ, ಐದು ನಿಮಿಷ ಆದಮೇಲೆ ಕುಡಿ ಪಾಪ, ಕೆಮ್ಮು ವೋಗುತ್ತೆ’ ಎಂದು ಹೇಳಿ, ಮತ್ತೆ ಮುಂದುವರೆಸಿ, ‘ಇನ್ನೊಂದು ಸತ್ತೋಯ್ತಂತೆ, ನಿಮ್ಮ ಅಮ್ಮ ಸಿಕ್ಕಿದ್ದಳು , ಹಂಗೆ ಹೇಳ್ತಿದ್ದಳು, ಹೋಗಲಿ ಬಿಡು ಪಾಪ, ತಲೆಗೆ ಹಾಕ್ಕೊಬೇಡ, ಒಳ್ಳೆ ಮಗ ಹುಟ್ಟಕೆ ಹಿಂಗೆಲ್ಲ ಆಗ್ತಿರಬಹುದು. ದೇವರು ಮನುಷ್ಯರ ಥರನೆ? ಭೇದ ಭಾವ ಮಾಡೋಕೆ? ಅವನಿಗೆ ಗೊತ್ತಿಲ್ಲವೇ, ಯಾರಿಗೆ ಏನೇನು ಕೊಡಬೇಕು, ಯಾರಿಗೆ ಏನೇನು ಬೇಡ ಅನ್ನೋದು?’ ಎಂದು ಸಮಾಧಾನದ ಮಾತನ್ನು ಹೇಳಿದಳು. + +ಮಹಾದೇವ ಮತ್ತು ಅವನ ಹೆಂಡತಿ ಲಲಿತ ಇದರ ಬಗ್ಗೆ ಅಷ್ಟೊಂದಾಗಿ ಮನಸ್ಸಿಗೆ ಹಚ್ಚಿಕೊಂಡಿರಲಿಲ್ಲ. ಈ ರೀತಿ ಅವಳಿಗೆ ಮೂರನೇ ಭಾರಿ ಆಗಿದ್ದುದರಿಂದ ಹಾಗೂ ಅದರ ಬಗ್ಗೆ ಯೋಚನೆ ಮಾಡಿ ಮಾಡಿ ಮನಸ್ಸು ಒಂದು ರೀತಿಯಲ್ಲಿ ಕಲ್ಲು ಆಗಿಬಿಟ್ಟಿತ್ತು. ಲಲಿತಳಿಗೆ ಚಿಕಿತ್ಸೆ ಕೊಡುತ್ತಿದ್ದ ವೈದ್ಯರು ತುಂಬಾ ಪ್ರಸಿದ್ಧರಾಗಿದ್ದರಲ್ಲದೆ ತುಂಬಾ ಮಾನವೀಯತೆ ಇರುವ ವ್ಯಕ್ತಿಯಾಗಿದ್ದರು. ಜೊತೆಗೆ ಕವಿತೆಗಳನ್ನು ಬರೆಯುವ ಹವ್ಯಾಸವಿದ್ದುದರಿಂದ ತುಂಬಾ ಸಂವೇದನಾಶೀಲರಾಗಿದ್ದು ಈ ವೈದ್ಯರನ್ನು ಕಂಡರೆ ಬಡವರಿಗೆ ತುಂಬಾ ಇಷ್ಟವಾಗುತ್ತಿತ್ತು. ಅವರು ಹೆಚ್ಚಿನ ಹಣವನ್ನು ಸುಲಿಗೆ ಮಾಡುತ್ತಿರಲಿಲ್ಲ. ಅವರು ‘ಮುಂದಿನ ಬಾರಿ ಅಬೋರ್ಟ್ ಆಗುವುದಕ್ಕೆ ಚಾನ್ಸೇ ಇಲ್ಲ. ಇದನ್ನು ನನ್ನ ವೃತ್ತಿಯಲ್ಲಿನ ಒಂದು ಸವಾಲಾಗಿ ಸ್ವೀಕರಿಸಿರುವೆ’ ಎಂದು ಅವರಿಬ್ಬರನ್ನೂ ಕೂರಿಸಿಕೊಂಡು ಹೇಳಿ ಫರ್ಟಿಲಿಟಿ ಮತ್ತು ಎಗ್ ಮೆಚುರಿಟಿಯ ಕುರಿತು ಅಂತರರಾಷ್ಟ್ರೀಯ ಸಂಕಿರಣದಲ್ಲಿ ಭಾಗವಹಿಸುವ ಸಲುವಾಗಿ ಲಂಡನ್ ಗೆ ತೆರಳಿದ್ದರು. ಮಹಾದೇವ, ಶಕುಂತ್ಲಜ್ಜಿ ಕರೆಯುವುದಕ್ಕೂ ಮುಂಚೆ, ಕಾರನ್ನು ಒಂದು ಮರದ ನೆರಳಿನಡಿಯಲ್ಲಿ ನಿಲ್ಲಿಸಿ, ಸಿಗರೇಟ್ ಸೇದಲು ಒಂದು ಗೂಡಂಗಡಿಗೆ ಹೋಗಿದ್ದ. ಸಿಗರೇಟನ್ನು ಸೇದಿ ಹೊರಗೆ ಬರುವಾಗ ಶಕುಂತ್ಲಜ್ಜಿ ‘ಏ ಪಾಪ ಬಾರ ಇಲ್ಲಿ’ ಎಂದು ಕರೆದಿದ್ದಳು. ಶಕುಂತ್ಲಜ್ಜಿಗೆ ‘ಮತ್ತೆ ಸಿಗ್ತೀನಿ ಅಜ್ಜಿ, ಲಲಿತ ಅವಳ ಅಮ್ಮನ ಮನೆಯಲ್ಲಿದ್ದಾಳೆ. ಸ್ವಲ್ಪದಿನ ಅರಾಮಾಗಿರಲು ಹೋಗಿದ್ದಾಳೆ. ಹದಿನೈದು ದಿನಗಳಾದವು ಹೋಗಿ, ಕರೆದುಕೊಂಡು ಬರಲು ಹೋಗ್ತಾ ಇದಿನಿ’ ಎಂದು ಹೇಳಿ ತನ್ನ ಕಾರಿನ ಬಳಿ ಬಂದು, ಅದರ ಬಾಗಿಲನ್ನು ತೆರೆದು, ಒಳಗೆ ಕೂತು ಕಾರನ್ನು ಚಾಲು ಮಾಡಿಕೊಂಡು ಹಿರಿಯೂರಿನ ಕಡೆ ಹೊರಟನು. + +ದುರ್ಗದಿಂದ ಹೊರಟ ಅವನ ಕಾರು ತುಸು ನಿಧಾನವಾಗಿಯೇ ರಾಷ್ಟ್ರೀಯ ಚತುಷ್ಪಥ ಹೆದ್ದಾರಿಯ ಮೇಲೆ ಚಲಿಸಿತು. ರಸ್ತೆಯ ಅಡಿಯಲ್ಲಿ ನೆಲಸಮಗೊಂಡ ಹಳ್ಳಿಗಳ ಉಸಿರು ಗಾಳಿಯಲ್ಲಿ ತೇಲಿ ಬರುತ್ತಿತ್ತು. ಮತ್ತು ಹಳ್ಳಿಗಳು ಮತ್ತು ಅಲ್ಲಿಯ ಜನಗಳ ಉಸಿರು ಎಲ್ಲೂ ಕದಲದೇ ರಸ್ತೆ ಉದ್ದಕ್ಕೂ ಆವರಿಸಿಕೊಂಡಿತ್ತು. ಗಾಳಿಯಲ್ಲಿ ಅವರ ಉಸಿರೂ ಬೆರೆತು ಅವನ ಒಳಗೆ ಹೋಗ್ತಾ ಬರುತ್ತಾ ಇತ್ತು. ಇಲ್ಲಿಗೆ ಸರಿಯಾಗಿ ನಾಲ್ಕುತಿಂಗಳ ಹಿಂದೆ ಇದೇ ಹೊತ್ತಿನಲ್ಲಿ ಬೆಂಗಳೂರಿನಕಡೆಯಿಂದ ದುರ್ಗಕ್ಕೆ ತನ್ನ ಹೆಂಡತಿ ಲಲಿತಳ ಜೊತೆ ಬರುತ್ತಾ ಇದ್ದ. ಅವಳಿಗೆ ಆಗ ಮೂರು ಮೂರುವರೆ ತಿಂಗಳಾಗಿತ್ತು ಮುಟ್ಟು ನಿಂತು. ಬಿಳಿಯ ಮೋಡಗಳು ಅರಳಿರುವ ಹತ್ತಿ ಹೊಲಗಳಂತೆ ಆಕಾಶದಲ್ಲಿ ಕಂಗೊಳಿಸುತ್ತಿದ್ದವು. ಸೂರ್ಯಕಾಂತಿ ಹೂವುಗಳು ಸೀಮೆ ಎಣ್ಣೆ ಬುಡ್ಡಿಯ ಬೆಳಕು ಎಣ್ಣೆ ತೀರುತ್ತಿದ್ದುದರಿಂದ ಮಿಣುಕು ಮಿಣುಕು ಎನ್ನುತ್ತಿರುವಂತೆ ಸೊರಗುತ್ತಿದ್ದವು. ಮಳೆಯಿಲ್ಲದೆ ಆಕಾಶನೋಡಲು ತಲೆಯನ್ನು ಎತ್ತಲಾಗದೆ ಮತ್ತು ತಮಗೆ ಹೆಸರನ್ನು ನೀಡಿದ ಸೂರ್ಯದೇವನನ್ನು ನೇರವಾಗಿ ನೋಡಲು ಆಗದೆ ನಿತ್ರಾಣಗೊಂಡಿದ್ದವು. ಕೆಲವಂತೂ ‘ನಿನ್ನ ಹೆಸರನ್ನು ನಮಗೆ ಯಾಕೆ ಇಟ್ರೋ ಸೂರ್ಯದೇವ!’ ಎಂದು ಜೋಪುಮೋರೆ ಹಾಕಿಕೊಂಡು ಜ್ವರ ಬಂದಿರುವವರ ಥರ ಕೇಳ್ತಾ ಇದ್ದವು.‘ಈ ಸಲ ಮಿಸ್ಸಾಗುವುದಕ್ಕೆ ಚಾನ್ಸೇ ಇಲ್ಲ ಅಲ್ವಾ?’ + +‘ಸಾರಿ ದೇವ್, ತುಂಬಾ ಹೋಪ್ಸ್ ಒಳ್ಳೇದಲ್ಲ’ ಸುಮ್ಮನಿದ್ದರೆ ನಮಗೂ ನೆಮ್ಮದಿ, ಹೋಪ್ಸ್ ಗಳಿಗೂ ಒಂದು ಮರ್ಯಾದೆಯನ್ನುವುದು ಇರುತ್ತೆ. ಅವುಗಳನ್ನ ಯಾಕೆ ಮುಜುಗರಕ್ಕೆಳೆದು ತರೋದು?’ + +‘ಅಮೇಜಾನ್ ನಲ್ಲಿ ಝೀರೋ ಟು ಸಿಕ್ಸ್ ನ ಒಂದು ಫ್ಲೋರಲ್ ಸ್ಕರ್ಟ್ ನೋಡಿದಿನಿ. ತುಂಬಾ ಬ್ಯೂಟಿಫುಲ್ ಆಗಿದೆ ಗೊತ್ತಾ!’ + +‘ಮತ್ತಿನ್ನೊಂದು ಗೊತ್ತಾ? ನಿನ್ನಂಥವರನ್ನು ನೋಡಿಯೇ ಆ ಗಾದೆಯನ್ನು ಮಾಡಿರುವುದು ಅನ್ನಿಸುತ್ತೆ.’ + +ಕಾರು ಐಮಂಗಲ ಸಮೀಪಿಸಿತ್ತು. ಅಕ್ಕ ಪಕ್ಕದ ಹೊಲಗಳಲ್ಲಿ ಕಾಣುತ್ತಿದ್ದ ಬೆಳೆಗಳೆಲ್ಲ ಮನೆಗೆ ಬೆಂಕಿ ಬಿದ್ದಾಗ ಒಳಗಿರುವ ಮನುಷ್ಯರೆಲ್ಲ ಅರೆಬೆಂದು ರೋಧಿಸುವ ಆಕೃತಿಗಳಂತೆ ಕಾಣುತ್ತಿದ್ದವು. ಮನಸ್ಸಿನಲ್ಲಿ ಲಲಿತ ಆಡಿದ ಮಾತುಗಳು ಮಾರ್ದನಿಸುತ್ತಿದ್ದವು ಮಹಾದೇವನ ಒಳಗೆ. ‘ದುಃಖ ಬಂದರೆ ಬದುಕಿನ ಚಾಪೆಯನ್ನು ಸುತ್ತಿಕೊಂಡು ಹೋಗುವುದಕ್ಕೆ ಆಗುತ್ತಾ? ಲೈಫಿನಲ್ಲಿ ಎಲ್ಲ ಥರದ ಬಣ್ಣಗಳ ಶೇಡ್ಸ್ ಗಳನ್ನು ನೋಡಬೇಕು. ಮೇಲಿರುವ ನಕ್ಷತ್ರಗಳು ಈ ಭೂಮಿ ಹುಟ್ಟಿದಾಗಿನಿಂದ ಆಗುತ್ತಿರುವ ಕೆಟ್ಟದ್ದು ಒಳ್ಳೇದು ಎನ್ನದೆ ಎಲ್ಲವನ್ನೂ ನೋಡ್ತಾ ಇಲ್ಲವಾ? ಅವುಗಳು ಮಿನುಗುವಲ್ಲಿಯೇನಾದ್ರೂ ವ್ಯತ್ಯಾಸವಾಗಿದೆಯಾ? ಜೀವ ಇರೋ ಮನುಷ್ಯರು ನಿರ್ಜೀವ ವಸ್ತುಗಳಿಂದ ಕಲಿಯೋದು ಬಾಳ ಇದೆ’‘ಮಿನುಗುತ್ತಿರಬೇಕು. ಅವಳ ಮೂಗಿನ ವಜ್ರದ ನತ್ತಿನ ಥರ ಸದಾ. ಎಂದು ತನಗೆ ತಾನೇ ಮನದ ಭಾವನೆಯ ಗದ್ಯವನ್ನು ಪದ್ಯಮಾಡಿಕೊಂಡು ಎಂದುಕೊಂಡ’. + +ಕಾರು ಮುಂದಕ್ಕೆ ಬಯಲನ್ನು ಸೀಳಿಕೊಂಡು ಹೋಗುತ್ತಿತ್ತು. + +‘ನಿನ್ನ ತಂಗಿ ಈ ವಿಷಯದಲ್ಲಿ ಇಷ್ಟೊಂದು ಚೀಪಾಗಿ ವರ್ತಿಸಬಾರದಿತ್ತು. ನಾನಂತೂ ನಿರೀಕ್ಷೆನೇ ಮಾಡಿರಲಿಲ್ಲ. ಅವಳ ಬಗ್ಗೆ ನಿಮ್ಮ ಇಡೀ ಸಂಬಂಧಿಕರಲ್ಲೇ ಒಂದು ಗೌರವ ಭಾವನೆಯನ್ನು ಇಟ್ಟುಕೊಂಡಿದ್ದೆ’. + +‘ಹೌದು. ನನಗೂ ಹಾಗೆ ಅನ್ನಿಸಿತು. ಅವಳು ನನಗೆ ಅವಳ ಜೀವನದಲ್ಲಿ ಒಂದು ವಿಶೇಷ ಸ್ಥಾನ ಕೊಟ್ಟಿದ್ದಾಳೆ ಎಂದುಕೊಂಡಿದ್ದೆ. ಆದರೆ, ನಾವು ಅಂದು ಕೊಳ್ಳುವುದೇ ಬೇರೆ, ಅದು ಇರುವುದೇ ಬೇರೆ. ಸಂಬಂಧಗಳ ನಿಜ ಮುಖ ದರ್ಶನವಾಗುವುದು ಇಂತಹ ಕ್ರೂಷಿಯಲ್ ಸಂದರ್ಭಗಳಲ್ಲಿಯೇ ಅನ್ನಿಸುತ್ತೆ. ಹೋಗಲಿ ಬಿಡು. ಅವರ ಸಹವಾಸ ನಮಗೆ ಯಾಕೆ ಇನ್ನು. ಅವಳು ಪ್ರಕಾಶಮಾಮನಿಗೆ ಹೆದರಿರಬೇಕು’.‘ಹಾಗಾದರೆ, ಅತ್ತೆ ಹೇಳಿದ್ದರಲ್ಲಿ ಏನು ತಪ್ಪಿದೆ? ನೀನೊಂಥರ ದೇವ್! ಅದರೂ ಆಳದಲ್ಲಿ ಎಲ್ಲೋ ಸಮರ್ಥನೆ ಮಾಡಿಕೊಳ್ಳುತ್ತಿದ್ದೀಯೇನೋ ಅನ್ನಿಸುತ್ತೆ’. + +‘ಇಲ್ಲ ಇಲ್ಲ, ನಿಜವಾಗಿಯೂ ಅವಳ ಈ ವರ್ತನೆ ನನ್ನ ಮನಸ್ಸಿಗೆ ತುಂಬಾ ನೋವು ತಂದಿದೆ, ಈ ಅವಮಾನವನ್ನು ನಾನು ಯಾವತ್ತೂ ಮರೆಯುವುದಕ್ಕೆ ಆಗುವುದಿಲ್ಲ. ಅಲ್ಲ, ನೀವೆಲ್ಲ ಒಂದೆ. ದೊಡ್ಡಮ್ಮ ಅಜ್ಜಿ, ನೀವೆಲ್ಲ ಒಂದೇ. ಸಂಬಂಧಗಳನ್ನು ಹಾಳುಮಾಡೋರು. ನಾನು ತಪ್ಪಾಯಿತು ಹೋಗಿದ್ದು ಅಂದದ್ದಕ್ಕೆ , ಹೌದು ತಪ್ಪೇ ಮತ್ತೆ. ಮಂಜುನ ನೋಡುವುದಕ್ಕಾಗಲಿ, ಮಾತನಾಡಿಸುವುದಕ್ಕಾಗಲಿ ಇನ್ನೆಂದು ಹೋಗಕೂಡದು’ ಎಂದಳು.‘ಹೋಗಲಿ ಬಿಡು, ಅವಳ ಮಗ, ಅವಳು ಇಷ್ಟದಂತೆ ಬೆಳೆಸಲಿ’ + +‘ಯಾರು ಬೇಡ ಅಂದದ್ದು, ಬೆಳೆಸಲಿ, ನಾನು ಜಸ್ಟ್ ಹೋದದ್ದು ಅವನನ್ನು ನೋಡೋಕೆ. ಮತ್ತೆ, ಮಂಗಳಳ ಪರವಾಗಿಯೇ ಮಾತಾಡುವುದಕ್ಕೆ ಹೋಗಿದ್ದು. ಆದರೆ, ಅವಳು ಅಮ್ಮನನ್ನು ಹೀಗೆ ಅಂದಳಲ್ಲ ಅದು ತುಂಬಾ ಬೇಜಾರ ಮಾಡಿತು. ಅವಳನ್ನು ಎಂದೂ ನಾನು ಕಸಿನ್ ಎಂದು ಭಾವಿಸಿರಲಿಲ್ಲ. ಸ್ವಂತ ತಂಗಿ ಥರ ಎಂದುಕೊಂಡಿದ್ದೆ. ಅದೇ ಭಾವದಲ್ಲಿ ಹೋಗಿದ್ದು ಮಾತನಾಡಿಸುವುದಕ್ಕೆ.’‘ಸದ್ಯ ನಾನು ಬರಲಿಲ್ಲ.’ + +‘ಅಮ್ಮನನ್ನು ಕರೆದುಕೊಂಡು ಹೋಗಬಾರದಿತ್ತು.’ + +ಕಾರು ಹೋಗುತ್ತಿದೆ. ಗುಡ್ಡಗಳಲ್ಲಿ ಹಾಕಿರುವ ಗಾಳಿ ಫ್ಯಾನುಗಳು ತಿರುಗುತ್ತಿದ್ದವು. ಇಬ್ಬರೂ ಕೆಲ ಕ್ಷಣ ಮೌನವಾದರು. ಮ್ಯೂಸಿಕ್ ಪ್ಲೇಯರ್ ನಲ್ಲಿ ಹಾಡುಗಳು ತಮ್ಮ ಪಾಡಿಗೆ ತಾವು ಹೊಮ್ಮುತ್ತಿದ್ದವು. ಫ್ಯಾನುಗಳು ತಿರುಗುತ್ತಿರುವುದನ್ನೇ ನೋಡುತ್ತಿದ್ದ ಲಲಿತಳ ಮನಸಿನಲ್ಲಿ ನೆನಪುಗಳು ಸುಳಿ ಸುಳಿಯಾಗಿ ತಿರುಗತೊಡಗಿದವು. ಸುತ್ತುತ್ತ ಸುತ್ತುತ್ತ ಅವಳ ಬಟ್ಟಲ ಕಣ್ಣುಗಳ ಮೂಲಕ ಚಿಟ್ಟೆಗಳಾಗಿ ಹೊರಗೆ ಹಾರಿಕೊಂಡು ಹೋದವು. ಅವೊತ್ತು ಮಂಗಳವಾರ. ಮಂಗಳಳ ಮಾವ ಹಣೆಗೆ ವಿಭೂತಿ ಕಟ್ಟನ್ನು ಧರಿಸಿ ಕಿವಿಯಲ್ಲಿ ಪುಟ್ಟ ಬಸವಿನ ಪಾದದ ಹೂವನ್ನು ಸಿಕ್ಕಿಸಿಕೊಂಡಿದ್ದರು. ಆಗಷ್ಟೇ ಪ್ರತಿವಾರದಂತೆ ಅವೋತ್ತು ಸಹ ದೇವಿ ಪುರಾಣದಲ್ಲಿ ಒಂದು ಅಧ್ಯಾಯವನ್ನು ಓದಿ ಮುಗಿಸಿದ್ದರು. ಎಲ್ಲರೂ ಊಟಕ್ಕೆ ಕೂತಿದ್ದರು. ಫೋನ್ ರಿಂಗಾಗಿತ್ತು. ಮಹಾದೇವ ಎಡಗೈಲಿ ಫೋನನ್ನು ಎತ್ತಿಕೊಂಡು ಕರೆಯನ್ನು ಸ್ವೀಕರಿಸಿದ.‘ನಾನು ಫೋನ್ ಮಾಡಿದ್ದೆನಲ್ಲಾ, ಹ್ಞಾ, ನಿಜ, ನಿನ್ನ ಪರವಾಗಿ ಕೆಲವು ಮಾತುಗಳನ್ನು ಹೇಳಿದೆ.’ + +‘…’ + +‘ಮತ್ತೆ ಯಾಕೆ ರಿಸೀವ್ ಮಾಡಲಿಲ್ಲ?’ + +‘…’ + +‘ಹೌದೇನು!’ + +‘…’ + +‘ಇಲ್ಲ ಮಂಗಳ ನಿನ್ನ ಪರವಾಗಿಯೇ ಮಾತಾಡುವುದಕ್ಕೆ ಹೋಗಿದ್ದು. ಯಾವ ಉದ್ದೇಶವೂ ಇಲ್ಲ. ಅಲ್ಲ ಇಷ್ಟು ದಿನ ಇಲ್ಲದು ಈಗ ಯಾಕೆ?’ + +‘… + +‘ಏನ್ ಮಂಗಳ ಹೀಗಂತಾ ಇದೀಯಾ?!’ + +‘…’ + +‘ಚಿಕ್ಕ ಹುಡಗನಾಗಿದ್ದಾಗ ನಾನೂನು ಅವನನ್ನು ಎತ್ತಿ ಆಡಿಸಿದ್ದೇನೆ, ಸ್ಕೂಲಿಗೆ ಕರೆದುಕೊಂಡು ಹೋಗಿಬಿಟ್ಟು ಬಂದಿದೀನಿ. ಅವನ ಕಕ್ಕನೂ ತೊಳೆದಿದ್ದೇನೆ. ಅವನ ಸ್ಕೂಲಲ್ಲಿ ಡ್ಯಾನ್ಸ್ ಫಂಕ್ಷನ್ ಇದೆ ಅಂದರೆ ಎಷ್ಟು ದೂರದಿಂದ ಬರುತ್ತಿದ್ದೆ ಗೊತ್ತಾ? ಕೇವಲ ಒಂದು ಸಲಿಗೆಯಿಂದ ಹೋಗಿದ್ದು. ಈಗ ಗೊತ್ತಾಯ್ತು. ನಿಜವಾದ ಪ್ರೀತಿ ಯಾವುದು ಅಂಥ. ಆಯ್ತು ಬಿಡಮ್ಮ, ಸಾರಿ, ತಪ್ಪಾಯ್ತು. ಇನ್ನೆಂದು ಹೋಗುವುದಿಲ್ಲ. ಇಡೀ ಜೀವನದಲ್ಲಿಯೇ ನೋಡಲ್ಲ. ಸರಿನಾ? ಆದರೆ ಅವನಿಗೆ ಇಲ್ಲದ್ದನ್ನ ಹೇಳಿದ್ದೀಯಲ್ಲಾ? ಈಗ ಡಿಸ್ಟರ್ಬ್ ಮಾಡಿದ್ದು ನಾನಾ ನೀನಾ? ಒಂದೇ ಒಂದು ಮಾತು ಸಾಕಾಗಿತ್ತು. ಇನ್ಮುಂದೆ ಯಾವೊತ್ತೂ ಹೋಗಬೇಡಿ, ಪ್ರಕಾಶ ಅವರಿಗೆ ಗೊತ್ತಾದ್ರೆ ಬೇಜಾರಾಗ್ತಾರೆ ಬೇಡ ಅನ್ನಬಹುದಿತ್ತು.’‘…’ + +‘ಅರೆ, ನೀನೇ ಎಷ್ಟು ಸಲ ಅಮ್ಮನ ಹತ್ತಿರ, ನನ್ನ ಹತ್ತಿರ ಪ್ರಕಾಶಮಾಮ ಟಾರ್ಚರ್ ಕೊಡ್ತಾರೆ, ಇಲ್ಲ ಸಲ್ಲದಕ್ಕೆಲ್ಲ ಅನುಮಾನ ಪಡ್ತಾರೆ ಅಂತೆಲ್ಲ ಹೇಳ್ತಿದ್ದೆಯಲ್ಲಾ? ಅಮ್ಮ ಹಾಗೆಲ್ಲ ಹೇಳೇ ಇಲ್ಲ, ಇದೆಲ್ಲ ಶ್ರೀಪತಿದೇ ಕಿತಾಪತಿ. ಇಲ್ಲದ ಚಾಡಿ ಹೇಳಿದಾನೆ. ನಾನೇನು ದೊಡ್ಡ ಅಪರಾಧಮಾಡಿದ್ದೇನೆ ಎನ್ನುವ ಥರ ಕೆದಕಿ ಕೆದಕಿ ಕೇಳ್ತಾನೆ.’‘…’ + +‘ನೋಡಿದಾ, ಕಳ್ಳ, ಕಾನ್ಫರೆನ್ಸ್ ಕಾಲ್ ಮಾಡಿ ಮಾತಾಡಿರುವುದನ್ನೆಲ್ಲ ಕೇಳಿಸಿದ್ದಾನೆ.’ + +‘…’ + +‘ಹೌದಾ!’ + +‘ನೀನೇ ಕೇಳಬಹುದಿತ್ತು, ಅಥವಾ ಹೇಳಬಹುದಿತ್ತು. ಅಷ್ಟಕ್ಕೂ ಅಮ್ಮ ಹೇಳಿದ್ದರಲ್ಲಿ ಏನು ತಪ್ಪಿದೆ? ನೀನು ಹಂಗೆಲ್ಲ ಮೊದಲು ಪ್ರಕಾಶಮಾಮನ ಬಗ್ಗೆ ಹೇಳಿದ್ದಕ್ಕೆ ಹಾಗೆ ಹೇಳಿರಬಹುದು. ಅಷ್ಟಕ್ಕೆ ಇಷ್ಟೆಲ್ಲ.’ + + + +‘…’ + +‘ನೀನು ಮೊದಲೇ ಇಷ್ಟೊಂದು ಗಂಡನನ್ನು ಸಮರ್ಥಿಸಿಕೊಂಡು ಮಾತನಾಡುತ್ತಿದ್ದರೆ, ಒಂದೇ ಒಂದು ನೆಗೇಟಿವ್ ಮಾತನ್ನು ಯಾರು ಹೇಳ್ತಾ ಇರಲಿಲ್ಲ. ಸಲಿಗೆಯಿಂದ ಹೋಗಿದ್ದು. ಈಗ ಅದೂ ಇಲ್ಲ. ಆದರೆ, ಶ್ರೀಪತಿಗೆ ಹೇಳು ನೀವು ಯಾರನ್ನು ದ್ವೇಷಿಸುತ್ತಿದ್ದೀರೋ ಅದರಲ್ಲೂ ಪ್ರಕಾಶಮಾಮನಿಗೆ ಯಾರು ಆಗುವುದಿಲ್ಲವೋ ಅವರಿಂದನೇ ಹೆಲ್ಪ್ ಪಡೆದು, ಸೊಸೈಟಿಯಲ್ಲಿ ಕೆಲಸ ಪಡೆದಿರೋದು. ಅವರ ಸಹಾಯದಿಂದಾನೆ ಅವರಿಗೆ ಗೊತ್ತಿರುವವರ ಮನೆಯಲ್ಲಿ ಬಾಡಿಗೆ ಇರೋದು. ಅವನ ಕೆಲಸಕ್ಕೆ ಅಮ್ಮ ಮತ್ತು ಅಪ್ಪ ಸೊಸೈಟಿ ಪ್ರೆಸಿಡೆಂಟ್ ಹತ್ತಿರ ಹೋಗಿ ರಿಕ್ವೆಸ್ಟ್ ಮಾಡಿ ಶಿಫಾರಸು ಮಾಡಿದಾರೆ ಗೊತ್ತಾ? ಈಗ ಹೇಳ್ತಾನೆ ನಾನು ಯಾವನ್ನೇನು ಬೇಡಲ್ಲ, ಯಾರು ಮುಂದಕ್ಕೂ ಹೋಗಿ ಕೈ ಚಾಚಲ್ಲ. ನೀವು ಮಂಜನ್ನು ನೋಡೋಕೆ ಯಾಕೆ ಹೋದ್ರಿ ಅಂತ ಕೇಳ್ತಾನೆ.’‘…’ + +‘ಹೌದು ಅದರಲ್ಲಿ ತಪ್ಪೇನಿದೆ? ನಾನು ಹೇಳಿದ್ದು ತಮಾಷೆಗೆ. ಮತ್ತು ಎಲ್ಲನೂ ಅವನನ್ನು ಕೇಳಿಯೇ ಮಾಡಬೇಕಿಲ್ಲ. ಅಷ್ಟೊಂದು ಸಲಿಗೆ ಅಧಿಕಾರ ಇಲ್ಲವಾ. ಇತ್ತು ಅನ್ನೋ ಕಾರಣಕ್ಕೇ ಹೋಗಿದ್ದು, ಈಗಿಲ್ಲ ಬಿಡು ನೀನು ಹಾಗೆ ಅಂದಮೇಲೆ.’ + +‘…’ + +‘ಆ ಮಾತೇ ಬಂದಿಲ್ಲ ಅಮ್ಮನ ಬಾಯಿಂದ. ಅವನಿಗೆ ಯಾಕೆ ಹೆದರುತ್ತೀಯೇ, ಅವನೇನು ಹುಲಿನಾ ಸಿಂಹನಾ. ನಿನ್ನ ಮಕ್ಕಳು ದೊಡ್ಡವರಾಗಿದ್ದಾರೆ. ಯಾಕೆ ಹೆದರುತ್ತೀಯಾ. ಅವನು ಅಂದು ಕೊಂಡಿರಬಹುದು ಅವನು ಸಂಬಳಕ್ಕಾಗಿ ದುಡ್ಡಿಗಾಗಿ ಇದ್ದಾರೆ ಅಂತಾ. ದುಡ್ಡಿಗಾಗಿ ಯಾರು ಜೀವನ ಮಾಡೋಕೆ ಅಗೊಲ್ಲ. ಅವನನ್ನು ಬಿಟ್ಟು ನೀನು ನಟರಾಜನ್ನ ಮದುವೆಯಾಗಿದ್ದರೆ ಎಷ್ಟೋ ಚೆನ್ನಾಗಿರುತ್ತಿತ್ತು. ಕೂಲಿ ಮಾಡಿಯಾದರೂ ಚೆನ್ನಾಗಿ ಇರುತ್ತಿದ್ದೆ. ಅವನೇನೊ ಗೃಹಸ್ತ, ಒಳ್ಳೇಯವನು ಅಂತ ಯಾರು ವಿರೋಧ ಮಾಡಲಿಲ್ಲ. ನೀನು ಸಾಕಷ್ಟು ಸಹಿಸಿಕೊಂಡಿದಿಯಾ. ನಿನ್ನಿಂದನೇ ಅವನು ಇಷ್ಟೊಂದೆಲ್ಲ ಪಡೆದಿರೋದು. ಮನೆ ಮಕ್ಕಳು ಗಂಡ ಅಂತ ಎಲ್ಲರನ್ನೂ ತೊರೆದು ಬದುಕಿಲ್ಲವೇನೇ ನೀನು. ಇಷ್ಟು ಮಾತುಗಳನ್ನು ಅಮ್ಮ ಅಂದಿದ್ದು ನನಗೂ ಕೇಳಿಸಿತು. ಇದರಲ್ಲಿ ಏನು ತಪ್ಪು?’‘…’ + +‘ಅಮ್ಮ ಆ ಅರ್ಥ ಬರುವ ಹಾಗೆ ಹೇಳೇ ಇಲ್ಲ.’ + +ಆಕಡೆಯಿಂದ ಕರೆ ಕಟ್ ಆಗಿತ್ತು. + +ಕಾರು ಮುಂದಕ್ಕೆ ಹೋಗುತ್ತಾ ಇತ್ತು. ಅಲ್ಪಕಾಲದ ಮೌನಕ್ಕೆ ‘ಹೇ..ಲಿಲ್’ ಎಂದು ಮಾತುಗಳನ್ನು ಮಹಾದೇವ್ ಬಿಸಾಕಿದ. ಲಲಿತ, ‘ಹೇ ಏನಿಲ್ಲ..’ ಎಂದು ಸಡನ್ನಾಗಿ ತಲೆಯನ್ನು ಕೊಡವಿಕೊಂಡು ಹೇಳಿದಳು. ಮತ್ತೆ ಮುಂದುವರೆಸಿ, ‘ಈಗ, ಹೋಗಿ ಮಾತನಾಡಿಸಿದ್ದಕ್ಕೆ ಏನಾಯತ್ತಂತೆ?’ ಎಂದು ಕೇಳಿದಳು. + +‘ಯಾವನಿಗೊತ್ತು?’ + +‘ನೀವು ಹೋಗಿ ಅವನನ್ನು ಡಿಸ್ಟರ್ಬ್ ಮಾಡಬೇಡಿ ಎಂದು ಹೇಳೋಳು ಅವಳೆ, ಈಗ ಅವಳು ಮಾಡಿದ್ದೇನು. ಡಿಸ್ಟರ್ಬ್ ಅಲ್ಲವೇ? ಸಿಲ್ಲಿ ವಿಷ್ಯನ ದೊಡ್ಡದು ಮಾಡಿದ್ಲು. ಅವಳು ನನ್ಗಿಂಥ ಚಿಕ್ಕವಾಳಾಗಿದ್ದರೂ ನಾನೇ ಕ್ಷಮೆ ಕೇಳಿದೆ’ + +‘ಸಂಬಂಧಗಳು ಸಂಬಂಧಗಳು ಅಂಥ ಕೊಚ್ಚಿ ಕೊಳ್ತಾ ಇರುತ್ತೀಯಾ, ನೋಡು ನಿಮ್ಮ ಸಂಬಂಧ’ ಎಂದು ವ್ಯಂಗ್ಯದಿಂದ ನಕ್ಕಳು. + +‘ಸಂದರ್ಭ ಮತ್ತು ಪರಿಸ್ಥಿತಿಗಳಲ್ಲಿಯೇ ಸಂಬಂಧಗಳ ನಿಜ ಮುಖ ದರ್ಶನವಾಗೋದು’ ಮತ್ತೆ ಮುಂದುವರೆಸಿ, ‘ಅಮ್ಮನಿಗೆ ಹೀಗೆ ಅಂದಳಲ್ಲ. ನೀವ್ಯಾರು ಸರಿಯಿಲ್ಲ. ನೀವೆಲ್ಲ ಸಂಬಂಧಗಳ ಹಾಳುಮಾಡೋರು. ನಾನು ಎಲ್ಲರನ್ನೂ ನೋಡಿದೀನಿ. ಮಂಜುಗೆ, ಹೋಗಿನೀವು ಇಲ್ಲದ ಹಳೆಯ ಕತೆಗಳನ್ನು ಹೇಳುವುದು ಬೇಡ ಎಂದಳು. ಹಾಗೆ ಅನ್ನಬಾರದಿತ್ತು ಅವಳು ನನಗೆ. ನಾನು ಎಷ್ಟು ಕ್ಲೋಸಾಗಿದ್ದೆ ಅವಳ ಹತ್ತಿರ. ನನ್ನ ಎಲ್ಲ ಪರ್ಸನಲ್ ವಿಷಯಗಳನ್ನು ಅವಳಿಗೆ ಮೊದಲು ಹೇಳುತ್ತಿದ್ದೆ.’ ಎಂದು ಬೇಸರಗೊಂಡನು. + +ಅಂದು ಗುರುವಾರ. ಶ್ರಾವಣಮಾಸ. ಜಟಿ ಜಟಿ ಮಳೆ. ಮಹಾದೇವ್ ಧಾರವಾಡದಿಂದ ನೇರ ಮಂಗಳಳ ಮದುವೆಗೆ ಹೋಗಿದ್ದ. ಧಾರವಾಡದಲ್ಲಿ ಓದುತ್ತಿದ್ದ. ಅವಳ ಮದುವೆ ವಿಷಯ ಗೊತ್ತಾಗಿ ತಕ್ಷಣಕ್ಕೆ ಅಲ್ಲಿಂದ ಹೊರಟಿದ್ದ. ಊರು ತಲುಪಿದಾಗ ಸಂಜೆ ಸುಮಾರು ಮೂರು ಗಂಟೆ. ಅಕ್ಕಪಕ್ಕದ ಹೊಲಗಳು ಹಸಿರಿನಿಂದ ಕಂಗೊಳಿಸುತ್ತಿದ್ದವು. ಶೇಂಗಾ ಹೊಲಗಳಲ್ಲಿ ಹೆಂಗಸರು ಕಳೆ ತೆಗೆಯುತ್ತಿದ್ದರು. ಬಸ್ ಸ್ಟ್ಯಾಂಡಿನಿಂದ ಮನೆ ಸ್ವಲ್ಪ ದೂರ ಇತ್ತು. ನಡೆದು ಹೋಗುವಾಗ, ಅವನ ಅದುರಿಗೆ ಮೈಕ್ ಸೆಟ್ಟಿನ ಹುಸೇನ ಸಾಬಿ ಸೈಕಲ್ಗೆ ಲೈಟಿನ ಸರ, ಸ್ಪೀಕರ್ ಬಕೆಟ್ ಇತ್ಯಾದಿಗಳನ್ನು ನೇತುಹಾಕಿಕೊಂಡು ಬರುತ್ತಿದ್ದ. ‘ಹುಸೇನಣ್ಣ ಮದುವೆ ಮುಗೀತಾ’ ಎಂದು ಕೇಳಿದ. ‘ಏನು ಮದುವೆನೋ ಏನೋ, ಗಲಾಟೆಯೋ ಗಲಾಟೆ. ಅವರು ಹೇಗಾದರು ಕಿತ್ತಾಡಿಕೊಳ್ಳಲಿ, ನಮಗೆ ಮಾತಿನ ಪ್ರಕಾರ ದುಡ್ಡು ಕೊಡ ಬೇಕೋ ಬೇಡವೋ ಹೇಳು ಮಾದೇವು. ಮುನ್ನೂರು ರುಪಾಯಿ ಕಡಿಮೆ ಕೊಟ್ಟರು. ‘ತಾರತಿಗಡಿ ಮಾಡುವ ಹಾಗಿದ್ದರೆ ಬರಲ್ಲ. ಮೊದಲೇ ಹೇಳಿ. ಮಾತಾಡಿದಷ್ಟು ಕೊಡಬೇಕು’ ಎಂದು ಮೊದಲೇ ಹೇಳಿದ್ದೆ ಎಂದ. ‘ಹೇಳೋದು ಒಂದು ಮಾಡೋದು ಒಂದು. ನಾಲಿಗೆ ಸರಿಯಿರಬೇಕು ಮನಷ್ಯಂದು’ ಎಂದು ಗೊಣಗಾಡುತ್ತ ಸೈಕಲನ್ನು ಮುಂದಕ್ಕೆ ತುಳಿದುಕೊಂಡು ಹೋದ. ನಂತರ ಪ್ರಕಾಶನ ತಂದೆ ಓಬಣ್ಣ ಎದುರಾದರು. ‘ಓಬ್ ಮಾಮ ಮದುವೆ ಮುಗೀತಾ ಆಗ್ಲೆ’ ಎಂದ ಮಹಾದೇವ. + +‘ಗಲಾಟೆ ಆಯ್ತಂತೆ, ಯಾಕೆ, ಯಾರು ಮಾಡಿದ್ದು?’ ಎಂದೆಲ್ಲ ಕೇಳುವವನಿದ್ದ. ಆದರೆ ಕೇಳಲಿಲ್ಲ.’ಅಲ್ಲೇನು ಶಾಟ ಇದೆ ಅಂತ ಇರಲಿ. ಕಳ್ಳ ಸೂಳೆ ಮಗ. ನಿನ್ ತಂಗಿ ನಮಿಗೆಲ್ಲ ಮೋಸ ಮಾಡಿದ್ಲು ಕಣ್ಲ. ನನ್ನ ಪಾಲಿಗೆ ಅವನು ಸತ್ತಂಗೆ ಇನ್ನ’ ಎಂದು ಓಬಣ್ಣ ಸಿಟ್ಟಿನಿಂದ ಹೇಳಿದನು. + +‘ಮತ್ತೆ ಮದುವೆಗೆ ಯಾಕೆ ಬಂದೆ?’ ಎಂದು ಕೇಳಬೇಕೆಂದುಕೊಂಡವನು, ಏನನ್ನೂ ಕೇಳದೆ ಮುನ್ನಡೆದ. ಎಲ್ಲರೂ ಊಟ ಮಾಡಿ, ಫೋಟೋಗಳನ್ನು ತೆಗಿಸಿಕೊಳ್ಳುತ್ತಿದ್ದರು. ಹೋದವನು ಅವರಿಗೆ ವಿಶ್ ಮಾಡಿದ. ಅವರ ಜೊತೆ ಇವನೂ ಫೋಟವನ್ನು ತೆಗೆಸಿಕೊಂಡ. + +ಮಂಗಳ, ದಿಂಡಾವರದ ಅವಳ ಅಜ್ಜಿ ಮನೆಯಲ್ಲಿ ಓದುತ್ತಿದ್ದಳು. ತುಂಬಾ ಸ್ಫುರದ್ರೂಪಿಯಾಗಿದ್ದ ಅವಳು ಓದಿನಲ್ಲೂ ಅಷ್ಟೇ ಜಾಣೆಯಾಗಿದ್ದಳು. ಅವಳ ಮೂರು ಜನ ದೊಡ್ಡ ಮಾವಂದಿರಿಗೆ ಮತ್ತು ಅವರ ಹೆಂಡಿತಿಯರಿಗೆ, ಚಿಕ್ಕ ಮಾಮ ನಟರಾಜನಿಗೆ ತುಂಬಾ ಅಚ್ಚುಮೆಚ್ಚಿನವಳಾಗಿದ್ದಳು. ಹತ್ತನೇ ಕ್ಲಾಸು ಓದುವಾಗ ಇದೆಲ್ಲ ನಡೆದದ್ದು. ಅವಳ ಚಿಕ್ಕ ಸೋದರ ಮಾವ ನಟರಾಜ ಅವಳನ್ನು ಮದುವೆಯಾಗಬೇಕಿತ್ತು. ಹಾಗಂತ ಇಡೀ ಮನೆಯಲ್ಲಿ ಅನಧೀಕೃತವಾದಂತಹ ಮಾತುಕತೆಯೂ ನಡೆದಿತ್ತು. ನಟರಾಜ ಐದನೇ ಕ್ಲಾಸಿಗೇ ಓದುವುದನ್ನು ನಿಲ್ಲಿಸಿ, ಯಾವ ಕೆಲಸವನ್ನೂ ಮಾಡದೆ, ನೀಟಾಗಿ ಬಟ್ಟೆ ಧರಿಸಿ ಹಿರಿಯೂರಿಗೂ ದಿಂಡಾವರಕ್ಕೂ ವಾರಕ್ಕೆ ಎರಡು ಮೂರು ಬಾರಿ ಅಡ್ಡಾಡಿಕೊಂಡು ಕಾಲ ಕಳೆಯುತ್ತಿದ್ದ. ಸಿನಿಮಾ ನೋಡುವುದು ಮತ್ತು ಇಸ್ಫೀಟಾಡುವುದನ್ನು ಹವ್ಯಾಸ ಮಾಡಿಕೊಂಡು, ಅದನ್ನೇ ವೃತ್ತಿಯಾಗಿ ಮಾಡುತ್ತಿದ್ದ. ಅದರ ಸಲುವಾಗಿ ಅವನ ಅಣ್ಣಂದಿರು ಅವನನ್ನು ಅನೇಕ ಬಾರಿ ಹೊಡಿದಿದ್ದು ಇದೆ. ನಟರಾಜನಿಗೆ ಇವಳ ಮೇಲೆ ತುಂಬಾ ಆಸೆಯೂ ಇತ್ತು. ಎಂದಿದ್ದರೂ ಅವಳನ್ನು ಅವನಿಗೇ ಕೊಟ್ಟು ಮದುವೆಮಾಡುವುದೆಂದು ಗೊತ್ತಿದ್ದುದರಿಂದ ಅವಳ ಬಳಿ ಇವನೇ ಹೋಗಿ, ಎಂದೂ ಮದುವೆ ಪ್ರಸ್ತಾಪ ಮಾಡಿರಲಿಲ್ಲ. ಮತ್ತು, ಎಂದೂ ಅವಳ ಹತ್ತಿರ ಸಲಿಗೆಯಿಂದ ನಡೆದುಕೊಂಡಿರಲಿಲ್ಲ. ಇವಳು ಯಾರಿಗೂ ಹೇಳದೆ ದೂರದ ಸಂಬಂಧಿ ಮತ್ತು ಆ ಸಂಬಂಧದ ಪ್ರಕಾರ ಮಾವ ಆಗಬೇಕಿದ್ದ ಪ್ರಕಾಶನನ್ನು ಪ್ರೀತಿಸುತ್ತಿದ್ದಳು. ಅವನೂ ಸಹ ಇವಳ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿದ್ದ. ಇಡೀ ದಿಂಡಾವರದ ಗ್ರಾಮದಲ್ಲಿ ಇವನನ್ನು ಎಲ್ಲರೂ ಹೊಗಳುತ್ತಿದ್ದರು. ಯಾರ ಜೊತೆಯೂ ಬೆರೆಯುತ್ತಿರಲಿಲ್ಲ. ಬಸ್ ಸ್ಟ್ಯಾಂಡಿನ ಅರಳಿಕಟ್ಟೆಮೇಲೆ ಇವನ ಓರಗೆಯವರ ಜೊತೆ ಕಾಡು ಹರಟೆಹೊಡೆಯುವುದಕ್ಕಾಗಲಿ ಮತ್ತಿತರೆ ಎಲ್ಲು ಊರಲ್ಲಿ ಅನಾವಶ್ಯಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. + +ಓದು, ಕ್ಲಾಸು, ಹೊಲ ಮತ್ತು ಮನೆ. ಇಷ್ಟೇ ಅವನಿಗೆ ಗೊತ್ತಿದ್ದ ಸಂಗತಿಗಳು. ಭಾನುವಾರ ಮತ್ತು ರಜಾದಿನಗಳಂದು ತನ್ನ ತಂದೆಯ ಜೊತೆ ಸೇರಿ ತಮ್ಮ ಮಾವಿನ ತೋಪಿನಲ್ಲಿ ಕೆಲಸ ಮಾಡುವುದು, ಬಡಗಿ ಕೆಲಸ ಮಾಡುವುದು, ಸೌದೆ ಕಡಿಯುವುದು ಮಾಡುತ್ತಿದ್ದ. ಒಮ್ಮೆ ತನ್ನ ಅಪ್ಪನ ಜೊತೆಸೇರಿ ಬಾವಿಯನ್ನೇ ತೋಡಿ ನೀರು ಬರಿಸಿ ಅದನ್ನು ತನ್ನ ಮಾವಿನ ತೋಟಕ್ಕೆ ಹಾಯಿಸಿದ್ದ. ಇದು ಇಡೀ ದಿಂಡಾವರದ ಊರಿನ ಜನರಿಗೆ ಇಷ್ಟ ಆಗಿ, ತಮ್ಮ ಬೆಳದುನಿಂತ ಮಕ್ಕಳಿಗೆ ‘ಇವನ ಉಚ್ಚೆ ಕುಡಿರೋ ಹೋಗಿ ಬುದ್ಧಿ ಬರುತ್ತೆ. ಆ ಹುಡುಗ ಓದೋದ್ರಲ್ಲೂ ಸೈ ಕೆಲಸದಲ್ಲೂ ಸೈ’ ಎಂದು ಅವನನ್ನು ಪ್ರಶಂಸಿಸುತ್ತ ಬೆಳೆದುನಿಂತ ತಮ್ಮ ಮಕ್ಕಳನ್ನು ಬೈಯುತ್ತಿದ್ದರು. ದುರ್ಗಕ್ಕೆ ಇಂಜಿನಿಯರಿಂಗ್ ಮಾಡಲು ಸೇರಿದ ಮೇಲಂತೂ ಇವನು ಊರಿಗೆ ಯಾವಾಗ ಬರುತ್ತಿದ್ದ ಮತ್ತು ಯಾವಾಗ ತೆರಳುತ್ತಿದ್ದ ಎಂಬುದು ಅಷ್ಟು ಸುಲಭದಲ್ಲಿ ಯಾರಿಗೂ ಗೊತ್ತಾಗುತ್ತಿರಲಿಲ್ಲ. ದುರ್ಗದಿಂದ ಬಂದವನು ಅದೇಗೋ ಗುಟ್ಟಾಗಿ ಮಂಗಳಳನ್ನು ಭೇಟಿ ಮಾಡುತ್ತಿದ್ದ. ಅವಳೂ ಇವನಿಗೆ ಪತ್ರಗಳನ್ನು ಬರೆದು ಕೊಡುತ್ತಿದ್ದಳು. ಈ ವಿಷಯ ಯಾರಿಗೂ ಗೊತ್ತಾಗದ ಹಾಗೆ ಗುಟ್ಟನ್ನು ಕಾಪಾಡಿಕೊಂಡಿದ್ದರು. ಇಂಜಿನಿಯರಿಂಗ್ ಅಂತಿಮವರ್ಷ ಇರುವಾಗಲೇ ಇವರ ಪ್ರೀತಿಯ ಗುಟ್ಟು ಇವನ ಅಪ್ಪನಿಂದ ರಟ್ಟಾಯಿತು. ಶ್ರಾವಣ ಶನಿವಾರದ ಒಂದು ದಿನ. ಓಬಣ್ಣ ಸ್ನಾನ ಮುಗಿಸಿ, ಶನಿಪುರಾಣ ಓದುವುದಕ್ಕೆಂದು ಶನಿಮಹಾತ್ಮೆ ಪುಸ್ತಕವನ್ನು ತೆಗೆಯುವಾಗ ಮಂಗಳಳ ಪತ್ರಗಳು ಸಿಕ್ಕು, ಅವನ್ನು ತೆಗೆದುಕೊಂಡು ಸೀದ ಮಂಗಳಳ ಅಜ್ಜಿ ಮನೆಗೆ ಹೋಗಿ ದೊಡ್ಡ ರಾದ್ಧಾಂತ ಮಾಡಿದ್ದ. ಕೊನೆಗೆ ಮಂಗಳಳ ಅಪ್ಪ ಅಮ್ಮರನ್ನು ಕರೆಸಿ ಪಂಚಾಯಿತಿ ಮಾಡಿ ‘ಇಬ್ಬರೂ ಒಬ್ಬರಿಗೊಬ್ಬರು ಇಷ್ಟ ಪಟ್ಟಿದ್ದಾರೆ ಮದುವೆ ಆಗಲಿ ಬಿಡು ಓಬಣ್ಣ ಎಂದು ಮನವೊಲಿಸಲು ಪ್ರಯತ್ನಪಟ್ಟಿದ್ದರು. ಆದರೂ ಓಬಣ್ಣ ವಿರೋಧವ್ಯಕ್ತಪಡಿಸಿ ಅಲ್ಲಿಂದ ಟವಲ್ಲನ್ನು ಕೊಡವಿಕೊಂಡು ಎದ್ದು ಹೋಗಿದ್ದ. ಮಂಗಳಳ ಅಜ್ಜಿ, ಮಾವಂದಿರು ಹೊರಗಡೆ ವಿರೋಧವ್ಯಕ್ತ ಪಡಿಸಿದರೂ ಒಳಗೊಳಗೆ ಒಂದುರೀತಿಯಲ್ಲಿ ಖುಷಿಯಾಗಿದ್ದರು. ಉಡಾಳ ನಟರಾಜನಿಗಿಂತ ಪ್ರಕಾಶ ಅವರೆಲ್ಲರಿಗೆ ಇಷ್ಟ ಆಗಿದ್ದ. ಹಾಗಾಗಿಯೇ ಅವರೆಲ್ಲರೂ ಮುಂದಿನಿಂತು ಮದುವೆ ಏರ್ಪಾಟನ್ನು ಮಾಡಿದ್ದರು. + +ಮಂಗಳಳ ದೊಡ್ಡ ಮಾಮ ನಿಜಗುಣಅವರು ಮಂಗಳ ಮತ್ತು ಪ್ರಕಾಶ ಇಬ್ಬರನ್ನೂ ಹಿರಿಯೂರಿಗೆ ಕರೆದುಕೊಂಡು ಹೋಗಿ ಬಟ್ಟೆ ಬಂಗಾರ ಕೊಡಿಸಿದ್ದರು. ತಾಳಿ ಕೊಡಿಸುವಾಗ ‘ಎಂತದಾದ್ರು ತಗಳ್ರಿ ಸದ್ಯಕ್ಕೆ. ಮುಂದೆ ಅವರು ಬೇಕಾದರೆ ಮುರೆಕುಟ್ಟಿಸಿ ಹೊಸದು ಮಾಡಿಸಿಕೊಳ್ತಾರೆ’ ಎಂದಿದ್ದ. ಅದೇ ದಿನ ಬಂಗಾರದ ಅಂಗಡಿಯಿಂದ ಹೊರಗಡೆ ಬರುವಾಗ ಪ್ರಕಾಶನ ಅಮ್ಮನ ಕಡೆಯ ಸಂಬಂಧಿ ನಾಗರಾಜ ತನ್ನ ಮಗಳನ್ನು ಪ್ರಕಾಶನಿಗೆ ಮದುಮೆ ಮಾಡಿಕೊಳ್ಳುವುದಾಗಿ ಪ್ರಕಾಶನ ಅಮ್ಮ ಮತ್ತು ಅಪ್ಪ ಇಬ್ಬರು ಮಾತುಕೊಟ್ಟಿದ್ದರು. ಈಗ ಕುದಿವ ಸಿಟ್ಟಿನಿಂದ ‘ಮೋಸ ಮಾಡ್ತ ಇದೀಯೇನೊ ಬಾಡ್ಕೋ. ಅದೆಂಗೆ ಮದುವೆ ಮಾಡಿಕೊಳ್ಳುತ್ತೀಯ ನಾವು ನೋಡುತ್ತೀವಿ’ ಎಂದು ಬೈದಿದ್ದಲ್ಲದೆ ತನ್ನ ಜೇಬಿನಲ್ಲಿ ಕುಡಿದು ಕಾಲಿ ಮಾಡಿದ್ದ ಓಲ್ಡ್ ಮಾಂಕ್ ಬಾಟಲನ್ನು ಪಕ್ಕದ ಕರೆಂಟಿನ ಕಂಬಕ್ಕೆ ಹೊಡೆದು ಅದರಿಂದ ಅವನನ್ನು ತಿವಿಯಲು ಮುಂದಾಗಿದ್ದ. ಅದನ್ನು ತಡೆಯಲು ಹೋದ ಮಂಗಳಳ ಎರಡನೇ ಮಾಮ ನಿಜಗುಣನ ತಮ್ಮ ಸತೀಶನ ಎಡ ಅಂಗೈಗೆ ತಗುಲಿತ್ತು. ಅದರ ಗುರುತು ಗಾಯವಾಸಿಯಾದರೂ ಅವನ ಕೈಯಲ್ಲಿ ಕಾಯಂಆಗಿ ಉಳಿಯಿತು. ಪ್ರಕಾಶ ಮದುವೆಯಾಗಿ ಕೆಲಸ ಸಿಗುವ ತನಕ ಒಂದು ವರ್ಷ ದಿಂಡಾವರದಲ್ಲಿಯೇ ಇದ್ದು ಬೆಂಗಳೂರಿನ ಯಾವುದೋ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ, ಅಲ್ಲಿಂದಲೇ ದಿಂಡಾವರಕ್ಕೆ ವಾರಕ್ಕೊಮ್ಮೆ ಓಡಾಡಿಕೊಂಡಿದ್ದ. ಆಗ ಪ್ರಕಾಶ ಮತ್ತು ಮಂಗಳ ಅವರಿಗೆ ಸುನನಯನ ಜನಿಸಿದಳು. ನಂತರ ಒಂದು ವರ್ಷದಲ್ಲಿ ಗುಲ್ಬರ್ಗದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಧ್ಯಾಪಕ ಹುದ್ದೆಗೆ ಆಯ್ಕೆಯಾಗಿ ಅಲ್ಲಿಯೇ ಪಿ.ಎಚ್.ಡಿ ಪದವಿಯನ್ನು ಪಡೆದು, ಪ್ರೊಫೆಸರ್ ಆಗಿ ಬಡ್ತಿ ಹೊಂದಿದ. ಅವನ ತಂದೆ ಓಬಣ್ಣ ಆಗೊಮ್ಮೆ ಈಗೊಮ್ಮೆ ಗುಲ್ಬರ್ಗಕ್ಕೆ ದುಡ್ಡು ಕಾಸಿಗೆ ಅವನ ಬಳಿ ಹೋಗಿ ಬರುತ್ತಿದ್ದ. ಓಬಣ್ಣ ಎಲೆ ಅಡಿಕೆಹಾಕಿ ಎಲ್ಲಿ ಅಂದರೆ ಅಲ್ಲಿ ಉಗುಳುವುದು, ಮಾಸಲು ಬಟ್ಟೆಯಲ್ಲಿ ಇರುವುದು ಮಂಗಳಳಿಗೆ ಇಷ್ಟ ಆಗುತ್ತಿರಲಿಲ್ಲ. ಆದರೂ ಅವನನ್ನು ಚೆನ್ನಾಗಿಯೇ ಊಟ ಉಪಚಾರ ಮಾಡಿ ಕಳುಹಿಸುತ್ತಿದ್ದಳು. + +ಓಬಣ್ಣ ಮತ್ತು ಅವನ ಮಗ ಪ್ರಕಾಶ ಮಾತಾಡುತ್ತಿದ್ದದ್ದು ಒಂದೇ ಮಾತು. ಅದು ಊರಿಗೆ ವಾಪಸ್ಸು ಹೋಗುವಾಗ. ದುಡ್ಡನ್ನು ಮಂಗಳಳ ಕೈಲಿ ಕೊಟ್ಟು ಕಾಲೇಜಿಗೆ ಹೋಗುತ್ತಿದ್ದ. ಅದನ್ನು ಇಸಕೊಂಡು ಓಬಣ್ಣ ದಿಂಡಾವರಕ್ಕೆ ಬರುತ್ತಿದ್ದ. ಹೋಗೋದಿನ ‘ಊರಿಗೆ ಹೋಗ್ತೀನಿ ಕಣಯ್ಯ’ ಎಂದಷ್ಟೇ ಹೇಳುತ್ತಿದ್ದ. ಅದನ್ನು ಪ್ರಕಾಶ ಕೇಳಿಸಿಯೂ ಕೇಳಿಸಿಕೊಳ್ಳದೆ ತನ್ನ ಕಾಲೇಜಿಗೆ ಕಾರನ್ನು ಚಾಲುಮಾಡಿಕೊಂಡು ಹೋಗುತ್ತಿದ್ದ. ಪ್ರಕಾಶ ಗುಲ್ಬರ್ಗಕ್ಕೆ ಹೋದ ಎರಡು ವರ್ಷ ಕಳೆದ ಮೇಲೆ ಮಂಜು ಹುಟ್ಟಿದ. ಬಾಲ್ಯದಿಂದಲೂ ತುಂಬಾ ಚೂಟಿಯಿದ್ದ ಇವನನ್ನು ಯಾವ ಕಷ್ಟ ಸೋಂಕದೆ ಬೆಳೆಸಿದ್ದರು. ಒಂದು ದಿನಕ್ಕೂ ತನ್ನ ಊರು ದಿಂಡಾವರಕ್ಕೆ ಆಗಲಿ ಹೆಂಡತಿ ಊರು ಪಿಟ್ಲಾಲಿಗಾಗಲಿ ಕಳಿಸಿರಲಿಲ್ಲ. ತನ್ನ ಹೆಂಡತಿಯ ಕಡೆಯವರು ಬಂದರೂ ಅಷ್ಟಕ್ಕಷ್ಟೇ ಅವನು ಅವರ ಹತ್ತಿರ ಮಾತಾಡುತ್ತಿದ್ದುದು. ಊ, ಹ್ಞಾ ಅಷ್ಟೆ ಎನ್ನುವ ಅರೆ ಬರೆ ಪದಗಳು. ಅವಳ ದೊಡ್ಡಮ್ಮನ ಮಗ ಮಹಾದೇವ ಆಗಿಂದಾಗ್ಗೆ ಹೋಗ್ತಾ ಇದ್ದ. ಮಂಗಳ ಮತ್ತು ಅವಳ ಮಕ್ಕಳಾದ ಸುನಯನ ಮತ್ತು ಮಂಜು ಜೊತೆಗೆ ತುಂಬಾ ಸಲಿಗೆಯಿಂದ ಇದ್ದವನೆಂದರೆ ಇವನೊಬ್ಬನೆ. ಅವರೂ ಸಹ ತುಂಬಾ ಹಚ್ಚಿಕೊಂಡಿದ್ದರು ಇವನನ್ನು. ಕ್ರಮೇಣ ಇವನೂ ಹೋಗುವುದನ್ನು ನಿಲ್ಲಿಸಿದ. ಅಷ್ಟೊತ್ತಿಗಾಗಲೇ ಪ್ರಕಾಶ ಯಾವ ನೆಂಟರನ್ನು ಸರಿಯಾಗಿ ಮುಖಕೊಟ್ಟು ಮಾತಾಡಿಸುತ್ತಿರಲಿಲ್ಲ. ಇದು ಹೋದವರಿಗೆಲ್ಲ ಕಿರಿಕಿರಿಯಾಗುತ್ತಿತ್ತು. ಮಂಗಳ ಏನಾದರೂ ಅಪ್ಪಿ ತಪ್ಪಿ ತನ್ನ ಅಜ್ಜಿ, ಮಾವಂದಿರ ಹೆಸರನ್ನು ಎತ್ತಿದರೆ ಸಿಡಿಮಿಡಿಗೊಳ್ಳುತ್ತಿದ್ದ ಮತ್ತು ಅಷ್ಟೇ ಅಲ್ಲದೆ, ತಿಂಗಳುಗಟ್ಟಲೆ ಇಬ್ಬರು ಮಾತನ್ನು ಬಿಡುತ್ತಿದ್ದರು. ಇದನ್ನೆಲ್ಲ ಸಾವಿರ ಸಲ ಫೋನ್ ಮಾಡಿ ತನ್ನ ದೊಡ್ಡಮ್ಮ ಮಹಾದೇವನ ತಾಯಿಯ ಬಳಿ ಹೇಳಿಕೊಂಡು ಅತ್ತಿದ್ದಿದೆ. ತನ್ನ ಮಾವರಬಗ್ಗೆ ಮಾತಾಡಿದರೆ ‘ಈಗಲೂ ನಿನಗೆ ನಿನ್ನ ಮಾವ ನಟರಾಜನ ಮೇಲೆ ಮನಸ್ಸಿದೆ’ ಎಂದೆಲ್ಲ ವ್ಯಂಗ್ಯ ಮಾಡುತ್ತಿದ್ದ. ಜೊತೆಗೆ ನಿನ್ನ ಮಾವ ನಿಜಗುಣ ಅವೊತ್ತು ಹಿರಿಯೂರಿನಲ್ಲಿ ತಾಳಿ ಎಂತಾದಾದ್ರು ತಗಳ್ರಿ’ ಎಂದು ಹೇಳಿದರಲ್ಲ ಎಂದು ಪದೇ ಪದೇ ರೇಗಿಸುತ್ತಿದ್ದ. ಇದು ಅವಳ ಮನಸ್ಸಿಗೆ ತುಂಬಾ ಘಾಸಿ ಆಗ್ತಾ ಇತ್ತು. + + + +ಆದರೆ ಅವಳ ಮಗ ಮಂಜುನನ್ನು ನೋಡಲು ಮಹಾದೇವ ಅವನ ಅಮ್ಮನನ್ನು ಕರೆದುಕೊಂಡು ಹೋಗಿದ್ದ ಸಂಗತಿಯನ್ನು ದೊಡ್ಡ ರಾದ್ಧಂತ ಮಾಡಿದ್ದಳು. ಇತ್ತೀಚೆಗೆ ಗುಲ್ಬರ್ಗಕ್ಕೆ ಅವರ ಮನೆಗೆ ಮಂಗಳಳ ಅಪ್ಪ, ಅಮ್ಮ, ತಮ್ಮಂದಿರು ಮತ್ತು ಪ್ರಕಾಶನ ಅಪ್ಪ ಓಬಣ್ಣನನ್ನು ಹೊರತು ಪಡಿಸಿದರೆ ಬೇರೆ ಯಾರು ಹೋಗುತ್ತಿರಲಿಲ್ಲ. ಮಹಾದೇವನಿಗೆ ಸಂಪೂರ್ಣವಾಗಿ ಫೋನ್ ಮಾಡುವುದನ್ನು ನಿಲ್ಲಿಸಿದ್ದಳು.ಕಾರು ಮುಂದೆ ಹೋಗ್ತಾ ಇತ್ತು. ತಕ್ಷಣಕ್ಕೆ ಅಲ್ಲಿ ಒಂದು ವಿಚಿತ್ರ ಸನ್ನಿವೇಶ ಜರುಗಿತು. + +‘ನನಗೆ ಈ ರಿಂಗ್ ಬೇಡ’ ಎಂದಳು ಲಲಿತ.‘ಯಾವ ರಿಂಗ್?’‘ಅದೇ, ಗೌರಿ ಹಬ್ಬಕ್ಕೆ ಎರಡು ವರ್ಷಗಳ ಹಿಂದೆ ನಿನ್ನ ತಂಗಿ ಕೊಟ್ಟಿದ್ದಳಲ್ಲ ಅದು’‘ಅರೆ, ಅದೇನು ನಿನ್ನನ್ನು ಏನು ಮಾಡೊಲ್ಲ ಬಿಡು.’‘ಥೂ ನಿನಗೆ ಅವಮಾನ ಅನ್ನೋದು ಆಗೋದಿಲ್ಲವೆ?’‘ವಸ್ತುಗಳು ಏನು ಮಾಡುತ್ತವೆ?’‘ನಿರ್ಜೀವ ವಸ್ತುಗಳೇ ಕಾಡುವುದು ಜೀವ ಇರುವವನ್ನು.’‘ಹೋಗಲಿ ಬಿಡು ಅದನ್ನು ಮಾರಿ ಅದರ ಬದಲಿಗೆ ಇನ್ನೊಂದನ್ನು ಕೊಂಡು ಕೊಂಡರೆ ಆಯ್ತು.’ + +ಲಲಿತ ತನ್ನ ಬೆರಳಿನಿಂದ ಉಂಗುರವನ್ನು ಬಿಚ್ಚಿ, ಕಾರಿನ ಕಿಟಕಿಯಿಂದಾಚೆ ಎಸಿದಳು. ಅವರ ಕಾರಿನ ಹಿಂದೆ ಚೈನಾವಾಲಿನ ಥರ ಒಂದು ಉದ್ದನೆಯ ಧಡೂತಿ ಲಾರಿ ಬರುತ್ತಿತ್ತು. ‘ಏಯ್ ಕೈಯನ್ನು ಹಾಗೆಲ್ಲ ಹೊರಗೆ ಹಾಕಬೇಡ. ಹಿಂದೆ ಲಾರಿ ಬರುತ್ತಿಲ್ಲವಾ? ಏನ್ ಮಾಡ್ತಾ ಇದೀಯಾ? ಹ್ಞಾ! ಉಂಗುರ ಎಲ್ಲೆ?’ ಎನ್ನುವುದರೊಳಗೆ ಅದು ಹೊರಗೆ ಬಿದ್ದಾಗಿತ್ತು. ರಸ್ತೆಯಾಚೆಯ ಕಮರಿಯೊಳಗೆ ಬಿತ್ತೋ ಅಥವಾ ಲಾರಿಯ ಟೈರಿನಡಿಯಲ್ಲಿ ಸಿಕ್ಕಿ ಹಾಕಿಕೊಂಡು ಅಪ್ಪಚ್ಚಿ ಆಯಿತೋ ಗೊತ್ತಾಗಲಿಲ್ಲ. + +‘ಹೋಗಲಿ ಬಿಡು, ಡ್ರೈವ್ ಮಾಡುವಾಗ ಯಾಕೆ ಟೆನ್ಷನ್ ಆಗೋದು. ಮನೆಗೆ ಹೋಗಿ ಕೂತು ಮಾತಾಡಿದರೆ ಆಯ್ತು’ ಎಂದ. ಮತ್ತೆ ತನ್ನ ಮಾತನ್ನ ಮುಂದುವರೆಸಿ, ‘ಲಿಲ್ ಆ ವಿಚಾರವೇ ಬೇಡ. ಬಿಟ್ಟಾಕಿಬಿಡು’ ಎಂದ. + +ಸಂಜೆ ಐದು ಗಂಟೆಯಾಗಿತ್ತು. ಲಲಿತಳನ್ನು ಕರೆದು ‘ರೆಡಿಯಾಗು, ಹೊರಗಡೆ ಹೋಗಿ ಬರೋಣ. ಮೊನ್ನೆ ಶಕುಂತ್ಲಜ್ಜಿ ಸಿಕ್ಕು ಲಲಿತಳನ್ನು ಕರೆದುಕೊಂಡು ಬಾ, ನೋಡ್ಹಂಗೆ ಆಗಿದೆ ಎಂದಿದ್ದಳು’ ಎಂದ. ಇಬ್ಬರೂ ತಮ್ಮ ಬಿಳಿಯ ಕಾರಿನಲ್ಲಿ ಶಕುಂತ್ಲಜ್ಜಿಯ ಮನೆಯ ಕಡೆ ಹೊರಟರು. ಮನೆಯ ಮುಂದೆ ಜನ ತುಂಬಿ ತುಳುಕುತ್ತಿತ್ತು. ಜನರನ್ನು ಸರಿಸಿ ದಾರಿ ಮಾಡಿಕೊಂಡು ಹೋಗಿ ನೋಡುತ್ತಾರೆ, ಶಕುಂತ್ಲಜ್ಜಿ ಹೆಣವಾಗಿ ಬಿದ್ದಿದ್ದಾಳೆ. ಅಲ್ಲಿ ನೆರೆದಿದ್ದವರೊಬ್ಬರನ್ನು ವಿಚಾರಿಸಿದಾಗ ಅಜ್ಜಿಯ ಸಂಬಂಧಿಕರೊಬ್ಬರು ಆಸ್ತಿ ವಿಷಯಕ್ಕಾಗಿ ಅವಳನ್ನು ಸಾಯಿಸಿರುವುದಾಗಿ ಹೇಳಿದರು. ಆ ಅಜ್ಜಿಯ ಹಣೆಗೆ ಇಬ್ಬರೂ ಹೋಗಿ ಮುತ್ತನ್ನು ಕೊಟ್ಟರು. ಕೆನ್ನೆಗಳನ್ನು ಸವರಿದರು. ಕಣ್ಣಲ್ಲಿ ನೀರು ಜಿನುಗುತ್ತಿತ್ತು. ತುಂಬಾ ಬೇಸರದಿಂದ ಮನೆಗೆ ಮರಳಿದರು. ಅಂದು ಶನಿವಾರ. ಬೆಳದಿಂಗಳು ಸುರಿಯುತ್ತಿತ್ತು. ತನ್ನ ಮನೆಯ ಅಂಗಳದಲ್ಲಿ ಒಬ್ಬನೇ ಹೋಗಿ ಚೇರನ್ನು ಹಾಕಿಕೊಂಡು ಕಾಲನ್ನು ಚಾಚಿಕೊಂಡು ಕುಳಿತ. ಬೆಳದಿಂಗಳು ಇವನನ್ನು ಎಳೆದು ಕೊಳ್ಳುತ್ತಿತ್ತು. ಬೆಳದಿಂಗಳನ್ನೇ ದಿಟ್ಟಿಸಿ ನೋಡುತ್ತ ಕುಳಿತ. ಯಾರೂ ಇವನನ್ನು ಮಾತನಾಡಿಸುವುದಕ್ಕೆ ಬರಲಿಲ್ಲ. ಒಮ್ಮೆ ಲಲಿತ ಬಂದು ಹೊರಗಡೆ ನೋಡಿ, ಇವನಿಗೆ ಕಾಣಿಸಿಕೊಳ್ಳದೇ ಒಳ ಹೋದಳು. ಬೆಳದಿಂಗಳು ನದಿಯಾಗಿ ಹರಿಯುತ್ತಿರುವುದನ್ನು ನೋಡುತ್ತಲೇ ಹೋದ. ರಾತ್ರಿ ತನ್ನ ಉತ್ಕಟತೆಯ ಮಟ್ಟವನ್ನು ತಲುಪುತ್ತಿದ್ದರೂ ಬೆಳದಿಂಗಳ ಬೆಳಕಿನ ಕಾರಣದಿಂದಾಗಿ ಕತ್ತಲು ಸಂಪೂರ್ಣಕತ್ತಲಾಗಲು ಸಾಧ್ಯವಾಗುತ್ತಿರಲಿಲ್ಲ. + + + +ದೂರದಲ್ಲಿ ಗೂಬೆಯ ಕೂಗು ಅಸ್ಪಷ್ಟವಾಗಿ ಕೇಳುತ್ತಿತ್ತು. ಬೆಳದಿಂಗಳಲ್ಲಿ ಬೆಳ್ಳಕ್ಕಿಗಳು ಹಾರಿ ಹೋಗುತ್ತಿದ್ದವು. ನಂತರ ಕಾಲಿ ಆಕಾಶ. ಮೋಡದ ತುಣುಕೂ ಇಲ್ಲ. ಚುಕ್ಕಿಗಳು ಬೆಳದಿಂಗಳನ್ನು ಬೆಳಗಲು ಬಿಟ್ಟು ಪ್ರಖರತೆಯಿಲ್ಲದೆ ಮಂದವಾಗಿ ತಮ್ಮ ಪಾಡಿಗೆ ತಾವು ಸುಮ್ಮನಿದ್ದವು. ಹಳೆಯ ಒಂದು ರುಪಾಯಿ ಅಗಲದ ಕುಂಕುಮ ಹಣೆಯ ಮೇಲೆ. ಕಣ್ಣುಗಳಲ್ಲಿ ಹೊಳಪು. ಸುಕ್ಕುಗಟ್ಟಿದ ಮುಖವಾದರೂ ಜೀವಕಳೆಯಿಂದ ತುಂಬಿಕೊಂಡಿರುವ ಆಕೃತಿಯೊಂದು ಬೆಳದಿಂಗಳನದಿಯಿಂದ ಎದ್ದು ಇವನು ಕುಳಿತಿರುವ ದಿಕ್ಕಿನ ಕಡೆ ಬರತೊಡಗಿತು. ಆಕೃತಿ ಒಂದು ಹೆಣ್ಣಿನ ರೂಪವಾಗಿ ಸ್ಪಷ್ಟವಾಗಿ ಗೋಚರಿಸತೊಡಗಿತು. ಇವನ ಕಡೆಯೇ ಬರುತ್ತಿದ್ದಾಳೆ. ಬಂದು ಬೆಳದಿಂಗಳ ಬಯಲಿಗೆ ಇವನನ್ನು ಕರೆದುಕೊಂಡು ಹೋದಳು. ಹೋಗಿ ನದಿಯ ದಡದಲ್ಲಿ ಕುಳಿತು ಕೊಂಡಿದ್ದಾರೆ. ನದಿ ಬೆಳದಿಂಗಳೇ ಆಗಿದೆ. ಶಕುಂತ್ಲಜ್ಜಿ ಅವನ ಜೊತೆ ಮಾತಾಡುತ್ತಿದ್ದಾಳೆ. ‘ಏ ಪಾಪ .. ಈ ಬದುಕು ಬದುಕಲ್ಲ. ಈ ಸಂಬಂಧಗಳು ಸಂಬಂಧವಲ್ಲ, ಇದು ಗೊತ್ತಾದವರು ಇರೋಲ್ಲ, ಇದ್ದೋರಿಗೆ ಗೊತ್ತಾಗೊಲ್ಲ. ಬೇಡವಾದ್ದನ್ನು ಕಿತ್ತಾಡಿಕೊಂಡು ಪಡೀತಾರೆ, ಬೇಕಿರುವುದನ್ನು ಕಾಲಲ್ಲಿ ತುಳಕೊಂಡು ಓಡಾಡ್ತಾರೆ. ಏ ಪಾಪ ನಿನಗೆ ಏನೋ ಹೇಳಬೇಕು ಕಣ.’ + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_405.txt b/Kenda Sampige/article_405.txt new file mode 100644 index 0000000000000000000000000000000000000000..8728509f77d57bbc5a53fa1b12a0506afcb1b040 --- /dev/null +++ b/Kenda Sampige/article_405.txt @@ -0,0 +1,37 @@ + + +ವಸುಂಧರಾ ಅವರ ಮೊದಲ ಕವಿತಾ ಸಂಕಲನವಿದು. ಸುಮಾರು ನಲ್ವತ್ತು ಕವಿತೆಗಳನ್ನು ಇಲ್ಲಿ ಒಟ್ಟುಗೂಡಿಸಲಾಗಿದೆ. ಈ ಕವಿತೆಗಳ ವಿಶೇಷಣವೆಂದರೆ‘ಕಾಂತ ಸಂಮಿತ ನಿರೂಪಣೆಯ ಕ್ರಮ’ ಎನ್ನಬಹುದು. ಹೂದೋಟವನ್ನು ಹೊಕ್ಕವರಿಗೆ ಹಲವು ಬಣ್ಣದ ಆಕಾರದ ಚಂದದ ಹೂಗಳು ಕಣ್ಣಿಗೆ ಬೀಳುವ ಮುನ್ನ ಹೂದೋಟದ ಆಹ್ಲಾದಕರವಾದ ಪರಿಮಳ ಮನಸ್ಸನ್ನು ಮುದಗೊಳಿಸುವಂತೆ ಈ ಕವಿತೆಗಳಲ್ಲಿನ ಭಾವತೀವ್ರತೆ ಓದುಗರ ಹೃದಯವನ್ನು ತಟ್ಟುತ್ತದೆ. ಪುರುಷಾಳ್ವಿಕೆಯ ಕಾಲದಿಂದಲೂ ಲೋಕಾಂತದಲ್ಲಿ ಮೌನವಾಗಿಸಿರುವ ಹೆಣ್ಣು ತನ್ನೊಳಗೆ ತಾನು ಪಿಸು ನುಡಿಯ ಮೂಲಕ ಸಂವಾದಿಸುತ್ತಿರುವ ಹಲವು ವಿನ್ಯಾಸಗಳನ್ನು ಇಲ್ಲಿ ಕಾಣಬಹುದು. + +ವಸುಂಧರಾ ಅವರ ಕವಿತೆಗಳಲ್ಲಿ ಕಾಣುವ ಮತ್ತೊಂದು ವಿಶಿಷ್ಟತೆ ಹಲವು ಕಾಲದ ಹೆಣ್ಣು ಪಾತ್ರಗಳ ಅನಾವರಣ, ಇಲ್ಲಿನ ಬಹು ಪಾಲು ಕವಿತೆಗಳಲ್ಲಿ ಪುರಾಣ ಕಾಲದ ಹೆಣ್ಣಿನಿಂದ ಹಿಡಿದು ಆಧುನಿಕ ಕಾಲದ ಹೆಣ್ಣುಗಳವರೆಗೆ ನಿರೂಪಿಸಲಾಗಿದೆ. ಆದರೆ ಪ್ರಶ್ನೆಗಳು ಮಾತ್ರ ಹಳೆಯವೇ ಆಗಿವೆ, ಆಧುನಿಕವೂ ಆಗಿವೆ. ಈ ಕವಿತೆಗಳಾದರೂ ಹೆಣ್ಣೋಟದ ಮೂಲಕ ಹಾದು ಬರುವ ವಿವಿಧ ಕಾಲಘಟ್ಟಗಳ ಹೆಣ್ಣುಗಳ ಮಾದರಿ, ಯೋಚಿಸುವ ವಿನ್ಯಾಸ ಮತ್ತು ಆದರ್ಶ ಹೆಣ್ಣಿನ ಕಲ್ಪಿತದ ಸಿಪ್ಪೆ ಸುಲಿಯುವ ಜವಾಬ್ದಾರಿಯನ್ನು ಈ ನಿರೂಪಣೆಗಳು ಮಾಡುತ್ತಿವೆ. ಆದ ಕಾರಣ ನಮಗೆ ಇಲ್ಲಿ ಸೀತೆ, ದ್ರೌಪದಿ, ಊರ್ಮಿ¼, ರಾಧೆ ಅಂತಹ ಪುರಾಣ ಪಾತ್ರಗಳ ಜೊತೆಗೆ ಹೇಗೋ ಹಾಗೇ ಯಶೋಧರೆ, ಅಕ್ಕ, ಅಮೃತಮತಿ ಮುಂತಾದ ಚಾರಿತ್ರಿಕ ಪಾತ್ರಗಳ ಜೊತೆಗೂ ಸಂವಾದಕ್ಕೆ ಆಹ್ವಾನವೂ ಇದೆ. ಸಂವಾದಕ್ಕೆ ತಕ್ಕ ಆಸ್ಪದವೂ ಇದೆ. ಆದರೆ ವಸುಂಧರಾ ಅವರ ಈ ನಿರೂಪಣೆಗಳು ತಾನು ಸಂವಾದಿಸಬೇಕು ಎನ್ನುವ ಪುರುಷ ಪಾತ್ರಗಳನ್ನು ಕರೆದು ಎದುರಿಗೆ ಕೂರಿಸಿಕೊಂಡು ಕೋರ್ಟಮಾರ್ಷಲ್ ನಡೆಸುವುದಿಲ್ಲ. ಬದಲಿಗೆ ಜೊತೆ ನಡೆಯುತ್ತಾ ಹೆಣ್ಣು-ಗಂಡು ಜೊತೆ ನಡೆಯುವ ಅನಿವಾರ್ಯತೆಯನ್ನು ಮನಗಾಣಿಸುತ್ತಲೇ ತಾನು ನಡೆಯುತ್ತಿರುವ ನಡಿಗೆ ಭಿನ್ನವೆಂದು ಸಂಗಾತಿಗೆ ತಿಳಿ ಹೇಳುವ ಆಪ್ತತ್ತೆಯು ಇಲ್ಲಿನ ಪ್ರಧಾನ ಚಲನೆಯಾಗಿದೆ. ಹೀಗೆ ಕಾವ್ಯ ಕಟ್ಟುವ ವಿದ್ಯಮಾನವು ಕನ್ನಡದ ಮಹಿಳಾ ಕವಿತೆ ಬೆಳವಣಿಗೆಯಲ್ಲಿ ಈಗಾಗಲೇ ದಾಟಿ ಬಂದಿರುವ ಹಂತವಾಗಿದೆ. ಈಗಿನ ಕನ್ನಡ ಮಹಿಳಾಕಾವ್ಯ ಗಂಡು ಭಾಷಾ ನಿರೂಪಣೆಯಿಂದ ಬಿಡಿಸಿಕೊಳ್ಳುವ ಸೂಕ್ಷ್ಮತೆಗಳನ್ನು ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಈ ಕವಿತೆಗಳಿಗೆ ಒದಗಿ ಬರುತ್ತಿರುವ ಅರ್ಥದ ನೆಲೆಗಳ ವಿಸ್ತಾರವು ರೆಕ್ಕೆ ಕತ್ತರಿಸಿದ ಹಕ್ಕಿಯಂತಾಗಿದೆ. ಹಗೆ ಮತ್ತು ಅಸಹನೆ ಇರದ ಈ ಕವಿತೆಗಳ ಕಟ್ಟುವಿಕೆ ಹೃದ್ಯವಾಗಿವೆ. + +ವಸುಂಧರಾ ಅವರ ಕವಿತೆಗಳಲ್ಲಿ ಅಂತಸ್ಥವಾಗಿರುವ ಮತ್ತೊಂದು ನೆಲೆಯೂ ಕೂಡ ಈ ಕವಿತೆಗಳನ್ನು ಅರ್ಥೈಸಲು ನಮಗೆ ನೆರವು ನೀಡುತ್ತದೆ. ತನ್ನನ್ನು ಹೆಣ್ಣಾಗಿಸಿರುವ, ಆಗಿಸುತ್ತಿರುವ ಲೋಕದ ಮೌಲ್ಯಗಳ ಜೊತೆಗೆ ಜಗಳವಾಡದೆ ತಾನು ‘ಅದಲ್ಲದ’ ಅಸಮ್ಮತಿಯನ್ನು ದಾಖಲಿಸುವ ವಿಧಾನ ಈ ಕವಿತೆಗಳಲ್ಲಿ ‘ನೆಲದ ಮರೆಯ ನಿದಾನ’ದಂತೆ ಹುದುಗಿಕೊಂಡಿದೆ. ಆದರೆ ಹೀಗೆ ಹೆಣ್ಣು ತನ್ನ ಜೀವದಂಬಲವನ್ನು ಗಂಡು ಅರಿಯಬೇಕು ಎಂದು ತಪನಪಡುವ- ಯಾತನೆಯನ್ನು ಗಂಡು ಲೋಕ ಒಳಒಳಗೆ ಸಂಭ್ರಮಿಸುತ್ತಿರುವ, ಸುಖಿಸುತ್ತಿರುವ ಸೂಕ್ಷ್ಮತೆಯನ್ನು ವಸುಂಧರಾ ತಮ್ಮ ಮುಂದಿನ ಕವಿತೆಗಳನ್ನು ಕಟ್ಟುವಾಗ ಗಮನಿಸುತ್ತಾರೆ ಎನ್ನುವ ಭರವಸೆಯೂ ಈ ಕವಿತೆಗಳ ಒಳಗೆ ಇದೆ. + +“ಅಭಿಮಾನ ನನಗುಂಟು ಮಮತೆಯೊಡನೆ ಕೈ ಹಿಡಿಯಲು ಬಾ ಜೋಡಿ ಎತ್ತಾಗಿ ಬಾಳನೊಗಕೆ” ಈ ಹಾರೈಕೆ ಅನಾದಿಯದಾದರೂ ಇಂಥ ಪಯಣ ಇನ್ನೂ ಆರಂಭಗೊಂಡಿಲ್ಲವೆಂದು ಕವಿತೆಗಳೇ ಹೇಳುತ್ತಿವೆ. ಗಂಡು ಲೋಕ ತನ್ನ ಸಹ ಪಯಣಿಗಳ ಜೊತೆ ನಡೆಯದೆ ತಾನಿಟ್ಟ ಹೆಜ್ಜೆಗಳಲ್ಲಿ ಹೆಜ್ಜೆ ಇಟ್ಟು ನಡೆಯಬೇಕು ಎಂಬ ಒತ್ತಾಯದ ಕಾಳಜಿಯನ್ನು ಹೆಣ್ಣುಲೋಕದ ಮುಂದಿರಿಸಿದೆ, ಅಷ್ಟೇ ಅಲ್ಲ ಅದನ್ನು ಆದರ್ಶ ನಡೆಯಾಗಿಸಿದೆ. ಆದರೆ ಶರತ್ತುಬದ್ಧವಾದ ಈ ಪ್ರೀತಿಯಲ್ಲಿ ಹುದುಗಿರುವ ಅವಲಂಬನೆಯ ಆಯಾಮವು ಕವಿತೆಗೆ ಕಾಣಿಸಬೇಕು. ಆಗ ಅದು ಕವಿತೆ ಮಾತ್ರವಾಗದೆ ಕಾಣ್ಕೆಯೂ ಆಗುತ್ತದೆ. ಇಂಥ ಪವಾಡ ಕನ್ನಡ ಮಹಿಳಾ ಕವಿತೆಯಲ್ಲಿ ಸಂಭವಿಸಿದೆ. + +ಕನ್ನಡದಲ್ಲಿ ಕಳೆದ ಮುವತ್ತು ವರ್ಷಗಳಲ್ಲಿ ನಡೆದಿರುವ ಹೆಣ್ಣಿನ ಬದುಕಿನ ಅನನ್ಯತೆಯನ್ನು, ಘನತೆಯನ್ನು ಕುರಿತ ಚರ್ಚೆಗಳು ಕನ್ನಡದ ಕವಿತೆಯಲ್ಲಿ ಮೈತಳೆಯುತ್ತಿರುವ ಮಾಯಾವರಣಕ್ಕೆ ವಸುಂಧರಾ ಅವರು ಶೀಘ್ರ ಪ್ರವೇಶ ಪಡೆದರೆ ಅವರ ಕಾವ್ಯಕಟ್ಟುವ ಶಬ್ಧಯಾನದ ಕೌಶಲ್ಯಕ್ಕೆ ಅರ್ಥಯಾನದ ಸಹಚರ್ಯೆಯೂ ತಾನಾಗಿಯೇ ಲಭಿಸುವುದು. ಈ ನಿಟ್ಟಿನಲ್ಲಿ ಅಕ್ಕ, ವೈದೇಹಿ, ಸವಿತಾ ನಾಗಭೂಷಣ, ಲಲಿತಾ ಸಿದ್ಧಬಸವಯ್ಯ, ವಿನಯ ವಕ್ಕುಂದ, ಕವಿತಾ ರೈ, ಪಿ. ಚಂದ್ರಿಕಾ ಮುಂತಾದ ಕವಿಗಳ ಕವಿತೆಗಳ ಅಭ್ಯಾಸ ಅವಶ್ಯಕವೆಂದು ನನಗೆ ತೋರುತ್ತಿದೆ. + +ವಸುಂಧರಾ ಅವರ ಕವಿತೆಗಳಲ್ಲಿ ಮೂರು ಮುಖ್ಯವಾದ ಹೆಣ್ಣಿನ ಅವಸ್ಥೆಗಳು ಶೋಧಕ್ಕೆ ಒಳಗಾಗಿರುವುದನ್ನು ಕಾಣುತ್ತೇವೆ. ಮೊದನೆಯದು ಆತ್ಮಸಂಗಾತವನ್ನು ನಿರೀಕ್ಷಿಸುವ ನಿರೂಪಣೆಗಳು. ಆದರ್ಶಮಯವಾದ ಹೆಣ್ಣು-ಗಂಡಿನ ಸಂಬಂಧವನ್ನು ವಿವರಿಸುವ ಮಾದರಿಯಿದು. ಈ ಬಗೆಯ ನಿರೂಪಣೆಗಳೇ ವಸುಂಧರಾ ಅವರ ಕವಿತೆಯ ಪ್ರಧಾನ ದನಿಯಾಗಿರುವುದನ್ನು ಗುರುತಿಸಬಹುದು. ಎರಡನೆಯ ನಿರೂಪಣೆಗಳು ತಾಯ್ತನದ ಅನುಭವಗಳನ್ನು ಕವಿತೆಯಾಗಿಸಲು ಹಂಬಲಸುತ್ತಿರುವ ಕವಿತೆಗಳು. ಮೂರನೆಯ ನಿರೂಪಣೆಯ ಮಾದರಿ, ಹೆಣ್ಣು ಗಮನಿಸುವ ಹೊರಲೋಕದ ವ್ಯಾಪಾರಗಳಿಗೆ ಪ್ರತಿಕ್ರಿಯಿಸುತ್ತಿರುವ ಕವಿತೆಗಳು. ಈ ಮಾದರಿಗಳನ್ನು ಬರೆಯುವಾಗ ಮೊದಲನೆಯ ಮಾದರಿಗೆ ತಮ್ಮ ಕನಸನ್ನು ಆಶ್ರಯಿಸುತ್ತಾರೆ. ಎರಡನೆಯ ಮಾದರಿಗೆ ತಮ್ಮ ಬದುಕಿನಲ್ಲಿ ಮಗುವಾಗಿ ಉಂಡ ಹಾಗೂ ತಾಯಿಯಾಗಿ ನೀಡಿದ ಅನುಭವವನ್ನೆ ಆಧರಿಸಿ ಬರೆಯುತ್ತಾರೆ. ಇನ್ನು ಮೂರನೆಯ ಮಾದರಿಯಾದ ಲೋಕ ವಿಮರ್ಶೆಯನ್ನು ಬರೆಯುವಾಗ ತಾವು ಶೈಕ್ಷಣಿಕವಾಗಿ ಪಡೆದ ಜ್ಞಾನವನ್ನು ತಮ್ಮ ತಿಳಿವಿನ ಚೌಕಟ್ಟಾಗಿ ಬಳಸುತ್ತಾರೆ. ಈ ಮಾದರಿಗಳು ವಸುಂಧರಾ ಅವರಿಗೆ ಮಾತ್ರ ಸೀಮಿತವಾಗದೆ ಇಂದಿನ ಮಹಿಳಾ ಕಾವ್ಯದ ಮುಖ್ಯವಾದ ನೆಲೆಯೂ ಆಗಿರುವುದು ಅಭ್ಯಾಸ ಯೋಗ್ಯವಾದ ಸಂಗತಿಯಾಗಿದೆ. ಈ ಮಾದರಿಗಳಲ್ಲಿ ಬಳಕೆಯಾಗಿರುವ ಕನ್ನಡ ಭಾಷಿಕ ಪ್ರಯೋಗಗಳು ಹೆಚ್ಚು ಏಕರೂಪಿ ಕನ್ನಡವಾಗಿರುವ ಅಪಾಯವನ್ನು ವಸುಂಧರಾ ಅವರು ಕಾವ್ಯ ಕಟ್ಟುವ ಈ ಪಯಣದಲ್ಲಿ ಬೇಗನೆ ಅರಿತುಕೊಳ್ಳಲಿ ಎಂಬ ಹಾರೈಕೆ ನನ್ನದು. + +ಮಂಡ್ಯದ ಹಳ್ಳಿಗಳ ನುಡಿ ವರಸೆಯ ದನಿಗಳು ಕವಿತೆಗೆ ವಿಲಕ್ಷಣವಾದ ಸೌಂದರ್ಯವನ್ನು ತಂದುಕೊಡುತ್ತವೆ ಎಂಬುದನ್ನು ವಸುಂಧರಾ ಅರಿತರೆ ಅವರ ಕಾವ್ಯಕ್ಕೆ ಮಣ್ಣಿನ ಗಂಧಗಮಲು ಅನಾಯಾಸವಾಗಿ ದೊರುಕುತ್ತದೆ. + +ವಸುಂಧರಾ ಅವರ ಕವಿತೆಗಳ ಸ್ಥಾಯಿಗುಣ ಸಹ ಹೃದಯ ಸಂವಾದ. ‘ಧೀಮಂತ ನಗ್ನತೆ’ ಎಂಬ ಚಿಕ್ಕ ಪದ್ಯ ತನ್ನ ಅನನ್ಯ ಒಳನೋಟದಿಂದ ಗಮನ ಸೆಳೆಯುತ್ತಿದೆ. ಜೈನಧರ್ಮದ ಅಹಿಂಸಾ ಪರಮೋಧರ್ಮ ಎಂಬ ತತ್ವದಂತೆ ಗೆದ್ದರೂ ಅಣ್ಣನಿಗೆ ಪದವಿ-ಪಟ್ಟಗಳನ್ನು ಬಿಟ್ಟುಕೊಟ್ಟ ಬಾಹುಬಲಿ ಗೊಮ್ಮಟನಾಗಿ ಅವತರಿಸಿದ್ದು ಕಾಲ ವಿಸ್ಮಯ. ನನಗೆ ನೆನಪಿರುವ ಹಾಗೆ ಬುದ್ಧನೊಂದಿಗೆ ಸಂವಾದಕ್ಕೆ ಎಲ್ಲಾ ಮಹಿಳಾ ಕವಿಗಳು ಪ್ರಯತ್ನಸಿರುವುದು ಕಂಡುಬರುತ್ತದೆ. ಯಶೋಧರೆಯನ್ನು ಪ್ರತಿನಿಧಿಸಿಯೋ ಅಥವಾ ತಮ್ಮ ಮೇಲೆಯೇ ಆಕೆಯನ್ನು ಆಹ್ವಾನಿಸಿಕೊಂಡು ತಥಾಗತನೊಂದಿಗೆ ತರ್ಕ ಹೂಡಿದ ಕವಿತೆಗಳು ಸಾಕಷ್ಟು ಕಾಣಿಸುತ್ತವೆ. ಆದರೆ ಗೊಮ್ಮಟ್ಟನನ್ನು ಕುರಿತು ನಿನ್ನ ತಪಸ್ಸಿನ ಸಂದರ್ಭದಲ್ಲಿ ನಿನಗೆ ನಿನ್ನನ್ನು ಪ್ರೀತಿಸಿದ ಮುಖ ನೆನಪಿಗೆ ಬರಲಿಲ್ಲವೇ ಎಂದು ಪ್ರಶ್ನಿಸಿದ ಕವಿತೆ ಇಲ್ಲವೆಂದೇ ಹೇಳಬೇಕು. + +ಎಷ್ಟು ಕಠಿಣನೋ ನೀನುಮಹಾ ಮೌ(ಮು)ನಿಕಾಡಲಿಲ್ಲವೇನಾಗ ಒಲುವಿನೊಂದು ಮುಖ?ಕಡೆಯಾಯ್ತೆ ನಿನಗೆ ಸಿರಿಯೊಳಗಣ ಸುಖ? + +ಈ ಸಾಲುಗಳಲ್ಲಿ ನಲ್ಮೆಯ ಹೆಣ್ಣನ್ನು ಬಾಹುಬಲಿಯೂ ಕೂಡ ತಾನು ವಿಸರ್ಜಿಸಬೇಕಾದ ಪದಾರ್ಥವೆಂದು ಬಗೆದ ಎಂಬ ಆರೋಪವನ್ನು ಕೇಳಲಾಗುತ್ತಿದೆ. “ನೆಲಸಲಿ ನಿನ್ನ ವಕ್ಷದೊಳೆ ಭಟಖಡ್ಗ ಮಂಡಲ”ವೆಂದು ಮಣ್ಣುನ್ನೂ, ಚಂಚಲೆ ರಾಜ್ಯಲಕ್ಷ್ಮಿಯೆಂದು ಹೆಣ್ಣನ್ನು, ನಿರಾಕರಿಸುವ ಬಾಹುಬಲಿಯ ನಡೆಯಲ್ಲಿ ತಿರಸ್ಕಾರಕ್ಕಿಂತ ಹೆಣ್ಣನ್ನು ಅಧಿಕಾರ ಲಾಂಛನವಾದ ಮಣ್ಣು ಮತ್ತು ಹೊನ್ನುಗಳಿಗೆ ಸಮೀಕರಿಸಿದ್ದನ್ನು ಕವಿತೆ ಆಕ್ಷೇಪಿಸುವುದು ಹೊಸ ಪ್ರಶ್ನೆಯಾಗಿದೆ. ಕಡೆಯಾಯ್ತೆ ನಿನಗೆ ಸಿರಿಯೊಳಗಣ ಸುಖ ಎಂಬ ಪ್ರಯೋಗ ಉತ್ಪಾಧಿಸುವ ವಿಷಾದ ನೀರಿಗೆ ಬಿದ್ದ ಕಲ್ಲು ಎಬ್ಬಿಸುವ ತರಂಗ ತೆರೆಗಳಂತೆ ಹಲವು ಅರ್ಥಗಳನ್ನು ಹೊಳೆಯಿಸುತ್ತದೆ. ಈ ಕವಿತೆ ಆಕಾರದಲ್ಲಿ ಪುಟ್ಟದಾಗಿದ್ದರೂ ಅದು ಉಂಟುಮಾಡುವ ಪರಿಣಾಮದಲ್ಲಿ ಮಾತ್ರ ಅದ್ಭುತವಾಗಿದೆ. + + + +ಈ ಕಾಂತಸಂಮಿತವಾದ ಕವಿತೆಗಳಲ್ಲಿ ಕಾಣಿಸುವ ಹೆಣ್ಣಿನ ಚಿತ್ರವನ್ನು ನೀವು ಒಮ್ಮೆ ಕಣ್ಣು ಮುಚ್ಚಿ ಕಲ್ಪಿಸಿಕೊಂಡರೆ ಆಕೆ ವಿವಾಹಿತಳೂ ವಿದ್ಯಾವಂತಳೂ ಆಗಿಯೂ ವಿವಾಹ ಮತ್ತು ಕುಟುಂಬ ಎಂಬ ಮೌಲ್ಯಗಳನ್ನು ಪರೀಕ್ಷಿಸಲು ಪ್ರಯತ್ನಿಸುತ್ತಿರುವುದು ಕಣ್ಮುಂದೆ ಬರುತ್ತದೆ. “ಧನಸ್ಸು ಮುರಿವಂತೆ ನನ್ನ ಮನಸ್ಸು ಮುರಿದೆ”ಎನ್ನುವ ಸೀತೆ, “ನಾನು ನಿಮ್ಮಂತೆ ಬುದ್ಧಳಾಗಲಿಲ್ಲ ಭಗವಾನ್ ಮಿಗಿಲು ಬದ್ಧತೆಯ ತಾಯಿ ಆದೆ”ಎನ್ನುವ ಯಶೋಧರೆ, ನಿನ್ನವರಾಗಿದ್ದರೇನು ಮುಂದೆ ನೂರು ಮಂದಿ ಕೌರವರ ಕೊಂದವರು”ಎಂದು ಪ್ರಶ್ನಿಸುವ ದ್ರೌಪತಿ ಪ್ರಶ್ನಿಸಲಾಗಿರುವ ತಮ್ಮ ಎದುರಿಗಿರುವ ರಾಮ ಬುದ್ಧ ಪಾಂಡವರನ್ನು ಮಾತ್ರ ಉದ್ದೇಶಿಸಿ ಕೇಳಿದ್ದಲ್ಲ. ವಿವಾಹ ಮತ್ತು ಕುಟುಂಬದ ಮೌಲ್ಯ ವ್ಯವಸ್ಥೆ ಹಾಗೂ ಸಂಬಂಧದ ಸ್ವರೂಪವನ್ನು ಪರೀಕ್ಷಿಸಿ ನೋಡುವ ಉದ್ದೇಶವನ್ನು ಇಲ್ಲಿ ಗುರುತಿಸಬೇಕು. + +(ಡಾ ಕೆ ವೈ ನಾರಾಯಣಸ್ವಾಮಿ) + +ಈ ಸಂಕಲನದ ಕೆಲವು ಕವಿತೆಗಳು ಏಕಾಂತದ ಮೌನದಲೆಗಳಿಂದ ಆಗಾಗ ಎಚ್ಚರಗೊಂಡು ತಾನು ಬದುಕುತ್ತಿರುವ ಲೋಕವನ್ನು ನೋಡುವುದುಂಟು. ಅಂತಹ ಲೋಕಾಂತ ಸಂಗತಿಗಳು ಇಲ್ಲಿ ಕವಿತೆ ರೂಪ ಧರಿಸಲು ಪ್ರಯತ್ನಿಸಿವೆ. ತಂತ್ರಜ್ಞಾನ ಯುಗದ ಮಕ್ಕಳ ಕನ್ನಡ ಕಲಿಕೆಯನ್ನು ಕುರಿತ ‘’ಕನ್ನಡ ಕಂದ”- ಮಂಡ್ಯದಲ್ಲಿ ಜನಪದವಾಗಿ ಉಳಿದಿರುವ ಗಾಂಧಿಯ ನೆನಪಿನ ‘ಗಾಂಧೀ’ ಕುರಿತ ಎರಡು ಪದ್ಯಗಳು ಹಾಗೂ ನೇಗಿಲ ಯೋಗಿಯನ್ನು ನೆನಪಿಗೆ ತರುವ ಕಪ್ಪುಜನರು, ಎಂಬ ಕವಿತೆಗಳನ್ನು ಪರಿಶೀಲಿಸಬಹುದು. ಲೋಕವನ್ನು ಕಾವ್ಯಾನುಭೂತಿಯಾಗಿಸಲು ಅನುಭವ ಮಾತ್ರ ಸಾಲದು ಇದಕ್ಕೆ ಅಗತ್ಯವಾದ ಲೋಕದೃಷ್ಟಿಯನ್ನು ಕವಿ ತಮ್ಮ ವ್ಯುತ್ಪತ್ತಿ ಜ್ಞಾನದಿಂದ ಮುಂದಿನ ಸಂಕಲನದ ಹೊತ್ತಿಗೆ ಪಡೆಯುತ್ತಾರೆ ಎನ್ನುವ ನಂಬಿಕೆ ನನಗಿದೆ. + +ಈ ಸಂಕಲನದ ಹಲವು ಉತ್ತಮ ಕವಿತೆಗಳನ್ನು ಕುರಿತು ಚರ್ಚೆ ಬೆಳೆಸಬಹುದು. ಓದುಗರು ಈ ಕವಿತೆಗಳ ಲೋಕವನ್ನು ಮುಕ್ತ ಮನಸ್ಸಿನಿಂದ ಪ್ರವೇಶ ಮಾಡಲು ಅನುವು ಮಾಡಿಕೊಡಲು ನಾನು ಅಂತ ಕವಿತೆಗಳನ್ನು ಹೆಸರಿಸಿ ಸುಮ್ಮನಾಗುತ್ತೇನೆ. :ಮೌನ ಮುತ್ತು: ಉರಿ- ಮಿಂಚು, ನಮ್ಮ ಹೆಸರೊಟ್ಟಿಗೆ, ಮಳೆ ಮತ್ತು ನಾನು, ಕಾಯಬೇಕಿದ ಕಾಲ, ಸ್ವಾಭಿಮಾನ ಮುಂತಾದ ಕವಿತೆಗಳು ಯಾವ ಕವಿಯಾದರೂ ಹೆಮ್ಮೆ ಪಡುಬಹುದಾದ ರಚನೆಗಳಾಗಿವೆ. ವಸುಂಧರಾ ಈ ಕವಿತಾ ಸಂಕಲನವನ್ನು ಯಾವ ಸಂಕೋಚವೂ ಇಲ್ಲದೆ ಕನ್ನಡ ಓದುಗರ ಕೈಗಿಡಬಹುದು ಎಂದು ಶಿಫಾರಸ್ಸು ಮಾಡುತ್ತೇನೆ. + + + +ಈ ಸಂಕಲನದ ಕವಿತೆಗಳನ್ನು ಒಟ್ಟಿಗೆ ಓದುವ ಮೊದಲ ಅವಕಾಶವನ್ನು ನನಗೆ ನೀಡಿದ ಹಾಗೇ ಈ ಕವಿತೆಗಳ ಕುರಿತು ಕವಿತೆಗಳೇ ಹೊಳೆಯಿಸಿದ ಕೆಲ ಚಿಂತನೆಗಳನ್ನು ಹಂಚಿಕೊಳ್ಳುಲು ಈ ಮೊದಲ ಮಾತನ್ನು ಬರೆದುಕೊಡಲು ಕೇಳಿದ ವಸುಂಧರಾ ಅವರ ಕನ್ನಡ ಕಾವ್ಯ ಪ್ರಯಾಣ ಧೀರ್ಘವಾಗಿರುವಂತೆ ಕನ್ನಡ ಕವಿತೆಗೆ ಕೆಲವು ಕಡಲ ಮುತ್ತುಗಳನ್ನು ಹೊತ್ತು ತರಲೆಂದು ಹಾರೈಸುತ್ತೇನೆ. ವಸುಂಧರಾ ಅವರನ್ನು ಪರಿಚಯಿಸಿ ಈ ಕವಿತೆಗಳಿಗೆ ನಾಲ್ಕು ಮಾತುಗಳನ್ನು ಬರೆಯಲು ಕಾರಣನಾದ ಅನುಗಾಲದ ಗೆಳೆಯ ದಿಲಾವರ ರಾಮದುರ್ಗನಿಗೆ ವಂದನೆಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_406.txt b/Kenda Sampige/article_406.txt new file mode 100644 index 0000000000000000000000000000000000000000..7699942debbb74f02779b1773cc50ec239550297 --- /dev/null +++ b/Kenda Sampige/article_406.txt @@ -0,0 +1,39 @@ + + +ಆಕಾಶವಾಣಿಯ ಹಲವು ವರ್ಷಗಳ ಹಿರಿಯ ಸಹೋದ್ಯೋಗಿಯೂ, ಕನ್ನಡದ ಹೆಸರಾಂತ ಕವಿಯೂ ಆಗಿರುವ ಜಿ.ಕೆ.ರವೀಂದ್ರಕುಮಾರರ ಈ ಲಲಿತ ಪ್ರಬಂಧಗಳನ್ನು ಓದಲು ತೊಡಗಿದ ಕೆಲ ಹೊತ್ತಿನಲ್ಲೇ ನನ್ನಲ್ಲಿ ಉಂಟಾದ ಅಚ್ಚರಿ ಮತ್ತು ಹುಟ್ಟಿದ ಮಂದಹಾಸವನ್ನು ಹೇಗೆ ವಿವರಿಸಲಿ? + +ಅಚ್ಚರಿ ಏನೆಂದರೆ ಗಂಭೀರ ಸ್ವಭಾವದವರೂ, ಅಷ್ಟೇ ಗಂಭೀರ ಧ್ವನಿಯ ಕವಿತೆಗಳನ್ನೂ ಬರೆದಿರುವ ರವೀಂದ್ರಕುಮಾರರು ಇಲ್ಲಿ ಅದು ಹೇಗೆ ಸಡಿಲಾಗಿ, ಸಲೀಸಾಗಿ ಬಯಲಲ್ಲಿ ಕ್ರಿಕೆಟ್ ಚೆಂಡೊಂದರ ಹಿಂದೆ ಲಂಗುಲಗಾಮಿಲ್ಲದೆ ಓಡುವ ಬಾಲಕನ ಹಾಗೆ, ಹಿಡಿಯಬೇಕಿದ್ದ ಬಾಲನ್ನೂ ಮರೆತು ಬದುಕಿನ ಬಿಡಿಬಿಡಿ ವಿವರಗಳನ್ನು ವಿವರಿಸುತ್ತಾರಲ್ಲಾ ಅದಕ್ಕೆ. ಮಂದಹಾಸ ಯಾಕೆಂದರೆ ಆ ವಿವರಗಳಲ್ಲಿ ಕಾಣುವ ಲವಲವಿಕೆ, ತುಂಟತನ ಮತ್ತು ಓದಿ ಮುಗಿಸುವಷ್ಟೊತ್ತಿಗೆ ಆವರಿಸುವ ಸಣ್ಣ ಸಣ್ಣ ವಿಷಾದಗಳು ಮತ್ತು ಒಂಟಿತನ. + +ಚಿಕ್ಕಜಾಜೂರಿನ ಬಳಿಯ ಗುಂಜಿಗನೂರಿನ ಅದಮ್ಯ ಉತ್ಸಾಹದ ಹುಡುಗನೊಬ್ಬ ದೇಶಕಾಲಗಳ ಎಲ್ಲೆಗಳನ್ನು ಮೀರಲು ಕ್ರಿಕೆಟನ್ನೂ, ಸಿನೆಮಾ ಹಾಡುಗಳನ್ನೂ, ಶಾಸ್ತ್ರೀಯ ಸಂಗೀತವನ್ನೂ, ಕನ್ನಡ ಕಾವ್ಯವನ್ನೂ, ರೇಡಿಯೋವನ್ನೂ ಮೈಗೆಲ್ಲ ಹಚ್ಚಿಕೊಂಡು ಓಟಕ್ಕೆ ಸಿದ್ಧನಾದ ಪರಿ. ಬಹುತೇಕ ಅಜ್ಞಾತವಾಗಿರುವಂತಹ ಹಳ್ಳಿಗಳಲ್ಲಿ ಹುಟ್ಟಿ ಬೆಳೆದು, ನಗರಗಳ ಮಾಯೆಗಳಿಗೆ ಮರುಳಾಗಿ, ಶಾಸ್ತ್ರೀಯವಾಗಿರುವುದರ ಹಿಂದೆ ಬಿದ್ದು ನೋಯಿಸಿಕೊಂಡು ಆಮೇಲೆ ಈ ಎಲ್ಲದರ ಕುರಿತು ನಮ್ಮೊಳಗೇ ಸಣ್ಣಗೆ ನಗುವುದಿದೆಯಲ್ಲ ಅದು ಇಲ್ಲಿರುವ ಬಹುತೇಕ ಪ್ರಬಂಧಗಳ ಆತ್ಮ. ಬಹುಶ: ರವೀಂದ್ರ ಕುಮಾರರು ಕಾವ್ಯ ಕನ್ನಿಕೆಯನ್ನು ಸ್ವಲ್ಪಕಾಲ ಬದಿಗೆ ತಳ್ಳಿ, ಗದ್ಯವೆಂಬ ಹುಚ್ಚು ಜೋಗಿಯ ಹಿಂದೆ ಅಲೆಯುವ ಅಲೆಮಾರಿತನಕ್ಕೆ ಮರುಳಾದರೆ ಒಳ್ಳೆಯ ಕಥನಗಾರನೊಬ್ಬ ಕನ್ನಡಕ್ಕೆ ಎಂಟ್ರಿ ಕೊಡಬಹುದು ಎಂದು ನನಗಂತೂ ಅನಿಸಿದೆ. ಕವಿಯೊಬ್ಬ ಪ್ರತಿಮೆಗಳ ಹಂಗು ತೊರೆದು ಬದುಕಿನ ಬಹು ನಿರೀಕ್ಷಿತ ಅಚ್ಚರಿಗಳ ಕುರಿತು ಎಲ್ಲೂ ಸಲ್ಲದ ಆದರೆ ಎಲ್ಲವನ್ನೂ ಕಾಣುವ ಒಬ್ಬ ಯಾತ್ರಿಕನಂತೆ ಒಂದು ಸಣ್ಣ ನಗುವಿನೊಂದಿಗೆ ವಿವರಿಸುವ ರೀತಿ ಇದೆಯಲ್ಲ ಅದು ಒಂದು ರೀತಿಯ ಬಿಡುಗಡೆ. ತಮ್ಮ ಬಾಲ್ಯದಲ್ಲೇ ಈ ರೀತಿಯ ನಿರುಮ್ಮಳ ಬಿಡುಗಡೆ ಪಡೆದಿರುವವರಂತೆ ಇಲ್ಲಿರುವ ಬರಹಗಳನ್ನು ಓದಿದರೆ ರವೀಂದ್ರಕುಮಾರ್ ಕಾಣಿಸಿಕೊಳ್ಳುತ್ತಾರೆ. + +(ಜಿ.ಕೆ.ರವೀಂದ್ರಕುಮಾರ್) + +ಆದರೆ ನನಗೆ ಅಚ್ಚರಿಯಾಗುವುದು ರವೀಂದ್ರಕುಮಾರರೂ ಸೇರಿದಂತೆ ನಾವೆಲ್ಲರೂ ಯಾಕೆ ಕಾವ್ಯದೇವಿಗೆ ಮೊದಲು ಮುಗಿಬೀಳುತ್ತೇವೆ ಮತ್ತು ನಂತರ ಗದ್ಯದ ಕಡೆ ಹೊರಳುತ್ತೇವೆ? ಬಹುಶ: ಇದು ಜಗತ್ತಿನ ಎಲ್ಲೆಡೆಯ ಬರಹಗಾರರ ಹಣೆಯ ಬರಹವೂ ಆಗಿರಬಹುದು. ಹೋಗಲಿ ಬಿಡಿ ಈ ಕುರಿತು ಇನ್ನಷ್ಟು ತಲೆಕೆಡಿಸಿಕೊಂಡರೆ ಪ್ರಯೋಜನವಿಲ್ಲದ ಇನ್ನಷ್ಟು ಇಂತಹದೇ ಮಸಲಾ ಮಾತುಗಳು ಹೊರಬರಬಹುದು. ನಡುವೆ ಈ ಮುನ್ನುಡಿಯನ್ನು ಸ್ವಲ್ಪ ನಿಲ್ಲಿಸಿ ಉಸ್ತಾದ್ ಅಮೀನ್ ಖಾನರು ಹಾಡಿರುವ ಬೆಳಗಿನ ಮೊದಲ ಪ್ರಹರದ ರಾಗ ‘ಆಹಿರ್ ಭೈರವಿ’ಯನ್ನು ನಡು ಇರುಳು ಕೇಳುತ್ತಾ ಕುಳಿತೆ. ಕಡೆದ ಕಲ್ಲಿನಂತೆ ಕದಲದೆ ಕುಳಿತು ಹಾಡುವ ಖಾನ್ ಸಾಹೇಬರು ಸುಮಾರು ೨೦ ನಿಮಿಷಗಳ ನಂತರ ಭಂಗಿ ಬದಲಿಸಿ, ‘ಪಿಯಾ ಪರದೀನ್ ಪರಮಸುಖ್ ಚತುರ’ ಎಂದು ಸಡಿಲಾಗುತ್ತಾರೆ. + +ಸಮುದ್ರದ ಘನಗಂಭೀರ ನಿಶ್ಯಬ್ಧ ಮೌನದಲ್ಲಿ ಕಂಗೆಟ್ಟ ಕೇಳುಗನ ಕಿವಿಯ ಪಟಲದಲ್ಲಿ ಇದ್ದಕ್ಕಿದ್ದಂತೆ ಜುಳುಜುಳು ಹರಿಯುವ ತೊರೆಯ ಸದ್ದು. ಹಾಡುವ ಖಾನರೂ, ಕೇಳುವ ನಾವೂ ಬೇರೆ ಬೇರೆ ಅಲ್ಲ ಎಂದೆನಿಸುವ ಅನುಪಮ ಸಂಗೀತದ ಚತುರವಾದ ಓಟ. ಒಂದು ಕ್ಷಣ ತಬ್ಬಿಬ್ಬಾದೆ. ನಾವು ಯಾಕೆ ಕವಿಗಳೂ, ಬರಹಗಾರರೂ, ಗದ್ಯದವರೂ, ಪದ್ಯದವರೂ ನಾವಲ್ಲದ ಏನೋ ಒಂದನ್ನು ಮೈಮೇಲೆ ಸುಳ್ಳುಸುಳ್ಳೇ ಆವಾಹಿಸಿಕೊಂಡು ಇರುವ ಒಂದು ಆಯಸ್ಸನ್ನೆಲ್ಲ ಕಳೆದುಬಿಡುತ್ತೇವೆ? ಗಹನವಲ್ಲದ ತುಂಟತನ, ನಿತ್ಯ ಬದುಕಿನ ಪುಟ್ಟಪುಟ್ಟ ವಿವರಗಳನ್ನು ಕಂಡಲ್ಲೇ ಕ್ಯಾಮರಾದಂತೆ ಸೆರೆಹಿಡಿಯುವ ಕಥನಗಾರನ ಗುಣ, ಹಸಿವನ್ನೂ, ನೋವನ್ನೂ, ನಿರಾಶೆಯನ್ನೂ ಸಣ್ಣದೊಂದು ವಾಕ್ಯದಲ್ಲೇ ಸೂಚಿಸಿಬಿಡಬಲ್ಲ ಕ್ಲುಪ್ತತೆ ಇವೆಲ್ಲವೂ ಇರುವ ಇವರು ಗದ್ಯದ ಕಡೆ ಹೊರಳಲು ಇಷ್ಟೊಂದು ಕಾಲ ಯಾಕೆ ತೆಗೆದುಕೊಂಡರು?! + +ಇವರ ‘ಅಸ್ತವ್ಯಸ್ತ ಮೀಮಾಂಸೆ’ ಎಂಬ ಪ್ರಬಂಧದ ಸಾಲುಗಳನ್ನೇ ಓದಿ. ಮನೆಗೆ ಬಂದವರನ್ನು ಎಲ್ಲಿ ಕೂರಿಸುವುದು ಎಂಬ ಆತಂಕದಲ್ಲೂ ಸೋಫಾದ ಮೇಲೆ ಅರ್ಧ ಓದಿದ ಪೇಪರು ಆಕಾಶ ನೋಡುತ್ತಾ ಅಂಗಾತ ಮಲಗಿರುವುದು ಕಾಣಿಸುತ್ತದೆ. ಸೋಫಾ ಕೈಗಳ ಮೇಲೆ ಬೆಳಗ್ಗೆ ನೀವೇ ಕುಡಿದಿಟ್ಟ ಲೋಟ. ಸೋಫಾದ ಮೂಲೆಯಲ್ಲಿ ಮೋಹದ ಹೆಂಡತಿಯ ವೇಲ್ ನಗುತ್ತ ಕೆಣಕುತ್ತಿದೆ. ಕೇವಲ ಮೂರೇ ಸಾಲುಗಳಲ್ಲಿ ಮುಗಿದ ವರ್ತಮಾನವನ್ನೂ, ಉಳಿದಿರುವ ಐಹಿಕವನ್ನೂ, ಮೋಹದ ಚಂಚಲ ಸೌಂದರ್ಯವನ್ನೂ ಯಾವುದೇ ಪ್ರತಿಮೆಗಳ ಮುಲಾಜಿಲ್ಲದೆ ಸಾಕ್ಷಿ ಸಮೇತ ಹೇಳುತ್ತಿದ್ದಾರೆ. ‘ಅಡುಗೆ ಮನೆಯ ಕ್ಯಾಲೆಂಡರಿನಲ್ಲಿ ಇನ್ನೂ ಹಾಳೆ ತಿರುಗಿಸಿಲ್ಲ. ಯಾಕೆಂದರೆ ಹಾಳೆಗಳನ್ನು ಯಾರೋ ಹೊಲಿದಿದ್ದಾರೆ. ಮತ್ತೆ ಅಲ್ಲಿ ಎರಡು ಸೂಜಿಗಳನ್ನು ಸಿಕ್ಕಿಸಿದ್ದಾರೆ…’ ಬದುಕಿನ ಅಸ್ತವ್ಯಸ್ತವಾದ ಅಸ್ಥಿತ್ವವಾದವನ್ನು ಹೀಗೆ ಕರಾರುವಾಕ್ಕಾದ ಚಿತ್ರಗಳ ಮುಖಾಂತರ ಬೇರೆ ಯಾರು ಹೇಳುತ್ತಾರೆ? ಇದನ್ನು ಕೇವಲ ಒಂದು ಲಲಿತ ಪ್ರಬಂಧವೆಂದು ಹೇಗೆ ಓದಿ ಮುಂದಕ್ಕೆ ಹೋಗುವುದು? + +ರವೀಂದ್ರಕುಮಾರರು ಕವಿಗಳು. ಅಸಂಖ್ಯಾತ ಕವಿಗೋಷ್ಠಿಗಳಿಗೆ ಹೋಗಿ ಬೋರು ಹೊಡೆಸಿಕೊಂಡು ಬಂದವರು. ಇವರೂ ಖುಷಿಯಾಗಿಯೇ ಕವಿಗೋಷ್ಠಿಗೆ ಹೋಗಿ ಬಂದಿರುತ್ತಾರೆ ಎಂಬ ಗುಮಾನಿಯಿತ್ತು ನನಗೆ. ಆದರೆ ಇವರ ‘ಪದ್ಯವಂತರಿಗಿದು ಕಾಲವಲ್ಲ’ ಎಂಬ ಪ್ರಬಂಧವನ್ನು ಓದಿ. ದೊಡ್ಡದೊಂದು ಅಸಂಗತ ಪ್ರಹಸನದಂತೆ ಗ್ರಾಮೀಣ ಭಾಗವೊಂದರಲ್ಲಿ ನಡೆಯುತ್ತಿರುವ ಕವಿಗೋಷ್ಠಿ. ಮ್ಯಾಟನಿ ನೋಡಲು ಬಂದವರು ಇನ್ನೂ ಮಾರ್ನಿಂಗ್ ಷೋ ನೋಡುತ್ತ ಕುಳಿತಿರಬೇಕಾದ ಸಮಯ ನಿರ್ವಹಣೆ. ಸಭಿಕರಾಗಿ ಕುಳಿತುಕೊಳ್ಳಲು ಯಾವುದೋ ಶಾಲೆಯಿಂದ ಒತ್ತೆಯಾಳುಗಳಂತೆ ಕರೆದು ತಂದಿದ್ದ ಪುಟಾಣಿ ಮಕ್ಕಳು. ಅವರು ಗೋಷ್ಠಿಗಳ ಉದ್ದಕ್ಕೂ ಮಾತನಾಡುತ್ತ ಜಗಳವಾಡುತ್ತ ಕುಳಿತಿದ್ದರು. ಇದೂ ಒಂದು ಬಯಲಾಟವೆಂಬಂತೆ ದೊಡ್ಡವರು ಸುಮ್ಮನೆ ನೋಡುತ್ತಿದ್ದರು. ಮಕ್ಕಳಿಗೆ ಕವಿಗೋಷ್ಠಿಯ ನಡುವಲ್ಲಿ ಅಸಾಧ್ಯ ಬೋರು ತಾಳಲಾಗದೆ `ಜೂsssಟ್’ ಅನ್ನುತ್ತಾ ಕವಿಗಳ ಮುಂದೆಯೇ ಜೂಟಾಟ ಆಡಲು ತೊಡಗುತ್ತಾರೆ. ಊರ ಮಹನೀಯರೊಬ್ಬರು ಮಕ್ಕಳಿಗೆ ‘ಏಯ್ ಕೆಳಗಿಳೀರೋ’ ಅಂತ ಗದರಿಸಿದ್ದು ಕವಿಗಳಿಗೆ ತಮ್ಮನ್ನೇ ಗದರಿಸಿದಂತೆ ಕೇಳಿಸಿ ಅಳ್ಳೆದೆಯಲ್ಲಿ ಕುಳಿತಿದ್ದಾರೆ. ಈ ಕವಿ ಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದವರು ರವೀಂದ್ರಕುಮಾರರು. ಅವರಿಗೆ ಸಿಟ್ಟು ಬರುವ ಬದಲು ಮಕ್ಕಳ ಬಗ್ಗೆ ಮೆಚ್ಚುಗೆ ಬರಲು ತೊಡಗುತ್ತದೆ. ಕವಿಗೋಷ್ಠಿಯಂತಹ ನಿರುಪಯುಕ್ತ ಕೈಂಕರ್ಯಕ್ಕಿಂತ ವೇದಿಕೆಯನ್ನು ಸೂಕ್ತವಾಗಿ ಆಡಲು ಬಳಸಿದ ಮಕ್ಕಳ ಬಗ್ಗೆ ಪ್ರೀತಿಯೂ ಬರುತ್ತದೆ. + +ನಮ್ಮ ಸಧ್ಯದ ಸಾಹಿತ್ಯಕ ಲೋಕದ ಜಡವಾದ ಒಣ ಕಾಷ್ಠದಂತಹ ಸ್ಥಿತಿಗೆ ಕವಿಗೋಷ್ಠಿಗಳು ಸರಿಯಾದ ಪ್ರತಿಮೆ. ಅಲ್ಲಿ ಜೂಟಾಟವಾಡುವ ಮಕ್ಕಳ ಕೇಕೆಯ ಸೌಂದರ್ಯವನ್ನು ಗ್ರಹಿಸುವುದು ಕವಿಯ ಕಣ್ಣು. ಈ ಅಸಂಗತದ ವಿನೋದವನ್ನು ಗ್ರಹಿಸುವುದು ಕಥನಕಾರನ ಗುಣ. ನನಗನಿಸುವುದು ಈ ಸಂಕಲನದ ಬಹುತೇಕ ಪ್ರಬಂಧಗಳಲ್ಲಿ ಓಡಾಡುವುದು ಈ ಮೂರು ಅಂಶಗಳು. ಅದು ಸಂಸಾರವಾಗಿರಬಹುದು, ಸಂಗೀತವಾಗಿರಬಹುದು ಅಥವಾ ಕ್ರಿಕೆಟ್ ಮೈದಾನವಾಗಿರಬಹುದು. ಗ್ರಾಮವೊಂದರ ಬೆರಗುಗಣ್ಣುಗಳ ಒಳ್ಳೆಯ ಹುಡುಗನೊಬ್ಬ ಬೆಳೆಯುತ್ತ ಬೆಳೆಯುತ್ತ ಕವಿಯೂ ಆಗಿ ತಾನು ಇದುವರೆಗೆ ಇದಮಿತ್ಥಮ್ ಎಂದುಕೊಂಡ ಸಂಗತಿಗಳು ಕಣ್ಣ ಮುಂದೆಯೇ ಕಳಚಿ ಬೀಳುವುದನ್ನ ವಿನೋದವಾಗಿ ನೋಡುತ್ತಲೇ ಈ ನಡುವೆ ಸಂಭವಿಸುವ ಮಾನವ ನಡಾವಳಿಯನ್ನು ಸಣ್ಣ ಮಕ್ಕಳ ಆಟದಂತೆ ಖುಷಿಯಿಂದ ಗಮನಿಸುವುದು. + +ಇವರ ‘ಟೀಂ ಗುಂಜಿಗನೂರು’ ಎಂಬ ಪ್ರಬಂಧ ಈ ಸಂಕಲನದ ಬಹಳ ಮುಖ್ಯ ಬರಹ ಎಂದು ನನಗೆ ಅನ್ನಿಸಿದೆ. ವ್ಯಾಪ್ತಿಯಲ್ಲಿ ಮತ್ತು ವಿವರಗಳಲ್ಲಿ ದೊಡ್ಡದೊಂದು ಕಾದಂಬರಿಯ ವಿಸ್ತಾರವನ್ನು ಪಡೆದುಕೊಳ್ಳಬಹುದಾಗಿದ್ದ ಬರಹವಿದು. ಗುಂಜಿಗನೂರು ಎನ್ನುವ ಪುಟ್ಟ ಊರಿನ ಪಡ್ಡೆ ಹುಡುಗರು ಕ್ರಿಕೆಟ್ ಎಂಬ ಲೋಕಾಂತರವನ್ನು ಗೆಲ್ಲಲು ಹೊರಡುವ ಮುಖಾಂತರ ಹಳ್ಳಿಯೊಂದರ ಮುಗ್ಧ ಹಪಹಪಿಗಳನ್ನು ಜಗದ ಭೂಪಟದಲ್ಲಿ ಕಡೆದು ನಿಲ್ಲಿಸಲು ನಡೆಸುವ ಸಾಹಸ ಗಾಥೆಯ ವಿವರಗಳು ಇಲ್ಲಿವೆ. + + + +ಹರಿದ ಬಟ್ಟೆಯ ಚೂರುಗಳನ್ನು ಸುತ್ತಿ ಚೆಂಡನ್ನಾಗಿ ಮಾಡಿಕೊಂಡು ಆಡುವ ಲೋಕೋತ್ತರ ಆಟ. ಚರಂಡಿಯ ಕೆಸರು ನೀರಲ್ಲಿ ಬಿದ್ದ ಬಟ್ಟೆಯ ಚೆಂಡಿನಿಂದ ಹನಿಗಳೋಪಾದಿಯಲ್ಲಿ ಚಿಮ್ಮುವ ಕೊಳೆನೀರಿನ ಸೌಂದರ್ಯ! ಹೊಡೆದ ಬೌಂಡರಿಗಳು ಪಕ್ಕದ ರಾಗಿ, ಉದ್ದು, ಜೋಳದ ಪೈರಿನೊಳಕ್ಕೆ ಹೊಕ್ಕು ಹಳ್ಳಿಗರ ಬಾಯಿಂದ ಅಶ್ಲೀಲವಾಗಿ ಬಯ್ಯಿಸಿಕೊಳ್ಳಬೇಕಾದ ದೈನೇಶಿ ಸ್ಥಿತಿ. ಹೊಟ್ಟೆಗೆ ಅನ್ನವಿಲ್ಲದೆ ‘ಟೀಂ ಗುಂಜಿಗನೂರು’ ಕಟ್ಟುವ ಈ ಪಡ್ಡೆ ಹುಡುಗರು ಕೊನೆಗೂ ಕಂಡುಕೊಳ್ಳುವ ಸತ್ಯ ಈ ಕ್ರಿಕೆಟ್ ಎಂಬುದು ಸಿಟಿಯವರಿಗೆ ಮಾತ್ರ ಅವಕಾಶ ನೀಡುವ ಆಟ ಎಂಬುದು. + +‘ಟೀಂ ಗುಂಜಿಗನೂರು ಎಂಬುದು ರಾಜ್ಯದ ಎಲ್ಲೆಡೆ ಹರಿದು ಹಂಚಿಹೋಗಿ, ಗುಡಿಯ ಮೇಲಿದ್ದ ಕ್ರಿಕೆಟ್ ಕಾಮೆಂಟರಿಯ ರೇಡಿಯೋ ಮಾಯವಾಗಿ ಇತಿಹಾಸ ಎಂದರೆ ಇಷ್ಟೇ ಅಲ್ಲವೇ’ ಎಂಬ ಅನುಭೂತಿಯೊಂದಿಗೆ ಪ್ರಬಂಧವೂ ಮುಗಿಯುತ್ತದೆ. ಆದರೆ ಈ ಬರಹದಲ್ಲಿ ರವೀಂದ್ರಕುಮಾರರು ಕೊಡುವ ವಿವರಗಳು ಹಾಗೂ ಆ ವಿವರಗಳಲ್ಲಿ ಅವರು ತೋರುವ ಉತ್ಸಾಹ ಮತ್ತು ವಿಷಾದಗಳು ಬಹಳ ಒಳ್ಳೆಯ ಕಥನವೊಂದರಂತೆ ಓದಿಸಿಕೊಂಡು ಹೋಗುತ್ತದೆ. ‘ಇನ್ನು ನಾನೂ ಒಂದು ಲಗಾನ್ ಸಿನೆಮಾ ತೆಗೆಯುವುದು ಬಾಕಿ ಇದೆ’ ಎಂದು ಅವರು ಪ್ರಬಂಧದ ಕೊನೆಯಲ್ಲಿ ಅನ್ನುತ್ತಾರೆ. ನನಗೂ ಹೀಗೆಯೇ ಅನ್ನಿಸಿದೆ. ಎಷ್ಟು ಒಳ್ಳೆಯ ಕಥನಗಾರಿಕೆ ಅವರ ಕೈಯಲ್ಲಿ ಅಡಗಿಕೊಂಡು ಕುಳಿತಿದೆ. ಅವರು ಮಾಡಬೇಕಿರುವುದು ಮುಷ್ಟಿಯನ್ನು ಸಡಿಲಿಸಬೇಕಿರುವುದು ಅಷ್ಟೇ! + +(ಅಬ್ದುಲ್ ರಶೀದ್) + +ಕುನ್ನಕ್ಕುಡಿ ವೈದ್ಯನಾಥನ್ ಅವರ ವಯೋಲಿನ್ ವಾದನದ ಕುರಿತಾದ ಬರಹವೂ ಹೀಗೆಯೇ. ರೇಡಿಯೋದಲ್ಲಿ ಪ್ರಸಾರವಾಗಬೇಕಾಗಿದ್ದ ಅವರ ವಾದನವನ್ನು ಕೇಳಲು ತರುಣನಾಗಿದ್ದ ಲೇಖಕರು ರೈಲ್ವೇ ಸ್ಟೇಷನ್ ನಿಂದ ಒಂದೂವರೆ ಮೈಲು ದೂರದ ಹಳ್ಳಿಯ ಮನೆಗೆ ಗಂವ್ ಎನ್ನುವ ಕತ್ತಲಲ್ಲಿ ನಡೆದ ವಿವರಗಳು ಚೇತೋಹಾರಿಯಾಗಿದೆ. ಅಷ್ಟು ಹಂಬಲಿಸಿದ್ದ ಕುನ್ನಕ್ಕುಡಿಯವರ ವಯಲಿನ್ ವಾದನವನ್ನು ಪ್ರತ್ಯಕ್ಷವಾಗಿ ಕೇಳಿದ ಮೇಲೆ ಉಂಟಾದ ಭ್ರಮನಿರಸನವನ್ನೂ ಹಾಗೆಯೇ ವಿವರಿಸುತ್ತಾರೆ. ‘ಕುನ್ನಕ್ಕುಡಿ ಎಂಬ ಸೌಧದ ಮಹಡಿಯ ಕಲ್ಲೊಂದು ಅಲುಗಾಡಿದಂತೆ ಭಾಸವಾಯಿತು’ ಅನ್ನುತ್ತಾರೆ. ‘ಅವರ ಪ್ರಯೋಗಶೀಲತೆಯ ಉತ್ಸಾಹ ಅವರ ವಾದನದ ಅಲೌಕಿಕತೆಯನ್ನು ನುಂಗಿ ಹಾಕಿತೇ’ ಎಂದೂ ಕೇಳುತ್ತಾರೆ. ‘ಪ್ರತಿಭೆಯ ಮೇಲೆ ಮನೋಧರ್ಮ ಸವಾರಿ ಮಾಡಿದರೆ, ಮನೋಧರ್ಮದ ಮೇಲೆ ಸಲೀಸುಭಾವ ಸವಾರಿ ಮಾಡಿದರೆ ಹೀಗಾಗುವುದೇ’ ಎಂದೂ ಕೇಳುತ್ತಾರೆ. + +‘ಚುಕ್ಕೀ ಚುಕ್ಕೀ’ ಎನ್ನುವ ಪ್ರಬಂಧದಲ್ಲೂ ಲೇಖಕರು ಒಂದು ಪ್ರಶ್ನೆ ಎತ್ತುತ್ತಾರೆ. ‘ಯಾರೋ ಇಟ್ಟ ಒಂದು ಚುಕ್ಕಿಗೆ ಇಷ್ಟೆಲ್ಲ ತಲೆಕೆಡಿಸಿಕೊಳ್ಳುವ ನಾನು ನನ್ನೊಳಗಿನ ಚುಕ್ಕಿಗೆ ಹೇಗಪ್ಪಾ ಸಮರ್ಥನೆ ಕೊಡುವುದು’ ಎಂದು ಕೇಳುತ್ತಾರೆ. ‘ಒಂದು ಅಸಂಗತ ಲಹರಿ’ ಎನ್ನುವ ಇನ್ನೊಂದು ಪ್ರಬಂಧದ ಕೊನೆಯ ಸಾಲಲ್ಲಿ ‘ಈ ಪ್ರಬಂಧ ಈಗ ಶುರುವಾಗಿದೆಯೇನೋ ಅನಿಸುತ್ತದೆ ’ ಎನ್ನುತ್ತಾರೆ. ‘ಅಲ್ಲಾ ಇದು ಪ್ರಬಂಧವಾ’ ಎಂದೂ ಕೇಳುತ್ತಾರೆ. ತನ್ನನ್ನು ತಾನೇ ನಿಕಷಕ್ಕೆ ಒಡ್ಡಿಕೊಳ್ಳುವ ಲೇಖಕನಿಗೆ ಮಾತ್ರ ಇನ್ನೂ ಒಳ್ಳೆಯದನ್ನ ಬರೆಯುವ ತಾಕತ್ತಿರುತ್ತದೆ. ರವೀಂದ್ರಕುಮಾರರಿಗೆ ಈ ತಾಕತ್ತು ಬಾಲ್ಯದಿಂದಲೇ ಬಂದಿದೆ ಎಂದು ನನಗೆ ಇಲ್ಲಿನ ಬರಹಗಳನ್ನು ಓದಿದಾಗ ಅನ್ನಿಸಿದೆ. + + + +ಗದ್ಯ, ಪದ್ಯ, ಪ್ರಬಂಧ, ಸಣ್ಣಕಥೆ ಇತ್ಯಾದಿ ಪ್ರಾಕಾರಗಳ ಖಚಿತವಾದ ಅರಿವೂ, ಮುಲಾಜೂ ಇಲ್ಲದೆ ಅಷ್ಟಿಷ್ಟು ಬರೆದುಕೊಂಡು ಓಡಾಡಿಕೊಂಡಿರುವ ನನ್ನಂಥವನಿಂದ ಮುನ್ನುಡಿ ಬರೆಸಿಕೊಂಡ ರವೀಂದ್ರಕುಮಾರರ ಔದಾರ್ಯ ದೊಡ್ಡದು. ಬಹುಶ: ಆಕಾಶವಾಣಿ ಎಂಬ ಜನತೆಯ ವಿಶ್ವವಿದ್ಯಾನಿಲಯದ ನೀರು ಕುಡಿದು ಬದುಕುತ್ತಿರುವ ನಮಗಿಬ್ಬರಿಗೂ ಲಾಗಾಯ್ತಿನ ಸಾಹಿತ್ಯಿಕ ಪರಿಕರಗಳ ಬಗ್ಗೆ ಇರುವ ಸಮಾನವಾದ ವಿನೋದ ದೃಷ್ಟಿಯೂ ಇದಕ್ಕೆ ಕಾರಣವಾಗಿರಬಹುದು. ಮಡಿಕೇರಿಯ ತಾರಾಮಾರ ಮಳೆಯಲ್ಲಿ ಒಂಟಿಯಾಗಿ ನೆನೆಯುತ್ತ ಬೇರೆಬೇರೆ ದಾರಿಯಲ್ಲಿ ನಡೆಯುತ್ತ ಒಂದೇ ಗಮ್ಯವನ್ನು ಸೇರುತ್ತಿದ್ದವರು ನಾವು. ಹಾಗೆಯೇ ಮೈಸೂರೆಂಬ ಸಾಂಸ್ಕೃತಿಕ ನಗರಿಯ ಸಾಹಿತ್ಯಿಕ ಆಷಾಢ ವರ್ಷಧಾರೆಯಲ್ಲೂ ಒಬ್ಬರ ಮುಖವನ್ನೊಬ್ಬರು ನೋಡಿ ನಸು ನಕ್ಕವರು. ಬಹುಶ: ಲಲಿತ ಪ್ರಬಂಧಗಳ ಗುಣವೇ ಇದು ಅನಿಸುತ್ತದೆ. ಬದುಕನ್ನು ಇನ್ನಷ್ಟು ಪ್ರೀತಿಯಿಂದ ನೋಡಲು ಕಲಿಸಿದ ಈ ಸಂಕಲನದ ಪ್ರಬಂಧಗಳಿಗೆ ನಾನಂತೂ ಆಭಾರಿಯಾಗಿದ್ದೇನೆ. ಕನ್ನಡಕ್ಕೊಂದು ‘ಟೀಂ ಗುಂಜಿಗನೂರ್’ ಎಂಬ ಚೇತೋಹಾರಿ ಕಾದಂಬರಿಯನ್ನು ಅವರು ಬರೆಯಬೇಕು ಅನ್ನುವುದು ಅವರಲ್ಲಿ ನನ್ನ ಒತ್ತಾಸೆ. + +ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು. \ No newline at end of file diff --git a/Kenda Sampige/article_407.txt b/Kenda Sampige/article_407.txt new file mode 100644 index 0000000000000000000000000000000000000000..b774de008bf56493f488292f8a637367258a8980 --- /dev/null +++ b/Kenda Sampige/article_407.txt @@ -0,0 +1,45 @@ + + +ನಾನು ಐದಾರು ವರ್ಷಗಳ ಹಿಂದೆ ಸಾಹಿತ್ಯ ಕ್ಷೇತ್ರದಲ್ಲಿ ಸಣ್ಣ ಪುಟ್ಟ ಬರವಣಿಗೆಯಲ್ಲಿ ಪ್ರಯತ್ನಿಸುತ್ತಿದ್ದಾಗ ಅಚಾನಕ್ಕಾಗಿ ಮಿಂಚಿನಂತೆ ಸಿಕ್ಕಿದವರು ಸಂಧ್ಯಾ ರಾಣಿ ಅವರು. ವೀಣೆಯ ತಂತಿಯೊಂದು ಕಂಪಿಸಿ ತನ್ನಿಂದ ತಾನ್ ಅವರ ಬದುಕು ಬರಹಗಳಲ್ಲಿನ ನಿಡಿದಾದ ಮೌನ, ಉತ್ಕಟವಾದ, ಅಷ್ಟೇ ಆಪ್ತವಾದ ನಿಚ್ಚಳ ಮನಸ್ಸು ನನಗೆ ತುಂಬ ಇಷ್ಟ. ತಾನೇ ಮೌನವಾದಂತೆ, ಗಿಳಿಯೊಂದು ಉಲಿದು ಸದ್ದಿಲ್ಲದೆ ಎಲೆಮರೆಯಲ್ಲಿ ಕುಳಿತಂತೆ, ಮೌನವಾದಂತೆ, ಗಿಳಿಯೊಂದು ಉಲಿದು ಸದ್ದಿಲ್ಲದೆ ಎಲೆಮರೆಯಲ್ಲಿ ಕುಳಿತಂತೆ, ಹೇಳಲಾಗದ ಉತ್ಕಟ ಭಾವಗಳನ್ನು ಅವರು ಪದಗಳಲ್ಲಿ ಒಡಮೂಡಿಸುವ ರೀತಿ ಅನುಪಮವಾದುದು. + +ನನ್ನ ಮೆಚ್ಚಿನ ಲೇಖಕಿಯಾದ ಸಂಧ್ಯಾರಾಣಿ ಅವರ ‘ಆನು ನಿನ್ನ ಹಾಡಿದಲ್ಲದೆ ಸೈರಿಸೆನೈಯ್ಯಾ’ ಪುಸ್ತಕವನ್ನು ಈ ನಿರ್ಭರ ಭಾವದೊಂದಿಗೆಯೇ ಓದಿದೆ. ಬಿ ವಿ ಭಾರತಿಯವರು ನಾನು ಗೌರವಿಸುವ ಇನ್ನೊಬ್ಬ ಲೇಖಕಿ. ಅವರ ಸಾಹಸದ ಕೆಚ್ಚು, ಬದುಕಿನೆದುರು ಮಂಡಿಯೂರಿ ಸೋಲದ ಛಲ ನನಗಿಷ್ಟ. ಅವರ ‘ಸಾಸಿವೆ ತಂದವಳು’ ಕೃತಿ ಓದಿದಾಗಿನಿಂದಲೇ ನಾನು ಅವರ ಅಭಿಮಾನಿ. ಅವರ ಕವನಗಳ ನಿರ್ಭಿಡೆ, ಕೆಚ್ಚಿನೊಳಗೆ ಮಿಡಿಯುವ ಮಿದು ವಿಷಣ್ಣತೆ ಅವರ ಬರಹಗಳ ನ್ನು ವಿಶಿಷ್ಟವಾಗಿಸುತ್ತದೆ. + +ಒಂದು ಕಳೆದು ಹೋದ ಪ್ರೇಮವೋ ಅದೇ ತರಹದ ಇನ್ನಾವುದೋ ಕೋಮಲ ಭಾವ ಎಲ್ಲಾ ಹೃದಯದಲ್ಲಿ ಇರುವ ಕಾರಣದಿಂದಲೇ ಈ ಹಾಡುಗಳು ನಮ್ಮೆಲ್ಲರ ಹಾಡು ಕೂಡ. ಕಾವ್ಯ ವಿಮರ್ಶೆ, ಮೀಮಾಂಸೆ ಅದು, ಇದು ಎಲ್ಲವನ್ನು ಒತ್ತಟ್ಟಿಗಿಟ್ಟು ನನಗನಿಸಿದ ಒಂದಷ್ಟು ವಿಷಯಗಳನ್ನು ಹೇಳಬಯಸುತ್ತೇನೆ. ಮೊದಲೇ ಹೇಳಿದಂತೆ ಈ ಕವನಗಳಲ್ಲಿನ ಸ್ಥಾಯಿ ಭಾವ ‘ಪ್ರೇಮ’. ಪ್ರೇಮದ ಹಂಬಲ, ವಿರಹ, ಸಾಂಗತ್ಯದ ಬಯಕೆ, ಅದರ ನಂತರ ಲಭಿಸುವ ಸಂತೃಪ್ತಿ ಇಲ್ಲವೇ ಶೂನ್ಯ. ನಮ್ಮ ಬಿಕ್ಕುಗಳನ್ನು, ಅಂತರಂಗದ ಮೂಕ ತಳಮಳಗಳನ್ನು, ದಿಕ್ಕೆಟ್ಟ ಮಗುವಿನಂತಹ ತಬ್ಬಲಿತನಗಳನ್ನು ಈ ಕವಿತೆಗಳು ಬಹಳ ಪರಿಣಾಮಕಾರಿಯಾಗಿ ನಿರೂಪಿಸುತ್ತವೆ. + +(ಭಾರತಿ ಬಿ.ವಿ ಮತ್ತು ಸಂಧ್ಯಾರಾಣಿ) + +ಸಂಧ್ಯಾರಾಣಿಯವರ ಶೈಲಿಯ ವಿಶಿಷ್ಟತೆ ಎಂದರೆ ಅವರ ಗದ್ಯವೊಂದು ಕಾವ್ಯದಂತೆಯೂ, ಕಾವ್ಯದಲ್ಲಿ ಗದ್ಯದ ಛಾಯೆಯೂ ಕಾಣಿಸುತ್ತಿರುವುದು. ಉದಾಹರಣೆಗೆ ‘ಸಂಗಾತವೆಂದರೆ ಸರಳಲ್ಲ- ಸಲೀಸು ಮೊದಲೇ ಅಲ್ಲ’ . ‘ಒಮ್ಮೆ ಸಿಕ್ಕ ಹನಿ ಅಮೃತ ಕಾಯುತ್ತದೆ ಬದುಕ’- ಈ ರೀತಿಯ ಸಾಲುಗಳು. ‘ತಾವರೆ ದಳದ ಕಂಗಳು’, ‘ಒಂದು ಹನಿ ಚಂದಿರ’… ಹೀಗೆ ಪ್ರಕೃತಿಯನ್ನು ಅವಲೋಕಿಸಿದ ಕಂಗಳ ಪ್ರತಿಮೆಗಳು. + +ನೆಲದಲ್ಲಿ ಬೇರು ಬಿಟ್ಟ ಮರಗಳನ್ನು ಕಂಡಾಗೆಲ್ಲಕುಂಡದಲ್ಲೇ ನಿಟ್ಟುಸಿರಾದ ಬೋನ್ಸಾಯ್ನನ್ನ ಕಂಗಳಲ್ಲಿ ಕಂಬನಿಯಿಡುತ್ತವೆ + +ಈ ರೀತಿ ಗಕ್ಕನೆ ನಮ್ಮನ್ನು ಅಲುಗಾಡಿಸಿ ಬಿಡುವ ಸಾಲುಗಳನ್ನು ಅವರು ಬರೆಯಬಲ್ಲರು. + +ಅದೇ ರೀತಿ ‘ಹಾಡಿ ಬಿಟ್ಟ ಚರಣದ ಒಂದು ಪಲ್ಲವಿ’ ಈ ರೀತಿಯ ದಟ್ಟ ಭಾವದ ಸೊಲ್ಲುಗಳನ್ನು ಕೂಡ. + +ಸಂಧ್ಯಾ ರಾಣಿಯವರ ಒಂದೊಂದು ಸಾಲುಗಳೂ ಹೀಗೆ. ನಮ್ಮ ಸ್ಮೃತಿ ಪಟಲದಲ್ಲಿ ಬಚ್ಚಿಟ್ಟ ನಿಟ್ಟುಸಿರುಗಳನ್ನು, ಬಿಕ್ಕುಗಳನ್ನು ಒಂದೊಂದಾಗಿ ಎಳೆತಂದು ಕೆನ್ನೆ ತೋಯಿಸುವ ಸಾಲುಗಳು. + +ನೆನಪುಗಳೆಂದರೆಆಷಾಢದಲ್ಲಿ ತೆರೆದಿಟ್ಟ ಕಿಟಕಿಚಿಲಕ ಹಾಕಲು ಮರೆತ ಬಾಗಿಲುಕಡಲ ತೆರೆ, ಶ್ರಾವಣದ ಮಳೆ ( ಕವಿತೆ: ಪಯಣ) + +ಹಾರಿ ಹೋದ ಚಿಟ್ಟೆ ಅಂಗೈಯಲಿ ಉಳಿಸಿದಕ್ಷಣಗಳನ್ನು ನೆನೆಯುತ್ತಿದ್ದೇನೆನಿನ್ನೆಗಳ ಊರಿನಲ್ಲಿ ಕಳೆದುಕೊಂಡನಾಳೆಗಳ ಹುಡುಕುತ್ತಿದ್ದೇನೆ (ಕವಿತೆ: ಅಂಗೈ ಬಿಟ್ಟ ಚಿಟ್ಟೆ) + +ಇನ್ನು ಭಾರತಿಯವರ ಶೈಲಿ ತುಂಬ ವಿಭಿನ್ನ. ಅವರ ಕವಿತೆಗಳೂ ಪ್ರೀತಿಯ ಜಟಿಲತೆಯನ್ನು ತಮ್ಮದೇ ವಿಧದಲ್ಲಿ ಹೇಳುತ್ತವೆ. + + + +ಹೊಂಗೆಯ ಮರದಡಿ ಬೆಳೆದವಳು ನಾನುಈ ಆಲದ ಗೋಜಲು ಜಟಿಲಆದರೂ ಮತ್ತೆ ಮತ್ತೆ ತೂಗಿ ಬೀಳುತ್ತೇನೆ (ಕವಿತೆ: ಪ್ರೀತಿ, ಅನಿವಾರ್ಯತೆ ಇತ್ಯಾದಿ) + +ಮಗುವಿನ ಮುಗ್ಧತೆಯೊಂದಿಗೆ ಕೆಚ್ಚು, ಒಂದು ರೀತಿಯ ನಿರ್ಲಿಪ್ತತೆ ಅವರ ಕವನಗಳ ಸ್ಥಾಯಿ ಭಾವ ಎಂದು ನನಗನಿಸುತ್ತದೆ. + +ಪ್ರಶ್ನೆಗಳಿಗೆಲ್ಲ ಉತ್ತರ ಬರೆಯಬೇಕಾದ ದರ್ದು,ಪರೀಕ್ಷೆಯಲ್ಲಿ ಮಾತ್ರ, ಬದುಕಿನಲ್ಲಲ್ಲ.. (ಕವಿತೆ: ವಿದಾಯ) + +(ಜಯಶ್ರೀ ಬಿ ಕದ್ರಿ ) + +ಹೀಗೆ ತಮ್ಮದೇ ಫಿಲಾಸಫಿಯನ್ನೂ ಅವರು ಹೇಳಬಲ್ಲರು. ‘ಸಾವು’, ‘ಅವನೆಂಬ ಅಸಾಂಪ್ರದಾಯಿಕ ಪದ್ಯ’, ‘ಅಸ್ಪಷ್ಟ ಚುಕ್ಕೆಗಳು’, ‘ನಿರ್ಮೋಹಿಯೇ’ ಹೀಗೆ ಒಳನೋಟಗಳುಳ್ಳ ಅನೇಕ ಕವಿತೆಗಳು. ‘ಎಸ್ಕಲೇಟರ್’, ‘ಸೆಲ್ಫಿ’ ಈ ರೀತಿಯ ಆಧುನಿಕ ಪ್ರತಿಮೆಗಳನ್ನೂ ಅವರು ಬಳಸಿಕೊಂಡಿದ್ದಾರೆ. ಬಿ ವಿ ಭಾರತಿಯವರ ಗದ್ಯದಲ್ಲಿನ ಹಾಸ್ಯ ಪ್ರಜ್ಞೆಯನ್ನು ಮೆಚ್ಚಿಕೊಂಡವಳು ನಾನು. ಅದೇ ಈ ಕವಿತೆಯಲ್ಲಿ ತಣ್ಣಗೆ ಹರಿಯುತ್ತಿರುವ ಹಾಸ್ಯ ಲೇಪಿತ ವಿಷಾದವನ್ನು ಗಮನಿಸಿ: + +ಹಾಗೆ ಹೊರಟು ಅದೆಷ್ಟೋ ಕಾಲ ನಡೆದರೂಅಂತರ ಹೆಚ್ಚುತ್ತಲೇ ಹೋದಕಾರಣ ತಿಳಿವ ಉಮೇದಿಗೆ ಬಿದ್ದಾಗಲೇನನಗೆ ಅರಿವಾಗಿದ್ದುನಾವು ಸಾಗುತ್ತಿದ್ದುದು ಮೆಟ್ಟಿಲ ಮೇಲಲ್ಲವಿರುದ್ಧ ದಿಕ್ಕಿನ ಎಸ್ಕಲೇಟರ್ ಮೇಲೆ ಎಂದು (ಕವಿತೆ: ಎಸ್ಕಲೇಟರ್) + + + +ಈ ಎರಡೂ ಕವಯಿತ್ರಿಯರ ಜೀವನ ಪ್ರೀತಿ, ಕಾವ್ಯದ ಬಗೆಗಿರುವ ಅಗಾಧತೆ ಈ ಎರಡೂ ಕವಯಿತ್ರಿಯರ ಜೀವನ ಪ್ರೀತಿ, ಕಾವ್ಯದ ಬಗೆಗಿರುವ ಅಗಾಧ ಹಂಬಲ, ಅಕ್ಷರಗಳನ್ನು ಅವರು ಆಪ್ತವಾಗಿಸುವ ಪರಿ ನನಗೊಂದು ಬೆರಗು. ‘ಆನು ನಿನ್ನ ಹಾಡಿದಲ್ಲದೆ ಸೈರಿಸೆನಯ್ಯಾ’ ಒಂದು ಅಪೂರ್ವವಾದ ಓದಿನ ಅನುಭವ ಕೊಡುತ್ತದೆ ಎಂದು ಖಚಿತವಾಗಿ ಹೇಳಬಲ್ಲೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_408.txt b/Kenda Sampige/article_408.txt new file mode 100644 index 0000000000000000000000000000000000000000..835360f24a73544e04697073d540ac752c0f0496 --- /dev/null +++ b/Kenda Sampige/article_408.txt @@ -0,0 +1,77 @@ + + +ನನ್ನ ಚಿಕ್ಕತಾಯಿ ಜೈಲಿನ ಬಾಯಿಗೆ ಬೀಳಲಿಕ್ಕಾದ ನನ್ನನ್ನು ಹೇಗೂ ಬಿಡುಗಡೆ ಮಾಡಿದಳು. ನಾನು ಮಾಡಿದ ತಪ್ಪಿಗೆ ನಾನೇ ಬಹಳ ನಾಚಿಕೆಪಟ್ಟು, ಅವಳ ಮೋರೆ ನೋಡುತ್ತಿರಲಿಲ್ಲ. ಅವಳೂ ನನ್ನ ಮೋರೆಯನ್ನು ಚಿರಕಾಲ ನೋಡಲಿಲ್ಲ. ಒಂದು ವರ್ಷದ ಮೇಲೆ ಅವಳು ತನ್ನ ಮುತ್ತೈದೆತನದ ಮೋರೆಯನ್ನು ಈ ಲೋಕದಿಂದ ತಿರುಗಿಸಿಬಿಟ್ಟಳು. ಹೋಗುವಾಗ ತನ್ನ ಒಡವೆಗಂಟನ್ನೂ ಮನೆಯನ್ನೂ ತನ್ನೊಡನೆ ಕೊಂಡು ಹೋಗಲಿಕ್ಕೆ ಮರೆತುಬಿಟ್ಟಳೆಂದು ತೋರುತ್ತಿದೆ. ಮದುವೆಯಾಗಲು ಸಂಭವವಿಲ್ಲದ ನನಗೆ ಅಂದಿನಿಂದ ಹೆಣ್ಣು ಕೊಡಲು ಕೆಲವರು ಮೊದಲು ಮಾಡಿದರು. ಒಬ್ಬಿಬ್ಬರು ನನ್ನನ್ನೇ ಅಳಿಯನಾಗಿ ಮಾಡಿಕೊಳ್ಳಬೇಕೆಂದಿದ್ದರು; ಹಲವರು ನನ್ನ ಪಾಲಿಗೆ ಬಂದ ಚಿನ್ನದ ಗಂಟನ್ನು ಅಳಿಯನಾಗಿ ಮಾಡಿಕೊಳ್ಳಬೇಕೆಂದಿದ್ದರು. ಇದನ್ನೆಲ್ಲಾ ಯೋಚಿಸಿ, ಹೊಸಪೇಟೆ ರಾಜಣ್ಣನವರು ಸ………ತಿ, (ಮದುವೆಯಾದುದರಿಂದ ಹೆಂಡತಿಯ ಹೆಸರನ್ನು ಬಹಿರಂಗವಾಗಿ ಹೇಳಲಿಕ್ಕೆ ಸ್ವಲ್ಪ ಶಂಕೆ) ಎಂಬ ತನ್ನ ಮಗಳನ್ನು ನನಗೆ ಕೊಟ್ಟು ಮದುವೆ ಮಾಡಿದರು. ಮದುವೆಯಾದ ಎರಡು ವರ್ಷಗಳವರೆಗೆ, ನನ್ನ ಹೆಂಡತಿಯನ್ನು ನಾನು ಪ್ರೀತಿಸುತ್ತಿರಲಿಲ್ಲ. ಈ ರೀತಿಯ ವೈಮನಸ್ಸಾಗಲಿಕ್ಕೆ ಅನೇಕ ಕಾರಣಗಳಿದ್ದುವು. ಪತ್ನೀಪರಿತ್ಯಾಗವು ನಮಗೆ ಕುಲಪರಂಪರೆಯಾದ ಧರ್ಮವು. ನಮ್ಮ ತಂದೆಯು ನಾನು ಹುಟ್ಟಿದ ಬಳಿಕ ಸಂಸಾರ ಜ್ಞಾನೋದಯವುಳ್ಳವರಾಗಿ, ನನ್ನ ತಾಯಿಯನ್ನು ಬಿಟ್ಟುಬಿಟ್ಟು, ಸಂತಧರ್ಮವನ್ನು ಅವಲಂಬಿಸಿದರು. ನಮ್ಮ ಚಿಕ್ಕತಂದೆಯು ಪ್ರಾಯಭರಿತರಾದುದರಿಂದ, ಪರದೇಶಗಳಲ್ಲಿ ಸುಖವೇ ಹೆಚ್ಚೆಂದು ತಿಳಿದುಕೊಂಡು, ನನ್ನ ಚಿಕ್ಕತಾಯಿಯನ್ನು ಬಿಟ್ಟು ಓಡಿಹೋದರು. ನನಗಾದರೊ, ನನ್ನ ಮಾವನು ಚಿನ್ನದ ಉಡಿದಾರವನ್ನೂ, ವಜ್ರದ ಉಂಗುರವನ್ನೂ ಕೊಟ್ಟಿರಲಿಲ್ಲ. ಇಂತಹ ಪ್ರೀತಿಬಂಧಕಗಳು ಇಲ್ಲದೆ, ಹೆಂಡತಿಯನ್ನು ಪ್ರೀತಿಸುವ ಬಗೆ ಹೇಗೆ? ವಾಚಕರೇ ಹೇಳಿರಿ! ನಿಮ್ಮ ಪತ್ನಿಯರ ತವರುಮನೆಯಿಂದ ನಿಮಗೆ ಉಂಗುರ ಉಡಿದಾರ ಬರುವ ಸಂಭವವಿದ್ದರೆ, ನಿಮ್ಮ ಪ್ರೀತಿ ಇನ್ನೂ ಅಧಿಕವಾಗಲಾರದೇ? ನಾನು ನನ್ನ ಹೆಂಡತಿಯನ್ನು ಅಲಕ್ಷಿಸಲಿಕ್ಕೆ ಮೂರನೆಯ ಕಾರಣವು ಅವಳ ರೂಪಲಾವಣ್ಯವಾಗಿತ್ತು. ಹುಡುಗಿಯು ಎರಡು ವರ್ಷಗಳವರೆಗೆ ನೋಡಲಿಕ್ಕೆ ಅಷ್ಟೊಂದು ರುಚಿಯಾಗಿರಲಿಲ್ಲ. ಅವಳ ಕಣ್ಣು, ಮೂಗು, ಹಣೆ ಆಕರ್ಷಿಸುವಷ್ಟು ಸುಂದರವಾಗದೆ ಇದ್ದರೂ, ಹುಬ್ಬುಗಳು ಮಾತ್ರ ಎಲ್ಲರ ಕಣ್ಣುಗಳನ್ನೂ ಎಳೆಯುತ್ತಿದ್ದವು. ಈ ಹುಬ್ಬುಗಳು ಕಣ್ಣಿನ ಮೇಲ್ಗಡೆಯಲ್ಲಿಟ್ಟ ಸಣ್ಣ ಮೀಸೆಗಳಂತಿದ್ದುವು. ಇದರಿಂದ ಸಂಪೂರ್ಣ ರೂಪಕ್ಕೆ ಒಂದು ಬಗೆಯ ಆಕಾರವೋ ವಿಕಾರವೋ ಉಂಟಾಗುತ್ತಿತ್ತು. ಈ ವಿಚಿತ್ರ ಭ್ರೂಯುಗ್ಮವು ಅವಳನ್ನು ಮತ್ತೊಂದು ಅಪಾಯಕ್ಕೆ ಗುರಿಮಾಡಿತು. + +ಕೆಲವು ಗೃಹಸ್ಥರು ಅವಳನ್ನು ಹುಬ್ಬಿನ ಹುಡುಗಿ ಎಂದೂ, ಅಯ್ಗಳರ ಮಗಳೆಂದೂ, ನಾನು ಕೇಳುವ ಹಾಗೆ ಕರೆಯುತ್ತಿದ್ದರು. ಒಬ್ಬಿಬ್ಬರು ಇದಕ್ಕೆ ಬದಲಾಗಿ ಇತಿಹಾಸದ ಹೆಸರಿನಿಂದ ಅವಳನ್ನು ಸಂಬೋಧಿಸುತ್ತಿದ್ದರು. ‘ಆಟದ ಸೀತೆ’ ‘ಆಟದ ಸೀತೆ’ ಎಂದು ಪುನಃ ಪುನಃ ಈ ಪುಣ್ಯಾತ್ಮರು ಹೇಳಿರುವುದು ನನ್ನ ಕಿವಿಗೆ ಬಿದ್ದಿದೆ. ಇದರ ಕಾರಣವನ್ನು ತಿಳಿದುಕೊಳ್ಳುವಷ್ಟು ಶ್ರಮವನ್ನು ನಾನು ತೆಗೆದುಕೊಳ್ಳಬೇಕಾಗಲಿಲ್ಲ. + +ಮೇಲೆ ಹೇಳಿದ ಕಾರಣಗಳಿಂದ ಅವಳನ್ನು ಎಲ್ಲಿ ನೋಡಿದರೂ ನಾನು ಅಲಕ್ಷಿಸುತ್ತಿದ್ದೆನು. ಅವಳು ಮಾತ್ರ ನನ್ನನ್ನು ನೋಡಿ ಹುಬ್ಬುಗಂಟು ಕೂಡಾ ಹಾಕುತ್ತಿರಲಿಲ್ಲ; ಅಥವಾ ಹಾಕಿಕೊಂಡರೂ ಆ ಹುಬ್ಬು ಗಂಟು ನನಗೆ ಚೆನ್ನಾಗಿ ತೋರುತ್ತಿರಲಿಲ್ಲ. ಈ ರೀತಿಯಲ್ಲಿ ಎರಡು ವರ್ಷಗಳು – ಪ್ರಣಯ ರಹಿತವಾದ 720 ದಿವಸಗಳು – ಕಳೆದುವು. ಆದರೂ ನಾನು ಸ್ಥಿರಚಿತ್ತನಾಗಿಯೇ ಇದ್ದು, ಬಂದ ಸಂಕಷ್ಟಗಳನ್ನೆಲ್ಲಾ ತಾಳಿಕೊಂಡೆನು. ಕಾಲವು ಇದ್ದಂತೆ ಇರುವುದಿಲ್ಲ. ಕಾಲಚಕ್ರವು ತಿರುಗುತ್ತಿರುವಾಗ ಅದರೊಂದಿಗೆ ಮನುಷ್ಯನ ಚರ್ಯೆಚೇಷ್ಟೆಗಳೂ, ಬುದ್ಧಿಜ್ಞಾನವೂ, ರೂಪಲಾವಣ್ಯವೂ ಬದಲಾಗುತ್ತ ಬರುವುವು. ಬಾಲ್ಯದಲ್ಲಿ ಕಳವು ಮಾಡಿ ದಿವಸ ಕಳೆಯುವ ಹುಡುಗನು ಯೌವನದಲ್ಲಿ ಪೋಲೀಸ್ ಇಲಾಖೆಯ ಇನ್ಸ್ಪೆಕ್ಟರಾಗುತ್ತಾನೆ; ಆನೆಯ ಮರಿಯೆಂದು ಲಾಯದಲ್ಲಿ ಸಾಕಿದ ಮೃಗವು ಕಾಲಾನುಕಾಲದಲ್ಲಿ ಕತ್ತೆಯ ಮರಿಯಾಗಿ ಹೋಗುವುದುಂಟು; ಕಾಗೆಯ ಗೂಡಿನಲ್ಲಿ ಬೆಳೆದ ಹಕ್ಕಿಯು ಗರಿಗಳು ಬರುತ್ತಲೆ, ಕೋಗಿಲೆಯಾಗಿ ಹಾರಿಹೋಗುವುದು. ಹೀಗಿರುವಾಗ ನನ್ನ ಹೆಂಡತಿ, ಸ್ವಲ್ಪ ಕಾಲದ ಮೇಲೆ ನನಗೆ ಅತ್ಯಂತ ರೂಪವತಿಯೆಂದು ತೋರಿದುರಲ್ಲಾಗಲಿ ನಾನು ಅವಳನ್ನು ಪ್ರೀತಿಸಿದುದರಲ್ಲಾಗಲಿ ನನ್ನ ದೋಷವೇನೂ ಇಲ್ಲ. + +ಮುಖವು ದಿನೇದಿನೇ ಪ್ರಫುಲ್ಲವಾಗುತ್ತ ಯೌವನ ಸಂಚಾರ ಸೂಚಕವಾಗುತ್ತಲೇ, ನನ್ನ ಹೃದಯದಲ್ಲಿ ಇಲ್ಲದ ಪ್ರೀತಿಯು ನನಗೆ ತಿಳಿಯದಂತೆ ಅಂಕುರಿಸಿತು. ಚಕ್ಷುಗಳನ್ನು ಕತ್ತಲಿಸುತ್ತಿದ್ದ ಭ್ರೂಯುಗ್ಮವು ಲಲಾಟಪ್ರದೇಶವು ಅಗಲವಾಗಿ ಹಿಡಿಯಲಾರದಷ್ಟು ಉಕ್ಕಿ ಉಕ್ಕಿ ಬರುತ್ತಿರಲು, ನನ್ನ ಮನಸ್ಸಿನ ಲವಲವಿಕೆಯು ಉನ್ನತವಾಗುತ್ತ ಬಂದು, ನನ್ನನ್ನು ಒಂದು ಪ್ರಕಾರವಾಗಿ ಹುಚ್ಚುಗೊಳಿಸಿತು. ಅವಳನ್ನು ನೋಡಿದರೆ, ಹುಬ್ಬಿನ ಹುಡುಗಿ ಎಂದಾಗಲೀ ಗಂಡುಹುಡುಗಿ ಎಂದಾಗಲೀ, ಯಾರೂ ಸದ್ವಿಚಾರಮಾಡುವಷ್ಟು ಅವಕಾಶವಿರಲಿಲ್ಲ. + +ಪತ್ನಿಯು ಪಾರಮಾರ್ಥಿಕ ವಸ್ತುವೆಂದು ಕೆಲವು ಗ್ರಂಥಕಾರರು ಹೇಳುವರು. ನನ್ನ ಹೆಂಡತಿಯು ಈ ತರಗತಿಗೆ ಬರುವಳೋ ಇಲ್ಲವೋ ನನಗೆ ಹೇಳಲು ಸಾಮರ್ಥ್ಯವಿಲ್ಲ. ‘ಅಪುತ್ರಸ್ಯ ಲೋಕೋ ನಾಸ್ತಿ’ ಎಂಬ ಮಾತು ಸುಳ್ಳಾದರೆ, ನನ್ನ ಹೆಂಡತಿಯು ಪಾರಮಾರ್ಥಿಕ ಸಂಬಂಧದವಳೆಂದು ಹೇಳಬಲ್ಲೆನು. ನನ್ನ ಹೆಂಡತಿಯು ಹೇಗಿದ್ದರೂ, ನನ್ನ ಪ್ರೀತಿಯು (ನಾವು ಈ ಲೋಕದಲ್ಲಿಯೇ ಇದ್ದುದರಿಂದ) ಇಹಲೋಕ ಸಂಬಂಧವಾದುದಾಗಿತ್ತು. ಆದರೆ ಆ ಪ್ರಣಯವೇ ನನ್ನನ್ನು ಈ ಅನರ್ಥಕ್ಕೆ ತಂದಿಳಿಸಿತು; ಆ ಪ್ರೀತಿಯೇ ನನ್ನನ್ನು ಪುನಃ ಜೈಲಿನಲ್ಲಿ ಮಲಗಿಸಿತು; ಆ ಸುಖಸಂಭಾಷಣೆಯೇ ನನ್ನ ಸರ್ವ ಸುಖಕ್ಕೂ ನಾಶಕಾರಕವಾಯಿತು. + +ಯಥಾರ್ಥ ಪ್ರಣಯವು ಮನುಷ್ಯನನ್ನು ದುಃಖಕ್ಕೆ ಹೇಗೆ ಗುರಿ ಮಾಡಬಹುದು ಎಂದು ಪಾಠಕ ಮಹಾಶಯರಲ್ಲಿ ಕೆಲವರು ಆಕ್ಷೇಪಿಸುವರು. ನಮ್ಮ ಪ್ರಣಯವು ಪ್ರಾಚೀನ ಮಾರ್ಗವನ್ನಾಗಲೀ, ನವೀನ ಮಾರ್ಗವನ್ನಾಗಲೀ ಅನುಸರಿಸಿಕೊಂಡು ಹೋಗಿರಲಿಲ್ಲ. ಅದು ಇವೆರಡರ ಮಧ್ಯಸ್ಥವಾಗಿ ಹರಿದು ಹೋಗುತ್ತಿತ್ತು. ನಾನು ಎಲ್ಲರ ಇದಿರಿನಲ್ಲಿ ಅವಳ ಹೆಸರನ್ನೆತ್ತಿ ಸಕಲಾವತಿ! ಸಕಲಾವತಿ! ಎಂದು ಕರೆಯುತ್ತಿರಲಿಲ್ಲ. ಆದರೆ ನಾವಿಬ್ಬರೂ ಏಕಾಂತದಲ್ಲಿದ್ದಾಗ, “ನನ್ನ ಜೀವನ ಸರ್ವಸ್ವವೇ….” ಎಂದು ಏನೋ ಏನೋ ಭ್ರಮೆಯಿಂದ ಹೇಳುತ್ತಿದ್ದೆನು. ಇದರಂತೆಯೇ ನಮ್ಮ ಕಾರ್ಯಕೆಲಸಗಳು ಅಷ್ಟೊಂದು ವಿಪರೀತಕ್ಕೆ ಹೋಗಿರಲಿಲ್ಲ. ನಾನು ‘ಚಾ’ ಕುಡಿಯುವಾಗ, ನನ್ನ ‘ಕಪ್’ನ್ನು ತುಟಿಯ ಬಳಿಗೆ ಅವಳು ಹಿಡಿಯಲೇಬೇಕೆಂಬ ನಿರ್ಬಂಧವಿರಲಿಲ್ಲ. ನಾನು ‘ಚುಟ್ಟಾ’ ಸೇದುವಾಗ, ಅವಳೇ ಅದಕ್ಕೆ ಬೆಂಕಿ ಹಚ್ಚಬೇಕೆಂಬ ಬಲಾತ್ಕಾರವಿರಲಿಲ್ಲ. ನಾನು ‘ಆಫೀಸಿಗೆ’ ಹೊರಡುವಾಗ, ಅವಳು ಇದಿರಾಗಿ ಬಂದು, ನನ್ನ ತಲೆಯನ್ನು ಹಿಡಿದುಕೊಂಡು ಬೊಟ್ಟನ್ನಿಡಬೇಕೆಂಬ ನನ್ನ ಕಾನೂನು ಇರಲಿಲ್ಲ. ಇವೆಲ್ಲವನ್ನು ಆಚರಣೆಗೆ ತರುವಷ್ಟು ಧೈರ್ಯ ನನಗೆ ಇರಲಿಲ್ಲ. ಆದರೂ ದಾಂಪತ್ಯಸುಖವು ಎಷ್ಟು ಮಧುರವಾಗಿರಬಹುದೋ ಅಷ್ಟು ಸುಖವು ನಮ್ಮಿಬ್ಬರ ಸಂಸಾರದಲ್ಲಿತ್ತು. ಅಷ್ಟೇಕೆ? ನನಗೆ ಬೇರೆ ಕೆಲಸವಿಲ್ಲದಿದ್ದರೆ ಹೆಂಡತಿಯೊಡನೆ ಸರಸ ಸಂಭಾಷಣೆಯನ್ನಾಡುತ್ತ ಕಾಲಕಳೆಯುವುದೇ ಪುಣ್ಯಸಾಧನೆಯೆಂದು ಭಾವಿಸುತ್ತಿದ್ದೆನು. + +ಎರಡು ತಿಂಗಳುಗಳಿಂದೀಚೆಗೆ ಕಳ್ಳರ ಕಾಟವು ನಮ್ಮ ಕೇರಿಯಲ್ಲಿ ಕೇಳಿಸುತ್ತಿತ್ತು. ಕಳವು ಗೊತ್ತು ಹಚ್ಚದಿದ್ದರೂ ಒಬ್ಬಿಬ್ಬರು ಪೋಲೀಸಿನವರು ಜೈಲಿಗೆ ಹೋದರು. ನನ್ನ ಹೆಂಡತಿಯು ನನ್ನ ಚಿಕ್ಕತಾಯಿಯ ಒಡವೆಗಂಟಿನ ವಿಷಯವಾಗಿ ಬಹಳ ಎಚ್ಚರಿಕೆಯುಳ್ಳವಳಾಗಿದ್ದಳು. ಮನೆಯನ್ನು ಬಿಟ್ಟು ಎಲ್ಲಿಯೂ ಹೋಗುತ್ತಿದ್ದಿಲ್ಲ. ಮನೆಯ ಸುತ್ತಲೂ ಸದ್ದಾದರೆ, ತನ್ನ ಎಚ್ಚರಿಕೆಯನ್ನು ನನಗೆ ತೋರಿಸುವಂತೆ ಅತ್ತಿತ್ತ ನೋಡುತ್ತಿದ್ದಳು. ಅವಳಿಗೆ ನಿದ್ದೆ ಹತ್ತಿದಾಗ ಅವಳು ಎಷ್ಟು ಜಾಗರೂಕಳಾಗಿರುವಳೋ ಎಂಬುದು ನನಗೆ ಚೆನ್ನಾಗಿ ಗೊತ್ತಿತ್ತು. ಆದರೂ ಹೆಂಗಸರಲ್ಲಿ ತಾನೇ ಜಾಗರೂಕಳೆಂದೂ, ಗಂಡಸರಲ್ಲಿ ನಾನೇ ಕುಂಭಕರ್ಣನೆಂದೂ, ನನ್ನೊಡನೆ ಒಂದು ಪ್ರಕಾರವಾದ ಅಹಂಕಾರದಿಂದ ಮಾತನಾಡುವಳು. + +ಕೆಲವು ಸಂಗತಿಗಳಲ್ಲಿ ಹೆಂಗಸರು ನುಡಿಯುವ ಮಾತು ನಮಗೆ ವಿರುದ್ಧವಾದರೂ, ಅದನ್ನು ನಾವು ನಗಾಡುತ್ತಲೇ ಒಪ್ಪಬೇಕಾಗುತ್ತದೆ; ಅಥವಾ ಅದರ ತಪ್ಪು ಗ್ರಹಿಕೆಯನ್ನು ನಮ್ಮ ಕೃತ್ಯಗಳಿಂದ ತೋರಿಸಬೇಕಲ್ಲದೆ ಬೇರೆ ಉಪಾಯವಿಲ್ಲ. ಅವರೊಡನೆ ಪ್ರತ್ಯುತ್ತರ ಕೊಡುವುದು ತರ್ಕವಿತರ್ಕಗಳಿಗೆ ಮಾರ್ಗವಾಗುವುದು; ಅವರನ್ನು ಸಮಾಧಾನಗೊಳಿಸುವುದು ಒರಟುತನವಾಗುವುದು. ಒಂದು ದಿನ ರಾತ್ರಿ ಊಟವಾದನಂತರ ನಾನು “ನಮ್ಮ ಒಡವೆಗಂಟನ್ನು ಕೋಣೆಯ ಪೆಟ್ಟಿಗೆಯಲ್ಲಿಡುವುದಕ್ಕೆ ಬದಲಾಗಿ, ನಾವು ಮಲಗುವ ಚಿಕ್ಕಮನೆಗೆ ತಂದಿಟ್ಟುಕೊಂಡರೆ ಒಳ್ಳೆಯದಲ್ಲವೇ? ಈ ಕಳ್ಳರು ಮನೆಯ ಹತ್ತಿರ ಹತ್ತಿರವಾಗಿ ಬರುತ್ತಾರೆ” ಎಂದು ಹೇಳಿದೆನು. + +“ಇದ್ದ ಕಡೆಯಿಂದ ಅದನ್ನು ತೆಗೆಯುವುದು ಬೇಡ; ನನ್ನನ್ನು ಎಚ್ಚರಿಸದೆ ಕಳ್ಳರು ಹೇಗೆ ನುಗ್ಗಬಹುದು” ಎಂದು ಅವಳು ಉತ್ತರ ಕೊಟ್ಟಳು. + + + +“ಕಳ್ಳರು ಎಷ್ಟು ಬುದ್ಧಿವಂತರೆಂದು ನೀನರಿಯೆ. ಅತ್ತೆಗೆ ತಿಳಿಯದೆ ಕಳ್ಳತನ ಮಾಡುವ ಸೊಸೆಯರಿಗಿಂತ ಜಾಣರು. ನಿನಗೆ ಸುಲಭ ನಿದ್ರೆಯಾದರೂ ಹೆಣ್ಣು ಹೆಂಗಸರನ್ನು ಮೋಸಗೊಳಿಸುವುದು ಒಂದು ವಿಷಯವಲ್ಲ.” + +“ನನ್ನನ್ನು ಮೋಸಗೊಳಿಸುವರೇ? ನಿನ್ನೆ ನೆರೆಯ ಮನೆಯಲ್ಲಿ ಕಳ್ಳರು ನುಗ್ಗಿದ್ದಾಗ, ಅದನ್ನು ಮೊದಲು ತಿಳಿದು ಎಚ್ಚರಿಸಿದುದು ನಾನಲ್ಲವೇ? ನನ್ನ ಮನೆಯಲ್ಲಿ ಕನ್ನವಿಕ್ಕಿದರೆ, ನಾನು ಗಾಢನಿದ್ರೆಯಲ್ಲಿಯೂ ತಿಳಿಯದೆ ಇರುವೆನೇ?” + +“ಅದಕ್ಕೆ ಕಾರಣವಿತ್ತು. ನಿನ್ನೆ ನಿನಗೆ ಹೊಟ್ಟೆನೋವು ಬಲವಾದುದರಿಂದ ನೀನು ನಿದ್ದೆ ಹೋಗದೆ ಎಚ್ಚರವಾಗಿದ್ದೆ. ಆದರೂ ನೀನು ಎಷ್ಟೋ ಸಲ ನಿದ್ದೆ ಹೋದುದು ನನ್ನ ಅನುಭವದಲ್ಲಿ ಇದೆ.” + +“ನನ್ನ ಎಚ್ಚರವನ್ನು ಕುರಿತು ಮಾತೇ? ಮನೆಯಲ್ಲಿ ಒಂದು ಇಲಿಯು ಬಟ್ಟೆಯನ್ನು ಕಡಿಯುತ್ತಿದ್ದರೂ ನಾನು ಎಚ್ಚರವಾಗುವೆನು. ಅಷ್ಟೇಕೆ ಇರುವೆ ಹರಿದು ಹೋದರೆ ಆ ಶಬ್ದವು ನನಗೆ ಗುಡುಗಿನಂತೆ ಕೇಳಿಸುವುದು.” + +“ಇರುವೆ ಮುಂದೆ ಹೋಗದವರಿಗೆ ಆನೆ ಹಿಂದುಗಡೆಯಿಂದ ಹೋಗಬಹುದು. ನಿನ್ನೊಡನೆ ಮುದ್ದು ತರ್ಕಗಳನ್ನು ಮಾತನಾಡಲಿಕ್ಕೆ ನನಗೆ ಸಮಯವಿಲ್ಲ. ಎಂಟು ಗಂಟೆಯಾಗಿ ಹೋಯಿತು; ನನ್ನ ಮಿತ್ರರೆಲ್ಲರೂ ನನ್ನನ್ನು ಒಂದು “ಪಾರ್ಟಿ” ಗೋಸ್ಕರ ಕಾದಿರುವರು. ನಾನು 9 ಗಂಟೆಯೊಳಗೆ ಹಿಂತಿರುಗಿ ಬರುವೆನು, ಮನೆಯ ಹತ್ತಿರ ಜೋಕೆಯಿಂದ ಇರು.” + +ಈ ಮಾತಿಗೆ ಉತ್ತರವಾಗಿ ನನ್ನ ಹೆಂಡತಿಯು ಏನೋ ಕೋಪದಿಂದ ಮಾತನಾಡಿದಳು. ಅದು ನನ್ನ ಮಾತುಗಳ ಮೇಲೆ ಕೋಪವಾಗಿರಲಿಲ್ಲ. ಕೋಪವು ನನ್ನ ಗಮನದ ವಿಷಯವಾಗಿತ್ತು. ನನ್ನ “ಪಾರ್ಟಿಯ” ಉತ್ಸಾಹದ ಪ್ರವಾಹದಲ್ಲಿ ಅವಳ ಕೋಪದ ಮಾತುಗಳು ನನ್ನಮೇಲೆ ತೇಲಿಹೋದುವು. + +ಆ ರಾತ್ರಿ ವಿಶೇಷ ತೆರದ “ಪಾರ್ಟಿ” ಇತ್ತು. ಸಂಗೀತದಲ್ಲಿಯೂ ಗಾಯನದಲ್ಲಿಯೂ ಸಮಯ ಹೋದುದು ತಿಳಿಯಲೇ ಇಲ್ಲ. ನಾನು ಮನೆಗೆ ಹಿಂತಿರುಗಿ ಬಂದಾಗ ಮಧ್ಯರಾತ್ರಿ ಕಳೆದಿತ್ತು. ಈ “ಪಾರ್ಟಿ”ಗಳ ದೆಸೆಯಿಂದ ನಾನು ಮಧ್ಯರಾತ್ರಿ ಮನೆಯನ್ನು ಸೇರುವುದು ಅಪರೂಪವಾದ ವಿಷಯವಾಗಿರಲಿಲ್ಲ. ಆದರೆ ನನ್ನ ಹೆಂಡತಿಯು ನನ್ನ ಜಾಗ್ರತೆಯನ್ನು ತೆಗೆದುಕೊಳ್ಳುವುದಕ್ಕೋಸ್ಕರ ನನಗೆ ದುಃಖಕರವಾಗುವ ರೀತಿಯಲ್ಲಿ ಎಚ್ಚರವಿರುತ್ತಿರಲಿಲ್ಲ. ನಾನು ದಾರಿಯಲ್ಲಿ ಬರುತ್ತಿದ್ದಾಗ ನವಮಿಯ ಚಂದ್ರನು ನಗಾಡುತ್ತ ಅಸ್ತಮಿಸುತ್ತಲಿದ್ದನು. “ಮುನಿಸಿಪಾಲಿಟಿಯವರು” ಬೀದಿಯ ಬೆಳಕಿನ ವಿಷಯ ಅಥವಾ ಅದರ ವೆಚ್ಚದ ವಿಷಯದಲ್ಲಿ ಹೆಚ್ಚಾದ ಜಾಗರೂಕತೆ ತೆಗೆದುಕೊಳ್ಳುವುದರಿಂದ ಎಲ್ಲಾ ಕಡೆಯಲ್ಲಿಯೂ ಕತ್ತಲಾಗಿತ್ತು. ದೂರವಿರುವ ಮನೆಗಳು ಆ ಅಂಧಕಾರದಲ್ಲಿ ಭಯಂಕರವಾಗಿ ಎದ್ದು ನಿಂತಿದ್ದವು. ನಾನು ಯಾವುದನ್ನೂ ಲಕ್ಷಿಸದೆ ಬೇಗಬೇಗನೆ ಕಾಲುಹಾಕುತ್ತಿದ್ದೆನು. ಅಂಧಕಾರದಲ್ಲಿ ಮನಸ್ಸಿಗೆ ಸ್ವಾಭಾವಿಕವಾದ ಭೂತ ಪಿಶಾಚಿಗಳ ಭಯವೂ ಕಳ್ಳರ ಅಂಜಿಕೆಯೂ ನನ್ನ ಮನಸ್ಸಿಗೆ ಹೊಳೆದುವು. “ಕಳ್ಳನಿಗೆ ಒಳ್ಳೆಯರಾತ್ರಿ” ಎಂದು ಎಣಿಸುತ್ತ ನಾನು ಮುಂದರಿಸುತ್ತಿದ್ದೆನು. ಆಗ ಹಠಾತ್ತಾಗಿ ನಾನು ಹೆಂಡತಿಯೊಡನೆ ಕಳ್ಳರ ಕಾಟವನ್ನು ಕುರಿತು ಮಾತನಾಡಿದುದು ಮನಸ್ಸಿಗೆ ಒತ್ತೊತ್ತಿ ಬಂತು. ನನ್ನ ಹೆಂಡತಿಯನ್ನು ಮೋಸಗೊಳಿಸುವ ಸರಸ ಚೇಷ್ಟೆಯನ್ನು ನಾನು ಮಾಡಬೇಕೆಂದು ಯೋಚಿಸಿದೆನು. ಇದೇ ರೀತಿಯಲ್ಲಿ ಪತಂಗವು ದೀಪದ ಸುತ್ತಲೂ ಮಂಡಳಿಸುತ್ತ, ಅದರ ಜ್ವಾಲೆಯಲ್ಲಿ ಬಿದ್ದು ಹತವಾಗುವುದು. + +ಮನೆಯನ್ನು ಸಮೀಪಿಸುತ್ತಲೇ ನಾನು ಮಾಡಿದ ಆಲೋಚನೆಗಳೆಲ್ಲವು ಸರಿಯಾದುವೆಂದು ತೋರಿದುವು. ನನ್ನ ಹೆಂಡತಿಯು ತನ್ನ ಸುಲಭನಿದ್ರೆಯನ್ನು ಬಡಾಯಿ ಹೇಳಿಕೊಳ್ಳುವುದನ್ನು ನಾನು ಕೇಳಿಕೇಳಿ, ಅವಳ ಎಚ್ಚರಿಕೆಯನ್ನು ಪರೀಕ್ಷಿಸಿ, ಅವಳನ್ನು ಅಪಹಾಸ್ಯಕ್ಕೆ ಗುರಿಮಾಡುವುದು ಯೋಗ್ಯವೆಂದು ತಿಳಿದುಕೊಂಡೆನು. ಮನೆಯ ಬಾಗಿಲಿಗೆ ಅಗುಣಿ ಹಾಕಿದರೂ, ಕಿಟಕಿಯ ಕಡೆಯಿಂದ ಒಳನುಗ್ಗಬಹುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಚಿಕ್ಕ ಮನೆಗೆ ಬಂದು, ಅಲ್ಲಿಂದ ಬೀಗದ ಕೈಗಳನ್ನು ಕಳುವು ಮಾಡಿ, ಪೆಟ್ಟಿಗೆಯಲ್ಲಿರುವ ಒಡವೆ ಗಂಟನ್ನು ಮೆಲ್ಲಗೆ ಎತ್ತಿಕೊಂಡು ಅಡಗಿಸಿಟ್ಟು, ಬಳಿಕ ಹೆಂಡತಿಯನ್ನು ಎಚ್ಚರಿಸಿದರೆ, ಈ ಚೇಷ್ಟೆಯು ಬಹಳ ಸಂತೋಷಕರವಾಗುವುದೆಂದು ನಿಶ್ಚಯಿಸಿದೆನು. ಅವಳು ತನ್ನ ಬಾಯಿಯಿಂದಲೇ ತಾನು ನಿದ್ದೆಹೋಗಿ ಮೋಸ ಹೋದೆನೆಂದು ಹೇಳಿದ ಮೇಲೆ, ಇದ್ದ ಸಂಗತಿಯನ್ನು ಬಿಚ್ಚಿ ಹೇಳಿ, ಎಲ್ಲವನ್ನು ಸರಿಗೊಳಿಸಬೇಕು. ಇಷ್ಟೆಲ್ಲಾ ಮಾಡುವಾಗ ಅವಳ ನಿದ್ರಾಭಂಗವಾಗುವುದೆಂಬ ಸಂಶಯವಿಲ್ಲದಿದ್ದರೂ ಸಂಶಯದ ಛಾಯೆಯಿತ್ತು. ಪೂರ್ವಾಪರವನ್ನು ಯೋಚಿಸುತ್ತ ಬರುವಷ್ಟಕ್ಕೆ ಈ ಚೇಷ್ಟೆಯಲ್ಲಿ ಹೆಂಡತಿಗಿಂತ ಗಂಡನೇ ಗೆಲ್ಲುವುದು ಸಾಧ್ಯವೆಂದು ನನಗೆ ಕಂಡುಬಂತು. + +ನಾನು ಮನೆಯನ್ನು ಸೇರಿದಾಗ, ಎಲ್ಲವೂ ಶಾಂತವಾಗಿತ್ತು. ಕಿಟಕಿಗಳಿಂದ ಒಳಗಿನ ದೀಪದ ಬೆಳಕು ತೋರುತ್ತಿರಲಿಲ್ಲ. ನನ್ನ ದುಶ್ಚೇಷ್ಟೆಗೆ ದೈವವೇ ಸಹಾಯಕವಾಗಿದೆ ಎಂದು ತಿಳಿದು, ನಡುಮನೆಯ ಕಿಟಕಿಯ ಬಳಿಯಲ್ಲಿ ಬಂದೆನು. ಕಿಟಿಕಿಯ ಬಾಗಿಲುಗಳು ತೆರೆದಿದ್ದುವು. ಕಿಟಕಿಯನ್ನು ಹತ್ತುವಾಗ ನನ್ನ ಮೈಯಲ್ಲೆಲ್ಲಾ ಒಂದು ಬಗೆಯ ಭೀತಿಯು ನಡುಗುತ್ತಿತ್ತು. ಬಾಲ್ಯದಲ್ಲಿ ಗೇರುಹಣ್ಣುಗಳಿಗೋಸ್ಕರ ಮರವನ್ನು ಹತ್ತಿದಾಗ, ದೂರದಿಂದ ಕೋಲು ಹಿಡಿದುಕೊಂಡು ಬರುವ ಮುದುಕನನ್ನು ನೋಡಿದಾಗ, ಯಾವ ಪ್ರಕಾರವಾಗಿ ಎದೆಯು ದಡದಡಿಸುತ್ತಲಿತ್ತೋ, ಅದಕ್ಕಿಂತಲೂ ನೂರುಪಾಲು ಈಗ ಅದು ಬಡಿಯುತ್ತಲಿತ್ತು – ಎಂದು ಹೇಳಿದರೆ ಒಂದು ದೊಡ್ಡ ಮಾತು ಆಗಲಾರದು. ನಡುಮನೆಗೆ ಧುಮುಕಿ ಬರುತ್ತಲೇ ಒಳಗಿನಿಂದ ಯಾರೋ ಕಾಳಪುರುಷನು ನನಗೆ ಇದಿರಾಗಿ ಸಮೀಪಿಸಿದುದನ್ನು ನೋಡಿ, ನನ್ನ ಮೈಯೆಲ್ಲಾ ತಣ್ಣಗಾಗಿ ನಾನು ಸ್ತಬ್ಧನಾದೆನು. ವ್ಯಕ್ತಿಯ ರೂಪು ಕತ್ತಲಲ್ಲಿ ಚೆನ್ನಾಗಿ ಕಾಣಿಸದಿದ್ದರೂ, ಕಣ್ಣುಗಳ ಗೊಂಬೆಗಳು ಗೂಗೆಯ ಕಣ್ಣುಗಳಂತೆ ಮಿನುಗುತ್ತಿದ್ದವು. ಅವನನ್ನು ನೋಡುತ್ತ ಬರುವಷ್ಟಕ್ಕೆ ನನ್ನ ಭೀತಿಯು ಹೆಚ್ಚು ಹೆಚ್ಚಾಗುತ್ತ ಬಂತು. ಅಷ್ಟರೊಳಗೆ ಆ ಕಾಳಪುರುಷನು ಏನು ಮಾಡಿದನೋ ನನಗೆ ತಿಳಿಯದು. ಫಕ್ಕನೆ ನನ್ನ ಎರಡು ಕೈಗಳನ್ನು ತನ್ನ ಕಠಿನಹಸ್ತದಲ್ಲಿ ಬಿಗಿದು ಹಿಡಿದುಕೊಂಡು, ಇನ್ನೊಂದು ಕೈಯಲ್ಲಿದ್ದ ಕತ್ತಿಯನ್ನು ನನ್ನ ಕೊರಳಿಗೆ ತೋರಿಸಿದನು. + +ವ್ಯಕ್ತಿ : “ನೀನು ಬೇರೆ ಮನೆಯನ್ನು ನೋಡಬಾರದಾಗಿತ್ತೇ? ಇದು ನನ್ನ ಊಟ. ಇಲ್ಲಿ ತಿನ್ನಲಿಕ್ಕೆ ಬಂದೆಯಾ? ನಡೆ! ಬೇರೆ ಕಡೆಗೆ ನಡೆ! ಇಲ್ಲವಾದರೆ….” + +ಮಾತನ್ನು ಪೂರೈಸದೆ ಅದರ ಅರ್ಥವನ್ನು ಕತ್ತಿಯಿಂದ ಸೂಚಿಸಿದನು. ವ್ಯಕ್ತಿಯು ಕಳ್ಳನೆಂದು ತಿಳಿದುಕೊಳ್ಳಲಿಕ್ಕೆ ಇನ್ನು ನನಗೆ ಕಷ್ಟವಿರಲಿಲ್ಲ. ಆದರೆ ನಾನೂ ಇವನ ಸಹಪಂಕ್ತಿಯವನೇ ಎಂದು ಅವನು ತಿಳಿದುದನ್ನು ನಂಬಲಿಕ್ಕೆ ನನಗೆ ಸ್ವಲ್ಪ ಕಷ್ಟವಿತ್ತು. ಈ ಸಂದರ್ಭದಲ್ಲಿ ನನ್ನ ಯಥಾರ್ಥ ಸ್ಥಿತಿಯು ತಿಳಿದುಬಂದರೆ, ನನ್ನ ಹೆಂಡತಿಯ ಕುಂಕುಮ ಉಳಿಯುವುದು ಕಷ್ಟ. ಓಡಿಹೋಗಿ ‘ಪೋಲೀಸ್ ಸ್ಟೇಶನ್ನಿಗೆ’ ತಿಳಿಸುವಷ್ಟರಲ್ಲಿ ಕಳ್ಳನು ಇದ್ದುದನ್ನೆಲ್ಲಾ ದೋಚಿಕೊಂಡು ಹೋದರೆ, ಲೋಕದಲ್ಲಿ ನನಗೆ ಹೆಂಡತಿಯಲ್ಲದೆ ಮತ್ತೇನೂ ಉಳಿಯದು. ಉಪಾಯಾಂತರದಿಂದ ಕಳ್ಳನನ್ನು ಬಂಧಿಸಿಕೊಂಡು, ಆಮೇಲೆ ಸಕಲಾವತಿಯನ್ನು ಎಚ್ಚರಿಸಿದರೆ, ಒಂದೇ ಕಲ್ಲಿನಿಂದ ಎರಡು ಹಣ್ಣುಗಳನ್ನು ಉದುರಿಸಬಹುದು. ಹೀಗೆ ಮಾಡುವುದಕ್ಕೆ ನಾನು ಕಳ್ಳನ ಹಾಗೆಯೇ ನಟಿಸುವುದೂ, ಬಂದ ಸಂಗತಿಗಳನ್ನೆಲ್ಲಾ ನನಗೆ ಸಹಾಯಕವಾಗುವ ಹಾಗೆ ಪ್ರಯತ್ನಿಸುವುದೂ, ಅವಶ್ಯವೆಂದು ನನ್ನ ಮನಸ್ಸಿಗೆ ಹತ್ತಿತು. ಆಪತ್ಕಾಲದಲ್ಲಿ ನನ್ನ ಮನಸ್ಸು ಈ ಪ್ರಕಾರವಾದ ಆಲೋಚನೆಗಳನ್ನು ಯಾವಾಗಲೂ ಮಾಡಿಲ್ಲ. ಹೀಗೆಯೇ ಕಳ್ಳನು ಕನ್ನವನ್ನು ಕೊರೆಯುವಾಗ, ತನ್ನಷ್ಟು ಭಾಗ್ಯಶಾಲಿ ಯಾರೂ ಆಗಲಾರನು ಎಂದು ತಿಳಿಯುವನು. + +“ಇಗೋ! ಚಿನ್ನದ ಪೆಟ್ಟಿಗೆಯನ್ನು ನಾನು ತೋರಿಸಿಕೊಟ್ಟರೆ, ನನಗೂ ನಿನಗೂ ಪಾಲಾಗಬಹುದೇ?” ಎಂದು ಕೇಳಿದೆನು.ಕಳ್ಳನ ಮನಸ್ಸಿಗೆ ಏನು ಹೊಳೆಯಿತೋ ನನಗೆ ತಿಳಿಯದು. ಅವನು ಅಸ್ಫುಟಸ್ವರದಿಂದ “ಎಲಾ! ಗುಲ್ಲು ಮಾಡಬೇಡ! ಮೆಲ್ಲಗೆ, ಇಬ್ಬರಿಗೆ…. ಒಳ್ಳೆಯದು” ಎಂದು ಹೇಳಿದನು. + +ನನ್ನ ಜೀವವು ಖಡ್ಗಧಾರೆಯ ಮೇಲೆ ಇತ್ತು. ನಾನು ಕಳ್ಳನೆಂದು ತೋರಿಸಿದುದರಲ್ಲಿ ತುಸುತಪ್ಪಿ ಬಿದ್ದು, ಅವನಿಗೆ ಶಂಕೆಹುಟ್ಟಿದರೆ, ನನ್ನನ್ನು ಪರಲೋಕಕ್ಕೆ ಕಳುಹಿಸಿದ ಪುಣ್ಯವು ಕಳ್ಳನಿಗೆ ಬರುವುದೆಂದು ನನಗೆ ಚೆನ್ನಾಗಿ ಗೊತ್ತಿತ್ತು. ಆದುದರಿಂದ ನಾನು ಆದಷ್ಟು ಪ್ರಯತ್ನದಿಂದ ಅತ್ತಿತ್ತ ಹುಡುಕಿದವನಂತೆ ತೋರಿಸಿದೆನು. + + + +“ಎಷ್ಟು ಹುಡುಕಿದರೂ ಸಿಕ್ಕಲಾರದು. ಇವರು ಬಡವರು. ನಾವು ಬೇರೆ ಮನೆಗೆ ನಡೆಯುವ!” ಎಂದು ಅವನೊಡನೆ ಆಲೋಚನೆ ಮಾಡಿದೆನು.ಕಳ್ಳನು ತನ್ನಮುಖದ ಬಳಿಯಲ್ಲಿ ಕೈ ಹಿಡಿದುಕೊಂಡು “ಛೀ! ಛೀ! ಈ ಮನೆಯಲ್ಲಿ ಹಣವಿದೆ ಎಂಬುದನ್ನು ನೀನರಿಯೆ. ಸತ್ತು ಹೋದ ಮುದುಕಿಯ ಹಣವು ಈ ಪಾಪಿಗಳ ಪಾಲಿಗೆ ಬಂದಿದೆ” ಎಂದು ಹೇಳಿದನು. + +ಒಂದೆರಡು ನಿಮಿಷದವರೆಗೆ ಮಾತನಾಡಲಿಕ್ಕೆ ನನಗೆ ಬಾಯಿ ಬರಲಿಲ್ಲ. ಆದರೂ ಬಲಾತ್ಕಾರದಿಂದ, “ಹಣವನ್ನು ಎಲ್ಲಿ ಹೂಳಿಟ್ಟಿರುವರೋ ನಮಗೆ ತಿಳಿಯದು. ಮಾಳಿಗೆಯಲ್ಲಿ ಇರಬಹುದೇ” ಎಂದು ಹೇಳಿದೆನು. + +ನಾನು ಮುಳ್ಳಿನ ಮರವನ್ನು ಏರಿದ್ದೆನು. ಆದರೂ ನನ್ನ ಮಾತು ಸಾರ್ಥಕವಾಯಿತು. ಗೃಹಸ್ಥನು ಒಪ್ಪಿಕೊಂಡು, ಮಾಳಿಗೆಯನ್ನು ಹತ್ತಲಿಕ್ಕೆ ಸಮ್ಮತಿಸಿದನು. ಮಾಳಿಗೆಯ ಹೊರಗೆ ತಾನು ಕಾದುಕೊಂಡಿದ್ದು, ನಾನು ಒಳಕ್ಕೆ ಹೋಗಿ ಹುಡುಕಬೇಕೆಂದು ಅಪ್ಪಣೆ ಮಾಡಿದನು. ನನಗೆ ಈ ಮಾತು ಯೋಗ್ಯವಾಗಿ ತೋರದಿದ್ದರೂ, ನಾನು ಒಳಗೆ ಪ್ರವೇಶಿಸಲೇಬೇಕಾಯಿತು. ಅಷ್ಟರಲ್ಲಿ ಕಳ್ಳನು ಪುನಃ ಬಂದು, “ಈ ಕಾರ್ಯವು ನಿನ್ನಿಂದ ಸಾಗದು. ನನ್ನ ಕೆಲಸವನ್ನು ನೀನು ಮಾಡು. ನಾನು ಒಂದು ನಿಮಿಷದಲ್ಲಿ ಹುಡುಕಿಬಿಡುತ್ತೇನೆ” ಎಂದು ಹೇಳಿದನು. + +ಕಳ್ಳನು ನನಗಿಂತಲೂ ಜಾಣನಾಗಿದ್ದನು. ಒಳಕ್ಕೆ ಹೋಗಿ ಒಂದೆರಡು ನಿಮಿಷಗಳಲ್ಲಿಯೇ ಹೊರಗೆ ಬಂದು ನಾನು ಕಾದುಕೊಂಡಿರುವೆನೋ ಇಲ್ಲವೋ ಎಂದು ನಿಶ್ಚಯ ಮಾಡಿಕೊಂಡನು. ನಾನು ಬಾಗಿಲು ಬಿಡದೆ ಇದ್ದುದರಿಂದ, ನನ್ನಲ್ಲಿ ಪೂರ್ಣ ನಂಬುಗೆಯಿಟ್ಟು, ತನ್ನ ಕೆಲಸಕ್ಕೆ ಹೋದನು. + +ನಾನು ಇನ್ನು ಅಲ್ಲಿ ತಡೆಯಲಿಲ್ಲ. ಪೋಲೀಸಿನವರನ್ನು ನಿದ್ದೆಯಿಂದ ಎಚ್ಚರಿಸುವುದಕ್ಕೆ ನನಗೆ ವಿಳಂಬವಾದರೂ, ಅವರನ್ನು ಕರೆತರುವುದಕ್ಕೆ ನನಗೆ ವಿಳಂಬವಾಗಲಿಲ್ಲ. ಕತ್ತಲು ಬಲವಾದುದರಿಂದಲೋ ಮಾಳಿಗೆಯ ಬಾಗಿಲನ್ನು ನಾನು ಎಳೆಯದೆ ಬಿಟ್ಟುದರಿಂದಲೋ, ಪೋಲೀಸಿನವರು ಒಳಕ್ಕೆ ಹೋಗಲು ಸಮ್ಮತಿಸಲಿಲ್ಲ. ಪೋಲೀಸಿನವರನ್ನು ಮಾಳಿಗೆಯ ಹೊಸ್ತಿಲಿನ ಬಳಿಯಲ್ಲಿರಿಸಿ, ನಾನು ಪುನಃ ಒಳಕ್ಕೆ ಹೋದೆನು. ಹೊರಗೆ ನಡೆದ ಸಂಗತಿ ಕಳ್ಳನಿಗೆ ಬೋಧೆಯಾಗಿತ್ತೋ ಇಲ್ಲವೋ ನನಗೆ ತಿಳಿಯದು. ಅವನು ಹಣದ ಗಂಟು ಸಿಕ್ಕಲಿಲ್ಲವೆಂದು ವ್ಯಸನಪಟ್ಟು, ಚಿಕ್ಕಮನೆಯನ್ನು ಹುಡುಕಲು ಕೆಳಗೆ ಇಳಿಯಲಿಕ್ಕೆ ಸಿದ್ಧನಾಗಿದ್ದನು. ನಾನು ಹಿಂದೆಯೇ ಬರುವೆನೆಂದು ಹೇಳಿ, ಅವನನ್ನು ಕೆಳಗೆ ಕಳುಹಿಸಿದೆನು. ಅವನು ಕೆಳಗೆ ಇಳಿಯುತ್ತಲೇ ಅಲ್ಲಿದ್ದವರು “ಏನು ಕಳ್ಳನು ಓಡಿಹೋದನೇ” ಎಂದು ಅವನೊಡನೆ ಕೇಳಿದರು. + +“ಅವನು ಮೇಲಿರುವನು. ನೀವು ಬೇಗನೆ ಹೋಗಿ ಹಿಡಿದರೆ ಈಗ ತಾನೇ ಸಿಕ್ಕುವನು. ಇಲ್ಲವಾದರೆ ಮೇಲಿನಿಂದಲೇ ಹಾರಿ ಹೋಗುವನು” ಎಂದು ಹೇಳಿ ಕಳ್ಳನು ಕತ್ತಲಲ್ಲಿ ಅದೃಶ್ಯನಾದನು. + +ಪೋಲೀಸಿನವರು “ಬಿಗಿಲ್” ಮಾಡಿದರು. ಕೂಡಲೇ ಮೂರು ನಾಲ್ಕು ಮಂದಿ ಬಂದು ಮೇಲಕ್ಕೆ ನುಗ್ಗಿ ನಿರಪರಾಧಿಯಾದ ನನ್ನನ್ನು ಬಂಧಿಸಿದರು. + +“ಇದೇನು ಹುಚ್ಚುತನ! ನಾನು ಕಳ್ಳನಲ್ಲ! ನಾನು ಮನೆಯ ಯಜಮಾನ! ಕಳ್ಳನನ್ನು ಹಿಡಿಯದೆ ನನ್ನನ್ನು ಏತಕ್ಕೆ ಬಂಧಿಸಿದಿರಿ?” ಎಂದು ನಾನು ಆಶ್ಚರ್ಯದಿಂದಲೂ ಭಯದಿಂದಲೂ ಕೇಳಿದೆನು. + +ಕೆಂಪು ಮುಂಡಾಸಿನವರು ಅವರ ಸ್ವಭಾವಕ್ಕನುಸಾರವಾಗಿ ನನ್ನ ಮಾತು ಪೂರೈಸಗೊಡಿಸದೆ, “ಹೆಚ್ಚು ಮಾತುಬೇಡ! ನಿನ್ನ ಸಂಗಡ ಇದ್ದವನನ್ನೂ ಬಂಧಿಸದೆ ಇರಲಾರೆವು; ಅವನು ಎಲ್ಲಿ ಹೋಗುವನು? ಅವನ, ಅಪ್ಪನ ಮನೆಗೆ?” ಎಂದು ಹೇಳಿ, ನನ್ನ ಕೈಗೆ ಕೋಳ ಹಾಕಿ, ಅಂಗಳಕ್ಕೆ ಬಲಾತ್ಕಾರದಿಂದ ತಂದರು. + +ಸಮಯಕ್ಕೆ ಸರಿಯಾಗಿ ಸಕಲಾವತಿ ಎಚ್ಚತ್ತು, ಚಿಕ್ಕಮನೆಯ ಬಾಗಿಲು ತೆರೆದು ಮೆಲ್ಲಗೆ ಚಾವಡಿಗೆ ಬಂದಳು. ನಾನು ಉಪಾಯವಿಲ್ಲದವನಾಗಿ, ಹೆಂಡತಿಯನ್ನು ಕರೆದು “ಬಂದ ಕಳ್ಳನನ್ನು ಹಾಳುಮಕ್ಕಳು ಸಡಿಲುಬಿಟ್ಟು, ನನ್ನನ್ನು ಕಟ್ಟಿ ತೆಗೆದುಕೊಂಡು ಹೋಗುತ್ತಿದ್ದಾರೆ. ನೀನಾದರೂ ನನ್ನನ್ನು ಗುರುತಿಸಿ, ಬಿಡುಗಡೆ ಮಾಡು” ಎಂದು ಮೊರೆಯಿಟ್ಟೆನು. + +“ಅಮ್ಮ ! ಒಬ್ಬ ಕಳ್ಳನು ನಮ್ಮನ್ನು ಮೋಸಪಡಿಸಿ ತಪ್ಪಿಸಿಕೊಂಡನು. ಈ ಕಳ್ಳರ ಜಾಣತನ ನೀನರಿಯೆ. ನೀನು ಇವನನ್ನು ಗುರುತಿಸಿದರೂ ಗುರುತಿಸದಿದ್ದರೂ, ನಾವು ಇವನನ್ನು ಕೊಂಡುಹೋಗದೆ ಬಿಡೆವು” ಎಂದು ಪೋಲೀಸಿನವನು ಹೇಳಿ, ನನ್ನನ್ನು – ನಿರಪರಾಧಿಯಾದ ಪ್ರಾಣಿಯನ್ನು – ಒಯ್ದುಕೊಂಡು ಹೋದರು. ಆಗ ನನ್ನ ಹೆಂಡತಿ ಬಿಕ್ಕಿ ಬಿಕ್ಕಿ ಅಳುತ್ತಿರುವುದು ನನಗೆ ಕೇಳಿಸುತ್ತಿತ್ತು. + + + +ನನ್ನನ್ನು ಸ್ಟೇಶನ್ನಿಗೆ ತಂದ ಕೂಡಲೇ ಇದ್ದ ಸಂಗತಿಯನ್ನೆಲ್ಲಾ ನಾನು ಯಥಾರ್ಥವಾಗಿ ಹೇಳಿದೆನು. ನನ್ನ ಹೆಂಡತಿಯನ್ನು ನಾನು ಹೇಗೆ ಪ್ರೀತಿಸುತ್ತಿದ್ದೆನೆಂದೂ ನನ್ನ ಹೆಂಡತಿಯ ಮೇಲಿನ ಪ್ರೀತಿಗೋಸ್ಕರವಾಗಿ ನಾನು ಮಾಡಿದ ದುಶ್ಚೇಷ್ಟೆಯು ನನ್ನನ್ನು ಹೇಗೆ ಆಪತ್ತಿಗೆ ತಗುಲಿಸಿತೆಂದೂ, ನನ್ನ ಹೆಂಡತಿಯು ನನ್ನನ್ನು ಬಿಡುಗಡೆ ಮಾಡದೆ ಇರಲಾರಳೆಂದೂ ನಾನು ಪೋಲೀಸಿನವರಿಗೆ ತಿಳಿಸಿದೆನು. ಅವರು ನನ್ನ ಮಾತಿಗೆ ಕಿವಿಗೊಟ್ಟರೋ ಇಲ್ಲವೋ ನನಗೆ ತಿಳಿಯದು. ನನ್ನನ್ನು ಆಗತಾನೇ ಬಿಡುಗಡೆ ಮಾಡಲಿಕ್ಕೆ ಬಲವಾದ ಕಾರಣವಿರಲಿಲ್ಲ. ಏಕೆಂದರೆ ನನ್ನ ಕೈಯಲ್ಲಿ ಹಣವಿರಲಿಲ್ಲ. ಆದರೂ ನಾನು ಒಂದು ರಾತ್ರಿ ಜೈಲಿನಲ್ಲಿ ಮಲಗಬೇಕಾಯಿತು ಎಂದು ಹೇಳಲಿಕ್ಕೆ ನಾಚಿಕೆ ಇಲ್ಲ. ನನ್ನ ಹೆಂಡತಿ ಸಕಲಾವತಿ ಮರುದಿನ ಬೆಳಿಗ್ಗೆ ನನ್ನನ್ನು ಬಿಡುಗಡೆ ಮಾಡಿದಳೆಂದೂ, ಅಂದಿನಿಂದ ನನ್ನ ಹೆಂಡತಿಯೊಡನೆ ದುಶ್ಚೇಷ್ಟೆ ಮಾಡುವುದು ನಿಂತುಹೋಯಿತೆಂದೂ, ಹೇಳಲಿಕ್ಕೆ ನನಗೆ ನಾಚಿಕೆ ಇಲ್ಲ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_409.txt b/Kenda Sampige/article_409.txt new file mode 100644 index 0000000000000000000000000000000000000000..26cc9ad14f45a74caf2236d08958f936f452013c --- /dev/null +++ b/Kenda Sampige/article_409.txt @@ -0,0 +1,93 @@ + + +– 1 –‘ನನ್ನ ಆಲೋಚನೆ ಕೇಳ್ತಿಯಾ?’ + +‘ಏನೂ?’ + +‘ನಾಳೇನೇ ಮಂಗ್ಳೂರಿಗೆ ಹೋಗಿ ಪೋಲೀಸಿನವರಿಗೆಲ್ಲಾ ಚೆನ್ನಾಗಿ ಕಾಣಿಸಿಕೊಂಡು ಪೇಟೆ ತುಂಬಾ ತಿರುಗಿ ಬಂದುಬಿಡ್ತೇನೆ…..’ + +‘ಒಳ್ಳೇ ಜಾಣ ಕಾಣೋ ನೀನು. ಶುದ್ಧ ಹುಚ್ಚಪ್ನ ಹಾಗೆ ಆ ಕೆಂಪುಟೊಪ್ಪಿಗಳ ಮೂಗಿನ ಮುಂದೆ ಸುಳಿದಾಡೋದು. ಹೋಗುವ ಕಾಲದ ಬುದ್ಧಿ ನಿಂಗೆ. ಮೊದಲೇ ಅವರಿಗೆ ನಮ್ಮ ಮೇಲೆ ಸಂಶಯಯಿದ್ಹಾಗೆ ತೋರುತ್ತೆ. ಈಗ ನೀನು ಬೇಕು ಬೇಕೂಂತ ಅವರ ಕೈಲಿ ಬೀಳೋದು ಹುಚ್ಚುತನ – ಕೇವಲ ಹುಚ್ಚುತನ.’ + +‘ನಾನು ಹೇಳುವುದನ್ನು ಪೂರಾ ಕೇಳು, ಕರೀಂ…. ಮತ್ತೆ ನಿನ್ನ ವ್ಯಾಖ್ಯಾನ.’ + +‘ಹೇಳೋದೇನು ನಾಗಣ್ಣ? ಹುಂ, ಆಗ್ಲಿ ನಿನ್ನ ಸೇವೆ.’ + +‘ಮೊದ್ಲು ಅವರ ಸಂಶಯ ನನ್ನ ಮೇಲೆ ಬೀಳುವ ಹಾಗೆ ಮಾಡ್ತೇನೆ. ಅವರೆಲ್ಲಾ ಕಣ್ಣಿಗೆ ಎಣ್ಣೆ ಹಾಕಿ ಕಾಯುತ್ತಿರುವಾಗ ನೀನು ಹೇಗೂ ಪಾರಾಗಿ ಹೋಗಬಹುದು. ಒಂದು ವೇಳೆ ಕೆಲಸ ನಾನು ಯೋಚಿಸಿದ ಹಾಗೆ ಮುಂದುವರಿಯದಿದ್ದರೆ ನಿನಗೊಂದು ಸಂಕೇತ ಕೊಡುತ್ತೇನೆ.’ + +‘ಏನು?’ + +‘ಸಂಕೇತ.’ + +‘ಹುಂ.’ + +‘ನಾನು ಹೋದಕಡೆ ಬಂದಕಡೆ ಪೋಲೀಸಿನವರು ನಾಯಿಗಳಂತೆ ಹಿಂಬಾಲಿಸುವುದನ್ನು ನೋಡಿದ್ರೆ ಎಂಥಾ ಗುಮ್ಮಟ್ರಾಯನೂ ನಗಬೇಕು ನೋಡು, ಹಾಗೆ ಮಾಡ್ತೇನೆ ಅವರನ್ನು. ಕೆಂಪುಟೊಪ್ಪಿಗಳು ಬೆನ್ನುಕಾಯುವಾಗ ನೀನು ನಗಾ ಹಿಡ್ಕೊಂಡು ಕೇಶವನ ಹತ್ರ ಹೋಗು. ನಿನ್ನ ಮೇಲೆ ಸಂಶಯ ಲವಲೇಶವಿಲ್ಲದ ಹಾಗೆ ಮಾಡೊ ಕೆಲಸ ನನ್ನ ಕೈಯಲ್ಲಿದೆ.’ + +‘ಅಷ್ಟರವರೆಗೆ?’ + +‘ಅಷ್ಟರವರೆಗೆ ನೀನು ನಮ್ಮ ಮೊದಲಿನ ಸ್ಥಳವಿದೆಯಲ್ಲಾ ಗುಡ್ಡದ ಮೇಲೆ? – ಅಲ್ಲಿರಬೇಕು. ಎಲ್ಲಾ ನಾನು ಯೋಚಿಸಿದ ಹಾಗೆ ಆದ್ರೆ ನಾಡದು – ಅಂದ್ರೆ ನಾಡದು – ಆದಿತ್ಯವಾರ ರಾತ್ರಿ – ಇಲ್ಲ …. ಹಾ …. ಸುಮಾರು … ಒಂದು ಗಂಟೆಗೆ ಸಂಕೇತ ಕೊಡುತ್ತೇನೆ.’ + +‘ಹೂಂ, ಸಂ…..’ + +‘ಕೇಳು. ಒಂದು ಗಂಟೆ ಸಮಯಕ್ಕೆ ಆಕಾಶ ನೋಡಿಕೊಂಡಿರು. ಒಂದು ಬಿರುಸು ಕಂಡ್ರೆ ಅಪಾಯ. ಪೇಟೆ ಹತ್ರ ಹೊರಡ್ಲೇಬೇಡ. ನಾನೇ ಸಮಯ ನೋಡಿ ಬಂದೇನು. ತಿಳಿಯಿತಲ್ವಾ.’ + +‘ಏನಂದೀ? ಬಿರುಸು?’‘ಹೌದೋ, ಬಿರುಸು ಬಾಣ, ಗೊತ್ತಾಯ್ತಲ್ವಾ?’‘ಹುಂ’‘ಒಂದು ಬಿರುಸು ಕಂಡ್ರೆ – ಅಪಾಯ’‘ಹುಂ. ಅಪಾಯವಿಲ್ಲದಿದ್ರೆ?’ + +‘ಎರಡು ಬಿರುಸು ಹಾರಿಸುತ್ತೇನೆ. ಒಂದರ ಹಿಂದೊಂದು. ಒಂದಾದ್ರೆ ಅಪಾಯ. ಎರಡಾದ್ರೆ – ನೆಟ್ಟಗೆ ಸರಾಫಕಟ್ಟೆ – ಏನೂ?’‘ಆದ್ರೆ ಪೋಲೀಸಿನವರು ನೋಡುವದಿಲ್ವಾ ಈ ನಿನ್ನ ಸಂಕೇತಗಳನ್ನಾ?’ + +‘ಉದ್ಯೋಗ ಇಲ್ವಾ ನಿನಗೆ? ಆ ಗೊಡ್ಡು ತಲೆಗಳಿಗೆ ಇದೆಲ್ಲಾ ಅರ್ಥವಾಗಬೇಡವೆ? ಇದೆಂಥಾ ಕೌತುಕಾಂತ ಬಾಯಿಬಿಟ್ಟು ನೋಡ್ಯಾವು. ಇಷ್ಟೆಲ್ಲಾ ಅವುಗಳ ತಲೆಗೆ ಹೋಗಿಬಿಟ್ರೆ ಊರು ಉರುಟಾದೀತು.’ + +‘ಹೌದೋ ನಾಗಣ್ಣ, ಎಲ್ಲಿ ಕಲಿತಿ ಈ ಮಂತ್ರ ತಂತ್ರ. ಏನು ತಲೆ ಮಹಾರಾಯಾ ನಿನ್ನದು! ನಿನ್ನೊಟ್ಟಿಗೆ ಕೆಲಸ ಮಾಡಲು ಸುರು ಮಾಡಿದ ಮೇಲೆ ಅರ್ಧಕ್ಕರ್ಧ ನಿನ್ನ ಉಪಾಯ ಎಲ್ಲಾ ಕಲಿತುಬಿಟ್ಟೆ! ನಿನ್ನ ಗುರು ….’ + +‘ಅದೆಲ್ಲಾ ಇರ್ಲಿ, ನೀನು ಈವತ್ತೇ ಆ ಗುಡ್ಡ ಸೇರಬೇಕು. ನಾನು ಕೆಳಗೆ ಸೋಮೇಶ್ವರದಲ್ಲಿ ಬಿಡಾರ ಮಾಡಿಕೊಂಡಿರುತ್ತೇನೆ. ನಾಡದು ಆದಿತ್ಯವಾರ ಜೋಕೆ. ಒಂದು ಗಂಟೆಗೆ – ನೆನಪಿರಲಿ.’‘ಹುಂ.’ + +ನಾಗಣ್ಣನೂ ಕರೀಮನೂ ಎದ್ದು ಹೊರಟುಹೋದರು. ಎರಡು ದಿನಗಳ ಹಿಂದೆ ಉಳ್ಳಾಲ ದೂಮಪ್ಪ ಹೆಗ್ಡೆಯವರ ಮನೆಗೆ ಯಾರೋ ಕನ್ನ ಹೊಡೆದು ಸುಮಾರು ಎರಡು ಮೂರು ಸಾವಿರ ರೂಪಾಯಿ ಬೆಲೆ ಬಾಳುವ ನಗನಾಣ್ಯಗಳನ್ನು ಹೊತ್ತಿದ್ದರು. ಇತ್ತೀಚೆಗೆ ನಾಲ್ಕೈದು ತಿಂಗಳಿಂದ ಕಳ್ಳರ ಭಯವು ಪ್ರಬಲವಾಗಿತ್ತು. ಪೋಲೀಸಿನವರು ಪ್ರತಿಬಾರಿಯೂ ಪರಾಜಿತರಾಗಿದ್ದರು. ಕಳ್ಳರೂ ಸಾಧಾರಣದವರಿರಲಿಲ್ಲ. ಏನಾದರೊಂದು ಹೊಸ ಸೋಗು ಹಾಕಿಕೊಂಡು ಪೋಲೀಸಿನವರ ಬೆರಳುಗಳಡಿಯಿಂದಲೇ ನುಸುಳಿ ಹೋಗುತ್ತಿದ್ದರು. ಪೋಲೀಸಿನವರಿಗೂ ಕೆಲವು ಜನರ ಮೇಲೆ ಸಂಶಯವಿದ್ದಿತು. ಕಳ್ಳ ವಸ್ತುಗಳನ್ನು ಕೊಂಡುಕೊಳ್ಳುವ ಕೇಶವ, ಐದಾರೇ ತಿಂಗಳ ಹಿಂದೆ ಅತ್ತೆ ಮನೆಯಿಂದ ಬಿಡುಗಡೆ ಹೊಂದಿಬಂದ ಕರೀಂ ಮತ್ತು ನಾಗಣ್ಣ ಇಬ್ಬರೂ ಪೋಲೀಸಿನವರ ದೃಷ್ಟಿಗೆ ತೀರಾ ಅಗೋಚರರಾಗಿರಲಿಲ್ಲ. ಆದರೆ ಯಾರನ್ನೂ ದಸ್ತಗಿರಿ ಮಾಡುವಷ್ಟು ಪ್ರಬಲ ಸಾಕ್ಷಿಗಳಾವುವೂ ದೊರೆತಿರಲಿಲ್ಲ. ಆದುದರಿಂದ ಪೋಲೀಸಿನವರಿಗೆ ಕೈಕಟ್ಟಿದಂತಾಗಿತ್ತು. + +ದೂಮಪ್ಪ ಹೆಗ್ಡೆಯು ಸಾಧಾರಣ ಮಟ್ಟಿಗೆ ಉಳ್ಳಾಲದ ತುಂಡರಸನೆಂತಲೇ ಹೇಳಬೇಕು. ರಾಮನ ತಪ್ಪಿಗೆ ಶ್ಯಾಮನ ತಲೆಯೊಡೆದು ಕಡೆಗೆ ಪಂಚಾಯತಿಗೆ ಮಾಡಿ ದೊಡ್ಡವನಾದ ಮಹಾರಾಯ. ಅಂಥವನ ಮನೆಗೆ ಕನ್ನ ಹಾಕಿದ ಕಳ್ಳರ ಸಾಹಸವನ್ನು ಕಂಡು ಪೋಲೀಸರೂ ತಲೆದೂಗಿದರು. (ಗುಣಕ್ಕೆ ಮತ್ಸರವೇ). ಈ ಬಾರಿಯೂ ನಗಗಳ ಪತ್ತೆಯಾಗದಿದ್ದರೆ ದೂಮಪ್ಪ ಹೆಗ್ಡೆಯು ಪೇಟೆ ಎಲ್ಲಾ ತಳಮಳ ಮಾಡಿ, ಅತಳ ಪಾತಾಳ ಒಂದು ಮಾಡಿ ತಮ್ಮ ಪಕಡಿ ಹಾರಿಸದೆ ಬಿಡನೆಂದು ಪೋಲೀಸಿನವರಿಗೆ ಚೆನ್ನಾಗಿ ಗೊತ್ತು. ಆದುದರಿಂದಲೇ ಅವರಿಗೆ ಕಳ್ಳರನ್ನು ಹಿಡಿಯಲು ದ್ವಿಗುಣೋತ್ಸಾಹ. + +ದೂಮಪ್ಪ ಹೆಗ್ಗಡೆಯ ಮನೆಗೆ ಕನ್ನ ಹಾಕಿದ ಕದೀಮರು ನಮ್ಮ ಕರೀಂ ಮತ್ತು ನಾಗಣ್ಣರೆಂದು ಇನ್ನೊಮ್ಮೆ ಹೇಳಬೇಕಾಗಿಲ್ಲ. ಯಾರ ಮನೆಗೆ ಕಳ್ಳರು ನುಗ್ಗಿದರೂ ತನ್ನ ಮನೆ ಗರ್ಭಗುಡಿಗೆ ಸಮಾನವೆಂದೂ ಕನ್ನ ಹಾಕುವಷ್ಟು ‘ಎದೆಗಟ್ಟಿ’ ಸದ್ಯಕ್ಕೆ ಯಾರಿಗೂ ಇಲ್ಲವೆಂದೂ ಕೊಚ್ಚಿಕೊಳ್ಳುತ್ತಿದ್ದ ಹೆಗ್ಗಡೆಯ ಗರ್ಭಗೃಹವನ್ನು ಭೇದಿಸಿ, ಎರಡು ಮೂರು ಸಾವಿರ ರೂಪಾಯಿ ನಗನಾಣ್ಯಗಳನ್ನು ಹಾರಿಸಿದುದು, ಹೆಗ್ಗಡೆಯ ಹೆಮ್ಮೆ ಒಮ್ಮೆಗೆ ತಗ್ಗಿದಂತೆಯೇ ಸೈ. ಆದರೆ ಎಷ್ಟರವರೆಗೆ? + +ನಾಗಣ್ಣನು ಕರೀಮನನ್ನು ‘ಬೀಳ್ಕೊಂಡು’ ನೆಟ್ಟಗೆ ಮಂಗಳೂರತ್ತ ಕಡೆಗೆ ಹೊರಟ. ಪೇಟೆಗೆ ಬಂದೊಡನೆಯೇ ಪೋಲೀಸು ಠಾಣೆಯ ಮಾರ್ಗವಾಗಿ ಎರಡು ಬಾರಿ ಅತ್ತಿತ್ತ ದರ್ಬಾರಿನಲ್ಲಿ ತಿರುಗಾಡಿಬಿಟ್ಟ. ‘ಚರ್ ಚರ್’ ಎಂದು ತನ್ನೊಡೆಯನ ಆಗಮನವನ್ನು ಘಂಟಾಘೋಷವಾಗಿ ಸಾರುವ ಜೋಡುಗಳು, ಕೆಂಪು ಪಟ್ಟಿಯ ಕಲಾಬತ್ತಿ, ರುಮಾಲು, ಬೆಳ್ಳಿಕಟ್ಟಿನ ಊರುಗೋಲು, ಹುರಿಮಾಡಿದ ದೊಡ್ಡ ಹುಲಿಮೀಸೆ, ಇವೆಲ್ಲಾ ಎಂಥವನನ್ನಾದರೂ ಒಮ್ಮೆಗೆ ಕೈಮುಗಿಸುವಂತಿತ್ತು. ನೋಡಿದರೆ ಅತ್ತೆಮನೆ ಅಂಬಲಿ ತಿಂದು ಸಾಕಾಗಿ ಮೊನ್ನೆ ತಾನೇ ಅರಮನೆಯಿಂದ ಹೊರಗೆ ಬಂದ ವ್ಯಕ್ತಿಯೆಂದು ಅವನನ್ನು ಯಾರೂ ಹೇಳರು. ಅಷ್ಟು ನಾಗಣ್ಣನ ಡೌಲು. + +ಠಾಣೆಯ ಮುಂದೆ ಇಷ್ಟು ಠೀವಿಯಿಂದ ಹೋಗುತ್ತಿರುವವನಾರೆಂದು ಕುತೂಹಲದಿಂದ ನೋಡಿದ ಪೋಲೀಸಿನವನು, ನಾಗಣ್ಣನೆಂದು ತಿಳಿದೊಡನೆಯೇ ಕೊಂಚ ಬೆಚ್ಚಿಬಿದ್ದನು. ಕುತೂಹಲವು ಕೌತುಕವಾಯಿತು. ನಾಗಣ್ಣನು ಸಾಧಾರಣ ಮೂರ್ತಿಯಲ್ಲವೆಂದೂ ಪಾಪದ ಪೋಲೀಸಿನವರಾರಾದರೂ ಸಿಕ್ಕಿದರೆ, ಏನಾದರೂ ಹಂಚಿಕೆ ಮಾಡಿ, ಏಳುಕೆರೆ ನೀರು ಕುಡಿಸಿಬಿಟ್ಟಾನೆಂದೂ ಪೋಲೀಸಿನವರಿಗೆಲ್ಲಾ ತಿಳಿದಿತ್ತು. ಇಂದಿನ ಅವನ ವರ್ತನೆಯನ್ನು ನೋಡಿದೊಡನೆಯೇ ನಾಗಣ್ಣನು ಏನೋ ಕಿತಾಪತಿಗೆ ಹೊರಟಿದ್ದಾನೆಂದು ಅವರಿಗೆ ದೃಢವಾಯಿತು. ಅಂತೂ ಗುಪ್ತ ಪೋಲೀಸನೊಬ್ಬನು ದೂರದಿಂದ ಅವನನ್ನು ಅನುಸರಿಸತೊಡಗಿದನು. ಇದನ್ನು ಕಂಡು ನಾಗಣ್ಣನು ಮನಸ್ಸಿನಲ್ಲೇ ನಕ್ಕು ನೆಟ್ಟಗೆ ಪಂಚಮಾಲಿಗೆ ಹೋಗಿ ಅಕ್ಕಿ ಧಾರಣೆ ಕೇಳಿದ; ಸರಾಫಕಟ್ಟೆಗೆ ನಡೆದು ಪವನಿಗೆ ಕ್ರಯ ಮಾಡಿದ; ಅಲ್ಲಿಂದ ಬಿರುಸು ಬಾಣ ಪಟಾಕಿಗಳನ್ನು ಮಾರುವ ಅಂಗಡಿಗೆ ಹೋಗಿ ಎರಡು ಬಿರುಸು ಕೊಂಡುಕೊಂಡ. ಇನ್ನೂ ಪೋಲೀಸಿನವನು ಬೆನ್ನು ಬಿಟ್ಟಿರಲಿಲ್ಲ. ನಾಗಣ್ಣನು ನಗುತ್ತಾ ರೈಲ್ವೇ ನಿಲ್ದಾಣಕ್ಕೆ ಬಂದು ರೈಲು ಹತ್ತಿದೊಡನೆ ಪೋಲೀಸಿನವನೂ ಮೌನವಾಗಿ ಇನ್ನೊಂದು ಗಾಡಿ ಹತ್ತಿದ. ಅಂತೂ ಇಂತೂ ಶುಕ್ರವಾರ ಸಾಯಂಕಾಲದೊಳಗೆ ಪೋಲೀಸು ಠಾಣೆಯಲ್ಲಿ ತಾನು ಇನ್ನೊಮ್ಮೆ ಕಾರ್ಯರಂಗಕ್ಕೆ ಇಳಿದಿದ್ದೇನೆಂದು ತೋರಿಸಿ ನಾಗಣ್ಣನು ಸೋಮೇಶ್ವರದಲ್ಲಿಳಿದ; ಅವನ ಹಿಂದೆ ಪೋಲೀಸಿನವ. + +ಸೋಮೇಶ್ವರದಲ್ಲಿ ಮನೆಗಳಿಗೆ ಅಭಾವವಿದ್ದಿಲ್ಲ. ರಾಮಣ್ಣ ಭಟ್ರ ಒಕ್ಕಲಿನವನೊಬ್ಬ ಗೇಣಿ ತಿಂದು ಓಡಿಹೋಗಿದ್ದ. ಅವನ ಮನೆ ಖಾಲಿಯಾಗಿತ್ತು. ನಾಗಣ್ಣನ ‘ಜೇನ ಸೋನೆಯ’ ತರದ ನಾಲ್ಕು ಮಾತುಗಳನ್ನು ಕೇಳಿ ರಾಮಣ್ಣ ಭಟ್ರು ಮನೆ ಬಿಟ್ಟುಕೊಟ್ಟರು. ನಾಗಣ್ಣ ಅದರಲ್ಲಿಳಿದುಕೊಂಡ. ಹಳ್ಳಿಯಲ್ಲಿ ಊಟಕ್ಕೆ ಹಣ ಬಿಚ್ಚಬೇಕಾಗಿಲ್ಲ. ಧರ್ಮಾತ್ಮರು ನಾಗಣ್ಣನಂತಹ ಪಟಾಕಿ ಬಾಯವರಿಗೆ ಒಂದು ತಿಂಗಳವರೆಗಾದರೂ ಅನ್ನವಿಕ್ಕಿ ಸಾಕಿ ಸಲಹಿಯಾರು! + +– 2 – + + + +ನಾಗಣ್ಣನು ಶನಿವಾರ ದಿನ ನಾಲ್ಕೈದು ಬಾರಿಯಾದರೂ ಕಾಡಿನ ಬದಿಗೆ ಹೋಗಿ ಏನೋ ಯೋಚಿಸಿ ಅಧೈರ್ಯಪಟ್ಟವನಂತೆ ನಟಿಸಿ ಹಿಂದಿರುಗಿ ಬಂದು ಬಿಟ್ಟಿದ್ದ. ಇದರಿಂದಾಗಿ ಆ ದಿನ ಸಾಯಂಕಾಲದೊಳಗೆ ಆರು ಪೋಲೀಸಿನವರು ಸೋಮೇಶ್ವರಕ್ಕೆ ಬಂದಿದ್ದರು. ನಾಗಣ್ಣನಂತೂ ಈ ಲೋಕದಲ್ಲೇ ಇರಲಿಲ್ಲ – ಆನಂದದಿಂದ. + +“ಬಿರುಸು ಎರಡು ಕರೀಮನಿಗೆ.” + +ರಾತ್ರಿ ಮಲಗಲು ಹೋಗುವಾಗ ಮನೆಯ ಮುಂದಿನ ಮರಗಳ ಮರೆಯಲ್ಲಿ ಕಣ್ಣಿಗೆ ನಸ್ಯವಿಕ್ಕಿ ಕಾದು ಕುಳಿತಿದ್ದ ಪೋಲೀಸಿನವರನ್ನು ಕಂಡು ನಾಗಣ್ಣನು ಆನಂದ ತೃಪ್ತಿಗಳಿಂದ ಇನ್ನೊಮ್ಮೆ ಮನದಲ್ಲೇ ನಕ್ಕನು. ಕೆಂಪುಟೊಪ್ಪಿಗಳು ಈ ಬಾರಿ ನಿಸ್ಸಂಶಯವಾಗಿಯೂ ಪರಾಜಿತರಾಗುವರೆಂದು ಅವನ ದೃಢವಾದ ನಂಬಿಕೆ – ಈ ನವೀನವಾದ, ಇಷ್ಟರವರೆಗೆ ಯಾರೂ ಕಂಡು ಕೇಳದಂತಹ ಉಪಾಯವನ್ನು ಭೇದಿಸಿ ನೋಡಲು ದಪ್ಪ ತಲೆಯ ಆ ಮೊದ್ದು ಜಂತುಗಳಿಗೆ ಸಾಧ್ಯವೇ? ಛೆ! + +ಆದಿತ್ಯವಾರ ದಿನ ಮುಂಜಾನೆ ನಾಗಣ್ಣನು ಇನ್ನೊಮ್ಮೆ ಕಾಡಿನ ಬಳಿಗೆ ಹೋಗಿ ಏನೋ ಅನುಮಾನಪಟ್ಟವನಂತೆ ಹಿಂತಿರುಗಿದನು. ಆದರೆ ಒಂದು ವಿಶೇಷ. ಮೊದಲಿನಂತೆ ಪೋಲೀಸಿನವರು ಅವನನ್ನು ಅನುಸರಿಸಿ ಬಂದಿರಲಿಲ್ಲ; ಮಾತ್ರವಲ್ಲದೆ ಪರೀಕ್ಷಿಸಿ ನೋಡಲಾಗಿ ಮೊದಲನೆ ಆರು ಮಂದಿಯ ಬದಲು ಈಗ ಬರೇ ನಾಲ್ಕು ಮಂದಿ ಮಾತ್ರವಿದ್ದರು. ನಾಗಣ್ಣನಿಗೆ ಆಶ್ಚರ್ಯವೂ ಕೌತುಕವೂ ಅಸಮಾಧಾನವೂ ಆಯಿತು. + +“ಏನಾಯ್ತು ಇವ್ರಿಗೆ? ಹಾಂ!” + +ಮಧ್ಯಾಹ್ನ ಇಬ್ಬರ ಹೊರತು ಉಳಿದವರೆಲ್ಲರೂ ಹೊರಟು ಹೋಗಿದ್ದರು. ಅವರೂ ಕೂಡ ಮೊದಲಿನ ಹಾಗೆ ಜಾಗರೂಕತೆಯಿಂದ ಮನೆಯನ್ನು ನೋಡಿಕೊಳ್ಳುವುದರ ಬದಲು ಈಗ ಏನೋ ಅಸಡ್ಡೆಯಿಂದ ವರ್ತಿಸುತ್ತಿದ್ದರು. ಇದನ್ನು ನೋಡಿದ ಬಳಿಕ ನಾಗಣ್ಣನ ಮನಸ್ಸಿನ ನೆಮ್ಮದಿಯೇ ಹೋದಂತಾಯಿತು. ಇಷ್ಟು ಸಾಧನೆ ಮಾಡಿಯೂ ಕಾರ್ಯವು ಕೈಗೂಡದಿದ್ದರೆ – ಚಿಃ – ಆಲೋಚನೆ ಮಾಡುವಾಗ ದುಃಖ ಬರುತ್ತೆ (ಸಹಜವೇ ಸರಿ!), ಎರಡು ಮೂರು ಸಾವಿರ ರೂಪಾಯಿಯು ಕಣ್ಣೆದುರಿನಲ್ಲೇ ಕೈಯಿಂದ ತಪ್ಪಿಹೋಗುವಾಗ! + +ನಾಗಣ್ಣನನ್ನು ಕಾಯಲಿಟ್ಟಿದ್ದ ಪೋಲೀಸರ ಸಂಖ್ಯೆ ಸಾಯಂಕಾಲ ಇನ್ನೂ ಕಡಮೆಯಾಯಿತು. ಅವನ ಕಾರ್ಯಕಲಾಪಗಳ ಮೇಲೆ ಕಣ್ಣಿಡಲು ಉಳಿದವನು ಒಬ್ಬನೇ – ನಾಗಣ್ಣನನ್ನು ಪೇಟೆಯಿಂದ ಸಂಶಯದಿಂದ ಅನುಸರಿಸಿಕೊಂಡು ಬಂದಿದ್ದ ಕಾನ್ಸ್ಟೇಬಲ್ ಮಹಾಶಯ! ‘ತಾನೊಂದೆಣಿಸಿದರೆ ದೈವ…..’ ಇತ್ಯಾದಿ ಇದೆಯಲ್ಲಾ, ಹಾಗಾಯಿತು ನಮ್ಮ ನಾಗಣ್ಣನಿಗೆ, ನಿಜವಾಗಿಯೂ ಖೇದಾಸ್ಪದವಾದ ವಿಷಯ. + +‘ಅವರಿಗೆ ಏನೋ ಸಂಶಯವಾಗಿರಬೇಕು. ನನ್ನ ನಟನೆ ಸ್ವಲ್ಪ ಜಾಸ್ತಿಯಾಯ್ತೂಂತ ಕಾಣುತ್ತೆ. ಛೆ; ಕರೀಮನಿಗೆ ಹಾಗಾದ್ರೆ, ಒಂದೇ ಬಿರುಸು ಈವತ್ತು. ಸಂಕೇತಾಂತ ಒಂದು ಮಾಡಿದ್ದು ಒಳ್ಳೇದೇ ಆಯ್ತು. ಇಲ್ಲದಿದ್ರೆ ಮಾಲು ಸಮೇತ ಕರೀಂ ಅವರ ಕೈಯಲ್ಲಿ ಸಿಕ್ಕಿ ಬಿಡುತ್ತಿದ್ದ. ನಿನ್ನೆ ಆರು ಜನಾ; ಈವತ್ತು ಒಬ್ನೇ. ಎಲ್ರೂ ಆ ಕೇಶವನ ಸರಾಫ ಕಟ್ಟೆಯ ಹತ್ರ ಹೊಂಚು ಹಾಕಿಕೊಂಡಿರಬೇಕು. ಮುಖ್ಯ ನಾನು ನಟನೆಮಾಡಿದ್ದು ಸ್ವಲ್ಪ ಜಾಸ್ತಿಯಾಯ್ತೂಂತ ಕಾಣುತ್ತೆ. ಆ ಕಾಡಿನ ಬಳಿಗೆ ಅಷ್ಟು ಸರ್ತಿ ಹೋಗ್ಬಾರಾದಿತ್ತು. ಕೈಯಲ್ಲಿದ್ದ ತುತ್ತು ಬಾಯಿಗೆ ಬಾರದಾಯಿತಲ್ಲಾ! ಸತ್ತೋಗ್ಲಿ ಇನ್ನು. ಮರುಗಿ ಏನು ಪ್ರಯೋಜನ? ಅಂತೂ ಬೇಗ ಬೇಗ ಮಾಡ್ಲಿಕ್ಕಾಗ್ಲಿಲ್ಲ ಕೆಲಸ. ಕರೀಮನಿಗೆ ಒಂದೇ ಬಿರುಸು. ಈವತ್ತು ನಮ್ಮ ಕೆಲಸ ಎಲ್ಲಾ ಕೈಗೂಡಿದ್ರೆ …. ಇರ್ಲಿ ….. ಕೊಡುಮಣ್ತಾಯ ದೈವಕ್ಕೆ…..’ ಇತ್ಯಾದಿ ಹರಕೆ ಹೇಳಿಕೊಂಡು ಮನೋರಾಜ್ಯದಲ್ಲಿ ನಾಗಣ್ಣನು ಸ್ವೇಚ್ಛೆಯಿಂದ ವಿಹರಿಸುತ್ತಿದ್ದನು. + +– 3 – + +ಕರೀಮನು ಗುಡ್ಡೆಯ ಮೇಲೆ ಮರಗಳ ಮರೆಯಲ್ಲಿ ನಿಂತು ಆಕಾಶವನ್ನು ತದೇಕದೃಷ್ಟಿಯಿಂದ ನೋಡುತ್ತಿದ್ದನು. ಸ್ವಲ್ಪ ಸಮಯದ ಬಳಿಕ ದೂರದಲ್ಲಿ ಆಕಾಶವು ಕ್ಷಣಕಾಲ ಬೆಳಗಿತು. ಒಂದು ಬಿರುಸು ಜಗ್ಗನೆ ಕಾಣಿಸಿಕೊಂಡು, ಸರ್ರನೆ ಮೇಲೇರಿ ಅಂಧಕಾರದಲ್ಲಿ ಲೀನವಾಯಿತು. + +‘ಹಃ ಕರ್ಮವೇ? ಒಂದು ಬಿರುಸು. ಹಾಗಾದ್ರೆ ಅಪಾಯ.’ + +ಕರೀಮನ ಮಾತು ಮುಗಿಯುವುದರೊಳಗೆ, ಇನ್ನೊಂದು ಬಿರುಸು ಆಕಾಶದಲ್ಲಿ ಮೂಡಿ ಮಾಯವಾಯಿತು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +‘ಹಃ ಎರಡು ಬಿರುಸು! ನೆಟ್ಟಗೆ ಸರಾಫ ಕಟ್ಟೆಗೆ ಸಾಮಾನು’ ಎನ್ನುತ್ತಾ ಕರೀಮನು ಹಿಂದು ಮುಂದೆ ನೋಡದೆ ಗುಡ್ಡ ಇಳಿದು, ಮಂಗಳೂರ ದಾರಿ ಹಿಡಿದು ಧಾವಿಸಿದ. ಇನ್ನು ಅರ್ಧನಿಮಿಷ ಅವನು ಆಕಾಶವನ್ನು ನಿರೀಕ್ಷಿಸಿ ನಿಂತಿದ್ದರೆ, ಮೂರನೇ, ನಾಲ್ಕನೇ, ಐದನೇ …. ನೂರನೇ, ಇನ್ನೂರನೇ ಬಿರುಸು ಬಾಣ ಆಕಾಶದಲ್ಲಿ ಹಾರಿ ಮಾಯವಾಗುವುದನ್ನು ಕಂಡು ಆಶ್ಚರ್ಯದಿಂದ ಮೂಕನಾಗುತ್ತಿದ್ದ. + +ಆದರೆ ಕರೀಮನು ಆಕಾಶವನ್ನು ನಿರೀಕ್ಷಿಸಲೂ ಇಲ್ಲ. ಆಶ್ಚರ್ಯದಿಂದ ಮೂಕನಾಗಲೂ ಇಲ್ಲ. ಗುಡ್ಡದ ಕೆಳಗೆ ಸೋಮೇಶ್ವರ ದೇವಸ್ಥಾನದಲ್ಲಿ ಅಂದು ರಾತ್ರಿ ವರ್ಷಾವಧಿಯ ಉತ್ಸವವೆಂದು ಅವನಿಗೆ ಗೊತ್ತೂ ಇರಲಿಲ್ಲ. ಪಾಪ! + + + +ನಾಗಣ್ಣನ ಅಭಿಮಾನ ಭಂಗವಾಯ್ತು. ಹೆಗ್ಗಡೆಯ ತಗ್ಗಿದ ಮುಖವು ಏರಿಹೋಯ್ತು. ಕರೀಮನಿಗೆ ಸೆರೆಮನೆಯ ಗತಿಯಾಯ್ತು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_41.txt b/Kenda Sampige/article_41.txt new file mode 100644 index 0000000000000000000000000000000000000000..f71c99c75f601ed83138bc7a68894bb8bc8f6eae --- /dev/null +++ b/Kenda Sampige/article_41.txt @@ -0,0 +1,33 @@ +(ಸೂರ್ಯಕೀರ್ತಿ) + +ಶ್ರಾವಣದ ಮಳೆ ಕೈಬಿಡದೆ ಸುರಿಯುತ್ತಲೇ ಇತ್ತು, ಮನೆಯ ಅಂಗಳವೆಲ್ಲ ಕೆಸರಾಗಿ; ಕೈಗೆ ಬಾಯಿಗೆ ಏನಾದರೂ ಖಾರದ ಪದಾರ್ಥಗಳು ಸಿಕ್ಕರೆ ಸಾಕು ಎನ್ನುವ ಮನೋಭಾವನೆಗೆ ತಂದು ನಿಲ್ಲಿಸಿತ್ತು. ಆಷಾಢಕ್ಕೆ ಬಂದ ಆರು ಜನ ಚಿಕ್ಕಮ್ಮಂದಿರು ಮನೆಯೊಳಗೆ ‘ನೀನು ತಾಟಗಿತ್ತಿ, ನೀನು ತಟ್ವಣಿಗಿತ್ತಿ’ ಎಂದೆಲ್ಲ ಕಿತ್ತಾಡಲು ಶುರುಮಾಡಿದ್ದರು. ಅಜ್ಜಿ ಬಿತ್ತನೆ ಬತ್ತವ ನೀರಿನಲ್ಲಿ ಒಂದು ರಾತ್ರಿ ನೆನಸಿ ಒಂದು ಗೋಣಿಚೀಲದಲ್ಲಿ ಸುರಿದು ಅದರ ಬಾಯಿಯನ್ನು ಭದ್ರವಾಗಿ ಕಟ್ಟಿ,‘ಇದರ ಬಾಯಿ ಕಟ್ರೂ ಇವರ ಬಾಯಿ ಕಟ್ಟೋಕೆ ಆಗಲಿಲ್ವಲ್ಲ ಸಿವ್ನೆ’ ಎಂದು ಪಡಸಾಲೆಯ ಮೇಲೆ ಕುಳಿತುಕೊಂಡಳು. ಮಳೆ ಸುರಿಯುತ್ತಲೇ ಇತ್ತು ದನಕುರಿ ಮೇಕೆಗಳ ಮೇಯಲು ಬಿಡದಂತೆ ಹುಯ್ಯುತ್ತಲೇ ಇತ್ತು. ಏಕಾದಶಿಗೆ ಮಾಡಿದ್ದ ಒಂದು ಕಂಡುಗ ಕಜ್ಜಾಯ, ಹತ್ತು ಸೇರು ಚಕ್ಕಳಿ, ಕೋಡುಬಳೆ, ಅಕ್ಕಿ ಸ್ಯಾವಿಗೆಯೆಲ್ಲ ಖಾಲಿಯಾಗುವ ಮಟ್ಟಕ್ಕೆ ಬಂದರೂ ಯಾರಿಗೂ ಹೊಟ್ಟೆಯ ಹಸಿವು ಸುಮ್ಮನಿರಲಿಲ್ಲ, ಬರುವ ಮಳೆಯ ಜೊತೆಗೆ ಏನಾದರೂ ತಿನ್ನಬೇಕೆಂಬ ಹಂಬಲ ಇನ್ನು ಹೆಚ್ಚಾಗುತ್ತಲೇ ಇತ್ತು. ಎಲ್ಲವನ್ನು ತಿಂದು ಖಾಲಿ ಮಾಡಿದರೆ ಬೀಗರಮನೆಗೆ ಏನು ಕೊಡೋದು ಎಂದೆಲ್ಲ ಯೋಚಿಸಿ ಒಂದಷ್ಚು ತಿಂಡಿಗಳ ದೊಡ್ಡದಾದ ಬಾನಗಳಿಗೆ ತುಂಬಿ ಅಟ್ಟದ ಮೇಲೆ ಯಾರಿಗೂ ಕಾಣದಂತೆ ಇಟ್ಟಿದ್ದಳು. ಅಜ್ಜಿಗೆ ಸಂಬಂಧಗಳು ಹೆಚ್ಚಿದಂತೆಲ್ಲ ಕಜ್ಜಾಯ ಪಾಕ ತೆಗೆಯುವುದು ಬೇಯಿಸುವುದು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇತ್ತು. ಅಳಿಯರು ಬಂದ್ರೆ ಅವರಿಗೂ ಒಂದಿಷ್ಟು ಕೊಡಬೇಕು ಅದು ಅಲ್ಲದೆ ಮಗ ಸೊಸೆ ಮೊಮ್ಮಕ್ಕಳಿಗೂ ಕೊಡಬೇಕು, ಮಳೆಗಾಲ ಬೇರೆ ನಮ್ಮ ಬಾಯಿಗಳು ತಟತಟನೆ ಮಾತನಾಡುತ್ತವೆ ‘ಏನಾದರೂ ಕೊಡು, ತಿನ್ನಬೇಕೆಂದು’ ಇದೆಲ್ಲ ಯೋಚಿಸಿಕೊಂಡು ಬಾನ, ವಾಡೆ, ಮಡಿಕೆ ಕುಡಿಕೆಗಳ ಬಳಿ ಯಾರನ್ನು ಬಿಡದೆ ಅವಳೊಬ್ಬಳೆ ನಿಭಾಯಿಸುತ್ತಿದ್ದಳು. + +ಚಿಕ್ಕಮ್ಮಂದಿರು ನಮ್ಮ ಗಂಡನ ಮನೆಗೆ ಅಷ್ಚು ಕೊಡಲೇಬೇಕು, ಕೊಡದಿದ್ದರೆ ‘ಎಂತಾ ಜಿಪುಣರ ಮನೆಯೇ ನಿಮ್ದು’ ಎಂದೆಲ್ಲ ಆಡಿಕೊಂಡು ನಗುತ್ತಾರೆ ಅಮ್ಮ ಎಂದೆಲ್ಲ ಅಜ್ಜಿಗೆ ಮೊದಲೇ ಹೇಳಿದ್ದರು. ಆದರೆ ಮನೆಯೊಳಗೆ ಶ್ರಾವಣದ ಪುಷ್ಯಮಳೆಯಂತೆ ಇವರ ಬಾಯಿಗಳು ಕೂಡ ಬಿಡುವಿಲ್ಲದೆ ಮಾತನಾಡಲು ಶುರುಮಾಡಿದ್ದವು. + +ಅಜ್ಜಿಗೆ ಏಳು ಜನ ಹೆಣ್ಣುಮಕ್ಕಳು, ಇಬ್ಬರು ಗಂಡುಮಕ್ಳಾಗಿದ್ದರೂ ಏನು ಪ್ರಯೋಜನವಿಲ್ಲವೆಂದು ಅವಳೆ ಗೊಣಗುತ್ತಿದ್ದಳು. ಆಷಾಢಕ್ಕೆ ಬಂದ ಮಕ್ಕಳ ನೋಡಿ ಖುಷಿಯಿಂದ ಅವರಿಗೆ ಏನು ಬೇಕೋ ಅದನೆಲ್ಲ ಮಾಡುವುದರಲ್ಲಿಯೇ ಏನೋ ಖುಷಿ ಅವಳಿಗೆ. ಅಷ್ಟೆಲ್ಲ ಕಜ್ಜಾಯ ಮಾಡಿದ್ದರೂ ಒಂದನ್ನು ತಿನ್ನುವುದಕ್ಕೂ ಆಗದೆ ಮಕ್ಕಳ ಆಗುಹೋಗುಗಳ ಬಗ್ಗೆ ರಾತ್ರಿಯಿಡಿ ಮಾತನಾಡುತ್ತಾ, ಒಬ್ಬೊಬ್ಬರಾಗಿ ನಂಗೆ ಸೀರೆ ಬೇಕು, ಕಾಸಿನ ಸರ ಮಾಡ್ಸು, ಕಿವಿಗೆ ಬೆಂಡೋಲೆ ಕೊಡ್ಸು, ನೋಡಮ್ಮ ನನ್ನ ಕಾಲಿಗೆ ಚೈನು ಇಲ್ಲ, ಕೈಗೆ ಬಳೆಗಳು ಇಲ್ಲ, ಮೂಗಿಗೆ ಮೂಗ್ಬಟ್ಟು ಇಲ್ಲ ಎಂದೆಲ್ಲ ಹೇಳಲು ಶುರುಮಾಡಿದ ಮೇಲೆ ಅಜ್ಜಿಗೆ ನಿದ್ದೆಯೇ ಬರುತಿರಲಿಲ್ಲ! ಕುರಿಕಂಬಳಿಯ ಹೊದ್ದುಕೊಂಡು ಅತ್ತಿಂದಿತ್ತ ಒದ್ದಾಡಿ ರಾತ್ರಿಯೆಲ್ಲ ಕಣ್ಣೀರಿನಿಂದಲೇ ಕೈತೊಳೆದು ಬೆಳ್ಗೆ ಅಟ್ಟಿ ಬಾಕ್ಲ ತೊಳೆದು ರಂಗೋಲೆಯಿಟ್ಟು, ಕೊಟ್ಟಿಗೆಯ ಸಗಣಿ ಬಾಚಿ ಹಸುಗಳಿಂದ ಹಾಲು ಕರೆಯಲು ಶುರುಮಾಡುವಾಗಲೇ ಯಾರೋ ಬಂದಂತೆ ಭಾಸವಾಯಿತು. ನೋಡಿದರೆ ಅಳಿಯರು ಪಟ್ಟೆಯಂಚಿನ ಪಂಚೆ ಉಟ್ಟುಕೊಂಡು ಹೆಗಲ ಮೇಲೆ ಮೈಸೂರಿನ ಮಿರಿಮಿರಿಯ ಟವಲ್ ಹಾಕಿಕೊಂಡು, ತಮ್ಮ ತಮ್ಮ ಹೆಂಡತಿಯರ ಬಳಿ ಹೋಗಲು ನಿರತರಾದರು. + +‘ಲೇಯ್ ಚಿಕ್ಕಮಿ, ದೊಡ್ಡಮಿ, ಸಾಕಿ, ಚೆನ್ನಿ, ಚೌಡಿ, ಬೋರಿ ಬಂದ್ರೆ ಇಲ್ಲಿ’ ಎಂದು ಕರೆದಾಗ ಹೊರಗೆ ನಿಂತಿದ್ದ ಗಂಡನನ್ನು ನೋಡಿ ಮಳೆಯಂತೆ ಕರಗಿ ಹೋದರು. “ಈ ಮಳೇಲಿ ಬಂದಿದ್ರಲಾ ಹ್ಯಾಂಗ್ಯಪಾ ಬಂದ್ರಿ? ಎತ್ತಿನಗಾಡಿ ಗಿಡಿ ಕಳ್ಸಿ ಅಂದಿದ್ರೆ ನಿಮ್ಮ ಮಾವ ಬರೋರು, ಆರು ಜನನೂ ಮಾತನಾಡಿಕೊಂಡೆ ಬಂದ್ರಾ? ಮನೆಯಲ್ಲಿ ಬೀಗರು ಹೆಂಗ್ ಅವ್ರೆ?” ಎಂದೆಲ್ಲ ಮಾತನಾಡಿಸುವಲ್ಲಿ ಸೂರ್ಯ ನೆತ್ತಿ ಕಡೆ ಓಡುತ್ತಲೇ ಇದ್ದ. ಆಗ ತಾನೇ ಕರೆದು ನೊರೆ ಹಾಲನ್ನು ಅಡುಗೆಮನೆಗೆ ತರುವಾಗಲೇ ‘ಅತ್ತೆ ನಮ್ಗೆ ಕಾಯಿಸಿದ ಗಿಯಿಸಿದ ಹಾಲು ಬ್ಯಾಡ್ರಿ ಹಂಗೆಯ ಕೊಟ್ಟುಬಿಡಿ, ನಮ್ಮ ಮನೆಯಲೂ ಕೂಡ ಹಿಂಗೆ ಕುಡಿಯೋದು’ ಎಂದರು, ಕೈಯಲ್ಲಿದ್ದ ಒಂದು ಕಬ್ಬಿಣದ ¨ಕೆಟ್ಟು ಹಾಲನ್ನು ಎಲ್ಲರೂ ಸೇರಿ ಕುಡಿದ ಮೇಲೆ ‘ಕೆರೆಕಡೆ ಹೋಗಿ ಬರ್ತಿವೆ ಕಣ್ರೆ, ತಿನ್ನೋಕೆ ಏನಾದ್ರೂ ರುಚಿರುಚಿಯಾಗೆ ಮಾಡ್ರೆ’ ಎಂದು ಹೊರಟಾಗ ಒಬ್ಬೊಬ್ಬರು ತನ್ನ ಗಂಡನಿಗೆ ಅದು ಮಾಡಬೇಕು ಇದು ಮಾಡಬೇಕು ಮನೆಯಲ್ಲಿ ಅದು ಇಲ್ಲ ಇದು ಇಲ್ಲ ಎಂತಾ ಮನೆಯಿದು ಎಂದೆಲ್ಲ ಜಗಳ, ಪಾತ್ರೆಗಳ ಕುಕ್ಕುವಿಕೆಯೊಂದಿಗೆ ಮುನಿಸುಗಳು ಹುಟ್ಟುತಿದ್ದವು. + + + +ಅಜ್ಜ ಮೊಳಕೆ ಬತ್ತವ ಎತ್ತಿನಗಾಡಿಗೆ ಹಾಕಿಕೊಂಡು ವಟ್ಲು ಹಾಕಲು ಹೊರಟ. ಅಜ್ಜಿ ಕೈಸನ್ನೆ ಮಾಡಿ ‘ಅಳಿಯಂದ್ರೂ ಬಂದವ್ರೆ ಇವತ್ತಾರು ಇರ್ರಿ’ ಎಂದರು ಕೇಳದೆ ಅದೇನು ಮಾಡಬೇಕು ಮಾಡ್ಕೋ ಎಂದು ಗದ್ದೆಯ ಕಡೆ ಹೊರಟೇಬಿಟ್ಟ. ಇಬ್ಬರು ಬಾಣಂತನಕ್ಕೆ ಬಂದಿದ್ದರು. ಅವರ ಹಸುಗೂಸುಗಳು ಕೈಬಿಡದೆ ರಚ್ಚೆ ಹಿಡಿಯುತಿದ್ದವು, ಅಜ್ಜಿ ಕೂಸುಗಳಿಗೆ ಎಣ್ಣೆ ಸ್ನಾನ ಮಾಡ್ಸಿ ಮೈ ಕೈಯಿ ನೀವಿ, ತಟ್ಟಿ ಬಿಸಿನೀರಿನ ಸ್ನಾನಕ್ಕೆ ತೊಟ್ಟಿಲಿಗೆ ಹಾಕಿದಾಗ ಒಂದೆರಡು ಗಂಟೆ ನಿಶ್ಯಬ್ದವಾಗಿ ಕೂಸುಗಳು ಮಲಗಿಬಿಡುತಿದ್ದವು. ಇನ್ನು ಬಾಣಂತಿಯರಿಗೆ ಊಟ, ಸ್ನಾನ ಕೇಳಬೇಕೆ? ಅವರಿಗೂ ಕೂಸುಗಳಂತೆ ಉಪಚರಿಸಿ ತಣ್ಣೀರು ಮುಟ್ಟಲು ಬಿಡದೆ ಕೂಸುಗಳ ಬಟ್ಟೆ ಒಗ್ದು, ಬಂದ ಅಳಿಯರನ್ನು ಮಾತನಾಡಿಸಲು ಸಮಯ ಸಿಗದೆ ಅಡುಗೆಮನೆಯಲ್ಲಿ ಉಪ್ಸಾರು ಮುದ್ದೆಯ ಮಾಡಲು ಸಿದ್ಧಳಾದಳು. ನನ್ನ ಗಂಡನಿಗೆ ಅದು ಇಷ್ಟವಿಲ್ಲ ಇದನ್ನೆ ಮಾಡಬೇಕಂತೆ ಇದು ಇಷ್ಟವಿಲ್ಲ ಅದು ಮಾಡಿದ್ರೆ ಹೆಂಗೆ ಇರುತ್ತೆ ಎಂದೆಲ್ಲ ಚಿಕ್ಕಮ್ಮಂದಿರು ಹೇಳುತ್ತಲೇ ಇದ್ದರು. ಅಜ್ಜಿ ನಿಧಾನವಾಗಿ “ತಾಯಿ, ಏಯ್ ತಾಯಿ ನಿಮ್ ಗಂಡಂದಿರಿಗೆ ಏನು ಬೇಕೋ ಅದನ್ನು ಮಾಡಿ ಕೊಡ್ರೆ ನಾನೇನು ಬ್ಯಾಡ ಅಂದಿದ್ದೇನೆ? ಬನ್ರೆ ಬೇಯ್ಸಿ ಹಾಕ್ರಿ” ಎಂದಳು. ಆದರೆ ಈ ಮಾತು ಬೇರೆ ಕಡೆಯೆ ತಿರುಗಿಕೊಂಡು “ಅಲ್ಲೂ ಮಾಡಬೇಕು ಇಲ್ಲೂ ಬಂದ್ರೂ ಕೆಲ್ಸ ಮಾಡಬೇಕು ನಮ್ಗೆ ವಿಶ್ರಾಂತಿಯೇ ಇಲ್ಲ” ಎಂದೆಲ್ಲ ಗೊಣಗಲು ಶುರು ಮಾಡಿದರು. ಮುದ್ದೆ ತಿರುಗುವಾಗಲೇ ಹಿಟ್ಟಿನ ಮಡಿಕೆ ‘ಪಟಾರನೇ’ ಒಡೆದು ಹೋಯ್ತು, ಸಾರಿನ ಮಡಿಕೆಗೆ ಲಡಬಡನೆ ಸೌಟು ಹಾಕಿ ತಿರುಗುವಾಗಲೇ ಮಡಿಕೆಯ ಅಂಡು ತೂತಾಯಿತು. + +‘ಈ ಮುದ್ಕಿ ಇನ್ನು ಹಳೆ ಕಾಲದಲ್ಲೆ ಆಯ್ತೆ, ಒಂದು ಸ್ಟೀಲ್, ಸಿಲ್ವರ್ ಪಾತ್ರೆಗಳು ಇಲ್ಲ ಈ ಮುಡ್ಕು ಮಡ್ಕೆ, ಈ ತೂತು ಮನೆಯಲ್ಲಿಯೇ ಸಾಯ್ಬೇಕು’ ಎಂದೆಲ್ಲ ಕೊಸರಾಡಿದರು. + +ಅಜ್ಜಿ ತಂಗಳ್ಮುದ್ದೆ, ಗಟ್ಟಿಮೊಸರು ಹಾಕಿ ಗದ್ದೆ ಕಡೆ ಹೋಗುವವರು ಯಾರಾದರೂ ಸಿಕ್ಕರೆ ‘ನಮ್ಮವರಿಗೆ’ ಈ ಗಂಟು ಕೊಟ್ಟುಬುಡಿ ಅಂತ ದಾರಿಯಲ್ಲಿ ಹೋಗುವವರ ಕೂಗಿ ಕೂಗಿ ಕೇಳಿ ಎಮ್ಮೆ ಮೇಯಿಸಲು ಹೋಗುತಿದ್ದ ಮೂಗರ ತಾಯವ್ವ ಸಿಕ್ಕಿ ಅವಳಿಗೆ ಬುತ್ತಿಯ ಕೊಟ್ಟು ‘ಅಳಿಯಂದ್ರೂ’ ಬಂದವರೆ ಬೇಗ ಬಂದ್ಬುಡೋಕೆ ಹೇಳು ತಾಯವ್ವ ನಮ್ಮವರಿಗೆ ಎಂದು ಮನೆಯೊಳಗೆ ಬರುವವರಷ್ಟರಲ್ಲಿಯೇ ‘ಈ ಉಪ್ಸಾರು ಮುದ್ದೆ ಗತಿಯಿಲ್ದೆ ನಾವು ಬಂದಿದ್ವೆ? ನಿಮ್ಮವ್ವ ಮುದ್ದೆ ಉಪ್ಸಾರು ಮಾಡಿದ್ರೆ ಯಾರು ಉಂಡಾರು, ನಂಗೆ ಬ್ಯಾಡ ಕಣೆ, ನಂಗೂ ಬ್ಯಾಡ ನಂಗೂ ಬ್ಯಾಡ‘ ಎಂದು ಎಲ್ಲರೂ ಗೋಡೆ ಕಡೆ ಮುಖ ಮಾಡಿಕೊಂಡಾಗ, + +‘ಯಪ್ಪಾ ನಿಮ್ಮ ಮಾವ ಗದ್ದೆ ಕಡೆ ಹೋಗವ್ನೆ ಕಣ್ರೋ. ಈಗ ಒಂದಿಷ್ಟು ಮುದ್ದೆ ಉಣ್ಣಿ. ಅವ್ರು ಬಂದು ಕೂಡಲೆ ಸಂತೆಗೆ ಕಳ್ಸಿ ಕೋಳಿ ತರಿಸ್ತೀನಿ ಕಣ್ರೋ’ ಎಂದರೂ ಕೇಳದೆ ‘ನೀವು ನಿಮ್ ಮಕ್ಕಳು ಉಣ್ಕೊಳ್ಳಿ, ಮಾವನಿಗೆ ನಾವ್ ಬತೀವಿಯಂದ್ರೂ ತಿಳಿಯದೆ ಹೋದ್ನ? ಅಷ್ಟು ಅಸಡ್ಡೆಯಾದ್ವ? ಬರಬಾರದಿತ್ತು ಬಂದ್ಬಿಟ್ವಿ. ಕೆರ, ಕೆರ ತಗೊಂಡು ನಮುಗ್ ನಾವೇ ಹೊಡೆದುಕೊಳ್ಳಬೇಕು’ ಎಂದಾಗ ಅಜ್ಜಿಯ ಕಣ್ಣಲ್ಲಿ ಇದ್ದ ಒಂದಷ್ಟು ನೀರು ಹೊರಬಂದವು. + +ಅಟ್ಟಿ ಮುಂದೆ ಮೇಯೋ ಕೋಳಿಗಳ ನೋಡಿ ‘ಯಾರವು ಈ ಕೋಳಿಗಳುʼ ಎಂದ ಚಿಕ್ಕಮಿಯ ಗಂಡ. + +‘ನಮ್ಮವೇ ಕಣ್ರಿ ಯಾರವು ಯಾಕ್ ಆಯ್ತವೆ?ʼ ಎಂದಳು. ಹಂಗರೆ ಇವ್ನೆ ಕೊಯಿದ್ಬುಟ್ಟು ಸಂತೆ ಕೋಳಿ ತಂದು ಕೂಯ್ದಿರಾ? ಎಂದಿದ್ದನ್ನು ಕಂಡ ಮಿಕ್ಕಿದ್ದವರು ಹೌದೌದು ಮನೆಕೋಳಿಯೇ ಬೇಕು. ಕುಯ್ಯೋಂಗಿದ್ರೆ ಈ ಕೋಳಿಗಳ ಕೂಯ್ದು ಅಡುಗೆ ಮಾಡಿ ಇಲ್ಲಂದ್ರೆ ನಮ್ಗೆ ಏನು ಬ್ಯಾಡ. ನಮ್ಮ ಹೆಂಗ್ಸರ ಜೊತೆ ಹೋಗ್ತಾ ಇರ್ತಿವಿ ಎಂದಿದ್ದನ್ನು ಕೇಳಿ ಅಜ್ಜ ಇನ್ನು ಬರದಿದ್ದನ್ನು ಕಂಡು ಬೀದಿ ಬಾಗಿಲಗಳ ಕಡೆ ನೋಡುತ್ತಲೇ ಇದ್ದಳು ಅಜ್ಜಿ. ಮೈಯೆಲ್ಲ ಗದ್ದೆಯ ಕೆಸರು ಬಳಿದುಕೊಂಡು ನೇಗಿಲು, ನಗ, ಸರಪ್ಣಿ, ದನಗಳು ಎಲ್ಲರೂ ಗಬುಡ ಮೆತ್ತಿಕೊಂಡು ಮಣ್ಣನ್ನೇ ವತ್ತುಕೊಂಡು ಬಂದ ಅಜ್ಜನಿಗೆ ನೀರೊಲೆಗೆ ಒಂದೆರಡು ಸೌದೆಯ ಹಾಕಿ ನೀರು ಕಾಯಿಸಿ ಸ್ನಾನ ಮಾಡಿದ ಮೇಲೆ ಸಂತೆಯ ಕಡೆ ಹೋಗಲು ಸಿದ್ಧನಾದ. ಮೊದಲೆ ಮನೆಯಲ್ಲಿರುವ ಮೊಟ್ಟೆಕೋಳಿಗಳೆಷ್ಟು? ಇನ್ನು ಯಾಟೆ, ಹುಂಜಗಳೆಷ್ಟು? ಎಂದೆಲ್ಲ ಲೆಕ್ಕ ಹಾಕಿದ್ದ ಅಳಿಯರ ಮುಂದೆ ಅಜ್ಜನ ಲೆಕ್ಕ ತಪ್ಪಿಹೋಗಿತ್ತು. ಅಜ್ಜಿ ಮತ್ತೆ ಬಾಯಿ ಸನ್ನೆ ಮಾಡಿ ‘ಎಲ್ರೂ ಮೊಟ್ಟೆಕೋಳಿ ಕುಯ್ಯಿ ಅಂತಾವ್ರೆ’ ಎಂದಳು. + +ಅಜ್ಜ ‘ಯಾಕಂತೆ, ಮನೆಯಲ್ಲಿ ಇಬ್ರೂ ಬಾಣಂತಿಯರು ಬ್ಯಾರೆ ಇದ್ದಾರೆ. ಮನೆಗೆ ಮೊಟ್ಟೆ ಬೇಕು ಅಂತ ಕೋಳಿ ಬಿಟ್ಟುಕೊಂಡಿದ್ರೆ, ಅವ್ನೆ ಕೇಳ್ತಾ ಇದ್ದಾರೆಯೇ? ಏನ್ರಪಾ ಸಂತೆಗೆ ಹೋಗಿ ಕೋಳಿ ತರ್ತೀನ್ರೋʼ ಎಂದಿದ್ದನ್ನು ಕೇಳಿಸಿಕೊಂಡವರು ತಮ್ಮ ಹೆಂಡತಿಯರ ಮೀಟಲು ಶುರುಮಾಡಿದರು. ‘ಮಾಡಿದ್ರೆ ಮೇಕೆ ಬಾಡು, ಇಲ್ಲಂದ್ರೆ ನಾಟಿಕೋಳಿ ಸಾರು, ಅದೂ ಇಲ್ಲವೆ ನಡೀತಾ ಇರು ನಮ್ಮ ಮನೆಗೆ ಹೋಗೋಣ’ ಎಂದು ಅವರವರೆ ಗೊಣಗುವುದನ್ನು ಕಂಡ ಅಜ್ಜಿ ‘ಹೋಗ್ಲಿ ಬಿಡ್ರೀ, ಎರಡು ಕೋಳಿ ಕೂಯುಕೊಳೋಣ’ ಎಂದಾಗ ‘ಏನು ಎರಡು ಕೋಳಿ ಸಾಕಾಗುತ್ತದೆಯೇ? ಇರೋ ಹತ್ತು ಕೋಳಿಯ ಜೊತೆಗೆ ಯಾಟೆ, ಪಾಟೆಗಳೆಲ್ಲ ಕೊಯ್ದು ಹಾಕಿದ್ರೂ ಸಾಕಾಗಲ್ಲ. + +‘ಏನೇ ನಿಮ್ಮವ್ವ ಅಳಿಯಂದ್ರ ನೋಡೋ ಹುಟ್ಟೇನೆ ಇದು, ಇದೊಂದು ಬಾಳಾಟ ಅಂತ ನಾನು ಅಂದುಕೊಂಡಿರಲಿಲ್ಲ, ಅಕ್ಕಪಕ್ಕದವರೆಲ್ಲ ಎಷ್ಟು ಚೆಂದವಾಗಿ ಅಳಿಯರನ್ನು ಕರ್ದು ಕಳಿಸ್ತಾರೆ ಅನ್ನೋದ್ನ ನೋಡಿ ಕಲಿಬೇಕು’ ಎಂದೆಲ್ಲ ಅಂದಿದ್ದನ್ನು ನೋಡಿ, ಮೇಯಲು ಹೋದ ಕೋಳಿಗಳ ಬಿಡದೆ ಅಟ್ಟಾಡಿಸಿಕೊಂಡು ಹಿಡಿದು ಕೂಯ್ದು ತಿಂದು ತಮ್ಮ ಹೆಂಡತಿಯರ ಜೊತೆ ಹೊರಟು ನಿಂತರು. ಅಜ್ಜಿ ಮಕ್ಕಳ ಖುಷಿಯ ನೋಡಿ ತನ್ನೆರಡು ಕೈಗಳ ಎತ್ತಿ ಆಶೀರ್ವಾದದ ಜೊತೆ ಒಂದಿಷ್ಟು ಕಣ್ಣೀರು ಹಾಕಿದಳು. ಎಲ್ಲರಿಗೂ ತಿಂಡಿ ತಿನಸುಗಳ ಕಟ್ಟಿ ‘ಜೋಪಾನ’ ಎಂದು ಹೇಳಿದಳು. ರಾತ್ರಿಯ ತೊಟ್ಟಿಕ್ಕುವ ಮಳೆಗೆ ತನ್ನೆಲ್ಲ ನೋವುಗಳ ಹೇಳಿಕೊಳ್ಳಲು ಶುರುಮಾಡಿದಳು ಈ ಮಳೆಯೋ ತನ್ನ ಮಕ್ಕಳಂತೆ ಏನು ಕೇಳಿಸಿಕೊಳ್ಳುತಿರಲಿಲ್ಲ. + + + +ಮಳೆ ಸುರಿಯುತ್ತಲೇ ಇತ್ತು, ಅಜ್ಜಿ ಮಕ್ಕಳು ಹೋದ ದಾರಿಯನ್ನೆ ನೋಡಿ ಅವರು ಆಟವಾಡಿದ, ಜಗಳವಾಡಿದ ಮನೆಯೆಲ್ಲವನ್ನು ಗಮನಿಸುತ್ತಾ ತುಸು ನಿದ್ದೆಗೆ ಜಾರಿದಳು! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_410.txt b/Kenda Sampige/article_410.txt new file mode 100644 index 0000000000000000000000000000000000000000..96420670429410fd57f295b4abbf3f82093bc50b --- /dev/null +++ b/Kenda Sampige/article_410.txt @@ -0,0 +1,149 @@ + + +ಸೋಮು ಕುದರೀಹಾಳ್ ಅವರ ಮೊದಲ ಕವನ ಸಂಕಲನ ಜಾಡು ತಪ್ಪಿದ ನಡಿಗೆ. ಒಬ್ಬ ಕವಿಗೆ ತಾನು ನಡೆಯುತ್ತಿರುವುದು ಜಾಡು ತಪ್ಪಿದ ನಡಿಗೆ ಎಂದು ಅನಿಸುವುದು ಯಾವಾಗ ಮತ್ತು ಯಾಕೆ? ಈ ಪ್ರಶ್ನೆ ಕುತೂಹಲಕಾರಿಯಾಗಿದೆ. ಇಲ್ಲಿನ ಸಂಭವನೀಯತೆಗಳು ಹೀಗಿವೆ: + +೧. ತಾನು ನಡೆಯುತ್ತಿರುವುದು ಬೇರೆ ಕವಿಗಳು ಕ್ರಮಿಸುವ ಹಾದಿಯನ್ನಲ್ಲ.೨. ತಾನೇ ಅರಸಿಕೊಂಡು ನಡೆಯುತ್ತಿರುವ ಮಾರ್ಗವು ಹಳೆಯ ಜಾಡನ್ನು ತಪ್ಪಿಸಿಕೊಂಡಿದೆ೩. ತಾನು ಬೇರೆ ಜಾಡು ಹಿಡಿದಿರುವುದು ಅದರ ಗಮ್ಯದ ಬಗ್ಗೆ ನನಗಿರುವ ಬೇರೆ ದೃಷ್ಟಿಕೋನದ ಕಾರಣ೪. ನನಗೆ ಮನವರಿಕೆಯಾದಂತೆ ನನ್ನ ಕಾವ್ಯದ ದಿಕ್ಕುಗಳು ಬದಲಾಗಿವೆ + +ಪ್ರಾಯಶಃ ತನ್ನ ಬರೆಹದ ಬಗ್ಗೆ ಸದಾ ವಿಮರ್ಶಾತ್ಮಕ ಧೋರಣೆಯನ್ನು ಇರಿಸಿಕೊಂಡವರಿಗೆ ಕಾವ್ಯ ಮಾರ್ಗದ ಬಗ್ಗೆ ಸಂಶಯಗಳು ಉಂಟಾಗುವುದು ಸಹಜವೇ ಆಗಿದೆ. ಅಡಿಗ, ಕುವೆಂಪು, ಪುತಿನ, ಶರ್ಮ, ಕೆ.ಎಸ್‌.ಎನ್, ಬೇಂದ್ರೆಯವರಲ್ಲದೆ ಒಂದು ಕಾಲಘಟ್ಟದಲ್ಲಿ ಬರೆದವರ ಕಾವ್ಯ ಮಾದರಿಗಳಲ್ಲಿ ಇದ್ದ ಪ್ರಶ್ನೆಗಳನ್ನು ಇವತ್ತಿನ ತಲೆಮಾರು ಎತ್ತುತ್ತಿಲ್ಲ. ಕಾವ್ಯಕರ್ಮದ ನಿಷ್ಠೆಯನ್ನು ಕುರಿತಂತೆಯೂ ಇಂದು ಬರೆಯುತ್ತಿರುವವರ ಮನೋಭಾವದಲ್ಲಿ ಅತಿ ದೊಡ್ಡ ಪಲ್ಲಟವುಂಟಾಗಿದೆ. ಆದರೂ ಕುವೆಂಪು ಅವರ ಸಾಮಾಜಿಕ ಮನೋಧರ್ಮ ಎಂದೆಂದಿನ ಪ್ರಶ್ನೆಗಳನ್ನು ಛೇಧಿಸಿ ಉತ್ತರಕ್ಕಾಗಿ ಹುಡುಕಾಟ ಮಾಡುವವರಿಗೆ ಹೆಚ್ಚು ನೆರವಿಗೆ ಬರುವಂಥದ್ದಾಗಿದೆ. ಇಂಥ ಮನೋಧರ್ಮದ ಕವಿತೆಗಳು ಕುದರೀಹಾಳ್ ಅವರ ಜಾಡು ತಪ್ಪಿದ ನಡಿಗೆ ಸಂಕಲನದ ಕವಿತೆಗಳಲ್ಲಿ ಇವೆ. ಹಾಗಾಗಿ ಇದನ್ನು ಪರಂಪರೆಯ ಮುಂದುವರಿಕೆಯಾಗಿ ಭಾವಿಸಬಹುದಾಗಿದೆ. + +ಕವಿ, ಸೋಮು ಕುದರಿಹಾಳ ನಮ್ಮ ಕಾಲದ ಸಾಮಾಜಿಕ ತಲ್ಲಣಗಳಿಗೆ ಪ್ರತಿಸ್ಪಂದಿಸುವ ಪ್ರಾಮಾಣಿಕ ಮನಸ್ಸಿನವರು. ದೇಹತಹ ಮುಗ್ಧ ಮನಸ್ಸಿನ, ವಿನಯಶೀಲರಾದ ಸೋಮು ಕನ್ನಡ ಬರಹ ವ್ಯವಸಾಯಕ್ಕೆ ಈಗಾಗಲೇ ತಮ್ಮ ಫಲವತ್ತಾದ ಬೀಜವನ್ನು ಊರಿದ್ದಾರೆ. ವೃತ್ತಿಯಿಂದ ಶಿಕ್ಷಕರಾದ ಇವರು ಮಕ್ಕಳ ಮನೋಭಿತ್ತಿಯಲ್ಲಿ ಸರಳವಾಗಿ ಅರಳುವ ಕಥೆಗಳನ್ನು ಬರೆದು ನಾಡಿನ ಕೆಲವು ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಅವರ ಚೊಕ್ಕಟವಾದ ಮಕ್ಕಳ ಮನಸ್ಸು ಇದಕ್ಕೆ ಸ್ಥಾಯಿಭಾವವಾಗಿದೆ. (ಡಾ. ಜಾಜಿ ದೇವೇಂದ್ರಪ್ಪ, ಮುನ್ನುಡಿ) + +ಸೋಮು ಕುದರಿಹಾಳ ಓದಿನ ಬದುಕಿನ ಬಗ್ಗೆ ಸ್ವತಃ ಅವರೇ ಹೇಳುವ ಮಾತು ಇಂತಿದೆ: + +ಆರು- ಏಳನೇ ತರಗತಿಯಲ್ಲಿದ್ದಾಗ ಮನೆಯಲ್ಲಿದ್ದ ರಾಮಾಯಣ ಪುಸ್ತಕದ ಹರಿದುಹೋದ ಹಾಳೆಗಳನ್ನು ಜೋಡಿಸಿ ಜೋಡಿಸಿಕೊಂಡು ಓದಿದ್ದು ಬಿಟ್ಟರೆ ಬಳಿಕ ಓದಿದ್ದು ಕೊಳ್ಳಲು ಕಾಸಿಲ್ಲದೆ ಹೋದದ್ದರಿಂದ ಕಡಿಮೆಯಾಯಿತು. ಇದರ ಜೊತೆಗೆ ವ್ಯವಸಾಯ ಮತ್ತು ಅದರ ಜೊತೆಜೊತೆಯ ಕೆಲಸಗಳಲ್ಲಿ, ಸಂಘಟನೆಗಳಲ್ಲಿ ತೊಡಗಿಕೊಂಡಿದ್ದು ಬೇರೆ. ಶಿಕ್ಷಕನಾಗಿ ದುಡಿದು ಹಣ ಸಂಪಾದಿಸುವವರೆಗೂ ಪುಸ್ತಕ ಕೊಳ್ಳಲು ಹಣದ ಅಡಚಣೆ. + +(ಸೋಮು ಕುದರಿಹಾಳ್) + +ಇಲ್ಲಿ ಈ ಮಾತನ್ನು ಕುರಿತು ಉಲ್ಲೇಖಿಸುವ ಕಾರಣವಿದೆ. ನಾನೂ ಸೋಮು ಅವರಂತೆಯೇ ಬದುಕಿ ಓದಿದವನು. ಓದಿನ ವಿಸ್ತಾರವಿಲ್ಲದಿದ್ದರೆ ಸಾಹಿತ್ಯದಲ್ಲಿ ತೊಡಗಿಕೊಳ್ಳುವುದು, ಸ್ಥಾಪಿಸಿಕೊಳ್ಳುವುದು ಕಷ್ಟಸಾಧ್ಯ. ಈ ಅಡಚಣೆಯನ್ನು ಸೋಮು ದಾಟಿದ್ದಾರೆ. ಓದಿನ, ಹಂಬಲದ, ಆಶಯದ ಬರವಣಿಗೆಯ ಹಿಂದೆ ಈ ಕಹಿ ಅನುಭವಗಳ ಛಾಯೆಯಿದೆ. ಜೊತೆಗೆ ತನ್ನದೇ ಆದ ಹೇಳುವ ಕ್ರಮವನ್ನು ಅವರು ಅಪ್ಪಿದ್ದಾರೆ. ಹಾಗಾಗಿ ಅವರ ಕವಿತೆಗಳು ಅಗತ್ಯ ಕಾವ್ಯ ಗುಣವನ್ನು ಒಡಲಾಗಿಸಿಕೊಂಡಿವೆ. ಅಂತೆಯೇ ತನ್ನ ಕಾವ್ಯದೇಣಿಯಲ್ಲಿ ತನ್ನ ಮೆಟ್ಟಿಲನ್ನೂ ಗಮನಿಸಿರುವ ಕವಿ ಅದಕ್ಕೆ ಕಾರಣಗಳನ್ನೂ ಹುಡುಕಿಕೊಳ್ಳುತ್ತಿದ್ದಾರೆ. + +ನಡೆದು ಬಂದ ಹೆಜ್ಜೆಗುರುತಿನಮೇಲೆ ಬಿರುಗಾಳಿ..ಬಿರುಗಾಳಿ ನಾನೇ ಸೃಷ್ಟಿಸಿದ್ದಾ?ಆವೇಗದ ವೇಗದ್ದಾ?ಉತ್ತರ ಯಾವುದಾದರೇನುಅಳಿಸಿಹೋಗಿದೆ ಇತಿಹಾಸ -ಎಂಬ ಮಾತುಗಳು ಇದಕ್ಕೆ ಸಾಕ್ಷಿ. + +ಕವಿತೆ ಮುಗಿಯುವುದು + +ನೆನಪುಗಳ ಗಂಟು; ಜೋತು ಬಿದ್ದಿದೆ ಹೆಗಲಿಗೆಬೆಂಬಿಡದೆ ಕಾಡುವುದಕ್ಕೊ? ಗುರಿ ತೋರುವುದಕ್ಕೊ? ಎಂದು. + +ಮಾನವನ ಬದುಕಿನ ದುರಂತವೆಂದರೆ ಬದುಕಿನ ಪಾಠಗಳಿಂದ ಗುರಿಯನ್ನರಸದೆ ಹೋಗುವುದರಿಂದ ಆಗುವ ಮರಳಿಸಲಾಗದ ಇತಿಹಾಸದ ತಪ್ಪುಗಳು, ದುರಂತಗಳು. ಬಿ ಆರ್ ಲಕ್ಷ್ಮಣರಾವ್ ಕ್ವಿಕ್ಸೋಟ್ ಕವಿತೆಯಲ್ಲಿ ಬರೆದಂತೆ, ಕ್ಷಮಿಸು ಇತಿಹಾಸವೇ, ಎಂದು ಅವರು ಪ್ರಾರ್ಥಿಸುವುದು ಇತಿಹಾಸದ ದುರಂತಗಳಿಂದ ಪಾಠ ಕಲಿಯದೆ ಹೋದ ಹೆಡ್ಡತನಕ್ಕಾಗಿ. + +ಹಿಂಸೆ ಸೋಮು ಅವರನ್ನು ಕಾಡುವ ಮತ್ತೊಂದು ವಿಚಾರ. ಬಂದೂಕಿನ ನೆಲೆಯಿಂದ ಹಿಂಸೆ, ಕೊಲೆಗಳ ರಾಜಕಾರಣವನ್ನು ಗಮನಿಸುವ ಸೋಮು ನಿಶ್ಚಿತವಾಗಿ ಇವುಗಳಿಂದ ಮನುಕುಲವನ್ನು ಪಾರುಮಾಡುವ ಬಗ್ಗೆ ಚಿಂತಿಸುತ್ತಾರೆ: + +ಯಾರದೋ ಎದೆ ಸೀಳುವ ಮೊದಲುಬಂದೂಕಿನೊಳಗಿನ ಕತ್ತಲೆಯಲ್ಲಿನನ್ನನ್ನು ನೂಕುವ ಕಿರಾತಕರುಸತ್ಯ ಹೇಳುವುದಿಲ್ಲ ನನಗೆ -(ಕ್ಷಮೆ ಕೇಳಿದ ಬಂದೂಕಿನ ಗುಂಡು) + +ಆದರೆ ಪ್ರತಿಹಿಂಸೆಯ ಹಿಂಸೆಯು ಅವರನ್ನು ಗಾಂಧಿಯನ್ ತಾತ್ವಿಕತೆಯಿಂದ ದೂರ ಉಳಿಸುತ್ತದೆ. ಮುಂದುವರಿದು ಇದೇ ಕವಿತೆಯಲ್ಲಿ ಅವರು ಬರೆಯುವುದು ಹೀಗೆ: + +ಸತ್ಯ ಗೊತ್ತಾದರೆಬಂದೂಕನ್ನೆ ಅವರ ಕಡೆಗೆ ತಿರುಗಿಸಿಅವರೆದೆಯನ್ನು ಸೀಳಿನಿಮ್ಮೆದುರು ನಿಲ್ಲತ್ತಿದ್ದೆ (ಕ್ಷಮೆ ಕೇಳಿದ ಬಂದೂಕಿನ ಗುಂಡು) + +ಸೋಮು ಎದುರಿನಲ್ಲಿ ಇಟ್ಟುಕೊಳ್ಳುವ ಮತ್ತೊಂದು ಪ್ರಶ್ನೆ ಜಾತಿಮೂಲದ್ದು. ಸಾವಿನಲ್ಲೂ ಬಿಡದೆ ಕಾಡುವ ಜಾತಿ, ಕುಲ, ಮತದ ಪ್ರಶ್ನೆಗಳನ್ನು ಸಮಾಜ ಬಿಡಿಸಿಕೊಳ್ಳದೆ ಸಾಂದ್ರೀಕರಣಗೊಳ್ಳುವ ಜಾತಿ ಮತದ ವಿಚಾರಗಳು ನಾಗರಿಕ ಮನಸ್ಸನ್ನು ಕಂಗೆಡಿಸುತ್ತವೆ. ಈ ವಿಚಾರಗಳನ್ನು ಮಣ್ಣು ಮಾಡಬೇಕಾದ ಸನ್ನಿವೇಶವೊಂದರ ಮೂಲಕ ಸೋಮು ನಿರ್ವಹಿಸುವ ಬಗೆ ನೋಡಿ: + +‘ಯಾವ ಕುಲ? ನಿನಗಿಲ್ಲ ಇಲ್ಲಿ ನೆಲಹೋಗು ಪಕ್ಕದೂರಿಗೆ ಬೇಡವೆಂದರೆಬಿಸುಟು ರಸ್ತೆ ಬದಿಗೆಎರಡೇ ಗುಕ್ಕು ನರಭಕ್ಷಕರಿಗೆ’ + +ಎರಡನೇ ಚಿತ್ರ: + +ಗೋರಿಯೊಳಗಿನ ಮೈಯತ್‌ ನ ಮಾರುತ್ತರ‘ಜನಾಜ್‌ ನಲ್ಲಿ ತರುವ ಹೆಣಕ್ಕಷ್ಟೇ ಜಾಗ’ + +ಚಿತ್ರ ಮೂರು + +ಮನವಿಪುರಸ್ಕರಿಸಿದ್ದಾರೆ ‘ಮುಚ್ಚುವ ಹೆಣದೆದೆಯಮೇಲೆ ಶಿಲುಬೆ ನೆಡಬೇಕಂತೆ’ + +ಕೊನೆಯ ಚಿತ್ರ ಇವೆಲ್ಲದರ ಸಾರಾಂಶದಂತಿದೆ. + +ತನ್ನಡಿಯಲಿ ಬೆಳೆದು ಜಗದೆತ್ತರತಲುಪಿದ ಬುದ್ಧನಿಗೆ ಮರದ ಪ್ರಶ್ನೆ‘ಸಾಸಿವೆ ತರುವೆ ಜೀವ ಕೊಡುವೆಯಾಶಾಂತಿ ನೆಮ್ಮದಿಗೆ?! + +ಇಲ್ಲಿ ಯಾವ ಮಾರುತ್ತರವನ್ನೂ ನಿರೀಕ್ಷಿಸುವಂತಿಲ್ಲ. ಉತ್ತರ ಕೊಡಬೇಕಿರುವುದು ಮನುಷ್ಯರ ಅಂತರಾಳ. ಇದರ ಬಗ್ಗೆ ಕವಿಗೇನು ಅನ್ನಿಸಿತು? ಹುಟ್ಟಿ ಬೆಳೆಸಲು ಜಾಗವಿಟ್ಟೆ ಒಡಲಲ್ಲಿ. ಸ್ಮಶಾನ ಕೊಡಲಿಲ್ಲ ಎಂದು. ಈ ಕವಿತೆಗೆ ಇದ್ದ ಸಾಧ್ಯತೆಯನ್ನು ಯಾಕೋ ಕವಿ ಮೊಟಕಾಗಿಸಿದ್ದಾರೆ. + +ಸೋಮು ಕವಿತೆಗಳಲ್ಲಿ ಹತಾಶೆಯ ಸ್ಥಾಯಿಭಾವವೊಂದರ ಪ್ರವಾಹವಿದೆ. ಕಂಡ ಕಡೆಯಲೆಲ್ಲ ಅವರಿಗೆ ಶೀತಲ ಕೋಮಲಗಳು ಕಾಣುವುದು ಕಷ್ಟವಾಗಿದೆ. ಅದರ ಜೊತೆಗೆ ಈ ಸನ್ನಿವೇಶ ನಿರ್ಮಾಣಕ್ಕೆ ತಾನೂ ಕಾರಣನೇನೋ ಎಂಬ ಸ್ವಯಂ ಆರೋಪದ ಪಾಪಪ್ರಜ್ಞೆ ಹಲವೆಡೆ ವ್ಯಕ್ತವಾಗುತ್ತದೆ. ಈ ಭಾವ ಢಾಳಾಗಿ ಸ್ವಯಂ ಶತ್ರು ಕವಿತೆಯಲ್ಲಿ ಅಭಿವ್ಯಕ್ತಿ ಪಡೆದಿದೆ: + +ಮಂದಿರದ ಮೇಲೆ ಹಬ್ಬಿದ ಬಳ್ಳಿಹಸಿರು ಬಣ್ಣದ್ದೆಂದು ಕುಡಿ ಚಿವುಟಿದಮತಿಹೀನ ನಾನು + +ಮಸೀದಿಯ ಮುಂಬಾಗಿಲಿನಲ್ಲಿ ಗೂಡು ಕಟ್ಟಿದಕೆಂಜಿರುವೆ ಕೇಸರಿ ಮೈಯದೆಂದುರೆಕ್ಕೆ ಮುರಿದ ಧರ್ಮಾಂಧ ನಾನು + +ಶಿಖರದಿ ನೆಟ್ಟ ಶಿಲುಬೆ ಕೆತ್ತಿಕೊಟ್ಟವಬಡಗಿಯೆಂದು ಉಳಿ ಬಾಚಿ ಕೈಗಳಿಗೆ ಮೊಳೆಹೊಡೆದ ಧರ್ಮಮೋಹಿ ನಾನು + +‘ಈ ದೇಶದಲ್ಲಿ ಸ್ಮಶಾನಗಳೂ ಜಾತಿಯಾಧಾರಿತ ಕೇಡರ್‌ ನಲ್ಲಿರುವ ದುರಂತವನ್ನು ಹೇಳುತ್ತದೆ. ಈ ಅಸಮಾನ ಭಾರತದಲ್ಲಿ ಬಣ್ಣಗಳೂ ಧರ್ಮಾಧಾರಿತವಾಗಿ ಹೋಗಿವೆ’ ಎಂಬ ಮುನ್ನುಡಿಯ ಮಾತುಗಳು ಇಲ್ಲಿ ಉಲ್ಲೇಖಾರ್ಹವಾಗಿವೆ. ಈ ಅಪರಾಧೀ ಭಾವ ತನ್ನೊಳಗೇ ಅಡಗದೆ ಸಾರ್ವಜನಿಕೋಕ್ತಿಯಾಗಿ ಪರಿವರ್ತನೆಯಾಗುವುದೇ ಕವಿಯು ಮೀರುವ ಪ್ರಯತ್ನದಲ್ಲಿ ಇದ್ದರೆಂಬ ನಂಬಿಕೆಯನ್ನು ಹುಟ್ಟಿಸುತ್ತದೆ. ದಯಾಮರಣ ಕವಿತೆ ಯೂಥನೇಶಿಯಾ ಕುರಿತ ಚರ್ಚೆಯನ್ನು ಮುಂದುವರಿಸಿ ಅದಕ್ಕೊಂದು ಸಮರ್ಥನೆಯನ್ನು ಕೊಡುತ್ತದೆ. ಆದರೆ ಅದನ್ನು ವಿರೋಧಿಸುವ ಭಾರತೀಯ ಮನಸ್ಸನ್ನು ಮತ್ತದರ ಧಾರ್ಮಿಕತೆಯ ಆಧಾರದ ನಿರಾಕರಣೆಯನ್ನು ಅದು ಪ್ರಶ್ನಿಸುವುದಿಲ್ಲ. ಬದಲಿಗೆ ಅದನ್ನು ಕಾನೂನಿನ ಶಿಕ್ಷೆಯೆಂದು ಪರಿಭಾವಿಸುತ್ತದೆ. + +ಕಾನೂನಿಗೆ ಶರಣಾಗುವ ಜೀವಕೆಸಿಗಲಿ ಹಿಡಿ ಪ್ರೀತಿ –ಎಂದು ಕೇಳುವ ಅವರು ಅದರ ಮುಖ್ಯ ಘಟಕವಾದ ಸಮಾಜದ ನೆಲೆಯಲ್ಲಿ ಕಾವ್ಯವಸ್ತುವನ್ನು ಗ್ರಹಿಸಬೇಕಿತ್ತು ಎನಿಸುತ್ತದೆ. + +ಪುಟ್ಟಕ್ಕನ ಹೈ ವೇ ಸಿನಿಮಾದ ಕಥೆ ಇಂದಿನ ಇನ್ಫ್ರಾಸ್ಟ್ರಕ್ಚರ್ ಯುಗದ ದುರಂತಗಳಿಗೆ ಕನ್ನಡಿ ಹಿಡಿಯುತ್ತದೆ. ಅನ್ನದ ಆತ್ಮಹತ್ಯೆ ಎಂಬ ಕವಿತೆ ಇಂಥದೇ ವಸ್ತುವಿನ ನಿರ್ವಹಣೆಯನ್ನು ಮಾಡುತ್ತದೆ. + +ಅನ್ನದ ತುತ್ತಾಗಿದ್ದದ್ದುಗಂಗಾಳದಷ್ಟು ಹೊಲರಿಂಗ್ ರೋಡ್‌ ಗೆ ತುತ್ತಾಗಿಶವಸಂಸ್ಕಾರಕ್ಕೂ ಅಡಿ ಲೆಕ್ಕದಮಣ್ಣು ಇರಲಿಲ್ಲ ಇವನ ಬಳಿ + +ಈ ಕಾರಿಡಾರುಗಳು, ಹೈವೇಗಳು ಕೊನೆಗೆ ಮಣ್ಣನ್ನು ನಂಬಿ ಬದುಕುವವರನ್ನು ಸಾವಿನತ್ತ ದೂಡುವುದನ್ನು ಕವಿತೆ ವಿಹ್ವಲವಾಗಿ ಬಣ್ಣಿಸುತ್ತದೆ. ಆಧುನಿಕತೆಯು ಮನುಷ್ಯ ಬದುಕನ್ನು ಕಟ್ಟಿಕೊಡದಿರುವುದನ್ನು ಕುರಿತು ಕವಿತೆ ಧ್ಯಾನಿಸುತ್ತದೆ. ಹೀಗೆ ಎಲ್ಲಕ್ಕೂ ಮಿಡಿವ ಮನಸ್ಸಿನ ವಿಹ್ವಲತೆ ವಿಶ ಪಾಶ ಕವಿತೆಯಲ್ಲಿ ಮುಂದುವರಿಯುತ್ತದೆ. ಇಲ್ಲಿ ಗುಡಿಸಲಲ್ಲಿ ಮಲಗಿ ಹಾವು ಕಡಿದು ಸತ್ತ ಮಕ್ಕಳಿಬ್ಬರ ಕುರಿತು ಚಿತ್ರಣವಿದೆ. + +ಬಹುಶಃ ಎಲ್ಲ ಕವಿಗಳೂ ತಾಯಿಯನ್ನು ಕುರಿತು ಬರೆಯುತ್ತಾರೆ. ಲಂಕೇಶರ ಅವ್ವ ಇಲ್ಲಿ ಸ್ಮರಣೀಯವಾದದ್ದು. ದಲಿತ ಸಾಹಿತ್ಯದಲ್ಲಂತೂ ತಾಯಿ ದೊಡ್ಡ ಮೋಟಿಫ್. ಸೋಮು ತಂದೆಯ ಬಗ್ಗೆ ಇಂತಹ ಕವಿತೆಯನ್ನು ಬರೆದಿದ್ದಾರೆ. ಎಲ್ಲವುಗಳ ಮೊತ್ತ-ಅಪ್ಪ ಎಂಬ ಕವಿತೆ ಅಪ್ಪನ ವ್ಯಕ್ತಿತ್ವವನ್ನು – + +ಅಪ್ಪನೆಂದರೆ…ಸೈನಿಕನಂತಹ ರಕ್ಷಕ, ಅಪ್ಪಟ ಸ್ನೇಹಿತ, ಸಲಹೆಗಾರಮನೆಯಂಗಳದಲ್ಲಿ ಅರಳಿದಮಕ್ಕಳೆಂಬ ಹೂಗಳ ಹೂದೋಟದ ಮಾಲಿಚಳಿ ಮಳೆ ಗಾಳಿ ಬಿಸಿಲಿನಿಂದ ಕಾಯುವ ಮನೆಅಪ್ಪನೆಂದರೆ ಹಸಿರು ತುಂಬಿದ ಕಾಡುಪ್ರೀತಿಯ ಪರ್ವತಗಳ ಅನಂತ ಸಾಲು... ಎಂದು ಬಣ್ಣಿಸುತ್ತದೆ. ಬಹುಶಃ ಇದಕ್ಕಿಂತ ಅಡಕವಾಗಿ ಸಂಬಂಧವೊಂದರ ವ್ಯಾಖ್ಯೆ ಕಷ್ಟವೇನೋ! + + + +ಹೀಗೆ ತಮ್ಮ ನೋಟವನ್ನು ವ್ಯಾಖ್ಯಾನಕ್ಕೆ ಒಳಪಡಿಸುವ ಸೋಮು ಹಲವೆಡೆ ಸಾಮಾನ್ಯನ ಸಂಘಟನೆಯಲ್ಲಿ ಸಿಡಿದು ನಿಲ್ಲುವ ಪ್ರತೀಕಗಳನ್ನು ನಿರ್ಮಿಸುತ್ತಾರೆ. ಗೋಡೆ ಕವಿತೆಯಲ್ಲಿ ಇಂತಹ ಸ್ವರೂಪವನ್ನು ಗಮನಿಸಬಹುದು. ಇದರ ಮುಂದುವರಿಕೆಯೆಂಬಂತೆ ನನ್ನ ಮನೆಗೆ ನಾನೇ ಆಗಂತುಕ ಎನ್ನುವ ನನ್ನೂರು, ನನ್ನ ಮನೆ: ನನ್ನದಲ್ಲ ಕವಿತೆಯನ್ನು ನೋಡಬಹುದು. ಈ ಕವಿತೆಯಲ್ಲಿನಡುಮನೆಯ ಕುರ್ಚಿಯಿಂದ ಹೊರಡುವಫರ್ಮಾನಿಗೆ ಕಾಯುಬೇಕು ಇಡೀ ಊರುಎನ್ನುವ ಮಾತು ಒಂದು ಸಂದರ್ಭವನ್ನು ನಿರ್ಮಾಣ ಮಾಡಿದರೆ ಇನ್ನೊಂದು + +ಬಾಂಬ್ ಹಕ್ಕಿ ಹಾಕಿದ ಹಿಕ್ಕೆಯಲ್ಲಿನ ಬೀಜಗಳುಗೋಡೆ ಬಿರುಕಿನಲ್ಲಿ ಹೆಮ್ಮರವಾಗಿ ಬೆಳೆದುಊರಿಗೂರೇ ಹಬ್ಬಿದ ಬೇರುಗಳಿಂದಮನೆ ಮನಸ್ಸು ಛಿದ್ರ ಛಿದ್ರ; ಊರು ಅಭದ್ರ– ಎಂಬ ವಿನಾಶದ ಚಿತ್ರಣವನ್ನು ನಮ್ಮ ಮುಂದಿಡುತ್ತದೆ. + +ಹಾಗೆಂದು ಕವಿಗೆ ತೀರಾ ಹಿರಿದಾದ ನೈರಾಶ್ಯಭಾವವಿಲ್ಲ. ಪದಕ್ಕೊಂದು ಪದವಿಟ್ಟು ಭಾವಕೆ ಜೀವಕೊಟ್ಟು ಕವಿಯಾದವರು ಸೋಮು. ಬೇವು ಬೆಲ್ಲ ಕವಿತೆ ಈ ಭಾವವನ್ನು ಮತ್ತಷ್ಟು ಹಿಗ್ಗಿಸುತ್ತದೆ. + +ಎಲೆಯುದುರಿಸಿ ಬರಿದಾದಬೋಳು ಮರಕ್ಕೆಕಳೆದುಕೊಂಡ ನೋವಿಲ್ಲ + +ಹೊಸತು ಚಿಗುರುಮೂಡುವ ಖುಷಿಗೆಕಾಲ ಅಡ್ಡಿಯಾಗುವುದಿಲ್ಲ + +ಬದುಕಿನಲ್ಲಿ ಆಶಾಭಾವವನ್ನು ವೃದ್ಧಿಸುವುದು ಈ ನಿರ್ಲಿಪ್ತ ಭಾವದ ಒಲವು ಮತ್ತು ಅರಿವು. ಕವಿತೆಯ ಕೊನೆ ಎಷ್ಟು ಚೆನ್ನಾಗಿದೆ ನೋಡಿ: + +ಉಸಿರು ಅರಳುವ ಸುಖದ ಹೊತ್ತಿಗೆಬೆಳಕೇ ಇರಬೇಕೆಂದೇನಿಲ್ಲ + +ಹೋಯಿತೆಂಬ ನೋವು-ಬೇವುಹೊಸತು ಹುಟ್ಟೆಲ್ಲ-ಬೆಲ್ಲ + +ಹಲವು ಕವಿತೆಗಳಲ್ಲಿ ಈ ವಿನಾಶದ ನಾಶವನ್ನು ಬಯಸುವ ಹಂಬಲವೇ ಪ್ರಾಮಾಣಿಕವಾಗಿ ಅಭಿವ್ಯಕ್ತಗೊಂಡಿದೆ. + +ನರಸಿಂಹಸ್ವಾಮಿಯವರ ಬಗೆಯಲ್ಲಿ ಚಿಂತಿಸುವ ಮನಸ್ಸೂ ಸೋಮು ಅವರಿಗಿದೆ ಎಂಬುದಕ್ಕೆ ತವರು ಮನೆ ಕವಿತೆ ಉದಾಹರಣೆ. ತವರಲ್ಲಿ ಮಗಳು. ಅಪ್ಪನಿಗೋ ಆಸೆ, ಅಳಿಯ ಬರಲಿ ಎಂದು: ಅವರೇ ಕರೆದಿದ್ದಾರೆ + +ಬಂದು ಬಿಡಿ ಇಲ್ಲಿಗೆಉಂಡು ತಿಂದು ಆರಾಮಾಗಿರಿ ಚಂದಗೆನಮಗೂ ಖುಷಿ ನೀವಿರಲು ಮಗಳೊಂದಿಗೆ + +ಅವರೊಂದಿಗೆ ಒಪ್ಪುವ ಅಳಿಯನಿಗೆ ಕಾಡುವ ಮನಸ್ಸು + +ಬರುವೆ ಮುಂದಿನವಾರಹುಣ್ಣಿಮೆಯಲ್ಲಿರುವಂತೆ ತುಂಬು ಚಂದಿರ + +ಆದ್ದರಿಂದ ಅವನು ಹೇಳುತ್ತಾನೆ: + +ಹೇಳಬೇಡಿ ನಾ ಬರುವುದು ಅವಳಿಗೆ ಸಡಗರನಾನೇ ಬಂದು ತೊಡಿಸುವೆ ಒಲವಿನ ಕಸವರ + +ಹೆಂಡತಿಯ ಮನಸ್ಸು ಒತ್ತಾಯಿಸಿ ಕೇಳುವಳು + +‘ಎಂದು ಬರುವಿರಿ ಕಾಯುತಿರುವೆ ತುದಿಗಾಲಲ್ಲಿ’‘ಬರಲ್ಲ ಕಣೇ’ ಎಂದೆ ಹುಸಿ ಕೋಪದಲಿ***ಕೊನೆಗೂ ಸೋತವನು ನಾನೇ ಅವಳೊಲವಿಗೆಬರುವೆನೆಂದುದ ಕೇಳಿ ಕುಣಿದಳು ನವಿಲ ಹಾಗೆ + +ಜೀವನದ ಸಣ್ಣ ಸಂತೋಷಗಳನ್ನು ಅಷ್ಟೇ ಅನುರಕ್ತಿಯಿಂದ ಪರಿಭಾವಿಸಿ ಅನುಭವಿಸುವುದು ಬದುಕಿನ ಸಾರ್ಥಕ್ಯದ ಹಾದಿ. ಇದು ಕವಿಯನ್ನು ಸಾಮಾಜಿಕ ಬದ್ಧತೆಯಿಂದ ದೂರಮಾಡುವುದಲ್ಲ. ಕಳಸಾ ಬಂಡೂರಿ ಹೋರಾಟದ ಸಮಯದಲ್ಲಿ ರೈತರನ್ನು ಥಳಿಸಿದ ಪೋಲೀಸರ ವರ್ತನೆಯಿಂದ ಬೇಸತ್ತು ಕವಿತೆ ಬರೆಯುವ ಕವಿ ಮಾನವೀಯತೆಯ ದೃಷ್ಟಿಯಿಂದಲೂ ಸೂಕ್ಷ್ಮಗಳನ್ನು ನಿರ್ವಚಿಸಬಲ್ಲರು. ಅವರ ಹಸಿವು ಕವಿತೆಯ ಕೊನೆ ಗಮನಿಸಿ: + +ನೆದರ ನೋಟ ಅಧರ ದಾಟದುಉದರ ತುಂಬದು ಕರುಣೆ ಸಾಲದುತುತ್ತೊಂದು ಬೇಕುಬೇಕು ಅಷ್ಟೇ..! + +ಈ ಎಚ್ಚರದಲ್ಲಿ ವಾಸ್ತವವನ್ನು ಗ್ರಹಿಸುವ ಬಗೆ ಹೀಗೆ: + +ಒಳಜಗತ್ತನ್ನು ಬೆಳಗುವಕಣ್ಣುಗಳ ಬಿಂಬಗಳಲಿದೀಪದ ಬೆಳಕಿನ ಬದಲಾಗಿಕಾರಿಕೊಂಡಿದೆ ಬೆಂಕಿಇದಕ್ಕೆ ಕೊನೆ ಮೊದಲಿಲ್ಲ -(ಕೊನೆ ಮೊದಲಿಲ್ಲ) + +-ಇವು ಕೊನೆಯ ಕವಿತೆಯ ಕೊನೆಯ ಸಾಲುಗಳು. ಯಾರೋ ಕಡಿದ ಕಾಡಿಗೆ ಮಳೆ ಇಲ್ಲದಾಗಿ ಇನ್ನಾರೋ ಕಟ್ಟಿಕೊಂಡ ಬೆಚ್ಚನೆ ಮನೆಗೆ ಮರಳಾಗಿ ಹೊಳೆಯೊಡಲು ಖಾಲಿಯಾಗಿ ಬೇಸಿಗೆಯಲ್ಲಿ ಹೊಳೆಯ ಕರುಳು ಬತ್ತಿ ಹೋಗುತ್ತದೆ ಎನ್ನುವ ಸೋಮು ’ಆದರೆ ನನ್ನೊಳಗಿರುವ ಪ್ರವಾಹಕ್ಕೆ ಬರವಿಲ್ಲ’ ಎಂದೂ ಬರೆಯುತ್ತಾರೆ. + +‘ಈ ಸಂಕಲನದ ಪದ್ಯಗಳೆಲ್ಲ ಈ ಲೋಕದ ದಂದುಗಗಳಿಗೆ ಮಿಡಿದ, ಬಂಡಾಯ ಹೂಡಿದ, ಸಾಂತ್ವನ ನೀಡಲು ಬೆರಳು ಚಾಚಿದ, ಸಖ್ಯದ ದಾರಿಗೆ ಅಹ್ವಾನಿಸುವ ಇರಾದೆಯನ್ನು ಹೊಂದಿವೆ’ ಎಂಬ ಮುನ್ನುಡಿಕಾರರ ಮಾತು ಒಪ್ಪತಕ್ಕದ್ದು. ಆದರೆ ಅವರು ಹೇಳುವ ಕ್ರಿಯಾಶೀಲತೆಯೆಂಬುದು ಸೃಜನಶೀಲ ಸಂವೇದನೆಯ ರೂಪವಾಗಿರುತ್ತದೆ. ಜಗತ್ತಿನ ಮಾನವೀಯ ಅಂತಃಕರಣವೇ ವ್ಯಕ್ತಿನಿಷ್ಠನನ್ನು ಕಾವ್ಯನಿಷ್ಠನನ್ನಾಗಿಸಿ ಅಂತಿಮವಾಗಿ ಆತ ಸಮಾಜಮುಖಿಯಾಗುತ್ತಾನೆ. ಆಗಲೇ ಕವಿಯಾದವನು ಏಕಾಂತದಿಂದ ಕಳಚಿಕೊಂಡು ಬಹುತ್ವದ ಮಾರ್ಗದಡೆಗೆ ಬರುತ್ತಾನೆ. ಇದೇ ಮಂಟಪ ಪ್ರಜ್ಞೆ, ಬಯಲುಜ್ಞಾನ, ಅನಿಕೇತನ ಪ್ರಭೆ. ಈ ಹಾದಿಯಲ್ಲಿ ಯೋಚಿಸುತ್ತಿರುವ ಗೆಳೆಯ ಸೋಮು ಕುದರಿಹಾಳ ತಮ್ಮ ಪಯಣವನ್ನು ಕಾಲುದಾರಿಯಲ್ಲಿ ನಡೆಸುತ್ತಿದ್ದಾರೆ. ರಾಜಮಾರ್ಗ ಇಂದಿನ ನಿಷೇಧಿತ ವಲಯ. ಸಾಮಾಜಿಕ ಸ್ತರವಿನ್ಯಾಸದ ಸೂಕ್ಷ್ಮತೆಯಿದ್ದು ಸಮುದಾಯದ ಸಾಂಸ್ಕೃತಿಕ ಲಯಗಳನ್ನು ಅರಿತ ಘಳಿಗೆಯೇ ಕಾಲುದಾರಿಯ ಪಥಿಕನಾಗುತ್ತಾನೆ ಕವಿ. ಎನ್ನುವ ಮತುಗಳು ವಿಸ್ತೃತವಾದ ಚರ್ಚೆಯನ್ನು ಬೇಡುತ್ತವೆ. + +ಒಟ್ಟಾರೆ ಸೋಮು ಕುದರಿಹಾಳ ಅವರ ಕವಿತೆಗಳು ಈ ನೆಲದ, ಈ ಬದುಕಿನ ಉಸಿರಾಡುತ್ತ ಸಾಮಾಜಿಕ ದೋಷಗಳಿಗೆ ಕನ್ನಡಿ ಹಿಡಿಯುತ್ತ ಸಾಗುತ್ತವೆ. ವಚನ ಕವಿತೆಯ ಬಗೆಯಲ್ಲಿ ಕೆಲವು ಸಾಗಿದರೂ ಚಿತ್ರಗಳನ್ನು ಸಮರ್ಥವಾಗಿ ಹಿಡಿದಿಡುವ ಸುಮಾರು ಕವಿತೆಗಳು ಕಾವ್ಯಧ್ವನಿಯ ಸಾಧ್ಯತೆಗಳನ್ನು ತಮ್ಮ ಸ್ವರೂಪದಲ್ಲಿ ಇಟ್ಟುಕೊಂಡಿವೆ. ಕವಿತೆಗೆ ಕೊಂಚ ಗೇಯತೆಯೂ ಅಗತ್ಯ ಅಥವಾ ಅಂತರ್ಲಯವಾದರೂ ಸಾಧಿತವಾದರೆ ಚೆನ್ನ. ಈ ಅಂತರ್ಲಯವೇ ಕನ್ನಡ ಕಾವ್ಯದ ಒಡಲಿನಂತಿದೆ. + +ಇಂದಿಗೂ ಹಲವರು ಹಾಡುವ ಕವಿತೆಗಳನ್ನು ಬರೆಯುತ್ತಿದ್ದಾರೆ. ಬೇರೆ ಬೇರೆ ಕವಿಗಳು ತಮ್ಮ ಕವಿತೆಗಳಲ್ಲಿ ಖಚಿತ ನಡೆಯ ಲಯಗಳನ್ನು ಸ್ವಾಭಾವಿಕವಾಗಿಯೇ ತರುತ್ತಿದ್ದಾರೆ. ಇದನ್ನು ಸೋಮು ಗಮನಿಸಬೇಕು. ಜೊತೆಗೆ ಮಾತಿನಲ್ಲಿ ಖಚಿತತೆಯ ಬಗೆಗೂ ಚಿಂತಿಸಬೇಕು. ಉದಾಹರಣೆಗೆ ಪಾಳು ಬಿದ್ದ ಬರಡು ಮನ, ನೀರಾರಿದ ಒಣಕಲು ಒಡಲು ಇಂಥ ಪ್ರಯೋಗಗಳು ಅಂಥ ಪ್ರಯೋಜನವನ್ನು ತರಲಾರವು. + + + +ಈ ಕಟ್ಟಿನಲ್ಲಿ ಮಕ್ಕಳಿಗಾಗಿ ಬರೆದ ಕವಿತೆಗಳೂ ಇವೆ, ಕೆಲವು. ಕಥೆಯನ್ನು ಮಕ್ಕಳ ಮನಮುಟ್ಟುವಂತೆ ಹೇಳಬಲ್ಲ ಕಲೆ ಇವರಿಗೆ ದಕ್ಕಿದೆ. ಮಕ್ಕಳ ನಡುವೆಯೇ ಇರುವ ಕವಿ ಆ ದಿಕ್ಕಿನಲ್ಲೂ ಹೆಚ್ಚಿನ ಪರಿಶ್ರಮ ಮಾಡಬಹುದು: ಉದಾಹರಣೆಗೊಂದು ಕವಿತೆ + +ಸಮಯ + +ಬೆಕ್ಕಿನ ಕೊರಳಿಗೆ ಗಂಟೆ ಕಟ್ಟಿರುವೆಇಲಿಗೆ ಬೋನನೂ ಇಟ್ಟಿರುವೆ + +ಹಾಳಾದ್ದು ಇಲಿ ಕಾಟಹಾಲು ಕದಿವ ಬೆಕ್ಕಿನದೂ + +ಆಯಕಟ್ಟಿನ ಜಾಗದಲಿ ಕುಳಿತಿರುವೆಆಯತಪ್ಪಿದರೆ ಅಪಾಯ ನನಗೂ + +ಬೆಕ್ಕು ಬರುವ ಸದ್ದು ಗೊತ್ತಾಗಿಇಲಿ ಕಚಕ್ ಪಚಕ್ ಕೀಚ್ ಕೀಚ್ಇಲಿಯಾಸೆಗೆ ಬೆಕ್ಕು ನೆಗೆದುಢಣ್ ಢಣಣಣಣ್ + +ಹಾಲಿನ ನೆಲುವಿನ ಬಳಿ ಕಾವಲಿದ್ದನಾನೂ ಸದ್ದನು ಬೆನ್ನತ್ತಿ + +ಬೀಸಿದ ಕೋಲು ಬೋನಿಗೆ ಬಿದ್ದುಇಲಿ ಹೊರಗೋಡಿತು, ಬೆಕ್ಕು ಹಾಲಿನಡೆಗೆ + +ಕಾಲನೆತ್ತಲಾಗುತ್ತಿಲ್ಲ ಆಗ ಬಿದ್ದದ್ದುಈಗ ನೋವು; ಕುಂಟುತ್ತಿದೆ ಬೆಕ್ಕು + +ಕೋಲು ಬಿದ್ದಿದೆ ಅಷ್ಟು ದೂರಮೀಸೆ ನಿಮಿರಿಸಿದೆ ಇಲಿ ಕೈ ಅಳತೆಯಲಿ + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_411.txt b/Kenda Sampige/article_411.txt new file mode 100644 index 0000000000000000000000000000000000000000..d1be2caf747c3d5b4e2cb2f994a941cc0f000728 --- /dev/null +++ b/Kenda Sampige/article_411.txt @@ -0,0 +1,69 @@ + + +ನನ್ನ ತಂದೆಗೆ ನಾನೊಬ್ಬನೇ ಮಗನು. ನನ್ನ ತಂದೆ ತಾಯಿಗಳು ನನ್ನನ್ನು ಮದುವೆ ಮಾಡದೆ ತೀರಿ ಹೋದರು. ಆ ದಿನ ಮೊದಲ್ಗೊಂಡು ನಾನು ನನ್ನ ಚಿಕ್ಕಪ್ಪನ ಮನೆಯಲ್ಲಿದ್ದೆನು. ನನ್ನ ಚಿಕ್ಕತಾಯಿಯನ್ನು ನೋಡಿದರೆ, ನನಗೆ ಮೈಯೆಲ್ಲ ಉರಿಯುತ್ತಿತ್ತು. ಆದರೆ ಅದನ್ನು ತಪ್ಪಿಸಲಿಕ್ಕೆ ಉಪಾಯವಿಲ್ಲ; ನನಗೆ ಉಪ್ಪನ್ನ ಕೊಡುವವರು ಬೇರೆ ಯಾರೂ ಇಲ್ಲ. ಇಷ್ಟರೊಳಗೆ ನನಗೆ ಮದುವೆಯಾಗಿ ಮೊಮ್ಮಗನ ಮೋರೆ ನೋಡುತ್ತಿದ್ದೆನು. ಈ ಮುದಿ ಗೂಗೆ – ಆದರೆ ಈಗ ಸಿಟ್ಟಿನಿಂದು ಬೈದು ಏನು ತಾನೇ ಪ್ರಯೋಜನ? ಆದುದೆಲ್ಲ ಆಗಿ ಹೋಯಿತು; ಜನ್ಮದ ಫಲ ತಿಂದು ಆಯಿತು. ಈಗ ಯಾಕೆ ತಾನೆ ಬೈಯುವುದು? ಕೆಲವು ತಿಂಗಳ ಹಿಂದೆ ನನ್ನ ಜಾತಕವನ್ನು ಹೊಸಪೇಟೆ ರಾಜಣ್ಣನವರು ಕೊಂಡು ಹೋಗಿ, ಅವರ ಚೊಚ್ಚಲ ಮಗಳ ಜಾತಕಕ್ಕೆ ಅದು ಕೂಡಿ ಬರುತ್ತದೆ ಎಂದು ಸಂಬಂಧದ ಪ್ರಸ್ತಾಪವನ್ನು ನಮ್ಮವರೊಡನೆ ಮಾಡುತ್ತಿದ್ದರಂತೆ. ಆದರೆ ಈ ಹಾಳು ಮೂಳಿಯ ಕೆಲಸದಿಂದ – ಬೈಯಬಾರದು; ಎಷ್ಟಾದರೂ ಚಿಕ್ಕತಾಯಿ. ನನಗೆ ಅನ್ನಕೊಟ್ಟು ಸಾಕಿದಂಥವಳು; ಮುಂದೆ ತನ್ನ ಚಿನ್ನಬಿಟ್ಟು ಸಾಯುವಂಥವಳು. + +ನನ್ನ ಚಿಕ್ಕತಾಯಿಯು 60 ವರ್ಷದ ಯುವತಿ. ಹಣೆಯಲ್ಲಿ ಕುಂಕುಮ, ಗಂಡನು ಮದುವೆಯಾದೊಡನೆಯೇ ಊರುಬಿಟ್ಟು ಹೋದುದರಿಂದ ಯಾವಾಗಲೂ ಮುತ್ತೈದೆ. ತಲೆಯಲ್ಲಿ ತುಂಬಾ ಕೂದಲು, ಒಂದೆರಡು ಕಪ್ಪೂ ಇದ್ದಾವೆ. ದೇಹ ಸ್ವಲ್ಪ – ಮೊನ್ನೆ ಮುಕ್ತಪುರದಿಂದ ಹಿಂತಿರುಗಿ ಬರುತ್ತಿದ್ದಾಗ ದೋಣಿಯಿಂದ ಇಳಿಯುವ ಸಂದರ್ಭದಲ್ಲಿ ಏನೋ ವಿಪರೀತವಾಯಿತು. ಪ್ರತಿನಿತ್ಯವೂ ಮೈಯ ಆಲಸ್ಯವನ್ನು ಕುರಿತು ಗೊಣಗುಟ್ಟುವಳು. ಆದರೆ ಹಗಲಿನ ಆಲಸ್ಯವು ರಾತ್ರಿಯ ಆಹಾರವನ್ನು ಕಡಿಮೆ ಮಾಡುತ್ತಿದ್ದಿಲ್ಲ. ರಾತ್ರಿ ಅನ್ನವನ್ನು ಊಟ ಮಾಡುತ್ತಿದ್ದಿಲ್ಲ. ಅವಳು ತಿನ್ನುವುದರಲ್ಲಿ ನನಗೂ ಆಗಾಗ್ಗೆ ಒಂದಿಷ್ಟು ಸಿಕ್ಕುತ್ತಿತ್ತು. “ಅಪ್ಪಾ! ಒಂದು ಸಲ ದೇವಸ್ಥಾನದವರೆಗೆ ನನ್ನ ಸಂಗಡ ಬಾರೆಯಾ?” ಎಂದು ಹೇಳಿ ಪ್ರತಿ ಶುಕ್ರವಾರ ರಾತಿಯಲ್ಲಿ ಒಂದು ಚಿಗಳಿಯನ್ನು ನನ್ನ ಕೈಗೆ ಹಾಕುತ್ತಿದ್ದಳು. ಹಾದಿಯಲ್ಲಿ ಹೋಗುತ್ತಿದ್ದಾಗ ತನ್ನ ಹಣವನ್ನೂ ಚಿನ್ನವನ್ನೂ ನನ್ನ ಹೆಸರಿಗೆ ಮಾಡುತ್ತೇನೆಂತಲೂ ತಾನು ಇನ್ನು ಹೆಚ್ಚುಕಾಲ ಬದುಕಲಾರೆನೆಂತಲೂ ನನ್ನೊಡನೆ ತತ್ವಜ್ಞಾನ ಎತ್ತುತ್ತಿದ್ದಳು. + +ಅವಳು ಹೇಳುವಂತೆ ಅವಳ ಬಳಿಯಲ್ಲಿ ಒಂದೆರಡು ಚಿನ್ನದ ವಸ್ತುಗಳಿದ್ದುವು. ಒಂದು ದೊಡ್ಡದಾದ ಓಲೆಜೋಡು ಕಿವಿಯಲ್ಲಿ ಸಣ್ಣದಾಗಿ ತೋರುತ್ತಿತ್ತು; ಕೈಗೆ ಎರಡು ಹಿಂಬಳೆಗಳಿದ್ದುವು. ಉಳಿದವುಗಳೆಲ್ಲ ವಿಶೇಷ ಬೆಲೆಯುಳ್ಳದಾಗಿದ್ದಿಲ್ಲ. ಆದರೂ ಅವುಗಳಲ್ಲಿ ಒಂದು ಆನೆಜಮೆಸರವನ್ನು ಅಧಿಕವಾಗಿ ಎಣಿಸುತ್ತಿದ್ದಳು. ಚಿನ್ನದಿಂದ ಬಿಗಿದ ಆನೆಯ ಕೂದಲುಗಳು ಮಕ್ಕಳಿಲ್ಲದ ಹೆಂಗಸರು ಇಟ್ಟುಕೊಳ್ಳುವುದು ಅಪರೂಪ. ಆದರೆ ಈ ನಗವನ್ನು ನಮ್ಮ ಚಿಕ್ಕತಾಯಿಗೆ ಯಾರೋ ಪ್ರಸಿದ್ಧ ಪೌರಾಣಿಕರು ಕೊಟ್ಟಿದ್ದರೆಂದು ಅವಳು ಹೇಳುತ್ತಿದ್ದಳು. ಈ ನಗವನ್ನು ಕೈಯಲ್ಲಿ ಹಿಡಿದು ಜಪಮಾಡಿದರೆ ಊರು ಬಿಟ್ಟು ಹೋದ ಗಂಡನು ಮರಳಿ ಬರುವನು ಎಂದು ನಂಬಿಸಿ ಕೊಟ್ಟುದರಿಂದ ಅದರ ವಿಷಯದಲ್ಲಿ ಹೆಚ್ಚಿನ ಎಚ್ಚರಿಕೆ. ಆಭರಣಗಳನ್ನೆಲ್ಲ ಅರಿವೆಯಲ್ಲಿ ಗಂಟು ಕಟ್ಟಿ ಅವುಗಳನ್ನು ಮೈಯಲ್ಲಿ ಎಲ್ಲಿಯೋ ಅಡಗಿಸುತ್ತಿದ್ದಳು. ಹಗಲು ಅವುಗಳ ಮೇಲೆ ಮನಸ್ಸು; ಇರುಳು ಅವುಗಳನ್ನು ಕುರಿತು ಕನಸು. + +ಮುಕ್ತಪುರದಲ್ಲಿ ಯಾರೋ ಪೌರಾಣಿಕರು ಎರಡು ತಿಂಗಳ ಹಿಂದೆ ಬಂದಿದ್ದರು. ಪೌರಾಣಿಕರ ಜಪತಪವನ್ನೂ ಸ್ನಾನಸಮಾಧಿಯನ್ನೂ ನೋಡಲಿಕ್ಕೆ ಊರೂರಿಂದ ಜನರು ಓಡುತ್ತಿದ್ದರು. ನನ್ನ ಚಿಕ್ಕತಾಯಿಗೆ ಓಡುವುದಕ್ಕೆ ದೇಹ ಬಿಡುವುದಿಲ್ಲ. ಬಂಡಿಯನ್ನು ಒದಗಿಸಬೇಕೆಂದು ನನ್ನೊಡನೆ ಎಂದಳು. ಅವಳನ್ನು ಕೊಂಡು ಹೋಗಲಿಕ್ಕೆ ಬಂಡಿಯಾಳಲ್ಲಿ ಯಾರೊಬ್ಬನೂ ಕ್ಲುಪ್ತವಾದ ಬಾಡಿಗೆಗೆ ಒಪ್ಪಲಿಲ್ಲ. ಕಡೆಗೆ ಅವಳನ್ನು ಹೇಗಾದರೂ ದೋಣಿಯಲ್ಲಿ ಕೂತುಕೊಳ್ಳಿಸಿ, ಬಳಿಕ ದೋಣಿಯ ಚಪ್ಪರವನ್ನು ಅಲ್ಲಲ್ಲಿ ಸಿಕ್ಕಿಸಿ, ಮುಕ್ತಪುರಕ್ಕೆ ನಾನು ಅವಳನ್ನು ಕಳುಹಿಸಿದೆನು. ಒಂದು ವಾರವು ಕಳೆದ ಮೇಲೆ ಅವಳು ಹಿಂತಿರುಗಿ ಬಂದಳು. ಪ್ರಯಾಣದ ಆಯಾಸವು ಅವಳಲ್ಲಿ ಕಂಡು ಬರಲಿಲ್ಲ. ಯಾಕೆಂದರೆ, ಮನೆಗೆ ಬಂದಕೂಡಲೇ ಅರಿವೆಗಳನ್ನು ಬಿಚ್ಚಲಿಕ್ಕೂ ವಸ್ತ್ರಗಳನ್ನು ನೋಡಲಿಕ್ಕೂ ಕುಳಿತಳು. ಗಂಟಿಗೆ ಸುತ್ತಿದ ಒಂದು ಅರಿವೆಯನ್ನು ಬಿಚ್ಚಿದಳು; ಆಮೇಲೆ ಮತ್ತೊಂದನ್ನು ತೆಗೆದಳು; ಬಳಿಕ ಇನ್ನೊಂದನ್ನು ತೆಗೆದಳು. ಪುನಃ ಮತ್ತೊಂದು, ಮತ್ತೊಂದು, ಮತ್ತೊಂದು – ದ್ರೌಪದಿಯ ವಸ್ತ್ರಹರಣವು ಸ್ಮರಣೆಗೆ ಬರುವಂತೆ ಮಾಡಿದಳು. + +ಎಲ್ಲವನ್ನು ಈಚೆಗೆ ತೆಗೆದ ಸ್ವಲ್ಪ ಹೊತ್ತಿನ ಮೇಲೆ “ಹೋಯ್ತು! ಅಪ್ಪಾ! ನನ್ನ ಸರ್ವಸ್ವ ಹೋಯ್ತು” ಎಂಬ ಗೋಳು ಕೇಳಿಸಿತು. ಜಗುಲಿಯಲ್ಲಿದ್ದ ನಾನು ಒಳಗೆ ಓಡಿದೆನು. ಅವಳ ಮುಖವು ಸಿಡಿಲು ಬಡಿದ ತೆರದಲ್ಲಿತ್ತು. ಅರಿವೆ ಚಿಂದಿಗಳಿಂದ ಹಣೆ ಚಚ್ಚಿಕೊಳ್ಳುವುದನ್ನು ಕಂಡು ದುಃಖದ ಕಾರಣವನ್ನು ಊಹಿಸಿದೆನು. ಒಡವೆಗಳ ಗಂಟು ಅರಿವೆಯೊಳಗೆ ಇದ್ದಿಲ್ಲ. ಮುದುಕಿಗೆ ತಕ್ಕದಾದ ಶಾಸ್ತಿಯಾಯಿತೆಂದು ನಾನು ಒಂದು ನಿಮಿಷ ಹಿಗ್ಗಿದೆನು. ಆದರೆ ಮುದುಕಿಯ ರೋದನದಲ್ಲಿ ನನ್ನ ಮನಸ್ಸು ಕರಗುತ್ತಾ ಬಂತು. ಅವಳ ದುಃಖ ಧ್ವನಿಯಲ್ಲಿಯೂ ಅವಳ ದುಃಖಾಶ್ರುಗಳಲ್ಲಿಯೂ ಅವಳ ನಿಷ್ಕಾಪಟ್ಯವೂ, ಅವಳ ಸ್ಥೂಲಬುದ್ಧಿಯೂ, ಅವಳ ವಾತ್ಸಲ್ಯವೂ ಸ್ಫುಟವಾದುವು. “ಅಪ್ಪಾ!” ತಲೆಯನ್ನು ಚಚ್ಚಿಕೊಳ್ಳುತ್ತಾ “ಅಪ್ಪಾ! ನನ್ನ ಸರ್ವಸ್ವಕ್ಕೆ ಯಾರೋ ಕೈಹಾಕಿದರು. ಹೊಟ್ಟೆಕಟ್ಟಿ ಕೂಡಿಸಿದ ಮೂರುಕಾಸುಗಳನ್ನು ನಿನಗೆ ಕೊಡಬೇಕೆಂದಿದ್ದೆನು. ಒಂದು ಕಾಸು ಕೂಡಾ ಉಳಿಯಲಿಲ್ಲ. ನಗಗಳ ಚಿಂತೆಯನ್ನು ನಾನು ಕಟ್ಟಿಕೊಳ್ಳಲಿಲ್ಲ. ಆ ಆನೆಜಮೆಸರ ಹೋಯಿತಲ್ಲ! ಇನ್ನು ನಿನ್ನ ಚಿಕ್ಕತಂದೆಯವರನ್ನು ನೋಡುವೆನೆಂಬ ಆಸೆಯು ಇಂದಿಗೆ ಆಯಿತು. ಎಲ್ಲವಾದರೂ ಹೋಗಬಹುದಿತ್ತು. ಈ ನಗವು ಉಳಿಯಬಹುದಿತ್ತು. ಬೆಳಗ್ಗೆ ನಾನು ಯಾರ ಮೋರೆಯನ್ನು ಕಂಡೆನೋ?” ಎಂದು ತಡವೆ ತಡವೆಗೆ ಮಕ್ಕಳಂತೆ ಹಂಬಲಿಸಿ ಅಳುತ್ತಿದ್ದಳು. + +ಅವಳು ಅಳುವುದನ್ನು ನೋಡಿ ನನ್ನ ಕಣ್ಣುಗಳಲ್ಲಿಯೂ ಒಂದೆರಡು ತಟುಕು ನೀರು ಒಸರಿತು. ಮುಂದೆ ನನಗೆ ಸಿಕ್ಕುವ ಗಂಟನ್ನು ಯಾರೋ ಎತ್ತಿದರೆಂದು, ಒಂದು ನಿಮಿಷದ ಮೇಲೆ, “ನನ್ನ ಒಡವೆಗಳನ್ನು ಯಾರು ತೆಗೆದಿರಬಹುದು? ದೋಣಿಯಾಳು ತೆಗೆದಿರಲಾರನು; ಅವನು ನನ್ನ ಹತ್ತಿರವೇ ಮಲಗಿದ್ದನು. ಅಯ್ಯೋ! ನನ್ನ ಜಪಸರವು ಹೋಯಿತಲ್ಲ! ಅವರ ಮುಖವನ್ನು ಈ ಜನ್ಮದಲ್ಲಿ ಇನ್ನೊಂದು ಸಲ ನೋಡುವೆನೆಂಬ ಆಸೆಯು ತೀರಿತಲ್ಲ!” ಎಂದ ಪುನಃ ಪ್ರಲಾಪಿಸಿದಳು. ಸ್ವಲ್ಪ ಹೊತ್ತಿನ ಮೇಲೆ ತಾನೇ ಸಮಾಧಾನವನ್ನು ಹೊಂದಿ “ಅಪ್ಪಾ! ನೀನಾದರೂ ಪ್ರಯತ್ನಮಾಡು; ನೀನು ಸೊಂಟ ಕಟ್ಟಿದರೆ ಅವುಗಳೆಲ್ಲವು ಸಿಕ್ಕದೆ ಇರಲಾರವು. ಸಿಕ್ಕಿದರೆ ನನ್ನ ಬೊಟ್ಟಿನ ಕುಂಕುಮ ಉಳಿಸಿದ ಪುಣ್ಯ ನಿನಗೆ”, ಎಂದು ಹೇಳಿದಳು. ಕಳವನ್ನು ಕುರಿತು ಪೋಲೀಸಿನವರಿಗೆ ವರ್ತಮಾನ ಮುಟ್ಟಿಸಿದ್ದಾಯಿತು. + +ನನಗೆ ಯಾರ ಮೇಲೆಯೂ ಸಂಶಯವಿದ್ದಿಲ್ಲ; ಸಂಶಯವಿದ್ದರೂ ನನ್ನ ಸಂಶಯವು ಫಲಿಸದಿದ್ದರೆ ವಿನಾಕಾರಣವಾಗಿ ವಿರೋಧ; ವಿರೋಧವಾದರೂ ಅವಚಿಯು ನನ್ನನ್ನು ಇನ್ನೂ ಹೆಚ್ಚಾಗಿ ಪ್ರೀತಿಸಳು. ಆದರೆ ಕಳ್ಳನನ್ನು ಹುಡುಕುವುದು ಹೇಗೆ? ಅನೇಕರಾದರೊ, ಅರಿವೆ ವಾಸನೆಯಿಂದ, ಹೆಜ್ಜೆ ಕುರುಹುಗಳಿಂದ, ಕೆಮ್ಮಿನ ಸ್ವರದಿಂದ, ಎಂಜಲ ರುಚಿಯಿಂದ ಪಾತಾಳದಲ್ಲಿ ಅಡಗಿದ್ದ ಕಳ್ಳನನ್ನು ಎತ್ತಿ ತಂದಿರುವರಂತೆ. ಪಂಚೇಂದ್ರಿಯಗಳ ಇಂತಹ ಗುಣವಿಶೇಷವು ನನ್ನಲ್ಲಿಲ್ಲ. ಆದರೂ ಸಾಧಿಸಬೇಕೆಂದು ದೃಢಮಾಡಿದೆನು. ಮೊದಲು ಹೆಜ್ಜೆಗಳ ಗುರುತುಗಳನ್ನು ಹಿಡಿದು ಹುಡುಕಿದೆನು. ಜಗುಲಿಯ ಮೇಲೆ ಕೆಲವು ಕುರುಹುಗಳಿದ್ದವು; ಅಂಗಳಕ್ಕೆ ಇಳಿಯುತ್ತಲೇ ಆ ಗುರುತುಗಳು ಒಂದನ್ನೊಂದು ಅಳಿಸಿಕೊಂಡು ಹೋದುವು. ಮನೆಯ ಕೊಟ್ಟಡಿಯಿಂದ ಹಿತ್ತಿಲಿನವರೆಗೆ ಎಲ್ಲವನ್ನೂ ಹುಡುಕಿದೆನು. ಹಿಂತಿರುಗಿ ಬರುತ್ತಿದ್ದಾಗ ಒಂದು ನಸೆಡಬ್ಬಿಯ ಬಿರುಡೆ ಹಾದಿಯಲ್ಲಿ ತೋರಿತು. ಕಳ್ಳ ಸಿಕ್ಕಿದನೆಂದು ಭಾವಿಸಿದೆನು. ಮನಸ್ಸಿನಲ್ಲಿ ಔತ್ಸುಕ್ಯವು ಕುದಿದು ಉಕ್ಕಿಬಂತು. ಅವಚಿಗೆ ತಿಳಿಸಲಿಕ್ಕೆ ಬೇಗನೆ ಓಡಿದೆನು. ಓಡುತ್ತಿದ್ದಾಗ ನನ್ನ ಉಡಿಯಿಂದ ಏನೋ ಕೆಳಗೆ ಬಿತ್ತು. ಸ್ವಲ್ಪ ಅಲ್ಲಿಯೆ ತಡೆದೆನು. ಬಿದ್ದ ಪದಾರ್ಥವನ್ನು ಕೈಯಲ್ಲಿ ಹಿಡಿದು ನೋಡಿದೆನು. ಒಳಗೆಲ್ಲ ಬರಿದಾಗಿತ್ತು. ಬಿರುಡೆ ಜಾರಿದುದರಿಂದ ನಸೆಯೆಲ್ಲ ಸುರಿದುಹೋಗಿ ಬರಿದಾದ ನನ್ನ ನಸೆಡಬ್ಬಿ. ನನ್ನ ಕೈಯಲ್ಲಿದ್ದ ಬಿರುಡೆಯನ್ನು ಅದಕ್ಕೆ ಜೋಡಿಸಿದೆನು; ಸರಿಯಾಗಿತ್ತು. ಒಂದು ತಡವೆಗೆ ನನ್ನ ಉತ್ಸಾಹದ ಮೇಲೆ ತಣ್ಣೀರು, ಎರಚಿದಂತಾಯಿತು. ಒಂದು ತಡವೆಗೆ ಕಳ್ಳನು ಸಿಕ್ಕುವನೆಂಬ ನಂಬಿಕೆಯು ಮನಸ್ಸಿನಿಂದ ಕಿತ್ತುಹೋಯಿತು. + +ಪ್ರಾತಃಕಾಲದಲ್ಲಿ ನಾನು ಮನೆಯಿಂದ ಹೊರಟೆನು. ಎಷ್ಟೋ ಸ್ಥಳಗಳಲ್ಲಿ ಮಾತನಾಡುತ್ತಾ ಕುಳಿತೆನು; ಒಂದೆರಡು ಮನೆಗಳಲ್ಲಿ ‘ಕಾಫಿ’ ಕುಡಿದಾಯಿತು. ಮಧ್ಯಾಹ್ನಕ್ಕೆ ಮನೆಗೆ ಹಿಂತಿರುಗಿದೆನು. ಹಾದಿಯಲ್ಲಿ ಒಬ್ಬ ಹೆಂಗಸನ್ನು ನೋಡಿದೆನು; ನೋಡುತ್ತಲೇ ಹೋದ ಒಡವೆ ಗಂಟು ಸ್ಮರಣೆಗೆ ಬಂತು. ಒಡವೆ ಗಂಟಿನಲ್ಲಿ ಚಿನ್ನದಿಂದ ಬಿಗಿದ ಆನೆಜಮೆ ಇತ್ತು; ಈ ಸ್ತ್ರೀಯ ಮಸ್ತಕದಲ್ಲಿ ಅಷ್ಟೇ ಬಿರುಸಾದ ಕೇಶಪಾಶಗಳು ಜಡೆ ಕಟ್ಟಿದ್ದುವು. ನನ್ನ ದೃಷ್ಟಿಯು ಅವಳ ಕೂದಲುಗಳಲ್ಲಿ ಸಿಕ್ಕಿಕೊಳ್ಳುತ್ತಲೇ ಅವಳು ತನ್ನ ಎಡಗೈಯಿಂದ ತುರುಬನ್ನು ಸವರಿದಳು. ನಾನು ನನ್ನಲ್ಲಿಯೇ ನಾಚಿಕೊಂಡು ಮುಂದರಿಸಿದೆನು. ಸ್ವಲ್ಪ ದೂರಕ್ಕೆ ಹೋದ ಮೇಲೆ ನಾನು ಮುಖ ತಿರುಗಿಸಿ ನೋಡಿದರೂ ಅವಳ ತುರುಬು ಚೆನ್ನಾಗಿ ನೋಡಲಿಕ್ಕೆ ಸಿಕ್ಕಲಿಲ್ಲ. ಅವಳು ನನ್ನಂತೆಯೇ ಮುಖ ತಿರುಗಿಸಿ ಯಾವುದನ್ನೋ ನೋಡುತ್ತಿದ್ದಳು. ನಾನು ಮನೆಯನ್ನು ಸೇರಿದೆನು. ಆದರೆ ಅವಚಿಯ ಇದಿರು ಹೋಗಲಿಕ್ಕೆ ನನಗೆ ಮೋರೆ ಇಲ್ಲ. ಅವಳಾದರೋ? ನಾನು ಕೈಯಲ್ಲಿ ಕಳ್ಳನನ್ನು ಹಿಡಿದು ತಾರದೆ ಬಿಡೆನೆಂದು ದೃಢವಾಗಿ ನಂಬಿದ್ದಳು. ಕಳ್ಳನ ಶಿಕ್ಷೆಯ ಮೇಲೆ ಅವಳ ಮನಸ್ಸು ನಿಲ್ಲಲಿಲ್ಲ; ಅವಳ ಜೀವವು ಹೋದೊಡವೆಗಳ ಮೇಲಿತ್ತು. ನಾನು ಬರುತ್ತಲೆ ಗಂಟನ್ನು ಕುರಿತು ನನ್ನನ್ನು ಕೇಳಿದಳು. ನಾನು ಇಲ್ಲದ ವೇಳೆಯಲ್ಲಿ ಪೋಲೀಸನವನು ಬಂದು ಒಂದು ರೂಪಾಯಿಯನ್ನು ಇಸುಕೊಂಡು ಹೋದನೆಂದು ಅವಳಿಂದ ತಿಳಿದೆನು. ನಾನು ಹಗಲು ಇರುಳು ಹುಡುಕುವುದರಲ್ಲಿಯೇ ಇದ್ದೆನೆಂದು ಹೇಳಿದೆನು. ಹೀಗೆ ಸುಳ್ಳು ಹೇಳುತ್ತಾ ಮೂರು ದಿವಸಗಳನ್ನು ಕಳೆದೆನು. ಆ ದಿನ ಮೊದಲ್ಗೊಂಡು ಸುಳ್ಳೆಂದರೇನು ಸತ್ಯವೆಂದರೇನು ಎಂಬ ಭೇದವು ನನ್ನ ಮನಸ್ಸಿಗೇ ಬರುತ್ತಿದ್ದಿಲ್ಲ. + +ಅನಿವಾರ್ಯವೆಂದು ತೋರುವ ಅಪಾಯಗಳನ್ನು ಪರಿಹರಿಸುವ ಉಪಾಯಗಳು ಮೂಢರ ಮನಸ್ಸಿನಲ್ಲಿಯೂ ಹೊಳೆಯುವುದುಂಟು. ಈ ಮಾತು ನನ್ನ ವಿಷಯದಲ್ಲಿ ಸಿದ್ಧವಾಗಿ ದೃಷ್ಟಾಂತಕ್ಕೆ ಬಂತು. ಆನೆಜಮೆ ಸರವನ್ನು ಹೇಗೂ ಶೋಧಿಸದಿದ್ದರೆ ಚಿಕ್ಕತಾಯಿಯ ಮನಸ್ಸು ಎಂದೂ ಸ್ವಸ್ಥವಾಗಿರದು; ಅವಳು ತನ್ನ ಮನೆಮಾರನ್ನು ನನ್ನ ಹೆಸರಿಗೆ ಮಾಡುವಳು ಎಂಬುದೊಂದು ಆಸೆಯು ಇನ್ನೂ ಉಳಿಯದು. ನನ್ನ ಚಿಕ್ಕ ತಾಯಿಗೆ ದೇವರ ಮೇಲೆ ಭಕ್ತಿಯೂ, ಪೌರಾಣಿಕರ ಮೇಲೆ ಪ್ರೀತಿಯೂ ಅಧಿಕವಾದುದರಿಂದ, ಅವಳ ಸರ್ವಸ್ವವು ಅವಳ ಮರಣವನ್ನು ನಿರಂತರ ಎದುರ್ನೋಡುತ್ತಿರುವ ಪೌರಾಣಿಕರ ಹಸ್ತಗತವಾಗುವುದಲ್ಲದೆ ಅದರಲ್ಲಿ ಒಂದು ಕಾಸು ನನ್ನ ಪಾಲಿಗೆ ಬರುವುದರಲ್ಲಿ ಬಹಳ ಸಂದೇಹವಿತ್ತು. ಆದರೆ ನಗವನ್ನು ನಾನು ಹುಡುಕಿ ತಂದರೆ ಅವಳ ವಾತ್ಸಲ್ಯವನ್ನು ನನ್ನ ಕಡೆಗೆ ತಿರುಗಿಸಿ, ಅವಳಿಗೆ ನಾನೇ ಉತ್ತರಾಧಿಕಾರಿಯಾಗುವ ಹಾಗೆ ಮಾಡಿಸಿದರೆ ನನ್ನ ಅದೃಷ್ಟವು ಮುಂದೆ ಅಷ್ಟೊಂದು ಹಾಳಾಗದು. ಈ ಕಾರಣಗಳಿಂದ ಆಭರಣಗಳನ್ನು ಹೇಗಾದರೂ ಹುಡುಕಿ ತರುವುದಕ್ಕೆ ಮನಸ್ಸನ್ನು ನಿರ್ಧರಿಸಿದೆನು. ಆದರೆ ಆಭರಣಗಳೇನೋ ಅಕ್ಕಸಾಲಿಗನ ಅಗ್ಗಿಷ್ಟಿಕೆಯನ್ನು ಸೇರಿದುವು; ಅವುಗಳು ಇನ್ನು ಚಿಕ್ಕತಾಯಿಯ ಕಣ್ಣಿಗೆ ಬೀಳುವ ಹಾಗಿಲ್ಲ. ಅದು ಸಿಕ್ಕದಿದ್ದರೆ ಅದರಂತೆ ಇನ್ನೊಂದನ್ನು ಒದಗಿಸಿಕೊಳ್ಳುವುದು ಕಷ್ಟಸಾಧ್ಯವೇ? ಹೀಗೆ ಒದಗಿಸಿದ ನಗದಿಂದ ಮುದಿಕಣ್ಣುಗಳನ್ನು ಮೋಸಗೊಳಿಸುವುದು ದೊಡ್ಡದೇ? ಈ ದುರಾಲೋಚನೆಗಳು ನನ್ನ ಮನಸ್ಸಿನಲ್ಲಿ ಪುನಃ ಪುನಃ ತಿರುಗಿದುವು. ಮರುದಿನ ಪ್ರಾತಃಕಾಲ ಎದ್ದು, “ಅವಚೀ! ಅವಸರಪಟ್ಟರೆ ಕಾರ್ಯವು ಭಂಗವಾಗುವುದು. ಇನ್ನೊಂದು ವಾರದೊಳಗೆ ನಾನು ಕಳ್ಳನನ್ನು ಹಿಡಿಯದೆ ಬಿಡೆನು. ನನ್ನ ಮನಸ್ಸಿಗೆ ಕೆಲವು ಉಪಾಯಗಳು ನಿನ್ನೆ ರಾತ್ರಿ ಕಂಡು ಬಂದುವು. ಇಂದು ಕಳ್ಳನ ಹೆಜ್ಜೆಯಲ್ಲಿಯೇ ನಾನು ನಡೆಯುತ್ತಿದ್ದೇನೆ. ನಾನು ನಗವನ್ನು ತಾರದಿದ್ದರು ನನ್ನ ಹೆಸರು ರಾ…. ಅಲ್ಲ” ಎಂದು ಹೇಳಿ ನನ್ನ ಉಪಾಯಗಳನ್ನು ಕಾರ್ಯಗಳಲ್ಲಿ ಸಿದ್ಧಪಡಿಸಲಿಕ್ಕೆ ಹೊರಟೆನು. + +ಆನೆಜಮೆಯನ್ನು ಒದಗಿಸುವುದು ಕಷ್ಟಸಾಧ್ಯವೆಂದು ನಾನು ಎಣಿಸಲಿಲ್ಲ. ಎರಡು ದಿನಗಳ ಹಿಂದೆ ಸಂಜೆಯಲ್ಲಿ ಮನೆಗೆ ಹಿಂತಿರುಗುತ್ತಿದ್ದಾಗ ಅಂತಹ ಕೂದಲುಗಳು ಸ್ತ್ರೀ ಮಸ್ತಕದಲ್ಲಿ ನೋಡಿದುದು ಸ್ಮರಣೆಯಲ್ಲಿತ್ತು. ಅವುಗಳಲ್ಲಿ ಒಂದೆರಡು ಕೂದಲುಗಳು ಬೆಲೆಗೆ ಸಿಕ್ಕಿದರೂ ನನ್ನ ಕಾರ್ಯವು ನೆರವೇರುವುದು. ಸ್ತ್ರೀಯರಲ್ಲಿ ಕೆಲವರು ತಮ್ಮ ಪುರುಷರ ಜುಟ್ಟನ್ನು ಹಿಡಿದು, ತಮಗೆ ವಿಧೇಯರಾಗಿ ಅವರನ್ನು ಇರಿಸುವರಂತೆ; ನಾನು ಅವರಂತೆಯೇ ಪ್ರೀತಿಯನ್ನು ನಟಿಸಿದರೆ ಒಬ್ಬ ಹೆಂಗಸಿನ ಕೂದಲನ್ನಾದರೂ ಹಿಡಿಯಲಾರೆನೆ? ಅದಲ್ಲದೆ ನನಗೆ ಬೇಕಾದ ಕೂದಲುಗಳಿರುವ ಹೆಂಗಸು ಸಾಮಾನ್ಯೆಯಾಗಿರುವಳು; ರಾಜಣ್ಣನವರ ನೆರೆಮನೆಯಲ್ಲಿ ಕೆಲಸ ಮಾಡಿ ಕಾಲಕ್ಷೇಪ ಮಾಡುವಂತಹಳು ಕಾಸುಕೊಟ್ಟರೆ ಕೂದಲು ಕೊಡಲಾರಳೇ? ಹೀಗೆ ಮನಸ್ಸಿನಲ್ಲಿ ಯೋಚಿಸುತ್ತಾ ಹಾದಿ ನಡೆದುದರಿಂದ ಗೋವಿಂದರಾಯರ ಮನೆ ದೂರದಲ್ಲಿದ್ದುದನ್ನು ತಿಳಿಯಲೇ ಇಲ್ಲ. ಕೆಲವು ಹೆಜ್ಜೆ ನಡೆಯುತ್ತಲೇ ಮನೆಯು ಸಮೀಪಿಸಿತು; ಅಂಗಳದಲ್ಲಿ ಅವಳು ಏನೋ ಕೆಲಸ ಮಾಡುವುದನ್ನು ಮಾರ್ಗದ ಮೇಲೆ ನಿಂತು ನೋಡಿದೆನು. ಮನೆಯ ಯಜಮಾನರನ್ನು ನೋಡಲಿಕ್ಕೆ ಬಂದೆನೆಂಬ ನೆಪಮಾಡಿ ಮನೆಯನ್ನು ಹೊಕ್ಕೆನು. ಅಂಗಳದಲ್ಲಿ ಅವಳನ್ನು ನೋಡುತ್ತಲೇ ನನ್ನ ಮನಸ್ಸು ಸ್ವಲ್ಪ ಹಿಂಜರಿಯಿತು. ಆ ರಮಣಿಯು 30ಕ್ಕೆ ಮೀರಿರಲಿಲ್ಲ. ದೇಹಕಾಂತಿಯು ಕೃಷ್ಣವರ್ಣದಿಂದ ಮಂಜುಳವಾಗಿತ್ತು; ಆ ಸಂಕುಚಿತ ಚಕ್ಷುಗಳನ್ನು ಆವರಿಸಿದ ಭ್ರೂಯುಗ್ಮವು ಲಲಾಟ ಪ್ರದೇಶದಲ್ಲಿ ಕಲಭಕೇಶದಂತಿದ್ದ ಅವಳ ಅಲಕಾವಳಿಯನ್ನು ತಡವೆ ತಡವೆಗೆ ಚುಂಬಿಸುತ್ತಿತ್ತು. ತಾಂಬೂಲದಿಂದಾರಕ್ತವಾದ ದಂತಗಳು ಅಧರನಿರೋಧವನ್ನು ಅತಿಕ್ರಮಿಸಿ ಮುಖದ ಮೇಲೆ ಅಲಂಕೃತವಾದ ಕೆಂಪು ಚಿಬ್ಬುಗಳನ್ನು ನೋಡುವಂತೆ ವಿರಾಜಿಸುತ್ತಿದ್ದವು. ಕಂಚುಕವು ಸ್ಕಂದಾಗ್ರದಲ್ಲಿಯೇ ಪೂರೈಸಿದುದರಿಂದ ಉಳಿದ ಹಸ್ತಭಾಗದಲ್ಲಿ ಗಾಜಿನ ಹಿಂಬಳೆಗಳಲ್ಲದೆ ಮತ್ತೊಂದಲಂಕಾರವಿರಲಿಲ್ಲ. ಜಗುಲಿಯ ಮೇಲೆ ಯಾರೂ ಇಲ್ಲದುದನ್ನು ನೋಡಿ, ಅವಳೊಡನೆ ಮಾತು ಹೇಗೆ ಎತ್ತುವುದು ಎಂದು ಒಂದು ನಿಮಿಷ ಯೋಚಿಸಿ ಅಲ್ಲಿಯೇ ತಡೆದೆನು. ಏನು ಮಾಡಿದರೂ ಹೃದಯವು ದಡದಡಿಸುವುದಲ್ಲದೆ ಮಾತು ಬಾರದು. ಕಡೆಗೆ ಪ್ರಯತ್ನಪೂರ್ವಕವಾಗಿ “ಮ್ ಮ್ ಮನೆ ಯಜಮಾನರಿರುವರೇ?” ಎಂದು ವಿಚಾರಿಸಿದೆನು. ಅಂದು ಮಾತನಾಡಿದುದು ಪೂರ್ಣ ಸ್ಮರಣೆಯಲ್ಲಿಲ್ಲ. ಆದರೆ ಅವಳು ನನ್ನ ಮಾತಿಗೆ ಪ್ರತ್ಯುತ್ತರ ಕೊಡಲಿಲ್ಲ. ಕಸಗುಡಿಸುವ ಸಪ್ಪುಳದಲ್ಲಿ ನನ್ನ ಮಾತು ಅವಳಿಗೆ ಕೇಳಿಸಲಿಲ್ಲವೆಂದು ನಾನು ಪುನಃ ವಿಚಾರಿಸಿದೆನು. ಅದಕ್ಕೆ ಅವಳು ಇಲ್ಲವೆಂದು ಉತ್ತರ ಕೊಟ್ಟಳು. ನಾನು ಧೈರ್ಯಗೊಂಡೆನು. ಆ ಮಾತು ನನಗೆ ಕೇಳಿಸಲಿಲ್ಲವೆಂದು ಹೇಳಿ ಅವಳ ಬಳಿಗೆ ಹೋದೆನು. ಹತ್ತಿರ ಬರುತ್ತಲೇ ನನ್ನ ಮೂಗಿನಲ್ಲಿ ವಿಜಾತೀಯವಾದ ಗಾಳಿಯು ಬೀಸಿದಂತಾಯಿತು. “ಯಜಮಾನರು ಮನೆಯಲ್ಲಿ ಇರುವರೇ?” ಎಂದೂ ಮತ್ತೆ ಕೇಳಿದೆನು. “ಇಲ್ಲ; ಅವರು ಬೆಳಗ್ಗೆ ಎದ್ದು ಹೋಗಿರುವರು” ಎಂದಳು. ಆ ಬಳಿಕ ಅವಳು ಸುಮ್ಮನಾದುದನ್ನು ನೋಡಿ, ನಾನು ಮನಸ್ಸಿನಲ್ಲಿಯೇ ಏನೋ ಹೇಳಿ ಹಿಂತಿರುಗಿದೆನು. ಆಗಲೇ ಒಬ್ಬ ಹೆಂಗಸು ಅಂಗಳದಿಂದ ಜಗುಲಿಯನ್ನು ಹತ್ತಿದಳು. ಅವಳು ಯಾರೆಂದು ತಿಳಿಕೊಳ್ಳುವ ಶ್ರಮವನ್ನು ತೆಗೆದುಕೊಳ್ಳದೆ, ನನ್ನ ಕೃತ್ಯಕ್ಕೆ ನಾನೇ ಹೆದರಿ ಬೀದಿಗೆ ಇಳಿದೆನು. ನನ್ನ ಸತ್ಕಾರ್ಯದ ಪ್ರಸ್ತಾವನೆಯು ಇಲ್ಲಿ ಮುಗಿದುದು. + +ಕಾರ್ಯಸಾಧನೆಯಲ್ಲಿ ವಿಘ್ನಗಳು ಪ್ರತಿಭಟಿಸಿದರೂ ಬುದ್ಧಿವಂತರು ಸ್ಥಿರಪ್ರಯತ್ನರಾಗಿ ಅವುಗಳನ್ನು ಕೊನೆಗಾಣಿಸಬೇಕೆಂಬುದೊಂದು ಹಿರಿಯರ ಮಾತು ಇರುವುದು. ಇದಕ್ಕನುಸಾರವಾಗಿ ನಡೆಯಬೇಕೆಂದು ನಾನು ನಿಶ್ಚಯಿಸಿದೆನು. ಚಿಕ್ಕತಾಯಿಯನ್ನು ಮೋಸಗೊಳಿಸಲಿಕ್ಕೆ ಈ ಸ್ತ್ರೀಯ ಪರಿಚಯವು, ಅದೂ ಸಾಲದಿದ್ದರೆ ಅವಳೊಡನೆ ಅನೃತ ಪ್ರಣಯವು ಅವಶ್ಯವೆಂದು ನನ್ನ ಮನಸ್ಸಿಗೆ ಖಚಿತವಾಯಿತು. ಕಳವಾದ ಆನೆಜಮೆ ಸರದಂತೆ ಮತ್ತೊಂದನ್ನು ಇವಳ ಕೂದಲುಗಳಿಂದಲ್ಲದೆ ಇನ್ನು ಯಾವ ಸಾಮಗ್ರಿಯಿಂದಲೂ ಒದಗಿಸಲಿಕ್ಕೂ ಸಾಧ್ಯವಿಲ್ಲವೆಂದು ನನ್ನ ಮನಸ್ಸಿಗೆ ಬಲವಾಗಿ ಕಂಡುಬಂತು. ಆದರೆ ನವೀನ ಈ ಸ್ತ್ರೀಯು ತನ್ನ ತಲೆಯನ್ನು ನನ್ನ ಕೈಯಲ್ಲಿ ಕೊಡುವುದು ಬಹಳ ಸಂದೇಹಾಸ್ಪದವಾಗಿತ್ತು. ಏಕೆಂದರೆ, ಅವಳ ತಲೆ ಮಾತ್ರವಲ್ಲ, ಸಂಪೂರ್ಣ ದೇಹವು ಬೇರೆಯವರ ವಶವಾಗಿರುವ ಸಂಗತಿಯಲ್ಲಿ ಅಂತಹ ಕೇಶಸಾಧನೆಯಲ್ಲಿ ನನ್ನ ಕೂದಲು ಮಾತ್ರವಲ್ಲ, ತಲೆ ಹೋದೀತೆಂಬ ಹೆದರಿಕೆಯು ನನಗಿತ್ತು. ಅದಲ್ಲದೆ ಕೋಳಿಗೆ ತನ್ನ ಚೂಡದ ಮೇಲೆ ಎಷ್ಟು ಪ್ರೇಮವೋ ಅದಕ್ಕಿಂತಲೂ ದಶಾಂಶವಾಗಿ ಅವಳಿಗೆ ತನ್ನ ವೇಣಿಯ ಮೇಲೆ ಪ್ರೇಮವಿತ್ತು. ಆದರೆ ನ್ಯಾಯಾಧೀಶನ ಸತ್ಯಸಂಧತೆಯನ್ನೂ ನಾರಿಯರ ಸತೀತ್ವವನ್ನೂ ಸೂರೆಗೊಳ್ಳುವ ಹಣವು ಒಬ್ಬ ಕ್ಷುದ್ರ ಸ್ತ್ರೀಯ ಒಂದೆರಡು ಕೂದಲುಗಳನ್ನು ಕೊಂಡುಕೊಳ್ಳಲಾರದೇ? ಒಂದು ಹಿಡಿ ಅಕ್ಕಿಗೋಸುಗ ದಿನವೆಲ್ಲ ಕಷ್ಟ ಮಾಡುವವಳು ಒಂದೆರಡು ರೂಪಾಯಿಗೆ ಕೆಲವು ಕೂದಲುಗಳನ್ನು ಕೊಡಲಾರಳೇ? ಈ ವಿಧವಾದ ತರ್ಕವಿತರ್ಕಗಳನ್ನು ನನ್ನಲ್ಲಿಯೇ ಮಥಿಸುತ್ತಾ ನಾನು ಪುನಃ ಮನೆಯನ್ನು ಸೇರಿದೆನು. + + + +ಮೂರು ದಿವಸಗಳು ನಿಲ್ಲದೆ ಕಳೆದುವು. ನಾಲ್ಕನೆಯ ದಿನ ರಾಯರ ಮನೆಗೆ ಹೋದೆನು. ಹೋದವನು ಕಾಲು ತೊಳೆಯುವುದಕ್ಕೆ ನೆಟ್ಟನೆ ಬಚ್ಚಲಿಗೆ ಹೋದೆನು. ಕೂದಲಿನವಳು ಒಲೆಗೆ ಕಟ್ಟಿಗೆಯನ್ನೊಟ್ಟಿ, ಬೆಂಕಿಯನ್ನುರಿಸುತ್ತಿದ್ದಳು. ನನ್ನನ್ನು ಮೆಲ್ಲಗೆ ನೋಡುತ್ತಲೇ – “ಹಾಳು ಕಟ್ಟಿಗೆ! ಊದಿ ಊದಿ ಕಣ್ಣು ಹೋಯಿತು. ಇನ್ನೂ ಉರಿಯುವುದಿಲ್ಲ.” ಎಂದು ತನ್ನಲ್ಲಿಯೇ ಗುಣಗುಟ್ಟುತ್ತಿದ್ದಳು. “ಕಾಲು ತೊಳೆಯುವುದಕ್ಕೆ ಒಂದು ತಪ್ಪಲೆ ನೀರು ಈಚೆಗೆ….” ಎಂದು ದೃಢಮನಸ್ಕನಾಗಿ ಕೇಳಿದೆನು. ಅವಳು ಎದ್ದು ನಿಂತಳು. ಆದರೆ ನಿಂತವಳು ಕೈಯಲ್ಲಿ ತಪ್ಪಲೆಯನ್ನು ಕೊಳ್ಳದೆ, ಬೆಳ್ಳಿ ಬಿಗಿದ ನಸೆಡಬ್ಬಿಯನ್ನು ಕುಪ್ಪಸದಿಂದೀಚೆಗೆ ತೆಗೆದಳು. ನಸೆ ಉಂಟೋ ಇಲ್ಲವೋ ಎಂದು ನೋಡುವಂತೆ ಡಬ್ಬಿಯನ್ನು ತನ್ನ ಕಣ್ಣಿದಿರಿಗೆ (ಆದುದರಿಂದ ನನ್ನ ಕಣ್ಣಿದಿರಿಗೂ) ಹಿಡಿದು ಅಲ್ಲಿಯೇ ತಡೆದಳು. ನಾನೇನೋ ಧೈರ್ಯಗೊಂಡು, ಕಾಲು ತೊಳೆಯುವುದನ್ನು ಮರೆತು – “ಚೆಲೋ ನಸೆಡಬ್ಬಿ! ನಸೆ ಇಲ್ಲವೆ?” ಎಂದು ಕೇಳಿದೆನು. ಅವಳು ಡಬ್ಬಿಯನ್ನು ನನ್ನ ನೀಡಿದ ಕೈಗೆ ಕೊಡುವುದಕ್ಕೆ ಲಜ್ಜಿತಳಾಗಿ ನನ್ನ ಕಣ್ಣ ಮುಂದಿಟ್ಟು, ತಪ್ಪಲೆಯನ್ನು ಹಿಡಿದು, ಗುಡಾಣದಲ್ಲಿ ಮುಳುಗಿಸುತ್ತಿದ್ದಳು. ಆಗ ಏನು ಕಾರಣವೋ ನನಗೆ ಮುಗುಳು ನಗೆ ಬಂತು; ನಾನು ನಗುವುದನ್ನು ಅವಳು ಓರೆ ನೋಟದಿಂದ ನೋಡದೆ ಹೋಗಲಿಲ್ಲ. ತಪ್ಪಲೆಯನ್ನು ನೀರು ತುಂಬಿ ನನ್ನ ಕೈಗೆ ಕೊಡುತ್ತಿದ್ದಾಗ ಅವಳೂ ನಗಾಡುತ್ತಿದ್ದಳು. ಆ ಸಮಯದಲ್ಲಿ ಯಾರೋ ಬರುವ ಸಪ್ಪುಳಾದುದರಿಂದ ನಾನು ಈಚೆಗೆ ಸರಿದೆನು. ಬಂದವಳು ನಮ್ಮಿಬ್ಬರನ್ನು ದೃಷ್ಟಿಸಿ, ಮನೆಯೊಳಗೆ ಸೇರಿದಳು. ನಾನು ದುರದೃಷ್ಟನೆಂದೆಣಿಸಿ ಅಲ್ಲಿಂದ ಕಾಲು ತೆಗೆದೆನು. + +ಈ ವಿಧವಾಗಿ ಎರಡು ಚಿಕುರಗಳಿಗೋಸುಗ ನಾನು ನಿದ್ರಾಹಾರಾದಿಗಳನ್ನು ಬಿಟ್ಟು ಒದ್ದಾಡಿದೆನು. ನಾನು ಪಟ್ಟ ಕಷ್ಟಗಳೆಲ್ಲವನ್ನು ಕೇಳಿದರೆ (ಮದುವೆಯಾಗಿದ್ದರೆ) ನನ್ನ ಹೆಂಡತಿಯು ಜೀವದಿಂದುಳಿಯುತ್ತಿದ್ದಿಲ್ಲ. ಹಗಲೆನ್ನದೆ ಇರುಳೆನ್ನದೆ ಕೇರಿಯಿಂದ ಕೇರಿಗೆ ಓಡುತ್ತಾ, ನಿರ್ಜನ ಪ್ರದೇಶಗಳಲ್ಲಿ ಅಲೆಯುತ್ತಾ, ಅನೇಕ ಗವಿಗಳಲ್ಲಿ ಅಡಗುತ್ತಾ, ಕಷ್ಟಪಟ್ಟರೂ ಹಿಡಿದ ಕಾರ್ಯವನ್ನು ಬಿಡಲಿಲ್ಲ. ಕೂದಲುಗಳು ಸಿಕ್ಕಿದುವು; ಅವುಗಳನ್ನು ಚಿನ್ನದಿಂದ ಬಿಗಿದು ನಗವು ಸಿದ್ಧವಾಯಿತು. ಚಿಕ್ಕತಾಯಿಯ ಆನೆಜಮೆಸರಕ್ಕೂ ಈ ನಗಕ್ಕೂ ಯಾವ ವ್ಯತ್ಯಾಸವೂ ಇದ್ದಂತೆ ನನಗೆ ತೋರಲಿಲ್ಲ. ಇನ್ನು ಮುದಿ ಕಣ್ಣುಗಳಿಗೆ ಕಂಡುಹಿಡಿಯಲಿಕ್ಕೆ ಸಾಧ್ಯವೇ? ಚಿಕ್ಕತಾಯಿಯ ಸರ್ವಸ್ವವೂ ನನ್ನ ಕೈಗೆ ಸಿಕ್ಕಿತು, ಇನ್ನು ಮುಂದೆ ನನ್ನ ಸೌಭಾಗ್ಯಕ್ಕೆ ಪಾರಾವಾರವಿಲ್ಲ; ಇನ್ನು ರಾಜಣ್ಣನವರ ಅಳಿಯನಾಗುವುದರಲ್ಲಿ ನನಗೇನೂ ಸಂಶಯವಿರಲಿಲ್ಲ. ಅಳಿಯನಾದರೆ ಮುಂದೆ ಅವರ ಹಣವು ನನ್ನ ಪಾಲಿಗೇ ಬರುವುದು. (ಅವರಿಗೆ ಒಂದು ಹೆಣ್ಣು ಮಗುವಲ್ಲದೆ ಬೇರೆ ಮಕ್ಕಳಿರಲಿಲ್ಲ). ಈ ವಿಧವಾಗಿ ಅಂತರಿಕ್ಷ ಗೋಪುರಗಳನ್ನು ಮನಸ್ಸಿನಲ್ಲಿಯೇ ಕಟ್ಟುತ್ತ ನಾನು ಮನೆಗೆ ಒಂದು ದಿನ ಸಾಯಂಕಾಲ ಹಿಂತಿರುಗುತ್ತಿದ್ದೆನು. ಎಡಬಲದಲ್ಲಿ ಹೋಗುವವರನ್ನು ನಾನು ಲಕ್ಷಿಸಲಿಲ್ಲ. ನನ್ನ ಹಿಂದೆ ಯಾರೋ ಓಡಿಬರುವ ಸಪ್ಪುಳವನ್ನು ಕೇಳಿದೆನು. ಮನೆಯನ್ನು ಮುಟ್ಟಲಿಕ್ಕೆ ಒಂದೆರಡು ಹೆಜ್ಜೆ ದೂರವಿತ್ತು. ಸಪ್ಪುಳು ನನ್ನ ಬೆನ್ನು ಹಿಂದೆಯೇ ಕೇಳಿಸಿತು. ಒಡನೆ ನನ್ನ ಹೆಗಲಿನ ಮೇಲೆ ಯಾರೋ ಕೈಯಿಟ್ಟರು. ಕತ್ತಲು ಬಲವಾದುದರಿಂದ ಯಾರೆಂದು ಚೆನ್ನಾಗಿ ತಿಳಿಯಲಿಲ್ಲ. + +ವ್ಯಕ್ತಿ : “ರಾಯರೇ! ನಿಮ್ಮನ್ನು ಕರೆತರಲಿಕ್ಕೆ ನನ್ನನ್ನು ಕಳುಹಿಸಿರುವವರು; ಒಂದು ಸಲ ಪೋಲೀಸ್ ಸ್ಟೇಶನ್ನಿಗೆ ದಯಮಾಡಬೇಕೆಂದು ಅಪ್ಪಣೆಯಾಗಿದೆ.” + +“ಇದೇನು ಯಾರು ಅಪ್ಪಣೆ ಕೊಟ್ಟಿರುವರು?” ಎಂದು ನಾನು ತುಟಿಯಲ್ಲಾಡಿಸಿದೆನು. + +ಒಡನೆ ಜನರೆಲ್ಲರು ಗುಂಪುಗುಂಪಾಗಿ ಬರಲಾರಂಭಿಸಿದರು; ಒಬ್ಬಿಬ್ಬರು “ಏತಕ್ಕೆ ಕೈದು ಮಾಡಿದರು? ಏತಕ್ಕೆ ಕೈದು ಮಾಡಿದರು?” ಎಂದು ಪರಸ್ಪರ ವಿಚಾರಿಸುತ್ತಿದ್ದರು. ಆ ಮಾತುಗಳನ್ನು ಕೇಳುತ್ತಲೇ ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಾಯಿತು. ಕಣ್ಣುಗಳಲ್ಲಿ ನಕ್ಷತ್ರಗಳು ಮಿಣುಕಿದವು; ವಸ್ತುಗಳೆಲ್ಲವೂ ನನ್ನ ಸುತ್ತಲೂ ತಿರುಗುವಂತೆ ಕಂಡುಬಂದವು; ಜನರ ಮಾತುಗಳು ದೂರದಿಂದ ಕೇಳಿಸುವಂತಾದುವು. + +ವ್ಯಕ್ತಿ : “ಇವರ ಚಿಕ್ಕತಾಯಿಯ ಕೆಲವು ನಗಗಳು ಕಳವಾಗಿದ್ದುವು. ಅದಕ್ಕೋಸುಗ ಇವರನ್ನು ಸ್ಟೇಶನ್ನಿಗೆ ತರಬೇಕೆಂದು ಖಾವಂದರು ಅಪ್ಪಣೆ ಕೊಟ್ಟಿದ್ದರು. ಮೂರು ದಿವಸಗಳಿಂದ ಇವರನ್ನು ಹುಡುಕಿದರೂ ಇವರು ಸಿಕ್ಕಲಿಲ್ಲ. ಅದರಲ್ಲಿ ಆಗುವುದೇನೂ ಇಲ್ಲ.” + +“ಅದು ಹೇ -ಹೇಗೆ ನಾ- ನಾನು ಕಳುವು ಮಾಡಿದೆನೇ?” + +ವ್ಯಕ್ತಿ : “ನಿಮ್ಮ ಚಿಕ್ಕತಾಯಿ ಎಲ್ಲವನ್ನೂ ಬಲ್ಲಳು. ಅದನ್ನೆಲ್ಲ ಮತ್ತೆ ನೋಡುವ! ಈಗ ಒಂದು ಸಲ ಸ್ಟೇಶನ್ನಿಗೆ ನಡೆಯುವ!” + +ನಾನು ಚಿಕ್ಕತಾಯಿಯನ್ನು ನೋಡದೆ ಬರಲಾರೆನೆಂದೆನು. ಕಡೆಗೆ ಪೋಲೀಸನವನು ಒಪ್ಪಿ, ನನ್ನ ಕೈ ಹಿಡಿದು ನನ್ನೊಡನೆ ಮನೆಗೆ ಬಂದನು.ಮಾರ್ಗದ ಮೇಲೆ ಬರುತ್ತಿರುವಾಗ ನನಗೆ ಎಲ್ಲ ಸಂಗತಿಗಳು ಮನಸ್ಸಿನಲ್ಲಿ ಎದ್ದು ನಿಂತು ಸ್ಪಷ್ಟವಾಗಿ ತೋರಿದುವು. ಪೋಲೀಸನವರು ಮೊದಲಿನಿಂದ ನನ್ನನ್ನೇ ಗುರಿ ನೋಡುತ್ತಿದ್ದರೆಂತಲೂ, ನಾನು ಮೈಮರೆವಂತೆ ಅವರು ನಂಬ್ರವನ್ನು ಸಡಿಲು ಬಿಟ್ಟರೆಂತಲೂ, ನನ್ನ ಕಳ್ಳ ಹೆಜ್ಜೆಗಳನ್ನು ಅವರು ಆಗಾಗ ಹೊಂಚಿ ನೋಡುತ್ತಿದ್ದರೆಂತಲೂ, ನನ್ನ ಮನಸ್ಸಿಗೆ ಖಚಿತವಾಯಿತು. ಅದಲ್ಲದೆ ನಾನು ಅನೇಕ ಅಕ್ಕಸಾಲಿಗರ ಅಂಗಡಿಗಳಲ್ಲಿ ಕುಳಿತಿರುವುದನ್ನೂ, ವಿಜನಸ್ಥಳಗಳಲ್ಲಿ ಒಂಟಿಗನಾಗಿ ಅಲೆಯುವುದನ್ನೂ, ಕ್ಷುದ್ರ ಸ್ತ್ರೀಯ ಗವಿಯಲ್ಲಿ ಆಗಾಗ ನುಸುಳುವುದನ್ನೂ ಇವರು ನೋಡಿದ್ದರೂ ಇರಬಹುದು. ಈ ವಿಷಯಗಳು ನನ್ನ ಮನಸ್ಸಿಗೆ ಪರಂಪರೆಯಾಗಿ ಸಾಲಿಡುತ್ತಲೇ ನನ್ನ ಕಳವಳವು ಭಯಂಕರವಾಯಿತು. ನನ್ನ ಚಿತೆಯನ್ನು ನಾನೇ ಸಿದ್ಧಪಡಿಸಿದಂತಾಯಿತು; ನಾನು ಅಗಿದ ಗುಣಿಯಲ್ಲಿ ನಾನೇ ಬೀಳುವುದಾಯಿತು. ಒಂದು ಕಡೆಯಲ್ಲಿ ಬಂಧನ ಶಿಕ್ಷೆ, ಇನ್ನೊಂದು ಕಡೆಯಲ್ಲಿ ದುಃಖಕರವಾದ ಕೃತಘ್ನತೆಯ ರೋಷ. ಇದನ್ನು ತಪ್ಪಿಸುವ ಹಾದಿ ಯಾವುದು? ಸತ್ಯವನ್ನು ಅಡಗಿಸಿದರೆ ಶಿಕ್ಷೆಯು ಎಷ್ಟು ವರ್ಷ ಎಂಬ ಪ್ರಶ್ನೆಯಲ್ಲದೆ ಮತ್ತೊಂದಿಲ್ಲ. ಸತ್ಯವನ್ನೊಪ್ಪಿದರೆ ಈ ಜನ್ಮದಲ್ಲಿ ಚಿಕ್ಕತಾಯಿಯನ್ನು ನೋಡುವುದು ಮುಗಿಯಿತು. ಆದುದರಿಂದ ಅಸತ್ಯದಿಂದ ಅಸತ್ಯವನ್ನು ದೃಢಪಡಿಸಬೇಕೆಂದು ಮನಸ್ಸಿನಲ್ಲಿ ನಿರ್ಧರಿಸಿದೆನು. + +ಪೋಲೀಸನವರು ನನ್ನನ್ನು ಹಿಡಿದಿರುವರು ಎಂಬುದನ್ನು ಚಿಕ್ಕತಾಯಿಯು ಕೆಲವು ನಿಮಿಷಗಳ ಹಿಂದೆ ತಿಳಿದಿದ್ದಳು. ನಾವಿಬ್ಬರು ಒಳಗೆ ಬರುತ್ತಲೇ ಅವಳು ನನಗೋಸುಗ ಅಳುವುದನ್ನೂ, ಪೋಲೀಸನವರನ್ನು ಮಧುರ ಭಾಷೆಯಿಂದ ಶಪಿಸುವುದನ್ನೂ ನಾನು ಕೇಳಿದೆನು. ಒಡನೆ ಅವಳಿದ್ದಲ್ಲಿಗೆ ನಡೆದು, ಪೋಲೀಸಿನವನು ಬಂದ ಸಂಗತಿಯನ್ನು ತಿಳಿಸಿದೆನು; ವಿಳಂಬ ಮಾಡದೆ ನಗವನ್ನು ತಂದಿರುವೆನೆಂದು ಹೇಳಿ, ಆನೆಜಮೆ ಸರವನ್ನು ಅವಳ ಕೈಗೆ ಕೊಟ್ಟೆನು. ಅವಳು ಅದನ್ನು ಎಷ್ಟೋ ನೋಡಿದಳು! ನನ್ನನ್ನು ಎಷ್ಟೋ ಹೊಗಳಿದಳು! ಪೋಲೀಸನವರನ್ನು ಎಷ್ಟೋ ಬೈದಳು! ಪೋಲೀಸನವನು ನಗವನ್ನು ನೋಡಿ “ಅಮ್ಮಾ! ಆ ನಗವು ನಿಮ್ಮದೆಂದು ನೀವು ಹೇಳುವಿರೇ?” ಎಂದನು. “ನನ್ನ ನಗವನ್ನು ನಾನು ಕಂಡುಹಿಡಿಯಲಾರೆನೇ? ಇದು ಸಾವಿರ ನಗಗಳಲ್ಲಿದ್ದರೂ ನಾನು ಇದನ್ನೇ ಗುರುತು ಹಿಡಿದೇನು” ಎಂದಳು. “ಇದು ನಿಮ್ಮದೆಂದು ನೀವು ಒಪ್ಪುತ್ತೀರೇ?” ಎಂದು ಪುನಃ ಕೇಳಿದನು. ಈ ಮಾತುಗಳನ್ನು ಕೇಳಿ ನನ್ನ ಮನಸ್ಸಿಗೆ ಇನ್ನೂ ಸಂಶಯವೂ ಭಯವೂ ಉಂಟಾಯಿತು; ಏಕೆಂದರೆ ಈ ಮಾತುಗಳನ್ನೇ ನನ್ನ ಚಿಕ್ಕ ತಾಯಿ ಮತ್ತೂ ಒಪ್ಪಿದರೆ ನಾನೇ ಕಳ್ಳನೆಂದು ಸಾಧಿಸುವುದರಲ್ಲಿ ಪೋಲೀಸನವರಿಗೆ ಕಷ್ಟವೇನೂ ಇಲ್ಲ. ಆ ಮಾತುಗಳ ಬಲವನ್ನು ತಪ್ಪಿಸಲೋಸುಗ ನಾನು ಒಂದು ನುಡಿಯನ್ನಾಡಲಿಕ್ಕೆ ಬಾಯೆತ್ತಿದೆನು. ಆದರೆ ಅಷ್ಟರೊಳಗೆ ಯಾರೋ ಒಳಗೆ ಬಂದರು. ಬಂದವನು ಒಂದು ಕಾಗದವನ್ನು ಪೋಲೀಸನವನ ಕೈಗೆ ಕೊಟ್ಟನು. ಕಾಗದವು ಚಿಕ್ಕತಾಯಿಯ ವಿಳಾಸಕ್ಕೆ ಬರೆದಿತ್ತು. ಕೂಡಲೇ ಅವಚಿಯು ಅದನ್ನೋದುವುದಕ್ಕೆ ಹೇಳಿದಳು. ಅದರಲ್ಲಿ ಬರೆದುದನ್ನು ಪೋಲೀಸನವನು ಹೀಗೆ ಓದಿದನು. + +“ನೀವು ಎರಡು ತಿಂಗಳ ಹಿಂದೆ ಇಲ್ಲಿ ಬಂದಾಗ, ಮಂದಿರದಲ್ಲಿ ನಡೆಯುವ ಪುರಾಣ ಶ್ರವಣಕಾಲದಲ್ಲಿ ನಿಮ್ಮ ನಗಗಳ ಗಂಟನ್ನು ಇಲ್ಲಿ ಮರೆತುಬಿಟ್ಟು ಹೋದಿರಿ. ನಿಮ್ಮ ಆನೆಜಮೆಸರವು ನಿಮ್ಮ ಜಪಕ್ಕೆ ನಿತ್ಯವೂ ಅವಶ್ಯವೆಂದು ಸ್ವತಃ ಗೊತ್ತಿದುದರಿಂದ, ಈ ಕಾಗದ ತರುವವನ ಕೈಯಲ್ಲಿ ಅದನ್ನು ಕಳಿಸಿರುತ್ತೇನೆ. ತಮ್ಮ ಮಿಕ್ಕ ನಗಗಳು ದೇವ ಪ್ರತಿಮೆಯ ಅಲಂಕಾರಕ್ಕಾಗಿ ಇಲ್ಲಿ ಇಟ್ಟಿರುತ್ತೇವೆ. ಕೃಷ್ಣಾಷ್ಟಮಿಯ ಉತ್ಸವವೂ ಭಜನೆಯೂ ಈ ವರ್ಷ ವಿಶೇಷ ತರದ್ದಾಗಿರುವುದರಿಂದ ತಾವು ಬರಬೇಕಾಗಿ ಪೌರಾಣಿಕರು ಅಪೇಕ್ಷಿಸುತ್ತಾರೆ.” + +ಈ ಕಾಗದವನ್ನು ಓದುತ್ತಲೇ ನನ್ನ ಮೈಯೆಲ್ಲಾ ತಣ್ಣಗಾಯಿತು; ಕಣ್ಣುಗಳಲ್ಲಿ ದೊಣ್ಣೆಯಿಂದ ಯಾರೋ ಬಡಿದಂತಾಯಿತು. ನಾನು ಏನು ಹೇಳಿದೆನೋ ಏನು ಮಾಡಿದೆನೋ ಈಗ ಸ್ಮರಿಸಲಾರೆನು. + +ಆಮೇಲೆ ನಡೆದ ವಿಷಯವನ್ನು ಇಲ್ಲಿ ಹೇಳುವುದು ಅವಶ್ಯವಿಲ್ಲ. ನನಗೆ ಮನೆಗಿಂತಲೂ ಸೆರೆಯೆ ಲೇಸೆಂದು ಕಂಡುಬಂತು. ಇನ್ನು ಮಾಡುವುದೇನು? ಆದರೆ ಸಂಪೂರ್ಣ ವಿಷಯವನ್ನು ಹೇಳುವುದು ಒಳ್ಳೆಯದು. ಮರುದಿನ ಹೊಸಪೇಟೆ ರಾಜಣ್ಣನವರ ಪತ್ನಿಯು ಬಂದು, ನನ್ನ ಚಿಕ್ಕತಾಯಿಯೊಡನೆ ಈ ರೀತಿಯಲ್ಲಿ ಮಾತಾಡುವುದನ್ನು ನಾನು ಮರೆಯಲ್ಲಿದ್ದು ಕೇಳಿದೆನು – + +“ನಿಮ್ಮ ಹುಡುಗನ ಜಾತಕವು ನಮ್ಮ ಸಕಲಾವತಿಯ ಜಾತಕಕ್ಕೆ ಕೂಡಿಬರುತ್ತಿತ್ತು; ಸಂಬಂಧವು ಒಳ್ಳೆಯದಾಗಿತ್ತು. ಆದರೆ ನಿಮ್ಮ ಹುಡುಗನು ಕೆಲವು ದಿನಗಳಿಂದ ಈಚೆಗೆ ಕೇರಿಕೇರಿಗಳಲ್ಲಿ ತಿರುಗುವುದನ್ನೂ, ಒಂದೆರಡು ಸಲ – ಮನೆಗಳನ್ನು ಸೇರಿದುದನ್ನೂ ನಮ್ಮ ಮನೆಯವರು ನೋಡಿದರಂತೆ. ನಾನು ಹುಡುಗನೆಂದು ಸುಮ್ಮನಿದ್ದೆನು. ಆತನು ಹೆಚ್ಚು ಸಲ ನಮ್ಮ ನೆರಮನೆಯ ಸೋಮಿಯೊಡನೆ ಒಬ್ಬನೇ ಮಾತಾಡುವುದನ್ನೂ ರೂಪಾಯಿ ಕೈಯಲ್ಲಿ ಹಿಡಿದುದನ್ನೂ ನಾನು ಗೋವಿಂದರಾಯರ ಮನೆಗೆ ಬರುತ್ತ ಹೋಗುತ್ತಿದ್ದಾಗ ನೋಡಿದ್ದೇನೆ. ಈ ಕಾರಣದಿಂದ ನಮ್ಮ ಮನೆಯವರಿಗೆ ಸಂಬಂಧದ ಪ್ರಸ್ತಾಪವು ಈಗ ಕಿವಿಗೇ ಹೋಗುವುದಿಲ್ಲ.” + + + +ಇದನ್ನು ಕೇಳುತ್ತಲೇ ನನ್ನ ಜೀವದಾಸೆ ಎಲ್ಲವೂ ಮುಗಿಯಿತು. ಏನು ಮಾಡುವುದು? ಈಗ ನಾನೇನು ಮಾಡಲಿ? ಸರ್ವಜನ ಪರಿಪೂರಿತವಾದ ಈ ಲೋಕಸಾಗರದಲ್ಲಿ ನಾನು ನನ್ನ ಜೀವನ ನೌಕವನ್ನು ಮುಂದೆ ಹೇಗೆ ನಡೆಯಿಸಲಿ? ನನ್ನ ಕಥೆಯನ್ನು ಓದುವ ಅಭಿಜ್ಞ ಪಾಠಕರಲ್ಲಿ ಯಾರೊಬ್ಬನಾದರೂ ಹೆಡ್ಡನಾದ ನಾನು ಮುಂದೆ ಏನು ಮಾಡಬೇಕೆಂದು ಹೇಳಲಾರ. + +ಟಿಪ್ಪಣಿ : ಕನ್ನಡದ ಮೊದಲ ಸಣ್ಣ ಕತೆಗಳನ್ನು ಬರೆದವರು ಪಂಜೆ ಮಂಗೇಶರಾಯರು. ಅವರು 1900 ನೆಯ ಇಸವಿ ಜುಲೈ ತಿಂಗಳ ‘ಸುವಾಸಿನಿ’ ಮಾಸ ಪತ್ರಿಕೆಯಲ್ಲಿ ಪ್ರಕಟಿಸಿದ ‘ನನ್ನ ಚಿಕ್ಕತಾಯಿ’ ಎಂಬ ಕತೆಯೇ ಕನ್ನಡದ ಮೊದಲನೆಯ ಸಣ್ಣ ಕತೆ ಎಂದು ಮಾನ್ಯವಾಗಿದೆ. ಆ ಕತೆ ಇದು. ಇದರ ಜತೆಗೆ ಪಂಜೆಯವರು ಇದೇ ಮಾಲಿಕೆಯಲ್ಲೆಂಬಂತೆ ಮತ್ತೆ ಮೂರು ಕತೆಗಳನ್ನು ಬರೆದರು. ಅವುಗಳೆಂದರೆ ‘ನನ್ನ ಹೆಂಡತಿ’, ‘ನನ್ನ ಚಿಕ್ಕತಂದೆ’ ಮತ್ತು ‘ನನ್ನ ಚಿಕ್ಕತಂದೆಯವರ ಉಯಿಲ್’ – ಇವುಗಳು. ಇವುಗಳು ಒಂದರ ಮುಂದುವರಿಕೆಯಂತೆ ಇನ್ನೊಂದಿವೆ. ಇವುಗಳನ್ನು ಒಟ್ಟಾಗಿ ಒಂದೇ ಕಥಾನಕದ ಭಾಗಗಳಂತೆ ನೋಡುವುದೇ ಸೂಕ್ತ. ಆದರೆ ಪಂಜೆಯವರು ಇವುಗಳನ್ನು ಪ್ರತ್ಯೇಕ ಕತೆಗಳಂತೆ ಬರೆದಿರುವ ಕಾರಣ ಇಲ್ಲಿ ಪ್ರತ್ಯೇಕ ಕತೆಗಳಂತೆ ಮುದ್ರಿಸಲಾಗಿದೆ. ಆದರೆ ಇವುಗಳನ್ನು ‘ಉಯಿಲು’ ಎಂಬ ಶೀರ್ಷಿಕೆಯಡಿ ಒಂದೇ ನೀಳ್ಗತೆಯ ನಾಲ್ಕು ಭಾಗಗಳಂತೆ ಓದಬಹುದು. ಇವು ಮಂಗಳೂರಿನ ‘ಸುವಾಸಿನಿ’ ಮಾಸಪತ್ರಿಕೆಯಲ್ಲಿ 1900 ರಿಂದ 1903 ರ ನಡುವೆ ಪ್ರಕಟವಾಗಿದ್ದವು. ಉಳಿದ ಮೂರು ಕತೆಗಳನ್ನು ಮುಂದೆ ಅನುಕ್ರಮವಾಗಿ ಕೊಡಲಾಗಿದೆ. + +ಈ ಕಥಾಗುಚ್ಛದಲ್ಲಿ ಪಂಜೆಯವರು ಇಪ್ಪತ್ತನೆಯ ಶತಮಾನದ ಹೊಸ್ತಿಲಲ್ಲಿ ವಸಾಹತು ಆಡಳಿತದ ಬಗ್ಗೆ ಸಮಕಾಲೀನರಲ್ಲಿ ಇದ್ದ ಅಭಿಪ್ರಾಯವನ್ನು ಸಾಂದರ್ಭಿಕವಾಗಿ ಬಯಲುಪಡಿಸಿದ್ದಾರೆ. ಅವರ ಕತೆಗಳಲ್ಲಿ ಅವರ ಚಿಕ್ಕತಾಯಿಯ ಒಡವೆಗಳು ಮತ್ತು ಚಿಕ್ಕತಂದೆಯವರ ಆಸ್ತಿಯನ್ನು ಪಡೆಯಲು ನಿರೂಪಕ ಪ್ರಯತ್ನ ಪಡುವುದನ್ನು ಲಘು ಹಾಸ್ಯದಿಂದ ವರ್ಣಿಸಲಾಗಿದೆ. ನಿರೂಪಕ ತನ್ನ ಪ್ರಯತ್ನದಲ್ಲಿ ಸಂಶಯಾಸ್ಪದನಾಗಿ ವರ್ತಿಸಿದಾಗಲೆಲ್ಲ ಪೋಲೀಸರು ಅವನನ್ನು ಹಿಡಿದುಹಾಕುತ್ತಾರೆ. ಪೋಲೀಸ್ ವ್ಯವಸ್ಥೆ ಜನರನ್ನು ಹೇಗೆ ಕಾಯುತ್ತಿತ್ತು ಎನ್ನುವುದನ್ನು ಪಂಜೆಯವರ ಕತೆಗಳು ಸ್ಪಷ್ಟಪಡಿಸುತ್ತವೆ. ಜತೆಗೆ ನ್ಯಾಯ ವ್ಯವಸ್ಥೆಯು ಆಸ್ತಿ ಹಕ್ಕಿನ ಉತ್ತರಾಧಿಕಾರ ಪ್ರಶ್ನೆಯನ್ನು ಪರಿಹರಿಸಲು ಬಳಕೆಯಾಗುತ್ತಿದ್ದುದನ್ನು ಅವರ ಕತೆಗಳಲ್ಲಿ ಕಾಣಬಹುದು. ಇಲ್ಲಿ ದುರ್ಬಲರಾದ ಸಾಮಾನ್ಯ ಹೆಂಗಸೊಬ್ಬಳ ಒಡವೆ ಮತ್ತು ಆಸ್ತಿಯೂ ಕೂಡಾ ಸರಕಾರದ ಹತೋಟಿಯಿಂದಾಗಿ ಸುಭದ್ರವಾಗಿತ್ತೆನ್ನುವುದನ್ನು ಈ ಕತೆಗಳು ಚಿತ್ರಿಸಿವೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ. + +ಇನ್ನೊಂದು ಬಹಳ ಸೂಕ್ಷ್ಮವಾದ ಅಂಶ ಇಲ್ಲಿದೆ. ದತ್ತುಪುತ್ರರಿಗೆ ಆಸ್ತಿ ಹಕ್ಕಿಲ್ಲ ಎನ್ನುವ ಬ್ರಿಟಿಷ್ ಸರಕಾರದ ಕಾನೂನನ್ನು ಇದು ವಿಡಂಬಿಸುತ್ತದೆನ್ನುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ರಾಜ ಮನೆತನಗಳ ಉತ್ತರಾಧಿಕಾರದಲ್ಲಿ ಬ್ರಿಟಿಷರು ಅನ್ಯಾಯ ಮಾಡಿದುದು ನಮಗೆಲ್ಲ ಇತಿಹಾಸದ ಪಾಠಗಳ ಮೂಲಕ ಗೊತ್ತಿದೆ. ಆದರೆ ಸಾಮಾನ್ಯರ ಬದುಕಿನಲ್ಲಿ ಕೂಡ ಬ್ರಿಟಿಷ್ ಸರಕಾರ ಹಸ್ತಕ್ಷೇಪ ಮಾಡುತ್ತಿತ್ತು. ಉತ್ತರಾಧಿಕಾರ ದಾಖಲೆಗಳು ಸ್ಪಷ್ಟವಾಗಿಲ್ಲದೆ ಇದ್ದಾಗ ಆ ಆಸ್ತಿಯನ್ನು ಸರಕಾರ ವಶಪಡಿಸಿಕೊಳ್ಳುತ್ತಿದ್ದುದನ್ನೂ ಪಂಜೆಯವರು ದಾಖಲಿಸಿದ್ದಾರೆ. ಆದುದರಿಂದ ಅವರದು ಏಕಮುಖವಾದ ವಸಾಹತುಶಾಹಿಯ ಆರಾಧನೆಯ ಮನೋಭಾವವಲ್ಲ, ಸತ್ಯದ ದಾಖಲೀಕರಣವೇ ಅವರ ಬರವಣಿಗೆಯಲ್ಲಿ ನಡೆದಿದೆ ಎನ್ನಬಹುದು. + + + +ಕಾಮತರ ಕತೆಯಂತೆ – ಅಥವಾ ಅದಕ್ಕಿಂತಲೂ ಸೂಕ್ಷ್ಮವಾಗಿ ಪಂಜೆಯವರು ನಿರೂಪಕನ ಧೂರ್ತತೆಯನ್ನು ಧ್ವನಿಸುತ್ತಾರೆ. ಪತ್ತೇದಾರನ ನಡೆಯಂತೆ ಪೋಲೀಸ್ ಇಲಾಖೆ ನಿರೂಪಕನ ಹಂಚಿಕೆಗಳನ್ನು ವಿಫಲಗೊಳಿಸುತ್ತದೆ. ಪಂಜೆ ಮಂಗೇಶರಾಯರ ಕತೆಗಳ ಧ್ವನಿ ಶಕ್ತಿ ಅನನ್ಯವಾದುದು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_412.txt b/Kenda Sampige/article_412.txt new file mode 100644 index 0000000000000000000000000000000000000000..239132ec45596a4ab3280afeb2bd6f3b08584e28 --- /dev/null +++ b/Kenda Sampige/article_412.txt @@ -0,0 +1,51 @@ + + + + +ಪಮ್ಮಿ ಬಲು ಚೂಟಿ ಹುಡುಗಿ. ತನ್ನ ಕೆಲಸವನ್ನೆಲ್ಲಾ ತಾನೇ ಮಾಡಿಕೊಳ್ಳುತ್ತಿದ್ದಳು. ವಯಸ್ಸು ಏಳೇ ವರ್ಷ, ಆದರೂ ಅಡುಗೆ ಮನೆಯಲ್ಲಿ ಸಣ್ಣಪುಟ್ಟ ಕೆಲಸ ಮಾಡಿ ಅಮ್ಮನಿಗೆ ಸಹಾಯ ಮಾಡೋದು ಅಂದರೆ ಅವಳಿಗೆ ತುಂಬಾ ಇಷ್ಟ. ತರಗತಿಯಲ್ಲಿ ಪಮ್ಮಿ ಚೂಟಿಯಾಗಿದ್ದಳು, ಓದಿನಲ್ಲೂ ಮುಂದಿದ್ದಳು. ತಾನು ಕಲಿತ ಪಾಠವನ್ನು ಬಾಯಿಪಾಠ ಮಾಡಿಕೊಂಡು ಅಮ್ಮನಿಗೆ ಒಪ್ಪಿಸಿಬಿಡುತ್ತಿದ್ದಳು. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದಳು. ಹಿರಿಯರಿಗೆ ಗೌರವ ತೋರಿಸುತ್ತಿದ್ದಳು. ಕಿರಿಯರಿಗೆ ಪ್ರೀತಿ ನೀಡುತ್ತಿದ್ದಳು. ಎಲ್ಲರೂ ಮೆಚ್ಚಿಕೊಳ್ಳುವಂಥ ಹುಡುಗಿಯಾಗಿದ್ದಳು ಪಮ್ಮಿ. + +ಒಂದು ದಿನ ಶಾಲೆಯಿಂದ ಮನೆಗೆ ಬರುವಾಗ ರಸ್ತೆ ದಾಟಲು ಒಬ್ಬ ಕುರುಡು ತಾತ ಕೈಯಲ್ಲಿ ಕೋಲು ಹಿಡಿದುಕೊಂಡು ನಿಂತಿದ್ದ. ದೂರದಿಂದ ತಾತನನ್ನು ನೋಡುತ್ತಲೇ ಬಂದಳು ಪಮ್ಮಿ. ಯಾರೊಬ್ಬರೂ ಕುರುಡು ತಾತನನ್ನು ರಸ್ತೆ ದಾಟಿಸಲೇ ಇಲ್ಲ. ತಾತನ ಹತ್ತಿರಕ್ಕೆ ಬಂದ ಪಮ್ಮಿ, ತಾತನ ಕೈ ಹಿಡಿದುಕೊಂಡು ‘ರಸ್ತೆ ದಾಟಿಸಬೇಕಾ ತಾತ?’ ಎಂದು ಕೇಳಿದಳು. ಮಗುವಿನ ಮುದ್ದಾದ ಮಾತನ್ನು ಕೇಳಿ ಕುರುಡು ತಾತ ‘ಹೌದು ಮಗು’ ಅಂದ. ರಸ್ತೆಯನ್ನು ದಾಟಿದ ಮೇಲೆ ಕುರುಡು ತಾತ ಕೇಳಿದ, ‘ಮಗು ನಾನೊಬ್ಬ ಭಿಕ್ಷುಕ. ನನಗೆ ಕಣ್ಣು ಕಾಣಿಸುವುದಿಲ್ಲ. ಎಲ್ಲರೂ ನನ್ನನ್ನು ನೋಡಿ ಅಸಹ್ಯ ಪಟ್ಟುಕೊಂಡರೆ, ನೀನು ನನ್ನ ಕೈ ಹಿಡಿದು ರಸ್ತೆ ದಾಟಿಸಿದೆಯಲ್ಲಾ, ನಿನ್ನನ್ನು ಪಡೆದ ತಾಯಿ ತಂದೆ, ನಿನಗೆ ಪಾಠ ಹೇಳಿದ ಗುರುಗಳು ಎಲ್ಲರೂ ತುಂಬಾ ಪುಣ್ಯವಂತರು’ ಎಂದು ತಾತ ಹೇಳಿದ. ಅದಕ್ಕೆ ಪಮ್ಮಿ ‘ಇದು ಪುಣ್ಯವಲ್ಲ ತಾತ, ನಮ್ಮ ಕರ್ತವ್ಯ’ ಅಂದಳು. + +ಮಗುವಿನ ಮಾತನ್ನು ಕೇಳಿದ ಕುರುಡು ತಾತ ಆಶ್ಚರ್ಯದಿಂದ ‘ನಿನ್ನ ಹೆಸರೇನು ಮಗು’? ಎಂದು ಮತ್ತೆ ಕೇಳಿದ. ‘ನನ್ನ ಹೆಸರು ಪಲ್ಲವಿ, ಎಲ್ಲರೂ ನನ್ನನ್ನು ಪಮ್ಮಿ ಪಮ್ಮಿ ಅಂತ ಕರಿತಾರೆ. ಸರಿ ತಾತ, ನೀವು ಎಲ್ಲಿಗೆ ಹೋಗಬೇಕು ಹೇಳಿ ನಾನು ರಸ್ತೆ ತೋರಿಸುತ್ತೇನೆ’ ಎಂದಳು ಪಮ್ಮಿ. ಅದಕ್ಕೆ ಉತ್ತರಿಸಿದ ತಾತ ‘ನನಗೆ ಎಲ್ಲಿ ಹೋಗಬೇಕು ಅಂತ ಗೊತ್ತೇ ಇಲ್ಲ ಮಗು. ನಾನು ನಡೆದದ್ದೇ ರಸ್ತೆ, ಹೋದದ್ದೆ ದಾರಿ’ ಅಂದ. ಆಗ ತಾತನ ಬಿಳಿ ಕಣ್ಣು ಗುಡ್ಡೆಯಲ್ಲಿ ನೀರು ಜಿನುಗುತ್ತಿದ್ದವು. + +ಕುರುಡು ತಾತ ಅಳುವುದನ್ನು ನೋಡಿ ಪಮ್ಮಿ ‘ಅಳಬೇಡ ತಾತ, ಯಾಕೆ ಅಳುತ್ತೀಯಾ?’ ಅಂತ ಕೇಳಿದಳು. ‘ಅಳದೇ ಬೇರೆ ದಾರಿ ಇಲ್ಲ ಕಂದ, ನನಗೆ ಕಾಲು ನೋವು, ಕಣ್ಣು ಕಾಣುವುದಿಲ್ಲ. ಹಸಿವು ಬೇರೆ ಅದಕ್ಕೆ ಅಳು ಬಂತು ಅಷ್ಟೇ’ ಅಂದ ತಾತ. + +‘ನಮ್ಮ ಅಮ್ಮ ಯಾವಾಗಲೂ ಹೇಳುತ್ತಾಳೆ, ಯಾವುದೇ ಸಮಯದಲ್ಲೂ ಎಷ್ಟೇ ಕಷ್ಟ ಬಂದರು ಅಳಬಾರದು, ನೋವನ್ನು ತಡ್ಕೋಬೇಕು. ಹುಷಾರಿಲ್ಲದಾಗ ಅಳದೇ ಔಷಧ ತಗೋಬೇಕು ಅಂತ. ಅದಕ್ಕೆ ತಾತ ನೀನು ಅಳಬೇಡ ಆಯ್ತಾ?’ + +ಪಮ್ಮಿಯ ಮಾತನ್ನು ಕೇಳಿದ ತಾತ, ‘ಈ ಕುರುಡನ ಮೇಲೆ ಎಷ್ಟೊಂದು ಪ್ರೀತಿ ತೋರಿಸುತ್ತಿದ್ದೀಯ ಮಗು’ ಎಂದನು. ‘ನನಗೆ ನನ್ನಮ್ಮ ಪ್ರೀತಿ ತೋರಿಸುತ್ತಾಳೆ, ನನ್ನ ಗುರುಗಳು ಪ್ರೀತಿ ತೋರಿಸುತ್ತಾರೆ, ನನ್ನ ಸ್ನೇಹಿತರು ಪ್ರೀತಿ ತೋರಿಸುತ್ತಾರೆ, ಹಾಗಾಗಿ ನಾನು ನಿನಗೆ ಪ್ರೀತಿ ತೋರಿಸುತ್ತಿದ್ದೀನಿ. ಪ್ರೀತಿನ ಕೊಟ್ರೆ ಮತ್ತೆ ಪ್ರೀತಿನೇ ವಾಪಸ್ಸು ಬರುತ್ತೆ ಅಂತ, ಪ್ರೀತಿಯಿಂದ ಏನು ಬೇಕಾದರೂ ಗೆಲ್ಲಬಹುದು ಅಂತಾನೂ ಅಮ್ಮ ಯಾವಾಗಲೂ ಮತ್ತೆ ಮತ್ತೆ ಹೇಳ್ತಾನೆ ಇರ್ತಾಳೆ ತಾತ’ ಅಂದಳು ಪಮ್ಮಿ. + +ಪಮ್ಮಿಯ ಮಾತನ್ನು ಕೇಳಿದ ಕುರುಡು ತಾತ ಒಂದು ಕ್ಷಣ ಬೆರಗಾಗಿ ಇಷ್ಟು ಒಳ್ಳೆಯ ಮಗುವಿನ ಮುಖ ನೋಡಲಾಗುತ್ತಿಲ್ಲವಲ್ಲ ಎಂದುಕೊಂಡ. ತಾತ ಸುಮ್ಮನ್ನಿದ್ದುದ್ದನ್ನು ನೋಡಿ ‘ಏನಾಯಿತು ತಾತ? ನಿಂಗೆ ನೋವಾಗುತ್ತಿದೆಯಾ? ನೀರು ಬೇಕಾ ನಿನಗೆ? ನಿನ್ನ ಚೀಲದಲ್ಲಿ ಏನಾದರೂ ತೆಗೆದುಕೊಡಬೇಕಾ? ಅಥವಾ ಏನಾದರೂ ತಿನ್ನಬೇಕಾ?’ ಅಂತ ಕಾಳಜಿಯಿಂದ ಪಮ್ಮಿ ಕೇಳಿದಳು. ಪಮ್ಮಿಯ ಮಾತನ್ನು ಗಮನಿಸಿದ ತಾತ ‘ಒಬ್ಬ ಕುರುಡನನ್ನು ನೋಡಿದರೆ ಎಲ್ಲರೂ ಕುರುಡ ಕುರುಡ ಅಂತ ಆಡಿಕೊಳ್ಳುತ್ತಾರೆ. ರಸ್ತೆಯಲ್ಲಿ ಗುದ್ದಿಕೊಂಡು ಹೋಗುತ್ತಾರೆ. ನೀನು ಕುರುಡನನ್ನು ಹೇಗೆ ನೋಡಿಕೊಳ್ಳಬೇಕು ಅನ್ನೊದನ್ನೆಲ್ಲಾ ಕಲಿತಿದ್ದೀಯಲ್ಲ, ಇದನ್ನೆಲ್ಲಾ ಹೇಗೆ ಕಲಿತೆ ಕಂದಾ?’ ಅಂದ ತಾತ. + +‘ನನಗೆ ಕುರುಡರು ಮಾತ್ರವಲ್ಲ ಎಲ್ಲರೂ ತುಂಬಾ ಇಷ್ಟ. ಕುರುಡರು ಮಾತ್ರ ಎಲ್ಲಾ ಕೆಲಸಾನ ಯಾರಿಗೂ ಹೇಳದೆ ಅವರೇ ಮಾಡಿಕೊಳ್ಳುತ್ತಾರೆ. ಬೇರೆಯವರ ಕೆಲಸಾನೂ ಶ್ರದ್ಧೆಯಿಂದ ಮಾಡುತ್ತಾರೆ. ಸ್ವಲ್ಪ ನಿಧಾನವಾಗಬಹುದು. ಆದರೆ ಮಾಡೋ ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ’ ಅಂದಳು ಪಮ್ಮಿ. ‘ಹೇಗೆ ಮಗು? ಅವರು ಎಲ್ಲಾ ಕೆಲಸವನ್ನು ಮಾಡುತ್ತಾರೆ ಅಂತ ನಿನಗೆ ಹೇಗೆ ಗೊತ್ತು’? + +‘ಓ ಚೆನ್ನಾಗಿ ಗೊತ್ತು ಯಾಕೆಂದ್ರೆ, ನಮ್ಮ ಮನೇಲಿ ಅಮ್ಮನಿಗೆ ರಾತ್ರಿ ಹೊತ್ತು ಕಣ್ಣೇ ಕಾಣಲ್ಲ. ಆದ್ರೂ, ರಾತ್ರಿ ವೇಳೆ ರುಚಿ ರುಚಿಯಾಗಿ ಅಡುಗೆ ಮಾಡಿ ಪ್ರೀತಿಯಿಂದ ಕೈ ತುತ್ತು ತಿನ್ನಿಸುತ್ತಾಳೆ. ಅಮ್ಮ ತುಂಬಾ ಜಾಣೆ. ಮನೆಯಲ್ಲಿ ಎಲ್ಲೆಲ್ಲಿ ಏನೇನಿದೆ ಅಂತ ಚೆನ್ನಾಗಿ ಗೊತ್ತು ಅವಳಿಗೆ. ಯಾವ ಡಬ್ಬದಲ್ಲಿ ಏನಿದೆ, ಎಲ್ಲಿ ಯಾವ ಯಾವ ವಸ್ತುಗಳು ಇವೆ ಎಂದು ನೆನಪಿಟ್ಟುಕೊಂಡು ಎಲ್ಲಾ ಕೆಲಸ ಅವಳೊಬ್ಬಳೆ ಮಾಡುತ್ತಾಳೆ.’ + +‘ಅಂದ್ರೆ, ನಿಮ್ಮ ಅಮ್ಮನಿಗೆ ಕಣ್ಣು ಕಾಣಲ್ವ?’‘ಇಲ್ಲ ತಾತ ಕಾಣುತ್ತೆ’‘ಮತ್ತೆ ಕಾಣಲ್ಲ ಅಂತ ಹೇಳ್ತಿದ್ದೀಯಾ?’‘ಹೌದು ಕಾಣಲ್ಲ’.‘ಕಾಣುತ್ತೆ, ಕಾಣಲ್ಲ ಹೇಗೆ ಮಗು’? ಸರಿಯಾಗಿ ಹೇಳು ಎಂದು ಕೇಳಿದ ತಾತ. + +‘ಅಮ್ಮನಿಗೆ ರಾತ್ರಿ ಹೊತ್ತು ಕಣ್ಣು ಕಾಣಲ್ಲ. ಬೆಳಿಗ್ಗೆ ಹೊತ್ತು ಚೆನ್ನಾಗಿ ಕಣ್ಣು ಕಾಣುತ್ತೆ. ಅವಳಿಗೆ ಇರುಳುಗುರುಡು ತಾತ. ಸಂಜೆಯಾದರೆ ಅವಳನ್ನು ಕೈಹಿಡಿದುಕೊಂಡು ಅಂಗಡಿಗೆ ಕರೆದುಕೊಂಡು ಹೋಗುತ್ತೇನೆ. ಇಬ್ಬರೂ ಸೇರಿ ತರಕಾರಿ ತರುತ್ತೇವೆ. ಅಮ್ಮನ ಜೊತೆ ಸೇರಿ ನಾನು ಮನೆ ಕೆಲಸಾನೂ ಮಾಡುತ್ತೀನಿ. ಅಮ್ಮನಿಗೆ ಕಣ್ಣು ಕಾಣದೇ ಇದ್ದಾಗ ಕಷ್ಟ ಪಡುವುದನ್ನು ನೋಡಿದ್ದೀನಿ. ಅದಕ್ಕೆ ಕುರುಡರು ಅಂದ್ರೆ ತುಂಬಾ ಇಷ್ಟ’ ಅಂತ ಪಮ್ಮಿ ಹೇಳಿದಳು.ಪಮ್ಮಿಯ ಮಾತುಗಳನ್ನು ಕೇಳಿದ ತಾತ ಪ್ರೀತಿಯಿಂದ ತಲೆ ಸವರುತ್ತಾ ‘ಮತ್ತೆ ಇನ್ನೇನೇನು ಅಮ್ಮನಿಗೆ ಸಹಾಯ ಮಾಡುತ್ತೀಯಾ ನೀನು’? ಅಂತ ಪಮ್ಮಿಯನ್ನು ಕೇಳಿದ. ಅದಕ್ಕೆ ಪಮ್ಮಿ ಅಮ್ಮನಿಗೆ ಬಟ್ಟೆಯನ್ನು ತೊಟ್ಟುಕೊಳ್ಳುವಾಗ ಬಣ್ಣ ಯಾವುದೆಂದು ಹೇಳುತ್ತೇನೆ. ರಸ್ತೆಯಲ್ಲಿ ಗುಂಡಿಗಳಿದ್ದಾಗ, ಯಾವುದಾದರೂ ಕಟ್ಟಡದಲ್ಲಿ ಮೆಟ್ಟಿಲುಗಳಿದ್ದಾಗ ಎಡವದಂತೆ ಎಚ್ಚರಿಸುತ್ತೇನೆ. ಸಂಜೆಯಾದ ಮೇಲೆ ಕಾಗದದ ಮೇಲಿರುವ ಅಕ್ಷರಗಳನ್ನು ಓದಿ ಹೇಳುತ್ತೇನೆ. ಅಮ್ಮನಿಗೆ ಸಹಾಯ ಆಗೋ ಕೆಲಸಗಳನ್ನೆಲ್ಲಾ ಅವಳು ಹೇಳುವ ಮೊದಲೇ ನಾನು ಮಾಡಿಬಿಡುತ್ತೇನೆ ತಾತ’ ಎಂದು ಹೇಳಿದ ಪಮ್ಮಿಯ ಮಾತನ್ನು ಕೇಳಿ, ‘ನಿನ್ನ ಮಾತುಗಳನ್ನು ಕೇಳುತ್ತಿದ್ದರೆ ನನಗೆ ಆನಂದವಾಗುತ್ತಿದೆ ಕಂದ’ ಎಂದು ತಾತ ಹೆಮ್ಮೆ ಪಟ್ಟನು. + +‘ತಾತ ನನ್ನ ತರಹ ನಿನಗೆ ಸಹಾಯ ಮಾಡಲು ನಿನ್ನ ಮಕ್ಕಳಿಲ್ವ?’ + +‘ಇಲ್ಲ ಮಗು, ನನಗೆ ಮಕ್ಕಳಿಲ್ಲ. ನನ್ನವರು ಅಂತ ಯಾರೂ ಇಲ್ಲ. ನಾನೊಬ್ಬ ಅನಾಥ ಕುರುಡು ತಾತ’. ‘ಹಾಗಾದರೆ, ನಿನಗೆ ಸಹಾಯ ಮಾಡಲು, ನಿನಗೆ ಕಾಣದ ವಸ್ತುಗಳನ್ನು ತೆಗೆದುಕೊಡಲು ಒಬ್ಬರೂ ಜೊತೆಯಲ್ಲಿ ಇಲ್ಲವಲ್ಲ ತಾತ. ಹೇಗೆ ದಾರಿಯಲ್ಲಿ ಒಬ್ಬನೇ ಹೋಗ್ತೀಯಾ?’ + +‘ಹೌದು, ಪಮ್ಮಿ ಒಂದೊಂದು ಸಲ ನಿನ್ನ ತರಹ ಯಾರಾದರೂ ಕೈಹಿಡಿದು ರಸ್ತೆ ದಾಟಿಸುತ್ತಾರೆ. ಇಲ್ಲ ಅಂದ್ರೆ ನಾನು ವಾಹನಗಳ ಶಬ್ದವನ್ನು ಕೇಳಿಸಿಕೊಂಡು, ಕೋಲಿನ ಸಹಾಯದಿಂದ ಮೆಲ್ಲಗೆ ದಾರಿ ಸಾಗಿಸುತ್ತೇನೆ. ಒಮ್ಮೊಮ್ಮೆ ಬೀಳುತ್ತೇನೆ ಬಿದ್ದಾಗ ನೋವಾಗುತ್ತೆ, ರಕ್ತ ಬರುತ್ತೆ, ಮತ್ತೆ ಹಾಗೆ ನಿಧಾನವಾಗಿ ಸಮಾಧಾನ ಮಾಡಿಕೊಂಡು ನಡೆದುಕೊಂಡು ಹೋಗುತ್ತೇನೆ’ ಅಂದ ತಾತ. + +ತಾತನ ಮಾತುಗಳನ್ನು ಕೇಳಿದ ಪಮ್ಮಿ ‘ಹಾಗಾದರೆ ನೀನೂ ಕೂಡಾ ಅಮ್ಮನ ತರಹ ಯಾರಿಗೂ ಹೇಳದೆ ನೋವನ್ನು ತಡೆದುಕೊಳ್ಳುತ್ತೀಯಾ’ ಎಂದು ಕೇಳಿದಳು. ‘ಹೌದು ಪಮ್ಮಿ, ಒಂದೊಂದು ಸಲ ನೋವು ತಡ್ಕೋತೀನಿ ಇನ್ನೂ ಕೆಲವು ಸಲ ನೋವು ಮರೆಯೋಕೆ ಮನದುಂಬಿ ಹಾಡು ಹೇಳುತ್ತೀನಿ. ಹಾಡು ಕೇಳಿ ಕೆಲವರು ದುಡ್ಡು ಹಾಕುತ್ತಾರೆ. ಕೆಲವರು ಚೆನ್ನಾಗಿ ಹಾಡಿದೆ ಅಂತ ಹೇಳುತ್ತಾರೆ. ಇನ್ನೂ ಕೆಲವರು ಭಿಕ್ಷೆ ಹಾಕಬೇಕು ಅಂತ ನನ್ನನ್ನೂ, ನನ್ನ ಕಂಠವನ್ನೂ ಬೈದು ಹೋಗುತ್ತಾರೆ. ಹಾಡಿ ನೋವನ್ನು ನೀಗಿಸಿಕೊಂಡ ಮೇಲೆ, ಬಂದ ಹಣದಿಂದ ಹಸಿವನ್ನು ನೀಗಿಸಿಕೊಳ್ಳುತ್ತೀನಿ’ ಅಂದ ತಾತ. + +(ಚಿತ್ರ: ವಿಶ್ವ ವಿನ್ಯಾಸ್) + +‘ನಿನಗೆ ಹಾಡೋಕೆ ಬರುತ್ತಾ ತಾತ? ನನಗೂ ಹಾಡು ಕೇಳೋಕೆ ಮತ್ತು ಹಾಡು ಹಾಡೋಕೆ ತುಂಬ ಇಷ್ಟ . ನನಗೂ ಹಾಡೋದು ಕಲಿಸಿಕೊಡುತ್ತೀಯಾ?’ ಎಂದು ಕೇಳಿದಳು ಪಮ್ಮಿ. ‘ಹೇಗೆ ಕಲಿಸಿ ಕೊಡೋದು ಮಗು? ನಾನು ದಾರಿ ದಾರಿ ತಿರುಗೋ ಕಣ್ಣು ಕಾಣದ ಭಿಕ್ಷುಕ. ಇವತ್ತು ಈ ರಸ್ತೆಯಲ್ಲಿ ಇದ್ದರೆ, ನಾಳೆ ಇನ್ನೆಲ್ಲಿ ಇರುತ್ತೀನೋ ಗೊತ್ತಿಲ್ಲವಲ್ಲ ಮಗು’ ಅಂದ ತಾತ. ‘ಹಾಗಾದರೆ ನೀನು ನಮ್ಮ ಮನೆಗೆ ಬಂದು ಬಿಡು ತಾತ. ಆಗ ನೀನೂ ದಿನಾಲೂ ಹಾಡು ಹೇಳಬಹುದು, ಮತ್ತೆ ನಾನು ಹಾಡು ಕಲಿಯಬಹುದು’ ಎಂದಳು. ‘ಅದೆಷ್ಟು ಒಳ್ಳೆಯ ಮನಸ್ಸು ಮಗು ನಿನ್ನದು. ನಾನು ಒಬ್ಬ ಭಿಕ್ಷುಕ, ಕೊಳೆ ಬಟ್ಟೆ ಹಾಕಿಕೊಂಡಿದ್ದೀನಿ. ಬಾಚದ ತಲೆಗೂದಲು, ಮೈ ತೊಳೆಯದೆ ಕೆಟ್ಟವಾಸನೆ ಬರುತ್ತಾ ಇದೆ. ಹೀಗಿದ್ದಾಗ ನಾನು ನಿಮ್ಮ ಮನೆಗೆ ಬಂದರೆ ನಿಮ್ಮಮ್ಮ ಬೈದುಬಿಡ್ತಾರೆ. ಬೇಡ ಮಗು. ನಾನು ದಾರಿಯಲ್ಲೇ ಜೀವನ ಮಾಡುತ್ತೀನಿ. ನೀನು ನನಗೆ ರಸ್ತೆ ದಾಟಿಸಿ, ಸವಿ ಸವಿಯಾದ ಮಾತುಗಳಿಂದ ಸಂತೋಷಪಡಿಸಿ, ಹಸಿವನ್ನು ಮರೆಸಿದ್ದೀಯಾ ಕಂದ. ಈಗ ತಡವಾಯ್ತು ಮನೆಗೆ ಹೋಗು ಅಮ್ಮ ಕಾಯುತ್ತಿರುತ್ತಾರೆ’ ಎಂದ ತಾತ. + +ಆಗ ಪಮ್ಮಿ ‘ನೀನು ಊಟ ಇಲ್ಲ ಅಂತ ಭಿಕ್ಷುಕನಾದೆ, ಸ್ನಾನ ಮಾಡಿಲ್ಲ, ಅದಕ್ಕೆ ವಾಸನೆ ಅಷ್ಟೇ. ಕೊಳೆ ಬಟ್ಟೆ ತೆಗೆದು ಬೇರೆ ಬಟ್ಟೆ ತೊಟ್ಟುಕೊಂಡರೆ ಎಲ್ಲ ಸರಿಹೋಗುತ್ತದೆ ಆಯ್ತ. ಆಗ ನೀನು ನಮ್ಮ ಥರನೇ ಆಗಿಬಿಡುತ್ತೀಯ. ನಮ್ಮ ಮನೇಲಿ ಊಟ ಇದೆ, ಬಟ್ಟೆ ಇದೆ, ಅಮ್ಮ ಹೇಳಿಕೊಟ್ಟಿರೋ ಪ್ರೀತಿ ಇದೆ, ನಿನ್ನ ಜೊತೆಗೆ ನಾನು, ಅಮ್ಮ, ಬೂಚಿ ಬೆಕ್ಕು ಎಲ್ಲಾ ಇರುತ್ತೀವಿ ಬಾ ತಾತ’ ಅಂದಳು ಪಮ್ಮಿ. ಮಾತನ್ನು ಕೇಳಿ ತಾತನ ಕಣ್ಣಲ್ಲಿ ಆನಂದಭಾಷ್ಪ ಸುರಿಯಿತು. ‘ನಾನು ಬಂದರೆ ಅಮ್ಮ ಬೈಯುತ್ತಾರೆ, ನೀನು ಹೊರಡು’ ಅಂತ ಮತ್ತೆ ಹೇಳಿದ ಕುರುಡು ತಾತ. + +ತಾತನ ಮಾತನ್ನು ಕೇಳಿದ ಪಮ್ಮಿ ‘ನಮ್ಮ ಅಮ್ಮ ತುಂಬಾ ಒಳ್ಳೆಯವರು. ಒಳ್ಳೆಯವರನ್ನು ಮನೆಗೆ ಕರೆದುಕೊಂಡು ಹೋದರೆ ಸಂತೋಷಪಡುತ್ತಾರೆ. ಅವರು ಯಾವಾಗಲೂ ಒಳ್ಳೆ ಕೆಲಸ ಮಾಡಿದರೆ ಬೈಯಲ್ಲ ತಾತ. ನಾನು ತಪ್ಪು ಮಾಡಿದಾಗಲೂ ತಿದ್ದಿ ಬುದ್ಧಿ ಹೇಳುತ್ತಾರೆಯೇ ಹೊರತು ಬೈಯ್ಯುವುದಿಲ್ಲ ಗೊತ್ತಾ’ ಎಂದು ಹೇಳಿದಳು. + +‘ಒಂದು ಸಲ ನಾನು ಶಾಲೆಗೆ ಹೋಗೋವಾಗ ನಮ್ಮ ಮನೆಯಲ್ಲಿರೋ ಬೂಚಿಬೆಕ್ಕು ಆಗಿನ್ನು ಮರಿಯಾಗಿತ್ತು. ಮರದ ಹತ್ತಿರ ಅದು ಆಟ ಆಡಬೇಕಾದರೆ ಅದರ ಎರಡೂ ಕಣ್ಣಿಗೆ ಮುಳ್ಳು ಚುಚ್ಚಿಕೊಂಡು ಕೊಚ್ಚೆಯಲ್ಲಿ ಬಿದ್ದು ಒದ್ದಾಡುತ್ತಿತ್ತು ಪಾಪ. ಆಗ ಅದರ ಮೈಯಲ್ಲಾ ರಕ್ತ, ಕೊಚ್ಚೆಯಾಗಿತ್ತು. ನಾನು ಶಾಲೆಯಿಂದ ಬರಬೇಕಾದರೆ ಅದನ್ನ ನೋಡಿದೆ. ಅದು ಒದ್ದಾಡುತ್ತಾ ಇತ್ತು. ಅದರ ಮೈಯಿಂದ ಕೆಟ್ಟ ವಾಸನೆ ಬರುತ್ತಿತ್ತು. ನನಗೆ ಅಳು ಬಂದು ಅದನ್ನ ಎತ್ತಿಕೊಂಡು ಮನೆಗೆ ಬಂದೆ. ಅಮ್ಮ ಅದಕ್ಕೆ ಬೈಯಲೇ ಇಲ್ಲ. ಗೊತ್ತಾ! ನಾನು, ಅಮ್ಮ ಸೇರಿಕೊಂಡು ಅದಕ್ಕೆ ಸ್ನಾನ ಮಾಡಿಸಿದೆವು. ಅದರ ಕಣ್ಣಿಂದ ಬರುತ್ತಿದ್ದ ರಕ್ತವನ್ನು ಒರೆಸಿ ಗಾಯಕ್ಕೆ ಅರಿಶಿಣ ಪುಡಿ ಹಾಕಿದಳು ಅಮ್ಮ. ಆಮೇಲೆ ಅದರ ಮೈಯಲ್ಲಾ ಒರೆಸಿ ಕುಡಿಯೋಕೆ ತಟ್ಟೆಗೆ ಹಾಲು ಹಾಕಿದ್ವಿ. ಎಷ್ಟು ಹೊತ್ತಾದರೂ ಅದು ಮಿಯಾಂವ್ ಮಿಯಾಂವ್ ಅಂತ ಅಳ್ತಾನೇ ಇತ್ತು. ಆಮೇಲೆ ಆ ಹಾಲಿನ ತಟ್ಟೆಯನ್ನು ಅದರ ಬಾಯಿ ಹತ್ತಿರ ಹಿಡಿದುಕೊಂಡ ಮೇಲೆ ಎಲ್ಲ ಒಂದೇ ಉಸಿರಿಗೆ ಕುಡಿದು ಹಾಕಿಬಿಡ್ತು. ಎಲ್ಲೂ ಓಡಾಡದೇ ಒಂದೇ ಕಡೆ ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಸೈನಿಕರು ಓಡಾಡೋ ತರಹ ಮನೆಯಲ್ಲಿ ಓಡಾಡುತ್ತಲೇ ಇತ್ತು. ಆಮೇಲೆ ನನಗೆ ಅಮ್ಮನಿಗೆ ಗೊತ್ತಾಯಿತು ಆ ಬೆಕ್ಕಿಗೆ ಎರಡೂ ಕಣ್ಣು ಕಾಣಿಸುತ್ತಿಲ್ಲ ಅಂತ. ಅದು ಗೊತ್ತಾದ ಮೇಲೆ ಅಮ್ಮನಿಗೆ ನನಗೆ ತುಂಬಾ ನೋವಾಯಿತು. ಆಚೆಗೆ ಬಿಟ್ಟುಬಿಟ್ಟರೆ ಯಾವುದಾದರೂ ಗಾಡಿಗೆ ಸಿಕ್ಕಿ ಅಥವಾ ಗುಂಡಿಯಲ್ಲಿ ಬಿದ್ದು ಸತ್ತು ಹೋಗುತ್ತೆ ಅಂತ ಅದನ್ನ ನಮ್ಮ ಮನೇಲೆ ಇಟ್ಟುಕೊಂಡುಬಿಟ್ಟೆವು. ಅದು ನನ್ನ ಜೊತೆ ಅಮ್ಮನ ಜೊತೆ ಆಟ ಆಡುತ್ತೆ. ಹಸಿವಾದಾಗ ಹಾಲು ಕುಡಿಯುತ್ತೆ. ಒಂದು ಇಲೀನೂ ಮನೆಗೆ ಬರೋಕೆ ಬಿಡಲ್ಲ. ಅದಕ್ಕೆ ನಾವು ಪ್ರೀತಿಯಿಂದ ಬೂಚಿಬೆಕ್ಕು ಅಂತ ಕರೀತೀವಿ. ನಮ್ಮ ಮನೆಯಲ್ಲಿ ಈಗ ಬೂಚಿ ಬೆಕ್ಕು ಕೂಡಾ ನಮ್ಮ ಕುಟುಂಬದ ಸದಸ್ಯ. ಅಮ್ಮನಿಗೆ, ಬೂಚಿಬೆಕ್ಕಿಗೆ ಕಷ್ಟ ಆದಾಗಲೆಲ್ಲಾ ನಾನು ಸಹಾಯ ಮಾಡುತ್ತೀನಿ. ನೀನು ಬಂದರೆ, ನಿನಗೂ ಕೆಲಸ ಮಾಡಿಕೊಳ್ಳಲು ಸ್ವಲ್ಪ ಸಹಾಯ ಮಾಡುತ್ತೀನಿ. ಅಮ್ಮ ಬೂಚಿಬೆಕ್ಕನ್ನು ಕರೆದುಕೊಂಡು ಹೋದಾಗಲೂ ಬೈಯಲ್ಲಿಲ್ಲ, ನೀನೂ ಬಂದರೂ ಖಂಡಿತ ಬೈಯಲ್ಲ, ಬಾ ತಾತ’ ಅಂತ ಕುರುಡು ತಾತನನ್ನು ಒತ್ತಾಯ ಮಾಡಿದಳು ಪಮ್ಮಿ. + + + +ಪಮ್ಮಿ, ಮನೆಗೆ ಕುರುಡು ತಾತನನ್ನು ಕರೆದಾಗ ‘ಪಮ್ಮಿ ನೀನು ಇನ್ನೂ ಚಿಕ್ಕವಳು. ನಿಮ್ಮ ಮನೆಯಲ್ಲಿ ಈಗಾಗಲೇ ಇರುವ ಅಮ್ಮನ ಮತ್ತು ಬೂಚಿಬೆಕ್ಕಿನ ಯೋಗಕ್ಷೇಮವನ್ನು ನೀನು ನೋಡಬೇಕು. ನಾನು ಬಂದರೆ ನಿನಗೆ ಹೆಚ್ಚು ಹೊರೆಯಾಗುವುದು ಕಂದ’. ಹುಷಾರಿಲ್ಲವೆಂದು, ನಡೆಯಲಾಗುವುದಿಲ್ಲವೆಂದು ಏನೆಲ್ಲಾ ಸಬೂಬು ಹೇಳಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ತಾತನ ಪ್ರಯತ್ನ ವಿಫಲವಾಯಿತು. ಪಮ್ಮಿಯ ಮಾತಿಗೆ ಕಟ್ಟುಬಿದ್ದು ತಾತ ‘ನಿಮ್ಮ ಮನೆಗೆ ಬರುತ್ತೇನೆ. ಆದರೆ ನಿತ್ಯವೂ ಅಲ್ಲೇ ಇರುವುದಿಲ್ಲ. ದಿನ ಸಂಜೆ ನಿಮ್ಮ ಮನೆಯ ಜಗುಲಿಯ ಮೇಲೆ ಬಂದು ಹಾಡುತ್ತೇನೆ. ಆಗ ನೀನು ನನಗೆ ಸೇವೆ ಮಾಡಬೇಡ! ನನಗೆ ಬೇಕಿರುವ ವಸ್ತುಗಳನ್ನು ಚೀಲದಲ್ಲಿ ಜೋಡಿಸಿಟ್ಟುಕೊಳ್ಳಲು ಸಹಾಯ ಮಾಡು ಕಂದ”. ಪಮ್ಮಿ ಮತ್ತು ತಾತ ಇಬ್ಬರೂ ಪಮ್ಮಿಯ ಮನೆ ಕಡೆಗೆ ನಡೆದರು. ಪಮ್ಮಿ ತಾತನ ಕೈ ಹಿಡಿದುಕೊಂಡು, ತಾತನ ಹಾಡು ಕೇಳುತ್ತಾ ಮನೆಯ ದಾರಿಯತ್ತ ಹೆಜ್ಜೆ ಹಾಕಿದಳು. ತಾತ ಧೈರ್ಯದಿಂದ ದಿಟ್ಟತನದಿಂದ ಪ್ರೀತಿಯ ಪಮ್ಮಿಯ ಜೊತೆಗೂಡಿ ಹೆಜ್ಜೆ ಹಾಕಿದ. + + + +ಬೇಲೂರು ರಘುನಂದನ್ ಹಾಸನ ಜಿಲ್ಲೆಯ ಬೇಲೂರಿನವರು. ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಎಂ.ಎ.ಪದವಿ, ಎಂ.ಫಿಲ್ ಪದವಿಯನ್ನುಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದು ಪ್ರಸ್ತುತ ಅದೇ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಕವಿ ಹಾಗೂ ನಾಟಕಕಾರರಾಗಿ ಗುರುತಿಸಿಕೊಂಡಿರುವ ರಘುನಂದನ್ ಅವರ ಹಲವು ಕಾವ್ಯ ಸಂಕಲನ, ಕಟ್ಟುಪದಗಳ ಗುಚ್ಛ, ಮಕ್ಕಳ ಕತಾ ಸಾಹಿತ್ಯ, ಪ್ರವಾಸ ಸಾಹಿತ್ಯ ಹಾಗೂ 8 ನಾಟಕ ಪುಸ್ತಕಗಳು ಪ್ರಕಟಗೊಂಡಿವೆ. 2017 ರಲ್ಲಿ ಕರ್ನಾಟಕ ನಾಟಕ ಅಕಾಡೆಮಿಗೆ ಸದಸ್ಯರಾಗಿ ಆಯ್ಕೆಗೊಂಡ ಬೇಲೂರು ಅವರಿಗೆ ಕುವೆಂಪು ಯುವಕವಿ ಪುರಸ್ಕಾರ, ಬೇಂದ್ರೆಗ್ರಂಥ ಬಹುಮಾನ, ಸಾಲು ಮರದತಿಮ್ಮಕ್ಕ ಹಸುರು ಪ್ರಶಸ್ತಿ, ಎಚ್.ಎಸ್.ವಿ. ಪುಟಾಣಿ ಸಾಹಿತ್ಯ ಪುರಸ್ಕಾರ, ತೇಜಸ್ವಿ ಕಟ್ಟೀಮನಿ ಯುವ ಪುರಸ್ಕಾರ, ರಾಷ್ಟ್ರಕವಿ ಕುವೆಂಪು ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. \ No newline at end of file diff --git a/Kenda Sampige/article_413.txt b/Kenda Sampige/article_413.txt new file mode 100644 index 0000000000000000000000000000000000000000..3b5dafbb6ceac0789bef6cf120f1a351045b2ec8 --- /dev/null +++ b/Kenda Sampige/article_413.txt @@ -0,0 +1,35 @@ +byಡಾ. ಗೀತಾ ವಸಂತ|Mar 25, 2019|ಸಾಹಿತ್ಯ| 0 Comments + +“ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ.” + +byಎಂ.ಜಿ. ಶುಭಮಂಗಳ|Mar 24, 2019|ವಾರದ ಕಥೆ,ಸಾಹಿತ್ಯ| 0 Comments + +“ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು.” + +byಡಾ. ಬಿ. ಜನಾರ್ದನ ಭಟ್|Mar 18, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ.” + +byಡಾ. ಬಿ. ಜನಾರ್ದನ ಭಟ್|Mar 17, 2019|ವಾರದ ಕಥೆ,ಸಾಹಿತ್ಯ| 0 Comments + +“ಮೆರವಣಿಗೆಯಲ್ಲಿ ಕಾಣುವ ಮದುಮಗನ ಹಾಗೆ ಹಣೆಗೆ ಬಾಸಿಂಗವನ್ನು ಕಟ್ಟಿದಂತೆ ಅಲಂಕಾರಹೊಂದಿ, ಕೊರಳಿಗೆ ಘಂಟಾಮಣಿಗಳ ಸರವನ್ನು ತೊಟ್ಟುಕೊಂಡು, ಗಂಭೀರವಾಗಿ ಸವಾರಿಗಾಡಿಯನ್ನು ಎಳೆವ, ಬೆನ್ನಮೇಲೆ ಮದುಮಗನ ರೇಶ್ಮೆದುಪ್ಪಟದ ಬದಲು ಗೋಣಿಚೀಲವನ್ನು ಹೊದೆದುಕೊಂಡು, ಒಂದು ಕಣ್ಣನ್ನು ಬಂಡಿಯಾಳಿನ ಬಲಗೈಯ ಮೇಲೂ, ಮತ್ತೊಂದನ್ನು ನಡೆವ ಮಾರ್ಗದ ಮೇಲೂ ಇಟ್ಟು…” + +byಎಂ.ಎಸ್.ಶ್ರೀರಾಂ|Mar 11, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲ್ಪನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ.” + +byನಂದೀಶ್ ಬಂಕೇನಹಳ್ಳಿ|Mar 10, 2019|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 0 Comments + +ಗೊಬ್ಬರಗುಂಡಿಯಲ್ಲಿ ಕೆದರುವ ಕಾರ್ಯದಲ್ಲಿ ನಿರತವಾಗಿದ್ದ ಹೆಂಟೆಕೋಳಿಯೊಂದು ಜೋರಾಗಿ ಕೂಗಿತ್ತು. ಅದರ ಕೂಗು ಕೇಳಲು ಕಾಫಿತೋಟದೊಳಗೆ ಅಲ್ಲಲ್ಲಿ ದರಗು ಕೆದರುತ್ತಿದ್ದ ಮರಿ, ಹಿರಿ, ಹೆಂಟೆ, ಹುಂಜ, ಹೂಮರಿಗಳು ಕೂಗತೊಡಗಿತ್ತು. ಕೋಳಿಗಳ ಗದ್ದಲದಿಂದ ನಂಜೆಗೌಡ ಮನೆಯ ಸೌದೆಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ ಒಂದೆರಡು ನಾಯಿಗಳು ಹೊರಬಂದು ನೆಲಮುಗಿಲು ಒಂದಾಗುವಂತೆ ಬೊಗಳತೊಡಗಿದ್ದವು. + +byಆರ್. ವಿಜಯರಾಘವನ್|Mar 7, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ.” + +byಡಾ. ಬಿ. ಜನಾರ್ದನ ಭಟ್|Mar 2, 2019|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 0 Comments + +ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು. + +byಸೃಜನ್|Feb 24, 2019|ವಾರದ ಕಥೆ,ಸಾಹಿತ್ಯ| 0 Comments + +“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ.” \ No newline at end of file diff --git a/Kenda Sampige/article_414.txt b/Kenda Sampige/article_414.txt new file mode 100644 index 0000000000000000000000000000000000000000..dc7ecc3cb0aca7c8263433b0ec20d64da2f6f033 --- /dev/null +++ b/Kenda Sampige/article_414.txt @@ -0,0 +1,49 @@ + + +ಆಂಗ್ಲರು ನಮ್ಮ ದೇಶವನ್ನು ಆಳತೊಡಗಿದಾಗ ಜಿಲ್ಲಾಧಿಕಾರಿ, ಪೋಲೀಸು ಸುಪರಿಂಟೆಂಡೆಂಟ್, ಮೊದಲಾದ ವರಿಷ್ಠ ಅಧಿಕಾರ ಪೀಠದಲ್ಲಿ ಯೂರೋಪಿಯನ್ನರೇ ಕುಳ್ಳಿರುತ್ತಿದ್ದರು. ಗ್ರಾಮ ಮಟ್ಟದಲ್ಲಿ ಆಡಳಿತ ಯಂತ್ರದ ಕೀಲುಗಳಾದ ಶ್ಯಾನುಭಾಗರು ಪಟೇಲರುಗಳನ್ನು ಹಿಂದಿನಂತೆ ಅವರು ಉಳಿಸಿಕೊಂಡರು. ಈ ಉದ್ಯೋಗಗಳು ಬಹುತೇಕ ವಂಶ ಪಾರಂಪರ್ಯವಾಗಿಯೇ ಬಂದಂಥವುಗಳು. ಗ್ರಾಮಾಧಿಕಾರಿಗಳಾದ ಪಟೇಲರು ಶ್ಯಾನುಭಾಗರುಗಳಲ್ಲಿ ಹೆಚ್ಚಿನವರು ತಕ್ಕಷ್ಟು ಅನುಕೂಲಸ್ಥರಾಗಿದ್ದು ಗೌರವಾನ್ವಿತ ಮನೆತನಕ್ಕೆ ಸೇರಿದವರಾಗಿರುತ್ತಿದ್ದರು. ತಾವು ಆಡಳಿತ ನಡೆಸುವ ಮುಂಚೆ ರಾಜರುಗಳಿಗೆ ದವಸ ಧಾನ್ಯ ರೂಪದಲ್ಲಿ ಕಂದಾಯ ತೆರುತ್ತಿದ್ದ ಪದ್ಧತಿಯನ್ನು ಬ್ರಿಟಿಷರು ರದ್ದು ಮಾಡಿ ಹಣದ ರೂಪದಲ್ಲಿಯೇ ತೆರಿಗೆ ಸಲ್ಲಿಸಬೇಕೆಂದು ತಾಕೀತು ಮಾಡಿದರು. ಆಗ ಅವರು ಗ್ರಾಮಾಧಿಕಾರಿಗಳು ಅನುಕೂಲವಂತರಾಗಿ ಗೌರವಸ್ಥರಾಗಿದ್ದರೆ ಕಂದಾಯದ ಹಣಕ್ಕೆ ಮೋಸವಾಗಲಿಕ್ಕಿಲ್ಲ ಎಂಬ ಭಾವನೆಯಿಂದ ಮೊದಲಿನ ವ್ಯವಸ್ಥೆಯನ್ನು ಬದಲಿಸಲು ಹೋಗಲಿಲ್ಲ. + +ಜನರು ಬ್ರಿಟಿಷ್ ಅಧಿಕಾರಿಗಳನ್ನು ದೊರೆಗಳೆಂದು ಕರೆಯುತ್ತಿದ್ದರು. ತಲೆಗೆ ಅವರು ಹಾಕಿಕೊಳ್ಳುತ್ತಿದ್ದ ಹೇಟಿಗೆ ದೊರೆ ಟೊಪ್ಪಿ ಎಂದೇ ನಮ್ಮ ಜನ ನಾಮಕರಣ ಮಾಡಿಬಿಟ್ಟರು. ಈ ಅಧಿಕಾರಿಗಳದ್ದು ಹೆಚ್ಚಾಗಿ ಕುದುರೆಯ ಮೇಲೆ ಸಂಚಾರ, ಪ್ರಯಾಣದಲ್ಲಿ ರಾತ್ರಿ ತಂಗಲು ಮುಸಾಫಿರ್ ಬಂಗ್ಲೆಗಳಿದ್ದುವು. ಅಲ್ಲಿ ತಂಗುವ ಅಧಿಕಾರಿಗಳಿಗೆ ಬೇಕಾಗುವ ಉಟೋಪಚಾರದ ಲವಾಜಮೆಯನ್ನು ಒದಗಿಸುವುದು, ಅವರನ್ನು ಗ್ರಾಮಕ್ಕೆ ಪ್ರವೇಶಿಸುವಾಗ ಗಣ್ಯರೊಡನೆ ಸ್ವಾಗತಿಸುವುದು, ಇಲ್ಲಿಂದ ತೆರಳುವರೆಗೆ ಅವರ ಯೋಗಕ್ಷೇಮವನ್ನು ನೋಡಿಕೊಳ್ಳುವುದು ಮುಂತಾದ ಜವಾಬ್ದಾರಿ ಗ್ರಾಮದ ಪಟೇಲರಿಗೆ ಸೇರಿದ್ದಾಗಿತ್ತು. ಮುಸಾಫಿರ್ ಬಂಗಲೆಗಳಿರುವ ಗ್ರಾಮಗಳಿಗೆ ಕಸಬಾ ಗ್ರಾಮಗಳೆಂದು ಹೆಸರು. ಆ ಗ್ರಾಮದ ಪಟೇಲರಿಗೆ ಇಬ್ಬರು ಉಗ್ರಾಣಿಗಳನ್ನು ಇಟ್ಟುಕೊಳ್ಳುವ ಅವಕಾಶವೂ ಇತ್ತು. + +ಮೈಸೂರು ಕಡೆಯಿಂದ ಕೊಡಗಿಗಾಗಿ ಮಂಗಳೂರಿಗೆ ಹೋಗುವ ಅಧಿಕಾರಿಗಳಿಗೆ ಬಡ್ಯಾರು ಗ್ರಾಮ ಒಂದು ತಂಗುದಾಣ. ಪೇಟೆಯ ಬದಿಯಲ್ಲಿಯೇ ಇರುವ ಎತ್ತರದ ಗುಡ್ಡದಲ್ಲಿ ಪ್ರವಾಸಿ ಬಂಗಲೆ. ಇದರಿಂದಾಗಿ ಆ ಗುಡ್ಡಕ್ಕೆ ಬಂಗಲೆಗುಡ್ಡೆಯೆಂದೇ ಹೆಸರು. ಗುಡ್ಡದ ಕೆಳಬದಿಯಲ್ಲಿ ಬಂಗಲೆಯ ಉಸ್ತುವಾರಿ ನೋಡಿಕೊಳ್ಳುವ ವಾಚರ್ ವಾಚಣ್ಣ ಮನೆ. ಅಲ್ಲಿಂದ ಒಂದು ಮೈಲು ದೂರದಲ್ಲಿ ಕಸಬಾ ಪಟೇಲ್ ಪಡುಬೈಲು ರುದ್ರಪ್ಪಯ್ಯನವರ ಮನೆ. + +ರುದ್ರಪ್ಪಯ್ಯನವರದ್ದು ಮನೆ ಎಂದು ಹೇಳುವುದಕ್ಕಿಂತಲೂ ಪುಟ್ಟ ಅರಮನೆ ಎಂದು ಹೇಳಿದರೇ ಸರಿಯಾದೀತು. ನಾಲ್ಕು ಸೂತ್ರದ ಒಳ ಅಂಗಳವಿರುವ ದೊಡ್ಡ ಎರಡು ಅಂತಸ್ತಿನ ಮನೆ. ಮನೆಯ ಪೂರ್ವಭಾಗದಲ್ಲಿ ಸುಮಾರು ಐವತ್ತು ಜನ ಕುಳಿತುಕೊಳ್ಳಬಹುದಾದ ಚಾವಡಿ. ಮನೆಯಿಂದ ಇಪ್ಪತ್ತು ಮಾರು ದೂರದಲ್ಲಿ ಊರ ಪಂಚಾತಿಕೆ ನಡೆಸಲು, ತಹಸೀಲ್ದಾರರೇ ಮುಂತಾದ ಸರಕಾರಿ ಅಧಿಕಾರಿಗಳ ತಾತ್ಕಾಲಿಕ ವಸತಿಗೆ ಅನುಕೂಲವಾದ ಕಟ್ಟಡ, ಭತ್ತದ ದಾಸ್ತಾನಿನ ಪತ್ತಾಯದ ಪೊರೆ, ಹಟ್ಟಿಕೊಟ್ಟಿಗೆ ಎಂದು ಬೇರೆ ನಾಲ್ಕೈದು ಉಪ ಕಟ್ಟಡಗಳು, ಒಂದು ಸಾವಿರದಷ್ಟು ಜನ ಒಮ್ಮೆಗೇ ಊಟಕ್ಕೆ ಕುಳಿತುಕೊಳ್ಳಬಹುದಾದ ವಿಶಾಲವಾದ ಅಂಗಳ. + +ಅಂಗಳದಿಂದ ಇಪ್ಪತ್ತು ಮೆಟ್ಟು ಇಳಿದರೆ ತೆಂಕುಬಡಗಲಾಗಿ ಚಾಚಿದ್ದ ಮೂರು ಬೆಳೆಯ ದೊಡ್ಡ ಬಯಲು, ಸಂಪೂರ್ಣವಾಗಿಯಲ್ಲದಿದ್ದರೂ ಹೆಚ್ಚು ಭಾಗ ಪಟೇಲರಿಗೇ ಸೇರಿದ್ದು. ಮನೆಯ ಇದಿರಿನ ಹದಿನೈದು ಮುಡಿ ಗದ್ದೆ ಸ್ವಂತ ಬೇಸಾಯಕ್ಕೆ ಇಟ್ಟುಕೊಂಡು ಉಳಿದಿದ್ದ ಗದ್ದೆಗಳನ್ನು ಹತ್ತು ಹದಿನೈದು ಒಕ್ಕಲುಗಳಿಗೆ ಗೇಣಿಗೆ ಕೊಟ್ಟಿದ್ದರು. + +ಪಟೇಲರದ್ದು ತಕ್ಕಷ್ಟು ದೊಡ್ಡ ಸಂಸಾರ. ಇವರಿಗೆ ಇಬ್ಬರು ಹೆಂಡತಿಯರು. ಮೊದಲ ಹೆಂಡತಿ ಲಕ್ಷ್ಮೀ ಅಮ್ಮನವರಲ್ಲಿ ಸಂತತಿಯಾಗಲಿಲ್ಲವೆಂದು ದೇವಕಿ ಅಮ್ಮನವರನ್ನು ಮದುವೆಯಾಗಿದ್ದರು. ಪಟೇಲರ ಇಬ್ಬರು ತಮ್ಮಂದಿರಾದ ಸೀತಾರಾಮಯ್ಯ, ಶ್ರೀನಿವಾಸಯ್ಯ ಎಂಬವರೂ ಇವರ ಸಂಸಾರವೂ ರುದ್ರಪ್ಪಯ್ಯನವರೊಟ್ಟಿಗೇ ವಾಸ. ಅಲ್ಲದೆ ಕುಟುಂಬದ ಬಾಲ ವಿಧವೆಯೊಬ್ಬರೂ ಈ ಮನೆಯಲ್ಲಿಯೇ ಆಶ್ರಯ ಪಡೆದಿದ್ದರು. ಗಂಡಸರು ಹೆಂಗಸರು ಮಕ್ಕಳು ಮರಿಗಳು ಎಂದು ಮನೆಯವರಲ್ಲದೇ ಬಂದು ಹೋಗುವ ನೆಂಟರಿಷ್ಟರು ಎಂದು ಹತ್ತು ಹನ್ನೆರಡು ಜನ ಸದಾ ಮನೆಯಲ್ಲಿರುತ್ತಿದ್ದರು. ಮಧ್ಯಾಹ್ನದ ಹೊತ್ತಿಗೆ ಇಬ್ಬರು ಉಗ್ರಾಣಿಗಳು, ನ್ಯಾಯ ತೀರ್ಮಾನಕ್ಕಾಗಿ ದೂರು ತೆಗೆದುಕೊಂಡು ಬಂದವರು ಇತ್ಯಾದಿಯಾಗಿ ನಾಲ್ಕಾರು ಜನರೂ ಊಟಕ್ಕೆ ತಪ್ಪಿದ್ದಿಲ್ಲ. ಒಂದೊಂದು ಸಲ ಇಪ್ಪತ್ತು ಇಪ್ಪತ್ತೈದು ಎಂಜಲೆಲೆಗಳೂ ಹೊರಗೆ ಬೀಳುವುದಿತ್ತು. + +ಒಂದು ಸಲ ಗ್ರಾಮದ ಕುಳವಾರುಗಳಿಂದ ವಸೂಲು ಮಾಡಿದ ಕಂದಾಯದ ಹಣವನ್ನು ತಾಲೂಕು ಖಜಾನೆಗೆ ಕಟ್ಟಲು ಪಟೇಲರ ಉಗ್ರಾಣಿ ಹೋಗಿದ್ದಾಗ, ಮೈಸೂರು ಕಡೆಯಿಂದ ಕೊಡಗಿಗಾಗಿ ಯಾವುದೋ ಇಲಾಖೆಯ ದೊಡ್ಡ ಆಂಗ್ಲ ಅಧಿಕಾರಿ ಅಂದಿನಿಂದ ಹದಿನೈದನೇ ದಿನದಲ್ಲಿ ಸಂಜೆ ಹೊತ್ತು ಬಡ್ಯಾರು ಗ್ರಾಮಕ್ಕೆ ತನ್ನ ನಾಲ್ಕಾರು ಶಿಬಂಧಿಯೊಂದಿಗೆ ಬರುತ್ತಾರೆಂತಲೂ ಮಾಮೂಲು ಪ್ರಕಾರ ಎಲ್ಲಾ ವ್ಯವಸ್ಥೆಯನ್ನು ಪಟೇಲರು ಮಾಡಬೇಕೆಂತಲೂ ಹುಕುಂ ತಾಲೋಕಿನಿಂದ ಅವನ ಕೈಗೆ ಬಂತು. ಅದನ್ನು ಆತ ಪಟೇಲರಿಗೆ ಕೊಟ್ಟ. + +ಅಧಿಕಾರಿ ಬರುವ ದಿವಸವಾದ ಶುಕ್ರವಾರ ಸಂಜೆ ಪಟೇಲರು, ಶ್ಯಾನುಭಾಗರು, ಅವರ ಉಗ್ರಾಣಿಗಳು ಇನ್ನೂ ನಾಲ್ಕಾರು ಜನರು ಸ್ವಾಗತಿಸಲು ಗೊತ್ತಾಗಿರುವ ಸ್ಥಳದಲ್ಲಿ ಸಂಜೆ ಹೋಗಿ ನಿಂತರು. ಕತ್ತಲಾಯಿತು, ಗಂಟೆ ಹತ್ತಕ್ಕೆ ಹತ್ತಿರವಾಯಿತು. ಪಟೇಲರು, “ಈ ದೊರೆ ಎಲ್ಲಿ ಕುಡಿದು ಬಿದ್ದಿದ್ದಾನೋ. ಇವನ ಪತ್ತೆಯೇ ಇಲ್ಲವಲ್ಲ, ಬದಲಿ ವರ್ತಮಾನವೂ ಇಲ್ಲ, ನಾವು ಹೋಗುವ” ಎಂದು ಅಲ್ಲಿದ್ದವರನ್ನು ಅವರವರ ಮನೆಗೆ ಹೋಗಲು ಹೇಳಿ ತಾವೂ ತಮ್ಮ ಮನೆಗೆ ಹೊರಟರು. + +ಮರುದಿವಸ ಶನಿವಾರ. ಅಮಾವಾಸ್ಯೆ, ಸಂಕ್ರಮಣ ಹೊರತು ಇತರ ಶನಿವಾರಗಳಲ್ಲಿ ಪಟೇಲರು ತಪ್ಪದೇ ತೈಲಾಭ್ಯಂಗ ಮಾಡುವುದು ಪದ್ಧತಿ. ಅದನ್ನು ಎಂದೂ ಅವರು ತಪ್ಪಿಸಲಾರರು. ಬೆಳಗಿನ ಉಪಾಹಾರದ ಅನಂತರ ಅವರ ಉಗ್ರಾಣಿಗಳಲ್ಲೊಬ್ಬರು ವೈದ್ಯ ವಾಸು ಪಂಡಿತನ ವಾತಾಹಾರಿ ತೈಲವನ್ನು ಪಟೇಲರ ಮೈಗೆ ಹಾಕಿ ಚೆನ್ನಾಗಿ ಮಾಲೀಷು ಮಾಡಬೇಕು. ಸುಮಾರು ಒಂದುವರೆ ಗಂಟೆಯ ತನಕ ಕಾದು ಎಣ್ಣೆ ಎಲ್ಲ ಮೈಗೆಳೆದು ಹಾಗೆ ಬೆವರಲು ತೊಡಗಿತು ಎಂದಾಗ ಅವರು ಸ್ನಾನಕ್ಕೆ ಏಳುತ್ತಿದ್ದರು. ಅಷ್ಟರೊಳಗೆ ಬಚ್ಚಲು ಮನೆಯಲ್ಲಿ ರಾಮ ಲಕ್ಷ್ಮಣ ಎಂಬ ದೊಡ್ಡ ಗುಡಾಣಗಳಲ್ಲಿ ಬಿಸಿನೀರು ಕಾಯಿಸಿ ದೊಡ್ಡ ತಾಮ್ರದ ಹಂಡೆಯೊಂದರಲ್ಲಿ ಗುಡಾಣಗಳಿಂದ ತೋಡಿ ಮೀಯಲು ಹದವಾದ ಬಿಸಿ ನೀರನ್ನು ಕೆಲಸದಾಕೆ ಕೊರಪೋಳು ಸಿದ್ಧಪಡಿಸಿಡಬೇಕು. ಎರಡು ಸೆರೆ ಸೀಗೆಪುಡಿ, ಎರಡು ಸೆರೆ ಬಾಗೆ ಮರದ ಕೆತ್ತೆಯ ಪುಡಿ ಸಹಿತ ಹೆಂಡತಿಯರ ಪೈಕಿ ಯಾರಾದರೊಬ್ಬರು ಪಟೇಲರು ಬಚ್ಚಲಿಗೆ ಕಾಲಿಡುವಾಗ ಸ್ನಾನ ಮಾಡಿಸಲು ಕಾಯುತ್ತಿರಬೇಕು. ಸಾವಕಾಶವಾಗಿ ಮೈಯಲ್ಲಿ ಒಂದಿಷ್ಟೂ ಎಣ್ಣೆಯ ಪಸೆ ಉಳಿಯದಂತೆ ತಿಕ್ಕಿ ತೀಡಿ, ಎರಡೂ ಗುಡಾಣಗಳು ಖಾಲಿಯಾದ ಮೇಲೆ ಮೂರು ಮೂರು ಸಲ ಮೈ ಒರೆಸಿಕೊಂಡು ಕೆಂಪಾದ ಮೈಯ ಪಟೇಲರು ಮನೆಗೆ ಬಂದು ಚಾವಡಿಯ ಉಯ್ಯಾಲೆಯಲ್ಲಿ ಕುಳಿತಾಗ ಮತ್ತೊಬ್ಬ ಹೆಂಡತಿ ಒಂದು ಗಿಂಡಿಯಲ್ಲಿ ಹದ ಬಿಸಿಯ ಹಾಲನ್ನು ತಂದುಕೊಡಬೇಕು. ಹಾಲನ್ನು ಕುಡಿದು ಉಯ್ಯಾಲೆಯಲ್ಲೇ ಪಟೇಲರು ಹೊದೆದು ಮಲಗುತ್ತಾರೆ. ಅರ್ಧ ಗಂಟೆಯ ಒಳಗೆ ಎದ್ದು ಪುನಃ ಮೈ ಒರಸಿ ದೇವರ ಪೂಜೆ ಮಾಡಿ ಮಧ್ಯಾಹ್ನದ ಊಟ ತೀರಿಸಿ ತಿರುಗಿ ಚಾವಡಿಗೆ ಬರುವಾಗ ಹಗಲು ಒಂದೂವರೆ ಗಂಟೆಯಾಗುತ್ತದೆ. ಅನಂತರ ಉಯ್ಯಾಲೆಯಲ್ಲೇ ಅರ್ಧಗಂಟೆ ನಿದ್ದೆ. + +ಈ ಶನಿವಾರ ಉಗ್ರಾಣಿ ಉಕ್ರಪ್ಪ ಪಟೇಲರಿಗೆ ಎಣ್ಣೆಹಾಕಿ ಮಾಲೀಷು ಮುಗಿಸುವ ಹೊತ್ತಿಗೆ ಬಂಗಲೆ ವಾಚರ್ ವಾಚಣ್ಣನ ಮಗ ಮಾದಪ್ಪ ಓಡೋಡಿ ಬಂದು, “ಒಬ್ಬ ಪರೆಂಗಿ ಅಧಿಕಾರಿಯೂ ನಾಲ್ಕಾರು ಜನ ಅವನ ಪರಿವಾರದವರೂ ಬಂಗಲೆಗೆ ಬಂದು ಬಿಟ್ಟಿದ್ದಾರೆ. ಧನಿಗಳನ್ನು ಬೇಗನೆ ಕರೆದುಕೊಂಡು ಬರಲು ಹೇಳಿದ್ದಾರೆ” ಎಂದು ಬಡಬಡಿಸಿದ. ಪಟೇಲರು “ನೀನು ಹೋಗು. ನಿನ್ನೆ ಬಂಗ್ಲೆಯಲ್ಲಿ ತಂದಿರಿಸಿದ ಎಳನೀರು ಬಾಳೆ ಹಣ್ಣುಗಳನ್ನು ಅವರಿಗೆ ಕೊಡುವಂತೆ ನಿನ್ನ ತಂದೆಯಲ್ಲಿ ಹೇಳು. ಬಟ್ಳರನಿಗೆ ಅಡುಗೆ ಸಾಮಾನುಗಳನ್ನೂ ಒದಗಿಸಲಿ. ನೀನು ಎರಡು ಸೇರು ಹಾಲು ಇಲ್ಲಿಂದ ಕೊಂಡು ಹೋಗು, ಕಾಫಿ ಕಾಯಿಸಲಿ. ನಾನು ಸ್ನಾನ ಮಾಡಿ ಊಟ ತೀರಿಸಿ ಬರುತ್ತೇನೆ. ಆಗ ಅವರ ಊಟವೂ ಮುಗಿದಿರುತ್ತದೆ” ಎಂದು ಮಾದನಲ್ಲಿ ಹೇಳಿ ಎಂದಿನಂತೆ ಸ್ನಾನಕ್ಕೆ ಹೋದರು. + +ಸ್ನಾನ ಮುಗಿಸಿ ಹಾಲು ಕುಡಿದು ಉಯ್ಯಾಲೆಯಲ್ಲಿ ಕೆಲ ಹೊತ್ತು ಹೊದೆದು ಮಲಗಿ ದೇವರ ಪೂಜೆಯಲ್ಲಿ ಅವರು ಇದ್ದಾಗ ಮಾದಪ್ಪ, ಅವನ ಜೊತೆಗೆ ದೊರೆಯ ಕೇಂಪು ಕ್ಲಾರ್ಕ್ ಹಾಗೂ ಇನ್ನೆರಡು ಜನರು ಪಟೇಲರ ಮನೆಯ ಅಂಗಳವನ್ನೇರಿದರು. ಮಾದಪ್ಪನ ಹೊರತಾಗಿ ಉಳಿದವರು ಸರಕಾರಿ ನೌಕರರೇ ಮುಂತಾದವರು ಬಂದರೆ ಕುಳ್ಳಿರಲೆಂದೇ ಇರುವ ಕಟ್ಟಡದಲ್ಲಿ ಹೋಗಿ ಕುಳಿತರು. ಅಲ್ಲಿಗೇ ಅವರ ಕಿವಿಗೆ ಪೂಜೆ ಮಾಡುತ್ತಿದ್ದ ಪಟೇಲರ ಮಂತ್ರ ಘೋಷ ಕೇಳಿ ಬರುತ್ತಿತ್ತು. ಇದರಿಂದಾಗಿ ಕೇಂಪ್ ಕ್ಲಾರ್ಕನಿಗೆ ತಾವು ಬಂದ ಸಂಗತಿಯನ್ನು ತಟ್ಟನೇ ಪಟೇಲರಿಗೆ ತಲುಪಿಸುವುದು ಹೇಗೆ? ಎಂಬ ಪ್ರಶ್ನೆ ಇದಿರಾಯಿತು. + +ಪಟೇಲರು ಪೂಜೆ ಮುಗಿಸಿ ನೇರ ಪಡಸಾಲೆಗೆ ಹೋಗಿ ಊಟ ತೀರಿಸಿ ಚಾವಡಿಯ ಬೋದಿಗೆ ಕಂಬಕ್ಕೆ ಒಂದು ಲೋಡನ್ನು ಒರಗಿಸಿಟ್ಟು ಅದಕ್ಕೆ ಬೆನ್ನು ಆನಿಸಿ ಕುಳಿತು ಪತ್ನಿ ದೇವಕಿ ತಂದಿರಿಸಿದ ವೀಳ್ಯದೆಲೆಯ ಹರಿವಾಣದಿಂದ ಒಂದೊಂದೇ ಅಡಕೆ ಹೋಳುಗಳನ್ನು ಬಾಯಿಗೆ ಎಸೆದರು. ನಾಲ್ಕು ವೀಳ್ಯದೆಲೆಗಳಿಗೆ ಕೈ ಹಾಕಿದರು. ಅಷ್ಟರಲ್ಲಿ ತನ್ನ ಊಟ ತೀರಿಸಿದ ಸೀತಾರಾಮಯ್ಯ ಹೊರಗೆ ಬಂದಾಗ ಮಾದಪ್ಪನನ್ನೂ ಉಳಿದವರನ್ನೂ ಕಂಡು ಏನು ಸಂಗತಿ ಎಂದು ವಿಚಾರಿಸಿದರು. “ಪಟೇಲರನ್ನು ಈಗಿಂದೀಗಲೇ ಕರೆದುಕೊಂಡು ಬನ್ನಿ. ನಾನು ಬರುವಾಗ ಮಾಮೂಲಿನಂತೆ ಗ್ರಾಮ ಗಡಿಯಲ್ಲಿ ತನ್ನನ್ನು ಸ್ವಾಗತಿಸಲಿಲ್ಲ ಆತ. ಬಂಗಲೆಯಲ್ಲಿ ತಾನೇ ನಿಂತು ನನ್ನ ಮೇಜವಾನಿಯ ಉಸ್ತುವಾರಿ ನೋಡಿಕೊಳ್ಳಲಿಲ್ಲ, ನಾನು ಬಂದು ಎರಡು ಗಂಟೆಯಾದರೂ ಪಟೇಲ ತನಗೆ ಮುಖ ತೋರಿಸಲಿಲ್ಲ, ಅವನಿಗೆ ಬಿಸಿ ಮುಟ್ಟಿಸುತ್ತೇನೆ ಎಂದೆಲ್ಲ ಹೇಳುತ್ತಾ ದೊರೆಗಳು ಹಾರಾಡುತ್ತಿದ್ದಾರೆ. ಈಗಿಂದೀಗ ಬಾರದಿದ್ದರೆ ಪಟೇಲರಿಗೆ ತೊಂದರೆಯಾಗುತ್ತದೆ” ಎಂದು ಕೇಂಪ್ ಕ್ಲಾರ್ಕ್ ಒಂದೇ ಉಸಿರಿನಲ್ಲಿ ಹೇಳಿದ. + +ಸೀತಾರಾಮಯ್ಯನ ಮುಖಾಂತರ ವಿಷಯ ಪಟೇಲ ಕಿವಿಗೆ ಬಿದ್ದಾಗ ಅವರು ಕೇಂಪ್ ಕ್ಲಾರ್ಕನನ್ನು ಚಾವಡಿಗೆ ಬರ ಮಾಡಿಕೊಂಡು, ಅಳುಕುತ್ತಲೇ ಬಂದ ಅವನನ್ನು ನೋಡಿದಾಕ್ಷಣ “ಏನು? ಆ ಮಂಗ ಮುಸುಡಿನವ ಬಂಗ್ಲೆ ಇಡೀ ಹಾರಾಡುತ್ತಿದ್ದಾನೆಯೇ? ನೆಲದ ಸಾರಣೆ ಉಳಿದಿದೆಯೋ ಅಥವಾ ಧೂಳಾಗಿ ಹಾರುತ್ತಾ ಇದೆಯೋ” ಎಂದು ಬಾಯಿಯಲ್ಲಿ ಅರ್ಧ ಜಗಿದಿದ್ದ ಎಲೆ ಅಡಕೆ ಹಿಂಟೆಯನ್ನೂ ‘ಥೂ’ ಎಂದು ಪೀಕದಾನಿಗೆ ಉಗುಳಿದರು. ಬಂದಾತ “ನಿಮ್ಮನ್ನು ನಮ್ಮೊಟ್ಟಿಗೇ ಕರೆದುಕೊಂಡು ಬಾರದಿದ್ದರೆ ನಮಗೆ ತಕ್ಕ ಶಾಸ್ತಿಯಾಗುತ್ತದೆ. ಆಂಗ್ಲ ದೊರೆ ತುಂಬಾ ದರ್ಪದವರು ಎಂಬ ಖ್ಯಾತಿ ಇದೆ. ಅವರು ಮೊದಲು ಮಿಲಿಟರಿಯಲ್ಲಿ ಅಧಿಕಾರಿಗಳಾಗಿದ್ದವರಂತೆ” ಎಂದು ಕಂಠದಾಳದಿಂದ ಉಸುರಿದ. + + + +ಪಟೇಲರು ಬೆನ್ನ ಹಿಂದೆ ಇದ್ದ ಲೋಡನ್ನು ಉಯ್ಯಾಲೆಯ ಮೇಲೆ ಎಸೆದರು. ಗಂಟಲ ಸೆರೆಯಲ್ಲಿದ್ದ ಅಡಕೆ ಚೂರುಗಳನ್ನು ಕ್ಯಾಕರಿಸಿ ಪೀಕದಾನಿಗೆ ಉಗುಳಿ ಎದ್ದು ನಿಂತು “ನಡಿ ಹೋಗು, ನಿನ್ನ ಬೆಂಕಿ ನವಾಬನಿಗೆ ನಾನು ಬರುತ್ತೇನೆಂದು ತಿಳಿಸು” ಎಂದು ಗರ್ಜಿಸಿದರು. + +ಪಟೇಲ್ ರುದ್ರಪ್ಪಯ್ಯನವರು ಸಿಟ್ಟು ಬಂದರೆ ಪ್ರಳಯ ಕಾಲದ ರುದ್ರನೇ ಎಂಬುದು ಊರವರ ಅನುಭವ. ಹತ್ತಿರ ಹತ್ತಿರ ಆರಡಿ ಎತ್ತರದ ಬಲವಾದ ಮೈಕಟ್ಟಿನ ಶರೀರ ಅವರದ್ದು. ತಾರುಣ್ಯದಲ್ಲಿ ಕೇರಳದ ಕಡೆಯಿಂದ ಯಾರೋ ಒಬ್ಬ ಕಳರಿ ಪಟ್ಟಿನವನನ್ನು ಕೆಲವು ಕಾಲ ತಮ್ಮ ಮನೆಯಲ್ಲಿಯೇ ಇರಿಸಿಕೊಂಡು ಆತನಿಂದ ಆ ವಿದ್ಯೆಯನ್ನೂ ತಕ್ಕಮಟ್ಟಿಗೆ ಕಲಿತವರು. ಕೇಂಪ್ ಕ್ಲಾರ್ಕ್ ಬೆನ್ನು ಹಾಕಿದ ಕೂಡಲೇ ಕುಳಿತವರು ಎದ್ದು ಹೋಗಿ ಕೋಣೆಯ ಬಾಗಿಲನ್ನು ದಡಾರನೆ ಮೆಟ್ಟಿ ತೆರೆದರು. ಮೂರು ಬೆರಳು ಅಗಲದ ಕೆಂಪು ಅಂಚಿನ ಧೋತ್ರವನ್ನು ಕಚ್ಚೆ ಹಾಕಿದರು. ಕಾಲರ್ ಇಲ್ಲದ ಕಪ್ಪು ಬಣ್ಣದ ಮುಚ್ಚು ಕೋಟನ್ನು ತೊಟ್ಟುಕೊಂಡರು. ಅರ್ಧಭದ್ರಾಕರಣದ ತಲೆಕೂದಲು ಜುಟ್ಟನ್ನು ಬಿಗಿಯಾಗಿ ಸೂಡಿ ಕಟ್ಟಿಕೊಂಡರು. ಕೊಳ್ಳೇಗಾಲದ ಚೌಕುಳಿ ಕೆಂಪುಶಾಲನ್ನು ಉತ್ತರೀಯ ಹಾಕಿ ಚಾವಡಿಯಲ್ಲಿದ್ದ ದೊಡ್ಡ ನಿಲುಗನ್ನಡಿಯ ಮುಂದೆ ನಿಂತರು. ಮುಖದಲ್ಲಿ ಪೂಜಾ ಕಾಲದಲ್ಲಿ ಹಾಕಿದ್ದ ತ್ರಿಪುಂಡ್ರ ಭಸ್ಮ. ಹಣೆಯ ಮಧ್ಯದಲ್ಲಿ ಕಾಸಿನಷ್ಟಗಲದ ಕುಂಕುಮ ಬೊಟ್ಟು, ಕಿವಿಗಳಲ್ಲಿ ತೂಗಾಡುವ ಚಿನ್ನದ ಒಂಟಿಗಳು, ಕೊರಳಲ್ಲಿ ಚಿನ್ನಕಟ್ಟಿದ ರುದ್ರಾಕ್ಷಿ ಮಾಲೆ, ಬಂಗಾರದ ಮುಂಗೈ ಸರಪಣಿ, ಒಟ್ಟಿನಲ್ಲಿ ನೂರು ಜನರ ಮಧ್ಯದಲ್ಲಿದ್ದರೂ ಎದ್ದು ಕಾಣುವ ಭವ್ಯ ಶರೀರ, ಅದಕ್ಕೊಪ್ಪುವ ವೇಷಭೂಷಣ, ಗೋಡೆಗೆ ತಗಲಿಸಿದ್ದ ಕಡವೆಯ ಕೊಂಬಿನಲ್ಲಿದ್ದ ರುಮಾಲನ್ನು ತಲೆಗೆ ಇಟ್ಟುಕೊಂಡರು. ಕನ್ನಡಿ ನೋಡಿ ಮೀಸೆ ಹುರಿ ಮಾಡಿಕೊಂಡರು, ಮೂಲೆಯಲ್ಲಿಟ್ಟಿದ್ದ ಬೆಳ್ಳಿಕಟ್ಟಿದ ನಾಗರ ಬೆತ್ತವನ್ನು ಕೈಯಲ್ಲಿ ಹಿಡಿದು ಚಾವಡಿಯಿಂದ ಅಂಗಳಕ್ಕೆ ಇಳಿದರು. + +ಅಷ್ಟರಲ್ಲಿ ಉಗ್ರಾಣಿಗಳಲ್ಲೊಬ್ಬ ಸಮಗಾರ ಸೇಸ ಪಟೇಲರಿಗೆಂದೇ ಮೆಹನತ್ತಿನಿಂದ ತಯಾರಿಸಿದ ಜೀಕಿನ ಮೆಟ್ಟುಗಳನ್ನು ಅವರ ಇದಿರಿಗೆ ತಂದಿಟ್ಟ. ಅವನ್ನು ಕಾಲಿಗೆ ಸಿಕ್ಕಿಸಿಕೊಂಡು ‘ಜರಕ್’ ‘ಜರಕ್’ ಎಂದು ಸದ್ದು ಮಾಡುತ್ತಾ ಬಯಲಿಗೆ ಇಳಿಯುವಾಗ ಅವರ ಇಬ್ಬರು ಉಗ್ರಾಣಿಗಳೂ ಒಕ್ಕಲುಗಳ ಪೈಕಿ ಏಳೆಂಟು ಮಂದಿಯೂ ಅವರನ್ನು ಹಿಂಬಾಲಿಸತೊಡಗಿದರು. + +ಇಷ್ಟರೊಳಗೆ ಬಂಗ್ಲೆಗೆ ದೊರೆ ಬಂದ ಸುದ್ದಿ ಮತ್ತು ಪಟೇಲರಿಗೂ ಆತನಿಗೂ ನಡೆದ ಇರಿಸು ಮುರಿಸಿನ ವಾರ್ತೆ ಬಯಲಿನಲ್ಲಿಯೂ ಪೇಟೆಯಲ್ಲಿಯೂ ಹರಡಿತ್ತು. ಹೀಗಾಗಿ ಪಟೇಲರು ಬಂಗಲೆಗೆ ಮುಟ್ಟುವಾಗ ಅವರ ಜೊತೆ ಸುಮಾರು ಐವತ್ತು ಜನರು ಸೇರಿಕೊಂಡರು. ಈಗಾಗಲೇ ಬಂಗಲೆಯಲ್ಲಿ ಏನು ನಡೆಯುತ್ತದೆ ಎಂದು ಕುತೂಹಲದಿಂದ ಬಂಗಲೆಯ ಆಸುಪಾಸಿನವರೂ ಜಮೆಯಾಗಿ ಪಟೇಲರದ್ದು ಪುಟ್ಟ ಪಾಳೆಯಗಾರನ ದಂಡೇ ಆಯಿತು. + +ದೊರೆ ಮತ್ತು ಆತನ ಪರಿವಾರದವರು ಬಂಗಲೆಯ ಒಳಗೆ ಊಟ ತೀರಿಸಿ ಕುಳಿತಿದ್ದರು. ಹೊರಗೆ ಯಾರೂ ಇರಲಿಲ್ಲ. ಪಟೇಲರು ಬಂಗಲೆಯ ಮೆಟ್ಟು ಕಲ್ಲಿನ ಹತ್ತಿರ ನಿಂತು ತಮ್ಮ ಕೈಯಲ್ಲಿದ್ದ ಬೆತ್ತವನ್ನು ಎರಡು ಸಲ ನೆಲಕ್ಕೆ ಕುಟ್ಟಿ ಸದ್ದು ಮಾಡಿದರು. ಆಗ ಕೋಟೆಯ ಒಳಗೆ ಕುಳಿತಿದ್ದ ದೊರೆ ತನ್ನ ಕೇಂಪ್ ಕ್ಲಾರ್ಕನೊಂದಿಗೆ ಸಿಟ್ಟಿನಿಂದ ಗಟ್ಟಿಯಾಗಿ ಹೇಳುತ್ತಿದ್ದ ಮಾತುಗಳು ಪಟೇಲರ ಕಿವಿಗೆ ಬಿದ್ದವು. ಬಹುಶಃ ಆತನಿಗೆ ಪಟೇಲರು ಬಂದದ್ದು ಗೊತ್ತಾಗಿ ಅವನು ಎದ್ದು ನಿಂತು ಬೂಟುಗಾಲನ್ನು ನೆಲಕ್ಕೆ ಅಪ್ಪಳಿಸುತ್ತಾ, “You dirty fellows, why so late to bring the rascal here?’’ (ಕೊಳಕು ಮನುಷ್ಯರೇ ಆ ಧೂರ್ತನನ್ನು ಕರೆತರಲು ಇಷ್ಟು ತಡವೇಕೆ) ಎಂದು ತಾರಕ ಸ್ವರದಲ್ಲಿ ಮಾತಾಡುತ್ತಾ ನಾಲ್ಕು ಹೆಜ್ಜೆ ಇದಿರು ಬಂದು ಕೇಂಪ್ ಕ್ಲಾರ್ಕನಲ್ಲಿ ಎಂದು ಏನೇನೋ ಬಡ ಬಡಿಸುತ್ತಾ ಬಂದವನೇ ಇದಿರು ನಿಂತಿರುವ ಪಟೇಲರ ಭವ್ಯಾಕೃತಿಯನ್ನು ನೋಡಿ ಅಲ್ಲೇ ನಿಂತು ಬಿಟ್ಟ. ಪಟೇಲರಿಗೆ ಇಂಗ್ಲೀಷ್ ಭಾಷೆ ಗೊತ್ತಿಲ್ಲದಿದ್ದರೂ ರಾಸ್ಕಲ್, ಬ್ಲಡೀಫೂಲ್ ಎಂಬುದು ಬೈಗಳೆಂದು ಗೊತ್ತಿತ್ತು. ಮತ್ತು ಅದು ತನ್ನನ್ನೇ ಗುರಿ ಇಟ್ಟು ಹೇಳಿದ್ದು ಎಂಬ ವಿಚಾರ ಅರ್ಥವಾಗಿತ್ತು. ಪಟೇಲರು ಬಾಯಿ ಬಿಡಲಿಲ್ಲ . ಕೇಂಪ್ ಕ್ಲಾಕ್, “ಇವತ್ತು ಗ್ರಾಮ ಗಡಿಯಲ್ಲಿ ತನ್ನನ್ನು ಸ್ವಾಗತಿಸದಿದ್ದಕ್ಕೂ, ಬಂಗ್ಲೆಯಲ್ಲಿಯೇ ಇದ್ದು ತನ್ನ ಯೋಗಕ್ಷೇಮವನ್ನು ನೋಡಿಕೊಳ್ಳದೆ ಇದ್ದದ್ದಕ್ಕೂ, ಹೇಳಿ ಕಳಿಸಿದಾಗ ಕೂಡಲೇ ಬಾರದಿದ್ದಕ್ಕೂ ನಿಮ್ಮ ಮೇಲೆ ದೊರೆಗಳಿಗೆ ಸಿಟ್ಟು ಬಂದಿದೆ, ಅವರಿಗೆ ನಿಮ್ಮ ಜವಾಬು ಬೇಕಾಗಿದೆ” ಎಂದ. ಪಟೇಲರ ಕಣ್ಣು ಕೆಂಪೇರಿತು. ಕರ್ಣನ ಸಾರಥಿಯಾಗಬೇಕೆಂದು ಕೌರವ ಶಲ್ಯನೊಡನೆ ಕೇಳಿಕೊಂಡಾಗ ಸಿಟ್ಟುಗೊಂಡ ಶಲ್ಯನನ್ನು ವರ್ಣಿಸುವ ಕುಮಾರವ್ಯಾಸನ “ಮಾತಿನ ಗಾಳಿ ತುಡುಕಿತು ಮನದ ರೋಷಜ್ವಾಲೆಯನು, ಮೀಸೆಗಳು ಕುಣಿದವು, ಕಾಯ ಕಂಪಿಸಿತು” ಎಂಬ ರೀತಿ ಪಟೇಲರ ದೇಹ ಸ್ಥಿತಿಯೂ ಆಯಿತು. + +ಪಟೇಲರು ಬೆತ್ತವನ್ನು ನೆಲಕ್ಕೆ ಕುಟ್ಟಿ ಬಂಗಲೆಯ ಮೆಟ್ಟಿಲುಗಳನ್ನು ಏರಿ ಜಗಲಿಯಲ್ಲಿ ನಿಂತು ಕೇಂಪ್ ಕ್ಲಾರ್ಕನನ್ನು ದಿಟ್ಟಿಸಿ ನೋಡಿ “ಬೊಗಳು, ನಿನ್ನ ಧನಿಯ ಹತ್ತಿರ, ಆತ ನನಗೆ ಪ್ರಯೋಗಿಸಿದ ಬೈಗಳಿಗಾಗಿ ಕ್ಷಮೆ ಕೇಳದಿದ್ದರೆ ಇಲ್ಲಿಂದ ಅವ ಹೆಜ್ಜೆ ತೆಗೆಯಲಿಕ್ಕಿಲ್ಲ. ನಾನು ಎಲ್ಲದಕ್ಕೂ ಸಿದ್ದನಾಗಿಯೇ ಬಂದವ. ಮಂಗ ಮುಸುಡಿನವನ ಬೈಗಳು ಕೇಳಿ ದಿನ ತೆಗೆಯುವ ಅಗತ್ಯ ನನಗಿಲ್ಲ. ಏನು ಮಾಡುತ್ತಾನೆ ಇವ? ನೋಟೀಸಿನಲ್ಲಿ ಹೇಳಿದ ದಿವಸ ಬಾರದೆ ಯಾವಾಗಲೋ ಬಂದು ನಾನು ಬರುವಾಗ ನೀನು ಇರಲಿಲ್ಲ ಎಂದು ಹೇಳುತ್ತಾನೆ, ನನ್ನದೇನು ಕತ್ತೆ ಚಾಕರಿಯೋ?” ಎಂದು ಬೆತ್ತವನ್ನು ನೆಲಕ್ಕೆ ಮತ್ತೊಮ್ಮೆ ಕುಟ್ಟಿ ಗಾಳಿಯಲ್ಲಿ ಬೀಸಿದರು. ಪಟೇಲರ ರುದ್ರಾವತಾರ ನೋಡಿ ದೊರೆ ಕೋಣೆಯ ಒಳಗೆ ಸೇರಿಕೊಂಡ. ಇಷ್ಟು ಹೊತ್ತಿಗೆ ಬಂಗಲೆಯ ಇದಿರು ಸಾಧಾರಣ ಹತ್ತಿರ ಹತ್ತಿರ ನೂರು ಜನರು ಸೇರಿದ್ದರು. ಅದರಲ್ಲಿ ಪಟೇಲರ ಕೂಲಿಯಾಳುಗಳೂ ಇಪ್ಪತ್ತೈದಕ್ಕೆ ಕಡಿಮೆ ಇಲ್ಲದಷ್ಟು ಹೆಂಗುಸರೂ ಇದ್ದರು. + +ಕೇಂಪ್ ಕ್ಲಾರ್ಕ್ ಒಳಗೆ ಹೋದವನೇ “ಪಟೇಲರನ್ನು ಸಮಾಧಾನಪಡಿಸುವುದೇ ಲೇಸು, ಇಲ್ಲದಿದ್ದರೆ ನಾವು ಇಲ್ಲಿಂದ ಕ್ಷೇಮವಾಗಿ ಹೋಗಲಾರೆವು. ಆತ ಇಲ್ಲಿಯ ತುಂಡರಸನೆಂದೇ ಹೇಳಬೇಕು. ಈಗಾಗಲೇ ಅವನ ಕಡೆಯ ಜನ ನೂರಕ್ಕೂ ಮಿಕ್ಕಿದೆ, ಸಂಜೆಯ ಹೊತ್ತಿಗೆ ಅದು ಇಮ್ಮಡಿಯಾಗಬಹುದು, ನಾವು ಅಪಾಯದಲ್ಲಿ ಸಿಲುಕಿದ್ದೇವೆ” ಎಂದು ಮುಂತಾಗಿ ನಯವಾಗಿ ತಿಳಿಸಿದ. ದೊರೆ ಒಂದು ನಿಮಿಷ ಯೋಚನೆ ಮಾಡಿದ. ಪಟೇಲರ ರೋಷಾವೇಷವನ್ನೂ ಬಂಗಲೆಯ ಮುಂದಿರುವ ಜನರನ್ನೂ ನೋಡಿದಾಗ ಕೇಂಪ್ ಕ್ಲಾರ್ಕನ ಮಾತಿನಲ್ಲಿ ಸತ್ಯಾಂಶ ಇದೆ ಎಂದು ಅವನಿಗೆ ಭಾಸವಾಯಿತು. + + + +ಐದು ನಿಮಿಷ ಕಳೆದ ಮೇಲೆ ದೊರೆ ಹೊರಗೆ ಬಂದವನೇ ಬೆಟ್ಟದ ಹಾಗೆ ಕದಲದೆ ನಿಂತ ಪಟೇಲರ ಹತ್ತಿರ ಹೋಗಿ ಬಲಗೈಯನ್ನು ನೀಡಿ “ಮಿಸ್ಟರ್ ಪಟೇಲ್, ಐ ಯಾಮ್ ಸಾರಿ, ಫರ್ಗೆಟ್ ದ ಪಾಸ್ಟ್” ಎಂದು ಅವರ ಕೈ ಕುಲುಕಿಸಿದ. ಪಟೇಲರು ಹತ್ತೂ ಬೆರಳಿಗೆ ಆರು ಉಂಗುರ ಸಿಕ್ಕಿಸಿದ್ದ ತಮ್ಮ ಎರಡು ಕೈಗಳಿಂದಲೂ ದೊರೆಯ ಕೈಯನ್ನು ಬಿಗಿಯಾಗಿ ಹಿಡಿದರು. ದೊರೆಗೆ ಇದು ಬರೇ ಪುಳಿಚಾರು ಬ್ರಾಹ್ಮಣನ ಕೈಯಲ್ಲ, ಸಮಯ ಬಿದ್ದರೆ ಉಕ್ಕಿನ ಸಲಾಖೆಯೂ ಆದೀತು ಎಂಬ ಅರಿವಾಗಿ ಪಟೇಲರ ಹಿಡಿತದಿಂದ ಕೈಯನ್ನು ಜಾರಿಸಿ ಹಿಂದೆ ತೆಗೆದುಕೊಂಡ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_415.txt b/Kenda Sampige/article_415.txt new file mode 100644 index 0000000000000000000000000000000000000000..c7af1c88d7368cf13f005582c277b02f35f5efe9 --- /dev/null +++ b/Kenda Sampige/article_415.txt @@ -0,0 +1,137 @@ + + +ಚಾಂದಿನಿ ಮನೋಹರ್ ನ ಜೊತೆ ಓಡಿಹೋದಳೆಂಬ ವಾರ್ತೆ ಊರೆಲ್ಲ ಹಬ್ಬಿದೆ. ಚಾಂದಿನಿ ಕುರಿತು ಚೆನ್ನಾಗಿ ತಿಳಿದವರೆಲ್ಲ “ಇದೇನಪ್ಪಾ.. ಹೀಗೆ ಮಾಡಿದಳು ಆ ಹುಡುಗಿ”ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡರು. + +ಮತ್ತೆ ಕೆಲವರು “ಯಾವಾಗ ನೋಡಿದರೂ ಗೋಷಾ… ಗೋಷಾ ಎನ್ನುತ್ತಿದ್ದಳು.. ಹಾಗೆ ಹೇಳುತ್ತಿದ್ದರೆ ಸಂಪ್ರದಾಯಸ್ಥ ಹುಡುಗಿ ಎಂದುಕೊಂಡೆವು.. ಆದರೆ ಹೀಗೆ ಮಾಡುತ್ತಾಳೆಂದು ಯಾವಾಗಲೂ ಅಂದುಕೊಳ್ಳಲಿಲ್ಲಪ್ಪ” ಎಂದು ಕೊಂಕಾಗಿ ಮಾತನಾಡಿದರು. + +ತಾಯಿ ಮಾಬುನ್ನಿಗೆ ಕಣ್ಣೀರು ಉಕ್ಕಿ ಬರುತ್ತಿದೆ. ಯಾರೋ ಏನೋ ಅಂದರೆಂದೋ, ಇಲ್ಲವೇ ಮಗಳು ಹೀಗೆ ಮಾಡಿದಳೆಂದು ಅಲ್ಲ ಆಕೆಯ ಬಾಧೆ.ಆಕೆಗಿರುವ ನೋವೆಲ್ಲ “ಏನಿದು..? ಈ ಪ್ರದೇಶಕ್ಕೆ ಏನು ದರಿದ್ರ ಆವರಿಸಿದೆ? ಅದು ಯಾವಾಗ ತೊಲಗುತ್ತದೆ?” ಎಂಬುದೇ. + +ಅದ್ಯಾವಾಗೊ ಚಿಕ್ಕಂದಿನಲ್ಲಿ ಶಾಲೆಯಲ್ಲಿ ಕಲಿತದ್ದು ನಾಲ್ಕು ಅಕ್ಷರಗಳೇ ಆದರೂ ಅಪಾರವಾದ ಜೀವನಾನುಭವ ಮಾಬುನ್ನಿಯದು. ಆಕೆಗೇನು ಮಾತನಾಡಬೇಕೆಂದು ಅರ್ಥವಾಗುತ್ತಿಲ್ಲ. ಮನೆಯಲ್ಲಿ ವೈರಿನ ಮಂಚದ ಮೇಲೆ ಮೌನವಾಗಿ ಕುಳಿತು ಬೀದಿಯತ್ತ ನೋಡುತ್ತಿದ್ದಾಳೆ. ನಿಜಕ್ಕೆ ಆಕೆ ಬೀದಿ ನೋಡುತ್ತಿದ್ದಾಳೋ ಇಲ್ಲವೇ ಶೂನ್ಯದತ್ತ ನೋಡುತ್ತಿರುವಳೋ ಕೂಡ ಹೇಳುವುದು ಕಷ್ಟ. + +ಆದರೆ ಚಾಂದಿನಿ ವಿಷಯ ಸಾಧ್ಯವಾದಷ್ಟು ಎಲ್ಲರಿಗೂ ತಿಳಿಯುವ ಮೊದಲೇ ಪರಿಹರಿಸಬೇಕೆಂದು ತಂದೆ ಫಕೃದ್ದೀನ್ ಶತಪ್ರಯತ್ನ ಮಾಡಿದನಾದರೂ ಪ್ರಯೋಜನವಾಗಲಿಲ್ಲ. ಮೊದಲೇ ಅದು ಚಿಕ್ಕ ಊರು. ವಿಷಯ ಕ್ಷಣಮಾತ್ರದಲ್ಲಿ ಎಲ್ಲರ ಕಿವಿಗೂ ಮುಟ್ಟಿತು. ಮಾಮೂಲಿ ಸುದ್ದಿಗಿಂತಲೂ ಇದು ವೇಗವಾಗಿ ಹರಡಿದೆ. ಅವರಿವರು ಬಂದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೆ, ಫಕೃದ್ದೀನ್ ಗೆ ಮೈಯೆಲ್ಲ ಉರಿಯುತ್ತಿದೆ, ಆದರೆ ಹೊರಗೆ ಏನೂ ಮಾತನಾಡಲಾಗುತ್ತಿಲ್ಲ. ಆತನಿಗೆ ತನ್ನದೇ ಸಾಕಷ್ಟು ಯೋಚನೆಗಳಿವೆ. + +ಮನೋಹರ್ ಕುಮ್ಮರಾಂ ಹಳ್ಳಿ ನಾಗಿರೆಡ್ಡಿಯ ಮಗ. ನಾಗಿರೆಡ್ಡಿ ದೊಡ್ಡಮನುಷ್ಯ. ತಪ್ಪು ಎಲ್ಲಿ ನಡೆದಿದೆಯೋ ಆತನು ಗ್ರಹಿಸಬಲ್ಲ. ಮನೋಹರ್, ಚಾಂದಿನಿ ಇಬ್ಬರೂ ವೀರಪುನಾಯುನಿ ಹಳ್ಳಿಯ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಎರಡನೇ ವರ್ಷ ವ್ಯಾಸಂಗ ಮಾಡುತ್ತಿದ್ದಾರೆ. ಇವರಿಬ್ಬರಿಗೂ ಅಲ್ಲಿಯೇ ಪರಿಚಯವಾಗಿರಬಹುದು. ಒಂದೆರಡು ಬಾರಿ ಇವರಿಬ್ಬರೂ ತಮ್ಮ ಊರಿನ ನದಿಯ ಬಳಿ ಮರಳ ರಾಶಿಯ ಬಳಿ ಕಾಣಿಸಿದರೆಂದು ಈಗ ವಿಚಾರಣೆಯ ಮೂಲಕ ತಿಳಿಯುತ್ತಿದೆ. + +ಇವರು ಹೋಗಿದ್ದರೆ ಎಲ್ಲಿ ಹೋಗಿರುತ್ತಾರೆ? ಅರ್ಜೆಂಟಾಗಿ ನಾಗಿರೆಡ್ಡಿಯ ಜೊತೆ ಮಾತನಾಡಬೇಕು. ಮಾತನಾಡಿದರೆ ಒಳ್ಳೆಯದಾ.. ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ಕೊಟ್ಟರೆ ಒಳ್ಳೆಯದಾ? ಪೊಲೀಸ್ ಸ್ಟೇಷನ್ನಿನಲ್ಲಿ ಕಂಪ್ಲೆಂಟ್ ನೀಡಿದರೆ ಕನಿಷ್ಠಪಕ್ಷ ಅವರು ಎಲ್ಲಿದ್ದಾರೋ, ಹೇಗಿದ್ದಾರೋ ಎಂದಾದರೂ ತಿಳಿಯುತ್ತದೆ. + +ತಾನು ಹೇಗಿದ್ದರೂ ಮನುಷ್ಯರನ್ನಿಟ್ಟು ಹುಡುಕಿಸಲಾರ. ನಾಗಿರೆಡ್ಡಿಯ ಮೇಲೆ ಅವಲಂಭಿಸುವುದು ಕೂಡ ಆತನಿಗೆ ಸರಿಯೆನಿಸಲಿಲ್ಲ. ಅದಕ್ಕೆ ಪೊಲೀಸ್ ಸ್ಟೇಷನ್ನಿನಲ್ಲಿ ಕಂಪ್ಲೆಂಟ್ ಮಾಡಲು ನಿರ್ಧರಿಸಿ ಹೋಗಿ ಕೊಟ್ಟು ಬಂದನು. + +ಮನೆಗೆ ಬಂದ ಸ್ವಲ್ಪಹೊತ್ತಿಗೆ ಅವನ ಮುದ್ದಿನ ತಂಗಿ ನಾಜಿಯಾ ನಂದಿ ಮಂಡಲಂನಿಂದ ಬಂದಿಳಿದಳು. ಆ ಊರಿಗೆ ಈ ಊರಿಗೆ ತುಂಬಾ ದೂರವೇನಲ್ಲ. ಹಾಗಾಗಿ ಆಕೆಗೂ ವಿಷಯ ಬೇಗನೆ ತಿಳಿಯಿತು. ಗಂಟಲು ಒಣಗಿದ್ದರಿಂದ ನಾಜಿಯಾ ಬಂದವಳೇ ಬುರ್ಖಾ ಕೂಡ ತೆಗೆಯದೆ ಗುಟುಕು ನೀರು ಕುಡಿಯಲು ಕೋಣೆಯ ಒಂದು ಮೂಲೆಯಲ್ಲಿದ್ದ ಮಡಿಕೆಯ ಬಳಿ ಹೋದಳು. ಅವಳನ್ನು ಗೇಲಿಮಾಡಿದಂತಿತ್ತು ಖಾಲಿ ಮಡಿಕೆ. + +“ಏನತ್ತಿಗೆ.. ಬಾಯಾರಿಕೆಯಾಗುತ್ತಿದೆ. ತೊಟ್ಟು ನೀರು ಕೂಡ ಇಲ್ಲದೆ ಹೇಗಿದ್ದೀಯ ಮನೆಯಲ್ಲಿ..” ಎಂದು ಆಶ್ಚರ್ಯ ವ್ಯಕ್ತಪಡಿಸಿದಳು.ಆ ಮಾತು ಕೇಳುತ್ತಲೇ ಮಾಬುನ್ನಿಗೆ ದುಃಖ ಉಮ್ಮಳಿಸಿತು, “ಇಷ್ಟು ಕಷ್ಟಕ್ಕೆ ಈ ನೀರೇ ಅಲ್ಲವೇ ತಾಯಿ ಕಾರಣ” ಎಂದಳು ಭಯದಿಂದ.ನಾಜಿಯಾಳಿಗೆ ಏನೂ ಅರ್ಥವಾಗಲಿಲ್ಲ. + +“ಸರಿ.. ಬಿಂದಿಗೆ ಎಲ್ಲಿದೆಯೋ ಹೇಳು.. ನಾನು ಹೋಗಿ ತರುತ್ತೀನಿ.. ನೀರು” ಎಂದಳು.ಮಾಬುನ್ನಿ ಮಾತನಾಡಲಿಲ್ಲ. + +ಬಿಂದಿಗೆಯನ್ನು ತಾನೇ ಹುಡುಕಿಕೊಂಡಳು. ಅತ್ತಿತ್ತ ಹುಡುಕಿ ಕೈಗೆ ಸಿಕ್ಕಿದ ಹಳದಿ ಬಣ್ಣದ ಪ್ಲಾಸ್ಟಿಕ್ ಬಿಂದಿಗೆ ಕೈಗೆ ತೆಗೆದುಕೊಂಡಳು. ಮತ್ತೊಂದು ಬಿಂದಿಗೆಗಾಗಿ ಹುಡುಕಿದಳು. + +“ಇನ್ನೊಂದು ಬಿಂದಿಗೆ ಇರಬೇಕಲ್ಲ ಅತ್ತಿಗೆ.. ಅದು ಎಲ್ಲಿದೆ ಹೇಳು.. ಒಂದೇ ಸಲ ಎರಡು ಬಿಂದಿಗೆಯಲ್ಲಿ ತೆಗೆದುಕೊಂಡು ಬರುತ್ತೇನೆ..” ಎಂದಳು ನಾಜಿಯಾ. + +ನಾಜಿಯಾಗೆ ಹಳ್ಳಿಯಲ್ಲಿ ಸೊಂಟದ ಮೇಲೆ ಒಂದು ಬಿಂದಿಗೆ, ಭುಜದ ಮೇಲೆ ಮತ್ತೊಂದು ಬಿಂದಿಗೆ ಎತ್ತಿಕೊಂಡು ನೀರು ತರುವ ಅಭ್ಯಾಸವಿದೆ. ಆ ಅಭ್ಯಾಸದಿಂದಲೇ ಕೇಳಿದಳು. ಆದರೆ ಆ ಬಿಂದಿಗೆ ಎಲ್ಲಿದೆಯೆಂದು ಹೇಳುತ್ತಾಳೆ ಮಾಬುನ್ನಿ? ಸ್ವಲ್ಪಹೊತ್ತು ತಡಬಡಾಯಿಸಿ ‘ಪಕ್ಕದ ಮನೆಯವರು ತೆಗೆದುಕೊಂಡು ಹೋಗಿದ್ದಾರೆ ಬಿಡು.. ನಾಜಿಯಾ” ಎಂದು ಹೇಳಿದಳು ಸುಮ್ಮನೆ. + +‘ಸರಿ..’ ಎಂದು ಇದ್ದ ಒಂದು ಬಿಂದಿಗೆಯನ್ನು ತೆಗೆದುಕೊಂಡು ಬೋರೆವೆಲ್ ಹುಡುಕುತ್ತ ಹೊರಟಳು ನಾಜಿಯಾ. + +ಫಕೃದ್ದೀನ್ ಮನೆಯ ಹೊರಗೆ ವರಾಂಡಾದಲ್ಲಿ ಜಗಲಿಯ ಮೇಲೆ ಕುಳಿತು ಬೀಡಿ ಹೊಗೆ ಬಿಡುತ್ತಿದ್ದಾನೆ. + +ನಾಜಿಯಾ ಹೊರಟ ಕಡೆಗೇ ಸ್ವಲ್ಪಹೊತ್ತು ನೋಡಿ, ನಿಧಾನವಾಗಿ ಯೋಚನೆಯಲ್ಲಿ ಮುಳುಗಿದಳು ಮಾಬುನ್ನಿ. + +ಮಾಬುನ್ನಿ ಮನೆಯಲ್ಲಿ ಎರಡು ಪ್ಲಾಸ್ಟಿಕ್ ಬಿಂದಿಗೆಗಳಿವೆ. ಒಂದೇನೋ ಹಳದಿಯದು ಅಂದರೆ ಈಗ ನಾಜಿಯಾ ನೀರಿಗೆ ತೆಗೆದುಕೊಂಡು ಹೋದಳಲ್ಲವಾ ಅದು. ಮತ್ತೊಂದು ಕೆಂಪದು.. ಹೂವುಗಳಿದ್ದದ್ದು. + +ನಿನ್ನೆ ಸರಿಯಾಗಿ ಇದೇ ಸಮಯಕ್ಕೆ ಈಗ ಇದೇ ನಾಜಿಯಾ ಹೊರಟಂತೆಯೇ ಆ ಕೆಂಪು ಬಿಂದಿಗೆಯನ್ನು ತೆಗೆದುಕೊಂಡು ನೀರಿಗೆ ಹೊರಟಳು ಚಾಂದಿನಿ. ಹೋದ ಹುಡುಗಿ ಹಾಗೆಯೇ ಮಾಯವಾಗುತ್ತಾಳೆಂದು ಮಾಬುನ್ನಿ ಊಹಿಸಿರಲಿಲ್ಲ. ಅಲ್ಲಿಗೂ ನಿನ್ನೆ ಸಂಜೆ ಬೋರವೆಲ್ ಬಳಿಗೂ ಹೋಗಿ ನೋಡಿಕೊಂಡು ಬಂದಿದ್ದನು ಫಕೃದ್ದೀನ್. ಚಾಂದಿನಿ ಸುಳಿವಾಗಲಿ ಆಕೆ ತೆಗೆದುಕೊಂಡು ಹೋದ ಆ ಬಿಂದಿಗೆಯ ಸುಳಿವಾಗಲಿ ಯಾವುದೂ ಸಿಗಲಿಲ್ಲ. ಚಾಂದಿನಿ ಬಿಂದಿಗೆಯನ್ನು ಯಾರ ಮನೆಯಲ್ಲಾದರೂ ಇಟ್ಟು ಹೋದಳೇನೋ.. ಇಲ್ಲವೇ ಅಲ್ಲೇ ಬೋರ್ ವೆಲ್ ಬಳಿ ಬಿಟ್ಟರೆ ಇನ್ನಾರಾದರೂ ತೆಗೆದುಕೊಂಡು ಹೋದರೇನೋ..! ಎರಡನೆಯದೇ ನಿಜವಾಗಿರುತ್ತದೆ. + +ಇಷ್ಟಕ್ಕೆ ಇದೆಲ್ಲಕ್ಕೂ ಕಾರಣ, ತಾನೇ. ತಾನೇ ಬಲವಂತವಾಗಿ ಬಿಂದಿಗೆ ಕೈಯಲ್ಲಿಟ್ಟು ಚಾಂದಿನಿಯನ್ನು ನೀರಿಗೆ ಕಳುಹಿಸಿದ್ದು. ಬಾಯಾರಿಕೆಯಿಂದ ಸತ್ತಾದರೂ ಹೋಗುತ್ತೇನಾಗಲಿ ನೀರಿಗೆ ಮಾತ್ರ ಹೋಗುವುದಿಲ್ಲ ಎಂದು ಆ ಹುಡುಗಿ ಎಷ್ಟು ಮೊಂಡು ಹಿಡಿದಳು. ನೀರು ತರುವುದೆಂದರೆ ಅವಳಿಗಷ್ಟು ಬೇಜಾರು. + +ತಾವೊಬ್ಬರೇ ಅಲ್ಲವಲ್ಲ.. ಇಡೀ ಊರಿನವರೆಲ್ಲ ಹೀಗೇ ನೀರಿಗೆ ಗೋಳಾಡುತ್ತಿರುವುದು. ಈ ದರಿದ್ರ ಯಾವತ್ತಿನದು? ಯಾವಾಗ ನೋಡಿದರೂ ರಾಯಲಸೀಮೆಗೆ ಯಾವುದೋ ಒಂದು ಮಾಡುತ್ತೀವಿ.. ಎಂದು ಹೇಳುವವರೇ ಹೊರತು ಮಾಡಿದ್ದೇನೂ ಇಲ್ಲ.. ಯಾವುದಾದರೂ ತೊರೆಯೋ.. ಯಾವುದೋ ಕಾಲುವೆಯೋ ಹರಿದು ಭೂತಾಯಿ ತಂಪಾಗಿದ್ದು ಇಲ್ಲ. ಬೋರ್ ವೆಲ್ ಗಳಿಗೆ ನೀರು ಹತ್ತಿದ್ದೂ ಇಲ್ಲ. + +ಅವೆಲ್ಲ ಹಾಗಿರಲಿ ಒಂದು ರೀತಿ ತಾನೇ ಚಾಂದಿನಿಯನ್ನು ನೀರಿಗೆ ಕಳುಹಿಸಿ ಮನೋಹರನೊಂದಿಗೆ ಓಡಿಹೋಗುವ ಹಾಗೆ ಮಾಡಿದ್ದು. ಆಕೆಗೆ ಒಮ್ಮೆಲೇ ನೂರಾರು ಆಲೋಚನೆಗಳು ಬಂದು ತಲೆ ಬಿಸಿಯಾಯಿತು. + +ಆಕೆಯ ಆಲೋಚನೆಗೆ ತಕ್ಕಂತೆಯೇ ಹೊರಗೆ ರಣ ಬಿಸಿಲು. ಆ ಬಿಸಿಲಿನಲ್ಲಿ ಬಂದ ಹೆಣ್ಣುಮಗಳಿಗೆ ಒಂದು ಗುಟುಕು ನೀರು ನೀಡಲಾರದ ದುಸ್ಥಿತಿ. ಮೇಲಾಗಿ ಬಿಸಿಲಿನಲ್ಲಿ ಬಂದ ಅವಳೇ ಬಿಂದಿಗೆ ತೆಗೆದುಕೊಂಡು ನೀರಿಗೆ ಹೊರಟಳು. “ಇದೇನು ಕಷ್ಟ ತಂದಿಟ್ಟೆಯಪ್ಪಾ.. ದೇವರೇ..” ಎಂದುಕೊಂಡಳು ಮಾಬುನ್ನಿ ಮನಸ್ಸಿನಲ್ಲಿ. ಆಕೆಗೆ ನಿನ್ನೆ ನಡೆದ ಘಟನೆಗಳು ಒಂದೊಂದಾಗಿ ಕಣ್ಣಮುಂದೆ ತೇಲುತ್ತಿವೆ. + + + +ಬರಕ್ಕೆ ಹೊಲಗಳಲ್ಲಿರುವ ಬೋರ್ ವೆಲ್ಗಳೇ ಅಲ್ಲ ಊರಿನಲ್ಲಿರುವ ಬೋರ್ ಗಳೂ ಒಣಗಿಹೋಗುತ್ತಿವೆ. ಮೊನ್ನೆಯವರೆಗೂ ಮೇದರ ಬೀದಿಯಲ್ಲಿ ಸುಬ್ಬಮ್ಮನ ಮನೆಯ ಬಳಿ ಬೋರ್ ವೆಲ್ ಇದ್ದಿತು. ಅದನ್ನು ಮೆಲ್ಲಗೆ ಹೊಡೆಯುವಂತೆ ಸುಬ್ಬಮ್ಮ ಎಲ್ಲರಿಗೂ ಹೇಳುತ್ತಿದ್ದಳು. + +“ಯಾವಾಗೆಂದರೆ ಆಗ ದಬಾ ದಬಾ ಎಂದು ಬೋರ್ ವೆಲ್ ಅನ್ನು ಹಾಗೆ ಹೊಡೆಯುತ್ತಿದ್ದೀರೇ. ಅದು ಕೂಡ ಕೆಟ್ಟುಹೋದರೆ ಉಚ್ಚೆ ಕುಡಿದು ಬದುಕಬೇಕು ನನ್ ಮ..ಳಾ… ನನ್ ಸ… ಮುಂ.. ರಾ” ಎಂದು ಅಡಿಕೆಎಲೆ ಜಗಿದ ಬಾಯಿ ಅಷ್ಟಗಲ ಮಾಡಿ ಎಲ್ಲರನ್ನು ಗದರಿಕೊಳ್ಳುತ್ತಿದ್ದಳು. + +ಯಾರು ಕೇಳಿದರು? ಯಾರೂ ಕೇಳಲಿಲ್ಲ. ಎಲ್ಲರೂ ಸುಬ್ಬಮ್ಮನನ್ನು ಬೈದುಕೊಳ್ಳುವವರೇ. + +“ಬೋರ್ ವೆಲ್ ಅವಳೊಬ್ಬಳ ಆಸ್ತಿ ಇದ್ದಹಾಗೆ ಎಲ್ಲರನ್ನು ಓ… ದಬಾಯಿಸುತ್ತಿದ್ದಾಳೆ” ಎಂದು ಆಡಿಕೊಳ್ಳುತ್ತಿದ್ರು. + +ಒಂದು ದಿನ ಬೆಳಿಗ್ಗೆ ಮೇದರ ಬೀದಿಯ ಆ ಬೋರ್ ವೆಲ್ ಕೆಟ್ಟುಹೋಯಿತು. ಇನ್ನು ಪಂಚಾಯಿತಿಯವರು ಬಂದು ಬೋರ್ ವೆಲ್ ರಿಪೇರಿ ಮಾಡುವವರೆಗೂ ಏನು ಮಾಡುವುದು? ಅದಕ್ಕೆ ಎಲ್ಲರೂ ಊರ ಹೊರಗೆ ಛತ್ರದ ಬಳಿಯಿರುವ ಬೋರ್ ವೆಲ್ ಬಳಿ ಜಮಾಯಿಸಲಾರಂಭಿಸಿದರು. ಅಲ್ಲಿ ಒಂದು ಬೋರ್ ವೆಲ್ ಇದೆಯೆಂದು ನಿನ್ನೆ ಮೊನ್ನೆಯವರೆಗೂ ಯಾರಿಗೂ ತಿಳಿದಿರಲಿಲ್ಲ. ರಾಜ್ಯ ವಿಭಜನೆಯಾದಮೇಲೆ ಒಂಟಿಮಿಟ್ಟ ರಾಮಾಲಯ ಮುನ್ನೆಲೆಗೆ ಬಂದಂತೆ, ಊರಿನಲ್ಲಿರುವ ಬೋರ್ ವೆಲ್ ಗಳು ಕೆಲವು ಒಣಗಿ, ಕೆಲವು ಕೆಟ್ಟುನಿಂತಮೇಲೆ ಛತ್ರದ ಬಳಿಯಿರುವ ಬೋರ್ ವೆಲ್ ಕಳೆಗಟ್ಟಿತು. + +ಆ ಬೋರ್ ವೆಲ್ ಬಹಳ ದೂರವಿತ್ತು. ಹೋಗಲು ಕಾಲು ಗಂಟೆ, ಬರಲು ಕಾಲು ಗಂಟೆ. ತಮ್ಮ ಸರದಿಗಾಗಿ ಸಾಲಿನಲ್ಲಿ ನಿಲ್ಲಲು ಅರ್ಧ ಗಂಟೆ.. ಹೀಗೆ ಒಂದು ಗಂಟೆ ಕಷ್ಟ ಪಡದ ಹೊರತು ಒಂದು ಬಿಂದಿಗೆ ನೀರು ತರುವುದು ಸಾಧ್ಯವಿರಲಿಲ್ಲ. ಮೇಲಾಗಿ ಭಾರ. + +ಯಮನ ಬಳಿಯಿರುವ ಗದೆಯನ್ನು ಎತ್ತಿದಹಾಗೆ ಇಷ್ಟದೈವಕ್ಕೆ ನಮಸ್ಕರಿಸಿ ಬೋರ್ ವೆಲ್ ರಾಡ್ ಎತ್ತಿ ಕೆಳಕ್ಕೆ ಮೇಲಕ್ಕೆ ದಬದಬಾ ಹೊಡೆದರೆ ಅದರಿಂದ ತೊಟಕ್ ತೊಟಕ್ ಎಂದು ಒಂದೊಂದೇ ಹನಿಯುದುರಿ ಬಿಂದಿಗೆ ತುಂಬುವಷ್ಟರಲ್ಲಿ ಭುಜಗಳು ಹಿಂಡಿಹಿಪ್ಪೆಯಾಗಿರುತ್ತವೆ. ಊರ ಹೊರಗಿನ ಛತ್ರದ ಬಳಿ ಕಾಲುನಡಿಗೆಯಲ್ಲಿ ದೂರಬಾರ ಹೋಗುವವರಿಗೆ ದಾಹ ತೀರಿಸಿಕೊಳ್ಳಲು ಅನುಕೂಲವಾಗಲೆಂದು ಸರ್ಕಾರ ಆ ಬೋರ್ ವೆಲ್ ಕೊರೆಸಿತು. ಆದರೆ ಊರ ಜನರೇ ದಾರಿಹೋಕರಾಗಿ ಆ ಬೋರ್ ವೆಲ್ ಬಳಿ ಸಾಲುನಿಲ್ಲುವರೆಂದು ಯಾರೂ ಊಹಿಸಲಿಲ್ಲ. + +ನೀರಿಗಾಗಿ ಎಲ್ಲರೂ ಆ ಬೋರ್ ವೆಲ್ ಮೇಲೆ ಅವಲಂಭಿಸಿದಾಗ ಮನೆಗಳಲ್ಲಿ ಜಗಳಗಳು ಆರಂಭವಾದವು. ಹೆಂಗಸರು “ನಾವಿನ್ನು ನೀರು ತರಲಾರೆವು ದಮ್ಮಯ್ಯ…” ಎಂದು ಬಾಯಿಬಾಯಿ ಬಡಿದುಕೊಳ್ಳಲಾರಂಭಿಸಿದರು. ಕೆಲವು ಹುಡುಗರು ಕೂಡ “ನಾವು ನೀರು ತರುವುದಿಲ್ಲ..” ಎಂದು ಹಿರಿಯರಿಗೆ ಎದುರು ಮಾತನಾಡಲಾರಂಭಿಸಿದರು. ಇನ್ನು ಮುದುಕ-ಮುದುಕಿಯರು ನೀರ ಮಾತೆತ್ತಿದರೆ ಬೆದರಿಹೋಗುತ್ತಿದ್ದಾರೆ. ಇದರಿಂದಾಗಿ ದೊಡ್ಡ ದೊಡ್ಡ ಗಂಡಸರು ಕೂಡ ಬಿಂದಿಗೆ ಹಿಡಿದು ಬೋರ್ ವೆಲ್ ಬಳಿ ಹೋಗುವ ಬಾಧೆ ತಪ್ಪುತ್ತಿಲ್ಲ. + +ಕೆಲವರು ತಳ್ಳು ಗಾಡಿಯಲ್ಲಿ ಬಿಂದಿಗೆಗಳನ್ನಿಟ್ಟುಕೊಂಡು ತಳ್ಳಿಕೊಂಡು ಬರುತ್ತಿದ್ದರೆ ಮತ್ತೆ ಕೆಲವರು ಸೈಕಲ್ ಗಳ ಮೇಲೆ ಬಿಂದಿಗೆಗಳನ್ನಿಟ್ಟುಕೊಂಡು ತೆಗೆದುಕೊಂಡು ಬರುತ್ತಿದ್ದಾರೆ. ಇನ್ನು ಎಳೆ ಮಕ್ಕಳ ತಾಯಂದಿರು ಮಕ್ಕಳನ್ನು, ಬಿಂದಿಗೆಗಳನ್ನು ಸಮಾನವಾಗಿ ಎತ್ತಿಕೊಂಡು ಬರುತ್ತಿದ್ದಾರೆ. ಇನ್ನು ಬಸುರಿ ಹೆಂಗಸರು ಅಲ್ಲೊಂದು ಹೆಜ್ಜೆ.. ಇಲ್ಲೊಂದು ಹೆಜ್ಜೆ ಹಾಕುತ್ತ ಬಿಂದಿಗೆ ಹೊತ್ತುಬರುತ್ತಿದ್ದಾರೆ. ಎಲ್ಲಿ ನೋಡಿದರೂ ನೀರಿಗೆ ಪಡುತ್ತಿರುವ ಪಾಡು, ಕಣ್ಣೀರೇ ಕಾಣಿಸುತ್ತಿದೆ. + +ಸರಿಯಾಗಿ ಇಂತಹ ಸಮಯದಲ್ಲಿಯೇ ಊರಿನ ಉರ್ದು ಟೀಚರ್ ಗೌಸುದ್ದೀನ್ ಮಗಳು ‘ಪ್ಯಾರಿ’ ಇದ್ದಾಳಲ್ಲಾ ಅವಳು ಮೈನೆರೆದಿದ್ದಾಳೆ. ಪ್ಯಾರಿ ಮತ್ತು ಚಾಂದಿನಿ ಆಪ್ತ ಗೆಳತಿಯರು. ಇಬ್ಬರೂ ಒಂದೇ ಕ್ಲಾಸು, ಒಂದೇ ಬೆಂಚು. ಶಾಲೆ ಬಿಟ್ಟು ಮನೆಗೆ ಬಂದ ಮೇಲೆ ಕೂಡ ಇಬ್ಬರೂ ಬಿಂದಿಗೆಗಳನ್ನು ತೆಗೆದುಕೊಂಡು ಬೋರ್ ವೆಲ್ ಬಳಿ ಜೊತೆಯಲ್ಲಿ ಹೋಗಿ ನೀರು ಹೊತ್ತುಕೊಂಡು ಬರುತ್ತಿದ್ದರು. ಇದ್ದಕ್ಕಿದ್ದಂತೆ ಪ್ಯಾರಿ “ಗೋಷಾ” ಹೆಸರಿನಲ್ಲಿ ಮನೆಯಿಂದ ಹೊರಬರುವುದನ್ನೇ ಬಿಟ್ಟುಬಿಟ್ಟಳು. ‘ನಾಲ್ಕು ದಿನ ಕಳೆದು ಮತ್ತೆ ಬರುತ್ತಾಳೇನೋ..’ ಎಂದು ಎದುರು ನೋಡುತ್ತಿದ್ದ ಚಾಂದಿನಿಗೆ ನಿರಾಸೆಯಾಯಿತು. + +ಪ್ಯಾರಿಗೆ, ಅವರ ಮನೆಯಲ್ಲಿ ಬಂಧುಬಳಗದವರನ್ನು ಕರೆದು ಹೊಸಿಕೆ ಹಾಕಿಸಿದರು. ಆ ಕಾರ್ಯಕ್ರಮಕ್ಕೆ ಚಾಂದಿನಿಯೂ ಹೋದಳು. ಪ್ಯಾರಿಯ ವೈಭವವನ್ನು ಕಣ್ಣಾರೆ ಕಂಡಳು. ಹೊಸದಾಗಿ ಹೊಲಿಸಿದ್ದ ಲಂಗ ದಾವಣಿ, ಮೈತುಂಬಾ ಒಡವೆಗಳು, ಹೂವಿನ ಹಾರಗಳು, ಸ್ವೀಟುಗಳು, ಅವಳ ಸುತ್ತಲೂ ನೆರೆದಿರುವ ನೆಂಟರು.. ಅಬ್ಬಾ ಮನೆಯ ತುಂಬಾ ಸಡಗರ. ಆ ಸಡಗರವನ್ನು, ಆ ಸಂತೋಷವನ್ನು ನೋಡಿ ಚಾಂದಿನಿಗೆ ಪ್ಯಾರಿಯ ಮೇಲೆ ಎಷ್ಟೇ ಇಲ್ಲವೆಂದರೂ ಎಲ್ಲೋ ಸ್ವಲ್ಪ ಅಸೂಯೆ ಹುಟ್ಟಿತು. + +ಆದರೆ ಎಲ್ಲಕ್ಕಿಂತಲೂ ಮುಖ್ಯವಾಗಿ ಚಾಂದಿನಿಯನ್ನು ಕಾಡಿದ ವಿಚಾರವೇನೆಂದರೆ “ಸದ್ಯ, ಇನ್ನು ನನಗೆ ಬೋರ್ ವೆಲ್ ನಿಂದ ನೀರು ತಂದು ಹಾಕುವ ಬಾಧೆ ಇಲ್ಲಪ್ಪ ಸ್ವಾಮಿ..” ಎಂದು ಪ್ಯಾರಿ ಭುಜಗಳೆಗುರಿಸಿ ಸಂತೋಷವಾಗಿ ಹೇಳಿದ್ದು. ಆ ಮಾತಿನಿಂದ ಚಾಂದಿನಿಗೆ ಒಮ್ಮೆಗೇ ಭಯ ಆವರಿಸಿತು. + +ಹೌದು ಇನ್ನು ಪ್ಯಾರಿ ತನ್ನೊಂದಿಗೆ ನೀರಿಗೆ ಬೋರ್ ವೆಲ್ ಬಳಿ ಬರುವುದಿಲ್ಲ. ತಾನೊಬ್ಬಳೇ ಅಷ್ಟು ದೂರದಿಂದ ನೀರು ಹೊತ್ತುಕೊಂಡು ಬರಬೇಕು. ಪ್ಯಾರಿ ಅದೃಷ್ಟವಂತಳು. ನೀರು ಹೊರುವ ಬಾಧೆಯಿಂದ ತಪ್ಪಿಸಿಕೊಂಡಳು. ಮತ್ತೆ ತನಗೇಕೆ ಆ ಬಾಧೆ ತಪ್ಪಲಿಲ್ಲ.ನಿಜ ಹೇಳಬೇಕೆಂದರೆ ಪ್ಯಾರಿಗಿಂತ ಮೊದಲು ಮೈನೆರೆದವಳು ಚಾಂದಿನಿ. + +“ಹೆಣ್ಣುಮಕ್ಕಳಿಗೆ ಇದು ಮಾಮೂಲೇ. ಹೊರಗೆ ಹೇಳುವ ಅಗತ್ಯವಿಲ್ಲ. ಆದರೆ ಒಂದು ವಿಷಯ ನೆನಪಿಟ್ಟುಕೋ.. ನಿನಗೆ ಹೀಗೆ ಆಗಿದೆ ಎಂದು ಹೊರಗೆಲ್ಲೂ ಹೇಳಬೇಡ. ಹೇಳಿದರೆ ದರಿದ್ರ ಸುತ್ತುಕೊಳ್ಳುತ್ತದೆ ಹುಷಾರು..” ಎಂದು ಬೆದರಿಸಿದ್ದಳು ಅಮ್ಮ ಮಾಬುನ್ನಿ. ಆ ಮೂರು ದಿನ ಜ್ವರದ ನೆಪದಿಂದ ಮನೆಯಲ್ಲಿದ್ದು ಮತ್ತೆ ಮಾಮೂಲಿನಂತೆ ಏನೂ ತಿಳಿಯದಂತೆ ಶಾಲೆಗೆ ಹೋದಳು ಚಾಂದಿನಿ. + +ಆದರೆ ಅದೊಂದು ಕಾರ್ಯಕ್ರಮವೆಂದು, ಅದಕ್ಕೆ ಹೀಗೆ ಹೊಸಿಕೆ ಹಾಕುವರೆಂದು, ಎಲ್ಲರನ್ನು ಕರೆದು ಶಾಸ್ತ್ರ ಮಾಡುತ್ತಾರೆಂದು, ಎಲ್ಲಕ್ಕಿಂತಲೂ ಮನೆಯಲ್ಲಿ ಗೋಷಾ ಇಟ್ಟು ಹೊರಗಿನಿಂದ ನೀರು ತಂದುಹಾಕುವ ಬಾಧೆ ತಪ್ಪಿಸುತ್ತಾರೆಂದು ಆಕೆಗೆ ಪ್ಯಾರಿಯನ್ನು ನೋಡುವವರೆಗೂ ತಿಳಿಯಲಿಲ್ಲ. ಆ ದಿನ ಮನೆಗೆ ಬಂದವಳೆ ಬಹಳ ಕೋಪದಿಂದ ಅಮ್ಮನನ್ನು ಕೂಗಿದಳು. + +“ಅಮ್ಮೀ… ಪ್ಯಾರಿಗೆ ಇಟ್ಟ ಹಾಗೆ ನನಗೇಕೆ ಗೋಷಾ ಇಡಲಿಲ್ಲ ನೀನು. ನಿಜವಾಗಲೂ ನಾನು ನಿನ್ನ ಮಗಳೇನಾ.. ಅಲ್ಲವಾ.. ಅದು ಹೇಳು ಮೊದಲು..” ಎಂದು ಕಿರುಚಾಡಿದಳು. + +ಮಾಬುನ್ನಿಗೆ ಏನು ಮಾತನಾಡುವುದೋ ಅರ್ಥವಾಗಲಿಲ್ಲ. ಸ್ವಲ್ಪ ಹೊತ್ತು ಹಿರಿಯ ಜೀವ ಒದ್ದಾಡಿತು. ಕೂಡಲೇ ನಿಸ್ಸಹಾಯಕವಾಗಿ ಧಡಧಡ ಎಂದು ಕಣ್ಣೀರು ಸುರಿಸಿದಳು. + +“ನಿನಗೆ ತಿಳಿಯದಿರುವುದು ಏನಿದೆ ಹೇಳಮ್ಮ. ನನ್ನ ಹೊಟ್ಟೆಯಲ್ಲಿ ಇನ್ನೊಂದು ಗಂಡು ಮಗುವನ್ನು ಕರುಣಿಸಲಿಲ್ಲ ದೇವರು. ಎಲ್ಲೆಲ್ಲೋ ಸುತ್ತಿ, ಎಷ್ಟು ದೇವರಿಗೆ ಕೈ ಮುಗಿದು ಕೊನೆಗೆ ಆ ಮಹಬೂಬ್ ಸುಬಹಾನ್ ಸಾಹೇಬ್ ಗೆ ಹರಕೆ ಹೊತ್ತುಕೊಂಡರೆ ನೀನು ಹುಟ್ಟಿದೆ ಬಹಳ ತಡವಾಗಿ. ನೀನೇ ನಮಗೆ ದಿಕ್ಕು. ನಿನ್ನನ್ನು ನೋಡಿಕೊಂಡೇ ನಾವು ಬದುಕುತ್ತಿದ್ದೀವಿ. ನಿನ್ನನ್ನು ಗೋಷಾ ಇಟ್ಟು ನಾಲ್ಕು ಜನರಂತೆ ಸುಖವಾಗಿ ನೋಡಿಕೊಳ್ಳಬೇಕೆಂದು ನಮಗಿರುವುದಿಲ್ಲವಾ ಹೇಳು. ಆದರೆ ಏನು ಮಾಡುವುದು. ಮನೆಗೆ ನೀರು ತಂದುಹಾಕಿಕೊಳ್ಳುವ ಶಕ್ತಿ ಕೂಡ ನಮಗಿಲ್ಲದಂತೆ ಮಾಡಿದ್ದಾನಲ್ಲವಾ.. ಆ ದೇವರು. + +ಇನ್ನು ಆ ಪ್ಯಾರಿ ವಿಷಯ.. ಅವರಮ್ಮ ರಮೀಜಾ ಒಬ್ಬಿಬ್ಬರಲ್ಲ ವರಸೆಯಾಗಿ ಮೂವರು ಗಂಡು ಮಕ್ಕಳನ್ನು ಹೆತ್ತಿದ್ದಾಳೆ. ಗಂಡು ಮಕ್ಕಳು ಇಲ್ಲದವರು ಇಲ್ಲವೆಂದು ಸಾಯುತ್ತಿದ್ದರೆ.. ದೇವರು ಇರುವವರಿಗೇ ಮತ್ತೆ ಮತ್ತೆ ಕರುಣಿಸುತ್ತಿದ್ದಾನೆ. ಆ ಮೂವರು ಗಂಡುಮಕ್ಕಳು ಪ್ಯಾರಿ ಮೈನೆರೆಯುತ್ತಿದ್ದಂತೆ ಅವರಮ್ಮನ ಬಳಿ ಹೋಗಿ ‘ಅಮ್ಮೀ.. ತಂಗಿಯನ್ನು ಗೋಷಾ ಇಡೋಣಮ್ಮ.. ಮನೆಗೆ ನಾವು ಮೂವರೂ ಸರದಿಯಂತೆ ನೀರು ತಂದುಹಾಕುತ್ತೇವೆ..’ ಎಂದು ಹೇಳಿದರಂತೆ. ಅವರ ಹೊಟ್ಟೆ ತಣ್ಣಗಿರಲಿ.. ಹೇಳಿದಂತೆ ನೀರು ತಂದು ಹಾಕುತ್ತಿದ್ದಾರೆ. ನಿನಗೂ, ನನಗೂ ಆ ಸುಖ ಎಲ್ಲಿದೆಯಮ್ಮ” ಎಂದಳು. + +ಅದಕ್ಕೆ ಸ್ವಲ್ಪ ಯೋಚಿಸಿ ಕೂಡಲೇ ಅಮ್ಮನಿಗೆ ಹೇಳಿದಳು. + +“ಅಮ್ಮೀ.. ನನಗೆ ನೀನು ಗೋಷಾ ಇಡದಿದ್ದರೆ ಹೋಗಲಿ ನಾಳೆ ನನ್ನನ್ನು ಗೋಷಾ ಇಡುವ ಮನೆಗೇ ಮದುವೆ ಮಾಡಿಕೊಡಬೇಕು.. ಸರೀನಾ..”ಆ ಮಾತಿಗೆ ಸಣ್ಣಗೆ ನಕ್ಕು “ಸರಿ ಬಿಡಮ್ಮಾ.. ನಿನಗೆ ಮದುವೆ ಮಾಡಿಕೊಟ್ಟು ನಾನು, ನಿಮ್ಮ ಅಪ್ಪ ಯಾವುದಾದರೂ ದರ್ಗಾ ಬಳಿ ಹೋಗಿ ‘ಅಲ್ಲಾ.. ಬಿಸ್ಮಿಲ್ಲಾ..’ ಎಂದು ಕಳೆದುಬಿಡುತ್ತೇವೆ ಬಿಡು..” ಎಂದಳು ಮಾಬುನ್ನಿ. + +ಇದು ಆಗಿ ಎರಡು ವರ್ಷ ಕಳೆಯಿತು. ಮೇದರ್ ಬೀದಿಯಲ್ಲಿ ಕೆಟ್ಟುಹೋದ ಬೋರ್ ವೆಲ್ ರಿಪೇರಿಯಾಗದೆ ಹಾಗೇ ಬಿದ್ದಿದೆ. ರಿಪೇರಿ ಮಾಡಿಸಲು ಮುಂದಾದ ಪಂಚಾಯಿತಿ ಅಧಿಕಾರಿಗಳು ಇನ್ನು ಅದು ರಿಪೇರಿಯಾಗುವುದಿಲ್ಲವೆಂದು ಘೋಷಿಸಿದರು. ನೀರಿಗೆ ಪರದಾಟ ಮುಂದುವರಿಯಿತು. ಇನ್ನು ಚಾಂದಿನಿ ಗೋಷಾ ಮಾತು ಯಾವತ್ತೋ ಮರೆತುಬಿಟ್ಟಿದ್ದಾಳೆ ಎಂದುಕೊಂಡಳು ಮಾಬುನ್ನಿ. ಆದರೆ ಆಕೆ ಮರೆತುಹೋಗಲಿಲ್ಲವೆಂದು ಕಾಲದೊಂದಿಗೆ ಆಕೆಯ ಕೋರಿಕೆಯು ಕೂಡ ಹಾಗೇ ಅವಳ ಮನಸ್ಸಿನಲ್ಲಿ ಬೆಳೆಯುತ್ತ ಬರುತ್ತಿದೆಯೆಂದು ಮಾಬುನ್ನಿಗೆ ಮೊನ್ನೆ ಅರ್ಥವಾಯಿತು. + +ಮಾಬುನ್ನಿ ಚಾಂದಿನಿಗೆ ಒಂದು ಸಂಬಂಧ ನೋಡಿದಳು. ರಾಯಚೋಟಿ ಬಳಿ ಕೋನಂ ಪೇಟೆಯಲ್ಲಿ ಇರುವ ನಿಂಬೆಕಾಯಿ ವ್ಯಾಪಾರಿ ಮಾಪ್ಪೀರ್ ಮಗ ಸುಭಾನ್ ಪಟ್ಟಣದಲ್ಲಿ ಓದುತ್ತಿದ್ದಾನಂತೆ. ಆತನಿಗೆ ಕೊಟ್ಟು ಮಾಡಿದರೆ ಚೆನ್ನಾಗಿ ನೋಡಿಕೊಳ್ಳುತ್ತಾನೆಂದು ತಂದೆಗೆ ಹೇಳುತ್ತಿದ್ದುದನ್ನು ಕೇಳಿಸಿಕೊಂಡಳು ಚಾಂದಿನಿ. + +ನಿಂಬೆಕಾಯಿ ವ್ಯಾಪಾರಿ ಮಾಪ್ಪೀರ್ ಮಾಮನ ಕುರಿತು ಸ್ವಲ್ಪ ಚಾಂದಿನಿಗೆ ತಿಳಿದಿದೆ. ದಿನವೂ ನಿಂಬೆತೋಟದ ಕೆಲಸದ ಮೇಲೆ ಸುತ್ತಮುತ್ತಲಿನ ಊರು ಸುತ್ತುವ ಆತ ದೂರದ ನೆಂಟ ಎನ್ನುವ ನೆಪದಲ್ಲಿ ಆಗಾಗ ಮನೆಗೆ ಬಂದು ಊಟ ಮಾಡಿಹೋಗುತ್ತಿದ್ದನು. ಬಹಳ ಒರಟು ಮನುಷ್ಯ. ನಮಾಜ್ ದಾರ್ ಅಲ್ಲ. + +ಈತನೇ ಹೀಗಿದ್ದರೆ ಇನ್ನು ಈತನ ಮಗ ಸುಭಾನ್ ಹೇಗೆ ಇರುತ್ತಾನೋ ಊಹಿಸಬಹುದು. ಅವನಿಗೆ ಕೊಟ್ಟು ಮಾಡಿದರೆ ಆತ ತನ್ನನ್ನು ಗೋಷಾ ಇಡುತ್ತಾನೆಂಬ ನಂಬಿಕೆಯಿಲ್ಲ ಚಾಂದಿನಿಗೆ. ಇನ್ನು ತಾನು ಜೀವನಪರ್ಯಂತ ಕ್ರಿಸ್ತ ಶಿಲುಬೆ ಹೊತ್ತಂತೆ ನೀರು ಹೊರುತ್ತಿರಬೇಕು. ಅದಕ್ಕೆ ಚಾಂದಿನಿ ಬೆದರಿಹೋದಳು. ಅವಕಾಶ ಸಿಕ್ಕಾಗಲೆಲ್ಲ ತಾಯಿಗೆ ಮತ್ತೆ ಮತ್ತೆ ‘ಗೋಷಾ’ ಮಾತು ನೆನಪಿಗೆ ಮಾಡಲಾರಂಭಿಸಿದಳು. ತಾನು ಮಾತ್ರ ಗೋಷಾ ವಿಷಯದಲ್ಲಿ ರಾಜಿಯಾಗುವುದಿಲ್ಲ ಎಂದು ಎಚ್ಚರಿಸಿದಳು. ತಾಯಿಯಾಗಿ ತನಗೆ ನೀಡಿದ ಮಾತು ತಪ್ಪಬಾರದೆಂದು ಅಂಗಲಾಚಿದಳು. ಆದರೂ ಮಾಬುನ್ನಿ ಅವನ್ನೆಲ್ಲ ಚಿಕ್ಕಹುಡುಗಿಯ ಚೇಷ್ಟೆಗಳೆಂದುಕೊಂಡಳು. ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ. ಇದರಿಂದ ಚಾಂದಿನಿ ಮಾಬುನ್ನಿಯರಿಗೆ ಆಗಾಗ ಜಗಳವಾಗುತ್ತಿತ್ತು. ನಿನ್ನೆ ಕೂಡ ಹಾಗೇ ಗಲಾಟೆಯಾಯಿತು. + +ಮಧ್ಯಾಹ್ನ ಕಾಲೇಜಿನಿಂದ ಮನೆಗೆ ಬಂದಳು ಚಾಂದಿನಿ. ಆವೇಗದಲ್ಲಿದ್ದಂತೆ ಕಂಡಳು. ಅದೇನು ಗಂಭೀರವೆನಿಸಲಿಲ್ಲ ಮಾಬುನ್ನಿಗೆ. ಅಭ್ಯಾಸದಂತೆ ಬರುತ್ತಿದಂತೆಯೇ ಬಿಂದಿಗೆ ನೀಡಿ ನೀರಿಗೆ ಕಳುಹಿಸಿದಳು. + +“ಅಮ್ಮೀ.. ಓ ಅಮ್ಮಿ.. ನೀನು ನನ್ನನ್ನು ಗೋಷಾ ಇಡುವ ಹುಡುಗನಿಗೆ ಕೊಟ್ಟು ಮದುವೆ ಮಾಡುತ್ತೇನೆಂದು ಹೇಳಿದ್ದೀಯಲ್ಲವಾ..” ಎಂದಳು ಚಾಂದಿನಿ ಅನುಮಾನದಿಂದ.“ಹಾಗೇ ಮಾಡೋಣ.. ನೀನೇನು ನನ್ನ ಸವತಿಯ ಮಗಳಾ.. ಯಾರೆಂದರೆ ಅವರಿಗೆ ಕೊಟ್ಟು ಮಾಡಲು. ಮೊದಲು ಬೋರ್ ವೆಲ್ ಬಳಿ ಹೋಗಿ ಒಂದು ಬಿಂದಿಗೆ ನೀರು ತೆಗೆದುಕೊಂಡು ಬಾಮ್ಮಾ.. ನಿನಗೆ ಕೈಮುಗಿಯುತ್ತೀನಿ. ಅಲ್ಲಿ ನೋಡು ಬೆಳಿಗ್ಗೆ ಹಾಕಿರುವ ಪಾತ್ರೆಗಳು.., ಹೇಗೆ ಒಣಗಿಹೋಗಿವೆ”, ದೀನವಾಗಿ ಹೇಳಿದಳು ಮಾಬುನ್ನಿ. + +ಚಾಂದಿನಿ ಕೇಳಲಿಲ್ಲ. + +“ಏನು ಒಣಗಿಹೋದರೂ ನನಗೇನೂ ಬೇಕಿಲ್ಲ.. ಮೊದಲು ನನಗೆ ಮಾತು ಕೊಡು.. ಆಗ ಹೋಗುತ್ತೇನೆ ನೀರಿಗೆ..”ತಲೆಬಡಿದುಕೊಂಡಳು ಮಾಬುನ್ನಿ. + +“ನೀರಿನ ಮಾತು ಎತ್ತಿದಾಗೆಲ್ಲಾ.. ನಿನ್ನದು ದೊಡ್ಡ ಹಾಡಾಗಿ ಹೋಗಿದೆಯೇ ನನಗೆ. ನಿನಗೆ ನಂಬಿಕೆ ಬರಬೇಕೆಂದರೆ ಆ ಅಲ್ಲಾನೇ ಇಳಿದುಬರಬೇಕೇ ಹೊರತು.. ನಾನೇ ಹೋಗುತ್ತೇನೆ ತೆಗಿ ನೀರಿಗೆ. ನಿನ್ನನ್ನೇನು ಅಷ್ಟು ಅಂಗಲಾಚುವುದು.. ದಾರಿಯಲ್ಲಿ ಯಾರಾದರೂ ನೋಡಿ ಏನಮ್ಮಾ ನೀನು ಬಂದಿದ್ದೀಯೇ.., ನಿನ್ನ ಮಗಳೇನಾದರೂ ಸತ್ತುಹೋದಳಾ.. ಎಂದು ಕೇಳಿದರೆ ಹೌದು ಎಂದೇ ಹೇಳುತ್ತೇನೆ..” – ಕಟುವಾಗಿ ಬೆದರಿಸುತ್ತ ಮೂಲೆಯಲ್ಲಿರುವ ಕೆಂಪು ಬಿಂದಿಗೆ ಕೈಯಲ್ಲಿ ತೆಗೆದುಕೊಳ್ಳಹೊರಟಳು ಮಾಬುನ್ನಿ. + +ಚಾಂದಿನಿ ಬೆದರಿಹೋದಳು. + + + +“ಮೊದಲೇ ಮುಪ್ಪಿನ ಜೀವ. ಯಾವಾಗಲೂ ಮೊಣಕಾಲು ನೋವು ಎನ್ನುತ್ತಿರುತ್ತಾಳೆ. ಎದ್ದರೆ ಕೂರಲಾಗದು.. ಕೂತರೆ ಏಳಲಾಗದು. ರೋಷ ಮಾತ್ರ ಬೇಗ ಬರುತ್ತದೆ. ಎಲ್ಲೋ ಊರಾಚೆಯ ಬೋರ್ ವೆಲ್ ಬಡಿದು ನೀರು ತರಲಾಗುತ್ತದಾ ಈಯಮ್ಮನಿಗೆ? ತಂದರೆ ದಾರಿನಡುವೆಯೇ ಪ್ರಾಣ ಪುಟುಕ್ ಎಂದು ಹಾರಿಹೋಗುತ್ತದೆ” ಗೊಣಗಿಕೊಂಡಳು ಚಾಂದಿನಿ. + +ಅದಕ್ಕೆ ಮೊದಲೊಮ್ಮೆ ಹೀಗೆ ಹಠಕ್ಕೆ ಬಿದ್ದು ನೀರಿಗೆ ಹೊರಟಳು ಮಾಬುನ್ನಿ. ಮಾಬುನ್ನಿ ನೀರು ತರುವಾಗ ಸರಿಯಾಗಿ ಮನೆ ಅರ್ಧ ಕಿಲೋಮೀಟರ್ ಇರುವಾಗ ಬೇವಿನ ಮರದ ಬಳಿ ಕುಸಿದುಬಿದ್ದಳು. ಮೊದಲೇ ಅದು ಒಳ್ಳೆಯ ಜಾಗವಲ್ಲ ಎಂದು ಆ ಸುತ್ತಮುತ್ತಲವರ ಪ್ರಚಾರ. ಬಹಳ ಜನ ಬೇರೆ ಬೇರೆ ರೀತಿ ಕೆಳಗೆ ಬಿದ್ದು ಅಲ್ಲಿ ಪ್ರಾಣಕ್ಕೆ ತಂದುಕೊಂಡದ್ದು ಅಲ್ಲಿಯೇ. ಅದಕ್ಕೇ ಚಾಂದಿನಿ ಭಯಪಟ್ಟಳು. ಓಡೋಡಿ ಬಂದು ನೋಡಿದರೆ ಬಿಂದಿಗೆ ಒಡೆದು ನೀರೆಲ್ಲ ಚೆಲ್ಲಿ ಅಲ್ಲಿ ಕೆಸರುಮಯವಾಯಿತು. ಆ ಕೆಸರಿನಲ್ಲಿಯೇ ಪ್ರಜ್ಞೆತಪ್ಪಿ ಬಿದ್ದಿದ್ದಾಳೆ ಮಾಬುನ್ನಿ. ದಾರಿಯಲ್ಲಿ ಹೋಗುತ್ತಿದ್ದ ಪುಣ್ಯಾತ್ಮರು ಮಾಬುನ್ನಿಯನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಮಂಚದ ಮೇಲೆ ಮಲಗಿಸಿಹೋದರು. ಆಗ ಚಾಂದಿನಿಯನ್ನು ಎಲ್ಲರೂ ಎಷ್ಟು ಬೈದರೋ ಈಗಲೂ ನೆನಪಿದೆ ಅವಳಿಗೆ. ಅದಕ್ಕೇ ಇನ್ಯಾವಾಗಲೂ ತಾಯಿಯ ಕೈಲಿ ನೀರು ಹೊರಿಸಬಾರದೆಂದು ಪ್ರಮಾಣ ಮಾಡಿಸಿಕೊಂಡಳು. + +ಆ ಬಲಹೀನತೆಯರಿತೇ ಕೊನೆಯ ಅಸ್ತ್ರವನ್ನು ಬೀಸಿದಳು ಮಾಬುನ್ನಿ. ಇನ್ನೇನು ಮಾಡಲಾಗುವುದಿಲ್ಲವೆಂದರಿತು ಭಯದಿಂದ ತಾಯಿಯ ಕೈಯಿಂದ ಬಿಂದಿಗೆಯನ್ನು ತೆಗೆದುಕೊಂಡಳು. ಕಣ್ಣಲ್ಲಿ ನೀರು ತುಂಬಿಕೊಂಡಿದ್ದರೆ ತಲೆಬಗ್ಗಿಸಿಕೊಂಡು “ಸರಿ.. ನಾನೇ ತರುತ್ತೀನಿ ಕೊಡು ನೀರು..” ಎಂದು ನಿಧಾನವಾಗಿ ಬೋರ್ ವೆಲ್ ಬಳಿಗೆ ಹೊರಟಳು. + +ಹಾಗೆ ಹೊರಟ ಚಾಂದಿನಿ ಒಂದು ಗಂಟೆಯಾದರೂ ಬರಲಿಲ್ಲ. ಎರಡು ಗಂಟೆಯಾದರೂ ಬರಲಿಲ್ಲ. ಕೊನೆಗೆ ಒಂದು ದಿನವಾದರೂ ಅವಳ ಜಾಡಿಲ್ಲ. ಆದರೆ ಚಾಂದಿನಿ ನಾಗಿರೆಡ್ಡಿಯ ಮಗ ಮನೋಹರನೊಂದಿಗೆ ಬೋರ್ ವೆಲ್ ಹತ್ತಿರವಿರುವ ಛತ್ರದ ಬಳಿ ಪುಲಿವೆಂದುಲ ಬಸ್ ಹತ್ತಿದಳೆಂದು ಯಾರೋ ನೋಡಿದವರು ಹೇಳುವವೇಳೆಗೆ ಇವರಿಬ್ಬರೂ ಓಡಿಹೋದರೆಂಬ ವಾರ್ತೆ ಎಲ್ಲರ ಬಾಯಿಗೆ ಆಹಾರವಾಯಿತು. + +“ಅಬ್ಬ.. ಎಷ್ಟು ದೂರವಪ್ಪಾ ಬೋರ್ ವೆಲ್..” ಎಂದು ಬೆವರು ಸುರಿಸಿಕೊಂಡು ಬಂದ ನಾಜಿಯಾ ಮಾತು ಕಿವಿಗೆ ಬಿದ್ದು ಈ ಲೋಕಕ್ಕೆ ಬಂದಳು ಮಾಬುನ್ನಿ. + +ನಾಜಿಯಾ ಬೇಗ ಬಿಂದಿಗೆ ಕೆಳಗಿಟ್ಟು ಲೋಟದಲ್ಲಿ ನೀರು ತುಂಬಿ ಹೊರಗೆ ಕುಳಿತಿದ್ದ ಅಣ್ಣ ಫಕೃದ್ದೀನ್ಗೆ ನೀಡಿದಳು. ಫಕೃದ್ದೀನ್ ಗಟಗಟ ನೀರು ಕುಡಿದು ಲೋಟ ನಾಜಿಯಾಳ ಕೈಗೆ ನೀಡುತ್ತ ‘ಈ ನೀರು ಎಷ್ಟು ಕೆಲಸ ಮಾಡುತ್ತಿದೆಯೋ ನಾಜಿಯಾ. ಅಮ್ಮ-ಮಗಳು ಒಬ್ಬರನ್ನು ಕಂಡರೆ ಒಬ್ಬರಿಗಾಗದಂತೆ ಮಾಡಿದೆ. ಪಕ್ಷಿ, ಹುಳು, ಗಿಡ, ಹುತ್ತ ಎಲ್ಲ ಒಣಗಿ ಸಾಯುತ್ತಿವೆ. ನಮ್ಮವರಿಗೆ ಮಾತ್ರ ಕನಸು ಕಾಣುವುದು ಹೇಗೆಂದು ಕೂಡ ತಿಳಿಯುತ್ತಿಲ್ಲ. ನಿನ್ನ ಅತ್ತಿಗೆಯೇನೋ.. ಗಂಡು ಮಗನಿದ್ದಿದ್ದರೆ ಚೆನ್ನಾಗಿತ್ತು ಎನ್ನುತ್ತಾಳೆ.. ಅವಳ ಮಗಳೇನೋ ಗೋಷಾ ಬೇಕು.. ಎನ್ನುತ್ತಿದ್ದಳು. ನಮಗೆ ಬೇಕಿದ್ದದ್ದು ನೀರಲ್ಲವಾ.. ಅದಿದ್ದಿದ್ದರೆ ಇವೆಲ್ಲ ಏಕೆ.. ಹಾಗಾದರೆ ಯಾಕೆ ನೀರು ಕುರಿತು ಯಾರೂ ಕೇಳುವುದಿಲ್ಲ? ನಾವು ಕಾಣಬೇಕಿದ್ದ ಕನಸನ್ನು ಬಿಟ್ಟು ಬೇರಾವುದೋ ಕನಸನ್ನು ಕಾಣುತ್ತಿದ್ದೇವೆ. ಅದಲ್ಲವಾ ‘ಬರ’ವಾಡುವ ಆಟ. ಈ ಸತ್ಯ ಹೊರಟುಹೋದ ಚಾಂದಿನಿಗಾಗಲಿ ನಿನ್ನ ಅತ್ತಿಗೆಗಾಗಲಿ ಹೇಗೆ ತಿಳಿಯಬೇಕು?” ಎಂದು ಹವಾಯಿ ಚಪ್ಪಲಿ ಕಾಲಿಗೇರಿಸಿಕೊಂಡು ಹೊರಟನು. + +ಅಣ್ಣ ಬಹಳ ದುಃಖದಲ್ಲಿರುತ್ತಾನೆಂದುಕೊಂಡಳು ನಾಜಿಯಾ, ಆದರೆ ಆತನ ಬಾಧೆ ಮಾತ್ರ ಸರಿಯಾಗಿ ಅರ್ಥವಾಗಲಿಲ್ಲ. ಏನೂ ಯೋಚಿಸದೆ ಇನ್ನೊಂದು ಲೋಟ ನೀರು ತುಂಬಿಕೊಂಡು ಬಂದು ಮಾಬುನ್ನಿಗೆ ನೀಡಿದಳು ನಾಜಿಯಾ. + +ತುಂಬಾ ದಾಹವಾಗಿದ್ದ ಮಾಬುನ್ನಿಗೆ ಲೋಟ ಕೈಗೆ ತೆಗೆದುಕೊಳ್ಳುತ್ತಿದ್ದಂತೆ ಕೈ ನಡುಗುತ್ತಿದೆ. ನೀರು ಬೆಚ್ಚಗೆ ಉಪ್ಪುಪ್ಪಾಗಿ ಒಂದೊಂದೇ ಗುಟುಕು ಗಂಟಲಿಗೆ ಇಳಿಯುತ್ತಿದ್ದರೆ ಕಣ್ಣೀರನ್ನು ಕುಡಿಯುತ್ತಿದ್ದಂತಿದೆ ಮಾಬುನ್ನಿಗೆ. + + + +ಗಟಗಟ ನೀರು ಕುಡಿದು ಲೋಟ ನಾಜಿಯಾ ಕೈಗಿತ್ತಳು. ನೀರು ಬೆಚ್ಚಗಿತ್ತೋ, ಉಪ್ಪಾಗಿತ್ತೋ ಆದರೆ ಆಕೆಗೆ ಸ್ವಲ್ಪ ದಾಹ ತೀರಿ ಮನಸ್ಸಿಗೆ ಸಮಾಧಾನವಾಯಿತು. ಆದರೆ ಅಷ್ಟರಲ್ಲಿ ಇದ್ದಕ್ಕಿದ್ದಂತೆ ಆಕಾಶವನ್ನು ಯಾವುದೋ ಮೋಡ ಕವಿದಂತಾಗಿ ಆಕೆಯ ತಾಯ ಹೃದಯಕ್ಕೆ ಒಂದು ಅನುಮಾನ ಕಾಡಲಾರಂಭಿಸಿತು. + +“ಇಷ್ಟಕ್ಕೂ.. ಮನೋಹರ್ ಆದರೂ ಚಾಂದಿನಿಯನ್ನು ಗೋಷಾ ಇಡುತ್ತಾನಾ?” + +ಕೋಲಾರ ಜಿಲ್ಲೆಯ ಗುಡಿಬಂಡೆಯವರು. ಪತ್ರಕರ್ತೆ ಮತ್ತು ಅನುವಾದಕಿಯಾಗಿ ವಿವಿಧ ನಿಯತಕಾಲಿಕೆಗಳಲ್ಲಿ ಕೆಲಸ ಮಾಡಿದ್ದಾರೆಅನುವಾದಿತ ತೆಲುಗು ಕಥೆಗಳು, ಲೇಖನಗಳು, ಸಂದರ್ಶನಗಳು ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಸಾಧಕರೊಡನೆ’ ಎಂಬ ಸ್ವಂತ ಕೃತಿ ಪ್ರಕಟಗೊಂಡಿದೆ. \ No newline at end of file diff --git a/Kenda Sampige/article_416.txt b/Kenda Sampige/article_416.txt new file mode 100644 index 0000000000000000000000000000000000000000..5ff06f71baa53e31e0ec388882503aa3356e307b --- /dev/null +++ b/Kenda Sampige/article_416.txt @@ -0,0 +1,35 @@ +byಕೆಂಡಸಂಪಿಗೆ|Feb 18, 2019|ದಿನದ ಪುಸ್ತಕ,ಸಾಹಿತ್ಯ| 1 Comment + +“ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು.” + +byಡಾ. ಬಿ. ಜನಾರ್ದನ ಭಟ್|Feb 17, 2019|ವಾರದ ಕಥೆ,ಸಾಹಿತ್ಯ| 0 Comments + +“ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು.” + +byಕೆಂಡಸಂಪಿಗೆ|Feb 11, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ” + +byಮಧುಸೂದನ್ ವೈ ಎನ್|Feb 10, 2019|ವಾರದ ಕಥೆ,ಸಾಹಿತ್ಯ| 1 Comment + +“ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ.” + +byಕೆಂಡಸಂಪಿಗೆ|Feb 4, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ?” + +byಡಾ. ಬಿ. ಜನಾರ್ದನ ಭಟ್|Feb 3, 2019|ವಾರದ ಕಥೆ,ಸಾಹಿತ್ಯ| 0 Comments + +“ರಸ್ತೆಯನ್ನು ಕೆಳಗಿನ ಬೈಲಿನ ಅಂಚಿನಲ್ಲಿ ಸಾಗಿಸಿದರೆ ಯಾರಿಗೂ ತೊಂದರೆಯಿಲ್ಲ. ಕಿರಸ್ತಾನರ ಮಣೆಗಾರರು ನಮ್ಮ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲವಾದ್ದರಿಂದ ಖಾವಿಂದರಿಗೆ ಅರ್ಜಿ ಹಾಕಿದೆನು ಎಂದು ತನ್ನ ಆಕ್ಷೇಪ ಅಭಿಪ್ರಾಯಗಳನ್ನು ಹೇಳಿದನು. ನಾನು ಆ ಗುಡಿಗಳನ್ನು ಕಿಟಕಿಯ ಸಂದಿನಲ್ಲಿ ಇಣುಕಿದೆ. ಒಳಗಡೆ ಕತ್ತಲಿತ್ತು.” + +byಕೆಂಡಸಂಪಿಗೆ|Jan 28, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ಟ್ರಯಲ್ ರೂಮಿನ ಅಪ್ಸರೆಯರಿಗೆ ಕೊನೆಗೂ ಉಳಿಯುವು ಆಯ್ಕೆ ಯಾವುದು? ಸ್ವಮರುಕವೆ? ಆಕ್ರೋಶವೆ? ವಿಷಾದವೆ? ಈ ಪ್ರಶ್ನೆಗಳ ಪ್ರಸ್ತಾಪವೇ ಹಳಹಳಿಕೆಯಂತೆ ಕಂಡರೆ ಅದು ಸಂವೇದನೆಯ ದೋಷವಲ್ಲವೆ? ಸಂಕೀರ್ಣವಾದ ಹೆಣ್ಣಿನ ವಿಷಯಗಳನ್ನು ಸರಳಗೊಳಿಸದೇ ಅದರ ಸಾಂದ್ರತೆಯಲ್ಲಿ ಇದು ಮಂಡಿಸುತ್ತದೆ.” + +byಕಿರಣ ಅಕ್ಕಿ|Jan 27, 2019|ವಾರದ ಕಥೆ,ಸಾಹಿತ್ಯ| 0 Comments + +“ಶಿವಪ್ಪನಿಗೆ ಆಗ ೧೪ ವರ್ಷ ವಯಸ್ಸು. ಊರಲ್ಲಿನ ಶಾಲೆಯನ್ನು ಬಿಟ್ಟು ಬಂದು ಬೆಂಗಳೂರು ಸೇರಿದ್ದ. ಅಮ್ಮ ತೀರಿಕೊಂಡ ಮೇಲೆ ಅಪ್ಪ ಇನ್ನೊಂದು ಮದುವೆ ಆಗಿದ್ದ. ಆ ಮಲತಾಯಿಯ ದ್ವಂದ್ವ ಪ್ರೀತಿಯ ಮುಂದೆ ಸಂಕುಚಿತಗೊಂಡ ಅವನ ಮನಸ್ಸು ಆಕಾಶವನ್ನು ಬಯಸಿತ್ತು.” + +byಕೆಂಡಸಂಪಿಗೆ|Jan 21, 2019|ದಿನದ ಪುಸ್ತಕ,ಸಾಹಿತ್ಯ| 0 Comments + +”ನಾನು ಕಂಡುಕೊಂಡಂತೆ “ಗದ್ಯಂ ಹೃದ್ಯಂ” ನಲ್ಲಿ ನಾಲ್ಕು ಬಗೆಯ ಬರಹಗಳಿವೆ. ಆತ್ಮಕಥಾನಕವಾದ ಬರಹಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು ಮತ್ತು ಸಮಕಾಲೀನ ವಸ್ತು, ಘಟನಾವಳಿಗಳನ್ನು ಕುರಿತ ಬಿಡಿ ಲೇಖನಗಳು. “ \ No newline at end of file diff --git a/Kenda Sampige/article_417.txt b/Kenda Sampige/article_417.txt new file mode 100644 index 0000000000000000000000000000000000000000..0142e4c497d069b2bef3f1a83216def56c42d881 --- /dev/null +++ b/Kenda Sampige/article_417.txt @@ -0,0 +1,45 @@ + + +ಕುಕ್ಕೆ ಸುಬ್ರಹ್ಮಣ್ಯದ ಸಂಪುಟ ನರಸಿಂಹಸ್ವಾಮಿ ಮಠದ ಸ್ವಾಮೀಜಿಯಾಗಿದ್ದು, ಪೀಠತ್ಯಾಗ ಮಾಡಿದ ಖ್ಯಾತ ಕರ್ನಾಟಕ ಸಂಗೀತ ಗಾಯಕರಾದ ವಿದ್ಯಾಭೂಷಣರು ತಮ್ಮ ಜೀವನ ಕಥನವನ್ನು ‘ನೆನಪೇ ಸಂಗೀತ’ ಎಂಬ ಹೆಸರಿನಲ್ಲಿ ಪ್ರಕಟಿಸಿದ್ದಾರೆ. ಇದು ಮೊದಲು ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬರುತ್ತಿತ್ತು. ಈಗ ಪುಸ್ತಕ ರೂಪದಲ್ಲಿ ಪ್ರಕಟವಾಗಿರುವುದರಿಂದ ಪುಸ್ತಕಪ್ರಿಯರಿಗೆ ಒಂದು ಸಂಗ್ರಹಯೋಗ್ಯ ಕೃತಿ ಸಿಕ್ಕಿದಂತಾಗಿದೆ.ಈ ಪುಸ್ತಕಕ್ಕೆ ಹಲವು ನೆಲೆಗಳಲ್ಲಿ ಮಹತ್ವ ಇದೆ. ಮೊದಲನೆಯದು, ಮಠವೊಂದರ ಸ್ವಾಮೀಜಿಯಾಗಿದ್ದವರು ಪೀಠತ್ಯಾಗ ಮಾಡಿದ ನಂತರ ಬರೆದ ಆತ್ಮಕಥನವಾಗಿ ಇದು ಒಂದು ಅನನ್ಯ ಪುಸ್ತಕ. ಆ ಅಂಶದ ಬಗ್ಗೆಯೇ ಈ ಪುಸ್ತಕ ಹೆಚ್ಚು ಗಮನ ಹರಿಸುತ್ತದೆ. ವಾಗ್ವಾದವಾಗಿ ಇದೊಂದು ಬಹಳ ಮಹತ್ವ ಇರುವ ಪುಸ್ತಕ. ಬಹುಮಟ್ಟಿಗೆ ಈ ವಾಗ್ವಾದ ಆತ್ಮಗತವಾಗಿಯೇ ಈ ಪುಸ್ತಕದಲ್ಲಿ ನಡೆದಿದೆ. ಜತೆಗೆ ವಿದ್ಯಾಭೂಷಣರ ಆತ್ಮೀಯ ಮಿತ್ರ ವಿದ್ವಾಂಸ ಲಕ್ಷ್ಮೀಶ ತೋಳ್ಪಾಡಿಯವರು ಈ ವಾಗ್ವಾದಕ್ಕೆ ತಾತ್ವಿಕ ಗಹನತೆ ಕೊಟ್ಟಿದ್ದಾರೆ. ಅದನ್ನು ಮುಂದೆ ಚರ್ಚಿಸಲಾಗಿದೆ. + +ಎರಡನೆಯದು, ಮಠಾಧಿಪತಿ ಸಂನ್ಯಾಸಿಗಳ ಬದುಕಿನ ಒಂದು ಪಾರ್ಶ್ವನೋಟ ಕೊಡುವ ಕಥನವಿದು. ಮೂರನೆಯದು, ಮಠಗಳ ಆಡಳಿತದ ಲೌಕಿಕ ಜಂಜಾಟಗಳ ಒಂದು ನೋಟವೂ ಇಲ್ಲಿ ಸಿಗುತ್ತದೆ. ಮಠಗಳ ದಿನನಿತ್ಯದ ಖರ್ಚುಗಳನ್ನು ನಿಭಾಯಿಸುವುದು ಎಷ್ಟು ಕಷ್ಟವೆಂಬ ಸಂಗತಿಯನ್ನು ಈ ಕೃತಿಯಲ್ಲಿ ತಿಳಿಯಬಹುದು. ವಿದ್ಯಾಭೂಷಣರ ತಂದೆಯವರಾದ ಗೋವಿಂದಾಚಾರ್ಯರು ಮಠದ ಪಾರುಪತ್ಯಗಾರರಾಗಿ ಖರ್ಚುಗಳನ್ನು ನಿಭಾಯಿಸಲು ಸಾಲ ತರುತ್ತಿದ್ದುದು, ತಮ್ಮ ಪತ್ನಿಯ ಆಭರಣಗಳನ್ನು ಸದಾ ಅಡವು ಇಡಬೇಕಾಗಿ ಬರುತ್ತಿದ್ದುದು, ಆ ಸೇವೆಯಲ್ಲಿಯೇ ಅವರು ನವೆದುದು ಇವೆಲ್ಲ ಈ ಆತ್ಮಕಥೆಯೊಳಗೆ ಬರುವ ಹೃದಯಸ್ಪರ್ಶಿಯಾದ ಅಧ್ಯಾಯಗಳು. ನಾಲ್ಕನೆಯದು, ವಿದ್ಯಾಭೂಷಣರು ಖ್ಯಾತ ಕರ್ನಾಟಕೀ ಗಾಯಕರೂ ಆಗಿ ಬೆಳೆದವರು. ಈ ಆಯಾಮದಲ್ಲಿ ಅವರ ನೆನಪುಗಳು, ಅವರ ಸಾಧನೆಯ ಪಥ ಹೇಗಿತ್ತು ಎನ್ನುವುದನ್ನೂ ತಿಳಿಯುವ ಅವಕಾಶ ಇಲ್ಲಿದೆ. ವಿದ್ಯಾಭೂಷಣರ ಬರವಣಿಗೆಯ ಸಂಗ್ರಹಗುಣದಿಂದಾಗಿ ಕೆಲವು ಆಯಾಮಗಳನ್ನು ಇನ್ನಷ್ಟು ಬೆಳೆಸಬಹುದಿತ್ತೆಂದು ಅನಿಸುವುದು ಸುಳ್ಳಲ್ಲ. ಆದರೆ ಪೀಠತ್ಯಾಗದ ತಾತ್ವಿಕತೆಯನ್ನು ಮತ್ತು ಕತೆಯನ್ನು ಹೇಳುವ ಉದ್ದೇಶವೇ ಪ್ರಧಾನವಾಗಿ ಕಾಣುವುದರಿಂದ ಇತರ ನೆನಪುಗಳು ಸಣ್ಣ ಸಣ್ಣ ಸಂಗತಿಗಳಾಗಿ ಬಂದು ಕೃತಿಯ ಸ್ವಾರಸ್ಯವನ್ನು ಹೆಚ್ಚಿಸುವಲ್ಲಿ ನೆರವಾಗಿವೆ. + + + +ವಿದ್ಯಾಭೂಷಣರ ಆತ್ಮಕಥೆಯಲ್ಲಿ ಎದ್ದು ಕಾಣುವ ಒಂದಂಶವೆಂದರೆ ಅವರ ಪ್ರಾಮಾಣಿಕತೆ. ಸಂನ್ಯಾಸ ಒಲ್ಲದ ತಮ್ಮನ್ನು ಒತ್ತಾಯದಿಂದ ಪೀಠದಲ್ಲಿ ಕುಳ್ಳಿರಿಸಿದ ಕಾರಣ, ತಮ್ಮ ಮನಸ್ಸು ಸದಾ ಪೀಠತ್ಯಾಗವೆಂಬ ಪ್ರತಿಭಟನೆಗೆ ತುಡಿಯುತ್ತಿದ್ದುದನ್ನು ದಾಖಲಿಸುವುದರ ಜತೆಗೆ ಅವರು ತಮ್ಮ ನಿರ್ಧಾರ ಮತ್ತು ನಡೆಗಳ ಬಗ್ಗೆ ಸ್ವವಿಮರ್ಶೆ ಮಾಡುತ್ತಾರೆ. ತಮ್ಮ ಸ್ವಾರ್ಥಸಾಧನೆಗಾಗಿ ತಮ್ಮ ಶಿಷ್ಯರಾದ (ಈಗಿನ ಸುಬ್ರಹ್ಮಣ್ಯ ಸ್ವಾಮಿಗಳಾದ) ಶ್ರೀಧರ ಜೋಯಿಸರಿಗೆ ಒತ್ತಾಯದಿಂದ ಇದನ್ನು ದಾಟಿಸಿದ್ದೇನೆ, ಸ್ವಲ್ಪ ಹೆಚ್ಚೇ ವಯಸ್ಸಿನ ಅಂತರವಿರುವ ತಮ್ಮ ಪತ್ನಿಯನ್ನು ಮದುವೆಯಾದುದು ಸರಿಯಾಯಿತೇ ಇಲ್ಲವೇ? ಇತ್ಯಾದಿ ಪ್ರಶ್ನೆಗಳನ್ನು ತನಗೆ ತಾನೇ ಕೇಳಿಕೊಳ್ಳುತ್ತಾರೆ. ತೋಳ್ಪಾಡಿಯವರು ಬರೆದುಕೊಟ್ಟ ಭಾಷಣವನ್ನು ಪ್ರಸ್ತುತಪಡಿಸಿದ್ದು, ತಾವೇ ರಮಾ ಅವರಿಗೆ ಮೊದಲಾಗಿ ಪ್ರಸ್ತಾಪ ಮಾಡಿದ್ದು ಇತ್ಯಾದಿಗಳನ್ನು ಕೂಡಾ ಸಂಕೋಚವಿಲ್ಲದೆ ಬರೆದುಕೊಂಡಿದ್ದಾರೆ. ಜತೆಗೆ, ಮತ್ತೊಂದು ಕಡೆ ಸಂಯಮವನ್ನು ತೋರಿಸಿದ್ದಾರೆ. ತಾನು ಗಮನಿಸಿದ ಇತರರ ದೌರ್ಬಲ್ಯಗಳನ್ನು ಹೇಳದೆ ತನ್ನ ನಿಲುವುಗಳನ್ನು ಮಾತ್ರ ಹೇಳಿಕೊಂಡು ಹೋಗಿದ್ದಾರೆ. + +“ನೆನಪೇ ಸಂಗೀತ – ಮರೆತೇ ಬಿಟ್ಟಿದ್ದ ನನ್ನ ಬದುಕಿನ ವಿಶಿಷ್ಟ ಸಂದರ್ಭಗಳನ್ನು ಮತ್ತೆ ನೆನಪಿಸಿಕೊಂಡು ಬರೆದುದು. ಇಲ್ಲಿ ಹೇಳದೇ ಉಳಿದುದು ಬಹಳಷ್ಟಿವೆ. ಮತ್ತದು ಬೇಕೆಂದೇ ಹೇಳದೇ ಉಳಿದದ್ದು. ಹಾಗೆಂದು ಹೇಳಿದವುಗಳಲ್ಲಿ ಅತಿಶಯೋಕ್ತಿಯೇನೂ ಇಲ್ಲ!” ಎಂದು ‘ನನ್ನೆರಡು ಮಾತು’ಗಳಲ್ಲಿ ಅವರು ಹೇಳಿಕೊಂಡಿದ್ದಾರೆ. + +ಒಂದು ಕೃತಿ ಅಂದರೆ ಅದರ ಮುನ್ನುಡಿ, ಬೆನ್ನುಡಿ ಎಲ್ಲ ಸೇರಿದ ಸಮಗ್ರ. ಹಾಗಾಗಿ ಲಕ್ಷ್ಮೀಶ ತೋಳ್ಪಾಡಿಯವರ ಮುನ್ನುಡಿಯೂ ಈ ಕೃತಿಯ ಭಾಗವಾಗಿಯೇ ಇದೆ. ಅವರ ಮುನ್ನುಡಿ, ವಿದ್ಯಾಭೂಷಣರ ಒಂದು ಮಾತಿಗೆ ಉತ್ತರವಾಗಿ ಬಂದು, ಇಡಿಯ ಕೃತಿಯನ್ನು ವಿಸ್ತರಿಸಿದೆ, ಮತ್ತು ಎತ್ತರಿಸಿದೆ. + +ಈ ಕೃತಿಯನ್ನು ಒಂದು ಆತ್ಮಕಥನವಾದರೂ ಒಂದು ಸೃಜನಶೀಲ ಸಾಹಿತ್ಯ ಕೃತಿಯಾಗಿ ಪರಿಗಣಿಸಬೇಕಾಗಿದೆ. ಆಗ ವಿದ್ಯಾಭೂಷಣರ ಬದುಕಿನ ಎರಡು ಮುಖ್ಯ ಧಾರೆಗಳು ಸ್ಪಷ್ಟವಾಗುತ್ತವೆ. ಒಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಪ್ರತಿನಿಧಿಸುವ ಬೌದ್ಧಿಕ – ಆಧ್ಯಾತ್ಮಿಕ ಮೌಲ್ಯಗಳು, ಇನ್ನೊಂದು ಅವರ ಪತ್ನಿ ಶ್ರೀಮತಿ ರಮಾ ವಿದ್ಯಾಭೂಷಣರು ಪ್ರತಿನಿಧಿಸುವ ಸಾಂಸಾರಿಕ ಮೌಲ್ಯಗಳು. ವಿದ್ಯಾಭೂಷಣರೂ ತಮ್ಮಲ್ಲಿರುವ ಈ ಎರಡು ತುಡಿತಗಳನ್ನು ಒಂದು ರೂಪಕದ ರೀತಿಯಲ್ಲಿ ಹೇಳುತ್ತಲೇ ನೆನಪುಗಳನ್ನು ಬಿಚ್ಚಿಡಲು ಪ್ರಾರಂಭಿಸುವುದು: “ದೇವ ನರಸಿಂಹ ನನ್ನ ಮನದೈವ…… ಕೆಂಡಸಂಪಿಗೆ ಹೂವು ಆತನಿಗೆ ಅತಿಪ್ರಿಯವಾದದ್ದು. ನನ್ನ ಹೆಂಡತಿಗೂ ಆ ಹೂವು ಪ್ರಿಯ…. ಕೆಂಡಸಂಪಿಗೆಯನ್ನು ವಿಷ್ಣುಪ್ರತೀಕವಾದ ಸಾಲಿಗ್ರಾಮದ ಮೇಲಿರಿಸಬಾರದಂತೆ. ಸಾಲಿಗ್ರಾಮಶಿಲೆ ವಜ್ರಕಠಿಣವಾದರೂ ಕೆಂಡಸಂಪಿಗೆಯ ಪರಿಮಳದ ಪ್ರಖರತೆಗೆ ಒಡೆದೇ ಹೋಗಬಹುದಂತೆ! ವಜ್ರನಖನಾದ ನರಸಿಂಹನ ವಜ್ರಕಠಿಣ ಪ್ರತೀಕ ಸಾಲಿಗ್ರಾಮವನ್ನೇ ಬೆದರಿಸಿಹ ಈ ಕೆಂಡಸಂಪಿಗೆಯನ್ನು ಏನನ್ನೋಣ?!” + + + +ನೇರವಾಗಿ ಇದನ್ನು ಘಟನೆಗಳ ಮೂಲಕ ನೋಡುವುದಾದರೆ ಅದು ಹೀಗಿದೆ. ಚಿಂತಕ ಲಕ್ಷ್ಮೀಶ ತೋಳ್ಪಾಡಿಯವರು ಪ್ರಾರಂಭದಿಂದಲೂ ವಿದ್ಯಾಭೂಷಣರ ಅತ್ಯಂತ ಆತ್ಮೀಯ ಗೆಳೆಯ, ಸಹಪಾಠಿ (ಸತೀರ್ಥ) ಮತ್ತು ಮಾರ್ಗದರ್ಶಕ. ಮಠದ ಕಾರ್ಯಕ್ರಮಗಳಿಗೆ ಬೌದ್ಧಿಕ ಔನ್ನತ್ಯವನ್ನು ಮತ್ತು ಲಿಬರಲ್ ದೃಷ್ಟಿಕೋನವನ್ನು ತಂದುಕೊಡುವಲ್ಲಿ ಲಕ್ಷ್ಮೀಶ ತೋಳ್ಪಾಡಿಯವರ ಪಾತ್ರವಿದೆ. + +ವಿದ್ಯಾಭೂಷಣರು ರಮಾ ಅವರನ್ನು ಮದುವೆಯಾಗಲು ನಿರ್ಧರಿಸಿ ಈ ನಿರ್ಧಾರ ಗಟ್ಟಿಯಾಗುತ್ತಿದ್ದ ಸಂದರ್ಭಗಳಲ್ಲಿ ತೋಳ್ಪಾಡಿಯವರು ಅದನ್ನು ವಿರೋಧಿಸುತ್ತಾರೆ. ರಮಾ ಅವರ ಜತೆಗೆ ದೂರವಾಣಿಯಲ್ಲಿ ಮಾತಾಡುತ್ತಿದ್ದ ವಿದ್ಯಾಭೂಷಣರಿಗೆ, ‘ಫೋನಿನಲ್ಲಿ ಮಾತಾಡುವುದನ್ನು ಬಿಡಿ. ಆಗ ಎಲ್ಲ ಮರೆತುಹೋಗುತ್ತದೆ” ಎಂದು ಸಲಹೆ ಕೊಡುತ್ತಾರೆ. + +ವಿದ್ಯಾಭೂಷಣರು ಕೊನೆಗೂ ಪೀಠತ್ಯಾಗದ ನಿರ್ಧಾರ ಮಾಡಿ, ಅದನ್ನು ಮೊದಲಾಗಿ ಮಿತ್ರ ತೋಳ್ಪಾಡಿಯವರಿಗೆ ಹೇಳಲು ಅವರ ಮನೆಗೆ ಹೋಗುತ್ತಾರೆ. ಆ ಸನ್ನಿವೇಶ ಹೀಗಿದೆ: + +“ಅಂತೂ ಶ್ರೀಧರ ಜೋಯಿಸರಿಗೆ ಸನ್ಯಾಸಾಶ್ರಮ ನೀಡುವ – ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಅಧಿಪತಿಯನ್ನಾಗಿಸುವ ದಿನ ಬಂತೇ ಬಂತು. ಅದಕ್ಕು ಮುಂಚೆ ತೋಳ್ಪಾಡಿಗೆ ವಿಷಯ ವಿವರಿಸಿ, ಮುಂದಿನ ಯೋಜನೆ ಕುರಿತು ಮಾತಾಡಲೆಂದು ಶಾಂತಿಗೋಡಿನ ಆತನ ಮನೆಗೇ ಹೊರಟೆ…… + +“ನಗುತ್ತಾ ವಿಷಯ ತಿಳಿಸಿದೆ. ನಡೆಯಲಿರುವ ಕಾರ್ಯಕ್ರಮದ ರೂಪರೇಷೆ ವಿವರಿಸಿದೆ, ನನ್ನ ಮುಂದಿನ ಹೆಜ್ಜೆಯ ಕುರಿತಾಗಿ ಅವನ ಸಲಹೆ ಕೇಳಿದೆ. ಅಷ್ಟರತನಕ ನನ್ನೆಲ್ಲ ಮಾತುಗಳನ್ನು ಸುಮ್ಮನೆ ಆಲಿಸುತ್ತಿದ್ದವನು, ಒಮ್ಮಿಂದೊಮ್ಮೆಲೆ ‘ಭಗ್ಗನೆ’ ಉರಿದುಬಿಟ್ಟ. ಆ ವರ್ತನೆ, ಆಗಿನ ಅವನ ಮಾತುಗಳು ನನಗೆ ತೀರ ಅನಿರೀಕ್ಷಿತವಾದವುಗಳಾಗಿತ್ತು. ಅವನ ಮುಖ ಕೆಂಪಗೆ, ಅವನ ತುಟಿಗಳು ನಡುಗುತ್ತಿದ್ದವು, “ಏನು? – ನನ್ನನ್ನು ಪರೀಕ್ಷೆ ಮಾಡಲು ಬಂದಿದೀರಾ? – ಏನು ಹೇಳ್ತಾ ಇದೀರಿ? – ಮತ್ತೆ ಮಠ ಬಿಡ್ತಿದೀರಿ? – ಸಣ್ಣ ಹುಡುಗಿಯನ್ನು ಮದುವೆಯಾಗ್ತಾ ಇದೀರಿ?” (ಪುಟ 124). + +ಇದನ್ನು ತಮ್ಮ ‘ಕನ್ನಡಿಹೊಳೆ’ ಎಂಬ ಮುನ್ನುಡಿಯಲ್ಲಿ ಪ್ರಸ್ತಾಪಿಸಿರುವ ತೋಳ್ಪಾಡಿಯವರು ಹೀಗೆ ಹೇಳುತ್ತಾರೆ: “ವಿದ್ಯಾಭೂಷಣರ ಈ ನೆನಪಿನ ಬರಹದಲ್ಲಿ ಕೊನೆಯಲ್ಲಿ ನಾನು ಅವರ ನಿಲುವನ್ನು ವಿರೋಧಿಸಿದ ಬಗ್ಗೆ ಕೆಲವು ಮಾತುಗಳು ಬಂದಿವೆ. ಹೌದು. ನನ್ನ ಮಾತುಗಳು ರೂಕ್ಷವಾಗಿದ್ದವು. ಅದಕ್ಕಾಗಿ ಅವರಲ್ಲಿ ಕ್ಷಮೆ ಯಾಚಿಸುವೆ. ಆದರೆ ನಾನು ತಳೆದ ನಿಲುವಿಗೆ – ಸಮರ್ಥನೆಯಲ್ಲ – ಒಂದೇ ಒಂದು ಕಾರಣವಾದರೂ ಇರಬಹುದಲ್ಲವೆ? ಇರಬಹುದು. ಆದರೆ ಆ ಕಾರಣ ನನ್ನಲ್ಲಿಯೇ ಇಂಗಿಹೋಗಲಿ. ನನಗೇ ಅದು ಮರೆತುಹೋಗಲಿ.” + +ಆ ಕಾರಣ ತಾತ್ವಿಕವಾದುದಾಗಿರಬಹುದು. ತೋಳ್ಪಾಡಿಯವರು ಈ ಮುನ್ನುಡಿಯ ಕೊನೆಯಲ್ಲಿ ಹೀಗೆ ಹಾರೈಸುತ್ತಾರೆ: “ಪ್ರಿಯ ವಿದ್ಯಾಭೂಷಣರಿಗೂ ಅವರೊಳಗಿನ ಇಷ್ಟದೈವದ ನಿಲುವು “ಕನ್ನೆಯ ಸ್ನೇಹದಂತೆ ಇದ್ದಿತ್ತು” ಎಂಬ ಬಗೆಯ ಅನುಭವವಾಗಿ ಬರಲಿ ಎಂದು ಎದೆಯಾಂತರಾಳದಿಂದ ಹಾರೈಸುವೆ.” (ಬಸವಣ್ಣನವರ ಮಾತು – ‘ಕೂಡಲ ಸಂಗನ ನಿಲವು ಕನ್ನೆಯ ಸ್ನೇಹದಂತೆ ಇದ್ದಿತ್ತು”.) + +ಲಕ್ಷ್ಮೀಶ ತೋಳ್ಪಾಡಿಯವರು ಹೇಳುತ್ತಿರುವ ಮಾತು, ವಿದ್ಯಾಭೂಷಣರ ಸಾಂಸಾರಿಕ ಬದುಕು ನೆಲೆಕಂಡುಕೊಂಡಂತೆ ಆಧ್ಯಾತ್ಮಿಕ ಹುಡುಕಾಟವೂ ಇನ್ನಷ್ಟು ತೀವ್ರವಾಗಲಿ, ಅದು ಅವರಿಗೆ ಸಿದ್ಧಿಸಲಿ ಎನ್ನುವುದಾಗಿರಬಹುದು. ವಿದ್ಯಾಭೂಷಣರು ತಮ್ಮ ಇಷ್ಟದೈವ ಲಕ್ಷ್ಮೀನರಸಿಂಹನ ಮೂರ್ತಿಯನ್ನು ತಮ್ಮ ಆಧ್ಯಾತ್ಮಿಕ ಸ್ಪಂದನವಿರುವ ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ, ಮೊದಲಿನಂತೆಯೆ ನಿತ್ಯಾನುಷ್ಠಾನ ಇತ್ಯಾದಿಗಳಲ್ಲಿ ತೊಡಗಿದ್ದಾರೆ ಎನ್ನುವುದನ್ನು ಗಮನಿಸಿದರೆ ಅವರ ಬದುಕಿನ ಎರಡು ತುಡಿತಗಳು ಸ್ಪಷ್ಟವಾಗುತ್ತವೆ. + +ಈ ಕಥಾನಕದಲ್ಲಿ ಸಂನ್ಯಾಸ, ಬಾಲ ಸಂನ್ಯಾಸ, ಮಠಗಳ ಅಗತ್ಯ, ಗೃಹಸ್ಥ ಸ್ವಾಮಿಗಳ ಪದ್ಧತಿಯ (ಋಷಿ ಪರಂಪರೆ) ಸಾಧ್ಯತೆ ಇತ್ಯಾದಿಗಳ ಬಗ್ಗೆ ಕೆಲವು ತಾತ್ವಿಕ ಚರ್ಚೆಗಳು ಇವೆ. ಪೇಜಾವರ ಸ್ವಾಮೀಜಿ, ಪಲಿಮಾರು ಸ್ವಾಮೀಜಿ, ಮಾಸ್ತಿ ಮುಂತಾದವರ ಅಭಿಪ್ರಾಯಗಳು, ಸ್ವತಃ ವಿದ್ಯಾಭೂಷಣರ ಚಿಂತನೆಗಳು ಇವೆಲ್ಲ ದಾಖಲಾಗಿ ಈ ವಿಷಯದ ಕುರಿತ ಒಂದು ಚಿಂತನೆಯಾಗಿ ಬೆಳೆದಿದೆ. ತಪಸ್ವಿಗಳಾದ ಪಲಿಮಾರು ಸ್ವಾಮೀಜಿಯವರು ಮತ್ತು ಅವರ ಶಿಷ್ಯ ಪೇಜಾವರ ಸ್ವಾಮೀಜಿಯವರು, ಜತೆಗೆ ಪೇಜಾವರರ ಶಿಷ್ಯ ವಿದ್ಯಾಭೂಷಣರು ಒಂದು ದಿನ ಏಕಾಂತದಲ್ಲಿ ಕುಳಿತಿದ್ದಾಗ ನಡೆದ ಒಂದು ಮಾತುಕತೆ ಕುತೂಹಲಕರವಾಗಿದೆ. ವಿದ್ಯಾಭೂಷಣರು ದಾಖಲಿಸುವ ಇನ್ನೊಂದು ಸನ್ನಿವೇಶ ಹೀಗಿದೆ: + +“ಪೇಜಾವರ ಶ್ರೀಪಾದರು ಆಗತಾನೇ ಕೆನ್ನೆಗಳಲ್ಲಿ ಹಾಲು ಆರದ, ಮೀಸೆ ಮೂಡದ ವಟುವೊಬ್ಬನನ್ನು ತಮ್ಮ ಉತ್ತರಾಧಿಕಾರಿಯೆಂದು ಆಯ್ಕೆ ಮಾಡಿ, ಸನ್ಯಾಸ ನೀಡಿ ತಮ್ಮ ಜೊತೆಗಿರಿಸಿಕೊಂಡಿದ್ದರು. ಬಾಲಯತಿಯ ಮುಖದಲ್ಲಿ ಅಪೂರ್ವ ತೇಜಸ್ಸು. ಅವರದು ಅಪೂರ್ವ ಪ್ರತಿಭೆಯೂ ಹೌದು. ಪೇಜಾವರ ಶ್ರೀಪಾದರನ್ನು ಭೇಟಿಯಾಗಲೆಂದು ಶತಾಯುಷ್ಯ ಸಮೀಪಿಸುತ್ತಿದ್ದ, ಕನ್ನಡದ ಆಸ್ತಿ – ಮಾಸ್ತಿಯವರು ಬಂದಿದ್ದರು. ಶ್ರೀಪಾದರ ಜೊತೆ ನಾನೂ ಇದ್ದೆ. ಮಾಸ್ತಿಯವರಿಗೆ ನಮ್ಮೆಲ್ಲರನ್ನು ಶ್ರೀಪಾದರು ಪರಿಚಯಿಸಿದರು. ಜೊತೆಗೆ ಹೊಸ ಸ್ವಾಮಿಗಳನ್ನೂ. ಮಾಸ್ತಿಯವರು ಹೊಸ ಸ್ವಾಮಿಗಳನ್ನು ದಿಟ್ಟಿಸಿ ನೋಡಿದರು – ಮತ್ತೂ ನೋಡಿದರು! ‘ಅಯ್ಯೋ ಪಾಪ’ ಎಂದುಸುರಿ ಸುಮ್ಮನಾದರು. ಕೂಡಲೆ ಹಿರಿಯ ಶ್ರೀಪಾದರು ಪ್ರತಿಕ್ರಿಯಿಸುತ್ತ, “ಇಲ್ಲ ಇಲ್ಲ, ಅವರಿಗೆ ಒಳ್ಳೆಯ ತರಬೇತಿ – ಶಿಕ್ಷಣ ನೀಡುವೆವು. ಪಾಠ ಪ್ರವಚನ ಮಾಡಿ ಯೋಗ್ಯ ರೀತಿಯಿಂದ ಅವರನ್ನು ಸಿದ್ಧಪಡಿಸುವೆವು” ಎಂದರೆ ಮಾಸ್ತಿಯವರಾದರೋ, “ಇಲ್ಲ ಇಲ್ಲ, ನನಗಿದರಲ್ಲಿ ನಂಬಿಕೆಯಿಲ್ಲ – ಸರಿ ಸರಿ ಇರಲೀ” ಎನ್ನುತ್ತಾ ಸ್ವಲ್ಪ ಹೊತ್ತು ಸುಮ್ಮನಾಗಿ – ಕೈಯಾಡಿಸಿ ವಿಷಯಾಂತರಗೊಂಡರು! ನಾನೂ ನೋಡುತ್ತಲೇ ಇದ್ದೆ.” (ಪುಟ 58) + +ಈ ಒಟ್ಟು ಕಥಾನಕವನ್ನು ಒಂದು ರೂಪಕವಾಗಿ ಗ್ರಹಿಸುವಂತಹ ತೋಳ್ಪಾಡಿಯವರ ಮುನ್ನುಡಿಯ ಮಾತುಗಳಿವು: “ಆ ಕಾಲದ ಕುಕ್ಕೆಯ ಕುಮಾರಪರ್ವತದ ಚಾಚಿದ ನೆರಳ ಅಡಿಯಲ್ಲಿ ಮುಗ್ಧ ಕುಮಾರಿಯಂತಿದ್ದ ಕುಕ್ಕೆಯ ಗಹನ ನೀರವ ರಾತ್ರಿಗಳಲ್ಲಿ – ಮಠದ ಮೇಲುಪ್ಪರಿಗೆಯ ಕಿರುಕೋಣೆಯಲ್ಲಿ …. ಈ ನನ್ನ ಗೆಳೆಯ ವಿದ್ಯಾಭೂಷಣರು – ನೀನಲ್ಲ; ನೀನು ಗೆಳೆಯನಿರಬಹುದು – ಆದರೆ ಹಾಡೇ ನನ್ನ ಪ್ರಾಣಸಖಿ – ಎನ್ನುವಂತೆ ಜಯದೇವನ ಅಷ್ಟಪದಿ – “ಪ್ರಿಯೇ ಚಾರುಶೀಲೇ” ಹಾಡುತ್ತಿದ್ದರೆ – ಓಹ್! ಅದೇನು ಅನುಭವ!…. ಆದರೂ ಇಲ್ಲಿ ಒಂದು ವಿ-ಸಂಗತಿ ಇರುವಂತಿದೆ. ಅದೇನೆಂದರೆ ಮಠದ ಉಪ್ಪರಿಗೆಯಲ್ಲಿ ಕಾವಿ ಉಟ್ಟ ತರುಣ ಕೊರಲಿನಿಂದ ಈ ಹಾಡು ಹುಟ್ಟಿ ಬರುತ್ತಿದೆ!” + + + +ಲೇಖಕ, ಸಂಗೀತ ವಿಷಯದಲ್ಲಿ ಅಧ್ಯಯನ ಮಾಡಿ ಸಂಪ್ರಬಂಧ ಬರೆದು ಪಿಎಚ್.ಡಿ. ಪದವಿ ಪಡೆದಿರುವ ಡಾ.ವಿದ್ಯಾಭೂಷಣರ ಈ ಕೃತಿ ಅವರ ಜನಪ್ರಿಯತೆಯ ಕಾರಣವಾಗಿ ಮಾತ್ರ ಮುಖ್ಯವಾಗುವುದಲ್ಲ, ಸಮಾಜದೊಳಗಿನ ಸಂನ್ಯಾಸಾಶ್ರಮದಂತಹ ಒಂದು ವ್ಯವಸ್ಥೆಯ ಭಾಗವಾಗಿದ್ದವರು ನಡೆಸಿದ ಸ್ವಾನುಭವದಿಂದ ಗಟ್ಟಿತನ ಪಡೆದ ಗಹನವಾದ ಚಿಂತನೆಗಳ ಸಹಿತ ಒಂದು ಜೀವನಕ್ರಮದ, ಒಂದು ಸಂಸ್ಕೃತಿಯ ದಾಖಲೆಯಾಗಿಯೂ ಮುಖ್ಯವಾಗಿದೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_418.txt b/Kenda Sampige/article_418.txt new file mode 100644 index 0000000000000000000000000000000000000000..df810fbbd4971261365d0f3ffb8459406bd0b5c9 --- /dev/null +++ b/Kenda Sampige/article_418.txt @@ -0,0 +1,67 @@ +ಈ ಫುಟ್‌ ಪಾತನ್ನುಪಾದಗಳಿಗಿಂತಲೂ ಹೆಚ್ಚುಬೆನ್ನುಗಳು ಸ್ಪರ್ಶಿಸಿವೆ + +ಈ ಫುಟ್‌ ಪಾತಿಗೆಕಸಕ್ಕಿಂತಲೂ ಹೆಚ್ಚುಕನಸುಗಳನ್ನು ಎಸೆಯಲಾಗಿದೆ + +ಈ ಫುಟ್‌ ಪಾತುಮಳೆಗಿಂತಲೂ ಹೆಚ್ಚುಕಣ್ಣೀರಲ್ಲಿ ತೊಯ್ದಿದೆ + +ಈ ಫುಟ್‌ ಪಾತನ್ನುನಗರಪಾಲಿಕೆಗಿಂತಲೂ ಹೆಚ್ಚುಅನಾಥರು ಪ್ರೀತಿಸಿದ್ದಾರೆ + +ಇದು ವಿಲ್ಸನ್ ಕಟೀಲ್ ಅವರ “ನಿಷೇಧಕ್ಕೊಳಪಟ್ಟ ಒಂದು ನೋಟು” ಸಂಕಲನದ ಕೊನೆಯ ಪದ್ಯ. ಇಲ್ಲಿನ ನಾಲ್ಕೂ ಪಾದಗಳಲ್ಲಿ ಒಂದು ಬಗೆಯ ಅಸಮ ಸಮೀಕರಣವನ್ನು ಮಾಡಲಾಗಿದೆ. ಪಾದಗಳು ಮತ್ತು ಬೆನ್ನು, ಕಸ ಮತ್ತು ಕನಸು, ಮಳೆ ಮತ್ತು ಕಣ್ಣೀರು, ನಗರಪಾಲಿಕೆ ಮತ್ತು ಅನಾಥರು ಇವು ಆ ಬಗೆಯ ಕಟ್ಟುವಿಕೆಯಲ್ಲಿನ ವಸ್ತುಗಳು. ಮೊದಲ ಮೂರು ಪಾದಗಳ ನಿರ್ವಹಣೆ ಸುಂದರವಾಗಿದೆ. ಇದು ಯಾರೂ ಗ್ರಹಿಸಬಲ್ಲ, ಚೆನ್ನಾಗಿದೆ ಎಂದು ಒಪ್ಪಬಲ್ಲ ಸಂರಚನೆ. + +ಕವನ ಕಟ್ಟುವ ಬಗೆಯ ಕುರಿತು ಅತ್ಯುತ್ಸಾಹ ಪ್ರಕಟಿಸದ ಕಾಲ ಇದು. ಆದರೆ ವಿಲ್ಸನ್ ಇಲ್ಲಿ ಮಾಡಿರುವ ಕೆಲಸ ಗಮನಿಕೆಗೆ ಸೂಕ್ತವಾದದ್ದು. ಆದರೆ ಮೇಲಿನ ಮೊದಲ ಮೂರು ಪಾದಗಳ – ಪಾದಗಳು ಮತ್ತು ಬೆನ್ನು, ಕಸ ಮತ್ತು ಕನಸು, ಮಳೆ ಮತ್ತು ಕಣ್ಣೀರು, – ನಿರೂಪಣೆಯ ದಾಟಿ ಕೊನೆಯ ಪಾದದ ನಗರಪಾಲಿಕೆ ಮತ್ತು ಅನಾಥರು ಎಂಬಲ್ಲಿಗೆ ಬರುವಾಗ ಮೇಲಿನ ರೂಪಕಾತ್ಮಕತೆಯನ್ನು ಬಿಟ್ಟುಕೊಟ್ಟು ಸಾಮಾಜಿಕತೆಯ ಸರಳೀಕೃತ ಚಿತ್ರದ ವರ್ಣನೆಯಾಗಿಬಿಡುತ್ತದೆ. ವಸ್ತುವೊಂದರ ನಿರ್ವಹಣೆಯ ಹಿಂದೆ ಇರುವ ಸಾಮಾಜಿಕ ಬದ್ಧತೆ ವಸ್ತು ಸ್ವಯಂ ಭರಿಸಬಲ್ಲ ನಿರ್ವಹಣೆಯ ಭಾರಕ್ಕಿಂತ ಹೆಚ್ಚಿನ ಪ್ರಾಧಾನ್ಯತೆ ಗಳಿಸಿಕೊಂಡಾಗ ಆಗುವ ಅಂತಿಮ ಪರಿಣಾಮವೇನು? ಅದು ನಿರ್ವಹಣೆಯ ಕ್ರಮವನ್ನು ಹೇಗೆ ಬದಲಿಸಬಲ್ಲದು ಎನ್ನುವ ಕುತೂಹಲಗಳು ಇಲ್ಲಿ ಮೂಡುತ್ತವೆ. + +ಇವತ್ತಿನ ಕಾವ್ಯದಲ್ಲಿ ಸಬಾಲ್ಟ್ರನ್ (Subaltern) ನೆಲೆಯಿಂದ ಹುಟ್ಟುವ ಕಾವ್ಯ ಇಂತಹ ಭಾರವನ್ನು ಹೊತ್ತುಕೊಂಡು ನಡೆಯುತ್ತಿದೆ. ರಜನೀಶ್ ಮಿಶ್ರಾ ತಮ್ಮ ಲೇಖನದ ಸಬಾಲ್ಟ್ರನ್ ಐಡೆನ್ಟಿಟಿ ಅಂಡ್ ಲಿಟರೇಚರ್ ಎಂಬ ಪ್ರಬಂಧದಲ್ಲಿ ಹೇಳುವಂತೆ ಸಾಹಿತ್ಯವೆನ್ನುವುದು ಬಾಹ್ಯದ ವಿವಿಧ ಸಮಾಜೋ ಆರ್ಥಿಕ ಕಾರಣಗಳ ಮತ್ತು ಸಂಬಂಧಿಸಿದ ಮನುಷ್ಯನ ಮಾನಸಿಕ ಸಂವೇದನೆಗಳ ಸಂಘರ್ಷದ ಅಭಿವ್ಯಕ್ತಿ. ಈ ಸಂಘರ್ಷ ನಡೆಯುವುದು ಮಾನವನ ಮನಸ್ಸಿನಲ್ಲಿ. ಅದು ಪರವಾದರೂ, ವಿರುದ್ಧವಾದರೂ ಅದರ ರಂಗಸ್ಥಳ ಈ ಮನಸ್ಸೇ. ಪರವಾದುದು ಎಂದಾದರೆ ಅದರ ಕಾರ್ಯಾಚರಣೆ ಮತ್ತು ಪರಿಣಾಮ ಒಂದು ಬಗೆಯಾಗಿ ಇರುತ್ತದೆ. ಇನ್ನೊಂದು ಅದರ ವಿರುದ್ಧವಾಗಿ ನಡೆಯುವಂಥದ್ದು. ಸಮಾಜದಲ್ಲಿನ ವಿರುದ್ಧದ ಪ್ರತೀಗಾಮಿ ಮನಸ್ಸುಗಳು, ಅಗತ್ಯ ಕಾವ್ಯಸಂವೇದನೆಯನ್ನು ರೂಢಿಸಿಕೊಂಡಂತೆ ತೋರುತ್ತಿಲ್ಲ. ಆದರೆ ಪರವಾದ ಸಂವೇದನೆಯು ಚಾರಿತ್ರಿಕ ಶೋಷಣೆಗಳ ವಿರುದ್ಧ ಕಾವ್ಯರಚನೆಯಲ್ಲಿ ತೊಡಗಿ ಅಲ್ಲಿಂದ ಮುಂದೆ ಹೋಗಿ ಬಲುಬೇಗ ಶಿಖರವನ್ನು ತಲುಪಿಬಿಟ್ಟ ಹಾಗಿದೆ. + +ಮೇಲೆ ಚರ್ಚಿಸಿದ ಈ ಸಂವೇದನೆ ಹೊಸ ತಲೆಮಾರಿನ ಸಬಾಲ್ಟ್ರನ್ ನೆಲೆಯ ಲೇಖಕರಲ್ಲಿ ಬಹಳವಾಗಿ ಕಂಡುಬರುತ್ತಲಿದೆ. ಅಲ್ಲಿನ ಪ್ರತಿಮೆಗಳಲ್ಲಿ ಬಹಳವಾಗಿ ಬಳಕೆಯಾಗುವುದು ಬುದ್ಧನ, ಬುದ್ಧತನದ, ತಾಯಿಯ, ಹೆಣ್ಣಿನ, ಶೋಷಣೆಯ, ಬೀದಿಗೆ ಬಿದ್ದವರ ಚಿತ್ರಗಳು; ಇದಕ್ಕೆ ಬೆನ್ನೆಲುಬಾಗಿ ಅಂಬೇಡ್ಕರರ ಮತ್ತು ಅವರ ಪ್ರತಿಪಾದನೆಯ ಹಿಂದಿನ ಸ್ಥೂಲ ಚಿತ್ರಣಗಳು. ಇದನ್ನು ಹೇಳುವಾಗ ಕಣ್ಣಿಗೆ ಕಟ್ಟುವ ಚಿತ್ರಗಳ ಬದಲಿಗೆ ಖಂಡನಾ ವಿಷಯದಲ್ಲಿ ತೊಡಗದೆ ಒಡಲಾಳವನ್ನು ಸಂಯಮದಿಂದ ಪ್ರಕಟಿಸುವ ಕಾವ್ಯವೂ ಹೇರಳವಾಗಿ ಬರೆಯಲ್ಪಡುತ್ತಿದೆ ಎನ್ನುವುದನ್ನು ಸಹ ನಾವು ನೆನಪಿನಲ್ಲಿಡಬೇಕು. ಮಿಶ್ರಾ ಹೇಳುವಂತೆ ಸಾಹಿತ್ಯಕ್ಕೆ ಕ್ರಾಂತಿಕಾರಿ ಮತ್ತು ಪ್ರತಿಕ್ರಿಯಾತ್ಮಕವಾದ ಕಾರ್ಯಕ್ಷಮತೆಯಿದೆ. ಅದೇ ಸಾಹಿತ್ಯವನ್ನು ಒಂದು ಸಮರ್ಥ ಸಾಧನವನ್ನಾಗಿಸುವುದು. ಈ ಸಾಧನವನ್ನು ಸುಧಾರಣೆಯ ಸಂದರ್ಭಗಳಲ್ಲಿ ಧಾರಾಳವಾಗಿ ಬಳಸಿಕೊಳ್ಳಲಾಗಿದೆ. ಆದರೆ ಭಾರತೀಯ ಸಂದರ್ಭದಲ್ಲಿ ಇಲ್ಲೊಂದು ಬಗೆಯ ಕಂದರ ನಿರ್ಮಾಣವಾಗುತ್ತದೆ. ಹಾಗಾಗಿ ಸಾಹಿತ್ಯದ ಪರಿಣಾಮ ಕ್ಷಮತೆಯ ಕುರಿತು ಸಂಶಯಗಳೂ ಮೂಡುತ್ತವೆ. ಇದನ್ನೇ ಮಿಶ್ರಾ ಸಬಾಲ್ಟ್ರನ್ ಮನುಷ್ಯ ಶೋಷಕರ ಭಾಷೆ ಮತ್ತು ಆಟಗಳನ್ನು ಕಲಿತುಕೊಂಡಿದ್ದಾನೆ. ಹಳೆಯ ಮಂದಿಯ ಭಾಷೆಯ ಮೇಲೆ ಹಿಡಿತ ಸಾಧಿಸಿದ್ದಾನೆ. ಅದರ ಮೂಲಕವೇ ತನ್ನ ಅಭಿವ್ಯಕ್ತಿಯನ್ನು ಸಾದರಪಡಿಸುತ್ತಿದ್ದಾನೆ. ಇದೇ ರಿಚ್ ಮತ್ತು ಸ್ಟ್ರೇಂಜ್. ಆದರೆ ಈ ಸೃಷ್ಟಿಯು ಎಸ್ತೆಟಿಕ್ಸ್ ಮತ್ತು ರೆಟಾರಿಕಲ್ ನಿಲುವುಗಳನ್ನು ಹೊಂದಿಲ್ಲವೆಂಬುದೇ ಗಮನಾರ್ಹ ವಿಚಾರ ಎಂದಿದ್ದಾರೆ. + +ನಿಜಕ್ಕೂ ಸಬಾಲ್ಟ್ರನ್ ಸಾಹಿತ್ಯದ ರೂಪಕಾತ್ಮಕತೆಗೆ ಬಲ ಬರುವುದು ಹೊಸ ಮೆಟಫರ್‌ ಗಳಿಂದ. ಆದರೆ ಇಂದಿನ ಈ ಮಾರ್ಗವು ಅದನ್ನು ಬಿಟ್ಟುಕೊಟ್ಟು ವಸ್ತುವಿನ ನಗ್ನಾವಸ್ಥೆಯನ್ನು ಹಾಗೆಯೇ ಬಿಡಿಸಿಡುವತ್ತ ತುಡಿಯುತ್ತಿದೆ. ಇದು ಒಂದು ಬಗೆಯಲ್ಲಿ ಸುಲಭದ ರಚನಾ ಮಾರ್ಗ. ಇದು ಅಮೃತಕ್ಕೆ ಹಾರುವ ಗರುಡನ ರೂಪಕವನ್ನು ಬಿಟ್ಟುಕೊಟ್ಟ ಮಾದರಿ. ಶೇಕ್ಸ್ ಪಿಯರ್‌ ನ ‘ಟೆಂಪೆಸ್ಟ್’ ನಾಟಕದಲ್ಲಿ ಬರುವ ಕಾಲಿಬನ್‌ ನ ಚಿತ್ರಣದಂತೆ. ಅವನು ದೆವ್ವವೊಂದರ ಮಗ, ಅರ್ಧ ಮೃಗ ಅರ್ಧ ಮನುಷ್ಯ. ಸಮಕಾಲೀನ ಸಬಾಲ್ಟ್ರನ್ ಬದುಕು ಏನೇನನ್ನು ಬಗೆದರೂ ಇಂದಿಗೂ ಇದೇ ದೃಷ್ಟಿಕೋನದಲ್ಲಿ ಕಾಣಲಾಗುತ್ತಿದೆ ಎನ್ನುವುದು ದೌರ್ಭಾಗ್ಯ. + +ಹಸಿವು, ನಿರಾಶ್ರಯ, ಬಡತನ ಮುಂತಾದ ಅನಿಷ್ಟಗಳನ್ನು ಒಪ್ಪಿತ ಪರಿಸ್ಥಿತಿಯಂತೆ ನೋಡುವ ಮನಸ್ಥಿತಿ ಭಾರತೀಯ ಸಮಾಜದಲ್ಲಿ ಹಾಸುಹೊಕ್ಕಾಗಿದೆ. ಒಂದಿಷ್ಟು ಭಿಕ್ಷೆ ಎಲ್ಲಕ್ಕೂ ಉತ್ತರವೆಂದು ನಾವು ಭಾವಿಸುತ್ತೇವೆ. ’ಕರುಣೆ’ಯ ಭಾರವನ್ನು ಒಲುಮೆಗೆ ಪರ್ಯಾಯವಾಗಿ ಭಾವಿಸುವುದರ ದುರಂತವನ್ನು ಕನ್ನಡ ಕಾವ್ಯ ಕುವೆಂಪು, ಪುತಿನ ಅವರಂಥಹವರ ಮೂಲಕ ಕಂಡಿರಿಸಿದೆ. ಆದರೆ ಈಗಿನ ಸಬಾಲ್ಟ್ರನ್ ಬರವಣಿಗೆ ಭಿನ್ನ ದೃಷ್ಟಿಕೋನದಿಂದ ಇದನ್ನು ನೋಡಲು ಪ್ರಯತ್ನಿಸುತ್ತಿದೆ ಎನ್ನಿಸುತ್ತದೆ. ಈ ಅನಿಸಿಕೆಗೆ ಪೂರಕವಾಗಿ ಈ ಬಗೆಯ ನೋಟಗಳು ವಿಲ್ಸನ್ ಅವರ ಕಾವ್ಯವನ್ನು ಸರಿಸುಮಾರಾಗಿ ಆಕ್ರಮಿಸಿದೆ. ಇಂಥದರ ನಡುವೆ ‘ಬಾಲ್ಯವನ್ನು ಕಳೆದುಕೊಂಡ’ ವಿಲ್ಸನ್ ಅವರ ಕಾವ್ಯ ಸಂವೇದನೆಯ ಅಭಿವ್ಯಕ್ತಿ ಕ್ರಮದಿಂದಾಗಿ ನಮ್ಮ ಗಮನ ಸೆಳೆಯುತ್ತದೆ. ಹೊಸ ಮತ್ತು ತನ್ನದೇ ಮಾಡಿಕೊಂಡ ಬಗೆಯ ಮಾತುಗಳ ವಿಲ್ಸನ್ ಪ್ರಬುದ್ಧತೆಯ ಕಡೆಗೆ ಹೆಜ್ಜೆ ಹಾಕುತ್ತಿರುವುದನ್ನು ಸ್ಪಷ್ಟವಾಗಿ ಸೂಚಿಸುತ್ತವೆ. ಈ ದಿಕ್ಕಿನತ್ತ ಅವರ ಪಯಣದ ಹಾದಿಯನ್ನಿಷ್ಟು ಪರಿಶೀಲಿಸುವುದು ಅಗತ್ಯ. + +‘ನಿನ್ನ ಸೆರಗ ಹೂಗಳಿಗೆ ಬೀಡಿಯೆಲೆಯದೇ ಘಾಟು’ ಎಂದು ಶುರುವಾಗುವ ‘ಬೀಡಿ ಕಟ್ಟುವ ಹುಡುಗಿಗೆ’ ಕವಿತೆಯ ಸಾಲುಗಳೆಷ್ಟು ಸಮರ್ಥವಾಗಿವೆ ಎಂದರೆ ಒಂದು ಹೊಸ ಸಾಧ್ಯತೆ ಇಲ್ಲಿ ತೆರೆದುಕೊಳ್ಳುತ್ತದೆ. ಪರಿಹಾರವಾಗದ ಈ ಸ್ಥಿತಿಯ ಕೊನೆಗೆ ‘ಉರಿವ ಬದುಕಿನ ಬೂದಿ ಉದುರಿ ಬೀಳುತ್ತದೆ’. ಅಲ್ಲಿನ ಪ್ರಯತ್ನಗಳು ವಿಫಲವಾದ ಬಗೆ ಎಂತಿದೆ ಎಂದರೆ ‘ನಿನ್ನೊಲೆಯಲ್ಲಿ ಬೆಳಕಾಗಲು ನನ್ನ ಸಂತತಿ ಕೊರೆದ ಕಡ್ಡಿಗಳೆಷ್ಟೋ’ ಎಂಬಂತೆ. ಅಂದರೆ ಸಾಂಘಿಕ ಪ್ರಯತ್ನಗಳು ಸಸ್ಟೈನ್ ಆಗದೆ ಸೋಲುವ ಪರಿ ಕವಿಗೆ ನಿಚ್ಚಳವಾಗಿದೆ. ಪರಿಹಾರವೇ ಇಲ್ಲವೆಂಬ ಗಾಢ ನಿಟ್ಟುಸಿರಿನ ಸ್ಥಿತಿ ಎಲ್ಲೆಡೆ ಹಬ್ಬಿರುವುದನ್ನು ಪ್ರಾದೇಶಿಕ ರೂಪಕದ ಮೂಲಕ ವಿವರಿಸಿಕೊಳ್ಳಲಾಗಿದೆ. + +ಹೀಗೇ ಒಂದು ಬಲೂನು ಹಿಡಿದ ಹುಡುಗಿ ಅಪಘಾತಕ್ಕೆ ಈಡಾಗಿ ಮರಣಿಸುವ ಚಿತ್ರ ‘ಬಲೂನು, ಮಕ್ಕಳು, ರಸ್ತೆ’ ಕವಿತೆಯಲ್ಲಿದೆ. ‘ರಸ್ತೆಯ ಮೇಲೆ ಹೊರಳುವ ಬಲೂನು ಮಗುವಿನ ಉಸಿರನ್ನು ಇನ್ನೂ ಹಿಡಿದುಕೊಂಡಿದೆ’ ಎಂಬ ಹೃದಯ ವಿದ್ರಾವಕ ಚಿತ್ರವನ್ನು ಕಟ್ಟುವ ಕವಿತೆ ಕವಿತೆಗೆ ಒಂದು ಪರ್ಪಸ್ ಬೇಕೆಂಬ ಇರಾದೆಯಲ್ಲಿ ಎರಡು ಪಾದ ಮುಂದಿಟ್ಟು ಹಿಂದೆ ಕವಿತೆ ನೀಡಿದ ಅನುಭವಕ್ಕೆ ಎರವಾಗಿದೆ. ಇದು ಬಹಳ ಕವಿಗಳ ದೌರ್ಬಲ್ಯವೂ ಆಗಿದೆ ಎನ್ನುವುದನ್ನು ಗಮನಿಸದಿದ್ದರೆ ವಿಲ್ಸನ್ ಕಾವ್ಯವನ್ನು ದುರ್ಬಲವೆಂದು ತಿಳಿಯುವ ಪ್ರಸಂಗ ಉದ್ಭವಿಸಿಬಿಡಬಹುದು. + +ನಿಷೇಧಕ್ಕೊಳಪಟ್ಟ ಒಂದು ನೋಟು ಸ್ಪಷ್ಟವಾಗಿ ನೋಟು ಅಮಾನ್ಯೀಕರಣಗೊಂಡು ಬಡಬಗ್ಗರ ಮೇಲೆ ಅತ್ಯಾಚಾರವಾದಂತೆ ಭಾವಿಸಿ ಬರೆದ ಕವಿತೆ. ಈ ನೋಟಿನ ಅವಸ್ಥಾಂತರಗಳಲ್ಲಿ ಬದುಕಿನಲ್ಲಿ ಸಂಪಾದನೆಗಿರುವ ಘೋರ ಹಾಗೂ ನಾಗರಿಕ ವಿಧಾನಗಳ ಉಲ್ಲೇಖವಿದೆ. ವಾಸ್ತವವಾಗಿ ನೋಟು ಅಮಾನ್ಯೀಕರಣದಿಂದ ಬಡವರಿಗೆ ಕೂಲಿ ಸಿಗದೆ ಹೋಗಿರುವಂಥ, ಭೂ ವಹಿವಾಟಿನವರಿಗೆ ಲೆಕ್ಕ ಸಿಗದವರಿಗೆ ತೊಂದರೆಯಾದದ್ದು ಮುಂತಾದ ಸತ್ಯಗಳು ಇವೆಯೇ ಹೊರತು ಮೋದಿ ಆಡಳಿತವನ್ನು ಕನ್ನಡ ಕಾವ್ಯ ಮತ್ತು ಸಂಪರ್ಕ ಮಾಧ್ಯಮಗಳು ಬಿಂಬಿಸಿದಂತೆ ಅಲ್ಲ; ಟೀಕಿಸಿದಷ್ಟಲ್ಲ ಸಹ ಎನ್ನುವುದು, ಮತ್ತು ನೋಟು ಬದಲಿಸಿಕೊಳ್ಳಲು ಜನರಿಗೆ ಹೇರಳ ಅವಕಾಶ ಕಲ್ಪಿಸಲಾಗಿತ್ತು ಎಂಬುದು ಸ್ವತಹ ಬ್ಯಾಂಕ್‌ ನ ಹಿರಿಯ ಅಧಿಕಾರಿಯಾಗಿದ್ದ ನನಗೆ ತಿಳಿದಿದೆ. ಇದೇ ಬಗೆಯ ಆ್ಯಂಟಿ ಮೋದಿ ಕವಿತೆ ‘ಕಿತ್ತಳೆಯ ಅಚ್ಚೇ ದಿನ್’. ಈ ಬಗೆಯ ಕವಿತೆಗಳು ಜನಪ್ರಿಯತೆಯ ಹಂಬಲದ ರಚನೆಗಳು. ಕಾರ್ಪೊರೇಟ್ ಆಸ್ಪತ್ರೆಗಳ ಚಿತ್ರಗಳ ಬಿಡಿಸುವ ಕವಿತೆಯೂ ಹೊಸ ಅನುಭವವೇನನ್ನೂ ಕೊಡುವುದಿಲ್ಲ. ಆದರೆ ಖಗೋಳದ ರಸಪ್ರಶ್ನೆಗಳು ಕವಿತೆಗೆ ಬಂದರೆ ಅದು ಹಂಗು ತೊರೆದ ವಿಷಣ್ಣ ಕವಿತೆ. ವಸ್ತುವನ್ನು ಖಚಿತವಾಗಿ ಕಾವ್ಯಕ್ಕೊಗ್ಗಿಸುವ ಕಲೆ ವಿಲ್ಸನ್ ಅವರಿಗೆ ಒದಗಿ ಬಂದಿರುವುದು ಇಲ್ಲಿ ಪ್ರಕಟವಾಗುತ್ತದೆ. + + + +ಪುಟ್ಟ ಪುಟ್ಟ ಸಾಲುಗಳಲ್ಲಿ ಪ್ರಖರ ಜೀವನಾನುಭವವನ್ನು ಹಿಡಿದಿಡುವ ಶಕ್ತಿ ವಿಲ್ಸನ್ ಅವರಿಗೆ ಇರುವುದನ್ನು ನಾವು ಸ್ವತಂತ್ರ ಸಾಲುಗಳು, ಮರಳ ಮೇಲೆ ಗೀಚಿದ್ದು, ಗಡಿ ನುಸುಳಿದ ಕವಿತೆ, ರೇಖಾಗಣಿತದ ಕವಿತೆಗಳು ಮುಂತಾದ ಕವಿತೆಗಳಲ್ಲಿ ಕಾಣಬಹುದು. ಪ್ರಬುದ್ಧ ಅಲೆಗಳೆಂದಿಗೂ ದೀಪಸ್ಥಂಭದ ಬೆಳಕನ್ನು ಬೆಳದಿಂಗಳೆಂದು ಭ್ರಮಿಸುವುದಿಲ್ಲ ಎನ್ನುವಲ್ಲಿ, + +ದಡದ ಮೇಲೆ ಬರೆದೆ –ಪರಶುರಾಮನಿಗೆ ಸೋತ ಸಮುದ್ರಕ್ಷಣದಲ್ಲಿ ಅಲೆಯೊಂದು ಅದನ್ನು ಅಳಿಸಿತನ್ನತನವನು ಗೆದ್ದಿತು –ಎನ್ನುವ ಮಾತುಗಳು ಧ್ವನಿಪೂರ್ಣವಾಗಿವೆ. ಹಾಗೆಯೇ ತ್ರಿಭುಜ ಎಂಬ ಕಿರಿಯ ಭಾಗದಲ್ಲಿ ಸಂಬಂಧಗಳನ್ನು ನೇರ್ಪುಗೊಳೀಸುವ ಹಂಬಲವಿದೆ. + +ಈ ಮೊದಲು ವಿವರಿಸಿದ ಎಸ್ತೆಟಿಕ್ ಅಥವಾ ರೆಟರಿಕಲ್ ನಿಲುವಿನ ಗೈರುಹಾಜರಿ ನಮಗೆ ಪದೇ ಪದೇ ಮುಖಾಮುಖಿಯಾಗುತ್ತದೆ. ಇರುವುದರಲ್ಲಿ ಅನುಭವವ ಹಿಗ್ಗಲಿಸುವ ಬಗೆಯ ಸಬಾಲ್ಟ್ರನ್ ಅಭಿವ್ಯಕ್ತಿಗೆ ಸ್ಪಷ್ಟ ನಿದರ್ಶನವಾಗಿ ನಾವು ತಮಟೆ ಕವಿತೆಯನ್ನು ನೋಡಬಹುದು. ಇದು ಜನರಿಗೆ ಅಗತ್ಯವಾಗಿರುವ ತುರ್ತು ಅಭಿವ್ಯಕ್ತಿಯ ಬರೆಹವಾದರೂ ಇಲ್ಲಿ ಕಲಾತ್ಮಕತೆಯು ತನ್ನ ಕರಗಳನ್ನು ಮುಂಚಾಚಿರುವುದನ್ನು ಗಮನಿಸಬಹುದು. ಇದರಲ್ಲಿ ಬಾವಲಿಯ ತೊಗಲಿನಿಂದ ತಮಟೆ ಮಾಡಿ ಬಾರಿಸುವ ಮಗನಿದ್ದಾನೆ. ಅವನದೂ ಸಬಾಲ್ಟ್ರನ್ ಅಭಿವ್ಯಕ್ತಿ. ಅದರ ಚಾಚು ಕಲೆಯೆ ಬದುಕನ್ನು ಇಮಾನ್ಸಿಪೇಟ್ ಮಾಡುವುದೆಂಬ ‘ಅವನ ಅಭಿವ್ಯಕ್ತಿಗೆ ಅಡ್ಡಿಪಡಿಸದ’ ಆ ಮೂಲಕ ಕಲೆಯಿಂದ ಮಹತ್ತರವಾದ ಅಂಚಿನ ಜನರಿಗೆ ಅಗತ್ಯವಾದ, ಜರೂರಿನ ಇಮಾನ್ಸಿಪೇಟರಿ ಸಂದರ್ಭ ಸೃಷ್ಟಿಯಾಗುವುದು ಎನ್ನುವ ನಂಬಿಕೆಯವರೆಗೂ ಕವಿತೆ ಮುಂದುವರೆದಿದೆ. + +ವಿಲ್ಸನ್ ಗೆಲ್ಲುವುದು ಸೂಕ್ಷ್ಮ ವಿಚಾರಗಳನ್ನು ಕವಿತೆಯಾಗಿಸುವುದರಲ್ಲಿ. ಉದಾಹರಣೆಗೆ ಅಜ್ಜಿ ಕವಿತೆಯನ್ನು ಗಮನಿಸಬಹುದು. + +‘ಅವಳಿ ಮರುಭೂಮಿಗಳಂತೆಅವಳ ಗಲ್ಲಗಳುಒಣಮರಳಿನ ಅಲೆ ಚಿತ್ತಾರನೆರಿಗೆಗಳುಅವೂ ಕಂಪಿಸುವುದುಂಟುಕಂಬನಿ ಜಾರಿದಾಗ’ –ಎಂದು ಪ್ರಾರಂಭವಾಗುವ ಕವಿತೆ ಕಾಯುವ ಅಜ್ಜಿ ಮತ್ತು ದೂರದ ಊರಿನ ಬಂಗಲೆಯಲ್ಲಿ ಒಂಟಿ ಆಡಿಕೊಳ್ಳುವ ಮೊಮ್ಮಗ ಎರಡನ್ನೂ ಮುಖಾಮಖಿಯಾಗಿಸಿ ಬದುಕಿನ ಪ್ಯಾರಡಾಕ್ಸ್ ಅನ್ನು ನಿರೂಪಿಸುತ್ತದೆ. ಕಾವ್ಯನಿರ್ಮಾಣದ ತಾಂತ್ರಿಕತೆಯನ್ನು ವಿಲ್ಸನ್ ಬಳಸುವ ಪರಿಗೆ ಜಾಮೆಟ್ರಿ ಬಾಕ್ಸಿನೊಳಗೆ ಕವಿತೆಯನ್ನು ನೋಡಬೇಕು. ಹಾಳೆಯ ಅಂಚಲ್ಲಿ ತಾನು ಹೆತ್ತ ಮಗುವಿನ ಚಿತ್ರವನ್ನು ಯಾರಾದರೂ ಹರಿದುಬಿಟ್ಟರೆ ಎಂದು ತವಕಿಸುವ ಪೆನ್ಸಿಲ್ ಏನೇನನ್ನೆಲ್ಲ ಹಿಡಿದಿರಿಸಿಕೊಂಡಿದೆ. ಒಂದೇ ಜಾಮೆಟ್ರಿ ಬಾಕ್ಸಿನಲ್ಲಿದ್ದರೂ ಅಲ್ಲಿನ ಪರಿಕರಗಳು ಹೇಗೆ ಘಟಕಗಳಾಗಿ ಪ್ರತ್ಯೇಕಿಸಲ್ಪಟ್ಟಂತೆ ಇಡಿಯನ್ನು ಬಿಟ್ಟು ಬಿಡಿಯಾಗಿ ಚಿಂತಿಸುವ ಕವಿತೆ ಧ್ಯಾನಿಸುವುದು ವಿಶ್ವಕುಟುಂಬವನ್ನು. + +ಚಿಟ್ಟೆಗಿಂತ ಹಗುರ ನನ್ನ ಕವಿತೆಕಾಗದವನ್ನೇ ಒದ್ದು, ಥಟ್ಟನೆಗಾಳಿಯಲಿ ಹಾರಿ ಹೋಯಿತು –ಎಂಬ ಹಂಗಿಲ್ಲದ ಕವಿತೆ ಬರೆಯುವ ಕವಿ ಬಣ್ಣಿಸುವುದು ಕಾವ್ಯ ಮೈದಳೆಯುವ ನಾನಾ ಅವಸ್ಥೆಗಳನ್ನು. ಅವಕ್ಕೆ ಪಾಂಡಿತ್ಯದ ಹಂಗಿಲ್ಲ ಎಂದು ಭಾವಿಸುವ ಕವಿಯ ಕವಿತೆ ಹಾರಿ ಹೋಗುವುದು ವಿದ್ವಾಂಸನ ಮಾತುಗಳಿಂದ. ಕಾವ್ಯಕ್ಕೆ ಗೊತ್ತಿದೆ ತಾನು ಬಂಧಿಯಲ್ಲ ಎಂದು. ತಾನು ಹಾರಿ ಹೋಗಿ ಎಲ್ಲಿ ಬೇಕಾದರೂ ನೆಲೆನಿಂತು ಹಾಡಬಲ್ಲೆನೆಂಬ ವಿಶ್ವಾಸ ಕವಿತೆಗಿದೆ. ಜೊತೆಗೆ ಕವಿತೆ ಹುಟ್ಟುವುದು ಹಲವು ಅವಸ್ಥೆಗಳಲ್ಲಿ. ಅದು ಪ್ರಶ್ನೋತ್ತರ ರೂಪದಲ್ಲಿದೆ. ಈ ಬಗೆಯ ಪ್ರಶ್ನೋತ್ತರ ವಿಲ್ಸನ್ ಅವರ ತಂತ್ರಗಳಲ್ಲೊಂದು. ಇದು ಸಂವಹನವನ್ನು ಸುಲಭ ಮಾಡುತ್ತದೆ. ಅರ್ಥಗಳು ಹೊಳೆದುಬಿಡುತ್ತವೆ. ಇದೇ ಬಗೆಯ ತಂತ್ರಗಾರಿಕೆಯನ್ನು ಹಳ್ಳ ದಾಟುವಾಗ ಕವಿತೆಯಲ್ಲಿಯೂ ಕಾಣಬಹುದು. ಆದರೆ ಈ ಕವಿತೆಯ ಕಡೆಯ ಭಾಗ ಬೇರೆಯೇ ತಾತ್ವಿಕತೆಯ ಕಡೆಗೆ ನಡೆಯುತ್ತದೆ. ಅದು ಸರಿಯಾಗಿ ಶಿಲ್ಪದಲ್ಲಿ ಅಡಕಗೊಂಡಂತೆ ಭಾಸವಾಗುವುದಿಲ್ಲ. + +ರಾಜಕೀಯ, ಸಾಮಾಜಿಕ ಅವ್ಯವಸ್ಥೆ, ಸಮಾಜವನ್ನು ಕಿತ್ತು ತಿನ್ನುವ ವೇಶ್ಯಾವೃತ್ತಿಯಂತಹ ಪಿಡುಗುಗಳ ಬಗ್ಗೆ ಈ ಸಂಕಲನದಲ್ಲಿ ಕವಿತೆಗಳಿವೆ. ಕವಿಯ ಸಾಮಾಜಿಕ ಎಚ್ಚರವನ್ನು ಈ ಕವಿತೆಗಳು ಪರಿಶೀಲಿಸುತ್ತಾವಾದರೂ(ಉದಾ: ವಯಸ್ಕರಿಗೆ ಮಾತ್ರ) ಭಾವೋದ್ದೀಪನೆಯು ಅವುಗಳಿಗೆ ಸಾಧ್ಯವಾಗುವುದಿಲ್ಲ; ಎಂದಿಗೂ ವರದಿ ಕಾವ್ಯವಾಗಲಾರದು. ಸಾಮಾಜಿಕ ಎಚ್ಚರವನ್ನು ಪ್ರತಿಪಾದಿಸುವ ಧರ್ಮ ಮತ್ತು ಮರ ಕವಿತೆಯೂ ಅಂತಿಮವಾಗಿ ವರ್ತಮಾನದಲ್ಲಿ ಕಣ್ಣು ನೆಟ್ಟು ಓದುಗನ ಚಿಂತನೆಗೆ ಬಾಂದುಕಲ್ಲು ನೆಟ್ಟುಬಿಡುತ್ತದೆ. ಹೋರಾಟದ ನೆನಪು ಮಾಡಿಸುವ ಕಯ್ಯೂರಿನ ಒಂದು ಭೇಟಿ ಕಮ್ಯೂನಿಷ್ಟ್ ಮ್ಯಾನಿಫೆಸ್ಟೋ ರೂಪದಲ್ಲಿದೆ. + +ಕತ್ತೆತ್ತಿ ಮೇಲೆ ನೋಡಿದರೆಕತ್ತಲ ಕಳೆ ಕೀಳಲೆತ್ತಿದಕತ್ತಿಯಂಚಲಿ ಮಿನುಗು ನಕ್ಷತ್ರನಾಳಿನ ಸೂರ್ಯ –ಎನ್ನುವ ಕವಿಯ ಕಣ್ಣಿಗೆ ಚಿತ್ರ ಶುಭದ ಮುಂಬರುವಿನ ಸಂಕೇತವಾಗಿ ಕಾಣುತ್ತದೆ. ಇದು ವಾಸ್ತವದ ಆಚೆಗೂ ಮಿನುಗಲೆತ್ನಿಸುವ ಛಲ. ಜೊತೆಗೊಂದು ನಂಬಿಕೆಯೂ ಬೆಳೆದಿದೆ ಅದು ಮರಳುವಾಗ ಕಾಲಿಗಂಟಿದ್ದು ಕಯ್ಯೂರಿನ ಮಣ್ಣು. ಅದಕ್ಕಿದೆ ಕಲ್ಲು ಮುಳ್ಳುಗಳನ್ನು ಮೆಟ್ಟಿ ನಡೆಸುವ ಶಕ್ತಿ. ಅದು ತನಗೆ ಬಂದಿದೆಯೆಂಬ ಭಾವ. ಇಡೀ ಕವಿತೆ ನಂಬಿಕೆಯ ಆಧಾರದಲ್ಲಿ ಕೆಲಸ ಮಾಡುತ್ತದೆ. ವಾಸ್ತವದ ಮೇಲೆ ಅಲ್ಲ. + +ಪರಿಪೂರ್ಣ ರಚನೆಯ ಮಾದರಿ ‘ಮೊದಲ ವೀಕ್ಷಣೆಗಳು’ ಕವಿತೆಯಲ್ಲಿದೆ. ಹಣೆ ತುಂಬ ಮಿನುಗುತ್ತಿದ್ದ ಬೆವರ ಹನಿ= ನಕ್ಷತ್ರ, ಅಕ್ಕಿ ಆರಿಸುವಾಗ ಅವ್ವ ಎತ್ತಿಟ್ಟ ಕಲ್ಲು ಚೂರು= ಕ್ಷುದ್ರಗ್ರಹ, ಕಂಡ ಮೊದಲ ಸೂರ್ಯ= ಅಮ್ಮ ಹಚ್ಚುತ್ತಿದ್ದ ಒಲೆ, ಕಂಡ ಮೊದಲ ಚಂದಿರ= ಅಮ್ಮನ ಕೈನ ಬಳೆ, ಕಂಡ ಮೊದಲ ಗ್ರಹಣ= ಅಪ್ಪನ ಸಾವಿನಲ್ಲಿ ಕಂಡ ಅಮ್ಮನ ಮುಖ. ಇಲ್ಲಿ ಸಾವಧಾನ ಸಾಗುವ ನಡೆಯಿದೆ. ಪ್ರತಿ ಸಂಕೇತಕ್ಕೂ ಭಿನ್ನ ಅರ್ಥಗಳಿವೆ. ಸಂಬಂಧದ ವ್ಯಾಖ್ಯೆಯಿದೆ. ಇದೇ ರೀತಿಯ ಕಿರುಗವಿತೆ ನಿರ್ಬಂಧ. ಇಲ್ಲಿ ಆಲೋಚನೆ ಸಾಮಾಜಿಕ. ಇದರ ಅರ್ಥವಿಸ್ತಾರಕ್ಕೆ ಅವಕಾಶಗಳಿವೆ, ಗೋರಕ್ಷಕರವರೆಗೂ. ಪೊಲಿಟಿಕಲ್ ಸಟೈರಿನಂತೆ ಕಾಣುವ ರಾಮ ರಾಮ ಕವಿತೆ ಸಮೂಹ ಸನ್ನಿಯ ಭಕ್ತರ ಬಗ್ಗೆ ತೋರುವ ಧೋರಣೆ ನಾಗರಿಕವಾದದ್ದು. ಇದೇ ಬಗೆಯಲ್ಲಿ ಮನುಷ್ಯನನ್ನು ಚೀಟಿಗಳನ್ನಾಗಿಸುವ ಆಡಳಿತದ ಕ್ರಮವನ್ನು ದಿವ್ಯ-ವ್ಯಂಗ್ಯದ ಮೂಲಕ ದರ್ಶಿಸುವ ಕವಿತೆ ‘ಸಾಕ್ಷಿ.’ ಸಾಮಾನ್ಯ ಮನುಷ್ಯನಿಗೆ ಇವು ಅವಷ್ಟೇ ಆಗಿ ತೋರುವಂಥದ್ದು. ಅವರಾದರೋ ಎಂಥವರು? ಯಾರದೋ ಕೈ ರೇಖೆಗಳಲ್ಲಿ ತಮ್ಮ ಬದುಕ ಹುಡುಕುವ ಭವಿಷ್ಯ ಹೇಳುವವರು. ಸಂತೆ ಕವಿತೆಯು ಇದನ್ನು ಕುರಿತು ಹೇಳುವುದರ ಜೊತೆ ಇನ್ನೆರಡು ಪ್ರತಿಮೆಗಳನ್ನು ಕೊಡುತ್ತದೆ. ಈ ಕವಿತೆಯ ಶಿಲ್ಪವೂ ಬಿಡಿಚಿತ್ರಗಳ ರೂಪದಲ್ಲಿದ್ದು ವಿಲ್ಸನ್ ಈ ಬಗೆಯ ಕಟ್ಟೋಣದಲ್ಲಿ ಹೊಂದಿರುವ ಹಿಡಿತವನ್ನು ಸೂಚಿಸುತ್ತದೆ. ಇದೇ ಬಗೆಯ ಶಿಲ್ಪದ ಕವಿತೆ ನಮ್ಮನೆಯ ಟಿವಿ. + +ವಿಲ್ಸನ್ ಹಲವೆಡೆ ಸಾರ್ವತ್ರಿಕ ಸತ್ಯವೂ, ಜಗಜ್ಜಾಹೀರು ಆಗಿರುವುದೂ ಆದ ಚಿತ್ರಣಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತಾರೆ. ಅದರಲ್ಲಿ ಒಂದು ಹಾಲೋಕಾಸ್ಟ್‌ನ ಚಿತ್ರ ಕಟ್ಟಲೆತ್ನಿಸುವ ಯಾತನಾ ಶಿಬಿರದ ಚಿತ್ರಗಳು ಎಂಬ ಕವಿತೆ. ಇದನ್ನು ಸಾರ್ವತ್ರೀಕರಿಸಲು ವರ್ತಮಾನದಲ್ಲೂ ಇದು ಜೀವಂತವೆಂಬಂತೆ ಕಾಣಿಸಲು ಕವಿ ನಡೆಸಿರುವ ಕೊಲಾಜ್ ಕ್ರಿಯೆ ಆಸಕ್ತಿದಾಯಕವಾಗಿದೆ. ಇದು ಭಾವನಾತ್ಮಕತೆಗಿಂತ ಹೆಚ್ಚು ಐಡಿಯೊಲಾಜಿಕಲ್ ಪ್ರಯತ್ನವಾಗಿದೆ. ಈ ಇತಿಹಾಸದುದ್ದಕ್ಕೂ ಹರಿದು ಬಂದಿರುವ ಬಗೆಬಗೆಯ ಹಾಲೊಕಾಸ್ಟ್‌ಗಳ, ಪರ್ಸಿಕ್ಯೂಷನ್‌ಗಳ ಮರುಕಳಿಸುವ ಚಿತ್ರಗಳು ಮನುಷ್ಯ ಮನಸ್ಸಿನ ಮೇಲೆ ಉಂಟು ಮಾಡಿರುವ ಪ್ರಭಾವಗಳು ಕಾಲಾನುಸಾರಿಯಾಗಿದೆ. ಈ ಎಚ್ಚರದಿಂದ ಬರೆಯಲಾದ ಕವಿತೆ ಇನ್ನೇನನ್ನೋ ಹೇಳಲು ಸಾಧ್ಯವಿತ್ತೆಂಬ ನಿರಾಶೆಯನ್ನು ಉಳಿಸಿದರೂ ಕೊನೆಯ ಭಾಗದ ಈ ಮಾತುಗಳು ಕವಿಯ ಈ ದಿನದ ಎಲ್ಲ ಸೂಕ್ಷ್ಮಜ್ಞರೆನಿಸಿಕೊಳ್ಳುವ ಜನರ ಯಾತನೆಯನ್ನು ದಾಖಲಿಸಿವೆ, ಹೊಸ ಎಚ್ಚರವನ್ನು ಬಯಸುತ್ತಲಿವೆ. + +ಈಗಇತಿಹಾಸದಈ ಕಪ್ಪು ಬಿಳುಪು ಮಾಸುಚಿತ್ರಗಳಿಗೆಹಸಿನೆತ್ತರಿನಿಂದ ರಂಗು ಬರಿಸಲುಹೊಂಚು ಹಾಕುತ್ತಿದೆ ಕಾಲ + +ಅತ್ಯಾಧುನಿಕ ಕ್ಯಾಮೆರಾಗಳುಸಜ್ಜುಗೊಳ್ಳುತ್ತಿವೆ…ಹೊಚ್ಚ ಹೊಸ ದೃಶ್ಯಗಳನ್ನು‘ಸೆರೆ’ ಹಿಡಿಯಲು! + +ವಿಲ್ಸನ್ ಅಪರೂಪದ ಚಿತ್ರಗಳನ್ನು ತುಣುಕುಗಳಲ್ಲಿ ಇಡಬಲ್ಲರೆಂದು ಹಿಂದೆಯೇ ಹೇಳಲಾಗಿದೆ. ಸರಳಾಚೆಯ ಸಾಲುಗಳು ಕವಿತೆಯ ಕೊನೆಯ ತುಣುಕನ್ನು ಈ ಹಿನ್ನೆಲೆಯಲ್ಲಿ ಗಮನಿಸಬಹುದು: + +ನಾಳೆ ಬಿಡುಗಡೆಗೋಡೆಯ ಕಲ್ಲುಗಳೇನಿಮ್ಮನ್ನು ಮುಟ್ಟುವುದಿಲ್ಲವಿಂದುಅವಳ ಹೂ ಸ್ಪರ್ಶಕ್ಕೆದೇಹವನ್ನು ಒಗ್ಗಿಸಿಕೊಳ್ಳಬೇಕಿದೆ! + +ಇದು ಬರಿಯ ಶಬ್ದವನ್ನಲ್ಲದೆ ಅದರ ಎಲ್ಲ ಸಾಧ್ಯತೆಗಳ ಪೂರ್ಣಬಿಂಬವನ್ನೂ ಹಿಡಿದಿಡುತ್ತಿದೆ. + +ವ್ಯಂಗ್ಯದಲ್ಲಿ ವಿಷಾಧವನ್ನು ಅಡಗಿಸುವ ವಿಲ್ಸನ್ ಅವರ ಕಾವ್ಯ ಮನೋಭಾವವನ್ನು ರೂಪಿಸಿರಬಹುದಾದ ಹಲವು ಎಲಿಮೆಂಟುಗಳನ್ನು ಕಾವ್ಯ ಶರೀರದಲ್ಲಿ ಗುರುತಿಸಬಹುದು. ನಾಟಕ ಮುಗಿದು ವೇದಿಕೆಯ ಹಿಂಬದಿ ಬಿದ್ದಿದ್ದ ಕರುಳು ಹರಿದ ದಿಂಬು ಕಾಣುವ ಕವಿ ಭಾವಿಸುವುದು ಆ ನಿಷ್ಠುರ ವಾಸ್ತವದ ಬೆಳಕು ಹರಿವಲ್ಲಿ ನಾಟಕದ ಬಸುರಿ ಅದನ್ನು ಜಾರಿಸಿ ಹೋಗಿರುವಳೆಂದು. ‘ಸಂಸ್ಕಾರಗಳು’ ಮಲದ ಗುಂಡಿ ಶುಚಿಗೊಳಿಸುವ ‘ನನ್ನವರ’ ಬಗಲಿಗೆ ನಿಂತು ಮೇಲಿನವರಲ್ಲಿ ತುಂಬಿರಬಹುದಾದ ಮಲ, ಅಂಧಕಾರ, ಪ್ರತಿಷ್ಠೆಗಳನ್ನು ಪ್ರಶ್ನಿಸುತ್ತದೆ. ಇಲ್ಲಿ ವ್ಯಂಗ್ಯಕ್ಕೆ ಸಿಲುಕದ ಆಕ್ರೋಶವಿದೆ. ಮತ್ತೆ ಹಿಂಸೆಯಿಂದಲೇ ಮುಕ್ತಿಯೆಂಬ ಮಾನಸಿಕತೆ ಎದ್ದು ನಿಲ್ಲುತ್ತದೆ. ಗಾಂಧಿಯೊಡನೆ ಹಾರಿಹೋದ ಅಹಿಂಸೆಯು ಬಂದೂಕಿನ ನಡುವೆ ಬದುಕುತ್ತಿದೆ. ಬಂದೂಕಿನ ಕೊರಳ ನಡುವಿಂದ ಶಾಂತಿ ಮಂತ್ರ ಪಠಿಸುತ್ತೇನೆ ಎಂದು ಮುಂದಿನ ಕವನ ‘ಗಾಂಧಿ ನನಗಿಷ್ಟ’ ಪ್ರತಿಪಾದಿಸುತ್ತಿದೆ. ನಾವು ಏಕ ಕಾಲದಲ್ಲಿ ಗಾಂಧಿಯನ್ನೂ, ಶಾಂತಿಯನ್ನೂ ಕಳೆದುಕೊಂಡಿರುವುದು ಇಲ್ಲಿ ಕಣ್ಣಿಗೆ ರಾಚುವಂತೆ ಚಿತ್ರಿತವಾಗಿದೆ. + +ವಿಲ್ಸನ್ ಅವರ ಕಾವ್ಯ ಒಂದು ಮಿತಿಗೊಳಪಟ್ಟು ಸಬಾಲ್ಟ್ರನ್ ಬದುಕಿನ ಸಂಕಟಗಳನ್ನು ಸ್ವಮರುಕವಿಲ್ಲದೆ ಬದುಕುತ್ತದೆ, ಪ್ರತಿರೋಧಿಸುತ್ತದೆ. ಅದು ಆ ಬದುಕಿನ ಎಲ್ಲ ಅನಿಷ್ಟಗಳಿಗೂ ಮೂಲವನ್ನು ಹುಡುಕುವಾಗ ಆಯ್ದುಕೊಳ್ಳುವ ದಾರಿ ಯಾರೂ ತುಳಿಯದ್ದೇನಲ್ಲ. ಬದುಕಿನ ಅರ್ಥಗಳ ಅನ್ವೇಷಣೆಯಲ್ಲಿ ಭಾಷೆ, ಸಂಯಮ ಮತ್ತು ಅಭಿವ್ಯಕ್ತಿ ಗೆಲ್ಲುವುದು ಸೋಲುವುದು ಇವೆರಡನ್ನೂ ಈ ಕಾವ್ಯದಲ್ಲಿ ಕಾಣಬಹುದಾಗಿದೆ. ವಿಶ್ವರೂಪಾತ್ಮಕತೆಯಿಂದ ಏಕರೂಪಾತ್ಮಕತೆಗೆ ಸಾಗುವ ಕಾವ್ಯಪಯಣದಲ್ಲಿ ಎಲ್ಲರೂ ಸಾಗುತ್ತಿರುವ ಹಾದಿಯು ಅಂಬೇಡ್ಕರ್ ಚಿಂತನೆಗಳಿಂದ ಎಷ್ಟು ಪ್ರಭಾವಿತವಾಗಿದೆಯೋ ಅಷ್ಟೇ ಮಟ್ಟಿಗೆ ನಿವಾರಣೆಯಾಗದ ಸಾಮಾಜಿಕ ಅಸಮಾನತೆಯಿಂದಲೂ ಪ್ರಭಾವಿತವಾಗಿದೆ. ಆದರೆ ಇಲ್ಲಿ ಸಂಚಲನೆಯನ್ನು ಕುರಿತ ಅನುಮಾನಗಳೂ ಇವೆ. ಬಯಲಿಗೆ ಬಂದ ಆದರ್ಶ-ಪ್ರತಿರೋಧಗಳ ಆಶಯಗಳಲ್ಲಿ ಹುಟ್ಟಿದ, ಸಬಾಲ್ಟ್ರನ್ ಸಮುದಾಯಗಳಿಗೆ ತಲುಪುತ್ತಿದ್ದ ಗೇಯಕಾವ್ಯ ಪರಂಪರೆಯನ್ನು ತೊರೆದು ಈ ಕಾವ್ಯ ಯಾರು ಅದದನ್ನೇ ಓದಿಕೊಂಡು ಬಂದಿದ್ದಾರೋ ಅವರವರನ್ನೇ ತಲುಪುತ್ತಿದೆ. + + + +ಕೌಟುಂಬಿಕ ಸಮಸ್ಯೆಗಳು, ಸಾಮಾಜಿಕ ಸಂಕಟಗಳು, ಅವುಗಳ ಪರಿಣಾಮಗಳನ್ನು ಹಸಿ ಹಸಿ ಗದ್ಯದಲ್ಲಿ ತಲುಪಿಸುವ ಪ್ರಯತ್ನಗಳೊಂದು ಕಡೆ, ಮತ್ತೆ ಮತ್ತೆ ಅದೇ ವಸ್ತುವನ್ನು ತಡಕುವ ಕಾವ್ಯ ರಚನೆಯ ಭರಾಟೆ ಒಂದು ಕಡೆ. ಇವು ನಿಷ್ಪ್ರಯೋಜಕವೆಂದು ನಾನು ಭಾವಿಸುವುದಿಲ್ಲ. ಪ್ರತಿರೋಧದ ಸದ್ದು ಎಂದಿಗೂ ಅಡಗಬಾರದು. ಆದರೆ ಪ್ರಶ್ನೆಯಿರುವುದು ಆಶಯ ಮತ್ತು ಕಲಾತ್ಮಕ ಅಭಿವ್ಯಕ್ತಿ ಇವೆರಡರ ನಡುವೆ. ವಿಲ್ಸನ್ ಅವರ ಆಶಯವು ಸ್ವ ದಿಂದ ಪರಕ್ಕೆ ವಲಸೆ ಹೋಗಿರುವುದಂತೂ ನಿಜ ಎಂದು ಈ ಸಂಕಲನ ಅರುಹುತ್ತದೆ. + +ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು. \ No newline at end of file diff --git a/Kenda Sampige/article_419.txt b/Kenda Sampige/article_419.txt new file mode 100644 index 0000000000000000000000000000000000000000..8d01cd722793e33e9aafe6896c3a972625fbad51 --- /dev/null +++ b/Kenda Sampige/article_419.txt @@ -0,0 +1,33 @@ + + +ಇರುವೆಯ ಸಾಲಲ್ಲಿ ಮೆಲ್ಲಗೆ ಸಾಗುತ್ತಾ ಇಡಿಯ ಬ್ರಹ್ಮಾಂಡವನ್ನೇ ತೂಗಿನೋಡುವ ಮಹತ್ವಾಕಾಂಕ್ಷೆಯ ಕವಯತ್ರಿ ಎಚ್.ಆರ್.ಸುಜಾತಾ. ಅವರ ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಎಂಬ ಸಂಕಲನದ ಕವಿತೆಗಳು ಪರಿಸರಕೇಂದ್ರದ ಮೂಲಕ ಮಾಡಿಸುವ ವಿಶ್ವದರ್ಶನ ವಿಶಿಷ್ಟವಾದದ್ದು. ಅನುದಿನದ ದಂದುಗದಲ್ಲಿ ಮನುಷ್ಯನ ಪ್ರಜ್ಞಾಕೇಂದ್ರವೇ ವಿಹ್ವಲಗೊಂಡಿರುವಾಗ, ತಮ್ಮತಣ್ಣಗಿನ ದನಿಯಲ್ಲಿ, ಜೀವದ ಸೊಲ್ಲುಗಳನ್ನು ಆಯ್ದು ನೇಯುವ ತಾದಾತ್ಮ್ಯದಿಂದಾಗಿ ಇಲ್ಲಿನ ಕವಿತೆಗಳು ಆವರಿಸಿಕೊಳ್ಳುತ್ತ ಹೋಗುತ್ತವೆ. + +ಬೆನ್ನುಡಿಯಲ್ಲಿ ಕೆ.ವೈ.ನಾರಾಯಣಸ್ವಾಮಿ ಅವರು ನುಡಿದಂತೆ ‘ಚಿತ್ತ ಹುತ್ತಗಟ್ಟಿ ಧ್ಯಾನಿಸುವ…. ಮೈತ್ರಿ ಸಂಹಿತೆಯನ್ನು ಹುಡುಕುತ್ತಿರುವ’ ಕವಿತೆಗಳು ಇವು. ಮನುಷ್ಯನ ಪ್ರಜ್ಞೆ ಹಾಗೂ ಪರಿಸರದ ಮೈತ್ರಿ ಇದು. ಹಸಿ ನೆಲದ ಉಸಿರನ್ನು ತನ್ನದಾಗಿಸಿಕೊಂಡು ಹಾಡುವ ವನಗಾಯಕಿಯ ಕಸುವು ಈ ಸಂಕಲನದಲ್ಲಿ ಕಾಣುತ್ತದೆ. ‘ಬೆಟ್ಟ ಬಾಗುತ್ತದೆ ಮರಗಿಡದ ತಲೆಯಲ್ಲಿ… ಬೆಟ್ಟ ಮಾತಾಡುತ್ತದೆ ಹಕ್ಕಿಕೊರಳಲ್ಲಿ….’ ಇದು ಸುಜಾತಾರ ಉಕ್ತಿ ಕ್ರಮ. ಪರಿಸರದ ಸಂವೇದನೆಯಲ್ಲಿ ಅವರ ಭಾವ ಹಾಗೂ ಭಾಷೆಗಳು ಆಕಾರ ಪಡೆಯುತ್ತ ಸಾವಯವ ಸಂಬಂಧವನ್ನು ಏರ್ಪಡಿಸಿಕೊಳ್ಳುತ್ತಾ ಹೋಗುತ್ತವೆ. ಇಲ್ಲಿ ‘ಗಿಡಗಂಟಿಗಳ ಕೊರಳೊಳಗಿಂದ ಹಕ್ಕಿಗಳ ಹಾಡು’ ಎಂಬ ಬೇಂದ್ರೆಯವರ ದರ್ಶನ ಅನುರಣಿಸುತ್ತದೆ. ನಾನು ಬೇರೆ ವಿಶ್ವ ಬೇರೆ ಎಂಬ ಭಾವವಳಿದ ಅನನ್ಯ ದರ್ಶನವಿದು. ಕುವೆಂಪು ಕಾವ್ಯ ಕೂಡ ಸಕಲ ಚರಾಚರಗಳಿಂದ ಕೂಡಿದ ಜೀವಜಗತ್ತನ್ನು ಪರಿಭಾವಿಸಿದ ರೀತಿ ಇದೇ ಆಗಿದೆ. + +(ಹೆಚ್.ಆರ್. ಸುಜಾತಾ) + +ಜೀವಜಗತ್ತನ್ನು ನೋಡುವ ವಿಸ್ಮಯದ ಕಣ್ಣೊಂದು ಇಲ್ಲಿನ ಕವಿತೆಗಳಲ್ಲಿದೆ. ಮರದಿಂದ ಮರಕ್ಕೆ ಡೇರೆ ಕಟ್ಟುವ ಕಾಡುಜೇಡ ತನ್ನ ಅನೂಹ್ಯ ನೇಯ್ಗೆಯಲ್ಲಿ ಕಾಲದ ಯಾವುದೋ ಹುಟ್ಟುಗಳನ್ನು ಹುದುಗಿಸಿಕೊಂಡಿರುತ್ತದೆ. ಜೇಡರ ಬಲೆಗೆ ಆತುಕೊಂಡು ಹಬ್ಬಿದ ಬಳ್ಳಿಯೊಂದು ಬಾತುಕೋಳಿಯಂಥಾ ಹೂವನ್ನು ಅರಳಿಸಲಿಕ್ಕಿದೆ. ಬಳ್ಳಿಯ ಕಣ್ಣ ಕೊಳದಲ್ಲಿ ಅರಳುವ ಈ ಹೂವು ಕೀಟ ಹಿಡಿವಕಲೆಯನ್ನು ಮೈಗೊಂಡಿದೆ! ಅದಕ್ಕಾಗಿಯೇ ಬಲೆ ಈ ಬಳ್ಳಿಯನ್ನು ತನ್ನೊಳಗೆ ಬಿಟ್ಟುಕೊಂಡಿದೆ! + +ಕಾಲದ ಯಾವುದೋ ಬಿಂದುವಿನಲ್ಲಿ ಘಟಿಸುವ ಈ ಎಲ್ಲಾ ಘಟನೆಗಳಿಗೆ ಸಂಬಂಧದ ಸೂತ್ರ ಜೋಡಿಸುವ ಪ್ರಕೃತಿಯ ನಿಗೂಢತೆ ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಕವಿತೆಯಲ್ಲಿ ರೂಪಕವಾಗಿದೆ. ಇಂಥ ಸೂಕ್ಷ್ಮ ನೋಟದ ಕ್ರಮ, ಸಮರ್ಥರೂಪಕ ಶಕ್ತಿ ಹಾಗೂ ಕಾವ್ಯ ಭಾಷೆಯ ಅಂತರಂಗ ಅರಿತು ಬಳಸುವ ಹದದಿಂದಾಗಿ ಎಚ್.ಆರ್.ಸುಜಾತ ಅವರ ಕವಿತೆಗಳು ಈ ಕಾಲದ ಅಬ್ಬರದ ದನಿಗಳ ಮಧ್ಯ ಅನನ್ಯವಾಗಿ ನಿಲ್ಲುತ್ತವೆ. + +ಕನ್ನಡಕಾವ್ಯ ಪರಂಪರೆಯಲ್ಲಿ ಪುರುಷ ಲೋಕದೃಷ್ಟಿಯು ಪ್ರಧಾನವಾಗಿ ತನ್ನ ಯಾಜಮಾನ್ಯವನ್ನು ಸ್ಥಾಪಿಸಿರುವುದು ವಾಸ್ತವ. ಅಂಥ ಡಾಳಾಗಿ ಕಾಣುವ ಪರಂಪರೆಯೊಳಗೆ ಸುಪ್ತವಾಗಿ ಮಾತೃ ಸಂವೇದನೆಯ ಧಾರೆಯು ಅಂತರಗಂಗೆಯಂತೆ ಹರಿದಿದೆ. ಸುಜಾತಾರ ಕಾವ್ಯದ ನಂಟು ಈ ಧಾರೆಯಜೊತೆ ಬೆಸೆದಿದೆ. ವಾದ ಸಿದ್ಧಾಂತಗಳ ಹಠಮಾರಿತನಕ್ಕೆ ತನ್ನನ್ನು ತೆತ್ತುಕೊಳ್ಳದೇ ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯತಾಜಾ ಕಸುವಿನಿಂದ ಕಂಗೊಳಿಸುತ್ತಿದೆ. ಗ್ರಾಮ್ಯ ಸೊಗಡಿನ ಜಾನಪದ ಸಂವೇದನೆಯೊಂದು ದಕ್ಕಿರುವುದು ಇಲ್ಲಿನ ಕೆಲವು ಕವಿತೆಗಳ ಶಕ್ತಿಯಾಗಿದೆ. + +ಕಡಲುಪ್ಪು ನೀರತಂದುಮಣ್ಣ ಮಡಕೆಯಲಿಟ್ಟುಗಂಜಿ ಕಾಯಿಸುತ್ತಾರೆಕಣ್ಣಲ್ಲಿಉಕ್ಕಿಸುರಿವಂತೆಹೆಣ್ಣುಗಳುಸೂರ್ಯನುರಿಯ ಮೇಲೆ (ಮಳೆಹನಿ ಹಾಡು) + +ಮಣ್ಣ ಮಡಕೆ, ಕಡಲಿನ ಉಪ್ಪು , ವ್ಯೂಮದ ಸೂರ್ಯ ಇಡೀ ಬ್ರಂಹ್ಮಾಂಡವನ್ನೇ ಬೆಸೆದು ಗಂಜಿ ಕಾಯಿಸುವ ಹೆಣ್ಣು…. ಪಂಚಭೂತಗಳ ನಡುವೆ ಅವುಗಳ ಭಾಗವಾಗಿಯೇ ತನ್ನನ್ನು ಅರಿಯುವ ಹೆಣ್ಣುನೋಟವೊಂದು ವಿಶ್ವವನ್ನು ಭಾವಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಹಿತ್ತಲ ಹಾಡು ಎಂಬ ಕವಿತೆಯಂತೂ ಹರಿಹರನ ಪುಷ್ಪ ರಗಳೆಯ ಉತ್ಕಟತೆಯನ್ನು ನೆನಪಿಸುತ್ತದೆ. ಹಸಿ ಮಣ್ಣು, ಮಿಂಚು, ಕಾಮನಬಿಲ್ಲು, ಹೂವು, ಜೇನು, ಗಂಧ, ಬಯಲು, ಗಾಳಿ, ದಟ್ಟ ಕಾನನ ಎಲ್ಲವನ್ನೂ ಹೆಣ್ಣೊಬ್ಬಳು ತನ್ನ ಸಂವೇದನೆಯ ಭಾವವಾಗಿ ಕಾಣುವುದು ಇಲ್ಲಿನ ಸ್ಥಾಯಿಭಾವವಾಗಿ ಕಾಣುತ್ತದೆ. + +ಹೆಣ್ಣು ಹೆಣ್ಣಾಗಿ ಅರಳುವುದುಹರಿವಾಗುವುದು ಹಸಿರಾಗುವುದುತನ್ನತಾನೇ ಮರೆವಂತೆ ಮೈ ತುಂಬಿಕೊಳ್ಳುವುದುದುಂಡಗಿನ ವಿಶ್ವವೇ ತಾನಾಗುವುದು (ಜೋಡಿ ಮೊಲೆಗಳು) + +ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ. ರೌದ್ರವಾಗಿ ತೋರುವ ಶಕ್ತಿದೇವತೆಗಳಲ್ಲಿ ಮಾತೃತ್ವದ ತಂಪನ್ನು ಕಾಣುವ, ರಕ್ತಸಿಕ್ತ ಆಚರಣೆಗಳಲ್ಲಿ ಸ್ತ್ರೀ ದೇಹಮೂಲದ ಅನುಭವಗಳನ್ನು ಕಾಣಿಸುವ ಮೂಲಕ ಕವಿತೆಗಳು ಸಾಂಸ್ಕೃತಿಕ ಆಯಾಮವೊಂದನ್ನು ಕಟ್ಟುತ್ತಿವೆ. + +ಹಣೆಮೇಲೆ ಉರಿವ ಸೂರ್ಯಎದೆಯೊಳಗೆ ಮುಚ್ಚಿಟ್ಟಚಂದ್ರಕೈಯೊಳು ಸದ್ದನರೆಯುವಮಾಯದಾ ಕೋಲಿನ ಠೇಂಕಾರ (ಉರಿಮಾರಿ) + +‘ಹಣೆಮೇಲೆ ಉರಿವ ಸೂರ್ಯ, ಎದೆಯೊಳಗೆ ಮುಚ್ಚಿಟ್ಟ ಚಂದ್ರ’ ನನ್ನು ಒಡಲುಗೊಂಡ ಉರಿಮಾರಿ ಹೊಟ್ಟೆಹೊರೆಯಲು ಅಸಿಟ್ಟು, ಉಪ್ಪು, ಮೆಣಸಿನಕಾಯಿ, ಕಾಸು ಕರಿಮಣಿ ಪಡಿಯನ್ನು ಪಡೆಯುವ ಮಾರಿ ಹೊತ್ತು ಊರೂರು ತಿರುಗುವ ಲೌಕಿಕದ ಹೆಣ್ಣಾಗಿ ಕಾಣಿಸುತ್ತಾಳೆ. ಕಾಲನಿಗೇ ಗೆಜ್ಜೆಸರ ಬಿಗಿದಂತೆ ಆವೇಶದಲ್ಲಿ ನಡೆವ ಇವಳು, ಆ ಉನ್ಮಾದದ ತಳದಲ್ಲಿ ಗಂಡ- ಮಕ್ಕಳ ಹೊಟ್ಟೆಹೊರೆವ ಬಡತಾಯಿ. ಲೌಕಿಕ ಅಲೌಕಿಕವನ್ನು ಬೆರೆಸುವ ಈ ಕವಿತೆ ಹೆಣ್ಣಿನ ಹಲವು ರೂಪಗಳ ಹಿಂದಿರುವ ಜೀವಮಿಡಿತದ ಸದ್ದನ್ನು ಕೇಳಿಸುತ್ತದೆ. ಹಾಗೆ ನೋಡಿದರೆ ಕಾವ್ಯವೆಂಬುದೇ ದೈನಿಕದ ಪಲಕುಗಳಲ್ಲಿ ಥಟ್ಟನೆ ಮಿಂಚುವ ದಿವ್ಯತೆಯನ್ನು ಕಂಡು ಅದನ್ನು ಹಿಡಿಯಲು ಜಿಗಿವ ಮಾಂತ್ರಿಕ ಕ್ಷಣ. ಅಂಥ ಪ್ರಯತ್ನ ಇಲ್ಲಿನ ಕವಿತೆಗಳಲ್ಲಿದೆ. + +ಒಕ್ಕಣ್ಣ ಸೂರ್ಯಒಂಟಿಯಾದ!ಕಂದನ ಬಾಯಲ್ಲಿಹಿಗ್ಗಿನ ಬುಗ್ಗೆಯಾಗಿ ಬೀಗುವಚಂದಿರನ ಬೆಳದಿಂಗಳ ಕಂಡುಬೆಪ್ಪಾದ (ಉರಿಮಾರಿ) + + + +ಹೆಂಗಳೆಯರು ಉಟ್ಟುಬಿಟ್ಟ ಸೀರೆಯ ದಾನಪಡೆದು ತಣ್ಣಗೆ ನಡೆದ ಉರಿಮಾರಿಯ ಕಣ್ಣಲ್ಲಿ ಉರಿವ ಉಜ್ವಲ ಬೆಳಕು ಕವಿತೆಯಲ್ಲಿ ಹರಡಿಕೊಳ್ಳುತ್ತದೆ. ಕಂದನ ಬಾಯಲ್ಲಿ ಅವಳೆದೆಯ ಚಂದಿರ ಹಾಲಾಗಿ ಇಳಿಯುವುದು ಮಾತೃ ಸಂವೇದನೆಯ ಕಾಲಾತೀತ ಬೆಸುಗೆಯಾಗಿ ಕಾಣಿಸುತ್ತದೆ. ಒಟ್ಟಾರೆಯಾಗಿ ‘ಕಾಡುಜೇಡ….’ ಸಂಕಲನದ ಕವಿತೆಗಳು ತಮ್ಮ ಸಂವೇದನೆಯ ವಿಸ್ತಾರ, ಪರಿಸರದೊಂದಿಗಿನ ತಾದಾತ್ಮ್ಯ ಸ್ತ್ರೀ ಮೂಲ ಅರಿವನ್ನು ದಾಟಿಸುವ ಭಾಷಾಭಿವ್ಯಕ್ತಿಯಿಂದಾಗಿ ಗಟ್ಟಿಯಾಗಿ ಉಳಿಯಬಲ್ಲವು. + +ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ. \ No newline at end of file diff --git a/Kenda Sampige/article_42.txt b/Kenda Sampige/article_42.txt new file mode 100644 index 0000000000000000000000000000000000000000..c529fdb8ae3987f0d94d7e37dcef3af445efdb18 --- /dev/null +++ b/Kenda Sampige/article_42.txt @@ -0,0 +1,25 @@ +ಆಕಾಶದಲ್ಲಿ ಈಗಷ್ಟೇ ಹಾರುತ್ತಿರುವ ಹಕ್ಕಿಗಳನ್ನು ಕಂಡರೆ ಅದರ ಬಣ್ಣವೋ ವೇಗವೋ ಆಕಾರವೋ ಕೂಗೋ ಅಥವಾ ಅದರ ಬಾಯಲ್ಲಿ ಕಚ್ಚಿಗೊಂಡಿರುವ ಆಹಾರವೋ ಗಮನಕ್ಕೆ ಬರಬಹುದು. ಹಾಗಂತ ಹಕ್ಕಿ ಹೇಗೆ ಹಾರುತ್ತಿದೆ, ಬಾನಿನಲ್ಲಿ ಯಾಕೆ ತೇಲುತ್ತಿದೆ ಎನ್ನುವ ವಿಷಯಗಳು ಯಾವ ಹೊಸ ಕುತೂಹಲವನ್ನೂ ಹುಟ್ಟಿಸಲಿಕ್ಕಿಲ್ಲ. ಹಕ್ಕಿಗಳ ಹಾರಾಟ ಚೋದ್ಯ ಎನಿಸುವುದು ನಿಂತು ಹಲವು ವರುಷಗಳು ದಶಕಗಳು ಕಳೆದವು. ಯಾಕೆಂದರೆ ಈ ಕಾಲದಲ್ಲಿ ಹಾರುವ ಸಾಮರ್ಥ್ಯ ಇರುವುದು ಬರೇ ಹಕ್ಕಿಗಳಿಗೆ ಮಾತ್ರ ಅಲ್ಲ. ಈ ಹಾರಾಟ ಎನ್ನುವ ವಿಶಿಷ್ಟ ಮಾಯಾ ವಿದ್ಯೆಯನ್ನು ಇದೀಗ ನಾವೂ ಕರಗತ ಮಾಡಿಕೊಂಡಾಗಿದೆ. ನಾವೇ ನೇರವಾಗಿ ರೆಕ್ಕೆ ಮೂಡಿಸಿಕೊಂಡು ಹಾರುವುದು ಸಾಧ್ಯ ಇಲ್ಲವಾದರೂ ಹಾರುವಂತಹದ್ದನ್ನು ಸೃಷ್ಟಿಸಿ ಅದರಲ್ಲಿ ನಾವೂ ಕುಳಿತು ಒಂದು ಗಗನವಿಹಾರ ಮಾಡುವ ಸಿದ್ಧಿ ಹೊಂದಿದ್ದೇವೆ. ಒಂದಾನೊಂದು ಕಾಲಕ್ಕೆ ಹಕ್ಕಿಗಳ ಹಾರಾಟಕ್ಕೆ ಮಾತ್ರ ತಾಣವಾಗಿದ್ದ ಆಕಾಶದಲ್ಲಿ ಈಗ ಹುಳು ಮನುಜರೂ ಪಾಲುದಾರರಾಗಿದ್ದಾರೆ. ಬಾನಿನಲ್ಲಿ ಇರುವ ಹಕ್ಕಿಗಳು ಎಷ್ಟು ಎನ್ನುವ ಲೆಕ್ಕ ಕಲ್ಪನೆಗೆ ಮೀರಿದ್ದಾದರೂ ಹಕ್ಕಿಗಳ ತಲೆಯ ಮೇಲೆ ಹಾರುವ, ಅವುಗಳ ಆಸುಪಾಸಲ್ಲಿಯೇ ಹತ್ತುವ ಇಳಿಯುವ ವಿಮಾನಗಳ ಬಗೆಗೆ ಹಕ್ಕಿಗಳಿಗೂ ತಿಳಿದಿರಬಹುದು. ಹಕ್ಕಿಗಳ ಕಣ್ಣಿಗೆ ವಿಮಾನಗಳು ಹೇಗೆ ಏನು ಆಗಿ ಕಂಡರೂ ಈ ಕಾಲದಲ್ಲಿ ನಮ್ಮ ಮಟ್ಟಿಗೆ ಹಾರುವ ವಿಷಯ ವಿಚಾರ ಬಂದರೆ ಕಲ್ಪನೆಗೆ ಹಕ್ಕಿಗಳಷ್ಟೇ ಸುಲಭವಾಗಿ ಸಾಮಾನ್ಯವಾಗಿ ಒದಗುವವು ವಿಮಾನಗಳು ಕೂಡ. + +ಈ ವಿಮಾನಗಳನ್ನು ಬರೇ ವಿಮಾನಗಳು ಎಂದು ಹೇಳುವವರು ಹಲವರಿರಬಹುದು. ವಿಮಾನಗಳ ಜೊತೆಗೆ ಆತ್ಮೀಯವಾದ ಒಡನಾಟ ಹೊಂದಿದ ಕಾರಣಕ್ಕೋ ಏನೋ, ಅವುಗಳನ್ನು ಬರೇ ಹಾರುವ ಪ್ರಯಾಣಿಸುವ ಇನ್ನೊಂದು ವಿಷಯವಾಗಿ ತಿಳಿಯುವುದು ನನಗೆ ಸಾಧ್ಯ ಇಲ್ಲ. ವಿಮಾನವೊಂದು ದೂರದ ಎತ್ತರದ ಆಕಾಶದಲ್ಲಿ ಸಾಗುವಾಗ ರೆಕ್ಕೆ ಪಟಪಟಗುಡಿಸಿದಂತೆ ಕಾಣುವುದು ಅಥವಾ ಪ್ರಯಾಣ ಮುಗಿಸಿ ನಿಲ್ದಾಣದಲ್ಲಿ ಇಳಿಯುವಾಗ ಅದರ ಬೆವರಿನ ಸುಗಂಧ ಮೂಗಿಗೆ ಬಡಿಯುವುದು ನಿಟ್ಟುಸಿರೂ ಕೇಳಿಸುವುದು ಈ ವಿಮಾನಗಳ ಜೊತೆ ಬೆಳೆದುಬಂದ ಸಖ್ಯದ ಫಲ ಇರಬಹುದು. ಏರೋಪ್ಲೇನ್ ಎನ್ನುವುದು ಏರುವ ಹಾರುವ ಇಳಿಯುವ ಯಂತ್ರ ಸಾಧನ ಹೌದಾದರೂ ಅದರ ಒಡನಾಟದಲ್ಲೇ ಇರುವವರಿಗೆ, ರೆಕ್ಕೆ ಮೈ ಬಾಲ ಕಣ್ಣು ಮೂಗು ಎಲುಬಿನ ಹಂದರ ನರಮಂಡಲ ಎದೆ ಬಡಿತ ಇವೆಲ್ಲವೂ ಇರುವ ಒಂದು ಜೀವಿಯಂತೆಯೂ ಕಾಣಿಸಬಹುದು. ವಿಮಾನ ತಯಾರಿಸುವ ಕಚೇರಿಯಲ್ಲಿ ಕೆಲಸ ಮಾಡುವವರ ಅಥವಾ ವಿಮಾನಗಳ ಜೊತೆಗೆ ಬೇರೆಬೇರೆ ಕಾರಣಗಳಿಗೆ ನಿಕಟ ಸಂಬಂಧ ಇರುವ ವೃತ್ತಿ ಪ್ರವೃತ್ತಿಯವರಿಗೆ ಹೀಗೆಲ್ಲ ಅನಿಸಿದರೆ ಆಶ್ಚರ್ಯ ಅಲ್ಲ. ಜೀವಸಂಕುಲದ ಅವಿಭಾಜ್ಯ ಪ್ರಭೇದ ಎನಿಸುವ ವಿಮಾನಗಳ ಸಹವಾಸದಲ್ಲಿ ಆಕಸ್ಮಿಕವಾಗಿ ಸಿಲುಕಿದವರಲ್ಲಿ ನಾನೂ ಒಬ್ಬ. ವಿಮಾನಗಳ ಜೊತೆಗಿನ ಈ ಆಪ್ತ ಒಡನಾಟ ಯೋಚಿಸಿ ಯೋಜಿಸಿ ತಿಳಿದು ಬಯಸಿ ದೊರಕಿದ್ದು ಅಲ್ಲ. ಮತ್ತೆ ಅಯಾಚಿತ ಆಯೋಜಿತವಾಗಿ ಆದ ಈ ಸಂಬಂಧದಿಂದಲೇ “ನಮಗೂ ವಿಮಾನಗಳಿಗೂ ಗಟ್ಟಿಯಾದ ಪ್ರೀತಿ ಬಾಂಧವ್ಯ ಹೊಂದಾಣಿಕೆ” ಅಂತ ನಾನು ಕೆಲಸ ಮಾಡುವ ವಿಮಾನ ಕಚೇರಿಯ ದೀರ್ಘಕಾಲೀನ ಆಂಗ್ಲ ಸಹೋದ್ಯೋಗಿಗಳು ನಕ್ಕು ನುಡಿಯುವುದಿದೆ. ಈ ವಿಮಾನಗಳಿಗೆ ನಮ್ಮ ಸಹವಾಸ ಬೇಕಿದ್ದರೂ ಬೇಡಿದ್ದರೂ ನಮಗಂತೂ ಅವು ಬೇಕು ಎಂದು ತಮಾಷೆ ಮಾಡುವುದಿದೆ. ಬಿಡಿ, ಆಂಗ್ಲರ ವ್ಯಂಗ್ಯ ತಮಾಷೆ ಕೊಂಕುಗಳಿಗೆ ವಿಮಾನಗಳಂತಹ ಹಾರುವ ತೇಲುವ ಯಂತ್ರಗಳೂ ಹೊರತಾಗಲಿಕ್ಕಿಲ್ಲ. + +ಹಾರುವ ಯಂತ್ರಗಳ ಹಾರಾಟದ ಹಿಂದಿನ ಜಾಡು ಹಿಡಿದು ಹುಡುಕುತ್ತ ಹೊರಟರೆ ಈಗಿನ ಯಾವ ವಿಮಾನ ಕಚೇರಿ ಕಾರ್ಖಾನೆಗಳ ಉಗಮಕ್ಕಿಂತಲೂ ಬಹಳ ಹಿಂದಿನ ಪುರಾಣ ಇತಿಹಾಸ ಕತೆ ಊಹೆಗಳು ಎದುರು ಬರುತ್ತವೆ. ಹಾಗಾಗಿಯೇ ವಿಮಾನಗಳ ಚರಿತ್ರೆಯನ್ನು ಬರೆದವರು ಬೇರೆಬೇರೆ ಕಾಲಘಟ್ಟದಿಂದ ಸ್ಥಳದಿಂದ ಘಟನೆಗಳಿಂದ ತಮ್ಮ ಅಧ್ಯಯನ, ಪುರಾವೆ ಹಾಗು ಅಂದಾಜುಗಳನ್ನು ವಿಶದೀಕರಿಸುವುದಿದೆ. ಆಕಾಶಕ್ಕೆ ನೆಗೆಯಬೇಕು ಎನ್ನುವ ಉತ್ಕಟ ಆಸೆ ಮನುಷ್ಯರಿಗೆ ಎಂದು ಬಂತೋ ಕರಾರುವಕ್ಕಾಗಿ ಹೇಳಿದವರಿಲ್ಲವಾದರೂ ಬಾನಿನಲ್ಲಿ ಸ್ವಚ್ಛಂದವಾಗಿ ಹಾರಿ ಇಳಿಯುವ ಹಕ್ಕಿಗಳನ್ನು ನೋಡಿ ನಮಗೂ ಹಾರುವ ಕನಸು ಹುಟ್ಟಿತು. ಮತ್ತೆ ಆ ನಿಟ್ಟಿನಲ್ಲಿ ಪ್ರಯತ್ನಗಳು ನಿರಂತರವಾಗಿ ಸಾಗಿದವು ಎನ್ನುವ ಉಲ್ಲೇಖಗಳು ಓದಿನಲ್ಲಿ ಸಿಗುತ್ತವೆ. + +ಪ್ರಾಚೀನ ಪುರಾಣಗಳಲ್ಲಿ ಗ್ರೀಕ್ ದಂತಕಥೆಗಳಲ್ಲಿ ಮನುಷ್ಯರನ್ನು ಕೂರಿಸಿಕೊಂಡು ಹಾರುವ ಜೀವಿಯೊ ವಾಹನವೋ ಅಥವಾ ಅಂತಹ ಕಲ್ಪನೆಯೋ ಬಂದುಹೋಗುತ್ತವೆ. ಹೆಗಲಿಗೆ ರೆಕ್ಕೆ ಕಟ್ಟಿ ಹಾರುವ ವ್ಯಕ್ತಿ ಪಾತ್ರಗಳ ಕತೆಗಳೂ ಇವೆ. ಪುರಾಣ ಕತೆ ಇತಿಹಾಸಗಳಲ್ಲಿ ಮನುಷ್ಯರ ಹಾರುವಿಕೆಗೆ ಪ್ರಚೋದನೆ ಉತ್ತೇಜನ ನೀಡಿದ ಹಕ್ಕಿಗಳ ವಿಕಾಸವಾದದ ಮೂಲವನ್ನು ಪರಿಶೀಲಿಸುತ್ತಾ ಕಾಲದಲ್ಲಿ ಹಿಮ್ಮುಖವಾಗಿ ಬಹಳ ದೂರ ಸಾಗಿದರೆ ಹಾರುವ ಗುಣ ಸ್ವಭಾವ ಅವುಗಳಿಗಿರಲಿಲ್ಲ ಎಂದೂ ತಿಳಿಯುತ್ತದೆ. ಈಗ ಸಹಜ ಹಾರಾಟವನ್ನು ಸ್ವಭಾವವಾಗಿ ಹೊಂದಿದ ಕೀಟಗಳು, ಹಕ್ಕಿಗಳು, ಬಾವಲಿ ಎಲ್ಲವೂ ಬೇರೆಬೇರೆ ಜೀವಮೂಲದಿಂದ ವಿಕಸನಗೊಂಡು ಹಾರುವ ಗುಣವನ್ನು ಪಡೆದುಕೊಂಡಿರಬಹುದು ಎಂದೂ ವಾದಿಸುತ್ತಾರೆ. + +ಹಲವು ಮಿಲಿಯನ್ ವರ್ಷಗಳ ಹಿಂದಿನ ಜುರಾಸಿಕ್ ಯುಗದಲ್ಲಿ ನಡೆದಾಡಿಕೊಂಡಿದ್ದ ಡೈನೋಸಾರ್ ಬಗೆಯ ಜೀವಿಗಳು, ಇನ್ಯಾವುದೋ ಜಾತಿಯ ಸರೀಸೃಪಗಳು ನೆಲದಲ್ಲಿ ತಮಗೆ ಆಹಾರ ಸಿಗದೆಯೋ ಅಥವಾ ಇನ್ಯಾವುದೋ ಜೀವಿಗೆ ತಾವೇ ಆಹಾರವಾಗುವುದನ್ನು ತಪ್ಪಿಸಿಕೊಳ್ಳಲೋ ನೆಗೆಯಲು ಆರಂಭಿಸಿ, ಮುಂದೆ ಕಾಲಾನುಕ್ರಮದಲ್ಲಿ ಅವುಗಳ ಮುಂಗಾಲುಗಳೇ ರೆಕ್ಕೆಗಳಾಗಿ ಬದಲಾಗಿ ಹಾರುವುದಕ್ಕೆ ಅಗತ್ಯವಾದ ದೇಹರಚನೆಯ ವಿಕಾಸ ಕಂಡವು ಎಂದು ಇಲ್ಲಿಯತನಕ ದೊರೆತ ಪಳೆಯುಳಿಕೆಗಳ ಆಧಾರದಲ್ಲಿ ಜೀವವಿಜ್ಞಾನಿಗಳು ಹೇಳುತ್ತಾರೆ. ವಿಕಾಸವಾದದ ಮೂಲ ಸಿದ್ಧಾಂತವಾಗಿರುವ ಉಳಿಯುವಿಕೆ, ಅಸ್ತಿತ್ವದಲ್ಲಿರುವಿಕೆಗಳೇ ಜೀವಿಗಳಿಗೆ ರೆಕ್ಕೆಗಳನ್ನೂ ನೀಡಿದವು ಎನ್ನುತ್ತಾರೆ. + +ನೂರಿನ್ನೂರು ಮಿಲಿಯನ್ ವರ್ಷಗಳ ವಿಕಾಸದ ಕಥನಲ್ಲಿ ಹಾರುವ ಏರುವ ಹಕ್ಕಿಯಾಗಿ ನಮಗೆ ಕಾಣಿಸುತ್ತಿರುವ ಜೀವಿಗಳನ್ನು ನೋಡುತ್ತಾ ಕುತೂಹಲಿಗಳಾದ ಮನುಷ್ಯರು ಹಾರುವ ವಸ್ತು ಯಂತ್ರಗಳ ತಯಾರಿಯಲ್ಲಿ ತೊಡಗಿದ್ದು ಕಲಿಕೆ ಪ್ರಯೋಗ ನಿರ್ಮಾಣಗಳ ಸಾತತ್ಯದಲ್ಲಿ ಆ ಯಂತ್ರಗಳು ಈಗ ನಾವು ನೋಡುವ ಬಳಸುವ ವಿಮಾನಗಳಾಗಿ ಮಾರ್ಪಾಟು ಪಡೆದದ್ದು ವಿಮಾನಲೋಕದ ಗತ ಇತಿಹಾಸ. ಕಾಲದ ಅಳತೆಯಲ್ಲಿ, ಜನರನ್ನು ತುಂಬಿಕೊಂಡು ಹಾರಾಡುವ ವಿಮಾನಗಳು ಆಕಾಶವನ್ನು ಸೇರಿದ್ದು ತೀರಾ ಇತ್ತೀಚಿನ ಇಪ್ಪತ್ತನೆಯ ಶತಮಾನದಲ್ಲಿಯಾದರೂ, ಆಹಾರಕ್ಕಾಗಿಯೋ ಉಳಿವಿಗಾಗಿಯೋ ಅಲ್ಲದಿದ್ದರೂ ಮನುಷ್ಯರ ಹಾರುವ ಕನಸು ಕೊನೆಗೂ ಸಾಕಾರಗೊಂಡದ್ದೂ ಕೂಡ ಇನ್ನೊಂದು ಬಗೆಯ ವಿಕಾಸದ ಬೆಳವಣಿಗೆಯ ಕತೆಯೇ. + + + +ವಿಮಾನಗಳನ್ನು ಆಕಾಶಕ್ಕೆ ಏರಿಸುವ ಹಾರಿಸುವ ಪ್ರಯತ್ನ ಆರಂಭ ಆಗುವ ಮುನ್ನ, ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳಲ್ಲಿ ಬರ್ನೌಲಿಯ ಸಿದ್ಧಾಂತ, ನ್ಯೂಟನ್ನನ ನಿಯಮ, ಕ್ಲೇಯೇಯ ಸಂಶೋಧನೆಗಳು ಮತ್ತೆ ಇನ್ನೂ ಹಲವು ವಿಜ್ಞಾನಿಗಳ ಪ್ರಭಾವದಿಂದ ವಾಯುಬಲ ವಿಜ್ಞಾನ (Aerodynamics) ಎನ್ನುವ ಚಲನಶಾಸ್ತ್ರದ ಶಾಖೆ ಹುಟ್ಟಲು ಕಾರಣವಾಗಿದ್ದವು. ಗಾಳಿಗಿಂತ ಭಾರವಾದ ವಸ್ತುವೂ ಹೇಗೆ ಯಾಕೆ ಗಾಳಿಯಲ್ಲಿ ಹಾರಲು ಸಾಧ್ಯ ಎನ್ನುವುದನ್ನು ತಿಳಿಸಿದ್ದವು. ತೂಕ, ಮೇಲೆತ್ತುವಿಕೆ, ಎಳೆತ, ದೂಡುವಿಕೆಗಳ (weight, lift, drag, thrust) ನಡುವಿನ ಸಂಬಂಧಗಳನ್ನೂ ವಿವರಿಸಿದ್ದವು. ಆ ಕಾಲದಲ್ಲಿ ಮತ್ತು ಅಲ್ಲಿಯ ತನಕ ಹಲವು ವೈಜ್ಞಾನಿಕ ವಾದ ಸಿದ್ಧಾಂತಗಳು ಬೆಳೆದಿದ್ದರೂ ಅವುಗಳಲ್ಲಿ ಎಲ್ಲವೂ ಸರಿಯಾದ ಜ್ಞಾನವನ್ನು ನೀಡಿದವು ಎಂದು ಹೇಳಲು ಬರುವುದಿಲ್ಲ, ಕೆಲವು ತಪ್ಪು ಸೂತ್ರಗಳೂ ಸಿದ್ಧಾಂತಗಳಾಗಿ ಮಂಡಿಸಲ್ಪಟ್ಟಿದ್ದವು. ಅಂತಹ ಹಾರಾಟದ ಸಿದ್ಧಾಂತಗಳ ಪ್ರಮಾಣ ಪರೀಕ್ಷೆ ಪ್ರಯೋಗಗಳು ಯುರೋಪ್ ಹಾಗು ಅಮೆರಿಕಗಳಲ್ಲಿ ನಡೆದರೂ ಅವುಗಳಲ್ಲಿ ಮೊದಲ ಯಶಸ್ಸು ಅಮೆರಿಕದ ರೈಟ್ ಸಹೋದರರದು. ಯಂತ್ರಚಾಲಿತ ವಿಮಾನ, ಜೊತೆಗೆ ಮಾನವ ಪೈಲಟ್ ಅನ್ನೂ ಕೂಡಿಸಿಕೊಂಡು ಹನ್ನೆರಡು ಸೆಕೆಂಡ್‌ಗಳಲ್ಲಿ ನೂರಿಪ್ಪತ್ತು ಅಡಿಗಳ ದೂರದ ಹಾರಾಟ ನಡೆಸಿದ್ದು ವಿಮಾನ ಜಗತ್ತಿನ ಚಾರಿತ್ರಿಕ ಕ್ಷಣ ಎಂದು ೧೯೦೩ರಲ್ಲಿ ದಾಖಲಾಯಿತು. ರೈಟ್ ಸಹೋದರರ ವಿಮಾನ, ಆಕಾಶದ ಏಣಿಯನ್ನು ಹತ್ತಿ ಹಾರುವ ತುಸು ಮೊದಲು, ಸ್ವಲ್ಪ ಆಮೇಲೆ ಯುರೋಪಿನಲ್ಲಿ ಜಗತ್ತಿನ ಇತರ ಕೆಲ ಭಾಗಗಳಲ್ಲಿಯೂ ಅಂತಹದೇ ಪ್ರಯತ್ನಗಳು ನಡೆದಿದ್ದರೂ ಅಲ್ಲಿಯತನಕ ಲಭ್ಯ ಇದ್ದ ಹಾರುವಿಕೆಯ ಸಿದ್ಧಾಂತಗಳನ್ನು ಹೆಚ್ಚು ಅರ್ಥ ಮಾಡಿಕೊಂಡು ಕಟ್ಟಿದ ವಿಮಾನ ನಮೂನೆ ರೈಟ್ ಸಹೋದರರ ಹಾರಾಟದ ಯಶಸ್ಸಿಗೆ ಕಾರಣ ಎನ್ನಲಾಗುತ್ತದೆ. ಆಕಾಶದಲ್ಲಿ ಹಾರಬೇಕು ಎನ್ನುವ ಇಚ್ಛೆ ಮತ್ತೆ ಆ ಬಗೆಗಿನ ತೀವ್ರ ಪ್ರಯತ್ನಗಳ ಮಹತ್ವದ ಮೈಲಿಗಲ್ಲಿನಂತೆ ಆ ಘಟನೆ ಕಂಡರೂ ವಿಮಾನಲೋಕದ ಆಪ್ತವಾದ ಪರಿಚಯ ಮಾಡಿಕೊಳ್ಳಹೊರಟರೆ ಹಾರಾಟದ ಇತರ ಪ್ರಕಾರಗಳ ಪ್ರಯತ್ನ ಪ್ರಯಾಸಗಳ ಭೇಟಿ ಪರಿಚಯವೂ ಆಗುತ್ತದೆ. + +ಯಾವುದೇ ಮಾದರಿಯ ವಿಮಾನ ಆಗಸವನ್ನು ಏರಿ ಹಾರುವುದಕ್ಕಿಂತ ಮೊದಲಿನ ಕೆಲವು ಸಾವಿರ ವರ್ಷಗಳಲ್ಲಿ ಮಾನವರು ನೇರವಾಗಿ ಹಾರಾಟದ ಭಾಗವಾಗಿರದೇ ಇದ್ದರೂ ಹಾರುವ ವಸ್ತುಗಳನ್ನು ವಿನ್ಯಾಸ ಮಾಡಿ ಹಾರಿಸಿದವರು, ನೆಲದಲ್ಲಿ ನಿಂತೇ ಕತ್ತು ಮೇಲೆ ಮಾಡಿ ಹಗ್ಗ ಜಗ್ಗಿ ಅವುಗಳ ಮೇಲೆ ಹತೋಟಿ ಇಟ್ಟವರು. ಮನುಷ್ಯರು ಹುಟ್ಟಿದ ಕಾಲದಿಂದಲೂ ಹಾರುತ್ತಲೇ ಇರುವ, ಹಾರಾಟದ ನಿತ್ಯ ಪಾಠಶಾಲೆ ಎನಿಸಿದ ಹಕ್ಕಿಗಳಿಗೂ ಮತ್ತೆ ಅಂತಹ ಗುರು ಕಲಿಕಾಸಂಸ್ಥೆಗಳ ವಿನಮ್ರ ವಿದ್ಯಾರ್ಥಿಗಳಾದ ವಿಮಾನಗಳಿಗೂ ನಡುವೆ ಕೊಂಡಿ ಕುಣಿಕೆಯಂತೆ ಮಾನವನಿರ್ಮಿತ ಗಾಳಿಪಟಗಳು ಮತ್ತೆ ಬಿಸಿಗಾಳಿಯ ಬಲೂನುಗಳು ಇದ್ದವು. ಹಕ್ಕಿಗಳಷ್ಟು ಸ್ವತಂತ್ರವಾಗಿ ಲೀಲಾಜಾಲವಾಗಿ ಹಾರಬಲ್ಲವು ಅಲ್ಲದ ಈ “ಪತಂಗ್”ಗಳು ಗಾಳಿಯಲ್ಲಿ ತೇಲುವ ಸಿದ್ಧಾಂತದ ನಿಟ್ಟಿನಲ್ಲಿಯೂ ಹಕ್ಕಿಗಳಿಗೂ ವಿಮಾನಗಳಿಗೂ ಹತ್ತಿದರವು. ಇನ್ನು ಬಿಸಿಗಾಳಿ ಬಲೂನುಗಳು ಗಾಳಿಪಟದಷ್ಟು ಪುರಾತನ ಅಲ್ಲದಿದ್ದರೂ ಕೆಲವು ಶತಮಾನಗಳ ಇತಿಹಾಸ ಇರುವವವು. ಗಾಳಿ ಬಿಸಿಯಾದ ಕಾರಣಕ್ಕೆ ಸುತ್ತಲಿನ ವಾತಾವರಣದ ಗಾಳಿಗಿಂತ ಹಗುರವಾಗಿ ಮೇಲೇರುವ ಸಿದ್ಧಾಂತವನ್ನು ಬಳಸಿ ಫ್ರಾನ್ಸಿನ ಸಹೋದರರಿಬ್ಬರು ೧೭೮೩ನೆಯ ಇಸವಿಯಲ್ಲಿ ದೊಡ್ಡ ಗಾತ್ರದ ಬಿಸಿಗಾಳಿ ಬಲೂನನ್ನು ಹಾರಿಸಿದ್ದೂ ವಿಮಾನ ಕಥನದ ಮೊದಮೊದಲ ಪುಟಗಳಲ್ಲಿ ದಾಖಲಾಗುವ ವಿಷಯವೇ. ಬಾನಾಡಿ ಹಕ್ಕಿಗಳನ್ನು ಗಾಳಿಪಟಗಳನ್ನು ಬಿಟ್ಟರೆ ಮಾನವ ನಿರ್ಮಿತ ವಸ್ತು ವಿಷಯವೊಂದು ನೆಲ ಬಿಟ್ಟು ಕೆಲವು ಘಳಿಗೆಗೆಗಳ ಮಟ್ಟಿಗೆ ತೇಲಿದ ಮೊದಲ ಚಾರಿತ್ರಿಕ ಉದಾಹರಣೆ ಕೂಡ ಹೌದದು. ಆ ಕಿರುಹಾರಾಟದ ಹಿಂದಿನ ಕಾರಣಕರ್ತರು ಮಾನವರೇ ಆದರೂ ಅಂದಿನ ಹಾರಾಟದಲ್ಲಿ ಯಾವ ಮನುಷ್ಯರೂ ಭಾಗಿಯಾಗಿರಲಿಲ್ಲ. ಅದು ಪ್ರಯೋಗಾತ್ಮಕ ಹಾರಾಟವಾಗಿದ್ದ ಕಾರಣ ಅಂದಿನ ಉಡ್ಡಯನದಲ್ಲಿ ಕುರಿ, ಬಾತುಕೋಳಿ ಹಾಗು ಕೋಳಿಗಳನ್ನು ಬಲೂನಿನಲ್ಲಿ ಹಾರಿಸಲಾಗಿತ್ತು. ಮತ್ತೆ ಆ ಎಲ್ಲ ಪ್ರಾಣಿಗಳೂ ಹಾರಾಟ ಮುಗಿಸಿ ಸುರಕ್ಷಿತವಾಗಿ ನೆಲವನ್ನು ತಲುಪಿದ್ದವು ಕೂಡ. ಆ ಘಟನೆ ನಡೆದ ಎರಡು ತಿಂಗಳುಗಳಲ್ಲಿ ಇಬ್ಬರು ವ್ಯಕ್ತಿಗಳನ್ನು ಹತ್ತಿಸಿಕೊಂಡ ಬಲೂನು ಇಪ್ಪತ್ತೈದು ನಿಮಿಷಗಳ ಸಣ್ಣ ತಿರುಗಾಟವನ್ನು ಪ್ಯಾರಿಸ್ ನಗರದ ಮೇಲೆ ಮಾಡಿತ್ತು. ಗಾಳಿ ಬಂದತ್ತ ಸಾಗುತ್ತಿದ್ದ ಈ ಬಲೂನುಗಳು ಮುಂದೆ ಪರಿಷ್ಕರಣೆಗೊಂಡು ಆಕಾಶದಲ್ಲಿ ಕಿರುವಿಹಾರದ ಹೊಸ ಪ್ರಕಾರವಾಗಿಯೇ ಬೆಳೆದವು. ಮತ್ತೆ ಗಾಳಿಪಟಗಳನ್ನು ಹಾರಿಸುವುದು ಸಾಮಾನ್ಯವಾದ ಸುಲಭವಾದ ದಿನಚರಿಯಾಗಿ ಜನಪ್ರಿಯ ಹವ್ಯಾಸವಾಗಿಯೂ ಉಳಿಯಿತು. ನಾನು ವಾಸಿಸುವ ಬ್ರಿಸ್ಟಲ್‌ನಲ್ಲಿ ಪ್ರತಿ ವರ್ಷವೂ ಅಂತಾರಾಷ್ಟ್ರೀಯ ಬಲೂನು ಉತ್ಸವ, ಗಾಳಿಪಟ ಹಬ್ಬ ನಡೆಯುತ್ತವೆ. + +ಒಂದು ಕಾಲಕ್ಕೆ ಗಗನಗಾಮಿಯಾಗುವ ತೀವ್ರ ಆಸೆಯ ವಿವಿಧ ಪ್ರಯತ್ನಗಳ ಕವಲುಗಳಾಗಿ ಕಾಣುವ ಗಾಳಿಪಟಗಳು ಬಲೂನುಗಳು ಮತ್ತೆ ಅವುಗಳು ಪ್ರಭಾವಿಸಿದ ವಿಮಾನಗಳು ಈ ಕಾಲಕ್ಕೆ ತಂತ್ರಜ್ಞಾನಗಳ ಬೆಳವಣಿಗೆ ಸಂಶೋಧನೆಗಳ ಬಲದಲ್ಲಿ ಹಾರುವಿಕೆ ಹಾರಿಸುವಿಕೆಗಳ ಸ್ವತಂತ್ರ ಸ್ವಾವಲಂಬಿ ಶಾಖೆಗಳಾಗಿ ಬೆಳೆದಿವೆ; ಆಗಸದ ಬೇರೆ ಬೇರೆ ಎತ್ತರಗಳಲ್ಲಿ ಒಂದಕ್ಕೊಂದು ಅಡ್ಡಿಪಡಿಸದೇ ಹಾರಾಡಿಕೊಂಡು ಹಾಯಾಗಿವೆ. ಮತ್ತೆ ನೂರು ವರ್ಷಗಳ ಹಿಂದೆ, ಮೊದಮೊದಲಿಗೆ ಮಾನವ ರಹಿತವಾಗಿ ಆಮೇಲೆ ಒಬ್ಬರಿಬ್ಬರನ್ನು ಕೆಲವು ಕ್ಷಣಗಳ ಮಟ್ಟಿಗೆ ಕೂರಿಸಿಕೊಂಡು ಗಾಳಿಸವಾರಿ ಮಾಡಿಸಿದ ವಿಮಾನಗಳು, ಸಂಶೋಧನೆ ಕಲಿಕೆಗಳ ಬಲದಲ್ಲಿ ರೂಪಾಂತರಗೊಂಡು ಈ ಕಾಲದಲ್ಲಿ ಸಾಗಾಟದ ಪ್ರಮುಖ ಮಾಧ್ಯಮವಾಗಿಯೂ ದೈತ್ಯ ಉದ್ಯಮವಾಗಿಯೂ ಬೆಳೆದಿವೆ. ಹೊರಜಗತ್ತಿಗೆ ಕಾಣಿಸುವ ಸಾಗಾಟ ವ್ಯವಸ್ಥೆ, ಉದ್ಯೋಗ ಏರ್ಪಾಡು, ವ್ಯಾಪಾರ ವ್ಯವಹಾರ ಇತ್ಯಾದಿಗಳ ಹಿನ್ನೆಲೆಯಲ್ಲಿ ಇರುವ ಪ್ರತಿ ವಿಮಾನಕ್ಕೂ ಅದರದ್ದೇ ಆದ ಒಂದು ಬದುಕಿದೆ, ಜೀವನಚಕ್ರ ಇದೆ, ಹುಟ್ಟು ಸಾವೂ ಇವೆ. ಹಾಗಾಗಿಯೇ ವಿಮಾನಗಳಿಗೆ ಸಂಬಂಧಿಸಿದ ವಿಚಾರಗಳನ್ನು ಕುತೂಹಲಕಾರಿ ರೋಚಕ ಆಸಕ್ತಿದಾಯಕ ಎಂದು ತಿಳಿಯುವವರಿದ್ದಾರೆ. ಮತ್ತೆ ಕೆಲವರು ನಿಗೂಢ ಕಠಿಣ ಶುಷ್ಕ ಎಂದು ದೂರ ಇಟ್ಟವರೂ ಇದ್ದಾರೆ. ಇನ್ನೂ ಕೆಲವರು, ಅಷ್ಟು ಚಂದದ ಸ್ವಚ್ಛವಾದ ಬಾನಿನಲ್ಲಿ ಕಲುಷಿತ ಹೊಗೆ ತುಂಬಿಸುತ್ತಾ ಸಾಗುವ ಕೃತಕ ಬಾನಾಡಿಗಳು ಎಂದು ಜರೆಯುವುದೂ ಇದೆ. ಆಮೇಲೆ ಪರಿಸರಸ್ನೇಹಿ ಪರ್ಯಾಯ ಸಾಗಾಟಗಳನ್ನು ಬೆಂಬಲಿ ಪ್ರೋತ್ಸಾಹಿಸುವವರ ಪ್ರತಿಭಟನೆಯ ವಸ್ತುವಾಗುವುದೂ ಇದೆ. + + + +ವಿಮಾನಗಳ ಅಸ್ತಿತ್ವವನ್ನು ಪಾತ್ರವನ್ನು ಬೇರೆಬೇರೆ ಆಯಾಮಗಳಿಂದ ನೋಡಿ ಪ್ರೀತಿ ಸ್ನೇಹ ದ್ವೇಷ ತಾತ್ಸಾರ ಅಸಡ್ಡೆಗಳನ್ನು ರೂಪಿಸಿಕೊಳ್ಳಬಹುದಾದರೂ ನಾವು ವಾಸಿಸುವ ಭೂಮಿಯ ಗಾತ್ರವನ್ನು ಸಣ್ಣದು ಮಾಡಿದ, ದೂರದ್ದನ್ನು ಹತ್ತಿರಕ್ಕೆ ತಂದ, ನಿಧಾನವಾದುದನ್ನು ವೇಗವಾಗಿಸಿದ ಅಪೂರ್ವ ಸಿದ್ಧಿ ಪ್ರಸಿದ್ಧಿ ವಿಮಾನಗಳಿಗೆ ಅವುಗಳ ಸಂತತಿಗೆ ಇದೆ. ಆಕಾಶಕ್ಕೆ ಹಲವು ದಿಕ್ಕುಗಳಿಂದ ಹಲವು ಬಗೆಯಲ್ಲಿ ಏಣಿ ಇಟ್ಟು ಏರುವ ಯತ್ನಗಳ ಫಲವಾಗಿ ಸಾಧ್ಯವಾದ ವಿಮಾನ ಹಾರಾಟ, ನೆಗೆತದ ಕಲ್ಪನೆ ವಾಸ್ತವವೂ ಆದ ದಿನದಿಂದ ಇಲ್ಲಿಯ ತನಕ ತೀವ್ರವಾದ ಬೆಳವಣಿಗೆಯನ್ನೂ ಬದಲಾವಣೆಗಳನ್ನೂ ಕಂಡಿದೆ; ಇನ್ನೂ ಕಾಣಲಿಕ್ಕಿದೆ. + +ಇಂಗ್ಲೆಂಡ್ ನ ಬ್ರಿಸ್ಟಲ್‌ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ. \ No newline at end of file diff --git a/Kenda Sampige/article_420.txt b/Kenda Sampige/article_420.txt new file mode 100644 index 0000000000000000000000000000000000000000..fdf70f6178bbd2361c4de3b058e5f51a9ea8f4f9 --- /dev/null +++ b/Kenda Sampige/article_420.txt @@ -0,0 +1,33 @@ + + +ಛಂದ ಪುಸ್ತಕ ಬಹುಮಾನಕ್ಕೆ ಪಾತ್ರವಾದ ಸ್ವಾಮಿ ಪೊನ್ನಾಚಿಯವರ ಕಥೆಗಳು ನಮಗೆ ಒಂದು ವಿಭಿನ್ನ ಮತ್ತು ಅದ್ಭುತ ಜಗತ್ತನ್ನು ತೆರೆದುಕೊಡುತ್ತವೆ. ಒಂದು ಮ್ಯೂಸಿಯಂನಲ್ಲಿ ಇರಬಹುದಾದ ಅನೇಕ ಕೋಣೆಗಳಲ್ಲಿ ಕಾಪಿಟ್ಟಿರುವ ಕಲಾವಸ್ತುವಿನಂತ ಅವರ ಕಥೆಗಳಲ್ಲಿ ಹೊಸತನವೂ, ಭಿನ್ನತೆಯೂ ಇದೆ. ಒಂದು ಕಥೆಯನ್ನು ಸಮರ್ಥವಾಗಿ ಹೆಣೆಯುವ ಕೌಶಲ, ಭಾಷೆಯ ಸಮರ್ಪಕತೆ, ಭಾಷೆಯ ಮತ್ತು ಕಥನ ತಂತ್ರದ ಮೇಲಿನ ಹಿಡಿತ ಮತ್ತು ವಿಚಾರಗಳ ಪ್ರಬುದ್ಧತೆ, ಈ ಎಲ್ಲವನ್ನು ಸ್ವಾಮಿ ತಮ್ಮ ಮೊದಲ ಕಥಾಸಂಕಲನದಲ್ಲೇ ತೋರುತ್ತಾರೆ. ಕನ್ನಡದ ಕಥಾಲೋಕಕ್ಕೆ ಹೊಸತನವನ್ನು ತರುತ್ತಿರುವ ಸ್ವಾಮಿಯವರನ್ನು ನಾವು ತೆರೆದ ಹೃದಯದಿಂದ ಸ್ವಾಗತಿಸೋಣ. + +ಸ್ವಾಮಿಯವರು ತಮ್ಮ ಕಥೆಗಳಲ್ಲಿ ಜಟಿಲ ವಿಷಯಗಳನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ. ಅವರ ಕಥೆಗಳಲ್ಲಿ ಆಧುನಿಕತೆ, ಸಹಜ ಬದುಕು, ನೈತಿಕತೆ, ಪರೋಪಕಾರ, ಸ್ವಾರ್ಥ – ಈ ಎಲ್ಲವೂ ವಿಚಿತ್ರ ರೀತಿಯಲ್ಲಿ ಮುಖಾಮುಖಿಯಾಗಿ ನಮ್ಮ ಮುಂದೆ ನಿಲ್ಲುತ್ತವೆ. ಸಾಮಾನ್ಯವಾಗಿ ಈ ರೀತಿ ವಸ್ತುಗಳನ್ನು ಕಥೆಗಾರ ಆಯ್ತು ಕಥೆ ಹೆಣೆಯುವಾಗ ಅದರಲ್ಲಿ ಕಥೆಗಾರನ ನಿಲುವು ಸೂಕ್ಷ್ಮವಾಗಿ ನಮಗೆ ಗೋಚರಿಸುತ್ತದೆ. ಪತ್ರಿಕೆಗಳಿಗೆ ರಾಜಕಾರಣಿಗಳನ್ನು ಸಂದರ್ಶನ ಮಾಡುವ ಪತ್ರಕರ್ತರು ಎಷ್ಟೇ ತಟಸ್ಥರೆಂದು ಕಂಡರೂ, ಅವರು ಸಂದರ್ಶನಕ್ಕೆ ಕರೆಯುವ ಅತಿಥಿಗಳು, ಅವರನ್ನು ಕೇಳುವ ಪ್ರಶ್ನೆಗಳು, ಪ್ರಶ್ನೆಗಳನ್ನು ಕೇಳುವ ಪರಿಯಲ್ಲಿಯೇ ನಮಗೆ ಸೂಕ್ಷವಾಗಿ ಪತ್ರಕರ್ತರ ನಿಲುವು ಮತ್ತು ಒಲವು ಯಾವಕಡೆಗಿದೆಯೆಂದು ತಿಳಿಯುತ್ತದೆ. ಹಾಗೆ ನೋಡಿದರೆ ಯಾರೂ ತಟಸ್ಥರಲ್ಲ. ಆದರೆ ಕಥೆಗಾರನ ಸವಾಲು ಇರುವುದೇ ಇದರಲ್ಲಿ ತನ್ನ ನಿಲುವು ಒಲವಿನ ಬಗ್ಗೆ ಸೂಚನೆ ನೀಡದೆಯೇ, ಆದರೂ ಆಸಕ್ತಿಕರವಾಗಿ ಕಥೆಯನ್ನು ಹೆಣೆದು, ಓದುಗರು ತಮ್ಮ ನಿಲುವನ್ನು ತಮ್ಮಲ್ಲೇ ತೆಗೆದುಕೊಳ್ಳುವಂತೆ ಮಾಡುವುದು ಸುಲಭದ ಮಾತಲ್ಲ. ಸ್ವಾಮಿಯವರ ಕಥೆಗಳು ಈ ಕೆಲಸವನ್ನು ಮಾಡುತ್ತವೆ. + +(ಸ್ವಾಮಿ ಪೊನ್ನಾಚಿ) + +ಕಥೆಗಾರರಾಗಿ ನಿಲುವು ತೆಗೆದು, ಓದುಗರೊಂದಿಗೆ ಕಾಲನಿಕ ವಾದಕ್ಕಿಳಿಯುವುದಕ್ಕಿಂತ, ವಿಷಯವನ್ನು ಸಮರ್ಥವಾಗಿ ಮಂಡಿಸಿ ಓದುಗರ ಮನದಲ್ಲಿಯೇ ಪ್ರಶ್ನೆಗಳನ್ನು ಹುಟ್ಟುಹಾಕುವಂತಹ ತಂತ್ರಗಾರಿಕೆಯನ್ನು ಸ್ವಾಮಿ ತೋರುತ್ತಾರೆ. ಆ ತಂತ್ರಗಾರಿಕೆಗೆ ಪೂರಕವಾದ ಭಾಷೆಯೂ ಅವರಲ್ಲಿದೆ. ಘಟನೆಗಳನ್ನು ಜೋಡಿಸುವ ಕ್ರಮವೂ ಇದೆ. ಓದುಗನ ಮನಸ್ಸಿನಲ್ಲಿ ಒಂದು ಚಿತ್ರಣವುಂಟಾಗುವಂತೆ ಮಾಡುವ ಕಲೆಗಾರಿಕೆಯೂ ಇದೆ. ಹೀಗಾಗಿ ಸ್ವಾಮಿಯವರು ಕುತೂಹಲದ ಮತ್ತು ಸಮರ್ಥವಾದ ಕಥೆಗಾರರಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ಅವರ ಕಥೆಗಳಲ್ಲಿ ವಸ್ತು ವೈವಿಧ್ಯವೂ ಇದೆ. “ ಧೂಪದ ಮಕ್ಕಳು ” ಎನ್ನುವ ಕಥೆಯನ್ನೇ ತೆಗೆದುಕೊಳ್ಳೋಣ. ಈ ಕಥೆಯು ಒಂದೇ ಕಾಲಕ್ಕೆ ಅನೇಕ ಪದರಗಳನ್ನು ತೆರೆಯುತ್ತಾ ಹೋಗುತ್ತದೆ. ಒಂದೆಡೆ ಗಿರಿಜನರ ಮಕ್ಕಳ ಮುಖಾಮುಖಿ ಆಧುನಿಕ ಜಗತ್ತಿನೊಂದಿಗೆ ಆಗುತ್ತದೆ. ಶಾಲೆ – ವಿದ್ಯೆ ಮತ್ತು ಬದುಕಿಗೆ ಬೇಕಾದ ಆದಾಯ ಆರ್ಜನೆಯ ತಾಕಲಾಟವೂ ಇದೆ. ಕಳ್ಳತನವೆಂದು ಶಿಷ್ಟಜಗತ್ತು ಕರೆಯುವುದನ್ನು ಬೇರೊಂದು ರೀತಿಯಲ್ಲಿ ಅರ್ಥೈಸಬಹುದೆಂಬ ಸಾಧ್ಯತೆಯೂ ಇದೆ. ಈ ಎಲ್ಲಕ್ಕಿಂತ ಮಿಗಿಲಾಗಿ ಕಳುವಾದ ಮೊಬೈಲು ( ಬಹುಶಃ ವೈಬ್ರೇಷನ್ ಮೋಡಿನಲ್ಲಿರುವುದರಿಂದ) ಅಲುಗಾಡುವುದು ದೆವ್ವಭೂತಗಳ ನೆನಪನ್ನು ಒಂದೆಡೆ ತಂದರೆ, ಮತ್ತೊಂದೆಡೆ “ಸಾರೇ ಜಹಾಂ ಸೆ ಅಚ್ಚಾ” ಅನ್ನುವ ರಿಂಗ್ ಟೋನಿನ ವಿಡಂಬನೆಯೂ ನಮ್ಮನ್ನು ತಟ್ಟುತ್ತದೆ. ಹೀಗೆ ವಿದ್ಯೆ, ಧೂಪದ ಮಾರಾಟ, ಶಾಲೆ – ಆಟ, ಕಾಯಕ – ಕಲಿಕೆಗಳ ಮಧ್ಯೆ ಯಾವುದೇ ನಿಲುವನ್ನು ತೆಗೆದುಕೊಳ್ಳದೇ ಆದರೆ ಎಲ್ಲ ಆಯಾಮಗಳನ್ನೂ ಪ್ರಶ್ನಿಸುವ ಅವರ ಕಥನದ ಶೈಲಿ ನಿಜಕ್ಕೂ ಹೊಸತನದಿಂದ ಕೂಡಿದ್ದು , – ಇದೇ ಜಾಡಿನಲ್ಲಿ ಕಾಯಕಕ್ಕೆ ತಯಾರದ ವಯಸ್ಸಿಗೆ ಹುಟ್ಟುವ ಕಲಿಕೆಗೂ ಕಾಯಕಕ್ಕೂ ಇರುವ ಘರ್ಷಣೆಯನ್ನು ಮಾಯಿ ಎನ್ನುವ ಕಥೆಯೂ ಸಮರ್ಥವಾಗಿ ಗ್ರಹಿಸುತ್ತದೆ. + +ಸ್ವಾಮಿಯವರ ಅನೇಕ ಕಾಳಜಿಗಳಲ್ಲಿ ಬಹುಶಃ ನಮ್ಮ ಒಟ್ಟಾರೆ ಬದುಕಿನಲ್ಲಿ ಶಾಲೆ – ಕಲಿಕೆಯ ಪಾತ್ರದ ಮಹತ್ವವೇನು ಎನ್ನುವುದರ ಅನ್ವೇಷಣೆಯೇ ಮಿಕ್ಕ ವಿಚಾರಗಳಿಗಿಂತ ಹೆಚ್ಚಿನ ಮಹತ್ವವನ್ನು ಪಡೆಯುತ್ತದೇನೋ. ಅವರ “ಶಿವನಜ್ಜಿ” ಕಥೆಯೂ ಶಾಲೆಯೊಂದರ ಆಸುಪಾಸಿನಲ್ಲೇ ಹೆಣೆಯಲಾಗಿದೆ. “ಶಿವನಜ್ಜಿ” ಕಥೆ, ಒಂದು ರೀತಿಯಿಂದ ಅಭಿವೃದ್ಧಿ, ಖಾಸಗೀ ಸ್ವಾತಂತ್ರ, ಸಾಮಾಜಿಕ ಹೊಣೆ, ಚಿಲ್ಲರೆ ರಾಜಕೀಯ, ಮೋಸ ಎಲ್ಲವನ್ನೂ ನಮ್ಮ ಮುಂದೆ ಬಿಚ್ಚಿಡುವ ಕಥೆ. ಇದರ ವಿರೋಧಾಭಾಸ ನೋಡಿ – ಒಂದೆಡೆ ಊರಿಗೆ ಒಂದು ಶಾಲೆ ಬಂದಿದೆ. ಮಕ್ಕಳು ಶಾಲೆಗೆ ಹೋಗುತ್ತಿದ್ದಾರೆ. ಇದು ಅಭಿವೃದ್ಧಿಯ – ಸರಕಾರದ ಲೆಕ್ಕಪತ್ರಗಳಿಗೆ ಸೇರುವ ಒಂದು ಮಾಹಿತಿ, ಸರಕಾರವು ಈ ಶಾಲೆಯನ್ನು ನಿರ್ಮಿಸಿ ಒಂದು ಅದ್ಭುತ ಕೆಲಸವನ್ನು ಮಾಡಿದೆ ಎಂದು ನಾವು ಸರಕಾರದ ಬೆನ್ನು ತಟ್ಟಬಹುದು. ಆದರೆ ಶಾಲೆಯ ನಿರ್ಮಾಣದಲ್ಲಿ ಯಾರು ಎಷ್ಟು ಬೆಲೆ ತೆತ್ತಬೇಕಾಯಿತು – ಬೆಲೆ ತೆತ್ತುವುದರಲ್ಲಿ ಆಗಿರುವ ರಾಜಕೀಯ ಹಾಗೂ ಆ ಶಾಲೆಯಿಂದ ತನ್ನ ಜೀವನದ ಸಂಧ್ಯಾಕಾಲದಲ್ಲಿ ಏನನ್ನೂ ಪಡೆದುಕೊಳ್ಳದ ಶಿವನಜ್ಜಿಯ ದುರಂತ ಕಥೆಯೂ ಅಡಗಿದೆ. + +ಅರ್ಥಶಾಸ್ತ್ರಜ್ಞ ಎಡ್ಕಂಡ್ ಫೆಲ್ಸ್ ಇದನ್ನೇ ಹೇಳುತ್ತಾನೆ. ನಮಗೆ ಅಭಿವೃದ್ಧಿ ಕಾಣುವುದು ಮಾಹಿತಿಯ ಮೂಲಕ – ಇಷ್ಟು ಸೇತುವೆ ನಿರ್ಮಾಣವಾಯಿತು. ರಸ್ತೆ ಬಂತು. ಶಾಲೆಗಳನ್ನು ಕಟ್ಟಿದೆವು, ಆಸ್ಪತ್ರೆಯನ್ನು ನಿರ್ಮಿಸಿದೆವು , ಆಣೆಕಟ್ಟುಗಳನ್ನು ನಿರ್ಮಿಸಿ ವಿದ್ಯುತ್ ಉತ್ಪಾದನೆ ಮಾಡಿದವು. ನೀರಾವರಿ ನೀಡಿದೆವು – ಹೀಗೆ; ಮಾಹಿತಿ ಅಭಿವೃದ್ಧಿಯನ್ನು ರೂಪಿಸುತ್ತದೆ. ಆದರೆ ಈ ಅಭಿವೃದ್ಧಿಯ ಹಿಂದಿರುವ ಖಾಸಗೀ ದುರಂತ ಕಥೆಗಳನ್ನು ಗ್ರಹಿಸುವುದು ಸಾಹಿತ್ಯ ಮಾತ್ರ, ಔದ್ಯೋಗಿಕ ಕ್ರಾಂತಿಯು ತಂದ ಅಭಿವೃದ್ಧಿಯನ್ನು ಕೊಂಡಾಡುತ್ತಲೇ ಫೆಲ್ಸ್ ಡಿಕನ್ಸ್, ಜೋಯಾ, ಬೇಕರನ್ನು ನೆನಪು ಮಾಡಿಕೊಂಡು ಅದಕ್ಕಾಗಿ ಖಾಸಗೀ ಬೆಲೆಯನ್ನು ತೆತ್ತವರನ್ನು ಸ್ಮರಿಸುತ್ತಾನೆ. “ಶಿವನಜ್ಜಿ” ಕಥೆ ಈ ಪಂಥಕ್ಕೆ ಸೇರುತ್ತದೆ. ಹೀಗಾಗಿಯೇ ಕಥೆಯನ್ನು ಸುಖಾಂತ, ದುಃಖಾಂತ ಎಂದು ವರ್ಗೀಕರಿಸುವುದಕ್ಕೆ ಕಷ್ಟವಾಗುತ್ತದೆ. ಅದು ಕೇವಲ ದುರಂತವಷ್ಟೇ. + +“ಸ್ವಾಮೀಜಿಯ ಪಾದವೂ ಹೆಣದ ತಲೆಯೂ” ಕಥೆಯು ಮನುಷ್ಯ ಮತ್ತು ಮನುಷ್ಯ ಬದುಕಿನಲ್ಲಿ ನಿರ್ವಹಿಸುತ್ತಿರುವ ಪಾತ್ರ – ಅದು ಕಾಯಕದ್ದೇ ಆಗಿರಬಹುದು ಅಥವಾ ಜೀವನಶೈಲಿಯ ಪಾತ್ರವೇ ಆಗಿರಬಹುದು – ಈ ಎರಡರ ನಡುವಿನ ವಿರೋಧಾಭಾಸವನ್ನು ನಮ್ಮ ಮುಂದಿಡುತ್ತದೆ. ನಮ್ಮಲ್ಲಿನ ಎಷ್ಟು ಮಂದಿ ಸ್ವಾಮಿಗಳು – ದೇವ ಪುರುಷರು ದೇವರನ್ನು ಅರ್ಥೈಸಲೆಂದೇ, ತಮ್ಮಾಯ್ಕೆಯಂತೆ ಆ ಸ್ಥಾನದಲ್ಲಿದ್ದಾರೆ? ಎಷ್ಟು ಮಂದಿಗೆ ಅದು ನಂಬುಗೆಯ ವಿಚಾರ? ಯಾರಿಗದು ಕೇವಲ ಒಂದು ಕಾಯಕ? ಯಾರು ಸಾಂಸಾರಿಕ – ಸಾಮಾಜಿಕ ಒತ್ತಡಗಳಿಂದಾಗಿ ಆ ಸ್ಥಾನದಲ್ಲಿದ್ದಾರೆ? ಆ ಸ್ನಾನದ ರೀತಿರಿವಾಜುಗಳು ನಮ್ಮ ಖಾಸಗೀ ಭಾವನೆಗಳಾದ ಸುಖ – ದುಃಖ – ಮದ – ಮತ್ಸರ – ಕಾಮಗಳನ್ನು ಹೇಗೆ ನಿರ್ದೇಶಿಸುತ್ತವೆ? ಈ ಎಲ್ಲ ಪ್ರಶ್ನೆಗಳನ್ನು ಕೇಳಿಕೊಳ್ಳುವಂತೆ ಈ ಕಥೆ ನಮ್ಮನ್ನು ಪ್ರೇರೇಪಿಸುತ್ತದೆ. + +ಶವದ ಮೇಲೆ ಸ್ವಾಮಿಗಳ ಪಾದಗಳನ್ನು ತಗುಲಿಸಿ ಆಶೀರ್ವಚನ ಮಾಡಿಸುವ ಪ್ರಕ್ರಿಯೆಯಲಿ. ಕಳಚಿ ಅಸಲೀ ಭಾವನೆಗಳು ಉಕ್ಕಿಬರುವ ವಿಷಾದವನ್ನು ಸ್ವಾಮಿ ಸಮರ್ಥವಾಗಿ ನಿರ್ವಹಿಸುತ್ತಾರೆ, – ಹೀಗೆ ದೊಡ್ಡ ಹಂದರದಲ್ಲಿ ತತ್ವ, ಭೂತ, ವರ್ತಮಾನದ ಸಾಮಾಜಿಕ ಲೇನ್ ದೇನ್ಗಳ ಜಗತ್ತನ್ನು ಚಿತ್ರಿಸುತ್ತಿರುವ ಸ್ವಾಮಿ, ಇದೇ ವಿಚಾರಗಳನ್ನು ಖಾಸಗಿಯಾಗಿಯೂ ನಿರ್ವಹಿಸುತ್ತಾರೆ. ಹೊರಜಗತ್ತಿನ ದೊಡ್ಡವಿಚಾರಗಳನ್ನು ಸಂಕೀರ್ಣ ಸಂಬಂಧಗಳನ್ನು ತೆರತೆರೆದು ನೋಡುವ ಈತ ಒಂದು ರೀತಿಯಿಂದ ತೀರಾ ಖಾಸಗಿಯಾದ ಸಂಬಂಧಗಳನ್ನು ಹೇಗೆ ಪರಿಶೀಲಿಸಬಹುದು ಎನ್ನುವುದಕ್ಕೆ “ಸ್ವಗತ” ಒಂದು ಉತ್ತಮ ನಿದರ್ಶನವಾಗಿದೆ. ಇಲ್ಲಿ ನಮ್ಮ ವರ್ತನೆಗೂ ಮನೋವ್ಯಾಪಾರಕ್ಕೂ – ಖಾಸಗಿ ರಾಗದ್ವೇಷಗಳಿಗೂ – ಬಹಿರಂಗವಾಗಿ ಸಂಬಂಧಗಳನ್ನು ನಿಭಾಯಿಸುವ ರೀತಿಗೂ ಇರುವ ವಿರೋಧಾಭಾಸವನ್ನು ಸ್ವಾಮಿ ಪ್ರಬುದ್ಧವಾಗಿ ನಿಭಾಯಿಸುತ್ತಾರೆ. + + + +“ಅಕ್ಕ ಅವನು ಸಿಕ್ಕಿದನೇ?” ಎನ್ನುವ ಕಥೆ ಒಂದು ವಿಲಕ್ಷಣ ಕಥೆಯಂದೇ ಹೇಳಬೇಕು. ಆಧುನಿಕ ಪ್ರತಿಮೆಗಳು – ನಗರ ಮತ್ತು ಯಂತ್ರಚಾಲಿತ ಸಾರಿಗೆಯಲ್ಲಿ ಸಾಗುತ್ತಲೇ ಚೆನ್ನಮಲ್ಲಿಕಾರ್ಜುನನ ಶೋಧಕ್ಕೆ ಹೊರಟಿರುವ ಮಹಿಳೆಯ ಶೋಧ, ಕೇಳುವ ಪ್ರಶ್ನೆಗಳು, ನಡೆಯುವ ಘಟನಾವಳಿಗಳಿಂದ ನಾವೂ ಕೂಡ ಕೆಲವು ಪ್ರಶ್ನೆಗಳನ್ನೆದುರಿಸಬೇಕಾಗುತ್ತದೆ. ಆಕೆಯ ಪ್ರಶ್ನೆಗಳೇ ಬೇರೆ, ಆದರೆ ಆಕೆಯ ಪ್ರಶ್ನೆಗಳಿಂದ ಉದ್ಭವವಾಗುವ ಪ್ರಶ್ನೆಗಳೇ ಬೇರೆ. ಶತಶತಮಾನಗಳಿಂದಲೂ ನಾವು ಮೂಲಭೂತ ಮನುಷ್ಯ ಸಂಬಂಧಗಳನ್ನು ಪ್ರಶ್ನಿಸುತ್ತಾ, ಅರ್ಥೈಸುತ್ತಾ – ಸಮಾಜದಲ್ಲಿನ ಸ್ವರಗಳನ್ನು – ಬಲಶಾಲಿ – ಬಲಹೀನರ ನಡುವಿನ ಸಂಬಂಧಗಳನ್ನು ಪರೀಕ್ಷಿಸುತ್ತಲೇ ಬರುತ್ತಿದ್ದೇವೆ. ಆದರೂ ಪ್ರಶ್ನೆಗಳು ನಿರಂತರವಾಗಿ ನಮ್ಮೆದುರು ನಿಂತಿವೆ. ಹಾಗೂ ಈ ಪ್ರಶ್ನೆಗಳು ಮುಂದೆಯೂ ಇರುತ್ತವೆ. ಆದರೂ ಅವುಗಳನ್ನು ಆಗಿಂದಾಗ್ಗೆ ಕೇಳಿಕೊಳ್ಳುವುದು ಮುಖ್ಯವಾಗುತ್ತದೆ. + +ಒಂದು ರೀತಿಯಿಂದ ಸ್ವಾಮಿಯವರು ಸಾಂದರ್ಭಿಕವಾಗಿ ಕಥೆಯನ್ನು ಅಕ್ಕಮಹಾದೇವಿ – ಬಸವಣ್ಣನವರ ರೂಪಕಗಳಿಂದ ನೇಯುವ ಮೂಲಕ ತಾವು ಕೇಳುವ ಪ್ರಶ್ನೆಗಳಿಗೆ, ನಿರೂಪಿಸುವ ಘಟನೆಗಳಿಗೆ ಸಾಂದರ್ಭಿಕವಾಗಿ ಕಾಣದಿದ್ದರೂ, ಅದನ್ನು ಒಂದು ಚರಿತ್ರೆಯಲ್ಲಿ ಅಡಕ ಮಾಡಿ, ಅದಕ್ಕೊಂದು ಘನತೆಯನ್ನು ತರುವ ಪ್ರಯತ್ನವನ್ನು ಮಾಡುತ್ತಾರೆ. ಇದು ಪ್ರಜ್ಞಾಪೂರ್ವಕವಾಗಿ ಅವರು ಮಾಡದಿದ್ದರೂ, ಅದಕ್ಕೆ ಆ ಚರ್ಚೆಯ ಅನುರಣನದ ಘನತೆ ದಕ್ಕುತ್ತದೆ. ಸ್ವಾಮಿಯವರ ಕಥೆಗಳಲ್ಲಿ ಒಂದು ಸಿದ್ಧ ಮಾದರಿ ನಮಗೆ ಕಾಣುತ್ತದೆ. ಅದು ಕಥೆಗಾರರೆಲ್ಲರೂ ಯಾವಾಗಲಾದರೊಮ್ಮೆ ಪ್ರಯೋಗಿಸಿ ಖುಷಿಪಡುವ ತಂತ್ರ. ಕಥೆಯ ಅಂತ್ಯದಲ್ಲಿ ಅನಿರೀಕ್ಷಿತ ತಿರುವೊಂದನ್ನು ಕೊಟ್ಟು ಓದುಗನನ್ನು ಅವಾಕ್ಕು ಮಾಡಿಸುವ ಈ ಟ್ವಿಸ್ಟ್ ಇನ್ ದ ಟೇಲ್ ತಂತ್ರವನ್ನು ಸ್ವಾಮಿಯವರೂ ಸೂಕ್ಷವಾಗಿ ಎಲ್ಲ ಕಥೆಗಳಲ್ಲೂ ಪ್ರಯೋಗಿಸುತ್ತಾರೆ. ಹಾಗೂ ಈ ಟ್ವಿಸ್ಟು ಸಾಮಾನ್ಯವಾಗಿ ಒಂದು ವಿಷಾದದ ಭಾವವನ್ನು ನಮ್ಮಲ್ಲಿ ಬಿಡುವುದರಿಂದ ಕಥೆಯ ಸಾಂಗತ್ಯ ಕಥೆ ಮುಗಿದ ನಂತರವೂ ಕಾಫಿಯ ಆಫರ್ ಟೇಸ್ಟಿನಂತೆ ಉಳಿದುಬಿಡುತ್ತದೆ. ಇದಕ್ಕೆ ಒಂದು ಒಳ್ಳೆಯ ಉದಾಹರಣೆ ಅವರ “ಹೀಗೊಂದು ಭೂಮಿಗೀತ ಕಥೆ”. + +(ಎಂ. ಎಸ್. ಶ್ರೀರಾಮ್) + +ಭೂತ ಕಥೆಯಲ್ಲೂ ಈ ತಂತ್ರ ಬರುತ್ತದಾದರೂ ಅಲ್ಲೊಂದು ವಿಡಂಬನೆಯಿದೆ. ದೇವರ ದರ್ಶನವಾದಂತೆ ಬಚ್ಚಲು ಮನೆಯಲ್ಲಿ ಭೂತವೂ ಪ್ರತ್ಯಕ್ಷವಾಗಬಹುದಲ್ಲಾ… ಅದನ್ನು ಅವರು ಭೂತವೆಂದು ಭಾವಿಸಬಹುದು, ದೆವ್ವ ಎನ್ನಬಹುದು. ಅದು ಹುಟ್ಟುಹಾಕುವ ಭಾವನೆಯಿಂದ ಅದಕ್ಕೆ ಭೂತವೆಂಬ ಹೆಸರು. ಆ ಘಟನೆ ಮತ್ತದರ ಸುತ್ತಮುತ್ತಲಿನ ವಿವರಣೆಯನ್ನು ಓದಿದಾಗ ನನಗನ್ನಿಸಿದ್ದು – ಪ್ರತ್ಯಕ್ಷವಾದದ್ದನ್ನು ದೇವರೆಂದು ಅರ್ಥೈಸಿ ಪೂಜೆಯನ್ನೂ ಮಾಡಬಹುದಲ್ಲಾ. ಭಯದ ಭಾವನೆಯಿಂದ ಭಕ್ತಿಯ ಭಾವನೆಗೆ ಮಾರ್ಪಾಟಾದರೆ ನಮ್ಮೆದುರು ಪ್ರಕಟವಾದದ್ದು ದೇವರೂ ಆಗಬಹುದು. ಆದರೆ ತಮಾಷೆಯೆಂದರೆ ಇದು ನಡೆಯುವುದು ಕತ್ತಲಲ್ಲಿ. ಭೂತಗಳು ಅವತರಿಸುವುದು ಕತ್ತಲಲ್ಲಿ, ಅವುಗಳ ಮೇಲೆ ಬೆಳಕು ಚೆಲ್ಲಿದಾಕ್ಷಣಕ್ಕೆ ಭೂತವನ್ನುವ ವಿಚಾರವೇ ಮಾಯವಾಗಿಬಿಡುತ್ತದೆ… ಸ್ವಗತ ಕಥೆಯ ಧಾಟಿಯಲ್ಲಿಯೇ ಸಾಗುವ ಮತ್ತೊಂದು ಕಥೆ ‘ವಿದಾಯ’. ಈ ಎರಡೂ ಕಥೆಗಳು ಸಂಕಲನದ ಮಿಕ್ಕ ಕಥೆಗಳಿಗಿಂತ ತೀರಾ ಭಿನ್ನವಾಗಿ ಸ್ವಾಮಿ ನಿಭಾಯಿಸಬಹುದಾದ ವೈವಿಧ್ಯವನ್ನು ಸೂಚಿಸುತ್ತವೆ. – “ ಈ ಕಥೆಗಳನ್ನು ನಿಜ ಎಂದುಕೊಂಡರೆ ನಿಜ, ಕಲ್ಪನೆ ಎಂದುಕೊಂಡರೆ ಅದೂ ನಿಜ” – ಎಷ್ಟು ಸುಂದರ ಮತ್ತು ಘನವಾದ ಮಾತು. ಈ ಮಾತುಗಳೇ ಸ್ವಾಮಿ ಪೊನ್ನಾಚಿಯವರ ಕಥನ ತತ್ವದ ದಿಕ್ಸೂಚಿಯಾಗಿರುವಂತಿದೆ. + + + +ನೈಜವಾದ, ನೈಜವಾಗಿ ಕಾಣಿಸುವ, ನೈಜವಲ್ಲದಿದ್ದರೂ ನಂಬಿಸುವಂತಹ ಕಥೆಗಳನ್ನು ಹೆಣೆಯಬಲ್ಲವನೇ ಸಮರ್ಥ ಕಥೆಗಾರ. ಅಂಥ ಲಕ್ಷಣವನ್ನು ಸ್ವಾಮಿ ಪೊನ್ನಾಚಿ ಈ ಸಂಕಲನದ ಮೂಲಕ ನಮಗೆ ತೋರಿಸಿಕೊಟ್ಟಿದ್ದಾರೆ. ಅವರಿಗೆ ಶುಭವಾಗಲಿ. ಅವರ ಕಥೆಗಳನ್ನು ಓದುವ, ಈ ಎರಡು ಮಾತುಗಳನ್ನು ಬರೆಯುವ ಅವಕಾಶ ಮಾಡಿಕೊಟ್ಟಿದ್ದಕ್ಕೆ ವಸುಧೇಂದ್ರನಿಗೂ, ಸ್ವಾಮಿಗೂ ಕೃತಜ್ಞತೆಗಳು. + +ಶ್ರೀರಾಂ, ಎಂ. ಎಸ್. ಆಂಧ್ರಪ್ರದೇಶದ ನೆಲ್ಲೂರಿನವರು.  ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟಿನ ಪ್ರಾಧ್ಯಾಪಕರಾಗಿದ್ದಾರೆ. ಕನ್ನಡ, ತೆಲುಗು, ಹಿಂದಿ, ಇಂಗ್ಲಿಷ್, ತಮಿಳು ಭಾಷೆಗಳನ್ನು ಬಲ್ಲವರು. ಗ್ರಾಮೀಣ ಅಭಿವೃದ್ಧಿ ಇವರ ಪರಿಣತಿಯ ವಿಷಯ. ಸಮಕಾಲೀನ ಸಾಹಿತ್ಯ, ರಂಗಭೂಮಿ, ಸಿನಿಮಾ ಇವರ ಆಸಕ್ತಿಯ ವಿಷಯಗಳು. ಮಾಯಾದರ್ಪಣ, ಅವರವರ ಸತ್ಯ, ತೇಲ್ ಮಾಲಿಶ್, ಸಲ್ಮಾನ್ ಖಾನನ ಡಿಫಿಕಲ್ಟೀಸು ಮತ್ತು ನಡೆಯಲಾರದ ದೂರ – ಹಿಡಿಯಲಾರದ ಬಸ್ಸು (ಕಥಾ ಸಂಕಲನಗಳು), ಕನಸು ಕಟ್ಟುವ ಕಾಲ, ಶನಿವಾರ ಸಂತೆ, ಅರ್ಥಾರ್ಥ,  ಕಥನ ಕುತೂಹಲ (ಪ್ರಬಂಧ ಸಂಕಲನಗಳು) ಜೊತೆ ಇನ್ನೂ ಹಲವು ಕೃತಿಗಳು ಪ್ರಕಟವಾಗಿವೆ. \ No newline at end of file diff --git a/Kenda Sampige/article_421.txt b/Kenda Sampige/article_421.txt new file mode 100644 index 0000000000000000000000000000000000000000..a33c0a9251b79af2804a993b46cfc06f0aec0e88 --- /dev/null +++ b/Kenda Sampige/article_421.txt @@ -0,0 +1,119 @@ + + +“ಅಮ್ಮಾ ನಮ್ಮನೆಗೆ ಯಾರೂ ಬರಲ್ವಲ್ಲ ಯಾಕೆ?” ಎಂದು ಕೇಳಿದ ಹತ್ತು ವರ್ಷದ ಸಾಯಿ. + +ಅವನ ತಾಯಿ ತಟ್ಟೆಯಲ್ಲಿ ಅನ್ನ ಬಡಿಸುತ್ತಿದ್ದಳು. ಆಕೆ ಅವನ ಮಾತುಗಳನ್ನು ಕೇಳಿಸಿಕೊಂಡಂತಿಲ್ಲ. ಮತ್ತೊಮ್ಮೆ ಜೋರು ದನಿಯಲ್ಲಿ ಕೇಳಿದ ಸಾಯಿ. “ಸುಮ್ನೆ ಮಾತಾಡ್ಡೆ ತಿನ್ನು” ಎನ್ನುತ್ತಾ ಅವನ ಹಣೆಯ ಮೇಲೆ ಕೈಹಾಕಿ ನೋಡಿದಳು. ಜಾಸ್ತಿ ಜ್ವರ ಇದ್ದಂತೆ ಕಾಣಲಿಲ್ಲ. ಉಪ್ಪು ಬೆರೆಸಿ ಅನ್ನವನ್ನು ಮೆತ್ತಗೆ ಹಿಸುಕಿ ಒಂದಿಷ್ಟು ನೀರುಹಾಕಿ ಕಲೆಸಿದಳು. ಸಾಯಿ ತಟ್ಟೆಯನ್ನು ಬೇಡವೆಂದು ತಳ್ಳುತ್ತಾ ‘ನಮ್ಮ ಕ್ಲಾಸಿನಲ್ಲಿ…’ ಎಂದು ಏನನ್ನೋ ಹೇಳಲು ಶುರುಮಾಡಿದ.ಅವನ ಮಾತುಗಳನ್ನು ತುಂಡರಿಸುತ್ತಾ “ಜ್ವರ ಎಳಿತಿದೆ.. ತಿನ್ನೋ” ಎಂದಳು ತುತ್ತನ್ನು ಬಾಯಿಗಿಡುತ್ತಾ. + +ಅದನ್ನು ಒಂದೇ ಗುಕ್ಕಿನಲ್ಲಿ ನುಂಗಿ “ನಿನ್ನೆ ನರೇಶನನ್ನೂ ಕೇಳ್ದೆ ಅಮ್ಮ. ನಮ್ಮನೆಗೆ ಹೋಗೋಣ ಎಂದು. ಅವರಮ್ಮ ಬೇಡ ಅಂದ್ಲಂತೆ. ಸ್ಕೂಲಲ್ಲೋ ಅವರ ಮನೆಯಲ್ಲೋ ಆಡಿಕೊಳ್ರಿ ಅಂದ್ಲು. ಯಾವಾಗಲೂ ನಾನೇ ಹೋಗಬೇಕು. ಅವ್ರು ನಮ್ಮನೆಗೆ ಬರಲ್ಲ” ಎಂದ. + +“ಬರ್ತಾರೆ ಬಿಡೋ.. ತಿನ್ನು ನನಗೆ ತುಂಬಾ ಕೆಲಸ ಇದೆ” ಎಂದು ತುತ್ತನ್ನು ಬಾಯಿಯೊಳಕ್ಕೆ ತುರುಕ ತೊಡಗಿದಳು. ತಿಂದನಂತರ ತಟ್ಟೆಯನ್ನು ಎತ್ತಿ ಕುಡಿಯುತ್ತಿದ್ದವನು ಸ್ವಲ್ಪ ಹೊತ್ತು ನಿಲ್ಲಿಸಿದ. ಅವರಮ್ಮ ಸಿಡುಕಿನಿಂದ “ಮತ್ತೇ ಏನೋ ನಿಂದು” ಎಂದಳು. + +“ಸೈಕಲ್ ಕೊಡಿಸ್ತೀನಿ ಅಂದಿದ್ರು ಅಪ್ಪ” ಎಂದ. + +‘ಸ್ವಲ್ಪ ಮೈ ಬಿಸಿ ಆಗಿಬಿಟ್ರೆ ಎಷ್ಟು ಬಸುರಿ ಬಯಕೆಗಳು ಕಣೋ ನಿನ್ನವು!” ಎಂದಳು ಆಕೆ ನಗುತ್ತಾ.“ನಿಜವಾಗ್ಲೂನೇ ರೊಕ್ಕ ಬಂದತಕ್ಷಣ ಕೊಡಿಸ್ತಾನಂತೆ. ಹೊಸ ಸೈಕಲ್.. ಸೆಕೆಂಡ್ಹ್ಯಾಂಡ್ ಅಲ್ಲ” ಎಂದ ಖುಷಿಯಿಂದ. + +“ನಿಮ್ಮ ಮುತ್ತಾತ ಮೇಲಿಂದ ಮೂಟೆ ಉರುಳ್ತಿಸಿದಾನೆ. ಕೊಡಿಸ್ತಾನೆ ಬಿಡು” ಎಂದು ಅವನ ಕೈಯಲ್ಲಿಂದ ತಟ್ಟೆಯನ್ನು ತೆಗೆದುಕೊಂಡು ಮುಸುರೆ ತೆಗೆದಳು.“ದೇವರಿಗೆ ಕೈಮುಗಿದೆ. ಬೆಳಿಗ್ಗೆ ಕನಸು ಕೂಡಾ ಬಂದಿತ್ತು” ಎಂದು ಕಣ್ಣು ಹಾರಿಸುತ್ತಾ, ಆಕೆ “ಏನ್ ತಂದೆ ಮಕ್ಕಳ್ರಪ್ಪ ನೀವು. ನಿನ್ನ ಸೈಕಲ್ ಗೆ, ಆತನ ಕುಡಿತಕ್ಕೆ.. ಮಂದಿ ಹೆಣಗಳೇ ಬೇಕಾ? ದೇವರು ಕೇಳ್ತಾನಾ ಇಂಥ ಬಯಕೆಗಳನ್ನು!” ಎಂದು ತಟ್ಟೆಯನ್ನು ಎತ್ತಿಕೊಂಡು ಬಾಗಿಲ ಹೊರಗೆ ಹೆಜ್ಜೆ ಹಾಕಿದಳು. + +ಆ ಹುಡುಗನಿಗೆ ಏನು ಮಾತನಾಡಬೇಕೋ ತೋಚಲಿಲ್ಲ. ಬಾಗಿಲ ಕಡೆ ನೋಡುತ್ತಾ ನೀರು ಕುಡಿದ. ಪಕ್ಕದಲ್ಲಿದ್ದ ದಿಂಬನ್ನು, ಕೌದಿಯನ್ನು ತೆಗೆದು ನೆಲದ ಮೇಲೆ ಹಾಸಿದ. ಅವನು ಹಾಗೆ ಅಡ್ಡ ಆಗುತ್ತಿದ್ದಂತೆ ಅವನ ತಾಯಿ ತಟ್ಟೆ ತೊಳೆದು ಒಳಗೆ ಬಂದಳು. + +ಔಷಧದ ಬಾಟಲಿ ತೆಗೆದು ನೋಡಿದಳು. ಬಾಟಲಿಯಲ್ಲಿ ತಳ ಕಾಣುತ್ತಿತ್ತು. ಲೋಟದೊಳಗಿನ ನೀರನ್ನು ಸ್ವಲ್ಪ ಬಾಟಲಿಯಲ್ಲಿ ಹಾಕಿ ಚೆನ್ನಾಗಿ ಕಲೆಸಿ, ಮಗನನ್ನು ಎಬ್ಬಿಸಿ ಔಷಧಿ ಕುಡಿಸಿದಳು. “ಮಲಕ್ಕೋ ಬ್ಯಾಡ ಮಗಾ. ಜ್ವರ ಜಾಸ್ತಿ ಆಗುತ್ತದೆ’ ಎಂದಳು ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಸಾಯಿ ದಿಂಬನ್ನೂ ಅವಚಿಕೊಂಡ. + +ಎಷ್ಟು ಎಬ್ಬಿಸಿದರೂ ಅವನಲ್ಲಿ ಪ್ರತಿಕ್ರಿಯೆ ಕಾಣದೇ, ಫ್ಯಾನಿನ ವೇಗವನ್ನು ಕಡಿಮೆ ಮಾಡಿ ಆಕೆ ಹೊರನಡೆದಳು. + +ಅವನು ಹಾಗೆ ಎಷ್ಟು ಹೊತ್ತು ಮಲಗಿದ್ದನೋ ನೆನಪಿಲ್ಲ. ಹೊರಗೆ ಅಳುವ ಸದ್ದಿಗೆ, ಕೂಗಾಟಗಳಿಗೆ ಎಚ್ಚರವಾಯಿತು. ಬಾಗಿಲಬಳಿ ಕೂತ ಅವನ ತಾಯಿ ಶೆಡ್ ಕಡೆ ನೋಡುತ್ತಿರುವುದು ಕಣ್ಣಿಗೆ ಬಿತ್ತು. + +“ಏನಾಯ್ತಮ್ಮ” ಎಂದು ಕೇಳಿದ + +“ಎದ್ದೆಯಾ.. ಏಳು.. ದೇವರು ಕೇಳಿಸಿಕೊಂಡಿದಾನೆ ಮಗಾ ನಿನ್ನ ಮಾತನ್ನ. ಯಾರೋ ದುಡ್ಡಿದ್ದೋರೇ ಉಸಿರುಬಿಟ್ಟಿದ್ದಾರೆ. ಏಳು ನಿನಗೆ ಹೊಸ ಸೈಕಲ್.. ನಿಮ್ಮಪ್ಪನಿಗೊಂದು ಬಾಟಲಿ..” ಎಂದಳು ವ್ಯಂಗ್ಯವಾಗಿ.ಈ ಮಾತಿಗೆ ಅವನ ಅಮಲೆಲ್ಲಾ ಇಳಿದುಯೋಯ್ತು. ತಲೆಸುತ್ತಿ ಬಂದು ಜೋಲಿ ಹೊಡೆದಂಗಾಯಿತು. + +ನೀರು ಕುಡಿದು ನಿಧಾನವಾಗಿ ಹೊರಗೆ ಬಂದು ಅಮ್ಮನ ಪಕ್ಕದಲ್ಲಿ ಕೂತು ಅಪ್ಪನಿಗಾಗಿ ಹುಡುಕಿದ. ಶೆಡ್ಡಿನೊಳಗೆ ಕಟ್ಟಿಗೆಗಳನ್ನು ಚಿತೆಯ ಮೇಲೆ ಒಡ್ಡುತ್ತಿದ್ದ ಅವನ ತಂದೆ ಪಕ್ಕದಲ್ಲಿ ಸತ್ತವ್ಯಕ್ತಿಗೆ ಸಂಬಂಧಿಸಿದ ವ್ಯಕ್ತಿಗಳು, ಶಾಸ್ತ್ರಿಗಳು ನಿಂತಿದ್ದರು. ಕೆಂಪಗೆ ಉರಿ ಚಾಚುತ್ತಿತ್ತು. ಉರಿಯನ್ನು ನೋಡಿ ನಗುತ್ತಾ ಅಮ್ಮನ ಮಡಿಲಲ್ಲಿ ವಾಲಿದ ಅವನ ತಲೆಯಲ್ಲಿ ಬೆರಳಾಡಿಸತೊಡಗಿದಳು. ಅವರಿಬ್ಬರ ಪಕ್ಕದಲ್ಲಿ ಗರ್ಭಿಣಿ ಹೆಂಗಸೊಬ್ಬಳು ಬಂದು ಕುಳಿತುಕೊಂಡಳು. ಪಕ್ಕದ ಮನೆಯಲ್ಲಿ ವಾಸವಾಗಿರುವ ಸುಡುಗಾಡು ಕಾಯುವವನ ಹೆಂಡತಿ ಆಕೆ. + +ಕಟ್ಟೆಯ ಪಕ್ಕದಲ್ಲಿರುವ ಕೈಪಂಪಿನ ಹತ್ತಿರ ಹೆಂಗಸರು ಗಂಡಸರು ತಲೆಸ್ನಾನ ಮಾಡುತ್ತಿದ್ದರು. ಅಮ್ಮನ ಮಡಿಲಲ್ಲಿ ತಲೆ ಇಟ್ಟು ಅವರೆಲ್ಲರನ್ನೂ ನೋಡುತ್ತಿದ್ದ ಸಾಯಿ. ಅವನಿಗೊಂದು ಅನುಮಾನ ಬಂತು. ‘ಅಮ್ಮಾ ಇವರಿಗೆ ಮಕ್ಕಳು ಇರಲ್ವ? ಮಕ್ಕಳು ಯಾಕೆ ಬರಲ್ಲ? ಎಂದು ಕೇಳಿದ. + +ಆಕೆ ಏನೂ ಮಾತನಾಡಲಿಲ್ಲ. ಅವನ ತಲೆ ನೇವರಿಸುತ್ತಿದ್ದಳು. ಅವನು ಆಕೆಯ ಕೈಯನ್ನು ತಳ್ಳಿದ, ಅವನಿಗೆ ಏನು ಹೇಳಬೇಕೆಂದು ತೋಚದೆ. ‘ಮಲಗಬೇಡ ಏಳು. ಗಂಜಿ ಕಾಯಿಸಿಕೊಂಡು ಬರ್ತೀನಿ’ ಎಂದು ಆಕೆ ಅವನನ್ನು ಎಬ್ಬಿಸಿ ಕೋಣೆಯೊಳಕ್ಕೆ ಹೋದಳು. + +ತಾಯಿ ಅತ್ತ ಹೋಗುತ್ತಿದ್ದಂತೆ ಅವನಿಗೆ ಏನೋ ಹೊಳೆದಂತಾಯಿತು. ಓಡುತ್ತಾ ಗೇಟಿನ ಹೊರಗೆ ಹೋದ. ಗೋಡೆಗೆ ಒರಗಿಕೊಂಡು ಕಾರುಗಳೂ, ಬೈಕು ಪಾರ್ಕ್ ಮಾಡಿದ್ದರು. ಕಾರುಗಳನ್ನು ಲೆಕ್ಕಹಾಕಿದ. ಒಟ್ಟು ಹನ್ನೊಂದು ಇದ್ದವು. ಅವನ ಮನಸ್ಸು ಗಾಳಿಪಟವಾಯಿತು. ಓಡುತ್ತಾ ಒಳಗೆ ಬಂದು ಬಾಗಿಲ ಬಳಿ ನಿಂತು ‘ಅಮ್ಮಾ ಹನ್ನೊಂದು ಕಾರುಗಳಿವೆ’ ಎಂದು ಕೂಗಿದ. + +“ಅಬ್ಬಾ ತಂದೆ ಮಕ್ಕಳಿಬ್ಬರೂ ಒಂದೇ.. ಥೂ” ಎಂದು ಅಂದುಕೊಂಡಳು.“ಸಾವಿರ ರೂಪಾಯಿಗಳಾದರೂ ಕೊಡ್ತಾರೇನಮ್ಮ” ಎಂದ. + +“ಬಾಯಿ ಮುಚ್ಚು.. ಅವರಿಗೆ ಕೇಳಿಸುತ್ತದೆ” ಎಂಬಂತೆ ಬಾಯಿಗೆ ಕೈ ಅಡ್ಡ ಇಟ್ಟು ಹೊರಗೆ ಜನರ ಕಡೆ ನೋಡುತ್ತಾ ಸನ್ನೆ ಮಾಡಿದಳು ಆಕೆ. ಅವನು ‘ಸರಿ’ ಎಂಬಂತೆ ತಲೆಯಾಡಿಸಿ, ಹೆಣಸುಡುತ್ತಿರುವ ಶೆಡ್ಡಿನ ಎದುರಿಗೆ ಇರುವ ಸಿಮೇಂಟಿನ ಕಟ್ಟೆಯ ಮೇಲೆ ಕುಳಿತುಕೊಂಡ. ಹತ್ತು ನಿಮಿಷಕ್ಕೆ ಮರಣಿಸಿದ ವ್ಯಕ್ತಿಗೆ ಸಂಬಂಧಿಸಿದ ಇಬ್ಬರು ಹೆಂಗಸರು ಏದುಸಿರು ಬಿಡುತ್ತಾ, ಸುದ್ದಿ ಮಾತಾನಾಡುತ್ತಾ ಬಂದು ಅವನಿಂದ ಸ್ವಲ್ಪ ದೂರದಲ್ಲಿ ಕುಳಿತರು. + +ಚಿತೆಯ ಮೇಲೆ ಹೆಣ ಸ್ವಲ್ಪ ಮೇಲೆದ್ದಿತು. ದೊಡ್ಡ ದೊಣ್ಣೆಯಿಂದ ಅದನ್ನು ಹಿಂದಕ್ಕೆ ತಿವಿಯುತ್ತಿದ್ದ ಸಾಯಿಯ ತಂದೆ. ಆ ದೃಶ್ಯ ನೋಡುತ್ತಿದ್ದಂತೆ ಗಾಬರಿಯಿಂದ ಅಮ್ಮನ ಬಳಿ ಓಡಿದ ಸಾಯಿ. ಎದ್ದು ಓಡುತ್ತಿದ್ದವನನ್ನು ಹಿಡಿದು ಮಡಿಲಲ್ಲಿ ಕೂಡಿಸಿಕೊಂಡು ಬೆನ್ನು ತಟ್ಟತೊಡಗಿದಳು. + +ಸಿಮೆಂಟು ಬೆಂಚಿನ ಮೇಲೆ ಕೂತಿದ್ದ ಇಬ್ಬರು ಹೆಂಗಸರಲ್ಲಿ ಸ್ವಲ್ಪ ಸ್ಫುರದ್ರೂಪಿಯಾಗಿ ಇದ್ದವಳು ಸಾಯಿಯನ್ನು ಕರೆದಳು. ಆಕೆಯ ಕಣ್ಣುಗಳು ಕೆಂಪಗೆ ಉಬ್ಬಿಕೊಂಡಿದ್ದವು. ‘ಪಾಪ ತುಂಬಾ ಅತ್ತಿರಬೇಕೆಂದುಕೊಂಡು ಆಕೆಯ ಬಳಿ ಹೋದ ಸಾಯಿ. + +“ಮಗಾ.. ಆ ಬೋರ್ ಪಂಪಿನ ಹತ್ರ ನನ್ನ ಚಪ್ಪಲಿಗಳನ್ನು ಬಿಟ್ಟಿದ್ದೀನಿ ಚೂರು ತಂದು ಕೊಡು ಪ್ಲೀಸ್” ಎಂದು ಕೇಳಿದಳು. ಅವನು ಓಡಿ ಹೋಗಿ ಅಲ್ಲಿದ್ದ ಚಪ್ಪಲಿಗಳನ್ನು ಕೈಯಿಂದ ಹಿಡಿದು ಆಕೆಗೆ ತೋರಿಸಿದ ‘ಅವೇ ಚಪ್ಪಲಿ’ ಎಂದು ಆಕೆ ತಲೆಯಾಡಿಸಿದಳು. ಅವುಗಳನ್ನು ತೆಗೆದುಕೊಂಡು ಓಡಿಬಂದು ಆಕೆಗೆ ಕೊಟ್ಟ. + +ಅವುಗಳನ್ನು ನೋಡುತ್ತಾ ‘ಥ್ಯಾಂಕ್ಸ್ ಕಣಪ್ಪಾ.. ನಿನ್ ಹೆಸ್ರು ಏನು?’ ಎಂದು ಕೇಳಿದಳು ಆ ಹೆಂಗಸು. ಅವನು ‘ಸಾಯಿ’ ಎಂದು ಉತ್ತರಿಸಿ, ಅವರಿಂದ ಸ್ವಲ್ಪ ದೂರದಲ್ಲಿ ಕೂತು ಅಪ್ಪನನ್ನೇ ನೋಡತೊಡಗಿದ. + +ಚಪ್ಪಲಿಗಳನ್ನು ತರಿಸಿಕೊಂಡ ಹೆಂಗಸು, ಪಕ್ಕದವಳನ್ನು ನೋಡುತ್ತಾ “ನೋಡಿದ್ರಾ ಜಿಂಕೆಯಂತೆ ಓಡಿ ತಂದುಕೊಟ್ಟ. ನಮ್ಮ ಹುಡುಗ್ರು ಇದ್ದಾರೆ ಯಾವಾಗ ನೋಡಿದರೂ ಸುಸ್ತು ಅಂತ ಜೋತು ಬೀಳ್ತಿರ್ತಾರೆ” ಎಂದಳು. + +“ನಾವೇನು ತಿನಿಸ್ತೀವಿ ಕಣ್ರಿ. ನಾಜೂಕು ತಿಂಡಿ. ಇವರೆಲ್ಲಾ ಜವಾರಿ ಊಟಮಾಡ್ತಾರೆ. ಮಧ್ಯಮ ವರ್ಗ ಅಂತ ಹೇಳೀವಿ ಆಗಲೀ ನಾವು ಅತ್ತಕಡೆ ಇತ್ತಕಡೆ ಇಲ್ಲದಂಗೆ ಆಗ್ತಾ ಇದ್ದೀವಿ.. ನಿಜಹೇಳಬೇಕೆಂದರೆ ನಮ್ಮ ಮಕ್ಕಳಿಗೆ ರಾತ್ರಿ ಹೊತ್ನಲ್ಲಿ ಬಾತ್ ರೂಮಿಗೆ ಹೋಗಬೇಕೆಂದರೂ ಹೆದರಿಕೊಳ್ತಾರೆ. ಇವನನ್ನು ನೋಡಿ ಸ್ಮಶಾಣದಲ್ಲಿ ಒಬ್ನೇ ಎಷ್ಟು ಆರಾಮಾಗಿ ಆಟ ಆಡಿಕೊಳ್ತಿದಾನೆ? ಹೆಣ ಸುಡೋದನ್ನು ಕಣ್ಣು ಮಿಟುಕಿಸದಂತೆ ಹೆಂಗೆ ನೋಡ್ತಿದಾನೋ ನೋಡ್ರಿ” ಎಂದಳು ಸಣ್ಣದೊಂದು ಭಾಷಣ ಬಿಗಿಯುತ್ತಿರುವವಳಂತೆ.ಆ ಮಾತುಗಳಿಗೆ ಸಾಯಿ ತಲೆ ತಿರುಗಿಸಿ ನೋಡಿದ. + +ಆ ಹೆಂಗಸು ಅವನನ್ನು ಉದ್ದೇಶಿಸಿ “ಏನು ಮಗಾ.. ಭಯ ಆಗಲ್ವಾ?” ಎಂದು ಕೇಳಿದಳು.ಅವನು ಮಾತನಾಡಲಿಲ್ಲ. + +ಕಾರ್ಯಕ್ರಮ ಪೂರ್ತಿಯಾದಂತಿದೆ. ಚಿತೆಬಳಿ ನಿಂತವರೆಲ್ಲರೂ ಸ್ನಾನ ಮುಗಿಸಿ ಹೊರಡತೊಡಗಿದರು. ಸಾಯಿಯ ತಂದೆ ಏದುಸಿರು ಬಿಡುತ್ತಾ ಅವರ ಬಳಿ ಬಂದ. + +ಹಳ್ಳಿಗಳಲ್ಲಾದರೆ ಸ್ಮಶಾನ ಕಾಯುವವರಿಗೆ ಅಕ್ಕಿ, ತರಕಾರಿ ಹೊಸಬಟ್ಟೆ ಕೊಡುತ್ತಾರೆ. ಸಿಟಿಯಲ್ಲಾದರೆ ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ‘ನೀವೇ ಕೊಂಡುಕೊಳ್ಳಿ’ ಎಂದು ಕೈಯಲ್ಲಿ ಒಂದಿಷ್ಟು ಹಣ ಇಡುತ್ತಾರೆ. ಆ ಹಣಕ್ಕಾಗಿಯೇ ಸಾಯಿ ತಂದೆ ಅವರ ಬಳಿ ಬಂದಿದ್ದು. + + + +ಸತ್ತವರ ಪೈಕಿಯ ದೊಡ್ಡ ಮನುಷ್ಯರೊಬ್ಬರು ಸಾಯಿಯ ತಂದೆ ಕೈಯಲ್ಲಿ ಹಣ ಕೊಟ್ಟರು. ಅವನು ಹಣಪಡೆಯಲು ನಿರಾಕರಿಸುತ್ತಿದ್ದಾನೆ ಅವರು ಏನೋ ಹೇಳುತ್ತಿದ್ದರು. + +ಆ ದೃಶ್ಯವನ್ನು ನೋಡುತ್ತಿದ್ದಂತೆಯೇ ಸಾಯಿಗೆ ಅರ್ಥವಾಯಿತು. ಇನ್ನೂ ತನ್ನ ಸೈಕಲ್ ಕೇವಲ ಕನಸೆಂದು. ಅವನು ನಿರಾಶೆಯಿಂದ ಒಂದು ಮೂಲೆಗೆ ಹೋಗಿ ಕುಳಿತುಕೊಂಡ. + +ಅವನನ್ನು ಉದ್ದೆಶಿಸಿ ಆ ಹೆಂಗಸರಲ್ಲಿ ಒಬ್ಬ ಹೆಣ್ಣುಮಗಳು ಹೊರಡುತ್ತಾ “ಯಾವತ್ತಾದರೂ ದೆವ್ವಗಳನ್ನು ನೋಡಿದ್ದೇನೋ?” ಎಂದು ಕೇಳಿದಳು.ಅಪ್ಪನನ್ನೇ ನೋಡುತ್ತಿದ್ದ ಆತ ‘ಹಾಂ’ ಎಂದ ಪರಧ್ಯಾನದಿಂದ + +ಅವರು ನಗುತ್ತಾ ಉಳಿದವರೊಂದಿಗೆ ಹೊರಟುಹೋದರು.* * *ಕತ್ತಲಾಯಿತು ಹೆಣ ಇನ್ನೂ ಪೂರ್ತಿಯಾಗಿ ಸುಟ್ಟಿರಲಿಲ್ಲ. ಅಪ್ಪ ಸರಾಯಿ ಕುಡಿಯುತ್ತಾ ಹೆಣದ ಮೇಲೆ ಮತ್ತಷ್ಟು ಸೀಮೆ ಎಣ್ಣೆಯನ್ನು ಸುರಿದ. ಒಂದಿಷ್ಟು ಸೌದೆ ತುರುಕಿ ಇನ್ನೊಂದು ಕಟ್ಟಿಗೆಯಿಂದ ಒಳನೂಕತೊಡಗಿದ. + +ಬಾಗಿಲ ಬಳಿ ಕುಳಿತು ಅಪ್ಪನನ್ನೇ ನೋಡುತ್ತಿದ್ದ ಸಾಯಿ. ಅವನ ತಾಯಿಗೆ ಮಗನನ್ನು ನೋಡುತ್ತಲೇ ದಿಗಿಲಾಯಿತು. “ಏಳು ಕಣೋ ನಿಮ್ಮಪ್ಪನಿಗೆ ನೂರು ಕೊಟ್ಟರೂ ಕುಡಿತಕ್ಕೇ.. ಸಾವಿರ ಕೊಟ್ಟರೂ ಕುಡಿತಕ್ಕೆ.. ಆಯ್ತು ಎದ್ದು ಮಲಗೋಗು..” ಎಂದಳು. + +ಅವನೇನು ಮಾತನಾಡಲಿಲ್ಲ. ತಾಯಿಗೆ ಅನುಮಾನ ಬಂದು ಅವನ ಹಣ್ಣೆಯ ಮೇಲೆ ಕೈಹಾಕಿ ನೋಡಿದಳು ಮೈ ಸುಡುತ್ತಿತ್ತು. “ಏಳು ಮಗಾ.. ಮಲಗು ಒಂಬತ್ತಾಗ್ತಾ ಇದೆ..” ಎಂದಳು. + +ಅವನು ಮರು ಮಾತನಾಡದೇ ಎದ್ದು ಚಿತೆ ಕಡೆ ನಡೆದ. ಆಕೆ ಮಗನನ್ನು ನೋಡುತ್ತಾ ಅಲ್ಲಿಯೇ ಕುಸಿದಳು.ಚಿತೆ ಪಕ್ಕದಲ್ಲಿ ದಂಡೆಯ ಮೇಲೆ ಕುಳಿತಿದ್ದ ಅಪ್ಪನ ಪಕ್ಕಕ್ಕೆ ಹೋಗಿ ಕುಳಿತುಕೊಂಡ ಸಾಯಿ. + +“ಏನಲೇ ಜ್ವರ ಕಡಿಮೆ ಆಗ್ಲಿಲ್ವಾ? ಈ ಬಿಸಿ ಹತ್ರ ಯಾಕೆ ಬಂದೆ? ಹೋಗಿ ಮಲಕ್ಕೋ?” ಎಂದ + +ಅವನು ಸ್ವಲ್ಪ ಸರಿದು ಅಪ್ಪನ ಮಡಿಲಲ್ಲಿ ತಲೆಯಿಟ್ಟು ಮಲಗಿದ. ಒಂದು ಕೈಯಿಂದ ಸರಾಯಿ ಕುಡಿಯುತ್ತಾ ಮತ್ತೊಂದು ಕೈಯಿಂದ ಮಗನನ್ನು ನೇವರಿಸಿದ.“ಅಪ್ಪ ನೀನು ಯಾಕೆ ಕುಡಿತಿಯಾ?” ಎಂದ + +ಅವನಿಗೆ ಸಿಟ್ಟುಬಂತು ಮದ್ಯದ ಬಾಟಲಿಯನ್ನು ಪಕ್ಕಕ್ಕಿಟ್ಟು, ಮಗನ ಭುಜವನ್ನು ಹಿಡಿದು ಎಬ್ಬಿಸಿ “ನಿಮ್ಮಮ್ಮ ಕಳಿಸಿದ್ಲಾ ಈ ರೀತಿ ಕೇಳೆಂದು. ಆಕೆಯನ್ನು ಈ ಹೆಣದ ಪಕ್ಕದಲ್ಲಿ ಜಾಗರಣೆ ಮಾಡಲು ಹೇಳು. ಎಣ್ಣೆ ಹೊಡಿದೇ” ಎಂದ ಸಿಟ್ಟಿನಿಂದ. + +ಸಾಯಿಗೆ ಅಪ್ಪನನ್ನು ನೋಡಿ ಭಯವಾಯಿತು. ಮೊದಲೇ ಫುಲ್ ಕುಡಿದಿದ್ದ, ಪಕ್ಕದಲ್ಲಿನ ಉರಿವ ಚಿತೆಯ ಬೆಳಕಿನಲ್ಲಿ ಅವನ ಕಣ್ಣುಗಳು ಇನ್ನೂ ಕೆಂಪಗೆ ಹೊಳೆದಂತಾಯಿತು ಅವನಿಗೆ. + +ಜ್ವರದಲ್ಲಿದ್ದ. ಇನ್ನೂ ಹೆದರಬಹುದೇನೋ ಎಂದು ಮಾತು ಬದಲಿಸಿದ ಅಪ್ಪ “ಎಷ್ಟು ಪಾಪಗಳನ್ನು ಮಾಡಿದಾನಪ್ಪ ಇವನು ಇಷ್ಟು ಚಿಮಣಿ ಎಣ್ಣೆ ಸುರಿದರೂ, ಕಟ್ಟಿಗೆ ಹಾಕಿದ್ರೂ ಸುಡ್ತಿಲ್ಲ..” ಎಂದು ಎದ್ದು ಮತ್ತಷ್ಟು ಕಟ್ಟಿಗೆ ಹಾಕಿದ. + +“ಹತ್ತು ಕೆ.ಜಿ ತುಪ್ಪಸುರಿದಿರ್ತಾರೆ ಇದರಲ್ಲಿ. ಐನೂರು ಕೊಡೋದಕ್ಕೆ ಅಳ್ತಾರೆ. ಸಂಬಳ ಕೊಡಲ್ವಾ? ಅಂತ ಕೊಂಕು ಬೇರೆ.. ಹೋಗ್ ಹೋಗಿ ಒಳಗೆ ಮಲಕ್ಕೋ.. ಸುಡ್ತಿರೋ ಹೆಣದ ಕಮಟು ಡೇಂಜರ್ರು.. ನಾತ ಕುಡೀಬಾರ್ದು.. ಕಾಯಿಲೆಬರ್ತವೆ. ಜ್ವರಬೇರೆ ಬಂದಿದೆ ಹೋಗು..” ಎಂದು ಮತ್ತೇ ಸ್ವಲ್ಪ ಚಿಮಣಿಎಣ್ಣೆ ಸುರುವಿದ. + +ಸಾಯಿ ಅಲ್ಲಾಡಲಿಲ್ಲ. ಅಪ್ಪ ಕುಳಿತುಕೊಳ್ಳುತ್ತಿದ್ದಂತೆಯೇ ಅಪ್ಪನ ಮಡಿಲಲ್ಲಿ ಮಲಗಿದ.“ಹತ್ತು ಕೆ.ಜಿ ತುಪ್ಪ ಬೆಲೆ ಎಷ್ಟು ಅಪ್ಪ?” ಎಂದು ಕೇಳಿದ + +“ಗೊತ್ತಿಲ್ಲ ಮಗಾ. ಆದರೂ ದುಬಾರಿ. ದಿವಸಕ್ಕೆ ಇವ್ರು ಮನೆಮುಂದೆ ಓಣಿಗೊಂದು ಫ್ಲೆಕ್ಸ್ ಕಟ್ತಾರೆ. ಕತ್ತಲಾಗುತ್ತಿದ್ದಂತೆ ಎರಡು ಫ್ಲೆಕ್ಸಿನ್ನಾದರೂ ಎಳ್ಕೊಂಬರ್ಬೇಕು. ಕೌದಿ ಹರಿದು ಹೋಗಿದೆ.. ಮನಿಕ್ಯಳಿಕೆ ಹಾಸ್ಕೋಬೋದು.. ಇಲ್ದಿದ್ರೆ ಯಾವನೋ ಒಬ್ಬ ತಗಂಡು ಹೋಗ್ತಾನೆ” ಎಂದ.“ಒಂದೊಂದು ಫ್ಲಕ್ಸ್ ಎಷ್ಟಿರಬಹುದು ಅಪ್ಪಾ?” ಎಂದು ಕೇಳಿದ ಸಾಯಿ. + +ಅಪ್ಪನಿಗೆ ಸಿಟ್ಟು ನೆತ್ತಿಗೇರಿತು “ನಿನಗೆ ಏನಾದರೊಂದು ಮಾಡಿ ಸೈಕಲ್ ಕೊಡಿಸ್ತೀನಿ ಮಗಾ. ಇಷ್ಟೋತ್ತಿನಿಂದ ಅದೆಷ್ಟು ಇದೆಷ್ಟು ಅಂತಾ ಕೇಳ್ತಾನೇ ಇದ್ದೀಯಾ. ಎಷ್ಟಾದರೆ ನಮಗೇನು? ಎಂಜಲು ಕೈಯಿಂದ ನಮ್ಮ ಕಡೆ ಕೈ ಬೀಸಲ್ಲ” ಎಂದ . + +ಎಂಜಲ ಕೈ ಅನ್ನುತ್ತಿದ್ದಂತೆ ಅವನಿಗೆ ಚಪ್ಪಲಿ ತರಿಸಿಕೊಂಡ ಹೆಂಗಸಿನ ಮಾತುಗಳು ನೆನಪಿಗೆ ಬಂದವು.“ಅವ್ರು ನಮ್ಮಷ್ಟು ಜವಾರಿ ಊಟಮಾಡಲ್ವಂತಲ್ಲ..?” ಎಂದ + +ಅವನೇನೂ ಮಾತಾಡಲಿಲ್ಲ. “ಲೋ ಜ್ವರದಲ್ಲಿ ಇದೇನೋ ಜಾಗರಣೆ ನಿಂದು. ಹೆಣ ಸುಡ್ತಿರೋ ವಾಸನೆ ಒಳ್ಳೆದಲ್ಲ ಮಗಾ.. ಹೋಗು ಹೋಗು ಒಂದು ತಿಂಗಳದಾಗೆ ನಿನಗೆ ಸೈಕಲ್ ಕೊಡಿಸ್ತೇನೆ” ಎಂದ ಅಕ್ಕರೆಯಿಂದ. + +ಅಪ್ಪನ ಮಡಿಲಿನಿಂದ ಚಾಚಿ ಎದೆ ಮೇಲೆ ತಲೆಇಟ್ಟು ಅವಚಿಕೊಂಡು ಮಡಿಲಲ್ಲಿ ಕುಳಿತುಕೊಂಡ ಸಾಯಿ.“ಮಕ್ಕಳು ಯಾಕೆ ಬರಲ್ಲ ಅಪ್ಪ ಇಲ್ಲಿಗೆ.. ಹೊರಗಿನ ಮಕ್ಕಳು..” ಎಂದು ಕೇಳಿದ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಮಗನ ಪ್ರಶ್ನೆಗೆ ಅವನ ಕಣ್ಣುಗಳೆಲ್ಲ ನೀರು ಉಬುಕಿ ಬಂದವು. ಕಣ್ಣೀರನ್ನು ಹತ್ತಿಕ್ಕಲು ಅವನಿಗೆ ಸಾಧ್ಯವಾಗಲಿಲ್ಲ. ಒಂದು ಕ್ಷಣ ತಡೆದು “ಈ ಬಿಸಿಗೆ ನನ್ನ ಕಣ್ಣುಗಳು ಉರಿಯಾತ್ತವೆ. ಗಾಳಿ ಆಡ್ತಿಲ್ಲ. ಜ್ವರದಲ್ಲಿದಿಯಾ ನೀನು ಹೋಗಯ್ಯ ನನ್ನ ಮಾತು ಕೇಳು. ಮನೆಯೊಳಕ್ಕೆ ಹೋಗಿ ಮಲಗು..” ಎಂದ ಕಣ್ಣೊರೆಸಿಕೊಳ್ಳುತ್ತಾ. + +ಅಪ್ಪನ ಮಾತುಗಳಿಗೆ ತಲೆ ಕೆಡಿಸಿಕೊಳ್ಳದೇ “ಇಲ್ಲಿ ದೆವ್ವಗಳಿರುತ್ತವೆಯಾ” ಎಂದು ಕೇಳಿದ ಸಾಯಿ. + +“ನಾನು ನಿನ್ನ ವಯಸ್ಸು ಬಂದಾಗಿನಿಂದ ನೋಡ್ತಿದ್ದೇನೆ ಮಗಾ. ಅಂಥಾವೇನಿಲ್ಲ ಇಲ್ಲಿ. ಇದ್ದರೆ ಗಿದ್ದರೆ ಊರಲ್ಲಿರುತ್ತವೆ.. ಇಲ್ಲಿ ಶಿವ ಇರ್ತಾನೆ ಮಗಾ..” ಎಂದ ಜೋರಾಗಿ ನಗುತ್ತಾ. + +ಅಪ್ಪನಿಗೆ ಅಷ್ಟೊಂದು ನಗು ಏಕೆ ಬಂದಿದೆಯೋ ಸಾಯಿಗೆ ಅರ್ಥವಾಗಲಿಲ್ಲ. “ಮತ್ತ್ಯಾಕೆ.. ನನ್ನ ಕ್ಲಾಸಿನ ಗೆಳೆಯರು ನಮ್ಮ ಮನೆಗೆ ಬರಲ್ಲ” ಎಂದು ಕೇಳಿದ. ಅವನು ಏನೂ ಮಾತಾಡಲಿಲ್ಲ. ಮೌನವಾಗಿ ಚಿತೆಯನ್ನು ನೋಡುತ್ತಾ ಕುಳಿತುಕೊಂಡ. ಸಾಯಿ ಅವನ ಗದ್ದವನ್ನು ಹಿಡಿಕೊಂಡು ‘ಏನೂ ಮಾತಾಡ್ತಿಲ್ಲ’ ಎಂಬಂತೆ ನೋಡಿದ.“ತಂದೆ ಒಂದು ಹೇಳ್ಲಾ. ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಕಷ್ಟ ಯಾವ್ದು ಗೊತ್ತ?” ಎಂದು ಉತ್ತರಕ್ಕಾಗಿ ನೋಡದೇ ಅವನೇ ಮುಂದುವರೆಸಿದ. “ನನ್ನಂಥವನ ಹೊಟ್ಟೆಯಲ್ಲಿ ಯಾಕಾದರೂ ಹುಟ್ಟಿದ್ನೋ? ಎಂದು ಅಂದುಕೊಳ್ಳುವುದು” ಎಂದು ಸಾಯಿಯನ್ನು ಮಡಿಲಿನಿಂದ ತೆಗೆದು ಪಕ್ಕದಲ್ಲಿ ಕೂಡಿಸಿಕೊಂಡ. ಹೆಣದ ಸುತ್ತಲೂ ಕಟ್ಟಿಗೆ ಇಟ್ಟು ಸೌದೆ ಇಟ್ಟು ಅವುಗಳ ಮೇಲೆ ಸೀಮೆಎಣ್ಣೆ ಸುರುವಿದ. ಜ್ವಾಲೆಗಳು ಭುಗಿಲೆದ್ದವು ಉರಿ ಮೇಲೆದ್ದಿತು. ಖಾಲಿಯಾದ ಸರಾಯಿ ಬಾಟಲಿಯನ್ನು ಬೆಂಕಿಗೆಸೆದ. ಫಟ್ ಎಂದು ಅದು ಒಡೆದ ಸದ್ದು ಕೇಳಿಸಿತು. + + + +ನಂತರ ಸಾಯಿಯನ್ನು ಎತ್ತಿಕೊಂಡು “ಇನ್ನೂ ಮೇಲೆ ಈ ಕಮಟು ವಾಸನೆ.. ನಮಗೆಬೇಡ. ನಡಿ ಮಲಗೋಣ ಬಾ. ಬರ್ತಾರೆ ಮಗಾ ನಮ್ಮನೆಗೆ ಬರ್ತಾರೆ ನಿಂಜೊತೆ ಆಟ ಆಡ್ತಾರೆ” ಎಂದು ಹೊಸ್ತಿ ಮೇಲೆ ಕುಳಿತು ತಮ್ಮಿಬ್ಬರನ್ನು ನೋಡುತ್ತಿದ್ದ ಹೆಂಡತಿಯ ಬಳಿ ಹೆಜ್ಜೆ ಹಾಕಿದ.ಆ ಹೆಣದೊಂದಿಗೆ ಕತ್ತಲು ಕೂಡಾ ಸುಡತೊಡಗಿತು. + +**** + + + +ವಿಜಯವಾಡ ಮೂಲದ ಚೈತನ್ಯ ಪಿಂಗಳಿ 2016ರ ಕೇಂದ್ರ ಸಾಹಿತ್ಯ ಯುವ ಪುರಸ್ಕಾರ ಪಡೆದ ಯುವ ಬರಹಗಾರ್ತಿ. ರಾಷ್ಟ್ರಧ್ವಜ ರೂಪಿಸಿದ ಮತ್ತು ಸ್ವತಂತ್ರ ಸಮರಯೋಧ ಪಿಂಗಳಿ ವೆಂಕಯ್ಯನವರ ಮರಿ ಮೊಮ್ಮಗಳು. ತೆಲಂಗಾಣ ಸೊಗಡಿನಿಂದ ಯಶಸ್ವೀ ಸಿನೆಮಾ ‘ಫಿದಾ’ ಗೆ ಇವರು ಬರೆದಿದ್ದಾರೆ. ಸದ್ಯ ಹೈದರಾಬಾದಿನಲ್ಲಿ ವಾಸ. + +ಕಲಾವಿದ ಮತ್ತು ಅನುವಾದಕ. ಓದಿದ್ದು ಸಂಡೂರು ಹಾಗು ಬಳ್ಳಾರಿ . ವೃತ್ತಿಯಿಂದ ಸಿವಿಲ್ ಇಂಜಿನೀಯರ್ .ರಾಮ್ ಗೋಪಾಲ್ ವರ್ಮ ‘ ನನ್ನಿಷ್ಟ’ ಮೊದಲ ಅನುವಾದ. ‘ಪಚ್ಚೆ ರಂಗೋಲಿ’ ಮೊದಲ ಅನುವಾದ ಕಥೆ.ಸದ್ಯ ಅನುವಾದ ಮತ್ತು ಪೈಂಟಿಂಗ್ಸ್ ಗಳಲ್ಲಿ ಬ್ಯುಸಿ . \ No newline at end of file diff --git a/Kenda Sampige/article_422.txt b/Kenda Sampige/article_422.txt new file mode 100644 index 0000000000000000000000000000000000000000..961e857f81dd4c525f478d709cf9d3cb37aa1fd4 --- /dev/null +++ b/Kenda Sampige/article_422.txt @@ -0,0 +1,111 @@ + + +ನಮ್ಮೂರಿಗೆ ಮುನ್ಸಿಫ್ ಕೋರ್ಟು ಮರಳಿ ಬಂದಿತು! ………….ಎಂದರೆ, ನಮ್ಮೂರಲ್ಲಿ ಇದ್ದ ಮುನ್ಸಿಫ್ ಕೋರ್ಟನ್ನು ಇಪ್ಪತ್ತು ವರ್ಷಗಳ ಹಿಂದೆ, ಹದಿನೆಂಟು ಮೈಲು ದೂರದ ಮತ್ತೊಂದೂರಿಗೆ ಒಯ್ದಿದ್ದರು. ಅಂದಿನಿಂದ ಇಂದಿನವರೆಗೂ, ಪೇಟೆಯಲ್ಲಿ ವ್ಯಾಪಾರವೂ, ಜನರಲ್ಲಿ ಉತ್ಸಾಹವೂ, ಮುಖದಲ್ಲಿ ಗಾಂಭೀರ್ಯವೂ ಕುಂದುತ್ತ ಬಂದು, ಅಂದಿನಿಂದಾದ ಎರಡು ಖಾನೆಸುಮಾರಿಗಳಲ್ಲಿ ಜನಸಂಖ್ಯೆ ಕಡಿಮೆಯಾಗಿಯೇ ಏರಿದಂತೆ ತೋರಿಬಂದಿದ್ದಿತು. ಮುನ್ಸಿಫ್ ಕೋರ್ಟು ವರ್ಗವಾದ ಕೂಡಲೇ, ಹಲವು ಮನೆಗಳೂ ಖಾಲಿಯಾದುವು; ವಕೀಲರು ಆ ಮತ್ತೊಂದೂರ ವಕೀಲರಿಗೆ ಏಜಂಟರೇ ಮಾತ್ರವಾದರು; ವಕೀಲ ಗುಮಾಸ್ತರೂ ಬಂಡಸಾಲೆಗಳಲ್ಲಿ ಗುಮಾಸ್ತರಾದರು; ಕಕ್ಷಿಗಾರರಿಗೆ ಕೋರ್ಟು ಸಮಯಕ್ಕೆ ಸರಿಯಾಗಿ ಅನ್ನ ಹಾಕುತ್ತಿದ್ದ, ಮತ್ತು ಉಳಿದ ಸಮಯದಲ್ಲೆಲ್ಲ ಕಕ್ಷಿಗಾರರಿಗೆ ನಿರಾತಂಕವಾದ ರಂಗಸ್ಥಳವಾಗಿದ್ದ, ಕೆಲವು ಹೊಟೇಲುಗಳು ಮಾಯವಾದುವು; ಅತ್ತಿತ್ತ ಓಡಾಡುವ ಬಿಟ್ಟೀ ಆಳುಗಳು ಊರು ಬಿಟ್ಟರು; ದೇವಸ್ಥಾನಕ್ಕೆ ಲಭಿಸುತ್ತಿದ್ದ ಕಾಣಿಕೆ, ಪೂಜೋತ್ಸವ ಕಾಲಗಳಲ್ಲಿ ನೆರೆಯುತ್ತಿದ್ದ ಜನಸಮೂಹ, ಎರಡೂ ಕುಂದಿದುದರಿಂದ ಊರ ಸಿರಿಯೇ ಮ್ಲಾನವಾಯಿತು. ಇಪ್ಪತ್ತು ವರ್ಷಗಳವರೆಗೆ ಇಂತಹದೊಂದು ಕ್ಷಯ ರೋಗದಿಂದ ನರಳುತಿದ್ದ ನಮ್ಮೂರಿಗೆ, ಆಕಸ್ಮಿಕವಾಗಿ ಗುಣ ತೋರುವಂತಹ ಸಂಘಟನೆಯೊಂದು ನಡೆಯಿತು. ಆ ಸಂಘಟನೆಯಿಂದಾಗಿ ಮುನ್ಸಿಫ್ ಕೋರ್ಟು ನಮ್ಮೂರಿಗೆ ಮರಳಿ ಬಂತು. + +ಅವೇ ಇಪ್ಪತ್ತು ವರ್ಷಗಳಲ್ಲಿ ನಮ್ಮೂರಿನವರಿಗೂ ಮತ್ತೊಂದೂರಿನವರಿಗೂ ಬಹಳ ಸ್ಪರ್ಧೆ ಸೆಣಸಾಟಗಳು, ಚಿಕ್ಕ ದೊಡ್ಡ ಪಿತೂರಿಗಳು, ವರ್ಷಕ್ಕೊಮ್ಮೆ ಊರೆಲ್ಲ ಸುಟ್ಟುಹೋಗುವ ಅಭ್ಯಾಸವು ನಮ್ಮೂರಿಗಿದ್ದಿತು. ಇದರಿಂದಾಗಿ ಕೋರ್ಟು ಮತ್ತೊಂದೂರಿಗೆ ವರ್ಗವಾದುದೆಂದು ಅಲ್ಲಿನವರು ಹೇಳುತ್ತ, ನಮ್ಮೂರನ್ನು ‘ಸುಟ್ಟೂರು’ ಎಂದು ನಾಮಕರಣ ಮಾಡಿದರು. ಮತ್ತೊಂದೂರಲ್ಲಿ ದೇವಳದ ಅರ್ಚಕರಿಗೂ ಮೊಕ್ತೇಸರರಿಗೂ ಪ್ರತಿ ವರ್ಷವೂ ಕಾಳಗವಿದ್ದುದರಿಂದ ಊರವರ ವಾಗ್ವಾದದಿಂದ ದೇವರನ್ನು ಸಂರಕ್ಷಿಸುವುದಕ್ಕಾಗಿ ತಮ್ಮ ಕೋರ್ಟು ಅತ್ತ ವರ್ಗವಾಗಿದ್ದಿತೆಂದು ನಮ್ಮೂರವರು ಹೇಳುತ್ತ, ಇತ್ತಂಡದವರು ಹಣವನ್ನು ದೇವಸ್ಥಾನದ ಭಂಡಾರದಿಂದ ಖರ್ಚು ಮಾಡುತ್ತಿದ್ದ ಕಾರಣ ದೇವರು ದಿವಾಳಿಯಾಗುತ್ತ ಬರುತ್ತಿರಲು ಮತ್ತೊಂದೂರಿಗೆ ‘ಕೆಟ್ಟೂರು’ ಎಂದು ನಮ್ಮೂರವರು ಹೆಸರಿಟ್ಟರು. ಸುಟ್ಟೂರು, ಕೆಟ್ಟೂರು ಇವೆರಡು ಊರುಗಳಲ್ಲಿನ ಮನೆತನಗಳು ಎಷ್ಟೋ ನೆಂಟಸ್ತಿಕೆಯುಳ್ಳವಾಗಿದ್ದವು; ಈಗ ಸೊಸೆ ತವರೂರಿಗೆ ಹೋಗವುದಕ್ಕಿಲ್ಲ, ಅಳಿಯನಿಗೆ ಮಾವನ ಮನೆಯ ಉಪಚಾರಗಳಿಲ್ಲ ಎಂಬಂತಾಯಿತು. ಮತ್ತೊಂದೂರಿನ ಅಕ್ಕಿ ನಮ್ಮೂರಲ್ಲೇ ಬಹಳವಾಗಿ ಮಾರಾಟವಾಗುತ್ತಿತ್ತು; ಈಗ ನಮ್ಮೂರವರು, ಅಲ್ಲಿನ ಅಕ್ಕಿಯನ್ನು ಬಹಳ ಉಷ್ಣವೆಂದು, ಅದು ನಾಲ್ವತ್ತೆಂಟು ಸೇರಿನ ಮುಡಿಯಾಗಿದ್ದರೂ ಅದನ್ನು ಕನಿಷ್ಠ ಬೆಲೆಗೆ ಕೇಳಿ ಅದು ಮಾರಾಟವಾಗದಂತೆ ನೋಡಿಕೊಂಡರು. ನಮ್ಮೂರಿನ ಮುಖ್ಯ ಕೈಗಾರಿಕೆಯಾದ ಹಪ್ಪಳ ಸಾಟುಗಳನ್ನು (ಅವನ್ನು ತಯಾರಿಸುವಾಗ ಅವುಗಳಲ್ಲಿ ಬೆವರು, ಉಗುಳು ಇತ್ಯಾದಿಗಳು ಬೆರೆತರೂ ತಿಳಿಯದಷ್ಟು ಅಜಾಗರೂಕ ಮೂರ್ಖರು ನಮ್ಮೂರವರೆಂದು) ಮತ್ತೊಂದೂರಿನವರು ಬಹಿಷ್ಕರಿಸಿದರು. ಇಂತಹ ಹಲವು ಪೀಕಲಾಟಗಳು ಎರಡೂ ಊರುಗಳಲ್ಲಿದ್ದುವು. ಆದರೂ ಅದೊಂದು ವಿಚಿತ್ರ ಘಟನೆಯಿಂದ ನಮ್ಮೂರಿಗೆ ಮುನ್ಸಿಫ್ ಕೋರ್ಟು ಮರಳಿ ಬಂದಿತು. + +ನಮ್ಮೂರ ದೇವಸ್ಥಾನದ ಸುತ್ತಲಿನ ಜೋಯಿಸರೊಬ್ಬರ ಮನೆಯೊಳಗೆ ಹತ್ತಿರದ ಸೌತೆ ಬೆಳೆವ ಹಿತ್ತಲಿನಿಂದ ಒಂದು ರಾತ್ರಿ ನರಿಗಳು ನುಗ್ಗಿರಲು, ಅವು ಮತ್ತೊಂದೂರಿನ ನರಿಗಳೆಂದಾಯಿತು. ಮತ್ತೊಂದೂರಿನಲ್ಲಿ ಕೆಲವು ದನಗಳಿಗೆ ಹುಚ್ಚು ನಾಯಿಯೊಂದು ಕಚ್ಚಲು, ಆ ನಾಯಿ ನಮ್ಮೂರದೆಂದು ಅಲ್ಲಿನವರ ದೂರ. ಮೇಷ ಮಾಸದಲ್ಲಿ ನಮ್ಮೂರಲ್ಲಿ ಆಣೆಕಲ್ಲ ಮಳೆ ಒಂದು ವರ್ಷ ಸುರಿಯಲು, ಮತ್ತೊಂದೂರಿನವರು ಮಾಡಿದ ಮಾಟದ ಫಲವಿದು ಎಂದು ಇಲ್ಲಿನವರ ಆಕ್ಷೇಪ; ಪ್ರತಿವರ್ಷ ಊರೆಲ್ಲ ಸುಡುವವರು ಸ್ವಲ್ಪ ನೀರನ್ನು ಕೂಡಿಸಿಡಲೆಂದು ತಾವು ಈ ಆಣೆಕಲ್ಲ ಮಳೆ ಕಳುಹಿದ್ದುದು ನಿಜವೆಂದು ಮತ್ತೊಂದೂರವರ ಸಮಾಧಾನ. ಇವೆರಡು ಊರುಗಳ ಎಲ್ಲೆಯಲ್ಲಿ ಹುಲಿಯ ಹಾವಳಿ, ಸರ್ಪಗಳ ಕಾಟ, ಸನ್ನಿಪಾತ ಸಿಡುಬುಗಳ ವ್ಯಾಪನ ಇದ್ದಲ್ಲಿ ಒಂದೂರಿನವರು ಮತ್ತೊಬ್ಬರನ್ನು ಅದರ ಮೂಲ ಕಾರಣರೆಂದು ಇಪ್ಪತ್ತು ವರ್ಷವೂ ಶಪಿಸದೇ ಇರಲಿಲ್ಲ. ಆದರೂ, ನಮ್ಮೂರಿಗೆ ಕೊನೆಗೆ ಹೇಗೋ ಮುನ್ಸಿಫ್ ಕೋರ್ಟು ಮರಳಿ ಬಂದಿತು. + +ಅದು ಹೇಗೆ ಬಂದಿತು? + +ಮತ್ತೊಂದೂರಿನ ಕೋರ್ಟ್ ಇನ್ಸ್ಪೆಕ್ಷನಿಗಾಗಿ ಜಿಲ್ಲಾ ಜಡ್ಜರವರು ಬಂದಿದ್ದು, ವಿಮರ್ಶೆ ಮುಗಿಸಿ ಹೊರಡುವಾಗ, ಅವರ ಬಟ್ಲರನು, “ಖಾವಂದರೇ! ಹೇಗೂ ಮಂಗ್ಳೂರಿಗೆ ಹಿಂತಿರುಗಬೇಕು; ಅತಿ ಪುರಾತನ ದೇವಸ್ಥಾನಗಳೂ ವಿವಿಧ ಸೃಷ್ಟಿ ವೈಚಿತ್ರ್ಯಗಳೂ ಇದ್ದು, ಇಂಗ್ಲೆಂಡಿನ ಒಂದು ತುಂಡೇ ಎಂಬಂತೆ, ಹಿಂದಣ ದೊರೆಗಳಲ್ಲಿ ಹಲವರು ಕಂಡುಕೊಂಡಾಡಿದ ನಮ್ಮೂರ ಮಾರ್ಗವಾಗಿ ಹಿಂದೆರಳೋಣವೇ? ದೂರವೂ ಒಂದೇ, ಸಮಯವೂ ಒಂದೇ; ಸ್ವಲ್ಪ ಅಡ್ಡಾಡಿದ ಹಾಗಾಯಿತು. ಅಲ್ಲಿಯೇನೂ ಕೋರ್ಟು ಇಲ್ಲ. ಇಷ್ಟು ದಿನ ಕೋರ್ಟಿನಿಂದ ಕೋರ್ಟಿಗೆ ಸಂದರ್ಶನ ಮಾಡಿ ಬಳಲಿರುವುದಕ್ಕೆ ಪ್ರತ್ಯಕ್ಷ ಇಂಗ್ಲೆಂಡನ್ನು ನೋಡಿದಂತಹ ಸಂತೋಷ ಸಂತೃಪ್ತಿಗಳು ಖಾವಂದರಿಗಾಗುವುವು ಎಂದು ಹೇಳಿಕೊಂಡನು. ದೊರೆಗಳೂ ಕುತೂಹಲಚಿತ್ತರಾಗಿ ಆಗಬಹುದೆಂದು, ಶನಿವಾರ ಸಂಜೆ ಅಲ್ಲಿಂದ ಹೊರಟು ರವಿವಾರ ಬೆಳಿಗ್ಗೆ ನಮ್ಮೂರಿಗೆ ದಯಮಾಡಿಸಿದರು. ದೊರೆಗಳ ಬಂಗಲೆಯಿರುವಲ್ಲಿ ನಮ್ಮೂರ ದೇವಸ್ಥಾನದ ಕಾರ್ತಿಕ ಹುಣ್ಣಿಮೆಯ ಮಹೋತ್ಸವಗಳ ಸಂಭ್ರಮವೆಲ್ಲ ನಡೆಯುತಿದ್ದಿತು. ಬಟ್ಲರನು ನಮ್ಮೂರವನೇ. ಅವನು ದೇವಸ್ಥಾನದ ಮೊಕ್ತೇಸರರಿಗೆ ದೊರೆಗಳು ಜಿಲ್ಲಾ ಜಡ್ಜರೆಂಬುದನ್ನು ತಿಳಿಸಿ, ಅವರನ್ನು ಹೇಗೂ ಮಾಡಿ ನಮ್ಮೂರವರು ಒಲಿಸಿಕೊಳ್ಳಬೇಕೆಂದನು. ಇಪ್ಪತ್ತು ವರ್ಷದಿಂದ ಕಾಯುತ್ತಿದ್ದವರಿಗೆ ‘ಅತ್ಯಪೂರ್ವ ಸಂದರ್ಭ’ವೊಂದು ಈಗ ದೊರೆಯಿತು. ಪೂಜಾ ವಿಗ್ರಹಕ್ಕೆ ಸಲ್ಲತಕ್ಕ ವೈಭವಾಡಂಬರಗಳಿಂದ ದೊರೆಗಳನ್ನು ಬಹುಮಾನಿಸಿ ಎದುರುಗಾಣಿಸಿಕೊಂಡು, ‘ವನಭೋಜನ’ದಲ್ಲಿ ದೇವರಿಗೆ ಅಭಿಷೇಕವಾಗುವಲ್ಲಿಗೆ ಕರೆದೊಯ್ದು, ಶತಮಾನಗಳಿಂದಲೂ ತೊಡಿಸಿಲ್ಲದಷ್ಟು ಆಭರಣಗಳನ್ನು ಪೂಜಾವಿಗ್ರಹಕ್ಕೆ ತೊಡಿಸಿ ದರ್ಶನದ ಪಾತ್ರಿಯಿಂದ, ‘‘ದೊರೆಗಳು ಖಂಡಿತವಾಗಿಯೂ ಸದ್ಯದಲ್ಲಿಯೇ ಹಾಯ್ ಕೋರ್ಟ್ ಜಡ್ಜರಾಗುವರು” ಎಂಬ ಮಾತನ್ನು ನುಡಿಸಿ, ಪ್ರಸಾದಗಳನ್ನು ದೊರೆಗಳಿಗೊಪ್ಪಿಸಿ, ಊರ ಜನರ ಭಕ್ತಿಶಕ್ತಿಗಳೆರಡನ್ನೂ ದೊರೆಗಳಿಗೆ ತಿಳಿದುಬರುವಂತೆ ಸಲ್ಲಿಸಿದರು. ಬಟ್ಲರನಂತೂ ಅಂದು ಜಡ್ಜ್ ದೇವತೆಯ ಉಪಾಸನೆಯನ್ನು ಊರವರು ಒಪ್ಪಿಸಿದ್ದ ಷೋಡಶೋಪಚಾರಗಳ ಮೂಲಕ ನೆರವೇರಿಸಿದನು. ಜಡ್ಜರು ಪ್ರಸನ್ನವದನರಾಗಿ, ಇಲ್ಲಿಂದ ಕೋರ್ಟುನ್ನು ಮತ್ತೊಂದೂರಿನ ಶ್ಮಶಾನಕ್ಕೆ ಒಯ್ದದ್ದು ಸರಿಯಾಗಲಿಲ್ಲ; ಇಲ್ಲಿದ್ದರೆ ಊರ ಹೊರಗಾಗಿ, ಯಾವ ಗಲಭೆಯೂ ಇಲ್ಲದೆ, ಎತ್ತರ ಬೆಟ್ಟಗಳು, ದೂರದ ಕಾಡುಗಳು, ಅಲ್ಲಲ್ಲಿ ಕಾಣುವ ಕೆರೆಗಳು, ಇತಿಹಾಸ ಪ್ರಸಿದ್ಧ ಕಟ್ಟಡಗಳು, ಮೊದಲಾದುವುಗಳ ನಿರ್ಬಾಧಕವಾದ ವಾತಾವರಣದಲ್ಲಿ ಆ ಸಂಪನ್ನ ಜನತೆಗೆ ನ್ಯಾಯವು ಸುಲಭವಾಗಿ ದೊರೆಯುವಂತಾದೀತು ಎಂದು ಮೇಲಣ ಆಫೀಸರರಿಗೆ ವರದಿ ಬರೆಯುತ್ತ ಮತ್ತೊಂದೂರು ಕೋರ್ಟಿನ ವಿಮರ್ಶೆಯನ್ನು ಈ ಶಿಫಾರಸಿಗೆ ಅನುಕೂಲವಾಗುವಂತೆ ಮಾಡಿದರು. + +ಮೂರ್ಛಿತವಾದ ದೇಹದಲ್ಲಿ ಪುನಃ ಚೇತನವು ಸಂಚಾರ ಹೊಂದಿದಂತೆ ನಮ್ಮೂರು ಲವಲವಿಸಿ ತವಕದಿಂದ, ಸುಪ್ರಸನ್ನತೆಯಿಂದ, ಮೆರೆಯಿತು. ಹೋದ ಶ್ವಾಸವೆಲ್ಲ ಮರಳಿ ತುಂಬತೊಡಗಿತು. ವಕೀಲರು ಹೊಸ ಅಂಗಿಗಳನ್ನು ಹೊಲಿಸಿದರು. ಗುಮಾಸ್ತರು ಅಂಗಡಿ ಚಾವಡಿಗಳಿಂದ ವಕೀಲ ಚಾವಡಿಗಳಿಗೆ ಬಂದರು. ಮತ್ತೊಂದೂರಿನಿಂದ ಎಷ್ಟೋ ನೌಕರರು ಇತ್ತ ಬಂದು ಇಲ್ಲಿನ ಬಿಡಾರಗಳಾವುವೂ ಮುಚ್ಚಿರದಂತೆ ನೋಡಿದರು. ಪ್ರತಿ ಶನಿವಾರವೂ ಸಂತೆಗೆ ಪ್ರಾರಂಭವಾಯಿತು. ದೇವಸ್ಥಾನದ ನಗಾರಿಯ ಧ್ವನಿಯು ನಾಲ್ಕು ಮಡಿ ಹೆಚ್ಚಿತು. ದರ್ಶನಪಾತ್ರಿಯ ಗೌರವವು ಹೆಚ್ಚಿ ಅವನ ಬಾಯಿಯಿಂದ ಕನ್ನಡ ಮಾತು ಹೊರಡತೊಡಗಿ, ಮನೆಗೊಬ್ಬರಂತೆ ತಿರುಪತಿಗೆ ಯಾತ್ರಿಕರಾಗಿ ಹೊರಡುವಂತಾಯಿತು. ನಮ್ಮೂರಲ್ಲಿ ಮೊದಲೇ ಎರಡು ವಿದ್ಯಾಶಾಲೆಗಳು, ರಿಜಿಸ್ತ್ರಿ ಆಫೀಸು, ಲೋಕಲ್ ಫಂಡಿನ ಆಫೀಸು, ಫೋರೆಸ್ಟ್ ರೇಂಜರರ ಆಫೀಸು, ಸಬ್ ಮೆಜಿಸ್ಟ್ರೇಟರ ಕಚೇರಿ, ಲೋಕಲ್ ಫಂಡಿನ ಆಸ್ಪತ್ರೆ, ಇಷ್ಟೆಲ್ಲ ಇದ್ದಿತು. ಈಗ ಮುನ್ಸಿಫ್ ಕೋರ್ಟು ಮರಳಿ ಬಂದಿತು. ಇವೆಲ್ಲ ಸೇರಿ ನಮ್ಮೂರು ಬಹಳ ಹೆಮ್ಮೆಯ ಊರೆಂದಾಯಿತು! ಮತ್ತೊಂದೂರಿನ ಪ್ರಸ್ತಾವವನ್ನೇ ಅಂತರಂಗದಲ್ಲಾಗಲಿ, ಬಹಿರಂಗವಾಗಿಯಾಗಲಿ ಯಾರೂ ಎತ್ತುತಿರಲಿಲ್ಲ. + +ಆವೂರಿಗೂ ನಮ್ಮೂರಿಗೂ ಮೂರು ಗಾವುದ ಹಾದಿ. ಆ ಕಾಲದ ರಸ್ತೆಗಳಲ್ಲಿ ಅಡ್ಡಾಡಿದವರಿಗೇ ಆ ಹಾದಿಯ ಸುಖ ಗೊತ್ತು. ಅದರಲ್ಲೂ ಬೇಸಿಗೆಯ ಬೇಗೆಯಲ್ಲಿ ಬೇರೆ; ಮಳೆಗಾಲದ ಇರುಳಲ್ಲಿ ಕೆಸರುಗದ್ದೆಯಂತೆ ತೋರುವಾಗ ಬೇರೆ. ಇಂತಹ ಮಾರ್ಗದಲ್ಲಿ ಎರಡೆತ್ತಿನ ಗಾಡಿ ಹತ್ತಿ ರಾತ್ರಿ ಸವಾರಿ ಮಾಡಲಿದ್ದರೆ, ಅದರಲ್ಲೂ ಜತೆಯಲ್ಲಿ ನವವಧು, ಬಳಿಯಲ್ಲಿ ಭಾವ, ರಾತ್ರಿಯಲ್ಲಿ ಹುಣ್ಣಿಮೆಯ ಬೆಳ್ದಿಂಗಳು ಇರುವಾಗ, ನೂರು ಸೂಡಿ ಬೈಹುಲ್ಲಿನ ಹಾಸಿಗೆಯ ಮೇಲೆ ಚೊಕ್ಕವಾಗಿ ಬಿಡಿಸಿದ ಕೇದಗೆಗರಿಯ ಚಾಪೆಯ ಮೇಲಿನ ಆಸನಶಯನಗಳ ವೈಭವ, ಒಂದು ಸಲ ಇಳಿಜಾರು ದೊರೆತೊಡನೆ ಬಂಡಿಯಾಳು ಗಾಡಿ ನಿಲ್ಲಿಸಿ, ಅದರಡಿಯಲ್ಲಿ ಒಂದು ಹಗ್ಗಕ್ಕೆ ಸಿಕ್ಕಿಸಿದ ತುಂಡುಕೋಲನ್ನು ತಿರುಪಿ ಚಕ್ರಗಳಿಗೊಂದು ಮರದ ತುಂಡು ಒತ್ತುವಂತೆ ಮಾಡುವ ವಿಧಾನದಿಂದ ಪುನಃ ಎತ್ತುಗಾಡಿಯೆಳೆದೊಡನೆ ಸವಾರಿಮಾಡುವವರ ದೇಹದಲ್ಲೆಲ್ಲ ಒಂದು ಬಗೆಯ ವಿದ್ಯುತ್ತು ಹರಿದಂತಾಗುವ ರೋಮಾಂಚನಕಾರಿ ಚಮತ್ಕಾರ, ಎತ್ತಿಗೆ ಹುರುಳಿಯಿಡಲು ಅದನ್ನು ಬೇಯಿಸುವ ಖಾಲಿ ಡಬ್ಬಿಗಳು ಗಾಡಿಯ ಕೆಳಗೆ ತೂಗುತ್ತ ಅತ್ತಿತ್ತ ಗೂಟಗಳಿಗೆ ತಗಲಿ ಆಗುವ ಜಾಗಟೆಯ ನಿನಾದಾನಂದ, ನಿದ್ರಿಸಿದಲ್ಲಿ ತೂಕಡಿಸುವ ಹಾಗೆಯೇ ಕಿವಿಯನ್ನು ಇರಿಯುವ ‘ಬೀರಿ’ಯ ಉರುಳಾಟದ ಚೀತ್ಕೃತಿಯ, ಯಾವ ಇಲೆಕ್ಟಿಕ್ ಹೋರ್ನಿಗಿಂತಲೂ ಹೆಚ್ಚಾಗಿ ಆರ್ಭಟಿಸುತ್ತ ಭೂತಗಳನ್ನು ಉಚ್ಚಾಟನೆಗೊಳಿಸಿ, ದಾರಿಯುದ್ದಕ್ಕೂ ಇರುವ ಕಾಡುಗಳಲ್ಲಿನ ಹುಲಿಗಳಲ್ಲಿ ದಿಗಿಲನ್ನು ಹಬ್ಬಿಸುವ ವೈಚಿತ್ರ್ಯ, ಆ ಹೋರ್ನಿನ ಜತೆಗೆ ಸಮತಾನವಾಗಿ ಬಂಡಿಯಾಳಿನ ‘ಓಓ’ ಪಲ್ಲವಿಯ ಆಲಾಪನೆ, ತಾಸಿಗೆ ಮೂರು ಮೈಲುಗಳ ಸರಾಸರಿಯ ನಡಿಗೆಯಿಂದ ಊರಿಂದೂರಿಗೆ ಸೇರುವ ವಿಲಾಸ, ಇದನ್ನೆಲ್ಲ ಬಲ್ಲವರೇ ಬಲ್ಲರು, ಪರಮಾತ್ಮನನ್ನು ಬಲ್ಲವರ ಹಾಗೆ! ಮೆರವಣಿಗೆಯಲ್ಲಿ ಕಾಣುವ ಮದುಮಗನ ಹಾಗೆ ಹಣೆಗೆ ಬಾಸಿಂಗವನ್ನು ಕಟ್ಟಿದಂತೆ ಅಲಂಕಾರಹೊಂದಿ, ಕೊರಳಿಗೆ ಘಂಟಾಮಣಿಗಳ ಸರವನ್ನು ತೊಟ್ಟುಕೊಂಡು, ಗಂಭೀರವಾಗಿ ಸವಾರಿಗಾಡಿಯನ್ನು ಎಳೆವ, ಬೆನ್ನಮೇಲೆ ಮದುಮಗನ ರೇಶ್ಮೆದುಪ್ಪಟದ ಬದಲು ಗೋಣಿಚೀಲವನ್ನು ಹೊದೆದುಕೊಂಡು, ಒಂದು ಕಣ್ಣನ್ನು ಬಂಡಿಯಾಳಿನ ಬಲಗೈಯ ಮೇಲೂ, ಮತ್ತೊಂದನ್ನು ನಡೆವ ಮಾರ್ಗದ ಮೇಲೂ ಇಟ್ಟು, ತಟಪಟವೆಂದು, ಒಡೆಯನ ‘ಓಓ’ ಗಳಿಗೆ ತಾಳ ಹಾಕುತ್ತ ನಡೆವ, ಆ ಬಂಡಿಯೆತ್ತಿನ ಯುಗವೇ ಮಾಯವಾಗಿದೆ. ಮೋಟರಿನಲ್ಲೀಗ ನೂರು ಮೈಲುಗಳನ್ನು ಮೂರು ತಾಸುಗಳಲ್ಲೇ ದಾಟುವಾಗಲಾದರೂ ಅಂದಿನ ಸವಾರಿಗಾಡಿಯ ಪ್ರಯಾಣದ ನೂರು ಮಾರಿನೊಳಗೊದಗುತಿದ್ದ ಸುಖಾನುಭವವು ನಮಗೆ ಈಗ ದೊರೆಯಲಾರದು; ಮೋಟರಿನ ಯುಗ ಮೇಲಾಟದ ಯುಗ, ಬಂಡಿಯ ಯುಗ, ದಂಡಿಗೆಯ ಯುಗ. + +ನಮ್ಮೂರಿಗೆ ಮುನ್ಸಿಫ್ ಕೋರ್ಟು ಮರಳಿ ಬರುತ್ತಲೇ ಹೊಸ ಮುನ್ಸಿಫರು ನೇಮಕಹೊಂದಿ ಬಂದರು. ಬಹು ಲಕ್ಷಣವುಳ್ಳವರು; ಸಾಧು; ದೇವಧರ್ಮ ಪಕ್ಷಪಾತಿಗಳು; ಸತ್ಯವನ್ನು ಶೋಧಿಸುವುದರಲ್ಲಿ ಚಾಣಾಕ್ಷರು; ವಯಸ್ಸು ಮೂವತ್ತೈದು; ಎಂ.ಎಲ್; ಆಗಲೇ ಅದು ಮೊದಲನೇ ಸಲ ಹುದ್ದೆ ಪಡೆದವರೆಂದು ಜತೆಯಲ್ಲಿ ತಮ್ಮ ತೀರ್ಥರೂಪರವರನ್ನು (ಸುಮಾರು ಅರುವತ್ತು ವಯಸ್ಸು) ಮಾತ್ರ ಕರೆದುತಂದಿದ್ದರು. ಹೆಚ್ಚಿನ ಆಡಂಬರದವರಲ್ಲ; ದವಲತ್ತಿನವರಲ್ಲ. ಒಂದು ಸಾಲಿಗ್ರಾಮ, ತಿರುಪತಿ ವೆಂಕಟರಮಣನದೊಂದು ಚಿನ್ನದ ಪ್ರತಿಮೆ, ಅದರ ಅಲಂಕಾರಗಳು, ಪೂಜಾಸಾಮಗ್ರಿಗಳು, ಎರಡು ಸಲಕ್ಕೆ ಬೇಕಾಗುವಷ್ಟು ಉಡುಪು, ಇಬ್ಬರಿಗೆ ಬೇಕಾಗುವಷ್ಟು ಹಾಸು, ಎರಡು ಕೊಡೆಗಳು, ಎರಡು ಊರುಗೋಲುಗಳು ಇಷ್ಟೇ ಅವರ ಸೊತ್ತು. ಮತ್ತೊಂದು ಪೆಟ್ಟಿಗೆಯಲ್ಲಿ ತುಂಬ ಗ್ರಂಥಗಳು; ದಪ್ಪವಾದವು, ಎಂ.ಎಲ್. ಪರೀಕ್ಷೆಗಾಗಿ ಮುನ್ಸಿಫರು ಓದಿದ ಗ್ರಂಥಗಳು; ಇತರ ಗ್ರಂಥಗಳಲ್ಲಿ ತತ್ವಜ್ಞಾನಕ್ಕೂ, ಬ್ರಹ್ಮಜ್ಞಾನ (Theosophy)ಕ್ಕೂ ಸಂಬಂಧಪಟ್ಟ ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯವು. + +ರಾಯರು ಚಿತ್ತೈಸುವರೆಂದು ತಿಳಿಯುತ್ತಲೇ ದೇವಸ್ಥಾನದ ಬಿರುದಾವಳಿಗಳಿಂದ ಹಿಲಾಲು, ದೀವಟಿಗೆ, ಬೆತ್ತ, ಛತ್ರ, ಚಾಮರ, ದಂಡಿಗೆ ಮೊದಲಾದುವುಗಳಿಂದ ದೇವಸ್ಥಾನದ ಹತ್ತು ಸಮಸ್ತರೂ, ಕೋರ್ಟಿನ ನೌಕರರೂ, ವಕೀಲರುಗಳೂ, ಇತರ ಸರಕಾರಿ ಹುದ್ದೇದಾರರೂ ಅವರನ್ನು ಎದುರುಗಾಣಿಸಿಕೊಂಡು, ದೇಗುಲದ ಸೇವೆಯ ವಾದ್ಯಗಾರರ ಸಂಗೀತದೊಡನೆ ಅವರ ನಿಲಯಕ್ಕೆ ಸಂಭ್ರಮವಾಗಿ ತಂದು ತಲಪಿಸಿದರು. ನಮ್ಮೂರ ಜನರಲ್ಲಿ ಎಲ್ಲ ಗಣನೀಯರಾದವರ ಪರಿಚಿತಿ ಮಾಡಿಕೊಂಡ ಬಳಿಕ ರಾಯರು ತಮ್ಮ ನಿತ್ಯದ ದೇವಾರಾಧನೆಗೂ ಪಿತೃದೇವನ ಶುಶ್ರೂಷೆಗೂ ಮನವೊಲಿದರು. ಭೋಜನಾನಂತರದಲ್ಲಿ ಬ್ರಹ್ಮಜ್ಞಾನವನ್ನೋದುತ್ತ ಕುಳಿತರು. + +ನಮ್ಮೂರವರ ಲಕ್ಷಣವೆಂದರೆ, ಒಂದು ಆಣೆಯನ್ನು ಒಂದು ರೂಪಾಯಿಯಷ್ಟು ಸೂಕ್ಷ್ಮವಾಗಿ ವ್ಯಯಿಸುವುದು. ಪ್ರತಿಯೊಂದು ಮರವನ್ನು ಕಲ್ಪವೃಕ್ಷವೆಂದು ಇವರು ಪ್ರತ್ಯಕ್ಷವಾಗಿ ತೋರಿಸಿಕೊಡುವವರು. ಒಂದು ಬಾಳೆಹಣ್ಣಿನಿಂದ ಮೂರು ಬಗೆಯ ರುಚಿಕರವಾದ ಪಲ್ಯ ಮಾಡುವವರು. ಯುಗಾದಿಯ ದಿನ ಮಾತ್ರವಲ್ಲದೆ ಮತ್ತೆಂದೂ ಹೊಸ ಬಟ್ಟೆಬರೆಗಳನ್ನು ಕೊಂಡುಕೊಳ್ಳದವರು. ಇಂತಹವರಲ್ಲಿ, ಈ ದಿವ್ಯ ಸಾಮಾನ್ಯತೆಯುಳ್ಳ ಮುನ್ಸಿಫರು ನೆಲೆಗೊಳ್ಳುವಂತಾದುದು ಅಪೂರ್ವ ಪುಣ್ಯದ ಫಲ. ನ್ಯಾಯಸ್ಥಾನದಲ್ಲಂತೂ ಬಲು ನಮ್ರರಾಗಿ, ಶಾಂತರಾಗಿ, ಮೃದುನುಡಿ ವಿನಯಾದಿಗಳಿಂದ ಕೋರ್ಟಿನಲ್ಲಿ ವ್ಯವಹಾರವಿರುವ ಸಮಸ್ತರನ್ನೂ ಒಲಿಸಿಕೊಂಡರು. ಕೋರ್ಟಿನಲ್ಲಾದರೂ ವ್ಯಾಜ್ಯದಲ್ಲಿ ಅವಗುಣ ಹೊಂದಿದ ಕಕ್ಷಿಗಾರರು ಸಹ ರಾಯರ ನ್ಯಾಯಬುದ್ಧಿಯನ್ನು ಕೊಂಡಾಡುತ್ತಿದ್ದರೇ ವಿನಾ, ಒಂದೇ ಒಂದು ಎದುರುಮಾತು ರಾಯರ ವಿಚಾರದಲ್ಲಿ ಊರಲ್ಲಿ ಕೇಳಿಸುತ್ತಿರಲಿಲ್ಲ. + +ವಿದ್ಯೆಯಲ್ಲಿ ಹೆಚ್ಚಾಗಿ ಬ್ರಾಹ್ಮಣರೇ ಮುಂದರಿದ ಆ ಕಾಲದಲ್ಲಿ ನಮ್ಮೂರ ಸರಕಾರಿ ಆಫೀಸುಗಳಲ್ಲೆಲ್ಲ ಬ್ರಾಹ್ಮಣರೇ ಅಧಿಕಾರಿಗಳಾಗಿಯೂ ನೌಕರರಾಗಿಯೂ ಇದ್ದರು. ರಾಯರು ಕ್ಲಪ್ತವಾಗಿ ಹನ್ನೊಂದು ಘಂಟೆಗೆ ಕೋರ್ಟಿನಲ್ಲಿ ಸಿಂಹಾಸನವನ್ನೇರುವರು. ಐದು ಹೊಡೆದಾಗ ಅಂದಿನ ವಿಚಾರಣೆಯನ್ನು ಅಲ್ಲೇ ಮುಗಿಸಿ, ಕೆಳಗಿಳಿದು ಕೋರ್ಟನ್ನು ಮುಚ್ಚಿಸಿ, ಸ್ವಲ್ಪ ಲಘು ಆಹಾರವನ್ನು ಸ್ವೀಕರಿಸಿ ದೇವಸ್ಥಾನದ ಮಾಳಿಗೆಯೊಂದರಲ್ಲಿ ಆಸೀನರಾಗುವರು. ಅಧಿಕಾರಿ ವರ್ಗದವರೇ ಮೊದಲಾಗಿ, ಅಂಗಡಿಗಾರರು, ಮೊಕ್ತೇಸರರು, ವಕೀಲರು, ಉಪಾಧ್ಯಾಯರು ಇತ್ಯಾದಿ ಎಲ್ಲರೂ ಅತ್ತ ಬರುವರು. ಚಿಕ್ಕದೊಂದು ಸಭೆಯಂತಾಗುವುದು. ರಾಯರು ಅಂದಿನ ವೃತ್ತಾಂತ ಪತ್ರಿಕೆಯಿಂದ ಪ್ರಪಂಚದ ವಿಚಾರಗಳನ್ನು ಸಭಿಕರಿಗೆ ತಿಳಿಸಿ, ಕ್ರಮೇಣ ಥಿಯೊಸೊಫಿಯ (ಬ್ರಹ್ಮಜ್ಞಾನದ) ವಿಚಾರ ಮಾತನಾಡುವರು. ಎಂ.ಎಲ್. ಪಾಸಾದ, ಇಂಗ್ಲಿಷ್ ಬಲ್ಲ ರಾಯರು ಶಾಸ್ತ್ರವನ್ನು ಜ್ಞಾನಕ್ಕೆ ಸರಿಯಾಗಿ ಹೊಂದಿಸಿಕೊಂಡು ವಿವರಿಸುವಾಗ ಸಭಿಕರು ಬಾಯ್ತೆರೆದು ಸೈಯೆನ್ನುವರು. ಅಂತೂ ಅಲ್ಲಿಂದಲೇ ಒಂದು ಬ್ರಹ್ಮಜ್ಞಾನ ಸಂಘದ ಶಾಖೆಯನ್ನು ಸ್ಥಾಪಿಸುವಂತೆ ಸರ್ವಾನುಮೋದಿತವಾದ ಸೂಚನೆ ಹೊರಟಿತು. + +ಕೋರ್ಟು ಕಛೇರಿಗಳಲ್ಲಿ ವ್ಯವಹರಿಸುತ್ತಿದ್ದ ವಕೀಲರೆಲ್ಲರೂ ಮೆಂಬರರಾದರು. ಅಧಿಕಾರಿಗಳಾಗಿದ್ದ ಬ್ರಾಹ್ಮಣರಂತೂ ಮುಂದಾಗಿ ಸಂಘವನ್ನು ಸೇರಿಕೊಂಡರು. ಬಾಂಧವ್ಯದ ಮಾತು ಎಂದ ಬಳಿಕ, ಇತರ ಜಾತಿಗಳವರೂ ಸದಸ್ಯರಾಗಲು ಹಿಂತೆಗೆಯಲಿಲ್ಲ. ದೇವಸ್ಥಾನಕ್ಕೆ ಹೋಗುತ್ತಿದ್ದವರ ಸಂಖ್ಯೆ ಬಹಳವಾಯಿತು. ದೇವಸ್ಥಾನವೂ ವಿನಿಯೋಗಗಳಲ್ಲಿ ಶುದ್ಧವಾಗಲೂ, ಭಕ್ತರಿಗೆ ಆಕರ್ಷಕವಾಗಲೂ ತೊಡಗಿತು. ಊರಲ್ಲಿ ತಿಂಗಳಿಗೆ ಇಪ್ಪತ್ತೈದು ರೂಪಾಯಿ ಉತ್ಪನ್ನ ಅಥವಾ ವೇತನವುಳ್ಳ ಪ್ರತಿಯೊಬ್ಬನೂ ಥಿಯೊಸೊಫಿಸ್ಟನಾದನು. ವಾಮನ ಪಂಡಿತನ ಭಗವದ್ಗೀತೆಯನ್ನು ನಾಲ್ಕು ತಿಂಗಳ ತನಕ ಪ್ರತಿನಿತ್ಯ ಓದಿ ಅರ್ಥಹೇಳಲು ಒಂದು ವ್ಯವಸ್ಥೆಯಾದುದರಿಂದ ಆ ವರ್ಷದಲ್ಲಿ ಮಳೆಗಾಲವು ಹೇಗೆ ಕಳೆಯಿತೆಂದು ಯಾರಿಗೂ ತಿಳಿಯದಂತಾಯಿತು. ಹಿಂದೂ ಧರ್ಮಶಾಸ್ತ್ರದ ಗ್ರಂಥಗಳಲ್ಲಿ ಒಂದೆರಡು, ಅಥವಾ ಎನಿ ಬೆಸೆಂಟರು ಆಗಲೇ ಪ್ರಕಟಿಸಿದ ಭಗವದ್ಗೀತೆಯ ಪುಸ್ತಕದ ಒಂದು ಪ್ರತಿಯು, ಪ್ರತಿಯೊಂದು ಮನೆಯಲ್ಲೂ ಉತ್ತಮ ಸ್ಥಾನವನ್ನು ಅಲಂಕರಿಸಿತು. + +ಜಿಲ್ಲಾ ಜಡ್ಜರು ಈ ಕೋರ್ಟಿನ ಕೆಲಸವನ್ನೆಲ್ಲ ತನಿಖೆ ಮಾಡಿ ಅತ್ಯುತ್ತಮವಾಗಿದೆ ಎಂದು ಹೇಳುತ್ತ, ತಾವು ಟೆನ್ನಿಸ್ ಪ್ರಿಯರಾದುದರಿಂದ ಕೋರ್ಟಿನಲ್ಲಿನ ಪರಿಶ್ರಮದಿಂದ ಮೆದುಳು ದಣಿದವರಿಗೆ ಆಡುವುದಕ್ಕಾಗಿ ಒಂದು ಟೆನ್ನಿಸ್ ಕೋರ್ಟನ್ನೂ ಇಲ್ಲಿ ತೆರೆದರೆ ಉತ್ತಮವೆಂದು ಮುನ್ಸಿಫರಿಗೆ ಸೂಚಿಸಿದರು. + +ಮಾರನೆಯ ದಿನವೇ, ಅತ್ತಿತ್ತ ಚಲಾವಣೆಯಾಗುತ್ತಿದ್ದ ಗಾಡಿಗಳನ್ನೂ ಎತ್ತುಗಳನ್ನೂ ಕೋರ್ಟು ಅಂಗಳದಲ್ಲಿ ರಾತ್ರಿ ವೇಳೆ ಇನ್ನು ಇರಬಾರದಾಗಿ ಅಪ್ಪಣೆ ಕೊಡಿಸಿ ಅಲ್ಲೇ ಟೆನ್ನಿಸ್ ಕೋರ್ಟನ್ನು ನಿರ್ಮಾಣ ಮಾಡಲಾಯಿತು. ಮುನ್ಸಿಫರೂ, ಡಾಕ್ಟರರೂ, ಹೆಡ್ ಮಾಸ್ತರರೂ, ಬಿ.ಎ., ಬಿ.ಎಲ್. ಕಲಿತ ವಕೀಲರೂ, ಕಾಲೇಜು ತರಗತಿಗಳಲ್ಲಿ ಕಲಿತು ರಜಾ ಕಾಲದಲ್ಲಿ ಮನೆಗೆ ಮರಳಿದ್ದ ಹಲವು ವಿದ್ಯಾರ್ಥಿಗಳೂ, ಎಲ್ಲರೂ ಒಂದೊಂದು ಬೇಟನ್ನು ಹಿಡಿದುಕೊಂಡು ಅದೊಂದು ಬಗೆಯ ಟೆನ್ನಿಸ್ ಆಟವನ್ನು ಸಾಯಂಕಾಲ ಆಡುವ ವ್ಯವಸ್ಥೆಯಾಯಿತು. ದೀಪ ಹಚ್ಚುವ ವೇಳೆ, ಸಾಯಂ ಸಂಧ್ಯೆಯ ಹೊತ್ತಿಗೆ, ಎಲ್ಲರೂ ದೇವಸ್ಥಾನಕ್ಕೆ ತೆರಳಿ, ಅಲ್ಲಿ ಬ್ರಹ್ಮಜ್ಞಾನ ಸಂಘದ ಆಶ್ರಯದಲ್ಲಿ ಒಂದು ತಾಸನ್ನಾದರೂ ಕಳೆದು ಮನೆಗೆ ಮರಳುವಂತಾಯಿತು. ಹೀಗೆ ಮುನ್ಸಿಫ್ ಕೋರ್ಟು ಮರಳಿ ಬಂದಂದಿನಿಂದ ದೇಹಾರೋಗ್ಯವೂ ಮಾನಸಿಕ ಆರೋಗ್ಯವೂ ಬೆಳೆಯಲು ಉತ್ತಮವಾದ ಅವಕಾಶವುಂಟಾಯಿತು. + +ಇದೇ ರೀತಿಯಾಗಿ ಒಂದು ಸಂವತ್ಸರವು ಕಳೆಯಿತು. ಇಪ್ಪತ್ತು ವರ್ಷಗಳಲ್ಲಿ ನಮ್ಮೂರು ಅನುಭವಿಸಿದ್ದ ಸಂಕಷ್ಟಗಳೆಲ್ಲವೂ ಇದೊಂದು ಸಂವತ್ಸರದೊಳಗಾಗಿ ಮಾಯವಾಗಿ, ಆ ಸಂಕಷ್ಟಗಳು ಉಂಟಾಗಿಸಿದ್ದ ಗಾಯಗಳೂ ಮಾಯುತ್ತ ಬಂದುವು. ಆದರೆ ಅಷ್ಟರಲ್ಲೇ ರಾಯರಿಗೆ ಯಾವುದೋ ಒಂದು ತೆಲುಗು ಜಿಲ್ಲೆಗೆ ವರ್ಗವಾಯಿತು! ನಮ್ಮೂರು ಅಸಹನೀಯವಾದ ಸಂತಾಪ ತಳೆಯಿತು. ಆದರೆ ಹೊಸ ರಾಯರು ಸಹ ಬ್ರಹ್ಮಜ್ಞಾನಿಗಳು, ಟೆನ್ನಿಸ್ ಪ್ರಿಯರು ಎಂಬುದನ್ನು ತಿಳಿದು ಆ ಸಂತಾಪವು ಕಡಿಮೆಯಾಯಿತು. ಅಂತೂ ಇಬ್ಬರೂ ರಾಯರುಗಳನ್ನು ತಮ್ಮೊಡನೆ ಕುಳ್ಳಿರಿಸಿಕೊಂಡು ಊರ ಮುಖಂಡರು (ಬ್ರಹ್ಮಜ್ಞಾನಿಗಳೇ ಮೊದಲಾಗಿ) ಒಂದು ಫೋಟೋ ಚಿತ್ರವನ್ನೆತ್ತಿಸಿಕೊಂಡರು. ರಾಯರು ವರ್ಗವಾದ ಪರವೂರಿಗೆ ಹೊರಡುವುದೆಂದಾಯಿತು. + +ಇಂದು ಹೊರಡದೆ ಉಪಾಯವಿಲ್ಲ. ರಾಯರು ಬರುವಾಗ ತಂದುದೇನೋ ಅದನ್ನೆಲ್ಲ ಮೂಟೆ ಕಟ್ಟಿದ್ದಾಯಿತು. ಅಮಾವಾಸ್ಯೆಯಾದರೇನು? ಸವಾರಿಗಾಡಿ ಸಿದ್ಧವಾಗಿರುವಾಗ ಊರಿಂದ ಹೊರಡಲು ಹೆದರಬೇಕೆ? ಊರ ಹತ್ತು ಸಮಸ್ತರು, ಬ್ರಹ್ಮಜ್ಞಾನ ಸಂಘದ ಸದಸ್ಯರು, ದೇವಸ್ಥಾನದ ಮೊಕ್ತೇಸರರು, ಮುಖ್ಯ ವರ್ತಕರು ಇತ್ಯಾದಿಯಾಗಿ ಸಮಸ್ತರೂ ಅವರನ್ನು ಊರ ಗೇಟಿನ ತನಕ ಕಳುಹಿಸಿಕೊಟ್ಟರು. ರಾತ್ರಿಯೂಟವಾದ ಬಳಿಕ ತಾನೇ ಹೊರಟುದು! ಅದರಲ್ಲೂ ಅವರಿವರೊಡನೆ ಮಾತನಾಡುತ್ತ, ಬ್ರಹ್ಮಜ್ಞಾನ ಸಂಘವನ್ನು ಸರ್ವರೂ ಕಾಪಾಡಿ ಬರಬೇಕೆಂದು ಹೇಳಿ, ಪ್ರತಿಯೊಬ್ಬರಿಂದ ವಾಗ್ದಾನ ಪಡೆದು ಮುನ್ನಡೆವಾಗ, ಅದು ಅಮಾವಾಸ್ಯೆಯೆಂಬುದು ತಿಳಿಯದವರಿಗೂ ಚೆನ್ನಾಗಿ ತಿಳಿದು ಬರುವಂತಿದ್ದಿತು. ಹೇಗೋ ರಾಯರೂ ಅವರ ತೀರ್ಥರೂಪರೂ ಸವಾರಿ ಗಾಡಿಯಲ್ಲಿ ಮಂಗಳೂರನ್ನು ಸೇರಿ ಅಲ್ಲಿಂದ ಹೊಸ ಊರಿಗೆ ಪ್ರಯಾಣ ಮಾಡುವುದಕ್ಕಾಗಿ ಮುಂಬರಿದರು. + +ನಮ್ಮೂರಿನಿಂದ ಮೂರು ಗಾವುದ ದೂರದಲ್ಲಿರುವ ಆವೂರನ್ನು ಹಾದು ಮಂಗಳೂರಿಗೆ ಗಾಡಿ ಚಲಿಸುವುದು. ಆವೂರಿಗೆ ತಲುಪಲು ಇನ್ನೆರಡು ಮೈಲುಗಳಿವೆ; ಅಷ್ಟರಲ್ಲಿ, ಗಾಡಿಯ ಬದಿಯಲ್ಲಿ ಯಾರೋ ಸುಳಿದಂತಾಯಿತು. ಅದಾದ ಐದೇ ನಿಮಿಷಗಳಲ್ಲಿ ಗಾಡಿಯ ಎಡ ಚಕ್ರವು ತಪ್ಪಿತು; ಗಾಡಿ ವಾಲುತ್ತ ದಡಲ್ಲನೆ ಮಾರ್ಗದ ಮೇಲೆ ಬಿದ್ದಿತು! ಅದೊಂದು ಚಕ್ರಕ್ಕೆ ಸಿಕ್ಕಿಸಿದ ಕೀಲೇ ಇದ್ದಿಲ್ಲ! ಗಾಡಿಯೊಳಗೆ ಕೂತಿದ್ದವರು ಆಕಾಶದ ಮೇಲೆ ಮಲಗಿದ್ದಂತೆ ಭಾವಿಸುವಂತಾಯಿತು! ಅವರಿಗೆ ಇತರ ಯಾವ ಪೆಟ್ಟೂ ಆಗದಂತೆ 250 ಸೂಡಿ ಬೈಹುಲ್ಲಿನ ಹಾಸೇ ಅವರನ್ನು ಕಾಪಾಡಿತು. ಗಾಡಿಯವನು ಎತ್ತುಗಳ ಕೊರಳ ಹಗ್ಗವನ್ನು ಬಿಡಿಸಿದನು. ತನ್ನದೊಂದು ಕೈಯಲ್ಲಿ ಬಾರುಕೋಲನ್ನೂ ಮತ್ತೊಂದರಲ್ಲಿ ಒಂದು ಕತ್ತಿಯನ್ನೂ ಧರಿಸಿದನು. ಗಾಡಿಗೆ ತೂಗಿದ್ದ ಲಾಟಾನು ಆಗ ಒಡೆದು ಹೋಗಿದ್ದಿತು. ಎತ್ತೆತ್ತಲೂ ಕತ್ತಲು! + +ಗಾಡಿಯಿಂದ ಸಾಮಾನಿನ ಎರಡು ಗಂಟುಗಳನ್ನು ಗಾಡಿಯವನು ಹೊತ್ತನು; ಪೂಜಾದೇವರ ಕರಡಿಗೆಯನ್ನು (ಸುಮಾರು 2000 ರೂಪಾಯಿಯ ಸೊತ್ತು) ರಾಯರೇ ಹಿಡಿದುಕೊಂಡರು; ತೀರ್ಥರೂಪರು, ಪಾಪ, ಹಣ್ಣು ಮುದುಕರು, ರಾಯರ ಕೈ ಹಿಡಿದು ಮುಂಬರಿದರು. ದೂರದಲ್ಲಿ ಕಾಣುತಿದ್ದ ದೀಪದ ಕಡೆಗೆ ಗಾಡಿಯವನು ಅವರನ್ನು ಕರೆದೊಯ್ದನು. ಎತ್ತುಗಳು ಅವನ ಬೆನ್ನಹಿಂದೆಯೇ, ಗುಲಾಮರಂತೆ ಕಾಲಿಟ್ಟುವು. ಎಂತೂ, ದೀಪವಿರುವಲ್ಲಿಗೆ ಎಲ್ಲರೂ ಬಂದು ತಲಪಿದರು. + +ಅದು ಆವೂರು ಭಾಗವತರ ಅಂಗಡಿಯ ದೀಪದ ಬೆಳಕಾಗಿದ್ದಿತು. ಪ್ರಯಾಣಿಕರನ್ನು ಕಾಣುತ್ತಲೇ, ಅಲ್ಲಿದ್ದ ನಾಲ್ಕಾರು ಜನಗಳನ್ನು ಸರಿಯ ಹೇಳಿ, ಕಂಬಳಿ ಹಾಸಿದನು. ಪ್ರಯಾಣಿಕರು ಕಂಬಳಿಯ ಮೇಲೆ ಕೂತರು; ತಮ್ಮ ಸಾಮಾನನ್ನು ಅಲ್ಲೇ ಮಡಗಿದರು. + +ಮಾತು ನಡೆಯಿತು. ಗಾಡಿಯವನು ಎಲ್ಲವನ್ನೂ ವಿವರಿಸಿದನು. ಗಾಡಿಗೊಂದು ಕೀಲನ್ನು ಒದಗಿಸಿದರೆ, ಮತ್ತೊಂದು ಲಾಟಾನೂ ದೊರೆತರೆ, ಅವನು ಪ್ರಯಾಣಿಕರನ್ನು ಸುರಕ್ಷಿತವಾಗಿ ಮಂಗಳೂರಿಗೆ ಕೊಂಡೊಯ್ಯುವನಂತೆ. ಆದರೆ, + +ಆದರೆ, ಅಂದೇ ಆ ಅಂಗಡಿಯ ಜಗಲಿಯ ಮೇಲೆ, ಆವೂರಲ್ಲಿ ಹರಡಿದ್ದ ಒಂದು ವಾರ್ತೆಯ ಪ್ರಸ್ತಾವವೂ ಚರ್ಚೆಯೂ ನಡೆದಿದ್ದಿತು. ಮೂರು ವರ್ಷಗಳ ಹಿಂದೆ ಕಣ್ಣಾನೂರು ಜೈಲಿಗೆ ರವಾನೆಯಾಗಿದ್ದ ಕೇಡಿ ಬೊಗ್ಗುವು ಅದೇ ವಾರದಲ್ಲಿ ಬಿಡುಗಡೆ ಹೊಂದಿ ಆವೂರಿಗೆ ಬಂದಿದ್ದಾನೆಂದೂ, ನಿನ್ನೆ ಮೊನ್ನೆ ಒಂದೆರಡು ಕಳವುಗಳಾಗಿದ್ದುವೆಂದೂ, ಇನ್ನು ಸರ್ವರೂ ಅತಿ ಜಾಗರೂಕತೆಯಿಂದಿರಬೇಕೆಂದೂ, ಅಲ್ಲಿ ಎಲ್ಲರಲ್ಲಿ ದಿಗಿಲು ಉಂಟಾಗಿದ್ದಿತು. ಅಮಾವಾಸ್ಯೆಯೇ ಕನ್ನ ಹಾಕುವವರಿಗೆ ಅತ್ಯಪೂರ್ವ ಸಂದರ್ಭವೆಂದೂ, ಅದೇ ರಾತ್ರಿ ಅವನು ಎಲ್ಲಿಯಾದರೂ ಕಳವು ಅಥವಾ ದರೋಡೆ ಮಾಡದೆ ಇರನೆಂದೂ ಮಾತು ನಡೆದಿದ್ದಿತು. ಬೊಗ್ಗು ಆವೂರಿನವನಲ್ಲ; ಆದರೆ ಮಂಗಳೂರಿನಿಂದ ತನ್ನೂರಿಗೆ ಹೋಗುವಾಗ, ಅವನ ಪದ್ಧತಿಯಂತೆ ಆವೂರಲ್ಲಿ ತನ್ನ ಕೈಚಳಕ ತೋರಿಸದೆ ಇರಲಾರನೆಂದು ಎಲ್ಲರೂ ನಂಬಿದ್ದರು. ಹೀಗಾಗಿ, ಭಾಗವತರು, ಪ್ರಯಾಣಿಕರಿಗೆ ಪ್ರಯಾಣ ಮಾಡುವುದಕ್ಕಾಗಲಿ, ತನ್ನಲ್ಲಿರುವುದಕ್ಕಾಗಲಿ, ಯಾವ ಅಭಿಪ್ರಾಯವನ್ನೂ ಸೂಚಿಸದೆ ಮೌನವಾಗಿದ್ದರು. ಗಾಡಿಯವನು ಏನು ಮಾಡುವುದಕ್ಕೂ ದಿಕ್ಕು ತೋಚದಾದನು. ರಾಯರು, “ಎಲ್ಲವೂ ದೈವೇಚ್ಛೆ”, ಎಂದು ಸುಮ್ಮನಾದರು. ರಾಯರ ತೀರ್ಥರೂಪರು, ‘ನಾವಿಲ್ಲೇ ಬಿದ್ದುಕೊಳ್ಳುವ. ಇದೊಂದು ಕರಡಿಗೆ ಪೂಜಾವಿಗ್ರಹದ್ದು. ಅದನ್ನು ತಲೆಗಿಂಬಾಗಿಟ್ಟುಕೊಳ್ಳೋಣ’ ಎಂದರು. “ಹಾಗಿದ್ದರೆ, ಪಠೇಲರಲ್ಲಿ (ನನ್ನ ಪರಿಚಿತಿಯುಳ್ಳವರು) ನಾನು ಇಂದು ರಾತ್ರಿ ಕಳೆದು, ಬೆಳಿಗ್ಗೆ ಗಾಡಿ ದುರಸ್ತಿ ಮಾಡಿಕೊಂಡು ಇತ್ತ ಬರುವೆನು” ಎಂದು ಗಾಡಿಯವನು ಅರಿಕೆ ಮಾಡಿಕೊಂಡು, ಇನ್ನು ಅಲ್ಲಿರದೆ, ಸಮಾಧಾನಚಿತ್ತರಾದ ರಾಯರ ಅಪ್ಪಣೆ ಪಡೆದು ಹೊರಟನು. ಎತ್ತುಗಳನ್ನು ಅಂಗಡಿಗೆ ಸಮೀಪವಾಗಿ ಬೆಳೆದ ಎರಡು ಮರಗಳಿಗೆ ಕಟ್ಟಿದ್ದಾಯಿತು. ಭಾಗವತರು ಪ್ರಯಾಣಿಕರಿಗೆ ಒಂದು ದೀಪವನ್ನು ತಂದಿಟ್ಟು, ಏನಾದರೂ ಸಿಹಿಯಾಳ, ಬಾಳೆಹಣ್ಣು, ಅವಲಕ್ಕಿ ಇತ್ಯಾದಿ ಬೇಕಾಗಬಹುದೋ ನೋಡೋಣ ಎಂದು ಕೂತರು. ಹೀಗೆ ಜಗಲಿಯಲ್ಲಿ ಉಳಿದವರೆಂದರೆ ಇವರೇ ಮೂವರು. + +ಪ್ರಯಾಣಿಕರು ಯಾರು ಏನೆಂಬುದು ಭಾಗವತರಿಗೆ ಗಾಡಿಯವನಿಂದ ತಿಳಿದೇ ಇದ್ದಿತು. ನಡುರಾತ್ರಿಗೆ ಸಮೀಪವಾಗಿ ಬರುತಿತ್ತು. ‘ಇನ್ನು ಇವರು ನಿದ್ದೆ ಹೋಗಲಿ. ಹತ್ತಿರವೇ ತಾನೂ ಇರುವೆನು. ತನಗೂ ಬೆಂಬಲಕ್ಕೆ ಇವರಾದರು. ಎಲ್ಲಿಯಾದರೂ ಕೇಡಿಯು ಇಲ್ಲಿಗೆ ಬಂದರೆ? ಗಾಡಿಯ ಚಕ್ರದ ಕೀಲನ್ನು ಕಿತ್ತವನಾರು? ಅವನೇ ಆಗಿರಬೇಕು! ಮುನ್ಸಿಫರು ಪ್ರಯಾಣ ಮಾಡುವ ಸೋವು ಅವನಿಗೆ ತಿಳಿದಿರಬೇಕು’ ಇತ್ಯಾದಿಯಾಗಿ ಭಾಗವತರು ಭಾವಿಸಿದರು. ಇನ್ನು ಭಾಗವತರೂ ನಿದ್ದೆ ಹೋಗುವುದೆಂದಾಯಿತು; ರಾಯರೂ ಮುದುಕನೂ ಮಲಗಿಕೊಂಡಿದ್ದರು. + + + +ಅಷ್ಟರಲ್ಲಿ ನಡು ಹರೆಯದ, ಕಿರುದೋತರವನ್ನುಟ್ಟ, ತುಂಡಂಗಿತೊಟ್ಟ, ತಲೆಗೊಂದು ಮುಟ್ಟಾಳೆಯನ್ನಿಟ್ಟುಕೊಂಡ, ಗಟ್ಟಿಮುಟ್ಟಾದ, ಧಾಂಡಿಗನೊಬ್ಬನು ಅತ್ತ ಬಂದನು. ಅವನು ಬರುತ್ತಲೇ, ಮೂವರು ಎದ್ದು ಕೂತರು. + +ಭಾಗವತರು : “ಯಾರೋ ಅದು?’’ಬಂದವನು : “ನಾನು”.ಭಾಗವತರು : “ನಾನು” ಎಂದರೆ?’’ಬಂದವನು : “ನನ್ನ ಗುರುತಿಲ್ಲವೇ? ನಾನು ಬೊಗ್ಗು”.ಭಾಗವತರು : “ಏನು ಬೇಕು? ಸಿಹಿಯಾಳ, ಎಲೆ, ಅಡಿಕೆ, ಅವಲಕ್ಕಿ?’’ಬಂದವನು : “ಅವುಗಳಿಗಾಗಿ ಇಲ್ಲಿಗೆ ಬರಬೇಕೆ? ಮುರಿದ ಗಾಡಿಯಲ್ಲಿದ್ದ ಪ್ರಯಾಣಿಕರು ಇಲ್ಲಿಗೆ ಬಂದುದನ್ನು ತಿಳಿದು, ಇತ್ತ ಬಂದೆ.’’ರಾಯರು : “ನಮ್ಮಿಂದೇನಾಗಬೇಕು? ಅಥವಾ ನೀನೊಂದು ಹೊಸ ಗಾಡಿ ತರುವೆಯೋ ನಮ್ಮ ಸವಾರಿಗೆ? ಹಾಗಿದ್ದರೆ ಉಪಕಾರ”.ಬಂದವನು (ನಕ್ಕು) : “ಗಾಡಿಸವಾರಿಯ ಮಾತು ಹಾಗಿರಲಿ. ನಿಮ್ಮ ಬಳಿಯಿರುವ ಹಣವನ್ನು ಇತ್ತ ಕೊಡಿ. ಹಾಗಾದಲ್ಲಿ ತೊಂದರೆ ಇಲ್ಲದೆ, ನಾನು ಹಿಂದೆ ಹೋಗುವೆನು. ಬೇಕಾದಾಗ ಗಾಡಿ ಮಾಡಿಕೊಂಡು ಸವಾರಿ ಮಾಡಿರಿ. ನನ್ನ ಅಡ್ಡಿಯಿಲ್ಲ”. + +ರಾಯರು : “ನಮ್ಮ ಬಳಿಯಲ್ಲಿ ಹಣವೇನೂ ಇಲ್ಲವಷ್ಟೆ! ಹಣವನ್ನು ಮೊದಲೇ ನಾವು ಹೋಗುವಲ್ಲಿಗೆ ಕಳುಹಿಸಿದ್ದೇವೆ. ಅಮಾವಾಸ್ಯೆ ರಾತ್ರಿ ಪ್ರಯಾಣ ಮಾಡುವವರು, ನಾವಿಬ್ಬರೇ ಇರುತ್ತಾ, ಹಣದ ಕಂಟಕವನ್ನೂ ಕಟ್ಟಿಕೊಳ್ಳುವೆವೇ? ನಿನಗೆ ಅಷ್ಟು ತಿಳಿಯದೇ? ಇದೋ, ಇದು ನಮ್ಮ ಬಟ್ಟೆ, ಹಾಸುಗೆ, ಇತ್ಯಾದಿ. ಇದು ಪುಸ್ತಕಗಳ ಪೆಟ್ಟಿಗೆ. ಇದು ದೇವರ ಪೂಜೆಯ ಕರಡಿಗೆ.’’ + +ಬಂದವನು ಒಂದೊಂದನ್ನೇ ಕಣ್ಣಿಟ್ಟು ನೋಡುತ್ತಿದ್ದನು. ಈಗ, ಕರಡಿಗೆಯ ಮೇಲೆ ಕಣ್ಣೂರಿದನು. ಅವನ ದೃಷ್ಟಿಯು ಮುಂದಕ್ಕೆ ಚಲಿಸಲಿಲ್ಲ. ಟಪ್ಪನೆ ಅದನ್ನು ಕಸುಕೊಂಡನು. ಕರಡಿಯೊಳಗೆ ಇದ್ದ ಚಿನ್ನದ ವಿಗ್ರಹ, ಅದರ ರತ್ನಾಭರಣಾದಿಗಳು ಎಲ್ಲವನ್ನೂ ನೋಡಿದನು. + +ಭಾಗವತರು : “ಅದೋ, ಬೊಗ್ಗು, ನೀನು ಇತರ ಕಳ್ಳರ ಹಾಗೆ ಕಳ್ಳನಲ್ಲ ಎನ್ನುತ್ತಾರೆ. ದೇವರು, ಧರ್ಮ, ಬಡವರು, ಅನಾಥರು, ಮೊದಲಾದವರಲ್ಲಿ ವಿಶೇಷ ಶ್ರದ್ಧೆಯುಳ್ಳವನಂತೆ. ಊಟ ಹಾಕಿದವರನ್ನು ಮರೆವವನಲ್ಲವಂತೆ. ಧನಿಗಳನ್ನು ಕದ್ದು ದರಿದ್ರರಿಗೆ ಧನ ಕೊಡುವವನಂತೆ. ಅದು ದೇವರ ವಿಗ್ರಹ, ದೇವರ ಆಭರಣಗಳು. ಅವನ್ನು ಕೊಳ್ಳೆಹೊಡೆಯುವುದೇ? ಇಗೋ, ಹೊಟ್ಟೆತುಂಬ ಬೇಕಾದಷ್ಟನ್ನು ನಿನಗೆ ಕೊಡುವೆ. ತಿನ್ನು. ಅವರು ಸರಕಾರದ ಹುದ್ದೇದಾರರು. ಸುಳ್ಳಾಡುವವರಲ್ಲ. ಇವರು ನಾಲ್ಕು ಊರಲ್ಲಿ ಸತ್ಯವಾದಿ ನ್ಯಾಯಶೀಲರೆಂದು ಹೆಸರ್ಗೊಂಡ ಮುನ್ಸಿಫರು. ಇವರು ಅವರ ತಂದೆ. ಮುದುಕರು. ಇಂತಹವರನ್ನು ನೋಯಿಸಬೇಡ. ನಿನ್ನ ಹೆಸರಿನ ಕೀರ್ತಿ ಉಳಿಯಲಿ. ಇಷ್ಟು ವರ್ಷಗಳಿಸಿದ ಹೆಸರನ್ನು ಈಗ ಕಳೆದುಕೊಳ್ಳಬೇಡ. ಅವರದನ್ನು ಅವರಿಗೆ ಕೊಡು. ನಿನಗೆ ಬೇಕಾದುದನ್ನು ಹೊಟ್ಟೆ ತುಂಬ ತಿನ್ನು. ಹಾಗೆ ಬೇಕಾದರೆ ಒಂದು ವರಹ ನಾನೇ ನಿನ್ನ ಸದ್ಯದ ಖರ್ಚಿಗೆ ಕೊಡುತ್ತೇನೆ. ಅಥವಾ ಇಲ್ಲಿಯೇ ಬೇಕಾದರೆ ಮಲಗು. ನಮಗೇನೂ ಬೇಸರವಿಲ್ಲ. ನೀನು ಇತ್ತ ಬರುವೆಯೆಂದು ನಾವು ತಿಳಿದೇ ಇದ್ದೆವು. ಹುಂ.’’ + +ಭಾಗವತರ ಮಾತು ಕೇಳುತ್ತ ಈ ಕೇಡಿಯು ಇನ್ನಷ್ಟು ಕಠಿಣಚಿತ್ತನಾದನು. ಅವನ ಮಾತುಗಳು ಕರ್ಕಶವಾಗಿ ಹೊರಟುವು: “ನೀವು ಹೇಳಿದ್ದೆಲ್ಲ ನಿಜ, ಆದರೆ ಈಗಲ್ಲ, ಹಿಂದೆ. ನಾನು ಕೇಡಿಯೆಂದು ತಿಳಿದಂದಿನಿಂದ ನನ್ನ ಮೇಲೆ ಇಲ್ಲದ ಅಪರಾಧ ಹೊರಿಸಿ ಜೈಲುಪಾಲು ಮಾಡುತ್ತಿರುವರು. ಈಗ ದೇವಧರ್ಮ ನೋಡುವುದಕ್ಕಿಲ್ಲ. ಬಲಿಷ್ಠನೇ ಗೆಲ್ಲುವನು. ಈ ದೊಣ್ಣೆಯೊಂದೇ ನನಗೆ ದೇವರು. ಈ ದೊಣ್ಣೆಯೊಂದಿದ್ದರೆ ಹೊಟ್ಟೆಯು ಗತಿಗೇಡದು. ಈ ಕರಡಿಗೆ ನನಗೆ ಬೇಕು. ದೇವರು ಧರ್ಮ ಎಂದು ನಂಬಿ ಹಾಳಾದೆ. ಇದರಲ್ಲಿದ್ದುದು ನನಗೆ ನಾಲ್ಕು ವರ್ಷಕ್ಕೆ ಸಾಕು. ಅರಸನಂತೆ ಬಾಳಬಹುದು. ಈಗ ನಡುರಾತ್ರಿಯಾಯಿತು. ಇನ್ನಿಷ್ಟರಲ್ಲೇ ಮರಳುವೆನು. ಆದರೆ ಒಮ್ಮೆಲೇ ಕಠಿನವೆನಿಸಲಾರೆನು. ನೋಡೋಣ; ಇವರನ್ನು ಬಿಟ್ಟರೂ ನನ್ನ ಮೇಲೆ ರುಜುವಾತು ಬಲವಾಗುವುದು. ಆದರೂ ಹೊಸ ಗಾಡಿಯನ್ನು ಕಾದಿದ್ದಂತೆ ಇವರೆಂದರಲ್ಲ? ಹೋಗಲಿ, ಇನ್ನೊಂದು ತಾಸಿನೊಳಗಾಗಿ ಇವರು ಹೊಸ ಗಾಡಿ ತರಲಿ. ಇವರಿಗೆ ಅಪಾಯವೇನೂ ಇಲ್ಲದಂತೆ ಇವರು ಗಾಡಿ ಹತ್ತಿ ಹೋಗಬಹುದು. ನಾನು ಈ ಕರಡಿಗೆಯೊಡನೆ ಮರೆಯಾಗುವೆನು. ಇಲ್ಲದಿದ್ದಲ್ಲಿ ಇವರಿಗೆ ಇಲ್ಲೇ ಬಿದ್ದು ಸಾಯುವ ಹಾಗೆ ಬಡೆಯುವೆನು. ನೀವ್ಯಾರೂ ಮಾತೆತ್ತ ಕೂಡದು. ಅತ್ತಿತ್ತ ಹೋಗಲೂ ಕೂಡದು. ಅಂಗಡಿಯವರೇ! ನೀವು ಈ ಊರಲ್ಲಿ ಪರಿಚಿತರು. ನೀವು ಗಾಡಿ ತರಹೋದರೆ ಪಠೇಲರಲ್ಲಿಗೆ ಅಥವಾ ಇನ್ನೆಲ್ಲಿಗಾದರೂ ಹೋಗಿ ಜನಕೂಡಿಸಿ ತರುವಿರಿ. ಈ ಮುದುಕರಾಗಲಿ ಇವರಾಗಲಿ ಹೋಗಲಿ. ಅವರಿಗೊಂದು ಲಾಟಾನು ಕೊಡಿರಿ. ಒಬ್ಬರು ಹೋಗಲಿ. ಇನ್ನೊಬ್ಬರು ಇಲ್ಲಿ ಇರಲಿ. ಒಂದು ತಾಸಿನೊಳಗೆ ಗಾಡಿ ತಂದರೆ ಅವರಿಬ್ಬರೂ ಸುರಕ್ಷಿತವಾಗಿ ಹೊರಡಲಿ. ಗಾಡಿ ಇಲ್ಲವಾದರೂ ಮರಳದೆ ಇದ್ದರೆ, ಇಲ್ಲಿ ಉಳಿದವರ ಕಾಲು ಮುರಿದು ಹಾಕುವೆನು. ಗಾಡಿ ಇಲ್ಲದೆ ಮರಳಿದರೆ ನೀವು ಮೂವರನ್ನೂ ಇಲ್ಲಿ ಮರಗಳಿಗೆ ಕಟ್ಟಿಹಾಕಿ ಬಾಯಲ್ಲಿ ಬಟ್ಟೆ ತುರುಕಿಸಿಟ್ಟು ಬಾಯಿಕಟ್ಟಿ ಹೊರಡುವೆನು. ಹುಂ, ಇಷ್ಟೆ ನನ್ನ ದಯೆ” ಎಂದು ಕರಾಳ ನಗುವಿನಿಂದ ತಿಳಿಸಿದನು. ಆಕಾಶವನ್ನು ನೋಡಿ, “ಅಲ್ಲೇ ಕಾಣುವ ಆ ದೊಡ್ಡ ನಕ್ಷತ್ರವು ಇನ್ನೊಂದು ತಾಸಿನಲ್ಲಿ ನೆತ್ತಿಗೆ ಬರುವುದು. ಅಷ್ಟರಲ್ಲಿ ಬರಲಿ. ಇಲ್ಲದಿದ್ದಲ್ಲಿ ನಾನು ಹೇಳಿದಂತೆ ಖಂಡಿತವಾಗಿಯೂ ಮಾಡುವೆನು” ಎಂದನು. + +ಇನ್ನು ಇವರೇನು ಮಾಡಬಹುದು? ಎಲ್ಲರೂ ಅವಾಕ್ಕಾದರು. ರಾಯರ ಬ್ರಹ್ಮಜ್ಞಾನಕ್ಕೆ ಈಗಲೇ ಪರೀಕ್ಷೆಯ ಕಾಲ. ವಿಧಿ, ಕರ್ಮಫಲ, ಎಲ್ಲವನ್ನೂ ಈಗಲೇ ಪರೀಕ್ಷೆ ಮಾಡಬೇಕೆಂದರು. ಕೇಡಿಯ ಮಾತಿಗೆ ಒಪ್ಪಿದರು. ವೃದ್ಧ ಪಿತನಿಗೆ ಸಮಾಧಾನ ಹೇಳಿ, ಒಂದು ಲಾಟಾನನ್ನು ಉರಿಸಿಕೊಂಡು, ಭಾಗವತರಿಗೆ ಶಾಂತರಾಗಿದ್ದು ಕೇಡಿಗೆ ಬೇಕಾದ ಆಹಾರವನ್ನು ಕೊಡಹೇಳಿ, “ಒಂದು ತಾಸಿನೊಳಗೆ ನನ್ನಂತಹವನು ಬಲು ವೇಗವಾಗಿ ನಡೆದರೂ ಈ ರಾತ್ರಿ ಕಾಲದಲ್ಲಿ ಮೂರು ಮೈಲಿಗೆ ಮಿಕ್ಕಿ ಹೋಗಲಾರನು. ಆದುದರಿಂದ ಇಲ್ಲಿಂದ ಒಂದೂವರೆ ಮೈಲುವರೆಗೆ ಹೋಗುವೆನು. ಗಾಡಿಯೊಂದು ದೈವೇಚ್ಛೆಯಿಂದ ದೊರೆತರಾಯಿತು. ಇಲ್ಲವಾದಲ್ಲಿ, ಹೀಗೆಯೇ ಹಿಂತಿರುಗುವೆನು. ಸುಮ್ಮನೆ ವೃದ್ಧರನ್ನು ಗಂಡಾಂತರಕ್ಕೀಡುಮಾಡುವುದೇ? ಅಂತೂ, ಮಹಾರಾಯಾ, ನಾನು ಬರುತ್ತೇನೆ; ಗಾಡಿ ದೊರೆಯಲಿ, ಇಲ್ಲದಿರಲಿ, ನಾನು ಬರುವ ತನಕ ಮಾತ್ರ ಇವರನ್ನು ಪೀಡಿಸಬೇಡ; ಬಂದ ತರುವಾಯ, ನಿನಗೆ ದೇವರು ಬುದ್ಧಿಕೊಡುವಂತೆ ಮಾಡು”, ಎನ್ನುತ್ತಾ, “ಅಯ್ಯಾ, ನಾವು ಇಷ್ಟು ವರ್ಷವೂ ನಮ್ಮ ಸರ್ವಸ್ವವೆಂದು ಪೂಜಿಸಿದ ದೇವರ ದಯೆ ನಮ್ಮನ್ನು ಕಾಪಾಡುವುದು; ಇದರಲ್ಲಿ ಸಂದೇಹವಿಲ್ಲ. ನನಗೆ ಆಶೀರ್ವಾದವಿರಲಿ”, ಎಂದು ತಂದೆಗೆ ಶರಣು ಬಂದು, ಕೇಡಿಯ ಕೈಗಳಲ್ಲಿದ್ದ ದೇವರ ಕರಡಿಗೆಯನ್ನು ವಂದಿಸಿ, ರಾಯರು ಹೊರಟರು. + +ಇತ್ತ ಕೇಡಿಯು ಇವರೊಡನೆ ಮಾತಾಡದೆ ವೀಳೆಯ ಜಗಿಯುತ್ತ, ಇವರಿಬ್ಬರೂ ಮಾತಾಡದಂತೆಯೂ ಪರಸ್ಪರ ಆಡಿಕೊಳ್ಳದಂತೆಯೂ (ಅಂಗಡಿಯ ಹಿಂದೆಯೇ ಮನೆಯಿದೆಯಷ್ಟೆ) ಎಚ್ಚರವಿಟ್ಟು, ಒಂದು ಕೈಯಲ್ಲಿ ಕರಡಿಗೆಯನ್ನೂ ಮತ್ತೊಂದರಲ್ಲಿ ತನ್ನ ಲಾಥಿಯನ್ನೂ ಹಿಡಿದುಕೊಂಡೇ ಕೂತಿದ್ದು, ಆಗಾಗ ಆಕಾಶ ನೋಡುತ್ತ, ಆ ದೊಡ್ಡ ನಕ್ಷತ್ರವು ನೆತ್ತಿಗೆ ಬರುವುದನ್ನು ಕಾಯುತ್ತಲೇ ಇದ್ದನು. ವೃದ್ಧರು ಮಂಕುಹಿಡಿದಂತಿದ್ದರಾದರೂ ದೇವರಲ್ಲಿ ವಿಶ್ವಾಸವನ್ನಿಟ್ಟುದನ್ನು ನೋಡಿ, ಭಾಗವತರಿಗೂ ಈ ಸಂದರ್ಭಕ್ಕೊಪ್ಪುವ ಭಾರತದೊಳಗಣ ನಾನಾ ಪದ್ಯಗಳು ನೆನಪಾದವು. ಆದರೆ ಪ್ರಯೋಗಿಸಿದರೆ ತಲೆಗೆ ಪೆಟ್ಟಾಗುವುದೆಂದು ಸುಮ್ಮನಿರಬೇಕಾಯಿತು. + +ರಾಯರು ಲಾಟಾನು ಹಿಡಿದು ಹೊರಟು ಮಾರ್ಗಕ್ಕೆ ಬಂದವರೇ ನಮ್ಮೂರ ಕಡೆಗೆ ಧಾವಿಸಿದಂತೆ ಕಾಲಿಟ್ಟರು. ಟೆನ್ನಿಸ್ ಆಟದ ಅಭ್ಯಾಸದಿಂದ ಇದು ಸುಲಭವಾಯಿತಲ್ಲದೆ, ರಾಯರು ಸಿಂಹಾಸನದಲ್ಲೂ ರಾಯರು, ಇತರ ವೇಳೆಯಲ್ಲೂ ರಾಯರಾಗಿಯೇ ಇದ್ದಿದ್ದರೆ, ಇದು ಸಾಧ್ಯವಾಗುತ್ತಿರಲಿಲ್ಲ. ಕಗ್ಗತ್ತಲು ಕಾಡು, ಒಬ್ಬಂಟಿಗರೇ ಭವಿಷ್ಯದ ಸಂಕಷ್ಟವೆಲ್ಲವನ್ನು ನೆನೆದು ಗೀತಾಪಾಠ ಹೇಳುತ್ತ ಧೈರ್ಯದಿಂದ ಮುನ್ನಡೆದರು; ಆಗಾಗ ಓಡಿದರು. ಒಂದು ಮೈಲು ಸಾಗಿತು. ದಾರಿಯುದ್ದಕ್ಕೂ, ಸಾಲು ಮರಗಳೂ ಅವುಗಳ ಹಿಂದೆ ಕಾಡೂ ಹೊರತು, ಒಂದು ಅಂಗಡಿಯೂ ಇಲ್ಲ. ಅಲ್ಲೇ ಒಂದು ಭೂತದ ಗುಡಿ. ಅದಕ್ಕೆ ಬಾಗಿಲುಗಳಿಲ್ಲ. ದೊಡ್ಡದೊಂದು ಹುತ್ತವು ಎತ್ತರಕ್ಕೆ ಬೆಳೆದಿರಲು ಅದಕ್ಕೆ ಒತ್ತಾಗಿ ಒಂದಾಳೆತ್ತರದ ಗೋಡೆಗಳನ್ನಿಟ್ಟು ಕಟ್ಟಿದ ಗುಡಿ! ಉದ್ದವಾದೊಂದು ಹುಲಿಯ ಬೊಂಬೆಯಿದೆ, ಅದರ ಬಣ್ಣ ಮಾಸಿ ಹೋಗಿದೆ. ಲಾಟಾನಿನ ಬೆಳಕಿಗೆ ಅದು ಒಂದು ಬಗೆಯಾಗಿ, ವಿಕಟವಾಗಿ, ವಿಕಾರವಾಗಿ, ಅಸಹ್ಯವಾಗಿ ಕಾಣುತ್ತಿದೆ. ರಾಯರು ಪಕ್ಕನೆ ದಿಗಿಲುಗೊಂಡರು. ಮೆಲ್ಲನೆ ಗರ್ಜಿಸಿದಂತಾಯಿತು. ರಾಯರ ಕಾಲು ತಡೆಯಿತು. ಘರ್ಜನೆ ಕರ್ಕಶವಾಗಿದ್ದಿತು; ಹತ್ತಿರಕ್ಕೆ ಬಂದಂತಾಯಿತು. ಇನ್ನಷ್ಟು ಕಾಲದಲ್ಲಿ ದಾರಿಯಲ್ಲಿ ತನಗೆದುರಾಗಿ ಗರ್ಜನೆ ಸಮೀಪಕ್ಕೆ ಬರುತ್ತಿದೆ. ಗುಡಿಯಾಚೆಗೆ ಮಾರ್ಗವು ಅರ್ಧವೃತ್ತದಂತಾಗಿ ತಿರುಗಿದೆ. ಜನರ ಸುಳಿದಾಟವಿಲ್ಲ. ಗರ್ಜನೆ ತೀರ ಹತ್ತಿರದಿಂದ ಕೇಳಿಸಿತು. ಓಹೋ, ಅದೊಂದು ಗಾಡಿ, ಎರಡೆತ್ತಿನ ಗಾಡಿ, ಗಾಡಿ ತುಂಬ ಹುಲ್ಲಿದೆ. ಗಾಡಿಗೆ ಲಾಟಾನು ಮಾತ್ರವಿಲ್ಲ. ಗಾಡಿಯವನು ಧೀರನು, ಒಡ್ಡಾಳು. ಕೈಕೋಲಿನಿಂದ ಹೊಡೆಯದೆಯೇ, ಆ ಇಳಿಜಾರಿನಲ್ಲಿ ಎತ್ತನ್ನು ಮೆಲ್ಲನೆ ನಡೆಯಿಸುತ್ತಾನೆ. ಗರ್ಜನೆಯು ‘ಬೀರಿ’ಯ ಧ್ವನಿ. + +ರಾಯರ ಲಾಟಾನನ್ನು ಕಂಡು, ಗಾಡಿ ನಿಂತಿತು. ರಾಯರಿಗೆ ಈಗ ತಾನೇಕೆ ಅತ್ತ ಬಂದುದೆಂದು ಮನಸ್ಸಿನಲ್ಲಿ ಹೊಳೆಯಿತು. “ಮಹಾರಾಯಾ, ನನ್ನನ್ನು ಸ್ವಲ್ಪ ಉಳಿಸಬಾರದೇ? ದೇವರೇ ನಿನ್ನನ್ನು ಕಳುಹಿಸಿದನು. ನನ್ನೊಡನೆ ಬರುವೆಯಾ? ನಮ್ಮ ಗಾಡಿ ಚಕ್ರಕಳಚಿ ಇಲ್ಲಿ ಒಂದೇ ಮೈಲುದೂರದಲ್ಲಿ ಬಿದ್ದಿದೆ. ನನ್ನ ಮುದಿ ತಂದೆಯವರೂ ನಾನೂ ಪ್ರಯಾಣಿಕರಾಗಿದ್ದೆವು. ಗಾಡಿಯವನು ಪಠೇಲರಲ್ಲಿ ಉಳಿದು ಬೆಳಿಗ್ಗೆ ಬರುವೆನೆಂದು ಹೋದನು. ಆದರೆ ನಮ್ಮನ್ನು ಒಬ್ಬ ಕೇಡಿಯು ಆತಂಕಿಸಿ ನಮ್ಮ ಪೂಜೆಯ ದೇವರನ್ನು ಸೆಳಕೊಂಡಿದ್ದಾನೆ. ಅದನ್ನಂತೂ ಕೊಡುವುದಿಲ್ಲವಂತೆ. ಅವನು ಪ್ರಸಿದ್ಧ ಕೇಡಿ ಬೊಗ್ಗುವಂತೆ. ಈ ವಾರವೇ ಬಿಡುಗಡೆ ಹೊಂದಿ ಕಣ್ಣಾನೂರಿನಿಂದ ಇತ್ತ ಬಂದವನಂತೆ. ನಾನು ಗಾಡಿಯನ್ನು ಈ ತಾಸಿನೊಳಗೆ ತಂದರೆ, ನಾವು ಮುಂದರಿಯಬಹುದಂತೆ; ಇಲ್ಲದಿದ್ದಲ್ಲಿ, ನಮ್ಮನ್ನು ಹೆಡಮುರಿ ಕಟ್ಟಿ, ದೇವರ ಕರಡಿಗೆಯೊಡನೆ ಅವನು ಮಾಯವಾಗುವನಂತೆ. ಹಿಂದೆ ಹೋಗದಿದ್ದರೆ ನನ್ನ ತಂದೆಯವರನ್ನು ಕೊಂದು ಹಾಕುವನಂತೆ. ದೇವಧರ್ಮಗಳ ಮೇಲೆ ಅವನ ವಿಶ್ವಾಸ ಹಿಂದೆ ಇದ್ದುದು ಇನ್ನಿಲ್ಲವಂತೆ. ಅಲ್ಲೇ ಇರುವ ಅಂಗಡಿಜಗಲಿಯ ಮೇಲೆ ಇದ್ದಾನೆ. ನಾವು ಪೂಜೆ ಮಾಡಿದ ದೇವರು ನಮ್ಮನ್ನು ಕಾಪಾಡುವನಾದರೆ ಕಾಪಾಡಲೆಂದು ಇತ್ತ ಗಾಡಿ ಹುಡುಕಿ ಬಂದೆ. ಈ ಅಮಾವಾಸ್ಯೆಯ ಕಗ್ಗತ್ತಲಿನ ನಡುರಾತ್ರಿಗೆ ನೀನು ಹೇಗೋ ಎದುರಾದೆ. ದೇವರೇ ನಿನ್ನನ್ನು ನಮ್ಮ ರಕ್ಷಣೆಗಾಗಿ ಕಳುಹಿಸಿದನು” ಎಂದು ಗಾಡಿಯವನನ್ನು ನಮಸ್ಕರಿಸಿ ರಾಯರು ಆನಂದಬಾಷ್ಪಗಳನ್ನು ಸುರಿಸಿದರು. + +ಇಷ್ಟು ಮಾತುಗಳನ್ನು ರಾಯರು ಕ್ಷಣಾರ್ಧದಲ್ಲೆಂಬಂತೆ ಗಾಡಿಯವನಿಗೆಂದರು. ಗಾಡಿಯವನೂ ಸಹಸಂತಾಪದಿಂದಲೋ ಎಂಬಂತೆ ಕಣ್ಣೀರು ಮಿಡಿದನು. ರಾಯರನ್ನು ಕೂಡಲೇ ಗಾಡಿಯಲ್ಲಿ ಕುಳ್ಳಿರಿಸಿ, ಎತ್ತುಗಳನ್ನು ಓಡುವಂತೆ ಪ್ರೇರೇಪಿಸಿದನು. ಗಾಡಿಯು, ಕವುಚಿಬಿದ್ದ ಇವರ ಗಾಡಿಯನ್ನು ದಾಟಲು, ಗಾಡಿಯವನು ದೂರದಿಂದಲೇ ಅಂಗಡಿಯಲ್ಲಿ ಉರಿಯುತ್ತಿದ್ದ ದೀಪದ ಬೆಳಕನ್ನು ಕಂಡು, ಅಲ್ಲಿಗೇ ತಾವು ಹೋಗುವುದೆಂದು ತಿಳಿದುಕೊಂಡ ಕೂಡಲೇ, ರಾಯರಿಗೆ ಗಾಡಿಯೆತ್ತುಗಳ ಹಗ್ಗ ಹಿಡಿದು ಅಲ್ಲೇ ನಿಲ್ಲುವಂತೆ ಹೇಳಿ, ಲಾಟಾನನ್ನು ಅಲ್ಲೇ ಕಿರಿದುಮಾಡಿ ಗಾಡಿಗೆ ಕಟ್ಟಿಕ್ಕಿ, ತಾನೊಬ್ಬನೇ ಅಂಗಡಿಯ ಕಡೆಗೆ ನಡೆದನು. + +ಇವನೋ ಯಾವನೋ ಯಾವುದೋ ಸಾಮಾನಿಗಾಗಿ ಬಂದಿದ್ದವನೆಂದು ಅಂಗಡಿಯವರು ತಿಳಿದರು; ಆದರೆ ಕೇಡಿಯ ಕೈಯ ಕೋಲನ್ನು ನೋಡಿ ಮಾತೆತ್ತಲಾರದಾದರು. + +ಗಾಡಿಯವನು : “ಸ್ವಾಮೀ, ನನಗೆ ಅರ್ಧಾಣೆಯ ವ್ಯಾಪಾರ ಕೊಡಿರಿ” ಎಂದು ಅರ್ಧಾಣೆಯನ್ನು ಅಂಗಡಿಯವರ ಬಳಿಗೆ ಬಿಸುಟನು.ಕೇಡಿ : “ಈಗ ವ್ಯಾಪಾರವಿಲ್ಲ. ಅಂಗಡಿಯವರು ಕೊಡಲಾರರು”. + +ಗಾಡಿಯವನು : “ನೆಂಟರು ಮನೆಗೆ ಬಂದು ಬಿಟ್ಟಿದ್ದಾರೆ; ಉಪಚಾರ ಮಾಡಬೇಡವೇ? ನನ್ನ ಮಗ, ಹಾಳು ಹುಡುಗ, ಸಂಜೆಗೇ ವೀಳೆಯ ತಾರದೆ ಮೋಸ ಮಾಡಿದ. ಇರಲಿ. ಅವರೇಕೆ ಸಾಮಾನು ಕೊಡಬಾರದು?’’ + +ಕೇಡಿ : “ನನ್ನಪ್ಪಣೆ ಹಾಗೆ!’’ + +ಗಾಡಿಯವನು : “ನಿಮ್ಮಪ್ಪಣೆ! ಎಂದರೆ, ನೀವು….?’’ + +ಕೇಡಿ : “ಫಟಿಂಗಾ! ನನ್ನ ಗುರುತಿಲ್ಲವೇ? ನಾನು ಕೇಡಿ ಬೊಗ್ಗು. ಇವರಲ್ಲಿಗೆ ಬಂದವರು ಅವರ ಸೊತ್ತನ್ನೇ ನನ್ನ ಕೂಡೆ ಇಟ್ಟು ಗಾಡಿ ತರಲು ಹೋಗಿದ್ದಾರೆ. ಒಂದು ತಾಸಿನ ವಾಯಿದೆ. ಆ ನಕ್ಷತ್ರ ನಡು ನೆತ್ತಿಗೆ ಬರುವವರೆಗೆ ಕಾದು, ನಂತರ ಈ ಮುದುಕನ ಕಾಲುಮುರಿದು, ಇವರಿಬ್ಬರನ್ನೂ ಮರಗಳಿಗೆ ಕಟ್ಟಿಕ್ಕಿ ಈ ಸೊತ್ತಿನೊಂದಿಗೆ ನಾನು ಮರೆಯಾಗುವೆನು, ಎಂದು ನನ್ನ ಶರ್ತ; ಅವರೆಲ್ಲರೂ ಒಪ್ಪಿದ್ದಾರೆ. ಈಗ ನೀನೂ ಬಂದೆ; ನಿನ್ನನ್ನು ಕಟ್ಟಿಹಾಕದೆ ನಿರ್ವಾಹವಿಲ್ಲ. ಶರ್ತದಂತೆ ಮಾಡದವನು ಬೊಗ್ಗುವೇ?’’ + +ಗಾಡಿಯವನು : “ಹಾಗಿದ್ದರೆ, ಅಂಗಡಿಯವರ ಬದಲಾಗಿ ನೀವೇ ಅಲ್ಲೇ ಇರುವ ಒಂದು ಕಟ್ಟು ವೀಳೆಯದೆಲೆ, ಇಷ್ಟು ಸುಣ್ಣ, ಒಂದು ಹೊಗೆಸೊಪ್ಪಿನ ತುಂಡು, ಮೂರು ಅಡಿಕೆ, ಇತ್ತ ಬಿಸಾಡಿ. ನಾನು ಹೋಗುವೆನು. ನಾನೇಕೆ ನಿಮ್ಮೊಳಗಣ ಮಾತಿಗೆ ಭಂಗ ತರಬೇಕು? ನನ್ನ ನೆಂಟರು ಎಷ್ಟು ಕಾಯುವರೋ?’’ + +ಕೇಡಿ : “ಸುಡು ನಿನ್ನ ನೆಂಟರನ್ನು; ಇಲ್ಲಿಂದ ಹೊರಟವನೇ ನಿನ್ನಲ್ಲಿಗೆ ಬರುತ್ತೇನೆ. ಆ ಮೇಲೆ ಅಲ್ಲಿಯೂ ನನ್ನ ಪರಾಕ್ರಮ ನೋಡುವೆ”.ಗಾಡಿಯವನು : “ನಿಮ್ಮ ಪರಾಕ್ರಮ ನಮಗೇಕೆ ತೋರಿಸುವಿರಿ? ನಾವು ತೀರ ಬಡವರು. ಅಥವಾ, ಅತ್ತ ಬರುವಿರಾದರೂ ನಾವೇನೂ ತಮ್ಮಂತಹ ಬಲಿಷ್ಠರನ್ನು ತಡೆವೆವೇ? ಅರ್ಧಾಣೆಯ ವ್ಯಾಪಾರ ಕೊಡಿರಿ. ದಮ್ಮಯ್ಯ”. + +ಕೇಡಿ : “ಸಾಕು, ಹೊಲಸು ಮಾತಾಡಬೇಡ. ನಿಲ್ಲಲ್ಲಿ ಸುಮ್ಮನೆ. ಈ ನಕ್ಷತ್ರವು ನೆತ್ತಿಗೆ ಬಂತು. ಇನ್ನು ಈ ಮುದುಕನ ಕಾಲು ಮುರಿದು ಇವರಿಬ್ಬರನ್ನೂ ಮರಕ್ಕೆ ಕಟ್ಟುವುದನ್ನು ನೋಡು. ಸುಮ್ಮನಿರು. ಮಾತಾಡಿ ಗುಲ್ಲೆಬ್ಬಿಸಬೇಡ. ನನ್ನ ಕೆಲಸ ಕೆಟ್ಟೀತು. ನಿನ್ನನ್ನು ಕೊಂದೇ ಹಾಕುವೆನು”.ಹೀಗೆಂದು ಕೇಡಿಯು ತನ್ನ ಕೈಯಲ್ಲಿದ್ದ ದೊಣ್ಣೆಯಿಂದ ಬಲವಾದ ಒಂದು ಏಟನ್ನು ವೃದ್ಧರ ಕಾಲಿಗೆ ಕೊಡಲು ದೊಣ್ಣೆ ಎತ್ತಿದನು. + +ಆದರೆ, ಎತ್ತಿದ ದೊಣ್ಣೆ ಗಾಡಿಯವನ ಎಡಗೈಯೊಳಗೆ, ಗಾಡಿಯವನ ಕೈಯಲ್ಲಿದ್ದ ಕೋಲು ಕೇಡಿಯ ಕುತ್ತಿಗೆಗೆ, ಹೇಗೆ ಬಿತ್ತೋ ಭಾಗವತರಿಗೆ ತಿಳಿಯಲೇ ಇಲ್ಲ. ಇದಾದ ಬಳಿಕ ಕೇಡಿಯನ್ನು ಗಾಡಿಯವನು ಒಂದು ಸಲ ಹಿಂದಣಿಂದ ತನ್ನ ತೋಳುಗಳಿಂದ ಬಿಗಿಯಾಗಿ ಒತ್ತಿ ಹಿಡಿದು, ಅವನ ಬಾಯಲ್ಲಿ ಅರ್ಧ ಕಟ್ಟು ವೀಳೆಯದೆಲೆ ತುರುಕಿಸಿ, ತನ್ನ ಎಲ ವಸ್ತ್ರದಿಂದ ಅವನ ಬಾಯಿಯನ್ನು ಬಲವಾಗಿ ಬಿಗಿದು ಹಿಂದಲೆಗೆ ಗಂಟಿಕ್ಕಿದನು. ಬೆನ್ನ ನಡುವೆ ಒಮ್ಮೆ ಗುದ್ದಿ, ಅವನ ಎರಡೂ ಕೈಗಳನ್ನು ಆತನ ಕೈಯಲ್ಲಿದ್ದ ಹಗ್ಗದಿಂದಲೇ ಬೆನ್ನಹಿಂದಕ್ಕೆ ಕಟ್ಟಿದನು. ಅವನನ್ನು ಕೆಡವಿ, ಅಲ್ಲೇ ಕಟ್ಟಿದ್ದ ಎತ್ತುಗಳಲ್ಲಿ ಒಂದರ ಹಗ್ಗ ಬಿಚ್ಚಿ ಕಾಲುಗಳೆರಡನ್ನೂ ಕಟ್ಟಿಕ್ಕಿದನು. ಆ ಬಳಿಕ, ಅವನನ್ನು ನೆಲಕ್ಕೆ ಒರಗಿಸಿ, ತಪ್ಪಿಸಿಕೊಳ್ಳಲು ಯತ್ನಿಸಿದರೆ ಕೊಂದಿಕ್ಕುವೆನೆಂದನು. ಭಾಗವತರು ಈಗ ಪರಾಕ್ರಮಿಗಳಾಗಿ, ಕೇಡಿಯು ಬಿದ್ದಲ್ಲಿಗೆ ಬಂದು ಅವನ ಎದೆಗೆ ಚೆನ್ನಾಗಿ ಎರಡು ಗುದ್ದಿದರು. ಅನಂತರ, ಗಾಡಿಯವನು ವೃದ್ಧರ ಕೈಯಲ್ಲಿ ದೇವರ ಕರಡಿಗೆಯನ್ನು ಇಟ್ಟು, ಭಾಗವತರಿಂದ ಅವರ ಪುಸ್ತಕಗಳ ಕಟ್ಟನ್ನು ಹೊರಿಸಿ, ತಾನು ಬಟ್ಟೆಗಳ ಮತ್ತು ಹಾಸುಗೆಯ ಮೂಟೆಯನ್ನು ಹೊತ್ತುಕೊಂಡು, ವೃದ್ಧರನ್ನು ತನ್ನ ಕೈಕೊಟ್ಟು ನಡಿಸಿ, ಜಾಗ್ರತೆಯಾಗಿ ರಸ್ತೆಯಲ್ಲಿದ್ದ ಬಂಡಿಯ ಬಳಿಗೆ ಬಂದನು. ಅಲ್ಲಿ, ತಂದ ಹೇರುಗಳನ್ನು ಗಾಡಿಯಲ್ಲಿರಿಸಿ, ವೃದ್ಧರನ್ನು ರಾಯರೊಡನೆ ಬಿಟ್ಟು, ಭಾಗವತರೊಡನೆ ಅವರ ಮನೆಗೆ ಮರಳಿದನು. ನೆಲದ ಮೇಲೆ ಬಿದ್ದುಕೊಂಡು ಉರುಡಾಡುತ್ತಿದ್ದ ಕೇಡಿಯ ಕಾಲು ಕಟ್ಟುಗಳನ್ನು ಬಿಚ್ಚಿ, ಅವನ ಕಾಲು ಹಗ್ಗಗಳನ್ನು ಬೆನ್ನಹಿಂದಣ ಕೈಕಟ್ಟಿಗೆ ಬಿಗಿದು, ಭಾಗವತರನ್ನು ಮನೆಯೊಳಗೆ ಹೋಗಬಿಟ್ಟು, ಕೇಡಿಯನ್ನು ರಾಯರ ಕವಚಿಬಿದ್ದ ಗಾಡಿಗೆ ಕೊಂಡೊಯ್ದು ಅದರೊಳಗೆ ಒರಗಿಸಿ, ಇತರರೂ ಸುಲಭವಾಗಿ ಬಿಡಿಸಲಾರದ ರೀತಿಯಲ್ಲಿ ಅವನನ್ನು ಚೆನ್ನಾಗಿ ಬಿಗಿದುಬಿಟ್ಟನು. + +ರಾಯರ ಬಳಿಗೆ ಈ ಗಾಡಿಯವನು ಬಂದನು. ಗಾಡಿಯೊಳಗೆ ಹುಲ್ಲು ಹಾಸಿ, ಚಾಪೆ ಸರಿಗೊಳಿಸಿ, ರಾಯರೂ ಅವರ ತೀರ್ಥರೂಪರೂ ಸವಾರಿಯಾಗುವಂತೆ ಕೇಳಿಕೊಂಡು, ಅವರನ್ನು ಕುಳ್ಳಿರಿಸಿಕೊಂಡು ಗಾಡಿಯನ್ನು ಮಂಗಳೂರಿನ ಕಡೆಗೆ ಓಡಿಸಿದನು. “ರಾಯರೇ, ನಾಳೆ ಪಠೇಲರ ಮನೆಯಿಂದ ನಿಮ್ಮ ಗಾಡಿಯವನು ತನ್ನ ಗಾಡಿ ಸರಿಮಾಡಲು ಹೋಗುವಾಗಲೇ ಕೇಡಿ ಬೊಗ್ಗುವು ಅದರೊಳಗೆ ಕಟ್ಟಲ್ಪಟ್ಟು ಬಿದ್ದಿರುವುದರಿಂದ ಆತನಿಗೆ ಕಠಿನ ಶಿಕ್ಷೆ ದೊರೆವುದೆಂದು ನನಗೆ ವಿಶ್ವಾಸವಿದೆ. ಇನ್ನು ಕೆಲವರ್ಷಗಳ ತನಕ ಈತನ ಬಾಧೆ ಈ ಊರಿಗೆ ತಗಲದು” ಎಂದು ಗಾಡಿಯವನೆಂದುದಕ್ಕೆ ರಾಯರು ನಕ್ಕರು. + +ಗಾಡಿಯು ಬೆಳಗಾಗುವ ಹೊತ್ತಿಗೆ, ಮಂಗಳೂರಿಂದ ನಾಲ್ಕು ಮೈಲು ದೂರವಾಗಿದ್ದಿತು. ಅದು ಉಷಃಕಾಲ. ರಾತ್ರಿಯಲ್ಲಿ ನಿದ್ದೆ ಇರಲಿ, ಇಲ್ಲದಿರಲಿ, ಈ ಮುಹೂರ್ತದ ತಂಗಾಳಿ ಎಂತಹವನಲ್ಲೂ ನವಚೇತನವನ್ನುಂಟುಮಾಡುವುದು. ನಕ್ಷತ್ರಗಳು ಒಂದೊಂದಾಗಿ ಅಡಗತೊಡಗಿದುವು. ಪ್ರಾತಃಸ್ಮರಣೆಗೆ ಪಂಚಪತಿವ್ರತೆಯರ ಸ್ತೋತ್ರವಾಗಲೆಂದೇನೋ, ಹಕ್ಕಿಗಳಲ್ಲಿ ಒಂದು ‘ಸೀ-ತಾ’ ಎನ್ನುವುದು; ಆಗ ಕೇಳಿಸುವುವೆಲ್ಲವೂ ಪಂಚಮಸ್ವರಗಳ ಇಂಚರಗಳೇ. ದೂರದಲ್ಲಿರುವ ಆ ಕಡಲನ್ನು ನೋಡಿರಿ; ಆಕಾಶವು ಕೆಳಕ್ಕಿಳಿಯುತ್ತ ಬಂದಂತೆ, ವಾಯುರೂಪದಿಂದ ದ್ರವರೂಪವಾಯಿತೋ ಎನ್ನಿಸುವಂತಿದೆ. ಮೋಡಗಳನ್ನು ನೋಡಿರಿ; ಯಾವ ಯಾವ ಸ್ವರ್ಗ ವಾಸಿಗಳು ರಾತ್ರಿಯಲ್ಲಿ ಪವಡಿಸಿದ ಹಾಸುಗೆಗಳೋ ಎನ್ನುವಂತಿದೆ. ಸೂರ್ಯಕಿರಣಗಳು ಬೆಳ್ಳಗಾಗಿ ತೋರುವುವಾದರೆ, ಈ ಮೋಡಗಳಲ್ಲಿ ಆ ಬಿಳುಪಿನೊಳಗೆ ಸೇರಿರುವ ಇತರ ಬಣ್ಣಗಳೆಲ್ಲ ಒಂದೊಂದಾಗಿ ಕ್ಷಣಕ್ಕೊಮ್ಮೆ ತೋರುತ್ತಿವೆ. ಭೂಮಿಯು ನಿರ್ಜೀವ ಪದಾರ್ಥ, ಜಡ ಮಣ್ಣು ಎಂದು ಹೇಳುವವರು ಬೆಳಗ್ಗಿನ ಜಾವದಲ್ಲಿ ಅವಳ ಸೊಬಗನ್ನು ಕಂಡರೆ, ಅವಳಲ್ಲಿ ಚೇತನವು ಮಿತಿಮೀರಿರುವುದರಿಂದಲೇ ವಿರುದ್ಧ ಭಾವದಿಂದ ಜಡವಾಗಿ ಕಾಣುವಳೋ ಎಂದು ಭಾಸವಾಗುವಂತಿದೆ. ಸೂರ್ಯನನ್ನು ಬರಿಗಣ್ಣಿಂದ ನೋಡಬೇಕಾದರೆ ಆಗ ತಾನೇ. ಮನುಷ್ಯನ ಮಹತ್ವವು ಆಗಣ ಆತನ ನೆರಳಲ್ಲೇ ವ್ಯಕ್ತ, ಅದೆಷ್ಟು ದೂರ! ಎಷ್ಟು ಭೂಭಾಗವನ್ನೂ ಇತರ ಸೃಷ್ಟಿಪದಾರ್ಥಗಳನ್ನೂ ತನ್ನ ಆಶ್ರಯದಲ್ಲಿ ಇರಗೊಡಿಸಬಲ್ಲುದು! ಸೃಷ್ಟಿಯ ಸೊಬಗು, ಮನುಷ್ಯನ ಮಹತ್ವ, ವಿಶ್ವದಲ್ಲಿನ ಪ್ರತಿಯೊಂದರಲ್ಲಿರುವ ಚೇತನದ ಪ್ರಕಾಶ, ಜೀವನದ ಉದ್ದೇಶ, ಎಲ್ಲವನ್ನೂ ಪ್ರಾತಃಕಾಲದಲ್ಲಿ ಪಂಚಭೂತಗಳು ಮೌನವಾಗಿ ಸಾರದೆ ಇಲ್ಲ. ಬ್ರಹ್ಮಜ್ಞಾನಿಗಳೂ ಧರ್ಮಪ್ರಾಣರೂ ಇಂತಹ ಪ್ರಾತಃಕಾಲದಲ್ಲಿ, ಎಷ್ಟೇ ಗಾಢನಿದ್ರೆಯು ಆಗ ಅವರಿಗೆ ಅವಶ್ಯಕವಾಗಿದ್ದರೂ, ಎಚ್ಚತ್ತುಕೊಳ್ಳದೆ ಇರಲಾರರು. ರಾಯರೂ ಅವರ ತೀರ್ಥರೂಪರೂ ರಾಮನಾಮಸ್ಮರಣೆಯೊಡನೆ ಕಣ್ತೆರೆದೆದ್ದು ಕೂತರು. + +ಗಾಡಿಯವನು : “ಸ್ವಾಮಿ, ಸುಖ ನಿದ್ದೆ ಮಾಡಿದಿರಾ?’’ಇಬ್ಬರೂ : “ಹೌದು, ನಿನ್ನ ಉಪಕಾರ.’’ಗಾಡಿಯವನು : “ಉಪಕಾರದ ಮಾತಿರಲಿ. ಗಾಡಿಯವನ ಕೆಲಸವೇ ಇಷ್ಟು. ಅಷ್ಟೇ ಮಾಡಿದೆನು. ರಾಯರು ತಂದ ಗಾಡಿಯವನು ಗಾಡಿಯವನಲ್ಲ. ತಮ್ಮನ್ನು ಆತನು ಪಠೇಲರಲ್ಲಿಗೇತಕ್ಕೆ ಕೊಂಡೊಯ್ಯಲಿಲ್ಲ? ಈಗ, ಆ ಕೇಡಿಯ ಮೇಲೆ ಆಗುವ ಮೊಕದ್ದಮೆಯಲ್ಲಿ ಕೆಲ ತಿಂಗಳು ಅತ್ತಿತ್ತ ಓಡಾಡುತ್ತ ಇರಲಿ. ಹಃ! ಹಃ!’’ + +ರಾಯರು : “ಇನ್ನೆಷ್ಟಿದೆ ಮಂಗಳೂರಿಗೆ?’’ಗಾಡಿಯವನು : “ಇಲ್ಲೇ, ನಾಲ್ಕು ಮೈಲು, ಒಂದು ತಾಸಿನ ದಾರಿ.’’ರಾಯರು : “ಅಲ್ಲಿಗೆ ಸೂರ್ಯೋದಯಕ್ಕೆ ಸರಿಯಾಗಿ ತಲಪುವಂತಾಯ್ತು.’’ಗಾಡಿಯವನು : “ಆದರೆ, ಸ್ವಾಮಿ, ನಾನು ಮಾತ್ರ ಆ ‘ಗೇಟ’ನ್ನು ದಾಟಿ ಮಂಗಳೂರಿಗೆ ಬರಲಾರೆ.’’ರಾಯರು : “ಗೇಟಿನ ‘ಫೀಸ’ನ್ನು ನಾವು ತೆರುತ್ತೇವೆ.’’ + +ಗಾಡಿಯವನು : “ಫೀಸಿಗಾಗಿ ಅಲ್ಲ, ನನಗೆ ಅಲ್ಲಿಗೆ ಹೋಗಲು ಆತಂಕವಿದೆ. ನಾನು ನಿನ್ನೆ, ನೀವು ಹೋಗಬೇಕಾಗಿದ್ದ ಆ ಪಠೇಲರಲ್ಲೇ, ಗಾಡಿಯೊಡನೆ ಇರಬೇಕಾಗಿತ್ತು. ಈ ಗಾಡಿ ಅವರದು. ನಮ್ಮೂರಿನಿಂದ ಅವರ ಮನೆಗೇ ಈ ಗಾಡಿಯಲ್ಲೇ ನಾನು ರಾತ್ರಿಯಲ್ಲಿ ತಲಪಿದ್ದರೆ ನನಗೆ ಹೆಚ್ಚಿನ ಪ್ರಯೋಜನವಿತ್ತು.’’ + +ರಾಯರು : “ಅದೆಷ್ಟು, ಅದೆಷ್ಟು? ಅದರ ಇಮ್ಮಡಿ ನಾನೇ ಕೊಡುವೆನು.’’ಗಾಡಿಯವನು : “ಹಣದ ಮಾತೇ ಅಲ್ಲ. ಅದು ಬೇರೆ; ಈಗ, ನಾನು ತಮ್ಮನ್ನು ಈ ಗಾಡಿಯಲ್ಲಿ ಕೂಡ್ರಿಸಿ, ಇಲ್ಲಿಯತನಕ ತಂದು ಮುಟ್ಟಿಸಿದುದಕ್ಕೂ, ದಾರಿಯಲ್ಲಿ ಆ ಕೇಡಿ ಬೊಗ್ಗುವಿನಿಂದಾದ ವಿಪತ್ತಿನಲ್ಲಿ ನಾನು ತಮಗೆ ನೆರವಾದುದಕ್ಕೂ, ಪಠೇಲರಿಗೆ ಒಂದು ಪತ್ರ ಬರೆದುಕೊಟ್ಟರೆ ಸರಿ. ಗಾಡಿಯ ಬಾಡಿಗೆ ಕೊಟ್ಟುದರಲ್ಲಿ, ಗಾಡಿಯ ಯಜಮಾನರಾದ ಆ ಪಠೇಲರಿಗೆಷ್ಟು ಎಂದು ತಿಳಿಸಿರಿ. ಉಳಿದುದೆಲ್ಲ ಈ ಎತ್ತುಗಳಿಗೆ! ನನಗೆ ಒಂದು ಕಾಸೂ ಅಗತ್ಯವಿಲ್ಲ.’’ + +ರಾಯರು ಅವಾಕ್ಕಾದರು. ಇವನಿಗೆ ಬೇಕಾದಂತೆ ಪತ್ರ ಬರೆದು ಕೊಟ್ಟರು. ಐದು ರೂಪಾಯಿಗಳು ಬಾಡಿಗೆಗೆ; ಒಂದು ರೂಪಾಯಿ ಎತ್ತುಗಳಿಗೆ, ತಮ್ಮದೊಂದು ದುಪ್ಪಟಿ ಗಾಡಿಯವನಿಗೆ, ಕೊಟ್ಟಾಯಿತು. + +ಅಷ್ಟರಲ್ಲಿ ಮಂಗಳೂರಿಗೆ ಹೋಗುವ ಗಾಡಿಗಳು ಒಂದೊಂದಾಗಿ ಬರ ಹತ್ತಿದುವು. ಅವುಗಳಲ್ಲಿ ಒಂದನ್ನು ರಾಯರಿಗಾಗಿ ಬಾಡಿಗೆಗೆ ನಿಷ್ಕರ್ಷಿಸಿ, ಗಾಡಿಯವನು ಇಬ್ಬರಿಗೂ ನಮಸ್ಕಾರ ಮಾಡಿ, ತಾನು ಬಂದ ದಾರಿಯಲ್ಲೇ ಹಿಂತಿರುಗಿದನು. + +ಯಥಾ ಕಾಲದಲ್ಲಿ ರಾಯರು ಮಂಗಳೂರಿಗೂ, ಅಲ್ಲಿಂದ ತಮಗೆ ವರ್ಗವಾದ ಊರಿಗೂ ತಲುಪಿದರು. ಕವಚಿಬಿದ್ದ ಗಾಡಿಯಲ್ಲಿ ಕಟ್ಟಿಕ್ಕಿದ ಕೇಡಿಗೆ ಏಳು ವರ್ಷದ ಕಠಿನ ಸಜೆಯಾಯಿತು. ಆ ಮೊಕದ್ದಮೆಯ ವಾರ್ತೆಯನ್ನು ಪತ್ರಿಕೆಯಲ್ಲಿ ರಾಯರು ಓದಿದರು. + +ಆಗ ತಾನೇ ಅವರಿಗೆ ಗೊತ್ತು, ತಮ್ಮನ್ನು ‘ಕೇಡಿ ಬೊಗ್ಗು’ ಎಂಬವನ ಬಾಯಿಯಿಂದ ತಪ್ಪಿಸಿ, ಮಂಗಳೂರಿಗೆ ತಲಪಿಸಿದ ಎರಡನೆಯ ಗಾಡಿಯವನು, ಅಂದಿನ ರಾತ್ರಿಯೊಳಗೆ ಆವೂರ ಪಠೇಲರಲ್ಲಿ ತನ್ನ ವಸತಿಯ ಹಾಜರಿ ಕೊಡಬೇಕಾಗಿದ್ದ, ಕಣ್ಣಾನೂರಿನಿಂದ ಬಿಡುಗಡೆ ಹೊಂದಿದ ಬೊಗ್ಗು ಮಹಾಶಯನೆಂದು! + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_423.txt b/Kenda Sampige/article_423.txt new file mode 100644 index 0000000000000000000000000000000000000000..83516aabf33dc4bb1238c9768d4846cc1f4f2337 --- /dev/null +++ b/Kenda Sampige/article_423.txt @@ -0,0 +1,91 @@ + + + + +ಪಡುಗೆರೆಯೆಂಬ ಮಲೆನಾಡಿನ ಮೂಡಣದಲ್ಲಿ ಆಗಷ್ಟೆ ನಿಧಾನಕ್ಕೆ ರಂಗು ಮೂಡುತ್ತಿತ್ತು. ಬೆಟ್ಟಸಾಲುಗಳು, ಕಾಫಿ, ಅಡಿಕೆ ತೋಟಗಳ ಅಂಚಿನ ಗದ್ದೆಯ ನಡುವೆ ಸಾಗಿದ್ದ ಕಾಲುದಾರಿಯಲ್ಲಿ ನಡೆದು ಹೋಗುತ್ತಿದ್ದ ಅಣ್ಣಪ್ಪ, ಅಕ್ಷಯ ಚೆಲುವಿನ ನಿಸರ್ಗ ಚಿತ್ರಣ ಸುತ್ತಮುತ್ತ ಚೆಲ್ಲಾಡಿದ್ದರೂ ಗಮನಿಸುವ ಮನಸ್ಥಿತಿಯಲ್ಲಿರಲಿಲ್ಲ. ನಿನ್ನೆ ರಾತ್ರಿ ಮಲಗುವಾಗಲೇ ‘ಬೆಳಿಗ್ಗೆ ಎದ್ದಿದ್ದು ನಂಜೆಗೌಡ್ರು ಮನಿಗೆ ಹೋಗ್ ಬರ್ಬೇಕು. ಎಷ್ಟ್ ಆದ್ರೂ ಹತ್ ಹದಿನೈದು ವರ್ಷ ಅವ್ರು ತೋಟದಲ್ಲಿ ದುಡ್ದಿದ್ದು ಅವ್ರಿಗ್ ಮರ್ತ್ ಹೋಗಿರಕ್ಲಾ’ ಎಂದು ಮನದಲ್ಲೆ ಅಂದುಕೊಂಡವನು ಬೆಳಿಗ್ಗೆ ಮುಂಚೆಯೇ ಮುಖ ತೊಳೆಯುವ ಶಾಸ್ತ್ರ ಮಾಡಿ ಬರಗಾಫಿ ಹೀರಿ ನಂಜೆಗೌಡರ ಮನೆಗೆ ಕಾಲುದಾರಿಯಲ್ಲಿ ಹೊರಟಿದ್ದ. + +ನಿಧಾನಕ್ಕೆ ಬೆಳಗಾಗಿ ಬೆಳಕಾಗುತ್ತಿದ್ದಂತೆ ಹಸಿರ ಒಡಲಿನಿಂದ ಹಕ್ಕಿಗಳ ಕೂಗು ಕೇಳತೊಡಗುತ್ತಾ ಅಲ್ಲೊಂದು ಇಲ್ಲೊಂದು ಕಾಡುಕೋಳಿಗಳು ಪರಸ್ಪರ ಪೈಪೋಟಿ ನೀಡುವಂತೆ ಕೂಗತೊಡಗಿದ್ದವು. ಗದ್ದೆಸಾಲುಗಳು ಮುಗಿದು ತೋಟಕ್ಕೆ ದಾಟುವ ಬೇಲಿಗೇಟಿನ ಮೂಲಕ ಕಾಫಿತೋಟದ ನಡುವೆ ಸಾಗಿದ್ದ ಕಾಲುದಾರಿಯಲ್ಲಿ ಅಣ್ಣಪ್ಪ ಸಾಗುತ್ತಿದ್ದಂತೆ ಆಗಷ್ಟೆ ಬಿರಿದು ಕಂಪು ಬೀರುತ್ತಿದ್ದ ಕಾಫಿ ಹೂವಿನ ಕಂಪು ಮೈಮನದೊಳಗೆ ನವೋಲ್ಲಾಸ ಮೂಡಿಸುವಂತಿದ್ದರೂ, ಅವುಗಳನ್ನು ಗಮನಿಸುವ ಸ್ಥಿತಿಯಲ್ಲಿರಲಿಲ್ಲ ಅಣ್ಣಪ್ಪನ ಮನಸ್ಸು. + +ಬೆಳ್ಳಂಬೆಳಗೆ ಕಾಲುದಾರಿಯಲ್ಲಿ ಸಾಗುತ್ತಿದ್ದ ಅಣ್ಣಪ್ಪನಿಗೆ ಪ್ರಯಾಣದೊಡನೇ ಮೌನವೂ ಹೆಜ್ಜೆ ಹಾಕುತ್ತಿತ್ತು. ಆ ಮೌನ, ಯೋಚನೆಯ ಖಜಾನೆಯ ಕೀಲಿಕೈಯಂತಾಗಿ ಮೊಗೆದಷ್ಟು ಯೋಚನೆಗಳು ಅಣ್ಣಪ್ಪನ ಚಿತ್ತದೊಳಗೆ ನುಸುಳತೊಡಗಿದವು. + +ಪಡುಗೆರೆಯ ನಂಜೆಗೌಡರು ಇದ್ದ ಮೂವರು ಅಣ್ಣತಮ್ಮಂದಿರ ನಡುವೆ ಆಸ್ತಿ ಪಾಲಾದ ನಂತರ ತಮ್ಮ ಪಾಲಿಗೆ ಬಂದ ಕಾಫಿ, ಅಡಿಕೆತೋಟ ಮತ್ತು ಗದ್ದೆಗಳನ್ನು ನೋಡಿಕೊಳ್ಳಲು ಒಕ್ಕಲೊಂದು ಬೇಕೆಂದು ಮೇಸ್ತ್ರಿ ಶೇಷಪ್ಪನಿಗೆ ಹೇಳಿದ ಮೇಲೆ ‘ಚಿಗಿರು ಕಸಿಯಿಂದ ಹಿಡ್ದು ಗದ್ದಿ ಕುಯ್ಲು ಮಾಡಾ ತನಕ ಎಲ್ಲಾ ಕೆಲ್ಸನ್ನೂ ಗೊತ್ತೀತೆ. ಇಂಥದ್ ಬರಕ್ಲಾ ಅನ್ನಂಗಿಲ್ಲ. ಕಾಫಿಗಿಡ್ಗಳನ್ನ ತಮ್ಮ ಮಕ್ಳುಮರಿ ನೋಡ್ದಂಗ್ ನೋಡ್ಕತ್ತವೆ’ ಎಂದು ಶೇಷಪ್ಪ, ಪಕ್ಕದ ಕೆಳ್ಳಳ್ಳಿಯ ಅಣ್ಣಪ್ಪನ ಕುಟುಂಬವನ್ನು ತೋಟದ ಲೈನುಮನೆಗೆ ತಂದು ಬಿಟ್ಟಿದ್ದ. + +ಅಣ್ಣಪ್ಪ ತನ್ನ ತಂದೆಯಿಂದ ಕಲಿತ ತೋಟದ ಕೆಲಸದ ಕೌಶಲ್ಯದಿಂದ ಕೆಲವೆ ದಿನಗಳಲ್ಲಿ ಗೌಡರ ಮೆಚ್ಚುಗೆಗೆ ಪಾತ್ರನಾದ. ಎಷ್ಟರ ಮಟ್ಟಿಗೆಂದರೆ ತೋಟಕ್ಕೆ ಯಾವ ಸಮಯಕ್ಕೆ ಗೊಬ್ಬರ ಹಾಕಬೇಕು, ಕಸಿ ಮಾಡಬೇಕು. ಗದ್ದೆ ಕುಯ್ಲಿಗೆ ಯಾವ ತಳಿ ಹಾಕಿದರೆ ಸರಿ ಎನ್ನುವುದನ್ನು ನಂಜೆಗೌಡರೇ ಅಣ್ಣಪ್ಪನ ಬಳಿ ಕೇಳಿ ನಂತರ ಕೆಲಸ ಮಾಡಿಸುತ್ತಿದ್ದರು. ಅಣ್ಣಪ್ಪ ತೋಟದ ಕೆಲಸವನ್ನು ತನ್ನದೇ ಕೆಲಸವೆನ್ನುವಂತೆ ಕಾಳಜಿ ವಹಿಸಿ ಮಾಡುತ್ತಿದ್ದದ್ದೂ ಅಣ್ಣಪ್ಪ ಮತ್ತು ನಂಜೆಗೌಡರ ನಡುವೆ ವಿಶ್ವಾಸ ಬೆಳೆಯಲು ಮುಖ್ಯ ಕಾರಣವಾಗಿತ್ತು. + +ಕೃಷಿ ಸಮಾವೇಶ, ಸಾವಯವ ವಿಚಾರ ಸಂಕಿರಣ ಎಂದು ವಾರಗಟ್ಟಲೆ ಹೊರಗೆ ಹೋಗುತ್ತಿದ್ದ ನಂಜಗೌಡರು ಅಣ್ಣಪ್ಪನಿಗೆ ತೋಟದ ಕೆಲಸದ ಉಸ್ತುವಾರಿಯನ್ನು ವಹಿಸಿ ಹೋಗುತ್ತಿದ್ದರು. ಅಣ್ಣಪ್ಪನ ಮೊದಲ ಮಗಳ ಮದುವೆಯನ್ನು ನಂಜೆಗೌಡರೆ ಮುಂದೆ ನಿಂತು ಮಾಡಿದ್ದರು. ಇಂತಿದ್ದ ಅಣ್ಣಪ್ಪ ಮತ್ತು ನಂಜೇಗೌಡರ ಆಳು ಮತ್ತು ಧಣಿಯ ಸಂಬಂಧ ಮುರಿದುಬೀಳಲು ಕೆಲವು ಘಟನೆಗಳು ಕಾರಣವಾದವು. + +**************** + +ಮೇಸ್ತ್ರೀ ಶೇಷಪ್ಪ, ಮಲೆನಾಡಿನ ಕಾಫಿತೋಟಗಳಿಗೆ ಜನಗಳನ್ನು ಬಿಡುವ, ಕಾಫಿ ಕುಯ್ಲಿನ ಸಂದರ್ಭದಲ್ಲಿ ಬಯಲುಸೀಮೆಯಿಂದ ತೋಟದಾಳುಗಳನ್ನು ಕರೆ ತರುವ ಕೆಲಸ ಮಾಡುತ್ತಿದ್ದ. ಮುಂಚೆಯೆಲ್ಲಾ ಕಾಫಿ ಕುಯ್ಲು ಪ್ರಾರಂಭವಾಗುವ ಮುನ್ನ ಕಾಫಿ ತೋಟಗಳ ಮಾಲೀಕರ ‘ಬಂಗಲೆ’ಮನೆಗಳ ಮುಂದೆ ಕಾದು ನಿಂತು ಮುಂಗಡ ಪಡೆದು ತೋಟಕ್ಕೆ ಜನ ಬಿಡುತ್ತಿದ್ದ ಶೇಷಪ್ಪ, ಈಗ ಸ್ವಸಹಾಯ ಸಂಘಕ್ಕೆ ಸೇರಿ ಸಾಲ ಪಡೆದು ಸ್ವಂತ ಆಟೋ ಕೊಂಡಿದ್ದ. ಪ್ರತಿದಿನ ಅದೇ ಆಟೋದಲ್ಲಿ ತೋಟದಾಳುಗಳನ್ನು ತೋಟಕ್ಕೆ ಬಿಡುವ ಸಂಜೆ ಕರೆದ್ಯೊಯುವ ಕೆಲಸ ಮಾಡುತ್ತಿದ್ದ. ಇತ್ತೀಚ್ಚೆಗೆ ತೋಟದಾಳುಗಳು ಸಿಗುವುದೇ ಕಷ್ಟವಾದಾಗ ತೋಟದ ಮಾಲೀಕರೆಲ್ಲಾ ಶೇಷಪ್ಪನನ್ನು ಹುಡುಕಿಕೊಂಡು ಬರಲು ಪ್ರಾರಂಭಿಸಿದರು. + +ಯಾವಾಗ ತೋಟದಾಳುಗಳಿಗೆ ಬೇಡಿಕೆ ಬರಲು ಪ್ರಾರಂಭವಾಯಿತೊ ಶೇಷಪ್ಪ ತಾನೂ ಈ ಮುಂಚೆ ತೋಟಗಳಿಗೆ ಬಿಟ್ಟಿದ್ದ ಆಳುಗಳನ್ನು ಹೆಚ್ಚಿನ ಸಂಬಳದ ಆಸೆ ತೋರಿಸಿ ಅಥವಾ ಇನ್ಯಾವುದೋ ಆಮಿಷ ಒಡ್ಡಿ ಹೆಚ್ಚು ಕಮಿಷನ್ ಕೊಡುವ ತೋಟಗಳಿಗೆ ಬಿಡುತ್ತಿದ್ದ. ಕೆಲ ಆಳುಗಳು ತಾವು ಹಲವು ವರ್ಷಗಳಿಂದ ಇದ್ದ ತೋಟವನ್ನು ಬಿಟ್ಟು ಬರಲು ಒಪ್ಪದೆ ಇದ್ದಾಗ ತನ್ನ ಮಾತಿನ ಜಾಣತನದಿಂದ ‘ನಿಮ್ ಒಳ್ಳೆದಕ್ಕೆ ನಾನ್ ಹೇಳೋದು, ಈ ತ್ವಾಟ್ದಲ್ಲಿ ಎಷ್ಟ್ ವರ್ಷ ದುಡ್ದ್ರೂ ಇದೇ ಕತೆ, ಎಷ್ಟ್ ವರ್ಷ ಅಂತ ಲೈನ್ ಮನೆಲ್ಲಿರ್ತೀರಿ. ಒಂದ್ ಬಾಡಿಗೆ ಮನೆ ಮಾಡ್ಕಂಡ್ ಇರಿ. ನಿಧಾನಕ್ಕೆ ಸ್ವಂತ ಮನೆ ಕಟ್ಟಿರಾಯ್ತು. ಪಂಚಾಯ್ತಿಲ್ಲಿ ಮನೆ ಮಾಡ್ಕೊಡೋ ಜಬಾದಾರಿ ನಂದು. ಒಂದ್ ಮನೆ ಅಂತಾದ್ ಮೇಲೆ ಒಂದೆ ತ್ವಾಟಕ್ಕೆ ಕೆಲ್ಸಕ್ ಹೋಗ್ ಬೇಕು ಅಂತೆನೂ ಇಲ್ಲ. ಯಾರ್ ತ್ವಾಟಕ್ ಬೇಕಾರ್ ಹೋಗ್ಬೋದು. ಒಳ್ಳೆ ಸಂಬಳಾನೂ ಸಿಕ್ತಿತ್ತೇ. ವಾರ ವಾರ ಕರೆಕ್ಟ್ ಬಟವಾಡಿ ಕೊಡ್ತಾರೆ’ ಎಂದೇಳಿ ಆ ತೋಟದಿಂದ ಬರುವಂತೆ ಮಾಡುತ್ತಿದ್ದ. + +ಬೆಂಗಳೂರು ಮೂಲದ ಟೆಕ್ಕಿ ವಿಕಾಸ್, ಮಲೆನಾಡಿನ ರೆಸಾರ್ಟವೊಂದಕ್ಕೆ ಬಂದ ವೇಳೆ ಇಲ್ಲಿನ ನಿಸರ್ಗಸೌಂದರ್ಯಕ್ಕೆ ಮನಸೋತು, ಕಾಡಿಗೆ ಹೊಂದಿಕೊಂಡಂತಿರುವ ಕಾಫಿತೋಟವನ್ನು ಕೊಂಡು ತೋಟದ ನಡುವೆ ಮನೆಯೊಂದನ್ನು ಕಟ್ಟಿ ತಿಂಗಳಿಗೊಮ್ಮೆಯೊ, ಆರು ತಿಂಗಳಿಗೊಮ್ಮೆಯೊ ಬೆಂಗಳೂರಿನ ಗೆಳೆಯರೊಂದಿಗೆ ಬರುತ್ತಿದ್ದ. ತೋಟದ ಮನೆ ನೋಡಿಕೊಳ್ಳಲು ಕೆಲಸಗಾರ ಕುಟುಂಬವೊಂದು ಬೇಕೆಂದು ವಿಕಾಸ್, ಶೇಷಪ್ಪಣನಿಗೆ ಹೇಳಿದಾಗ ಮಲೆನಾಡಿನ ತೋಟದಾಳುಗಳಿಗೆ ನೀಡುವ ಕೂಲಿಯ ಅಂದಾಜಿಲ್ಲದ ಟೆಕ್ಕಿ ವಿಕಾಸ್ ಬಳಿ ಹೆಚ್ಚಿನ ಹಣ ವಸೂಲಿ ಮಾಡಬಹುದೆಂಬ ದುರಾಲೋಚನೆ ಬಂದ ಶೇಷಪ್ಪ ಸೀದಾ ನಡೆದಿದ್ದು ನಂಜೆಗೌಡರ ತೋಟದ ಲೈನುಮನೆಗೆ. + +ಬೆಂಗಳೂರು ಮೂಲದ ಟೆಕ್ಕಿ ಕೊಂಡ ತೋಟದ ಮನೆ ನೋಡಿಕೊಳ್ಳಲು ಅಣ್ಣಪ್ಪಣ್ಣ ಕುಟುಂಬ ಸಮೇತನಾಗಿ ಬರಬೇಕೆಂದು ಶೇಷಪ್ಪ ಹೇಳಿದಾಗ ಅಣ್ಣಪ್ಪಣ ಆ ಆಹ್ವಾನವನ್ನು ಸಕಾರಣವಾಗಿಯೇ ನಿರಾಕರಿಸಿದ. ಯಾಕೆಂದರೆ ನಂಜೆಗೌಡ ಮತ್ತು ಅಣ್ಣಪ್ಪಣ್ಣನ ಧಣಿ ಮತ್ತು ಆಳಿನ ಸಂಬಂಧ ದುಡಿದು ಕೂಲಿ ತೆಗೆದುಕೊಳ್ಳುವ ವ್ಯವಹಾರಕ್ಕೆ ಮಾತ್ರ ಸೀಮಿತವಾಗದೇ ವಿವರಣೆಗೆ ನಿಲುಕದ ಭಾವನಾತ್ಮಕ ಸಂಬಂಧವೊಂದು ಅವರ ನಡುವೆ ಬೆಳೆದಿತ್ತು. ಅದಲ್ಲದೇ ಇಷ್ಟು ವರ್ಷ ಕೆಲಸ ನೀಡಿದ ಧಣಿಗಳ ಬಳಿ ನಾನು ಬೇರೆಡೆಗೆ ಹೋಗುತ್ತೇನೆ ಎಂದು ಯಾವ ಬಾಯಿಯಿಂದ ಕೇಳುವುದು? ಒಂದು ವೇಳೆ ಹಾಗಂದರೆ ಅವರೆಷ್ಟು ನೊಂದುಕೊಳ್ಳಬಹುದು ಎಂದು ಅಣ್ಣಪ್ಪಣ ಶೇಷಪ್ಪಣನಿಗೆ ಬೇರೆ ಎಲ್ಲಿಯಾದರೂ ಜನ ನೋಡುವಂತೆ ಹೇಳಿ ಕಳಿಸಿದ್ದ. + +ಆದರೆ ಮರುಮಾತನಾಡದೆ ಹಿಡಿದ ಕೆಲಸವನ್ನು ತನ್ನ ಮನೆಯ ಕೆಲಸ ಎನ್ನುವಂತೆ ಮಾಡುವ, ಅಣ್ಣಪ್ಪಣ್ಣನಂಥ ಆಳನ್ನು ಮತ್ತೆಮತ್ತೆ ನೆನಪಿಸಿಕೊಂಡರೂ ಬೇರ್ಯಾರ ಹೆಸರು ಹೊಳೆಯಲಿಲ್ಲ. ಹಾಗೆ ಕೆಲ ತೋಟದಾಳುಗಳಿದ್ದರೂ ಅವರನ್ನು ನಂಬಿ ಟೆಕ್ಕಿಯ ತೋಟದ ಮನೆಯ ಜವಾಬ್ದಾರಿ ವಹಿಸುವಂತೆಯೂ ಇರಲಿಲ್ಲ. ತೋಟದ ಕಾಫಿ, ಮೆಣಸು ಮಾರುವುದು, ಧಣಿಗಳ ಮನೆಯ ವಸ್ತುಗಳನ್ನು ಕದ್ದು ಮಾರುವುದು ಇವೇ ಕೆಲಸಗಳಲ್ಲಿ ಪ್ರವೀಣರಾಗಿದ್ದ ಅವರನ್ನು ತೋಟದಮನೆ ನೋಡಿಕೊಳ್ಳಲು ಬಿಡುವುದು ಸರಿ ಎನಿಸಲಿಲ್ಲ. ಶೇಷಪ್ಪ ತನ್ನ ಪ್ರಯತ್ನ ಬಿಡದೆ ಅಣ್ಣಪ್ಪಣನ ಹೆಂಡತಿ ಗೌರಿಯ ಮೂಲಕ ತನ್ನ ಪ್ರಯತ್ನ ಮುಂದುವರಿಸಿದ. + + + +‘ನೋಡ್ ಗೌರಕ್ಕ. ಅಣ್ಣಪ್ಪಂಗೆ ಹೇಳಿರೇ ಅರ್ಥ ಆಗಾಕ್ಲ. ಗೌಡ್ರು ಅವ್ರ ತ್ವಾಟ, ಗದ್ದಿಗೆ ಜನ ಬೇಕು ಅಂತ ಅಣ್ಣಪ್ಪಣನ ವಿಶ್ವಾಸ್ದಲ್ಲಿ ಇಟ್ಕಂಡಾರೆ. ಎಷ್ಟ್ ದಿನ ಅಂತ ಈ ಲೈನ್ ಮನಿಲ್ ಇರ್ತಿರಿ. ಬೆಂಗಳೂರ್ ಕಡೆರೋ ಒಬ್ರು ತ್ವಾಟ ಮಾಡ್ಯಾರೆ. ಅಲೆನ್ ಅಂತ ದೊಡ್ ಕೆಲ್ಸ ಇಲ್ಲ. ನೀವ್ ಗಂಡ ಹೆಂಡ್ತಿ ಇಬ್ರುವೆ ತ್ವಾಟಾ ಮನಿಕಡಿಗ್ ನೋಡ್ಕಂಡ್ ಗಿಡ್ಗಳಿಗೆ ಕಸಿ ಚಿಗ್ರು ತೆಗ್ದಕಂಡ್ ಇದ್ರೆ ಸಾಕ್. ಒಳ್ಳೆ ಸಂಬ್ಳನೇ ಕೊಡ್ತಾರೆ. ತ್ವಾಟದ್ ಮನೀಲೆ ಇರ್ಬೋದು. ಕರೆಂಟ್ ನೀರು ಎಲ್ಲ ಇದೆ. ಈ ತರ ಮತ್ತೇಲ್ ಸಿಕ್ತದೇ ನೀನೇ ಹೇಳು?’ ಎಂದು ಶೇಷಪ್ಪ ಹೇಳಿದಾಗ ಗೌರಿಗೆ ಶೇಷಪ್ಪ ಹೇಳುವುದರಲ್ಲಿಯೂ ಸತ್ಯವಿದೆ ಎನಿಸಿತ್ತು. + +ಈ ಮುಂಚೆ ಲೈನುಮನೆಯಲ್ಲೇ ಇದ್ದ ಸದಾನಂದನ ಕುಟುಂಬ ಅದೇ ಊರಿನ ಕಂಪನಿ ಕಾಫಿ ಎಸ್ಟೇಟಿಗೆ ಸೇರಿ ಸ್ವಂತ ಮನೆಯನ್ನು ಕಟ್ಟಿ ಮಗನಿಗೆ ಬೈಕ್ ತೆಗೆದುಕೊಟ್ಟು ಚಂದವಾಗಿ ಬದುಕು ಕಟ್ಟಿಕೊಂಡಿರುವಾಗ, ನಂಜೇಗೌಡರ ತೋಟದಲ್ಲಿ ಅಣ್ಣಪ್ಪಣನ ಜೊತೆಗೆ ಕೆಲಸ ಮಾಡುತ್ತಿದ್ದ ರಾಜೇಶ, ಮರಗಸಿ ಕೆಲಸ ಮಾಡುತ್ತಲ್ಲೆ ಸಣ್ಣದಾಗಿ ಟಿಂಬರ್ ಬಿಸಿನೆಸ್ ಶುರುಮಾಡಿ ಸ್ವಂತ ಲಾರಿ ಕೊಂಡು ನಂಜೇಗೌಡರ ತೋಟದಲ್ಲಿಯೇ ಮರ ವಹಿಸಿಕೊಂಡು ಮರದ ದಿಮ್ಮಿಗಳನ್ನು ತನ್ನ ಲಾರಿಯಲ್ಲಿಯೆ ತುಂಬಿಸಿಕೊಂಡು ಹೋಗುವ ಮಟ್ಟಕ್ಕೆ ಬೆಳೆದಿರುವಾಗ ನಾವ್ಯಾಕೆ ಹೀಗೆ ಇರಬೇಕು ಎಂದು ಈ ಮುಂಚೆಯೇ ಗೌರಿಗೆ ಅನಿಸಿರದೇ ಇರಲಿಲ್ಲ. ಆದರೆ ಗಂಡ ಅಣ್ಣಪ್ಪಣ್ಣನ ಮನಸ್ಸು ಗೊತ್ತಿದ್ದರಿಂದ ಆ ವಿಚಾರವನ್ನು ಪ್ರಸ್ತಾಪಿಸಲು ಹೋಗಿರಲಿಲ್ಲ. + +ಆದರೆ ಯಾವಾಗ ಶೇಷಪ್ಪ ತನ್ನ ಮನದಲ್ಲಿದ ಮಾತಿಗೆ ಪುಷ್ಟಿ ನೀಡುವಂತೆ ಮಾತನಾಡಿದನೋ ಗೌರಿಗೆ ಇನ್ನೂ ಸುಮ್ಮನಿದ್ದು ಪ್ರಯೋಜನವಿಲ್ಲ ಎನಿಸಿ ಗಂಡ ಅಣ್ಣಪ್ಪಣ್ಣ ಸಂಜೆ ಬಂದೊಡನೇ ನಂಜೆಗೌಡರ ತೋಟ ಬಿಡುವ ವಿಚಾರ ತಿಳಿಸಿದಾಗ ಅಣ್ಣಪ್ಪಣ್ಣನೂ ಸುತಾರಂ ಆಗುವುದೇ ಇಲ್ಲ ಎಂದೆ ಹೇಳಿದ್ದ. ಆದರೆ ಮುಂಚಿನಿಂದಲೂ ಮಿತಭಾಷಿಯಾಗಿದ್ದ ಅಣ್ಣಪ್ಪಣ್ಣ ಗೌರಿಯ ಹಠಕ್ಕೆ ಸೋಲಲೇಬೇಕಾಗಿತ್ತು. ಮರುದಿನ ನಂಜೆಗೌಡರಿಗೆ ವಿಷಯ ತಿಳಿಸುವುದು ಹೇಗೆಂದು ಅಣ್ಣಪ್ಪಣ್ಣ ನಂಜೆಗೌಡರ ಬಂಗಲೆ ಕಡೆಗೆ ಹೋಗದೆ ಇದ್ದಾಗ ಗೌರಿಯೆ ನಂಜೆಗೌಡರ ಬಳಿ ತೋಟ ಬಿಡುವ ವಿಷಯ ಹೇಳಿದ್ದಳು. ಈ ವಿಷಯ ಕೇಳಿ ಒಂದು ಕ್ಷಣ ಮೌನವಾದ ನಂಜೆಗೌಡರು ‘ಅಣ್ಣಪ್ಪ್ ಎಲ್ ಹೋದ. ಅವ್ನೆ ಬರಕ್ಕೇಳು. ಮಾತಡಾಣ’ ಎಂದಾಗ, ‘ಅವ್ರೆ ನನ್ನ ಕಳ್ಸಿದ್ದು’ ಎಂದ ಗೌರಿಯ ಮಾತಿಗೆ ಗೌಡರು ಮರು ಮಾತನಾಡದೇ ಕೆಲಸದ ಲೆಕ್ಕ ಮಾಡಿ ಉಳಿದ ಹಣವನ್ನು ಗೌರಿಯ ಕೈಗಿಟ್ಟು ಕಳಿಸಿದ್ದರು. + +ಮೇಸ್ತ್ರಿ ಶೇಷಪ್ಪಣ್ಣ, ಅಣ್ಣಪ್ಪಣ್ಣನ ಕುಟುಂಬವನ್ನು ಟೆಕ್ಕಿ ವಿಕಾಸ್ ನ ತೋಟದಲ್ಲಿ ಬಿಟ್ಟು ಹೋದ ಮೇಲೆ ತೋಟದಮನೆಯ ಹೊಸ ಪರಿಸರದಲ್ಲಿ ಅಣ್ಣಪ್ಪಣ್ಣ ಮತ್ತು ಗೌರಿ ಖುಷಿಯಿಂದಲೇ ಕೆಲಸ ಪ್ರಾರಂಭಿಸಿದ್ದರು. ಗೌರಿ ತೋಟದ ಮನೆಯ ಕೆಲಸಗಳನ್ನು ಮಾಡಿದರೆ ಅಣ್ಣಪ್ಪಣ್ಣ ಮನೆ ಸುತ್ತಲಿನ ಕೆಲಸಗಳನ್ನು ಮಾಡುತ್ತಿದ್ದ. ವಾರಕ್ಕೆ, ತಿಂಗಳಿಗೊಮ್ಮೆ ಬರುತ್ತಿದ್ದ ವಿಕಾಸ್ ಬರುವಾಗ ಒಂದಷ್ಟು ಗೆಳೆಯರನ್ನು ಕರೆದುಕೊಂಡು ಬರುತ್ತಿದ್ದ. ಬಂದವರಿಗೆ ತುಂಡಿನ ಅಡಿಗೆ ಮಾಡಿ ಬಡಿಸುವ ಕೆಲಸ ಗೌರಿಯದಾದರೆ, ಅವರಿಗೆ ಬೇಕಾದ ಮದ್ಯ ಮುಂತಾದ ವಸ್ತುಗಳನ್ನು ಅಣ್ಣಪ್ಪಣ್ಣ ಸರಬರಾಜು ಮಾಡಬೇಕಾಗಿತ್ತು. + +ವರ್ಷ ಕಳೆಯುವವರೆಗೂ ವಾರಕ್ಕೆ, ತಿಂಗಳಿಗೊಮ್ಮೆ ಬರುತ್ತಿದ್ದ ವಿಕಾಸ್ ಅನಂತರದಲ್ಲಿ ತೋಟದ ಮನೆ ಕಡೆಗೆ ಬರುವುದನ್ನೆ ನಿಲ್ಲಿಸಿದ್ದ. ಮುಂಚೆ ತೋಟಕ್ಕೆ ಬಂದಾಗಲ್ಲೆಲ್ಲಾ ಅಷ್ಟಿಷ್ಟು ಹಣ ಕೊಟ್ಟು ಹೋಗುತ್ತಿದ್ದ ವಿಕಾಸ್ ಕೊನೆಯ ಬಾರಿ ಬಂದಾಗ ಎಟಿಎಂ ಕಾರ್ಡ್ವೊಂದನ್ನು ಕೊಟ್ಟು ತಿಂಗಳು ತಿಂಗಳು ಅಕೌಂಟಿಗೆ ಹಣ ಹಾಕುವುದಾಗಿಯೂ ಎಟಿಎಂನಲ್ಲಿ ಹಣ ಬಿಡಿಸಿಕೊಳ್ಳುವಂತೆ ಹೇಳಿ ಹೋಗಿದ್ದ. + +ತನ್ನ ತಂದೆಯ ಕಾಲದಿಂದಲೂ ಕಾಫಿ ತೋಟದ ಲೈನಿನಲ್ಲಿ ಬೆಳೆದ ಅಣ್ಣಪ್ಪನಿಗೆ ಕಾಫಿತೋಟದ ಕೆಲಸವೆಂದರೆ ಅದೊಂದು ತರದ ಧ್ಯಾನ. ಕಾಲಕಾಲಕ್ಕೆ ಯಾವ ಯಾವ ಕೆಲಸಗಳನ್ನು ಮಾಡಬೇಕು, ನೆರಳು ಹೆಚ್ಚಿದರೆ ಎಲ್ಲಿ ಮರಗಸಿ ಮಾಡಬೇಕು, ಯಾವ ಸಮಯದಲ್ಲಿ ಗೊಬ್ಬರ ಹಾಕಬೇಕು, ಚಿಗುರು, ಕಸಿ, ಅಗತೆ ಮುಂತಾದ ಕೆಲಸಗಳ ಜ್ಞಾನ ಅವನ ತಂದೆಯ ಕಡೆಯಿಂದ ಬಂದ ಬಳುವಳಿ. ಬೆಳಿಗ್ಗೆಯಿಂದ ಕಷ್ಟ ಪಟ್ಟು ತೋಟದಲ್ಲಿ ದುಡಿದು ಸಂಜೆ ಉಂಡು ಮಲಗಿದರೆ ಸಾವಿನಂಥ ನಿದ್ದೆ. ಶ್ರಮದ ಹಿಂದಿನ ನೆಮ್ಮದಿ ಮತ್ತು ಸುಖ ಅಣ್ಣಪ್ಪನಿಗೆ ಅಭ್ಯಾಸವಾಗಿ ಹೋಗಿತ್ತು. ಮುಂಚಿನಿಂದಲೂ ಸುಮ್ಮನೆ ಕುಳಿತು ಕಾಲಹರಣ ಮಾಡುತ್ತಿರಲಿಲ್ಲ. ಏನಾದರೂ ವಿಶೇಷ ಕಾರ್ಯಗಳಿದರೆ ಮಾತ್ರ ತೋಟದ ಕೆಲಸಕ್ಕೆ ರಜೆ ಹಾಕುತ್ತಿದ್ದ ಅಣ್ಣಪ್ಪಣ. + +ಆದರೆ ವಿಕಾಸ್ ನ ತೋಟದ ಮನೆಗೆ ಬಂದ ನಂತರ ಮುಂಚಿನ ತರದ ಶ್ರಮದ ಕೆಲಸ ಇರುತ್ತಿರಲಿಲ್ಲ. ಕಾಫಿಗಿಡಗಳನು ಮಕ್ಕಳಂತೆ ಬೆಳೆಸಿ ಬಿಸಿಲಾದರೆ ನೆರಳು ಮಾಡಿ ಮಳೆ ಕಡಿಮೆಯಾದರೆ ನೀರು ಹಾಯಿಸಿ ಕೆಲಸಗಾರರರ ಸಂಬಳ, ಗೊಬ್ಬರ, ಕೀಟನಾಶಕ ಮುಂತಾದವುಗಳಿಗೆ ಖರ್ಚು ಮಾಡಿ ಕಾಫಿ ಬೆಳೆ ತೆಗೆಯಬೇಕೆಂಬ ಅನಿವಾರ್ಯತೆ ಇಲ್ಲದ ವಿಕಾಸ್ ನಿಗೆ ಕಾಫಿ ತೋಟದ ಗಿಡಗಳಿಗೂ ಮನೆ ಮುಂದಿನ ಅಲಂಕಾರಿಕ ಗಿಡಗಳಿಗೂ ಹೆಚ್ಚಿನ ವ್ಯತ್ಯಾಸ ಇರಲಿಲ್ಲ. ಅಪರೂಪಕ್ಕೆ ಒಮ್ಮೆ ಮೋಜುಮಸ್ತಿ ಮಾಡಲು ತೋಟದ ಮನೆಗೆ ಬರುವ ವಿಕಾಸ್ ಗೆ ಕಾಫಿ ಸಂಸ್ಕೃತಿಯ ಗಂಧಗಾಳಿಯ ಅರಿವು ಇರಲಿಲ್ಲ. ಅದರ ಅಗತ್ಯವೂ ಅವನಿಗೆ ಬೇಕಿರಲಿಲ್ಲ. + +ಮೊದಮೊದಲು ಎಲ್ಲವೂ ಚಂದವಾಗೆ ಕಂಡ ಬದುಕು ಬರಬರುತ್ತಾ ಖಾಲಿ ಖಾಲಿ ಎನಿಸತೊಡಗಿತ್ತು ಅಣ್ಣಪ್ಪಣ್ಣನಿಗೆ. ಅಣ್ಣಪ್ಪಣ್ಣನಿಗೆ ಪ್ರತಿತಿಂಗಳು ಎಟಿಎಂನಿಂದ ಹಣ ಸಿಗುತ್ತಿತ್ತಾದರೂ ಹೆಚ್ಚಿನ ಹಣವನ್ನು ಕೇಳುವಂತಿರಲಿಲ್ಲ. ಹಬ್ಬ ಸುಗ್ಗಿ ಎಂದಾಗ ಬಟ್ಟೆಗೆ, ಮಕ್ಕಳಿಗೆ ಎಂದು ಹೆಚ್ಚಿನ ಹಣ ಬೇಕಾದಾಗ ಅವರಿವರ ಬಳಿ ಸಾಲ ಪಡೆದುಕೊಳ್ಳುವಂತಾಯಿತು. ಮುಂಚೆ ನಂಜೆಗೌಡರ ತೋಟದಲ್ಲಿರುವಾಗ ಹೆಚ್ಚಿನ ಹಣ ಬೇಕೆಂದಾಗ ಸಿಗುತ್ತಿತ್ತು. ಆದರೆ ಈ ಎಟಿಎಂ ಯಂತ್ರದ ಮುಂದೆ ಸುಮ್ಮನೆ ಕಾರ್ಡ್ ಹಾಕಿ ಬಂದಷ್ಟು ಹಣ ತೆಗೆದುಕೊಂಡು ಬರಬೇಕಾಗಿತ್ತು. + +ಹೀಗೆ ಕೆಲವರ್ಷಗಳು ಕಳೆದವು. ಕಾಫಿ ಕುಯ್ಲಿನ ಸಂದರ್ಭದಲ್ಲಿ ಬಯಲುಸೀಮೆಯಿಂದ ಬರುವ ಹದಿನಾರು ಕೆಲಸದವರಂತೆ ಮಲೆನಾಡಿನ ಕಂಪನಿ ಕಾಫಿ ಎಸ್ಟೇಟ್ ವೊಂದಕ್ಕೆ ಅಸ್ಸಾಂ ಕಡೆಯ ಒಂದೆರಡು ಕುಟುಂಬಗಳು ಬಂದವು. ಅವರಿಗೆ ಅಲ್ಲಿ ಕೆಲಸವಿಲ್ಲದೆ ಇಲ್ಲಿಗೆ ಬಂದರೋ ಅಥವಾ ಇಲ್ಲಿನ ಕಂಪನಿ ಎಸ್ಟೇಟ್ ನವರು ತೋಟದಾಳುಗಳ ಕೊರತೆಯಿಂದ ಅಲ್ಲಿಂದ ಅವರನ್ನು ಕರೆತಂದರೋ ಒಟ್ಟಿನಲ್ಲಿ ಬಂದ ಒಂದೆರಡು ಅಸ್ಸಾಂ ಕುಟುಂಬಗಳು ವರ್ಷಕೊಮ್ಮೆ ಅಸ್ಸಾಂಗೆ ಹೋಗಿ ಹಿಂದಿರುಗುವಾಗ ಮತ್ತಷ್ಟು ಅಸ್ಸಾಂ ಕುಟುಂಬಗಳನ್ನು ಕರೆತಂದರು. ಕೆಲ ವರ್ಷಗಳಲ್ಲಿ ಸುತ್ತಮುತ್ತಲ್ಲಾ ಎಸ್ಟೇಟ್ ಗಳಲ್ಲಿ ಅಸ್ಸಾಂ ಕಾರ್ಮಿಕರೇ ಹೆಚ್ಚಾಗಿ ಕಾಣಿಸತೊಡಗಿದ್ದರು. ಅಸ್ಸಾಂ ತೋಟದಾಳುಗಳ ಭಾಷೆಯ ಸಮಸ್ಯೆಯಿಂದಾಗಿ ಎಸ್ಟೇಟ್ ಗಳಲ್ಲಿನ ಮಲೆನಾಡಿನ ಮೇಸ್ತ್ರಿಗಳು ಸರಿಯಾಗಿ ಕೆಲಸ ಮಾಡಿಸಲಾಗದೇ ಅತ್ತ ಹಿಂದಿಯೂ ಅಲ್ಲದ ಇತ್ತ ಕನ್ನಡವೂ ಅಲ್ಲದ ಒಂದು ತರದ ಭಾಷೆಯಲ್ಲಿ ಮಾತನಾಡಿ ಕೆಲಸ ಮಾಡಿಸಲು ಪರದಾಡುವಂತಾಯಿತು. + +ಕೊನೆಕೊನೆಗೆ ಅಸ್ಸಾಂ ಕೆಲಸಗಾರರಲ್ಲೆ ಮಲೆನಾಡಿಗೆ ಬಂದ ಹಳಬರಾದ ಅಲ್ಪಸ್ವಲ್ಪ ಕನ್ನಡ ಮಾತನಾಡಲು ಬರುವ ಕೆಲ ಅಸ್ಸಾಂ ಕೆಲಸಗಾರರನ್ನೆ ಮೇಸ್ತ್ರಿಗಳಾಗಿ ಕೆಲ ಎಸ್ಟೇಟ್ ಗಳಲ್ಲಿ ನೇಮಿಸಲಾಯಿತು. ಪ್ರಾರಂಭದಲ್ಲಿ ಪಟ್ಟಿಗೆ ಸೇರಿದ ಎಸ್ಟೇಟ್ ನಲ್ಲಿ ಮೇಸ್ತ್ರಿಗಳಾಗಿ ದುಡಿಯುತ್ತಿದ್ದ ಅಸ್ಸಾಂ ಮೇಸ್ತ್ರಿಗಳು ಅಕ್ಕಪಕ್ಕದ ತೋಟಗಳಿಗೂ ತಾವೆ ಕೆಲಸದಾಳುಗಳನ್ನು ಅಸ್ಸಾಂನಿಂದ ತಂದು ಬಿಡಲು ಪ್ರಾರಂಭಿಸಿದರು. ಇದರಿಂದ ದಕ್ಷಿಣಕನ್ನಡದಿಂದ, ಬಯಲುಸೀಮೆಯ ಕಡೆಯಿಂದ ಬಂದು ಮಲೆನಾಡಿನ ಕಾಫಿತೋಟಗಳಿಗೆ ತೋಟದಾಳುಗಳನ್ನು ಬಿಡುತ್ತಿದ್ದ ಶೇಷಪ್ಪನಂತಹ ಮೇಸ್ತ್ರಿಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಕಡಿಮೆಯಾಗತೊಡಗಿತ್ತು. + +ಪ್ರಾರಂಭದಲ್ಲಿ ಟೆಕ್ಕಿ ವಿಕಾಸ್ ಎಟಿಎಂಗೆ ಸರಿಯಾಗಿ ತಿಂಗಳು ತಿಂಗಳು ಹಣ ಹಾಕುತ್ತಿದ್ದವನು, ನಂತರ 3 ತಿಂಗಳಿಗೊಮ್ಮೆ, 6 ತಿಂಗಳಿಗೊಮ್ಮೆ ಹಣ ಹಾಕತೊಡಗಿದಾಗ ಅಣ್ಣಪ್ಪನಿಗೆ ಕಷ್ಟವಾಗತೊಡಗಿತ್ತು. ಹೆಂಡತಿಯ ಮಾತಿನಿಂದಾಗಿ ಪ್ರತಿವಾರ ಹಣ ಕಟ್ಟಿ ಒಡವೆ ಪಡೆಯುವ ನಾಲ್ಕೈದು ಸ್ಕೀಮಿಗೆ ಸೇರಿದ್ದರಿಂದ ಅಣ್ಣಪ್ಪನಿಗೆ ಖರ್ಚು ಕೂಡ ಹೆಚ್ಚಾಗಿತ್ತು. ವರ್ಷದ ಹಿಂದೆ ಮದುವೆಯಾಗಿದ್ದ ಮಗಳು ಹೆರಿಗೆಗೆಂದು ಮನೆಗೆ ಬಂದರೂ ಮದುವೆಗೆ ಸ್ವಸಹಾಯ ಸಂಘದಲ್ಲಿ ಮಾಡಿದ್ದ ಸಾಲ ಇನ್ನೂ ತೀರಿರಲಿಲ್ಲ. ಅದರ ಕಂತನ್ನು ವಾರ ವಾರ ಕಟ್ಟಲೇಬೇಕಾದ್ದರಿಂದ ಅಣ್ಣಪ್ಪನ ಆರ್ಥಿಕ ಪರಿಸ್ಥಿತಿ ವಿಕಾಸ್ ನ ಬ್ಯಾಂಕಿಗೆ ಹಾಕುವ ಹಣವನ್ನೆ ನೆಚ್ಚಿಕೊಂಡಿತ್ತು. + +ಹೀಗಿರುವಾಗಲೇ ಹೆರಿಗೆಗೆಂದು ಮನೆಗೆ ಬಂದಿದ್ದ ಮಗಳಿಗೆ ದಿನ ತುಂಬುವ ಮೊದಲೆ ನಡುರಾತ್ರಿ ಹೆರಿಗೆ ನೋವು ಪ್ರಾರಂಭವಾದಾಗ ಅಣ್ಣಪ್ಪನಿಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ನೆನಪಾಗಿದ್ದು ನಂಜೆಗೌಡರು. ಸೀದಾ ಓಡುವವನಂತೆ ನಡೆಯುತ್ತಾ ಹೋಗಿ ನಂಜೆಗೌಡರ ಬಂಗಲೆಮನೆಯ ಬಾಗಿಲು ತಟ್ಟಿದಾಗ ಗೌಡರು ತಮ್ಮ ಕಾರಿನಲ್ಲಿಯೇ ಚಿಕ್ಕಮಗಳೂರಿನ ಹೆರಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ದಿಕ್ಕೆ ತೋಚದೆ ಕುಳಿತಿದ್ದ ಅಣ್ಣಪ್ಪನಿಗೆ ಬೆಂಬಲವಾಗಿ ನಿಂತು ಬೆಳಕು ಹರಿಯುವವರೆಗೂ ಜೊತೆಗಿದ್ದರು. ಎರಡು ದಿನದ ನಂತರ ನಂಜೆಗೌಡರು ತಮ್ಮ ಮಡದಿ ಸೀತಮ್ಮನವರ ಜೊತೆಗೆ ಆಸ್ಪತ್ರೆಗೆ ಬಂದು ತಾಯಿ-ಮಗುವಿನ ಕುಶಲ ವಿಚಾರಿಸಿ ತಾಯಿಯ ಕೈಗೆ ಒಂದಿಷ್ಟು ಹಣವನ್ನು ಕೊಟ್ಟು ಹೋಗಿದ್ದರು. + +ಅದಾದ ನಂತರದಲ್ಲಿ ಅಣ್ಣಪ್ಪನಿಗೆ ಏನೆನಸಿತೋ ಏನೋ ಒಂದು ರಾತ್ರಿ ಮಲಗಿರುವಾಗ ‘ಬೆಳಿಗ್ಗೆ ಎದ್ದಿದ್ದು ನಂಜೆಗೌಡ್ರು ಮನಿಗೆ ಹೋಗ್ ಬರ್ಬೇಕು. ಎಷ್ಟ್ ಆದ್ರೂ ಹತ್ ಹದಿನೈದು ವರ್ಷ ಅವ್ರು ತೋಟದಲ್ಲಿ ದುಡ್ದಿದ್ದು ಅವ್ರಿಗ್ ಮರ್ತ್ ಹೋಗಿರಕ್ಲಾ’ ಎಂದು ಮನದಲ್ಲೆ ಅಂದುಕೊಡವನು ಬೆಳಿಗ್ಗೆ ಮುಂಚೆಯೆ ಮುಖತೊಳೆಯುವ ಶಾಸ್ತ್ರ ಮಾಡಿ ಬರಗಾಫಿ ಹೀರಿ ನಂಜೆಗೌಡರ ಮನೆಗೆ ಕಾಲುದಾರಿಯಲ್ಲಿ ಹೊರಟ್ಟಿದ. + +**************** + + + +ಮೂಡಣದ ಸೂರ್ಯ ಸ್ವಲ್ಪ ಮೇಲೆರಿದ್ದ. ಸುತ್ತತೋಟ, ಅದರಾಚೆಗೆ ಅಕ್ಷಯ ಕಾನನ ಹರಡಿದ್ದ ಪಡುಗೆರೆಯ ತುಂಬ ದಿವ್ಯಮೌನವೊಂದು ಆವರಿಸಿಕೊಂಡಿತ್ತು. ಮುಖ್ಯರಸ್ತೆಗೆ ಹೊಂದಿಕೊಂಡಂತಿರುವ ನಂಜೆಗೌಡರ ಬಂಗಲೆಮನೆಯ ಹಂಚಿನ ನಡುವಿನ ಹೊಗೆಕೊಳವೆಯಿಂದ ಹೊಗೆ ಬಳುಕುತ್ತಾ ಆಗಸವನ್ನು ಮುಟ್ಟಿ ಮೋಡವಾಗುತ್ತಿತ್ತು. + +ಬಂಗಲೆ ಮನೆಯ ಅಂಗಳದ ಮೂಲೆಯಲ್ಲಿದ್ದ ತೆಂಗಿನಮರ ಸೋಗೆಗರಿಯೊಂದು ದಡಾಲ್ ಎಂದು ಹೆಂಚಿನ ಮೇಲೆ ಬೀಳಲು ಒಂದೆರಡು ಹೆಂಚು ಒಡೆದು ಸೋಗೆಯೊಂದಿಗೆ ನೆಲಕ್ಕೆ ಬಿತ್ತು. ಮೌನವೇ ಸಾಮ್ರಾಜ್ಯ ಸ್ಥಾಪಿಸಿದಂತಿದ್ದ ಆ ಪರಿಸರದಲ್ಲಿ ಮೌನದ ಕೊಳಕ್ಕೆ ಶಬ್ದಕೋಲಾಹಲದ ಕಲ್ಲೆಸೆದಂತಾಗಿ ಗೊಬ್ಬರಗುಂಡಿಯಲ್ಲಿ ಕೆದರುವ ಕಾರ್ಯದಲ್ಲಿ ನಿರತವಾಗಿದ್ದ ಹೆಂಟೆಕೋಳಿಯೊಂದು ಜೋರಾಗಿ ಕೂಗಿತ್ತು. ಅದರ ಕೂಗು ಕೇಳಲು ಕಾಫಿತೋಟದೊಳಗೆ ಅಲ್ಲಲ್ಲಿ ದರಗು ಕೆದರುತ್ತಿದ್ದ ಮರಿ, ಹಿರಿ, ಹೆಂಟೆ, ಹುಂಜ, ಹೂಮರಿಗಳು ಕೂಗತೊಡಗಿತ್ತು. ಕೋಳಿಗಳ ಗದ್ದಲದಿಂದ ನಂಜೆಗೌಡ ಮನೆಯ ಸೌದೆಕೊಟ್ಟಿಗೆಯಲ್ಲಿ ಬೆಚ್ಚಗೆ ಮಲಗಿದ್ದ ಒಂದೆರಡು ನಾಯಿಗಳು ಹೊರಬಂದು ನೆಲಮುಗಿಲು ಒಂದಾಗುವಂತೆ ಬೊಗಳತೊಡಗಿದ್ದವು. ಕೋಳಿ, ನಾಯಿಗಳ ಶಬ್ದಕೋಲಾಹಲದಿಂದ ಇಡಿ ಪರಿಸರ ಶಬ್ದಮಯವಾಗಿ ಹೋಯಿತು. + +ಹೊಗೆ ತುಂಬಿದ್ದ ನಸುಗತ್ತಲೆಯ ಅಡಿಗೆ ಕೋಣೆಯಲ್ಲಿ ರೊಟ್ಟಿ ಮಾಡುತ್ತಿದ್ದ ಸೀತಮ್ಮನವರು ರೊಟ್ಟಿಯೊಂದನ್ನು ಬಾಣಲಿಯ ಮೇಲೆ ಹಾಕಿ ಅಂಗಳಕ್ಕೆ ಬಂದವರೆ ‘ಇದರ್ ಹಿಂಡ್ ಉದ್ರಾ, ಏನ್ ಸಾಯ್ತಾವ್ ಹಂಗೇ, ಹಚ್ಚಾ ಹಚ್ಚಾ’ ಎಂದು ಅಂಗಳದಲ್ಲಿ ಅರಚುತ್ತಿದ್ದ ನಾಯಿಗಳನ್ನು ಅಟ್ಟಲು ತೋಟದೊಳಗೆ ನುಗಿದ್ದ ನಾಯಿಗಳ ಅನಿರೀಕ್ಷಿತ ಆಗಮನದಿಂದ ಕಾಫಿಗಿಡಗಳ ಕೆಳಗೆ ಬೊಬ್ಬೆ ಹಾಕುತ್ತಿದ್ದ ಕೋಳಿಗಳ ಕೂಗು ಮತ್ತೂ ಹೆಚ್ಚಾಯಿತು. ಆಗಷ್ಟೇ ಮಿಂದು ದೇವರಕೋಣೆಯಲ್ಲಿ ಪೂಜೆ ಮಾಡುವುದರಲ್ಲಿ ನಿರತರಾಗಿದ್ದ ನಂಜೆಗೌಡರು ಈ ಗದ್ದಲದ ದೆಸಿಯಿಂದ ‘ನೆಮ್ದಿಯಿಂದ ಪೂಜಿ ಮಾಡಕ್ಕೂ ಬಿಡಕ್ಲಾ’ ಎಂದು ಅವಸರದಿಂದ ಪೂಜೆ ಮುಗಿಸಿ ಅಂಗಳಕ್ಕೆ ಬಂದರು. ಬೆಳಿಗ್ಗೆ ಒಂಬತ್ತಕ್ಕೆಲ್ಲಾ ಬಂದು ಬಿಡುತ್ತಿದ್ದ ಕೆಲಸಗಾರರನ್ನು ಕರೆ ತರುತ್ತಿದ್ದ ಆಟೋ ಗಂಟೆ ಹತ್ತಾದರೂ ಬರದೆ ಇದ್ದಾಗ ಮನೆ ಮುಂದಿನ ರಸ್ತೆಗೆ ಕಣ್ಣಾಗಿ ಅಂಗಳದ ಒಂದು ಬದಿಯಲ್ಲಿದ್ದ ಆರಾಮಕುರ್ಚಿಗೆ ಒರಗಿದರು. + +ತೋಟದ ಲೈನಿನಲ್ಲಿ ಹಲವು ವರ್ಷಗಳ ಹಿಂದಿನಿಂದ ಇದ್ದ ಕುಟುಂಬಗಳು ಒಬ್ಬೊಬ್ಬರಾಗಿ ಹೋದ ನಂತರ ನಂಜೆಗೌಡರು ಬಯಲುಸೀಮೆಯಿಂದ ತೋಟಕ್ಕೆ ಜನಬಿಡುತ್ತೇನೆ ಎಂದು ಹೇಳಿಕೊಂಡು ಬಂದ ಮೇಸ್ತ್ರಿಯ ಮಾತಿಗೆ ಒಂದು ಕುಟುಂಬವನ್ನು ಕರೆಸಿಕೊಂಡಿದ್ದರು. ಮುರ್ನಾಲ್ಕು ತಿಂಗಳು ಚೆನ್ನಾಗಿಯೇ ಕೆಲಸ ಮಾಡಿದ್ದ ಆ ಕುಟುಂಬ ದೀಪಾವಳಿಗೆ ಊರಿಗೆ ಹೋಗಿ ಬರುತ್ತೇವೆ ಎಂದು ಬಯಲುಸೀಮೆಗೆ ಹೋದವರು ಇತ್ತಮುಖ ಮಾಡಿರಲೇ ಇಲ್ಲ. ಸ್ವಲ್ಪ ಸಾಲವನ್ನು ಕೊಟ್ಟಿದ್ದ ನಂಜೆಗೌಡರು ಅದರ ನಂತರ ಬಯಲುಸೀಮೆಯ ತೋಟದಾಳುಗಳನ್ನು ತೋಟಕ್ಕೆ ಸೇರಿಸಿಕೊಳ್ಳಲು ಹಿಂಜರಿಯುತ್ತಿದ್ದರು. + +ಕಾಫಿ ಕುಯ್ಲಿನಂಥ ತುರ್ತಿನ ಕೆಲಸಗಳಿದ್ದಾಗ ಆಳುಗಳ ಅನಿವಾರ್ಯತೆ ಇದ್ದ ಕಾರಣಕ್ಕಾಗಿ ಅಸ್ಸಾಂ ಮೇಸ್ತ್ರಿಯ ಮೂಲಕ ನಾಲ್ಕೈದು ಕುಟುಂಬಗಳನ್ನು ತೋಟದ ಲೈನಿಗೆ ಕರೆಸಿಕೊಂಡಿದ್ದರು. ತೋಟದ ಕೆಲಸದಲ್ಲಿ ಅಷ್ಟಾಗಿ ಅನುಭವವಿಲ್ಲದ, ಭಾಷೆಯ ಸಮಸ್ಯೆಯಿಂದಾಗಿ ಕೆಲಸ ತೆಗೆಸಿಕೊಳ್ಳಲು ಸಾಧ್ಯವಾಗದೇ ಇದ್ದರೂ ತೋಟದಾಳುಗಳೆ ಸಿಗದೇ ಇದ್ದುದರಿಂದ ಅಸ್ಸಾಂ ಆಳುಗಳನ್ನು ನಂಜೆಗೌಡ ಸಹಿಸಿಕೊಳ್ಳಲೇಬೇಕಾಗುತ್ತಿತ್ತು.. ಗೌಡರು ಬೆಳೆಗಾರರ ಸಂಘ, ರೈತಸಂಘ, ಸಾವಯವ ಕೃಷಿಕರ ಸಂಘ ಮುಂತಾದ ಸಂಘಗಳಲ್ಲೂ ಸಕ್ರಿಯವಾಗಿದ್ದರಿಂದ ವಾರದಲ್ಲಿ 3 ದಿನ ಮೀಟಿಂಗ್, ಸಂವಾದ, ಪ್ರ್ಯಾತ್ಯಕ್ಷತೆ, ಪ್ರತಿಭಟನೆ ಎಂದು ತಿರುಗಾಟ ಇದ್ದೇ ಇರುತಿತ್ತು. ಒಳ್ಳೆ ಭಾಷಣಕಾರರು ಆಗಿದ್ದ ನಂಜೆಗೌಡರು ಉಪನ್ಯಾಸ ನೀಡಲು ರಾಜ್ಯಮಟ್ಟದ ಕಾರ್ಯಕ್ರಮಗಳಿಗೂ ಹೋಗಬೇಕಾಗುತ್ತಿತ್ತು. + +ತೋಟ ಮತ್ತು ಸಂಘಟನೆಗಳ ಜವಾಬ್ದಾರಿ ನಿಭಾಯಿಸಲು ಗೌಡರಿಗೆ ಕಷ್ಟವೆನಿಸುತ್ತಿತ್ತು. ಒಮ್ಮೊಮ್ಮೆ ಈ ತೋಟವನ್ನೆಲ್ಲಾ ಮಾರಿ ಮಗನೊಡನೆ ಬೆಂಗಳೂರಿನಲ್ಲಿ ಇದ್ದುಬಿಡುವ ಎನಿಸುತ್ತಿತ್ತು. ಪೇಟೆಯಿಂದ ಸಾಕಷ್ಟು ದೂರವಿದ್ದ, ಸುತ್ತಾ ಕಾಡಿನ ಅಂಚಿನಲ್ಲಿರುವ ಸರಿಯಾದ ರಸ್ತೆ ಸೌಕರ್ಯವೂ ಇಲ್ಲದ ಈ ಹಳ್ಳಿಯಲ್ಲಿ ದುಡಿದು ಮಾಡುವುದೇನಿದೆ ಎಂದೆಸಿದರೂ ಮತ್ತೆ ಇಲ್ಲಿರುವಷ್ಟು ನೆಮ್ಮದಿ ಮತ್ತೆಲ್ಲೂ ಸಿಗಲಾರದು ಎಂದೂ ಎನಿಸುತ್ತಿತ್ತು. ಗೌಡರ ಬಂಗಲೆ ಮನೆಗೆ ಬರಬೇಕಾದರೆ ಒಂದಷ್ಟು ಕಿ.ಮಿ ಮೀಸಲು ಅರಣ್ಯ ನಡುವೆ ಬರಬೇಕಾಗುತ್ತಿತ್ತು. ಮೀಸಲು ಅರಣ್ಯದೊಳಗೆ ವಿದ್ಯುತ್ ಕಂಬಗಳನ್ನು ನೆಡಲು ಅವಕಾಶ ಸಿಗದೆ ಇರುವುದರಿಂದ ಗೌಡರು ಸೋಲಾರ್, ಜನರೇಟರ್ ಬಳಸುತ್ತಿದ್ದರು. + +ಅರಣ್ಯ ಇಲಾಖೆಗೆ ಹಲವು ಬಾರಿ ತಮ್ಮ ಪ್ರಭಾವ ಬಳಸಿ ವಿದ್ಯುತ್ ಲೈನ್ ಎಳೆಯಲು ಅನುಮತಿ ಪಡೆದುಕೊಂಡಿದ್ದರೂ ಯಾರೋ ಕೆಲ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಅರಣ್ಯ ಇಲಾಖೆಯವರು ವಿದ್ಯುತ್ ಕಂಬಗಳನ್ನು ಹಾಕಲು ಒಪ್ಪದೆ ಹೋದರು. + +‘ಈ ಪರಿಸರವಾದಿಗಳಿಂದ ಬರ್ಕತ್ ಇಲ್ಲ. ಆತ್ರ್ ಗಳಿಗೆ ಒಂದ್ ಹಾಲುವಾಣ ಗೂಟ ನೆಟ್ ಗೊತ್ತಿರಕ್ಲ, ಇವ್ರೆಲ್ಲ ಪರಿಸರವಾದಿಗಳಂತೆ. ಗುಡ್ಡದ್ ಮ್ಯಾಲೆ, ಕಾಡ್ ಒಳ್ಗೆ ಅಷ್ಟ್ ದೊಡ್ ಹೈಟೆನ್ಸ್ ಕರೆಂಟ್ ಲೈನ್ ಹೋಗ್ಯಾದೆ. ಅದ್ ಕಾಣಾಕ್ಲ. ಇಲ್ಲಿ ಕತ್ಲೆಲ್ಲಿ ಜೀವ್ನ ಕಳಿತ್ತಾ ಇದ್ದಿವೀ. ಕರೆಂಟ್ ಕನೆಕ್ಷನ್ ತಗಳನಾ ಅಂದ್ರೆ ಇರ್ತ್ಗಳ್ದ್ ಒಂದ್ ರ್ವಾತೆ’ ಎಂದು ಯಾವುದೋ ವಿಚಾರ ಸಂಕಿರಣವೊಂದರಲ್ಲಿ ಬಹಿರಂಗವಾಗಿಯೆ ಅಸಮಾಧಾನ ವ್ಯಕ್ತಪಡಿಸಿದರು. + +ಈ ಎಲ್ಲಾ ತರಲೆ ತಾಪತ್ರಯಗಳಲ್ಲೆ ಮುಳುಗಿ ಹೋಗಿದ್ದ ಗೌಡರಿಗೆ ತೋಟದ ಕೆಲಸಗಳನ್ನು ನೋಡಿಕೊಳ್ಳುವ ನಂಬಿಕಸ್ತ ಆಳಿನ ಅಗತ್ಯ ಖಂಡಿತವಾಗಿಯೂ ಇತ್ತು. ಅಣ್ಣಪ್ಪಣನ ಹೆಂಡತಿ ಗೌರಿ ಅಂದು ತೋಟ ಬಿಡುವ ಬಗ್ಗೆ ಬಂದು ಹೇಳಿದಾಗ ನಿಜವಾಗಲೂ ಗೌಡರಿಗೆ ಬೇಸರವಾಗಿತ್ತು. ಸಂಬಳ ಬೇಕಾದರೆ ಹೆಚ್ಚು ಮಾಡುವ, ಬೇಕಾದರೆ ಬಾಡಿಗೆ ಮನೆಯಲ್ಲಿ ಇದ್ದುಕೊಂಡೆ ನಮ್ಮ ತೋಟಕ್ಕೆ ಕೆಲಸಕ್ಕೆ ಬನ್ನಿ ಎಂದು ಹೇಳಬೇಕು ಎಂದುಕೊಂಡಿದ್ದರು. + +ಆದರೆ ಅಂದು ಗೌರಿಯ ಮಾತಿನ ದಾಟಿಯಲ್ಲಿದ್ದ ಒಂದು ರೀತಿ ಅಹಂ ನಂಜೆಗೌಡರಿಗೆ ಹಾಗೆ ಹೇಳದಂತೆ ತಡೆದಿತ್ತು. ಆ ಗುಂಗಿನಲ್ಲಿಯೇ ಲೆಕ್ಕ ಮಾಡಿ ಕಳಿಸಿದರೂ ಕೂಡ. ಅಣ್ಣಪ್ಪಣ್ಣ ಮತ್ತೆ ಸಿಕ್ಕಾಗ ಹೇಗಾದರೂ ಮಾಡಿ ಅವನನ್ನು ಮನವೊಲಿಸಿ ನಮ್ಮ ತೋಟಕ್ಕೆ ಕೆಲಸಕ್ಕೆ ಬಾ ಎಂದು ಹೇಳಬೇಕೆಂದರೂ ಮತ್ತೆ ಅಣ್ಣಪ್ಪ ಬಂಗಲೆ ಕಡೆಗೆ ಬಂದಿರಲಿಲ್ಲ. ಒಂದೆರಡು ಬಾರಿ ಸಿಕ್ಕರೂ ಮಾತನಾಡಿಸಲು ಆಗಿರಲಿಲ್ಲ. ಅಣ್ಣಪ್ಪನಿಗೂ ಗೌಡರಿಗೆ ಹೇಗೆ ಮುಖ ತೋರಿಸುವುದು ಎಂದೆನಿಸಿರಬೇಕೋ ಏನೋ. + +ನಂಜೆಗೌಡರು ಬಂಗಲೆ ಮನೆಯ ಮುಂದಿನ ಆರಾಮ ಖುರ್ಚಿಗೆ ಒರಗಿಗೊಂಡು ಸಮಯ ಕಳೆದರೂ ಬಾರದ ಕೆಲಸದಾಳುಗಳ ಆಟೋದ ನಿರೀಕ್ಷೆಯಲ್ಲಿ ಕುಳಿತಿರುವಾಗ ರಸ್ತೆಯಲ್ಲಿ ಯಾರೋ ನಡೆದುಕೊಂಡು ಬರುತ್ತಿರುವುದು ಕಾಣಿಸಿತು. ಆಕೃತಿ ಹತ್ತಿರವಾಗುತ್ತಿದ್ದಂತೆ ನಂಜೆಗೌಡರು ಅಚ್ಚರಿಯಿಂದ ನಗುಮೊಗದಿಂದಲೇ ‘ಏನ್ ಅಣ್ಣಪ್ಪ, ಎಲ್ಲಾ ಮಾರಾಯ ನೀನು. ಸುದ್ದಿ ಇಲ್ಲಲ್ಲಾ ನಿಂದು. ಬಾ ಕುತ್ಕಾ’ ಎಂದು ಪಕ್ಕದಲ್ಲೆ ಇದ್ದ ಕಟ್ಟೆಯ ಕಡೆಗೆ ಕೈತೋರಿಸಿದರು. ಅಣ್ಣಪ್ಪಣ್ಣ ಕಟ್ಟೆಯ ಮೇಲೆ ಕುಳಿತುಕೊಂಡವನೆ, ‘ಕಾಫಿ ಪುಲ್ ಹಣ್ ಆಗ್ಯಾದೆ. ಕುಯ್ಲು ಸುರು ಮಾಡೀರಾ ಗೌಡ್ರೆ?’ ಎಂದು ಕೇಳಿದ. + +ಗೌಡರು ‘ಇಲ್ ಕಣಾ ಮಾರಾಯಾ, ಈ ಅಸ್ಸಾಂ ಜನಗಳನ್ನ ಇಡ್ಕಂಡ್ ಎಂತಾ ಕೆಲಸ್ ಮಾಡಾದ ಏನಾ. ಇಲ್ಲಿಯೋರೆ ಒಂದಷ್ಟ್ ಜನಗಳು ಬರ್ತೀವಿ ಅಂದ್ರು. ಇಷ್ಟೋತ್ ಆದ್ರೂ ಕಾಣಕ್ಲ. ಎಂಥಾ ಮಾಡಾದ ಏನಾ. ಒಂದು ತಲೆಗ್ ಹೋಗಾಕ್ಲಾ’ ಎಂದರು. + +ಆ ವೇಳೆಗೆ ಮನೆಯೊಳಗಿಂದ ಬಂದ ನಂಜೆಗೌಡರ ಪತ್ನಿ ಸೀತಮ್ಮನವರು ‘ಏನಾ ಅಣ್ಣಪ್ಪ, ಮಗಳು ಹೆಂಗ್ ಅದಳಾ. ಕೈ ತೊಳ್ಕಳ್ಳಿ ತಿಂಡಿ ಮಾಡಿರಂತೆ’ ಎಂದು ಒಳಹೋದರು. ಗೌಡರು ಆರಾಮಕುರ್ಚಿಯಿಂದ ಎದ್ದು ಕೈತೊಳೆಯಲೆಂದು ಒಳಹೋದರು. ಅಣ್ಣಪ್ಪಣ್ಣ ಕೂಡ ಗೌಡರನ್ನು ಹಿಂಬಾಲಿಸಿ ಒಳನಡೆದ. + + + +ಅದಾಗಿ ಒಂದು ವಾರಕ್ಕೆ ಅಣ್ಣಪಣ್ಣನ ಕುಟುಂಬ ಮತ್ತೆ ನಂಜೆಗೌಡರ ತೋಟಕ್ಕೆ ಬಂತು. ‘ಲೈನ್ ಮನಿಲ್ ಇರದ ಬ್ಯಾಡ’ ಎಂದು ಗೌಡರು ಬಂಗಲೆ ಸಮೀಪದಲ್ಲೆ 2 ಕೊಠಡಿಯ ಮನೆಯೊಂದನ್ನು ಮಾಡಿಕೊಟ್ಟರು. ತೋಟದ ಕೆಲಸ ಜವಾಬ್ದಾರಿಯನ್ನು ಅಣ್ಣಪ್ಪಣ್ಣನಿಗೆ ಬಿಟ್ಟು ಉಪನ್ಯಾಸ, ಹೋರಾಟಗಳಲ್ಲಿ ತೊಡಗಿಕೊಂಡರು. ಮೇಸ್ತ್ರಿ ಶೇಷಪ್ಪ ತೋಟಕ್ಕೆ ಜನ ಬಿಡುವ ಕೆಲಸ ಬಿಟ್ಟು. ಗ್ರಾ.ಪಂ. ತಾ.ಪಂಚಾಯತ್ ಗಳಿರುವ ಕಾಮಗಾರಿಗಳನ್ನು ಹಿಡಿದು ಕಂಟ್ರಾಕ್ಟರ್ ಮಾಡಲು ಪ್ರಾರಂಭಿಸಿದ. ನಂಜೆಗೌಡರು ಬಂಗಲೆಮನೆಗೆ ವಿದ್ಯುತ್ ಲೈನ್ ಎಳೆಸಲು ತಮ್ಮ ಪ್ರಯತ್ನವನ್ನು ಎಂದಿನಂತೆ ಮುಂದುವರಿಸಿದರು. ಮಲೆನಾಡು ಕೂಡ ನಿಧಾನಕ್ಕೆ ಬದಲಾವಣೆಗೆ ಒಗ್ಗಿಕೊಳ್ಳತೊಡಗಿತು. + +ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ‘ಮುಖವಾಡ’ ಇವರ ಕವನ ಸಂಕಲನ. \ No newline at end of file diff --git a/Kenda Sampige/article_424.txt b/Kenda Sampige/article_424.txt new file mode 100644 index 0000000000000000000000000000000000000000..ce45a16197b30569628b056d488df6b66a7ec172 --- /dev/null +++ b/Kenda Sampige/article_424.txt @@ -0,0 +1,123 @@ + + + + +ತನ್ನೆರಡು ಒಂಟೆಗಳನ್ನು ಅಕ್ಕಪಕ್ಕ ಕೂರಿಸಿ ಚಾಮಿಯ ಕೈಕಾಲು ಆಡದಂತೆ ಕಟ್ಟಿಹಾಕಿದ್ದಳು ಪ್ರೆಪ್. ಮುಂದಿನ ನಡೆಗೆಂದು ಮಾನಿಟರನ್ನೆ ದಿಟ್ಟಿಸುತ್ತ ಕುಳಿತಿದ್ದ ಚಾಮಿಯ ಕ್ಲಾಕ್ ಐಸಿಯೂ ನಲ್ಲಿರುವವನ ಉಸಿರಿನಂತೆ ಜರ್ರನೆ ಇಳಿದುಹೋಗುತ್ತಿತ್ತು. ಅವನಿಗೇನು ಇಡಲು ಬೇರೆ ಅವಕಾಶಗಳೇ ಇಲ್ಲವಂತೇನಿಲ್ಲ, ಎರಡು ಮೂರು ದಿಕ್ಕುಗಳಿಂದ ಆಲೋಚಿಸಿದರೆ ಪ್ರೆಪ್ ಳನ್ನೇ ಗಪ್ಪೆನಿಸುವಂತ ಸ್ಟೆಪ್ಪುಗಳಿದ್ದವು. ಆದರೆ ಸಮಯ ಯಾರಪ್ಪನದು? ಬದುಕೇ ಹಾಗಲ್ಲವೇ. ಸೃಷ್ಟಿ ನಮಗೆಂದು ಮೀಸಲಿಟ್ಟಿರುವ ಸಮಯದೊಳಗೆ ಅತ್ಯುತ್ತಮ ಆಟ ಆಡುವ ಒತ್ತಡ ಎಲ್ಲರಿಗೂ. ಅಗತ್ಯವಾಗಿ ಐವತ್ತು ಓವರಿನ ಆಟದಂತೆ. ಯಾವ ಓಟದಲ್ಲಾದರೂ ಎಲ್ಲಾ ಸ್ಪರ್ಧಿಗಳು ಕೈಕೈ ಹಿಡಿದು ಒಟ್ಟಿಗೆ ಗುರಿ ತಲುಪಿದ ನಿದರ್ಶನ ಉಂಟೇ?. ಸಮತಾವಾದಿಗಳು ಹಾಗನ್ನುತ್ತಾರೆ, ನಮ್ಮೊಡನೆ ಬನ್ನಿ, ಅಂತಹ ಸ್ಪರ್ಧೆ ಏರ್ಪಡಿಸುತ್ತೇವೆಂದು. ಸ್ಪರ್ಧಾವಾದಿಗಳನ್ನು ಕೇಳಿನೋಡಿ. ಅದೆಂತ ಸ್ಪರ್ಧೆ? ಯಾರೂ ಓಡೋದೇ ಇಲ್ಲ ಅವಾಗ, ಎಂದುಬಿಡುತ್ತಾರೆ. + +“ಸೋಲ್ತೀನಿ ಅಂತ ಗೊತ್ತಿದ್ರೂ ಯಾಕೆ ಆಡ್ತಿದಿಯ”, ಪ್ರೆಪ್, ಅರ್ಥಾತ್ ಪ್ರಫುಲ್ಲಿಕಾ ಚಾಮಿಯ ಕಾಲೆಳೆದಳು. ಒಂದು ವೇಳೆ ಅವನು ಇದನ್ನು ಹೀಯಾಳಿಕೆಯ ಧನಿಯಲ್ಲಿ ಓದಿಕೊಂಡುಬಿಟ್ಟರೆ? ಕಳವಳ. ಆನ್ ಲೈನ್ ಚಾಟಿಂಗಿನ ಸಮಸ್ಯೆಯೆ ಇದು. ಸಂವಹನದ ಮುಕ್ಕಾಲುಭಾಷೆಯನ್ನು ಕಣ್ಣು, ಹಣೆ, ಹುಬ್ಬು, ತುಟಿ, ಕೆನ್ನೆಮಾತಾಡುತ್ತವೆ. ಇಲ್ಲಿ ಅದೇ ಇಲ್ಲ. ಹಿಂದಗುಂಟಲೆ ಮೂರು ನಗುವಿನ ಸ್ಮೈಲಿಗಳು ಜೊತೆಗೊಂದು ಕಣ್ಣೊಡೆಯುವ ಸ್ಮೈಲಿ ಲಗತ್ತಿಸಿದಳು. ಡಿಜಿಟಲ್ ಸ್ಮೈಲಿಗಳು ಎಂದಿಗೂ ಜೈವಿಕ ಅಂಗಗಳನ್ನು ಯಥಾವತ್ತಾಗಿ ಅನುಕರಿಸಲು ಸಾಧ್ಯವಿಲ್ಲ. ಹಂಗೆಲ್ಲ ಅನುಕರಣೆ ಮಾಡುವಂತಿದ್ದರೆ ಸೃಷ್ಟಿಯ ಕಲೆಗೆಲ್ಲಿ ಬೆಲೆ? + +“ಗೆಲ್ಲೋಕಂತಲೇ ಆಡ್ತೀನಿ ಪ್ರೆಪ್. ಆದರೆ ಈ ಸೋಲು ನನಗಿಷ್ಟ”, ವಿಂಕಿಂಗ್ ಅಟ್ಯಾಚಡ್. + +ಆ ಕಡೆಯಿಂದ ಮುಯ್ಯಿಯಾಗಿ ಮುತ್ತು. ಪ್ರತಿ ಸಲವೂ ಆ ಮುತ್ತಿನ ಮೂತಿ ಅದೇ ದಿಕ್ಕಿನಲ್ಲಿ ತಿರುಗಿರುತ್ತದೆ. ಪ್ರೆಪ್ ಹೆಣ್ಣೆಂಬುದು ಖಚಿತ. ವಯಸ್ಸು, ರೂಪ, ಮದುವೆಯೋ, ಮಕ್ಕಳೋ, ಕುರುಡಿಯೋ ಕುಂಟಿಯೋ – ಊಹ್ಞೂ. ಬಂಗಾಳದವಳು ಅಂತಾಳೆ, ಎಷ್ಟು ನಿಜವೋ ಎಷ್ಟು ಸುಳ್ಳೋ. ಆದರೆ ಚೆಸ್ ಮಾತ್ರ ಚನ್ನಾಗಿ ಆಡ್ತಾಳೆ. ಸೋತರೆ ಬೆನ್ನತ್ತಿ ಇನ್ನೊಂದು ಆಟ ಆಡಿಸಿ – ಇವನನ್ನ ಸೋಲಿಸೋವರೆಗೂ ನಿದ್ದೆ ಮಾಡಲು ಬಿಡಳು. ಇಸ್ಪೀಟಿನ ಬಗೆಯಚಟ. ಸಕ್ಕತ್ತಾಗಿ ಆಡ್ತಾಳೆ ಎಂದಮಾತ್ರಕ್ಕೆ ಗ್ರಾಂಡ್ ಮಾಸ್ಟರ್ ಅಂತೇನು ಅಲ್ಲ, ಚಾಮಿಯ ಲೆವೆಲ್ಲಿಗೆ ಬಡಿದಾಡಲು ಸಮ ಇರುವಂತವಳು. ಒಂದೆಜ್ಜೆ ಮುಂದೆ. ಪರಿಣಾಮ, ಈ ಆಟ ಅವರ ಅದೆಷ್ಟೋ ಇರುಳುಗಳನ್ನು ನುಂಗಿಬಿಟ್ಟಿವೆ. ಚೆಸ್ ನಲ್ಲೆಂತ ರೊಮ್ಯಾನ್ಸ್ ಅಂತ ಚಾಮಿಯ ಹೆಂಡತಿಗೂ ತಾತ್ಸಾರ. + +“ಯು ಮೀನ್, ನಾನು ಗೆಲ್ಲಲಿ ಅಂತ ಸೋಲ್ತೀಯಾ?”, ಹಂಗಂತಾಳೆ, ಆದರೆ, ಅದು ತಮಾಷೆಗೆ ಮಾತ್ರ. ರೊಮಾಂಟಿಕ್ಸ್ಟೇಟ್ ಮೆಂಟ್. ತನ್ನ ಶ್ರಮದಿಂದಲೇ ತಾನು ಗೆದ್ದಿರುವುದು ಎಂಬ ಆಂತರ್ಯದ ಹಠ ಇದ್ದೇ ಇದೆ. + +“ನೋ ನೋ. ನಾನು ಸೋತಿದ್ದು ದಿಟವೇ. ಆದರೆ ಈ ಸೋಲು ನನ್ನ ಬದುಕಿನ ಮಹತ್ವದ ಆಟಗಳ ಗೆಲುವಿಗೆ ಸಹಾಯಮಾಡುತ್ತದೆ. ಬದುಕು ಸಂಕೀರ್ಣ ಅನ್ನೋದು ಎಲ್ಲರಿಗೂ ತಿಳಿದಿರುವಂತದ್ದೇ. ಆದರೆ ಅದಕ್ಕೊಂದು ಚೀಟ್ ಶೀಟ್ ಉಂಟು. ನಾವು ಚೀಟ್ ಶೀಟ್ ಅಂತೀವಿ, ನೀವೇನಂತಿರೋ ಗೊತ್ತಿಲ್ಲ. ಒಂತರ ಬದುಕಿಗೇನೆ ಚಳ್ಳೆಹಣ್ಣು ತಿನ್ನಿಸುವ ಸೂತ್ರಗಳು ಅಂತಿಟ್ಟುಕೋ. ಯಾರೂ ಯಾವತ್ತೂ ಎಲ್ಲಾನೂ ಗೆಲ್ಲೋಲ್ಲ ಅನ್ನೋದು ಸಾರ್ವತ್ರಿಕ ಸತ್ಯ ಅಲ್ವಾ? ಅಂತಹ ಮಹಾನ್ ಆಟಗಾರರೂ ಕೂಡ ಪ್ರತಿ ಮ್ಯಾಚಿನಲ್ಲು ಸೆಂಚುರಿ ಹೊಡಿಲಿಲ್ಲ. ಅಂತಂತ ಬಲಿಷ್ಠ ತಂಡಗಳೂ ಕೂಡ ಎಲ್ಲಾ ಮ್ಯಾಚ್ ಗೆಲ್ಲಲಾಗಲಿಲ್ಲ. ತುಂಬಾ ಜನಕ್ಕೆ ಗೊತ್ತಿರದ ಸತ್ಯ ಅಂದರೆ ಸೋಲು ಗೆಲುವು ಮನಸ್ಥಿತಿಗೆ ಸಂಬಂಧಪಟ್ಟಿದ್ದು. ಆಟಕ್ಕಲ್ಲ. ಅದಕ್ಕೇಂತ ನಾನು ಏಕಕಾಲಕ್ಕೆ ಎರಡು ಮೂರು ಆಟಗಳನ್ನ ಆಡ್ತಿರ್ತೀನಿ. ಅದರಲ್ಲಿ ಚೆಸ್ ಕೂಡ ಒಂದು. ಈ ಆಟದ ಸೋಲನ್ನ ಬೇರೊಂದು ಆಟದ ಲೆಕ್ಕಕ್ಕೆ ಸೇರಿಸ್ತೀನಿ. ಅಲ್ಲಿರೋ ನನ್ನ ಪಾಲಿನ ಗೆಲುವನ್ನ ನಾನು ದಕ್ಕಿಸಿಕೊಳ್ತೀನಿ….”. + +ಡಿಸ್ ಲೈಕ್. ತಡರಾತ್ರಿ ಮೂರು ಗಂಟೆ. ಹಾಗೇ ರೊಮಾನ್ಸ್ ನತ್ತ ಜಾರುವ ಹೊತ್ತಲ್ಲಿ ಗಂಭೀರ ವಿಷಯತಂದು ಮೂಡ್ ಹಾಳು ಮಾಡಿಬಿಡುತ್ತಾನೆ. ಸ್ಖಲನಕ್ಕೆ ಭಂಗ ತಂದಷ್ಟು ಕೋಪ. ಅನ್ ರೊಮಾಂಟಿಕ್ ಬಾಸ್ಟರ್ಡ್. ಎಲ್ಲ ಹಾಳು ಮಾಡಿಬಿಟ್ಟ. ಚೆಸ್ ಆಡಿ ಇವನನ್ನ ಸೋಲಿಸೋದೇ ನನ್ನ ಜೀವನದ ಮೂಲ ಉದ್ದೇಶ ಅಂತ ತಿಳಕೊಂಡಿದಾನೆ, ಗೂಬೆ. ಪಟ್ಟಾಗಿ ಕೂತರೆ ಸಾಲು ಸಾಲಾಗಿ ಮಣ್ಣು ಮುಕ್ಕಿಸಿ, ಇನ್ನೆಂದೂ ಇತ್ತ ತಿರುಗಿ ನೋಡಬಾರದು ಹಾಗೆ ಮಾಡ್ತೀನಿ.ಮನಸ್ಸು ತಿಳಿಗೊಂಡಾಗ ಅನಿಸುತ್ತೆ, ಏನೋ ಹೇಳಿದನಲ್ಲ, ಚೀಟ್ ಶೀಟ್ ಅಂತ. ಹಾಗನ್ನೋದೂ ಒಂದು ಇದೆಯಾ? ನಾನೂ ಬಳಸಬಹುದಾ? ಪ್ರಯೋಗ ಇವನ ಮೇಲೆಯೆ ಯಾಕಾಗಬಾರದು? ಸೋತು ಹಿಮ್ಮೆಟ್ಟುತ್ತಿರುವ ಕುದುರೆ ಹಿಂದೆಸರಿಯುತ್ತ ಕಡೆಗಳಿಗೆಯಲ್ಲಿ ಚಮಕ್ ಕೊಟ್ಟಂತ ರೋಮಾಂಚನ. ಎಲ್ ಓ ಎಲ್. ಲಾಟ್ಸ್ ಆಫ್ ಲೈಕ್ಸ್. ಅರ್ಥಕೆಡಿಸೋದರಲ್ಲು ಅರ್ಥವಿದೆ. + +*** + +ಚಾಮರಾಜೇಂದ್ರ ಸುಮಾರು ವರ್ಷಗಳಿಂದ ಹೀಗೊಂದು ಆಲೋಚನೆಯನ್ನು ಮೆಲುಕುತ್ತಲೇ ಇದ್ದ, ಏನೂ ಬ್ಯಾಡಾ, ಕನಿಷ್ಟ ಮರವಳಿ ಮಾಡಿಸಿ ಬಿಟ್ಟುಬಿಡಾನ, ಊರಿಗೆಲ್ಲಾ ದೇಶೋದ್ಧಾರದ ಪುಂಗಿ ಊದ್ತೀನಿ, ಪೋಷ್ಟ್ ಹಾಕ್ತೀನಿ, ಕಮೆಂಟು ಮಾಡ್ತೀನಿ, ಫಾರ್ವರ್ಡ್ ಮಾಡ್ತೀನಿ, ನಂದೇ ಜಮೀನನ್ನ ಬರಡು ಬಿಟ್ಟಿದ್ದೀನಿ. ಒಂದು ಪುಟ್ಟತೋಟ ಅಂತಾದರೆ ಹೋಗಿ ಬತ್ತ ಒಳ್ಳೆ ಗಾಳಿ ನೆರಳು ತಂಪು, ಮನೆ ಮಕ್ಕಳಿಗೆಲ್ಲ ತಿನ್ನೋಕಂತ ಹಣ್ಣು, ಕಷ್ಟಕಾಲಕ್ಕೆಆಸರೆ. ನಡುವೆ ತೋಟದಮನೆ ಅಂತ ಇದ್ದರೆ ಅದು ಇನ್ನೂ ಚಂದ. ಮೈನೊಂದಾಗ ಮಣ್ಣಿನ ಕಾವು ಕೊಟ್ಟುಕೊಳ್ಳಬೋದು. ಮನನೊಂದಾಗ ಆಕಾಶನೆ ಹೊದ್ದುಕೊಂಡು ಮಲಗಬೋದು. ಹಾಗೆಲ್ಲ ಕನಸು ಕಾಣ್ತಿದ್ದೋನಿಗೆ ಗ್ಯಾನ ಕೂಡಿ ಬಂದದ್ದು ಈ ಮಳೆಗಾಲಕ್ಕೆ. ಇಪ್ಪತ್ತು ವರ್ಷಗಳಾಗಿದ್ದವು ಹೊಲದೊಳಗೆ ಕಾಲಿಕ್ಕಿ. ಯಾರಿಗಾದರೂ ತೋರಿಸಿದರೆ ಇಲ್ಲಿ ಹೊಲಾನೇ ಇಲ್ಲ ಎಂಬಷ್ಟು ಬಂಜರಾಗಿ ತಗ್ಗುದಿಬ್ಬಗಳ ಆಗರವಾಗಿತ್ತು ಭೂಮಿ. + +“ಸಾಯೇಬ್ರೆ ಇಗ ಇಲ್ಲಿಂದ ಇಲ್ಲಿಗೆ. ಆಮ್ಯಾಕೆ ಇದುನ್ನ ನೋಡು, ನಿಮ್ಮ ತಾತನ ಕಾಲದಾಗೆ ಊಣಿರೋಕಲ್ಲು. ಯೋಸೊರ್ಸ ಆತೋ ಗೇದು. ನಿಮ್ಮಪ್ನು ಗೇಲಿಲ್ಲ. ನೀನು ಗೇಲಿಲ್ಲ. ಅದಿಕ್ಕೆ ಕಾಮಲ್ಲ. ಈ ಕಲ್ಲಿನನ್ಯಾರಕ್ಕೆ ನಿಮ್ಮೊಲ”. ಯಾವ ಕಾಲಕ್ಕೋ ಬರೆಸಿದ್ದ ಚೆಕ್ ಬಂದಿ ತರಿಸಿ ಅಕ್ಕ ಪಕ್ಕ ಯಾರಿದಾರೆ ಅಂತ ತಿಳಕೊಂಡು, ಅವರನ್ನು ಕರೆಸಿ ತನ್ನ ಹೊಲ ಹುಡುಕಿಕೊಂಡಿದ್ದ ಚಾಮಿ. + +“ಇನ್ನು ಉಡುಗನ ವೈಸು. ಯೋಳದೋರ ಮಾತು ಕ್ಯೋಳಬಕು. ಯಂಗು ಬಂದಿದಿಯ ಸುಮ್ಕೆ ಉಣಸೆ ಸಸಿ ಊಣಿಸಿ ಯಾರ ಕೈಗಾನ ಒಂದೀಟು ಕಾಸು ಕೊಟ್ಟು ಒಂದೆಲ್ಡು ವರ್ಸ ನೀರೊಯ್ದು ಸಾಕಕೇಳು. ನಿನ್ ಕೈನಾಗೆ ಜಲದ ಗೆರೆ ಕಾಮಂಗಿಲ್ಲ. ದುಡ್ಡು ಕರ್ಸು ಮಾಡಕೆ ಉಪಾಯವ ಕ್ಯೋಳು ಬೇಕಾದ್ರೆ ಸಾವ್ರ ಕೊಡ್ತೀವಿ”. ಬರಗಾಲದ ಬಟ್ಟಲೆನಿಸಿರುವಂತ ಪ್ರದೇಶದಲ್ಲಿ ಅವನ ಗ್ರಹಚಾರಕೆಟ್ಟಿತ್ತೋ, ಹಳ್ಳಕ್ಕೆ ಬೀಳಿಸಲೆಂದೆ ಹಾಗಾಯಿತೋ, ಸುತ್ತ ಮುತ್ತಲಿನವರ ಕಣ್ಣಾಗುವಂತೆ ಅಂತರ್ಜಲವು ಉಕ್ಕಿ ಊರವರು ಕಣ್ಣು ಬಾಯಿ ಬಿಡುವಂತಾಯಿತು. ಇಲ್ಲದಿದ್ದರೆ ಈ ಕತೆಯೇ ಹುಟ್ಟುತ್ತಿರಲಿಲ್ಲ. ಹಂಗನ್ನಬಾರದು ರಾಜ, ಗಂಗೆ ಎಲ್ಲರಿಗೂ ಒಲಿಯಲ್ಲ ಅಂತಾರೆ ಜನ. ತರುವಾಯ ಜೇಸಿಬಿಯ ಪಾದಾರ್ಪಣೆಯಾಗಿ ಅದು ತನ್ನಕಾಲುಗಳನ್ನು ಊರಗಲ ಅಗಲಿಸಿ ನಿಂತು, ಜಾಲಿ, ಬೇಲಿ, ಕತ್ತಾಳೆ, ತಂಗಟೆಕುಲ-ನೆಲೆ ನೋಡದೆ ಸಕಲ ಗಿಡಗೆಂಟೆಗಳನ್ನು ತನ್ನಕೊಕ್ಕಿನಿಂದ ಒಂದೇಟಿಗೆ ತರದು ಬುಡಸಮೇತ ಎಬ್ಬಿಸಿ, ತದನಂತರ ಎರಡು ಸಾಲು ಟ್ರಾಕ್ಟರಿನಿಂದ ಗೆಯ್ಯಿಸಿ, ಹೆಂಟೆಗಳನ್ನು ಒಡೆಸಿ, ಅಕ್ಕಪಕ್ಕದ ಜಮೀನಿನೊಳಗೆ ಕರಗಿಹೋಗಿದ್ದ ಬದುಗಳನ್ನು ಪುನರ್ ಸ್ಥಾಪಿಸಿ ಒಂದುಮಟ್ಟಕ್ಕೆ ಸಮ ಮಾಡಿ ಮೋಟರು ಇಳಿಸಿ ಪೈಪುಗಳನ್ನು ಹೂಣಿಸಿ ನೀರೆತ್ತಿ ನೆತ್ತಿಗೆ ಸೋಕಿಸಿಕೊಳ್ಳುವುದರೊಳಗೆ ಚಾಮಿಯ ನೀರಿಳಿದಿತ್ತು. ಎಲಾ ಎಲಾ ಅದುಮ್ಕಂಡು ಬೆಂಗಳೂರ್ನಾಗೆ ಬಿದ್ದಿದ್ದರೆ ಚೆನ್ನಾಗಿತ್ತೇನೋ, ಎಂಜಿನಿಯರ್ ಕ್ಯಾಮೆಗೆ ತಾನು ಲಾಯಕ್ಕು, ಬೇಸಾಯ ಶೋಕಿಗಲ್ಲ ಎಂಬ ಬುದ್ಧೋದಯವಾಗುತ್ತಿದ್ದಂತೆ ಆಸಾಮಿ ನಾಪತ್ತೆ, + +“ನಿಮಿಗ್ಯಾಕೆ ಬೇಕಿತ್ತು ಸಾ. ತಿಂಗಳ ತಿಂಗಳ ಸಂಬಳ ಎಣಿಷ್ಕಮದು ಬಿಟ್ಟು ಉರಿಯೋ ಬಿಸಿಲ್ನಾಗೆ”.“ಮಾಡೋರೇ ಮಾಡಾಕಾಗದೆ ಊರು ಬಿಟ್ಟವರೆ. ನೀವು ನೋಡಿದರೆ…”.“ಡ್ಯೂಟಿ ಎಲ್ಲಿ ಸಾ, ಪ್ರವೀಟೋ ಗೋರ್ಮೆಂಟೋ”“ಸಿವಿಲ್ಲೋ?”“ತಿಂಗಳಿಗೆ ಲಕ್ಸನೋ ಎರಡು ಲಕ್ಸಾನೋ?”. + +ಊರಿಗೆ ಚಾಮಿ ಮೇಲೆ ಒಂಥರ ಕುತೂಹಲ, ಇನ್ನೊಂಥರ ಅನುಕಂಪ. ದಪ್ಪನಾಗಿ ಮಾಡಿಕ್ಕಿರಬೇಕು. ಅಲ್ಲಿಖರ್ಚು ಮಾಡಿ ತುಳುಕಿದ್ದನ್ನ ಇಲ್ಲಿ ಸುರಿಯಾಕೆ ಬಂದಿರಬೇಕು. ಮಾಡಲಿ ಬಿಡಿ. ನಾಲ್ಕಾರು ಜನಕ್ಕೆ ಹಂಚಿಕೆಯಾದರೆ ಸಾಹೇಬರೇನು ಸಣ್ಣ ಆಗೋದಿಲ್ಲ ಅಂತಾರೆ. + +“ಎಲ್ಲಿ ಸಾ, ನಿಮ್ಮ ಎಂಗುಸ್ರು ಬರ್ಲಿಲ್ವ್ಯಾ”.ಒಬ್ಬೊಬ್ಬರೇ ಬತ್ತಾರೆ, ಹೋಗ್ತಾರೆ. ಹೆಂಡತಿ ಮಕ್ಕಳ ಸುದ್ದಿಯಿಲ್ಲ. ಕೇಳಿದರೆ ಏನೋ ಒಂದು ಹಾರಿಕೆ ಉತ್ತರ. ದೇಶಾಂತರ ಹೋದೋರಿಗೆ ಇದ್ಕಿದಂಗೆ ಊರಿನ ನೆನಪಾಗೈತೆ ಅಂದರೆ, ಏನೋ ಕೊರೆ ಇರಬೇಕು. ಬಿಟ್ಟರೂ ಬಿಟ್ಟಿರಬೋದೇನೋ ಯಾರಿಗ್ಗೊತ್ತು.“ನೀವು ಈ ಕಡೆಕೆ ಬಂದಾಗ ಮೇಡಮ್ಮು ಮನ್ಯಾಗೆ ಒಬ್ರೆ ಇರ್ತಾರೋ”. ಕಾಳಜಿ ಎಂತದು. + +ಚಾಮಿಯ ಆಗಮನದಿಂದ ಕೆಲಕಾಲ ಸಂಚಲನ ಉಂಟಾಗಿದ್ದರೂ ನಾಪತ್ತೆಯಾದ ನಂತರ ಇನ್ನು ಸಾಹೇಬರು ಇತ್ತಕಡಿಕೆ ತಲೆ ಹಾಕಲ್ಲ ಅಂತ ನಸುನಕ್ಕ ಊರು ದವಡೆಯಲ್ಲಿದ್ದ ಹೊಗೆಸೊಪ್ಪಿನ ಉಂಡೆಯನ್ನು ಇನ್ನೊಂದು ಮಗ್ಗುಲಿಗೆ ವರ್ಗಾಯಿಸಿ ಬೆಳದಿಂಗಳನ್ನು ಮೇಲೆರಚಿಕೊಂಡು ಮೈನೀವಿ, “ಕಾಪಾಡು ರಂಗಾ” ಎನ್ನುತ್ತ ಅಂಗಳದಲ್ಲಿ ಮೈಚೆಲ್ಲಿತು. + +*** + +“ಯಾಕೋ ಇಷ್ಟು ಕೋಪ? ಈ ಕೋಪನೆಲ್ಲ ನಿನ್ನ ಔಟ್ ಡೋರ್ ಗೇಮ್ಸ್ ನಲ್ಲಿ ಇಟ್ಕೊ. ನನ್ನತ್ರ ತರಬೇಡ..”, ಪ್ರೆಪ್ ಟೈಪಿಸುತ್ತ ಮುಂದೆ ಯಾವ ನಡೆ ಇಡಲಿ ಎಂದು ಯೋಚಿಸುತ್ತಿದ್ದಳು. ಪೋಲಿಯೋದಿಂದ ವೀಲ್ ಚೇರಿಗೆ ಸೀಮಿತಗೊಂಡಿರುವಳನ್ನು ಕಂಡರೆ ಸೋಲಿಸಬಾರದೆನ್ನುವಷ್ಟು ಮನ ಕರಗುತ್ತೆ. ಆದರೆ, ಆಟ ಅಂದಮೇಲೆ ಆಟ. ಚೆಕ್ಮೇಟ್. + +“ಅಯ್ಯೋ ಮನೆಹಾಳ. ಸೋಲಿಸಿಬಿಟ್ಯ?”“ಇಲ್ಲಿ ಗೆಲ್ತಿದಿಯ ಅಂತಂದರೆ ಔಟ್ ಡೋರ್ ಗೇಮ್ಸ್ ಗಳೆಲ್ಲ ಗೋತಾನಾ?”, ಸೊಟ್ಟ ನಾಲಿಗೆಯ ಸ್ಮೈಲಿ. ಪ್ರತ್ಯುತ್ತರವಿಲ್ಲ. ಹಸಿರು ಬೊಟ್ಟಿನ ಡಿಜಿಟಲ್ ಚಾಮಿ ಕಂದುಬಣ್ಣಕ್ಕೆ ತಿರುಗಿದ. ಪ್ರಫುಲ್ಲಿಕಾ ಕಳಿಸಿದ ಢಬ್ ಢಬ್ ಹೊಡೆದುಕೊಳ್ಳುವ ಕಡುಗೆಂಪು ಹೃದಯವು ಹಿಪ್ಪೀಯಂತೆ ಹೋಗಿ ಜೋಂಬಿಯಂತೆ ಮರಳಿತು. ಸಣ್ಣ ಸಣ್ಣ ಆಸೆಗಳಿಗೂ ತೊಡಕಾಗಬಾರದೆಂದು ಪ್ರೆಪ್ ಏನೆಲ್ಲ ಆಟಾಟೋಪ ನಡೆಸಿದರೂ ಚಾಮಿ ಸುಮ್ಮನಿರುತ್ತಾನೆ. ಅಕಸ್ಮಾತ್ ಆಕೆಗೆ ಪೋಲಿಯೋ ಇರದಿದ್ದರೆ ಇಷ್ಟೇ ಉದಾಸೀನ ತೋರಿಸುತ್ತಿದ್ದನೋ, ಹೇಳಲಾಗದು. ಮನುಷ್ಯನಿಗೆ ಸಹಜವಾಗಿ ಒಲಿಯೋದೆಂದರೆ ಸಣ್ಣ ಬುದ್ದಿ. ದೊಡ್ಡ ಮನಸ್ಸು ಒಳ್ಳೆ ಗುಣಗಳನ್ನು ಕಷ್ಟಪಟ್ಟು ಬೆಳೆಸಿಕೊಳ್ಳಬೇಕಾಗುತ್ತದೆ. + +ನಗರದೊಳಗೆ ಕಳೆದುಹೋಗುವುದು ತಂತಾನೆ ಆಗುವಂತದು. ಅದರಲ್ಲೂ ಎರಡು ಬಗೆಯುಂಟು. ಹೋದ ಸಲ ಅಲೆದಾಡಿದ್ದ ಬೀದಿಯಲ್ಲಿ ಈ ಸಲ ಪರಪಟ್ಟಾಗುವುದು ಒಂದು ಬಗೆ. ಮನೆಯಿಂದ ಹೊರಟು ಆಫೀಸು ತಲುಪಿದೊಡನೆ, ಇದೇನಿದು ಬಂದದ್ದು ಗೊತ್ತೇ ಆಗಲಿಲ್ಲವಲ್ಲ, ಯಾವ ದಾರಿ ಬಳಸಿ ಹೇಗೆ ಬಂದೆ, ಅದೂ ಕಿಕ್ಕಿರಿಯೊ ಟ್ರಾಫಿಕ್ಕಿನ ನಡುವೆ… ಎಂದೆಲ್ಲ ಸೋಜಿಗಪಡುವುದು ಇನ್ನೊಂದು ಬಗೆ. ಚಾಮಿಯದು ಇದ್ಯಾವುದೂ ಅಲ್ಲದ್ದು. ಇದೆಲ್ಲವು ಬೆರೆತದ್ದು. ಸಂತನು ಬಿರುಬಯಲಿನ ನಡುವೆ ಕಳೆದುಹೋಗುವಂತೆ. ಪ್ರತಿಯೊಂದೂ ಧ್ಯಾನ. ಇಲ್ಲೇ ಇದ್ದೂ ಇಲ್ಲವಾಗುತ್ತಾನೆ. ಎಲ್ಲೋಇದ್ದೂ ಇಲ್ಲೇ ಇರುತ್ತಾನೆ. ಪಕ್ಕಾ ವ್ಯಾಪಾರಿಯೂ ಲೋಭಿಯೂ ಕಾಮಿಯೂ ಧ್ಯಾನಿಯೂ, ಇದ್ಯಾವುದರೊಂದಿಗೂ ತನಗೆ ಸಂಬಂಧವೆ ಇಲ್ಲವೆಂಬಂತೆ ಜೋಗಿಯೂ ಆಗಿರುತ್ತಾನೆ. + +ಸಹದ್ಯೋಗಿಗಳು ಅಚ್ಚರಿ ಪಡುವಂತೆ ಆಫೀಸಿನ ಕೆಲಸದೊಳಗೆ ಮುಳುಗಿರುತ್ತಾನೆ. ಇಂತಹ ಗೃಹಸ್ಥನನ್ನು ಮತ್ತೆಲ್ಲೂ ಕಂಡಿಲ್ಲವೆಂಬಂತೆ ಸಂಸಾರದೊಳಗೆ ಇಳಿದಿರುತ್ತಾನೆ. ಎಲ್ಲ ಜಂಜಡಗಳ ನಡುವೆ ಕೋಳಿ ಕುಕ್ಕಿದಂತೆ ಮೊಬೈಲನ್ನು ಕುಕ್ಕುತ್ತ ಆಗಾಗ್ಗೆ ಜೇಸಿಬಿ ಕಾಲಿಕ್ಕೋಕೂ ಮುಂಚಿನ ಆಮೇಲಿನ ಸೆರೆಹಿಡಿದ ಪಟಗಳನ್ನು ಎಡ ಬಲ ಸ್ವಾಯಿಪ್ ಮಾಡುತ್ತಿರುತ್ತಾನೆ. ಹಕ್ಕಿಪಿಕ್ಕಿನೋರ ಹುಡುಗನನ್ನು ಹಿಡಕೊಂಬಂದು ಕಟಿಂಗ್ ಮಾಡಿಸಿ ಸೋಪಚ್ಚಿ ಸ್ನಾನ ಮಾಡಿಸಿ ಒಗದಿರೋ ಅಂಗಿ ಚಡ್ಡಿ ಹಾಕಿಸಿ, ಎಣ್ಣೆ ಹಚ್ಚಿ ತಲೆ ಬಾಚಿ ಕ್ರಾಪು ತೆಗೆದು ಕನ್ನಡಿ ಮುಂದೆ ನಿಲ್ಲಿಸಿದಂಗೆ ಶಿಸ್ತಾಗಿ ನಿಂತಿದೆ ಹೊಲ. ಮಾಡಿದ್ದ ಕಸುಬಿನಿಂದ ಸಾರ್ಥಕ ಮನೋಭಾವ. ಕಾಸುಕೊಟ್ಟು ಗುಡ್ಡಗಾಡಿನ ಮ್ಯಾರಥಾನ್ ಓಟ ಮುಗಿಸಿದಾಗ ಉಂಟಾಗುವಸಿರಿಗಿಂತಲೂ ನೂರು ಪಟ್ಟು ಹೆಚ್ಚು. ಎಲ್ಲೋ ಮೂಲೇಲಿ ಇದು ನನ್ನ ಬದುಕಾಯಿತು ಎಂಬ ನೆಮ್ಮದಿ. ಮರಳಿಬಾ ಎನ್ನುತ್ತದೆ ಗಾಳಿ. + +ಚಕ್ಕಲಮಕ್ಕಲ ಕೂತು ಕಾದು ಬರಿಸಿಕೊಳ್ಳುವ ನೆಮ್ಮದಿಗಿಂತ ಅಗೆದು ಬಗೆದು ದೊರಕಿಸಿಕೊಳ್ಳುವ ನೆಮ್ಮದಿ ಅತ್ಯಂತ್ಯ ಹಿರಿದು, ಹಿತವಾದದ್ದು. ಬಹಳ ಕಾಲ ನಿಲ್ಲುವಂತದ್ದು. ಪಂಡಿತರು ಹೇಳಬಹುದು, ಮನಸ್ಸನ್ನ ದುಡಿಸಿಕೊಳ್ಳಬೇಕು ಅಂತ. ಅಲ್ಲಲ್ಲ, ನೆಮ್ಮದಿ ಬೇಕೆಂದರೆ ಮೈಯನ್ನು ದುಡಿಸಿಕೊಳ್ಳಬೇಕು. ತನ್ಮೂಲಕ ಮನಸ್ಸು. ಗಣ ಗಣ ಕಾಯುವ ಕಲ್ಲುಮಣ್ಣುಗಳ ಮೇಲೆ ಅಂಗಾಲು ಊರಿ ಸುಟ್ಟು ಬರೆ ಹಾಕುವ ಬಿಸಿಲಿಗೆ ಬೆತ್ತಲೆ ಬೆನ್ನೊಡ್ಡಿ ಸಲಿಕೆ ಹಿಡಿದು ಅಂಗೈಲಿ ಬಬ್ಬೆ ಒಡೆಯುವವರೆಗೂ ಬದು ಕಟ್ಟಿ ನೋಡು. ಕಾರ್ಯವು ಯಕಃಶ್ಚಿತ್ ಮಂಕರಿ ಮಣ್ಣನ್ನು ಅತ್ತಿಂದ ಇತ್ತ ಎತ್ತಿ ಹಾಕುವುದು. ಯಾವ ಸಾಧನೆಗಾಗಿ? ಖಾಯಿಲೆಗೆ ಔಷಧಿ ಕಂಡುಹಿಡಿಯುವಂತದೇ? ಗ್ರಹಗಳು ಎಂಟೋ ಒಂಭತ್ತೋ ಶೋಧಿಸಿದಂತೆಯೇ? ಅಣೆಕಟ್ಟು ಕಟ್ಟಿದಂತೆಯೇ? ಹಸಿರುಕ್ರಾಂತಿಯೇ ಕ್ಷೀರಕ್ರಾಂತಿಯೇ? ಇದಾವುದೂ ಅಲ್ಲದ ಕ್ಷುಲ್ಲಕವೆಂಬಂತ ಇದು ನನ್ನದು ಅದು, ನಿನ್ನದು ಎಂಬ ಗೆರೆ ಹೊಡೆಯುವ ಬದು ಕಟ್ಟು, ಆಧ್ಯಾತ್ಮವು ಗೋಚರಿಸುತ್ತದೆ. ಚಾಮಿ ಅಂಗೈ ನೋಡಿಕೊಂಡ. ಒಡೆದ ಬಬ್ಬೆಗಳು ಕೂಡಿಕೊಂಡು ಅಂಗೈ ನಯಸ್ಸಾಗಿದೆ. ನೆನೆಸಿಕೊಂಡರೆ ತೊಡೆ ಮೊಣಕಾಲು ಮೀನಖಂಡ ರೆಟ್ಟೆಗಳಲ್ಲಿ ಕರೆಂಟು ಹರಿದಂತಾಗುತ್ತದೆ. ವಾಪಸ್ಸು ಬಂದಾಗಿಂದ ತನ್ನೊಳಗೆ ಸಾಕಷ್ಟು ಬದಲಾವಣೆ ಗಮನಿಸಿದ್ದಾನೆ. ಇದು ಹೀಗೆ, ಜಗತ್ತು ಇರೋದೆ ಹೀಗೆ. ಮೈ ಪರಚಿಕೊಂಡು ಪ್ರಯೋಜನವಿಲ್ಲ. ಹಾಗಂತ ನಿರಾಶಾವಾದಿಯಲ್ಲ. ಲೌಕಿಕದೊಳಗೆ ಬದುಕುತ್ತಲೇ ಅಲೌಕಿಕದ ಪ್ರಜ್ಞೆಯಿರುವುದು. ಸಮಯಕ್ಕೆ ಬೆಲೆಯುಂಟೇ ಎಂಬ ಜಿಜ್ಞಾಸೆಯಿರುವಾಗಲೆ ಇಷ್ಟವಾದ ವಾಚು ಕೊಂಡುಕೊಳ್ಳುವುದು. ಬಚ್ಚಲು ಬೆಡ್ರೂಮಿನಲ್ಲೂ ಬಿಚ್ಚಿಡದಷ್ಟು ಉತ್ಕಟ ಅನುಭವಿಸುವುದು. ಯಾವುದೋ ದುಷ್ಟ ಗಳಿಗೆಯಲ್ಲಿ(ದುಷ್ಟ?) ಬಿದ್ದುಒಡೆದು ವಿರೂಪಗೊಂಡಾಗ, ವಿರೂಪದ ಸ್ವರೂಪವನ್ನೆ ಬಿಡಿಸಿ ಬಿಡಿಸಿ ನೋಡುತ್ತ ಕಲಾತ್ಮಕ ವಿಜ್ಞಾನಿಯಂತೆ ಮಾರ್ಪಡುವುದು, ಕ್ಷೋಭೆಗೆ ಅವಕಾಶವೇ ಇಲ್ಲದಂತೆ. ಮನಸ್ಸು ಮಾಗಿದೆ. ಮೈಯಿಂದ ಮನಸ್ಸೋ. ಮನಸ್ಸಿಂದ ಮೈಯೋ. ಜಟಿಲವು. ಹೊಟ್ಟೆಪಾಡಿನ ತಪಸ್ಸಿನಿಂದ ಹೊರಬಂದೊಡನೆ ಫೋನಿನ ಮೂಲಕ, ಜೇಸಿಬಿ ಕರೆಸಿದ್ದೂ ತಡವಾಗಲಿಲ್ಲ. ಗುಂಡಿ ಹೊಡೆಸಿದ್ದೂ ತಡವಾಗಲಿಲ್ಲ. ರಾತ್ರೋ ರಾತ್ರಿ ಕಸಿ ಕಟ್ಟಿದ ಮಾವಿನ ಸಸಿಗಳು ಅಂಗಳದಲ್ಲಿ ಇಳಿಸಿದ್ದೂ ತಡವಾಗಲಿಲ್ಲ. ಎಂಜಿನಿಯರ್ ಸಾಹೇಬರ ಸ್ಪೀಡಿಗೆ ಊರಿಗೆ ಊರೇ ಕಕ್ಕಾಬಿಕ್ಕಿ. ಅಡ್ಡ ಮಳೆ ಜಡಿದಂತೆ ಅಂದುಕೊಂಡಿತು. + +“ಅಲ್ಲಾ ಸಾ. ಆಗ ಬಂದ್ರಿ. ನೆಲ ಅಚ್ ಕಟ್ ಮಾಡಿಸಿ ಹೋದ್ರಿ. ಆಮ್ಯಾಕೆ ಸುಳಿವೆ ಇಲ್ಲ. ಈಗ ಬಂದ್ರಿ. ಬತ್ತಾನೆ ಟ್ಯಾಕುಟ್ರಿ ತುಂಬ ಸಸಿ ಒತ್ಕಂಬಂದಿದೀರ. ರಾತ್ರಿಕೆ ಗಿಡ ಊಣನ ಅಂತ ಮಾಡಿದಿರೇನು?”“ರಾತ್ರಿ ಬೇಡ. ನಾಳೆ ಆದರೂ ಪರವಾಗಿಲ್ಲ”.“ಒಂದಿನ ರಜ ಆಕಿ ಬಂದಿದಿರೋ”.“ಹೌದು”“ಅರ್ಥವಾತು ಬುಡಿ”. ಏನೋ ಎಡವಟ್ಟಾಗಿದೆ, ಅರ್ಥವಾಗುತ್ತಿಲ್ಲ.“ರವೆಪ್ಪ, ನಿನ್ ಕ್ಲಾಸ್ ಮೆಂಟು ಅಮ್ತೀಯ. ರವಷ್ಟು ಬಿಡಿಸಿ ಯೇಳಪ್ಪ. ಪಾರಂ ಸಸಿ ಅಮ್ತಾರೆ. ಸಾನೆದುಡ್ನವಿರಬಕು. ಅನ್ನೇಯವಾಗಿ ತಿಪ್ಪೆ ಪಾಲಾಗ್ತವೆ”. + +ರವಿ, ಪ್ರೈಮರಿ ಸ್ಕೂಲಿನ ಕ್ಲಾಸಮೇಟು. ಆಗಿನ ಕಾಲಕ್ಕೆ ತೋಟ ಗೀಟ, ಟ್ಯಾಕ್ಟರು, ಬುಲೆಟ್ಟು ಮಡಗಿದ್ದಂತ ಕುಟುಂಬ. ‘ನಮ್ ತ್ವಾಟ ಪಾಟ ನೋಡ್ಕಮಕೆ ಮೂರಾಳು ಬೇಕು’ ಎಂಬ ಹಿನ್ನೆಲೆಯಲ್ಲಿ ಓದಿಗೆ ತಿಲಾಂಜಲಿ ಹಾಡಿದ್ದವನಿಗೆ ಕಾಲಾನಂತರ ಮಳೆಯು ಮರೀಚಿಕೆಯಾಗಿ ಬೋರ್ ವೆಲ್ಲುಗಳು ಒಣಗಿ, ತೋಟ ಉಳಿಸಿಕೊಳ್ಳಲು ಜಮೀನಿನ ಉದ್ದಗಲ ತೂತಿಕ್ಕಿ ಉಳಿತಾಯವೆಲ್ಲ ಹರಣವಾಗಿ, ಈಗ ಮದುವೆಯಾಗಿದೆ, ಎರಡು ಮಕ್ಕಳು. ಮೆತ್ತಗಾಗಿದ್ದಾನೆ. ಅಂಗೈಯಗಲ ತೋಟ ಬದುಕುಳಿದಿದೆ. + +“ಅಪ್ಪಿ, ಗಿಡ ಊಣಕು ಮುಂಚೆ ಗುಂಡಿಗೆ ಗೊಬ್ಬರ ಹೊಡಿಬೇಕು. ಮಣ್ಣು ಮುಚ್ಚಿಸಬೇಕು. ನೀರಿಕ್ಕಿನೆನಾಕಬೇಕು. ಆಮೇಕೆ ಸಸಿ ಊಣದು.. ಇದುಕ್ಕೆಲ್ಲ ಆಳುಕಾಳು.. ಸುಮ್ನೆನಾ”.“ಇದೆಲ್ಲ ನಾಳೆ ಮುಗಿಸಿ, ನಾಡಿದ್ದು ಊಣಬಹುದಲ್ಲ?”.“ಇದು ಕಂಪ್ಲೀಟ್ರು ಮೊಬೈಲು ಪಟಪಟ ಒತ್ತಿದಂಗಲ್ಲಪ್ಪಿ. ಕಷ್ಟ ಐತೆ”. + +ರವಿ ಕಷ್ಟದ ವಿವರಣೆ ಕೊಟ್ಟ. ತುರ್ತಾಗಿ ತಿಪ್ಪೆ ಗೊಬ್ಬರ ಬೇಕು. ನೋಡಿದರೆ ಊರಿಗೂರೆ ಬಣ ಬಣ ಅಂತಿದೆ. ತನ್ನ ಮನೆಯ ಹಿಂದೆಯೆ ಇದ್ದ ಸಣ್ಣೋನಿದ್ದಾಗ ಕೂರುತ್ತಿದ್ದ ತಿಪ್ಪೆ ಹುಡುಕಿದ. ಅಲ್ಲೀಗ ಶಾಲೆ, ಪಕ್ಕದೇವರ ಗುಡಿ ಎದ್ದಿವೆ. ಪೈಪೋಟಿಗಳಿದು ಫಲವತ್ತಾಗಿ ಬೆಳೆಯುತ್ತಿವೆ. ಎದುರುಮನೆಯ ಹಜಾರದಲ್ಲಿ ಪ್ರವಾಹೋಪಾದಿಯಲ್ಲಿ ಇಳಿಯುತ್ತಿದ್ದ ಬೆವರಿಗೆ ಬೀಸಣಿಗೆ ಕೊಟ್ಟು ತಡೆಹಿಡಿಯುವ ವ್ಯರ್ಥ ಪ್ರಯತ್ನದಲ್ಲಿದ್ದ ಸುಗ್ಗಜ್ಜಿ –“ದನ ಕರ ಯಾರು ಸಾಕ್ತಾರೆ ಮಗ ಈಗಿನ ಕಾಲದಾಗೆ. ಒಂದಿಂದರೊಂದು ಅಮ್ತ ಬರಗಾಲ ಬಂದು ಜನವೆಲ್ಲ ತಿಕಸುಡಿಷ್ಕಂಡು.. ನಮ್ಮಪ್ಪ ಬ್ಯಾಡಾ ಬ್ಯಾಸಾಯದ ಗೋಳು. ದೇವ್ರು ಅಂಬೋನು ಇಗಾ ಈ ಪಾಪ್ರು ಕಣ್ಣುಗಳನ್ನ ಇನ್ನೂ ಯಾವ ಸುಕಕ್ಕೆ ಉಳಿಸೆವ್ನೋ. ನೀರು ನಿಡಿಯಿಲ್ದೆನಾ.. ಉಲ್ಲು ಸೊಪ್ಪು ಇಲ್ದೆನಾ.. ಉಳ ಉಳ ಒದ್ದಾಡದಂಗೆ ಒದ್ದಾಡ್ತನ ಸತೋದ್ವು. ”.“ಬಿಡು, ಪ್ಯಾಕೆಟ್ ಗೊಬ್ಬರನೆ ಹಾಕಿದರಾಯಿತು”, ಎಂದ ಚಾಮಿ.“ಇನ್ನು ಸಣ್ಣ ಸಸಿ ಕಣಪ. ಎಳೆ ಮಗಿನ ಬೆಳ್ಳುಗಳಿದ್ದಂಗೆ ಬೇರು.. ಸುಟ್ಟೋಗ್ತವೆ, ಯಂಗು ನಿಮ್ಮೊಲದಾಕೆ ಮಡ್ಕೆ ಇಳಿಸಿ ಸ್ಯಾನೆ ವರ್ಸ ಆಗೆತೆ. ಗೊಬ್ಬರ ಆಕದಿದ್ದರು ನಡಿತೆತೆ“.“ಸಾಯೇಬ್ರೆ, ಈವಜ್ಜಿ ಮಾತು ಕಟ್ಕ್ಯ. ಮುಣುಗೋಗ್ತಿಯ. ಯಂಗನ ಮಾಡಿ ಗೊಬ್ರ ಉಡುಕಬಕು, ಗಿಡ ಆಗ್ಲೆಬಾಡ್ಕಂಡೆವೆ, ಸೊಣಮಣ ಅಮ್ತ ಕೂಕಂಡ್ರೆ ದೇವ್ರೇ ಗತಿ”. + + + +ಚಾಮಿ ಸಸಿಗಳತ್ತ ಗಮನ ಹರಿಸಿರಲಿಲ್ಲ. ಜೀವ ತುಂಬಿಕೊಂಡಿದ್ದ ಹಚ್ಚ ಹಸಿರು ಎಲೆಗಳು ಸೊರಗಿ ನೆಲನೋಡುತ್ತಿವೆ. ಮನಸ್ಸು ಉದ್ವಿಗ್ನಗೊಂಡಿತು. ಇರುಳೊತ್ತಿನಲ್ಲಿ ಏನೂ ಮಾಡಲಾಗದು ಎಂದು ಹತಾಶನಾಗಿ ಮೊಬೈಲ್ತೆಗೆದ. ಇಲ್ಲಿ ನೆಟ್ವರ್ಕಿಗು ಭಂಗ. ಮಹಡಿ ಮೇಲತ್ತಿ ನಾಲಕ್ಕೂ ಮೂಲೆ ನಿಂತು ತಡಕಾಡಿದ. ಕೊನೆಗೊಂಚೂರು ಕೊಂಡಿ ಸಿಕ್ಕಿತು. ಕೆರೆ ಕೋಡಿ ಒಡೆದಂತೆ ಮೆಸೇಜುಗಳು ಹರಿಯಲಾರಂಭಿಸಿದವು. + +“ಯಾಕೆ ಆಫ್ ಲೈನ್?”“ಏನಾದರೂ ತಪ್ಪು ಮಾತಾಡಿದ್ನ”“ತಲೆ ಸಿಡಿದೋಗ್ತಿದೆ. ಈ ಕೂಡಲೆ ಚೆಸ್ ಆಡಬೇಕು. ಆನ್ ಲೈನ್ ಬಾ”. ಸಣ್ಣ ಹುಡುಗಿಯಂತೆ ವರ್ತಿಸುತ್ತಾಳೆ. + +*** + +“ಸಾಯೇಬ್ರೇ..”ಇಂಜಿರ್ ಸಾಯೇಬ್ರೇ..” + +ಮಾಳಿಗೆ ಮೇಲೆ ಚಾಪೆ ಹಾಸಿಕೊಂಡು ಮಲಗಿದ್ದ ಚಾಮಿ ಧಿಗ್ಗನೆ ಎದ್ದು ಕುಳಿತ. ಮಬ್ಬು ಮಬ್ಬು ಬೆಳಕು. ಆಕಾಶದಲ್ಲಿ ಅಲ್ಲೊಂದು ಇಲ್ಲೊಂದು ಚುಕ್ಕಿ. ಸುತ್ತ ಕೆರ ಪರ ಕೆರೆವ ಪೊರಕೆಗಳ ಸದ್ದು. ಹುಂಜ ಹ್ಯಾಟೆಗಳ ಪರದಾಟ. ಅಲ್ಲೊಂದು ಇಲ್ಲೊಂದು ಪಾತಾಳವನ್ನೆ ಬಗೆದುಬಿಡುವಂತ ಕೆಮ್ಮು ಕಫಗಳು. ರಸ್ತೆಯಲ್ಲಿ ನಿಂತುಯಾರೋ ಕೂಗಿದಂತೆ. ಮಧ್ಯರಾತ್ರಿ ಎಬ್ಬಿಸಿದಂತಹ ಇರುಸುಮುರುಸು. + +ರಸ್ತೆಯಲ್ಲಿ ಎಂದುಕೊಳ್ಳುತ್ತಿರುವಾಗಲೇ ಎದುರಿಗೆ ಪ್ರತ್ಯಕ್ಷನಾಗಿದ್ದ ಅನಿಲ. ತನ್ನ ಸಹೋದರ ಸಂಬಂಧಿ. ಹಳ್ಳಿಗರಿಗೆ ಪ್ರೈವಸಿಯ ಪರಿಜ್ಞಾನವಿರುವುದಿಲ್ಲ ಎಂಬುದು ಥಟ್ಟನೆ ಹೊಳೆದು ಬೆಡ್ ಶೀಟಿನ ಮರೆಯಲ್ಲಿ ಚಡ್ಡಿಯ ಲಾಡಿಯನ್ನು ಗಂಟು ಬಿಗಿಯುತ್ತಿರಲು,“ಎಂಟ್ಗಂಟೆ ತಂಕ ಮನಿಕಮರಲ್ವ ನೀವ್ಯಲ್ಲ.…”, ನಸುಕಿನ ನಿಶ್ಯಬ್ಧದಲಿ ಅನಿಲನ ಗಂಟಲು ಊರಿಗೆಲ್ಲ ಸಾರಿ ಪಿಚ್ಚೆನಿಸಿತು.ಒತ್ತಾಯದಿಂದ ಕಣ್ಣ ರೆಪ್ಪೆಗಳನ್ನು ಬಿಡಿಸುತ್ತ “ಎಂಟಲ್ಲ, ಹತ್ತು..” ಅಂತ ಗೊಣಗಿದ್ದು ತನಗೆ ಮಾತ್ರ ಕೇಳಿಸಿತು. + +“ಇಂಗಾದ್ರೆ ಬದ್ಕು ಸಾಗದೆಂಗೆ.. ಯೋಳಬಕು ಯೋಳಬಕು.. ಕಾಪಿ ಕುಡ್ದು ರಡಿಯಾಗು. ಎಲ್ಗೊ ಒಂತಕೆ ಕರ್ಕಂಡೋಗ್ತಿನಿ. ಮೆಟ್ಟು ಆಕ್ಯಂಡು ಬಾ. ಮಣ್ಣಗೆ ಓಡಾಡ ಸಿರಿ ಆಮೇಕೆ ತೀರಿಸ್ಕಮಿವಂತೆ”. ಅಶರೀರವಾಣಿ ನುಡಿದಷ್ಟು ವೇಗದಲ್ಲಿ ಅನಿಲ ಮಾಯವಾಗಿದ್ದ. ಬೇಜಾರಿಂದ ಮಲಗಿದ್ದವನಿಗೆ ಎಲ್ಲೋ ಕರಕೊಂಡು ಹೋಗ್ತೀನಿ ಎಂಬ ನಿಗೂಢಯುಕ್ತ ಆಮಂತ್ರಣ ಮುದ ನೀಡಿತಾದರೂ ತಕ್ಷಣ ಎದೆ ಒತ್ತಿದಂತಾಗಿ ಹಿತ್ತಲಿನಲ್ಲಿ ಇಳಿಸಿದ್ದ ಸಸಿಗಳತ್ತ ಧಾವಿಸಿದರೆ, ಸಸಿಗಳು ರಾತ್ರಿಗಿಂತ ಹೆಚ್ಚು ನಿತ್ರಾಣಗೊಂಡಿವೆ. ಹಾಲಿನ ಕ್ಯಾನು ಹಿಡಿದು ಸಾಗುತ್ತಿದ್ದ ‘ಅರುಣಪ್ಪ’, “ನೀಯೋನು ಯದರ್ಕಬ್ಯಾಡಣ. ಜೀವ ಯಲೆಯಾಗಲ್ಲ ಇರದು. ಬೇರ್ನಾಗೆ”, ಎಂದಾಗ ವೈದ್ಯನ ಭರವಸೆಯಂತೆ ಕೇಳಿಸಿತು. ಅರುಣ ತನಗಿಂತ ಎರಡು ಮೂರು ಕ್ಲಾಸು ಚಿಕ್ಕವನಿರಬೇಕು, ಒಂದೇ ಕ್ಲಾಸುರೂಮಿನಲ್ಲಿ ಕೂರುತ್ತಿದ್ದ ನೆನಪು. ಶಾಲೆ ಬಿಟ್ಟೊಡನೆ ಅಪ್ಪಯ್ಯನ ಮಗ್ಗುಲಿಗೆ ಅಂಟಿಕೊಂಡು ಲಟ ಲಟ ಮಡಕೆ ತಟ್ಟುವುದ ಕಲಿಯುತ್ತಿದ್ದ. + +ಜೇಡಿಮಣ್ಣಿಗೆ ನೀರೊಯ್ಯುತ್ತಿದ್ದ. ಸಣ್ಣ ಸಣ್ಣ ಹೂಜಿಯಂತವನ್ನು ತಟ್ಟುವುದು ಎಂತ ಮೋಜಿನ ಕೆಲಸ ಎಂದು ತಾನು ಕರುಬುತ್ತಿದ್ದುದುಂಟು. ಅಪ್ಪನ ವಿದ್ಯೆಯೇನೋ ಕಲಿತ, ಪ್ರಯೋಜನಕ್ಕೆ ಬರಲಿಲ್ಲ. ಈಗ ಸೀಮೆ ಹಸುಕಟ್ಟಿದ್ದಾನಂತೆ. ಗೊಬ್ಬರ ಕೊಡು ಅಂದರೆ, “ಇದ್ಯಾತುಕೆ ಬತ್ತದೇಳಣ. ಇಂಡಿ ಇಕ್ಕದು ನಾವು” ಅಂತಾನೆ. ಹಸಿ ಹುಲ್ಲು ತಿಂದು ಕೊಡೋ ಹಾಲು ಉತ್ತಮ ಅಲ್ಲವೇನೋ ಅಂದರೆ, “ಅವುಕ್ಕೆ ಮೇವೆಲ್ಲಿ ಒಂದಿಸೋದೂ, ಆಪಾಟಿಮೇವು ತಿಂದರೂ ಅವು ಕೊಡೋ ಆಲೆಷ್ಟು..” ಎಂದು ರಾಗ ಎಳೆಯುತ್ತಾನೆ. ಹೈಬ್ರಿಡ್ ಸಸಿಗಳನ್ನು ತಂದಿರುವತಾನು, ರಸಗೊಬ್ಬರ ಹೊಡೆಸಲಿರುವ ತಾನು ಈ ಪ್ರಶ್ನೆ ಕೇಳಬಾರದಿತ್ತು ಅಂದುಕೊಂಡ ಚಾಮಿ. + +*** + +“ಇದ್ಯಾವೂರ್ಲ ಅನೀಲ”,“ಇದುನ್ನ ಗೊಲ್ಲರಟ್ಟಿ ಅಮ್ತಾರೆ”“ಈ ಹೆಸರಿನ ಊರುಗಳು ತುಂಬಾನೆ ಇದಾವಲ್ವ”“ನೀನು ಸಣ್ಣೋನಿದ್ದಾಗ್ಲೆ ಊರು ಬಿಟ್ಟೆ ನೋಡು, ಅದಿಕ್ಕೆ ಈಪಾಟಿ ರಾಮಾಯ್ಣ”. ಅಮೇರಿಕಾದಿಂದ ಬಂದಿರುವವರಿಗೆ ಹಳ್ಳಿ ತೋರಿಸಿದಂತೆನಿಸಿತು ಅನಿಲನಿಗೆ. + +ಅಲ್ಲೊಂದು ಇಲ್ಲೊಂದು ಗುಡಿಸಲುಗಳು ಬಿಟ್ಟರೆ ಎಲ್ಲ ಆಧುನಿಕ ಸಿಮೆಂಟಿನ ಮನೆಗಳೆ. ಮನೆಗೊಂದು ಕುರಿದೊಡ್ಡಿ. ಮನೆಯೆದುರು ಹೆಂಗಸರು ಕಾಫಿ ಟೀ ಕುಡಿದ ಪಾತ್ರೆಗಳನ್ನು ರಾತ್ರಿಯ ಅಡಿಗೆ ಪಾತ್ರೆಗಳನ್ನು ತಟ್ಟೆ ಲೋಟಗಳನ್ನು ಗುಡ್ಡೆ ಹಾಕಿಕೊಂಡು ಬೆಳಗುವುದರಲ್ಲಿ ತೊಡಗಿಸಿಕೊಂಡಿದ್ದರು. ತೊಳೆದ ಮಸಿ ಮುಸುರೆಯ ಹೊಂಡು ನೇರ ರಸ್ತೆಗೆ ಇಳಿಯುತ್ತಿತ್ತು. ಹಟ್ಟಿಯ ತುಂಬ ಕುರಿಗಳೋ ಕುರಿಗಳು. ಮೇಕೆಗಳೋ ಮೇಕೆಗಳು. ದೊಡ್ಡವು ಸಣ್ಣವು. ಇನ್ನೂ ಕಾಲೂರಲು ತಟ್ಟಾಡುತ್ತಿರುವಂತವು. ಹಗ್ಗ ಕಟ್ಟಿ ನೇತಾಕಿರುವ ಶೆಡೆಸೊಪ್ಪಿನ ಬ್ರೇಕ್ ಫಾಸ್ಟನ್ನು ಸವಿಯುತ್ತಿರುವ ಕುರಿಗಳು. ತೂಗುಯ್ಯಾಡುವ ಮೊಲೆಗಳಿಗೆ ಜೋತುಬಿದ್ದಿರುವ ಮರಿಗಳು. ಮ್ಯಾ ಬ್ಯಾ…. ಬ್ಯಾ ಮ್ಯಾ… ಎಂಬ ನಿರಂತರ ರಣ ಕಹಳೆ ಊರ ತುಂಬ. ಹೆಜ್ಜೆ ಇಟ್ಟಲ್ಲೆಲ್ಲ ಮೆತ್ತಿಕೊಳ್ಳುವ ಹಸಿ ಹಸಿ ಪಿಚಿಕೆ. ಆಘ್ರಾಣಿಸಲು ಸವಾಲೆಸೆಯುವಂತಹ ನಾತ. ಸರ್ವವೂ ಹಟ್ಟಿಯೊಳಗೆ ಬೆರೆತು ಸರ್ವೇ ಸಾಮಾನ್ಯ ದೃಶ್ಯದಂತೆ ಗೋಚರಿಸುತ್ತಿತ್ತು. + +ಅವರು ದೊಡ್ಡ ಹಟ್ಟಿಯೊಂದರ ಎದುರು ನಿಂತರು.“ನಿಂಗೋ”, ಕೂಗಿದ ಅನಿಲ.“ಯಾರೂ?”,“ಎಲಾ ಬಾರ್ಲ ಒರೀಕೆ ಎಂಗಸರ ಸೆರಗು ಬಿಟ್ಟು. ಒಳಗೆ ಕೂಕಂಡು ಯಾರು ಅಂದ್ರೆ?”“ಓ, ನೀನ್ಯಾ, ಏನಣ?”“ನಿಂದು ತಿಪ್ಪೆ ರೇಟೇಳು”,“ಯಾರಿಗೆ?”.“ನಮ್ ಇಂಜಿನಿರ್ ಸಾಯೇಬ್ರಿಗೆ”.“ನೀನು ಕೇಳದೆಚ್ಚ ನಾ ಕೊಡದೆಚ್ಚ. ಕೊಡಸಣ ಎಷ್ಟೋ ಒಂದಿಷ್ಟ.”.“ಬಾಯಿ ಬುಟ್ಟು ಯೋಳೋ ಒಂದು ರೇಟು”“ಯಂಟು ಸಾವ್ರ ಕೊಡೋಗು”“ಯಾಕೆ ಯಾರ್ದನ ಬುಲ್ಡೆ ಒಡ್ದು ತತ್ತರೇಳು. ಯಂಟು ಸಾವ್ರಂತೆ. ಏಳ ನಿಮ್ಮೈನ ತು*ಳ. ಯೇಳಕೊಂದು ಲೆಕ್ಕಾಚಾರ ಬ್ಯಾಡ್ವ್ಯ. ಮೂರು ಸಾವ್ರ ತಕ. ನಮ್ದೆ ಟ್ಯಾಕ್ಟ್ರಿ ಬಂದು ತುಂಬಕಂಡೋಗ್ತೆತೆ”.“ಅಲ್ಲಲೆ , ಮೊದಲೇ ಗೊಬ್ಬರಕ್ಕೆ ಬಂಗ, ಅಂಗ ಗದುರ್ಕಮದು. ಅವನು ಕೊಡಲ್ಲ ಹೋಗು ಅಂದಿದ್ರೆ..?”“ಯಾಕ ಕೊಡಲ್ಲ ಅಮ್ತನೆ?”, ಅಬ್ಬರ ಕೇಳಿ ಚಾಮಿ ತೆಪ್ಪಗಾದ. ಎಲಾ ಇವನ, ಹೆಂಗಪ್ಪ ಅಂತ ತಲೆ ಮೇಲೆಕೈಹೊತ್ತು ಕುಳಿತಿದ್ದೆ, ಇವನು ಜೊತೆಗಿದ್ದರೆ ಕೆಲಸ ಇಷ್ಟು ಸಲೀಸ?. + +“ಹಂಗೆನ ಒಂದಷ್ಟು ಜನ ಆಳುಗಳನ್ನು ಹೊಂದಿಸ್ಕೊಡೋ, ಲೇಟಾದಷ್ಟು ಸಸಿ ಹಾಳಾಗ್ತವೆ”.“ಆಳಿಗೇನು ಬರವ್ಯ, ಇಲ್ಲೇ ಮಾದಿಗರಟ್ಟೆಕೆ ಓಗು. ಯಾರಾನ ಕರುದ್ರೆ ಸಾಕು ಅಮ್ತ ಕಾಯ್ತಿರ್ತರೆ”.“ದೊಡ್ಡ ಮನುಸ್ನಂಗೆ ಪಸ್ಟೆ ದುಡ್ಡು ಬಿಚ್ಚಬುಟ್ಯ ಉಸಾರು. ಬ್ಯಳ ಬ್ಯಳಿಗ್ಗೆನೆ ಕುಡುದು ಮನಿಕಮ್ತರೆ ಸೂಳೆಮಕ್ಳು. ಅಮೇಕೆ ನೆಕ್ಕಬಕು”. + + + +*** + +ಊರುಗಳು, ಹಟ್ಟಿಗಳು, ಮನುಷ್ಯರು. ಸೌಲಭ್ಯಗಳು. ನಾಗರೀಕತೆ. ಸಂಪತ್ತು. ಎಲ್ಲ ಒಂದಕ್ಕೊಂದು ಹೇಗೆ ಸಂಕೀರ್ಣವಾಗಿ ನೇಯ್ದುಕೊಂಡಿವೆ. ಈಗ ಬಲವಂತದಿಂದ ಬೆರೆಸಲಾಗದಿದ್ದರೂ ಮುಖ್ಯ ಊರಿಂದ ಹಟ್ಟಿಗಳಿನ್ನೂ ದೂರ ದೂರ. ಊರೊಳಗೆ ಮಹಡಿ ಮನೆಗಳು ಏಳುತ್ತಿದ್ದರೆ ಇಲ್ಲಿನ್ನೂ ಗುಡಿಸಲುಗಳು ತಿಣುಕಿ ಪಣುಕಿ ಸಿಮೆಂಟಿನ ಗೋಡೆಗಳಾಗಿ ಮಾರ್ಪಡುತ್ತಿವೆ. ಅಲ್ಲಿ ಮನೆಮನೆಗೆ ನಲ್ಲಿಗಳು ಬರುವ ಕಾಲ. ಇಲ್ಲಿ ಮುಸುರೆ ತೊಳೆದ ನೀರುರಸ್ತೆ ಮಧ್ಯದಲ್ಲಿ ಹರಿಯುತ್ತಿದೆ. ಚಾಮಿ ಹಿಂದೆಂದೂ ಆ ಹಟ್ಟಿಗೆ ಕಾಲಿಟ್ಟಿರಲಿಲ್ಲ. ಅಂತ ಪ್ರಮೇಯವೇ ಬಂದಿರಲಿಲ್ಲವೆಂಬುದು ಸೋಜಿಗವೆನಿಸಿತು. ಒಂದಷ್ಟು ಸರ್ಕಾರಿ ಗೋಡೆಗಳು. ಒಂದಷ್ಟು ಗುಡಿಸಲುಗಳು. ಹಟ್ಟಿ ನಡುವೆ ಬೆಳ್ಳಗೆ ಹೊಳೆಯುತ್ತಿರುವ ಸಿಮೆಂಟಿನ ರಸ್ತೆ. ಹಟ್ಟಿಯ ಹೆಬ್ಬಾಗಿಲಲ್ಲೆ ನೀರಿನ ಟ್ಯಾಂಕು. ಸುತ್ತ ನಲ್ಲಿಗಳು. ನೀರಿಡಿಯಲು ಹೆಂಗಸರು, ಮಕ್ಕಳುಮರಿ… ಅಲ್ಲೊಬ್ಬ ಒಂಟಿಕಾಲಿನ ಅಂಗವಿಕಲ. ಇವನನ್ನು ಎಲ್ಲೋ ನೋಡಿದ್ದೀನಲ್ಲ? + +“ಏನು ಚಾಮಿ, ಅಪರೂಪ?”, ಅಂದ ಅವನು. ಹ್ಞಾ, ನನ್ನ ಕ್ಲಾಸ್ ಮೇಟು. ಹೆಸರೂ.. ?“ನಾನು ಉಮೇಶ..”,“ಹೇ, ಸಾರಿ, ತಕ್ಷಣಕ್ಕೆ ಗುರುತು ಸಿಕ್ಕಲಿಲ್ಲ..” ಎನ್ನುತ್ತ ಹಸ್ತ ಲಾಘವಕ್ಕೆಂದು ಕೈಚಾಚಿದ. ಉಮೇಶ ಒದ್ದೆ ಕೈಗಳನ್ನು ಒರೆಸಿಕೊಂಡು ಕೈ ನೀಡಿದ. ಉಭಯ ಕುಶಲೋಪರಿ ಜರುಗಿತು. ಅಷ್ಟರಲ್ಲಿ ಅವನ ಬಿಂದಿಗೆತುಂಬಿ, ಇವನು ಸಹಾಯ ಮಾಡಲೆಂದು ಮುಂದಾದರೂ ಉಮೇಶ ಒಪ್ಪದೆ, ಮಾಂತ್ರಿಕ ರೀತಿಯಲ್ಲಿ ಬಿಂದಿಗೆಯನ್ನು ಎತ್ತಿ ಹೆಗಲ ಮೇಲಿಟ್ಟುಕೊಂಡು ಊರುಗೋಲನ್ನು ಊರಿಕೊಂಡು, “ಬಾ ಮನ್ತಕೋಗನ”, ಎಂದು ಮುನ್ನಡೆದ. ಇದೇ ಊರುಗೋಲು ಹಿಡಿದು ‘ಮಾನಿಟರ್’ ಗಿರಿ ಮಾಡುತ್ತಿದ್ದವನು ಇವನೇ ಅಲ್ಲವೇ?. ಎಷ್ಟು ಜಾಣನಿದ್ದ. + +ಬಿಂದಿಗೆ ಇಳಿಸುತ್ತ “ಇವರು ನಮ್ಮ ಮಿಸ್ಸಸ್ಸು”, ಅಂದ ಉಮೇಶ. + +ಆಕೆ ಅಂಗಳದಲ್ಲಿ ಪಾತ್ರೆ ತೊಳೆಯುತ್ತಿದ್ದಳು. ಚಾಮಿ ಸೂಕ್ಷವಾಗಿ ಅವಳ ಕೈ, ಕಾಲು, ಕಣ್ಣು… ಮುಖ್ಯವಾದುವೆಲ್ಲ ಸರಿಯಾಗಿವೆಯಾ ಗಮನಿಸಿ… ತನ್ನ ಆಲೋಚನೆಗೆ ತಾನೆ ಹೇಸಿಗೆಪಟ್ಟುಕೊಂಡ. ಮನುಷ್ಯನ ಇತಿಮಿತಿಗಳು ಎಲ್ಲೆಲ್ಲಿ ಹೇಗೆಲ್ಲ ಪ್ರಕಟಗೊಳ್ಳುತ್ತವೆ!. ಅವನ ಒಳನುಡಿಯನ್ನು ಆಲಿಸಿದನೋ ಅಥವಾ ಬಂದವರೆಲ್ಲರ ವರ್ತನೆಗಳಿಂದ ಕಂಡುಕೊಂಡಿದ್ದನೋ, “ನಮ್ಮ ಸಂಬಂದದಾಗೆ ಮದುವೆ ಮಾಡಿಕೊಟ್ಟರು”, ಎಂದ ಉಮೇಶ. + +“ಯೋ ಬಾಣ, ಬಾರ್ಲ ಚಾಮಿ ಬಂದವ್ನೆ..”, ಅಗೋ ಮತ್ತೊಬ್ಬ ಕ್ಲಾಸ್ ಮೇಟು. ಎಲ್ಲ ಎಷ್ಟು ದೊಡ್ಡವರಾಗಿಬಿಟ್ಟಿದ್ದಾರೆ?. ವಾಟ್ ನಾನ್ಸೆನ್ಸ್. ನಾನೂ ಆದೇ ವಯಸ್ಸಿನೋನಲ್ಲವೆ. ಬಾಣನ ಹಿಂದೆ ಮೇಕೆ ಮರಿಯಂತೆ ಜಿಗಿದು ಬಂದವು ಎರಡುಸಣ್ಣ ಹೆಣ್ಣುಮಕ್ಕಳು. “ನನ್ನ ಮಕ್ಕಳು..” ಎಂದು ಕೆಂಪಾನೆ ಕೆಂಪು ಹಲ್ಲು ಬೀರಿದ ಬಾಣ. ಅವನು ಪಂಚೆಕಟ್ಟುವುದ ನೀವು ನೋಡಬೇಕು. ಬೆಂಗಳೂರಿನ ಹೆಂಗಸರು ಕೂಡ ಚಡ್ಡಿಯನ್ನು ಇನ್ನು ತುಸು ಕೆಳಕ್ಕೆ ಉಡುತ್ತಾರೆ. ಅವನು ಇತ್ತ ನಡೆದು ಬರುವಾಗ ಪಂಚೆಯ ನಟ್ಟನಡುವಿರುವ ಅವನ ಬಿದಿರು ಕಡ್ಡಿಯಂತ ಕಾಲುಗಳು ದೇವಸ್ಥಾನದ ಗಂಟೆಯನ್ನು ನೆನಪಿಸಿದವು. + +ಹೆಗಲಮೇಲಿದ್ದ ಟವೆಲ್ಲಿಂದ ಬಾಯಿ ಮುಚ್ಚಿಕೊಂಡು “ವೋ ಯೇನಣ ಸಮಚರ?”, ಎಂದು ಆಶ್ಚರ್ಯ ಸೂಚಿಸಿದ ಬಾಣ.“ಯಲ, ಗಿಡ ಊಣಕೆ ಒಂದೈದಾರು ಆಳು ಬೇಕಂತೆ..” ಉಮೇಶ ಅಡ್ಡ ಬಾಯಿ ಹಾಕಲು, ಬಾಣ ತಲೆ ಕೆರೆದುಕೊಳ್ಳುತ್ತ…” ನಮ್ಮ ಓನರನ್ನ ಬೆಂಗ್ಳೂರ್ಗೆ ಬಿಟ್ಟು ಬರ್ಬಕು. ಆಮ್ಯಾಕೆ ಬತ್ತೀನೇಳು.” + +“ಯಲ ಅರ್ಜೆಂಟಂತೆ ಕಣಲ”.“ನಾನು ಬಂದ್ರುನು ಇನ್ನಾರಾಳು ಎಲ್ಲಿ ಅಮ್ತ ಉಡುಕ್ಕಂಬತ್ತಿಯ.. ಆ…” ಎಂದು ತಲೆ ಕೆರೆದುಕೊಂಡು “ಒಂದು ಕೆಲ್ಸ ಮಾಡಣ. ದಿನಗೂಲಿಗಿಂತ ಸುಮ್ಕೆ ಇಷ್ಟುಕ್ಕಮ್ತ ಒಪ್ಪರಿಸು. ನಾನೆ ಆಳು ಕರಕಬಂದು ನಾಳಿಕಿಂದಕೆಲ್ಸ ಸುರು ಮಾಡ್ತಿನಿ”. + +ಇದು ಮೂವರಿಗೂ ಒಪ್ಪಿಗೆಯಾಯಿತು. ಬೆಳಗ್ಗೆ ಮಾಳಿಗೆಯಿಂದ ಇಳಿದವನು ಲೋಟ ನೀರು ಕುಡಿಯದೆ ತಿಂಡಿತಿನ್ನದೆ ಹೊಟ್ಟೆ ಹಸಿದು ಒಬ್ರಾನ ಟೀಗೆ ಕರಿಲಿಲ್ಲ ಎಂದು ಮನಸ್ಸಿನಲ್ಲೆ ಬೈದುಕೊಂಡ ಚಾಮಿ. + +***ಬೆಳಗ್ಗೆ ಹನ್ನೊಂದರ ಸಮಯ. ಚಾಮಿ ಭರ್ತಿ ತಿಂಡಿ ತಿಂದು ಬಿಂದಿಗೆ ನೀರಿನೊಂದಿಗೆ ಹೊಲದೊಳಗೆ ಕಾಲಿಟ್ಟಿದ್ದ. ಬೆಳಗ್ಗೆ ಆರು ಗಂಟೆಯಿಂದಲೇ ಕೂಲೇರು ಕೆಲಸವನ್ನು ಶುರು ಮಾಡಿದ್ದಾರೆ ಎಂಬ ಸುದ್ದಿ ಮುಟ್ಟಿತ್ತು. ಕುಡಿಯಲು ನೀರು ತರಲು ಹೇಳಿದ್ದರು. ಪಕ್ಕದೂರಿನ ಕಾಯನ್ನು ಬೂತಿಗೆ ಹೊರಟಿದ್ದವನನ್ನು ನಿಲ್ಲಿಸಿ, “ಕೂಲೇರಿಗ್ಯಾಕೆಪಿಲ್ಟ್ರು ನೀರು” ಎಂದು ಉಗಿದು ವಾಪಸ್ಸು ಕಳಿಸಿದ್ದರು ಜನ. ಅದಾಗಲೇ ಸಾಕಷ್ಟು ವ್ಯತಿರಿಕ್ತ ನಡವಳಿಕೆಯಿಂದ ಹಳ್ಳಿಯ “ಎಕೋ ಸಿಸ್ಟಂ” ಅನ್ನು ಕೆಡಿಸುವವನಂತೆ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಚಾಮಿ ಇನ್ನೊಂದು ಎದುರು ಮಾತಾಡಲು ಹಿಂಜರಿದು ಟ್ಯಾಂಕಿನ ನೀರಿಗೆ ಶರಣಾಗಿದ್ದ. ರಸ್ತೆ ಬದಿಯ ತುಂಡದ ಕೆಲಸ ಮುಗಿದಿತ್ತು. ಬಾಣ, ಉಮೇಶನ ಮಿಸ್ಸೆಸ್ಸು, ನಾಗ, ಮತ್ತು ಇನ್ನೊಬ್ಬ ಅಜ್ಜ. ಉಳಿದಂತೆ ಮೂವರು ಸಣ್ಣ ಮಕ್ಕಳು. ಆರಾಳು ಅಂದಿದ್ದ, ಬರೇ ನಾಲ್ಕಾಳು ಬಂದಿದ್ದಾರೆ, ಇನ್ನಿಬ್ಬರು ಒದಗಲಿಲ್ಲವಾ ಅಥವಾ ಕುಡಿದು ಮಲಗಿಬಿಟ್ಟರಾ?. ಇವರು ಇಷ್ಟೊಂದು ಗುಂಡಿಗಳನ್ನು ಬದ್ಧವಾಗಿ ಮುಚ್ಚಬಲ್ಲರೇ? ಚಾಮಿಗೆ ಊರಿನೋರು ಹೆದರಿಸಿದ್ದು ಭೂತವಾಗಿ ಪರಿಣಮಿಸಿತ್ತು. ಅದರಲ್ಲೂ ಕಟ್ಟುಮಸ್ತಾಗಿದ್ದುದು ಎರಡಾಳು ಮಾತ್ರ. ಉಳಿದಂತೆ ಮುದುಕ, ಹೆಂಗಸು.ಮಕ್ಕಳು. ಇವರನ್ನು ನೆಚ್ಚಿಕೊಂಡರೆ ಸಸಿಗಳನ್ನು ಒಣಗಿಸಿಬಿಡುತ್ತಾರೇನೋ ಎಂದು ದಿಗಿಲಾಯಿತು. ಬಾಣ, ನಾಗ ಜೆಸಿಬಿಯನ್ನು ನಾಚಿಸುವಂತೆ ಮಣ್ಣೆಳೆಯುತ್ತಿದ್ದರು. ಉಮೇಶನ ಮಿಸ್ಸೆಸ್ಸು ಸ್ವಲ್ಪ ನಿಧಾನ. ಆದರೆ ನಿರಂತರ. + +ಇನ್ನು ಅಜ್ಜ. ಯಾಕಪ್ಪ ಬಾಣ ಇವನನ್ನು ಕರೆತಂದೆ ಎಂದು ಕೇಳಬೇಕೆನಿಸಿತು. ಬೆಳ್ಳನೆ ಎದೆಗೂದಲು. ಹಂಚಿಕಡ್ಡಿಯಂತ ಕೈಕಾಲು. ಬೆತ್ತಲೆ ಬೆನ್ನು ಬಿಸಿಲಿಗೆ ಪ್ರತಿಫಲಿಸುತ್ತಿತ್ತು. ಪುರಾತನ ಪಳಯುಳಿಕೆಯಂತಿದ್ದ ಅಜ್ಜ. ಬಿಲಿಸಿನ ಝಳದಲ್ಲಿ ಎದೆಯ ದಮ್ಮು ಕಟ್ಟಿ “ಹ್ರಾ..ಹ್ರಾ” ಎನ್ನುತ್ತ ಸಲಿಕೆ ಆಡಿಸುತ್ತಿದ್ದ. ಸಲಿಕೆಯೆ ಅವನಿಗಿಂತ ದೊಡ್ಡದಾಗಿ ಕಾಣಿಸುತ್ತಿತ್ತು. ಯಾವಕ್ಷಣದಲ್ಲಿ ಬೇಕಾದರೂ ಅಜ್ಜ ಮುಂದಕ್ಕುರುಳಿ ಗುಂಡಿಯಲ್ಲಿ ಬಿದ್ದು.. ಹೋಗಿಬಿಡಬಹುದು ಎಂಬಷ್ಟು ಭಯವಾಯಿತು ಚಾಮಿಗೆ. ಅಕಸ್ಮಾತ್ ಈತ ಈ ಕ್ಷಣದಲ್ಲಿ ಇಲ್ಲಿ ಸತ್ತರೆ ಅದಕ್ಕೆ ಹೊಣೆ ಯಾರು? ಬಾಣನಾ ನಾನಾ? ಇವರಿಗೆಲ್ಲ ಇನ್ಶುರೆನ್ಸ್ ಇಲ್ಲ ಏನಿಲ್ಲ. ಕಲ್ಪನೆಯ ಪರಿಣಾಮ ನೆನೆಸಿಕೊಂಡು ಸಣ್ಣ ಭಯ ದೊಡ್ಡದಾಗಿ ಅಜ್ಜನನ್ನು ವಾಪಸ್ಸು ಕಳಿಸುವುದೇ ಒಳಿತು ಎನ್ನುವ ತೀರ್ಮಾನಕ್ಕೆ ಬಂದ. “ಅಜ್ಜ ನೀರು ಕುಡಿತ್ಯಾ?”, ಎನ್ನಲು ಉಸಿರುಹೊರಡದೆ ತಾ ಎನ್ನುವಂತೆ ತಲೆದೂಗಿದ ಅಜ್ಜ. ಚಾಮಿ ಲೋಟ ತರುವುದನ್ನೆ ಮರೆತಿದ್ದ. ಬೊಗಸೆಗೆ ಹೊಯ್ಯಲಾ? ಎಷ್ಟು ಅನಾಗರೀಕವಾಗಿ ಕಾಣಿಸುತ್ತೆ ಎಂದು ಚಿಂತಿಸುತ್ತಿರಲು ಅಜ್ಜ ಮರದ ಬುಡದಲ್ಲಿಟ್ಟಿದ್ದ ತನ್ನ ಚೊಂಬುತಂದ. ಚೊಂಬು ಬಹಳಷ್ಟು ನೊಂದಿರುವಂತೆ, ಅವನ ವೃತ್ತಿಯ ಒಂದು ಆಯುಧದಂತೆ ಕಂಡಿತು ಚಾಮಿಗೆ. “ಟ್ಯಾಂಕಿನ ನೀರು, ಪರವಾಗಿಲ್ವ?”, ಹೇಳಬಾರದೆಂದುಕೊಂಡಿದ್ದರೂ ಬಾಯಿಗೆ ಬಂದುಬಿಟ್ಟಿತು. “ನಮಗೆಂತ ಕಾಯಿಲೆ ಕಸಾಲೆ. ತತ್ತ ತತ್ತ ಸೋಮೇ” ಎಂದು ನೀರೊಯ್ಯಲು ಒತ್ತಾಯಪಡಿಸಿದ ಅಜ್ಜ. + +ಚಾಮಿ ಬಾಣನನ್ನು ಮರೆಗೆ ಕರೆದು ಮೊದಲು ಅಜ್ಜನನ್ನು ಮಕ್ಕಳನ್ನು ಕಳಿಸು ಮತ್ತು ಮಾತು ಕೊಟ್ಟಂತೆ ಆರಾಳು ಹೊಂದಿಸಿ ಕೆಲಸ ಮುಗಿಸು ಎಂದು ತಾಕೀತು ಮಾಡಿದ. ನೋಡೋಕೆ ಅಂಗಿದ್ರು ಅಜ್ಜ ಜಬರ್ದಸ್ತ್ ಆಳು .ಗಟ್ಟಿ ಕುಳ ಅದು. ಇಷ್ಟು ಸುಲಬನಾಗಿ ಪ್ರಾಣ ಬಿಡಲ್ಲ. ಮಕ್ಕಳು ಹೊಟ್ಟೆಪಾಡಿಗೆ ಬೆಂಗಳೂರು ಸೇರ್ಕಂಡವ್ರೆ. ಹೆಂಡತಿ ಟಿಬಿ ತಗುಲಿ ಸತ್ತೋಗೆತೆ. ವಾರಕ್ಕೊಂದೋ ಎಲ್ಡೋ ಕೂಲಿ ಸಿಕ್ಕದು. ಹೊಟ್ಟೆಗು ಬಟ್ಟೆಗು ನ್ಯಾರ. ಮಿಕ್ಕಿದ್ರೆ ಚೂರು ಯಂಡ. ಎಚ್ಚು ಕಮ್ಮಿ ಆದರೆ ನಾನಿದೀನಿ ಅಂದ ಬಾಣ. ಮತ್ತೆ ಮಕ್ಕಳು? ಸಣ್ಣೋರು ಅಮ್ತ ತಾಚ್ಚಾರ ಮಾಡಬ್ಯಾಡಿ. ನನ್ನ ವಯ್ಸು ಮುಟ್ಟವಷ್ಟತ್ತಿಗೆ ನನ್ನೆರಡರಷ್ಟು ಬದುಕು ಮಾಡ್ತವೆ ಅವು ಎಂದು ತುಸು ಜೋರಾಗೆ ಹೊಗಳಿ, ಮಕ್ಕಳು ಅದನ್ನು ಕೇಳಿಸಿಕೊಂಡು ಸಲಿಕೆಯನ್ನು ಇನ್ನಷ್ಟು ಬಿರುಸಾಗಿ ಆಡಿಸಿದವು. ಹೀಗೆಲ್ಲ ಹೇಳಿದರೆ ಮತ್ತೆಂತ ಮಾತು. ಚಾಮಿಗೆ ಇಕ್ಕಟ್ಟೆನಿಸಿತು. ದಸರಾ ರಜ ಇದ್ದಿರಬೇಕು. ಅಥವಾ ಶಾಲೆಯನ್ನೆ ಬಿಟ್ಟಿದ್ದಾರೋ ಏನೋ. ಏನು ಹೇಳಲೂ ಕೇಳಲೂ ಹಿಂಜರಿಕೆ. ಮೌಲ್ಯಗಳನ್ನು ಬಾಯಲ್ಲಿ ಆಡುವುದು ಸುಲಭ. ಕ್ರಿಯೆಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ. ಕ್ರಾಂತಿಗೆ ದನಿಗೂಡಿಸುವುದು ಸುಲಭ. ಮುಂದೆ ನಿಂತು ಶಕ್ತಿಯುತವಾಗಿ ಧನಿಯೆತ್ತುವುದು ಕಷ್ಟ. ಸಾಮಾನ್ಯರಿಗೂ ಅಸಾಮಾನ್ಯರಿಗೂ ಇರೋ ವ್ಯತ್ಯಾಸವು ಇದೇ ಅನ್ನಿಸುತ್ತದೆ. ಜನರ ಬಾಯಿಗೆ ಹೆದರಿ ಶುದ್ಧಕುಡಿಯುವ ನೀರು ತರಲಾಗದವನು ಏನು ಮಾತಾಡಿ ಏನು ಪ್ರಯೋಜನ?. + +ಏನಾದರೂ ಮಾಡಿಕೊಳ್ಳಿ ಎನ್ನುತ್ತ ಚಾಮಿ ಕೂರಲು ನೆರಳಿಗಾಗಿ ಹುಡುಕಾಡಲು ಪಕ್ಕದ ಜಮೀನಲ್ಲಿ ಹುಣಸೆಕಾಯಿ ಆಯುತ್ತಿದ್ದ ಸೋಮಪ್ಪ ಕಂಡು ಅವರ ಜೊತೆಗೂಡಿದ. ಸ್ವಲ್ಪ ಮಾತಿಗೆ ಸಿಕ್ಕಿದರೆ ಸಾಕು ಎಲ್ಲರೂ ಏನಾದರೊಂದು ಹೇಳುವವರೇ ಎಂದು ನೆನಪಾಗಿ ಸುತ್ತ ಏಕಾಂತ ಸ್ಥಳ ಹುಡುಕುವಷ್ಟರಲ್ಲಿ-“ಅಲ್ವಲ ಅಪಯ, ಆಟೋಂದು ದುಡ್ಡಿಗೆ ಒಪ್ಪರಿಸಿದಿಯಲ, ನಿನಿಗೇನು ಬುದ್ದಿ ಐತಾ ಇಲ್ವಾ?” ಎಂದು ಬೈಯ್ಯುವ ಧನಿಯಲ್ಲಿ ಸೋಮಪ್ಪ ಪ್ರಶ್ನಿಸಿದ.ಪಕ್ಕದಲ್ಲೇ ಮಣ್ಣೆಳೆಯುತ್ತಿದ್ದ ನಾಗ ಕೇಳಿಸಿಕೊಂಡು – “ಆಟೋಂದಂತೆ ಆಟೋಂದು. ಯೋಟೋಂದು ಕೊಟ್ಬುಟವ್ರೊ. ಸುಮ್ಮುಕ ಕೂಕಳಪ ದೊಡ್ಡ ಮನ್ಸ ನೀನೇನು ಎತ್ತಿಕೊಡಬ್ಯಾಡ” ಎಂದು ಗದರಿದ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +“ಮುನ್ನೋಡಕಂಡು ಬದ್ಕು ಮಾಡೋ ಅಲಾಲಕೋರ ನನ ಮಗನೆ. ಗೊತ್ತೇನೋ ಅತ್ತು ಸಾವ್ರುಕ್ಕೆ ಎಷ್ಟು ಸೊನ್ನೆ ಅಮ್ತನ?”.“ಈಗೇನು ಬಾರಪ. ಆ ಸೊನ್ನೆಗುಳನ್ನೆಲ್ಲ ನೀನೆ ಮಡಿಕ್ಕಂಡು ಗುಂಡಿ ಮುಚ್ಕೊಟ್ಟೋಗು…” ಎಂದು ನಾಗಪುನಃ ವಟ್ಟರಿಸಲು ಸೋಮಪ್ಪ ಇವನ ಹತ್ತಿರ ಮಾತೇನು ಎಂದು ಸುಮ್ಮನಾದ. ನಾಗ ಬಹಳ ಜೋರು. ಪ್ರತಿಯೊಂದಕ್ಕೂ ದಬಾಯಿಸುತ್ತಾನೆ ಎಂದು ಜನ ಎಚ್ಚರಿಸಿದ್ದು ನೆನಪಾಯಿತು ಚಾಮಿಗೆ. + +“ನೀನು ಕೊಟ್ಟಿರದ್ರಾಗೆ ಅರ್ದ ಕೊಟ್ಟಿದ್ರು ಸಾಕಿತ್ತು ಈ ನನ ಮಗ ಒಬ್ನೆ ಬಂದು ಹಗ್ಲು ಇಳ್ಳುಅಮ್ದಂಗೆ ಮುಚ್ಕೊಟ್ಟೋಗಿರೋನು”, ಇದೇನು ಸೋಮಪ್ಪ ಇದ್ದಕಿದ್ದಂಗೆ ನಾಗನನ್ನು ಹೊಗಳಲಾರಂಭಿಸಿದ? ಅಥವಾಸೂಕ್ಷ್ಮವಾಗಿ ಅರ್ಧ ದುಡ್ಡಿನ ಕೆಲಸ ಅಂತ ಹೇಳುತ್ತಿದ್ದಾನಾ ತಿಳಿಯಲಿಲ್ಲ. “ಅಂಗ ಮಾಡಣ. ಮುಂದಿನ ಸತಿ ನಂಗೊಬ್ನಿಗೆ ಒಪ್ಪರಿಸು. ನೀನೇಳಿದ ಟೈಮಿಗೆ ಮುಗುಸಿಕೊಟ್ಟೋಗ್ತೀನಿ..”. ನಾಗ ಮೆಲ್ಲಗೆ ಉಸುರಿದ. ನಾಲ್ಕುಜನ ಒಟ್ಟು ಕೆಲಸ ಮುಗಿಸಲು ಮೂರು ದಿವಸ ಹಿಡಿದದ್ದು ನೆನೆಸಿಕೊಂಡರೆ ನಾಗ ಒಬ್ಬನೇ ದುಡಿಯುವ ಆಸೆಗೆ ಎಂತಹ ರಿಸ್ಕಿನ ಒಪ್ಪಂದದ ಮಾತಾಡಿದ್ದ ಎಂದು ಚಾಮಿಗೆ ಮೂರು ದಿನಗಳ ತರುವಾಯ ತಿಳಿಯಿತು. ಹಸಿವೆ ಬಡತನ ಅವುಗಳ ಮೇಲೆ ಬರೆ ಎಳೆದಂತೆ ಜಗತ್ತು ಒಡ್ಡುವ ಸ್ಪರ್ಧೆ. ಬಡತನ ಸರಿದೂಗಿಸುತ್ತ ಸ್ಪರ್ಧೆಗೆ ಎದುರಾಗುವುದೆಲ್ಲಿಂದಸಾಧ್ಯ?. ಇವನು ಮಹಾತ್ವಾಕಾಂಕ್ಷಿಯಾಗಿದ್ದಾನೆ. ಉದ್ಯೋಗ ಕೂಲಿ. ತನ್ನ ವೃತ್ತಿಯಿಂದ ಅದೆಷ್ಟುತಾನೆ ದುಡಿಯಬಲ್ಲ? ತನ್ನ ಪಾಡು ಬಿಡು, ತನ್ನ ಮಕ್ಕಳಿಗಾದರು ಉಳ್ಳವರ ಮಕ್ಕಳಷ್ಟೇ ಉತ್ತಮ ಶಿಕ್ಷಣ ಪೌಷ್ಠಿಕ ಆಹಾರ ಕೊಡಿಸಲು ಸಾಧ್ಯವೇ?. ವೇದಿಕೆ ಮೇಲೆ ಪ್ರೈಜ್ ಹಿಡಿದು ಮೈಕಿನಲ್ಲಿ ಭಾಷಣ ಕುಟ್ಟುವ ಪ್ರತಿಯೊಂದು ಮಗುವೂ ಯೋಚಿಸಬೇಕು, ತಾನು ಎಲ್ಲರೊಂದಿಗೆ ಸ್ಪರ್ಧಿಸಿ ಜಯಿಸಿದೆನೋ ಅಥವಾ ಸೀಮಿತ ಮಂದಿಯೊಂದಿಗೆ ಮಾತ್ರ ಹೊರಾಡಿ ಗೆದ್ದೆನೋ ಎಂದು. ಯಾಕೆಂದರೆ ಅದೇ ಭಾಷಣ ಕುಟ್ಟುವ ಮಂದಿಯನ್ನು ಅವಕಾಶವೇ ಇಲ್ಲದ ಲಕ್ಷಾಂತರ ಮಂದಿ ಟಿವಿಯೆದುರು ಕುಳಿತು ಆಲಿಸುತ್ತ ಕನಸು ಕಾಣುತ್ತಿರುತ್ತಾರೆ, ಅಥವಾ ಪರಿಸ್ಥಿತಿಯ ಅರಿವಾಗಿ ಕನಸೇ ಕಾಣದಷ್ಟು ಕುರುಡರಾಗುತ್ತಿರುತ್ತಾರೆ.ಚಾಮಿ ನಾಗನ ಪಿಸಪಿಸಕ್ಕೆ ನಕ್ಕು ಸುಮ್ಮನಾದ. + +*** + + + +ಮನುಷ್ಯ ಹುಟ್ಟಾ ಲಾಭಕೋರ ಮನಸ್ಥಿತಿಯವನು ಅನ್ನಿಸುತ್ತೆ. ಹುಟ್ಟಿಸೋ ಮಕ್ಕಳನ್ನೂ ಕೂಡ ಮುಂದೆ ನಮ್ಮನ್ನು ಸಾಕಲಿ ಎಂದೇ ಅವರ ದೇಹ ಬುದ್ಧಿ ಬೆಳವಣಿಗೆಗಳಲ್ಲಿ ಹೂಡಿಕೆ ಮಾಡುತ್ತಿರುತ್ತಾನೆ. ಹಾಗಲ್ಲದಿರುವವರು ಬಹಳ ವಿರಳ. ಅಂತೂ ಇಂತೂ ಚಾಮಿ ಮಾವಿನ ಸಸಿ ನೆಡಿಸಿದ್ದ. ಒಂದಷ್ಟು ಸಸಿಗಳು ಮಣ್ಣಿನಲ್ಲಿ ಹೂತನಂತರ ಕೊನೆಯುಸಿರೆಳೆದಿದ್ದವು. ‘ಪ್ರಯಾಸಕರ ಗೆಲುವು’ ಎಂದು ನಿಟ್ಟುಸಿರು ಬಿಟ್ಟಿದ್ದನ್ನು ಪ್ರೆಪ್ ಳಿಂದ ಮುಚ್ಚಿಟ್ಟಿದ್ದ. ಆನಂತರ ದಿಢೀರನೆ ಒಂದು ರಾತ್ರಿ ಕಾಡುಹಂದಿಗಳು ಧಾಳಿಯಿಟ್ಟು ಹಸಿ ಮಣ್ಣನ್ನು ದೊಗೆದು ಬೇರನ್ನು ಗಾಯಗೊಳಿಸಿ ಮುಕ್ಕಾಲು ಭಾಗ ಸಸಿಗಳು ಒಣಗಿ ಪುನಃ ಅತ್ತ ತಿರುಗಲೂ ಆಗದಂತೆ ಆಫೀಸಿನಲ್ಲಿ ಸಿಕ್ಕಿಹಾಕಿಕೊಂಡು ನೆಲ ಚನ್ನಾಗಿ ಹದಗೊಂಡಿದ್ದರಿಂದ ಕಳೆಯು ಕಾಡಿನಂತೆ ದಟ್ಟವಾಗಿ ಬೆಳೆದು ನಾಗನ ನೆನಪನ್ನು ತರಿಸಿತ್ತು. ನಾಗನೊಂದಿಗೆ ಫೋನಿನಲ್ಲೆ ಜಮೀನಿನ ಸಂಪೂರ್ಣ ಜವಾಬ್ಧಾರಿ ವಹಿಸಿ ಏನಾದರು ಬೆಳೆದುಕೋ ಬೆಳೆದಿದ್ದರಲ್ಲಿ ಒಂಚೂರು ನನಗೆ ಕೊಡು ಎಂಬಲ್ಲಿಗೆ ನಿಲ್ಲಿಸಿ ಮನುಷ್ಯನ ಇತಿಮಿತಿಗಳ ಪರಾಮರ್ಶೆಯಲ್ಲಿ ತೊಡಗಿದ ಚಾಮಿ. + +ಮಧುಸೂಧನ್ ವೈ ಎನ್ ಮೂಲತಃ ತುಮಕೂರು ಜಿಲ್ಲೆ ಸಿರಾ ತಾಲೂಕಿನ ಯರಗುಂಟೆ ಗ್ರಾಮದವರು. ವೃತ್ತಿ ಸಾಫ್ಟವೇರ್ ಎಂಜಿನಿಯರ್. ಬೆಂಗಳೂರಿನಲ್ಲಿ ವಾಸ. ಸಾಹಿತ್ಯದ ಓದು, ವಿಶ್ವ ಸಿನಿಮಾಗಳ ವೀಕ್ಷಣೆ ಹವ್ಯಾಸವಿರುವ ಇವರಿಗೆ ತತ್ವಶಾಸ್ತ್ರದಲ್ಲಿಯೂ ಆಸಕ್ತಿ. ಇವರ “ಕಾರೇಹಣ್ಣು” ಕಥಾ ಸಂಕಲನಕ್ಕೆ ಈ ಹೊತ್ತಿಗೆಯ ಪ್ರಶಸ್ತಿ ಲಭಿಸಿದೆ. \ No newline at end of file diff --git a/Kenda Sampige/article_425.txt b/Kenda Sampige/article_425.txt new file mode 100644 index 0000000000000000000000000000000000000000..e73ebd553f196396c18b3e1834485baef21d8d24 --- /dev/null +++ b/Kenda Sampige/article_425.txt @@ -0,0 +1,85 @@ + + +ನಾನಾಗ ಸಣ್ಣ ಹುಡುಗ, ಪ್ರಾಯ ಹನ್ನೊಂದೋ, ಹನ್ನೆರಡೋ; ನಮ್ಮ ಸೋದರತ್ತೆಯ ಮನೆಗೆ ಹೋಗಿದ್ದೆ. ಅವರ ಗಂಡ – ನನ್ನ ಮಾವ – ತಕ್ಕಮಟ್ಟಿನ ಹಣಗಾರ. ಹಣಗಾರಿಕೆಗಿಂತಲೂ ಕಾರಭಾರ ಹೆಚ್ಚು. ಊರ ಗದ್ದೆತೋಟಗಳಲ್ಲದೆ ಒಂದು ಕಾಪಿತೋಟ, ಇನ್ನೊಂದು ಏಲಕ್ಕಿ ಮಲೆ. ಅವರ ವಾಸ ಊರಲ್ಲಿ ಆರು ತಿಂಗಳು, ಗಟ್ಟದಲ್ಲಿ ಆರು ತಿಂಗಳು – ವಿಕ್ರಮಾದಿತ್ಯನ ಹಾಗೆ. ಅವರಿಗೆ ನನ್ನ ಮೇಲೆ ತುಂಬಾ ಪ್ರೀತಿ, ನನಗೆ ಅವರಲ್ಲಿ ಬಹಳ ಸಲುಗೆ. ಸಲುಗೆ ಎಷ್ಟೆಂದರೆ – ಒಮ್ಮೊಮ್ಮೆ ಅವರು ಕುಳಿತಿದ್ದರೆ ಬಳಿಗೆ ಹೋಗಿ ಒಂದು ಕೈಯನ್ನು ಅವರ ತೊಡೆಗೊತ್ತಿ, ಇನ್ನೊಂದು ಕೈಯಲ್ಲಿ ಅವರ ಕೊಂಬುಮೀಸೆಯನ್ನು ಹುರಿಮಾಡಿ ಸುರುಳುತ್ತಿದ್ದೆ. ಆ ಬಾರಿ ನಾನು ಅವರ ಮನೆಗೆ ಹೋಗಿ ಒಂದೆರಡು ದಿನಗಳಲ್ಲಿಯೇ ಅತ್ತೆ ಮಾವಂದಿರಿಬ್ಬರೂ ಗಟ್ಟಕ್ಕೆ ಹೊರಡಬೇಕಾಗಿತ್ತು. ಬಂದ ಮೂರು ದಿನಗಳಲ್ಲಿಯೇ ಹಿಂತಿರುಗಿ ಹೋಗಬೇಕಾಯಿತಲ್ಲ ಎಂದು ನನಗೆ ಭಾರಿ ಶೂನ್ಯ; ಅವರಿಗೂ ಬೇಸರ. ಆಗ ಮಾವ, “ಕೃಷ್ಣಾ, ನೀನು ಗಟ್ಟಕ್ಕೆ ಬರುತ್ತೀಯೋ?’’ ಎಂದು ಕೇಳಿದರು. ಪಕ್ಕನೆ ನನ್ನ ಮನಸ್ಸಿನಲ್ಲಿ ಕಣ್ಣು ತೆರೆದಂತಾಯಿತು. “ಹುಂ” ಎಂದೆ. “ಅವನ ತಾಯಿ, ಅಜ್ಜ ಎಲ್ಲ ಏನು ಹೇಳುತ್ತಾರೋ?’’ ಎಂದರು ಅತ್ತೆ. (ಬಾಲ್ಯದಲ್ಲಿಯೇ ನಾನು ತಂದೆಯನ್ನು ಕಳೆದುಕೊಂಡು ನಮ್ಮಜ್ಜನ ಮನೆಯಲ್ಲಿದ್ದೆ). “ಛೇ! ನಾವು ಕರೆದುಕೊಂಡು ಹೋದರೆ ಏನೂ ಹೇಳಲಿಕ್ಕಿಲ್ಲ. ಬರಲಿ, ಪಾಪ! ನಾನು ಅವರ ಮನೆಗೆ ಹೇಳಿ ಕಳುಹಿಸುತ್ತೇನೆ” ಎಂದು ಮಾವ ಹೇಳಿದೊಡನೆ, ಅತ್ತೆಯ ಮಾತಿನಿಂದ ಒಸರತೊಡಗಿದ್ದ ಕಣ್ಣೀರು ಸುಖಜಲವಾಗಿ ಕಣ್ಣು ತುಂಬಿತು. ನಕ್ಕು ನಾಚಿಕೊಂಡು ಮುಖ ತಿರುಗಿಸಿ ಕುಣಿಯುತ್ತಾ ಹಾರುತ್ತಾ ತೋಟಕ್ಕೆ ಓಡಿ ಹೋದೆ. + +ಅದೇ ದಿನ ರಾತ್ರಿ ಪ್ರಯಾಣ, ಬಿಳಿಯ ಜೋಡೆತ್ತಿನ ದೊಡ್ಡ ಗಾಡಿಯಲ್ಲಿ. ಮರುದಿನ ಹಗಲು ಉಪ್ಪಿನಂಗಡಿಯಲ್ಲಿ ಮಜಲು; ಬೈಗಿನಲ್ಲಿ ಪುನಃ ಪ್ರಯಾಣಾರಂಭ. ಮೂರನೆಯ ದಿನ ಶಿರಾಡಿಯಲ್ಲಿ ಕಳೆಯಿತು. ನಾಲ್ಕನೆಯ ದಿನ ಸಕಲೇಶಪುರದ ಬಳಿಯ ಕಾಪಿತೋಟಕ್ಕೆ ಗಾಡಿ ಮುಟ್ಟಿತು. ಹೋಗಿ ಎರಡು ದಿನ ನಾನು ಮಾವನ ಬಂಗಲೆ ಬಿಟ್ಟು ಹೊರಗೆ ಕಾಲೇ ಇಡಲಿಲ್ಲ. ನಿದ್ದೆ ಮಾಡುವುದೇ ಕೆಲಸ. ಅನಂತರ ಮೆಲ್ಲಗೆ ಕಾಪಿತೋಟದ ಅಂದಚಂದಗಳನ್ನು ನೋಡುತ್ತ ಸುತ್ತಮುತ್ತಲಿನ ಪ್ರಕೃತಿಯ ಪರಿಚಯ ಮಾಡಿಕೊಳ್ಳತೊಡಗಿದೆ. ಗಟ್ಟಕ್ಕೆ ಬಂದುದು ನನಗೆ ಅತ್ಯಂತ ಸಂತೋಷಕರವಾಯಿತೆಂದು ಬೇರೆ ಹೇಳುವುದು ಬೇಡ. ಆ ಹೂಬಿಸಿಲಿನ – ಅಲ್ಲ , ಹೂನೆಳಲಿನ ಕಾಪಿತೋಟ! ತೊಳೆದು ‘ಮಾಲೀಸು’ ಮಾಡಿದ ಹಸುರು ಬಣ್ಣದ ಕುರಿಮಂದೆಯಂತಿದ್ದ ಮುದ್ದು ಮುದ್ದು ಕಾಪಿಗಿಡಗಳು. ಒಂದೆಡೆ ಕಿತ್ತಳೆಯ ರಾಜ್ಯ, ಮತ್ತೊಂದೆಡೆ ಪೇರಳೆಯ ಸಾಮ್ರಾಜ್ಯ! ವಿಚಿತ್ರವಾದ ಕಾಡುಹೂಗಳ, ಕಾಪಿಹೂಗಳ ಕಂಪು. ಕನಸಿನಲ್ಲಿಯೂ ಕಾಣದ ತರತರದ ಹಕ್ಕಿಗಳ ವಿವಿಧ ಮಧುರಧ್ವನಿ. ಅಲ್ಲಲ್ಲಿ ಗಂಭೀರವಾದ ಪ್ರತಿಧ್ವನಿ. ಮಹಾರಾಜನ ತಲೆಯ ಮುತ್ತಿನ ತುರಾಯಿಯಂತೆ, ಸಜೀವವಾದ ಬೆಳ್ಳಿಯ ಕೊಳವಿಯಂತೆ, ಹಾರುವ ಇಳಿಯುವ ಮಲೆನೀರ ನಿರ್ಝರ! ಅದರ ನಾದದ ಜತೆಗೆ ಜೀರುದುಂಬಿಯ ಝೇಂಕಾರ – ಈ ನವೀನ – ಪುರಾತನ ಪ್ರಪಂಚದಲ್ಲಿ ಸದಾ ಹಾರುವ ಬಣ್ಣದ ಚಿಟ್ಟೆಗಳೊಳಗೆ ನಾನೂ ಒಂದು ಆಗಿದ್ದೆ. + +ಆ ಸುಂದರ ಸನ್ನಿವೇಶದ ಸುಖಕ್ಕೆ ಸೋದರತ್ತೆಯ ಉಪಚಾರದ ಬೆಂಬಲ. ಗಟ್ಟದ ಜೇನು, ತುಪ್ಪದ ರೊಟ್ಟಿ, ಹಾಲಿನ ಕಾಪಿ, ಕೋಸಿನ ಪಲ್ಯ, ಬಟಾಟೆ ಹುಳಿ, ಏಲಕ್ಕಿ ಹಾಕಿದ ಲಿಂಬೆಹಣ್ಣಿನ ಗಮಗಮಿಸುವ ಉಪ್ಪಿನಕಾಯಿ, ಕೇಸರಿಭಾತು, ಕಿತ್ತಳೆ ಹಣ್ಣು – ಇನ್ನೇನು ಬೇಕು? ಏನು ಬೇಕಾದರೂ ದೊರಕುತ್ತಿತ್ತು. ಆದರೆ ಇದಕ್ಕಿಂತಲೂ ಪ್ರಿಯವಾಗಿತ್ತು ಮಾವನ ಜತೆಯ ಕಾಪಿತೋಟದ ತಿರುಗಾಟ; ಪ್ರತಿದಿನವೂ ತಿರುಗಾಡುತ್ತಿದ್ದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಗಳು ಕುರಿಗಳೆಡೆಯ ಕುರುಬರಂತೆ ಕಾಣುತ್ತಿದ್ದರು. ನನ್ನ ಮಾವ ದಯಾಳು; ಅವರೊಡನೆ ಪ್ರೀತಿಯಲ್ಲಿ ಮಾತಾಡುತ್ತಿದ್ದರು. ಅವರ ಸುಖದುಃಖಗಳನ್ನು ಆಗಾಗ ಕೇಳುತ್ತಿದ್ದರು. ಅವರೊಡನೆ ನನಗೆ ಹಲವರ ಪರಿಚಯವಾಯಿತು. ಕೆಲವರು ಗೆಳೆಯರೂ ಆದರು. ಒಬ್ಬ ಅರೆಮುದುಕನಂತೂ ನನಗೆ ಅತ್ಯಂತ ಪ್ರಿಯನಾದ. ಅವನ ಹೆಸರು ಲಿಂಗಯ್ಯ. ಅವನು ನಮ್ಮ ಊರಿನ, ಮನೆಯ, ಸುದ್ದಿಯೆಲ್ಲ ಕೇಳುತ್ತಿದ್ದ, ತನ್ನ ಕಥೆ ಹೇಳುತ್ತಿದ್ದ, ಲಿಂಗಯ್ಯ ಬೇಲೂರಿನ ಬಳಿಯ ಒಂದು ಹಳ್ಳಿಯವನಂತೆ. ಅವನಿಗೆ ಮನೆಯಲ್ಲಿ ಯಾರೂ ಇಲ್ಲವಂತೆ. ಅವನ ಹೆಂಡತಿ ಅವನನ್ನು ಬಿಟ್ಟು ಓಡಿಹೋಗಿದ್ದಳಂತೆ. ಅವನು ಎಷ್ಟೋ ತೋಟಗಳಲ್ಲಿ ಕೆಲಸ ಮಾಡಿದ್ದನಂತೆ. ಆದರೆ ನನ್ನ ಮಾವನಂತಹ ‘ದೊರೆ’ ಬೇರೆ ಯಾರೂ ತನಗೆ ದೊರಕಲಿಲ್ಲವೆಂದು ಹೇಳುತ್ತಿದ್ದ. + +ಅವನು ತೋಟದಲ್ಲಿ ಕೆಲಸ ಮಾಡುವಾಗ ವಿನೋದದ ಮಾತುಗಳನ್ನು ಆಡುತ್ತಿದ್ದ. ಇದರಿಂದ ಅವನ ಬಳಿಯಲ್ಲಿ ಮಾವನೊಂದಿಗೆ ನಿಂತುಕೊಂಡು, ತೋಟವನ್ನೂ ಕೆಲಸವನ್ನೂ ನೋಡುತ್ತಾ ಇರುವುದೆಂದರೆ ನನಗೊಂದು ಹಬ್ಬವೇ ಆಗಿತ್ತು. ಸಂಜೆ ತನ್ನ ‘ಹಟ್ಟಿಗೆ’ ಬಂದು ಊಟ ತೀರಿಸಿ, ಕಂಬಳಿ ಹಾಸಿ ಗೋಡೆಗೆ ಒರಗಿಕೊಂಡು ಹೊಗೆ ಸೇದುತ್ತಾ ಹಾಡುತ್ತಿದ್ದ. ಅವನ ದನಿ ಬಹಳ ಇನಿದಾಗಿತ್ತು. ಅವನ ಹಾಡೆಂದರೆ ನಮ್ಮೂರ ‘ಪಾರ್ದನೆ’ಯ ಹಾಗೆ. ಅದರಲ್ಲೆಷ್ಟೋ ಹಳೆಯ ಕತೆಗಳು – ದುಃಖಗಳು, ಸಂತೋಷಗಳು, ಪೌರುಷಗಳು, ಪ್ರೀತಿಗಳು – ಎಲ್ಲ ತುಂಬಿದ್ದುವು. ನಾನು ಅವನ ಬಳಿಗೆ ಹೋಗಿ ಕುಳಿತುಕೊಂಡು ಅದನ್ನು ಕೇಳುತ್ತಿದ್ದೆ. ಗಾಳಿ ಚಳಿ ಏರಿದಾಗ, ನನಗೆ ನಿದ್ದೆ ಬರಬಹುದೆಂದಾಗ, ಅವನು ಹಾಡು ನಿಲ್ಲಿಸಿ, “ಚಿಕ್ಕಯ್ಯಾ, ಇನ್ನು ನಾಳೆ ಹೇಳುವ” ಎಂದು ಹೇಳಿ ನನ್ನನ್ನು ಬಂಗಲೆಗೆ ಹೋಗಲು ಹೇಳುತ್ತಿದ್ದ. + +ಹೀಗೆ ಸುಮಾರು ಒಂದು ತಿಂಗಳು ಕಳೆಯಿತು. ಒಂದು ದಿನ ನನ್ನ ಮಾವನಿಗೆ ಏಲಕ್ಕಿಮಲೆಗೆ ಹೋಗಬೇಕಾಗಿ ಬಂತು. ಅವರ ಕಾಪಿ ತೋಟದಿಂದ ಅಲ್ಲಿಗೆ ಹದಿನಾರು ಮೈಲು ದೂರವಿತ್ತು. ರಸ್ತೆಯೇನೂ ಇಲ್ಲ; ಕಾಲುದಾರಿ. ಆದುದರಿಂದ, ನಾನು ಅವರೊಂದಿಗೆ ಹೊರಡುವ ಮನಸ್ಸು ಮಾಡಿದರೂ ಅವರಾಗಿ ಬೇಡವೆಂದರು. ಮೂರು ದಿನಗಳಲ್ಲಿ ಹಿಂತಿರುಗಿ ಬರುತ್ತೇನೆಂದರು. ಅವರ ಜತೆಗೆ ಲಿಂಗಯ್ಯನೂ ಅಲ್ಲಿಗೆ ಹೊರಟ. ನನಗೆ ಬಹಳ ಬಿನ್ನಗೆ. ಅವರು ಹೊರಟುಹೋದ ದಿನವಿಡೀ ಬಂಗಲೆಯಲ್ಲಿ ಸುಮ್ಮನೆ ಕುಳಿತು ನೋಡುತ್ತಾ ಇದ್ದೆ. ಸಂಜೆ ಜೋರು ಚಳಿಯಾಯಿತು. ಅತ್ತೆಯೊಡನೆ ಹೇಳಿದೆ. ಮೆಯ್ ಮುಟ್ಟಿ ನೋಡಿ, “ಮೆಯ್ ಕಾಯುತ್ತಿದೆ!’’ ಎಂದರು. ಎರಡು ದಿನ ಬೋಧವಿಲ್ಲದ ಜ್ವರ ಬಂತು. ಅತ್ತೆ ನಿದ್ದೆ ಬಿಟ್ಟು ಚೆನ್ನಾಗಿ ಆರೈಕೆ ಮಾಡಿದರು. ಮದ್ದು ಕುಡಿಸಿದರು. ಮೂರನೆಯ ದಿನ ಬೆವರಿಬಿಟ್ಟಿತು. ನಾಲ್ಕನೆಯ ದಿನ ಮೆಲ್ಲಗೆ ಎದ್ದು ಬಂಗಲೆಯೊಳಗೆ ಅತ್ತಿತ್ತ ತಿರುಗಾಡುವಂತಾಯಿತು. ಸಂಜೆಯಾಗುವಾಗ ಮಾವನೂ ಬಂದರು. ಜ್ವರ ಬಂದು ಆಯಾಸವೆಲ್ಲ ಥಟ್ಟನೆ ಮಾಯವಾಯಿತು. ಅಷ್ಟರಲ್ಲಿ ಲಿಂಗಯ್ಯ ಬಂದು, “ಚಿಕ್ಕಯ್ಯಾ! ನನ್ನದೊಂದು ನೆನಪಿಗೆ. ಇದಕ್ಕೆ ಬೆಳ್ಳಿ ಕಟ್ಟಿಸಿಕೊಳ್ಳಿ” ಎಂದು ಒಂದು ಬಣ್ಣಬಣ್ಣದ ಸೆಳೆಬೆತ್ತವನ್ನು ನನ್ನ ಕೈಯಲ್ಲಿ ಕೊಟ್ಟ. ನನಗಾದ ಸಂತೋಷ ಅಷ್ಟಿಷ್ಟಲ್ಲ. ಅದನ್ನು ಹಿಡಿದುಕೊಂಡ ಮನೆತುಂಬ ಠೀವಿಯಿಂದ ನಡೆದಾಡಿದೆ. ಅದರ ಪ್ರತಿಯೊಂದು ಮಚ್ಚೆ, ಪ್ರತಿಯೊಂದು ಗಂಟು, ಗಿಣ್ಣು – ಎಲ್ಲವನ್ನೂ ನೋಡಿ ನೋಡಿ ತುಲನೆಮಾಡಿ ಮೆಚ್ಚಿ, ಅತ್ತೆಗೆ ತೋರಿಸಿ, ಮಾವಗೆ ಹೇಳಿ, ಬಾರಿಬಾರಿಗೆ ಲಿಂಗಯ್ಯನ ಹೆಸರೆತ್ತಿ, ಅವನ ಬಳಿಗೆ ಹೋಗಿ, ಅದು ಎಲ್ಲಿ ಸಿಕ್ಕಿತು, ಹೇಗೆ ಸಿಕ್ಕಿತು, ಯಾರು ಕಡಿದುದು ಮೊದಲಾದ ಎಲ್ಲಾ ಕಥೆಯನ್ನು ಕೇಳಿ ಕೇಳಿ ತಿಳಿದುಕೊಂಡೆ. ಅದು ನನ್ನ ಮಾವನ ಏಲಕ್ಕಿ ಮಲೆಯಲ್ಲಿಯೇ ಬೆಳೆದ ನಾಗರಬೆತ್ತವೆಂದು ಕೇಳಿ ಮತ್ತಷ್ಟು ಪ್ರೀತಿಗೊಂಡೆ. + +ಮತ್ತೆ ನಾಲ್ಕಾರು ದಿನಗಳಲ್ಲಿ ಮಾವನ ಬಂಗಲೆಗೆ ಏಲಕ್ಕಿಯ ಚೀಲಗಳು ಹೊರೆಹೊರೆಯಾಗಿ ಬರತೊಡಗಿದವು. ಆ ಚೀಲಗಳೆಲ್ಲ ನನ್ನ ಮಾವನ ಬಿಳಿಗಾಡಿಯನ್ನೇರಿದುವು. ಅವುಗಳ ಮಾರಾಟಕ್ಕಾಗಿ ಮಾವನೂ ಊರಿಗೆ ಬಂದು ಮಂಗಳೂರಿಗೆ ಹೋಗಬೇಕಾಗಿತ್ತು. ನಾನೂ ಊರಿಗೆ ಹೊರಡುವುದೆಂದಾಯಿತು. + +ಹೊರಡುವಾಗ ನನ್ನತ್ತೆ ಮೂರು ಏಲಕ್ಕಿ ಮಾಲೆಗಳನ್ನು ತಂದು, ಒಂದನ್ನು ನನ್ನ ಕೊರಳಿಗೆ ಹಾಕಿ, ಉಳಿದುದನ್ನು ನನ್ನ ಕೈಯಲ್ಲಿ ಕೊಟ್ಟು “ಮನೆಗೆ ಹೋಗಿ ನಿನ್ನಕ್ಕನಿಗೊಂದು ಕೊಡು; ಅಜ್ಜನಿಗೊಂದು ಕೊಡು” ಎಂದು ಹೇಳಿ ಮತ್ತೆ, “ಮಾವ ಮಂಗಳೂರಿನಿಂದ ಬರುವವರಗೆ ನಿನಗೆ ಇಲ್ಲೇ ಇದ್ದುಬಿಡಬಹುದಿತ್ತು” ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರಿನ ಒಂದು ‘ಪದರು’ ಹೊಳೆಯಿತು. ನನ್ನನ್ನು ಜತೆಯಲ್ಲಿರಿಸಿಕೊಂಡು ಅಷ್ಟು ದಿನ ಇದ್ದು ಈಗ ನಾನೂ ಮಾವನೂ ಇಬ್ಬರೂ ಅಗಲುವಾಗ, ಮಕ್ಕಳಿಲ್ಲದ ನನ್ನ ಅತ್ತೆಗೆ ಬಹಳ ಖೇದವಾಗಿದ್ದಿರಬೇಕು. ಆದರೂ ಇನ್ನೂ ಇಲ್ಲೇ ಇರಿಸಿಕೊಂಡರೆ ನನ್ನ ಅಜ್ಜ, ತಾಯಿ, ಬೇಸರಿಸಬಹುದೆಂದು ಗೊತ್ತಿದ್ದ ಅವರು ಒತ್ತಾಯಿಸಲಿಲ್ಲ. ಮಾವ ಹೊರಡುವುದರಿಂದ ನನಗೂ ಹೊರಡುವ ಮನಸ್ಸೇ ಇತ್ತು. ಆದರೆ ಆ ಕಾಪಿತೋಟದ ಅಂದ, ಲಿಂಗಯ್ಯನ ಗೆಳೆತನ, ಅತ್ತೆಯ ಉಪಚಾರ, ಇವೆಲ್ಲವನ್ನು ಬಿಟ್ಟು ಹೊರಡುವಾಗ ಮನಸ್ಸಿನ ಅರ್ಧಾಂಶ ಅವಿತಿತು. + +ಅತ್ತೆಯ ಕೈಗಳಿಂದ ಅಪ್ಪಿಸಿಕೊಂಡು ಹೇಗೋ ಗಾಡಿಯೇರಿದೆ. ಲಿಂಗಯ್ಯ ಗಾಡಿ ಹೊರಡುವಲ್ಲಿ ನಿಂತಿದ್ದ. “ಬೆತ್ತ ಉಂಟಲ್ಲಾ ಚಿಕ್ಕಯ್ಯಾ?’’ ಎಂದ. ಅದನ್ನು ಬಿಡುವುದುಂಟೆ? ಅದು ನನ್ನ ಬಳಿಯಲ್ಲಿಯೇ ಇತ್ತು. “ಇಗೋ! ಇಲ್ಲಿದೆ” ಎಂದು ತೆಗೆದು ತೋರಿಸಿದೆ. ಅವನಿಗೆ ನನ್ನ ಕೃತಜ್ಞತೆಯನ್ನು ಹೇಗೆ ತಿಳಿಸುವುದೆಂದು ತಿಳಿಯದಾದೆ. ಸುಮ್ಮನೆ ಅವನ ಮುಖ ನೋಡುತ್ತ ಕುಳಿತೆ. ನನ್ನ ಕಣ್ಣಲ್ಲಿ ನೀರಿಳಿಯಿತು. ಅವನು ಬಳಿಗೆ ಬಂದು ನನ್ನ ಕಣ್ಣೊರೆಸಿ, “ಹೋಗಿಬನ್ನಿ” ಎಂದ. ಅವನ ಕಣ್ಣಲ್ಲಿಯೂ ನೀರು ತುಂಬಿದ್ದು ನನಗೆ ಕಂಡಿತು. ನಮ್ಮ ಗಾಡಿ ಹೊರಟಿತು. + +ಮೂರನೆಯ ದಿನ ಗಾಡಿ ನಮ್ಮ ಮಾವನ ಊರಮನೆಗೆ ಬಂದು ಮುಟ್ಟಿತು. ಮನೆಯಲ್ಲಿ ಎರಡು ದಿನವಿದ್ದು ಮಾವ ಮಂಗಳೂರಿಗೆ ಗಾಡಿ ಕಟ್ಟಿಸಿದರು. ಅಷ್ಟರೊಳಗೆ ನನ್ನ ಬೆತ್ತಕ್ಕೆ ಕಟ್ಟಿಹಾಕಿಸಿಕೊಟ್ಟರು. ದೇವಯ್ಯಾಚಾರಿ ಮೇಲುತುದಿಗೆ ಬೆಳ್ಳಿಯ ಟೊಪ್ಪಿಗೆಯನ್ನೂ ಕೆಳತುದಿಗೆ ಕುಂಭಕೋಣದ ಹಿತ್ತಾಳಿಯ ಮುಚ್ಚುಕಟ್ಟನ್ನೂ ಹಾಕಿದ. ಬೆತ್ತದ ಅಂದ ಇಮ್ಮಡಿಸಿತು. ಒಂದು ಜನದ ಜತೆಕೊಟ್ಟು ಆರು ಮೈಲು ದೂರದ ನಮ್ಮಜ್ಜನ ಮನೆಗೆ ನನ್ನನ್ನು ಕಳುಹಿಸಿದರು. ಹೊರಡುವಾಗ ಗಿಳಿ ಬಣ್ಣದ ಒಂದು ಕಾಶ್ಮೀರದ ಸಕಲಾತಿಯನ್ನು ನನ್ನ ಹೆಗಲಿಗೆ ಹಾಕಿ ಬೆನ್ನು ತಟ್ಟಿ, “ನಿನಗೆ ಹೊದೆಯಲಿಕ್ಕೆ” ಎಂದರು. ನನ್ನ ಮುಖವರಳಿದ್ದು ನನಗೇ ಕಂಡಂತಾಯಿತು; ಕಣ್ಣೀರೂ ಬಂತು. ಹಾಗೆಯೇ ಒಮ್ಮೆ ಅವರ ನಗುಮೊಗವನ್ನು ನೋಡಿ,“ಬರುತ್ತೇನೆ” ಎಂದು ಹೇಳಿ ಬೆತ್ತ ಹಿಡಿದುಕೊಂಡು ನೆಟ್ಟಗೆ ಮನೆಗೆ ಹೊರಟೆ. + +ಮನೆಗೆ ಬರುವಾಗ ಎರಡು ಗಳಿಗೆ ಹೊತ್ತು ಉಳಿದಿತ್ತು. ನಾನು ಅಷ್ಟು ದಿನ ಕಳೆದು ಬರುವಾಗ ನನ್ನನ್ನು ಕಂಡು, ತುಂಬಿದ ನಮ್ಮ ಮನೆಯವರೆಲ್ಲರೂ ನಗುನಗುತ್ತ ನನ್ನನ್ನು ಮುತ್ತುವರು, ನನ್ನ ಬೆತ್ತ ಸಕಲಾತಿ ಎಲ್ಲಾ ನೋಡಿ ಮೆಚ್ಚಿ ನಲಿಯುವರು, ಎಂದು ಭಾವಿಸಿದ್ದೆ. ಆದರೆ ಕೆಲವರೆಲ್ಲ ನನ್ನನ್ನೂ ಕಂಡೂ ಕಾಣದಂತೆ ತೊಲಗಿದರು! ಅಂಗಳದ ಮೂಲೆಯಲ್ಲಿದ್ದ ನನ್ನ ಅಕ್ಕ ಮಾತ್ರ “ತಮ್ಮ ಬಂದ!’’ ಎಂದು ನಗುನಗುತ್ತ ಬೊಬ್ಬಿಟ್ಟು ನನ್ನ ಬಳಿಗೆ ಓಡಿಬಂದಳು. ಆಗ ನಾನು “ಇಗೋ ನೋಡು, ಮಾವ ಕೊಟ್ಟ ಸಕಲಾತಿ!’’ ಎಂದು ತೋರಿಸಿದೆ. ಅವಳು “ಆಹಾ! ಚಂದವೇ” ಎಂದು ಹೇಳುತ್ತ ಕೈಯಲ್ಲಿ ತೆಗೆದುಕೊಂಡು ಒಳಗಿದ್ದ ತಾಯಿಗೆ ತೋರಿಸಲು ಕೊಂಡೋಡಿದಳು. ನಾನೂ ಒಳಗೆ ಹೋದೆ. ತಾಯಿನನ್ನನ್ನು ಕಂಡು, “ಏನೋ ಇಷ್ಟು ದಿನ? ಅಜ್ಜ ಸಿಟ್ಟಿನಲ್ಲಿದ್ದಾರೆ!’’ ಎಂದರು. ಅವರ ಕೈಯಲ್ಲಿ ಸಕಲಾತಿ ಇತ್ತು. ಅದನ್ನು ನೋಡಿ ಒಳಗಿಡು ಎಂದು ನನ್ನಕ್ಕನ ಕೈಯಲ್ಲಿ ಹೇಳಿ ಕಣ್ಣೊರೆಸಿಕೊಂಡು “ಅಬ್ಬ ಹೊಗೆಯೇ!’’ ಎನ್ನುತ್ತಾ ನನ್ನ ಜತೆಯಲ್ಲಿ ಬಂದ ಆಳಿಗೆ ಬಾಯಾರಿಕೆ ಕೊಡುವುದಕ್ಕಾಗಿ ಮಜ್ಜಿಗೆ ನೀರು ಮಾಡಲು ಹೋದರು. ಬೇರಾರೂ ನನ್ನನ್ನು ಮಾತಾಡಿಸಲೇ ಇಲ್ಲ! + +ನಾನು ಖಿನ್ನತೆಯಿಂದಲೂ ಭೀತಿಯಿಂದಲೂ ಬಾವಿಕಟ್ಟೆಗೆ ಹೋಗಿ ಕಾಲು ತೊಳೆದುಕೊಂಡು ಬಂದು, ತಾಯಿಯ ಹತ್ತಿರ ಕೇಳಿ ಒಂದು ತುಂಡು ಬೆಲ್ಲ ತೆಗೆದುಕೊಂಡು, ನೀರು ಕುಡಿದು ಹೊರಗೆ ಬಂದು ಚಾವಡಿಯ ಒಂದು ಮೂಲೆಯಲ್ಲಿ ಕುಳಿತೆ. ಏಲಕ್ಕಿ ಮಾಲೆಯ ನೆನಪೇ ಹೋಯಿತು. ಅದು ನನ್ನ ಬಟ್ಟೆಯ ಗಂಟಿನಲ್ಲಿಯೇ ಇತ್ತು. ಕೈಯಲ್ಲಿ ಮಾತ್ರ ಬೆತ್ತವಿತ್ತು. ಅದನ್ನು ನೆಲಕ್ಕೆ ಮೆಲ್ಲನೆ ತಟ್ಟುತ್ತಾ ಇದ್ದೆ. ಮನಸ್ಸು ಎಲ್ಲಿತ್ತೋ ನನಗೇ ಗೊತ್ತಿರಲಿಲ್ಲ. ಅಷ್ಟರಲ್ಲಿ ತೋಟಕ್ಕೋ ಎಲ್ಲಿಗೋ ಹೋಗಿದ್ದ ಅಜ್ಜ ಬಂದರು. ಅವರನ್ನು ನೋಡಿ ಫಕ್ಕನೆ ಅಳುಕಿತು. ಚಾವಡಿಯೇರುವಾಗಲೇ ಅವರು ನನ್ನನ್ನು ಕಂಡರು! “ಏನೋ ಬಂದುಬಿಟ್ಟೆ? ಅಲ್ಲಿಂದ ಹೋಗೆಂದು ಕುತ್ತಿಗೆಗೆ ಕೈಹಾಕಿ ದೂಡಿದರೋ?’’ ಎಂದು ಕಣ್ಣುಕೆಂಪು ಮಾಡಿ ಹೇಳಿದರು. ನಾನು ಮೂಲೆಗೆ ಅಂಟಿದೆ. ಹಾಗೆಯೇ ಅವರು ಮೇಲೆ ಬಂದು, ‘ಬಾಜಿರ ಹಲಗೆ’ ಯಲ್ಲಿ ಕುಳಿತು ವೀಳ್ಯ ಹಾಕತೊಡಗಿದರು. ಇಷ್ಟರಲ್ಲಿಯೇ ಮುಗಿದುಹೋಯಿತೆಂದು ಭಾವಿಸಿ ನಾನು ಸ್ವಲ್ಪ ಸಮಾಧಾನಪಟ್ಟುಕೊಂಡು, ಅನ್ಯಮನಸ್ಕನಾಗಿ ತಲೆ ಬಗ್ಗಿಸಿದಲ್ಲಿಂದಲೇ ಬೆತ್ತದ ತುದಿಯಲ್ಲಿ ನೆಲವನ್ನು ಪುನಃ ತಟ್ಟತೊಡಗಿದೆ. ಅಜ್ಜ ನನ್ನ ಕಡೆಗೆ ನೋಡಿದರು! + +“ಅದೆಲ್ಲಿಂದಲೋ ಬೆತ್ತ? ಇಲ್ಲಿ ತಾ!” ಎಂದರು. ನನ್ನ ಎದೆಯೊಳಗಿನ ಡಬಡಬ ನನಗೆ ಸರಿಯಾಗಿ ಕೇಳುತ್ತಿತ್ತು. ಬೆತ್ತವನ್ನು ತಂದು ಅವರ ಕೈಯಲ್ಲಿ ಕೊಟ್ಟೆ. ಅದನ್ನವರು ಅಮೂಲಾಗ್ರವಾಗಿ ನೋಡಿದರು; ಅದರ ಕಟ್ಟಗಳನ್ನು ಮುಟ್ಟಿದರು; ನೆಟ್ಟಗೆ ಹಿಡಿದು, ಅಡ್ಡ ಹಿಡಿದು, ನೋಟ ಹಿಡಿದು ಪರೀಕ್ಷಿಸಿದರು. ಹಿಡಿದು ಅಲುಗಿಸಿದರು. ಕೊನೆಗೆ ನನ್ನ ಕಡೆಗೆ ನೋಡಿ “ಸೋಮಾರಿ! ಮನೆಯಲ್ಲಿ ಕುಳಿತು ಓದಿ ಬರೆದು ಟವಣೆ ಕಲಿತು ಮರ್ಯಾದೆಯಲ್ಲಿ ಎರಡು ಕೂಳು ಸಂಪಾದಿಸುವ ಆಲೋಚನೆ ಬಿಟ್ಟು, ಇನ್ನು ಕೋಲುಬೆತ್ತ ಹಿಡಿದುಕೋ! ಪನ್ನೆ ತಿದ್ದು! ಪೋಲಿಯಾಗಿ ಅಂಕ – ಆಯನ, ಆಟ – ನೋಟ ಎಲ್ಲುಂಟೆಂದು ತಿರುಗಾಡು! ಮತ್ತೆ ಗಟ್ಟ ಹತ್ತಿ ತೋಟದಲ್ಲಿ ಅಡಿಗೆ ಕೆಲಸಕ್ಕೆ ಸೇರು! ನಿನ್ನ ಹಣೆಬರಹ ನೋಡು ನೀ ನೋಡು!’’ ಎಂದು ಹೇಳಿ ಬೆತ್ತದ ಎರಡು ಕೊನೆಗಳಲ್ಲಿಯೂ ಹಿಡಿದು ಬಾಗಿಸಿದರು. ನನ್ನ ಜೀವವೇ ಮುರಿಯುವಂತಾಯಿತು. “ಬೇಡಜ್ಜಾ, ಬೇಡಜ್ಜಾ!’’ ಎಂದೆ. ಅವರು ಕಣ್ಣು ಕೆರಳಿಸಿ ನೋಡಿದರು! ಅಳುತ್ತಾ ಹಿಂದೆ ಸರಿದೆ. ಆದರೆ ಅದು ಸಪುರವಾಗಿ ಸೆಳೆಯಾಗಿದ್ದುದರಿಂದ ಮುರಿಯದೆ ಬಳುಕಿತು. ಕೂಡಲೆ ಅಜ್ಜ ಹಲ್ಲು ಕಚ್ಚಿ ಅದನ್ನು ಇನ್ನೊಂದು ಮೆಯ್ಗೆ ಥಟ್ಟನೆ ಬಗ್ಗಿಸಿದರು, ಅದು ಮುರಿಯಿತು. ನನ್ನ ಲಿಂಗಯ್ಯನ ಪ್ರೀತಿಯ ತಂತು ತುಂಡಾಯಿತು! ಅದರ ಕಟ್ಟಗಳನ್ನವರು ‘ಎಲೆ ಗುದ್ದಾಣ’ದ ಕಲ್ಲಿನಲ್ಲಿ ಗುದ್ದಿ ತೆಗೆದರು; ತಮ್ಮ ಜನಿವಾರದ ಪೆಟ್ಟಿಗೆಯಲ್ಲಿ ಹಾಕಿ ಮೇಲೆ ‘ಉತ್ತರ’ ದಲ್ಲಿಟ್ಟರು. ನನ್ನ ಮುದ್ದು ಬೆತ್ತದ ಮುರುಕುಗಳನ್ನು ಕೊಂಡುಹೋಗಿ, ಅಂಗಳದ ಮೂಲೆಯಲ್ಲಿ ಹೊಗೆದುರಿಯುತ್ತಿದ್ದ ಸುಡುಮಣ್ಣಿನ ರಾಶಿಗೆ ಎಸೆದುಬಿಟ್ಟರು! + +ನಾನು ಆ ದಿನ ಊಟ ಮಾಡಲಿಲ್ಲ. ನನ್ನನ್ನು ಊಟಕ್ಕೆಬ್ಬಿಸಲು ತಾಯಿ ಬಂದರು. ನಾನು ಎಚ್ಚರವಿದ್ದರೂ ಏಳಲಿಲ್ಲ. “ನಿನಗೆ ಹಸಿವಿಲ್ಲ” ಎಂದು ಹೇಳಿ ಒಳಗೆ ಹೋದರು. ಅವರೂ ಅಂದು ಊಟ ಮಾಡಿದರೋ ಇಲ್ಲವೋ ನನಗೆ ಗೊತ್ತಿಲ್ಲ. ನಾನು ಬೆಳಿಗ್ಗೆ ಎದ್ದು ಮುಖ ತೊಳೆದು ವಿಭೂತಿ ಹಾಕಿ ದೇವರಿಗೆ ನಮಸ್ಕರಿಸಿ, ಭಾಗವತದ ಓಲೆಪುಸ್ತಕವನ್ನು ತೆಗೆದುಕೊಂಡು ಓದುವುದಕ್ಕೆ ಕುಳಿತೆ. ಕಣ್ಣಿನಿಂದ ನೀರು ಇಳಿಯುತ್ತಲೇ ಇದ್ದುದರಿಂದ ಓದಲಾಗಲಿಲ್ಲ. ಪುಸ್ತಕವನ್ನು ಕಟ್ಟಿಟ್ಟೆ. ಎದ್ದು ಬಯಲಿಗೆ ನಡೆದೆ. ನಾಲ್ಕು ಗಳಿಗೆ ಹೊತ್ತಾಗುವಾಗ ಆಯಾಸದಲ್ಲಿ ಏನೂ ಕೂಡದು. ಮನೆಗೆ ಬಂದೆ. ಮಿಂದು ಜಪಮಾಡಿ ಒಳಗೆ ಹೋದೆ. ಎಲೆಯಿಟ್ಟುಕೊಂಡು ಕುಳಿತೆ. ತಾಯಿ ಇಷ್ಟು ಗಂಜಿ ಹಾಕಿದರು. ಮಾತಾಡದೆ ಉಂಡು ಕೈತೊಳೆದು ಬಂದು ತಲೆ ನೋಯುತ್ತದೆ ಎಂದು ಹೇಳಿ, ಒಂದು ಹುಲ್ಲಚಾಪೆಯನ್ನೂ ತಲೆದಿಂಬನ್ನೂ ತೆಗೆದುಕೊಂಡು, ಚಾವಡಿಯ ಮೂಲೆಯಲ್ಲಿ ಗೋಡೆಗೆ ಮೋರೆ ಹಾಕಿ ಮಲಗಿದೆ. ನಿದ್ದೆ ಬರುವಂತಿರಲಿಲ್ಲ. + +ಅಜ್ಜ ಆ ದಿನ ಮನೆಯಲ್ಲಿರಲಿಲ್ಲ. ಒಂದು ಪಾಲುಪಂಚಾಯತಿಕೆಯ ನಿಮಿತ್ತ ನನ್ನ ತಾಯಿಯ ಸೋದರಮಾವನ ಮನೆಗೆ ಹೋಗಿದ್ದರು. ಆದುದರಿಂದ ಮಲಗಿದ್ದಲ್ಲಿಂದ ಎಬ್ಬಿಸಿ ಬರೆಯಲು ಕುಳ್ಳಿರಿಸುವವರು ಯಾರೂ ಇರಲಿಲ್ಲ. ನನ್ನ ಮಾವಂದಿರು ನನ್ನ ಗೊಡವೆಗೆ ಬರುವವರೇ ಅಲ್ಲ. ಆದುದರಿಂದ ಸುಮ್ಮನೆ ಮಲಗಿದ್ದೆ. + +ನಮ್ಮಜ್ಜನ ಮನೆಯಲ್ಲಿ ತುಂಬ ಜನರಿದ್ದರು. ದೊಡ್ಡ ಕುಟುಂಬ. ಒಬ್ಬರು ಹಣ್ಣು ಮುದುಕಿಯೂ ಇದ್ದರು. ನನ್ನ ಅಜ್ಜನಿಗೆ ಅವರು ದೊಡ್ಡಮ್ಮ. ಎಂದರೆ ತಂದೆಯ ಅಣ್ಣನ ಹೆಂಡತಿ. ಅವರಿಗೆ ಮಕ್ಕಳಿಲ್ಲ, ಬಾಲವಿಧವೆ. ಎಲ್ಲರ ಮೇಲೂ ಅವರಿಗೆ ಕರುಣೆ, ಪ್ರೀತಿ. ಹೆಚ್ಚಿನ ಸಮಯವೆಲ್ಲ ಒಳಗೇ ಇದ್ದುಕೊಂಡು, ಏನೋ ಧ್ಯಾನಿಸುತ್ತ ಕಾಲಕಳೆಯುವರು. ಅವರಿಗೆ ಬಹಳ ದಾಕ್ಷಿಣ್ಯ, ಬಹಳ ಅಂಜಿಕೆ. ನಮ್ಮ ಅಜ್ಜ ಅವರಿಗೆ ಮಗನಾಗಬೇಕಾಗಿದ್ದರೂ ಅವರ ಇದಿರಿನಲ್ಲಿ ನಿಂತು ಮಾತಾಡಲು ಸಹ ಹೆದರುತ್ತಿದ್ದರು. ನಮ್ಮ ಅಜ್ಜನಿಗೆ ಸಿಟ್ಟು ಬಹಳ, ಅವರನ್ನು ಕಂಡೊಡನೆ ಅಲ್ಲಿ ನಿಲ್ಲದೆ ಒಳಗೆ ಹೋಗುತ್ತಿದ್ದರು. ಅಂದು ಅಜ್ಜ ಮನೆಯಲ್ಲಿಲ್ಲದಿದ್ದುದರಿಂದ ಅವರು ಚಾವಡಿಗೆ ಬಂದು, ನಾನು ಮಲಗಿದ್ದುದನ್ನು ನೋಡಿದರು. ನನ್ನ ದುಃಖದ ಕಾರಣ ಅವರಿಗೆ ಗೊತ್ತಿರಲಿಲ್ಲ. ಅವರು ನನ್ನ ಬಳಿಗೆ ಬಂದು ಕುಳಿತು, ಬೆನ್ನು ಸವರಿ ಎದೆಮುಟ್ಟಿ ನೋಡಿ, “ಮಗೂ! ನಿನಗೇನಪ್ಪಾ? ಅತ್ತೆಯ ಮನೆಯಲ್ಲಿ ಊಟಗೀಟ ಸರಿಯಾಗಲಿಲ್ಲವೋ? ಗಟ್ಟಕ್ಕೆ ಹೋಗಿ ಬಂದೆಯಂತೆ. ಅದು ಜ್ವರದ ಊರು. ಏನಾಯಿತು ಮಗೂ?’’ ಎಂದರು. ನಾನು ಉತ್ತರ ಕೊಡಲೇ ಇಲ್ಲ. ಅವರು ಮತ್ತೂ ಮತ್ತೂ ಕೇಳಿದರು. ಅವರ ದನಿ ನನ್ನ ಮನಸ್ಸನ್ನು ಅಲುಗಿಸಿತು. ಕೊನೆಗೆ ಬಿಕ್ಕುತ್ತಾ ಬಿಕ್ಕುತ್ತಾ ನನ್ನ ದುಃಖದ ಕಾರಣವನ್ನು ಹೇಳಿದೆ : ಮುರಿದುಹೋದ ನನ್ನ ಮುದ್ದು ಬೆತ್ತದ ಕತೆಯನ್ನೆಲ್ಲ ಹೇಳಿದೆ. + +ದೇವಜ್ಜಿ – ಇದು ನಾವು ಅವರನ್ನು ಕರೆಯುವ ಹೆಸರು; ಅವರ ಹೆಸರು ದೇವಕಿ ಎಂದು – ನನ್ನೊಡನೆ ಕಣ್ಣೀರು ಸುರಿಸುತ್ತಾ ಸುದ್ದಿಯನ್ನೆಲ್ಲ ಕೇಳಿದರು. ಸೆರಗಿನಲ್ಲಿ ಒರಸಿದಷ್ಟು ಅವರ ಕಣ್ಣಲ್ಲಿ ನೀರಿಳಿಯುತ್ತಲೇ ಇತ್ತು. ಕೊನೆಕೊನೆಗೆ ಅವರಿಗೆ ದುಃಖವನ್ನು ತಡೆಯಲಾಗಲಿಲ್ಲ. ಅವರು ಚೆನ್ನಾಗಿ – ಆದರೆ ಮಲ್ಲಗೆ, ಅತ್ತರು. ನಾನು ಅತ್ತೆ. ಇಬ್ಬರೂ ಮುಖವನವ್ನೊರಸಿಕೊಂಡೆವು. ಅಜ್ಜಿ ಸ್ವಲ್ಪ ತಡೆದು, “ಮಗೂ, ಆ ಬೆತ್ತ ಮುರಿದದ್ದು ಒಳ್ಳೆಯದೇ ಆಯಿತಪ್ಪ. ಅದು ಎಲ್ಲಿದ್ದ ನಾಗರಬೆತ್ತವೋ! ನಾಗರ ಬೆತ್ತವೆಂದರೆ ಜೀವಕ್ಕೆ ಸಂಚಕಾರ, ಮಗೂ! ನಿನಗದು ಬೇಡವೇ ಬೇಡ, ಅಳಬೇಡ ಮಗೂ, ಅಳಬೇಡ!’’ ಎಂದು ಹೇಳುತ್ತಾ ಅವರೇ ಗೊಳೋ ಎಂದು ಅತ್ತರು. ಚಾವಡಿಯಲ್ಲಿ ಬೇರಾರೂ ಇರಲಿಲ್ಲ. + +ನನಗೊಂದು ಶಂಕೆ ಹುಟ್ಟಿತು. ನಾಗರಬೆತ್ತವು ಜೀವಕ್ಕೆ ಸಂಚಕಾರವಾಗುವುದು ಹೇಗೆ? ಹೋ! ‘ನಾಗ’ ಎಂದರೆ ಹಾವು! ಹಾವಿಗಿರುವಂತೆ ಬೆತ್ತದಲ್ಲಿ ವಿಷವಿದೆಯೇ? ಇರುವ ಹಾಗಿಲ್ಲ. ಇದ್ದರೆ ಲಿಂಗಯ್ಯ ನನಗದನ್ನು ಕೊಡಲಿಕ್ಕಿಲ್ಲ. ಕೊಡಲು ಮಾವ ಬಿಡಲಿಕ್ಕೂ ಇಲ್ಲ. ಹಾಗಾದರೆ ಅದಕ್ಕೆ ಹಾವಿನ ಹೆಸರೇಕೆ? ನಾಗರಹಾವಿನಂತೆ ಬಿಳಿಹಳದಿ ಬಣ್ಣವಿದ್ದು, ಹಾವಿನ ಕೊರಳಲ್ಲಿರುವಂತೆ ಅಲ್ಲಲ್ಲಿ ಮಚ್ಚೆಯಿರುವುದರಿಂದ ನಾಗರಬೆತ್ತವೆಂದು ಹೇಳುವುದಾಗಿರಬೇಕು. ಹಾಗಾದರೆ ಅದು ಅಪಾಯಕರವೆಂದು ದೇವಜ್ಜಿ ಹೇಳಲು ಕಾರಣವೇನು? ತಿಳಿಯಬೇಕಾಯಿತು. + +ಸ್ವಲ್ಪ ಹೊತ್ತಿನಲ್ಲಿ ದೇವಜ್ಜಿ ಅಳುವನ್ನು ನಿಲ್ಲಿಸಿ ಕಣ್ಣು ಮೋರೆಯೊರಸಿಕೊಂಡರು. ಮೆಲ್ಲಗೆ ಅಂಗಳಕ್ಕಿಳಿದು ಅತ್ತಿತ್ತ ನೋಡಿ ಬಾವಿಕಟ್ಟೆಗೆ ಹೋಗಿ ಮುಖಕ್ಕೆ ನೀರು ಹಾಕಿ ಸೆರಗಿನಲ್ಲಿ ಒರಸಿಕೊಂಡು ಬಂದು ತಿರುಗಿ ನನ್ನ ಬಳಿಯಲ್ಲಿ ಕುಳಿತರು. ಮಳೆ ಬಂದು ಬಿಟ್ಟ ಬಾನಿನಂತೆ ಅವರ ನಿರಿಮೋರೆ ನಿರ್ಮಲವಾಯಿತು. ಆಗ ನಾನು, “ದೇವಜ್ಜಿ ನಾಗರಬೆತ್ತದಲ್ಲಿ ವಿಷವುಂಟೋ? ಅದರಲ್ಲಿ ಏನು ಅಪಾಯ?’’ ಎಂದು ಕೇಳಿದೆ. ಅವರ ತುಟಿಗಳು ನಡುಗಿದವು, ತಿರುಪಿದವು. ಆದರೂ ಅವರ ಅಳುವನ್ನು ಒತ್ತಿಕೊಂಡು ಬಳಿಯಲ್ಲಿ ಕುಳಿತ ನನ್ನ ತಲೆಯನ್ನು ಸವರುತ್ತ ಹೇಳತೊಡಗಿದರು : + +“ಮಗು, ಏನು ಹೇಳಲಿ! ನೀನು ಹಸುಳೆ. ನಿನಗೇನು ಗೊತ್ತು? ನಿನ್ನ ತಾಯಿಗಾದರೆ ನೀವಾದರೂ ಇದ್ದೀರಿ. ನನಗೆ ಯಾರಿದ್ದಾರೆ ಮಗೂ? ನನ್ನ ಭಾಗ್ಯವನ್ನು ಮುಕ್ಕಿ ತಿಂದದ್ದು ಒಂದು ನಾಗರಬೆತ್ತ ಮಗು!’’ ಎಂದು ಹೇಳಿ ‘ಸೂ’ ಎಂದು ನಿಟ್ಟುಸಿರಲ್ಲಿ ನಿಲ್ಲಿಸಿದರು. + +ದೇವಜ್ಜಿ ನಮ್ಮಜ್ಜನ ದೊಡ್ಡಮ್ಮ. ಪಾಪದ ಮುದುಕಿ. ಅಷ್ಟು ಮುದುಕಿಯಾದರೂ ನಮ್ಮೊಡನೆ ಹುಳಿಸೆಬಿತ್ತು ಅಗಿಯುವ ಗೆಳತಿ; ಹೆಣ್ಣು ಮಕ್ಕಳಿಗೆಲ್ಲ ಹೂಕಟ್ಟಿ ಕೊಡುವ ಪ್ರಿಯಸಖಿ; ನಮ್ಮ ಭಾಮಜ್ಜಿಯಂತೆ (ಎಂದರೆ ನಮ್ಮಜ್ಜನ ಅಕ್ಕ) ಅಲ್ಲಿ ಮೈಲಿಗೆ ಇಲ್ಲಿ ಮುಸುರೆ ಎಂದು ಬೊಬ್ಬಿಡುತ್ತ, ಮಕ್ಕಳನ್ನು ಬೈದು ಬೆದರಿಸುವ ಮಡಿಮರುಳೆಯಲ್ಲ, ಮಕ್ಕಳೊಡನೆ ಒಬ್ಬಿಬ್ಬರ ಮೇಲೆ ಮೋಹವಿಟ್ಟುಕೊಂಡು ಅವರ ಕಡೆಹಿಡಿದು ಬೇರೆ ಮಕ್ಕಳೊಡನೆ ಕಚ್ಚಾಡುವ ಜಗಳಗಂಟಿಯಲ್ಲ. ಅವಳ ಮುಖ ಹಾಗೆ, ಇವಳ ಮೂಗು ಹೀಗೆ, ಇವಳಿಗೆ ಮತ್ಸರ ಹೆಚ್ಚು, ಅವಳಿಗೆ ಕೋಪ ಹೆಚ್ಚು, ಇವಳು ಬರೀ ಹೆಡ್ಡೆ, ಅವಳಾದರೆ ಬುದ್ಧಿವಂತೆ ಎಂದು ಮೊದಲಾಗಿ ಕೆದಕುತ್ತಲೇ ಇರುವ ‘ಕೊಕ್ಕೆ’ಯೂ ಅಲ್ಲ – ಎಂದಿಷ್ಟೇ ಅವರ ಕುರಿತು ಆವರೆಗೆ ನನಗೆ ಗೊತ್ತಿದ್ದುದು. ಅವರ ಎದೆಯೊಳಗಿನ ಮರುಕದ ಅರಿವು ನನಗೆ ಇರಲೇ ಇಲ್ಲ. ನಾಗರಬೆತ್ತವು ನನ್ನೆದೆಯನ್ನು ಕರಗಿಸಿದ್ದು ಮಾತ್ರವಾದರೆ, ಅವರೆದೆಯನ್ನು ಸೀಳಿಯೇ ಹಾಕಿತ್ತು! ಆ ಬಗೆಯನ್ನು ಅವರು ನನಗೆ ಹೀಗೆ ಹೇಳಿದರು – + +“ಮಗೂ, ನಿನಗೆ ಗೊತ್ತಿಲ್ಲ. ನನಗೆ ಹಾಗೆಲ್ಲ ಹೇಳುವ ಅಭ್ಯಾಸವೂ ಇಲ್ಲ. ಯಾರ ಹತ್ತಿರ ಹೇಳಿ ಏನು ಮಾಡುವುದು? ಸುಮ್ಮನೆ ಕರಕರೆಯನ್ನು ಕರೆದಂತಾಗುವುದು. ಆದರೆ ಈ ಹೊತ್ತೇನೊ ನಿನ್ನೊಡನೆ ಹೇಳಬೇಕೆಂದು ತೋರುತ್ತದೆ; ಹೇಳಿ ಬಿಡುತ್ತೇನೆ, ಕೇಳು : ನನ್ನಪ್ಪನ ಮನೆ ಈವೂರಲ್ಲಿ ಅಲ್ಲ, ದೂರ. ಇಲ್ಲಿಂದ ಎರಡು ದಿನಗಳ ದಾರಿ, ಗಟ್ಟದ ಬುಡ. ಸಂಪಾಜೆ ಎಂದು ಕೇಳಿದ್ದೀಯಾ? ಅಲ್ಲಿಗೆ ಹತ್ತಿರ. ಈಗ ಅಲ್ಲಿ ಯಾರೆಲ್ಲ ಇದ್ದಾರೋ ನನಗೆ ಗೊತ್ತೇ ಇಲ್ಲ. ಮತ್ತೆ ನನಗೆ ಅಲ್ಲಿಗೆ ಹೋಗಬೇಕೆಂದೂ ತೋರಲೇ ಇಲ್ಲ. ನನ್ನಪ್ಪ ಇರುವಾಗ ವರ್ಷಕ್ಕೊಮ್ಮೆ ಇಲ್ಲಿಗೆ ಬಂದು ನೋಡಿ ಹೋಗುತ್ತಿದ್ದರು. ನನ್ನನ್ನು “ಮನೆಗೊಮ್ಮೆ ಬಾ ಮಗಳೇ!’’ ಎಂದು ಕರೆಯುತ್ತಿದ್ದರು. ಆದರೆ “ಆ ದಾರಿಯನ್ನೇ ನೋಡಲು ನನ್ನಿಂದಾಗದು” ಎಂದು ಹೇಳಿ ನಾನು ಬರುವುದಿಲ್ಲವೆನ್ನುತ್ತಿದ್ದೆ. ಇಬ್ಬರೂ ಕಣ್ಣೀರು ಹಾಕುತ್ತಿದ್ದೆವು. ಇಲ್ಲಿಗೆ ಬಂದರೆ ಅವರಿಗೆ ನನ್ನನ್ನು ಬಿಟ್ಟು ಹೊರಡಲು ಕಾಲೇ ಬರುತ್ತಿರಲಿಲ್ಲ. ಆದರೆ “ಎಷ್ಟು ದಿನ ಇನ್ನೊಬ್ಬರ ಮನೆಯಲ್ಲಿ ಕುಳಿತುಕೊಳ್ಳುವುದು? ನೀವು ಹೋಗಿ” ಎಂದು ನಾನೇ ಅವರನ್ನು ಕಳುಹಿಸುತ್ತಿದ್ದೆ. ಸಂದು ಕಡಿದ ಮೇಲೆ ಸಂಬಂಧಿಕರಾದರೂ ‘ಬೇಕಾದವ’ರಲ್ಲ. ಮತ್ತೆ ಅವರಿಗೆ ಒಂದು ವಾತರೋಗ ಹಿಡಿಯಿತು. ನಡೆಯಲಿಕ್ಕೆ ಕೂಡದು. ಅವರು ಸಾಯುವುದಕ್ಕೆ ಎರಡು ವರ್ಷಗಳ ಮೊದಲೊಮ್ಮ ಗಾಡಿಯಲ್ಲಿ ಬಂದು ಮೂರು ದಿನವಿದ್ದು, “ನಾನಿನ್ನು ಬರುವುದಿಲ್ಲ ಮಗಳೇ!’’ ಎಂದು ಹೇಳಿ ಹೋಗಿದ್ದರು. ಆಗ ನಾನು ಅವರ ಕಾಲು ಹಿಡಿದದ್ದೇ ಕೊನೆಯದು. ಅವರೆಲ್ಲ ಹೋದರು. ನಾನು ಯಾವಾಗ ಹೋಗುವುದೋ!’’ ಎಂದು ಹೇಳಿ ದೇವಜ್ಜಿ ಸೆರಗಿನಲ್ಲಿ ಕಣ್ಣೊರೆಸಿಕೊಂಡರು; ನಾನೂ ಅದರಲ್ಲೇ ಉಜ್ಜಿಕೊಂಡೆ. ಆ ಮೇಲೆ ಅವರು ಮೆಲ್ಲಗೆ ಮುಂದುವರಿಸಿದರು – + +“ನನಗೆ ಹುಟ್ಟುವಾಗಲೇ ಅದೃಷ್ಟವಿಲ್ಲ. ನಾನು ಒಂದು ವರ್ಷದ ಮಗುವಾಗಿದ್ದಾಗಲೇ ನನ್ನಮ್ಮ ತೀರಿಹೋದರಂತೆ. ಅವರ ಮೋರೆಯ ನೆನಪಿಟ್ಟುಕೊಳ್ಳುವುದಕ್ಕೂ ನನಗೆ ಹಣೆ ಬರಹವಿರಲಿಲ್ಲ. ನನಗೆ ಒಡಹುಟ್ಟೂ ಇಲ್ಲ; ನಾನೇ ಚೊಚ್ಚಲ ಮಗುವಂತೆ. ನನ್ನಪ್ಪನೇ ನನ್ನನ್ನು ಸಾಕಿದ್ದು. ನನಗೆ ಐದು ವರ್ಷವಾಗುವಾಗ ನನ್ನಪ್ಪ ಬೇರೆ ಮದುವೆಯಾದರು. ಚಿಕ್ಕಮ್ಮನಿಗೆ ಮೇಲೆ ಮೇಲೆ ಹೆರಿಗೆ. ಎಲ್ಲ ಗಂಡು ಮಕ್ಕಳೇ. ನನಗೆ ತಮ್ಮಂದಿರೆಂದರೆ ಬಹುಪ್ರೀತಿ. ಈಗ ಅವರೆಲ್ಲ ಹೇಗಿದ್ದಾರೋ ಎಲ್ಲಿದ್ದಾರೋ ನನಗೆ ಗೊತ್ತಿಲ್ಲ. ಇಲ್ಲಿಗೆ ಅವರು ಬಂದದ್ದಿಲ್ಲ. ನಾನಂತೂ ಹೋದದ್ದೇ ಇಲ್ಲ. ನನ್ನ ಚಿಕ್ಕಮ್ಮನೂ ಒಳ್ಳೆಯ ಹೆಂಗಸು. ನನ್ನಪ್ಪ ತೀರಿಹೋದ ಮರುವರ್ಷವೇ ಅವಳು ತೀರಿ ಹೋದಳೆಂದು, ಅದೇ ವರ್ಷ ಕಾವೇರಿ ಯಾತ್ರೆಗೆ ಹೋಗಿ ಬಂದ ಗುಂಡಿಮನೆ ವೆಂಕಟರಮಣಯ್ಯನವರು ಹೇಳಿದ್ದರು. ಮತ್ತೆ ಅಲ್ಲಿಯ ಸುದ್ದಿಯೇ ಇಲ್ಲ. ಯಾರ ಸುದ್ದಿ ನನಗೆ ಯಾಕೆ?’’ + +“ನನ್ನ ಮದುವೆಗಾಗಿ ನನ್ನಪ್ಪ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನನ್ನದಕ್ಕೆ ಕೂಡಿಬರುವ ಜಾತಕ ಆ ಸೀಮೆಯಲ್ಲಿಯೇ ಸಿಕ್ಕಲಿಲ್ಲವಂತೆ. ಮತ್ತೆ ಅವರು ಹುಡುಕಿ ಈ ಸೀಮೆಗೆ ಬಂದರಂತೆ. ‘ಈ ಮನೆಯವರ’ ಒಬ್ಬರ ಜಾತಕ ಕೂಡಿ ಬಂತಂತೆ. ಎಂಥಾ ಕೂಡಿ ಬಂದದ್ದೋ! ನಿಜವಾಗಿ ಕೂಡಿ ಬಂದರೆ ಹೀಗಾಗಬೇಕೆ? ಪಾಪ, ನನ್ನಪ್ಪನಿಗೆ ಹೊರೆಯೊಂದು ಇಳಿದಂತಾಯಿತು. ನನಗೆ ಹದಿಮೂರು ವರ್ಷ ತುಂಬಿತ್ತು. ಮದುವೆಯಾಗಿ ಮರುದಿಬ್ಬಣ ಬಂದದ್ದು ‘ದೋಲಿ’ಯಲ್ಲಿ. ನನಗೆ ಆ ಪ್ರಾಯದಲ್ಲಿ ಹದಿನಾರು ಹರದಾರಿ ನಡೆಯಲಿಕ್ಕಾಗುವುದಿಲ್ಲವೆಂದು ಅಪ್ಪ ಬಲ್ಲಾಳರ ಮನೆಯಿಂದ ದೊಡ್ಡ ದೋಲಿ ತರಿಸಿದರು. ಆ ಸಮಯದಲ್ಲಿ ಈವೂರಿಗೆ ರಸ್ತೆ ಇದ್ದಿಲ್ಲ. ಆದುದರಿಂದ ಗಾಡಿ ಮಾಡುವಂತಿರಲಿಲ್ಲ. ಚಿಕ್ಕಮ್ಮ ಬರಲಿಲ್ಲ. ಅವಳು ಬಾಣಂತಿ. ಎಲ್ಲರೂ ನಡೆದದ್ದೇ. ನಾನು ‘ಅವರೂ’ ಮಾತ್ರ ದೋಲಿಯಲ್ಲಿ. ಅವರನ್ನು ನಾನು ಸರಿಯಾಗಿ ನೋಡಿದ್ದು ದೋಲಿಯಲ್ಲಿಯೇ. ಅರಸಿನ ಬಿಳಿ ಮೆಯ್ ಬಣ್ಣ; ನುಣುನುಣುಪು ಕೈಬೆರಳು; ಮೋರೆಯಲ್ಲಿ ಯಾವಾಗಲೂ ನಗೆಯೇ. ಉದ್ದ ತಲೆಕೂದಲು; ಜುಟ್ಟು ಕಟ್ಟಿದರೆ ಎರಡು ಕೈತುಂಬ. ಸೂ! ಏನಾದರೇನು! ನನಗೆ ಹಣೆಬರಹ ಬೇಡವೋ?’’ಸ್ವಲ್ಪ ಹೊತ್ತು ದೃಷ್ಟಿಯನ್ನು ತಗ್ಗಿಸಿ ಏನೋ ಧ್ಯಾನಿಸಿ ಅನಂತರ ಮುಂದೆ ಹೇಳಿದರು: + +“ಗೃಹಪ್ರವೇಶವಾಗಿ ಅಪ್ಪನ ಮನೆಗೆ ನಾವಿಬ್ಬರೂ ಹೋದ ಮೇಲೆ ‘ಅವರು’ ಅಲ್ಲಿದ್ದುದು ಎರಡೇ ದಿನ. ಇಲ್ಲಿ ಅವರಜ್ಜನ ಶ್ರಾದ್ಧವಿದ್ದುದರಿಂದ ಕೂಡಲೇ ಬರಬೇಕೆಂದು ಮಾವನವರು ಹೇಳಿದ್ದರು. ಹಿರಿಯ ಮಗನಲ್ಲವೋ? ಹಾಗೆ ಅವರು ಬಂದ ಮೇಲೆ ಮತ್ತೆ ಆರು ತಿಂಗಳು ನನ್ನನ್ನು ಕರೆದುಕೊಂಡು ಹೋಗಲು ಇಲ್ಲಿಂದ ಯಾರೂ ಬರಲಿಲ್ಲ. ಸಣ್ಣವಳು, ನಡೆಯಲಿಕ್ಕಾಗಲಿಕ್ಕಿಲ್ಲ ಎಂದಿರಬಹುದು. ನನ್ನತ್ತೆಯವರಿಗೆ ಸೊಸೆಯಂದಿರ ಮೇಲೆ ಅತಿ ಕರುಣೆ. ನನ್ನಪ್ಪನ ಮನೆಯಲ್ಲಿ ನವರಾತ್ರಿ ಭಾರಿ ಗದ್ದಲ, ಒಂಬತ್ತು ದಿನ ಮಹಾಪೂಜೆ. ಎಂಥಾ ಮಂಡಲ! ಎಷ್ಟು ಬಣ್ಣ! ಎಷ್ಟಾರತಿ! ಎಂಥಾ ಮಂತ್ರಘೋಷ! ದಶಮಿ ದಿನ ಸಮಾರಾಧನೆಗೆ ಎಷ್ಟು ಬಗೆ ಪರಮಾನ್ನ! ಎಷ್ಟು ಬಗೆ ಕಜ್ಜಾಯ! ಈ ಪೂಜೆಗೆ ನನ್ನಪ್ಪ ಅಳಿಯನಿಗೆ ಕರೆ ಕಳುಹಿಸಿದರು. ಒಂದು ಕಾಗದ ಕೊಟ್ಟು, ಎರಡಾಳುಗಳನ್ನು ಇಲ್ಲಿಗೆ ಕಳುಹಿಸಿದರು. ಯಾವಾಗ ಬರುವರೆಂದು ನಾನು ಅಲ್ಲಿ ದಾರಿ ನೋಡುತ್ತಲೇ ಇದ್ದೆ. ಐದಾರು ದಿನಗಳಲ್ಲಿ ಬಂದರು. ಅವರು ಬಂದು ಮನೆಮೆಟ್ಟಿಲು ಹತ್ತಿದ್ದು ಈಗಲೂ ನನ್ನ ಕಣ್ಣಿನಲ್ಲಿದೆ. ತಲೆಗೆ ಗದ್ದೆಮಡಿ ಪಟ್ಟೆ ಎಲೆವಸ್ತ್ರ ಹೆಗಲಿಗೆ ನನ್ನಪ್ಪ ಮದುವೆಗೆ ಉಡುಗೊರೆ ಮಾಡಿದ ಐದು ಬೆರಳಗಲದ ಕಂಬಿಯ ದೋತರ. ಉಟ್ಟಿದ್ದು ಮಡಿ ಮಾಡಿಸಿದ ಮಂಗಲಜವುಳಿ. ಕೈಯಲ್ಲೊಂದು ‘ಸುಗಂಧಿ’ ತುಂಡು. ಕಾಲಿಗೆ ಎಣ್ಣೆಮೇಣದ ಬೇಗಡೆ ಹೂವಿನ ಮೆಟ್ಟು. ಸೂ! ಆ ರೂಪಿನಲ್ಲೇ ಬಂದರು, ಆ ರೂಪಿನಲ್ಲೇ ಹೋದರು! + +‘ಅವರು’ ನವರಾತ್ರಿ ಪೂಜೆಗೆ ಬಂದವರು ‘ಹಬ್ಬ’ (ದೀಪಾವಳಿ)ದವರೆಗೂ ಅಲ್ಲೇ ಇದ್ದರು. ಮಾವನವರಿಗೆ ನನ್ನಪ್ಪ ಕಾಗದದಲ್ಲಿ ಹಾಗೇ ಬರೆದಿದ್ದರಂತೆ – ನವರಾತ್ರಿಗೆ ‘ಅವರು’ ಬರಬೇಕು, ಹಬ್ಬ ಕಳೆದು ಅಳಿಯನನ್ನೂ ಮಗಳನ್ನೂ ಒಟ್ಟಿಗೆ ಕಳುಹಿಸಿಕೊಡುತ್ತೇನೆಂದು. ಆ ಒಂದು ತಿಂಗಳು ನನ್ನಪ್ಪನ ಮನೆಯಲ್ಲಿ ಎಂದೂ ಇಲ್ಲದಿದ್ದ ಸುಖಸಂತೋಷ. ಒಮ್ಮೊಮ್ಮೆ ಅಪ್ಪನೊಟ್ಟಿಗೆ ‘ಅವರೂ’ ಅತ್ತಿತ್ತ ಬಯಲಲ್ಲೋ, ಗುಡ್ಡದಲ್ಲೋ ತಿರುಗಾಡಲು ಹೋಗುತ್ತಿದ್ದರು. ನಾನೂ ಅವರ ಜತೆಯಲ್ಲಿ ಬರಬೇಕೆಂದು ‘ಅವರ’ ಮನಸ್ಸಿನಲ್ಲಿತ್ತು. ಯಾರಾದರೂ ಹಾಸ್ಯ ಮಾಡಬಹುದೆಂದು ನನಗೆ ಅಂಜಿಕೆ. ಒಂದು ದಿನ ಹೊರಡುವಾಗ ಬಾಯಿಬಿಟ್ಟು ಕರೆದರು. ನಾನು ‘ಊಂಹುಂ’ ಎಂದು ಓಡಿದೆ. ಅವರಿಗೆ ಆಸೆ ತೀರಲಿಲ್ಲ. ಯಾಕೆ ಬಂತೋ ಆ ಆಸೆ! ಮರುದಿನ ಹೇಗೂ ನನ್ನನ್ನು ಒಪ್ಪಿಸಿದರು. ಅಪ್ಪ ಮಧ್ಯಾಹ್ನದ ಊಟಮಾಡಿ ಮಲಗಿದ್ದರು. ನಾವಿಬ್ಬರೇ ಹೊರಟೆವು. ಅಯ್ಯೋ ಮಗು! ನಾನು ಯಾಕೆ ಅಲ್ಲಿಗೆ ಅವರನ್ನು ಕರೆದುಕೊಂಡು ಹೋದೆನೊ! + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ನಾವು ಗದ್ದೆ ಬಯಿಲಿನ ಕೊನೆಗೆ ಹೋದೆವು. ಅದರಿಂದ ಮೇಲೆ ನನ್ನಪ್ಪನ ಸಣ್ಣದೊಂದು ಅಡಿಕೆ ತೋಟ. ಮೇಲೆ ದೊಡ್ಡ ಬೆಟ್ಟ. ಬೆಟ್ಟದ ಬುಡದಲ್ಲಿ ತುಂಬ ಏಲಕ್ಕಿ ಗಿಡ. ನನ್ನಪ್ಪ ಅದನ್ನೆಲ್ಲ ಅವರಿಗೆ ತೋರಿಸಿದ್ದರಂತೆ. ಆದರೆ ಮುಂದೆ ದಾರಿ ಸರಿ ಇಲ್ಲ. ಹೋಗುವುದು ಬೇಡ ಎಂದು ಮರಳಿದ್ದರಂತೆ. ಮೇಲೊಂದು ‘ಶಾಸ್ತಾ’ ವಿನ ಸಣ್ಣ ಗುಡಿಯಿತ್ತು. ಅದು ಇಡೀ ಕಗ್ಗಲ್ಲಿನದೇ, ಮಾಡು ಕೂಡ ಹಾಸುಗಲ್ಲು. ವರ್ಷಕ್ಕೊಮ್ಮೆ ಅಲ್ಲಿ ಆರಾಧನೆ ಮಾಡುವುದಕ್ಕಾಗಿ ಸುಳ್ಯದಿಂದ ತಂತ್ರಿಗಳನ್ನು ನನ್ನಪ್ಪ ಕರೆಯಿಸುತ್ತಿದ್ದರು. ಬೇರೆ ದಿನಗಳಲ್ಲಿ ಅಲ್ಲಿ ಹೋಗುವವರು ಬಹಳ ಕಡಿಮೆ. ಆದರೆ ಅಲ್ಲೊಂದು ನಾಗಸಂಪಿಗೆ ಮರವಿದ್ದುದರಿಂದ ಅದರ ಹೂವಿಗಾಗಿ ನಾನು ಒಮ್ಮೊಮ್ಮೆ ಹೋಗುತ್ತಿದ್ದೆ. ನಾಗಸಂಪಗೆ ಹೂವೆಂದರೆ ನನಗೆ ಜೀವ. ಮಗೂ! ಈಗ ಕೂಡ ಎಲ್ಲಿಯಾದರೂ ಆ ಹೂ ಕಂಡರೆ ತೆಗೆದು ಮೂಸಿಹೋಗುತ್ತದೆ. ನನಗೆ ಹೂವಾಗದೆಂಬ ನೆನಪೇ ಆಗುವುದಿಲ್ಲ. ಮಗು! ಏನು ಮಾಡಲಿ? ನನ್ನ ಹಣೆಬರಹ. ಸೂ! ‘ಹಬ್ಬ’ದ ಸಮಯದಲ್ಲಿ ನಾಗಸಂಪಗೆ ಹೂವಾಗುವುದಿಲ್ಲ. ಆದರೂ ಅಲ್ಲೆಲ್ಲ ನೋಡಬೇಕೆಂದು ‘ಅವರು’ ಹೇಳಿದುದರಿಂದ, ಮೇಲೆ ಕರೆದುಕೊಂಡು ಹೋದೆ. ಅವರಿಗೆ ಅಲ್ಲೆಲ್ಲ ನೋಡಿ ಬಹಳ ಸಂತೋಷವಾಯಿತು. ಅದು ಅಷ್ಟು ಚಂದದ ಸ್ಥಳ. ಒಂದೆಡೆ ಬೆತ್ತದ ‘ಹಿಂಡಿಲಿ’ ನ ಎಡೆಯಿಂದ ತಿಳಿ ನೀರು ಅಡಕೆಯ ಸಿಂಗಾರದಂತೆ ಹಾರಿ ಬರುತ್ತಿತ್ತು. ಅದನ್ನು ನಾವಿಬ್ಬರೂ ಮುಟ್ಟಿ ಮುಟ್ಟಿ ಒಬ್ಬರೊಬ್ಬರ ಮುಖಕ್ಕೆ ಸಿಡಿಸಿಕೊಂಡೆವು. ಬೇಕಾದಷ್ಟು ಮಾತಾಡಿದೆವು. ನಾನು ಅವರೊಡನೆ ಅದಕ್ಕೆ ಮೊದಲು ಅಷ್ಟು ಮಾತಾಡಿದ್ದೇ ಇಲ್ಲ. ಮತ್ತೆಯೂ ಇಲ್ಲ! ಹೂಂ. ಗುಡಿಯ ಹಿಂದೆಲ್ಲ ನಾಗರಬೆತ್ತದ ಬಳಿ ಹೊದರು. ಅಲ್ಲಿಯ ಬೆತ್ತವೆಂದರೆ ಬಹಳ ಹೆಸರಿನದು. ಆದರೆ ‘ಶಾಸ್ತಾವು’ ಕಾರಣಿಕದ್ದು. ಆದುದರಿಂದ ಸಾಧಾರಣದವರೆಲ್ಲ ಅಲ್ಲಿ ಬೆತ್ತ ಕಡಿಯಲು ಹೆದರುತ್ತಿದ್ದರು. + +ಮಂತ್ರವಾದಿಗಳು ಬಂದು, ಪ್ರಾರ್ಥನೆ ಮಾಡಿ ಕಡಿಯಬೇಕು. ಅವರಿಗೆ ಇಂಥಾದ್ದರಲ್ಲೆಲ್ಲ ನಂಬಿಕೆಯೇ ಇಲ್ಲ. ಇಲ್ಲಿ ನನ್ನ ಮಾವನವರಿಗೂ ‘ಅವರಿ’ಗೂ ಅಂಥಾ ಸಂಗತಿಯಲ್ಲಿ ಯಾವಾಗಲೂ ತರ್ಕವಂತೆ; ನನ್ನತ್ತೆಯವರಿರುವಾಗ ಹೇಳುತ್ತಿದ್ದರು. ಯಾವಾಗಲೂ ಕುಂಪಿನಿಯವರನ್ನು ಹೊಗಳುವುದು, ಅಯ್ಯೋ! ಮೊದಲು ಗೊತ್ತಿದ್ದರೆ ಹಾಗೆ ಹೊಗಳುತ್ತಿದ್ದರೇ? ಪಾಪ! ತುರುಕರ ಹಾವಳಿಯನ್ನು ನಿಲ್ಲಿಸಿದರೆಂದು ಕುಂಪಿನಿಯವರ ಮೇಲೆ ಭಕ್ತಿ. ಸೂ! ನಾವು ಗುಡಿಯ ಬಾಗಿಲಿಗೆ ಹೋದೆವು. ಅದಕ್ಕೆ ಬಾಗಿಲ ಪಡಿ ಇಲ್ಲ. ಒಳಗೆ ಶಾಸ್ತಾವಿನ ಮೂರ್ತಿ. ಇಣಿಕಿ ನೋಡಿದರು. ಯಾವ ಮಂತ್ರವಾದಿ ಯಾಕೆ ಕಡಿದಿಟ್ಟದ್ದೋ, ಒಂದು ನಾಗರಬೆತ್ತ ಬಿದ್ದಿತ್ತು. ಬೇಡ ಬೇಡ ಎಂದು ಎಷ್ಟು ಹೇಳಿದರೂ ಕೇಳದೆ ಕೈಹಾಕಿ ತೆಗೆದುಬಿಟ್ಟರು! “ನೋಡು, ಎಂಥಾ ಬೆತ್ತ! ಇದನ್ನು ಯಾರು ಬಿಟ್ಟಾರು? ಇದು ಕುಂಪಿನಿ ರಾಜ್ಯ, ಈಗ ಇಲ್ಲಿ ಕಾರಣಿಕವೂ ಇಲ್ಲ, ಏನೂ ಇಲ್ಲ” ಎಂದು ಹೇಳಿ, “ಇಲ್ಲಿಗೆ ಬಂದದ್ದು ಸಾರ್ಥಕವಾಯಿತು. ಇನ್ನು ಹೋಗುವ” ಎಂದು ಹೇಳಿ ಹೊರಟರು. ನಾನು ಹಿಂಬಾಲಿಸಿದೆ, ನನಗೆ ಮನಸ್ಸಿನಲ್ಲಿ ಆಗಲೇ ಒಂದು ‘ಕಳ್ಳ’ ನುಗ್ಗಿತ್ತು. ಆದರೆ ಗಂಡಸರು ನಮ್ಮ ಮಾತು ಕೇಳುತ್ತಾರೋ? ಬರುವಾಗ ನಾನು ಹೆಚ್ಚು ಮಾತಾಡಲಿಲ್ಲ. ಅವರು ಬೆತ್ತದ ಕುರಿತು ಹೇಳುತ್ತಲೇ ಇದ್ದರು. ಅವರು ಹೇಳಿದ್ದಕ್ಕೆ ಹುಂಗುಟ್ಟುತ್ತಾ ಬಂದೆ. + +ನನ್ನಪ್ಪ ಜಗಲಿಯಲ್ಲಿ ನಿಂತು ನಾವು ಬರುವುದನ್ನೇ ನೋಡುತ್ತಿದ್ದರು. ಅವರ ಮುಗುಳುನಗೆ ಕಂಡು ನನಗೆ ನಾಚಿಕೆಯಾಯಿತು. ನಾನು ಓಡಿಹೋಗಿ ‘ಕುರುಬಾಗಿಲ’ಲ್ಲಿ ಒಳನುಗ್ಗಿದೆ. ಚಿಕ್ಕಮ್ಮನ ಮೋರೆಯನ್ನು ನೋಡುವ ಧೈರ್ಯವೇ ನನಗಾಗಲಿಲ್ಲ. ನಾನು ಕೈಸಾಲೆಯ ಕತ್ತಲೆ ಮೂಲೆಯಲ್ಲಿ ನಿಂತುಕೊಂಡು ಹೊರಗಿನ ಮಾತನ್ನು ಕೇಳುತ್ತಿದ್ದೆ. + +“ಇದೆಲ್ಲಿಂದ ಬೆತ್ತ? ಈಗ ಕಡಿದ ಹಾಗಿಲ್ಲ” ಎಂದರು ನನ್ನಪ್ಪ. “ಶಾಸ್ತಾವಿನ ಬಳಿಯಲ್ಲಿ ಬಿದ್ದಿತ್ತು. ಯಾರೋ ಪುಣ್ಯಾತ್ಮರು ಕಡಿದಿಟ್ಟಿದ್ದರು. ಬಿಡುವುದಕ್ಕೆ ಮನಸ್ಸು ಬರಲಿಲ್ಲ. ತೆಗೆದುಕೊಂಡೆ. ಇದರ ಮಚ್ಚೆ ನೋಡಿ! ಇದರ ಗಂಟುಗಳು ಎಷ್ಟು ಹತ್ತಿರ; ಒಂದಕ್ಕೊಂದು ಎಷ್ಟು ಸಮ! ಇಂಥಾ ಬೆತ್ತವನ್ನೇ ನಮ್ಮ ಪಟೇಲರು ಎಲ್ಲಿಂದಲೋ ಹೋದ ವರ್ಷ ತರಿಸಿದ್ದರು. ಐದು ರೂಪಾಯಿ ಕೊಟ್ಟರಂತೆ. ಅದಕ್ಕಿಂತ ಇದು ಒಂದು ಬಣ್ಣ ಮಿಗಿಲಾದೀತು ಹೊರತು ಕಮ್ಮಿಯಲ್ಲ. ಬೆಳ್ಳಿ ಕಟ್ಟಿಸಿದರೆ ಮುದ್ದುಮುದ್ದಾಗಿ ಕಂಡೀತು. ಒಬ್ಬನಿಗೆ ಒಂದೇ ಹೊಡೆತ ಸಾಕು. ನೋಡಿ ಇದರ ಭಾರ!’’ ಎಂದರು ಅವರು. ನನ್ನಪ್ಪ, “ನಿನಗೆ ಬೆತ್ತ ಬೇಕಾದರೆ ನಾನು ತರಿಸಿಕೊಡುತ್ತಿದ್ದೆ. ಅಲ್ಲಿರುವುದೆಲ್ಲ ಶಾಸ್ತಾವಿನ ಬೆತ್ತ. ತಂತ್ರಿಗಳಿಲ್ಲದೆ ನಾವದನ್ನು ಕಡಿಯುವ ಕಟ್ಟಳೆ ಇಲ್ಲ. ಅಷ್ಟೆ” ಎಂದರು. “ಏನು ಮಾವ? ನಿಮಗೆ ಭ್ರಾಂತೋ? ಕುಂಪನಿಯವರಿಗೆ ಈ ಶಂಕೆಯೆಲ್ಲ ಉಂಟೇ? ನೋಡಿ, ಈಗ ನಮ್ಮೂರಿನಿಂದ ಮಂಗಳೂರಿಗೆ ಮಾರ್ಗ ಕಡಿಸಲು ತೊಡಗಿದ್ದಾರೆ. ಕಳೆದ ತಿಂಗಳಲ್ಲಿ ಏನಾಯಿತು ಗೊತ್ತುಂಟೋ? ನಮ್ಮ ಗ್ರಾಮದ ಭೂತಸ್ಥಾನದ ಬಾಗಿಲಲ್ಲಿ ಒಂದು ಅಶ್ವತ್ಥದ ಕಟ್ಟೆ ಇತ್ತು. ಮರ ಬಹಳ ಮುದಿಯಾಗಿ ಹೋಗಿತ್ತು. ಅದರ ಬುಡದಲ್ಲಿ ಏಳೆಂಟು ನಾಗನ ಕಲ್ಲುಗಳು. ಬಯಲನ್ನು ಸೀಳಿ ರಸ್ತೆ ಬರುವಾಗ ಅದು ಅಡ್ಡ ಬಂತು. ಜನ ಯಾರೂ ಕಡಿಯಲಿಕ್ಕೆ ಒಪ್ಪಲಿಲ್ಲ. ಒಬ್ಬ ಬಿಳಿ ಮೋರೆಯವ ಬಂದ; ಒಬ್ಬ ಜಾತಿಕೆಟ್ಟ ಹೊಲೆಯನ ಕೈಯಲ್ಲಿ ಪೂರಾ ತೆಗೆಯಿಸಿಬಿಟ್ಟ! ಅವನಿಗೇನಾಯಿತು? ಹೊಲೆಯನಿಗೇನಾಯಿತು? ಹೇಳಿ! ಈ ಭ್ರಾಂತೆಲ್ಲ ಇಲ್ಲದಿದ್ದುದರಿಂದಲೇ ಕುಂಪಿನಿಯವರು ರಾಜ್ಯವನ್ನೆಲ್ಲ ಹಿಡಿದಿದ್ದಾರೆ.’’ ಎಂದು ಅವರು ಹೇಳಿದ ಮೇಲೆ ನನ್ನಪ್ಪ ಹೆಚ್ಚೇನೂ ಆ ಕುರಿತು ಮಾತಾಡಲಿಲ್ಲ.ಅವರಿಗೆ ಬೆತ್ತ ಸಿಕ್ಕಿದ ಸಂತೋಷ ಅಷ್ಟಿಷ್ಟಲ್ಲ. ಆ ದಿನ ಅವರ ತುದಿಗಳನ್ನು ನಯಗೊಳಿಸಿ, ನೋಡಿ ನೋಡಿ ಮೆಚ್ಚುವುದರಲ್ಲಿ ಸಂಜೆಯಾಯಿತು. + +ಮರುದಿನ ಬೆಳಗ್ಗೆ ನನ್ನಪ್ಪನನ್ನು ಕರೆದುಕೊಂಡು ಒಂದು ಹರದಾರಿ ದೂರದಲ್ಲಿದ್ದ ರಾಮಾಚಾರಿಯ ಮನೆಗೆ ಹೋಗಿ ಮಧ್ಯಾಹ್ನದೊಳಗೆ ಬೆಳ್ಳಿಯ ಕಟ್ಟ ಹಾಕಿಸಿಕೊಂಡು ಬಂದರು. ಅದು ತತ್ಕಾಲಕ್ಕೆ ಹಾಕಿದ ಕಟ್ಟ. ಇನ್ನೊಂದು ಬಾರಿ ಬಂದಾಗ “ಹುಲಿಮೋರೆ” ಯಿಟ್ಟು ಕಟ್ಟಿಕೊಡಬೇಕೆಂದು ರಾಮಾಚಾರಿಗೆ ಅಪ್ಪನಿಂದ ಹೇಳಿಸಿದರಂತೆ! ಅವನೂ ಒಪ್ಪಿದನಂತೆ. ಅಲ್ಲಿಂದ ಬಂದು ಸ್ನಾನ ಮಾಡುವಾಗ ನನ್ನ ಹತ್ತಿರ ಹಾಗೆಲ್ಲ ಹೇಳಿದರು. ಆದರೆ ಹುಲಿಮೋರೆ…. ಹುಲಿಮೋರೆ….! ಅಯ್ಯೋ! ಮನೆಯ ದಾರಿಯಲ್ಲಿಯೇ ಕಾಣುವಂತಾಯಿತು!’’ ಎಂದು ದೇವಜ್ಜಿ ನಡುಗು ದನಿಯಲ್ಲಿ ನುಡಿದು ಮೋರೆಗೆ ಸೆರಗು ಮುಚ್ಚಿಕೊಂಡರು. + +ಸ್ವಲ್ಪ ಹೊತ್ತು ಸುಮ್ಮನಿದ್ದು ಏನೋ ಧ್ಯಾನಿಸಿ, ಮತ್ತೆ ತೊಡಗಿದರು -“ಆ ಮೇಲೆ ಮೂರು ದಿನಗಳಲ್ಲಿ ‘ಹಬ್ಬ’ ಬಂತು. ಚಿಕ್ಕಮ್ಮ ‘ಅವರಿ’ಗೂ ನನಗೂ ಎಣ್ಣೆಯೆರೆದರು; ನನ್ನ ಹೆತ್ತ ತಾಯಂತೆಯೇ ನನ್ನ ಮೆಯ್ಗೆ ಎಣ್ಣೆ ಕಿಟ್ಟಿದರು. ‘ಅವರಿ’ಗೆ ನನ್ನಪ್ಪನೇ ಎಣ್ಣೆ ಹಚ್ಚಿದರು. ಅಳಿಯನೆಂದರೆ ಅವರಿಗೆ ಮಗನ ಹಾಗೆ ಅಷ್ಟು ಪ್ರೀತಿಯಾಗಿ ಹೋಗಿತ್ತು. ಚಿಕ್ಕಮ್ಮ ನಮಗಿಬ್ಬರಿಗೂ ಒಟ್ಟಿಗೆ ನೀರು ಹಾಕಿದರು. ನನ್ನಪ್ಪನ ಮನೆಯ ಬಚ್ಚಲ ಮನೆಯೆಂದರೆ ಸಣ್ಣದಲ್ಲ, ಗುಳಿಯೂ ದೊಡ್ಡದು. ಯಾವಾಗಲೂ ಎರಡು ಹರವಿಗಳಲ್ಲಿ ನೀರು ಕಾಯುತ್ತಲೇ ಇರಬೇಕು. ಭಾರಿ ಸ್ನಾನವಾಯಿತು. ಸಮ್ಮಾನವಾಯಿತು. ಹಬ್ಬದ ಪಾಡ್ಯದ ದಿನ ಉಡುಗೊರೆಯಾಯಿತು. ಸೀರೆ ದೋತರಗಳಲ್ಲದೆ, ನನ್ನ ಕೈಗೆ ಹವಳದ ಕಟ್ಟಿನ ಬಳೆಗಳನ್ನೂ, ಅವರ ಕೈಗೆ ಕೆಂಪು ಕಲ್ಲಿನ ಉಂಗುರವನ್ನೂ ಅಪ್ಪನೇ ತೊಡಿಸಿದರು. ಆದರೆ ಆ ಕೈಯನ್ನು ನೋಡುವ ಭಾಗ್ಯ ನನಗೆ ಮತ್ತೆ ಇದ್ದದ್ದು ಎಷ್ಟು ದಿನ ಮಗು? ಮುಂದೆ ಹೇಳಲು ಕಷ್ಟವಾಗುತ್ತದೆ …. ಗಂಟಲು ಬಿಗಿಯುತ್ತಿದೆ! …… ಆದರೆ ಹೇಳತೊಡಗಿದರೆ ನಿಲ್ಲಿಸಲಿಕ್ಕಾಗುವುದಿಲ್ಲ. ಮಗೂ!’’ ಎಂದು ಕಟ್ಟಿ ಕಟ್ಟಿ ಹೇಳಿ, ಮತ್ತೆ ಬಿಕ್ಕಿ ಬಿಕ್ಕಿ ಅತ್ತರು. + +ಮುಂದೆ ದೇವಜ್ಜಿಗೆ ಹೇಳುವುದು ಅತಿ ಕಷ್ಟವಾಯಿತು. ಅವರ ಸ್ಥಿತಿಯನ್ನು ನೋಡಿ ನನಗೂ ಅಂತರಂಗದಲ್ಲಿ ಅತಿ ವೇದನೆಯಾಯಿತು. ಆದರೆ ಅವರಿಗೆ ಕೊನೆಯ ತನಕ ಹೇಳಿ ಮುಗಿಸದೆ ಇರಲು ಸಾಧ್ಯವಾಗುವಂತಿರಲಿಲ್ಲ. ನನಗಾದರೂ ಪೂರ್ಣವಾಗಿ ಕೇಳದೆ ಮನಸ್ಸು ನಿಲ್ಲುವಂತಿರಲಿಲ್ಲ. ಅವರು ತಡೆದು ತಡೆದು ಅತ್ತು ಅತ್ತು ಹೇಗೋ ಹೇಳಿದರು; ನಾನೂ ನನ್ನ ಕಣ್ಣೊರೆಸಿ ಅವರ ಕಣ್ಣೊರೆಸಿ ಅವರ ಮಡಿಲಲ್ಲಿ ತಲೆಯಿಟ್ಟು ಹೇಗೋ ಕೇಳಿದೆ. ಆದುದರಿಂದ ಮುಂದಿನ ಕಥೆಯನ್ನು ಅವರು ಹೇಳಿದ ಸರಣಿಯಲ್ಲಿಯೇ ನಾನಿಂದು ಬರೆಯಲಾರೆ. ಅವರು ಹೇಳಿದುದೆಲ್ಲ ಅಲ್ಲಲ್ಲಿ ತುಂಡುತುಂಡಾಗಿ, ಕೆಲವು ಮಾತುಗಳು ಅಸ್ಫುಟವಾಗಿ, ಕೆಲವೆಲ್ಲ ಕೈಬಾಯಿಯ ಸನ್ನೆಯಾಗಿ ಹೋಗುತ್ತಿತ್ತು. ಅದರ ತಾತ್ಪರ್ಯವನ್ನು ತೆಗೆದು ಇಲ್ಲಿ ಕೊಡುತ್ತೇನೆ. ಆದುದರಿಂದ ಮುಂದಿನ ಕಥಾಭಾಗದಲ್ಲಿ ಆ ನೊಂದೆದೆಯ ‘ಬೇವಿನ’ ಪಾಕವು ಕಾಣದಿದ್ದರೆ ವಾಚಕರು ಮನ್ನಿಸಬೇಕು. + +ದೀಪಾವಳಿ ಹಬ್ಬ ಕಳೆದು ಎರಡು ದಿನಗಳ ಮೇಲೆ ಆ ದಂಪತಿಗಳು ನಮ್ಮ ಮನೆಗೆ ಹೊರಟರು. ಜತೆಗೆ ಎರಡು ಆಳುಗಳನ್ನು ನಮ್ಮ ದೇವಜ್ಜಿಯ ತಂದೆ ಕಳುಹಿಸಿಕೊಟ್ಟರು. ಗಂಡಹೆಂಡಿರು ಚೆನ್ನಾಗಿ ಸಿಂಗರಿಸಿಕೊಂಡು, ಒಳಗೆ ದೇವರಿಗೆ ನಮಸ್ಕರಿಸಿ ಚಾವಡಿಯಲ್ಲಿ ಬಂದು ನಿಂತರು; ಅವರ ಅಂದವನ್ನು ಕಣ್ಣು ತುಂಬ ನೋಡುತ್ತಿದ್ದ ಹಿರಿಯರ ಕಾಲುಹಿಡಿದು, ಕಿರಿಯರನ್ನು ಮುಟ್ಟಿ ತಟ್ಟಿ, ಮಕ್ಕಳನ್ನು ಎತ್ತಿ ಮುದ್ದಿಸಿ ಅಂಗಳಕ್ಕಿಳಿದರು. ಗಂಡ ಬೆತ್ತ ಹಿಡಿದು ಮುಂದೆ ನಡೆದರು, ಬೆನ್ನಿಗೆ, ಹೊಸ ಸೀರೆಯ ಬಸಬಸದೊಡನೆ ಹೆಂಡತಿ ಬಂದರು. ಎಡೆತಿಂಡಿಗಾಗಿ ಅವಲಕ್ಕಿ, ಕಾಯಿ, ಬೆಲ್ಲ, ಸಕ್ಕರೆ, ಸೀಯಾಳ ಮೊದಲಾದುವನ್ನೆಲ್ಲ ಆಳುಗಳು ಗಂಟುಕಟ್ಟಿ ಹಿಡಿದುಕೊಂಡಿದ್ದರು. ಅಳಿಯನನ್ನೂ ಮಗಳನ್ನೂ ಕೊಟ್ಟು ಕಳುಹುವುದಕ್ಕಾಗಿ ಯಜಮಾನರು ಅರ್ಧ ಹರದಾರಿಯ ತನಕ, ರಾಜ ರಸ್ತೆಗೆ ದಾರಿ ಕೂಡುವವರೆಗೆ, ಮಾತಾಡುತ್ತಾ ಬಂದರು. ದಂಪತಿಗಳು ಅಲ್ಲಿ ಮತ್ತೊಮ್ಮೆ ಅವರ ಕಾಲು ಹಿಡಿದರು. ಅಳಿಯನನ್ನು ತಲೆಮುಟ್ಟಿ ಮಗಳನ್ನು ಮೆಯ್ ಮುಟ್ಟಿ ಅವರು ಹರಸಿ, ನಿಂತರು! ಇವರು ಮುಂದೆ ನಡೆದರು. + +ಮೂರು ದಿನದ ಪಯಣ ಹಾಕಿ ಮನೆಗೆ ಮುಟ್ಟುವುದೆಂದು ನಿಶ್ಚಯವಾಗಿತ್ತು. ಅಲ್ಲಲ್ಲಿ ತಂಗುವುದಕ್ಕೆ ಸಂಬಂಧಿಕರ, ಪರಿಚಿತರ, ಉದಾರಬುದ್ಧಿಯ ಶ್ರೀಮಂತರ ಮನೆಗಳಿದ್ದವು. ಮೊದಲನೆಯ ರಾತ್ರಿ ಗುಜ್ಜರಕಾಡು ಸರಳಾಯರ ಮನೆಯಲ್ಲಿ. ಆ ಮನೆಯವರೆಲ್ಲ ಅತಿಥಿಗಳಲ್ಲಿ ಅತ್ಯಂತ ಆದರವುಳ್ಳವರು. ಊಟ ಉಪಚಾರ ಬಹಳ ಚೆನ್ನಾಯಿತು. ಮರುದಿನ ಬೆಳಗ್ಗೆ ಹಾಗೆಯೇ ಹೊರಡಲು ಅವರು ಬಿಡಲಿಲ್ಲ. ಬೇಗ ಊಟ ಮಾಡಿಸಿ ಕಳುಹಿಸಿಕೊಟ್ಟರು. ಎರಡನೆಯ ರಾತ್ರಿ ಪಡುಮಲೆ ಶಂಭಯ್ಯನವರಲ್ಲಿ. ಅಲ್ಲಿಗೆ ರಸ್ತೆ ಬಿಟ್ಟು ಸ್ವಲ್ಪ ದೂರ ಹೋಗಬೇಕು. ಅವರಿಗೂ ದೇವಜ್ಜಿಯ ತಂದೆಯವರಿಗೂ ದೂರದ ನಂಟತನವಿತ್ತು. ಇವರು ಬಂದುದು ಅವರಿಗೆ ಬಹಳ ಸಂತೋಷಕರವಾಯಿತು, ಅತಿ ಪ್ರೀತಿಯಿಂದ ಆದರಿಸಿದರು. ಮಾತ್ರವಲ್ಲ, ಮರುದಿನ ಹೊರಡಲು ಬಿಡಲಿಲ್ಲ, ಔತಣದ ಊಟ ಮಾಡಿಸಿದರು. ಅದರ ಮರುದಿನ ಬೆಳಗ್ಗೆ ಸ್ನಾನ ಊಟ ತೀರಿದ ಮೇಲೆ ಬೀಳ್ಕೊಟ್ಟರು. ಮತ್ತೂ ಒಂದೂವರೆ ದಿನದ ಹಾದಿ ಉಳಿದಿತ್ತು. ಅದೂ ಕೂಡ ಒಳದಾರಿ, ರಸ್ತೆಯಿಲ್ಲ. ಅಂದಿನ ಇರುಳು ಹೇಗೂ ಕಲ್ಲೂರು ಅಪ್ಪಯ್ಯ ಶಾಸ್ತ್ರಿಗಳಲ್ಲಿ ಮುಟ್ಟಿದರು. ಅವರು ಬಡವರು; ಆದರೂ ದಾರಿಗರಿಗೆ ಸಂತೋಷದಿಂದ ಒಂದು ಚೆಂಬು ನೀರು ಕೊಡುವವರು. ರಾತ್ರಿಯ ಸಾರನ್ನದೂಟ ಬಲು ರುಚಿಯಾಗಿತ್ತು. ಶಾಸ್ತ್ರಿಗಳು ಊರಲ್ಲೆಲ್ಲ ಹೆಸರುಗೊಂಡ ವಿದ್ವಾಂಸರು. ಊಟವಾದ ಮೇಲೆ ಶ್ರೀಮದ್ರಾಮಾಯಣ (ಸಂಸ್ಕೃತ ವಾಲ್ಮೀಕಿ ರಾಮಾಯಣ)ದ ಅರಣ್ಯಕಾಂಡದ ಒಂದೆರಡು ಸರ್ಗಗಳನ್ನು ಓದಿ ಅರ್ಥ ಹೇಳಿದರು. ಅದು ಅತ್ಯಂತ ರಸವತ್ತಾಗಿ ಎದೆಕರಗಿಸಿತು. ಅನಂತರ ಒಂದು ನಿದ್ದೆ. ಕೋಳಿ ಕೂಗುವಾಗಲೇ ಎದ್ದು ಹೊರಟರು. ಸುಮಾರು ಹತ್ತು ಗಳಿಗೆ ಹೊತ್ತಿನವರೆಗೆ ಒಂದೇ ಸಮನೆ ನಡೆದರು, ಗುಮ್ಮಪದವಿಗೆ ಬಂದರು. ಗುಮ್ಮಪದವು ದೊಡ್ಡ ಮೈದಾನು. ಉರಿಬಿಸಿಲಲ್ಲಿ ನಡೆಯುವುದು ಕಷ್ಟವಾಯಿತು. ಹೇಗೂ ಸ್ವಲ್ಪ ದೂರ ನಡೆದು ದೊಡ್ಡದೊಂದು ಆಲದ ಮರದ ಬುಡದಲ್ಲಿ ಕುಳಿತರು. ಸುಖವಾಗಿ ಗಾಳಿ ಬೀಸಿತು, ತಂಪಾಯಿತು. ಪಡುಮಲೆಯಿಂದ ಹೊರಡುವಾಗಲೂ ನಾಲ್ಕು ಸೀಯಾಳ ಕೊಟ್ಟಿದ್ದರಂತೆ. ಅವುಗಳೊಳಗೆ ಎರಡು ಉಳಿದಿದ್ದುವು. ಒಂದನ್ನು ಗಂಡಹೆಂಡಿರು ಕುಡಿದರು. ಮತ್ತೊಂದನ್ನು ಆಳುಗಳಿಗೆ ಕೊಟ್ಟರು. ಅವರು ಬೇಡವೆಂದರು; ಆದರೆ ನಮ್ಮ ದೇವಜ್ಜಿಯ ಗಂಡ ಒತ್ತಾಯಿಸಿದ್ದರಿಂದ ಹೇಗೂ ಕುಡಿದರು. ಆಳುಗಳು ವೀಳ್ಯ ಜಗಿಯುತ್ತಾ ಕುಳಿತಿದ್ದರು. + +ಹೀಗೆ ಅವರು ವಿಶ್ರಮಿಸುತ್ತಿದ್ದಾಗ ದೂರದಲ್ಲಿ ನಾಲ್ಕಾರು ಜನ ಕುದುರೆಸವಾರಿ ಮಾಡುತ್ತಾ ಬರುತ್ತಿರುವುದು ಕಂಡಿತು. ದೇವಜ್ಜಿ ಆವರೆಗೆ ಅಂಥಾದ್ದನ್ನು ನೋಡಿರಲಿಲ್ಲವಂತೆ. ಅವರು ಆಶ್ಚರ್ಯಪಟ್ಟು ಕೈತೋರಿ ಗಂಡನೊಡನೆ ಕೇಳಿದರು. ಆಗ ಆಳುಗಳು ದಿಗಿಲಿನ ದನಿಯಲ್ಲಿ “ಸೋಜರರು! ಸೋಜರರು!’’ ಎಂದರು. ದೇವಜ್ಜಿಗೆ ನಡುಗಿತು. “ನಾವು ಮರದಡ್ಡದಲ್ಲಿ ಅಡಗುವ! ಅವರು ಕಂಡದ್ದನ್ನು ಎಳೆದುಕೊಂಡು ಹೋಗುತ್ತಾರೆ! ಹೋದ ವರ್ಷ ಹಾಲೇರಿಯಲ್ಲಿ ನನ್ನಕ್ಕನ ಮಗಳನ್ನು ನಡುರಸ್ತೆಯಲ್ಲಿಯೇ ಹಿಡಿದೆಳೆದರಂತೆ” ಎಂದು ಒಬ್ಬ ಹೇಳಿದ, ಇನ್ನೊಬ್ಬ “ನನ್ನ ತಮ್ಮನ ಕಿವಿ ಹರಿದು ಒಂಟಿ ತೆಗೆದಿದ್ದಾರೆ! ಓಡಿದರೆ ಅಟ್ಟಿ ಹಿಡಿದು ಕೊಲ್ಲುತ್ತಾರೆ!’’ ಎಂದ. ದೇವಜ್ಜಿಗೆ ಕಂಗಾಲಾಯಿತು. ಆದರೆ ಅವರ ಗಂಡ ನಗಾಡಿದರಂತೆ. “ಏನು ಹೇಡಿಗಳೋ ನೀವು! ಬರೀ ಮೂಢರು! ಸುಮ್ಮನಿರಿ. ಅವರೇನು ಮನುಷ್ಯರಲ್ಲವೇ? ಅವರು ಕುಂಪಿನಿ ಸೋಜರರು! ಹಾಗೆಲ್ಲ ಸುಲಿಗೆ ಮಾಡಲು ಅವರು ಕಾಟಕಾಯಿಯವರಲ್ಲ. ನಮ್ಮೂರ ಸಂತೆಯ ಮೂರು ಕಾಸಿಗೊಂದರ ಅರಸುಗಳ ಕಾಟವನ್ನೆಲ್ಲ ನಿಲ್ಲಿಸಿಬಿಟ್ಟಿದ್ದಾರೆ. ನಮ್ಮೂರಲ್ಲಿ ಈಗ ರಾಮರಾಜ್ಯ! ನೋಡಿ, ಎಲ್ಲೆಲ್ಲಿಗೆ ರಸ್ತೆ ಕಡಿಸುತ್ತಿದ್ದಾರೆ! ಎಂಥಾ ಸಂಕ ಕಟ್ಟಿಸಿದ್ದಾರೆ! ಕಳ್ಳರನ್ನೆಲ್ಲ ಹಿಡಿದು ಜೈಲಿಗೆ ತಳ್ಳುತ್ತಾರೆ. ಅದಕ್ಕಾಗಿ ‘ಪುಲಿಸಿ’ನವರು ಕೆಂಪು ಪಗಡಿ ಇಟ್ಟುಕೊಂಡು ಹಳ್ಳಿ ಹಳ್ಳಿ ತಿರುಗುತ್ತಿದ್ದಾರೆ. + +ಕುಂಪಿನಿಯವರನ್ನು ದೇವರೇ ನಮ್ಮೂರಿಗೆ ಕಳುಹಿಸಿದ್ದು! ಅವರನ್ನು ಕಂಡರೆ ಎದ್ದು ನಿಂತು ಕೈಮುಗಿಯಬೇಕು!’’ ಎಂದರಂತೆ. ಆದರೆ ಆ ಎಳೆ ಹುಡುಗಿಗೆ ಧೈರ್ಯ ಹುಟ್ಟಲಿಲ್ಲ. ಅಲ್ಲದೆ ಅದಕ್ಕೆ ಮೊದಲಿನ ವರ್ಷ ಮಡಿಕೇರಿಯ ಬಳಿಯಲ್ಲಿ ‘ಸೋಜರ’ರು ಅನರ್ಥಗಳನ್ನು ಮಾಡಿದ್ದರೆಂದು ಅವರ ಚಿಕ್ಕಮ್ಮ ಸುದ್ದಿ ಹೇಳಿದ್ದು ನೆನಪಿಗೆ ಬಂತು. ಅವರು ಏನು ಮಾಡುವುದೆಂದು ತಿಳಿಯದೆ ಕಣ್ಣಗಲಿಸಿ ಗಂಡನ ಮುಖವನ್ನು ನೋಡಿ ಕಣ್ಣೀರು ತುಂಬಿ ನಡುನಡುಗಿದರು. ಈ ವಿಹ್ವಲತೆಯನ್ನು ಕಂಡು ಗಂಡನಿಗೆ ಕರುಣೆ ಹುಟ್ಟಿತೆಂದು ತೋರುತ್ತದೆ, ಅವರು “ನೀನು ಬೇಕಾದರೆ ಈ ಮರದ ಮೇಲೆ ಹತ್ತಿ ಕುಳಿತುಕೋ. ನೋಡು, ಅವರೆಂತಹ ದೇವತಾ ಮನುಷ್ಯರೆಂದು!’’ ಎಂದು ಹೇಳಿ ಹೆಂಡತಿಯನ್ನು ಹೆಗಲೇರಿಸಿದರು. ಮರಹತ್ತಿ ಅಭ್ಯಾಸವಿಲ್ಲದಿದ್ದರೂ ಹುಡುಗಿಯಾಗಿದ್ದ ದೇವಜ್ಜಿ ಕೊಂಬೆಯನ್ನು ಹಿಡಿದು ಥಟ್ಟನೆ ಮೇಲೇರಿ ಕುಳಿತರು. ಗಂಡ ಬೆತ್ತ ಹಿಡಿದುಕೊಂಡು ಹತ್ತು ಮಾರು ಮುಂದೆ ನಡೆದು ದಾರಿಯ ಬಳಿಯಲ್ಲಿ ನೆಟ್ಟಗೆ ನಿಂತುಕೊಂಡರು. ಆಳುಗಳು ಮರದ ಬುಡದಲ್ಲಿಯೇ ಕಣ್ಣು ಕಣ್ಣು ಬಿಡುತ್ತಿದ್ದರು. + +“ನಾನು ಮರದಲ್ಲಿ ಕುಳಿತು ಎಲ್ಲಾ ನೋಡುತ್ತಿದ್ದೆ. ಮಗೂ! ಅಯ್ಯೋ, ಅದನ್ನು ನೋಡಿದ ಕಣ್ಣು ಇನ್ನೂ ಮುಚ್ಚಲಿಲ್ಲವಲ್ಲಾ!’’ ಎಂದು ದೇವಜ್ಜಿ ಕೊರಗಿದ ದನಿ ನನ್ನೆದೆಯನ್ನು ಈಗಲೂ ಕೊರೆಯುತ್ತಿದೆ. + +‘ಸೋಜರ’ರು ಕುಣಿಯುವ ಕುದುರೆಗಳಲ್ಲಿ ಬರುತ್ತಿದ್ದರು. ಭಾರಿ ದೊಡ್ಡ ಕುದುರೆಗಳು! ಅವರ ‘ಕೊಡೆಟೊಪ್ಪಿ’ ಹಣೆಯರ್ಧವನ್ನು ಮುಚ್ಚಿತ್ತು. ಮೆಯ್ಗೆಲ್ಲ ಕೆಂಪಂಗಿ, ಅಂಗಿಯಲ್ಲಿ ಅಲ್ಲಲ್ಲಿ ಜೋಲಾಡುವ ‘ಚೌರಿ’, ಮುಖ ಕೆಂಪು ಕೆಂಪು. ಕೆಲವರಿಗೆ ಮೀಸೆಯಿಲ್ಲ. ಒಬ್ಬನಿಗೆ ಕೆಂಚು ಮೀಸೆ. ಅವನ ಮೋರೆಯೋ! ಹುಲಿಮೋರೆಯ ಹಾಗಿತ್ತು! ಮರದ ಮೇಲಿದ್ದ ಆ ಎಳೇ ಹುಡುಗಿಗೆ ಮೆಯ್ ಜುಂ ಜುಂ ಎಂದಿತು. ಅವರ ಗಂಡ ನಿಂತಲ್ಲಿಗೆ ಸರಿಯಾಗಿ ಸೋಜರರು ಬಂದರು. ‘ಇವರು’ ಹರ್ಷಗೊಂಡು ತಲೆಬಾಗಿ ಕೈಮುಗಿದರು. ಕೆಂಪು ಮೀಸೆಯ ಸೋಜರನು ಏನೋ ಸನ್ನೆ ಮಾಡಿದ. ಎಲ್ಲ ಕುದುರೆಗಳೂ ನಿಂತವು. ಅವನು ನಗುತ್ತ ಉಳಿದವರಿಗೆ ಏನೋ ಹೇಳಿದ. ಎಲ್ಲರೂ ಸಂತೋಷಪಟ್ಟಂತೆ ಕಂಡಿತು. ಕೂಡಲೇ ಹುಲಿ ಮೋರೆಯವನು ಕೆಳಗಿಳಿದ. ಬಾಯಲ್ಲಿ ಏನೋ ಹೇಳುತ್ತ ‘ಇವರ’ ಬಳಿಗೆ ಬಂದ. ಬೆತ್ತಕ್ಕೆ ಕೈತೋರಿ ‘ಕೊಡು’ ಎಂದು ಸನ್ನೆ ಮಾಡಿ. ‘ಇವರು’ ಊಂ, ಹುಂ ಎಂದು ಹೇಳಿ ಹಿಂದೆ ಸರಿದರು. ಅವನು ಕಣ್ಣು ಕೆರಳಿಸಿಕೊಂಡು ಮುಂದೆ ಬಂದು. ‘ರಶ್ಕಾ!’ ಎಂದು ದಟ್ಟಿಸಿ ಬೆತ್ತಕ್ಕೆ ಕೈ ಹಾಕಿದ! ಇವರು ಕೈ ಬಿಡಲಿಲ್ಲ. “ಇದೆಂಥಾ ನ್ಯಾಯ?’’ ಎಂದು ಹೇಳಿ ಹಿಂದಕ್ಕೆಳೆದರು! ಮರದಲ್ಲಿದ್ದ ದೇವಜ್ಜಿಗೆ ಕೆಳಗೆ ಬೀಳುವಂತಾಯಿತು. ಬೊಬ್ಬೆ ಹೊಡೆಯಲ್ಲಿದ್ದ ಬಾಯಿ ತೆರೆದಲ್ಲಿಯೇ ಕಟ್ಟಿಹೋಯಿತು. ಆ ಸೋಜರನು ಕಾಲೆತ್ತಿ ಇವರ ಹೊಟ್ಟೆಗೆ ಒದೆದನು, ಇವರು ಬಿದ್ದರು. ಬೀಳುವಾಗಲೂ ಬೆತ್ತ ಕೈಯಲ್ಲಿಯೇ ಇತ್ತು. “ಅಯ್ಯೋ, ಕುಂಪಿನಿ ರಾಕ್ಷಸಾ; ಅಯ್ಯೋ! ದೇವ..’’ ಎಂದು ಮುಂದೆ ಹೇಳುವಷ್ಟರೊಳಗೆ, ಅವನು ಕೊರಳೊತ್ತಿ ಹಿಡಿದ. ಕೈಯಿಂದ ಬೆತ್ತ ಸಡಿಲಿತು, ಎಳೆದುಕೊಂಡ. ಅಷ್ಟರಲ್ಲಿ ಅವರು ತಲೆಯೆತ್ತಿದರು. ಕೂಡಲೇ ಅದೇ ನಾಗರಬೆತ್ತದಲ್ಲಿ ಒಂದು ಹೊಡೆದ. ತಲೆಯೊಡೆದು ಹೋಯಿತು! ರಕ್ತ ದಿಳಿ ದಿಳಿ ಎಂದಿಳಿಯಿತು! ದೇವಜ್ಜಿಗೆ ಹಿಡಿದ ಕವಲುಗೊಂಬೆಯಿಂದ ಕೈಬಿಡಲೂ ಚೈತನ್ಯವಿರಲಿಲ್ಲ! ಆ ರಾಕ್ಷಸನು ‘ಹಹ್ಹಾ’ ಎಂದು ನಗಾಡಿ, ಮುಖ ತಿರುಗಿಸಿ ಬೆತ್ತವನ್ನು ನೋಡುತ್ತಾ ‘ರಾಶ್ಕಾ, ರಾಶ್ಕಾ’ ಎಂದು ಒದರುತ್ತಾ ಕುದುರೆಯ ಬಳಿಗೆ ಹೋಗಿ ಏರಿದನು. ಎಲ್ಲರೂ ಪಿಶಾಚಗಳಂತೆ ನಕ್ಕರು, ಕೆಲೆದರು, ಕುದುರೆ ಹಾರಿಸಿಕೊಂಡು ಎತ್ತಲೋ ಹೋದರು. + +ಅವರು ಕಣ್ಮರೆಯಾದೊಡನೆ ದೇವಜ್ಜಿ, ತಲೆತಿರುಗಿ ಕೈಬಿಟ್ಟರು, ಮರದ ಅಡ್ಡದಲ್ಲಿ ಅಡಗಿ ನಿಂತಿದ್ದ ಆಳುಗಳಲ್ಲಿ ಒಬ್ಬನು ಕಂಡು ಓಡಿ ಬಂದು, ಕೆಳಗೆ ಬೀಳುವುದಕ್ಕೆ ಮೊದಲೇ ಹಿಡಿದುಕೊಂಡ. ಅಷ್ಟರಲ್ಲಿ ಮತ್ತೊಬ್ಬನೂ ಬಂದ, ಇಬ್ಬರೂ ಕೂಡಿ ಕೆಳಗಿಳಿಸಿದರು. ದೇವಜ್ಜಿಗೆ ಬೋಧ ತಪ್ಪಿ ಹೋಗಿತ್ತು. ಅರ್ಧ ಗಳಿಗೆಯ ಅನಂತರ ಬೋಧ ಬಂತಂತೆ. “ಯಾಕೆ ಬಂತೋ?!’’ ಎಂದು ದೇವಜ್ಜಿ ನನ್ನೊಡನೆ ಹೇಳಿ ಹಂಬಲಿಸಿ ಅತ್ತರು. ಅಲ್ಲಿ ಬಿದ್ದ ದೇಹದ ಬಳಿಗೆ ಹೋಗಿ ನೋಡಿದರು, ಮುಟ್ಟಿದರು. ಏನು ಪ್ರಯೋಜನ? ಎಲ್ಲ ಯಾವಾಗಲೋ ಮುಗಿದುಹೋಗಿತ್ತು. ಆಯಿತು. ಮುಂದೇನು ಮಾಡುವುದು? ಹಿಂದೆ ತಂದೆ ಮನೆಗೆ ಹೋಗಲು ಎರಡೂವರೆ ದಿನಗಳ ದಾರಿ ಇದೆ. ಮಾವನ ಮನೆಗೆ – ಅದು ಮಾವನ ಮನೆಯೇ ಸರಿ. ಗಂಡನ ಮನೆ ಇನ್ನೆಲ್ಲಿ? – ಅರ್ಧದಿನದ ದಾರಿ. ದಾರಿ ತನಗೆ ಗೊತ್ತಿಲ್ಲ. ಆಳುಗಳಿಗೆ ಮೊದಲೆರಡು ಬಾರಿ ನಡೆದು ಬಂದವರಾದುದರಿಂದ, ಗೊತ್ತಿತ್ತು. ಮಾತ್ರವಲ್ಲ. ಯಾವಾಗ ತನ್ನನ್ನು ಈ ಮನೆಗೆ ಮದುವೆಯಾಯಿತೋ, ತಂದೆಯ ಮನೆಗೆ ತಾನು ಹೊರಗೆ. ಆಳುಗಳು ಹಿಡಿದುಕೊಂಡಿದ್ದ ಗಂಟಿನಿಂದ, ಮಾಸಿದ ಸೀರೆಯೊಂದನ್ನು ತೆಗೆದುಟ್ಟರು. ಅವರು ಉಟ್ಟಿದ್ದ ಹದಿನಾರು ಮೊಳದ ಹೊಸ ಸೀರೆಯನ್ನು ಆಳುಗಳು ಆ ದೇಹಕ್ಕೆ ಸುತ್ತಿದರು. ಯಾವುದೋ ಒಂದು ಮರದ ಕೊಂಬೆಯೊಂದನ್ನು ಹೇಗೂ ಕಡಿದು ತಂದು ಅದಕ್ಕೆ ಬಿಗಿಯಲಾಯಿತು. ಆಳುಗಳಿಬ್ಬರೂ ಅದಕ್ಕೆ ಹೆಗಲು ಕೊಟ್ಟರು. ಹೊರಲಾರದ ಗಂಟುಮೂಟೆಗಳನ್ನು ಅಲ್ಲೇ ಬಿಸಾಡಿದರು. ಪತಿಯ ದೇಹವನ್ನು ಹಿಂಬಾಲಿಸಿ ಸತಿ ನಡೆದರು. ಎರಡು ಗಳಿಗೆ ಇರುಳಾಗುವಾಗ ಹೇಗೂ ಮನೆಯಂಗಳದಲ್ಲಿ ಬಂದು ಬಿದ್ದರು. + +ಮುಂದಿನ ವೃತ್ತಾಂತವನ್ನು ಹೇಳುವುದೇನು, ಕೇಳುವುದೇನು? ಆ ದಿನ ದೇವಜ್ಜಿ ಹೇಳಲೂ ಇಲ್ಲ, ಹೇಳೆಂದು ನಾನು ಕೇಳಲೂ ಇಲ್ಲ. ಅವರು ಮಾತು ಮುಗಿಸಿ ಧ್ಯಾನಿಸುತ್ತ ಕುಳಿತರು. ನಾನು ಅವರ ಮಡಿಲಲ್ಲಿ ಮೊಗವನ್ನು ಮುಚ್ಚಿಟ್ಟು ಬಹಳ ಹೊತ್ತು ಹಾಗೇ ಮಲಗಿದೆ. ಆದರೆ ಇನ್ನೊಂದು ದಿನ ಹೀಗೇ ಯಾವುದೋ ಒಂದು ಪ್ರಸ್ತಾವದಲ್ಲಿ, ಅವರು ತಮ್ಮ ಅತ್ತೆಯವರನ್ನು ಬಹಳ ಕೊಂಡಾಡಿದರು. ತಮ್ಮ ಹೊಟ್ಟೆಯ ಮಗಳಂತೆಯೇ ಸೊಸೆಯನ್ನವರು ನೋಡಿಕೊಳ್ಳುತ್ತಿದ್ದರಂತೆ. ಯಾರು ಏನೆಂದರೂ ಸೊಸೆಯ ತಲೆಕೂದಲನ್ನು ಉಳಿಸಿಕೊಂಡರಂತೆ. “ಅಷ್ಟಾದರೂ ನನಗೆ ನೋಡಲು ಉಳಿಯಲಿ!’’ ಎಂದು ಮರುಗಿದರಂತೆ. ಯಾವಾಗಲೂ ತಮ್ಮ ಜತೆಯಲ್ಲಿಯೇ ಮಲಗಿಸಿಕೊಂಡು “ನೀನೇ ನನ್ನ ಹಿರಿಯ ಮಗ!’’ ಎಂದು ಹೇಳಿ ಕಣ್ಣೀರು ಹಾಕುತ್ತಿದ್ದರಂತೆ. ಇದನ್ನೆಲ್ಲ ದೇವಜ್ಜಿ ನನ್ನೊಡನೆ ಹೇಳಿ ಆ ದಿನವೂ ಕಣ್ಣೀರು ತುಂಬಿದರು. ನನ್ನ ಕಣ್ಣು ತುಂಬಿ ಬಂತೆಂದು ಬೇರೆ ಹೇಳಬೇಕಾಗಿಲ್ಲ. ದೇವಜ್ಜಿಗೂ ನನಗೂ ಹಾರ್ದಿಕವಾದ ಯಾವುದೋ ಒಂದು ಬಾಂಧವ್ಯ, ನನ್ನ ಮುದ್ದು ಬೆತ್ತ ಮುರಿದ ಮರುದಿನದಿಂದ ನೆಲೆಗೊಂಡು ಹೋಗಿತ್ತು. ಅವರೀಗ ಕಣ್ಮರೆಯಾದರೂ ಅದು ಹಾಗೆಯೇ ಉಳಿದಿದೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_426.txt b/Kenda Sampige/article_426.txt new file mode 100644 index 0000000000000000000000000000000000000000..270d6f99c8f882aa99a7040adca28ca072737d65 --- /dev/null +++ b/Kenda Sampige/article_426.txt @@ -0,0 +1,67 @@ + + + + +‘ಲೇ ಮಾದೇವಿ.. ಒಂದ್ ಸ್ವಲ್ಪ್ ಛಾ ಮಾಡಲಾ..’ ಮಂಡಕ್ಕಿ ಡಬ್ಬಿಯನ್ನು ಅಟ್ಟದಿಂದ ಕೆಳಗಿಳಿಸುತ್ತ ಹೇಳಿದ ಶಿವಪ್ಪ. + +ಸುಣ್ಣದ ಬಣ್ಣವ ಮರೆತ ನಾಲ್ಕು ಗೋಡೆಗಳು, ಅಲ್ಲಲ್ಲಿ ಮಣ್ಣಿನ ತೇಪೆಗಳು ಹಾಗು ಒಂದು ಬಾಗಿಲು, ಇಷ್ಟು ಬಿಟ್ಟು ಒಂದು ಕಿಟಕಿಯೂ ಇಲ್ಲದ ಅತೀ ಸಾಧಾರಣ ಕೋಣೆಯದು. ಕಟ್ಟಿಗೆಯ ಹಲಿಗೆಯನ್ನು ಅಟ್ಟವನ್ನಾಗಿ ಮಾಡಿ, ಅದರ ಮೇಲೆ ಬೆರಳೆಣಿಕೆಯಷ್ಟು ಆಕಾರಗೆಟ್ಟ ಅಲ್ಯೂಮಿನಿಯಂ ಡಬ್ಬಿಗಳಲ್ಲಿ ಇಡೀ ಸಂಸಾರವನ್ನು ಅವಿತಿಟ್ಟವಳು ಮಾದೇವಿ. ಅವಳು ಆರದಂತೆ ನೋಡಿಕೊಳ್ಳುತ್ತಿದ್ದ ಒಲೆಯ ಬೆಂಕಿಯು ಆ ಪುಟ್ಟ ಕೋಣೆಯ ಜೀವದಂತೆ ಕಾಣುತ್ತಿತ್ತು. ಅವಳ ಗಂಡ ಶಿವಪ್ಪ, ಅದ್ಯಾವುದೋ ಕನಸಿನ ಬೆನ್ನು ಹತ್ತಿ ಹದಿನೈದು ವರ್ಷದ ಹಿಂದೆ ಹಳ್ಳಿ ಬಿಟ್ಟು ಬೆಂಗಳೂರಿಗೆ ಬಂದಿದ್ದ. ಸಧ್ಯಕ್ಕೆ ಒಂದು ಸಿಮೆಂಟ್ ಫ್ಯಾಕ್ಟರಿಯಲ್ಲಿ ದಿನಗೂಲಿಗೆ ಕೆಲಸ ಮಾಡುತ್ತಾ ತನ್ನ ಹೆಂಡತಿ, ಮಗುವಿನ ಜೊತೆ ಸಾಕಾರ ಬದುಕಾಗಿದ್ದ. + +ಬಲಗೈ ಇಂದ ಒಲಿ ಇದ್ದಿಲನ್ನು ಊದುಗೋಳಿಯಲ್ಲಿ ಆಡಿಸುತ್ತಾ, ‘ಮಂಡಕ್ಕಿ ತಿಂತಿರ್ರಿ.. ವಲಿ ಮ್ಯಾಲೆ ಇಟ್ಟೀನಿ ಛಾ ಕ ‘ ಎಂದು ಹೇಳಿ ಮಂಡಕ್ಕಿಯನ್ನು ಹಾಕಿಕೊಳ್ಳಲು ಹಳೆ ಪೇಪರ್ ತುಂಡುಗಳನ್ನು ಶಿವಪ್ಪನತ್ತ ಸರಿಸಿದಳು ಮಾದೇವಿ. + +‘ಯಪ್ಪಾ.. ನಾನೂ ತಿಂತೇನಿ ನಿನ್ ಕೂಡ’ ಶಿವಪ್ಪನ ಮಗ ಈರಣ್ಣ ಬಂದು ಅಪ್ಪನ ತೊಡೆಯ ಮೇಲೆ ಕುಳಿತ. + +ಈರಪ್ಪನಿಗೆ ಈಗ ಏಳು ವರ್ಷ. ಮೂರೇ ಮೂರು ಬೇರೆ ಬೇರೆ ಬಣ್ಣಗಳ ಗುಂಡಿಯಿದ್ದ ದಿನಾ ತೊಡುವ ಅಂಗಿ, ಗುಂಡಿಯ ಅಭಾವದಿಂದ ತನ್ನ ಅಸ್ತಿತ್ತ್ವವನ್ನು ತೋರಿಸುತ್ತಿರುವ ಪುಟ್ಟ ಗುಣಗಡಿಗೆ, ಹಳದಿ ಉಡದಾರದಿಂದ ಬಿಗಿದ ನೀಲಿ ಚಡ್ಡಿಯನ್ನುತೊಟ್ಟ ಈರಣ್ಣ ನೋಡಲು ಥೇಟ್ ಅಪ್ಪನ ಹೋಲಿಕೆ. ಕಿವಿ ಮಾತ್ರ ಅವರಮ್ಮನ ಹಾಗೆ. ‘ಊರಗಲ, ಆನೆ ಕಿವಿ’ ಎಂದು ಆಗಾಗ ಹೇಳಿ ನಗುತಿದ್ದ ಶಿವಪ್ಪ. + +ಮಂಡಕ್ಕಿ ತಿನ್ನುತ್ತ ಅದರ ಕೆಳಗೆ ಹಾಸಿದ್ದ ಪೇಪರ್ ನತ್ತ ಬೊಟ್ಟು ಮಾಡಿ ಈರಣ್ಣ ‘ಯಪ್ಪಾ.. ಇವಾ ಯಾರು? ಕೈಯಾಗ ಏನ ಹಿಡದಾನ??’ ಎಂದು ಕೇಳಿದ. + +‘ಅವ್ರು ಚಂದ್ರಶೇಖರ ಕಂಬಾರರು ಈರಣ್ಣ, ಜ್ಞಾನಪೀಠ ಪ್ರಶಸ್ತಿ ತಗೊಳಾಕತ್ತಾರ’. ಅದೇ ಫೋಟೋ ಕೆಳಗೆ ಬರೆದಿದ್ದನ್ನು ಓದಿ ಹೇಳಿದ ಶಿವಪ್ಪ. + +‘ಯಪ್ಪಾ ಪೇಪರ್ ಒಳಗ ಫೋಟೋ ಬರಬೇಕಂದ್ರ ಏನ್ ಮಾಡ್ಬೇಕು?’ + +‘ಪೇಪರ್ ಒಳಗ ಹೆಸರು ಬರಬೇಕಂದ್ರ ಏನರ ಛೊಲೋ ಕೆಲಸ ಮಾಡಿರಬೇಕು, ಇಲ್ಲಂದ್ರ ನಾಕ್ ಜನಕ್ಕ ಒಳ್ಳೇದು ಮಾಡಿರಬೇಕು’. + +‘ಯಪ್ಪಾ ನೀನು ಛೊಲೋ ನ ಅದಿ.. ನಿನ್ನ ಫೋಟೋ ನು ಬಂದಿತ್ತೇನ್ ಪೇಪರ್ ಒಳಗ ಎಂದರೆ?’ + +ಮಗನ ಪ್ರತಿ ಪ್ರಶ್ನೆಗೆ ಸಾರ್ಥಕ ಶಾಲೆ ಆಗುತ್ತಿದ್ದ ಶಿವಪ್ಪ ಯಾಕೋ ಈ ಪ್ರಶ್ನೆಗೆ ಸುಮ್ಮನಾದ. ಏನೋ ಯೋಚಿಸಿ ಮತ್ತೆ ಹೇಳಿದ; ‘ಇಲ್ಲ ಈರಣ್ಣ ನಾ ಅಂಥಾ ಕೆಲಸ ಏನೂ ಮಾಡಿಲ್ಲ ಇಲ್ಲಿ ತನಕ. ನೀ ಓದಿ ದೊಡ್ದಾವ ಆದ್ರ, ನಿಂದೂ ಬರತ್ತ ಹೆಸರು ಪೇಪರ್ ಒಳಗ’. + +‘ನಿ ಬಶೀ ಒಳಗ ಹಾಕೊಂಡ್ ಕುಡಿ ಛಾ, ಅಪ್ಪನ ಗತೆ ಮಾಡಬ್ಯಾಡ’. ಇಬ್ಬರಿಗೂ ಛಾ ಕೊಡುತ್ತ ಈರಣ್ಣನಿಗೆ ಹೇಳಿದಳು ಮಾದೇವಿ. + +ಸಂಜೆಯಾಯಿತು. ಹಸಿರು ಬಣ್ಣದ ಹಳೇ ಕಬ್ಬಿಣದ ಟ್ರಂಕ್ ಅನ್ನು ಹರಡಿಕೊಂಡು ಕುಂತಿದ್ದ ಶಿವಪ್ಪ. ಮಾದೇವಿಯ ಒಲೆಯ ಹೊಗೆಯು ತೆರೆದ ಬಾಗಿಲಿನಿಂದ ಒಳ ಬರುತ್ತಿದ್ದ ಸಂಜೆಯ ಸೂರ್ಯನ ಕಿರಣಗಳನ್ನು ಪರೀಕ್ಷಿಸಿ ಮನೆಯೊಳಗೆ ಬಿಡುತ್ತಿತ್ತು. ಅದನ್ನು ಒಂದೇ ಗೈರು ಹಾಜರಿನ ದೃಷ್ಟಿಯಿಂದ ನೋಡುತ್ತ ಹಳೆ ನೆನಪುಗಳಲ್ಲಿ ಕಳೆದುಹೋಗುತ್ತಿದ್ದ ಶಿವಪ್ಪ. + +********** + +‘ಪೇಪರ್!! + +‘ಟ್ರಿನ್.. ಟ್ರಿನ್….. ‘ + +ಸೈಕಲ್ ಘಂಟೆಯನ್ನು ಬಾರಿಸುತ್ತ ಕೈಯಲ್ಲಿದ್ದ ಸಂಯುಕ್ತ ಕರ್ನಾಟಕ ದಿನಪತ್ರಿಕೆಯನ್ನು ಹಳದಿ ಕಾಂಪೌಂಡ್ ಒಳಗೆ ಎಸೆಯುತ್ತ ಶಿವೂ ಮುಂದೆ ಸಾಗಿದ್ದ. + +ಶಿವಪ್ಪನಿಗೆ ಆಗ ೧೪ ವರ್ಷ ವಯಸ್ಸು. ಊರಲ್ಲಿನ ಶಾಲೆಯನ್ನು ಬಿಟ್ಟು ಬಂದು ಬೆಂಗಳೂರು ಸೇರಿದ್ದ. ಅಮ್ಮ ತೀರಿಕೊಂಡ ಮೇಲೆ ಅಪ್ಪ ಇನ್ನೊಂದು ಮದುವೆ ಆಗಿದ್ದ. ಆ ಮಲತಾಯಿಯ ದ್ವಂದ್ವ ಪ್ರೀತಿಯ ಮುಂದೆ ಸಂಕುಚಿತಗೊಂಡ ಅವನ ಮನಸ್ಸು ಆಕಾಶವನ್ನು ಬಯಸಿತ್ತು. ಆ ವಯಸ್ಸಲ್ಲೇ ಬರವಣಿಗೆಯನು ಮೈಗೂಡಿಸಿಕೊಂಡು, ಆಗಲೇ ಹಳ್ಳಿಯಲ್ಲಿ ಹೆಸರಾಗಿದ್ದ ಹುಡುಗ ಅವನು. ಹೊಸ ಅವ್ವನ ಕಾಟ ತಾಳದೆ ನೇಕಾರ ಶಂಭಯ್ಯನ ಜೊತೆ ಸೇರಿ ಅಪ್ಪನಿಗೆ ಹೇಳಿಯೇ ಊರು ಬಿಟ್ಟಿದ್ದ. ಅವಳ ನಡಾವಳಿಗಳನ್ನು ಕಂಡು ಗೊತ್ತಿದ್ದ ಅಪ್ಪನು ತಡೆಯದೇ ಮಗನನ್ನು ಬೀಳ್ಕೊಟ್ಟಿದ್ದ. + +‘ಏನ್ ಮರೀ.. ಪ್ರಜಾವಾಣಿ ಇದೆಯಾ??’ ದಾರಿಯಲ್ಲಿ ಒಬ್ಬ ಕನ್ನಡಕ ಹಾಕಿದ ಅಂಕಲ್ ಕೇಳಿದರು. + +‘ಹುಂ ಸರ್! ಇದೇ. ಒಂದೂವರೆ ರುಪಾಯಿ’. ಪೇಪರ್ ಕೊಟ್ಟು, ದುಡ್ಡನ್ನು ತನ್ನ ಅಂಗಿಯ ಕಿಸೆಗೆ ಹಾಕಿ ಮತ್ತೆ ಸೈಕಲ್ ತುಳಿದ. + +ಟ್ರಿನ್.. ಟ್ರಿನ್… + +ಬಸವೇಶ್ವರ ನಗರದ ಒಂದು ಗಲ್ಲಿಯ ಪೇಪರ್ ಡೆಲಿವರಿ ಜವಾಬ್ದಾರಿ ಶಿವುನದಾಗಿತ್ತು. ಬೆಳಿಗ್ಗೆ ಐದು ಘಂಟೆಗೆ ಎಲ್ಲ ಪೇಪರ್ ಹೊಂದಿಸಿ, ತುಸು ಹೊತ್ತು ಅದರಲ್ಲಿನ ಸಮಾಚಾರಗಳಲ್ಲಿ ತಿಳಿದಷ್ಟು ಓದಿ ಆಮೇಲೆ ಪೇಪರ್ ಹಾಕಲು ಹೋಗುವುದು ಅವನ ನಿತ್ಯದ ರೂಢಿ. ವಿಜಯ ಕರ್ನಾಟಕದ ‘ಆಣಿ ಮುತ್ತು ‘, ಟೈಮ್ಸ್ ಆಫ್ ಇಂಡಿಯಾ ದ ‘ದಿ ಸ್ಪೀಕಿಂಗ್ ಟ್ರೀ’, ಉದಯವಾಣಿಯ ವಸಂತ ಶೆಟ್ಟಿ ಅಂಕಣಗಳು ಹೀಗೆ ಕೆಲವುಗಳನ್ನು ತಪ್ಪದೇ ಓದುತ್ತಿದ್ದ. + +ಹಳ್ಳಿಯಲ್ಲಿನ ಚಿನ್ನೂರು ಮಾಸ್ತರರು ‘ಛಂದ ಬರೀತಿಯಲ್ಲೋ ಶಿವೂ, ಪೇಪರ್ ನೊಳಗ ಹಾಕ್ಸೋಣ ತಡಿ ಒಮ್ಮೆ’ ಅಂತ ಹೇಳಿದ್ದನ್ನು ದಿನವೂ ನೆನಪು ಮಾಡಿಕೊಳ್ಳುತ್ತಿದ್ದ. ೨೦೦ ರೂ ಮಾಶಾಸನ ಕೊಡುವ ಹಾಲು ಮಾರುವ ಕೆಲಸವನ್ನು ಬಿಟ್ಟ ಅವನು, ೧೫೦ ರುಪಾಯಿ ಕೊಡುವ ಪೇಪರ್ ಹಾಕುವ ಕೆಲಸವನ್ನು ಮಾಡಲು ಕಾರಣವೂ ಇದೇ ಬರವಣಿಗೆಯ ಆಸಕ್ತಿಯಾಗಿತ್ತು. “ನಾನೂ ಒಂದಿನ ಲೇಖಕ ಆಗ್ತೀನಿ, ಪೇಪರ್ ಗಳಲ್ಲಿ ನನ್ನ ಅಂಕಣವೂ ಬರುತ್ತೆ” ಎಂದುಕೊಳ್ಳುತ್ತಿದ್ದ. ಪೇಪರ್ ಹಾಕುವಾಗ ಸುತ್ತ ಮುತ್ತಲಿನ ಜನರನ್ನು ಗಮನಿಸುತ್ತಿದ್ದ, ಆ ವಯಸ್ಸಿನಲ್ಲೇ ತನ್ನ ಬರವಣಿಗೆಗೆ ಬೇಕಾದ ಪಾತ್ರಗಳನ್ನೂ ತನಗರಿವಿಲ್ಲದಂತೆಯೇ ಹುಡುಕುತ್ತಿದ್ದನೇನೋ. ಮನಸ್ಸು ಸದಾ ಜಾಗೃತವಾಗಿರುತ್ತಿತ್ತು. + +ದಿನಾ ಒಂದೇ ಜಾಗದಲ್ಲಿ ಪೇಪರ್ ಹಾಕುತ್ತಿದ್ದ ಕಾರಣ, ಆ ಜಾಗದ ಬಹಳ ಜನರ ಪರಿಚಯವೂ ಅವನಿಗಿತ್ತು. ಕೆಲವರ ಮುಖ ಪರಿಚಯ, ಕೆಲವರ ನಗು ಪರಿಚಯ, ಕೆಲವರ ಧ್ವನಿ ಪರಿಚಯ, ಇನ್ನೂ ಕೆಲವರ ಒಡನಾಟವೂ ಇತ್ತು. ರೂಫಿನ ಮನೆಯ ಅಂಕಲ್, ಹಳದಿ ಕಾಂಪೌಂಡ್ ಚೈತ್ರಕ್ಕ, ವಾಕಿಂಗ್ ಮೇಷ್ಟ್ರು, ಉದ್ದ ಸ್ವೆಟರಿನ ಮಿಲ್ಟ್ರಿ ಅಜ್ಜ, ಹೀಗೆ ಕೆಲ ಪರಿಚಯಗಳಿಗೆ ಹೀಗೆಲ್ಲ ಹೆಸರುಗಳನ್ನಿಟ್ಟುಕೊಂಡಿದ್ದ. ದೊಡ್ಡ ಮನೆ ಆಂಟಿ ಮಾತ್ರ ಇವನಿಗೆ ಸಾಕಷ್ಟು ಪ್ರೀತಿಯನ್ನು ಕೊಡುವ ಜೊತೆಗೇ, ಅವನನ್ನು ಮಾತಾಡಿಸಿ, ತಿನ್ನಲು ಏನಾದರೊಂದು ತಿಂಡಿ ತಿನಿಸನ್ನೂ ಕೊಡುತ್ತಿದ್ದರು. “ ಶಿವೂ, ನಿನ್ನೆ ಜಾಮೂನು ಮಾಡಿದ್ದೆ, ತಗೋ, ನಿಮ್ಮ ಅಂಕಲ್ ನಿನ್ನೆ ತಂದಿದ್ರು” ಅಂತ ಬಿಸ್ಕೆಟ್, ಹೀಗೆ ಏನಾದರು ಕೊಡುತ್ತಲೇ ಇದ್ದರು. ಅದಕ್ಕೇ ಇಲ್ಲದ ಅವ್ವನ ಪ್ರೀತಿಯ ಕಿರುನೋಟವು ಅವರಲ್ಲಿ ಕಂಡಂತಾಗಿ ಅಷ್ಟರಲ್ಲೇ ಖುಷಿಪಟ್ಟುಕೊಂಡು ದಿನಾಲು ದೊಡ್ಮನೆ ಆಂಟಿಯನ್ನು ಮಾತನಾಡಿಸಿಯೇ ಶಿವು ಮುಂದಕ್ಕೆ ಹೋಗುತ್ತಿದ್ದನು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಜನರನ್ನು ದೂರಂದಿಂದಲೇ ಗಮನಿಸುತ್ತಿದ್ದ ಶಿವೂ, ತನ್ನ ಕಲ್ಪನೆಗೆ ತಕ್ಕಂತೆ ಒಬ್ಬೊಬ್ಬರಿಗೂ ಒಂದೊಂದು ಕಥೆಯನ್ನು ತನ್ನ ಮನದಲ್ಲೇ ಹೊಂದಿಸಿಕೊಂಡಿದ್ದ. “ವಾಕಿಂಗ್ ಅಂಕಲ್ ನಡ್ಕೊಂಡೆ ಹೋಗ್ತಾರೆ, ಆದರೆ ಅವರ ಹೆಂಡತಿ ಕಾರ್ ನಲ್ಲಿ ಓಡಾಡ್ತಾರೆ, ನಮ್ಮ ಎರಡನೇ ಅಮ್ಮನ ಥರ ಇರ್ಬೇಕು ಆ ಆಂಟಿ. ಚೈತ್ರಕ್ಕ ಪಾಪ, ಯಾವಾಗಲು ಓದ್ತಾ ಇರ್ತಾಳೆ, ಅವರಮ್ಮ ಆಡೋಕೆ ಬಿಡಲ್ಲ ಅನ್ಸತ್ತೆ ಅವಳನ್ನ. ದೊಡ್ಡ ಮನೆ ಆಂಟಿ ತುಂಬಾ ಒಳ್ಳೇವ್ರು, ಅವರ ಅಂಕಲ್ ಯಾವಾಗಲು ಕುಂತು ಪೇಪರ್ ಓದ್ತಾ ಇರ್ತಾರೆ ಪಾಪ ಕಾಲಿಗೆ ಏನಾದರೂ ಆಗಿರಬೇಕೋ ಏನೋ!, ಅವರ ನಾಯಿ ಬಡ್ಡಿ ಮಗಂದು ನನ್ನ ನೋಡಿ ಯಾವಾಗ್ಲೂ ಬೊಗಳುತ್ತೆ.” ಹೀಗೆ ಕೆಲುವು ಊಹೆಗಳು ಅವನ ತಲೆ ಮತ್ತು ಮನಸ್ಸು ಎರಡರಲ್ಲೂ ತುಂಬಿರುತ್ತಿದ್ದವು. ಅಷ್ಟೇ ಅಲ್ಲ, ಎಂಟನೇ ಮೇನ್ ನಲ್ಲಿನ ರಿಟೈರ್ಡ್ ಕಾಲೇಜ್ ಪ್ರೊಫೆಸರ್ ಪರಿಚಯವೂ ಹೇಗೋ ಆಗಿಹೋಗಿ, ದಿನವೂ ಅವರಿಗೆ ತನ್ನ ಕವನ-ಕಥೆಗಳನ್ನ ಓದಿ ಹೇಳುತ್ತಿದ್ದ. ಅವರು ನಕ್ಕು ದುಬ್ಬ ಚಪ್ಪರಿಸಿ ‘ಭಲೇ’ ಎಂದರೆ ಹಿರಿ ಹಿರಿ ಹಿಗ್ಗುತ್ತಿದ್ದ. ಅವರೂ ಇವನ ಬರವಣಿಗೆಗಳನ್ನು ಪತ್ರಿಕೆಯವರಿಗೆ ಪೋಸ್ಟ್ ಮಾಡಿಸುತ್ತಿದ್ದರು. ತನ್ನ ಹೆಸರು ಪತ್ರಿಕೆಯಲ್ಲಿ ಬಂದರೆ ಹಳ್ಳಿಯಲ್ಲಿನ ಅಪ್ಪ ಎಷ್ಟು ಖುಷಿಪಡುತ್ತಾನೆ, ಚಿನ್ನೂರು ಮಾಸ್ತರರು ಶಾಲೆಯಲ್ಲಿ ತನ್ನ ವರ್ಗದ ಎಲ್ಲರಿಗೂ ಓದಿ ಹೇಳುತ್ತಾರೆ, ಸತ್ತು ಸ್ವರ್ಗದಲ್ಲಿರೋ ಅವ್ವ ಅಲ್ಲಿಂದಲೇ ಖುಷಿಯಲ್ಲಿ ಆಕಾಶದ ತುಂಬೆಲ್ಲ ಹರಡುತ್ತಾಳೆ ಅಂತೆಲ್ಲ ಯೋಚಿಸುತ್ತಿದ್ದ. + +ಆವತ್ತೊಂದಿನ ಎಂದಿನಂತೆ ಪೇಪರ್ ಹಾಕಲು ದೊಡ್ಡ ಮನೆ ಹತ್ತಿರ ಹೋದಾಗ ಸೈಕಲ್ ಘಂಟೆಯನ್ನು ಬಾರಿಸಿ ಆಂಟಿ ಬರುವುದಕ್ಕಾಗಿ ಕಾದು ನಿಂತ. ಆಂಟಿ ಬರದೇ ಹೋದಾಗ ಕಾಂಪೌಂಡ್ ಒಳಗೆ ಮಲಗಿದ್ದ ನಾಯಿಯ ಮೇಲೆ ಪೇಪರ್ ಎಸೆದರೆ ಅದು ತನ್ನ ನೋಡಿ ಬೊಗಳಿ ಆ ಸದ್ದಿಗೆ ಆಂಟಿ ಬರಬಹುದು ಎಂದು ಯೋಜನೆ ಮಾಡಿ, ಸರಿಯಾಗಿ ಅದಕ್ಕೆ ಗುರಿ ಇಟ್ಟು ಜೋರಾಗಿ ಪೇಪರ್ ಎಸೆದ. ನಾಯಿ ಮಿಸುಗಲಿಲ್ಲ. “ಹಾಂ?! ಇದೇನಪ್ಪ.. ಬಡ್ಡಿ ಮಗಂದು ಸುಮ್ನೆ ಇದ್ಯಲ್ಲ ಇವತ್ತು.” ಎರಡು ನಿಮಿಷ ಕಾದು ಸೈಕಲ್ ನಿಂದ ಕೆಳಗಿಳಿದು, ಮನೆಯತ್ತ ಹೆಜ್ಜೆ ಹಾಕಿದ. ಆ ಮನೆ ಬರುವುದರೊಳಗೆ ಆಂಟಿ ಕೊಡುವ ತಿನಿಸುಗಳ ನೆನೆದು ತುಸು ಹೊಟ್ಟೆ ಹಸಿವು ತಂತಾನೇ ಆಗಿರುತ್ತಿತ್ತು, ಅದೇ ಆಸೆಯಿಂದಲೋ ಅಥವಾ ಆಂಟಿಯನ್ನು ಮಾತನಾಡಿಸಿ ಹೋಗಬೇಕೆಂದೋ ನಾಯಿಯನ್ನು ನೋಡುತ್ತ ಅದರಿಂದ ದೂರವನ್ನು ಕಾಯ್ದು ಗೋಡೆ ಹಿಡಿದುಕೊಂಡು ಕಾಂಪೌಂಡ್ ಒಳಗೆ ಹೋಗಿ ಬಾಗಿಲು ಇಣುಕಿದ. ಯಾರೂ ಕಾಣಲಿಲ್ಲ. ಪಡಸಾಲಿ (ಡ್ರಾಯಿಂಗ್ ರೂಂ) ನಿಶಬ್ದವಾಗಿತ್ತು. ಮತ್ತೆ ‘ಆಂಟಿ’ ಎಂದು ಜೋರಾಗಿ ಕೂಗಿದ, ಅಷ್ಟೊತ್ತಿಗೆ ಅಲ್ಲಿದ್ದ ಫೋನ್ ರಿಂಗಣಗೊಂಡಿತು. ಆ ಸದ್ದಿಗೆ ಬರಬಹುದು ಎಂದು ಊಹಿಸಿದ!.. ಆದರೆ ಒಂದು ಸುತ್ತು ಕರೆದು ಫೋನ್ ಕೂಡ ಸುಮ್ಮನಾಯಿತು. ಆಗವನಿಗೆ ಯಾಕೋ ಅನುಮಾನ ಶುರುವಾಗಿ ಯಾರದರೂ ಬೈದರೂ ಪರವಾಗಿಲ್ಲ ಎಂದು ಪಡಸಾಲಿಯ ಒಳಗಡೆ ಹೋಗಿ ಆಂಟಿಯನ್ನು ಕೂಗುತ್ತಲೇ ರೂಂ ನತ್ತ ನಡೆದ. ರೂಂ ನಲ್ಲಿ ಬೆಡ್ ನ ಕೆಳಗೆ ನೋಡಿದರೇ ಏನೋ ಅನಾಹುತ ಘಟಿಸಿ, ಆಂಟಿ ನೆಲಕ್ಕೆ ಬಿದ್ದಿದ್ದಾರೆ. ಅವರ ಕುತ್ತಿಗೆಯಿಂದ ರಕ್ತ ಹರಿಯುತ್ತಿದೆ. ಆಗಲೇ ರಕ್ತ ಅರ್ಧ ರೂಂ ನ ತುಂಬೆಲ್ಲ ಹರಡಿದೆ. ಒಂದುಕ್ಷಣ ಏನು ಮಾಡಬೇಕೆಂದು ತಿಳಿಯದೇ ಜೋರಾಗಿ ಕಿರುಚಿಕೊಂಡು ಅಲ್ಲಿ ಕ್ಷಣವೂ ನಿಲ್ಲಲಾಗದೆ ಶರವೇಗದಲ್ಲಿ ಹೊರ ಓಡಿಬಂದ. ಕಾಂಪೌಂಡ್ ಆಚೆ ನಿಂತು ಜೋರು ಮತ್ತಷ್ಟು ಜೋರಾಗಿ ಕಿರುಚಿ ವಿಚಿತ್ರವಾಗಿ ಅಳತೊಡಗಿದ.. ಅವನ ಮೈಯೆಲ್ಲ ಗದಗದ ನಡುಗುತ್ತಿತ್ತು. + +ಹದಿನೈದೇ ನಿಮಿಷದಲ್ಲಿ ದೊಡ್ಡ ಮನೆಯ ತುಂಬಾ ಜನಜಂಗುಳಿ. ಅದೆಷ್ಟೋ ಬಂಧುಗಳು, ಬೈಕ್, ಕಾರ್ ಗಳು, ಪೊಲೀಸರು, ಪತ್ರಿಕೆಯವರು, ಟಿವಿ ಚಾನೆಲ್ ನವರು ಅಲ್ಲಿ ಸೇರಿದ್ದರು. ಪಕ್ಕದ ಮನೆಯ ರಾವ್ ಅಂಕಲ್ ಶಿವೂನನ್ನು ತಮ್ಮ ಮನೆಯೊಳಗೇ ಕೂರಿಸಿ ನೀರು, ಬಿಸ್ಕೆಟ್ ಅನ್ನು ಕೊಟ್ಟು ಸಮಾಧಾನ ಮಾಡುತ್ತಿದ್ದರು. ಆ ಕಿರಿ ವಯಸ್ಸಿಗೆ ಜೀರ್ಣವಾಗದ ದೃಶ್ಯವನ್ನು ನೋಡಿ ಧೃತಿಗೆಟ್ಟು ಕಂಗಾಲಾದ ಶಿವೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ. ನೆರೆದ ಜನರೆಲ್ಲ ಬೊಟ್ಟು ಮಾಡಿ “ಅದೇ ಹುಡುಗನಂತೆ ಮೊದಲು ಶಾರದಮ್ಮನವರನ್ನು ನೋಡಿದ್ದು” ಎಂದು ಪರಸ್ಪರ ಹೇಳಿಕೊಳ್ಳುತ್ತಿದ್ದರು. ಅಷ್ಟರಲ್ಲಿ ಕೆಲ ಪತ್ರಿಕೆಯವರು ರಾವ್ ಅಂಕಲ್ ಸಹಾಯ ಕೇಳಿಬಂದು ಶಿವೂನನ್ನು ಮಾತನಾಡಿಸತೊಡಗಿದರು. ಹೆದರಿದ ಶಿವೂನನ್ನು ಆ ಮನೆಯ ಆಂಟಿ ಬೆವರು ಒರೆಸುತ್ತ ಅವರಿಗೆ ಉತ್ತರಿಸುವಲ್ಲಿ ಸಹಕರಿಸುತ್ತಿದ್ದರು. ಶಿವೂ ರಿಪೋರ್ಟರ್ ಗಳ ಪ್ರಶ್ನೆಗಳಿಗೆ ನಡುಗುತ್ತಲೇ ತೋಚಿದಷ್ಟು ಉತ್ತರಿಸಿದ. ಒಂದು ಘಂಟೆಯ ನಂತರ ಆ ಜನಜಂಗುಳಿ ಮಾಯವಾಯಿತು. ಅಲ್ಲಿ ನೆರೆದಿದ್ದ ಪೊಲೀಸರು ಸತ್ತು ಬಿದ್ದಿದ್ದ ಆ ದೊಡ್ಡ ಮನೆ ನಾಯಿಯನ್ನು ಸಾಗಿಸುತ್ತಿದ್ದಿದ್ದ ದೃಶ್ಯ ಕಿಟಕಿಯಿಂದ ಶಿವೂನ ಕಣ್ಣಿಗೆ ಬಿದ್ದಿತ್ತು. ಯಾಕದು ಇವತ್ತು ಬೊಗಳಲಿಲ್ಲ ಎಂಬ ಅವನ ಪ್ರಶ್ನೆಗೆ ಉತ್ತರ ತಿಳಿಯಿತು. ಆನಂತರ ಶಿವೂನನ್ನು ತಕ್ಕ ಮಟ್ಟಿಗೆ ವಿಚಾರಿಸಿ ಪೊಲೀಸರು ತಮ್ಮ ಜೀಪಿನಲ್ಲೇ ಅವನನ್ನು ಶಂಭಯ್ಯನ ರೂಮಿಗೆ ತಂದು ಬಿಟ್ಟರು. ಶಿವೂ ಅಳುತ್ತಳುತ್ತ ಶಂಭಯ್ಯನ್ನನ್ನು ಅಪ್ಪಿಕೊಂಡವ ಎಷ್ಟು ಹೊತ್ತಾದರೂ ಬಿಟ್ಟಿರಲೇ ಇಲ್ಲ. + +ಮರುದಿನ ಶಿವೂ ಪೇಪರ್ ಹಾಕಲು ಹೋಗಲಿಲ್ಲ, ಶಂಭಯ್ಯನ ನೇಯುವ ಕೆಲಸದಲ್ಲೇ ತುಸು ಸಹಾಯ ಮಾಡಿದ. ಆವತ್ತಿನ ಪೇಪರ್ ತಂದ ಶಂಭಯ್ಯ ಶಿವೂಗೆ ತೋರಿಸಿದ. ಪೇಪರ್ ನ ಮೊದಲನೇ ಪುಟದ ಕೆಳಭಾಗದಲ್ಲಿ ದೊಡ್ಡ ಮನೆಯ ಫೋಟೋ ಇತ್ತು, ಅದರ ಮೂಲೆಯಲ್ಲಿ ಪಾಸ್ ಪೋರ್ಟ್ ಸೈಜ್ ನಲ್ಲಿ ಶಿವೂ ಫೋಟೋ ಸಹ ಇತ್ತು. ‘ನಸುಕಿನಲ್ಲೇ ಭಾರಿ ದರೋಡೆ!’ ಎಂದು ದೊಡ್ಡಕ್ಷರದಲ್ಲಿ ಬರೆದಿತ್ತು. ಹಿಂದಿನ ಪುಟದಲ್ಲಿ ಹುಚ್ಚಿಯಂತೆ ಬಿದ್ದಿದ್ದ ಆಂಟಿಯ ಫೋಟೋ ಕಂಡು ಹೆದರಿದ ಶಿವು. ‘ಲೇ ಶಿವು .. ಪೇಪರ್ ಒಳಗ ಹೆಸರು ಬರಬೇಕು ಅಂತ ಯಾವಾಗಲೂ ಅಂತಿದ್ದಿಲಾ.. ನೋಡ್ ಇವತ್ತ ಬಂದೆತಿ. ಫೋಟೋನೂ ಹಾಕ್ಯರ ಮಳ್ಳ-ಸೂಳೆಗಂಡ್ರು’ ಅಂತ ಹೇಳಿ ನಕ್ಕ ಶಂಭಯ್ಯ. ನಗುಬಾರದೆ ಶಿವೂ ಆ ಪೇಪರ್ ಅನ್ನು ಬದಿಗೆ ಇಟ್ಟು ಶಂಭಯ್ಯನ ಹತ್ತಿರಕ್ಕೆ ಸರಿದ. ಶಂಭಯ್ಯ ಶಿವೂನ ತಲೆ ಸವರಿ ಮತ್ತೆ ಹಗ್ಗ ನೇಯತೊಡಗಿದ. + + + +ಮಾದೇವಿಯ ಪಾತ್ರೆಗಳ ಸದ್ದಿಗೆ ಆ ಹಳೆಯ ಟ್ರಂಕ್ ನಿಂದ ಹೊರಬಂದ ಶಿವಪ್ಪನಿಗೆ ಅಂಗಳದಲ್ಲಿ ಆಡುತ್ತಿದ್ದ ಈರಣ್ಣನ ಸದ್ದು ಕೇಳಿತು. ಕೈಯ್ಯಲ್ಲಿ ಗಾಳಿಗೆ ತಿರುಗುವ ಬಣ್ಣದ ಚಕ್ರವ ಹಿಡಿದು ಓಡುತಿದ್ದ ಈರಣ್ಣ ಬಾಯಿಯಿಂದ ಸದ್ದು ಮಾಡುತಿದ್ದ…’ಜೀೕೕೕೕೕೕೕೕ………’ + +ಕಿರಣ ಅಕ್ಕಿ ಮೂಲತಃ ಉತ್ತರ ಕರ್ನಾಟಕದ ಗದಗ ಊರಿನವರು. ಎಂಟು ವರ್ಷಗಳಿಂದ ಬೆಂಗಳೂರಿನ ನಿವಾಸಿ. ಐ.ಟಿ ಕಂಪೆನಿಯ ಉದ್ಯೋಗಿ. ಚಿತ್ರಕಲೆ, ಪುಸ್ತಕಗಳು ಹಾಗೂ ಬರವಣಿಗೆ ಇವರ ಹವ್ಯಾಸಗಳು. \ No newline at end of file diff --git a/Kenda Sampige/article_427.txt b/Kenda Sampige/article_427.txt new file mode 100644 index 0000000000000000000000000000000000000000..f8e8d84ca2877c8f71a172cc642763c2b5e2e837 --- /dev/null +++ b/Kenda Sampige/article_427.txt @@ -0,0 +1,65 @@ + + +ಅಪ್ಪನ ಗಿಲಾಸು ನಾಗರಾಜ್ ಪೂಜಾರ ರವರ ಮೊದಲ ಕವನ ಸಂಕಲನ. ಈಗ ಅನೇಕರು ಬೇರೆ ಬೇರೆ ಸಮುದಾಯಗಳ ಸಾಮಾಜಿಕ ಹಿನ್ನಲೆಯಿಂದ ಕಾವ್ಯಲೋಕಕ್ಕೆ ಕಾಲಿಡುತ್ತಿದ್ದಾರೆ. ಕೇವಲ ತಮ್ಮ ಸಮುದಾಯದ ಇಂಗಿತಗಳನ್ನು, ನಿವೇದನೆಗೊಳಿಸುವ ಉಮೇದಿನಲ್ಲಿ ಕಾವ್ಯ ಬರೆವವರಂತೆ ಕಾಣದ ಪೂಜಾರರವರು, ತನ್ನ ಪಾಡು ಹಾಗೂ ಜೀವಂತವಾಗಿ ಬದುಕುವ ಇಂಗಿತಗಳು ಮತ್ತು ಕಾವ್ಯದ ಬಗೆಗಿನ ಆಸಕ್ತಿಯ ಓದಿನ ಪ್ರಭಾವ ಹಾಗೂ ಈ ಆಕರ್ಷಣೆಗಳು ನೀಡಿರುವ ಸಂವೇದನೆಯ ತೀವ್ರತೆಯಿಂದಾಗಿ ತಮ್ಮ ಕಾವ್ಯಯಾನವನ್ನು ಆರಂಭಿಸಿದ್ದಾರೆ. ಈ ಬೆಳವಣಿಗೆಯೇ ಹೇಳುತ್ತದೆ ಕವಿ ತಾನು ರೂಪುಗೊಳ್ಳುವ ಹಾದಿಯಲ್ಲಿದ್ದಾರೆಂಬುದನ್ನು. ಇಂತಹ ಸಕಾರಣಕ್ಕಾಗಿಯೇ ಇವರ ಕಾವ್ಯ, ಜೀವನದ ಹಲವು ಆಯಾಮಗಳ ಅರ್ಥವಂತಿಕೆಯ ಚಡಪಡಿಕೆಗಳ ಒಟ್ಟು ಮೊತ್ತವಾಗಿ ನಮ್ಮನ್ನು ಸೆಳೆಯುತ್ತದೆ. + +ಕಾವ್ಯ ಪ್ರವೇಶಿಕೆಯ ನಂಟು, ಕೇವಲ ಸಮುದಾಯದ ವಕ್ತಾರಿಕೆಯ ಮುಖವಾಣಿಗೆ ಸೀಮಿತವಾಗದೆ, ಕಾವ್ಯವು ವ್ಯಕ್ತಿಗತವಾದ ಜರೂರು, ಮನೋಹಂಬಲಗಳ ತುಡಿತವನ್ನೂ ಸಹ ಒಳಗೊಂಡಿರಬೇಕು. ಇಂತಹ ಅಯಾಮಗಳಲ್ಲಿ ಕವಿತೆ ಬರೆಯುತ್ತಿರುವ ಪೂಜಾರರು ನಮ್ಮನ್ನು ಆಕರ್ಷಿಸುತ್ತಲೇ, ಅವರ ಕಾವ್ಯ ಹೊಸ ಕಾವ್ಯಾಸಕ್ತಿಯ ಕಾಳಜಿಗಳನ್ನು ಪೋಷಿಸುತ್ತಿದೆನ್ನಬಹುದು. + +ಅಪ್ಪನ ಗಿಲಾಸು ಎಂಬುದು ಕವಿಗೆ ಹೊಸಲೋಕವೂ, ನೆನಪು ಹಾಗೂ ಜೀವನದಿಯ ರೂಪಕವೂ ಆಗಿರುತ್ತದೆ. ಗಿಲಾಸು ಎಂಬ ಪದವು ಕೇವಲ ರೂಢಿಗತವಾದ ಅಪಭ್ರಂಶಾತ್ಮಕ ಹಳಸು ಪದ ಪಧಾರ್ಥವೆಂಬ ನಿರ್ಲಕ್ಷ್ಯ ಸಲ್ಲದು. ಈ ಗಿಲಾಸು ಜೀವನದ ಪುನರ್ ಸೃಷ್ಟಿಯ ಹೊಸ ನೆಲೆಯಾಗಿದ್ದು, ಇದು ತತ್ವವೂ, ಲೋಕದೃಷ್ಟಿಯೂ ಹಾಗೂ ಕವಿಗೆ ಬೇಕಾದ ಸ್ಮೃತಿಪರಂಪರೆಯ ಸಾಂಸ್ಕೃತಿಕ ತಾವು ಸಹ ಆಗಿರುತ್ತದೆ. ಈ ಗ್ಲಾಸ್ ಎಂಬ ತತ್ಸಮವೂ ತದ್ಭವಗೊಳ್ಳುವ ರೂಪಾಂತರಗಳ ಹಿಂದೆ ಈ ದೇಶದ ಹಿತ್ತಲ ನೈಜ ಜೀವನಸೆಲೆಗಳಿವೆ. ಯಾವುದನ್ನು ವರ್ನಾಕುಲರ್ ಎಂದು ದುಂಡೀಕರಿಸುತ್ತೇವೆಯೋ ಇಂಥ ಸರಳೀಕೃತ ಶಿಷ್ಠ ಪರಿಶಿಷ್ಠದ ರೂಢಿಗತ ಅಲೋಚನೆಗಳು ಈ ಗಿಲಾಸು ಎಂಬುದರ ಸೃಜನಶೀಲತೆಯ ಸ್ವಾಯತ್ತತೆಯನ್ನು ನಿರಾಕರಿಸುತ್ತವೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಗಿಲಾಸು ಎಂಬುದು ಕವಿಯ ಮಾತಲ್ಲಿ ಹೇಳುವುದಾದರೆ, ಮುಟ್ಟಿನಿತಿಹಾಸದ ಗುರುತಾಗಿದ್ದು, ಈ ದೇಶದ ಸಾಮಾಜಿಕ ಚರಿತ್ರೆಯ ಸ್ಪೃಶ್ಯ ಮತ್ತು ಅಸ್ಪೃಶ್ಯತೆಯ ಇತಿಹಾಸದ ಕಥನಲೋಕವೇ ಆಗಿದೆ. + +ಇತಿಹಾಸ ಅಲ್ಲಗಳೆದ ಜನಮಾನಸದ ಸ್ಮೃತಿಲೋಕದ ಪ್ರತೀಕವಾಗಿ ಈ ‘ಅಪ್ಪನ ಗಿಲಾಸು’ ಕಾಣುತ್ತದೆ. ಬದುಕಿನೊಡಲಿಂದ ಎದ್ದ ಸಾಂಸ್ಕೃತಿಕ ಪ್ರತಿರೋಧದ ಪ್ರತಿಮಾಲೋಕವೂ ಸಹ ಆಗಿರುತ್ತದೆ. ಜನ ಸಾಮಾನ್ಯರ ನಡುವಿನಿಂದಲೇ ಪ್ರಕಟಗೊಳ್ಳಬೇಕಾದ ಸೃಜನಶೀಲತೆಯ ಆಯಾಮಗಳು ಮಾತ್ರವೇ ನಮಗೆ ತಣ್ಣಗಿನ ಜೀವನಾನ್ವೇಷಣೆಯ ಹಾದಿಗಳ ರೂಟನ್ನು ತೋರಬಲ್ಲವು. ಈ ಕಾರಣದಿಂದಲೇ ಗಿಲಾಸು ಎಂಬುದು ಇತಿಹಾಸದ ಗುರುತಾಗಿಯೂ ಕವಿಗೆ ಕಾಡುತ್ತಲೇ ಇರುತ್ತದೆ. + +ಜೀವನದ ಸೃಜನಶೀಲತೆಗಾಗಿ ಹಂಬಲಿಸುವ ಕವಿಗಳು ತಮ್ಮ ಬದುಕಿನ ನಾನಾ ಸೂಕ್ಷ್ಮತೆ ಹಾಗೂ ಅರಿವು ಹಾಗೂ ಮರೆವುಗಳ ಭಾಗದ ಮೊತ್ತವಾಗಿ ಕವಿತೆಯನ್ನು ಹೆಣೆಯುತ್ತಾರೆ. ಹಾಗೆಯೇ ಮಾನವತನಕ್ಕೆ ಧಕ್ಕೆಯಾಗದಂತೆ ಜೀವಿಸಲು ಹಾತೊರೆವ ಹಂಬಲಗಳು ಮತ್ತು ತಮ್ಮ ಸುತ್ತಣವನ್ನು ಕಲ್ಪಿಸಿಕೊಳ್ಳುವ ಆದರ್ಶಗಳ ಲೋಕ ವಿಸ್ತರಣೆಯಾಗಿಯೇ ಕವಿತೆ ಕವಿಗಳಿಗೆ ಹೊಸ ಏಕಾಂತದ ತಾವು ಹಾಗೂ ಜೀವನದ ಹೊಸ ಅಯಾಮವು ಸಹ ಆಗಿರುತ್ತದೆ. ಇಂತಹ ಆಕಾಂಕ್ಷೆಗಳ ಜೀವಿಯಾದ ಕವಿಗೆ ಕವಿತೆಯು ಶೋಧನೆ ಹಾಗೂ ಹೊಸದರ ಕ್ರಿಯಾಶೀಲ ಗೀಳಾಗಿ ಜೀವಂತಿಕೆಯಂತೆ ಕಾಣಿಸುತ್ತದೆ. ಎಲ್ಲರ ಬಳಿಗೆ ಹೋಗುವ ಗೀತೆಯಾಗಿ ಈ ಕವಿತೆ ಅಲೆಮಾರಿ ಆತ್ಮವೆಂಬ ರೂಪಾಂತರಗಳ ಅರ್ಥ ಧರಿಸುತ್ತದೆ. ಹೀಗೆ ಸಾಧಾರಣೀಕರಣಗೊಳ್ಳುವ ಅರ್ಥವು, ಇಡೀ ಮಾನವ ಜನಾಂಗಕ್ಕೆ ಬೇಕಾದ “ಕತ್ತಲು ಹಗಲೆನ್ನದೆ ದೀಪ ಉರಿಯಲಿ” ಎಂಬ ಆಶಯಗಳ ಅಸ್ಮಿತೆಯ ಛಾಪನ್ನು ಮೂಡಿಸುತ್ತದೆ. + +ಇಲ್ಲಿನ ಬಹುಪಾಲು ಕವಿತೆಗಳು ಕವಿಯ ಮನೋಧರ್ಮದ ಆಚೆಗೂ ಜಿಗಿದು ಮನುಷ್ಯ ಜೀವನದ ಆಂತರ್ಯಗಳ ಕಥನವಾಗಿ ಬದಲಾಗುತ್ತವೆ. ಭಾಷೆ ಕ್ಲಿಷ್ಟಗೊಂಡರೂ ಅರ್ಥದ ಶೋಧನೆಯಲ್ಲಿ ನಿಯತ್ತಿನ ಕಾಣ್ಕೆಗಳಿವೆ. ಕವಿಯ ಅನುಭವದ ಅಸಲಿ ಆಯಾಮಗಳ ಸಾಂಧ್ರತೆ ಕವಿತೆಯಲ್ಲಿ ಹರಳುಗಟ್ಟಿದೆ ಎನ್ನಬಹುದು. ಸ್ಥೂಲಾರ್ಥದ ಬೆನ್ನತ್ತದ ಕವಿಯು ಸೂಕ್ಷ್ಮ ಮತ್ತು ಗಾಢವಾದ ಅಮೂರ್ತತೆಯ ಜಾಡು ಹಿಡಿದರೂ, ಈ ಕವಿತೆಗಳು ಅರ್ಥ ನಿಶ್ಚಿತತೆಗೆ ಗಂಟುಬೀಳದೆ ಹೊಸದಾಗಿ ಏನನ್ನೋ ಧ್ವನಿಸುತ್ತವೆ. ಹಾಗೂ ಜೀವನದ ಅನೂಹ್ಯ ಸಂಗತಿಗಳ ಪರಸ್ಪರ ಘರ್ಷಣೆ ಹಾಗೂ ವೈರುದ್ಧ್ಯಗಳ ಒಟ್ಟುಮೊತ್ತವಾಗಿ ಈ ಸಂಕಲನದ ಕವಿತೆಗಳು ಹೊಸ ಹ್ಯೂಮನ್ ಕಂಟೆಂಟನ್ನು ಧ್ವನಿಸುತ್ತವೆ. + +“ಘೋಷಿಸುತ್ತವೆ ಯುದ್ಧ ವಿರಾಮವನ್ನುಎಡಬಿಡಂಗಿ ಎರಡಾತ್ಮಗಳುನೇರ ಲಗ್ಗೆಯಿಟ್ಟ ನರಗಳ ಒಳಗಿನ ದೇಹಕೊಳುವೆಹೊರಚೆಲ್ಲುತ್ತದೆ ವಿರಸ ಸರಸಗಳ ಪ್ರವಾಹದಂತೆ”. + +(ನಾಗರಾಜ್ ಪೂಜಾರ) + +ಈ ಕವಿತೆಯಲ್ಲಿ ಅಪ್ಪನ ರೂಪಕವೇ ನಿರಾಯುಧವಾಗಿ ಮನುಷ್ಯ ತನ್ನನ್ನು ತಾನೇ ಗೆಲ್ಲುವ ಆತ್ಮಸಂಯಮದ ಫಿಲಾಸಫಿಯಾಗಿ ಪ್ರಕಟವಾಗುತ್ತದೆ. ಅಲ್ಲಲ್ಲಿ ಸುಳಿವ ಅನುಭಾವದ ಭಾಷೆ ಹಾಗೂ ಹೋಲಿಕೆಗಳು ಕವಿ ತಾನು ಯಾವ ಪರಂಪರೆಯ ವಾರಸುದಾರನಾಗಬೇಕೆಂಬ ರಾಜಕೀಯ ಎಚ್ಚರವೂ ಸಹ ಈ ಕಾಲದ ಕ್ರೌರ್ಯದ ದಿಗಿಲನು ದಾಟಲು ಕವಿತೆ ಹೊಸ ಒಡಪಾಗುತ್ತದೆ. ತನ್ನ ಸೀಳಿಕೊಳ್ಳುವ ದ್ವಂದ್ವವತೆ ಹಾಗೂ ಸೂಕ್ಷ್ಮವಾಗುತ್ತಲೇ ತನ್ನ ಇರುವಿಕೆಗೆ, ರೆಕ್ಕೆ ಕಟ್ಟಿಕೊಳ್ಳುವಿಕೆಗೆ ಶಕ್ತಿ ಕೇಂದ್ರವಾಗುವ ಅಪ್ಪನ ಗಿಲಾಸು ಒಟ್ಟು ಭಗ್ನವಾಗುತ್ತಿರುವ ಮನುಷ್ಯರ ಅನ್ ಆರ್ಗ್ಯಾನಿಕ್ ತನಕ್ಕೆ ಹೊಸ ಬೆಸುಗೆಯ ಇಂಗಿತಗಳನ್ನು ಧ್ಯಾನಿಸುವ ಧಾವಂತತೆಯನ್ನು ತಣ್ಣಗೆ ಆಸ್ಪೋಟಿಸಿಕೊಳ್ಳುತ್ತಲೇ ಸೃಜನಶೀಲತೆಯನ್ನು ಹರಸುವ ವರ್ತಮಾನದ ತಾಜಾ ಇಂಗಿತಗಳನ್ನು ಪ್ರಕಟಿಸುತ್ತದೆ. + +ಮಾಸಿ ಹೋಗಲು ಹಿಂಜರಿವ ಮನುಷ್ಯರ ಕರ್ಷಣಗಳ ತಿಕ್ಕಾಟದ ವಿಷಾದ, ಆಕ್ರೋಶ, ಮಾತಿಗೂ ನಿಲುಕದ ಮನುಷ್ಯರ ನೋವಿನ ಮೌನದ ನಿಟ್ಟುಸಿರು ‘ಅಪ್ಪನ ಗಿಲಾಸು’ ಸಂಕಲನದೊಳಗೆ ಹೆಪ್ಪುಗಟ್ಟಿದೆ. ಸದಾ ಕಾಡುವ ಅಪ್ಪ, ದೈನಂದಿನ ಬದುಕಿನ ಹಲ ಲಕೋಟೆಗಳ ಭಾವ ಅನುಭಾವಗಳ ಸಂಲಗ್ನತೆ, ಕವಿಯ ಖಾಸಗೀತನದ ಮುಕ್ತ ಹಂಬಲಗಳು, ಪ್ರೇಮ, ಕಾಮ ಹಾಗೂ ರಾಜಕೀಯ ದ್ವೇಷದಾಚೆಗೂ ಮನುಷ್ಯರಾಗಿ ಉಳಿಯಬೇಕನ್ನುವ ತೀವ್ರ ಸೆಳವುಗಳ ಕಾರಣಕ್ಕೆ ಈ ಸಂಕಲನ ವಿಶೇಷವಾಗುತ್ತದೆ. + +ಪ್ರೇಮ, ಕಾಮದ ವೈಯಕ್ತಿಕ ತುಮುಲಗಳನ್ನು ಬಚ್ಚಿಡುತ್ತಲೇ ಸಾಮಾಜಿಕ ಬದ್ಧತೆಗಾಗಿ ಕವಿತೆ ಬರೆಯುತ್ತೇವೆಂಬುದು ಶುದ್ಧ ಕಾಡು ಹರಟೆಯೇ. ಜೀವನಸಾಂಗತ್ಯದ ಒಡನಾಟವಿರದೆ ಲೋಕವನ್ನು ಪ್ರವಾಸಿಗನ ಎಚ್ಚರದಲ್ಲಿ ನೋಡುವ ನಮ್ಮ ರಾಜಕೀಯ ಚಾಳಿಗಳು ಕವಿತೆಯನ್ನು ಕಟ್ಟಲಾರವು. ಹಾಗೇ ನೋಡಿದರೆ ಹೊಸ ಕಾಲದ ಸಾಮಾಜಿಕ ಬಂಡುಕೋರತನ ಹಾಗೂ ಆಕ್ರೋಶದ ನುಡಿಗಟ್ಟುಗಳನ್ನು ತನ್ನದೇ ಜೀವಂತ ಅನುಭವದ ನೆಲೆಯಲ್ಲಿ ಸಂಘಟಿಸಿಕೊಳ್ಳದ ತಲೆಮಾರು ಜೀವನಸೌಂದರ್ಯಕ್ಕೆ ಬೇಕಾದ ಸೃಜನಶೀಲತೆಯನ್ನು ಕಂಡುಕೊಳ್ಳಲಾರದು. ಈಗ ಬರೆಯುತ್ತಿರುವವರು ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ನಮ್ಮ ಪ್ರಜ್ಞಾಪೂರ್ವಕವಾದ ಅರ್ಥನಿರ್ಮಾಣವು ಕೃತಕ ನೈತಿಕ ಎಚ್ಚರದ ನಂಟಿನ ಅಲ್ಪಕಾಲೀನ ಶಬ್ಧಬಿಂಬಗಳನ್ನು ತರಬಲ್ಲದೇ ಹೊರತು ಬದುಕಿನ ಸೂಕ್ಷ್ಮತೆ ಹಾಗೂ ಎಚ್ಚರಗಳನ್ನು ದ್ವನಿಸಲಾರದು. ಈ ವಿಚಾರದಲ್ಲಿ ನಾಗರಾಜ್ ಪೂಜಾರರಿಗೆ ಇರುವ ಸೂಕ್ಷ್ಮತೆ ಮತ್ತು ಎಚ್ಚರ ಕಂಡು ಖುಷಿಯಾಗುತ್ತದೆ. + +“ಛೇ ಛೆ !ಮನುಷ್ಯನನ್ನಾಗಿಸುವ ಅನಿವಾರ್ಯಕೋಹೃದಯದ ಮೌನ ಕೇಳಿಸುವ ಹುಂಬತನಕೋಕೇಳಿಸಿಕೋ ತುಸು ಹೆಚ್ಚೆ ಇಲ್ಲಿ” + +ಹೀಗೆ ಕವಿಗೆ ನಿರ್ಧಾರಗಳ ಭಾರವಿಲ್ಲ. ಆಸ್ಫೋಟದ ಧಾವಂತವೂ ಇಲ್ಲದೆ ತಣ್ಣಗೆ ತನ್ನ ಹಿನ್ನಡೆ ಹಾಗೂ ಮುನ್ನಡೆಗಳನ್ನು ಪ್ರಕಟಿಸುವ ಗುಣದಿಂದಲೇನೋ ಇಲ್ಲಿನ ಕವಿತೆಗಳು ಕವಿಯ ಗೊಂದಲಗಳ ನಡುವೆಯೂ ಹೊಸದಾಗಿ ಏನನ್ನೋ ಅಮೂರ್ತವಾಗಿ ಸೂಚಿಸುತ್ತವೆ. ಈ ನಿವೇದನೆಗಳ ಭಾರ ಕಳಚುತ್ತಲೇ ಹಗುರಾಗಿ ಹೇಳುವ ಅನುದ್ವಿಗ್ನತೆಯ ಕವಿ ಮಾತ್ರವೇ ಎಲ್ಲ ಜನಗಳ ಬಳಿಗೆ ಸಾಗುವ ಗೀತೆಯನ್ನು ನುಡಿಸಬಲ್ಲರೇನೊ. ಇಂತಹ ಭರವಸೆಗಳ ಜೊತೆಗೆ ನಾವು ನಮ್ಮ ಸಂಬಂಧಗಳು, ಅವುಗಳ ಸಾಮಾಜಿಕ ಚೌಕಟ್ಟುಗಳು ಇವೆಲ್ಲವನ್ನು ಒಂದು ಸದೂರಲ್ಲಿ ನೋಡಬಲ್ಲವೇನೋ. ಬಹುಶಃ ಇಂತಹ ಸಾಧ್ಯತೆಗಳನ್ನು ಆಗುಮಾಡಿಸುವ ಕವಿಗಳು ಮಾತ್ರವೆ ಮನುಷ್ಯ ಜನಾಂಗದ ಸಂಕಷ್ಟಗಳ ಕತೆ ಹೇಳಬಲ್ಲರೇನೋ. + +ಕಾವ್ಯಸೌಂದರ್ಯ ಎಂಬುದರ ಏಕರೂಪಿ ನಿರೂಪಣೆಯ ವಿಮರ್ಶೆಯ ಕ್ರಮ ವಿನ್ಯಾಸಗಳು ಕಾವ್ಯ ಎಂಬುದರ ಅಸಂಖ್ಯಾತ ಧ್ವನಿ ಸಂಕೇತಗಳನ್ನು ಬಚ್ಚಿಡುವ ರಾಜಕಾರಣವನ್ನು ನಿರ್ವಹಿಸುತ್ತವೆ. ಕನ್ನಡ ಕಾವ್ಯದ ನವ್ಯೋತ್ತರವೆಂಬ ವಿಮರ್ಶಾ ಮತ್ತು ಸಾಹಿತ್ಯಕ ದೃಷ್ಟಿಕೋನವೇ ಇಂತಹ ಅಪಾಯಕಾರಿ ವಿನ್ಯಾಸದಿಂದಾಗಿದೆ. ಮೇಲಾಗಿ ಈಗ ಕನ್ನಡ ಕಾವ್ಯ ಸಂಕೀರ್ಣವಾದ ಭಿನ್ನ ದ್ವನಿ ಸಾಮರ್ಥ್ಯದ ಸಮುಚ್ಛಯಗಳ ಪ್ರತಿಮಾಲೋಕವಾಗಿ ರೂಪುಗೊಳ್ಳುತ್ತಿದ್ದು, ಅಪ್ಪನ ಗಿಲಾಸು ಕಾವ್ಯವನ್ನು ನಾವು ಹೀಗೆ ಪರಿಭಾವಿಸುವ ಜರೂರಿದೆ. + + + +ಕವಿ ತನ್ನ ಆತ್ಮಜಿಜ್ಞಾಸೆಯ ಸಾಧ್ಯತೆಗಳ ಜೊತೆಗೆ ವಿಶಿಷ್ಠವಾಗಿ ಜೀವಿಸುವ ಹಂಬಲಗಳ ಜೊತೆ ತನ್ನ ಸುತ್ತಣವನ್ನು ಪುನರ್ಸೃಜಿಸಿಕೊಳ್ಳಲು ಹಾತೊರೆವ ಕ್ರಮದಲ್ಲಿಯೇ ಹೊಸ ಲೌಕಿಕತೆಯ ವಾಸನಾಭಿತ್ತಿಗಳಿರುತ್ತವೆ. ಇಂತಹ ವಾಸನೆಗಳು ಕೇವಲ ವ್ಯಕ್ತಿ ವಿಶಿಷ್ಠತೆಯ ವರಾತಗಳು ಮಾತ್ರವಾಗಿರದೆ ತನ್ನದೆ ಸಮುದಾಯಿಕ ಸೃಜನಶೀಲತೆಯ ಕಥನಾತ್ಮಕ ಚರಿತ್ರೆಯ ಮಂಡನೆಯೂ ಆಗಿ ಕವಿತೆಗಳು ಕಂಡುಬರುತ್ತವೆ. ಬದುಕಿನ ಸೃಜನತೆಯು ತನ್ನ ಕಾಲವನ್ನು ತೀವ್ರವಾಗಿ ಜೀವಿಸುವ ನಂಬಿಕೆ ಹಾಗೂ ವಿಶ್ವಾಸಗಳ ಶೋಧನೆಯೇ ಆಗಿರುತ್ತದೆ. ಜೊತೆಗೆ ಕವಿಯ ಕವಿತೆ ಕೂಡ ಹೊಸ ಕಾಲಮಾನದ ಜೀವಂತಿಕೆಗಳನ್ನು ಹರಸುವ ಸಾಹಸಶೀಲತೆಯ ಪ್ರವೃತ್ತಿಗಳಿಗಾಗಿ ಅಲೆದಾಡುವುದೇ ಆಗಿರುತ್ತದೆ. ಈ ಮೂಲಕ ಕವಿಗೆ ಕವಿತೆ ಹೊಸ ಹುಟ್ಟಿನ ಅವಕಾಶ ನಿರ್ಮಾಣ ಮಾಡುತ್ತದೆ.ನಾಗರಾಜ್ ಪೂಜಾರರ ಕಾವ್ಯ ಕೌಶಲ್ಯತೆ ಹಾಗೂ ಜಿಜ್ಞಾಸೆಯ ವಿನ್ಯಾಸಗಳು ತಣ್ಣಗಿನ ಜೀವಂತಿಕೆ ಹರಸುವ ಶೋಧನಾ ಪ್ರವೃತ್ತಿಗಳಂದ ಕೂಡಿದೆ ಎನ್ನಬಹುದು. ಕವಿ ತನ್ನ ದೈನಂದಿನ ಲಯಗಳ ಜೊತೆಗೆ ತನ್ನ ತಲೆಮಾರಿನ ಬೇರುಗಳು, ವರ್ತಮಾನದ ಸಾಮಾಜಿಕ ಹಾಗೂ ರಾಜಕೀಯ ವಿಷಮತೆಗಳು ಹೀಗೆ ಹತ್ತು ಹಲವುಗಳ ಹಿನ್ನಲೆಯಿಂದ ಕಾವ್ಯದ ವಸ್ತುವಿಷಯ, ಅಭಿವ್ಯಕ್ತಿಯ ಸಾಧ್ಯತೆಗಳ ಹುಡುಕಾಟದ ಫಲಶೃತಿಯ ಪ್ರತೀಕವಾಗಿ ಈ ಅಪ್ಪನ ಗಿಲಾಸು ಸಂಕಲನ ಒಡಮೂಡಿದೆ ಎನ್ನಬಹುದು. ಜೀವನದ ಯುಕ್ತಾಯುಕ್ತತೆಗಳೇ ಸಂಚಾರಿ ಭಾವಗಳನ್ನು ಅವಲಂಭಿಸಿವೆ. ಇಂತಹ ಸಂಚಾರದ ಒಡನಾಟವೇ ಭಾವ ಅನುಭಾವದ ಪ್ರತಿಮೆಗಳಾಗಿ ಜೀವನದ ಅನಂತ ಸಾಧ್ಯತೆಗಳ ಪುನರ್ ಸೃಷ್ಟಿಗೆ ಕಾರಣವಾಗುತ್ತದೆ. ಕುವೆಂಪು ಹೇಳಿದಂತೆ, ಕಡಲಿನಾಳಕೂ ಹಿರಿದು ಮನಸಿನಾಳ. ಇದರ ತಳಬುಡದ ತಳ ಅತಳಗಳ ಶೋಧನಾ ಪ್ರವೃತ್ತಿಗಳೇ ಕವಿತೆ ಹಾಗೂ ಕಲೆಯ ಸ್ವರೂಪ ಪಡೆಯುತ್ತವೆ. ಕವಿತೆ ತಿರುಗುವ, ತಿರುಗುತ್ತಲೇ ಇರಬೇಕಾದ ಜಂಗಮಶೀಲತೆಯೇ ಆಗಿರುತ್ತದೆ. ಇಂತಹ ತಿರುಗುವಿಕೆಗಳು ಬೇಂದ್ರೆ ಹೇಳುವಂತೆ, ತಿರುಗಿ ತಿರುಗಿ ಮತ್ತೆ ಹೊಸದಾಗುವ ನಾವೀನ್ಯತೆಯ ಹಂಬಲ ಹಾಗೂ ತೀವ್ರವಾಸನೆಗಳೇ ಕವಿತ್ವಕ್ಕೆ ಹುಟ್ಟಿನ ಅವಕಾಶ ನೀಡುತ್ತವೆ. ಅಪ್ಪನ ಗಿಲಾಸು ಇಂತಹ ಹಂಬಲ ಮತ್ತು ತೀವ್ರತೆಗಳ ಶೋಧನೆಯೇ ಆಗಿದೆ.ಮನುಷ್ಯರು ಪುಟಿದೇಳುವ ತಮ್ಮ ಚೈತನ್ಯಶೀಲತೆಯಿಂದಲೇ ಸೃಜನಾತ್ಮಕ ಅಸ್ಮಿತೆ ಚರಿತ್ರೆಯನ್ನು ನಿರ್ಮಿಸಿದ್ದಾರೆ. ಕವಿತೆ ಇಂತಹ ಮನುಷ್ಯರ ಪ್ರಾಗ್ರೂಪತ್ವದ ಆದಿಮ ನೆಲೆಗಳ ಅನುಸಂಧಾನದ ಯಾನವೇ ಆಗಿರುತ್ತದೆ. ಅದಮ್ಯ ವಿಶ್ವಾಸದ ಹಸಿವು ಹಾಗೂ ತಾನೇ ನಿರ್ಮಿಸಿಕೊಂಡ ಅದೃಶ್ಯ ಗೋಡೆಗಳ ಆಚೆಗೆ ಸಾಗುವ ಈ ಉಲ್ಲಂಘನೆಯ ಸಾಧ್ಯತೆಗಳಿಂದಾಗಿಯೇ ಒಂದು ಅಖಂಡ ವಿಸ್ತ್ಋತ ದಿಟ್ಟಿಯ ಬೆನ್ನುತ್ತವುದೇ ಹೊಸ ಸಂಚಲನೆ ಹಾಗೂ ಜೀವನ್ಮುಖಿಯಾಗುವ ಕೌತುಕ ಹಾಗೂ ಮುಗ್ಧತೆಯನ್ನು ನಮ್ಮೊಳಗೆ ಅನಂತವಾಗಿರಿಸಬಲ್ಲದು. ಇಂತಹ ನಿರೀಕ್ಷೆಗಳ ಭಾರದ ಕವಿ ಮನವು ತನ್ನ ಪಾಡುಗಳನ್ನು ಮನುಜಗತವಾಗಿ ಕಾವ್ಯದ ರೂಪದಲ್ಲಿ ವ್ಯಕ್ತವಾಗಬಲ್ಲದು. + +“ತಲೆ ಎತ್ತಿ ಶಾಂತವಾಗಿ ನಿರ್ಭಯದಿಆಡುವ ಕಡಲ ತಡಿಯ ಮಕ್ಕಳತೆಕ್ಕೆಗವಚಿ ಕಬಳಿಸುವ ಮುನ್ನಓ ಅಲೆಯೇ! ನೋಡು ಮೇಲೊಂದು ಸಲಗುಯ್ ಗುಡುತ್ತಿದೆ ಅಸ್ತಿತ್ವದ ಹಾಡು”. + +ನಾಗರಾಜ್ ಬಹಳ ಪ್ರಬುದ್ಧ ಕವಿಯಂತೆಯೇ ಬದುಕಿನ ಗೂಢಾರ್ಥಗಳನ್ನು ಕಾವ್ಯಾತ್ಮಕಗೊಳಿಸುವ ಕೌಶಲ್ಯವನ್ನು ಹೊಂದಿದ್ದಾರೆಂಬ ಮಾತುಗಳನ್ನು ಮೇಲಿನ ರೂಪಕವೇ ಹೇಳುತ್ತದೆ. ಕವಿತೆ ಮನುಕುಲದ ಗೀತೆ ಎಂಬ ಕನ್ನಡ ಕಾವ್ಯ ಪರಂಪರೆಯ ಪುನರಾವರ್ತನೆಯಾಗಬೇಕಾದ ಹಲವು ದನಿ ಸಾಂಧ್ರತೆಗಳನ್ನು ಇವರ ಕವನ ಸಂಕಲನ ಒಳಗೊಂಡಿದೆ. + +ಈ ಕವಿತೆಗಳ ಒಟ್ಟು ಸ್ಥಾಯೀಯೇ ಬಾಳುವೆ ಇಂಗಿತಗಳತ್ತ ಹೊರಳುವುದೇ ಆಗಿದೆ. ಕವಿತೆ ಆಂತರ್ಯವು ವ್ಯಕ್ತಿಯ ಮನೋಪಾತಾಳಿಯಿಂದ ಹೊಮ್ಮಿದ್ದರೂ, ಈ ಆಂತರ್ಯವು ಲಂಕೇಶರು ಹೇಳಿದಂತೆ, ಒಟ್ಟು ಜನಾಂಗದ್ದಾಗಿ ಬದಲಾಗುತ್ತದೆ. ಮನುಷ್ಯ ಜೀವಿತಕಾಲದ ಸಂಘರ್ಷ, ಏದುಸಿರು ಹಾಗೂ ಸಮನ್ವಯದ ಧಾವಂತತೆ, ಮನುಷ್ಯಜೀವನದ ವ್ಯಾಮೋಹ, ಹಪಹಪಿಕೆಗಳು, ಪ್ರೇಮ ಕಾಮದ ಉನ್ಮಾದದ, ಈರ್ಷೆ ಹಾಗೂ ನೈತಿಕ ಅಧಃಪತನ ಹಾಗೂ ನೈತಿಕಪ್ರಜ್ಞೆಯತ್ತ ದಿಟ್ಟತೆ ಹೀಗೆ ಎಲ್ಲವೂ ಕಾವ್ಯದ ಕ್ಯಾನ್ವಾಸ್ ಮೇಲೆ ಬಿಂಬಿತವಾಗಬೇಕು. ಇಂತಹ ಬಿಂಬಗಳು ಶಬ್ಧದ ಅಂತಃಸತ್ವವಾದ ಅರ್ಥದ ದಿಕ್ತಟಗಳನ್ನು ಬಹುವಾಗಿ ವಿಸ್ತರಿಸುವ ಮಹಾಹಂಬಲಗಳ ಒಟ್ಟು ಮೊತ್ತವು ಕವಿತೆಯಾಗಿ ಹೊರ ಹೊಮ್ಮಬೇಕು. + +“ಅನತಿ ದೂರದ ಮೇಲಕೆನಕ್ಷತ್ರ, ಹೊಳಪು, ಸೂರ್ಯಪಾತಾಳ ತಳದ ಕೆಳಗೆವಜ್ರ ವಯ್ಯಾರ, ವೈಡೂರ್ಯ…ಹೀಗೆಎಲ್ಲದರ ಗರ್ಭಕಿರಣಗಳ..” + +ಆಚೆಗೆ ನೋಡುತ್ತಲೇ ಖಾಲಿಯಾಗಿ ನಡೆವ ಜೀವನ ಯಾನದ ಪ್ರತಿಮೆಗಳ ಹಾಗೆ ಕವಿತೆ ಕಾವ್ಯ ನಮಗೆ ಅಲ್ಲಲ್ಲಿ ಭಾಸವಾಗುತ್ತದೆ. ಬಹುಶಃ ಸದ್ದಿಲ್ಲದೆ ಪ್ರವಾದಿಯೋಪಾದಿಯ ಹಾಗೆ ಮಾತಾಡುವ ಇವರ ಕವಿತೆಗಳು ತಣ್ಣಗೆ ಮನತಾಕುತ್ತವೆ. ಕಾವ್ಯ ಶಬ್ಧಾಡಂಬರದ ಕಿಕ್ಕಿರುವಿಕೆ ಹಾಗೂ ರಾಜಕೀಯ ಕ್ಲೀಶೆಗಳಿಗೆ ಸಿಲುಕುವ ಅಪಾಯಗಳಿಂದ ಮುಕ್ತವಾಗಬೇಕು. ಈ ವಿಚಾರದಲ್ಲಿ ನಾಗರಾಜ್ ಕಾವ್ಯಕ್ಕಿರಬೇಕಾದ ಸೂಕ್ಷ್ಮತೆ ಹಾಗೂ ಗ್ರಹಿಕೆಗಳ ಬಗ್ಗೆ ಬಹಳ ಎಚ್ಚರದಲ್ಲಿದ್ದೇನೆ ಎಂಬ ಮುನ್ಸೂಚನೆಯನ್ನು ನೀಡಿದ್ದಾರೆನ್ನಬಹುದು. + +“ನಾನಿಲ್ಲಿ ಹೊಳಪಿನ ಕಿರಣಗಳ ಜೊತೆನಿನ್ನ ಹೊಂದಾಣಿಸುವ ಮಾತಿಗಿಳಿದಿಲ್ಲಮರು ಮಾತು ನಿನ್ನದೇ ಎನ್ನುವ ಒಳಹರಿವು ಅಷ್ಟೆ!” + +(ಪ್ರಕಾಶ್ ಮಂಟೇದ) + +ಅಸಲಿಯಾಗಿ ಇದು ಪ್ರೇಮ ನಿವೇದನೆಯೇ ಆದರೂ ಪರೋಕ್ಷವಾಗಿ ಇದು ಬೇರೆಯದೆ ಅರ್ಥದ ಹೊಳಹನ್ನು ತೋರುತ್ತಿದೆ. ಸಾಮಾಜಿಕ ಕ್ರೌರ್ಯಗಳ ಹೊಸ ಕಾಲದ ಕಾವ್ಯ ಪ್ರತಿರೋಧ ಪ್ರತಿಮೆಗಳನ್ನು ಸೃಷ್ಟಿಸುವ ಪ್ರಯತ್ನವನ್ನು ನಿರ್ವಹಿಸುವ ಪ್ರಾಮಾಣಿಕತೆ ತೋರಿರುವುದು ಬಹಳ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶ. ತನ್ನ ಕಾಲವನ್ನು ಪ್ರಾಮಾಣಿಕವಾಗಿ ಜೀವಿಸಿ, ಮುಖಾಮುಖಿಯಾಗುವ ಎದೆಗಾರಿಕೆಯೂ ಸಹ ಸಾಂಸ್ಕೃತಿಕ ಕವಿ ತಾನು ಒಳಗೊಳ್ಳಬೇಕಾದ ಸಾಮಾಜಿಕ ಕಾಳಜಿ ಹಾಗು ಬದ್ಧತೆಗಳ ಉತ್ತರದಾಯಿತ್ವವೇ ಆಗಿರುತ್ತದೆ. + +ಇತಿಹಾಸ ಒಳಗುಟ್ಟುಗಳ ಜನವಿರೋಧಿ ಪರಂಪರೆಗೆ ವಿರುದ್ಧವಾಗಿ ಹೊಸ ಸೌಹಾರ್ಧತೆಯ ಸಾಧ್ಯತೆಗಳ ಒಟ್ಟು ಮುನ್ನೋಟದ ವಿರಾಟರೂಪಿತನವು ಮಾತ್ರವೇ ಭಾರತದಂತಹ ದೇಶದಲ್ಲಿ ಪ್ರಜಾಪ್ರಭುತ್ವೀಯ ಗುಣದ ರಾಜಕೀಯ ವಿವೇಕದ ಪ್ರತಿಮೆಗಳನ್ನು ಸೃಷ್ಟಿಸಲು ಸಾಧ್ಯ. ಅಪ್ಪನ ಗಿಲಾಸು ಎಂಬುದರ ರೂಪಕವೇ ಇಂತಹ ಸಾಂಸ್ಕೃತಿಕ ಹೊಣೆಗಾರಿಕೆಯ ಜನಲೋಕದ ಪ್ರತಿಮೆಯಾಗಿ ಚರಿತ್ರೆಯ ಹಿಂಸೆ ಮತ್ತು ದಮನಗಳನ್ನು ಪ್ರತಿರೋಧಿಸುತ್ತದೆ. ಇಂತಹ ಸಾಧ್ಯತೆಗಳ ಒಟ್ಟುಮೊತ್ತದ ಧ್ವನ್ಯಾರ್ಥಗಳ ರೂಪವಾಗಿ ಲೋಕಲ್ ಬಸ್ ಕವಿತೆ ಬಹಳ ಮುಖ್ಯವಾಗಿ ಕಾಣುತ್ತದೆ. ತನ್ನ ಜೀವನ ಪರಿಸರದ ಜೊತೆಗಿನ ನಂಟು ಅದು ಸಾವಯವಗೊಳ್ಳುವ ಆಂತರ್ಯದ ಯಾನವೇ ಹೊರತು ಕವಿಗೆ ಅದು ಪ್ರಜ್ಞಾಪೂರ್ವಕವಾಗಿ ಮುಖ್ಯವಾಗುವುದೇ ಇಲ್ಲ. ಸಹಜ ಲಯಗತಿಯ ಭಾಷೆ ಹಾಗೂ ತುಡಿತಗಳ ನಂಟಸ್ಥಿಕೆಯಲ್ಲಿಯೇ ಜೀವನ ಒಂದು ಯಾನ ಎಂಬ ಕವಿತೆಯ ಒಟ್ಟಾರ್ಥವು ಭಾರತೀಯರು ಜೀವನವನ್ನು ಲೀಲೆ ಹಾಗೂ ಚಲನಾತ್ಮಕವಾದ ದರ್ಶನದಲ್ಲಿ ನೋಡಿರುವ ಪರಂಪರೆಯ ಮುನ್ನೋಟಗಳಂತೆ ಈ ಕವಿತೆ ಭಾಸವಾಗುತ್ತದೆ. + +“ಮೂಗಿಲ್ಲದ ಕರಿಗಳ ಮದದ ದಾರಿಗೆಮಸುಕಲಿ ನೇಯ್ದ ನಶೆಯ ಮೂರುಬಟ್ಟೆ ಮೈಗೆವಿಕಾರ ಕಾಳ ನೆರಳು ತೇಯ್ದ ತಿಲಕ ಹಣೆಗೆ..” + +(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್) + +ಇಂತಹ ಶಕ್ತಿಶಾಲಿಯಾದ ರೂಪಕಗಳನ್ನು ಸೃಷ್ಟಿಸುವ ಕವಿ ತಣ್ಣಗೆ ಈ ಗಂಡು ಪ್ರಪಂಚದ ಮನೋವಿಕೃತಗಳನ್ನು ಬಯಲು ಮಾಡುತ್ತಾರೆ. ಬದುಕು ಹೀಗೇಕೆ ಎಂಬ ಪ್ರಶ್ನೆಗಳ ಹಿಂದೆ ಅನಾಥವಾಗುವ ಹೆಣ್ಣು ಸಮುದಾಯದ ಭಿನ್ನ ದನಿಯ ರೂಪಕಗಳು ಅಡಗಿವೆ ಎನ್ನಬಹುದು. ಟಿಕಳಿ ಮಾರುವ ಹುಡುಗಿ, ರೂಮ್ ನಂ-21, ತಿರಸ್ಕೃತ, ಮಡಿಲು ಕವಿತೆಗಳು ಸಾಮಾಜಿಕ ಕ್ರೌರ್ಯದ ವಿರುದ್ಧ ಅಸಂಖ್ಯ ದ್ವನಿಗಳನ್ನೆಬ್ಬಿಸುತ್ತವೆ. + +ತೀರಾ ಒಂದು ಕಾಮನ್ ಕಾವ್ಯಾತ್ಮಕವಾದ ಎಲಿಮೆಂಟಿನಿಂದ ಕಾವ್ಯದ ಬಗ್ಗೆ ಮಾತಾಡುವ ಚಾಳಿಗಳನ್ನು ಬಿಡದೆ ಹೋದರೆ, ಕನ್ನಡ ಕಾವ್ಯವು ಕೇವಲ ಒಂದು ಮೊನಾಟನಿಕ್ಕಾದ ಎಸ್ಥೆಟಿಕ್ಸ್ ನ ವೃದ್ಧ್ಯಾಪ್ಯತನದಲ್ಲಿಯೇ ಸ್ಥಗಿತಗೊಳ್ಳಬೇಕಾಗುತ್ತದೆ. ಇದೊಂತರ ಕೃತಕವಾದ ಈ ವಿಮರ್ಶಕರೆಂಬುವವರಿಂದ ಸೃಷ್ಟಿಯಾಗಿರುವ ಕೃತಕವಾದ ಫಾಗ್ ಎನ್ನಬಹುದು. ಇಂತಹ ಕೃತಕ ಕಾವಳವ ಸರಿಸಿನೋಡಿದರೆ ಮಾತ್ರ ಕನ್ನಡ ಕಾವ್ಯ ಹೊಸ ನಂಟಸ್ಥಿಕೆಯ ಮಗ್ಗಲುಗಳ ಪರಿಚಯವಾಗುತ್ತದೆನ್ನಬಹುದು. + + + +ಅಭಿವ್ಯಕ್ತಿ ಎಂಬುದು ಕವಿಗೆ ಕೇವಲ ವಿಶಿಷ್ಠತೆಯ ಹಂಬಲ ಮಾತ್ರವಾಗಿರದೆ, ತನ್ನ ಹಾಗೂ ತನ್ನನ್ನಾವರಿಸಿರುವ ಲೋಕ ನಂಟಸ್ಥಿಕೆಯ ಸಂಬಂದ ನಿರೂಪಣೆಗಳ ಮೊತ್ತವಾಗಿರುತ್ತದೆ. ಇಲ್ಲಿನ ಬಹುಪಾಲು ಕವಿತೆಗಳು ಕವಿಯ ವಿಶಿಷ್ಠತೆಯ ಹಂಬಲ ಹಾಗೂ ಲೋಕ ನಂಟಸ್ಥಿಕೆಯ ಸಾಂಧ್ರಗೊಂಡ ರೂಪಕಗಳ ಜಗತ್ತನ್ನು ಅನಾವರಣಗೊಳಿಸುತ್ತವೆ. ತಲೆಮಾರಿನ ಹಳಹಳಿಕೆಗಳ ಜೊತೆಗೆ ಕವಿ ತಾನು ಜೀವಂತ ವ್ಯಕ್ತಿತ್ವದ ಶೋದನೆ, ತಾನಂದುಕೊಂಡ ಲೋಕವನ್ನು ತಾನಿರುವ ವಾಸ್ತವದ ಕರಾಳತೆಗಳ ನಡುವೆಯೇ ಗಟ್ಟಿಯಾಗಿ ನೆಲೆ ನಿಲ್ಲುವ ಕಸುವು ಹಾಗೂ ತನ್ನನ್ನಾವರಿಸುವ ಜಡತೆ ಹಾಗು ಸ್ಥಗಿತತೆಗಳನ್ನು ಮೀರಲು ಕಾವ್ಯಾಭಿವ್ಯಕ್ತಿಯತ್ತ ಚಿತ್ತಸ್ಥರಾಗುವುದು ಸಹಜವಾಗಿಯೇ ಎಲ್ಲ ಕವಿಗಳಿಗೂ ಅನ್ವಯಿಸಬಹುದಾದರೂ ಅಪ್ಪನ ಗಿಲಾಸು ಸಂಕಲನವು ಈ ಸಾಧಾರಣವಾದ ಅನ್ವಯಿಕ ಅಂಶಗಳ ಆಚೆಗೂ ಗಮನ ಸೆಳೆಯುತ್ತದೆಂಬುದೇ ವಿಶೇಷ. ಇವರ ಕವಿತೆ ಓದುವ ನೆಪದಲ್ಲಿ ನಾನೇ ಹೆಚ್ಚು ನನ್ನನ್ನು ಲಂಬಿಸಿಕೊಂಡಿದ್ದರೂ, ಅಪ್ಪನ ಗಿಲಾಸು ಹೀಗೆ ನನ್ನನ್ನು ನುಡಿಸಿದೆ ಎಂಬುದು ಸಹ ಸತ್ಯ.. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_428.txt b/Kenda Sampige/article_428.txt new file mode 100644 index 0000000000000000000000000000000000000000..b8c15ba0940386c5851773f746216f76f5239c45 --- /dev/null +++ b/Kenda Sampige/article_428.txt @@ -0,0 +1,45 @@ + + +ಅಮ್ಮ ರಕ್ತ ಮಾಂಸ ತುಂಬಿಕೊಂಡು ಚೆನ್ನಾಗಿದ್ದಾಗ ಆಕೆಗೆ ಒಂದು ಅಭ್ಯಾಸ ಇತ್ತು. ಮನೆಯ ಡ್ರೈವರುಗಳಿಗೆ, ಕೆಲಸದವರಿಗೆ, ಕಕ್ಕಸ್ಸು ತೊಳೆಯುವವಳಿಗೆ, ಕಸ ತೆಗೆಯುವವರಿಗೆ ಎಲ್ಲರಿಗೂ ಮನೆಯಲ್ಲಿ ಮಾಡಿದ್ದು, ಇದ್ದದ್ದು, ಮುಸುರೆ, ಮೈಲಿಗೆ, ತಿಂಡಿ ತೀರ್ಥಗಳನ್ನೆಲ್ಲಾ ಸಮವಾಗಿ ಹಂಚುವುದು. ಆದರೆ, ಎಲ್ಲರನ್ನೂ ಮನೆಯ ಹೊರಗಿನ ಜಗಲಿಯ ಮೇಲೆ ಕೂರಿಸಿ ಬಾಳೆಎಲೆಯಲ್ಲೋ ಅಡಿಕೆಯ ಹಾಳೆಯಲ್ಲೋ ತುಂಬಿಸಿ ಹದಿನಾಲ್ಕಿಂಚು ದೂರದಿಂದ ಅವರುಗಳಿಗೆ ಕ್ಯಾಚ್ ಹಾಕುವುದು. ಪ್ರತಿಬಾರಿ ಕ್ಯಾಚ್ ಹಾಕಿದಾಗಲೂ ಮೈಮೇಲೆ ಏನಾದರೂ ಮುಸುರೆ ಹಾರಿತೇ ಎಂದು ಅನುಮಾನ ಪಡುವುದು. ಮತ್ತೊಮ್ಮೆ ಸ್ನಾನ ಮಾಡಿ ಡ್ರೈವರ್ ‘ಸರತ್’ ಜತೆ ರಾಯರ ಮಠಕ್ಕೆ ಹೋಗುವುದು. ಸರತ್ ತನ್ನ ಗೋರಿಪಾಳಯದ ಕಷ್ಟ ಸುಖವನ್ನೆಲ್ಲಾ ಅಮ್ಮನೊಂದಿಗೆ ಹೇಳುತ್ತಿದ್ದನಂತೆ. ‘ಎಂತ ಪಾಡು ಪಡ್ತಾವಪ್ಪ, ಈ ಹುಡುಗರು’ ಎಂದು ಅಲವತ್ತುಕೊಂಡು ಐವತ್ತೋ ನೂರೋ ಸಾಲ ಕೊಡುವುದು. + +ಸರತ್ ಕಂಡರೆ ಅಮ್ಮನಿಗೆ ಕೊಂಚ ಹೆಚ್ಚೇ ಪ್ರೀತಿ. ಆತನಿಗಾಗಿಯೇ ಒಂದು ಸ್ಟೀಲ್ ಲೋಟವಿತ್ತು. ಅಮ್ಮ ಮಾಡಿದ ಫಿಲ್ಟರ್ ಕಾಫಿ ಮುಂದೆ ಬೈಟುಕಾಫಿಯ ಕಾಫಿ ವೇಸ್ಟು ಎಂದು ಸುರಿಸಿಕೊಂಡು ಕಾಫಿ ಕುಡಿಯುತ್ತಿದ್ದ, ಆತ. ಅನಂತರ ಕುಡಿದ ಲೋಟವನ್ನು ತೊಳೆದು ಹೊರಗೇ ಕಿಟಕಿಯಲ್ಲಿ ಬೋರಲಾಕುತ್ತಿದ್ದ. ಒಮ್ಮೆ ಬೆಂಗಳೂರಿಗೆ ಬಂದಾಗ ಬೀದಿಯಲ್ಲಿ ಕ್ರಿಕೆಟ್ ಆಡುತ್ತಿದ್ದ ನನ್ನ ಮಗ ಅಲ್ಲಿಯೇಇ ದ್ದ ಸರತ್ ನ ಲೋಟದಲ್ಲಿ ನಲ್ಲಿ ನೀರು ಹಿಡಕೊಂಡು ಕುಡಿದ ತಪ್ಪಿಗಾಗಿ ಅಜ್ಜಿಯಿಂದ ಬೈಸಿಕೊಂಡಿದ್ದ. + +ನನ್ನ ಮಗಳು ‘ಅಜ್ಜಿ, ದಿಸ್ ಈಸ್ ಟೋಟಲೀ ರಾಂಗ್’ ಎಂದು ಅಜ್ಜಿಯ ಜತೆ ಜಗಳವಾಡಿ ಕೆಲಸದ ಹುಡುಗಿ ರತ್ನಳಿಗೂ ತನಗೂ ಒಟ್ಟಿಗೆ ತಿಂಡಿಕೊಡಬೇಕೆಂದು ಹಠ ಮಾಡಿದಾಗ ಅಮ್ಮ ಆಕೆಯನ್ನೂ ರತ್ನನ ಜತೆ ಹೊರಗೆ ಕೂರಿಸಿ ದೋಸೆ ಕೊಟ್ಟಿದ್ದಳು. ತಿಂಡಿ ತಿನ್ನುತ್ತಿದ್ದಾಗ ರತ್ನಳಿಗೆ ‘ನೀನು ಇದನ್ನು ಸಹಿಸಿಕೊಳ್ಳಬಾರದು. ಇದು ತಪ್ಪು.’ ಎಂದು ಹೇಳಿದಳಂತೆ. ನನ್ನ ಹತ್ತಿರ ಹೇಳಿದ್ದಳು. ‘ಡ್ಯಾಡಿ, ಅಜ್ಜಿ ಇರೋದೇ ಹಾಗೆ. ಅದರ ಜತೆಜತೆಗೂ ಶಿ ಹ್ಯಾಸ್ ಅ ಬಿಗ್ ಹಾರ್ಟ್ ಅಂತೆ. ಅದು ಸಾಕಾ. ಟ್ರಂಪ್ ಏನು ಮಾಡಿದರೂ ಎಕಾನಮಿ ಸುಧಾರಿಸಿದ್ಯಲ್ಲ ಸಾಕು ಎಂದ ಹಾಗಲ್ವ, ಈ ವಾದ’ ಎಂದಿದ್ದಳು. ನಾನು ಮಾತಾಡಿರಲಿಲ್ಲ. ಹಿಂದೆಲ್ಲಾ ಅಮ್ಮನ ಜತೆ ಮಾತಾಡಿ ಸೋತಿದ್ದೆ. + +ಅಮ್ಮರಕ್ತ ಮಾಂಸ ಕಳಕೊಂಡು ಆರು ತಿಂಗಳಾಗಿತ್ತು. ಇದ್ದದ್ದು ಬರೀಚರ್ಮ ಮತ್ತು ಮೂಳೆ. ಕಾಯಿಲೆ, ಮೂಗಿನ ನಳಿಕೆಯಿಂದ ಸಿಗುವ ದ್ರವ ಮಾತ್ರ ಆಹಾರ. ಎಲ್ಲವೂ ಆಕೆಯನ್ನು ಜರ್ಝರಿತಗೊಳಿಸಿದ್ದವು. ಆದರೂ ಬಂದವರಿಗೆ ಕಾಫಿ ಕುಡಕೊಂಡು ಹೋಗಿ ಎನ್ನುವುದನ್ನು ಸಂಜ್ಞೆಯಿಂದಲೇ ಸೂಚಿಸುತ್ತಿದ್ದಳು. ಅಮ್ಮನ ಆಸರೆಯಾಗಿದ್ದ ಮನೆಯ ಹುಡುಗಿಗೆ ಒಂದು ಲುಕ್ ಕೊಡುತ್ತಿದ್ದಳು. ಆ ಲುಕ್ ಬಂದಾಕ್ಷಣ ಆ ಹುಡುಗಿ ಸರತ್ ಇತ್ಯಾದಿಗಳು ಕಾಫಿಕುಡಿದ ಲೋಟವನ್ನು ಹೊರಗೆ ಬೋರಲು ಹಾಕಿದ್ದಾರೆ ಎಂದು ನೋಡಿಕೊಂಡು ಬಂದು ಇನ್ನೊಂದು ಲುಕ್ ಕೊಟ್ಟಾಗ ಮಾತ್ರ ಆಕೆಗೆ ಸಮಾಧಾನ. + +ಆರು ತಿಂಗಳು ನಳಿಕೆಯಿಂದ ಊಟ ಮಾಡಿಸುತ್ತಿದ್ದುದು ಶಾರದಾ ಎಂಬ ನರ್ಸ್. ಮದ್ದೂರಿನ ಕಡೆಯವಳು. ಬಹಳ ಚೆನ್ನಾಗಿ ನೋಡಿಕೊಂಡಳು. ಆದರೆ ಅಮ್ಮ ಆಕೆಯನ್ನು ಕರೆಯುತ್ತಿದ್ದುದು ರಾಧಿಕಾ ಎಂದು. ಅಮ್ಮನ ಅನೇಕ ಹೆಲುಸಿನೇಶನ್ನುಗಳಲ್ಲಿ ಇದೂ ಒಂದು ಎಂದು ನಾನು ನನ್ನ ಡಾಕ್ಟರೀ ಅಭಿಪ್ರಾಯವನ್ನು ಕೊಟ್ಟರೆ ನನ್ನ ತಮ್ಮ, ನಾಗಮಂಗಲದಲ್ಲಿದ್ದಾಗ ನಮ್ಮ ಮನೆಯ ಪಕ್ಕದಲ್ಲಿದ್ದ ರಾಘವೇಂದ್ರರಾಯರ ಮಗಳ ಹೆಸರು ರಾಧಿಕಾ ಎಂದು ಹೇಳುತ್ತಿದ್ದ. ಇದರ ಹಿಂದಿನ ಸತ್ಯವನ್ನು ನಿರೂಪಿಸುವುದು ಕಷ್ಟ. `ಪಿತೃಪಕ್ಷದ ಬಾಡೂಟ’ವನ್ನು ಒಮ್ಮೆಯೂ ತಪ್ಪಿಸದ ಶಾರದಾ ರಾಘವೇಂದ್ರರಾಯರ ಮಗಳು ರಾಧಿಕಾ ಆದದ್ದು ಅಮ್ಮನ ಅಸಹಾಯಕ ಮತ್ತು ಅನುಕೂಲದ ವಿಸ್ಮೃತಿಗಳಲ್ಲೊಂದು. + +ಹೋದ ಬಾರಿ ನಾನು ಬಂದಾಗ ಅಮ್ಮನಿಗೆ ತೆಳ್ಳಗಿನ ಸಜ್ಜಿಗೆ ಮಾಡಬೇಕೆಂದು ಪ್ರಯತ್ನಿಸುತ್ತಿದ್ದೆ. ಅಡುಗೆಮನೆಯ ಬಾಗಿಲಲ್ಲಿಯೇ ನಿಂತ ಶಾರದಾ ನನಗೆ ಹೇಗೆ ಮಾಡಬೇಕೆಂದು ನಿರ್ದೇಶಿಸುತ್ತಿದ್ದಳು. ‘ನಾನು ಈ ಮಡಿ ಮೈಲಿಗೆ ಎಲ್ಲ ನೋಡೊಲ್ಲ. ನೀನೇ ಮಾಡು, ಬಾ’ ಎಂದು ಕರೆದಾಗ ಆಕೆ, ‘ಬೇಡ ಸರ್, ಆಂಟಿ ಮನಸ್ಸಿಗೆ ಬೇಜಾರು ಆಗಬಹುದಲ್ಲವಾ?’ ಎಂದಳು. ಅಮ್ಮನಿಗೆ ಯಾರು ಏನು ತಿನ್ನಿಸುತ್ತಿದ್ದಾರೆ ಕುಡಿಸುತ್ತಿದ್ದಾರೆ ಎನ್ನುವುದು ಅರ್ಥವಾಗುವುದು ಸಾಧ್ಯವೇ ಇರಲಿಲ್ಲ.ಅಮ್ಮ ಸತ್ತಿದ್ದಳು. + +(ಗುರುಪ್ರಸಾದ್ ಕಾಗಿನೆಲೆ) + +ಯಥಾಪ್ರಕಾರ ಐಸ್ ಬಾಕ್ಸ್, ಬೆಂಗಳೂರಿನ ಡಿಮ್ ಅಂಡ್ ಡಿಪ್ ವಿದ್ಯುತ್ತಿಗೆ ಅನುಸರಿಸಿದ ಯುಪಿಎಸ್, ತುರ್ತು ವಿಮಾನ ಹಿಡಿದು ಬಂದ ನಾವುಗಳು. ಬಂದು ನೋಡಿದಾಗ ಅಮ್ಮನಿಗೆ ತಂದಿದ್ದ ಐಸ್ ಬಾಕ್ಸು ಭಾರಿದೊಡ್ಡದಾಗಿ ಕಾಣಿಸಿತು. ಅಮ್ಮ ಇದ್ದಿದ್ದು ಕೇವಲ ಮೂವತ್ತು ಕಿಲೋ. + +ಅಮ್ಮ ಬಹಳ ಕಾಲ ಅನಾರೋಗ್ಯದಿಂದ ಇದ್ದುದರಿಂದ ನೋಡಿಕೊಂಡು ಹೋಗಲು ಬಂದಿದ್ದವರೆಲ್ಲ ‘ಹೋಗಲಿ ಬಿಡು, ಮುಕ್ತಿ.’ ‘ಗೆದ್ದುಕೊಂಡಳು, ಆಕೆ’ ಎನ್ನುವುದರಜತೆಗೆ ಇನ್ನಾರೋ ಒಬ್ಬರು, ‘ಗೆದ್ದುಕೊಂಡಿರಿ ಬಿಡ್ರಪ್ಪ ನೀವು’ ಎಂದರು. ನಾನು ಆ ಮಾತಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ಯೋಚಿಸುತ್ತಿದ್ದೆ. + +ನೆಂಟರೆಲ್ಲ ಅಮ್ಮನ ಬಾಯಿಗೆ ಅಕ್ಕಿಕಾಳು ಹಾಕುತ್ತಿದ್ದರು. ಬಂದ ಸಂಬಂಧಿಗಳಲ್ಲಿ ಅಕ್ಕತಂಗಿಯರಿಬ್ಬರು ಪುರೋಹಿತರಜತೆ ಧರ್ಮಜಿಜ್ಞಾಸೆ ನಡೆಸಿದ್ದರು. ಅಕ್ಕ ಉತ್ತರಾದಿ ಮಠ, ತಂಗಿರಾಯರ ಮಠ. ಅಂದುಉತ್ತರಾದಿ ಮಠಕ್ಕೆ ಏಕಾದಶಿಯಂತೆ. ರಾಯರ ಮಠಕ್ಕೆ ದ್ವಾದಶಿ. ಏಕಾದಶಿ ಇದ್ದವರು ಅಮ್ಮನ ಬಾಯಿಗೆ ಅಕ್ಕಿಕಾಳು ಹಾಕಬಾರದಂತೆ. ಆದರೆ ಹಿರಿಮಗಳು, ಅಕ್ಕಿ ಹಾಕಲೇಬೇಕೆಂದು ಹಟ. ತನ್ನನ್ನು ಅವರಪ್ಪ, ಅಮ್ಮ ಉತ್ತರಾದಿ ಮಠಕ್ಕೆ ಯಾಕೆ ಕೊಟ್ಟರೋ ಎಂದು ಪೇಚಾಡಿಕೊಂಡಳು. ಪುರೋಹಿತರಿಗೆ ಇಲ್ಲಿ ಏನಾದರೂ ಶಾರ್ಟ್ಕಟ್ ಇದೆಯಾ ಎಂದು ಕೇಳಿದಾಗ ಪ್ರಗತಿಪರ ಪುರೋಹಿತರು ‘ನಿಮಗೆ ಮಠ ಮುಖ್ಯಾನೋ, ಸತ್ತವರು ಮುಖ್ಯಾನೋ’ ಎಂದು ರಾಮಾಚಾರಿಯ ಚಾಮಯ್ಯ ಮೇಷ್ಟರು ಮಧ್ವಾಚಾರ್ಯರಿಗೆ ಕೇಳಿದಂತೆ ಕೇಳಿದರು. ಸದ್ಯ ಆಕೆ ರಾಮಾಚಾರಿಯ ಅಪ್ಪನಷ್ಟು ಕರ್ಮಠಳಾಗಿರದೇ ಇದ್ದುದರಿಂದ ಅಕ್ಕಿಕಾಳು ಹಾಕಿ ಹೋದಳು. + +ಅಮ್ಮನ ದಹನಕಾರ್ಯವೆಲ್ಲ ಮುಗಿಸಿ ಅಸ್ಥಿ ವಿಸರ್ಜನೆಗೆಂದು ಶ್ರೀರಂಗಪಟ್ಟಣದ ಸಂಗಮಕ್ಕೆ ಹೋಗಿದ್ದೆವು. ಎಲ್ಲ ಆದಮೇಲೆ ಜತೆಗೆ ಬಂದ ನಮ್ಮ ಭಾವ ಈ ‘ಸ್ಮಶಾನದ ಕೆಲಸ ಆದಮೇಲೆ ಅದ್ಯಾಕೋ ಗೊತ್ತಿಲ್ಲ. ಭಯಂಕರ ಹಸಿವಾಗುತ್ತೆ ನೋಡು’ ಎಂದರು. ಇನ್ನೊಬ್ಬರು ಅದನ್ನು ಅನುಮೋದಿಸಿದರು. ಆಗತಾನೇ ಅಮ್ಮನ ಅಸ್ಥಿ ವಿಸರ್ಜಿಸಿದ ನಮಗೆ ಮಿಶ್ರಭಾವ. ಆದರೂ ಹೊಟ್ಟೆ ಕೇಳಬೇಕಲ್ಲ. ನಮ್ಮ ಬಂಧುಗಳು ಇದನ್ನು ಮುಂಚೆಯೇ ನಿರೀಕ್ಷಿಸಿ ಶ್ರೀರಂಗಪಟ್ಟಣದ ಉತ್ತರಾದಿ ಮಠದಲ್ಲಿ ನಮಗೆ ಊಟದ ವ್ಯವಸ್ಥೆಯನ್ನು ಮಾಡಿದ್ದರು. + +ಉತ್ತರಾದಿ ಮಠಕ್ಕೆ ಹೋದಾಗ ಅಲ್ಲಿ ನಮ್ಮನ್ನೇ ನಿರೀಕ್ಷಿಸಿದ್ದಂತೆ, ಒಬ್ಬರು ಮಡಿಹೆಂಗಸರು ‘ಮೈಲಿಗೆಯವರಾ ಬನ್ನಿ, ಬನ್ನಿ. ಏನನ್ನೂ ಮುಟ್ಟಿಸಿಕೊಳ್ಳಬೇಡಿ. ಈ ಕಡೆಯಿಂದ ಬಂದು ಆ ಗೋಡೆಬದಿಯಲ್ಲಿ ಏನನ್ನೂ ಮುಟ್ಟದಂಗೆ ಕೂತುಕೊಳ್ಳಿ’ ಎಂದು ಕೂರಿಸಿ ಐದು ಬಾಳೆಲೆಯನ್ನು ನಮ್ಮತ್ತ ದೂರದಿಂದ ಸೋಕದಂತೆ ಹಾಕಿದರು. + + + +ಎಲೆಗಳನ್ನು ನೆಲಕ್ಕೆ ಬೀಳದಂತೆ ಹಿಡಿದ ನಾವು ಎಲೆ ಒರೆಸಿ ಕೂತೆವು. ಒಳಗಿನಿಂದ ಇನ್ನೊಬ್ಬರು ಹೆಂಗಸು ಅಂಗಾರ ಇಟ್ಟುಕೊಂಡು ಬಂದರು. ಪಕ್ಕದಲ್ಲಿ ಕೂತಿದ್ದ ನಮ್ಮ ಭಾವ ‘ಆಕೆಯ ಗಂಡ ಸನ್ಯಾಸಿಯಾದರಂತೆ. ಆದರೆ ಪೀಠ ಸಿಕ್ಕಲಿಲ್ಲ. ಹರಿಚಿತ್ತ ಸರಿಇರದೆ ಬೃಂದಾವನಸ್ಥರಾದರು. ಹಾಗಾಗಿ ಈಗ ಮಠದ ಕೆಲಸ ಮಾಡಿಕೊಂಡಿದ್ದಾರೆ’ ಎಂದರು. + +ನಾನು ‘ಮಠದ ಕೆಲಸ ಎಂದರೆ?’ + +‘ಹೀಗೇ ಮೈಲಿಗೆಯವರಿಗೆ ಅಡುಗೆ ಮಾಡುವುದು. ಬಡಿಸುವುದು, ಇತ್ಯಾದಿ’ ಎಂದರು, ಭಾವ. + +ಅಜ್ಜಿ, ‘ಚೆನ್ನಾಗಿ ಊಟಮಾಡಿ, ಏ ಮೀನಾಕ್ಷೀ… ತೊವ್ವಿ, ಪಲ್ಯದ ಬಟ್ಟಲೆಲ್ಲ ಖಾಲಿ ಮಾಡಿಬಿಡು. ಇಂದು ಬೇರೆಯಾರೂ ಇಲ್ಲ. ಬರೇ ಇಷ್ಟು ಜನ ಮಾತ್ರ.’ ಎಂದರು. ಮೀನಾಕ್ಷಿಯವರು ಯಾವುದೂ ದಂಡವಾಗದಂತೆ ಎಲ್ಲ ಬಡಿಸಿದರು. + +ನಮ್ಮ ಪಕ್ಕದಲ್ಲಿಯೇ ನಮ್ಮನ್ನು ಕಾಯುತ್ತಾಕೂತ ಅಜ್ಜಿ ಪುಷ್ಕಳವಾದ ಊಟದ ಅನಂತರ ನಾನು ಹಿಂದೆಮುಂದೆ ನೋಡದೇ ಏಳಲು ಹೋದಾಗ ‘ಹಾಗೇ ಏಳೋದಲ್ಲ. ನಿಮ್ಮ ಎಲೆ ಎತ್ತಬೇಕು’ ಎಂದರು. ನಾನು ಎಲೆ ಮುದುರಿ ಕೈಗೆತ್ತಿಕೊಂಡಾಗ ‘ಏ ಒಂದು ನಿಮಿಷ ಹೋಗಬೇಡಿ, ಅಲ್ಲೇ ನಿಲ್ಲಿ.’ ಎಂದು ನನ್ನ ತಮ್ಮನಿಗೆ, ‘ನೀ ಹೋಗಿ ಅಲ್ಲಿ ಹೊರಗಿರೋ ಪ್ಲಾಸ್ಟಿಕ್ ಟಬ್ ತಗಂಬಾಪ್ಪಾ’ ಎಂದರು. ಅಲ್ಲಿ ಪಾತ್ರೆ ತೊಳೆಯುತ್ತಾ ಕೂತಿದ್ದ ಇನ್ನೊಬ್ಬ ಕಚ್ಚೆಸೀರೆಯಾಕೆ ಟಬ್ ತೋರಿಸಿ ಅದರ ಮೇಲಿದ್ದ ಹಳೇ ಒರೆಸುವ ಬಟ್ಟೆಯನ್ನೂ ತೆಗೆದುಕೊಂಡು ಹೋಗಿ ಎಂದು ಹೇಳಿದರು. + +ಟಬ್ ಬಂದ ಮೇಲೆ ಐದೂ ಎಲೆ ಎತ್ತಿ ನನ್ನತಮ್ಮ ಗೋಮಯ ಮಾಡಿದ. ನಾನು ನೀಟಾಗಿ ಒರೆಸಿದೆ. ಹೊರಗೆ ಹೋಗಬೇಕಾದರೆ ಅಲ್ಲಿ ಪಾತ್ರೆ ತೊಳೆಯುತ್ತಿದ್ದ ಹೆಂಗಸೊಬ್ಬರು ‘ನೀವು ಕುಡಿದ ನೀರಿನ ಲೋಟವನ್ನು ತೊಳೆದು ಬೋರಲು ಹಾಕಿಬಿಡಿ. ಮತ್ತು ಆ ಒರೆಸುವ ಬಟ್ಟೆಯನ್ನು ಚೆನ್ನಾಗಿ ಕಸಗಿ ಹಿಂಡಿ ಆ ಬೋರಲು ಟಬ್ಬಿನ ಮೇಲೇ ಒಣಹಾಕಿ ಹೋಗ್ರಪ್ಪ’ ಎಂದರು. + + + +ಆಗ ತಾನೇ ಅಸ್ಥಿ ವಿಸರ್ಜನೆ ಮಾಡಿದ್ದ ಅಮ್ಮರಕ್ತ ಮಾಂಸತುಂಬಿಕೊಂಡು ಮತ್ತೆ ಪ್ರತ್ಯಕ್ಷಳಾದಳು ಅನ್ನಿಸಿತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_429.txt b/Kenda Sampige/article_429.txt new file mode 100644 index 0000000000000000000000000000000000000000..618cefce65092c3f2548bbb8f685903981b54391 --- /dev/null +++ b/Kenda Sampige/article_429.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|Jan 20, 2019|ವಾರದ ಕಥೆ,ಸಾಹಿತ್ಯ| 0 Comments + +“ನೀನೊಂದು ಸಣ್ಣ ಮಗು! ನಿನಗೇನೂ ಗೊತ್ತಿಲ್ಲ. ನಾನು ಕಲಿಸುತ್ತೇನೆ! ನಾನು ಕಲಿಸಿದ್ದನ್ನು ಕಲಿಯದೆ ಚಂಡಿ ಹಿಡಿಯಬೇಡ!” ಎನ್ನುತ್ತಾ ಕೆಲೆನ್ ಕಿಲಕಿಲನೇ ನಕ್ಕಳು. ಅವಳ ಬಿಳಿಯ ಬಾಹುಗಳು ಬಾಬುರಾಯನ ಕಂಠವನ್ನು ಬಿಗಿದವು.” + +byಕೆಂಡಸಂಪಿಗೆ|Jan 18, 2019|ದಿನದ ಪುಸ್ತಕ,ಸಾಹಿತ್ಯ| 0 Comments + +“ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು!” + +byಎ. ಎನ್. ಪ್ರಸನ್ನ|Jan 13, 2019|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 0 Comments + +“ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ.” + +byಡಾ. ಬಿ. ಜನಾರ್ದನ ಭಟ್|Jan 6, 2019|ವಾರದ ಕಥೆ,ಸಾಹಿತ್ಯ| 0 Comments + +”ಭೋಜ ಶೆಟ್ಟಿಗೆ ಸಾಂತೇರುಗುತ್ತಿನ ಗೌರವಕ್ಕೆ ಚ್ಯುತಿ ಬರುವ ಪ್ರಸಂಗ ಏನಾದರೂ ನಡೆಯಬಾರದೇ ಎಂಬ ದುರಾಲೋಚನೆ ಸದಾ ಕಾಡುತ್ತಿತ್ತು. ಅದಕ್ಕಾಗಿ ಅವನು ಕಾಯುತ್ತಿದ್ದನೆನ್ನುವಂತೆ ಇದ್ದಾಗ, ಮಂಗಳೂರಿಗೆ ಹೊಸತಾಗಿ ರೈಲು ಸರ್ವಿಸ್ ಪ್ರಾರಂಭವಾಗುವ ಸುದ್ದಿ ಬಂತು. “ + +byಕೆಂಡಸಂಪಿಗೆ|Dec 31, 2018|ದಿನದ ಪುಸ್ತಕ,ಸಾಹಿತ್ಯ| 0 Comments + +”ಆ ಮರಣಕ್ಕೆ ನೇರ ಸಾಕ್ಷಿಯಾದ ನಾನು ತಲ್ಲಣಿಸಿ ಹೋದೆ. ನಾನಷ್ಟೇ ಅಲ್ಲ ನನ್ನೊಡನೆ ನಿಂತಿದ್ದ ಎಲ್ಲರೂ… ಹೆಂಗಸೊಬ್ಬಳ ಚೀತ್ಕಾರ ಕೇಳಿತು. ರಾಜ್ ಮೈದಾನಿ ಪ್ರಜ್ಞೆತಪ್ಪಿ ಕುಸಿದುಬಿದ್ದರು. ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕುಜನ ರಾಜ್ ಎಂದು ಜೋರಾಗಿ ಕೂಗಿ ಅವರ ಸುತ್ತುವರೆದು ನಿಂತರು.” + +byಮಂಜುನಾಯಕ ಚಳ್ಳೂರು|Dec 30, 2018|ವಾರದ ಕಥೆ,ಸಾಹಿತ್ಯ| 2 Comments + +“ಅವತ್ತು ರಾತ್ರಿ ಅವನಿಗೆ ಆ ಕನಸು ಬೀಳಲಿಲ್ಲ. ಆದರೆ ಅದರ ವಾಸನೆ ಮಾತ್ರ ಹಿಂಬಾಲಿಸುತ್ತಲೇ ಇತ್ತು. ಏನೇನೋ ಪ್ರಯತ್ನಗಳನ್ನು ಮಾಡಿದರೂ ಅದರ ವಾಸನೆಯಿಂದ ತಪ್ಪಿಸಿಕೊಳ್ಳಲು ಆಗದೆ ಹೈರಾಣಾದ. ಯಾರೊಂದಿಗೂ ಹಂಚಿಕೊಳ್ಳುವುದಿರಲಿ, ಅದನ್ನ ಮತ್ತೊಮ್ಮೆ ನೆನಪಿಸಿಕೊಂಡರೇನೇ ಪ್ರಾಣ ಹೋದಂತಾಗುವ ಕನಸು ಅದಾಗಿತ್ತು.” + +byಡಾ. ಬಿ. ಜನಾರ್ದನ ಭಟ್|Dec 23, 2018|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 0 Comments + +”ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ” + +byದೇವನೂರ ಮಹಾದೇವ|Dec 16, 2018|ವಾರದ ಕಥೆ,ಸಾಹಿತ್ಯ| 0 Comments + +ಕತ್ತಲು ಕವಚುತ್ತಲೆ ‘ನಮ್ಮ ಸೂರ್‍ಯಪ್ನ ಕಿತ್ಕೊಂಡವ ಯಾರ್‍ಲ’ ಬೀರ ನಿಧಾನವಾಗಿ ಕೇಳಿದನು. ಲಕ್ಷ್ಮಿಗೆ ತಡೆಯಲಾಗಲಿಲ್ಲ. ನಗುಬಂತು, ಗಟ್ಟಿಯಾಗಿ ನಕ್ಕು ಬಿಟ್ಟಳು. ‘ನಕ್ತಿಯಾ? ನಗು ನಗು, ನೀನೆಲ್ಲೊ ರಾವುಗೀವು ಇರ್‍ಬೇಕು. ‘ ಅದಕ್ಕೂ ಲಕ್ಷ್ಮಿ ಕಿಸಕಿಸ ನಕ್ಕಳು. ‘ನೀ ಎಲ್ಲೋದ್ರೂ ಬುಡಕಿಲ್ಲ ನೋಡು.” + +byಕೆಂಡಸಂಪಿಗೆ|Dec 10, 2018|ದಿನದ ಪುಸ್ತಕ,ಸಾಹಿತ್ಯ| 0 Comments + +“ರಮೇಶ ಅವರಿಗೆ ಪಾಶ್ಚಾತ್ಯ ತತ್ವಪರಂಪರೆಗಳ ಕಾವ್ಯ ಪರಂಪರೆಗಳ ಒಡನಾಟವಿದೆ.ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ಅಂತಹ ಅನುಸಂಧಾನದ ಮೂಲಕ ಮಾತ್ರ ದೇಸಿ ಕಾವ್ಯ ಮೀಮಾಂಸೆಗಳೊಡನೆ ಮಾತುಕತೆ ಸಾಧ್ಯವಾಗುತ್ತದೆ.” \ No newline at end of file diff --git a/Kenda Sampige/article_43.txt b/Kenda Sampige/article_43.txt new file mode 100644 index 0000000000000000000000000000000000000000..633c0854faa93610a5bd4bff3f0c76708a6689ab --- /dev/null +++ b/Kenda Sampige/article_43.txt @@ -0,0 +1,9 @@ +ಒರಿಸ್ಸಾವನ್ನು `ಉತ್ಕಲ’- ಸುಂದರ ಕಲೆಗಳ ನಾಡು ಎಂದೂ ಕರೆಯಲಾಗುತ್ತದೆ. ಅಲ್ಲಿನ ದೇವಾಲಯಗಳು ತಮ್ಮ ವಾಸ್ತುಶೈಲಿ ಹಾಗೂ ಶಿಲ್ಪಕಲೆಯಿಂದಾಗಿ ವಿಶ್ವವಿಖ್ಯಾತವಾಗಿವೆ. ಆ ದೇಗುಲಗಳ ಕಲಾ ಸಿರಿವಂತಿಕೆಗೆ ಹಾಗೂ ತಾಂತ್ರಿಕ ಅದ್ಭುತಕ್ಕೆ ಸರಿಸಾಠಿಯಾದುದಿಲ್ಲ. ಒರಿಸ್ಸಾದ ರಾಜಧಾನಿಯಾಗಿರುವ ಭುವನೇಶ್ವರದಲ್ಲಿ ಸುಮಾರು ಐದುನೂರು ದೇವಾಲಯಗಳಿದ್ದು ಆ ನಗರವನ್ನು `ದೇವಾಲಯಗಳ ನಗರ’ವೆಂದೇ ಕರೆಯಲಾಗುತ್ತದೆ. ಭುವನೇಶ್ವರವನ್ನು ದೇವಾಲಯಗಳ ಮ್ಯೂಸಿಯಂ ಎಂದೇ ಹೇಳಬಹುದು, ಏಕೆಂದರೆ ಒರಿಸ್ಸಾದ ದೇವಾಲಯಗಳ ವಾಸ್ತುಕಲೆ ಆರಂಭವಾದಂದಿನಿಂದ (ಕ್ರಿ.ಶ. 6ನೇ ಶತಮಾನ) ಅಂತ್ಯದವರೆಗೂ (ಕ್ರಿ.ಶ. 13ನೇ ಶತಮಾನ) ನಿರ್ಮಿತವಾಗಿರುವ ದೇವಾಲಯಗಳು ವಾಸ್ತು ವಿನ್ಯಾಸದ ವಿಕಾಸದ ಮಾದರಿಗಳಾಗಿ, ಕಲಾಮಂದಿರಗಳಾಗಿ ನಿಂತಿವೆ. ಭುವನೇಶ್ವರಕ್ಕೆ 60 ಕಿ.ಮೀ. ದೂರದಲ್ಲಿರುವ ಕೊನಾರ್ಕ್‌ನಲ್ಲಿನ 13ನೇ ಶತಮಾನದಲ್ಲಿ ನಿರ್ಮಿತವಾಗಿರುವ ಸೂರ್ಯ ದೇವಾಲಯ ತನ್ನ ಅಗಾಧತೆ ಹಾಗೂ ಶಿಲ್ಪಕಲೆಯ ಸೌಂದರ್ಯದಿಂದಾಗಿ ಪ್ರಖ್ಯಾತವಾಗಿದೆ. ಪುರಿ, ಭುವನೇಶ್ವರದಿಂದ 60 ಕಿ.ಮೀ. ದೂರದಲ್ಲಿದ್ದು ಅಲ್ಲಿನ ಜಗನ್ನಾಥ ಮಂದಿರದಿAದಾಗಿ ಹಿಂದೂ ಭಕ್ತಾದಿಗಳಿಗೆ ಪುಣ್ಯಕ್ಷೇತ್ರವಾಗಿದೆ. ಈ ಮೂರೂ ಪ್ರಸಿದ್ಧ ಸ್ಥಳಗಳನ್ನು ಪ್ರವಾಸಿಗಳ ದೃಷ್ಟಿಯಿಂದ `ಸುವರ್ಣ ತ್ರಿಕೋನ’ವೆಂದು ಕರೆಯುತ್ತಾರೆ. + +(ಡಾ. ಜೆ. ಬಾಲಕೃಷ್ಣ) + +ಭುವನೇಶ್ವರದಲ್ಲಿ 500ಕ್ಕೂ ಹೆಚ್ಚು ದೇವಾಲಯಗಳಿದ್ದರೂ ಸಹ ಅವುಗಳಲ್ಲಿ ಲಿಂಗರಾಜ ದೇವಾಲಯ ವಾಸ್ತುಶೈಲಿಯ ದೃಷ್ಟಿಯಿಂದ ಪ್ರಾಮುಖ್ಯತೆ ಪಡೆದಿದೆ. ಒರಿಸ್ಸಾದಲ್ಲಿ ನಿರ್ಮಿತವಾಗಿರುವ ಮೊಟ್ಟಮೊದಲ ಅತಿ ದೊಡ್ಡ ದೇವಾಲಯವಾಗಿರುವುದಲ್ಲದೆ, ಒರಿಸ್ಸಾದ ಶೈವ ದೇವಾಲಯಗಳಲ್ಲಿಯೇ ದೊಡ್ಡ ದೇವಾಲಯವಾಗಿರುವ ಲಿಂಗರಾಜ ದೇವಾಲಯ `ಕಳಿಂಗ ವಾಸ್ತುಶೈಲಿ’ಯ ಅತಿ ಸುಂದರ ಉದಾಹರಣೆಯಾಗಿದೆ. ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ಒರಿಸ್ಸಾ ದೇವಾಲಯಗಳ ವಾಸ್ತು ಶಿಲ್ಪ ನಿರ್ಮಾಣ 11ನೇ ಶತಮಾನದಲ್ಲಿ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಯಿತು. + +ಸೋಮವಂಶಿ ದೊರೆಗಳು ಕ್ರಿ.ಶ. 11ನೇ ಶತಮಾನದಲ್ಲಿ ಲಿಂಗದೇವರಾಜ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಮಹಾನದಿ ಕಣಿವೆಯ ಮೇಲ್ಭಾಗದಲ್ಲಿ ರಾಜ್ಯವಾಳುತ್ತಿದ್ದ ಸೋಮವಂಶಿಗಳು ಕಣಿವೆಯ ಕೆಳಭಾಗದಲ್ಲಿ ಹಾಗೂ ಕರಾವಳಿಯ ಉತ್ಕಲವನ್ನು ಗೆದ್ದು ಅಲ್ಲಿಯೂ ತಮ್ಮ ಸಾಂಪ್ರದಾಯಕ ದೇವಾಲಯ ನಿರ್ಮಾಣವನ್ನು ಮುಂದುವರೆಸಿದರು. ಅವರ ಆಶ್ರಯದಲ್ಲಿಯೇ ಒರಿಸ್ಸಾದ ದೇವಾಲಯಗಳ `ಕಳಿಂಗ ಶೈಲಿ’ ವಿಕಾಸಗೊಂಡು ಅಂತಿಮ ರೂಪ ಪಡೆದು ಉತ್ತುಂಗಕ್ಕೇರಿತು. 54.86 ಮೀಟರ್ ಎತ್ತರದ ಅಂಗುಲ ಅಂಗುಲವೂ ಕೆತ್ತನೆಯ ಶಿಖರವಿರುವ ಲಿಂಗರಾಜದೇವಳದ ಮುಖ್ಯ ದೇಗುಲ ಪಂಚ ರಥ ಮಾದರಿಯದು. ಅದಕ್ಕೆ ಹೊಂದಿಕೊಂಡಂತೆ ಜಗಮೋಹನ, ನಾಟ್ಯಮಂದಿರ ಹಾಗೂ ಭೋಗ ಮಂಟಪಗಳಿವೆ. ಅವುಗಳಲ್ಲಿ ನಾಟ್ಯಮಂದಿರ ಹಾಗೂ ಭೋಗಮಂಟಪಗಳನ್ನು ನಂತರದ ಸಮಯದಲ್ಲಿ ನಿರ್ಮಿಸಲಾಗಿದೆಯೆಂದು ನಂಬಲಾಗಿದೆ. ಲಿಂಗರಾಜ ದೇವಾಲಯದ ಆವರಣದಲ್ಲಿ ಹಲವಾರು ಸಣ್ಣ ಸಣ್ಣ ದೇವಾಲಯಗಳಿವೆ. ಅವುಗಳಲ್ಲಿ ಮುಖ್ಯವಾದುವು ಚಂಡೇಶ್ವರ ದೇವ ದೇವಾಲಯ, ಗೋಪಾಲುಣಿ ದೇವಾಲಯ, ಲಡುಕೇಶ್ವರ ದೇವಾಲಯ, ಪಾರ್ವತಿ ದೇವಾಲಯ, ಸಾವಿತ್ರಿ ದೇವಿ ದೇವಾಲಯ, ಸಕ್ರೇಶ್ವರ್ ದೇವಾಲಯ ಹಾಗೂ ಸತಿ ದೇವಿ ದೇವಾಲಯ. ಲಿಂಗರಾಜ ದೇಗುಲದ ಅಗಾಧತೆ ನೋಡುಗರನ್ನು ಬೆರಗುಗೊಳಿಸುತ್ತದೆ. ಅದರ ಕುಸುರಿಯಂಥ ಕೆತ್ತನೆ ಹಾಗೂ ಶಿಲ್ಪ ಸೌಂದರ್ಯ ಮಂತ್ರಮುಗ್ಧಗೊಳಿಸುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_430.txt b/Kenda Sampige/article_430.txt new file mode 100644 index 0000000000000000000000000000000000000000..77b1398406527525b54ceab107b3658fe338602c --- /dev/null +++ b/Kenda Sampige/article_430.txt @@ -0,0 +1,35 @@ + + +ಕಾವ್ಯಕ್ಕೆ ಬೀಸಣಿಕೆಯ ಗುಣವೂ ಉಂಟು. ನಮ್ಮ ಬುದ್ಧಿ ಭಾವಗಳ ತಾಪವನ್ನು ತಣಿಸಲು ಕಾವ್ಯದ ಬೀಸಣಿಕೆಯನ್ನು ಬೀಸಿಕೊಳ್ಳುತ್ತಾ , ಬರುವ ತಂಗಾಳಿಯನ್ನು ಆನಂದಿಸುತ್ತಾ, ಕಾವ್ಯದ ಬಗೆಗಿನ ನಮ್ಮ ಪ್ರೀತಿ, ಕೃತಜ್ಞತೆಯನ್ನು ಹೆಚ್ಚಿಸಿಕೊಳ್ಳುವ ಸ್ನೇಹದ ನಂಟು ಕಾವ್ಯದ್ದು. ಆದ್ದರಿಂದಲೇ ಕವಿಗಳ ಮೊದಮೊದಲ ಧೋರಣೆ, ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ, ಹಾಡುವುದು ಅನಿವಾರ್ಯ ಕರ್ಮ ನನಗೆ ಎನ್ನುವುದಾಗಿರುತ್ತದೆ. ಕಾವ್ಯಕ್ಕೆ, ಕಾವ್ಯ ಪರಂಪರೆಗೆ, ಭಾಷೆ ಮತ್ತು ಕಾವ್ಯ ಸಂಸ್ಕೃತಿಗೆ ನಾನೇನು ಕೊಟ್ಟೆ ಎನ್ನುವ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ. ಬದಲಿಗೆ ಕಾವ್ಯ ನನಗೇನು ಕೊಟ್ಟಿತು ಎನ್ನುವ ಸಂಗತಿಯೇ ಗಾಢವಾಗಿ ಕಾಡುತ್ತದೆ. ಇಲ್ಲಿಯ ತನಕ ಕವಿಗೂ ಕಾವ್ಯಕ್ಕೂ ಇರುವುದು ಅಂತರಂಗದ ಸಂಬಂಧ. + +ಆದರೆ ಕಾವ್ಯವೆನ್ನುವ ಮೋಹಿನಿಯ ಜೊತೆಗಿನ ಸಂಬಂಧ ಅಷ್ಟು ಸುಲಭದ್ದಲ್ಲ. ಅಂತರಂಗದ ಸುಪ್ತ ಸಂಬಂಧ ಅದ್ಯಾವುದೋ ಘಳಿಗೆಯಲ್ಲಿ ಲೋಕದೊಂದಿಗೆ ಸಂಬಂಧ ಕಟ್ಟಿಕೊಳ್ಳಲು ತಹತಹಿಸುತ್ತದೆ. ಲೋಕದ ಅಂಗೀಕಾರವೂ ಅದಕ್ಕೆ ಬೇಕು ಎನ್ನುವ ಉತ್ಕಟೇಚ್ಛೆ ಜ್ವರದಂತೆ ಕಾಡುತ್ತದೆ. ಇಲ್ಲಿಂದಾಚೆಗೆ ಕಾವ್ಯದ ಜೊತೆಗಿನ ಸಂಬಂಧದ ಸ್ವರೂಪವೂ ಬದಲಾಗುತ್ತಾ ಹೋಗುತ್ತದೆ. ಅಲ್ಲಿಯ ತನಕ ಕಾವ್ಯ ನನಗೆ ಕೊಟ್ಟದ್ದೇನು ಎನ್ನುವುದು ಮುಖ್ಯವಾದದ್ದು. ಈಗ ಕಾವ್ಯಕ್ಕೆ ನಾನು ಕೊಟ್ಟದ್ದೇನು ಎನ್ನುವ ಯು ಟರ್ನ್ ಅನ್ನು ಈ ಸಂಬಂಧ ಅನಿವಾರ್ಯವಾಗಿ ಪಡೆದುಕೊಳ್ಳುತ್ತದೆ. + +ಆದರೆ ಯಾವಾಗ ಕಾವ್ಯವು ಓದುಗರ ತೆಕ್ಕೆಗೆ ಬೀಳುತ್ತದೋ ಆಗ ಅದು ಹಲವು ಪ್ರಶ್ನೆಗಳನ್ನು ಎದುರಾಗಬೇಕಾಗುತ್ತದೆ. ಮುಖ್ಯವಾಗಿ ಅದು ಕಾವ್ಯದ ಮೂಲಭೂತ ಗುಣಲಕ್ಷಣಗಳನ್ನು ಪಡೆದಿದೆಯೋ ಇಲ್ಲವೋ ಎನ್ನುವ ಅರ್ಹತಾ ಪರೀಕ್ಷೆಯಲ್ಲಿ ಅದು ಉತ್ತೀರ್ಣವಾಗಬೇಕು. ಕಾವ್ಯವು ಏಕಾಂತ ವಾಸದಿಂದ ಲೋಕಾಂತದ ಕಡೆಗೆ ಪಯಣಿಸುವಾಗ ಈ ಅಗ್ನಿದಿವ್ಯವನ್ನು ಅದು ಹಾಯಲೇಬೇಕು. + +ಇಂಥ ಪ್ರಾಥಮಿಕ ಸಂಗತಿಗಳನ್ನು ಉಲ್ಲೇಖಿಸಲು ಕಾರಣವಿದೆ. ವರ್ಷವೊಂದರಲ್ಲಿ ಪ್ರಕಟವಾಗುವ ಎಲ್ಲ ಪ್ರಕಾರಗಳ ಪುಸ್ತಕಗಳಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಪ್ರಕಟವಾಗುವುದು ಕವನ ಸಂಕಲನಗಳು. ಅವುಗಳನ್ನು ಓದಲು ಉಪಕ್ರಮಿಸಿದರೆ ಎದೆ ಒಡೆಯುತ್ತದೆ. ಕಾವ್ಯದ ಹೆಸರಿನ ಮತ್ತು ಕಾವ್ಯದ ವೇಷಧಾರಿಯಾದ ಬರವಣಿಗೆಗಳು ಕಾವ್ಯಾಸಕ್ತರಲ್ಲಿ ಆಘಾತವನ್ನುಂಟು ಮಾಡುತ್ತವೆ. ಕವಿಗಳಿಗೆ ತಮ್ಮ ಕಾವ್ಯವನ್ನು ಪ್ರಕಟಿಸಬೇಕಾದಾಗ ಅಗತ್ಯವಾಗಿ ಇರಬೇಕಾದ ಆತ್ಮವಿಮರ್ಶೆ ಮತ್ತು ಸ್ವ್ಯಯಂ ಮೌಲ್ಯಮಾಪನದ ವಿವೇಕದ ಗೈರು ಹಾಜರಿ ಎದ್ದು ಕಾಣುತ್ತದೆ. ಏಕಾಂತ ಮತ್ತು ಲೋಕಾಂತದ ನಡುವೆ ‘ಮೇಘದೂತ’ನಂತೆ ಕಾರ್ಯ ನಿರ್ವಹಿಸಬೇಕಾದ ಕಾವ್ಯ ‘ಏಜೆಂಟ್’ ನ ಪಾತ್ರವಹಿಸಬಾರದು. + +ಭುವನಾ ಹಿರೇಮಠ ಇಂಥ ಆತುರಕ್ಕೆ ಬಲಿಬಿದ್ದಿಲ್ಲ ಎನ್ನುವುದಕ್ಕೆ ಈ ಸಂಕಲನ ಉದಾಹರಣೆಯಾಗಿದೆ. ಕಾವ್ಯದ ಮೇಲಿನ ಅನುರಕ್ತಿ ಇಲ್ಲಿದೆ. ಮೊದಲ ಸಂಕಲನದ ಶಕ್ತಿ ಮಿತಿಗಳು ಇಲ್ಲಿನ ಕವಿತೆಗಳಲ್ಲಿವೆ ಎನ್ನುವುದು ನಿಜ. ಆದರೆ, ಕಾವ್ಯ ಇವರಿಗೆ ತಾತ್ಕಾಲಿಕವಾದ ಆಶ್ರಯತಾಣವಾಗದೆ , ಕಾವ್ಯದ ಜೊತೆಗಿನ ನಿಡುಗಾಲದ ಸಖ್ಯಕ್ಕೆ ಇವರು ಹಂಬಲಿಸುತ್ತಿದ್ದಾರೆ ಎನ್ನುವುದಕ್ಕೆ ಇಲ್ಲಿನ ಕವಿತೆಗಳಲ್ಲಿ ಪುರಾವೆಯಿದೆ ಎನ್ನುವುದೇ ಇವರ ಕಾವ್ಯದ ಬಗೆಗೆ ನಮಗೆ ಆಸಕ್ತಿ ಹುಟ್ಟಲು ಕಾರಣವಾಗುತ್ತದೆ. + +(ಭುವನಾ ಹಿರೇಮಠ) + +ಮಹಿಳಾ ಕಾವ್ಯದ ಪ್ರಧಾನ ವಸ್ತುಗಳಲ್ಲಿ ಒಂದಾದ ‘ಗಂಡು ಹೆಣ್ಣಿನ ಸಂಬಂಧ’ದ ಪದರಗಳು ಈ ಸಂಕಲನದ ಮೂಲಾಶಯ. ಇದೊಂದು ವಿಲಕ್ಷಣವಾದ ಸಂಗತಿ. ಮಹಿಳಾ ಸಾಹಿತ್ಯ ಸೀಮಿತ ಲೋಕದ್ದು ಎನ್ನುವ ಆರೋಪದ ಹಿಂದೆ ಇರುವುದು ಮಹಿಳೆಯರು ವೈಯಕ್ತಿಕ ಸಂಬಂಧಗಳು ಮತ್ತು ಕೌಟುಂಬಿಕ ನೆಲೆಯಾಚೆಗೆ ತಮ್ಮನ್ನು ವಿಸ್ತರಿಸಿಕೊಳ್ಳುವುದಿಲ್ಲ ಎಂದು. ಆದರೆ, ಸಂಬಂಧಗಳು ಮತ್ತು ಕೌಟುಂಬಿಕತೆಯನ್ನು ಹೆಣ್ಣು ಭದ್ರಕೋಟೆಯಂತೆ ಕಟ್ಟದೇ ಹೋಗಿದ್ದರೆ ನಾಗರಿಕತೆಯ ಯಾವ ಸಂಸ್ಥೆಗಳೂ ಇಷ್ಟು ಬಾಳಿಕೆ ಬರುತ್ತಿರಲಿಲ್ಲ. ಎಂದರೆ, ಯಾವುದು ಸೀಮಿತವಾಗಿ ಕಾಣಿಸುತ್ತದೋ ಅಥವಾ ಹಾಗೆಂದು ಹೇಳಲಾಗುತ್ತದೆಯೋ ಅದು ನಿಜದಲ್ಲಿ, ಕುಟುಂಬವೂ ಸೇರಿದಂತೆ ನಾಗರಿಕ ಸಂಸ್ಥೆಗಳ ಮೂಲಾಧಾರವೇ ಆಗಿದೆ. ಎಂದರೆ, ಈ ಸಂಗತಿಗಳನ್ನು ಕುರಿತ ಹೆಣ್ಣಿನ ಆಸ್ಥೆಯು ಅವಳ ಅನನ್ಯತೆ ಮತ್ತು ಶಕ್ತಿಯೇ ಹೊರತು ಅವಳ ಮಿತಿ ಅಥವಾ ದೌರ್ಬಲ್ಯವಲ್ಲ. ಅಥವಾ ಇದನ್ನು ಅನುಭವಲೋಕದ ಮಿತಿ ಎಂದು ಹೇಳುವುದೂ ಸರಿಯಲ್ಲ. ಗಂಡು ಹೆಣ್ಣಿನ ಆದ್ಯತೆಗಳು ಬದಲಾದಾಗ ಅವರ ಅನುಭವಲೋಕಗಳೂ ಸಹಜವಾಗಿಯೇ ಬದಲಾಗುತ್ತವೆ ಎನ್ನುವ ಹಿನ್ನೆಲೆಯಲ್ಲಿ ನೋಡುವುದು ಮಹಿಳಾ ಸಾಹಿತ್ಯವನ್ನು ಗ್ರಹಿಸುವ ಸರಿಯಾದ ಕ್ರಮ. + +ಗಂಡು ಹೆಣ್ಣಿನ ಸಂಬಂಧ ಪುರುಷ ಲೇಖಕರಲ್ಲಿ ಅವರ ಹಲವು ಶೋಧಗಳಲ್ಲಿ ಒಂದಾದರೆ, ಲೇಖಕಿಯರಲ್ಲಿ ಬಹಳಷ್ಟು ಸಲ,ಅದು ಪ್ರಧಾನಶೋಧವಾಗುತ್ತದೆ. ಭುವನಾ ಹಿರೇಮಠ ಅವರಲ್ಲಿ ಈ ಲಕ್ಷಣ ಎದ್ದು ಕಾಣುತ್ತದೆ. ಹಾಗೆಯೇ ಈ ಸಂಕಲನದ ಇನ್ನೊಂದು ಮುಖ್ಯ ಕಾಳಜಿಯೆಂದರೆ ಅದು ಹೆಣ್ಣಿನ ಸಮಕಾಲೀನ ಸ್ಥಿತಿಗತಿಗಳನ್ನು, ಅದರ ನಿಜದ ನೆಲೆಯಲ್ಲಿ ಕಾಣಲು ಯತ್ನಿಸುವುದು. + +ಯಾವ ಕಾಲದಲ್ಲಿಯೂ ಅನೇಕ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ಹೆಣ್ಣು ಈ ಕಾಲದಲ್ಲಿ ಎದುರಿಸುತ್ತಿರುವ ಸವಾಲುಗಳ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಭುವನಾ ತವಕಿಸುತ್ತಾರೆ. ಈ ಸಂಕಲನದ ಒಳ್ಳೆಯ ಕವಿತೆಗಳಲ್ಲಿ ಒಂದಾದ ‘ಟ್ರಯಲ್ ರೂಮಿನ ಅಪ್ಸರೆಯರು’ ಕವಿತೆಯನ್ನೇ ನೋಡೋಣ. ಟ್ರಯಲ್ ರೂಮಿನಲ್ಲಿಯೂ ಕೊನೆಗೂ ಹೆಣ್ಣು ತನ್ನನ್ನು ತಾನು ನೋಡಿಕೊಳ್ಳುತ್ತಾಳೆಯೋ? ‘ಅವರ’ ಕಣ್ಣೀರಿನಲ್ಲಿ ತನ್ನನ್ನು ನೋಡಿಕೊಳ್ಳುತ್ತಾಳೆಯೊ? ಟ್ರಯಲ್ ರೂಮಿನಲ್ಲಿ ಮೊಣಕಾಲಿನ ಮೇಲಿನ ಸ್ಕರ್ಟ್ನಲ್ಲಿ, ವ್ಯಾಕ್ಸ್ ಮಾಡಿಲ್ಲದ ಕಾಲಿನಲ್ಲಿ ಹೆಣ್ಣು ತನ್ನನ್ನು ತಾನು ಗ್ರಹಿಸಿಕೊಳ್ಳುವುದು ಹೇಗೆ? ವ್ಯಾಕ್ಸ್ ಮಾಡಬೇಕಾದ್ದಾದರೂ ಯಾರಿಗೆ? ತನಗಾಗಿಯೇ? ಅವರಿಗಾಗಿಯೇ? ವ್ಯಾಕ್ಸ್ ಮಾಡದೇ ಹೋದರೂ ಮಾಡೆಲ್ ನಂತೆ ಕಾಣಿಸುವುದು ಸ್ವಮೋಹವೂ ಇದ್ದೀತು, ವಾಸ್ತವವೂ ಇದ್ದೀತು. ಆದರೆ ‘ಲೋಕದ ಕಣ್ಣು’ ಇದನ್ನು ಒಪ್ಪಲಾರದು ಎಂದ ಮೇಲೆ ತಾನು ಟ್ರಯಲ್ ರೂಮಿನಲ್ಲಿ ಮಾತ್ರ ಅಪ್ಸರೆಯಾಗುವುದು ಖಂಡಿತ. + +ಇದನ್ನು ಅರ್ಥಮಾಡಿಕೊಳ್ಳುವುದು ಹೇಗೆ? ಗಂಡಸಿಗೆ ವಯಸ್ಸೇ ಆಗುವುದಿಲ್ಲವೆ? ಅವನಿಗೆ ಮಾತ್ರ ಆಜೀವ ಪರ್ಯಂತ ‘ಲುಕಿಂಗ್ ಸ್ಮಾರ್ಟ್’ ವಿಶೇಷಣ ಯಾಕೆ? ಸರಿ, ಪ್ರಶ್ನೆಗಳಿಗೇನು ಹೀಗೆ ಕೇಳುತ್ತಲೇ ಹೋಗಬಹುದು, ಆದರೆ ಉತ್ತರ ಯಾರು ಕೊಡಬೇಕು? ಹೆಣ್ಣು ತನಗೆ ತಾನೇ ಕೊಟ್ಟುಕೊಳ್ಳಬೇಕೆ? ಅಥವಾ ಲೋಕ ಲಾಗಾಯ್ತಿನಿಂದಲೂ ಉತ್ತರದಂತಲ್ಲ, ವಿಧಿಸಿದ ಶಾಸನದಂತೆ ಸ್ಥಾಪಿತವಾಗಿರುವ ಸತ್ಯವನ್ನು ಮರುದರ್ಶನದಲ್ಲಿ ಒಪ್ಪಿಕೊಳ್ಳಬೇಕೆ? ಇಷ್ಟಕ್ಕೂ ಈ ಸವಾಲು ಇಂದಿನದು ಮಾತ್ರವೆ? ಅದು ಎಲ್ಲ ಕಾಲದ್ದೂ ಹೌದಲ್ಲವೆ? ಟ್ರಯಲ್ ರೂಮಿನ ಅಪ್ಸರೆಯರಿಗೆ ಕೊನೆಗೂ ಉಳಿಯುವು ಆಯ್ಕೆ ಯಾವುದು? ಸ್ವಮರುಕವೆ? ಆಕ್ರೋಶವೆ? ವಿಷಾದವೆ? ಈ ಪ್ರಶ್ನೆಗಳ ಪ್ರಸ್ತಾಪವೇ ಹಳಹಳಿಕೆಯಂತೆ ಕಂಡರೆ ಅದು ಸಂವೇದನೆಯ ದೋಷವಲ್ಲವೆ? ಇಂಥ ಹಲವು ಉತ್ತರವಿಲ್ಲದ, ಅಥವಾ ಉತ್ತರದಂತೆ ಕಂಡರೂ ನಿಜದಲ್ಲಿ ಉತ್ತರವಲ್ಲದ ವಾಸ್ತವಗಳನ್ನು ಈ ಕವಿತೆ ನಮ್ಮೆದುರಿಗೆ ಇಡುತ್ತದೆ. ಇಡೀ ಸಂಕಲನದಲ್ಲಿ ಇದೊಂದು ಪ್ರಾತಿನಿಧಿಕ ಕವಿತೆಯಾಗುವುದಕ್ಕೆ ಇದೇ ಕಾರಣ. ಸಂಕೀರ್ಣವಾದ ಹೆಣ್ಣಿನ ವಿಷಯಗಳನ್ನು ಸರಳಗೊಳಿಸದೇ ಅದರ ಸಾಂದ್ರತೆಯಲ್ಲಿ ಇದು ಮಂಡಿಸುತ್ತದೆ. ಇಲ್ಲಿ ಹೆಣ್ಣಿನ ದೃಷ್ಟಿಕೋನವೂ, ಅವಳ ಆ ದೃಷ್ಟಿಕೋನವನ್ನು ನಿರ್ಧರಿಸಲು ಅಧಿಕಾರ ಬಲದಿಂದ ಪ್ರಯತ್ನಿಸುವ ಮೌಲ್ಯವ್ಯವಸ್ಥೆಯೂ, ಅದರಿಂದ ಹೊರಬರಬೇಕೋ ಬೇಡವೋ ಎನ್ನುವ ಹೆಣ್ಣಿನ ಸಂದಿಗ್ಧತೆಗಳೂ ಏಕಕಾಲಕ್ಕೆ ಪ್ರತ್ಯಕ್ಷವಾಗುತ್ತವೆ. + + + +‘ಮಿಲಿಯನ್ ಡಾಲರ್ ಮುಗುಳ್ನಗೆ’ ಕವಿತೆ ಇದರ ಮುಂದುವರಿಕೆಯಂತೆಯೇ ಕಾಣಿಸುತ್ತದೆ. ಯಾಕಾಗಿ ಲೋಕಕ್ಕೆ ಹೆಣ್ಣನ್ನು ತಾಳಕ್ಕೆ ಕುಣಿಸುವ ಕ್ರೌರ್ಯ ಎನ್ನುವುದು ಕೊನೆಯೇ ಇಲ್ಲದ ಉದ್ಗಾರವಷ್ಟೇ. ತುಂಬಿ ತುಳುಕುವ ಮೊಲೆಗಳೂ ಬಿಟ್ಟಿಯಾಗಿ, ತಮಗೆ ಬೇಕೆಂದಾಗ , ಕಣ್ಣು ಬಿಟ್ಟಾಗಲೆಲ್ಲ ಬೇಕು, ಅಪಾರ ಆತ್ಮವಂಚನೆಯಲ್ಲಿ ‘ಏನು ಹೆಂಗಸರಪ್ಪಾ..!’ ಎಂದು ಮೂಗು ಮುರಿಯುವುದನ್ನೂ ಬಿಡಲಾರರು. ಫೇಸ್ಬುಕ್ಕಿನಲ್ಲಿ ಹೆಸರೂ ಹಾಕಲೂ ಧೈರ್ಯವಿಲ್ಲದ ‘ಗಂಡಸರ’ ಬಗ್ಗೆ ಅಸಹ್ಯ ಹುಟ್ಟಿದರೂ ಅವರನ್ನು ಮಣಿಸುವ ದಾರಿ ಕಾಣದು. ಹೆಣ್ಣಿನ ಸವಾಲುಗಳು ಅಮೂರ್ತ ಎಂದು ಮತ್ತೆ ಮತ್ತೆ ಹೇಳುತ್ತೇವಲ್ಲ. ಅದು ಅಮೂರ್ತವೂ ಹೌದು, ಅಗಮ್ಯವೂ ಹೌದು ಅನೇಕ ಬಾರಿ. ಮಾತ್ರವಲ್ಲ, ಅಸ್ಪಷ್ಟವೂ ಹೌದು. ಏಕೆಂದರೆ ಎಷ್ಟೋ ಬಾರಿ ಹೆಣ್ಣು ಮಕ್ಕಳಿಗೆ ಸಮಸ್ಯೆ ತಮ್ಮದೇ, ಲೋಕದ್ದೇ ಎನ್ನುವುದೇ ತಿಳಿಯುವುದಿಲ್ಲ. ಹೆಣ್ಣು ಮಕ್ಕಳನ್ನು, ಅವರ ಲೋಕದೃಷ್ಟಿಯನ್ನು ಅಷ್ಟು ಗೊಂದಲಗೊಳಿಸಲಾಗಿದೆ. ‘ಸಾಕಿಯರು ನಾವು’ ಕವಿತೆ ಕೂಡ ಇದನ್ನೇ ಮುಂದುವರಿಸಿದೆ. + +ಗಂಡು ಹೆಣ್ಣಿನ ಸಂಬಂಧಗಳಲ್ಲಿ ಹೆಣ್ಣಿನ ಮಟ್ಟಿಗೆ , ‘ಕೊಡುವುದೇನು ಕೊಂಬುದೇನು, ಒಲವು ಸ್ನೇಹ ಪ್ರೀತಿ’ ಎನ್ನುವ ನಿರುಮ್ಮಳತೆ ಕಷ್ಟ ಸಾಧ್ಯದ್ದು. ಸ್ವಪ್ರಜ್ಞೆಯ ಹೆಣ್ಣಿಗಂತೂ ಅದು ಇನ್ನೂ ಕಷ್ಟದ್ದು. ಗಾಢ ಬೆಸುಗೆಯಲ್ಲೂ ಎಲ್ಲಿಂದಲೋ ಗಂಡಿನ ಅಧಿಕಾರ ನುಸುಳಲು ಸದಾ ಹವಣಿಸುತ್ತಿರುತ್ತದೆ. ಅದನ್ನು ಗಮನಿಸದೇ ಇರುವುದು ಅಸಾಧ್ಯ ಎನ್ನುವ ಸೂಕ್ಷ್ಮ ಗ್ರಹಿಕೆ ಭುವನಾ ಅವರ ಹಲವು ಕವಿತೆಗಳನ್ನು ರೂಪಿಸಿದೆ. + +‘ನಾನು ಅವನು’ ಕವಿತೆಯನ್ನು ಈ ದೃಷ್ಟಿಯಿಂದ ನೋಡಬಹುದು. ಯಾವುದೇ ಸಂಬಂಧಗಳಲ್ಲೂ ನಿರೀಕ್ಷೆಗಳು, ಕನಸು ಕನವರಿಕೆಗಳು ಇರುವುದು ಹೌದು, ಆದರೆ ಕಾಯುವುದು, ನಿರಾಸೆಗೊಳ್ಳುವುದು ಹೆಣ್ಣನ್ನೇ ಯಾಕೆ ಹೆಚ್ಚು ಕಾಡುತ್ತದೆ ಎನ್ನುವ ವಿಷಾದ ಇಲ್ಲಿದೆ. ಇದನ್ನು ದಾಟಿ ಸಂಬಂಧವೊಂದು ಫಲಿಸುವ ಅಮೃತಮುಹೂರ್ತವನ್ನು ‘ಸ್ವರ್ಗದ ಕದ ತೆರೆದಾಗ’ ಕವಿತೆ ಹಂಬಲಿಸುತ್ತದೆ. + +ಭುವನಾ ಅವರ ಕವಿತೆಗಳನ್ನು ಮೆಚ್ಚುತ್ತಿರುವಾಗಲೇ ನನಗನ್ನಿಸಿದ ಇತರ ಕೆಲವು ಸಂಗತಿಗಳನ್ನೂ ಹೇಳಬೇಕು, ಅದು ನನ್ನ ವೃತ್ತಿಧರ್ಮ. ‘ಸ್ವ’ದ ದ್ವೈತ ಎನ್ನುವುದು ಲೋಕದ ಜೊತೆಯಲ್ಲಿ ‘ಅದ್ವೈತ’ವಾಗದೇ ನಮ್ಮ ಲೋಕ ಮೀಮಾಂಸೆ ಅಧಿಕೃತವಾಗಲಾರದು. ಅದನ್ನು ಲೋಕದ ಇತರ ಮುಖ್ಯ ಚಲನೆಗಳ ಜೊತೆಯಲ್ಲಿ ಇಡುತ್ತಾ ಅದರೊಂದಿಗೆ ಸ್ನೇಹ, ಜಗಳಗಳನ್ನು ಮಾಡುವುದು ತೀರಾ ಅನಿವಾರ್ಯ. ಅದನ್ನು ಕೇವಲ ಹೆಣ್ಣಿನ ವಿಷಯಗಳಿಗೆ ಮಾತ್ರವಲ್ಲ, ಲೋಕದ ಇತರ ಘಟಿತಗಳ ಜೊತೆಯಲ್ಲೂ ಮಾಡಬೇಕು. ಇದು ಭುವನಾ ಅವರ ಮೊದಲ ಸಂಕಲನವಾದ್ದರಿಂದ ಈ ಮಾತುಗಳನ್ನು ಹೇಳಲೇ ಬೇಕು. ಇವರು ನಡೆಯಬೇಕಾದ ದಾರಿ ಇನ್ನೂ ದೀರ್ಘವಾಗಿದೆ. ವಿಸ್ತಾರ ಸಹಜವಾಗಿಯೇ ಆದೀತು. ಆದರೆ ಅದರ ಅಗತ್ಯವನ್ನು ಹೇಳಲೇಬೇಕು. ಲೋಕದ ಅನಂತತೆಯ ಅಗಾಧತೆಯ ಅರಿವು ಇವರ ಬರವಣಿಗೆಯನ್ನು ಹಿಗ್ಗಿಸುತ್ತಾ ಪುಷ್ಟಗೊಳಿಸಲಿ. ಕವಿಯ ಪ್ರಯಾಣವು ಸತತೋದ್ಯೋಗದ ಫಲ. ಇಂಥ ಸತತೋದ್ಯೋಗದ ತಪಸ್ಸು ಇವರಿಗೆ ಸಾಧ್ಯವಾಗಲಿ, ಕನ್ನಡ ಜಗತ್ತು ಇವರ ಕಾವ್ಯವನ್ನು ಪ್ರೀತಿಯಿಂದ ಬರಮಾಡಿಕೊಳ್ಳಲಿ. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_431.txt b/Kenda Sampige/article_431.txt new file mode 100644 index 0000000000000000000000000000000000000000..796be7cd2328c375d9596278273fe6c2357e61fb --- /dev/null +++ b/Kenda Sampige/article_431.txt @@ -0,0 +1,49 @@ +ಮೂಲತ: ಕವಿಯಾದರೂ ತಮ್ಮ ಗದ್ಯಬರಹಗಳ ಸಂಕಲನಕ್ಕೆ “ಗದ್ಯಂ ಹೃದ್ಯಂ” ಎಂದು ಹೆಸರಿಸಿ ನಮ್ಮಂಥ “ಗದ್ಯಮಾತ್ರ” ಲೇಖಕರಿಗೆ ಗೌರವ ತಂದು ಕೊಟ್ಟ ಕಾರಣ ಶೆಟ್ಟರ್ ಅವರನ್ನು ಅಭಿನಂದಿಸುತ್ತ ಈ ಕೃತಿಯ ಓದು ನನಗೆ ನೀಡಿದಸಂತೋಷವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಯತ್ನಿಸುತ್ತೇನೆ. + +ನಾನು ಕಂಡುಕೊಂಡಂತೆ “ಗದ್ಯಂ ಹೃದ್ಯಂ” ನಲ್ಲಿ ನಾಲ್ಕು ಬಗೆಯ ಬರಹಗಳಿವೆ. ಆತ್ಮಕಥಾನಕವಾದ ಬರಹಗಳು, ಪ್ರವಾಸ ಕಥನ, ವ್ಯಕ್ತಿಚಿತ್ರಗಳು ಮತ್ತು ಸಮಕಾಲೀನ ವಸ್ತು, ಘಟನಾವಳಿಗಳನ್ನು ಕುರಿತ ಬಿಡಿ ಲೇಖನಗಳು. ಆತ್ಮಕಥಾನಕದ ಧಾಟಿಯ ಬರೆಹಗಳಲ್ಲಿ ಲೇಖಕರ ಬಾಲ್ಯ ಹಾಗೂ ಹದಿಹರೆಯದ ಬದುಕನ್ನು ಹಿಡಿದಿಟ್ಟಿರುವ ಬೈಲಹೊಂಗಲದ ಬಾಲ್ಯದ ನೆನಪುಗಳು, ನಂತರ ಅಷ್ಟಿಷ್ಟು ದಾಖಲಾಗಿರುವ ಧಾರವಾಡದ ಕಾಲೇಜು ದಿನಗಳು. ತದನಂತರ ದೆಹಲಿಯ ಜೆ.ಎನ್.ಯು ವಿದ್ಯಾರ್ಥಿ ಜೀವನದ ನೆನಪುಗಳು ಸೇರಿವೆ. + +ಮೊದಲ ಅಧ್ಯಾಯದಲ್ಲಿಯೇ ಬಾಲ್ಯದ ನೆನಪಿನ ಸುರುಳಿ ಬಿಚ್ಚಿಕೊಳ್ಳುತ್ತದೆ. “ಹಾಸಿಗೆ ಇದ್ದಷ್ಟು ಕಾಲು ಚಾಚಿಕೊಂಡಿದ್ದ ದಿನಗಳು”, “ಶೇಂಗಾ ಸುಗ್ಗಿಯ ಸಂಭ್ರಮ”, “ಮಮತಾಮಯಿ ತಾಯಿ, ಸ್ಥಿತಪ್ರಜ್ಞ ತಂದೆ” ಹೀಗೆ ಆರಂಭದ ಈ ಮೂರು ಅಧ್ಯಾಯಗಳಲ್ಲದೇ ಸ್ವಂತದ ಬದುಕಿನ ಚದುರಿದ ಚಿತ್ರಗಳು “ಅದು ರಮ್ಯ ಬಾಲ್ಯಕಾಲ”, “ಪ್ರೇಮವೆಂಬ ಮಧುರ ನೋವು”, “ಉಳವೀಯ ದಾರೀಲಿ ಶರಣರ ನೆನೆಯುತ”, “ಡಾಕ್ಟರ್ಸ್ ಡೇ” ನೆಪದಲ್ಲಿ ತಮ್ಮನ್ನು ಕಾಡಿದ ಖಾಯಿಲೆಗಳ ಬಗೆಗಿನ ಸೂಕ್ಷ್ಮ ವರ್ಣನೆ… ಇವೆಲ್ಲ ನೇರವಾಗಿ ಲೇಖಕರ ಆತ್ಮಕಥಾನಕದ ಭಾಗಗಳಂತೆಯೇ ಕಾಣುತ್ತವೆ. + +(ಅಶೋಕ ಶೆಟ್ಟರ್ ) + +ಮೊದಲ ಅಧ್ಯಾಯದ ಮೊದಲ ವಾಕ್ಯಗಳು ಎಷ್ಟೊಂದು ಸರಳವಾಗಿ, ಹೃದಯಂಗಮವಾಗಿ ಆರಂಭವಾಗುತ್ತವೆ ! “ಒಂದೇ ಹೆಸರು ಕವಲೊಡೆದಂತೆ, ನನ್ನ ಅವ್ವ ಈರವ್ವ ಅಪ್ಪ ಈರಪ್ಪ. ಇಬ್ಬರಿಗೂ ಮಧ್ಯೆ ಹತ್ತು ವರ್ಷಗಳ ವ್ಯತ್ಯಾಸ, ಸ್ವಭಾವ ವ್ಯತ್ಯಾಸಗಳೋ ಹಲವಾರು. ಮೂಲತ: ಇಬ್ಬರೂ ಸಾತ್ವಿಕರು…” ತಮ್ಮ ವಂಶಸ್ಥರು ಒಂದು ಕಾಲದಲ್ಲಿ ಅತ್ಯಂತ ಶ್ರೀಮಂತರಾಗಿ ಬಾಳ್ವೆ ನಡೆಸಿದರೆಂಬ ಹೊಳಹುಗಳಷ್ಟೇ ಲೇಖಕರಿಗೆ ಕಾಣುವುದು. ಯಾಕೆಂದರೆ ಅವರ ಬಾಲ್ಯ ಆರಂಭವಾಗುವದೇ ಬೈಲಹೊಂಗಲದ ಬಾಡಿಗೆ ಮನೆಯಲ್ಲಿ. ಬೈಲಹೊಂಗಲಕ್ಕೆ ಬಂದು ನೆಲೆಗೊಳ್ಳುವ ಮೊದಲೇ ಅವರ ತಂದೆ ಮತ್ತು ಚಿಕ್ಕಪ್ಪ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿರುತ್ತಾರೆ. ಗಾಂಧೀಜಿಯವರನ್ನು ಕಂಡಿರುತ್ತಾರೆ, ಜೈಲುವಾಸ ಅನುಭವಿಸಿರುತ್ತಾರೆ… ಈ ಎಲ್ಲಾ ಘಟನೆಗಳನ್ನು ಲೇಖಕರು ಅವರ ತಂದೆಯವರಷ್ಟೇ ನಿರ್ಲಿಪ್ತ ಮನೋಭಾವದಿಂದ ವಿವರಿಸುವುದೇ ಒಂದು ವಿಶೇಷ. + +“ಶೇಂಗಾ ಸುಗ್ಗಿಯ ಸಂಭ್ರಮ” ಒಂದು ಸಣ್ಣ ವ್ಯಾಪಾರಸ್ಥರ ಮನೆಯಲ್ಲಿ ನಡೆಯುವ ವಹಿವಾಟಿನ ಸಂಭ್ರಮದ ಚಿತ್ರ. ತಂದೆ ಸ್ಥಿತಪ್ರಜ್ಞರಾದಾಗ ಮಮತಾಮಯಿಯಾದ ತಾಯಿ ಸ್ವಲ್ಪ ಮಟ್ಟಿನ ಲೌಕಿಕತೆಯನ್ನಾದರೂ ರೂಢಿಸಿಕೊಳ್ಳಬೇಕಲ್ಲವೇ? ಮಗ ದೆಹಲಿಗೆ ಹೊರಟಾಗ ಆಕೆ ಅವನು ಅಲ್ಲಿ ಪಡೆಯಬಹುದಾದ ಹಣವನ್ನು ತಾನೇ ಹೇಗೆ ಹೊಂದಿಸಿ ಕೊಡಬಲ್ಲೆ ಎಂದು ವಿವರಿಸುವ ಮಾತುಗಳು ಹೃದಯಸ್ಪರ್ಶಿಯಾಗಿವೆ. ಲೇಖಕರು ಕವಿಯೂ ಆಗಿರುವದರಿಂದ ಅವರು ಬಾಲ್ಯದಿಂದ ಮೊಗೆದು ಕೊಟ್ಟಿರುವ ನೆನಪುಗಳೆಲ್ಲ ತಿಳಿನೀರಿನಂತೆ ಕಂಗೊಳಿಸುತ್ತವೆ. ಇದೇ ಬಗೆಯ ಭಾವನಾತ್ಮಕತೆ “ಉಳವೀಯ ದಾರೀಲಿ ಶರಣರ ನೆನೆಯುತ”, “ಅದು ರಮ್ಯ ಬಾಲಕಾಲ”, “ಪ್ರೇಮವೆಂಬ ಮದುರ ನೋವು” ಮುಂತಾದ ಬರೆಹಗಳಲ್ಲಿಯೂ ಮುಂದುವರಿದಿದೆ. ಆತ್ಮಕಥಾನಕವಾದ ಇಂಥ ಬರೆಹಗಳ ಗುಚ್ಛದಲ್ಲಿ ನಾನು “ದೆಹಲಿ ಡೈರಿ” ಎಂದು ಕರೆಯಲು ಇಷ್ಟಪಡುವ ನಾಲ್ಕು ಲೇಖನಗಳು ತುಂಬ ಮಹತ್ವದ್ದಾಗಿವೆ. “ಯಮುನೆಯ ದಡದ ರಾಜನಗರಿಯಲ್ಲಿ ಕೊಲೆ ದಂಗೆ ಮುಂತಾಗಿ”, “ಮನಸು ಹೃದಯಗಳ ಮಾರಣಹೋಮವ ಮರೆತೇನೆಂದರ ಮರೆಯಲಿ ಹ್ಯಾಂಗ” ಈ ಲೇಖನಗಳಲ್ಲಿ ಇಂದಿರಾ ಹತ್ಯೆಯ ನಂತರ ಸಿಖ್ ಸಮುದಾಯದ ಮೇಲೆ ನಡೆದ ಕ್ರೌರ್ಯವನ್ನು, ಹಿಂಸೆಯನ್ನು, ಲೇಖಕರು ತೀವ್ರ ನೋವು, ಅನುಕಂಪದಿಂದ ದಾಖಲಿಸಿದ್ದಾರೆ. ಅವರು ಖುದ್ದಾಗಿ ಇತರೆ ವಿದ್ಯಾರ್ಥಿ ಸ್ನೇಹಿತರೊಂದಿಗೆ ಬಾಧಿತ ಸಿಖ್ ಸಮುದಾಯದ ಪರಿಹಾರ ಕಾರ್ಯಗಳಲ್ಲಿಯೂ ತೊಡಗಿಕೊಳ್ಳುತ್ತಾರೆ. + +“ಸಾಲುಸಾಲಾಗಿದ್ದ ಸರದಾರ್ ಗಳ ಹೊಜೈರಿ ಮತ್ತಿತರ ಅಂಗಡಿಗಳ ಮಾಲೆಲ್ಲ ಸುಟ್ಟು ನಿಶಿನಿಶಿ ಹೊಗೆಯಾಡುತ್ತಿತ್ತು, ಇಡೀ ವಾತಾವರಣದಲ್ಲಿ ತಬ್ಬಲಿತನ ಮತ್ತು ವಿಷಾದ”“ಈ ತನಕ ಬರೀ ಹೊಡಿಬಡಿ ಆಗಿದೆ, ಹೆಣಗಳೇನೂ ಬಿದ್ದಿಲ್ವಲ್ಲ ಎಂದಿದ್ದನಲ್ಲ ತಣ್ಣಗಿನ ದನಿಯಲ್ಲಿ ಆ ಪೋಲೀಸ್ ಅಧಿಕಾರಿ, ಮರುದಿನ ಬರೀ ಸಾವಿನದೇ ಸುದ್ದಿ. ಹೆಣಗಳ ರಾಶಿಯೇ ಬಿದ್ದಿತು”“ದೆಹಲಿಯ ಕುರಿತು ಆಗಿನಿಂದ ಅಷ್ಟಿಷ್ಟು ಇದ್ದ ಭಾವನಾತ್ಮಕ ತಂತು ಅದೇಕೋ ಕಡಿದೇ ಹೋಯಿತು”. + +ಸಿಖ್ಖರ ಅಸಹಾಯಕತೆ, ಆಕ್ರಂದನ, ಪೋಲಿಸರ ನಿಷ್ಕ್ರಿಯತೆ, ಸಿಖ್ಖರ ಸಹಾಯಕ್ಕೆ ಧಾವಿಸಿದ ಅನ್ಯಧರ್ಮೀಯರ ಕಳಕಳಿಯನ್ನು ಲೇಖಕರು ಇಂಥ ವಾಕ್ಯಗಳ ಮೂಲಕ ಇಡೀ ಸನ್ನಿವೇಶದ ದಾರುಣತೆ ಓದುಗನ ಎದೆಯೊಳಗೆ ಇಳಿಯುವಂತೆ ಬಣ್ಣಿಸುತ್ತಾರೆ. + +ಈ ದೆಹಲಿ ಡೈರಿಯ ಮತ್ತೊಂದು ಅಧ್ಯಾಯ ಲೇಖಕರ ಸೆರೆವಾಸವನ್ನು ಕುರಿತದ್ದು: “ಸೆರೆಮನೆಯೊಳಗಿಂದ ಆಕಾಶ ನೋಡಿದ ದಿನಗಳ ನೆನೆಯುತ್ತ”- ದೆಹಲಿಯ ಕುಖ್ಯಾತ ತಿಹಾರ್ ಜೈಲಿನಲ್ಲಿ ಹನ್ನೊಂದು ದಿನಗಳ ವಾಸ್ತವ್ಯದ ವೃತ್ತಾಂತ. ನಮ್ಮ ಕಾಲದ ವಿದ್ಯಾರ್ಥಿ ಜೀವನದ ಅವಿಭಾಜ್ಯ ಅಂಗವೇನೋ ಎಂಬಂತಿದ್ದ ಕುಲಪತಿಯ ಘೇರಾವ್ ಕಾರ್ಯಕ್ರಮದಲ್ಲಿ ಲೇಖಕರೂ ಪಾಲ್ಗೊಳ್ಳುತ್ತಾರೆ. ಸುಮಾರು 350 ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಪೋಲೀಸರು ವಶಕ್ಕೆ ತೆಗೆದುಕೊಂಡು ಆ ವಿದ್ಯಾರ್ಥಿಗಳ ಗುಂಪಿನಲ್ಲಿ ಇವರೂ ಸೇರಿರುತ್ತಾರೆ. ಮಾಮೂಲಿನಂತೆ ಸಂಜೆ ಕಳಿಸುತ್ತಾರೆ ಎಂದು ಎಲ್ಲರೂ ಭಾವಿಸಿರುತ್ತಾರೆ. ಆದರೆ ಇವರೆಲ್ಲರನ್ನು “ಆರ್ಸನ್, ರಾಯ್ಟಿಂಗ್, ಲೂಟಿಂಗ್, ಅಟೆಂಪ್ಟ್ ಟು ಮರ್ಡರ್ ದಿ ವೈಸ್ ಚಾನ್ಸಲರ್, ಮೊಲೆಸ್ಟೆಶನ್” ಅಪಾದನೆಗಳಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಾರೆ. ತುಂಬ ಚೇತೋಹಾರಿಯಾದ (ಆದರೆ ಲೇಖಕರು ಇದನ್ನು ಮತ್ತಷ್ಟು ತಾಳ್ಮೆಯಿಂದ ವಿಸ್ತರಿಸಬಹುದಿತ್ತು ಎಂಬ ಅಸಮಾಧಾನ ಕಾಡಿತು !) ಈ ಬರಹದಲ್ಲಿ ಎಲ್ಲಿಯೂ ಸ್ವಾನುಕಂಪದ ದನಿ ಇಲ್ಲ, ಬಣ್ಣ ಕಟ್ಟಿ ಹೇಳುವ ಆಡಂಬರವೂ ಇಲ್ಲ, ಯಾವುದೇ ನೈತಿಕ ತೀರ್ಮಾನಗಳಿಲ್ಲ. ಅದು ವಿದ್ಯಾರ್ಥಿ ಜೀವನದ ಮತ್ತೊಂದು ಸರಳ ಅಧ್ಯಾಯವಾಗಿತ್ತೇನೋ ಎಂಬಷ್ಟು ನಿರುಮ್ಮಳವಾಗಿ ವರ್ಣಿಸುತ್ತಾರೆ. + +(ಚಂದ್ರಶೇಖರ್ ಆಲೂರು) + +“ಹೆಂಡ್ತಿ ಅಂತ ಇರೋಳೇ ನೀನೊಬ್ಳು..”, “ಕಾಶ್ಮೀರವೆಂಬ ಸ್ವರ್ಗವೂ ಕಾನೂನು ಸುವ್ಯವಸ್ಥೆಯ ನರಕವೂ”, “ನನ್ನ ಅಮರನಾಥ್ ಯಾತ್ರೆ”, “ತೀರ್ಥಕ್ಷೇತ್ರಗಳೆಂಬ ಅನುಭವಲೋಕಗಳು”… ಇವೆಲ್ಲ ಲೇಖಕರು ವಿವಿಧ ಕಾಲಘಟ್ಟದಲ್ಲಿ ಕೈಗೊಂಡ ಪ್ರವಾಸದಕಥನಗಳು. “ಹಾಗೆ ನಾನು ಆಸ್ತಿಕನೇನೂ ಅಲ್ಲ. ಮಹಾದೈವಭೀರುವೂ ಅಲ್ಲ. ಭಕ್ತಿರಸದಲ್ಲಿ ಮಿಂದೆದ್ದಂಥ ಅನುಭವಗಳು ನನಗಾದದ್ದು ಇಲ್ಲವೇ ಇಲ್ಲ ಅನ್ನುವಷ್ಟು ವಿರಳ…” ಎಂಬ ಮಾತುಗಳು ಅವರು ಭಾರತದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಕೈಗೊಂಡ ಅವರ ಪ್ರವಾಸದ ಕಥನಗಳ ಸಾರದಂತಿದೆ. ಅಂದರೆ ಜಮ್ಮು-ಕಾಶ್ಮೀರ್, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿರುವ ವೈಷ್ಣೋದೇವಿ, ಅಮರನಾಥ, ಮಥುರಾ, ಋಷಿಕೇಶ, ಹರಿದ್ವಾರ್, ಪಂಜಾಬಿನ ಅಮೃತಸರ್… ಹೀಗೆ ಭಾರತದ ವಿವಿಧ ಧಾರ್ಮಿಕ ಕ್ಷೇತ್ರಗಳ ಭೇಟಿ, ಅಲ್ಲಿನ ಅನುಭವ ಇಲ್ಲಿನ ಪ್ರವಾಸಕಥನಗಳಾಗಿವೆ. ಅಮರನಾಥ್ ಯಾತ್ರೆಯ ಕುರಿತು ಬರೆಯುವಾಗ ಅಮರನಾಥ್ ಯಾತ್ರೆಯ ಪ್ರಾಚೀನತೆಯ ಬಗ್ಗೆ ಹೇಳುತ್ತಲೇ, ಶ್ರೀ ಅಮರನಾಥ್ ಕತೆಯನ್ನು ಪ್ರಸ್ತಾಪಿಸುತ್ತಲೇ “…ಇವು ನನಗೆ ಸ್ಪಿರಿಚುಅಲ್ ಸಂಗತಿಗಳು, ರಿಲಿಜಿಯಸ್ ಅಥವಾ ಥಿಯಾಲಾಜಿಕಲ್ ಸಂಗತಿಗಳಲ್ಲ. ಇವುಗಳಿಗೂ ಧರ್ಮಗಳಿಗೂ ಅರ್ಥಾತ್ ಸಂಬಂಧವಿಲ್ಲ ಎಂದು ಚೀರಾಡಿ ಹೇಳಬೇಕಾಗುತ್ತದೆ. ಹಾಗೆಯೇ ಅಮರನಾಥ್ ಅಥವಾ ಇನ್ನಾವುದೇ ಯಾತ್ರೆ ಕೂಡ ಧಾರ್ಮಿಕವಾಗದೇ ನಮ್ಮನ್ನು ಲೌಕಿಕದ ಅನುಭವಗಳೇ ಅತೀತದ ಕುರಿತ ಗ್ರಹಿಕೆಗೆ ಕೊಂಡೊಯ್ಯುವ ಆಧ್ಯಾತ್ಮಿಕ ಸಂಗತಿಯಾಗಬಹುದು ಎನ್ನಿಸುತ್ತದೆ…” ಎನ್ನುತ್ತಾರೆ, ಹೀಗಾಗಿಯೇ ಈ ಎಲ್ಲ ಯಾತ್ರೆಗಳನ್ನು ಕುರಿತ ಕಥನಗಳು ವಿಶೇಷ ಗ್ರಹಿಕೆಯಿಂದ ಕೂಡಿವೆ. + +ಇನ್ನುಳಿದಂತೆ ಈ ಸಂಕಲನದಲ್ಲಿ ಸಮಕಾಲೀನ ಸಂದರ್ಭವನ್ನು ಚರ್ಚಿಸಿರುವ ಹಲವು ಲೇಖನಗಳಿವೆ. ಹಾಗೆಯೇ ನಿರಂಜನ, ಕಿ.ರಂ., ಏಣಗಿ ನಟರಾಜ್, ಸಾಕೇತ್ ರಾಜನ್, ಸಿ. ಬಸವಲಿಂಗಯ್ಯರನ್ನು ಕುರಿತ ವ್ಯಕ್ತಿಚಿತ್ರಗಳಿವೆ. ಸಮಕಾಲೀನ ಸಂದರ್ಭಕ್ಕೆ ಪ್ರತಿಕ್ರಿಯಿಸುವ ರೂಪದಲ್ಲಿರುವ ಬರಹಗಳು ಮೊನಚಾಗಿವೆ, ಲವಲವಿಕೆಯಿಂದ ಕೂಡಿವೆ. ಸಾಹಿತ್ಯ ಸಮ್ಮೇಳನಗಳು, ಚುನಾವಣೆ, ಡಬ್ಬಿಂಗ್, ಫೇಸ್ ಬುಕ್, ಹೊಸವರ್ಷಾಚರಣೆ, ನಂಬಿಕೆ-ಮೂಢನಂಬಿಕೆ, ವಾಘಾ ಬಾರ್ಡರ್… ಹೀಗೆ ಹಲವು ವಸ್ತುಗಳ ವೈವಿಧ್ಯವಿದೆ. + +ಒಟ್ಟಾರೆಯಾಗಿ “ಗದ್ಯಂ ಹೃದ್ಯಂ…” ನಲ್ಲಿ ಆತ್ಮಕತೆ, ಪ್ರವಾಸಕಥನ, ಪ್ರಬಂಧ, ವ್ಯಕ್ತಿಚಿತ್ರ, ಸಮಕಾಲೀನ ಬದುಕಿಗೆ ಸ್ಪಂದಿಸಿದ ಲೇಖನಗಳು.., ಎಲ್ಲವೂ ಇವೆ. ಇಂಥ ಒಂದು ಸಮೃದ್ಧ ಓದಿಗೆ ಅವಕಾಶ ಮಾಡಿಕೊಟ್ಟ ಗೆಳೆಯ ಅಶೋಕ ಶೆಟ್ಟರ್ ರಿಗೆ ಅಭಿನಂದಿಸುತ್ತ ನನ್ನ ಮಾತುಗಳನ್ನು ಮುಗಿಸುತ್ತಿದ್ದೇನೆ. + +ಒಮ್ಮೊಮ್ಮೆ ನಾವು ಅತೀ ವೈಚಾರಿಕತೆಗೆ ಬೀಳುತ್ತೇವೆ, ನಮ್ಮ ಹಬ್ಬಗಳ ಸಂಕೇತಗಳಲ್ಲಿ ಕಾರ್ಯಕಾರಣ ಸಂಬಂಧ ಹುಡುಕತೊಡಗುತ್ತೇವೆ, ಅವುಗಳ ಆಚರಣೆಗಳ ವಿವರಗಳನ್ನು ಹಿಂಜಿ ಹಿಸುಕಿ ಅವುಗಳಲ್ಲಿ ನಮ್ಮ ಶ್ರೇಣೀಕೃತ ಸಮಾಜದ ವೈಕಲ್ಯಗಳನ್ನು ಹುಡುಕಿ ನಿಟ್ಟುಸಿರು ಬಿಡುತ್ತೇವೆ. ಹಬ್ಬದ ಆನಂದಕ್ಕೆ ಎರವಾಗುತ್ತೇವೆ, ಆದರೆ ಇಂಥ ವ್ಯಾಪಗಳಿಲ್ಲದ ಬಹುಪಾಲು ಜನ ಅವುಗಳನ್ನು ಆಚರಿಸುತ್ತಿರುತ್ತಾರೆ. ಸಾಮಾನ್ಯರು ಕೂಡ ಹಬ್ಬ-ಹುಣ್ಣಿಮೆಗಳನ್ನು ತಮ್ಮದೇ ಮಿತಿಗಳಲ್ಲಿ ಆಚರಿಸಿ ಸಂಭ್ರಮಿಸುತ್ತಿರುತ್ತಾರೆ. ಹಲವಾರು ವರ್ಷಗಳ ಹಿಂದೆ ರೈತರ, ಕೂಲಿಕಾರರ, ಗ್ರಾಮೀಣ ಮಹಿಳೆಯರ, ನಗರದ ಬಡಜನರ ಕಷ್ಟಕಾರ್ಪಣ್ಯಗಳ ಕುರಿತು ಸದಾ ಯೋಚಿಸುತ್ತ, ಆ ಕುರಿತು ವಿಷಾದ ಪಟ್ಟುಕೊಳ್ಳುತ್ತಿದ್ದ ಕಾಮ್ರೇಡ್ ಒಬ್ಬರು ( ಈಗ ಅವರು ಕಮ್ಯುನಿಸ್ಟ್ ಪಕ್ಷವೊಂದರ ರಾಜ್ಯ ಮಟ್ಟದ ನಾಯಕರು) ಒಂದು ದಿನ ನನಗೆ “ಬಡವರು, ರೈತರು, ತ್ರಾಸಿನ್ಯಾಗ ಅದಾರ, ತೊಂದ್ರಿ ಪಡ್ತಾರ, ಶೋಷಣೆಗೆ ಒಳಗಾಗ್ಯಾರ ಹಂಗ ಹಿಂಗ ಅಂತ ನಾವು ತೆಲಿ ಕೆಡಿಸಿಕೊಂಡ್ ಕುಂತಿರ್ತೀವಲ್ಲಾ, ಹುಚ್ಚರ ನಾಂವ, ಆ್ಯಕ್ಚುಅಲಿ ನೋಡಿದರ ಅವ್ರು ಜಾತ್ರಿ, ನಿಬ್ಬಣ, ಹಬ್ಬಾ ಹುಣಿಮಿ, ಸಂತೀಪ್ಯಾಟಿ ಅಂತ ಕುಲುಕುಲು ನಕ್ಕೊಂತ ಚೈನಿ ಹೊಡೀತಿರತಾರ” ಎಂದಿದ್ದರು ನಗುತ್ತ. + +ನಾನು ಹಬ್ಬಗಳ ಕುರಿತು ಪುರಾಣಕತೆಗಳ ಕೆಸರುಮಡುವಿನಲ್ಲಿ ಬೀಳದೆ ಸುಮ್ಮನೇ ಹಬ್ಬಗಳ ಭಾಗವಾಗುತ್ತ ಬಂದಿದ್ದೇನೆ. ಅದು ರೂಢಿಸಿಕೊಂಡದ್ದಲ್ಲ, ಬಾಲ್ಯದಿಂದಲೂ ಬಂದು ಈಗಲೂ ಹಾಗೇ ಉಳಿದುಕೊಂಡದ್ದು. ಹಬ್ಬಗಳ ಆಚರಣೆಗಳ ಅರ್ಥವಿವರಣೆಯನ್ನು ಯಾರಾದರೂ ನೀಡುವ ಅಥವಾ ಯಾರನ್ನಾದರೂ ಹಾಗೆ ನೀಡುವಂತೆ ಕೇಳುವ ಸಂಸ್ಕೃತಿ ನಮ್ಮದಾಗಿರಲಿಲ್ಲ, ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಎಂಬ ಪಟ್ಟಣದಲ್ಲಿದ್ದ ನಮ್ಮ ಲಿಂಗಾಯತ ಶೆಟ್ಟರ ಕುಟುಂಬದಲ್ಲಿ ತೊಂದರೆ ತಾಪತ್ರಯಗಳ, ಆಡಚಣಿ ಆಪತ್ತುಗಳ ನಡುವೆ ಹಬ್ಬಗಳು ಬರುತ್ತಿದ್ದವು, ಅವುಗಳನ್ನು ಆಚರಿಸುವ ಒಂದು ಸಿದ್ಧಕ್ರಮಕ್ಕನುಗುಣವಾಗಿ ನಾವು ಅವುಗಳನ್ನು ಆಚರಿಸುತ್ತಿದ್ದೆವು ಮತ್ತು ಅವು ಮುಗಿದು ಹೋಗುತ್ತಿದ್ದವು. ಗಣೇಶ ಚತುರ್ಥಿಯಲ್ಲಿ ಮಾವಿನ ಹಣ್ಣಿನ ಸೀಕರಣೆ, ಹೋಳಿಹುಣಿಮೆಯಲ್ಲಿ ಹೂರಣಹೋಳಿಗೆ, ದೀಪಾವಳಿಯಲ್ಲಿ ಕರ್ಚೀಕಾಯಿ, ಹುರೆಕ್ಕಿ ಹೋಳಿಗಿ, ಯುಗಾದಿ-ದಸರೆಗಳಲ್ಲಿ ಗೋಧಿ ಹುಗ್ಗಿ ಅಥವಾ ಶಾವಿಗಿ ಪಾಯಸ, ಅಮಾವಾಸ್ಯೆಗಳಲ್ಲಿ ಹೂರಣಗಡಬು ಹೀಗೆ ಏನೋ ಒಂದು ಸಿಹಿ ಅಡುಗೆ ಇರುತ್ತಿತ್ತು. ಪೂಜೆ ಸ್ವಲ್ಪ ವಿಶೇಷವಾಗಿರುತ್ತಿತ್ತು. ಹೂವು ಗಂಧ, ತಳಿರು ತೋರಣಗಳ ಇರುವು ಆಹ್ಲಾದವನ್ನುಂಟು ಮಾಡುತ್ತಿತ್ತು. + +ಆ ಎಲ್ಲ ಹಬ್ಬಗಳ ಪೈಕಿ ನನಗೆ ಅತ್ಯಂತ ಮೋಹಕವೆನಿಸುತ್ತಿದ್ದುದು ಹೋಳಿ ಹಬ್ಬ. ನನಗೇನು ನಮ್ಮ ಇಡೀ ಟೋಳಿಗೆ ಹೋಳಿ ಹಬ್ಬದ ಸಂಭ್ರಮ ಕಾಮದಹನಕ್ಕೂ ಹದಿನೈದಿಪ್ಪತ್ತು ದಿನ ಮುಂಚೆಯೇ ಆರಂಭವಾಗುತ್ತಿತ್ತು. ಯಾರ ಯಾರ ಮನೆಯ ಆಸು ಪಾಸಿನಲ್ಲಿ, ಕಂಪೌಂಡ್ ಒಳಗಡೆ ಕಟ್ಟಿಗೆಯ ಸಂಗ್ರಹ ಇದೆ ಎಂಬುದನ್ನು ಹಗಲು ಹೊತ್ತು ಸ್ಟಡಿ ಮಾಡುತ್ತಿದ್ದೆವು. ಎಳ್ಳಷ್ಟೂ ಸದ್ದು ಗದ್ದಲವಾಗದ ಹಾಗೆ, ಯಾರು ಎಲ್ಲಿಂದ ರಾತ್ರಿಯ ಯಾವ ಪ್ರಹರದಲ್ಲಿ ಆ ಜಾಗ ಪ್ರವೇಶಿಸಿ ಹೊರಗಿರುವ ಇನ್ನ್ಯಾರ ಕೈಗೆ ಎಷ್ಟು ಪ್ರಮಾಣದಲ್ಲಿ ಅದನ್ನು ವರ್ಗಾಯಿಸಬೇಕು, ಯಾರು ಅದನ್ನು ಹೊತ್ತೊಯ್ಯಬೇಕು, ಮನೆಯ ಯಾರಾದರೂ ಎಚ್ಚತ್ತರೆ ಪ್ಲ್ಯಾನ್ ಬಿ ಹೇಗಿರಬೇಕು ಎಂಬುದರ ರೂಪುರೇಷೆಯೆಲ್ಲ ಇದ್ದುದರಲ್ಲಿ ಸ್ವಲ್ಪ ಪ್ರೌಢ ವಯಸ್ಕರಾದ ಒಬ್ಬಿಬ್ಬರ ಮಾರ್ಗದರ್ಶನದಲ್ಲಿ ಸಿದ್ಧವಾಗಿ ಹೋಳಿಹಬ್ಬದ ಪ್ರಮುಖ ಚಟುವಟಿಕೆಯಾದ ಕಟ್ಟಿಗೆ, ಕುಳ್ಳುಗಳ ಕಳ್ಳತನಕ್ಕೆ ನಾವು ಶ್ರದ್ಧೆಯಿಂದಲೂ ಉತ್ಸಾಹದಿಂದಲೂ ತೊಡಗುತ್ತಿದ್ದೆವು. ಸುಮಾರು ಇಪ್ಪತ್ತು ಇಪ್ಪತ್ತೈದು ಜನರ ಬಾಲ ಸೈನ್ಯ ಅದು. ಕದ್ದು ತಂದ ಕಟ್ಟಿಗೆಗಳನ್ನು ಒಂದು ಹೊಂಡದಂತಿದ್ದ ತಗ್ಗಿನಲ್ಲಿ ಒಗೆಯುತ್ತಿದ್ದೆವು. ಕಾಮದಹನದ ದಿನ ಬಂದಾಗ ಅವು ಒಂದೇನು ಮೂರು ಕಾಮಣ್ಣರನ್ನು ದಹಿಸುವಷ್ಟು ಪ್ರಮಾಣದಲ್ಲಿ ಸಂಗ್ರಹವಾಗಿರುತ್ತಿದ್ದವು. + +ಆಮೇಲೆ ಹಣ ಸಂಗ್ರಹ. ಮನೆಮನೆಗೆ ಹೋಗಿ ಮನೆಯವರ ತಲೆ ಚಿಟ್ಟು ಹಿಡಿಯುವಂತೆ ಎಲ್ಲರೂ ಲಬೋ ಲಬೋ ಬಾಯಿಬಡಿದುಕೊಂಡು ಹೊಯ್ಕೊಳ್ಳುತ್ತ ಢಂಕಣಕ ಢಂಕಣಕ ಹಲಿಗಿ ಬಾರಿಸಿ ಚೌಕಾಸಿ ಮಾಡಿ ಕೊನೆಗೆ ಅವರಿಂದ ಹಣ ಪೀಕಿಸಿ ಮುಂದಿನ ಮನೆಗೆ ಹೋಗಿ ಮತ್ತೆ ಲಬೋಲಬೋ. ಹಾಗೆ ಸಂಗ್ರಹವಾದ ಹಣದ ಲೆಕ್ಕ ಒಬ್ಬ ಇಡುತ್ತಿದ್ದ, ಸಾಮಾನು ಸರಂಜಾಮು ಮತ್ತೊಬ್ಬ ತರುತ್ತಿದ್ದ, ಕಾಮದಹನದ ರಾತ್ರಿ ಇಡೀ ದಿನ ಎಚ್ಚರ ಇರಬೇಕಲ್ಲ, ಹೀಗಾಗಿ ರಾತ್ರಿಯೆಲ್ಲ ತಿನ್ನಲು ಬೇಕಾದ ಚುರುಮುರಿ, ಖಾರಾ ಚೂಡಾ, ಕಾಮಣ್ಣನಿಗೆ ಪೂಜೆ ಮಾಡುವಾಗ ಒಡೆದು ನಂತರ ಅದರ ಕೊಬ್ರಿ ಹೋಳುಗಳನ್ನು ಚುರುಮುರಿಯೊದಿಗೆ ಸೇರಿಸಿ ದೇಣಿಗೆ ಕೊಟ್ಟ ಮನೆಗಳಿಗೆ ಪ್ರಸಾದವಾಗಿ ಕೊಡಲು ತೆಂಗಿನಕಾಯಿಗಳು, ಬೆಲ್ಲ, ಚಾಪುಡಿ, ಹಾಲು, ಬೀಡಿ-ಸಿಗರೇಟು, ಎಲಡಿಕೆ ತಂಬಾಕು ಒಂದೇ ಎರಡೇ… ಸಂಭ್ರಮವೋ ಸಂಭ್ರಮ. ಆಮೇಲೆ ಫಾಲ್ಗುಣ ಶುಕ್ಲ ಹುಣ್ಣಿಮೆಯ ಹಿಂದಿನ ದಿನ ರಾತ್ರಿ ಬೆಳದಿಂಗಳಲ್ಲಿ ಮೀಯುತ್ತ ಉದ್ದನೆಯ ಕೋಲಿಗೆ ಒಣಹುಲ್ಲು ಚಿಂದಿ ಬಟ್ಟೆ ಇತ್ಯಾದಿ ಸ್ಟಫ್ ಮಾಡಿ ಹೊಲಗಳಲ್ಲಿ ಇರುವ ಬೆದರು ಬೊಬೆಯಂಥದೊಂದು ಶರೀರ ಸೃಷ್ಟಿಸಿ ಅದಕ್ಕೊಂದು ಪ್ಯಾಂಟ್ ಶರ್ಟು ತೊಡಿಸಿ ಒಂದು ಮುಖವನ್ನೂ ಮಾಡಿ ತಲೆಗೊಂದು ಮುಂಡಾಸು ಅಥವಾ ಟೋಪಿ ಹಾಕಿ, ಕಣ್ಣು ಮೂಗು ಮೀಸೆ ಬರೆದು ಎತ್ತಿ ಗೋಡೆಗಾನಿಸಿ ಇಟ್ಟರೆ…, ಅದೋ, ನಮ್ಮ ಕಾಮಣ್ಣ ರೆಡಿ. + +ಈ ಸಲ ಹೋಳಿ ಹುಣ್ಣಿಮೆ ನನಗೆ ವಿಶಿಷ್ಟವಾಗಿತ್ತು. ಈ ವರ್ಷ ನನ್ನ ಹುಟ್ಟಿದ ದಿನವೂ ಹೋಳಿಹುಣ್ಣಿಮೆಯ ಓಕುಳಿಯ ದಿನವೂ ಮೇಳೈಸಿದ್ದವು, “ಚುಮು ಚುಮು ಬೆಳಕಿನ್ಯಾಗ ಒಂದೊಂದs ಕಾಮಣ್ಣ ಮೆರಕೊಂತ ಮನಿಗಿ ಬರಾಕತ್ತಿದ್ವು, ಆಗ ನೀ ಹುಟ್ಟಿದಿ” ಎಂದು ನಮ್ಮವ್ವ ತನ್ನ ತವರೂರು ಸತ್ತಿಗೇರಿಯಲ್ಲಿ ತಮ್ಮ ತಾಯಿಯ ಮನೆಯಲ್ಲಿ ನಾನು ಹುಟ್ಟಿದ ಪ್ರಸಂಗವನ್ನು ನನಗೆ ಆಗಾಗ ಹೇಳುತ್ತಿದ್ದಳು. ಒಮ್ಮೊಮ್ಮೆ ನನ್ನ ಕಿಡಿಗೇಡಿತನದಿಂದ ರೋಸಿ ಹೋದಾಗ “ಕಾಮಣ್ಣ ಮೆರಿಯೂವಾಗ ಹುಟ್ಟಿದಂವ ನೀ, ಅದಕ್ಕs ಇಷ್ಟ ಉರೀತಿ” ಎಂದು ಬೈಯ್ಯುತ್ತಲೂ ಇದ್ದಳು. ಧಾರವಾಡದಲ್ಲಿ ಸಾರ್ವಜನಿಕ ಗಣಪತಿ ಕೂಡ್ರಿಸುವಂತೆ ಕಾಮಣ್ಣರನ್ನು ಓಣಿಗಳಲ್ಲಿ ಸಾದಾಸೀದಾ ಮಂಟಪಗಳಲ್ಲಿ ಕೂಡ್ರಿಸುತ್ತಾರೆ. ಆಮೇಲೆ ದಹಿಸುತ್ತಾರೆ. ನಮ್ಮಲ್ಲಿ ಹಾಗಿರಲಿಲ್ಲ. ಹುಣ್ಣಿಮೆಯ ದಿನ ಬೆಳಿಗ್ಗೆ ಕಾಮಣ್ಣನ ಮೆರವಣಿಗೆ ಶುರು. ಅದು ಮತ್ತೊಂದು ರೌಂಡ್ ಹಣ ಪೀಕಿಸುವ ಕಾರ್ಯಕ್ರಮ. ಊರಿನ ಹಲವಾರು ಓಣಿ- ಬೀದಿಗಳ ಕಾಮಣ್ಣಗಳು ಒಬ್ಬೊಬ್ಬನ ಹೆಗಲಿಗಾನಿ ಅವನ ಹಿಂದೆ ಹೊಯ್ಕೊ, ಬಡಕೋ ಮಾಡುವ ಹತ್ತಾರು ಇತರರ ಪಟಾಲಂ ಗಳೊಂದಿಗೆ ಊರಿನ ಇನ್ನಿತರ ಪ್ರದೇಶದ ಮನೆಗಳಿಗೆ ಹೋಗುವದು, ಕಾಸು ಕೇಳುವದು ಇದು ಮಧ್ಯಾಹ್ನದವರೆಗೆ ನಡೆಯುತ್ತಿತ್ತು. ಕೊಡುವವರು ತಾನೇ ಎಷ್ಟಂತ ಕೊಡುತ್ತಾರೆ? ಎಷ್ಟುಕಾಮಣ್ಣಗಳಿಗೆ? ಒಂದಾಣೆ ಎರಡಾಣೆ ಕೊಟ್ಟು ಸಾಗಹಾಕುತ್ತಿದ್ದರು. ಶಪಿಸುತ್ತಲೂ ಇದ್ದರು. ಹೆಂಗಳೆಯರು “ಬೇಕ್ಕಾದ್ದಷ್ಟ್ ಹೊಯ್ಕೊರ್ರಿ, ಇಷ್ಟs, ಇದರ ಮ್ಯಾಲೆ ಒಂದ್ ನಯಾಪೈಸಾನೂ ಕೊಡೂದುಲ್ಲ” ಎಂದು ಕೈ ಜಾಡಿಸಿ ನಮ್ಮತ್ತ ಬೆನ್ನು ತಿರುವಿ ಒಳಗೆ ಹೋಗುತ್ತಿದ್ದರು. ನಾವು ಸ್ವಲ್ಪ ಹೊತ್ತು ಹೊಯ್ಕೊಂಡು ಅವರ ನಿರ್ಧಾರ ಅಚಲ ಅಂತ ಮನವರಿಕೆಯಾದ ಮೇಲೆ ಮುಂದಿನ ಮನೆಗೆ ಹೋಗುತ್ತಿದ್ದೆವು. + +ರಾತ್ರಿಯೆಲ್ಲ ಎಚ್ಚರವಿದ್ದು ಬೆಳಗು ಹರಿಯುವ ಹೊತ್ತಿಗೆ ಕಾಮಣ್ಣನ ಸುತ್ತ ಕುಳ್ಳು ಕಟ್ಟಿಗೆ ಸೊಪ್ಪುಸದೆ ಎಲ್ಲ ಒಟ್ಟಿ, ಬೆಂಕಿ ಹಚ್ಚಿ ಹೊಯ್ಕೊಳ್ಳುತ್ತ, ಕಿಡಿಗಳನ್ನು, ಹಾರಿಸಿ ಉದ್ದೋಉದ್ದ ಏಳುತ್ತಿದ್ದ ಬೆಂಕಿಯ ಕೆನ್ನಾಲಗೆಗಳ ಮೋಹಕ ಬೆಳಕಿನಲ್ಲಿ ಒಬ್ಬರೊಬ್ಬರು ನೋಡುತ್ತ ನಗುತ್ತ ಬೆಳಗಾಗುತ್ತಲೇ ಮನೆಗೆ ವಾಪಸಾಗಿ ಬಕೀಟಿನಲ್ಲಿ ಬಣ್ಣ ಕಲಸಿ ಬಾಟಲಿಗಳಲ್ಲಿ ತುಂಬಿಕೊಂಡು, ಬಣ್ಣದ ಪುಡಿಯ ಪಾಕೀಟುಗಳನ್ನು ಕಿಸೆಯಲ್ಲಿಟ್ಟುಕೊಂಡು ಓಕುಳಿಗೆ ಹೋಗುವದು ಇನ್ನೊಂದು ಮಜಲು. ಒಬ್ಬರೊಬ್ಬರ ಮುಖಕ್ಕೆ ವಿವಿಧ ಬಗೆಯ ಬಣ್ಣ, ಮಸಿ, ಇತ್ಯಾದಿ ತಿಕ್ಕಿ ಬಟ್ಟೆಗಳೆಲ್ಲ ತೊಯ್ದು ತಪ್ಪಡಿಯಾಗಿ ಮತ್ತೆ ಬಣ್ಣ ಕಲಸಿಕೊಳ್ಳಲು ಮನೆಯ ಬಳಿ ಬಂದರೆ ಸ್ವತ: ನಮ್ಮ ತಾಯಿ, ಅಕ್ಕ ತಂಗಿಯರು ಗುರುತು ಹಿಡಿಯಲಾರದೇ ಹಿಡಿದು “ಐ ಇಂವ ಅಶೋಕ, ಐ ಇಂವ ರುದ್ರಪ್ಪ, ಐ ಇಂವ ಬಾಲ್ಯಾ” ಎಂದು ಕೈ ಮಾಡಿ ತೋರಿಸುವದು, ಕೆಕ್ಯಕ್ಕಾಡಿಸಿ ನಗುವದು ಮಾಡುತ್ತ ನಮ್ಮ ಚೆಹರಾ ಪಟ್ಟಿ ಹಾಗಾದರೆ ಎಷ್ಟು ಬದಲಾಗಿರಬಹುದೆಂದು ನಮಗೇ ಗಾಬರಿಯಾಗಿ ಕನ್ನಡಿಯಲ್ಲಿ ನೋಡಿದರೆ ಅವು ನಿಜಕ್ಕೂ ಕರಾಬುಗೆಟ್ಟು ಹೋಗಿ, ಬರೀ ಕಣ್ಣುಗಳು ಮತ್ತು ಬಾಯಿ ತೆರೆದರೆ ಹಲ್ಲುಗಳ ಸಾಲಿನ ಬಿಳುಪು ಮಾತ್ರ ಕಾಣುವಂತೆ ಮಾರ್ಪಟ್ಟು ಇನ್ನುಳಿದೆಲ್ಲವು ಬಣ್ಣದಲ್ಲಿ ಮುಳುಗಿ ಹೋಗಿ ನೀಲಿ ಹಸಿರು ಕೇಸರಿಗಳೆಲ್ಲ ಮೇಳೈಸಿದ ದಟ್ಟ ವಿಲಕ್ಷಣ ಬಣ್ಣವೊಂದನ್ನು ನಮ್ಮ ಮುಖ ಕಸಿ ಮಾಡಿಕೊಂಡಂತಿರುತ್ತಿತ್ತು. ಹೋಳಿ ಹುಣ್ಣಿಮೆ ಮುಗಿದೊಡನೆ ನಮಗೆ ಎಲ್ಲ ಖಾಲಿ ಖಾಲಿ ಎನ್ನಿಸುತ್ತಿತ್ತು. ಆ ಅಪಾರ ಕ್ರಿಯಾಶೀಲತೆಯ ಪರ್ವ ಮುಗಿದ ಸಂಕಟ ಒಂದೆಡೆಯಾದರೆ ಶಾಲೆ ಎಂಬ ಪೀಡೆಯೂ ವಾರ್ಷಿಕ ಪರೀಕ್ಷೆ ಎಂಬ ದೆವ್ವವೂ ಬಾಯ್ದೆರೆದು ನಿಂತಿರುತ್ತಿದ್ದವು. + +ಧಾರವಾಡಕ್ಕೆ ಬಂದ ಮೇಲೆ ಬಣ್ಣದಾಟದ ನನ್ನ ಉತ್ಸಾಹ ಕುಂದಿತು. ದೆಹಲಿಯಲ್ಲಿದ್ದ ಐದು ವರ್ಷಗಳಲ್ಲಿ ಬಿಂದಾಸ್ ಹೋಳಿ ಆಡಿದೆನು. ಮತ್ತೆ ಅಧ್ಯಾಪಕನಾಗಿ ಧಾರವಾಡಕ್ಕೆ ಬಂದ ಮೇಲೆ ಕಳೆದ ಇಪ್ಪತ್ತಾರು ವರ್ಷಗಳಿಂದ ಬಣ್ಣದಾಟ ಸಾಂಕೇತಿಕ ಮಾತ್ರ. ಯೂನಿವರ್ಸಿಟಿ ಕ್ವಾರ್ಟರ್ಸ್ ನಲ್ಲಿದ್ದಾಗ ಗೆಸ್ಟ್ ಹೌಸ್ ನ ಸಿಬ್ಬಂದಿ ಅಥವಾ ಹಾಸ್ಟೆಲ್ ನಲ್ಲಿರುತ್ತಿದ್ದ ವಿದ್ಯಾರ್ಥಿಗಳು ಬಣ್ಣ ಹಾಕಿ ಹೋಗುತ್ತಿದ್ದರು. ಅಲ್ಲಿಂದ ಹೊರಬಂದ ಮೇಲೆ ನಾನು ವಾಸಿಸುವ ಮೊಹಲ್ಲಾದ ಹಾಗೂ ನೆರೆಹೊರೆಯವರು ಬಂದು ಬಣ್ಣ ಹಾಕುತ್ತಾರೆ, ಅವರೊಂದಿಗೆ ಸ್ವಲ್ಪ ಹೊತ್ತು ಸಂಚರಿಸಿ ಮರಳಿ ಬರುತ್ತೇನೆ. + +ಆದರೆ ಹೋಳಿಯಾಟದ ವರದಿಗಳನ್ನು, ಚಿತ್ರಗಳನ್ನು ಪತ್ರಿಕೆಯಲ್ಲಿ ಟಿವಿಯಲ್ಲಿ ಮುದದಿಂದ ಆಸ್ವಾದಿಸುತ್ತೇನೆ. ಹೊಸ ಚಿಗುರು, ಕೋಗಿಲೆಗಳ ಕೂಗು, ಋತುಗಳ ರಾಜ ವಸಂತನ ಆಗಮನ, ಬೇಸಿಗೆಯ ಧಗೆ, ಬೆಳದಿಂಗಳು, ಬಣ್ಣ…. ಹೋಳಿ ನನಗೆ ಯಾವಾಗಲೂ ಇಷ್ಟ. ಪಾಠ ಮಾಡುವಾಗ, ಶಿವನ ವಿವಿಧ ರೂಪಗಳನ್ನು, ಆಯಾ ರೂಪಗಳಲ್ಲಿ ಶಿವನನ್ನು ಚಿತ್ರಿಸುವ ಕುರಿತ ಆಗಮ, ಪುರಾಣಗಳ ಶಿಲ್ಪಲಕ್ಷಣಗಳ ಕುರಿತ ಪ್ರಸ್ತಾಪಗಳನ್ನು ವಿದ್ಯಾರ್ಥಿಗಳಿಗೆ ವಿವರಿಸುವ ಸಂದರ್ಭಗಳಲ್ಲಿ ತ್ರಿಪುರಾಂತಕ, ಅಂಧಕಾಸುರಮರ್ದನರ ಜೊತೆ ಮದನಾಂತಕನೂ ಬರುತ್ತಾನೆ. ಕಬ್ಬಿನ ಜಲ್ಲೆಯ ಬಿಲ್ಲು, ಹೂವಿನ ಬಾಣ ಹೊತ್ತು ಬರುವ ಕಾಮದೇವನ ಕಲ್ಪನೆಯಲ್ಲಿರುವ ಕಾಠಿಣ್ಯ ಮತ್ತು ಮೃದುತ್ವದ ಸಮಾಗಮವೇ ನನಗೆ ತುಂಬ ಇಷ್ಟವಾಗುತ್ತದೆ. ರತಿದೇವಿ ಕಾಮದೇವರ ಚಿತ್ರಣದಲ್ಲಿ ಪಾರಂಪರಿಕ ಶೈಲಿಯ ವರ್ಣಚಿತ್ರ ಕಲಾವಿದರು ಮೈಯ್ಯೆಲ್ಲ ಕಣ್ಣಾಗಿ, ಕಣ್ನೋಟವೆಲ್ಲ ಕಾಮವಾಗಿ ತೊಡಗಿಕೊಂಡಂಥ ತನ್ಮಯತೆ ಕೆಲಚಿತ್ರಗಳಲ್ಲಿ ಕಂಡುಬರುತ್ತದೆ. ಧರ್ಮ, ಅರ್ಥ, ಮೋಕ್ಷಗಳೊಂದಿಗೆ ಪುರುಷಾರ್ಥಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡ ಕಾಮನನ್ನು ಶಿವ ಯಾಕೆ ಸುಟ್ಟ ಎಂಬುದು, ಕತೆಗಳನ್ನೋದಿಯೂ, ನನಗೆ ಅರ್ಥವಾಗಿಲ್ಲ. ಕಾಮನೆಗಳು ಪ್ರೇಮದ ನವಿರನ್ನು ತೊರೆದು ಕಾಮಮಾತ್ರವಾಗಿ ಮೃಗೀಯಗೊಳ್ಳುವ ಸಾಧ್ಯತೆಯನ್ನು ನಿರುತ್ತೇಜಕಗೊಳಿಸಲೆಂದೆ? ಆದರೆ ಶೃಂಗಾರಭಾವ ರತಿಭಾವವಾಗದೇ ಹೋದಾಗ ಇರುವ ಸೊಗಸೇನು? ಶರಬಾಣ ಬಿಟ್ಟು ಉದ್ಧಟ ಕಾಮನು ಶಿವನ ತಪವ ಭಂಗಗೊಳಿಸಿದನೆಂದೇ ಇಟ್ಟುಕೊಳ್ಳೋಣ. ಶಿವನು ತ್ರಿಲೋಚನನಾಗಿ ಮನ್ಮಥನನ್ನು ಸುಟ್ಟೇ ಬಿಡುವದೇ? ಹಾಗಂತ ಕಾಮದಿಂದ ಮುಕ್ತನಾದನೇ? ಪಾರ್ವತಿಯೊಂದಿಗೆ ಮದುವೆಯೂ ಆಯಿತು, ಮಕ್ಕಳೂ ಆದವು. ಏನು ಕೇಡಾಯಿತು? ಲೋಕ ಕಲ್ಯಾಣಕ್ಕೆ ಅದರಿಂದೇನು ಕಂಟಕವಾಯಿತು? ಹಾಗೇ ಕೃಷ್ಣನ ಹೆಂಡತಿ ರುಕ್ಮಿಣಿ ಸಂಜಾತ ಪ್ರದ್ಯುಮ್ನನು ರತಿಯನ್ನು ಬಂಧಿಸಿಟ್ಟ ಶಂಭ ರಾಕ್ಷಸನನ್ನು ಕೊಂದು ಅವಳೊಂದಿಗೆ ದ್ವಾರಕೆಗೆ ಮರಳಿದ್ದು ಅಂದು ಅಲ್ಲಿ ವಸಂತೋತ್ಸವ ಇದ್ದದ್ದು.., ಅದು ಬೇರೆಯದೇ ಕತೆ. + +ಕತೆಗಳಿಗೇನು, ಸಾಕಷ್ಟಿವೆ. ಪ್ರಶ್ನೆಗಳನ್ನೂ ಕೇಳುತ್ತ ಹೋಗಬಹುದು. ಪುರಾಣಗಳನ್ನು ಇತಿಹಾಸವೆಂಬಂತೆ ಗ್ರಹಿಸಿ ಸಮಾಜದ ವ್ಯಾಖ್ಯಾನಗಳಾಗಿ ಮಾರ್ಪಡಿಸಿ ನೊಂದು ಬೆಂದು ಮಾಡುವದು ನಮ್ಮ ಸಂಭ್ರಮವನ್ನು ನಾವೇ ಹತ್ತಿಕ್ಕುವದಕ್ಕಿಂತ ಹೆಚ್ಚಿನ ಪರಿಣಾಮ ಬೀರುತ್ತದೆಂದು ಅನ್ನಿಸುವದಿಲ್ಲ. ತಪೋಭಂಗಕ್ಕೆ ಕಾರಣನಾದ ಮನ್ಮಥನನ್ನು ಶಿವ ಮೂರನೆಯ ಕಣ್ಣು ತೆರೆದು ಸುಟ್ಟ ಘಟನೆಯಿಂದ ಇನ್ನೊಂಥರ ಪ್ರೇರಣೆ ಪಡೆದು ಅರಿಷಡ್ವರ್ಗಗಳ ಮೇಲೆ ವಿಜಯ ಸಾಧಿಸಿ, ಕಾಮದಿಂದ ವಿಮೋಚನೆ ಪಡೆದು, ಧ್ಯಾನಸಮಾಧಿ ಸ್ಥಿತಿಗೆ ಹೋಗೋಣ. ಎಂಥ ಬೋರಿಂಗ್ ಅಲ್ವಾ? ಕಾಮನ ಬಾಣ ತಾಕುತ್ತಲೇ ಶಿವನಿಗೆ ಸಮಸ್ತ ಜಗತ್ತೇ ರಂಗುರಂಗಾಗಿ ಕಂಡಿತಂತೆ ಎಂಬುದನ್ನು ನಂಬಿ ಈ ಮಧುಮಾಸವನ್ನು ಸ್ವಲ್ಪ ಪ್ಯಾಶನೇಟ್ ಆಗಿ ನೇವರಿಸಬಹುದಲ್ಲವೇ? + + + +ಕೊನೇಪಕ್ಷ ಪುರಾಣಗಳನ್ನು, ದಂತಕತೆಗಳನ್ನು ಸ್ವಲ್ಪ ಪಕ್ಕಕ್ಕಿಟ್ಟು ನಮ್ಮ ಪರಂಪರೆಯನ್ನು ಹೀಗಳೆಯುವ ವಿಮರ್ಶಾಪ್ರಜ್ಞೆಗೂ ಸ್ವಲ್ಪ ವಿರಾಮ ಕೊಟ್ಟು ಬೆಳಕಿಗೊಂದು ಹಬ್ಬ, ಬಣ್ಣಕ್ಕೊಂದು ಹಬ್ಬ ಸೃಷ್ಟಿಸಿದ ನಮ್ಮದೇ ಪರಂಪರೆಯ ಕಲ್ಪನಾಶ್ರೀಮಂತಿಕೆಯನ್ನು ಸ್ವಲ್ಪ ಮೆಚ್ಚಿ, ಸ್ವಲ್ಪ ನಮಿಸಿ ಚೈತ್ರ ವೈಶಾಖವೆಂಬ ಜೇನಿನಂತೆ ಸವಿಯಾದ ತಿಂಗಳುಗಳನ್ನು ಬಣ್ಣ ಬಣ್ಣದ ಓಕುಳಿಯೊಂದಿಗೆ ಕೋಟ್ಯಾಂತರ ಜನ ಆನಂದಿಸುವದನ್ನಾದರೂ ಆನಂದಿಸಬಹುದಲ್ಲವೆ? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_432.txt b/Kenda Sampige/article_432.txt new file mode 100644 index 0000000000000000000000000000000000000000..04fbb79297a6a9ca90d14e5ae24fc9627ad0d000 --- /dev/null +++ b/Kenda Sampige/article_432.txt @@ -0,0 +1,51 @@ + + +ಹೊಸಬರ ಕಾವ್ಯವನ್ನು ಓದುವಾಗ, ಬರೆಯುವಾಗ ಎದುರಾಗುವ ಸವಾಲುಗಳು ಹಲಬಗೆಯವು. ಈ ಶತಮಾನದ ಕಾವ್ಯದ ದಾರಿಯಲ್ಲಿ ಪರಿಶೀಲನೆ, ಸಮೀಕ್ಷೆ, ತಾತ್ವಿಕ ಚೌಕಟ್ಟು, ವಿಶ್ಲೇಷಣೆಗಳು ಏಕಕಾಲಕ್ಕೆ ಒಂದೇ ರೇಖೆಯಲ್ಲಿ ಸಿಕ್ಕರೂ ಸಿಗಬಹುದು. ಸಮಕಾಲೀನ ಸಮಾಜದಲ್ಲಿ ‘ಆಗಿರುವ’ ಆಗುತ್ತಿರುವ’ ಘಟನೆಗಳು ಒಂದು ಕಡೆಗಿದ್ದರೆ, ಮತ್ತೊಂದು ಕಡೆ ಬದುಕಿನಲ್ಲಿ ಚದುರಿದಂತೆ ಇರುವ ಸ್ವ ಚಲನೆಗಳು ಒತ್ತರಿಸಿ ಬರುತ್ತಿವೆ. ಇವರ ಕಾವ್ಯವನ್ನು ಎದುರಿಗಿಟ್ಟುಕೊಂಡು ತೀರ ಪರಂಪರೆಯನ್ನು ಅವಾಹಿಸಿಕೊಂಡು ವಿವರಿಸುವುದಾಗಲೀ, ಮತ್ತು ಪರಂಪರೆಯ ಛಂದೋಲಯಗಳನ್ನು ಬೆನ್ನಿಗಂಟಿಸಿಕೊಂಡು ಮುನ್ನಡೆಯುವುದಾಗಲೀ, ಸಮಕಾಲೀನವಾದ ಯಾವುದೋ ಒಂದು ಚಳುವಳಿಯ ತಿಳುವಳಿಕೆಯ ಹಿನ್ನೆಲೆಯಿಂದ ವಿವರಿಸಿಕೊಳ್ಳುವುದು ಬಹುತೇಕ ಕಷ್ಟ. ಹಾಗಾಗಿಯೇ ಕನ್ನಡದಲ್ಲಿ ಬರೆಯುತ್ತಿರುವ ಕವಿಗಳ ಮನೋಲೋಕ “ಏಕದಾರಿ”ದಲ್ಲ; ಅದು ‘ಬಹುದಾರಿ’ಯದು. ಆದ್ದರಿಂದಲೇ ಹೊಸಬರ ಕಾವ್ಯವನ್ನು ‘ಹಲವು ಬಣ್ಣದ ಹಗ್ಗ’ಎಂದು ಕರೆಯಲಾಗಿದೆ. + +ಪಶ್ಚಿಮದಲ್ಲಿ ಈ ಕಾಲಘಟ್ಟವನ್ನು ಮತ್ತು ಬರಹದ ತಿಳುವಳಿಕೆಯನ್ನು ‘ಆಧುನಿಕೋತ್ತರ’ ‘ಸತ್ಯೋತ್ತರ’ ಮುಂತಾದ ತತ್ವಗಳಿಂದ ಕರೆದಿರುವುದು ಸರಿಯಷ್ಟೆ. ಆದರೆ ಇವುಗಳ ಗರ್ಭದ ಆಶಯಗಳು, ವೈವಿಧ್ಯತೆ ಮತ್ತು ಬಹುತ್ವದ ಆಯಾಮಗಳನ್ನು ಹೊಂದಿರುವ ಭಾರತ ಮತ್ತು ಕರ್ನಾಟಕದಂತಹ ಪ್ರದೇಶಗಳಿಗೆ ಭಿನ್ನವಾಗಬಲ್ಲವು. ಹಾಗಾದರೇ ಇವುಗಳನ್ನು ಒಳಗುಮಾಡಿಕೊಂಡು ನಮ್ಮದೇ ಮಾನದಂಡಗಳನ್ನು ಸೃಜಿಸಿಕೊಳ್ಳುವುದು ಹೇಗೆ? ಈ ಶತಮಾನದ ಕನ್ನಡದ ಕವಿಗಳು ಹಳಬರ ಯಾವ ಮಾದರಿಗಳನ್ನು ಮುರಿದು ಕಟ್ಟುತ್ತಿದ್ದಾರೆ? ಅವರು ತಮ್ಮದೇ ಜೀವನ ಮಾರ್ಗವನ್ನು ಕವಿತೆಯಂತಹ ಭಾಷಿಕ ಚೌಕಟ್ಟಿನಲ್ಲಿ ಹೇಗೆ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ? ಸಮಕಾಲೀನ ಜೀವನಕ್ರಮವೇ ಅವಸರದ ಮತ್ತು ವಿಛ್ಚಿದ್ರಗೊಳ್ಳುವ ಇರಾದೆಯಲ್ಲಿದ್ದಾಗ ಅವರಿಗೆ ಮುಖ್ಯವಾಗುವುದು ಯಾವುದು? ಮುಂತಾದ ಹಲಬಗೆಯ ಪ್ರಶ್ನೆಗಳು ನಮ್ಮ ದಾರಿಗಳನ್ನು ಅಷ್ಟು ಬೇಗ ಸುಗಮಗೊಳಿಸಲಾರವು. ಹಾಗಂತ ಇವುಗಳಿಗೆ ಎದರು ಬಗೆಯ ಪರಿಹಾರಗಳು ಇಲ್ಲವೇ ಇಲ್ಲ ಎಂದು ಹೇಳುವುದು ಕೂಡ ತಪ್ಪು. ಆಧುನಿಕೋತ್ತರದ ಲಕ್ಷಣಗಳಲ್ಲಿ ‘ಬಹುತ್ವ’ವೂ ಒಂದು. ಈ ಪದವನ್ನು ನಮ್ಮ ಸಾಂವಿಧಾನಿಕ ಆಶಯದಲ್ಲೇ ಕಾಣುತ್ತೇವೆ. ಆದರೇ ಅದನ್ನು ನಾವು ‘ವೈವಿಧ್ಯತೆ’ ಎಂಬ ಪದದಿಂದ ಕರೆಯಲಾಗಿದೆ. ಸಾರ್ವತ್ರಿಕ ಆಶಯವನ್ನು ಹೊಂದಿರುವ ಈ ಪದಗಳಿಗೆ ಅಂಟಿಕೊಂಡಿರುವ ರೋಗಗಳು ಭಾರತದಂತಹ ದೇಶಗಳಲ್ಲಿ ಸಾಂಕ್ರಾಮಿಕವಾಗಿ ಹರಡುತ್ತಿವೆ. + +‘ರಾಷ್ಟ್ರೀಯತೆ’ ‘ಹಿಂದುತ್ವ’ ಮುಂತಾದ ಪದಗಳ ಹಿನ್ನಲೆಯಲ್ಲಿ ಮುಗ್ಧ ಜನಸಮೂಹವನ್ನು ದಿಕ್ಕುತಪ್ಪಿಸುವ ಹಾದಿಗಳು ಪ್ರಬಲಗೊಂಡಿರುವ ಈ ಶತಮಾನದಲ್ಲಿ ‘ವೈವಿಧ್ಯತೆ’ ಮತ್ತು ‘ ಬಹುತ್ವ’ಗಳು ತಮ್ಮದೇ ದಾರಿಯಲ್ಲಿ ಸ್ವಂತೀಕರಣವನ್ನು ಉಳಿಸಿಕೊಳ್ಳಲು ಯತ್ನಿಸುತ್ತಿವೆ. ಹೀಗೆ ಉಳಿಸುವ ದಾರಿಗಳು ಬರೀ ‘ಬುದ್ಧಿಜೀವಿಗಳ’ ಮತ್ತು ‘ಎಡಪಂಥ’ಗಳೇ ಆಗಬೇಕಾಗಿಲ್ಲ. ಈ ನೆಲದ ಸಮಾನತೆಯನ್ನು ತಾತ್ವಿಕವಾಗಿ ಹಾಡಿನ ಮೂಲಕ ಹರಡುವ ‘ಜನಪದ ದನಿ’ ಗಳಾದರೂ ಸಾಕು. ಮಂಟೇಸ್ವಾಮಿಯ ಪದಗಳೂ, ತತ್ವಪದಗಳೂ ಆಗಬಹುದು. ವೈವಿಧ್ಯಮಯ ಬದುಕಿನ ಈ ಸಂದರ್ಭದಲ್ಲಿ ಯಾವಕವಿಯೂ ಇದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. + +ಈ ಶತಮಾನದ ಹೊಸ ಕವಿಗಳು ಪರಂಪರೆಯ ‘ಆಶಯ’ಗಳ ಕಡೆಗೆ ಪ್ರಭಾವಿತಗೊಂಡಷ್ಟು ‘ಆಕೃತಿ’ಯ ಕಡೆಗೆ ಅಷ್ಟಾಗಿ ಒಲವು ತೋರಿಸಿಲ್ಲ. ಇದಕ್ಕೆ ಹಲವು ಕಾರಣಗಳೂ ಇರಬಲ್ಲವು. ಇವರು ಸಂಪ್ರದಾಯ ಬದ್ಧ ಲಯಗಾರಿಕೆಯನ್ನು ಮುರಿದು, ಆಡುಮಾತಿನ ‘ಕಥನ’ಲಯವನ್ನು ಸ್ವಾಗತಿಸಿಕೊಂಡಿದ್ದು ಕಾರಣವಿರಬಹುದು. ಆಡುಮಾತಿನ ಲಯಗಾರಿಕೆಯನ್ನು ಬಳಸುವುದು ಈ ಕಾಲಮಾನದ ವಿಶಿಷ್ಟತೆಯೂ ಕೂಡ. ಆದರೆ ಇದಕ್ಕೆ ತಕ್ಕ ಪ್ರತಿಮೆ, ರೂಪಕಗಳನ್ನು ನಿರ್ಮಿಸುವುದರಲ್ಲಿ ಸೋಲುತ್ತಿದ್ದಾರೆ. ಇಲ್ಲಿ ‘ಮಾತು’ ಅಧಿಕಗೊಂಡು ‘ಕವಿತ್ವ’ ಗೌಣವಾಗುವುದು ಸಾಮಾನ್ಯ. ಈ ಮಾತನ್ನು ಸದ್ಯಕ್ಕೆ ಬರೆಯುತ್ತಿರುವ ಎಲ್ಲ ಕವಿಗಳಿಗೂ ಅನ್ವಯಿಸಲು ಆಗದು. ಸಂಸ್ಕೃತ ಕಾವ್ಯ ಮೀಮಾಂಸೆಯ ನಿಲುವುಗಳ ಆಧಾರಗಳ ಹಿನ್ನಲೆಯಲ್ಲಿ ಈ ಶತಮಾನದ ಕಾವ್ಯವನ್ನು ಪರಿಶೀಲನೆ ಮಾಡಲು ಆಗದ ಮಾತು. ನಿರ್ದಿಷ್ಟ ಛಂದೋಲಯಗಳನ್ನು ಮೀರಿ ಇಂದಿನ ಕವಿತೆ ಕಾಣಿಸಿಕೊಂಡಿದೆ. ಆಗಲೇ ಹೇಳಿದ ಹಾಗೆ ಕನ್ನಡ ಭಾಷಿಕ ಚೌಕಟ್ಟುಗಳು ಭಿನ್ನವಾಗಿಯೇ ಬಳಕೆಗೊಳ್ಳುತ್ತಿವೆ. ಇದರ ವೈವಿಧ್ಯತೆಯನ್ನು ಅರಿಯಲು ಕೊಂಚ ಧ್ಯಾನಸ್ಥ ಸ್ಥಿತಿ ಬೇಕು. + +ಆಡು ಮಾತಿನ ಲಯಕ್ಕೆ ಅನುಗುಣವಾಗಿ ಇವರು ನಿರ್ಮಾಣಮಾಡಿಕೊಳ್ಳುತ್ತಿರುವ ತಾತ್ವಿಕ ಚೌಕಟ್ಟುಗಳು ಕೂಡ ಭಿನ್ನವಾಗಿಯೇ ಕಂಡುಬರುತ್ತಿವೆ. ಹಲವು ಬಾರಿ ಕವಿತೆಯ ವಸ್ತುಗಾರಿಕೆಯಲ್ಲಿಯಲ್ಲಿಯೇ ಅವರ ತಾತ್ವಿಕತೆ ಅರಿವಾಗಬಹುದು. ನಮ್ಮ ಪೂರ್ವಸೂರಿಗಳ ಕಾವ್ಯದ ತಾತ್ವಿಕತೆಗಳನ್ನು ಹಿರಿಯ ವಿಮರ್ಶಕರು ಅಧ್ಯಯನದ ಅನುಕೂಲಕ್ಕೆ ತಕ್ಕಂತೆ ವಿಂಗಡಿಸಿಕೊಂಡಿದ್ದಾರೆ. ಆದರೆ ಇಂದು ಹಿರಿಯರ ಕಾವ್ಯವನ್ನು ಮತ್ತೊಮ್ಮೆ ನೋಡಿದಾಗಲೂ ‘ತಾತ್ವಿಕತೆಗಳ ಗರ್ಭ’ ಸೀಳಿದಂತೆ ಕಾಣುತ್ತದೆ. ಅಂದರೆ ಅಲ್ಲೂ ವೈವಿಧ್ಯತೆ ಇದೆ. + +ಈ ಹಿನ್ನಲೆಯಲ್ಲಿ ಹೊಸಬರ ಕಾವ್ಯಕ್ಕೆ ‘ಸಮಾಜ’ ಮತ್ತು ‘ಮನುಷ್ಯ’ ನೇ ಕೇಂದ್ರವೆಂದು ಬಹುತೇಕ ಒಪ್ಪಿಕೊಳ್ಳಬೇಕಾಗುತ್ತದೆ. ಇದರಲ್ಲಿ ಲಿಂಗಬೇಧವೇನೂ ಇಲ್ಲ. ಚಾಂದಿನಿಯಂತ ಬದಲು ದೇಹದ ವ್ಯಕ್ತಿಯ ಕನ್ನಡ ಭಾಷಿಕ ನುಡಿಗಟ್ಟುಗಳು ನಮ್ಮ ಕಣ್ಣಮುಂದಿವೆ. ಸಮಾಜ ಮತ್ತು ಮನುಷ್ಯ ಎಂದು ಕರೆದಾಗ, ಹಿಂದೆ ನವೋದಯ ಮತ್ತು ನವ್ಯ ಕಾವ್ಯಗಳಲ್ಲಿ ಬಂದಿವೆಯಲ್ಲವೇ ಎಂಬ ಮಾತು ಕೇಳಿಸಬಹುದು. ಆದರೆ ಬದಲಾದ ಕಾಲಮಾನ, ಆಲೋಚನಾಕ್ರಮ, ವೈವಿಧ್ಯತೆ, ಆಧುನಿಕವನ್ನು ಮೀರುತ್ತಿರುವ ಜೀವನ ಕ್ರಮಗಳ ಪಲ್ಲಟಗಳು: ಎಲ್ಲಕ್ಕಿಂತ ಮುಖ್ಯವಾಗಿ ಪಶುಪಾಲನ ಸಂಸ್ಕೃತಿಯ ಅವನತಿ, ಈ ನೆಲದ ಮೂಲ ಕಸುಬು ವ್ಯವಸಾಯದ ನಾಶ: ಪ್ರಜಾಪ್ರಭುತ್ವದ ಆತಂಕಗಳು: ಮಾನವತ್ವದ ವಿಚ್ಛಿದ್ರತೆ, ಬದಲಾದ ನಗರಚಿತ್ರಗಳು; ಹಿಂದುತ್ವ ತೋರಿಸುತ್ತಿರುವ ಅಪಾಯಗಳಿಂದಾಗಿ ಸಮಾಜದ ಪ್ರಕ್ಷುಬ್ಧತೆ ಮುಂತಾದ ವಸ್ತುಗಾರಿಕೆಯನ್ನು ಹೊಸಬರ ಕಾವ್ಯದಲ್ಲಿ ಕಾಣಲು ಸಾಧ್ಯ. ಈ ಎಲ್ಲ ವಸ್ತುಗಾರಿಕೆಯನ್ನು ಬಳಸಿಕೊಂಡೇ ನಾವು ಇಂದಿನ ಕಾವ್ಯದ ತಾತ್ವಿಕತೆಯನ್ನು ‘ವೈವಿಧ್ಯತೆಯ’ ಅಥವ ‘ಬಹುತ್ವದ’ ಕಾವ್ಯ ಎಂದು ಕರೆಯಬಹುದು. + +ಇಂದಿನ ಕಾವ್ಯದ ವಸ್ತು ಯಾವುದೇ ಒಂದು ಕೇಂದ್ರ ವಸ್ತುವನ್ನು ಹಿಡಿದು ಸಾಗುವುದಿಲ್ಲ. ಹಾಗಂತ ಇದು ಉದ್ದೇಶರಹಿತ ಕಾವ್ಯವಲ್ಲ. ಸದ್ಯದ ಬದುಕಿನ ಪಲ್ಲಟಗಳನ್ನು ಅನುಲಕ್ಷಿಸಿಯೇ ಕವಿತೆ ಸಾಗುತ್ತಿದೆ. ಹೀಗಿದ್ದರೂ ಹೊಸ ಕವಿ ಸವಾಲನ್ನು ಎದುರಿಸುತ್ತಿರುವುದು ಕವಿತೆಯನ್ನು ‘ಕಟ್ಟುವುದರಲ್ಲಿ’. ಆಗಲೇ ಹೇಳಿದ ಹಾಗೆ ಇಂದಿನ ಕವಿ ಆಶಯದ ಕವಿಯಾಗಿ ಹೆಚ್ಚು ಮುನ್ನೆಲೆಗೆ ಬರುತ್ತಿರುವುದು ಗೋಚರಿಸುತ್ತಿದೆ. ಆದರೆ ಇದನ್ನು ಅವರು ಬರೆದಿರುವ ಎಲ್ಲ ಕವಿತೆಗಳಿಗೂ ಅನ್ವಯಿಸಲು ಆಗದು. ಒಂದು ಸಂಕಲನದಲ್ಲಿ ಒಂದು ಕವಿತೆ ನಿಜದ ಕವಿತೆಯಾಗಿ ಗೊಚರಿಸಿದರೆ, ಇನ್ನುಳಿದ ಇಪ್ಪತ್ತು ಕವಿತೆಗಳು ಬರೀ ಮಾತುಗಳಾಗಿ ಇರುತ್ತವೆ. ಇಷ್ಟರ ನಡುವೆಯೇ ಇಂದು ಹೊಸಬರ ಕಾವ್ಯದ ಬಗ್ಗೆ ತೀರ ನಿರಾಶೆಯನ್ನು ಇಟ್ಟುಕೊಳ್ಳಬೇಕಾಗಿಲ್ಲ. ಕೆಲವು ವಿಮರ್ಶಕರು ಹೊಸಬರ ಕಾವ್ಯವನ್ನು ಅನೇಕ ಭಿನ್ನಾಭಿಪ್ರಾಯಗಳಲ್ಲಿ ಕರೆದಿರುವುದು ಸರಿಯಷ್ಟೇ. ಅವುಗಳನ್ನು ಹೀಗೆ ಪಟ್ಟಿಮಾಡಬಹುದು. ಹೊಸಬರ ಕಾವ್ಯದಲ್ಲಿ ‘ಜೀವನ ದರ್ಶನವಿಲ್ಲ’, ‘ಕವಿತೆ ನೆನಪಿನಲ್ಲಿ ಉಳಿಯುವುದಿಲ್ಲ’ ‘ಅನುಭವವಿಲ್ಲ’ ಪ್ರಮುಖವಾದ ಒಬ್ಬ ಕವಿಯ ಬಗ್ಗೆ ಬರೆದರೆ ಅಥವಾ ಮಾತನಾಡಿದರೆ, ಇಡೀ ಆ ತಲೆಮಾರಿಗೆ ಅನ್ವಯಿಸುತ್ತದೆ’. ಮುಂತಾದ ಮಾತುಗಳು ಬಿಡಿ ಓದಿನ ಫಲವಾಗಿ ಹುಟ್ಟಿಕೊಂಡರೇ, ಮತ್ತೂ ಕೆಲವು ಅರ್ಧಸತ್ಯಗಳು ಎಂತಲೇ ಹೇಳಬೇಕು. + +ಇವು ಕೊಂಚ ದೊಡ್ಡವರ ಅಭಿಪ್ರಾಯಗಳಾದರೆ, ಹೊಸತಲೆಮಾರಿನಲ್ಲಿಯೇ ಕಾಣಿಸಿಕೊಳ್ಳುತ್ತಿರುವ ವಿಶೇಷಣಗಳ ರೋಗ. ತಮಗೆ ತಾವೇ ‘ಪ್ರಧಾನ’ ‘ಅಗ್ರಗಣ್ಯ’ ‘ ಪ್ರಶಸ್ತಿ ಪಡೆದ ಕೃತಿಗಳೇ ಶ್ರೇಷ್ಟವೆಂಬ ಗೀಳು. ಮಾಧ್ಯಮಗಳಲ್ಲಿ ಕಾಣಿಸಿಕೊಂಡ ಕವಿತೆಯೇ ಶ್ರೇಷ್ಟ ಮುಂತಾದುವುಗಳ ಬೆನ್ನುಹತ್ತಿ ಜೀವಂತ ಕವಿತೆಯನ್ನು ನೀಡುವ ಧ್ಯಾನಸ್ಥ ಸ್ಥಿತಿಯನ್ನು ಮರೆಯುತ್ತಿದ್ದಾರೆ. ಇದರ ನಡುವೆಯೂ ತಮ್ಮ ಪಾಡಿಗೆ ತಾವು ಒಳ್ಳೆಯ ಕವಿತೆಗಳನ್ನು ಕೆಲವರು ನೀಡುತ್ತಿರುವುದು ಗಮನಿಸಬೇಕು. ಹಾಗಾಗಿ ಇದು ವಿಶೇಷಣಗಳ ಬೆನ್ನು ಹತ್ತಿ ಹೊಗುವ ಕಾಲಮಾನವಲ್ಲ. ಅಥವ ಯಾವುದೋ ಒಬ್ಬ ಕವಿಯನ್ನು ಮೆರೆಸಿ ಆತನಿಗೆ ತನ್ನ ಕಾವ್ಯದಲ್ಲಿ ಇಲ್ಲದಿದ್ದರೂ ದೊಡ್ಡಮಟ್ಟದ ತಾತ್ವಿಕತೆಯನ್ನು ಗಂಟುಹಾಕಿ, ಇನ್ನುಳಿದ ಕವಿಗಳನ್ನು ಗೌಣಗೊಳಿಸುವ ಪರಿಯೂ ‘ವೈವಿಧ್ಯಕಾವ್ಯ’ಕ್ಕೆ ಸಲ್ಲ. ನವಮಾಧ್ಯಮಗಳ ಪ್ರವೇಶಿಕೆಯಿಂದಾಗಿ ಗಟ್ಟಿಯಾದ ಕವಿತೆ ಮರೆಯಾಗಲು ಸಾಧ್ಯವೇ ಇಲ್ಲ. ಆದರೆ ಗುರುತಿಸುವ ರಾಜಕಾರಣದಿಂದಾಗಿ ಮತ್ತು ಕಣ್ತಪ್ಪಿನಿಂದಾಗಿ ಹಾಗಾಗಬಹುದು. + +ಇದರ ನಡುವೆ, ಕೆಲವರಂತೂ ಎಂಥವರಿಗೆ ಮುನ್ನುಡಿ, ಬೆನ್ನುಡಿ ಬರೆಯಬೇಕು? ಹೇಗೆ ಬರೆಯಬೇಕು? ಈ ಮೂಲಕ ಜಾತ್ಯತೀತನಾಗುವುದು ಹೇಗೆ? ನನ್ನ ಮುನ್ನುಡಿ ಯಾವ ಪ್ರಶಸ್ತಿಗಳಿಗೆ ಯೋಗ್ಯವಾಗ ಬಲ್ಲದು. ಎಂಬ ಯೋಚನೆ ಒಂದು ಕಡೆಗಿದ್ದರೇ; ಮತ್ತೊಂದು ಕಡೆ ಹೊಸಬರು ತಾನು ಯಾರ ಕಡೆ ಮುನ್ನುಡಿ ಬರೆಸಿದರೆ ಪ್ರಶಸ್ತಿ ಸಿಗಬಲ್ಲದು ಎಂಬ ಆಲೋಚನೆಯಲ್ಲಿ ಮಗ್ನವಾಗಿದ್ದಾರೆ. ಪ್ರಶಸ್ತಿಗಳ ಸಾಂಸ್ಕೃತಿಕ ಯಜಮಾನಿಕೆಗಳ ನಡುವೆಯೂ ಗಟ್ಟಿಯಾದ ಕವಿತೆಗಳಿವೆ. ಹಿಂದೆ ಕ್ರೈಸ್ಟ್ ಕಾಲೇಜ್ ಕಾವ್ಯ ಸ್ಪರ್ಧೆ ಮತ್ತು ‘ಸಂಚಯ’ ಪತ್ರಿಕೆಗಳ ಸ್ಪರ್ಧೆಯಲ್ಲಿನ ಕವಿತೆಗಳ ಗಟ್ಟಿತನ ನೋಡಿದರೂ ನಮಗೆ ಅರಿವಾಗಬಹುದು. ಇದರಲ್ಲಿ ನಾವು ಕಾಣಬೇಕಾದದ್ದು ವೈವಿಧ್ಯತೆ ಮತ್ತು ‘ನಿಜದ ಕವಿತೆ’ಯ ಮಾನದಂಡ. ಈಗ ‘ಸಂಚಯ’ ನಿಂತಿದ್ದರೆ, ಮತ್ತೊಂದು ಚಿ.ಶ್ರೀನಿವಾಸರಾಜು ಅವರ ನಂತರ ಕುಂಟುತ್ತಾ ಸಾಗುತ್ತಿದೆ. ಸದ್ಯ ಕ್ರೈಸ್ಟ್ ಕಾಲೇಜ್ ಹೊಸತಲೆಮಾರಿನ ಕವಿತೆಗಳನ್ನು ಗುರುತಿಸುವ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದೆ. ವರ್ತಮಾನದಲ್ಲಿ ಇವುಗಳ ಅಗತ್ಯವೂ ಇಲ್ಲದಂತೆ ನವಮಾಧ್ಯಮಗಳು ಹೆಚ್ಚು ಜಾಗವನ್ನು ಹೊಸತಲೆಮಾರಿಗೆ ನೀಡುತ್ತಿವೆ. ಇದರಿಂದ ಅನುಕೂಲವೇ ಆಗಿದೆ. ಆದರೆ ಪ್ರಶ್ನೆ ಇರುವುದು ಅವುಗಳನ್ನು ಬಳಸಿಕೊಳ್ಳುವ ಬಗೆಯಲ್ಲಿ. ಆದ್ದರಿಂದ ಯಾವುದೇ ಒಂದು ಸತ್ಯ ಇಂದಿನ ಸಮಾಜಕ್ಕೆ ಅಂತಿಮವಲ್ಲ. + +ಬಹುದಿಕ್ಕುಗಳಿಂದ, ಬಹು ಅನುಭವಗಳಿಂದ ಬರುವ ಸತ್ಯಗಳೂ ಇಲ್ಲಿ ಮುಖ್ಯವೇ. ಒಂದು ಸಂಕಲನದಲ್ಲಿ ಒಂದು ಪದ್ಯ ಇಡೀ ಸಮಾಜಕ್ಕೆ ಕನ್ನಡಿ ಹಿಡಿದರೆ ಅಷ್ಟರ ಮಟ್ಟಿಗೆ ಅದು ಸಫಲ ಕವಿತೆಯೇ ಆಗಿರುತ್ತದೆ. ಇಂದಿನ ಜೀವನವೇ ಹಲ ಬಗೆಯ ಛಿದ್ರತೆ ಮತ್ತು ಕಣ್ಣೋಟಗಳಿಂದ ಕೂಡಿರುವಾಗ ಯಾವೊದೋ ಒಂದು ಬಗೆಯ ಬದುಕಿನ ದರ್ಶನವನ್ನು ಕಾಣುವುದಕ್ಕೇ ಹೇಗೆ ಸಾಧ್ಯ? ಇನ್ನು ಯಾವೊಬ್ಬ ಕವಿಯೂ ಅನುಭವ ಇಲ್ಲದೇ ಬರೆಯಲು ಸಾಧ್ಯವೇ? ಹಾಗಂತ ಹೊಸಬರ ಕವಿತೆಗೆ ಮಿತಿಗಳೇ ಇಲ್ಲವೆಂದಲ್ಲ. ಅವುಗಳನ್ನು ನಾವು ವಸ್ತುಗಾರಿಕೆಯಲ್ಲಿ ಮತ್ತು ಕವಿತೆಯ ‘ಕಟ್ಟಡ’ದಲ್ಲಿ ಗುರುತಿಸಲು ಸಾಧ್ಯ. + +ವಸ್ತುಗಾರಿಕೆ ಇಪ್ಪತ್ತೊಂದನೇ ಶತಮಾನದ ಕವಿತೆಗೆ ದೊಡ್ಡ ಸಮಸ್ಯೆ ಎಂದೆನಿಸುವುದಿಲ್ಲ. ಕವಿತೆಯಲ್ಲಿ ‘ವಿವರ’ಗಳ ಮೂಲಕ ‘ಸ್ವ’ ಅನುಭವಗಳು ಅಭಿವ್ಯಕ್ತಗೊಳ್ಳುತ್ತಿವೆ. ಹೊಸಬರ ಅನೇಕ ಕವಿತೆಗಳ ಗರ್ಭದಲ್ಲಿ ‘ಅವೈಯಕ್ತಿಕತೆ’ ಬಹುಮಟ್ಟಿಗೆ ದೂರವಾಗಿ ‘ವೈಯಕ್ತಿಕತೆ’ ಹೆಚ್ಚು ಒಳಗುಮಾಡಿಕೊಂಡಿರುತ್ತದೆ. ವಿವರಗಳು ಸಾಮಾಜಿಕತೆಯನ್ನು ಅಭಿವ್ಯಕ್ತಿಸುವಾಗ ಕವಿತ್ವ ಅಲ್ಲಿ ಸತ್ವಪೂರ್ಣವಾಗದೇ ಹೋಗುವ ಸಂಭವ ಹೆಚ್ಚು. ಹಲವು ಬಾರಿ ಹೊಸ ತಲೆಮಾರಿನ ಕವಿತೆ ‘ವಿವರ’ಗಳಿಂದಲೇ ಗೆದ್ದಿದೆ. ಆದರೆ ಎಲ್ಲ ಸಂದರ್ಭಗಳಲ್ಲೂ ವಿವರಗಳಿಂದ ಕೂಡಿದ ಕವಿತೆ ಕವಿಯ ಕೈ ಹಿಡಿದಿಲ್ಲ. ಅನುಭವವು ಅಲ್ಲಿ ಗಟ್ಟಿಯಾಗಿದ್ದರು ‘ಹೇಳಿಕೆ’ ಗಳ ಮಟ್ಟ ನುಸುಳಿ ಕವಿತೆ ಸೋಲುತ್ತಿದೆ. ಮನುಷ್ಯ ಪರ ಮತ್ತು ಆ ಮೂಲಕ ಸಾಮಾಜಿಕತೆಯ ಕಾವ್ಯ, ವಿವರಗಳನ್ನು ಬಯಸುವುದು ಸಹಜ. ಆದರೆ ಅದಕ್ಕೆ ತಕ್ಕ ಪ್ರತಿಮೆ, ರೂಪಕಗಳನ್ನು ನಿರ್ಮಿಸುವುದು ತೀರಾ ಹೊಸಬರಿಗೆ ಸಾಧ್ಯವಾಗಬೇಕಾಗಿದೆ. ಅವರ ಸಂಕಲನದ ಒಟ್ಟು ಪದ್ಯಗಳಲ್ಲಿ ಕೆಲವು ಮಾತ್ರ ತಾಜಾತನದ ಪ್ರತಿಮೆಗಳನ್ನು ಒಳಗೊಂಡಿರುತ್ತವೆ. ಅಭಿವ್ಯಕ್ತಿಯ ಕ್ರಮವು ಅನುಭವ ಮತ್ತು ವಿವರ, ಅದಕ್ಕೆ ತಕ್ಕ ಪ್ರತಿಮೆಗಳು ಗಟ್ಟಿಗೊಂಡಾಗ ಮಾತ್ರ ಯಶಸ್ವಿಯಾಗಬಲ್ಲದು. + +ಇಂದಿನ ಕವಿತೆಯಲ್ಲಿ ಹಲ ಬಗೆಯ ಅನುಭವಗಳ ಜೊತೆಗೆ ಅಭಿವ್ಯಕ್ತಿಗಳು ಭಿನ್ನವಾಗಿವೆ. ಹಾಗಾಗಿಯೇ ವಸ್ತುಗಾರಿಕೆಯೂ ಕೂಡ ಏಕರೂಪವಾಗಿಲ್ಲ. ಈಚೆಗೆ ಬಂದಿರುವ ‘ಮೀನುಪೇಟೆಯ ತಿರುವು’ (ರೇಣುಕಾ ರಮಾನಂದ), ‘ಹಲಗೆ ಮತ್ತು ಮೆದುಬೆರಳು’( ಕಾದಂಬನಿ) ‘ನಕ್ಷತ್ರ ಕವಿತೆಗಳು’ ( ನಾಗಶ್ರೀ ಶ್ರೀರಕ್ಷ) ‘ಎಲೆಕ್ಟ್ರಿಕ್ ಬೇಲಿ ಮತ್ತು ಪಾರಿವಾಳ’ (ಲಕ್ಷ್ಮಣ.ವಿ.ಎ) ‘ಕಸಬಾರಿಗೆ ಪಾದ’ (ಬಸವರಾಜ್ ಹೃತ್ಸಾಕ್ಷಿ) ‘ಕಾಲದ ರಶೀದಿ ಪುಟ’ ( ಮಧು ಬಿರಾದಾರ) ‘ಒಡೆದ ಬಣ್ಣದ ಚಿತ್ರಗಳ’ ( ಮಹಾಂತೇಶ್ ಪಾಟೀಲ) ‘ಕನಸ ಬೆನ್ನತ್ತಿ ನಡಿಗೆ’ ( ಸಿದ್ದು ಸತ್ಯಣ್ಣ) ಮುಂತಾದವರ ಸಂಕಲನಗಳಲ್ಲದೇ ಟೀನಾಶಶಿಕಾಂತ್, ಭಾರತಿ.ಬಿ.ವಿ, ಮೌಲ್ಯ.ಎಂ., ಕಾಜೂರು ಸತೀಶ, ರಂಗನಾಥ ಆರನಕಟ್ಟೆ, ಸಂದೀಪ್ ಈಶಾನ್ಯ, ಭುವನಾಹಿರೇಮಠ, ಮಂಜುಳಾ ಹುಲಿಕುಂಟೆ, ಕಾವ್ಯಶ್ರೀ ನಾಯ್ಕ, ಗಾಣಿಗೇರ ನಿರಂಜನ, ಶ್ರೀಧರ ಬನವಾಸಿ, ಕೈದಾಳ ಕೃಷ್ಣ ಮೂರ್ತಿ, ವಿಲ್ಸನ ಕಟೀಲ, ನಾಗರಾಜ ಕೋರಿ, ಪರಿಮಳ ಮುಂತಾದವರ ಬಿಡಿಕವಿತೆಗಳನ್ನು ಪರಿಗಣಿಸಬಹುದು. + +ಇವರಲ್ಲದೇ ಕೊಂಚ ಹಳಬರಾದ ಆಲೂರು ದೊಡ್ಡನಿಂಗಪ್ಪ, ರುದ್ರೇಶ್ವರಸ್ವಾಮಿ, ಮಹಮದ್ ಭಾಷಾ ಗೂಳ್ಯಂ, ಚೀಮನಹಳ್ಳಿ ರಮೇಶಬಾಬು, ಆರೀಫ, ಆನಂದ ಕುಂಚನೂರು, ಅಂಕುರ್, ವಾಸುದೇವ ನಾಡಿಗ, ಆರೋಲಿ, ಟಿ.ಯಲ್ಲಪ್ಪ, ಪಿ.ಚಂದ್ರಿಕಾ, ಅಕ್ಷತಾ.ಕೆ, ಚೇತನಾ ತೀರ್ಥಹಳ್ಳಿ, ಮಹಾಯಾನ ಮಂಜುನಾಥ ಮುಂತಾದವರು ಆಗಾಗ ಬರೆದ ಪದ್ಯಗಳು ಹೊಸ ಬಗೆಯ ಅನುಭವಗಳನ್ನು ನೀಡಿವೆ. ಹೊಸ ಕಾಲಮಾನದಲ್ಲಿ ಬೇರೆ ಬೇರೆ ವಲಯಗಳಿಂದ ಕವಿತೆ ಬರೆಯುತ್ತಿರುವ ಕೃಷ್ಣಗಿಳಿಯಾರ್, ಹೃದಯಶಿವ, ಕೆ.ರವೀಂದ್ರನಾಥ್, ಚಂದ್ರಚೂಡ್, ನಾಗರಾಜ್ ವಸ್ತಾರೆ, ಹತ್ವಾರ್, ಮುಂತಾದವರ ಭಾಷಿಕ ನುಡಿಕಟ್ಟುಗಳನ್ನು, ಅನುಭವಗಳನ್ನು ನಾವು ಚರ್ಚೆಗೆ ತಗೆದುಕೊಳ್ಳದಿದ್ದರೆ ಅದು ಕೂಡ ಅಪಾಯವೇ. + +ಮೇಲಿನವರಲ್ಲದೇ ಇನ್ನು ಹಲವು ಜನ ಈ ಲೇಖನದಲ್ಲಿ ಪ್ರಸ್ತಾಪವಾಗಬಹುದು. ಇದನ್ನು ಮೀರಿ ಹೊಸ ಕವಿತೆಯನ್ನು ಮರೆತರೇ ಅದು ನನ್ನ ತಿಳುವಳಿಕೆಯ ಮಿತಿಯೇ ಆಗಿರುತ್ತದೆ. ಒಂದು ಕವಿತೆ ಯಾವ ಬಗೆಯ ಅನುಭವವನ್ನು ನೀಡಬಲ್ಲದು ಎಂಬುದನ್ನು ಮೊದಲೇ ನಿರ್ಧಿರಿಸುವಾಗಲೂ ಓದುಗ ಅಥವಾ ಬರಹಗಾರನಿಗೆ ತನ್ನದೇ ಪೂರ್ವತಯಾರಿಯ ಅಗತ್ಯ ಇರಬೇಕು. ಇಲ್ಲದಿದ್ದರೆ ಅವಸರದ ತೀರ್ಮಾನಗಳಿಗೆ ತಲುಪಬೇಕಾಗುತ್ತದೆ. ನಿದರ್ಶನಕ್ಕೆ ಈಗಿನ ಹೆಣ್ಣು ಮಕ್ಕಳ ಕಾವ್ಯ ಕೇವಲ ದೇಹಮೀಮಾಂಸೆಯ ಕವಿತೆಗಳನ್ನು ಕಟ್ಟುತ್ತಿದ್ದಾರೆ ಎಂಬ ಮಾತು ಇಂದು ಹಳತಾಗುತ್ತಿದೆ. ಅಥವ ಅದನ್ನು ಸಾಮಾಜಿಕ ನೆಲೆಗೆ ಧಾಟಿಸುವಲ್ಲಿ ಭಿನ್ನವಾಗಿದೆ. ಲೈಂಗಿಕತೆ ಎಂಬುದು ‘ಸ್ವ’ಅನುಭವದ ಬೆನ್ನಲ್ಲಿ ಬಂದು ಅದು ಸಮಾಜದ ಬಹುದೊಡ್ಡ ಸವಾಲುಗಳಿಗೂ ದಾಟಬಲ್ಲದು. ವ್ಯಕ್ತಿಗತ ರಾಜಕಾರಣ, ಪ್ರಭುತ್ವದ ಬಿರುಕುಗಳು ಕೂಡ ಇವರ ಕಾವ್ಯದಲ್ಲಿ ಗೋಚರಿಸಬಲ್ಲವು. ಹಲವು ವಸ್ತುಗಳಿಗೆ ಕೈಚಾಚುವ ಕವಿತೆಗಳೇ ಇಂದು ಮುನ್ನಲೆಗೆ ಬಂದಿವೆ. + +ಜಾಗತೀಕರಣವನ್ನೂ ಮೀರಿದ ಬದುಕಿನ ಪಲ್ಲಟ, ಸ್ವಂತೀಕರಣಕ್ಕೆ ಮರಳುವ ಕಾತರ: + +ಮುಕ್ತಮಾರುಕಟ್ಟೆ, ತಂತ್ರಜ್ಞಾನ ಇವುಗಳಿಂದ ಬದಲಾಗಿರುವ ಜೀವನಶೈಲಿಯ ಪಲ್ಲಟ ತೀವ್ರಗತಿಯದು ಎಂದು ತಿಳಿದ ಸಂಗತಿ. ಜಾಗತೀಕರಣ ಎಂಬ ಪದವೂ ಕೂಡ ಇಂದು ಹಳತಾಗಿ, ಇಂದಿನ ‘ಜೀವನಕ್ರಮ’ವನ್ನು ತೋರಿಸುವ ಪಾರಿಭಾಷಿಕ ಪದಗಳ ಹುಡುಕಾಟವೂ ಎಲ್ಲೆ ಮೀರಿ ನಡೆಯುತ್ತಿದೆ. ವಸಾಹತೋತ್ತರದ ಬಹುಪಾಲು ಚಿಂತಕರು ಸಾಮ್ರಾಜ್ಯಶಾಹಿಯ ‘ಎದರು’ ಚಿಂತನಾಕ್ರಮವಾಗಿ ಬಹುತೇಕ ‘ದೇಸಿಯತೆ’ ಅಥವಾ ಸ್ಥಳೀಯತೆಗಳನ್ನೇ ಶೋಧಿಸಿದ್ದಾರೆ. ಇಂದು ಕೂಡ ಅದೇ ಬಗೆಯ ಶೋಧನಾ ಕ್ರಮವೂ ಅಗತ್ಯವಾಗಿದೆ. ಭಾರತ, ಮತ್ತು ಅದರ ಒಂದು ಭೂಭಾಗದ ಕರ್ನಾಟಕದಲ್ಲಿ ಜಗತ್ತಿನ ಜೀವನಶೈಲಿಗಳು ಕೇವಲ ನಗರಗಳಿಗೆ ಮಾತ್ರ ಸೀಮಿತಗೊಳ್ಳದೇ ಗ್ರಾಮಗಳನ್ನು ವ್ಯಾಪಿಸುತ್ತಿರುವುದು ಸುಳ್ಳಲ್ಲ. ಅತಿಯಾದ ಆರ್ಥಿಕ ಪಲ್ಲಟಗಳು, ಅಭಿವೃದ್ಧಿಯ ಒತ್ತಡಗಳಿಂದಾಗಿ ಈ ನೆಲದ ಬೆನ್ನೆಲುಬಾದ ಕೃಷಿಯ ಚಟುವಟಿಕೆಗಳು ನಾಶದ ಅಂಚಿಗೆ ತಲುಪಿವೆ. ಇದಕ್ಕೆ ಹೊಸ ತಲೆಮಾರಿನ ಕಾವ್ಯ ತೀವ್ರವಾಗಿ ಅಭಿವ್ಯಕ್ತಿಸಿದೆ. ಕೃಷಿಯ ನಾಶವೆಂದರೆ ಅದು ಭೂಮಿಯ ಅವನತಿಯೆಂದೇ ಭಾವಿಸಬೇಕಾಗಿದೆ. + +ಇದರ ಫಲವಾಗಿ ಅವರ ಕಾವ್ಯ ಉಸಿರಾಡುವುದು ಒಂದು ನೆನಪುಗಳ ಮೂಲಕ; ಮತ್ತೊಂದು ಸ್ವಂತೀಕರಣಕ್ಕೆ ಮರಳುವ ಕಾತರ. ಗ್ರಾಮದ ದಟ್ಟ ಅನುಭವಗಳನ್ನು ಮೈಗಂಟಿಸಿಕೊಂಡು ನಗರಗಳಿಗೆ ಧಾವಿಸಿರುವ ಅನೇಕ ಕವಿಗಳು ಬದಲಾದ ಜೀವನ ಕ್ರಮವನ್ನು ಸಂದಿಗ್ಧತೆ, ದುಗುಡ, ತಲ್ಲಣಗಳಿಂದ ಎದುರುಗೊಂಡಿದ್ದಾರೆ. ಇಂದಿನ ನೆನಪುಗಳು ಕೇವಲ ‘ಇದ್ದವು’ಎಂಬ ಮಾತೇ ಅಧಿಕವಾಗಿ ಅವುಗಳನ್ನು ಮರುರೂಪಿಸುವ ಅನಿವಾರ್ಯತೆ ಕಂಡುಬರಲಾರದು. ಇಂದಿನ ಕವಿತೆ ಇವುಗಳನ್ನು ಹೇಗೆ ‘ನಿಭಾಯಿಸಿದೆ’ ಎನ್ನುವುದೇ ಮುಖ್ಯ. ಕಣ್ಮರೆಯಾಗುತ್ತಿರುವ ಆಪ್ತ ಜಗತ್ತನ್ನು ಪುನರ್ ‘ಸ್ವಂತೀಕರಣಕ್ಕೆ’ ಒಗ್ಗಿಸಿಕೊಳ್ಳುವುದು ಹೇಗೆ? ಈ ಸ್ವಂತೀಕರಣವು ಸಮಾಜದ ಮತ್ತು ವೈಯಕ್ತಿಕತೆಯಿಂದ ಜಾರುತ್ತಿರುವ ‘ಸಹ್ಯ ಬದುಕನ್ನು’ ಮರುರೂಪಿಸುವ ಕ್ರಿಯೆಯನ್ನು ತೋರಿಸುತ್ತದೆ. ಪರಂಪರೆಯನ್ನು ಮತ್ತೊಮ್ಮೆ ನಮಗೆ ಬೇಕಾದ ಬಗೆಯಲ್ಲಿ ನಿರ್ಮಿಸುವದು ಕೂಡ ಇದರ ಕೆಲಸವಾಗಿರುತ್ತದೆ. + +ಈಚೆಗೆ ಬಂದ ‘ಭತ್ತ ಬೆಳೆಯುವುದೆಂದರೆ..’ (ರೇಣುಕಾ ರಮಾನಂದ) ಕವಿತೆ ತೀವ್ರವಾಗಿ ಕಸುಬೊಂದರ ನಾಶ ಮತ್ತು ಅದನ್ನು ಮರುಕಟ್ಟುವಿಕೆಯ ಯತ್ನಗಳನ್ನು ಅಭಿವ್ಯಕ್ತಿಸಿದೆ. ಅಂದರೆ, ಇದನ್ನೇ ಕಣ್ಮರೆಯಾದ ಪರಂಪರೆಯ ಜೀವನಕ್ರಮದ ಮರು ನಿರ್ಮಾಣದ ಕೆಲಸ ಎಂದು ಕರೆದೆ. ಅರ್ಥಾತ್ ‘ಸಂತೀಕರಣಕ್ಕೆ’ ಹಿಂತಿರುಗುವುದು. ‘ಭತ್ತ ಹಾಗಂದರೇನು? ಎಂಬ ಪ್ರಶ್ನೆಯೇ ಈ ಕಾಲದ ತಲ್ಲಣವಾಗಿದೆ. ‘ಅವಳಿಗೆ ಅಕ್ಕಿ ಗೊತ್ತು, ದೋಸೆಗೊತ್ತು/ ಅನ್ನ, ಪುಳಿಯೊಗರೆ, ಪಲಾವ್/ ಎಲ್ಲವೂ ಗೊತ್ತು/ಗೊತ್ತಿಲ್ಲ ಭತ್ತ’ ಎಂಬ ಸಾಧಾರಣ ಸಂವಾದಿ ರೂಪಿಯಾಗಿ ಸಾಗುವ ಕವಿತೆ ಸದ್ಯದ ಜೀವನಕ್ರಮಗಳನ್ನು ಎದುರುಗೊಂಡು ಅಂತಿಮವಾಗಿ ‘ಮುಂದಿನ ಬಾರಿ ಭತ್ತಕ್ಕೆ/ ಗೊಬ್ಬರವೂ /ನಮ್ಮದೇ’ ಎಂಬ ಈ ನೆಲದ ಮೂಲತನಕ್ಕೆ ವಾಪಸ್ಸಾಗುತ್ತದೆ. ಆದರೆ ಇದೇ ಆಶಯ ಮುಂದುವರೆಯುವುದೇ? ಎಂಬ ಪ್ರಶ್ನೆಯೂ ಇದೆ. ಈ ಬಗೆಯ ಪ್ರತಿಮೆಗಳು ಹೊಸಬರ ಕವಿತೆಗಳಲ್ಲಿ ಅನೇಕ ಬಾರಿ ಕಾಣಿಸಿಕೊಂಡಿವೆ. + +‘ನೇಗಿಲು ತುಕ್ಕು ಹಿಡಿಯುತ್ತಿದೆ/ ಕುಂಟೆಯ ಮೇಳಿ ಕಳೆದು ಹೋಗಿದೆ/ ಗೆದ್ದಲು ತಿಂದ ನೊಗ ಹಾಡು ಹಗಲೇ/ಯಾರದೋ ಮನೆಯ ಉರುವಲಾಗಿದೆ’ (ವಿಠಲ ದಳವಾಯಿ) ‘ನೇಗಿಲಗೆರೆಗೆ ಬಿದ್ದ/ ಅಪ್ಪನ ಬೆವರಹನಿಯಲ್ಲಿ/ ದೇವರು ಮಿಂಚಿ ಮರೆಯಾದ’ ( ಹಂದಲಗೆರೆ ಗಿರೀಶ) ‘ಹುಟ್ಟಿಸೋ ವೀರ್ಯಕ್ಕೆ ಖಾತರಿ ಇಲ್ಲದ ಕಾಲ/ ಉದುರಿ ಬಿದ್ದಾವೋ ಪಾತರಗಿತ್ತೀಯ ಕಾಲ/ ಬೆಂಡೆಯ ಗಿಡದಾಗ ತೊಂಡಿಂಯ ಬಳ್ಯಾಗ/ ನಗುತ ನಿಂತೈತ್ಯವ್ವ ಪುಂಡೀಯ ಪಲ್ಯ’ ( ಬಸವರಾಜ ಹೃತ್ಸಾಕ್ಷಿ) ‘ನಮ್ಮದೆಯ ಬಯಲನ್ನು ನಮಗೆ ಬಿಟ್ಟುಬಿಡಿ/ ಹಾರಿಬರದಿರಲಿತ್ತ ಉಕ್ಕಿನಕ್ಕಿ/ ಮೂಡದಿರಲಿ ದೈತ್ಯ ಗಾಲಿಗಳ ಚಿತ್ತಾರ/ ಕೇಳದಿರಲಿಲೆಂದೂ ಸಿಡಿಮದ್ದುಗಳ ಮೊರೆತ’ ( ಕಾವ್ಯಶ್ರೀ ನಾಯ್ಕ) ‘ನಕ್ಕರೆ ಗುಳಿ ಬೀಳುತ್ತಿದ್ದ/ ನಮ್ಮೂರ ಹೊಲಗದ್ದೆಗಳಲ್ಲಿ/ ಈಗ ಡಾಂಬರು ರಸ್ತೆಯ ಹಳ್ಳಗಳು/ ಹೆಪ್ಪು ಗಟ್ಟಿದ ಕತ್ತಲ ಬೊಬ್ಬೆಗಳನ್ನು ಹೊಡೆದುಕೊಂಡು,/ಗುಳೆ ಎದ್ದಿರುವ ಹಕ್ಕಿಗಳು. (ಮಂಜುನಾಥ್.ಎಸ್.) ‘ಕಲಿಗಾಲದ ಈ ಕೊನೆಯಲ್ಲಿ/ ಕಲ್ಲಿನ ಕಂಬಗಳಿಗೂ, ಗೆದ್ದಲು ಗೊದ್ದ ಹತ್ತಿದೆ’ (ರಾಜೇಂದ್ರ ಪ್ರಸಾದ್) ‘ಬಿತ್ತಿದ ಬೀಜ/ ಭೂಮಿಪಾಲಾದಾಗ/ ಸಾಲದ ಬಿಸಿಲಿಗೆ ಒಣಗತೊಡಗಿತ್ತು/ ಬದುಕಿನ ಬೇರು’ ( ಮೋದೂರು ತೇಜ) ‘ಭೂಮಿಯೇ ನೀನು ನನ್ನವ್ವ/ ಬಿತ್ತಿದ ಹೊಲ/ ಪರಂಪರೆಯ ಹುದುಗಿದ ಸಮಾಧಿ/ ಸಮತೆಯ ಕನಸ ಹಂಚಿಕೊಂಡು ರಟ್ಟೆ ಜೋಡಿಸಿದ್ದೇವೆ.’( ವೀರಣ್ಣ ಮಡಿವಾಳರ) ಹೀಗೆ ಅನೇಕ ಆತಂಕಿತ ಪ್ರತಿಮೆಗಳನ್ನು ಹಲವರ ಕವಿತೆಗಳಲ್ಲಿ ಕಾಣಬಹುದು. ಈ ಪ್ರಕ್ರಿಯೆ ಕೊಂಚ ಹಳಬರಾದ ಮಲ್ಲಿಕಾರ್ಜುನಗೌಡ ತೂಲಹಳ್ಳಿ ಅವರ ‘ಲಕ್ಕವ್ವನ ಗುಡ್ಡ’, ರಮೇಶ ಬಾಬು ಚೀಮನಹಳ್ಳಿ, ಮಂಜುನಾಥ್ ಲತಾ, ಸತ್ಯಮಂಗಲಮಹದೇವ, ಅರುಣ್ ಜೋಳದ, ರಮೇಶ ಅರೋಲಿ, ಕುಂಚನೂರು, ರಂಗನಾಥ ಕಂಟನಕುಂಟೆ , ಸೈಫ್ ಜಾನ್ಸ್ ಮುಂತಾದವರ ಕವಿತೆಗಳಲ್ಲೂ ವ್ಯಕ್ತಗೊಂಡಿವೆ. + +ಮೇಲಿನ ಕವಿತೆಗಳಲ್ಲಿ ಬಹುತೇಕ ಕೃಷಿ ಪ್ರತಿಮೆಗಳನ್ನು ಕಾಣಬಹುದು. ಇವುಗಳನ್ನು ‘ಕಾಲದ ಆತಂಕಿತ ಪ್ರತಿಮೆಗಳು’ ಎಂದು ಕರೆಯಲು ಹಲವು ಕಾರಣಗಳೂ ಇವೆ. ಈ ಬಗೆಯ ಆತಂಕಿತ ಪ್ರತಿಮೆಗಳು, ಹಳೆಯ ರೊಮ್ಯಾಂಟಿಕ್ ಮಾದರಿಯಲ್ಲಿ ‘ಸೌಂದರ್ಯ ಅನುಭವವನ್ನು’ ನೀಡಲಾರವು. ಅಥವ ನಿಸರ್ಗದ ಉನ್ಮಾದದಲ್ಲಿ ಮಿಂದೇಳುವ ರಸಾನುಭವವೂ ನೀಡಲಾರವು. ಈ ಪ್ರತಿಮೆಗಳ ಒಳಗರ್ಭಗಳು ಈ ಕಾಲಮಾನದ ಒಂದು ಅನುಭವದ, ಮತ್ತು ಗ್ರಾಮದ ನೆನಪುಗಳ ವಿನಾಶದ ಅಂಚನ್ನು ಎಡತಾಕುತ್ತಿವೆ. ಹೀಗೆ ಹೇಳುವಾಗ ಡಿ.ಆರ್.ನಾಗರಾಜ ಅವರು ಹಿಂದೆ ಬರೆದ ಲೇಖನ ‘ಆತಂಕಿತ ಹಿಂದು ಮತ್ತು ಕುಪಿತಗೊಂಡ ರೈತ’ ನೆನಪಾಗುತ್ತಿದೆ. ಇಂದು ಕುಪಿತಗೊಂಡಿರುವುದು ಕೇವಲ ರೈತ ಮಾತ್ರವಲ್ಲ, ಬದಲಿಗೆ ಆತನಿರುವ ಇಡೀ ಸಮಾಜವೇ ಕುಪಿತಗೊಂಡಿದೆ. ಹಿಂದು ‘ಇಂದು’ ಹೇಗೆ ಹೊಸಬಗೆಯ ‘ರಾಷ್ಟ್ರೀಯತೆ’ಯ ಹಿಂದೆ ಆತಂಕಿತಗೊಂಡಿದ್ದಾನೆ ಎಂಬುದನ್ನು ಕೂಡ ಇಂದಿನ ಕವಿತೆಯ ಮೂಲಕ ಮುಂದೆ ಚರ್ಚೆಗೆ ಎತ್ತಿಕೊಳ್ಳಬಹುದು. ಗಾಂಧೀಯವರ ಗ್ರಾಮ ತತ್ವಗಳನ್ನು ಈ ಕಾಲಕ್ಕೆ ಅದರಲ್ಲೂ ಮೇಲೆ ಉದ್ದರಿಸಿದ ಕವಿತೆಗಳ ಪ್ರತಿಮೆಗಳ ಬೆನ್ನಲ್ಲಿ ಅನ್ವಯಿಸಿಕೊಳ್ಳುವಾಗಲೂ ಭಿನ್ನತೆಗಳೂ, ಹಲವು ಸಾರೆ ಪುನರಾವರ್ತನೆ ಆಗಬಹುದು. + +ವಸಾಹತೋತ್ತರ ಕಾಲದಲ್ಲಿ ಗಾಂಧೀಜಿಯವರ ಫಿಲಾಸಫಿ, ಅಭಿವೃದ್ಧಿಯ ವಿಚಾರದಲ್ಲಿ ಹಲಬಗೆಯ ಗೊಂದಲಗಳನ್ನು ಎದುರಿಸಿದ್ದು ತಿಳಿದ ಸಂಗತಿ. ಆದರೆ ಹೊಸಬರ ಕೃಷಿ ಚಿತ್ರಗಳ ಬೆನ್ನಲ್ಲಿ ಗಾಂಧೀ ಮತ್ತೊಮ್ಮೆ ಕಾಡುತ್ತಾರೆ. ಉಪಭೋಗವಾದದ ಸುಲಭಮಾರ್ಗವನ್ನು ಹಿಡಿಯಲು ಯತ್ನಿಸುತ್ತಿರುವ ಇಂದಿನ ಮನುಷ್ಯನಿಗೆ ‘ಭೂಮಿ’ಯ ಶಾಶ್ವತತೆಯ ಅರಿವು, ಕಸುಬುಗಳ ಪ್ರಾಮುಖ್ಯತೆಯ ಅರಿವು ಕ್ಷೀಣಿಸುತ್ತದೆಯೇ? ಎಂಬ ಆತಂಕವೂ ಇದೆ. ಏಕೆಂದರೆ ಹಿಂದೆ ನಾವು ಮೂಲಕಸುಬುಗಳ ವಿನಾಶಕ್ಕೆ ಕೇವಲ ಜಾಗತೀಕರಣವನ್ನು ದೂರುತ್ತಿದ್ದೆವು. ಆದರೆ ಇಂದು ಪ್ರಭುತ್ವಗಳ ಮತ್ತು ಅಭಿವೃದ್ದಿಗಳ ಶಾಮೀಲಿನಿಂದ(ನಮಗೆ ಬೇಕಾದ ಅಭಿವೃದ್ಧಿ ಯಾವ ಬಗೆಯದು ಎಂಬುದನ್ನು ಮೊದಲು ಅರಿಯಬೇಕು) ‘ರೈತನೇ’ ತನ್ನ ‘ಇರುವಿಕೆ’ ಯನ್ನು ಕಳೆದುಕೊಳ್ಳುವ ಹಾದಿಯಲ್ಲಿದ್ದಾನೆ. + +ಹೆದ್ದಾರಿಗಳ ದೊಡ್ಡಮಟ್ಟದ ವಿಸ್ತರಣೆಗಳು, ಸೈಬರ್ ಕ್ರಾಂತಿಗಳೂ ಕೂಡ ಕೃಷಿ ಭೂಮಿಯ ಕಣ್ಮರೆಯ ಚಿತ್ರಗಳು ಹೊಸಬರ ಕವಿತೆಯಲ್ಲಿ ಅಲ್ಲಲ್ಲಿ ಕಾಣಿಸಿಕೊಂಡಿವೆ. ತಕ್ಷಣಕ್ಕೆ ‘ಲಕ್ಕವ್ವನ ಗುಡ್ಡ’ ( ಮಲ್ಲಿಕಾರ್ಜುನಗೌಡ) ‘ಪಾಳುಬಿದ್ದ ಕೆರೆಯಲ್ಲಿ ಕೊನಗಂಟಿ ಹೂವುಗಳ ಸುಗ್ಗೀಹಾಡು’ (ಗಂಗಪ್ಪ ತಳವಾರ) ‘ಉತ್ತೀತಿಯ ಹಾಡು’ ( ಕಳ್ಳಹಳ್ಳಿ ನಾರಾಯಣಪ್ಪ) ‘ಎಲ್ಲವ ಕರುಣಿಸಿದ ಸೃಷ್ಟಿ ಮೌನವಾಗಿ ಪ್ರೀತಿಸುತ್ತದೆ/ ಪಂಚಭೂತಗಳ ಋಣ ಮರೆತು ಪ್ರಾಣಹತ್ಯೆಯ ಸಂಚು ನಡೆದಿದೆ’(ಮಲ್ಲಿಕಾರ್ಜುನ ಛಬ್ಬಿಯವರ ಕವಿತೆಯ ಸಾಲುಗಳು) ‘ನಮ್ಮದೇ ಭೂಮಿಯಲಿ/ನಾವೇ ಜೀತಕ್ಕಿದ್ದು/ದಿನ ದೂಡುತ್ತಿದ್ದೇವೆ.’ ( ಎಸ್.ಕೆ. ಮಂಜುನಾಥ) ‘ಆಗಸವೂ ಬೊಗಸೆಯೊಡ್ಡಿದೆ ಭೂಮಿ ಮುಂದೆ’( ಚೀಮನಹಳ್ಳಿ ಅವರ ಈಚಿನ ಕವಿತೆ ‘ಬೊಗಸೆ’ ಕವಿತೆಯ ಸಾಲು) ‘ಕೇವಲ ಅನ್ನಕ್ಕಾಗಿ ಹೊಲಗಳನ್ನು ಮಾರಿಕೊಂಡು ಭಿಕಾರಿಗಳಾರುವವರ/ ಕೆಲವರು ಗಣಿಗಳಲ್ಲಿಯೇ ಜೀವ ಸಮಾಧಿಯಾಗಿ ಸಂಸ್ಕಾರದ ಖರ್ಚನ್ನು ಉಳಿಸಿರುವವರ ( ಎಚ್.ಆರ್. ರಮೇಶ) ಎಂಬ ಕವಿತೆಗಳು ನೆನಪಾಗುತ್ತಿವೆ. + +ಇವಲ್ಲದೇ ಬಯಲುಸೀಮೆಯ ಕೃಷಿಭೂಮಿಯ ನಾಶದ ಕುರಿತು ಅನೇಕರು ಕವಿತೆ ಕಟ್ಟಿದ್ದಾರೆ. ಉತ್ತರಕರ್ನಾಟಕದಿಂದ ಬರುವ ಕವಿತೆಗಳ ಗರ್ಭದಲ್ಲಿ ‘ವಲಸೆ’ ‘ಹಸಿವು’ ‘ಬಡತನ’ದ ಚಿತ್ರಗಳು ಗೋಚರಿಸುವುದು ಕೂಡ ಈ ಬಗೆಯ ಭೂಮಿಯ ನಾಶದಿಂದಲೇ. ಹಾಗಾಗಿ ಇಲ್ಲಿ ನಾವು ಮರು ಆಲೋಚಿಸುವ ವಿಚಾರವೆಂದರೇ ಹಳ್ಳಿಯ ಬದಲಾದ ಚಿತ್ರಗಳಿಗೆ ‘ಹೊರಗಿನ’ ಜಾಗತೀಕರಣಕ್ಕಿಂತ, ‘ಒಳಗಿನ’ ಜಾಗತೀಕರಣದ ರಾಜಕಾರಣದ ಕುರಿತು. ಇಲ್ಲಿಯೇ ನಮಗೆ ಮತ್ತೊಮ್ಮೆ ಗಾಂಧೀ ಮತ್ತು ಅಂಬೇಡ್ಕರ ಅವರ ತಾತ್ವಿಕತೆಗಳು ಒತ್ತರಿಸಿಕೊಂಡು ಬರುತ್ತವೆ. ಆದರೆ ಹೊಸಬರ ಕವಿತೆಯಲ್ಲಿ ಇವರು ಹೆಚ್ಚಾಗಿ ವೈರುಧ್ಯದ ನೆಲೆಯಲ್ಲಿ ಇಲ್ಲವೇ ‘ಮಾನವತೆ’ಯ ಚೌಕಟ್ಟಿನಲ್ಲಿ ಕಾಣಿಸುತ್ತಾರೆ. ಆದರೆ ಈಗ ಬರೆಯುತ್ತಿರುವ ಅನೇಕ ಹೊಸ ಕವಿಗಳು ಒಂದು ಕಾಲಕ್ಕೆ ಕೃಷಿಯನ್ನು ಸಂಭ್ರಮದಿಂದ ಕಂಡು, ಈಗ ಅದರ ಕಳವಳವನ್ನು ಆತಂಕದಿಂದ ಎದರುಗೊಳ್ಳುತ್ತಿದ್ದಾರೆ. + +ಒಳಗಿನ ರಾಜಕಾರಣವನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳದಿದ್ದಾಗ ಸಹಜವಾಗಿಯೇ ಇಂದಿನ ಮನುಷ್ಯ ಅನೇಕ ರಾಜಿಗಳಿಗೆ ಒಳಗಾಗುತ್ತಾನೆ. ಇಪ್ಪತ್ತೆರಡನೇ ಶತಮಾನದ ಪ್ರವೇಶಕ್ಕೆ ದಾಪುಗಾಲಿಡುತ್ತಿರುವ ನಾವು ಮತ್ತೆ ಕೃಷಿಯ ಮಹತ್ವವನ್ನು ಮನಗಾಣಬೇಕಿದೆ. ಈ ಆಶಯವು ಕವಿತೆಯ ಚೌಕಟ್ಟಿನಲ್ಲಿ ಬರಬಹುದೆಂದು ನಿರೀಕ್ಷೆ ಮಾಡಬಹುದು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_433.txt b/Kenda Sampige/article_433.txt new file mode 100644 index 0000000000000000000000000000000000000000..400e7f50034b60f9ab8ef2a477337a0aae7fc79d --- /dev/null +++ b/Kenda Sampige/article_433.txt @@ -0,0 +1,55 @@ + + +ತಾ: ……………….ಈ ದಿನ ಲಿಲ್ಲಿಗೆ ಕಾಗದ ಬರೆಯಬೇಕೆಂದು ಮಾಡಿದ್ದೆ. ಆದರೆ ದಿನವಿಡೀ ಸಂದರ್ಶಕರೊಡನೆ ಭೇಟಿ, ಮನವಿಗಳ ಪರಿಶೀಲನೆಗಳಿದ್ದುದರಿಂದ ವೇಳೆಯೇ ಸಿಗಲಿಲ್ಲ. ಈ ದಿನ ಅಚ್ಯುತ ಭಟ್ಟನೊಡನೆ ಚರ್ಚಿಸಿಯೇ ಕಾಲ ಹೋಯಿತು. ಭಟ್ಟನೊಬ್ಬ ವಿಚಿತ್ರ ವ್ಯಕ್ತಿ. ನಮ್ಮ ಸೀಮೆಯಲ್ಲಿ ರಸ್ತೆ ಬೇಕೆಂದು ಜನ ಹಾತೊರೆಯುತ್ತಿರುತ್ತಾರೆ. ಇಲ್ಲಿಯವರು ರಸ್ತೆ ಬಂದರೂ ಹೆದರುತ್ತಾರೆ. ಹೊಸೂರಿನಿಂದ ಹೊರಟು ಸಂದೂರಿಗೆ ಹೋಗಿ ಸೇರುವ ರಸ್ತೆ ಈ ಕಪಾಲೇಶ್ವರ ದೇವಸ್ಥಾನದ ಮುಂದುಗಡೆ ಹಾದುಹೋಗಬೇಕಾಗಿತ್ತು. ಆದರೆ ಅಚ್ಯುತ ಭಟ್ಟನು ದೇವಾಲಯದ ಮುಂದೆ ರಸ್ತೆ ಬರಬಾರದೆಂದು ತಕರಾರು ಮಾಡಿದ್ದನು. ಇವನ ಆಕ್ಷೇಪಗಳನ್ನು ಪರಾಮರ್ಶಿಸಿ ನೋಡಬೇಕೆಂದೇ ನಾನು ಬಂದುದು. ಈ ಬ್ರಾಹ್ಮಣ ಏನೆಂದರೂ ಜಗ್ಗುವುದಿಲ್ಲ. ರಸ್ತೆಯಂತೂ ಅವಶ್ಯದ್ದಾಗಿ ಕಾಣುವುದು. ನಾಳೆ ಇನ್ನೊಮ್ಮೆ ಬ್ರಾಹ್ಮಣನನ್ನು ಒಲಿಸಿ ನೋಡಬೇಕು. + +ತಾ: ………………. + +ನಿನ್ನೆ ನನ್ನೊಡನೆ ದುಭಾಷಿಯಾಗಿ ವರ್ತಿಸಿದ ನರಸಿಂಗರಾಯ ಚಾಲೂಕಿನ ಮನುಷ್ಯನಾಗಿರಲಿಲ್ಲ. ಆದುದರಿಂದಲೆ ಭಟ್ಟನೊಡನೆ ಸಲೀಸಾಗಿ ವ್ಯವಹರಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿಯೆ ಈ ದಿನ ಸ್ಯಾಮುವೆಲನನ್ನು ಕರಕೊಂಡು ಬ್ರಾಹ್ಮಣನ ಮನೆಗೇ ಹೋದೆ. ತೆಂಗಿನ ತೋಟದ ನಡುವೆ ಸಣ್ಣ ಗುಡಿಸಲಿನಲ್ಲಿ ಬ್ರಾಹ್ಮಣ ವಾಸವಾಗಿದ್ದನು. ಮನೆಯ ಹೊರಗಡೆ ತುಳಸಿಗಿಡಕ್ಕೆ ಒಬ್ಬ ಹೆಂಗಸು ಸುತ್ತು ತೆಗೆಯುತ್ತಿದ್ದಳು. ಅವಳ ಸೆರಗು ಹಿಡಿದುಕೊಂಡು ಒಂದು ಮಗುವೂ ಸುತ್ತುತ್ತಿತ್ತು. ಮನೆಯ ಬಾವಿಕಟ್ಟೆಯ ಬದಿಯಲ್ಲಿಯೆ ಒಬ್ಬ ತರುಣ ನಮ್ಮನ್ನು ನಿಲ್ಲಿಸಿ ಬಂದ ಕಾರಣವನ್ನು ವಿಚಾರಿಸಿದನು. ಸ್ಯಾಮುವೆಲನು ಕಲೆಕ್ಟರ್ ದೊರೆ ಬಂದಿದ್ದಾರೆ ಎಂದು ಕ್ಯಾನರೀಸ್ ನಲ್ಲಿ ಹೇಳಿದನು. ತರುಣನು ಕೂಡಲೆ ಒಳಗೆ ಓಡಿ ಒಂದು ಮಂಚವನ್ನು ತಂದು ಬಾವಿಕಟ್ಟೆಯ ಸಮೀಪವೆ ಇರಿಸಿ ಕುಳಿತುಕೊಳ್ಳಲು ಸೂಚಿಸಿದನು. ನಾವು ಕುಳಿತಿರುವಾಗ ಒಬ್ಬ ಆಳು ಮಗ ಬಂದು ನಮಗೆ ಬಗ್ಗಿ ವಂದಿಸಿದನು. ತರುಣನು ತುಳು ಭಾಷೆಯಲ್ಲಿ ಏನೋ ಒದರಿದನು. ತುಳು ಭಾಷೆ ಕೇಳುವುದಕ್ಕೆ ಹಿತವಾಗಿದೆ. ಅರ್ಥ ಆಗಿಲ್ಲ. ಆಳು ಮಗ ಸ್ವಲ್ಪ ಹೊತ್ತಿನಲ್ಲಿಯೆ ಮೂರು ನಾಲ್ಕು ಎಳನೀರುಗಳನ್ನು ಕಡಿದು ತಂದನು. ನಾನು ಬೇಡವೆಂದೆ. ಸ್ಯಾಮುವೆಲನು ಅವನ್ನು ಬಂಗಲೆಗೆ ಕಳುಹಿಸಿದನು. ನನಗೆ ಅಚ್ಯುತ ಭಟ್ಟ ಬೇಕಾಗಿದ್ದ. ಆದರೆ ಅವನು ‘ಯಜ್ಞ ಮಾಡುತ್ತಾನೆ; ಈಗ ಸಿಗಲಾರ’ ಎಂದು ತರುಣನಿಂದ ತಿಳಿಯಿತು. + +ಬರಿಯ ಬೆಂಕಿಯನ್ನು ತುಪ್ಪ ಹಾಕಿ ಉರಿಸುವುದನ್ನು ಈ ಜನ ಯಜ್ಞವೆಂದು ಕರೆಯುತ್ತಾರಂತೆ. ಅವರು ಅದನ್ನು ಮಾಡಿದರೆ ದೇವರು ಮೆಚ್ಚುತ್ತಾರೆ ಎಂದು ನಂಬುತ್ತಾರಂತೆ. ಏನು ಜನರೋ! ಏನು ಧರ್ಮವೊ! ನನಗಂತೂ ವಿಚಿತ್ರವಾಗಿ ಕಾಣುತ್ತದೆ. ಒಂದು ಗಂಟೆಯ ಅನಂತರ ಅಚ್ಯುತ ಭಟ್ಟನನ್ನು ಬಂಗಲೆಗೆ ಬರಹೇಳಿ ನಾವು ಶೀತಪ್ಪ ಸೆಟ್ಟಿಯ ಮನೆಗೆ ಹೋದೆವು. ಶೀತಪ್ಪ ಸೆಟ್ಟಿ ಸರಕಾರಕ್ಕೆ ಬಗ್ಗಿ ನಡೆವ ಸಾಧು ಮನುಷ್ಯ. ಅವನೂ ರಸ್ತೆಗೆ ಆಕ್ಷೇಪ ಎತ್ತಿದ್ದನು. ನಾವು ಹೋದಾಗ ಶೀತಪ್ಪು ಮನೆಯಲ್ಲಿ ಇರಲಿಲ್ಲ. ನನಗೆ ಅವರವರನ್ನು ಪ್ರತ್ಯಕ್ಷ ಕಂಡು ಅವರು ಹೇಳುವ ಸಮಾಚಾರಗಳ ಸತ್ಯಾಸತ್ಯಗಳನ್ನು ಕಣ್ಣಾರೆ ಪರಾಮರ್ಶಿಸುವ ಕುತೂಹಲವಿದ್ದುದರಿಂದ ನಾನೇ ಸ್ವತಃ ಆ ಜನಗಳ ಗುಡಿಸಲುಗಳಿಗೆ ಹೋಗಬೇಕೆಂದು ಮಾಡಿದೆನು. ನಾವು ಬಂದ ಸುದ್ದಿ ಕೇಳಿ ಶೀತಪ್ಪು ಗದ್ದೆಯಿಂದ ಓಡಿ ಬಂದ. ಒಂದು ಕೋಪಿನವಲ್ಲದೆ ಮೈಯಲ್ಲಿ ಬೇರೆ ಬಟ್ಟೆಯಿಲ್ಲ. ಗದ್ದೆಯ ಕೆಸರು ಮೈಗೆಲ್ಲ ಲೇಪಿಸಿತ್ತು. ಓಡಿ ಬಂದವನೆ ನಮಗೆ ಕೈಮುಗಿದ. ಸ್ಯಾಮುವೆಲನು ನಾನು ಬಂದ ಕಾರಣವನ್ನು ಹೇಳಿದ ಮೇಲೆ ಅವನು ಬಾವಿಕಟ್ಟೆಗೆ ಹೋಗಿ ಒಂದಿಷ್ಟು ನೀರನ್ನು ಸುರುವಿಕೊಂಡು ಸೋಪು ಹಾಕಿ ತೊಳೆದುಕೊಳ್ಳದೆಯೆ ಮೈಯೊರಸಿಕೊಂಡು ನಮ್ಮನ್ನು ಕರೆದುಕೊಂಡು ಹೋಗಿ ಒಂದು ಸ್ಥಳದ ಮುಂದೆ ನಿಲ್ಲಿಸಿ ರಸ್ತೆ ಹೀಗೆ ಬರುತ್ತದೆ, ಸ್ವಾಮಿ. ಹೀಗೆ ಬಂದರೆ ಈ ಜುಮಾದಿ ಗುಡ್ಡವೂ ಪಂಜುರ್ಲಿ ಸ್ಥಾನವೂ ಬೇರ್ಪಟ್ಟ ಹಾಗಾಗುತ್ತೆ. ಇದು ಎರಡೂ ಸ್ಥಾನಗಳು ಒಂದಾಗಿರಬೇಕಾದ್ದು. + +ರಸ್ತೆಯನ್ನು ಕೆಳಗಿನ ಬೈಲಿನ ಅಂಚಿನಲ್ಲಿ ಸಾಗಿಸಿದರೆ ಯಾರಿಗೂ ತೊಂದರೆಯಿಲ್ಲ. ಕಿರಸ್ತಾನರ ಮಣೆಗಾರರು ನಮ್ಮ ಮಾತನ್ನು ಮನಸ್ಸಿಗೆ ಹಚ್ಚಿಕೊಂಡಿಲ್ಲವಾದ್ದರಿಂದ ಖಾವಿಂದರಿಗೆ ಅರ್ಜಿ ಹಾಕಿದೆನು ಎಂದು ತನ್ನ ಆಕ್ಷೇಪ ಅಭಿಪ್ರಾಯಗಳನ್ನು ಹೇಳಿದನು. ನಾನು ಆ ಗುಡಿಗಳನ್ನು ಕಿಟಕಿಯ ಸಂದಿನಲ್ಲಿ ಇಣುಕಿದೆ. ಒಳಗಡೆ ಕತ್ತಲಿತ್ತು. ಒಂದು ಕಡೆ ಒಂದು ಖಡ್ಗವಿರಿಸಿದಂತೆ ಕಂಡಿತು. ಏನೆಂದರೂ ಈ ಹಿಂದುಗಳ ಧಾರ್ಮಿಕ ಭಾವನೆಯನ್ನು ನೋಯಿಸಬಾರದೆಂದು ಸರಕಾರದ ಉದ್ದೇಶವೆ ಇರುವುದರಿಂದ ಶೀತಪ್ಪುವಿಗೆ ಸಮಾಧಾನ ಹೇಳಿದೆ. ಇಷ್ಟರಲ್ಲಿ ಘಂಟೆ ಒಂಭತ್ತಾದ್ದರಿಂದ ಬಂಗಲೆಗೆ ಹಿಂತಿರುಗಿದೆವು. ಬಂಗಲೆಯಲ್ಲಿ ಭಟ್ಟ ಕಾದಿದ್ದ. ನಾನು ಬೆಳಗ್ಗಿನ ಬ್ರೆಡ್ಡು-ಕಾಫಿಗಳನ್ನು ತೀರಿಸಿಕೊಂಡು ಭಟ್ಟನೊಡನೆ ಮಾತಾಡಲು ಬಂದು ಕುಳಿತೆ. + +ಭಟ್ಟನಿಗೆ ವಯಸ್ಸಾಗಿದೆ. ಕಣ್ಣುಗಳು ಕುಳಿಬಿದ್ದಿದ್ದರೂ ಅದರಲ್ಲಿ ಒಂದು ವರ್ಚಸ್ಸಿತ್ತು. ಮುಖ ನೆರಿಬಿದ್ದಿದ್ದರೂ ಒಂದು ಕಾಂತಿಯಿತ್ತು. ಲೋಕದ ಸಿಹಿಕಹಿಗಳನ್ನು ಕಂಡು ಉಂಡು ಅನುಭವದಿಂದ ಮಾಗಿದ ಜೀವವಲ್ಲವೆ? ಮಾತಿನಲ್ಲಿಯೂ ಹಾಗೆಯೆ, ವಿಷಯಗಳನ್ನು ಕೇಳುವುದರಲ್ಲಿ ಸಹನೆಯಿತ್ತು. ಹೇಳುವುದರಲ್ಲಿ ನಯವಿತ್ತು. ಮಂಡನೆಯಲ್ಲಿ ತೂಕವಿತ್ತು. ಮೈಗೆಲ್ಲ ಗೋಪಿಯೆಂಬುದನ್ನು ಲೇಪಿಸಿಕೊಂಡಿದ್ದನು. ನಾನು ಅವನೊಡನೆ ರಸ್ತೆಯಾಗುವುದರಿಂದ ಊರಿಗೆ ಹಿತವಾಗುವುದೆಂದೂ, ದೇವಸ್ಥಾನಕ್ಕೆ ಬರುವವರಿಗೂ ಸೌಕರ್ಯವಾಗುವುದೆಂದೂ ತಕರಾರು ಮಾಡಬಾರದೆಂದೂ ಸ್ಯಾಮುವೆಲನ ಮೂಲಕ ಹೇಳಿಸಿದೆ. ಅದಕ್ಕೆ ದೊರೆತ ಉತ್ತರವಿಷ್ಟೆ: + +“ಕಪಾಲೇಶ್ವರನ ಗುಡಿ ಪ್ರಾಚೀನವಾದುದು. ಕಾಪಾಲಿಗಳೆಂಬ ಕ್ರೂರರು ಈ ನಾಡಿನಲ್ಲಿ ಸಜ್ಜನರನ್ನು ನಾನಾ ವಿಧಗಳಿಂದ ಪೀಡಿಸುತ್ತಲಿದ್ದರು. ಆಗ ಅಗಸ್ತ್ಯ ಮುನಿಗಳು-ಅದೋ, ಓ ಅಲ್ಲಿ ತೋರುವ ಬೆಟ್ಟದಲ್ಲಿ ಈ ಊರಿನ ಮಂಗಲಕ್ಕಾಗಿ ತಪಸ್ಸು ಮಾಡುತ್ತ ಕುಳಿತರು. ಅವರ ತಪಃಪ್ರಭಾವದಿಂದ ಈ ಸ್ಥಳದಲ್ಲಿ ಒಂದು ಮಹತ್ತಾದ ಜ್ಯೋತಿಯುತ್ಪನ್ನವಾಗಿ ಕಾಪಾಲಿಕರ ಕಾಟವಡಗಿದೆ. ಅಂದಿನಿಂದಲೂ ಸ್ವಾಮೀ ಇಲ್ಲಿಯೆ ಸನ್ನಿಹಿತನಾಗಿದ್ದಾನೆ. ಸ್ವಾಮಿಯ ಭೃತ್ಯನಾದ ಭೈರವನ ಗುಡಿಯೂ ಪಕ್ಕದಲ್ಲಿಯೆ ಇದೆ. ಈ ಭೈರವನು ಬಹಳ ಪ್ರಭಾವಶಾಲಿಯಾದವನು. ಇಲ್ಲಿ ದೇವಾಲಯದ ಸುತ್ತಲೂ ಇರುವ ತೋಡಿನ ಒಳಗಡೆ ಅಶುಚಿವಂತರು ಸುಳಿವಂತಿಲ್ಲ. ಮುಟ್ಟಾದವರು ಬರುವಂತಿಲ್ಲ. ಇಂಥ ಕಠೋರ ನಿಯಮಗಳನ್ನು ಪಾಲಿಸದೆ ಇದ್ದರೆ ಊರು ಭೈರವನ ಕೋಪಾಗ್ನಿಗೆ ತುತ್ತಾಗಬೇಕಾಗುವುದು. ಈ ಅನುಭವವೂ ಆಗಿದೆ. ರಸ್ತೆಯಾದರೆ ಈ ನಿಯಮಗಳೆಲ್ಲ ಶಿಥಿಲವಾಗುವುದು. ಸ್ವಾಮಿ ಸನ್ನಿಧಾನದ ಪಾವಿತ್ರ್ಯವನ್ನು ಕಾಪಾಡುವುದಕ್ಕಿಂತ ರಸ್ತೆ ಹೆಚ್ಚು ಅವಶ್ಯವೆನಿಸುವುದಿಲ್ಲ. ಆದುದರಿಂದ ರಸ್ತೆಯನ್ನು ಬೇರೆ ಕಡೆಯಿಂದ ಒಯ್ಯಿರಿ. ರಸ್ತೆ ಬೇಡವೆಂದು ನಾನು ಹೇಳಲಾರೆ. ಆದರೆ ನಿಯಮಗಳನ್ನು ಹಾಳುಮಾಡುವ ಈಗಿನ ಯೋಜನೆಯಂತೆ ರಸ್ತೆಯಾಗುವುದು ನಮಗೆಲ್ಲ ಅನಿಷ್ಟ. ಪರಾಂಬರಿಸಿರಿ.’’ + +ಬ್ರಾಹ್ಮಣ ಇಷ್ಟು ಹೇಳಿ ಸುಮ್ಮಗಾದ. ಸ್ಯಾಮುವೆಲನಿಗೂ ನನಗೂ ಏನು ಹೇಳಬೇಕೆಂದೇ ತೋರಲಿಲ್ಲ. ರಸ್ತೆಯನ್ನು ಮುಂದುವರಿಸುವುದು ನಮಗೆ ಆಡಳಿತದ ಅನುಕೂಲದ ದೃಷ್ಟಿಯಿಂದಲೂ ಅಗತ್ಯವುಂಟು. ಮುಂದುವರಿಸಬೇಕೆಂದು ನಿರ್ಧರಿಸಿಯೂ ಆಗಿದೆ. ಈ ಬ್ರಾಹ್ಮಣನ ಮಾತು ಕೇಳಿದರೆ ರಸ್ತೆ ವಕ್ರವೂ ಆಗುತ್ತದೆ. ಫಲವತ್ಪ್ರದೇಶಗಳನ್ನು ಹಾಳುಗೈದು ಹೋಗಬೇಕಾದ್ದರಿಂದ ಇದಕ್ಕಿಂತಲೂ ಹೆಚ್ಚಿನ ಕಷ್ಟವೂ ಉಂಟಾದೀತು. ಈ ಊರಿನಲ್ಲಿ ಬ್ರಾಹ್ಮಣನ ವರ್ಚಸ್ಸಿದೆ. ಅವನ ಅಭಿಪ್ರಾಯವನ್ನು ಮೀರುವುದೂ ವಿವೇಕವಲ್ಲ. ಏನು ಮಾಡಲೆಂಬುದೇ ಸಮಸ್ಯೆಯಾಯಿತು! ಯಾವುದಕ್ಕೂ ವಿಚಾರಿಸುತ್ತೇನೆ ಎಂದು ಹೇಳಿ ಸದ್ಯ ಬ್ರಾಹ್ಮಣನನ್ನು ಕಳಿಸಿಬಿಟ್ಟೆ. ಸಂಜೆಗೆ ಊರನ್ನು ಸುತ್ತಿ ಬಂದೆ. ಊರು ಚೊಕ್ಕವಾಗಿದೆ. ಎಲ್ಲ ಮನೆಗಳೂ ಚಿಕ್ಕವಾದರೂ ತೋಪಿನ ತಂಪಿನಲ್ಲಿ ಹಿತವಾಗಿ ಕಂಡವು. ಎಲ್ಲರ ಮುಖದಲ್ಲಿಯೂ ನಲಿವಿತ್ತು. ಎಲ್ಲರೂ ವಿನಯಶೀಲರೂ ಸತ್ಯಪರಾಯಣರೂ ಆಗಿರುವಂತೆ ಕಂಡಿತು. ಬ್ರಾಹ್ಮಣರ ಮನೆಗಳೂ ಹತ್ತಾರು ಇದ್ದುವು. ಈ ಬ್ರಾಹ್ಮಣರು ಧರ್ಮದ ಪ್ರತಿಪಾದಕರಾಗಿದ್ದಾರೆ. ಜನಸಾಮಾನ್ಯರಿಗೆ ಏನೂ ಗೊತ್ತಿರುವ ಹಾಗೆ ಇಲ್ಲ. ಅವರೆಲ್ಲರ ಮೇಲೆ ಇವರ ವರ್ಚಸ್ಸಿದೆ. + +ಸಂಜೆ ಒಬ್ಬ ಬ್ರಾಹ್ಮಣ ಸಿಕ್ಕಿದ. ನಾನು ಅವನ ಹತ್ತಿರ ಕೆಲವು ಪ್ರಶ್ನೆಗಳನ್ನು ಕೇಳಿದೆ. ಅವನು ತನಗೆ ತಿಳಿದಂತೆ ಉತ್ತರ ಕೊಟ್ಟನು. ಆ ಮೇಲೆ ಗಾಯತ್ರಿಯ ಮಾತು ಬಂತು. ಗಾಯತ್ರಿ ಎಂದರೆ ಪವಿತ್ರವಾದ ಪ್ರಾರ್ಥನೆಯಂತೆ. ಅದನ್ನು ಹೇಳು ನೋಡೋಣ ಎಂದೆ. ಅವನು ಹೇಳಲಿಲ್ಲ. ಅಶುಚಿಯಲ್ಲಿರುವಾಗ ಹೇಳಬಾರದೆಂದೂ, ಅನಧಿಕಾರಿಗಳು ಕೇಳಬಾರದೆಂದೂ ಹೇಳಿಬಿಟ್ಟ! ನನಗೆ ಆಶ್ಚರ್ಯವಾಯಿತು. ಇವರ ದೇವರಿಗೆ ಗುಟ್ಟಿನ ಪ್ರಾರ್ಥನೆಯೆ ಬೇಕೇ? ಇನ್ನೊಬ್ಬ ಬ್ರಾಹ್ಮಣ ಯುವಕ ಸಿಕ್ಕಾಗ ಪುನಃ ಗಾಯತ್ರಿಯ ಮಾತು ಬಂದು ಆತನೊಡನೆ ಅದನ್ನು ಹೇಳುವಂತೆ ಹೇಳಿದೆ. ಆತ ಆರಂಭದಲ್ಲಿ ಅಳುಕಿದ. ಅವನಿಗೆ ನಾಲ್ಕು ರೂಪಾಯಿಗಳ ಸಂಭಾವನೆಯನ್ನು ಕೊಟ್ಟು ನೋಡಿದೆ. ಅಂಜುತ್ತ ಅಂಜುತ್ತ ಅವನು ಹೇಳಿದ. ನನಗೆ ಅರ್ಥವಾಗಲಿಲ್ಲ. ಆದರೂ ಕೇಳುವ ಕೌತುಕವಿತ್ತು. ಈ ಬ್ರಾಹ್ಮಣರು ತಮ್ಮ ಮಂತ್ರಗಳನ್ನು ಎಷ್ಟು ಗೋಪನಮಾಡುತ್ತಾರೆ! ಆದರೆ ಅವರಲ್ಲಿಯೂ ದುಡ್ಡಿಗೆ ಸೋಲುವವರಿದ್ದಾರೆ! ಬ್ರಾಹ್ಮಣರ ವರ್ಚಸ್ಸು ಶಿಥಿಲವಾದರೆ ಧರ್ಮದ ಬಲ ತಗ್ಗುವುದು. ಇಲ್ಲಿ ಒಂದೇ ಧರ್ಮದ ಜನರಿದ್ದ ಕಾರಣ ರಸ್ತೆಯ ಕೆಲಸದಂಥ ಸಣ್ಣ ಮಾತುಗಳಿಗೂ ನೂರಾರು ಆಕ್ಷೇಪಗಳು. ನಮ್ಮ ಜನ ಇಲ್ಲಿ ಇದ್ದಿದ್ದರೆ ಚೆನ್ನಾಗಿತ್ತು. ಈ ಸಲ ಹೋದವನೆ ರೆ| ಫಾದರ್ ರವರನ್ನು ಕಾಣಬೇಕು. ಈ ಹಳ್ಳಿಯಲ್ಲಿ ಒಂದು ಶಾಲೆಯನ್ನಾದರೂ ತೆರೆದು ಯೇಸು ಸ್ವಾಮಿಯ ಸಂದೇಶವನ್ನು ಹರಡುವಂತೆ ಪ್ರೋತ್ಸಾಹಿಸಬೇಕು. ಈ ಹಳ್ಳಿ ಅದಕ್ಕೆ ಅನುಕೂಲವಾಗಿರುತ್ತದೆ ಎಂದು ನನ್ನ ಅಭಿಪ್ರಾಯವಾಗಿದೆ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ತಾ: ………………. + +ಈ ದಿನ ನಾನು ಆ ಹಳ್ಳಿಯಿಂದ ಮರಳಿಬಂದೆ. ಬ್ರಾಹ್ಮಣನ ಅಭಿಪ್ರಾಯವನ್ನು ಒಪ್ಪುವುದು ಸಾಧ್ಯವಾಗಿ ಕಾಣುವುದಿಲ್ಲ. ಆದುದರಿಂದ ಅಲ್ಲಿಂದ ಹೊರಡುವಾಗ ರಸ್ತೆಯ ಯೋಜನೆಯನ್ನು ಬದಲಿಸಲಾಗುವುದಿಲ್ಲವೆಂದು ತೀರ್ಪಿತ್ತು ಬಂದೆ. ಆ ಬ್ರಾಹ್ಮಣನೂ ಕೆಲವರೂ ಬಹಳ ಗೊಣಗುಟ್ಟಿದರಂತೆ. ಜಾಗದ ಮರ್ಯಾದೆಯನ್ನು ಭೈರವ ನೋಡಿಕೊಂಡಾನು ಎಂದರಂತೆ ಕೆಲವರು. ಭೈರವ ಬಂದು ಆಕ್ಷೇಪಿಸಿದಾಗ ನೋಡಿಕೊಳ್ಳೋಣವೆಂದು ನಾನು ನಕ್ಕುಬಿಟ್ಟೆ! + +ತಾ: ……………….ಮುತ್ತಳ್ಳಿ ಕ್ಯಾಂಪಿನಿಂದ ಈ ದಿನ ಬರುವಾಗ ಮನೆಯಲ್ಲಿ ಲಿಲ್ಲಿ ಕಾಹಿಲೆ ಬಿದ್ದಿದ್ದಾಳೆ. ಹಾಗಾಗಿ ಈ ದಿನ ನನ್ನ ಮನಸ್ಸೆ ಸರಿಯಿಲ್ಲ. ಆಫೀಸಿನ ಕಾರ್ಯಗೌರವದಲ್ಲಿ ಬತ್ತಿಹೋದ ನನ್ನ ಜೀವನಶಕ್ತಿಗೆ ಲಿಲ್ಲಿಯ ನಗೆ ಒಂದು ಅಮೃತಸೇಚನವಿದ್ದ ಹಾಗೆ! ಅವಳ ಮಾತು ಒಂದು ರಸಾಯನವಿದ್ದ ಹಾಗೆ. + +ತಾ: ………………. + +ನಿನ್ನೆ ಲಿಲ್ಲಿ ಹುಚ್ಚಾಬಟ್ಟೆ ಮಾತಾಡಿ ನನ್ನನ್ನು ಗಾಬರಿಪಡಿಸಿದಳು. ಡಾಕ್ಟರರು ಬಂದು ಇನ್ಫ್ಲೂಯಂಝ-ಭಯವಿಲ್ಲ, ಎಂದಿದ್ದಾರೆ. ರಾತ್ರೆಯಿಡೀ ಭಯವೆಂದು ಚೀರುತ್ತಿದ್ದಳೊಮ್ಮೆ. ನಾನು ಬಳಿಯಲ್ಲೆ ಇದ್ದರೂ ಭಯವಂತೆ, ಉರಿಯಂತೆ. ನನಗೆ ಯಾವ ಕೆಲಸ ಮಾಡಲು ಉತ್ಸಾಹವಿಲ್ಲ. ದೇವರೇ, ಲಿಲ್ಲಿಗೆ ಗುಣವಾಗಲಿ. + +ತಾ: ………………. + +ನಿನ್ನೆ ರಾತ್ರಿ ನನಗೂ ಒಂದು ಅತ್ಯಂತ ವಿಸ್ಮಯಕರವಾದ ಅನುಭವವಾಯಿತು. ನಿದ್ದೆಯೂ ಅಲ್ಲ; ಎಚ್ಚರವೂ ಅಲ್ಲ ಎನ್ನುವ ಮಟ್ಟಿನಲ್ಲಿ ಇದ್ದ ಹಾಗೆ ನೆನಪು. ಲಿಲ್ಲಿಯ ತಲೆಬುಡದಲ್ಲಿ ನೆರಳೊಂದು ಕುಳಿತಿತ್ತು. ಕಣ್ಣಿನಿಂದ ಕಿಡಿಯುರುಳುತ್ತಿದ್ದಂತೆ ತೋರುತ್ತಿತ್ತು. ಆ ಕರಿನೆರಳಿನ ಕರಾಳವಾದ ಕೈಗಳು ಲಿಲ್ಲಿಯನ್ನು ಆವರಿಸಿದಂತಿದ್ದವು! ಇದೇನಾಗಿದ್ದೀತು? ನನಗೇಕೋ ಅದನ್ನು ಕಂಡು ಭಯವೇ ಆಯಿತು. ಜನರ ಮಾತನ್ನು ಕೇಳಿ ಮನಸ್ಸಿನಲ್ಲಿ ಉಂಟಾದ ವಿಕಾರಗಳಿಂದ ಹೀಗಾಗಿರಬೇಕು. + +ತಾ: ………………. + +ಕರಿನೆರಳಿನ ಕಾಟ ನನ್ನನ್ನು ಪೂರ್ಣ ಗಾಬರಿಗೊಳಿಸಿದೆ. ಲಿಲ್ಲಿಯ ಸ್ಥಿತಿ ನಿನ್ನೆ ರಾತ್ರಿ ಬಹಳ ವಿಷಮವಾಗಿತ್ತು. ನಿನ್ನೆ ಸ್ಯಾಮುವೆಲ್ ಬಂದು ಒಂದು ನವೀನವಾದ ಆದರೆ ಸ್ವಾರಸ್ಯವಾದ ಸುದ್ದಿ ಹೇಳಿದ. ಕಪಾಲೇಶ್ವರನ ಭೈರವನ ಉಪದ್ರದಿಂದ ಲಿಲ್ಲಿಗೆ ಅಪಾಯವುಂಟಾಗಿದೆಯೆಂದೂ ಜಾಗದ ಗೌರವವನ್ನು ಭೈರವನು ಉಳಿಸಿಯೆ ಉಳಿಸುವೆನೆಂದೂ ಜನರು ಹೇಳುತ್ತಿರುವರಂತೆ. ಹುಚ್ಚು ಜನರು!… ಅಥವಾ…. ಅಥವಾ…. ಅದು ಸತ್ಯವಾಗಿರಬಹುದೇ? ಲಿಲ್ಲಿಗೆ ಅಪಾಯ ಬರಬಹುದೇ?…. + +ತಾ: ………………. + +ಲಿಲ್ಲಿಯ ಪರಿಸ್ಥಿತಿ ವಿಷಮವಾಗಿದೆಯೆಂದು ಡಾಕ್ಟರರೆ ಹೇಳಿಬಿಟ್ಟರು. ಓ ದೇವರೇ… ನನ್ನ ಲಿಲ್ಲಿಯನ್ನು ಉಳಿಸು… ಈ ಹಿಂದೂಗಳ ಭೂತವೇ ಇದರ ಕಾರಣವಾಗಿರಬಹುದೇ?… ಏನೇ ಆಗಲಿ. ನನಗೆ ಲಿಲ್ಲಿ ಉಳಿಯಬೇಕು… ಹಾಳಾಗಿ ಹೋಗಲಿ. ರಸ್ತೆಯನ್ನು ಆ ದೇವಸ್ಥಾನದ ಹತ್ತಿರ ಕೊಂಡೊಯ್ಯದೆ ಬೇರೆ ದಾರಿಯ ಮುಖಾಂತರ ಮುಂದುವರಿಸುವಂತೆ ಈ ದಿನವೆ ಆಜ್ಞೆ ಮಾಡುವೆನು. + +ತಾ: ………………. + +ಇದು ಕೇವಲ ವಿಚಿತ್ರವಾಗಿದೆ. ನಿನ್ನೆ ನಾನು ರಸ್ತೆಯನ್ನು ಕಪಾಲೇಶ್ವರ ಗುಡಿಯ ಹತ್ತಿರ ಕೊಂಡೊಯ್ಯದಂತೆ ಆಜ್ಞಾಪಿಸಿದೆ. ಲಿಲ್ಲಿಯ ಜ್ವರ ಬಿಟ್ಟಿದೆ. ಈಗ ಆಕೆ ಉಲ್ಲಸಿತಳಾಗಿದ್ದಾಳೆ. ರೆ| ಫಾದರ್ ಇದನ್ನು ಕೇಳಿ ನಕ್ಕುಬಿಟ್ಟರು. ಆದರೆ ನನಗೆ ಏನೂ ಹೇಳುವುದಕ್ಕೆ ತೋರುವುದಿಲ್ಲ… ಧೈರ್ಯವೂ ಇಲ್ಲ… + + + +ಒಮ್ಮೆಗೆ ಪಾರಾದೆ. ಲಿಲ್ಲಿ ಈಗ ಪೂರ್ಣ ಗುಣಮುಖಳಾಗಿದ್ದಾಳೆ… ಹೇಗೂ ಇರಲಿ. ಈ ಹಿಂದೂಗಳ ದೇವ – ದೆವ್ವಗಳ ತಂಟೆಗೆ ಹೋಗಬಾರದಾಗಿ ನಿರ್ಧರಿಸಿಬಿಟ್ಟಿದ್ದೇನೆ. ಅಚ್ಯುತಭಟ್ಟರಿಗೆ – ಪಾಪ ನನ್ನ ನಿರ್ಧಾರ ಕೇಳಿ ಎಷ್ಟು ಸಂತೋಷವಾಯಿತೋ? ಈ ಭೂತ – ದೈವಗಳ ಮೂಢನಂಬಿಕೆಯನ್ನು ಕಿತ್ತೆಸೆಯುವುದು ಹೇಗೆ? ನಾಳೆಯಿಂದ ಈ ಬಗೆಗೆ ಯತ್ನಿಸಬಹುದು. ಈ ನಾಡಿನಲ್ಲಿ ಇದು ಅಗತ್ಯ ಆಗಬೇಕಾದ ಕಾರ್ಯ…. + +(ಬನ್ನಂಜೆ ರಾಮಾಚಾರ್ಯ) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_434.txt b/Kenda Sampige/article_434.txt new file mode 100644 index 0000000000000000000000000000000000000000..ff986161b69cb8aa19c65447ff5a5c1053fb5644 --- /dev/null +++ b/Kenda Sampige/article_434.txt @@ -0,0 +1,41 @@ + + +ದರ್ಶನ, ಕಾವ್ಯ ಮತ್ತು ಮೀಮಾಂಸೆಗಳು ವರ್ತಮಾನದೊಡನೆ ಅನುಸಂಧಾನವನ್ನು ಬಿಟ್ಟರೆ ಜಡವಾಗುತ್ತವೆ. ಅವುಗಳನ್ನು ವರ್ತಮಾನದ ಈ ನೆಲಕ್ಕೆ ಎಳೆದು ತರುವ ಜವಾಬುದಾರಿಯನ್ನು ಕವಿ ನಿಭಾಯಿಸಬೇಕು. ಹಾಗೆ ಕರೆತರುವಾಗ ಅನೇಕ ಹಂಗುಗಳಿಂದ ಅವನ್ನು ಮುಕ್ತಗೊಳಿಸಬೇಕಾಗುತ್ತದೆ. ಪರಂಪರೆಯ ಕಿಲುಬಿನಿಂದ, ಭಾಷೆಯ ಜಡತ್ವದಿಂದ, ಅರ್ಥದ ಬಂಧನದಿಂದ ಮತ್ತು ಸಿದ್ಧಗೊಂಡಿರುವ ಹಠಮಾರಿ ಓದಿನ ಮಾದರಿಯಿಂದ ಕಾವ್ಯವನ್ನು ಕಳಚಿ ತರಬೇಕು. ಅಂತಹ ಪ್ರಕ್ರಿಯೆಯೊಂದನ್ನು ಎಚ್ ಆರ್ ರಮೇಶ ಅವರ ಕಾವ್ಯದಲ್ಲಿ ನಾನು ಕಂಡೆ. ಕಟ್ಟುವ ಕಾವ್ಯದ ಮಾದರಿಯಿಂದ ಕಳಚುವ ಮಾದರಿಗೆ ಕಾವ್ಯವನ್ನು ಒಗ್ಗಿಸಿದಾಗ ಅಲ್ಲಿಂದಿಲ್ಲಿಗೆ ಇಲ್ಲಿಂದಲ್ಲಿಗೆ ಲಾಳಿಯಾಟದ ಲಾಸ್ಯವೊಂದು ಸಿದ್ಧಿಸುತ್ತದೆ. ಅದನ್ನೂ ಲಯವೊಂದಕ್ಕೆ ತೂಗಿಬಿಟ್ಟರೆ ಜಡವೆನ್ನುವುದು ಕರಗಿ ಹೋಗುತ್ತದೆ. ಹೀಗೆ ಭೂಮಿಯಾಕಾಶಕ್ಕೆ ನಡೆಯುವ ಲಾಳಿಯಾಟವನ್ನು ಕೆಲವು ಮೀಮಾಂಸಕರು ಕಾವ್ಯವೆಂದಿದ್ದಾರೆ. ಇಂತಹ ತೂಗಾಟದ ಮೂಲಕ ವರ್ತಮಾನದ ಕಾಠಿಣ್ಯವನ್ನು ಕರಗಿಸುವ ಮಾದರಿಗಳು ಕನ್ನಡದ ಕಾವ್ಯ, ದರ್ಶನ ಪರಂಪರೆಯಲ್ಲಿ ಹಾಸು ಹೊಕ್ಕಾಗಿವೆ. ಕಾವ್ಯವೆನ್ನುವುದು ಒಂದು ನೇಯ್ಗೆ, ಒಂದು ಕೌಶಲ, ಒಂದು ಕಸುಬು ಮತ್ತು ಬದುಕುವ ಒಂದು ದಾರಿ. ಇವುಗಳಲ್ಲಿ ಕೆಲವನ್ನಾದರೂ ಕವಿ ಪ್ರಯತ್ನಿಸದೇ ಹೋದಲ್ಲಿ ಕನ್ನಡಿಗರು ಅಂತಹವರ ಕಾವ್ಯವನ್ನು ಓದಿಲ್ಲ, ಓದುವುದಿಲ್ಲ. ಇವೆಲ್ಲ ಕಾವ್ಯಾನುಸಂಧಾನಕ್ಕೆ ಹೊರಗಿನಿಂದ ಒದಗಿಸಿಕೊಳ್ಳಬೇಕಾದ ಹತಾರುಗಳಲ್ಲ; ಬದಲಿಗೆ ಈ ನೆಲದ ಬಿತ್ತನೆಗೆ ಒಗ್ಗಿಬರುವ ಕೂರಿಗೆಯ ಕಣ್ಣುಗಳು. ಈ ಸಂಕಲನದ ಅನೇಕ ಕವನಗಳು ಇಂತಹ ಕೂರಿಗೆಯ ಕಣ್ಣುಗಳಂತೆ ನನ್ನನ್ನು ಮಾತನಾಡಿಸಿದವು. + +*** + +ಧರ್ಮಕ್ಕೆ ಕಾಲ ಸರಿದಂತೆಲ್ಲಾ ನೆತ್ತರ ವರ್ಣ ಮೆತ್ತಿಕೊಳ್ಳುತ್ತಲೇ ಇದೆಇವನು ನೋಡುತ್ತಿದ್ದಾನೆಅವರು ನೋಡುತ್ತಿಲ್ಲಪೂರ್ಣಿಮೆ ಅನಾಥವಾಗಿ ಅಳುತ್ತಿದೆ ಇವರ ಕಂಡು ಅಥವಾ ಅಳುತ್ತಿಲ್ಲ ನಗುತ್ತಿದೆಅವನ ನಗು ಪೂರ್ಣಿಮೆಯ ತುಂಬಿದೆಇವರು ಪೂರ್ಣಿಮೆಯನ್ನೂ ನೋಡುತ್ತಿಲ್ಲಅಗಾಧವಾಗಿ ತುಂಬಿಕೊಂಡಿದ್ದರೂ ಕಣ್ಣ ಕೋರೈಸುವ ಲೈಟುಗಳ ತರಂಗಗಳುಅವರ ಸುತ್ತಿಕೊಂಡು ಹರಿಯುತ್ತಿವೆಅವನು ಮಲಗಿದ್ದಾನೆ ಅವನ ಒಂದೊಂದು ಭಂಗಿಯೂ ಜಗದ ಚೆಲುವುಪೂರ್ಣಿಮೆಗೆ ಕಳೆ(ಅವನು ಮಲಗಿಲ್ಲ) + +(ಎಸ್.ನಟರಾಜ ಬೂದಾಳು) + +ಇಂತಹ ಸಾಲುಗಳು ಕವನವೆನ್ನುವುದು ಮುಗಿದುಹೋದ ಸಂಗತಿಯಲ್ಲ; ಬದಲಿಗೆ ಅದರ ಇನ್ನೊಂದರ್ಧವು ಕೇಳುಗರಲ್ಲಿ ಬೆಳೆಯುವ ಬಿತ್ತನೆಯ ಕಾಳು ಎಂಬುದಕ್ಕೆ ಸಾಕ್ಷಿಯನ್ನೊದಗಿಸುತ್ತವೆ. ಆ ಇನ್ನರ್ಧಕ್ಕೆ ನಡೆಯುವ ಹುಡುಕಾಟದಂತಿರುವ ರಮೇಶರ ಅನೇಕ ಕವನಗಳು ತಟಕ್ಕನೆ ಅರ್ಧಕ್ಕೆ ನಿಂತುಹೋದಂತೆ ಭಾಸವಾಗುತ್ತವೆ. ಇದು ಓದುಗರನ್ನು ಕಾವ್ಯ ಪ್ರಕ್ರಿಯೆಗೆ ಒಳಗುಮಾಡಿಕೊಳ್ಳುವ ಕ್ರಮವೂ ಹೌದು. ಕಾವ್ಯವೆನ್ನುವುದು ಕವಿ ಮತ್ತು ಕೇಳುಗರಿಬ್ಬರೂ ಸೇರಿ ತಮ್ಮ ತಮ್ಮ ಕಾಲದೇಶದೊಡನೆ ನಡೆಸುವ ಅನುಸಂಧಾನದ ಫಲವಾಗಿರುವುದರಿಂದ ಸಿದ್ಧ ಕಾವ್ಯವಾಗಲೀ ಸಿದ್ಧ ಕವಿಯಾಗಲೀ ಸಿದ್ಧ ಓದುಗರಾಗಲೀ ಇರಲು ಸಾಧ್ಯವಿಲ್ಲ. ಎಲ್ಲವೂ ಒಗ್ಗೂಡಿದಾಗ ಉಂಟಾಗುವ ಪರಿಣಾಮವೂ ಸ್ಥಿತವಲ್ಲ. ಇಂತಹ ಪ್ರವಾಹರೂಪೀ ಕಾವ್ಯ ಪ್ರಕ್ರಿಯೆಯನ್ನು ಹರಿಯಬಿಡುವ ಅನೇಕ ಕವನಗಳು ಈ ಸಂಕಲನದಲ್ಲಿವೆ. ‘ಹಳೆಯ ಆಕಾಶ ಹೊಸ ಸೆಲ್ಫಿ’ ಕವನದ ಈ ಕೆಲವು ಸಾಲುಗಳನ್ನು ಉದಾಹರಿಸದಿರಲಾರೆ: + +ಬೆಳದಿಂಗಳು ಹಳೆಯದುಕೋಟಿ ಸಮಯದಿಂದ ಹೀಗೆ ಉರಿದು ಹೋಗಿರಬಹುದುಬೆಳಗಿರಬಹುದುಅವಳ ಕಣ್ಣುಗಳಲ್ಲಿ ಅದು ಹರಿಯುತ್ತಿದೆಅಥವಾ ಮಾರಿ ಹಬ್ಬದ ಬಾಡಿನ ಘಮಲ ಸವಿಯುತ್ತಿದ್ದಅಜ್ಜನಂತೆ ಅಜ್ಜನಜ್ಜನಂತೆ ಮುತ್ತಜ್ಜನ ಮುತ್ತಜ್ಜಿಯಂತೆಹಳೆಯ ಬೆಳದಿಂಗಳು ಅವಳ ಕಣ್ಣುಗಳಲಿ ಹರಿಯುತ್ತಿದೆರೂಪಕ ಹಳೆಯದೆನ್ನಿಸಬಹುದುಅಮ್ಮನ ರೊಟ್ಟಿಯೂ ಹಳೆಯದುಅಪ್ಪನ ಸಾಲದಂತೆ, ಅವನ ಚಪ್ಪಲಿಯಂತೆ(ಹಳೆಯ ಆಕಾಶ ಹೊಸ ಸೆಲ್ಫಿ) + +ಶಬ್ದಾರ್ಥಗಳ ಸಂಬಂಧ ಸ್ವರೂಪವನ್ನು ದರ್ಶನ, ಮೀಮಾಂಸೆ ಮತ್ತು ಕಾವ್ಯಗಳು ಎಂದಿನಿಂದಲೂ ಶೋಧಿಸುತ್ತಲೇ ಬಂದಿವೆ. ಶರೀಫಜ್ಜನಂತೂ ‘ಭಾಷೆ ಒಂದೇ ಭವನಾಶ ಒಂದೇ’ ಎನ್ನುತ್ತ ಭಾಷೆಯನ್ನು ಸಮಸ್ತ ಲೌಕಿಕ ಎಂಬರ್ಥದಲ್ಲಿ ಬಳಸಿ ನೋಡುತ್ತಾನೆ. ಶಬ್ದಾರ್ಥ ಸಂಬಂಧವನ್ನು ಪಾರ್ವತಿ ಪರಮೇಶ್ವರರಂತೆ ಪಾರಲೌಕಿಕಗೊಳಿಸಿರುವ ಮೀಮಾಂಸಾ ಪ್ರಯತ್ನಗಳಿವೆ. ಇನ್ನು ಭಾಷೆ ಅರ್ಥದ ಸಂಬಂಧಗಳು ಈ ಲೋಕದ ಈ ಕ್ಷಣದ ಆಗುವಿಕೆಯನ್ನು ದಾಖಲಿಸಲು ಬಳಸುವ ಪ್ರಕ್ರಿಯಾ ಮೀಮಾಂಸೆಯ ಪರಿಕರಗಳು ಮಾತ್ರ. ಅವುಗಳಾಚೆಗೆ ಯಾವುದೇ ಪಾರಲೌಕಿಕತೆಯನ್ನು ಆರೋಪಿಸುವುದರಲ್ಲಿ ಅರ್ಥವಿಲ್ಲವೆನ್ನುವ ಪ್ರಕ್ರಿಯಾ ಮೀಮಾಂಸಕರೂ ನಮ್ಮ ನಡುವೆ ಇದ್ದಾರೆ. ತೊಡೆಯಲಾಗದ ಲಿಪಿಯ ಬರೆಯಲಾಗದು ಎಂದ ಅಲ್ಲಮ ಆಹ್ವಾನ ಮತ್ತು ವಿಸರ್ಜನೆಯೇ ನಿಸರ್ಗದ ಮತ್ತು ಕಾವ್ಯದ ಆರೋಗ್ಯದ ಗುಟ್ಟು ಎಂದು ಎಚ್ಚರಿಸುತ್ತಾನೆ. ಅಂತಹ ಒಂದೆರಡು ತೀವ್ರ ಎಚ್ಚರದ ಸಾಲುಗಳು ಈ ಸಂಕಲನದಲ್ಲಿವೆ. ಈ ಎರಡು ಪುಟ್ಟ ಕವನಗಳು ನನ್ನನ್ನು ಹೀಗೆ ಮಾತಾಡಲು ಹಚ್ಚಿದವು: + +ಒಳಗೆ ಹೋದಂತೆಲ್ಲ ಅರ್ಥಗಳು ಓಡುತ್ತಿವೆಅಥವಸಿಕ್ಕ ಅರ್ಥಅರ್ಥವಾಗುತ್ತಿಲ್ಲಅನುವಾದಿಸುತ್ತಲೇ ಇದ್ದೇನೆ ನಿನ್ನ + +ಕಣ್ಣಿಗೆ ಕಾಣುವ ಹೂವು ಕಾಣುತ್ತಿಲ್ಲವೆಂಬಂತೆ ಅನುವಾದಿಸುತ್ತಿದ್ದೇನೆ. + +ಬರೆದರೆ ಮತ್ತೆ ಅವೇ ಸಾಲುಗಳುಇಲ್ಲಿ ಅಮರತ್ವದ ಕೊಳಕುನಾತಪ್ರತಿಮೆಗಳಲಿ, ಮಿನಾರುಗಳಲಿ, ಮಂದಿರಗಳಲಿಧರ್ಮಗ್ರಂಥದ ಕಟ್ಟುಗಳಲಿಬರೆಯಬೇಕು ಮಂಜುಗಡ್ಡೆಯ ಮೇಲೆಹರಿಯುತ್ತ ತನ್ನನು ತಾನು ಕಳಕೊಂಡು ಹಬ್ಬುತ್ತಾ ಪಡೆಯುತ್ತಾ + + + +ಭಾಷೆಗೆ ತನ್ನದೇ ಆದದ್ದು ಇಲ್ಲವೆನ್ನುವ ನಿಲುವಿನ ಮೂಲಕ ಪ್ರಮಾಣ ನಿರಾಕರಣೆಯಂತಹ ನಿಲುವನ್ನು ಪ್ರತಿಪಾದಿಸುವ ಕವನವೊಂದು ನನ್ನ ಗಮನವನ್ನು ಸೆಳೆಯಿತು. ಪ್ರಮಾಣ ನಿರಾಕರಣೆ ಕನ್ನಡ ಕಾವ್ಯ ನಿರಂತರವಾಗಿ ಕಾಪಾಡಿಕೊಂಡು ಬಂದ ಎಚ್ಚರ. ಇಂತಹ ಪ್ರತಿಕ್ರಿಯಾತ್ಮಕ ನಿಲುವುಗಳು ಹುಟ್ಟಲು ಕಾರಣ ಈ ನೆಲವನ್ನು ಸಾವಿರಾರು ವರುಷಗಳಿಂದ ಅನೇಕ ರೀತಿಯ ತಲ್ಲಣಗಳಿಗೆ ನೂಕಿದ ಸಾಂಸ್ಕøತಿಕ ವಸಾಹತುಶಾಹಿ. ಇದಕ್ಕೆ ಪ್ರತಿಕ್ರಿಯಿಸುವುದಕ್ಕೇ ತನ್ನ ಚೈತನ್ಯದ ಬಹುಭಾಗವನ್ನು ಈ ನೆಲ ವ್ಯಯ ಮಾಡುತ್ತಾ ಬಂದಿದೆ. ಇಲ್ಲಿನ ಕವಿ, ದಾರ್ಶನಿಕರು ಯಾರೋ ಹೊರಿಸಿದ ಈ ಅನಿವಾರ್ಯ ಹೊರೆಯನ್ನು ನಿಭಾಯಿಸುತ್ತಲೇ ತಮ್ಮ ಕಾವ್ಯೋದ್ಯೋಗ ಮಾಡುತ್ತಾ ಬಂದಿದ್ದಾರೆ. ಈ ಊಳಿಗ ಇನ್ನೂ ತಪ್ಪಿಲ್ಲ. ಸಾಂಸ್ಕøತಿಕ ವಸಾಹತುಶಾಹಿಯಡಿಗೆ ಸಿಕ್ಕ ಆವರಣಗಳು ಈ ಸಂಕಟದಿಂದ ಹೊರಬರುವುದು ಅಷ್ಟು ಸುಲಭವಲ್ಲ. ಅಂತಹ ಬಿಡುಗಡೆಯನ್ನು ಸಾಧ್ಯವಾಗಿಸಿಕೊಂಡಿರುವ ಕೆಲವೇ ತಾತ್ವಿಕ ಆವರಣಗಳಿವೆ. ನಾನು ಬಲ್ಲ ಹಾಗೆ ಕನ್ನಡದ ತತ್ವಪದಕಾರರು ಮಾತ್ರ ಅಂತಹ ಬಿಡುಗಡೆಯನ್ನು ಅನುಭವಿಸಿದ್ದಾರೆ. ಕನ್ನಡದ ಕವಿಗಳು ಒಮ್ಮೆಯಾದರೂ ತತ್ವಪದಗಳ ಒಳಹೊಕ್ಕು ಬರದೆ ಹೋದರೆ ಈ ನಾಡಿನ ಅಸ್ಮಿತೆಯ ಜೊತೆಗೆ ಸಂಬಂಧ ಸಾಧಿಸಲಾರರು ಎಂಬುದೇ ನನ್ನ ಗಟ್ಟೆ ನಂಬುಗೆ. ರಮೇಶ ಅವರಿಗೆ ಪಾಶ್ಚಾತ್ಯ ತತ್ವಪರಂಪರೆಗಳ ಕಾವ್ಯ ಪರಂಪರೆಗಳ ಒಡನಾಟವಿದೆ. ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ಅಂತಹ ಅನುಸಂಧಾನದ ಮೂಲಕ ಮಾತ್ರ ದೇಸಿ ಕಾವ್ಯ ಮೀಮಾಂಸೆಗಳೊಡನೆ ಮಾತುಕತೆ ಸಾಧ್ಯವಾಗುತ್ತದೆ. ಇಲ್ಲಿನ ಮೀಮಾಂಸಾ ಪರಂಪರೆಗಳ ಅರಿವಿಲ್ಲದಿರುವ ಆವರಣಗಳಲ್ಲಿ ಮಾತ್ರ ನಿರ್ದಿಷ್ಟ ಮಾದರಿಯ ಭಾಷೆಯೊಂದು ತಾನೇ ಪ್ರಮಾಣವೆನ್ನುವ ಅಹಂ ಅನ್ನು ಪ್ರದರ್ಶಿಸಬಹುದು. ಅದನ್ನು ಸೂಚಿಸುವ ಕವನವೆಂದೇ ಇದನ್ನು ಇಲ್ಲಿ ಉದ್ಧರಿಸುತ್ತಿದ್ದೇನೆ. + +ಇಲ್ಲಿ ಅದನ್ನುಅದುಎಂದು ಕರೆಯಬೇಕುಅದನ್ನು ಹೆಸರ್ಹಿಡಿದು ಕರೆದರೆಅಶ್ಲೀಲಮರ್ಯಾದೆಗೆಟ್ಟ ಅಸಭ್ಯತನಲಂಗಿಲ್ಲ ಲಗಾಮಿಲ್ಲಎಂದುಎಳೆದು ತಂದುಲೋಕವನೇ ಕೂಗಿ ಕರೆದುಧರ್ಮದ ಹಗ್ಗದಲ್ಲಿ ನೇಣು ಹಾಕುವರು……ಅದನ್ನು ಅದಾಗಿ ಕರೆದರೆಹೇಸಿಗೆಭಾಷೆಯೇ ಸೃಷ್ಟಿಯ ಅರ್ಥದ ದಾರಿಯೇ + +ಅರ್ಥವುಳಿವುದೇ ನಿರಂತರಏನೆಲ್ಲಾ ಅಳಿದಿರುವ ಈ ಜಗದಲ್ಲಿಅನಂತ ಕಾಲದ ಪರಿಯ ಅಪರಿಮಿತದಲಿ? + +(ಕವಿ ಹೆಚ್ ಆರ್ ರಮೇಶ್) + +ಈ ಕವನಗಳಲ್ಲಿನ ಕ್ರಿಯಾಲೋಕ ವರ್ತಮಾನದ ಸಂಕಟದ ಅನುಸಂಧಾನವೇ ತನ್ನ ಮೊದಲ ಆಯ್ಕೆ ಎಂದುಕೊಂಡಿರುವುದರಿಂದ ಸಹಜವಾಗಿ ವರ್ತಮಾನದ ಅನೇಕ ಸಂಘರ್ಷಗಳು ಇಲ್ಲಿ ಜಾಗ ಪಡೆದಿವೆ. ವೇಮುಲ, ಯು.ಆರ್. ಅನಂತಮೂರ್ತಿ, ಆಕ್ರಮಣ, ಅವನು, ಇವರು, ಅವರು ಮತ್ತು ರಾಷ್ಟ್ರನಾಯಕ, ಮೊದಲಾದ ಕವನಗಳು ಈ ಮಾದರಿಯವು. ವೇಮುಲನನ್ನು ಕುರಿತ ಕವನ ತನ್ನೆಲ್ಲ ಮೂರ್ತ ವಿವರಗಳಿಂದಲೇ ಈ ಹೊತ್ತು ನಮ್ಮ ತಟ್ಟೆಯನ್ನು ತುಂಬಿಕೊಂಡಿರುವ ಸಂಕಟವನ್ನು ಧ್ವನಿಯಾಗಿಸಿ ಕಾವ್ಯವೆಂದರೆ ಹಸಿವಿಗೆ ಅನ್ನವೋ ಆನಂದಕ್ಕೆ ರಸವೋ? ಎನ್ನುವ ಮೀಮಾಂಸೆಯ ಗಟ್ಟಿ ಪ್ರಶ್ನೆಯನ್ನು ಎತ್ತುತ್ತದೆ. + +ನೀನು ಇರಬೇಕಿತ್ತು ಅವರ ವಿರುದ್ಧ ಸೆಣಸಲುಬಾಬಾ ಸಾಹೇಬರು ಸಾವಿರ ಸಲ ಸತ್ತು ಬದುಕಿದರುಹೋರಾಡುತ್ತಗಾಂಧಿಯ ಜೊತೆಗಂತೂ ಸೆಣಸಿ ಹೈರಾಣಾಗಿಮುನಿದರು, ಸಿಟ್ಟಾದರು, ಕೋಪಗೊಂಡರುಜಗದ ಯಾವ ಯುದ್ಧಕ್ಕಿಂತ ಕಡಿಮೆ ಅವರ ಸೆಣಸಾಟಗಾಂಧಿಯನ್ನೂ ಬಿಟ್ಟರಾ ಅವರುಅವನ ರಾಮಅವನ ಗೀತೆಅವನ ಕಾಪಾಡಲಿಲ್ಲಸುಸ್ತಾದ ಬಾಬಾರ ಆವರಿಸಿತು ತಥಾಗತನ ಬೆಳದಿಂಗಳುನೀನು ಇರಬೇಕಿತ್ತುನಿನಗಾಗಿನಿನ್ನ ಅಮ್ಮ ಅನ್ನವ ಬೇಯಿಸುತ್ತಿದ್ದಳುಸಿಮೆಂಟ್ ಶೀಟಿನಡಿಯ ಧಗೆಯಲಿನಿನಗಾಗಿನಿನ್ನ ಸ್ನೇಹಿತರು ನಿನ್ನ ಗೆಳತಿಯರುಹೊಸ ಪುಸ್ತಕಗಳ ಕೊಂಡಿದ್ದರುಇಲ್ಲಿ ಗಾಂಧಿಯಾದರೆ ಕೊಲೆ ಮಾಡುತ್ತಾರೆಬಾಬಾ ಸಾಹೇಬರಾದರೆ ಸರ್ಕಲ್ ಮಧ್ಯೆ ನಿಲ್ಲಿಸಿ ಪ್ರತಿಮೆ ಮಾಡುತ್ತಾರೆ(ವೇಮುಲ) + +Form is emptiness ಎಂಬ ನಿಲುವನ್ನು ಪ್ರತಿಪಾದಿಸುವ ಅನೇಕ ವಚನಗಳು ಇವೆ. ಇಂತಹ ವಚನಗಳನ್ನು ವೀರಶೈವದ ಆವರಣಕ್ಕೋ, ಲಿಂಗಾಯತ ಆವರಣಕ್ಕೋ ಸೀಮಿತವಾಗಿ ಓದುವುದು ಅವುಗಳನ್ನು ಸೀಮಿತಗೊಳಿಸಿದಂತೆಯೆಂಬುದು ನನ್ನ ಅನಿಸಿಕೆ. ಇದು ಕಾವ್ಯಕ್ಕೂ ಅನ್ವಯವಾಗುವ ಮಾತು. ಕಾವ್ಯವೆಂದರೆ ರಸ, ಧ್ವನಿ, ಆನಂದವೆನ್ನುವ ಮೀಮಾಂಸೆಯ ದಾರಿಗೆ ಕನ್ನಡದ ಕಾವ್ಯ ಎಂದೋ ವಿದಾಯ ಹೇಳಿದೆ. ಇಂತಹ ನಿಲುವುಗಳು ವ್ಯಕ್ತವಾಗುವ ಪಾಶ್ಚಾತ್ಯ ಕಾವ್ಯ ಮೀಮಾಂಸೆ ಮತ್ತು ಭಾಷಾ ವಿಜ್ಞಾನದ ಹೊಳಹುಗಳು ಆಧುನಿಕ ಕಾವ್ಯದಲ್ಲಿ ಜಾಗ ಕಂಡುಕೊಳ್ಳುವುದನ್ನು ನಾವು ಸ್ವೀಕರಿಸಬೇಕು. ಏಕೆಂದರೆ ಸಮಾನ ಚಿಂತನೆಗಳು ಕನ್ನಡದ ತತ್ವ ಮತ್ತು ಮೀಮಾಂಸಾ ಪ್ರಸ್ಥಾನಗಳಲ್ಲಿ ಅನುರಣಿಸಿವೆ. ಅವು ಹೊಸಗನ್ನಡ ಕಾವ್ಯದಲ್ಲಿ ಯಾವ ರೂಪದಲ್ಲಿಯೇ ಬಂದರೂ ಇಂತಹ ತತ್ವಪ್ರಸ್ಥಾನದೊಡನೆ ಮಾತನಾಡತೊಡಗುತ್ತವೆ ಅನ್ನಿಸುತ್ತದೆ. ಅಂತಹ ಒಂದು ಕವನ: + +ನಿನಗೆ ಅಳಿವಿಲ್ಲ.ನನಗೆ;ಮಾಗಿಯ ಎಲೆಯಂತೆ ನಾನುಋತುಮಾನದ ಪರಿಕರಗಳಾದಿಯಾಗಿ ಜೀವಅಜೀವಗಳರೂಪಕಗಳಲಿ ಬಿದ್ದು ಒದ್ದಾಡಿಅಳಿಯುವೆ.ನೀನ ರೂಪಕಗಳಾಚೆಅದಕೆ ಏನೋ ನಿನಗೆ ರೂಪಿಲ್ಲವೆನ್ನುವರು.ನೀನುಪ್ರಶ್ನೆಅದಕುತ್ತರವೂ ನಿರುತ್ತರಡೆರಿಡಾದಿಗಳು ರೂಪಿಲ್ಲದಿರುವುದು ರೂಪವೇ ಎನ್ನುವರುನಿರುತ್ತರವೂ ಉತ್ತರವೆನ್ನವರು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_435.txt b/Kenda Sampige/article_435.txt new file mode 100644 index 0000000000000000000000000000000000000000..5442f52d6c050f18a684178563d00e2436b142c6 --- /dev/null +++ b/Kenda Sampige/article_435.txt @@ -0,0 +1,65 @@ + + +ಕಾರ್ನಳ್ಳಿ ದೊರೆ ಬೆನೆಟರು ಯುರೋಪಿನಿಂದ ಬಂದು ಕಡಿಮೆಯೆಂದರೆ ಹದಿನೆಂಟು ವರುಷಗಳಾದರೂ ಆಗಿರಬೇಕು. ಅವರಿಗೀಗ ಕಾರ್ನಳ್ಳಿಯಲ್ಲೊಂದು, ಮಾವರೆಯಲ್ಲೊಂದು – ಹೀಗೆ ಎರಡು ದೊಡ್ಡ ಕಾಫಿ ತೋಟಗಳಿವೆ. ಎರಡರಲ್ಲಿ ಒಟ್ಟಿಗೆ ಸುಮಾರು 800 ಕೂಲಿಯಾಳುಗಳು ಕೆಲಸಮಾಡುತ್ತಾರೆ. ಆಳು ಕಟ್ಟುವ ಒಬ್ಬೊಬ್ಬನಿಗೆ ಒಂದು ಸಾವಿರದಿಂದ ಆರು ಸಾವಿರದವರೆಗೂ ಕೊಟ್ಟು, ಅವರ ಸುಮಾರು 70 ಸಾವಿರ ರೂಪಾಯಿಗಳು ಅಡ್ವಾನ್ಸಾಗಿ ದಕ್ಷಿಣ ಕನ್ನಡಕ್ಕಿಳಿದವು – ಪ್ರತಿಯಾಗಿ ದಕ್ಷಿಣ ಕನ್ನಡದಿಂದ ಆ 800 ಆಳುಗಳು ಗಟ್ಟಹತ್ತಿದರು. + +ಬೆನೆಟ್ ದೊರೆ ಯುರೋಪಿನಿಂದ ಇಲ್ಲಿ ಬಂದು ನಿಂತ ನಂತರ, ಇಂದಿಗೆ ಮೂರು ವರುಷಗಳಿಗೆ ಹಿಂದೆ ಒಮ್ಮೆ ಮಾತ್ರ ಮಾತೃಭೂಮಿಗೆ ಹೋಗಿ ಬಂದಿದ್ದರು. ಹಿಂದಿರುಗುವಾಗ ಮದುವೆ ಮಾಡಿಕೊಂಡು ದೊರೆಸಾನಿಯೊಟ್ಟಿಗೆ ಬಂದಿದ್ದರು. ಬಾಬುರಾಯ ಈಗ ಕಾರ್ನಳ್ಳಿ ತೋಟದ ಮುನ್ಶಿ. ಮಿ| ಬೆನೆಟರಿಗೆ ಬಾಬುರಾಯನ ತಂದೆಯಷ್ಟು ಅಚ್ಚುಮೆಚ್ಚಿನ ಬಂಟ ಇನ್ನೊಬ್ಬನಿರಲಿಲ್ಲ. ಕಾರ್ನಳ್ಳಿ ತೋಟದ ಎಲ್ಲಾ ಮೇಲ್ವಿಚಾರಣೆಯನ್ನು ತನ್ನ ಅತ್ಯಂತ ನಂಬಿಗಸ್ಥನಾದ ವಾಸುರಾಯ (ಬಾಬುರಾಯನ ತಂದೆ)ನ ವಶಕ್ಕೆ ಕೊಟ್ಟಿದ್ದರು ದೊರೆ. ಅವ ಕಳೆದ ವರುಷ ತೀರಿಹೋದಾಗ ಬೆನೆಟರು ಆ ದಿನವಿಡೀ ಹೇಟು ಇಡದೆ ಕಣ್ಣೀರು ಸುರಿಸಿದ್ದರು. ಕಾರ್ನಳ್ಳಿ ತೋಟದಲ್ಲಿ ವಾಸುರಾಯನ 300 ಆಳುಗಳಿದ್ದವು. ತಂದೆ ತೀರಿದ ನಂತರ ಬಾಬುರಾಯನು ಕಾರ್ನಳ್ಳಿಗೆ ಬಂದು ನಿಂತ. ವಾಸುರಾಯನ ಸ್ಥಾನದಲ್ಲಿ ಮನ್ಶಿಯಾಗಿ ಕಾರ್ನಳ್ಳಿ ತೋಟದ ಕೆಲಸದ ಮೇಲ್ವಿಚಾರಣೆಯನ್ನು ವಹಿಸಿಕೊಂಡ. + +ಬಿಳಿ ಜನರ ಖಾಸಗೀ ಮೈತ್ರಿಯು ಬಹಳ ನಿರ್ಮಲವಾದುದು. ಬಾಬುರಾಯನಿಗೆ ತೋಟದ ಅನುಭವ ಕಡಿಮೆ. ಈವರೆಗೂ ಮನೆಯಲ್ಲಿ ಉಂಡು ತಿಂದು ಸುಖದಲ್ಲಿದ್ದವ. ತಂದೆಯೊಡನೆ ಒಂದೆರಡು ಸಲ ಗಟ್ಟ ನೋಡಲು ಕಾರ್ನಳ್ಳಿಗೇನೋ ಬಂದಿದ್ದ. ಅವನ ಆಗಿನ ಇತರ ಸಮಯದಂತೆ ಅದೂ ವಿನೋದದಲ್ಲಿಯೋ ವಿಹಾರದಲ್ಲಿಯೋ ಕಳೆದುಹೋಗಿತ್ತು. ಆಗ ಬೆನೆಟರು ಹುಡುಗನ ಬೆನ್ನು ತಟ್ಟಿ ಒಂದು ಸಣ್ಣ ಪಿಸ್ತೂಲನ್ನು ಇನಾಮು ಕೊಟ್ಟಿದ್ದರು. ತರುಣ ಬಾಬುವಿಗೆ ಅಷ್ಟರಿಂದಲೇ ಬಹಳ ಗೌರವ, ದೊರೆಯ ಮೇಲೆ.  ಈಗಲಂತೂ ಬೆನಟರ ಕೈಕೆಳಗೆ ಮುನ್ಶಿಯಾಗಿ ನಿಂತಿದ್ದಾನೆ. ಬೆನೆಟರು ಅವನನ್ನು ಪುತ್ರವಾತ್ಸಲ್ಯದಿಂದ ನೋಡುತ್ತಿದ್ದಾರೆ. ದೊರೆಯ ಬಂಗಲೆಯ ಸಮೀಪದ ಚಿಕ್ಕದೊಂದು ಬಂಗಲೆಯನ್ನು ಧರ್ಮಾರ್ಥವಾಗಿ ಬಾಬುವಿನ ವಾಸಕ್ಕೆಂದು ಬಿಟ್ಟಿದ್ದಾರೆ. + +ಮರುದಿನ ಬೆನೆಟ್ ದೊರೆಗೆ ಅಲ್ಲಿದ್ದ ತನ್ನ ತೋಟದ ತನಖಿ ಮಾಡಿ ಬರಲು ಮಾವರೆಗೆ ಹೋಗಬೇಕಾಗಿತ್ತು. ತೋಟದ ಕೆಲಸ, ಲೆಕ್ಕಪತ್ರ, ಬಂಗಲೆ ದುರಸ್ತಿ – ಇವೆಲ್ಲವನ್ನು ಪರೀಕ್ಷಿಸಲು ಹದಿನೈದು ದಿನಗಳಾದರೂ ಬೇಕಾಗಬಹುದು. ಆ ರಾತ್ರಿ ಬಾಬುರಾಯನನ್ನು ತನ್ನಲ್ಲಿಗೆ ಡಿನ್ನರಿಗೆ ಆಮಂತ್ರಿಸಿದರು ದೊರೆ. ಬಾಬುರಾಯ ತುಸು ನಾಚಿಕೆಯ ಪ್ರಕೃತಿಯವ. ಬೆನೆಟರಿಗೆ ಹಿಂದೂ ಜನರ ಸ್ವಭಾವ, ರೀತಿ ನೀತಿಗಳ ಅರಿವಿತ್ತು. ಅಷ್ಟೇ ಏಕೆ? ಹದಿನೆಂಟು ವರುಷಗಳ ಸಮ್ಮಿಲನದ ಪರಿಣಾಮವಾಗಿ ಅವರಲ್ಲಿ ಹಿಂದೂ ಮರ್ಜಿಯೇ ಬಹಳ ಮಟ್ಟಿಗಿತ್ತು. ಆದ್ದರಿಂದ ಸಾಮಾನ್ಯ ಮಟ್ಟದ ಸಂಕೋಚ ಮನೋವೃತ್ತಿಯನ್ನು ಅವರು ಕ್ಷಮಿಸಬಲ್ಲರು. ನಮ್ಮ ಬಾಬುರಾಯನಲ್ಲಿ ಸಂಕೋಚ ಮಾತ್ರವಲ್ಲ, ಮುಖಹೇಡಿತನವೂ ಇತ್ತು. ಇದು ದೊರೆಗಳವರಿಗೂ ದೊರೆಸಾನಿಗಳವರಿಗೂ ಗೊತ್ತು. ದೊರೆ ಮತ್ತು ಧೊರೆಸಾನಿ ಈ ಸಂಗತಿಯನ್ನು ತಮ್ಮೊಳಗೆ ಮಾತಾಡಿಕೊಂಡು ಬಾಬುರಾಯನಲ್ಲಿ ಸಲಿಗೆಯನ್ನು ಹೆಚ್ಚಿಸಬೇಕೆಂಬ ಉದ್ದೇಶದಿಂದಲೇ ಆ ದಿನ ಡಿನ್ನರಿಗೆ ಆಮಂತ್ರಿಸಿದ್ದರು. + +ಮೂವರೂ ಡಿನ್ನರಿಗೆ ಕುಳಿತರು. ಅಡಿಗೆ ಹೆಂಗಸು ಮಿಶ್ಶನಿನವಳು. ದೊರೆಗಳಂತೂ ಸ್ವರಭೇದಗಳನ್ನು ಬಿಟ್ಟರೆ ಕನ್ನಡ ತುಳು ಭಾಷೆಗಳನ್ನ ಸ್ವಚ್ಛವಾಗಿ ಮಾತಾಡಬಲ್ಲರು. ದೊರೆಸಾನಿಯೂ ಮೂರು ವರ್ಷಗಳಿಂದ ದೊರೆಯೊಡನೆಯೂ ಅಡಿಗೆಯವಳೊಡನೆಯೂ ತುಳು ಕನ್ನಡ ಮಾತಾಡುವ ನಿರ್ಧಾರ ಮಾಡಿ ಇಷ್ಟರಲ್ಲೇ ಕಲಿತಿದ್ದಳು. ಸರಿ, ಊಟದ ವೇಳೆ ಬಿಳಿ ದಂಪತಿಗಳ ತಮಾಷೆಗೆ ಪ್ರಾರಂಭವಾಯಿತು. ಬಾಬುರಾವ್ ಎಲ್ಲಕ್ಕೂ ನಮ್ರತೆಯನ್ನು ತೋರಿಸುತ್ತಾ ಬಂದ. ತಟ್ಟೆಯನ್ನು ಪೂರ್ತಿ ಖಾಲಿ ಮಾಡುವುದಕ್ಕೂ ಬಾಬುವಿಗೆ ಸಂಕೋಚ. ಮಿಸಿಸ್ ಬೆನೆಟ್ “ತೆ-ಗೆ-ದು-ಕೋ, ತಿನ್ನು – ಅಷ್ಟೇ ತಿನ್ನು ಯಾಕೆ?” ಎಂದು ರಾಗ ಎಳೆದಳು. “ನನ್ನ ಹುಡುಗಾ! ತಿನ್ನು-ತಿನ್ನು-ನಾಚಿಕೆ ಮಾಡಬೇಡ” ಎಂದರು ದೊರೆ. ಬಾಬು ನಾಚಿಕೆಗೊಂಡ. ಅವ ಚಮಚಾ ಹಿಡಿಯುವಾಗ, ಕೂರಸಿಗೆ ಕೈ ಹಾಕುವವನಂತೆ ಬಹಳ ಜಾಗ್ರತೆ ತೆಗೆದುಕೊಳ್ಳುತಿದ್ದ. “ಕೆಲೆನ್ ಹೇಳುತ್ತಾಳೆ – ನೀನು ಯಾವಾಗಲೂ ನಾಚಿಕೆ ತೋರಿಸುತ್ತೀ ಅಂತೆ. ಮಾತಾಡುವದೇ ಇಲ್ಲವಂತೆ. ಯಾಕೆ ಹಾಗೆ ಮಾಡಬೇಕು?” ಬೆನೆಟ್ ದೊರೆ ಕೇಳಿದರು. ಆ ಮಾತು ಕೇಳುವಾಗಲೂ ಬಾಬುರಾಯನಿಗೆ ನಾಚುಗೆ! + +“ನೋಡು, ನನಗೆ ನಾಳೆ ಮಾವರೆಗೆ ಹೋಗಬೇಕು. ಅಲ್ಲಿ ಇನ್ಸ್ ಪೆಕ್ಷನ್ ಮುಗಿಯುವಾಗ ಹದಿನೈದು ದಿನ ಹಿಡಿಯಬಹುದು. ನೀನು ನನ್ನ ಬಂಗಲೆಯನ್ನು ನೋಡಿಕೊಂಡಿರಬೇಕು. ಕೆಲೆನಳು ಅಲ್ಲಿಗೆ ಬರುವುದಿಲ್ಲ. ಅವಳಿಗೆ ಹುಲಿಯೆಂದರೆ ತುಂಬಾ ಹೆದರಿಕೆ. ಅವಳನ್ನೂ ನೋಡಿಕೊ! ನೀನು ಧಾಂಡಿಗನಿದ್ದೀಯಾ! ಹುಡುಗಾ, ಹುಶಾರಿರಬೇಕು.”ದೊರೆಯ ಮಾತಿನಲ್ಲಿ ಸಲುಗೆ – ವಿನೋದವಿತ್ತು. ಬಾಬು ನಮ್ರತೆಯಿಂದ “ಆಯ್ತು ಸಾರ್!” ಎಂದ.ಊಟ ತೀರಿತು. ರಾತ್ರಿ ಬಹಳ ಹೊತ್ತಿನವರೆಗೆ ದಂಪತಿಗಳು ಮಗುವನ್ನು ಮಾತಾಡಿಸುವಂತೆ ಬಾಬುರಾಯನನ್ನು ಮಾತಾಡಿಸಿದರು. ಉತ್ತರ ಕೊಡಲೇಬೇಕಾಗಿ ಬಂದಾಗ ‘ಹೌದು ಸಾರ್’ ‘ಅಲ್ಲ ಸಾರ್’ ‘ಆಯ್ತು ಸಾರ್’ ಎನ್ನುತ್ತಾನೆ ಬಾಬು; ಮಿಕ್ಕವುಗಳಿಗೆಲ್ಲಾ ತಲೆಯಡಿಗಿಟ್ಟು, ಎಡ ಬಲ ನೋಡಿ ಮುಗುಳು ನಗುತ್ತಾನೆ ಮಾತ್ರ. ದೊರೆಸಾನಿಯ ಯಾವ ತಮಾಷೆಗೂ ಅವನ ಉತ್ತರವಿಲ್ಲ – ವಿಧೇಯತೆಯ ಪ್ರದರ್ಶನ ಮಾತ್ರ.ಬಾಬುವಿಗೂ ದೊರೆಸಾನಿಗೂ ಹೇಳುವದನ್ನೆಲ್ಲಾ ಹೇಳಿ ಮರುದಿನ ಮುಂಜಾನೆ ಬೆನೆಟ್ ದೊರೆಗಳು ಮಾವರೆಗೆ ಹೊರಟುಹೋದರು. + +“ಇಲ್ಲಿ ಹೆಣ್ಣು ಹುಲಿಯೇನೂ ಇಲ್ಲವೆಂದೂ, ಹೆದರುವದು ಬೇಡವೆಂದೂ ಅವನಿಗೆ ಹೇಳು. ಅವನಿಗೆ ಊಟಕ್ಕೆ ಬರಲಿಕ್ಕೆ ಹೇಳು”- ಮರುದಿನ ಸಂಜೆ ಧೊರ್ಸಾನಿ ಅಡಿಗೆಯವಳೊಡನೆ ರಾಗ ಎಳೆಯುವದು ತನ್ನ ಬಿಡಾರದಲ್ಲಿದ್ದ ಬಾಬುವಿಗೆ ಕೇಳಿಸಿತು. ಆ ಮಾತಿನ ಅರ್ಥವಾದುದರಿಂದ ಅಡಿಗೆಯವಳು ಒಡತಿಯ ಮೊಗ ನೋಡಿ ನಕ್ಕಳು. + +ಬಾಬು ದೊರೆಯ ಬಂಗಲೆಗೆ ಬಂದ. ಅಡಿಗೆಯವಳು ತೋರಿಸಿದ ಟೇಬಲಿನ ಮುಂದೆ ಕುಳಿತ; ಮೇಜಿನ ಮೇಲೆ ತಟ್ಟೆಗಳೂ ಬಂದು ಕುಳಿತವು; ಧೊರ್ಸಾನಿಯೂ ಬಂದು ಹತ್ತಿರದಲ್ಲಿ ನಿಂತಳು. ಕೊನೆಯ ಸಂಗತಿಯು ಬಾಬರಾಯನ ನಾಚುಗೆಯನ್ನು ಹೆಚ್ಚಿಸಿತು. ಬಾಬುರಾಯ ಕಷ್ಟದಿಂದ ತಿನ್ನುತ್ತಿದ್ದ. ತಿಂದಷ್ಟೂ ಕೆಲೆನಳ “ತಿನ್ನೂ” ಕೋರೆ ರಾಗ! “ಕ್ರಾಪ್ ಬಾಚಿಲ್ಲವೇಕೆ?” ಮಧ್ಯ ಮಧ್ಯದಲ್ಲಿ ಇಂತಹ ಅಡ್ಡ ಸವಾಲು. ಬಾಬು ಆಗಾಗ ಧೊರ್ಸಾನಿಯ ಮುಖ ನೋಡಲೇಬೇಕಾಗುತ್ತಿತ್ತು. ಆ ಬೆಕ್ಕು ಕಣ್ಣುಗಳಲ್ಲಿ ಒಂದು ಪ್ರಕಾಶವೇನೋ ಇತ್ತು. ಅದರರ್ಥವೇನೆಂದು ಈ ಕರಿಯವನಿಗೇನು ಗೊತ್ತಾದೀತು? ಮುಖದಲ್ಲೊಂದು ಭಾವವಿತ್ತು; ಬಾಬುನಂತಹ ಕರಿ ಯುವಕರು ಹುಡುಗಿಯರನ್ನು ಕಂಡಾಗ ತೋರುವ ಭಾವವನ್ನೇ ತೋರಿಸುತ್ತಿದ್ದಳು ಅವನಿದಿರು ಬಿಳಿ ಹುಡುಗಿ. “ಟಾಯಿಮೆಷ್ಟಾಯಿತು?” ಎನ್ನುತ್ತಾ ಬಾಬುವಿನ ಎಡಕೈಯನ್ನೆತ್ತಿ ನೋಡಿದಳು ಕೆಲೆನ್. ಬಾಬುನ ಕೈ ಅವಳೆತ್ತಿದವರೆಗೂ ಏರಿತು – ಅವಳು ಕೆಳಗಿಟ್ಟಲ್ಲಿ ಕೊರಡಿನಂತೆ ಬಿತ್ತು ! ಊಟವಾದ ಮೇಲೆ ತನ್ನ ಬಿಡಾರಕ್ಕೆ ಹೋಗಿ ಬಾಬು ತಪಸ್ವಿಯಂತೆ ಕುಳಿತುಕೊಂಡ. + +***** + +ಕೊಠಡಿಯ ಬಾಗಿಲು ದೂಡಿದಂತಾಯಿತು. ಕೆಲೆನ ಒಳಗೆ ಬಂದಳು. ಬಾಬುವಿಗೆ ಇದೊಂದು ಆಕಸ್ಮಿಕ ಘಟನೆ. ಧೊರ್ಸಾನಿ ಹಿಂದೆಯೂ ಇವನ ಬಿಡಾರಕ್ಕೆ ಬಂದುದುಂಟು. ಎಲ್ಲವನ್ನೂ ನೋಡಿಕೊಂಡು ಹೋದುದುಂಟು. ಆದರೆ ರಾತ್ರಿ ಹೊತ್ತು ಬಾಗಿಲು ದೂಡಿಕೊಂಡು ಒಳಬಂದಳಲ್ಲಾ – ಅದು ವಿಶೇಷ. ಅವನು ಅವಳನ್ನು ಬರಮಾಡಿಕೊಳ್ಳುವದಕ್ಕೂ ಮರೆತು ಬೆಪ್ಪನಂತೆ ಇದ್ದ. ಹೀಗೆ ಅವ ದಂಗುಬಡೆದು ಹೋದುದರಲ್ಲಿ ಧೊರ್ಸಾನಿ ಯಾವ ವಿಶೇಷವನ್ನೂ ಕಾಣಲಿಲ್ಲ. ತಿಂಡಿಯ ಚಮಚಾ ಹಿಡಿಯುವಾಗ ಅಳುಕಿದ ಹುಡುಗನ ಅಂಜಿಕೆಗೂ ಒಂದು ಬೆಲೆಯಿದ್ದೀತೆ? ಅವಳು ನಗುತ್ತಾ “ಮಲಗಲಿಲ್ಲಾ ನೀನು?” ಎಂದವಳೇ ಬಾಬುನ ಹತ್ತಿರ ಬಂದು ಕುಳಿತಳು. ಬಾಬುರಾಯನಲ್ಲೀಗ ನಿತ್ಯದ ಸಂಕೋಚ ಮತ್ತು ಒಂದು ಹೊಸ ಅನುಮಾನ ಹುಟ್ಟಿತು. “ಯಾಕೆ ಮಾತಾಡುವದಿಲ್ಲ?” ಎಂದು ಇನ್ನಷ್ಟು ಒತ್ತಿ ಕುಳಿತು ಮಗುವಿನೊಡನಾಡುವವಳಂತೆ ಅವನ ಗಲ್ಲವನ್ನು ತಿರುಗಿಸಿ ಹಿಡಿದು ಕೇಳಿದಳು. + +ತರುಣ ಬಾಬುವಿನಲ್ಲಿದ್ದ ಸಂಕೋಚತ್ವವು ಘನತೆಯದು. ಅವನ ಅಳುಕೆಂಬುದು ಹೆಚ್ಚಾಗಿ ಪಾಪದ ಹಾದಿಯ ತೀರಾ ಮುಂಭಾಗದಲ್ಲಿ ಎದ್ದು ನಿಲ್ಲುತ್ತಿತ್ತು. ಅದು ಅಷ್ಟು ಮುಂಭಾಗದಲ್ಲಿ ತೋರುವುದು ತಪ್ಪಾಗಿರಬಹುದು; ಅದನ್ನು ಹಿಂಭಾಗಕ್ಕೆ ದೂಡುವುದು ಅಗತ್ಯವೆನಿಸಿರಬಹುದು. ಆದರೆ ಅದು ತಡೆಗಟ್ಟಿ ನಿಲ್ಲುವ ಹಾದಿ ಪಾಪದ್ದೆಂಬುದೂ ಅದನ್ನು ಪೂರ್ಣ ಕಿತ್ತೊಗೆದು ಮುಂದುವರಿಸುವದೆಂದರೆ ನರಕದ ಕಡೆಗೆಂಬುದೂ ಸತ್ಯ. ಬಾಬುರಾವ್ ಗಂಭೀರವಾಗಿ ಹೇಳಿದ –“ನೀವೀಗ ಬಂಗಲೆಗೆ ಹೋಗಿ. ದೊರೆಗಳಿಲ್ಲದ ವೇಳೆ ಇಷ್ಟು ಸಲಿಗೆಯಿಂದ ವರ್ತಿಸುವುದು ಉಚಿತವಲ್ಲ.”“ಹೋ! ಅದರಲ್ಲೇನೂ ಇಲ್ಲ. ಅವರಿನ್ನು ಹದಿನೈದು ದಿವಸ ಬರುವುದಿಲ್ಲ. ಏಕೆ ಹೆದರಬೇಕು? ಹುಚ್ಚು ಹುಡುಗಾ!” ಧೊರ್ಸಾನಿ ಅವನ ಕ್ರಾಪನ್ನು ಸವರುತ್ತಾ ಮುಖನೋಡಿ ಮುತ್ತಿಟ್ಟಳು.ಬಾಬುರಾವ್ ಮೌನ. + +ಎದೆಯರ್ಧದ ಕೆಳಗೆ, ಅರ್ಧ ತೊಡೆಯ ಮೇಲೆ ಮಾತ್ರವಿದ್ದ ಪೋಷಾಕಿನಲ್ಲಿದ್ದಳು ಧೊರೆಸಾನಿ.“ನೀನೊಂದು ಸಣ್ಣ ಮಗು! ನಿನಗೇನೂ ಗೊತ್ತಿಲ್ಲ. ನಾನು ಕಲಿಸುತ್ತೇನೆ! ನಾನು ಕಲಿಸಿದ್ದನ್ನು ಕಲಿಯದೆ ಚಂಡಿ ಹಿಡಿಯಬೇಡ!” ಎನ್ನುತ್ತಾ ಕೆಲೆನ್ ಕಿಲಕಿಲನೇ ನಕ್ಕಳು. ಅವಳ ಬಿಳಿಯ ಬಾಹುಗಳು ಬಾಬುರಾಯನ ಕಂಠವನ್ನು ಬಿಗಿದವು. ತಾನು ಪಾಪವನ್ನು ಮಾಡುತ್ತಿದ್ದೇನೆ, ತನ್ನನ್ನು ಮಗನಂತೆ ನೋಡುತ್ತಿರುವ ಧೊರೆಗೆ ದ್ರೋಹವನ್ನು ಬಗೆಯುತ್ತಿದ್ದೇನೆ – ಎಂಬ ನೋವು ಬಾಬುರಾಯನ ಹೃದಯದಲ್ಲಿತ್ತು. ಆದರೆ ಇದ್ದ ನರಕಕ್ಕೆಳೆಯುವದಷ್ಟೇ ಅಲ್ಲ – ನರಕದ ನರಕವನ್ನೇ ಬೇಕಾದರೆ ನಿರ್ಮಿಸಲಿ ಈ ಪಾಪ – ಆ ಪಾಪದಲ್ಲಿಷ್ಟು ಸುಖವಿರುವುದಾದರೆ ಅದಕ್ಕಾಗಿ ನರಕಗಳನ್ನೆಲ್ಲಾ ಅನುಭವಿಸಬಹುದು – ಅನ್ನಿಸಿತು ಆ ಸಮಯದಲ್ಲಿ ರಾಯರಿಗೆ ! ನಾಚುಗೆಯು ಪಾಪಭೀರುತ್ವವು ಅನ್ಯರ ಮೇಲೆ ನುಗ್ಗದಂತೆ ತಡೆಯಬಹುದು- ಅನ್ಯರು ನುಗ್ಗಿ ಬಂದಾಗಲೂ ತಡೆಯುವಷ್ಟು ಶಕ್ತಿ ಅದಕ್ಕೆಲ್ಲಿಂದ? ಬಾಬು ಜಡಭರತನಲ್ಲ; ಆ ವರೆಗೂ ನಳಿತೋಳ ಸ್ಪರ್ಶವಾಗದೆ ಜಡವೇರಿದ್ದ ತರುಣ! + +***** + +“ಗುಡ್ ನೈಟ್ ಬಾಬು! ಎನೇನೋ ಯೋಚಿಸುತ್ತಾ ಬೇಸರ ಪಟ್ಟುಕೊಳ್ಳಬೇಡ. ಬೆಳಗ್ಗಿನ ಟೀಗೆ ಬಂಗಲೆಗೆ ಬಾ!” ಬಾಗಿಲು ತೆರೆದು ಹೊರಗೆ ಬರುವಾಗ ಧೊರ್ಸಾನಿ ಹೇಳಿದಳು.ಅದಕ್ಕೂ ಬಾಬುರಾವ್ ಮೌನ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +***** + +ಉಳಿದ ಹದಿನಾಲ್ಕು ದಿನಗಳೂ ಕಳೆದವು. ಎಷ್ಟು ಬೇಗನೆ! ಕೆಲೆನಳಿಗೂ ಬಾಬುವಿಗೂ, ದಿನಕ್ಕೆ ಹನ್ನೆರಡೇ ಘಂಟೆಯೆಂದು ತೋರಿರಬೇಕು. ಇಲ್ಲಿ ಕಡಿಮೆಯಾದ ಘಂಟೆಗಳು ಅಲ್ಲಿ ಮಾವರೆಯಲ್ಲಿದ್ದ ಬೆನೆಟ್ ಧೊರೆಗಳ ದಿನಗಳನ್ನು ಕೂಡಿರಬೇಕು. ಧೊರ್ಸಾನಿಯನ್ನು ಹುಲಿ ತಿನ್ನದಂತೆ ನೋಡಲು ಬಾಬುರಾಯನನ್ನು ನೇಮಿಸಿ ಬಂದಿದ್ದನಾದರೂ, ಹುಲಿಗೆ ಧೊರ್ಸಾನಿ ಬೇಕಿದ್ದುದಕ್ಕೂ ಹೆಚ್ಚಾಗಿ ಧೊರೆಗೆ ಧೊರ್ಸಾನಿ ಬೇಕಲ್ಲ! ಅವಳನ್ನೆಷ್ಟು ದಿನ ಅವ ಬಿಟ್ಟಿರಬಲ್ಲನು? ಆದ್ದರಿಂದ ಅಲ್ಲಿಯ ಕೆಲಸವನ್ನು ಅವಸರವಸರದಿಂದ ಮುಗಿಸಿಕೊಂಡು ದೊರೆ ಕಾರ್ನಳ್ಳಿಗೆ ಬಂದ. + +ಇಲ್ಲಿ ಎಲ್ಲರೂ ಕ್ಷೇಮ. ಮತ್ತೂ ಸಂತೋಷದ ವಿಷಯವೆಂದರೆ ಬಾಬುರಾಯನ ಸಂಕೋಚವೀಗ ಮಾಯವಾಗಿದೆ, ಕೆಲೆನಳಿಗೂ ತನಗೂ ಯೋಗ್ಯ ಸಂಗಾತಿಗಳಿಲ್ಲವಲ್ಲಾ – ಎಂಬ ಬೇಸರ ಕೂಡಾ ಮುಂದಕ್ಕಿಲ್ಲ. + +***** + +ಆ ಮೇಲಿನ ದಿನಗಳು ಯಾರಿಗೂ ಬೇಸರವನ್ನೀಯದೆ ಗತಿಸಹತ್ತಿದವು. ಬೆನೆಟ್ ಧೊರೆ ರಾತ್ರಿ ಏಳು ಘಂಟೆಯ ನಂತರ ಬ್ರಾಂಡಿಯ ಮಜಾದಲ್ಲಿರುತ್ತಿದ್ದ; ಮತಿಮರೆಯುತ್ತಿದ್ದ. ಬಾಬುರಾಯನ ರಾತ್ರಿ ಫಲಾಹಾರವೀಗ ಧೊರೆಯ ಬಂಗಲೆಯಲ್ಲಿಯೇ. ಮೆದುಳು ನೆನೆದು ತೂಕಡಿಸುವಾಗ ‘ಹೇ ಹುಡಿ…ಗಾ, ಏ-ನೋ-ಮಾ-ಮಾ-ಮಾ-ತಾಡೋ’ ಎನ್ನುವನು ದೊರೆ. ‘ಅವನ ನಾಚುಗೆಯಿನ್ನೂ ಹೋಗಿಲ್ಲ’ ಎಂದು ಅದಕ್ಕೆ ಸ್ವರ ಕೂಡಿಸಿ ಪ್ರೀತಿಯ ಬಾಬುವನ್ನು ನೋಡಿ ಕಣ್ಣಣಕಿಸುವಳು ಕೆಲೆನ್. ತಾನು ಅಮಲಿನಲ್ಲಿ ತೂಕಡಿಸಬೇಕು. ಆ ಸಮಯದಲ್ಲಿ ಸ್ಮೃತಿಯೆಂಬುದಿರುವವರೆಗೂ ಕೆಲೆನಳ ಮತ್ತು ಹುಡುಗನ ನಗೆಯು ಕೇಳುತ್ತಲೇ ಇರಬೇಕು. ಬೆನೆಟ್ ದೊರೆಯ ರಾತ್ರಿ ಕಾಲದ ವಿನೋದವಿದು! ಒಂದೆರಡು ಘಂಟೆ ಹೀಗೆ ಒದ್ದಾಡಿ ಸೋಫಾದಲ್ಲಿ ಬಿದ್ದುಬಿಟ್ಟನೆಂದರೆ, ದೊರೆಗೆ ಪ್ರಜ್ಞೆ – ಸ್ವಚ್ಛಮತಿ ಬರುವದು ಮರುದಿನ ಮುಂಜಾನೆಯೇ ಸರಿ. + +ಕೆಲೆನ್ – ಬಾಬುಗಳೊಳಗಿನ ಮಾತು – ನಗೆ – ಕೆಲಸಗಳ ರೀತಿ ದೊರೆಗೆ ಸ್ಮೃತಿಯಿರುವಾಗ ಒಂದು ವಿಧ; ಸ್ಮೃತಿ ತಪ್ಪಿದಾಗ ಮತ್ತೊಂದು ರೀತಿ. ದೊರೆಯೆಚ್ಚರಿರುವಾಗಿನ ಇವರ ವಿನೋದವೆಲ್ಲಾ ಒಡೆಯನ ಆನಂದಕ್ಕಾಗಿ. ಆ ಮೇಲಿನದು ಸ್ವಂತ ತೃಪ್ತಿಗಾಗಿ! ಆದರೆ ಬಾಬುರಾಯನಲ್ಲಿ ಸಂಕೋಚ, ಪಾಪದ ಭಯ, ಯಜಮಾನನ ಹೆದರಿಕೆ – ಇವೆಲ್ಲವುಗಳಿಂದಾಗಿ ಅತಿರೇಕ ಜಾಗ್ರತೆ ಈಗಲೂ ಇತ್ತು. ಅದು ಅಗತ್ಯವಿಲ್ಲವೆಂದು ಕೆಲೆನಳ ಸಾಧನೆ. + +ಒಂದು ರಾತ್ರಿ ದೊರೆ ಮಿತಿಮೀರಿದ ಅಮಲಿನಿಂದ ತೂಕಡಿಸುತ್ತಿದ್ದ. ಬಾಬುರಾವ್ ಆ ರಾತ್ರಿ ತೋಟದಲ್ಲಿರುವ ಅಗತ್ಯ ಬಿದ್ದಿತ್ತು. ದೊರೆ ಅಮಲಿನಲ್ಲಿ ಕೆಲೆನಳನ್ನೊಮ್ಮೆ ಬಾಬುವನ್ನೊಮ್ಮೆ ಕರೆಯುತ್ತಿದ್ದ. ಧೊರೆಸಾನಿ ಬಂದು ರೋಗಿಯನ್ನು ಉಪಚರಿಸುವಂತೆ ಗಂಡನ ಆರೈಕೆಗೆ ತೊಡಗಿದಳು. ಅಪ್ಪಿಕೊಂಡು ಹೋಗಿ ಸೋಫದಲ್ಲಿ ಕೂತುಕೊಳ್ಳಿಸಿ ಕರವಸ್ತ್ರದಿಂದ ಗಂಡನ ಮುಖವನ್ನೊರಸುತ್ತಿದ್ದಳು ಕೆಲೆನ್. ಎಲ್ಲಾ ರಾತ್ರಿಗಳನ್ನೂ ಅಮಲಿನಲ್ಲೆ ಕಳೆದಿದ್ದ ಬೆನೆಟ್ ಧೊರೆಗೆ ಅವಳ ಸ್ಪರ್ಶಸುಖವು ಆ ಅರೆಮರವೆಯಲ್ಲಿ ಕೂಡಾ ಸ್ವರ್ಗತುಲ್ಯವಾಗಿ ತೋರಿತು. ‘ಕೆ-ಕೆ-ಕೆ-ಲೇನ್! ನ-ನ್ನ-ಪ್ರಿಯ-ಕೆಲೇನ್!’ ಎಂದವಳ ಕಂಠಬಾಚಿಕೊಂಡ. ಅವಳು ಅವನ ಮುಖಕ್ಕೊಂದು ಮುತ್ತು ಕೊಟ್ಟು ತುಸು ದೂರ ಸರಿದು ನಿಂತಳು. ‘ಬಾ-ಬಾ’ ಎಂದು ಬೆನೆಟ್ ಇದಿರಿಗೆ ಮುಗ್ಗರಿಸಿದ. ಹಿಡಿಯಲು ಬಂದ ಕೆಲೆನಳ ತಲೆ ಗಡಕ್ಕನೆ ಧೊರೆಯ ತಲೆಗೆ ತಾಗಿತು. “ಹಾಯ್ ! ನನ್ನ-ಪಿರೀ-ಪ್ರೀ-ತಿಯ ಕೇಲೆನಾ, ಹಾಯ್!” ಬೆನೆಟ್ ನೋವಿನಿಂದ ಮುಂದಲೆ ಸವರಿಕೊಂಡ. + +ಕೆಲೆನ ಗಂಡನ ತಲೆಯನ್ನು ತಿಕ್ಕಿದಳು. ಮುಂದಲೆಗೊಂದು ಮುತ್ತು ಕೊಟ್ಟು ಅವನ ಮುಖವೆತ್ತಿ ಹಿಡಿದು ಪ್ರೇಮದಿಂದ ಹೇಳಿದಳು. “ಎಲ್ಲಿಯಾದರೂ ತಲೆಯೊಡೆದು ಸತ್ತು ಹೋಗುತ್ತಿದ್ದರೆ ನನಗೆಂತಹ ಗತಿಯೊದಗುತ್ತಿತ್ತು! ನಾನೇ ಕೊಂದು ಹಾಕಿದೆನೆಂದಾಗುತ್ತಿತ್ತಲ್ಲಾ!”“…ಇಲ್ಲಾ – ನಾನು…. ಬರೆದು ಹಾಕುತ್ತೇನೆ. ನಾನೇ -ತಲೆ ಬಡೆದುಕೊಂಡು – ಪ್ರಾಣ ತೆಗೆದುಕೊಂಡೆನೆಂದು – ತಾ – ಕಾಗದ – ತಾ – ತಾ. ಈಗಲೇ – ಬರೆಯುತ್ತೇನೆ!” ಬೆನೆಟ್ ತೊದಲಿದ. ಕೆಲೆನ್ ಕಾಗದ ಪೆನ್ ತಂದು ಕೊಟ್ಟಳು. ದೊರೆ ತೂಕಡಿಸುತ್ತಾ ಗೀಚಿದ. ಬರೆಯುವದಕ್ಕೆ ಬೇಕಾಗುವ ಸಹಕಾರ ಸಲಹೆಗಳು ಕೆಲೆನಳಿಂದ ದೊರೆತವು. ಬೆನೆಟ್ ದೊರೆಯ ದಸ್ಕತು ಬಿತ್ತು. + +ಮರುದಿನ ರಾತ್ರಿ ಅಮಲು ಮತ್ತು ನಿದ್ದೆಯೊಟ್ಟಾಗಿ ದೊರೆ ಸೋಫಾದಲ್ಲಿ ಬಿದ್ದಿದ್ದ. ಎಲ್ಲಾ ಕೆಲಸವನ್ನೂ ಅವಸರವಸರದಿಂದ ತೀರಿಸಿ ಬಾಬು ರಾವ್ ದೊರೆಯ ಬಂಗಲೆಗೆ ಹೊರಟ. ಬೆಟರಿಯ ಬೆಳಕನ್ನೇ ಕಾಯುತ್ತಿದ್ದ ಕೆಲೆನ್ ಓಡಿಬಂದು ತೋಟದಲ್ಲೇ ಅವನನ್ನಿದಿರುಗೊಂಡಳು. ಅವಳಲ್ಲಿ ಆ ದಿನವಿದ್ದ ಉತ್ಸಾಹವನ್ನು ಅರಿತುಕೊಂಡ ಬಾಬು. + +“ನನ್ನ ಪ್ರಿಯ ಬಾಬು! ನಿನ್ನ ಸಂಕಟವನ್ನು ದೂರಮಾಡುವ ಉಪಾಯ ಕಂಡುಹಿಡಿದ್ದೇನೆ” ಹುಡುಗನನ್ನಾಲಿಂಗಿಸಿ ಹೇಳಿದಳು ಕೆಲೆನ. ಬಾಬು ಅವಳನ್ನೇ ನೋಡುತ್ತಾ ನಿಂತ.“ನೋಡು!” ಒಂದು ಕಾಗದವನ್ನು ಬಾಬುರಾಯನ ಕೈಗೆ ಕೊಟ್ಟು ಹೇಳಿದಳು ಕೆಲೆನ –“ಆ ಪ್ರಾಣಿ ಅಲ್ಲಿ ಅಮಲೇರಿ ಬಿದ್ದುಕೊಂಡಿದೆ. ನೀನು ಧೈರ್ಯ ತೆಗೆದುಕೋ. ಆ ಕಾಗದದಲ್ಲಿ ಈ ದಿನದ ತಾರೀಕು ಹಾಕಿದೆ. ಇದೇ ತಕ್ಕ ಸಮಯ! ನಮ್ಮ ಹಾದಿಯಲ್ಲಿರುವ ಕಂಟಕವೊಂದನ್ನು ಈಗಲೇ ನಿವಾರಿಸಿಕೊಳ್ಳೋಣ- ಏನೂ ಭಯವಿಲ್ಲ. ನೋಡು – ಆ ಕಾಗದ ಓದಿಕೊ! ತ್ವರೆಮಾಡು.” + +ಬಾಬು ಅವಸರವಸರದಿಂದ ಕಾಗದ ಓದಿಕೊಂಡ. ಅಕ್ಷರಗಳು, ಬರಹದ ಸಾಲುಗಳು ಅಸ್ತವ್ಯಸ್ತವಾಗಿದ್ದವು – ಅಮಲೇರಿದವನು ಅಥವಾ ಸಾಯಲು ಹೊರಟವನು ಬರೆದ ಹಾಗೆ!“ನಾನು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಮಾಡಿಕೊಂಡಿದ್ದೇನೆ. ನನ್ನ ಪ್ರೀತಿಯ ಕೆಲೆನಳಿಗಾಗಿ ಮಾತ್ರ ಮರುಗುತ್ತೇನೆ. ನನ್ನ ಎಲ್ಲಾ ಐಶ್ವರ್ಯವು ಕೆಲೆನಳಿಗೆ ಸೇರತಕ್ಕದ್ದು. ನನ್ನ ಮರಣಕ್ಕೆ ನಾನೇ ಜವಾಬ್ದಾರನಿದ್ದೇನೆ.ಇ. ವಿ. ಬೆನೆಟ್20-11-38’’ + +ಓದುತ್ತಿದ್ದಾಗ ಬಾಬುವಿನ ದೇಹವೆಲ್ಲಾ ಕಂಪಿಸಿತು; ಮೈ ಬೆವರಿತು. + + + +‘ರಕ್ಕಸೀ!’ ನಡುಗುವ ಧ್ವನಿಯಲ್ಲಿ ಉದ್ಗರಿಸಿದ ಬಾಬು. ಕಾಗದವನ್ನು ಹರಿದು ಚೂರು ಚೂರು ಮಾಡಿ ಕೆಲೆನಳ ಮುಖಕ್ಕೆಸೆದ. ಆ ಮೇಲೆ ಅಲ್ಲಿ ನಿಲ್ಲಲಿಲ್ಲ. ಮಿಸ್ಟರ್ ಮತ್ತು ಮಿಸಿಸ್ ಬೆನೆಟರು ತೋಟದಲ್ಲಿ ಸೋಫವನ್ನಿಡಿಸಿ ಕುಳಿತಿದ್ದರು. ಮಾತಿನ ಮಧ್ಯೆ ಬೆನೆಟ್ ಹೇಳಿದ – “ಆ ಹುಡುಗ ಹೋಗಿ ಒಂದು ವಾರವಾಯಿತು. ಹೇಳದೆ ಕೇಳದೆ ಹೋಗಿ ಬಿಟ್ಟ. ಏನು ಬೇಸರ ಬಂತೊ! ಅವನ ಸ್ವಭಾವವೇ ಹಾಗೆ – ಎಲ್ಲದರಲ್ಲಿಯೂ ಸಂಕೋಚ, ದಾಕ್ಷಿಣ್ಯ. ಹುಚ್ಚು ಹುಡುಗ!”ಲೇಡಿ ಬೆನೆಟಳ ಉತ್ತರವಿಲ್ಲ! + + + +ಟಿಪ್ಪಣಿ + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_436.txt b/Kenda Sampige/article_436.txt new file mode 100644 index 0000000000000000000000000000000000000000..1d767fbcebad2d5aeaaf8627e1abd7d43a138527 --- /dev/null +++ b/Kenda Sampige/article_436.txt @@ -0,0 +1,47 @@ + + +ರಂಜನೀ,ಈ ರೀತಿ ಕೊರೆಯುವ ಮನುಷ್ಯರು ನಿನಗೆ ಇಷ್ಟವಾಗುವುದಿಲ್ಲ, ಗೊತ್ತು. ಆದರೂ ಒಂದು ಸಣ್ಣ ಫಿಲಾಸಫಿಯನ್ನು ಹಂಚಿಕೊಳ್ಳುತ್ತೇನೆ ಕೇಳು. ನಮ್ಮೆಲ್ಲ ಯೋಚನೆಗಳಿಗೂ ಎರಡು ಮುಖಗಳಿರುತ್ತವೆ. ಒಂದು ಅತಿ ಬುದ್ಧಿವಂತಿಕೆಯದು ಮತ್ತೊಂದು ಅತಿ ದಡ್ಡತನದ್ದು. ಯಾವ ಮುಖವನ್ನು ನೋಡುತ್ತಿದ್ದೀಯಾ ಎನ್ನುವುದರ ಮೇಲೆ ಅದು ಬುದ್ಧಿವಂತಿಕೆಯದೋ ದಡ್ಡತನದ್ದೋ ತೀರ್ಪಿಗೆ ಬಂದುಬಿಡುತ್ತೇವೆ. ಇಂದಿನ ಅತಿಬುದ್ಧಿವಂತಿಕೆಯ ನಿರ್ಧಾರ ಮಳೆಗಾಲವೊಂದು ಕಳೆಯುವುದರೊಳಗೆ ಅತಿದಡ್ಡತನದ್ದು ಎಂದು ಅನ್ನಿಸಿಕೊಳ್ಳಬಹುದು. ಹೀಗೆ ಮಾಡಿದರೂ ಸಾಯುತ್ತೇನೆ ಹಾಗೆ ಮಾಡಿದರೂ ಸಾಯುತ್ತೇನೆ ಎನ್ನುವಾಗ ಏನು ಮಾಡಿದರೂ ನಡೆಯುತ್ತದೆ, ಕಣ್ಣುಕಟ್ಟಿ ರಸ್ತೆಗಳು ಕೂಡುವಲ್ಲಿ ಬಿಟ್ಟು, `ಹೋಗು’ ಎಂದಂತೆ. ಸರಿಯಾದ ರಸ್ತೆಯಲ್ಲಿ ಹೋದರೆ ನೀನು ಹೀರೋ, ತಪ್ಪಾದ ರಸ್ತೆಯನ್ನು ತುಳಿದರೆ ನೀನು ಜೀರೋ. ಅಂದು ಬಂದೂಕುಗಳಿಗೆ ಎದೆಕೊಟ್ಟು ನಿಂತವರಲ್ಲಿ ಉಳಿದದ್ದು ನಾನೊಬ್ಬನೇ ಆದರೆ ನಾನು ಹೀರೋ, ಮಹಾಕ್ಷತ್ರಿಯ. ಅವರೆಲ್ಲ ಉಳಿದು ನಾನೊಬ್ಬ ಮೂರ್ಖತನದಿಂದ ತೊಡೆ ಮುರಿದುಕೊಂಡು ಹಾಸಿಗೆಯಲ್ಲಿ ಮಲಗಿದ್ದರೆ ನಾನೊಬ್ಬ ದೊಡ್ಡ ಕಮಂಗಿ. ಕಾಮನ್ ಸೆನ್ಸ್ಇಲ್ಲದವನು. ಆದರೆ ತಮಾಷೆ ನೋಡು, ಈ ಕಪ್ಪುಬಿಳಿ ಮುಖಗಳು ಫ್ಯಾನ್ ತಿರುಗಿದಂತೆ ಹೇಗೆ ಬದಲಾಗುತ್ತಿರುತ್ತವೆ ಎಂದರೆ ಸಾಯುವತನಕ ನಿನಗಷ್ಟಕ್ಕೆ ಕೂಡ ನೀನು ಹೀರೋನೋ ಜೀರೋನೋ ತಿಳಿಯುವುದಿಲ್ಲ, ಬೇರೆಯವರ ಮನೆ ಹಾಳಾಗಲಿ. + +ಮನೋಜ ಮತ್ತು ಅವನ ಪಕ್ಕದವನು ಏನೋ ಪಿಸುಗುಟ್ಟಿ ಮಾತನಾಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಆದರೆ ಏನು ಎಂದು ತಿಳಿಯಲಿಲ್ಲ. ಕೊನೆಗೆ ಮನೋಜ ನನ್ನೊಂದಿಗೆ ಪಿಸುಗುಟ್ಟಿದ. + +‘ಹೊರಗಿನ ಪ್ರಪಂಚವನ್ನು ಸಂಪರ್ಕಿಸಲು ಇನ್ನೂ ಒಂದು ವಿಧಾನವಿದೆಯಂತೆ.’‘ಹೇಗೆ?’‘ಸರ್ವರ್ ಕಂಸೋಲಿನಿಂದ.’`ಎಲ್ಲಿದೆ ಸರ್ವರ್ ಕಂಸೋಲು?’`ಸರ್ವರ್ ರೂಮಿನಲ್ಲಿ.’ + +ಗಸ್ತು ತಿರುಗುತ್ತಿದ್ದವರಲ್ಲಿ ಒಬ್ಬ ಮಧ್ಯಕ್ಕೆ ಓಡಿಹೋಗಿ ತನ್ನ ನಾಯಕನೊಂದಿಗೆ ಏನನ್ನೋ ಪಿಸುಗುಟ್ಟುತ್ತಿದ್ದ. ಇನ್ನೊಬ್ಬ ನಿಂತವರನ್ನು ದುರುಗುಟ್ಟಿಕೊಂಡು ತಿರುಗುತ್ತಲೆಯಿದ್ದ. ಒಬ್ಬ ಹಾಲಿನ ಎದುರುಗೋಡೆಗೆ ಆತುನಿಂತು ಇಡೀ ಆಫೀಸನ್ನು ಗಮನಿಸುತ್ತಿದ್ದ. ಒಬ್ಬ ಮತ್ತೊಂದು ದಿಕ್ಕಿನಲ್ಲಿ ಕುರ್ಚಿ-ಟೇಬಲ್ಲುಗಳಿಂದ ಮುಚ್ಚಿದ ಬಾಗಿಲಿಗೆ ಬೆನ್ನು ಹಾಕಿ ನಿಂತಿದ್ದ. ನನ್ನ ಲೆಕ್ಕಕ್ಕೆ ಸಿಕ್ಕ ಕಡೆಯವನು ನಾಯಕನ ಹಿಂಭಾಗದಲ್ಲಿ ಏಳೆಂಟು ಅಡಿ ದೂರದಲ್ಲಿ ಕಾನ್ಫರೆನ್ಸ್ ರೂಮಿಗೂ ರಾಜ್ ಮೈದಾನಿಯ ಕ್ಯಾಬಿನ್ ಗೂ ನಡುವೆ ನಿಂತಿದ್ದ. + +`ಸರ್ವರ್ ರೂಮು ಎಲ್ಲಿದೆ?’ ಎಂದು ಪಿಸುಗುಟ್ಟಿದೆ. `ನೀನು ಒರಗಿರುವ ಗೋಡೆಯ ಹಿಂಭಾಗದ್ದೇ’ ಎಂದ. `ನಿನ್ನ ಬಲಭಾಗದಲ್ಲಿ ಬಾಗಿಲು ಕಾಣುತ್ತದಲ್ಲ ಅದೇ ಎಂಟ್ರೆನ್ಸ್.’ + +ನನ್ನ ಬಲಭಾಗಕ್ಕೆ ತಿರುಗಿ ನೋಡಿದೆ. ಕುತ್ತಿಗೆ ತಿರುಗಿಸಲೂ ಭಯವಾಗುತ್ತಿತ್ತು. ಈಗಾಗಲೇ ಇಬ್ಬರನ್ನು ಹೊಡೆದುರುಳಿಸಿ ಏನೂ ಆಗದವರಂತೆ ಅವರ ದೇಹಗಳನ್ನು ತುಳಿದು ಓಡಾಡುವ ಈ ರಾಕ್ಷಸರು ಬರೀ ಕುತ್ತಿಗೆ ತಿರುಗಿಸಿದ್ದಕ್ಕೆ ಶೂಟ್ ಮಾಡಲು ಹೇಸದವರು. ನನ್ನ ಕಿವಿಗೆ ಬಿದ್ದಏಟು ಭಗಭಗನೆ ಉರಿಯುತ್ತಿತ್ತು. ಸವರಿಕೊಳ್ಳಲೂ ಹೆದರಿಕೆ. + +ನಿಧಾನವಾಗಿ ಕತ್ತು ಹೊರಳಿಸಿ ಒರಗಿದ ಗೋಡೆಯೆಡೆಗೆ ದೃಷ್ಟಿಹಾಯಿಸಿ ನನ್ನ ಬಲಭಾಗದೆಡೆಗೆ ನೋಡಿದೆ. ಸರ್ವರ್ ರೂಮಿನ ಬಾಗಿಲು ಕಾಣಿಸಿತು. ನನ್ನಿಂದ ಸುಮಾರು ಹತ್ತು ಮೀಟರಿರಬಹುದು. + +‘ಹೇಗಾದರೂ ಆ ರೂಮಿಗೆ ತೂರಿಕೊಂಡು ಸರ್ವರ್ ನಿಂದ ಪೊಲೀಸರನ್ನು ಸಂಪರ್ಕಿಸಬೇಕು’ ಎಂದ. ಆ ಭಯದ ವಾತಾವರಣದಲ್ಲೂ ಅವನ ಮಾತುಗಳು ನನ್ನಲ್ಲಿ ನಗು ಬರಿಸಿದವು. ಜೇಮ್ಸ್ ಬಾಂಡ್ ಸಿನಿಮಾಗಳಲ್ಲಿ ಮಾತ್ರ ಸಾಧ್ಯವಾಗುವಂತಹದ್ದು. ಹಾಲಿವುಡ್ ಆ್ಯಕ್ಷನ್ ಮೂವಿಗಳನ್ನು ವಿಪರೀತ ನೋಡಿದರೆ ನಿಜಜೀವನದಲ್ಲಿ ಬರುವ ಭ್ರಮೆಯಿದು. + +`ಏನು ಮಾತನಾಡುತ್ತಿದ್ದೀಯಾ! ಸಾಧ್ಯವಾಗುವುದಿಲ್ಲ’. ‘ಏಕೆ?’ ಎಂದ. ‘ಏನು ಹುಡುಗಾಟವಾಡುತ್ತಿದ್ದೀಯಾ! ಒಂದು ಹೆಜ್ಜೆ ಅತ್ತಇತ್ತ ಇಟ್ಟರೂ ಶೂಟ್ ಮಾಡುತ್ತಾರೆ.’ + +‘ನಾವೇನು ಮಾಡದಿದ್ದರೂ ಕೊನೆಗೆ ಆಗುವುದು ಅದಷ್ಟೇ. ನೈನ್ ಇಲೆವೆನ್ ಥರ.’ + +ಅಲ್ಲಿಗೆ ಮಾತು ನಿಲ್ಲಿಸಿದೆವು. ಮೊದಲನೆಯದಾಗಿ ನಾನು ಸೇಲ್ಸ್ ಮನುಷ್ಯ. ನನಗೆ ಸರ್ವರ್ ನಿಂದ ಹೊರ ಪ್ರಪಂಚಕ್ಕೆ ಸಂದೇಶ ಕಳುಹಿಸಬಹುದಾದ ಯಾವ ಟೆಕ್ನಿಕಲ್ ಪರಿಣತಿಯಿಲ್ಲ. ಮೇಲಾಗಿ, ಇಲ್ಲಿಂದ ಅಲ್ಲಿಗೆ ಹೋಗುವುದು ಹೇಗೆ, ಹೋದರೂ ಶಬ್ದವಾಗದಂತೆ ಸರ್ವರ್ ಗಳ ಮೇಲೆ ಕೆಲಸ ಮಾಡುವುದು ಹೇಗೆ, ಸರ್ವರುಗಳಿಂದ ವಾಯ್ಸ್ ಕಾಲ್ ಮಾಡುವುದು ಸಾಧ್ಯವೇ, ಮಾಡಿದರೂ ಯಾವ ನಂಬರಿಗೆ ಮಾಡಬೇಕು, 911 ಸಾಧ್ಯವಾ, ಪೊಲೀಸರು ವಾಪಸ್ಸು ಫೋನ್ ಮಾಡಿದರೆ ಸರ್ವರ್ಗೆ ಬರುತ್ತದಾ?… ರಮ್ಯಕಲ್ಪನೆಯಷ್ಟೆ. + +ಅದೇ ಸಮಯಕ್ಕೆ ಎರಡು ಘಟನೆಗಳು ಒಟ್ಟಿಗೆ ನಡೆದವು. ಮೊದಲನೆಯದು, ಕೆಫೆಟೇರಿಯಾದ ಸ್ಟೋರ್ ರೂಮಿನಲ್ಲಿ ಅಡಗಿದ್ದ ಒಬ್ಬ ವ್ಯಕ್ತಿಯನ್ನು ಮುಸುಕುಧಾರಿಯೊಬ್ಬ ತಲೆಗೂದಲು ಹಿಡಿದು ಎಳೆದುತಂದಿದ್ದು. ತೆಳ್ಳಗೆ ಕುಳ್ಳಗೆ ಎಲ್ಲಿಬೇಕಾದರೂ ಅಡಗಲು ಅನುಕೂಲವಾದ ದೇಹವುಳ್ಳ ಆ ವ್ಯಕ್ತಿ ಭಾರತೀಯನಂತೆ ಕಾಣುತ್ತಿದ್ದ. ‘ಐಯಾಂ ಸಾರಿ, ಐಯಾಂ ಸಾರಿ’ ಎಂದು ಬಡಬಡಿಸುತ್ತಿದ್ದ. `ವೆಂಕಟ್ರಾವ್’ ಎಂದ ಮನೋಜ್ ಆಶ್ಚರ್ಯದಲ್ಲಿ. `ಎಲ್ಲಿ ಅಡಗಿದ್ದ ಇಷ್ಟು ಹೊತ್ತು?’ + +ನಮ್ಮನ್ನು ಕಾವಲು ಕಾಯುತ್ತಿದ್ದವನೂ ಸೇರಿದಂತೆ ಇಬ್ಬರು ಮುಸುಕುಧಾರಿಗಳು ವೆಂಕಟರಾವ್ ನನ್ನು ಎಳೆದುಕೊಂಡು ಬರುವಲ್ಲಿಗೆ ಓಡಿದರು. ಅವರಲ್ಲೊಬ್ಬ ಮೊದಲು ಮಾಡಿದ ಕೆಲಸವೆಂದರೆ ವೆಂಕಟರಾವ್ ನ ಫೋನನ್ನು ಕಿತ್ತುಕೊಂಡು ಯಾರಿಗಾದರೂ ಕಾಲ್ ಮಾಡಿದ್ದಾನಾ ಎಂದು ಪರಿಶೀಲಿಸಿದ್ದು. ಮರುಕ್ಷಣಕ್ಕೆ ಫೋನು ಮತ್ತು ವೆಂಕಟರಾವ್ ಇಬ್ಬರನ್ನೂ ನೆಲಕ್ಕೆ ಕುಕ್ಕಿದರು. ಮೂವರೂ ಸೇರಿ ಅವನನ್ನು ಝಾಡಿಸಿ ಒದೆಯುತ್ತಿದ್ದರು. ವೆಂಕಟರಾವ್ ಚಿತ್ರವಿಚಿತ್ರವಾದ ಕರುಳು ಕಿತ್ತುಬರುವ ಶಬ್ದವನ್ನು ಮಾಡುತ್ತಿದ್ದ. ಕುಸಿದುಬಿದ್ದವ ನನಗೆ ಕಾಣುತ್ತಿರಲಿಲ್ಲ. ಮಧ್ಯದಲ್ಲಿದ್ದ ಟೇಬಲ್ಲು, ಕುರ್ಚಿ, ಮತ್ತು ಆ ಭಾಗವನ್ನು ಬೇರ್ಪಡಿಸುವ ಅರ್ಧಗಾಜಿನ ಗೋಡೆಯ ಭರ್ತಿ ತುಂಬಿದ್ದ ಕಂಪನಿಯ ಪೋಸ್ಟರ್ ಗಳು ಅವನನ್ನು ನಮ್ಮಿಂದ ಮರೆ ಮಾಡಿದ್ದವು. ಒಂದು ಗುಂಡಿನ ಶಬ್ದದೊಂದಿಗೆ ವೆಂಕಟರಾವ್ ನ ಗದ್ದಲ ನಿಂತು ಹೋಯಿತು. + +ಆ ಮರಣಕ್ಕೆ ನೇರ ಸಾಕ್ಷಿಯಾದ ನಾನು ತಲ್ಲಣಿಸಿ ಹೋದೆ. ನಾನಷ್ಟೇ ಅಲ್ಲ ನನ್ನೊಡನೆ ನಿಂತಿದ್ದ ಎಲ್ಲರೂ… ಹೆಂಗಸೊಬ್ಬಳ ಚೀತ್ಕಾರ ಕೇಳಿತು. ರಾಜ್ ಮೈದಾನಿ ಪ್ರಜ್ಞೆತಪ್ಪಿ ಕುಸಿದುಬಿದ್ದರು. ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕುಜನ ರಾಜ್ ಎಂದು ಜೋರಾಗಿ ಕೂಗಿ ಅವರ ಸುತ್ತುವರೆದು ನಿಂತರು. ನಮ್ಮನ್ನು ಕಾಯುತ್ತಿದ್ದವ ಅಲ್ಲಿಗೆ ಓಡಿದ. ಅರ್ಥವಾಗದ ಭಾಷೆಯಲ್ಲಿ ಚೀರುವ ಧ್ವನಿಯಲ್ಲಿ ಕೂಗುತ್ತ ರಾಜ್ ಸುತ್ತ ನಿಂತ ಜನರನ್ನು ತಳ್ಳಲಾರಂಭಿಸಿದ. + +ಅದೇ ಸಮಯಕ್ಕೆ ಮನೋಜನ ಎಡಭಾಗಕ್ಕೆ ನಿಂತ ವ್ಯಕ್ತಿ, ಒಬ್ಬ ಬಿಳಿಯ, ತನ್ನ ಜಾಗದಿಂದ ಮೆಲ್ಲನೆ ಸರಿದು ಮನೋಜನ ಹಿಂಭಾಗದಿಂದ ನನ್ನನ್ನು ದಾಟಿಕೊಂಡು ಸಾಲಿನ ಕೊನೆಯವನಾಗಿ ನಿಂತಿದ್ದ ನನ್ನ ಬಲಭಾಗಕ್ಕೆ ಬಂದು ಪಕ್ಕಕ್ಕೆ ನಿಂತು `ದೆ ಆರ್ ನಾಟ್ ವಾಚಿಂಗ್ ಅಸ್ ನೌ. ಲೆಟ್ ಅಸ್ ಗೆಟ್ ಇನ್ ಟು ದ ಸರ್ವರ್ ರೂಂ’ ಎಂದು ಕೈ ಜಗ್ಗಿ ಎಳೆದು ಕುಕ್ಕರುಗಾಲಿನಲ್ಲಿ ಸರ್ವರ್ ರೂಮಿನೆಡೆಗೆ ತೆವಳಲಾರಂಭಿಸಿದ. `ನೋ. ಐ ಡೋಂಟ್ ಕಮ್!’ ಎಂದೆ ಗಾಬರಿಯಲ್ಲಿ. `ಬಟ್ ಐ ಕಾಂಟ್ ಡೂ ದಟ್ ಅಲೋನ್’ ಎಂದು ಹತಾಶೆಯಿಂದ ನನ್ನೆಡೆಗೆ ಮತ್ತು ಮನೋಜನೆಡೆಗೆ ನೋಡಿದ. `ಹೋಗು. ಇಲ್ಲಿರುವುದಕ್ಕಿಂತ ಅದೇ ಸೇಫ್’ ಎಂದು ಮನೋಜ್ ಪಿಸುಗುಟ್ಟಿದ. ಹಾಗಿದ್ದರೆ ಅವನೇಕೆ ಹೋಗಲಿಲ್ಲ ಎನ್ನುವ ಪ್ರಶ್ನೆ ಈಗ ಹಾಸಿಗೆಯಲ್ಲಿ ಮಲಗಿದ್ದಾಗ ಬರುತ್ತಿದೆ, ಆಗ ಬರಲಿಲ್ಲ. `ಐಯಾಂ ನಾಟ್ ಎ ಟೆಕ್ನಿಕಲ್’ ಎಂದು ಪಿಸುಗುಟ್ಟಿದೆ. `ಹೂ ಕೇರ್ಸ್. ಐ ಕ್ಯಾನ್ ಟೇಕ್ ಕೇರ್ ಆಫ್ ಇಟ್’ ಎಂದ ಬಿಳಿಯ ಇನ್ನೂ ಬಂದಿಲ್ಲ ಎನ್ನುವ ಅಸಹನೆಯಿಂದ. ಕುಕ್ಕರಗಾಲಿನಲ್ಲಿ ತೆವಳುತ್ತ ಅವನನ್ನು ಹಿಂಬಾಲಿಸಿದೆ. ನನ್ನ ಮುಂದಿದ್ದವ ಎತ್ತರದವ. ಬಗ್ಗಿ ಮೊಣಕಾಲಿನಲ್ಲಿ ತೆವಳುವಾಗ ಅವನ ತೋಳಿನ ಸ್ನಾಯುಗಳು ಬಳುಕುವ ರೀತಿಗೆ ಬಲವಾನನೆಂಬ ಅಂದಾಜು ಮೂಡುತ್ತಿತ್ತು. + +ಕೆಲವೇ ಸೆಕೆಂಡಿನಲ್ಲಿ ಸರ್ವರ್ ರೂಮಿನ ಬಾಗಿಲ ಬಳಿಯಿದ್ದೆವು. ಕುಕ್ಕರುಗಾಲಿನಲ್ಲಿ ಕುಳಿತಂತೆಯೇ ಬಾಗಿಲನ್ನು ಜೋರಾಗಿ ತಳ್ಳಿದ. ನಮ್ಮ ಅದೃಷ್ಟಕ್ಕೆ ಅದು ಶಬ್ದವಾಗದಂತೆ ತೆರೆದುಕೊಂಡಿತು. ಕಪ್ಪೆಯಂತೆ ಕುಪ್ಪಳಿಸಿ ಒಳಸೇರಿ ಬಾಗಿಲು ಹಿಡಿದು ನನ್ನೆಡೆಗೆ ನೋಡಿದ. ನಾನೂ ಕುಪ್ಪಳಿಸಿ ಒಳಸೇರಿದೆ. ಮೆಲ್ಲನೆ ಬಾಗಿಲು ಮುಚ್ಚಿಕೊಂಡಿತು. ಬಾಗಿಲು ಮುಚ್ಚಿಕೊಳ್ಳುವ ಮುನ್ನದ ಸಣ್ಣಕಿಂಡಿಯಲ್ಲಿ ವೆಂಕಟರಾವ್ ನ ಸುತ್ತ ನಿಂತಿದ್ದ ಮುಸುಕುಧಾರಿಗಳಲ್ಲಿ ಒಬ್ಬ ಈ ಕಡೆ ನೋಡಿದಂತೆ ನನಗೆ ಭಾಸವಾಯಿತು. ಹಾಗೆ ಅನ್ನಿಸಿದ ಮರುಸೆಕೆಂಡಿಗೆ ಬಾಗಿಲು ಹಾಕಿಕೊಂಡಿತು. ಬೋಲ್ಟ್ ಹಾಕಬಹುದಾ ಎಂದು ನೋಡಿದೆ. ಆ ಬಾಗಿಲಿಗೆ ಅದೇನೂ ಇರಲಿಲ್ಲ. + + + +ಮಬ್ಬು ನೀಲಿಬೆಳಕಿನ ಮತ್ತು ಮೈಕೊರೆಯುವ ಚಳಿಯ ಆ ಪುಟ್ಟಕೋಣೆಯಲ್ಲಿ ಎರಡು ಚಿಕ್ಕ ರಾಕ್ ಗಳಲ್ಲಿ ಮಿನುಗುವ ನೀಲಿ ನಕ್ಷತ್ರಗಳಷ್ಟೆ ತುಂಬಿದ್ದವು. ಅವುಗಳ ಗುಂಯ್ ಗುಡುವ ಶಬ್ದ. ಹಿಂದೆ ಎಂದೋ, ನನ್ನ ಮೊದಲ ಕಂಪನಿಯಲ್ಲಿ ಟ್ರೈನಿ ಇಂಜಿನಿಯರಾಗಿ ಸೇರಿದಾಗ ಎಕ್ಸ್ಪೋಷರ್ ಗೋಸ್ಕರ ಒಂದು ಇಂತಹದ್ದೇ ಆದರೆ ಇದಕ್ಕಿಂತ ಹತ್ತುಪಟ್ಟು ದೊಡ್ಡದಾದ ಡೇಟಾಸೆಂಟರಿಗೆ ಭೇಟಿಯಿತ್ತದ್ದು ಬಿಟ್ಟರೆ ಮತ್ತೆಂದೂ ಇಂತಹ ತಣ್ಣನೆಯ ಕೋಣೆಯನ್ನು ಹೊಕ್ಕಿರಲಿಲ್ಲ. + +ನನ್ನೊಡನೆ ಬಂದ ಬಿಳಿಯ ನನ್ನಷ್ಟೇ ವಿಹ್ವಲನಾಗಿ ನಿಂತಿದ್ದು ನನಗೆ ಗಾಬರಿಯನ್ನುತಂದಿತು. `ಯು ನೊ ವಾಟ್ ಟು ಡು, ಈಸೆಂಟಿಟ್?’ ಎಂದೆ. `ಗೋ ಅರೌಂಡ್ ಆ್ಯಂಡ್ ಸರ್ಚ್ ದ ಲೇಬಲ್ ಆಘಿ2998. ಐ ಹ್ಯಾವ್ ಆ್ಯಕ್ಸೆಸ್ ಆನ್ ದಟ್ ಸರ್ವರ್’. ನಾನು ಹುಡುಕಲಾರಂಭಿಸಿದೆ. ನನ್ನನ್ನು ಕೆಲಸಕ್ಕೆ ಹಚ್ಚಿದ್ದು ನೆಪಮಾತ್ರ ಎನ್ನುವಂತೆ ಅವನು ನೇರವಾಗಿ ಎರಡನೆ  ರಾಕ್ ನ ಮೂಲೆಗೆ ಹೋಗಿ ಕೀಬೋರ್ಡ್ ಎಳೆದು ಮಾನಿಟರ್ ಆನ್ ಮಾಡಿದ. ಕಪ್ಪುಪರದೆಯ ಮೇಲೆ ಮೂಡುವ ನೀಲಿ ಅಕ್ಷರಗಳ ಬೆಳಕು ಕೋಣೆಯೊಳಗೆ ತುಂಬಿತು. ‘ಐ ಗಾಟ್ ಇಟ್. ಕಮ್ ಹಿಯರ್’ ಎಂದು ಕೂಗಿದ. ಗಾಬರಿಯಲ್ಲಿ ನಾನು `ಯುವರ್ ವಾಯ್ಸ್ ಈಸ್ ಲೌಡ್’ ಎಂದೆ. ಅದಕ್ಕವನು `ನಾಟ್ ಟು ವರಿ. ದಿಸ್ ಈಸ್ ಎ ಸೌಂಡ್ ಪ್ರೂಫ್ ರೂಂ’ ಎಂದ. + +`ಐ ಹ್ಯಾಡ್ ಆ್ಯಕ್ಸೆಸ್ ಸಿಕ್ಸ್ ಮಂತ್ಸ್ ಬ್ಯಾಕ್. ಐ ಹೋಪ್ ಎವರಿಥಿಂಗ್ ರಿಮೈನ್ಡ್ ಸೇಮ್’ ಎಂದೆನ್ನುತ್ತ ಲಾಗಿನ್ ಸ್ಕ್ರೀನಿನಲ್ಲಿ ತನ್ನ ಯೂಸರ್ ನೇಮ್ ಮತ್ತು ಪಾಸ್ ವರ್ಡನ್ನು ಟೈಪ್ ಮಾಡಿದ. ಆ ಗಾಬರಿಯ ಸಂದರ್ಭದಲ್ಲೂ ಅವನ ಮುಖದ ಮೇಲೊಂದು ಸಣ್ಣ ವಿಜಯದ ನಗು ಕಾಣಿಸಿಕೊಂಡಿತು. + +ಧಡ್ಡನೆ ಯಾರೋ ಬಾಗಿಲನ್ನು ಒದ್ದು ಒಳ ಪ್ರವೇಶಿಸಿದರು. ಆ ಶಬ್ದಕ್ಕೆ ಹೆದರಿದವನಂತೆ ಬಿಳಿಯ ಹಿಂದಕ್ಕೆ ಹಾರಿದ. ಅವನ ತಲೆ ಸರಿಯಾಗಿ ನನ್ನ ಮೂಗಿಗೆ ಬಡಿದು ಸಣ್ಣಚೀತ್ಕಾರದೊಂದಿಗೆ ಹಿಂದಕ್ಕೆ ಜರುಗಿದೆ. ಆ ಮಬ್ಬು ನೀಲಿ ಬೆಳಕಿನಲ್ಲಿ ನುಗ್ಗಿದ ವ್ಯಕ್ತಿಯ ಆಕಾರ ಅಸ್ಪಷ್ಟವಾಗಿ ಕಾಣುತ್ತಿತ್ತು. ಎಲ್ಲವೂ ಕಪ್ಪುಮಯವಾಗಿದ್ದವನ ಬಂದೂಕು ಮಾತ್ರ ಆ ಮಂದ ಬೆಳಕಿಗೂ ಹೊಳೆಯುತ್ತಿತ್ತು. ಕಪ್ಪಾಕೃತಿಯ ಮುಖವಾಡದ ಮುಖ ನಮ್ಮೆಡೆಗೆ ನೋಡಿತು. ಅದಷ್ಟೇ ಚಿತ್ರ ಅವನದ್ದು ನನ್ನ ಮನಸ್ಸಿನಲ್ಲಿ ಉಳಿದಿರುವುದು. ಅವನ ಮೊದಲ ಗುಂಡು ಬಿಳಿಯನ ಎದೆಯನ್ನು ಹೊಕ್ಕಿತು. ಅವನು ತಳ್ಳಲ್ಪಟ್ಟವನಂತೆ ಹಿಂದೆ ಬಿದ್ದು ನನ್ನನ್ನೂ ಬೀಳಿಸಿದ. ನಾನು ಗಾಳಿಯಲ್ಲಿ ತೇಲಿದವನಂತೆ ಬಿದ್ದು ಹಿಂಭಾಗದಿಂದ ನೆಲಕ್ಕೆ ಕುಕ್ಕಿ ಕಾಲುಗಳು ಮೇಲೆದ್ದವು. ಅದೇ ಸಮಯಕ್ಕೆ ಬಂದ ಎರಡನೆಗುಂಡು ನನ್ನ ಎಡತೊಡೆಯನ್ನು ಸೀಳಿತು. ಅವನ ಮೂರನೆಯ ಗುಂಡು ನೀಲಿಬೆಳಕಿನ ಸರ್ವರ್ ಮಾನಿಟರನ್ನು ಭೇದಿಸಿ ಬೆಂಕಿಯನ್ನು ಹೊರಹಾಕಿ ಆ ಮಾನಿಟರು ಮತ್ತೊಂದಕ್ಕೋ ರಾಕ್ ಗೋ ಅಪ್ಪಳಿಸಿ ದೊಡ್ಡ ಸದ್ದನ್ನು ಮಾಡಿತು. ಆ ರೂಮಿನ ಎಲ್ಲಾ ನೀಲಿ ನಕ್ಷತ್ರಗಳೂ ಏಕಕಾಲಕ್ಕೆ ನಂದಿಹೋಗಿ ಸಾವಿನಷ್ಟೇ ಕಪ್ಪಾದ ಕತ್ತಲೆ ಆವರಿಸಿಕೊಂಡಿತು. + +(ಕಾದಂಬರಿ: ತಾರಾಬಾಯಿಯ ಪತ್ರ, ಲೇಖಕರು: ಎಂ. ಆರ್. ದತ್ತಾತ್ರಿ, ಪ್ರಕಾಶನ: ಛಂದ ಪುಸ್ತಕ, ಬೆಲೆ:110) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_437.txt b/Kenda Sampige/article_437.txt new file mode 100644 index 0000000000000000000000000000000000000000..02fee839dd6d4f332d6a434a7b1fa7d5c66a37b0 --- /dev/null +++ b/Kenda Sampige/article_437.txt @@ -0,0 +1,131 @@ + + +ಸಾಂತೇರುಗುತ್ತು ಎನ್ನುವುದು ಸೀಮೆಯ ಗುತ್ತು ಎನ್ನುವ ನಂಬಿಕೆ ಅಂಬಕ್ಕೆಯದ್ದು. ಅಲ್ಲ ಅದು ಮಾಗಣೆ ಗುತ್ತು ಎಂದು, ಆಕೆಯ ಎದುರಲ್ಲದಿದ್ದರೂ, ಹಿಂಬದಿಯಿಂದ ‘ಕದ್ದು ಮುಚ್ಚಿ’ ಆಡಿಕೊಳ್ಳುವ ‘ಮಿತ್ತಗುತ್ತು’ ಎಂಬ ಗ್ರಾಮ ಗುತ್ತೊಂದು-ಒಂಬತ್ತುಕೆರೆಯಲ್ಲಿ ಇತ್ತು. ಅಪ್ಪಿತಪ್ಪಿ ಈ ಮಿತ್ತಗುತ್ತಿನವರು ಇಂಥ ಮಾತು ಆಡುತ್ತಾರೆ ಎಂದು ಯಾರಾದರೂ ಅದನ್ನು ಅಂಬಕ್ಕೆಯ ಕಿವಿಗೆ ಹಾಕಿದರೆ “ಮಂಗ! ಅವನಿಗೇನು ಗೊತ್ತು ನಮ್ಮ ಗುತ್ತಿನ ಹಿನ್ನೆಲೆ? ಆ ಗುತ್ತಿನವರಿಗೆ ನಮ್ಮ ಸೋದರಮಾವನ ಕಾಲದಿಂದಲೂ ಸಾಂತೇರುಗುತ್ತು ಅಂದರೆ ಅಷ್ಟಕ್ಕಷ್ಟೇ. ಒಂಥರಾ ನಂಜು! ಯಾಕೆನ್ನುತ್ತೀರಾ? ನಮ್ಮ ಗುತ್ತಿನ ಒಬ್ಬಾಕೆಯನ್ನು ಈ ಮಿತ್ತಗುತ್ತಿನ ಒಬ್ಬ ಪಡಪೋಸಿ ಮಾಲಿಂಗ ಎಂಬವನಿಗೆ ವಿವಾಹವಾಗಬೇಕೆಂಬ ಆಸೆ ಮೂಗಿನ ತನಕ ಇತ್ತಂತೆ. ಎಲ್ಲಾದರೂ ಸೀಮೆಗುತ್ತಿನ ಹೆಣ್ಣನ್ನು ಗ್ರಾಮ ಗುತ್ತಿನ ಮನೆಗೆ ವಿವಾಹ ಮಾಡಿಕೊಡುವುದು ಸಾಧ್ಯವೇ? ನಮ್ಮ ಅಜ್ಜ ‘ಎಷ್ಟು ಧೈರ್ಯವೋ ನಿನಗೆ?’ ಎಂದು ಮಾಲಿಂಗನಿಗೆ ಹೆಣ್ಣು ಕೇಳಲು ಪರೋಕ್ಷವಾಗಿ ಬಂದವರ ಮುಖಕ್ಕೆ ಉಗಿದು ಕಳುಹಿಸಿದ್ದರಂತೆ. ತಕ್ಕೊಳ್ಳಿ ಆ ದಿನದಿಂದ ಈ ಮಿತ್ತಗುತ್ತಿನವರಿಗೆ ಸಾಂತೇರುಗುತ್ತು ಅಂದರೆ, ಕಂಡರೆ ಆಗದಷ್ಟು ನಂಜು! ಎನ್ನುತ್ತಿದ್ದುದುಂಟು. ಇಂತ ಮಾತುಗಳನ್ನು ವರುಷಕ್ಕೆ ಒಂದು ಹತ್ತು ಬಾರಿಯಾದರೂ ಅಂಬಕ್ಕೆ ಅವರಿವರಿಗೆ ಹೇಳದೇ ಇರುತ್ತಿರಲಿಲ್ಲ – ಅದು ಯಾರಿಗೂ ಮರೆತು ಹೋಗಬಾರದು ಎನ್ನುವ ಹಾಗೆ. ಆದರೆ ಹಾಗೆ ಅವರ ಬಾಯಿಯಿಂದ ಅದನ್ನು ಕೇಳಿಸಿಕೊಳ್ಳುವವರೂ ಬೇರೆ ಯಾರೂ ಇದ್ದಿಲ್ಲ. ಅದು ಗುತ್ತಿನ ಮೂಲದಾಳುಗಳಿಗೋ ಅಥವಾ ಕೂಲಿಯಾಳುಗಳಿಗೋ ಮಾತ್ರ ಸೀಮಿತವಾಗಿತ್ತು. + +ಸಾಂತೇರ್ ಗುತ್ತಿನ ಹೆಣ್ಮಕ್ಕಳು ಯಾವತ್ತೂ ಸುಂದರಾಂಗಿಯರೇ. ಅವರ ನಡೆಯಲ್ಲಿ ನುಡಿಯಲ್ಲಿ, ಗುತ್ತಿನ ಛಾಪು ಇರುವಂಥಾದ್ದೇ. ಅಂಗ ಸೌಷ್ಠವವೂ ಅಷ್ಟೇ. ತಿದ್ದಿ ತೀಡಿದ ಹಾಗಿರುವ ಹುಬ್ಬು, ಉರುಟಾಗಿರುವ ಮುಖ, ತುಸು ದೊಡ್ಡದೇ ಎನ್ನಬಹುದಾದ ಮೂಗು, ತೊಂಡೆ ತುಟಿ, ಸೊಂಟದ ತನಕ ಇಳಿಯುವ ತಲೆಗೂದಲು, ಗೋಧಿನಾಗರ ಮೈಬಣ್ಣ, ಆಕರ್ಷಕವಾದ ಕಣ್ಣು, ಉದ್ದ ತೋಳು, ಎದ್ದು ತೋರುವ ಎದೆ, ಹದವಾದ ಸಿಂಹ ಸೊಂಟ! ಸಾಮಾನ್ಯವಾಗಿ ಗುತ್ತಿನ ಎಲ್ಲ ಹೆಣ್ಮಕ್ಕಳೂ ಹೀಗೆಯೇ. ಹಿಂದೆ ಕೋಚ್ ಮೆನ್ ದೊರೆ – ಒಪ್ಪಿ ಕೈ ಹಿಡಿದ ಅಂಬಕ್ಕೆಯ ಅಜ್ಜಿಯ ತಂಗಿ ಕೊರಪೊಲುಗೆ ಈ ಎಲ್ಲ ಲಕ್ಷಣಗಳಿದ್ದೂ ಫಕ್ಕನೆ ಎಂತಹ ಗಂಡಸೂ ಒಮ್ಮೆ ನಿಂತು ನೋಡುವಷ್ಟು ಆಕರ್ಷಕವಾಗಿದ್ದಳಂತೆ. ಗಂಡಸು ಏನು, ಹೆಂಗಸರೂ ಸಹ ಆಕೆಯನ್ನು ನೋಡಿ ಕಣ್ಣು ಕೀಳದೆ ಇರುತ್ತಿದ್ದರಂತೆ ಎಂದು ಮೂಸಬ್ಬ ವರ್ಣಿಸುವಾಗ ಕೇಳುಗರಿಗೆ ಪ್ರತ್ಯಕ್ಷ ಆಕೆಯನ್ನು ಕಾಣುತ್ತಿದ್ದೇನೆ ಎಂಬ ಹಾಗೆ ಚಿತ್ರ ಕಣ್ಮುಂದೆ ಮೂಡಿ ಬಂದಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ. + +ಉಳ್ಳಾಲದಲ್ಲಿ ರಾತ್ರೆ ಕ್ಯಾಂಪ್ ಹೂಡಿದ್ದ ಕೋಚ್ ಮೆನ್ ಎಂಬ ದೊರೆಯೊಬ್ಬ ಒಂದು ಬೆಳಗ್ಗೆ ಒಂಬತ್ತು ಕೆರೆಯ ಗುತ್ತಿನ ಅಂಗಳದ ಮುಂಬದಿಯಲ್ಲಿ ಕುದುರೆ ಏರಿ ಹೋಗುತ್ತಿದ್ದಾಗ ತೋಡಿನ (ಹಳ್ಳದ) ಆಚೆ ಬದಿಯಲ್ಲಿ ಹೊನ್ನೆಮರಕ್ಕೆ ಹಗ್ಗ ತೂಗ ಹಾಕಿ ಕೊರಪೊಲು ನಾಲ್ಕಾರು ಕೂಲಿಯಾಳುಗಳ ಮಕ್ಕಳೊಂದಿಗೆ ಜೋಕಾಲಿ ಯಾಡುತ್ತಿದ್ದಳಂತೆ. ದೊರೆ ಒಂದು ಕ್ಷಣ, ಜೋಕಾಲಿಯಾಡುವ ಈ ಕೊರಪೊಲನ್ನು ನೋಡಿ ‘ಎಂಥ ಚೆಂದುಳ್ಳಿ ಚೆಲುವೆ ಈ ಹುಡುಗಿ, ಓ ದೇವರೇ!’ ಎಂದು ಕುದುರೆಯನ್ನು ನಿಲ್ಲಿಸಿ ‘ಇಲ್ಲಿ ಬಾ’ ಎಂದು ಆಕೆಯನ್ನು ಕರೆದನಂತೆ. ಅದಕ್ಕೆ ಆಕೆ ‘ಬರಲಾರೆ’ ಎಂದು ಕೈಸನ್ನೆಯಿಂದ ಪ್ರತ್ಯುತ್ತರ ನೀಡಿದಳಂತೆ. ಅಷ್ಟಕ್ಕಾದರೆ, ದೊರೆ ಹೊರಟು ಹೋಗುತ್ತಿದ್ದನೇನೋ. ಆಕೆ ತನ್ನನ್ನು ಗಣನೆಗೆ ತೆಗೆದುಕೊಳ್ಳದೇ ಜೋಕಾಲಿಯಾಡುವುದನ್ನು ಮುಂದುವರಿಸಿದ್ದು ನೋಡಿದ ದೊರೆ, ಈ ದಿಟ್ಟೆ ಯಾರು? ಕುಲ ಗೋತ್ರ ಯಾವುದು? ಎಂಬುದನ್ನೆಲ್ಲಾ ವಿಚಾರಿಸುವಂತೆ ತನ್ನ ಕೈ ಕೆಳಗಿನವರಿಗೆ ಆಜ್ಞಾಪಿಸಿ, ವಿಟ್ಲದಾಚೆ ಹೊರಟ ತನ್ನ ಪ್ರಯಾಣವನ್ನು ರದ್ದುಪಡಿಸಿ ಮತ್ತೆ ಉಳ್ಳಾಲದ ಕ್ಯಾಂಪಿಗೆ ಮರಳಿದನಂತೆ. ಆ ಹುಡುಗಿ ಸಾಂತೇರ್ ಗುತ್ತಿಗೆ ಸೇರಿದವಳೆಂದು ಮಧ್ಯಾಹ್ನದ ಒಳಗೆ ತಿಳಿದುಕೊಂಡ ಕೋಚ್ ಮೆನ್ ದೊರೆ, ಅಂದಿನ ಗುತ್ತಿನ ಯಜಮಾನ ವೆಂಕಪ್ಪ ಹೆಗ್ಡೆಯವರನ್ನು ತನ್ನ ಕ್ಯಾಂಪಿಗೆ ಬರಲು ಹೇಳಿಕಳಿಸಿದನಂತೆ. + +ದೊರೆಯ ಅನಿರೀಕ್ಷಿತ ಕರೆಯಿಂದ ಕಂಗಾಲಾದ ವೆಂಕಪ್ಪ ಹೆಗ್ಡೆ ಅಂಜುತ್ತಾ ಅಳುಕುತ್ತಾ ಹೋಗಿ ದೊರೆಯನ್ನು ಕಂಡರೆ, ದೊರೆ ಬೇರೆ ಏನನ್ನೂ ಹೇಳದೆ “ನಿಮ್ಮ ಮನೆಯ ಕಿಶೋರಿಯನ್ನು ನೋಡಿದೆ. ಬಲು ಫಸಂದು ಅನಿಸಿದೆ. ನಾನಿನ್ನೂ ಇಪ್ಪತೈದರ ಹುಡುಗ. ಅವಿವಾಹಿತ. ನಿಮ್ಮ ಹುಡುಗಿಯನ್ನು ನನಗೆ ಮದುವೆ ಮಾಡಿಕೊಡಬೇಕು!’’ ಎಂದನಂತೆ. + +ವೆಂಕಪ್ಪ ಹೆಗ್ಡೆಯವರಿಗೆ ಈ ಕೋಚ್ ಮೆನ್ ದೊರೆಯ ಬೇಡಿಕೆ ಕೇಳಿ ದಿಗಿಲಾಯಿತು. ಇನ್ನೂ ಹದಿನಾರು ತುಂಬದ ತನ್ನ ಸೊಸೆಯನ್ನು ಯಾರು ಏನು ಎಂದು ತಿಳಿಯದೆ ಈ ದೊರೆಗೆ ಕೊಟ್ಟರೆ, ಹುಲಿಯ ಬಾಯಿಗೆ ಕುರಿಯನ್ನು ಕೊಟ್ಟಂತಾಗದೇ? ಎಂಬ ಭಯವೂ ಹುಟ್ಟಿತು. ಇಷ್ಟಕ್ಕೂ ಈತ ಈಗ ಈಕೆಯ ಕೈ ಹಿಡಿದರೂ, ನಾಳೆ ಇನ್ನೊಬ್ಬಳನ್ನು ಮೋಹಿಸಿ ‘ನೀನು ನಿನ್ನ ತವರಿಗೆ ಹೋಗು’ ಎಂದು ಹಿಂದೆ ಕಳುಹಿಸಿದರೆ, ಇವಳನ್ನು ಗುತ್ತಿನ ಮನೆ ಮತ್ತೆ ಹೇಗೆ ಸ್ವೀಕರಿಸುವುದು? ಎಂಬ ಆತಂಕವೂ ಕಾಡಿತಂತೆ. ಆದರೆ ಆಗಿನ ಸರಕಾರ ಇಂಗ್ಲಿಷ್ ದೊರೆಗಳದ್ದು. ಅವರ ಬೇಕು ಬೇಡಗಳನ್ನು ತಿರಸ್ಕರಿಸುವುದೆಂದರೆ ಗಂಡಾಂತರವನ್ನು ಬೇಕಂತಲೇ ಕರೆದು ಎದೆಗೆಳೆದುಕೊಂಡ ಹಾಗೆ. ಹಾಗಂತ ಗುತ್ತಿನ ಮನೆಯ ಹಸುಳೆಯನ್ನು ಬಲಿಕೊಟ್ಟು ಗುತ್ತನ್ನು ಉಳಿಸಿಕೊಳ್ಳುವುದು ಎಷ್ಟು ಸರಿ?ಹೀಗೆಲ್ಲಾ ಯೋಚಿಸಿದ ವೆಂಕಪ್ಪ ಹೆಗ್ಡೆ ಕೈ ಮುಗಿದು “ಈ ವಿಚಾರದಲ್ಲಿ ದಿಢೀರ್ ನಿರ್ಧಾರಕ್ಕೆ ಬರುವುದು ಕಷ್ಟ. ಎರಡು ದಿನದ ಅವಧಿ ಕೊಡಿ’ಎಂದರಂತೆ. ‘ಆಲ್ರೈಟ್, ಅಷ್ಟರ ತನಕ ನಾನೂ ಈ ಕ್ಯಾಂಪ್ ನಲ್ಲೇ ಇರುತ್ತೇನೆ’ ಎಂದನಂತೆ ದೊರೆ. + +ವೆಂಕಪ್ಪ ಹೆಗ್ಡೆಯವರು ಗುತ್ತಿನ ಮನೆಗೆ ಬಂದವರೇ, ಮನೆಮಂದಿಯನ್ನಲ್ಲದೇ ಊರವರನ್ನೂ ಚಾವಡಿಗೆ ಕರೆಸಿ ದೊರೆಯ ಅಪೇಕ್ಷೆ ಮುಂದಿಟ್ಟರು. ಇಡೀ ಮನೆಯ ಮಂದಿ, ಒಂದು ಕ್ಷಣ ಮಾತಿಲ್ಲದೆ ಮೂಕರಾಗಿ ಒಬ್ಬರ ಮುಖವನ್ನು ಇನ್ನೊಬ್ಬರು ದಿಟ್ಟಿಸುತ್ತಾ ಯಾರಿಗೆ ಯಾರು ಏನು ಹೇಳುವುದು? ಎಂದು ತಿಳಿಯದೇ ಉಳಿದವರಂತೆ. ಕೊರೆಪೊಲುವಿನ ತಾಯಿ ತುಂಗಕ್ಕೆ ‘ಅಯ್ಯೋ ದೇವರೇ. ನನ್ನ ಮಗಳಿಗೆ ಈ ಗತಿ ಬಂತೇ?’ ಎಂದು ಎದೆ ಬಡಿದುಕೊಂಡು ಅಳಲು ಹತ್ತಿದರಂತೆ. ಅವರನ್ನು ಹೇಗೆ ಸಮಾಧಾನಪಡಿಸುವುದೆನ್ನುವುದು ಯಾರಿಗೂ ಹೊಳೆಯಲಿಲ್ಲವಂತೆ. ಊರ ಸುತ್ತುಮುತ್ತಿನವರನ್ನೆಲ್ಲ ಕರೆಸಿ ಅಭಿಪ್ರಾಯ ಕೇಳಿದರಾಯಿತೇ ಎಂದು ವೆಂಕಪ್ಪ ಹೆಗ್ಡೆ ಮುಂದಾಗುವಷ್ಟರಲ್ಲಿ ತುಂಗಕ್ಕ ತನ್ನನ್ನೂ ತನ್ನ ಮಗಳನ್ನೂ ದೂರಕ್ಕೆ ಕಳುಹಿಸಿ ಎಂದು ಬೇಡಿಕೊಂಡರಂತೆ. ಸೇರಿದ ಊರ ಮಂದಿ ತಲೆಗೊಬ್ಬರ ಹಾಗೆ ಮಾತನಾಡಿದರೆ, ತುಂಗಕ್ಕೆಯ ಮೊರೆ ಒಂದೇ. “ಎಷ್ಟಕ್ಕೂ ಈ ಮದುವೆ ಸಾಧ್ಯವಿಲ್ಲ. ದೊರೆಗೆ ಮಗಳನ್ನು ಕೊಡುವುದಕ್ಕಿಂತ ಹಳ್ಳಕ್ಕೆ ತಮ್ಮನ್ನು ನೂಕುವುದೇ ವಾಸಿ!’’ ಎಂದು. + +ಕೊನೆಗೂ ವೆಂಕಪ್ಪ ಹೆಗ್ಡೆಯವರೇ ಸ್ವಂತ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಕೊರಪೊಲುವಿನಲ್ಲೇ ಅಭಿಪ್ರಾಯ ಕೇಳುವುದು, ಆಕೆ ಒಪ್ಪಿದರೆ ಮದುವೆ, ಒಪ್ಪದಿದ್ದರೆ ತಲೆದಂಡ ಕೊಟ್ಟಾದರೂ ದೊರೆಯನ್ನು ಎದುರು ಹಾಕಿಕೊಳ್ಳುವುದು. ‘ಸರಿ’ ಎಂದರು ಎಲ್ಲರೂ. ಆದರೆ ಕೊರಪೊಲುವನ್ನು ನೀನು ಮದುವೆಗೆ ಒಪ್ಪುತ್ತೀಯಾ ಎಂದು ಕೇಳುವುದು ಯಾರು? ಮದುವೆ ಎಂದರೆ ಏನೆಂದು ತಿಳಿಯದ ಅವಳು ‘ಹ್ಞೂಂ’ ಎಂದರೂ ಕಷ್ಟ. ಊಹ್ಞೂಂ ಎಂದರೆ ಇನ್ನೂ ಸಂಕಷ್ಟ. ಆದರೆ ಬೇರೆ ಉಪಾಯವೇ ಇಲ್ಲ ತಾನೆ? + +ಈ ಎಲ್ಲಾ ರಾದ್ಧಾಂತ ನಡೆಯುವಾಗ ಕೊರಪೊಲು ಎಲ್ಲಿದ್ದಾಳೆ ಎಂದು ಯಾರೂ ತರ್ಕಿಸಿಯೇ ಇರಲಿಲ್ಲ. ಹುಡುಗಿ ಎಲ್ಲಿ ಎಲ್ಲಿ ಎಂದು ಹುಡುಕಿದರೆ, ಎಲ್ಲವನ್ನೂ ಕೇಳಿಸಿಕೊಂಡ ಕೊರಪೊಲು, ಉಪ್ಪರಿಗೆ ಹತ್ತಿ ನಿಶ್ಚಿಂತೆಯಿಂದ ಮಲಗಿ ನಿದ್ದೆ ಹೊಡೆಯುತ್ತಿದ್ದಳಂತೆ. ಅವಳ ಅಭಿಪ್ರಾಯವನ್ನು ಯಾರು ಕೇಳುವುದು, ತಾಯಿಯೋ ಮಾವನೋ ಅಥವಾ ಅವಳ ತಂದೆಯನ್ನು ಕರೆಸಿ ಅವರಿಂದಲೋ ಎಂದು ಚರ್ಚೆ ಪ್ರಾರಂಭವಾಗಿ ಎರಡು ವರುಷದ ಹಿಂದೆ ಮದುವೆಯಾದ ಅಂಬಕ್ಕೆಯ ಅಜ್ಜಿ ತುಂಬಪ್ಪೆಯಲ್ಲೇ ಕೇಳಿಸುವುದೆಂದು ನಿಶ್ಚಯಿಸಿದರಂತೆ. ತುಂಬಪ್ಪೆ ಕೊರಪೊಲುವಿನಲ್ಲಿ ನಿಧಾನವಾಗಿ ವಿಷಯವನ್ನೆಲ್ಲ ಪ್ರಸ್ತಾಪಿಸಿ ‘ನಿನ್ನೆ ನಿನ್ನನ್ನು ಮಾತನಾಡಿಸಿದ ಆ ಕೋಚ್ ಮೆನ್ ದೊರೆಯನ್ನು ಮದುವೆಯಾಗಲು ಸಿದ್ಧಳಿದ್ದೀಯಾ?’ ಎಂದು ಬಹಳ ನೋವಿನಿಂದ ಪ್ರಶ್ನಿಸಿದರಂತೆ. + +ಕೊರಪೊಲು – ಮೊದಲು ಏನೂ ಮಾತನಾಡದೆ ಸುಮ್ಮನಿದ್ದಳಂತೆ. ಆ ಮೇಲೆ ‘ಬೇಡ ಅಂದರೆ ಬೇಡ ಅನ್ನು ಆಗಬಹುದಾದರೆ ಹ್ಞೂ ಅನ್ನು’ ಅಂದದ್ದಕ್ಕೆ ಒಂದರ್ಧ ತಾಸು ಸುಮ್ಮನಿದ್ದು, ಮೊದಲು ‘ಊಹ್ಞೂಂ’ ಅಂದು, ಆಮೇಲೆ ‘ಹ್ಞೂಂ’ ‘ಹ್ಞೂಂ’ ಅಂದಳಂತೆ. ತುಂಬಪ್ಪೆಗೆ – ಒಪ್ಪಲಿಲ್ಲ ಅನ್ನುವುದೋ, ಒಪ್ಪಿದಳು ಅನ್ನುವುದೋ ತಿಳಿಯದೆ ಚಡಪಡಿಸುತ್ತಿದ್ದಾಗ ಕೊರಪೊಲು ‘ಒಪ್ಪಿದ್ದೇನೆ’ ಎಂದು ಬಾಯಿ ಬಿಟ್ಟು ಹೇಳಿದಾಗ, ಒಮ್ಮೆ ಎದೆ ಧಸಕ್ ಎಂದರೂ, ಜುಮಾದಿಯ ಮೇಲೆ ಭಾರ ಹಾಕಿ ಕೋಚ್ ಮೆನ್ ದೊರೆಗೆ ಇವಳನ್ನು ಒಪ್ಪಿಸುವುದೇ ಸರಿ ಎಂದು, ಇಡೀ ಗುತ್ತಿನ ಮನೆ ಮದುವೆಗೆ ಒಪ್ಪಿಗೆ ನೀಡಿತಂತೆ. + +ಮರುದಿನ ಗುತ್ತಿನಾರ್ ವೆಂಕಪ್ಪ ಹೆಗ್ಡೆ ದೊರೆ ಇದ್ದಲ್ಲಿಗೆ ಹೋಗಿ ‘ಹುಡುಗಿ ಒಪ್ಪಿದ್ದಾಳೆ. ನಾವು ಮದುವೆಯೂ ಮಾಡಿಕೊಡುತ್ತೇವೆ. ಆದರೆ ನಮ್ಮ ಸಂಪ್ರದಾಯಗಳನ್ನು ನೀವು ಪಾಲಿಸಬೇಕು’ ಎಂದು ಭಿನ್ನವಿಸಿದ್ದಕ್ಕೆ ‘ಸರಿ’ ಎಂದರಂತೆ ಕೋಚ್ ಮೆನ್ ದೊರೆ. ರಾತ್ರೋರಾತ್ರಿ – ಒಂಬತ್ತು ಕೆರೆಯ ಎಲ್ಲ ವರ್ಗದ ಮಂದಿಯೂ ಗುತ್ತಿನ ಮನೆಯ ಅಂಗಳದಲ್ಲಿ ಜಮಾಯಿಸಿ, ದೊಡ್ಡ ಚಪ್ಪರ ನಿರ್ಮಾಣ ಮಾಡಿದರಂತೆ. ಉಳ್ಳಾಲದ ಪೇಟೆಯಿಂದ ಮದುವೆಯ ಊಟಕ್ಕೆ ಬೇಕಾದ ಬೆಲ್ಲ, ಬೇಳೆ ಕಾಳುಗಳೂ ಬಂದುವಂತೆ. ಊರಿನ ಮನೆ ಮನೆಗಳ ತೋಟಗಳಲ್ಲಿ ಬೆಳೆದಿದ್ದ ತರಕಾರಿಗಳ ರಾಶಿಯೇ ಗುತ್ತಿನ ಅಂಗಳಕ್ಕೆ ಬಂತಂತೆ. ಮಂಗಳೂರಿನಿಂದ ಕೋಚ್ ಮೆನ್ ದೊರೆಯ ಊಟ ಉಪಾಹಾರಕ್ಕೆ ಬೇಕಾದ ಆಹಾರವಸ್ತುಗಳನ್ನು ಮಾಂಸವನ್ನು ಅವರೇ ತರಿಸಿಕೊಳ್ಳುವ ವ್ಯವಸ್ಥೆಯನ್ನು ಅವರೇ ಮಾಡಿಕೊಂಡರಂತೆ. ತುಳುನಾಡಿನ ವೈಶಿಷ್ಟ್ಯದ ಕೋರಿ ಕೊದ್ದೆಲು, ಕೋರಿ ಗಸಿ ಮಾಡಲು – ತಿಮ್ಮಂಗೂರು ಗುತ್ತಿನ ಬಾಣಸಿಗ ಅಮ್ಮುವಿಗೆ ಜನ ಹೋಯಿತಂತೆ. + +ಆ ಕಾಲದಲ್ಲಿ ತೀರ ಅಪರೂಪವಾಗಿದ್ದ ಬೆಡಿ ಗರ್ನಾಲುಗಳ ಸದ್ದಿನೊಂದಿಗೆ, ಮಂಗಳೂರಿನಿಂದ ದೊರೆಯೇ ತರಿಸಿದ ಪೋಲೀಸ್ ಬ್ಯಾಂಡಿನ ಗೌಜಿಯೊಂದಿಗೆ ದೊರೆಯ ದಿಬ್ಬಣ ಕೊನೆಗೂ ಗುತ್ತಿನ ಅಂಗಳಕ್ಕೆ ಬಂತು. ಊರಿಗೆ ಊರೇ ಅಲ್ಲಿ ನೆರೆದಿತ್ತು. ಆಮಂತ್ರಣ ಅಧಿಕೃತವಾಗಿ ಇದ್ದವರೂ ಇಲ್ಲದವರೂ ಈ ವಿಶಿಷ್ಟ ಮದುವೆಯನ್ನು ನೋಡಲಿಕ್ಕಾಗಿ ನಾಮುಂದು ತಾಮುಂದು ಎಂಬಂತೆ ಬಂದು ಭಾಗವಹಿಸಿದರು. ಕೋಚ್ಮೆನ್ ದೊರೆಗೆ ಈ ಗುತ್ತಿನ ಮನೆಯೂ ಒಂದು ಪುಟ್ಟ ಅರಸೊತ್ತಿಗೆಯ ಮನೆ ಎಂಬ ಅನುಭವವಾಗಿ ತುಂಬಾ ಖುಷಿಯಾಯಿತು. + +ಕೋಚ್ ಮೆನ್ ದೊರೆ ತನ್ನ ಪತ್ನಿ ಕೊರಪೊಲನ್ನು ‘ಕೋರ್ ಪಲ್’ ಎಂದು ಕರೆಯುತ್ತಾ ಪ್ರೀತಿಯಿಂದ ತಬ್ಬಿಕೊಂಡು, ತನ್ನ ಕುದುರೆಯ ಮೇಲೆ ಕುಳ್ಳಿರಿಸಿಕೊಂಡು ಉಳ್ಳಾಲದ ಕ್ಯಾಂಪ್ ಗೆ ಕರೆದೊಯ್ಯುವುದನ್ನು, ಒಂಬತ್ತು ಕೆರೆ ಮತ್ತು ಸುತ್ತಮುತ್ತಲ ಮಂದಿ, ಮತ್ತು ಗುತ್ತಿನ ಮನೆಯ ಬಂಧು ಬಾಂಧವರು ತೆರೆದ ಕಣ್ಣನ್ನು ಮುಚ್ಚದೇ ನೋಡಿದರಂತೆ. ಕೊರಪೊಲಿನ ತಾಯಿ ಮಾತ್ರ ಆಘಾತಕ್ಕೊಳಗಾದವಳಂತೆ ಮೌನಿಯಾಗಿ ಇದ್ದಳಂತೆ ಎಂದು ಅಂಬಕ್ಕೆ ಈಗಲೂ ಹೇಳುವಾಗ ಆಕೆಯ ಕಂಠ ಗದ್ಗದವಾಗುತ್ತದೆ. + +ಕೊರಪೊಲು ಚಿಕ್ಕವಳಿದ್ದರೂ ತೀರ ಅಪರಿಚಿತ ವಿದೇಶೀಯನೊಂದಿಗೆ ನವವಧುವಾಗಿ ಕೈ ಹಿಡಿದು ಹೊರಟು ನಿಂತಾಗ ಆಕೆ ಅಳಬಹುದು ಎಂದು ಎಲ್ಲರೂ ಅಂದುಕೊಂಡಿದ್ದರೆ ಆಕೆ ಏನೂ ಆತಂಕ ಇಲ್ಲದವಳ ಹಾಗೆ ನಗುನಗುತ್ತಾ ಹೊರಟಿದ್ದಳಂತೆ. ಅದನ್ನು ನೋಡಿ ಮನದೊಳಗೆ ನೋವಿದ್ದರೂ ಗುತ್ತಿನ ಮನೆಯವರು ಏನೂ ತೋರ್ಪಡಿಸದೇ ಕುಳಿತರಂತೆ. ಕುತ್ತಿಗೆ ಮತ್ತು ಕೈತುಂಬ ಬಂಗಾರದ ಒಡವೆಗಳಿಂದ ಶೋಭಿಸುತ್ತಿದ್ದ ಕೊರಪೊಲು ಜುಮಾದಿ ದೈವಕ್ಕೆ ಕೈ ಮುಗಿದು ಹಿರಿಯರ ಕಾಲಿಗೆ ಅಡ್ಡ ಬಿದ್ದು, ಗುತ್ತಿನ ಅಂಗಳಕ್ಕೆ ಕಾಲಿಟ್ಟಾಗ ಅವಳನ್ನು ಬೀಳ್ಕೊಡಲು ಬಂದ ವೆಂಕಪ್ಪ ಹೆಗ್ಡೆಯವರ ಕೈ ಕುಲುಕಿದ ದೊರೆ, ತನ್ನ ಪತ್ನಿಯ ಮೈಮೇಲಿದ್ದ ಎಲ್ಲ ಒಡವೆಗಳನ್ನು ತೆಗೆದು ಅವರ ಕೈಯಲ್ಲಿ ಇಟ್ಟರಂತೆ. ಆಮೇಲೆ ತನ್ನ ಕೋಟಿನ ಕಿಸೆಯಲ್ಲಿದ್ದ ಚಿನ್ನದ ಚೈನಿನಲ್ಲಿ ತೂಗು ಹಾಕಿದ್ದ ಕೈ ಗಡಿಯಾರವನ್ನು ಹೆಗ್ಡೆಯವರಿಗೆ ಉಡುಗೊರೆಯಾಗಿ ನೀಡಿದರಂತೆ. ಕೊರಪೊಲು ತನ್ನ ಮೈ ಕೈ ಬರಿದಾದ್ದನ್ನು ನೋಡಿ ಆತಂಕಿತಳಾದಾಗ, ಹೆಗ್ಡೆಯವರ ಕೈ ತುಂಬಿ ತುಳುಕುತ್ತಿದ್ದ ಆಕೆಯದ್ದಾದ ಚಿನ್ನದ ಸರಗಳಲ್ಲಿ – ಅವಲಕ್ಕಿ ಸರವೊಂದನ್ನು ಎತ್ತಿ ತೆಗೆದು, ಅದನ್ನು ಕೊರಪೊಳಿಗೆ ದೊರೆಯೇ ತೊಡಿಸಿ ‘ದೆಟ್ ಈಸ್ ಫೈನ್ ಎಂಡ್ ಇನಫ್’ ಎಂದರಂತೆ. ಆಮೇಲೆ ದುಬಾಷಿಯಲ್ಲಿ “ಹೆಗ್ಡೆಯವರಿಗೆ ಬ್ರಿಟಿಷ್ ಸರಕಾರವು ಈ ಗ್ರಾಮದ ಪಠೇಲಿಕೆಯ ಗೌರವ ಮತ್ತು ಅದರ ಸಂಕೇತವಾಗಿ ಒಂದು ತೋಟೆಯ ಕೋವಿಯನ್ನು ದಯಪಾಲಿಸುವುದು ಎಂದು ಹೇಳು’ಎಂದು ಆದೇಶಿಸಿದರಂತೆ. + +ಕೋಚ್ ಮೆನ್ ದೊರೆ, ಗುತ್ತಿನ ಅಂಗಳದಲ್ಲಿ ಏನು ಹೇಳಿದರೋ ಹಾಗೆಯೇ ನಡಕೊಂಡರು. ತಿಂಗಳೊಳಗೆ ವೆಂಕಪ್ಪ ಹೆಗ್ಡೆಯವರಿಗೆ ಬ್ರಿಟಿಷ್ ಸರಕಾರದಿಂದ ಗ್ರಾಮ ಪಠೇಲಿಕೆಯ ಆದೇಶದ ಸನದು ಬಂತು. ಜೊತೆಗೆ ಕೋವಿಯ ಲೈಸನ್ಸ್ ಮತ್ತು ತೋಟೆಯ ಕೋವಿಯೂ ಬಂತು. ಕೊರಪ್ಪಲು – ಕೋಚ್ ಮನ್ ದೊರೆ ಮಂಗಳೂರಿಗೆ ಬಂದಷ್ಟು ಸಲವೂ ಅವರ ಜೊತೆ ಬರುತ್ತಿದ್ದಳು. ಹಾಗೆ ಬಂದವಳನ್ನು ದೊರೆ ಕುದುರೆ ಸಾರೋಟ್ ನಲ್ಲಿ ಗುತ್ತಿನ ಮನೆಗೆ ಕಳುಹಿಸುತ್ತಿದ್ದರು. ಗುತ್ತಿನ ಹೆಣ್ಣು ಮಗಳು – ದೊರೆಯ ಕೈ ಹಿಡಿದು ಸುಖದಲ್ಲಿರುವುದನ್ನು ನೋಡಿ, ಗುತ್ತಿನ ಮನೆ ಮಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಸಾಂತೇರ್ ಗುತ್ತು ಅಂದರೆ ಏನು ಅಂತ ತಿಳಿದುಕೊಂಡಿದ್ದೀರಿ, ಬ್ರಿಟಿಷ್ ದೊರೆಗೇ ಹೆಣ್ಣು ಕೊಟ್ಟ ಮನೆತನ! ಎಂದು ಊರ ಮಂದಿ ಆಡಿಕೊಂಡರು. ಇದರಿಂದ ಗುತ್ತಿನ ಪ್ರತಿಷ್ಠೆಯೂ ಹೆಚ್ಚಿತು. + +ಸಾಂತೇರ್ ಗುತ್ತಿನ ಮನೆಗೆ ಬ್ರಿಟಿಷ್ ಸರಕಾರ ಹೀಗೆ ನೀಡಿದ ‘ಪಠೇಲಿಕೆಯ ಸನದು’ನ್ನು ಸ್ವತಃ ವೆಂಕಪ್ಪ ಹೆಗ್ಡೆಯವರೇ, ಮಂಗಳೂರಿಗೆ ಹೋಗಿ ಕಟ್ಟು ಹಾಕಿಸಿ ತಂದು, ಗುತ್ತಿನ ಚಾವಡಿಯ ಬಾಗಿಲನ ಬಲಬದಿಯಲ್ಲಿ ಅದನ್ನು ತೂಗು ಹಾಕಿದರು. ಬ್ರಿಟಿಷ್ ಸರಕಾರ ನೀಡಿದ ತೋಟೆಯ ಕೋವಿಯನ್ನು ಗುತ್ತಿನ ಚಾವಡಿಯ ಗೋಡೆಯಲ್ಲಿ ಅಲಂಕರಿಸಿ ಇಡಲು, ತಿಮ್ಮಯಾಚಾರಿಯನ್ನು ಕರೆಸಿದರು. ಆತ ಒಂದು ವಾರ ಕೆಲಸಮಾಡಿ ಬೀಟಿಮರದಿಂದ ಬಹಳ ಸುಂದರವಾದ ಒಂದು ಸ್ಟೇಂಡನ್ನು ಮಾಡಿಕೊಟ್ಟ. ಕೋವಿ ಅದರ ಮೇಲೆ ರಾರಾಜಿಸಿತು.ಈ ಎಲ್ಲ ಘಟನೆಗಳಿಂದ ಗುತ್ತಿನ ಪ್ರತಿಷ್ಠೆ ಇನ್ನಷ್ಟು ಹೆಚ್ಚಿತು. ವೆಂಕಪ್ಪ ಹೆಗ್ಡೆಯವರು ಗುತ್ತಿನ ಅಂಗಳದಿಂದ ಹೊರಗೆ ಕಾಲಿಟ್ಟ ಕೂಡಲೇ ಆಳುಕಾಳುಗಳೆಲ್ಲ ಸದಾ ಹಿಂಬಾಲಿಸಲು ಪ್ರಾರಂಭಿಸಿದರು. ಅವರಿಗೆ ಬಿಸಿಲು ಬೀಳದ ಹಾಗೆ, ಮಳೆ ಬೀಳದ ಹಾಗೆ ಕೊಡೆ ಹಿಡಿಯಲೂ ಒಬ್ಬ ಆಳು ನೇಮಕಗೊಂಡ. ಆ ದಾರಿಯಲ್ಲಿ ಈ ದಾರಿಯಲ್ಲಿ ಅವರು ನಡೆದು ಬರುತ್ತಿದ್ದರೆ ಜನರು ಮಾರುದ್ದ ದೂರ ನಿಂತು ನಮಸ್ಕರಿಸಲು ಸನ್ನದ್ಧರಾದರು. ಆದರೆ ಇದನ್ನೆಲ್ಲ ನೋಡಿದ ಮಿತ್ತಗುತ್ತಿನ ಭೋಜ ಶೆಟ್ಟಿಗೆ ತಡೆಯಲಾರದಷ್ಟು ಹೊಟ್ಟೆ ಉರಿ ಪ್ರಾರಂಭವಾಯಿತು. ಮಿತ್ತಗುತ್ತು ಎನ್ನುವುದು ಸಾಂತೇರ್ ಗುತ್ತಿನ ಕೈಕೆಳಗಿನ ಗುತ್ತು. ಈ ಗುತ್ತಿನ ಉತ್ಪತ್ತಿ ಸಾಂತೇರ್ ಗುತ್ತಿನ ಎದುರು ಏನೂ ಅಲ್ಲ. ಆದರೆ ಭೋಜ ಶೆಟ್ಟಿಯನ್ನು ಕೇಳಿದರೆ, ಎರಡು ಮೂರು ತಲೆಮಾರುಗಳ ಹಿಂದೆ ಮಿತ್ತಗುತ್ತಿನ ಹಿರಿಯರ ಒಂದು ಪಾಲು ಈ ಸಾಂತೇರ್ ಗುತ್ತಿನಲ್ಲಿ ಬಂದು ಕೆಲಸಕ್ಕೆ ಬಂಟರಾಗಿ ನಿಂತವರು. ಅಲ್ಲಿದ್ದ ಜೈನರು ನಿರ್ವಂಶವಾಗುತ್ತಿದ್ದ ಹಾಗೆ ಇದು ತಮ್ಮದೆಂದು ಮಾಡಿಕೊಂಡವರೂ ಅವರೇ. ನಿಜ ಹೇಳುವುದಾದರೆ ಎರಡೂ ಗುತ್ತಿನ ಬಳಿ (ಗೋತ್ರ) ಒಂದೇ. ಕುಲನಾಮ ಕೂಡಾ ಶೆಟ್ಟಿಯೇ. ಆದರೆ ಸಾಂತೇರ್ ಗುತ್ತಿನ ಯಜಮಾನನಾಗುವವನಿಗೆ ‘ಗಡಿ ಪತ್ತು’ನ ಧಾರ್ಮಿಕ ವಿಧಿ ಇರುವುದರಿಂದ ಆತನ ಕುಲನಾಮ ಮರೆಯಾಗಿ ಗಡಿ ಹಿಡಿದ ನಂತರ ಆತ ‘ಹೆಗ್ಡೆ’ ಎಂದು ಆಗುತ್ತಾನೆ. ಅದು ಬಿಟ್ಟರೆ ಎರಡೂ ಮನೆತನಗಳ ಸ್ಥಾನಮಾನ ಒಂದೇ. ಅಷ್ಟೇ ಅಲ್ಲ, ರಕ್ತ ಸಂಬಂಧವೂ ಪರಸ್ಪರ ನಿಷಿದ್ಧ. ಹಾಗಾಗಿ ಈಗ ಸಾಂತೇರ್ ಗುತ್ತಿನವರು ಆರೋಪಿಸುವ ಹಾಗೆ, ಮಿತ್ತಗುತ್ತಿನವರು ಸಾಂತೇರ್ ಗುತ್ತಿನ ಹೆಣ್ಣನ್ನು ಕೇಳಿದ್ದೂ ಇಲ್ಲ. ಕೇಳುವ ಸಂಭವವೂ ಇರಲಿಲ್ಲ. ಇದೆಲ್ಲ ಸುಮ್ಮನೇ ಆ ಅಂಬಕ್ಕೆ ಹೊತ್ತು ಕಳೆಯಲಿಕ್ಕೆ ಹೇಳುವ ಕಂತೆ ಪುರಾಣಗಳು ಅಷ್ಟೇ.ಆದರೆ, ಹೀಗೆ ಹೇಳುವ ಮಿತ್ತಗುತ್ತಿನ ಭೋಜ ಶೆಟ್ಟಿಯನ್ನು, ಊರ ಮಂದಿ ‘ಆ ಶೆಟ್ಟರ ಮಾತೊ, ಬಿಡಿ. ಸಾಂತೇರ್ ಗುತ್ತೆಲ್ಲಿ? ಮಿತ್ತಗುತ್ತೆಲ್ಲಿ? ಇದೆಲ್ಲ ಇವರ ಪಟಾಕಿ!’ ಎಂದು ಹೇಳುವುದಷ್ಟೇ ಅಲ್ಲ, ಭೋಜ ಶೆಟ್ಟರನ್ನು ‘ಮಡೆಂಜಿ’ ಎಂದು ಹಿಂಬದಿಯಿಂದ ಕರೆಯುತ್ತಾರೆ. ಮಡೆಂಜಿ ಎನ್ನುವುದು ಒಂದು ಜಾತಿಯ ಮೀನಿನ ಹೆಸರು. ಆ ಮೀನು ಇದ್ದಲ್ಲಿ , ಕೆರೆನೀರು ತಿಳಿಯಾಗಿರುವುದು ಸಾಧ್ಯವಿಲ್ಲ. ಭೋಜ ಶೆಟ್ಟರಿದ್ದಲ್ಲೂ ಅಷ್ಟೆ. ಏನಾದರೊಂದು ತರಲೆ, ತಕರಾರು ಇರುತ್ತದೆ ಎಂಬರ್ಥದ ಮಾತು ಅದು. + +ಇಂಥ ಭೋಜ ಶೆಟ್ಟಿಗೆ ಸಾಂತೇರ್ ಗುತ್ತಿಗೆ – ಪಠೇಲಿಕೆ ಮತ್ತು ತೋಟೆಯ ಕೋವಿ ಸಿಕ್ಕಿದ ಮೇಲೆ, ತನ್ನ ಮಾತನ್ನು ಕೇಳುವವರೇ ಇಲ್ಲ ಅನಿಸಿತು. ಹಾಗೆಂದು, ಗುತ್ತಿನವರನ್ನು ನಿಷ್ಠುರ ಮಾಡಿಕೊಂಡರೂ ಸುಖವಿಲ್ಲ. ಅವರನ್ನು ಹೆಚ್ಚು ಹಚ್ಚಿಕೊಳ್ಳುವುದರಿಂದ ಲಾಭವಂತೂ ಇಲ್ಲವೇ ಇಲ್ಲ. ಈಗ ಏನಾದರೂ ಉಪಾಯ ಹೂಡಿ, ಸಂದರ್ಭ ಸೃಷ್ಟಿಸಿ ಈ ಗುತ್ತಿನ ಗೌರವ ತಗ್ಗಿಸುವ ಕೆಲಸ ಮಾಡಬೇಕೆಂದು ಯೋಚಿಸಹತ್ತಿದ. + +ಆದರೆ ಅಂತಹ ಸಂದರ್ಭಗಳು ಫಕ್ಕನೆ ಸೃಷ್ಟಿಯಾಗುವ ಹಾಗೆ ಇರಲಿಲ್ಲ. ಒಂದು ತಿಂಗಳಾಯಿತು, ಎರಡು ತಿಂಗಳಾಯಿತು. ಭೋಜ ಶೆಟ್ಟಿ ಕಾದದ್ದೇ ಬಂತು. ಊಹ್ಞೂಂ. ಏನೂ ಸಂದರ್ಭಗಳೇ ಒದಗಿ ಬರಲಿಲ್ಲ. ಈ ನಡುವೆ, ದೊರೆ ಉಡುಗೊರೆ ನೀಡಿದ ಕೋವಿ, ಮತ್ತು ಪಠೇಲಿಕೆ ಸನದುಗಳನ್ನು ಕಣ್ಣಲ್ಲಾದರೂ ನೋಡಬೇಕು, ಆನಂದಿಸುವುದಕ್ಕಲ್ಲ, ಕರುಬಲಾದರೂ ಎಂಬಂತೆ ಶೆಟ್ಟಿ ಕಾಯುತ್ತಿದ್ದ. ಸುಮ್ಮನೆ ಹೋಗಿ ಕೋವಿ ನೋಡುವುದು, ಸನದು ಓದುವುದು ಅಂದರೆ ಅದು ತನಗೇ ಅಗೌರವ. ಅದರ ಬದಲು ಏನಾದರೂ ಉದ್ದೇಶ ಇಟ್ಟುಕೊಂಡು ಹೋಗಿ ನೋಡಿಕೊಂಡು ಬರಬೇಕು ಎಂದುಕೊಂಡ ಭೋಜ ಶೆಟ್ಟಿ. ಆದರೆ ಅವನ ದುರದೃಷ್ಟ – ಅಂತಹ ಅವಕಾಶವೂ ಫಕ್ಕನೇ ಒದಗಿ ಬರಲಿಲ್ಲ. + +ಕೊನೆಗೊಮ್ಮೆ ಸುಮ್ಮನೇ ಸಾಂತೇರ್ ಗುತ್ತಿನ ಚಾವಡಿಗೆ ಹೋದ. ವೆಂಕಪ್ಪ ಹೆಗ್ಡೆಯವರು ‘ಬನ್ನಿ ಶೆಟ್ಟರೇ ಬನ್ನಿ. ಬಹಳ ದಿನಗಳಾಯ್ತು ನಿಮ್ಮನ್ನು ನೋಡದೇ. ನಮ್ಮ ಮನೆಯ ಮದುವೆಯ ನಂತರ ನೀವು ಬರಲೇ ಇಲ್ಲ. ಈ ಕಡೆ ಬರುವಿರಿ ಎಂದುಕೊಂಡಿದ್ದೆ’ ಎಂದೆಲ್ಲಾ ಹೇಳಿ ಸ್ವಾಗತಿಸಿ ‘ಏನು ಮತ್ತೆ ವಿಶೇಷ?’ ಎಂದು ಪ್ರಶ್ನಿಸಿದರು. + +ಭೋಜ ಶೆಟ್ಟಿ “ಗುತ್ತಿಗೆ ಒಂದು ದೊಡ್ಡ ಗೌರವ ಬಂತಲ್ಲ! ಅದನ್ನು ನೋಡಿ ನಿಮ್ಮನ್ನು ಅಭಿನಂದಿಸಿ ಹೋಗೋಣ ಎಂದಿದ್ದೆ. ಯಾವ್ಯಾವುದೋ ಸುಡುಗಾಡು ಕೆಲಸಗಳು ಕೈತುಂಬ ಇದ್ದವು. ಬರಲಾಗಲೇ ಇಲ್ಲ. ಹ್ಹಿ ಹ್ಹಿ!” ಎಂದು ನಗುತ್ತಾ ‘ಇದೇ ಏನು ಪಠೇಲಿಕೆಯ ಸನದು?’ ಎಂದು, ಕಟ್ಟು ಹಾಕಿಟ್ಟ ಸನದನ್ನು ಕೈಯಲ್ಲಿ ಎತ್ತಿ ಹಿಡಿದು ಓದಿ ನೋಡುವ ಹಾಗೆ ನೋಡಿದ. ಆಮೇಲೆ ಬಹಳ ಜಾಗರೂಕವಾಗಿ ತೋಟೆಯ ಕೋವಿಯನ್ನು ತೆಗೆದು, ‘ಎಷ್ಟು ಭಾರ ಹೆಗ್ಡೇರೆ ಇದು!’ ಎಂದು ಎತ್ತಿ ಅದನ್ನು ತನ್ನ ತೊಡೆಯ ಮೇಲಿಟ್ಟು ನಯವಾಗಿ ನೀವಿದ. ಆಮೇಲೆ ಗುಂಡು ಹೇಗೆ ತುಂಬುವುದು, ಈಡು ಹೇಗೆ ಮಾಡುವುದು ಎಂಬುದನ್ನೆಲ್ಲ ವಿವರವಾಗಿ ಕೇಳಿ ಅದು ಎಲ್ಲಿತ್ತೋ ಅಲ್ಲಿಯೇ ಇರಿಸಿ, ತಮ್ಮ ಮನೆಯಲ್ಲಿರುವ ನಾಡಕೋವಿಯನ್ನು ನೆನಪಿಸಿಕೊಂಡ. ತಾನು ಆ ಕೋವಿಯನ್ನು ವರುಷಕ್ಕೆ ಒಂದೋ ಎರಡೋ ಬಾರಿ, ಮದ್ದು ತುಂಬಿ, ತೆಂಗಿನ ನಾರನ್ನು ಹಾಕಿ ಜಡಿದು ಹೆಗಲ ಮೇಲಿಟ್ಟುಕೊಂಡು ನಾಲ್ಕು ಜನ ಓಡಾಡುವಲ್ಲಿ ಆತ ಕಾಣಿಸಿಕೊಳ್ಳುವುದುಂಟು. ಯಾವುದಾದರೂ ಕಾಡು ಪ್ರಾಣಿಯ ಹೆಸರು ಹೇಳಿ “ಎಂಥ ಉಪದ್ರವ ಮಾರಾಯರೇ, ಈ ದಿನ ರಾತ್ರೆ ಈಡು ಮಾಡುತ್ತೇನೆ ನೋಡಿ!” ಎಂದು ಜನರ ಗಮನವನ್ನು ತನ್ನೆಡೆಗೆ ಸೆಳೆದು, “ಭೋಜ ಶೆಟ್ರು ಈ ರಾತ್ರೆ ಖಂಡಿತ ಈಡು ಮಾಡುತ್ತಾರೆ” ಎನ್ನುವಂಥ ಅಭಿಪ್ರಾಯವನ್ನು ಜನರಲ್ಲಿ ಬಿತ್ತುವುದುಂಟು. ಆಮೇಲೆ, ಈಡು ಆಗಿದೆ ಎಂದು ಆಗಬೇಕಲ್ಲ! ಅದಕ್ಕಾಗಿ ಆತ ಒಂದರ್ಧ ಗಂಟೆ ಕಾಡಿನಲ್ಲೋ ಹೊಲದ ಬದಿಯಲ್ಲೋ ಓಡಾಡುವುದು ರೂಢಿ. ಪ್ರಾಣಿ ಸಿಗದಿದ್ದರೂ, ಆಕಾಶಕ್ಕೊಂದು ಈಡು ಮಾಡಿ ಢಂ ಎಂದು ನಾಲ್ಕೂ ಕಡೆ ಶಬ್ದ ಕೇಳಿಸಿದ ಮೇಲೆಯೇ ಆತ ಮನೆಗೆ ಮರಳುವುದು. ಮನೆ ಮಂದಿ ಈಡಾಯಿತೇ ಏಂದು ಕೇಳಿದರೆ- ‘ಒಂದೇ ಗೇಣದಲ್ಲಿ ತಪ್ಪಿಹೋಯಿತು ನೋಡಿ!’ ಎಂದು ಹೇಳುವನು. ಊರ ಮಂದಿ ‘ಈಡಾಗಿತ್ತೇ ಶೆಟ್ಟರೇ ನಿನ್ನೆ ರಾತ್ರಿ?’ ಎಂದರೆ ‘ಹ್ಞೂ. ಒಂದು ಬರಿಂಕ ಬಿತ್ತು’ ಎಂದೋ ಅಥವಾ “ಹಂದಿಗೆ ಈಡಾಗಿತ್ತು ಮಾರಾಯ, ಅರ್ಧ ಪೆಟ್ಟಾಗಿರಬೇಕು ಅದಕ್ಕೆ. ಆದರೆ ಅದು ಎಲ್ಲಿ ಓಡಿಹೋಯಿತೋ ಏನೋ. ನಾಲ್ಕು ದಿನದ ಮೇಲೆ ಅದು ಸತ್ತ ವಾಸನೆಯಿಂದ ಗೊತ್ತಾಗಬೇಕು!’ ಎನ್ನುತ್ತಿದ್ದುದೇ ಹೆಚ್ಚು. + +ಇಂಥ (ಮಡೆಂಜಿ) ಭೋಜ ಶೆಟ್ಟಿಗೆ ಸಾಂತೇರುಗುತ್ತಿನ ಗೌರವಕ್ಕೆ ಚ್ಯುತಿ ಬರುವ ಪ್ರಸಂಗ ಏನಾದರೂ ನಡೆಯಬಾರದೇ ಎಂಬ ದುರಾಲೋಚನೆ ಸದಾ ಕಾಡುತ್ತಿತ್ತು. ಅದಕ್ಕಾಗಿ ಅವನು ಕಾಯುತ್ತಿದ್ದನೆನ್ನುವಂತೆ ಇದ್ದಾಗ, ಮಂಗಳೂರಿಗೆ ಹೊಸತಾಗಿ ರೈಲು ಸರ್ವಿಸ್ ಪ್ರಾರಂಭವಾಗುವ ಸುದ್ದಿ ಬಂತು. ನಾಡಿದು ಸೋಮವಾರ ಪ್ರಾರಂಭವಾಗುತ್ತದಂತೆ ಎಂದಿದ್ದದ್ದು, ಮತ್ತೂ ಎರಡು ಸೋಮವಾರ ಕಳೆದು ಮೂರನೇ ಸೋಮವಾರದಂದು, ಮಂಗಳೂರು ರೈಲ್ವೆ ನಿಲ್ದಾಣಕ್ಕೆ ಮದ್ರಾಸಿನಿಂದ ರೈಲು ಬಂದು ನಿಲ್ಲುವುದು ಖಾತ್ರಿ ಎಂಬ ಸುದ್ದಿ ಬಂತು. ಜೂನ್ 1907ರ ಮೂರನೇ ಸೋಮವಾರ ಮಂಗಳೂರಿಗೆ ಬೆಳಗ್ಗೆ ಬರುವ ರೈಲು ಅದೇ ದಿನ ಸಂಜೆ ಮೂರು ಗಂಟೆಗೆ ಮತ್ತೆ ಮದ್ರಾಸಿಗೇ ಹೊರಡುತ್ತದಂತೆ. ಆ ರೈಲು ಉಳ್ಳಾಲ ಮಂಜೇಶ್ವರ ಕುಂಬ್ಳೆ ಕಾಸರಗೋಡುಗಳಲ್ಲೂ ನಿಲ್ಲುವುದಂತೆ ಎಂಬ ಸುದ್ದಿಯೂ ಹಬ್ಬಿತು. ರೈಲನ್ನೇ ನೋಡಿರದ ಈ ಪ್ರದೇಶದ ಮಂದಿ ಆ ದಿನ ರೈಲಿನಲ್ಲಿ ಪ್ರಯಾಣಿಸಲು ಇಲ್ಲವೇ ರೈಲನ್ನು ನೋಡಲು ಅದು ಪ್ರಾರಂಭವಾಗುವ ಮುನ್ನಾದಿನದ ರಾತ್ರೆಯಿಂದಲೇ ಕುತ್ತಿಗೆ ಉದ್ದ ಮಾಡಿ ಕಾಯತೊಡಗಿದರು. ಕೆಲವರಂತೂ ರೈಲು ತಮ್ಮ ಮನೆಯಂಗಳಕ್ಕೆ ಬರುತ್ತದೆನ್ನುವ ಹಾಗೆ ಸಂಭ್ರಮಪಟ್ಟರು. + +ಭೋಜ ಶೆಟ್ಟಿ ಈ ತನಕ ರೈಲನ್ನು ನೋಡಿರದಿದ್ದರೂ ಅದು ಹಾಗೆ ಉಂಟು, ಹೀಗೆ ಉಂಟು ಎಂದು ಖುದ್ದಾಗಿ ತಾನೇ ನೋಡಿ ಬಂದ ಹಾಗೆ ದಾರಿಯಲ್ಲಿ ಹೋಗುವವರನ್ನು ಕರೆದು ಇಲ್ಲವೇ ತಡೆದು ತನಗೆ ಗೊತ್ತಿರುವುದನ್ನು ಗೊತ್ತಿರುವುದಕ್ಕಿಂತಲೂ ಹೆಚ್ಚಾಗಿ ವರ್ಣಿಸತೊಡಗಿದ. “ನಾನು ರೈಲು ಮಂಗಳೂರಿಗೆ ಬರುವ ದಿನವೇ ಹೋಗಬೇಕೆಂದಿದ್ದೇನೆ. ನೀವು ಬರುವುದಾದರೆ ಬನ್ನಿ” ಎಂದು ಮೀನಿನ ವ್ಯಾಪಾರಿ ಶೇಕಬ್ಬನನ್ನು, ಕಟ್ಟಿಗೆ ವ್ಯಾಪಾರಿ ಮೋಂತು ಪರ್ಬುವನ್ನು, ಅಲ್ಲದೆ ಇನ್ನು ನಾಲ್ಕಾರು ಮಂದಿಯನ್ನೂ ಭೋಜ ಶೆಟ್ಟಿ ಆಹ್ವಾನಿಸಿದ್ದ. ಆದರೆ ಅವರೆಲ್ಲ ಬಿಡಿ, ಇವನು ಆಹ್ವಾನಿಸಿದ ಯಾರೊಬ್ಬರೂ “ಶೆಟ್ಟರೇ, ನಿಮಗೇನು ಅವಸರ? ಒಮ್ಮೆ ಮಂಗಳೂರಿಗೆ ರೈಲು ಬರುವುದು ಪ್ರಾರಂಭವಾಯಿತೋ, ಆಮೇಲೆ ದಿನಾ ಅದು ಬಂದು ಹೋಗುತ್ತದಲ್ಲ? ಹೊಸತಾಗಿ ರೈಲು ಬರುವುದು ಪ್ರಾರಂಭವಾಯಿತೋ, ಆಮೇಲೆ ದಿನಾ ಅದು ಬಂದು ಹೋಗುತ್ತದಲ್ಲ? ಹೊಸತಾಗಿ ರೈಲು ಮಂಗಳೂರಿಗೆ ಬರುವ ದಿನ ಎಷ್ಟು ಜನ ಸೇರುತ್ತಾರೋ ಏನೋ. ಆ ಗಲಾಟೆಯಲ್ಲಿ ಯಾರ ಯಾರ ಕಾಲಡಿಗೆ ಬಿದ್ದು ನಮ್ಮ ಕೈಕಾಲು ಮುರಿಸಿಕೊಳ್ಳುವುದಕ್ಕಿಂತ ನಿಧಾನವಾಗಿ ಒಮ್ಮೆ ನಾವು ಹೋದರಾಯಿತು ಬಿಡಿ! ಎಂದು ಪ್ರತಿಯಾಡಿ, ಶೆಟ್ಟಿಯ ಜೊತೆಗೂಡಲು ನಿರಾಕರಿಸಿದರು. ‘ಹೌದಲ್ಲ?’ ಎಂದು ಭೋಜ ಶೆಟ್ಟಿಯೂ ರೈಲು ಮಂಗಳೂರಿಗೆ ಬರುವ ಮೊದಲೇ ದಿನವೇ ತಾನು ಮಂಗಳೂರಿಗೆ ಹೋಗಬೇಕೆಂಬ ನಿರ್ಧಾರದಿಂದ ಹಿಂದೆ ಸರಿದ. + +ರೈಲು ಮಂಗಳೂರಿಗೆ ಬಂದು ಹೋದ ಸುದ್ದಿ, ಮಂಗಳೂರಿನಲ್ಲಿ ಜನವೋ ಜನ ಎಂಬ ವಿಷಯ, ಆ ದಿನಗಳಲ್ಲಿ ಯಾವ ವಾರ್ತಾಪತ್ರಿಕೆಗಳೂ ಇಲ್ಲದ್ದರಿಂದ ಒಬ್ಬರಿಂದ ಮತ್ತೊಬ್ಬರಿಗೆ ನಿಧಾನವಾಗಿ ಹಬ್ಬಿತು. ‘ಎಷ್ಟು ಜನರಿದ್ದರಂತೆ ಅಲ್ಲಿ?’ ಎಂದು ಒಬ್ಬರು ಕೇಳಿದರೆ, ಇನ್ನೊಬ್ಬರು ನಮ್ಮ, ‘ಉಳ್ಳಾಲದ ದರ್ಗಾದ ಜಾತ್ರೆಗಿಂತಲೂ ಹೆಚ್ಚು’ ಎಂದರು. ಮಗದೊಬ್ಬರು ‘ಮಂಜೇಶ್ವರದ ತೇರಿಗಿಂತ ಹೆಚ್ಚೇ?’ ಎಂದು ಪ್ರಶ್ನಿಸಿದರು. ಭೋಜ ಶೆಟ್ಟಿ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದೆ, ರೈಲು ಸರ್ವಿಸ್ ಪ್ರಾರಂಭವಾಗಿ ವಾರ ಕಳೆದ ಮೇಲೆ, ಮಂಗಳೂರಿಗೆ ಹೋಗಿ ರೈಲ್ವೇ ಸ್ಟೇಶನಿನಲ್ಲಿ ಇಳಿದಾಗ, ಅದೇ ರೈಲಿನಿಂದ ತನ್ನ ದೂರದ ಬಂಧು ಉಪ್ಪಳದ ಸೀನಪ್ಪ ರೈಗಳೂ ಇಳಿಯುವುದು ಕಂಡಿತು. ‘ಏನು ಭಾವ?’ (ದಾನೆ ಭಾವ?) ಎಂದು ಇಬ್ಬರೂ ಕುಶಲ ವಿಚಾರಿಸಿಕೊಂಡ ಮೇಲೆ, ಇಬ್ಬರೂ ರೈಲಿನ ಪ್ರಯಾಣದ ಅನುಭವ ಹೇಗಿದೆ ಎಂದು ನೋಡಲಿಕ್ಕಾಗಿಯೇ ಮಂಗಳೂರಿಗೆ ಹೊರಟಿದ್ದು ಎಂದರೆ ತಾವು ಸಣ್ಣವರಾಗುತ್ತೇವೆ ಎಂದುಕೊಂಡು ಹೇಳದೇ ಉಳಿದರು. ಪರಸ್ಪರ ತಾವು ಬಂದ ಉದ್ದೇಶವನ್ನು ಮರೆ ಮಾಚಿದ ಹಾಗೆ ಬೇರೆ ಏನನ್ನೋ ಹೇಳಿಕೊಂಡರು. ‘ನನಗೆ ಬಂದರಿನಲ್ಲಿ ಕೆಲಸ’ ಎಂದು ರೈಗಳು ಹೇಳಿದರೆ ‘ನನಗೆ ರಥಬೀದಿಯಲ್ಲಿ’ ಎಂದ ಭೋಜಶೆಟ್ಟಿ. ಆದರೂ ಇಬ್ಬರೂ ಒಟ್ಟಿಗೆ – ಒಂದು ಕಾಫಿ ಕುಡಿಯುವುದು ಒಳ್ಳೆಯದು ಎಂಬ ಸಹಮತಕ್ಕೆ ಬಂದರು. ಆ ದಿನಗಳಲ್ಲಿ ಹಂಪನಕಟ್ಟೆಯಲ್ಲಿ, ಹಂಚು ಹೊದೆಸಿದ್ದ (ಉಳಿದ ಅನೇಕ ಕಟ್ಟಡಗಳಿಗೆ ಮುಳಿಹುಲ್ಲಿನ ಮಾಡು ಇತ್ತು). ವೆಂಕಟೇಶ ಪೈಗಳ (ಮಂಗಳೂರಿನಲ್ಲೇ ಮೊದಲನೆಯದೆನ್ನಬಹುದಾದ) ಕಾಫಿ ಹೋಟೇಲಿನೊಳಗೆ ಇಬ್ಬರೂ ಹೊಕ್ಕರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಇಬ್ಬರೂ ಕಾಫಿ ತಿಂಡಿ – ಸ್ವೀಕರಿಸುತ್ತಿದ್ದ ಹಾಗೆ, ಸೀನಪ್ಪ ರೈ ‘ನಿಮ್ಮ ಸಾಂತೇರ್ ಗುತ್ತಿನ ಹುಡುಗಿಯೊಬ್ಬಳನ್ನು ಕೋಚ್ ಮನ್ ದೊರೆಯೊಬ್ಬ ಮದುವೆಯಾದರಂತೆ ಅಲ್ವಾ? ಆಮೇಲೆ ಗುತ್ತಿನ ಮನೆಗೆ ಪಠೇಲಿಕೆಯ ಸನದು, ತೋಟೆಯ ಕೋವಿಯ ಲೈಸನ್ಸ್ ಎಲ್ಲವೂ ಬಂತಂತೆ, ನಿಜವಾ?’ ಎಂದು ಪ್ರಶ್ನಿಸಿದರು, ಭೋಜ ಶೆಟ್ಟಿಯನ್ನು. + +‘ಹೌದಪ್ಪಾ ಹೌದು!’ ಎಂದು ತುಸು ವಿಷಾದದಿಂದ, ಆಮೇಲೆ ವ್ಯಂಗ್ಯದಿಂದ ಭೋಜಶೆಟ್ಟಿ ಮಾತಿಗೆ ಪ್ರಾರಂಭಿಸಿದ. “ಹೊಳೆಯ ನೀರು ಬೆಟ್ಟಕ್ಕೆ ಹರಿಯುತ್ತಾ? ಸಮುದ್ರಕ್ಕಲ್ಲವೇ ಹೋಗುವುದು! ಗುತ್ತಿನ ಹುಡುಗಿಗಿಂತ ಎರಡು ಪಟ್ಟು ಚೆಂದದ ಹುಡುಗಿ ನಮ್ಮ ಮನೆಯಲ್ಲಿದ್ದಾಳೆ, ಅಂದರೆ ಯಾರು ಕೇಳುತ್ತಾರೆ? ಆದರೆ ನಾವು ಅದನ್ನು ಟಂಟಂ ಮಾಡಲಾಗುತ್ತದಾ? ಆ ದೊರೆ – ದಾರಿಯಲ್ಲಿ ಹೋಗುತ್ತಾ ಹೊನ್ನೆ ಮರದಲ್ಲಿ ಜೋಕಾಲಿ ಆಡುತ್ತಾ ಕುಳಿತಿದ್ದ ಆ ಕರಿ ಹುಡುಗಿಯನ್ನು ನೋಡಿ ಯಾಕೆ ಮರುಳಾದನೋ! ದೇವರಿಗೇ ಗೊತ್ತು. ಆಕೆ ಮರದಿಂದ ಜಿಗಿದು ಓಡಿದ್ದನ್ನು ನೋಡಿ ಆತ ‘ಶಹಭಾಸ್’ ಎಂದು ಅವಳನ್ನು ಮದುವೆಯಾಗಲು ಹೊರಟ ಅಂದರೆ ಹುಚ್ಚ ಎಂದೇ ಅರ್ಥ. ಗುತ್ತಿನ ಮನೆಯ ಹುಡುಗಿಗೆ ಗುತ್ತಿನಲ್ಲಿ ಮಾಡಲು ಏನೂ ಕೆಲಸ ಇರಲಿಲ್ಲ ಎಂದೇ ಜೋಕಾಲಿ ಆಡುತ್ತಾ ಕುಳಿತಿದ್ದಳು ಆಕೆ! ನಮ್ಮಂಥವರ ಮನೆಯ ಹುಡುಗಿಯರಿಗೆ ಇದಕ್ಕೆಲ್ಲ ಬಿಡುವೆಲ್ಲಿದೆ ಹೇಳಿ? ಅದೂ ಅಲ್ಲದೆ ಹಾಗೆಲ್ಲ ಜೋಕಾಲಿ ಆಡಿದರೂ, ಊರ ಮಂದಿ ಏನು ಹೇಳಿಯಾರು ಎಂಬ ಗೊಡವೆ ಬೇಡವೇ ಆಕೆಗೆ? ಗಂಡು ಬೀರಿ ಆಕೆ. ನಾಲ್ಕು ಜನ ಹೋಗುವ ದಾರಿಗೆ ಎದುರಾಗಿ ಪ್ರಾಯಕ್ಕೆ ಬಂದ ಮೇಲೆ ಜೋಕಾಲಿಯಾಡುವುದು ಎಷ್ಟು ಸರಿ ಹೇಳಿ? ಶ್ರೀಮಂತರ ಮನೆಯವರು ಏನು ಮಾಡಿದರೂ ನಡೆಯುತ್ತದೆ. ನಮ್ಮಂಥವರು ಮಾಡಿದರೆ, ‘ಹುಡುಗಿಯನ್ನು ಮಾರಾಟಕ್ಕೆ ಇಟ್ಟಿದ್ದಾರೆ ನೋಡಿ!’ ಎನ್ನುತ್ತಿರಲಿಲ್ಲವೇ ಜನ?’ ಎಂದು ಭೋಜ ಶೆಟ್ಟ ಆಡುತ್ತಿರುವಷ್ಟರಲ್ಲಿ,‘ನೋಡಿ ಭಾವ, ಅದೆಲ್ಲ ಆ ಹುಡುಗಿಯ ಯೋಗ! ಇಷ್ಟಕ್ಕೂ ನಾವು ‘ಸಂಭ್ರಮ’ ಪಡುವಂಥಾದ್ದು ಏನು ಇದೆ ಇದರಲ್ಲಿ?’ ಎಂದು ಸೀನಪ್ಪ ರೈಗಳು ‘ಥತ್’ ಎಂದು ಎರಡು ಸಲ ಸೀನಿ, ಎಡದ ಕೈಯಿಂದ ಮೂಗನ್ನು ಒರಸಿಕೊಂಡು ತುಸು ತಗ್ಗಿದ ಸ್ವರದಲ್ಲಿ ಹೇಳಿದರು. “ಈ ದೊರೆಗಳ ಮರ್ಜಿ ನಿಮಗೆ ಗೊತ್ತುಂಟಾ? ಹೆಣ್ಣು ಅಂದರೆ ಅವರಿಗೆ ಬರೇ ಭೋಗದ ವಸ್ತು ಮಾರಾಯ! ನಾಲ್ಕು ದಿನ ರಾತ್ರೆ ಹಗಲು ಜೊತೆಯಲ್ಲಿ ಮಲಗಿಸಿಕೊಂಡು ಸಾಕು, ಇನ್ನು ನಡಿ ನಿನ್ನ ಮನೆಗೆ!” ಎನ್ನಲೂ ಹೇಸದ ಮಂದಿ ಅವರು. ಪ್ರತಿಭಟಿಸಲಿಕ್ಕಾಗುತ್ತದಾ ನಮಗೆ? ಬ್ರಿಟಿಷ್ ದೊರೆಗಳಲ್ಲವೇ ಅವರು!” ಎಂದು. ಆಮೇಲೆ ಒಂದು ನಿಮಿಷ ತಡೆದು, “ಚಿಕ್ಕಮಗಳೂರಿನಲ್ಲಿ ಒಬ್ಬ ದೊರೆ ಅಲ್ಲಿಯ ಗೌಡರ ಹುಡುಗಿಯನ್ನು ಹೀಗೆಯೇ ಮದುವೇ ಆಗಿ, ಆರೇ ತಿಂಗಳಲ್ಲಿ ಕೈ ಕೊಟ್ಟನಂತೆ. ಗೌಡರ ತೋಟಕ್ಕೆ ಆಳುಕಟ್ಟುವ, ನಮ್ಮ ಕಾರ್ಕಳದ ನಂಟನೊಬ್ಬ ಮೊನ್ನೆ ನಮ್ಮ ಮನೆಗೆ ಬಂದವನು ಹೇಳಿದ್ದು!” ಎಂದರು ಭೋಜಶೆಟ್ಟಿಯಲ್ಲಿ ಇಲ್ಲದ ಕುತೂಹಲ ಕೆರಳುವ ಹಾಗೆ. + +‘ಹೌದಾ?’ ಎಂದು ಹೌಹಾರಿದ ಭೋಜ ಶೆಟ್ಟಿಗೆ ಒಳಗೊಳಗೇ ‘ಹಾಗಾಗದಿರಲಿ, ದೇವರೇ!’ ಎಂದೂ ಅನಿಸಿತು. ವಾಸ್ತವವಾಗಿ ಅವನಿಗೆ ಗುತ್ತಿನ ಮನೆಯ ಬಗ್ಗೆ ದ್ವೇಷ ಇದ್ದ ಹಾಗೆ ಇರಲಿಲ್ಲ. ತಾನು ಗುತ್ತಿನ ಮನೆಯ ಹೆಗ್ಡೆಯವರಿಗೆ ಸಮಾನ ಎಂಬ ಅಹಂಭಾವವೋ; ಅಥವಾ ಗುತ್ತಿನ ಮನೆಯವರು ಆಗಾಗ ತನ್ನನ್ನು ಕರೆದು, ಊರ ವಿಚಾರದಲ್ಲಿ “ಅದು ಹೇಗೆ? ಇದು ಹೇಗೆ?” ಎಂದು ಕೇಳುತ್ತಿಲ್ಲವಲ್ಲ ಎಂಬ ನೋವೋ ತನ್ನ ಅಸಹನೆಗೆ ಕಾರಣವಾಗಿರಬಹುದು, ಎನ್ನುವುದನ್ನು ಆತನೇ ತಿಳಿದಿರಲಿಲ್ಲ. ‘ಈ ಸೀನಪ್ಪ ರೈಗಳ ಮಾತನ್ನೇ ಊರಲ್ಲಿ ಒಂದಿಷ್ಟು ಟಾಂ ಟಾಂ ಮಾಡಿದರೆ ಗುತ್ತಿನ ಮನೆಯವರು ಹೆದರಿ ಕಂಗಾಲಾಗುತ್ತಾರೆ, ಮಾತ್ರವಲ್ಲ ಅದು ಎಂತದ್ದು ಭೋಜ?’ ಎಂದು ಅಲ್ಲಿಂದ ತನಗೆ ಕರೆಯೂ ಬಂದು ತನ್ನನ್ನು ಮತ್ತೆ ಆಗಾಗ ಮತ್ತೆ ಗುತ್ತಿನ ಮನೆಗೆ ಕರೆಸಿಕೊಳ್ಳುತ್ತಾರೆ, ಎಂಬ ಖುಶಿ ಆಯಿತು ಭೋಜ ಶೆಟ್ಟಿಗೆ. + +ಇಬ್ಬರೂ ಹೊಟೇಲಿನಿಂದ ಹೊರಟು ನಿಂತರು. ಸೀನಪ್ಪ ರೈಗಳು, ತಾನು ಓದಿದ್ದ ಇಂಗ್ಲಿಷ್ ದೈನಿಕವನ್ನು (ದಿ ಹಿಂದೂ) ಮಡಚಿ ಕಂಕುಳಲ್ಲಿ ಇಟ್ಟುಕೊಂಡಿದ್ದನ್ನು ನೋಡಿದ ಭೋಜ ಶೆಟ್ಟಿಗೆ ತಾನೂ ಈ ಇಂಗ್ಲಿಷ್ ಪತ್ರಿಕೆಯನ್ನು ಕೈಯಲ್ಲಿ ಹಿಡಿದುಕೊಂಡರಾದೀತು ಅಂತಲೂ ಅನಿಸಿತು. ‘ನೀವು ಓದಿ ಆಯ್ತೇನು ಆ ಪೇಪರು?’ ಎಂದು ಭೋಜ ಶೆಟ್ಟಿ ಸೀನಪ್ಪ ರೈಗಳಿಗೆ. ರೈಗಳೂ ಹ್ಞೂ ಎಂದು ಪತ್ರಿಕೆಯನ್ನು ಭೋಜ ಶೆಟ್ಟಿಯೆಡೆಗೆ ಚಾಚಿ ತುಸು ಮುಜುಗರದಲ್ಲೇ ‘ನಿಮಗೆ ಇಂಗ್ಲಿಷ್ ಓದಲು ಬರುತ್ತದೇನು?’ ಎಂದು ಪ್ರಶ್ನಿಸಿದರು. + +ಭೋಜ ಶೆಟ್ಟಿಗೆ ಮುಜುಗರವಾಯಿತು. ಅವನು ಆ ದಿನಗಳಲ್ಲಿ ಐದನೇ ಈಯತ್ತೆ ತನಕವಷ್ಟೇ ಶಾಲೆಗೆ ಹೋದದ್ದು. ಇಂಗ್ಲಿಷ್ ಪತ್ರಿಕೆ ಓದುವಷ್ಟು ಇಂಗ್ಲಿಷ್ ಜ್ಞಾನ ಇಲ್ಲದಿದ್ದರೂ ಅಲ್ಪಸ್ವಲ್ಪ ಇಂಗ್ಲಿಷಿನ ಶಬ್ದಗಳ ಜ್ಞಾನ ಅವನಿಗೆ ಇತ್ತು. ಏನೂ ಇಂಗ್ಲಿಷ್ ಜ್ಞಾನ ಇಲ್ಲದ ಮಂದಿಯ ಎದುರು ಅವನು ‘ಇಂಗ್ಲಿಷ್ ಮೆನ್’ (ಇಂಗ್ಲಿಷ್ ಬಲ್ಲವರೆಂದು) ಎಂದು ಮಾನ್ಯವಾಗಿದ್ದ. ಒಂದು ಇಂಗ್ಲಿಷ್ ಪತ್ರಿಕೆಯನ್ನು ವೃಥಾ ಬಿಸಾಕುವುದಕ್ಕಿಂತ, ಬಿಡುವಿದ್ದಾಗ ವಾರವೋ ಹದಿನೈದು ದಿನವೋ ಸ್ವಲ್ಪಸ್ವಲ್ಪ ಓದಿ ಇಂಗ್ಲಿಷ್ ಜ್ಞಾನ ಹೆಚ್ಚಿಸಿಕೊಳ್ಳಬಹುದೆಂಬ ಇರಾದೆ ಶೆಟ್ಟಿಯದ್ದು. ರೈಗಳು ನೇರವಾಗಿ ತನಗೆ ಇಂಗ್ಲಿಷ್ ಓದಲು ಬರುತ್ತದೇನು ಎಂದು ಕೇಳಿದ್ದು ಸರಿಯಲ್ಲ ಅನಿಸಿದರೂ ಉತ್ತರಿಸುವುದು ಅನಿವಾರ್ಯವಾದ್ದರಿಂದ ‘ಹ್ಞೂಂ ಸ್ವಲ್ಪ’ ಎಂದಷ್ಟೇ ಹೇಳಿ, ಅಲ್ಲಿಂದ ‘ಜಾರಿ’ಕೊಂಡ ಭೋಜ ಶೆಟ್ಟಿ. + +ಸಂಜೆ ಉಳ್ಳಾಲದ ಕಮ್ತೀರ ಅಂಗಡಿಗೆ ಮಂಗಳೂರಿನಿಂದ ಬಂದಿಳಿದ ಭೋಜ ಶೆಟ್ಟಿಯನ್ನು ಕಮ್ತೀರು (ಕಾಮತರು) ಶೆಟ್ಟರ ಸವಾರಿ ಎತ್ತಲಿಂದ? ಎಂದು ಕೇಳುವಷ್ಟರಲ್ಲೇ ಭೋಜ ಶೆಟ್ಟ, ತನ್ನ ಮೊದಲ ರೈಲು ಪ್ರಯಾಣದ ಅನುಭವಗಳನ್ನೆಲ್ಲ ಅಲ್ಲಿದ್ದವರು ಕಣ್ಣು ಬಾಯಿ ಬಿಟ್ಟು ಕೇಳುವ ಹಾಗೆ ವಿವರಿಸಿದ. ಆಮೇಲೆ ‘ನೋಡಿ ಇಂಗ್ಲಿಷ್ ಪೇಪರು ಮದ್ರಾಸಿನಿಂದಲೇ ಬರುವುದು. ಇದರಲ್ಲೂ ಮಂಗಳೂರಿಗೆ ರೈಲು ಬಂದ ಸುದ್ದಿ ಬಂದಿದೆ!’ ಎಂದ. ಅಲ್ಲೇ ಇದ್ದು ಇದನ್ನೆಲ್ಲ ಗರಬಡಿದ ಹಾಗೆ ನಿಂತು ಕೇಳುತ್ತಿದ್ದ ಅಡಿಗೆ ಗೋವಿಂದಣ್ಣ ‘ನನಗೂ ಒಮ್ಮೆ ರೈಲಿನಲ್ಲಿ ಹೋಗಬೇಕು ಹಾಗಾದರೆ!’ ಎಂದು ಎದ್ದು ನಿಂತು ಸ್ವಲ್ಪ ಉಮೇದು ತೋರಿಸಿದನು. + +‘ಖಂಡಿತ ಹೋಗಬೇಕು ಭಟ್ರೇ. ನೀವು! ಅಡಿಗೆಗೆ ಹೋಗುವವರಾದರೇನಾಯಿತು? ನಿಮ್ಮಂಥವರಿಗೂ ಈ ಅನುಭವ ಇರಲೇಬೇಕು. ನೀವು ಇನ್ನು ಮುಂದೆ ಮಂಗಳೂರಿಗೆ ಅಡಿಗೆಗೆ ಹೋಗುವುದಾದರೆ ಮುನ್ನಾದಿನವೇ ಹೋಗಬೇಕಾಗಿಲ್ಲ. ಬೆಳಗ್ಗಿನ ಎಂಟು ಗಂಟೆಯ ರೈಲಲ್ಲಿ ಹೋದರೆ ಸಾಕು!’ ಎಂಬ ಪುಕ್ಕಟೆ ಸಲಹೆ ಗೋವಿಂದಣ್ಣನಿಗೆ ಭೋಜ ಶೆಟ್ಟಿ ನೀಡಿದ. + +‘ಹೌದಲ್ಲ. ಬರೋಬ್ಬರಿ. ಶೆಟ್ಟರೇ ತುಂಬ ಒಳ್ಳೇದಾಯ್ತು ಹಾಗಾದರೆ ನನಗೆ!’ ಎಂದು ಅಡಿಗೆ ಗೋವಿಂದಣ್ಣ ಕುತೂಹಲದಲ್ಲಿ ‘ರೈಲಲ್ಲಿ ಹೋಗಬೇಕಾದರೆ ಏನು ಮಾಡಬೇಕು?’ ಎಂದರು. ‘ಮಾಡಲಿಕ್ಕೆ ಎಂತದ್ದುಂಟು ಮಣ್ಣು? ರೈಲಿನಲ್ಲಿ ಹತ್ತಿ ಕುಳಿತರಾಯಿತು. ಆದರೆ ಮಂಗಳೂರು ಬಂತು ಅಂತ ಯಾರೂ ಹೇಳುವುದಿಲ್ಲ. ಅದು ನಿಂತ ಕೂಡಲೇ ನೀವು ಇಳಿದು ನಿಮ್ಮಷ್ಟಕ್ಕೇ ಹೋದರಾಯ್ತು ; ಅಷ್ಟೇ!’ ಎಂದ. + +ಅಡಿಗೆ ಗೋವಿಂದಣ್ಣ – ವಾರದ ಮೇಲೆ ತಾನು ಹೋಗಬೇಕಾಗಿರುವ ಮಂಗಳೂರಿನ ವಕೀಲರ ಮನೆಯ ಅಡಿಗೆಗೆ ರೈಲು ಹತ್ತಿ ಹೋಗುವುದೆಂದು ಖುಶಿಯಿಂದ ಕನಸು ಕಾಣುತ್ತಾ ಹೊರಟು ಹೋದರು. ಇತ್ತ ಭೋಜ ಶೆಟ್ಟಿ ತುಸು ತಗ್ಗಿದ ಸ್ವರದಲ್ಲಿ ‘ಕಮ್ತಿಯವರೇ, ನಿಮಗೊಂದು ವಿಷಯ ಗೊತ್ತುಂಟಾ?’ ಚಿಕ್ಕಮಗಳೂರಿನಲ್ಲಿ, ಕೋಚ್ ಮೆನ್ ದೊರೆಯೊಬ್ಬ ಇಲ್ಲಿ ನಮ್ಮ ಗುತ್ತಿನ ಹುಡುಗಿಯನ್ನು ಮದುವೆಯಾದ ಹಾಗೆ, ಅಲ್ಲಿನ ಗೌಡರ ಹುಡುಗಿಯೊಬ್ಬಳನ್ನು ಮದುವೆಯಾಗಿ ಆರೇ ತಿಂಗಳಲ್ಲಿ ‘ಬೇಡ ನೀನು ಮನೆಗೆ ಹೋಗು!’ ಎಂದು ಕಳುಹಿಸಿದ್ದಾರಂತೆ. ನೋಡಿ, ಈ ಪೇಪರಿನಲ್ಲಿ ಆ ಸುದ್ದಿ ಬಂದಿದೆ! ಬೇಕಾದರೆ ಓದಿನೋಡಿ’ ಎಂದ. + +ಕಾಮತರು – ನೀರುಳ್ಳಿ ಗಡ್ಡೆಗಳನ್ನು ಎತ್ತಿ ತ್ರಾಸಿನಲ್ಲಿ (ತಕ್ಕಡಿ) ಹಾಕಿ ತೂಗಲು ಹೊರಟಿದ್ದರು. ಒಂದು ಕ್ಷಣ ಬೆಪ್ಪಾಗಿ ನಿಂತು ‘ಹೌದಾ?’ ಎಂದು ಬಾಯಿ ಬಿಟ್ಟು ದೇವರೇ, ನಮ್ಮ ಗುತ್ತಿನ ಹುಡುಗಿಯ ಬಾಳು ಹಾಗಾಗದಿರಲಿ! ಎಂದು ತಾವು ನಂಬಿರುವ ಮುಲ್ಕಿ ವೆಂಕಟ್ರಮಣ ದೇವರನ್ನು ಮನಸ್ಸಿನಲ್ಲೇ ಒಂದು ನಿಮಿಷ ಧ್ಯಾನಿಸಿದರು. ‘ಈ ಬ್ರಿಟಿಷ್ ದೊರೆಗಳ ಮರ್ಜಿ ಹೇಳಲಿಕ್ಕಾಗುವುದಿಲ್ಲ ಮಾರಾಯರೇ. ನಿಜವೇ ಇರಬಹುದು. ತಪ್ಪಿಯೂ ಈ ಸುದ್ದಿಯನ್ನು ಗುತ್ತಿನವರ ಕಿವಿಗೆ ಹಾಕಬೇಡಿ. ಆ ಕೊರಪೊಲಿನ ತಾಯಿ ತುಂಗಕ್ಕೆ ಇದನ್ನೆಲ್ಲ ಕೇಳಿದರೆ ಎದೆ ಬಡಿದು ಸತ್ತಾರು ಜೋಕೆ!’ ಎಂದು ಭೋಜ ಶೆಟ್ಟಿಯನ್ನು ಎಚ್ಚರಿಸಿದರು. + +‘ಅದಕ್ಕೇ ನಾನು ಯಾರಿಗೂ ಈ ವಿಚಾರ ಹೇಳಬಾರದು ಅಂತ ಮಾಡಿದ್ದೇನೆ’ ಎಂದ ಭೋಜಶೆಟ್ಟಿ ಅಂಗಡಿಯಲ್ಲಿ, ಜಿನಸಿ ಸಾಮಾನಿಗಾಗಿ ಬಂದು ಕಾದು ಕುಳಿತ ನಾಲ್ಕೈದು ಮಂದಿ ಗಿರಾಕಿಗಳನ್ನು ಉದ್ದೇಶಿಸಿ ಸ್ವಲ್ಪ ಗತ್ತಿನಲ್ಲಿ ‘ಬಾಯಿ ಬಿಟ್ಟರೆ ಜಾಗ್ರತೆ!’ ಎಂದು ಸಣ್ಣಗೆ ಗರ್ಜಿಸಿದ. ಆಮೇಲೆ ‘ನೀನು ಮೋಂಟನಲ್ವಾ? ನಿನ್ನ ಹೆಸರೇನು. ಬಿರ್ಕುಲನಾ? ಸರಿ’ ಎಂದು ಎಲ್ಲರ ಕುಲಗೋತ್ರ ವಿಚಾರಿಸಿದ ಹಾಗೆ ಮಾಡಿ, ಎಲ್ಲರೂ ‘ಇಲ್ಲ ಧನಿಗಳೇ, ನಮಗೆ ಯಾಕೆ ಗುತ್ತಿನ ಮನೆಯ ವಿಚಾರ?’ ಎಂದು ಕೈ ಮುಗಿದರು. ಭೋಜ ಶೆಟ್ಟಿ ಹಾಗೆ ಕೈಮುಗಿಸಿಕೊಂಡ ಖುಷಿಯಲ್ಲಿ ‘ನಾನು ಬರ್ತೇನೆ ಕಮ್ತೀರೇ’ ಎಂದು ಹೊರಟುಹೋದ. + +ವಾರದ ಮೇಲೆ ಮಂಗಳೂರಿಗೆ ರೈಲಿನಲ್ಲೇ ಹೋಗಲು ನಿಶ್ಚಯಿಸಿದ್ದ ಅಡಿಗೆ ಗೋವಿಂದಣ್ಣ ‘ಸರಿ’ ಎಂದು ಹೊರಟೇಬಿಟ್ಟರು. ಹಾಗೇ ಹೋಗಿ ಮರಳಿ ಬರುತ್ತಾ “ಈ ರೈಲಿನ ಸಹವಾಸವೇ ಬೇಡ” ಎಂದು ಮರುದಿನ ನಡೆದುಕೊಂಡೇ ಬಂದರು. ಬಂದವರೇ ಕಮ್ತೀರ ಭಂಡಸಾಲೆಗೆ ಬಂದು ‘ಉಸ್ಸಪ್ಪ’ ಎಂದು ಕುಳಿತುಕೊಂಡರು. ಕಮ್ತೀರು ‘ಅರೇ, ನೀವು ರೈಲಿನಲ್ಲೇ ಹೋಗಬೇಕು ಎಂದವರು ನಡೆದುಕೊಂಡು ಬಂದ ಹಾಗೆ ಇದೆಯಲ್ಲ!’ ಎಂದು ಆಶ್ಚರ್ಯವ್ಯಕ್ತಪಡಿಸಿ ಕೇಳಿದಾಗ, ಗೋವಿಂದಣ್ಣ “ಕಾಮತರೇ, ಆ ಭೋಜ ಶೆಟ್ಟರ ಮಾತು ಕೇಳಿ ನಾನು ರೈಲಿನಲ್ಲಿ ಹೋದದ್ದು ಹೌದು. ಹೋಗುವಾಗ ತುಂಬಾ ಖುಶಿಯೂ ಆಯ್ತು. ಜುಗ್ ಬುಗ್ ಅಂತ ಅದು ಮುಂದೆ ಮುಂದೆ ಹೋಗುವಾಗ ನಾವು ಸಣ್ಣದಿರುವಾಗ ನಮ್ಮ ಅಮ್ಮ ತೊಟ್ಟಿಲು ತೂಗಿದ ಹಾಗೂ ಆಯ್ತು. ಅಷ್ಟೇ ಅಲ್ಲ – ಎಂತಹ ವೇಗ ಮಾರಾಯರೇ ಅದಕ್ಕೆ. ನೋಡುತ್ತಾ ನೋಡುತ್ತಾ ಇದ್ದ ಹಾಗೆ ನೇತ್ರಾವತಿ ಹೊಳೆ ಒಂದೇ ಕ್ಷಣದಲ್ಲಿ ಬಂತು! ಇಷ್ಟರವರೆಗೂ – ನದಿಯನ್ನು ದೋಣಿಯಲ್ಲೇ ದಾಟಿ ಗೊತ್ತಿರುವ ನಮಗೆ ಈಗ ರೈಲಿನಲ್ಲಿ – ನದಿಯ ಮೇಲೆ ಹೋಗುವಾಗ ಆದ ಮಜಾವೇ ಬೇರೆ. ಅಹ್ಹಾ ಅಹ್ಹಾ ಎಂದುಕೊಂಡೆ ನಾನು! ಅಷ್ಟೇ ಅಲ್ಲ. ರೈಲಿನಲ್ಲಿ ನಾವು ಹೋಗುವಾಗ, ರೈಲು ಮುಂದೆ ಮುಂದೆ ಹೋದ ಹಾಗೆ ಆಗದೇ ಮರ ಗಿಡ ಗುಡ್ಡ ಹೊಲಗಳೆಲ್ಲ ಹಿಂದೆ ಹಿಂದೆ ಹೋದ ಹಾಗೆ ಆಗುತ್ತದೆ ನೋಡಿ!’’ ಎಂದರು. + +‘ಒಳ್ಳೇದಾಯ್ತು ಬಿಡಿ; ಹಾಗಾದರೆ! ನನಗೂ ಒಮ್ಮೆ ಹೋಗಬೇಕು’ ಎಂದರು ಕಾಮತರು. ಅಷ್ಟರಲ್ಲಿ ಗೋವಿಂದಣ್ಣ ಮುಖ ಸಪ್ಪೆ ಮಾಡಿಕೊಂಡು, “ಆದರೆ ನೋಡಿ, ರೈಲು ಇಳಿದು, ಅದೇನು ಸ್ಟೇಶನ್ನೋ ಗೀಶನ್ನೋ ಅಂತಾರಲ್ಲ ಸುಡುಗಾಡು, ಅದರಲ್ಲಿ ಉದ್ದಕ್ಕೂ ನಡೆದು ನಾನು ದೊಡ್ಡ ಗೇಟಿನಲ್ಲಿ ಹೊರಹೋಗಬೇಕು ಎನ್ನುವಾಗ ಪೋಲೀಸರ ಹಾಗೆ ಖಾಕಿ ಅಂಗಿ ಚಡ್ಡಿ ಹಾಕಿದವನೊಬ್ಬ ತಡೆದು ನಿಲ್ಲಿಸಿ ಎಲ್ಲಿ ಟಿಕೇಟು? ಅಂದ. ನನಗೇನು ಗೊತ್ತು ಟಿಕೇಟು ಬೇಕು ಎಂದು? ಭೋಜ ಶೆಟ್ರು ಹೇಳಲಿಲ್ಲ ಅಂದೆ!” ಅದಕ್ಕೆ ಅಂವ, ಇಂಗ್ಲಿಷೋ ಎಂಥದೋ ಒಂದು ಭಾಷೆಯಲ್ಲಿ ನನಗೆ ಬೈದು, “ನಿಲ್ಲಿ ಹೀಗೆ” ಎಂದು ನನ್ನನ್ನು ತಡೆದು ನಿಲ್ಲಿಸಿದ. ಬೆನ್ನುಹಾಕಿ ನಿಲ್ಲಿಸಿ ಆಮೇಲೆ ಬಲವಾಗಿ ಕುಂಡೆಗೆ ಒದ್ದು ಬಿಟ್ಟ. ಆ ಒದೆ ಎಷ್ಟು ಜೋರಿತ್ತೆಂದರೇ, ನಾನು ಮುಂದೆ ಹೋಗಿ ಮುಗ್ಗರಿಸಿ ಬಿದ್ದೆ!’’ ಎಂದರು. + +ಕಾಮತರಿಗೆ ನಗಬೇಕು ಅನಿಸಿದರೂ, ನಗಲಾಗಲಿಲ್ಲ. ಪಾಪ ಅನಿಸಿ, ‘ಛೇ, ಭೋಜ ಶೆಟ್ರು – ಟಿಕೇಟ್ ತೆಗೆದುಕೊಂಡು ಹೋಗಬೇಕು ಎಂದು ನಿಮಗೆ ಅನ್ನದೇ ಇದ್ದದ್ದು ದೊಡ್ಡ ತಪ್ಪಾಯಿತು ಭಟ್ರೇ’ ಎಂದು, ರೈಲ್ವೇ ಪ್ರಯಾಣದ ಮಾಹಿತಿಗಳನ್ನೆಲ್ಲ ವಿವರಿಸಿ ಹೇಳಿದರು. ಆಮೇಲೆ ‘ಟಿಕೇಟು ತೆಗೆಯದೆ ಹೋಗಬೇಡಿ’ ಎಂದೂ ಎಚ್ಚರಿಸಿದರು. + +ಗೋವಿಂದಣ್ಣ ರೈಲು ಪ್ರಯಾಣದಲ್ಲಿ ಕುಂಡೆಗೆ ತುಳಿಸಿಕೊಂಡ ವಾರ್ತೆ ನಿಧಾನವಾಗಿ ಒಂಬತ್ತುಕೆರೆಯಲ್ಲಿ ಹಬ್ಬಿತು, ಕೆಲವರು ಬಿದ್ದು ಬಿದ್ದು ನಕ್ಕರೆ, ಇನ್ನು ಕೇಲವರು ‘ಹೌದಾ?’ ಎಂದು ಅಚ್ಚರಿಪಟ್ಟರು. ಒಬ್ಬಿಬ್ಬರು ರೈಲು ಬಂದ ಮಾತ್ರಕ್ಕೆ, ಅದರಲ್ಲಿ ಹೋಗುವ ಮರುಳು ಯಾಕೆ ಬೇಕಿತ್ತು ಈ ಭಟ್ಟರಿಗೆ ಕೈಕಾಲು ಗಟ್ಟಿ ಇರುವಾಗ? ಎಂದದ್ದೂ ಆಯಿತು. + +ಈ ಸುದ್ದಿಯ ಬೆನ್ನಿಗೇ ಭೋಜ ಶೆಟ್ಟಿ ಯಾರಿಗೂ ಹೇಳಬೇಡಿ ಎಂದು ಹೇಳಿದ ರಹಸ್ಯ ವಾರ್ತೆಯೂ ಕೂಡಾ ‘ಯಾರಿಗೂ ಹೇಳಬೇಡಿ’ ಎಂಬಂತೆ ಒಬ್ಬರಿಂದ ಇನ್ನೊಬ್ಬರಿಗೆ ಹಬ್ಬಿತು. ಗುತ್ತಿನ ಅಂಗಳದಲ್ಲೂ ಅದು ಗುಜುಗುಜು ಅಂತ ಸದ್ದು ಮಾಡಿತು. ಶ್ಯೂ, ಹೇಳಬೇಡಿ, ಆ ವಿಚಾರ ಮಾತನಾಡಬೇಡಿ ಎಂದು ಗುತ್ತಿನ ಅಂಗಳದಲ್ಲಿ ಸೇರುತ್ತಿದ್ದವರೆಲ್ಲ ಪರಸ್ಪರ ಎಚ್ಚರಿಸಿದ್ದನ್ನು ಮೀರಿಯೂ ಅದು ತುಂಗಕ್ಕೆಯ ಕಿವಿಗೂ ಗರ್ನಾಲಿನ ಸದ್ದಿನ ಹಾಗೆ ಬಂದು ಅಪ್ಪಳಿಸಿತು. + +ತುಂಗಕ್ಕೆಗೆ ಅನ್ನ ನೀರು ಸೇರಲಿಲ್ಲ. ಸುಮ್ಮನೇ ಹೋಗಿ ತನ್ನ ಕೋಣೆಯಲ್ಲಿ ಮಲಗಿಕೊಂಡರು. ಏನು? ಎಂದು ಮನೆಮಂದಿ ಬಂದು ಕೇಳಿದರೆ, ಮೊದಲಿಗೆ ‘ಏನೂ ಇಲ್ಲ!’ ಎಂದರು. ಆಮೇಲೆ ಬರೀ ಕಣ್ಣೀರು ಹರಿಸತೊಡಗಿದರು. ಇದು ಗುತ್ತಿನ ಯಜಮಾನ ವೆಂಕಪ್ಪ ಹೆಗ್ಡೆಯವರ ಕಿವಿಗೂ ಮುಟ್ಟಿತು. ಖುದ್ದಾಗಿ ಅವರೇ ಹೋಗಿ ‘ಅಪ್ಪೆ ತುಂಗಕ್ಕೆ’ (ತಾಯಿ ತುಂಗಮ್ಮ) ಎಂದು ಪ್ರೀತಿಯಿಂದ ಸಂಬೋಧಿಸಿ ತಲೆ ನೇವರಿಸಿ ‘ಗಡಿಪತ್ತಿನಾರರಲ್ಲೂ ಹೇಳದ ಕಷ್ಟವೇನಮ್ಮ ನಿನಗೆ?’ ಎಂದು ಕೇಳಿದಾಗ ತುಂಗಕ್ಕೆಯ ಕೊರಗೆಲ್ಲ ಕಟ್ಟೆ ಒಡೆದು ಬಂತು. ‘ಕೋಚ್ ಮೆನ್ ದೊರೆಯೊಬ್ಬ ತಾನು ವರಿಸಿದ ನಮ್ಮ ಜಾತಿಯ ಹುಡುಗಿಯನ್ನು ಮೊನ್ನೆ ಬೇಡ ಎಂದು ತಿರಸ್ಕರಿಸಿ ಬಿಟ್ಟನಂತಲ್ಲ? ಅದು ನಮ್ಮ ಕೊರಪೊಲೇ ಆಗಿದ್ದರೇ?’ ಎಂದು ತನ್ನ ಕೊರಗನ್ನು ವ್ಯಕ್ತಪಡಿಸಿ ಗೋಳೋ ಎಂದು ಅಳಲು ಪ್ರಾರಂಭಿಸಿದರು. ಮೊದಲಿಗೆ, ‘ಎಲ್ಲಾದರೂ ಉಂಟೇ?’ ಎಂದ ವೆಂಕಪ್ಪ ಹೆಗ್ಡೆ ಹಾಗೇನಾಗಿರಲು ಸಾಧ್ಯವಿಲ್ಲ ಎಂದುಕೊಂಡರೂ, ಕೆಲಸದಾಳುಗಳನ್ನೆಲ್ಲ ಕರೆಸಿ, ‘ಯಾರು ಹೇಳಿದ್ದು ನಿಮಗೆ, ಎಲ್ಲಿ ಕೇಳಿದಿರಿ?’ ಎಂದೆಲ್ಲ ವಿಚಾರಿಸಿದರು. + +ಮೊದಲಿಗೆ ಯಾರು ಯಾರಿಗೆ ಹೇಳಿದರು ಎಂಬುದು ಖಚಿತವಾಗದಿದ್ದರೂ ವೆಂಕಪ್ಪ ಹೆಗ್ಡೆಯವರು ಒಬ್ಬೊಬ್ಬರನ್ನೇ ಕರೆದು ಕೇಳಿದಾಗ, ಅದು ಕಮ್ತೀರ ಅಂಗಡಿಯಿಂದ ತಿಳಿದು ಬಂದದ್ದು ಎಂದಾಯಿತು. ‘ಸರಿ, ಅವರನ್ನೇ ಕರೆಸಿ ಖಚಿತ ಮಾಡೋಣ’ ಎಂದು ಮೂಲದಾಳನ್ನು ಕಮ್ತೀರ ಅಂಗಡಿಗೆ ಕಳುಹಿಸಿದರು. ಖುದ್ದಾಗಿ ಒಮ್ಮೆ ಗುತ್ತಿನ ಮನೆಗೆ ಬಂದು ಹೋಗಬೇಕಂತೆ ಎಂಬ ಆದೇಶದೊಂದಿಗೆ. + +ತನ್ನ ಅಂಗಡಿಯಲ್ಲಿ ಉಳ್ಳಾಲದ ಬೆಲ್ಲದಚ್ಚುಗಳನ್ನು ಗೋಣಿಯಿಂದ ತೆಗೆದು ಗುಡಾಣಕ್ಕೆ ತುಂಬುತ್ತಿದ್ದ ಕಮ್ತೀರು, ಗುತ್ತಿನ ಮನೆಯ ಕರೆಬಂದ ತತ್ ಕ್ಷಣ, ಬೆಲ್ಲದ ಅಂಟು ಬೆರಳುಗಳಲ್ಲಿ ಇದ್ದರೂ ಅದನ್ನು ತೊಳೆಯದೇ ಉಟ್ಟಬಟ್ಟೆಗೆ ಕೈ ಒರಸಿಕೊಂಡು ಹಕ್ಕಿ ಹಾರಿಬಂದ ಹಾಗೆ ಗುತ್ತಿನ ಮನೆಯ ಚಾವಡಿಯಲ್ಲಿ ಹಾಜರಾದರು. + +ತಲೆಗೆ ಕೈ ಇಟ್ಟು ಕುಳಿತಿದ್ದ ವೆಂಕಪ್ಪ ಹೆಗ್ಡೆಯವರು ಕಮ್ತೀರನ್ನು ನೋಡಿದವರೇ ಕಣ್ಣಂಚಿನಲ್ಲಿ ನೀರು ತುಂಬಿಕೊಂಡು ವಿಷಯವನ್ನೆಲ್ಲ ಬಿಡಿಸಿ ಹೇಳಿ, “ಆ ಭೋಜ ಶೆಟ್ಟಿ ನಿಮ್ಮ ಅಂಗಡಿಯಲ್ಲಿ ಇಂಗ್ಲಿಷ್ ಪೇಪರಿನಲ್ಲಿ ಇದ್ದುದನ್ನು ಓದಿ ಹೇಳಿದ್ದು ಹೌದಾ?” ಎಂದರು ಆತಂಕದಲ್ಲಿ.“ಓದಿ ಹೇಳಿದ್ದು ಹೌದು. ಆದರೆ ಅದು ಕೊರಪೊಲಿನ ವಿಷಯ ಅಲ್ಲ. ಬೇರೆ ಯಾರದ್ದೋ ಕತೆ. ಅದಕ್ಕೆ ನೀವು ಇಷ್ಟು ಚಿಂತಿಸುವುದು ಏಕೆ? ಇಷ್ಟಕ್ಕೂ ನನಗೆ ಇಂಗ್ಲಿಷ್ ಬರುವುದಿಲ್ಲ. ನಾನು ನೋಡಿದ್ದೂ ಇಲ್ಲ. ಓದಿದ್ದೂ ಇಲ್ಲ. ಆ ಪಟಾಕಿ ಭೋಜ ಶೆಟ್ಟಿಯ ಮಾತು ಕೇಳಿ ನೀವು ಯಾಕೆ ಇಷ್ಟು ಕೊರಗಬೇಕು?’’ ಎಂದು ವೆಂಕಪ್ಪ ಹೆಗ್ಡೆಯವರಿಗೆ ಕಮ್ತೀರು ಸಾಂತ್ವನ ಹೇಳಿದರು. + +ಕಮ್ತೀರ ಮಾತಿಗೆ ಪ್ರತಿಕ್ರಿಯೆ ವ್ಯಕ್ತಪಡಿಸದ ಹೆಗ್ಡೆಯವರು ಕಮ್ತೀರನ್ನು ಎಳನೀರು ಕೊಟ್ಟು ಕಳುಹಿಸಿದರೂ, “ಭೋಜ ಶೆಟ್ಟಿ ಮಾತಿನಲ್ಲಿ ಪಟಾಕಿ ಇರಬಹುದು. ಆದರೆ ಸುಮ್ಮನೇ ಹೇಳಲಾರ” ಎಂದುಕೊಂಡರು. ರಾತ್ರೆ ಊಟ ಮಾಡದೆ, ಬರೇ “ಒಂದು ಲೋಟ ಹಾಲು ಕೊಡು” ಎಂದು, ಎಂದೂ ಹಾಲು ಕುಡಿಯದ ಹೆಗ್ಡೆಯವರು, ಹಾಲು ಕುಡಿದು ಅಷ್ಟರಲ್ಲೇ ತೃಪ್ತರಾದವರಂತೆ ಹೋಗಿ ತಮ್ಮ ಕೋಣೆಯಲ್ಲಿ ಮಲಗಿಕೊಂಡರು. + +ಮರುದಿನ ಬೆಳಿಗ್ಗೆ ಎದ್ದ ವೆಂಕಪ್ಪ ಹೆಗ್ಡೆಯವರು ನಿತ್ಯ ಕರ್ಮಗಳನ್ನೆಲ್ಲ ತೀರಿಸಿ ಜುಮಾದಿ ದೈವಕ್ಕೆ ಹೂನೀರು ಇಟ್ಟು ಕೈ ಮುಗಿದರು. ಆಮೇಲೆ ಅಲ್ಲೇ ನಿಂತು ತುಂಗಕ್ಕೆ ಎಂದು ಕೂಗಿ ಕರೆದರು. ತುಂಗಕ್ಕೆ ರಾತ್ರಿ ನಿದ್ದೆಗೆಟ್ಟು ಆಗ ತಾನೇ ಎದ್ದು ಬಂದಿದ್ದರಷ್ಟೆ. ಆಕೆಗೆ ಅದು ಕೇಳಿಸಲ್ಲಿಲ. ‘ಗುತ್ತಿನಾರ್ ಕೂಗುತ್ತಿದ್ದಾರೆ ನೋಡಿ’ ಎಂದು ಗುತ್ತಿನ ಮನೆಯ ಹಿಂಬದಿಯಲ್ಲಿ ಮಾತನಾಡಿಕೊಂಡಿದ್ದವರು ಆಕೆಯನ್ನು ಕೂಗಿ ಹೇಳಿದರು. ಚಾವಡಿಗೆ ಮನೆಮಂದಿ ಎಲ್ಲಾ ಧಾವಿಸಿ ಬರುತ್ತಿದ್ದಂತೆ, ಗುತ್ತಿನಾರು ಕೋಚ್ ಮೆನ್ ದೊರೆ ಉಡುಗೊರೆಯಾಗಿ ನೀಡಿದ್ದ ಕೋವಿಯನ್ನು ಕೈಯಲ್ಲಿ ಹಿಡಿದು ಅದರ ನಡುಮುರಿದು ಗುಂಡು ತುಂಬುತ್ತಿದ್ದರು. ಅದನ್ನು ನೋಡಿದವರೇ, ‘ಅಯ್ಯೋ ದೇವರೇ, ಓ ತುಂಗಕ್ಕಾ, ಬನ್ನಿ ಬೇಗ’ ಎಂದು ಎಲ್ಲರೂ ಕೂಗಿಕೊಳ್ಳುತ್ತಿರುವಷ್ಟರಲ್ಲಿ ಗುತ್ತಿನಾರ್, ನಾಲ್ಕೂ ಸುತ್ತ ನೋಡಿ ‘ಎಲ್ಲಿ ತುಂಗಕ್ಕೆ?’ ಎಂದು ಆವೇಶಭರಿತರಾದರು. ಚಾವಡಿಗೆ ಕಾಲಿಡುತ್ತಿದ್ದ ತುಂಗಕ್ಕೆಯನ್ನು ಕಂಡ ಅವರು “ನಾನು ಕುಟುಂಬ ದ್ರೋಹಿ ತುಂಗಕ್ಕ! ಇನ್ನು ಬದುಕಿರಬಾರದು. ಸಾಯಲೇಬೇಕು. ನೀನು ಗುಂಡು ಹೊಡಿ, ಇಲ್ಲವೇ ನಾನೇ ಈಡು ಮಾಡಿಕೊಂಡು ಸಾಯುತ್ತೇನೆ” ಎಂದು ಕೋವಿಯನ್ನು ತುಂಗಕ್ಕೆಯತ್ತ ಚಾಚಿದರು. ತುಂಗಕ್ಕೆಯೂ ಸೇರಿದಂತೆ ಗುತ್ತಿನ ಚಾವಡಿಯಲ್ಲಿದ್ದವರೆಲ್ಲ ‘ಇದೇನು ಗುತ್ತಿನಾರ್ ಮಾಡುತ್ತಿರುವುದು?’ ಎಂದು ತರ್ಕಿಸುವಷ್ಟರಲ್ಲಿ, ಗುತ್ತಿನಾರ್ ರ ದೇಹವಿಡೀ ಕಂಪಿಸಿದಂತಾಯಿತು. ಕೋವಿ ಹಿಡಿದುಕೊಂಡಿದ್ದ ಅವರು ಹಾಗೆಯೇ ದಿಢೀರಾಗಿ ಕುಸಿದುಬಿದ್ದರು. ಗುತ್ತಿನ ಚಾವಡಿಯಲ್ಲಿ ಬೊಬ್ಬೇಯೇ ಬೊಬ್ಬೆ. ‘ಅಯ್ಯೋ, ಇದೇನು? ಏನಾಯಿತು ಹೆಗ್ಡೆಯವರಿಗೆ?’ ಎನ್ನುವವರು ಕೆಲವರಾದರೆ, ಒಮ್ಮೆ ಬನ್ನಿರೋ – ಎಲ್ಲರೂ ಎನ್ನುವವರು ಇನ್ನು ಹಲವರು. ಆಗಲೇ ಅಂಗಳದಲ್ಲಿದ್ದ ಆಳುಕಾಳುಗಳು, ಅಡಿಗೆ ಮನೆಯಲ್ಲಿದ್ದ ಅಡಿಗೆಯಾಳುಗಳು ಎಲ್ಲರೂ ಚಾವಡಿಗೆ ಓಡಿ ಬಂದರು. ಮೂಲದಾಳುಗಳು ಚಾವಡಿಯೊಳಗೆ ಕಾಲಿಡಲಾರದೆ ಅಂಗಳದಲ್ಲೇ ನಿಂತು ಕುತ್ತಿಗೆ ಉದ್ದ ಮಾಡಿ ‘ದೇವರೇ ಉಳ್ಳಾಯ (ಯಜಮಾನ)ನನ್ನು ಕಾಪಾಡಿ’ ಎಂದು ಮೊರೆ ಇಡಹತ್ತಿದರು. + + + +ಯಾರಿಗೂ ಏನೂ ಮಾಡಬೇಕು ಎಂದು ತಿಳಿಯದ ಸ್ಥಿತಿಯಲ್ಲಿ ಒಬ್ಬರು ಹೆಗ್ಡೆಯವರ ಮುಖಕ್ಕೆ ನೀರು ಚಿಮುಕಿದರೆ, ಇನ್ನೊಬ್ಬರು ಅವರ ತಲೆಯನ್ನು ತಮ್ಮ ತೊಡೆಯ ಮೇಲಿಟ್ಟುಕೊಂಡರು. ಗುತ್ತಿನ ಕೆಲಸಗಾರರಲ್ಲೇ ಹಿರಿಯವನಾದ ಮುದ್ದು ಪೂಜಾರಿ ತನ್ನ ಹೆಗಲಿನಲ್ಲಿದ್ದ ಶಲ್ಯದಿಂದ ಗಾಳಿ ಹಾಕತೊಡಗಿದ. ಇದೆಲ್ಲದರಿಂದ ನಿಧಾನವಾಗಿ ಕಣ್ಣು ತೆರೆದ ಹೆಗ್ಡೆಯವರು ಮಾತನಾಡಲು ಎಂಬಂತೆ ಬಾಯಿ ತೆರೆದರು. ಆದರೆ ಮಾತು ಬರಲಿಲ್ಲ. ಎದ್ದು ಕುಳಿತುಕೊಳ್ಳಲೂ ಪ್ರಯತ್ನಿಸಿ ನೋಡಿದರು. ಆಗಲಿಲ್ಲ. ಸುಮ್ಮನೇ ಮಿಕಮಿಕ ಕಣ್ಣು ಬಿಟ್ಟು ಮಲಗಿದ ಅವರನ್ನು ನೋಡಿದ ಗುಂಪಿನಲ್ಲಿದ್ದವರೊಬ್ಬ ‘ಅವರ ಎಡಕೈ ಎತ್ತಿ ನೋಡಿ’ ಎಂದ. ತುಂಗಕ್ಕೆ ಎತ್ತಲು ಹೋದರೇ, ಆ ಕೈಯಲ್ಲಿ ಶಕ್ತಿ ಇಲ್ಲದ ಹಾಗೇ ಆಗಿ ಹೋಗಿತ್ತು. ಅಷ್ಟರಲ್ಲಿ ಆತನೇ ಮುಂದೆ ಬಂದು ಹೆಗ್ಡೆಯವರ ಎಡದ ಕಾಲನ್ನು ಎತ್ತಲು ಪ್ರಯತ್ನಿಸಿದ. ಅದನ್ನೂ ಆತನಿಗೆ ಎತ್ತಲಾಗಲಿಲ್ಲ. ಆತ ನಿಧಾನವಾಗಿ ಹಿಂದೆ ಸುರಿದು ‘ತುಂಗಕ್ಕೆ ಸ್ವಲ್ಪ ಇಲ್ಲಿ ಬನ್ನಿ’ ಎಂದು ಕರೆದು ‘ಗುತ್ತಿನಾರಿಗೆ ಕಡಪ್ಪು (ಪಕ್ಷಾಘಾತ) ಆದ ಹಾಗಿದೆ’ ಎಂದ ಮೆತ್ತಗೆ. + +ಡಾ. ನಾ. ಮೊಗಸಾಲೆ + +‘ಕೋಚ್ ಮೆನ್ ದೊರೆಗಳ ಮದುವೆ’ ಎನ್ನುವ ಕಥಾಭಾಗ ಡಾ. ನಾ. ಮೊಗಸಾಲೆ ಅವರ ‘ಉಲ್ಲಂಘನೆ’ (2008) ಕಾದಂಬರಿಯಿಂದ ಆಯ್ದ ಭಾಗ. ಅವರ ಇನ್ನೊಂದು ಬೃಹತ್ ಕಾದಂಬರಿ ‘ಮುಖಾಂತರ’ದಲ್ಲಿ ಗಾಂಧೀಜಿಯವರ ಅನುಯಾಯಿ ‘ಟೊಪ್ಪಿ ಶಂಭಟ್ಟ’ ಪಾತ್ರ ಬರುತ್ತದೆ. ಮಂಗಳೂರಿನಲ್ಲಿ ಸ್ವಾತಂತ್ರ್ಯ ಹೋರಾಟದ ಚಿತ್ರಗಳು ಬರುತ್ತವೆ. ಆ ಭಾಗದಲ್ಲಿ ‘ಮುಖಾಂತರ’ ಕಾದಂಬರಿಯ ಕೆಲವು ಪುಟಗಳನ್ನು ಕೊಡಲಾಗುವುದು. ಪ್ರಸ್ತುತ ಭಾಗ ದೇಶದಲ್ಲಿ ಯಾವುದೇ ಸ್ವಾತಂತ್ರ್ಯ ಹೋರಾಟ ರೂಪುಗೊಳ್ಳದೆ ಇದ್ದ ‘ಅಂಧಕಾರ’ ಯುಗದ ಕತೆ. + +ಉಡುಪಿ ಜಿಲ್ಲೆಯ ಕಾಂತಾವರದಲ್ಲಿ ನೆಲೆಸಿರುವ ಡಾ. ನಾ. ಮೊಗಸಾಲೆ (1944) ಅಲ್ಲಿ ಸರಕಾರಿ ವೈದ್ಯಾಧಿಕಾರಿಯಾಗಿದ್ದರು, ಈಗ ನಿವೃತ್ತರು. ಸಮಗ್ರ ಕತೆಗಳು ಸೇರಿ 7 ಕಥಾ ಸಂಕಲನಗಳು, ಸಮಗ್ರ ಕಾವ್ಯ ಸಂಪುಟಗಳು ಸೇರಿ 13 ಕವನ ಸಂಕಲನಗಳು, 17 ಕಾದಂಬರಿಗಳು, 6 ಸಂಪಾದಿತ ಕೃತಿಗಳು ಮತ್ತು 6 ವೈದ್ಯಕೀಯ ಕೃತಿಗಳನ್ನು ಅವರು ಪ್ರಕಟಿಸಿದ್ದಾರೆ. ಕಾಂತಾವರ ಕನ್ನಡ ಸಂಘದ ಸ್ಥಾಪನೆ ಮತ್ತು ಅದರ ಮೂಲಕ ಅವರು ನಡೆಸಿದ ಚಟುವಟಿಕೆಗಳು ಉಡುಪಿ ಜಿಲ್ಲೆಯ ಸಾಹಿತ್ಯ ಚಟುವಟಿಕೆಗಳ ಇತಿಹಾಸದ ಒಂದು ಉಜ್ವಲ ಅಧ್ಯಾಯವಾಗಿದೆ. + +ಈ ಕಥಾಭಾಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬ್ರಿಟಿಷ್ ಸರಕಾರದ ‘ಸ್ಥಿರವಾದ’ ಆಳ್ವಿಕೆಯ ಕಾಲದ ಚಿತ್ರಣ ಪ್ರಾರಂಭವಾಗುತ್ತದೆ. (ಹುರುಳಿ ಭೀಮರಾಯರ ‘ಮುರುಕು ದಂಬೂಕು’ ಕೂಡ ಈ ಭಾಗಕ್ಕೆ ಸೇರಬಹುದಾದ ಕಥನ). ಕಲ್ಯಾಣಪ್ಪನ ಕ್ರಾಂತಿಯ ಕಾಲದಲ್ಲಿ ಸರಿಯಾದ ಶಸ್ತ್ರಗಳಿಲ್ಲದೆ ಮಂಗಳೂರಿನತ್ತ ಧಾವಿಸಿದ ರೈತರ ಸೇನೆಯನ್ನು ಕಂಡು ಬ್ರಿಟಿಷರು ಗಾಬರಿಬಿದ್ದು ಓಡಿಹೋದರೆಂದರೆ ಅವರ ಆಳ್ವಿಕೆ ಅಲ್ಲಿಯವರೆಗೆ ದುರ್ಬಲವೇ ಆಗಿತ್ತು ಎನ್ನುವುದು ಸ್ಪಷ್ಟ. ಅಥವಾ ಈ ಜಿಲ್ಲೆ ಶಾಂತಿಪ್ರಿಯರ ಜಿಲ್ಲೆ ಎಂದು ಅಂದಾಜಿಸಿ ನಿರ್ಲಕ್ಷಿಸಿರಲೂ ಬಹುದು. + +ಬ್ರಿಟಿಷ್ ಸರಕಾರದಡಿ ದಕ್ಷಿಣ ಕನ್ನಡ ಜಿಲ್ಲೆ : 1837 ರ ನಂತರ 1857 ರ ಭಾರತದ ಮೊದಲನೆಯ ಸ್ವಾತಂತ್ರ್ಯ ಸಂಗ್ರಾಮದ ಕಾಲದಲ್ಲಿ ಜಿಲ್ಲೆಯಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತ ಗಟ್ಟಿಯಾಯಿತು. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ಸರಕಾರಕ್ಕೆ ಅಧಿಕಾರ ಹಸ್ತಾಂತರವಾದದ್ದು ಈ ಜಿಲ್ಲೆಯಲ್ಲಿ ಮಹತ್ತರವಾದ ಬದಲಾವಣೆಯನ್ನು ತರಲಿಲ್ಲ. ಹಾಗಾಗಿ ಈ ಜಿಲ್ಲೆಯ ಮಟ್ಟಿಗೆ 1800 ರಿಂದ 1947 ರವರೆಗೆ ಒಂದೇ ಬಗೆಯ ವಸಾಹತುಶಾಹಿ ಆಡಳಿತ ಇತ್ತು ಎನ್ನಬಹುದು. + +ಬ್ರಿಟಿಷರು ಜಿಲ್ಲೆಯನ್ನು ಎರಡು ಡಿವಿಷನ್ ಗಳಾಗಿ ವಿಂಗಡಿಸಿದ್ದರು. ತಾಲೂಕು, ಮಾಗಣೆ, ಗ್ರಾಮ ಮತ್ತು ವರ್ಗ – ಇವುಗಳು ಉಪವಿಭಾಗಗಳು. ಜಿಲ್ಲಾಧಿಕಾರಿಯ ಕಛೇರಿಯಲ್ಲಿ ಶಿರಸ್ತೇದಾರ, ಗುಮಾಸ್ತ, ಮುನ್ಷಿ, ಎಕೌಂಟೆಂಟ್ ಇತ್ಯಾದಿ ಸಿಬ್ಬಂದಿಗಳಿರುತ್ತಿದ್ದರು. ತಾಲೂಕು ಕಛೇರಿಗಳಲ್ಲಿ ತಹಶೀಲ್ದಾರರ ನಂತರ ಡೆಪ್ಯುಟಿ ತಹಶೀಲ್ದಾರ್, ಪೇಷ್ಕಾರ್, ಶಿರಸ್ತೇದಾರ್, ಗುಮಾಸ್ತ ಮುಂತಾದ ಸಿಬ್ಬಂದಿಗಳಿರುತ್ತಿದ್ದರು. ಹಳ್ಳಿಗಳಲ್ಲಿ ಪಟೇಲ, ಶಾನುಭೋಗ ಮತ್ತು ಉಗ್ರಾಣಿಗಳಿರುತ್ತಿದ್ದರು. ಮಣೆಗಾರರು ಶಾನುಭೋಗರ ಕೆಲಸದ ಮೇಲುಸ್ತುವಾರಿ ವಹಿಸುತ್ತಿದ್ದವರು. + +ಬ್ರಿಟಿಷರ ಆಡಳಿತ ಬಹಳ ಶಿಸ್ತಿನಿಂದ ಕೂಡಿತ್ತು. ಪೋಲೀಸರು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದರು. ಗ್ರಾಮದಲ್ಲಿ ಪಟೇಲರೇ ಸರಕಾರದ ಪ್ರತಿನಿಧಿಯಾಗಿದ್ದುದರಿಂದ ಊರಿನಲ್ಲಿ ಏನೇ ಅಪರಾಧ ನಡೆದರೂ ಅವನು ಸರಕಾರಕ್ಕೆ ವರದಿ ಸಲ್ಲಿಸಬೇಕಿತ್ತು. ಆಗ ಪೋಲೀಸರು ಅಗತ್ಯವಿದ್ದರೆ ಬಂದು ಅಪರಾಧದ ತನಿಖೆ ನಡೆಸುತ್ತಿದ್ದರು. ಪಟೇಲ, ಶಾನುಭೋಗರಿಗೆ ಸಹಾಯಕನಾಗಿ ಉಗ್ರಾಣಿ ಎಂಬ ಡಿ ದರ್ಜೆಯ ನೌಕರನಿರುತ್ತಿದ್ದ. ಅವನು ಅಟೆಂಡರನಾಗಿಯೂ, ಗ್ರಾಮ ಪೋಲೀಸನಾಗಿಯೂ, ಹಿಂದಿನ ಕಾಲದ ಕೊತವಾಲನಂತೆಯೂ ಕಾರ್ಯನಿರ್ವಹಿಸುತ್ತ ಸರಕಾರ ಮತ್ತು ಜನರ ನಡುವಿನ ಕಟ್ಟ ಕಡೆಯ ಕೊಂಡಿಯಾಗಿರುತ್ತಿದ್ದ. + +ಭೂಮಿ ಹಕ್ಕು ಹಾಗೂ ಕಂದಾಯ ವಸೂಲಿ : ದಕ್ಷಿಣ ಕನ್ನಡದಲ್ಲಿ ಮನ್ರೋ ಆಡಳಿತ ವಹಿಸಿಕೊಂಡಾಗ ಎಲ್ಲ ಕಡೆಗಳಲ್ಲಿಯೂ ಸಣ್ಣ ಸಣ್ಣ ರೈತರು ಇದ್ದರು. ಭೂಮಿಹಕ್ಕುಗಳ ದಾಖಲೆಗಳೂ ಅವರಲ್ಲಿದ್ದವು. ಆ ಹಕ್ಕುಗಳು ಅವರಿಗೆ ಹೇಗೆ ಬಂದವೆಂದು ಹೇಳಲಾಗದಷ್ಟು ಜಟಿಲತೆ ಇತ್ತು, ಐತಿಹಾಸಿಕ ಆಧಾರಗಳಿರಲಿಲ್ಲ. ಈ ಹಕ್ಕುಗಳನ್ನು ವರ್ಗ ಎಂದು ಕರೆಯುತ್ತಿದ್ದರು (ತ್ಯಾಂಪಣ್ಣ ವರ್ಗ, ಸುಬ್ರಾಯ ವರ್ಗ ಇತ್ಯಾದಿ ಹೆಸರುಗಳ ವರ್ಗಗಳಿದ್ದವು). ಸುಮಾರು 14 ನೆಯ ಶತಮಾನದಲ್ಲಿ ಕೃಷಿ ಹಿಡುವಳಿಗಳನ್ನು ವರ್ಗಗಳಾಗಿ ವಿಂಗಡಿಸಲಾಗಿತ್ತು ಎಂದು ತಿಳಿದುಬರುತ್ತದೆ. ಮನ್ರೋ ಆ ಹಕ್ಕುಗಳನ್ನು ಊರ್ಜಿತಗೊಳಿಸಿ ಅವರವರಿಗೆ ಭೂಮಿಯ ಪಟ್ಟಾ ನೀಡಲು ಆದೇಶಿಸಿದ್ದ. + +ಬ್ರಿಟಿಷರು ಹಣದ ರೂಪದಲ್ಲಿ ತೆರಿಗೆ ನೀಡಬೇಕೆಂದು ವಿಧಿಸಿದ ಕಾರಣ ಮತ್ತು ತೆರಿಗೆ ಅತಿಯಾಗಿದ್ದ ಕಾರಣ ಸಣ್ಣ ಸಣ್ಣ ರೈತರಿಗೆ ಅದನ್ನು ತೆರುವುದು ಕಷ್ಟವಾಗುತ್ತಿತ್ತು. ಆಗ ಹುಟ್ಟಿಕೊಂಡ ಒಂದು ಪ್ರಭಾವೀ ವರ್ಗವೇ ಬಡ್ಡಿಗೆ ಹಣ ಕೊಡುವ ಲೇವಾದೇವಿಗಾರರದ್ದು. ತೆರಿಗೆ ವಸೂಲಿ ನಡೆಯುವ ಸ್ಥಳಗಳಲ್ಲಿ ಆಸ್ತಿಯನ್ನು ಅಡವಿಟ್ಟುಕೊಂಡು ಬಡ್ಡಿಗೆ ಸಾಲ ಕೊಡುವ ಬಡ್ಡಿವ್ಯಾಪಾರಿಗಳು ಅಥವಾ ಅವರ ಶಾನುಭೋಗರು ಹಾಜರಿರುತ್ತಿದ್ದರು. ಕೆಲವೊಮ್ಮೆ ತೆರಿಗೆ (ಇದಕ್ಕೆ ಕಿಸ್ತ್ / ಕಿಸ್ತು ಎಂದು ಹೆಸರು) ವಸೂಲಿ ಮಾಡುವ ಪಟೇಲ, ಶಾನುಭೋಗರೇ ಹಣವನ್ನು ಸಾಲವಾಗಿ ಕೊಡುತ್ತಿದ್ದುದುಂಟು. + +ಸಾಲದ ಉರುಳಿಗೆ ಸಿಕ್ಕಿದ ರೈತರು ಕೆಲವೇ ವರ್ಷಗಳಲ್ಲಿ ತಮ್ಮ ಆಸ್ತಿಗಳನ್ನು ಕಳೆದುಕೊಂಡು ಗೇಣಿದಾರರಾಗಿಬಿಡುತ್ತಿದ್ದರು. ಹೀಗಾಗಿ ಶ್ರೀಮಂತ ವರ್ತಕರ, ಲೇವಾದೇವಿಗಾರರ ಮತ್ತು ಜಮೀನುದಾರರ ಕೈಯಲ್ಲಿ ಅಗಾಧ ಗಾತ್ರದ ಆಸ್ತಿಗಳು ಸಂಗ್ರಹವಾದವು. ಬಡ್ಡಿವ್ಯಾಪಾರಿ ಕುಟುಂಬಗಳಿಗೆ (ಹೆಚ್ಚಾಗಿ ಗೌಡ ಸಾರಸ್ವತ ವ್ಯಾಪಾರಿಗಳು, ನಂತರ ಶ್ರೀಮಂತ ಬಂಟರು, ಜೈನರು, ಬ್ರಾಹ್ಮಣರು – ಇವರು ಹಣವನ್ನು ಬಡ್ಡಿಗೆ ನೀಡುತ್ತಿದ್ದರು) ದೂರ ದೂರದ ಊರುಗಳಲ್ಲಿಯೂ ಆಸ್ತಿ ದೊರಕಿದುದಕ್ಕೆ ಇದೇ ಕಾರಣ. ಈ ರೀತಿ ಗುತ್ತಿನವರೂ, ಪಟೇಲರೂ, ಶಾನುಭೋಗರೂ ಇತರ ಶ್ರೀಮಂತರೂ ದೊಡ್ಡ ದೊಡ್ಡ ಹಿಡುವಳಿಗಾರರಾದರು. ದೊಡ್ಡ ಗುತ್ತಿನವರು ಮತ್ತು ಕೃಷಿಕ ಜಮೀನುದಾರರನ್ನು ಬಿಟ್ಟರೆ ಆಸ್ತಿಗಳ (ಇದರ ಮೂಲ ‘ಅಸೆಟ್’ ಎಂಬ ಇಂಗ್ಲಿಷ್ ಶಬ್ದ) ಒಡೆಯರಾದ ವರ್ತಕರು ಮತ್ತು ಶ್ರೀಮಂತರು (ಇವರು ಹೊಂದಿದ್ದ ಆಸ್ತಿ ಬೇರೆ ಊರುಗಳಲ್ಲಿರುತ್ತಿದ್ದುದು ಸಾಮಾನ್ಯವಾಗಿತ್ತು) ಸ್ವತಃ ಕೃಷಿ ಮಾಡುತ್ತಿರಲಿಲ್ಲ ಅಥವಾ ಮಾಡಿಸುತ್ತಿರಲಿಲ್ಲ. ಅವರು ತಮ್ಮ ಗದ್ದೆಗಳನ್ನು ರೈತರಿಗೆ ಬೇಸಾಯ ಮಾಡಲು ಗೇಣಿಗೆ (ವರ್ಷಂಪ್ರತಿ ಧಾನ್ಯ ಮತ್ತಿತರ ಕೃಷ್ಯುತ್ಪನ್ನಗಳ ಮೂಲಕ ಸಂದಾಯ ಮಾಡಬೇಕಾದ ಪ್ರತಿಫಲ) ಕೊಡುತ್ತಿದ್ದರು. ಆಗ ಮೂಲಗೇಣಿ ಮತ್ತು ಚಾಲಗೇಣಿ ಎಂಬ ಎರಡು ಬಗೆಯ ಗೇಣಿ ಹಕ್ಕುಗಳು ಪ್ರಧಾನವಾಗಿ ಚಾಲ್ತಿಗೆ ಬಂದವು. + +ಮೂಲ ಗೇಣಿ : ಜಮೀನಿನ ಮೂಲ ಒಡೆಯರು ಸಾಲ ಪಡೆದು ಹಿಂದಿರುಗಿಸಲಾಗದೆ ಆಸ್ತಿಯ ಒಡೆತನವನ್ನು ಕಳೆದುಕೊಂಡ ಸಂದರ್ಭಗಳಲ್ಲಿ, ಸಾಲ ನೀಡಿದವರು ಜಮೀನನ್ನು ಮಾರಾಟ ಮಾಡುವ ಹಕ್ಕನ್ನು ಬಿಟ್ಟು ಉಳಿದ ಎಲ್ಲಾ ಒಡೆತನ, ವಂಶಪಾರಂಪರ್ಯ ಹಕ್ಕುಗಳನ್ನು ಮೂಲ ಒಡೆಯರಿಗೆ ಬಿಟ್ಟುಕೊಟ್ಟು, ವರ್ಷಂಪ್ರತಿ ಗೇಣಿಯನ್ನು ಮಾತ್ರ ಸ್ವೀಕರಿಸುತ್ತಿದ್ದ ಪದ್ಧತಿ ಇದು. ಮೂಲಗೇಣಿ ಆಧಾರದಲ್ಲಿ ಆಸ್ತಿಗಳನ್ನು ಹೊಂದಿದ್ದವರು ತಾವೇ ಕೃಷಿ ಮಾಡದೆ ಗದ್ದೆಗಳನ್ನು ಮಾತ್ರ ಚಾಲಗೇಣಿಗೆ ರೈತರಿಗೆ ವಹಿಸಿಕೊಡುತ್ತಿದ್ದುದೂ ಉಂಟು. + +ಚಾಲಗೇಣಿ : ತಾತ್ಕಾಲಿಕವಾದ, ಯಾವಾಗ ಬೇಕಾದರೂ ಗೇಣಿದಾರ ರೈತನನ್ನು ಹೊರಡಿಸಬಹುದಾದ ಗೇಣಿ ಪದ್ಧತಿಯಿದು. ಸಾಮಾನ್ಯವಾಗಿ ವರ್ಷ ವರ್ಷವೂ ಗೇಣಿಚೀಟು ಎಂಬ ಒಪ್ಪಂದ ಪತ್ರದ ಆಧಾರದಲ್ಲಿ ರೈತರಿಗೆ ಆಸ್ತಿಯನ್ನು ಕೃಷಿ ಮಾಡಲು ನೀಡಬೇಕಾಗಿತ್ತು. ಅವರು ನಿರ್ದಿಷ್ಟ ಗೇಣಿಯನ್ನು ಧನಿಗೆ ಕೊಡಬೇಕಾಗಿತ್ತು. ಸರಕಾರದ ದಾಖಲೆಗಳಲ್ಲಿ ಧನಿಯ ಹೆಸರೇ ಇರುತ್ತಿತ್ತು ಹೊರತು ಗೇಣಿದಾರ (ಅಥವಾ ಸ್ಥಳೀಯ ಪರಿಭಾಷೆಯಲ್ಲಿ ‘ಒಕ್ಕಲಿನವನು’) ಯಾವುದೇ ಭದ್ರತೆ ಅಥವಾ ದಾಖಲೆಗೆ ಅರ್ಹನಾಗಿರಲಿಲ್ಲ. ಗೇಣಿಚೀಟು ಒಂದೇ ಅವನ ಬಳಿ ಇರುತ್ತಿದ್ದ ದಾಖಲೆ. + +ಗುತ್ತುಗಳ ಸ್ಥಿತಿ : ಮೊದಲು ಊರುಗಳಲ್ಲಿ ಪ್ರಬಲವಾಗಿದ್ದ ಗುತ್ತುಗಳಿಗೆ ಸರಕಾರದ ಮಾನ್ಯತೆ ಇರಲಿಲ್ಲ. ಆದರೆ ಗುತ್ತಿನವರನ್ನೇ ಪಟೇಲರನ್ನಾಗಿ ಮಾಡಿದ ಉದಾಹರಣೆಗಳೇ ಹೆಚ್ಚಾಗಿದ್ದುದರಿಂದ ಅಂತಹ ಗುತ್ತಿನವರು ಆಡಳಿತಾತ್ಮಕವಾಗಿಯೂ ಪ್ರಭಾವಶಾಲಿಗಳಾಗಿ ಉಳಿದುಕೊಂಡರು. (ಟಿಪ್ಪುಸುಲ್ತಾನನ ಕಾಲದಲ್ಲಿದ್ದ ಪಟೇಲರು ತಮಗೆ ನಿಷ್ಠಾವಂತರಾಗಿರಲು ಒಪ್ಪಿದರೆ ಅವರನ್ನೇ ಪಟೇಲರನ್ನಾಗಿ ಬ್ರಿಟಿಷರು ನೇಮಕ ಮಾಡಿದ್ದರು). ಅಲ್ಲದೆ ಗುತ್ತಿನವರು ತಮ್ಮ ಹಿಡುವಳಿಗಳನ್ನು ಹಿಗ್ಗಿಸಿಕೊಂಡು ದೊಡ್ಡ ದೊಡ್ಡ ಜಮೀನುದಾರರಾಗಿ ಬೆಳೆದುದರಿಂದ ಅವರ ವೈಭವ ಹಿಂದಿನಂತೆಯೇ ಉಳಿದುಕೊಂಡು ಬಂತು. ದೈವ ದೇವರುಗಳ ಆರಾಧನೆಯಲ್ಲಿ, ಕಟ್ಟು ಕಟ್ಟಳೆಗಳಲ್ಲಿ ಗುತ್ತಿನವರ ಸ್ಥಾನಮಾನಕ್ಕೆ ಸಾಮಾಜಿಕವಾಗಿ ಇದ್ದ ಪ್ರಾಧಾನ್ಯ ಕಡಿಮೆಯಾಗಲಿಲ್ಲ. + +ನಾಲ್ಕು ಬಗೆಯ ರೈತರು : ಎನ್. ಶ್ಯಾಮ ಭಟ್ ಅವರು ವಸಾಹತು ಕಾಲದಲ್ಲಿ ನಾಲ್ಕು ಬಗೆಯ ರೈತರಿದ್ದುದನ್ನು ಗುರುತಿಸಿದ್ದಾರೆ. 1. ತಾವು ಕೆಲಸ ಮಾಡದೆ ಕೃಷಿ ಕಾರ್ಮಿಕರಿಂದ ಕೆಲಸ ಮಾಡಿಸುವ ಜಮೀನುದಾರರು 2. ಶ್ರೀಮಂತ ಕೃಷಿಕರು. ಇವರು ಕೃಷಿ ಕಾರ್ಮಿಕರ ಜತೆಗೆ ತಮ್ಮ ಮನೆಯವರನ್ನು ಕೂಡಾ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. 3. ಸಣ್ಣ ರೈತರು ಮತ್ತು ಗೇಣಿದಾರರು. 4. ಭೂರಹಿತ ಕೃಷಿ ಕಾರ್ಮಿಕರು. ಇವರು ಹೆಚ್ಚಾಗಿ ಕೆಳವರ್ಗದವರಾಗಿರುತ್ತಿದ್ದರು. + +ಅರ್ಥ ವ್ಯವಸ್ಥೆ : ಬ್ರಿಟಿಷರು ಜಿಲ್ಲೆಯ ಕೃಷಿ ವ್ಯವಸ್ಥೆ ಮತ್ತು ಭೂಕಂದಾಯವನ್ನು ಸಂಗ್ರಹಿಸುವುದೇ ತಮ್ಮ ಪರಮಗುರಿ ಎಂದು ಆಡಳಿತವನ್ನು ನಡೆಸಿದರು. ಅವರ ಆಡಳಿತ ಯಂತ್ರವೇ ತೆರಿಗೆ ಸಂಗ್ರಹಕ್ಕಾಗಿ ದುಡಿಯುತ್ತಿತ್ತು. ಆನುಷಂಗಿಕವಾಗಿ ನ್ಯಾಯಾಂಗ, ಪೋಲೀಸ್ ವ್ಯವಸ್ಥೆ, ಶಿಕ್ಷಣ, ರಸ್ತೆ ಮುಂತಾದ ಮೂಲಭೂತ ಸೌಕರ್ಯಗಳ ವೃದ್ಧಿ ಮುಂತಾದವುಗಳಿಗೆ ಅವರು ಅಗತ್ಯವಿದ್ದಷ್ಟು (ಅಷ್ಟೇ) ಗಮನವನ್ನು ಕೊಡುತ್ತಿದ್ದರು. ಬಾಸೆಲ್ ಮಿಷನ್ ಮತ್ತು ರೋಮನ್ ಕೆಥೋಲಿಕರ ಮುತುವರ್ಜಿಯಿಂದ ಇಲ್ಲಿ ಶಿಕ್ಷಣ ವ್ಯವಸ್ಥೆ ಉತ್ತಮವಾಗಿ ಬೆಳೆಯಿತು ಹೊರತು ಸರಕಾರದ ಶ್ರಮ ಅದರಲ್ಲಿ ಕಡಿಮೆಯೇ. ಕೃಷಿಯನ್ನು ಹೊರತು ಪಡಿಸಿದ ಇತರ ಉದ್ದಿಮೆಗಳಿಗೆ ಕೂಡಾ ಸರಕಾರ ಗಮನಕೊಟ್ಟದ್ದಿಲ್ಲ. ಬಾಸೆಲ್ ಮಿಷನ್ ಮತ್ತು ಖಾಸಗಿ ವ್ಯಕ್ತಿಗಳ ಸಾಧನೆಯಿಂದ ಇಲ್ಲಿ ಉದ್ಯಮಗಳು ನಿಧಾನವಾಗಿ ಬೆಳೆದವು.ಬ್ರಿಟಿಷರ ಕಾಲದಲ್ಲಿ ಕೃಷಿಯೇ ಪ್ರಧಾನವಾಗಿತ್ತು. ಈ ಕ್ಷೇತ್ರ ಬಹಳ ಸಮೃದ್ಧವಾಗಿದ್ದರೂ ಇದರಲ್ಲಿ ದುಡಿಯುತ್ತಿದ್ದವರು ಬಡವರು ಹಾಗೂ ಅನಕ್ಷರಸ್ಥರಾಗಿಯೇ ಉಳಿಯುತ್ತಿದ್ದರು. + +ಸರಕಾರದ ಭಯ : ಒಟ್ಟಿನಲ್ಲಿ ಬ್ರಿಟಿಷರ ಆಡಳಿತ ವ್ಯವಸ್ಥೆ, ನ್ಯಾಯಾಂಗಗಳು ತಪ್ಪಿತಸ್ಥರನ್ನು ಬಹಳ ಕಠಿಣವಾಗಿ ಶಿಕ್ಷಿಸುತ್ತಿದ್ದುದರಿಂದ ‘ಸರಕಾರದ ಭಯ ಸರ್ವರಿಗೂ’ ಇತ್ತು. ಜನರಿಗೆ ನೆಮ್ಮದಿಯಿಂದ ಬದುಕಬಹುದಾದ ಭದ್ರತೆಯನ್ನು ಸರಕಾರ ನೀಡುತ್ತಿತ್ತು. ಜನರ ಆರ್ಥಿಕ ಪರಿಸ್ಥಿತಿ ಬಹಳ ಕಡಿಮೆ ಮಟ್ಟದಲ್ಲಿದ್ದರೂ ಜನರಿಗೆ ಅದಕ್ಕೆ ಕಾರಣ ಪರಕೀಯ ಸರಕಾರ ಎಂದು ಗೊತ್ತಾಗುವ ಸಾಧ್ಯತೆ ಇರಲಿಲ್ಲ. + +ಬ್ರಿಟಿಷ್ ದೊರೆಗಳ ಮರ್ಜಿ : ಅಂತೂ ಬ್ರಿಟಿಷರು ಈ ಜಿಲ್ಲೆಯನ್ನು ಆಳಲು ಬಂದರು. ಇಲ್ಲಿನ ದೊರೆಗಳೇ ಆದರು. ಬ್ರಿಟಿಷ್ ಅಧಿಕಾರಿಗಳನ್ನು ‘ದೊರೆಗಳು’ ಎಂದೂ, ಅವರ ಪತ್ನಿಯರನ್ನು ‘ಧೊರೆಸಾನಿ’ ಎಂದೂ ಕರೆಯುವುದು ವಾಡಿಕೆಯಾಗಿತ್ತು. ಅವರನ್ನೇ ಪಾತ್ರವಾಗುಳ್ಳ ಕತೆ ಕಾದಂಬರಿಗಳನ್ನು ಕೂಡಾ ಈ ಜಿಲ್ಲೆಯ ಕತೆಗಾರರು ಬರೆದಿದ್ದಾರೆ. ಬ್ರಿಟಿಷ್ ಅಧಿಕಾರಿಗಳು ಈ ಜಿಲ್ಲೆಯ ಜನರಲ್ಲಿ ಭಯ ಭಕ್ತಿಯನ್ನು ಪ್ರೇರೇಪಿಸುವಂತೆ ಗತ್ತು ಗೈರತ್ತುಗಳನ್ನು ಪ್ರದರ್ಶಿಸುತ್ತಿದ್ದುದು, ಅವರ ಒಳ್ಳೆಯತನ, ದುಷ್ಟತನ, ಅಹಂಕಾರ, ಸ್ಥಳೀಯ ದೈವದೇವರುಗಳನ್ನು ಧಿಕ್ಕರಿಸಿ ಕಷ್ಟಕ್ಕೆ ಒಳಗಾದುದು – ಇಂತಹವುಗಳೆಲ್ಲ ಇಲ್ಲಿನ ಕತೆಗಳಲ್ಲಿ ದಾಖಲಾಗಿವೆ. ದೊರೆಗಳು ಮತ್ತು ದೊರೆಸಾನಿಗಳ ಮರ್ಜಿಗಳನ್ನು ಚಿತ್ರಿಸಿರುವ ಕೆಲವು ಕತೆಗಳನ್ನು ಉಲ್ಲೇಖಿಸುವುದಾದರೆ ಡಾ. ನಾ. ಮೊಗಸಾಲೆಯವರ ‘ಉಲ್ಲಂಘನೆ’ ಕಾದಂಬರಿಯಲ್ಲಿ ಕೋಚ್ ಮೆನ್ ಎಂಬ ದೊರೆಗಳ ಮದುವೆ ಸಾಂತೇರ್ ಗುತ್ತಿನ ಒಬ್ಬಳು ಹೆಣ್ಣುಮಗಳೊಂದಿಗೆ ಆಗುತ್ತದೆ, ಮತ್ತು ಆ ಕಾರಣದಿಂದ ಗುತ್ತಿನವರಿಗೆ ಪಟೇಲಿಕೆ ಸಿಗುತ್ತದೆ. ಈ ಕಥಾನಕವು ಸಾಂಕೇತಿಕವೂ ಅರ್ಥಪೂರ್ಣವೂ ಆಗಿದೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_438.txt b/Kenda Sampige/article_438.txt new file mode 100644 index 0000000000000000000000000000000000000000..917493d839bebaef48ee2a27396f9a661ea8eb2d --- /dev/null +++ b/Kenda Sampige/article_438.txt @@ -0,0 +1,39 @@ + + +ನಾನು ಬಳ್ಳಾರಿಯಿಂದ ಕರ್ನೂಲ್, ಬೆಂಗಳೂರು ಪ್ರವಾಸ ಮುಗಿಸಿ ಕುಕ್ಕೆಗೇ ಹಿಂತಿರುಗಿದೆ. ಮತ್ತಿನ ದಿವಸಗಳಲ್ಲಿ ಪ್ರತಿದಿನವೆಂಬಂತೆ ನಾವು ದೂರವಾಣಿ ಸಂಪರ್ಕದಲ್ಲಿರುತ್ತಿದ್ದೆವು. ಇಲ್ಲದೇ ಇರಲು ನಮ್ಮಿಂದ ಆಗುತ್ತಿರಲಿಲ್ಲ! ಆಕೆ ನಿಧಾನವಾಗಿ ತನ್ನ ಸಮೀಪ ಬಂಧುಗಳಲ್ಲಿ, ತನ್ನ ಗೆಳತಿಯರಲ್ಲಿ, ತಂದೆ ತಾಯಿಯರಲ್ಲಿ ವಿಷಯ ಪ್ರಸ್ತಾಪಿಸಿದ್ದಳು. ಅವರು ಹೌಹಾರಿದ್ದರು. ಬಳ್ಳಾರಿಯ ಆ ಊರಿನಲ್ಲಿ, ಅಷ್ಟೇಕೆ ಜಿಲ್ಲೆಯಲ್ಲೇ ಪ್ರಸಿದ್ಧರಾಗಿದ್ದ, ಅಲ್ಲಿನ ಜನ ವಿಶೇಷ ಪ್ರೀತಿ ಗೌರವಗಳಿಂದ ಕಾಣುತ್ತಿದ್ದ, ಪ್ರತಿಷ್ಠಿತ ಮನೆತನದ ತಮ್ಮ ಹೆಣ್ಣುಮಗಳು ಸ್ವಾಮೀಜಿಗಳೊಬ್ಬರನ್ನು ಮದುವೆಯಾಗಬೇಕೆಂದಿರುವುದು ನಂಬಲಾಗದ, ಅರಗಿಸಿಕೊಳ್ಳಲಾಗದ, ಒಪ್ಪಿಗೆ ನೀಡಲಾಗದ ಸಂಗತಿಯಾಗಿ ಮನೆಯವರೆಲ್ಲರ ತಳಮಳಕ್ಕೆ, ನಿದ್ದೆಗೆಡಿಸಿದ್ದಕ್ಕೆ ಕಾರಣವಾಗಿತ್ತು. ಅದು ಅತ್ಯಂತ ಸಹಜ ಪ್ರತಿಕ್ರಿಯೆಯಾಗಿತ್ತು. + +ಆಕೆಯ ತಂದೆ ಜನಪ್ರಿಯ ವೈದ್ಯರು, ಸಂಪನ್ನರು. ತಂದೆ ತಾಯಿಗಳಿಗೆ ತಮ್ಮ ಅಚ್ಚುಮೆಚ್ಚಿನ ಮಗಳು ಯಾರೋ ಒಬ್ಬ ಸ್ವಾಮಿಯನ್ನು, ಅದೂ ವಯಸ್ಸಿನಲ್ಲಿ ಬಹಳ ಅಂತರವಿರುವ ವ್ಯಕ್ತಿಯನ್ನು ಕೈಹಿಡಿಯುವುದೆಂದರೆ ನಿಜಕ್ಕೂ-ಸುತರಾಂ ಬೇಕಿರಲಿಲ್ಲ. ಆಕೆ ‘ಹೂಂ’ ಅಂದರೆ ಎಂತೆಂಥಾ ಯೋಗ್ಯತಾವಂತ, ಸ್ಥಿತಿವಂತ, ಲೌಕಿಕ ವಿದ್ಯಾವಂತ ವ್ಯಕ್ತಿ ಆಕೆಯನ್ನು ಮದುವೆಯಾಗಬಹುದಿತ್ತು. ಅವರಪ್ಪ ಅವರ ಅವಿಭಕ್ತ ಕುಟುಂಬದ ಎಲ್ಲ ಹೆಣ್ಣು ಮಕ್ಕಳ ಮದುವೆಗಳನ್ನು ತಾವೇ ನಿಂತು ಮಾಡಿಸಿದವರು. ತಮ್ಮ ಮಗಳನ್ನು ಅನುರೂಪ ವ್ಯಕ್ತಿಗೆ, ತಮ್ಮ ಯೋಗ್ಯತೆಗೆ ಕುಂದಿಲ್ಲದಂತೆ, ಸ್ವಲ್ಪ ಹೆಚ್ಚೇ ಚೆನ್ನಾಗಿ ಮದುವೆ ಮಾಡಿಕೊಡುವ ಕನಸು ಕಂಡಿದ್ದವರು. ಮಗಳ ಮದುವೆಯನ್ನು ಹೇಗೆ ಮಾಡಬೇಕೆಂದಿದ್ದರೋ ಪಾಪ. ಮಧ್ಯೆ ಎಲ್ಲಿಂದ ಈ ಪೀಡೆ ತಗುಲಿಕೊಂಡಿತೋ ಎಂದವರಿಗೆ ಅನಿಸಿರಬಹುದು. ಪರಮ ಸ್ವಾರ್ಥಿಯಾಗಿ ನಾನವರಿಗೆ ಕಂಡಿರಬಹುದು! + +ನೆನಪಿನ ಸುರುಳಿ ಬಿಚ್ಚಿಕೊಂಡಾಗಲೆಲ್ಲ, ಮಿತ್ರ ತೋಳ್ಪಾಡಿ ಮನೆಯ ಆ ಪ್ರಶಾಂತ ಹಳ್ಳಿಯ ಪರಿಸರದ, ಹಾಡಿಯ ನೆನಪು ಬಂದೇ ಬರುತ್ತದೆ. ‘ಶಾಂತಿಗೋಡು’ ಎಂಬ ಹೆಸರಿನ ಊರಿನ ಆ ಮನೆಯನ್ನು ಒಬ್ಬಾತ ಬಂದವನು ಶಾಂತಿಯಗೂಡು ಎಂದು ಬಣ್ಣಿಸಿದ್ದು ನನಗೆ ನೆನಪಿದೆ. ಎಷ್ಟು ಸಲ ಅದನ್ನೇ ಮಾತನಾಡಿದೆವೋ ಅಲ್ಲೇ! ಈ ಸಲ ಸಿಕ್ಕಿದಾಗ ಕೇಳಿದ್ದ “ಏನು ಯಾರೋ ಹುಡುಗಿಯನ್ನು ಪ್ರೀತಿಸಿದ್ದೀರಂತೆ, ತುಂಬ ಹಚ್ಚಿಕೊಂಡಿದ್ದೀರಂತೆ, ಫೋನ್ ನಲ್ಲಿ ಮಾತನಾಡುತ್ತಲೇ ಇರುತ್ತೀರಂತೆ, ಮಠ ಬಿಡುವ ಸಿದ್ಧತೆ ನಡೆಸಿದ್ದೀರಂತೆ? ನನಗೆ ಹೇಳಲೇ ಇಲ್ಲಾ?” ಒಮ್ಮೆಗೆ ನನಗೆ ಪಿಚ್ಚೆನಿಸಿತು. ಯಾವುದನ್ನೂ ಆತನಲ್ಲಿ ಹೇಳದಿರುತ್ತಿರಲಿಲ್ಲ. ತಡವರಿಸಿದೆ. “ಹೌದು ಮಾರಾಯಾ- ಹೇಳಲಾಗಲಿಲ್ಲ-ಯಾಕೋ ಏನೋ ಸಂಕೋಚವೆನಿಸಿತು. ಮತ್ತೆ ಈಗ ಏನು ಮಾಡಲಿ?- ಹೇಗೆ ಮಾಡಲಿ?-ಹೀಗೆ ಇದೆ ಪರಿಸ್ಥಿತಿ-ನೀನೇ ಹೇಳಿಬಿಡು” ಎಂದೆ. ಸ್ವಲ್ಪ ಸುಮ್ಮನಿದ್ದ. “ಅದು ಹೇಗೆ ಮಾಡಬೇಕೋ, ಏನು ಮಾಡಬೇಕೋ ನನಗೆ ಗೊತ್ತಿಲ್ಲ. ನಿಮ್ಮದೇ ನಿರ್ಧಾರ, ಹೆಜ್ಜೆ ಇಡಬೇಕಾದುದು ನೀವೇ. ನಾವ್ಯಾರು ನಿಮ್ಮನ್ನು ಕೈ ಹಿಡಿದು ಹೊರಗೆ ಕರಕೊಂಡು ಬರಲಾಗುವುದಿಲ್ಲ”-ಅಂದ! ಮಾತಲ್ಲಿ ಎಂದಿನ ಸರಸತೆ ಇರಲಿಲ್ಲ. ಸ್ವಲ್ಪ ವ್ಯಗ್ರನಾಗಿದ್ದಂತೆ ಕಂಡಿತು. ನಾನೂ “ಹೌದು-ಹೌದು” ಎಂದು ತಲೆಯಾಡಿಸಿ, ಹಿಂದೆ ಬಂದಿದ್ದೆ. ನಾನು ಆಶ್ರಮ ತ್ಯಾಗ ಮಾಡುವ ದಿನಗಳು ಸಮೀಪಿಸಿದಂತೆ, ಅವನೂ ತಳಮಳಗೊಂಡಂತೆ ಕಂಡಿತು. + +ಇದೆಲ್ಲ ಸ್ವಲ್ಪ ವೇಗವಾಗಿ ಬೆಳೆದಂತೆ, ನನ್ನ ಹಿತೈಷಿಗಳು, ಬಂಧುಗಳು, ಬಂದು ಬಂದು ತಿಳಿ ಹೇಳತೊಡಗಿದರು. ಕೆಲವರು ಹೇಳಿದರು, ಮತ್ತೆ ಕೆಲವರು ಇನ್ನು ಕೆಲವರಿಂದ ಹೇಳಿಸಿದರು. “ಬೇಡ ಬೇಡಾ-ಸಂಸಾರದಲ್ಲೇನೂ ಹುರುಳಿಲ್ಲಾ. ಕ್ಷಣ ನಿಮಿಷಗಳ ಸುಖಕ್ಕೆಂದು ಮುಂದೆ ತಾಪತ್ರಯಗಳ ಸರಮಾಲೆಗೆ ಯಾಕೆ ಕತ್ತೊಡ್ಡುತ್ತೀರಿ. ಎಷ್ಟು ಚೆನ್ನಾಗಿದ್ದೀರಿ ನೀವೀಗ. ಪೀಠ ತ್ಯಾಗ ಮಾಡದಿರಿ” ಎಂದು ಕೈ ಮುಗಿದು ನಮಸ್ಕರಿಸಿ ಬಿನ್ನವಿಸಿಕೊಳ್ಳುತ್ತಿದ್ದರು. ಆಗೆಲ್ಲ ನನಗನ್ನಿಸುತ್ತಿತ್ತು “ಇವರು ಹೇಳುವುದು ಒಂದೊಮ್ಮೆ ನಿಜವೇ ಇರಬಹುದು. ಆದರೆ ಅದು ಅವರ ಅನುಭವವಷ್ಟೇ? ನನ್ನದಲ್ಲ ತಾನೇ? ಸ್ವತಃ ಅನುಭವಿಸದೆ ಸಾರಾಸಾರ ನಾನೇ ತಿಳಿಯದೆ ನಾನೇನು ಮಾಡಲಾದೀತು? ಹೇಗೆ ಇಲ್ಲೇ ಇದ್ದು ಬಿಡಲಿ? ಒಂದೊಮ್ಮೆ ಅನುಭವ ನನ್ನದೇ ಆದರೆ, ಒಳ್ಳೆಯದೋ- ಕೆಟ್ಟದೋ ನನ್ನ ಪಕ್ವತೆಗೇ ತಾನೆ? (ನಮ್ಮ ನಮ್ಮ ಮೂಗಿನ ನೇರಕ್ಕೆ ಯೋಚಿಸುವುದು- ಮಾಡುವುದು ಯಾರನ್ನೂ ಬಿಟ್ಟಿಲ್ಲ!)” ಉದ್ಧಾಮ ಪಂಡಿತರಾದ, ಸಹೃದಯರಾದ ಬನ್ನಂಜೆ ಆಚಾರ್ಯರಲ್ಲಿ ಇದೇ ಅಭಿಪ್ರಾಯವನ್ನು ಮಂಡಿಸಿದ್ದೆ. ಅವರಾದರೋ ಕೇಳಿ, ನನ್ನನ್ನು ಸುಮ್ಮನೆ ಪ್ರೀತಿಯಿಂದ ನೋಡಿ ‘ತ್ಚು ತ್ಚು’ ಎಂದು ಲೊಚಗುಟ್ಟಿ ನಕ್ಕಿದ್ದರು! ನಾನು ಮುಂದುವರಿಸಿ “ಇದರಿಂದ ದೇವರಿಗೆ ಸಿಟ್ಟು ಬಂದೀತಾ” ಎಂದು ಕೇಳಿದ್ದೆ. + + + +ನನ್ನದು ಬಹಳ ದಡ್ಡ ಪ್ರಶ್ನೆಯೆಂದು ಅವರಿಗನ್ನಿಸಿರಬೇಕು. “ಛೇ ಛೇ, ಹಾಗೇನಿಲ್ಲಾ- ಮತ್ತೆ ಈ ಹಿಂದೆಯೂ ಪೀಠತ್ಯಾಗ ಮಾಡಿ, ಸಂಸಾರಿಗಳಾದವರ ಉದಾಹರಣೆ ನಮ್ಮಲ್ಲಿದೆ. ಅಂಥವರ ಪರಿಸ್ಥಿತಿ ಮುಂದೆಲ್ಲ ಚೆನ್ನಾಗಿ ಆಯಿತು ಎನ್ನುವಂತಿಲ್ಲ. ಕೆಲವೊಮ್ಮೆ ಅದು ಅಸಹನೀಯವಾಗಿ ಪರಿಣಮಿಸಿತು. ಎಲ್ಲರು ಆದರ-ಗೌರವಗಳಿಂದ ಕಾಣುವ ದೊಡ್ಡ ಸ್ಥಾನದಿಂದ ಚ್ಯುತರಾದಾಗ ಆಗುವ ಪರಿಣಾಮವನ್ನು ಸಹಿಸಿಕೊಳ್ಳಲು ಎಲ್ಲರಿಂದಲು ಸಾಧ್ಯವಿಲ್ಲ. ಅದಕ್ಕೆ ವಿಶೇಷ ಎದೆಗಾರಿಕೆ ಬೇಕು. ಅದಕ್ಕೆ ತುಂಬು ನಿಸ್ಪೃಹ, ಉದಾರ ಮನಸ್ಥಿತಿ ಬೇಕು. (ಇದು ಇನ್ನೊಂದು ರೀತಿಯ ಸನ್ಯಾಸವಲ್ಲದೆ ಮತ್ತೇನು) ಇದು ಅಧ್ಯಾತ್ಮ, ದೇವರು, ಧರ್ಮಕ್ಕಿಂತಲೂ-ಸಾಮಾಜಿಕ ಸಮಸ್ಯೆ. ನಿಮಗೆ ಯಾವ ದುಃಸ್ಥಿತಿಯೂ ಒದಗಿ ಬರಬಾರದು ಎಂಬುದೇ ನನ್ನ-ನನ್ನಂಥವನ ಮೊದಲ ಕಾಳಜಿ” ಎಂದುಬಿಟ್ಟರು. ಸತ್ಯಕಾಮರದ್ದೂ ಸ್ವಲ್ಪ ವ್ಯತ್ಯಾಸದಲ್ಲಿ ಇದೇ ಅಭಿಪ್ರಾಯವಾಗಿತ್ತು. + +ಸಂಸಾರದಲ್ಲಿ ಅಸಾರತೆಯ ತಮ್ಮ ಸ್ವತಃ ಅನುಭವವನ್ನು ವಿವರಪಡಿಸಿ, ಸನ್ಯಾಸದ ಇಂತಹ ಉತ್ತಮ ಸಂದರ್ಭವನ್ನು ನಾನು ಕಳಕೊಳ್ಳಬಾರದೆಂದು ‘ಪುತ್ತೂರಿನ ಅಜ್ಜ’ನವರು ಕಳಕಳಿಯಿಂದಲೇ ನನಗೆ ತಿಳಿಹೇಳಿದ್ದರು. ಒಮ್ಮೆ ಕಛೇರಿಯೊಂದರಲ್ಲಿ ನಾನು ‘ಕಣ್ಣಿನೊಳಗೆ ನೋಡೋ-ಒಳಗಣ್ಣಿನಿಂದಲಿ ನೋಡೋ ಹರಿಯ-ಮೂಜಗಧೊರಿಯ’ ಎಂದು ಕಣ್ಣು ಮುಚ್ಚಿ ಹಾಡುತ್ತಿದ್ದರೆ, ‘ಹರಿ ಒಳಗೆಲ್ಲಿ ಕಾಣುತ್ತಾನೆ ಇವರಿಗೇ-ಇವರಿಗೆ ಮನದ ತುಂಬ ಒಂದೇ ಧ್ಯಾನ’ ಅಂದಿದ್ದರಂತೆ! ತೋಳ್ಪಾಡಿ ಹಾಗೆಂದು ನನ್ನಲ್ಲಿ ಹೇಳಿದ್ದ. ಯಾರು ಏನು ಹೇಳಲಿ-ಆಗೆಲ್ಲ ನನ್ನದೊಂದೇ ಉತ್ತರ-ನಸು ನಗು. + +ಪಲಿಮಾರಿನ ದೊಡ್ಡ ಶ್ರೀಗಳವರಿಗೆ, ಪೇಜಾವರ ಸ್ವಾಮಿಗಳವರಿಗೆ ವಿಷಯ ತಿಳಿಯಿತು. ನೇರವಾಗಿ ಬಳ್ಳಾರಿಗೇ ತೆರಳಿ ‘ರಮಾ’ಳನ್ನೇ ವಿಚಾರಿಸಿಕೊಂಡರು! “ಇದೊಂದು ವಿಷಯವನ್ನು ಬಿಟ್ಟುಬಿಡು-ನೀನು ಅವರನ್ನು ಬಿಡದಿದ್ದರೆ ಶಾಪ ಕೊಡುತ್ತೇನೆ” ಎಂದು ಪಲಿಮಾರಿನ ಶ್ರೀಗಳು ಮುನಿಸಿಕೊಂಡು ಹೇಳಿದರೆ, ಆದೀತೆಂದಳಂತೆ ರಮಾ! ಸ್ವಾಮಿಗಳು ನಕ್ಕುಬಿಟ್ಟರಂತೆ. ಪೇಜಾವರರಂತೂ “ನಿನಗೆ ಬೇರೆ ಒಳ್ಳೆಯ ಹುಡುಗನನ್ನು ನಾನೇ ನೋಡಿ ಮದುವೆ ಮಾಡಿಸುತ್ತೇನೆ. ಇವರನ್ನಂತು ಬಿಟ್ಟುಬಿಡು, ಇಡೀ ಸಮಾಜಕ್ಕೆ, ಮಾಧ್ವ ಸಮಾಜಕ್ಕೆ ಇವರು ತುಂಬ ಬೇಕಾದವರು, ತುಂಬ ಹೆಸರು ಮಾಡಿದವರು, ಇವರನ್ನು ಬಿಟ್ಟುಬಿಡು ನೀನು” ಅಂದಿದ್ದರಂತೆ. “ಇದರಲ್ಲಿ ನಾನು ಬಿಡಲಿಕ್ಕೆ ಏನೂ ಇಲ್ಲ. ನೀವು ಅವರನ್ನೇ ಕೇಳಿ ನೋಡಿ” ಎಂದು ಅಂದಿದ್ದಳಂತೆ ರಮಾ! ಪೇಜಾವರರು ನನಗೆ ಸಿಕ್ಕವರು “ಹುಡುಗಿ ತುಂಬಾ ಜೋರಿದ್ದಾಳೆ” ಎಂದು ನಕ್ಕು ನುಡಿದಿದ್ದರು! + +ಮತ್ತೆ ನನ್ನ ತಂಗಿ-ತಮ್ಮಂದಿರು, ಅವರ ಸನಿಹ ಸಂಬಂಧಿಗಳು ಎಲ್ಲ ಕಲೆತು ನನ್ನಲ್ಲಿ ಇದೇ ವಿಷಯ ಚರ್ಚಿಸಿದ್ದರು. ಮಾತಿಗೆ ಮಾತು ಬೆಳೆದು ಒಂದೊಮ್ಮೆ ಅದು ವಿಕೋಪಕ್ಕೆ ಹೋಗುತ್ತಿತ್ತೇನೋ. ಆದರೆ ನನ್ನ ನಿರ್ಧಾರ ಅವರಿಗೆ ಮನವರಿಕೆಯಾದಾಗ, ಯಾಕೋ ಏನೋ ಅವರೆಲ್ಲಾ ಒಮ್ಮೆಗೇ ಸುಮ್ಮನಾದರು. ಅಲ್ಲದೆ ನನ್ನ ಸಹೋದರಿಯರೆಲ್ಲಾ ಸುತ್ತುವರಿದು ‘ಬುದ್ದೀ’-‘ನೀವು ಹೇಗೇ ಇರಿ-ಚೆನ್ನಾಗಿರಿ-ಮತ್ತೆ ನಾವೆಲ್ಲಾ ಜೊತೆಗಿರೋಣ, ಚೆನ್ನಾಗಿರೋಣ! ನಮಗೆ ನೀವು ಬೇಕು!”-ಅವರೊಂದಿಗೆ ನಾನೂ ಗದ್ಗದಿತನಾಗಿದ್ದೆ! + +ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು! ಎಲ್ಲರಿಗು ನಗುಮುಖದೊಂದಿಗೆ ತಲೆಯಲ್ಲಾಡಿಸುವುದೇ ನನ್ನ ಉತ್ತರ! ಈ ರೀತಿಯ ಉತ್ತರಕ್ಕೆ ಸಿಡಿಮಿಡಿಗೊಂಡವರೂ ಇದ್ದರು. ಇದನ್ನೆಲ್ಲ ಗಮನಿಸಿ ಗುರುಗಳಾದ ಪೇಜಾವರರು ಹಾಗೂ ಪಲಿಮಾರು ಮಠಾಧೀಶರು ಅಂದಿದ್ದರು, “ಎಷ್ಟು ಜನಾನುರಾಗ, ಜನಾದರಣೆ ಗಳಿಸಿಕೊಂಡಿದ್ದೀರಿ! ಎಂಥ ಅಪಾರ ಕೀರ್ತಿ ನಿಮ್ಮದು! ಎಲ್ಲ ಬಿಟ್ಟು ಅದು ಹೇಗೆ ಹೋಗುತ್ತೀರೋ-ಆಶ್ಚರ್ಯ! ಆಶ್ಚರ್ಯ! ಅಷ್ಟಲ್ಲದೆ ನಿಮ್ಮದು ಮಧ್ವಾನುಜ ವಿಷ್ಣುತೀರ್ಥರ ಪರಂಪರೆ! ವಿಷ್ಣುತೀರ್ಥರು ಪೂಜಿಸಿದ ಲಕ್ಷ್ಮೀನರಸಿಂಹನನ್ನು ಬಿಟ್ಟು ಹೋಗುತ್ತೀರಾ?” ನಾನು ಮೌನವಾಗಿ ತಲೆತಗ್ಗಿಸಿ ಕೇಳುತ್ತಿದ್ದೆನಷ್ಟೇ. + + + +ಈ ಮಧ್ಯೆ ‘ವಿಪಶ್ಯನ ಧ್ಯಾನ’ದಿಂದ ನಾನು ಸರಿಹೋದೇನೆಂದು ಮಿತ್ರರು ಬೆಂಗಳೂರಿಗೆ ಅದಕ್ಕೂ ನನ್ನನ್ನು ಕರೆದುಕೊಂಡು ಹೋಗಿದ್ದರು! ಹತ್ತು ದಿವಸದ ಆ ಶಿಬಿರದಲ್ಲಿ ಭಾಗವಹಿಸಿದ್ದೆ. ಧ್ಯಾನ-ಮೌನಗಳು ನನಗೆ ಇಷ್ಟವಾಯಿತಾಗಿ, ಸದ್ಯದ ವಿಷಯದಲ್ಲಿ ಅದು ಪ್ರಯೋಜನಕ್ಕೆ ಬರಲಿಲ್ಲ. + +ನನ್ನನ್ನು ಈ ಎಲ್ಲ ಬೆಳವಣಿಗೆಗಳಿಂದ ವಿಮುಖನನ್ನಾಗಿಸಲು ಏನು ಮಾಡಬಹುದೆಂದು ಕೇಳಲು ಕೆಲವು ಆಸಕ್ತರು ಪ್ರಸಿದ್ಧ ಜ್ಯೋತಿಷಿಗಳೊಬ್ಬರಲ್ಲಿ ತೆರಳಿದ್ದರಂತೆ. ಜ್ಯೋತಿಷಿಗಳು ಇವರನ್ನು ನೋಡಿದೊಡನೆ ಇವರು ಬಂದ ಉದ್ದೇಶವನ್ನು ತಿಳಿದು ಹೇಳಿದರಂತೆ. “ಯಾವ ವ್ಯಕ್ತಿಯ ಕುರಿತು ನೀವೀಗ ಬಂದಿರುವಿರೋ ಅವರು ನಿಮಗೆ ದಕ್ಕುವುದಿಲ್ಲ. ಆ ಬಗ್ಗೆ ಪ್ರಯತ್ನಿಸಬೇಡಿ. ನಿಮಗದರಿಂದ ಕೆಡುಕೇ ಆದೀತು. ಅವರಿಗೆ ದೇವರ ವಿಶೇಷ ಅನುಗ್ರಹವಿದೆ. ಹೋಗಿರಿ” ಎಂದು. ಇದೇ ವ್ಯಕ್ತಿಗಳು ನನ್ನ ಮನಃಪರಿವರ್ತನೆ ಮಾಡಿಸಲೆಂದು ಪ್ರಸಿದ್ಧ ದೇವೀ ಉಪಾಸಕರಲ್ಲಿ ಕರೆದೊಯ್ದಿದ್ದರು (ನಾನಾದರೋ ಇಂತಹದೆಲ್ಲವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅವರೆಲ್ಲ ಹೇಳಿದಂತೆ ಕೇಳುತ್ತಿದ್ದೆ. ಆಗಿಬಿಡಲಿ-ಅವರಿಗೇಕೆ ಮತ್ತೆ ಬೇಸರ? ಎಂಬ ರೀತಿಯಲ್ಲಿ). ಉಪಾಸಕರು ಮೀನಾ-ಮೇಷ ಮಾಡಿ ನನ್ನನ್ನು ಉಪಾಸನೆಯ ಕೊಠಡಿಗೆ ಕರೆದೊಯ್ದು ಬಾಗಿಲು ಹಾಕಿಕೊಂಡರು. ದೇವಿಯ ಮುಂದೆ ನಿಲ್ಲಿಸಿದರು. “ನಿಮಗೆ ನಾನೇನು ಹೇಳಲಿ? ಆ ತಾಯಿಯ ಮಗು ನೀವು! ನೀವು ತಿಳಿದಂತೆ ಮಾಡಿ, ಆ ತಾಯಿ ನಿಮ್ಮನ್ನು ರಕ್ಷಿಸುತ್ತಾಳೆ!”ಹೊರಗೆ ಬಂದವನಿಗೆ ಪ್ರಶ್ನೆಗಳ ಸುರಿಮಳೆ! ಉಪಾಸಕರು ಏನು ಹೇಳಿದರು-ಏನು ಹೇಳಿದರು?” ನಾನು ಸುಮ್ಮನಿದ್ದೆ, ನಕ್ಕೆ. + + + +ಇಷ್ಟೆಲ್ಲ ನಡೆಯುತ್ತಿದ್ದಂತೆ ಅಸಹನೀಯ ಮಾನಸಿಕ ಒತ್ತಡ ನನ್ನ ಆರೋಗ್ಯಕ್ಕೆ ಆತಂಕಕಾರಿಯಾಗಿ ಪರಿಣಮಿಸಿತ್ತು. ದೇಹದಲ್ಲಿ ಕೃಶನಾಗಿ ಹೋಗಿದ್ದೆ. ಒಂದು ತೀರ್ಮಾನಕ್ಕೆ ಬಂದಿದ್ದೆ. “ದೇವರಲ್ಲಿ ಶರಣಾಗಿಬಿಡಬೇಕು. ಅವನೇ ಮತಿ ಅವನೇ ಗತಿ. ಬುದ್ಧಿ ಕೊಟ್ಟವನು ಅವನೇ. ದಾಟಿಸಬೇಕಾದವನೂ ಅವನೇ. ನಾನಿನ್ನು ಹಿಂದೆ ಮುಂದೆ ನೋಡುವವನಲ್ಲ. ಮುಂದಿನ ಬದುಕನ್ನು ಅಪಾಯವಿದ್ದರೂ ಸವಾಲಾಗಿ ಸ್ವೀಕರಿಸುವವನು. ನನ್ನ ಜೊತೆ ನನ್ನ ಲಕ್ಷ್ಮೀನರಸಿಂಹನಿದ್ದಾನೆ! ರಕ್ಷತೀತ್ಯೇವ ವಿಶ್ವಾಸಃ” ಅದು ಹರಿದಾಸರ ಆದರ್ಶ. ಸವಾಲನ್ನು ಎದುರಿಸುವುದು ಮತ್ತು ಶರಣಾಗತಿ ಹರಿದಾಸರ ಬದುಕಿನ ರೀತಿ! ನನಗೆ ದಾರಿ ನಿಚ್ಚಳವಾಗಿತ್ತು. + +ಮಠದಿಂದ ತುಸುದೂರ ದುರ್ಗಾದೇವಿಯ ಗುಡಿ. ನಮ್ಮ ಹಿರಿಯ ಸ್ವಾಮೀಜಿಗಳು ಕಟ್ಟಿಸಿದ್ದು. ಇದೇ ಸಮಯ ದುರಸ್ತಿಯ ಕೆಲಸವಿದೆಯೆಂದು, ನೋಡಿಕೊಂಡು ಬರೋಣವೆಂದು ನಾನೂ, ನನ್ನ ತಮ್ಮ ವೇಣುಗೋಪಾಲನೂ ಒಂದು ದಿನ ಅಲ್ಲಿಗೆ ಹೋದೆವು. ದುರಸ್ತಿಯ ಕೆಲಸ ವಿಶೇಷವೇನೂ ಇರಲಿಲ್ಲ. ಆದರೆ ಕಟ್ಟಡ ಹಳೆಯದಾಗಿತ್ತು. ಇದ್ದಕ್ಕಿದ್ದಂತೆ ಯಾಕೆ ಈ ಹಳೆಯ ಗುಡಿಯನ್ನು ಕೆಡವಿ, ಹೊಸದಾಗಿ, ಚೆನ್ನಾಗಿ ನಿರ್ಮಿಸಿಬಿಡಬಾರದು? ನಮ್ಮ ಕುಲದೇವತೆಯ ಮಂದಿರ ಸುಂದರವಾಗಿದ್ದರೆ ಎಷ್ಟು ಚೆನ್ನಾಗಿರುತ್ತದೆ. ವಿಷಯ ತಲೆಗೆ ಹೊಕ್ಕಿತೋ-ಕೆಲಸ ಶುರುವಾಯಿತೇ! ಅದಕ್ಕೆ ಹಣ? ಬೆಂಗಳೂರಿನ ಒಬ್ಬ ಭಕ್ತರು ಐದು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ಅಷ್ಟು ಸಾಲದು. ಆ ಕಾಲದಲ್ಲೇ ಅದಕ್ಕೆ ಹತ್ತು ಲಕ್ಷದಷ್ಟು ಬೇಕಾಗಿತ್ತು. ನನ್ನಲ್ಲಿ ಬೇರೆ ಸಂಗ್ರಹವಿರಲಿಲ್ಲ. ಇದ್ದ ‘ಟೆಂಪೋ ಟ್ರಾವಲರ್’ ಒಂದನ್ನು ಮಾರಿಬಿಟ್ಟೆ- ಹಣ ಹೊಂದಿಸಲು. ಸಾಲದು ಮತ್ತೂ ಬೇಕಿತ್ತು. ನನ್ನ ‘ಇಡುಗಂಟು’ (ಓದುಗರಿಗೆ ಅರ್ಥವಾಗಿರಬಹುದು. ನಾನು ಆಶ್ರಮ ತ್ಯಾಗ ಮಾಡುವಾಗ ನನ್ನೊಂದಿಗೆ ಒಯ್ಯಲು ಮೀಸಲಾಗಿಟ್ಟಿದ್ದ ಸುಮಾರು ಮೂರು-ಮೂರೂವರೆ ಲಕ್ಷದಷ್ಟು ಹಣದ)-ಇಂದಿರಾ ವಿಕಾಸ ಪತ್ರಗಳನ್ನೂ ಮಾರಿ ಹಣ ಹೊಂದಿಸಿದೆ! ಈಗ ನಗುವ ಸರದಿ ಒಳಗೆ ಕುಳಿತ ನರಸಿಂಹ-ದುರ್ಗಾದೇವಿಯರದ್ದು! + + + +ನನಗೆ ಏನೇನೂ ದುಃಖವೆನಿಸಲಿಲ್ಲ! ಭಲೇ- ಭಗವಂತನ ಕಾರುಣ್ಯಕ್ಕೇನೆಂಬೆ? ನಾನೂ ನಕ್ಕೆ. “ಯಸ್ಯಾನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ”-ದೇವರು ಯಾರನ್ನಾದರೂ ಅನುಗ್ರಹಿಸಬೇಕೆಂದರೆ ಮೊದಲು ಆತನ ಸಂಪತ್ತನ್ನು ಅಪಹರಿಸುವನಂತೆ. ಇದು ದಾಸರ, ಶರಣರ ನಂಬಿಕೆ! “ಹೊರ ನಡೆಯಬೇಕೆಂದಿರುವೆಯಾ? ಬರಿದಾದ ಎರಡೂ ಕೈಮೇಲೆತ್ತಿಕೊಂಡೇ ನಡೆ!! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_439.txt b/Kenda Sampige/article_439.txt new file mode 100644 index 0000000000000000000000000000000000000000..c0d3c3745410bacc69342ec211731cb50602e508 --- /dev/null +++ b/Kenda Sampige/article_439.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|Dec 9, 2018|ವಾರದ ಕಥೆ,ಸಾಹಿತ್ಯ| 0 Comments + +“ಹೆಚ್ಚೇನು? ಸ್ವತಃ ಪಟ್ಟಾಧಿಕಾರಿಣಿಯಾದ ದೇವಮ್ಮಾಜಿಯೇ ಸಹಿಸಲಿಲ್ಲ. ಇದಕ್ಕಾಗಿ ದೇವಮ್ಮಾಜಿಯೂ, ಮಹದೇವಮ್ಮಾಜಿಯೂ ಅಪ್ಪುಕಳವೆಂಬಲ್ಲಿ ವಾಸಮಾಡುತ್ತಿದ್ದರು. ದುರಾಚಾರಿಯ ದುರ್ವಾಸನೆಯು ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇತ್ತು.” + +byಕೆಂಡಸಂಪಿಗೆ|Dec 3, 2018|ದಿನದ ಪುಸ್ತಕ,ಸಾಹಿತ್ಯ| 0 Comments + +”ಮಹಿಳೆ ಮಹಿಳೆಯರ ಕತೆಗಳನ್ನೇ ಬರೆದು ಅಚ್ಚು ಹಾಕುವ ಅನಿವಾರ್ಯತೆ ಇರುವುದಾದರೂ ಮಹಿಳಾ ವಸ್ತುವನ್ನು ಎತ್ತಿಕೊಂಡು ಬರೆಯುವುದರಿಂದಲೇ ಅನನ್ಯತೆ ಒದಗಿ ಬರುವುದು ಎಂಬ ಊಹೆ ಯಾವಾಗಲೂ ನಿಜವಲ್ಲ. ಹಾಗೆ ನೋಡಿದರೆ ಮಹಿಳಾ ಲೋಕವೂ ಒಟ್ಟಂದದಲ್ಲಿ ನಿರ್ವಹಿಸುವಂತದ್ದಲ್ಲ ಎಂದು ಸ್ವತ: ಸುಶೀಲಾ ಅವರ ಕತೆಗಳೇ ನಿರೂಪಿಸುತ್ತಲಿವೆ.” + +byದರ್ಶನ್ ಜೆ|Dec 2, 2018|ವಾರದ ಕಥೆ,ಸಾಹಿತ್ಯ| 1 Comment + +”ನನಗೆ ಹೊಟ್ಟೆಯಲ್ಲಿ ಸಂಕಟ ಶುರುವಾಯಿತು. ಇಂಥಾ ಸಮಯದಲ್ಲಿ ನಾವೆಲ್ಲಾ ಗೆಳೆಯರು ನಮ್ಮ ಜೀವದ ಗೆಳೆಯ ಅಬೀಬಾನ ಹತ್ತಿರ ಇರಬೇಕು, ಹೌದು ಅದೇ ಒಳಿತೆನಿಸಿತು.ಎಲ್ಲರು ನಮ್ಮ ಮನೆಗಳ ಹಿಂದಿನ ಬೀದಿಯ ಸಾಬರ ಬೀದಿಗೆ ಹೋದೆವು. ದೂರದಿಂದಲೇ ಅಬೀಬಾನ ಮನೆಯ ಹತ್ತಿರದ ಜನಸಂದಣಿ ನೋಡಿ ಭಯವಾಯ್ತು.” + +byಡಾ. ಬಿ. ಜನಾರ್ದನ ಭಟ್|Nov 25, 2018|ವಾರದ ಕಥೆ,ಸಾಹಿತ್ಯ| 0 Comments + +”ಸ್ವಾಮಿಗಳೇ, ಆಧಾರವಿಲ್ಲದೆ ಮಾತಾಡುವ ಪೈಕಿಯವನಲ್ಲ ನಾನು.ನನ್ನ ತಂದೆಯವರ ಕಾಲದಲ್ಲಿ ಕೊಡಗಿನ ದರೋಡೆಕೋರರ ದಂಡು ತುಳುನಾಡಿಗೆ ಇಳಿಯಿತು.ಹೊಂಬಾಳೆ ನಾಯಕ ಮತ್ತು ಗೋಪಗೌಡ ಅದರ ಮುಖಂಡರು. ಅವರು ಉದ್ದಕ್ಕೂ ತುಳು ನಾಡನ್ನು ದೋಚುತ್ತಾ ಹೋದರು.ಆಗ ತುಳುನಾಡಿನಲ್ಲಿ ಟಿಪ್ಪುವಿನ ಆಡಳಿತ ಇತ್ತು ನೋಡಿ.” + +byಕೆಂಡಸಂಪಿಗೆ|Nov 23, 2018|ದಿನದ ಪುಸ್ತಕ,ಸಾಹಿತ್ಯ| 0 Comments + +”ಕಥೆ ಬರೆಯುವ. ಲಲಿತ ಪ್ರಬಂಧಗಳನ್ನು ಲೀಲಾಜಾಲವಾಗಿ ಬರೆಯುವ ಅನಿತಾ ನಮ್ಮ ಕನ್ನಡ ಸಾಹಿತ್ಯ ಜಗತ್ತಿಗೆ ದಕ್ಕಿದ ಸೊಗಸಾದ ಹಾಸ್ಯಪ್ರಜ್ಞೆ. ಅದು ಹಾಸ್ಯದ ಹೆಸರಿನ ಅಪಹಾಸ್ಯವಲ್ಲ. ಅದೊಂದು ದೃಷ್ಟಿಕೋನ.ಒಮ್ಮೊಮ್ಮೆ ಮನಸ್ಸು ಬಂದಾಗ ಕವಿತೆಯನ್ನೂ ಬರೆದು ಹುಬ್ಬು ಹಾರಿಸುವ ಅನಿತಾ ಇವೆಲ್ಲವುಗಳನ್ನೂ ಮೀರುವಂತೆ ಒಬ್ಬ ಅದ್ಭುತ ಪ್ರಕೃತಿ ಶಾಸ್ತ್ರಜ್ಞೆ.” + +byಕೆಂಡಸಂಪಿಗೆ|Nov 19, 2018|ದಿನದ ಪುಸ್ತಕ,ಸಾಹಿತ್ಯ| 0 Comments + +”ನಮಗೆ ಶಿಶ್ವಾರ ಇದೆ, ನಾವೂ ಅಲ್ಲಿ ಕೂತು ಅಕ್ಷರ ಕಲಿಯಬಹುದು ಎಂಬ ಪರಿಜ್ಞಾನವೂ ಇರಲಿಲ್ಲ.ಯಾಕೆಂದರೆ, ಮನೆಯಲ್ಲಿ ಯಾರೂ ನಮ್ಮನ್ನು ತಾವಾಗೇ ಶಿಶ್ವಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿರಲಿಲ್ಲ. ಆಯಾ ಬಂದು ಎಲ್ಲರ ಮನೆ ಮನೆಗೆ ತೆರಳಿ ನಾಳೆಯಿಂದ ಮಕ್ಕಳನ್ನು ಶಿಶ್ವಾರಕ್ಕೆ ಕಳಿಸಬೇಕೆಂದು ಮನೆಯ ಹಿರಿಯರಿಗೆ ತಾಕೀತು ಮಾಡಿದಾಗಲೇ ನಮಗೆ ಅರಿವಾದದ್ದು” + +byಭಾರತಿ ಬಿ.ವಿ.|Nov 18, 2018|ವಾರದ ಕಥೆ,ಸಾಹಿತ್ಯ| 0 Comments + +“ಅವನು ಹಾಸಿಗೆಗೆ ಹಿಂತಿರುಗುವುದರಲ್ಲೇ ನಾನು ಹಾರಿಹೋಗಿ ದೀಪವಾರಿಸಿದೆ. ಆ ಕೂಡಲೇ ಮತ್ತೆ ಗಾಭರಿಗೊಂಡ ಅವನು! ಅಬ್ಬ, ಎಂಥ ತಮಾಷೆ ಎನ್ನುತ್ತೀ ಇಡೀ ರಾತ್ರಿ! ಒಮ್ಮೆ ಕತ್ತಲು, ಮತ್ತೊಮ್ಮೆ ಬೆಳಕು, ಮತ್ತೊಮ್ಮೆ ಬೆಳಕು, ಇದ್ದಕ್ಕಿದ್ದಂತೆ ಕತ್ತಲು…..! ಬೆಳಗಿನ ಜಾವದಲ್ಲಿ ಮೊದಲ ಟ್ರಾಮಿನ ಸದ್ದು ಕಿವಿಗೆ ಬಿದ್ದಿದ್ದೇ ತಡ, ಬೇಗ ಬೇಗ ಬಟ್ಟೆ ಹಾಕಿದವನೇ ಎದ್ದು ಬಿದ್ದು ಓಡಿಹೋದ.” + +byಡಾ. ಬಿ. ಜನಾರ್ದನ ಭಟ್|Nov 11, 2018|ವಾರದ ಕಥೆ,ಸಾಹಿತ್ಯ| 0 Comments + +ಜನ ಬೀದಿಯಲ್ಲಿ ಆಡಿಕೊಂಡರು:“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು” + +byಕೆಂಡಸಂಪಿಗೆ|Nov 5, 2018|ದಿನದ ಅಗ್ರ ಬರಹ,ಸಾಹಿತ್ಯ| 0 Comments + +ರಾತ್ರಿ ಕತ್ತಲಾಗಿದ್ದರೂ ಅಲ್ಲಲ್ಲಿ ಇದ್ದ ಬೀದಿ ಲೈಟಿನ ಕಾರಣವಾಗಿ ನನಗೇನೂ ಭಯ ಅನಿಸಲಿಲ್ಲ. ಅಪ್ಪನ ಎತ್ತಿನ ಗಾಡಿಯಲ್ಲಿ ಸುತ್ತುತ್ತಿದ್ದ ನನಗೆ ಚಿತ್ತಣ್ಣನ ರಿಕ್ಷಾ ದೇವಾನುದೇವತೆಗಳ ರಥದಂತೆ ಕಂಡಿತು. \ No newline at end of file diff --git a/Kenda Sampige/article_44.txt b/Kenda Sampige/article_44.txt new file mode 100644 index 0000000000000000000000000000000000000000..8a23b9d9f5940e9aa5b988f27f39f05612b43c59 --- /dev/null +++ b/Kenda Sampige/article_44.txt @@ -0,0 +1,91 @@ +ಶ್ರಾವಣದಿಂದ ಕಾರ್ತೀಕದವರೆಗೆ ಹಬ್ಬಗಳ ಸಾಲುಸಾಲು. ಶ್ರಾವಣದಲ್ಲಿ ನಾಲ್ಕು ವಾರಗಳ ಮಂಗಳಗೌರಿ ಪೂಜೆ, ನಡುವೆ ಬರುವ ಭೀಮನ ಅಮಾವಾಸ್ಯೆ ಮತ್ತು ವರಮಹಾಲಕ್ಷ್ಮಿ ವ್ರತಗಳನ್ನು ಹಾದು ಗೌರಿ-ಗಣೇಶ ಹಬ್ಬ ಮುಗಿಸಿ ಸುಧಾರಿಸಿಕೊಳ್ಳುವ ಹೊತ್ತಿಗೆ ಮೈಸೂರು ದಸರಾ ಆರಂಭಗೊಳ್ಳುತ್ತದೆ. ಅದು ಮುಗಿಯುತ್ತಿದ್ದಂತೆ ದೀಪಾವಳಿ, ಕಾರ್ತೀಕ ಸೋಮವಾರಗಳು ಬರುತ್ತವೆ. ಈ ಹಬ್ಬಗಳ ಸಾಲು ಮುಗಿಯುವವರೆಗೆ ಮನೆಯಲ್ಲಿ ಏನಿಲ್ಲವೆಂದರೂ ಒಂದು ಪಿಂಡಿ ಬೆಲ್ಲ, ಇಪ್ಪತ್ತು ಇಪ್ಪತೈದು ತೆಂಗಿನಕಾಯಿ ಬೇಕೇಬೇಕು. ಈ ಎಲ್ಲ ಹಬ್ಬಗಳನ್ನ ತಾಯವ್ವ ವೈಭವದಿಂದ ಮಾಡದಿದ್ದರೂ ಸಂಪ್ರದಾಯಬದ್ಧವಾಗಿ ಆಚರಿಸಿಕೊಂಡು ಬಂದಿದ್ದಳು. + +ತಾಯವ್ವ ಸತ್ತ ನಂತರ ಅವುಗಳನ್ನು ನಿಭಾಯಿಸುವ ಸರದಿ ಮನೆಯ ಸೊಸೆಯರದಾಗಿತ್ತು. ಅದರಲ್ಲೂ ಮನೆಯ ಹಿರಿಸೊಸೆಯಾದ ಪುಟ್ಟಮ್ಮ ಮನೆತನದ ಸಂಪ್ರದಾಯಕ್ಕೂ ಹೆಚ್ಚು ಭಾದ್ಯಳಾಗಿದ್ದಳು. ಅತ್ತೆಯೊಂದಿಗೆ ಎಂಟೊಂಬತ್ತು ವರ್ಷ ಪಳಗಿದ್ದ ಅವಳು ಸರಿಸುಮಾರು ಎಲ್ಲವನ್ನೂ ಕಲಿತಿದ್ದಳು ಸಹ. + +ಸಣ್ಣವಯಸ್ಸಿನಿಂದಲೂ ಹೋಗಿ ಬಂದು ಮಾಡುತ್ತಿದ್ದ ದಾಕ್ಷಾಯಿಣಿಗೆ ಎಲ್ಲವೂ ತಿಳಿದಿತ್ತಾದರೂ ಅವಳು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವಳಲ್ಲ. ತಾಯವ್ವನಾದರೂ ಇರುವವರೆಗೂ ಅವಳನ್ನು ಅಣ್ಣನ ಮಗಳಾಗಿ ಕಂಡಳೇ ಹೊರತು ಸೊಸೆಯಾಗಿ ಅಲ್ಲ. ಮನೆತನದ ಸಂಪ್ರದಾಯ, ಆಚಾರ-ವಿಚಾರಗಳನ್ನೆಲ್ಲ ನಿಭಾಯಿಸುವ ಹೊಣೆ ಹಿರಿಯ ಸೊಸೆಯದು ಎಂದು ನಂಬಿದವಳು ಅವಳು. ಹಾಗಾಗಿ ಅವಳು ಪುಟ್ಟಮ್ಮನನ್ನು ತಿದ್ದಿತೀಡುವುದರಲ್ಲಿ ಹಾಕಿದ ಶ್ರಮವನ್ನು ದಾಕ್ಷಾಯಿಣಿಯ ಮೇಲೆ ಹಾಕಲಿಲ್ಲ. ಜೊತೆಗೆ ತಮ್ಮ ವಿಶು ಎಲ್ಲ ಕಹಿಯನ್ನೂ ಮರೆತು ಎರಡನೆ ಸಂಬಂಧಕ್ಕೆ ತನ್ನ ಚಂದದ ಮಗಳನ್ನು ಕೊಡಲೊಪ್ಪಿದ್ದರ ಬಗ್ಗೆಯೂ ಅವಳು ತುಸು ಹೆಚ್ಚೆನಿಸುವಷ್ಟೇ ಕೃತಜ್ಞರಾಗಿದ್ದಳು. + +ತಾಯವ್ವ ಸತ್ತ ನಂತರ ಪುಟ್ಟಮ್ಮನು ಅತ್ತೆಯ ಸಂಪ್ರದಾಯವನ್ನು ಚ್ಯುತಿಯಾಗದಂತೆ ಮಾಡಿಕೊಂಡು ಬಂದಿದ್ದಳು. ಈ ವಿಚಾರದಲ್ಲಿ ಅವಳು ದಾಕ್ಷಾಯಿಣಿಯನ್ನು ನಚ್ಚುವಂತಿರಲಿಲ್ಲ. ಕೂಗಳೆತೆಯ ದೂರದಲ್ಲಿ ತಾಯಿ ಮನೆ ಇದ್ದುದರಿಂದ ಅವಳಿಗೆ ಯಾವಾಗ ಬೇಕಾದರೂ ಕರೆ ಬರುತ್ತಿತ್ತು. ರಾಜಶೇಖರನು ಸಣ್ಣಪುಟ್ಟ ಹಬ್ಬಗಳ ಹೆಸರೇಳಿ ತನ್ನ ಕೆಲಸವನ್ನು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ. ಅದರಲ್ಲೂ ದಸರೆಯ ಹೊತ್ತಿಗೆ ಯಾವುದಾದರೊಂದು ರಿಪೇರಿಯ ಗುತ್ತಿಗೆ ಸಿಗುವ ಸಾಧ್ಯತೆಯೂ ಇತ್ತು. ಹಾಗಾಗಿ ಅವನು ಹಬ್ಬಗಳನ್ನು ನೆಚ್ಚಿ ಮನೆಯಲ್ಲಿ ಕೂರುತ್ತಿರಲಿಲ್ಲ. ಇದರಿಂದಲೂ ದಾಕ್ಷಾಯಿಣಿಗೆ ತೌರಿಗೆ ಹೋಗುವುದು ಸಲೀಸಾಗುತ್ತಿತ್ತು… + +(ಡಾ. ಎಂ. ಉಷಾ) + +ಈ ಬಾರಿ ಕುಲಗಾಣದ ಮನೆಯಲ್ಲಿ ಸುಗುಣ ಮತ್ತು ಮೀನಾಕ್ಷಿಯರ ನಡುವಿನ ಕದ್ದು ಬೆಣ್ಣೆ ಮಾರಿಕೊಳ್ಳುವ ಜಗಳ ತಾರಕಕ್ಕೇರಿ ಮನೆಯ ವಾತಾವರಣ ಬಿಗಡಾಯಿಸಿತ್ತು. ವಾರಗಿತ್ತಿಯ ಮೇಲೆ ಮುನಿಸಿಕೊಂಡ ಮೀನಾಕ್ಷಿ ಮುಟ್ಟಿನ ನೆಪವೊಡ್ಡಿ ಆಚೆ ಕುಳಿತಿದ್ದಳು. + +‘ಹುಸಿಮುಟ್ಟುʼ ಹೆಂಗಸರ ದೊಡ್ಡ ಆಯುಧ. ಮನೆಯಲ್ಲಿ ಕೆಲಸ ಹೆಚ್ಚಾದಾಗ, ಗಂಡ ಹತ್ತಿರ ಬರುವುದು ಬೇಡವೆನಿಸಿದಾಗ ಹೆಣ್ಣುಮಕ್ಕಳು ಇದನ್ನು ಪ್ರಯೋಗಿಸುತ್ತಾರೆ. ಅದರಂತೆ ಮೀನಾಕ್ಷಿ ಮನೆಯ ಜವಾಬ್ದಾರಿಯನ್ನೆಲ್ಲ ಹೊತ್ತು ನಡೆಸುವ ತನ್ನ ಬೆಲೆಯನ್ನು ವಾರಗಿತ್ತಿಗೆ ತೋರಿಸಲು ಈ ಆಯುಧ ಪ್ರಯೋಗಿಸಿದ್ದಳು. + +ನಾಲ್ಕೈದು ದಿನಗಳ ಅಂತರದಲ್ಲಿ ನಡೆದ ಈ ವಿದ್ಯಮಾನದಿಂದಾಗಿ ಈ ಬಾರಿ ಗೌರಿ ಹಬ್ಬಕ್ಕೆ ದಾಕ್ಷಾಯಿಣಿ ಮನೆಯಲ್ಲಿಯೇ ಉಳಿಯುವಂತಾಗಿತ್ತು. ದಾಕ್ಷಾಯಿಣಿಗೆ ಅಲ್ಲಿಗೆ ಹೋಗಿ ನಡೆಯುತ್ತಿದ್ದುದನ್ನು ನೋಡಬೇಕೆಂಬ ಹಂಬಲವಿದ್ದರೂ, ರಾಜಶೇಖರ ಇಂತಹ ಪರಿಸ್ಥಿತಿಯಲ್ಲಿ ನಾವು ಅಲ್ಲಿರುವುದು ಸೂಕ್ತವಲ್ಲ ಎಂದು ತೀರ್ಮಾನಿಸಿ ನಿರಾಕರಿಸಿದ್ದ. ಹೆಂಡತಿಗೆ ಸ್ನೋಪೌಡರುಗಳ ಬಳಕೆಯವರೆಗೆ ಮಾತ್ರ ಅವನು ಸ್ವಾತಂತ್ರ‍್ಯ ಕೊಟ್ಟಿದ್ದ… + +ಎಂದಿನಂತೆ ವಾರಗಿತ್ತಿಯರಿಬ್ಬರೂ ಬೆಳಕರಿಯುವ ಮೊದಲೇ ಎದ್ದು ತಲೆಗೆ ಎರೆದುಕೊಂಡರು. ಪುಟ್ಟಮ್ಮ ಸರೋಜಳನ್ನು ಎಬ್ಬಿಸಿ ಉಳಿದವರಿಗೆ ಎರೆಯುವ ಕೆಲಸ ವಹಿಸಿ ತಾನು ದೇವರ ಮನೆ ಹೊಕ್ಕಳು. ಮಾಡುವ ಕೆಲಸಕ್ಕೆ ಅಡ್ಡ ಬರುವರೆಂದು ಚಿಕ್ಕ ಮಕ್ಕಳನ್ನು ಅಮ್ಮಂದಿರಿಬ್ಬರೂ ತಟ್ಟಿ ಮಲಗಿಸಿದ್ದರು. + +ನಿಜಗುಣ-ರಾಜಶೇಖರ ಪ್ರತ್ಯೇಕವಾಗಿ ತಮ್ಮ ಜೊತೆಗಾರರೊಂದಿಗೆ ಬಹಿರ್ದೆಸೆಗೆ ತೆರಳಿದ್ದರು. ದಾಕ್ಷಾಯಿಣಿ ಅಡುಗೆ ಕೆಲಸಕ್ಕೆ ನಿಂತಳು. ಪೂಜೆಯನ್ನು ನಿಜಗುಣ ಮಾಡಿಸುತ್ತಿದ್ದರಿಂದ, ಪುಟ್ಟಮ್ಮ ದೇವರ ಪೂಜೆಗೆ ಅಣಿಮಾಡುವ ಕೆಲಸ ಅವಳದಾಗಿತ್ತು. ಹರವೆಯ ಮೇದರ ನಿಂಗಜ್ಜನಿಂದ ತರಿಸಿದ್ದ ಹೊಸಮೊರಗಳಿಗೆ ಅಡ್ಡಡ್ಡವಾಗಿ ಅರಿಶಿನ ಬಳಿದು, ಮೊನೆಬಾಲೆ ಎಲೆ ಹರಡಿ ಅದರಲ್ಲಿ ಒಂಬತ್ತು ಬಗೆಯ ಧಾನ್ಯಗಳು, ಒಂದೆರಡು ತರಕಾರಿ, ಅಚ್ಚುಬೆಲ್ಲ, ವಿಳ್ಳೆದೆಲೆ, ತೆಂಗಿನಕಾಯಿ, ರವಿಕೆಕಣ, ಬಳೆಬಿಚ್ಚೋಲೆ, ಕರಿಮಣಿ, ಕನ್ನಡಿ, ಸಿಕ್ಕಟಿಕೆ, ಅರಿಶಿನ ಕುಂಕುಮ ಇತ್ಯಾದಿಗಳನ್ನೆಲ್ಲ ಇಟ್ಟು ಅರಿಶಿನ ದಾರ ಸುತ್ತಿ ಬಾಗಿನ ಸಿದ್ಧ ಮಾಡುವ ಹೊತ್ತಿಗೆ ಮಲಗಿದ್ದ ಮಲ್ಲಿಯ ‘ರಂಗಪ್ರವೇಶʼವಾಯಿತು. + +ತಾಯಿ ಮಗ್ಗುಲಲ್ಲಿ ಇಲ್ಲದ್ದರಿಂದ ಅವನು ಬೇಗನೆ ಎದ್ದಿದ್ದ. ಸರೋಜ ಮುದ್ದುಗರೆದು ಹಿತ್ತಲಿಗೆ ಕರೆದೊಯ್ದು ‘ಉಮ್ಮʼ ಮಾಡಿಸಿ, ಮೈ ತೊಳೆಯುವಲ್ಲಿಗೆ ತನ್ನ ಬುದ್ದಿಯನ್ನೆಲ್ಲ ಖರ್ಚು ಮಾಡಿದ್ದಳು. ಅಕ್ಕನಿಗೆ ಹೊಡೆದು, ಪರಚಿ, ಅಳುತ್ತ ಎಲ್ಲ ಕೆಲಸ ಮುಗಿಸಿದ ಮಲ್ಲಿ ತಾಯಿಯನ್ನು ತಲುಪಿದ್ದ. + +ಇದೀಗ ದೇವರ ಕೋಣೆಯಲ್ಲಿ ಕಂಡ ಸಮೃದ್ಧಿಯಿಂದ ಅವನ ಉತ್ಸಾಹ ಇಮ್ಮಡಿಯಾಯಿತು. ಲಗುಬಗೆಯಿಂದ ತಾಯಿಗೆ ನೆರವಿಗೆ ಮುಂದಾದ. ಪುಟ್ಟಮ್ಮ ಅದಕ್ಕೆ ಅವನಿಗೆ ಅವಕಾಶ ಕೊಡದೆ, ಏನು ಮುಟ್ಟಿದರೂ, ಅಬ್ಬು… ಆಯಿ… ಅತ್ತ… ಎಂದು ಹಿಮ್ಮೆಟ್ಟಿಸ ತೊಡಗಿದಳು. ದೇವರ ಸಾಮಗ್ರಿಯಾದ್ದರಿಂದ ಅವಳ ಕಣ್ಗಾವಲು ದಿನಕ್ಕಿಂತ ತುಸು ಅಧಿಕವಾಗಿಯೇ ಇತ್ತು. + +ಇದರಿಂದ ಬೇಸತ್ತ ಮಲ್ಲಿ ಬೇರೇನು ಮಾಡಬಹುದು… ಎಂದು ಯೋಚಿಸಿದ. ಅಡುಗೆ ಮನೆ ಅವನ ಗಮನ ಸೆಳೆಯಿತು. ಚಿಕ್ಕಮ್ಮನಿಗೆ ನೆರವಾಗಲು ಅತ್ತ ದೌಡಾಯಿಸಿದ… + +ಮೊಸರ ಗಡಿಗೆಯಲ್ಲಿ ಕಡೆಗೋಲು ಬಿಟ್ಟು, ಒಲೆಯ ಮುಂದೆ ಇಡ್ಲಿ ಚಿಬ್ಬಲಿಗೆ ಸಂಪಣ ಹುಯ್ಯುತ್ತಿದ್ದ ದಾಕ್ಷಾಯಿಣಿ ಮಲ್ಲಿ ಒಲೆಯ ಹತ್ತಿರ ಬರುತ್ತಿದ್ದುದು ಕಂಡದ್ದೇ ‘ಅಕ್ಕ ಮಲ್ಲಿನ್ ಕರ್ಕಂಬುಡಿ… ಆಮೇಲೆ ನನ್ ಮಗಂಗೆ ಅದು ಮಾಡಿದ್ರು… ಇದು ಮಾಡಿದ್ರು ಅಂತ ರಂಪ ಮಾಡಬೇಡಿʼ ಎಂದು ಕೂಗಿದಳು. + +ದಾಕ್ಷಾಯಿಣಿಯ ಮಾತಿನ ವರಸೆಯಿಂದಲೇ ಪುಟ್ಟಮ್ಮನಿಗೆ ಅವಳು ಜಗಳಕ್ಕೆ ಕಾಲು ಕೆರೆಯುತ್ತಿರುವುದು ಮನದಟ್ಟಾಯಿತು. ಮಾತು ಮುಂದುವರಿಸದೆ ಮಲ್ಲಿಯನ್ನು ಕಂಕುಳಲ್ಲಿ ಹಾಕಿಕೊಂಡು ಸರೋಜಳನ್ನು ಹುಡುಕುತ್ತ ಹೊರಬಂದಳು. ಮೊಸರು ಗಡಿಗೆ ಕೈತಪ್ಪಿತೆಂದು ಮಲ್ಲಿ ಕೊಸರಾಡಿ ಅಳುತ್ತಿದ್ದ. ಹಠ ಮಾಡುತ್ತಿರುವ ಅವನನ್ನು ಸರೋಜ ಮಾತ್ರ ಸಂಭಾಳಿಸಲು ಸಾಧ್ಯವಿತ್ತು. + +ಹಜಾರ, ನೀರಮನೆ… ಎಲ್ಲಿಯೂ ಕಾಣದ ಮಗಳನ್ನು ಹುಡುಕಿಕೊಂಡು ಪುಟ್ಟಮ್ಮ ತಮ್ಮ ಕೋಣೆ ತಲುಪಿದಳು… + +ಅವಳ ನಿರೀಕ್ಷೆಯಂತೆ ಸರೋಜ ಅಲ್ಲಿದ್ದಳು ಮಾತ್ರವಲ್ಲ… ತನ್ನ ಅಲಂಕಾರವನ್ನು ಮುಗಿಸಿ ಪದ್ಮಳ ಮುಖಕ್ಕೆ ಪೌಡರ್ ಬಳಿಯುತ್ತಿದ್ದಳು. ಅದಾಗ ತಾನೇ ಸ್ನಾನ ಮುಗಿಸಿ ಬಂದಿದ್ದ ಮಂಗಳೆ ಅಕ್ಕಂದಿರ ಪಕ್ಕ ನಿಂತು ತನ್ನ ಸರದಿಗಾಗಿ ಕಾಯುತ್ತಿದ್ದಳು. + +ಈಗ ತಾಯಿಯನ್ನು ನೋಡಿದ್ದೇ ಸರೋಜ ಕೈಯಲ್ಲಿದ್ದ ಪೌಡರಿನ ಡಬ್ಬಿಯನ್ನು ಮುಚ್ಚಿಟ್ಟುಕೊಂಡಳು. ಪದ್ಮ ತನ್ನ ಮುಖ ಮರೆಯಾಗಿಸಿಕೊಂಡಳು. ಮೊದಲೇ ಅಸಮಧಾನಗೊಂಡಿದ್ದ ಪುಟ್ಟಮ್ಮನಿಗೆ ಮಕ್ಕಳ ಈ ಕಳ್ಳಾಟದಿಂದ ಪಿತ್ತ ನೆತ್ತಿಗೇರಿತು. ಕಂಕುಳಲ್ಲಿದ್ದ ಮಲ್ಲಿಯನ್ನು ಕೆಳಕ್ಕೆ ಕುಕ್ಕಿದವಳೆ ಸರೋಜಳ ಮೇಲೆ ಮುಗಿಬಿದ್ದಳು. ‘ಮನೆ ಕೆಲಸ ಮಾಡದು ಬುಟ್ಟು ಸೂಳೆರಂಗೆ ಅಲಂಕಾರ ಮಾಡ್ಕತಾ ಕೂತಿದಿಯಾ ಇಲ್ಲಿ? ಯಾವ ನಾಯಕಸಾನಿ ಕೊಟ್ಲೆ ಇದ್ನ ನಿಂಗೆ… ʼ ಎಂದು ಸಿಕ್ಕಸಿಕ್ಕಲ್ಲಿ ಬಡಿಯ ತೊಡಗಿದಳು. + +ಈ ಬಾರಿ ಗೌರಿಹಬ್ಬಕ್ಕೆಂದು ರಾಜಶೇಖರ ದಾಕ್ಷಾಯಿಣಿಗೆ ಹೊಸ ಸ್ನೋಪೌಡರ್ ಡಬ್ಬಿಗಳನ್ನು ತಂದುಕೊಟ್ಟಿದ್ದನ್ನು ಗಮನಿಸಿದ ಸರೋಜ ಚಿಕ್ಕಮ್ಮನಲ್ಲಿ ಹಳೆಯ ಡಬ್ಬಿಯನ್ನು ಕೇಳಿ ಪಡೆದಿದ್ದಳು. ಇವತ್ತು ಹಬ್ಬದ ದಿನವಾಗಿದ್ದುದು ಮತ್ತು ಕೆಲಸದಲ್ಲಿ ಮುಳುಗಿ ಹೋಗಿರುವ ಅಮ್ಮ ಗಮನಿಸುವುದಿಲ್ಲ ಎನ್ನುವ ಧೈರ್ಯದಲ್ಲಿ ಹಚ್ಚಿಕೊಂಡಿದ್ದಳು. ತನ್ನ ಗುಟ್ಟು ರಟ್ಟಾಗದಿರಲೆಂದು ತಂಗಿಯರಿಂದ ಆಣೆ ಹಾಕಿಸಿಕೊಂಡು ಅವರಿಗೂ ಹಚ್ಚುತ್ತಿರುವಾಗ ಸಿಕ್ಕಿಬಿದ್ದಿದ್ದಳು. + +ಹದಿನೆಂಟರ ಪ್ರಾಯದ ಸರೋಜಳಿಗೆ ತಾನು ಮಾಡುತ್ತಿರುವ ತಪ್ಪೇನು ಎಂಬುದು ಅರ್ಥವಾಗಲಿಲ್ಲ. ಮನೆಯಲ್ಲಿ ಚಿಕ್ಕಪ್ಪನೇ ತಂದುಕೊಡುತ್ತಿರುವಾಗ, ಮಕ್ಕಳ ತಾಯಿಯಾದ ಚಿಕ್ಕಮ್ಮನೇ ಹಚ್ಚಿಕೊಳ್ಳುವಾಗ, ತಾನು ಹುಡುಗಿ ಹಚ್ಚಿಕೊಂಡರೇನು…? ಎಂಬುದು ಅವಳ ಮನದ ಪ್ರಶ್ನೆ. + +ತಾಯಿಯ ಹೊಡೆತದಿಂದ ತಪ್ಪಿಸಿಕೊಂಡು ಹಜಾರಕ್ಕೆ ಓಡಿಬಂದ ಸರೋಜ, ‘ಚಿಕ್ಕಮ್ಮ ಹಚ್ಕಳಲ್ಲವಾ? ನಾವ್ಚಕಂಡ್ರೆ ಏನ ತಪ್ಪು?ʼ ಎಂದು ಸೆಟೆದು ನಿಂತಳು. + +ಮಗಳು ಎದುರು ಉತ್ತರ ನೀಡಿದ್ದು ಮತ್ತು ತನ್ನ ಸಮರ್ಥನೆಗಾಗಿ ದಾಕ್ಷಾಯಿಣಿಯ ಹೆಸರು ಹೇಳಿದ್ದು ಪುಟ್ಟಮ್ಮನನ್ನು ಇನ್ನೂ ಕೆರಳಿಸಿತು. ಹಿಂದೆ ಮುಂದೆ ನೋಡದೆ, ‘ಅವ್ಳು ತಿಂತಳೆ, ನೀನು ತಿಂತಿಯಾ?ʼ ಎಂದು ಕೇಳಿದಳು. + +ಈ ಮಾತು ಅಡುಗೆ ಮನೆಯಲ್ಲಿದ್ದ ದಾಕ್ಷಾಯಿಣಿಗ ಕಿವಿಗೆ ಬಂದು ಅಪ್ಪಳಿಸಿತು. ಅವಳು ಕೈಲಿ ಹಿಡಿದಿದ್ದ ಸೌಟಿನೊಂದಿಗೆ ಹೊರಬಂದವಳೆ, ‘ನಾನೇನು ತಿಂತೀನಕ್ಕ? ನಾಲಗ್ನೆ ಬಿಗಿಹಿಡಿದು ಮಾತಾಡಿ… ನನ್ನ ಗಂಡ ತಂದ್ಕೊಡ್ತನೆ… ನಾನು ಆಕತೀನಿ. ನನ್ನ ಗಂಡನಿಗೆ ಇಲ್ಲದ ದರ್ದು ನಿಮಗೇನು? ನಾ ಏನು ನಿಮ್ ಮಗ್ಳಿಗೆ ಕೊಡಕ್ಕೋಗಿರಲಿಲ್ಲ… ಅವಳೆ ಬೇಡ್ಕಂಡ್ ಬಂದಿದ್ದೋಳು. ಅಷ್ಟು ಕಷ್ಟ ಆಗಿದ್ರೆ ನಿಮ್ಮ ಮಕ್ಕಳನ್ನ ನಿಮ್ಮ ಅಂಕೆಲಿ ಮಡಿಕ್ಕಳಿʼ ಎಂದು ಜಾಡಿಸಿದಳು. + + + +ಮಾತಿಗಿಳಿದರೆ ದಾಕ್ಷಾಯಿಣಿ ಮೀನಾಕ್ಷಿಯ ಮಗಳೆ ಸರಿ! ಯಾರನ್ನು ಬಿಟ್ಟುಕೊಡುವ ಮಾತೇ ಇಲ್ಲ. + +ಆದರೀಗ ಪುಟ್ಟಮ್ಮನೂ ಸೋಲುವ ಸ್ಥಿತಿಯಲ್ಲಿರಲಿಲ್ಲ. ‘ದೊಡ್ಡವರು, ಬೆಳೆದ ಮಕ್ಕಳಿರುವ ಮನೇಲಿ ಹೆಂಗಿರಬೇಕೋ ಹಂಗಿದ್ದರೆ ಚನ್ನ… ಅವೆ ಚಂಗ್ಲು ಬಿದ್ದರೆ ನಾವ್ಯಾರಿಗೇಳದು?ʼ ಎಂದು ತಿರುಗಿಸಿಕೊಟ್ಟಳು. ಸೇರಿಗೆ ಸವ್ವಾಸೇರಾಗಿ ಮಾತು ಬೆಳೆಯಿತು. + +ಅವರಿಬ್ಬರ ಜಗಳದ ನಡುವೆಯೇ ಸರೋಜ ನೀರಮನೆಗೆ ಹೋಗಿ ಮುಖ ತೊಳೆದು ಬಂದು ಮಕಾಡೆ ಮಲಗಿದಳು. ಅರೆಬರೆ ಹಚ್ಚಿಸಿಕೊಂಡಿದ್ದ ಪದ್ಮ ಲಂಗದಿಂದ ಮುಖ ಮುಚ್ಚಿಕೊಂಡಳು. ತಾನಿನ್ನೂ ಹಚ್ಚಿಸಿಕೊಂಡಿಲ್ಲವೆಂಬ ಧೈರ್ಯದಲ್ಲಿ ಮಂಗಳೆ ನಿಂತಿದ್ದಳು. ದೊಡ್ಡವರ ಕೂಗಾಟವನ್ನು ನೋಡಿ ಸದ್ದಡಗಿದ್ದ ಮಲ್ಲಿ ಮಂಗಳೆಯ ಆಸರೆ ಪಡೆದಿದ್ದ. ಆತಂಕ, ಭಯ, ಕುತೂಹಲಗಳ ಉದ್ರೇಕದಲ್ಲಿ ಅವನು ತನ್ನ ಕುಮಣ್ಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದ. ಅವನ ಚಡ್ಡಿ ಪೂರಾ ಒದ್ದೆಯಾಗಿತ್ತು… + +ನಿಜಗುಣ-ರಾಜಶೇಖರ ಬರುವ ವೇಳೆಗೆ ಮನಸೋ ಇಚ್ಚೆ ಬೈದಾಡಿದ ವಾರಗಿತ್ತಿಯರು ಅಡುಗೆಮನೆ ದೇವರಮನೆ ಎರಡನ್ನೂ ಬಿಟ್ಟು ತಮ್ಮ ತಮ್ಮ ಕೋಣೆಗಳನ್ನು ಸೇರಿದ್ದರು. ಹಬ್ಬದ ಮನೆಯಲ್ಲಿ ಸ್ಮಶಾನ ಮೌನ ಆವರಿಸಿತ್ತು. ನಂತರ ಪರಿಸ್ಥಿತಿಯನ್ನು ಸುಧಾರಿಸಿ ಗೌರಮ್ಮನ ತಲೆ ಮೇಲೆ ಹೂವು ಕಾಣಿಸಲು ಅಣ್ಣತಮ್ಮ ಇಬ್ಬರೂ ತಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಬೇಕಾಯಿತು. ಗಂಡನ ಮಾತಿಗಿಂತ ಮಿಗಿಲಾಗಿ ದೈವಕ್ಕೆ ಹೆದರಿ ಪುಟ್ಟಮ್ಮ ಬಂದಳಾಗಿ ರಾಜಶೇಖರ ದಾಕ್ಷಾಯಿಣಿಗೆ ದಮ್ಮಯ್ಯ ಅನ್ನುವ ಸ್ಥಿತಿ ಬರಲಿಲ್ಲ. + +*** + +ಗೌರಿ ಹಬ್ಬದಲ್ಲಿ ಹತ್ತಿದ ಬೆಂಕಿ ನಂದಿದಂತೆ ಕಾಣುತ್ತಿದ್ದರೂ ಒಳಗೇ ಕವರುತ್ತಿತ್ತು. ವಾರಗಿತ್ತಿಯರಿಬ್ಬರು ಒಟ್ಟಿಗಿರಲು ಸಾಧ್ಯವಿಲ್ಲ ಎನ್ನುವ ಒಂದೇ ಮಂತ್ರ ಜಪಿಸುತ್ತಿದ್ದರು. ಪುಟ್ಟಮ್ಮ ಬೇರೆಯಾಗದಿದ್ದರೆ ಬಾವಿಗೆ ಬೀಳುವುದಾಗಿ ಹೆದರಿಸುತ್ತಿದ್ದರೆ, ದಾಕ್ಷಾಯಿಣಿ ಅಪ್ಪನ ಮನೆಗೆ ಹೋಗುವುದಾಗಿ ಬೆದರಿಸುತ್ತಿದ್ದಳು. + +ಈ ಬಾರಿಯ ಕದನದ ವಿಶೇಷವೆಂದರೆ, ಮೊದಲ ಬಾರಿಗೆ ಇಬ್ಬರು ಗಂಡಸರಿಗೂ ತಮ್ಮ ತಮ್ಮ ಹೆಂಡತಿಯರು ಹೇಳುತ್ತಿರುವುದು ಸರಿ ಎನಿಸಿದ್ದು. ಇಬ್ಬರೂ ಈ ವಿಷಮ ಸ್ಥಿತಿಯಲ್ಲಿ ಶ್ರೀಕಂಠಯ್ಯ ಮತ್ತು ತಾಯವ್ವನನ್ನು ತುಂಬಾ ನೆನಪು ಮಾಡಿದರು. ಅಮ್ಮ ಮೂಲೆಯಲ್ಲಿ ಕೂತಿದ್ದರೂ ಸಾಕಿತ್ತು, ಸೊಸೆಯರನ್ನು ಹೇಗೋ ನಿಭಾಯಿಸುತ್ತಿದ್ದಳು ಎಂಬುದನ್ನು ಇಬ್ಬರೂ ಅರಿತವರಾಗಿದ್ದರು. + +ಮನೆಯಲ್ಲಿ ಮುಸುಕಿನ ಗುದ್ದಾಟ ಹೆಚ್ಚಾದಂತೆ ತನಗೆ ತಾನು ನಿರ್ಧಾರಕ್ಕೆ ಬರಲಾರದೆ, ನಿಜಗುಣ ತಂದೆಯ ಆಪ್ತರಲ್ಲಿ ಒಬ್ಬರಾದ ಶಿವಪ್ಪನವರ ಬಳಿಗೆ ಸಮಾಲೋಚನೆಗೆ ತೆರಳಿದ. ಶಿವಪ್ಪನವರು ಅನುಭವಸ್ಥರು. ಮೂರು ಗಂಡು ಮಕ್ಕಳ ಸಂಸಾರವನ್ನೂ, ವಿಧವೆಯಾಗಿ ಮನೆಗೆ ಮರಳಿದ್ದ ಮಗಳ ಸಂಸಾರವನ್ನೂ ಒಟ್ಟಿಗೆ ತೂಗಿಸುತ್ತಿದ್ದ ಅರವತೈದು ವರ್ಷದ ಜೀವ ಅದು. + +ಶಿವಪ್ಪನವರು ವಿಷಯವನ್ನೆಲ್ಲ ಸಾವಕಾಶವಾಗಿ ಕೇಳಿಸಿಕೊಂಡು ತಮಗೆ ತಿಳಿದ ಬುದ್ಧಿ ಮಾತನ್ನು ಹೇಳಿದರು. ‘ನಿಜಗುಣ, ಈ ಯಮಕಳ ಮಾತು ಕೇಳ್ಕಂಡು ಬ್ಯಾರೆ ಆಗಬ್ಯಾಡ. ರಾಜಪ್ಪಂಗೇನು ಕಂಟ್ರಾಕ್ಟ್ರ ಕೆಲಸ ಅದೆ, ನಾಕ್ ವರ್ಷ ಮಳೆಬೆಳೆ ಇಲ್ಲದಿದ್ದರೂ ಚಿಂತಿಲ್ಲ. ಅವನ ಬೆನ್ನಿಗೆ ವಿಶ್ವಪ್ಪನವರು ನಿಂತ್ಗತಾರೆ. ನಿಂಗ್ಯಾರಿದ್ದರು? ಒಂದಲ್ಲ ಎರಡಲ್ಲ ಮೂರು ಹೆಣ್ಣು ಮಕ್ಕಳು ಬೇರೆ. ಈಗ ಮಾಡ್ತೀನಿ ಅಂದ್ರೂ ಮೂವರಿಗೂ ಒಟ್ಟಿಗೆ ಚಪ್ಪರ ಹಾಕಬಹುದು… ಹಂಗ ಬೆಳೆದು ನಿಂತವೆ. ಇಂಥ ಹೊತ್ತಲ್ಲಿ ಬ್ಯಾರೆ ಹೋದ್ರೆ ಕಷ್ಟಕ್ಕ್ ಸಿಕ್ಕಾಕಳವ್ನು ನೀನೆ… ಯೋಚನೆ ಮಾಡು? ಇರದು ಹತ್ತು ಎಕರೆ ಹೊಲ… ಅದರಲ್ಲಿ ನಿನ್ನ ಪಾಲು ತಕಂಡ್ರೆ ಬೆಳೆಯದು ಮುವತ್ತು ಮೂಟೆ ರಾಗಿ… ನೀ ಹೇಳೋ ಶಾಸ್ತ್ರದಲ್ಲಿ ಸಿಗೋದು ಪುಡಿ ಕಾಸು… ಇಂಗಂತಿನಿ ಅಂತ ಬೇಜಾರು ಮಾಡ್ಕಬೇಡ… ನೀನು ನನ್ನ ಮಗನಿದ್ದಂಗೆ… ಅದಕ್ಕೆ ವಂಚನೆ ಇಲ್ಲದೆ ಹೇಳ್ತಾ ಇದೀನಿ. ನನ್ನ ಕೇಳಿದ್ರೆ ಮೂರು ಹೆಣ್ಣೈಕಳನ್ನು ಹಸೆ ಏರಿಸೋವರೆಗೆ ಬ್ಯಾರೆ ಹೋಗೊ ಮಾತ ನೀನು ಮರ‍್ತುಬುಡೋದೆ ಒಳ್ಳೇದುʼ ಎಂಬ ಸಲಹೆ ನೀಡಿದರು. + +ಆ ಮಾತು ನಿಜಗುಣನಿಗೂ ಒಪ್ಪಿತವಾಯಿತಾಗಿ ಅವನು ಬೇರೆಯಾಗುವ ವಿಚಾರದಿಂದ ವಿಮುಖನಾದ. + +ಇತ್ತ ರಾಜಶೇಖರನಿಗೆ ಮೊದಲಿಗೆ ವಿಶುಮಾವನಲ್ಲಿ ಚರ್ಚಿಸಬೇಕೆನಿಸಿದರು ನಂತರ ಬೇಡವೆನಿಸಿತು. ಇನ್ನು ಊರಿನಲ್ಲಿ ಮಾತನಾಡಲು ಅವನಿಗೆ ಆಪ್ತರಾರೂ ಇರಲಿಲ್ಲ. ಕೊನೆಗೆ ಅಳೆದು ಸುರಿದು ತನ್ನ ಹಿತೈಷಿಗಳಾದ ರಾಮಸ್ವಾಮಿ ಐಯ್ಯರ್ ಮನೆಗೆ ಹೋದ. + +ಐಯ್ಯರ್ ಈಗ ತಮ್ಮ ಕಂಟ್ರಾಕ್ಟರಿಕೆಯನ್ನು ಮಗನಿಗೆ ವಹಿಸಿ ಬೇಕಾದಾಗ ಅವನಿಗೆ ಸಲಹೆ ಕೊಡುವ ಮಟ್ಟಿಗೆ ಕೆಲಸ ಮಾಡುತ್ತಿದ್ದರು. ಉಳಿದಂತೆ ಅವರದು ವಿಶ್ರಾಂತ ಜೀವನ. + +ಅಪರೂಪಕ್ಕೆ ಬಂದ ಶಿಷ್ಯನಿಗೆ ಸೊಸೆಯಿಂದ ಕಾಫಿತಿಂಡಿ ಕೊಡಿಸಿ ಸತ್ಕರಿಸಿದರು. ಅವನ ಕಂಟ್ರಾಕ್ಟರಿಕೆಯ ಕಷ್ಟಸುಖ ವಿಚಾರಿಸಿದರು. ರಾಜಶೇಖರ ಎಲ್ಲಕ್ಕೂ ಸಮರ್ಪಕವಾದ ಉತ್ತರ ನೀಡಿ, ಅವರ ಸಹಾಯವನ್ನು ಮನಸಾರೆ ಕೊಂಡಾಡಿದ. ಉಪಕಾರ ಸ್ಮರಣೆ ಇಲ್ಲದ ಕೃತಘ್ಞರೇ ತುಂಬಿರುವ ಕಾಲದಲ್ಲಿ ಮುಕ್ತವಾಗಿ ತನ್ನನ್ನು ಸ್ಮರಿಸುತ್ತಿರುವ ರಾಜಶೇಖರನ ಮಾತಿಗೆ ಅವರು ಸಂತೃಪ್ತರಾದರು. + +ಉಭಯ ಕುಶಲೋಪರಿಯ ನಂತರ ರಾಜಶೇಖರ ತನ್ನ ವೈಯಕ್ತಿಕ ಸಮಸ್ಯೆಯನ್ನು ಹೇಳಿಕೊಂಡ. ಐಯ್ಯರ್ರು ನಡುನಡುವೆ ಬಾಯಿ ಹಾಕಿ ಊರಲ್ಲಿ ಜಮೀನು ಎಷ್ಟಿದೆ? ಏನು ಬೆಳಿತೀರ? ಯಾರು ಮಾಡ್ತರೆ? ವರಮಾನ ಎಷ್ಟು? ಇತ್ಯಾದಿಗಳನ್ನು ಕೇಳಿಕೊಂಡರು. + +ರಾಜಶೇಖರ ತಮಗೆ ಹತ್ತೆಕರೆ ಹೊಲವಿದೆ ಎಂಬುದರ ಹೊರತಾಗಿ ಉಳಿದ ವಿಷಯಗಳ ಬಗ್ಗೆ ‘ಅಷ್ಟೇನು ಗೊತ್ತಿಲ್ಲ… ಎಲ್ಲವನ್ನೂ ಅಣ್ಣನೇ ನೋಡಿಕೊಳ್ಳುವುದುʼ ಎಂದು ತಿಳಿಸಿದ. + +ಇದೆಲ್ಲ ಮಾತುಕತೆ ನಡೆಯುತ್ತಿರುವಂತೆಯೇ ಸೊಸೆಯ ಕಡೆಯಿಂದ ಇನ್ನೊಮ್ಮೆ ಗಟ್ಟಿಕಾಫಿ ಸರಬರಾಜಾಯಿತು. ಕಾಫಿ ಗುಟುಕಿಸಿದ ಐಯ್ಯರ್ ‘ನನ್ನ ಸೊಸೆ ಸಾಕ್ಷಾತ್ ಅನ್ನಪೂರ್ಣೆʼ ಎಂದು ಹೊಗಳಿದರು. + +ರಾಜಶೇಖರನಿಗೆ ಅವರ ಸೊಸೆಯನ್ನು ತಾನು ಹೊಗಳಬೇಕೋ ಬೇಡವೋ ತಿಳಿಯಲಿಲ್ಲವಾಗಿ ಸುಮ್ಮನೆ ತಲೆ ಕುಣಿಸಿದ. + +ಕನ್ನಡ ಬರದ ‘ತಮಿಳುಸೊಸೆʼ ಕೂಡ ಬರಿದೆ ನಕ್ಕು ಒಳಸರಿದಳು. + +ಕಾಫಿ ಹೀರಿ ಚುರುಕಾದ ಐಯ್ಯರ್ ಅವರು ತಮ್ಮ ಅಮೂಲ್ಯವಾದ ಸಲಹೆಯನ್ನು ಹೀಗೆ ನೀಡಿದರು: ‘ರಾಜಶೇಖರ ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಅನ್ನೋ ಗಾದೆ ಕೇಳಿದ್ದೀಯಲ್ಲಪ್ಪ… ಹಾಗೆ ಇದು. ಹಿರಿಯರು ಕಟ್ಟಿದ ಮನೆಯನ್ನು ಮುರಿದು ಭಾಗ ಮಾಡ್ಕೊಳ್ಳೊದು ತುಂಬಾ ಸುಲಭದ ಕೆಲಸ. ಎಲ್ಲಿಂದಲೋ ಬಂದು ಸೇರಿಕೊಳ್ಳೋ ಹೆಣ್ಣುಮಕ್ಕಳಿಗೆ ನಿಮ್ಮ ಹಿರಿಯರ ಕಷ್ಟ ಹೇಗೆ ತಿಳೀಬೇಕು? ನೀವು ನೀವು ಅಣ್ಣತಮ್ಮಂದಿರ ಮಧ್ಯೆ ಹೊಂದಾಣಿಕೆ ಇರಬೇಕು ಅಷ್ಟೆ. ನೀನೀಗ ಹೆಂಡತಿ ಮಾತಿಗೆ ಬೆಲೆಕೊಟ್ಟು ಅಣ್ಣನ್ನ ಬಿಟ್ರೆ ಕಷ್ಟಕ್ಕೆ ಸಿಕ್ಕಾಕೋತೀಯ… ನಾನು ಜಮೀನಿನ ಕಡೆ ತಲೆನೇ ಹಾಕಲ್ಲ ಅಂತಿಯಲ್ಲ? ಮತ್ತೆ ಭಾಗ ತಗೊಂಡೇನು ಮಾಡ್ತೀಯ? ಈಗೇನೋ ಕಂಟ್ರಾಕ್ಟರ್ ಗುತ್ತಿಗೆ ಸಿಕ್ತಿದೆ. ಕೈಯಲ್ಲಿ ನಾಲ್ಕು ಕಾಸು ಓಡಾಡ್ತಾ ಇದೆ. ಆದರೆ ಹೀಗೆ ನಡಿಯುತ್ತೆ ಅಂತ ಹೇಳೊಕ್ ಬರಲ್ಲ… ನಾಳೆ ಇನ್ಯಾವನಾದ್ರೂ ನಿಂಗಿಂತ ಜಾಸ್ತಿ ಲಂಚ ಕೊಟ್ರೆ ಗುತ್ತಿಗೆ ಅವನಿಗೇ ಹೋಗುತ್ತೆ…ʼ ಎಂದವರೆ ಒಂದು ನಿಮಿಷ ತಡೆದು, ಮತ್ತೂ ಹತ್ತಿರ ಸರಿದು, ದನಿಯನ್ನು ಮತ್ತೂ ತಗ್ಗಿಸಿ ಹೀಗೆಂದರು: ‘ನನಗೆ ಬೇಕಾದವನು ಅಂತ ಇನ್ನು ಒಂದು ಮಾತು ಬಿಚ್ಚಿ ಹೇಳ್ತೀನಿ… ನಾನು ನೀನು ಚನ್ನಾಗಿದೀವಿ ಅಂತ ಎಲ್ಲ ಚನ್ನಾಗಿದೆ ಅಂದುಕೋ ಬೇಡ. ಕಾಮಗಾರಿ ಇಲಾಖೇಲಿ ನಮ್ಮವರೇ ಜಾಸ್ತಿ… ಅವರಿಗೆ ಹಿಂದೆ ನೀವೂ ಮಾಂಸಮಡ್ಡಿ ತಿನ್ನದೇ ಇರೋ ಜನ ಅಂತ ನಿಮ್ಮ ಬಗ್ಗೆ ಒಂಥರ ಅಭಿಮಾನ ಇತ್ತು. ಆದ್ರೆ ನಿಮ್ಮವರು ಮುಸಲ್ಮಾನರು ಮತ್ತು ಒಕ್ಕಲಿಗರ ಜೊತೆ ಸೇರಿಕೊಂಡು ನಮ್ಮವರ ಮೇಲೆ ಮಸಲತ್ತು ಮಾಡಿದಾಗಿನಿಂದ ವಿಷಯ ಬದಲಾಗಿದೆ ತಿಳಿತಾ!… ಯಾವಾಗ ಬೇಕಾದ್ರೂ ಈ ಗುತ್ತಿಗೆ ಕೆಲಸ ನಿನಗೆ ಕೈಕೊಡಬಹುದು. ಆಗ ಹೆಂಡತಿ ಸ್ನೋಪೌಡರ್ ಗತಿ ಏನು? ಇದೆಲ್ಲ ಹುಚ್ಚಾಟ ಬಿಡು. ಹೆಂಗಸ್ರು ಎಷ್ಟಾದ್ರೂ ಬಡಿದಾಡಲಿ… ಪ್ರಪಂಚಜ್ಞಾನ ಇಲ್ಲ ಅವಕ್ಕೆ… ನೀನು ಅವರ ತಾಳಕ್ಕೆ ಹೆಜ್ಜೆ ಹಾಕೊಕೋದ್ರೆ ನಡುಬೀದಿಗೆ ಬರ್ತೀಯ ಅಷ್ಟೇ…ʼ ಎಂದು ಉಂಡುಂಡೆಯಾಗಿ ಇಲಾಖೆಯಲ್ಲಿದ್ದ ಜಾತಿರಾಜಕಾರಣವನ್ನು ಬಿಚ್ಚಿಟ್ಟರು. + + + +ಹೀಗೆ ಇಬ್ಬರ ಕಡೆಯ ಹಿತೈಷಿಗಳು ಪಾಲಾಗುವ ಪರ ಇಲ್ಲದ್ದರಿಂದ ಇಬ್ಬರೂ ತಮ್ಮ ಆಲೋಚನೆಯನ್ನು ಅಲ್ಲಿಗೇ ಕೈಬಿಟ್ಟರು. ತಮ್ಮತಮ್ಮ ಹೆಂಡಂದಿರ ಮಾತುಗಳಿಗೆ ಸೊಪ್ಪುಹಾಕದೆ ಉದಾಸೀನ ತೋರಿದರು. ನಿಜಗುಣನಂತೂ ನೇರವಾಗಿಯೇ ‘ಅದೆಲ್ಲ ಆಗದ ಮಾತು… ಇರೋದ್ರಲ್ಲಿ ಅನುಸರಿಸಿಕೊಂಡು ಬಾಳೋದು ಕಲ್ತುಕೊʼ ಎಂದು ಹೇಳಿ ಪುಟ್ಟಮ್ಮನ ಬಾಯಿ ಮುಚ್ಚಿಸಿದ. ಒಂದು ಬಾಯಿ ಮುಚ್ಚಿಸಿದ್ದರಿಂದ ಇನ್ನೊಂದು ತಂತಾನೆ ಸ್ವಲ್ಪ ನಿಯಂತ್ರಣಕ್ಕೆ ಬಂತು. ವಾರಗಿತ್ತಿಯರಿಬ್ಬರೂ ಬಿಗುಮಾನವಾಗಿಯೇ ತಮ್ಮ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದರು. ಸರೋಜ ಚಿಕ್ಕಮ್ಮ ಕೊಟ್ಟಿದ್ದ ಸ್ನೋಪೌಡರ್ ಡಬ್ಬಿಗಳನ್ನು ಅವರ ಕೋಣೆಯ ಬಾಗಿಲಲ್ಲಿಟ್ಟು ಹಿಂತಿರುಗಿದ್ದರೂ ಅಮ್ಮನೆಡೆಗಿನ ತನ್ನ ಮುನಿಸನ್ನು ಬಿಡಲಿಲ್ಲ. ಪದ್ಮ-ಮಂಗಳೆಯರು ಮಾತ್ರ ಎಲ್ಲ ಮರೆತು ಎಂದಿನಂತಾದರು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_440.txt b/Kenda Sampige/article_440.txt new file mode 100644 index 0000000000000000000000000000000000000000..45e35b3165197ef25302771a70ca79e21ff6b4bd --- /dev/null +++ b/Kenda Sampige/article_440.txt @@ -0,0 +1,83 @@ + + +ನಾ ಈಗ ಒಂದೇ ಕತೆ ಹೇಳೀಕೆ ಹೊರಟೊಳೆ. ಕತೆ ಅಂದ್ರೆ ನಾ ಕಟ್ಟಿದ್ದಲ್ಲ. ಕೇಳಿದ್ದ್. ಈ ಕತೆಯ ನಾಯಕ ಈಗ ಬದ್ಕಿತ್ಲೆ. ಕತೆ ಹೇಳ್ದವೂ ಬದ್ಕಿತ್ಲೆ. ಆದ್ರೆ ಕತೆಯಾಗಿ ಇಬ್ರೂ ಬದುಕ್ಯೊಳೋ. ನಮ್ಮದ್ ಮಲೆನಾಡ್. ಕೊಡಗಿಗೆ ಅಂಟಿಕೊಂಡೇ ಇರುವ ಊರ್. ಇಲ್ಲಿ ಒಂದ್ ಗುಡಿ ಉಟ್ಟು. ಅದ್ ಬೈನಾಟಿ ಭೂತದ್ದ್. ವರ್ಷಕ್ಕೊಮ್ಮೆ ಬೈನಾಟಿ ಭೂತದ ಜಾತ್ರೆ ಆದೆ. ಬೈನಾಟಿ ಭೂತ ಅಂದ್ರೆ ಅರ್ಜುನ್ನ ಪರೀಕ್ಷೆ ಮಾಡಿಕೆ ಹೊರಟ ಈಸರ ದೇವ್ರ್, ಬೈನಾಟಿ ಜಾತ್ರೆಯಂದ್ ಊರವೆಲ್ಲಾ ಸೇರಿ ಕೂಡು ಬೇಟೆ ಆಡುವೆ. ಈಗ ಕಾಡ್ ಇಲ್ಲೆ, ಮೃಗನೂ ಇಲ್ಲೆ. ಆದ್ರೂ ನಾವೆಲ್ಲಾ ಬೆಡಿ ಹಿಡ್ದ್ ಗುಡ್ಡ ಸುತ್ತಿ ಕಾಲಿ ಕೈಲಿ ಬಂದವೆ. ಸಂಪ್ರದಾಯ ಬುಡಿಕೆ ಬೊತ್ತಲೆ? ಅಂತಾ ಒಂದ್ ದಿನ ಅಪ್ಪಯ್ಯ ಗೌಡ್ರ್ ಬೂತಕಲ್ ಗುಡ್ಡೆ ಮೇಲೆ ಹೇಳ್ದ ಕತೆ. “ಈ ಗುಡ್ಡೇಲಿ ನಾ ನೂರಾದರೂ ಹುಲಿಗಳ ಕೊಂದಿರುವೆ. ಉಳ್ದ ಚಿಲ್ರೆ ಪಲ್ರೆ ಬುಡಿ. ಆದ್ರೆ ಕೂಸಪ್ಪ ಗೌಡ್ರ ಹಾಂಗೆ ನಮ್ಮಿಂದ ಯಾರಿಂದ್ಲೂ ಮಾಡಿಕ್ಕೆ ಆತ್ಲೆ ಬುಡಿ.” + +“ಯಾವ ಕೂಸಪ್ಪ ಗೌಡ್ರ್?” + +ಅಪ್ಪಯ್ಯ ಗೌಡ್ರ್ ನಮ್ಮ ಪ್ರಶ್ನೆಗೆ ನೆಗಾಡ್ದೊ. ಹಕ್ಕಲೆ ಇದ್ದ ದೊಡ್ಡ ಬಂಡೆಗಲ್ನ ಮೇಲೆ ಕುದ್ದೋ. ನಾವು ಕೂಡಾ ಸುತ್ತಮುತ್ತ ಕುದ್ದೊ. ತಮ್ಮ ಸಡನ್ನ್ಡೆತ್ತ್ ಬೆಡೀನ ಬಂಡೆ ಮೇಲೆ ಇಸಿ ಗೌಡ್ರ್ ಚೋಯಂಬುನ ಹಕ್ಕಲೆ ಒಂದ್ ಬೀಡಿ ಕೇಳ್ದೊ. ಬೀಡಿ ಎಳ್ಕಂಡ್ ಅದ್ರ ಹೊಗೇನೇ ನೋಡ್ತಾ ಹಳೇದ್ರ ನೆಂಪು ಮಾಡೀಕ್ಕೆ ಸುರುಮಾಡ್ದೊ. + +“ಆಗ ಈ ಸೀಮೆಗೆ ಅಮರ ಸುಳ್ಯಾಂತ ಹೆಸ್ರ್. ಕೊಡಗಿನ ಚಿಕ್ಕವೀರ ರಾಜೇಂದ್ರ ದೊರೆಗಳ ಆಡಳ್ತಕ್ಕೆ ಇದ್ ಒಳಪಟ್ಟಿತ್ತ್. ಅವು ಲಿಂಗಾಯತ್ರ್. ಈ ಸೀಮೇಲಿ ಲಿಂಗಾಯಿತ್ರೆ ಇತ್ಲೆ. ಆದ್ರೂ ಜನ ಅವ್ರ ಪ್ರೀತಿಸ್ತಿದ್ದೊ.”ನಮ್ಮ ಕೋಲ್ಚಾರ್ ಕೂಸಪ್ಪ ರಾಜರ ಸೈನ್ಯಲಿ ಇತ್ತ್. ಬರ್ಜರಿ ಆಳಂಗದ ಸೀಪಾಯಿ. ಆರೂವರೆ ಅಡಿಯಸ್ಟ್ ಎತ್ತ್ರ ಇತ್ತ್. ಅಗಲ ಮುಖ, ದೊಡ್ಡ ಮೂಗು, ಬರ್ಜರಿ ಹುರಿ ಮೀಸೆ, ಮತ್ತೆ ಹೆದ್ರಿಕೆ ಹುಟ್ಟುಸ್ವ ಕೆಂಪು ಕಣ್ಣುಗ! ಅವ್ರ ಬಲವಾದ ತೋಳುಗ, ದೃಢವಾದ ಕಾಲ್ಗ, ಮಾಸಲವಾದ ಗಟ್ಟಿ ಸರೀರ ಅವ್ರ ನಾಯಕನಾಗಿ ಮಾಡಿತ್ತ್. ಅವ್ರ ಸೇನಾ ನಾಯಕ ಕುಳ್ಳ ಕುಂಡೋಚ್ಚ. ಕೂಸಪ್ಪ ಗೌಡ್ರೀಗೆ ಏನಾದ್ರೂ ಹೇಳೋಕೂಂತಾದ್ರೆ ಅವ್ನಿಗೆ ತುಂಬಾ ಕಸಿವಿಸಿ ಆತಿತ್ತ್. ಈ ಕೂಸಪ್ಪ ಎಂತಾ ವ್ಯಕ್ತಿಯೆಂದ್ರೆ, ಮೊದುವೆಗೆ ಹೋದ್ರೆ ಪಂತ ಹಾಕಿ ನಾಲ್ಕ್ ಕವಂಗ ಪಾಯ್ಸ ಕುಡೀತೀತ್ಗಡ. ಹಲ್ಲಿಂದ ಅಕ್ಕಿ ಮುಡೀ ಎತ್ತೀತ್ ಗಡ! + +ಒಂದ್ ಸರ್ತಿ ರಜಾ ತಗಂಡ್ ಊರಿಗೆ ಬಂದ ಕೂಸಪ್ಪ ಗೌಡ್ರೀಗೆ ಬೇಟೆ ಆಡ್ವ ಮನಸ್ಸಾತ್. ಬಾಳ್ ಕತ್ತಿ ಸೊಂಟಕ್ಕೆ ಸಿಗ್ಸಿ, ಕೇಪಿನ ಬೆಡಿಗೆ ಮೊದ್ದ್ ಜಡ್ದ್ ಅವು ಬಂದದ್ದ್ ಇದೇ ಭೂತಕಲ್ ಗುಡ್ಡೆಗೆ. ಹೆದ್ರಿಕೆ ಅಂತ ಹೇಳ್ರೆ ಏನ್ತ ಗೊತ್ತೆ ಇರ್ದ ಅವು ಒಬ್ಬುರೇ ಬೇಟೆಗೆ ಬಂದಿದ್ದೊ ಗಡ. + +ಆಗ ಈ ಗುಡ್ಡೆ ಹೀಂಗೆ ಇತ್ಲೆ. ಗಿಡ ಮೊರಂದ ತುಂಬಿ ಎಲ್ಲೆಲ್ಲೂ ಹಸ್ರ್. ಒಳಗಡೆ ಸಂಕಪಾಲ, ಕಾಟಿ, ಹಂದಿ, ಹುಲಿಗೊ ತುಂಬಿಕೊಂಡಿತ್ತ್ ಗಡ. ಆದ್ರೆ ಕೂಸಪ್ಪ ಗೌಡ್ರ್ ಸ್ವಲ್ಪಾನೂ ಹೆದ್ರಿಕೆ ಇಲ್ಲದೆ ಬರುತ್ತಿದ್ದೊ ಗಡ. ಮರದ ಮೇಲಿದ್ದ ಒಂದು ಮುಚ್ಚ ಇವ್ರ ನೋಡಿ ‘ಕೀಚ್ ಕೀಚ್’ ಅಂತೇಳಿ ಮತ್ತೊಂದ್ ಮರಕ್ಕೆ ಹಾರಿತ್ಗಡ. ಮುಚ್ಚನ ಮಾಸ ಬಾರಿ ರುಚಿ. ಕೂಸಪ್ಪ ಗೌಡ್ರ್ ಬೆಡಿ ಎತ್ತಿದೊ. “ಬೇಡ. ಇದ್ಕಿಂತ ಒಳ್ಳೇದ್ ಸಿಕ್ಕುದು. ಹಾಳಾದ್ದ್ ಮತ್ತೆ ಯಾರ್ ಮೊದ್ದು ಜಡಿಯುದು” ಎಂದು ಕೆಳಗಿಳಿಸಿದೊ. ಮುಚ್ಚ ಮತ್ತೊಂದು ಮರಕ್ಕೆ ಹಾರಿ ಕಾಣೆಯಾತ್. + +ಆಗ ಆ ಮರದ ಬುಡದತ್ತ ಅವ್ರ ದೃಷ್ಟಿ ಹೋತ್. ಒಂದು ಕ್ಷಣ ಅವು ಮರಗಟ್ಟಿ ಹೋದೊ. ಅಲ್ಲಿ ಎರಡ್ ಹಡೀ ಗಾತ್ರದ ಕಾಟಿಗೊ ಇವ್ರುನನೇ ನೋಡ್ತಿತ್! ಯಾದಕ್ಕೆ ಗುಂಡು ಹೊಡಿಯೋದು? ಈ ಗುಡ್ಡೆಲಿ ಕಾಟಿಗಿಂತ ಜೋರಾಗಿ ಓಡಿಕೆ ಸಾಧ್ಯ ಇಲ್ಲೆ. ಮಳೆಗಾಲ ಆದ್ರಿಂದ ಮರ ಹತ್ತಿ ಬೊದ್ಕೊಕೂ ಸಾಧ್ಯ ಇಲ್ಲೆ. + +ಅವು ಆಲೋಚ್ನೆ ಮಾಡಿಕೊಂಡು ಇದ್ದಾಂಗೆ ಸಣ್ಣ ಕಾಟಿ ಹಾಯಿಕೆ ಬಾತ್. ಕೂಸಪ್ಪ ಗೌಡ್ರ್ ನೋಟ ನೋಡಿ ಕುದ್ರೆ ಅದುಮಿದೊ. ಕಾಟಿ ಬೀತ್, ನೋಡಿ ಓ ಅಲ್ಲಿ ದೊಡ್ಡ ಗುಂಡಿ ಕಂಡದೆಯಲ್ಲಾ…. ಅದಕ್ಕೆ ಕಾಟಿ ಹೊರಳ್ತಾ ಹೋಗಿ ಬೀತ್. + +ಈಗ ದೊಡ್ಡ ಕಾಟಿ ಕೊಂಬು ಚಾಚಿ ಮುಂದೆ ಬಾತ್. ಮೊದ್ದ್ ಜಡೀಕೆ ಸಮಯ ಇಲ್ಲೆ. ಸಿಟ್ಟಿಂದ ಸುಳುಂಪುತ್ತಾ ಬಾವ ಕಾಟಿನ ನೋಡಿ ಗೌಡ್ರಿಗೆ ಎಲ್ಲಾ ದೇವ್ರ, ಬೂತೊಗಳ ನೆಂಪಾಗಿರ್ದ್. ಮೈಸಾಸುರ್ನ ಅವ್ತಾರದಂಗೆ ಕಾಣ್ವ ಕಾಟಿ ಅವ್ರ ಕುತ್ತೋಕ್ ಅಂತೇಳುವಷ್ಟರಲ್ಲಿ ಅವುಕೆ ಸೈನ್ಯಲಿ ದಿನಾ ಮಾಡುವ ಕವಾಯಿತು ನೆಂಪಾಗಿ ಅವು ಕಾಲ್ ಅಗ್ಲಿಸಿ ಮೇಲೆ ಹಾರ್ದೊ, ಕಾಟಿ ತಲೆ ಬೊಗ್ಸಿದ್ರಿಂದ ಅವು ಸರ್ತಾಗಿ ಬೆನ್ನ್ ಮೇಲಕ್ಕೆ ಕುಳಿತಿದ್ದೊ. ಕಾಟಿ ಗಾಬ್ರೀಲಿ ಅತ್ತಿತ್ತ ಓಡೀಕೆ ಸುರು ಮಾಡ್ತ್. + +ಹೆಂಗೋ ಸರಿ ಮಾಡಿಕೊಂಡ ಅವು ತಿರ್ಗಿ ಕಾಟಿನ ಬೆನ್ನ ಮೇಲೆ ಸರಿಯಾಗಿ ಕುದ್ದೊ. ಕಾಟಿನ ದೊಡ್ಡ ಕೊಂಬುಗ ಅವ್ರ ಕೈಗೆ ಸರ್ಯಾಗಿ ಸಿಗ್ತಿತ್. ಕೊಂಬ್ ಹಿಡ್ಕಂಡ್ ಜೋರಾಗಿ ಅಲ್ಗಾಡ್ಸಿಕೆ ಅವು ಸುರು ಮಾಡ್ದೊ. ಕಾಟಿ ತಲೆನ ಅತ್ತಿತ್ತ ಆಡ್ಸಿಕೆ ಸುರು ಮಾಡ್ತ್. ಅವು ಹಿಡ್ದ ಪಟ್ಟ್ ಬುಟ್ಟತ್ತಿಲ್ಲೆ. ಬಲವಾಗಿ ಹಿಡ್ದ್ ಕುತ್ತಿಗೇನ ಎಡಕ್ಕೆ ತಿರ್ಗಿಸ್ದೊ. ಲಟಕ್ಕ್ ಸಬುದ ದೊಟ್ಟಿಗೆ ಕುತ್ತಿಗೆ ಮುರೀತ್. ಅವು ಕೆಳಕ್ಕೆ ಬಿದ್ರೂ ಕೊಂಬುನ ಬುಟ್ಟತ್ಲೆ. ಕಾಟಿ ಅಡ್ಡ ಬಿದ್ದು ಹೊರಳ್ಲಿಕ್ಕೆ ಸುರು ಮಾಡ್ತ್. ಆಗ ಅವು ಕೊಂಬುನ ಬುಟ್ಟೊ. ಅವುಕೆ ಬಾಳ್ ಕತ್ತಿ ನೆಂಪಾತ್. ಅದ್ ಉರ್ಡಾಟ ಮಾಡಕನ ಸ್ವಲ್ಪ ದೂರಲೇ ಬಿದ್ದೀತ್. ಅವು ಓಡಿ ಹೋಗಿ ಕತ್ತೀನ ತಂದೊ. ಎರಡ್ ಕಡಿಯಾಟಲಿ ತಲೆ ಬೇರೆ ಆತ್. ಕಾಟೀನ ಸರೀರ ಹೊರ್ಳಿ ಹೊರ್ಳಿ ಅಲ್ಲೇ ಆ ಹೊಂಡಕ್ಕೆ ಬೀತ್.” + +******************* + +ಅಪ್ಪಯ್ಯ ಗೌಡ್ರ್ ಚೋಯಂಬುನ ಹಕ್ಕಲೆ ಇನ್ನೊಂದ್ ಬೀಡಿ ಕೇಳ್ದೊ. ನಾವು ಆಸ್ಚರ್ಯಪಟ್ಟ್ ಕೂತಿದ್ದೊ. ಬೀಡಿ ಎಳ್ಕೊಂಡ್ ಇದ್ದಂಗೆ ಅಪ್ಪಯ್ಯ ಗೌಡ್ರ್ “ಆತಲ್ಲಾ ಇನ್ನ್ ಎದ್ರಿ. ಅಂದಿನೋ ಮೊಲನೋ ಸಿಕ್ಕಿದೆನೋ ನೋಡಮಾ” ಎಂತೇಳಿ ಎದ್ರಿಕೆ ನೋಡ್ದೊ. ನಾವು ಬುಡೋಕಲೆ? “ಕುದ್ರಿ ಕುದ್ರಿ. ಕೂಸಪ್ಪ ಗೌಡ್ರ ಕತೆ ಹೇಳಿ” ಎಂದ್ ನಾವ್ ಅವುರ ಕುದ್ರಿಸಿದೋ. ಅಪ್ಪಯ್ಯ ಗೌಡ್ರ್ “ಬೇಡ ಬುಡಿ. ಅದ್ ದೊಡ್ಡ ರಾಮಾಯಣನೇ ಆದೆ” ಎಂದೋ. ನಾವ್ ಕೇಳೊಕಲೆ? “ಆತ್ ಇಲ್ಲಿ ಮುರ್ಗಗೊ ಇಲ್ಲೆ. ಇಂದ್ `ನಾವ್ ಬೇಟೆ ಆಡ್ದಂಗೆ” ಎಂದ್ ಅವು ಕುದ್ರಿದೊ. ಬೀಡಿ ಎಳಿತಾ ಮೊತ್ತೆ ನೆಂಪು ಮಾಡೀಕೆ ಸುರು ಮಾಡ್ದೊ. + +ಆಗ ಇಂಗ್ಲೀಸರ ಆರ್ವಾಡ ಜೋರಿದ್ದ ಕಾಲ. ಮೈಸೂರ್ನ ಸ್ವಾಧೀನ ಮಾಡ್ಕೊಂಡ ಮೇಲೆ ಅವ್ರ ಕಣ್ಣ್ ಕೊಡಗಿನ ಮೇಲೆ ಬೀತ್. ಅವ್ರ ಯಜಮಾನಿಕೆ ಒಪ್ಪಿಕೊಣೊಕು ಅಂತೇಳಿ ರಾಜಂಗೆ ಕರೆ ಬಾತ್. ರಾಜನ ಸೇನಾಪತಿಗೊ ಯುದ್ಧ ಮಾಡೋಮಾ ಅಂತ ಹೇಳ್ದೊ ಗಡ. ಸೇನೆಲಿ ಬರಿಕೈಲಿ ಹುಲಿಕೊಂದ ನಂಜಯ್ಯ ಎಂಬ ಸುಬೇದಾರ ಇತ್ತ್. ನಮ್ಮಲ್ಲಿ ಕೋಟಿ ಚೆನ್ನಯ್ಯರ್ ಒಳೊಲ್ಲ. ಹಾಂಗೆ ಸೇನೆಲಿ ಕರ್ತು ಮತ್ತು ಚೆಟ್ಟಿ ಅಂತ್ ಇಬ್ರ್ ಮಲೆಕುಡೀರು ಇದ್ದೊಗಡ. ಬಾಳ ಧೈರ್ಯವಂತೊಗಡ. ಕೂಸಪ್ಪ ಗೌಡ್ರ್ ಕೇಳ್ದೇ ಬೇಡ. ಇವು ಎಲ್ಲಾ ಯುದ್ಧಕ್ಕೆ ತಯಾರಾಕನ ದಿವಾನ ಬೋಪು ಅಡ್ಡಿ ಮಾಡ್ದೊಗಡ. ರಾಜಿ ಮಾಡ್ದೇ ಒಳ್ಳೇದ್ ಅಂತ ರಾಜನ್ನ ಒಪ್ಪಿಸಿದೊಗಡ. ಯುದ್ಧನೇ ಇಲ್ಲ್ದೆ ಕೊಡಗು ಇಂಗ್ಲೀಷರ ಕೈಗೆ ಹೋತ್. ಅವು ರಾಜನ ಬಲಾತ್ಕಾರಲಿ ಕಾಸಿಗೆ ಓಡ್ಸಿದೊ ಗಡ. + +ಆಗ ರಾಜನಿಸ್ಟ್ರು ಅಮರ ಸುಳ್ಯಕ್ಕೆ ಬಂದೊ. ಅವುಕ್ಕೆ ಆಸ್ರಯ ಸಿಕ್ಕಿದ್ದ್ ಕೆದುಂಬಾಡಿ ರಾಮಗೌಡ್ರಲ್ಲಿ. ಇಂಗ್ಲೀಷರು ಹೊಗೆಸೊಪ್ಪು ಮತ್ತು ಉಪ್ಪಿಗೆ ತೆರಿಗೆ ಹಾಕಿದ್ದೊ. ಕಂದಾಯ ಹಣ ರೂಪಲೇ ಕೊಡೊಕುಂತೇಳಿ ಸಾಸ್ನ ಮಾಡಿದ್ದೊ. ಅದ್ ಇಲ್ಲಿನ ಬೇಸಾಯಗಾರ್ರ ಕೆರಳಿಸೀತ್. ಕೆದುಂಬಾಡಿ ರಾಮ ಗೌಡ್ರ್ ಆಗ ಅಮರ ಸುಳ್ಯ ಸೀಮೇಲಿ ತುಂಬ ಹೆಸರು ಗಳಿಸಿದ್ದೊ. ಕೂಸಪ್ಪ ಗೌಡ್ರಿಗೂ ಜನ ಬೆಂಬಲ ಇತ್ತ್. ಇವೆಲ್ಲಾ ಸೇರಿ ಸೋಮವಾರಪೇಟೆ ಕಡೆಯ ಒಬ್ಬ ಲಿಂಗಾಯ್ತನ್ನ ಕರ್ಕೊಂಡು ಬಂದೊ. ಅವಂಗೆ ಕಲ್ಯಾಣಪ್ಪಂತ ಹೆಸ್ರು ಕೊಟ್ಟು, ರಾಜ್ರ ನೆಂಟಂತೇಳಿ ಸುದ್ದಿ ಹಬ್ಸಿ ಸೇನಾಪತಿ ಮಾಡಿ ಸೇನೆ ಕಟ್ಟಿದೊ. ಇಂಗ್ಲೀಸ್ರ ಕಂದಾಯ ತೆಗೆದು ಹಾಕಿ ಮೂರು ವರ್ಸ ಕಂದಾಯ ಮಾಪಿ ಅಂತೇಳಿ ಇಸ್ತಿಯಾರು ಹೊರಡಿಸಿದೊ. + + + +ಕೇಳ್ದೇನ್? ಅಮರ ಸುಳ್ಯದ ಬೇಸಯಗಾರ್ರೆಲ್ಲಾ ಜಾತಿ ಮರ್ತು ಒಂದಾದೊ. ರಾಜ್ರ ಸೈನ್ಯದ ಸೈನಿಕರ್ ಈ ಸುದ್ದಿನ ಕೇಳಿ ತುಂಬ ಮಂದಿ ಒಂದಾಗಿ ಅಮರ ಸುಳ್ಯಕ್ಕೆ ಬಂದೊ. ಜನವೋ ಜನ. ಸಿಕ್ಕಿದ್ದೇ ಆಯುಧ. ಬೆಳ್ಳಾರೆ, ಪಂಜ, ಪುತ್ತೂರು, ವಿಟ್ಲ, ಪಾಣೆಮಂಗಳೂರು ಆಗಿ ದೊಡ್ಡ ಪಡೆ ಮಂಗಳೂರಿಗೆ ಹೋತ್. ಅಲ್ಲಲ್ಲಿ ತುಂಡರಸ್ರ್ ಸೈನ್ಯನ ಸೇರಿಕೊಂಡೊ. ಈ ದೊಡ್ಡ ಸೈನ್ಯದ ಎದ್ರ್ ನಿಲ್ಲೀಕೆ ಆಗ್ದೆ ಇಂಗ್ಲೀಸ್ರ್ ಕಣ್ಣಾನೂರ್ಗೆ ಓಡ್ದೊ. + +“ಕಲ್ಯಾಣಪ್ಪ ರಾಜ್ಯಪಾಲ ಆತ್. ಹದಿಮೂರ್ ದಿನ ರಾಜ್ರ ಹೆಸ್ರೀಲಿ ಆಡಳ್ತೆ ನಡೆಸ್ತ್. ಹದಿಮೂರ್ನೆ ರಾತ್ರೆ ಕಲ್ಯಾಣಪ್ಪನ ಪಡೆ ನಿದ್ರೆ ಮಾಡಿಕೊಂಡಿರಕನ ಇಂಗ್ಲೀಸ್ರ ದೊಡ್ಡ ಪಡೆ ಬೆಡಿ, ಫಿರಂಗಿ ಒಟ್ಟಿಗೆ ಧಾಳಿ ಮಾಡ್ತ್. ಕಲ್ಯಾಣಪ್ಪ ಮತ್ತು ಅವುನ ಬಂಟ್ರ್ಗಳ ಇಂಗ್ಲೀಸ್ರು ಗಲ್ಲಿಗೇರಿಸಿದೊ”. + +**************** + +ಅಪ್ಪಯ್ಯ ಗೌಡ್ರ್ ಕತೆ ನಿಲ್ಸಿದೊ. ನಾವು ಕಲ್ಲಿನಂತೆ ಕುದ್ದಿದೊ. ಬಾಡು ನಾಯ್ಕ ಲೊಚಗುಟ್ಟಿತ್. “ಅಯ್ಯೋ ಪಾಪ. ಕೂಸಪ್ಪ ಗೌಡ್ರ್ ಹಂಗಾರೆ ಮಂಗ್ಳೂರ್ಲೇ ಸತ್ತ್ ಹೋತ್” ಎಂದ ಬೇಜಾರಿಲಿ ಹೇಳ್ತ್. + +“ಇಲ್ಲೆ ಇಲ್ಲೆ” ಅಪ್ಪಯ್ಯ ಗೌಡ್ರ್ ಹೇಳ್ದೊ. “ಕಲ್ಯಾಣಪ್ಪ ಮಂಗ್ಳೂರ್ನ ವಸ ಮಾಡಿದ್ದ್ ಗೊತ್ತಾಕನ ಮಡ್ಕೇರಿಲಿ ಇಂಗ್ಲೀಸರ ಸೈನ್ಯಾಧಿಕಾರಿ ಲೀಹಾರ್ಡಿ ಅಮರ ಸುಳ್ಯಕ್ಕೆ ಸೇನೆಯೊಟ್ಟಿಗೆ ಬಾತ್. ಇದ್ ಗೊತ್ತಾಗಿ ಕಲ್ಯಾಣಪ್ಪ ಕುಡಿಯ ಸೋದರ್ರು ಕೂಸಪ್ಪ ಗೌಡ್ರೊಟ್ಟಿಗೆ ಅಮರ ಸುಳ್ಯಕ್ಕೆ ಸೇನೆನ ಕಳಿಸಿಕೊಟ್ಟತ್ತ್. ಕುಡಿಯ ಸೋದರ್ರು ಲೀಹಾರ್ಡಿಗೆ ಸಿಕ್ಕಿ ಬಿದ್ದೊ. ಕೂಸಪ್ಪ ಗೌಡ್ರು ತಪ್ಪಿಸಿಕೊಂಡು ಓಡ್ದೊ”. + +“ಓ ಅಸ್ಟೇನಾ ಮತ್ತೆ ಎಂಥದ್ ಅವರ ಧೈರ್ಯ?” ಚೊಯಂಬ್ ಕೇಳಕನ ಅಪ್ಪಯ್ಯ ಗೌಡ್ರಿಗೆ ನಗೆ ಬಾತ್. + +“ಅಂದ್ ನೀ ಮಾಡ್ದ್ ಎಂತದ್ದ್? ಹುಲಿನ ಕಂಡಾಕನ ಹೆದ್ರಿ ಓಡಿ ಮರ ಹತ್ತಿತ್ಲೆನಾ? ಹುಲಿನ ಕೊಂದ ಮೇಲೆ ನಾನೆ ಅಲ್ಲೆನ ನಿನ್ನ ಮರಂದ ಇಳ್ಸಿದ್? ಮತ್ತೆ ಹುಲಿ ಜೊರ ಬಂದ್ ನೀ ಒಂದ್ ತಿಂಗೊ ಮಲಗಿತ್ಲೆನಾ? ಬಾರಿ ಧೈರ್ಯವಂತ ನೀ”. ನಾವ್ ಎಲ್ಲಾ ನೆಗಾಡ್ದೊ. ಚೋಯಂಬು ಕೂಡಾ ನೆಗಾಡಿತ್. + +ಅಪ್ಪಯ್ಯ ಗೌಡ್ರ್ ಇನ್ನೊಂದ್ ಬೀಡಿ ತಗೊಂಡೊ. ಹೊಗೆ ಬುಡ್ತಾ ಮತ್ತೆ ಕತೆ ಮುಂದುವರ್ಸಿದೊ. “ಕೂಸಪ್ಪ ಗೌಡ್ರ್ ಓಡಿದ್ದ್ ಇಂಗ್ಲೀಸ್ರಿಗೆ ಹೆದ್ರಿ ಅಲ್ಲ. ಜನ್ರ ವಾಪಸ್ ಒಟ್ಟು ಮಾಡಿ ಇಂಗ್ಲೀಸ್ರ ಓಡ್ಸಿಕೆ. ಈ ಪೆರಮುಂಡ, ಕರಿಕ್ಕೆ, ಕೋಲ್ಚಾರು, ಆಲೆಟ್ಟಿ, ಅಜ್ಜಾವರ, ಉಳುವಾರು, ಪೆರಾಜೆ, ನಿಡ್ಯಮಲೆ, ಅರಂತೊಡು, ಕಾಂತಮಂಗ್ಲ, ಮಂಡೆಕೋಲ್, ಸುಳ್ಯ, ತೊಡಿಕ್ಕಾನ ಸುತ್ತಿ ಬೇಸಾಯಗಾರ್ರ ಒಟ್ಟ್ ಸೇರ್ಸಿಕೆ ಸುರು ಮಾಡ್ದೊ. ಕಲ್ಯಾಣಪ್ಪನ ಗಲ್ಲಿಗೇರಿಸಿದ್ದಕ್ಕೆ ಕಂದಾಯ ಕಟ್ಬೇಡಿ ಎಂದು ಎಲ್ಲವುಕ್ಕೆ ಹೇಳ್ದೊ. ಅಮರ ಸುಳ್ಯ ಮಾಗಣೆಂದ ಒಂದು ಕಾಸೂ ಕಂದಾಯ ಸಿಕ್ದೇ ಹೋಕನ ಲೀಹಾರ್ಡಿ ಗೂಢಚಾರ್ರ ಅಟ್ಟಿತ್. ಕೂಸಪ್ಪ ಗೌಡ್ರ ಕಾರ್ಬಾರ್ ತಿಳ್ದ್ ಸಿಟ್ಟ್ ಬಾತ್. ಗೌಡ್ರ ತಲೆಗೆ ಐದ್ಸಾವಿರ ರೂಪಾಯಿ ಬಹುಮಾನ ಘೋಷಣೆ ಮಾಡ್ತ್. ಲೀಹಾರ್ಡಿನ ಪರ್ಮಾನು ಹೊರಟ ಮೇಲೆ ಕೂಸಪ್ಪ ಗೌಡ್ರ್ ಅಡಗಿಕೊಂಡ್ ತಿರ್ಗಾಡಿಕೆ ಸುರು ಮಾಡ್ದೊ. ಸಾವಿನ ಬಯಂದ ಅಲ್ಲ. ಸಿಕ್ಕಿ ಬಿದ್ರೆ ಇಂಗ್ಲೀಸ್ರ ವಿರುದ್ಧ ಹೋರಾಡೊವು ಇಲ್ಲೇಂತ ಆದೆ ಎಂದ್ ಅವುಕೆ ಗೊತ್ತಿತ್ತ್”. + +ಸ್ವಲ್ಪ ಹೊತ್ತ್ ಅಪ್ಪಯ್ಯ ಗೌಡ್ರ್ ನಿಲ್ಸಿದೊ. ನವುಗೆ ತುಂಬಾ ಕುತೂಹಲ ಆಗಿತ್ತ್. ತಡೀಕೆ ಆಗ್ದೆ ಕೇಳ್ದೊ. + +“ಮುಂದೇನಾತ್?” + +ಅಪ್ಪಯ್ಯ ಗೌಡ್ರ್ ನಿಟ್ಟುಸಿರ್ ಬುಟ್ಟೊ. “ಆದ್ ಏನ್? ದುಡ್ಡಿನ ಆಸೆ ಯಾರಿಗೆ ಇರ್ದುಲೆ ಹೇಳಿ? ಕೂಸಪ್ಪ ಗೌಡ್ರು ಅಡಂಗುವ ಜಾಗೆನ ಯಾರೋ ಒಬ್ಬ ಲೀಹಾಡಿಯ ಸೈನಿಕರಿಗೆ ತೋರ್ಸಿತ್.” + +“ಅದ್ ಇದೇ ಕೋಲ್ಚಾರಿನ ಒಬ್ಬ ಮಧ್ಯಮ ವರ್ಗದ ಬೇಸಾಯಗಾರ್ನ ಮನೆಲಿ. ಮಳೆಗಾಲದ ಕರ್ಚಿಗೇಂತೇಳಿ ಅಟ್ಟದ ಮೇಲೆ ಅವ ಮುಡೀನ ಸರ್ಯಾಗಿ ಜೋಡ್ಸಿ ಇಟ್ಟಿತ್. ಸೈನಿಕ್ರ ನೋಡ್ದ ಕೂಸಪ್ಪ ಗೌಡ್ರು ಅಟ್ಟಹತ್ತಿ ಮುಡಿಗಳ ಹಿಂದೆ ಅಡಗಿ ಕುದ್ದತ್. ಸೈನಿಕರು ಎಂಟು ಜನ ಇದ್ದೊ. ಆದ್ರೂ ಅಟ್ಟಕ್ಕೆ ಹತ್ತಿಕೆ ಸುರುವಿಗೆ ಅವಿಕೆ ಧೈರ್ಯ ಬಾತ್ಲೆ. ಕಡೇಗೆ ಹಣದ ಆಸೆ ಗೆದ್ದತ್ತ್. ಇಬ್ರು ಧೈರ್ಯ ಮಾಡಿ ಮೊದ್ಲು ಅಟ್ಟ ಹತ್ತಿದೊ. ಉಳ್ದವು ಹಿಂದಿಂದ ಹತ್ತಿದೊ. ಕತ್ತಿ ಹಿಡ್ಕೊಂಡ್ ನಿಧಾನವಾಗಿ ಮುಂದೆ ಹೋದೊ. + +ಕೂಸಪ್ಪ ಗೌಡ್ರ್ ಆಗ್ಲೂ ಹೆದರ್ತ್ಲೆ. ತನ್ನಕಲೆ ಇದ್ದ ಅಕ್ಕಿ ಮುಡಿನ ಎತ್ತಿ ಒಬ್ಬ ಸೈನಿಕನ ಮೇಲೆ ಬಿಸಾಡ್ದೊ. ಅಂವ ನೋವಿಲಿ ಅಯ್ಯಯ್ಯೋ ಎಂತೇಳಿ ಬೊಬ್ಬೆ ಹಾಕಿತ್. ಕೂಸಪ್ಪ ಗೌಡ್ರ್ ಇನ್ನೊಂದ್ ಅಕ್ಕಿ ಮುಡಿ ತೆಗ್ದ್ ಬಿಸಾಡ್ದೊ. ತಪ್ಪಿಸಿಕೊಂಡ್ ಸೈನಿಕ್ರು ಅವುರ ಸುತ್ತು ಹಾಕ್ದೊ. ಸಿಟ್ಟಿಲಿ ಕೂಸಪ್ಪ ಗೌಡ್ರ್ ಒಂದೆ ಸಮನೆ ಅಕ್ಕಿ ಮುಡೀನ ಎತ್ತಿ ಬಿಸಾಡಿಕೆ ಸುರು ಮಾಡ್ದೊ. ಆಗ ಒಬ್ಬ ಸೈನಿಕ ಅವ್ರ ಎಡ ಬಾಗಲಿ ಕತ್ತೀನ ಸರ್ಯಾಗಿ ಬೀಸಿತ್. ಅವ್ರ ಎಡಕೈ ತುಂಡಾಗಿ ಕೆಳಕ್ಕೆ ಬೀತ್. ಆಗ ಬಲಬಾಗಲಿ ಸೈನಿಕ ಕೊರ್ಳಿಗೆ ಸರ್ಯಾಗಿ ಕತ್ತಿ ಬೀಸಿತ್. ಛಿಲ್ಲೆಂತ ರಕ್ತ ಚಿಮ್ಮಿ ಅವ್ರ ರುಂಡ ಮುಂಡಂದ ಬೇರ್ಪಟ್ಟ್ ಕೆಳಕ್ಕೆ ಬೀತ್. ಸೈನಿಕ್ರ ಮುಖಕ್ಕೆ ರಕ್ತದ ಓಕುಳಿ ಆತ್.ತಲೆಕಡ್ದ ಸೈನಿಕ ಬಿದ್ದ ರುಂಡನ ಎತ್ತಿಕೊಂಡ್ ಅಟ್ಟಾಸ ಹಾಕ್ತ್.” + +******************** + +ಅಪ್ಪಯ್ಯ ಗೌಡ್ರ ಮುಖಲಿ ನೋವು ಹೆಪ್ಪುಗಟ್ಟಿತ್ತ್. ನಾವ್ ಏನ್ ಮಾಡಿಕಾಗದೆ ತುಂಬಾ ಬೇಜಾರಿಲಿ ಇದ್ದೊ. ಸೊಲ್ಪ ಹೊತ್ತಾದ ಮೇಲೆ ಚೋಯಂಬು ಮಾತಾಡಿತ್. “ಅಂತೂ ಎಂಟ್ ಜನ ಸೇರಿ ಆಯ್ದ ಇಲ್ಲದ ಒಬ್ಬನ ಕೊಂದುಬುಟ್ಟೊ! ಅವುಕೆ ಬಹುಮಾನ ಸಿಕ್ಕಿರೊಕ್ಕಲ್ಲಾ? ಅವ್ರ ಕುಟುಂಬದವಿಕೆ ಭೂಮಿ ಕೊಟ್ಟಿರುವೊ.” + +“ಅದೋ” ಅಪ್ಪಯ್ಯ ಗೌಡ್ರ್ ಕತೆ ಮತ್ತೆ ಮುಂದುವರ್ಸಿದೊ. “ಆ ಕತೆ ಬಾಳ ಲಾಯಿಕುಟ್ಟು. ಈ ಸೈನಿಕ್ರು ಕೂಸಪ್ಪ ಗೌಡ್ರ ರುಂಡ ತಕಂಡ್ ಲೀ ಹಾರ್ಡಿನ ನೋಡೀಕೆ ಹೋದೊ. ಕೂಸಪ್ಪ ಗೌಡ್ರ ತಲೆ ಹಾರ್ಸಿದೋನೇ ಅದ್ರ ಹಿಡ್ಕೊಂಡಿತ್ತ್. ಲೀಹಾರ್ಡಿಗೆ ವಿಸ್ಯ ಗೊತ್ತಾಗಿ ಕ್ಯಾಪ್ಟನ್ ಡ್ರೆಸ್ಸಲ್ಲೇ ಹೊರಗೆ ಬಾತ್. + +ಸೈನಿಕ್ರು ಲೀ ಹಾರ್ಡಿನ ಕಂಡ್ ಮಿಲಿಟ್ರಿ ಗತ್ತಿಲಿ ಸೆಲ್ಯೂಟ್ ಹೊಡ್ದೊ. ರುಂಡ ಹಿಡ್ದವ ಅದ್ರ ಲೀ ಹಾರ್ಡಿನ ಮುಂದೆ ಇಸಿತ್. ಅದ್ರ ನೋಡ್ದ ಲೀ ಹಾರ್ಡಿನ ಹುಬ್ಬುಗೊ ಮೇಲೆ ಹೋತ್. “ದೇವ್ರೇ ….. ಇದು ಎಂತಾ ಭವ್ಯತೆ” ಎಂದ್ ಅವ ಉದ್ಗರಿಸಿತ್. + +ಮಾಮೂಲು ಸ್ಥಿತಿಗೆ ಬಂದ ಲೀ ಹಾರ್ಡಿ ಮತ್ತೆ ಕೇಳ್ತ್, “ಇವನ್ನ್ ಕೊಂದದ್ದ್ ಯಾರ್?” + +ಕೊಂದ ಸೈನಿಕ ಒಂದು ಹೆಜ್ಜೆ ಎದ್ರ್ ಬಂದ್ ಎದೆ ಮುಂದೆ ಮಾಡಿ ಹೇಳ್ತ್, “ನಾನ್.” ಉಳಿದೋವ್ಕೆಲ್ಲಾ ಬಹುಮಾನಲಿ ಪಾಲ್ ತಪ್ಪಿ ಹೋಕೆ ಬತ್ತ್ತೇಳಿ ಗಾಬ್ರಿಂದ, “ನಾವ್ ಎಲ್ಲಾ ಇದ್ರಿಂದ ಇವ್ನ ಕೊಲ್ಲಿಕೆ ಸಾಧ್ಯ ಆದ್ದ್” ಎಂತ ಹೇಳ್ದೊ. + + + +ಲೀ ಹಾರ್ಡಿಗೆ ನೆಗೆ ಬಾತ್. “ಆತ್…. ಆತ್ …… ಬಹುಮಾನ ಎಲ್ರಿಗೂ ಕೊಡೊಮಾ. ಮೊದ್ಲು ಇವಂಗೆ. ಮತ್ತೆ ನಿವುಗೆಲ್ಲಾ. ನೀ ಬಾ, ಹಕ್ಕಲೆ ಬಾ.”ಕೂಸಪ್ಪ ಗೌಡ್ರ ಕೊಂದವ ಉಳ್ದವ್ರೆಲ್ಲಾ ನೋಡಿ ಕುಸಿಲಿ ನಗೆಯಾಡಿ ಲೀಹಾರ್ಡಿ ಹಕ್ಕಲೆ ಬಂದ್ ನಿಂತತ್. ಈ ಮಾತ್ ಕತೆನೆಲ್ಲಾ ಕೇಳಿ ಅಲ್ಲೇ ಒಂದ್ ಕೋಣೇಲಿ ಬರ್ಕೊಂಡು ಕುದ್ದಿದ್ದ ಬೋಪು ದಿವಾನ ಹೊರಗೆ ಬಂದ್ ನೋಡ್ತ್. + +ಲೀ ಹಾರ್ಡಿ ಹಕ್ಕಲೆ ಬಂದ್ ನಿಂತ ಸೈನಿಕನ ಒಂದ್ ಸರ್ತಿ ಸರ್ಯಾಗಿ ನೋಡ್ತ್. ಮಿಂಚಿನಾಂಗೆ ಅವನ ಒರೆಲಿದ್ದ ಕತ್ತಿನ ತೆಗ್ದ್ ಅವನ ತಲೆನ ಕಚ್ಕಂತೇಳಿ ಕತ್ತರಿಸಿತ್. ಇದ್ರ ನೋಡಿ ಹೆದ್ರಿಹೋದ ಬೋಪು ‘ಇಗ್ಗುತಪ್ಪಾ’ ಎಂತೇಳಿ ಬೊಬ್ಬೆ ಹಾಕಿತ್. ಹೆದ್ರಿಹೋದ ಸೈನಿಕರ್ ಜೀವ ಉಳಿಸಿಕೊಂಬಿಕೆ ಬೇಕಾಗಿ ಮರ್ಲರಂಗೆ ಓಡ್ದೊ. + +ಲೀಹಾರ್ಡಿ ಕೂಸಪ್ಪ ಗೌಡ್ರ ತಲೆನ ಕೈಲಿ ಹಿಡ್ಕೊಂಡ್ತ್. ಹೆಣವಾಗಿ ಬಿದ್ದ ಸೈನಿಕನ ಕುತ್ತಿಗೆಂದ ಉಕ್ಕಿ ಹರಿಯುತ್ತಿದ್ದ ರಕ್ತಲಿ ತನ್ನ ಬಲಗೈ ತೋರುಬೆರಳ್ನ ಮುಳ್ಗಿಸಿತ್. ಆ ರಕ್ತಲಿ ಗೌಡ್ರ ಹಣೆಗೆ ಬೊಟ್ಟು ಇಸುತ್ತಾ ನಡ್ಗಿಕೊಂಡ್ ಹೇಳ್ತ್. “ಓ ವೀರಯೋಧ! ನನ್ನ ಕ್ಷಮಿಸ್. ಇದ್ಕಿಂತ ಹೆಚ್ಚಿಗೆ ನಿಂಗೆ ನಾ ಏನೂ ಕೊಡೀಕೆ ಆದುಲೆ.” + +“ಬೋಪು ದಿವಾನ ಹೆದ್ರ್ಕಂಡ್ ನಡ್ಗುತ್ತಾ ಇದರ ನೋಡ್ತಿತ್ತ್”. + +ಕತೆ ಮುಗೀಕನ ಎಲ್ರ ಕಣ್ಣಿಲಿ ನೀರ್ ತುಂಬಿತ್ತ್. ಅಪ್ಪಯ್ಯ ಗೌಡ್ರ್ ಎದ್ದೊ. “ನಿವುಗೆ ಅಂದಿಗೈಪು ಅಪ್ಪದಿಟ್ಟು ತಿಂಬ ಯೋಗ ಇಲ್ಲೆ, ನಡಿನಿ” ಎಂತ ಹೇಳ್ದೊ.ಅಂದಿ ಕಾಂಬುಕೆ ಸಿಕ್ಕರೂ ಅವಿಕೆ ಅಂದ್ ಅದ್ರ ಕೊಲ್ಲಿಕೆ ಮನಸ್ಸ್ ಬಾತಿತ್ತೊ ಇಲ್ಲೆನೋ!(1996) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_441.txt b/Kenda Sampige/article_441.txt new file mode 100644 index 0000000000000000000000000000000000000000..ee201a5928d116981b3d72b7442b1783cbc3a384 --- /dev/null +++ b/Kenda Sampige/article_441.txt @@ -0,0 +1,213 @@ + + +ಅಂಗಾತಳಾಗಿ ಮಲಗಿ ಬೆಳಗಾಗುವುದನ್ನೇ ಜಲಜ ಕಾಯುತ್ತಿದ್ದಳು. ತಲೆದಿಂಬಿನಡಿ ಇಟ್ಟಿದ್ದ ಬಲ ಅಂಗೈ ಹೊರಗೆ ಚಾಚಿ ನಾಲ್ಕು ಬೆರಳುಗಳು ಕೊಂಚ ನೋಯುವಷ್ಟು ಬಲವಾಗಿ ಮುಷ್ಟಿ ಬಿಗಿ ಹಿಡಿದಳು. ಸಣ್ಣಗೆ ನಿಟ್ಟುಸಿರು ಬಿಟ್ಟು ಕೈ ಸಡಲಿಸಿ ಇನ್ನೊಂದು ಕಡೆ ಹೊರಳಿ ಸುಮ್ಮನೆ ಕ್ಷಣಗಳನ್ನು ಕಲೆ ಹಾಕಿದ್ದಷ್ಟೆ. ಇನ್ನೂ ಬೆಳಗಾಗದಿದ್ದರೆ ಆ ಸೂರ್ಯನ ಹುಟ್ಟಡಗಿಸುತ್ತೀನಿ ಎಂಬ ಆಲೋಚನೆ ಇಳುಕಿ ನಗು ಬಂತು. ಹೊದಿಕೆಯನ್ನು ಬದಿಗೆ ಸರಿಸಿದ ಕೈ ಅವಳಿಗೆ ಅರಿವಿಲ್ಲದೆಯೇ ಕಿಬ್ಬೊಟ್ಟೆಯನ್ನೂ ಸವರಿತು. ಅದರೊಂದಿಗೇ ಸಣ್ಣಗೆ ಬೆಚ್ಚಿ ಕಣ್ಣು ಬಿಟ್ಟ ಅವಳಿಗೆ ಬೆಳಗಿನ ಮೊದಲ ಪದರು ಗೆಲುವು ಮೂಡಿತು. ಕಿಟಕಿಯಿಂದ ಒಳಗಿಳಿದ ಬೆಳಕಿನಲ್ಲಿ ಅವಳಿಗೆ ಕಂಡದ್ದು ಎರಡು. ಆಗೊಮ್ಮೆ-ಈಗೊಮ್ಮೆ ಸಣ್ಣಗೆ ಗೊರಕೆ ಹೊಡೆಯುತ್ತಿದ್ದ ಅಮ್ಮ ರಾಜಮ್ಮ ಮತ್ತು ಗೋಡೆಯ ಪಕ್ಕದಲ್ಲಿ ತಾನು ಕೆಲಸ ಮಾಡುತ್ತಿದ್ದ ಡೇ ಕೇರ್ ನ ಮ್ಯಾನೇಜರ್ ಗಿರಿಜಮ್ಮ ತನ್ನ ಮೇಲಿನ ಪ್ರೀತಿಯಿಂದ, ಒತ್ತಾಯದಿಂದ ಕೊಡಿಸಿದ್ದ ಡ್ರೆಸಿಂಗ್ ಟೇಬಲ್ ಮೇಲೆ ಯಾವುದೋ ಯೋಚನೆಯಲ್ಲಿ ಮಡಚಿ ಇಟ್ಟಿದ್ದ ಆ ಚೀಟಿ. ಅವಳು ಒಂದು ಕ್ಷಣ ತತ್ತರ ನಡುಗಿದಳು. ಅಮ್ಮ ಏನಾದರೂ ಅದನ್ನು ನೋಡಿದರೆ ಏನು ಗತಿ ಎನಿಸಿತು. ಒಂದು ಪಕ್ಷ ನೋಡಿದರೂ ಅದರ ತಲೆಬುಡ ತಿಳಿಯಲು ಸಾಧ್ಯವೇ ಇಲ್ಲ ಎಂದು ಸ್ವಲ್ಪ ಸಮಾಧಾನಪಟ್ಟುಕೊಂಡಳು. ಅದೇನಿದ್ದರೂ ತಾನು ಮಾಡಿರುವುದು ಸರಿಯಲ್ಲ ಎಂದು ಎದ್ದು ಆ ಸಣ್ಣ ರೂಮಿನಲ್ಲಿಯೇ ಮೂರು ಹೆಜ್ಜೆಯಿಟ್ಟು ಡ್ರೆಸಿಂಗ್ ಟೇಬಲ್ ಕಡೆ ಹೋಗುವಷ್ಟರಲ್ಲಿ ಅಲ್ಲಿದ್ದ ಬಟ್ಟಲು ಕಾಲಿಗೆ ತಾಗಿ ಬಿದ್ದು ‘ಠಣ್’ ಎಂದು ಶಬ್ದವಾಯಿತು. + +“ಏನು ಮಾಡ್ದೆ ಜಲಜಾ…. ರಾತ್ರಿಯೆಲ್ಲ ನೋವಿಂದ ನಿದ್ದೇನೇ ಬಂದಿರಲಿಲ್ಲ….” ಎಂದು ರಾಗ ಎಳೆದರು ರಾಜಮ್ಮ. + +“ಕಾಣಿಸ್ಲಿಲ್ಲಮ್ಮಾ” ಎಂದು ಹೇಳುತ್ತಲೇ ಅವಳು ಆ ಕಾಗದವನ್ನು ತೆಗೆದು ತನ್ನ ಸಣ್ಣ ಪರ್ಸ್ ನಲ್ಲಿ ಹಾಕಿ ಜಿಪ್ ಹಾಕಿದಳು. ಇದರಿಂದ ಒಂದು ರೀತಿಯ ಸಮಾಧಾನ ಉಂಟಾದರೂ ಆ ಕ್ಷೀಣ ಬೆಳಕಿನಲ್ಲಿಯೇ ತನ್ನ ಇಡೀ ಆಕೃತಿಯನ್ನು ಕಂಡು ಒಂದು ಕ್ಷಣ ಹಾಗೆಯೇ ನಿಂತಳು. ಏಕೋ ಅವಳಿಗೆ ಇನ್ನೂ ಯೋಚನೆಪಡುವಷ್ಟಿಲ್ಲ ಎಂದು ತೋರಿತು. ಪಕ್ಕಕ್ಕೆ ತಿರುಗಿದಾಗ ಮಂಡಿಯೂತಕ್ಕೆ ರಾಜಮ್ಮ ಕಟ್ಟಿಕೊಂಡಿದ್ದ ತಣ್ಣೀರು ಪಟ್ಟಿ ಒಣಗಿದ್ದು ಕಾಣಿಸಿತು. + +“ನೋಡಮ್ಮ, ನೀನೇನೂ ಮಾಡಕ್ಕೆ ಹೋಗ್ಬೇಡ….. ಇನ್ನೊಂದು ಸರ್ತಿ ಪಟ್ಟಿ ಕಟ್ತೀನಿ….. ಊತ ಇಳಿಯುತ್ತೆ”. + +ಅವಳು ಒಮ್ಮೆ ಬಟ್ಟೆ, ಜಡೆ ಸರಿ ಮಾಡಿಕೊಂಡು ಮುಖಕ್ಕೆ ತಣ್ಣೀರು ಎರೆಚಿ, ಒರೆಸಿಕೊಂಡು ಕಾಫಿ ಮಾಡಲು ಹೊರಟಳು. ಸ್ಟೌವ್ ಹಚ್ಚಿ, ನೀರಿನ ಪಾತ್ರೆಯಿಟ್ಟು, ಕಾಫಿ ಪುಡಿ ಹಾಕುತ್ತಿದ್ದಂತೆ ಕೆಲವೇ ಸಮಯದಲ್ಲಿ ಕುದಿಯುವುದಕ್ಕೆ ಶುರುವಾಯಿತು. ರಾಜಮ್ಮ “ಇದೇನೇ ಇಷ್ಟು ಜೋರಾಗಿ ಉರಿ ಮಾಡಿದೀಯಾ” ಎಂದದ್ದು ಕೇಳಿ ಕುದಿತವನ್ನೇ ನೋಡುತ್ತಿದ್ದ ಜಲಜ ಅದರ ಪ್ರಮಾಣ ಕಡಿಮೆ ಮಾಡಿದಳು. + +ಕಾಫಿ ಲೋಟಗಳನ್ನು ಹಿಡಿದು ಬಂದು ಒಂದನ್ನು ರಾಜಮ್ಮನ ಮುಂದಿಟ್ಟು ಗೋಡೆಯ ಮೇಲಿನ ಗಡಿಯಾರದ ಕಡೆ ದೃಷ್ಟಿ ಹಾಯಿಸಿದಳು. ಉರುಳುವ ನಿಮಿಷಗಳು ಈಗ ಹೆಚ್ಚಿನ ಅವಧಿ ತೆಗೆದುಕೊಳ್ಳುತ್ತಿರುವಂತೆ ಭಾಸವಾಯಿತು. ಮಕ್ಕಳು ಬಂದು ಎಂದಿನ ಕೆಲಸ ಪ್ರಾರಂಭವಾಗುವುದಕ್ಕೆ ಮುಂಚೆ ಮ್ಯಾನೇಜರ್ ಗಿರಿಜಮ್ಮನ ಬಳಿ ಮಾತಾಡಲೇಬೇಕು. ಜೊತೆಗೆ ಸೀನು ಈಗಲಾದರೂ ಮಾತು ಉಳಿಸಿಕೊಳ್ಳುತ್ತಾನೆಂಬ ಭರವಸೆಯ ಹೊಯ್ದಾಟ ಅವಳಲ್ಲಿ. ಅವನು ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಾನೆಂದೂ, ಬಿಡುವಾದಾಗ ಸ್ನೇಹಿತನ ಜೊತೆ ಮಕ್ಕಳನ್ನು ಡೇ ಕೇರ್ ಗೆ ಕರೆದುಕೊಂಡು ಬರುತ್ತಾನೆಂದೂ ಗೊತ್ತಿತ್ತು. ಇನ್ನಷ್ಟು ವಿವರಗಳನ್ನು ಕೇಳಬೇಕೆನ್ನುವಷ್ಟರಲ್ಲಿ ಮಾತು ಬೇರಾವುದೋ ದಿಕ್ಕಿಗೆ ತಿರುಗುತ್ತಿತ್ತು. ಮತ್ತೆ ಒಬ್ಬಳೇ ಇದ್ದಾಗ ಅದು ನೆನಪಾಗಿ ಮುಂದಿನಸಲ ಬಿಡಲೇಬಾರದು ಎಂದುಕೊಳ್ಳುತ್ತಿದ್ದಳು. + +“ಸೀನು ಈ ಕಡೆ ಬರ್ದೆ ಸುಮಾರು ದಿನ ಆಯ್ತಲ್ವಾ?” ಎಂದು ಅಲ್ಲಿದ್ದ ಅವನ ಟೋಪಿಯನ್ನು ಕೈಗೆತ್ತಿಕೊಂಡು ಅದರ ಕಡೆ ಕಣ್ಣು ಹಾಯಿಸಿ, “ಇದೇನು ಇಲಿ ಕಚ್ಚಿ ತುಂಡು ತುಂಡು ಮಾಡಿದೆ” ಎಂದು ಜಲಜಳ ಎದುರು ಹಿಡಿದರು ರಾಜಮ್ಮ. + +“ತುಂಬಾ ಆಗ್ಹೋಗಿದೆ. ಇಲಿ ಪಾಷಾಣ ಹಾಕ್ಬೇಕು….. ಇಲ್ದಿದ್ರೆ ನಡೆಯಲ್ಲ…… ಅವು ಕಡ್ದು ನಂದೂ ಒಂದೆರಡು ಫ್ರಾಕ್ ಹಾಳಾಗಿದೆ” ಎಂದಳು ಅದನ್ನು ನೋಡುತ್ತ. + +ಜಲಜಳಿಗೆ ತನ್ನ ಬಟ್ಟೆಗಳನ್ನು ಬೀರುವಿನಲ್ಲಿಟ್ಟು ಕಾಪಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದರೂ ಇತ್ತೀಚೆಗೆ ಕೆಲವು ನಾಶವಾಗುತ್ತಿದ್ದದ್ದು ತೀವ್ರವಾಗಿ ಕಾಡಿತ್ತು. ಈಗ ಉಳಿದವುಗಳನ್ನು ಪರೀಕ್ಷಿಸಿದಳು. ಆ ಕ್ಷಣದಲ್ಲಿ ಇನ್ನಷ್ಟು ನಾಶವಾಗಿರದೆ ಹಗುರೆನಿಸಿದರೂ ನಷ್ಟವಾದದ್ದಕ್ಕೆ ಬೇಸರವಾಯಿತು. ಹಾಗೆಯೇ ಸೀನು ಟೋಪಿಯನ್ನು ಅವನಿಗೆ ತೋರಿಸಿ ತಮಾಷೆ ನೋಡಲು ತಾನು ತೆಗೆದುಕೊಂಡು ಹೋಗುವ ಬ್ಯಾಗ್ ನಲ್ಲಿ ತುರುಕಿದಳು. + +“ಏನಿಲ್ಲದಿದ್ದರೂ ದಿನಾ ಸ್ನಾನ ಮಾಡಿ, ಇಸ್ತ್ರಿ ಮಾಡಿದ ಬಟ್ಟೆ ಹಾಕ್ಕೊಂಡು ಬರ್ಬೇಕು ಗೊತ್ತ? ಇಲ್ಲಿ ಬರೋವೆಲ್ಲ ಚಿಕ್ಕ ಮಕ್ಳು” ಎಂದು ಮ್ಯಾನೇಜರ್ ಗಿರಿಜಮ್ಮ ಮೊದಲನೆ ದಿನವೇ ತಾಕೀತು ಮಾಡಿದ್ದರು. ಅದನ್ನು ತಪ್ಪದೆ ಪಾಲಿಸುತ್ತಿದ್ದ ಜಲಜ, ಬಚ್ಚಲು ಮನೆಗೆ ಹೋಗಿ ಬಾಗಿಲು ಹಾಕಿಕೊಂಡಳು. ಬೆಳಕು ಅಲ್ಲಿ ಕಿಟಕಿಯಿಂದ ಬರುತ್ತಿತ್ತು. ಬಕೆಟ್ ಗೆ ನೀರು ಬಿಟ್ಟು, ವಾರಕ್ಕೊಮ್ಮೆ ಮಾಡುತ್ತಿದ್ದಂತೆ ಅಲ್ಲಿ ಅಟ್ಟದ ಮೇಲೆ ಸ್ವಲ್ಪ ಕಾಣದಂತೆ ಹಿಂದಕ್ಕಿಟ್ಟಿದ್ದ ಡಬ್ಬಿಯನ್ನು ಎಳೆದುಕೊಂಡಳು. ಅದರ ಮುಚ್ಚಳ ತೆಗೆದೊಡನೆ ಅಳೆಯುವ ಟೇಪ್ ಸಿಕ್ಕಿತು. ಒಂದು ಕ್ಷಣ ಉಸಿರು ಬಿಗಿ ಹಿಡಿದು ಸುಮ್ಮನೆ ನಿಂತಳು. ಅನಂತರ ಸಾವರಿಸಿಕೊಂಡು ಮಗ್ ನಿಂದ ನೀರು ಹಾಕಿಕೊಳ್ಳುವುದಕ್ಕೆ ಮೊದಲು ಹೊಟ್ಟೆಯ ಅಳತೆಯನ್ನು ಪರೀಕ್ಷಿಸಿಕೊಂಡಳು. ಏನು ಎತ್ತ ಗೊತ್ತಿಲ್ಲದೆ ಅರ್ಧವೋ ಮುಕ್ಕಾಲೋ ಇಂಚು ಅಥವಾ ಇನ್ನೊಂದಿಷ್ಟು ಹೆಚ್ಚಿಗೆ ತೋರಿಸುತ್ತಿದ್ದಂತೆ ಕಾಣಿಸಿತು. ಧಿಡೀರನೆ ಅಲ್ಲಲ್ಲಿ ಮೈಯ ಸಂದಿಗೊಂದಿಗಳಲ್ಲಿ ತೆಳು ಬೆವರಿನ ಪದರು ಕಾಣಿಸಿಕೊಂಡು ಕಾವು ಹಬ್ಬಿತು. ಸುಮ್ಮನೆ ಕಣ್ಮುಚ್ಚಿದಳು. ತಕ್ಷಣವೇ ಅಂಗೈ ಅಗಲಿಸಿ ಬೆರಳು ಮಡಿಸಲು ತೊಡಗಿದಳು. ಅದರ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದು ಕಷ್ಟವಾಯಿತು. ಕಿಟಕಿಯ ಕಡೆ ಮುಖ ಮಾಡಿ ನಿಂತು ಹಗುರು ಮಾಡುವ ತಿಳಿಗಾಳಿಗಾಗಿ ಒಂದೆರಡು ಕ್ಷಣ ಕಾದಳು. ನುಸುಳಿದ ತೀಕ್ಷ್ಣ ಬೆಳಕು ಎಲ್ಲ ಓರೆಕೋರೆಗಳಿಗೆ ಹಬ್ಬಿತಷ್ಟೆ. + +ಅಂದು ಸೀನು ಬಂದ ದಿನ ಏಕಾಂತ ಸಿಗುವುದಕ್ಕೆ ಮುಂಚೆಯೇ ಸನ್ನೆಯಲ್ಲಿ ತನ್ನ ಬದಲಾದ ಸ್ಥಿತಿಯನ್ನು ತಿಳಿಸುವ ಅವಳ ಪ್ರಯತ್ನ ಲಗಾಟ ಹೊಡೆದು ಪೆಚ್ಚಾಗಿದ್ದಳು. ಅದರ ಹಿಂದೆಯೇ ನುಗ್ಗಿದ ಸಿಟ್ಟಿಗೆ ಇವನೆಂಥ ಪೆದ್ದ ಎನಿಸಿತ್ತು. ಆದರೆ ಸೀನುಗೆ ತಾನು ತೀರ ಇಷ್ಟಪಡುವ ಹುಡುಗಿಯ ಸಂಬಂಧ ನಿಶ್ಚಿತ ತಿರುವು ಪಡೆದುಕೊಂಡ ಸೂಚನೆ ಆ ಕ್ಷಣದಲ್ಲಿಯೇ ಅರ್ಥವಾಗಿ ಪುಳಕಗೊಂಡಿದ್ದ. ತಕ್ಷಣವೇ ಅದಕ್ಕೆ ಸೂಕ್ತ ಪ್ರತಿಕ್ರಿಯೆ ವ್ಯಕ್ತಪಡಿಸುವುದನ್ನು ಕಷ್ಟಪಟ್ಟು ನಿಯಂತ್ರಿಸಿಕೊಂಡ. ಅದಕ್ಕೆ ಪ್ರಮುಖ ಕಾರಣ ಅಪ್ಪ ಸತ್ತ ಮೇಲೆ ಆಸ್ತಿ ಹಂಚಿಕೆಯ ವಿಷಯದಲ್ಲಿ ಅಣ್ಣ ತಮ್ಮಂದಿರಲ್ಲಿ ತಲೆದೋರಿದ್ದ ವಿಷಮ ಪರಿಸ್ಥಿತಿ ಕೋರ್ಟ್ ಮಟ್ಟಿಲೇರುವಂತೆ ಮಾಡಿದ್ದು ಒಂದಾದರೆ ಫ್ಯಾಕ್ಟರಿಯಲ್ಲಿ ಇನ್ನೂ ಸ್ಥಿರವಾಗದ ತನ್ನ ಕೆಲಸದ ನೆಲೆ ಮತ್ತೊಂದು. ಅಲ್ಲಿ ಒಂದಿಲ್ಲೊಂದು ಪೈಪೋಟಿ; ಅನಿವಾರ್ಯ ಕುದಿತ. ಹಾಗಾಗಿ ಯಾವುದೂ ಗೆರೆ ಹಾಕಿದಂತೆ ಜರುಗುವುದು ಅಸಾಧ್ಯವೆಂಬುದು ಅರಿವಾಗಿತ್ತು. ಇವುಗಳಿಂದಾಗಿಯೇ ಯಾವುದೇ ವಿಷಯವಾದರೂ ಹಿಂಜರಿಕೆಯೇ ಮುಂದಾಗುತ್ತಿತ್ತು. ಈಗ ಜಲಜಳ ಬಗ್ಗೆ ಉಂಟಾದ ಭಾವನೆ ಹೊರಹೊಮ್ಮುವುದಕ್ಕೆ ಮುಳುವಾದದ್ದು ಕೂಡ ಅದೇ. ಅದಕ್ಕಾಗಿ ಅವನಲ್ಲಿ ಇನ್ನಿಲ್ಲದಷ್ಟು ನೋವಿನ ಝಳಕು ಹರಿಯಿತು. ಜೊತೆ ಇನ್ನು ಮುಂದೆ ಹಲವು ಒಡನಾಟಗಳನ್ನು ಬಿಡಬೇಕು ಎಂದುಕೊಂಡ. + +ಅದಾದ ನಂತರ ಸೀನು ಬಂದಾಗ, “ಇನ್ನು ಕಾಯೋ ಹಾಗೆ ಇಲ್ಲ… ಏನಿದ್ರೂ ವಾರ-ಎರಡು ವಾರದಲ್ಲಿ ಮುಗಿಬೇಕು. ಗೊತ್ತಾಯ್ತಾ?” ಎಂದಿದ್ದಳು. ಅವನು, “ನಾನೇನು ಎಳೆಮಗೂನಾ… ತಿಳಿಯತ್ತೆ … ನಿಂಗೆ ಏನೇನು ಅಂತ ಹೇಳೋದು… ತಲೆ ಯಾವಾಗಲೂ ಗಿಮ್ ಅಂತಿರತ್ತೆ” ಎಂದು ಮಾತಿನ ದಿಕ್ಕು ಬದಲಾಯಿಸಿದಾಗ ಜಲಜಳಿಗೆ ಪ್ರತಿಯೊಂದೂ ಪ್ರಶ್ನೆಯಾಗಿತ್ತು. ಅನಂತರ ಕೆಲವು ಬಾರಿ ತಾನು ಹೇಳಿದಾಗ ಒತ್ತಾಯಿಸುತ್ತಿರುವಂತೆ ತಿಳಿದುಕೊಳ್ಳುತ್ತಾನೆ. ಅಲ್ಲದೆ ಬೇರೇನೋಏನೋ ಕಾರಣ ಹೇಳಿ ತನ್ನ ಕೆಲಸ ಮುಗಿಸಿ ಅವಸರದಿಂದ ಹೋಗಿಬಿಡುತ್ತಾನೆ. ಅವನನ್ನು ಸರಿಪಡಿಸುವುದು ಹೇಗೆ? ಗೊತ್ತಾಗಲ್ಲ… ತಕ್ಷಣವೇ ಏನಾದರೂ ದಾರಿ ಹುಡುಕಬೇಕು… ಹೇಗೆ? ಎಂದು ಡೇ ಕೇರ್ ನ ಹಾಲ್ ನಲ್ಲಿ ಆಟವಾಡುವ ಮಕ್ಕಳ ಕಡೆ ನೋಡಿಯೂ ನೋಡದಂತೆ ಯೋಚಿಸುತ್ತಾಳೆ. + +ಆ ಸಲ ಸೀನು ಕಳೆದ ಅನೇಕ ಬಾರಿಗಿಂತ ಕಳೆದುಂಬಿದವನಂತೆ ಕಂಡ ಜಲಜಳಿಗೆ. ಅವಳಿಗೂ ಉತ್ಸಾಹ ಮೂಡಿತ್ತು. ದೊರೆತ ಏಕಾಂತಕ್ಕೆ ಅಣಿಯಾಗುತ್ತಲೇ “ಏನಾಯ್ತು ಫ್ಯಾಕ್ಟರಿ ವಿಷ್ಯ?… ಎಲ್ಲ ಸರಿಹೋಯ್ತಾ?” ಎಂದ ಅವಳ ಪೀಠಿಕೆಗೆ, “ಹಲ್ಕಾ ನನ್ಮಕ್ಳು… ಹಳೇದರ ಸಮಾಚಾರಾನೇ ಬೇಡಾಂತ ಹೊಸದಕ್ಕೆ ಏಟು ಹಾಕಿದೀನಿ? ಒಳ್ಳೆ ಜನ. ಇನ್ನೆರಡು ದಿನದಲ್ಲಿ ಫಿಕ್ಸ್ ಆಗತ್ತೆ” ಎಂದು ಮುಂದಿನ ಸಮಾರಂಭಕ್ಕೆ ದಿನ ಗೊತ್ತುಮಾಡುವುದಷ್ಟೇ ಬಾಕಿ ಎನ್ನುವಂತೆ ಹೇಳಿದ್ದ. ಹೇಳಿದ ಮಾತಿನಲ್ಲಿ ದೃಢತೆ ಇರುವಂತೆ ಭಾಸವಾದರೂ ಮುಖಮುದ್ರೆ ಕಂಡಿದ್ದರೆ ಇನ್ನಷ್ಟು ಸ್ಪಷ್ಟವಾಗುತ್ತಿತ್ತು ಎಂದುಕೊಂಡಿದ್ದಳು ಜಲಜ. ಅದಾದ ಎರಡು ದಿನ ಜಲಜ ಯಾವ ಫೋನ್ ಬಂದರೂ ಅದು ಅವನಿಂದ ಎಂದು ನಿರೀಕ್ಷಿಸುತ್ತಲೇ ಕಳೆದಳು. ಅದೇ ಗುಂಗಿನಲ್ಲಿದ್ದ ಅವಳು ಮನೆಯಲ್ಲಿ ನಲ್ಲಿಯಿಂದ ನೀರು ಬಂದು ಕೊಡ ತುಂಬಿ ಅಡುಗೆ ಮನೆಯಲ್ಲ ಹರಿಯುತ್ತಿದ್ದರೂ ರಾಜಮ್ಮನಿಂದ ಬೈಸಿಕೊಂಡು ಸರಿಪಡಿಸಬೇಕಾಯಿತು. ಹಾಗಾದರೆ ಅವನು ಹೇಳಿದ್ದು ನಿಜವೋ ಅಲ್ಲವೋ ಎಂಬ ಅನುಮಾನ ಅವಳಿಗೆ. + +ಡೇ ಕೇರ್ಗೆ ಹೋಗುವ ರಸ್ತೆಯ ಬದಿಯಲ್ಲಿ ಆಸ್ಪತ್ರೆಗೆ ಅತಿ ಹತ್ತಿರದಲ್ಲಿಯೇ ಇದ್ದ ಗಣೇಶನ ಗುಡಿಯ ನೆನಪಾಯಿತು. ತಾನು ಮಕ್ಕಳನ್ನು ನೋಡಿಕೊಳ್ಳುತ್ತಿರುವಾಗ ಅಲ್ಲಿ ಮೊಳಗುವ ಗಂಟೆಗಳ ಶಬ್ದವೂ ಅವಳಿಗೆ ದಿನವೂ ಕೇಳಿಸುತ್ತಿತ್ತು. ಗುಡಿಯಲ್ಲಿ ಜನರಿರಲಿ ಬಿಡಲಿ, ಆಸ್ಪತ್ರೆಯ ಡಾಕ್ಟರ್ ವಸುಧಾ ಒಂದು ಕ್ಷಣ ನಿಂತು ಕೈಮುಗಿದು ಮುಂದೆ ಹೋಗುತ್ತಿದ್ದರು. ಅಂತಹ ಸಂದರ್ಭವೊಂದರಲ್ಲಿ ಜಲಜಳಿಗೆ ಆಕೆ ಪರಿಚಯವಾದದ್ದು. + +ಬಚ್ಚಲಿಂದ ಹೊರಡುವ ಮುಂಚೆ ಟೇಪನ್ನು ಮತ್ತೆ ಡಬ್ಬಿಯಲ್ಲಿಟ್ಟು ಹಿಂದಕ್ಕೆ ತಳ್ಳಿದೆನೋ ಇಲ್ಲವೋ ಎನ್ನುವುದು ಅರಿವಾಗದಷ್ಟು ಅವಳ ಮನಸ್ಸನ್ನು ಸೀನು ತುಂಬಿಕೊಂಡಿದ್ದ. ಹೊರ ಬಂದಾಗ ಕೊಂಚ ಗಂಭೀರವಾಗಿ ಕಾಣಿಸಿದ ಅವಳಿಗೆ “ಯಾಕಿವತ್ತು ಹಾಡೆಲ್ಲ ಬಂದಾಗಿದೆ…. ಬಚ್ಚಲಲ್ಲೂ ಇಲಿಗಿಲಿ ಕಾಣಿಸ್ತೋ ಹೇಗೆ?” ಎಂದ ರಾಜಮ್ಮಳ ಮಾತಿಗೆ ಜಲಜ ಉತ್ತರಿಸಲೂ ಇಲ್ಲ; ಆ ಕಡೆ ಮುಖ ಕೂಡ ತಿರುಗಿಸಲಿಲ್ಲ. + +“ಹೊಟ್ಟೆಗೇನೂ ಇಲ್ಲ ಅಂತ ಆಗ್ಲೆ ಮುಖ ಊದಿ ಬಿಡ್ತ?….. ಆಚೆ, ರಸ್ತೆ ಮೂಲೇಲಿ ಸಿಗುತ್ತಲ್ಲ, ಏನಾದ್ರೂ ತಿಂದು ಹೋಗು. ನಂಗೇನೂ ಬೇಡ” ಎಂದ ರಾಜಮ್ಮ ಊತುಕೊಂಡಿದ್ದ ಭಾಗದ ಮೇಲೆ ಅಂಗೈ ಸವರಿದರು. ಜಲಜ ಇದಕ್ಕೂ ಉತ್ತರಿಸದೆ ಮಾಮೂಲಿಗಿಂತೆ ಸಡಿಲವಾಗಿ ಹಿಂದು ಮುಂದಿನ ಭಾಗಗಳಲ್ಲಿ ಏಕಪ್ರಕಾರವಾಗಿ ಕಾಣುವಂತೆ ಸೀರೆ-ಸೆರಗು ಹರಿಬಿಟ್ಟು ಹೊರಟಳು. ಉದ್ವೇಗದಲ್ಲಿ ಪರ್ಸು, ಬ್ಯಾಗು ಮರೆತರೂ ಮತ್ತೆ ಬಂದು ತೆಗೆದುಕೊಂಡಳು. + +ಪಕ್ಕದ ರಸ್ತೆಯ ಮೂಲೆಯಲ್ಲಿಯೆ ಅವಳ ಓರಗೆಯ ಸೀತೆ ನಡೆಸುತ್ತಿದ್ದ ತಿಂಡಿಯಂಗಡಿ. ಜಲಜ ಬಿಡುವಾದಾಗ ಕುಳಿತು ಟೀವಿ ಸೀರಿಯಲ್ ಗಳ ಬಗ್ಗೆ, ಡೇ ಕೇರ್ ನ ಮಕ್ಕಳ ತುಂಟಾಟದ ಬಗ್ಗೆ, ಹಲವು ಸಲ ಮಕ್ಕಳ ಅಮ್ಮಂದಿರಿಂದ ಕೆಲಸಕ್ಕೆ ಬಾರದ ವಿಷಯಗಳಿಗೆ ಬೈಸಿಕೊಂಡುದರ ಬಗ್ಗೆ ಮಾತನಾಡುತ್ತ ಕಾಲ ಕಳೆಯುತ್ತಿದ್ದಳು. + +ಡೇ ಕೇರ್ ನ ದೈನಂದಿನ ದಿನಚರಿ ಇನ್ನೂ ಪ್ರಾರಂಭವಾಗಬೇಕಿತ್ತು. ಎಂದಿನಂತೆ ಕೆಲಸದಾಕೆ ಎಲ್ಲವನ್ನೂ ಒಪ್ಪವಾಗಿಡಲು ಶುರುಮಾಡಿದ್ದಳು. ಜಲಜಳಿಗೇಕೋ ಮುಂಜಾವಿನ ಸೂರ್ಯನ ಕಿರಣಗಳು ತೆರೆದ ಬಾಗಿಲಿನ ಹೊಸಿಲನ ಮೇಲೆ ಬಿದ್ದು ವಿಶಿಷ್ಟ ರಂಗು ಪ್ರತಿಫಲಿಸುವಂತೆ ಕಾಣಿಸಿ ಮುದಗೊಂಡಳು. ಗಿರಿಜಮ್ಮ ಇನ್ನೂ ಬಂದಿರಲಿಲ್ಲ. ನಿತ್ಯದಂತೆ ಅವರು ಬರುವರೆಂದು ತಿಳಿದಿದ್ದರೂ ಒಂದು ಪಕ್ಷ ಬೇರೇನೋ ಕಾರಣದಿಂದ ಬರದಿದ್ದರೆ ಈ ಮೊದಲೇ ಅವರಿಗೆ ತಿಳಿಸಿದ್ದ ಮತ್ತು ಅವರೊಂದಿಗೆ ಹಾಕಿಕೊಂಡ ಕಾರ್ಯಕ್ರಮ ಹಾಳಾಗುವುದಲ್ಲ ಎನ್ನುವ ಆಲೋಚನೆ ಅವಳಲ್ಲಿ ಆತಂಕ ಹುಟ್ಟಿಸಿತು. ನಿಮಿಷಗಳು ಕಳೆಯುತ್ತಿರುವಂತೆ ಅವರ ಪ್ರತೀಕ್ಷೆಯಲ್ಲಿಯೇ ತಾನು ಮಾಡಬೇಕಾದದ್ದನ್ನೆಲ್ಲ ಮಾಡದೆ ಸುಮ್ಮನಿದ್ದ ಅವಳಿಗೆ ಸುತ್ತಮುತ್ತ ಆಗಲೇ ಓಡಾಡುತ್ತಿದ್ದವರ ಚಿಕ್ಕಪುಟ್ಟ ಮಾತುಗಳು, ಆಟದ ಸಾಮಾನುಗಳು, ಸಲಕರಣೆಗಳ ಶಬ್ದಗಳು ಯಾವುದೂ ಕಿವಿಯೊಳಗೆ ಇಳಿಯಲಿಲ್ಲ. ಕಣ್ಣಿನಲ್ಲಿಯೂ ನೋಟದಲ್ಲಿನ ಚಲಿಸುತ್ತಿರುವ ಚಿತ್ರಿಕೆಗಳ ಹಾಗಷ್ಟೆ. + +ಗಿರಿಜಮ್ಮ ಬಂದ ಕೂಡಲೆ ಇವೆಲ್ಲ ಕೊನೆಗೊಂಡವು. ಜಲಜಳ ಮುಖದಲ್ಲಿ ನಸುನಗು ಕಾಣಿಸಿಕೊಂಡು ಗೆಲುವಾಗುತ್ತಿದ್ದಂತೆ ಆಚೀಚಿನ ಶಬ್ದಗಳು, ಮಾತುಗಳು ಕಿರಿಕಿರಿ ಉಂಟುಮಾಡಿದವು. ಮ್ಯಾನೇಜರ್ ಕುರ್ಚಿಯಲ್ಲಿ ಕುಳಿತು ನಿರುದ್ದೇಶದಿಂದ ಅತ್ತಿತ್ತ ಕಣ್ಣು ಹಾಯಿಸುವುದರಳೊಗೆ ಜಲಜ ಆಕೆಯ ಬಳಿಗೆ ಬಂದು ನಸುನಕ್ಕು ನಮಸ್ಕರಿಸುವಂತೆ ತಲೆಯಾಡಿಸಿ, “ಅದೇ ಮೇಡಂ, ನಿನ್ನೆ ಮಾತಾಡಿಕೊಂಡಂತೆ ಡಾಕ್ಟರ್ ಹತ್ತಿರ ಯಾವಾಗ ಹೋಗೋದು” ಎಂದಳು. + +“ಆಗ್ಲಿ, ಹೇಳಿದೀನಲ್ಲ…. ಅವ್ರು ಬರ್ಲಿ…. ಗೊತ್ತಾಗುತ್ತಲ್ಲ.” ಡಾಕ್ಟರ್ ವಸುಧಾ ದಿನನಿತ್ಯ ದೇವಸ್ಥಾನಕ್ಕೆ ಡೇ ಕೇರ್ ಮುಂದೆ ಹೋಗಬೇಕಾದ ಅಭ್ಯಾಸದ ಹಿನ್ನೆಲೆಯಲ್ಲಿ ಹೇಳಿದರು. + +“ಮನೇಲಿ ಹೇಳಿದಿ ತಾನೇ?” ಎಂದು ಪೇಪರ್ ಪಕ್ಕಕ್ಕಿಡುತ್ತ ಕೇಳಿದ್ದಕ್ಕೆ ರೆಪ್ಪೆ ಮಿಟುಕಿಸದೆ ನೋಡಿದಳು ಜಲಜ. + +“ಮತ್ತೆ ಮದ್ವೇಗೆಲ್ಲ ರೆಡಿ ಮಾಡೋರು ಯಾರು? ಎಲ್ಲಾ ನಡೀತಿದ್ಯಾ ….” ಎಂದು ಬಾಗಿಲಿನಿಂದಾಚೆ ದೃಷ್ಟಿ ಹರಿಸುತ್ತಾ “ಏನಂತಾನೆ ನಿನ್ನ ಚೆಲುವ” ಎಂದು ಮದುವೆಯಾಗಿರದ ಆಕೆ ನಗು ತೇಲಿಸಿದರು. ನಡು ನಲವತ್ತರ ದಢೂತಿ ಆಕಾರದ ಅವರು ತಮ್ಮ ಯೋಗ್ಯತೆಗೆ ಮೀರಿದ ಅತಿ ಅಪೇಕ್ಷೆ-ನಿರೀಕ್ಷೆಗಳಿಂದ ದೊರೆತ ಅವಕಾಶಗಳನ್ನೆಲ್ಲ ತಿರಸ್ಕರಿಸಿದ್ದರು. ಮೂಲಭೂತವಾಗಿ ತಪ್ಪು ದಾರಿ ಹಿಡಿದ ಅವರ ಆಲೋಚನೆಯ ಕ್ರಮವನ್ನು ಸರಿಪಡಿಸುವ ಪ್ರಯತ್ನವನ್ನು ಯಾರೂ ಮಾಡಲಿಲ್ಲ. ಇದೆಲ್ಲ ತಿಳಿಸಿ ಹೇಳುವುದರಿಂದ ಬಗೆಹರಿಯುವುದಿಲ್ಲ, ಸ್ವಂತಕ್ಕೇ ಅರಿವಾಗುವಂತಾದ್ದು ಎಂದು ಹತ್ತಿರದವರೂ ಆ ವಿಷಯದಲ್ಲಿ ದೂರವಾಗಿದ್ದರು. ಎಲ್ಲ ಕಳೆದುಕೊಂಡ ಮೇಲೆ ಇನ್ನೇನು ಎನ್ನುವ ಭಾವನೆಯ ಜೊತೆ ಉರುಳಿದ ವರ್ಷಗಳಲ್ಲಿ ಕಂಡ ಹಲವಾರು ವಾಸ್ತವ ವಿಷಯಗಳು ಅವರ ಮನಸ್ಸನ್ನು ಬೇರೆ ಬೇರೆ ಬಗೆಯಲ್ಲಿ ಹದಗೊಳಿಸಿವೆ. ಈಗಿರುವ ಸ್ಥಿತಿಗೆ ಅವರು ಹೊಂದಿಕೊಂಡಿದ್ದಾರೆ. + +“ಇವತ್ತು ಬಂದೇ ಬರ್ತೀನಿ ಅಂತ ಹೇಳಿದಾನೆ” ಎಂದು ತನ್ನ ಬಳಿ ಬಂದ ಮೂರು ವರ್ಷದ ಮಗುವಿಗೆ ತೊಡಿಸಿದ್ದ ಶೂ ಕಳಚಿ ಬಿದ್ದಿದ್ದನ್ನು ಸರಿಪಡಿಸುತ್ತ ಹೇಳಿದಳು ಜಲಜ. + +ಗಿರಿಜಮ್ಮ ಅವಳಿಗೆ ಕಳೆದ ವರ್ಷದಿಂದ ಗೊತ್ತಷ್ಟೆ. ನೋಡಿದ ಕೂಡಲೆ ಆಹಾ ಎನ್ನುವಂತಿರದಿದ್ದರೂ ಲವಲವಿಕೆಯಿಂದ, ಹಿತವಾದ ವರ್ತನೆ-ಮಾತುಗಳಿಂದ ಇಷ್ಟವಾಗಿದ್ದಳು. ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳಲು ಸಾಧ್ಯವಾಗದೇ ಒಂದೆರಡು ಸಲ ಏಕಾಂತದಲ್ಲಿ ಪೆಚ್ಚಾಗಿ ಕುಳಿತವಳನ್ನು ಹತ್ತಿರ ಕರೆದು ಹುರಿದುಂಬಿಸಿ ಮಕ್ಕಳನ್ನು ಒಲಿಸಿಕೊಳ್ಳಲು ಬೇಕಾದ ಅಗತ್ಯ ರೀತಿಗಳನ್ನು, ವಿಧಾನಗಳನ್ನು ಹೇಳಿಕೊಟ್ಟಿದ್ದರು. ಅವುಗಳನ್ನು ಯಶಸ್ವಿಯಾಗಿ ಪ್ರಯೋಗಿಸಿದ ಜಲಜಳನ್ನು ಕಂಡು ಅವರಿಗೆ ತುಂಬ ಸಂತೋಷವಾಗಿತ್ತು. ಇತರರ ಬಗ್ಗೆ ಹೇಗಿದ್ದರೂ ತನ್ನ ಮೇಲಿನ ವಿಶ್ವಾಸ ಹಾಗೂ ಪ್ರೀತಿ ಜಲಜಗೆ ತನ್ನೆಲ್ಲ ವಿಷಯಗಳನ್ನು ಹೇಳಿಕೊಳ್ಳುವುದರಿಂದ ಪ್ರಾರಂಭವಾಗಿ ಅಂತರಂಗವನ್ನು ತೆರೆದಿಡುವ ಮಟ್ಟವನ್ನೂ ತಲುಪಿತ್ತು. ಈಗೀಗ ಜಲಜಳಿಗೆ ಹಿಡಿದುಮುಟ್ಟಿದ್ದಕ್ಕೆಲ್ಲ ಗಿರಿಜಮ್ಮ ಬೇಕು. ಹಾಗಾಗಿ ಸೀನು ಸಂಬಂಧಿತ ವಿಷಯವನ್ನು ಅವರಿಂದ ಈಗ ಬೇಡ, ಆಗ ಬೇಡ ಎಂದು ತಡೆತಡೆದು ಅನಂತರ ಹೇಳಿಬಿಟ್ಟಿದ್ದಳು. ಹೇಳಿ ಹಗುರಾಗಿ ಹಕ್ಕಿಯಂತೆ ಹಾರಿದ ಅವಳ ಕಣ್ಣುಗಳನ್ನು ಕಂಡ ಗಿರಿಜಮ್ಮ ಅರೆಕ್ಷಣ ಬೆರಗಪ್ಪಳಿಸಿದವರಂತೆ ನಿಂತಿದ್ದರು. ತಕ್ಷಣವೇ ಅವಳ ಭುಜ ಹಿಡಿದು ಮೆಲ್ಲನೆ ಅಲುಗಿಸಿ ಭೂಮಿಯ ಮೇಲೆ ನಿಲ್ಲುವಂತೆ ಮಾಡಿ ನಸುನಕ್ಕು ಅವಳ ಸಂಭ್ರಮದೊಳಗೆ ಬೆರೆತಿದ್ದರು. ಇವೆಲ್ಲ ಕೆಲವು ಕ್ಷಣಗಳು ಮಾತ್ರ. ನಿಂತಂತೆಯೇ ಗಿರಿಜಮ್ಮ ಎರಡೂವರೆ ದಶಕಗಳಕ್ಕೂ ಹಿಂದೆ ಹಾರಿದ್ದರು. ಅವು ಜಲಜಳು ಹೇಳಿದ ವಿಷಯ ಮತ್ತು ಭಾವನೆಗಳಿಗೆ ಸರಿಸುಮಾರು ಸಮಾನಾಂತರವಾದಂಥವು. ತಮ್ಮ ನರನಾಡಿಗಳನ್ನು ಮೀಟಿ ಮನಸ್ಸನ್ನು ಅಲ್ಲೋಲಕಲ್ಲೋಲ ಮಾಡಿದ ಆ ಗಳಿಗೆಗಳು ನಿನ್ನೆ ಮೊನ್ನೆಯಷ್ಟೇ ಜರುಗಿದಂತೆ ಕಂಡವು. ಎಲ್ಲವೂ ಸರಳ, ಸರಾಗ ಎಂದುಕೊಂಡದ್ದು ದಿಕ್ಕು ಬದಲಾಗಿ ಅನಂತರದ ಗಳಿಗೆಗಳು ಕೊರಡಾದದ್ದು ಹೇಗೆ? ತಪ್ಪಾದದ್ದೆಲ್ಲಿ ತಿಳಿಯಲಿಲ್ಲ. ಅಹಂಕಾರಗಳದ್ದೋ, ಅಪೇಕ್ಷೆಗಳದ್ದೋ, ನಿರ್ಧಾರ ತೆಗೆದುಕೊಳ್ಳುವ ಅಸಮರ್ಥತೆಯೋ, ಎಲ್ಲ ಗೊಂದಲ. ಅನಂತರ ವರ್ಷಗಳು ಅವರ ಕಣ್ಣೆದುರು ಕರಗುತ್ತಲೇ ಹೋಯಿತು. + +“ಗುಡ್ ಲಕ್” ಎಂದಷ್ಟೇ ಹೇಳಿ ತಮ್ಮ ಬೆಂಬಲವಿದೆ ಎಂದು ಸೂಚಿಸಿದ್ದರು. ಆ ಮಾತು ಜಲಜಳಿಗೆ ಎಲ್ಲಿಲ್ಲದ ಚೈತನ್ಯ ಕೊಟ್ಟಿತ್ತು. ಕನಸಿನ ಲೋಕದ ಬಾಗಿಲು ತೆರೆದು ಪುಟಿಯುವಂತಾಗಿದ್ದಳು. ಅವನ ಫ್ಯಾಕ್ಟರಿ ಕೆಲಸ, ಒಂದಿಬ್ಬರು ಸ್ನೇಹಿತರು, ದೂರದೂರದಲ್ಲಿರುವ ಅಪ್ಪ-ಅಮ್ಮ ಮುಂತಾದವುಗಳ ಬಗ್ಗೆ ತಿಳಿದ ಅರೆ-ಬರೆ ವಿಷಯಗಳನ್ನು ಅವರಿಗೆ ತಿಳಿಸಿದ್ದಳು. + +ಗಿರಿಜಮ್ಮನಿಗೆ ಸೀನು ಮೊದಲ ಬಾರಿ ಕಂಡಾಗ ಸಾಮಾನ್ಯ ಹುಡುಗನಂತೆ ಕಂಡಿದ್ದ. ಕೇಳಿದ್ದಕ್ಕೆ ಕಡಿಮೆ ಪದಗಳಲ್ಲಿ ಉತ್ತರಿಸಿದ್ದ. ಅದು-ಇದು ಕೇಳಿ ಮಾತು ಬೆಳೆಸಬೇಕೆಂದು ಆಕೆಗನಿಸಲಿಲ್ಲ. ಪರಸ್ಪರ ಇಷ್ಟವಾದದ್ದು ಮುಖ್ಯ. ಇನ್ನುಳಿದಂತೆ ಒಬ್ಬರಿಗೊಬ್ಬರು ಅರ್ಥಮಾಡಿಕೊಂಡು ಹೊಂದಿಕೊಳ್ಳುವುದು ಅವರಿಗೆ ಬಿಟ್ಟದ್ದು ಎಂದು ಸುಮ್ಮನಾದರು. ಆದರೆ ಹಾಗೆಯೇ ಬಿಡದೆ, “ನಮ್ಮ ಜಲಜ ಬಹಳ ಹುಷಾರು… ತುಂಬಾ ನಾಜೂಕು, ಸೂಕ್ಷ್ಮ” ಎಂದಷ್ಟೇ ಹೇಳಿ ತಾವೂ ನಕ್ಕು, ಅವನನ್ನೂ ನಗಿಸಿದ್ದರು. + +ರಂಪ ಮಾಡುತ್ತಿದ್ದ ಮಗುವೊಂದಕ್ಕೆ ಅದು ತಂದಿದ್ದ ಬ್ಯಾಗೊಳಗಿನಿಂದ ಬಾಟಲಿಯಿಂದ ನೀರು ಕುಡಿಸಿ ಸಮಾಧಾನ ಮಾಡಿ ಕಣ್ಣೊರಿಸಿ ಬಂದ ಜಲಜಳಿಗೆ “ಅವ್ನು ಬರ್ತಾನಲ್ಲ …. ಈ ಸರ್ತಿ ಎಲ್ಲಾನೂ ಸರಿಯಾಗಿ ಡಿಸೈಡ್ ಮಾಡ್ಬಿಡು” ಎಂದರು. + +“ನಾನು ಹೇಳ್ತಾನೇ ಇದ್ದೀನಿ.” ಅವಳ ಮಾತಿನಲ್ಲಿ ದೃಢತೆ ಕಾಣದೆ ನೋವಿನೆಳೆ ಕಂಡು ಗಿರಿಜಮ್ಮ ಪ್ರಶ್ನಿಸುವಂತೆ ನೋಡಿದರು. ಜಲಜ ಅವರಿಗೆ ತುಂಬ ಸೂಕ್ಷ್ಮವೊಂದನ್ನು ತಿಳಿಸಬೇಕೆಂದು ಅವರ ಕಡೆ ತಿರುಗಿದಾಗ ಬಾಗಿಲಲ್ಲಿ ಕೆಲಸದಾಕೆ ಕಾಣಿಸಿಕೊಂಡು “ಏನ್ರವ್ವಾ ನಮ್ಮನೆಯಾಗಾದಂಗೆ ಇಲ್ಲೂ ಇಲಿ ಕಾಟ ಇಪರೀತ ಆಗದೆ…. ಸುಮ್ಕೆ ಬಿಟ್ರೆ ಅಷ್ಟೆ… ಎಂಥದೂ ಉಳಿಯಾಕಿಲ್ಲ” ಎಂದಳು. + + + +“ಅಲ್ಲಿ-ಇಲ್ಲಿ ಒಂದೆರಡು ಇಲಿ ಬೋನು ತಂದಿಟ್ರೆ?” ಎಂದರು ಗಿರಿಜಮ್ಮ. + +“ಅದ್ಕೆಲ್ಲ ಗಿಟ್ಟಾಂಗಿಲ್ಲ…. ಇತ್ತೀಚ್ಗೆ ಬಾಳ ಆಗದೆ…. ಪಾಸಾಣನೇ ಗತಿ…. ನಾವು ಮಾಡ್ದಂಗೆ…. ಅಕಾ ನೋಡಿ ಅಲ್ಲಿ ಮಡಿಗಿವ್ನಿ” ಎಂದು ಮೂಲೆಲ್ಲಿ ಇಟ್ಟದ್ದನ್ನು ತೋರಿಸಿದಳು. + +ಜಲಜಳಿಗೆ ಸೀನು ಜೊತೆಗಿನ ಭೇಟಿಗೆ ಸಿಗುವ ಪ್ರತ್ಯೇಕವಾದ ವೇಳೆ, ಸ್ಥಳ, ಅವಕಾಶ ಕಡಿಮೆಯಿತ್ತು. ಸೀನುಗೂ ಕೂಡ ಅಷ್ಟೆ. ಮನೆಯಲ್ಲಿ ಭೇಟಿ ಅಸಾಧ್ಯವೆಂದು ಅವಳಿಗೆ ಗೊತ್ತಿತ್ತು. ಹೀಗಾಗಿ ಗಿರಿಜಮ್ಮನವರ ಒಪ್ಪಿಗೆ ಪಡೆದು ಡೇ-ಕೇರ್ ನಲ್ಲಿಯೇ ಕುಳಿತು ಮಾತು ಇತ್ಯಾದಿಯಲ್ಲಿ ಸಮಯ ಕಳೆಯುತ್ತಿದ್ದರು. ಯಾವುದಾದರು ಸದ್ದು, ಮಾತು ಕೇಳಿಸಿದರೆ ದೂರ ಸರಿಯುತ್ತಿದ್ದ ಅವರು ಉಳಿದಂತೆ ತಮಗಿಷ್ಟ ಬಂದಂತೆ ಇರುತ್ತಿದ್ದರು. ಅವರೇನು ಮಾಡುತ್ತಿರಬಹುದೆಂಬ ಅನುಮಾನ ಗಿರಿಜಮ್ಮನಿಗಿದ್ದರೂ ಜಲಜಳ ಬಗ್ಗೆ ಅವರಿಗೆ ಅತೀವ ಭರವಸೆಯಿತ್ತು. ಇದನ್ನೆಲ್ಲ ಮೀರಿ ತಾವು ಪ್ರೇಮಕ್ಕೆ ಒಳಗಾದ ಯುವ ಜೋಡಿಗೆ ಅವಕಾಶ ಮಾಡಿಕೊಡುತ್ತಿರುವುದಕ್ಕೆ ವಿಚಿತ್ರ ಸಂತೋಷವಿತ್ತು. ಇಷ್ಟಾದರೂ ಅವರಿಗೆ ಇತರರು ತಮಗನಿಸಿದ್ದನ್ನು ಒಪ್ಪುವುದಿಲ್ಲ ಎಂಬ ತಿಳಿವಳಿಕೆಯೂ ಇತ್ತು. ಆದರೆ ಅವರಿಗೆ ತಮ್ಮ ಮೇಲೆ, ತಾವು ನಂಬಿದ್ದರ ಮೇಲೆ ಹುಚ್ಚು ಭರವಸೆ. + +ತನಗೆ ಎಲ್ಲ ಬಗೆಯಲ್ಲಿ ಬೆಂಬಲಿಸಿರುವ ಗಿರಿಜಮ್ಮನಿಗೆ ತನಗೆ ಮಾತ್ರ ತಿಳಿದಿರುವ ಅತ್ಯಂತ ಮಖ್ಯವಾದ ಲೆಕ್ಕಾಚಾರದ ವಿಷಯವನ್ನು ತಿಳಿಸದೇ ಇರುವುದು ಎಳ್ಳಷ್ಟೂ ಸರಿಯಲ್ಲ. ಅಷ್ಟೇಕೆ, ಒಂದು ವಿಧದಲ್ಲಿ ಅವರ ವಿಶ್ವಾಸಕ್ಕೆ ದ್ರೋಹ ಬಗೆದಂತೆ, ಅವರ ವಾತ್ಸಲ್ಯಕ್ಕೇ ಅರ್ಹವಿಲ್ಲದವಳೆಂಬ ಅನ್ನಿಸಿಕೆ ಒತ್ತರಿಸಿ ಬಂದು ಜಲಜಳ ಮನಸ್ಸು ಕುಗ್ಗಿತು. ಸುತ್ತ ಒಂದಿಲ್ಲೊಂದು ರೀತಿಯಲ್ಲಿ ಮಕ್ಕಳು ಉಂಟುಮಾಡುತ್ತಿದ್ದ ಹೆಚ್ಚಿನ ಪ್ರಮಾಣದ ವಿವಿಧ ಬಗೆಯ ಶಬ್ದಗಳು ಅವಳಿಗನಿಸಿದ್ದನ್ನು ಇನ್ನಷ್ಟು ಹೆಚ್ಚಿಸಿತು. ಏನು ಮಾಡಲೂ ತೋಚದಂತಾಗಿ ತಾನು ನೋಡಿಕೊಳ್ಳಬೇಕಾದ ಮಕ್ಕಳ ಗುಂಪನ್ನು ಸುಧಾರಿಸಲು ಸಾಧ್ಯವಾಗದೆ, ಜೊತೆಗೆ ಕೆಲಸ ಮಾಡುವಾಕೆಯ ಕಡೆ ತಿರುಗಿ, “ಸ್ವಲ್ಪ ಹೆಲ್ಪ್ ಮಾಡ್ತೀಯಾ, ಪ್ಲೀಸ್” ಎಂದು ಅನಿವಾರ್ಯವಾಗಿ ಕೇಳಿದಳು. `ಓ ಹೋ’ ಎಂದು ಮಾರುದ್ದ ಕೈ ಮಾಡಿ ತಾನು ನೋಡಿಕೊಳ್ಳುವ ಮಕ್ಕಳ ಜೊತೆ ತನ್ನವನ್ನೂ ಸೇರಿಸಿಕೊಳ್ಳುತ್ತಿದ್ದ ಹಾಗೆ ತಾನೇಕೆ ಹೀಗೆ ಹುಂಬಳಂತೆ ವರ್ತಿಸುತ್ತಿದ್ದೇನೆ. ಎಲ್ಲವೂ ಇವತ್ತು ಇತ್ಯರ್ಥವಾಗುತ್ತಲ್ಲ. ಅವನ ಮಾತಿಗಿಂತ ತನ್ನ ಬಗ್ಗೆ ನಡೆದುಕೊಳ್ಳುವ ರೀತಿ ನೂರಕ್ಕೆ ನೂರು ಸಹಕಾರಿಯಾಗಿದೆಯಲ್ಲ. ಹೀಗೆ ಸುಮ್ಮನೆ ತಳಮಳಗೊಳ್ಳುವುದು ಸುತಾರಾಂ ಸರಿಯಿಲ್ಲ ಎನ್ನುವ ಆಲೋಚನೆ ಅವಳಲ್ಲಿ ತೀವ್ರತರ ಭಾವನೆ ಹುಟ್ಟಿಸಿ ಮೊದಲಿನದನ್ನು ನಿರ್ನಾಮಗೊಳಿಸುತ್ತದೆ. + +ಆಡುತ್ತಿದ್ದ ಮಗುವೊಂದು ಢಿಕ್ಕಿ ಹೊಡೆದದ್ದರಿಂದ ಜಲಜ ಭೂಮಿಗೆ ಬಂದಳು. ಆ ಮಗುವನ್ನು ಸರಿಯಾಗಿ ಹೋಗುವಂತೆ ಮಾಡಿ ಪಕ್ಕಕ್ಕೆ ಕತ್ತು ತಿರುಗಿಸಿದಾಗ ಡಾಕ್ಟರ್ ವಸುಧಾ ರಸ್ತೆಯಲ್ಲಿ ಹೋಗುತ್ತಿದ್ದದ್ದು ಕಂಡಿತು. ಮಾಡುತ್ತಿದ್ದ ಕೆಲಸವನ್ನು ಹಾಗೆಯೇ ಬಿಟ್ಟು ಅವರಿಗೆ ಕಾಣಿಸುವಷ್ಟು ದೂರದಲ್ಲಿ ನಿಂತು ನಮಸ್ಕರಿಸಿದಳು. ಅವರು ಇನ್ನೂ ಬಳಿಗೆ ಬಂದಾಗ “ಬಂದು ಕಾಣ್ತೀನಿ, ಡಾಕ್ಟ್ರೇ” ಎಂದಳು. ಅವರು ನಸುನಗುತ್ತ ಮುಂದೆ ಸಾಗಿದರು. + +ಗಿರಿಜಮ್ಮ ಕಂಡ ಕೂಡಲೆ, “ಡಾಕ್ಟ್ರು ಬಂದಿದಾರೆ. ಯಾವಾಗ ಹೋಗೋಣ” ಎಂದು ಸ್ವಲ್ಪ ತವಕದಿಂದಲೇ ಕೇಳಿದಳು. + +“ಎಷ್ಟು ಅರ್ಜೆಂಟ್ ನೋಡು…. ಎಲ್ಲ ಸರಿ ಇರತ್ತೆ ಸುಮ್ನಿರು” ಎಂದು ನಗು ಬೆರೆಸಿದರು. + +ಪೋಷಕರು ಮಕ್ಕಳನ್ನು ಸ್ಕೂಟರು, ಕಾರುಗಳಲ್ಲಿ ಕರೆದುಕೊಂಡು ಹೋಗುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗುವ ವ್ಯಾನ್ ಗಳಲ್ಲಿ ಮಕ್ಕಳು ಕುಳಿತು ಹೊರಡುವುದು ಮುಂತಾದವು ಮುಗಿಯುವಷ್ಟರಲ್ಲಿ ಸಾಕಷ್ಟು ಸಮಯವಾಗಿತ್ತು. ಜಲಜ ಹೇಳಿದ ಕೆಲಸದಾಕೆ ಇಲಿ ಪಾಷಾಣದ ಕ್ಯಾರಿ ಬ್ಯಾಗನ್ನು ಅಲ್ಲಿಯೇ ಬಿಟ್ಟದ್ದು ಲಕ್ಷಿಯ ಗಮನಕ್ಕೆ ಬಂತು. ಮತ್ತೊಮ್ಮೆ ಗಿರಿಜಮ್ಮನವರನ್ನು ಅವಸರಪಡಿಸಿ ಆಸ್ಪತ್ರೆಯ ಗೈನಕಾಲಜಿ ವಿಭಾಗದಲ್ಲಿ ಕುಳಿತುಕೊಳ್ಳುವ ವೇಳೆಗೆ ಅಲ್ಲಿ ಇನ್ನಿಬ್ಬರಿದ್ದರು. ನರ್ಸುಗಳು, ಸಹಾಯಕರು ತಮ್ಮ ತಮ್ಮ ಕೆಲಸದಲ್ಲಿ ನಿರತರಾಗಿದ್ದರು. ಅವರು ಮಾಡುವುದನ್ನು ಸವಿಸ್ತಾರವಾಗಿ ನೋಡಬೇಕೆನಿಸಿತು. ಆದರೆ ಅತ್ತ ಕಡೆ ಕಣ್ಣು ಹಾಯಿಸಿದ ಹತ್ತು ಸೆಕೆಂಡಿನಲ್ಲಿ ಬೇಸರ ತಂದಿತು. ಆನಂತರದ ಕಾಯುವಿಕೆ ಜಲಜಳಿಗೆ ಭಾರವೆನಿಸತೊಡಗಿತು. ಸುಮ್ಮನೆ ಕತ್ತೆತ್ತಿ ತಾರಸಿ ನೋಡಿದ ಅವಳ ಭುಜದ ಮೇಲೆ ಕೈಯಿಟ್ಟ ಗಿರಿಜಮ್ಮ ಸಣ್ಣಗೆ ತಲೆ ಹಾಕಿದರು. ಜಲಜ ತೆಳುನಗೆ ಬೀರಿದಳು. + +ತನ್ನ ಸರದಿ ಬಂದಾಗ ಗಿರಿಜಮ್ಮನ ಜೊತೆ ಡಾಕ್ಟರ ಕೊಠಡಿಯನ್ನು ಪ್ರವೇಶಿಸಿ ಮತ್ತೆ ಹೊರಗೆ ಬಂದಾಗ ಅವಳು ಅವಳಾಗಿರಲಿಲ್ಲ. ಮೈಯೆಲ್ಲ ಯೋಚನೆ ತುಂಬಿ ಮೌನದಿಂದ ಮತ್ತೆ ಸಾಲಾಗಿದ್ದ ಕುರ್ಚಿಯಲ್ಲಿ ಕುಳಿತಳು. + +“ಈಗೇನು ಅಂಥ ಅಗ್ಬಾರದ್ದು ಆಗಿರೋದು…. ಇದೆಲ್ಲ ನಿಜವಾಗ್ಲೂ ಸೀರಿಯಸ್ ಅಲ್ಲ…. ಒಂದು ಸ್ವಲ್ಪ ಮುಂಚೆ ಅಷ್ಟೇ….” ಅವಳ ಮೌನದ ಭಾರ ತಾಳಲಾರದೆ ಗಿರಿಜಮ್ಮ ಹೇಳಿದರು. + +“ನಾನು ಮುಂಚೇನೇ ನಿಮ್ಗೆ ಇಷ್ಟಾಗಿದೆ ಅಂತ ಹೇಳ್ಬೇಕಾಗಿತ್ತು.” + +“ಅದ್ರಿಂದೇನೂ ವ್ಯತ್ಯಾಸ ಆಗ್ತಿರ್ಲಿಲ್ಲ…. ಹೋಗ್ಲಿ ಬಿಡು…. ಅವ್ನು ಬರ್ತಾನಲ್ಲ…. ಪಟ್ಟಾಗಿ ಹಿಡ್ಕೊಂಡು ಮುಂದಿನ ವಾರಾನೋ, ಆಚೆ ವಾರಾನೋ ಶಾಸ್ತ್ರ ಮುಗಿಸಿ ಬಿಡಿ ….” ಅವಳಲ್ಲಿ ಲವಲವಿಕೆ ತುಂಬಲು ಪ್ರಯತ್ನಿಸಿದರು ಗಿರಿಜಮ್ಮ. + +ರೂಮಿನಿಂದ ಹೊರಗೆ ಬಂದ ಡಾಕ್ಟರ್ ವಸುಧಾ ಹತ್ತಿರದಲ್ಲಿ ಕಂಡ ಜಲಜಳ ಕಡೆ ತಿರುಗಿ, “ಟೇಕ್ ಕೇರ್” ಎಂದು ಗಿರಿಜಮ್ಮಳ ಕಡೆ ನಗು ಬೀರಿ ಮತ್ತೊಂದು ಕಡೆ ಹೋದರು. + +“ಡಾಕ್ಟ್ರು ಕೂಡ ನಮ್ಮ ಜೊತೇನೇ ಇದಾರೆ. ಮುಖ್ಯವಾದದ್ದನ್ನು ನೋಡ್ಕೋ ಸಾಕು. ಉಳಿದದ್ದು ಎಲ್ಲ ತನ್ನಷ್ಟಕ್ಕೆ ತಾನು ಸರಿ ಹೋಗತ್ತೆ…. ಗೊತ್ತಾಯ್ತು ತಾನೆ. ಡಾಕ್ಟ್ರು ಕಡ್ಡಿ ಮುರಿದ ಹಾಗೆ ಹೇಳಿದಾರೆ. ಯಾವುದೇ ವಿಷಯಕ್ಕೂ ಬೇರೆ ದಾರೀನೇ ಇಲ್ಲ. ನಿನ್ನ ವಿಷಯಕ್ಕಷ್ಟೇ ಅಲ್ಲ. ನಿನ್ನ ಮತ್ತು ನಿನ್ನೊಳಗಿರುವುದರ ವಿಷಯಕ್ಕೆ.” + +“ಚೆನ್ನಾಗಿ ಗೊತ್ತಾಗಿದೆ” ಅವಳು ಈಗ ಸ್ವಲ್ಪ ಸದೃಢವಾಗಿ ಹೇಳಿದಳು. + +“ಅಷ್ಟಾದ್ರೆ ಮುಗೀತು…. ಏನೂ ಯೋಚ್ನೆ ಮಾಡ್ಬೇಡ, ಗಾಬರಿ ಆಗ್ಬೇಡ …. ಬೇಕಿದ್ರೆ ಹೇಳು. ನಾನೇ ಬಂದು ನಿಮ್ಮಮ್ಮನ ಹತ್ರ ಹೇಳ್ತೀನಿ, ಅವನನ್ನೂ ಕೂಡಿಸಿಕೊಂಡು” ಎಂದು ಉತ್ಸಾಹದಿಂದ ಹೇಳಿದರು. + +ವಾಪಸು ಬರುವಾಗ ತಿಂಡಿಯ ಅಂಗಡಿಯ ಬಳಿ ಜಲಜ ವೇಗ ಕಡಿಮೆ ಮಾಡಿ ಅತ್ತ ನೋಟ ಬೀರಿದಾಗ ಸೀತೆ ಕೂಗಿ ಕರೆದಳು. + +“ಬೆಳಿಗ್ಗೆ ನೀನು ಮೊಬೈಲ್ ಇಲ್ಲೇ ಬಿಟ್ಟು ಹೋಗಿದ್ದೆ …. ಒಂದೆರಡು ಸಲ ರಿಂಗ್ ಆಗಿತ್ತು …. ನಾನು ತೆಗೀಲಿಲ್ಲ” ಎಂದು ಸೀತೆ ಅದನ್ನು ಕೊಟ್ಟಳು. ಜಲಜ ಅವಸರದಿಂದ ಸೀನು ಫೋನ್ ಬಂದಿರಬಹುದೇ ಎಂಬ ನಿರೀಕ್ಷೆಯಲ್ಲಿ ನಿಂತಲ್ಲೇ ನೋಡಿದಳು. ಅವನು ಎರಡು ಸಲ ಪ್ರಯತ್ನಿಸಿದ್ದ. ಜಲಜಗೆ ಹುರುಪು ಚಿಮ್ಮಿತು. ಅಲ್ಲಿಂದಲೇ ಅವನಿಗೆ ಫೋನಾಯಿಸಿದಳು. ಒಂದಲ್ಲ ಎರಡು-ಮೂರು ಬಾರಿ. ಸಿಗಲಿಲ್ಲ. ಪೆಚ್ಚಾದಳು.ಡೇ ಕೇರ್ ಗೆ ತಲುಪಿದಾಗ ಗಿರಿಜಮ್ಮ ಹೊರಡಲು ಸಿದ್ಧವಾಗುತ್ತಿದ್ದದ್ದು ಕಾಣಿಸಿತು. + +“ನಾನಿಲ್ಲೆ ಇರ್ತೀನಿ …. ಅವ್ನಿಗೆ ಕಾಯ್ತೀನಿ …. ಬಂದೇ ಬರ್ತಾನೆ.” + +“ಯಾವುದಕ್ಕೂ ಫೋನ್ ಮಾಡು” ಎಂದು ಹೆಜ್ಜೆ ಹಾಕಿದರು ಗಿರಿಜಮ್ಮ. + +ಜಲಜ ಬಾಗಿಲ ಬಳಿಯೇ ಕುರ್ಚಿ ಎಳೆದುಕೊಂಡು ಕುಳಿತಿದ್ದಳು. ಸೆಕೆಂಡುಗಳು ಉರುಳುತ್ತಿದ್ದವು. ಸೂರ್ಯನ ಪ್ರಖರತೆ ಹೆಚ್ಚುತ್ತಿತ್ತು. ಬೇಸರದ, ಆತಂಕದ ಹಾಳೆಗಳು ಮನಸ್ಸಿನ ಮೇಲೆ ಒಂದು, ಇನ್ನೊಂದು, ಮತ್ತೊಂದು ಪೇರಿಸುತ್ತಲೇ ಹೋಗುತ್ತಿತ್ತು. ಸುಮ್ಮನೆ ಒಳಗೆ ಕಣ್ಣಾಡಿಸಿದ ಅವಳಿಗೆ ಬಣ್ಣ ಬಣ್ಣದ ಹಾಳೆಗಳು ಮಂಕಾಗಿ ಹರಡಿ ಬಿದ್ದಂತೆ ಕಂಡಿತು. ಜೊತೆಗೆ ಮಕ್ಕಳು ಆಟವಾಡುವ ಬಣ್ಣದ ಚೆಂಡುಗಳು, ಬಣ್ಣದ ಪೆನ್ಸಿಲ್ ಗಳು, ಕ್ರೆಯಾನುಗಳು, ಚಾಕ್ ಪೀಸ್ ಗಳು ದಿಕ್ಕಿಲ್ಲದಂತೆ ಚದುರಿ ಬಿದ್ದಿದ್ದವು. ಹೊರಗಡೆ ನೋಡಿದ ಅವಳಿಗೆ ಕಾಂಪೌಂಡಿನಾಚೆ ರಸ್ತೆಯಲ್ಲಿ ಓಡುವ ವಾಹನಗಳಲ್ಲಿ ಕುಳಿತವರ ಚಲಿಸುವ ತಲೆ ಮಾತ್ರ ಕಾಣುತ್ತಿತ್ತು. ಇದೊಂದು ಬಗೆಯಾದರೆ, ಗೇಟ್ ನ ಕೆಳಭಾಗ ಮಾತ್ರ ಮುಚ್ಚದಿದ್ದುದರಿಂದ ಕಾಣಿಸುತ್ತಿದ್ದದ್ದು ನಡೆಯುವವರ ಕಾಲುಗಳು ಮಾತ್ರ. ಉಳಿದಂತೆ ಅವರ ಹೃದಯ, ಇತ್ಯಾದಿ ಭಾಗಗಳು ದೃಷ್ಟಿಗೆ ಎಟುಕುವಂತಿರಲಿಲ್ಲ. ಮತ್ತಷ್ಟು ಕತ್ತು ತಿರುಗಿಸಿದಾಗ ಕೆಲಸದಾಕೆ ಮರೆತು ಬಿಟ್ಟು ಹೋದ ಇಲಿ ಪಾಷಾಣವಿರುವ ಕ್ಯಾರಿ ಬ್ಯಾಗ್ ಮೂಲೆಗೊರಗಿದ್ದು ಕಂಡಿತು. + +ತಲ್ಲಣ ತುಂಬಿ ಏನೊಂದೂ ಸ್ಪಷ್ಟವೆನಿಸದಂತಿದ್ದ ಜಲಜಳನ್ನು ಎಚ್ಚರಿಸುವಂತೆ ಮೊಬೈಲ್ ರಿಂಗಾಯಿತು. ತಟ್ಟನೆ ನೋಡಿದರೆ ಸೀನುವಿನದು. ಅವನು ಬರುತ್ತಿದ್ದೇನೆಂದು ಹೇಳಿ ಮುಂದುವರಿಸುವುದನ್ನು ತಡೆದು ಅವಳು “ಡಾಕ್ಟರ್…. ಡಾಕ್ಟರ್” ಎಂದು ಉದ್ವೇಗದಿಂದ ಬಡಬಡಿಸಿದಳು. ಫೋನ್ ಕಟ್ಟಾಗಿತ್ತು. + +ಈಗವಳಿಗೆ ಸಂಭ್ರಮ. ಕಂಡದ್ದಕ್ಕೆಲ್ಲ, ಕೇಳಿದ್ದಕ್ಕೆಲ್ಲ ಮಿರುಗು-ಬೆರಗಿನ ಲೇಪ. ಕುಳಿತಿದ್ದರೂ ಕುಣಿಯುತ್ತಿದ್ದ ಅನ್ನಿಸಿಕೆ. ಕ್ಷಣಗಳಿಗೆ ಬಗೆ ಬಗೆ ಬಣ್ಣದ ರೆಕ್ಕೆ. ಜೊತೆಗೆ ಹಿತವಾದ ಇನಿದನಿಯ ಆಲಾಪ… ಅವಳು ಸೀನುಗೆ ಹೇಳಬೇಕಾದ ವಿಷಯಗಳ ಪಟ್ಟಿ, ಅವು ಅವನಿಗೆ ಮನದಟ್ಟಾಗಬೇಕಾದರೆ ಉಪಯೋಗಿಸಬೇಕಾದ ಮಾತುಗಳು ಇವುಗಳ ಪಟ್ಟಿಯನ್ನು ಸಿದ್ಧಪಡಿಸುತ್ತ ಕುಳಿತಳು. + +ಗೇಟ್ ಬಳಿ ಶಬ್ದವಾಗಿ ಸೀನು ಒಳಗೆ ಬಂದ. ಎಣ್ಣೆಗೆಂಪಿನ ಸುಮಾರು ಐದೂಮುಕ್ಕಾಲು ಅಡಿ ಎತ್ತರದ ಸಾಮಾನ್ಯಕ್ಕಿಂತ ಸ್ವಲ್ಪ ದೊಡ್ಡವೇ ಎನಿಸುವ ಕಣ್ಣುಗಳ ತುಂಬುಗೂದಲಿನ, ಪೀಚೆಂದು ಕಾಣಿಸದ ಅವನು ಉದ್ದದ ಸದೃಢ ಹೆಜ್ಜೆಗಳನ್ನಿಡುತ್ತ ಬರುತ್ತಿದ್ದದ್ದು ಕಂಡು ಅವಳಿಗೆ ಮುದವೆನಿಸಿತು. + +ಅವಳ ಹತ್ತಿರಕ್ಕೆ ಇನ್ನೊಂದು ಕುರ್ಚಿಯನ್ನೆಳೆದು ಕುಳಿತುಕೊಳ್ಳುತ್ತ, “ಕೆಟ್ಟ ಬಿಸಿಲು” ಎಂದು ದೀರ್ಘವಾಗಿ ಉಸಿರೆಳಿದು ಬಿಟ್ಟಾಗ ಅವನ ಕತ್ತು, ಹಣೆಯ ಮೇಲೆ ತೆಳುವಾಗಿ ಬೆವರಂಟಿದ್ದು ಕಾಣಿಸಿತವಳಿಗೆ. ಅಲ್ಲಿ ಕುರ್ಚಿಯ ಮೇಲೆ ಹಾಕಿದ್ದ ಕೆಂಪು ಬಣ್ಣದ ಬಟ್ಟೆಯಿಂದ ಒರೆಸಿಕೊಂಡ. ಜಲಜಳಿಗೆ ಅವನ ಇಲಿ ಕಡಿದ ಟೋಪಿ ನೆನಪಾಯಿತು. ಬ್ಯಾಗಿನಿಂದ ತೆಗೆದು ಅದರಲ್ಲಿ ಇಲಿ ಕಡಿತದಿಂದ ಆಗಿದ್ದ ಸಂದಿಗಳ ಮೂಲಕ ನೋಡಿ ಅಲ್ಲಲ್ಲಿ ಕತ್ತರಿಸಿದಂತೆ ಅವನ ಮುಖ ಕಂಡು ಕಿಸಕ್ಕೆಂದು ನಕ್ಕಳು. + +ಅವನು ಅದನ್ನು ಅವಳಿಂದ ಕಿತ್ತುಕೊಳ್ಳುತ್ತಿದ್ದಂತೆ, “ಹಾಕ್ಕೋ, ಕಿರೀಟದ ಹಾಗಿದೆ” ಎಂದು ಮತ್ತೆ ನಕ್ಕಳು.“ಕರೆಕ್ಟ್, ನಾನೀಗನಿಜವಾಗ್ಲೂ ಚಕ್ರವರ್ತೀನೇ. ನಿಂಗೆ ಹ್ಯಾಗೆ ಗೊತ್ತಾಯ್ತು?” ಎಂದು ರೇಗಿಸುತ್ತ ಹುಬ್ಬೇರಿಸಿ ನಸುನಕ್ಕು ಅದನ್ನು ಉಂಡೆ ಮಾಡಿ ಎಸೆದ. + +ಅನಂತರ ಜಲಜ, “ಬೆಳಿಗ್ಗೆ ತಿಂಡಿ ಆಗಿದೆಯಾ?” ಎಂದಳು. + +“ಎಲ್ಲಾಗಿದೆ? …. ಸುತ್ತಾನೇ ಇದೀನಿ …. ಹೊಟ್ಟೆ ಬೇರೆ ಸರಿಯಿಲ್ಲ” ಎಂದು ಪ್ಯಾಂಟ್ ಜೇಬಿನಿಂದ ಕರ್ಚೀಫ್ ತೆಗೆದು ಹಣೆ ಒರೆಸಿಕೊಂಡ. + +“ಒಂದ್ನಿಮಿಷ ಬಂದೆ ಇರು” ಎಂದು ಎದ್ದಳು + +ದಾಪುಗಾಲು ಹಾಕಿ ತಿಂಡಿಯಂಗಡಿ ತಲುಪಿದಳು. ಸೀತೆ ಅಗಲದ ತಟ್ಟೆಯ ತುಂಬ ಸಮೋಸ ಕರಿದಿಟ್ಟಿದ್ದಳು. ಅದಲ್ಲದೆ ಬೇರೇನೂ ಇರಲಿಲ್ಲ. ಪೇಪರಿನಲ್ಲಿ ಚಟ್ನಿಯ ಜೊತೆ ನಾಲ್ಕು ಸಮೋಸ ಸುತ್ತಿದ ಕೂಡಲೆ ಸೀನುಗೆ ಪೆಪ್ಸಿ ಎಂದರೆ ಪ್ರಾಣ ಎನ್ನುವುದು ನೆನಪಾಯಿತು. ಪಕ್ಕದ ಅಂಗಡಿಯ ಫ್ರಿಜ್ ನಲ್ಲಿದ್ದ ಎರಡು ಬಾಟಲಿ ಜೊತೆಗಿರಿಸಿಕೊಂಡು ಬಂದು, “ಮೊದ್ಲು ಹೊಟ್ಟೆಗಷ್ಟು ಹಾಕ್ಕೊ” ಎಂದಳು. + +ಅವಳ ಕಕ್ಕುಲಾತಿ ಅವನಿಗೆ ನಸುನಗೆ ತರಿಸಿತು. ಸಮೋಸ ಬಾಯಿಗಿಟ್ಟುಕೊಳ್ಳುತ್ತಲೇ, “ಪೊಜಿಷನ್ ಏನಂತ ನಂಗೊತ್ತು” ಎಂದ ನಸುನಗು ತೇಲಿಸಿ. + +ಜಲಜಳಿಗೆ ಆಶ್ಚರ್ಯ, ತೀಕ್ಷ್ಣವಾಗಿ ನೋಡಿದಳು. + +ಇಂದಷ್ಟೇ ತನಗೆ ತಿಳಿದ ಸಂಗತಿ, ತಾನು ಇದುವರೆಗೂ ತಿಳಿಸದ ವಿಷಯ ಅವನನ್ನು ತಲುಪಿದ್ದು ಹೇಗೆ? ಏನಾದರೂ ವಿವರಿಸಲಾಗದ ಮುನ್ಸೂಚನೆಯೇ? ತಿಳಿಯದಾದಳು. + +“ಒಳ್ಳೇದಾಯ್ತು …. ಹಾಗಿದ್ರೆ ಇವತ್ತು ಎಲ್ಲಾನೂ ಡಿಸೈಡ್ ಮಾಡ್ಬಿಡೋಣ, ಅಂದ್ಕೊಂಡ ಹಾಗೆ ….” ಎಂದಳು ಸಾವರಿಸಿಕೊಂಡು. + +“ಮದ್ವೆ ಮಾಡ್ಕೊಳ್ತೀನಿ ಅಂತ ಹೇಳಿದೀನಲ್ಲ …. ಅವಸರ ಪಟ್ರೆ ಹೇಗೆ?”…. ಫ್ಯಾಕ್ಟರೀದು ಫೈನಲ್ ಸ್ಟೇಜ್ನಲ್ಲಿದೆ, ಈ ಸರ್ತಿ ಪಕ್ಕಾ…. ಅಲ್ಲಿಗೆ ಮುಗೀತಲ್ಲ?” + +ಅವನ ಮುಖ ಚಹರೆ ಭರವಸೆ ಮೂಡಿಸಿದರೂ ನಂಬಿಕೆ ಹಟ್ಟಿಸುವಂತಿರಲಿಲ್ಲ. ಜಲಜಳಿಗೆ ಗೊಂದಲ ಮುತ್ತಿತು. ಎಂದಿನಂತೆ ಎಲ್ಲವೂ ಅಸ್ಪಷ್ಟ. ಪರಿಸ್ಥಿತಿಯ ತೀವ್ರತೆಯನ್ನು ಅವನು ಸ್ವೀಕರಿಸಿರುವ ಬಗೆ ಹೇಗೆ? ತಮ್ಮ ಭವಿಷ್ಯ ಕುರಿತು ಆಲೋಚನೆಗಳೇನು? ಅವಳಿಗೇನೂ ತಿಳಿಯದಾಯಿತು. + +“ತಿಂಗಳುಗಟ್ಲೆ ನೀನು ಹೀಗೇ ಹೇಳ್ತಿದೀಯ …. ಈಗಂತೂ ಸಾಧ್ಯಾನೇ ಇಲ್ಲ …. ನನ್ನ ವಿಷಯ ಗೊತ್ತಾದ ಮೇಲೆ ಕೂಡ ಹೀಗೆ ಹೇಳಿದ್ರೆ?” ದನಿ ಎತ್ತರಿಸಿದಳು ಜಲಜ. + +ಅವನು ಇನ್ನೊಂದು ಸಮೋಸ ಮುಗಿಸಿ, ಪೆಪ್ಸಿ ಓಪನ್ ಮಾಡಿ ಕುಡಿದು, + +“ಏನಂಥ ವಿಷಯ?…. ನಾನು ಡಾಕ್ಟರನ್ನ ಕಂಡು ಬಂದೆ”. + +ಜಲಜಳಿಗೆ ಎಲ್ಲವೂ ಸ್ಥಬ್ದವಾದಂತಾಯಿತು. ಸುಮ್ಮನೆ ಕಣ್ಮುಚ್ಚಿದಳು. ತಾನು ಮದುವೆಯಾಗುವ ಮನುಷ್ಯನಿಂದ ಇಂಥ ಸುಳ್ಳು…. ಉಡಾಫೆ! ಅವನ ತೊಡೆಯ ಮೇಲಿದ್ದ ಕೈಯನ್ನು ತಟ್ಟನೆ ತೆಗೆದಳು. ದೃಷ್ಟಿ ಪಕ್ಕಕ್ಕೆ ತಿರುಗಿಸಿದಳು. + +“ಸಂದರ್ಭ ಏನೂಂತ ಗೊತ್ತು…. ಏನು ಎತ್ತ ತಿಳೀದೆ ಏನೇನೋ ಯೋಚ್ನೆ ಮಾಡ್ತಾರೆ …. ಆದರೆ ನೀವು ಇನ್ನೊಂದು-ಮತ್ತೊಂದು ಯೋಚ್ನೆ ಮಾಡೋ ಹಾಗೇ ಇಲ್ಲ …. ಅದೆಲ್ಲ ಟೋಟಲ್ ಡೇಂಜರ್ …. ನಿಮ್ಗೆ, ನಿಮ್ಮಲ್ಲಿರೋದಕ್ಕೆ ಇಬ್ರಿಗೂ” ಎಂದು ತನ್ನ ಮನಸ್ಸು ಅಸ್ಥಿರವಾಗಿರಬಹುದು ಎನ್ನುವ ಅನುಮಾನದಿಂದ ಮತ್ತೆ ಮತ್ತೆ ಹೇಳಿದ್ದರು ಡಾಕ್ಟರ್ ವಸುಧಾ. + +ಇವನ ಆಳ, ಅಂತರಂಗದ ಸ್ವರೂಪ ಏನೊಂದೂ ಗೊತ್ತಿರಲಿಲ್ಲ. ಈಗಷ್ಟೇ ತಿಳಿಯಿತಲ್ಲ…. ಒಂದಿಷ್ಟೂ ಸಂದೇಹ ಪಡದೆ ಸುಮ್ಮನೆ ನಂಬಿದೆನಲ್ಲ ….ಕಾಣುವ ಮುಖ ಚಹರೆ ಮೂಡಿಸು ಭಾವ, ಆಡುವ ಮಾತಿನ ಮಾಧುರ್ಯ, ಸಾಮೀಪ್ಯದ ಹಿತ, ಸ್ಪರ್ಶದ ಸೌಖ್ಯ, ಮಾತಿಗೆ ಮೀರಿದ ಮಿಲನದ ಲಹರಿಗಳೆಲ್ಲ ಕೇವಲ ಹುಸಿಯೇ? ಒಂದಿಷ್ಟೂ ಅರ್ಥವಿಲ್ಲದ್ದೇ?. ಇದರ ಕಿಂಚಿತ್ ಪರಿವೆಯಿಲ್ಲದೆ ತನ್ನ ಇಡೀ ಜೀವನವೇ, ಪ್ರಪಂಚವೇ ಧೂಳಿಪಟವಾಗುವ ಸಮಯ ತಂದುಕೊಂಡೆನಲ್ಲ ಎಂದು ಕೂತಲ್ಲೇ ಬಗ್ಗಿ ಮಂಡಿಯ ನಡುವೆ ಮುಖವಿಟ್ಟು ಕೆಲವು ಕ್ಷಣ ಕಣ್ಮುಚ್ಚಿದಳು. ಬೇಡೆಂದರೂ ಬಿಡದೆ ಹೊರನುಗ್ಗಿದ ಕಲವು ಕಣ್ಣಿರ ಹನಿಗಳಿಂದ ಮಂಡಿ ಕೊಂಚ ಒದ್ದೆಯಾಯಿತು. ಇದೇನಿದ್ದರೂ ತನ್ನೊಳಗೆ ನುಗ್ಗುತ್ತಿದ್ದ ಉರಿಯನ್ನು ಹೇಗಾದರೂ ಹೊಡೆದೋಡಿಸಬೇಕು ಎನ್ನುವ ತೀವ್ರಾಭಿಲಾಷೆ ಉಕ್ಕೇರಿತು. + +ತನ್ನ ಮಾತಿಗೆ ಜಲಜ ವಿಪರೀತದ ಪ್ರತಿಕ್ರಿಯೆ ತೋರಿಸದೆ ಹೋದದ್ದರಿಂದ ಸೀನು ಮುಖ ಒಂದಷ್ಟು ಅರಳಿತು. ವಿಚಿತ್ರ ಗೆಲುವು ಮೂಡಿತು. + +ಜಲಜ ಕಿಟಕಿಯಾಚೆ ರೆಪ್ಪೆ ಬಡಿಯದೆ ನೋಡುತ್ತ ಇನ್ನಷ್ಟು, ಮತ್ತಷ್ಟು ತನ್ನನ್ನು ತಾನು ಒಗ್ಗೂಡಿಸುವುದರಲ್ಲಿ ನಿರತಳಾಗಿದ್ದಳು. ಮುಂದಿನೆರಡು ಸೆಕೆಂಡುಗಳಲ್ಲಿ ಅತ್ಯಂತ ದೃಢ ನಿರ್ಧಾರ ತೆಗೆದುಕೊಂಡಳು. ನಿಜ, ತಾನಿವನನ್ನು ಪ್ರೀತಿಸಿದ್ದೋ, ಮೋಹಿಸಿದ್ದೋ, ಇಷ್ಟಪಟ್ಟಿದ್ದೋ ಏನೇ ಇರಲಿ. ಶುದ್ಧ ಮನಸ್ಸಿನಿಂದ ಅವನವಳಾಗಿದ್ದೆ. ಅಷ್ಟು, ಇಷ್ಟಂತಿಲ್ಲ, ಸಂಪೂರ್ಣವಾಗಿ. ಅಳತೆ ಮೀರಿ ಕಣ್ಣುಗಳಲ್ಲಿ ಬಣ್ಣಗಳಿಳಿದಿದ್ದು ನಿಜ, ನೋಡಿದರೆ ಕಣ್ಣು ನೋಯುವಷ್ಟು ದೂರ ಕನಸುಗಳು ಹಬ್ಬಿದ್ದು ನಿಜ. ಇದರಿಂದ ಎಲ್ಲದರ ಅರಿವನ್ನು ಮೀರಿ ತಾನು ಪಡೆದ ಫಲ ತನ್ನೊಳಗಿದೆ. ಅದು ಚಿಗುರೊಡೆದ ಘಳಿಗೆಯಿಂದ ತನ್ನಲ್ಲಿ ಪದಗಳಿಗೆ ಸಿಗದ ಭಾವನೆಗಳ ಪದರುಗಳು. ತಾನು ಬೇರೆಯದೇ ಪ್ರಪಂಚವನ್ನು ಸೃಷ್ಟಿಸಿದ ಹಾಗೆ. ಅಲ್ಲಿ ಎಲ್ಲವೂ ನೂತನ, ಸಂಭ್ರಮಗಳ ತೋರಣ. ಮಧುರ ದಿನಗಳ ಅಲೆ. ಪ್ರತಿನಿತ್ಯವೂ ಹೊಸ ಕನಸುಗಳ ಮಿರುಗು. ತನ್ನ ಬದಲಾದ ಪರಿಗೆ ತನಗೇ ಬೆರಗಿನ ರೆಕ್ಕೆ ಮೂಡಿದ್ದವು. ಅದನ್ನು ತಾನೊಬ್ಬಳೇ ಸುಖಿಸಿದ್ದಳು. ತನ್ನನ್ನೇ ಅಭ್ಯಾಸ ಮಾಡುತ್ತ ಏಕಾಂತದಲ್ಲಿ ಮುಳುಗುವ ಅಭಿಲಾಷೆ ಕೂಡ. ಅನೇಕ ಬಾರಿ ಡ್ರೆಸಿಂಗ್ ಟೇಬಲ್ ನ ಕನ್ನಡಿ ಎದುರು ನಿಂತು ತನ್ನನ್ನೇ ನೋಡುತ್ತ ತೇಲುತ್ತಿದ್ದಳು. ಇಷ್ಟಕ್ಕೂ ಈ ಪ್ರಾಥಮಿಕ ಮಜಲು ತಲುಪುವ ಮುಂದೆಯೂ ನಿಂತಲ್ಲಿ ಕುಳಿತಲ್ಲಿ ಉತ್ಸಾಹದ ಜೀಕು. ಬೆನ್ನಟ್ಟಿದ್ದ ಅಪೇಕ್ಷೆ-ನಿರಪೇಕ್ಷೆಗಳ ದಂಡು. ಅದರ ಮುಂದೆ ಉಳಿದದ್ದೆಲ್ಲ ತೃಣ. ಯಾರೇನು ಮಾಡಿದರೂ, ಯಾವುದೇ ಕಾರಣಕ್ಕೂ ಅದನ್ನು ವ್ಯರ್ಥಗೊಳಿಸುವುದಿಲ್ಲ. ತಾನೂ ಸಾಯುವುದಿಲ್ಲ. ಉಳಿದದ್ದೆಲ್ಲ ನಾಶವಾದರೂ ಸರಿಯೆ, ತನ್ನ ಪ್ರಪಂಚ ತನಗೆ. ಯಾರನ್ನೂ ಲೆಕ್ಕಿಸುವುದಿಲ್ಲ. . + +ಸಣ್ಣಗೆ ಅವಡುಗಚ್ಚಿ, ಮೈ ಬಿಗಿದು ಮತ್ತೆ ಸಡಲಿಸಿದಳು. ಕುಳಿತ ರೀತಿಯಲ್ಲಿಯೇ ಸ್ವಲ್ಪ ತಲೆಯೆತ್ತಿ ಕಣ್ಣೊರೆಸಿಕೊಂಡಳು. + +“ಊರಿಗೆ ಹೋಗಿ ಮುಂದಿನ ವಾರ ಬರ್ತೀನಿ…. ಆಗೆಲ್ಲ ಗೊತ್ತಾಗುತ್ತೆ” ಎಂದ. + +ಅವಳಿಗೆ ಅದು ಕೇಳಿಸಲೇ ಇಲ್ಲವೆನ್ನುವಂತೆ ಸುಮ್ಮನೆ ಕುಳಿತಿದ್ದಳು. + + + +ಜಲಜ ಎದುರಿಗಿದ್ದರೂ ತಾನು ಸುಮ್ಮನಿರುವುದು ಸೀನುಗೆ ಸರಿ ಎನಿಸಲಿಲ್ಲ. ಎದ್ದು ಬಾಗಿಲ ಚಿಲಕ ಹಾಕಿ ಬಂದು ಅವಳನ್ನು ಹಿಡಿದೆಬ್ಬಿಸಿ ತುಟಿಯ ಹತ್ತಿರ ತುಟಿ ತಂದು ಅವಳ ಸೊಂಟದ ಸುತ್ತ ಕೈ ಬಳಸಿ ಜೋರಾಗಿಯೇ ಸೆಳೆದ. ಪರಸ್ಪರ ದೇಹಗಳು ಅಂಟಿಕೊಳ್ಳುತ್ತವೇನೋ ಎನ್ನುವಂತಾಯಿತು. ಸೀನೂನ ಈ ದಿಢೀರ್ ವರ್ತನೆಗೆ ಜಲಜ ಸ್ವಲ್ಪವೂ ಸಿದ್ಧವಿರಲಿಲ್ಲ. ಅವಳ ಇಡೀ ಮೈ ಧಗಧಗಿಸಿತು. ಅವನ ಮೈಗೆ ತಾಕಿದ ತನ್ನ ಮೈಯ ಭಾಗಗಳು ಬೆಂಕಿಯುಂಡೆಯಾಗಿದ್ದವು. ಅರೆಕ್ಷಣದ ಅವನ ತುಟಿಗಳ ಸ್ಪರ್ಶ ಅವಳ ತುಟಿಗಳನ್ನು ಜ್ವಾಲಾಮುಖಿಯ ತುಣುಕುಗಳನ್ನಾಗಿಸಿತು. ಅವಳಿಗೆ ತಳವಿರದ ಕತ್ತಲ ಕೂಪದಲ್ಲಿ ಅತಿವೇಗವಾಗಿ ಬೀಳುತ್ತಿರುವಂತೆ ಎನಿಸಿತು. ಏನಿದೇನಿದು ಎಂದುಕೊಳ್ಳುವಷ್ಟರಲ್ಲಿ ಅವಳಿಗೆ ತಾನು ಮತ್ತು ತನ್ನ ಸಧ್ಯದ ಸ್ಥಿತಿಯ ಬಗ್ಗೆ ಹಠಾತ್ ಅರಿವಾಯಿತು. ತಕ್ಷಣವೇ ಹೆಜ್ಜೆ ಹಿಂದಕ್ಕಿಟ್ಟು ಎರಡೂ ಕೈಗಳಿಂದ ಅವನನ್ನು ಬಲವಾಗಿ ನೂಕಿದಳು. ಎದುರಿನ ಗೋಡೆಗೆ ಢಿಕ್ಕಿ ಹೊಡೆದು ಬಿದ್ದ. ಅನೇಕ ಬಾರಿ ತನ್ನ ನಿರೀಕ್ಷೆಗಿಂತಲೂ ಹೆಚ್ಚು ಸಹಕರಿಸುತ್ತಿದ್ದವಳು ಹೀಗೆ ವಿಚಿತ್ರವಾಗಿ ಪ್ರತಿಕ್ರಿಯಿಸಿದ್ದರ ಕಾರಣ ಅವನಿಗೆಟುಕಲಿಲ್ಲ. ಅವಳು ರೆಪ್ಪೆ ಅಲುಗಿಸದೆ ನೋಡುತ್ತಿದ್ದದ್ದನ್ನು ಕಂಡು ದಂಗಾದ. ಅನಿರೀಕ್ಷಿತವೆನಿಸುವಂತೆ ಇಡೀ ಸಂದರ್ಭದಲ್ಲಿ ಉಂಟಾದ, ಊಹಿಸಲಾಗದ ಬದಲಾವಣೆಯಿಂದ ಅವನಿಗೆ ಎದ್ದೇಳಲೂ ತೋಚಲಿಲ್ಲ.. ಆದರೆ ಮರುಕ್ಷಣ ಅವಳ ತೀಕ್ಷ್ಣ ದೃಷ್ಟಿ, ನಿಂತ ನಿಲುವು, ಭಂಗಿ ಎಲ್ಲವೂ ಹಲವು ಪ್ರಶ್ನೆಗಳ ಜೊತೆ ಅಗಾಧ ಸಿಟ್ಟಿಗೆ ಕಾರಣವಾಯಿತು. ತನ್ನನ್ನು ಹೀಗೆ ನಿರಾಕರಿಸುವ ಕೊಬ್ಬು ಅವಳಿಗೆ ಬಂದಿದ್ದೆಲ್ಲಿಂದ?…. ತನ್ನನ್ನು ಬಿಟ್ಟರೆ ಅವಳಿಗೆ ಉಳಿದದ್ದೆಲ್ಲ ದೊಡ್ಡ ಸೊನ್ನೆ. ತಾನು ದಕ್ಕಿದ್ದರಿಂದ ಎಲ್ಲವನ್ನೂ ಪಡೆದ ಹಾಗೆ. ಇಡೀ ಜೀವನದಲ್ಲಿ ಬೇರೇನೂ ಬಯಕೆಯಿಲ್ಲ. ತನ್ನ ಮೇಲಿರುವ ಪ್ರೀತಿ ಕಿಂಚಿತ್ ಕಡಿಮೆ ಆಗದಿರುವುದೇ ದೇವರಲ್ಲಿ ಪ್ರಾರ್ಥನೆ ಎಂದು ಮತ್ತೆ ಮತ್ತೆ ಹೇಳುತ್ತಿದ್ದವಳ ಬದಲಾದ ರೀತಿಗೆ ಕಾರಣವೇನು ಎನ್ನುವ ಗೊಂದಲ ಸೀನುಗೆ. + +ಇಬ್ಬರಿಂದಲೂ ಮಾತು ಹೊರಡುವುದಕ್ಕೆ ಕೊಂಚವೂ ಅವಕಾಶವಿರಲಿಲ್ಲ. ಮೌನದ್ದೇ ಆಧಿಪತ್ಯ. ದಿಕ್ಕು ದೆಸೆ ಇಲ್ಲದ ಅಸ್ಪಷ್ಟ ಆಲೋಚನೆಗಳನ್ನು ಹೊರತುಪಡಿಸಿದರೆ ಒಳಗೆ ಪ್ರವೇಶಿಸುತ್ತಿದ್ದದ್ದು ರಸ್ತೆಯಲ್ಲಿ ಹಾದು ಹೋಗುವ ವಾಹನಗಳ ಸದ್ದು. + +ಅವಳಲ್ಲಿ ಭಾವನೆಗಳ ಉಬ್ಬರಗಳೆದ್ದಿತ್ತು. ಅವನ ತುಟಿಗಳು, ಹರವಾದ ರೋಮಭರಿತ ಎದೆ, ಬಲಿಷ್ಠ ರಟ್ಟೆ-ಕೈಗಳು ಅವಳಲ್ಲಿ ಬಗೆದಷ್ಟೂ ತೀರದ, ಮಾತು ಮೀರಿದ ಸಂತೋಷವನ್ನು ಕೊಟ್ಟಿದ್ದವು. ಮೈಗಳು ಬಿಗಿದು ಹರ್ಷದುಯ್ಯಾಲೆ ಪ್ರಪಂಚವನ್ನೇ ಮರೆಸುವಷ್ಟು ಮದವೇರಿಸಿತ್ತು. ಇವೆಲ್ಲಕ್ಕೆ ಅಸ್ತಿಭಾರವಾಗಿದ್ದದ್ದು ಮದುವೆಯ ಬಗ್ಗೆ ಇದ್ದ ಭರವಸೆ. ಇದನ್ನು ರೂಪಿಸುವಾಗಲೂ ಅವಳು ತನ್ನ ಓದು, ಸಾಮಾನ್ಯ ಜ್ಞಾನ, ತಿಳಿವಳಿಕೆ, ವಾಸ್ತವದ ಅರಿವು ಇವುಗಳೊಂದಿಗೆ ತಿಳಿದ ಅವನ ವಿಷಯಗಳನ್ನು ಜೋಡಿಸಿದ್ದಳು. + +ಅವಳು ಎದುರು ನೋಡುತ್ತಿದ್ದದ್ದೇ ಎಲ್ಲವೂ ನಿರ್ಧರಿತವಾಗುವ, ತಮ್ಮಿಬ್ಬರ ಜೀವನ ನೆಲೆಗೊಳ್ಳುವ ನಿಶ್ಚಿತ ಘಟನೆಗಾಗಿ; ಮುಖ್ಯವಾದದ್ದರ ಪರಿಹಾರಕ್ಕಾಗಿ. ಈ ತುರ್ತಿನ ಜೊತೆಗೆ ಅದನ್ನು ನೂರರಷ್ಟು ಹೆಚ್ಚು ಮಾಡುವಂತೆ ಡಾಕ್ಟರ್ ವಸುಧಾರ ಸೂಕ್ಷ್ಮ ಮತ್ತು ಅನ್ಯಮಾರ್ಗವಿರದಂಥ ಮಾತುಗಳು. + +ಒಂದಷ್ಟು ಸಾವರಿಸಿಕೊಂಡು, ಮೈ ಕೊಂಚ ಸಡಿಲಿಸಿ, “ಡಾಕ್ಟರ್ ಏನು ಹೇಳಿದರು ಗೊತ್ತಾ?” ಎಂದು ಅವನ ಕಣ್ಣಲ್ಲಿ ಕಣ್ಣು ನೆಟ್ಟಳು. + +ಅವನು ಮಾತನಾಡಲಿಲ್ಲ. ಎದ್ದು ಕುಳಿತ. + +“ಐದು ತಿಂಗಳು ದಾಟಿದೆ…. ಈಗೇನೂ ಸಾಧ್ಯವಿಲ್ಲ…. ಹುಚ್ಚುಚ್ಚು ಯೋಚ್ನೆ ಬೇಡ …. ನಂಗೂ, ಮಗೂಗೂ ಫುಲ್ ಡೇಂಜರ್, ಅಂದ್ರು.” + +ಅವಳ ಕಡೆ ನೋಡುತ್ತಿದ್ದವನು ದೃಷ್ಟಿ ಬೇರೆ ಕಡೆ ಮಾಡಿದ. + +“ಇದು ನನ್ನ ಮಾತಲ್ಲ…. ಎಲ್ಲ ಅವರದ್ದೇ…. ಅವರಿಗೆ ತಾನೆ ಸರಿಯಾಗಿ ಗೊತ್ತಾಗೋದು.” + +ಅವಳು ಹೇಳುತ್ತಿರುವುದು ತನ್ನ ಮೇಲೆ ಒತ್ತಡ ಹೆಚ್ಚಿಸುವುದಕ್ಕಾಗಿ ಎಂದು ತಿಳಿದು ಒಮ್ಮೆ ಜೋರಾಗಿ ನಕ್ಕ. ಅವಳಿಗೆ ಇದೇನಾಯಿತು, ಹೀಗೇಕಾಯಿತು ತಿಳಿಯಲೇ ಇಲ್ಲ. ಗರಬಡಿದವಳಂತೆ ಒಂದರೆಗಳಿಗೆ ಮೂಕಳಾದಳು. ಅವಳ ಮೌನ ಪ್ರತಿಕ್ರಿಯೆ ಅವನಿಗೆ ಉತ್ಸಾಹ ಮೂಡಿಸಿತು. ಎದ್ದು ಬಂದು ಅವಳ ಪಕ್ಕದಲ್ಲಿ ಕುಳಿತು ಹಿಂದಿನಂತೆ ಎಳೆದುಕೊಂಡು ನೇವರಿಸುತ್ತ ಎಲ್ಲೆಂದರಲ್ಲಿ ಕೈಯಾಡಿಸಲು ಪ್ರಯತ್ನಿಸಿದ. + +ತನ್ನೆಲ್ಲ ಶಕ್ತಿಯನ್ನು ಒಗ್ಗೂಡಿಸಿ ಅವನನ್ನು ಅತ್ತ ದೂಡಿದಳು. ಅದು ಕೊಟ್ಟ ಸೂಚನೆಯಿಂದ ಸುಮ್ಮನಾದ. + +ಹಿಂದೆ ಹಲವಾರು ಸಲ ಅಪೇಕ್ಷೆಯ, ಪ್ರೀತಿಯ ಸೆಲೆ ಉಕ್ಕಿಸಿದ್ದ ಅವನ ತುಟಿ, ಎದೆ, ಬಲಿಷ್ಠ ಕೈಗಳು ಮುಂತಾದವೆಲ್ಲ ಅವಳಲ್ಲಿ ಇನ್ನಿಲ್ಲದಷ್ಟು ಹೇಸಿಗೆ ಹುಟ್ಟಿಸಿತು. ತನ್ನ ಮಗುವಿಗೆ ಕಾರಣನೆನ್ನುವುದು ಬಿಟ್ಟರೆ ಅವನ ಬಗ್ಗೆ ಭುಗಿಲೆದ್ದ ದ್ವೇಷಕ್ಕೆ ಎಣೆ ಇರಲಿಲ್ಲ. ಅವನಿಗೆ ತನ್ನ ಮೈಮೇಲಷ್ಟೆ ಮೋಹ. ತನ್ನ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ತನ್ನ ಬಗ್ಗೆ ಇರದಿದ್ದರೆ ಹೋಗಲಿ ತಾನೇ ಕಾರಣನಾದ ಇನ್ನೂ ಬೆಳಕು ಕಾಣದ ಕಂದನ ಬಗ್ಗೆಯೂ ಕೂಡ ಅಷ್ಟೆ, ಯಾವುದೇ ಲೆಕ್ಕಕ್ಕಿಲ್ಲ. ಅವನಿಗೆ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವ ಸಾಮರ್ಥ್ಯವಿಲ್ಲ. ಅವನೊಳಗಿನ ನೆಲೆಯನ್ನು ಸರಿಯಾಗಿ ತಿಳಿದುಕೊಳ್ಳದೆ ಸುಮ್ಮನೆ ಒಪ್ಪಿ ಸ್ವೀಕರಿಸಿದೆ ಎನಿಸಿತವಳಿಗೆ. ಪರಿಣಾಮದ ಫಲ ತನ್ನೊಳಗಿದೆ… ಡೇ ಕೇರ್ ನಲ್ಲಿ ಮಕ್ಕಳು, ಸುತ್ತ-ಮುತ್ತ ಸುಳಿಯುತ್ತಿದ್ದ ಅಮ್ಮ, ಗಿರಿಜಮ್ಮ ಇವರೆಲ್ಲರನ್ನು ಅಷ್ಟು ದೂರದಲ್ಲಿ ನಿಂತು ರಂಗದ ಮೇಲೆ ನೋಡುತ್ತಿರುವ ಹಾಗೆ. ತನ್ನ ಬದುಕು ಬೇರೊಂದು ನೆಗೆತಕ್ಕೆ ಸಿದ್ಧವಾಗಿ ಚಿಮ್ಮು ಹಲಗೆಯ ಮೇಲೆ ನಿಂತ ಹಾಗೆ + +“ಹೌದಾ” ಎಂದು ಕಣ್ಣರಳಿಸಿದ. ಅಷ್ಟೇ ಖುಷಿ ಕೂಡ. ಅನಂತರ ಗಂಡಸುತನದಿಂದ ಆದರೆ ತಕ್ಷಣವೇ “ಹೊಸ ಬೈಕ್ ತೊಗೊಂಡಿದೀನಿ” ಎಂದಿದ್ದ. ಪೆಚ್ಚಾಗಿ ಪಕ್ಕಕ್ಕೆ ಸರಿದಿದ್ದಳು. ಅವಳ ಸಪ್ಪೆ ಮುಖ ಕಂಡು ಹೆಚ್ಚಿನ ಉತ್ಸಾಹದಿಂದ ರಮಿಸಲು ಪ್ರಯತ್ನಿಸಿದ್ದ. ಅವಳಿಗೆ ಇದೇನು ಗಂಡಸು ಎಂಬ ಭಾವನೆ ಮೂಡಿತ್ತು. + +“ನಮ್ಮ ವಿಷಯಕ್ಕೆ ಮುಂದೆ ಏನೇನು ಆಗ್ಬೇಕೋ ಎಲ್ಲಾ ಮಾಡ್ತೀನಿ” ಎಂದು ಜವಾಬ್ದಾರಿ ಅರಿತವನಂತೆ ಹೇಳಿದ್ದು ಮೆಚ್ಚುಗೆಯಾಗಿತ್ತು. + +“ಎಲ್ಲ ಫಟಾಫಟ್ ಆಗ್ಬೇಕು” ಎಂದು ಒತ್ತಾಯಿಸಿದಾಗ, “ಅದು ಬೇರೆ ವಿಷಯ …. ಆದರೆ ಈಗಿಂದು ….” ಎಂದು ಅವಳನ್ನು ಎಳೆದುಕೊಂಡಿದ್ದ. ಅಮ್ಮನ ಹತ್ತಿರವಂತೂ ಬಾಯಿ ಬಂದ್. ಗಿರಿಜಮ್ಮನ ಬಳಿಯೂ ಅಷ್ಟೆ. ಏನನ್ನೂ ತಿಳಿಸಲಿಲ್ಲ. ದಿನಚರಿ ಎಂದಿನಂತೆ ಮಾಮೂಲು. + +ತಿಂಗಳಲ್ಲಿ ನಾಲ್ಕು ಸಲ ಬಂದಿದ್ದರೂ ತನ್ನ-ತಮ್ಮಿಬ್ಬರ ವಿಷಯ ತಲೆಗೆ ಹಚ್ಚಿಕೊಳ್ಳದೆ ಬಿಡುಬೀಸಾಗಿರುವುದನ್ನು ಕಂಡು ವಿಚಲಿತಗೊಂಡಿದ್ದಳು. ಒಂದು ಸಲ ಮನೆ ಪ್ರಾಬ್ಲಮ್, ಊರಿಗೆ ಹೋಗ್ಬೇಕು ಎಂದರೆ, ಮತ್ತೊಂದು ಸಲ ಫ್ಯಾಕ್ಟರೀಲಿ ಪ್ರಾಬ್ಲಮ್ ಎನ್ನುತ್ತಿದ್ದ. ಒಂದು ಸಲ ಹೇಳುತ್ತಿದ್ದಕ್ಕೂ ಮತ್ತೊಂದು ಸಲ ಹೇಳುತ್ತಿದ್ದಕ್ಕೂ ಹೊಂದಾಣಿಕೆ ಕಾಣದೆ ಅವಳು ನಿಜಕ್ಕೂ ತಳಮಳಗೊಂಡಿದ್ದಳು. ಎಲ್ಲವೂ ಅಸ್ಪಷ್ಟ, ಗೊಂದಲ. ಮಾತು ಯಾವ ದಿಕ್ಕಿನಲ್ಲಿ ಚಲಿಸುತ್ತಿದೆ, ಪರಿಸ್ಥಿತಿ ಯಾವ ಬಗೆಯಲ್ಲಿದೆ ಎನ್ನುವುದರ ತಳಬುಡ ತಿಳಿಯದೆ ದಿಕ್ಕು ತಪ್ಪಿದಂತಾಗಿತ್ತು. ಒಮ್ಮೊಮ್ಮೆ ಮನೆಗೂ ಬಂದು ಊಟ ಮಾಡಿಕೊಂಡು ಹೋಗುತ್ತಿದ್ದರೆ, ಉಳಿದಂತೆ, “ಈಗಷ್ಟೆ ಊಟವಾಯಿತಲ್ಲ” ಎಂದು ಜಲಜಳ ಕಡೆ ನೋಡಿ ನಕ್ಕುಜಾಗ ಖಾಲಿ ಮಾಡುತ್ತಿದ್ದ. ಒಟ್ಟಾರೆ ಪರಿಸ್ಥಿತಿಯ ಬಗ್ಗೆ, ಭವಿಷ್ಯದ ಬಗ್ಗೆ ಯಾವುದೇ ನಿಶ್ಚಿತ ಕ್ರಮಗಳಿರಲಿಲ್ಲ. + +ಸೀನು ಮೊಬೈಲ್ ರಿಂಗಾಯಿತು. ಎತ್ತಿಕೊಂಡು ಮೆಲು ದನಿಯಲ್ಲಿಯೇ ಮಾತನಾಡುತ್ತ ಅನೇಕ ರೀತಿಯಲ್ಲಿ ಪುಸಲಾಯಿಸಲು ತೊಡಗಿದ. ನಡುವೆ ಕೊಂಚ ಗಾಬರಿಯಾದಂತೆ ಕಂಡರೂ ಕೊನೆಗೆ ಹಸನ್ಮುಖನಾಗಿ ಮಾತು ಮುಗಿಸಿದ. ಆನಂತರ ಏಳುತ್ತ, “ಹೇಳಿದ್ನಲ್ಲ, ಬಂದೆ” ಎಂದು ಹಿತ್ತಲಿನ ಕಡೆ ಹೆಜ್ಜೆ ಇಟ್ಟವನು ನಿಂತ. ಟೇಬಲ್ ಮೇಲಿದ್ದ ಇನ್ನೊಂದು ಪೆಪ್ಸಿ ಬಾಟಲಿನ ಮುಚ್ಚಳ ತೆಗೆದು ಅರ್ಧ ಕುಡಿದಿಟ್ಟು ವಿಚಿತ್ರ ಶಬ್ದ ಹೊರಡಿಸಿ ಹೊರಟ. + +ಅವಳು ಅಕಾರಣವಾಗಿ ಕತ್ತು ತಿರುಗಿಸಿದಾಗ ಕಂಡದ್ದು ಅವನ ಮೊಬೈಲ್. ತೆಗೆದುಕೊಂಡು ಕೇವಲ ಕುತೂಹಲದಿಂದ ಅದರ ಮೇಲೆ ಬೆರಳಾಡಿಸಿದಾಗ ಕಂಡದ್ದರಿಂದ ದಂಗಾದಳು. ಒಂದಾದ ಮೇಲೊಂದು ಹುಡುಗಿಯರ ಫೋಟೋಗಳು! ಪ್ರತ್ಯೇಕವಾಗಿ ಮತ್ತು ಸೀನು ಜೊತೆಗೆ. ಅವುಗಳ ಸಾಲಿನಲ್ಲಿ ತನ್ನದೂ ಒಂದು! ತಲೆ ತಿರುಗಿದಂತಾದ ಜಲಜಳಿಗೆ ಒಟ್ಟು ನೋಡಿದ್ದೆಷ್ಟು ಲೆಕ್ಕ ಸಿಗಲಿಲ್ಲ. ನೋಡಿದಷ್ಟೂ ಅವರೆಲ್ಲರ ತವಕ, ತಲ್ಲಣಗಳು ಹರಿದು ಬಂದು ತನ್ನೊಳಗೆ ಸೇರಿದಂತೆ ಭಾಸವಾಗಿ ಕೆಲವು ಕ್ಷಣ ಕಣ್ಣು ಮುಚ್ಚಿ ಸಾವರಿಸಿಕೊಂಡಳು. + +ಈಗವಳಿಗೆ ಸಂಪೂರ್ಣವಾಗಿ ಮನವರಿಕೆಯಾಗಿತ್ತು. ತಾನಷ್ಟೇ ಏಕೆ ಯಾರಾದರಾಗಲೂ ಸ್ವೀಕರಿಸುವುದಕ್ಕೆ ಅಯೋಗ್ಯ. ಕೇವಲ ತಿರಸ್ಕರಿಸುವುದಕ್ಕೆ ಲಾಯಕ್ಕು. ಅವನಿಗೆ ತಾನು, ತನ್ನೊಳಗಿರುವುದರ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲ. ಅವನಿಗೇನು ಬೇಕು, ಏಕೆ ತನ್ನ ಹಿಂದೆ ಬಿದ್ದಿದ್ದಾನೆ ಎಂದು ಹೆಚ್ಚು ಹೆಚ್ಚು ಸ್ಪಷ್ಟವಾಗುತ್ತಿದ್ದಂತೆ ಅವನು ಸರಸವಾಡಲು ಬಿಟ್ಟ ತನ್ನ ಮೈ ಎಷ್ಟು ಹೊಲಸಾಗಿದೆ ಎಂಬ ಆಲೋಚನೆಯಿಂದ ಉಗುಳು ನುಂಗಿದಳು. ಅವನು ಕೈಯಿಟ್ಟ ಕಡೆಯೆಲ್ಲ ನರಕ, ಥೂ ಎಂದು ತನ್ನನ್ನೇ ಹಳಿದುಕೊಂಡಳು. + +ತಾನು, ಮಗು ಇಬ್ಬರೂ ಸತ್ತರೂ ಅವನಿಗೆ ಕಿಂಚಿತ್ ವ್ಯತ್ಯಾಸವಿಲ್ಲ. ಅವನ ಬಲೆಯಲ್ಲಿ ಹಲವಾರು ಹುಡುಗಿಯರು. ಒಬ್ಬಳಲ್ಲದಿದ್ದರೆ ಇನ್ನೊಬ್ಬಳು. ಅಂಥವರ ಗತಿಯೂ ತನ್ನಂತಾಗಬಹುದು ಎಂದು ನಡುಗಿದಳು. ಅವನ ಬಗ್ಗೆ ದ್ವೇಷ ಉಕ್ಕೇರಿತು. + +ಈಗವಳ ಆಲೋಚನೆ ತಿರುಗಿದ್ದು ತನಗಿಂತ ಮಗುವಿನ ಬಗ್ಗೆ. ಏನಿದ್ದರೂ ಸರಿಯೆ ಮಗುವಿನ ಬಗ್ಗೆ ಯಾರೂ ಮಾತನಾಡುವಂತಿಲ್ಲ. ಅದು ಎಂದೆಂದಿಗೂ, ತನ್ನ ಸ್ಥಿತಿ ಏನೇ ಇರಲಿ ತನ್ನದೇ ತನ್ನದು ಮಾತ್ರ. ಅದರ ಕ್ಷೇಮಕ್ಕೆ ಏನು ಮಾಡಲೂ ಸಿದ್ಧ. ಈ ದೊಡ್ಡ ಪ್ರಪಂಚದಲ್ಲಿ ತನ್ನದೇ ಪ್ರಪಂಚವನ್ನು ಸೃಷ್ಟಿಸಿಕೊಳ್ಳುತ್ತೇನೆ. ಆ ಸವಾಲನ್ನು ಎದುರಿಸುತ್ತೇನೆ. ಸೋಲು ಎನ್ನುವ ಮಾತಿಲ್ಲ. ತೀರ ಸಾಮಾನ್ಯವಾಗಿಯಾದರೂ ಬದುಕುತ್ತೇನೆ. ಇವನ ತೆವಲಿಗೆ ಸಿಕ್ಕಿ ಸುಮ್ಮನೆ ಬಲಿಯಾಗುವುದಿಲ್ಲ, ಹುಸಿಯಾಗಲು ಬಿಡುವುದಿಲ್ಲ. + +ಜಲಜ ಇನ್ನಷ್ಟು ಆಲೋಚನೆಗೆ ಒಳಗಾದಳು. ಸೀನು ತನ್ನ ಜೊತೆ ವರ್ತಿಸಿದ ರೀತಿ ಇವತ್ತಿಗೆ ಮಾತ್ರ ಮುಗಿಯುವುದಿಲ್ಲ. ಹೀಗೆಯೇ ಬೇಜವಾಬ್ದಾರಿಯಿಂದ, ಉಡಾಫೆಯಿಂದ ಇರುವುದನ್ನು ಮುಂದುವರಿಸುತ್ತಾನೆ. ತನ್ನ ಬಾಳಿಗೆ ಬುಡವೇ ಸಿಗುವುದಿಲ್ಲ. ಬಿಟ್ಟೇನೆಂದರೂ ಬಿಡದ ಇವನ ಸೂತ್ರಕ್ಕೆ ಸಿಕ್ಕಿಹಾಕಿಕೊಂಡು ಸೆಣೆಸುವುದು ಹೇಗೆ? ತನ್ನ ಮೈಯನ್ನು ಆಕ್ರಮಿಸುತ್ತಲೇ ಇರುತ್ತಾನೆ. ತಾನದರಲ್ಲಿ ಸೋಲಬಾರದು. ಆದರೆ ಸೋಲುವುದು ಅನಿವಾರ್ಯ. + +ಅವಳ ಕಣ್ಣುಗಳು ಹನಿಗೂಡಿದವು. ತಾನೀಗ ಇಷ್ಟೊಂದು ದ್ವೇಷಿಸುವವನನ್ನು ಯಾವುದರಿಂದ ತಡೆಯಲಿ? ಈ ಪ್ರಮಾಣದ ಅಸಹ್ಯ, ಹೇಸಿಗೆ ಹುಟ್ಟಿಸುವ ವ್ಯಕ್ತಿಯನ್ನು ಸಹಿಸುವುದು ಸಾಧ್ಯವೇ ಇಲ್ಲ.. ಅವನ ಸಹವಾಸ ಇನ್ನೂ ಕೆಲವರಿಗೆ ವಿವಿಧ ಬಗೆಯ ಕುದಿತವನ್ನು ತಂದಿರಬಹುದು. ಮಾತಿಲ್ಲದೆ, ಕೈಲಾಗದೆ ಸುಮ್ಮನೆ ಬೆಂದು ಹೋಗಿರಬೇಕು. ಎಲ್ಲ ತಿಳಿದೂ ಸುಮ್ಮನಿದ್ದರೆ ಹೇಡಿಯಾದಂತೆ. ಅವನಿಂದ ನನಗೆ ಪೂರ್ಣ ಬಿಡುಗಡೆ ಬೇಕು. ತನ್ನಂಥವರಿಗೂ ಬಿಡುಗಡೆ ಒದಗಿಸಬೇಕು… ಆದರೆ ಅದಕ್ಕೇನು ದಾರಿ? ಏನು ಮಾಡಲಿ ಎಂದು ಪರಿತಪಿಸುತ್ತಾ ಸ್ವಲ್ಪ ಹೊತ್ತು ಸುಮ್ಮನಾದಳು. ಅವಳಿಗರಿವಿಲ್ಲದೆ ಗಂಟಲು ಒಣಗುತ್ತಿತ್ತು. ಸುತ್ತಲಿನದೆಲ್ಲ ಕ್ರಮೇಣ ಕರಗುತ್ತಿರುವ ಹಾಗೆ …. + +ಅವಳಲ್ಲಿ ಮಿಂಚು ಹೊಳೆದಂತಾಯಿತು. ಅವಳಿಗೆ ಕಂಡದ್ದು ಕೆಲಸದಾಕೆ ಬಿಟ್ಟು ಹೋಗಿದ್ದ ಮೂಲೆಯಲ್ಲಿದ್ದ ಇಲಿ ಪಾಷಾಣದ ಕ್ಯಾರಿಬ್ಯಾಗ್. ಹಠಾತ್ ಹೊಳೆದ ಆಲೋಚನೆಗೆ ಅವಳ ಮೈ ನಿಲ್ಲಲಾರದಷ್ಟು ನಡುಗಿತು. ಆದರವಳು ಅಸ್ಥಿರಗೊಳ್ಳಲಿಲ್ಲ. ಉಗುಳುನುಂಗಿ ಸಾವರಿಸಿಕೊಂಡಳು. ತಕ್ಷಣವೇ ಅವಳು ಓಡಿ ಹೋಗಿ ಕ್ಯಾರಿ ಬ್ಯಾಗನ್ನು ತಂದಳು. ಅದರಲ್ಲಿದ್ದ ಪೊಟ್ಟಣದಿಂದ ಅರ್ಧವಾಗಿದ್ದ ಪೆಪ್ಸಿ ಬಾಟಲಿಗೆ ಜಾಗರೂಕತೆಯಿಂದ ಒಂದಷ್ಟನ್ನು ಹಾಕಿ ಕದಡಿದಳು. ಸಣ್ಣಗೆ ನಡುಗುತ್ತಿದ್ದ ಕೈ ಮತ್ತು ಅಬ್ಬರದ ಹೃದಯ ಬಡಿತದ ನಡುವೆ ಅದನ್ನು ಪೂರೈಸುವಷ್ಟರಲ್ಲಿ ಮೈಯ ಸಂದುಗೊಂದುಗಳಲ್ಲಿ ಜಿನುಗಿದ ಬೆವರು. ಪಟ್ಟಣವನ್ನು ಮರೆಯಾಗಿಟ್ಟು ಮುಂಗೈಯಿಂದ ಕಣ್ಣು-ಹಣೆ ಒರೆಸಿಕೊಂಡಳು. ತಲೆ ಎತ್ತಿ ನೋಡಿ, ಫ್ಯಾನ್ ಹಾಕಿಕೊಳ್ಳವುದನ್ನೂ ಮರೆತದ್ದು ತಿಳಿದು ಆನ್ ಮಾಡಿದಳು. ಅದೂ ಸಾಲದೆನಿಸಿ ಅರೆಗಣ್ಣು ಮಾಡಿ ಮುಷ್ಟಿ ಹಿಡಿದು, ಉಸಿರುಗಟ್ಟಿ ಕೆಲವು ಕ್ಷಣ ಕಳೆದಳು. ಯೋಚಿಸಿದಷ್ಟೂ ತನ್ನ ನಿರ್ಧಾರ ಸರಿ ಎಂದು ಕಂಡಿತವಳಿಗೆ. ಪರಿಸ್ಥಿತಿ, ಸಂದರ್ಭಗಳು ಬದಲಾದರೆ ಎನ್ನುವ ಆಲೋಚನೆ ಇಣುಕಿತು. ತಾನು ತೆಗೆದುಕೊಳ್ಳುವ ಕ್ರಮದಿಂದ ಉಂಟಾಗುವ ಯಾವುದೇ ಸಮಸ್ಯೆಯನ್ನು ಎದುರಿಸುವುದಕ್ಕೆ ಸಿದ್ಧ. ಎಲ್ಲರೂ ಎಲ್ಲವನ್ನೂ ಕಳೆದುಕೊಳ್ಳಬಹುದು ಆದರೆ ಸಿಗುವ ಸಮಾಧಾನಕ್ಕೆ ಎಲ್ಲಿದೆ ಮಿತಿ ಎಂದುಕೊಂಡಳು. ಸುತ್ತಲಿನ ಪರಿವೆ ಇಲ್ಲದಂತಾಗಿದ್ದ ಅವಳಿಗೆ ರಸ್ತೆಯಲ್ಲಿ ಚಲಿಸುವ ವಾಹನಗಳ ಶಬ್ದ ಕೇಳಿಸತೊಡಗಿತು. + +ಸೀನು ಮತ್ತೆ ಕಾಣಿಸಿಕೊಂಡ. ಅವಳು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಎತ್ತಲೋ ನೋಡಿದಳು. ಅವಳ ಭುಜವನ್ನು ಮೃದುವಾಗಿ ತಟ್ಟಿ, “ಇವತ್ತು ನನ್ನ ಉಪವಾಸ ಕಳಿಸ್ತಿದೀಯ….. ಮುಂದಿನ ಸಲ ಬಂದಾಗ ಮಾತ್ರ ಹಬ್ಬದೂಟ ಬೇಕೇ ಬೇಕು, ಮರೀಬೇಡ . ಬರ್ತೀನಿ” ಎಂದು ಬ್ಯಾಕ್ ಪ್ಯಾಕ್ ಬ್ಯಾಗ್ ತೆಗೆದುಕೊಳ್ಳುತ್ತ ಹೇಳಿದ. + + + +“ಇಲ್ಲೇ ಬಿಟ್ಟೆಯಲ್ಲ” ಎಂದು ತಾನು ಸಿದ್ಧಪಡಿಸಿದ್ದ ಪೆಪ್ಸಿ ಬಾಟಲಿಗೆ ಅಲ್ಲೇ ಬಿದ್ದಿದ್ದ ಮುಚ್ಚಳ ತೆಗೆದುಕೊಂಡು ಒತ್ತಿ ಅವನ ಬ್ಯಾಗೊಳಗಿಟ್ಟಳು. + +“ಒಳ್ಳೆ ಹುಡುಗಿ…. ನಂಗೇನಿಷ್ಟ ಅಂತ ಗೊತ್ತು ನಿಂಗೆ” ಎಂದು ಹೊರಟ. + +ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು. \ No newline at end of file diff --git a/Kenda Sampige/article_442.txt b/Kenda Sampige/article_442.txt new file mode 100644 index 0000000000000000000000000000000000000000..1707db2ec17ac2fd5d094551b76f03c86368f24f --- /dev/null +++ b/Kenda Sampige/article_442.txt @@ -0,0 +1,35 @@ + + +ಸಂಜೆಯ ಕೆಂಪಿಗೆ ಮೊಖಹಾಕಿ ಕುಂತ ಬೀರನ ತಲೆ ಒಳಗೆ ಕಿಟ್ಟಪ್ಪ ಥರಾವರಿ ಮೂಡತೊಡಗಿದನು. ಕಿಟ್ಟಪ್ಪ ಮದುವೆಗೆ ಒಪ್ಪಿ ಸಾಯುವ ಅಪ್ಪನಿಗೆ ನೆಮ್ಮದಿ ತರಲಿಲ್ಲ. ಅವನಿಗೆ ಅವನ ಹಠವೇ ದೊಡ್ಡದಾಯ್ತು. ಕಾಲೇಜಿಗೆ ಮಣ್ಣಾಕುವಾಗ ಆದ ಗೆಣಕಾತಿ ಹಿಂದೆ ಸುತ್ತಿ ಫೇಲಾಗಿ ಹಟ್ಟಿಗೆ ಬಂದರೂ ಅವಳ ಹುಚ್ಚು ಬಿಡಲಿಲ್ಲ. ವಾರ ಹದಿನೈದು ದಿನಕ್ಕೆ ಮೈಸೂರಿಗೆ ಹೋಗುವುದೂ ತಪ್ಪಲಿಲ್ಲ. ಗೌಡರು ಹೇಳುವವರೆಗೂ ಹೇಳಿದರು, ಬೈದರು ಕೇಳಲಿಲ್ಲ. ವಯಸ್ಸಿಗೆ ಬಂದ ಮಗ, ಈಗೀಗಂತು ಗೌಡರು ಕಿಟ್ಟಪ್ಪ ಏನು ಮಾಡಿದರೂ ಕೇಳುವುದೇ ಇಲ್ಲ. ‘ನಾ ಸಾಯೊವರ್‍ಗಾದ್ರೂ, ಸುಮ್ಗಿರೂ ಬಡ್ಡೀಮಗ್ನೆ ಅಂದ್ರೂ ಕೇಳೊಲ್ಲ. ಇನ್ನು ನಾನೇನು ಮಾಡ್ಲಿ? ಮನೆ ಮಾರಿದ್ರೂ ಚಿಂತಿಲ್ಲ, ಎಂದೋ ಹಾಳಾಯ್ತು’ ಈ ಖದೀಮ ಬೊಡ್ಡೆದ್ನ ಪಳ್ಳಿಗೆ ಕಳಿಸ್ದೆ ನೇಗಿಲು ಹಿಡಿಸಬೇಕಿತ್ತು. ನಾನೆ ತಪ್ಪು ಮಾಡಿ ಅವ್ನ ಅನ್ನೋದು ಅಂದರೆ… ಪೂರ್ತಿ ಹೇಳದೆ ಉಳಿದುದ ನುಂಗಿ ಒಂದು ಸಲ ಕಹಿ ಮೋರೆ ಮಾಡಿ ನಕ್ಕುಬಿಡುವರು. ಕೂತು ಉಂಡರೂ ಮುಗಿಯದಂಥ ಆಸ್ತೀಲಿ ಕಿಟ್ಟಪ್ಪ ಹೆಂಗಿರಬೇಕು? ಅದುಬಿಟ್ಟು ಈ ಗುಳ್ಳಲ್ಲೆ ಎಷ್ಟು ದಿನ ಕುಡಿದು ಬಿದ್ದಿಲ್ಲ? ವಾರ ಹದಿನೈದು ದಿನಕ್ಕೆ ಇದನ್ನೆ ಪಟ್ಟಾಗಿ ಹಿಡಿದುಬಿಟ್ಟವನೆ. ಎಷ್ಟು ಹೇಳಿದರೂ ವಸಕಿಬಿಡುತ್ತಾನೆ, ಹೆಚ್ಚಿಗೆ ಮಾತಾಡೋಕೆ ಅನ್ನ ಹಾಕುವ ದಣಿ… + +ಬರುವ ಯುಗಾದಿಗೆ ಇಲ್ಲಿಗೆ ಬಂದು, ವರ್ಷ ಸಂದುತ್ತದೆ. ದಿಕ್ಕುದೆಸೆ ಕಾಣದೆ ಗಂಟು ಮೂಟೆ ಕಟ್ಟಿ ಲಕ್ಷ್ಮಿಯೊಡನೆ ಹೊರಟಾಗ ಕೈಲಿ ಬಿಡುಗಾಸಿಲ್ಲ. ರಾತ್ರಿ ರೈಲು ಹತ್ತಿ ಹಿಂದಲ ಡಬ್ಬಿಲಿ ಕೂತು ಮೈಸೂರು ತಲುಪಿದಾಗ ಹೊತ್ತು ಮೀರಿತ್ತು. ಸ್ಟೇಷನ್ನಿನಲ್ಲೆ ಮಲಗಿದ್ದು ನಲ್ಲೀಲಿ ಮೊಖ ತೊಳೆದು ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ಕೂತಾಗ ಲಕ್ಷ್ಮಿಯೇ ನಂಜನಗೂಡು ಕಡೆಗೆ ಹೋಗುವ ಅಂದದ್ದು. ಆಗಲಿ ಎಂದು ಹೊರಟಿದ್ದ ರೈಲುಹತ್ತಿ ಕೂತು ಟಿಕೇಟು ಕೇಳಲು ಬಂದವರ ಕೈಲಿ ಸಿಕ್ಕಿ ಫಜೀತಿ ಪಡುವಾಗಲೇ ಗೌಡರು ಅವರಿಗೆ ಸಮಾಧಾನ ಮಾಡಿ ಕಳಿಸಿ ಯಾರು ಎಂತು ಎತ್ತ ಅಂತ ವಿಚಾರಿಸಿ, ಕೆಲಸಕ್ಕಾಗಿ ಊರು ಬಿಟ್ಟು ಬಂದಿದ್ದೀವಿ ಹಾಲು ಮತ ಅನ್ನುತ್ತಲೆ ವಸಿ ಹೊತ್ತು ಯೋಚಿಸಿ, ‘ನಮ್ಮ ತೋಟದಲ್ಲೆ ಕೆಲ್ಸ ಮಾಡಾಕೆ ತಳವಾಗಿ ಇರೊ ಎರಡಾಳು ಬೇಕು. ಅಲ್ಲೆ ಮನೆಮಠವಿದೆ, ನೀವು ಇರೋದಾದ್ರೆ…’ ಅಂದರು. ಗೌಡರು ದೇವರಂತೆ ಕಂಡರು. + +ಊರ ಕಡೆ ಬೀರ ತಿರುಗಿ ನೋಡಿದನು. ಆಗಲೇ ಹೊತ್ತು ಮುಳುಗಿ ಕತ್ತಲಾಗಿತ್ತು. ಇಷ್ಟಕ್ಕಾಗಲೆ ಕಿಟ್ಟಪ್ಪ ಬರಬೇಕಿತ್ತಲ್ಲ ಎಂದು ಯೋಚಿಸುತ್ತ ಬೀಡಿ ಹತ್ತಿಸಿದನು. ದೂರದಲ್ಲಿ ಒಂದು ಬ್ಯಾಟರಿ ಬೆಳಕು ಹತ್ತಿರವಾಗುತ್ತಿತ್ತು. ಕತ್ತಲ ಸೀಳಿ ಹತ್ತಿರವಾಗುತ್ತಿದ್ದ ಬ್ಯಾಟರಿ ಬೆಳಕನ್ನೇ ನೋಡುತ್ತ ಅದು ಓಡಿದ ಕಡೆ ಕಣ್ಣಾಡಿಸುತ್ತ ಹತ್ತಿರ ಬರುತ್ತಲೆ ಅಂತು ನೋಡಿದಾಗ ಮಿಲ್ಲಿನ ಹುಡುಗ ಪಾಷ ಬಂದು ನಿಂತನು. ಬಂದವನೆ ‘ಮೋಟರ್‍ನ ಕಾಯಲ್ಲು ಕೆಟ್ಟೋಯ್ತಲೆ ಕಿಟ್ಟಪ್ಪನೋರು ಮೈಸೂರ್‍ಗೆ ತಕ್ಕಂಡೋದ್ರು ಬರಕಿಲ್ವಂತೆ’ ಅಂದ. ‘ಅಂಗಾ’ ಅಂದಾಗ ಪಾಷ ತಲೆಯಾಡಿಸಿ ‘ಹೋಗ್ತೀನಿ ಕನಣ್ಣೋ’ ಎಂದವನೆ ಪಕ್ಕಕ್ಕೆ ತಿರುಗಿದಾಗ ಬೀರ ‘ಬಾರೋ ಸಾಬು ಉಂಡ್ಕಂಡು ಹೋಗುವಂತೆ’ ಅಂದನು. ‘ಆಗಲ್ಲ ಕನಣ್ಣಾ ಜನ ಜಾಸ್ತಿ ಕಾದವ್ರೆ ಮಿಲ್ನಲ್ಲಿ, ಈಗ ಸಣ್ಣ ಮಿಲ್ಲ ಓಡಿಸ್ತ ಆವ್ನಿ ಹೇಳು ಅಂದ್ರು ಹೇಳಾಕೆ ಬಂದಿ ಅಷ್ಟೆ’ ಎಂದು ಸರಸರನೆ ಹೆಜ್ಜೆ ಇಟ್ಟನು. ಬೀರ ಕೆಮ್ಮಿ ಹತ್ತಿಸಿದ ಬೀಡಿ ಕೈಗೆ ಸುಡಲು ಮತ್ತೊಂದು ತೆಗೆದು ಅದಕ್ಕೆ ಮುತ್ತಿಕ್ಕಿಸಿ ಗುಡಿಸಲು ಒಳಕ್ಕೆ ನುಗ್ಗಿದನು. + +ಲಕ್ಷ್ಮಿ ಅಂದುಕೊಂಡಳು: ಈಗೀಗ ತುಂಬ ಚಳಿ ಹಿಡಿಯುತ್ತೆ. ಒಳಗಿದ್ದರೂ ಇಷ್ಟು ಚಳಿ, ಇನ್ನು ಹೊರಗೆ? ಅಪ್ಪನ ಆಸ್ತಿ ಅಂತ ಬೀರ ಯಾವಾಗಲೂ ಆ ಕಲ್ಲಿನ ಮೇಲೆ ಕೂತಿರುತ್ತಾನೆ. ಹೊರಕ್ಕೆ ಹೋಗಿದ್ದಾಗ ಬೇಕು ಅಂತ ಕೆಮ್ಮಿದರೂ ತಿರುಗಿ ನೋಡಲಿಲ್ಲ. ಕೂತಕೂತನೆ ಮರಳುತ್ತಿದ್ದೆ ಸಾರಿಗೆ ಉಪ್ಪು ಹಾಕಿದಳು. ಗಮ್ಮನೆ ವಾಸನೆ ಗುಡಿಸಲಿನ ಪೂರ್ತ ಹರಡಿತು. ನೆರಕೆ ಸದ್ದಾಗಲು ಬಗ್ಗಿ ನೋಡಿದಾಗ ಬೀರ ಬರುತ್ತಿದ್ದು ಕಿಟ್ಟಪ್ಪ ಇರಲಿಲ್ಲ. ‘ಈವತ್ತು ಕಿಟ್ಟಪ್ಪ ಬರಕಿಲ್ವಂತೆಕಮ್ಮಿ… ಮೈಸೂರ್‍ಗೆ ಹೋಗುವನಂತೆ ಪಾಷ ಹೇಳೋದ’ ಎಂದವನೆ ಇಟ್ಟಿದ್ದ ಸರಾಪು ಬಾಟಲಿ ಕಡೆ ನಡೆದನು. ಇಂದು ಕಿಟ್ಟಪ್ಪ ಬರದಿದ್ದರೆ ಎಲ್ಲವನ್ನು ಈ ದೈತ್ಯ ಕುಡಿದು ಏನು ಅವಾಂತರ ಮಾಡುವನೊ ಎಂದು ಲಕ್ಷ್ಮಿಗೆ ಅಳುಕೆನಿಸಿದರೂ ಅವ ಹೇಗೆ ಆಡಿದರೂ ತನಗೆ ಪಾಠವಾಗಿದೆಯಲ್ಲಾ ಎಂದು ಸಮಾಧಾನವೂ ಆಯ್ತು. ಅದರೊಡನೆ ನಗೂನೂ ಬಂತು. + +(ಚಿತ್ರ: ಚರಿತಾ) + +ಅತ್ತ, ಬೀರ ಹರಿವಾಣದ ಮುಂದೆ ಕೂತು ಸರಾಪಿನ ಎರಡು ಬಾಟಲಿಯ ಬಿರಡೆಗಳನ್ನೂ ಕಳೆದು ಪಕ್ಕದಲ್ಲಿ ಇಟ್ಟುಕೊಂಡನು. ಹಿಟ್ಟಿನೊಡನೆ ಬಂದ ಲಕ್ಷ್ಮಿಗೆ ನಗು ಬಂತು. ‘ಐ ನಿನ್ನ ದರಿದ್ರ ಆಸೆಗೆ ಮಣ್ಣಾಕ-ವಸಿಕುಡಿ’ ಅಂದಳು. ಬೀರ ಕಕಕ ನಕ್ಕು ‘ಈವೊತ್ತು ಹೊಟ್ಟೆ ಇರೊ ಅಷ್ಟು ಕುಡುದು ತಿಂದು ನಿನ್ನ ಸುಲಿದು ಬಿಡಬೇಕು ಅಂತ’ ಅಂದನು. ಈಗ ಸುಮ್ಮನೆ ಅಂದರೂ ಕುಡಿದ ಮೇಲೆ ಹೇಳಿದ ಹಾಗೆ ಮಾಡುತ್ತಿದ್ದ ಅವ, ಚಳಿ ಅನಿಸಲು ಲಕ್ಷ್ಮಿಯ ಒಳಕ್ಕೆ ಬಂದು ಬೂದಿ ಮುಚ್ಚಿದ ಕೆಂಡ ಕೆದಕಿ ಕೈ ಕಾಯಿಸತೊಡಗಿದಳು. ಬೀರ, ಒಂದೆ ಸಮ ಗಟಗಟ ಕುಡಿಯೋದು ಕೇಳಿಸುತ್ತಿತ್ತು. ‘ಇನ್ನೊಸಿ ತಕ್ಕಂದು ಬಾಮ್ಮಿ’ ಅಂದಾಗ ಲಕ್ಷ್ಮಿಗೆ ಅಚ್ಚರಿಯಾಗಿ ಅರೆ ಇವ್ನ ಎಷ್ಟು ತಿಂತಾನಪ್ಪ ದಯ್ಯ ಹಿಡಕಂಡವರಂತೆ ಅಂದುಕೊಂಡು ಮುಚ್ಚಲು ತುಂಬ ಮಾಂಸ ತುಂಬಿ ಕೋಣೆಯಿಂದ ಬಂದಳು. ಬೀರನ ಸುತ್ತ ಮೂಳೆಗಳು ಬಗೆಬಗೆಯಾಗಿ ಬಿದ್ದಿದ್ದವು. ಸರಾಪು ಒಂದೂವರೆ ಬಾಟಲಿನಷ್ಟು ಖಾಲಿಯಾಗಿತ್ತು. ‘ಅವ್ವೀ… ಇದ್ಯಾನ ಮಾರಾಯ ದಯ್ಯದಂಗೆ ತಿನ್ತಿ’ ಅನ್ನಲು ಬಾಯಿಗೆ ಬಂದರೂ, ಕುಡಿದಿರುವನೆಂದು ಸುಮ್ಮನಾಗಿ ಮುಚ್ಚಲಲ್ಲಿ ಇದ್ದುದನ್ನು ಹರಿವಾಣಕ್ಕೆ ಬಗ್ಗಿಸಿದಳು. ಬೀರನ ಸುತ್ತ ಗಬ್ಬು ವಾಸನೆ ಹರಡಿತ್ತು. ಲಕ್ಷ್ಮಿಗೆ ತಲೆ ತಿರುಗಿ ವಾಕರಿಕೆ ಬರುವಂತಾಗಲು ಬಾಯಿಗೆ ಸೆರಗಿನ ಬಟ್ಟೆ ತುರುಕಿ ಕೋಣೆಗೆ ಓಡಿ ಬಂದು ಕುಂತಳು. ಬೀರ ಈಗೀಗ ಬದಲಾಯಿಸಿ ಹೋಗವನೆ. ಕುಡಿಯೋದು ಆಮೇಲ ಉಸಿರು ತೆಗೆದರೂ ಬೀಡಿ ಬೀಡಿ ಅಂತ ಇಳಿದುಹೋಗವನೆ, ಮೊದಲ ಕಳೆಯೇ ಇಲ್ಲ. ಎಷ್ಟು ಹೇಳಿದರೂ ತಳ್ಳಿ ಬಿಡುತ್ತಾನೆ. ಮಲ್ಲಿಪುರದ ಸಾವ್ಕಾರ್ರು ಕುಡುದು ಎದೆಯೊಡೆದು ಸತ್ತೋದ ವಿಷ್ಯ ಹೇಳ್ತಲೆ ವಸಿ ಹೊತ್ತು ಸುಮ್ಮನಿದ್ದು ‘ಯಾರು ಸಾಸ್ವತ ಹೇಳು’ ಅಂದು ಒಂಥರಾ ನಕ್ಕ. ಅದಕ್ಕೆ ‘ಕುಡಿಯೋದು ಬಿಟ್ಟರೆ ಮುಳುಗಿಹೋಗದು ಏನ? ‘ ಅಂದುದಕ್ಕೆ ಒಂದು ರೀತಿ ನನ್ನನ್ನೆ ನೋಡಿ ‘ನಾನು’ ಅಂದು ನುಂಗಿಕೊಂಡನು. + +ಬಗ್ಗಿ ನೋಡಿದರೆ ಬೀರ ಕಾಲುಚಾಚಿ ಆರಾಮ ಬಿದ್ದುಕೊಂಡಿದ್ದನು. ಒಂದು ತೊಟ್ಟು ಸರಾಪೂ ಇರಲಿಲ್ಲ. ಹರಿವಾಣದಲ್ಲಿ ಎರಡು ತುಕಡ ಮಾಂಸ ಉಳಿದಿತ್ತು. ‘ಥೂ ಇವ್ನ ಗೋಳೆ ಇಷ್ಟು’ ಎಂದು ಗೊಣಗಿ ಹೊರಕ್ಕೆ ಬಂದು ಸುತ್ತ ಇದ್ದ ಮೂಳೆ ಗೋರಿ ಹರಿವಾಣಕ್ಕೆ ಹಾಕಿದಳು. ಅರೆಗಣ್ಣು ಬಿಟ್ಟಿದ್ದ ಬೀರ ಅಗಲವಾಗಿ ಕಣ್ಣು ತೆಗೆದರೆ ಕೆಂಡ ಕಂಡಾಂತಾಯ್ತು. ಅವನು ಒಂದೆರಡು ಸಲ ಹಾಹೊ ಅಂದು ‘ಯಾವನೋ ಅವ್ನು ನನ್ನ ತವಕ ಬಂದಿರೋ ಧೀರ? ‘ ಅಂದನು. ಲಕ್ಷ್ಮಿ ಕ್ಯಾಣಸಾರದಿಂದ ‘ಸುಮ್ನೆ ಬಿದ್ಕೊ ಇನ್ನು’ ಅಂದಾಗ ‘ಓಯ್ ನನ್ನ ಲಚಮಿ… ಬಾ ಚಿನ್ನ ಬಾ, ನಾ ಯಾರೂ ಅಂತೀನಿ’ ತೆವೆಯಲು ಯತ್ನಿಸಿ ಆಗದೆ ನೆಲಕ್ಕೆ ಒರಗಿ ಕಣ್ಣು ಮುಚ್ಚಿ ಲಚಮಿ ಲಚಮಿ ಎಂದು ಗೊರಗುಟ್ಟುತೊಡಗಿದನು. ಲಕ್ಷ್ಮಿ ಕೋಣೆಯ ಮೂಲೆಯಲ್ಲಿ ಚಾಪೆ ಹಾಸಿ ಗೋಡೆಕಡೆಗೆ ತಿರುಗಿ ಬಿದ್ದುಕೊಂಡಳು. ರಗ್ಗನ್ನು ಮೊಖತುಂಬಿ ಹೊದ್ದು ದೀಪವಾರಿಸಿದಳು. + +ಕತ್ತಲು ಕವಚುತ್ತಲೆ ‘ನಮ್ಮ ಸೂರ್‍ಯಪ್ನ ಕಿತ್ಕೊಂಡವ ಯಾರ್‍ಲ’ ಬೀರ ನಿಧಾನವಾಗಿ ಕೇಳಿದನು. ಲಕ್ಷ್ಮಿಗೆ ತಡೆಯಲಾಗಲಿಲ್ಲ. ನಗುಬಂತು, ಗಟ್ಟಿಯಾಗಿ ನಕ್ಕು ಬಿಟ್ಟಳು. ‘ನಕ್ತಿಯಾ? ನಗು ನಗು, ನೀನೆಲ್ಲೊ ರಾವುಗೀವು ಇರ್‍ಬೇಕು. ‘ ಅದಕ್ಕೂ ಲಕ್ಷ್ಮಿ ಕಿಸಕಿಸ ನಕ್ಕಳು. ‘ನೀ ಎಲ್ಲೋದ್ರೂ ಬುಡಕಿಲ್ಲ ನೋಡು. ಒಳ್ಳೆ ಮಾತ್ನಲ್ಲಿ ಬುಡು. ಇಲ್ದಿದ್ರೆ… ‘ ಗಟ್ಟಿಯಾಗಿ ಕೂಗಿದ್ದಕ್ಕೆ ಲಕ್ಷ್ಮಿಗೆ ತಲೆ ಚಿಟ್ಟೆನಿಸಿತು. ‘ಸುಮ್ನೆ ಬಿದ್ಕೊಳ್ಳದ ಕಲ್ತಗೊ, ಇನ್ನು ನನ್ನ ಗೋಳುಹುಯ್ಕೋಬೇಡ’ ಅಂದಳು. ಬೀರ ಸ್ವಲ್ಪ ಹೊತ್ತು ಸುಮ್ಮನಿದ್ದನು. ದನಿ ಗುರುತು ಹಿಡಿದವನಂತೆ ನಕ್ಕು ‘ಹೊಯ್ ಈಗ ಗೊತ್ತಾಯ್ತು, ನನ ಲಚಮಿ, ಚಂದುಳ್ಳಿ ಲಚಮಿ’ ಅಂದನು. ಲಕ್ಷ್ಮಿ ಮಾತಾಡಲಿಲ್ಲ. ‘ಇನ್ನೂ ನಾಚ್ಕೆಯಾ ನಿಂಗೆ? ಈಟು ದಿನ ಆದ್ರೂ! ಬಾ ಅಂದರೆ ಬರ್‍ಬೇಕು.’ ಲಕ್ಷ್ಮಿ ಈಗಲೂ ಮಾತಾಡಲಿಲ್ಲ. ಎಳೆ ಕೂಸಂತೆ ನಕ್ಕಳು. ಬೀರನಿಗೆ ಕೋಪ ನೆತ್ತಿಗೇರಿತು ‘ನಾ ಕರೀದ್ರೂ ನೀ ಬರಾಕಿಲ್ವಮ್ಮಿ’ ಅಂತಲೆ ಲಕ್ಷ್ಮಿ ‘ಸುಮ್ನೆ ಬಿದ್ಕೊ ಇನ್ನು’ ಗಡುಸಿನಿಂದ ಹೇಳಿದಳು. ‘ಏನಮ್ಮಿ ನಿನ್ನ ಧಿಮಾಕು ! ಇಷ್ಟಕೂ ಬಂದು ಬುಟ್ಯಾ’ ಚೀರಿದ. ಲಕ್ಷ್ಮಿ ಏನನ್ನೊ ಗೊಣಗಿದಳು. ‘ನೀ ಮಾತಾಡದಿಲ್ವ? ನನ್ನೊಂದ್ಗ ಯಾಕೆ ಮಾತಾಡ್ತಿ ಹೇಳು-ಕಿಟ್ಟಪ್ಪನೊಂದಿಗೆ ಮಾತಾಡೋದು ಬಿಟ್ಟು. ಎಷ್ಟಾದ್ರೂ ಅವ ನಿನ್ನ ಮಿಂಡಾ ಅಲ್ವಾ?’ ಎಂದನು. ಲಕ್ಷ್ಮಿಗೆ ಬಾನೇ ಬಂದು ಮೊಗಚಿಕೊಂಡಂತಾಯ್ತು. ಮೈಕೈ ಸಣ್ಣಗೆ ನಡುಗಿದವು. ತುಂಬಾ ಧೈರ್‍ಯ ತಂದು ‘ನೀ ಯ್ಯಾನ್ನ ಅನ್ನೋದು?’ ಅಂದು ಕಿವಿ ನಿಮಿರಿಸಿ ಕೂತುಕೊಂಡಳು. ‘ನಾ ಯ್ಯಾನ್ನ ಅನ್ನೋದು ಅಂತೀಯೆನಮ್ಮಿ, ಕೊತ್ತಿ ಕಣ್ಮುಚ್ಕಂಡು ಹಾಲ್ಕುಡಿದ್ರ ಗೊತ್ತಾಗಲ್ವಂತೆ! ಹೆಹ್ಹೆಹ್ಹೆ ಗತಿ ಕಾಣಸ್ತೀನಿ ಕಂದಾ… ಬೆಳ್ಗಾಗಲಿ. ನೀನೂ ಇಲ್ಲ, ಅವ್ನೂ ಇಲ್ಲ. ಬಾವ್ಗ ತರದ್ ತರದ್ ಹಾಕ್ತೀನಿ. ನನ್ನನ್ನ ಅಷ್ಟಕ್ಕು ತಪರ ಅಂತ ತಿಳ್ಕೊಂಡಿವಿರಿ! ಈಗ ಏನಾಯ್ತು ತಕ್ಕೊ… ಬೆಳಗಾಗೋದೆ ಇಲ್ವಾ? ನಾಳೆ ಅವ್ನು ಬರೋದೆ ಇಲ್ವಾ? ಬಂದೇ ಬತ್ತಾನೆ. ಮಿಂಡಗಾತಿ ಮೊಖ ನೋಡಕೆ… ‘ ಹಹಾ ನಕ್ಕು ಸ್ವಲ್ಪ ಹೊತ್ತು ಎಡಬಿಡದೆ ಕೆಮ್ಮಿ ಕ್ಯಾಕರಿಸಿ ಅಲ್ಲೆ ಉಗುದು ‘ಉಸ್ಸಪ್ಪೊ’ ಅಂದು ಉಗುಳು ನುಂಗಿದನು. ‘ಮಚ್ಚು ಮಡಗಿವನಿ ತೊಲೆಮ್ಯಾಗ… ರಡಿ, ರಡಿಯಾಗೈತೆ’ ಅಂದದ್ದು ಗಟ್ಟಿಯಾಗಿತ್ತು. ನೆಲಕ್ಕೆ ಕೈಯೂರಿ ಕೂತಳು. ಅವ ನಕ್ಕ, ಕೆಮ್ಮಿದ, ‘ಉಸ್ಸಪ್ಪೊ’ ಅಂದ, ಕ್ಯಾಕರಿಸಿ ಉಗಿದ. ಚಣ ಹೊತ್ತು ಸದ್ದಿಲ್ಲ. ಲಕ್ಷ್ಮಿ ಕುಳಿತೇ ಇದ್ದಳು. ತಲೆ ಗಿರ್ ಅನ್ನುತ್ತಿತ್ತು. ತೊಡೆಗಳು ನಡುಗುತ್ತಿದ್ದವು. ಎದೆ ಡವ ಡವ ಹೊಡೆದುಕೊಳ್ಳುತ್ತಿತ್ತು. ವಸಿ ಹೊತ್ತಾದ ಮೇಲೆ ಗೊರಕೆ, ಯಮದ ಗೊರಕೆ ಕೇಳಿಸಿತು. + +ಲಕ್ಷ್ಮಿಗೆ ಗರ ಹಿಡಿದಂತಾಯ್ತು. ಕುಡುದು ಮಾತಾಡಿದ ಅಂತ ತಳ್ಳಿಹಾಕುವಂತಿಲ್ಲ. ಸುಳಿವು ಹತ್ತದೆ ಮಾತು ಹೇಗೆ ಬರುತ್ತದೆ? ಕುಡುದು ಮಾತಾಡಿದರೂ…? ಬೀರನಿಗೆ ಎಲ್ಲವೂ ಗೊತ್ತಾಗಿದೆ. ಏನು ಮಾಡುವನೊ ದೇವರೆ. ಅವನ ಆಟವ ಈಗೇನು ನೋಡುತ್ತಿಲ್ಲ. ಎರಡು ಬೆಳೆ ಪೈರಿನಿಂದಲೂ ಚೆಂದಾಗಿ ಗೊತ್ತು. ಹಾಸ್ಟಲಿನ ಊಟದ ಬೆಲ್ಲು ಹೊಡೆದು ಸುಮಾರೆ ಹೊತ್ತಾಗಿತ್ತು. ಈಗೀತ ಸಮರಾತ್ರಿ ಹತ್ತಿರವಾಗಿರಬೇಕು. ಗುಡಿಸಲ ಪೂರ್‍ತ ಗೊರಕೆ. ಸರಾಪಿನ ನಾತ ಗಬ್ಬೊ ಅನ್ನಿಸುತ್ತಿತ್ತು. ಬೀರ ಹೊರಳಾಡಿದ. ಸ್ವಲ್ಪ ಹೊತ್ತು ಸಮಾ ಕೆಮ್ಮಿದ. ಆಮೇಲೆ ಪುನಃ ಗೊರಕೆ. ಲಕ್ಷ್ಮಿಗೆ ಮಲಗಬೇಕೆನಿಸಿತು. ಆಕಳಿಸಿದಳು. ತಲೆಯನ್ನು ಮಂಡಿಗೆ ಅದುಮಿ ಕುಂತು ಕಣ್ಣು ಮುಚ್ಚಿದಳು. ತೋಟಕ್ಕೆ ಕಾಲಿರಿಸಿದ ಮಾರನೆ ದಿನವೆ ಕಿಟ್ಟಪ್ಪ ಬಂದದ್ದು. ಬೀರ ‘ನಮ್ಮ ಸವ್ಕಾರ್ರ ಮಗನೋರು’ ಅಂದ. ಕಿಟ್ಟಪ್ಪ ನನ್ನನ್ನೆ ಒಂಥರಾ ನೋಡಿದರು. ಬೀರ ಕೆಮ್ಮಿದ. ನಾನು ಕತ್ತನ್ನು ಬಾವಿ ಕಡೆ ತಿರುಗಿಸಿ ನೆಲ ನೋಡುತ್ತಿದ್ದು, ಬೆವತು ನಿಲ್ಲಲೂ ಆಗದೆ ಕಸಗುಡಿಸಬೇಕೆಂದು ಒಳಕ್ಕೆ ನುಗ್ಗಿದೆ. ಕಿಟ್ಟಪ್ಪ ಹೊರಗೆ ಇದ್ದರೂ ಇನ್ನೂ ನನ್ನನ್ನೇ ನೋಡುತ್ತಿರುವನೇನೋ ಅನ್ನಿಸುತ್ತಿತ್ತು. ಹೋಗುವವರೆಗೂ, ಹೋದ ನಂತರವೂ…. + +ಒಂದು ದಿನ ಸರಾಪಿನ ಬಾಟಲಿಗಳನ್ನು ಬೀರನೆ ಹಲ್ಲು ಕಿರಿಯುತ್ತ ತಂದನು. ಅವತ್ತಿನ ಮಾಂಸವೂ ಹೆಚ್ಚಾಗಿಯೆ ಇತ್ತು. ಇಂದು ಕಿಟ್ಟಪ್ ಬರುವರು ಅಂದ. ಅದಕ್ಕೇನೂ ಮಾತಾಡಲಿಲ್ಲ. ಮಾಡಿಕೊಟ್ಟೆ. ಕತ್ತಲಾಗಿ ಚಣಹೊತ್ತು ಕಳೆಯಲು ಕಿಟ್ಟಪ್ಪ ಬಂದರು. ತುಂಬವೆ ಶಿಸ್ತು ಮಾಡಿಕೊಂಡಿದ್ದರು. ‘ಏನಾರ ಮದ್ವೆ, ಹೆಣ್ಣ ನೋಡಾಕೆ ಬಂದಿದಿರಾ ಕಿಟ್ಟಪ್ಪ?’ ಬೀರ ನಗುನಗುತ್ತ ಅಂದಾಗ ಕಿಟ್ಟಪ್ಪನೂ ನಕ್ಕನು. ಹುಟ್ಟುತ್ತಲೆ ನಗುತ್ತ ಹುಟ್ಟಿದನೇನೊ ಅವ. ತಿಂದರು, ಇಬ್ಬರು ತಿಂದರು. ಕುಡಿದರು. ಬೀರನೆ ಹೆಚ್ಚು ಬಗ್ಗಿಸಿಕೊಂಡನು. ಆಮೇಲೆ ಕಣ್ಣು ತೇಲಿಸಿ ಕಾಲು ಚಾಚಿ ಬಿದ್ದುಕೊಂಡನು. ಕಿಟ್ಟಪ್ಪ ಎಷ್ಟು ಹೊತ್ತಾದರೂ ಹೋಗಲಿಲ್ಲ. ನಾನು ಕೋಣೆ ಒಳಕ್ಕೆ ಹೋದೆ. ಕಿಟ್ಟಪ್ಪ ಕೆಮ್ಮಿ ನಾವು ಬರುವುದಕ್ಕೆ ಮುಂಚಿನಿಂದಲೂ ಇದ್ದ ಹಗ್ಗದ ಹುರಿ ಮಂಚದ ಮೇಲೆ ಕುಂತು ಹಾಗೆ ಇದ್ದು ಆಮೇಲ ನಿಧಾನಕ್ಕೆ ಅಲ್ಲಿ ಒರಗಿದನು. ಜೀವ ಕೈಲಿಡಿದು ಕೋಣೆ ಒಳಗೆ ಕಂಬಳಿ ಹಾಸಿ ಮಲಗಿ ರಗ್ಗು ಹೊದ್ದು ದೀಪವಾರಿಸಿದೆ. ಕತ್ತಲಾಯಿತು. ಕಣ್ಣು ಮುಚ್ಚಿದರೂ ನಿದ್ದೆ ಸುಳಿಯಲಿಲ್ಲ. ಏನೇನೊ ಊರ ಕಡೆಯ ನೆನಪುಗಳು… + +(ಚಿತ್ರ: ಚರಿತಾ) + +ಸ್ವಲ್ಪ ನಿದ್ದೆಯ ಮಂಕು. ಹಜಾರದಿಂದ ಬೀರನ ಗೊರಕೆ ಚೆನ್ನಾಗಿ ಕೇಳಿಸುತ್ತಿತ್ತು. ಕಿಟ್ಟಪ್ಪನ ಆಗಾಗಲ ಕೆಮ್ಮು. ಹೊರಳಿದಾಗ ಸರಸರ ಸದ್ದು. ಬೀಡಿ ಎಳದಾಗಿನ ಕೆಂಪು ಬೆಳಕು. ಪುನಃ ಬೀರನ ಗೊರಕೆ. ಎಲ್ಲವನ್ನೂ ಕಾಣದ ಹಾಗೆ ಕರಗಿಸಿ ಕೊಂಡಿರುವ ಗವಗತ್ತಲು. ಬಿಗಿಯಾಗಿ ಕಣ್ಣು ಮುಚ್ಚಿದರೂ ನಿದ್ದೆಯ ಸುಳಿವೇ ಇಲ್ಲ. ಕೆಮ್ಮುವುದೂ ಕಷ್ಟ. ಉಗುಳು ನುಂಗಲೂ ಆಗದು. ನುಂಗಿದರೆ ಗೊಳಕ್ ಅಂತ ಸದ್ದಾಗುತ್ತದೆ. ಸುತ್ತಲೂ ಎಂಥದೂ ಸದ್ದಿಲ್ಲ. ಅದೇ ದೊಡ್ಡದಾಗಿ ಕೇಳಿಸುತ್ತದೆ. ಬೀರನೇನೊ ಗೊರಕೆ ಹೊಡೆಯುತ್ತಿದ್ದಾನೆ. ಕಿಟ್ಟಪ್ಪನಂತೂ ಕಣ್ಣು ಮುಚ್ಚಿಲ್ಲ ಅಂತ ಕಾಣುತ್ತೆ. ಬೀಡಿ ಸೇದೋದು ಕೆಮ್ಮುವುದು ಮಾಡುತ್ತವನೆ. ಕಳೆ ಕೀಳಲು ಬಂದಿದ್ದ ಪುಟ್ಟಿ ಕಿಟ್ಟಪ್ಪನ ಚರಿತ್ರಾನ ಒದರಿ ಹೋಗವಳೆ. ನಂಗೂ ನಿದ್ದೆ ಇಲ್ಲ. ಗೊತ್ತಾಗಿ ಬಿಟ್ಟರೆ? ಥೂ.‘ಲಕ್ಷ್ಮಿ’ ಮೆಲ್ಲನೆ ಕರೆದು ಮೈ ಮುಟ್ಟಿ ಅಲ್ಲಾಡಿಸಿದಾಗ ತಟ್ಟನೆ ಎಚ್ಚರವಾಗಿ ಬೆಚ್ಚಿಬಿದ್ದಳು. ಯೋಚನೆ ದಿಗಿಲಿನ ಮಧ್ಯೆ ಯಾವಾಗ ನಿದ್ದೆ ಬಂತೊ ಗೊತ್ತಿರಲಿಲ್ಲ. ಜೋಪಡಿ ಹಾರಿಹೋಗುವಂತೆ ಎದೆ ಬಡಿದುಕೊಳ್ಳತೊಡಗಿತು. ಮೆಲ್ಲನೆ ಮೈಸವರಿದ. ಉಸಿರ ಹಿಡಿತ ತಪ್ಪಿತು. ಒಂದು ಕಯ್ಯ ತೊಡೆಯ ಮೇಲೆ ಇಟ್ಟು ಇನ್ನೊಂದು ಕಯ್ಯಿಂದ ಗಲ್ಲ ಹಿಡಿದು ಅಲ್ಲಾಡಿಸಿದನು. ಇನ್ನು ಸರಿಯಲ್ಲ ಅಂದುಕೊಂಡು ಬೆಚ್ಚೆತ್ತವಳಂತೆ ‘ಯಾರು?’ ಅಂದಾಗ ‘ನಾನು ಕಿಟ್ಟಪ್ಪ’ ಅಂದನು. ಬೀರನ ಗೊರಕೆ ಕೇಳಿಸಿದಾಗ ಮೈ ನಡುಗಿತು. ಕಿಟ್ಟಪ್ಪನ ಕೈ ತೊಡೆ ಸವರುತ್ತಿತ್ತು. ತೋಚದೆ ಬೆಬಗುಟ್ಟುತ್ತ ‘ಬೀರ ಮಲಗವನೆ’ ಅನ್ನಲು ಕಿಟ್ಟಪ್ಪ ಅಂದದ್ದು-‘ಹ್ಹಿ ಕುಡಿದು ಬಿದ್ದೈತೆ. + +ಹೊತ್ತು ಮೂಡಲು ಎಚ್ಚರವಾಗಿ ಮೈ ಮಾಲು ಮುರಿಯಲು ಬೀರನಿಗೆ ಹಗೂರವಾದಂತೆ ತೋರಿತು. ಹಾಗೂ ಬೀರನಿಗೆ ವಸಿ ರಾತ್ರಿ ನಿಶ ಉಳಿದಿತ್ತು. ಎರಡೂ ಕೈಯನ್ನು ಗಸಗಸನೆ ತೀಡಿ ಮೊಖಕ್ಕೆ ಎದುರು ನಿಂತ ಅಂಗೈ ನೋಡಿಕೊಂಡು ಮೆಲ್ಲನೆ ‘ಲಚಮಿ’ ಎಂದಾಗ ಉತ್ತರ ಬರಲಿಲ್ಲ. ಇಷ್ಟು ಹೊತ್ತಾದರೂ ಹೆಂಗಸಿಗೆ ಅಷ್ಟು ನಿದ್ದೆಯ ಅಂದುಕೊಂಡು ಬಲ ಮೊಗ್ಗಲಿಗೆ ಹೊರಳಿ ಕಂಬಳಿ ಸರಿಸಿ ಕೋಣೆಕಡೆ ನೋಡಿದಾಗ ಲಕ್ಷ್ಮಿ ಮೊಖದ ತುಂಬಾ ಹೊದ್ದು ಕೊಕ್ಕರಿಸಿಕೊಂಡು ಮಲಗಿದ್ದಳು. ಅವಳು ಹೊದ್ದಿದ್ದ ಪಟ್ಟೆ ಪಟ್ಟೆ ರಗ್ಗಿಗೆ ದಿಟ್ಟಿ ನೆಟ್ಟಿತು. ಕಳೆದ ಸೋಮವಾರ ಕಿಟ್ಟಪ್ಪ ರಗ್ಗು ಚಾಚಿ ತಕ್ಕೋ ಬೀರ ಬರೋದು ಚಳಿಗಾಲ ಅಂದು, ಕೊಟ್ಟರು, ರಾತ್ರಿ ಮಲಗುವಾಗ ಚಲುವಿ ಒಳಗೊಳಗೆ ನಗುತ್ತ ಅದನ್ನು ತನ್ನ ಕಡೆ ಎಳೆದುಕೊಂಡು ‘ಇದು ನಂಗೇ ಬೇಕು ಎಂದು ಬಿಮ್ಮನೆ ಬೀರಿ ಹಿಡಿದುಕೊಂಡಳು. ಅವಳನ್ನೆ ಬಾಚಿ ತಬ್ಬಿಕೊಂಡು ಎದೆಗೆ ಅಮುಕಿ ‘ಹೋಗ್ಲಿ ಅದನ್ನ ನೀನೇ ತಕ್ಕೊ… ನಿನ್ನನ್ನ ನಂಕೊಡು ಅದ್ಕಿಂತ ನೀನೆ ಬೆಚ್ಚಗೆ’ ಅಂದಾಗ ಕಿಸಕಿಸ ನಕ್ಳು. ಈಗ ಅವಳಿಗೆ ಬೆಚ್ಚಗಾಗುತ್ತಿರಬೇಕು… ‘ + +ಕಿಟ್ಟಪ್ಪ ಕೊಟ್ಟಿರುವ ರಗ್ಗು ಲಚಮೀನ ಕವಿಚಿಕೊಂಡಿದೆ. ಕಿಟ್ಟಪ್ಪ ಕಟ್ಟಿಸಿರುವ ಮನೆ ಇಬ್ಬರನ್ನೂ ಕವಿಚಿಕೊಂಡಿದೆ. ನನ್ನನ್ನ ಆದರೆ ಚಿಂತಿಲ್ಲ. ಲಚಮಿಯನ್ನಾದರೆ… ಪಟೇಲರ ಹಟ್ಟಿಗೆ ಚಲ್ಲಣ ಸಿಕ್ಕಿಸಿಕೊಂಡು ಬಂದಿದ್ದವ ಲಚಮೀನ ಕೆಣಕಿದನಂತೆ ಅಂತ ಕಿವಿಗೆ ಬಿದ್ದುದೆ ತಡ ಜಗಲಿಮ್ಯಾಗ ಕಾಲಮ್ಯಾಲ ಕಾಲಮ್ಯಾಲ ಕಾಲ ಹಾಕಿ ಕುಳಿತಿದ್ದವನ ಕತ್ತಿನ ಪಟ್ಟಿ ಹಿಡಿದು ಎಳೆದು, ‘ನಿನ್ನ ಸಾವ್ಕಾರಿಕೆ ಇದ್ರೆ ನಿನ್ನ ಹಟ್ಟಿಗೆ ಕನ್ಲ. ನಂಗೂ ವಸಿ ತೋರಿಸೋಕೆ ಬತ್ತೀಯಾ?’ ಎಂದು ಬಿಗೀಬೇಕು. ಅಷ್ಟಕ್ಕೆ ಪಟೇಲರು ಮಧ್ಯಕ್ಕೆ ಬಂದು ಕೈ ಮುಗಿದು ‘ಬೇರೆ ಊರ್‍ನ ಹೈದ ಏನೂ ತಿಳಿದೇ’ ಅಂತ ಸುಮ್ಮನಾಗಿಸಿದರು. ಹಟ್ಟಿಗೆ ಬಂದಾಗ ಲಚಮಿ ಎದೆಗೆ ಆತುಬಿದ್ದಳು. + +ಎಡಗೈಯಿಂದ ಹೊಟ್ಟೆ ಸವರಿ ಮೇಲಕ್ಕೆ ತಂದು ಎದೆಯ ಮೇಲಿಟ್ಟನು. ಎದೆಯೊಳಗೆ ಸಣ್ಣಕ್ಕೆ ನೋವು ಹರಿಯಿತು. ‘ಕುಡಿಬೇಡಿ ಅಂತ ಎಷ್ಟು ಬಡ್ಕಂಡ್ರೂ ಕೇಳೊಲ್ಲ. ಮಲ್ಲಿಪುರ್‍ದ ಸವ್ಕಾರ್ರು ಕುಡ್ದು ಎದೆ ಒಡೆದು ಸತ್ತೋದ್ರಂತೆ. ಕುಡ್ದರೆ ಕಳ್ಳನ್ನೆಲ್ಲ ಕೊರೆದು ಹಾಕ್ಬಿಡ್ತದಂತೆ,’ ಏನಾರು ಸಾವ್ಕಾರರಿಗೆ ಆದಂಗೆ ನಂಗೂ ಆಗಿಬಿಟ್ಟರೆ? ಲಚಮಿಗೆ ದಿಕ್ಕು? ಯಾಕೆ? ಹೆಂಗೆಂಗೊ ಆಗತೊಡಗಿತು. ಬೀಡಿ ಸೇದಬೇಕೆನಿಸಿ ದಿಂಬು ಸರಿಸಿ ನೋಡಿದಾಗ ಇರಲಿಲ್ಲ. ಹೊರಗೆ ಇಬ್ಬನಿ ಬೀಳುತ್ತಿತ್ತು. ಮೊದಲೆ ಚಳಿ, ಬೀಡೀನೂ ಇಲ್ಲ. ಬಿಸಲು ಬರುವವರೆಗೂ ಹಿಂಗೇ ಇರಬೇಕು.‘ಇನ್ನೂ ಬೆಳೆಯೊ ಹೊತ್ತು. ಮಲ್ಗವನೆ ಎಳೆಕೂಸಂಗೆ. ನಾಚ್ಕೆ ಆಗಾಕಿಲ್ವ ನಿನ್ನ ಘಟಕ್ಕೆ’ ಇಷ್ಟು ಮೊಬ್ಬಿಗೆ ಕಿಟ್ಟಪ್ಪ? ಚಳಿ ಬಿಟ್ಟವನಂತೆ ಕಂಬಳಿ ಹೊದ್ದು ಮೇಲಕ್ಕೆ ಎದ್ದು ಕೋಣೆ ಕಡೆ ನೋಡಲು ಲಚಮಿ ಇನ್ನು ಮಲಗವಳೆ. ಏಳಿಸಬೇಕೆನಿಸಿದರೂ ಮನಸಾಗಲಿಲ್ಲ. ಬಲಗಡೆ ನೇತುಹಾಕಿದ್ದ ಚಾಮುಂಡವ್ವನ ಪೋಟೊಗೆ ಕೈ ಮುಗಿದು ತಡಿಕೆ ಬಿಚ್ಚಲು ಮೂಡಣ ದಿಕ್ಕಿಗೆ ಎದುರಾಗಿದ್ದ ಜೋಪಡಿ ಒಳಕ್ಕೆ ಬೆಳಕು ಚಲ್ಲಿತು. ನೋಡಿದರೆ ಕಿಟ್ಟಪ್ಪ ನಿಂತಿದ್ದರು. + +ಲಕ್ಷ್ಮಿ ಎದ್ದು ಚಣಹೊತ್ತು ಸುಧಾರಿಸಿಕೊಂಡರೂ ಮಂಕು ಆರಿರಲಿಲ್ಲ. ರಾತ್ರಿಯ ನೆಪ್ಪು ಮೈಚುರುಗುಟ್ಟಿಸಲು ತೊಲೆಕಡೆ ಕಣ್ಣೋಡಿದಾಗ ಮಚ್ಚು ಅಲ್ಲೆ ಇತ್ತು. ಹೇಗೇಗೋ ಆಗಿ ಹೊರಕ್ಕೆ ಬಗ್ಗಿ ನೋಡಿದಳು. ಬೀರ ಆಗಲೆ ಎದ್ದು ಹೊರಗೆ ಯಾರ ಜೊತೆಯಲ್ಲೊ ಮಾತಾಡುತ್ತಿದ್ದನು. ಸದ್ದು ಮಾಡದೆ ಬಾಗಿಲ ಬಳಿ ಬಂದು ನೆರಕೆ ಕಿಂಡಿಗೆ ಕಣ್ಣು ಹಾಕಿದಾಗ ಅಚ್ಚರಿ ಆಯ್ತು. ಕಿಟ್ಟಪ್ಪ ನಿಂತಿದ್ದನು. ಯಾತಕ್ಕೊ ಕಿಟ್ಟಪ್ಪ ನಕ್ಕ, ಬೀರನೂ ನಕ್ಕನು. + +ಕನ್ನಡದ ಅಪ್ರತಿಮ ಬರಹಗಾರ, ಚಿಂತಕ, ಸಂಘಟಕ, ಹೋರಾಟಗಾರ. ದ್ಯಾವನೂರು (ಕಥಾಸಂಕಲನ), ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ದೇವನೂರರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_443.txt b/Kenda Sampige/article_443.txt new file mode 100644 index 0000000000000000000000000000000000000000..236071e3a7f6ee7fe4e5dc27ed1fbf2dbd15a468 --- /dev/null +++ b/Kenda Sampige/article_443.txt @@ -0,0 +1,55 @@ + + +ಹೈದ್ರಾಬಾದ್ ಕರ್ನಾಟಕದ ಮೂಲೆಯೊಂದರಲ್ಲಿರುವ ಚಿಕ್ಕ ಊರು ಕನ್ನೇರುಮಡುವಿನ ತಾಯಮ್ಮನ ಗುಡಿಯ ಮೈಕಿನಲ್ಲಿ ಶರೀಫಜ್ಜನ ಹಾಡುಗಳು ಬೆಳಗ್ಗೆ ಆರಕ್ಕೆ ಬದಲು ತಿಂಗಳಿಗೊಂದು ಸಲ ಆರುವರೆ, ಏಳಕ್ಕೆ ಪ್ರಸಾರವಾಗುವುದುಂಟು; ಅದೂ ಗುಡಿಯ ಪೂಜಾರಿ, ಆರೂ ಕಾಲು ಅಡಿ ಎತ್ತರದ ಬ್ರಹ್ಮಚಾರಿ ಉದ್ದನ್ ಬಾಲಯ್ಯ ಪಕ್ಕದೂರು, ಜೀರಾಳಕ್ಕೆ ಹೋಗಿ ತನ್ನ ಗೆಣತಿ, ಮಾಟ ಮಂತ್ರ ಮಾಡಿಕೊಂಡು ಊರವರನ್ನೆಲ್ಲ ಹೆದರಿಸಿಕೊಂಡಿರುವ ಮಾತಂಗಿಯ ಮನೆಗೆ ಹೋಗಿ ಮರುದಿನ ಬರುವುದು ತಡವಾದಾಗ ಮಾತ್ರ, ಕೊಟ್ಟ ಬಟ್ಟೆಯನ್ನು ಯಾವತ್ತೂ ಹೇಳಿದ ಟೈಮಿಗೆ ಹೊಲಿದುಕೊಟ್ಟ ಇತಿಹಾಸವೇ ಇಲ್ಲದ ಟೇಲರ್ ಪಿಂಜಾರ್ ಮಾಬುವೇ ಆ ಊರಿನ ಮಸೀದಿಯಂಥ ಜಾಗದಲ್ಲಿ, ಇರುವ ಆರೇಳು ಜನ ಪಿಂಜಾರರಿಗಾಗಿ ಅಜಾನು ಕೂಗುವುದರಿಂದ ನಮಾಜಿನ ಸಮಯವೂ ತಾಸುಗಟ್ಟಲೆ ಏರುಪೇರಾಗಿದ್ದಿದೆ. ಆದರೆ ಮಿರ್ಚಿ ರಂಗಮ್ಮ ಎಂದೇ ಕನ್ನೆರುಮಡುವಿನಲ್ಲಿ ಹೆಸರಾಗಿರುವ, ಸುಮಾರು ವರ್ಷಗಳ ಹಿಂದೆ ಬುಕ್ಕನಹಟ್ಟಿಯಲ್ಲಿ ಬರಬಿದ್ದಾಗ ಅಲ್ಲಿಂದ ಗುಳೆ ಬಂದ ಜನರಲ್ಲಿ ಒಬ್ಬಳಾಗಿರುವ, ಗಂಡ, ಮಕ್ಕಳು, ಬಂಧುಗಳು ಅಂತ ಯಾರೂ ಇಲ್ಲದ ರಂಗನಾಯಕಮ್ಮ ಮಾತ್ರ ಓಂ ಸಿನಿಮಾದ ಪೋಸ್ಟರನ್ನು ಇನ್ನೂ ಅಂಟಿಸಿಕೊಂಡಿರುವ, ನಿಜಾಮನ ಕಾಲದ ದೊಡ್ಡ ಕಟ್ಟಡವೊಂದನ್ನೇ ನವೀಕರಿಸಿ ನಿರ್ಮಿಸಲಾಗಿರುವ ಊರಿನ ಬಸ್ಸ್ಟ್ಯಾಂಡ್ ಕಟ್ಟಡದ ಮುಂದಿನ ಜಾಗಕ್ಕೆ ತನ್ನ ತಳ್ಳುಗಾಡಿಯೊಂದಿಗೆ ಬಂದು ಕರೆಕ್ಟಾಗಿ ಆರು ಹದಿನೈದಕ್ಕೆ ಮೊದಲ ಸುತ್ತಿನ ಮಿರ್ಚಿಗಳನ್ನು ಕೊತಕೊತ ಕುದಿಯುತ್ತಿರುವ ಎಣ್ಣೆಗೆ ಬಿಡುವುದನ್ನು ಎಂದೂ ತಪ್ಪಿಸಿದವಳಲ್ಲ. + +ಅಷ್ಟೊತ್ತಿಗಾಗಲೇ ಕನ್ನೆರುಮಡುವಿನ ಪುರುಷ ಮಹಾಜನತೆ ಮುಖ ತೊಳೆದುಕೊಂಡು, ಟವೆಲ್ ಜಾಡಿಸಿಕೊಂಡು, ಲುಂಗಿ ಏರಿಸಿ ಕಟ್ಟಿಕೊಂಡು, ಬಸ್ ಸ್ಟಾಂಡ್ ನ ಕಲ್ಲು ಬೆಂಚುಗಳ ಮೇಲೆ ಹಾಗೂ ಅಲ್ಲೇ ಸಮೀಪದಲ್ಲಿರುವ ಸಂಗಪ್ಪನ ಪಾನ್ ಶಾಪ್ ಕಟ್ಟೆಯ ಮೇಲೆ ಕಿಕ್ಕಿರಿದು ಬಿಟ್ಟಿರುತ್ತದೆ. ಬಣ್ಣ ಕಂಡು ವರ್ಷಗಳೇ ಆಗಿರುವ ತಳ್ಳುಗಾಡಿಯೊಂದರ ಮೇಲೆ ಕುಂಟುಗಾಲಿನ ಒಂದು ನೀಲಿ ಸ್ಟೌ, ಒಂದು ದೊಡ್ಡ ಬಾಣಲೆ, ಒಂದು ರಂದ್ರಮೈಯ ಚಮಚ, ಕಲಸಿದ ಹಿಟ್ಟು ತುಂಬಿಕೊಂಡ ದೊಡ್ಡ ಡಬರಿ, ಒಂದು ಅಗಲ ಪರಾತ, ಒಂದು ಡಬ್ಬಿ ಒಳ್ಳೆಣ್ಣೆ, ಒಂದು ಸಣ್ಣ ಮಂಡಾಳು ಚೀಲ, ಸೀಮೆ ಎಣ್ಣೆ ಡಬ್ಬ, ಹರಿದು ಪ್ಲೇಟ್ ಮಾಡಿಕೊಳ್ಳಲು ಒಂದು ಪೆಂಡಿ ಹಳೆಯ ದಿನಪತ್ರಿಕೆ, ಕೈ ಒರೆಸಿಕೊಳ್ಳುವ ಬಟ್ಟೆ ಇತ್ಯಾದಿ ಸಾಮಾನು ಸರಂಜಾಮುಗಳನ್ನು ಹೇರಿಕೊಂಡ ರಂಗಮ್ಮನ ಸವಾರಿ ಬಂದದ್ದೇ ಎಲ್ಲರೂ ಎದ್ದು, ಟವಲ್ ಜಾಡಿಸಿ, ಲುಂಗಿ ಸರಿಪಡಿಸಿಕೊಂಡು ರಂಗಮ್ಮನ ತಳ್ಳುಗಾಡಿಯ ಸುತ್ತ ನೆರೆದುಬಿಡುತ್ತಾರೆ. + +ಬೆಳಗ್ಗೆ ಎಂಟುಗಂಟೆಯಿಂದಲೇ ಬಿರುಬಿಸಿಲು ಸುರಿಯಲು ತೊಡಗುವ ಕನ್ನೆರುಮಡುವಿನಲ್ಲಿ ಅತ್ಯಂತ ಆಹ್ಲಾದಕರ ಸಮಯವೆಂದರೆ ಅದು ಸಾಯಂಕಾಲ ಮಾತ್ರ. ಹೊಲಗಳಿಗೆ ಹೋದ ದನ-ಕರು, ಕುರಿ-ಮರಿ, ಜನಗಳೆಲ್ಲಾ ಧೂಳೆಬ್ಬಿಸಿಕೊಂಡು ಊರು ಸೇರುವ, ಮನೆಯಂಗಳಗಳೆಲ್ಲಾ ಗುಡಿಸಿಕೊಂಡು, ನೀರು ಚಿಮುಕಿಸಿಕೊಂಡು ಹುಡಿಮಣ್ಣ ಪರಿಮಳ ಹರಡುವ, ತಾಯಮ್ಮನ ಗುಡಿಯಿಂದ ‘ತರವಲ್ಲ ತಗಿ ನಿನ್ನಾ’ ಕೇಳಿಬರುವ – ಗೋಧೂಳಿಯ ಈ ತಂಪೊತ್ತಿನಲ್ಲಿ ಊರ ಗಣಮಕ್ಕಳೆಲ್ಲ ಒಂದೆಡೆ ಸೇರಿ ಹರಟಲು, ಜಗಳ ಕಾಯಲು, ಅವರಿವರ ಬಗ್ಗೆ ಆಡಿಕೊಂಡು ಊರತಿಪ್ಪಿ ಕೆದರಲು, ಬದುಕು ಬಾಳೇವಿನ ಬಗ್ಗೆ, ಊರ ಕಾರ್ಯಗಳ ಬಗ್ಗೆ ಮಾತನಾಡಲು, ಕಟ್ಟೆಗೆ ಇದ್ದಿಲಿನಿಂದ ಗೆರೆ ಕೊರೆದು ಹುಲಿಮನೆ, ಚೌಕಾಬಾರ ಆಡಲು, ಒಬ್ಬರಿಗೊಬ್ಬರು ತಮಾಷೆ ಮಾಡಲು, ರಂಗಮ್ಮನ ಮಿರ್ಚಿ ಸ್ಟಾಲ್ ಒಂದು ರುಚಿಕಟ್ಟಾದ ವೇದಿಕೆಯಾಗಿತ್ತೆಂದೇ ಹೇಳಬಹುದು. ಆದರೆ ಎಂಥವರಿಗೂ ಬಾಯಲ್ಲಿ ನೀರೂರಿಸುವ ರಂಗಮ್ಮನ ಮಿರ್ಚಿಗಳ ಮೋಹವನ್ನೂ ಮೀರಿದ ಭೂಪರೂ ಆ ಊರಿನಲ್ಲಿ ಕೆಲವರಿದ್ದರು. ಅವರು ಈ ಹೊತ್ತಿನಲ್ಲಿ ಇಳಿಗೇರ ಗಂಗಣ್ಣನ ಹೆಂಡದಂಗಡಿಯಲ್ಲಿ ಕುಡಿದು ಡಿಂಗಾಗಿ, ಬೀಳಲು ಗಟಾರು ಹುಡುಕುತ್ತಲೋ, ಜಗಳವಾಡಲು ವೈರಿಗಳನ್ನು ಹುಡುಕುತ್ತಲೋ, ಇಲ್ಲಾ ಹೆಂಡತಿ ಮಕ್ಕಳನ್ನು ಹಿಡಿದು ಬಡಿಯಲು ಕಾರಣ ಹುಡುಕುತ್ತಲೋ ಇರುತ್ತಿದ್ದರು. ಇನ್ನೂ ಕೆಲವರು, ಇದ್ದುದರಲ್ಲೇ ಕೈಯಲ್ಲಿ ಸ್ವಲ್ಪ ಜಾಸ್ತಿ ದುಡ್ಡು ಆಡುತ್ತಿದ್ದವರು ಕಳ್ಳಿಗುಡ್ಡದ ಬೇಲಿ ಪೊದೆಗಳ ಮರೆಯಲ್ಲಿರುವ, ಕನ್ನೆರುಮಡುವಿನ ಅನಭಿಶಕ್ತ ಸೌಂದರ್ಯವತಿ ಶೇಪನ್ ರಾಣಿಯ ಹತ್ತಂಕಣದ ಮನೆಹೊಕ್ಕು ತಮ್ಮ ಪಾಲಿನ ಮಾಲನ್ನು ತೆಕ್ಕೆಬಡಿದುಕೊಂಡು ಗುದುಮುರುಗಿಯಾಡುತ್ತ ಹಗ್ಗದ ಮಂಚ ಮುರಿಯುವ ಪ್ರಯತ್ನದಲ್ಲಿ ನಿರತರಾಗಿರುತ್ತಿದ್ದರು. + +ಹಾಗೆ ನೋಡಿದರೆ ಕನ್ನೆರುಮಡುವಿನ ಎಷ್ಟೋ ಮದುವೆ ಮಾತುಕತೆಗಳು, ಪಂಚಾಯಿತಿಗಳು ಆಗಿದ್ದು, ಕೊಲೆ ಸಂಚುಗಳು ರೂಪುಗೊಂಡದ್ದು, ಎಷ್ಟೋ ಗಂಡಂದಿರಿಗೆ ತಮ್ಮ ಹೆಂಡತಿಯರ ಗೆಣೆಯರ ವಿಷಯಗಳು ಗೊತ್ತಾಗಿ ಹಲವು ಮನೆತನಗಳ ಚರಿತ್ರೆಗಳು ರಕ್ತಸಿಕ್ತ ಅಂತ್ಯ ಕಾಣಲು ಕಾರಣವಾಗಿದ್ದು ಕೂಡ ರಂಗಮ್ಮನ ಮಿರ್ಚಿ ಪರಿಮಳದ ಆವರಣದಲ್ಲಿಯೇ. + +ರಂಗಮ್ಮ ಗಿರಾಕಿಗಳನ್ನು ‘ಯಣ್ಣಾ, ಚಿಗಪ್ಪಾ, ದೊಡಪ್ಪಾ, ಮುದೇತಾ, ತಮ್ಮಾ, ಮುದಿಯಾ’ ಅಂತ ಕರೆಯುತ್ತ ವ್ಯಾಪಾರ ಮಾಡುತ್ತಿದ್ದ ರೀತಿಯೇ ಚಂದವಿತ್ತು. ಒಂದು ಕೈಯಿಂದ ಪ್ಲೇಟ್ ಗೆ ಮಂಡಾಳು ಸುರಿದು, ಮಿರ್ಚಿ ಇಟ್ಟು ಕೊಡುತ್ತ, ಇನ್ನೊಂದು ಕೈಯಿಂದ ಮೆಣಸಿನಕಾಯಿಯನ್ನು ಹಿಟ್ಟಲ್ಲದ್ದಿ ಎಣ್ಣೆಗೆ ಬಿಡುತ್ತಿದ್ದ ಅವಳಿಗೆ ದುಡ್ಡು ಇಸಿದುಕೊಳ್ಳಲು ಕೈಗಳು ಖಾಲಿ ಇರುತ್ತಿರಲಿಲ್ಲ. ಹಾಗಾಗಿ ಐದಾರು ಜನ ತಿಂದಮೇಲೆ ಕೈ ಒರೆಸಿಕೊಂಡು ಒಟ್ಟಿಗೇ ದುಡ್ಡು ಇಸಿದುಕೊಳ್ಳುತ್ತಿದ್ದಳು. ಪಾರ್ಸಲ್ ಕಟ್ಟಲೂ ಅವಳಲ್ಲಿ ಅಂಥ ವ್ಯವಸ್ಥೆಗಳೇನು ಇರಲಿಲ್ಲ. ದೊಡ್ಡ ಹಾಳೆಯಲ್ಲಿ ಮಂಡಾಳು ಸುರುವಿ, ಮಿರ್ಚಿ ಇಟ್ಟು, ಮಡಚಿ, ಗಿರಾಕಿ ಕೈಗಿಟ್ಟರೆ ಮುಗಿಯಿತು. ಮಂಡಾಳು ಚಲ್ಲದಂತೆ ಕಾಯ್ದುಕೊಂಡು ಮನೆಗೊಯ್ಯುವುದು ಅವರವರ ಜವಾಬ್ದಾರಿ. ಎಲ್ಲರೂ ಟವೆಲ್ ಹಾಕಿಕೊಳ್ಳುವವರೇ ಆಗಿದ್ದರಿಂದ ಇದೇನು ಅಂಥ ಸಮಸ್ಯೆಯ ವಿಚಾರವೂ ಆಗಿರಲಿಲ್ಲ. + +ರಂಗಮ್ಮನ ಮಿರ್ಚಿ ಸಮಾರಾಧನೆ ಸುಮಾರು ಎಂಟೊಂಬತ್ತು ಗಂಟೆವರೆವರೆಗೂ ನಡೆಯುತ್ತಿತ್ತು. ಅಷ್ಟರೊಳಗೆ ಸಂಗಪ್ಪನ ಅಂಗಡಿಯ ಅಂಗಳವೆನ್ನುವುದು ಕಣಕಣದಲ್ಲೂ ಕೇಸರಿ ತುಂಬಿಕೊಂಡ ಪಾನ್ ಪರಾಕುವೀರರ ಲಾಲಾರಸದಿಂದ ಹೋಳಿ ಆಚರಿಸಿರುತ್ತಿತ್ತು. ಜನರೆಲ್ಲ ತಮ್ಮ ತಮ್ಮ ಮಾತು, ಕತೆಗಳನ್ನೆಲ್ಲ ಮುಗಿಸಿಕೊಂಡು ಹೆಂಡತಿ ಮಕ್ಕಳಿಗೆ ಕಟ್ಟಿಸಿಕೊಂಡ ಮಿರ್ಚಿ ಪಾರ್ಸಲ್ ನೊಂದಿಗೆ ಮನೆಗೆ ಹೊರಡಲು ಅನುವಾಗುತ್ತಿದ್ದರು. ರಂಗಮ್ಮ ಮೊದಲು ಗಿರಾಕಿಗಳು ತಿಂದೆಸೆದ ಹಾಳೆಗಳನ್ನೆಲ್ಲ ಗುಡಿಸಿ ರಟ್ಟಿನ ಡಬ್ಬಿಗೆ ತುಂಬಿ ತಿಪ್ಪೆಗೆ ಎಸೆದು ಬರುತ್ತಿದ್ದಳು. ಅದಾದಮೇಲೆ ಡಬರಿ, ಪರಾತ, ಚಮಚಗಳನ್ನು ಲೇಪಣ್ಣ ಶೆಟ್ಟಿಯ ಮನೆಮುಂದಿದ್ದ ಕೈಬೋರಿನ ನೀರಲ್ಲಿ ತೊಳೆದುಕೊಂಡು ಬರುತ್ತಿದ್ದಳು. ಎಲ್ಲ ಒಪ್ಪವಾಗಿದ್ದೇ ತನ್ನ ಗಾಡಿ ತಳ್ಳಿಕೊಂಡು ಊರಹೊರಗಿನ ಮಾಳಗಡ್ಡಿಯಲ್ಲಿದ್ದ ತನ್ನ ಗುಡಿಸಲ ಕಡೆಗೆ ಸಾಗುತ್ತಿದ್ದಳು. + +ಈಗ ಮೂವತ್ತೇಳು ಮೂವತ್ತೆಂಟರ ವಯಸ್ಸಿನವಳಾಗಿರಬಹುದಾದ ಅವಳ ಗಂಡ ಹುಸೇನಿ, ಅಡಿವೆಮ್ಮ ಸಾವ್ಕಾರ್ತಿಯ ತೋಟಕ್ಕೆ ತೆಂಗಿನಕಾಯಿ ಕದಿಯಲು ಹೋದಾಗ ಜೇನು ಕಚ್ಚಿಸಿಕೊಂಡು ಸತ್ತನೆಂದು ಕೆಲವರು ಹೇಳುತ್ತಾರೆ. ರಂಗಮ್ಮನನ್ನು ಪ್ರೇಯಸಿಯನ್ನಾಗಿ ಇಟ್ಟುಕೊಳ್ಳಲು ಬಯಸಿದ್ದ ಅಡಿವೆಮ್ಮ ಸಾವ್ಕಾರ್ತಿಯ ಗಂಡ, ಯಾವುದೋ ನಿಗೂಢ ರೋಗ ಬಂದು ಇದ್ದಕ್ಕಿದ್ದಂತೆ ತೀರಿಹೋದ. ಗಂಗೇಗೌಡನೇ ಹುಸೇನಿಯನ್ನು ಕೊಲ್ಲಿಸಿದ ಎಂಬ ಕತೆಯೂ ಚಾಲ್ತಿಯಲ್ಲಿದೆ. ಆದರೆ ಯಾರನ್ನೂ ಅಷ್ಟಾಗಿ ಹಚ್ಚಿಕೊಳ್ಳದ, ತನ್ನ ಪಾಡಿಗೆ ತಾನು ಜಾಲಿಮರದಂತೆ ಬದುಕುತ್ತಿರುವ ರಂಗಮ್ಮನ ಬದುಕು ಕನ್ನೆರುಮಡುವಿನ ಜನರ ಪಾಲಿಗೆ ಅವಳು ಮಾಡುವ ಮಿರ್ಚಿಗಳ ವಿಶಿಷ್ಟ ಪರಿಮಳದಷ್ಟೇ ನಿಗೂಢವಾಗಿ ಉಳಿದಿದೆ. ಸಾಯಂಕಾಲವಾದದ್ದೇ ತನ್ನ ಮಿರ್ಚಿಮಾಡುವ ಸಾಮಾನುಗಳ ತೇರಿನೊಂದಿಗೆ ಹಾಜರಾಗುತ್ತಿದ್ದ ಅವಳು ಅಷ್ಟೊತ್ತಿನವರೆಗೂ ಏನು ಮಾಡುತ್ತಾಳೆ, ಬೇಸರವಾದಾಗ ಯಾರೊಂದಿಗೆ ಮಾತನಾಡುತ್ತಾಳೆ, ತನ್ನ ಕಷ್ಟಗಳನ್ನೆಲ್ಲ ಯಾವ ದೇವರ ಮುಂದೆ ಹಂಚಿಕೊಳ್ಳುತ್ತಾಳೆ, ಹುಷಾರುತಪ್ಪಿದಾಗ ಯಾರಿಂದ ಆರೈಕೆ ಪಡೆಯುತ್ತಾಳೆ ಎಂದು ತಲೆಕೆಡಿಸಿಕೊಳ್ಳುವಂಥ ಹಿತೈಷಿಗಳ್ಯಾರೂ ಅವಳಿಗಿರಲಿಲ್ಲ. ಅದಲ್ಲದೆ ಅವಳು ಯಾರ ಸ್ನೇಹ, ಕಾಳಜಿಯನ್ನೂ ಬಯಸಿದವಳಲ್ಲ. ಎಷ್ಟುಬೇಕೋ ಅಷ್ಟು ಮಾತು, ಎಷ್ಟು ಬೇಕೋ ಅಷ್ಟು ಸ್ನೇಹ. ಹಾಗಂತ ಅವಳು ವ್ಯಾವಹಾರಿಕ ಮನೋಭಾವದವಳು ಅಂತಲೂ ಅಲ್ಲ. ನಾಳೆಗಳ ನಿರೀಕ್ಷೆ ಇಲ್ಲದೆ, ನಾಳೆಗಾಗಿ ಏನನ್ನೂ ಕೂಡಿಡದೆ ಬದುಕುತ್ತಿದ್ದ ಅವಳು ವರ್ಷಕ್ಕೊಮ್ಮೆ ನಡೆಯುವ ಸೋಮನಾಥನ ಜಾತ್ರೆಯ ದಿನ ತನ್ನ ಆ ವರ್ಷದ ದುಡಿಕೆಯನ್ನು ಗುಡಿಯ ಹುಂಡಿಗೆ ಹಾಕಿ ಗುಡಿಯ ಪಕ್ಕದಲ್ಲಿ ಹರಿಯುತ್ತಿರುವ ತುಂಗಭದ್ರೆ ನದಿಯ ದೊಡ್ಡ ಕಾಲುವೆಯಲ್ಲಿ ಕೈತೊಳೆದುಕೊಂಡುಬಿಡುತ್ತಿದ್ದಳು. + +ಸಮಾಧಾನದಿಂದಲೇ ಗಿರಾಕಿಗಳನ್ನು ಸಂಭಾಳಿಸುತ್ತಿದ್ದ ರಂಗಮ್ಮ, ಹಿಂದಿನ ಬಾಕಿ ಕೊಡದೆ ಮತ್ತೆ ಮಿರ್ಚಿ ಒಯ್ಯಲು ಬಂದವರಿಗೂ ‘ಯಣ್ಣಾ ಹಳೇದ್ ಉದ್ರಿ ಉಳುದೈತ್ಯಪೋ?’ ಅಂತ ಸಂಕೋಚದಿಂದಲೇ ಕೇಳುತ್ತಿದ್ದಳು. ಯಾರೊಂದಿಗೂ ಜೋರಾಗಿ ಮಾತನಾಡಿದವಳಲ್ಲ. ಜಗಳವಂತೂ ಅವಳ ಮಟ್ಟಿಗೆ ತುಂಬಾ ದೂರದ ಮಾತು. ಆದರೆ ಅಂಥ ಶಾಂತಮೂರ್ತಿಯ ಒಳಗೂ ಒಬ್ಬ ದುರ್ಗೆ ಇದ್ದಾಳೆ ಎಂದು ಕನ್ನೆರುಮಡುವಿನ ಜನತೆಗೆ ಗೊತ್ತಾಗಿದ್ದು ಮಾತ್ರ ಪಂಪ್ ಲಚುಮ ಮಾಡಿದ ಒಂದು ವಿಕೃತ ಸಾಹಸದಿಂದ. + +ಕನ್ನೆರುಮಡುವಿನ ಪಾಲಿಗೆ ಏಕೈಕ ಮೆಡಿಕಲ್ ಸ್ಟೋರ್ ಆಗಿರುವ ಸಿದ್ಧಿವಿನಾಯಕ ಮೆಡಿಕಲ್ ಸ್ಟೋರ್ ಮುಂದಿನ ಕಟ್ಟೆಗೆ ಕೂತು ನಾರಾಯಣಿಯಿಂದ ಹೊಸ ಹೊಸ ವಿಡಿಯೋಗಳನ್ನು ಡೌನ್ಲೋಡ್ ಮಾಡಿಸಿಕೊಂಡು ನೋಡುವುದನ್ನೇ ತನ್ನ ಜೀವನದ ಪರಮಉದ್ಯೋಗ ಮಾಡಿಕೊಂಡಿರುವ ಪಂಪ್ ಲಚುಮನ ನಿಜವಾದ ಹೆಸರು ಲಕ್ಷ್ಮಣ. ಊರತುಂಬ ಗೆಣತಿಯರನ್ನು ಮಾಡಿಕೊಂಡು ಮೆರೆಯುತ್ತಿರುವ, ತನಗೊಬ್ಬ ಮಗ ಇದ್ದಾನೆ ಎಂಬುದನ್ನೇ ಮರೆತು ಗೂಳಿಯಂತೆ ಸಿಕ್ಕಸಿಕ್ಕಲ್ಲೆಲ್ಲ ಮೆಯ್ದುಕೊಂಡು ಓಡಾಡುತ್ತಿರುವ ಮಲ್ಲರುದ್ರಪ್ಪನ ಏಕೈಕ ಮಗ, ತನ್ನ ಆರನೇ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡ, ನೋಡಲು ಹಂಚಿಕಡ್ಡಿಯಂತೆ ಕಾಣುವ, ಎಸ್.ಎಸ್.ಎಲ್.ಸಿ ಪಾಸಾಗಿದ್ದರೆ ಈಗ ಬಿ.ಎ ಮುಗಿಸಿರುತ್ತಿದ್ದ ಲಕ್ಷ್ಮಣ ಕನ್ನೆರುಮಡುವಿನ ತುಂಬ ಪಂಪ್ ಲಚುಮನೆಂದೇ ಖ್ಯಾತಿಯಾಗಿದ್ದಾನೆ. ಹಾಗೆ ನೋಡಿದರೆ ಅವನನ್ನು ಅರ್ಧ ಹಾಳು ಮಾಡಿದ್ದು ಮೆಡಿಕಲ್ ಶಾಪ್ ನ ನಾರಾಯಣಿಯೇ ಎನ್ನಬೇಕು. ಇವನಿಗೆ ”ಅಂಥ” ವಿಡಿಯೋಗಳನ್ನು ನೋಡುವ ರುಚಿ ಹತ್ತಿಸಿದ್ದಲ್ಲದೆ ಅರ್ಜೆಂಟ್ ಗೆ ಬೇಕಾಗಬಹುದೆಂದು ಒಂದೆರಡು ಕಾಂಡಮ್ ಪಾಕೆಟ್ ಗಳನ್ನೂ ಕೊಟ್ಟಿದ್ದ. ಲಚುಮ ಯಾವಾಗಲೂ ಅವೆರಡು ಪಾಕೆಟ್ ಗಳನ್ನು ತನ್ನ ಆರ್.ಕೆ.ಜಿ ಚಡ್ಡಿಯ ಜೇಬಿನಲ್ಲಿಟ್ಟುಕೊಂಡು, ಲುಂಗಿ ಮೇಲೇರಿಸಿಕೊಂಡು, ಅರ್ಧ ತೊಡೆ ಕಾಣಿಸಿಕೊಂಡು ತಿರುಗುತ್ತಿದ್ದ. ಎಲ್ಲಾದರೂ ಚಾನ್ಸ್ ಸಿಕ್ಕರೆ ತನ್ನ ಆಪ್ತಮಿತ್ರ ಕೊಟ್ಟಿರೋ ಹತ್ಯಾರುಗಳನ್ನು ಪ್ರಯೋಗಿಸಬೇಕೆಂದು ಹಾತೊರೆಯುತ್ತಿದ್ದ ಅವನ ಕೈಗೆ ಯಾವುದೇ ಬ್ಯಾಟಿಯೂ ಸಿಕ್ಕಿರಲಿಲ್ಲ. ಅದಲ್ಲದೆ ಇವನ ಮೂರೋತ್ತೂ ಕಬಡ್ಡಿ ನೋಡುವ ಚಾಳಿಯ ಬಗ್ಗೆ ಊರಿಡೀ ಜನರಿಗೆ ಗೊತ್ತಿದ್ದರಿಂದ ಇವನು ತಮ್ಮ ಓಣಿಯ ಬೀದಿಯಲ್ಲಿ ಸುಳಿದಾಡಿದರೂ ಸಾಕು ಹಿರಿಯರು ನಿಲ್ಲಿಸಿ ಕೇಳುತ್ತಿದ್ದರು ‘ಯಾಕ್ ಲಚುಮಾ ಇತ್ತಾಗ್ ಬಂದಿ?’ ಎಂದು. ಅಷ್ಟರಮಟ್ಟಿಗೆ ಲಚುಮನ ಲೂಸ್ ಲಾಡಿ ವಿಷಯ ಹಬ್ಬಿತ್ತು. ನಾರಾಯಣಿ ಕೊಟ್ಟ ಶಸ್ತ್ರಾಸ್ತ್ರಗಳನ್ನು ಪ್ರಯೋಗಿಸಲು ತಕ್ಕ ಅವಕಾಶ ಸಿಗದೆ ಹತಾಶನಾಗಿದ್ದ ಲಚುಮ ಹಳ್ಳದ ಮರೆಯ ಬೇಲಿಯ ವಿವಿಧ ಸ್ಥಳಗಳಲ್ಲಿ ಪಂಪ್ ಹೊಡೆದುಕೊಳ್ಳುವ ಮೂಲಕ ತನ್ನ ಅಸಹಾಯಕತೆಯನ್ನು ಮೀರುವ ಸಾಹಸ ಮಾಡುತ್ತಿದ್ದ. + +ಅಂಥವನು ಅವತ್ತು ಅದ್ಯಾವ ವೀಡಿಯೋ ನೋಡಿಕೊಂಡು, ಪಂಪ್ ಹೊಡೆದುಕೊಳ್ಳದೆ ಹಾಗೇ ಬಂದಿದ್ದನೋ ಏನೋ ಗದ್ದಲದಲ್ಲಿ ಯಾರಿಗೂ ಗೊತ್ತಾಗುವುದಿಲ್ಲ ಎಂದುಕೊಂಡು ರಂಗಮ್ಮನ ಪೃಷ್ಠಕ್ಕೆ ಕೈ ತಾಕಿಸುವ ಸಾಹಸಕ್ಕೆ ಕೈ ಹಾಕಿದ್ದಾನೆ. ಗಿರಾಕಿಗಳು ಕಂಡಾಪಟ್ಟೆ ಇದ್ದದ್ದರಿಂದ ರಂಗಮ್ಮನಿಗೆ ಮೊದಮೊದಲು ಏನೂ ಅನ್ನಿಸಿರಲಿಲ್ಲ. ಮರಪಟ್ಟಿಲೆ ಯಾರದೋ ಕೈ ತಾಕುತ್ತಿದೆ ಎಂದುಕೊಂಡಿದ್ದಾಳೆ. ಆದರೆ ಈ ಚೇಷ್ಟೆ ಮತ್ತೆ ಮತ್ತೆ ಪುನರಾವರ್ತನೆಯಾದಾಗ ಅನುಮಾನ ಬಂದಿದೆ, ಆಗ ಹಿಂದಕ್ಕೆ ನೋಡಿದಾಗ ಪಂಪ್ ಲಚುಮ ತನ್ನ ಪಾನ್ ಪರಾಕಿನ ಕೆಂಪುಶೋಭಿತ ಹಲ್ಲುಗಳನ್ನು ಇಷ್ಟಗಲ ಕಿಸಿದು ತೋರಿಸಿದ್ದಾನೆ. ಆಗ ಅವಳಿಗೆ ಇಷ್ಟರವರೆಗೂ ತನ್ನ ಪೃಷ್ಠಕ್ಕೆ ಕೈತಾಗಿಸುತ್ತಿದ್ದ ‘ಅಡಾವುಡಿ’ ಇವನೇ ಎಂಬುದರಲ್ಲಿ ಅನುಮಾನ ಉಳಿದಿಲ್ಲ. ಹಾಗನ್ನಿಸಿದ್ದೇ ತಡ ಬಡಾಬಡಾ ಕಾಲಾಗಿನ ಕೆರುವು ತೆಗೆದು ಅವನ ಮುಖಕ್ಕೆ ರಪ ರಪ ಹೊಡೆಯಲು ಶುರು ಮಾಡಿದಳು. ಅವನು ‘ಯಾಕಂಗೇ? ಯಾಕಂಗೇ?’ ಅಂತ ಕೇಳುತ್ತಿದ್ದಾನೆ. ಆದರೆ ಅವಳು ಅವನ ಯಾವ ಮಾತುಗಳನ್ನೂ ಲೆಕ್ಕಿಸದೆ ಅವನನ್ನು ಹೊಡೆಯುತ್ತಲೇ ಇದ್ದಳು. ಅವನನ್ನು ನಿಲ್ಲಿಸಿ ಬಡಿದದ್ದು ಆಕೆಗೆ ಸಮಾಧಾನ ತಂದಿಲ್ಲ ಎನಿಸುತ್ತೆ. ಹಾಗಾಗಿ ಕೆಡವಿ ಬೀಳಿಸಿ ಕುಂಬಾರ ಮಣ್ಣು ತುಳಿದಂತೆ ತುಳಿಯತೊಡಗಿದಾಗ ಮಾತ್ರ ಎಲ್ಲರೂ ಗಾಬರಿಯಾದರು. ಒಂದಿಬ್ಬರು ಹಿರಿಯರು ‘ಸಾಕ್ ಬುಡು ರಂಗಮ್ಮ? ಆ ಸುಳೆಮಗ ಸತ್ ಗಿತ್ ಹೋಗ್ಯಾನ್ ಇಂದಡಿಗೆ’ ಎಂದು ಸಮಾಧಾನ ಮಾಡಿ ನಿಲ್ಲಿಸಿದರು. ಆದರೂ ಆಕೆಯ ಸಿಟ್ಟು ಇಳಿದಂತಿರಲಿಲ್ಲ. ಪಂಪ್ ಲಚುಮನನ್ನು ವಾಚಾಮಗೋಚರವಾಗಿ ಬಯ್ಯತ್ತಲೇ ಇದ್ದಳು. + +ಅದೇ ಕೊನೆ ಲಚುಮ ರಂಗಮ್ಮನ ಸ್ಟಾಲ್ ಕಡೆ ಬರುವುದಿರಲಿ ವೀಡಿಯೋ ನೋಡುವುದನ್ನೂ ಬಿಟ್ಟುಬಿಟ್ಟ. ಹೆಚ್ಚಾನೆಚ್ಚು ಅವರ ಮಾಗಣಿ ಹೊಲದ ಶೆಡ್ಡಿನಲ್ಲೇ ಕಾಲ ಕಳೆಯತೊಡಗಿದ. ಅದಾಗಿ ಒಂದೆರಡು ತಿಂಗಳಿಗೆ ಅವನು ಎಲ್ಲರಿಗೂ ಗಾಬರಿಯಾಗುವಂತೆ ಜಾತ್ರೆ, ಶ್ರಾವಣ, ಶಿವರಾತ್ರಿಗಳಲ್ಲಿ ಭಾವಪರವಶನಾಗಿ ಭಜನಾಪದ ಹಾಡಲು ಶುರು ಮಾಡಿಬಿಟ್ಟ. ಅದಲ್ಲದೆ ಅವನು ಆ ವರ್ಷದ ದಸರಾದಲ್ಲಿ ತೆಗೆದುಕೊಂಡ ನಿರ್ಧಾರವಂತೂ ಎಲ್ಲರ ದಿಗ್ಭ್ರಮೆಗೆ ದೂಡಿತ್ತು. ‘ಬನ್ನಿ’ ಕೊಡುವ ದಿನದಂದು ಅವನು ಪ್ರತಿ ಮನೆಗೂ ಹೋಗಿ ಸಣ್ಣವರು ದೊಡ್ಡವರು ಎನ್ನದೆ ಎಲ್ಲರಿಗೂ ಕಾಲುಬಿದ್ದು ನಮಸ್ಕಾರ ಮಾಡಿದ. ‘ನೀವೆಲ್ಲ ಇನ್ಮ್ಯಾಲಿಂದ ನನಿಗಿ ತಂದಿತಾಯಿ ಸಮಾನ’ ಎಂದ. ಆದಾದಮೇಲೆ ಅವನು ತನ್ನ ಮನೆ ಬಿಟ್ಟು ಪಂಪಾಪತಿ ತಾತನ ಮಠದಲ್ಲೇ ಇರತೊಡಗಿದ. ಅವಾಗಿನಿಂದ ಜನರೆಲ್ಲ ‘ರಂಗಮ್ಮ ಅವತ್ತು ಒದ್ಕಂತ ಒದ್ಕಂತ ಲಚುಮನ ಬೀಜಾ ತುಳುದುಬುಟ್ಟಾಳ. ಅದ್ಕಾ ಅವ್ನು ಸನ್ಯಾಸಿ ಆಗ್ಯಾನ’ ಎಂದು ಮಾತನಾಡಿಕೊಳ್ಳತೊಡಗಿದರು. ಆದರೆ ಅದರ ಕಾರಣ ಅವರೆಂದುಕೊಂಡಷ್ಟು ಸರಳ ಇರಲಿಲ್ಲ. + +ಅವತ್ತು ಲಚುಮನನ್ನು ಒದ್ದು ಬಂದ ದಿನದಿಂದ ರಂಗಮ್ಮನ ಬದುಕಿನಲ್ಲಿ ವಿಚಿತ್ರ ಬದಲಾವಣೆಗಳು ಘಟಿಸತೊಡಗಿದವು. ಅವತ್ತಾದ ಲಫಡಾದಿಂದ ಬೇಸತ್ತು ಎಂದಿಗಿಂತ ಬೇಗನೇ ಮನೆಗೆ ಬಂದ ಅವಳಿಗೆ ಯಾವತ್ತೂ ಇರದಂಥ ವಿಪರೀತ ತಲೆನೋವು. ನಿದ್ದೆಬಾರದೆ ನಸುಕಿನ ನಾಲ್ಕರವರೆಗೆ ಹೊರಳಾಡುತ್ತಲೇ ಇದ್ದಳು. ಆಮೇಲೆ ಸಣ್ಣಗೆ ಜೊಂಪು ಹತ್ತಿತು. ಎಚ್ಚರವಾದಾಗ ಮಟಮಟ ಮಧ್ಯಾಹ್ನ. ಹಾಸಿಗೆಯಿಂದ ಮೇಲೇಳಲಿಕ್ಕೆ ನೋಡಿದರೆ ಒಂದು ಕಾಲು ಮೇಲಕ್ಕೆ ಏಳುತ್ತಲೇ ಇಲ್ಲ. ಅದಕ್ಕೆ ಹೆಬ್ಬಾವು ಸುತ್ತಿಕೊಂಡಿದೆಯೇನೋ ಎಂಬಷ್ಟು ಭಾರ. ಒಂದೇ ಕಾಲಮೇಲೆ ಭಾರ ಹಾಕಿ ಮಲಗಿರಬೇಕು, ಅದಕ್ಕೇ ಕಾಲಿಗೆ ಜೋಮು ಹಿಡಿದಿದೆ ಎಂದುಕೊಂಡಳು. ಆದರೆ ಎಷ್ಟೊತ್ತಾದರೂ ಕಾಲು ಮೇಲಕ್ಕೆ ಏಳದಿದ್ದಾಗ ನಿಜಕ್ಕೂ ಕಾಲಿಗೆ ಹೆಬ್ಬಾವು ಸುತ್ತಿಕೊಂಡಿದೆಯೇನೋ ಎಂಬ ಅನುಮಾನ ಬರತೊಡಗಿತು. ತುಂಬಾ ಹೊತ್ತಿನವರೆಗೆ ಅವಳ ಕಾಲಿಗೆ ಸುತ್ತಿಕೊಂಡಿದ್ದ ಹೆಬ್ಬಾವು ಬಿಡಲೇ ಇಲ್ಲ. ಕಡೆಗೂ ಅವಳು ಇನ್ನಿಲ್ಲದ ತ್ರಾಸು ಪಟ್ಟುಕೊಂಡು ಹಲ್ಲುಕಚ್ಚಿಕೊಂಡು, ತಿಣುಕಾಡಿ ಅದರ ಕಾಲು ಬಿಡಿಸಿಕೊಂಡು ಮೇಲೇಳುವ ಹೊತ್ತಿಗೆ ಹುಟ್ಟಿದ ಎರಡೇ ದಿನಕ್ಕೆ ಕಣ್ಣುಮುಚ್ಚಿದ ತನ್ನ ಮಗನ ನೆನಪಾಗಿ ದಳ ದಳ ಕಣ್ಣೀರು ಉದುರಿದ್ದವು. + +ಅವತ್ತು ಎಂದಿಗಿಂತ ಚೂರು ತಡವಾಗಿಯೇ ಬಸ್ಸ್ಟ್ಯಾಂಡ್ಗೆ ಬಂದಳು. ಅಷ್ಟೊತ್ತಿಗಾಗಲೇ ಜನ ಗುಂಪಾಗಿ ಸೇರಿ ಕಾಯುತ್ತ ನಿಂತಿದ್ದರು. ರಂಗಮ್ಮ ಗಾಡಿ ನಿಲ್ಲಿಸಿ, ಎಲ್ಲ ತಯಾರಿ ಶುರು ಮಾಡಿಕೊಂಡಳು. ಮೊದಲ ಸುತ್ತಿನ ಮಿರ್ಚಿಗಳನ್ನು ಕರಿದು ಪರಾತಕ್ಕೆ ಸುರುವಿದಳು. ದಿನವೂ ಬರುತ್ತಿದ್ದ ಮಿರ್ಚಿಯ ಪರಿಮಳಕ್ಕೆ ಬೇರೆನೋ ಸೇರಿಕೊಂಡಿದೆ ಎನ್ನಿಸಿತು. ಮಿರ್ಚಿ ಕರಿದದ್ದೇ ಜನ ಅವಳ ಸುತ್ತ ಸೇರಿ ‘ನಂಗ್ಯೊಂದ್ ಪ್ಲೇಟ್, ನಂಗ್ಯೊಂದ್ ಪ್ಲೇಟ್ ರಂಗಮ್ಮ’ ಅಂತ ಪೈಪೋಟಿಗಿಳಿದರು. ಯಾಕೋ ಅವಳಿಗೆ ಉಸಿರುಗಟ್ಟಿದಂತಾಯಿತು. ಬೆನ್ನು ಬಿಸಿಯಾಗತೊಡಗಿತು. ಹೆಬ್ಬಾವು ಮತ್ತೆ ಬಂದು ಕಾಲಿಗೆ ಸುತ್ತಿಕೊಳ್ಳತೊಡಗಿದೆಯೇನೋ ಎಂಬಂತೆ ಕಾಲುಗಳೆರಡು ಬಿಗಿಯಾಗತೊಡಗಿದವು. ‘ಸ್ವಲ್ಪ ಹಿಂದಕ್ ಸರ್ಕರೀ ಅಣ್ಣ? ಎಲ್ಲರಿಗಿ ಕೊಡ್ತೀನಿ’ ಎಂದು ಎಲ್ಲರನ್ನೂ ಸ್ವಲ್ಪ ದೂರ ನಿಲ್ಲಿಸಿದಳು. ತನ್ನ ಹಿಂದೆ ನಿಂತಿದ್ದವರನ್ನೆಲ್ಲ ಮುಂದೆ ಬರುವಂತೆ ಕೇಳಿಕೊಂಡಳು. ಈಗ ಚೂರು ಹಗುರ ಅನ್ನಿಸಿತು. ಮಿರ್ಚಿ ಕಟ್ಟಿಕೊಡತೊಡಗಿದಳು. ಎಲ್ಲರಿಗಿಂತ ಮೊದಲು ಪ್ಲೇಟ್ ಮಿರ್ಚಿ ತೆಗೆದುಕೊಂಡು ತಿಂದ ಮೂಲಿಮನಿ ಸ್ವಾಮ ಬಂದು ‘ರಂಗಮ್ಮ ಇವತ್ ಮಿರ್ಚಿ ಕಂಡಂಗ್ ಖಾರ ಆಗ್ಯಾವಲಾ..?’ ಎಂದ. ಉಳಿದವರೂ ಅದಕ್ಕೆ ಹ್ಞೂಂಗುಟ್ಟಿದರು. + +ಇವತ್ತು ಕೂಡ ಎಂದಿಗಿಂತ ಬೇಗನೇ ಗಾಡಿ ತಳ್ಳಿಕೊಂಡು ಬಂದಳು ರಂಗಮ್ಮ. + +ಮನೆಗೆ ಬಂದವಳೇ ತನ್ನ ಹಳೆಯ ಟ್ರಂಕಿನಲ್ಲಿದ್ದ ಹುಸೇನಿಯ ಫೋಟೋ ತೆಗೆದು ಎಷ್ಟೋ ಹೊತ್ತಿನವರೆಗೆ ಅದನ್ನ ಕೈಯಿಂದ ಸವರತೊಡಗಿದಳು. ದಿನಾ ಸರಹೊತ್ತಲ್ಲಿ ಬಂದು ಎಚ್ಚರಿಸಿ ಉಳಿದ ಅನ್ನ ಹಾಕಿಸಿಕೊಂಡು ತಿಂದು ಹೋಗುವ ‘ಕರಿಯ’ ಬಂದು ಬೊಗಳಿದಾಗಲೇ ತಾನು ಅಡುಗೆ ಮಾಡಿಕೊಳ್ಳದಿರುವುದು ನೆನಪಾಯಿತು ಅವಳಿಗೆ. ರೊಟ್ಟಿಪುಟ್ಟಿಯಲ್ಲಿ ಉಳಿದಿದ್ದ ಎರಡು ಒಣರೊಟ್ಟಿಗಳಲ್ಲಿ ಒಂದನ್ನು ಒಯ್ದು ಕರಿಯನಿಗೆ ಕೊಟ್ಟಳು. ಇನ್ನೊಂದನ್ನು ಅವನ ಮುಂದೆಯೇ ಕುಳಿತು, ಅವನು ಕಡಿದಂತೆ ತಾನೂ ಹಲ್ಲಿನಿಂದ ಕಡಿದು ತಿನ್ನತೊಡಗಿದಳು, ಕಡಿಯುತ್ತ ಕಡಿಯುತ್ತ ಆವೇಶ ಬಂದಂತಾಯಿತು. ರೊಟ್ಟಿ ಮುಗಿದುಹೋಗಿ ಎಷ್ಟೊತ್ತಿನವರೆಗೂ ಕಡಿಯುತ್ತಲೇ ಇದ್ದಳು, ಕರಿಯನ ತಣ್ಣನೆಯ ಮೂತಿ ಕೈಗೆ ತಾಕಿದಾಗಲೇ ಅವಳಿಗೆ ಎಚ್ಚರವಾಗಿದ್ದು. ಆದರೆ ಅಷ್ಟೊತ್ತಿಗಾಗಲೇ ಬಾಯಿತುಂಬ ರಕ್ತತುಂಬಿಕೊಂಡು ತುಟಿಯಿಂದ ತಾಂಬೂಲದಂತೆ ಜಿನುಗತೊಡಗಿತ್ತು. ಗಾಬರಿಯಿಂದ ಬಚ್ಚಲು ತಟ್ಟಿಮರೆಗೆ ಹೋಗಿ ಬಾಯಿ ತುಂಬ ನೀರು ತುಂಬಿಕೊಂಡು ಮುಕ್ಕಳಿಸಿದಳು, ಆದರೆ ಅವಳಿಗೆ ಆಶ್ಚರ್ಯವಾಗುವ ರೀತಿಯಲ್ಲಿ ಮೈಮನ ಹಗುರ ಎನ್ನಿಸತೊಡಗಿತು. ಬೇಗನೇ ನಿದ್ದೆಯೂ ಬಂತು. + + + +ಮರುದಿನ ಎಚ್ಚರವಾದಾಗ ಮಟಮಟ ಮಧ್ಯಾಹ್ನ. ಇವತ್ತು ಕೂಡ ನೆನ್ನೆಯ ಪಾಡೇ ಎದುರಾಯಿತು. ಹೆಬ್ಬಾವು ಬೇಗ ಅವಳನ್ನು ಮೇಲೇಳಲು ಬಿಡಲೇ ಇಲ್ಲ. ಅಂತೂ ಹೇಗೋ ಕಷ್ಟಪಟ್ಟು ಎದ್ದವಳೇ ಸೀದಾ ಗುಡಿಸಲ ಮುಂದಿರುವ ತಟ್ಟಿಮರೆಯಲ್ಲಿ ಕುಳಿತು ದಬದಬ ನೀರು ಸುರುವಿಕೊಂಡಳು. ಒದ್ದೆಬಟ್ಟೆಯಲ್ಲೇ ಗುಡಿಸಲೊಳಕ್ಕೆ ಬಂದು ಟ್ರಂಕು ತೆಗೆದಳು, ಬಳಸುವುದನ್ನು ಬಿಟ್ಟು ಎಷ್ಟೋ ವರ್ಷಗಳಾಗಿದ್ದ, ಒಮ್ಮೆ ಹುಲಿಗೆಮ್ಮನ ಜಾತ್ರೆಗೆ ಹೋಗಿದ್ದಾಗ ಹುಸೇನಿ ಕೊಂಡುಕೊಂಡು ಬಂದಿದ್ದ ತಗಡಿನ ಫ್ರೇಮಿನ ಕನ್ನಡಿಗಾಗಿ ಹುಡುಕಿದಳು. ಮೂಲೆಯಲ್ಲಿ ಬಿದ್ದುಕೊಂಡಿದ್ದ ಅದರ ಕಟ್ಟುಗಳಿಗೆ ಜಂಗು ಹಿಡಿದುಹೋಗಿತ್ತು. ಒದ್ದೆಸೀರೆಯ ಅಂಚಿನಿಂದ ಒರೆಸಿದಾಗ ಫಳ ಫಳ ಹೊಳೆಯತೊಡಗಿತು. ಅದರಲ್ಲಿ ಕಂಡ ಬಟ್ಟಲು ಕಂಗಳ ಸುಂದರಿಯನ್ನು ನೋಡಿ ಒಂಥರ ಎನಿಸಿತು. + +ಧೂಳುಮೆತ್ತಿಕೊಂಡಿದ್ದ ಸೆರಗನ್ನೇ ಬಾಯಿಗೆ ಇಟ್ಟುಕೊಂಡು ನಗು ತಡೆದುಕೊಂಡಳು. ಆ ಕನ್ನಡಿಯನ್ನು ಮಗುವೇನೋ ಎಂಬಂತೆ ಜೋಪಾನವಾಗಿ ಎತ್ತಿಕೊಂಡು ಬಂದು ಮೊಳೆಯೊಂದಕ್ಕೆ ನೇತುಹಾಕಿದಳು. ಆ ಮಗುವನ್ನು ಮತ್ತೊಮ್ಮೆ ನೋಡುವ ಮನಸ್ಸಾಯಿತು. ಈ ಸಲ ನೋಡಿದಾಗ ತನ್ನ ಗದ್ದದ ಮೇಲಿರುವ ಹಸಿರು ನಕ್ಷತ್ರಮಚ್ಚೆ ಕಣ್ಣಿಗೆ ಬಿತ್ತು. ‘ನನಿಗೆಸ್ಟರೇ ವಯ್ಸಾದ್ರೂ ಈ ಖೋಡಿಗ್ ವಯ್ಸಾಗಲ್ ಅನ್ಸತ್? ಈಗ ಸೈತ ಹಂಗಾ ಐತಿ’ ಎಂದು ತನಗೆ ತಾನೇ ಮಾತಾಡಿಕೊಂಡು ಕೊಕ್ ಕೊಕ್ ಎಂದು ನಗತೊಡಗಿದಳು. ನಗುತ್ತ ನಗುತ್ತ ಅಳುವಿನ ಅಂಚಿಗೆ ತಲುಪಿದಳು. + +ಅವತ್ತು ರಾತ್ರಿ ರಂಗಮ್ಮನಿಂದ ಒದೆಸಿಕೊಂಡು ಬಂದ ಲಚುಮನನ್ನು ಅವನಪ್ಪ ಬಾರುಕೋಲಿನಿಂದ ದನಕ್ಕೆ ಬಡಿಯುವಂತೆ ಬಡಿದ. ರಕ್ತಸಿಕ್ತ ಮೊಣಕಾಲು ಮಡಿಸಿಕೊಂಡು, ಬಾರು ಬಿದ್ದ ಬೆನ್ನು ಒರಗಿಸಿ ನೆಲ್ಲುಚೀಲ ಒಟ್ಟುವ ಕೋಣೆಯಲ್ಲಿ ಎಷ್ಟೋ ಹೊತ್ತು ಪ್ರಜ್ಞೆತಪ್ಪಿ ಬಿದ್ದಿದ್ದ ಲಚುಮನನ್ನು ಎಬ್ಬಿಸಲಿಕ್ಕೆ ಇನ್ನೊಂದು ಜೀವವೂ ಇರಲಿಲ್ಲ ಆ ದೊಡ್ಡ ಮನೆಯಲ್ಲಿ. ಮರುದಿನ ಬೆಳಗಾಗುವವರೆಗೂ ಹಾಗೇ ಬಿದ್ದುಕೊಂಡಿದ್ದ. ಎಚ್ಚರವಾದಾಗ ಕುಂಟುತ್ತ ಅಡುಗೆ ಮನೆಗೆ ಹೋಗಿ ಅರಿಸಿನ ಡಬ್ಬಿಗೆ ಕೈ ಹಾಕಿ ಹಿಡಿ ಅರಿಶಿಣ ತೆಗೆದುಕೊಂಡು ಬೆನ್ನಿಗೆ, ಮೊಣಕಾಲಿಗೆ ಸವರಿಕೊಂಡ. ಚೂರು ಹಿತವೆನಿಸಿತು. ದನದ ಬಂಕದ ಕಡೆಯಿಂದ ಬಂದ ‘ಹರ್ಯಾ ಹರ್ಯಾ’ ಸದ್ದು ಕೇಳಿ ಒಂದು ಕ್ಷಣ ಬೆಚ್ಚಿಬಿದ್ದ. ಅಪ್ಪ ಎತ್ತುಕಟ್ಟಿಕೊಂಡು ಹೊಲಕ್ಕೆ ಹೊರಟಿರುವುದು ಖಾತ್ರಿಯಾಯಿತು. ಹೊಟ್ಟೆ ಚುರುಗುಟ್ಟುತ್ತಿರುವುದು ಗಮನಕ್ಕೆ ಬಂತು. ಅಡುಗೆಮನೆಯೊಳಕ್ಕೆ ಹೋದ ಅವನಿಗೆ ಆಶ್ಚರ್ಯವಾಗುವ ರೀತಿ ಅವರಪ್ಪ ಮೊದಲ ಬಾರಿಗೆ ತಾನೇ ಅನ್ನ ಬೇಯಿಸಿಟ್ಟಿದ್ದ. ಸಾರನ್ನೂ ಮಾಡಿಟ್ಟಿದ್ದ. ಒಂದು ತಟ್ಟೆಗೆ ಅನ್ನ ಸಾರು ಸುರುವಿಕೊಂಡು ಗಬಗಬ ತಿಂದ. ಯಾಕೋ ಮೊದಲ ಬಾರಿಗೆ ಹೊಟ್ಟೆತುಂಬ ಊಟ ಮಾಡಿದೆ ಅನ್ನಿಸಿತು. ತಟ್ಟೆಯಲ್ಲಿ ಅನ್ನ ಇನ್ನೂ ಇರುವಾಗಲೇ ಕಣ್ಣು ನಿದ್ದೆಗೆಳೆಯತೊಡಗಿದವು. ಬಂಕದಲ್ಲಿರುವ ಹೊರಸಿಗೆ ಬಂದು ಅಡ್ಡಾದ. ನಿದ್ದೆ ಹತ್ತಿತು. + +ನಿದ್ದೆ ಹೋಗಿ ಹದಿನೈದು ನಿಮಿಷವೂ ಆಗಿಲ್ಲ, ಕೆಟ್ಟ ಕನಸುಬಿದ್ದು ಚಿಟ್ ಅಂತ ಚೀರಿಕೊಂಡು ಎಚ್ಚರಗೊಂಡ. ಕಪಾಳ ಕೆಂಪಾಗುವಂತೆ ರಪ ರಪ ಹೊಡೆದುಕೊಳ್ಳತೊಡಗಿದ. ನಾಲಗೆಯನ್ನು ಲುಂಗಿಯಿಂದ ಒರೆಸಿಕೊಳ್ಳತೊಡಗಿದ. ಬಚ್ಚಲುಮನೆಗೆ ಹೋಗಿ ವಾಂತಿ ಮಾಡಿಕೊಂಡ. ಮುಷ್ಟಿತುಂಬ ಇದ್ದಿಲು ಬಾಯಿಗಿಟ್ಟುಕೊಂಡು ಕರಕರ ಕಡಿದು, ಹಲ್ಲುಜ್ಜಿಕೊಂಡ. ಬಾಯಿಮುಕ್ಕಳಿಸಿದ. ದಬದಬ ನೀರು ಸುರುವಿಕೊಂಡ. ಆದರೆ ಅವನು ಕಂಡು ಬೆಚ್ಚಿಬಿದ್ದ ಆ ಭಿಭತ್ಸ ಕನಸಿನ ಒಡೆದ ಹಾಲಿನಂಥ ವಾಸನೆ ಅವನ ಮೂಗು, ಬಾಯಿ, ನಾಲಗೆ, ರಕ್ತವನ್ನೆಲ್ಲ ಸೇರಿಕೊಂಡಿದೆಯೇನೋ ಎಂಬಂತೆ ಅವನಿಂದ ದೂರ ಹೋಗಲೊಲ್ಲದು. ಸ್ನಾನ ಮುಗಿಸಿ ಮನೆಯಿಂದ ಹೊರಬಿದ್ದ. ಆಗಲೂ ಆ ವಾಸನೆ ಅವನನ್ನು ಹಿಂಬಾಲಿಸತೊಡಗಿತು. ಅದರಿಂದ ತಪ್ಪಿಸಿಕೊಳ್ಳಲೆಂಬಂತೆ ಓಡತೊಡಗಿದ. ಓಡುತ್ತ ಓಡುತ್ತ ತಮ್ಮ ಮಾಗಣಿ ಹೊಲಕ್ಕೆ ಬಂದ. ಅಷ್ಟೊತ್ತಿಗೆ ಬಟ್ಟೆಯೆಲ್ಲ ಬೆವರಿನಿಂದ ತೊಯ್ದು ತೊಪ್ಪೆಯಾಗಿತ್ತು. ಕೈಕಾಲೆಲ್ಲ ಸೋತು, ಗಂಟಲೆಲ್ಲ ಒಣಗಿಹೋಗಿತ್ತು. ಶೆಡ್ಡಿಗೆ ಹೋಗಿ ಪಂಪ್ಸೆಟ್ ಆನ್ ಮಾಡಿದ. ಬೋರ್ನ ಬಾಯಿಗೆ ಬಾಯಿಟ್ಟು ಹೊಟ್ಟೆತುಂಬುವವರೆಗೆ ನೀರು ಕುಡಿದ. ಅಲ್ಲೇ ಕಡಿಮಿ ಮೇಲೆ ಅಡ್ಡಾದ. ನಿದ್ದೆ ಹತ್ತಿತು. ಮತ್ತದೇ ಒಡೆದ ಹಾಲಿನ ವಾಸನೆಯ ಕನಸು ಬಿದ್ದು ಚಿಟ್ಟೆಂದು ಚೀರಿಕೊಂಡು ಎದ್ದಾಗ ಕತ್ತಲಾಗಿತ್ತು. ಬಾಯಿತುಂಬಾ ಒಡೆದ ಹಾಲು ತುಂಬಿಕೊಂಡಿರುವಂತೆ ದುರ್ನಾತ. ಸಹಿಸಲಸಾಧ್ಯವಾಗಿ ಗದ್ದೆಗೆ ಹರಿಸಿದ್ದ ನೀರನ್ನೇ ಬಾಯಿಗೆ ಹಾಕಿಕೊಂಡು ಮುಕ್ಕಳಿಸಿದ. ನೀರಿನೊಳಗೆ ಬೆರೆತಿರೋ ಕ್ರಿಮಿನಾಶದ ವಾಸನೆಯಿಂದ ಒಳಗಿದ್ದದ್ದೆಲ್ಲಾ ಕಕ್ಕಿಕೊಂಡ. ಅಲ್ಲಿಂದ ಧಾವಿಸಿಕೊಂಡು ಮನೆಗೆ ಬಂದ. ನಡುಮನೆಯ ಗೋಡೆಗೆ ತೂಗುಹಾಕಿದ್ದ ತನ್ನ ಅವ್ವನ ಫೋಟೋದ ಮುಂದೆ ಬಂದು ಕೈಮುಗಿದು ನಿಂತ. ಕಪಾಳಗಳಿಗೆ ಚಟ್ ಚಟ್ ಎಂದು ಹೊಡೆದುಕೊಳ್ಳತೊಡಗಿದ. ಅವನಪ್ಪ ಬಂದು ನಿಲ್ಲಿಸದಿದ್ದರೆ ಅವನು ಕಪಾಳಗಳನ್ನೇ ಹರಿದುಕೊಳ್ಳುತ್ತಿದ್ದನೇನೋ?! + +ಅವತ್ತು ರಾತ್ರಿ ಅವನಿಗೆ ಆ ಕನಸು ಬೀಳಲಿಲ್ಲ. ಆದರೆ ಅದರ ವಾಸನೆ ಮಾತ್ರ ಹಿಂಬಾಲಿಸುತ್ತಲೇ ಇತ್ತು. ಏನೇನೋ ಪ್ರಯತ್ನಗಳನ್ನು ಮಾಡಿದರೂ ಅದರ ವಾಸನೆಯಿಂದ ತಪ್ಪಿಸಿಕೊಳ್ಳಲು ಆಗದೆ ಹೈರಾಣಾದ. ಯಾರೊಂದಿಗೂ ಹಂಚಿಕೊಳ್ಳುವುದಿರಲಿ, ಅದನ್ನ ಮತ್ತೊಮ್ಮೆ ನೆನಪಿಸಿಕೊಂಡರೇನೇ ಪ್ರಾಣ ಹೋದಂತಾಗುವ ಕನಸು ಅದಾಗಿತ್ತು. ಪ್ರತಿರಾತ್ರಿ ಮಲಗುವಾಗಲೂ ದೇವರೇ ಆ ಕನಸು ಮತ್ತೊಮ್ಮೆ ಬೀಳದಿರಲಿ ಎಂದು ಬೇಡಿಕೊಂಡು ಮಲಗುತ್ತಿದ್ದ. ಆದರೆ ಅದರ ವಾಸನೆಯಿಂದ ತುಂಬಾ ಹೊತ್ತು ನಿದ್ದೆ ಬರುತ್ತಲೇ ಇರಲಿಲ್ಲ. ದಿನಗಳೆದಂತೆ ಅವನು ಅದರ ವಾಸನೆಗೆ ಒಗ್ಗಿಕೊಂಡ, ಆದರೆ ದಿನದಿನಕ್ಕೂ ಸೊರಗತೊಡಗಿದ, ಮನೆಯಲ್ಲಿದ್ದಾಗಲೇ ಅದರ ಘಾಟು ಜಾಸ್ತಿ ಅಂತ ಗೊತ್ತಾದ ದಿನದಿಂದ ಮಾಗಣಿ ಹೊಲದ ಶೆಡ್ಡಿನಲ್ಲೇ ಇರತೊಡಗಿದೆ. ಅದೊಂದು ದಿನ ಯಾವುದೋ ಕಾರಣಕ್ಕಾಗಿ ಪಂಪಾಪತಿ ಮಠಕ್ಕೆ ಹೋದಾಗ ಆ ಕನಸಿನ ವಾಸನೆ ಮತ್ತಷ್ಟು ತೀವ್ರತೆ ಕಳೆದುಕೊಂಡದ್ದು ಗಮನಿಸಿದ ಅವನು ಅವತ್ತಿನಿಂದ ಅಲ್ಲೇ ಇರತೊಡಗಿದ. ಅವನಪ್ಪ ಬಂದು ಎಷ್ಟೇ ಬೆದರಿಕೆ ಹಾಕಿದರೂ ಅಲ್ಲಿಂದ ಕದಲಲಿಲ್ಲ. + +ಇತ್ತ ರಂಗಮ್ಮನಿಗೆ ದಿನಬೆಳಗಾದರೆ ಹೆಬ್ಬಾವಿನ ಕಾಟ ರೂಢಿಯಾಗಿಹೋಯ್ತು. ಆದರೆ ಅವಳಿಗೆ ಮಿರ್ಚಿ ಮಾಡುವ ಉತ್ಸಾಹ ದಿನದಿಂದ ದಿನಕ್ಕೆ ಕಡಿಮೆಯಾಗತೊಡಗಿತು. ಜನ ‘ಮಿರ್ಚಿಗೆ ಮೊದ್ಲಿನ್ ರುತಿ ಇಲ್ಲಾ ರಂಗಮ್ಮ’ ಎನ್ನತೊಡಗಿದರು. ಬಸ್ಸ್ಟ್ಯಾಂಡ್ನಿಂದ ಗುಡಿಸಲಿಗೆ ಬಂದದ್ದೇ ಏನಾದರೊಂದು ವಸ್ತುವೋ, ಸಂಗತಿಯೋ ಅವಳಿಗೆ ಹುಟ್ಟಿದ ಎರಡೇದಿನಕ್ಕೆ ಕಳೆದುಹೋದ ಮಗನ ಹಸಿಮೈ ವಾಸನೆ ಹೊತ್ತು ತಂದು ಹಿಂಸೆ ನೀಡುತ್ತಿದ್ದವು. ತನ್ನ ಹಂಬಲದ ಕರುಳೇ ದಿನಬೆಳಗೆದ್ದರೆ ಸುತ್ತಿಕೊಳ್ಳುವ ಹೆಬ್ಬಾವಿರಬೇಕೆಂದು ತೀರ್ಮಾನಿಸಿ, ಅದು ತನ್ನ ಕೊರಳಿಗೆ ಸುತ್ತಿಕೊಳ್ಳುವವರೆಗೆ ಹೇಗೋ ಸಹಿಸಿಕೊಂಡು ಬದುಕಿದರಾಯಿತೆಂದು ನಿರ್ಧರಿಸಿದಳು. + +ಅದು ಬನ್ನಿ ಹಬ್ಬದ ರಾತ್ರಿ. ಊರಜನರೆಲ್ಲಾ ಒಬ್ಬರಿಗೊಬ್ಬರು ಬನ್ನಿ ಹಂಚಿಕೊಂಡು ‘ಬನ್ನಿ ತಗಂಡ್ ಬಂಗಾರದಂಗ್ ಇರಂಬ್ರಿ’ ಎಂದು ಹಾರೈಸಿಕೊಳ್ಳುವ ವಿಶೇಷ ರಾತ್ರಿ. ಆದರೆ ರಂಗಮ್ಮ, ಹುಸೇನಿ ತೀರಿಕೊಂಡಾಗಿನಿಂದ ಯಾರೊಂದಿಗೂ ಬನ್ನಿ ಹಂಚಿಕೊಂಡಿಲ್ಲ. ಸೋಮನಾಥನ ದೇವಸ್ಥಾನಕ್ಕೆ ಹೋಗಿ ಬನ್ನಿ ಇಟ್ಟು ಕೈಮುಗಿದರೆ ಅವಳ ಪಾಲಿನ ಬನ್ನಿ ಹಬ್ಬ ಮುಗಿಯಿತು. ಅವತ್ತೂ ಹಾಗೇ ಮಾಡಿ ಗುಡಿಸಲ ಕಡೆ ಬಂದವಳನ್ನು ಒಂದು ಚಿಕ್ಕ ಬಿಳಿಬಣ್ಣದ ನಾಯಿಮರಿ ಸ್ವಾಗತಿಸಿತು. ಬಾಲ ಅಲ್ಲಾಡಿಸುತ್ತ ನಿಂತಿದ್ದ ಅದನ್ನು ಕಂಡು ಮುದ್ದು ಬಂತು. ಅದನ್ನೆತ್ತಿಕೊಂಡು ಗುಡಿಸಲೊಳಕ್ಕೆ ಹೋದಳು. ಒಂದು ಬಟ್ಟಲಿನಲ್ಲಿ ಮಜ್ಜಿಗೆ ಸುರುವಿ ಅದಕ್ಕೆ ಕುಡಿಯಲು ಕೊಟ್ಟಳು. ಅದರ ತಲೆನೇವರಿಸುತ್ತಾ ಕುಳಿತುಕೊಂಡಳು. ಅದರ ಸ್ವರ್ಶ ಸಾಕಾಯಿತು ಅವಳಿಗೆ ಮಗನ ಹಸಿಮೈ ವಾಸನೆಯ ಆವರಣಕ್ಕೆ ಜಾರಿಕೊಳ್ಳಲು. ದಳದಳ ಕಣ್ಣೀರು ಸುರಿಸುತ್ತ ಕಲ್ಲಿನಂತೆ ಕುಳಿತುಕೊಳ್ಳಲು. ಅತ್ತಷ್ಟೂ ಅವಳ ಎದೆಬಿಗಿಯತೊಡಗಿತು. ನಾಯಿಮರಿ ಅದರೊಳಗಿದ್ದ ಮಜ್ಜಿಗೆ ಮುಗಿಸಿ ಇನ್ನಷ್ಟು ಎಂಬಂತೆ ಇವಳೆಡೆ ನೋಡತೊಡಗಿತು. ಅದರ ‘ಬೇಕು ಬೇಕು’ ಎಂಬ ಕಣ್ಣುಗಳನ್ನು ನೋಡಿದ್ದೇ ಕಣ್ಣು ಮತ್ತಷ್ಟು ತುಂಬತೊಡಗಿದವು. ಎದೆಯ ಭಾರ ಸಹಿಸಲಸಾಧ್ಯವಾಗುವಷ್ಟು ಹೆಚ್ಚಾಯಿತು. ಬಟ್ಟಲು ತೆಗೆದುಕೊಂಡು ಅದರೊಳಕ್ಕೆ ಅದನ್ನು ರವಾನಿಸಿ, ಆ ನಾಯಿಮರಿಯ ಮುಂದಿಟ್ಟಳು. ಎರಡು ಗುಟುಕು ಕುಡಿದದ್ದೇ ಅದು ನಿದ್ದೆ ಬಂದು ಅವಳ ಮಡಿಲಲ್ಲಿ ಮಲಗಿತು. ಅದಕ್ಕೆ ಚೋ ಬಡಿಯುತ್ತ ಕುಳಿತುಕೊಂಡಳು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಒಂದಷ್ಟು ಹೊತ್ತು ಆಗಿರಬೇಕು. ಯಾರೋ ‘ಚಿಗವ್ವಾ’ ಎಂದು ಕರೆದಂತಾಯಿತು. ಅವಳು ಸೆರಗು ಸರಿ ಮಾಡಿಳ್ಳುವಷ್ಟರಲ್ಲಿ ಲಚುಮ ಕದ ನೂಕಿಕೊಂಡು ಒಳಕ್ಕೆ ಬಂದ. ಗುಡಿಸಲೊಳಕ್ಕೆ ಕಾಲಿಟ್ಟದ್ದೇ ಅವನಿಗೆ ತನ್ನನ್ನು ಇಷ್ಟುದಿನ ಹಿಂಬಾಲಿಸುತ್ತಿದ್ದ ಕೆಟ್ಟ ಕನಸಿನ ವಾಸನೆ ಬಿಟ್ಟು ಹೋಗುತ್ತಿರುವುದು ಗಮನಕ್ಕೆ ಬಂದು ಮನಸು ಹಗುರವಾಗತೊಡಗಿತು. ಆದರೆ ಅವನನ್ನು ನೋಡಿದ್ದೇ ರಂಗಮ್ಮನಿಗೆ ಮೈಯೆಲ್ಲಾ ಬೆಂಕಿ ಹತ್ತಿದಂತಾಯಿತು. ಅವನು ಬನ್ನಿ ಹಿಡಿದುಕೊಂಡು ಮುಗುಳ್ನಗುತ್ತ ‘ಚಿಗವ್ವಾ ಬನ್ನಿ ಕೊಡಾಕ್ ಬಂದೀನಿ’ ಅಂದ. ಇವಳಿಗೆ ಕೈಗೆ ಸಿಕ್ಕಿದ್ದನ್ನು ತೆಗೆದುಕೊಂಡು ಅವನನ್ನು ಬಾರಿಸಬೇಕು ಎನ್ನಿಸತೊಡಗಿತು. ಕಣ್ಣು ಕೆಂಪು ಮಾಡಿಕೊಂಡು ಹಾಗೇ ಕುಳಿತುಕೊಂಡಳು. ಅವನು ಮತ್ತೊಮ್ಮೆ ‘ಚಿಗವ್ವಾ ಬನ್ನಿ ಕೊಡಾಕ್ ಬಂದೀನಿ’ ಅಂದ. ಅವಳು ‘ಸುಮ್ಕ್ಯಾ ಹೋಗಲೋ ಚಿಟ್ಯಾ’ ಎಂದು ಜೋರಾಗಿ ಕೂಗಿದಳು. ನಾಯಿಮರಿಗೆ ಎಚ್ಚರವಾಗಿ ಹೊರಕ್ಕೆ ಓಡಿತು. ಲಚುಮ ಹಾಗೇ ನಿಂತಿದ್ದ. + +‘ನೀ ಬನ್ನಿ ಇಸ್ಕಂಬಮಟ ನಾ ಹೋಗಲ್ಲ..’ ಎಂದ. ಅವಳಿಗೆ ಮತ್ತಷ್ಟು ಆವೇಶ ಬಂದು ಅಲ್ಲೇ ಪಕ್ಕದಲ್ಲಿದ್ದ ಚಾ ವಾಟಗ ತೆಗೆದುಕೊಂಡು ಅವನೆಡೆಗೆ ಬೀಸಿದಳು. ಅದು ಅವನ ಮೊಣಕಾಲಿಗೆ ಬಿದ್ದು ರಕ್ತ ಸುರಿಯತೊಡಗಿತು. ಅವನು ಕದಲದೆ ನಿಂತ. ಅವಳು ಹೆಬ್ಬಾವಿನಂತೆ ಬುಸುಗುಡುತ್ತಲೇ ಇದ್ದಳು. ಇದ್ದಕ್ಕಿದ್ದಂತೆ ಅವಳ ಕಣ್ಣಲ್ಲಿ ದಳದಳ ಕಂಬನಿ. ಅವನು ‘ಯಾಕ್ ಚಿಗವ್ವಾ..?’ ಎಂದು ಸಮಾಧಾನ ಮಾಡಲೆಂದು ಅವಳ ಸಮೀಪಕ್ಕೆ ಹೊರಟ. ತನ್ನನ್ನು ಕೆಟ್ಟಕನಸಿನ ವಾಸನೆಯಿಂದ ಪಾರು ಮಾಡಲೆಂದೇ ಹೊರಡುತ್ತಿದೆಯೇನೋ ಎಂಬಂಥ ಪರಿಮಳ ಆವರಿಸತೊಡಗಿತು ಅವನನ್ನು. ಅವಳು ಮತ್ತಷ್ಟು ರೋಷಗೊಂಡು ಅವನನ್ನು ಎಡಗಾಲಿನಿಂದ ಒದ್ದು ‘ಹೋಗಲೋ ಅಡಾವುಡಿಗುಡಿದೋನೇ’ ಎಂದು ಬೈದಳು. ಅವನು ಸಾವರಿಸಿಕೊಂಡು ಎದ್ದು ಅವಳ ಪಕ್ಕದಲ್ಲೇ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತ. ಅವಳ ಕಣ್ಣೀರಿನ ರಭಸ ಹೆಚ್ಚಾಗುತ್ತಲೇ ಇತ್ತು. ಅವನು ಅವಳ ಪಕ್ಕದಲ್ಲಿದ್ದ ಬಟ್ಟಲನ್ನು ತೆಗೆದುಕೊಂಡ. ಅದರೊಳಗಿದ್ದ ಆಕೆಯ ಎದೆಭಾರವನ್ನು ಮಗುವಿನಂತೆ ಕುಡಿದ. ಆಗ ಅವಳ ಕಣ್ಣೀರಿನ ರಭಸಕ್ಕೆ ಹಳ್ಳ ಬಂತು. ಅದು ರಭಸದಿಂದ ನದಿಸೇರಿ ಪ್ರವಾಹವಾಗಿ ಸಾಗರದಲ್ಲಿ ಐಕ್ಯವಾಗಿ ಶಾಂತವಾಯಿತು. ಅವನು ‘ತಪ್ಪಾತಾ ನಮವ್ವಾ?’ ಎಂದು ಚಿಕ್ಕಮಗುವಿನಂತೆ ದುಃಖಿಸತೊಡಗಿದ. ಅವಳು ಅವನ ತಲೆಯನ್ನೊಮ್ಮೆ ನೇವರಿಸಿ, ಮಡಿಲಲ್ಲಿಟ್ಟುಕೊಂಡು ಚೋ ಬಡಿಯತೊಡಗಿದಳು. + +ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ. “ಫೂ” ಇವರ ಪ್ರಕಟಿತ ಕಥಾ ಸಂಕಲನ. \ No newline at end of file diff --git a/Kenda Sampige/article_444.txt b/Kenda Sampige/article_444.txt new file mode 100644 index 0000000000000000000000000000000000000000..2772fa3e9226a7381c878e71d5934a5cc3ae5cc1 --- /dev/null +++ b/Kenda Sampige/article_444.txt @@ -0,0 +1,39 @@ + + +ಅಂಕಣ ಬರಹಗಳ ಬಗ್ಗೆ ಮಾತನಾಡುವಾಗೆಲ್ಲಾ ನನಗೊಂದು ಬೆರಗು ಇದ್ದೇ ಇದೆ. ಅದು ಪ್ರತಿ ವಾರಕ್ಕೊಂದೋ ಹದಿನೈದು ದಿನಕ್ಕೊಂದೋ ತಿಂಗಳಿಗೊಂದೋ ನಮಗೆ ಐದರಿಂದ ಹತ್ತು ನಿಮಿಷಗಳ ಓದು ಅಷ್ಟೇ. ಆದರೆ ಒಂದು ಅಂಕಣವನ್ನು ವರ್ಷಗಟ್ಟಲೆ ತಿಂಗಳುಗಟ್ಟಲೆ ಬರೆಯುವವರಿಗೆ ಅದು ಅವರ ಜೀವನದಲ್ಲಿ ಪ್ರತಿಕ್ಷಣವೂ ಹಾಸುಹೊಕ್ಕಾಗಿಬಿಟ್ಟಿರುತ್ತದೆ. ಒಂದು ಅಂಕಣ ಬರೆದು ಕಳಿಸಿ ಮುಗಿಯಿತು ಅನ್ನುವಂತಿಲ್ಲ. ಮರುಕ್ಷಣದಿಂದಲೇ ಮುಂದಿನ ಅಂಕಣದ ಕುರಿತ ಯೋಚನೆ ಶುರುವಾಗಿರುತ್ತದೆ. ಅಂಕಣದಲ್ಲಿ ವರ್ತಮಾನಕ್ಕೆ ಸ್ಪಂದಿಸಬೇಕಾಗಿರುವುದರಿಂದ ಪ್ರತಿ ಘಟನೆಯೂ ಮನದಲ್ಲಿ ಅಚ್ಚಾಗಿ ತನ್ನನ್ನು ಅಂಕಣವನ್ನಾಗಿಸು ಎಂದು ಬೇಡುತ್ತಿರುತ್ತದೆ. ಹೀಗಾಗಿ ಅವರು ಪ್ರತಿಕ್ಷಣ ಎದುರಾಗುವ ಘಟನೆಗಳನ್ನೂ ಬಹಳ ಎಚ್ಚರಿಕೆಯಿಂದ ಗಮನಿಸುತ್ತಿರುತ್ತಾರೆ. + +ಒಬ್ಬ ಅಂಕಣಕಾರನ ಮನದಲ್ಲಿ ಅಚ್ಚಾಗುವ ಸಂಗತಿಗಳನ್ನು ಅವನೆಷ್ಟು ಒಳಗಿಳಿಸಿಕೊಳ್ಳುತ್ತಾನೆ, ಒಳಗಿಳಿಸಿಕೊಂಡಿದ್ದನ್ನು ಓದುಗನೊಳಗೆ ಹೇಗೆ ಇಳಿಸುತ್ತಾನೆ ಎಂಬುದರ ಮೇಲೆ ಒಂದು ಅಂಕಣದ ಯಶಸ್ಸು ತೀರ್ಮಾನವಾಗುತ್ತದೆ. ಓದುಗನಿಗೆ ಮುಟ್ಟಿಸುವುದೇ ಅಂಕಣಕಾರನ ಮುಖ್ಯ ಉದ್ದೇಶವಾದರೂ ಓದುಗನೊಳಗೆ ತನ್ನ ಹರಳುಗಟ್ಟಿದ ಅನುಭವಗಳನ್ನು ಇಳಿಸುವುದೇ ಗುರಿಯಾದರೂ ಆ ಘಟನೆಗಳು ಅವನನ್ನೂ ಬದಲಿಸುತ್ತಲೇ ಹೋಗುತ್ತವೆ. ಅಥವಾ ಮೊದಲಿಗಿಂತ ಅವನ ಗ್ರಹಿಕೆ, ದೃಷ್ಟಿಕೋನ, ನೋಟದ ಹಿಂದಿನ ಚಿತ್ರಗಳನ್ನು ಅರಿಯುವ ರೀತಿ ಮತ್ತೆ ಮತ್ತೆ ಚುರುಕಾಗುತ್ತಾ ಹೋಗುತ್ತದೆ. ಓದುಗನ ನಾಡಿಮಿಡಿತ ಬರೆಯುತ್ತಾ ಬರೆಯುತ್ತಾ ಅಂಕಣಕಾರನಿಗೆ ದಕ್ಕುವಂತೆಯೇ ಆ ಅಂಕಣಗಳನ್ನು ಸತತವಾಗಿ ಓದುವವನಿಗೆ ಅಂಕಣಕಾರನ ನಾಡಿಮಿಡಿತವೂ ಅರಿವಾಗಲೇಬೇಕು. + +ಹೀಗೆ ಅಂಕಣವನ್ನು ಓದುತ್ತಾ ಓದುಗ ಅವನ ಅರಿವಿನ ಪರಿಧಿಯನ್ನು ವಿಸ್ತರಿಸಿಕೊಳ್ಳುತ್ತಿರುವಂತೆಯೇ ಒಬ್ಬ ಅಂಕಣಕಾರನೂ ಓದುಗನ ಜೊತೆಜೊತೆಗೇ ತನ್ನ ಅರಿವನ್ನೂ ವಿಸ್ತರಿಸಿಕೊಳ್ಳುತ್ತಿರುತ್ತಾನೆ. ಅದು ಒಂದು ರೀತಿ ಸಮಾನಾಂತರವಾಗಿ ನಡೆಯುವ ಪ್ರಕ್ರಿಯೆ. ಹೀಗೆ ಬೆಳೆಯುತ್ತ ಹೋಗುವ ಅಂಕಣಕಾರ ಮತ್ತು ಓದುಗನ ಸಂಬಂಧ ಪರಸ್ಪರ ಕೊಟ್ಟು ಪಡೆಯುವಂಥದ್ದು. ಹೀಗಾಗಿಯೇ ನಾನು ಅಂಕಣಗಳನ್ನು ಬೆರಗಿನಿಂದಲೇ ಓದುತ್ತೇನೆ. ಅವರು ಪ್ರತಿಬಾರಿಯೂ ವಿಷಯಗಳನ್ನು ಹೆಕ್ಕಿ ತರುವ ರೀತಿ ಅದನ್ನು ಮಂಡಿಸುವ ರೀತಿಯನ್ನು ಗಮನಿಸುತ್ತಲೇ ಇರುತ್ತೇನೆ. ಹೀಗೆ ಕುತೂಹಲದಿಂದ ಗಮನಿಸುವುದು ಅನಿತಾ ನರೇಶ್ ಮಂಚಿಯವರ ಅಂಕಣವನ್ನು. + +ಅನಿತಾ ಯಾವತ್ತೂ ಅಂಕಣದ ವಸ್ತುವಿಗಾಗಿ ತಡಕಾಡುವವರೇ ಅಲ್ಲ. ಅವರದು ಬಹು ಸೂಕ್ಷ್ಮ ದೃಷ್ಟಿ. ಅವರ ಕಣ್ಣಿಂದ ಸಣ್ಣ ಸಣ್ಣ ಸಂಗತಿಗಳೂ ತಪ್ಪಿಸಿಕೊಳ್ಳಲಾಗದೆ ಅವರ ಬರಹಗಳಲ್ಲಿ ಹೊಸರೀತಿಯಲ್ಲಿ ಹೊಸ ಭಾವ ಹೊತ್ತು ಬೆರಗು ಮೂಡಿಸುತ್ತವೆ. ಅವರ ಅಂಕಣಗಳು ಬಹಳ ವಿಶಿಷ್ಟ ಎಂದೇ ನನಗೆ ಯಾವಾಗಲೂ ಅನ್ನಿಸುತ್ತಿರುತ್ತವೆ. ಬಹಳ ಮುಖ್ಯವಾಗಿ ಅವರು ಮಿಕ್ಕ ಅಂಕಣಕಾರರಿಗಿಂತ ಭಿನ್ನವಾಗಿ ಬರೆಯಲು ಪ್ರಯತ್ನಿಸುವುದಿಲ್ಲ. ಅವರೆಲ್ಲರಿಗಿಂತ ವಿಶಿಷ್ಟವಾಗಿ ಬರೆಯಲು ವಸ್ತುಗಳನ್ನು ಎಲ್ಲೆಲ್ಲಿಂದಲೋ ತಂದು ಗುಡ್ಡೆ ಹಾಕಿಕೊಳ್ಳುವುದಿಲ್ಲ. ತನ್ನ ಅಂಕಣದ ಬಗ್ಗೆ ವಿಶೇಷವಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲ. ತುಂಬಾ ಸಹಜವಾಗಿಯೇ ಅವರು ತನ್ನ ಸುತ್ತಮುತ್ತ ಕಾಣಸಿಗುವ ಸಂಗತಿಗಳನ್ನೇ ಅಂಕಣದಲ್ಲಿ ಬರೆಯುತ್ತಾರೆ. ಅರೆ ಹೌದಲ್ಲಾ ಎನ್ನಿಸುವಂತೆ. ಇದನ್ನು ನಾನೇಕೆ ಗಮನಿಸಿರಲಿಲ್ಲ ಎನ್ನುವಂತೆ. ಒಂದು ಅಂಕಣದಲ್ಲಿ ಹೀಗೆ ಬರೆಯುತ್ತಾರೆ ನೋಡಿ. + +“ರಾತ್ರೋರಾತ್ರಿ ಕಸವನ್ನು ತಂದು ಊರ ಹೊರಗೆ ಸುರಿಯುತ್ತಿದ್ದ ವಂಚಕರನ್ನು ಹಿಡಿದು ಆ ಕಸವನ್ನು ಮರಳಿ ಅವರ ವಾಹನಕ್ಕೇ ತುಂಬುವಂತೆ ಮಾಡಿ ಅವರನ್ನು ಓಡಿಸಿದ ಗ್ರಾಮಸ್ಥರ ಬಗ್ಗೆ ಪತ್ರಿಕೆಯಲ್ಲಿ ವರದಿಯೊಂದಿತ್ತು. ಆ ಕಸವನ್ನು ಅವರೇನು ಮಾಡಿರಬಹುದು? ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡಿರಬಹುದೇ? ಅಥವಾ ಇನ್ನೊಂದು ನಿರ್ಜನ ಪ್ರದೇಶವನ್ನು ಹುಡುಕಿ ಎಸೆದಿರಬಹುದೇ? ನಾವು ಯಾಕೆ ಹೀಗೆ?”ಗ್ರಾಮಸ್ಥರು ಓಡಿಸಿದ್ದರ ಬಗ್ಗೆ ಬರೆಯುವ ಪತ್ರಿಕೆಗೆ ಅದನ್ನು ಓದುವ ನಮಗೆ ನಂತರ ಆ ಕಸವೇನಾಯಿತು ಎಂಬ ಬಗ್ಗೆ ಯೋಚನೆ ಮೂಡುವುದಿಲ್ಲ. ಗ್ರಾಮಸ್ಥರ ಬಗ್ಗೆ ಖುಷಿ ಪಟ್ಟು ಕಸ ವಿಲೇವಾರಿ ಸರಿಯಾದ ರೀತಿಯಲ್ಲಿ ಆಗಬೇಕು ಎಂಬ ಮಾತೊಗೆದು ಸುಮ್ಮನಾಗುತ್ತೇವೆ. + +ಹೊರಗಿನ ಕಸದ ಬಗ್ಗೆ ಹೀಗೆ ಬರೆಯುವ ಸಮಸ್ಯೆಯ ಮೂಲಕ್ಕಿಳಿಯುವ ಅನಿತಾ ಮನದೊಳಗಿನ ಕಸವನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುವಲ್ಲೂ ಸಿದ್ಧ ಹಸ್ತರು. ತನ್ನ ಸುತ್ತಲಿನ ಜನರ ಕಾಳಜಿಯನ್ನು ಅರ್ಥಮಾಡಿಕೊಳ್ಳದೆ ಸುಖಾಸುಮ್ಮನೆ ಕೊರಗುವ ಸಂಕಟಕ್ಕೆ ಅವರು ಹೇಳಿದ್ದು ಹೀಗೆ-“ನಮ್ಮ ಇರುವಿಕೆಯೇ ಮುಖ್ಯ, ಅದಿಲ್ಲದೇ ಇದ್ದರೆ ಇಲ್ಲೇನೂ ನಡೆಯದು ಎಂಬುದು ನಮ್ಮ ಭಾವನೆ. ಇದು ಮನೆಯಲ್ಲಿ ಅಂತಲ್ಲ, ಎಲ್ಲ ಕಡೆಯೂ ನಡೆಯುವಂಥದ್ದೇ. ನಾವಿಲ್ಲದಿದ್ದರೂ ಪ್ರಪಂಚ ನಡೆಯುತ್ತದೆ ಎಂಬ ಸತ್ಯವನ್ನು ಹೊತ್ತುಕೊಂಡೇ ಕರ್ತವ್ಯ ನಿಭಾಯಿಸಿದರೆ ನಮ್ಮ ಅಹಂ ಕೊಂಚ ತಗ್ಗಬಹುದೇನೋ.” + +ನಡೆಯುವ ಘಟನೆಗಳನ್ನು ನೋಡುವ ರೀತಿಯೇ ಮುಖ್ಯ ಎಂಬುದು ಇವರ ನಿಲುವು. ಶಾಲೆಯ ಅಧ್ಯಾಪಕರು ಕೊಟ್ಟ ಸರ್ಪ್ರೈಸ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಅದಕ್ಕಾಗಿ ಅಧ್ಯಾಪಕರನ್ನೇ ದೂಷಿಸಿದಾಗ ಅವರು ಹೇಳುವ ಮಾತುಗಳು ಬದುಕಿಗೆ ಬಹುಮುಖ್ಯವೆನ್ನಿಸಿಬಿಡುತ್ತದೆ. + +“ಪರೀಕ್ಷೆಗಳು ಬಂದಾಗ ಓದಿ ಅದನ್ನು ಪರೀಕ್ಷೆಯ ದಿನ ಬರೆದು ಅಂಕ ಗಿಟ್ಟಿಸಿಕೊಳ್ಳುವುದೇ ಸಫಲತೆ ಅಲ್ಲ. ಪ್ರತಿದಿನ ಸನ್ನದ್ಧರಾಗಿರಬೇಕು ಎಂಬುದಕ್ಕೆ ಈ ಪರೀಕ್ಷೆ. ಬದುಕು ಯಾವ ಪರೀಕ್ಷೆಯನ್ನೂ ಮುಂಚಿತವಾಗಿ ಹೇಳಿ ಮಾಡುವುದಿಲ್ಲ. ಆಗ ಬರುವ ನಿಮ್ಮ ಮಾರ್ಕ್ ಗಳ ಮೇಲೆ ನಿಮ್ಮ ಜೀವನ ಹೇಗೆ ನಡೆಯುತ್ತದೆ ಎಂಬುದು ನಿರ್ಧಾರವಾಗುತ್ತದೆ. ನೀವು ಎಲ್ಲರೊಡನೆ ಹೇಗೆ ಕನೆಕ್ಟ್ ಆಗಿರುತ್ತೀರಿ ಎಂಬುದರ ಮೇಲೆ ಅಂಕಗಳು ಲಭಿಸುತ್ತ ಹೋಗುತ್ತವೆ” + +ಹೀಗೆ ಸಣ್ಣ ಪುಟ್ಟ ಘಟನೆಗಳನ್ನೇ ಅಂಕಣವಾಗಿಸುತ್ತಾ ಅವುಗಳೊಳಗೆ ಟೆಲಿಸ್ಕೋಪ್ ಇಟ್ಟು ಇದು ಮೇಲ್ನೋಟಕ್ಕೆ ಕಾಣುವ ಹಾಗಲ್ಲ.. ಇದರೊಳಗೆ ಹೀಗೂ ಇದೆ ನೋಡಿ ಎಂದು ತೋರಿಸುತ್ತಾ ಹೋಗುವ ಅನಿತಾ ಬರಹಗಳು ಬಹಳ ಸರಳವಾಗಿ ಕಂಡರೂ ಅದರೊಳಗೆ ಅವರು ಕಾಣಿಸುವ ಭಾವಗಳು ಸರಳವಲ್ಲವೇ ಅಲ್ಲ. ಒಂದೊಂದು ಅಂಕಣಗಳೂ ಕಾಡುತ್ತಲೇ ಇರುವಷ್ಟು ನಮಗೆ ಹತ್ತಿರವಾಗುತ್ತವೆ. + +ಕಥೆ ಬರೆಯುವ. ಲಲಿತ ಪ್ರಬಂಧಗಳನ್ನು ಲೀಲಾಜಾಲವಾಗಿ ಬರೆಯುವ (ಅನಿತಾ ನಮ್ಮ ಕನ್ನಡ ಸಾಹಿತ್ಯ ಜಗತ್ತಿಗೆ ದಕ್ಕಿದ ಸೊಗಸಾದ ಹಾಸ್ಯಪ್ರಜ್ಞೆ. ಅದು ಹಾಸ್ಯದ ಹೆಸರಿನ ಅಪಹಾಸ್ಯವಲ್ಲ. ಅದೊಂದು ದೃಷ್ಟಿಕೋನ. ಟಿ.ಸುನಂದಮ್ಮ , ಭುವನೇಶ್ವರಿ ಹೆಗಡೆಯವರ ನಂತರ ಅದೇ ಮಟ್ಟವನ್ನು ಕಾಯ್ದುಕೊಳ್ಳಬಲ್ಲ ಹಾಸ್ಯಲೇಖಕಿ ) ಒಮ್ಮೊಮ್ಮೆ ಮನಸ್ಸು ಬಂದಾಗ ಕವಿತೆಯನ್ನೂ ಬರೆದು ಹುಬ್ಬು ಹಾರಿಸುವ ಅನಿತಾ ಇವೆಲ್ಲವುಗಳನ್ನೂ ಮೀರುವಂತೆ ಒಬ್ಬ ಅದ್ಭುತ ಪ್ರಕೃತಿ ಶಾಸ್ತ್ರಜ್ಞೆ . ಅವರು ನಿಂತಲ್ಲೇ ಧ್ಯಾನಸ್ಥರಾಗುವಷ್ಟು ಮೈಮರೆಯುತ್ತಾರೆ ಪ್ರಕೃತಿಯಲ್ಲಿ. ಮೈಮರೆಯುವುದೆಂದರೆ ಕ್ಷಣ ಹೊತ್ತು ನಾವು ಜಲಪಾತದ ಮುಂದೆ ನಿಂತಂತೆ. ಆಗುಂಬೆಯ ಸೂರ್ಯಾಸ್ತ ನೋಡಿದಂತೆ ಅಲ್ಲ. + +“ಎಲ್ಲ ಕಡೆ ಚಳಿಗಾಲ ತನ್ನ ಚಾದರ ಹಾಸಿ ಪಶು ಪಕ್ಷಿ ಪ್ರಾಣಿಗಳನ್ನು ಗಡಗಡ ನಡುಗುವಂತೆ ಮಾಡುವ ಕಾಲ ಬಂದಾಗ ಹಕ್ಕಿಗಳು ಬೆಚ್ಚಗಿನ ವಾತಾವರಣ ಅರಸಿ ವಲಸೆ ಹೋಗುವುದು ಸಹಜ. ನಾವಿರುವ ದಕ್ಷಿಣ ಕನ್ನಡ ಜಿಲ್ಲೆ ಪ್ರದೇಶ ಕಡಿಮೆ ಚಳಿ ಹೊಂದಿದ ಕಾರಣ ಸಹಜವಾಗಿಯೇ ಚಳಿಗಾಲದಲ್ಲಿ ಎಲೆ ಕಳಚುವ ಮರಗಳ ಸಂಖ್ಯೆಯೂ ಕಡಿಮೆಯೇ. ಬೆಚ್ಚನೆಯ ಸ್ಥಳ ಅರಸಿ ಬರುವ ಹಕ್ಕಿಗಳಿಗೆ ನಮ್ಮೂರ ಹಸಿರುಕ್ಕುವ ಮರಗಳು ಆಕರ್ಷಣೀಯವಾಗಿ ಕಾಣಿಸುವುದರಲ್ಲಿ ಆಶ್ಚರ್ಯವಿಲ್ಲ. ಹತ್ತು ಹಲವು ಹಕ್ಕಿಗಳು ನಮ್ಮ ಕಡೆಗೆ ಹಾರಿ ಬರುತ್ತವೆ. ಒಂದಿಷ್ಟು ದಿನ ನಮ್ಮ ಪರಿಸರದಲ್ಲಿ ಕಾಣಿಸಿಕೊಂಡು ತಮ್ಮ ಕೆಲಸ ಮುಗಿದ ಕೂಡಲೇ ಮಾಯವಾಗುತ್ತವೆ. ಹಾಗೆ ಬರುವ ಹಕ್ಕಿಗಳಲ್ಲಿ ಇಂಡಿಯನ್ ಪಿಟ್ಟ (ನವರಂಗ) ಎಂಬ ಹಕ್ಕಿಯೂ ಒಂದು. ಹೆಚ್ಚಾಗಿ ಡಿಸೆಂಬರ್ ಜನವರಿಯಲ್ಲೇ ಕಾಣಿಸಿಕೊಳ್ಳುವ ಈ ಹಕ್ಕಿ ಈ ವರ್ಷ ಇನ್ನೂ ಕಾಣಿಸಿಲ್ಲ ಯಾಕೆ ಎಂಬ ಚಿಂತೆ ನನ್ನದಾಗಿತ್ತು. ಪರಿಸರದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳು ನಮ್ಮ ಕಣ್ಣಿಗೆ ಕಾಣಿಸದಿದ್ದರೂ ಪ್ರಾಣಿ ಪಕ್ಷಿಗಳು ಅದನ್ನು ಗ್ರಹಿಸುತ್ತವೆ. ಸುರಕ್ಷಿತ ಎಂಬ ಭಾವನೆ ಅವುಗಳಲ್ಲಿ ಮೊಳೆಯುವವರೆಗೂ ಯಾವುದೇ ಜಾಗವನ್ನು ತಮ್ಮದಾಗಿಸಿಕೊಳ್ಳವು. ನಾನು ನಮ್ಮ ಪರಿಸರದಲ್ಲಿ ಈ ಹಕ್ಕಿಯನ್ನು ಗುರುತಿಸಿ ನಾಲ್ಕು ವರ್ಷಗಳಾಗಿತ್ತು. + + + +ಛೇ ಈ ವರ್ಷ ಪಿಟ್ಟ ಕಾಣಲಿಲ್ಲ ಎಂದರೆ ನಮ್ಮ ಪರಿಸರ ಅದಕ್ಕೆ ಬೇಕಾದ ರಕ್ಷಣೆಯನ್ನು ಕೊಡುವಲ್ಲಿ ಸಫಲವಾಗಿಲ್ಲವೇನೋ ಎಂಬ ನೋವಿನೆಳೆ ನನ್ನೊಳಗೆ ಕಾಡತೊಡಗಿತ್ತು.” + +ಇದು ಅನಿತಾರ ಪರಿಸರ ಪ್ರೀತಿ. ಅವರು ಅದನ್ನು ಪ್ರತಿಕ್ಷಣ ಅನುಭವಿಸುತ್ತಾರೆ. + +ಹಿಂದೊಮ್ಮೆ ನಾನು ಅವರಿಗೆ ಅಡಿಗರ ಸಾಲನ್ನು ಮೈಮರೆತು ಹೇಳುತ್ತಿದ್ದಾಗ ನಡುವೆಯೇ ಕತ್ತರಿಸಿ “ಯಾರು ಹೇಳಿದ್ದು ತೇಗಕ್ಕೆ ಹೂವಿಲ್ಲ ಎಂದು? ಉಂಟು ” ಎಂದಿದ್ದರು. ಅದರಿಂದ ಉಪಯೋಗವಿಲ್ಲ ಎಂದೇನಾದರೂ ಅಡಿಗರು ಹೇಳಿರಬಹುದೇ ಎಂದು ನಾನು ಅನುಮಾನಿಸುತ್ತಿದ್ದಾಗ ಬಹಳ ಸ್ಪಷ್ಟವಾಗಿ ಒಂದು ಮಾತು ನುಡಿದಿದ್ದರು. “ನಮಗನ್ನಿಸಬಹುದು ಹಾಗೆ. ಆದರೆ ಪ್ರಕೃತಿಯ ಯಾವ ವಸ್ತುಗಳೂ ನಿರುಪಯೋಗಿಯಲ್ಲ . ಅವುಗಳ ಮಟ್ಟಿಗೆ ಅವು ಪ್ರಯೋಜನಕಾರಿಯೇ. ನಮಗೆ ಉಪಯೋಗವಿಲ್ಲ ಎಂದ ಮಾತ್ರಕ್ಕೆ ಅವು ಉಪಯುಕ್ತವಲ್ಲ ಎಂದು ಭಾವಿಸಬಾರದು ಎಂದೇ ಅಡಿಗರು ಹೇಳಿರಬಹುದು”. ಅಂತಹುದೇ ಮಾತನ್ನು ತಮ್ಮ ಇತ್ತೀಚಿನ ಅಂಕಣದಲ್ಲಿ ಬರೆದಿದ್ದಾರೆ. + + + +“ಪರಿಸರವನ್ನು ಇದ್ದಂತೆ ಉಳಿಸಿಕೊಳ್ಳುವ ಪ್ರಯತ್ನ ಮಾಡೋಣ. ಈ ನೀರು ಈ ಗಾಳಿ ಈ ನೆಲ ನಮ್ಮದೆಷ್ಟೋ ಅಷ್ಟೇ ನಮ್ಮ ಸಹವಾಸಿಗಳಾದ ಇತರ ಜೀವಿಗಳದ್ದು ಕೂಡ. ಆ ಸತ್ಯವೇ ಆನಂದದ ಮೂಲ.” + +ಇದು ಬದುಕಿಗೆ ಬೇಕಾದ ದೃಷ್ಟಿಕೋನ. ಆರೋಗ್ಯಕರವಾದದ್ದು ಕೂಡ. ಅನಿತಾ ಬರೆದ ಈ ಅಂಕಣಗಳನ್ನೊಳಗೊಂಡ ಶ್ರೀನಿವಾಸ ಪುಸ್ತಕ ಪ್ರಕಾಶನ ಪ್ರಕಟಿಸುತ್ತಿರುವ “ಮಹತಿ” ಈ ನವೆಂಬರ್ ಇಪ್ಪತ್ತೈದನೇ ತಾರೀಕಿನಂದು ಅವರ ಸ್ವಗೃಹದಲ್ಲೇ ಬಿಡುಗಡೆಯಾಗಲಿದೆ. ಜೊತೆಜೊತೆಗೆ ಅವರ “ನೈಲಾ” ಕಥಾಸಂಕಲನವೂ. ಇದು ನಿಜಕ್ಕೂ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_445.txt b/Kenda Sampige/article_445.txt new file mode 100644 index 0000000000000000000000000000000000000000..5096f1c9dbf942be19f9e4fd300b8d0aaea24685 --- /dev/null +++ b/Kenda Sampige/article_445.txt @@ -0,0 +1,35 @@ + + +ಪಾಳಯಗಾರರ…. ಆಳ್ವಿಕೆಯ ಕುರುಹನ್ನು ನಮ್ಮ ಸೀಮೆಯಾದ ಸುಳ್ಯ ಕೆರೆಮೂಲೆ ಪನ್ನೆಯಲ್ಲಿ ಇರುವ ಅರಮನೆಗಳ ಕಟ್ಟೋಣಗಳ ಆಸ್ತಿವಾರಗಳಿಂದ ತಿಳಿಯಬಹುದು. ಅಲ್ಲಿಯೇ ನಮ್ಮ ಸೀಮೆಯ “ಹಿರಿಯ” ಸ್ಥಾನವಾದ “ಬೀಡು” ಎಂಬ ಕಟ್ಟೋಣವು ಈಗಲೂ ಇದೆ. + +ಅಲ್ಲಿ ವರುಷಕ್ಕೊಮ್ಮೆ “ಮಿತ್ತೂರ್ನಾಯರ” ದೈವದ ಭಂಡಾರವು ಶ್ರೀ ಚೆನ್ನಕೇಶವ ದೇವಳ ಜಾತ್ರೆಗೆ ಬರುತ್ತದೆ. ಆ ಜಾತ್ರೆಯು ಧನುರ್ಮಾಸ ಹದಿನೆಂಟರ ಲಾಗಾೈತು (ಅಂದರೆ ಜನವರಿ ತಿಂಗಳ ತಾ. 7) ಇಪ್ಪತ್ತೇಳರವರೆಗೆ ಜರಗುತ್ತದೆ. ಆ ಮಧ್ಯ ಧನುರ್ಮಾಸ ಇಪ್ಪತ್ತೈದರಲ್ಲಿ ನಡೆಯುವ ವಾಲೆಸರಿ ದಿವಸ ಬಂದು ರಾತ್ರೆ ಅದೇ ಬೀಡಿನಲ್ಲಿ ತಂಗಿ ಮರುದಿನ ನಡೆಯುವ ದರ್ಶನದ ಬಲಿಗೆ ಸೇರುತ್ತದೆ. ಅದೇ ಬೀಡಿನಿಂದಲೇ ಕೊಡಗು ಸೀಮೆಯ ಮಹಾರಾಜರ ಕಿಸ್ತು ಮುಹೂರ್ತಾಚರಣೆ (ಪೊಗದಿ ಯಾನೆ ಕಂದಾಯ) ವರುಷಕ್ಕೊಮ್ಮೆ ಕಟ್ಟುತ್ತಿದ್ದರು. ಅಲ್ಲಿಂದಲೇ ಈ ಕಥೆಗೆ ಕಾರಣವಾದ “ಕಲ್ಯಾಣಪ್ಪನ ಕಾಟುಕಾಯಿ” ಎಂಬ ಸಣ್ಣದೊಂದು ದಂಗೆಯು ಎದ್ದಿತ್ತು.ಅದು ಸಾಲಿಯಾನ 1837ನೆಯ ಇಸವಿಯ ರಾಕ್ಷಸ ಸಂವತ್ಸರದ ಧನುರ್ಮಾಸ (ದಶಂಬರ ತಿಂಗಳು)ದಲ್ಲಿ ನಡೆಯಿತು. ಈ ಕಥೆಯನ್ನು ಸಮೂಲವಾಗಿ ಸರಕಾರವಾಗಲೀ ಯಾರೂ ಬರೆಯಲಿಲ್ಲ. ಕೊಂಚ ವಿವರಣೆಯನ್ನು ಮಾತ್ರ ಕೊಡಗು ಚರಿತ್ರೆಯ ಪುಸ್ತಕದಲ್ಲಿ ಬರೆದಿರುವರು. ಇನ್ನೂ ಸ್ವಲ್ಪ ಹೆಚ್ಚಾಗಿ ಮಡಿಕೇರಿ ಹೈಸ್ಕೂಲು ಉಪಾಧ್ಯಾಯರು ಒಂದು ಸಣ್ಣ ಪುಸ್ತಕವನ್ನು ಬರೆದಿರುವರು. ಈ ದಂಗೆಯ ನಂತರವೇ 1857ರಲ್ಲಿ ಸಿಪಾಯಿ ದಂಗೆಯೊಂದು ಎದ್ದಿತ್ತು. ಆ ಮೇಲೆಯೇ ನಮ್ಮ ಅಹಿಂಸಾ ಸ್ವಾತಂತ್ರ್ಯ ಸಮರದ ಫಲರೂಪವಾಗಿ ಇಂದಿಗೆ ಸ್ವರಾಜ್ಯ ಪ್ರಾಪ್ತಿಯಾಯಿತೆನ್ನುವುದು ಹೆಮ್ಮೆಯ ಮಾತು. + +ಸರಕಾರವು ಮಾತ್ರ ಇದನ್ನು ಸಣ್ಣದೊಂದು ಬಂಡಾಯವೆಂದು ಹೀನೈಸಿದರೂ ನಮ್ಮೂರ ಗೌಡ ಗಂಡಾಳುಗಳಿಂದ ಹದಿನೇಳು ದಿನಗಳ ಪರಿಯಂತರ ಪಂಚಪಾಡಿಗೆ ಬಂದಿತ್ತು. ಕಲೆಕ್ಟರನು ಸಮುದ್ರ ಹಾರಿ ಉಪ್ಪು ನೀರೇ ಕುಡಿದನು. ನಾಡೇ ನಡುಗಿತು. ಹದಿಮೂರು ದಿವಸ ನಿಶಾನಿ ಏರಿಸಿ ಬಾವಟೆ ಗುಡ್ಡೆಯಲ್ಲಿ ರಾಜ್ಯವಾಳಿದರು. ನಾಡಜನಾಂಗವು ನಾನಾ ಯಾತನೆ ಅನುಭವಿಸಿತು. ಗೌಡ ಜನಾಂಗವು ಅನೇಕ ಶಿಕ್ಷೆಗೆ ಗುರಿಯಾಯಿತು. ನಮ್ಮ ಕಥಾನಾಯಕ ಕಲ್ಯಾಣಪ್ಪನೂ ಇನ್ನಿತರರೂ ಮರಣದಂಡನೆಗೆ ಗುರಿಯಾದರು. ನಿಜವಾದ ಕಲ್ಯಾಣ ಸ್ವಾಮಿಯು ಬದುಕಿಕೊಂಡನು. ಇದೇ ಕಥಾ ಗುರಿಯು. ಕಥಾಧೋರಣೆಯು ಹೇಗಿದ್ದರೂ ಈ ಕಥೆಯ ಮುಖ್ಯೋದ್ದೇಶವು ಮಾತ್ರ ಬೇರೆಯೇ ಇತ್ತು. ಅಲ್ಲದೆ ಬ್ರಿಟಿಷ್ ಸರಕಾರದ ಆಡಳಿತೆಯ ದಬ್ಬಾಳಿಕೆಯನ್ನು ಅಣಗಿಸುವುದಕ್ಕೂ ಅಲ್ಲ, ಸ್ವಾತಂತ್ರ್ಯಾಭಿಲಾಷೆಗೂ ಅಲ್ಲ, ಶಕ್ತಿ ಪ್ರದರ್ಶನಕ್ಕೂ ಅಲ್ಲ, ಸಮಾಜದ್ರೋಹಿಯ ಶಾಸನಕ್ಕಾಗಿ ಉಂಟಾಯಿತು. + +ಆ ಕಾಲದಲ್ಲಿ ನಮ್ಮ ಈ ನಾಡು ಕೊಡಗು ರಾಜನ ಆಳ್ವಿಕೆಗೆ ಸೇರಿತ್ತು. ಆದರೆ ಕೊಡಗು ವೀರರಾಜೇಂದ್ರನಿಗೆ ನಮ್ಮ ಪ್ರಾಂತವು ಸೇರಿದುದಲ್ಲ. ಟಿಪ್ಪುವು ಕೊಡಗು ವೀರರಾಜೇಂದ್ರನಿಂದ ದೊರೆತ ಸಹಾಯಕ್ಕಾಗಿ ನಮ್ಮ ಚಂದ್ರಗಿರಿ ಪರಿಯಂತದ ಸೀಮಾ ಭೂಮಿಗಳನ್ನು ಉಚಿತವಾಗಿ ಕೊಟ್ಟಿದ್ದನು. ಸ್ವತಃ ದಬ್ಬಾಳಿಕೆಶಾಹಿಯಾದ ರಾಜನ ಆಳ್ವಿಕೆಯನ್ನು ಮತ್ತೆ ಹೇಳುವುದೇನು? ಪರಿಣಾಮವು ಮಾತ್ರ ಸುರೆ ಕುಡಿದ ಮರ್ಕಟನಂತಾಯಿತು. ವೀರರಾಜನು ಲಿಂಗಾಯತ ವಂಶಸ್ಥನು. ಶಾಸ್ತ್ರ ಪಂಡಿತನು, ದೃಢಕಾಯನು, ದೈವಭಕ್ತನು, ಧರ್ಮಜ್ಞನೂ ಆಗಿದ್ದನು. ಅವನಿಗಿದ್ದ ಕೊರತೆಯು ಮಾತ್ರ ಕಾಮಲೋಲುಪತೆ. ಪರಸ್ತ್ರೀ ಜಾರನು ಆಗಿದ್ದನು. ಇವನು ಎಷ್ಟೋ ಮಂದಿ ತರುಣಿಯರನ್ನು ವಿವಾಹವಾಗಿರುವನು. ಬಹುಭಾರ್ಯೆಯರೆಂಬ ಪ್ರತೀತಿಯಿದೆ. ಮೊಗಲಶಾಹಿಯಲ್ಲಿ ತಲೆಯೆತ್ತಿದ ಘೋಷಾ ಪದ್ಧತಿಯು, ಬಾಲ್ಯ ವಿವಾಹ ಕಟ್ಲೆಯೂ ಇವನ ಕಾಲದಲ್ಲಿ ಮತ್ತಷ್ಟು ಮಿರುಗು ಕೊಟ್ಟಿತು. ಆತನ ನ್ಯಾಯ ತೀರ್ಮಾನ ಕ್ರಮವೂ ಬಹಳ ವಿಚಿತ್ರವಿತ್ತು. ಆಪಾದಿತರು ಅವರವರೇ ಆತನ ಶಿಕ್ಷೆಗೆ ಹೆದರಿ ತಮ್ಮ ತಮ್ಮ ಬಾಯಿಯಿಂದಲೇ ಸತ್ಯಸತ್ಯವೇ ನುಡಿಯುತ್ತಿದ್ದರು. ಇದರಿಂದ ನ್ಯಾಯದ ಬದಲಿಗೆ ಅನ್ಯಾಯವು ಎಷ್ಟೋ ನಡೆದಿದೆ. + +ಶಿಕ್ಷೆಗಳಲ್ಲಿ ಪ್ರಾಮುಖ್ಯವಾದವುಗಳು :ಭಯಂಕರ ಶಿಖರವಾದ ಕುಂದ್ರುಮೊಟ್ಟೆಯೆಂಬ ಬೆಟ್ಟದಿಂದ ದೂಡಿಸಿ ಹಾಕುವುದು, ಕಾಡು ನೊಣವನ್ನು ಹೊಟ್ಟೆಗೆ ಕಟ್ಟಿಸುವುದು, ಮೂತ್ರ ದ್ವಾರಕ್ಕೆ ಕಡ್ಡಿ ತುರುಕಿಸುವುದು, ಕಿವಿ ಮೂಗು ಮೊಲೆಗಳನ್ನು ಕತ್ತರಿಸುವುದು, ಲಿಂಗಛೇದನ ಪಡಿಸುವುದು, ಕೊರಡೆ ಹೊಡಿಸುವುದು, ಇತ್ಯಾದಿ… ಇತ್ಯಾದಿ ಭಯಂಕರ ಶಿಕ್ಷೆಗಳನ್ನು ಕೊಡಿಸುತ್ತಿದ್ದನು. ಈತನ ಕಾಮವಾಸನೆ ಸಲುವಾಗಿಯೇ ಅನೇಕ ಭೂಮಿಗಳು, ಜಮ್ಮ, ಜಹಗೀರ್ ಆಗಿ ಹೋಗಿದ್ದವು. ಅದು ಈಗಲೂ ತಿಳಿಯುತ್ತಿದೆ. + + + +ಆ ಕಾಲವು ಈಸ್ಟ್ ಇಂಡಿಯಾ ಕಂಪೆನಿ ಸರಕಾರದ ಅಧಿಕಾರಕ್ಕೆ ಒಪ್ಪಿತ್ತು. 1779ರಲ್ಲಿ ಟಿಪ್ಪುವನ್ನು ಕೊಂದ ಬಳಿಕ ರಾಜನು ಬ್ರಿಟಿಷರೊಡನೆ ಒಂದು ಒಪ್ಪಂದವನ್ನು ಮಾಡಿಕೊಂಡು ಕೊಡಗು ರಾಜ್ಯವನ್ನು ಆಳುತ್ತಿದ್ದನು. ಕೊಡಗು ರಾಜನ ದಬ್ಬಾಳಿಕೆಯು ಮಾತ್ರ ಪ್ರಜೆಗಳನ್ನು ದಂಗು ಬಡಿಸಿತು. ಅನಾಚಾರಗಳು ಅತಿಯಾಗಿ ನಡೆಯುತ್ತಿದ್ದವು. ಏನಾದರೂ ಬ್ರಿಟಿಷ್ ಸರಕಾರಕ್ಕೆ ಸರಿಯಾದ ವರ್ತಮಾನಗಳು ಸಿಕ್ಕುತ್ತಿರಲಿಲ್ಲ. ತನ್ನ ಆಡಳಿತೆಯ ಯಾವ ಸುಳುವೂ ಸಿಕ್ಕಬಾರದೆಂದು ರಾಜನ ಬಲವಾದ ಪ್ರತಿಬಂಧವೂ ಇತ್ತು. ಏನಾದರೂ ಸಣ್ಣ ಪುಟ್ಟ ದೂರುಗಳು ಬ್ರಿಟಿಷರಿಗೆ ದೊರೆತರೂ ರೆಸಿಡೆಂಟನು ಸುಮ್ಮನಿದ್ದನು. ಹೀಗಾಗಿ ಪ್ರಜೆಗಳು ನಾನಾ ಬಗೆಯ ಪೀಡನೆಗೆ ಗುರಿಯಾಗುತ್ತಿದ್ದರು. + +ಹೆಚ್ಚೇನು? ಸ್ವತಃ ಪಟ್ಟಾಧಿಕಾರಿಣಿಯಾದ ದೇವಮ್ಮಾಜಿಯೇ ಸಹಿಸಲಿಲ್ಲ. ಇದಕ್ಕಾಗಿ ದೇವಮ್ಮಾಜಿಯೂ, ಮಹದೇವಮ್ಮಾಜಿಯೂ ಅಪ್ಪುಕಳವೆಂಬಲ್ಲಿ ವಾಸಮಾಡುತ್ತಿದ್ದರು. ದುರಾಚಾರಿಯ ದುರ್ವಾಸನೆಯು ದಿನೇ ದಿನೇ ಅಭಿವೃದ್ಧಿಯಾಗುತ್ತಲೇ ಇತ್ತು. ಇದನ್ನು ಸಹಿಸಲಾರದೆ ರಾಜ್ಯಪತನವೆಂದು ತಿಳಿದರೂ ಅದೇ ದೇವಮ್ಮಾಜಿಯು ಕಂಪೆನಿ ಸರಕಾರಕ್ಕೆ ದೂರುಕೊಟ್ಟಳು. ಆಗಲೇ ಬ್ರಿಟಿಷರು ಕಣ್ಣು ತೆರೆದುದು. ಅದೇ ನೆವನದಿಂದ ಕೊಡಗು ರಾಜನನ್ನು ಪದಚ್ಯುತನನ್ನಾಗಿ ಮಾಡಿ ಇಂಗ್ಲಿಷ್ ಸರಕಾರವು ರಾಜ್ಯಭಾರಕ್ಕುಪಕ್ರಮಿಸಿತು. ಕೊಡಗು ಮಹಾರಾಜನೆಲ್ಲಿಯೋ ತಲೆಮರೆಸಿಕೊಂಡು ತನ್ನ ಸಂತತಿಯು ಸಹ ಕಾಲವಾದನೆಂದು ತಿಳಿಯುತ್ತದೆ. ಹೀಗೆ ಒಂದು ರಾಜಸಂತತಿಯು ಅವಸಾನವನ್ನು ಹೊಂದಿತು. ಆದರೆ ರಾಜ್ಯಗಳಲ್ಲಿ ಸರಿಯಾದ ಶಿಸ್ತುಗಳಿಲ್ಲದ ಕಾಲವಾದುದರಿಂದ ಕೊಡಗು ಕರಣಿಕನಾದ ಲಕ್ಷ್ಮೀನಾರಾಯಣನ ಪ್ರತಿಷ್ಠಾಕಾಲವಾಗಿತ್ತು. + +ಇದೇ ಕಾಲದಲ್ಲಿ ನಮ್ಮ ಕಥಾನಾಯಕನಾದ ಅಟ್ಲೂರು ದೊರೆ ರಾಮಪ್ಪಯ್ಯನು ಮೊಗಲ್ ಶಾಹಿ ದರಬಾರವನ್ನೇ ನಡೆಸುತ್ತಿದ್ದನು. ಗೌಡ ಜನಾಂಗಕ್ಕಂತೂ ಆಗರ್ಭ ವಿರೋಧಿಯಾಗಿದ್ದನು. ಜನರೆಲ್ಲಾ ಅವನನ್ನು ಅಟ್ಲೂರು ದೊರೆಯೆಂದು ಸಂಬೋಧಿಸಬೇಕಾಗಿದ್ದಿತು. ವಾತಾವರಣವು ಅದಕ್ಕನುಕೂಲಿಸಿಯೇ ಇತ್ತು. ಕೊಡಗು ಕರಣಿಕ ಲಕ್ಷ್ಮಿನಾರಾಯಣನು ಇವನ ಸೋದರ ಅಣ್ಣನಾಗಿದ್ದನು. ಅವರ ವಾಸ್ತವ್ಯದ ಮನೆತನವು ನಮ್ಮ ಸೀಮೆಯ ಅಜ್ಜಾವರ ಗ್ರಾಮದಲ್ಲಿತ್ತು. ಅವರು ಬಹಳ ಐಶ್ವರ್ಯವಂತರಾಗಿದ್ದರು. ದೊಡ್ಡ ಅನುಕೂಲಸ್ಥರೆಂಬ ಪ್ರತೀತಿಯಿತ್ತು. ಇವರಿಗಿದ್ದ ಮನೆತನದ ದಿವಾನ್ ಗಿರಿಯು ಹೈದರನ ಕಾಲದಲ್ಲೇ ಇತ್ತೆಂದು ತಿಳಿಯುತ್ತದೆ. ಹಾಗಾಗಿ ಕೊಡಗು ದೇಶದೊಡನೆ ಬಂದ ಪದವಿಯಾಗಿದ್ದಿತು. + +ಈ ಕಾರಣಗಳಿಂದಲೇ ಅಟ್ಲೂರು ರಾಮಪ್ಪಯ್ಯನನನ್ನು ವಿಚಾರಿಸುವಷ್ಟು ಎದೆಗಾರಿಕೆಯು ಯಾರಿಗೂ ಇರಲಿಲ್ಲ. ವಿಚಾರಿಸಿದರೂ ಕೂಡ ತಮ್ಮ ಸಾವನ್ನು ತಾವು ಬಯಸಿದಂತೆಯೇ ಸರಿ. ಇಷ್ಟರಲ್ಲೂ ಆತನು ಗೌಡ ಜನಾಂಗಕ್ಕೆ ತುಂಬಾ ಕೋಟಳೆಗಳನ್ನು ಕೊಡುತ್ತಿದ್ದನು. ರಿಜಿಸ್ತ್ರಿ ಕರಾರುಗಳಿಲ್ಲದೆ ಆ ಕಾಲವಾದುದರಿಂದ ಅನೇಕ ಜನರು ಆತನಿಗೆ ಶರಣು ಹೊಡೆಯುತ್ತಿದ್ದರು. ಕೇಳಿದಂತೆ ಭೂಮಿಗಳನ್ನು ಬರೆದು ಕೊಡುತ್ತಿದ್ದರು. ಕೆಲವರನ್ನು ಬಚ್ಚಲ ಹಿಂಬದಿ ಕೊಂಡು ಹೋಗಿ ಹೊಡೆದು ವಾಲೆಗರಿಗಳಿಗೆ ಕೈಮುಟ್ಟಿಸುತ್ತಿದ್ದನು. ಸರಿ. ಅಷ್ಟೇ ಆ ಕಾಲಕ್ಕೆ ಸಾಕಾಗಿತ್ತು. ಬರಕೊಡುವವನ ಮೂರು ಗೆರೆಯೆಂದರೆ ಅದೇ ರಿಜಿಸ್ತ್ರಿಯು. ಆತನಲ್ಲಿ ವಾದ ಮಾಡಲಿಕ್ಕೆ ಯಾರಿಗೂ ಎದೆಗಾರಿಕೆಯೂ ಸಾಲದು. ಕೊಡಗು ರಾಜನು ಈ ವಿಷಯಗಳಾವುದನ್ನು ವಿಚಾರಿಸುತ್ತಿರಲಿಲ್ಲ. + +ಮೂಲಿ ನಂಬ್ರ …….ನೇ ವರ್ಗದ ಬಾಬ್ತು ಬಂದ ತೀರ್ವೆ ಹಣವೆಂದರೆ ಮುಗಿಯಿತು. ಹಾಗಾಗಿ ತುಂಬಾ ಭೂಮಿಗಳು ಕರಣಿಕರ ಕುಟುಂಬಕ್ಕೆ ಬಂದಿದ್ದವು.ಈತನ ಪತನಕ್ಕಾಗಿಯೇ ಈ ಕಾಟುಕಾಯಿಯೆಂಬ ದಂಗೆಯು ಉಂಟಾಯಿತು. ಗೌಡ ಜನಾಂಗವಂತೂ ನಿರಕ್ಷರ ಕುಕ್ಷಿಗಳೇ ಆಗಿದ್ದರು…. ಆದರೆ ಎದೆಗಾರಿಕೆಯುಳ್ಳವರು ದೃಢಕಾಯರು, ಗಂಡಾಳುಗಳು, ಶಕ್ತಿವಂತರು, ಆಜಾನುಬಾಹುಗಳು, ಕೆಂಗಣ್ಣು ಹುರಿಮೀಶೆಯವರು ಆಗಿದ್ದರು. ಹೀಗಿದ್ದ ಯೋದ್ಧತನವೇ ಇವರನ್ನು ಹಿಂದು ಮುಂದನ್ನರಿಯದ ಇಂಥಾ ದಂಗೆಗೆ ದೂಡಲ್ಪಟ್ಟಿತು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಮುಂದಾಗಿ ದೈನಂದಿನ ವಿರೋಧಿಯಾಗಿದ್ದ ಅಟ್ಲೂರು ದೊರೆ ರಾಮಪ್ಪಯ್ಯನನ್ನೇ ಹಿಡಿದರು. ಚಿತ್ರಹಿಂಸೆಗಳನ್ನೇ ಮಾಡಿದರು. ಈ ದಂಗೆಯ ಕಾರ್ಯಕ್ಕೆ ಅನುಮೋದಿಸಿದ ಕೊಡಗರು ಬಾರದುಳಿದರು. ಇವರು ಸತ್ತರು. ಕೊತ್ತಳಿಂಗೆ ಬಾಣದವರೆಂಬ ಬಿರಿದು ಮಾತ್ರ ನಮ್ಮ ಅಮರ ಸುಳ್ಯದ ಈ ಸೀಮೆಗೆ ದೊರಕಿತು. + +ಈ ಕಥೆಯನ್ನು ನಾನು ಪುರಾತನ ಹರಕು ಮುರುಕು ಸಾಹಿತಿಗಳು ಬರೆದ ಯಕ್ಷಗಾನ ಪುಸ್ತಕದ ಆಧಾರದಿಂದಲೂ, ವಯೋವೃದ್ಧರ ಪುರಾಣ ಪರಿಚಯದಿಂದಲೂ, ನನ್ನ ಸ್ವಂತ ತಿಳುವಳಿಕೆಯಿಂದಲೂ ಮೂಲಕಥೆಯು ಹುಟ್ಟಡಗಬಾರದೆಂದು ಯಕ್ಷಗಾನ ರೂಪವಾಗಿ ಬರೆದೆನು. ಈ ಕೃತಿಗೆ ಬಹಳಮಟ್ಟಿಗೆ ಪ್ರೋತ್ಸಾಹ ಹಾಗೂ ಆಶೀರ್ವಾದವನ್ನು ದಯಪಾಲಿಸಿದ ಶ್ರೀಮಾನ್ ರಾಷ್ಟ್ರಕವಿಗಳು ಯಂ. ಗೋವಿಂದ ಪೈಗಳ ಸನ್ನಿಧಿಗೂ, ಹೊಸ ಪ್ರೋತ್ಸಾಹವನ್ನಿತ್ತು ಈ ಕೃತಿಯನ್ನು ಅಚ್ಚು ಹಾಕಿಸಲೇಬೇಕೆಂದು ಇದರ ಸಂಬಂಧವಾಗಿ ಬರೆದ ಕಾದಂಬರಿಯ ಮೂಲ ತಾತರು ಶ್ರೀಮಾನ್ ನಿರಂಜನರವರ ಚರಣಕ್ಕೂ ಅರ್ಪಿಸಿರುವೆನು. + +ಕೆಲವು ಪದ್ಯಭಾಗಗಳು:1. ಕಲ್ಯಾಣಪ್ಪನ ಸೇನೆಯ ನೀತಿಸಂಹಿತೆ:“ಶರಣಾಗುವವರನು ಬಿಡಬೇಕು | ವಿಪ್ರ | ವರರ ಚೇಷ್ಟೆಯು ಬಹು ಕೆಡಕಕ್ಕು | ತರವರಿದೆಲ್ಲರ ಸುಲಿಬೇಕು | ಹೆಂಗ | ಳರನೆಲ್ಲರ ಮುಟ್ಟಾದೆ ಬಿಡಬೇಕು || 5 || ಹೆಂಡವ ಕುಡಿಯಬೇಡೆಂದರು | ದುಡ್ಡು | ದೆಂಡವ ಮಾಡದಿರೆಂದರು | ಭಂಡು ಸೂಳೆಯ ಸಂಗ ಒಳಿತಲ್ಲ | ನಾವು | ಗಂಡುತನದಿ ಪೋಪುದೆಂದೆಲ್ಲ|| 6 ||”2. ಸೇನೆಯ ದುಂಡಾವರ್ತಿಯ ವರ್ಣನೆ:“ಕಾಸರಗೋಡಿಗೆ ಬಂದು | ಆ | ಫೀಸಿನ ಕೋಣೆಯೊಳಂದು | ತಾಸಿಲ್ದಾರನ | ಹಿಡಿದರು ಬಡಿದರು | ಮೀಸಲುಹಣ ಖ | ಜಾನೆಯ ಮುರಿದರು || 1 || ಹನ್ನೆರಡೂ ಸಾವಿರದ | ಹಣ | ವನ್ನವರೂ ಅಲ್ಲಿಂದ | ಬೆನ್ನಿಗೆ ಬಾಸುಂ | ಡೆಯ ಕೈಕಟ್ಟುತ | ಬನ್ನಿಯ ಮರದೊಳು | ತೂಗಿದರಳಲು || 2 || ಬಡಿಯುತಲಾ ಹರದರನೂ | ಹಿಡಿ | ಹಿಡಿಯುತಲಾ ಹೆಂಗಳನು | ಮುಡಿ ಮೂಗೆಳೆದರು | ಕಿವಿಗಳ ಕೊೈದರು | ಮಿಡುಕಿದ ಗಾಳದ | ಕೊಂಕಣರಿಂದ || 3 || ಪಳ್ಳಿಯೊಳೂ ನಲಿದಾಡಿ ಅವ | ರಲ್ಲಿಯ ಮುಕ್ರಿಯ ನೋಡಿ | ಹಲ್ಲನು ಮುರಿದರು | ಸೆಳೆದರು ಬಡಿದರು | ಗಲ್ಲಿ ಗಡರಿಗರ | ಬಡಿಯುತ ನಡಿಯುತ || 4 ||3. ಮಂಗಳೂರನ್ನು ವಶಪಡಿಸಿಕೊಂಡ ಸನ್ನಿವೇಶದ ವರ್ಣನೆ:ಬಂದರಾ ಮಂಗ್ಳೂರಿಗಾಗುತ | ಬಂದರಾಗ ||ಪ|| ಬಂದರಾ ಕಲ್ಗುಟಿಕರಂದದಿ | ಮುಂದೆ ಯುದ್ದಾರದೊಳು ಪಳ್ಳಿಯ | ನಂದು ಕೆಡಿಸುತ ಮಾಪಿಳೆಯರ ಸತಿ | ವೃಂದಕಪಮಾನದೊಳು ಕೆತ್ತಿದ | ದರಂದು ಕಿವಿಮೂಗುಗಳನೆಲ್ಲವ | ಚಂದವಾಯ್ತೆಂದೆನುತ ನಗುತಲಿ | ಬಂದು ಬಂದಲ್ಲಿಂದ ಬಡಿಯುತ | ಮುಂದೆಯೂರೊಳಗಾರ್ಭಟೀಸುತ || ಬಂ|| 1|| ಹರದರೊಂದಾಯ್ತಂದು ನಮ್ಮನು | ಪೊರೆವರ ಸೇರಲಿಕೆ ಗುಪ್ತದಿ | ನೆರಹಿಸುತ ಗಂಡಾಳು ಸಾವಿರ | ದೆರಡು ನೂರನು ಮಾಡಿಕೊಳುತಲಿ | ಸರಿದು ಬರೆ ಹಿಂದಿಂದ ಪಾಕಿಮ | ರರಿಯದಂದದಿ ಹಗೆಯ ಸಾಧಿಸಿ | ಬರಲು ಉಳ್ಳಾಲದೊಳು ಇನ್ನೂ |ರಿರದೆ ಹೊಳೆಬದಿ ಕಾಯುತೀರ್ದರು ||ಬಂ||2|| ಮುಂದೆ ನಂದಾವರದಿ ಲೂಟಿಯ | ನಂದು ಮಾಡುತ ಕಂಕನಾಡಿಯ | ಮುಂದಕಿರುತಿಹ ಕ್ರಿಶ್ಚನೀಯರ |ಚಂದಗೆಡಿಸಿದವರಿಗರ್ಜಿಗೆ | ಬಂದು ಗುರುವಿನ ಗಡ್ಡ ಹಿಡಿದೆಳ | ದಂದು ನಾನಾವಿಧ ಕೋಟಳೆ | ಇಂದ ಬಹುದಿಕ್ಕುಗಳಿಗೋಡಿತು | ಮಂದಿ ಪರಿಭವವೇನನೆಂಬೆನು ||ಬಂ||3||4. ಕ್ರಾಂತಿ ವಿಫಲವಾದ ಮೇಲೆ ಬ್ರಿಟಿಷರ ಸೇನೆ ಊರೂರು, ಮನೆ ಮನೆಗಳಲ್ಲಿ ಭಾಗವಹಿಸಿದವರಿಗಾಗಿ ನಡೆಸಿದ ಹುಡುಕಾಟದ ವರ್ಣನೆ:ಬಡವ ಕಲ್ಯಾಣನನು ಬಂಗನ | ಹಿಡಿದು ಸುಬ್ರಾಯನನು ಮೂವರ | ಕೊಡಲು ಪಾಶಿ ಬಿಕರ್ನಕಟ್ಟೆಲಿ | ಮಡುಹಲಂದು ||……………………..(ರಾಗ – ಕಲ್ಯಾಣಿ – ಝಂಪೆ)ಕೊಡಗು ಸರಕಾರದಲಿ | ನೇಮವನು ಪಡೆದಂದು | ಕೊಡಗ ಮುಕ್ಕಂಡರರೆ | ಪೊರಟರಬ್ಬರದಿ ||1|| ಘುಡುಗುಡಿವತಿರವಕೆ ಪೊಡವಿ ಕಂಪಿಸಿತಂದು || ನಡೆದು ಮುನ್ನೂರಾಳು | ಇಳಿದಂದು ಬರಲು ||2|| ಕತ್ತಿಕೋವಿಯ ಜನರು | ಮಾಡಿದುಪಹತಿ ನಮಗೆ | ಸತ್ತರೂ ಹೋಗದದು ಕೇಳಿ ನೀವೆಂದು ||3|| ಬಾಲೆಯರು ಮಕ್ಕಳಾ | ಒಡಹುಟ್ಟುಗಳ ಬಿಟ್ಟು | ಬಾಳುವೆಯೆ ಕಾಡೆಂದು | ಹೊಕ್ಕರೆಲ್ಲಂದು ||4|| ಜನಹೊಗದ ದಟ್ಟಡವಿ | ಕಾಡೊಳಗೆ ಬಿಲತೋಡಿ | ವನಮೃಗದ ಗವಿಗಳನು | ಮರದ ಪೊಟರೆಯನು ||5|| ಉಣಲಿಲ್ಲ ಉಡಲಿಲ್ಲ | ಹಣವಿಲ್ಲ ಜನರಿಲ್ಲ | ದಣಿದರೈ ಹೊಗೆ ಹಾಕ | ಲಳಲದಂದನಕ ||6|| ತಾಯಿ ಮಕ್ಕಳ ಬಿಟ್ಟು | ಗಂಡ ಹೆಂಡತಿಯಗಲಿ | ಮಾಯವಾದೆಜಮಾನ | ಸಂಸಾರ ಕಾಣ ||7|| ನೋಯದವರಿಲ್ಲ ಮ | ಕ್ಕಳು ಕೂಗದಂತರುವೆ | ಬಾಯಿಂಗೆ ತುರುಕಲಿ | ಬದುಕಲಂದಲ್ಲಿ ||8|| ಮನೆಯನೊಂದರ ಬಿಡದೆ | ಹುಡುಕಿದರು ಮೂರ್ತಿಂಗ | ಳಿನ ಪರಿಯ ಕಾಲದಲಿ | ಹಿಡಿದು ಕಾಡಿನಲಿ ||9|| ಜನರನೆಳೆತಂದೆಲ್ಲ | ಕಾಲಗೊಪ್ಪಿಸುವಂತೆ | ದನುಜರಂದದೊಳೆಳೆದು | ಕೊಟ್ಟರಂದು ||10|| + +(ರಾಗ ಮಧು – ಅಷ್ಟ)ಕೂಡೆ ವಿಚಾರಿಸು | ತಧಿಕಾರಿಗಳನು | ನೋಡಿ ರಿಜೀಸ್ತ್ರಿಯ | ವಿತರಣೆಗಳನು | ಗೌಡಾರೆ ಹದಿನಾಲ್ಕು | ಮಂದಿ ಪಾಶಿಯನು | ಮಾಡಿದರಿನ್ನುಳಿ| ದರಿಗೆ ಸೀಕ್ಷೆಯನು ||1|| ಕೊಟ್ಟರು ರಾಮಯ್ಯ | ನಣ್ಣುವಮ್ಮಣಗೆ | ಭಟ್ಟರೀಶ್ವರರು ಗೌ | ಡಜ್ಜ ಮುಖ್ಯರಿಗೆ | ಒಟ್ಟು ನೂರಿನ್ನೂರು | ಕೈದಿ ಗುಮಾನಿ | ಪಟ್ಟವರೆಂದಾಯ್ತು | ಗೌಡರ ಹಾನಿ ||2|| + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_446.txt b/Kenda Sampige/article_446.txt new file mode 100644 index 0000000000000000000000000000000000000000..882a704dafb201c985419d24e3a7b9eb6e519507 --- /dev/null +++ b/Kenda Sampige/article_446.txt @@ -0,0 +1,89 @@ + + +ನಮ್ಮೂರಿನ ಸರ್ಕಾರಿ ಬಾಲಕರ ಪಾಠಶಾಲೆಗೆ ನಾವು ‘ಸಾಬಾಪಾಶ ‘ ಅನ್ನುವುದುಂಟು. ಈ ಪದದ ಉದ್ದೇಶ ಅಂತಾ ಹಿರಿದೇನಿಲ್ಲವಾದರೂ ಇದರಿಂದ ಹಲವು ಬಾರಿ ಉಪಯೋಗವೇ ಆಗಿದೆ. ಹೇಗೆ ಅಂತೀರಾ? ತಮ್ಮ ಮನೆಗಳಲಿದ್ದ ಗೆಳೆಯರನ್ನು ಕ್ರಿಕೆಟ್ ಆಟಕ್ಕೆ ಕರೆಯಲು ನಾವು ಉಪಯೋಗಿಸುತ್ತಿದ್ದ ಕೋಡ್ ವರ್ಡ್ ‘ಸಾಬಾಪಾಶ’. ನಮ್ಮ ಮನೆಗಳ ಹಿಂದಿನ ಕನ್ಸರ್ವೆನ್ಸಿಯನ್ನು ದಾಟಿ ಆಳೆತ್ತರದ ಗೋಡೆಯನ್ನು ಜಿಗಿದರೆ ಸಾಬಾಪಾಶದ ಒಳಹೊಕ್ಕೆವೆಂದೇ ಅರ್ಥ. + +ಎಲ್ಲ ಸರ್ಕಾರಿ ಪಾಠಶಾಲೆಗಳಂತೆ ಇದೂ ಬಹಳ ಹಳೆಯದು. ನೆತ್ತಿಯ ಮೇಲೆ ಸ್ಥಾಪನೆ ೧೯೦೧ ಎಂದು ಬರೆಯದೆ ಇದ್ದಿದ್ದರೆ ನಮಗೆ ಆ ವಯಸ್ಸಿನಲ್ಲಿ ಈ ವಿಷಯ ತಿಳಿಯುತ್ತಿರಲಿಲ್ಲವೇನೋ? ಕಟ್ಟಡದ ಮಧ್ಯಭಾಗ ಕಾಂಕ್ರಿಟಿನದ್ದು. ಅಲ್ಲಿ ಪ್ರಾಥಮಿಕ ಹಂತದ ತರಗತಿಗಳು. ಎಡಗಡೆಗೆ ಹೆಂಚಿನ ಚಿಕ್ಕ ಕೋಣೆಗಳು. ಅಲ್ಲಿ ಮಾಧ್ಯಮಿಕ ಹಂತದ ತರಗತಿಗಳು. ಹಿತ್ತಲಲ್ಲಿ ಒಂದು ಹಲಸಿನಮರ, ನಾಲ್ಕು ತೆಂಗಿನ ಮರಗಳು, ಒಂದು ಗಂಟೆ ಹೂವಿನ ಮರ, ಮತ್ತೊಂದು ಮಲ್ಲೆ ಹೂವಿನದ್ದು. ಕಟ್ಟಡದ ಎರಡೂ ಪಾರ್ಶ್ವದಲ್ಲೂ ಚಿಕ್ಕದಾದ ಎರಡು ಆಟದ ಮೈದಾನಗಳು. ಎಡಗಡೆಯ ಮೈದಾನದ ಗೋಡೆಯ ಬದಿಗೆಲ್ಲ ಬಣ್ಣ ಬಣ್ಣದ ಹೂ ಗಿಡಗಳನ್ನು ಹಾಕಿದ್ದರಿಂದ ಅಲ್ಲಿ ಕ್ರಿಕೆಟ್ ಆಟ ನಿಷಿದ್ಧ. ಕೆಲವೊಮ್ಮೆ ಇದನ್ನು ಉಲ್ಲಂಘಿಸಿ ಉಗಿಸಿಕೊಂಡಿದ್ದರಿಂದ ಆಡುವುದಾದರೆ ಬಲಗಡೆಯ ಮೈದಾನದಲ್ಲೇ ಎಂಬುದಾಗಿ ನಿರ್ಣಯಿಸಿದ್ದೆವು. ಬಲಗಡೆಯದ್ದು ಚಿಕ್ಕ ಮೈದಾನ ಮತ್ತು ಬದಿಯಲ್ಲಿ ಶೌಚಾಲಯಗಳಿದ್ದವು (ಅವನ್ನು ನಾವು ಓಪನ್ ಏರ್ ಥಿಯೇಟರ್ ಅನ್ನುತ್ತಿದ್ದೆವು). ಇದೇ ಕಾರಣಕ್ಕೆ ಬಾಲು ಒಂದು ವೇಳೆ ಅಲ್ಲಿಗೆ ಹೊಡೆಯಲ್ಪಟ್ಟರೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ಆದರೂ ಹೊಂದಿಕೊಂಡು ಗಬ್ಬುನಾಥ ಸಹಿಸಿಕೊಂಡು ಆಡುತ್ತಿದ್ದದಕ್ಕೆ ಕಾರಣ ಅದು ಅಬೀಬನ ಅಂಗಡಿಗೆ ಹತ್ತಿರವಾಗಿದ್ದುದ್ದು. + +ಅಬೀಬಾ ಕಾಸಿಮ್ ಸಾಬರ ಐದನೆಯ ಮಗ, ಅವನಿಗೆ ನಾಲ್ಕುಮಂದಿ ಅಕ್ಕಂದಿರು ಒಬ್ಬಳು ತಂಗಿ. ಕಾಸಿಮ್ ಸಾಬರು ಎಲ್ಲರಿಗೂ ಗೊತ್ತಿದ್ದ ಮನುಷ್ಯ ಅದಕ್ಕೆ ಕಾರಣ, ಪೇಟೆಯ ಬೇರೆ ಬೇರೆ ಮಗ್ಗುಲುಗಳಲ್ಲಿ ಅವರ ಪೆಟ್ಟಿಗೆ ಅಂಗಡಿಗಳಿದ್ದವು. ಎಲ್ಲದರಲ್ಲೂ ಅವರ ಕುಟುಂಬದವರೇ ಇರುತ್ತಿದ್ದರು, ಒಳ್ಳೆಯ ವ್ಯಾಪಾರ, ದುಡ್ಡು ಈಕಡೆ ಆಕಡೆಯಾಗುವ ಪ್ರಮೇಯವೇ ಇಲ್ಲ. ಸಾಬ್ ಜುಗ್ಗರಲ್ಲ, ಒಳ್ಳೆಯ ಮನೆಕಟ್ಟಿಸಿದ್ದರು, ಮಕ್ಕಳಿಗೆಲ್ಲ ಒಳ್ಳೆಯ ಬಟ್ಟೆಬರೆ, ಬಾಬಯ್ಯನನ್ನು ಮಾಡಿದಾಗ ದೇಣಿಗೆ ಕೊಡುವುದರ ಜೊತೆಗೆ ರಂಜಾನ್ ಹಬ್ಬದಲ್ಲಿ ದಾನ ಮಾಡುತ್ತಿದ್ದುದರಿಂದ ಜನ ಅವರನ್ನುಅಪಾರವಾಗಿ ಇಷ್ಟ ಪಡುತ್ತಿದ್ದರು. ನಾವು ಅಬೀಬಾನನ್ನು ಇಷ್ಟಪಡುತ್ತಿದ್ದ ಹಾಗೆ. + +ಅಬೀಬಾ ಸಾಬಾಪಾಶದ ಬಳಿಯ ಅವರ ಪೆಟ್ಟಿಗೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ಅವನ ವಿದ್ಯಾಭ್ಯಾಸ ನಾಲ್ಕೋ ಐದೋಕ್ಲಾಸಿನವರೆಗೆ ಅಷ್ಟೇ, ಆಮೇಲೆ ಓದು ತಲೆಯೊಳಗೆ ಇಳಿಯದ್ದಿದ್ದನ್ನು ನೋಡಿದ ಅವರಪ್ಪ ಸ್ಕೂಲು ಬಿಡಿಸಿದ್ದೇ ಒಂದೆರಡು ವರ್ಷಗಳ ಕಾಲ ‘ಸಂಕಪ್ಪನ ಸೈಕಲ್ ಶಾಪಿಗೆ’ ಸೇರಿಸಿದರು. ಪರವಾಗಿಲ್ಲ ಒಂದು ಕಡೆ ಕೂತು ಕೆಲಸ ಮಾಡಬಲ್ಲನೆಂಬ ನಂಬಿಕೆ ಬಂದಮೇಲೆ ಸಾಬಾಪಾಶದ ಬಳಿ ಅಂಗಡಿ ಹಾಕಿಕೊಟ್ಟರು. + +ಪ್ರತಿ ಶನಿವಾರ ಸ್ಕೂಲು ಮುಗಿದಮೇಲೆ ಎಲ್ಲರೂ ಖಾಲಿಯಾಗುವುದನ್ನೇ ಕಾದಿರುತ್ತಿದ್ದ ನಾವು, ಚಂಗನೆ ಗೋಡೆ ಹಾರಿ ಮೈದಾನದಲ್ಲಿ ಹಾಜರಿಗೊಳ್ಳುತ್ತಿದ್ದೆವು. ನಾವು ಅಂದರೆ ನಾನು, ಮಂಜ, ನಟ, ಮಧು, ರವಿ, ಒಮ್ಮೊಮ್ಮೆ ಇಬ್ಬರು ಮೂವರಿದ್ದರೂ ಸೂರ್ಯ ಮುಳುಗಿ ಕತ್ತಲಾಗುವವರೆಗೆ ಆಡುತ್ತಿದ್ದೆವು. ಅಂಥ ದಿನಗಳಲ್ಲಿ ಅಬೀಬಾ ನಮಗೆ ಹತ್ತಿರವಾಗತೊಡಗಿದ. ಅವನಿಗಾದರೂ ಪ್ರತೀ ದಿನ ಕುಂತಲ್ಲೇ ಕುಂತು ಬೋರು ಹೊಡೆಯುತ್ತಿತ್ತು ಅನ್ನಿಸುತ್ತದೆ. ಯಾವಾಗ ಶನಿವಾರವಾಗುತ್ತೋ ಅಂತ ನಮ್ಮಂತೇ ಅವನೂ ಕಾಯುತ್ತಿದ್ದಿರಬಹುದು. ಮೊದಮೊದಲು ಅಂಗಡಿಯಲ್ಲೇ ಕುಂತು ಗೋಡೆಯಾಚೆಗಿನ ನಮ್ಮ ಆಟವನ್ನು ನೋಡುತ್ತಿದ್ದವನು, ಆಮೇಲಾಮೇಲೆ ಗೋಡೆಯಮೇಲೆ ಕುಂತು ಅತ್ತ ಅಂಗಡಿಯನ್ನೂ ಇತ್ತ ನಮ್ಮ ಆಟವನ್ನೂ ನೋಡುತ್ತಿದ್ದ. ಒಮ್ಮೆ ಹೀಗೇ ಗೋಡೆಯ ಮೇಲೆ ಕುಂತು ನಮ್ಮ ಆಟವನ್ನು ನೋಡುತ್ತಿರುವಾಗ, ಮಂಜ “ಬಾರೋ ಅಮೀಬಾ, ನೀನೂ ಆಡುವಂತೆ, ಯಾಕೆ ಹಂಗೆ ಯಾವಾಗ್ಲೂ ಕೋತಿ ಕುಣಿಯೋದು ನೋಡೋ ಹಂಗೆ ನೋಡ್ತಾಇರ್ತೀಯಾ” ಅಂದಾಗ ಅಬೀಬನಿಗೆ ಎಷ್ಟೋ ದಿನಗಳ ತನ್ನ ಆಸೆ ಇವತ್ತು ನೆರವೇರಬಹುದೆನಿಸಿ “ಇರೋ ಈಗ ಬರ್ತೀನಿ” ಅಂತ ಹೇಳಿ, ಗೋಡೆಯ ಆ ಬದಿಗೆ ಜಿಗಿದು ರಸ್ತೆದಾಟಿ, ಅಂಗಡಿಯ ಬಳಿಗೆ ಓಡಿ, ಪಕ್ಕದಲ್ಲಿ ಎಳನೀರು ಮಾರುತ್ತಿದ್ದ ರೆಹಮಾನರಿಗೆ ಏನೋ ಹೇಳಿ ರಸ್ತೆ ದಾಟಿ, ಗೋಡೆಜಿಗಿದು, ನಮ್ಮೊಡನೆ ಆಟಕ್ಕೆ ಸೇರಿದ. + +ಆಗಾಗ ಗೋಡೆಯ ಬಳಿಬಂದು ಅಂಗಡಿಯ ಕಡೆಗೊಮ್ಮೆ ನೋಡಿಮತ್ತೆ ಆಟಕ್ಕೆ ಮರಳುತ್ತಿದ್ದ. ಆಟವೆಲ್ಲ ಮುಗಿದಮೇಲೆ ನಾವೆಲ್ಲಾ ಗೋಡೆಯೇರಿ ರಸ್ತೆಗೆ ಅಭಿಮುಖವಾಗಿ ಕುಳಿತರೆ, ಅಬೀಬಾ ಅಂಗಡಿ ಹೊಕ್ಕು ಎಲ್ಲವನ್ನೂ ಒಮ್ಮೆ ಪರಿಶೀಲಿಸಿಕೊಂಡು ಪೊರಕೆಹಿಡಿದು ಕಸಗುಡಿಸಿದವನಂತೆ ಮಾಡಿ, ಒಂದೇ ಲೋಟದ ನೀರನ್ನು ನೆಲಕ್ಕೆ ಚುಮುಕಿಸಿ ಲಾಟೀನು ಹಚ್ಚುತ್ತಿದ್ದ. + +ಝಗಮಗಿಸುವ ಬೀದಿ ದೀಪಗಳಿದ್ದ ರಸ್ತೆಯಲ್ಲಿ ಅಬೀಬನ ಪೆಟ್ಟಿಗೆಯ ಗೂಡಂಗಡಿ ಬೇರೆಯೇ ತೆರೆನಾಗಿ ಕಾಣುತ್ತಿತ್ತು. ಮಂದ ಲಾಟೀನು ದೀಪದ ಬೆಳಕಿನಲ್ಲಿ ತೂಗುತ್ತಿದ್ದ ಏಲಕ್ಕಿಬಾಳೆಯ ಗೊನೆ, ಹಣ್ಣಾಗಿ ಚಿಕ್ಕೆ ಹೊಡೆದ ಪಚ್ಚಬಾಳೆ ಗೊನೆ, ಪಾನ್ ಪರಾಗ್, ಮಾಣಿಕ್ಚಂದ್, ರಾಜ ಸುಪಾರಿ, ವಿಮಲ್ ಗುಟ್ಕಾದ ಸರಗಳು, ಗಾಜಿನ ಬಾಟಲಿಗಳಲಿದ್ದ ಶುಂಠಿ ಪೆಪ್ಪರಮಿಂಟು, ಪ್ಯಾರಿಸ್ ಚಾಕೋಲೇಟು, ನಿಂಬೆ ಹುಳಿ ಮಿಂಟು, ಬತ್ತಾಸು, ಕುಟ್ಟು ಉಂಡಿ ಕಣ್ಣು ಕೋರೈಸುತ್ತಿದ್ದರೂ ‘ಮಂಜನ’ ಕಣ್ಣುಮಾತ್ರ ಸಾಲಾಗಿ ಜೋಡಿಸಿಟ್ಟ ಚಾರ್ಮಿನಾರ್, ವಿಲ್ಸ್, ಗೋಲ್ಡ್ ಫ್ಲೇಕ್ ಕಿಂಗ್ ನ ಮೇಲೆ ಬೀಳುತ್ತಿದ್ದುದ್ದು! ಅವನ ಅಪ್ಪ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು ಮತ್ತು ಪ್ರತೀದಿನ ಮಂಜನಿಗೆ ದುಡ್ಡುಕೊಟ್ಟು ಸಿಗರೇಟು ತರಿಸಿಕೊಳ್ಳುತ್ತಿದ್ದರು. ಮಂಜ ಆಗಾಗ ಒಂದೆರಡು ರೂಪಾಯಿ ಎಗರಿಸಿ ತಾನೂ ಸಿಗರೇಟು ಸೇದಲು ಕಲಿತದ್ದು ಹಾಗೆಯೇ . + +ಹೀಗೇ ಕಾಲಕಳೆಯುತ್ತಾ ಎಂಟು ಗಂಟೆಯಾಗಿಬಿಟ್ಟರೆ ‘ನಟ’ ನಮ್ಮನ್ನು ಎಚ್ಚರಿಸಿ “ನಡೀರೋ ಕೋತಿ ತೋಪಿಗೆ ಹೋಗಿ ನೀರುಬೇರೆ ತರಬೇಕು, ಇವಾಗ ಜನಕಮ್ಮಿ ಆಗಿರ್ತಾರೆ, ನೀರು ಫೋರ್ಸ್ ಆಗಿರುತ್ತೆ” ಅನ್ನುತ್ತಿದ್ದ. ಆಗೆಲ್ಲ ನಮ್ಮೂರಿಗೆ ಹೇಮಾವತಿ ನೀರು ಬಂದಿರಲಿಲ್ಲ. ಹಾಸನದವರು ಹೇಮಾವತಿಯನ್ನು ದಾರಾಳವಾಗಿ ಕನ್ನಂಬಾಡಿಗೆ ಹರಿಸಿ ಅದು ಅಲ್ಲಿಂದ ತಮಿಳುನಾಡಿಗೆ ಹೋದರೂ ಅಡ್ಡಿಯಿಲ್ಲ ತುಮಕೂರಿಗೆ ಮಾತ್ರ ಹೋಗಕೂಡದು ಅಂದುಕೊಂಡಿದ್ದರೋ ಏನೋ? ಅಂತೂ ನಮಗೆ ಆಗ ನೀರಿಗೆ ಬವಣೆ, ಒಂದು ಬಿಂದಿಗೆಗೆ ಹೆಂಗಸರು ಬೀದಿಬೀದಿಯಲ್ಲಿ ಕಿತ್ತಾಡುವ, ಕೆಟ್ಟ ಕೆಟ್ಟದಾಗಿ ಕರೆದುಕೊಳ್ಳುವ ಪರಿಸ್ಥಿತಿ! ಅಬೀಬಾ ನಮಗೆ ಪರಿಚಯವಾದದ್ದು ಹೀಗೆ. + +ಒಂದು ಭಾನುವಾರ ನಾವೆಲ್ಲಾ ಬ್ಯಾಟು ಬಾಲು ಹಿಡಿದು ಸಾಬಾಪಾಶದ ಕಂಪೌಂಡಿನ ಮೇಲೆ ನಿಂತಿದ್ದೆವು. ಮಂಜ ಒಳಗೆ ಧುಮುಕಿದ್ದೇ ತೆಂಗಿನಮರ ಹತ್ತಲು ಸಜ್ಜಾಗುತ್ತಿದ್ದ. ಆಗ ರಸ್ತೆಯ ಆಚೆಕಡೆಯಿಂದ ಬಂದ ಅಬೀಬಾ ‘ಏನ್ರೋ’? ಅಂದ. ನಾನು ಮಾತಾಡದೆ ಒಳಗಿನ ಕಂಪೌಂಡಿನ ಕಡೆಗೆ ಕೈಮಾಡಿದೆ, ಅವನಿಗದು ತಿಳಿಯದೆ ಇರಲಿಲ್ಲ. ಬೇಗನೆ ಓಡಿಬಂದು ಗೋಡೆ ಏರಿದ. ಮಂಜ ಅದಾಗಲೇ ತನ್ನ ಎರಡೂ ಕಾಲುಗಳ ಹೆಬ್ಬೆಟ್ಟಿಗೆ ಟೈನ್ ದಾರ ಸಿಕ್ಕಿಸಿಕೊಂಡು ಮರ ಏರುತಿದ್ದ ಮತ್ತು ಹಿಂದಿನ ದಿನ ಮಳೆಯಾಗಿದ್ದರಿಂದಲೋ ಏನೋ ಆಗಾಗ ಜಾರುತಿದ್ದ. ಇದನ್ನು ನೋಡಿದ ಅಬೀಬಾ “ಲೇ ಬದ್ಮಾಶ್ ಉತರ್, ಮರ ಜಾರ್ತಾ ಐತೆ, ಬಿದ್ರೆ ಖಲಾಸ್ ಆಗ್ಬಿಟ್ಟಿ ಒಡೆ ಮಾಡ್ಬಿಡ್ತಾರೆ ನಿಮ್ ಮನೇಲಿ” ಅಂದ. + +ಯಾರ ಮಾತಿಗೂ ಸಾಮಾನ್ಯವಾಗಿ ಜಗ್ಗದ ಆಸಾಮಿ ಮಂಜ ಅದ್ಯಾಕೋ ಅಬೀಬನಿಗೆ ಬೆಲೆಕೊಟ್ಟು ಮರ ಇಳಿದು ಗೋಡೆಯೇರಿದ. ಅಬೀಬನಿಗೆ ಖುಷಿಯಾಯ್ತು.“ಚಲ್ ನಿಂಗೆ ಕಾಯಿ ತಾನೆ ಬೇಕು? ನಾನು ಉದ್ರಿಸಿ ಕೊಡ್ತೀನಿ. ಸೀದಾ ಹೋಗಿ ಮೋಲ್ಡ್ ಮೇಲೆ ಹತ್ತು, ನಾನೂ ಬರ್ತೀನಿ” ಅಂದು ನಮ್ಮ ಕಡೆಗೆ ತಿರುಗಿ“ಲೋ ಒಂದಷ್ಟು ದಪ್ಪು ಕಲ್ಲು ಹುಡ್ಕಿ ಮೇಲುಕ್ಕೆ ಕ್ಯಾಚ್ ಹಾಕ್ರೋ” ಅಂದ. + +ನಾವು ಗೋಡೆಯಿಂದ ಕೆಳಗಿಳಿದು ಕನ್ಸರ್ವೆನ್ಸಿಯಲ್ಲೆಲ್ಲಾ ಹುಡುಕಾಡಿ ಒಂದಷ್ಟು ಸಾಮಾನ್ಯ ಗಾತ್ರದ ಕಲ್ಲುಗಳನ್ನು ಒಟ್ಟು ಮಾಡಿ ಮೇಲಕ್ಕೆ ಎಸೆಯುತ್ತಿದ್ದರೆ, ಅಬೀಬಾ ಅವನೆಲ್ಲಾ ಹಿಡಿದು ಗುಡ್ಡೆ ಮಾಡಿಕೊಳ್ಳುತ್ತಿದ್ದ. ನಂತರ ನಮ್ಮನ್ನೆಲ್ಲ ಸ್ವಲ್ಪ ದೂರಹೋಗುವಂತೆ ಹೇಳಿ ದಪ್ಪನಾದ ಕಲ್ಲೊಂದನ್ನು ಬರ್ರನೆ ಕಾಯಿಯಗೊಂಚಲುಗಳತ್ತ ಬೀಸಿದ. + +‘ದಪ್’ ಅನ್ನುವ ಸದ್ದು, ಒಂದೆರಡು ಸೆಕೆಂಡಿನಲ್ಲಿ ‘ತೊಪ್’ ಎನ್ನುವ ಸದ್ದು ಕೇಳಿಸಿತು. ಕಲ್ಲು ತೆಂಗಿನಕಾಯಿಗೆ ಬೀಳುವ ಬದಲಿಗೆ ಅದರ ಬುಡ್ಡೆಗೆ ಬಿದ್ದು ಗುರಿತಪ್ಪಿತ್ತು. ಮಂಜ ಅಬೀಬನ ಮುಖ ನೋಡಿ ಮುಗುಳ್ನಕ್ಕಿದಕ್ಕೆ ಅಬೀಬಾ “ಅಬ್ ದೇಖ್ ರೇ” ಅಂದವನೇ ಮತ್ತೊಂದು ಕಲ್ಲನ್ನು ಬಲವಾಗಿ ಬೀಸಿದ. ಈ ಬಾರಿ ಕಲ್ಲು ಒಣಗಿದ ಗೊಂಚಲಿನ ಬುಡಕ್ಕೇ ಬಿದ್ದದ್ದರಿಂದ ಒಂದಿಡೀ ಗೊಂಚಲು ‘ಧಡಾರನೆ’ ಕಾಂಪೌಂಡ್ ನ ಒಳಗಡೆ ಬಿತ್ತು. ಸುಮಾರು ಹತ್ತರಿಂದ ಹದಿನೈದು ಕಾಯಿಗಳು, ಮಂಜನ ಮುಖ ಅರಳಿದರೆ ಅಬೀಬಾ ಗರ್ವದಿಂದ ಬೀಗುತ್ತಿದ್ದ. ನಮಗೆ ಎಷ್ಟ್ ಕಾಯಿ, ಎಂತಹುದು ಎಂದು ನೋಡುವ ತವಕದಿಂದ ಗೋಡೆ ಏರಿದೆವು, ಮರದ ಪಕ್ಕಕ್ಕೆ ಗೊಂಚಲು ಬಿದ್ದು ಒಂದೆರಡು ಕಾಯಿಗಳು ಪಕ್ಕಕ್ಕೆ ಓಡಿದ್ದವು. ಮಂಜ ತಾನೂ ಒಂದು ಕಲ್ಲನ್ನು ಬೀಸುವ ಹುನ್ನಾರದಲ್ಲಿದ್ದ. ಆದರೆ ಅಬೀಬಾ “ಲೇ ಜಾಂಟ್, ಎಲ್ಲಕಾಯಿ ಬಿದ್ರೆ ನಾಳೆ ಹೆಡ್ ಮಾಸ್ಟರ್ ಗೆ ಗೊತ್ತಾಗಲ್ಲ? ಇವತ್ತು ಸಾಕು ಇಳಿ” ಅಂದ. ಮಂಜನಿಗೆ ಸರಿಯೆನಿಸಿತೇನೋ, ತಾರಸಿಯಿಂದ ಇಳಿದು ಗೋಡೆಯ ಮೇಲೆ ಬಂದು ಅಲ್ಲಿಂದ ಒಳಕ್ಕೆ ಜಿಗಿದು, ಮೊದಲು ಗೊಂಚಲನ್ನು ಮೇಲಕ್ಕೆ ಮುಟ್ಟಿಸಿ ನಂತರ ಅಲ್ಲಿದ್ದ ಒಂದೆರಡು ಕಾಯಿಗಳನ್ನು ಮೇಲಕ್ಕೆಸೆದು ಗೋಡೆಹತ್ತಿದ. ಏಳನೇ ಕ್ಲಾಸಿನವರೆಗೆ ಮಂಜ ಸಾಬಾಪಾಶದಲ್ಲೇ ಓದಿದ್ದರಿಂದ ಅಲ್ಲಿನ ಒಂದೊಂದು ಗೋಡೆ, ಕಿಟಕಿ, ರೂಮು, ಚಿಲಕ, ಮರ, ಗಿಡ, ಟಾಯ್ಲೆಟ್ಟು, ಬೆಂಚು, ಹಲಗೆ ಅವನಿಗೆ ಚಿರಪರಿಚಿತ. + +ಅಬೀಬಾ ನಮ್ಮ ಕಡೆಗೆ ತಿರುಗಿ “ಹೆಂಗಾರ ಮಾಡಿ ,ಈ ಕಾಯಿನ ಒಳ್ಳೆ ಕಡೆ ಸೇರಿಸ್ಬಿಡಿ, ಆಮೇಲೆ ಏನ್ಮಾಡ್ಬೇಕೋ ನೋಡನ” ಅಂದ. + +ನಾವು ಅದೇನೋ ಮಹದ್ ಕಾರ್ಯವೆಂಬಂತೆ ಆಚೀಚೆ ಹತ್ತುಸಲ ನೋಡಿ ಹೇಗೋ ಮಾಡಿ ಅಷ್ಟೂ ಕಾಯಿಗಳನ್ನು ‘ನಟ’ ನ ಮನೆಯ ಅಟ್ಟದ ಮೇಲಿರಿಸಿದೆವು. ನಮಗೆ ಅದಕ್ಕಿಂತಾ ಒಳ್ಳೆಯ ಜಾಗ ಗೊತ್ತಿರಲಿಲ್ಲ. + +ತಿರುಗಿಬಂದು ನೋಡಿದರೆ ಮಂಜ, ಅಬೀಬಾ ಗೋಡೆಯ ಮೇಲಿರಲಿಲ್ಲ. ಬಹುಷಃ ಫೀಲ್ಡ್ ನ ಒಳಗಡೆ ಇರಬೇಕೆಂದು ಹತ್ತಿನೋಡಿದರೆ ಎಂಥಾ ನೋಟ! ಗೋಡೆಯ ಒತ್ತಟಿಗಿರುವ ಹೊಂಗೆಯ ಮರದಡಿ ಇಬ್ಬರೂ ಕುಕ್ಕರಗಾಲಿನಲ್ಲಿ ಕುಳಿತಿದ್ದಾರೆ, ಮಂಜನ ಬಾಯಲ್ಲಿ ಸಿಗರೇಟಿದೆ ಮತ್ತು ಅದನ್ನು ಕಡ್ಡಿಗೀರಿ ಅಬೀಬಾ ಹೊತ್ತಿಸುತ್ತಿದ್ದಾನೆ. ಅಬೀಬಾ ನಮ್ಮನ್ನೆಲ್ಲಾ ನೋಡಿ ಅಡಿಕೆ ಪಟ್ನ, ಕುಟ್ಟುನ್ಡಿ, ಚಾಕೊಲೇಟು, ಶುಂಠಿ ಮಿಂಟು ಎಲ್ಲ ಕೊಟ್ಟು ಸಂತಸಪಡಿಸಿದ. ನಮಗೆ ಇವನು ಮೊದಲೇ ನಮ್ಮ ಗೆಳೆಯನಾಗಬಾರದಿತ್ತಾ ಅನ್ನಿಸಿತು. ಹೀಗಿರುವಾಗ ಕಾಯಿಗಳನೆಲ್ಲ ಏನು ಮಾಡುವುದು ಎಂಬ ಪ್ರಶ್ನೆ ಮೂಡಿತು. + +ನಾನಿದ್ದವನು “ಮತ್ತೇನು? ಸಿಪ್ಪೆಸುಲಿದು ಎಬ್ಬಿ ನೀರುಕುಡಿದು ಕಾಯಿ ತಿನ್ನೋದು” ಅಂದೆ.ಅದಕ್ಕೆ ಅಬೀಬಾ “ಏ ಬದ್ಮಾಶ್ ಯಾವತ್ತೂ ಕಾಯಿ ತಿಂದಿಲ್ಲಾ? ನಿನ್ನ ಬುದ್ಧಿಗಿಷ್ಟು” ಅಂತ ಬೈದ. + +ಮಂಜ ಇದ್ದವನು “ಲೇ ಅಮೀಬಾ, ಹೇಂಗೂ ಹನ್ನೆರಡು ಕಾಯಿ ಐತೆ, ನಾವು ಆರು ಜನ ಎಲ್ಲಾರ್ಗೂ ಎಲ್ಡ್ ಕಾಯಿ ಬತ್ತೈತೆ, ಮನೆಗ್ಕೊಟ್ಟುಬಿಡಾನ” ಅಂದ, ನಾವೂ ಹ್ಞೂಂಗುಟ್ಟಿದೆವು. ಅಬೀಬಾ “ನನ್ ಮಕ್ಳ ಮನೆಗೆ ಕೊಟ್ರೆ ಎಲ್ಲಿಂದ ಬಂತು ಅಂತ ಕೇಳಲ್ವಾ? ಚೋರಿ ಕಾ ಮಾಲ್ ಅಂತೀರಾ?” ಅಂದಾಗ ನಾವೆಲ್ಲಾ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಅವನು ನಮೆಲ್ಲರಿಗಿಂತಾ ಚಾಲಾಕಿ ಅಂತ ಬೇರೆ ಹೇಳಬೇಕಾಗಿಲ್ಲ. ಅವನನ್ನೇ ಕೇಳಿದೆವು, ಅದಕ್ಕವನು “ನೋಡಿ ನಮ್ಮಹತ್ರ ಹನ್ನೆರಡ್ ಕಾಯಿ ಐತೆ, ಅಂಗ್ಡಿ ಬೆಲೆ ಎಂಟು ರುಪಾಯ್, ಮಂಡಿಗೆ ಕೊಟ್ರೆ ಆರ್ರುಪಾಯ್ ಕೊಡ್ತಾರೆ, ನಾಳೇನೇ ನಾನು ಮಂಜ ಹೋಗಿ ಮಂಡಿಗೆ ಮಾರಿ ಬತ್ತೀವಿ, ಆಮೇಲೆ ಬಂದಿದ್ ದುಡ್ನ ಏನ್ಮಾಡೋದ್ ಅಂತಯೋಚ್ನೆ ಮಾಡನಂತೆ” ಅಂದ. ನಾವೆಲ್ಲರೂ ತಲೆಯಾಡಿಸಿದೆವು. + +ಅದರಂತೆ ಅವರು ಮರುದಿನವೇ ಅಷ್ಟೂ ಕಾಯಿಗಳನ್ನು ಮಂಡಿಗೆ ಮಾರಿ ಬಂದರು. ಸಂಜೆ ಶಾಲೆ ಮುಗಿದ ನಂತರ ಎಲ್ಲರೂ(ಅಬೀಬಾನನ್ನು ಬಿಟ್ಟು ) ಮಂಜನ ಮನೆಯ ಜಗುಲಿಯ ಮೇಲೆ ಆಸೀನರಾದೆವು. ಮಂಜ ಮಾತಾಡತೊಡಗಿದ.“ನೋಡ್ರೋ ಹನ್ನೆರಡು ಕಾಯ್ನೂ ಆರು ರೂಪಾಯಿಗೇ ಮಾರಿದ್ವಿ, ಆದ್ರೂ ಶುರುನಲ್ಲಿ ಯಾವ ಮಂಡಿಯವನೂ ತಗೋಳಾಕೆ ರೆಡಿ ಇರ್ಲಿಲ್ಲ, ಐದುಕ್ ಕೊಡು, ನಾಕುಕ್ ಕೊಡು ಅನ್ನೋರೆ ಎಲ್ಲ, ನಾನು ಐದುಕ್ ಆದ್ರೆ ಕೊಟ್ಬುಡಾನ ಅಮೀಬಾ ಅಂದೆ, ಆದ್ರೆ ಅವ್ನು ಹಿಡ್ದಿದ್ಪಟ್ಟೆ ಬಿಡ್ಲಿಲ್ಲ, ಕಡೆಗೆ ಒಬ್ಬ ಶೆಟ್ಟಿ ಹತ್ರ ಹೋದ್ವಿ. ಅವ್ನು ಕಾಯಿನ ತಿನ್ನೊಹಂಗ್ ನೋಡಿ, ಕೈಗೆ ಎತ್ಕೊಂಡು, ಟಕ್ ಅಂತ ಬಡ್ದು, ನೋಡ್ರಪ್ಪಾ ಐದುಕ್ಕಾದ್ರೆ ಕೊಡ್ರಿ ಎಲ್ಲಾ ತಗಂತಿನಿ ಇಲ್ಲಾ ಅಂದ್ರೆ ಎತ್ಕಂಡ್ ಹೋಗ್ರಿ ಅನ್ನೋದಾ? ನಾನು ಮತ್ತೆ, ಅಮೀಬಾ ಕೊಟ್ಬುಡಾನ ಕಣೋ ಅಂದೆ, ಅವ್ನು ಮತ್ತೆ ಒಪ್ಲಿಲ್ಲ! ಆರುಪಾಯ್ಗೆ ನಯಾ ಪೈಸಾ ಕಮ್ಮಿಗೆ ಕೊಡಾದ್ ಬೇಡ, ನಡಿ ಎತ್ಕಂಡು ಅನ್ನೋದಾ? ನಂಗೆ ಸ್ಕೂಲ್ಗೆ ತಡ ಆಗುತ್ತೋ, ನೀನ್ ಬೇರೆ ಅಂಗಡಿಗ್ಹೋಬೇಕು” ಅಂದೆ. + +ಅಮೀಬಾ ನನ್ ಕೈಯಲ್ಲಿದ್ದ ಚೀಲ ಕಿತ್ಕೊಂಡು ಕಾಯೆಲ್ಲ ಕೆಳಗೆ ಸುರಿದು “ಏಳ್ ರುಪಾಯ್ ಒಂದ್ ಕಾಯಿ, ಏಳ್ರುಪಾಯ್ ಒಂದ್ ಕಾಯಿ ಅಂತಾ ಕೂಗೋಕೆ ಶುರು ಮಾಡ್ಬುಟ್ಟ! ಶೆಟ್ಟಿ ಹತ್ರ ಇದಕ್ಕಿಂತಾ ಚಿಕ್ಕು ಕಾಯಿತ್ತು ಅದುನ್ನ ಅವ್ನು ಎಂಟ್ರುಪಾಯಿಗೆ ಮಾರ್ತಾಯಿದ್ದ, ಎಲ್ಲಿ ನಮ್ಮಿಂದ ಅವನ ವ್ಯಾಪಾರಕ್ಕೆ ಕುತ್ ಬೀಳುತ್ತೋ ಅಂತ, ಪಕ್ ಅಂತ ಹತ್ರ ಬಂದು ಆರ್ರುಪಾಯಿಗೆ ಕೊಡ್ರೋ ನಾನೇ ಎಲ್ಲಾ ತಗೋತೀನಿ ಅನ್ನೋದಾ! ನಾವು ಎಲ್ಲಾ ಅವ್ನಿಗ್ ಮಾರಿ ಕಾಸ್ ಇಸ್ಕೊಂಡ್ ಬಂದ್ವಿ ನೋಡ್ರಪ್ಪಾ, ನೀವ್ ಏನೇ ಹೇಳ್ರೋ ನಮ್ಮ ಅಮೀಬಾ ವ್ಯಾಪಾರದಲ್ಲಿ ಶೆಟ್ಟ್ರುನೇ ಮೀರುಸ್ತಾನೆ ಬಿಡು” ಅಂದಾಗ ನಮ್ಮ ಕಣ್ಣುಗಳು ಅಭಿಮಾನದಿಂದ ಹೊಳೆಯುತ್ತಿದ್ದವು. ಜೊತೆಗೆ ಕಾಯಿಮಾರಿದ ಹಣವೆಲ್ಲಾ ಮಂಜನ ಹತ್ತಿರವೇ ಇರುವುದನ್ನು ಕೇಳಿ ಮತ್ತಷ್ಟು ಖುಷಿಯಾಯಿತು. ಸ್ನೇಹಿತರೆಲ್ಲಾ ಅದನ್ನ ಹೇಗೆ ಖರ್ಚು ಮಾಡುವುದೆಂದು ಚರ್ಚಿಸುತ್ತಿರುವಾಗ ನಾನು ಅಬೀಬನನ್ನ ಒಂದು ಮಾತುಕೇಳಬೇಕಿತ್ತು ಅಂದದ್ದಕ್ಕೆ ಮಂಜ “ಏನು ಪ್ರಾಬ್ಲಮ್ಮ್ ಇಲ್ಲ ಅವ್ನುನಿಮಗೆ ಹೆಂಗ್ ಬೇಕೋ ಹಂಗ್ ಖರ್ಚು ಮಾಡ್ರೋ, ನಂದ್ ಏನ್ತಕ್ರಾರ್ ಇಲ್ಲ” ಅಂದಿದ್ದನಂತೆ. + +ರವಿ, ನಾವೆಲ್ಲಾ ಒಟ್ಟಿಗೆ ಹೋಗಿ ದಾವಣಗೆರೆ ಬೆಣ್ಣೆ ಮಸಾಲೆ ತಿನ್ನೋದಾ ಅಂದಾಗ ಎಲ್ಲರ ಬಾಯಲ್ಲೂ ಬೆಣ್ಣೆಯಾಡತೊಡಗಿತು! ಈ ಐಡಿಯಾ ಎಲ್ಲರಿಗೂ ಒಪ್ಪಿಗೆಯೂ ಆಯಿತು. ಮಾರನೆಯ ದಿನಸಂಜೆ ಅಬೀಬನನ್ನೂ ಕರೆದುಕೊಂಡು ಹೋಟೆಲ್ಲಿಗೆ ಹೋಗಿ ಎಲ್ಲಾ ದೋಸೆ ತಿಂದು ಬಂದೆವು, ಎಂತಾ ಅನುಭವ ಅದು! ನಾವೆಲ್ಲಾ ಗೆಳೆಯರು ಒಟ್ಟಿಗೆ ಹೋಗಿ ಹೋಟೆಲ್ಲಿನಲ್ಲಿ ತಿಂದದ್ದು ಅದೇ ಮೊದಲಬಾರಿ. ನಾವು ಒಂದೆರಡು ದಿನ ಅದರ ಗುಂಗಿನಿಂದ ಹೊರ ಬರಲೇಇಲ್ಲ. + +***ನಮಗೆ ಯಾವತ್ತಿಗೂ ಸುಲಭವಾಗಿ ಅಷ್ಟು ಹಣಸಿಗಬಹುದೆನ್ನುವುದರ ಬಗ್ಗೆ ಅಂದಾಜೇ ಇರಲಿಲ್ಲ. ಒಮ್ಮೆ ರುಚಿಕಂಡ ನಾವು ಮತ್ತೆ ಮತ್ತೆ ಸಾಬಾಪಾಶಕ್ಕೆ ಲಗ್ಗೆ ಹಾಕಿದೆವು. ಎಳೆಯ, ಒಣಗಿದ ಎಲ್ಲ ಕಾಯಿಗಳನ್ನೂ ಹೊಡೆದುರುಳಿಸಿದೆವು. ಕೆಲವು ದಿನಗಳಲ್ಲೇ ಎಲ್ಲ ಮರಗಳೂ ಬರಿದಾದವು. ಸ್ಕೂಲಿನ ಹೆಡ್ ಮಾಸ್ಟರಿಗೆ ಇದು ಕಿರಿಕಿರಿ ಉಂಟು ಮಾಡಿತು. ಬಹುಷಃ ತಮ್ಮ ಪಾಲಿನ ಆಸ್ತಿ ಬೇರೆಯವರ ಪಾಲಾಗುತ್ತಿದೆ ಅಂತ ಇರಬಹುದು. ವರ್ಷವರ್ಷ ತೆಂಗಿನಕಾಯಿ, ಹಲಸನ್ನು ತಮ್ಮ ಅಧ್ಯಕ್ಷತೆಯಲ್ಲಿ ಕೆಡವಿಸಿ, ಕೀಳಿಸಿ ಎಲ್ಲ ಶಿಕ್ಷಕರಿಗೂ ಒಂದೊಂದನ್ನೂ ಔಪಚಾರಿಕವಾಗಿ ಕೊಟ್ಟು, ತಾವು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದರಿಂದ ಈ ವರ್ಷ ಅದಕ್ಕೆ ಕತ್ತರಿ ಬಿದ್ದದ್ದನ್ನು ನೋಡಿ ವ್ಯಗ್ರರಾದರು. ತಮ್ಮ ವಿದ್ಯಾರ್ಥಿಗಳಿಗೆ, ಆಚೀಚೆಗಿನ ಅಂಗಡಿಯವರಿಗೆ ಈ ಬಗ್ಗೆ ಹೇಳಿ ನಿಗಾ ವಹಿಸಲು ಕೋರಿದರು. ಸಾಬಾಪಾಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಕಡಿವಾಣ ಹಾಕಿದರು. ಅದನ್ನೂ ಲೆಕ್ಕಿಸದೆ ನಾವು ಅಲ್ಲಿ ಆಡತೊಡಗಿದೆವು. + +ಒಂದು ದಿನ ಹೀಗೆ ಆಡುತ್ತಿರುವಾಗ ಬಾಲು ತಾರಸಿಯ ಮೇಲೆ ಹೋಯಿತು. ಮಂಜ ಮೇಲೆ ಹತ್ತಿ ಸುತ್ತ ಹರಡಿದ್ದ ಎಲೆಗಳ ನಡುವೆ ಹುಡುಕುತ್ತಾ ನಿಂತಾಗ, ಎದಿರು ಅಂಗಡಿಯ ಗಂಗಾಧರಯ್ಯನವರಿಗೆ ಸ್ಪಷ್ಟವಾಗಿ ಕಂಡಿತು. ಅವರೋ ಮುನಿಸಿಪಲ್ ಕೌನ್ಸಿಲ್ಲರ್ ಆಗಿದ್ದವರು. ತಮ್ಮ ಟೈಮಿನಲ್ಲಿ ಸಾಬಾಪಾಶಕ್ಕಾಗಿ ಶ್ರಮಿಸಿ ಹಳೆಯ ಗೋಡೆ ರಿಪೇರಿ, ಶೌಚಾಲಯದ ಸ್ವಚ್ಛತೆ, ಹೆಂಚುಗಳ ದುರಸ್ಥಿ, ಸುಣ್ಣ-ಬಣ್ಣ ಹೀಗೆ ಹಲವಾರು ಕೆಲಸಗಳನ್ನು ಮಾಡಿಸಿ ಇಲ್ಲೊಂದು ಶಾಲೆಯಿದೆ ಅನ್ನುವುದನ್ನು ಹೋಗಿ ಬರುವವರಿಗೆ ಮನದಟ್ಟು ಮಾಡಿಸಿದ್ದರು. ಈಗ ಶಾಲೆ ಸರ್ಕಾರದ ಯಾವ್ಯಾವುದೋ ಸ್ಕೀಮುಗಳಿಂದ ಬಹಳಷ್ಟು ಅಭಿವೃದ್ಧಿ ಹೊಂದಿದೆಯಾದರೂ ತಾನು ಕೈಗೊಂಡ ಕಾರ್ಯಗಳಿಂದಲೇ ಇಲ್ಲಿಯವರೆಗೂ ಶಾಲೆ ಉಳಿದಿದೆಯೆಂದು ಬಲವಾಗಿ ನಂಬಿದ್ದರು. ಕೆಲವು ದಿನಗಳಿಂದ ಕಾಯಿ, ಹಣ್ಣು ಕಳವಾಗುವುದರ ಬಗ್ಗೆ ತಿಳಿದು ಸಿಟ್ಟಾಗಿದ್ದರು. + +“ಹೀಗೆ ಬಿಟ್ಟರೆ ನಾಳೆ ಹೆಂಚು, ತೀರು, ಬೋರ್ಡು, ಬೆಂಚು, ಟೇಬಲ್ಲು ಏನೂ ಬಿಡಲ್ಲ ಕಳ್ಳ ಮುಂಡೆ ಮಕ್ಳು, ಗವರ್ನಮೆಂಟ್ ಸ್ಕೂಲು ಅಂದ್ರೆ ಯಾರೂ ಹೇಳೋವ್ರ್ ಕೇಳೋವ್ರ್ ಇಲ್ಲ ಅನ್ಕೊಂಬುಟ್ಟವ್ರೆ” ಅಂತ ತಮ್ಮ ಓರಗೆಯವರ ಹತ್ತಿರ ಗುಡುಗಿದ್ದರು. + +ಈಗ ನೋಡಿದರೆ ಕಳ್ಳ ತಾರಸಿಯ ಮೇಲೇ ಇದ್ದಾನೆ! ಹೇಗಾದರೂ ಮಾಡಿ ಹಿಡಿಯುಬೇಕು ಅಂತ ತಮ್ಮ ಊರುಗೋಲು ಹಿಡಿದು ಶಾಲೆಯ ಹಿಂಬದಿಯ ಕನ್ಸರ್ವೆನ್ಸಿಯ ಗೋಡೆಯ ಬಳಿ ಬಂದುನಿಂತರು. ಮಂಜ ಸಿಕ್ಕ ಬಾಲನ್ನು ನಮ್ಮಲ್ಲಿಗೆ ಎಸೆದು ತಾರಸಿಯ ಗೋಡೆಯ ಮೇಲಿನಿಂದ ಜೋಪಾನವಾಗಿ ಇಳಿದು ಅಲ್ಲಿಂದ ನಡೆದು, ಫೀಲ್ಡಿನ ಚಿಕ್ಕ ಗೋಡೆಯ ಬಳಿ ಬರುವಾಗ ಅಲ್ಲೇಕಾಯುತ್ತಿದ್ದ ಗಂಗಾಧರಯ್ಯನವರು ಜೋರಾಗಿ ಕೋಲು ಬೀಸಿದರು. ಅದು ಅವನ ಹಿಮ್ಮಡಿಗೆ ಬಲವಾಗಿ ತಗುಲಿ ಸಮತೋಲನ ಸಿಗದೆ ಅದೃಷ್ಟವಶಾತ್ ಕನ್ಸರ್ವೆನ್ಸಿಯ ಕಡೆ ಬಿದ್ದು, ತಡವರಿಸಿ ಎದ್ದು ಹಿಂದೆನೋಡದೆ, ಸತ್ತೆನೋ ಕೆಟ್ಟೆನೋ ಅಂತ ಓಟ ಕಿತ್ತ. ಬಾಲು ಕೊಟ್ಟು ಎಷ್ಟು ಹೊತ್ತಾದರೂ ಮಂಜ ಬಾರದಿರುವುದನ್ನು ನೋಡಿ ನಟ ಗೋಡೆ ಹತ್ತಲು ಹೋದವನು ದೊಪ್ಪನೆ ಹಿಂದಕ್ಕೆ ಜಿಗಿದು “ಲೋ ಗಂಗಾಧರಯ್ಯ ಬತ್ತಾ ಅವ್ನೆ” ಅಂದಾಗ ಬ್ಯಾಟು, ಬಾಲು ಎಲ್ಲಹಿಡಿದು ಒಟ್ಟಿಗೆ ಮುಂದಿನ ಗೇಟಿನಿಂದ ಎಲ್ಲರೂ ಒಟ್ಟಿಗೆ ಓಡಿದೆವು. + +ಮನೆಯ ಹತ್ತಿರ ಬಂದಾಗ, ಮಂಜ ಜಗುಲಿಯ ಮೇಲೆ ಕೂತಿದ್ದ. ಅವನ ಹಿಮ್ಮಡಿ ಊದಿ ಕೆಂಪಾಗಿತ್ತು. ಬಲವಾಗಿ ಹೊಡೆತಬಿದ್ದನಂತರ ಓಡಿದ್ದರಿಂದ ಈಗ ಒಂದು ಹೆಜ್ಜೆ ಇಡುವುದೂ ಅಸಾಧ್ಯವಾಗಿತ್ತು. ನಮಗೆ ಅವನ ಪರಿಸ್ಥಿತಿ ಕಂಡು ದುಖ:ವಾಗಿತ್ತು. ಒಂದುವೇಳೆ ನಾವ್ಯಾರಾದರೂ ಅವನ ಸ್ಥಿತಿಯಲ್ಲಿ ಇದ್ದಿದ್ದರೆ ಖಂಡಿತಾ ಸಿಕ್ಕಿಬಿದ್ದು ಮತ್ತೊಂದಷ್ಟು ಏಟು ತಿಂದು ಬರುತ್ತಿದ್ದೆವು ಎಂದು ರವಿ ಹೇಳಿದಾಗ ಎಲ್ಲರೂ ‘ಹೂ೦’ ಗುಟ್ಟಿದೆವು. ಅದರಿಂದ ಸ್ವಲ್ಪ ಉತ್ತೇಜಿತನಾದಂತೆ ಮಂಜ ನಡೆದುದ್ದೆಲ್ಲವನೂ ವಿವರಿಸಿದ. ಅನಂತರ ಒಂದಷ್ಟು ದಿನಗಳು ಸಾಬಾಪಾಶಕ್ಕೆ ಹೋಗುವುದೇ ಬೇಡವೆಂದು ನಿರ್ಧರಿಸಿದೆವು. + + + +*** + +ಆ ದಿನ ಬುಧವಾರ ಸ್ಕೂಲಿಗೆ ಕಲರ್ ಡ್ರೆಸ್. ಯುನಿಫಾರ್ಮ್, ಬೆಲ್ಟ್, ಶೂ, ಟೈ ಅಂತ ಟೈಮ್ ವೇಸ್ಟ್ ಆಗುವುದಿಲ್ಲವಾದ್ದರಿಂದ ಎಂಟುಗಂಟೆಯಾದರೂ ಇನ್ನೂ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದೆ. ಅಮ್ಮ ಒಂದೆರಡು ಬಾರಿ “ಬೇಗ ಏಳೋ ಸೋಂಬೇರಿ” ಎಂದು ಕೂಗಿದ್ದಳು. ನಾನು ಇನ್ನೂ ಮಲಗೇ ಇದ್ದೆ. ಹೊರಗೆ ದೂರದಲ್ಲಿ ಅಪ್ಪನ ಬೈಕ್ ಸದ್ದು ಮಾಡಿದಾಗ ‘ಛಂಗನೆ’ ಎದ್ದೆ. ಹೊದ್ದಿದ್ದ ಬೆಡ್ ಶೀಟನ್ನು ಬೇಗನೆ ಮಡಿಚಿಟ್ಟು, ಹಾಸಿಗೆ ಸರಿಮಾಡಿ ಸುತ್ತಿ, ಮೂಲೆಸೇರಿಸಿ, ಒಳಬಾಗಿಲಿನ ಮೇಲೆ ಹಾಕಿದ್ದ ಟವೆಲ್ ಎಳೆದು ಕೊಂಡು ಸ್ನಾನದಮನೆ ಸೇರಿ ಬಾಗಿಲು ಜಡಿದೆ. ಅಮ್ಮ ಇದನ್ನೆಲ್ಲಾ ಗಮನಿಸಿ “ಇದಕ್ಕೇನು ಕಡಿಮೆ ಇಲ್ಲ ನೋಡು” ಅಂದಳು. + +ಅಪ್ಪ ಮನೆಯೊಳಗೆ ಬಂದಾಗ ನಾನು ಬಚ್ಚಲಿನ ಒಳಗೆ ಹಲ್ಲು ಉಜ್ಜುತ್ತಿದ್ದೆ. ಆಗ ಅವರು “ಇವಳೇ, ನಮ್ಮ ಪೆಟ್ಟಿಗೆ ಅಂಗಡಿ ಕಾಸಿಂಸಾಬರು ಇರಲಿಲ್ವಾ? ಇವತ್ತು ಬೆಳಿಗ್ಗೆ ನಾಲ್ಕೂವರೆ ಐದು ಗಂಟೆ ಸುಮಾರಿಗೆ ಎದೆ ನೋವು ಅಂದ್ರಂತೆ, ಅವರ ಹೆಂಡ್ತಿ ಬಿಸಿನೀರು ಕಾಯಿಸಿ ತರೋದ್ರೊಳ್ಗೆ ಪ್ರಾಣ ಹೊರಟು ಹೋಗಿದೆ. ಐದಾರ್ ಜನ ಹೆಣ್ಮಕ್ಳು ಒಬ್ರಿಗೂ ಮದ್ವೆ ಆಗಿಲ್ಲ, ಆ ಗಂಡುಮಗ ಬೇರೆ ನಮ್ ನವೀನನ ವಯಸ್ಸಿನವನು, ಆವಮ್ಮ ಅದೇನ್ಮಾಡುತ್ತೋ ಏನ್ ಕಥೇನೋ ಆ ದೇವರೇ ಬಲ್ಲ” ಅಂದರು. + +ಬಚ್ಚಲಿನಲ್ಲಿ ಕೋಳಿನಿದ್ದೆ ಹೊಡೆದುಕೊಂಡು ಹಲ್ಲು ಉಜ್ಜುತ್ತಿದ್ದ ನನಗೆ ಹೊಟ್ಟೆಯಲ್ಲಿ ಸಂಕಟ ಶುರುವಾಯಿತು. ಇಂಥಾ ಸಮಯದಲ್ಲಿ ನಾವೆಲ್ಲಾ ಗೆಳೆಯರು ನಮ್ಮ ಜೀವದ ಗೆಳೆಯ ಅಬೀಬಾನ ಹತ್ತಿರ ಇರಬೇಕು, ಹೌದು ಅದೇ ಒಳಿತೆನಿಸಿತು. ಬೇಗ ಬೇಗ ಸ್ನಾನಮಾಡಿ, ಸಿಕ್ಕ ಬಟ್ಟೆ ಹಾಕಿಕೊಂಡು, ದೇವರ ಮನೆಯ ಕಡೆಗೂ ಹೋಗದೆ ಮನೆಯಿಂದಾ ಹೊರಬಿದ್ದು ಮಂಜ, ನಟ, ರವಿ, ಮಧು ಎಲ್ಲರನ್ನೂ ಕರೆದು ವಿಷಯ ತಿಳಿಸಿದೆ. ನಂತರ ಎಲ್ಲರು ನಮ್ಮ ಮನೆಗಳ ಹಿಂದಿನ ಬೀದಿಯ ಸಾಬರ ಬೀದಿಗೆ ಹೋದೆವು. ದೂರದಿಂದಲೇ ಅಬೀಬಾನ ಮನೆಯ ಹತ್ತಿರದ ಜನಸಂದಣಿ ನೋಡಿ ಭಯವಾಯ್ತು. ಒಬ್ಬೊಬ್ಬರನ್ನೇ ಪಕ್ಕಕ್ಕೆ ಸರಿಸಿ ಮುಂದೆ ಹೋಗಿ ನಿಂತೆವು. ಖಾಸೀಮ್ ಸಾಬರನ್ನು ಅವರ ಮನೆಯ ವರಾಂಡದಲ್ಲಿ ಮಲಗಿಸಿದ್ದರು. ಅಬೀಬನ ತಾಯಿ ಅತ್ತೂ ಕಣ್ಣು ಬತ್ತಿ ಹೋಗಿ ಯಾವ ಶಕ್ತಿಯೂಇಲ್ಲದಂತಾಗಿ ವರಾಂಡಾದ ಗೋಡೆಗೆ ಒರಗಿದ್ದರು. ಹೆಣ್ಣು ಮಕ್ಕಳು ಒಬ್ಬರನ್ನೊಬ್ಬರು ಸಂತೈಸುತ್ತಾ ಅಳಲೂ ಆಗದೆ, ಸುಮ್ಮನಿರಲೂ ಆಗದೆ ವ್ಯಥೆ ಪಡುತ್ತಿದ್ದರು. ಅಬೀಬ ಮಾತ್ರ ಒಳಗೂ ಹೊರಗೂ ಓಡಾಡುತ್ತಾ ಏನಕ್ಕೋ ಸಿದ್ಧತೆ ಮಾಡುತ್ತಿದ್ದ. ಅವನನ್ನೂ ಸಂತೈಸಲು ಬಂದ ನಾವುಗಳು ಕೃಶವಾಗಿ ಹೋದರೂ ಅಬೀಬ ಧೈರ್ಯವಾಗಿದ್ದ. ಆ ಕ್ಷಣದಲ್ಲಿ ನನಗೆ “ಅಲ್ಲಾಹ್” ಯಾವುದೋ ಅಧ್ಭುತ ಶಕ್ತಿಯನ್ನು ಇವನಿಗೆ ದಯಪಾಲಿಸಿದ್ದಾನೆ ಅನ್ನಿಸಿತು. + +ಸ್ವಲ್ಪ ಸಮಯಕ್ಕೆ ನಾಲ್ಕು ಜನ ಅದೆಂತಹುದೋ ಪೆಟ್ಟಿಗೆಯೊಂದನ್ನು ತಂದರು. ಅದರ ಮೇಲೆ ಹಸಿರುಬಟ್ಟೆಹೊದಿಸಿದ್ದರು. ಕಾಸೀಮ ಸಾಬರನ್ನು ಅದರೊಳಗೆ ಮಲಗಿಸಿ ಸೆಂಟುಗಳನ್ನು ಚುಮುಕಿಸಿ ಕೊನೆಯ ದರ್ಶನ ಮಾಡಿಕೊಳ್ಳುವವರು ಮಾಡಿಕೊಳ್ಳಿ ಎಂದರು. ನಂತರ ಪೆಟ್ಟಿಗೆಯನ್ನು ಮುಚ್ಚಿ ಹಸಿರುಬಟ್ಟೆಯ ಮೇಲೆ ಮಲ್ಲಿಗೆ ಹೂವಿನ ಅಲಂಕಾರ ಮಾಡಿ ಎತ್ತಿಕೊಂಡು ಮಸೀದಿಯ ಬಳಿ ಪ್ರಾರ್ಥನೆಗೆ ಕೊಂಡೊಯ್ಯುವಾಗ ಹೆಂಗಸರೆಲ್ಲಾ ಮನೆಯಲ್ಲಿಯೇ ಉಳಿದರೆ ಗಂಡಸರು ಹೆಗಲಿಗೆ ಹೆಗಲು ಕೊಡುತ್ತಾ ಮುನ್ನಡೆದರು. ನಾವೆಲ್ಲಾ ಸ್ಮಶಾನದವರೆಗೆ ಹೋಗುವುದೆಂದು ಮೊದಲು ತೀರ್ಮಾನಿಸಿದ್ದನ್ನು ಕೈಬಿಟ್ಟು ನಮ್ಮಗಳ ಮನೆಗಳತ್ತ ನಡೆದೆವು. + +*** + +ಕಾಸಿಮ್ ಸಾಬರ ನಿಧನದ ನಂತರ ಎಲ್ಲ ಜವಾಬ್ದಾರಿಗಳು ಅಬೀಬನ ಮೇಲೆ ಬಿದ್ದವು. ಅವರ ಬಹುಪಾಲು ಅಂಗಡಿಗಳನ್ನು ಅವನ ಅಕ್ಕ ತಂಗಿಯರು ನೋಡಿಕೊಳ್ಳುತ್ತಿದ್ದರಿಂದ ಅವನು ಮತ್ತಷ್ಟು ಎಚ್ಚರಿಕೆ ವಹಿಸಬೇಕಿತ್ತು. ಹೀಗಿರುವಾಗ ನಮ್ಮೊಡನೆ ಕೆಲಸಕ್ಕೆ ಬಾರದ ಆಟವಾಡಲು, ಹರಟೆ ಹೊಡೆಯಲು ಸಾಧ್ಯವೇ? ದಿನೇ ದಿನೇ ಅಬೀಬಾ ಅವನ ಕೆಲಸ ಕಾರ್ಯಗಳಲ್ಲಿ ಮಗ್ನನಾದ. ವರ್ಷ ಕಳೆವುದರೊಳಗೆ ದೊಡ್ಡ ಅಕ್ಕ ತಬಸೂಮಳ ಮದುವೆಯಾಯ್ತು. ಆ ಸಮಯಕ್ಕೇ ಮುನಿಸಿಪಲ್ ಆಫೀಸಿನಲ್ಲಿ ಅಕೌಂಟೆಂಟ್ ಆಗಿದ್ದ ನನ್ನಪ್ಪನಿಗೆ ಕೋಲಾರಕ್ಕೆ ವರ್ಗ ಆಯ್ತು. ನಾನಾಗ ಹತ್ತನೇ ತರಗತಿಗೆ ಕಾಲಿಟ್ಟಿದ್ದೆ. ನಂತರದ ದಿನಗಳಲ್ಲಿ ಓದು, ಪಾಠ, ಉದ್ಯೋಗ ಅಂತಲೇ ಓಡಾಡಿದ್ದರಿಂದ ಹಳೆಯ ನೆನಪುಗಳೆಲ್ಲಾ ಹಿತ್ತಲಿಗೆ ಸರಿದವು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಮತ್ತೆ ನಾನು ತುಮಕೂರಿಗೆ ಹೋಗಬೇಕಾಗಿ ಬಂದದ್ದು ಅಕ್ಕನ ಮದುವೆಯ ಸಂಧರ್ಭದಲ್ಲಿ. ಆಗ ನಾವಿದ್ದದ್ದು ಮೈಸೂರಿನಲ್ಲಿ, ನಾವು ಅಪ್ಪನ ಜೊತೆ ಸಾಕಷ್ಟು ಊರುಗಳನ್ನು ಅಲೆದೆವಾದರೂ ತುಮಕೂರಿನ ನೆರೆ-ಹೊರೆ ನಮಗೆ ಬೇರೆಲ್ಲೂ ಸಿಕ್ಕಲಿಲ್ಲ. ಆ ಕಾರಣಕ್ಕಾಗಿಯೇ ಅಮ್ಮ ನನ್ನ ಜೊತೆಗೆ ಖುದ್ದಾಗಿ ಲಗ್ನಪತ್ರಿಕೆ ಹಂಚಲು ಬರುವುದಾಗಿ ಹೇಳಿದಳು. ಒಂದು ಭಾನುವಾರದ ದಿನ ನಸುಕಿಗೇ ಎದ್ದು ತುಮಕೂರಿನ ಬಸ್ಸು ಹಿಡಿದೆವು. ಊರು ತಲುಪಿದಾಗ ಒಂಭತ್ತು ಗಂಟೆ. ಆರಕ್ಕೇರದ ಮೂರಕ್ಕಿಳಿಯದ ತುಮಕೂರು ಪ್ರಶಾಂತವಾಗಿತ್ತು. ನಡೆದೇ ನಾವಿದ್ದ “ಗಂಗಮ್ಮಜ್ಜಿ” ವಠಾರಕ್ಕೆ ಹೋದೆವು. ವಠಾರದ ಹೆಂಗಸರೆಲ್ಲಾ ಅಮ್ಮನನ್ನು ನಾಮುಂದು ತಾಮುಂದು ಎಂಬಂತೆ ತಮ್ಮ ಮನೆಗಳಿಗೆ ಕರೆದರೆ ನನ್ನನ್ನು ಮಾತ್ರ “ಈವಪ್ಪ ಯಾರು?” ಎಂದು ಕೇಳುವುದು, ನನ್ನಮ್ಮ “ಅಯ್ಯೋ ಇದು ನಮ್ಮ ನವೀನ” ಅಂದರೆ “ಓಹ್ ಗುರುತೇ ಸಿಗಲಿಲ್ಲಾ ನೋಡು! ಇಲ್ಲಿದ್ದಾಗ ಕುಳ್ಳಕ್ಕೆ -ತೆಳ್ಳಕ್ಕೆ ಇದ್ದೆ” ಅನ್ನುವುದು ಸ್ವಾಭಾವಿಕ ಅನಿಸಿತು. + +ನಾನು ಅಮ್ಮನಿಗೆ ಹೇಳಿ ವಠಾರದಿಂದ ಹೊರಬಿದ್ದವನೇ ಮೊದಲು ಹೋದದ್ದು ಎದುರಿನ ಓಣಿಯ ಕೊನೆಯ ಮಂಜನ ಮನೆಗೆ. ಅವನು ಮನೆಯಲ್ಲಿ ಇರಲಿಲ್ಲ. ಅವನಮ್ಮ ಜನತಾ ಬಜಾರ್ ಬಳಿ ಅವನೊಂದು ಚಿಕ್ಕ ಟೀ ಅಂಗಡಿ ಇಟ್ಟಿರುವುದಾಗಿಯೂ ಅಲ್ಲಿಹೋದರೆ ಸಿಕ್ಕುವನೆಂದು ಹೇಳಿದರು. ಅಲ್ಲಿಂದ ನಂತರ ನಟನಮನೆಗೆ ಹೋದರೆ ತಿಳಿದದ್ದು ಆರು ತಿಂಗಳಿನಿಂದ ಬೆಂಗಳೂರಿನ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಆಗಾಗ ಊರಿಗೆ ಬಂದು ಹೋಗುತ್ತಾನೆಂಬುದು. ಮಧು ನನಗೇ ತಿಳಿದಿದ್ದಂತೆ ಹಾಸನದ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ಫೈನಲ್ ಇಯರ್ ಓದುತ್ತಿದ್ದ. ಹಾಗಾಗಿ ರವಿ ಒಬ್ಬನೇ ಮನೆಯಲ್ಲಿ ಸಿಕ್ಕಿದ್ದು. ಅವನಿಂದ ನಮ್ಮ ಇನ್ನೂ ಹಲವು ಸ್ನೇಹಿತರು ಎಲ್ಲಿ-ಏನು ಮಾಡುತ್ತಿದ್ದಾರೆಂದು ತಿಳಿಯಿತು. + +ಮಾತಿನ ಮಧ್ಯೆ ಅಬೀಬನ ಹೆಸರು ಬಂದಾಗ ನಾನು ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದೆ. ಅದರಿಂದ ತಿಳಿದು ಬಂದ್ದದೇನೆಂದರೆ , ಅಬೀಬ ಕಷ್ಟ ಪಟ್ಟು ದುಡಿಯುತ್ತಿದ್ದಾನೆ. ಈಗಾಗಲೇ ನಾಲ್ಕು ಅಕ್ಕಂದಿರ ಮದುವೆ ಮಾಡಿದ್ದಾನೆ. ಉಳಿದಿರುವವಳು ಕೊನೆಯ ತಂಗಿಯೊಬ್ಬಳೇ, ಅವಳ ಮದುವೆಗೂ ಏರ್ಪಾಟು ಮಾಡಿಕೊಳ್ಳುತ್ತಿದ್ದಾನೆ. ತಮ್ಮ ಕುಟುಂಬದವರೇ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿಗಳನ್ನು ಈಗ ನಂಬಿಕಸ್ಥರಿಗೆ ಬಿಟ್ಟು ಕೊಟ್ಟಿದ್ದಾನೆ. ತನಗೆ ಓಡಾಡಲು ಮೋಟಾರ್ ಬೈಕೊಂದನ್ನು ಕೊಂಡಿದ್ದಾನೆ ಎಂಬುದು. + +ಇವೆಲ್ಲವೂ ಅಬೀಬನ ಮೇಲೆ ನನಗಿದ್ದ ಪ್ರೀತಿಯನ್ನುಗೌರವವನ್ನಾಗಿಸಿದವು. ಕೂಡಲೇ ರವಿಗೆ ಅಬೀಬನು ಈಗ ಎಲ್ಲಿಸಿಕ್ಕುತ್ತಾನೆಂದು ಕೇಳಿದ್ದಕ್ಕೆ ಅವನು “ಮಧ್ಯಾಹ್ನ ಒಂದೂವರೆ ಸುಮಾರಿಗೆ ಸಾಬಾಪಾಶದ ಹತ್ತಿರ ಕಲೆಕ್ಷನ್ ಗೆ ಬರುತ್ತಾನೆ. ಆಗ ಸಿಗಬಹುದು” ಅಂದ. ಸಾಬಾಪಾಶ ಎಂಬ ಹೆಸರನ್ನು ಕೇಳಿಯೇ ವರ್ಷಗಳಾಗಿದ್ದವು. ಆಗಿನ ನೆನಪುಗಳೆಲ್ಲಾ ಒಂದೊಂದಾಗಿ ಮರುಕಳಿಸಿದವು. + +ಮಧ್ಯಾಹ್ನ ಒಂದರ ಸುಮಾರಿಗೆ ವಿಪರೀತ ಬಿಸಿಲಿನಲ್ಲೇ ನಾನು ಮತ್ತು ರವಿ ಸಾಬಾಪಾಶದ ಅದೇ ಗೋಡೆಯ ಮೇಲೆ ಹೋಗಿ ಕುಳಿತೆವು. ಎದುರುಗೆ ಅದೇ ಪೆಟ್ಟಿಗೆ ಅಂಗಡಿ, ಆದರೆ ಒಳಗೆ ಮತ್ಯಾರೋ ಇದ್ದರು. ಸ್ವಲ್ಪ ಸಮಯಕ್ಕೆ ಬೈಕಿನ ಮೇಲೆ ಬಂದವ್ಯಕ್ತಿಯೊಬ್ಬ ರವಿಯ ಕಡೆಗೆ ಕೈಮಾಡಿದ. ರವಿ ಪ್ರತಿಕ್ರಿಯಿಸಿ ನನ್ನಕಡೆಗೆ ತಿರುಗಿ “ನೋಡೋ ಅಬೀಬಾ” ಎಂದಾಗ ನನಗೆನಂಬಲಿಕ್ಕೇ ಆಗಲಿಲ್ಲ! + +ಆಗ ನನಗಿಂತಾ ಸಣ್ಣಗಿದ್ದ ನಾವು ಕೆಲವೊಮ್ಮೆ ವಿನೋದಕ್ಕೆ “ಅಮೀಬಾ” ಅನ್ನುತ್ತಿದ್ದವನು ದಷ್ಟಪುಷ್ಟವಾಗಿ ಬೆಳೆದು ನಲವತ್ತು ವರ್ಷದವನ೦ತ್ತಿದ್ದು, ಗಡ್ಡಧಾರಿಯಾಗಿದ್ದ. ನಾನು ಕೈಬೀಸಿದಾಗ ಗೊಂದಲದಿಂದಲೇ ನನನ್ನು ಗಮನಿಸಿದ ಅಬೀಬಾ ಏನೋ ಹೊಳೆದವನಂತೆ ಗಾಡಿಯ ಸ್ಟ್ಯಾಂಡ್ ಹಾಕಿ, ರಸ್ತೆ ದಾಟಿ ಲಗುಬಗೆಯಿಂದ ನಮ್ಮ ಬಳಿ ಬಂದು ನಿಂತವನೇ “ಏ ನವೀನ ಅಲ್ವಾ?” ಅಂದ. + + + +ನಾನು ಖುಷಿಯಿಂದಾ ಹೂ೦ಗುಟ್ಟಿದೆ. “ನೋಡ್ದಾ ಹೆಂಗೆ ಕಂಡ್ಹಿಡ್ದೆ ” ಅಂದವನೇ ನನ್ನ ಹಿಂದೂ ಮುಂದೂ ಎಲ್ಲಾ ಒಂದೇ ಜಾಡಿಗೆ ವಿಚಾರಿಸಿಬಿಡುವ ಉತ್ಸಾಹ ತೋರಿದ. ನಾನು ಕೈಚೀಲದಿಂದ “ಲಗ್ನಪತ್ರಿಕೆ” ಯೊಂದನ್ನು ತೆಗೆದು ಅದರ ಮೇಲೆ “ಅಬೀಬಾ” ಎಂದು ಬರೆಯ ಹೊರಟವನು ಮನಸಲ್ಲೇ ನನ್ನನ್ನು ನಾನು ತಿದ್ದಿಕೊಂಡು “ಅಬೀಬ್ ಸಾಬ್ ರವರು ಮತ್ತು ಕುಟುಂಬ, ತುಮಕೂರು” ಎಂದು ಬರೆದು ಅವನ ಕೈಗಿತ್ತು “ಅಕ್ಕನ ಮದುವೆ ಇನ್ನು ಹದಿನೈದು ದಿನಕ್ಕೆ ಮೈಸೂರಿನಲ್ಲಿ, ಎಲ್ಲಾ ಗೆಳೆಯರನ್ನು ನೀನೇ ಖುದ್ದಾಗಿ ಹೊರಡಿಸಿಕೊಂಡು ಬರಬೇಕು, ಅಬೀಬಾ” ಎಂದೆ.“ಫಿಕರ್ ನಕ್ಕೋ ಬಾ, ನಾವೆಲ್ಲಾ ಹಿಂದಿನ್ ದಿನಾನೇ ಬಂದು ನಿಂಗೆಸಾತ್ ಕೊಡ್ತೀವಿ” ಅಂದ. + +ಸಂಜೆ ಮೈಸೂರಿಗೆ ಮರಳಿ ಹೋಗುವಾಗ ಬಸ್ಸಿನಲ್ಲಿ ಅಬೀಬನ ಬೆಳವಣಿಗೆಯನ್ನು ನೆನೆದು ಮನಸ್ಸು ತುಂಬಿಬಂತು. ಅದು ಕಣ್ಣಂಚಿಗೆ ಬರಲು ತಡವಾಗಲಿಲ್ಲ! + +ಮೂಲತಃ ಹೊಸದುರ್ಗದ ಹುಟ್ಟೂರಿನವರು. ಬೆಂಗಳೂರಿನ ( ಸೌದಿ ಅರೇಬಿಯಾ ಮೂಲದ) ಪೆಟ್ರೋಕೆಮಿಕಲ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. “ಪದ್ಯ ಸಿಕ್ಕಿತು” ಇವರ ಚೊಚ್ಚಲ ಕವನ ಸಂಕಲನ. \ No newline at end of file diff --git a/Kenda Sampige/article_447.txt b/Kenda Sampige/article_447.txt new file mode 100644 index 0000000000000000000000000000000000000000..cb96a0b399fd57fe4c8c2feb2cfcab2a887c1606 --- /dev/null +++ b/Kenda Sampige/article_447.txt @@ -0,0 +1,35 @@ +byಬದರಿ ರೂಪನಗುಡಿ|Nov 4, 2018|ವಾರದ ಕಥೆ,ಸಾಹಿತ್ಯ| 0 Comments + +“ಆದ್ರೆ ಅಲ್ಲಿ ಯಾರೂ ಮಾತೂ ಕೇಳಿಸಿಕೊಳ್ತಿಲ್ಲ. ಟೌನ್ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕಾಕೊಳ್ಳೋದಕ್ಕೆ ಹುಚ್ಚಿಗೆ ಬಿದ್ದವರಂಗೆ ನುಗ್ಗುತ್ತಿದ್ದರು. ಹೆಂಗಸರು, ಮಕ್ಕಳು, ವಯಸ್ಸಾದವರನ್ನ ಕಾಳಜಿಯಿಂದ, ಗೌರವದಿಂದ ನಡೆಸಿಕೊಳ್ಳಬೇಕು ಅಂತ ಯುದ್ಧದ ಸಮಯದಲ್ಲೂ ಪಾಲಿಸುವ ಸರಳವಾದ ಸೂತ್ರವನ್ನೂ ಮೀರಿದ, ಕಾಡಿನ ಮೃಗದ ಸ್ವಭಾವ..” + +byಡಾ. ಬಿ. ಜನಾರ್ದನ ಭಟ್|Oct 27, 2018|ವಾರದ ಕಥೆ,ಸಾಹಿತ್ಯ| 0 Comments + +”ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು.ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು.” + +byಡಾ. ಬಿ. ಜನಾರ್ದನ ಭಟ್|Oct 21, 2018|ವಾರದ ಕಥೆ,ಸಾಹಿತ್ಯ| 0 Comments + +“ಕಾಗದವನ್ನು ನಾರಾಯಣ ಉಪಾಧ್ಯಾಯರಿಗೆ ಹಿಂದಿರುಗಿಸಿದೆ. ನಾನು ಓದುವುದನ್ನೇ ಗಮನಿಸುತ್ತಿದ್ದ ನಾರಾಯಣ ಉಪಾಧ್ಯಾಯರು, “ಅರ್ಥವಾಗುವುದಿಲ್ಲ ಅಲ್ವಾ?” ಎಂದು ಅದು ತಮಗೆ ಗೊತ್ತೇ ಇತ್ತು ಎಂಬ ಭಾವದಿಂದ ಕೇಳಿ ಕಾಗದವನ್ನು ಮಡಚಿ ತಮ್ಮ ಅಂಗಿಯ ಕಿಸೆಯೊಳಗೆ ಇಟ್ಟುಕೊಂಡರು.” + +byಸುದರ್ಶನ್|Oct 13, 2018|ವಾರದ ಕಥೆ,ಸಾಹಿತ್ಯ| 0 Comments + +ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ. + +byಕೆಂಡಸಂಪಿಗೆ|Oct 8, 2018|ದಿನದ ಪುಸ್ತಕ,ಸಾಹಿತ್ಯ| 0 Comments + +“ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು.ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು.ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು.ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ ಆರತಿಯೆತ್ತಿ ನಾಗಸ್ವರ ವಾದ್ಯದ ಸಮೇತ ಒಳಗೆ ಬರಮಾಡಿಕೊಂಡಿದ್ದರು” + +byಕೆಂಡಸಂಪಿಗೆ|Oct 7, 2018|ವಾರದ ಕಥೆ,ಸಾಹಿತ್ಯ| 0 Comments + +”ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು.” + +byಎಚ್. ಶೇಷಗಿರಿರಾವ್|Oct 1, 2018|ಸಾಹಿತ್ಯ| 1 Comment + +“ಅವನು ಓದಿನಲ್ಲಿ ಅಷ್ಟು ಮುಂದಿಲ್ಲ.ಬಹಳ ಕಷ್ಟಪಡುತಿದ್ದ.ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ.ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ.ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು.” + +byಸುನೈಫ್ ವಿಟ್ಲ|Sep 30, 2018|ವಾರದ ಕಥೆ,ಸಾಹಿತ್ಯ| 0 Comments + +”ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ. ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ.” + +byಡಾ. ಬಿ. ಜನಾರ್ದನ ಭಟ್|Sep 22, 2018|ವಾರದ ಕಥೆ,ಸಾಹಿತ್ಯ| 0 Comments + +”ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು.” \ No newline at end of file diff --git a/Kenda Sampige/article_448.txt b/Kenda Sampige/article_448.txt new file mode 100644 index 0000000000000000000000000000000000000000..c1f6b18b71476a7cac30c821b0e52428850577ce --- /dev/null +++ b/Kenda Sampige/article_448.txt @@ -0,0 +1,41 @@ + + +ಬಾಲ್ಯದ ನೆನಪು ಪ್ರತಿಯೊಬ್ಬರನ್ನೂ ಕ್ಷಣಕಾಲವಾದರೂ ತನ್ನ ಬಾಹುಬಂಧನದಲ್ಲಿ ಹಿಡಿದಿಟ್ಟು, ನಮ್ಮ ಮುಂದೆ ಕಣ್ಣು ಮಿಟುಕಿಸುತ್ತಾ ಹಾದು ಹೋಗುವಾಗ ಮನಸ್ಸಿಗೆ ಮುದ ನೀಡುವುದಂತೂ ಸುಳ್ಳಲ್ಲ. ಹಠ, ಸೋಮಾರಿತನ, ಕೋಪ, ಅಸಹನೆ, ನಿಷ್ಕಲ್ಮಶ ನಗು, ಪೆಟ್ಟಾದಾಗಿನ ನೋವು, ಸಂಕಟ ಹಾಗೇ ಆರೋಗ್ಯ ಹದಗೆಟ್ಟಾಗ ಕಂಬಳಿ ಹೊದ್ದು ನಡುಗುವುದರಲ್ಲೂ ಎಲ್ಲರ ಗಮನ ಸೆಳೆಯುವಿಕೆ, ಕನಸಿನ ಕನವರಿಕೆಗಳು, ತಾನು ಕಂಡ ಸಿನಿಮಾಗಳಲ್ಲಿನ ನಟ-ನಟಿಯರ ಹಾವಭಾವದ ನಂಟು, ಪ್ರಮಾಣದ ಹಿಂತೆಗೆಯುವಿಕೆ, ಆಟ-ಪಾಠ, ಸುಳ್ಳಿನ ಕಂತೆಯಲ್ಲೂ ನಿಜದ ನೆರಳ ತೋರುವಿಕೆ, ಕದ್ದು ಮುಚ್ಚಿ ಆಡಿದ ಆಟಗಳು, ಬಿದ್ದ ನೋವಿನಲ್ಲೂ ಸ್ವಾಭಿಮಾನದ ಬಿಗುಮಾನ… ಸಕಲ ಕಲಾ ಪಾರಂಗತರಂತೆ ತಮ್ಮ ಸಹಪಾಠಿಗಳೊಂದಿಗೆ ತೋರುವ ಭಂಡ ಧೈರ್ಯ… ಹೀಗೆ ಒಂದೇ ಎರಡೇ… ಚಿಕ್ಕಂದಿನಲ್ಲಿ ಒಡಮೂಡಿದ ಭಾವ ತರಂಗಗಳು. ಹೌದು, ಪ್ರತಿಯೊಂದರಲ್ಲೂ ಹೊಸತನದ ತುಡಿತ, ಕನವರಿಕೆಗಳು ನಮ್ಮನ್ನು ಸೆಳೆಯುತ್ತಿದ್ದದ್ದು ನಿಜ. ಆ ಹೊಸತನದಲ್ಲೂ ನೋವು-ನಲಿವಿನ ಮಿಲನ ನಮ್ಮಲ್ಲಿ ಬೆಳಗಾಗುವಷ್ಟರಲ್ಲಿ ಜೀವಕಳೆಯ ಚಿಗುರೊಂದಿಗೆ ಅರಳಿರುತ್ತಿತ್ತು ಅಲ್ಲವೇ? ಅದಕ್ಕೇ ನಾವು ಯಾವಾಗಲೂ ಬಯಸುವುದು ಮಕ್ಕಳೊಂದಿಗಿನ ಸಾಂಗತ್ಯವನ್ನು! + +ನಮ್ಮ ಊರಿನಲ್ಲಿ ಈಗಿನಂತೆ ಗಲ್ಲಿಗೊಂದು ಎಲ್ ಕೆ ಜಿ/ಯು ಕೆ ಜಿ ಖಾಸಗಿ ನರ್ಸರಿ ಶಾಲೆಗಳಿರಲಿಲ್ಲ. ಇದ್ದರೂ ನಗರಗಳ ಸಿರಿವಂತ ಮಕ್ಕಳಿಗೆ ಮಾತ್ರ. ಸರ್ಕಾರಿ ಶಿಶ್ವಾರ(ಆಡುಭಾಷೆಯಲ್ಲಿ)ವೇ ನಮಗೆ ಎಲ್ಕೆಜಿ/ಯುಕೆಜಿಯ ನರ್ಸರಿ ಶಾಲೆಗಳು! ಶಿಶುವಿಹಾರದಲ್ಲಿ ಜಯಮ್ಮ ಎಂಬ ಮೇಡಂ ಇದ್ದರು. ಆಗ ಶಿಶ್ವಾರಕ್ಕೆ ಮಕ್ಕಳು ಹೋಗುತ್ತಿದ್ದದ್ದು ಕಡಿಮೆ. ಮನೆ ಹತ್ತಿರವೇ ಅದು ಇದು ಆಡಿಕೊಂಡು ಸುಮ್ಮನಿದ್ದು ಬಿಡುತ್ತಿದ್ದರು. ಆದರೆ ಜಯಮ್ಮ ಮೇಡಂ, ಅಡುಗೆಯವರು ಮತ್ತು ಆಯಾರನ್ನು ಎಲ್ಲರ ಮನೆಗೆ ಕಳುಹಿಸಿ ಮಕ್ಕಳನ್ನು ಬಿಡದೆ ಕರೆದುಕೊಂಡು ಬರುವಂತೆ ವಾರ್ನ್ ಮಾಡಿದರು. + +ನಮಗೆ ಶಿಶ್ವಾರ ಇದೆ, ನಾವೂ ಅಲ್ಲಿ ಕೂತು ಅಕ್ಷರ ಕಲಿಯಬಹುದು ಎಂಬ ಪರಿಜ್ಞಾನವೂ ಇರಲಿಲ್ಲ. ಯಾಕೆಂದರೆ, ಮನೆಯಲ್ಲಿ ಯಾರೂ ನಮ್ಮನ್ನು ತಾವಾಗೇ ಶಿಶ್ವಾರಕ್ಕೆ ಕರೆದುಕೊಂಡು ಹೋಗಿ ಬಿಟ್ಟು ಬರುತ್ತಿರಲಿಲ್ಲ. ಆಯಾ ಬಂದು ಎಲ್ಲರ ಮನೆ ಮನೆಗೆ ತೆರಳಿ ನಾಳೆಯಿಂದ ಮಕ್ಕಳನ್ನು ಶಿಶ್ವಾರಕ್ಕೆ ಕಳಿಸಬೇಕೆಂದು ಮನೆಯ ಹಿರಿಯರಿಗೆ ತಾಕೀತು ಮಾಡಿದಾಗಲೇ ನಮಗೆ ಅರಿವಾದದ್ದು, ಶಿಶ್ವಾರ ಅಂತ ಒಂದಿದೆ ಅಂತ! ಅದಕ್ಕೆ ಹೋಗುವುದಕ್ಕೂ ನಮಗೆ ಹಿಂಜರಿಕೆ. ಯಾರೂ ಗೊತ್ತಿಲ್ಲ. ಎಲ್ಲರನ್ನೂ ಕೂಡಿಕೊಂಡು ಇವರು ಏನು ಮಾಡಿಬಿಡುವರೋ ಎಂಬ ಭಯ ಬೇರೆ! ದಿನವೂ ಬೆಳಿಗ್ಗೆ ಟೀಚರ್ ಜಯಮ್ಮ, ಆಯಾ ಮತ್ತು ಅಡುಗೆಯವರನ್ನು ಕಳುಹಿಸಿ ಮನೆಯಲ್ಲಿ ಆಟವಾಡುವ ಮಕ್ಕಳನ್ನು ಹಿರಿಯರಿಗೆ ತಿಳಿಸಿ ಒಪ್ಪಿಗೆ ಪಡೆದು ಕರೆದುಕೊಂಡು ಹೋಗಿ ಊಟ, ತಿಂಡಿ ಕೊಟ್ಟು ಕಳುಹಿಸುತ್ತಿದ್ದರು. + +ಒಂದಿನ ನಾನೂ ಸಹ ಮಕ್ಕಳೊಂದಿಗೆ ಅಂಜಿಕೆಯಿಂದಲೇ ಶಿಶ್ವಾರಕ್ಕೆ ಕಾಲಿಟ್ಟೆ. ಮಕ್ಕಳೆಲ್ಲ ಇದ್ದರೂ ನನ್ನ ಮನದಲ್ಲಿ ಒಂಥರ ದುಗುಡ ಮನೆ ಮಾಡಿ ಕೊರೆಯಹತ್ತಿತು. ಮೊದಲನೇ ದಿನವೇ, ಯಾವುದೇ ಕಾರಣಕ್ಕೂ ಹಿಂದಿನ ಬೆಂಚಿ(ಮಣೆ)ಗೆ ಹೋಗಿ ಕುಳಿತುಕೊಳ್ಳಬಾರದೆಂದು ತೀರ್ಮಾನಿಸಿ ಬಿಟ್ಟಿದ್ದೆ. ಯಾಕೆಂದರೆ ಇವರಿಂದ ತಪ್ಪಿಸಿಕೊಂಡು ಮನೆಗೆ ಓಡಿ ಹೋಗಲು ಸಾಧ್ಯವಾಗಬೇಕಲ್ಲ?! ಹೀಗೆ ಓಡಿ ಹೋಗಲು ಇನ್ನೊಂದು ಕಾರಣವಿದೆ. ನನ್ನ ಸ್ನೇಹಿತರು (ಪೆದ್ದು ಮುದ್ದುಗಳು) ಶಿಶ್ವಾರಕ್ಕೆ ಹೋದರೆ ಮಕ್ಕಳಿಗೆ ಚಾಕಲೇಟ್, ತಿಂಡಿ ಆಸೆ ತೋರಿಸಿ ತಿನ್ನಿಸಿ ಮಕ್ಕಳನ್ನೆಲ್ಲ ಮಲಗಿಸಿ ಇಂಜೆಕ್ಷನ್ ಕೊಡುತ್ತಾರೆಂಬ ಹುಯಿಲೆಬ್ಬಿಸಿದ್ದರು! ಮೊದಲೇ ನಾ ಪುಕ್ಕಲಿ. ನನ್ನ ಪರಿಸ್ಥಿತಿ ಕೇಳಬೇಕೇ! ಟೀಚರ್ ನಮ್ಮನ್ನು ಪ್ರೀತಿಯಿಂದ ಮಾತನಾಡಿಸಿ ಚಾಕಲೇಟ್, ಬಿಸ್ಕತ್, ಅದು ಇದೂ ಕೊಟ್ಟಾಗ ಅದನ್ನು ತಿಂದರೂ ನನಗೆ ನೆಮ್ಮದಿ ಇರುತ್ತಿರಲಿಲ್ಲ. ಎಲ್ಲವನ್ನೂ ಅನುಮಾನದಿಂದಲೇ ನೋಡುವ ಪೊಲೀಸ್ ಬುದ್ಧಿ ಹೆಗಲೇರಿರುತ್ತಿತ್ತು. + +ಶಿಶ್ವಾರದ ಹತ್ತಿರಕ್ಕೆ ಹೋದಂತೆ ಅಲ್ಲಿ ತಿಂಡಿ ಮಾಡುವ ವಾಸನೆ ಮೂಗಿಗೆ ಬಡಿದು ಬಾಯಲ್ಲಿ ನೀರೂರಿಸಿ, ಇವತ್ತೇನು ತಿಂಡಿ ಮಾಡಿರಬಹುದು ಎನ್ನುವ ಲೆಕ್ಕಾಚಾರ ನಮ್ಮ ಮನಗಳಲ್ಲಿ ಆಗಲೇ ಆಗಿ ಹೋಗಿರುತ್ತಿತ್ತು. ಅವತ್ತಿನ ತಿಂಡಿಯನ್ನು ವಾಸನೆಯಿಂದಲೇ ಪಕ್ಕಾ ಗುರುತು ಹಚ್ಚಿರುತ್ತಿದ್ದೆವು. ಅಷ್ಟು ಪಫರ್ೆಕ್ಟ್ ಆಗಿತ್ತು ನಮ್ಮ ಮೂಗು. ಆದರೆ ಅದರ ಒಳ ಹೊಕ್ಕ ತಕ್ಷಣ ಆತಂಕ, ಭಯ ನನ್ನ ಮನಸ್ಸಿನಲ್ಲಿ ತಾಂಡವವಾಡುತ್ತಿತ್ತು. ಅವರು ಊಟ ಅಥವಾ ತಿಂಡಿ ಕೊಟ್ಟು, ಅಕ್ಷರಾಭ್ಯಾಸ ಮಾಡಿಸಿ, ಇಲ್ಲವೇ ಮಗ್ಗಿ ಹೇಳಿಸಿ ಸ್ವಲ್ಪ ಹೊತ್ತು ಮಲ್ಕೊಳ್ಳಿ ಅಂತ ಹೇಳುದ್ರೆ ಸಾಕು, ನನ್ನ ಅನುಮಾನದ ಗಂಟೆ ಬಾರಿಸುತ್ತಿತ್ತು! ಅಯ್ಯೋ ಇವತ್ತೇನು ಮಾಡುತ್ತಾರೋ ಎಂಬ ಭಯ ನನ್ನ ನಿದ್ದೆಯನ್ನು ಕಿತ್ತುಕೊಂಡು ಬೇಸ್ತು ಬೀಳುತ್ತಿದ್ದೆ. + +ಶಿಶ್ವಾರ ರಸ್ತೆಯ ಬದಿಯಲ್ಲಿದ್ದ ಕಾರಣ, ಮಕ್ಕಳೆಲ್ಲ ಎಲ್ಲಿ ರಸ್ತೆಗಿಳಿಯುತ್ತಾರೋ ಎಂಬ ಆತಂಕದಿಂದ ನಾವು ತಿಂಡಿ ತಿಂದು ಕೈ ತೊಳೆದುಕೊಳ್ಳಲು ನಿಂತರೆ ನಮ್ಮನ್ನೆಲ್ಲ ಕಾಯುತ್ತಾ, ಯಾರನ್ನೂ ಮನೆಗೆ ಓಡಿ ಹೋಗದಂತೆ ತಡೆಯುತ್ತಾ ನಿಂತಿರುತ್ತಿದ್ದ ಆಯಾ, ಮನೆಗೋಡಿ ಹೋಗೋ ವಿಚಾರ ಗೊತ್ತಾದ ತಕ್ಷಣ, ಏಯ್ ಎಲ್ಲೂ ಹೋಗ್ಬೇಡ್ರೋ ನಡೀರಿ ಒಳಿಕೆ, ಇವತ್ತು ಮನೆಗೆ ಕಳ್ಸಲ್ಲ ನಿಮ್ಮನ್ನ ಅಂತ ಗದರುತ್ತಿದ್ದರಿಂದ ಆಯಾ ಮತ್ತು ಅಡುಗೆಯವರು ನಮಗೆ ಯಮದೂತರಂತೆ ಕಾಣಿಸುತ್ತಿದ್ದರು. ಇಂಥ ಸಂದರ್ಭದಲ್ಲಿ ನನಗೆ ತಿಂದದ್ದು ಗಂಟಲಲ್ಲೇ ಸಿಕ್ಕಿ ಹಾಕಿಕೊಂಡಂತಾಗಿ ಎಷ್ಟೊತ್ತಿಗೆ ಮನೆಗೆ ಹಿಂತಿರುಗುತ್ತೇನೋ ಎಂದು ಕಾದು ಕುಳಿತಿರುತ್ತಿದ್ದೆ. ಅವರು ಟೀಚರ್ ಜತೆ ಅದು ಇದು ಮಾತಾಡುತ್ತಾ ನಿಂತಿರುವುದನ್ನು ಗಮನಿಸಿ, ಜೀವ ಕೈಯಲ್ಲಿಡಿದು ಒಂದೇ ಉಸಿರಿಗೆ ಓಟ ಕಿತ್ತವರು ಮನೆಯ ಜಗಲಿಯಲ್ಲಿ ಕುಳಿತು ನಿಟ್ಟುಸಿರು ಬಿಡುತ್ತಿದ್ದೆವು. ಒಟ್ಟಿನಲ್ಲಿ ಆ ಗುಹೆಯಿಂದ ತಪ್ಪಿಸಿಕೊಂಡೆ ಎನ್ನುವ ಭಾವ ನನ್ನಲ್ಲಿ ನೆಮ್ಮದಿ ಮೂಡಿಸುತ್ತಿತ್ತು. + +ಆಯಾ, ದಿನಂಪ್ರತಿ ಮನೆ ಮನೆಗೆ ತೆರಳಿ ಮಕ್ಕಳನ್ನು ಕರೆದುಕೊಂಡು ಅಥವಾ ಕೆಲವೊಮ್ಮೆ ಒತ್ತಾಯ ಪೂರ್ವಕವಾಗಿ ಅತ್ತರೂ ಬಿಡದೆ ಎಳೆದೊಯ್ಯುತ್ತಿದ್ದರಿಂದ ನಾನು ಅವರ ಕಂಡರೆ ಭಯ ಬೀಳುತ್ತಿದ್ದೆ. ಎಷ್ಟೋ ದಿನ ಅವರಿಂದ ತಪ್ಪಿಸಿಕೊಳ್ಳಲು ಕದ್ದು ಕುಳಿತಿರುವುದೂ ಇದೆ. ಕೆಲವೊಮ್ಮೆ ನನ್ನ ಸ್ನೇಹಿತರು ಶಿಶ್ವಾರಕ್ಕೆ ಹೋಗಿ ಬಂದು, ಇವತ್ತು ಟೀಚರ್ ಈ ತಿಂಡಿ ಕೊಟ್ರು ಗೊತ್ತಾ? ನೀ ಬರ್ಲೆ ಇಲ್ಲ. ಚೆನ್ನಾಗಿತ್ತು ಕಣೆ. ಮತ್ತೆ ಹಾಡು, ಡ್ಯಾನ್ಸು ಮಾಡ್ಸಿ ಕಥೆ ಹೇಳುದ್ರು ಅಂತ ಹೇಳಿದಾಗ ನಾನೂ ಹೋಗಬೇಕಾಗಿತ್ತು ಛೇ! ಅಂತ ಎಷ್ಟೋ ದಿನ ಅಂದುಕೊಳ್ಳುತ್ತಿದ್ದೆ. + +ಒಂದು ದಿನ ಎಲ್ಲರಿಗೂ ತಿಂಡಿ ನೀಡಿದ ಮೇಲೆ ಯಾರನ್ನೂ ಹೊರಕ್ಕೆ ಹೋಗದಂತೆ ಆಯಾ ಕೂಡಿ ಹಾಕಿದರು. ನನಗೆ ದಿಕ್ಕೇ ತೋಚದಾಗಿತ್ತು. ಅಯ್ಯೋ! ಈಗೇನ್ ಮಾಡ್ತಾರೋ ಏನೋ ಎಂಬ ಅಳುಕು ನನ್ನನ್ನು ಗೊಂದಲಕ್ಕೀಡು ಮಾಡಹತ್ತಿತ್ತು. ಬಾಗಿಲ ಜಡಿದು ಟೀಚರ್ ಕಥೆ ಹೇಳಿದ ನಂತರ ಮಲಗಲು ಹೇಳಿದರು. ನನಗೆ ನಿದ್ದೆ ಬಂದೀತೆ? ಮೊದಲೇ ಅರ್ಧ ಸತ್ತಂತಾಗಿದ್ದ ನಾನು, ಅರ್ಧಂಬರ್ಧ ಕಣ್ಣು ಬಿಟ್ಟು ತೂಕಡಿಸುತ್ತಾ ಬೆಂಚಿನ ಮೇಲೆ ಮಲಗಿದ್ದೆ. ಸ್ವಲ್ಪ ಶಬ್ದವಾದರೂ ದಢಕ್ಕನೆದ್ದು ಕಣ್ಣು ತೆರೆದು ನೋಡುತ್ತಿದ್ದೆ, ಎಲ್ಲರೂ ಕ್ಷೇಮದಿಂದಿದ್ದಾರೆಯೇ ಎಂದು! ಆ ದಿನ ಹೇಗೋ ದೂಡಿದ ನಂತರ ದಿನ ಕಳೆದಂತೆ ಶಿಶ್ವಾರ ನನಗೆ ಹತ್ತಿರಾಗುತ್ತಾ ಬಂತು. ದಿನಾ ಹೋಗಲು ಬಯಸದಿದ್ದರೂ ವಾರಕ್ಕೆ ಒಮ್ಮೆ ಭೇಟಿ ನೀಡುವ ಅತಿಥಿಯಾದೆ. ಒಟ್ಟಿನಲ್ಲಿ ಶಿಶ್ವಾರದಲ್ಲಿ ಕೊಡುತ್ತಿದ್ದ ಚಾಕಲೇಟುಗಳು, ತಿಂಡಿಗಳು ನಮ್ಮ ಬಾಯಲ್ಲಿ ನೀರೂರಿಸಿ ನಮ್ಮ ಸೆಳೆಯುತ್ತಿದ್ದ ಪರಿ ನಿಜಕ್ಕೂ ತಮಾಷೆಯ ಸಂಗತಿ. ಬರುಬರುತ್ತಾ ಶಿಶ್ವಾರ ತನ್ನ ಮಡಿಲಿಗೆ ನಮ್ಮನ್ನೆಲ್ಲಾ ಆಲಂಗಿಸಿಕೊಂಡು ಸಿಹಿ ನೆನಪುಗಳ ಅಚ್ಚೊತ್ತತೊಡಗಿತು. + +ಶಿಶ್ವಾರದ ಹಂತ ಮುಗಿದ ಮೇಲೆ ನಮ್ಮನ್ನು ಒಂದನೇ ತರಗತಿಗೆ ಸರ್ಕಾರಿ ಶಾಲೆಗೆ ವರ್ಗಾಯಿಸಲಾಯಿತು. ಅಷ್ಟು ದಿನ ತುಂಟಾಟವಾಡುತ್ತಾ, ಸ್ಲೇಟು ಬಳಪ ಹಿಡಿಯದೇ ಗೋಡೆಗೆ ನೇತಾಕಿರುತ್ತಿದ್ದ ಚಾರ್ಟಿನ ಹೂ, ಹಣ್ಣು, ಪ್ರಾಣಿ-ಪಕ್ಷಿಗಳ ಚಿತ್ರಗಳನ್ನು ನೋಡಿ ಬಾಯಿಪಾಠದಲ್ಲೇ ಕಲಿಯುತ್ತಾ ಓಡಾಡುತ್ತಿದ್ದವರಿಗೆ ಒಂದನೇ ತರಗತಿಯ ಹೊಸ ಅನುಭವ. ಮೊದಲನೇ ದಿನ ಹೊಸ ಸ್ಲೇಟು, ಬಳಪ ಕೈಯಲ್ಲಿಡಿದಿರುವ ಖುಷಿ. ಆದರೆ, ತರಗತಿಯ ಒಳಗೆ ಹೋಗಿ ಕುಳಿತವರನ್ನು ಕಂಡಾಗ ನನಗೆ ಕಸಿವಿಸಿಯಾಗತೊಡಗಿತು. ತರಗತಿಯಲ್ಲಿ ಕುಳಿತವರಲ್ಲಿ ಕೆಲವರು ಅಳುಮುಂಜಿ ಮುಖ ಮಾಡಿ ತುಟಿಯನ್ನು ಕಚ್ಚಿಡಿದು ಎಲ್ಲರನ್ನೂ ಬೆಪ್ಪಾಗಿ ನೋಡುತ್ತಾ ಕುಳಿತರೆ, ಮತ್ತೆ ಕೆಲವರು ಹೊಸ ಸ್ಲೇಟು, ಬಳಪದ ಗುಂಗಿನಲ್ಲಿ ತೇಲುತ್ತಾ ಸ್ಲೇಟಿನ ಮೇಲೆ ಗೀಜುತ್ತಾ, ಅದನ್ನು ಎಂಜಲಾಕಿ ಅಳಿಸುತ್ತಾ ಕುಳಿತಿದ್ದರು. ಇನ್ನೂ ಕೆಲವರೋ ಮನೆಯವರು ಶಾಲೆಗೆ ಕಳಿಸಲು ಪೂಸಿ ಹೊಡೆದು ಕೈಗೆ ಕೊಟ್ಟ ಚಾಕಲೇಟನ್ನು ಬೇಕಂತಲೇ ಎಲ್ಲರಿಗೂ ತೋರಿಸುವಂತೆ ಕೈಯಲ್ಲಿ ಮುರುಮುರು ಅಂತ ಶಬ್ದ ಮಾಡಿ, ಬಾಯಲ್ಲಿ ಹಾಕಿಕೊಂಡು ಕೆನ್ನೆ ಊದಿಸಿ ಚೀಪಿ ಎಲ್ಲರ ಗಮನ ಸೆಳೆಯುತ್ತಿದ್ದರೆ, ಮತ್ತೆ ಕೆಲವರು ಈ ದಿನ ಕಳೆದು ಮನೆ ಸೇರಿದರೆ ಸಾಕೆಂಬ ಮೂಕವೇದನೆಯಲ್ಲಿ ಅಂದಿನ ದಿನ ದೂಡುತ್ತಿದ್ದರು. ಮೇಷ್ಟ್ರು ಬಂದು ಒಬ್ಬೊಬ್ಬರಾಗಿ ಹೆಸರೇಳುವಂತೆ ಹೇಳಿದಾಗ, ಎಲ್ಲರ ಎದೆಯಲ್ಲಿ ಡವಡವ ಶುರುವಾಗಿ ತಮ್ಮ ಸರದಿ ಎಷ್ಟೊತ್ತಿಗೆ ಮುಗಿಯುತ್ತೋ ಎಂದು ನಮ್ಮ ಮುಂದಿದ್ದ ಮಕ್ಕಳನ್ನು ಎಣಿಸುತ್ತಾ, ತನ್ನ ಸರದಿ ಬಂದಾಗ ಹೇಗೋ ಹೇಳಾಯ್ತಲ್ಲ ಎಂಬ ನೆಮ್ಮದಿಯಿಂದ ಕುಳಿತಿರುತ್ತಿದ್ದೆವು. (ನಾನಂತೂ ನಡುಗುತ್ತಲೇ ಎದ್ದು ಹೆಸರೇಳಿ ಕೂರುತ್ತಿದ್ದೆ. ಮೇಷ್ಟ್ರು ಎದ್ದು ಹೊರ ಹೋದರೂ ನನ್ನ ನಡುಕ, ಎದೆಬಡಿತ ಮಾತ್ರ ನಿಂತಿರುತ್ತಿರಲಿಲ್ಲ!) + + + +ಮೇಷ್ಟ್ರು ಹೊಡೆಯುವುದಿಲ್ಲ ಎಂಬ ಅರಿವಾದ ಕ್ಷಣ ಎಲ್ಲರ ಹಾವಭಾವದಲ್ಲಿ ಬದಲಾವಣೆ ಗಾಳಿ ಬೀಸಿದರೂ, ಮೊದಲಿನಂತೆಯೇ ಅಕ್ಕಪಕ್ಕದವರನ್ನು ದಿಟ್ಟಿಸುತ್ತಾ ಮೇಷ್ಟ್ರು ಕೇಳುವ ಪ್ರಶ್ನೆಗೆ ಉತ್ತರಿಸುವುದಕ್ಕಾಗಿ ಕೈ ಎತ್ತಿದವರನ್ನು ಯಾವುದೋ ದಿವ್ಯಶಕ್ತಿಯ ಹಾಗೆ ಪುಳಕಿತರಾಗಿ ನೋಡುತ್ತಿದ್ದೆವು. ಉತ್ತರ ನನಗೆ ಗೊತ್ತಿದ್ದರೂ ಹಿಂಜರಿಕೆಯಿಂದ ಕೈ ಎತ್ತುತ್ತಿರಲಿಲ್ಲ. ಏನೋ ಒಂಥರ ಅಂಜಿಕೆಯಿಂದ ಕೈ ಎತ್ತಿದರೂ ಎಲ್ಲರ ಕಣ್ಣು ನನ್ನ ಮೇಲಿರುತ್ತಿದ್ದರಿಂದ ಇದ್ಯಾರಿಗೆ ಬೇಕು ಈ ಸಹವಾಸ ಅಂತ ಸುಮ್ಮನಿದ್ದು ಬಿಡುತ್ತಿದ್ದೆ. ಆದರೂ ಅದರಲ್ಲೊಂಥರ ಖುಷಿ ಇರುತ್ತಿತ್ತು ಎನ್ನುವುದು ಮಾತ್ರ ಸುಳ್ಳಲ್ಲ. ಮೊದಲನೇ ದಿನ ಹೇಗೋ ಕಳೆದದ್ದಾಯಿತು. ಈಗ ಎರಡನೇ ದಿನದ ಸರದಿ. ಮೊದಲನೇ ದಿನದ ಹಾಗೆ ಎಲ್ಲರ ಮುಖ ಕಳೆಗುಂದದಿದ್ದರೂ ಸ್ವಲ್ಪಮಟ್ಟಿಗೆ ಸುಧಾರಣೆ ಕಂಡಿತ್ತು. ಆದರೆ ಯಾರಿಗೂ ಮೇಷ್ಟ್ರು ಹೇಳಿಕೊಡುತ್ತಿದ್ದ ಮಗ್ಗಿಯ ಮೇಲೆ ಗಮನವಿರದೆ, ಎಷ್ಟೊತ್ತಿಗೆ ಮನೆಗೆ ತಲುಪುತ್ತೇವೋ ಅನ್ನುವ ಚಿಂತೆ ಎಲ್ಲರ ಮುಖ ಕಪ್ಪಾಗಿಸಿತ್ತು. ಮೂರನೆಯ ದಿನ ಅವರವರ ಮುಖ ನೋಡಿಕೊಂಡು ತಮ್ಮ ಪಾಡಿಗೆ ತಾವಿದ್ದು ಕಳೆದದ್ದಾಯಿತು. ನಾಲ್ಕನೇ ದಿನ ಬಳಪ ಮುಗಿದಾಗ ಅಕ್ಕಪಕ್ಕದವರ ಕಡೆಗೆ ಧನ್ಯತೆಯಿಂದ ನೋಡಿ ಕೇಳಲಾಗದ ಪರಿಸ್ಥಿತಿಯಲ್ಲಿ ತಲೆ ತಗ್ಗಿಸಿ ಸುಮ್ಮನೆ ಸ್ಲೇಟಿನ ಮೇಲೆ ಕೈಯಾಡಿಸುತ್ತಾ ಕುಳಿತಿರುತ್ತಿದ್ದೆ. ಐದನೇ ದಿನಕ್ಕೆ ನಮ್ಮಲ್ಲಿ ಚೇತರಿಕೆ ಕಂಡು ಗೆಲುವು ಮುನ್ನುಗ್ಗುತ್ತಿರಲು, ಯಾರಿದ್ದರೇನು ನಾವೇ ರಾಜ-ರಾಣಿ ಎನ್ನುವ ತರ್ಲೆ ಆಟಗಳು ತಮ್ಮ ಮೊದಲಿನ ಛಾಪು ಹೊತ್ತಲು ಶುರುವಿಟ್ಟವು. ಇನ್ನ ಕೇಳಬೇಕೇ? ನಮ್ಮ ನಮ್ಮಲ್ಲಿ ಅಡಗಿದ್ದ ವರಸೆಗಳು ಒಂದೊಂದಾಗಿ ಹೊರಗೆ ಹೆಜ್ಜೆ ಇಡಲಾರಂಭಿಸಿದವು. + +ಕೀಟಲೆ, ತರಲೆಗಳು, ವ್ಯಂಗ್ಯ, ಅಳು, ನಗು ಎಲ್ಲವೂ ಎಲ್ಲರೊಂದಿಗೆ ಬೆರೆಯುವ ಸ್ನೇಹಪರತೆ ಮೂಡಿಸಿದವು. ಅಕ್ಕಪಕ್ಕದವರ ಬಳಿ ಬಳಪ ಕೇಳುವ ನೆಪದಲ್ಲಿ ಕಿರುನಗೆ ಮೂಡಿ ಒಬ್ಬರಿಗೊಬ್ಬರು ಮುಖ ಪರಿಚಯ ಸ್ವಲ್ಪಮಟ್ಟಿಗೆ ಆಗುವ ಮೂಲಕ ತೆರೆದುಕೊಂಡ ಸ್ನೇಹದ ಪುಟ, ಮಾತುಕತೆ, ಬಳಪದ ಅದಲು ಬದಲಿನ ವಹಿವಾಟಿಗೂ ಅಡಿಪಾಯ ಹಾಕಿತು. ನಂತರ ನಮ್ಮ ಧೈರ್ಯ ಹಿಮ್ಮಡಿಗೊಂಡು ನಾವು ಜೊತೆಗೂಡುವುದರಿಂದ ಶುರುವಾಗಿ ಒಟ್ಟಿಗೆ ಆಟೋಟಗಳಲ್ಲಿ ಪಾಲ್ಗೊಂಡು, ಮೇಷ್ಟ್ರು ಕುರ್ಚಿಯವರೆಗೂ ಮುಂದುವರೆಯಿತು! ಈ ಸ್ನೇಹ ಮೇಷ್ಟ್ರು ಇಲ್ಲದಿದ್ದಾಗ ಡಸ್ಟರ್ ತೆಗೆದುಕೊಂಡು ಬೋರ್ಡ್ ಸ್ವಚ್ಛಗೊಳಿಸುವುದು, ಬೋರ್ಡ್ ಮೇಲೆ ಕಾಗುಣಿತ, ಮಗ್ಗಿ, ಹೆಸರಲ್ಲೇ ಚಿತ್ರ ಬಿಡಿಸುವುದಕ್ಕೂ ಪೈಪೋಟಿಯಾಗಿ ನಮ್ಮಲ್ಲಿ ಮುನ್ನುಗ್ಗುವ ಎದೆಗಾರಿಕೆಗೆ ನಾಂದಿ ಹಾಡಿತು. + +ನನ್ನ ತರಗತಿಯಲ್ಲಿ ಇದ್ದ ಕೆಲವರಿಗೆ ಬಳಪ ತಿನ್ನುವ ಅಭ್ಯಾಸ. ಅಂತಹವರು ಕದ್ದಾದರೂ ಬಳಪ ತಿನ್ನುತ್ತಿದ್ದರು. ಇಂಥವರ ಹತ್ತಿರ ಬಳಪದ ಡಬ್ಬವೇ ಇರುತ್ತಿತ್ತು. ಅದರಲ್ಲಿ ಬರೆದು ಬರೆದೂ ಸವೆದ ಚಿಕ್ಕ ಚಿಕ್ಕ ಬಳಪದ ತುಣುಕುಗಳು, ಹೊಸದಾದ ಉದ್ದವಾದ ಬಳಪ, ಬಣ್ಣ ಬಣ್ಣದ ಚಾಕ್ಪೀಸ್ಗಳು, ಒಂದಿಂಚಿನ ಬಳಪ, ಎರಡಿಂಚಿನ ಬಳಪ, ಗುಂಡಾಕಾರದ ಬಳಪ, ಸಣಕಲು ಬಳಪ, ಮೆದುವಾದ ಬಳಪ, ಗಡಸಾದ ಬಳಪ ಹೀಗೆ ವಿಧ ವಿಧವಾದ ಕಲೆಕ್ಷನ್ನೇ ಇರುತ್ತಿತ್ತು. ನಾನು ನನ್ನ ಸ್ಲೇಟಿನಲ್ಲಿ ಬರೆಯದಂತಹ ಬಳಪವನ್ನು ಅವರಿಗೆ ನೀಡಿ ನಮಗೆ ಇಷ್ಟವಾಗುವ ಬಳಪವನ್ನು ಅವರಿಂದ ಪಡೆದುಕೊಂಡು ಬೀಗುತ್ತಿದ್ದೆ. + +(ಕಾವೇರಿ ಎಸ್ ಎಸ್) + +ಅಂತಹವರ ಜೊತೆ ಕೋಪಗೊಂಡಿದ್ದರೆ ಯಾವುದೇ ಕಾರಣಕ್ಕೂ ಬಳಪ, ಸ್ಕೇಲು ನಮಗೆ ಸಿಗುತ್ತಿರಲಿಲ್ಲ. ಸುಮ್ಮನೆ ನಮ್ಮ ಪಾಡಿಗೆ ನಾವು ಏನೂ ತಿಳಿಯದ ಹಾಗೆ ಕುಳಿತು ಮೆಲ್ಲಗೆ ಕೇಳಿದರೆ ಮಾತ್ರ ಅವು ನಮಗೆ ದಕ್ಕುತ್ತಿದ್ದವು. ಕೆಲವೊಮ್ಮೆ ಕೇಳಲಾಗದೆ ನಮಗೆ ಬರೆಯೋದಿಕ್ಕೆ ಬೆರಳಿನಲ್ಲಿ ಹಿಡಿದುಕೊಳ್ಳಲೂ ಆಗದಂತಹ ಬಳಪಗಳನ್ನು ಸ್ಲೇಟಿನ ಮೇಲೆ ಒತ್ತಿ ಹಿಡಿದು ಬರೆಯುತ್ತಿದ್ದದ್ದು ನಮಗೆ ಮೋಜು ನೀಡುತ್ತಿತ್ತು. + +ಇಷ್ಟಕ್ಕೇ ಈ ಪೈಪೋಟಿ ನಿಲ್ಲುತ್ತಿರಲಿಲ್ಲ. ಯಾವ ರೀತಿಯ ಸ್ಲೇಟು, ಸ್ಕೇಲು ಯಾವ ಬಣ್ಣದಲ್ಲಿದೆ, ಅದರ ಸೈಡಿನಲ್ಲಿ ಯಾವ ಡಿಸೈನ್ ಇದೆ, ನೈಸಾಗಿದೆಯಾ, ಹೊರಟಾಗಿದೆಯಾ, ಕಿತ್ತೋಗಿದೆಯಾ ಅಥವಾ ದೊಡ್ಡದಾ, ಚಿಕ್ಕದಾ ಎನ್ನುವುದನ್ನು ನಮ್ಮ ಕಣ್ಣುಗಳು ತೂಕ ಮಾಡುತ್ತಿದ್ದವು. ಅವು ಇಷ್ಟವಾದರೆ ಎಲ್ಲಿ ತಗೊಂಡೆ? ಅಂತ ಕೇಳಿ ಮುಟ್ಟಿ ಚೆನ್ನಾಗಿದೆ ಅಂತ ಅದರ ಮೇಲೆ ನಮಗಿಷ್ಟವಾದ ಬಳಪದಲ್ಲಿ ಬರೆಯುತ್ತಿದ್ದೆವು. ಆದರೆ ಆ ಸ್ಲೇಟಿಗೆ ನಮ್ಮ ಬಳಪ ಹತ್ತದಿದ್ದರೆ, ಇದೆಷ್ಟು ಚೆನ್ನಾಗಿದೆ ಬಳಪ, ನಿನ್ನ ಸ್ಲೇಟಿಗೆ ಬರೆಯಲ್ಲ. ಇದು ಚೆನ್ನಾಗಿಲ್ಲ ಎನ್ನುವ ತೀಮರ್ಾನ ನಮ್ಮ ಮನಸ್ಸು ಕೈಗೊಳ್ಳುತ್ತಿತ್ತು! ಯಾರಾದರೂ ಒಳ್ಳೆ ಬಟ್ಟೆ, ಚಪ್ಪಲಿ, ಶೂ (ಶೂವನ್ನು ಹಣಕಾಸಿನಲ್ಲಿ ಉತ್ತಮವಾಗಿದ್ದವರು ಹಾಕಿಕೊಂಡು ಬರುತ್ತಿದ್ದರು. ಇಲ್ಲವಾದಲ್ಲಿ ಹವಾಯ್ ಚಪ್ಪಲಿಯೇ ನಮಗೆಲ್ಲ ಉತ್ತಮ ಮಟ್ಟದ ಚಪ್ಪಲಿಯಾಗಿತ್ತು) ಹಾಕಿಕೊಂಡಿದ್ದರಿಂದ ಹಿಡಿದು ಹೂ ಮುಡಿದುಕೊಂಡು ಬಂದರೆ, ಅವನ್ನು ದಿಟ್ಟಿಸಿ ಅವುಗಳನ್ನೆಲ್ಲ ನೋಡಿ ಕೈಯಾಡಿಸಿ ಅವರೊಂದಿಗೆ ನಾವೂ ಖುಷಿಗೊಳ್ಳುತ್ತಿದ್ದೆವು. + +ಶಾಲೆಗೆ ಬರುವ ದಾರಿಯಲ್ಲಿ ಅಥವಾ ಅಕ್ಕಪಕ್ಕದವರ ಮನೆಯ ಹತ್ತಿರ ಬಿಟ್ಟಿರುತ್ತಿದ್ದ ಹೂಗಳ ಕಡೆಗೆ ನಮ್ಮ ಗಮನ ಹರಿಯುತ್ತಿತ್ತು. ಅವು ಮೊಗ್ಗಾಗಿ ಅರಳುವುದನ್ನೇ ಕಾಯುತ್ತಿದ್ದೆವು. ಅರಳಿದ ಬೆಳಿಗ್ಗೆ ಗಿಡದಲ್ಲಿ ಹೂವು ಮಾಯವಾಗಿ ನಮ್ಮ ತರಗತಿಯ ಟೀಚರ್ ಮುಡಿಯಲ್ಲಿರುತ್ತಿತ್ತು. ನಾವೇ ತಂದುಕೊಟ್ಟಿದ್ದೆನ್ನುವ ಬಿಗುಮಾನದಲ್ಲಿ ಟೀಚರ್ ಜೊತೆ ಮಾತನಾಡುತ್ತಾ ಹಿಂದೆ ಮುಂದೆ ಸುತ್ತುತ್ತಿದ್ದೆವು. ಹೂವನ್ನು ಮನೆಯಲ್ಲಿ ಮುಡಿಯಲು ಕೊಟ್ಟರೆ ಅದನ್ನು ಮುಡಿಯದೆ ಕೈಯಲ್ಲಿಡಿದು ತಂದು ಟೀಚರ್ಗೆ ಒಪ್ಪಿಸುವ ಹಂತಕ್ಕೂ ಇದು ತಲುಪಿತು. ಹೂ ತಂದುಕೊಡುವುದಕ್ಕೂ ಪೈಪೋಟಿಗಿಳಿಯುತ್ತಿದ್ದ ನಾವು, ನಮ್ಮ ಎದುರಾಳಿಯ ಗುಂಪು ತಂದುಕೊಟ್ಟರೆ, ನಾಳೆ ನಾವು ತಂದುಕೊಡುವ ಉಪಾಯ ಹೂಡುತ್ತಿದ್ದೆವು! ಹೀಗೆ ದಿನಂಪ್ರತಿ ಪೈಪೋಟಿಗಿಳಿಯುತ್ತಿದ್ದ ನಾವು ಕೆಲವೊಮ್ಮೆ ವೈಮನಸ್ಸು ಮರೆತು ಜೊತೆಗೂಡಿ ಆಡುತ್ತಿದ್ದೆವು. ನಮ್ಮ ತರಗತಿಯ ಯಾರನ್ನೇ ಆದರೂ ಬೇರೆ ತರಗತಿಯವರು ಅವಮಾನ ಮಾಡಿದರೆ ಸಹಿಸುತ್ತಿರಲಿಲ್ಲ. ಅವರಿಗೆ ಸರಿಯಾದ ಬುದ್ಧಿ ಕಲಿಸಲು ಕಾಯುತ್ತಿದ್ದೆವು. + +ಯಾವುದಾದರೂ ಹೊಸ ವಸ್ತು ತೆಗೆದುಕೊಂಡರಂತೂ ನಮ್ಮನ್ನು ಹಿಡಿಯೋದಿಕ್ಕೆ ಆಗುತ್ತಿರಲಿಲ್ಲ. ಎಷ್ಟೊತ್ತಿಗೆ ಎಲ್ಲರಿಗೂ ತೋರಿಸಿಕೊಂಡು ಬರುವುದೋ ಎಂದು ಗೋಳಾಡುತ್ತಿದ್ದೆವು. ಹೊಸ ಬಟ್ಟೆ ಹಾಕಿಕೊಂಡು, ಮೇಕಪ್ ಮಾಡಿಕೊಂಡು ಸ್ಟೈಲಾಗಿ ತರಗತಿಗೆ ಬಂದು ಟೀಚರ್ಗೆ ತೋರಿಸಿ ಚೆನ್ನಾಗಿದೆ ಅಂತ ಹೇಳಿಸಿಕೊಂಡ ಮೇಲೆ ನಮಗೆ ಸಮಾಧಾನವಾಗುತ್ತಿತ್ತು. ಅಂತಹ ಸಂದರ್ಭದಲ್ಲಿ ಕೆಲವರಿಗೆ ಹೊಟ್ಟೆ ಉರಿಸಲು ಕೂಡ ನುಲಿಯುತ್ತಾ ನಲಿಯುತ್ತಾ ಮೂತಿ ಸೊಟ್ಟ ಮಾಡಿಕೊಂಡು ಓಡಾಡಿಕೊಂಡಿರುತ್ತಿದ್ದೆವು. ಹೊಸತೆನ್ನುವ ಉತ್ಸಾಹ ನಮ್ಮನ್ನು ಅಟ್ಟಕ್ಕೇರಿಸಿ ಹಾಗೆ ಮಾಡಿಸುತ್ತಿತ್ತು!ಹೀಗೆ ತೆರೆದುಕೊಳ್ಳುತ್ತಲೇ ಸಾಗುವ ನಲಿವು-ನೋವಿನ ತುಣುಕುಗಳನ್ನು ಹೆಕ್ಕಿದಂತೆ ಖಾಲಿಯಾಗದಿರುವ ಅಕ್ಷಯಪಾತ್ರೆಯೇ ಬಾಲ್ಯ. ಪುಟ್ಟ ಪುಟ್ಟ ಕನಸುಗಳೊಂದಿಗೆ ಈಡೇರದ ಆಸೆಗಳಿಗಾಗಿ ಅತ್ತು ಕರೆದು ಸುಸ್ತಾಗಿ ಬೇಸ್ತು ಬಿದ್ದು ಬಿಕ್ಕುತ್ತ ನಿದ್ದೆಗೈದು… ಪೂಸಿಯ ಚೌಕಟ್ಟಿಗೆ ಬೆರಗಾಗಿ ಮತ್ತೆ ಪುಟಿಯುವ ಮುದ್ದು ಮನಗಳ ಆಲಂಗಿಸಿಕೊಂಡ ಬಾಲ್ಯ, ಮತ್ತೆ ಹಿಂತಿರುಗಿ ಬರಲಾರದ ಬದುಕಿನ ಅಪೂರ್ವ ಅಧ್ಯಾಯವೇ ಸರಿ. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_449.txt b/Kenda Sampige/article_449.txt new file mode 100644 index 0000000000000000000000000000000000000000..b288f50854e0cfeeda9b710a099de778d8b9d8f4 --- /dev/null +++ b/Kenda Sampige/article_449.txt @@ -0,0 +1,33 @@ + + +ಸುಶೀಲಾ ಡೋಣೂರ ಅವರ ಕತೆಗಳು ಹೆಣ್ಣಿನ ಕತೆಗಳು. ಮತ್ತು ಹೆಣ್ಣೊಬ್ಬಳೇ ಬರೆಯಬಹುದಾದ ಕತೆಗಳು. ಅವರ ಇಲ್ಲಿನ ಕತೆಗಳಿಗೆ ಹಾಗೆಂದೇ ಒಂದು ವಿಶೇಷವಾದ ಸ್ತ್ರೀಕೇಂದ್ರಿತ ಚೌಕಟ್ಟು ಸಿಗುತ್ತದೆ. ಹೆಣ್ಣಾಗಿ ಅನುಭವಿಸಬಹುದಾದ ಬವಣೆಗಳು ಕಣ್ಣಿಗೆ ಕಟ್ಟುವಂತೆಯೇ ಇದ್ದರೂ ಬರೆಯ ಹೋದಾಗ ಕ್ಲೀಷೆಯೆನಿಸುವ ವಸ್ತುವಾಗಿ ಬಿಡುವ ಸ್ತ್ರೀಕೇಂದ್ರಿತ ಕತೆಗಳನ್ನು ಕ್ಲೀಷೆಯಾಗದಂತೆ ಬರೆಯುವುದೆಂದರೆ ದೊಡ್ಡ ರಿಸ್ಕ್. ಹೆಣ್ಣಿನ ಸಮಸ್ಯೆಗಳನ್ನೆಲ್ಲಾ ಒಮ್ಮುಖದ ಬಿಡುಗಡೆಯ ಗವಾಕ್ಷಿಯೆಡೆಗೆ ತರುವಂತಹ ಜನಪ್ರಿಯ ಮಾದರಿಗಳು ಸಹ ಕಥನಕಾರ್ತಿಯರಿಗೆ ಅಡ್ಡಿ ಉಂಟು ಮಾಡುವಂತವೇ. ಹೀಗೆಂದೇ ಕತೆಗಾರ್ತಿಯಾಗಿ ಹುಷಾರಾಗಿ ಹೆಜ್ಜೆ ಇಡಬೇಕಾದ ಅಗತ್ಯ ಸುಶೀಲಾ ಅವರಂತಹ ಬರಹಗಾರ್ತಿಯರಿಗಿದೆ ಎನ್ನಿಸುತ್ತಿದೆ. + +ಸುಶೀಲಾ ಅವರ ಕತೆಗಳು ಆಧುನಿಕ ಕಾಲಘಟ್ಟದಲ್ಲಿ ಬಿಚ್ಚಿಕೊಳ್ಳುವ ಕತೆಗಳು. ಅಲ್ಲಿ ಬರುವ ಹೆಣ್ಣು ಪಾತ್ರಗಳು ಕಾಲದ ಸಂಕ್ರಮಣವನ್ನು ಅನುಭವಿಸುತ್ತಿರುವವರು. ಅವರ ಬದುಕಲ್ಲಿ ಉಂಟಾಗುವ ಬದಲಾವಣೆ ಅವರ ಪಾಲಿಗೆ ಸಕಾರಾತ್ಮಕವಾಗಿದ್ದರೂ ಸಮಾಜದ ಪಾಲಿಗೆ ಅವು ನಕಾರಾತ್ಮಕವಾಗಿ ಕಾಣುತ್ತಿರುವ ಪರಿಸ್ಥಿತಿ. ಏಕೆಂದರೆ ಹೆಣ್ಣಿನ ಬೆಳವಣಿಗೆ, ಪ್ರಗತಿಗಳನ್ನು ಸಮಾಜ ಆತಂಕದಿಂದಲೇ ನೋಡುತ್ತಿರುತ್ತದೆ. ಮೂಲಭೂತವಾಗಿ ಹೆಣ್ಣು ಬದಲಾಗದೇ ಶುದ್ಧ ಸ್ವರೂಪಳಾಗಿ ಉಳಿಯಬೇಕೆಂಬುದು ರಾಷ್ಟ್ರೀಯವಾದಿಗಳ ಕಾಲದಿಂದಲೂ ಒಪ್ಪಿತವಾದ ಸಂಗತಿಯಾಗಿದೆ. ಇಲ್ಲಿನ ‘ಬದುಕ ಮನ್ನಿಸೊ ಪ್ರಭುವೇ’ ಎನ್ನುವ ಕತೆಯಲ್ಲಿ ಬರುವ ಹೆಣ್ಣು ಗಂಡನಿಂದ ಸರಿಯಾಗಿ ಬಾಳಿಸಲ್ಪಡದೆ ಮುಸ್ಲಿಂ ಯುವಕನೊಟ್ಟಿಗೆ ಹೋಗಿ ಜೀವನ ಕಟ್ಟಿಕೊಳ್ಳುವ ಹಂದರ ಇದೆ. ಅಲ್ಲಿ ಸಂಕಟ ಅನುಭವಿಸುವ ಹೆಣ್ಣಿನ ಬಗ್ಗೆ ಪುಟ್ಟ ನಿರೂಪಕಿ ಸಹಾನುಭೂತಿಯಿಂದ ವರ್ತಿಸುತ್ತಾಳಲ್ಲದೆ ಅವಳ ಬಗ್ಗೆ ಯಾವ ಕೆಟ್ಟ ಭಾವನೆಯನ್ನೂ ಇಟ್ಟುಕೊಂಡಿರುವುದಿಲ್ಲ. ಆದರೆ ಅವಳ ತಂದೆ ಹೇಳುವ ಮಾತುಗಳು ಹೀಗಿವೆ: ‘ಹೆಣ್ಮಕ್ಕಳಿಗೆ ಸಾಧು-ಸಂತರಿಗಿಂತ ಗಟ್ಟಿತನ ಇರಬೇಕವಾ, ಯಾಕೇಂದ್ರ ಹೆಣ್ಮಕ್ಳ ಬದುಕೇ ಒಂದು ತಪಸ್ಸು’ ಎಂದು. ಈ ಧೋರಣೆ ಈ ಉಪದೇಶಗಳು ನೊಂದ ಹೆಣ್ಣಿಗೆ ಬದುಕನ್ನು ನೀಡಲಾರವು. ಆದುದರಿಂದಲೇ ಆ ಹೆಣ್ಣು ಹೇಳುತ್ತಾಳೆ; ಆ ತಪಸ್ಸಿನ್ಯಾಗ ನಾ ಸೋತಿನಿ ಕಾಕಾ, ಈಗ ನನ್ನ ಕನಸು ಮಾತ್ರ ಮುಖ್ಯ ಎಂದು. ‘ತಲ್ಲಣಿಸದಿರು ಮನವೆ..’ ಕತೆಯು(ಸುಶೀಲಾ ಅವರ ಟೈಟಲ್ಗಳು ತುಂಬಾ ರೊಮ್ಯಾಂಟಿಕ್ ಅನ್ನಿಸುತ್ತವೆ ಎಂಬ ಮಾತನ್ನು ಇಲ್ಲಿಯೇ ಹೇಳಿಬಿಡಬೇಕೆನ್ನಿಸಿದೆ) ಡೈವೋರ್ಸಿಗೆ ಅರ್ಜಿ ಹಾಕಿ ಪರಸ್ಪರರ ಒಪ್ಪಿಗೆಯಲ್ಲಿಯೇ ವಿಚ್ಛೇದನ ಏರ್ಪಡುತ್ತಿರುವ ಹೊತ್ತಿನಲ್ಲಿ ಹೆಣ್ಣಿನ ಶೋಷಣೆ ಎಷ್ಟು ಕ್ರೂರವಾಗಬಲ್ಲದು ಎನ್ನುವುದನ್ನು ಹೇಳುತ್ತದೆ. + +ಈ ತೆರನಾದ ಸಾಂಪ್ರದಾಯಿಕ ಕಥನಗಳನ್ನು ಮುಂದಿಡುತ್ತಲೇ ಕತೆಗಾರ್ತಿ ಹೆಣ್ಣಿನ ಮುಂದುವರೆದ ಹಂತದಲ್ಲಿ ನಡೆಯುವ ಶೋಷಣೆಗಳನ್ನು ಗುರುತಿಸಬಲ್ಲ ಕತೆಗಳನ್ನು ಕಟ್ಟಿಕೊಡಬಲ್ಲರು. ಹೆಣ್ಣಿಗೆ ವಿದ್ಯಾಭ್ಯಾಸ ಹಾಗೂ ಆರ್ಥಿಕ ಸ್ವಾವಲಂಬನೆ ಸಿಕ್ಕರೆ ಅವಳ ಉದ್ಧಾರವಾದಂತೆಯೇ ಎನ್ನುವ ಮೊದಲ ಗ್ರಹಿಕೆಗಳೇನಿದ್ದವು ಅವು ನಿಜಕ್ಕೂ ಹೆಣ್ಣಿಗೆ ವಿದ್ಯಾಭ್ಯಾಸ ಹಾಗೂ ದುಡ್ಡುಗಳು ದಕ್ಕಿದ ನಂತರ ಬದಲಾಗಿವೆ ಎನ್ನುವುದನ್ನು ಸುಶೀಲಾ ಅವರ ಕತೆ- ‘ಭೃಂಗದ ಬೆನ್ನೇರಿ’ ಮನೋಜ್ಞವಾಗಿ ಮುಂದಿಡುತ್ತದೆ. ಅದರಲ್ಲಿ ಬರುವ ನಾಯಕಿ ಹಳ್ಳಿಯಲ್ಲಿರುವವಳಾಗಿದ್ದು ತನ್ನ ಮಗಳಿಗೆ ವಿದ್ಯಾಭ್ಯಾಸ ಆ ಮೂಲಕ ಗಳಿಸಬಹುದಾದ ಹಣದ ಬಗೆಗೆ ಕನಸನ್ನು ತುಂಬುವವಳು. + +(ಸುಶೀಲಾ ಡೋಣೂರ) + +‘ನಿನ್ನ ಬಾಳು ನನ್ನಂಗೆ ಆಗಬಾರದು ಮಗಾ. ಚೆನ್ನಾಗಿ ಓದಬೇಕು. ಒಂದೊಳ್ಳೆ ಕೆಲಸ ಹಿಡೀಬೇಕು. ಆಫೀಸರ್ ಆಗಬೇಕು. ನಾಲ್ಕು ಕಾಸು ಸಂಪಾದಿಸಬೇಕು. ಕಾರು ಓಡಿಸೋ ಹಾಗಾಗಬೇಕು ನೀನು. ನಿನ್ನದೇ ಬಂಗಲೆ ಮಾಡಿಕೊಳ್ಳಬೇಕು. ನಿನ್ನ ತಿಜೋರಿಯಲ್ಲಿ ಕನಿಷ್ಠ ಐವತ್ತು ತೊಲೆ ಬಂಗಾರದ ಒಡವೆ, ಕೇಜಿಗಟ್ಟಳೆ ಬೆಳ್ಳಿ ಆಭರಣ ಇರಬೇಕು. ರೇಷ್ಮೆ ಸೀರೆ, ಮಿಣ ಮಿಣ ಡ್ರೆಸ್ಸು, ಘಂ ಅನ್ನೋ ಸಾಬೂನು, ಪೌಡರ್ರು….. ನನ್ನ ಕಲ್ಪನೆಗೆ ನಿಲುಕದ್ದೆಲ್ಲಾ ನಿನ್ನ ಹತ್ತಿರ ಇರಬೇಕು.’ + +ಆನಂತರ ಮಗಳು ದೊಡ್ಡದಾದ ಸಂಬಳ ಬರುವ ಕೆಲಸ ಹಿಡಿಯುವಳಾದರೂ ಪ್ರಾಜೆಕ್ಟ್ಗಳ ಒತ್ತಡ ಹಾಗೂ ಹಣದ ಹಿಂದಿನ ಶುಷ್ಕ ಓಡಾಟ ಅವಳನ್ನು ಹೈರಾಣಾಗಿಸುತ್ತವೆ. ಆದರೆ ಅಮ್ಮ ಅಪ್ಪ ಎಲ್ಲರೂ ಇವಳ ಸಕ್ಸಸ್ ಅನ್ನು ಹಣದ ಅಳತೆಗೋಲುಗಳಿಂದಲೇ ಅಳೆಯುತ್ತಾರಾದ್ದರಿಂದ ಅನಿವಾರ್ಯವಾಗಿ ಒತ್ತಡದ ಹೊರೆ ಹೊರಬೇಕಾದ ಶೋಷಣೆಗೆ ಸಿಲುಕಬೇಕಾಗುತ್ತಾಳೆ. ಈ ರೀತಿಯ ಬೆಳವಣಿಗೆ ಕಥಾವಸ್ತುವಿನ ದೃಷ್ಟಿಯಿಂದ ಗಮನಾರ್ಹ ಎನ್ನಿಸುವಂತದ್ದು. + + + +ಹಾಗೆಯೇ ಈ ಸಂಕಲನದಲ್ಲಿ ಇರುವ ‘ತೂಫಾನ್’ ಕತೆ ಉತ್ತಮ ಕತೆ. ವಸ್ತು ಮತ್ತು ನಿರ್ವಹಣೆಯ ದೃಷ್ಟಿಗಳಿಂದಲೂ ಈ ಕತೆ ಮುಖ್ಯವೆನ್ನಿಸುತ್ತದೆ. ಇದು ಹೆಣ್ಣಿನ ವೇಷದಲ್ಲಿರುವ ಹಿಜಡಾನ/ಳ ಕತೆ. ತನ್ನ ಸೌಂದರ್ಯ ಒಳಗಿಂದ ಖೊಟ್ಟಿ ಎನ್ನುವುದನ್ನು ಬಲ್ಲ ಅವನಿಗೆ/ಆಕೆಗೆ ಗಂಡಸರು ತನ್ನ ಬಾಹ್ಯ ಸೌಂದರ್ಯಕ್ಕಾಗಿ ಜೊಲ್ಲು ಸುರಿಸುವುದನ್ನು ನೋಡುವಾಗ ಖೇದವೆನಿಸುತ್ತಿರುತ್ತದೆ. ಅಪ್ರತಿಮ ಸೌಂದರ್ಯವನ್ನು ಮೇಲಿನ ಅಲಂಕಾರದಿಂದ ಪಡೆದುಕೊಳ್ಳಬಹುದಾದರೂ ತನಗೆ ಇಬ್ಬಂದಿತನ ತಂದಿಟ್ಟ ಲೈಂಗಿಕತೆಯ ಕುರಿತು ಕತೆ ಹೊಮ್ಮಿಸುವ ವಿಷಾದ ಗಮನಾರ್ಹವಾದುದು. ಎಂತಹ ತೂಫಾನುಗಳನ್ನು ಮನಸ್ಸಿನಲ್ಲಿಟ್ಟು ಬದುಕಬೇಕಾದ ಸ್ಥಿತಿ ಇದೆ ಎನ್ನುವುದನ್ನು ಇಂತಹ ಕತೆಗಳು ನಿರೂಪಿಸುತ್ತವೆ. ಈ ಮೂಲಕ ತೀರಾ ಅಂಚಿನಲ್ಲಿರುವ ಸಮುದಾಯಗಳ ವಸ್ತುವನ್ನು ಎತ್ತಿಕೊಳ್ಳುವ ಅವಕಾಶವೂ ಕತೆಗಾರ್ತಿಗೆ ಒದಗಿ ಬಂದಿದೆ. + +ಸುಶೀಲಾ ಅವರ ಕತೆಗಳಲ್ಲಿ ಅಂಚಿನಲ್ಲಿ ಅಂಚಾಗಿರುವ ಹೆಣ್ಣುಮಕ್ಕಳೇ ಕತೆಯ ವಸ್ತುವಾಗುವುದು ವಿಶೇಷ. ಇದನ್ನು ಕತೆಗಾರ್ತಿ ಯಾವುದೇ ತಾತ್ವಿಕ ಭಾರದಿಂದ ಆಯ್ಕೆ ಮಾಡಿಕೊಂಡಂತೆ ಕಾಣುವುದಿಲ್ಲ. ಆದರೆ ವಸ್ತುವಿನ ಆಯ್ಕೆಯಿಂದಲೇ ಅವಕ್ಕೆ ಒಂದು ವಿಷಾದ ಗುಣ ಒದಗಿ ಬರುವಂತಿದೆ. ಉದಾಹರಣೆಗೆ ‘ದೇವರ ತಪ್ಪು’ ಕತೆ ಮಾಲಿ ಎನ್ನುವ ಬುದ್ಧಿಮಾಂದ್ಯ ಪರಿತ್ಯಕ್ತ ಹುಡುಗಿಯ ಕತೆಯನ್ನು ಹೇಳುವ ರೀತಿ. ಸಮಾಜದ ದೃಷ್ಟಿ ಧೋರಣೆಗಳು ಇಂತಹ ಪಾತ್ರಗಳಲ್ಲಿ ಹೇಗೆ ವ್ಯಕ್ತವಾಗುತ್ತದೆ ಎನ್ನುವುದನ್ನು ಗಮನಿಸಿದರೆ ತೀವ್ರ ಹೇಸಿಗೆ ಎನ್ನಿಸುತ್ತದೆ. ಏಕೆಂದರೆ ಮೇಲ್ಪದರದಲ್ಲಿ ನಾವು ಮಾತನಾಡುವ, ಕೇಳುವ ಮಾನವೀಯತೆ, ಅನುಕಂಪ ಎಲ್ಲವೂ ಹುಸಿ ಎನ್ನಿಸುವ ಮಟ್ಟಕ್ಕೆ ಕೆಳಗಿಳಿದಿರುತ್ತದೆ. ಆ ಹುಡುಗಿಯನ್ನು ಗುಡಿಯ ಪೂಜಾರಿಯಿಂದ ಹಿಡಿದು ಸಭ್ಯ ಗೃಹಸ್ಥನ ತನಕ ಎಲ್ಲರೂ ಬಳಸಿಕೊಳ್ಳುವವರೇ. ಈ ಕ್ರೌರ್ಯವನ್ನು ಸಮಕಾಲೀನ ಸಂದರ್ಭಗಳೂ ದೃಢಪಡಿಸುತ್ತಲೇ ಇವೆ. ಇವನ್ನು ಹೇಗೆ ಎದುರಾಗಬೇಕು ಎನ್ನುವುದೇ ನಮ್ಮ ಮುಂದಿರುವ ಸಮಸ್ಯೆ. ಸುಶೀಲಾ ಅವರ ಕತೆಗಳು ಇಂತಹ ಕಡೆ ಪ್ರಸ್ತುತವೆನಿಸುತ್ತವೆ; ಸಾಮಾಜಿಕ ಎನ್ನಿಸುತ್ತವೆ. + +(ಆರ್.ತಾರಿಣಿ ಶುಭದಾಯಿನಿ) + +ಸುಶೀಲಾ ಅವರ ಕತೆಗಳಲ್ಲಿ ಹೆಚ್ಚಿನವು ರೊಮ್ಯಾಂಟಿಕ್ ಆದ ಕತೆಗಳು. ರಮ್ಯವಾದ ಲಹರಿಯಲ್ಲಿ ಚಲಿಸುತ್ತಾ ಹೋಗಿ ವಿಷಾದದಲ್ಲಿ ಉಳಿಯುವಂತವು. ಕತೆಯನ್ನು ವಸ್ತುವಿನ ಮೂಲಕ ನಿರೂಪಣೆಯ ಮೂಲಕ ನಿರ್ವಹಿಸುವುದಷ್ಟೇ ಅಲ್ಲದೆ ಅದರಾಚೆ ಒಂದು ಸ್ಪೇಸ್ ಅನ್ನು ನಿರ್ಮಾಣ ಮಾಡಬೇಕಾಗುತ್ತದೆ. ಅಂದರೆ ಕತೆಗಳು ಹೇಳುವುದರಾಚೆ ಓದುಗರಿಗೆಂದು ಇನ್ನೇನನ್ನೋ ಉಳಿಸಿದರೆ ಬೆಳೆದಂತೆ. ಸುಶೀಲಾ ಅವರ ಕತೆಗಳು ಈ ಎಲ್ಲೆಯನ್ನು ಮುಟ್ಟುತ್ತವೆ ಇಲ್ಲವೆಂದಲ್ಲ; ಆದರೆ ಅವರ ಕತೆಗಳು ಜನಪ್ರಿಯ ಕತೆಗಳ ಧಾಟಿಯನ್ನು ಬಳಸಿಕೊಳ್ಳುತ್ತಾ ಒಂದು ಮಟ್ಟಕ್ಕೆ ತಮಗೆ ತಾವೇ ಸೀಮಿತ ಚೌಕಟ್ಟನ್ನು ಹಾಕಿಕೊಳ್ಳುತ್ತವೆ. ಇದನ್ನು ಅವರು ವಿಶಿಷ್ಟ ತಂತ್ರ ಹಾಗೂ ಇನ್ನೂ ಗಾಢವಾದ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವುದರ ಮೂಲಕ ಮೀರಬೇಕೆ? ಅಥವಾ ತಮ್ಮ ನಿರೂಪಣಾ ಶೈಲಿಯಲ್ಲಿ ತರಬೇಕೆ? ಎನ್ನುವ ಪ್ರಶ್ನೆಗಳು ಇಲ್ಲಿ ಕೇಳಿಕೊಳ್ಳಬೇಕಿದೆ. + +ನಿಜ ಹೇಳಬೇಕೆಂದರೆ ಓದಿಸಿಕೊಂಡು ಹೋಗುವ ಗುಣವುಳ್ಳ ಕತೆಗಳನ್ನು ಬರೆಯುವುದು ತಪ್ಪೇನೂ ಅಲ್ಲ. ತೇಜಸ್ವಿ ಕೂಡ ತಮ್ಮ ಎರಡನೆಯ ಹಂತದ ಬರವಣಿಗೆಯಲ್ಲಿ ಜನರನ್ನು ತಲುಪಬಲ್ಲ ಕಥನದ ನಿರೂಪಣೆಯನ್ನು ತಂದುಕೊಂಡರು. ಸುಶೀಲಾ ಅವರ ಕತೆಗಳು ಸರಾಗವಾಗಿ ಓದಿಸಿಕೊಳ್ಳುತ್ತವೆ ಎನ್ನುವುದು ಒಂದು ಗುಣವೇ, ದೋಷವಲ್ಲ. ಇದರಾಚೆಗೂ ಅವರು ಹೊಸ ಹೊಸ ನಿರೂಪಣೆ ಹಾಗೂ ತಂತ್ರಗಳನ್ನು ರೂಢಿಸಿಕೊಳ್ಳಬೇಕು ಎಂಬುದು ಅಪೇಕ್ಷೆ ಮಾತ್ರ. ಕನ್ನಡದಲ್ಲಿ ಕತೆಗಾರ್ತಿಯರು ಸಶಕ್ತವಾಗಿ ಹೊಮ್ಮುವುದಕ್ಕೆ ಬೇಕಾದ ಸಂದರ್ಭದಲ್ಲಿ ಬರೆಯುತ್ತಿರುವ ಸುಶೀಲಾ ಅವರು ತಮ್ಮ ವಸ್ತುವಿನ ಆಯ್ಕೆಯಿಂದಲೇ ಒಂದರ್ಧ ತಮ್ಮ ಶಕ್ತಿಯನ್ನು ನಿರೂಪಿಸಿಬಿಟ್ಟಿದ್ದಾರೆ. ಇನ್ನುಳಿದಂತೆ ಕತೆಯನ್ನು ತಮ್ಮದೇ ಆದ ಧಾಟಿಯಲ್ಲಿ ಹೇಳುವ ಕತೆಗಾರ್ತಿಯ ಕಸುಬುದಾರಿಕೆ ಅವರಲ್ಲಿ ನಿಚ್ಚಳವಾಗಿ ಕಾಣಬೇಕಿದೆ. ಇವು ಅವರ ಬಗೆಗಿನ ನಿರೀಕ್ಷೆಯಿಂದಲೇ ಹೇಳುವ ಮಾತುಗಳು ವಿನಾ ಅನ್ಯ ಉದ್ದೇಶಗಳಿಂದಲ್ಲ. + +ಸುಶೀಲಾ ಅವರ ಕತೆಗಳು ಹೆಣ್ಣಿನ ಕತೆಗಳು ಎಂದು ಈ ಮೊದಲೇ ಹೇಳಿದೆ. ಅದರಂತೆ ಈ ವಸ್ತುವಿನ ಆಯ್ಕೆಯು ಒಂದೊಮ್ಮೆ ಅವರ ಆಯ್ಕೆಯ ಮಿತಿಯಾಗಕೂಡದು. ಮಹಿಳೆ ಮಹಿಳೆಯರ ಕತೆಗಳನ್ನೇ ಬರೆದು ಅಚ್ಚು ಹಾಕುವ ಅನಿವಾರ್ಯತೆ ಇರುವುದಾದರೂ ಮಹಿಳಾ ವಸ್ತುವನ್ನು ಎತ್ತಿಕೊಂಡು ಬರೆಯುವುದರಿಂದಲೇ ಅನನ್ಯತೆ ಒದಗಿ ಬರುವುದು ಎಂಬ ಊಹೆ ಯಾವಾಗಲೂ ನಿಜವಲ್ಲ. ಹಾಗೆ ನೋಡಿದರೆ ಮಹಿಳಾ ಲೋಕವೂ ಒಟ್ಟಂದದಲ್ಲಿ ನಿರ್ವಹಿಸುವಂತದ್ದಲ್ಲ ಎಂದು ಸ್ವತ: ಸುಶೀಲಾ ಅವರ ಕತೆಗಳೇ ನಿರೂಪಿಸುತ್ತಲಿವೆ. ಮಹಿಳಾ ಅನುಭವಗಳ ಅನನ್ಯತೆಯನ್ನು ದಾಖಲಿಸುತ್ತಲೇ ಮಾನವತಾ ಜಗತ್ತನ್ನು ಮುಖಾಮುಖಿಯಾಗಬೇಕಾದ ಅಗತ್ಯ ಇಂದು ಎಲ್ಲಾ ಸ್ತ್ರೀಬರಹಗಳಿಗಿದೆ. ಅನನ್ಯತೆಯು ಸ್ತ್ರೀ ಬರಹಗಳಿಗೆ ಒದಗಿದ ವರವೂ ಹೌದು ಶಾಪವೂ ಹೌದು. ಏಕೆಂದರೆ ಅನನ್ಯತೆಯಿಲ್ಲದೆ ಸ್ತ್ರೀ ಬರಹಗಳ ವಿಶಿಷ್ಟತೆಯನ್ನು ಅರಿಯುವುದು ಕಷ್ಟ. ಸಾರ್ವತ್ರಿಕವಾಗಿ ಬರೆದಾಗ ಲಿಂಗ ಸೂಕ್ಷ್ಮತೆಗಳು ಮಸಕಾಗುತ್ತವೆ. ಹೀಗೆಂದೇ ಮಹಿಳಾ ಬರಹಗಾರ್ತಿಯರಿಗೆ ಇಂದು ಎಂದಿಗಿಂತ ಹೆಚ್ಚಿನ ಒತ್ತಡವಿದೆ. ಮಹಿಳಾ ವಸ್ತು, ಮಹಿಳಾ ನಿರೂಪಣೆ, ಮಹಿಳಾ ಜಗತ್ತುಗಳನ್ನು ತಮ್ಮ ಅನನ್ಯತೆಗಳೆಂದು ಭಾವಿಸುವ ಲೇಖಕಿಯರಿಗೆ ಮುಖ್ಯವಾಹಿನಿ ರಾಜಕಾರಣದಲ್ಲಿ ತಮ್ಮದೇ ಆದ ಸ್ಪೇಸ್ ಸಿಗುವುದಾದರೂ ಅದು ಮಹಿಳಾ ಪ್ರತಿನಿಧೀಕರಣದ ಕುರುಹಾಗಿ ನಿಂತಿರುತ್ತದೆ. ಆದುದರಿಂದ ತಾವೇ ತಾವಾಗಿ ಬರೆಯುತ್ತಲೇ ಸಾರ್ವತ್ರಿಕಗೊಳ್ಳುವ ಲೇಖಕಿಯರ ಹುಟ್ಟಿಗೆ ಎಲ್ಲರ ನಿರೀಕ್ಷೆಯಿದೆ. + +ಸುಶೀಲಾ ಅವರ ಈ ಸಂಕಲನದ ಕತೆಗಳನ್ನು ನಾನು ಓದಿ ಮುಗಿಸಿದಾಗ ಏನೋ ವಿಷಾದ ಉಳಿದುಕೊಂಡಂತೆ ಭಾಸವಾಯಿತು. ಎಷ್ಟೆಲ್ಲಾ ಹೆಣ್ಣುಗಳ ಬದುಕುಗಳು; ಯಾವ್ಯಾವ ತಿರುವುಗಳು?! ಇವನ್ನೆಲ್ಲಾ ಸಮಾಧಾನದಿಂದ ಕೇಳಿ ಕಿವಿಯಾಗುವವರಾಗಲೀ ಅಥವಾ ಆಸರೆ ನೀಡುವವರಾಗಲೀ ಅಪರೂಪ. ನೋವಿನ ಕತೆಗಳಿಗೆ ಭಾಷೆಯೇ ಇಲ್ಲದೆ, ಅಭಿವ್ಯಕ್ತಿ ಸೋತಂತಾಗುವ ಸಂದರ್ಭಗಳು ಹೆಣ್ಣುಗಳ ಬದುಕುಗಳಲ್ಲಿ. ಈ ಅಂಚಿನಲ್ಲಿ ಸವೆದು ಸವೆದು ನವೆದ ಹೆಣ್ಣುಗಳ ಮನಸ್ಸಿನ ಕೆಲವು ಪಿಸುಮಾತುಗಳನ್ನು ಇಲ್ಲಿ ಸುಶೀಲಾ ಅವರು ಕೇಳಿಸಿದ್ದಾರೆ. ಅವು ಹೃದಯ ಬಿಚ್ಚಿ ಕೇಳಿಕೊಳ್ಳಬೇಕಾದ ಮಾತುಗಳು. ಅವನ್ನು ಕೇಳುವುದೆಂದರೆ ಮನ: ಪರಿವರ್ತನೆಗೆ ದಾರಿ ಮಾಡಿಕೊಟ್ಟಂತೆ. ಸುಶೀಲಾ ಅವರ ಕತೆಗಳು ಹೀಗೆ ಕೇಳಿಸಲು ಸಫಲವಾಗಿವೆ. ಆದರೆ ಇಲ್ಲಿ ಒಂದು ಮಾತು, ಪತ್ರಿಕೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆದ ಕತೆಗಳು ಇನ್ನೂ ವಿಸ್ತಾರವಾಗಬೇಕು ಎನ್ನಿಸುತ್ತವೆ. ಸಾವಿರ ಪದಗಳ ಮಿತಿಗೆ ಒಳಪಟ್ಟ ಸಣ್ಣಕತೆ ಇನ್ನೂ ಇನ್ನೂ ಸಣ್ಣದಾಗುತ್ತಿರುವ ಸಂದರ್ಭ ನಮ್ಮ ಕಣ್ಣ ಮುಂದಿದೆ. ಸುಶೀಲಾ ಅವರಂತಹ ಕತೆಗಾರ್ತಿಯರು ಇದನ್ನು ಮೀರಿ ಬೆಳೆಯಬೇಕಿದೆ. ಸುಶೀಲಾ ಅವರಿಂದ ಇದನ್ನು ನಿರೀಕ್ಷಿಸುವುದಕ್ಕೆ ಯಾವ ಸಂಕೋಚವೂ ಇಲ್ಲ. ಅವರು ಬರೆಯಬಲ್ಲರು. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_45.txt b/Kenda Sampige/article_45.txt new file mode 100644 index 0000000000000000000000000000000000000000..1596c772f0ac7f13c73b1034145d5735ebc4ac01 --- /dev/null +++ b/Kenda Sampige/article_45.txt @@ -0,0 +1,35 @@ +byಕೆಂಡಸಂಪಿಗೆ|Dec 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕವಯಿತ್ರಿಯರ ಸ್ಮೃತಿಯಲ್ಲಿ ಮತ್ತು ಅನುಭವದಲ್ಲಿ ಅಮ್ಮನ ಪಾತ್ರ, ಕಾರ್ಯ, ಲೋಕದೃಷ್ಟಿಗಳು ವಿಶಿಷ್ಟವಾಗಿವೆ. ಅಮ್ಮನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವಳು ಮನೆಯಿಂದ ಹೊರಹಾಕುವ ಕಸವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಕವಯಿತ್ರಿ! ಅಮ್ಮ ತನ್ನ ಮನೆಯ, ಮನದ, ಸಂಬಂಧದ ಯಾವ ವಸ್ತು ವಿಚಾರಗಳನ್ನೂ ಅವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ ಎನಿಸುವವರೆಗೂ ಹೊರಹಾಕುವುದಿಲ್ಲ, ಅನಂತರವೇ ವಿವಿಧ ಲಕೋಟೆಗಳಲ್ಲಿ ಹಾಕಿ ಮನೆ, ಮನದಿಂದ ಹೊರ ಅಟ್ಟುತ್ತಾಳೆ ಎಂಬ ಚಿಂತನೆಯು ಹೊಸ ಒಳನೋಟವನ್ನು ನೀಡುತ್ತದೆ.ಪ್ರೊ. ಸಬಿಹಾ ಭೂಮಿಗೌಡ ಸಂಪಾದಿಸಿದ “ಕನ್ನಡ ಮಹಿಳಾ ಕಾವ್ಯ” ಕೃತಿಗೆ ಬರೆದ ಅವರ ಮಾತುಗಳು ಇಲ್ಲಿವೆ… + +byಕೆಂಡಸಂಪಿಗೆ|Dec 15, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು.ಅನುಪಮಾ ಪ್ರಸಾದ್‌ ಕಥಾ ಸಂಕಲನ “ಚೋದ್ಯ”ಕ್ಕೆ ಕೇಶವ ಮಳಗಿ ಬರೆದ ಮಾತುಗಳು + +byಕೆ. ಎನ್. ಲಾವಣ್ಯ ಪ್ರಭಾ|Dec 14, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್‌ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲಾ ರೀತಿಯಲ್ಲಿ ಅವರು ಆಕಾಶವಾಣಿಯಲ್ಲಿ ಕೆಲಸ ನಿರ್ವಹಿಸುತ್ತಲೇ ಮುಂದೆ ಆಕಾಶವಾಯ ಸಂಗೀತ ಸಂಯೋಜಕಿಯೂ ಆಗುತ್ತಾರೆ.ಎಚ್. ಆರ್. ಲೀಲಾವತಿ ಆತ್ಮಕಥನ “ಹಾಡಾಗಿ ಹರಿದಾಳೆ” ಕೃತಿಯ ಕುರಿತು ಕೆ.ಎನ್.ಲಾವಣ್ಯ ಪ್ರಭಾ ಬರಹ + +byಅನುಸೂಯ ಯತೀಶ್|Dec 13, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿ ನಲವತ್ತೊಂಬತ್ತು ಪುಟ್ಟ ಪುಟ್ಟ ಅಧ್ಯಾಯಗಳು ಇಡೀ ಕಾದಂಬರಿಯ ಸಾರಸತ್ವವನ್ನು ಉಣಬಡಿಸುತ್ತವೆ. ಹದವರಿತ ಭಾಷೆಯಲ್ಲಿ ಮೈನವಿರೇಳಿಸುವ ಸಂಭಾಷಣೆಗಳು ಓದುಗರಿಗೆ ಕಚಗುಳಿ ಇಡುತ್ತವೆ. ಲೇಖಕರ ಬಾಲ್ಯದ ಅನುಭವಗಳ ಒಟ್ಟು ಮೊತ್ತ ಈ ಕನಸೇ ಕಾಡು ಮಲ್ಲಿಗೆ. ಇಲ್ಲಿ ಬಹುತೇಕ ನೈಜ ಅನುಭವಗಳೆ ಕಾದಂಬರಿಯ ಜೀವ ದ್ರವ್ಯವಾಗಿದ್ದರೂ ಲೇಖಕರು ತಮ್ಮ ಬರಹದ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಂದರ್ಭೋಚಿತವಾಗಿ ಪೂರಕ ಪಾತ್ರಗಳನ್ನ ಕಲ್ಪಿಸಿಕೊಂಡು ಆ ಕಥೆಗೆ ವಿಭಿನ್ನ ಆಯಾಮಗಳನ್ನು ಕಲ್ಪಿಸಿದ್ದಾರೆ.ಮಧು ವೈ.ಎನ್.‌ ಕಾದಂಬರಿ “ಕನಸೇ ಕಾಡುಮಲ್ಲಿಗೆ” ಕುರಿತು ಅನಸೂಯ ಯತೀಶ್‌ ಬರಹ + +byಕೆಂಡಸಂಪಿಗೆ|Dec 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ.ಕತೆಗಾರ ಸ್ವಾಮಿ ಪೊನ್ನಾಚಿ ಹೊಸ ಕಥಾ ಸಂಕಲನ “ದಾರಿ ತಪ್ಪಿಸುವ ಗಿಡ”ಕ್ಕೆ ಓ ಎಲ್‌ ನಾಗಭೂಷಣ ಸ್ವಾಮಿ ಬರೆದ ಮುನ್ನುಡಿ + +byಕೆಂಡಸಂಪಿಗೆ|Dec 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಆಗ ಎನ್‌ಎಸ್‌ಡಿಯಲ್ಲಿ ಅಲ್ಕಾಜೀ ಎನ್ನುವವರು ಮುಖ್ಯಸ್ಥರಾಗದ್ದಿರು. ಶ್ರೀರಂಗರ ಕಾಗದದಿಂದಾಗಿ ಪ್ರಸನ್ನನಿಗೆ ಎನ್‌ಎಸ್‌ಡಿಯಲ್ಲಿ ಪ್ರವೇಶ ಸಿಕ್ಕಿತು. ಎನ್‌ಎಸ್‌ಡಿ ಎಂದರೆ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮ. ದೆಹಲಿಯಲ್ಲಿರುವ ಅತಿ ಪ್ರತಿಷ್ಠಿತ ನಾಟಕ ಕಲಿಸುವ ಶಾಲೆ. ಅದಕ್ಕೆ ಸೀಟುಗಳು ಬಹಳ ಕಡಿಮೆ ಇರುತ್ತದ್ದಿವು. ಇಡಿಯ ಭಾರತಕ್ಕೆ 8-10 ಸೀಟುಗಳು ಮಾತ್ರ ಇರುತ್ತದ್ದಿವು. ನಮ್ಮ ಈಗಿನ ಕಾಲದ ಅನೇಕ ಹೊಸ ಬಗೆಯ ಚಿತ್ರಗಳನ್ನು ಮಾಡುವ ನಿರ್ದೇಶಕರು ಮತ್ತು ನಟರು ಅಲ್ಲಿಂದಲೇ ಬಂದವರು. ಈಗ ಎನ್‌ಎಸ್‌ಡಿಯ ಬ್ರಾಂಚ್‌ಗಳು ದೇಶದ ನಾನಾ ಕಡೆ ಇವೆ. ಬೆಂಗಳೂರಿನಲ್ಲೂ ಒಂದಿದೆ.ಟಿ.ಎನ್.‌ ಸೀತಾರಾಮ್‌ ಅವರ ಆತ್ಮಕಥನ “ಬದುಕಿನ ಪುಟಗಳು” ಕೃತಿಯ ಕೆಲವು ಪುಟಗಳು + +byಕೆಂಡಸಂಪಿಗೆ|Dec 9, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ?ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿ ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ + +byನಾರಾಯಣ ಯಾಜಿ|Dec 5, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ.ಬಂಗಾಳಿಯ ಮಾನದಾ ದೇವಿ ಆತ್ಮಕಥನ “ವಿದ್ಯಾವಂತ ವೇಶ್ಯೆಯ ಆತ್ಮಕಥೆ”ಯನ್ನು ನಾಗ ಎಚ್ ಹುಬ್ಳಿ ಕನ್ನಡಕ್ಕೆ ತಂದಿದ್ದು ಈ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Dec 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು!ವಿದ್ವಾಂಸರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್‌ ಅವರ ಆತ್ಮಕಥನ “ದಿಟದ ದೀವಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ \ No newline at end of file diff --git a/Kenda Sampige/article_450.txt b/Kenda Sampige/article_450.txt new file mode 100644 index 0000000000000000000000000000000000000000..0c75bce2e7ac25220038850eae0ec8055044561b --- /dev/null +++ b/Kenda Sampige/article_450.txt @@ -0,0 +1,53 @@ + + +ಚಿತ್ರದುರ್ಗದ ಬಳಿಯ ಚಳ್ಳಕೆರೆಯಲ್ಲಿ ನನ್ನಪ್ಪ ಅಲ್ಲಿಯ ಎಪಿಎಂಸಿ ಮಾರ್ಕೇಟಿನಲ್ಲಿ ಎತ್ತಿನ ಗಾಡಿ ಮಡಗಿ ಬಾಡಿಗೆಗೆ ಹೊಡೆಯುತ್ತಿದ್ದ. ಒಂದು ಸರ್ತಿ ವಾರೆದಾರಿಯಲ್ಲಿ ಗಾಡಿ ಮೊಗುಚಿ ಎತ್ತಿನ ಕೆಳಗೆ ಬಿದ್ದ ಅಪ್ಪನ ಮೇಲೆ ಮೂಟೆಯೂ ಬಿದ್ದಿತು. ಇನ್ನು ಎತ್ತು, ಗಾಡಿ, ಬಾಡಿಗೆಯ ಸಹವಾಸ ಬೇಡವೆಂದು, ಸಂಜೆಯ ಹೊತ್ತು ಬಸ್‌ ಸ್ಟಾಂಡಿನಲ್ಲಿ ಮಂಡಾಳು ಮಾಡಿ, ಮೆಣಿಸಿನಕಾಯಿ ಬೋಂಡ ಬೇಯಿಸುತ್ತಿದ್ದ ಅವ್ವನ ಜತೆ ಸೇರಿಕೊಂಡ. ಅಪ್ಪನಿಗೆ ಮುಸುರೆ ಪದಾರ್ಥದ ವ್ಯವಹಾರ ಬರುತ್ತಿರಲಿಲ್ಲ. ಅದರಿಂದ ಮೆಣಸಿನಕಾಯಿಯೊಳಗಿನ ಬೀಜ ತೆಗೆಯುವುದು, ಈರುಳ್ಳಿ ಹಸನು ಮಾಡುವುದು, ಪಕ್ಕದ ಬೋರ್‌ ವೆಲ್ಲಿನಿಂದ ಗಿರಾಕಿಗಳ ಕೈತೊಳೆಯುವ, ಕುಡಿಯುವ ನೀರು ತರುವುದು, ಜಗ್‌ ಗಳಿಗೆ ನೀರು ತುಂಬಿಡುವುದು ಮಾಡುತ್ತಿದ್ದ. + +ಹದವಾಗಿ ಪದಾರ್ಥ ಬೇಯಿಸುವುದು, ಮಂಡಕ್ಕಿ ಕಲೆಸುವುದು, ತಿಂದವರಿಂದ ಕಾಸು ಈಸಿ ಗಲ್ಲಕ್ಕೆ ಹಾಕಿ ಚಿಲ್ಲರೆ ಕೊಡುವುದು ಅವ್ವನ ಕೆಲಸ. ಕಾಸು ಕೈಯ್ಯಲ್ಲಾಡುತ್ತಿದ್ದುದರಿಂದ ಅವ್ವ ಜೋರಾಗಿದ್ದಳು. ಪದಾರ್ಥ ತಿಂದ ಗಿರಾಕಿಗಳು ಅವ್ವನೊಂದಿಗೆ ನಾಳೆ-ನಾಳಿದ್ದು ಅಂದು ಸಾಲ ಹೇಳುವಂತಿಲ್ಲ. ಕಮಾಯಿ ಜಾಸ್ತಿ ಇದ್ದ ಅವ್ವನ ಮುಂದೆ ಅಪ್ಪನೇ ಸುಮ್ಮನಿರುತ್ತಿದ್ದ. ಸಂಜೆಯಿಂದ ತಡರಾತ್ರಿತನಕ ಬಸ್‌ ಸ್ಟಾಂಡಿನಲ್ಲಿ ವ್ಯಾಪಾರವಾದರೆ, ಅವ್ವನ ಹಗಲ ಕೆಲಸ ರಾತ್ರಿ ವ್ಯಾಪಾರಕ್ಕೆ ಬೇಕಾಗುವ ಸಾಮಾನು ಸರಂಜಾಮು, ಲವಾಜಮೆ ಹೊಂದಿಸುವುದು. ಹೈಸ್ಕೂಲಿಗೆ ಹೋಗಿಬರುತ್ತಿದ್ದ ನಾನು ಆಗೀಗ ಅವ್ವನೊಂದಿಗೆ ಪುರಿಭಟ್ಟಿ, ತರಕಾರಿ ಅಂಗಡಿ ಮುಂಗಟ್ಟುಗಳಿಗೆ ಸುತ್ತಿ ತಲೆಯ ಮೇಲೆ ಸಾಮಾನು ಹೊತ್ತು ತರುತ್ತಿದ್ದೆ. + +ಇನ್ನು ಮುಂದಿನ ಕಥೆ ಎಂದರೆ ರಾತ್ರಿ ಪಾಳಿಯ ರಿಕ್ಷಾದವರು ಮಂಡಾಳು, ಮೆಣಸಿನಕಾಯಿಗೆ ಬಂದು ಅಪ್ಪ ಅವ್ವನ ಮುಂದೆ ಊರ ಸುದ್ದಿಯೆಲ್ಲ ಮಾತಾಡುತ್ತಿದ್ದರು. ಹಂಗೆ ಕಡೆಯದಾಗಿ ವ್ಯಾಪಾರ ಮುಗಿದು ಅಲ್ಲೇ ತೊಳೆದ ಪಾತ್ರೆ, ಪಡಗ, ಬಾಂಡ್ಲಿ, ಮಿಕ್ಕ ಎಣ್ಣೆ, ತರಕಾರಿ ಪದಾರ್ಥ, ಪುರಿಮೂಟೆ ಎಲ್ಲವನ್ನೂ ಏರಿಸಿ ಮನೆಗೆ ಬಿಡುತ್ತಿದ್ದ ಚಿತ್ತಯ್ಯ ನಿತ್ಯ ಪರಿಚಯವಾಗಿ ಅವನೊಂದಿಗೆ ಅಪ್ಪ ಅವ್ವ ಮತ್ತು ನನ್ನ ಸಲುಗೆ ಆಯಿತು. ಅವನು ತಡರಾತ್ರಿ ಯಾಗಿ ಇನ್ನೂ ವ್ಯಾಪಾರ ಇದ್ದರೆ ನನ್ನ ರಿಕ್ಷಾ ಹತ್ತಿಸಿಕೊಂಡು ಮನೆಗೆ ಬಿಟ್ಟು ಅಲ್ಲಿಂದ ಹತ್ತಿರವೇ ಇದ್ದ ದೊಡ್ಡೇರಿಯ ತನ್ನ ಹಟ್ಟಿಗೆ ಹೋಗುತ್ತಿದ್ದ. ನಾನು ಆಗ ಒಂಬತ್ತು ಪಾಸಾಗಿ ಎಸ್ಸೆಸ್ಸೆಲ್ಸಿಗೆ ಬಂದಿದ್ದೆ. ಹದಿನೈದು ವರ್ಷ ಎಂದೆನಲ್ಲ. ಅಪ್ಪ ಅವ್ವನನ್ನು ಬಿಟ್ಟು, ಕಂಡವರೆಲ್ಲ ಇಷ್ಟ ಆಗುತ್ತಿದ್ದರು. ಮನೆ ಬೇಡವೆನಿಸುತ್ತಿತ್ತು. + +ಶಾಲೆಯಲ್ಲಿ ನಾನು ಅತ್ತಿತ್ತ ಹಾಯುವಲ್ಲಿ ಹುಡುಗರು ಈರುಳ್ಳಿ, ಮೆಣಸಿನಕಾಯಿ, ಮಂಡಾಳು ಎಂದೆಲ್ಲ ಮಾತಾಡಿಕೊಳ್ಳುತ್ತಿದ್ದರು. ಅದು ನನ್ನನ್ನೇ ಕುರಿತ ಚೇಷ್ಟೆ ಎಂದು ಗೊತ್ತಾಗುತ್ತಿತ್ತು. ನಾನು ನನ್ನವ್ವನೊಡನೆ ಶುಕ್ರವಾರದ ಸಂತೆಗೆ ಹೋಗಿ ಅವಳು ಈರುಳ್ಳಿ ಮೂಟೆ ಹೊತ್ತು ಬಂದರೆ ನಾನು ಮೆಣಸಿನ ಕಾಯಿ ಪುಟ್ಟಿ ತರುತ್ತಿದ್ದೆ. ಶಕ್ತಿ ಕಳೆದುಕೊಂಡಿದ್ದ ಅಪ್ಪ ಸಣ್ಣಪುಟ್ಟ ಲವಾಜಮೆ ಪದಾರ್ಥ ಹಿಡಿದು ಬರುತ್ತಿದ್ದ. ಅದಲ್ಲದೆ ಶನಿವಾರ, ಭಾನುವಾರ ಬಸ್ ಸ್ಟ್ಯಾಂಡಿ ನಲ್ಲಿ ವ್ಯಾಪಾರ ಏರಿರುತ್ತಿದ್ದರಿಂದ ನಾನು ಎಷ್ಟೋ ಹೊತ್ತು ಅಲ್ಲೇ ಇರುತ್ತಿದ್ದೆ. + +ಅದರ ಮಾರನೆಯ ದಿನಗಳಲ್ಲಿ ಹುಡುಗರು ನನ್ನತ್ತ “ಈರುಳ್ಳಿ, ಮೆಣಸಿನಕಾಯಿ” ಎಂಬುದು ಮಾತ್ರವಲ್ಲದೆ “ಶುಕ್ರವಾರದ ಸಂತೆಯ ಸುಂದರಿ, “ಶನಿವಾರದ ಬಸ್‌ಸ್ಟ್ಯಾಂಡಿನ ಚೆಂಡು ಮಲ್ಲಿಗೆ ಎನ್ನುತ್ತಿದ್ದರು. ನನಗೆ ಕೀಳರಿಮೆ ಕಾಡುತ್ತಿತ್ತು. ಅದು ಅಪ್ಪ ಅವ್ವನ ಮೇಲೆ ಸಿಟ್ಟಾಗಿಯೂ ರೂಪಗೊಳ್ಳುತ್ತಿತ್ತು. ಇದನ್ನು ಶಾಲೆಯ ಕನ್ನಡ ಮೇಷ್ಟ್ರು ಪಾಲಯ್ಯನವರಿಗೆ ಹೇಳಿದೆ. ಅವರು “ಚಿತ್ರಕ್ಕ ನೀನು ತೆಲೆ ಕೆಡಿಸ್ಕಂಬ್ಯಾಡ ಸುಮ್ಕೆ ಓದು ಎಂದರು. ನನಗೆ ಅವರ ಮಾತಿನಿಂದ ಸಮಾಧಾನವೋ, ಸಂತೋಷವೋ ಆಗುವುದರ ಬದಲು, ನನ್ನ ಬಾಲಿಶ ತಲೆಗೆ ಬರುತ್ತಿದ್ದ ಚೇಷ್ಟೆಯ ಪ್ರಶ್ನೆ ಎಂದರೆ ಮುವತ್ತು ವಯಸ್ಸಿನ ಮೇಷ್ಟ್ರು ಹದಿನೈದು ವಯಸ್ಸಿನ ನನ್ನನ್ನು ಚಿತ್ರಕ್ಕ ಎನ್ನುತ್ತಾರಲ್ಲ ಎನಿಸುತ್ತಿತ್ತು. ಆಗಾಗ ಶಾಲೆಯ ಅಂಗಳದಲ್ಲಿ ನನ್ನ ತಲೆಮುಡಿಗೆ ಕೈಯ್ಯಾಡಿಸಿ “ಚಿತ್ರವ್ವಾ ನೀನೇನು ಹೆದರ್ಕಂಬ್ಯಾಡ ನೋಡು, ಯಾರೇನಾರ ಅಂದ್ಕಳ್ಳಿ ಎನ್ನುವಲ್ಲಿ ಯಲಾ ಮೇಷ್ಟ್ರು ನನಗೀಗ ಅಕ್ಕನ ಜಾಗ ತೆಗೆದು ಅವ್ವನನ್ನಾಗಿ ಮಾಡಿಬಿಟ್ಟರಲ್ಲ ಎಂದು ನಗು ಬರುತ್ತಿತ್ತು. + +ಒಂದು ದಿನ ಸಂಜೆ ಸಂತೆಯ ವ್ಯಾಪಾರ ಇನ್ನೂ ತಗ್ಗದಿರಲು ಅವ್ವ ಹೇಳಿದಳೆಂದು ಓದುವ ನಿಮಿತ್ತ ಹಟ್ಟಿಗೆ ಹೋಗುವುದೆಂದರೆ, ಚಿತ್ತಯ್ಯ ತಾನು ಕರೆದುಕೊಂಡು ಹೋಗುವೆನೆಂದು ಬಂದ. ಒಬ್ಬಳೇ ರಿಕ್ಷಾ ಹತ್ತಿ ಮನೆಯ ದಾರಿ ಹಿಡಿದರೆ ಚಿತ್ತಯ್ಯ “ಲೇ ಚಿತ್ರಿ ಇವತ್ತು ನಮ್ಮಟ್ಟಿಗೆ ಹೋಗಾನ ಬಾ” ಎಂದು ದೊಡ್ಡೇರಿ ಕಡೆ ರಿಕ್ಷಾ ಓಡಿಸಿದ. + +ರಾತ್ರಿ ಕತ್ತಲಾಗಿದ್ದರೂ ಅಲ್ಲಲ್ಲಿ ಇದ್ದ ಬೀದಿ ಲೈಟಿನ ಕಾರಣವಾಗಿ ನನಗೇನೂ ಭಯ ಅನಿಸಲಿಲ್ಲ. ಅಪ್ಪನ ಎತ್ತಿನ ಗಾಡಿಯಲ್ಲಿ ಸುತ್ತುತ್ತಿದ್ದ ನನಗೆ ಚಿತ್ತಣ್ಣನ ರಿಕ್ಷಾ ದೇವಾನುದೇವತೆಗಳ ರಥದಂತೆ ಕಂಡಿತು. ಚಳ್ಳಕೆರೆ ಪಟ್ಟಣದಲ್ಲಿ ಹರಿಯುವ ದೊಡ್ಡವರ ಕಾರಿನಂತೆ ಕಂಡಿತು. ಇಂಥ ಬಾಲಿಶ ಯೋಚನೆ ಬಿಟ್ಟರೆ ನನ್ನ ತಲೆಯಲ್ಲಿ ಬೇರೇನೂ ಹೊಳೆದಿರಲಿಲ್ಲ. ಚಿತ್ತಣ್ಣನೂ ಅಷ್ಟೆ, ದಿನಾ ನೋಡುತ್ತಿದ್ದವನೇ ತಾನೇ ಎನಿಸಿತು. ದೊಡ್ಡೇರಿಯ ಅವನ ಹಟ್ಟಿಗೆ ಹೋದಾಗ ರಾತ್ರಿ ಒಂಬತ್ತು ಘಂಟೆ. ನನ್ನ ಅಪ್ಪ ಅವ್ವ ಕಟ್ಟಿದ್ದ ಮಟ್ಟಾಳೆ ಗುಡಿಸಲು, ಇವನ ತಗಡು ಷೀಟಿನ ವಪ್ಪಾರೆಯೂ ಒಂದೇ ಅನ್ನಿಸಿತು. + +ಚಿತ್ತಯ್ಯನು ಮಂಡಾಳು, ಮೆಣಸಿನಕಾಯಿ ಮೆಲ್ಲುವಾಗೆಲ್ಲ ನನ್ನ ಅಂದಚೆಂದವನ್ನು ಕಂಡು ಆನಂದಪಡುವವನಂತಿದ್ದ. ಅಪ್ಪ-ಅವ್ವನೊಂದಿಗೆ ಅದನ್ನು ಹೇಳುತ್ತ, “ಜಾಸ್ತಿ ದಿನ ಈ ಚಿತ್ರಿನ ಇಲ್ಲಿ ಕುಂಡ್ರಸಬ್ಯಾಡಾ, ಒಂದಲ್ಲಾ ಒಂದು ದಿನ ನಾನೇ ಇವಳ ಎಗರಿಸಿ ಕರಕೊಂಡು ಒಯ್ಯುವೆನು ಅನ್ನುತ್ತಲೂ ಇದ್ದ. ಚಿತ್ತಣ್ಣ ನನ್ನ ಹೊಗಳುವಾಗಲೂ, ಆಮೇಲೂ ಮತ್ತೆ ಮತ್ತೆ ಅವನಾಡಿದ್ದನ್ನು ನೆನೆಯುವಾಗೆಲ್ಲ ಅವನ ರಿಕ್ಷಾದಲ್ಲೇ ಬೇಗ ಹಟ್ಟಿ ಮುಟ್ಟಿ ಕನ್ನಡಿ ನೋಡಿಕೊಳ್ಳಬೇಕೆನಿಸುತ್ತಿತ್ತು. ಬಾಂಡಲೆಯಿಂದ ಎದ್ದ ಎಣ್ಣೆಯ ಹಬೆ, ಮೆಣಸಿನಕಾಯಿ, ಈರುಳ್ಳಿ ಘಾಟಿನಿಂದ ನನ್ನ ಮುಖ ಜಡ್ಡುಗಟ್ಟಿಲ್ಲವಲ್ಲ ಎಂದುಕೊಳ್ಳುತ್ತಿದ್ದೆ. + +ಅವ್ವನನ್ನು ಪೀಡಿಸಿ ಮೈಗೆ ಬಣ್ಣ ಬಣ್ಣದ ಬಟ್ಟೆ, ಮುಖಬಣ್ಣ, ತುಟಿ ಬಣ್ಣ, ತಲೆ ಮೈಗೆ ಸುವಾಸನೆಯ ಎಣ್ಣೆ ಕೊಡಿಸಿಕೊಳ್ಳುವುದೆಲ್ಲ ತಡವಾಗಬಹುದು ಅಥವಾ ಕೇಳುವಲ್ಲಿ ಅವ್ವ ಮುಸುಡಿಗೆ ತಿವಿಯಬಹುದು, ಅದರಿಂದ ನಾನೇ ಗಲ್ಲಾದಿಂದ ಕಾಸು ಎಗರಿಸಿ ಬೇಕಾದುದೆಲ್ಲವನ್ನೂ ಕೊಂಡುಕೊಳ್ಳಬೇಕೆನಿಸುತ್ತಿತ್ತು. ಕಾಸು ಕದ್ದುಕೊಂಡು ಕೊಳ್ಳುವುದೇನೋ ಸರಿ. ಅದನ್ನೆಲ್ಲ ಮೈಮೇಲೆ ಪೂಸಿಕೊಂಡರೆ ಅವ್ವನಿಗೆ ಗೊತ್ತಾಗಿಯೇ ಆಗುತ್ತದಲ್ಲ ಆಗೇನು ಮಾಡುವುದು ಎಂದು ಬೇಜಾರಾಗುತ್ತಿತ್ತು. ಕಾಸು ಕದ್ದು ಎಲ್ಲ ಕೊಂಡು, ಸ್ಕೂಲಿನಲ್ಲಿ ನಾನು ಚೆನ್ನಾಗಿ ಓದುತ್ತೇನೆಂದು ಬಾಳ ಬಾಳ ಇಷ್ಟಪಡುತ್ತಿದ್ದ ಪಾಲಯ್ಯ ಮೇಷ್ಟ್ರು ಕೊಡಿಸಿದ್ದೆಂದು, ಸ್ಕೂಲಿಗೆ ದಿನಾ ಇದನ್ನೆಲ್ಲ ಹಾಕಿಕೊಂಡು ಬರದಿದ್ದರೆ ನೀನು ಸ್ಟೂಡೆಂಟೇ ಅಲ್ಲ ಅಂದರೆಂದು ಸುಳ್ಳು ಹೇಳಿಬಿಟ್ಟರೆ ಹೇಗೆ ಎನಿಸಿತು. ಈ ಕನಸುಗಳೆಲ್ಲ ಗರಿಗೆದರಿದ್ದು ಚಿತ್ತಯ್ಯನ ಒಪ್ಪಾರೆಯಲ್ಲಿದ್ದಾಗಲೇ. + +ಚಿತ್ತಣ್ಣನ ಮನೆಯಲ್ಲಿ ನಾನು ಒಂದು ವಾರವೇ ಇದ್ದುಬಿಟ್ಟೆ. ಅವನು ಯಾಕೆ ನನ್ನನ್ನು ಕರೆದುಕೊಂಡು ಹೋಗಿ ಮಡಗಿದ, ನಾನು ಯಾಕೆ ಹಾಗೆ ಅವನ ವಪ್ಪಾರೆಯಲ್ಲಿ ಒಂದು ವಾರ ಇದ್ದುಬಿಟ್ಟೆನೆಂದು ನನಗೆ ಗೊತ್ತೇ ಆಗಲಿಲ್ಲ. ಗತಿಯಿಲ್ಲದವರ ಮಕ್ಕಳು ಕಂಡವರ ಕಾಲು ಬುಡದಲ್ಲಿ! + +ವಾರವೆಲ್ಲ ಅವನೇ ಚಳ್ಳಕೆರೆಗೆ ಹೋಗುವಾಗ ಸ್ಕೂಲಿಗೆ ಬಿಟ್ಟು ಹೋಗುತ್ತಿದ್ದ. ತಿರುಗಿ ವಾಪಸು ದೊಡ್ಡೇರಿಗೇ ಕರೆದುಕೊಂಡು ಬರುತ್ತಿದ್ದ. “ಚಳ್ಳಕೆರೆಗೆ ಹೋಗಬೇಕಾದರೆ ಹೇಳು ಚಿತ್ರಿ ಕರಕಂಡೋಗಿ ಬಿಡ್ತನಿ” ಅನ್ನುತ್ತಿದ್ದ. ದಿನನಿತ್ಯ ರಿಕ್ಷಾದಲ್ಲಿ ಕೂತು ಸ್ಕೂಲಿಗೆ ಹೋಗುವುದೇ ನನಗೆ ಸಂಭ್ರಮವಾಗಿ ಕಂಡಿತು. + +ಚಿಕ್ಕಂದು ಅಪ್ಪನ ಗಾಡಿಯಲ್ಲಿ ಸುತ್ತುತ್ತಿದ್ದೆನಲ್ಲ, ಈಗ ರಿಕ್ಷಾದಲ್ಲಿ ಕೂತು ಅದೆಷ್ಟು ಸ್ಪೀಡಾಗಿ ಓಡುತ್ತಿರುವೆನೆನಿಸಿತು. ಹಾಗೆ ಚಿತ್ತಣ್ಣನು ನನ್ನನ್ನೂ ಅವನ ಹೆಂಡತಿ ಮಕ್ಕಳನ್ನೂ ಗುಡಿಗೆ ಕರೆದುಕೊಂಡು ಹೋಗುವಾಗ ನನಗೆ ಎತ್ತಿನಗಾಡಿಯ ಅಪ್ಪನಿಗಿಂತ ಬೀದಿಯಲ್ಲಿ ಮಂಡಾಳು, ಬೋಂಡಾ ಮರುವ ಅವ್ವನಿಗಿಂತ ಈ ಚಿತ್ತಣ್ಣನೇ ಭಾರಿ ಸಾಹುಕಾರ ಎನಿಸಿತು. ಎಲ್ಲರಿಗಿಂತ ದೊಡ್ಡವರೆಂದರೆ ಶಾಲೆಗೆ ಬೈಕಿನಲ್ಲಿ ಬರುವ ಪಾಲಯ್ಯ ಮೇಷ್ಟ್ರೇ ಎನಿಸಿ, ಅವರ ಬೈಕಿನ ಹಿಂದೆ ಅವರ ಹೆಂಡತಿ ಸಿರಿಯಕ್ಕನಂತೆ ಕೂತುಕೊಳ್ಳುವ ಭಾಗ್ಯ ನನಗೆ ಜೀವನದಲ್ಲಿ ದೊರಕುವುದಿಲ್ಲವೆನಿಸುತ್ತಿತ್ತು. + +ಚಿತ್ತಯ್ಯನ ಹಟ್ಟಿಯಲ್ಲಿರುವಾಗ್ಗೆ ಅವನ ಹೆಂಡತಿ ತಿಪ್ಪವ್ವ ಯಾವಾಗಲೂ ಅಲ್ಲೇ ಮರದಡಿಯಲ್ಲಿ ಕೂತಿರುತ್ತಿದ್ದ ಮುದುಕನಿಗೆ ಹೊತ್ತೊತ್ತಿಗೂ ಆರಕದ ಮುದ್ದೆ, ವುದಕ, ಅನ್ನ ನೀಡುತ್ತಿದ್ದಳು. ಆ ಮುದುಕ ನಾನಿದ್ದ ಐದಾರು ದಿನದಲ್ಲಿ ಒಂದು ದಿನವೂ ಮನೆಯ ಒಳಗೆ ಬಂದದ್ದಿಲ್ಲ. ತಿಪ್ಪವ್ವ ಅವನು ಕೂತಿದ್ದ ಮರದ ಬುಡದತ್ತಲೇ ಹೋಗಿ ಕೈ ತೊಳೆಸಿ ಅನ್ನ ಮುದ್ದೆ ಇಟ್ಟುಬರುತ್ತಿದ್ದಳು. ಅವನಿಗೆ ಮಂದಗಣ್ಣು ಇದ್ದಂತಿತ್ತು. ಮಲಗುವಲ್ಲಿ ಎದ್ದು ಗುಡಿಯ ಕಡೆ ತಡವಿಕೊಂಡು ಹೋಗುತ್ತಿದ್ದ. ಆ ಗುಡಿಯಲ್ಲಿ ಅವನು ರಾತ್ರಿಯೆಲ್ಲ ಸಣ್ಣದನಿಯಲ್ಲಿ ಹಾಡುತ್ತಿದ್ದ. ಕೇಳಿದರೆ ಆಕಾಶದತ್ತ ಕೈ ಮುಗಿಯುತ್ತ ಅವು ದೇವಮಾನವರ ಕಥೆಗಳು ಎನ್ನುತ್ತಿದ್ದ. + +ಒಂದು ದಿನ ತಿಪ್ಪವ್ವನನ್ನು ಮುದ್ದೆ ನೀಡುತ್ತಿದ್ದ ಮುದುಕ ಯಾರು ಎಂದು ಕೇಳಿದೆ. ಗೊತ್ತಿಲ್ಲ, “ನಾ ಲಗ್ನಾಗಿ ಬಂದು ಆರು ತಿಂಗ್ಳಾತು ನೋಡು. ಆವಜ್ಜ ಅಲ್ಲೇ ಇದ್ದ. ಈಗಲೂ ಅಲ್ಲೇ ಕುಂತ್ಕಂಡದೆ. ನಿಮ್ಮಣ್ಣ ಅವನ್ನ ಬಿಟ್ಟು ಉಂಬದೆಂಗೆ. ಆವಜ್ಜಂಗೂ ಒಂದೀಟು ಮುದ್ದೆ, ಆಮ್ರ ಕೊಡಲೇ ತಿಪ್ಪೀ ಅಂತಂತನೆ. ತಗೀ ಇನ್ನೇನು ಅದೂ ನಮ್ಮಟ್ಟೀದೆ ಅಂತ ಕೊಡ್ತನಿ ಎಂದಳು. ಹಾಗೆ ಒಂದೆರಡು ಬಾರಿ ನಾನೂ ಅಜ್ಜನಿಗೆ ಉಂಡಾದ ಮೇಲೆ ಕೈತೊಳೆಸಿ ಬಂದಿದ್ದೆ. + +ವಾರ ಕಾಲ ನಾನು ಉಳಿದ ಹಟ್ಟಿಯಲ್ಲಿ ಸಂತೆ, ಬಸ್‌ ಸ್ಟ್ಯಾಂಡು, ಬಸ್ಸು, ಕಾರಿನ ಧೂಳು, ಅಂಗಡಿ, ಮುಂಗಟ್ಟು, ಹಾದಿಬೀದಿ, ನಿಂತುಕುಂತು ಮಾತಾಡುವ ಮಂದಿ ಇರಲೇ ಇಲ್ಲ. ಬೆಳಗು, ಬೈಗಾದರೆ ಹಟ್ಟಿ ಹಿಂದುಮುಂದಿದ್ದ ತೋಪಿನಲ್ಲಿ ಹಕ್ಕಿಪಿಕ್ಕಿಗಳ ಕೂಗು. ಅದರ ಕೆಳಗೆ ಮಕ್ಕಳ ಆಟ. ಇನ್ನಷ್ಟು ದಿನ ಚಳ್ಳಕೆರೆಯ ಸ್ಟ್ಯಾಂಡು, ನನ್ನ ಕೇರಿ ನೆನಪಿಗೆ ಬಾರದಂತಾಗಿ ಆ ಹಟ್ಟಿಯಲ್ಲೇ ಮರದ ತೋಪಿನ ಕೆಳಗೆ ಕುಣಿದಾಡಬೇಕೆನಿಸುತ್ತಿತ್ತು. + +* * * *ಒಂದು ದಿನ ಬೆಳಿಗ್ಗೆ ದೊಡ್ಡೇರಿಯ ಚಿತ್ತಯ್ಯನ ಮನೆಯ ಮುಂದೆ ಬಂದು ನಿಂತ ಪೊಲೀಸರು ಚಿತ್ತಯ್ಯನನ್ನು ಹಿಡಿದು “ನಡಿಯಲೇ ಬದ್ಮಾಷ್ ಸ್ಟೇಷನ್ಗೆ ಎಂದರು. “ಯಾಕ್ ಸ್ವಾಮಿ ಏನಾತು ಎಂದರೆ “ಎಲ್ಲ ಸ್ಟೇಷನ್ಲಿ ಗೊತ್ತಾಯ್ತದೆ” ನಡಿ ಎಂದು ಜೀಪಿನಲ್ಲಿ ಏರಿಸಿಕೊಂಡು ಹೋದರು. ನಾನೂ ಇದ್ದೆ. ನಮ್ಮಪ್ಪ ಕೈಕಾಲ ಮೇಲೆ ಸ್ವಾಧೀನ ಕಳೆದುಕೊಂಡವನು, ಮನಸ್ಸಿನ ಮೇಲೂ ಹಿಡಿತ ತಪ್ಪಿ ಚಿತ್ತಯ್ಯನು ನನ್ನನ್ನು ಮನೆಗೆ ಕರೆದುಕೊಂಡು ಹೋಗಿದ್ದುದಕ್ಕೆ ಕಂಪ್ಲೇಂಟು ಕೊಟ್ಟುಬಿಟ್ಟಿದ್ದ. ಅವ್ವನೂ ಸ್ಟೇಷನ್ನಿನಲ್ಲಿ ಅಳುತ್ತ ಇನ್ನೂ ವಯಸ್ಸಿಗೆ ಬರದ ಕೂಸನ್ನು ರಿಕ್ಷಾದಲ್ಲಿ ಕೂರಿಸಿಕೊಂಡ ಹಲ್ಲಂಡೆ ಚಿತ್ತನು ಮನೆಗೆ ಕರೆದುಕೊಂಡು ಹೋಗಿ, ರೂಮಿಗೆ ಕೂಡಿಕೊಂಡಿರುವನೆಂದು ಹೇಳಿಬಿಟ್ಟಿದ್ದಳು. + +ಪೊಲೀಸರಿಗೆ ನನ್ನ ಮುಖ, ಬಣ್ಣ, ವಯಸ್ಸು ಮೀರಿದ ಮೈಕಟ್ಟು ನೋಡುತ್ತಾ ಚಿತ್ತಯ್ಯನು ಹೊತ್ತುಕೊಂಡು ಹೋಗಿರುವುದರಲ್ಲಿ ಯಾವ ಅನುಮಾನವೂ ಇಲ್ಲವೆಂದು ಖಚಿತಪಡಿಸಿಕೊಂಡರು. ಸ್ಟೇಷನ್ನಿನಲ್ಲಿ ಬೂಟುಗಾಲಲ್ಲಿ ಒದೆಯುವಾಗ “ಗತಿಯಿಲ್ಲದ ಬದ್ಮಾಷ್ ನಿಂಗೆ ಇಬ್ರೆಂಡ್ರು ಬೇಕಾ, ಅದೂ ವಯಸ್ಸಿಗೆ ಬರದ ಹುಡುಗಿ ಬೇಕಾ” ಅಂದು ಒಂದೊಂದು ಒದೆತಕ್ಕೆ ಒಂದೊಂದು ಬೈಗುಳ ಬೆರೆಸುತ್ತಿದ್ದರು. ಏಟಿನ ಮಧ್ಯೆ ನಾನು ಅಂಥದೇನೂ ಆಗಿಲ್ಲ ಅಂದರೆ ಅವರು ಅವನತ್ತ ತಿರುಗಿ “ಯಾವಾಗ ಲಗ್ನವಾಗಬೇಕು ಅಂತ ಮೂರ್ತ ಇಟ್ಕಂಡಿದ್ದೀಯಾ ಹಲಾಲ್‌ ಖೋರ್, ಬಾನ್‌ ಚೋತ್” ಎಂದು ಇನ್ನೂ ಜೋರಾಗಿ ಏಟು ಹಾಕುತ್ತ, “ಉಸಿರು ಬುಟ್ಟರೆ ನಿನ್ನ ಕತೆ ಖತಂ” ಎನ್ನುತ್ತಿದ್ದರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ನಾಳೆ ಭಾನುವಾರ ಕಳೆದು ಸೋಮವಾರ ಕೋರ್ಟಿಗೆ ಹಾಕುತ್ತೇವೆಂದು ನಮ್ಮಪ್ಪ ಅವ್ವನಿಗೆ ಹೇಳಿ ಅಲ್ಲೇ ಲಾಕಪ್ಪಿಗೆ ತಳ್ಳಿದರು. “ನಿಮ್ಮುಡುಗೀನ ಕರ್ಕೊಂಡೋಗ್ರಯ್ಯ” ಎನ್ನಲು ನಾನು ಹೋಗಿ ಲಾಕಪ್ಪಿನ ಸರಳನ್ನು ಭದ್ರವಾಗಿ ಹಿಡಿದುಕೊಂಡು ಕೂತೆ. ನಮ್ಮವ್ವ “ಅಗಳವ್ವಾ ನನ ಮಗಳ ಮೇಲೆ ಮಾಟಮಂತ್ರ ಮಾಡಸ್ಬುಟ್ಟವನಲ್ಲಪ್ಪಾ” ಎಂದು ತಿರುಗಿ ಬಾಯಿ ಬಡಿಯತೊಡಗಿದಳು. + +ಸರಳು ಹಿಡಿದುಕೊಂಡೇ ನಾನು ‘ನಂಗೆ ಯಾರೂ ಮಾಟ ಮಾಡ್ಸಿಲ್ಲ, ಚಿತ್ತಣ್ಣನ್ನ ಬುಡಿಸೀ’ ಅಂದರೆ ಅವ್ವ ಬಂದು ಕೆನ್ನೆಗೆ ಸರಿಯಾಗಿ ಬಾರಿಸಿ “ನಡಿಯಲೇ ಬೋಸುಡಿ ಮನೆಗೆ” ಎಂದಳು. ‘ನಾನು ಬರಲ್ಲ’ ಎಂದೆ. ಕೆನ್ನೆಯ ಮೇಲೆ ಬಿದ್ದ ಏಟಿಗಿಂತಲೂ ಬಲವಾದ ಹೊಡೆತ ಅವ್ವನ ಕೆನ್ನೆಗೆ ನನ್ನ ಮಾತಿನಿಂದ ಬಿದ್ದಂತಾಯಿತು. ನನ್ನ ಮಾತಿಗೆ ರೋಷವುಕ್ಕಿದ ಅಪ್ಪನೂ ಬಲಗೆನ್ನೆಗೆ ಬಾರಿಸಿ “ಬೀದಿಲಿ ಕುಂತಿರಾ ಅಪ್ಪ ಅವ್ವದೀರು ಯಾಕೆ, ಈ ರಿಕ್ಷಾ ತರುಬೋ ಮಿಂಡ್ಗಾರನೇ ಸಾಕು ಅಂತ ಮನೆ ಬಿಟ್ಟು ಓಡಿ ಬಂದಿದ್ದೀಯಾ ಮಿಂಡ್ರಿ” ಎಂದು ಅಪ್ಪ ಅವ್ವ ಇಬ್ಬರೂ ಸ್ಟೇಷನ್ ಬಿಟ್ಟು ಹೊರಟರು. ಹಾಗೆ ಹೋಗುವಲ್ಲಿ ಅವ್ವ ನನ್ನತ್ತ, “ನೀನು ಮನೆ ಕಡೆ ಮುಖ ಆಕಬೇಕಲ್ಲಾ ಆಗ ಇರದು ಮಾರಮ್ನಬ್ಬ…” ಅಂದು ಹೋದಳು.ನಾನು ಎಷ್ಟೋ ಹೊತ್ತು ಲಾಕಪ್ಪಿನ ಬಾಗಿಲ ಸರಳು ಹಿಡಿದು ಕೂತಿರಲು ಪೊಲೀಸರು ನನ್ನನ್ನು ಆಚೆ ಎಳೆದುಬಿಟ್ಟರು. ನನಗೆ ಎಲ್ಲಿಗೆ ಹೋಗಬೇಕೆಂದು ಗೊತ್ತಾಗಲಿಲ್ಲ. ತಿರುಗಿ ಚಿತ್ತಯ್ಯನ ಮನೆಗೆ ಹೋದರೆ ಇಷ್ಟು ಹೊತ್ತಿಗೆ ವಿಷಯವೆಲ್ಲ ಗೊತ್ತಾಗಿ ಅವನ ಹೆಂಡತಿ ನನ್ನ ತಲೆಯ ಮೇಲೆ ಕಲ್ಲು ಎತ್ತಿಹಾಕಿಬಿಡಬಹುದೆನಿಸಿತು. ಅವ್ವ ಅಪ್ಪನಲ್ಲಿಗೆ ಹೋದರೆ ತಿರುಗಿ ಏಟು ಬೀಳಬಹುದೆನಿಸಿತು. ಲಾಕಪ್ಪಿನಲ್ಲಿ ಬಿದ್ದಿದ್ದ ಚಿತ್ತಯ್ಯ “ಚಿತ್ರಿ ಇಲ್ಲಿ ನೀನು ಕೂತ್ಕಬ್ಯಾಡ. ಕತ್ಲಾದರೆ ಆಗಬಾರದ್ದು ಆಗಿ ಅದೂ ನನ ತೆಲಿ ಮೇಲೆ ಬತ್ತದೇ ನೋಡು ಎಂದ. ಅರ್ಥವಾಗದೇ ಇರುವಂಥದ್ದು ಏನೋ ಅಷ್ಟಿಷ್ಟು ಗೊತ್ತಾದಂತಾಗಿ ಎದ್ದು ನಾನು ಓದುತ್ತಿದ್ದ ಶಾಲೆಯತ್ತ ಬಂದೆ. ಅಲ್ಲಿಯ ಅಂಗಳದ ಮೂಲೆಯಲ್ಲಿ ಹಕ್ಕಿಪಿಕ್ಕಿಯವರು ಬೀಡು ಬಿಟ್ಟಿದ್ದರು. ರಾತ್ರಿಯೆಲ್ಲ ಅವರೊಂದಿಗೇ ಇದ್ದೆ. + +ಬೆಳಿಗ್ಗೆ ಎದ್ದರೆ ಹಕ್ಕಿಪಿಕ್ಕಿಯ ಹೆಂಗಸರೆಲ್ಲ ಗೂಡು ತೆರೆದು ಕೋಳಿಗಳನ್ನು ಈಚೆ ಬಿಟ್ಟಿದ್ದರು. ಅಲ್ಲಿಯೇ ಅಡ್ಡಾಡುತ್ತಿದ್ದ ಆಡು, ಕುರಿಯ ಬಳಿ ಅವುಗಳ ಮರಿಗಳು. ನಾನು ಕೋಳಿಪಿಳ್ಳೆಗಳ ಹಿಂದಿಂದೆ ಹೋದರೆ ಹುಂಜಗಳು ಅಟ್ಟಿಸಿ ಕೊಂಡುಬರುತ್ತಿದ್ದವು. ತಾಯಿ ಕೋಳಿಯು ಕಾಳು ಕಡ್ಡಿ, ಹುಳು ಹುಪ್ಪಟೆ ಕೆದಕುತ್ತ ಪಿಳ್ಳೆಗಳನ್ನು ಕರೆಯುವುದ ನಿಂತು ನೋಡುವಲ್ಲಿ ಬಿಡಾರದ ಯಜಮಾನ ಬಂದು ಊರುಕೇರಿಯ ಕೂಸೇ ನಿಂಗೊಂದು ಆಟ ತೋರಿಸಲಾ ಅಂದ.ಏನು ತೋರಿಸಬಹುದೆಂದು ಪ್ರಶ್ನೆಯ ಕಣ್ಣಲ್ಲೇ ನಿಂತೆ. ಅವನು ಸುಮ್ಮನೆ ಬಾಯನ್ನು ಕೈಯ್ಯಿಂದ ಮುಚ್ಚಿ ಹೆಂಟೆಯ ಸದ್ದು ಮಾಡಿದ. ಅಲ್ಲೆಲ್ಲೋ ಇದ್ದ ಹೆಣ್ಣು ಕೋಳಿ ಇತ್ತಲಿತ್ತಲೇ, ಇವನತ್ತಲೇ ಓಡಿ ಬಂದಿತು. ಮತ್ತೆ ಬಾಯಿ ಮರೆ ಮಾಡಿ ಗಂಡು ಗೀಜಗನಂತೆ ಸಿಳ್ಳೆ ಹಾಕಿದ. ಬಿಡಾರದಾಚೆ ಮೇಯುತ್ತಿದ್ದ ಹೆಣ್ಣು ಗೀಜಗ ಗಿಲಿಗಿಲಿ ಸದ್ದು ಮಾಡಿಬಂದುವು. ಅಲ್ಲೇ ಹರಡಿದ್ದ ಬಲೆಗೆ ಸಿಕ್ಕಿ ಒದ್ದಾಡಿ ಏನೂ ಕಾಣದೆ ಮುದುರಿ ಬೀಳುತ್ತಿದ್ದವು. ಅವನು ನಗುತ್ತಿದ್ದ. ನನಗೆ ಆಶ್ಚರ್ಯವೆನಿಸಲು ಯಜಮಾನನು ಈಗ ಹೋರಿಯ ಸದ್ದು ಹಾಕಲಾ ಎಂದು ಜೋರು ದನಿ ಮಾಡಿದ. ಬಿಡಾರದ ಸಾಮಾನು ಹೊತ್ತು ಇವರೊಂದಿಗೆ ಊರೂರು ತಿರುಗುತ್ತಿದ್ದ ಹಸು ನಿಂತಲ್ಲಿಯೇ ಸದ್ದು ಬಂದತ್ತ ಮುಖ ತಿರುಗಿಸಿ ಮೂಗು ಅರಳಿಸಿತು. ಆಮೇಲೊಂದು ಘಳಿಗೆ ಬಿಟ್ಟು ಕೂಸೇ ಬೇಕಾದರೆ ಹುಲಿಯನ್ನೂ ಬರಹೇಳುತ್ತೇನೆ, ನೋಡುತ್ತೀಯಾ ಅಂದ. ನಾನು ಭಯದ ಮುಖದಲ್ಲಿ ನಿಂತೆ. + +ಅಷ್ಟರಲ್ಲಿ ಬೆಳಗಿನ ಹೊತ್ತು ವಾಯು ವಿಹಾರಕ್ಕೆ ಬರುತ್ತಿದ್ದ ಪಾಲಯ್ಯ ಮೇಷ್ಟ್ರು ಎಲ್ಲಿದ್ದರೂ ಎದ್ದು ಕಾಣುತ್ತಿದ್ದ ನನ್ನ ಬಳಿ ಬಂದರು. “ಚಿತ್ರಿ ಈಟೊತ್ಗೆ ಬಂದು ಈ ಕೋಳಿಪಿಳ್ಳೆ ಹಿಂದೆ ತಡವ್ಯಾಡತ್ತಿದ್ದಿ, ನಿಂಗೆ ತೆಲೆ ಹೆಂಗೈತೆ” ಎಂದು ನನ್ನ ನೋಡಿದವರು ಅನುಮಾನದ ಮುಖ ಮಾಡಿಕೊಂಡರು. ಕೈಹಿಡಿದು ಬಲವಂತದಿಂದ ಅಂಬುವಂತೆ ಮನೆಗೆ ಕರೆದುಕೊಂಡು ಹೋದರು. “ನೀನು ಸಂತೆಗಿಂತೆ, ಬಸ್‌ಸ್ಟ್ಯಾಂಡು, ಈರುಳ್ಳಿ ಮೆಣಸಿನಕಾಯಿ ಅಂತ ಊರ ತುಂಬ ಅಡ್ಡಾಡಕಂತಿದ್ರೆ ಉದ್ಧಾರ ಆಗಂಗಿಲ್ಲ ನೋಡು” ಎಂದರು. + + + +ಅವರ ಮನೆಯಲ್ಲೇ ಬೆಳಗ್ಗೆ ತಿಂಡಿ ತಿಂದ ಮೇಲೆ ಮೇಷ್ಟ್ರು “ಮನೆಗೋಗಿ ಪುಸ್ತಕದ ಬ್ಯಾಗು ತಗಂಬಾ” ಎನ್ನಲು “ನಾನು ಮನೆಗೋಗಲ್ಲ. ಊರಾಚೆ ಕಪಿಲೆ ಬಾವಿಗೆ ಹೋಗಿ ಬಿದ್ಕಂತೀನಿ” ಎಂದೆ. ಹಾಗೆಂದು ಪಾಲಯ್ಯ ಮೇಷ್ಟ್ರು ಮನೆಯಲ್ಲೇ ಉಳಿದೆ. ಹಿಂದುಮುಂದಿನ ಅರಿವಿಲ್ಲದ ನಾನು ಸೀದ ಅವರ ಮನೆಯಿಂದಲೇ ಹೋಗಿ ಬಾವಿಗೆ ಬಿದ್ದರೆ ಒಂದು ಹೋಗಿ ಇನ್ನೊಂದು ಕಥೆಯಾಗುವುದೆಂದು ನನ್ನನ್ನು ಬೈಕಿನಲ್ಲಿ ಕೂರಿಸಿ ಶಾಲೆಗೆ ಕರೆದುಕೊಂಡು ಹೋದರು. ಮನೆಯಿಂದ ಪುಸ್ತಕ, ಬ್ಯಾಗು ಅವರೇ ತಂದರು. + +(‘ಸಿದ್ಧಿಯ ಕೈ ಚಂದ್ರನತ್ತ’: ಡಾ ಕೃಷ್ಣಮೂರ್ತಿ ಹನೂರರ ಕಾದಂಬರಿ ಸದ್ಯದಲ್ಲೇ ಮೈಸೂರಿನ ಅಭಿರುಚಿ ಪ್ರಕಾಶನದಿಂದ ಹೊರಬರಲಿದೆ) + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_451.txt b/Kenda Sampige/article_451.txt new file mode 100644 index 0000000000000000000000000000000000000000..fdaa6cdf3997c787a46bbb93733be88119fdb56d --- /dev/null +++ b/Kenda Sampige/article_451.txt @@ -0,0 +1,39 @@ + + +ವಿಟ್ಲದ ತುಂಡರಸನಿಗೆ ಭೇಟಿಗೆ ಬರಬೇಕೆಂದು ಸವಾರರಿಬ್ಬರೊಡನೆ ಕಲ್ಯಾಣಸ್ವಾಮಿ ಕರೆಯೋಲೆ ಕಳುಹಿದ…ಕಪ್ಪ ಕಾಣಿಕೆಗಳೊಡನೆ ಧಾವಿಸಿ ಬಂದ ಆ ಅರಸನನ್ನು ಉದ್ದೇಶಿಸಿ ರಾಜ್ಯಪಾಲನೆಂದ :“ನಾವು ಹೇಳಿಕಳಿಸೋವರೆಗೂ ಬರಬಾರದು ಅಂತ ಮಾಡಿದ್ದಿರೋ?”ಮಾತಿಗಾಗಿ ತಡವರಿಸಿದ ವಿಟ್ಲದ ಅರಸು.“ತಮ್ಮ ಮನೋಧರ್ಮ ತಿಳಿಯದೆ ಸಂಕೋಚವಾಯ್ತು.”“ಈಗ ನಮ್ಮ ಮನೋಧರ್ಮ ತಿಳೀತೇನು? ನಮ್ಮ ಧ್ಯೇಯ ಏನೂಂತ ಅರ್ಥಮಾಡಿಕೊಂಡಿರೋ?”“ಹೌದು”“ಕುಂಪಣಿಯವರನ್ನು ಏನು ಮಾಡೋಣ?”“ಯುದ್ಧವೇ ಸರಿ. ನಮ್ಮಲ್ಲಿ ಶಕ್ತಿ ಸಾಲದೆ ಈವರೆಗೂ ಸುಮ್ಮನಿದ್ದೆವು.”“ನಮ್ಮ ಜತೆ ಬರುತ್ತೀರೇನು ಹಾಗಾದರೆ?”ಉತ್ತರ ನಿಧಾನವಾಯಿತು. + +“ನನಗೆ ವಯಸ್ಸಾಯ್ತು…”“ಈ ಯುವಕರನ್ನು ನೋಡಿದೀರೇನು?” ಎಂದ ಕಲ್ಯಾಣಸ್ವಾಮಿ. ವೃದ್ಧ ಸೋಮಯ್ಯನೆಡೆಗೆ ಬೊಟ್ಟು ಮಾಡುತ್ತ, ನಸುನಕ್ಕು.ತನಗಿಂತಲೂ ಹಿರಿಯನಾಗಿದ್ದ ಸೋಮಯ್ಯನನ್ನು ಕಂಡು ವಿಟ್ಲದ ಅರಸನ ಮುಖ ಕಪ್ಪಿಟ್ಟಿತು. ವೃಥಾ ಮಾತು ಬೆಳೆಸುವುದರಲ್ಲಿ ಅರ್ಥವಿಲ್ಲವೆಂದು, ಕಲ್ಯಾಣಸ್ವಾಮಿ ಹೇಳಿದ:“ಹೋಗಲಿ ಬಿಡಿ. ವಿಟ್ಲದಿಂದ ಆಯುಧ ಸಮೇತರಾಗಿ ಯೋಧರನ್ನು ಕಳಿಸ್ಕೊಡಿ.”ಬದುಕಿದೆನೆಂದು ಸರಾಗವಾಗಿ ಉಸಿರು ಬಿಡುತ್ತ ಆ ತುಂಡರಸನೆಂದ:“ತಮ್ಮ ದಂಡನ್ನು ಸೇರಬೇಕೂಂತ ಜನರು ಆಗಲೆ ಮಾತಾಡ್ತಾ ಇದ್ದರು.”“ಹಾಗೋ? ಒಳ್ಳೇದು. ನೀವು ಕೊಡಗು ರಾಜರ ಸ್ನೇಹಿತರೆಂತಲೇ ಭಾವಿಸ್ತೀನಿ. ಕಡಮೆಯೆಂದರೆ ನೂರು ಜನ ಸೈನಿಕರಾದರೂ ವಿಟ್ಲದಿಂದ ಬರಬೇಕು.”“ನೂರೈವತ್ತು ಜನರನ್ನು ಕಳಿಸ್ತೇನೆ.”ಸಾಯುವವರು ಬೇರೆಯವರ ಮಕ್ಕಳೆಂದಾದರೆ ನೂರೈವತ್ತೇನು, ಇನ್ನೂರೇನು – ಎಂದು ಮನಸಿನೊಳಗೇ ನಗುತ್ತ, ಕಲ್ಯಾಣಸ್ವಾಮಿ ಹೇಳಿದ:“ಆಗಲಿ, ಇವತ್ತು ನಮ್ಮಲ್ಲೇ ನೀವು ಆತಿಥ್ಯ ಸ್ವೀಕರಿಸ್ಬೇಕು.”ಅರಸು ಪುನಃ ಹಿಂದುಮುಂದು ನೋಡಿದ:“ಕ್ಷಮಿಸಬೇಕು. ನಾವು-ತಾವು-”“ನಿಮಗೆ ತೊಂದರೆಯಾಗುವ ಹಾಗಿದ್ದರೆ ಬೇಡ. ಬನ್ನಿ. ಶಿಬಿರವನ್ನು ನೋಡಿ ಊರಿಗೆ ಹೋಗುವಿರಂತೆ.” + +…. ಹಗಲು ಪತ್ತೆಹಚ್ಚಿದ್ದ ಅರ್ಥಧಾರಿಗಳನ್ನು ಸೈನಿಕರು ಕರೆದುತಂದು, ರಾತ್ರೆ ಶಿಬಿರದಲ್ಲಿ ಯಕ್ಷಗಾನ ಕೂಟವೇರ್ಪಡಿಸಿದರು. ಯಕ್ಷಗಾನ ಪ್ರಿಯನಾಗಿದ್ದ ರಾಮಗೌಡನೇ ಆ ಕೂಟದ ಮೇಲ್ವಿಚಾರಣೆಯನ್ನು ನೋಡಿದ. ಮೆದುಳು ಮುಂದಿನ ಯೋಜನೆಯಲ್ಲೆ ನಿರತವಾಗಿದ್ದರೂ ಸೈನಿಕರ ಜತೆ ಕಲ್ಯಾಣಸ್ವಾಮಿಯೂ ಬಂದು ಕುಳಿತು ಅರ್ಥಧಾರಿಗಳ ವಾಗ್ಯುದ್ಧದ ಸುಖ ಅನುಭವಿಸಿದ. + +ಕೂಟ ನಡೆಯುತ್ತಿದ್ದಂತೆ ಕಾವಲುಗಾರನೊಬ್ಬ ಬಂದು ರಾಮಗೌಡ ಕಿವಿಯಲ್ಲಿ ಪಿಸುನುಡಿದ :“ಯಾವನೋ ಒಬ್ಬ ಸವಾರ ಬಂದವನೆ. ಸ್ವಾಮಿಯವರನ್ನು ತಕ್ಷಣ ಕಾಣ್ಬೇಕಂತೆ.”ಎದ್ದು ಹೋದ ರಾಮಗೌಡ, ಕೆಲ ನಿಮಿಷಗಳಲ್ಲೆ ಮರಳಿ ಬಂದು ಕಲ್ಯಾಣಸ್ವಾಮಿಯನ್ನು ಕರೆದೊಯ್ದ.ಬಂದಿದ್ದ ಸವಾರ, ಸುಬ್ರಾಯ ಹೆಗ್ಗಡೆಯ ದೂತ. + +ಸವಾರನಿಗೆ ಕೇಳಿಸದಂತೆ ರಾಮಗೌಡನೊಡನೆ ಪಿಸುಧ್ವನಿಯಲ್ಲಿ ಕಲ್ಯಾಣಸ್ವಾಮಿ ವಿಚಾರಿಸಿದ :“ಯಾರು ಈ ಹೆಗ್ಗಡೆ!”“ಹೆಗ್ಗಡೆ? ಓ ತಿಳಿಯಿತು! ಕುಂಬಳೆಯ ಸಮೀಪ ಉತ್ತರಕ್ಕೆ ತೆಂಕುಂಬಳೆ ಅಂತ ಒಂದು ಗ್ರಾಮ ಇದೆ. ಅದರ ಪಾಳೆಯಗಾರ ಸುಬ್ರಾಯ ಹೆಗ್ಗಡೆ. ಹೆಸರು ಕೇಳಿದ್ದು ನೆನಪಿದೆ.”“ಪಾಳೆಯಗಾರ ಅಂದಿರಾ?”“ಹೂಂ. ವಿಜಯನಗರದ ಅರಸರು ಕೋಟೆಗಳ ರಕ್ಷಣೆಗೇಂತ ಇವರ ಹಿಂದಿನವರನ್ನು ಇಲ್ಲಿಗೆ ಕಳಿಸಿದರಂತೆ. ಇವರೆಲ್ಲಾ ಕೋಟೆಯವರು – ರಾಜಕ್ಷತ್ರಿಯ ವಂಶದವರು.”“ವೀರರು ತಾನೆ?”“ಹೌದು.”ಕಲ್ಯಾಣಸ್ವಾಮಿ ಓಲೆಯನ್ನು ರಾಮಗೌಡನ ಕೈಗಿತ್ತ. + +“ಓದಿ ನೋಡಿ. ತಾನು ಕುಂಪಣಿಯವರ ವಿರೋಧಿ ಅಂತಲೂ ತನ್ನ ದಂಡಿನೊಡನೆ ಮಂಜೇಶ್ವರದ ಹಾದಿಯಾಗಿ ನಮ್ಮನ್ನು ಸೇರ್ಕೊಳ್ತೇನೆ ಅಂತಲೂ ಬರೆದಿದ್ದಾನೆ. ಇವನ ಉದ್ದೇಶ ಏನಿದ್ದೀತು?”ರಾಮಗೌಡ ಓಲೆಯನ್ನು ಓದಿದ. ಹುಬ್ಬುಗಂಟಿಕ್ಕಿದ. ಸಡಿಲಿಸಿದ. ದೂರದಲ್ಲಿ ನಿಂತಿದ್ದ ದೂತನ ಕಡೆಗೊಮ್ಮೆ ನೋಡಿ, ತನ್ನ ಅಭಿಪ್ರಾಯವನ್ನಿತ್ತ.“ಇಂಥದೇ ಉದ್ದೇಶ ಅಂತ ಹೇಳೋದು ಕಠಿಣ. ಆದರೆ ಸಹಾಯ ಮಾತ್ರ ನಮಗೆ ಬೇಕೇ ಬೇಕು. ತಾನಾಗಿ ಬರ್ತೇನೆ ಅಂದವನನ್ನು ಬಿಡೋದೆ?”“ಅದು ನಿಜ. ಸ್ನೇಹಿತ ಅಂತಲೇ ಆತನನ್ನು ಸ್ವೀಕರಿಸೋಣ. ಆದರೆ ನಮ್ಮ ಹೆಸರಲ್ಲಿ ಕೊಲೆ ಸುಲಿಗೆ ಆಗಬಾರದು, ಅವನಿಗೆ ಉತ್ತರ ಬರೆಯೋಣ. ನಾವು ಶರತ ಹಾಕಿದ್ದೇವೆ ಅಂತ ಆತ ಭಾವಿಸಬಾರದು; ಉಪದೇಶ ಅಂತಲೂ ತಿಳೀಬಾರದು. ಹಾಗೆ ಸೂಚ್ಯವಾಗಿರ್ಬೇಕು ಒಕ್ಕಣೆ.”“ಸರಿ”“ನಂಜಯ್ಯನವರನ್ನು ಕರೀರಿ ಹಾಗಾದರೆ.” + +….ಬಂದಿದ್ದ ದೂತ ಶಿಬಿರದ ಭೋಜನ ಶಾಲೆಯಲ್ಲಿ ಊಟ ಮಾಡಿದ. ಕಲ್ಯಾಣಸ್ವಾಮಿಯ ಸೈನಿಕರೊಡನೆ ಬೆರೆತ. ಯಕ್ಷಗಾನ ನಡೆಯುತ್ತಿದ್ದ ಕಡೆ ಕುಳಿತು ತೂಕಡಿಸಿದ. ಪ್ರಯಾಣದಿಂದ ಬಳಲಿದ್ದ ಆ ಮನುಷ್ಯ ತನ್ನ ಕುದುರೆಯನ್ನು ಕಟ್ಟಿಹಾಕಿದ್ದ ಕಡೆಗೊಮ್ಮೆ ದೃಷ್ಟಿ ಬೀರಿ, ಬಯಲಲ್ಲೇ ನಿದ್ದೆ ಹೋದ. + +ಬೆಳಗಿನ ಜಾವ ಕೊಂಬು ವಾದ್ಯ ಇತರ ಸೈನಿಕರೊಡನೆ ಆತನನ್ನೂ ಎಬ್ಬಿಸಿತು, ದಂಡನಾಯಕದ್ವಯರ ನೇತೃತ್ವದಲ್ಲಿ ಕವಾಯಿತು ನಡೆದುದನ್ನು ಆತ ನೋಡಿದ. ಬಳಿಕ, ದಳಪತಿಗಳಾದ ಕುಡಿಯ ಸೋದರರ ಜತೆಯಲ್ಲಿ ಉಪಾಹಾರ ಸ್ವೀಕರಿಸಿ, ‘ವೀರದಳಪತಿ ಸುಬ್ರಾಯ ಹೆಗ್ಗಡೆ’ಯವರಿಗೆಂದು ರಾಜ್ಯಪಾಲ ಕಲ್ಯಾಣಸ್ವಾಮಿ ಬರೆದುಕೊಟ್ಟ ಉತ್ತರದೊಡನೆ ಆ ದೂತ ತೆಂಕುಂಬಳೆಯ ಕಡೆಗೆ ಸಾಗಿದ. + +….ಪುತ್ತೂರಿನಲ್ಲಿ ಮತ್ತೂ ಒಂದು ದಿನ ಇದ್ದರೆ ಸಾಕೆಂಬುದು ಸೇನಾಧಿಕಾರಿಗಳ ಅಭಿಪ್ರಾಯವಾಗಿತ್ತು. + +ಅದನ್ನು ಬಲಪಡಿಸುವಂತೆ ನಡೆಯಿತೊಂದು ಘಟನೆ. ಊರಿನ ಒಂದು ಮೂಲೆಯಿಂದ ಕೆಲವರು ಬಂದು, ಕಲ್ಯಾಣಸ್ವಾಮಿಯ ಎದುರು ಕಿವಿಯೊಡೆಯುವಂತೆ ಆರ್ತನಾದ ಮಾಡಿದರು. ತಿರುತಿರುಗಿ ಅಭಯದ ಆಶ್ವಾಸನೆಯನ್ನು ಕೊಟ್ಟ ಬಳಿಕವಷ್ಟೇ ಅವರು ಬಾಯಿ ತೆರೆದುದು. + +ನಡೆದುದಿಷ್ಟೆ. ಕಲ್ಯಾಣಪ್ಪನ ದಂಡಿನವರೆಂದು ಹೇಳಿ ಕೆಲವರು ಮನೆಗಳಿಗೆ ನುಗ್ಗಿ ಲೂಟಿ ಮಾಡಿದ್ದರು. ಸ್ತ್ರೀಯರ ಕಿವಿ ಮೂಗು ಕತ್ತುಗಳಲ್ಲಿದ್ದ ಆಭರಣಗಳನ್ನು ಅಪಹರಿಸಿದ್ದರು.ಕನಲಿದ ರುದ್ರನಾದ ಕಲ್ಯಾಣಸ್ವಾಮಿ. ಆತ ಆಜ್ಞಾಪಿಸಿದ: + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +“ದಂಡನಾಯಕರೆ, ಈಗಿಂದೀಗ ಶಿಬಿರದಲ್ಲಿ ತನಿಖೆ ನಡಸಿ! ಅಪರಾಧಿಗಳ ಪತ್ತೆಯಾಗಲಿ!”ಅವರನ್ನು ಗುರುತು ಹಿಡಿಯಲೆಂದು ದೌರ್ಜನ್ಯಕ್ಕೆ ತುತ್ತಾಗಿದ್ದವರ ಮನೆಗಳ ಜನರೇ ಬಂದರು. ಕೊಂಬಿನ ಕರೆಗೆ ಓಗೊಟ್ಟು ಸೈನಿಕರೆಲ್ಲ ಶಿಬಿರಕ್ಕೆ ಧಾವಿಸಿದರು. ಆದರೆ, ಕಳುವಿನ ವಸ್ತು ಒಡವೆ ಶಿಬಿರದಲ್ಲಿರಲಿಲ್ಲ. ಒಂದೂವರೆ ಸಾವಿರಕ್ಕೂ ಮಿಕ್ಕಿದ ಸಂಖ್ಯೆಯ ಆ ಸೈನಿಕ ವೃಂದದಲ್ಲಿ, ದೌರ್ಜನ್ಯವೆಸಗಿದವರು ಪತ್ತೆಯಾಗಲಿಲ್ಲ. + +“ಇದು ಸುಳ್ಳು ಆರೋಪ!” ಎಂದ ಕರಿಯಪ್ಪ ಕಿಡಿಕಿಡಿಯಾಗಿ.ಆದರೆ ಗೋಳಾಡುತ್ತಿದ್ದವರ ಪ್ರಾಮಾಣಿಕತೆಯನ್ನು ಶಂಕಿಸಲು ಇತರರು ಇಷ್ಟಪಡಲಿಲ್ಲ.ಸೋಮಯ್ಯನೆಂದ:“ಇದ್ದೀತು ಬಿಡಪ್ಪ, ಊರಿದ್ದಲ್ಲಿ ಹೊಲಗೇರಿ.”ಕಲ್ಯಾಣಸ್ವಾಮಿ ಇದರಿಂದ ಬಲು ನೊಂದು ಹೇಳಿದ:“ಆ ಪಾಪಿಗಳು ಸಿಕ್ಕರೆ ಕಡಾಯಿಯಲ್ಲಿ ಎಣ್ಣೆ ಕುದಿಸಿ ಅದ್ದಬೇಕು ರಾಮಗೌಡರೆ!… ಈಗ ಈ ಜನರಿಗೆಲ್ಲಾ ತಲಾ ಐವತ್ತು ವರಹ ಕೊಡುವಂತೆ ಅಣ್ಣಿಗೌಡರಿಗೆ ತಿಳಿಸಿ.”ಆ ವಿಚಾರಣೆ, ರಾಜ್ಯಪಾಲ ಪರಿಹಾರದ್ರವ್ಯವನ್ನಿತ್ತುದು, ಊರವರ ದೃಷ್ಟಿಯಲ್ಲಿ ಬಂಡಾಯಗಾರರ ದಂಡಿನ ಬೆಲೆ ಹೆಚ್ಚುವಂತೆ ಮಾಡಿದುವು. + +ಜನ ಬೀದಿಯಲ್ಲಿ ಆಡಿಕೊಂಡರು:“ಕಲ್ಯಾಣಸ್ವಾಮಿ ಧರ್ಮಿಷ್ಠ! ದುಷ್ಟ ಶಿಕ್ಷಕ-ಶಿಷ್ಟ ರಕ್ಷಕ!”ಆದರೆ, ಹಲವು ಶತಮಾನಗಳವರೆಗೆ ತಿಂದು ಉಂಡರೂ ಮಿಗುವ ಸಿರಿವಂತಿಕೆಯಿದ್ದ ಕೆಲವರು ಮಾತ್ರ ಮುಚ್ಚಿದ ಬಾಗಿಲುಗಳ ಹಿಂದಿನಿಂದ ಗೊಣಗಿದರು:“ಶುರುವಾಯಿತು ಕಾಟಕಾಯಿ. ಕುಂಪಣಿ ಸರಕಾರವೇ ಇದ್ದಿದ್ದರೆ ವಾಸಿಯಾಗಿತ್ತು.”….ಆ ರಾತ್ರೆ ಕಳೆದು ಬೆಳಗಾದ ಬಳಿಕ ದೀವಟಿಗೆಯ, ‘ಕೊತ್ತಳಿಗೆ ಭಟರ’, ದಂಡು ಮುಂದಕ್ಕೆ ಹೊರಟಿತು. ಇಬ್ಬಿಬ್ಬರಂತೆ ಸಾಲುಗಟ್ಟಿದ್ದರೂ ಬಲು ದೀರ್ಘವಾಗಿದ್ದ ಸೇನೆ. ಕುದುರೆಗಳಲ್ಲದೆ, ಬೊಕ್ಕಸವನ್ನೂ ಸಾಮಗ್ರಿಗಳನ್ನೂ ಹೊತ್ತಿದ್ದ ಹೋರಿಗಳು ಬೇರೆ. ಜತೆಯಲ್ಲೆ, ಕೈದಿಗಳಾಗಿದ್ದ ದೇವಪ್ಪಯ್ಯ ಮತ್ತಿಬ್ಬರು ಸಿಪಾಯಿಗಳು. ಉತ್ಸಾಹಕ್ಕಂತೂ ಯಾವ ಅಭಾವವೂ ಇರಲಿಲ್ಲ.“ಹ್ಯಾಗಿದೆ ನದಿ?” ಎಂದು ಕಲ್ಯಾಣಸ್ವಾಮಿ, ರಾಮಗೌಡನತ್ತ ನೋಡಿ ಕೇಳಿದ.ದಂಡನಾಯಕ ಗೌಡನ ಮುಖದಲ್ಲಿ ಗೆಲುವಿತ್ತು. + +“ತಕ್ಕಮಟ್ಟಿಗಿದೆ. ಇನ್ನೂ ಸಾಲದು. ಪಾಣೆಮೊಗರು-ನಂದಾವರ ದಾಟೋಣ, ಆಮೇಲೆ ಹೇಳ್ತೀನಿ.”ಪಾಣೆಮೊಗರಿನ ಸಂತೆಕಟ್ಟೆಯ ಮೈದಾನದಲ್ಲಿ ಯುಗಾದಿಯ ದಿನ ದಂಡು ಬೀಡುಬಿಟ್ಟಿತು.“ಸುಳ್ಯದಿಂದ ಇವತ್ತು ಹೊರಡಬೇಕೂಂತ ಗೊತ್ತಾಗಿದ್ದ ದಿನ” ಎಂದ ರಾಮಗೌಡ, ಕಲ್ಯಾಣಸ್ವಾಮಿಯೊಡನೆ.ನೆನಪಿದೆ ಎಂಬಂತೆ ಕಲ್ಯಾಣಸ್ವಾಮಿ ನಸುನಕ್ಕ.……..ಊರವರ ನೆರವು ಅಲ್ಲಿಯೂ ಕಡಿಮೆಯಾಗಲಿಲ್ಲ.… ಹಬ್ಬದ ಊಟದ ಹೊತ್ತಿಗೆ ಶಿಬಿರದ ಕಾವಲಿನವರು ದಂಡನಾಯಕರೊಡನೆ ಬಂದು ಕಾತರದ ಧ್ವನಿಯಲ್ಲಿ ಸುದ್ದಿ ಮುಟ್ಟಿಸಿದರು:“ಯಾವುದೋ ಕಾಲಾಳು ದಂಡು ಬರೋದು ಕಾಣಿಸ್ತಿದೆ.”ರಾಮಗೌಡ ಹುಬ್ಬು ಗಂಟಿಕ್ಕಿದ. + +“ದಂಡು?”“ಹೂಂ. ಪುತ್ತೂರಿನ ಕಡೆಯಿಂದ.”“ಪುತ್ತೂರಿನ ಕಡೆಯಿಂದ?”ಅದು ಸಾಧ್ಯವೇ ಇರಲಿಲ್ಲ. ಆದರೂ ರಾಮಗೌಡ ಆಜ್ಞಾಪಿಸಿದ:“ಕೊಂಬು ಊದಿ! ಸೈನಿಕರು ಸಿದ್ಧರಾಗಿ!”ಊಟಕ್ಕೆಂದು ಹೊರಟವರು ಹೋರಾಟಕ್ಕೆಂದು ಸೊಂಟ ಬಿಗಿದರು.ನಂಜಯ್ಯನೆಡೆಗೆ ತಿರುಗಿ ಕಲ್ಯಾಣಸ್ವಾಮಿ ಹೇಳಿದ:“ನಮ್ಮನ್ನು ಸೇರೋದಕ್ಕೆ ಕೊಡಗಿನಿಂದ ಜನ ಬರ್ತಿರಬಹುದು ಅಂತೀನಿ.”“ಇರಬೌದು, ನೋಡಾನ” ಎಂದ ನಂಜಯ್ಯ.ಕಲ್ಯಾಣಸ್ವಾಮಿಯ ಊಹೆ ಸರಿಯಾಗಿತ್ತು. ಬಂದಿದ್ದವರು ಘಟ್ಟದ ಕೆಳಗಿನ ಚೆಂಬು, ಪೆರಾಜೆಗಳ ರೈತ ಯೋಧರು. ಜತೆಯಲ್ಲೆ, ವೀರರಾಜಪೇಟೆ ನಾಡಿನ ಪಾಡಿ ನಾಲ್ಕುನಾಡಿನ ಕದನ ಕಲಿಗಳು.ಕಲ್ಯಾಣಸ್ವಾಮಿಯೆಂದ:“ಇನ್ನೊಂದು ಉಪನದಿ ಗೌಡರೆ!” + +(ನಿರಂಜನರ ‘ಕಲ್ಯಾಣಸ್ವಾಮಿ’ ಕಾದಂಬರಿಯ ಆಯ್ದ ಪುಟಗಳು. 1956) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_452.txt b/Kenda Sampige/article_452.txt new file mode 100644 index 0000000000000000000000000000000000000000..2a1c8edd5cb215cb0b3e0978ea1f748607e49948 --- /dev/null +++ b/Kenda Sampige/article_452.txt @@ -0,0 +1,233 @@ +ಮಾಂಟೋ + + + +ದಣಿವಿನ ದಿನವೊಂದು ಮುಗಿದ ನಂತರ ಹಾಸಿಗೆಯ ಮೇಲೆ ಬಿದ್ದುಕೊಂಡ ಕೂಡಲೇ ಅವಳು ನಿದ್ರೆಗೆ ಜಾರಿದಳು. ಅವಳು ‘ಬಾಸ್’ ಎಂದು ಕರೆಯುತ್ತಿದ್ದ ನೈರ್ಮಲ್ಯ ವಿಭಾಗದ ಸರಕಾರಿ ಅಧಿಕಾರಿಯೊಬ್ಬ ಆಗ ತಾನೇ ಅವಳೊಡನೆ ಸಂಭೋಗ ಮುಗಿಸಿ, ಕುಡಿದ ಅಮಲಿನಲ್ಲಿಯೇ ಮನೆಯ ಕಡೆಗೆ ಹೊರಟಿದ್ದ. ಅವನನ್ನು ತುಂಬ ಪ್ರೀತಿಸುವ ಅವನ ಕಾನೂನುಬದ್ಧ ಹೆಂಡತಿಯ ಪ್ರೇಮದ ಮೇಲಿನ ಅತೀವ ಕಾಳಜಿಯಿಂದ ತಾನು ಮನೆಗೆ ಹೊರಡಲೇಬೇಕೆಂದು ಹೊರಟಿದ್ದ. ಹಾಗಿಲ್ಲದಿದ್ದರೆ ಆ ರಾತ್ರಿ ಅವನು ಅಲ್ಲಿಯೇ ಉಳಿಯಲೂಬಹುದಿತ್ತು ಕೂಡಾ. + +ಆ ಅಧಿಕಾರಿಗೆ ದೇಹ ಸುಖ ಕೊಟ್ಟಿದ್ದರ ಲೆಕ್ಕ ಚುಕ್ತಾ ಮಾಡಲು ಅವನು ಕೊಟ್ಟಿದ್ದ ದುಡ್ಡು ಎಂಜಲಿನಿಂದ ಒದ್ದೆಯಾಗಿದ್ದ ಅವಳ ಬಿಗಿಯಾದ ಬ್ರಾದಿಂದ ಹೊರ ಜಾರಲು ಹವಣಿಸುತ್ತಿತ್ತು. ಅವಳ ಉಸಿರಾಟದ ಲಯಕ್ಕನುಗುಣವಾಗಿ ಆ ನಾಣ್ಯಗಳು ಒಂದರೊಡನೊಂದು ಸೇರಿ ಮಾಡುವ ಸದ್ದು ಅವಳ ಹೃದಯದ ಅನಿಯಮಿತ ಬಡಿತದೊಡನೆ ವಿಲೀನವಾಗುತ್ತಿತ್ತು. ನಿಜಕ್ಕೂ ಹೇಳಬೇಕೆಂದರೆ ಆ ನಾಣ್ಯಗಳು ಕರಗಿ ಅವಳ ರಕ್ತದೊಡನೆ ಬೆರೆಯುತ್ತಿವೆಯೇನೋ ಎನ್ನಿಸುವಂತೆ ಭಾಸವಾಗುತ್ತಿತ್ತು! ಆ ಅಧಿಕಾರಿ ಬರುವಾಗ ತಂದಿದ್ದ ಬ್ರ್ಯಾಂಡಿಯ ಸಣ್ಣ ಬಾಟಲ್ ಮತ್ತು ಸೋಡಾ ಖಾಲಿಯಾದ ನಂತರ ನೀರಿನ ಜೊತೆ ಕುಡಿದ ಬಿಯೋರಾ ಎರಡೂ ಸೇರಿ ಅವಳ ಎದೆಯ ತುಂಬ ಕಾವು ಹರಡುತ್ತಿತ್ತು. + +ಅವಳು ತನ್ನ ವಿಶಾಲವಾದ ತೇಗದ ಮರದ ಮಂಚದಲ್ಲಿ ಮುಖ ದಿಂಬಿಗಾನಿಸಿ ಮಲಗಿದ್ದಳು. ತೋಳುಗಳವರೆಗೂ ಬಟ್ಟೆಯಿಲ್ಲದೇ ಬೆತ್ತಲಾಗಿದ್ದ ಅವಳ ಕೈಗಳು, ಗಾಳಿಪಟದ ಬಿದಿರು ಕಮಾನಿನಂತೆ ಹರಡಿದ್ದವು. ಅವಳ ಸುಕ್ಕುಗಟ್ಟಿದ ಬಲ ಕಂಕುಳು ಪದೇ ಪದೇ ಶೇವ್ ಮಾಡುವುದರಿಂದ ನೀಲಿಗಟ್ಟಿತ್ತು. ಅದು ರೆಕ್ಕೆಪುಕ್ಕ ತರಿದ ಕೋಳಿಯ ಚರ್ಮವನ್ನು ಅವಳಿಗೆ ಕಸಿ ಮಾಡಿದ್ದಾರೇನೋ ಎನ್ನಿಸುವ ಹಾಗೆ ಕಾಣುತ್ತಿತ್ತು. + +ಅವಳ ಸಣ್ಣ ಮತ್ತು ಅಸ್ತವ್ಯಸ್ತಗೊಂಡ ರೂಮಿನ ತುಂಬ ವಸ್ತುಗಳು ಎಲ್ಲೆಂದರಲ್ಲಿ ಚೆಲ್ಲಾಡಿದ್ದವು. ಅವಳ ಹಾಸಿಗೆಯ ಕೆಳಗೆ ಅವಳ ಕಜ್ಜಿನಾಯಿಯು ಮೂರು ನಾಲ್ಕು ಜೊತೆ ಹಳೆಯ ಚಪ್ಪಲಿಗಳ ಮೇಲೆ ತಲೆ ಆನಿಸಿಕೊಂಡು ಮಲಗಿತ್ತು. ನಿದ್ರೆಯಲ್ಲಿಯೂ ಅದು ಯಾವುದೋ ವಸ್ತುವನ್ನು ಕಂಡು ಹಲ್ಲು ಮಸೆಯುತ್ತಿತ್ತು. ಆ ನಾಯಿಯ ಚರ್ಮ ಎಷ್ಟು ಕಲೆಗಳಿಂದ ಕೂಡಿತ್ತೆಂದರೆ, ದೂರದಿಂದ ನೋಡಿದರೆ ಅದೊಂದು ನೆಲ ಒರೆಸುವ ಮಡಿಕೆಗಳ ಗೋಣಿಚೀಲದ ತುಂಡಿನಂತೆ ಕಾಣುತ್ತಿತ್ತು. + +ಅವಳ ಮೇಕಪ್ ಸಾಮಗ್ರಿಗಳು – ರೋಜು, ಲಿಪ್ ಸ್ಟಿಕ್, ಪೌಡರ್, ಒಂದು ಬಾಚಣಿಕೆ, ಕೂದಲಿನ ಗಂಟಿಗೆ ಹಾಕುವ ಹೇರ್ ಪಿನ್ ಗಳು ಗೋಡೆಯಲ್ಲಿದ್ದ ಒಂದು ಪುಟ್ಟ ಗೂಡಿನ ತುಂಬಾ ಹರಡಿದ್ದವು. ಅಲ್ಲೇ ತೂಗುಬಿಟ್ಟಿದ್ದ ಒಂದು ಪಂಜರದಲ್ಲಿ ಹಸಿರು ಗಿಣಿಯೊಂದು ತನ್ನ ರೆಕ್ಕೆಗಳಲ್ಲಿ ಮುಖ ಹುದುಗಿಸಿ ಮಲಗಿತ್ತು. ಪಂಜರದ ತುಂಬ ಒಣಕಲು ಸೀಬೆಹಣ್ಣಿನ ತುಂಡುಗಳು, ಕೊಳೆತ ಕಿತ್ತಳೆ ತುಂಡುಗಳು ಚೆಲ್ಲಾಡಿದ್ದವು ಮತ್ತು ಆ ದುರ್ಗಂಧ ಸೂಸುತ್ತಿದ್ದ ಹಣ್ಣುಗಳ ಮೇಲೆಲ್ಲ ನೊಣ ಮತ್ತು ನುಸಿಗಳು ಹಾರಾಡುತ್ತಿದ್ದವು. ಹಾಸಿಗೆಯ ಪಕ್ಕದಲ್ಲಿ ಮಣಕುಗಟ್ಟಿದ ಹಿಂಬದಿಯ ಬೆತ್ತದ ಕುರ್ಚಿಯೊಂದಿತ್ತು ಮತ್ತು ಆ ಕುರ್ಚಿಯ ಬಲಭಾಗದಲ್ಲಿದ್ದ ಸುಂದರ ಸ್ಟೂಲಿನ ಮೇಲೆ HMV ಕಂಪನಿಯವರು ತಯಾರಿಸಿದ ಪೋರ್ಟೆಬಲ್ ಗ್ರಾಮಾಫೋಮ್ ಇತ್ತು. ಆ ಗ್ರಾಮಫೋನಿಗೆ ಜಾಳುಜಾಳಾದ ಕರಿಯ ಬಟ್ಟೆಯೊಂದನ್ನು ಹೊದಿಸಲಾಗಿತ್ತು. ಸ್ಟೂಲಿನ ಮೇಲೆ ಮತ್ತು ರೂಮಿನ ಎಲ್ಲ ಕಡೆಯೂ ತುಕ್ಕು ಹಿಡಿದ ಸೂಜಿಗಳು ಬಿದ್ದಿದ್ದವು. ಸ್ಟೂಲಿನ ಹಿಂಭಾಗದ ಗೋಡೆಯ ಮೇಲೆ ನಾಲ್ಕು ಫೋಟೋ ಫ್ರೇಮ್ ಗಳನ್ನು ನೇತುಹಾಕಲಾಗಿತ್ತು ಮತ್ತು ನಾಲ್ಕು ಗಂಡಸರ ಫೋಟೋಗಳು ಆ ಫ್ರೇಮಿನೊಳಗೆ ಬಂಧಿಸಲ್ಪಟ್ಟಿದ್ದವು. + +ಆ ಫೋಟೋಗಳಿಂದ ಅನತಿ ದೂರದಲ್ಲಿ – ಅಂದರೆ ರೂಮಿನೊಳಗೆ ಕಾಲಿಟ್ಟರೆ ಎಡಬದಿಯ ಮೂಲೆಯಲ್ಲಿ ಒಂದು ಗಾಢವರ್ಣದ ದೇವರ ಚಿತ್ರ – ಬಹುಶಃ ಬಟ್ಟೆಯನ್ನು ಸುತ್ತುವ ರಟ್ಟಿನ ಕೊಳವೆಯಿಂದ ಕತ್ತರಿಸಿ ಫ್ರೇಮ್ ಹಾಕಲ್ಪಟ್ಟಿದ್ದು – ನೇತು ಹಾಕಲ್ಪಟ್ಟಿತ್ತು ಮತ್ತು ಅದರ ಮೇಲೆ ಜೀರ್ಣವಾದ ಹಾಗೂ ತಾಜಾ ಹೂಗಳಿದ್ದವು. ಅಲ್ಲಿ ಎಣ್ಣೆ ಮಣಕುಗಟ್ಟಿದ ಗೂಡಿನಲ್ಲಿ ಎಣ್ಣೆಯ ಬಟ್ಟಲೊಂದಿತ್ತು ಮತ್ತು ಪಕ್ಕದಲ್ಲೇ ದೀಪವೊಂದು ಉರಿಯುತ್ತಿತ್ತು. ರೂಮಿನಲ್ಲಿ ಹೆಚ್ಚು ಗಾಳಿಯಾಡದ ಕಾರಣಕ್ಕಾಗಿ ಆ ದೀಪವು ಭಕ್ತನೊಬ್ಬನ ಹಣೆಯ ಮೇಲಿನ ನಾಮದಂತೆ ನಿಶ್ಚಲವಾಗಿ ಮತ್ತು ನೆಟ್ಟಗೆ ಉರಿಯುತ್ತಿತ್ತು. ಉರಿದು ನಂದಿದ ಗಂಧದಕಡ್ಡಿಯ ಹುಡಿ ಆ ಗೂಡನ್ನು ಮತ್ತಿಷ್ಟು ಗಲೀಜಾಗಿಸಿತ್ತು. + +ದಿನದ ಮೊದಲ ಗಳಿಕೆಯನ್ನು ಅವಳು, ಕೈಯಲ್ಲಿ ಹಿಡಿದು, ದೇವರ ವಿಗ್ರಹಕ್ಕೆ ತಾಕಿಸಿ, ನಂತರ ಹಣೆಗೊಮ್ಮೆ ಸೋಕಿಸಿ ಆ ನಂತರ ಬ್ರಾ ಒಳಕ್ಕೆ ತುರುಕಿಕೊಳ್ಳುತ್ತಾಳೆ. ಅವಳ ಮೊಲೆಗಳು ದೊಡ್ಡ ಗಾತ್ರವಿರುವುದರಿಂದ ಹೊರಗೆ ಬೀಳುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಮಾಧೋ ಪುಣೆಯಿಂದ ರಜೆಗೆಂದು ಬಂದಾಗ ಮಾತ್ರ ಹಾಸಿಗೆಯಲ್ಲಿ ಕಾಲಿರಿಸಿಕೊಳ್ಳುವ ಜಾಗದ ಕೆಳಗೆ ಆ ಕಾರಣಕ್ಕೆಂದೇ ಗುಳಿ ಮಾಡಿಸಿದ ಸಣ್ಣ ಕಿಂಡಿಯಲ್ಲಿ ಸ್ವಲ್ಪ ಹಣ ಬಚ್ಚಿಡುತ್ತಾಳೆ. ಗಿರಾಕಿಗಳನ್ನೊದಗಿಸುವ ದಲ್ಲಾಳಿ ರಾಮ್ ಲಾಲ್ ಮಾಧೋನಿಗೆ ಹಣ ಸಿಗದಂತೆ ಬಚ್ಚಿಡಲು ಹೇಳಿಕೊಟ್ಟಿದ್ದ. ಮಾಧೋ ಅವಳೊಡನೆ ಮಲಗಲು ಪುಣೆಯಿಂದ ಬರುತ್ತಾನೆ ಅನ್ನುವ ವಿಷಯ ತಿಳಿದಾಗ ಅವನು ಹೇಳಿದ್ದ ‘ಯಾವಾಗಿನಿಂದ ಆ ಸೂ…ಮಗನ ಜೊತೆ ಇದೆಲ್ಲ ವ್ಯವಹಾರ ಶುರುವಾಗಿದ್ದು? ಎಂಥ ವಿಚಿತ್ರ ಪ್ರೇಮ ನಿಮ್ಮದು! ಆ ಹಲ್ಕ ಸೂ…ಮಗ ಒಂದು ಪೈಸೆ ಖರ್ಚು ಮಾಡದೇ ನಿನ್ನ ಜೊತೆ ಮಲಗುವುದಲ್ಲದೇ, ಹೋಗುವಾಗ ನಿನ್ನ ಹಣವನ್ನೇ ಕಬಳಿಸುತ್ತಾನೆ. ಈ ವಿಷಯದಲ್ಲಿ ಏನೋ ಸರಿಯಿಲ್ಲವೆನ್ನಿಸುತ್ತದೆ ನನಗೆ. ನಿನಗೆ ಅವನೆಂದರೆ ಯಾವುದೋ ಕಾರಣಕ್ಕೆ ಬಹಳ ಇಷ್ಟವಿರಬೇಕು. ಕಳೆದ ಏಳು ವರ್ಷಗಳಿಂದ ಈ ತಲೆಹಿಡುಕನ ಕೆಲಸ ಮಾಡ್ತಿದ್ದೇನಲ್ಲ, ಹಾಗಾಗಿ ಹುಡುಗಿಯರ ದೌರ್ಬಲ್ಯಗಳೆಲ್ಲ ನನಗೆ ಗೊತ್ತು’. + +ರಾಮ್ ಲಾಲ್ ಇಡೀ ಮುಂಬಯಿಯ ಉದ್ದಗಲಕ್ಕೂ ಹತ್ತು ರೂಪಾಯಿಯಿಂದ ನೂರು ರೂಪಾಯಿ ಛಾರ್ಜ್ ಮಾಡುವ ಸುಮಾರು 120 ಸೂಳೆಯರಿಗೆ ಗಿರಾಕಿ ಒದಗಿಸುತ್ತಾನೆ. ಅವನು ಸೌಗಂಧಿಗೆ ಹೇಳುತ್ತಾನೆ ‘ನಾಯಿ, ಹಣವನ್ನು ಹಾಗೆ ದುಂದುಗಾರಿಕೆ ಮಾಡಬೇಡ. ನಿನಗೇ ಗೊತ್ತಿಲ್ಲದ ಹಾಗೆ ನಿನ್ನಲ್ಲಿರುವ ಬಟ್ಟೆಯೂ ಉಳಿಯದಂತೆ ಬೆತ್ತಲೆ ಮಾಡುತ್ತಾನೆ ಆ ತಾಯ್ಗಂಡ ಸೂಳೆಮಗ! ನಿನ್ನ ಹಾಸಿಗೆಯ ಕೆಳಗೆ ಒಂದು ಕಿಂಡಿ ಕೊರೆದು ನಿನ್ನ ಹಣವನ್ನೆಲ್ಲ ಅಲ್ಲಿ ಮುಚ್ಚಿಡು. ಅವನು ಬಂದಾಗ ಹೇಳು ‘ನಿನ್ನಾಣೆಗೂ ಮಾಧೋ, ಇಡೀ ದಿನ ಒಂದೇ ಒಂದು ಸಾಮಾನನ್ನೂ ಕಂಡಿಲ್ಲ! ಕೆಳಗಿನ ಅಂಗಡಿಯಿಂದ ನನಗಾಗಿ ಒಂದು ಕಪ್ ಚಹಾ ಮತ್ತು ಬಿಸ್ಕಿಟ್ ತರಿಸು, ಹೊಟ್ಟೆ ಹಸಿವಿನಿಂದ ಘರ್ಜಿಸುತ್ತಿದೆ’ ಎಂದು. ತಿಳಿಯಿತಾ? ಸಧ್ಯದ ಪರಿಸ್ಥಿತಿ ಸರಿಯಿಲ್ಲ. ಆಳುವ ಪಾರ್ಟಿಯ ಸೂ…ಮಕ್ಕಳು ಮದ್ಯಸಾರವನ್ನೂ ನಿಷೇಧಿಸಿದ್ದಾರೆ. ವ್ಯಾಪಾರ ತುಂಬ ಕಡಿಮೆಯಾಗಿಹೋಗಿದೆ. ಮದ್ಯವನ್ನೇನೋ ಹೇಗಾದರೂ ಮಾಡಿ ಹೊಂಚಬಹುದು. ದೇವರಾಣೆಗೂ ಹೇಳುತ್ತೇನೆ, ಖಾಲಿಯಾಗಿರುವ ಶೀಶೆಗಳನ್ನೆತ್ತಿ ಅದರಲ್ಲಿ ಉಳಿದಿರುವ ವೈನನ್ನು ಮೂಸಿ ನೋಡುವಾಗ ಮುಂದಿನ ಜನ್ಮದಲ್ಲಿಯೂ ಸೂಳೆಯಾಗಿಯೇ ಹುಟ್ಟಬೇಕು ಎಂದು ಪ್ರಾರ್ಥಿಸುವಂತಾಗುತ್ತದೆ. + +ಸೌಗಂಧಿ ತನ್ನ ದೇಹದ ಎಲ್ಲ ಅಂಗಾಂಗಕ್ಕಿಂತ ತನ್ನ ತೋರ ಮೊಲೆಗಳನ್ನು ತುಂಬ ಇಷ್ಟ ಪಡುತ್ತಾಳೆ. ಅವಳ ಗೆಳತಿ ಜಮುನಾ ‘ನಿನ್ನ ಸಿಡಿಮದ್ದಿನಂಥ ಮೊಲೆಗಳಿಗೆ ಸರಿಯಾದ ಬ್ರಾದ ಒತ್ತಾಸೆ ಒದಗಿಸಿದರೆ ಅವು ಯಾವತ್ತೂ ತಮ್ಮ ಪೆಡಸುತನವನ್ನು ಕಳೆದುಕೊಳ್ಳುವುದಿಲ್ಲ’ ಎಂದು ಹುರಿದುಂಬಿಸುತ್ತಾಳೆ. ಆಗೆಲ್ಲ ಸೌಗಂಧಿ ನಗುತ್ತಾ ಹೇಳುತ್ತಾಳೆ. ‘ಎಲ್ಲರೂ ನಿನ್ನಂತೆಯೇ ಎಂದು ಭಾವಿಸಿರುವೆಯಾ ಜಮುನಾ? ಈ ಗಂಡಸರು ಹತ್ತು ರೂಪಾಯಿ ಬಿಸಾಕಿ ತಮಗೆ ಬೇಕಾದ ಹಾಗೆ ನಿನ್ನನ್ನು ಬಳಸಿಕೊಳ್ಳುವುದರಿಂದ, ನೀನು ಎಲ್ಲರೂ ಹಾಗೆಯೇ ಇರುತ್ತಾರೆ ಎಂದುಕೊಂಡಿರುವೆ. ನನಗೇನಾದರೂ ಹಾಗೆಲ್ಲ ಎಲ್ಲ ಕಡೆಗೂ ಕೈ ಹಾಕಬೇಕಂತೆ, ಆಗ ಅವನಿಗೊಂದು ಗತಿ ಕಾಣಿಸದಿದ್ದರೆ ಕೇಳು! ’ ಹೀಗೆ ಹೇಳುವಾಗಲೇ ಮತ್ತೇನೋ ನೆನಪಾಗುತ್ತದೆ. ‘ಓಹ್! ನೆನ್ನೆ ನೆನ್ನೆ ಏನಾಯಿತು ಗೊತ್ತಾ? ರಾಮ್ ಲಾಲ್ ನಡುರಾತ್ರಿ ಎರಡು ಘಂಟೆಗೆ ಪಂಜಾಬಿಯೊಬ್ಬನನ್ನು ಕರೆತಂದ. ರಾತ್ರಿಗೆ ಮೂವತ್ತು ರೂಪಾಯಿಯಂತೆ ವ್ಯವಹಾರ ಕುದುರಿತು. ರಾಮ್ ಲಾಲ್ ಹೊರಟ ನಂತರ, ನಾನು ದೀಪವಾರಿಸಿದ್ದೇ ತಡ, ಈ ಗಂಡಸು ಪೂರ್ತಿ ಹೆದರಿಬಿಟ್ಟ! ಜಮುನಾ ಕೇಳಿಸಿಕೊಳ್ಳುತ್ತಿರುವೆಯಾ? ನಿನ್ನಾಣೆಗೂ ಸತ್ಯ ಹೇಳುತ್ತಿದ್ದೇನೆ, ದೀಪವಾರಿಸಿದ ಕೂಡಲೇ ಗಡಗಡ ನಡುಗಲು ಪ್ರಾರಂಭಿಸಿಬಿಟ್ಟ! ಅವನಿಗೆ ಕತ್ತಲೆಂದರೆ ಭಯ ಜಮುನಾ! + +ನಾನು ಕೇಳಿದೆ ‘ಯಾತಕ್ಕೋಸ್ಕರ ಕಾಯುತ್ತಿರುವೆ? ಆಗಲೇ ರಾತ್ರಿ ಮೂರಾಗುತ್ತಾ ಬಂದಿತು. ನಿನ್ನ ಗಡುವು ಮುಗಿಯುತ್ತ ಬರುತ್ತಿದೆ’. + +ಅವನು ‘ಅದನ್ನು ಒತ್ತು, ಅದನ್ನು ಒತ್ತು’ ಎಂದ. + +ನಾನು ‘ಏನು ನಿನ್ನ ಮಾತಿನ ಅರ್ಥ!’ ಎಂದೆ. + +ಅವನೆಂದ ‘ಕರೆಂಟು! ಕರೆಂಟು!’. + +ನಾನು ಅರ್ಥವಾಗದೇ ‘ಏನು ಕರೆಂಟು? ಏನು ಹಾಗೆಂದರೆ?’ ಎಂದೆ. + +ಅವನು ‘ದೀಪ! ದೀಪ!’ ಎಂದ. + +ಅವನ ಕೀರಲು ದನಿ ಕೇಳಿ ನನಗಂತೂ ನಗು ತಡೆಯಲಾಗಲಿಲ್ಲ. + +ನಾನು ‘ಉಹುಂ, ಸಾಧ್ಯವೇ ಇಲ್ಲ’ ಎಂದು ಛೇಡಿಸುತ್ತ ಅವನ ದಪ್ಪ ತೊಡೆಗಳನ್ನು ಚಿವುಟಿದ್ದೇ ತಡ, ಅವನು ಹಾಸಿಗೆಯಿಂದ ಕೆಳಗೆ ಹಾರಿದವನೇ ದೀಪ ಬೆಳಗಿಸಿದ. ನಾನು ಮೈಮೇಲೆ ಬಟ್ಟೆ ಎಳೆದುಕೊಳ್ಳುತ್ತಾ ಹೇಳಿದೆ ‘ಅಯ್ಯೋ ನಿನಗೆ ಸ್ವಲ್ಪವಾದರೂ ನಾಚಿಕೆ ಇಲ್ಲವೇ ಸೂ…ಮಗನೇ?’. ಅವನು ಹಾಸಿಗೆಗೆ ಹಿಂತಿರುಗುವುದರಲ್ಲೇ ನಾನು ಹಾರಿಹೋಗಿ ದೀಪವಾರಿಸಿದೆ. ಆ ಕೂಡಲೇ ಮತ್ತೆ ಗಾಭರಿಗೊಂಡ ಅವನು! ಅಬ್ಬ, ಎಂಥ ತಮಾಷೆ ಎನ್ನುತ್ತೀ ಇಡೀ ರಾತ್ರಿ! ಒಮ್ಮೆ ಕತ್ತಲು, ಮತ್ತೊಮ್ಮೆ ಬೆಳಕು, ಮತ್ತೊಮ್ಮೆ ಬೆಳಕು, ಇದ್ದಕ್ಕಿದ್ದಂತೆ ಕತ್ತಲು…..! ಬೆಳಗಿನ ಜಾವದಲ್ಲಿ ಮೊದಲ ಟ್ರಾಮಿನ ಸದ್ದು ಕಿವಿಗೆ ಬಿದ್ದಿದ್ದೇ ತಡ, ಬೇಗ ಬೇಗ ಬಟ್ಟೆ ಹಾಕಿದವನೇ ಎದ್ದು ಬಿದ್ದು ಓಡಿಹೋದ. ಆ ಸೂ….ಮಗನಿಗೆ ಬೆಟ್ಟಿಂಗ್ ನಲ್ಲಿ ಬಿಟ್ಟಿ ಹಣವೇನಾದರೂ ಸಿಕ್ಕಿರಬೇಕು. ಇಲ್ಲದಿದ್ದರೆ ಯಾರು ಹಣವನ್ನು ಹೀಗೆ ಹಾಳು ಮಾಡುತ್ತಾರೆ ಹೇಳು? ಜಮುನಾ ನಾನು ಇಂಥ ಗಿರಾಕಿಗಳಿಗೋಸ್ಕರ ಎಂತೆಂಥ ಪಟ್ಟುಗಳನ್ನು ಕಲಿತಿದ್ದೇನೆ ಗೊತ್ತೇ?’ + +ಸೌಗಂಧಿಗೆ ನಿಜಕ್ಕೂ ಈ ರೀತಿಯ ಪಟ್ಟುಗಳು ಅಥವಾ ತಂತ್ರಗಳು ತಿಳಿದಿದ್ದವು. ಅದನ್ನು ತನ್ನ ಒಂದೆರಡು ಗೆಳತಿಯರ ಜೊತೆ ಹಂಚಿಕೊಳ್ಳುತ್ತಾಳೆ ಕೂಡಾ. ಅವಳ ಉಪದೇಶ ಈ ರೀತಿ ಇರುತ್ತದೆ ಸಾಧಾರಣವಾಗಿ. ‘ಬಂದವನು ಒಳ್ಳೆಯವನಾಗಿದ್ದು, ಹೆಚ್ಚು ಮಾತು ಆಡಲು ಬರುವುದಿಲ್ಲವಾದರೆ, ಅವನನ್ನು ಚೆನ್ನಾಗಿ ಕೆಣಕಬೇಕು, ಕಚಗುಳಿ ಕೊಡಬೇಕು, ಅವನೊಡನೆ ಆಡಬೇಕು. ಅವನು ಗಡ್ಡ ಬಿಟ್ಟಿದ್ದರೆ ಅದರೊಳಗೆ ಬಾಚಣಿಕೆಯಂತೆ ಬೆರಳಾಡಿಸಿ ಒಂದಿಷ್ಟು ಕೂದಲುಗಳನ್ನು ತಿರುಚಬೇಕು. ಅವನಿಗೆ ದಪ್ಪ ಹೊಟ್ಟೆಯಿದ್ದರೆ, ಡೋಲಿನ ಹಾಗೆ ಬಡೆಯಬೇಕು. ಅವನು ಇಷ್ಟ ಬಂದಂತೆ ಮಾಡಲು ಅವಕಾಶವನ್ನೇ ನೀಡಬಾರದು. ಅವನು ಖುಷಿಯಲ್ಲಿ ಅಲ್ಲಿಂದ ಹೊರಡುತ್ತಾನೆ ಮತ್ತು ನೀವು ಬಚಾವಾಗುತ್ತೀರಿ. ಹೆಚ್ಚು ಮಾತನಾಡದ ಗಂಡಸರು ಅಪಾಯಕಾರಿಗಳು. ಅವಕಾಶ ಸಿಕ್ಕರೆ ತುಂಬ ನೋಯಿಸುತ್ತಾರೆ!’ + +ಆದರೆ ಸೌಗಂಧಿ ತಾನು ಅಂದುಕೊಂಡಷ್ಟು ಬುದ್ಧಿವಂತಳಾಗಿರಲಿಲ್ಲ ಮತ್ತು ಅವಳ ಬಳಿ ಬರುವ ಕೆಲವು ಖಾಯಂ ಗಿರಾಕಿಗಳಿದ್ದರು. ಅವಳು ತುಂಬ ಭಾವುಕಳಾಗಿದ್ದಳು, ಹಾಗಾಗಿ ನಿರ್ಧಾರದ ಘಳಿಗೆಗಳಲ್ಲಿ ಅವಳ ತಂತ್ರಗಳೆಲ್ಲ ನೆನಪಿಗೆ ಬಾರದಂತಾಗುತ್ತಿದ್ದವು. ಮಗುವಿಗೆ ಜನ್ಮ ಕೊಟ್ಟಾಗಿನಿಂದ ಹೊಟ್ಟೆಯ ಮೇಲಿದ್ದ ಚರ್ಮ ಸಡಿಲ ಬಿದ್ದ ಗುರುತುಗಳಿದ್ದವು ಮತ್ತು ಮೊದಲ ಬಾರಿಗೆ ಆ ಗುರುತುಗಳನ್ನು ಕಂಡಾಗ ಅವಳಿಗೆ ಹೆಣ್ಣು ನಾಯಿಯೊಂದು ಮನೆಯಲ್ಲಿದ್ದ ಮರಿಗಳ ನೆನಪಿನಲ್ಲಿ ಆತಂಕಗೊಳ್ಳುತ್ತಾ ಎದುರಾದ ತನ್ನ ಕಡೆಗೆ ದೃಷ್ಟಿಯನ್ನೂ ಹರಿಸದೇ ನಿರ್ಲಕ್ಷಿಸುತ್ತಾ ಹೊರಟುಹೋದ ಹತಾಶೆಯಲ್ಲಿ ಅವಳ ಕಜ್ಜಿನಾಯಿ ನೆಲಕೆರೆದು ಕೆರೆದು ಉಂಟಾಗುತ್ತಿದ್ದ ಗೆರೆಗಳು ನೆನಪಾಗಿದ್ದವು. + +ಸೌಗಂಧಿ ಯಾವಾಗಲೂ ತನ್ನದೇ ಲೋಕದಲ್ಲಿ ವಿಹರಿಸುವಂಥವಳು, ಆದರೆ ಒಂದು ಕಕ್ಕುಲಾತಿಯ ಮಾತು ಅವಳ ದೇಹದಲ್ಲಿ ಸಂತೋಷದ ತರಂಗಗಳನ್ನು ಎಬ್ಬಿಸುವಷ್ಟು ಶಕ್ತವಾಗಿತ್ತು ಮತ್ತು ಸೆಕ್ಸ್ ಅನ್ನುವುದು ನಿಷ್ಪ್ರಯೋಜಕ ಎಂದು ನಂಬಿಸಿಕೊಳ್ಳುವುದರಲ್ಲೇ ದೇಹಕ್ಕೆ ಅದು ಇಷ್ಟವೆಂದು ಅರಿವಾಗಿ ಹೋಗುತ್ತಿತ್ತು! ಇಡೀ ದಿನ ದೇಹವು ದಣಿದು ಸುಸ್ತಾಗಿ ಹೋಗಿ ಗಾಢ ನಿದ್ರೆಯೊಂದು ತನ್ನನ್ನು ಆವರಿಸಿಕೊಳ್ಳುವ ಕನಸು ಕಾಣುತ್ತಿದ್ದಳು, ಆಹ್! ಎಂಥ ಸುಖ ನಿದ್ರೆಯದು! ದೇಹದ ಕೊನೆಯ ಶಕ್ತಿಯ ಹನಿಯೂ ಸೋರಿಹೋದಷ್ಟು ಆಯಾಸವಾದಾಗಿನ ಮೂರ್ಛಾವಸ್ಥೆಯ ಸ್ಥಿತಿಯು ಎಂಥಾ ಆನಂದದಾಯಕ!’ ಕೆಲವೊಮ್ಮೆ ಅವಳಿಗೆ ತನ್ನ ಇರುವಿಕೆಯ ಬಗ್ಗೆಯೇ ಅನುಮಾನ ಹುಟ್ಟಿಬಿಡುತ್ತಿತ್ತು ಮತ್ತು ಕೆಲವೊಮ್ಮೆ ಇರುವ, ಇಲ್ಲದ ಎರಡೂ ಸ್ಥಿತಿಗಳ ನಡುವೆ ತೂಗಾಡುತ್ತಿರುವಂತೆ ಅವಳಿಗೆ ಭಾಸವಾಗುತ್ತಿತ್ತು, ಎತ್ತರದ ಆಕಾಶದಲ್ಲಿ ತೇಲುತ್ತಿರುವಾಗ ಗಾಳಿಯು ಅವಳನ್ನು ಸುತ್ತುವರೆದಾಗ – ಮೇಲಿಂದ ಬೀಸುವ ಗಾಳಿ, ಕೆಳಗಿನ ಗಾಳಿ, ಎಡದ ಗಾಳಿ, ಬಲದ ಗಾಳಿ – ಒಟ್ಟಿನಲ್ಲಿ ಎಲ್ಲೆಲ್ಲೂ ಬರೀ ಗಾಳಿಯೇ, ಉಸಿರುಗಟ್ಟಿಸುವಷ್ಟು ಗಾಳಿ, ಆದರೆ ಅದ್ಭುತವಾದ ಗಾಳಿ ಕೂಡಾ! ಸಣ್ಣವಳಿದ್ದಾಗ ಕಣ್ಣಾಮುಚ್ಚಾಲೆ ಆಟ ಆಡುವಾಗ, ಅವಳ ಅಮ್ಮನ ದೊಡ್ದದೊಂದು ಟ್ರಂಕ್ನೊಳಗೆ ಅವಳು ಬಚ್ಚಿಟ್ಟುಕೊಂಡು, ಸಿಕ್ಕಿಬೀಳುತ್ತೇನಾ ಅನ್ನುವ ನಿರೀಕ್ಷೆ ಮತ್ತು ಕಾತರದಲ್ಲಿರುವಾಗ, ಇದ್ದಕ್ಕಿದ್ದಂತೆ ಉಸಿರು ಕಟ್ಟುತ್ತಿದೆ ಅನ್ನಿಸಿ ಎದೆ ಬಡಿತ ಏರಿಬಿಡುತ್ತಿತ್ತು. ಆ ಭಾವನೆ ಎಷ್ಟು ಮಜವಾಗಿರುತ್ತಿತ್ತು! + +ಸೌಗಂಧಿಗೆ ಇಡೀ ಜನ್ಮ ಜನರು ತನ್ನನ್ನು ಹುಡುಕುತ್ತಲೇ ಇರುವಾಗ, ಹಾಗೆ ಯಾರ ಕೈಗೂ ಸಿಕ್ಕದೇ ಹಾಗೆ ಟ್ರಂಕಿನೊಳಗೆ ಅಡಗಿಯೇ ಇದ್ದು, ಅಪರೂಪಕ್ಕೊಮ್ಮೆ ತಾನು ಅವರ ಕೈಲಿ ಸಿಕ್ಕಿಬಿದ್ದು, ಆ ನಂತರ ತಾನೂ ಆ ರೀತಿ ಯಾರನ್ನಾದರೂ ಹುಡುಕಬೇಕು ಎನ್ನಿಸುತ್ತದೆ. ಕಳೆದ ಐದು ವರ್ಷಗಳಿಂದ ಅವಳ ಬದುಕು ಥೇಟ್ ಕಣ್ಣಾಮುಚ್ಚಾಲೆ ಆಟದಂತೆಯೇ ಇದೆ: ಕೆಲವೊಮ್ಮೆ ಅವಳು ಯಾರದ್ದೋ ಹುಡುಕಾಟಕ್ಕೆ ಬಿದ್ದರೆ, ಮತ್ಯಾವುದೋ ಗಂಡಸು ಅವಳ ಹುಡುಕಾಟಕ್ಕೆ ಬೀಳುತ್ತಾನೆ. ಬದುಕು ಹೀಗೆಯೇ ಸಾಗುತ್ತಲಿದೆ. ಅವಳು ಸಂತೋಷವಾಗಿಯೇ ಇದ್ದಳು, ಏಕೆಂದರೆ ಅವಳು ಸಂತೋಷವಾಗಿಯೇ ಇರಬೇಕಾಗಿತ್ತು. ಪ್ರತೀ ರಾತ್ರಿಯೂ ತನ್ನ ವಿಶಾಲವಾದ ತೇಗದ ಮರದ ಮಂಚವನ್ನು ಬೇರೆ ಬೇರೆ ಗಂಡಸಿನೊಡನೆ ಹಂಚಿಕೊಳ್ಳುತ್ತಿದ್ದಳು ಮತ್ತು ಅವರನ್ನೆಲ್ಲ ಹಿಡಿತದಲ್ಲಿಡುವ ಅನೇಕ ತಂತ್ರಗಳು ಅವಳಿಗೆ ಗೊತ್ತಿರಲೇಬೇಕಿತ್ತು. ಅವರ ಕೆಟ್ಟಾಕೊಳಕ ಆಸೆ ಮತ್ತು ಬೇಡಿಕೆಗಳನ್ನು ಒಪ್ಪಬಾರದೆಂದು ಅನೇಕ ಸಲ ಅವಳು ಪ್ರತಿಜ್ಞೆ ಮಾಡಿದ್ದರೂ, ಅವರನ್ನು ಉಪೇಕ್ಷಿಸಬೇಕೆಂದು ನಿರ್ಧರಿಸಿದ್ದರೂ, ಅಂಥ ಘಳಿಗೆಗಳು ಎದುರಾಗೇ ಬಿಟ್ಟಾಗ ಪ್ರತೀ ಬಾರಿಯೂ ಸೋತುಬಿಡುತ್ತಿದ್ದಳು. ಪ್ರೀತಿಸಲ್ಪಡಬೇಕು ಅನ್ನುವ ಆ ಕ್ಷಣದ ತೀವ್ರ ಬಯಕೆಯನ್ನು ಹತ್ತಿಕ್ಕಲಾಗುತ್ತಲೇ ಇರಲಿಲ್ಲ. + +ಪ್ರತೀ ದಿನವೂ ಒಬ್ಬೊಬ್ಬ ಗಂಡಸು ಅವಳನ್ನು ಪ್ರೀತಿಸುತ್ತೇನೆಂದು ಸಾರುತ್ತಿದ್ದ. ಸೌಗಂಧಿಗೂ ಗೊತ್ತಿತ್ತು ಅವರು ಸುಳ್ಳಾಡುತ್ತಿದ್ದಾರೆನ್ನುವುದು, ಆದರೂ ಉಕ್ಕಿದ ಆ ನಿಮಿಷದ ಭಾವನೆಗಳಲ್ಲಿ ಮುಳುಗಿಹೋದ ಅವಳು, ನಿಜಕ್ಕೂ ಅವರು ತನ್ನನ್ನು ಪ್ರೀತಿಸುತ್ತಿದ್ದಾರೆಂದೇ ನಂಬುತ್ತಿದ್ದಳು. ‘ಪ್ರೀತಿ’. ಆಹ್ ಎಂಥ ಮಧುರವಾದ ಪದ! ಇಡೀ ದೇಹಕ್ಕೆ ಪ್ರೀತಿಯನ್ನು ಬಳಿದುಕೊಂಡು ಕಣಕಣದಲ್ಲೂ ಇಳಿಯುವಂತೆ ಮಸಾಜ್ ಮಾಡಿಕೊಳ್ಳಬೇಕು ಅನ್ನಿಸುತ್ತಿತ್ತು ಅವಳಿಗೆ. ತನ್ನನ್ನೇ ತಾನು ಪ್ರೀತಿಗೆ ಅರ್ಪಿಸಿಕೊಂಡು ಬಿಡಬೇಕು ಅನ್ನಿಸುತ್ತಿತ್ತು. ಪ್ರೀತಿ ಅನ್ನುವುದೇ ಒಂದು ಹೂಜಿಯೆಂದಿಟ್ಟುಕೊಳ್ಳಿ, ಅದರ ಬಾಯಿಯೊಳಗಿಂದ ಒಳಗಿಳಿದು ಅದರೊಳಗೆ ಮುದುಡಿ ಅಡಗಿ ಕುಳಿತು ಬಿರಟೆ ಜಡಿದು ಬಿಡುತ್ತಿದ್ದಳು. ಅವಳಿಗೆ ನಿಜಕ್ಕೂ ಪ್ರೇಮಿಸಬೇಕು ಎಂದು ಆಸೆಯಾದಾಗ, ಆ ಗಂಡಸು ಯಾರು ಅನ್ನುವುದನ್ನೂ ಲಕ್ಷಿಸುತ್ತಿರಲಿಲ್ಲ. ಆಗ ಬಂದ ಯಾವುದೇ ಗಂಡಸನ್ನೂ ಕರೆದುಕೊಂಡು, ಅವನ ತೊಡೆಯ ಮೇಲೆ ಕುಳ್ಳರಿಸಿಕೊಂಡು, ಅವನ ತಲೆದಡವಿ, ಜೋಗುಳ ಹಾಡಿ ಅವನನ್ನು ಮಲಗಿಸಬೇಕು ಅನ್ನಿಸುತ್ತಿತ್ತು. + +ಅವಳಲ್ಲಿ ಅಗಾಧ ಪ್ರೇಮವಿರುತ್ತಿತ್ತೆಂದರೆ, ಆ ಕ್ಷಣದಲ್ಲಿ ಯಾವುದೇ ಗಿರಾಕಿಯನ್ನೂ ಅವಳು ಪ್ರೇಮಿಸಲು ಸಿದ್ಧವಿರುತ್ತಿದ್ದಳು ಮತ್ತು ಆ ಪ್ರೀತಿಯನ್ನು ಚಿರಕಾಲ ಜೀವಂತವಾಗಿಡಲು ಶಕ್ತಳಿದ್ದಳು. ಆಗಲೇ ಹೇಳಿದೆನಲ್ಲ, ಗೋಡೆಯ ಮೇಲಿದ್ದ ನಾಲ್ಕು ಫೋಟೋಗಳಲ್ಲಿನ ಗಂಡಸರು, ಅವರೆಲ್ಲ ಅವಳು ಪ್ರೇಮ ನಿವೇದನೆ ಮಾಡಿಕೊಂಡಂಥವರೇ. ಅವಳು ಒಳ್ಳೆಯವಳೇ ಇದ್ದಳು, ಆದರೆ ಆ ಗಂಡಸರೇಕೆ ಒಳ್ಳೆಯವರಾಗಿರಲಿಲ್ಲ? ಅವಳಿಗದು ಅರ್ಥವೇ ಆಗುತ್ತಿರಲಿಲ್ಲ, ಹಾಗಾಗಿ ಒಮ್ಮೆ ಕನ್ನಡಿಯಲ್ಲಿ ನೋಡಿಕೊಳ್ಳುವಾಗ ಅಯಾಚಿತವಾಗಿ ‘ಸೌಗಂಧಿ, ಕಾಲಕ್ಕೆ ನಿನ್ನ ಮೇಲೆ ಕರುಣೆಯಿಲ್ಲ’ ಎಂದು ತನ್ನಷ್ಟಕ್ಕೆ ತಾನು ಹೇಳಿಕೊಳ್ಳುತ್ತಿದ್ದಳು. + +ಅವಳು ಸೂಳೆಗಾರಿಕೆಯಲ್ಲಿ ಕಳೆದ ಸಮಯ – ಕಳೆದ ಐದು ವರ್ಷಗಳ ಎಲ್ಲ ದಿನಗಳು ಮತ್ತು ರಾತ್ರಿಗಳು – ಅವು ಮಾತ್ರ ಅವಳಿಗೆ ಮುಖ್ಯವೆನಿಸಿದ್ದವು. ಅವಳು ಕನಸು ಕಂಡಷ್ಟು ಸಂತೋಷವಾಗಿಲ್ಲದೇ ಹೋದರೂ ತೃಪ್ತಿಯಿಂದಿದ್ದಳು. ಅವಳು ಅರಮನೆ ಕಟ್ಟಬೇಕು ಎನ್ನುವಂಥ ಕನಸನ್ನೇನೂ ಕಂಡವಳಲ್ಲ. ಹಣವೆನ್ನುವುದು ನಿಜಕ್ಕೂ ಅಷ್ಟೊಂದು ದೊಡ್ಡ ವಿಷಯವೇ ಆಗಿರಲಿಲ್ಲ. ಅವಳು ಗಿರಾಕಿಗಳಿಂದ ಹತ್ತು ರೂಪಾಯಿ ಪಡೆಯುತ್ತಿದ್ದುದರಲ್ಲಿ, ಎರಡೂವರೆ ರೂಪಾಯಿ ರಾಮ್ ಲಾಲ್ ಗೆ ಸೇರುತ್ತಿತ್ತು ಮತ್ತು ಉಳಿದ ಏಳೂವರೆ ರೂಪಾಯಿ ಅವಳಿಗೆ ಬೇಕಾದಷ್ಟಾಗಿತ್ತು. ಮಾಧೋ ಪುಣೆಯಿಂದ ಅವಳಿಗೆ ‘ಚುಚ್ಚಲು’ ಬಂದಾಗ – ರಾಮ್ ಲಾಲ್ ಹಾಗೆಯೇ ಕರೆಯುತ್ತಾನೆ ಅದನ್ನು – ಅವನ ಕೈಗೆ ಹತ್ತೋ, ಹದಿನೈದೋ ರೂಪಾಯಿಗಳನ್ನಿಡುತ್ತಿದ್ದಳು. ಹಾಗೆ ಮಾಡುತ್ತಿದ್ದುದಾದರೂ ಅವಳಿಗೆ ಅವನ ಮೇಲಿದ್ದ ಮೋಹದ ಕಾರಣಕ್ಕೆ ಮಾತ್ರ. ರಾಮ್ ಲಾಲ್ ಹೇಳುವುದು ನಿಜ – ಮಾಧೋನಲ್ಲಿ ಅವಳನ್ನು ಆಕರ್ಷಿಸುವಂಥದ್ದೇನೋ ಇತ್ತು. + +ನಾನು ಯಾಕೆ ಸುಮ್ಮನೇ ಇದ್ದುದನ್ನು ಇದ್ದಂತೆ ಹೇಳಿಬಿಡಬಾರದು? + +ಸೌಗಂಧಿ ಮೊದಲಿಗೆ ಮಾಧೋನನ್ನು ಭೇಟಿಯಾದಾಗ ಅವನು ಹೇಳಿದ್ದ ‘ನಿನಗೆ ನಿಜಕ್ಕೂ ನಾಚಿಕೆಯಾಗುವುದಿಲ್ಲವೇ? ನೀನು ಏನನ್ನು ಬಿಕರಿಗಿಟ್ಟಿರುವೆ ಎನ್ನುವುದು ನಿನಗೆ ತಿಳಿದಿದೆಯೇ? ನಾನು ಏತಕ್ಕಾಗಿ ಬಂದಿರುವೆನೆಂದು ನೀನು ತಿಳಿದಿರುವೆ? ಛಿ ಛಿ ಛಿ. ಹತ್ತು ರೂಪಾಯಿಯಲ್ಲಿ ಎರಡೂವರೆ ರೂಪಾಯಿ ಆ ತಲೆಹಿಡುಕನಿಗೆ ಸೇರುತ್ತದೆ ಬೇರೆ. ಉಳಿದದ್ದೆಷ್ಟು, ಏಳೂವರೆ ರೂಪಾಯಿ, ಸರಿ ತಾನೇ … ಏಳೂವರೆ? ಆ ಏಳೂವರೆ ರೂಪಾಯಿಗೆ ನೀನು ನನಗೆ ಕೊಡಲಾಗದ್ದನ್ನು ಕೊಡುವೆ ಎಂದು ಪ್ರಮಾಣ ಮಾಡುತ್ತೀಯೆ ಮತ್ತು ನಾನು ತೆಗೆದುಕೊಳ್ಳಲಾರದ ಏನೋ ಒಂದಕ್ಕಾಗಿ ನಾನು ಇಲ್ಲಿಗೆ ಬಂದಿರುವೆ! ನನಗೇನೋ ಹೆಂಗಸು ಬೇಕು, ಆದರೆ ನಿನಗೆ ಗಂಡಸು ಬೇಕೇ? ನನಗೆ ಯಾವ ಹೆಣ್ಣಾದರೂ ಆದೀತು, ಆದರೆ ನಿನಗೆ ನಾನು ನಿಜಕ್ಕೂ ಇಷ್ಟವಾಗುತ್ತೇನಾ? ನಮ್ಮ ಸಂಬಂಧವೇನು? ಉಹುಂ, ಏನಿಲ್ಲ, ಏನೇನೂ ಇಲ್ಲ. ಬರೀ ಹತ್ತು ರೂಪಾಯಿಗಳು – ಆ ತಲೆಹಿಡುಕನಿಗೆ ಕೊಟ್ಟ ಬಳಿಕ ಉಳಿವ ನೀನು ಹುಡಿ ಹಾರಿಸುವ ಏಳೂವರೆ ರೂಪಾಯಿ – ಅದಷ್ಟೇ ನಮ್ಮಿಬ್ಬರನ್ನು ಬಂಧಿಸಿರುವ ತಂತು. ನೀನೂ ಅದರ ಮೇಲೆ ಕಣ್ಣಿರಿಸಿರುವೆ ಮತ್ತು ನಾನೂ ಸಹಾ. ನಿನ್ನ ಹೃದಯ ಏನೋ ಹೇಳುತ್ತದೆ, ನನ್ನ ಹೃದಯ ಮತ್ತೇನೋ ಹೇಳುತ್ತದೆ. ನಾವಿಬ್ಬರೂ ಏಕೆ ಒಂದಾಗಬಾರದು? ನಾನು ಪುಣೆಯಲ್ಲಿ ಹೆಡ್ ಕಾನ್ಸ್ಟೇಬಲ್ ಆಗಿದ್ದೇನೆ. ನಾನು ತಿಂಗಳಿಗೊಮ್ಮೆ ಮೂರ್ನಾಲ್ಕು ದಿನ ಇಲ್ಲಿಗೆ ಬರುತ್ತೇನೆ. ನಾನು ನಿನಗೆ ಬೇಕಾದ್ದೆಲ್ಲವನ್ನೂ ಕೊಡಿಸುತ್ತೇನೆ. ಅಂದಹಾಗೆ ಈ ಮನೆಗೆ ಬಾಡಿಗೆಯೆಷ್ಟು? + +ಈ ರೀತಿಯಾಗಿ ಮಾಧೋ ಹೇಳಿದ್ದೆಲ್ಲವೂ ಕೇಳಿ ಕೇಳಿ ತಾನು ಹೆಡ್ ಕಾನ್ಸ್ ಟೇಬಲ್ಲನ ಹೆಂಡತಿಯೇನೋ ಅನ್ನುವ ಭ್ರಮೆ ಆವರಿಸಿತ್ತು. ಮಾಧೋ ಅವಳ ರೂಮನ್ನು ಒಪ್ಪ ಮಾಡಿ, ಅವಳ ಮಂಚದಲ್ಲಿ ತಲೆಯನ್ನಿಡುವ ಗೋಡೆಯಲ್ಲಿ ನೇತುಹಾಕಿದ್ದ ಕಾಮಶಾಸ್ತ್ರದ ಭಂಗಿಗಳ ಫೋಟೋಗಳನ್ನೆಲ್ಲ ಹರಿದು ಹಾಕಿದ್ದ. ಅವನು ಹೇಳಿದ್ದ ‘ಸೌಗಂಧಿ, ನೀನು ಆ ರೀತಿಯಾದ ಫೋಟೋಗಳನ್ನು ನೇತುಹಾಕಲು ನಾನು ಬಿಡುವುದಿಲ್ಲ. ಮತ್ತು ಈ ನೀರಿನ ಹೂಜಿ ನೋಡು, ಅದೆಷ್ಟು ಕೊಳಕಾಗಿದೆ! ಮತ್ತು ಈ ಚಿಂದಿ, ಈ ಚಿಂದಿಗಳು – ಅಬ್ಬ ಎಷ್ಟು ದುರ್ನಾತ ಬೀರುತ್ತಿವೆ! ಅವನ್ನು ಹೊರಕ್ಕೆಸಿ. ಮತ್ತು ನಿನ್ನ ಕೂದಲಿಗೆ ಅದೇನು ಮಾಡಿಕೊಂಡಿದ್ದೀಯ? ಮತ್ತು ….’ ಮಾಧೋ ಮತ್ತು ಸೌಗಂಧಿ ಮೂರು ಸುದೀರ್ಘ ಘಂಟೆಗಳ ಕಾಲ ಮಾತಾಡಿದ ನಂತರ ಸೌಗಂಧಿಗೆ ಅವನು ಎಷ್ಟೋ ವರ್ಷಗಳಿಂದ ಪರಿಚಯವಿರುವಂತೆ ಅನ್ನಿಸಿಬಿಟ್ಟಿತ್ತು. ಯಾರೂ ಅದುವರೆಗೆ ಆ ರೂಮಿನ ಗಬ್ಬುನಾತದ ಚಿಂದಿಗಳ ಬಗ್ಗೆ, ಕೊಳಕು ಹೂಜಿಯ ಬಗ್ಗೆ, ಉದ್ರೇಕಗೊಳಿಸುವ ಚಿತ್ರಗಳ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಹಾಗೆ ನೋಡಿದರೆ ಅವಳ ರೂಮನ್ನು ಮನೆ ಎಂದು ಯಾರೂ ಪರಿಗಣಿಸಿಯೇ ಇರಲಿಲ್ಲ. ಗಂಡಸರು ಬರುತ್ತಿದ್ದರು, ಹೋಗುತ್ತಿದ್ದರು, ಯಾರೂ ಆ ಹಾಸಿಗೆಯ ಕೊಳಕನ್ನು ಸಹಾ ಗಮನಿಸುತ್ತಿರಲಿಲ್ಲ. ‘ನಿನ್ನ ಮೂಗು ನೋಡು ಅದೆಷ್ಟು ಕೆಂಪಗಾಗಿದೆ! ನೆಗಡಿಯಾಗದಿದ್ದರೆ ಸಾಕು. ಇರು ಹೋಗಿ ಏನಾದರೂ ಮಾತ್ರೆ ತರುತ್ತೇನೆ’ ಎಂದು ಯಾರೂ ಹೇಳಿರಲಿಲ್ಲ. ಮಾಧೋ ನಿಜಕ್ಕೂ ಒಳ್ಳೆಯ ಮನುಷ್ಯನಾಗಿದ್ದ. ಅವನು ಹೇಳಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ. ಎಷ್ಟು ಖಡಾಖಂಡಿತವಾಗಿ ಅವಳನ್ನು ಬಯ್ದಿದ್ದ! ಅವಳಿಗೆ ನಿಜಕ್ಕೂ ಅವನ ಅವಶ್ಯಕತೆ ಅನ್ನಿಸಿತ್ತು ಮತ್ತು ಹಾಗೆ ಶುರುವಾಗಿತ್ತು ಅವರಿಬ್ಬರ ಸಂಬಂಧ. + +ಮಾಧೋ ತಿಂಗಳಿಗೊಮ್ಮೆ ಪುಣೆಯಿಂದ ಬರುತ್ತಿದ್ದ ಮತ್ತು ಹಿಂತಿರುಗುವ ಮೊದಲು ಯಾವಾಗಲೂ ಹೇಳುತ್ತಿದ್ದ ‘ನೋಡು ಸುಗಂಧಿ, ಹೇಳುತ್ತೇನೆ ಕೇಳು, ನೀನೇನಾದರೂ ನಿನ್ನ ಈ ದಂಧೆಯನ್ನು ಮುಂದುವರೆಸಿದ್ದೇ ಆದರೆ ಅಲ್ಲಿಗೆ ನಮ್ಮ ಸಂಬಂಧ ಮುಗಿಯಿತೆಂದು ತಿಳಿ. ಒಬ್ಬನೇ ಒಬ್ಬ ಗಂಡಸನ್ನು ಇಲ್ಲಿಗೆ ಬಂದಿದ್ದ ಎಂದು ತಿಳಿಯಿತಾದರೆ, ನಿನ್ನ ಕೂದಲನ್ನು ಹಿಡಿದೆಳೆದು ಆಚೆ ದಬ್ಬುತ್ತೇನೆ. ನಾನು ಪುಣೆ ತಲುಪಿದ ಕೂಡಲೇ ನಿನ್ನ ಈ ತಿಂಗಳ ಖರ್ಚಿನ ಹಣವನ್ನು ಮನಿ ಆರ್ಡರ್ ಮಾಡುತ್ತೇನೆ. ನೆನಪಿಸು, ಅಂದಹಾಗೆ ಈ ರೂಮಿನ ಬಾಡಿಗೆ ಎಷ್ಟು?’ + +ಆದರೆ ಮಾಧೋ ಯಾವತ್ತೂ ಹಣವನ್ನು ಕಳಿಸಲೂ ಇಲ್ಲ ಮತ್ತು ಸೌಗಂಧಿ ಎಂದೂ ಅವಳ ದಂಧೆಯನ್ನು ನಿಲ್ಲಿಸಲೂ ಇಲ್ಲ. ಅಲ್ಲಿ ಏನು ನಡೆಯುತ್ತಿದೆ ಎನ್ನುವುದು ಇಬ್ಬರಿಗೂ ತಿಳಿದಿತ್ತು. ಸೌಗಂಧಿ ಮಾಧೋನನ್ನು ‘ಅದೇನು ನೀನು ಕೊಚ್ಚಿಕೊಳ್ಳುವುದು? ಯಾವತ್ತು ನೀನು ನನಗೆಂದು ಏನಾದರೂ ಕೊಟ್ಟಿರುವೆ?’ ಎಂದು ಕೇಳಲಿಲ್ಲ ಮತ್ತು ಮಾಧೋ ಸೌಗಂಧಿಯನ್ನು ‘ಈ ಹಣ ಎಲ್ಲಿಂದ ಬಂತು? ನಾನಿದನ್ನು ನಿನಗೆ ಕೊಡಲಿಲ್ಲ ಅಲ್ಲವೇ’ ಎಂದು ಕೇಳಲಿಲ್ಲ. ಇಬ್ಬರೂ ಸುಳ್ಳಾಡುತ್ತಿದ್ದರು, ಇಬ್ಬರೂ ಮುಖವಾಡ ತೊಟ್ಟಿದ್ದರು. ಆದರೂ ಚಿನ್ನದ ಒಡವೆ ಕೊಳ್ಳುವ ಶಕ್ತಿಯಿಲ್ಲದವರು ಗಿಲೀಟು ಒಡವೆಯಲ್ಲೇ ತೃಪ್ತಿ ಪಡುವಂತೆ ಸೌಗಂಧಿಯೂ ಸಂಭ್ರಮ ಪಡುತ್ತಿದ್ದಳು. + +ತುಂಬ ಸುಸ್ತಾಗಿದ್ದ ಸೌಗಂಧಿ ದೀಪವನ್ನೂ ಆರಿಸದೇ ಹಾಗೆಯೇ ಮಲಗಿಬಿಟ್ಟಿದ್ದಳು. ತಲೆಯ ಮೇಲೆ ತೂಗುಬಿದ್ದಿದ್ದ ದೀಪದ ಪ್ರಖರ ಬೆಳಕು ಸಹಾ ಅವಳನ್ನು ಎಚ್ಚರಗೊಳಿಸಲು ಶಕ್ಯವಾಗಿರಲಿಲ್ಲ. + +ಬಾಗಿಲು ಬಡಿದ ಸದ್ದು ಕೇಳಿಸಿತು. ನಡುರಾತ್ರಿಯ ಎರಡು ಘಂಟೆಯಲ್ಲಿ ಯಾರು ಬಂದಿರಬಹುದು? ಆ ಬಾಗಿಲ ಬಡಿತವು ನೊಣದ ಗುಯ್ಗುಡುವ ಸದ್ದಿನಂತೆ, ಸಣ್ಣಗೆ ಸೌಗಂಧಿಯ ಕಿವಿಯನ್ನು ತಲುಪುತ್ತಿತ್ತು. ಬರಬರುತ್ತಾ ಆ ಬಡಿತ ಜೋರಾದಾಗ ಅವಳು ಎಚ್ಚರಗೊಂಡಳು. ಅವಳ ಬಾಯಿಯ ತುಂಬ ಹಿಂದಿನ ರಾತ್ರಿ ಕುಡಿದ ಸಾರಾಯಿ ಮತ್ತು ಹಲ್ಲಿನ ನಡುವೆ ಸಿಕ್ಕಿಕೊಂಡ ಮೀನಿನ ತುಂಡುಗಳಿಂದ ಉಂಟಾದ ಕಹಿ ಮತ್ತು ಅಂಟಾದ ಜೊಲ್ಲು ತುಂಬಿತ್ತು. ಲುಂಗಿಯ ಅಂಚಿನಿಂದ ಜೊಲ್ಲನ್ನು ತೊಡೆದು ಕಣ್ಣುಜ್ಜಿಕೊಂಡಳು. ಆಗ ಒಬ್ಬಳೇ ಇರುವುದು ಅರಿವಿಗೆ ಬಂತು. ಅವಳು ಮಂಚದಡಿ ಬಗ್ಗಿ ನೋಡಿದಳು, ಅವಳ ನಾಯಿ ಚಪ್ಪಲಿಗಳ ಮೇಲೊರಗಿ ಸುಖನಿದ್ರೆಯಲ್ಲಿತ್ತು. ಅವಳು ತಲೆಯೆತ್ತಿ ತನ್ನದೇ ರೆಕ್ಕೆಗಳ ನಡುವೆ ತಲೆ ಹುದುಗಿಸಿ ನಿದ್ರಿಸುತ್ತಿದ್ದ ಗಿಣಿಯಿದ್ದ ಪಂಜರವನ್ನು ನೋಡಿದಳು. + +ಯಾರೋ ಬಾಗಿಲು ಬಡಿಯುತ್ತಲೇ ಇದ್ದಾರೆ. ಮಿಡಿಯುತ್ತಿದ್ದ ತಲೆಯಲ್ಲಿಯೇ ಸೌಗಂಧಿ ಎದ್ದಳು. ಹೂಜಿಯಿಂದ ಒಂದು ಲೋಟದ ತುಂಬ ನೀರು ಮೊಗೆದು ಬಾಯಿ ಮುಕ್ಕಳಿಸಿದಳು. ಮತ್ತೊಂದು ಲೋಟದ ತುಂಬ ನೀರು ಮೊಗೆದು ಕುಡಿದು ಬಾಗಿಲನ್ನು ತೆರೆದಳು. + +‘ರಾಮ್ ಲಾಲ್?’ + +ರಾಮ್ ಲಾಲ್ ಬಾಗಿಲು ಬಡಿದು ಬಡಿದು ಸುಸ್ತಾಗಿದ್ದವ ‘ನೀನು ಸತ್ತಿದ್ದೀಯೋ ಹೇಗೆ’ ಎಂದು ಸಿಟ್ಟಿನಿಂದ ‘ನಾನು ಈ ಸರಿರಾತ್ರಿಯಲ್ಲಿ ಮೂರ್ಖನಂತೆ ಬಾಗಿಲು ಬಡಿಯುತ್ತಲೇ ಇರುವಾಗ ನೀನು ಅದೆಲ್ಲಿ ಹಾಳಾಗಿ ಹೋಗಿದ್ದೆ?’ ಅಂದವನೇ ಮತ್ತೆ ದನಿ ತಗ್ಗಿಸಿ ‘ಯಾರಾದರೂ ಇದ್ದಾರಾ ಒಳಗೆ?’ ಎಂದು ಕೇಳಿದ. + +ಸೌಗಂಧಿ ಇಲ್ಲವೆನ್ನುವಂತೆ ತಲೆಯಾಡಿಸುತ್ತಲೇ ರಾಮ್ ಲಾಲ್ ದನಿಯೆತ್ತರಿಸಿ ‘ಮತ್ತೆ ಬಾಗಿಲೇಕೆ ತೆಗೆಯಲಿಲ್ಲ? ಆಹ್! ಇದೆಲ್ಲ ಅತಿಯಾಯಿತು ಯಾಕೋ. ಅದೆಂಥ ನಿದ್ರೆ ನಿನ್ನದು? ಹೀಗೆ ಒಬ್ಬೊಬ್ಬಳನ್ನು ಎಬ್ಬಿಸಲೂ ಎರಡೆರಡು ಘಂಟೆಕಾಲ ತಲೆ ಚೆಚ್ಚಿಕೊಂಡು ಸಾಯುತ್ತಿದ್ದರೆ ನಾನು ವ್ಯವಹಾರ ನಡೆಸಿದಂತೆಯೇ ಇದೆ. ಅದೇನು ಹಾಗೆ ದುರುಗುಟ್ಟಿ ನೋಡುತ್ತಿರುವೆ? ಬೇಗ, ಆ ಲುಂಗಿಯನ್ನು ತೆಗೆದು ಹೂಗಳ ಡಿಸೈನಿನ ನಿನ್ನ ಸೀರೆಯನ್ನುಟ್ಟು, ಮುಖಕ್ಕೆ ಪೌಡರ್ ಹಚ್ಚಿ ಈ ಕೂಡಲೇ ನನ್ನೊಡನೆ ಹೊರಡು. ಒಬ್ಬ ಶ್ರೀಮಂತ ಕಾರಿನಲ್ಲಿ ನಿನಗಾಗಿ ಕಾಯುತ್ತಿದ್ದಾನೆ. ಬೇಗ!’ + +ಸೌಗಂಧಿ ಆರಾಮ ಕುರ್ಚಿಯಲ್ಲಿ ಕುಳಿತಳು ಮತ್ತು ರಾಮ್ ಲಾಲ್ ಒಳಗೆ ಬಂದವನೇ ಕನ್ನಡಿಯೆದುರು ನಿಂತು ತಲೆ ಬಾಚಿಕೊಳ್ಳಲಾರಂಭಿಸಿದ. ಸೌಗಂಧಿ ಸ್ಟೂಲಿನ ಹತ್ತಿರ ಹೋಗಿ, ಅಲ್ಲಿದ್ದ ಮುಲಾಮಿನ ಬಾಟಲನ್ನೆತ್ತಿಕೊಂಡು, ಮುಚ್ಚಳ ತೆರೆದು ‘ರಾಮ್ ಲಾಲ್, ನನಗೆ ಇವತ್ತು ಮನಸ್ಸಿಲ್ಲ’ ಎಂದಳು. + +ರಾಮ್ ಲಾಲ್ ಬಾಚಣಿಕೆಯನ್ನು ಮತ್ತೆ ಗೂಡಿನಲ್ಲಿ ಇಡುತ್ತಾ, ಅವಳ ಕಡೆ ತಿರುಗಿ ‘ಹಾಗಂತ ಮೊದಲೇ ಹೇಳಲೇನಾಗಿತ್ತು?’ ಎಂದ. + +ಸೌಗಂಧಿ ಹಣೆ ಮತ್ತು…. ಮುಲಾಮು ತಿಕ್ಕುತ್ತಾ ‘ಹಾಗಲ್ಲ ರಾಮ್ ಲಾಲ್, ನನಗೀಗ ಏನೋ ಸರಿಯಿಲ್ಲ. ತುಂಬ ಕುಡಿದುಬಿಟ್ಟೆ ಅನ್ನಿಸುತ್ತದೆ’. + +ರಾಮ್ ಲಾಲ್ ಆಸೆಬುರುಕ ದನಿಯಲ್ಲಿ ‘ಇನ್ನೂ ಉಳಿದಿದೆಯಾ? ಇದ್ದರೆ ನನಗೆ ಬೇಕು’ ಎಂದ.ಸೌಗಂಧಿ ಮುಲಾಮಿನ ಬಾಟಲನ್ನು ಕೆಳಗಿಡುತ್ತಾ ‘ಇದ್ದಬದ್ದದ್ದನ್ನೆಲ್ಲ ಕುಡಿಯದಿದ್ದರೆ ಈ ತಲೆನೋವು ಯಾಕೆ ಬರುತ್ತಿತ್ತು ನನಗೆ? ರಾಮ್ ಲಾಲ್, ಒಂದು ಕೆಲಸ ಮಾಡು, ಆ ಮನುಷ್ಯನನ್ನು ಇಲ್ಲಿಗೇ ಕರೆದುಕೊಂಡು ಬಾ’ ಎಂದಳು. + +‘ಇಲ್ಲ, ಇಲ್ಲ, ಅವನಿಲ್ಲಿಗೆಲ್ಲ ಬರುವುದಿಲ್ಲ. ಅವನೊಬ್ಬ ತುಂಬ ಸಭ್ಯ ಮನುಷ್ಯ. ಈ ಓಣಿಯಲ್ಲಿ ಕಾರಿನಲ್ಲಿ ಬರಲೇ ಆತಂಕ ವ್ಯಕ್ತಪಡಿಸುತ್ತಿದ್ದ. ಸಿದ್ಧವಾಗಿ ಬಾ, ಆ ನಂತರ ಸರಿ ಹೋಗುತ್ತೀಯೆ’ ಎಂದ. + +ಇಷ್ಟೆಲ್ಲ ಕಷ್ಟ ಬರೀ ಏಳೂವರೆ ರೂಪಾಯಿಗೆ? ಸೌಗಂಧಿಗೆ ತಲೆ ನೋವಿದ್ದಾಗ ಕೆಲಸ ಮಾಡಲು ಮನಸ್ಸೇ ಆಗುತ್ತಿರಲಿಲ್ಲ. ಆದರೆ ಈಗ ಅವಳಿಗೆ ತುರ್ತಾಗಿ ಹಣದ ಅವಶ್ಯಕತೆಯಿತ್ತು. ಪಕ್ಕದ ಮನೆಯ ಮದರಾಸಿ ಹೆಂಗಸಿನ ಗಂಡ ಕಾರು ಅಪಘಾತದಲ್ಲಿ ಸತ್ತುಹೋಗಿದ್ದ. ಈಗ ಆ ಹೆಂಗಸು, ತನ್ನ ಪುಟ್ಟ ಮಗಳೊಡನೆ ಮದರಾಸಿಗೆ ಹೋಗಬೇಕಿತ್ತು. ಆದರೆ ಪ್ರಯಾಣಕ್ಕೆ ಬೇಕಿದ್ದಷ್ಟು ಹಣ ಅವಳ ಬಳಿಯಿರಲಿಲ್ಲ. ಅವಳಿಗೆ ತುಂಬ ಗಾಭರಿಯಾಗಿತ್ತು. ಹಿಂದಿನ ದಿನ ತಾನೆ ಸೌಗಂಧಿ ಅವಳಿಗೆ ಆಶ್ವಾಸನೆ ನೀಡಿದ್ದಳು. ‘ಯೋಚಿಸಬೇಡ. ಪುಣೆಯಿಂದ ನನ್ನ ಬಾಯ್ ಫ಼್ರೆಂಡ್ ಬರುವವನಿದ್ದಾನೆ. ಅವನಿಂದ ಹಣ ಪಡೆದು ನಿನಗೆ ತಿಕೀಟು ಮಾಡಿಸುತ್ತೇನೆ’ ಮಾಧೋ ನಿಜಕ್ಕೂ ಬರುವವನಿದ್ದ, ಆದರೆ ಹಣದ ವ್ಯವಸ್ಥೆ ಸೌಗಂಧಿಯೇ ಮಾಡಿಕೊಳ್ಳಬೇಕಿತ್ತು. ಇದೆಲ್ಲ ಮನಸ್ಸಿನಲ್ಲಿ ಇದ್ದುದರಿಂದ, ಅವಳು ಎದ್ದು ಹೂಗಳ ಸೀರೆಯುಟ್ಟು ಸಿದ್ಧಳಾಗಿ ಕೆನ್ನೆಗಿಷ್ಟು ರೋಜು ಬಳಿದಳು. ಮತ್ತೊಂದು ಲೋಟ ನೀರು ಕುಡಿದು ರಾಮ್ ಲಾಲನ ಜೊತೆ ಹೊರಟಳು. + +ಸಣ್ಣ ಊರಿನ ಲೆಕ್ಕಕ್ಕೆ ಸ್ವಲ್ಪ ದೊಡ್ಡದೇ ಅನ್ನಿಸುವಂತಿದ್ದ ಮಾರ್ಕೆಟ್ಟಿನ ಓಣಿ ಮೌನ ಹೊದ್ದು ಮಲಗಿತ್ತು. ಬೀದಿದೀಪದ ಬೆಳಕು ಕ್ಷೀಣವಾಗಿತ್ತು. ಓಣಿಯ ಆ ತುದಿಯಲ್ಲಿ ನಿಂತಿದ್ದ ಕಾರನ್ನು ಕಂಡಳು, ಆ ಕಡುಕಪ್ಪು ರಾತ್ರಿಯ ನಿಗೂಢ ಮೌನದಲ್ಲಿ ನಿಂತಿದ್ದ ಕಪ್ಪು ಕಾರು ಬರಿಯ ನೆರಳಿನಂತೆ ಭಾಸವಾಯಿತು. ಸೌಗಂಧಿಗೆ ಅವಳ ತಲೆನೋವು ಇಡಿಯ ವಾತಾವರಣವನ್ನೆಲ್ಲ ಆವರಿಸಿರುವ ಹಾಗೆ ಭಾಸವಾಗಿ, ಅಲ್ಲಿದ್ದ ಗಾಳಿಯೂ ಬ್ರಾಂಡಿ ಮತ್ತು ಚಂದ್ರನ ಬೆಳಕಿನಲ್ಲಿ ಗಾಳಿಯೂ ಮತ್ತೇರಿರುವ ಹಾಗೆ ಅನ್ನಿಸಿತು. + + + +ರಾಮ್ ಲಾಲ್ ಮುಂದೆ ನಡೆದು ಕಾರಿನಲ್ಲಿದ್ದವರಿಗೆ ಏನೋ ಹೇಳಿದ. ಸೌಗಂಧಿಯೂ ಅಷ್ಟರಲ್ಲಿ ಕಾರನ್ನು ಸಮೀಪಿಸಿದ್ದಳು. ರಾಮ್ ಲಾಲ್ ತುಸು ಬದಿಗೆ ಸರಿದು, ‘ಇಗೋ ಇವಳೇ! ತುಂಬ ಒಳ್ಳೆಯವಳು. ಈಗ ತಾನೆ ದಂಧೆ ಶುರು ಮಾಡಿದ್ದಾಳೆ’ ಎಂದವನೇ ಸೌಗಂಧಿಯ ಕಡೆ ತಿರುಗಿ ‘ಸೌಗಂಧಿ, ಇಲ್ಲಿ ಬಾ. ಬಾಸ್ ನಿನ್ನನ್ನು ನೋಡಬೇಕಂತೆ’ ಎಂದ. + +ಸೀರೆಯಲ್ಲಿ ಬೆರಳುಗಳಿಂದ ಸ್ವಲ್ಪ ಮೇಲಕ್ಕೆ ಎತ್ತಿಹಿಡಿದು, ಕಾರಿನ ಮನುಷ್ಯ ಅವಳೆಡೆಗೆ ಬಿಡುತ್ತಿದ್ದ ಟಾರ್ಚಿನ ಬೆಳಕಿನಲ್ಲಿ ಮುಖ ಕಾಣುವಂತೆ ನಿಂತಳು. ಸೌಗಂಧಿಯ ನಿದ್ರೆಯಿಂದ ತುಂಬಿದ ಕಣ್ಣುಗಳೆಡೆ ಬೆಳಕು ಬಿದ್ದಕೂಡಲೇ ಅಲ್ಲಿದ್ದ ದೀಪ ಸಣ್ಣದೊಂದು ಕ್ಲಿಕ್ ಸದ್ದಿನಿಂದ ಆರಿಹೋಗಿ, ಕಾರಿನಲ್ಲಿದ್ದ ಮನುಷ್ಯ ‘ಯಕ್!’ ಅಂದಿದ್ದೇ ತಡ, ಕಾರಿನ ಇಂಜಿನ್ ಮತ್ತೆ ಜನ್ಮ ಪಡೆದು, ಕಾರು ಓಣಿಯುದ್ದಕ್ಕೂ ಸಾಗಿ ಕಣ್ಮರೆಯಾಯಿತು. + +ಸೌಗಂಧಿಗೆ ಪ್ರತಿಕ್ರಿಯೆ ತೋರಲೂ ಸಮಯವಿರಲಿಲ್ಲ. ಆ ಮನುಷ್ಯನ ಟಾರ್ಚಿನ ಬೆಳಕು ಇನ್ನೂ ಕಣ್ಣುಗಳಿಗೆ ಚುಚ್ಚುತ್ತಿದೆಯೇನೋ ಅನ್ನಿಸುತ್ತಿದ್ದು, ಆ ಮನುಷ್ಯನ ಮುಖವನ್ನೂ ನೋಡಿರಲಿಲ್ಲ. ಏನಾಗಿತ್ತು? ಅವಳ ಕಿವಿಗಳಲ್ಲಿ ಈಗಲೂ ಮೊರೆಯುತ್ತಿದ್ದ ಆ ‘ಯಕ್’ ನ ಅರ್ಥವೇನು? + +‘ಅವನಿಗೆ ಬಹುಶಃ ನೀನು ಹಿಡಿಸಲಿಲ್ಲವೆನ್ನಿಸುತ್ತದೆ’ ರಾಮ್ ಲಾಲ್ ಹೇಳಿದ. ‘ಸರಿ, ನಾನಿನ್ನು ಹೊರಡುತ್ತೇನೆ. ಏನೂ ಉಪಯೋಗವಿಲ್ಲದೇ ಎರಡು ಘಂಟೆ ಕಾಲ ವ್ಯರ್ಥವಾಯಿತು’. + +ಸೌಗಂಧಿಗೆ ಆ ಕ್ಷಣದಲ್ಲಿ ಏನಾದರೂ ತೀವ್ರವಾದದ್ದನ್ನು ಮಾಡಬೇಕು ಅನ್ನಿಸಿಬಿಟ್ಟಿತು. ಆ ಕಾರು ಎಲ್ಲಿ? ಆ ಮನುಷ್ಯ? ಓಹ್! ಆ ಯಕ್ ನ ಅರ್ಥ ನಾನು ಹಿಡಿಸಲಿಲ್ಲವೆಂದೇ? ಬಾಸ್ಟರ್ಡ್… + +ಕಾರು ಹೊರಟುಹೋಗಿ ಆಗಿತ್ತು. ಹಿಂಬದಿಯ ಎರಡು ಕೆಂಪು ಪಾರ್ಕಿಂಗ್ ದೀಪಗಳು, ನಡುರಾತ್ರಿಯ ಖಾಲಿ ಮಾರ್ಕೆಟ್ಟಿನ ಓಣಿಯಲ್ಲಿ ಮಂಕಾಗುತ್ತಾ ಸಾಗುತ್ತಿತ್ತು. ಆದರೆ ಆ ಇರಿಯುವ ‘ಯಕ್’ ಉದ್ಗಾರ ಅವಳ ಎದೆಯನ್ನು ಸೀಳಿ ನುಗ್ಗುತ್ತಿತ್ತು. ಅವಳಿಗೆ ‘ಏಯ್, ಕಿತ್ತೋಗಿರೋ ನನ್ಮಗನೇ, ಕಾರು ನಿಲ್ಲಿಸು! ಒಂದೇ ಒಂದು ನಿಮಿಷ ಮತ್ತೆ ಬಾ’ ಎಂದು ಕೂಗಬೇಕು ಅನ್ನಿಸುತ್ತಿತ್ತು. ಅದರೆ ಆ ಕಾರು ತುಂಬ ದೂರ ಹೋಗಿಯಾಗಿತ್ತು. + +ಅವಳು ನಿರ್ಜನವಾಗಿದ್ದ ಆ ಮಾರ್ಕೆಟ್ಟಿನಲ್ಲಿ ನಿಂತೇ ಇದ್ದಳು. ಗಾಳಿಗೆ ಪಟಪಟಿಸುತ್ತಿದ್ದ ಅವಳ ಆ ಸೀರೆ ‘ಯಕ್! ಯಕ್!’ ಎಂದು ಹೇಳುತ್ತಿರುವ ಹಾಗೆ ಅನ್ನಿಸಿತು. ಆ ಉದ್ಗಾರವನ್ನು ಅವಳೆಷ್ಟು ದ್ವೇಷಿಸುತ್ತಿದ್ದಳು! ಉಟ್ಟ ಸೀರೆಯನ್ನು ತುಂಡುತುಂಡು ಮಾಡಿ ಗಾಳಿಗೆ ಹಾರಬಿಡಬೇಕು ಅನ್ನಿಸಲಾರಂಭಿಸಿತು. + +ಇಲ್ಲಿಗೆ ಬರುವ ಮೊದಲು ಆಕರ್ಷಕವಾಗಿ ಕಾಣಲೆಂದೇ ಪೌಡರ್ ಮತ್ತು ಲಿಪ್ಸ್ಟಿಕ್ ಮೆತ್ತಿದ್ದು ನೆನಪಾಗಿ ಅವಮಾನವಾದಂತೆನಿ ಬೆವರಲಾರಂಭಿಸಿದಳು. ತನ್ನ ಕಾರ್ಯವನ್ನು ಸಮರ್ಥಿಸಿಕೊಳ್ಳುವಂತೆ ‘ನಾನೇನೂ ಆ ಹಂದಿಗೋಸ್ಕರ ಅಲಂಕಾರ ಮಾಡಿಕೊಳ್ಳಲಿಲ್ಲ! ಇದು ನನ್ನ ಎಂದಿನ ಅಭ್ಯಾಸ, ನನ್ನೊಬ್ಬಳದ್ದೇ ಅಲ್ಲ, ಎಲ್ಲರದ್ದೂ ಇದೇ ಅಭ್ಯಾಸ. ಆದರೆ ಈ ನಡುರಾತ್ರಿಯ ಎರಡು ಘಂಟೆ, ರಾಮ್ ಲಾಲ್, ಈ ಮಾರ್ಕೆಟ್, ಆ ಕಾರು ಮತ್ತು ಆ ಟಾರ್ಚಿನ ಬೆಳಕು! ಮತ್ತೆ ಮತ್ತೆ ನೆನಪಾಗಿ ಸುತ್ತಲಿದ್ದ ಮಿಣುಕು ಬೀದಿದೀಪಗಳ ಬೆಳಕಿನಲ್ಲಿ ಮತ್ತೆ ಆ ಕಾರಿನ ಇಂಜಿನ್ನಿನ ರೊಯ್ ಸದ್ದು ಕಿವಿಯಲ್ಲಿ ಮೊರೆಯಿತು. + +ಅವಳು ಬೆವರಲಾರಂಭಿಸಿದಳು ಮತ್ತು ಅವಳ ಹಣೆಗೆ ಮೆತ್ತಿದ್ದ ಮುಲಾಮು ಚರ್ಮದೊಳಗೆ ಇಳಿಯಲಾರಂಭಿಸಿತು. ಅವಳ ದೇಹವೇ ಅವಳಿಗೆ ಅಪರಿಚಿತ ಅನ್ನಿಸಿ, ಆ ಹಣೆ ತನಗೆ ಸೇರಿದ್ದಲ್ಲವೇ ಅಲ್ಲ ಎನ್ನಿಸಲಾರಂಭಿಸಿತು. ಬೆವರಿದ ಮುಖಕ್ಕೆ ತಣ್ಣನೆಯ ಗಾಳಿ ಬಂದು ರಾಚಿದ ಕೂಡಲೇ ಯಾರೋ ಸ್ಯಾಟಿನ್ ಬಟ್ಟೆಯ ತುಂಡೊಂದನ್ನು ಹಣೆಯ ಮೇಲೆ ಇರಿಸಿದಂತೆ ಅನ್ನಿಸಿತು ಸೌಗಂಧಿಗೆ. ಅವಳ ತಲೆ ಇನ್ನೂ ನೋವಿನಿಂದ ಮಿಡಿಯುತ್ತಿತ್ತು. ಆದರೆ ಅವಳ ಯೋಚನೆಗಳ ಗದ್ದಲವು ಈ ನೋವನ್ನು ಮರೆಮಾಚಿತ್ತು. ಸೌಗಂಧಿಗೆ ಆ ನೋವು ಇಡೀ ದೇಹವನ್ನೇ ಸುತ್ತುವರೆಯಲಿ ಎನ್ನಿಸಿತು – ತಲೆಯಲ್ಲಿ ನೋವು, ಕಾಲಿನಲ್ಲಿ ನೋವು, ಹೊಟ್ಟೆಯಲ್ಲಿ ನೋವು, ಕೈಗಳಲ್ಲಿ ನೋವು ಹರಡಿ ಯೋಚಿಸಲೂ ಅಸಾಧ್ಯವಾದ ಸ್ಥಿತಿ ತಲುಪಬೇಕು ಅನ್ನಿಸಿತು ಅವಳಿಗೆ. ಎದೆಯೊಳಗೆ ಏನೋ ವಿಚಿತ್ರವಾದ ತಳಮಳ ಆದಂತೆ ಅನ್ನಿಸಿತು. ಅದು ನೋವೇ ಇರಬಹುದೇ? ಹೃದಯ ಒಂದು ಸಲ ಕಿವುಚಿದಂತಾಗಿ ಮತ್ತೆ ಯಥಾಸ್ಥಿತಿ ತಲುಪಿತು. ಏನದು? ಥು! ಏನದು? ಆ ‘ಯಕ್’ ಅವಳ ಹೃದಯವನ್ನೇ ಅಲ್ಲಾಡಿಸಿಬಿಟ್ಟಿತ್ತು. + +ಸೌಗಂಧಿ ಮನೆಯ ಕಡೆ ಹೆಜ್ಜೆ ಹಾಕಿದಳು. ಇದ್ದಕ್ಕಿದ್ದಂತೆ ಏನೋ ನೆನಪಾಗಿ ಅಲ್ಲೇ ನಿಂತಳು. ‘ರಾಮ್ ಲಾಲ್ ಏನು ಹೇಳಿದ್ದ? ನಾನು ಕುರೂಪಿ ಎಂದಲ್ಲವೇ? ಆದರೆ, ಉಹುಂ, ಇಲ್ಲ ರಾಮ್ ಲಾಲ್ ಹಾಗೆ ಹೇಳಿರಲಿಲ್ಲ. ಅವನು ‘ಬಹುಶಃ ಅವನಿಗೆ ನೀನು ಇಷ್ಟವಾಗಿರಲಿಕ್ಕಿಲ್ಲ’ ಎಂದಿದ್ದನಷ್ಟೇ. ಅಂದರೆ…. ಬಹುಶಃ ಅವನಿಗೆ ನನ್ನ…. ಅವನಿಗೆ ನನ್ನ…. ರೂಪ ಇಷ್ಟವಾಗಿರದೇ ಹೋಗಿರಬಹುದಾ? ಅವನಿಗೆ ನಾನು ಕುರೂಪಿ ಎನ್ನಿಸಿರಲಿಕ್ಕೂ ಸಾಕು, ಅದರಲ್ಲೇನು? ಎಷ್ಟೋ ಗಂಡಸರೂ ಕುರೂಪಿಗಳಾಗಿರುವುದಿಲ್ಲವೇ? ಹಿಂದಿನ ಹುಣ್ಣಿಮೆಯ ದಿನ ಬಂದಿದ್ದ ಅವನು ನಿಜಕ್ಕೂ ಕೆಟ್ಟದಾಗಿದ್ದ. ಆದರೆ ನಾನು ಅವನನ್ನು ಕಂಡು ಅಸಹ್ಯದಿಂದ ಮೂಗು ಮುರಿದಿರಲಿಲ್ಲ! ನನ್ನ ಮೇಲೇರಿದಾಗ ಮನಸ್ಸು ಪ್ರತಿಭಟಿಸಿತ್ತಲ್ಲವೇ? ನುಗ್ಗುತ್ತಿದ್ದ ವಾಕರಿಕೆಯನ್ನು ಬಲವಂತವಾಗಿ ಅದುಮಿಟ್ಟಿರಲಿಲ್ಲವೇ? ಆದರೆ ಸೌಗಂಧಿ, ನೀನು ಅವನನ್ನು ಕಂಡು ಒದ್ದಿರಲಿಲ್ಲ, ಕಿರುಚಿಕೊಂಡಿರಲಿಲ್ಲ. ಅವನು ಬೇಡವೆಂದು ವಾಪಸ್ ಕಳಿಸಿರಲಿಲ್ಲ. ಈ ಕಾರಿನಲ್ಲಿದ್ದ ಶ್ರೀಮಂತನ ಹಾಗೆ ಮುಖದೆದುರಿಗೇ ಉಗಿದಿರಲಿಲ್ಲ. ‘ಯಕ್!!’ ಏನಿರಬಹುದು ಆ ಯಕ್ ನ ಅರ್ಥ! + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +1) ಅಬ್ಬ ಎಂಥ ಕೆಟ್ಟ ಹಾಸ್ಯ! ಇವಳನ್ನು ಹುಟ್ಟಿಸಿದ ಅಮ್ಮನೂ ಇವಳನ್ನು ಅರೆಘಳಿಗೆ ನಿಂತು ನೋಡಿರಲಾರಳು. + +2) ಈ ನಾಯಿ ನನ್ನ ಬೂಟು ತಿಕ್ಕಲು ಲಾಯಕ್ಕಷ್ಟೇ. + +3) ರಾಮ್ ಲಾಲ್, ಈ ವಿಚಿತ್ರಪ್ರಾಣಿಯನ್ನು ಅದೆಲ್ಲಿಂದ ಹುಡುಕಿ ತಂದೆ? + +4) ರಾಮ್ ಲಾಲ್, ಇವಳನ್ನೇನಾ ನೀನು ಎರ್ರಾ ಬಿರ್ರಿ ಹೊಗಳಿದ್ದು? ಇದಕ್ಕೆ ಹತ್ತು ರೂಪಾಯಿ ಕೊಡಬೇಕಾ?! ಇವಳ ಬದಲು ಯಾವುದೋ ಹಸುವಿನ ಮೇಲೆ ಹತ್ತುವುದು ವಾಸಿ. + +ಸೌಗಂಧಿ ತಲೆಯಿಂದ ಕಾಲ್ಬೆರಳಿನವರೆಗೂ ಕುದಿಯುತ್ತಿದ್ದಳು. ತನ್ನ ಮೇಲೆ ತಾನು ಸಿಟ್ಟು ಮಾಡಿಕೊಳ್ಳುತ್ತಿದ್ದಳು, ರಾಮ್ ಲಾಲನ ಮೇಲೆ ಕ್ರೋಧಗೊಳ್ಳುತ್ತಿದ್ದಳು. ಕೊನೆಗೆ ಅದೆಲ್ಲವನ್ನೂ ಬದಿಗೆ ಸರಿಸಿ, ಆ ಮನುಷ್ಯನ ಬಗ್ಗೆ ಯೋಚಿಸಲಾರಂಭಿಸಿದಳು. ದೇಹದ ಕಣಕಣವೂ ಅವನನ್ನು ಒಂದು ಸಲ…. ಒಂದೇ ಒಂದು ಸಲ ಕಾಣಲು ಬಯಸುತ್ತಿತ್ತು. ನಡೆದ ಎಲ್ಲ ಘಟನೆಗಳನ್ನೂ ಒಮ್ಮೆ ಪುನರಾವರ್ತನೆಯಾಗಲೆಂದು ಬಯಸಿದಳು…. ಒಂದೇ ಒಂದು ಬಾರಿ! ಆಗ ಆ ಘಟನೆ ಹೀಗಿರುತ್ತದೆ – ಅವಳು ಕಾರಿನೆಡೆಗೆ ನಿಧಾನವಾಗಿ ನಡೆಯುತ್ತಾಳೆ. ಟಾರ್ಚ್ ಅನ್ನು ಬೆಳಗಿಸುತ್ತಾ ಕೈಯೊಂದು ಕಾರಿನಿಂದ ಹೊರಗೆ ಚಾಚುತ್ತದೆ ಮತ್ತು ಅವಳ ಮುಖದ ಮೇಲೆ ಆ ಬೆಳಕು ಬೀಳುತ್ತದೆ. ಆ ಕೂಡಲೇ ಅವಳ ಕಿವಿಗೆ ‘ಯಕ್’ ಅನ್ನುವ ಶಬ್ಧ ಬೀಳುತ್ತದೆ. ಆದರೆ ಈ ಬಾರಿ ಅವಳು ಕಾಡು ಬೆಕ್ಕಿನಂತೆ ಅವನ ಮೇಲೆರಗಿ ಮುಖವನ್ನು ಪರಚುತ್ತಾಳೆ. ಅವಳ ಉದ್ದುದ್ದ ಉಗುರುಗಳಿಂದ ಅವನ ಕೆನ್ನೆ ಬಗೆಯುತ್ತಾಳೆ. ಕೂದಲು ಹಿಡಿದು ಅವನನ್ನು ಕಾರಿನಿಂದ ಹೊರಕ್ಕೆಳೆದು ಕರುಣೆಯ ಸುಳಿವೂ ಇಲ್ಲದೇ ಅವನನ್ನು ಸಿಕ್ಕಸಿಕ್ಕಲ್ಲಿ ಗುದ್ದಿಡುತ್ತಾಳೆ. ಆ ನಂತರ ಆಯಾಸವಾಗಿ ಹೋಗಿ, ಅಲ್ಲೇ ಕುಸಿದು ಅಳುತ್ತಾಳೆ. + +ಈ ಕಣ್ಣೀರಿನಲ್ಲಿ ಕೊನೆಗೊಳ್ಳುವ ಅಂತ್ಯವನ್ನು ಏಕೆ ಹಾಕಿದ್ದಳೆಂದರೆ ಈಗಾಗಲೇ ಅವಳ ಕಣ್ಣಲ್ಲಿ ಮೂರ್ನಾಲ್ಕು ಹನಿಗಳು ಮೂಡಿವೆ – ಅಷ್ಟು ಸಿಟ್ಟು ಮತ್ತು ಅಷ್ಟು ಅಸಹಾಯಕತೆ ಒಟ್ಟೊಟ್ಟಿಗೇ ಆವರಿಸಿದಂತೆನಿಸಿತು. ತನ್ನನ್ನೇ ತಾನು ಪ್ರಶ್ನಿಸಿಕೊಂಡಳು ‘ಯಾಕೆ ಅಳುತ್ತಿರುವುದು? ಏನಾಗಿದೆ ನಿನಗೆ?’ ಕಣ್ಣಿನಲ್ಲಿ ನೀರು ಇನ್ನೂ ಈಜುತ್ತಲೇ ಇತ್ತು. ಅವಳು ಕಣ್ಣು ಮಿಟುಕಿಸಿದ ಕೂಡಲೇ ರೆಪ್ಪೆಯೆಲ್ಲ ಒದ್ದೆಯಾಯಿತು ಮತ್ತು ತೇವವಾದ ಕಣ್ಣುಗಳಿಂದ ಸೌಗಂಧಿ ಆ ಕಾರು ಹೋದ ದಿಕ್ಕನ್ನೇ ನೋಡಿದಳು. + +ಇದ್ದಕ್ಕಿದ್ದಂತೆ ಅಲ್ಲೊಂದು ಸದ್ದು – ಪರ್, ಪರ್, ಪರ್…. ಎಲ್ಲಿಂದ ಆ ಸದ್ದು ಬರುತ್ತಿದೆಯೆಂದು ನೋಡಿದವಳಿಗೆ ಯಾರೂ ಕಾಣಿಸಲಿಲ್ಲ. ಆಗ ಅವಳಿಗದು ತನ್ನ ಜೋರಾದ ಎದೆಬಡಿತ, ಆ ಕಾರಿನ ಸದ್ದಲ್ಲ ಎಂದು ಗೊತ್ತಾಯಿತು. ಏನಾಗುತ್ತಿದೆ? ಸರಾಗವಾಗಿ ಬಡಿದುಕೊಳ್ಳುತ್ತಿದ್ದ ಎದೆ ಇದ್ದಕ್ಕಿದ್ದ ಹಾಗೆ ಅಷ್ಟು ಭಾರವಾಗಿ ಯಾಕೆ ಬಡಿದುಕೊಳ್ಳಲು ಪ್ರಾರಂಭಿಸಿತು? ಗೀರು ಬಿದ್ದ ಗ್ರಾಮಫೋನ್ ರೆಕಾರ್ಡ್ ನ ಮೇಲೆ ಮುಳ್ಳು ಸಿಕ್ಕಿಕೊಂಡು ಹಾಡಿದ್ದೇ ಹಾಡು – ‘ನಾನು ನಕ್ಷತ್ರಗಳನ್ನೆಣಿಸುತ್ತಲಿರುವಾಗ ರಾತ್ರಿ ಕಳೆದೇ ಹೋಗಿತ್ತು’ ಎನ್ನುವ ಹಾಡಿನಲ್ಲಿ ಒಂದೇ ಕಡೆಗೆ ಸಿಕ್ಕಿಬಿದ್ದು ‘ನಕ್ಷತ್ರ, ನಕ್ಷತ್ರ, ನಕ್ಷತ್ರ….’ ಎಂದು ಪುನರಾವರ್ತನೆಯಾಗುವಂತೆ ಆಯಿತು. + +ಆಕಾಶದ ತುಂಬ ಅಸಂಖ್ಯ ನಕ್ಷತ್ರಗಳಿದ್ದವು. ಸೌಗಂಧಿ ತಲೆಯೆತ್ತಿ ನೋಡಿ ಉದ್ಗರಿಸಿದಳು. ‘ಆಹ್! ಎಷ್ಟು ಚೆಂದ!’ ಎಂದು. ಬೇರೆಡೆಗೆ ಮನಸ್ಸು ಹೊರಳಿಸಿಕೊಂಡು ಮನಸ್ಸನ್ನು ಸಮಾಧಾನಗೊಳಿಸಲೆಂದು ನೋಡಿದರೆ, ಆ ನಕ್ಷತ್ರಗಳೇ ಅವಳಿಗೆ ಮರೆತಿದ್ದನ್ನು ನೆನಪಿಸುವಂತೆ ‘ನಕ್ಷತ್ರಗಳು ಸುಂದರ. ಆದರೆ ನೀನೇಷ್ಟು ಕುರೂಪಿ. ಆ ಮನುಷ್ಯ ನಿನ್ನನ್ನು ಅವಹೇಳನ ಮಾಡಿದ್ದು ಆಗಲೇ ಮರೆತೆಯಾ?’ ಎಂದು ಕೇಳಿದವು. + +ಆದರೆ ಸೌಗಂಧಿ ಕುರೂಪಿಯಾಗಿರಲಿಲ್ಲ. ಇತ್ತೀಚೆಗೆ ಕನ್ನಡಿಯೆದುರು ನಿಂತ ಎಲ್ಲ ಸಂಧರ್ಭಗಳನ್ನೂ ಮೆಲುಕು ಹಾಕಿದಳು. ಐದು ವರ್ಷದ ಕೆಳಗೆ ತಂದೆ-ತಾಯಿಯ ಜೊತೆ ಚಿಂತೆಯಿಲ್ಲದೇ ಇದ್ದಂತೆ ಈಗ ಇಲ್ಲವಾದರೂ, ಕುರೂಪಿ ಎನ್ನುವಂತೆ ಖಂಡಿತಾ ಇರಲಿಲ್ಲ. ನಿಜಕ್ಕೂ ಹೇಳಬೇಕೆಂದರೆ, ಗಂಡಸರು ಎವೆಯಿಕ್ಕದೇ ನೋಡುವ ಹೆಂಗಸರ ಗುಂಪಿಗೆ ಅವಳನ್ನು ಸೇರಿಸಬಹುದಾಗಿತ್ತು. ಗಂಡಸರು ಜೊಲ್ಲು ಸುರಿಸುವ ಎಲ್ಲ ದೇಹ ಸೌಂದರ್ಯವೂ ಅವಳಿಗಿತ್ತು ಮತ್ತು ಅವಳು ಚಿಕ್ಕ ವಯಸ್ಸಿನವಳಾಗಿದ್ದಳು ಮತ್ತು ಒಳ್ಳೆಯ ಫಿಗರ್ ಇತ್ತು! ಕೆಲವೊಮ್ಮೆ ಸ್ನಾನ ಮಾಡುವಾಗ, ಅವಳು ಖುಷಿಯಿಂದ ತನ್ನ ದುಂಡಾದ ದೃಢಕಾಲುಗಳನ್ನೇ ನೋಡಿಕೊಳ್ಳುತ್ತಿದ್ದಳು. ಅವಳಲ್ಲಿ ವಿನಯವಿತ್ತು, ಅವಳು ಸ್ನೇಹಮಯಿಯಾಗಿದ್ದಳು. ಅವಳದ್ದು ಕಾರುಣ್ಯಭರಿತ ಹೃದಯವಾಗಿತ್ತು… ಹಾಗಾಗಿ ಅಲ್ಲಿಯವರೆಗೆ ಬಂದ ಯಾವುದೇ ಗಿರಾಕಿಯನ್ನು ಅವಳು ನಿರಾಶೆಗೊಳಿಸಿರಲಿಲ್ಲ. + +ಹಿಂದಿನ ವರ್ಷ ಕ್ರಿಸ್ ಮಸ್ ಸಮಯದಲ್ಲಿ ಅವಳು ಗೋಲ್ ಪರ್ತಾದಲ್ಲಿದ್ದಾಗಿನ ದಿನಗಳನ್ನು ನೆನಪು ಮಾಡಿಕೊಂಡಳು. ಒಬ್ಬ ಸಣ್ಣ ವಯಸ್ಸಿನಾತ ಅಲ್ಲಿಯೇ ರಾತ್ರಿ ಕಳೆದು, ಮರುದಿನ ಹೊರಡುವ ಮುನ್ನ ಗೂಟಕ್ಕೆ ಸಿಕ್ಕಿಸಿದ್ದ ತನ್ನ ಕೋಟನ್ನು ತೆಗೆದುಕೊಳ್ಳಲು ಹೋದಾಗ ಅದರಲ್ಲಿದ್ದ ಪರ್ಸ್ ಕಾಣೆಯಾಗಿರುವುದು ಗಮನಕ್ಕೆ ಬಂದಿತ್ತು. ಸೌಗಂಧಿಯ ಮನೆಯ ಕೆಲಸದವಳು ಅದನ್ನು ಹಾರಿಸಿದ್ದಳು. ಆ ಮನುಷ್ಯ ತುಂಬ ದುಃಖಕ್ಕೊಳಗಾಗಿದ್ದ. ಆತ ರಜೆಗೆಂದು ಹೈದರಾಬಾದಿನಿಂದ ಬಂದಿದ್ದ ಮತ್ತು ಈಗ ವಾಪಸ್ ಹೋಗಲು ಅವನ ಬಳಿ ಹಣವೇ ಇರಲಿಲ್ಲ. ಸೌಗಂಧಿಗೂ ತುಂಬ ಪಾಪ ಅನ್ನಿಸಿ ಅವನು ಕೊಟ್ಟ ಹತ್ತು ರೂಪಾಯಿಯನ್ನು ಹಿಂತಿರುಗಿಸಿಬಿಟ್ಟಿದ್ದಳು. + +‘ನಾನು ಎಂದು, ಏನು ತಪ್ಪು ಮಾಡಿರುವೆ?’ ಸುತ್ತಲಿದ್ದ ಕತ್ತಲಾದ ಬೀದಿದೀಪಗಳನ್ನು, ಕಬ್ಬಿಣದ ವಿದ್ಯುತ್ ಕಂಬಗಳನ್ನು, ಫುಟ್ ಪಾತಿಗೆ ಹಾಕಿದ್ದ ಚೌಕಾಕಾರದ ಟೈಲ್ಸ್, ಜಲ್ಲಿಯ ರಸ್ತೆ ಎಲ್ಲವನ್ನೂ ಕೇಳಿದಳು. ಭೂಮಿಯ ಮೇಲಿರುವುದನ್ನೆಲ್ಲ ಕೇಳಿದ ನಂತರ ತಲೆಯೆತ್ತಿ ಆಕಾಶದ ನಕ್ಷತ್ರಗಳನ್ನೆಲ್ಲ ಕೇಳಿದಳು, ಆದರೆ ಅಲ್ಲಿಂದಲೂ ಯಾವ ಉತ್ತರವೂ ಬರಲಿಲ್ಲ. + +ಆ ಪ್ರಶ್ನೆಗೆ ಉತ್ತರ ಅವಳಿಗೇ ಗೊತ್ತಿತ್ತು. ಅವಳು ಕೆಟ್ಟದಾಗಿರುವುದಿರಲಿ, ನಿಜಕ್ಕೂ ಚೆಂದಕ್ಕೇ ಇದ್ದಳು. ಆದರೂ ಯಾರಾದರೂ ಅವಳನ್ನು ಹೊಗಳಲಿ ಅನ್ನಿಸಿತು, ಯಾವನಾದರೊಬ್ಬ ಅವಳ ಭುಜದ ಮೇಲೆ ಕೈಯಿರಿಸಿ ‘ಸೌಗಂಧಿ, ನೀನು ಚೆಂದವಿಲ್ಲವೆಂದು ಯಾರು ಹೇಳಿದರು? ಹೇಳಿದವರೇ ಚೆಂದವಿಲ್ಲದವರು!… ಇಲ್ಲ, ಅದೇನೂ ಅಗತ್ಯವಿಲ್ಲ. ‘ಸೌಗಂಧಿ ನೀನು ನಿಜಕ್ಕೂ ಚೆಂದವಿದ್ದೀಯ’ ಎಂದರೆ ಸಾಕು. + +ಯಾರಾದರೊಬ್ಬರು ತನ್ನನ್ನು ಹೊಗಳಲಿ ಎಂದು ಈ ಹಿಂದೆ ಎಂದೂ ಬಯಸದವಳು, ಇಂದೇಕೆ ಬಯಸುತ್ತಿದ್ದೇನೆ ಅನ್ನಿಸಿತು ಅವಳಿಗೆ. ನಿರ್ಜೀವ ವಸ್ತುಗಳೆಲ್ಲ ತನ್ನ ಬೆಲೆ ಸಾಬೀತು ಪಡಿಸಲೆಂದು ಯಾಕೆ ಬಯಸುತ್ತಿದ್ದೇನೆ? ಜಗತ್ತನ್ನೆಲ್ಲ ತೊಡೆಯ ಮೇಲೆ ಮಲಗಿಸಬೇಕೆಂದು ಯಾಕೆ ಅನ್ನಿಸುತ್ತಿದೆ? ಯಾರಿಗಾದರೂ ಸಾಂತ್ವನ ನೀಡಬೇಕೆಂಬ ಉತ್ಕಟ ಆಸೆ ದೇಹದಲ್ಲೆಲ್ಲ ಹುಟ್ಟುತ್ತಿದೆ? ಬೀದಿದೀಪದ ಕೊರೆಯುವ ಕಬ್ಬಿಣದ ಕಂಬವನ್ನು ತಬ್ಬಿ ಕೆಂಡದಂತೆ ಸುಡುತ್ತಿರುವ ಕೆನ್ನೆಗಳನ್ನು ಒತ್ತಬೇಕು ಎಂದು ಅವಳಿಗೇಕೆ ಅನ್ನಿಸುತ್ತಿದೆ? + +ಇದ್ದಕ್ಕಿದ್ದಂತೆ ಸುತ್ತಲಿನ ಎಲ್ಲವೂ ಅವಳನ್ನು ಕರುಣೆಯಿಂದ ನೋಡುತ್ತಿರುವಂತೆ ಅನ್ನಿಸಿಬಿಟ್ಟಿತು – ಬೀದಿ ದೀಪಗಳು, ಲೈಟು ಕಂಭಗಳು, ಫುಟ್ ಪಾತಿಗೆ ಹೊದೆಸಿದ್ದ ಕಲ್ಲುಗಳು, ಎಲ್ಲವೂ! ತಲೆಯ ಮೇಲೆ ಹರಡಿದ್ದ ನಕ್ಷತ್ರಗಳಿಂದ ತುಂಬಿದ, ದೀಪದ ಬೆಳಕಿನಲ್ಲಿ ಹಾಲಿನಂತೆ ಬೆಳಗುತ್ತಿದ್ದ ಆಕಾಶ ಕೂಡಾ ಅವಳನ್ನು ಅರ್ಥ ಮಾಡಿಕೊಳ್ಳುತ್ತಿರುವಂತೆನಿಸಿತು ಮತ್ತು ಅದಕ್ಕೆ ಪ್ರತಿಯಾಗಿ ನಕ್ಷತ್ರಗಳ ಮಿನುಗು ಕೂಡಾ ತನಗೆ ಅರ್ಥವಾಗುತ್ತಿದೆ ಅನ್ನಿಸಿತು ಸೌಗಂಧಿಗೆ. ಆದರೆ ಒಳಗಿದ್ದ ಆ ಗೊಂದಲವೇನು? ಯಾಕೆ ಅಷ್ಟು ತಳಮಳಗೊಂಡಿದ್ದಾಳೆ? ಒಳಗಿನ ಕುದಿತದಿಂದ ಬಿಡುಗಡೆ ಹೊಂದಬೇಕು ಎಂದು ಮನಸ್ಸು ಬಯಸುತ್ತಿದೆ, ಆದರೆ ಹೇಗೆ ಎನ್ನುವುದೇ ಅರ್ಥವಾಗುತ್ತಿಲ್ಲ. + +ಸೌಗಂಧಿ ಓಣಿಯ ಮೂಲೆಯಲ್ಲಿದ್ದ ಕೆಂಪು ಪೋಸ್ಟ್ ಬಾಕ್ಸಿನ ಪಕ್ಕ ನಿಂತಿದ್ದಳು. ಕುಳಿರ್ಗಾಳಿ ಬೀಸಿದಾಗ ಅದರ ಬಾಯಿಯಲ್ಲಿದ್ದ ಕಬ್ಬಿಣದ ನಾಲಿಗೆಯಂತೆ ಹೊರಚಾಚಿದ ವಸ್ತು ದಡಬಡ ಸದ್ದು ಮಾಡಿತು. ಮತ್ತೆ ಆ ಕಾರು ಹೋದ ದಿಕ್ಕಿನತ್ತ ನೋಡಿದಳು ಸೌಗಂಧಿ. ಅಲ್ಲಿ ಏನೂ ಕಾಣಿಸಲಿಲ್ಲ. ಒಂದೇ ಒಂದು ಸಾರಿ ಆ ಕಾರು ಹಿಂದಿರುಗಿ ಬಂದು… ಬಂದು… ಆದರೆ ಅಷ್ಟರಲ್ಲೇ ಮತ್ತೆ ಹೇಳಿಕೊಂಡಳು ‘ಅದು ಬಾರದಿದ್ದರೆ ನನಗೆ ಯಾವ ತೊಂದರೆಯೂ ಇಲ್ಲ. ನಿಜಕ್ಕೂ ಹೇಳಬೇಕೆಂದರೆ ಅದು ಬಾರದಿದ್ದರೇನೇ ಒಳ್ಳೆಯದು. ನಾನ್ಯಾಕೆ ಅದರ ವಿಷಯವಾಗಿ ಈ ರೀತಿ ಚಿಂತೆಗೆ ಬಿದ್ದಿದ್ದೇನೆ? ನಾನು ಮನೆಗೆ ಹೋಗಿ, ಮಗುವಿನಂತೆ ನಿದ್ರಿಸುತ್ತೇನೆ. ಎಲ್ಲವೂ ಪುನರಾವರ್ತಿಸುವುದರಿಂದ ಏನು ಪ್ರಯೋಜನ? ಕಾರಣವೇ ಇಲ್ಲದೇ ನಾನೇಕೆ ಇಷ್ಟು ಚಿಂತಿಸುತ್ತಿದ್ದೇನೆ? ನಡೆ ಸೌಗಂಧಿ, ಮನೆಗೆ ಹೋಗುವಾ. ಒಂದು ಲೋಟ ತಣ್ಣೀರು ಕುಡಿದು, ಮುಲಾಮು ತಿಕ್ಕಿ, ಹಾಸಿಗೆಗೆ ಬೀಳು. ಒಳ್ಳೆಯ ನಿದ್ರೆ ಬಂದರೆ, ನಾಳೆಗೆ ನೀನು ಸರಿ ಹೋಗಿರುತ್ತೀಯೆ. ಸುಡುಗಾಡಿಗೆ ಹೋಗಲಿ ಅವನು ಮತ್ತು ಆ ಕಾರು! + +ಈ ಯೋಚನೆಗಳು ಸೌಗಂಧಿಗೆ ತುಸು ನೆಮ್ಮದಿ ಕೊಟ್ಟವು. ತಣ್ಣೀರಿನ ಕೊಳದಲ್ಲಿ ಆಗತಾನೇ ಮಿಂದು ಎದ್ದು ಬಂದಂತೆ ಅನ್ನಿಸುತ್ತಿತ್ತು ಅವಳಿಗೆ. ಪ್ರಾರ್ಥನೆಯ ಬಳಿಕ ಹಗುರಾಗುವ ದೇಹದಂತೆ ಈಗಲೂ ಅನ್ನಿಸಿತ್ತು. ಮನೆಯತ್ತ ಹೆಜ್ಜೆ ಹಾಕುವಾಗ ಅವಳ ಉತ್ಸಾಹ ಸ್ವಲ್ಪ ಹೆಚ್ಚಿ, ಹೆಜ್ಜೆಗಳು ಹಗುರವೆನ್ನಿಸಿದವು. + +ಅವಳ ಫ್ಲಾಟನ್ನು ತಲುಪುವುದರ ಒಳಗೆ ಮತ್ತೆ ಆ ಮನುಷ್ಯನ ನೆನಪು ಮರುಕಳಿಸಿದಂತಾಗಿ, ದೇಹದ ತುಂಬ ನೋವಿನ ಮಿಡಿತ ಹೆಚ್ಚಿತು. ಅವಳ ಹೆಜ್ಜೆಗಳು ಮತ್ತೆ ಭಾರವಾದವು, ಮತ್ತೆ ಆ ನೆನಪು ಮೊದಲಿನಿಂದ ಹೆಜ್ಜೆಹೆಜ್ಜೆಗೂ ಮರುಕಳಿಸಲು ಆರಂಭಿಸಿತು – ಮತ್ತೆ ರೂಮನ್ನು ಬಿಟ್ಟು ಮಾರ್ಕೆಟ್ಟಿನ ಓಣಿಗೆ ಕಾಲಿಟ್ಟಂತೆ, ಮುಖಕ್ಕೆ ಪ್ರಖರ ಬೆಳಕೊಂದು ಬಿಟ್ಟಂತೆ, ಮತ್ತೆ ಆ ಅವಮಾನವಾದಂತೆ. ಕುರಿ ಅಥವಾ ಮೇಕೆಯ ಚರ್ಮದಡಿ ಮಾಂಸವಿದೆಯೋ ಇಲ್ಲವೋ ಎಂದು ಪರೀಕ್ಷಿಸಲು ಬೆರಳಿನಿಂದ ರೋಮಭರಿತ ದೇಹವನ್ನು ಒತ್ತುವಂತೆ ಯಾರೋ ಅವಳ ಎದೆಗೂಡನ್ನು ಬೆರಳಿನಿಂದ ಗಟ್ಟಿಯಾಗಿ ಒತ್ತುತ್ತಿರುವಂತೆನಿಸಿತ್ತು ಅವಳಿಗೆ. ಆ ಶ್ರೀಮಂತ ಸೂಳೆಮಗ…! ಅವನಿಗೆ ಬಾಯಿಗೆ ಬಂದಂತೆ ಶಪಿಸಬೇಕೆನ್ನಿಸಿತು ಸೌಗಂಧಿಗೆ. ಆದರೆ ಅದರಿಂದೇನು ಸಿಗುತ್ತದೆ? ಅವಳೆಂದುಕೊಂಡಳು… ‘ಅವನ ಇಡೀ ದೇಹದ ಅಂಗುಲಂಗುಲವನ್ನೂ ತಿರಸ್ಕಾರದ ಮಾತುಗಳಿಂದ ತುಂಬಿಸಿದರೆ ಅದು ನಿಜವಾದ ಸುಖ ಮತ್ತು ನೆಮ್ಮದಿ. ಅವನು ಇಡೀ ಜನ್ಮ ನರಳುವಂತೆ ಏನಾದರೂ ಹೇಳಿದರೆ ಅದು ನಿಜವಾದ ಖುಷಿ. ಅಥವಾ ಅವನೆದುರು ತೊಟ್ಟ ಬಟ್ಟೆಯನ್ನು ಹರಿದು ಚಿಂದಿ ಮಾಡಿ ಕೇಳಬೇಕು ‘ನೀನು ಬಂದಿದ್ದು ಇದಕ್ಕಾಗೇ ತಾನೇ? ಇಗೋ ಬಿಟ್ಟಿಯಾಗಿ ಇದನ್ನು ತೆಗೆದುಕೋ – ಬಿಟ್ಟಿಯಾಗಿ! ಆದರೆ ನನ್ನೊಳಗಿರುವುದನ್ನು ಕೊಳ್ಳಲು ನಿನ್ನ ಅಪ್ಪನಿಂದಲೂ ಸಾಧ್ಯವಿಲ್ಲ!’ + +ಸೌಗಂಧಿ ಸೇಡು ತೀರಿಸಿಕೊಳ್ಳುವ ವಿವಿಧ ಮಾರ್ಗಗಳನ್ನು ಯೋಚಿಸುತ್ತಿದ್ದಳು. ಮತ್ತೆ ಒಂದೇ ಒಂದು ಸಲ ಅವನು ಸಿಕ್ಕಿಬಿಟ್ಟರೆ ಹೀಗೆ ಮಾಡುತ್ತೇನೆ… ಅಲ್ಲಲ್ಲ, ಹೀಗಲ್ಲ… ಹೇಗೆಂದರೆ…. ಇಷ್ಟು ಅಂದುಕೊಳ್ಳುವುದರಲ್ಲಿ ಅವನು ಮತ್ತೆಂದೂ ಸಿಗುವುದಿಲ್ಲ ಎನ್ನುವ ಸತ್ಯ ಸೌಗಂಧಿಗೆ ಅರಿವಾಗಿ, ಮತ್ತೆ ಉಸಿರು ಎಳೆದುಕೊಳ್ಳಲೂ ಸಮಯವಿಲ್ಲದಂತೆ ಅವನನ್ನು ಶಪಿಸಲು ಶುರು ಮಾಡುತ್ತಿದ್ದಳು. ತುಂಬ ಕೆಟ್ಟ ಪದದಿಂದೇನೂ ಅವನನ್ನು ಬಯ್ಯುವುದು ಅವಳಿಗೆ ಬೇಕಿರಲಿಲ್ಲ. ಮೂಗಿನ ಮೇಲೆ ನೊಣವೊಂದು ಅಂಟಿಕೊಂಡು ಶಾಶ್ವತವಾಗಿ ಕೂರುವಂಥ ಬಯ್ಗುಳವೊಂದನ್ನು ಅವನ ಕಡೆಗೆ ಉಗಿಯಬೇಕು ಅನ್ನಿಸುತ್ತಿತ್ತು. + +ಈ ರೀತಿಯ ಸ್ಥಿತಿಯಲ್ಲಿ, ಅವಳು ಎರಡನೆಯ ಮಹಡಿಯ ತನ್ನ ರೂಮನ್ನು ತಲುಪಿದ್ದಳು. ಬ್ರಾ ಒಳಗಿನಿಂದ ಕೀಲಿಯನ್ನು ತೆಗೆದು, ಬೀಗ ತೆಗೆಯಲು ನೋಡಿದರೆ ಅಲ್ಲಿದ್ದ ಬೀಗ ಕಾಣೆಯಾಗಿತ್ತು! ಸೌಗಂಧಿ ಬಾಗಿಲನ್ನು ತಳ್ಳಿದಾಗ ಒಂದು ಸಣ್ಣ ಕ್ರೀಂಚ್ ದನಿ ಹೊರಟಿತು. ಅಷ್ಟರಲ್ಲಿ ಯಾರೋ ಒಳಗಿನಿಂದ ಚೈನ್ ತೆರೆದರು ಮತ್ತು ಬಾಗಿಲು ತೆರೆದುಕೊಂಡಿತು. ಸೌಗಂಧಿ ಒಳಗೆ ಹೆಜ್ಜೆಯಿಟ್ಟಳು. + +ಮಾಧೋ ಕಿಸಕಿಸ ನಗುತ್ತಾ ಬಾಗಿಲು ಮುಚ್ಚಿ ಸೌಗಂಧಿಗೆ ಹೇಳಿದ ‘ಅಂತೂ ಇವತ್ತು ನಾನು ಹೇಳಿದ್ದನ್ನು ಗಂಭೀರವಾಗಿ ತೆಗೆದುಕೊಂಡೆ ನೋಡು! ಬೆಳಗ್ಗಿನ ವಾಕಿಂಗ್ ಆರೋಗ್ಯಕ್ಕೆ ತುಂಬ ಒಳ್ಳೆಯದು! ಈ ರೀತಿ ದಿನವೂ ಎದ್ದು ನಸುಕಿನಲ್ಲೇ ವಾಕಿಂಗ್ ಮಾಡಿದರೆ ನಿನ್ನ ಜಡತ್ವವೆಲ್ಲ ಓಡಿಹೋಗುತ್ತದೆ, ಮತ್ತು ನಿನ್ನ ಸೊಂಟನೋವು ಸಹಾ. ಎಷ್ಟು ದಿನದಿಂದ ಆ ನೋವನ್ನು ಅನುಭವಿಸುತ್ತಲೇ ಬಂದಿದ್ದೀಯ. ವಿಕ್ಟೋರಿಯಾ ಗಾರ್ಡನ್ ವರೆಗೂ ನಡೆದು ವಾಪಸ್ಸಾಗಿರಬೇಕು, ಅಲ್ಲವೇ?’ + +ಸೌಗಂಧಿ ಉತ್ತರಿಸಲಿಲ್ಲ, ಮತ್ತು ಮಾಧೋ ಕೂಡಾ ಉತ್ತರಕ್ಕಾಗಿ ಬಲವಂತ ಪಡಿಸಲೂ ಇಲ್ಲ. ನಿಜಕ್ಕು ಹೇಳಬೇಕೆಂದರೆ, ಅವಳು ತನ್ನ ಪ್ರಶ್ನೆಗಳಿಗೆ ಉತ್ತರಿಸಲೇಬೇಕೆಂದು ಅವನು ಎಂದೂ ನಿರೀಕ್ಷಿಸುತ್ತಲೂ ಇರಲಿಲ್ಲ. ನಿಜಕ್ಕು ಹೇಳಬೇಕೆಂದರೆ, ಅವಳು ತನ್ನ ಪ್ರಶ್ನೆಗಳಿಗೆ ಉತ್ತರಿಸಲೇ ಬೇಕೆಂದು ಅವನು ಎಂದೂ ನಿರೀಕ್ಷಿಸುತ್ತಲೂ ಇರಲಿಲ್ಲ, ಏನಾದರೂ ಮಾತಾಡಬೇಕಲ್ಲ ಎಂದು ಮಾತಾಡುತ್ತಿದ್ದನಷ್ಟೇ. + +ಮಾಧೋ ಮಣಕುಗಟ್ಟಿದ ಬೆತ್ತದ ಕುರ್ಚಿಯ ಮೇಲೆ ಕುಳಿತು , ಕಾಲಮೇಲೆ ಕಾಲು ಹಾಕಿ, ಮೀಸೆ ಹುರಿಮಾಡಿಕೊಂಡ. + +ಸೌಗಂಧಿ ಹಾಸಿಗೆಯ ಮೇಲೆ ಕುಳಿತು ‘ನಾನು ನಿನ್ನನ್ನೇ ನಿರೀಕ್ಷಿಸುತ್ತಿದ್ದೆ’ ಎಂದಳು. + +ಮಾಧೋ ಆಶ್ಚರ್ಯ ಚಕಿತನಾದ! ‘ನನ್ನನ್ನು ನಿರೀಕ್ಷಿಸುತ್ತಿದ್ದೆಯಾ? ನಿನಗೆ ಹೇಗೆ ಗೊತ್ತಿತ್ತು ನಾನು ಬರುತ್ತೇನೆನ್ನುವುದು?’. ಸೌಗಂಧಿ ತೆಳುವಾದ ನಗೆ ಬೀರುತ್ತಾ ‘ನೀನು ಕನಸಲ್ಲಿ ಬಂದಿದ್ದೆ. ಆಗ ಎಚ್ಚರವಾಗಿಬಿಟ್ಟಿತು. ಎದ್ದು ನೋಡಿದರೆ ಯಾರೂ ಇರಲಿಲ್ಲ. ಹೇಗೂ ಎದ್ದಿದ್ದೇನಲ್ಲ ಎಂದು ವಾಕಿಂಗ್ ಹೊರಟುಬಿಟ್ಟೆ’ + +ಮಾಧೋಗೆ ಇದು ಖುಷಿ ಕೊಟ್ಟಿತು. ‘ಮತ್ತು ನಾನು ಬಂದೇಬಿಟ್ಟೆ! ಪ್ರೀತಿಸುವವರ ಹೃದಯಗಳು ಒಂದರೊಡನೊಂದು ಕೂಡಿಕೊಂಡಿರುತ್ತವೆ ಅನ್ನುವುದು ಎಷ್ಟು ಸತ್ಯ! ಕನಸು ಬಿದ್ದಿದ್ದು ಯಾವಾಗ?’ + +‘ಸುಮಾರು ನಾಲ್ಕು ಘಂಟೆಯ ಸಮಯದಲ್ಲಿ’ + +ಮಾಧೋ ಕುರ್ಚಿಯಿಂದೆದ್ದು ಸೌಗಂಧಿಯ ಪಕ್ಕ ಕುಳಿತು ಹೇಳಿದ ‘ನನಗೆ ನೀನು ಸರಿಯಾಗಿ ಎರಡು ಘಂಟೆಗೆ ಬಿದ್ದ ಕನಸಲ್ಲಿ ಬಂದಿದ್ದೆ. ನೀನು ಇದೇ ಸೀರೆಯುಟ್ಟು ನನ್ನ ಪಕ್ಕ ನಿಂತಿದ್ದೆ. ಏನನ್ನು ಹಿಡಿದಿದ್ದೆ – ಏನದು … ಓಹ್! ನೆನಪಾಯಿತು, ನೀನು ಹಣದ ಚೀಲವೊಂದನ್ನು ಕೈಯಲ್ಲಿ ಹಿಡಿದು ನಿಂತಿದ್ದೆ. ನೀನು ಆ ಚೀಲವನ್ನು ನನ್ನ ಕೈಗಿಡುತ್ತಾ ‘‘ಮಾಧೋ ಅದೇನು ದೊಡ್ಡ ಚಿಂತೆ ನಿನ್ನದು? ತೆಗೆದುಕೋ ಈ ಚೀಲವನ್ನು. ನನ್ನ ಹಣ ನಿನ್ನದೂ ಅಲ್ಲವೇ?” ಎಂದೆ. ಸೌಗಂಧಿ, ಆಣೆ ಮಾಡಿ ಹೇಳುತ್ತೇನೆ, ಆ ಕೂಡಲೇ ಎದ್ದೆ, ಟಿಕೀಟು ಮಾಡಿಸಿದೆ ಮತ್ತು ಇಲ್ಲಿಗೆ ಬಂದೇಬಿಟ್ಟೆ. ಏನು ಹೇಳಲಿ? ನಾನೀಗ ತುಂಬ ತೊಂದರೆಯಲ್ಲಿದ್ದೇನೆ. ಅದ್ಯಾರು ಎಲ್ಲಿದ್ದರೋ ತಿಳಿದಿಲ್ಲ, ಇದ್ದಕ್ಕಿದ್ದಂತೆ ನನ್ನ ವಿರುದ್ಧ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಆ ಇನ್ಸ್‌ಪೆಕ್ಟರ್‌ಗೆ ಇಪ್ಪತ್ತು ರೂಪಾಯಿ ಕೊಟ್ಟುಬಿಟ್ಟರೆ ಅವನು ನನ್ನನ್ನು ಬಿಟ್ಟು ಬಿಡುತ್ತಾನೆ … ನಿನಗೆ ಸುಸ್ತಾಗಿಲ್ಲವೇ? ಬಾ ಮಲಗು, ನಾನು ನಿನ್ನ ಪಾದಗಳನ್ನು ಮಸಾಜ್ ಮಾಡುತ್ತೇನೆ. ವಾಕಿಂಗ್ ಮಾಡಿ ಅಭ್ಯಾಸವಿಲ್ಲದಿದ್ದರೆ, ಸುಸ್ತಾಗುವುದು ಖಂಡಿತ. ಬಾ ಇಲ್ಲಿ, ನನ್ನ ಕಡೆಗೆ ಕಾಲನ್ನಿಟ್ಟು ಮಲಗಿಕೋ’ + +ಸೌಗಂಧಿ ಅಲ್ಲಿಯೇ ಮಲಗಿದಳು. ಕೈಗಳನ್ನು ಮಡಚಿ ತಲೆಯಡಿ ದಿಂಬಿನಂತೆ ಇಟ್ಟುಕೊಂಡು, ಜಿಗುಪ್ಸೆ ತುಂಬಿದ ಸನಿಯಲ್ಲಿ ಹೇಳಿದಳು ‘ಮಾಧೋ, ಯಾವ ಸೂಳೆಮಗ ನಿನ್ನ ವಿರುದ್ದ ರಿಪೋರ್ಟು ಮಾಡಿದ? ನೀನು ಜೈಲಿಗೆ ಹೋಗಬಹುದೆನ್ನುವ ಸಣ್ಣ ಸಾಧ್ಯತೆಯಿದ್ದರೂ ನನಗೆ ಸತ್ಯ ಹೇಳು. ಆತನಿಗೆ ಇಪ್ಪತ್ತೋ ಮೂವತ್ತೋ ರೂಪಾಯಿ ಕೊಡು – ಉಹು, ಐವತ್ತಾಗಲಿ, ನೂರಾದರೂ ಸರಿಯೇ – ನೀನು ಆ ಬಗ್ಗೆ ಎಂದೂ ಪಶ್ಚಾತ್ತಾಪ ಪಡುವುದಿಲ್ಲ. ನೀನು ಇದರಿಂದ ಬಿಡಿಸಿಕೊಂಡರೆ, ಅದೇ ದೊಡ್ಡ ಅದೃಷ್ಟ. ಸರಿ, ಸಾಕು ಒತ್ತಿದ್ದು ನಿಲ್ಲಿಸು, ನನಗೆ ಅಷ್ಟೇನೂ ದಣಿವಾಗಿಲ್ಲ. ಅದನ್ನು ನಿಲ್ಲಿಸಿ ನನಗೆ ಎಲ್ಲವನ್ನೂ ಪೂರ್ತಿಯಾಗಿ ಹೇಳು. “ಪೋಲಿಸ್ ರಿಪೋರ್ಟ್” ಅನ್ನುವ ಮಾತು ಕೇಳಿಯೇ ನನ್ನ ಎದೆ ಹೊಡೆದುಕೊಳ್ಳುತ್ತಿದೆ. ನೀನು ಯಾವಾಗ ಹಿಂತಿರುಗುವೆ?’ + +ಮಾಧೋಗೆ ಸೌಗಂಧಿಯ ಉಸಿರಿನಲ್ಲಿ ಸಾರಾಯಿ ವಾಸನೆ ಬರುತ್ತಿತ್ತು. ಅವನು ಇದೇ ಸರಿಯಾದ ಸಮಯ ಎಂದು ಆಲೋಚಿಸಿ, ಆತುರದಲ್ಲಿ “ನಾನು ಮಧ್ಯಾಹ್ನದ ರೈಲಿಗೆ ವಾಪಸ್ ಹೊರಡಬೇಕು. ಸಂಜೆಯೊಳಗೆ ಆ ಸಬ್ ಇನ್ಸ್‌ಪೆಕ್ಟರ್‌ಗೆ ಸಂಜೆಯೊಳಗೆ ಐವತ್ತೋ ನೂರೋ ಕೊಡದಿದ್ದರೆ, ಆಮೇಲೆ …. ನನಗನ್ನಿಸುತ್ತದೆ ಅವನಿಗೆ ತೀರಾ ಹೆಚ್ಚೇನೂ ಕೊಡಬೇಕಿಲ್ಲ ಎಂದು. ಬಹುಶಃ ಐವತ್ತು ಸಾಕಾಗಬಹುದು” + +‘ಐವತ್ತು!’ ಸೌಗಂಧಿ ಜೋರಾಗಿ ಉದ್ಗರಿಸಿದಳು. + +ನಂತರ ನಿಧಾನವಾಗಿ ಎದ್ದು, ಗೋಡೆಯ ಮೇಲೆ ತೂಗುಹಾಕಿದ್ದ ನಾಲ್ಕು ಫೋಟೋಗಳ ಎದುರು ಹೋಗಿ ನಿಂತಳು. ಆ ಫೋಟೋಗಳಲ್ಲಿ ಮಾಧೋನದ್ದು ಎಡದಿಂದ ಮೂರನೆಯದಾಗಿತ್ತು ; ಅವನು ಕುರ್ಚಿಯೊಂದರ ಮೇಲೆ ಕುಳಿತಿದ್ದ, ಹಿಂದೆ ಹೂಗಳ ಡಿಜ಼ೈನ್ ಇರುವ ಪರದೆ ಇಳಿ ಬಿಟ್ಟಿತ್ತು. ತೊಡೇಯ ಮೇಲೆ ಕೈಗಳನ್ನಿಟ್ಟು ಕುಳಿತು, ಒಂದು ಕೈನಲ್ಲಿ ಗುಲಾಬಿಯೊಂದನ್ನು ಹಿಡಿದಿದ್ದ. ಅವನ ಪಕ್ಕ ಇದ್ದ ಸ್ಟೂಲ್ ಒಂದರ ಮೇಲೆ ಎರಡು ದಪ್ಪ ಪುಸ್ತಕಗಳಿದ್ದವು. ಫೋಟೋದಲ್ಲಿ ಇದ್ದುದೆಲ್ಲವೂ ಎಷ್ಟು ಸ್ಪಷ್ಟವಾಗಿ ಕಾಣುತ್ತಿತ್ತು ಎಂದರೆ, ಎಲ್ಲವೂ “ನಮ್ಮ ಫೋಟೋ ತೆಗೆಸಿಕೊಳ್ಳುತ್ತಿದ್ದೇವೆ! ನಾವು ಚಿತ್ರ ತೆಗೆಸಿಕೊಳ್ಳುತ್ತಿದ್ದೇವೆ!” ಎಂದು ಸಾರಿ ಹೇಳುತ್ತಿರುವಂತೆ ಇದೆ. ಫೋಟೊದಲ್ಲಿದ್ದ ಮಾಧೋನ ಕಣ್ಣುಗಳು ಅಗಲವಾಗಿ ಅರಳಿದ್ದವು, ಮತ್ತು ಆ ಇಡೀ ಸನ್ನಿವೇಶವೇ ಅವನಿಗೆ ಮುಜುಗರ ತರಿಸುತ್ತಿರುವಂತೆ ಭಾಸವಾಗುತ್ತಿತ್ತು. + +ಸೌಗಂಧಿ ಕೀರಲು ದನಿಯಲ್ಲಿ ನಕ್ಕಳು, ಆ ನಗು ಮಾಧೋನನ್ನು ಸೂಜಿಗಳಿಂದ ಚುಚ್ಚುತ್ತಿರುವಂತೆ ಅನ್ನಿಸಿತು. ಅವನು ಮಲಗ್ಗಿದ್ದಲ್ಲಿಂದ ಎದ್ದು, ಅವಳ ಬಳಿ ಹೋಗಿ, ‘ಯಾರ ಫೋಟೋ ನೋಡಿ ನಗುತ್ತಿರುವೆ?’ ಎಂದು ಕೇಳಿದ. + +ಸೌಗಂಧಿ ಎಡದಿಂದ ಮೊದಲು ಇದ್ದ ನೈರ್ಮಲ್ಯ ಇಲಾಖೆಯ ಅಧಿಕಾರಿಯ ಫೋಟೋ ಕಡೆ ಬೆರಳು ಮಾಡಿ, ‘ಇವನು – ಈ ಮನುಷ್ಯನದ್ದು’ ಎಂದಳು ‘ಅವನ ಮೂತಿ ನೋಡು. ಅವನು “ಒಬ್ಬಳು ರಾಣಿ ತನ್ನೊಡನೆ ಒಮ್ಮೆ ಪ್ರೇಮದಲ್ಲಿ ಬಿದ್ದಿದ್ದಳು” ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ. ವ್ಯಾಕ್! ರಾಣಿಯೊಬ್ಬಳು ಪ್ರೇಮದಲ್ಲಿ ಬೀಳುವ ಮೂತಿಯೇ ಇದು?’ + +ಸೌಗಂಧಿ ಆ ಫೋಟೋವನ್ನು ಎಷ್ಟು ರಭಸದಿಂದ ಕಿತ್ತಳೆಂದರೆ, ತೂಗುಬಿಟ್ಟಿದ್ದ ಮೊಳೆ, ಪ್ಲ್ಯಾಸ್ಟರಿನ ಜೊತೆಯಲ್ಲಿ ಅದು ಕಿತ್ತು ಬಂದಿತು. ಮಾಧೋ ಆಘಾತಕ್ಕೆ ಒಳಗಾದ ಮತ್ತು ಅವನು ಚೇತರಿಸಿಕೊಳ್ಳುವ ಮುನ್ನವೇ, ಸೌಗಂಧಿ ಅದನ್ನು ಕಿಟಕಿಯಾಚೆ ಎಸೆದಳು. ಎರಡು ಮಹಡಿಗಳಿಂದ ನೆಲಕ್ಕೆ ಬಿದ್ದು, ಅದರ ಗಾಜು ಪುಡಿಪುಡಿಯಾದ ಸದ್ದು ಕೇಳಿಸಿತು. + +‘ಕಸ ಒಯ್ಯುವ ರಾಣಿ ಕಸ ಬಾಚಲು ಬರುತ್ತಾಳಲ್ಲ, ಆಗ ಇವನನ್ನು ಜೊತೆಗೆ ಕೊಂಡೊಯ್ದು ತನ್ನದಾಗಿಸಿಕೊಳ್ಳಲಿ’ ಎಂದು ವ್ಯಂಗ್ಯದಿಂದ ಹೇಳಿದಳು. ಹಾಗೆ ಹೇಳಿದ ಸೌಗಂಧಿ, ದೊಡ್ಡ ಕಹಿ ನಗೆ ನಕ್ಕಳು. ಎರಡು ಬೆಣಚು ಕಲ್ಲುಗಳನ್ನು ಒಂದರೊಂಡನೊಂದು ತಿಕ್ಕಿದಾಗ ಉದುರುವ ಕಿಡಿಗಳಂತಿತ್ತು ಅವಳ ತುಟಿಗಳಿಂದ ಹೊರಬಿದ್ದ ಆ ನಗು. + +ಮಧೋ ತಾನೂ ಬಲವಂತದ ನಗೆಯೊಂದನ್ನು ಬೀರಿದ. + +ಸೌಗಂಧಿ ಎರಡನೆಯ ಫೊಟೋವನ್ನು ಗೋಡೆಯಿಂದ ರಭಸದಿಂದ ಕಿತ್ತು, ಕಿಟಕಿಯಾಚೆ ಎಸೆದಳು. + +‘ಈ ಸ್ಥಳವನ್ನು ಏನಂದುಕೊಂಡಿದ್ದಾನೆ ಆ ಸೂಳೆಮಗ?’ ಕೇಳುತ್ತಾಳೆ ‘ಇವತ್ತಿನಿಂದ ಕುರೂಪಿ ಗಂಡಸರಿಗೆ ಇಲ್ಲಿಗೆ ಪ್ರವೇಶವಿಲ್ಲ – ಸರಿಯಲ್ಲವೇ ಮಾಧೋ?’ + +ಮಾಧೋ ಮತ್ತೆ ಬಲವಂತದ ನಗು ನಗುತ್ತಾನೆ. + +ಒಂದು ಕೈಯಿಂದ ಪೇಟಾ ಸುತ್ತಿದ್ದ ಗಂಡಸಿನ ಆ ಫೋಟೋವನ್ನು ಕೀಳುತ್ತಾ, ಮತ್ತೊಂದು ಕೈಯನ್ನು ಮಾಧೋನ ಫೋಟೋದೆಡೆಗೆ ಚಾಚುತ್ತಾಳೆ. ಮಾಧೋ ಅವಳು ತನ್ನನ್ನೇ ಕೀಳಲು ತೊಡಗಿದ್ದಾಳೋ ಅನ್ನುವಂತೆ ಹಿಂದಕ್ಕೆ ಅಡಿಯಿಡುತ್ತಾನೆ. ಸೌಗಂಧಿ ಆ ಎರಡೂ ಫೋಟೋಗಳನ್ನು ಮೊಳೆ ಮತ್ತು ಪ್ಲ್ಯಾಸ್ಟರಿನ ಸಮೇತ ಕಿತ್ತುಹಾಕುತ್ತಾಳೆ. + +ಸೌಗಂಧಿ ಗಟ್ಟಿಯಾಗಿ ನಗುತ್ತಾ, ಕಿರುಚುತ್ತಾಳೆ. ‘ಯಕ್‌ಕ್‌ಕ್!’ + +ಎರಡೂ ಫ್ರೇಮ್‌ಗಳನ್ನು ಕಿಟಕಿಯಾಚೆ ಎಸೆಯುತ್ತಾಳೆ, ಮತ್ತು ಕ್ಷಣಕಾಲದಲ್ಲೇ ಗಾಜುಗಳು ಫಳ್ಳೆಂದು ಪುಡಿಪುಡಿಯಾದ ಸದ್ದು ಕಿವಿಗೆ ಬೀಳುತ್ತದೆ. ಮಾಧೋಗೆ ತನ್ನೊಳಗೇ ಏನೋ ಪುಡಿಪುಡಿಯಾದ ಭಾವನೆ. ಬಲವಂತವಾಗಿ ನಗಲು ಪ್ರಯತ್ನಿಸುತ್ತಾನೆ. + +‘ಹು, ಒಳ್ಳೆಯ ಕೆಲಸ ಮಾಡಿದೆ’ ಹೇಳುತ್ತಾನೆ ‘ನನಗೂ ಆ ಫೋಟೋ ಇಷ್ಟವಿರಲಿಲ್ಲ’ + +ಸೌಗಂಧಿ ನಿಧಾನವಾಗಿ ಅವನೆಡೆಗೆ ಬರುತ್ತಾಳೆ. ‘ನಿನಗೂ ಇಷ್ಟವಿರಲಿಲ್ಲವೇ ಆ ಫೋಟೋ?’ ಮತ್ತೆ ಮತ್ತೆ ಹೇಳುತ್ತಾಳೆ ‘ನಿನಗಾದರೂ ಅದು ಹೇಗೆ ಸಾಧ್ಯವಾದೀತು – ನಿನ್ನಲ್ಲಿ ಇಷ್ಟ ಪಡುವಂಥದ್ದು ಏನಾದರೂ ಇದೆಯೇ? ನೀನೋ ನಿನ್ನ ಜೋಕರ್ ಮೂಗೋ, ನೀನೋ ನಿನ್ನ ಕೂದಲಿನ ಹಣೆಯೋ, ನೀನೋ ನಿನ್ನ ಕತ್ತೆಯಂಥ ಹೊಳ್ಳೆಯೋ, ನೀನೋ ನಿನ್ನ ತಿರುಚಿದ ಕಿವಿಯೋ, ನೀನೋ ನಿನ್ನ ಬಾಯಿಯ ದುರ್ವಾಸನೆಯೋ, ನೀನೋ ನಿನ್ನ ದುರ್ಗಂಧದ ದೇಹವೋ? ನಿನಗೂ ಆ ಫೋಟೋ ಇಷ್ಟವಾಗಲಿಲ್ಲ ಅಲ್ಲವೇ? ಯಕ್‌ಕ್‌ಕ್! ಅದು ನಿನ್ನ ದೋಷಗಳನ್ನೆಲ್ಲ ಮರೆಮಾಡಿಟ್ಟುಕೊಂಡಿತ್ತು. ನಿನಗೆ ಗೊತ್ತಾ, ಈಗೀಗ ನೀನು ನಿನ್ನ ಕುಂದುಕೊರತೆಗಳ ಬಗ್ಗೆಯೂ ಹೆಮ್ಮೆ ಪಡಬೇಕು!’ + +ಮಾಧೋ ಮತ್ತಿಷ್ಟು ಹಿಂಜರಿಯುತ್ತಾನೆ. ಗೋಡೆಗೆ ಒತ್ತರಿಸಿಕೊಳ್ಳುತ್ತ ಕಿರುಚುತ್ತಾನೆ, ‘ನೋಡು, ಸೌಗಂಧಿ, ನೀನು ಮತ್ತೆ ನಿನ್ನ ದಂಧೆಯನ್ನು ಪ್ರಾರಂಭಿಸಿದ್ದೀಯ ಎನ್ನಿಸುತ್ತಿದೆ ನನಗೆ. ಇದು ನಾನು ನಿನಗೆ ಕಡೆಯ ಬಾರಿಗೆ ಹೇಳುತ್ತಿದ್ದೇನೆ ……’ + +ಸೌಗಂಧಿ ಅವನನ್ನು ನಡುವಲ್ಲೇ ತಡೆಯುತ್ತಾಳೆ. ‘ನೀನು ಮತ್ತೆ ದಂಧೆ ಶುರು ಮಾಡಿದರೆ’ ಅವನನ್ನೇ ಅಣಕಿಸುವ ದನಿಯಲ್ಲಿ. ‘ನಮ್ಮ ಸಂಬಂಧ ಇಲ್ಲಿಗೆ ಮುಗಿಯಿತು. ನಿನ್ನ ಜೊತೆ ಯಾವುದೇ ಗಂಡಸಾದರೂ ಮಲಗಿದ ಎಂದರೆ, ನಿನ್ನ ಕೂದಲನ್ನು ಹಿಡಿದೆಳೆಯುತ್ತೇನೆ ಮತ್ತು ಆಚೆಗಟ್ಟುತ್ತೇನೆ. ತಿಳಿಯಿತೇ? ನಾನು ಪುಣೆ ಸೇರಿದ ಕೂಡಲೆ ಈ ತಿಂಗಳ ಖರ್ಚಿನ ಹಣವನ್ನು ಕೂಡಲೇ ಮನಿ ಆರ್ಡರ್ ಮಾಡುತ್ತೇನೆ. ಈ ರೂಮಿನ ಬಾಡಿಗೆಯೆಷ್ಟು?’ + +ಮಾಧೋ ದಿಗ್ಭ್ರಮೆಗೊಳ್ಳುತ್ತಾನೆ. + +‘ಇಲ್ಲಿ ಕೇಳು’, ತನಗೇ ಎನ್ನುವಂತೆ ಹೇಳಿಕೊಳ್ಳುತ್ತಾಳೆ, ‘ಹದಿನೈದು ರೂಪಾಯಿ. ಹದಿನೈದು ಮತ್ತು ನಾನು ಹತ್ತು ರೂಪಾಯಿ ತೆಗೆದುಕೊಳ್ಳುತ್ತೇನೆ ಒಬ್ಬನಿಂದ. ಮತ್ತು, ನಿನಗೇ ತಿಳಿದಿರುವಂತೆ, ಅದರಲ್ಲಿ ಎರಡೂವರೆ ಆ ತಲೆಹಿಡುಕನಿಗೆ ಹೋಗುತ್ತದೆ. ಉಳಿದ ಏಳೂವರೆ – ಏಳೂವರೆ ತಾನೇ? – ಅದು ನನಗೆ ಸೇರುತ್ತದೆ. ಮತ್ತು ಆ ಏಳೂವರೆ ರೂಪಾಯಿಗಳಿಗೆ, ನಾನು ನಿನಗೆ ಕೊಡಲಾಗದ್ದನ್ನೆಲ್ಲ ಕೊಡುತ್ತೇನೆಂದು ಆಣೆ ಮಾಡಿದೆ, ಮತ್ತು ನೀನು ತೆಗೆದುಕೊಳ್ಳಲಾಗದ ಎಲ್ಲದಕ್ಕಾಗಿ ಇಲ್ಲಿಗೆ ಬಂದೆ. ನಮ್ಮ ಸಂಬಂಧವೇನಿತ್ತು? ಏನೇನೂ ಇಲ್ಲ – ಆ ಹತ್ತು ರೂಪಾಯಿಗಳಷ್ಟೇ. ಅಷ್ಟಕ್ಕಾಗಿ ನಾವು “ನನಗೆ ನೀನು ಬೇಕು, ನಿನಗೆ ನಾನು ಬೇಕು” ಎಂದೆಲ್ಲ ಸುಳ್ಳು ಹೇಳಿಕೊಂಡೆವು. ಮೊದಲಿಗೆ ಅದು ಹತ್ತು ರೂಪಾಯಿ ಇತ್ತು, ಈಗ ಅದು ಐವತ್ತಕ್ಕೆ ಬಂದು ನಿಂತಿದೆ. ನಿನಗೂ ಅದರ ಮೇಲೆ ಕಣ್ಣು ಮತ್ತು ನನಗೂ ಕೂಡಾ. ಅದೇನು ನಿನ್ನ ಕೂದಲಿಗೆ ಏನು ಮಾಡಿಕೊಂಡೆ?’ + +ಒಂದು ಬೆರಳಿನಿಂದ ಮಾಧೋನ ಟೊಪ್ಪಿಗೆಯನ್ನು ಎಗರಿಸುತ್ತಾಳೆ. ಮಾಧೋಗೆ ಅದು ಸ್ವಲ್ಪವೂ ಇಷ್ಟವಾಗುವುದಿಲ್ಲ. + +‘ಸೌಗಂಧಿ!’ + +ಸೌಗಂಧಿ ಮಾಧೋನ ಜೇಬಿನಿಂದ ಕರ್ಚೀಫನ್ನು ಹೊರಗೆಳೆದು, ಅದನ್ನು ಮೂಸಿ, ನೆಲಕ್ಕೆ ಬಿಸುಡುತ್ತಾಳೆ. ‘ಇದೊಂದು ಚಿಂದಿ ಬಟ್ಟೆ, ಒಂದು ಚಿಂದಿ! ಕೆಟ್ಟ ದುರ್ನಾತ ಬರುತ್ತಿದೆ, ತೆಗೆದು ಅದನ್ನು ಹೊರಗೆಸೆ’ + +‘ಸೌಗಂಧಿ!’ + +‘ಥು – ನಿಲ್ಲಿಸು ನಿನ್ನ “ಸೌಗಂಧಿ ಇದು, ಸೌಗಂಧಿ ಅದು” ಎಲ್ಲವನ್ನೂ! ನಿನಗೆ ಬೇಕಾದ ಐವತ್ತು ರೂಪಾಯಿಗಳನ್ನು ಕೊಡಲು ನಿನ್ನಮ್ಮ ಕಾದು ನಿಂತಿದ್ದಾಳೆಯೇ? ಅಥವಾ ನೀನೇನು ಸಣ್ಣ ವಯಸ್ಸಿನ, ಸುಂದರಾಂಗ ಪುರುಷ ಕುದುರೆಯೋ ನೋಡಿದೊಡನೆ ನಿನ್ನೊಡನೆ ಪ್ರೇಮಕ್ಕೆ ಬೀಳಲು? ಸೂಳೆಮಗನೇ! ನನ್ನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದೀಯಾ? ನಾನೇನು ಇಲ್ಲಿ ಕಾದು ಬಿದ್ದಿರುವವಳಾ? ನೀನೊಬ್ಬ ಕಿತ್ತೋದವನು! ನಿನ್ನನ್ನು ನೀನು ಏನೆಂದು ತಿಳಿದಿರುವೆ? ನಾನು ನಿನ್ನನ್ನೇ ಕೇಳುತ್ತಿರುವುದು “ನೀನ್ಯಾವನೋ? ಕಿತ್ತುಹೋದ ಕಳ್ಳ?ಈ ಸರಿರಾತ್ರಿಯಲ್ಲಿ ನೀನು ಇಲ್ಲಿಗೇಕೆ ಬಂದಿರುವೆ? ಪೊಲೀಸರನ್ನು ಕರೆಯಲೇನು? ಪುಣೆಯಲ್ಲಿ ನಿನ್ನ ಮೇಲೊಂದು ಪೊಲೀಸ್ ರಿಪೋರ್ಟ್ ನಿಜವಾಗಿಯೂ ಇತ್ತು ಅಂತಲೇ ಇಟ್ಟುಕೊಂಡರೂ, ಅದಕ್ಕೆ ನಾನೇಕೆ ಚಿಂತಿಸಬೇಕು – ನಾನು ಇಲ್ಲಿಯೇ ನಿನ್ನ ಮೇಲೊಂದು ಕೇಸ್ ಹಾಕುತ್ತೇನೆ” + +ಮಾಧೋ ಗಾಭರಿಗೊಂಡ. ‘ಸೌಗಂಧಿ, ಏನಾಗಿದೆ ನಿನಗೆ?’ + +‘ಹೋಗಲೋ ನಿನ್ನಮ್ಮನ್! ನೀನ್ಯಾವನು ಅದನ್ನೆಲ್ಲ ಕೇಳಲು? ಮೊದಲು ಇಲ್ಲಿಂದ ತೊಲಗು-ಇಲ್ಲವಾದರೆ!’ + +ಸೌಗಂಧಿಯ ಕೊಳಕು ನಾಯಿ ಅವಳ ಕಿರುಚಾಟವನ್ನು ಕೇಳಿ, ಮಂಚದಡಿಯಿಂದ ಆಕ್ರಮಣಕಾರಿಯಾಗಿ ಎದ್ದು ಬಂದು, ಮಾಧೋನೆಡೆಗೆ ತಿರುಗಿ, ಬೊಗಳಲು ಶುರು ಮಾಡುತ್ತದೆ. ಸೌಗಂಧಿ ಗಟ್ಟಿಯಾಗಿ ನಗುತ್ತಾಳೆ, ಮಾಧೋಗೆ ಗಾಭರಿಯಾಗುತ್ತದೆ. ಅವನು ತನ್ನ ಟೋಪಿಯನ್ನು ತೆಗೆದುಕೊಳ್ಳಲು ಬಾಗುತ್ತಾನೆ, ಆದರೆ ಸೌಗಂಧಿ ಕಿರುಚುತ್ತಾಳೆ, ‘ಅದನ್ನು ಮುಟ್ಟಬೇಡ – ಮೊದಲು ಇಲ್ಲಿಂದ ತೊಲಗು. ನೀನು ತಲುಪಿದ ಕೂಡಲೆ ನಿನ್ನ ಕಿತ್ತೋದ ಟೋಪಿಯನ್ನು ಪಾರ್ಸೆಲ್ ಕಳಿಸುತ್ತೇನೆ’ + + + +ಮತ್ತಿಷ್ಟು ಗಟ್ಟಿಯಾಗಿ ನಗುತ್ತಾಳೆ. ಬೆತ್ತದ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾಳೆ ಮತ್ತು ಅವಳ ನಾಯಿಯು ಮಾಧೋನನ್ನು ರೂಮಿನಿಂದಾಚೆಗೆ ತಳ್ಳಿಕೊಂಡು ಓಡಿಸುತ್ತದೆ ಮತ್ತು ಮೆಟ್ಟಿಲಿಳಿದು ಹೋಗಲು ಹೇಳುವಂತೆ ಬೊಗಳುತ್ತದೆ. + +ವಾಪಸ್ಸು ಬಂದಾಗ, ಬಾಲವನ್ನು ರಭಸವಾಗಿ ಅಲ್ಲಾಡಿಸುತ್ತಿರುತ್ತಾನೆ. ಸೌಗಂಧಿಯ ಪಾದಗಳ ಬಳಿ ಕುಳಿತು, ತಲೆ ಅಲ್ಲಾಡಿಸುತ್ತಾ, ಕೆನ್ನೆಯಡಿ ಕಿವಿ ಮಡಚಿ ಮಲಗುತ್ತಾನೆ. ಸೌಗಂಧಿಗೆ ಆಗ ಇದ್ದಕ್ಕಿದ್ದಂತೆ ತನ್ನನ್ನು ಸುತ್ತುವರೆದ ಗಾಭರಿಗೊಳಿಸುವ ಗಾಢಮೌನ, ಆವರೆಗೆ ಎಂದೂ ಅನುಭವಿಸಿಲ್ಲದ ಗಾಢಮೌನ ಅರಿವಿಗೆ ಬರುತ್ತದೆ. ಜನಭರಿತ ರೈಲೊಂದು ಎಲ್ಲ ಸ್ಟೇಷನ್‌ಗಳಲ್ಲೂ ಪ್ರಯಾಣಿಕರನ್ನು ಇಳಿಸಿ ಇಳಿಸಿ, ಕೊನೆಗೆ ಖಾಲಿಯಾಗಿ ನಿರ್ಜನವಾದ ತಗಡಿನ ಚಾವಣಿಯಡಿ ನಿಂತಿರುವಂತೆ ಭಾಸವಾಗುತ್ತದೆ. ಅತ್ಯಂತ ನೋವು ಕೊಡುವ ಶೂನ್ಯಭಾವ. ಸೌಗಂಧಿ ಆ ಭಾವವನ್ನು ತೊಡೆದು ಹಾಕಲು ಪ್ರಯತ್ನಿಸಿ ಸೋಲುತ್ತಾಳೆ. ಇದ್ದಕ್ಕಿದ್ದಂತೆ ಮನಸ್ಸಿನ ತುಂಬ ಏನೇನೋ ಆಲೋಚನೆಗಳು, ಆದರೆ ಮನಸ್ಸು ಜರಡಿಯಂತಾಗಿಯೂ, ಸಾವಿರಾರು ಯೋಚನೆಗಳನ್ನು ಅದರಲ್ಲಿ ಹಾಕಿದಂತೆಯೂ ಕುರ್ಚಿಯಲ್ಲಿಯೇ ಕುಳಿತಿರುತ್ತಾಳೆ, ಆದರೆ ಯೋಚನೆಗಳು ಮುಗಿದ ನಂತರವೂ, ಅವಳಿಗೆ ತನ್ನನ್ನು ತಾನು ಸಂತೈಸಿಕೊಳ್ಳುವ ಮಾರ್ಗ ಹೊಳೆಯುವುದಿಲ್ಲ. ಅವಳು ತನ್ನ ಕೊಳಕು ನಾಯಿಯನ್ನು ಎತ್ತಿಕೊಂಡು, ತನ್ನ ವಿಶಾಲವಾದ ತೇಗದ ಮರದ ಮಂಚದ ಮೇಲೆ ಒಂದು ತುದಿಗೆ ಮಲಗಿಸಿ, ಅವನ ಪಕ್ಕ ಮಲಗುತ್ತಾಳೆ ಮತ್ತು ಕೂಡಲೇ ಗಾಢನಿದ್ರೆ ಆವರಿಸುತ್ತದೆ…. + + + +ಹುಟ್ಟಿದ್ದು ಕೊಳ್ಳೇಗಾಲದಲ್ಲಿ. ಬೆಂಗಳೂರಿನಲ್ಲಿ ವಾಸ. ಕವನ, ಪ್ರಬಂಧ, ಪ್ರವಾಸ ಕಥನ, ನಾಟಕ ಇವುಗಳನ್ನು ಬರೆಯಲು ಆಸಕ್ತಿ. ಕವನಗಳ ಅನುವಾದ ಇತ್ತೀಚೆಗೆ ಹಿಡಿದಿರುವ ಹುಚ್ಚು. ನಾಟಕ ನೋಡುವುದು ಊರೂರು ಸುತ್ತುವುದು ಅತ್ಯಂತ ಪ್ರೀತಿಯ ಹವ್ಯಾಸಗಳು.`ಜಸ್ಟ್ ಮಾತ್ ಮಾತಲ್ಲಿ’ ಮತ್ತು ‘ಕಿಚನ್ ಕವಿತೆಗಳು’ ಇವರ ಇತ್ತೀಚೆಗಿನ ಪುಸ್ತಕಗಳು \ No newline at end of file diff --git a/Kenda Sampige/article_453.txt b/Kenda Sampige/article_453.txt new file mode 100644 index 0000000000000000000000000000000000000000..4c60cf77c6fbfc75915c8bd71de95f2b7b6b22bb --- /dev/null +++ b/Kenda Sampige/article_453.txt @@ -0,0 +1,69 @@ + + +ರೈತದಂಡು ಬೆಳ್ಳಾರೆ, ಪುತ್ತೂರುಗಳನ್ನು ಗೆದ್ದು ನಂದಾವರ ದೇವಾಲಯದ ಮುಂಭಾಗದ ತೇರಮಜಲಿನಲ್ಲಿ ಬೀಡುಬಿಟ್ಟಿತ್ತು. ನಂದಾವರದ ಬಂಗರಸ ತನ್ನ ಪುಟ್ಟ ಪಡೆಯೊಡನೆ ರೈತ ದಂಡನ್ನು ಸೇರಿಕೊಂಡಿದ್ದ. ದೇವಾಲಯದ ಸಭಾಮಂಟದಲ್ಲಿ ಪುಟ್ಟ ಬಸವ ಎತ್ತರದ ಪೀಠದಲ್ಲಿ ಕುಳಿತಿದ್ದ. ಕೆಳಗೆ ನೆಲದಲ್ಲಿ ಹುಲಿ ಕಡಿದ ನಂಜಯ್ಯ, ಕೆದಂಬಾಡಿ ರಾಮಗೌಡ, ಬಂಗರಸ ಮತ್ತು ದೇವಾಲಯದ ಮೊಕ್ತೇಸರ ಕಾಂತು ಭಂಡಾರಿ ಈಚಲ ಚಾಪೆಯಲ್ಲಿ ಕುಳಿತಿದ್ದರು. ಅವರು ಏನೋ ಗಹನವಾದ ಚರ್ಚೆಯಲ್ಲಿ ತೊಡಗಿದ್ದರು. ಆಗ ಆ ಗುಂಪು ಒಳಗೆ ಬಂತು. ಅದರಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಂದಿ ಇದ್ದರು. ಅವರ ಹಣೆಯಲ್ಲಿ ತಿರುಪತಿ ನಾಮಗಳಿದ್ದವು. ತಲೆಗೆ ಬಿಳಿಟೊಪ್ಪಿ ಹಾಕಿಕೊಂಡಿದ್ದರು. ಗುಂಪಿನ ಮುಂಭಾಗದಲ್ಲಿದ್ದ ಗುಡಾಣ ಹೊಟ್ಟೆಯ ಗುಜ್ಜಾನೆ ಮರಿಯಂತಿದ್ದ ಕುಳ್ಳ ಆಸಾಮಿ ಪುಟ್ಟ ಬಸವನ ಎದುರು ನಿಂತು ಪ್ರಶ್ನಿಸಿದ + +“ಕಲ್ಯಾಣ ಸ್ವಾಮಿಗಳು ಎಂದರೆ ನೀವೇಯೋ?”“ಹೌದು ನಾನೇ. ದಯವಿಟ್ಟು ಕುಳಿತುಕೊಳ್ಳಿ. ನೀವು ಯಾರೆಂದು ತಿಳಿಯಲಿಲ್ಲ.”ಅಲ್ಲಿ ಬೇರೆ ಆಸನವಿರಲಿಲ್ಲ. ಬಂದವರು ನೆಲದಲ್ಲೇ ಕುಳಿತುಕೊಳ್ಳಬೇಕಿತ್ತು. ಬಂಗರಸನಿಗೆ ಗುಂಪಿನ ಮುಖಂಡನ ಪರಿಚಯವಿತ್ತು. + +“ಇಲ್ಲಿಂದ ಮೇಲೆ ಎರಡು ಮೈಲಿ ದೂರದಲ್ಲಿ ನೇತ್ರಾವತಿಯ ಬಲ ದಂಡೆಯಲ್ಲಿ ಬಂಟವಾಳ ಪೇಟೆ ಇದೆ ಸ್ವಾಮಿ. ಅಲ್ಲಿ ವೆಂಕಟರಮಣ ಸ್ವಾಮಿಯ ದೇವಾಲಯವಿದೆ. ಇವರು ಅದರ ಆಡಳಿತ ಮೊಕ್ತೇಸರ ರಂಗ ಬಾಳಿಗರು. ತುಳುನಾಡಿನ ದೊಡ್ಡ ವರ್ತಕರಲ್ಲಿ ಇವರೂ ಒಬ್ಬರು. ಅರಬ್ಬಿ ಸಮುದ್ರದಿಂದ ಬಂಟವಾಳದವರೆಗೆ ನಾವೆಗಳು ಬರುತ್ತವೆ. ಇವರು ಅರಬ್ ದೇಶಗಳಿಗೆ ಅಕ್ಕಿ ರಫ್ತು ಮಾಡುತ್ತಾರೆ. ಇಡೀ ತುಳು ನಾಡಿಗೆ ಉಪ್ಪು ಮತ್ತು ಹೊಗೆಸೊಪ್ಪು ವಿತರಿಸುವುದು ಇವರೇ. ಇಂಗ್ಲಿಷರಿಗೆ ತುಂಬಾ ತುಂಬಾ ಬೇಕಾದವರು.”ಬಂಗರಸ ಕೊನೆಯ ವಾಕ್ಯವನ್ನು ಬೇಕೆಂದೇ ಒತ್ತಿ ಹೇಳಿದ. ಪುಟ್ಟಬಸವನ ಮುಖದಲ್ಲಿ ಕಂಡೂ ಕಾಣದಂತಹ ನಗುವೊಂದು ಮೂಡಿ ಮಾಯವಾಯಿತು. + +“ಹೇಳಿ ರಂಗ ಬಾಳಿಗರೇ, ನಮ್ಮಿಂದ ನಿಮಗೆ ಯಾವ ಸಹಾಯವಾಗಬೇಕು? ನಂದಾವರದ ಬಂಗರಸರು ನಮ್ಮ ಜತೆ ಸೇರಿಕೊಂಡಿದ್ದಾರೆ. ನೀವೂ ಸೇರಿಕೊಂಡರೆ ನಮ್ಮನ್ನು ಸುಲಿಯುವ ಆ ಬ್ರಿಟಿಷರನ್ನು ನಮ್ಮ ತಾಯ್ನೆಲದಿಂದ ಓಡಿಸಿ ನಾವು ಸ್ವತಂತ್ರರಾಗಬಹುದು. ಏನು ನಿಮ್ಮ ಅಭಿಪ್ರಾಯ?” + +ಅಂತಹ ಮಾತನ್ನು ರಂಗ ಬಾಳಿಗ ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ತಬ್ಬಿಬ್ಬಾದವನು ಸಾವರಿಸಿಕೊಂಡು ಮಾತಾಡಿದ. + +“ನಿಮ್ಮ ಹೆಸರಲ್ಲಿ ನಮ್ಮ ದೇವಾಲಯಕ್ಕೊಂದು ಪತ್ರ ಬಂದಿದೆ. ಆದರೆ ನೀವು ಕೊಡಗಿನ ರಾಜ್ಯಪಾಲರು ಹೌದೋ ಅಲ್ಲವೋ ಎಂಬ ಬಗ್ಗೆಯೇ ನಮ್ಮೆಲ್ಲರಲ್ಲಿ ಸಂದೇಹಗಳಿವೆ. ನಿಮ್ಮದು ದರೋಡೆಕೋರರ ದಂಡು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಕಲ್ಯಾಣಪ್ಪನ ಕಾಟಕಾಯಿ ಎಂಬ ಮಾತು ನಮ್ಮಲ್ಲಿ ಕೇಳಿ ಬರುತ್ತಿದೆ. ನಾನು ನಿಜವನ್ನು ಹೇಳುತ್ತಿರುವುದಕ್ಕೆ ಸ್ವಾಮಿಗಳು ಕ್ಷಮಿಸಬೇಕು.”ಪುಟ್ಟ ಬಸವನಿಗೆ ಸಿಟ್ಟು ಬರಲಿಲ್ಲ. + +“ಹೀಗೆ ಆಡಿಕೊಳ್ಳುತ್ತಿರುವುದಕ್ಕೆ ಕಾರಣವೇನು ರಂಗ ಬಾಳಿಗರೇ.” + +“ಸ್ವಾಮಿಗಳೇ, ಆಧಾರವಿಲ್ಲದೆ ಮಾತಾಡುವ ಪೈಕಿಯವನಲ್ಲ ನಾನು. ನನ್ನ ತಂದೆಯವರ ಕಾಲದಲ್ಲಿ ಕೊಡಗಿನ ದರೋಡೆಕೋರರ ದಂಡು ತುಳುನಾಡಿಗೆ ಇಳಿಯಿತು. ಹೊಂಬಾಳೆ ನಾಯಕ ಮತ್ತು ಗೋಪಗೌಡ ಅದರ ಮುಖಂಡರು. ಅವರು ಉದ್ದಕ್ಕೂ ತುಳು ನಾಡನ್ನು ದೋಚುತ್ತಾ ಹೋದರು. ಆಗ ತುಳುನಾಡಿನಲ್ಲಿ ಟಿಪ್ಪುವಿನ ಆಡಳಿತ ಇತ್ತು ನೋಡಿ. ಕೊಡಗಿನ ಕಾಟಕಾಯಿ ತಂಡ ಬಂಟವಾಳವನ್ನು ಸಂಪೂರ್ಣವಾಗಿ ದೋಚಿತು. ನಮ್ಮ ವೆಂಕಟರಮಣ ದೇವರ ವಿಗ್ರಹವನ್ನೂ ಬಿಡಲಿಲ್ಲ. ಆಮೇಲೆ ನನ್ನ ಅಪ್ಪ ಒಂದು ನಿಯೋಗದೊಡನೆ ಮಡಿಕೇರಿಗೆ ಹೋಗಿ ದೊಡ್ಡವೀರ ಮಹಾಪ್ರಭುಗಳಲ್ಲಿ ವಿಷಯ ಅರಿಕೆ ಮಾಡಿ ಮೂರ್ತಿಯನ್ನು ತರಬೇಕಾದರೆ ಸಾಕುಸಾಕಾಗಿ ಹೋಯಿತು. ಕೊಡಗರು ದರೋಡೆಕೋರರೆಂಬುದಕ್ಕೆ ಬೇರೆ ಸಾಕ್ಷಿ ಬೇಕಾ ಸ್ವಾಮಿಗಳೇ?” ಹುಲಿಕಡಿದ ನಂಜಯ್ಯನೆಂದ. + +“ಅದು ಟಿಪ್ಪುವಿನ ಹೆಸರು ಕೆಡಿಸಲೆಂದು ಇಂಗ್ಲಿಷರು ದೊಡ್ಡ ವೀರರಾಜರಿಂದ ಬಲಾತ್ಕಾರವಾಗಿ ಆ ಕೆಲಸ ಮಾಡಿಸಿದ್ದು ಬಾಳಿಗರೇ. ಇದೇ ಇಂಗ್ಲಿಷರು ಮಂಗಳೂರಲ್ಲಿ ಚರ್ಚುಗಳಿಗೆ ಬೆಂಕಿ ಇಟ್ಟು ಅದು ಟಿಪ್ಪುವಿನ ಕೃತ್ಯವೆಂದು ಅಪಪ್ರಚಾರ ಮಾಡಿ ಕ್ರಿಶ್ಚಯನ್ನರು ಟಿಪ್ಪುವಿಗೆ ತಿರುಗಿ ಬೀಳುವಂತೆ ಮಾಡಿದರು. ನಮ್ಮ ನಾಡನ್ನು ಧರ್ಮದ ಆಧಾರದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಯನ್ ಎಂದು ಒಡೆದು ಆಳುವ ಇಂಗ್ಲಿಷರು ನಿಮಗೆ ಕೊಡಗರಿಗಿಂತ ಆಪ್ತರಾಗಿರುವುದು ಈ ನಾಡಿನ ದುರ್ದೈವ.” + +ಈ ಮಾತಿಗೆ ರಂಗ ಬಾಳಿಗ ತಬ್ಬಿಬ್ಬಾಗಿ ಹೋದ.ಪುಟ್ಟ ಬಸವ ಸಮಾಧಾನದ ಮಾತನ್ನಾಡಿದ. + +“ದೊಡ್ಡವೀರ ರಾಜರ ಕಾಲದಲ್ಲಿ ತಪ್ಪು ಘಟಿಸಿದ್ದರೆ ಕೊಡಗಿನ ಪ್ರತಿನಿಧಿಯಾಗಿ ನಾನು ಕ್ಷಮೆಯಾಚಿಸುತ್ತಿದ್ದೇನೆ. ಅದನ್ನು ಮರೆತುಬಿಡೋಣ. ಕೊಡಗರಿಂದ ಬೇರೆ ಏನಾದರೂ ತಪ್ಪು ಸಂಭವಿಸಿದೆಯೇ?”ರಂಗ ಬಾಳಿಗನ ಮುಖ ವಿಕಸಿಸಿತು. + +“ಹೌದು ಸ್ವಾಮಿಗಳೇ, ನೀವು ಕೊಡಗರು ದರೋಡೆಕೋರರು ಮಾತ್ರವಲ್ಲ, ಹೆಣ್ಣು ಕಳ್ಳರೂ ಕೂಡಾ. ಆ ಘಟನೆ ನಿಮಗೆ ನೆನಪಿರಬಹುದು. ಚಿಕ್ಕ ವೀರರಾಜರ ಕಾಲದಲ್ಲಿ ದಿವಾನ ಕುಂಟ ಬಸವ ಇಲ್ಲಿಗೆ ಬಂದಿದ್ದ. ಈ ದೇವಾಲಯದ ಅರ್ಚಕರ ಮಗ ಪಾಣೆ ಸೂರ್ಯನ ಹೆಂಡತಿಯನ್ನು ಹಾರಿಸಿಕೊಂಡು ಹೋಗಿದ್ದ. ಇದು ಮನುಷ್ಯರು ಮಾಡುವ ಕೃತ್ಯವಾ ಸ್ವಾಮಿ?” + +ಕಂದಿದ ಮುಖದಿಂದ ಪುಟ್ಟ ಬಸವನೆಂದ,“ತಪ್ಪು ಯಾರೇ ಮಾಡಿದ್ದರೂ ಅಂತಿಮವಾಗಿ ಅದಕ್ಕೆ ರಾಜನೇ ಹೊಣೆಗಾರನಾಗುತ್ತಾನೆ. ವೆಂಕಟರಮಣ ದೇವಾಲಯದ ಮೂರ್ತಿಯನ್ನು, ಪಾಣೆ ಸೂರ್ಯನ ಹೆಂಡತಿಯನ್ನು ಒಯ್ದದ್ದು ಕ್ಷಮೆಯೇ ಇಲ್ಲದ ತಪ್ಪುಗಳು. ಅದಕ್ಕಾಗಿ ನಾನು ಮತ್ತೊಮ್ಮೆ ಕ್ಷಮೆ ಯಾಚಿಸುತ್ತೇನೆ.”ರಂಗ ಬಾಳಿಗ ಗೆಲುವಿನ ನಗೆ ನಕ್ಕ. + +“ನಮ್ಮ ಆಕ್ಷೇಪ ಹಿಂದೆ ಘಟಿಸಿ ಹೋದದ್ದರ ಬಗ್ಗೆ ಅಲ್ಲ. ನಿನ್ನೆ ನಮ್ಮ ಅಂಗಡಿಗೆ ಬಂದು ನಿಮ್ಮ ದಂಡಿನವರು ಹತ್ತು ಮುಡಿ ಅಕ್ಕಿ ಕೇಳಿದರು. ನಾನು ಇಲ್ಲವೆಂದರೂ ನಮ್ಮ ಗೋದಾಮಿಗೆ ನುಗ್ಗಿ ಇಪ್ಪತ್ತೈದು ಮುಡಿ ಹೊತ್ತುಕೊಂಡು ಹೋದರು.”ತಕ್ಷಣ ಕೆದಂಬಾಡಿ ರಾಮಗೌಡ ಕೇಳಿದ. + +“ಹತ್ತು ಮುಡಿ ಅಕ್ಕಿ ಇಲ್ಲದವರ ಗೋದಾಮಿನಲ್ಲಿ ಇಪ್ಪತ್ತೈದು ಮುಡಿ ಅಕ್ಕಿ ಎಲ್ಲಿಂದ ಬಂತು ಬಾಳಿಗರೇ?”“ನನ್ನ ಗೋದಾಮಿನಲ್ಲಿ ಅಕ್ಕಿ ಇದ್ದದ್ದು ನಿಜ. ಅದು ಹೊರ ದೇಶಕ್ಕೆ ರಫ್ತು ಮಾಡಲೆಂದು ಇಟ್ಟಿದ್ದೇ ಶಿವಾಯಿ, ಯಾರಿಗೂ ಮಾರಲಿಕ್ಕಲ್ಲ. ಕೊಡುವುದಿಲ್ಲವೆಂದು ಹೇಳಿದ ಮೇಲೆ ಬಲಾತ್ಕಾರದಿಂದ ಗೋದಾಮಿಗೆ ನುಗ್ಗಿ ಮುಡಿ ಅಕ್ಕಿ ಒಯ್ದದ್ದು ತಪ್ಪಲ್ಲವೇ ಸ್ವಾಮಿಗಳೇ?”“ನಿನ್ನೆ ರಂಗ ಬಾಳಿಗರ ಗೋದಾಮಿನಿಂದ ಅಕ್ಕಿ ತಂದವರು ಯಾರು ರಾಮಗೌಡರೇ?”“ಊಕಣ್ಣ ಬಂಟರ ತಂಡದವರು ಸ್ವಾಮಿ.”“ಅವರನ್ನು ಬರಹೇಳಿ.” + +ರಾಮಗೌಡ ಊಕಣ್ಣ ಬಂಟನನ್ನು ಕರೆತಂದ. ಅದುವರೆಗಿನ ಮಾತುಕತೆ ಕೇಳಿಸಿಕೊಳ್ಳುತ್ತಿದ್ದ ಊಕಣ್ಣ ಬಂಟನೆಂದ,“ನಮಗೆ ಬಲಾತ್ಕಾರದಿಂದ ಅಕ್ಕಿ ಮುಡಿ ಹೊತ್ತು ತರುವ ಉದ್ದೇಶವಿರಲಿಲ್ಲ ಮಹಾಸ್ವಾಮಿ. ನಾವು ಅಕ್ಕಿ ತರಲೆಂದು ಸಾಕಷ್ಟು ಹಣ ಕೊಂಡು ಹೋಗಿದ್ದೆವು. ಅಕ್ಕಿ ಕೇಳಿದ್ದಕ್ಕೆ ಇವರು ಇಲ್ಲವೆಂದರು. ಇವರ ನಡೆ ನುಡಿಯಲ್ಲಿ ಸುಳ್ಳರ ಭಾವವಿತ್ತು. ನಾವು ಅಂಗಡಿಯಿಂದ ಇತ್ತ ಬಂದು ಮರೆಯಲ್ಲಿ ಕಾದೆವು. ಸ್ವಲ್ಪ ಹೊತ್ತಲ್ಲಿ ಇವರ ಆಳುಗಳು ಅಕ್ಕಿ ಮುಡಿಗಳನ್ನು ಹೊತ್ತುಕೊಂಡು ನದಿಯತ್ತ ಬರುವುದನ್ನು ಕಂಡೆವು. ನಾವು ಕೆಲಸದಾಳುಗಳನ್ನು ತಡೆದು ಅಕ್ಕಿ ಎಲ್ಲಿಗೆ ಎಂದು ಕೇಳಿದಾಗ – ಮಂಗಳೂರಿಗೆ, ಕಲೆಕ್ಟರ್ ಲೂವಿನ್ ಮತ್ತು ಅವನ ಕಡೆಯವರಿಗೆ-ಎಂದರು. ನಾಡನ್ನು ದೋಚುವವರಿಗೆ ಇವರು ಅಕ್ಕಿ ಕೊಡುತ್ತಾರೆ. ನಾಡಿಗೆ ಬಿಡುಗಡೆ ತಂದು ಕೊಡಲು ಹೊರಟವರಿಗೆ ಇಲ್ಲ. ನಮಗೆ ಅಕ್ಕಿ ಬೇಕಿತ್ತು, ತಂದೆವು. ಹಣ ಇಲ್ಲಿದೆ ಮಹಾಸ್ವಾಮಿ, ನೀವೇ ಈ ಬಾಳಿಗರಿಗೆ ಕೊಟ್ಟು ಬಿಡಿ.” + +ರಂಗ ಬಾಳಿಗ ತನ್ನ ಹಟ ಬಿಡಲಿಲ್ಲ.“ನಾನು ವ್ಯಾಪಾರೀ ಧರ್ಮ ಪಾಲಿಸುತ್ತಿದ್ದೇನೆ. ನನ್ನ ವೃತ್ತಿ ಧರ್ಮಕ್ಕೆ ಅಡ್ಡಿಪಡಿಸಿ ಇವರು ಅನ್ಯಾಯವೆಸಗಿದ್ದಾರೆ. ಸ್ವಾಮಿಗಳು ನ್ಯಾಯ-ನೀತಿಯನ್ನು ಗೌರವಿಸುವವರು ಎಂದಾದರೆ ಇವರನ್ನು ಶಿಕ್ಷಿಸಬೇಕು.”ಇದುವರೆಗೆ ಎಲ್ಲವನ್ನೂ ಮೌನವಾಗಿ ಕೇಳಿಸಿಕೊಳ್ಳುತ್ತಿದ್ದ ನಂದಾವರ ದೇವಾಲಯದ ಮೊಕ್ತೇಸರ ಕಾಂತು ಭಂಡಾರಿಗೆ ತಡಕೊಳ್ಳಲು ಸಾಧ್ಯವಾಗಲಿಲ್ಲ. + +“ಮಹಾಸ್ವಾಮಿಗಳೇ, ಈ ರಂಗ ಬಾಳಿಗನ ಬಾಯಿಯಿಂದ ಒಳ್ಳೆಯ ಮಾತುಗಳು ಬಂದಾವೆಂದು ಸುಮ್ಮನಿದ್ದೆ. ಇವನು ನಿಜಕ್ಕೂ ರಾಜದ್ರೋಹ ಮಾಡಿದ್ದಾನೆ. ಮೊನ್ನೆ ಪುತ್ತೂರಲ್ಲಿ ನಿಮ್ಮನ್ನು ಎದುರಿಸಲಾಗದೆ ಪಲಾಯನ ಮಾಡಿದ ಕಲೆಕ್ಟರ್ ಲೂವಿನ್ ಮತ್ತು ಅವನ ಸೈನಿಕರಿಗೆ ಬಂಟವಾಳದಲ್ಲಿ ಗಡದ್ದು ಊಟ-ಉಪಹಾರ ಮತ್ತು ಆಶ್ರಯ ನೀಡಿ ಕ್ಷೇಮವಾಗಿ ಗುರುಪುರದ ಮೂಲಕ ಮಂಗಳೂರಿಗೆ ತಲುಪುವ ವ್ಯವಸ್ಥೆ ಮಾಡಿದ್ದು ಇವನೇ. ದಾಸ್ತಾನಿದ್ದರೂ ನಮಗೆ ಕೊಡದೆ ಮತ್ತೆ ಲೂವಿನ್ ನ ಪಡೆಗೆ ಕಳುಹಿಸಲು ಯತ್ನಿಸಿ ರಾಜದ್ರೋಹ ಎಸಗಿದ್ದನ್ನು ವ್ಯಾಪಾರಿ ಧರ್ಮ ಎನ್ನುತ್ತಿದ್ದಾನೆ. ಈ ನಾಡದ್ರೋಹಿಯನ್ನು ಬಂಧಿಸಿ ನೇಣು ಹಾಕಲು ಆಜ್ಞೆ ಮಾಡಿ ಬಿಡಿ ಸ್ವಾಮಿಗಳೇ. ಈ ಕುತಂತ್ರಿ ನರಿಗೆ ಅದುವೇ ಸರಿಯಾದ ಶಿಕ್ಷೆ.”ರಂಗ ಬಾಳಿಗ ಭಯದಿಂದ ಬಿಳಿಚಿ ಹೋದ. + +“ಮಹಾಸ್ವಾಮಿಗಳು ನನ್ನದು ತಪ್ಪಾಗಿದ್ದರೆ ಕ್ಷಮಿಸಬೇಕು. ಕಲೆಕ್ಟರ್ ಲೂವಿನ್ ಮೊದಲಿನಿಂದಲೂ ನನ್ನ ಸ್ನೇಹಿತರು. ಹಸಿದು ಬಂದು ಅವರು ಅನ್ನ ಕೇಳಿದಾಗ ಇಲ್ಲವೆನ್ನಲು ನನಗೆ ಮನಸ್ಸು ಬರಲಿಲ್ಲ. ಇಲ್ಲವೆನ್ನುವ ಧೈರ್ಯ ಮಾಡುತ್ತಿದ್ದರೆ ಹಸಿವಿನಿಂದ ಕಂಗಾಲಾಗಿದ್ದ ಒಂದೂನೂರ ಐವತ್ತು ಸೈನಿಕರ ಕೋವಿಗಳು ನನ್ನನ್ನು ಉಳಿಸುತ್ತಿರಲಿಲ್ಲ. ಹೊಟ್ಟೆಪಾಡಿಗಾಗಿ ನಾನು ವ್ಯಾಪಾರ ವೃತ್ತಿ ಆರಂಭಿಸಿದವನು. ಲೂವಿನ್ ಸಾಹೇಬರ ದಯೆಯಿಂದ ಒಳ ಪ್ರದೇಶಗಳಿಗೆ ಉಪ್ಪು ಮತ್ತು ಹೊಗೆಸೊಪ್ಪು ವಿತರಣೆ ಮಾಡುವ ಹಕ್ಕು ನನಗೆ ಸಿಕ್ಕಿದೆ. ಮೊದಲು ಇಲ್ಲೆಲ್ಲಾ ಕಳ್ಳಕಾಕರ ಉಪಟಳವಿತ್ತು. ಇಂಗ್ಲಿಷರ ಕಾನೂನು ಮತ್ತು ನ್ಯಾಯ ವ್ಯವಸ್ಥೆಯಿಂದಾಗಿ ನಾವು ಭಯರಹಿತವಾಗಿ ಬಾಳುತ್ತಿದ್ದೇವೆ. ನಾವು, ತುಳುನಾಡಿನ ವ್ಯಾಪಾರಿಗಳು ಇಂಗ್ಲಿಷರನ್ನು ವಿರೋಧಿಸಲು ಕಾರಣಗಳೇ ಇಲ್ಲ.”ಕೆದಂಬಾಡಿ ರಾಮಗೌಡ ಆಕ್ಷೇಪಿಸಿದ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +“ಏ ರಂಗ ಬಾಳಿಗಾ, ನಾವು ತುಳುನಾಡಿನ ರೈತರು ಇಂಗ್ಲಿಷರನ್ನು ವಿರೋಧಿಸಲು ಸಾಕಷ್ಟು ಕಾರಣಗಳಿವೆ. ರಾಜರ ಕಾಲದಲ್ಲಿ ಬೆಳೆಗೆ ಕಂದಾಯ ಕಟ್ಟಿದರೆ ಸಾಕಿತ್ತು. ಈಗ ಕೃಷಿ ಮಾಡದ ಭೂಮಿಗೂ ನಗದು ರೂಪದಲ್ಲಿ ಕಂದಾಯ ಕಟ್ಟಬೇಕಾಗಿದೆ. ಕಂದಾಯ ಕಟ್ಟಲಾಗದವರ ಭೂಮಿಯನ್ನು ನಿಮ್ಮಂತಹ ವ್ಯಾಪಾರಿಗಳು ಮೂರು ಕಾಸಿಗೆ ಕೊಂಡು ಜಮೀನುದಾರರಾಗುತ್ತೀರಿ. ತಂಬಾಕು ಬೆಳೆಯಲು, ಉಪ್ಪು ತಯಾರಿಸಲು ಅವಕಾಶವನ್ನೇ ಕೊಡುತ್ತಿಲ್ಲ. ನಮ್ಮ ಬೆಳೆಗಳನ್ನು ನೀವು ಹೇಳಿದ ಬೆಲೆಗೆ ಮಾರಿ, ಉಪ್ಪು-ಹೊಗೆಸೊಪ್ಪುಗಳನ್ನು ನೀವೆಂದ ಬೆಲೆಗೆ ನಾವು ಕೊಳ್ಳಬೇಕಿದೆ. ನಿನ್ನ ಲಾಭ ಬಡುಕತನವನ್ನು ನ್ಯಾಯ, ಧರ್ಮ ಎನ್ನುತ್ತೀಯಲ್ಲಾ?” + +ರಂಗ ಬಾಳಿಗ ಉತ್ತರಿಸಿದ,“ನನಗೆ ಇಂಗ್ಲಿಷರು ಮಾಡಿದ್ದರಲ್ಲಿ ಯಾವ ತಪ್ಪೂ ಕಾಣಿಸುವುದಿಲ್ಲ. ದಾಸರ ಹಾಡು ನೆನಪಿಸಿಕೊಳ್ಳಿ – ಎಲ್ಲಾರು ಮಾಡುವುದು ಹೊಟ್ಟೆಗಾಗಿ. ನಾನು ಇಂಗ್ಲಿಷರನ್ನು ದೂರಲಾರೆ. ನೀವು ನನಗೆ ಶಿಕ್ಷೆ ವಿಧಿಸಿದರೂ ಚಿಂತಿಲ್ಲ.”ಹುಲಿ ಕಡಿದ ನಂಜಯ್ಯ ಅಭಯ ನೀಡಿದ. + +“ರಂಗ ಬಾಳಿಗರೇ, ನಿಮಗೆ ಸ್ವಾಮಿಗಳು ಶಿಕ್ಷೆ ನೀಡುವುದಿಲ್ಲ. ನಮ್ಮ ವೈರಿಗಳು ಇಂಗ್ಲಿಷರೇ ಹೊರತು ನೀವಲ್ಲ. ಒಂದು ಸಂದೇಹವನ್ನು ಪರಿಹರಿಸುವುದಕ್ಕೆ ಇದನ್ನು ಕೇಳುತ್ತಿದ್ದೇನೆ. ರೈತರು ಕಂದಾಯ ಪಾವತಿಸುವಂತೆ ನೀವೂ ಇಂಗ್ಲಿಷರಿಗೆ ತೆರಿಗೆ ಕಟ್ಟಬೇಕಾಗುತ್ತದೆ ಅಲ್ಲವೆ?”“ಅದು ನಿಜ. ತೆರಿಗೆ ಕಟ್ಟುವುದು ಕಡ್ಡಾಯ”“ತೆರಿಗೆ ಕಟ್ಟೋದಿಕ್ಕೆ ಹಣ ಎಲ್ಲಿಂದ ತರುತ್ತೀರಿ?”“ನಾವದನ್ನು ಮಾರಾಟ ಮಾಡುವ ಸಾಮಾನುಗಳ ಮೇಲೆ ಹಾಕುತ್ತೇವೆ.”“ಹಾಗಾದರೆ ತೆರಿಗೆಗಳಿಂದ ಸಾಮಾನುಗಳ ಬೆಲೆ ಹೆಚ್ಚಾಗುತ್ತದೆ ಅಲ್ಲವೆ?”“ಹೌದು. ಏರಲೇ ಬೇಕಲ್ವಾ?”“ಈಗ ಹೇಳಿ ಬಾಳಿಗರೇ, ತೆರಿಗೆಯಿಂದ ತೊಂದರೆ ಪಡುವುದು ಬಡವರೇ ಅಲ್ಲವೆ?”ರಂಗ ಬಾಳಿಗನ ಮುಖ ಪೆಚ್ಚಾಯಿತು. + +“ಹಾಗೆಯೇ ಭೂ ಕಂದಾಯ ಹೆಚ್ಚಾದರೆ ತೊಂದರೆಗೆ ಒಳಗಾಗುವವರು ಬಡ ರೈತರು ಮಾತ್ರ ರಂಗ ಬಾಳಿಗರೇ. ಅಲ್ಲವೆನ್ನುತ್ತೀರಾ?”ರಂಗ ಬಾಳಿಗ ಉತ್ತರಿಸಲು ಹೋಗಲಿಲ್ಲ. + +“ನಿಜಾ ಹೇಳಿ ರಂಗ ಬಾಳಿಗರೇ. ಟಿಪ್ಪು ಸುಲ್ತಾನನ ಕಾಲದಲ್ಲಿ ಇಷ್ಟೊಂದು ಭೂ ಕಂದಾಯ ಇತ್ತಾ? ಸಾಮಾನುಗಳಿಗೆ ಅವನು ಇಷ್ಟೊಂದು ತೆರಿಗೆ ವಿಧಿಸುತ್ತಿದ್ದನಾ? ಅಫೀಮು, ಗಾಂಜಾ, ಶರಾಬು ಮಾರಾಟವನ್ನು ಅವನು ನಿಷೇಧಿಸಿದ್ದನಲ್ಲ? ಉಪ್ಪು ತಯಾರಿಸಲು, ಹೊಗೆಸೊಪ್ಪು ಬೆಳೆಯಲು ನಿರ್ಬಂಧವಿತ್ತಾ?”ರಂಗ ಬಾಳಿಗ ಮೌನಕ್ಕೆ ಶರಣಾದ. + +“ಉತ್ತರಿಸಿ ರಂಗ ಬಾಳಿಗರೇ. ನಿಮ್ಮ ಆತ್ಮಸಾಕ್ಷಿಯನ್ನು ಬ್ರಿಟಿಷರ ಬೂಟುಗಳಿಗೆ ಅಡವಿಟ್ಟಿದ್ದೀರಾ?”ಕುಗ್ಗಿದ ದನಿಯಲ್ಲಿ ರಂಗ ಬಾಳಿಗನೆಂದ.“ಟಿಪ್ಪು ಸುಲ್ತಾನನಂತಹ ಸಹಿಷ್ಣು ರಾಜ ಸಿಗುವುದು ಕಷ್ಟ. ಅವನು ಎಂದಿಗೂ ತನ್ನ ಪ್ರಜೆಗಳನ್ನು ಸುಲಿಯಲಿಲ್ಲ. ನಮ್ಮ ಬಂಟವಾಳದ ವೆಂಕಟರಮಣ ದೇವಾಲಯಕ್ಕೆ, ನಂದಾವರದ ಈ ದೇವಾಲಯಕ್ಕೆ ಅದೆಷ್ಟೋ ಉಂಬಳಿ ನೀಡಿದ್ದಾನೆ. ಅಂಥವನನ್ನು ಬಯ್ದರೆ ದೇವರು ಮೆಚ್ಚುವುದಿಲ್ಲ.” + +ಹುಲಿ ಕಡಿದ ನಂಜಯ್ಯ ಮುಂದುವರಿಸಿದ:“ಆದರೆ ಅಂತ ಧರ್ಮಾತ್ಮನನ್ನು ಮತಾಂಧನೆಂದು ಸುಳ್ಳು ಸುಳ್ಳೇ ಇಂಗ್ಲಿಷರು ಕೂಗಿ ಹೇಳಿದಾಗ ನೀವು ಅದಕ್ಕೆ ನಿಮ್ಮ ದನಿಯನ್ನೂ ಸೇರಿಸಿದರಲ್ಲಾ ಬಾಳಿಗರೇ? ಈ ನಾಡಿನ ರೈತ ಊಟಕ್ಕಿಲ್ಲದೆ ಬೀದಿಗಿಳಿದಾಗ ನೀವು ಆ ಇಂಗ್ಲಿಷರ ಪರ ವಹಿಸುತ್ತಿದ್ದೀರಲ್ಲಾ? ನೀವು ಇಷ್ಟು ಹೊತ್ತು ಕಲ್ಯಾಣ ಸ್ವಾಮಿಗಳೆದುರು ಕೂತು ಇಂಗ್ಲಿಷರ ಗುಣಗಾನ ಮಾಡಿದಿರಿ. ಹೀಗೆ ನೀವು ಕಲೆಕ್ಟರ್ ಲೂವಿನ್ನನೆದುರು ಕೂತು ಕಲ್ಯಾಣ ಸ್ವಾಮಿಗಳ ಗುಣಗಾನ ಮಾಡಬಲ್ಲಿರಾ? ನೀವು ಕಣ್ಣಿದ್ದೂ ಕುರುಡರಾಗಿ ಬಿಟ್ಟಿರಲ್ಲ ರಂಗ ಬಾಳಿಗರೇ?”ಪೂರ್ತಿ ಸೋತು ಹೋದ ದನಿಯಲ್ಲಿ ರಂಗ ಬಾಳಿಗ ಕೇಳಿದ.“ನಾನೀಗ ಏನು ಮಾಡಬೇಕೆಂದು ಸ್ವಾಮಿಗಳು ಅಪೇಕ್ಷಿಸುತ್ತೀರಿ?”ಪುಟ್ಟ ಬಸವ ತೀರ್ಪಿತ್ತ. + + + +“ನಮ್ಮ ದಂಡು ತಂದ ನಿಮ್ಮ ಅಕ್ಕಿ ಮುಡಿಗಳ ಬೆಲೆಯನ್ನು ಸರಿಯಾಗಿ ಲೆಕ್ಕ ಹಾಕಿ ತೆಗೆದುಕೊಳ್ಳಿ. ರೈತರನ್ನು ಸುಲಿದು ತಿನ್ನುವುದನ್ನು ನಿಲ್ಲಿಸಿ. ಕೊಡಗರದು ಕಾಟಕಾಯಿ ಎಂದು ಅಪಪ್ರಚಾರ ಮಾಡಬೇಡಿ. ಅದನ್ನು ಬಿಟ್ಟು ನಾವು ನಿಮ್ಮಿಂದ ಬೇರೇನನ್ನೂ ಅಪೇಕ್ಷಿಸುವುದಿಲ್ಲ.” + +ಪ್ರಭಾಕರ ಶಿಶಿಲ ಅವರು ಕಲ್ಯಾಣಪ್ಪನ ಹೋರಾಟದ ರೋಚಕ ಇತಿಹಾಸದಲ್ಲಿ ತೀವ್ರ ಆಸಕ್ತರು. ಸುಳ್ಯದ ರಂಗಕರ್ಮಿ, ಸಮಾಜ ಸುಧಾರಕ ಎನ್. ಎಸ್. ದೇವಿಪ್ರಸಾದ್ ಸಂಪಾಜೆಯವರ ನೇತೃತ್ವದಲ್ಲಿ 1998 ರಲ್ಲಿ ‘ಅಮರ ಕ್ರಾಂತಿ ಉತ್ಸವ ಸಮಿತಿ’ಯನ್ನು ರಚಿಸಿದಾಗ ಅದರಲ್ಲಿ ಸಕ್ರಿಯರಾಗಿದ್ದವರು ಪ್ರಭಾಕರ ಶಿಶಿಲ. ಹಿಂದೆ ಸುಳ್ಯದ ಕ್ರಾಂತಿಕಾರರು 1837 ರ ಮಾರ್ಚ್ 30 ರಂದು ಬೆಳ್ಳಾರೆ ಕೋಟೆಯಲ್ಲಿದ್ದ ಖಜಾನೆಯನ್ನು ವಶಪಡಿಸಿಕೊಳ್ಳುವುದರೊಂದಿಗೆ ಕ್ರಾಂತಿ ಆರಂಭಿಸಿ, ಪುತ್ತೂರು ಪಾಣೆ ಮಂಗಳೂರು ದಾರಿಯಾಗಿ ಎಪ್ರಿಲ್ 5 ರಂದು ಮಂಗಳೂರಿಗೆ ತಲುಪಿದ್ದರು. ಬಾವುಟಗುಡ್ಡದಲ್ಲಿ ಕೊಡಗಿನ ಅರಸರ ವಿಜಯಧ್ವಜವನ್ನು ಹಾರಿಸಿದ್ದರು. + +1998 ರಲ್ಲಿ ಅದೇ ರೀತಿ ಕಾಲ್ನಡಿಗೆಯ ಜಾಥಾ ಕೈಗೊಂಡು ಅಮರ ಸುಳ್ಯದ ಕ್ರಾಂತಿಯನ್ನು ಅರ್ಥಪೂರ್ಣವಾಗಿ ನೆನಪಿಸಿಕೊಳ್ಳಬೇಕು ಎನ್ನುವ ಆಲೋಚನೆಯನ್ನು ಶಿಶಿಲರು ನೀಡಿದ್ದರು. ಅದೇ ರೀತಿ 1998 ಮಾರ್ಚ್30 ರಂದು ಪ್ರಾರಂಭವಾದ ಜಾಥಾ ಬೆಳ್ಳಾರೆ, ಕುಂಬ್ರ, ಪುತ್ತೂರು, ನಂದಾವರ ಮಾರ್ಗದಲ್ಲಿ ಸಾಗಿ ಎಪ್ರಿಲ್ 5 ರಂದು ಮಂಗಳೂರಿಗೆ ತಲುಪಿತು. ಬಾವುಟಗುಡ್ಡದಲ್ಲಿ ಕೊಡಗಿನ ರಾಜನ ಧ್ವಜವನ್ನು ದೇವಿಪ್ರಸಾದ್ ಸಂಪಾಜೆ ಹಾರಿಸಿದರು. ಶಿಶಿಲರು ಜಾಥಾಕ್ಕಾಗಿಯೇ ರಚಿಸಿದ ‘ಅಮರ ಕ್ರಾಂತಿ ವೀರರು’ ಬೀದಿ ನಾಟಕವನ್ನು ದಾರಿಯಲ್ಲಿ ಪ್ರದರ್ಶಿಸುತ್ತಿದ್ದರು. ಏಳುದಿನಗಳ ಜಾಥಾದಲ್ಲಿ ಶಿಶಿಲರ ಇಡೀ ಸಂಸಾರ ಭಾಗವಹಿಸಿತ್ತು. ಪ್ರಭಾಕರ ಶಿಶಿಲರ ಈ ಕತೆಯ ಹಿನ್ನೆಲೆಯಾಗಿ ಈ ಮಾಹಿತಿಗಳನ್ನು ಗಮನಿಸಿದಾಗ ಅವರ ಕತೆಗಳ ಪಾತ್ರಧಾರಿಗಳು ಆಡುವ ಮಾತುಗಳಲ್ಲಿ ಶಿಶಿಲರ ‘ಧ್ವನಿ’ ಕೇಳಿಸುವುದು ವಿಶೇಷವಲ್ಲ ಎಂದು ಅರ್ಥವಾಗುತ್ತದೆ. + +ಈ ಕತೆಯಲ್ಲಿ ಕೊಡಗರ ಕಾಟಕಾಯಿ ಎಂಬ ಶಬ್ದ ಮತ್ತು ಅದರ ಬಗ್ಗೆ ವಿವರಗಳು ಸಿಗುತ್ತವೆ. ಕಲ್ಯಾಣಪ್ಪನ ಕಾಟಕಾಯಿ ಶಬ್ದದ ಮೂಲ ಅದೇ. ಕಲ್ಯಾಣಪ್ಪನ ಕ್ರಾಂತಿಯ ಕಾಲದ ಚಟುವಟಿಕೆಗಳನ್ನು ದಕ್ಷಿಣ ಕನ್ನಡದ ಜನ ಕೊಡಗರ ಕಾಟಕಾಯಿಯ ಮುಂದುವರಿಕೆ ಎಂದು ಭಾವಿಸಿದ್ದಕ್ಕೆ ಕಾರಣಗಳಿವೆ. + +ಟಿಪ್ಪು ಸುಲ್ತಾನನ ಆಡಳಿತದ ಬಗ್ಗೆ, ಬ್ರಿಟಿಷರ ತೆರಿಗೆ ಹೆಚ್ಚೇ ಆಗಿದ್ದರೂ ಅವರು ಜನರನ್ನು ಮರುಳುಗೊಳಿಸುತ್ತಿದ್ದುದಕ್ಕೆ (ಈ ಬಗ್ಗೆ ಪ್ರಸ್ತಾವನೆಯಲ್ಲಿ ಹೇಳಲಾಗಿದೆ) ಇಲ್ಲಿನ ರಂಗ ಬಾಳಿಗ ಸಾಕ್ಷ್ಯ ನುಡಿಯುತ್ತಿದ್ದಾನೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_454.txt b/Kenda Sampige/article_454.txt new file mode 100644 index 0000000000000000000000000000000000000000..f7309f705758fa3730511072791c1acad423d7a3 --- /dev/null +++ b/Kenda Sampige/article_454.txt @@ -0,0 +1,65 @@ +ಭಾವನಾ ಮತ್ತು ಸ್ವಾಮಿ ಯಜಮಾನರ ಕೊಠಡಿಗೆ ಹೋದರು. ಅವರು ಪ್ರೀತಿಯಿಂದ ಬರಮಾಡಿಕೊಂಡರು. ಸ್ವಾಮಿ ಸಂಕೋಚದಿಂದಲೇ ನಿಂತಿದ್ದರು. ಹತ್ತಿರದಲ್ಲಿಯೇ ಇದ್ದ ಕುರ್ಚಿಯಲ್ಲಿ ಕೂರಲು ಹೇಳಿದರು. ಅಷ್ಟರಲ್ಲಿ ಯಜಮಾನರನ್ನುನೋಡಿಕೊಳ್ಳುತ್ತಿದ್ದ ಮೇಲ್ ನರ್ಸ್ ಕೊಠಡಿಯಿಂದ ಹೊರಗೆ ಹೋದರು. ಯಜಮಾನರು ಭಾವನಾಳಿಗೂ ಕೂಡಲು ತಿಳಿಸಿದರು. ಸ್ವಾಮಿಯನ್ನು ಉದ್ದೇಶಿಸಿ “ನಿಮಗೇನು ತೊಂದರೆಯಾಗುತ್ತಿಲ್ಲ ಎಂದು ಭಾವಿಸುವೆ. ನೀವು ಬಂದ ಮೇಲೆ ಇಲ್ಲಿಯ ಒಟ್ಟುವಾತಾವರಣಕ್ಕೆ ಕಳೆ ಬಂದಿದೆ. ಭಾವನಾ ಕೂಡ ಎಲ್ಲಿಲ್ಲದ ಉತ್ಸಾಹದಿಂದ ತನ್ನ ಕಾರ್ಯ ನಿರ್ವಹಿಸುತ್ತಿದ್ದಾಳೆ. ಅದೇ ನನಗೆ ನೆಮ್ಮದಿಯನ್ನು ತಂದುಕೊಟ್ಟಿದೆ. ಕೊನೆಗೂ ನನ್ನ ಒಂದು ರೀತಿಯ ಒಂಟಿತನವನ್ನು ಕಾಪಾಡಿರೋದೆ ಈ ಪುಸ್ತಕಗಳು. ಎಷ್ಟೋಮಂದಿ ನನ್ನ ಸ್ನೇಹಿತರು ಹಾಗೂ ಬಂಧು ಬಳಗದವರು ಬಂದಾಗ; ಇಷ್ಟು ಓದ್ತಿಯಲ್ಲ ಏನು ಸುಖ ಕೊಡ್ತದೆ ಅಂತಾರೆ; ಕೆಲವರು ದಿನಾ ಪಾರಾಯಣದಲ್ಲಿ ತೊಡಗು ಅಂತಾರೆ. ಅವರಿಗೆ ಉತ್ತರಿಸಲು ಹೋಗುವುದಿಲ್ಲ. ಯಾಕೆಂದರೆ ಅವರಿಗೆ ಓದಿನ ಖುಷಿ ಗೊತ್ತಿಲ್ಲ. ಇರಲಿ, ಜೀವನ ಎಂದರೆ ಅದೆಲ್ಲ ಇದ್ದದ್ದೇ. ಇಂದು ನನ್ನ ಜೊತೆ ಡ್ರಿಂಕ್ಸ್ ತೆಗೆದುಕೊಳ್ಳಲು ಕಂಪನಿ ಕೊಡಿ. ಯಾವುದೇ ವಿಧವಾದ ಮುಜುಗರವನ್ನು ಅನುಭವಿಸಬೇಡಿ. ಒಂದು ದೃಷ್ಟಿಯಿಂದ ಭಾವನಾ ಈ ಮನೆತನಕ್ಕೆ ಹೇಗೆ ದೊಡ್ಡಮ್ಯಾನೇಜರ್ ಆಗಿದ್ದಾಳೋ ಅದೇ ರೀತಿಯಲ್ಲಿ ನನ್ನ ಕೊಠಡಿಯ ಬಾರ್ ಗೂ ಮ್ಯಾನೇಜರ್. ಅವಳು ಕೊಟ್ಟರೆ ಕುಡಿಯಬೇಕು, ಇಲ್ಲದಿದ್ದರೆ ಇಲ್ಲ. ಅವಳು ಒಂದು ಸಾರಿ ‘ಇಲ್ಲ’ ಎಂದ ಮೇಲೆ ಮುಗಿಯಿತು. ನಾವು ಬಾಟಲ್ ಕಡೆಗೆ ಮಿಕ ಮಿಕ ನೋಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ನೋಡು ಭಾವನಾ ನಮ್ಮಿಬ್ಬರಿಗೂ ಸರ್ವ್ ಮಾಡುವೆಯಾ? ನೀನೂ ಒಂದು ಸ್ಮಾಲ್ ತಗೋ. ಯಾವುದೆ ವಿಧವಾದ ಮುಜುಗರಕ್ಕೆ ಒಳಗಾಗಬೇಡ.” + +ಭಾವನಾ ನಗುತ್ತ ಇಬ್ಬರಿಗೂ ರಾಯಲ್ ಸೆಲ್ಯೂಟ್ ಸರ್ವ್ ಮಾಡಿದಳು. ಜೊತೆಗೆ ತಿನ್ನುವ ವಸ್ತುಗಳನ್ನು ವ್ಯವಸ್ಥೆ ಮಾಡಿದಳು. ಚಿಯರ್ಸ್ ಎಂಬ ಧ್ವನಿಯ ಜೊತೆಗೆ ವಿಸ್ಕಿಯನ್ನು ಚಪ್ಪರಿಸಿದರು. ಅಷ್ಟರಲ್ಲಿ ಕಮಲಾ ಬಾಗಿಲಲ್ಲಿ ನಿಂತು + +ಊಟವನ್ನುಎಷ್ಟು ಸಮಯಕ್ಕೆ ತರಲಿ ಎಂದು ಕೇಳಿ ಹೋದಳು ಅನ್ನಿಸುತ್ತದೆ. ಭಾವನಾ ಏನೋ ಸೂಚನೆ ಕೊಟ್ಟು ಬಂದಿದ್ದಳು. + +“ಸ್ವಾಮಿ ನಾನು ಮೊದಲು ಕುಡಿದದ್ದು ನನ್ನ ತಂದೆಯ ಜೊತೆಯಲ್ಲಿ. ಭಾವನಾಳ ಅಜ್ಜನ ಜೊತೆಯಲ್ಲಿ. ನಾನು ಆಗ ತಾನೇ ಡಿಗ್ರಿಯನ್ನು ಇದೇ ಚೆನ್ನೈನ ಅರ್ಥಾತ್ ಮದ್ರಾಸ್ ನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪಡೆದು ಬಂದಿದ್ದೆ. ತಂದೆಯವರು ಕುದುರೆಯ ಸಾರೋಟಿನಲ್ಲಿ ಕಾನ್ವೇಕೇಷನ್ ಕಾರ್ಯಕ್ರಮಕ್ಕೆ ಬಂದಿದ್ದರು. ಅವರು ಪ್ರತಿಷ್ಠಿತ ವ್ಯಕ್ತಿಯಾಗಿದ್ದರಿಂದ ಮುಂದಿನ ಮುಖ್ಯ ಅತಿಥಿಗಳ ಜೊತೆಯೇ ಕೂತಿದ್ದರು. ಜೊತೆಗೆ ಅಂದಿನ ಮುಖ್ಯಮಂತ್ರಿಗಳಾಗಿದ್ದ ಕಾಮರಾಜ ನಾಡಾರ್ ಅವರು ಅಪ್ಪನಿಗೆಆತ್ಮೀಯರಾಗಿದ್ದರು. ಅಲ್ಲಿಂದ ವಾಪಸ್ಸು ಬರುವಾಗ ಆ ಸಾರೋಟಿನಲ್ಲಿಯೇ ಮನೆಗೆ ವಾಪಸ್ಸು ಬಂದಿದ್ದೆ. ಸುಮಾರು ಹದಿನೈದು ಹದಿನಾರು ಕಿ.ಮೀಟರ್ ದೂರವಿರಬಹುದು. ಆಗ ಚೆನ್ನೈನ ರಸ್ತೆಗಳಿಗೆ ಒಂದು ಸೊಬಗಿತ್ತು. ಅಲ್ಲಲ್ಲಿ ಆಂಗ್ಲೋಇಂಡಿಯನ್ಸ್ ಇನ್ನು ಓಡಾಡುತ್ತಿದ್ದ ಕಾಲವದು. ನನ್ನ ಸಹಪಾಠಿಗಳೂ ಇಬ್ಬರು ಮೂವರು ಇಂಗ್ಲೀಷ್ ನ ಕುಟುಂಬಕ್ಕೆ ಸೇರಿದವರೂ ಇದ್ದರು. ಮನೆಗೆ ವಾಪಸ್ಸು ಬಂದಾಗ ಗೇಟಿನಲ್ಲಿ ಆರತಿಯೆತ್ತಿ ನಾಗಸ್ವರ ವಾದ್ಯದ ಸಮೇತ ಒಳಗೆ ಬರಮಾಡಿಕೊಂಡಿದ್ದರು. ಆಗ ಆರತಿಯೆತ್ತಿದ ಹುಡುಗಿಯರಲ್ಲಿ ಭಾವನಾನೂ ಇದ್ದಳು. ತುಂಬ ಜೋರು ಮಾಡುತ್ತಿದ್ದ ಹುಡುಗಿ. ಆದರೆ ಸ್ವಲ್ಪ ಜೋರಾಗಿ ಅವಳ ಬಗ್ಗೆ ಮಾತಾಡಿಬಿಟ್ಟರೆ ಅಳ್ತಾ ಓಡಿಹೋಗಿ ಅಜ್ಜ, ಅಜ್ಜಿಗೆ ಹೇಳ್ತಿದ್ದಳು. ಪಾಪ, ಅವಳು ಈಗಲೂ ಏನೂ ಬದಲಾವಣೆಯಾಗಿಲ್ಲ. ಹೆಣ್ಣು ಮಕ್ಕಳು ಹಾಗೆಯೇ ಇರಬೇಕು. ಮನೆಗೆ ನಿಜವಾಗಿಯೂ ಕಳೆ ಇರುತ್ತದೆ. ಈಗ ಭಾವನಾಳ ರೀತಿಯಲ್ಲಿ ಒಂದಷ್ಟು ಹುಡುಗಿಯರು ನನ್ನ ಮಕ್ಕಳಾಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು ಅನ್ನಿಸುತ್ತದೆ. ನನ್ನ ಮಗನ ಬದಲು ಅವನ ಪಕ್ಕದಲ್ಲಿ ಒಬ್ಬ ಹುಡುಗಿ ಇದ್ದಿದ್ದರೂ ಚೆನ್ನಾಗಿತ್ತು. ಭಾವುಕತೆಯಿಂದ ಕಣ್ಣೊರೆಸಿಕೊಂಡರು. ಕ್ಷಮಿಸಿ, ಈಗ ನಾನು ಕಲ್ಲು ಮನಸ್ಸಿನವನಾಗಿದ್ದೇನೆ. ಇಲ್ಲದಿದ್ದರೆ ನಾನು ಈ ದೇಹದ ನೋವನ್ನು ಹಾಗೂ ಕುಟುಂಬದ ನೋವನ್ನುಸಹಿಸಿಕೊಳ್ಳಲು ಆಗುತ್ತಿರಲಿಲ್ಲ” ಎಂದು ಗ್ಲಾಸ್ ಕೈಗೆ ತೆಗೆದುಕೊಂಡು ಒಂದು ಗುಟುಕು ವಿಸ್ಕಿ ಕುಡಿದು ಬಾಯಿಗೆ ಕಾಳು ಹಾಕಿಕೊಂಡು ಚಪ್ಪರಿಸುತ್ತ “ಭಾವನಾ ನೀನು ಒಂದು ಸ್ಮಾಲ್ ತಗೋ” ಎಂದು ಒತ್ತಾಯ ಮಾಡಿ ತಗೊಳ್ಳುವಂತೆ ಮಾಡಿದರು. + +ಸ್ವಲ್ಪ ಸಮಯ ಮಾತಿರಲಿಲ್ಲ. ಇದ್ದಕ್ಕಿದ್ದಂತೆ “ಸ್ವಾಮಿ, ಒಂದು ಪುಟ್ಟ ಸಹಾಯ ಮಾಡಿ. ಅಲ್ಲಿ ಗೋಡೆಯ ಮೇಲೆ ಕಾಣುವ ನನ್ನ ಮಗನ ಭಾವಚಿತ್ರವನ್ನು ತೆಗೆದು ಅಲ್ಲೆಲ್ಲಾದರು ಮರೆಯಲ್ಲಿ ಇಡಿ. ನೋಡ್ತಾ ಇದ್ದರೆ ಹಿಂಸೆಯಾಗ್ತದೆ. ನಾನು ಕ್ರೂರಿಎಂದು ತಿಳಿದುಕೊಳ್ಳಬೇಡಿ. ನೋಡುತ್ತಿದ್ದರೆ ಭಾವನೆಗಳು ಉಕ್ಕಿಬಂದು ಮಾನಸಿಕ ಹಿಂಸೆಯಾಗ್ತದೆ.” ಸ್ವಾಮಿ ಭಾವನಾಳ ಮುಖ ನೋಡಿದ. ಆಕೆಯೂ ಹೋಗಿ ತೆಗೆದು ಮರೆಯಲ್ಲಿಡಿ ಎಂಬ ಭಾವನೆಯನ್ನು ಮುಖದಲ್ಲಿ ವ್ಯಕ್ತಪಡಿಸಿದಳು. ಅವನು ನಿಧಾನವಾಗಿ ಹೋಗಿ ಆ ಕೆಲಸವನ್ನು ಮಾಡಿ ಬಂದ. ಮತ್ತೆ ಯಜಮಾನರು ವೇದನೆಯಿಂದ “ನಿಮ್ಮಿಂದ ಆ ಕೆಲಸ ಮಾಡಿಸಿದೆ. ಅದನ್ನು ಆ ಮೇಲ್ ನರ್ಸ್ ಮೂಲಕ ಮಾಡಿಸಬಹುದಾಗಿತ್ತು. ಅನ್ಯಥಾ ಭಾವಿಸಬೇಡಿ. ತಗೊಳ್ಳಿ ಡ್ರಿಂಕ್ಸ್. ಸಂಕೋಚ ಬೇಡ. ನಿಮ್ಮ ಗ್ಲಾಸಿನಲ್ಲಿ ಹಾಗೆಯೇ ಇದೆ” ಎಂದರು. ಸ್ವಾಮಿ, ಒಂದು ಗುಟುಕು ಚಪ್ಪರಿಸಿ, ಒಂದಷ್ಟು ಕಾಳು ಬಾಯಿಗೆ ಹಾಕಿಕೊಂಡನು. ಒಂದೈದು ನಿಮಿಷ ಅವರ ನಡುವೆ ಯಾವುದೇ ಮಾತುಕತೆ ಇರಲಿಲ್ಲ. ಯಜಮಾನರಾದ ಭರತ್ ನಾಡಾರ್ ಮತ್ತೆ ಒಂದುಗುಟುಕು ಚಪ್ಪರಿಸಿ ಸ್ವಾಮಿ ಮುಂದಿನ ವಾರ ಮೆರಿನಾ ಬೀಚ್ ಕಡೆ ಹೋಗಿ ಬರೋಣ. ತುಂಬ ದಿವಸದಿಂದ ಕಾಡ್ತಾ ಇದೆ. ಅಪ್ಪ ನನ್ನ ಬಾಲ್ಯದಲ್ಲಿ ಕುದುರೆ ಮೇಲೆ ಕೂರಿಸಿಕೊಂಡು ಸಮುದ್ರದ ಅಲೆಗಳ ವೈವಿಧ್ಯಮಯತೆಯನ್ನು ತೋರಿಸುತ್ತ ಎಂತೆಂಥ ಕಥೆಗಳನ್ನು ವಿಸ್ತರಿಸಿದ್ದರು. ಮುಂದೆ ಅದನ್ನು ನಾನು ಮುಂದುವರಿಸಲು ಆಗಲಿಲ್ಲ. ಮುಂದುವರಿಸುವ ವಾಹಕವಾಗಿದ್ದ ಕುದುರೆಯೂ ಹೋಯಿತು. ನಾನು ದೊಡ್ಡ ಪ್ರಮಾಣದಲ್ಲಿ ಅಂಗವಿಕಲನಾಗಿ ಎಲ್ಲವೂ ನುಚ್ಚುನೂರಾಯಿತು. ಭಾವನಾಳ ಬದುಕು ಭಗ್ನಗೊಂಡಿತು. ಈಗ ಅದನ್ನೆಲ್ಲ ಹಿಂದಿರುಗಿ ಅರ್ಥೈಸಿಕೊಳ್ಳೋದಿಕ್ಕೆ ಆಗಲಾರದಷ್ಟು ಸಮಸ್ಯೆ ತೀವ್ರಗೊಂಡಿದೆ. ನಾವ್ಯಾರೂ ಊಹಿಸಿಕೊಂಡೇ ಇರಲಿಲ್ಲ. ಮಗ ರಾಮ್ ಕುಮಾರ್ ಹೀಗೆ ಮಾಡ್ತಾನೆಂದು. ಹಾಳಾಗಿ ಹೋಗ್ಲಿ; ಸ್ವಾಮಿ, ಹೀಗೇನು ಮಾಡೋಣ. ಆ ಸಭಾಂಗಣದಲ್ಲಿ ವರ್ಷಕ್ಕೆ ಒಂದೆರಡು ಒಳ್ಳೆಯ ಕಾರ್ಯಕ್ರಮ ಮಾಡೋಣ. ತೆಲುಗು, ಕನ್ನಡ ಮತ್ತು ತಮಿಳು ಲೇಖಕರ ಹಾಗೂ ಕಲಾವಿದರ ಸಮಾವೇಶಕ್ಕೆ ಯೋಜನೆ ರೂಪಿಸಿ. ಅದು ಎಷ್ಟು ಖರ್ಚಾದರೂ ಚಿಂತೆ ಇಲ್ಲ. ನಾನು ಎಷ್ಟುದಿವಸ ಬದುಕಿರ್ತಿನೋ ಗೊತ್ತಿಲ್ಲ. ಅಷ್ಟರಲ್ಲಿ ಅದನ್ನು ನೋಡಿ ಸಂತೋಷ ಪಟ್ಟು ಹೋಗುವೆ. ಸ್ವಾಮಿ, ಇಲ್ಲಿ ಮತ್ತೊಂದು ಹಿಂಸೆಯಾಗುವ ವಿಷಯವೆಂದರೆ; ಇಂಥ ಕಾರ್ಯಕ್ರಮ ಮಾಡುವಾಗ; ಬಂದವರೆಲ್ಲ ನಿಮ್ಮ ಮಗ ಎಲ್ಲಿ ಕಾಣ್ತಿಲ್ಲ. ಮುಂಬೈನಿಂದ ಬಂದನಾ? ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳ್ತಾನೆ ಹೋಗುವರು.” + +“ಸರ್, ಏನು ತಪ್ಪು ತಿಳಿಯಬೇಡಿ. ಈಗ ತಾತ್ಕಾಲಿಕವಾಗಿ ನಮಗೆ ಉಳಿದಿರುವುದು ಒಂದೇ ಮಾರ್ಗ. ನಾವು ಸ್ವಲ್ಪಮಟ್ಟಿನ ಸುಳ್ಳಿನ ಮೊರೆ ಹೋಗಬೇಕಾಗುತ್ತದೆ. ಮಾನಸಿಕವಾಗಿ ಇದು ತಮಗೆ ಹಿಂಸೆಯಾಗಬಹುದು. ಆದರೂ ಸದ್ಯಕ್ಕೆ ಅದು ಅನಿವಾರ್ಯ ಅನ್ನಿಸುತ್ತದೆ. ಅದೇನೆಂದರೆ ಹಾಗೆ ಯಾರಾದರೂ ಕೇಳುವ ಸಮಯದಲ್ಲಿ; ನಾವು ಹೇಳಬೇಕಾದದ್ದು; ನಿನ್ನೆ ಬಂದಿದ್ದ, ಕಳೆದ ವಾರ ಬಂದಿದ್ದ, ಇನ್ನು ಮೂರು ನಾಲ್ಕು ವರ್ಷ ಅವನು ಮುಂಬಯಿಯಲ್ಲಿ ಇದ್ದೇ ಇರಬೇಕಾಗುತ್ತದೆ. ಯಾವುದೋ ಒಂದುದೊಡ್ಡ ಪ್ರಾಜೆಕ್ಟ್ ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾನೆ ಎಂದು ಹೇಳುತ್ತ ಹೋಗೋಣ” ಎಂದು ಸೂಚಿಸಿದ. + +ಅದಕ್ಕೆ ಯಜಮಾನರು ಸ್ವಲ್ಪ ಸಮಯ ಸ್ವಾಮಿಯ ಮುಖವನ್ನೇ ನೋಡುತ್ತಿದ್ದು ತಮ್ಮ ಕೈಯನ್ನು ಅವನ ಕಡೆಗೆ ಚಾಚಿ ಕೈಕುಲುಕಿ “ಎಂಥ ಅದ್ಭುತ ಸಲಹೆಯನ್ನು ಕೊಟ್ಟಿದ್ದೀರಿ. ನಿಜವಾಗಿಯೂ ಸದ್ಯಕ್ಕೆ ಇದೇ ಅತ್ಯಂತ ಉಪಯುಕ್ತ ಕಾರ್ಯತಂತ್ರ ಅನ್ನಿಸುತ್ತದೆ. ಮತ್ತೊಮ್ಮೆ ಇದಕ್ಕಾಗಿ ಚಿಯರ್ಸ್” ಎಂದರು. ಭಾವನಾನು ತಾತ್ಕಾಲಿಕವಾಗಿಯಾದರೂ ಜನರ ಬಾಯಿ ಮುಚ್ಚಿಸಬಹುದೆಂಬ ಅಭಿಪ್ರಾಯಕ್ಕೆ ಬಂದಳು. + +“ಸ್ವಾಮಿ, ನೀವಿಬ್ಬರೂ ಮಾತಾಡ್ತ ಡ್ರಿಂಕ್ಸ್ ತಗೊಳ್ತಿರಿ. ನಾನು ಹತ್ತು ನಿಮಿಷ ಮೈ ಚಾಚುತ್ತೀನಿ. ಆಮೇಲೆ ಕಂಪನಿ ಕೊಡ್ತೀನಿ. ಅರ್ಧಮುಕ್ಕಾಲು ಗಂಟೆಗಿಂತ ಹೆಚ್ಚಾಗಿ ಕೂರಲು ಆಗುವುದಿಲ್ಲ” ಎಂದರು.ಅವರಿಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡರು. ಇಬ್ಬರೂ ಆ ಕ್ಷಣದಲ್ಲಿ ಮಾತು ಕಳೆದುಕೊಂಡಿದ್ದರು. ಇಡೀ ಕೊಠಡಿಯಲ್ಲಿ ನೀರವತೆ ಆವರಿಸಿಕೊಂಡಿತ್ತು. ಕಾಲು ಗಂಟೆಯಾದರೂ ಎಂಥ ಮಾತು ಇರಲಿಲ್ಲ. + +ಯಜಮಾನರು ನಗುತ್ತ “ಭಾವನಾ ಬಾ ಇಲ್ಲಿ” ಎಂದು ಕರೆದರು. ಭಾವನಾ ನಿಧಾನವಾಗಿ ಯಜಮಾನರನ್ನು ಹಿಂದಕ್ಕೆ ಸರಿಸಿದಳು. ಅವರು ಸ್ವಲ್ಪ ಆರಾಮವಾಗಿ ಕೂತು; “ಕ್ಷಮಿಸಿ, ನಿಮ್ಮನ್ನು ಸುಮ್ಮನೆ ಕೂರಿಸಿದೆ. ನೀವು ಏನಾದರೂ ಮಾತಾಡಬಹುದಾಗಿತ್ತು. ಹೊರಗಡೆ ಕಿಟಕಿಯ ಬಳಿಯ ಹಲಸಿನ ಮರದಲ್ಲಿ ಕೂತ ಎರಡು ಹಾಲಕ್ಕಿಗಳು ಒಟ್ಟಿಗೆ ಕೂಗತೊಡಗಿದ್ದವು. + + + +“ಹಾಗೆ ಒಟ್ಟಿಗೆ ಕೂಗಿದರೆ ಶುಭಸೂಚನೆಯಂತೆ” ಎಂದು ಭಾವನಾ ಹೇಳಿದಾಗ; ಯಜಮಾನರು ಅದಕ್ಕೆ ಪ್ರತಿಕ್ರಿಯಿಸಲಿಲ್ಲ. ಭಾವನಾಳನ್ನು ಒಂದೇ ಸಮನೇ ನೋಡತೊಡಗಿದ್ದರು; ಮನುಷ್ಯನ ಸುತ್ತ ಎಂತೆಂಥ ಸಂಗತಿಗಳು ಆವರಿಸಿಕೊಂಡಿರುತ್ತವೆ ಎಂದು. ಅದರಿಂದಲೂ ಅವಳಿಗೆ ತಾತ್ಕಾಲಿಕ ನೆಮ್ಮದಿ ಸಿಗುವಂತಿದ್ದರೆ ಸಿಗಲಿ. ಅದನ್ನು ಇಷ್ಟು ದೀರ್ಘಕಾಲದ ನಂತರ ಈಗ ಅಲ್ಲಗಳೆಯುವುದು ಸೂಕ್ತವಲ್ಲ ಎಂಬ ಮನಸ್ಥಿತಿಯಲ್ಲಿಯೇ ಮತ್ತೊಂದು ವಿಸ್ಕಿಯನ್ನು ಒಳಗೆ ಬಿಟ್ಟುಕೊಂಡರು. ಹಾಗೆಯೇ ಸ್ವಲ್ಪ ಕಣ್ಣು ಮುಚ್ಚಿದರು.“ಸ್ವಾಮಿ, ಕೊನೆಗೂ ಈ ಕುಟುಂಬಕ್ಕೆ ನಾನೇ ಕೊನೆಯ ತಲೆಮಾರಿನವನಾಗಬಹುದು ಎಂಬ ಭೀತಿ ನನ್ನನ್ನು ಕಾಡುತ್ತಿದೆ. ನನ್ನ ಮಗನಂತೂ ಬರುವ ಯಾವ ಸೂಚನೆಯೂ ಇಲ್ಲ. ಅವನು ಬದುಕಿದ್ದಾನೋ ಇಲ್ಲವೋ ಅದೂ ಗೊತ್ತಿಲ್ಲ. ಇರಲಿ, ಬಿಡಿ. ಅದರ ಬಗ್ಗೆ ನಿಮ್ಮ ತಲೆ ಈಗಾಗಲೇ ಸಾಕಷ್ಟು ಕೆಟ್ಟಿದೆ. ಯಾವುದೂ ಶಾಶ್ವತವಲ್ಲ ಎಂಬ ತಾತ್ವಿಕ ಪರಿಕಲ್ಪನೆಯು ಮನುಷ್ಯನಿಗೆ ಅರಿವು ಮೂಡಿದಾಗಿನಿಂದಲೂ ಚಲಾವಣೆಯಲ್ಲಿದೆ. ಅಂಥದ್ದರಲ್ಲಿ ‘ಇದು ಶಾಶ್ವತ’ ಎಂಬ ಹುಚ್ಚುತನವನ್ನು ಯಾಕೆ ಆರೋಪಿಸಿಕೊಳ್ಳಬೇಕು. ಆದರೂ ನಾನು ಆಡಿ ಬೆಳೆದ ಜಾಗವಿದು. ಕೆಲವು ಅಪೂರ್ವ ನೆನಪುಗಳನ್ನು ಕೊಟ್ಟಿದೆ. ಅದನ್ನು ಹೇಗೆ ಪಾಳು ಬಿಡಲು ಸಾಧ್ಯ. ಯಾರನ್ನಾದರೂ ದತ್ತು ತಗೊಳ್ಳೋಣವೆಂದರೆ; ಆ ಹುಡುಗ ಬೆಳೆದು ಈ ಕುಟುಂಬಕ್ಕೆ ಹೇಗೆ ವಿಧೇಯನಾಗಿರುತ್ತಾನೆಂಬುದನ್ನು ಹೇಗೆ ನಂಬುವುದು, ಈಗ ಬೆಳೆಸಿ ಉತ್ತರಾಧಿಕಾರಿಯನ್ನಾಗಿ ಮಾಡುವ ಕಾಲಘಟ್ಟವನ್ನು ಮೀರಿ ಬಿಟ್ಟಿದ್ದೇವೆ; ಆದರೆ ಆದರೂ ಎಂಬ ಪ್ರಶ್ನೆ ಮುಖಾಮುಖಿಯಾಗ್ತದೆ.” + +ಸ್ವಾಮಿ: “ನೀವು ಮತ್ತು ಭಾವನಾ ಕೂತು ಚರ್ಚೆ ಮಾಡಿ ಒಂದು ತೀರ್ಮಾನಕ್ಕೆ ಬನ್ನಿ. ಆಮೇಲೆ ಅದರ ಬಗ್ಗೆ ಕಾರ್ಯತಂತ್ರವನ್ನು ರೂಪಿಸೋಣ. ಮತ್ತೊಂದು ಮುಖ್ಯ ವಿಷಯ; ನೀವು ಸೂಕ್ಷ್ಮ ಸಂವೇದನೆಯುಳ್ಳವರಾದ್ದರಿಂದ; ಈ ಕುಟುಂಬವನ್ನುಕುರಿತು ಒಂದು ಕೃತಿಯನ್ನು ರಚಿಸಲು ಸಾಧ್ಯವಾ ಯೋಚಿಸಿ; ಯಾಕೆಂದರೆ; ನಾಳೆ ಇಂಥ ಕುಟುಂಬವೊಂದಿತ್ತು. ಅದು ಹೀಗೆ ಕಳೆದು ಹೋಯಿತು ಎಂಬ ಚಾರಿತ್ರಿಕ ಮಾಹಿತಿಗಾಗಿಯಾದರೂ ಇರಲಿ ಎಂಬುದು ನನ್ನ ಆಶಯ. ಭಾವನಾ ಇದಕ್ಕೆ ನಿನ್ನಅಭಿಪ್ರಾಯವೇನು?”“ಮೊನ್ನೆ ಆಕಸ್ಮಿಕವಾಗಿ ಇದರ ಬಗ್ಗೆ ಪ್ರಸ್ತಾಪಿಸಿದ್ದೆ ಸ್ವಾಮಿಯ ಬಳಿ.” + +“ಸರ್, ಈ ಕುಟುಂಬದ ವೈವಿಧ್ಯಮಯ ಆಗು ಹೋಗುಗಳನ್ನು ಇಲ್ಲಿಗೆ ಬಂದಾಗಲಿನಿಂದ ಗಮನಿಸುತ್ತಿದ್ದೇನೆ. ನಿಜವಾಗಿಯೂ ದಾಖಲು ಮಾಡಬೇಕಾದ್ದೇ ಆಗಿದೆ. ನನಗೆ ಒಂದಷ್ಟು ಸಮಯ ಕೊಡಿ” ಎಂದ.“ಸಾಧ್ಯವಾದರೆ ನನ್ನ ಬದುಕಿನ ಕಾಲಾವಧಿಯಲ್ಲಿ ಬರಲಿ ಎಂಬುದು ನನ್ನ ಆಶಯ.”“ಸರ್. ನಿಜವಾಗಿಯೂ ಪ್ರಯತ್ನಿಸುವೆ” ಎಂದ ಅವನು. + +ಯಜಮಾನರು ಒಂದು ಕ್ಷಣ ಹಾಗೆಯೇ ಕಣ್ಣು ಮುಚ್ಚಿದರು. ಬಟ್ಟಲನ್ನು ಎರಡೂ ಕೈಯಲ್ಲಿಡಿದಿದ್ದರು. ಆ ಬಟ್ಟಲು ಅವರ ಎದೆಯ ಮೇಲೆ ಆಶ್ರಯ ಪಡೆದಿತ್ತು. ಮತ್ತೆ ಒಂದು ಗುಟುಕು ಕುಡಿದು “ಭಾವನಾ ಕಮಲಾ ಹೇಗಿದ್ದಾಳೆ? ಅವಳಿಗೆ ಸ್ವಲ್ಪ ರೆಸ್ಟ್ ತಗೊಳ್ಳೋದಿಕ್ಕೆ ಹೇಳು. ಹೆರಿಗೆಯ ದಿನಗಳು ಹತ್ತಿರ ಬರುತ್ತಿರಬಹುದು.” + +“ಹೇಳಿದ್ದೇನೆ. ಇಷ್ಟರಲ್ಲಿಯೇ ಬೇರೆ ವ್ಯವಸ್ಥೆ ಮಾಡುವೆ. ಹಾಗೆಯೇ ಒಂದು ದಿನ ಬೀಚ್ ಗೆ ಹೋಗಲು ವ್ಯವಸ್ಥೆ ಮಾಡುವೆ. ಯಾವಾಗ ಮಾಡಲಿ?”“ನೋಡು ನಿಮ್ಮ ಅನುಕೂಲ ನೋಡಿ, ನನಗೆ ತಿಳಿಸಿದರೆ ಸಾಕು. ಕೊನೆಗೂ ನೀವು ತಾನೇ ನನ್ನನ್ನು ಕರೆದುಕೊಂಡು ಹೋಗುವುದು” ಆ ಧ್ವನಿಯಲ್ಲಿ ವಿಷಾದವಿತ್ತು.ಭಾವನಾ ಅವರ ಹತ್ತಿರ ಹೋಗಿ ತಲೆ ನೇವರಿಸುತ್ತ “ಎಲ್ಲದಕ್ಕೂ ಅಪ್ಸೆಟ್ ಆಗಬೇಡಿ. ಊಟ ತರಲಾ?” + +“ಭಾವನಾ ಒಂದು ಕೆಲಸ ಮಾಡು. ಸ್ವಲ್ಪವೇ ಊಟ ಕಳಿಸಿ, ನೀವು ಅಲ್ಲೇ ಊಟ ಮಾಡಿ. ಯಾಕೆಂದರೆ ನೀವು ನನ್ನ ಊಟ ನೋಡಿ, ನೀವು ಸರಿಯಾಗಿ ಮಾಡುವುದಿಲ್ಲ. ಸಾಧ್ಯವಾದರೆ, ಸ್ವಾಮಿಗೆ ಇನ್ನು ಸ್ವಲ್ಪ ವಿಸ್ಕಿ ಕೊಡು”ಭಾವನಾ ಆಗಲಿ ಎಂದು ಅಲ್ಲಿಂದ ಎದ್ದು ಬಂದಳು. ಸ್ವಾಮಿಯೂ ಯಜಮಾನರಿಗೆ ನಮಸ್ಕರಿಸಿ ಡೈನಿಂಗ್ ಟೇಬಲ್ ಬಳಿಗೆ ನಡೆದ. ಯಜಮಾನರನ್ನು ಏನೇನೋ ಕೇಳಬೇಕೆಂದುಕೊಂಡಿದ್ದ. ಆದರೆ ಅವರ ಮನಸ್ಥಿತಿಯನ್ನು ಕಂಡು ಕೇಳುವುದಕ್ಕೆ ಧೈರ್ಯವೇ ಬರಲಿಲ್ಲ. ಇರಲಿ, ಮೆರಿನಾಬೀಚ್ ಕಡೆ ಹೋದಾಗ; ಆ ಅಲೆಗಳ ಪ್ರಫುಲ್ಲತೆಯಲ್ಲಿ ಒಂದಷ್ಟು ಮಾತಾಡಿಸೋಣ. ಆದರೆ ಅಲ್ಲಿಯೂ ಎಚ್ಚರ ವಹಿಸಬೇಕು. ಯಾಕೆಂದರೆ ಅಲ್ಲೆಲ್ಲ ಬಾಲ್ಯವನ್ನು ಸಮೃದ್ಧವಾಗಿ ಅನುಭವಿಸಿದವರು ಎಂದುಯೋಚಿಸುವ ಸಮಯಕ್ಕೆ ಭಾವನಾ ಅವನ ಗ್ಲಾಸಿಗೆ ಮತ್ತೊಂದು ಸ್ಮಾಲ್ ವಿಸ್ಕಿ ಬಗ್ಗಿಸಿದ್ದಳು. ಅದಕ್ಕೆ ಬೇಕಾಗಿರಲಿಲ್ಲ ಎಂದು ತಲೆಯೆತ್ತಿ ಅವಳ ಮುಖ ನೋಡಿದ. ಅವಳು ನಗುತ್ತ“ಕುಡೀರಿ ಸ್ವಾಮಿ, ನೀವು ಔಟ್ ಆಗೋದು ನೋಡಬೇಕು. ಆಗ ನಿಮ್ಮ ಬಾಯಿಂದ ಎಂತೆಂಥ ಸುಂದರ ಮಾತುಗಳು ಬರುತ್ತವೆಯೋ ನೋಡಬೇಕು.” + +“ಭಾವನಾ ನಿನಗ್ಯಾಕೆ ಆ ಹುಚ್ಚು?”“ಹುಚ್ಚಲ್ಲ. ನೀವು ಯಾವ ರೀತಿಯ ಕುಡುಕರು ಎಂಬುದು ಸಾಬೀತು ಪಡಿಸಿಕೊಳ್ಳಬೇಕು.”“ಸರಿಯಮ್ಮ, ಕಾಯ್ತಾ ಕೂತಿರು”“ಕೊನೆಯ ಪಕ್ಷ ನಿಮ್ಮ ಮುಖದಲ್ಲಿ ಆಗುವ ಏರುಪೇರನ್ನು ನಾನು ನೋಡಬೇಕು.”“ನಿಜವಾಗಿಯೂ ನಿನ್ನ ಮೂತಿಗೆ ಎರಡು ಬಿಡೋಣ ಅನ್ನಿಸುತ್ತಿದೆ.”“ನೋಡಿ, ಈಗ ಗೊತ್ತಾಯಿತು. ಅದು ಕುಡಿತದ ಮಾತಿನ ಲಕ್ಷಣ.”“ಸರಿಯಮ್ಮ. ಈಗ ಒಂದು ಕೆಲಸ ಮಾಡು. ಊಟ ಬಡಿಸು. ಕೊಠಡಿಗೆ ಹೋಗಿ ಆರಾಮವಾಗಿ ಮಲಗಬೇಕು” + +“ಬೇಡ, ಸ್ವಾಮಿ ಇನ್ನು ಸ್ವಲ್ಪ ಸಮಯ ಊಟವಾದ ಮೇಲೆ ಕೂಡೋಣ. ನೋಡಿ ಆಕಾಶದಲ್ಲಿ ಚಂದ್ರ ಎಷ್ಟು ವಿಶಾಲ ಹೃದಯದಿಂದ ಕಾಣಿಸಿಕೊಂಡಿದ್ದಾನೆ. ನಾವು ಹೋದರೆ ಅವನಿಗೆ ಬೇಸರವಾಗುವುದಿಲ್ಲವೇ?”“ಅಯ್ಯೋ ತಿಕ್ಕಲಮ್ಮ, ನಿನಗೆ ಬುದ್ಧಿ ಇಲ್ಲ. ಆ ಚಂದ್ರನನ್ನು ನಿನ್ನಂತೆ ಮೋಹಿಸುವವರು ಪ್ರತಿದಿವಸ ಲಕ್ಷಾಂತರ ಮಂದಿ ಇರ್ತಾರೆ. ಅವನಿಗೂ ನಿಮ್ಮಂಥವರ ಪ್ರೀತಿ-ಪ್ರೇಮ ಕಂಡು ಬೋರ್ ಆಗಿಬಿಟ್ಟಿರುತ್ತೆ. ಆದ್ದರಿಂದಲೇ ಅವನು ಯಾವಾಗಲೂ, ನಿರ್ಲಿಪ್ತನಂತೆ ಗೋಚರಿಸುವುದು.”“ನಿಮ್ಮ ತರಲೆ ಮಾತು ಸಾಕು, ನಾನು ಆಜ್ಞೆ ಮಾಡ್ತಾ ಇದ್ದೇನೆ. ರಾತ್ರಿ ಹನ್ನೆರಡರವರೆಗೂ ನೀವು ಚಂದ್ರನ ಬೆಳಕಲ್ಲಿ ಕೂರಬೇಕು.”ಇಬ್ಬರೂ ಊಟ ಮುಗಿಸಿದರು. ಹೊರಗೆ ಚಂದ್ರನ ಬೆಳಕಿಗೆ ಪೂರಕವೆಂಬಂತೆ ತೆಳುವಾದ ಗಾಳಿ ಇತ್ತು. ಹೋಗಿ ಕೂತರು. ಒತ್ತಾಯ ಮಾಡಿ, ಕಮಲಾಳನ್ನು ಕೂರಿಸಿಕೊಂಡರು. ದೂರದಲ್ಲಿ ಕದ್ದು ನೋಡುತ್ತಿದ್ದ ದೊರೈನನ್ನು ಕರೆದರು. ಅವನು ಸಂಕೋಚದಿಂದಲೇ ಬಂದು, ದೂರದಲ್ಲಿ ಕೈಕಟ್ಟಿ ನಿಂತಿದ್ದ. ಒತ್ತಾಯ ಮಾಡಿ ಹತ್ತಿರ ಕರೆದರು. ಕಮಲಾ ತಲೆತಗ್ಗಿಸಿ ಕೂತಿದ್ದಳು. ದೊರೈನನ್ನು ಕೂರಿಸಿದರು. + +“ದೊರೈ ಕೊನೆಗೂ ಇಲ್ಲೆಲ್ಲ ಆಡೋದಿಕ್ಕೆ ಒಂದು ಮಗುವನ್ನು ಕೊಡ್ತಿದ್ದೀಯ. ಗುಡ್. ಹುಡುಗಿಯನ್ನು ಕೊಡ್ತೀಯೋ, ಹುಡುಗನನ್ನು ಕೊಡ್ತೀಯೋ” ಎಂದ ಸ್ವಾಮಿ.“ನನಗೆ ಹುಡುಗ ಆದರೆ ಇಷ್ಟ” ಎಂದ ದೊರೈ.ಅದಕ್ಕೆ ಕಮಲಾ ಚಕ್ಕನೆ, ಅವನ ಮೋರೆ ನೋಡಿ, “ಹುಡುಗನಂತೆ ಹುಡುಗ. ಯಾವುದೋ ಬರ್ತದೆ ಬಿಡಿ” ಎಂದಳು. ಅದಕ್ಕೆ ಸ್ವಾಮಿ ಮತ್ತು ಭಾವನಾ ದಂಗಾದರು.“ಕಮಲಾ ಯಾಕೆ ಅವನ ಮೇಲೆ ಅಷ್ಟು ರೋಪ್ ಹಾಕ್ತೀಯ?”“ಅಮ್ಮಾವ್ರೆ ನಿಮಗೆ ಗೊತ್ತಿಲ್ಲ. ತುಂಬ ಘಾಟಿ ಇದ್ದಾನೆ. ನನ್ನ ಮೇಲೆ ಎಷ್ಟು ಜಬರದಸ್ತು ಮಾಡ್ತಾನೆ ಗೊತ್ತ. ಇನ್ನು ಸ್ವಲ್ಪ ಉದ್ದ ಇದ್ದಿದ್ದರೆ, ಸಾಯಿಸೇ ಬಿಡ್ತಿದ್ದ.”“ಅಮ್ಮಾವ್ರೆ ನಿಜವಾಗಿಯೂ ಇಲ್ಲ. ಕಾಟ ಕೊಡೋದೆ ಅವಳು.”“ಇರಲಿ ದೊರೈ, ಹೀಗೆ ಕಿತ್ತಾಡಿಕೊಂಡಿರಿ. ಇಲ್ಲದಿದ್ದರೆ ಸ್ವಾರಸ್ಯವೇ ಇರೋದಿಲ್ಲ.” ಎಂದಳು ಭಾವನಾ.“ಅಮ್ಮಾವ್ರೆ; ಅವನ ಬುದ್ಧಿ ನಿಮಗೆ ಗೊತ್ತಿಲ್ಲ; ಈಗ ನೀವು ಹೇಳಿದ್ದೀರಿ ಅಂತ ಅದನ್ನು ಅವನು ಸರ್ಟಿಫಿಕೇಟ್ ಮಾಡಿಕೊಳ್ತಾನೆ. ಕಂಟ್ರೋಲ್ ಮಾಡೋದಿಕ್ಕೆ ಆಗೋದಿಲ್ಲ” ಕಮಲಾಳ ಆ ಮಾತು ಕೇಳಿ ಭಾವನಾ ಮತ್ತು ಸ್ವಾಮಿ ಹಸನ್ಮುಖಿಗಳಾಗಿ “ನೀವುಹೀಗೇ ಇರಬೇಕು. ಟೈಮಾಯಿತು ಹೋಗಿ ಮಲಗಿ” ಎಂದಳು. + +ಅವರಿಬ್ಬರೂ ತಮ್ಮ ಕುಟೀರದತ್ತ ನಡೆದರು. ಅದೇ ಸಮಯಕ್ಕೆ ಗಡಿಯಾರ ಹನ್ನೊಂದು ಗಂಟೆ ಸೂಚಿಸಿತು.ಅವರಿಬ್ಬರ ನಡುವೆ ಸ್ವಲ್ಪ ಸಮಯ ಮಾತಿರಲಿಲ್ಲ. ತೋಟದ ಆ ದಟ್ಟ ಮರಗಿಡಗಳ ಮಧ್ಯೆ ಯಾವ ಯಾವ ಜಾತಿಯ ಕೀಟಗಳು ವಿಚಿತ್ರ ರೀತಿಯ ಶಬ್ದ ಮಾಡುತ್ತಿದ್ದವು. ಒಮ್ಮೊಮ್ಮೆ ಅದು ಧ್ವನಿ ಪೂರ್ಣವೂ ಹೌದು, ಕರ್ಕಶವೂ ಕೂಡ.“ಸ್ವಾಮಿ ನಿಮಗೆ ಬೇಸರವಾಗುತ್ತಿದ್ದರೆ ಕೊಠಡಿಗೆ ಹೋಗೋಣ.”“ನೀನೇ ಹೇಳಿದೆ. ಹನ್ನೆರಡು ಗಂಟೆಯವರೆವಿಗೂ ಇರಬೇಕು. ಇದು ನನ್ನ ಆಜ್ಞೆ ಎಂದು.”“ಮಹಾ ಆಜ್ಞೆ ಪಾಲಿಸೋದು” ಎಂದಳು. + +“ಭಾವನಾ ಈಗ ಅಂಥ ಅನಗತ್ಯ ಮಾತುಗಳಿಂದ ಪ್ರಯೋಜನವಿಲ್ಲ. ಯಜಮಾನರನ್ನು ಸಮುದ್ರದಂಡೆಗೆ ಯಾವಾಗ ಕರೆದುಕೊಂಡು ಹೋಗೋಣ? ಸಾಧ್ಯವಾದರೆ ಅವರ ಒಟ್ಟು ಮಾತನ್ನು ವಿಡಿಯೋದಲ್ಲಿ ಹಿಡಿದಿಡಲು ಪ್ರಯತ್ನಿಸೋಣ. ಅಂದಿನ ಅವರ ಒಟ್ಟು ಮಾತಿನ ಹಿನ್ನೆಲೆಯಲ್ಲಿ ಈ ಕುಟುಂಬದ ಬಗ್ಗೆ ಬರೆಯಲು ಪ್ರಯತ್ನಿಸುವೆ. ಯಾಕೆಂದರೆ ಯಜಮಾನರು ತಮ್ಮ ಬಾಲ್ಯದಲ್ಲಿ ತಂದೆಯವರ ಕುದುರೆಯ ಮೇಲೆ ಕೂತು ಸಮುದ್ರ ದಂಡೆಯಲ್ಲಿ ಸವಾರಿ ಮಾಡುವುದೆಂದರೆ ಎಂಥ ಅಪೂರ್ವವಾದದ್ದು. ಅದು ಬಾಲ್ಯದ ಶ್ರೀಮಂತಿಕೆಯ ಸಂಕೇತವಲ್ಲವೆ? ಅದನ್ನು ಅವರು ಹೇಳುವಾಗ ಒಂದು ವಿಧದ ವೇದನೆ ಇತ್ತು. ಕೊನೆಗೆ ಅಂಥ ಶ್ರೀಮಂತ ಬಾಲ್ಯದಿಂದ ಬೆಳೆದ ಅವರ ಯೌವನವೂ ಕೂಡ ನುಚ್ಚುನೂರಾದದ್ದು ಕೂಡ ಕುದುರೆಯ ಓಟದಿಂದಲೇ. ಅಷ್ಟೇ ಅಲ್ಲ ಅವರು ಪದವಿ ಪಡೆದು ಬಂದದ್ದೇ ಕುದುರೆಯ ಸಾರೋಟಿನಲ್ಲಿ. ಯಜಮಾನರನ್ನು ನೋಡುತ್ತಿದ್ದರೆ ಅತ್ಯಂತ ಸುಸಂಸ್ಕೃತ ವ್ಯಕ್ತಿ ಅನ್ನಿಸುತ್ತದೆ. ಅವರು ಕೇವಲ ಮನೆಯ ವಾತಾವರಣದಿಂದ ಮಾತ್ರವಲ್ಲ. ಕಾಲೇಜಿನವಾತಾವರಣದಿಂದಲೂ ಅತ್ಯುತ್ತಮವಾದದ್ದನ್ನು ಪಡೆದು ಬಂದಿದ್ದಾರೆ. ಮತ್ತೆ ಪುಸ್ತಕ ಸಂಸ್ಕೃತಿ ಕುರಿತಂತೆ ಗಾಢವಾದ ಅಭಿರುಚಿ ಇದೆ. ಸಂಜೆಯ ಮಾತಿನಲ್ಲಿ ಅವರ ಸ್ನೇಹಿತರೊಬ್ಬರನ್ನು ದೃಷ್ಟಿಯಲ್ಲಿಟ್ಟುಕೊಂಡು “ನನ್ನನ್ನು ಇಲ್ಲಿಯವರೆವಿಗೆ ಬದುಕಿಸಿದ್ದರೆ ಪುಸ್ತಕಗಳು ಮಾತ್ರ” ಎಂಬ ಮಾತು ಮಹತ್ವಪೂರ್ಣವಾದದ್ದು. ಆ ರೀತಿಯ ಮನೋಭಾವನೆಯ ವ್ಯಕ್ತಿಯ ಕಾರಣಕ್ಕಾಗಿಯಾದರೂ ಈ ಕುಟುಂಬ ಕುರಿತು ನಾನು ಬರೆಯಲೇಬೇಕಾಗಿದೆ. ಭಯ ಪಡಬೇಡ, ನಿನ್ನೆ ತಾನೇ ನೀನು ನಿನ್ನ ಬಗ್ಗೆ ಬರೆಯಲು ಕೇಳಿಕೊಂಡಿದ್ದೆ. ಅದರಲ್ಲೂ ಮುಖಪುಟದಲ್ಲಿ ನೀನು ಅದ್ಭುತವಾಗಿ ಕಾಣುವಂತೆ. ಭಾವನಾ ನಿಜವಾಗಿಯೂ ಬರೆಯುವೆ. ನೀನು ಎಷ್ಟು ತರಲೆ ಎಂದು” ಭಾವನಾಳ ಬೆನ್ನು ತಟ್ಟಿ “ಎದ್ದೇಳಮ್ಮ ಕೊಠಡಿ ಕರೆಯುತ್ತಿದೆ” + +“ನೀವೇ ಹೋಗಿ. ನಾನು ತರಲೆ ಎಂಬುದನ್ನು ನೀವು ವಾಪಸ್ಸು ತೆಗೆದುಕೊಳ್ಳುವವರೆಗೆ; ನಾನು ಬರುವುದಿಲ್ಲ” + +“ಅಮ್ಮ ಜಗನ್ಮಾತೆ ಬಾಮ್ಮ. ಹಿಂದೆ ಎಷ್ಟು ಬಾರಿ ತರಲೆ ಎಂದು ಸಂಬೋಧಿಸಿದ್ದೇನೆ. ಆಗ ವಿರೋಧಿಸಲಿಲ್ಲ. ಈಗ ಏನು? ಒಂದು ವೇಳೆ ನಾನು ನಿನ್ನ ಬಗ್ಗೆ ಬರೆದರೆ ತರಲೆ ಎಂದಲ್ಲ ಬರೆಯುವುದು. ಎಷ್ಟು ಲವಲವಿಕೆಯ ತರಲೆ ಎಂದು”“ಸರಿಯಪ್ಪ ಏನಾದರೂ ಬರೆದುಕೋ. ನಾನು ನಿರ್ಲಿಪ್ತಳಾಗಿರುತ್ತೇನೆ. ಮತ್ತೆ ಹಾಗೆ ಹೇಳಿ ಬರೆಸಿಕೊಳ್ಳುವುದೂ ಕೂಡ ಅಷ್ಟು ಸಮಂಜಸವಲ್ಲ.” + +(ಲೇಖಕರ ಚಿತ್ರಗಳು: ಜಯಶಂಕರ ಹಲಗೂರು) + +ಗಡಿಯಾರ ಹನ್ನೆರಡು ಎಂದು ಧ್ವನಿ ಮಾಡತೊಡಗಿತು. ಇಬ್ಬರೂ ಒಬ್ಬರ ಮುಖವನ್ನೊಬ್ಬರು ನೋಡಿಕೊಳ್ಳುತ್ತ ಕೊಠಡಿಗೆ ಹೋದರು. ಹೋದ ತಕ್ಷಣ ಆ ಕುಟುಂಬದ ವಂಶೋದ್ಧಾರಕ ರಾಮ್ ಕುಮಾರ್ ನಾಡಾರ್ ವ್ಯಂಗ್ಯವಾಗಿ ಸ್ವಾಮಿಯ ಕಡೆಗೆ ನೋಡಿದಂತೆನ್ನಿಸಿತು. ಅಲ್ಲಿ ನನ್ನ ಭಾವಚಿತ್ರ ತೆಗೆದು ಮರೆಯಲ್ಲಿಟ್ಟಿದ್ದೀಯ, ಇಲ್ಲಿಯೂ ತೆಗೆದು ಬಿಡು ಎನ್ನುವ ರೀತಿಯಲ್ಲಿತ್ತು ಆ ನೋಟ. ಸ್ವಾಮಿ ತೀವ್ರವಾಗಿ ಮಗನ ಭಾವಚಿತ್ರವನ್ನು ನೋಡುತ್ತಿದ್ದುದನ್ನು ಕಂಡು ಭಾವನಾ ಹತ್ತಿರ ಬಂದು “ನಿಮಗೆ ಮುಜಗರವಾದರೆ ತೆಗೆದು ಮರೆಯಲ್ಲಿಡಿ. ನಾನೇನು ತಪ್ಪಾಗಿ ಭಾವಿಸುವುದಿಲ್ಲ.” + +“ಭಾವನಾ ನಿನ್ನ ಸಮಸ್ಯೆ ಮತ್ತು ವೇದನೆ ಎರಡೂ ಗೊತ್ತು. ಯಾಕೆಂದರೆ ಪ್ರತಿಯೊಂದು ಭಾವಚಿತ್ರವಾಗಲಿ, ವಿಗ್ರಹವಾಗಲಿ ಜೀವಂತ ವ್ಯಕ್ತಿಯ ಸ್ಥಾನದಲ್ಲಿಯೇ ನಿಂತು ಸಂಬಂಧಗಳನ್ನು ನಿಯಂತ್ರಿಸುತ್ತಿರುತ್ತದೆ. ಆ ನೆಲೆಯಲ್ಲಿ ನಿನ್ನ ಒಪ್ಪಿಗೆಯನ್ನು ಪಡೆದೇ ತೆಗೆದು ಮರೆಯಲ್ಲಿಡುತ್ತಿದ್ದೇನೆ. ಅನ್ಯಥಾ ಭಾವಿಸಬೇಡ” ಎಂದ. + +ಜೊತೆಗೆ ಅವನು ಅವಳ ಪಕ್ಕದಲ್ಲಿ ಮಲಗಿರುವಾಗ ಆ ಭಾವಚಿತ್ರ ತನ್ನನ್ನು ಉಗ್ರವಾಗಿ ನೋಡುತ್ತ ನಿನಗೆ ಯಾವ ವಿಧವಾದ ನೈತಿಕತೆ ಇದೆ. ನನ್ನ ತಾಯಿಯ ಪಕ್ಕದಲ್ಲಿ ಮಲಗಲು. ಅದರಲ್ಲೂ ಈ ಕೊಠಡಿಯ ಸನಿಹದಲ್ಲಿಯೇ ತಂದೆ ಅನಾಥವಾಗಿನರಳುತ್ತ ಮಲಗಿರುವಾಗ; ನಿಮಗೆ ಪಾಪಪ್ರಜ್ಞೆಯೇ ಇಲ್ಲ ಎಂದು ಚುಚ್ಚಿ ಚುಚ್ಚಿ ಹೇಳಿದಂತಾಗುತ್ತಿತ್ತು. ಆಗ ಎಷ್ಟು ಬಾರಿ ತಲ್ಲಣದಿಂದ ಒದ್ದಾಡಿದ್ದಾನೆ. ಆದರೆ ಆ ಸಮಸ್ಯೆಯನ್ನು ಭಾವನಾಳ ಮುಂದೆ ಎಂದೂ ಹೇಳಲು ಹೋಗಿಲ್ಲ. ಯಾಕೆಂದರೆ ಆತಂಕಕ್ಕೆ ಒಳಗಾಗುವಳು ಎಂದು. ಅದರ ಪ್ರಾಯಶ್ಚಿತ್ತ ಹೇಗೆ ಒದಗಿ ಬರುವುದೋ ಗೊತ್ತಿಲ್ಲ. ಹಿಂದೆ ಒಮ್ಮೆ ಬಿದ್ದ ಭೀಕರ ಕನಸನ್ನು ನೆನಪು ಮಾಡಿಕೊಂಡು ಗಾಬರಿಯಿಂದ; ಅವನಿಗೆ ಗೊತ್ತಿಲ್ಲದೆಯೇ “ಓ ದೇವರೇ” ಎಂದು ಉದ್ಗಾರ ತೆಗೆದ. + +ಭಾವನಾ ಅವನ ಹೆಗಲ ಮೇಲೆ ಕೈಯಾಕಿ “ಯಾಕೆ ಏನಾಯಿತು? ನೀವು ಯಾಕೆ ನೋವು ತಿನ್ತೀರಿ. ಅವನ ಭಾವಚಿತ್ರ ತೆಗೆದಿದ್ದಕ್ಕೆ” ಎಂದು ಮುಗ್ಧತೆಯಿಂದ ಕೇಳಿದಳು. + +ಅದಕ್ಕೂ ಅವನು ಅವಳ ಮುಗ್ಧತೆಯನ್ನು ವಂಚಿಸುತ್ತಿದ್ದೇನೆ ಎಂದು ಭಾವಿಸಿದ. ಜೊತೆಗೆ ಈ ಮಹಾನ್ ಕುಟುಂಬದ ಜೀವಾಳವಾದ ಹುಡುಗನೊಬ್ಬನ ಭಾವಚಿತ್ರವನ್ನು ಎರಡೂ ಕಡೆಯೂ ನಾನೇ ತೆಗೆಯುವಂಥ ಪರಿಸ್ಥಿತಿ ಉದ್ಭವಿಸಿತೇ ಎಂದು ಒದ್ದಾಡಿದ. ಅಯ್ಯೋ ಇದೆಲ್ಲ ಹೇಗೆ ಘಟಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ. ಎಂದು ಯೋಚಿಸುತ್ತಲೇ ಭಾವನಾಳ ಮಗ್ಗುಲಲ್ಲಿದ್ದ. ಆಗ ಸಿದ್ದಪ್ಪ ಸ್ವಾಮೀಜಿಯನ್ನು ಸ್ಮರಿಸುತ್ತಲೇ ಭಾವನಾಳ ಕೂದಲಲ್ಲಿ ಬೆರಳಾಡಿಸುತ್ತ “ಗೊತ್ತಿಲ್ಲ ನನ್ನ ಬದುಕುಎಲ್ಲಿಗೆ ತಲುಪುವುದೆಂದು ಯೋಚಿಸಿದ.”ಆಗ ಜೋಡಿ ಹಾಲಕ್ಕಿಗಳು ಎರಡು ಬಾರಿ ಕೂಗಿಕೊಂಡವು. + + + +ಆಗ ಭಾವನಾ “ಸ್ವಾಮಿ ಏನೂ ಬೇರೆ ಯೋಚನೆ ಮಾಡದೆ ಸುಮ್ಮನೆ ಮಲಗಿ. ಎಲ್ಲವೂ ಒಳ್ಳೆಯದಾಗುವುದು” ಎಂದಳು.ಯಜಮಾನರ ರೀತಿಯಲ್ಲಿ ಅದನ್ನು ವಿರೋಧಿಸಲು ಹೋಗಲಿಲ್ಲ. ಇಂಥ ದೀರ್ಘಕಾಲದ ನಂಬಿಕೆಗಳು ಏನೋ ಒಳ್ಳೆಯದನ್ನು ಅಂಟಿಸಿಕೊಂಡೇ ಕಾಲಕಾಲಕ್ಕೂ ವಿಸ್ತಾರವಾಗುತ್ತ ಬಂದಿರಬಹುದು ಎಂಬ ಭಾವನೆ ಅವನ ಮನಸ್ಸಿನಲ್ಲಿ ಕೆಲಸಮಾಡತೊಡಗಿತ್ತು. + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_455.txt b/Kenda Sampige/article_455.txt new file mode 100644 index 0000000000000000000000000000000000000000..55cbd29f073ee3561c72364c2b203b6ebddee587 --- /dev/null +++ b/Kenda Sampige/article_455.txt @@ -0,0 +1,129 @@ + + +ಆ ಹಳ್ಳಿಯವರ ಪಾಲಿಗೆ, ಅದು ಎಲ್ಲಮ್ಮನ ಕಟ್ಟೆ. ಅಗಲವಾಗಿ ಹರಡಿಕೊಂಡಿದ್ದ ಕೊಂಬೆಗಳ ನೆರಳಿನಲ್ಲಿ ಅವತ್ತು ಬೆಳಿಗ್ಗೆ ಬಸ್ಸಿಗಾಗಿ ಕಾಯ್ತಾ ನಿಂತಿದ್ದ ಮಲ್ಲಯ್ಯ. ನಾಲ್ಕೈದು ಮಂದಿ ಮುದುಕರು ಆಗಲೇ ಕಟ್ಟಿಮ್ಯಾಲೆ ಸೇರಿ ಮಾತು ಶುರುಹಚ್ಚಿದ್ರು. ಊರಾಗಳ ದನ ಮೇವಿಗಾಗಿ ಗುಡ್ಡದ ಕಡಿಗೆ ಹೊಂಟಿದ್ವು. + +ಅಲ್ಲಲ್ಲಿ ಮರಗಳ ಕೆಳಗೆ, ಅರ್ಧಂಬರ್ದ ಬಿದ್ದಿದ್ದ ಮೊಂಡು ಗೋಡೆಗಳ ಕೆಳಗೆ, ನೆರಳು ನಿಧಾನಕ್ಕೆ ಹರಡಿಕೊಳ್ತಿತ್ತು. ಬೆಳಿಗ್ಗೆನೇ ತಂಗಳನ್ನ ಮುದ್ದೆ ತಿಂದು ಬಚ್ಚಲಿಗೆ ಹಾಕಿದ್ದ ತಟ್ಟೆಗಳಲ್ಲಿ ಉಳಿದ ಅಗುಳು, ಮುದ್ದೆ ನೋಡಿ ಕಾಗೆ ಕಾವ್ ಕಾವ್ ಅಂತಾ ಕೂಗ್ತಿದ್ದವು. ಹಳೇ ಬೇವಿನಮರದಿಂದ ಗಾಳಿಯಲ್ಲಿ ತೇಲಿ ಬರ್ತಿರೋ ಬೇವಿನಹೂವಿನ ಪರಿಮಳ ಆ ಪರಿಸರವನ್ನು ನಿಶ್ಚಿಂತೆ, ನಿಶ್ಯಬ್ದದಲ್ಲಿ ತುಂಬಿತ್ತು. + +ಆದ್ರೆ ಮಲ್ಲಯ್ಯ ಸಮಾಧಾನದಿಂದ ಇದ್ದಿಲ್ಲ. “ಟೌನಿಗೆ ಹೋಗೋದಾ, ಬ್ಯಾಡಾ?” ಅಂತ ಮನಸ್ಸಿನ್ಯಾಗೆ ಚಡಪಡಿಸ್ತಿದ್ದ. ವಯಸ್ಸಾದ ತಂದೆ ಬೊಯ್ದಿದ್ದೇ ಕಿವ್ಯಾಗ ಕೇಳಿಸ್ತಿತ್ತು. “ಮೂರು ಹೊತ್ತು ಟೌನಿಗೆ ಹೋಗಿ ಏನು ರಾಜಕಾರ್ಯ ಮಾಡ್ತಿಯೋ ಏನೋ. ಅಲ್ಲೇನು ನಮ್ಮ ತಾತನ ಗಂಟು ಬಚ್ಚಿಟ್ಟಿದ್ದೀಯಾ…?” ಆತಗೇನು ಗೊತ್ತು. ಮನಿಯಾಗ ಮೂರು ದಿನ ಊಟನಾರ ಬಿಟ್ಟೇನು. ಆದ್ರೆ ಟೌನಿಗೋಗೋದು ಬಿಡಕ್ಕಾಗ್ತದಾ? + +ಆ ಹಳ್ಳಿಯ ನಿಶ್ಯಬ್ದವನ್ನು, ಶಾಂತಿಯನ್ನು ಕದಡುವಂತೆ ದಡದಡ ಸದ್ದಿನೊಂದಿಗೆ ಟೌನಿಂದ ಖಾಸಗಿ ಬಸ್ಸು ಬಂತು. ಬಸ್ಸು ಬರೋದು ತಡ, ಇಲ್ಲಿ ಮಲ್ಲಯ್ಯನ ತಲೆಯೊಳಗೆ ಹುಳು ಕೊರೆಯೋದು ಶುರುವಾಯ್ತು. “ಟೌನಿಗೆ ಹೋಗಿಬಿಡ್ಲಾ….? ಅಲ್ಲಿಗೋಗಿ ಮ್ಯಾಟ್ನಿ ಪಿಕ್ಚರ್ ಗೋದ್ರೆ? ದುರ್ಗಾ ಓಟ್ಲಾಗೆ ದೋಸೆ ತಿಂದ್ರೆ? ಮಟ್ಕಾ ನಂಬ್ರಿಗೆ ದುಡ್ಡು ಕಟ್ಟಿದ್ರೆ? ಒಂದು ಕ್ವಾಟ್ರು ಹಾಕ್ಕೊಂಡ್ರೆ? ಮಸ್ತ್ ಇರಂಗಿಲ್ಲೇನು..” ಮನಸ್ಸು ಕುದುರಿ ಇದ್ದಂಗೆ. ಲಗಾಮು ಹಿಡಿಯೋದು ಎಷ್ಟು ಜನರ ಕೈಲಾಗ್ತದೆ? ಆದ್ರೆ ಮಲ್ಲಯ್ಯನ ಜೇಬಿನಾಗ ದುಡ್ಡಿದ್ದಿಲ್ಲ. ದುಡ್ಡಿದ್ರೇನೆ ಮಜಾ. ಸುಖ ಎಲ್ಲಾ ದುಡ್ಡಿನಲ್ಲೇ ಬಚ್ಚಿಟ್ಟುಕೊಂಡಿದೆ. ಸಾಲಮಾಡಿಯಾದ್ರೂ ತುಪ್ಪ ತಿನ್ಬೇಕು. + +ಒಂದು ಕಾಲಕ್ಕೆ ಆ ಹಳ್ಳಿಯಿಂದಾ ಟೌನಿಗೆ ಹತ್ತುಮೈಲು ದೂರ. ಆದ್ರೆ ಈ ಬಸ್ಸು ಬಂದ ಮ್ಯಾಲೆ ಅದೇ ಹಳ್ಳಿಯಿಂದ ಟೌನಿಗೆ ಈಗ ಅರ್ಧ ತಾಸು ದೂರ ಅಷ್ಟೇ. ದೂರ ಈಗ ಸಮಯದ ಲೆಕ್ಕಕ್ಕೆ ಬಂದು ನಿಂತಿದೆ. ಕಾಲವೇ ಈಗ ಒಂದು ಹುಚ್ಚು ವೇಗ ಪಡೆದುಕೊಂಡಿದೆ. ದುಡ್ಡು ಮನುಷ್ಯನ ಅಳೀತಿದೆ, ಆಳ್ತಿದೆ. + +ಇದರಾಗ ಯಾರದೂ ತಪ್ಪಿಲ್ಲ. ಮ್ಯಾಟ್ನಿ ನೋಡ್ರೀ ಅಂತ ಟಾಕೀಸ್ ನಮ್ಮನ್ನ ಕೇಳಂಗಿಲ್ಲ. ಮಟ್ಕಾ ಆಡಬರ್ರೀ ಅಂತ ಯಾರೂ ಬೇಡಿಕೊಳ್ಳೊದಿಲ್ಲ. ಬ್ರಾಂದಿ ಕುಡಿಬರ್ರೀ ಅಂತ ಯಾರೂ ನಮ್ಮನ್ನ ಎದೀಮ್ಯಾಲೆ ಕುಂತು ಕರಿಯಂಗಿಲ್ಲ. ಪ್ರಜಾತಂತ್ರದಾಗ ಯಾರನ್ನೂ ಯಾವುದಕ್ಕೂ ಜುಲುಮೀ ಮಾಡಂಗಿಲ್ಲ. ಕೆಟ್ಟ ವಿಷ ನಿದಾನಕ್ಕೆ ಅದೇ ರೂಢಿಯಾಗ್ತದೆ ಅಷ್ಟೆ.“ಲಕ್ಷ್ಮವ್ವಾ, ಬೆಳ್ ಬೆಳಿಗ್ಗೆ ಗಂಟ್ಲಾಗೆ ಕಾಫೀ ಬೀಳ್ಳಿಲ್ಲಾಂದ್ರೆ ತಲಿನೋವು ಶುರು ಆಗ್ತದೇ”“ವಾರಕ್ಕೊಂದು ಸಿನಿಮಾ ನೋಡಲಿಲ್ಲಾ ಅಂದ್ರೆ ಹುಚ್ಚು ಹಿಡ್ದಂಗಿರ್ತದೆ ನೋಡು”“ಎರಡು ಮೂರು ದಿನಕ್ಕೆ ಒಂದು ಸರ್ತಿನಾರ ಎಣ್ಣೆ ಹೊಡೆದು, ಬಿರ್ಯಾನಿ ತಿನ್ಲಿಲ್ಲ ಅಂದ್ರೆ ಇನ್ನೇನು ಬದುಕು, ಥೂ”“ಸಪ್ಪಗಿರೋ ಜೀವನದೊಳಗ ಮಟ್ಕಾ ಆಡಿದ್ರೆ ನಸೀಬು ಬದಲಾದ್ರೂ ಆಗಬೋದು ನೋಡ್ರಪ್ಪಾ. ಮತ್ತ ಇನ್ಯಾಕ ಬ್ಯಾರೆ ಯೋಚನೆ”ಹತ್ತು… ಹತ್ತು… ಬಸ್ಸು ಹತ್ತು… ರೈಟ್… ರೈಟ್…! ಅಲ್ಲೇ ಎಲ್ಲಾರ ಸಾಲ ಮಾಡಿದ್ರೆ ಆಯ್ತು.“ಪುಲ್ಲಣ್ಣ ನಮ್ಮ ತೋಟಕ್ಕ ನೀರು ಕಟ್ಟಕ್ಕ ಬಂದಿಲ್ಲ ಇವತ್ತು ಎಲ್ಲಿ?”“ಬಸ್ಸಿನಾಗೆ ಇದೇ ಈಗ ಹೋದ…”“ತಿಮ್ಮಣ್ಣ ಹೊಲದಾಗ ಕಳೆ ತೆಗೆಯೊಕ್ಕ ಇವತ್ತು ಬರ್ತೀನಂದಿದ್ದ… ಎಲ್ಲಿ?”“ಅಗೋ… ಆ ಬಸ್ಸಿನಾಗ ಕುಂತು ಟೌನು ಕಡೀಗೋದ…”ಮೊದಲಿನಂಗೆ ಕೂಲಿಗೆ ಆಳು ಸಿಗವಲ್ರು. ಒಕ್ಕಲುತನ ಅಂದ್ರೆ ಮುಗೀಲಾರದ ಕಷ್ಟದ ಬದುಕೇ. + +ಬಂದಿದ್ದ ಬಸ್ಸಿನ್ಯಾಗಿಂದ ಇಳಿದವರು ಭಾಳ ಮಂದಿ ರಾತ್ರಿ ಟೌನ್ ನಾಗೆ ಉಳಕೊಂಡು, ಇಗೋ ಈವಾಗ ಊರಿಗೆ ವಾಪಾಸ್ ಬರ್ತಿರೋವ್ರೆ. ಅವ್ರೇನು ಹೆಚ್ಚು ಮಂದಿ ಇಲ್ಲ. ಆದ್ರೆ ಅವರನ್ನ ತಳ್ಳಿಕೊಂಡು ಬಸ್ಸಿನೊಳಗೆ ಹತ್ತೋಮಂದಿ ಮಾತ್ರ ಎರಡು ಬಸ್ಸಿಗೆ ಆಗೋವಷ್ಟು ಇದ್ರು. + +“ಇಳಿಯೋರಿಗೆ ಜಾಗ ಬಿಡ್ರೋಯಪ್ಪಾ..” ಅಂತ ಒಂದುಕಡೆ ಚಿಲ್ರೆ ಎಣಿಸಿಕೂಡ್ತಾ ಕಂಡಕ್ಟರ್ ಜೋರಾಗಿ ಕೂಗತಲೇ ಇದ್ದ. ಕೇಳೋರ್ಯಾರು? ಇನ್ನೊಂದು ಕಡಿ ಡ್ರೈವರ್ ಹೊಯ್ಕೊಂತಿದ್ರೂ ಕೆಲ ವೀರಾಧಿವೀರರು ಪಂಚೆ ಎತ್ತಿ ಕಟ್ಟಿ ಡ್ರೈವರ್ ಕಡಿ ಬಾಗಿಲಿನಿಂದ ಬಸ್ಸಿನೊಳಕ್ಕೆ ಕುರಿಗಳು ನುಗ್ಗಿದಂಗೆ ನುಗ್ಗುತಿದ್ರು. ಕೆಲವು ಬೆರಿಕೆ ಮಂದಿ ಬಸ್ಸಿನ ಬಗಲಾಗ ಜಿಗಿದುಹತ್ತಿ ಕಿಟಕಿಯಿಂದ ಬಸ್ಸಿನೊಳಗೆ ಸೀಟಿಗೆ ಟವಲು ಹಾಕಿ ಸೀಟು ಕಾಯ್ದಿರಿಸುತಿದ್ರು.“ಲೇ ತಳ್ಳ್ಬ್ಯಾಡ್ರೋ, ಸಣ್ಣ ಹುಡುಗೀ.. ಉಸುರಾಡವಲ್ದು”“ಏಯ್, ಯಪ್ಪೋ..! ಮುದ್ಯಾಕಿ ಅಂತ ಕೂಡಾ ನೋಡವಲ್ರು.. ತುಳಿತೀರಲ್ಲೋ”“ಈ ಗಂಡಸ್ರಿಗೆ ಕಣ್ಣೇ ಕಾಣಂಗಿಲ್ರಪ್ಪೋ” + +ಆದ್ರೆ ಅಲ್ಲಿ ಯಾರೂ ಮಾತೂ ಕೇಳಿಸಿಕೊಳ್ತಿಲ್ಲ. ಟೌನ್ ಎಂಬ ಮಾಯಾವಿಯ ಸೆಳೆತಕ್ಕೆ ಸಿಕ್ಕಾಕೊಳ್ಳೋದಕ್ಕೆ ಹುಚ್ಚಿಗೆ ಬಿದ್ದವರಂಗೆ ನುಗ್ಗುತ್ತಿದ್ರು. ಹೆಂಗಸರು, ಮಕ್ಕಳು, ವಯಸ್ಸಾದವರನ್ನ ಕಾಳಜಿಯಿಂದ, ಗೌರವದಿಂದ ನಡೆಸಿಕೊಳ್ಳಬೇಕು ಅಂತ ಯುದ್ಧದ ಸಮಯದಲ್ಲೂ ಪಾಲಿಸುವ ಸರಳವಾದ ಸೂತ್ರವನ್ನೂ ಮೀರಿದ, ಕಾಡಿನ ಮೃಗದ ಸ್ವಭಾವ, ಗುಂಪುಗಳ ಕ್ರೌರ್ಯ, ಆ ಹಳ್ಳಿಯ ಜನರಲ್ಲಿ ಸೇರಿಕೊಂಡಿದ್ದು, ಈ ಬಸ್ಸು ಹಳ್ಳಿಗೆ ಪ್ರವೇಶ ಮಾಡಿದಂದಿನಿಂದಲೇ. + +ಮಲ್ಲಯ್ಯ ಹ್ಯಾಗೋ ಬಸ್ಸು ಹತ್ತಿ ನಿಲ್ಲೋಜಾಗ ಮಾಡಿಕೊಂಡ. ಶಿವಾ ಅಂತ ಬೆಳಿಗ್ಗೆ ಎದ್ದ ಕೂಡಲೇ ಹೆಂಡ್ತಿ ಕಪಾಳಕ್ಕೆ ಒಂದು ಬಾರಿಸಿ, ಬೆನ್ನು ಬಗ್ಗಿಸಿ ನಾಲ್ಕು ಏಟು ಕೊಟ್ಟಿದ್ದ. ಅದರ ಚುರುಕು ಇನ್ನೂ ಕೈಗೆ ಚುಚ್ಚಿದಂಗೆ ಅನಿಸ್ತಿತ್ತು. ಹೆಂಡ್ತಿನ ನೆನೆದ್ರೆ ಸಿಟ್ಟು ಏರ್ತಿತ್ತು. ಅಪ್ಪನ್ನ ನೆನೆದ್ರೂ ಅಷ್ಟೇ.. “ಇಷ್ಟು ವರ್ಷ ರಾಜನಂಗೆ ಬದುಕಿ ಈಗ..” ಸಿಟ್ಟು ಸರ್ರಂತ ನೆತ್ತಿಗೇರ್ತಿತ್ತು. + +ಬೆಳ್ ಬೆಳಿಗ್ಗೆನೇ ಮನ್ಯಾಗ ನಡೆದದ್ದು ಆತನ ತಲ್ಯಾಗ ಇನ್ನೂ ಕೊರೀತಿತ್ತು. ದಿನಾ ನಸುಕಿಲೆ ಐದುಗಂಟೆಗೆಲ್ಲಾ ಏಳೋ ಮಲ್ಲಯ್ಯ ಇವತ್ತು ಏಳಾದ್ರೂ ಮುಸುಕುಹೊದ್ದುಕೊಂಡು ಬಿದ್ದುಕೊಂಡಿದ್ದ. ಎಚ್ಚರಾಗಿತ್ತು. ಆದರೇ, ಮುಸುಕು ತೆಗೆದು ಹೊರಗಿನ ಬದುಕಿಗೆ ಕಾಲಿಡಬೇಕನಿಸವಲ್ದಾಗಿತ್ತು. ರಾತ್ರಿ ಮಳ್ಕೊಳ್ಳೋ ಮುಂಚೆ ಅಪ್ಪ ಅಂದಿದ್ದ ಮಾತು ಮುಳ್ಳೂ ಚುಚ್ಚಿದಂಗಿತ್ತು. + +“ನಾಳೆ ಚಂದ್ರಣ್ಣನ ತೋಟಕ್ಕೆ ಕೂಲಿ ಕೆಲಸಕ್ಕೆ ನೀನೂ ಬರ್ತೀಯಂತೇಳೀನಿ” ಅಂದಿದ್ದ ಅಪ್ಪ.“ನಾನಾ? ಕೂಲಿಕೆಲಸಕ್ಕಾ? ಇಷ್ಟು ವರ್ಷ ರಾಜನಂಗೆ ಬದುಕಿ ಈಗ..?” ರೋಷ ಉಕ್ಕಿ, ಮಲ್ಲಯ್ಯ ದವಡೆ ಬಿಗಿ ಹಿಡಿದು ಕೋಪ ತಡಕೊಂಡಿದ್ದ. ಅಲ್ಲೀವರೆಗೆ ಒಬ್ಬರ ಕೈಕೆಳಗೆ ದುಡಿದು ಗೊತ್ತದ್ದಿಲ್ಲ. ತಮ್ಮ ಹತ್ತು ಎಕರೆ ಹೊಲದಾಗ ಬೇಸಾಯ ಮಾಡಿಕೊಂಡು ಆರಾಮಾಗೆ ಇದ್ದ. ಹೊರಗಿಂದ ಒಂದಿಬ್ಬರು ಹೆಚ್ಚಿಗೆ ಬಂದ್ರೂ ಕರೆದು ಊಟಕ್ಕೆ ಹಾಕೋವಷ್ಟು ಶಕ್ತಿ ಇತ್ತು. ಆದರೆ ಈಗ? + +ಬರ್ತಾ ಬರ್ತಾ ಮಳೆ ಕಮ್ಮಿ ಆಯ್ತು. ಈಗಂತೂ ಮಳೆ ಇಲ್ಲ, ಬೆಳೆ ಇಲ್ಲ ಇನ್ನ ಕೂಲಿ ಮಾಡಿ ದುಡಿಲಿಲ್ಲ ಅಂದ್ರೆ ಮನೆ ನಡೆಯಲ್ಲ ಅನ್ನೋ ಪರಿಸ್ಥಿತಿ. ಮೊದ್ಲಿಗೆ ಮಲ್ಲಯ್ಯನ ವಯಸ್ಸಾದ ತಾಯಿ ಕೂಲಿಗೋಗೋಕೆ ಶುರು ಮಾಡಿದ್ಲು. ಒಂದುವಾರ ಕಳೆದು ಸೊಸೀನೂ ಜೊತೆಗೆ ಕರ್ಕೊಂಡು ಹೋಗಕತ್ತಿದ್ಲು. ಈಗಂತೂ ಕೈಲಾಗವಲ್ದು ಅಂತೇಳಿ ಮನ್ಯಾಗ ಇದ್ದುಕೊಂಡು ಆಳುಗಳನ್ನ ಸಜ್ಜುಮಾಡಿ ಕಳಿಸಿಕೊಡ್ತಾಳೆ. ಒಂದು ತಿಂಗಳಿಂದಾ ಮಲ್ಲಯ್ಯನ ವಯಸ್ಸಾದ ತಂದೆ ಸಹಾ ಕೂಲಿ ಕೆಲಸಕ್ಕೊಗೋಕೆ ಶುರು ಮಾಡಿದ್ದ. ಈಗ ಮಗನ್ನೂ ಕರೆಯಕ್ಕೆ ಶುರು ಮಾಡಿದ್ದ. + +“ನಿನಗೆ ಮದುವೆಯಾಗಿ ಮೂರು ಮಕ್ಕಳು ಆಗ್ಯಾವೆ. ಮಳೆ ಇಲ್ಲ, ಬೆಳೆ ಇಲ್ಲ. ಕೂಲಿಗೋಗಿ ದುಡಿಲಿಲ್ಲಾ ಅಂದ್ರೆ ಮನೆ ನಡೆಯಂಗಿಲ್ಲ. ಇಂಗಿದ್ದಾಗ ನಾನು ಕೂಲಿಕೆಲಸ ಮಾಡಂಗಿಲ್ಲ ಅಂತ ಸೆಟಗೊಂಡು ಕುಂತ್ರೆ, ಹೊಟ್ಟಿಗೆ ಹಿಟ್ಟೆಂಗ ಹುಟ್ತದೆ? ಇನ್ನಾ ಯಾವಾಗ ನಿನಗೆ ಸಂಸಾರದ ಜವಾಬ್ದಾರಿ ತಿಳಿಯೋದು?” ಅಂತ ಹೇಳ್ತಾನೆ ಇದ್ದ, ಮುದ್ಯಾತ. ಆದ್ರೂ ಮಲ್ಲಯ್ಯ ತಪ್ಪಿಸಿಕೊಂಡು ಅಡ್ಯಾಡಿಕೊಂಡಿದ್ದ. + +“ಏನಣ್ಣಾ, ಅತ್ತಿಗೆ ಕೂಲಿಗೋಗ್ತಿದ್ದಂಗಿದೆ?” ಅಂತ ಯಾರಾನ್ನಾ ಕೇಳಿದ್ರೆ ಭಾಳ ಕಸಿವಿಸಿಪಡ್ತಿದ್ದ. ಆದ್ರೂ ಅದೇನೂ ತೋರಿಸಿಕೊಳ್ದಂಗೆ “ಅದೊಂದು ಹುಚ್ಚು ಖೋಡಿ, ಹೇಳಿದ್ರೂ ಕೇಳಂಗಿಲ್ಲ. ಮನ್ಯಾಗ ಸುಮ್ನೆ ಕುಂತು ಏನು ಮಾಡ್ಲಿ. ದುಡಿಯಕ್ಕೋದ್ರೆ ಹೊತ್ತೋಗ್ತದೆ ಅಂತಾಳೆ” ಅಂತಾನೆ. + +ಈ ವಯಸ್ಸಿನ್ಯಾಗೆ ಯಾಕೆ ನಿಮ್ಮಪ್ಪ ಕೂಲಿಗೋಗಕತ್ಯಾನೆ? ಅಂತ ಯಾರಾರ ಕೇಳಿದ್ರೆ, “ಆತೂಬ್ಬಾತ ನಮ್ಮಾತೇ ಕೇಳಂಗಿಲ್ಲಪ್ಪೋ. ನಿನಗ್ಯಾಕ ಮನ್ಯಾಗ ಉಂಡು ತಣ್ಣಗ ಕುಂದ್ರು ಅಂದ್ರೆ ಕೇಳಂಗಿಲ್ಲ ನೋಡು” ಅಂತ ಒಣ ಜಂಭ ತೋರಿಸಿಕೊಳ್ತಾ ತಪ್ಪಿಸಿಕೊಳ್ತಾನೆ. + +“ಏನವ್ವಾ.. ಅಕ್ಕಮ್ಮ ಇವತ್ತು ನಿನಗಂಡ ಹಾಸಿಗೆಬಿಟ್ಟು ಏಳಂಗಿಲ್ಲೇನು?” ಅಂತ ಜೋರಾಗಿ ಎರಡು-ಮೂರು ಸಲ ಅಂದಿದ್ದು ಕಿವಿಗೆ ಬಿತ್ತು. ಇನ್ನ ತಪ್ಪಂಗಿಲ್ಲ ಅಂತ ಎದ್ದು ಬಯಲುಕಡೀಗೆ ಹೋಗಿ ಬಂದ. ಮುಖ ತೊಳೆದು ಮುದ್ದೆ ಉಂಡ. + +ಅಷ್ಟೊತ್ತಿಗಾಗ್ಲೇ ಮುದ್ದೆ ಉಂಡು ಎಲಿಯಡಿಕೆ ಆಕ್ಯಂಡು ಹೊರಗೆ ಕಟ್ಟಿಮ್ಯಾಲೆ ಕುಂತಿದ್ದ ಮುದ್ಯಾತ. “ಇವತ್ತು ನನ್ನ ಕೂಲಿಗೆ ಕಳ್ಸೋವರೆಗೋ ಬಿಡಂಗ ಕಾಣವಲ್ದು. ಇಷ್ಟು ವರ್ಷ ರಾಜನಂಗೆ ಬದುಕಿ ಈಗ…” ಅಂತ ಕೈ ಕೈ ಹಿಸುಕಿದ. ಹೆಂಡ್ತಿ ಹತ್ರಕ್ಕೊಗಿ “ಏನಾರ ರೊಕ್ಕದಾವಾ?” ಅಂತ ಕೇಳಿದ. “ಎದಕ್ಕ” ಕೇಳಿದ್ಲು. “ಇನ್ನೂ ಎಷ್ಟುದಿನ ಹಿಂಗ ಮಾತು ಮಾತಿಗೂ ಗಂಡನಿಗೆ ದುಡ್ಡು ಹೊಂದಿಸಿಕೊಡೋದು?” + +“ನಿಂಗ್ಯಾಕ ಅದರ ಉಸಾಬರಿ? ಬಾಯಿ ಮುಚ್ಕೊಂಡು ಕೊಡೋದು ಕಲಿ”ಅಕ್ಕಮ್ಮ ಸುಮ್ನೆ ಹೋಗಿ ಟ್ರಂಕಿನಾಗ ಇದ್ದಿದ್ದ ಹತ್ತು ರೂಪಾಯಿ ತಂದು ಆತನ ಕೈಗಿಟ್ಟಳು.“ಇಷ್ಟೇನಾ? ಹೋದವಾರ ಕೂಲಿ ದುಡ್ಡೇನು ಮಾಡಿದಿ?”“ಮಾವ ಕೈಗೆ ಕೊಟ್ಟೆ”ಅಕ್ಕಮ್ಮನ ಕೆನ್ನೆಗೆ ಫಟಾರಂತ ಏಟು ಬಿತ್ತು. + +“ಹೆಂಡ್ರು ದುಡಿದ ದುಡ್ಡು ಕಸ್ಕೊಂಡು ಹೆಂಡ್ತಿ ಮ್ಯಾಲೆ ಕೈ ಎತ್ತೋದಲ್ಲ ಗಂಡಸ್ತನ. ಬಾ, ನನ್ಜೋಡಿ ಕೂಲಿ ಕೆಲಸಕ್ಕೆ. ದುಡಿದು ಈ ಮನಿ ನಡೆಸು. ಆಗ ಕೈ ಎತ್ತು. ಒಪ್ಕೊಂತೀನಿ. ಅದು ಬಿಟ್ಟು…” ಅವಳ ಮಾತು ಮುಗಿದಿರಲಿಲ್ಲ. ಅವಳು ಕೂಲಿ ಕೆಲಸಕ್ಕೆ ಹೋಗು ಅಂದಿದ್ದಕ್ಕೇ, ರಪ್ಪಂತ ಅವಳ ಕೂದಲು ಹಿಡಿದು ಬಗ್ಗಿಸಿ “ನನಗೆ ತಿರುಗಿ ಹೇಳೋವಷ್ಟು ದೊಡ್ಡೋಳು ಆಗಿಬಿಟ್ಯಾ ಸೂಳೆ..” ಅಂದು ಬೆನ್ನಮೇಲೆ ದಬದಬಾಂತ ಗುದ್ದಿದ. + +ಒಳಗಡೆ ಮಗನ ಬೈಗುಳ, ಸೊಸಿ ಅಳು ಕಿವಿಗೆ ಬಿದ್ದು, ಮುದ್ಯಾತ ನಿದಾನಕ್ಕ ಎದ್ದ. ಅಷ್ಟರಾಗ ಅಂಗಿ ಆಕ್ಯಂತಾ ಹೊರಗ ಬಂದ ಮಗನ ನೋಡಿ “ಎಲ್ಲಿಗೊಂಟಿಯಪ್ಪಾ?” ಅಂತ ಮೆಲ್ಲಗೆ ಕೇಳಿದ. ಆ ವಯಸ್ಸಾದ ತಂದೆಯ ದನಿಯಲ್ಲಿ “ನೀನೆಲ್ಲಿಗೆ ಹೊಂಟಿಯೋ ನನಗೊತ್ತು ಬಿಡೋ” ಅನ್ನುವ ವ್ಯಂಗ್ಯವಿತ್ತು. ತಂದೆಯ ಪ್ರಶ್ನೆಗೆ ಮಲ್ಲಯ್ಯ ಮುಖ ತಿರುಗಿಸಿಕೊಂಡು “ಟೌನಿಗೆ” ಅಂದ. + +“ಅಲ್ಲ, ಆ ಸುಡುಗಾಡು ಟೌನಿಗೋಗಿಲ್ಲಂದ್ರೆ ಸತ್ತೋಗಿಬಿಡ್ತೀಯಾ? ಕೆಲಸಕ್ಕೋಗಿ ದುಡೀ ಅಂತೇಳಿದ್ರೆ ಒಗ್ಗಂಗಿಲ್ಲ. ಹೋಗ್ಲಿ ಮನ್ಯಾಗಾರಾ ಸುಮ್ನೆ ಕುಂದ್ರಪ್ಪಾ ಅಂದೆರ, ಅದೂ ಇಲ್ಲ. ಮನ್ಯಾಗ ಹೆಣ್ಮಕ್ಕಳು, ಮುದುಕರು ಕೂಲಿಗೋಗಿ ಸಂಸಾರ ನಡೆಸಿದ್ರೆ, ನೀನು ಟೌನಿಗೋಗೋದು, ತಿಂದು, ಕುಡುದು ಸಾಲ ಮಾಡಿಕೊಂಡು ಬರೋದು. ಆ ಸಾಲಗಾರರು ಮನಿಹತ್ರ ಬಂದು ನಮಗೆ ಕೇಳೋದು. ನಾವೇನು ಸಂಸಾರ ನಡೆಸೋಣ ಇಲ್ಲಾ ನೀನು ಮಾಡೋ ಸಾಲ ತೀರಸ್ಕೊಂತಿರೋಣಾ, ನೀನೇ ಹೇಳು”“ಸಾಲಾನಾ? ಎಲ್ಲಿ, ನಾನ್ಯಾರತ್ರ ಸಾಲ ಮಾಡಿದ್ದೆ, ಹೇಳ್ಸು ನೋಡೋಣ” ಅಂದ ಮಲ್ಲಯ್ಯ. + +“ಎಷ್ಟುಮಂದಿ ಹತ್ರ ಹೇಳಿಸ್ಲಿ? ಆ ಹೊನ್ನೂರುಸ್ವಾಮಿಗೆ ನೀನು ಮುನ್ನೂರು ರೂಪಾಯಿ ಬಾಕಿ ಇಲ್ಲೇನು? ದೊಡ್ಡಕಟ್ಟಿ ಶೀನಣ್ಣಗೆ ಐನೂರು ಕೊಡಬೇಕಿಲ್ಲೇನು? ಇನ್ನಾ ಎಷ್ಟು ಮಂದಿ ಕೈಲಿ ಹೇಳಿಸ್ಲೇಳು?“ಸಂಸಾರ ಅಂದಮ್ಯಾಲೆ ಸಾಲಸೂಲ ಇರ್ತಾವೆ” + +“ಏನು? ಮತ್ತೆ ಹೇಳು. ಮನಿ ಸಲುವಾಗಿ ಮಾಡಿಯಾ? ಎಂದಾರಾ ಮನಿಗೆ ಅಕ್ಕಿ ತಂದೀಯಾ, ಬ್ಯಾಳಿ ತಂದೀಯಾ, ಉಪ್ಪು ಉಂಚೆಣ್ಣು ತಂದಾಕಿಯಾ? ಮನೀಗಂತೇಳಿ ಒಂದತ್ತು ರೂಪಾಯಿ ಎದಕ್ಕನ್ನಾ ಕೊಟ್ಟೀಯಾ? ಎದಿಮ್ಯಾಲೆ ಕೈಯಿಟ್ಟು ಹೇಳು. ಬಸ್ಸುಹತ್ತಿ ಆ ಹಾಳು ಟೌನಿಗೋಗೋದು, ಜಲ್ಸಾ ಮಾಡೋದು, ಊರು ತುಂಬಾ ಸಾಲ ಮಾಡೋದು. ಕೂಲಿ ಕೆಲಸಕ್ಕೆ ಹೋಗಂದ್ರೆ ಮಾತ್ರ ಭಯಂಕರ ರೋಷ ಈತಗೆ” ಜೋರಾಗಿ ಅಂದ.ಮಲ್ಲಯ್ಯನಿಗೆ ಇನ್ನೂ ಸಿಟ್ಟು ಬಂತು. “ಇಷ್ಟು ವರ್ಷ ರಾಜನಂಗಿದ್ದು…” + +ಹಿಂಗನುಕೊಳ್ಳೊದರ ಹಿಂದೆ ಮಲ್ಲಯ್ಯನಿಗೆ ಒಂದು ಕಾರಣ ಇತ್ತು. ಇತ್ತಿತ್ಲಾಗೆ ಮಲ್ಲಯ್ಯ ಊರಿನ ರಾಜಕೀಯದೊಳಗೆ ಕೈಯಾಡ್ಸಕ್ಕೆ ಶುರು ಮಾಡಿದ್ದ. ಆ ಹಳ್ಳಿಯ ಪಂಚಾಯತಿ ಅಧ್ಯಕ್ಷರ ಜೊತೆ ಸೈ ಅಂದ್ರೆ ಸೈ ಅನ್ನೋಕೆ ತಯಾರಾಗ್ತಿದ್ದ. ಮಲ್ಲಯ್ಯನ ಕುಲಬಾಂಧವರ ಒಂದು ಗುಂಪು ಸಾಥ್ ಕೊಡಕ್ಕೆ ತಯಾರಾಗಿದ್ರು. + +ಆ ಹಳ್ಯಾಗೆ ಮಲ್ಲಯ್ಯನ ಕುಲದವರಿಗೂ, ಪಂಚಾಯಿತೀ ಅಧ್ಯಕ್ಷರ ಕುಲದವರಿಗೂ ಜಗಳ ಇಪ್ಪತ್ತು ವರ್ಷಕ್ಕೂ ಹಳೆಯ ಕಾಲದ್ದು. ಆಗ ಬಹುಶಃ ಮಲ್ಲಯ್ಯನಿಗೆ ಹತ್ತು ವರ್ಷ ವಯಸ್ಸಾಗಿರಬೇಕು. ಮಲ್ಲಯ್ಯನ ಕುಲದ ಹುಡುಗನೊಬ್ಬ ಅಧ್ಯಕ್ಷರ ಕುಲದವರ ಮನೆ ನಾಯಿಗೆ ಕಲ್ಲು ಹೊಡೆದ ಅಂತ ಶುರುವಾಗಿದ್ದ ಜಗಳ ಹಂತ ಹಂತವಾಗಿ ಬೆಳೆದು ಇವತ್ತಿಗೂ ಹೊಗೆಯಾಡ್ತಾನೇ ಇತ್ತು. ಊರಾಗೆ ಎಲ್ಲಾರ ಜೋಡಿ ಹೊಂದಿಕೊಂಡೇ ಇರೋ ಅಧ್ಯಕ್ಷ ವೆಂಕಟೇಶಪ್ಪ ಸಹ ಟೈಂ ಬಂದಾಗ ತಮ್ಮವರ ಕಡಿಗೇ ಸೇರಿಕೊಂಡಿದ್ದ. ಸರ್ಕಾರದ ಸವಲತ್ತು, ಸಬ್ಸಿಡಿಗಳೂ ಯಾವೂ ಮಲ್ಲಯ್ಯನ ಕುಲದವರಿಗೆ ಸಿಗದಂತೆ ಅಡ್ಡ ಹಾಕಿಸ್ತಿದ್ದ. ಇತ್ತಿತ್ಲಾಗೆ ರಸ್ತೆ ಕಂಟ್ರಾಕ್ಟು, ಪಂಚಾಯತಿ ಕಟ್ಟಡ ಕಂಟ್ರಾಕ್ಟು ಮುಂತಾದ ಕಾಮಗಾರಿಗಳಿಗೆ ಪ್ರಯತ್ನ ಮಾಡಿ ವೆಂಕಟೇಶಪ್ಪ ನ ಜೋಡಿ ಸೆಣಸಲಾರದೆ ಮಲ್ಲಯ್ಯ ಹಿಂದಕ್ಕೆ ಸರೀಬೇಕಾಯ್ತು. + +“ಇವರು ನಮ್ಮನ್ನ ಬದುಕಕ್ಕೆ, ಮ್ಯಾಲೆ ಬರಕ್ಕೆ ಬಿಡೋದಿಲ್ಲ. ಸರ್ಕಾರದ ಹಣ ಎಲ್ಲಾ ಅವ್ರಕಡೆಯವ್ರಿಗೆ ಬೇಕು. ಎಲ್ಲಾ ತಾವೇ ಉಣಬೇಕು. ಬ್ಯಾರೆ ಮಂದಿ ನೋಡಿ ಸುಮ್ನಿರಬೇಕಾ” ಅಂತ ಕೈ ಕೈ ಹಿಸುಕಿಕೊಳ್ತಿದ್ದ. ಆದರೆ ಅದಕ್ಕೆ ಏನು ಮಾಡಬೇಕೋ ಮಲ್ಲಯ್ಯನಿಗೆ ಗೊತ್ತಿದ್ದಿಲ್ಲ. ತಮ್ಮಕಡೆ ಜನರನ್ನ ಚುನಾವಣೆಗೆ ಅಲ್ಲದೆ ಬ್ಯಾರೇ ಟೈಂನಾಗ ಹ್ಯಾಗೆ ಉಪಯೋಗ ಮಾಡಿಕೊಳ್ಳೋದು ಗೊತ್ತಾಗ್ತಿದ್ದಿಲ್ಲ. ಇದರಿಂದಾ ಆತನಲ್ಲಿ ಬರೀ ಕೋಪ, ಹತಾಶೆ ತುಂಬಿಕೊಳ್ತಿದ್ದವು. ಆದರೂ ಇನ್ನೊಂದು ಕಡೆ ತಮ್ಮವರು ಒಂದಷ್ಟು ಮಂದಿ ತನ್ನ ಹಿಂದಿದ್ದಾರೆ, ತಾನೂ ಒಂದು ಗುಂಪಿಗೆ ನಾಯಕ ಅನ್ನೋ ಯೋಚನೆ ಅವನಿಗೆ ಹೊಸ ಹುರುಪು ಒಂದು ತೆರನಾದ ಅಮಲು ಕೊಡ್ತಿತ್ತು. + +ಪಂಚಾಯತಿ ಅಧ್ಯಕ್ಷರ ಮರ್ಜಿ ಹಿಡಿದುಕೊಂಡಿದ್ರಷ್ಟೇ ಆ ಊರಲ್ಲಿ ಆರಾಮಾಗಿ ಕೆಲಸ ಮಾಡಿಕೊಂಡಿರಬಹುದು ಅಂದುಕೊಳ್ಳೋ ಶಾಲೆಯ ಮೇಷ್ಟ್ರ ಬಗ್ಗೆ, ಅಂಗನವಾಡಿ ಟೀಚರ್ ಬಗ್ಗೆ ಮೇಲಿಂದ ಮೇಲೆ ದೂರಿನ ಮೂಗರ್ಜಿ ಬರೆದು ತನ್ನ ಇರುವುಕೆ, ಪ್ರಾಮುಖ್ಯತೆ, ಶಕ್ತಿ ತೋರಿಸೋ ಪ್ರಯತ್ನ ಮಾಡ್ತಿದ್ದ. ಆ ದೂರಿನ ಅರ್ಜಿಗಳ ಮೇಲೆ ಹೆಬ್ಬೆಟ್ಟು ಒತ್ತಕ್ಕೆ ಹ್ಯಾಗೂ ತನ್ನ ಹಿಂದಿನ ಗುಂಪು ತಯಾರಾಗೇ ಇತ್ತು. ಊರಿನ ರಾಜಕೀಯದಲ್ಲಿ ಹೀಗೆ ಮುಖಂಡನಾಗಿ ಬೆಳೀತಿರೋ ತಾನು ಕೂಲಿ ಕೆಲಸಕ್ಕೆ ಹೋಗಕ್ಕಾಗೊದಿಲ್ಲ ಅಂತ ಈ ಮುದುಕಪ್ಪನಿಗೆ ಹ್ಯಾಗೆ ಹೇಳೋದು. ಹೊರಗೊಂದು ಕಾಟ, ಮನ್ಯಾಗಿನ್ನೊಂದು ಕಾಟ ಛೆ! ಛೆ! ಅಂತ ಅಪ್ಪನ ಮ್ಯಾಲೆ ಬ್ಯಾಸರ ಮಾಡಿಕೊಂಡ. ಹೇಳಿದ್ರೂ ಕೂಳಿಗೆ ಗಿಟ್ಟಲಾರದ ಒಣರಾಜಕೀಯ ನಮಗ್ಯಾಕಪ್ಪಾ ಅಂತಾನೆ. ಮೈ ಮುರಿದು ದುಡಿಯೋದೊಂದೆ ಗೊತ್ತಿದ್ದ ಹಳೇ ಕಾಲದ ಮುದ್ಯಾತನಿಗೆ ಹ್ಯಾಗೆ ತಿಳೀಬೇಕು. + +ಈ ಮುದ್ಯಾತ ಅಪ್ಪನಂತೂ ಓದು ಬರಹ ಇಲ್ದೋನು. ತಾನು..? ಏಳನೇ ಕ್ಲಾಸ್ ಓದಿದೋನು. ಓದು ಬರಹ ಗೊತ್ತಿರೋನು. ದೊಡ್ಡೋರ್ಹಂಗೆ ಟೌನಿಗೋಗಿ ಆಫೀಸು, ಕೋರ್ಟು, ಕಛೇರಿ ಸುತ್ತಾಡೋನು. ಅಂತಾದ್ದು ಕೂಲಿ ಕೆಲಸಕ್ಕೋಗೋದಂದ್ರೆ ತಲಿಕೆಡಂಗಿಲ್ಲೇನು? ಅಪ್ಪನಕಡೀಗೆ ದುರುಗಿಟ್ಟಿ ನೋಡಿ “ಅಪ್ಪ ಅಂತ ಇಷ್ಟು ದಿನ ಸುಮ್ನಿದ್ದೀನಿ. ಇನ್ನೊಂದು ಸಲ ಕೂಲಿಗೋಗಂದ್ರೆಗಿನಾ ಸರಿಗಿರಂಗಿಲ್ಲ ನೋಡು” ಅಂದು ಬಿರಬಿರ ಹೆಜ್ಜೆ ಇಟುಗೊಂಡು ಹೊರಕ್ಕೋದ. ಹೀಗೆ ದಡ ದಡಾಂತ ಸಿಟ್ಟಿಲೆ ಹೋಗ್ತಿದ್ದ ಮಗನ್ನ ನೋಡ್ತಾ ನಿಂತುಬಿಟ್ಟ ಮುದ್ಯಾತ. + +ಗ್ರಾಮೀಣ ಸಂಪರ್ಕ ಅಂತ ಸರ್ಕಾರ ಪ್ರತೀ ಹಳ್ಳಿಗೆ ಬಸ್ಸು ಓಡಿಸಿದ್ದೇ ಬಂತು ದರಿದ್ರ. ಈ ಹಾಳು ಬಸ್ಸು ಬರೋಕಿಂತಾ ಮುಂಚೆ ಹಳ್ಳಿ ಎಷ್ಟು ಮುಗ್ದವಾಗಿ, ಶಾಂತಿಯಿಂದ ತಣ್ಣಗಿತ್ತು. ಈ ಬಸ್ಸೆಂಬೋ ದೈತ್ಯ ಕಾಲಿಟ್ಟ ಮ್ಯಾಲೆ ಒಳ್ಳೇದು, ಕೆಟ್ಟದು ಏನೇನೆಲ್ಲಾ ಬಂತೋ ನೋಡಿದ್ದಾಯಿತು. “ಥೂ..! ಈ ಜನಮಕ್ಕಿಷ್ಟು..” ಮಗ ಹೋದ ಕಡೇಗೆ ಉಗಿದ ಆ ತಂದೆ. + +ಹಳ್ಳಿಗೆ ಬಸ್ಸು ಇಲ್ದಿದ್ದ ದಿನಗಳೇ ಎಷ್ಟು ಬೇಷಿದ್ದವು. ಟೌನಿನ ಯಾವಸೋಂಕು ಇಲ್ದಂಗ ಹಳ್ಳಿ ಒಂದು ಸ್ವಚ್ಚ ದ್ವೀಪವಾಗಿತ್ತು. ಊರಾಗ ದೊಡ್ಡೋರು ಹೇಳಿದ್ರೆ, ಮರುಮಾತಿಲ್ದಂಗೆ ಒಪ್ಕೊಂಡು ಮಾಡ್ತಿದ್ರು. ವೆಂಕಟನಾಯ್ಡು ಮನೆಯಲ್ಲಿ ಒಂದಿಷ್ಟು ಊಟಕೊಟ್ಟು, ಎಲೆ ಅಡಿಕೆ ಕೊಟ್ರೆ ಸಾಕು ಸಂಜೆಯಾಗೋಷ್ಟರಲ್ಲಿ ಕೋಟಿಯಂತಾ ದೊಡ್ಡ ಮನೆ ಪೂರ್ತಿ ಸುಣ್ಣ ಹೊದ್ದು ಮುಗುಸ್ತಿದ್ರು. ಆ ಕಾಲದಲ್ಲಿ ಮನುಷ್ಯರು ಹೊಟ್ಟೆ-ಬಟ್ಟೆ ಬಗ್ಗೆ ಮಾತ್ರ ಚಿಂತೆ ಮಾಡ್ತಿದ್ರು. ಹೊತ್ತು ಮುಳುಗಿ ಬುಡ್ಡಿ ದೀಪ ಹಚ್ಚೋ ಹೊತ್ತಿಗೆ ಹಾಡೋ ಕಥೆನೋ ಹೇಳ್ಕೊಂಡು ನಿದ್ದೆಗೆ ಜಾರಿಕೊಳ್ಳೋದು. ಅಬ್ಬಬ್ಬಾ ಅಂದ್ರೆ ವರ್ಷಕ್ಕೊಂದು ಸರ್ತಿ ಬಂಡಿಕಟ್ಟಿಕ್ಯಂಡು ಟೌನ್ ಗೋಗಿ ಲವಕುಶ ಇಲ್ಲಾ ಪಾಂಡವವನವಾಸ ಇಂಥಾ ಸಿನಿಮಾನೋಡಿ ಕೋಳಿಕೂಗೋಷ್ಟೊತ್ತಿಗೆ ಹಳ್ಳಿ ಸೇರಿಕೊಂತಿದ್ದರು. ಮುಂದಿನ ವರ್ಷದ ತನಕಾ ಅದೇ ಸುದ್ದಿ ಮಾತಾಡಿಕೊಂತಿದ್ರು. ಬಹುಶಃ, ಬಹಳ ಕಡಿಮೆ ಬೇಕು ಬೇಡಗಳಿಂದ ಬದುಕು ಸಾಗಿಸೋದು ಅನಾಗರೀಕತೆ ಅಂತಂದುಕೊಂಡ್ರೆ ಅವರು ಅನಾಗರೀಕರೇ. ಮತ್ತೊಂದುಕಡೆ ವೆಂಕಟೇಶಪ್ಪನ ಅಧಿಪತ್ಯವನ್ನು ಒಪ್ಪಿಕೊಂಡಿದ್ದೂ ಸಹಾ ಅಂದಿನ ಅವರ ನೆಮ್ಮದಿಗೆ ಕಾರಣವಾಗಿತ್ತಾ? ಯೋಚನೆ ಮಾಡಿದ್ರೆ ಹೌದು ಅನ್ನಿಸಬಹುದೇನೋ. + +ಬಸ್ಸು ಹಳ್ಳಿಯಿಂದ ಹೊರಡಕ್ಕೆ ತಯಾರಾಯಿತು. ಮಲ್ಲಯ್ಯ ಬಸ್ಸಿನೊಳಗಡೆ ಕಣ್ಣಾಡಿಸಿದ. ಬಸ್ಸಿನ ಹಿಂಭಾಗದಲ್ಲಿ ನಿಂತಿದ್ದ ನಾಲ್ವರು ಗೆಳೆಯರು ನೋಡಿ ನಕ್ಕರು. ಬಸ್ಸಿನೊಳಗೆ ತರಹೇವಾರಿ ಜನ ತುಂಬಿದ್ದರು. ಶಾಲೆಗೋಗೊ ಮಕ್ಕಳಿದ್ದರು, ಕಾಲೇಜಿಗೋಗೋ ಹುಡುಗರು, ಹುಡುಗಿಯರಿದ್ದರು. ಹಳ್ಳಿಯಲ್ಲಿ ಬೆಳೆದ ತರಕಾರಿ ಮುಂತಾದವು ಬುಟ್ಟಿಗಳಾಗ ತುಂಬಿಸಿ ತಗೊಂಡುಹೋಗ್ತಿರೋ ಸಣ್ಣ ವ್ಯಾಪಾರಿಗಳಿದ್ದರು. ಎಮ್ಮಿಹಾಲು ಟೌನ್ ನಲ್ಲಿ ಹೋಟೇಲ್ಗಳಿಗೆ ಮಾರಕ್ಕೆ ಹೊರಟ ಮಂದಿ ಇದ್ದರು. ಹಿಂಗ ಬಸ್ಸಿನ ಅನುಕೂಲ ಇದ್ದು, ವ್ಯಾಪಾರ ವಹಿವಾಟು ನಡೀತಿರೋದರಿಂದಾ ಹಳ್ಯಾಗ ಬದುಕು ನಡೀತಿತ್ತು. ಇಲ್ಲಂದ್ರೆ ಇಷ್ಟು ವರ್ಷದ ಬರದ ಹೊಡೆತಕ್ಕೆ ಆ ಹಳ್ಳಿಯ ಜನ ಯಾವತ್ತೋ ಮನೆಮಠ ಮಾರಿ ಗುಳೇ ಹೋಗಬೇಕಾಗಿತ್ತು. + +ಬಸ್ಸು ಹೊರಟಿತು. ಬಸ್ಸಿನಾಗ ಪಂಚಾಯಿತಿ ಅಧ್ಯಕ್ಷರ ಸಣ್ಣ ಭಾಮೈದನಿಗೆ ಸಹಾ ಸೀಟುಸಿಕ್ಕಿಲ್ಲ. ನಿಂತಿದ್ದ ಆತನ ಮುಂದೆ ಆಚಾರಿ, ಇನ್ನೂ ಮುಂದೆ ಕೂಲಿಗೋಗೊ ಹೆಣ್ಮಗಳು ದುರಿಗಿ ನಿಂತಿದ್ಲು. ಬಸ್ಸು ಹೋಗ್ತಿದ್ದಾಗ ದಾರ್ಯಾಗಳ ಸಣ್ಣ ಸಣ್ಣ ಹೊಂಡ ಗುಂಡಿಗೆ ಸಿಕ್ಕಿ ಒಳಗಿನ ಮಂದಿ ಆಗಾಗ್ಗೆ ಜೋಲಿಹೊಡಿತಿದ್ರು. ಹಂಗ ಜೋಲಿ ಹೊಡದಾಗ ದುರುಗಿ ಬೆನ್ನು ಆಚಾರಿ ಎದೆಗೆ ಗಟ್ಟಿಯಾಗಿ ಆನಿಕೊಂತಿತ್ತು. ಅದು ಆಚಾರಿಗೆ ಬಹಳ ಹಿತವಾಗಿತ್ತು. ಧಗ್ಗನೆ ಹೊತ್ತಿ ಉರಿದ ಕಾಮನೆಯ ಶಾಖದಲ್ಲಿ ಮಡಿಮೈಲಿಗೆಯ ಆಲೋಚನೆಯೇ ಸುಟ್ಟು ಭಸ್ಮವಾದಂತಿತ್ತು. ಹೀಗೆ ಮೇಲು-ಕೀಳು, ಜಾತಿ-ಮತಗಳ ಎಲ್ಲಾ ವರ್ಗಗಳನ್ನು ಒಂದೇ ಗುಂಪಿನಲ್ಲಿ ಕಟ್ಟಿಹಾಕಿದಂತೆ ಹೊತ್ತುಕೊಂಡು ಹೊರಟಿತ್ತು ಆ ಮೋಟಾರು ವಾಹನ. ನೂರಾರು ವರುಷಗಳ ಸಾಮಾಜಿಕ ಚರಿತ್ರೆಯಲ್ಲಿ ನೂರಾರು ಸಂಸ್ಕರಣಾವಾದಿಗಳು ಮಾಡಲಾಗದ ಕೆಲಸವನ್ನು ಆ ಒಂದೇ ಒಂದು ಯಂತ್ರ ಸುಲಭವಾಗಿ ಮಾಡಿಬಿಟ್ಟಿತ್ತು. ಯಂತ್ರಕ್ಕೆ ವ್ಯಾಪಾರವೇ ಜೀವಾಳ, ಜಾತಿ-ಮತವಲ್ಲ. + +ಹಳ್ಳಿ ದಾಟಿ ವೆಂಕಟೇಶಪ್ಪನ ತೋಟದ ಹತ್ತಿರ ಬಂದ ಕೂಡಲೇ ಠಪ್ಪಂತ ಬಸ್ಸು ನಿಂತುಬಿಡ್ತು. ಅಧ್ಯಕ್ಷರ ಮನೆಯವರು ನಿಧಾನವಾಗಿ ಮೆರವಣಿಗೆಯಲ್ಲಿ ನಡೆದಹಾಗೆ ನಡಕೊಂಡು ಬಂದರು. ಕಂಡಕ್ಟರ್ “ಆ ಮುಂದಿನ ಸೀಟಿನವರು ಎದ್ದೇಳ್ರಿ. ಅಧ್ಯಕ್ಷರ ಮನಿಯವರು ಬಂದಾರೆ, ಸೀಟು ಬಿಟ್ಟುಕೊಡ್ರಿ” ಅಂತ ಕೂಗಿದ. ಅವರು ಸೀಟಿನಲ್ಲಿ ಆಸೀನರಾದರು. ಬಸ್ಸು ಮುಂದಕ್ಕೋಡಿತು. ಅವರ ದರ್ಬಾರು ನೋಡಿದ ಮಲ್ಲಯ್ಯನಿಗೆ ಹೊಟ್ಟೆಯಲ್ಲಿ ಬೆಂಕಿ ಬಿದ್ದಂಗಾಯ್ತು. ಈ ಬಸ್ಸು ವೆಂಕಟೇಶಪ್ಪ ಅವರಪ್ಪನದೇನಲ್ಲ, ಖಾಸಗಿ ಬಸ್ಸು. ಬ್ಯಾರೇ ಜಾತಿ ಜನಗಳ ಹತ್ರ ಕಡಿಮೆ ದುಡ್ಡು ಇಸ್ಕೊಂತಾರೇನು? ಎಲ್ಲಾರ್ಗೂ ಒಂದೇ ಟಿಕೆಟ್ ದುಡ್ಡಲ್ಲೇನು. ಅಂಥಾದ್ರಾಗ ಇವರು ಬಂದಕೂಡ್ಲೇ ಎಲ್ಲರೂ ಯಾಕೆ ಸೀಟು ಬಿಟ್ಟುಕೊಡಬೇಕು? ಹೇಳಿಕೇಳಿ ಇವತ್ತು ಅಲ್ಲಿ ಸೀಟುಬಿಟ್ಟುಕೊಟ್ಟವರು ಮಲ್ಲಯ್ಯನ ಕಡಿಯವರು. “ಥೂ.. ಇವನವ್ವನ.. ಇದೂ ಒಂದು ಬದುಕೇನು..?” ಮಲ್ಲಯ್ಯ ಸಿಟ್ಟಿನಲ್ಲಿ ಹಲ್ಲು ಮಸೆದದ್ದಷ್ಟೇ ಆಯಿತು. + +ಮೊದಲಿಗೆ ಆ ಹಳ್ಳಿಗೆ ಸರ್ಕಾರದ ಬಸ್ಸು ಬರ್ತಿತ್ತು. ವೆಂಕಟೇಶಪ್ಪನೂ ಅದಕ್ಕೆ ಬೆಂಬಲವಾಗೇ ಇದ್ದ. ಆದ್ರೆ ಬರುಬರುತ್ತಾ ಇದರಿಂದಾ ತನ್ನ ಅಧಿಪತ್ಯಕ್ಕೆ ಸಂಚು ಬರೋ ಲಕ್ಷಣಗಳು ಕಾಣಿಸಿದವು. ಭೂಮಿ ಇಲ್ಲದ ಕೂಲಿಕಾರರು ಅಲ್ಲಿವರೆಗೆ ಹಳ್ಳಿಯ ಭೂಮಾಲೀಕರ ಮರ್ಜಿಯಲ್ಲಿರುತ್ತಿದ್ರು. ಈಗ ಹೆಚ್ಚು ಕೂಲಿ ಸಿಗೋ ಕಡೇ ಹತ್ತಿಪ್ಪತ್ತು ಕಿಲೋಮೀಟರು ದೂರಕ್ಕೆ ಹೋಗ್ತಾರೆ. ಹಳ್ಯಾಗೂ ಕೂಲಿ ಆಳಿಗೆ ಬೇಡಿಕೆ ಜಾಸ್ತಿಯಾಯಿತು. ಬಡವರ ಮಕ್ಕಳು ಊರಾಗ ಏಳನೇ ತರಗತಿವರೆಗೆ ಮಾತ್ರ ಓದಿ ಆನಂತರ ಕೂಲಿಕೆಲಸಕ್ಕೆ ನಿಂತುಬಿಡ್ತಿದ್ರು. ಈಗ ಬಸ್ಸಿನಾಗೆ ಟೌನಿಗೋಗಿ ಮುಂದಕ್ಕೆ ಓದಕ್ಕೋಗ್ತಾರೆ. ಒಂದಾನೊಂದು ಕಾಲದಾಗ ಇಡೀ ಹಳ್ಳೀಗೆ ವೆಂಕಟೇಶಪ್ಪ ಒಬ್ಬನೇ ಎಸ್.ಎಸ್.ಎಲ್.ಸಿ ವರೆಗೆ ಪಾಸಾಗಿದ್ದೋನು. ಆದರೆ ಈಗ ಹಿಂದುಳಿದ ಕುಲದವರಲ್ಲೇ ಇಬ್ಬರು, ಮೂವರು, ಪದವಿ ಮುಗಿಸಿ ಮುಂದಕ್ಕೂ ಓದಿದ್ದರು. ಯಾರ್ಯಾರೋ ಹುಡುಗರು ತನ್ನ ಕಣ್ಣಮುಂದೆ ಟಕ್ ಮಾಡ್ಕೊಂಡು, ಹೊಸ ಹೊಸ ಫ್ಯಾಷನ್ಗಳು ಮಾಡಕತ್ತಿದ್ರು. ಮೊದಲು ತಮ್ಮ ಮನ್ಯಾಗಷ್ಟೇ ಜನವರಿ ಒಂದಕ್ಕೆ ಹೊಸ ವರ್ಷದ ಸಂಭ್ರಮ ಆಗ್ತಿತ್ತು. ಈಗ ಊರಾಗ ಎಲ್ಲಾರೂ ಆವತ್ತು ಮನೆಮುಂದೆ ಸಾರಿಸಿ, ಹೊಸ ರಂಗೋಲಿ ಹಾಕಿ, ಹ್ಯಾಪಿ ನ್ಯೂ ಇಯರ್ ಅಂತನ್ನೊದು ನೋಡಿ ಅಧ್ಯಕ್ಷರು “ಛೆ.. ಛೆ.. ಊರಾಗ ನಮ್ಮ ಪದ್ಧತಿ ಸಂಪ್ರದಾಯ ಎಲ್ಲಾ ಹಾಳಾಗಿ ಹೋಗ್ತಾ ಇದೆ” ಅನ್ತಿದ್ರು. + +ಒಟ್ಟಿನಲ್ಲಿ ಊರ ಜನ ತನ್ನ ಕೈಯಿಂದಾ ಮೆಲ್ಲಕ್ಕೆ ಜಾರಿಹೋಗ್ತಿದ್ದಾರೆನ್ಸಿತ್ತು. ಇದನ್ನ ಗಮನಿಸಿ ಅಧ್ಯಕ್ಷರು ಮೆಲ್ಲಗೆ ತನ್ನ ಬಾಲ ಬಿಚ್ಚಿದರು. ಸರ್ಕಾರಿ ಬಸ್ಸಿನ ಮೇಲೆ ಮೆಲ್ಲಗೆ ತಕರಾರು ಶುರು ಮಾಡಿದ. ಯಾರು, ಎಲ್ಲಿ ಕೈ ಎತ್ತಿದರೂ ಬಸ್ಸು ನಿಲ್ಲಿಸಬೇಕೆಂದ. ಎಷ್ಟು ಸಾಮಾನು ತಂದರೂ ಹಾಕ್ಕೊಂಡು ಸುಮ್ನೆ ಹೊರಡಬೇಕೆಂದ. ಮೂರು ಟ್ರಿಪ್ ಸಾಲೋದಿಲ್ಲ. ಆರು ಟ್ರಿಪ್ ಓಡಿಸಲೇಬೇಕೆಂದ. ಇಲ್ಲಂದ್ರೆ ಹಳ್ಳಿಗೆ ಬಸ್ಸು ಓಡ್ಸಕ್ಕೆ ಬಿಡೋದಿಲ್ಲ ಅಂತ ಪಟ್ಟು ಹಿಡಿದು ಕುಂತುಬಿಟ್ಟ. ಅಧ್ಯಕ್ಷರು ತಮ್ಮ ಸಲುವಾಗಿ ಹೋರಾಡುತ್ತಿದ್ದಾರೆ ಅಂದುಕೊಂಡು ಹಳ್ಳಿಮಂದಿ ಎಲ್ಲಾರೂ ಬೆಂಬಲಕೊಟ್ಟರು. ಈ ಗದ್ಲ ಎಲ್ಲಾ ನೋಡಿ ಸಾರಿಗೆ ಇಲಾಖೆಯವರು ಹಳ್ಳಿಗೆ ಬಸ್ಸು ಕ್ಯಾನ್ಸಲ್ ಮಾಡಿ ಕೈತೊಳಕೊಂಡು ಬಿಟ್ರು. ಇದರಿಂದಾ ಹೊಡೆತಬಿದ್ದಿದ್ದು ಸಾಮಾನ್ಯ ಜನರಿಗೆ. ಕೂಲಿ ಕೆಲಸಕ್ಕೆ, ತರಕಾರಿ ಹಾಲು ಮಾರೋಂಥಾ ಸಣ್ಣ ವ್ಯಾಪಾರಕ್ಕೆ. ಮಕ್ಕಳು ಶಾಲೆ-ಕಾಲೇಜಿಗೆ ಹೋಗೋಂಗಿಲ್ಲ. ಕೆಲವರಿಗಂತು ಟೌನಿಗೋಗಿ ಕುಡುದು, ಇಸ್ಪೇಟ್ ಆಡೋದಕ್ಕೂ ಕೈಕಾಲು ಕಟ್ಟಿದಂಗಾಯ್ತು. + +ಸರಿ ಬಡವರು, ಕೂಲಿಗೋಗೋರು ಎಲ್ಲಾ ಸೇರಿ, ಅರ್ಜಿಕೊಟ್ಟು ಅಧ್ಯಕ್ಷರ ವಿರೋಧದ ನಡುವೆಯೂ ಹಳ್ಳಿಗೆ ಮತ್ತೆ ಬಸ್ಸು ಹಾಕಿಸಿಬಿಟ್ಟರು. ವೆಂಕಟೇಶಪ್ಪನಿಗೆ ಪರಿಸ್ಥಿತಿ ಅರ್ಥವಾಯ್ತು. ಊರಿಗೆ ಬಸ್ಸು ಬರಲೇಬಾರದಿತ್ತು. ಒಂದ್ಸಲ ಬಂದ ಮೇಲೆ ಅದನ್ನ ನಿಲ್ಸೋದು ಆಗೋದಿಲ್ಲ. ಈಗೇನ್ಮಾಡ್ಬೇಕು? ಅದನ್ನೂ ತನಗೇ ಅನುಕೂಲ ಆಗೋಹಾಗೇ ಬಳಸಿಕೊಳ್ಳಬೇಕು. ವೆಂಕಟೆಶಪ್ಪ ತನಗೆ ಚೆನ್ನಾಗಿ ಪರಿಚಯ ಇರೋ ಖಾಸಗಿ ಬಸ್ ಯಜಮಾನರೊಬ್ಬರನ್ನ ಪುಸಲಾಯಿಸಿ ಹಳ್ಳಿಗೊಂದು ಬಸ್ ರೂಟ್ ಪರವಾನಗಿ ತೆಗೆಸಿ, ಖಾಸಗಿ ಬಸ್ಸು ಶುರು ಮಾಡಿಸಿದ. ಅದು ಸರ್ಕಾರಿ ಬಸ್ಸಿಗಿಂತಾ ಎಂಟಾಣೆ ಕಮ್ಮಿ ಚಾರ್ಜಿಗೆ ಓಡ್ತಿತ್ತು. ಅಲ್ಲದೇ ಮಂದೀನ ಚೂಬಿಟ್ಟು ಸುಳ್ಳೇ ಜಗಳ ಎಬ್ಬಿಸಿ, ಸರ್ಕಾರಿ ಬಸ್ಸ್ ನ ಗಾಜು ಒಡೆಸಿದ, ಟೈರ್ ಕೊಯ್ಸಿದ. ಇಂಥಾ ಗದ್ಲ ಮೇಲಿಂದ ಮೇಲೆ ಆಗೋದು ನೋಡಿ ಸರ್ಕಾರಿ ಬಸ್ಸು ರದ್ದಾಯಿತು. ಖಸಗಿ ಬಸ್ಸೊಂದೇ ಉಳೀತು. ಜನ ಯಾವುದೋ ಒಂದು ಬಸ್ಸು ಓಡ್ತಿದೆ, ಸಾಕು ಅಂದುಕೊಂಡ್ರು. ಖಾಸಗಿ ಬಸ್ಸು ಬರ್ಜರಿ ಕಲೆಕ್ಷನ್ನಿನಲ್ಲಿ ಓಡ್ತಿತ್ತು. ವೆಂಕಟೇಶಪ್ಪನಿಗೂ ಒಳ್ಳೆ ಕಮಿಷನ್ ಬರ್ತಿತ್ತು. + +ಬಸ್ಸು ಮುಂದಕ್ಕೆ ಹೊರಟು, ಗುಡ್ಡದ ತಿರುವಿನಲ್ಲಿ ಹಳ್ಳಿ ರಸ್ತೆಯಿಂದಾ ಮೇನ್ ರೋಡಿಗೆ ಬಂದಾಗ ಟೌನ್ ನಿಂದಾ ಇಂಡ್ ಸುಜುಕಿ ಗಾಡಿಯಲ್ಲಿ ವೆಂಕಟೇಶಪ್ಪ ಎದುರಿಗೆ ಬಂದ. ಬಸ್ಸು ನಿಲ್ಲಿಸಿ ಬಸ್ಸಿನಲ್ಲಿದ್ದ ತಮ್ಮ ಹೆಣ್ಮಕ್ಕಳ ಜತೆ ಮಾತಾಡಿ ಹಳ್ಳಿಕಡಿಗೆ ಹೋದ. ಇದನ್ನ ನೋಡ್ತಿದ್ದ ಮಲ್ಲಯ್ಯ ಮನಸ್ಸಿನಾಗ ಕತ್ತಿ ಮಸಿತಿದ್ದ. ನಲವತ್ತು ವರ್ಷದ ಕೆಳಗೆ ರೇಡಿಯೋ, ಗ್ರಾಮಫೋನ್ ರಿಕಾರ್ಡು, ನೀರೆತ್ತೋ ಆಯಿಲ್ ಮಿಷನು ಮುಂತಾದವು ಹಳ್ಳಿಗೆ ತಂದು ಎಲ್ಲಾರನ್ನು ಆಶ್ಚರ್ಯಗೊಳಿಸಿದ್ದ. ಹಳ್ಳಿಗೆ ಬಸ್ಸು ಬರೋ ಮುಂಚಿನಿಂದಾ ಬುಲೆಟ್ ಗಾಡಿ ಓಡಿಸ್ಕೊಂಡು ಟೌನಿಗೋಗ್ತಿದ್ದ. ಅದರಿಂದಾ ಆತನಿಗೊಬ್ಬನಿಗೇ ಟೌನಿನಲ್ಲಿ ಅಧಿಕಾರಿಗಳು, ಫೋಲಿಸರು ಮುಂತಾದವರ ಜತಿ ಪರಿಚಯ, ವ್ಯವಹಾರ ಬೆಳೀತು. ಅದರಿಂದಾಗಿ ಊರುಗಳ ಜನ ಈತನ ಮಾತಿಗೆ ಬೆಲೆಕೊಟ್ಟು ರಾಜಕೀಯದೊಳಗೆ ಬೆಳೆಸಿದರು. ಆದ್ರೆಈಗ, ಆತನ ಇಂಡ್ಸುಜುಕಿ ಗಾಡಿ ನೋಡಿ ಜನ ಆಶ್ಚರ್ಯಪಡ್ತಾ ಇಲ್ಲ. ಬಸ್ಸು ಬಂದಾಗಿಂದಾ ಆ ಹಳ್ಳಿ ಟೌನಿಗೆ ಹತ್ತಿರವಾಗ್ತಾ ಬಂತು. ಈಗೀಗ ಹಳ್ಳಿ ಮಂದಿ ಬೆರಿಕೆ ಆಗ್ತಿದ್ದಾರೆ ಅಂತ ವೆಂಕಟೇಶಪ್ಪನಿಗೆ ಚಿಂತೆಯಾಗ್ತಿತ್ತು. + + + +ಟೌನು ಹೊರಗೆ ಆ ರಸ್ತೆಯಲ್ಲಿ ಪಾಳುಬಿದ್ದ ಮನೆಗಳು ಕೆಲವಿದ್ದವು. ಅಲ್ಲಿ ಪೋಕಿರಿಗಳು ಸೇರಿ ಕುಡಿತ, ಜೂಜು ಮುಂತಾದವು ಮಾಡ್ತಿದ್ದರು. ಆ ರಸ್ತೆಯಲ್ಲಿ ಬರೋ ಪರವೂರಿನ ಗಾಡಿಗಳ ಸಲುವಾಗಿ ಮೈಮಾರೋ ಹೆಂಗಸರು ಕಾಣಿಸಿಕೊಳ್ತಿದ್ದರು. ಮಲ್ಲಯ್ಯ ಟೌನ್ ನಲ್ಲಿ ಬಸ್ಸಿಳಿದ. ಸೀದಾ ಹತ್ತಿರದ ಸಂದಿಯಲ್ಲಿದ್ದ ಗುಡಿಸಲು ಹೋಟೇಲ್ಗೋಗಿ ಕುಳಿತ. ಬಸ್ಸಿನಲ್ಲಿ ಹಿಂದೆ ನಿಂತಿದ್ದು, ಇವನ ಕಡೆ ನೋಡಿ ನಕ್ಕಿದ್ದ ನಾಲ್ವರು ಮಲ್ಲಯ್ಯನ ಕಡೆಯವರು, ಸ್ವಲ್ಪ ಹೊತ್ತಿನ ನಂತರ ಅಲ್ಲಿಗೆ ಬಂದು ಕೂತರು. ಚಾ ಕುಡಿದು ಬೀಡಿ ಹಚ್ಚಿದರು. ಹಳ್ಳಿಯ ನ್ಯಾಯಬೆಲೆ ಅಂಗಡಿಯವನ ಮೇಲೆ ಗಹನವಾದ ಚರ್ಚೆ ಶುರುವಾಯಿತು. ಅವನ ಬಗ್ಗೆ ಮೂಗರ್ಜಿ ತಯಾರಾಗಿತ್ತು. ಅವನು ವೆಂಕಟೇಶಪ್ಪನ ಕಡೆಯವನು. ಮಲ್ಲಯ್ಯನ ಕಡೆಯ ಒಂದಷ್ಟು ಜನ ಈ ಅರ್ಜಿಗೆ ಸಹಿ ಮಾಡಿದರು. ಇವರೆಲ್ಲಾ ಸೇರಿ ಆ ಅರ್ಜಿಯನ್ನು ತಹಶೀಲ್ದಾರ್ ಕಛೇರಿಯಲ್ಲಿ ಕೊಟ್ಟುಬಂದ್ರು. ಅಲ್ಲಿಂದ ಟಾಕೀಸ್ನಾಗೆ ಮ್ಯಾಟ್ನಿ ಷೋ ನೋಡಕ್ಕೋದ್ರು. ಹಸಿವಾಗಿದ್ದಕ್ಕೆ ಇಂಟರ್ವೆಲ್ ನಲ್ಲಿ ಮಿರ್ಚಿಬಜ್ಜಿ ತಿಂದು, ಚಾ ಕುಡಿದರು. ಮ್ಯಾಟ್ನಿ ಮುಗಿಸಿ ಹೊರಗೆ ಬಂದು ಮತ್ತೆ ಸ್ವಲ್ಪೊತ್ತು ರಸ್ತೆ ಸುತ್ತಿದ್ರು. ಎಲ್ಲರೂ ಮತ್ತೆ ಹಳ್ಳಿಗೋಗೋ ಬಸ್ಸಿಗಾಗಿ ನಿಂತರು. ಆದರೆ ಮಲ್ಲಯ್ಯನಿಗೆ ಎಣ್ಣೆ ಹೊಡೀದಂಗೆ (ಮದ್ಯಪಾನ) ಊರಿಗೋಗೋ ಮನಸಾಗವಲ್ದು. ಆಗ ರಾಜ್ಯದಲ್ಲಿ ಸಂಪೂರ್ಣ ಮದ್ಯಪಾನ ನಿಷೇದ ಜಾರಿಯಲ್ಲಿತ್ತು. ಆದ್ರೇನು, ಮೂವತ್ತು ರೂಪಾಯಿ ಕೊಡೋ ಕಡಿಗೆ ಅರವತ್ತು ಬಿಸಾಕಿದ್ರೆ ಎಲ್ಲಾ ಸಿಗ್ತದೆ, ಅಷ್ಟೇ. + +ಮಲ್ಲಯ್ಯನ ಕಿಸೆದಾಗ ಒಂದು ನಯಾಪೈಸೆ ಇದ್ದಿಲ್ಲ ಪಕ್ಕದಲ್ಲಿ ಇದ್ದವರ ಮುಖ ನೋಡಿದ. ಅವರತ್ರನೂ ಇದ್ದಂಗ ಕಾಣ್ಲಿಲ್ಲ. ಅವರು ವಾಪಾಸ್ ಮನಿಸೇರಿಕೊಳ್ಳೋ ಆತ್ರದಾಗಿದ್ದರು. ಮಲ್ಲಯ್ಯನಿಗೂ ಹಸಿವೇ. ಆದ್ರೆ ಅದನ್ನ ಮೀರಿ ಹೆಂಡದಕಡಿಗೆ ನಾಲಿಗೆ ಚರಚರಾಂತ ಎಳೀತಿತ್ತು. ಹಳ್ಳಿಗೋಗೋ ಬಸ್ಸು ಎದಿರೀಗೆ ಬಂತು. ಕಡೇ ಟ್ರಿಪ್ಪು. ಆ ಬಸ್ಸೋದ್ರೆ ಇನ್ನ ರಾತ್ರಿ ಊರಿಗೆ ಬಸ್ಸಿಲ್ಲ. ಆದ್ರೆ ಎಣ್ಣೆ ಹಾಕಲಾರದಂಗೆ ಊರಿಗೋಗೋದಾ? ಜತಿಗೆ ಬಂದವ್ರು “ಏನಣ್ಣಾ ಬರಂಗಿಲ್ಲೇನು” ಅಂತ ಕೇಳಿ ಹೋಗಿ ಬಸ್ಸು ಹತ್ತಿದ್ರು. ಮಲ್ಲಯ್ಯನಿಗೋ ಮನಸ್ಸಿನ್ಯಾಗೆ ಒಂದೇ ಸಮ ಕಸಿವಿಸಿ “ಹತ್ತಲಾ? ಬ್ಯಾಡಾ?” ಕಂಡಕ್ಟರ್ ರೈಟ್, ರೈಟ್ ಅಂದ. ಬಸ್ಸು ಇನ್ನೇನು ಹೊರಡಬೇಕು. ಅಷ್ಟರಾಗ ಯಾರೋ ಬಸ್ಸಿನ ಬಾಡಿಗೆ ದಬದಬಾಂತ ಬಡಿದ್ರು. “ಓಲ್ಡನ್.. ಓಲ್ಡಾನ್” ಅಂತ ಕೂಗಿ “ಯದಕ್ಕಂಗೆ ಬಡಿತೀರೋ?” ಅಂದ ಕಂಡಕ್ಟರ್. + +“ಏ.. ಹೆಣ್ಮಗಳು ಬರಕತ್ಯಾಳಣಾ.., ಅಗೋ ಅಲ್ಲಿ ನೋಡು ಕೈ ಮಾಡಕತ್ಯಾಳೆ” ಅಲ್ಲಿ ನೋಡಿದರೆ, ಕಾಶೀಂಪೀರಾ ಬೀಡೀಅಂಗಡ್ಯಾಗೆ ಆ ಹೆಣ್ಣುಮಗಳು ಮಟ್ಕಾ ನಂಬರಿಗೆ ದುಡ್ಡು ಕಟ್ತಿದ್ದಳು. ಇನ್ನೊಂದು ಕೈಯಲ್ಲಿ ಬಸ್ಸಿನ ಕಡಿಗೆ ಕೈತೋರಿಸಿ ನಿಲ್ಸಕ್ಕೆ ಕೂಗುತಿದ್ಲು. “ಜಲ್ದಿ ಹೇಳಮ್ಮಾ.. ಯಾ ನಂಬರಿಗೆ..? ಕಾಶೀಂಪೀರಾ ಅವಸರ ಮಾಡಿದ. + +“ಅಣಾ, ನೀವ್ಯಾನಂಬರಿಗೆ ಕಟ್ಟೀರಣಾ?”“ಜೀರೋ, ಒಂಬತ್ತು”“ಸರಿಯಣ್ಣಾ, ಇಗೋ ಓಪನ್ ಗೆ ಜೀರೋಗೆ ನಾಕುರೂಪಾಯಿ, ಕ್ಲೋಸಿಂಗ್ ಒಂಬತ್ತಕ್ಕೆ ಐದುರೂಪಾಯಿ, ಆ ಮ್ಯಾಲೆ ಎಲ್ಡುಸೇರಿ ಮಟ್ಕಾ ನಂಬರಿಗೆ ಒಂದ್ರೂಪಾಯಿ. ಒಟ್ಟು ಹತ್ತು ರೂಪಾಯಿ” ಕೊಟ್ಟಳು. + +ಅವನು ಬಿರಬಿರ ಗೀಚಿಕೊಟ್ಟ ಮಟ್ಕಾ ಚೀಟಿ ಇಸ್ಕೊಂಡು, ಭುಜದಮ್ಯಾಲೆ ಹರಿದಿದ್ದ ರವಿಕೆಯನ್ನು ಎಳೆದು ಸರಿಮಾಡ್ಕೊಂಡು, ಕಂಕುಳದಾಗಿನ ಮಗುವನ್ನ ಹಿಡಕೊಂಡು ಓಡೋಡಿ ಬಂದು, ಬುಕಬುಕ ಅಂತ ಸದ್ದುಮಾಡ್ತಾ, ಹಾರ್ನ್ ಬಾರಿಸ್ತಿರೋ ಬಸ್ಸು ಹತ್ತಿಬಿಟ್ಲು. ಬಸ್ಸು ಹೊರಟೋಯ್ತು. + +ಬಸ್ಸು ಹೊರಟೋದಕೂಡಲೇ ಮಲ್ಲಯ್ಯನ ಮನಸ್ಸಿನ ತೊಳಲಾಟ ನಿಂತೋಯ್ತು. “ಎಂಗನ್ನಾ ಮಾಡಿ ಇವತ್ತು ಎಣ್ಣೆ ಹಾಕ್ಕೋಬೇಕು. ಅದಕ್ಕೆ ಎಪ್ಪತ್ತು ರೂಪಾಯಿ ಬೇಕು. ಏನ್ಮಾಡ್ಲೀ” ಎಲ್ಲಾ ಕಡೆ ನೋಡ್ತಿದ್ದ. ಎದುರಿಗೆ ಬಟ್ಟಿ ಅಂಗಡಿ ಮಾಲಿಕ ‘ಗಲ್ಲಾಪೆಟ್ಟಿಗೆ’ ಹತ್ತಿರ ಕೂತಿದ್ದ. ಸಂಜೆಗೆ ಅಂಗಡಿಯಲ್ಲಿ ದೀಪ ಹಾಕಿ ಗಲ್ಲಕ್ಕೆ ಕೈ ತಾಗಿಸಿ ನಮಸ್ಕಾರ ಮಾಡ್ಕೊಳ್ತಿದ್ದ. ತಿಂದು, ಕುಡಿದು ಸುಖಪಡದಂಗೆ ಬರೀ ದುಡಿದು ಹಣ ಗುಡ್ಡೆಹಾಕ್ಕೊಂಡಿರೋ ಇಂಥವರ್ನ ಕಂಡ್ರೆ ಮಲ್ಲಯ್ಯನಿಗೆ ಅಯ್ಯೋ ಪಾಪ ಅನಿಸ್ತಿತ್ತು. ಜೊತಿಗೆ, ಏಸುಮಂದೀನ ಮೋಸಮಾಡ್ಯಾನೋ ಗುಂಡುಸೂ..ಮಗ. ಜಿಗಿದು ಗುದ್ದಿದರೇನೇ ಮುದಿರಿಕ್ಯಂಡು ಬಿಳ್ತಾನ. ಆವಾಗ ಆ ದುಡ್ಡಿನ ಪೆಟ್ಟಿಗ್ಯಾಗಿಂದ ಒಂದೆಪ್ಪತ್ತು ರೂಪಾಯಿ ತೆಗಂಡರೇ ಎಷ್ಟು ಬೇಷಿರತ್ತಲ್ಲಾ ಅನಿಸ್ತಿತ್ತು. ಆದರೆ ಅಷ್ಟಕ್ಕೆ ಪೋಲೀಸರು, ಕೋರ್ಟು, ಜೈಲು ನೆನಪಾದವು. + +ಮಲ್ಲಯ್ಯನ ಪೂರ್ವಿಕರು ಒಂದಾನೊಂದು ಕಾಲದಾಗ ಬೇಟೆಗಾರರೇ. ಕಾಡಹಂದಿನ ಹೊಡೀಬೇಕಂದ್ರೆ ಧೈರ್ಯಬೇಕು. ಮೊಲ ಹಿಡೀಬೇಕಂದ್ರೆ ಕಳ್ಳರ ಕೈಚಳಕನೂ ಇರಬೇಕು. ಇವೆರಡೂ ಮೈಗೂಡಿಸಿಕೊಂಡಿದ್ದ ಜನಾಂಗ ಕಾಲಸರಿದಂತೆಲ್ಲಾ ಊರುಸೇರಿ ಅಲ್ಪ-ಸ್ವಲ್ಪ ಭೂಮಿ ಉಳುಮೆ ಶುರುಮಾಡಿದ್ರು. ಹಾಗೇನೆ ಬೇಟೆ, ಸಣ್ಣ-ಸಣ್ಣ ಕಳ್ಳತನ, ಭಟ್ಟಿಸರಾಯಿ ಕಾಯಿಸೋದು ಸಹಾ ಮಾಡ್ತಿದ್ರು. ಬಹುಶಾ, ಅವರ ಜೀವನ ವಿಧಾನ ಪಾಶ್ಚಿಮಾತ್ಯ ಬ್ರಿಟೀಷರ ಆಳ್ವಿಕೆಯ ಜೀವನ ವಿಧಾನಕ್ಕೆ ಒಂದು ರೀತಿಯ ಸವಾಲಿನಂತಿತ್ತು. ಬ್ರಿಟೀಷರು ಇವರಮೇಲೆ ನಿರಂತರ ದಾಳಿಮಾಡ್ತಿದ್ರು. ಇಂಥಾದ್ದರಲ್ಲಿ, ಅವರಂಥಾ ಕೆಳವರ್ಗದ ಜನಾಂಗಗಳು ತಮ್ಮ ಉಳಿವಿಗಾಗಿ ಮೇಲ್ವರ್ಗದವರ ಹಿಡಿತಕ್ಕೆ ಸಿಗಬೇಕಾಯಿತು. + +ಮಲ್ಲಯ್ಯ ಆಶೆಯಿಂದಾ ಅಂಗಡಿಯ ಕಡೆ ನೋಡ್ತಿರಬೇಕಾದ್ರೆ “ಅಣ್ಣಾ” ಅಂತ ಹತ್ರ ಬಂದು ನಿಂತನೊಬ್ಬ. ಅವನು ಅಲ್ಲಿಗೆ ಮೂವತ್ತು ಕಿ.ಮೀ ದೂರದ ನೇತ್ರಪಲ್ಲಿಯವನು. ದಾಡಿಬೆಳೆಸಿದ್ದ, ಮೀಸೆ ಕೊನೆ ತಿರುವಿದ್ದ, ಮಾಸಿದ್ದ ಅಂಗಿಯ ತೋಳು ಮಡಚಿದ್ದ. ಅಡ್ಡ ಪಂಚೆ ಎತ್ತಿಕಟ್ಟಿದ್ದ. ಬಾಯಿಂದ ಬ್ರಾಂದಿ ವಾಸನೆ ಗಪ್ಪಂತ ಬಡೀತಿತ್ತು. ನೇತ್ರಪಲ್ಲಿಯಲ್ಲಿ ಎತ್ತು ಖರೀದಿಗೆ ಹೋದಾಗ ಪರಿಚಯವಾಗಿದ್ದ. ಆ ಮೇಲೆ ಒಮ್ಮೆ ಬ್ರಾಂದಿ ಶಾಪಿನ ಜಗಳದಾಗ ಅವನು ಹೊಡೆಸಿಕೊಂತಿದ್ರೆ, ಮಲ್ಲಯ್ಯನೇ ಅಡ್ಡ ಹೋಗಿ ಅವರನ್ನೆಲ್ಲಾ ಹೊಡೆದು ಇವನ್ನ ಬಿಡಿಸಿದ್ದ. “ಎಣ್ಣೆ ಬೇಕೋ ತಮ್ಮಾ..” ಅಂದ ಈ ಕ್ಷಣಕ್ಕೆ ಹತಾಶನಾಗಿದ್ದ ಮಲ್ಲಯ್ಯ. + +“ನೀನು ಕೇಳಬೇಕೇನಣ್ಣಾ..” ಅಂದು ಕಿಸೆದಾಗಿಂದಾ ಹಾಫ್ ಬಾಟಲ್ ತೆಗೆದು ನಕ್ಕ. ಅದರಾಗೆ ಇನ್ನೂ ಅರ್ಧಕ್ಕೆ “ಎಣ್ಣೆ” ಇತ್ತು. ಮಲ್ಲಯ್ಯ ಸ್ವಲ್ಪ ಗಾಬರಿಯಿಂದ “ಪೋಲಿಸರು ನೋಡ್ತಾರೋ” ಅಂದ. + +“ಅವ್ರು ನಮ್ಮೋರೇ, ಬಾಣ್ಣ..” ಅಂದು ಹತ್ತರದ ಸೋಡಾ ಬಂಡಿಗೆ ಹೋದ. ಅಲ್ಲಿ ಒಂದು ಗ್ಲಾಸಿಗೆ ಸ್ವಲ್ಪ ಬ್ರಾಂದಿ ಹಾಕಿ, ಅದಕ್ಕೆ ಸೋಡಾ ಬೆರೆಸಿ “ನನ್ನದಾಯ್ತು, ಇಕ, ಇವಾಗ ನೀನು ತಗೋ” ಅಂದು ಕೊಟ್ಟ. ಮಲ್ಲಯ್ಯ ಗ್ಲಾಸೆತ್ತಿ ಗಟಗಟನೆ ಕುಡಿದು ಬಾಯಿ ಒರೆಸಿಕೊಂಡ. ಅವನಿಂದ ಸಿಗರೇಟ್ ಇಸ್ಕೊಂಡು ಹಚ್ಚಿ ದಮ್ಮು ಎಳೆದ. ಸ್ವಲ್ಪ ಹಾಯಾಗಿತ್ತು. “ಅಣ್ಣಾ.. ಇಕ ಮಿರ್ಚಿಬಜ್ಜಿ ತಿನ್ನು” ಅಂದ. ಇಬ್ಬರೂ ಹೋಗಿ, ಬಾಗಿಲೆಳೆದು ಮುಚ್ಚಿದ್ದ ಅಂಗಡಿಯ ಕಟ್ಟಿಗೆ ಕೂತು ಕಾಲು ಕೆಳಗೆ ಬಿಟ್ಟುಕೊಂಡು ಮಿರ್ಚಿ ಬಜ್ಜಿ ತಿನ್ನಲು ಶುರುಮಾಡಿದ್ರು. ಮಲ್ಲಯ್ಯ “ಲೇ, ನನಿಗೆ ತಮ್ಮ ಅಂದ್ರೆ ನೀನೇನೋಡು. ನಿನ್ನ ಯಾರನ್ನ ಏನಾರಾ ಅಂದ್ರೆ, ನಿನ್ನ ತಂಟೆಗೆ ಯಾರನ್ನಾ ಬಂದ್ರೆಗಿನಾ ಹೇಳು ಅವರ್ನ ಇಲ್ಲ ಅನಿಸಿಬಿಡ್ತೀನಿ” ಅಂದ. + +ಆ ನೇತ್ರಪಲ್ಲಿಯವನು ಜೋರಾಗಿ ನಕ್ಕುಬಿಟ್ಟ. “ಏನಣ್ಣಾ, ನಾನಿನ್ನಾ ಅವತ್ತು ನೀನು ಬ್ರಾಂದಿ ಶಾಪಿನ ಜಗಳದಾಗ ಒದಿಸಿಕೊಂಡಿದ್ದ ಹಳೇ ಮನುಷ್ಯ ಅಂದುಕೊಂಡ್ಯಾ? ನಾನೀವಾಗ ನಮ್ಮ ಈಶಪ್ಪನ ಮನುಷ್ಯಾ ಅಣ್ಣಾ, ಇವಾಗ ಯಾರನ್ನಾ ನನ್ನ ತಡವಿಕೋ ಅಂತೇಳು. ಸಿಗಿದು ಗೂಟಕ್ಕೆ ಕಟ್ತೀನಿ. ಅಷ್ಟ್ಯಾಕೆ, ಈ ಬಜಾರದಾಗ ಏನು ಮಾಡಬೇಕೇಳು. ಆ ಬೀಡಿ ಅಂಗಡಿ ಅವನತ್ರ ಐವತ್ತು ರೂಪಾಯಿ ಕಸ್ಕೊಂಬರ್ಲೇನು. ಈ ಊರಾಗ ಯಾರನ್ನಾ ಆಗಲೀ ನಮ್ಮ ಧಣಿ ಹೆಸರೇಳಿದ್ರೆ ಹಡಲ್. ಅಷ್ಟೆ” ಅಂದ. ಹಿಂದೆ ಇದೇ ಮನುಷ್ಯ ಪೋಲಿಸರು, ತಾಲೂಕಾಫೀಸಿನವರು, ಕರೆಂಟಾಫೀಸ್ ಲೈನ್ಮ್ಯಾನ್, ಯಾರು ಕಂಡ್ರೋ, ತಲಿಗೆ ಸುತ್ತಿದ್ದ ವಲ್ಲಿ ಬಿಚ್ಚಿ, ಹಲ್ಲು ಕಿಸಿದು ‘ನಮಸ್ಕಾರ ಸಾರ್’ ಅಂತಿದ್ದ. ಆದ್ರೆ ಈಗ, ಯಾರೋ ಒಬ್ಬ ಬಲವಾದ ರಾಜಕೀಯದವರ ಹಿಂಬಾಲಕನಾದರೆ ಸಾಕು. ಆ ನಾಯಕ ರೌಡಿ ಹಿನ್ನಲೆಯವನಾದರೆ ಇನ್ನೂ ಒಳ್ಳೇದು ಅವರು ಹೇಳಿದ್ದ ಕೆಲಸ ಮಾಡ್ತಾ, ಸಮಾಜದೊಳಗೆ, ಊರಿನ ಅಧಿಕಾರಿಗಳ ಮೇಲೆ ಸವಾರಿ ಮಾಡಿದ್ರೂ ಯಾರೋ ಕೇಳಂಗಿಲ್ಲ. + +“ಅಣಾ, ಒಂದು ಮಾತು ಕೇಳ್ಲಾ, ನೀನೇರಾ ಆ ವೆಂಕಟೇಶಪ್ಪನ ಗುಂಪಿನವನೇನು?” ಅಂತ ಕೇಳಿದ.“ಛೆ. ಛೆ, ಆತನಿಗೂ ನಮಗೂ ಯಾವಾಗ್ಲೂ ಆಗಂಗಿಲ್ಲ” ಅಂದ ಮಲ್ಲಯ್ಯ.“ಒಳ್ಳೆದಾಯ್ತು ಬಿಡಣ್ಣಾ. ಇಲ್ಲಂದ್ರೆ ನಾವಿಬ್ರೂ ಎದುರು ಪಾರ್ಟಿಯವರಾಗಿ ಬಿಡ್ತಿದ್ವಿ” ಅಂದ ನೇತ್ರಪಲ್ಲಿಯವ.“ಅದು ಹ್ಯಾಗೆ? ನಾವಿಬ್ಬರೂ ಒಂದೇ ಕುಲದವರಲ್ಲೇನು?”“ಬ್ಯಾರೆ ಪಾರ್ಟಿ ಆದ್ರೆ ಕುಲ-ಗಿಲ ನಡಿಯಂಗಿಲ್ಲ ಅಣ್ಣಾ. ಅದ್ಸರಿ, ನಿನಗೆ ಆ ವೆಂಕಟೇಶಪ್ಪನಿಗೆ ಯಾಕೆ ಸರಿಬರಂಗಿಲ್ಲಣ್ಣಾ” ಅಂತ ಕೇಳಿದ. + +ಆಗ ವೆಂಕಟೇಶಪ್ಪನ ಕಾಂಟ್ರಾಕ್ಟುಗಳು, ಅವನು ದುಡ್ಡು ಮಾಡೋ ಪರಿ, ಅವನ ಅಧಿಕಾರ, ತಮ್ಮ ಕುಲದವರು ಅನಾದಿ ಕಾಲದ ಶೌರ್ಯ, ಬೇಟೆ ಮುಂತಾದೆಲ್ಲಾ ಕಥೆ ಕಟ್ಟಿ ಹೇಳಿದ.“ಮತ್ತೆ ಈಗೇನು ಮಾಡ್ತೀಯಾ?” ಅದಕ್ಕೆ ಮಲ್ಲಯ್ಯ ಮುಖ ಕೆಳಗೆ ಮಾಡಿ “ಅದೇ ಗೊತ್ತಾಗವಲ್ದೋ ತಮ್ಮ ಆತನ ಅಧಿಕಾರದ ಮುಂದೆ ನಮ್ದು ನಡಿವಲ್ದು ಅಂತ ಸುಮ್ಮನಾಗಬೇಕು ಅಷ್ಟೆ”“ಅಂಗಂತ ಸುಮ್ನಿದ್ರೆ ಎಂಗಣ್ಣಾ? ನನ್ನ ಮಾತು ಕೇಳು, ನನ್ನಜತಿ ಬಾ. ನಮ್ಮ ಈಶಪ್ಪನತ್ರ ಕರಕೊಂಡು ಹೋಗ್ತಿನಿ”“ಓದ್ರೇ ಏನಾಗುತ್ತೆ”“ನಿನಿಗೆ ರಾಜಕೀಯ ಗುಟ್ಟು ಗೊತ್ತಿಲ್ಲ ನೋಡು. ಈಗ ನಮ್ಮ ಈಶಪ್ಪ, ನಿಮ್ಮೂರು ವೆಂಕಟೇಶಪ್ಪ ರಾಜಕೀಯದಾಗ ಒಳ್ಳೆ ಹಾವು ಮುಂಗುಸಿ ಇದ್ದಂಗಿರ್ತಾರ. ಇಬ್ಬರ ನಡುವೆ ಹಸಿ ಹುಲ್ಲು ಹಾಕಿದ್ರೂ ಧಗ್ಗಂತ ಹೊತ್ತಿಕೊಂತದ” ಒಂದು ಕ್ಷಣ ಸುಮ್ಮನಿದ್ದು, “ ಹಳ್ಯಾಗೆ ಬರೀ ನಿಮ್ಮ ಕುಲದವರು ನಿನ್ನ ಹಿಂದಿದ್ರೆ ಸಾಲ್ದು. ರಾಜಕೀಯದ ಬೆಂಬಲ ಇರಬೇಕು. ಅವಾಗ ನೀನೇರಾ ಮಾಡಬಹುದು” ಅಂದ.“ಆದ್ರೆ ನಾವು, ಈಶಪ್ಪನ ಕಡಿಗೆ ಸೇರಿದ್ರೆ ವೆಂಕಟೇಶಪ್ಪನಿಗೇನಾಗ್ತದೆ?” ಅಂದ ಮಲ್ಲಯ್ಯ. + +“ಅಲ್ಲೇ ಇರೋದು ನೋಡು ಮಜಾ. ನಿಮ್ಮೂರಾಗ ಕೆರೆಯಲ್ಲಿ ಮೀನಿ ಹಿಡಿಯೋ ಟೆಂಡರ್, ಎಷ್ಟೋ ವರ್ಷಗಳಿಂದ ನಿಮ್ಮ ವೆಂಕಟೇಶಪ್ಪನಿಗೇ ಕಟ್ಟಿಟ್ಟ ಬುತ್ತಿ ಇದ್ದಂಗಿತ್ತಲ್ಲೇನು? ಈ ವರ್ಷ ನಮ್ಮ ಧಣಿ ಆ ಟೆಂಡರ್ಗೆ ಸವಾಲಾಕ್ತಾನೆ. ಆ ಟೆಂಡರ್ ನಮ್ಮ ಕಡಿಗೆ ಬರ್ತದೆ. ಆ ವೆಂಕಟೇಶಪ್ಪ ಊರಾಗ ನಿನಗೆ ಒಂದೂಕೆಲಸ ಮಾಡಕ್ಕ ಬಿಟ್ಟಿಲ್ಲ. ಈಗ ನೀನು ಆತನಿಗೆ ಯಾವುದೇ ಟೆಂಡರೂ, ಕೆಲಸ ಮಾಡಕ್ಕೆ ಬಿಡೋದಿಲ್ಲ. ಏಟಿಗೆ ಎದಿರೇಟು. ಆವಾಗ ಗೊತ್ತಾಗ್ತದೆ. ನಾವೇನು ಅಂತ”“ಅದೆಲ್ಲಾ ಇರ್ಲಿ. ಮನ್ಯಾಗ ಒಟ್ಟ ಪರಿಸ್ಥಿತಿ ಸರಿ ಇಲ್ಲ. ನಾನು ಅದನ್ನು ನೋಡಬೇಕು ತಮ್ಮಾ” ಅಂದ ಮಲ್ಲಯ್ಯ ಮೆಲ್ಲಗೆ. + +“ಅಣ್ಣಾ, ನೀನು ಭಾಳ ಅಮಾಯಕ ಇದ್ದೀ ಬಿಡು. ನಾವು ಆರಾಮಾಗಿ ಬದುಕಲಿಲ್ಲಾ ಅಂದ್ರೆ ಈ ರಾಜಕೀಯ ಎಲ್ಲಾ ಎದಕೇಳು? ಇಲ್ಲಿ ಕೇಳು. ಮೀನು ಹಿಡಿಯೋ ಟೆಂಡರ್ ನಮ್ಮ ಈಶಪ್ಪಗೆ ಸಿಕ್ಕರೆ, ನೊಡಿಕ್ಯಂಬೋದು ನೀನೆ ಅಲ್ಲೇನು. ಮತ್ತೆ ನಿನಿಗೆ ಆ ಟೆಂಡರ್ ನಾಗೆ ಪಾಲು ಸಿಗಂಗಿಲ್ಲ ಅನುಕೊಂಡಿಯೇನು” ಅಂದ. + +“ತಮ್ಮಾ, ನೀ ಏನಾರ ಹೇಳು ನಿಮ್ಮಷ್ಟು ತಿಳಿವಳಿಕೆ ನಮಗೆ ಬರಂಗಿಲ್ಲ ಬಿಡು” ಮಲ್ಲಯ್ಯ ಅಭಿಮಾನದಿಂದ ಹೇಳಿದ. ಇಷ್ಟೆಲ್ಲಾ ಹೇಳಿದ್ರೂ ಈಶ್ವರಪ್ಪನ ಕಡಿಗೆ ಹೋಗ್ಲಾ ಬ್ಯಾಡ ಅಂತ ಇನ್ನೂ ಸ್ವಲ್ಪ ಯೋಚನೆ ಮಾಡ್ತಿದ್ದ. ಆದರೂ ಮೀನಿನ ಕೆಲಸದಾಗ ಪಾಲು ಸಿಗೋ ಆಶೆ ಎಳಿತಿತ್ತು. + +“ನಮಗೆ ಈ ರಾಜಕೀಯ ಉಸಾಬರಿ ಎಲ್ಲಾ ಯಾಕೆ ಅನುಕೋಬಾರ್ದಣ್ಣ. ಮೆತ್ತಗಿರೋನ ನೋಡಿದ್ರೆ ಎಲ್ಲರೂ ಬಗ್ಗಿಸಿ ಜಿಗಿಯೋರೆ. ಅದಕ್ಕೆ ನಮ್ಮ ಜತೀಗೂ ಒಬ್ಬರು ನಾಯಕರು, ಒಂದು ಪಾರ್ಟಿ ಸಪೋಟ್ ಇದ್ರೆ ನಮಗೂ ಮರ್ಯಾದೆ”“ಆದ್ರೂ, ಜಗಳ, ಪೋಲಿಸರು, ಕೋರ್ಟು, ಕಛೇರಿ ನನ್ನ ಕೈಲಾಗ್ತದಾ?” + +ಅಷ್ಟರಲ್ಲಿ ಆ ಕಡೆ ಬಂದ ಪೋಲೀಸ್ ನೇತ್ರಪಲ್ಲಿಯವನನ್ನ ನೋಡಿದ್ದೇ “ನಮಸ್ಕಾರಣ್ಣಾ” ಅಂದು ನಮಸ್ಕಾರ ಮಾಡಿದ. ಪಕ್ಕಕ್ಕೆ ಕರೆದು ಏನೋ ಗುಸು-ಗುಸು ಮಾತಾಡಿದ. ಕಡೀಗೆ “ನಮ್ಮನ್ನ ಮರಿಬ್ಯಾಡಣ್ಣಾ” ಅಂದು ನಕ್ಕೊಂತಾ ಹೋದ. + +ನಮ್ಮಂಥವರ ಕೈಯಾಗ ಸಣ್ಣ ಬ್ಲೇಡಿದ್ರೂ “ಕೈಯಾಗ ಬ್ಲೇಡು ಬೇಕೇನಲೇ ಭೋಸುಡಿಕೆ” ಅಂದು ಬೂಟುಕಾಲಲ್ಲಿ ಒದಿಯೋ ಪೋಲಿಸರು, ಕುಡುಗೋಲು ಹಿಡಿದು ಓಡಾಡ್ತಿರೋ ಇವನಿಗೆ ಡೊಗ್ಗಿ ಸಲಾಮ ಮಾಡ್ಲಿಕ್ಕತ್ಯಾರೆ.ಅಷ್ಟೇ, ಮಲ್ಲಯ್ಯ ಮರು ಮಾತಾಡದಂಗೆ ಅವನ ಜತಿಗೆ ಹೊರಟುಬಿಟ್ಟ. + +ಆ ಮಾರನೆಯ ಮುಂಜಾನೆ..ಹಳ್ಳಿಗೆ ಹೊಗೋರು ಸೋಪು, ಪೌಡರು, ಚಹಾಪುಡಿ ಪ್ಯಾಕೆಟುಗಳು, ಸಿನಿಮಾ ಹಾಡಿನ ಕ್ಯಾಸೆಟುಗಳು ಮುಂತಾದ್ದು ತೆಗೆದುಕೊಂಡು ಹೊರಟಿದ್ದರು. ಹಳ್ಳಿಯಿಂದ ಟೌನಿಗೆ, ಟೌನಿಂದ ಹಳ್ಳಿಗೆ ಒಂಥರಾ ಕಲಬೆರೆಕೆ ರಾಜಕೀಯ ಸಂಸ್ಕೃತಿ ಬೆಳೆಸುವಂತೆ ತಯಾರಾಗಿ ನಿಂತಿತ್ತು, ಮಲ್ಲಯ್ಯನ ಹಳ್ಳಿಯ ಕಡೆ ಹೊರಟಿದ್ದ ಆ ಬಸ್ಸು. + +ಮಲ್ಲಯ್ಯನ ಯುದ್ಧರಂಗ ಈಗ ಬಹಳ ವಿಶಾಲವಾಯ್ತು. ಅವನ ಯೋಚನೆ ಬರೀ ಹಳ್ಳಿಮಟ್ಟದಲ್ಲಿ ಇರೋತಂಕ ವೆಂಕಟೇಶಪ್ಪನ ಶಕ್ತಿ ಬಹಳ ಜಾಸ್ತಿ ಅನಿಸ್ತಿತ್ತು. ಅದನ್ನ ಮೀರಬೇಕಂದ್ರೆ ತಾನೂ ಹಳ್ಳಿಬಿಟ್ಟು ಹೊರಗಿನ ರಾಜಕೀಯಕ್ಕೆ ಕಾಲಿಡಬೇಕಿತ್ತು. ಇದೆಲ್ಲದರ ನಡುವೆ, ವಿಚಿತ್ರ ತಳಮಳ, ಉದ್ವೇಗದಲ್ಲಿ ಮಲ್ಲಯ್ಯ ಬಸ್ಸಿನಲ್ಲಿ ಕೂತಿದ್ದ. + + + +ಆದ್ರೆ ಈಗ ಅವನೊಬ್ಬನೇ ಅಲ್ಲ, ಟೌನ್ ಬಸ್ಸಿನ ಜೊತೆಯಲ್ಲೇ ಆ ಹಳ್ಳಿಯೊಳಕ್ಕೆ ಭಯಾನಕ ಹೆಜ್ಜೆ ಇಡಲು, ಮೂರು ಕೈ ಬಾಂಬುಗಳು ಮಲ್ಲಯ್ಯನ ಕೈಚೀಲಗೊಳಗೆ ನಿಶ್ಯಬ್ದವಾಗಿ ಕಾಯ್ತಾ ಕೂತಿದ್ದವು. + +ಬಂಡಿ ನಾರಾಯಣಸ್ವಾಮಿಯವರು ಕಳೆದ ನಾಲ್ಕು ದಶಕಗಳಿಂದ ತೆಲುಗಿನ ಕಥಾ ಲೋಕದಲ್ಲಿ ಮುಖ್ಯವಾದ ಲೇಖಕರು. ಆಂಧ್ರದ ಅನಂತಪುರದಲ್ಲಿ ಶಿಕ್ಷಕರಾಗಿ ನಿವೃತ್ತಿ ಹೊಂದಿ, ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಹಿಂದುಳಿದ ರಾಯಲಸೀಮಾ ಪ್ರಾಂತದ ಬಡತನ, ಕಾಡುವ ಮಳೆಯ ಅಭಾವ, ಬರ ಮತ್ತು ಕ್ರೌರ್ಯದ ಚಿತ್ರಣವನ್ನು ಇವರ ಕಥೆ, ಕಾದಂಬರಿಗಳಲ್ಲಿ ಕಾಣಬಹುದು.ಇತ್ತೀಚಿನ ಇವರ “ಶಪ್ತಭೂಮಿ”, ರಾಯಲಸೀಮೆಯ ಚಾರಿತ್ರಿಕ ಕಾದಂಬರಿಗೆ ಅಮೇರಿಕಾದ “ತಾನ್” ತೆಲುಗು ಸಂಘಟನೆಯ ಪ್ರಶಸ್ತಿ ಬಂದಿದೆ. ಇದನ್ನು ಕನ್ನಡದಲ್ಲಿ ಕುಂ.ವೀ ಅವರು ಅನುವಾದಿಸಿದ್ದಾರೆ.ಇವರ ಬಹಳಷ್ಟು ಕಥೆ ಕಾದಂಬರಿಗಳಲ್ಲಿ “ವೀರಗಲ್ಲು” ಕಥಾಸಂಕಲನ, “ಶಪ್ತಭೂಮಿ”, “ಗದ್ದಲಾಡು ತುನ್ನಾಯಿ”, “ಮೀ ರಾಜ್ಯಂ ಮೀರೇಲು ಕೊಂಡಿ ಸ್ವಾಮಿ” ಮುಂತಾದವು ನೆನಪಿಸಿಕೊಳ್ಳುವಂಥವು. + +ಅನುವಾದಕರು. ತೆಲುಗಿನಿಂದ ಕನ್ನಡಕ್ಕೆ ಹಾಗೂ ಕನ್ನಡದಿಂದ ತೆಲುಗಿಗೆ ಸಮರ್ಥವಾಗಿ ಅನುವಾದಿಸಬಲ್ಲವರು.ಇತ್ತೀಚೆಗಷ್ಟೆ ಅಭಿಯಂತರರಾಗಿ ನಿವೃತ್ತರಾಗಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. \ No newline at end of file diff --git a/Kenda Sampige/article_456.txt b/Kenda Sampige/article_456.txt new file mode 100644 index 0000000000000000000000000000000000000000..bc998c359b5f2fc76aefd00e501fa49eee7c7b7e --- /dev/null +++ b/Kenda Sampige/article_456.txt @@ -0,0 +1,51 @@ + + +ನಾನು ಒಂದು ದಿನ ಗಂಪದಬೈಲು ನಾರಾಯಣ ಉಪಾಧ್ಯಾಯರ ಮನೆಗೆ ಹೋಗಿದ್ದೆ. ಉಪಾಧ್ಯಾಯರ ತಾಯಿ ಲಕ್ಷ್ಮಕ್ಕ ಮಾಡಿದ ಹಳ್ಳಿಯ ಅಪೂರ್ವ ಖಾದ್ಯಗಳು; ಚೆನ್ನಾಗಿ ಬೆಂದ ಬೆಳ್ತಿಗೆ ಅನ್ನ ಕಲಸಿಕೊಳ್ಳಲು ಒಂದರ ನಂತರ ಒಂದರಂತೆ ಬರುತ್ತಿದ್ದ ರುಚಿಕಟ್ಟಾದ ಬಿಸಿಬಿಸಿ ಸಾರು, ಕೊದ್ದೆಲು, ತಂಬುಳಿ, ಉದ್ದಿನಿಟ್ಟು, ಬಾಳಕದ ಮೆಣಸು, ಪಲ್ಯಗಳು ಇವುಗಳನ್ನೆಲ್ಲ ಸುರಿದು ಊಟ ಮಾಡಿದ ನಂತರ ನಾನೂ, ನಾರಾಯಣ ಉಪಾಧ್ಯಾಯರೂ ಸ್ವಲ್ಪ ಹೊತ್ತು ಮನೆಯ ಹಿಂಭಾಗದ ತೋಟದಲ್ಲಿ ಅಡ್ಡಾಡಿ ಬಂದೆವು. + +ಆ ತೋಟದಲ್ಲಿ ಒಂದಷ್ಟು ಮಾವಿನಮರಗಳು, ಕೆಲವು ಹಲಸಿನ ಮರಗಳು ಮತ್ತು ಕೆಲವು ತೆಂಗಿನಮರಗಳು ಯಾವ ಯೋಜನೆಯೂ ಇಲ್ಲದಂತೆ ಬೆಳೆದು ಫಲಕೊಡುತ್ತಿದ್ದವು. ಹಿಂದಿನ ಕಾಲದವರು ಬೆಳೆಸಿದ ತೋಟ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತಿತ್ತು. ಅಲ್ಲಿಗೆ ಹೋಗಿ, ಮನೆಯ ಯಾವ ಕಿಟಕಿಗೂ ಕಾಣದಂತೆ ಒಂದು ಕಡೆ ನೆಲಕ್ಕೆ ಸಮಾನಾಂತರವಾಗಿ ಹರಡಿದ್ದ ಕಸಿ ಮಾವಿನಮರದ ಗೆಲ್ಲಿನಲ್ಲಿ ಕುಳಿತುಕೊಂಡು ನಾರಾಯಣ ಉಪಾಧ್ಯಾಯರು ಸಿಗರೇಟು ಸೇದಿದ ಮೇಲೆ ನಾವು ಮತ್ತೆ ಮನೆಯೊಳಗೆ ಬಂದೆವು. ಅಷ್ಟರಲ್ಲಿ ಅವರ ಹೆಂಡತಿ ಮನೆಯ ಅಂತರದಲ್ಲಿ (ಪಡಸಾಲೆಯ ಎದುರಿನ ನೀಳವಾದ ಕೋಣೆ) ನಮಗಿಬ್ಬರಿಗೂ ಅಕ್ಕಪಕ್ಕದಲ್ಲಿ ಚಾಪೆ ಹಾಸಿದ್ದುದನ್ನು ಕಂಡು ಅವುಗಳ ಮೇಲೆ ಮೈಚೆಲ್ಲಿ ಹರಟೆ ಮುಂದುವರಿಸಿದೆವು. ನಾರಾಯಣ ಉಪಾಧ್ಯಾಯರ ತಂದೆ ವೇದವ್ಯಾಸ ಉಪಾಧ್ಯಾಯರೂ, ಅವರ ಮಡದಿಯೂ ಒಳಗೆ ಪಡಸಾಲೆಯಲ್ಲಿ ಮಲಗಿಕೊಂಡಿದ್ದರು. ಮಕ್ಕಳು ಮರಿಗಳು, ಹೆಂಗಸರೆಲ್ಲ ಮೇಲೆ ಮಾಳಿಗೆಯಲ್ಲಿ ಮಲಗಿದ್ದರು. + +ಮಾತಾಡುತ್ತಾ ಮಾತಾಡುತ್ತಾ ನನಗೆ ಮೊದಲು ನಿದ್ದೆ ಆವರಿಸಿಕೊಂಡಿತೋ, ಉಪಾಧ್ಯಾಯರನ್ನು ಮೊದಲು ಸೆಳೆಯಿತೋ ಹೇಳಲಾರೆ. ನನಗೆ ನಡುರಾತ್ರಿ ಬೆಚ್ಚಿಬಿದ್ದು ದಡಕ್ಕೆಂದು ಎದ್ದು ಕುಳಿತದ್ದೇ ಗೊತ್ತು. ಏನು ಎತ್ತ ಯಾವುದೂ ತಿಳಿಯದೆ ಗವ್ವೆಂದು ಭಯವೊಂದೇ ಆವರಿಸಿಕೊಂಡಂತಿದ್ದ ನನ್ನ ಮನಸ್ಸನ್ನು ಸ್ಥಿಮಿತಕ್ಕೆ ತಂದುಕೊಂಡು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದೆ. ಮನೆಯ ಬಾಗಿಲನ್ನು ಯಾರೋ ಬಲವಾಗಿ ಒದೆಯುತ್ತಿದ್ದರು. ಇಡೀ ಮನೆಯೇ ಗಡಗಡನೆ ಅಲ್ಲಾಡುವಂತೆ ಅನಿಸುತ್ತಿತ್ತು. ನಾರಾಯಣ ಉಪಾಧ್ಯಾಯರ ತಂದೆ ವೇದವ್ಯಾಸ ಉಪಾಧ್ಯಾಯರು ಮಹಾ ಸಾತ್ವಿಕ. ಅದಕ್ಕಿಂತಲೂ ಮುಖ್ಯವಾಗಿ ಗಂಪದಬೈಲಿನ ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರು. ಅಂತಹ ಉಪಾಧ್ಯಾಯರ ಮನೆಗೆ ಹೀಗೆ ದಾಳಿ ಮಾಡುವ ಧೈರ್ಯ ಯಾವ ದುಷ್ಕರ್ಮಿಗೆ ಅಥವಾ ರೌಡಿಗೆ ಇರಬಹುದು ಎಂದು ನಾನು ಆತಂಕದಿಂದ ನಾರಾಯಣ ಉಪಾಧ್ಯಾಯರತ್ತ ನೋಡಿದೆ. ಅವರಿಗೆ ಕೂಡಾ ಎಚ್ಚರಾಗಿತ್ತು. ಅವರು ಕಣ್ಣರಳಿಸಿ ಆತಂಕದಿಂದ ನನ್ನನ್ನೇ ನೋಡುತ್ತಿದ್ದರು – ನನಗೇನಾದರೂ ಎಚ್ಚರವಾದರೆ ಹೆದರಿಕೊಳ್ಳುತ್ತೇನೋ ಎಂದು ಕಾಯುತ್ತಿದ್ದರು. ನಾನು ಅವರನ್ನು ನೋಡಿದ ತಕ್ಷಣ ‘ಏನೂ ಆಗದು, ಸುಮ್ಮನಿರಿ’ ಎಂಬಂತೆ ಸನ್ನೆ ಮಾಡಿದರು. ‘ವಿಚಾರವನ್ನು ನಾಳೆ ಹೇಳುತ್ತೇನೆ’ ಎಂದು ಕೂಡಾ ಹಾವಭಾವದಲ್ಲೇ ಸೂಚಿಸಿದರು. + +ಸ್ವಲ್ಪ ಹೊತ್ತಿನಲ್ಲಿಯೇ ಬಾಗಿಲು ಒದೆಯುವ ಶಬ್ದ ನಿಂತುಹೋಗಿ ನೀರವತೆ ಆವರಿಸಿಕೊಂಡಿತು. ಅಷ್ಟು ದೊಡ್ಡ ಶಬ್ದವಾಗಿದ್ದರೂ ಮನೆಯ ಯಾರೂ ಎದ್ದಂತೆ ಕಾಣಲಿಲ್ಲ. ನಾನು ಆ ಶಬ್ದದ ಬಗ್ಗೆಯೇ ಯೋಚನೆ ಮಾಡುತ್ತಾ ಮಲಗಿಕೊಂಡೆ. ಬಹಳ ಹೊತ್ತು ನನ್ನ ಬಳಿ ನಿದ್ದೆ ಸುಳಿಯಲಿಲ್ಲ. ಮರುದಿನ ಎದ್ದು ಪ್ರಾತರ್ವಿಧಿಗಳನ್ನು ತೀರಿಸಿದ ಮೇಲೆ ನಾರಾಯಣ ಉಪಾಧ್ಯಾಯರ ಹೆಂಡತಿ ಸರೋಜಕ್ಕ ಮಾಡಿಕೊಟ್ಟ ಕಾಫಿ ಕುಡಿದು, ಉಪಾಧ್ಯಾಯರ ಸೂಚನೆಯಂತೆ ಅವರ ಜತೆಗೆ ಪಕ್ಕದ ಬೈಲು ಗದ್ದೆಯತ್ತ ಹೆಜ್ಜೆ ಹಾಕಿದೆ. ಹಿಂದಿನ ರಾತ್ರಿ ಬಾಗಿಲು ಒದ್ದವರ ವಿಷಯ ಹೇಳುವುದಕ್ಕೆ ಅವರು ಹಾಗೆ ಕರೆದುದು ಎಂದು ತಿಳಿದಿದ್ದ ನಾನು ವಿಷಯ ತಿಳಿಯುವ ಉತ್ಸಾಹದಿಂದಲೇ ಹೆಜ್ಜೆ ಹಾಕಿದೆ. ನಾರಾಯಣ ಉಪಾಧ್ಯಾಯರು ಹೇಳಿದ ಕತೆ ಕೇಳಿ ನನ್ನ ಭಯ ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಯಿತು. + +ನಾನು ಕನಿಷ್ಠ ಎರಡು ದಿನವಾದರೂ ನಾರಾಯಣ ಉಪಾಧ್ಯಾಯರ ಮನೆಯಲ್ಲಿ ನಿಂತು ಸುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿನ ಐತಿಹ್ಯಗಳ ಕುರಿತು ಮಾಹಿತಿ ಸಂಗ್ರಹಿಸಬೇಕೆಂದಿದ್ದೆ. ಆದರೆ ನನಗೆ ಹುಡುಕಾಡದೆಯೇ ಕಾಲಿಗೆ ತೊಡರಿಕೊಂಡದ್ದು ಒಂದು ಹೃದಯವಿದ್ರಾವಕವಾದ ಐತಿಹ್ಯ. + +ನಾರಾಯಣ ಉಪಾಧ್ಯಾಯರು ನನ್ನನ್ನು ಮೈಲುಗಟ್ಟಲೆ ಉದ್ದಗಲಕ್ಕೆ ಹಬ್ಬಿದ ವಿಸ್ತಾರವಾದ ಹಸಿರು ಗದ್ದೆಗಳ ಬಯಲಿನ ನಡುವೆ ಗದ್ದೆಗಳಿಗೆ ಕಟ್ಟುಹಾಕಿದಂತಿದ್ದ ಹುಣಿಗಳೆಂಬ ದಂಡೆಗಳ ಮೇಲೆ ನಡೆಯಿಸಿಕೊಂಡು, ಅಲ್ಲಲ್ಲಿ ರಕ್ತನಾಳಗಳಂತೆ ಹರಿಯುತ್ತಿದ್ದ ಸಣ್ಣ ದೊಡ್ಡ ತೋಡುಗಳನ್ನು ಹಾಯಿಸಿ ನಡುವೆ ಒಂದು ಕಡೆ ಬೋಗುಣಿ ಕವುಚಿ ಹಾಕಿದಂತಿದ್ದ ಬಂಡೆಗಲ್ಲಿನ ಹಾಸಿನ ಮೇಲೆ ಕುಳ್ಳಿರಿಸಿದರು. ನಂತರ ತಾವು ತಂದಿದ್ದ ಒಂದು ಹಳೆಯ ಕಾಗದವನ್ನು ನನಗೆ ಕೊಟ್ಟು, “ಇದನ್ನು ಓದಿ” ಎಂದರು. ಅದೊಂದು ಹಳೆಯ ರಿಜಿಸ್ತ್ರಿ ದಾಖಲೆಯ ಪ್ರತಿಯಾಗಿತ್ತು. 1905 ನೆಯ ಇಸವಿಯಲ್ಲಿ ರಾಮಪ್ಪ ಭಟ್ಟ ಎನ್ನುವವರು ತಮ್ಮ ಮಗ ಅನಂತ ಭಟ್ಟ ಎಂಬವನು ತೀರಿಕೊಂಡ ಕಾರಣ ತಮ್ಮ ಆಸ್ತಿಯನ್ನು ತಮ್ಮ ಮಗಳ ಮಗ ವಾಸುದೇವ ಉಪಾಧ್ಯಾಯ ಎಂಬವನಿಗೆ ಬರೆದುಕೊಟ್ಟ ಪತ್ರ. ಅದರಲ್ಲಿ ನನಗೆ ಅರ್ಥವಾಗದ ಆಸ್ತಿ ಗಡಿ ವಿವರಗಳು, ಕರಾರುಗಳು ಇತ್ಯಾದಿ ಇದ್ದವು. ಆದರೆ ವಿಶೇಷವೇನೂ ಕಾಣಲಿಲ್ಲ. + +ಕಾಗದವನ್ನು ನಾರಾಯಣ ಉಪಾಧ್ಯಾಯರಿಗೆ ಹಿಂದಿರುಗಿಸಿದೆ. ನಾನು ಓದುವುದನ್ನೇ ಗಮನಿಸುತ್ತಿದ್ದ ನಾರಾಯಣ ಉಪಾಧ್ಯಾಯರು, “ಅರ್ಥವಾಗುವುದಿಲ್ಲ ಅಲ್ವಾ?” ಎಂದು ಅದು ತಮಗೆ ಗೊತ್ತೇ ಇತ್ತು ಎಂಬ ಭಾವದಿಂದ ಕೇಳಿ ಕಾಗದವನ್ನು ಮಡಚಿ ತಮ್ಮ ಅಂಗಿಯ ಕಿಸೆಯೊಳಗೆ ಇಟ್ಟುಕೊಂಡರು. ನಂತರ ಒಂದು ಸಿಗರೇಟು ಹಚ್ಚಿ ಕಣ್ಣುಮುಚ್ಚಿ ಎರಡು ದಂ ಎಳೆದರು. ದೀರ್ಘವಾದ ಕತೆಯೊಂದನ್ನು ಹೇಳಲು ಹೀಗೆ ಸಿದ್ಧತೆ ಮಾಡಿಕೊಂಡ ನಾರಾಯಣ ಉಪಾಧ್ಯಾಯರು ಆ ರಿಜಿಸ್ತ್ರಿ ಕಾಗದದ ಕತೆಯನ್ನು ಹೇಳುವ ಮೂಲಕ ಹಿಂದಿನ ರಾತ್ರಿ ಬಾಗಿಲು ಒದೆಯುತ್ತಿದ್ದ ಶಬ್ದದ ಹಿಂದಿನ ರಹಸ್ಯವನ್ನು ಅನಾವರಣಗೊಳಿಸಿದರು. “ಈ ರಿಜಿಸ್ತ್ರಿ ಪತ್ರದಲ್ಲಿ ಹೇಳಿರುವ ವಾಸುದೇವ ಉಪಾಧ್ಯಾಯರು ನನ್ನ ಅಜ್ಜನ ತಂದೆ” ಎಂದು ನಾರಾಯಣ ಉಪಾಧ್ಯಾಯರು ಪ್ರಾರಂಭಿಸಿದರು. ಆಗ ನನಗೆ ಅವರು ತಂದು ನನ್ನ ಕೈಯಲ್ಲಿಟ್ಟ ಪತ್ರಕ್ಕೂ ನಿನ್ನೆ ರಾತ್ರಿ ಕೇಳಿಸಿದ ಶಬ್ದಕ್ಕೂ ಸ್ವಲ್ಪವಾದರೂ ಸಂಬಂಧ ಇರಬಹುದು ಎಂದು ಖಚಿತವಾಯಿತು. “ನಾವು ಮೂಲತಃ ನಡುಕಣಿಯವರು. ನಮ್ಮ ಹಿರಿಯರು ಗಂಪದಬೈಲಿಗೆ ಬಂದು ನೆಲೆಸಿದ್ದೇ ಒಂದು ಕತೆ” – ಹೀಗೆ ಕಥಾನಕದ ಪ್ರಾರಂಭವಾಯಿತು. ಇಲ್ಲಿ ಬರುವ ಹೆಸರುಗಳು, ಸಂಬಂಧಗಳು ನೆನಪಿಡಲು ಕಷ್ಟವಾದರೆ ನೆನಪಿಡಬೇಕಾದಿಲ್ಲ. `ಇದರಲ್ಲಿ ಕತೆಯೇ ಪ್ರಧಾನ ಹೊರತು ಹೆಸರುಗಳಲ್ಲ’ ಎಂಬ ಸೂಚನೆಯನ್ನೂ ಉಪಾಧ್ಯಾಯರು ನೀಡಿದ ಕಾರಣ ನಾನು ಕತೆಯನ್ನು ಸುಮ್ಮನೆ ಕೇಳುತ್ತಾ ಹೋದೆ. + + + +ಗಂಪದಬೈಲಿನಲ್ಲಿ ಬಹಳ ಗೌರವವಿದ್ದ ಕುಟುಂಬ ರಾಮಪ್ಪ ಭಟ್ಟರದು. ರಾಮಪ್ಪ ಭಟ್ಟರ ಮಗಳ ಮಗ ವಾಸುದೇವ ಉಪಾಧ್ಯಾಯರು ನಮ್ಮ ವಂಶದ ಹಿಂದಿನ ತಲೆ. ರಾಮಪ್ಪ ಭಟ್ಟರ ಮಗ ಅನಂತ ಭಟ್ಟನು ತೀರಿಕೊಂಡ ವಿಷಯವೇ ನಾನು ಹೇಳಬೇಕಾದ ಮುಖ್ಯ ಕತೆ. ಅಂತಹ ಕತೆಗಳನ್ನು ರಿಜಿಸ್ತ್ರಿ ದಾಖಲೆಗಳು ಹೇಳುವುದಿಲ್ಲ. ಅದನ್ನು ನಾವೇ ತಲೆಮಾರಿನಿಂದ ತಲೆಮಾರಿಗೆ ದಾಟಿಸಬೇಕು. + +ಈ ರಿಜಿಸ್ತ್ರಿ ಪತ್ರದ ಮೂಲಕ ತಮ್ಮೆಲ್ಲ ಆಸ್ತಿಯನ್ನು ಮತ್ತು ಮಹಾಲಿಂಗೇಶ್ವರ ದೇವಸ್ಥಾನದ ಪೂಜೆಯ ಹಕ್ಕನ್ನು ನಮ್ಮ ಕುಟುಂಬಕ್ಕೆ – ಅಂದರೆ ತಮ್ಮ ಮಗಳ ಮಗನಿಗೆ – ಬರೆದುಕೊಟ್ಟ ರಾಮಪ್ಪ ಭಟ್ಟರು ಈ ಊರಿನ ಮುಖ್ಯ ಪುರೋಹಿತರಾಗಿದ್ದರು. ರಾಜಪುರೋಹಿತ ಎಂಬ ಬಿರುದು ಅವರ ಕುಟುಂಬಕ್ಕೆ ಇತ್ತು. ಆ ಬಿರುದು ಅವರ ಅಪ್ಪ ಲಕ್ಷ್ಮೀನಾರಾಯಣ ಭಟ್ಟರಿಂದಾಗಿ ರಾಮಪ್ಪ ಭಟ್ಟರಿಗೂ ಬಂದಿತ್ತು. ಲಕ್ಷ್ಮೀನಾರಾಯಣ ಭಟ್ಟರು ತಿರುವಾಂಕೂರು ಸಂಸ್ಥಾನದಲ್ಲಿ ಪುರೋಹಿತರಾಗಿದ್ದರೆಂದೂ, ಆಗ ಅವರಿಗೆ ಅಲ್ಲಿನ ಅರಸ ‘ರಾಜಪುರೋಹಿತ’ ಎಂಬ ಬಿರುದು ನೀಡಿದ್ದನೆಂದೂ ಹೇಳುತ್ತಿದ್ದರು. + +ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರು ಕೇರಳದಿಂದ ಹಿಂದಿರುಗಿ ಬಂದು ಗಂಪದಬೈಲಿನಲ್ಲಿ ನೆಲೆನಿಂತ ಮೇಲೆ ಅವರನ್ನು ಇಲ್ಲಿನ ಬ್ರಾಹ್ಮಣ ಸಮುದಾಯ ತಮ್ಮ ಪುರೋಹಿತರೆಂದು ಸ್ವೀಕರಿಸಿತು. ಅದುವರೆಗೆ ಇಲ್ಲಿ ಪುರೋಹಿತರು ಯಾರೂ ಇರಲಿಲ್ಲ. ಇಲ್ಲಿನವರ ಶುಭಾಶುಭ ವೈದಿಕ ಕಾರ್ಯಗಳಿಗೆ ನಡುಕಣಿಯ ಒಬ್ಬರು ಪುರೋಹಿತರು ಬಹಳ ಕಷ್ಟಪಟ್ಟುಕೊಂಡು ಬರಬೇಕಾಗಿತ್ತಂತೆ. ಇಂತಹ ಸಂದರ್ಭದಲ್ಲಿ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರು ಕೇರಳದಿಂದ ಹಿಂದಿರುಗಿ ಬಂದದ್ದು. ಅವರ ವಿದ್ವತ್ತಿಗೆ ಗಂಪದಬೈಲಿನ ಜನ ಶರಣಾಗಿಬಿಟ್ಟರು. ಕೆಲವೇ ದಿನಗಳಲ್ಲಿ ಯಾವ ಆತಂಕವೂ ಇಲ್ಲದೆ ಇಲ್ಲಿನ ಜನತೆ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರನ್ನು ತಮ್ಮ ಕುಲಪುರೋಹಿತರನ್ನಾಗಿಸಿಕೊಂಡಿತು. ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರಿಗೆ ಕೆಲವೇ ಸಮಯದಲ್ಲಿ ಗಂಪದಬೈಲು ಮಹಾಲಿಂಗೇಶ್ವರ ದೇವಸ್ಥಾನದ ಅರ್ಚಕರ ಕೆಲಸವೂ ಸಿಕ್ಕಿತು. + +ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರು ಯಾವ ಊರಿನವರಾಗಿದ್ದರು ಎಂಬುದು ಬಹಳ ಮುಖ್ಯ ವಿಷಯ. ಅವರ ಅಜ್ಜ ಸುಬ್ರಾಯ ಭಟ್ಟರೆಂಬವರು ಕುಟುಂಬಸಮೇತ ಬಂಟ್ವಾಳದ ಸಮೀಪದ ಒಂದು ಹಳ್ಳಿ ನೂತಬೆಟ್ಟಿನಿಂದ ಗಂಪದಬೈಲಿಗೆ ವಲಸೆ ಬಂದುದಾಗಿತ್ತು. ಅವರು ಗಂಪದಬೈಲಿನಲ್ಲಿ ಹಲವಾರು ಆಸ್ತಿಗಳನ್ನು ಖರೀದಿಸಿ ಅವುಗಳನ್ನು ಚಾಲಗೇಣಿ ಆಧಾರದಲ್ಲಿ ನಾಲ್ಕೈದು ಒಕ್ಕಲುಗಳಿಗೆ ಕೃಷಿ ಮಾಡಲೆಂದು ಹಂಚಿಕೊಟ್ಟಿದ್ದರು. ಬಹಳ ದೊಡ್ಡ ಮೂರುಪ್ಪರಿಗೆಯ ಎರಡು ಸೀಳಿನ ಮನೆಯೊಂದನ್ನು ಕಟ್ಟಿಸಿ ಅದರಲ್ಲಿ ಹೆಚ್ಚುಸಮಯ ವಾಸಮಾಡದೆ ಯಾವುದೋ ನಿಗೂಢ ಕಾರಣದಿಂದಾಗಿ, ಗೇಣಿ ವಸೂಲಿಗೆ ವ್ಯವಸ್ಥೆ ಮಾಡಿ ತಾವು ಸಂಸಾರ ಸಮೇತ ಕೇರಳಕ್ಕೆ ವಲಸೆ ಹೋದರು. ಸುಬ್ರಾಯ ಭಟ್ಟರ ಮರಣಾನಂತರ ಅವರ ಮಗ ರಾಮಚಂದ್ರ ಭಟ್ಟರು ಹಲವಾರು ವರ್ಷಗಳ ಕಾಲ ಕೇರಳದಲ್ಲಿಯೇ ರಾಜಪುರೋಹಿತರಾಗಿ ಕೆಲಸ ಮಾಡಿ ಅಲ್ಲೇ ತೀರಿಕೊಂಡರು. ಸಾಯುವ ಮುನ್ನ ತಮ್ಮ ತಂದೆಯ ನಿಗೂಢ ರಹಸ್ಯವನ್ನು ತಮ್ಮ ಪುತ್ರ ಲಕ್ಷ್ಮೀನಾರಾಯಣ ಭಟ್ಟರಿಗೆ ಹೇಳಿದರು. ಲಕ್ಷ್ಮೀನಾರಾಯಣ ಭಟ್ಟರು ಆ ರಹಸ್ಯವನ್ನು ಹಾಗೆಯೇ ಹೊತ್ತುಕೊಂಡು ಗಂಪದಬೈಲಿಗೆ ಹಿಂದಿರುಗಿ ಬಂದರು. + +ಸುಬ್ರಾಯ ಭಟ್ಟರು ನೂತಬೆಟ್ಟು ಎಂಬಲ್ಲಿಯವರು ಎಂದೆನಲ್ಲ. ಅವರು ಮೂವರು ಅಣ್ಣತಮ್ಮಂದಿರು. ಸುಬ್ರಾಯ ಭಟ್ಟರು ದೊಡ್ಡವರು; ಎರಡನೆಯವರು ವಿಠಲ ಭಟ್ಟರು ಅಣ್ಣನ ಜತೆಯಲ್ಲಿಯೇ ಊರು ಬಿಟ್ಟು ಬಂದು ಸಮೀಪದ ಮಾದಯ ಕುಮೆರಿಯಲ್ಲಿ ಸ್ವಲ್ಪ ಆಸ್ತಿ ತೆಗೆದುಕೊಂಡು ವಾಸವಾಗಿದ್ದರು. ಅವರಿಬ್ಬರ ಕೊನೆಯ ತಮ್ಮ ರಘುಪತಿ ಭಟ್ಟರು ನೂತಬೆಟ್ಟಿನಲ್ಲಿಯೇ ಉಳಿದುಕೊಂಡರೆಂದು ಹೇಳುತ್ತಾರೆ. ಗಂಪದಬೈಲಿಗೆ ಬಂದ ಸುಬ್ರಾಯ ಭಟ್ಟರು ಸ್ವಲ್ಪವೇ ಕಾಲದಲ್ಲಿ ಊರುಬಿಟ್ಟು ಕೇರಳಕ್ಕೆ ಹೋಗಿ, ಅವರ ಮೊಮ್ಮಗ ತಿರುಗಿ ಊರಿಗೆ ಬಂದರೆಂದು ಹೇಳಿದೆ. ಮಾದಯಕುಮೆರಿಯ ವಿಠಲ ಭಟ್ಟರ ಕವಲಿನವರು ಎಲ್ಲಾ ದುಶ್ಚಟಗಳನ್ನು ಅಂಟಿಸಿಕೊಂಡು ಸಾಲಗಾರರಾಗಿ ಎಲ್ಲಿ ಹಣ ಸಿಗುತ್ತದೆ ಎಂದು ಬಾಯಗಲಿಸಿಕೊಂಡು ಹುಡುಕುತ್ತಿದ್ದರು. ಆಗ ಅವರ ಗಮನ ತಮ್ಮ ದಾಯಾದಿಗಳತ್ತ ಅಂದರೆ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ಮಗ ರಾಮಪ್ಪ ಭಟ್ಟರತ್ತ ಹೋಯಿತು. + +ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರಿಗೆ ಒಳ್ಳೆಯ ಹೆಸರೂ ಆದಾಯವೂ ಇತ್ತು. ಅವರ ಮಗ ರಾಮಪ್ಪ ಭಟ್ಟರು ತಂದೆಯ ಹೆಸರು, ಆಸ್ತಿ, ಸಂಪತ್ತು, ಉದ್ಯೋಗ ಎಲ್ಲದಕ್ಕೂ ಉತ್ತರಾಧಿಕಾರಿಯಾಗಿ ಸುಖವಾಗಿಯೇ ಬದುಕುತ್ತಿದ್ದರು. ಅವರಿಗೆ ಇಬ್ಬರು ಮಕ್ಕಳು – ದೊಡ್ಡವರು ರುಕ್ಮಿಣಿ ಅಂತ. ನಮ್ಮ ಅಜ್ಜನ ಅಜ್ಜ ಅನಂತರಾಮ ಉಪಾಧ್ಯಾಯರನ್ನು ಮದುವೆಯಾಗಿ ನಡುಕಣಿಯಲ್ಲಿದ್ದರು. ಎರಡನೆಯವನೇ ನಮ್ಮ ಕತೆಯ ಅನಂತ ಭಟ್ಟ; ಇಪ್ಪತ್ತೆರಡನೆಯ ವಯಸ್ಸಿಗೆ ಹೆಂಡತಿಯನ್ನು ವಿಧವೆಯಾಗಿಸಿ ಮಕ್ಕಳಿಲ್ಲದೆ ಸತ್ತುಹೋದ. ಅವನು ಸತ್ತುಹೋದಾಗ ತನ್ನ ವಂಶ ನಿರ್ವಂಶ ಆದಕಾರಣ ರಾಮಪ್ಪ ಭಟ್ಟರ ಮಗಳ ಮಗನಿಗೆ ತನ್ನೆಲ್ಲಾ ಆಸ್ತಿ ಹಾಗೂ ಅಧಿಕಾರಗಳನ್ನು ಬರೆದುಕೊಟ್ಟುಬಿಟ್ಟರು. + +ಅನಂತ ಭಟ್ಟನು ಸತ್ತುದೆಂದರೆ ಸತ್ತುದಲ್ಲ; ಆತ್ಮಹತ್ಯೆ ಮಾಡಿಕೊಂಡದ್ದು. ಅದಕ್ಕೆ ಕಾರಣ ಅನಂತ ಭಟ್ಟನಿಗೆ ಚಿಕ್ಕಪ್ಪನಾಗಬೇಕಾದ ಮಾದಯ ಕುಮೆರಿಯ ದಾಯಾದಿ – ಅವನ ಹೆಸರು ಶ್ರೀಪತಿ ಭಟ್ಟ ಎಂದಾಗಿತ್ತು. ಶ್ರೀಪತಿ ಭಟ್ಟನೆಂದರೆ ನೂತಬೆಟ್ಟಿನಿಂದ ಅಣ್ಣನ ಜತೆಗೆ ಊರುಬಿಟ್ಟು ಮಾದಯ ಕುಮೆರಿಯಲ್ಲಿ ನೆಲೆನಿಂತ ಸುಬ್ರಾಯ ಭಟ್ಟರ ತಮ್ಮ ವಿಠಲ ಭಟ್ಟರ ಮೊಮ್ಮಗ. ವಿಠಲ ಭಟ್ಟರು ಮಾದಯ ಕುಮೆರಿಯಲ್ಲಿ ಸಣ್ಣದೊಂದು ಆಸ್ತಿ ಖರೀದಿಸಿ ಅಲ್ಲಿ ನೆಲೆನಿಂತರು ಎಂದೆನಲ್ಲ – ಅವರು ಯಾವ ಕೆಲಸವನ್ನೂ ಮಾಡದೆ ದಿನ ಕಳೆಯುತ್ತಿದ್ದರು ಎಂದು ಹೇಳುತ್ತಾರೆ. ವಿಠಲ ಭಟ್ಟರು ಮದರಾಸಿಗೆ ಹೋಗುತ್ತ ಬರುತ್ತಾ ಇದ್ದರು. ಅವರು ಅಲ್ಲಿಗೆ ಹೋಗುತ್ತಿದ್ದುದು ವೇಶ್ಯಾ ಸಹವಾಸ ಮಾಡಲಿಕ್ಕೆ ಹಾಗೂ ಜುಗಾರಿ ಆಡಲಿಕ್ಕಂತೆ. ಅಲ್ಲಿಗೆ ಹೋಗುವಾಗ ಸಾಕಷ್ಟು ಹಣ ತೆಗೆದುಕೊಂಡು ಹೋಗಿ, ಅಲ್ಲಿ ಒಂದು ಹೋಟೆಲಿನಲ್ಲಿ ನಿಂತು ಮಜ ಮಾಡಿ ದುಡ್ಡು ಖರ್ಚಾದ ಮೇಲೆ ಊರಿಗೆ ಹಿಂದಿರುಗುತ್ತಿದ್ದರಂತೆ. + +ವಿಠಲ ಭಟ್ಟರ ಮಗ ಮತ್ತು ಮೊಮ್ಮಗನ ಹೆಸರು ನನಗೆ ಗೊತ್ತಿಲ್ಲ. ಅವರು ಅಡಿಗೆಯ ಕೆಲಸಕ್ಕೆ ಹೋಗುತ್ತಿದ್ದರಂತೆ. ಅಲ್ಪ ಸ್ವಲ್ಪ ವೈದಿಕ ಕೆಲಸವೂ ಗೊತ್ತಿದ್ದಿರಬಹುದು. ಅಂತೂ ಸ್ವಲ್ಪ ಮಟ್ಟಿಗೆ ಪ್ರಾಮಾಣಿಕ ಗೃಹಸ್ಥರಾಗಿ ಅವರು ಬದುಕಿರಬಹುದು ಅಂತ ಅನಿಸುತ್ತದೆ. ಹೆಸರು ಉಳಿಯಬೇಕಾದರೆ ಒಂದೋ ತುಂಬಾ ಒಳ್ಳೆಯ ಕೆಲಸ ಮಾಡಿರಬೇಕು, ಇಲ್ಲವೇ ತುಂಬಾ ಕೆಟ್ಟ ರೀತಿಯಲ್ಲಿ ಬದುಕಿರಬೇಕು. ಎಲ್ಲರ ಹಾಗೆ ಬದುಕಿದರೆ ಮುಂದಿನವರಿಗೆ ಉದಾಹರಣೆಯಾಗಿ ಉಳಿಯುವುದಿಲ್ಲ ಎನ್ನುವುದಕ್ಕೆ ಈ ವ್ಯಕ್ತಿಯೇ ಒಂದು ಉದಾಹರಣೆಯಾಗಬಹುದು! + +ವಿಠಲ ಭಟ್ಟರ ಮರಿಮಗನೇ ಈ ಶ್ರೀಪತಿ ಭಟ್ಟನೆಂಬವ. ಇವನಿಗೆ ಮುತ್ತಜ್ಜನ ದುರ್ಬುದ್ಧಿ ಎಲ್ಲ ಇತ್ತಂತೆ. ಹಾಗಾಗಿ ಅವನಿಗೆ ಇನ್ನೂ ಹೆಚ್ಚು ದುಡ್ಡು ಬೇಕು ಅಂತ ಅನಿಸುತ್ತಿದ್ದಿರಬೇಕು. ಅವನ ಕಣ್ಣು ಸುಖವಾಗಿದ್ದ ತನ್ನ ದಾಯಾದಿಗಳಾದ ರಾಮಪ್ಪ ಭಟ್ಟರ ಮೇಲೆ ಬಿತ್ತು. ಅದಕ್ಕಾಗಿ ಅವನು ಸುಳ್ಳು ಸಾಕ್ಷಿಗಳನ್ನು ಸೃಷ್ಟಿ ಮಾಡಿ ತಾನು ರಾಮಪ್ಪ ಭಟ್ಟರ ಖಾಸ ತಮ್ಮ, ತನಗೆ ಕೂಡಾ ಲಕ್ಷ್ಮೀನಾರಾಯಣ ಭಟ್ಟರ ಆಸ್ತಿಯಲ್ಲಿ ಮತ್ತು ದೇವಸ್ಥಾನದ ಪೂಜೆಯಲ್ಲಿ ಪಾಲು ಬೇಕು ಎಂದು ಮಂಗಳೂರು ಕೋರ್ಟಿನಲ್ಲಿ ಕೇಸು ಹಾಕಿದನಂತೆ.ಕೇಸು ಹಲವಾರು ವರ್ಷಗಳ ಕಾಲ ನಡೆಯಿತು. ಎರಡೂ ಕಡೆಯವರು ಮಂಗಳೂರಿನ ಕೋರ್ಟಿಗೆ ಅಲೆದಾಡುತ್ತಾ ಇದ್ದರು. ಪ್ರಾಯವಾದ ಕಾರಣ ರಾಮಪ್ಪ ಭಟ್ಟರಿಗೆ ಕೋರ್ಟು ಕಛೇರಿ ಅಂತ ಅಲೆದಾಡಲು ಸಾಧ್ಯವಿರಲಿಲ್ಲ. ಅವರು ಮಗ ಅನಂತ ಭಟ್ಟನನ್ನು ಇದಕ್ಕೆಲ್ಲ ಕಳಿಸುತ್ತಿದ್ದರು. ಅನಂತ ಭಟ್ಟ ಮುಗ್ಧ ಮತ್ತು ಸಣ್ಣ ಪ್ರಾಯದವ. ಶ್ರೀಪತಿ ಭಟ್ಟನಾದರೋ ಹಲವು ಊರುಗಳ ನೀರು ಕುಡಿದ ಖದೀಮ. + +ಅನಂತ ಭಟ್ಟ ಕೋರ್ಟಿನ ವ್ಯವಹಾರಗಳಿಗೆ ಓಡಾಡುವಾಗ ಒಂದು ಎತ್ತಿನ ಗಾಡಿಯನ್ನು ಕಟ್ಟಿಸಿಕೊಂಡು ಅದರಲ್ಲಿ ಹೋಗುತ್ತಿದ್ದದ್ದು ಕ್ರಮ. ಅವನ ಜತೆಗೆ ಅವರ ಕಡೆಯ ಸಾಕ್ಷೀದಾರನಾದ ಸೀನಪ್ಪಟ್ರು (ಶೀನಪ್ಪ ಅಥವಾ ಶ್ರೀನಿವಾಸ ಭಟ್ಟರು) ಇರುತ್ತಿದ್ದರು. ಮಧ್ಯಾಹ್ನದ ಹೊತ್ತು ಊಟಕ್ಕೆ ಬದಲಾಗಿ ಅವರಿಬ್ಬರೂ ಅನಂತ ಭಟ್ಟ ಮನೆಯಿಂದ ತರುತ್ತಿದ್ದ ಅವಲಕ್ಕಿ ಮೊಸರು ತಿನ್ನುತ್ತಿದ್ದರು. ಚಿಕ್ಕಪ್ಪ ಶ್ರೀಪತಿ ಭಟ್ಟ ಕೋರ್ಟಿಗೆ ಹೋಗುವಾಗಿನ ವೈಭವವೇ ಬೇರೆ. ಅವನು ಅಲ್ಲಿನ ಹೋಟೆಲಿನಲ್ಲಿ ತನ್ನ ಜತೆಗೆ ಸಾಕ್ಷೀದಾರರಾಗಿ ಬರುತ್ತಿದ್ದವರಿಗೆ ಕಾಫಿ ಕುಡಿಸುತ್ತಿದ್ದನಂತೆ. ಹಾಗೆ ಕಾಫಿ ಕುಡಿಯಲಿಕ್ಕಾಗಿಯೇ ಸಾಕ್ಷಿ ಹೇಳಲು ನಾನು ಬರುತ್ತೇನೆ ತಾನು ಬರುತ್ತೇನೆ ಎಂದು ಹಲವರು ದುಂಬಾಲು ಬೀಳುತ್ತಿದ್ದರಂತೆ. ಸಾಕ್ಷೀದಾರರು ಕೋರ್ಟಿನಲ್ಲಿ “ಶ್ರೀಪತಿ ಭಟ್ಟರು ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ಸ್ವಂತ ಮಗ, ರಾಮಪ್ಪ ಭಟ್ಟರ ಖಾಸಾ ತಮ್ಮ ಎನ್ನುವುದನ್ನು ನಾನು ಇಂತಿಂಥ ಕಾರಣದಿಂದ ಬಲ್ಲೆ; ಅದನ್ನು ಪ್ರಮಾಣೀಕರಿಸಿ ಹೇಳುತ್ತೇನೆ” ಎಂದಷ್ಟೇ ಹೇಳಬೇಕಾಗಿದ್ದುದು. ರಾಮಪ್ಪ ಭಟ್ಟರ ಕಡೆಯಿಂದ ಅದನ್ನು ಅಲ್ಲಗಳೆಯಬೇಕಾದವರು ಸೀನಪ್ಪಟ್ರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಈ ಜಿಗುಟನ್ನು ಬಿಡಿಸಲಾರದೆ ಕೋರ್ಟಿನಲ್ಲಿ ಲಿಖಿತ ಸಾಕ್ಷಿ ಕೇಳಿದರು ಅಂತ ಕಾಣುತ್ತದೆ. ಆಗ ಜನನ ಪ್ರಮಾಣಪತ್ರಗಳು ಎಲ್ಲಿ ಸಿಗುತ್ತವೆ? ಶ್ರೀಪತಿ ಭಟ್ಟ ಒಂದು ಜಾತಕವನ್ನು ಲಿಖಿತ ಸಾಕಿಯಾಗಿ ಕೋರ್ಟಿಗೆ ಹಾಜರುಪಡಿಸಿದ. ಅದರಲ್ಲಿ ‘ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ದ್ವಿತೀಯ ಪುತ್ರ ಶ್ರೀಪತಿಯ ಶುಭಜನನ’ ಎಂದು ಬರೆದಿತ್ತಂತೆ. ಈ ವಿಷಯವನ್ನು ಅನಂತ ಭಟ್ಟ ತಂದೆಗೆ ವರದಿ ಮಾಡುವಾಗ ಅವರಿಗೆ ಶ್ರೀಪತಿಯ ಕುತಂತ್ರವನ್ನು ಹೇಗೆ ಎದುರಿಸುವುದು ಎಂದು ತಿಳಿಯದೆ ಎರಡು ದಿನ ಅನ್ನ ನೀರು ಬಿಟ್ಟು ಯೋಚಿಸುತ್ತ ಕುಳಿತಿದ್ದರಂತೆ. ಕೊನೆಗೆ ಇದ್ದಕ್ಕಿದ್ದಂತೆ ಎದ್ದು, “ಇದಕ್ಕೆ ಮಹಾಲಿಂಗೇಶ್ವರನೇ ಪರಿಹಾರ ತೋರಿಸಿದ” ಎಂದು ಹಳೆಯ ಟ್ರಂಕಿನಲ್ಲಿ ತನ್ನ ಜಾತಕ ಹುಡುಕಿದರಂತೆ. ಅದು ಸಿಕ್ಕಿತು. ಆ ಜಾತಕ ಇದ್ದುದು ತುಳು ಅಥವಾ ಮಲಯಾಳೀ ಲಿಪಿಯಲ್ಲಿ, ಕನ್ನಡದಲ್ಲಿ ಅಲ್ಲ. ಅಪ್ಪ ಲಕ್ಷ್ಮೀನಾರಾಯಣ ಭಟ್ಟರಿಗೆ ಕನ್ನಡ ಲಿಪಿಯಲ್ಲಿ ಬರೆಯಲು ಬರುತ್ತಿರಲಿಲ್ಲ ಎನ್ನುವ ಸತ್ಯ ಶ್ರೀಪತಿಗೆ ಗೊತ್ತಿಲ್ಲ ಎನ್ನುವುದು ರಾಮಪ್ಪ ಭಟ್ಟರಿಗೆ ಹೊಳೆಯಿತು. ಅವರು ಮಗನ ಕೈಯಲ್ಲಿ ತನ್ನ ಹಳೆಯ ಜಾತಕದ ಪ್ರತಿಯನ್ನು ಕೊಟ್ಟು, “ಇದನ್ನು ನಮ್ಮ ವಕೀಲರ ಕೈಯಲ್ಲಿ ಗುಟ್ಟಿನಲ್ಲಿ ಕೊಡು. ಸೀನಪ್ಪುವಿಗೆ ಕೂಡಾ ಹೇಳಬೇಡ. ಕೋರ್ಟಿನಲ್ಲಿ ನಮ್ಮ ವಕೀಲರು ಈ ಜಾತಕವನ್ನು ಹಾಜರುಪಡಿಸಿದರೆ ಎದುರು ಕಡೆಯವರ ಮೋಸವೆಲ್ಲ ಬಯಲಾಗಿಹೋಗುತ್ತದೆ. ಇನ್ನು ಈ ಸುಳ್ಳು ಕೇಸು ಹೆಚ್ಚು ಎಳೆಯಲಿಕ್ಕಿಲ್ಲ” ಎಂದು ಧೈರ್ಯ ಹೇಳಿದರು.ಇತ್ತ ಶ್ರೀಪತಿ ಭಟ್ಟನೂ ಅಂತಿಮ ಪ್ರಹಾರಕ್ಕೆ ಸಿದ್ಧತೆ ಮಾಡಿಕೊಂಡಿದ್ದುದು ಸತ್ಯವಂತರಾದ ರಾಮಪ್ಪ ಭಟ್ಟರಿಗೆ ಗೊತ್ತೇ ಇರಲಿಲ್ಲ. ಈ ಶ್ರೀಪತಿ ಭಟ್ಟನಿಗೆ ಗಂಪದಬೈಲಿನಲ್ಲಿ ತರಂಬೆ ಎನ್ನುವ ಸೂಳೆಯಿದ್ದಳು. ಅವಳು ಭಾರೀ ಚೆಂದವಂತೆ. ಶ್ರೀಪತಿ ಭಟ್ಟನ ರಸಿಕತೆಗೋ, ಪ್ರೀತಿಗೋ ಒಲಿದು ಅವನನ್ನೇ ನೆಚ್ಚಿಕೊಂಡಿದ್ದವಳು ತರಂಬೆ. ಈ ಶ್ರೀಪತಿ ಭಟ್ಟ ಒಮ್ಮೆ ಸೀನಪ್ಪಟ್ರನ್ನು ಅವಳ ಬಳಿಗೆ ಕಳುಹಿಸಿ ಸ್ವರ್ಗ ತೋರಿಸಿದ. ಆಗ ಸೀನಪ್ಪಟ್ರಿಗೆ ಎಷ್ಟು ವರ್ಷ ವಯಸ್ಸು ಎನ್ನುವುದು ನನಗೆ ತಿಳಿಯದು. ಆದರೆ ಮನುಷ್ಯ ಆ ಒಂದು ಆಸೆಗೆ ಏನು ಬೇಕಾದರೂ ಮಾಡಲು ಸಿದ್ಧನಾಗುತ್ತಾನಲ್ಲ! ಇದಾದ ನಂತರ ಸೀನಪ್ಪಟ್ರು ಅಂತಿಮ ಹಿಯರಿಂಗಿನಲ್ಲಿ ತನ್ನ ಕಡೆಗೆ ಸಾಕ್ಷಿ ಹೇಳುವಂತೆ ತಿರುಗಿಸಿಕೊಂಡ. ಇದಲ್ಲದೆ ಅವನಿಗೆ ರಾಮಪ್ಪ ಭಟ್ಟರ ಮಲಯಾಳಿ ಲಿಪಿಯ ಜಾತಕದ ವಿಷಯ ಹೇಗೋ ಗೊತ್ತಾಗಿ ಹೋಯಿತು. ಅನಂತನೇ ಸೀನಪ್ಪಟ್ರ ಬಳಿ ಆ ರಹಸ್ಯವನ್ನು ಹೇಳಿ, ಅವರು ಶ್ರೀಪತಿಗೆ ಅದನ್ನು ಹೇಳಿರಬಹುದು. ಶ್ರೀಪತಿ ಭಟ್ಟ ರಾಮಪ್ಪ ಭಟ್ಟರ ಕಡೆಯ ವಕೀಲರಿಗೆ ಲಂಚ ನೀಡಿ ಆ ಜಾತಕ ಕೋರ್ಟಿಗೆ ಬಾರದ ಹಾಗೆ ನೋಡಿಕೊಂಡ. + +ಕೋರ್ಟಿನಲ್ಲಿ ಅನಂತ ಭಟ್ಟ ತಮ್ಮ ವಕೀಲರ ಬಳಿ, “ಜಾತಕ” “ಜಾತಕ” ಎಂದು ಅದನ್ನು ಹಾಜರು ಪಡಿಸಲು ನೆನಪಿಸುತ್ತಲೇ ಇದ್ದನಂತೆ. ವಕೀಲರು, “ಇದೇನೂ ಅಂಥ ಮುಖ್ಯ ಸಾಕ್ಷಿ ಅಲ್ಲ, ನೀವೇನೂ ಹೆದರಬೇಡಿ. ನಾನು ಕೇಸು ಗೆಲ್ಲಿಸಿಕೊಟ್ಟರೆ ಆಯಿತಲ್ಲ” ಎಂದು ಬೊಗಳೆ ಬಿಡುತ್ತಲೇ ಇದ್ದರು. ಅಷ್ಟರಲ್ಲಿ ಸೀನಪ್ಪಟ್ರು ತಾನು ಇದುವರೆಗೆ ಹೇಳಿದ್ದೆಲ್ಲ ಸುಳ್ಳು, ಶ್ರೀಪತಿ ಭಟ್ಟ ರಾಜಪುರೋಹಿತ ಲಕ್ಷ್ಮೀನಾರಾಯಣ ಭಟ್ಟರ ಮಗನೇ ಎನ್ನುವುದು ನನಗೆ ಈಗ ಸ್ಪಷ್ಟವಾಗಿದೆ ಎಂದು ಹೇಳಿಕೆ ನೀಡಿದರು. ಜಡ್ಜಿ ಹಾಗೆಯೇ ತೀರ್ಪು ಕೊಟ್ಟು ಎದ್ದುಹೋದ. ಅನಂತ ಭಟ್ಟನಿಗೆ ಅಲ್ಲೇ ನೆಲ ಕುಸಿದ ಹಾಗಾಯಿತು. ಎಲ್ಲರೂ ಅವನನ್ನು ಬಿಟ್ಟು ಅವರಷ್ಟಕ್ಕೆ ಹೊರಟು ಹೋದರು. ಸೀನಪ್ಪಟ್ರು ಕೂಡಾ ಅವನ ಕಡೆ ನೋಡದೆ ಶ್ರೀಪತಿ ಭಟ್ಟನ ಜತೆಗೆ ಹೋಟೆಲಿನಲ್ಲಿ ಕಾಫಿ ಕುಡಿಯಲು ಸಂಭ್ರಮದಿಂದ ಹೊರಟರು. + +ಅನಂತ ಭಟ್ಟ ತನ್ನ ಗಾಡಿಯನ್ನೇರಿ ಕುಳಿತ. ಗಾಡಿ ಹೊಡೆಯುವವನ ಬಳಿ ಏನೂ ಹೇಳದೆ, ಅವನು ಏನು ಮಾತಾಡಿದರೂ ಉತ್ತರಿಸದೆ ಮೌನವಾಗಿ ಕುಳಿತಿದ್ದ. ಗಾಡಿ ಗಂಪದಬೈಲಿನ ಕಡೆಗೆ ಸಾಗತೊಡಗಿತು. ದಾರಿಯಲ್ಲಿ ಎಲ್ಲೋ ತನ್ನ ಕೈಯಲ್ಲಿದ್ದ ಉಂಗುರದಲ್ಲಿದ್ದ ವಜ್ರದ ಹರಳನ್ನು ನುಂಗಿ ಪ್ರಾಣ ಕಳೆದುಕೊಂಡದ್ದು ಗಾಡಿಯವನಿಗೆ ಗೊತ್ತೇ ಆಗಲಿಲ್ಲ. ಗಾಡಿಯನ್ನು ಮನೆಯಂಗಳಕ್ಕೆ ತಂದು ನಿಲ್ಲಿಸಿದಾಗಲೇ ಅನಂತ ಭಟ್ಟ ಆತ್ಮಹತ್ಯೆ ಮಾಡಿಕೊಂಡ ವಿಚಾರ ಗಾಡಿಯವನಿಗೂ ತಿಳಿದದ್ದು. ತಮ್ಮ ಮಗ ಒಳ್ಳೆಯ ಸುದ್ದಿ ತರುತ್ತಾನೆಂಬ ಆತುರದಿಂದ ಹೊರಗೆ ಬಂದ ರಾಮಪ್ಪ ಭಟ್ಟರು ಗಾಡಿಯತ್ತ ಧಾವಿಸಿ ನೋಡಿದಾಗ ಅವರಿಗೆ ತಮ್ಮ ಏಕೈಕ ಪುತ್ರನ ಹೆಣದ ದರ್ಶನವಾಯಿತು. ಅವರು ‘ಹಾ!’ ಎಂದು ಎದೆ ಹಿಡಿದುಕೊಂಡು ಕುಸಿದುಬಿದ್ದರು. + +ರಾಮಪ್ಪ ಭಟ್ಟರು ಆಮೇಲೆ ಪರಶುರಾಮ ಅವತಾರವನ್ನೇ ತಾಳಿ ತಾವೇ ಮಂಗಳೂರಿಗೆ ಹೋಗಿ, ಅಪೀಲು ಹಾಕಿ ಕೇಸು ಗೆದ್ದರಂತೆ. ತನ್ನ ಆಸ್ತಿಯ ಮೇಲೆ ಶ್ರೀಪತಿ ಭಟ್ಟನ ಸಂತಾನದ ಕಣ್ಣು ಕೂಡ ಬೀಳದಂತೆ ಮಾಡುತ್ತೇನೆ ಎಂದು ಘೋಷಿಸಿ ತಮ್ಮ ಆಸ್ತಿ ಮತ್ತು ದೇವಸ್ಥಾನದ ಪೂಜೆಯ ಹಕ್ಕನ್ನು ಮಗಳ ವಂಶಕ್ಕೆ ಬರೆದುಕೊಟ್ಟರು. ಅದೇ ರಿಜಿಸ್ತ್ರಿ ದಾಖಲೆಯ ಪ್ರತಿ ಇದು. + +ಈಗ ನಿನ್ನೆ ನೀವು ಕೇಳಿದ ಶಬ್ದದ ವಿಷಯಕ್ಕೆ ಬರುತ್ತೇನೆ. ಆ ರೀತಿ ನೊಂದುಕೊಂಡು ಜೀವಕಳೆದುಕೊಂಡ ಅನಂತ ಭಟ್ಟನ ಆತ್ಮಕ್ಕೆ ಇನ್ನೂ ಮುಕ್ತಿ ಸಿಕ್ಕಿಲ್ಲ ಅಂತ ಹೇಳುತ್ತಾರೆ. ಆಗಾಗ ನಡುರಾತ್ರಿ ಬಂದು ನಮ್ಮ ಮನೆಯ ಬಾಗಿಲಿಗೆ ಒದ್ದು ಹೋಗುವುದು ಅನಂತ ಭಟ್ಟನ ಪ್ರೇತವೇ ಎಂದು ಜ್ಯೋತಿಷಿಗಳಲ್ಲಿ ಕೇಳಿದಾಗ ಹೇಳಿದ್ದಾರೆ. ಶ್ರೀಪತಿ ಭಟ್ಟನ ಕುಟುಂಬದ ಮನೆಯಲ್ಲಿ ಅನಂತ ಭಟ್ಟನ ಪ್ರೇತದ ಉಪದ್ರವ ನಿತ್ಯವೂ ಇದೆಯಂತೆ. “ನನಗೆ ಏನಾದರೂ ನಿವೃತ್ತಿ ಮಾಡಿ” ಎಂದು ಕೇಳುವುದಕ್ಕೆ ಇರಬಹುದು, ನಮ್ಮ ಮನೆಗೂ ಆಗಾಗ ಅದರ ಭೇಟಿ ಇರುತ್ತದೆ. ನಾವೂ ಏನಾದರೂ ಮಾಡಬೇಕೆಂದಿದ್ದೇವೆ.ನಾರಾಯಣ ಉಪಾಧ್ಯಾಯರು ಕತೆ ಮುಗಿಸಿದಾಗ ನನ್ನಲ್ಲಿ ಒಂದು ಗಾಢವಾದ ವಿಷಾದ ಭಾವನೆ ಮೂಡಿತು. ನಾನು ತುಂಬಾ ಹೊತ್ತು ಮಾತಾಡಲಿಲ್ಲ. ಮನುಷ್ಯ ಕ್ಷಣಿಕವಾದ ಸುಖಕ್ಕಾಗಿ ಎಷ್ಟು ಜನರಿಗೆ ಶಾಶ್ವತವಾದ ನೋವನ್ನು ಕೊಡುತ್ತಾನೆ ಎನ್ನುವುದನ್ನೇ ಯೋಚಿಸುತ್ತಾ ಕುಳಿತೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_457.txt b/Kenda Sampige/article_457.txt new file mode 100644 index 0000000000000000000000000000000000000000..39fb97c9b035e4e57aad31dd5daf25a0955df408 --- /dev/null +++ b/Kenda Sampige/article_457.txt @@ -0,0 +1,57 @@ + + +ಹೆಚ್ಚು ಕಡಿಮೆ ನೂರು ವರ್ಷಗಳ ಹಿಂದೆ ಮಂಗಳೂರಲ್ಲಿ ಕರಣಿಕ ದೇವಪ್ಪಯ್ಯನು ಒಬ್ಬ ಗಣ್ಯ ವ್ಯಕ್ತಿ. ಕ್ರಿ.ಶ. 1830ರ ಕಾಲಕ್ಕೆ ಅವನು ಹಜೂರು ಶಿರಸ್ತೇದಾರನಾಗಿದ್ದನು. ಅಂದಿನ ದಿನಗಳಲ್ಲಿ ಹಜೂರು ಶಿರಸ್ತೇದಾರನೆಂದರೆ ಒಬ್ಬ ತುಂಡರಸು ಇದ್ದ ಹಾಗೆ. ಊರಿನ ಎಲ್ಲ ಮಾನ ಮರ್ಯಾದೆಗಳು ಮುಂದಾಗಿ ಅವನಿಗೇ ಸಲ್ಲುತ್ತಿದ್ದುವು. ಅದರಲ್ಲಿಯೂ ದೇವಪ್ಪಯ್ಯನು ತನ್ನ ಗುಣಾತಿಶಯಗಳಿಂದ ಇಡೀ ಜಿಲ್ಲೆಯ ಜನರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದನು. + +ಅವನು ಕನ್ನಡ, ಮರಾಠಿ, ಪಾರ್ಶಿ ಭಾಷೆಗಳನ್ನು ಬಲ್ಲವನಾಗಿದ್ದನು. ಹುದ್ದೆಗೆ ಸೇರಿದ ಮೇಲೆ ಇಂಗ್ಲಿಷ್ ಅಧಿಕಾರಿಗಳ ಒಡನಾಟದಿಂದ ಇಂಗ್ಲಿಷನ್ನೂ ತಕ್ಕಷ್ಟು ಕಲಿತುಕೊಂಡಿದ್ದನು. ಉದ್ಯೋಗದಲ್ಲಿ ಬಹು ಪರಿಶ್ರಮಿಯಾಗಿದ್ದುದರಿಂದ ಅಧಿಕಾರಿಗಳ ಮೆಚ್ಚನ್ನು ಪಡೆದಿದ್ದನು. ಧೀರನೂ ಗುಣವಂತನೂ ಆಗಿ ಊರಲ್ಲೆಲ್ಲ ತನ್ನ ವರ್ಚಸ್ಸನ್ನು ಬೀರಿದ್ದನು. ಅವನ ಶಿಸ್ತು, ಕ್ರಮ, ಓಜೆಗಳು ಆಗಿನ ಕಲೆಕ್ಟರಿಗೆ ಚೆನ್ನಾಗಿ ಹಿಡಿಯುತ್ತಿದ್ದುದರಿಂದ ಕಚೇರಿಯಲ್ಲಿ ಅವನ ಮಾತು ನಡೆಯುತ್ತಿತ್ತು. ಕಲೆಕ್ಟರನ ಬಲಗೈಯಾಗಿ ಹಜೂರಿನ ಪಾರುಪತ್ಯವೆಲ್ಲ ಅವನ ಕೈಯಲ್ಲೇ ಇತ್ತು. ಆದರೂ ಅವನ ಅಧಿಕಾರದ ಕಾಲವು ಬಹು ಬಿಕ್ಕಟ್ಟಿನದಾಗಿದ್ದುದರಿಂದ ಹಲವು ಗಂಡಾಂತರಗಳನ್ನು ಇದಿರಿಸಬೇಕಾಗಿತ್ತು. + +ಕ್ರಿ.ಶ. 1834ರಲ್ಲಿ ಇಂಗ್ಲೀಷರು ದೊಡ್ಡ ಸೈನ್ಯವನ್ನು ಕಳುಹಿಸಿ, ಕೊಡಗಿನ ವೀರರಾಜೇಂದ್ರ ಒಡೆಯನನ್ನು ಸೆರೆಹಿಡಿದು, ಕೊಡಗು ಸೀಮೆಯನ್ನು ಸ್ವಾಧೀನಪಡಿಸಿಕೊಂಡು ಅಮರ, ಸೂಳ್ಯ, ಪಂಜ, ಬೆಳ್ಳಾರೆ ಮಾಗಣೆಗಳನ್ನು ಕನ್ನಡ ಜಿಲ್ಲೆಗೆ ಸೇರಿಸಿಕೊಂಡರು. ಕೊಡಗು ಅಧಿಕಾರಿಗಳನ್ನು ತೆಗೆದು ಇಂಗ್ಲೀಷು ಅಧಿಕಾರಿಗಳನ್ನು ನೇಮಕ ಮಾಡಿದರು. ಇದರಿಂದ ನಾಲ್ಕು ಮಾಗಣೆಗಳ ಕೊಡಗರಿಗೆ ಬೇಸರ ಹುಟ್ಟಿತು. ಅದೇ ಸಮಯಕ್ಕೆ ಭೂಕಂದಾಯವನ್ನು ನಗದಿಯಿಂದ ತೆರಬೇಕೆಂದು ಸರಕಾರದ ಹುಕುಮ್ ಹೊರಟಿತು. ಇದರಿಂದ ರೈತರೆಲ್ಲ ಕಂಗಾಲಾದರು. ಅಂದಿನ ದಿನಗಳಲ್ಲಿ ರೈತರಿಗೆ ಹಣ ವಟಾಯಿಸುವುದು ಕಷ್ಟವಾಗಿತ್ತು. ಸ್ವಲ್ಪ ಹಣಕ್ಕೆ ತುಂಬ ಧಾನ್ಯ ಕೊಡಬೇಕಾಗಿತ್ತು. ಅಷ್ಟು ಧಾನ್ಯವನ್ನು ಸಾಹುಕಾರರಲ್ಲದೆ ಬೇರೆ ಯಾರು ಕೊಂಡುಕೊಳ್ಳುವವರಿರಲಿಲ್ಲ. ಸಾಹುಕಾರರು ಅತ್ಯಲ್ಪ ಬೆಲೆಗೆ ರಾಶಿ ಧಾನ್ಯವನ್ನು ಪಡೆದು ಹೇರಳ ಲಾಭ ಹೊಡೆಯುತ್ತಿದ್ದರು. ರೈತರು ತಾವು ಬೆಳೆಸಿದ ಧಾನ್ಯವನ್ನೆಲ್ಲ ಸಾಹುಕಾರರಿಗೆ ಅಳತೆಕೊಟ್ಟು, ಸಿಕ್ಕಿದ ಹಣವನ್ನು ತೀರ್ವೆಗೆ ತುಂಬಿಸಿ, ಮಿಗತೆ ಧಾನ್ಯ ಹೊಟ್ಟೆಗೆ ಸಾಲದೆ ಪೇಚಾಡುತ್ತಿದ್ದರು. ಇದರೊಂದಿಗೆ ಸರ್ಕಾರದವರು ಉಪ್ಪಿನ ಮೇಲೆ ಕರಹೊರಿಸಿ ಉಪ್ಪಿನ ಕೋಟಿಗಳನ್ನು ತೆರೆದರು. ಹೊಗೆಸೊಪ್ಪು ಮಾರಾಟದ ಗುತ್ತಿಗೆಯನ್ನು ಏರ್ಪಡಿಸಿದರು. ಇದರಿಂದೆಲ್ಲ ಪ್ರಜೆಗಳು ಮನನೊಂದಿದ್ದರು. + +ಹೀಗೆ ಮನನೊಂದ ಜನರ ಒಂದು ಪಂಗಡವು ದಿನದಿಂದ ದಿನಕ್ಕೆ ಬೆಳೆಯುತ್ತಾ ಬಂತು. ಎಂತಾದರೂ ಕೊಡಗನ್ನು ಹಿಂದೆ ಪಡೆದು ಸ್ವತಂತ್ರವಾಗಿ ಆಳಬೇಕೆಂದು ಸಂಚು ಹೂಡಿತು. ಏಳು ಸಾವಿರ ಸೀಮೆಯ ಪುಟ್ಟಬಸಪ್ಪನೆಂಬ ಜಂಗಮನು, ಕಲ್ಯಾಣ ಸ್ವಾಮಿ ನಂಜುಂಡರಸು ಎಂಬ ಹೆಸರನ್ನಿಟ್ಟುಕೊಂಡು, ತಾನು ಕೊಡಗಿನ ಅರಸು ಪೀಳಿಗೆಯವನೆಂದೂ ಪಟ್ಟಕೆ ಹಕ್ಕುದಾರನೆಂದೂ ಬಹಿರಂಗಪಡಿಸಿದನು. ಅಮರ, ಸೂಳ್ಯ, ಪಂಜ, ಬೆಳ್ಳಾರೆ, ನಾಲ್ಕು ಮಾಗಣೆಗಳ ಜನರು ಅವನನ್ನು ಸೇರಿಕೊಂಡರು. ಕಷ್ಟಕ್ಕೀಡಾಗಿದ್ದ ರೈತರೂ ಅವನ ಪಕ್ಷ ಹಿಡಿದರು. + +ಕಲ್ಯಾಣಸ್ವಾಮಿಯನ್ನು ಹೀಗೆ ಒಂದು ದೊಡ್ಡ ದಂಡನ್ನು ಕೂಡಿಸಿಕೊಂಡು ಬೆಳ್ಳಾರೆಗೆ ಹೋಗಿ ಸರಕಾರಿ ಖಜಾನೆಯನ್ನು ಒಡೆದನು. ಊರನ್ನೆಲ್ಲ ಸುಲಿಗೆ ಮಾಡಿ, ಅಲ್ಲಿಂದ ಸುಬ್ರಹ್ಮಣ್ಯಕ್ಕೆ ಹೋಗಿ, ಅಲ್ಲಿಂದ ಪುತ್ತೂರಿಗೆ ಹೊರಟನು. ಹೋದಲ್ಲೆಲ್ಲ “ನಾವು ಮೂರು ವರ್ಷಗಳವರೆಗೆ ಭೂಕಂದಾಯವನ್ನು ಎತ್ತುವುದಿಲ್ಲ. ದಕ್ಷಿಣ ಕನ್ನಡದಲ್ಲಿ ಉಪ್ಪು ಮತ್ತು ಹೊಗೆಸೊಪ್ಪು ಮಾರಾಟದ ಗುತ್ತಿಗೆಯನ್ನು ರದ್ದುಗೊಳಿಸುವೆವು. ಬೇರೆ ಕಡೆಗಳಲ್ಲಿ ಬ್ರಿಟಿಷ್ ಅಧಿಕಾರವು ಅಡಗಿದೆ. ಇಲ್ಲಿಯೂ ಸದ್ಯದಲ್ಲಿಯೇ ಅಡಗುವುದು. ಆದುದರಿಂದ ನಮ್ಮಲ್ಲಿ ವಿಶ್ವಾಸವಿಟ್ಟು ಕೊಡ್ಗಿ ಅರಸುತನದಲ್ಲಿ ಭಕ್ತಿಯಿಟ್ಟು ಪ್ರಜೆಗಳೆಲ್ಲ ನಮ್ಮನ್ನು ಸೇರಿಕೊಳ್ಳುವುದು ಲೇಸು! ಲೇಸು!!” ಎಂದು ಇಸ್ತಿಹಾರನ್ನು ಪ್ರಕಟಿಸಿದನು. + +ಉಪ್ಪಿನಂಗಡಿಯ ತಹಸಿಲ್ದಾರನು ಈ ವರ್ತಮಾನ ಕೇಳಿ ಮಂಗಳೂರಿನಲ್ಲಿದ್ದ ಕಲೆಕ್ಟರನಿಗೆ ವರದಿಕೊಟ್ಟನು. ಕಲೆಕ್ಟರನು ಗಾಬರಿಗೊಂಡು ಏನು ಮಾಡುವುದೆಂದು ಕರಣಿಕ ದೇವಪ್ಪಯ್ಯನೊಡನೆ ಆಲೋಚಿಸಿದನು. ಧೈರ್ಯಶಾಲಿಯಾದ ದೇವಪ್ಪಯ್ಯನು ಕಾಟಕಾಯಿಯನ್ನು ಇದಿರಿಸುವುದೇ ಸರಿಯೆಂದನು. ಕಲೆಕ್ಟರನಿಗೂ ಅದು ಒಪ್ಪಿಗೆಯಾಯಿತು. ದೇವಪ್ಪಯ್ಯನು ಕೂಡಲೇ ಕಚೇರಿಯ ಎಲ್ಲ ಜವಾನರನ್ನು ಕೂಡಿಸಿ, ಅವರನ್ನು ಹುರಿದುಂಬಿಸಿ, ಬಡ್ತಿಯ ಆಸೆಯನ್ನು ಹುಟ್ಟಿಸಿ, ಕಾಟಕಾಯಿಯನ್ನು ಅಡಗಿಸುವ ಪ್ರಯತ್ನ ಮಾಡಬೇಕೆಂದು ಬೋಧಿಸಿದನು. ದೇವಪ್ಪಯ್ಯನ ಮಾತು ಎಲ್ಲರಿಗೂ ಸಮ್ಮತವಾಯಿತು. ಕೂಡಲೇ ಕತ್ತಿ, ದೊಣ್ಣೆ, ಕೊಡಲಿ, ಕಠಾರಿಗಳನ್ನು ತೆಗೆದುಕೊಂಡು, ಕಚ್ಚೆ ಬಿಗಿದು ಅಣಿಯಾದರು. ಅವರನ್ನೆಲ್ಲ ಕರೆದುಕೊಂಡು ಕಲೆಕ್ಟರು ಮತ್ತು ದೇವಪ್ಪಯ್ಯ ತರಾತುರಿಯಿಂದ ಪುತ್ತೂರಿನ ದಾರಿಯನ್ನು ಹಿಡಿದರು. ಪುತ್ತೂರನ್ನು ಸೇರಿ ಕಚೇರಿ ನಡೆಸುವಷ್ಟರಲ್ಲಿ ಕಲ್ಯಾಣಸ್ವಾಮಿಯು ದೊಡ್ಡ ದಂಡಿನೊಡನೆ ಪುತ್ತೂರನ್ನು ಸಮೀಪಿಸಿದನೆಂಬ ಸುದ್ದಿ ಬಂತು. ಈ ಸುದ್ದಿಯನ್ನು ಕೇಳಿ ಕಲೆಕ್ಟರನು ದೇವಪ್ಪಯ್ಯನಿಗೆ ಪುತ್ತೂರಿನ ಜವಾಬುದಾರಿಯನ್ನು ವಹಿಸಿಕೊಟ್ಟು, ತಾನು ಹಜೂರು ಬಂದೋಬಸ್ತಿಗೆ ಹೋಗುವೆನೆಂದು ಕುದುರೆ ಹತ್ತಿಕೊಂಡು ಹಿಂತೆರಳಿಬಿಟ್ಟನು. + +ಪುತ್ತೂರಿನ ಜವಾಬುದಾರಿಯೆಲ್ಲ ದೇವಪ್ಪಯ್ಯನ ಮೇಲೆ ಬಿತ್ತು. ಪಾಪ ಅವನು ಹತ್ತಾರು ಪೇದೆಗಳನ್ನು ಕಟ್ಟಿಕೊಂಡು ಏನು ಮಾಡಬಲ್ಲನು? ಕಾಟಕಾಯಿಯ ಕುರಿತು ಹಲವು ಭಯಂಕರ ಸುದ್ದಿಗಳು ಬರುತ್ತಿದ್ದುವು. ಧೀರನಾದ ದೇವಪ್ಪಯ್ಯನು ಸ್ವಲ್ಪವೂ ಹೆದರಲಿಲ್ಲ. ಖಜಾನೆಯ ಹಣವನ್ನೆಲ್ಲ ತೆಗೆದು, ಯಾರಿಗೂ ತಿಳಿಯದಂತೆ ಬಚ್ಚಿಟ್ಟು ಬರಿಯ ಖಜಾನೆಗೆ ಬೀಗ ಮುದ್ರೆ ಹಾಕಿದನು. ಮುಖ್ಯ ಲೆಕ್ಕಪತ್ರಗಳ ದಫ್ತರುಗಳನ್ನೆಲ್ಲ ಸಾಗಿಸಿ, ಕರಡು ಕಾಗದಗಳು ಮಾತ್ರ ಕಣ್ಣಿಗೆ ಬೀಳುವಂತಿರಿಸಿ, ಇನಿತಾದರೂ ಸಂಶಯ ತಟ್ಟದಂತೆ ಕಚೇರಿಯನ್ನು ವ್ಯವಸ್ಥೆಗೊಳಿಸಿದನು. ತನ್ನ ಜತೆಯಲ್ಲಿ ಬಂದಿದ್ದ ಪೇದೆಗಳ ಪಡೆಗೂ, ಪುತ್ತೂರಿನ ಸಿಬ್ಬಂದಿಗೂ, ತನ್ನಲ್ಲಿ ವಿಶ್ವಾಸವಿಟ್ಟು ನೆರೆದಿದ್ದ ಊರ ಜನರಿಗೂ ಧೈರ್ಯ ಭರವಸೆಗಳನ್ನು ಕೊಡುತ್ತ ಕಚೇರಿಯಲ್ಲಿ ಕುಳಿತಿದ್ದನು. ನಡುಹರೆಯದ ದೇವಪ್ಪಯ್ಯನ ರಕ್ತಛಾಯೆ ತುಂಬಿದ ಬೆಳ್ಳಗಿನ ಮೈಬಣ್ಣ, ಲಕ್ಷಣವಾದ ದುಂಡುಮೊಗ, ಭವ್ಯವಾದ ಆಕೃತಿಯಲ್ಲಿ ಘನತೆ ಗಾಂಭೀರ್ಯಗಳು ಎದ್ದುಕಾಣುತ್ತಿದ್ದುವು. ಉಟ್ಟ ಹುಬ್ಬಳ್ಳಿ ಧೋತ್ರ, ತೊಟ್ಟ ಕರಿಯ ಅಲ್ಪಾಕಿನ ನಿಲುವಂಗಿ, ಇಟ್ಟ ಗರ್ಭಸುತ್ತಿನ ದೊಡ್ಡ ಮುಂಡಾಸು ಆ ಘನತೆ ಗಾಂಭೀರ್ಯಗಳಿಗೆ ಇಮ್ಮಡಿ ಕಳೆ ಕೊಟ್ಟಿದ್ದುವು. ಎಂಥವನಾದರೂ ಅವನನ್ನು ಕಂಡಾಕ್ಷಣ ಅವನ ಆಕರ್ಷಕವಾದ ಆ ಅಸಾಧಾರಣ ವರ್ಚಸ್ಸಿಗೆ ಮಣಿಯದಿರನು. + +ಅಷ್ಟರಲ್ಲಿ ಕಾಟಕಾಯಿ ಬಂತೇ ಬಂತು. ದೂರದಿಂದಲೇ ಅದರ ಬೊಬ್ಬೆ ಅಟ್ಟಹಾಸ ಕೇಳಿಸುತ್ತಿದ್ದಿತು. ದಂಡಿನ ತುಳಿತದಿಂದ ಎದ್ದ ಧೂಳಿಯು ಮೋಡದಂತೆ ಕವಿದಿದ್ದಿತು. ಈ ಗಲ್ಲು ಗಲಭೆಯನ್ನು ಕೇಳಿ ಊರ ಜನರೆಲ್ಲ ಸಿಕ್ಕ ಸಿಕ್ಕಲ್ಲಿ ಅವಿತುಕೊಂಡರು. ಅಳುತ್ತಿದ್ದ ಮಕ್ಕಳು ಕೂಡ ಅಲ್ಲಲ್ಲೆ ಬಾಯಿಮುಚ್ಚಿಕೊಂಡವು. ಮಾರಿ ಹಿಂಡು ಮಸಣವನ್ನು ಹೊಗುವಂತೆ ಕಾಟಕಾಯಿ ಊರನ್ನು ಹೊಕ್ಕು ಸೊರೆ ಸುಲಿಗೆ ಮಾಡುತ್ತ, ಕಂಡದ್ದಕ್ಕೆಲ್ಲ ಕಿಚ್ಚಿಡುತ್ತ ಕಚೇರಿಯನ್ನು ಸಮೀಪಿಸಿತು. + +ಕಲ್ಯಾಣ ಸ್ವಾಮಿಯು ದರ್ಪದಿಂದ ಕಚೇರಿಯನ್ನು ನುಗ್ಗಿ, ಕಲೆಕ್ಟರು ಕಚೇರಿ ನಡೆಸುವ ಉಚ್ಚಾಸನವನ್ನೇರಿ, ಕಾಲಮೇಲೆ ಕಾಲುಹಾಕಿ ಕುಳಿತುಕೊಂಡನು. ಕರ್ರಗಿನ ಕರಾಳರೂಪಿನ ಅವನನ್ನು ನೋಡುವಾಗ ಮೈ ಜುಮ್ಮೆನಿಸುತ್ತಿತ್ತು. ಅವನ ಕೆಂಗಣ್ಣುಗಳು ಕಿಡಿ ಕಾರುತ್ತಿದ್ದುವು. ಅವನು ಕೊಡಗರ ಉಡಿಗೆಯನ್ನು ತೊಟ್ಟಿದ್ದನು. ಚಲ್ಲಣ ಹಾಕಿ ಕರಿಯ ಕುಪ್ಪಸವನ್ನು ತೊಟ್ಟು ರೇಶಿಮೆಯ ಕೆಂಪು ದಟ್ಟಿಯನ್ನು ಬಿಗಿದಿದ್ದನು. ದಟ್ಟಿಯಲ್ಲಿ ‘ಪೀಚೆ ಕತ್ತಿ’ಯ ಬೆಳ್ಳಿ ಹಿಡಿಯ ಹೊಳೆಯುತ್ತಿದ್ದಿತು. ತಲೆಗೆ ಜರಿ ಮುಂಡಾಸನ್ನು ಕಟ್ಟಿದ್ದನು. ಕೈಯಲ್ಲಿ ಜೋಡು ಧಾರೆಯ ಬಿಚ್ಚು ಗತ್ತಿಯು ಜಗಜಗಿಸುತ್ತಿದ್ದಿತು. ಅವನ ಸುತ್ತಲೂ ಪೀಚೆ ಕತ್ತಿ, ಒಡಿಕತ್ತಿ, ಕೊಡಲಿ, ಕೋವಿ, ಕೊರಡೆಗಳನ್ನು ಹಿಡಿದುಕೊಂಡು ಭೀಕರ ಸ್ವರೂಪದ ಪುಂಡರು ಸಾಲು ಸಾಲಾಗಿ ನಿಂತಿದ್ದರು. ಕೆಲವರು ಕೊತ್ತಳಿಗೆಯನ್ನೂ, ಇನ್ನು ಕೆಲವರು ಚಿಟ್ಬಿಲ್ಲು, ಕವಣೆಕಲ್ಲು, ತಿರಿಕಲ್ಲುಗಳನ್ನೂ ಹಿಡಿದುಕೊಂಡು ನಿಂತಿದ್ದರು. ಕಲ್ಯಾಣಸ್ವಾಮಿಯು ಸುತ್ತಲೊಮ್ಮೆ ಕಣ್ಣು ಹೊರಳಿಸಿದನು. ಎಲ್ಲರಿಗೂ ಒಮ್ಮೆ ಎದೆ ಹಾರಿತು. ದೇವಪ್ಪಯ್ಯನನ್ನು ಕಾಣುತ್ತಲೇ ಅವನ ಕಣ್ಣು ಕುಕ್ಕಿದಂತಾಯಿತು. ಅವನನ್ನು ತನ್ನ ಮುಂದೆ ಎಳೆದು ತರುವಂತೆ ಆಜ್ಞಾಪಿಸಿದನು. ಪುಂಡರು ಅವನನ್ನು ದರದರನೆ ಎಳೆದುತಂದು ಮುಂದೆ ನಿಲ್ಲಿಸಿದರು. ಕಠೋರವಾದ ಕಂಠದಿಂದ ‘ನೀನು ಯಾರೋ’ ಎಂದು ಕೇಳಿದನು. + +ದೇ- ನಾನೇ ಕರಣಿಕ ದೇವಪ್ಪಯ್ಯ, ಮಂಗಳೂರಿನ ಶಿರಸ್ತೇದಾರ.ಕ- ನೀನಿನ್ನು ನಮ್ಮ ಕರಣಿಕನಾಗಬೇಕು !ದೇ- ನಿನ್ನ ಚಾಕರಿ ಬೇಕಾಗಿಲ್ಲ ನನಗೆ.ಕ- ಎಲೊ! ಯಾರೊಡನೆ ಮಾತಾಡುತ್ತಿರುವೆ ನೀನು? ಗೊತ್ತುಂಟೋ? ನಮ್ಮ ಅಪ್ಪಣೆ ಮೀರಿದರೆ ನಿನ್ನ ತಲೆ ಹಾರಿಸಿಬಿಟ್ಟೇನು. ರಾಜ್ಯವೀಗ ನಮ್ಮದು. ನಿನ್ನ ಬ್ರಿಟಿಷ್ ಸರಕಾರ ಅಳಿಯಿತು. ಅದರೊಡನೆ ನೀನೂ ಸಾಯುವೆ – ಎಂದು ಹೇಳಿ ಅವನ ಅಂಗಿ ಮುಂಡಾಸುಗಳನ್ನೆಲ್ಲ ಕಳಚಿಸಿ ಅವನನ್ನು ಕಠಿಣವಾದ ಪಹರೆಯಲ್ಲಿಡುವಂತೆ ಅಪ್ಪಣೆಕೊಟ್ಟನು. + +ಕಲ್ಯಾಣಸ್ವಾಮಿಯ ಪರಿಚಾರಕರಲ್ಲಿ ಅನಂತು ಎಂಬ ಒಬ್ಬ ಗೌಡಸಾರಸ್ವತನಿದ್ದನು. ದೇವಪ್ಪಯ್ಯನಿಗೆ ಅವನನ್ನು ಕಂಡ ಗುರುತಿತ್ತು. ಅವನನ್ನು ನೋಡಿ ಸಲುಗೆಯಿಂದ ‘ತುಂ ಹಮ್ ಗೆಲೆ ಅಂತೂ ಪೂತು ಅನಂತೂರೆ?’ ಎಂದು ಕೊಂಕಣಿ ಮಾತಿನಲ್ಲಿ ಕೇಳಿದನು. ಕೊಡ್ಗಿ ಅರಸನ ಆಳೆಂಬ ಹೆಮ್ಮೆಯಿಂದ ಆ ಊಳಿಗದವನು ಕನ್ನಡದಲ್ಲಿ ‘ಏನಂದೆ ನೀನು? ಮಹಾಸ್ವಾಮಿಯವರೊಡನೆ ಹೇಳಿ ನಿನ್ನ ತಲೆ ಕಡಿಸಿಬಿಟ್ಟೇನು. ಗೊತ್ತುಂಟೋ?’ ಎಂದು ತಲೆಮೀರಿ ಮಾತಾಡಿದನು. ದೇವಪ್ಪಯ್ಯನು ಮುಗುಳು ನಗುತ್ತ ಸುಮ್ಮನಾದನು. + + + +ಅವನು ಪುಂಡನ ಕೈಸಿಕ್ಕಿ , ಬಂದಿಯಾಗಿ ಬಹಳ ಕಷ್ಟಕ್ಕೀಡಾದನು. ಕಾಟಕಾಯಿ ಹೋದಲೆಲ್ಲ ಇತರ ಬಂದಿಗಳೊಡನೆ ಅವನನ್ನೂ ತೆಗೆದುಕೊಂಡು ಹೋಗುತ್ತಿದ್ದರು. ದೇವಪ್ಪಯ್ಯನು ಹೋದಲೆಲ್ಲ ಕಾಟಕಾಯಿ ನಡೆಸಿದ ಕ್ರೂರತನ, ಕೊಲೆ, ಸುಲಿಗೆ ಹಾವಳಿಗಳ ಪ್ರತ್ಯಕ್ಷ ಸಾಕ್ಷಿಯಾಗಿದ್ದನು. ಕಾಟಕಾಯಿಗೆ ನೆರವು ಕೊಟ್ಟವರನ್ನೆಲ್ಲ ತಿಳಿದುಕೊಂಡನು. ಹೀಗೆ ಸೆರೆಯಾಳಾಗಿದ್ದರೂ ಸರ್ಕಾರದ ಸೇವೆಯನ್ನು ಮರೆಯದೆ ಎಲ್ಲಾ ಸುಳಿವುಗಳನ್ನೂ ಅರಿತುಕೊಳ್ಳುತ್ತಿದ್ದನು. ಕೆಲವು ದಿನಗಳು ಕಳೆಯಲು ಅವನು ಅಂತುವಿನಲ್ಲಿ ವಿಶ್ವಾಸ ಬೆಳೆಸಿಕೊಂಡು ಸೆರೆಯಿಂದ ತಪ್ಪಿಸಿಕೊಳ್ಳುವ ಹಂಚಿಕೆ ಮಾಡುತ್ತಿದ್ದನು. + +ಒಂದು ದಿನ ಅಂತು ಒಬ್ಬನೇ ಇದ್ದ ಸಮಯ ನೋಡಿ ಅವನನ್ನು ಬಳಿಗೆ ಕರೆದು ‘ಹೌದೋ ಅಂತು! ಊರ ಮೇಲೆ ಊರು ಬಿದ್ದರೆ ಶಾನಭಾಗರಿಗೆ ಬಂದದ್ದೇನು? ಹೇಳು. ನಾವಿಬ್ಬರೂ ಶಾನಭಾಗರೆ. ನಾನೂ ನೀನೂ ಒಂದೆ. ನಮಗೆ ಕುಂಪಣಿ ಸರಕಾರವಾದರೇನು! ಕೊಡ್ಗಿ ಅರಸ್ತನವಾದರೇನು! ನಮ್ಮನ್ನೆಲ್ಲ ಕೊಂಕಣದಿಂದ ಕರೆದುತಂದ ಕೆಳದಿ ಅರಸುತನವೇ ಅಳಿಯಿತು. ಈಗ ಕೊಡಗು ಅರಸನೂ ಒಂದು ಕೈನೋಡಲಿ. ಯಾವ ರಾಯನ ಕಾಲಕ್ಕೂ ಶಾನಭಾಗಿಕೆ ನಮಗೆ ಕಟ್ಟಿಟ್ಟದ್ದೇ, ಆದುದರಿಂದ ನಾನೊಂದು ಗುಟ್ಟನ್ನು ನಿನಗೆ ಹೇಳುವೆನು, ಕೇಳುವೆಯಾ?’ ಎಂದನು.ಆಗ ಅಂತುವು, ‘ಅದೇನು ಗುಟ್ಟಪ್ಪಾ! ಹೇಳಿ ನೋಡುವ, ಯಾರಿಗೂ ಹೇಳಲಿಕ್ಕಿಲ್ಲ’ ಎಂದನು. + +‘ನೋಡು ಅಂತು, ಈ ಕಾಟಕಾಯಿಯಿಂದ ಬ್ರಿಟಿಷರಿಗೆ ಪರಿಣಾಮವಿಲ್ಲೆಂದು ಕಾಣಿಸುತ್ತದೆ. ಇದನ್ನು ನೋಡಿ ಈಗೀಗ ನನ್ನ ಮನಸ್ಸು ಎಳತಾಗಿಬಿಟ್ಟಿದೆ. ಎಷ್ಟೆಂದರೂ ಕೊಡಗರು ನಮ್ಮ ಜನರೇ ಅಲ್ಲವೆ? ಆ ಫರಂಗಿ ಜನರಿಗಿಂತ ಇವರೇ ವಾಸಿ. ಆದುದರಿಂದ ಕಾಟಕಾಯಿಗೆ ನನ್ನಿಂದಾದ ಸಹಾಯವನ್ನು ಮಾಡಬೇಕೆಂದು ನಿರ್ಧರಿಸಿರುವೆನು. ನಂದಾವರದ ಲಕ್ಷ್ಮಪ್ಪರಸನು ಸರಕಾರದಿಂದ ದೊರೆಯುವ ಮಲ್ಲಿಖಾನೆಯನ್ನು ನನ್ನ ಮುಖಾಂತರವೇ ಪಡೆಯಬೇಕಾಗಿರುವುದರಿಂದ ಅವನು ನನ್ನ ಹಂಗಿನಲ್ಲಿರುವನು. ಅವನು ಜೈನ ಅರಸರಲ್ಲಿ ಬಹು ಸಾಮರ್ಥ್ಯವುಳ್ಳವನು. ಬೇಕಾದ ಸೇನೆ ಸರಂಜಾಮುಗಳನ್ನು ಒದಗಿಸಬಲ್ಲನು. ನಾನು ಒಂದು ಮಾತು ಹೇಳಿದರೆ ಒಲ್ಲೆನೆನ್ನ. ಯಾವುದಕ್ಕೂ ಹೀಗೆ ಕೈದಿಯಾಗಿ ಏನು ಮಾಡಲಿ ಹೇಳು. ನೀನು ನಿನ್ನ ಒಡೆಯನ ಕಿವಿಯಲ್ಲಿ ಮೆಲ್ಲಗೆ ಈ ಮಾತನ್ನು ಹಾಕಿನೋಡು. ಖಂಡಿತವಾಗಿಯೂ ಕಾಟಕಾಯಿ ಗೆಲುವುದು. ಆದರೆ ಮಾರಾಯ! ಈ ಗುಟ್ಟೆಲ್ಲಿಯಾದರೂ ರಟ್ಟಾದರೆ ಕೆಲಸ ಕೆಟ್ಟೀತು ಕಂಡ್ಯಾ’ ಎಂದನು.ಅಂತುವಿಗೆ ಈ ಮಾತು ಮೆಚ್ಚಿತು. ‘ನಾಳೆಯೇ ತಿಳಿಸುತ್ತೇನೆ’ ಎಂದು ತನ್ನ ಕೆಲಸಕ್ಕೆ ಹೋದನು. + +ಮರುದಿನ ಕಲ್ಯಾಣಸ್ವಾಮಿಯು ದೇವಪ್ಪಯ್ಯನನ್ನು ಗುಟ್ಟಿನಲ್ಲಿ ಕರೆಸಿ ‘ನೀನು ನಮ್ಮ ಪಕ್ಷಕ್ಕೆ ತಿರುಗಿರುವೆಯಂತೆ. ಸಂತೋಷ. ನಿನ್ನನ್ನು ನಮ್ಮ ಕರಣಿಕನನ್ನಾಗಿ ಮಾಡಿಕೊಳ್ಳುವೆನು. ಅದಕ್ಕೆ ಮುಂಚೆ ಬಂಗರಾಜನು ನಮಗೆ ನೆರವಾಗುವಂತೆ ಮಾಡುವೆಯಾ?’ ಎಂದು ಕೇಳಿದನು. + +ದೇ – ಕೆಲವು ದಿನಗಳಿಂದ ಅದೇ ಯೋಚನೆಯಲ್ಲಿರುವೆನು. ತಮ್ಮ ಸಾಹಸಗಳನ್ನು ಕಂಡಂತೆಲ್ಲ ತಮಗೆ ತನ್ನ ಅಳಿಲ ಸೇವೆಯನ್ನಾದರೂ ಸಲಿಸಬೇಕು ಅನ್ನಿಸುತ್ತದೆ. ಶತಪ್ರಯತ್ನ ಮಾಡಿ ಬಂಗರಾಜನು ಕಾಟಕಾಯಿಗೆ ಬೇಕಾದ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಮಾಡುವೆನು. + +ಕ – ಸರಿ! ಹಾಗಾದರೆ ನಿನ್ನನ್ನು ಈಗಲೇ ಬಿಡುಗಡೆ ಮಾಡುವೆನು. ನಮಗೆ ಬೇಕಾದ ಎಲ್ಲಾ ಸಹಾಯಗಳನ್ನು ಒದಗಿಸು. ಆದರೆ ನೋಡು! ಎಲ್ಲಿಯಾದರೂ ಮೀರಿ ನಡೆದರೆ, ವಂಚನೆ ದ್ರೋಹ ಮಾಡಿದರೆ ಇದೇ ಕತ್ತಿಯಿಂದ ನಿನ್ನ ರುಂಡವನ್ನು ಹಾರಿಸಿಯೇನು. ತಿಳಿಯಿತೇ? – ಎಂದು ಕತ್ತಿಯನ್ನೊಮ್ಮೆ ಝಳಪಿಸಿದನು. + +ದೇ – ಕೊಡಗು ರಾಯರನ್ನು ವಂಚಿಸಿ ಬದುಕುವುದುಂಟೆ! ನಾನು ಅಷ್ಟನ್ನು ತಿಳಿಯೆನೆ? ಕೊಡ್ಗಿ ರಾಜ್ಯ ಕಟ್ಟುವುದರಲ್ಲಿ ನನ್ನದೂ ಒಂದು ಅಳಿಲ ಭಕ್ತಿಯಿರಲಿ! ಅಷ್ಟೆ. + +ಕ – ಹಾಗಾದರೆ ನಿನ್ನಲ್ಲಿ ನಂಬಿಗೆಯಿರಿಸಿ ಬಿಡುಗಡೆಪಡಿಸಿರುವೆವು – ಎಂದು ಕಾವಲುಗಾರರ ಕಡೆಗೆ ನೋಡಲು ಅವರೆಲ್ಲ ಹಿಂದೆ ಸರಿದರು. ದೇವಪ್ಪಯ್ಯನು ಕೈಮುಗಿದನು.“ಸರಿ. ಈಗಲೇ ಹೊರಡು!”ದೇ – ಅಪ್ಪಣೆ ! ಬರುವೆನು. + +ಹೀಗೆ ಉಪಾಯದಿಂದ ತಪ್ಪಿಸಿಕೊಂಡು ದೇವಪ್ಪಯ್ಯನು ನೆಟ್ಟಗೆ ಮಂಗಳೂರಿಗೆ ಹೋಗಿ ಹಜೂರಲ್ಲಿ ಕಲೆಕ್ಟರನ್ನು ಕಂಡು ಸಂಗತಿಯನ್ನೆಲ್ಲ ಬಣ್ಣಿಸಿದನು. ಕಲೆಕ್ಟರನು ಕುತೂಹಲಗೊಂಡು ಎಲ್ಲವನ್ನೂ ಕೇಳಿ ತನ್ನ ಶಿರಸ್ತೆದಾರನ ಧೈರ್ಯ, ಸಾಮರ್ಥ್ಯ ರಾಜಭಕ್ತಿಗಾಗಿ ಹೆಮ್ಮೆಪಟ್ಟನು. ಅಂದಿನಿಂದ ಕಲೆಕ್ಟರನೂ ದೇವಪ್ಪಯ್ಯನೂ ಕಾಟಕಾಯಿಯನ್ನು ಅಡಗಿಸುವುದಕ್ಕಾಗಿ ಹೆಣಗಾಡಿದರು. ಕಾಟಕಾಯಿ ಮಂಗಳೂರಿಗೆ ಬಂದರೆ ಏನು ಮಾಡಬೇಕೆಂದು ಮೊದಲೇ ನಿರ್ಧರಿಸಿಕೊಂಡರು. ತಲಚೇರಿಯಲ್ಲಿದ್ದ ಸೈನ್ಯಕ್ಕೂ ಬೆಂಗಳೂರು ಸೈನ್ಯಕ್ಕೂ ಸುದ್ದಿ ಹೋಯಿತು. ದೇವಪ್ಪಯ್ಯನು ಕಲ್ಯಾಣಸ್ವಾಮಿಯ ಕ್ರೂರತ್ವ, ಅನ್ಯಾಯ, ಅನೀತಿಗಳನ್ನು ಜನರಿಗೆ ಬೋಧಿಸಿ ಎಲ್ಲರನ್ನೂ ಸರಕಾರದ ಕಡೆಗೆ ಒಲಿಸಿಕೊಂಡನು. + +ಇತ್ತ ಕಲ್ಯಾಣಸ್ವಾಮಿಯು ಪುತ್ತೂರನ್ನು ಸುಲಿಗೆಮಾಡಿ ಪಾಣೆಮಂಗಳೂರಿಗೆ ಹೋದನು. ದೇವಪ್ಪಯ್ಯನು ನೆನಸಿದ್ದಂತೆ ನಂದಾವರದ ಬಂಗರಸನು ಕಾಟಕಾಯಿಗೆ ತುಂಬ ಸಹಾಯಮಾಡಿದನು. ಪುಂಡರ ಪಡೆಗೆ ಊಟ ಉಪಚಾರ ಮಾಡಿಸಿ ಉಡಿಗೆ ತೊಡಿಗೆಗಳನ್ನು ಕೊಡಿಸಿದನು. ನೂರಾರು ಜನರನ್ನು ಕೂಡಿಸಿಕೊಟ್ಟನು. ಕಲ್ಯಾಣಸ್ವಾಮಿಯು ಇದೆಲ್ಲವೂ ದೇವಪ್ಪಯ್ಯನಿಂದಲೇ ಆಯಿತೆಂದು ನಂಬಿದನು. ಹುರುಪುಗೊಂಡು ಸಾಗಿ ಬಂಟವಾಳಕ್ಕೆ ಮುತ್ತಿಗೆ ಹಾಕಿ ಸೂರೆ ಮಾಡಿದನು. ಅಲ್ಲಿಂದ ಮಂಗಳೂರಿನ ದಾರಿಯನ್ನು ಹಿಡಿದನು.ಈಗ ಅವನ ದಂಡು ಬಹಳ ದೊಡ್ಡದಾಗಿತ್ತು. ಪುಂಡರೆಲ್ಲ ಸೊಕ್ಕೇರಿ ಹುಚ್ಚರಾಗಿದ್ದರು. ಊರು ಕೇರಿಗಳನ್ನೆಲ್ಲ ಕೊಳ್ಳೆಯಿಡುತ್ತ ನಡೆದರು. ಕಾಟಕಾಯಿ ಬರುತ್ತದೆಂದು ಊರೆಲ್ಲ ಭಯಗೊಂಡಿತು. ಎಲ್ಲೆಲ್ಲಿಯೂ ಬೊಬ್ಬೆಯೆದ್ದಿತು. ಇಂಗ್ಲೀಷು ಅಧಿಕಾರಿಗಳೆಲ್ಲ ಹೆದರಿ ಕಣ್ಣಾನೂರಿಗೆ ಹೋಗಲು ಅಳಿವೆ ಬಾಗಿಲಲ್ಲಿ ಹಡಗನ್ನು ಕಾಯುತ್ತಿದ್ದರು. ಕಲ್ಯಾಣಸ್ವಾಮಿಯು ಸೆರೆಮನೆಗೆ ಹೋಗಿ ಕೈದಿಗಳನ್ನೆಲ್ಲ ಬಿಡಿಸಿ ತನ್ನ ದಂಡಿಗೆ ಸೇರಿಸಿಕೊಂಡನು. ತಾಲೂಕು ಕಚೇರಿಗೆ ಹೋಗಿ ಖಜಾನೆಯನ್ನು ದೋಚಿದನು. ಇಂಗ್ಲೀಷ್ ಅಧಿಕಾರಿಗಳ ಮನೆಗಳಿಗೆ ಬೆಂಕಿಕೊಟ್ಟನು. ಸಿಕ್ಕಿದ್ದನ್ನು ಸುಲಿಯುತ್ತ ಕಂಡದ್ದನ್ನು ಕೆಡಿಸುತ್ತ ಹಾವಳಿಮಾಡುತ್ತಿದ್ದನು. + +ಈ ಸಂದರ್ಭವನ್ನು ನೋಡಿಕೊಂಡು ತೆಂಕುಂಬಳೆಯ ಕೋಟೆಯ ಒಳಿಯಲ್ಲಿದ್ದ ಸುಬ್ರಾಯ ಹೆಗ್ಗಡೆಯೆಂಬವನು ಕೆಲವು ಪೋಲಿಗಳನ್ನು ಕೂಡಿಕೊಂಡು, ಕಲ್ಯಾಣಸ್ವಾಮಿಯನ್ನು ಸೇರಿ, ಅವನ ಸೂಚನೆಯಂತೆ ಕುಂಬಳೆ ಕಡೆಯಿಂದ ದಂಗೆಯೆಬ್ಬಿಸಿ ಮಂಗಳೂರಿಗೆ ಬರುತ್ತಿದ್ದನು. ದೇವಪ್ಪಯ್ಯನು ಈ ಸೋವನ್ನು ತಿಳಿದುಕೊಂಡು ತಕ್ಕ ಮುಂಜಾಗ್ರತೆಯನ್ನು ವಹಿಸಿದ್ದನು. + +ಸುಬ್ರಾಯನ ದಂಡು ಮಂಜೇಶ್ವರ ಮತ್ತು ಉಳ್ಳಾಲಕ್ಕೆ ಬಂದಾಗ ಅಲ್ಲಿಯ ಜನರು ಊಟ, ಉಪಚಾರ, ಉಡಿಗೆ, ಉಚಿತಗಳನ್ನು ಕೊಟ್ಟು ಸಂತೈಸಿ ಕೊಳ್ಳೆಯಿಡದಂತೆ ಬೇಡಿಕೊಂಡರು. ಸುಬ್ರಾಯನು ಅಲ್ಲಿಂದ ಹೊಳೆ ದಾಟಿ ಮಂಗಳೂರನ್ನು ಸೇರಬೇಕೆಂದಿದ್ದನು. ಆದರೆ ಅವನ ಆಸೆಯು ಈಡೇರಲಿಲ್ಲ. ದೇವಪ್ಪಯ್ಯನಿಗೆ ಉಳ್ಳಾಲದಲ್ಲಿ ಹಲವು ಸಾಹುಕಾರರ ಸ್ನೇಹವಿದ್ದಿತು. ದೇವಪ್ಪಯ್ಯನ ಅಪೇಕ್ಷೆಯಂತೆ ಅವರು ಸುಬ್ರಾಯನಿಗೆ ಸಹಾಯಮಾಡುವಂತೆ ನಟಿಸಿ ದಂಡಿಗೆ ಹೊಳೆದಾಟಲು ಬೇಕಾದ ದೋಣಿಗಳನ್ನು ಒದಗಿಸಿಕೊಟ್ಟರು. ದೋಣಿಗಳ ಅಡಿಯಲ್ಲಿ ಕೂತುಗಳನ್ನು ಕೊರೆಯಿಸಿ ಮೇಣ ಮೆತ್ತಿದ್ದರು. ಅರ್ಧಾಣೆಯ ಗಟ್ಟಿ ಮುಕ್ಕಾಲುಗಳನ್ನು ಚೀಲಗಳಲ್ಲಿ ತುಂಬಿಸಿ ತಮ್ಮ ಕಾಣಿಕೆಯೆಂದು ದೋಣಿಗಳಲ್ಲಿ ತುಂಬಿಸಿದರು. + +ದಂಡು ಗಡಿಬಿಡಿಯಿಂದ ದೋಣೆಯನ್ನು ಹತ್ತಿತು. ಹಾಯಿಬಿಟ್ಟಿತು. ದೋಣಿಗಳು ಮುಂದೆ ಸರಿದು ನಡುಹೊಳೆಯನ್ನು ಮುಟ್ಟಿದುವು. ದಂಡಿನವರು ಕೂತಲ್ಲಿ ಕುಳ್ಳಿರದೆ ತಮ್ಮ ಹುಚ್ಚಾಟಕ್ಕೆ ತೊಡಗಿದ್ದರು. ದೋಣಿಗಳು ಅತ್ತಿತ್ತ ಮಾಲುತ್ತಿದ್ದುವು. ಅಷ್ಟರಲ್ಲಿ ಮೆತ್ತಿದ್ದ ಮೇಣವೆಲ್ಲ ಎದ್ದು ಹೋಯಿತು. ತೂತುಗಳಿಂದ ನೀರು ಹೊಕ್ಕಿತು. ಗಟ್ಟಿಮುಕ್ಕಾಲುಗಳ ಭಾರದಿಂದ ದೋಣಿಗಳೆಲ್ಲ ನಡುಹೊಳೆಯ ಗಯದಲ್ಲಿ ದಂಡಿನೊಂದಿಗೆ ಮುಳುಗಿದುವು. ಸುಬ್ರಾಯನೂ ಹಲವು ಪುಂಡರೂ ಮುಳುಗಿ ಸತ್ತರು. ಈಜಾಡಿ ದಡ ಸೇರುತ್ತಿದ್ದವರನ್ನು ಸರಕಾರದ ಕೆಲವು ಸೈನಿಕರು ಗುಂಡುಹಾರಿಸಿ ಕೊಂದರು. ದೇವಪ್ಪಯ್ಯನು ಸುಬ್ರಾಯನ ದಂಡನ್ನು ಹೀಗೆ ಉಪಾಯದಿಂದ ಹೊಳೆಯಲ್ಲಿ ಮುಳುಗಿಸಿ ಮಂಗಳೂರನ್ನು ಸೇರಿದನು. + +ಆ ವೇಳೆಗೆ ತಲಚೇರಿಯ ಸೈನ್ಯವು ಪತ್ತೆಮಾರಿಗಳಲ್ಲಿಯೂ, ಬೆಂಗಳೂರಿನ ಸೈನ್ಯವು ನೆಲದಾರಿಯಾಗಿಯೂ ಬಂದು ತಲುಪಿದುವು. ಸೈನ್ಯ ಬಂದ ಸುದ್ದಿ ಸಿಕ್ಕಿದೊಡನೆ ಕಲ್ಯಾಣ ಸ್ವಾಮಿಯ ದಂಡು ಚೆಲ್ಲಾಪಿಲ್ಲಿಯಾಗಿ ಚದರಿತು. ಕಲ್ಯಾಣ ಸ್ವಾಮಿಯು ಸೂಳ್ಯಕ್ಕೆ ಓಡಿಹೋದನು. ಕೊಡಗಿನ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಲೀ ಹಾರ್ಡಿಯು ಕಲ್ಯಾಣಸ್ವಾಮಿಯನ್ನೂ, ನಂದಾವರದ ಬಂಗರಸನನ್ನೂ, ಇತರ ಮುಖಂಡರನ್ನೂ ಸೆರೆಹಿಡಿದು ತನಿಕೆ ನಡೆಸಿದನು. ದೇವಪ್ಪಯ್ಯನು ಬೇಕಾದಷ್ಟು ಸಾಕ್ಷಿಗಳನ್ನೂ ರುಜುವಾತುಗಳನ್ನೂ ಹಾಜರುಪಡಿಸಿದನು. ಲೀ ಹಾರ್ಡಿಯು ಬಂಡುಗಾರನಾದ ಕಲ್ಯಾಣ ಸ್ವಾಮಿಗೂ, ಬಂಗರಸನಿಗೂ ಮರಣದಂಡನೆಯನ್ನು ವಿಧಿಸಿ ಮಂಗಳೂರಿನ ಬಿಕ್ರನಕಟ್ಟೆ ಪದವಿನಲ್ಲಿ ಗಲ್ಲಿಗೇರಿಸಿದನು. ಕಾಟಕಾಯಿಗೆ ಸಹಾಯ ಮಾಡಿದ ಹಲವರಿಗೆ ಏಳರಿಂದ ಹದಿನಾಲ್ಕು ವರ್ಷಗಳ ವರೆಗಿನ ಕಠಿಣ ಸಜೆಯಾಯಿತು. ಹಲವರಿಗೆ ಸಿಂಗಾಪುರಕ್ಕೆ ದ್ವೀಪಾಂತರವಾಯಿತು. ಸರಕಾರಕ್ಕೆ ಸಹಾಯಕರಾದ ಹಲವರಿಗೆ ದೇವಪ್ಪಯ್ಯನ ಸಿಫಾರಸಿನ ಮೇರೆಗೆ ಸರಕಾರದ ಬಹುಮಾನ ದೊರೆಯಿತು. ಬಂಟವಾಳದ ಜಮೀನುದಾರ ರಂಗ ಬಾಳಿಗನು ಇಂಗ್ಲಿಷ್ ಸೈನ್ಯಕ್ಕೆ ಪಾಣೆ ಮಂಗಳೂರಿನಲ್ಲಿ ನದಿದಾಟುವುದಕ್ಕೆ ದೋಣಿಗಳನ್ನು ಒದಗಿಸಿಕೊಟ್ಟು ಬಂಟವಾಳದಲ್ಲಿ ಧಾರಾಳ ಅಕ್ಕಿ ಸರಬರಾಯಿ ಮಾಡಿದುದರಿಂದ ಅವನಿಗೆ ಮೂರು ತಲಾಂತರಗಳವರೆಗೆ ತೀರ್ವೆಯನ್ನು ಮಾಫಿಬಿಟ್ಟು ‘ಚಾವಲ್ ಕೀ ರಾಜ್’ ಎಂಬ ಹೆಸರನ್ನು ಕೊಟ್ಟರು.ಹೀಗೆ ದೇವಪ್ಪಯ್ಯನ ಛಲ ಪರಿಶ್ರಮಗಳಿಂದ ಕಾಟಕಾಯಿಯು ಒಂದು ತಿಂಗಳಲ್ಲಿ ಹೇಳ ಹೆಸರಿಲ್ಲದಂತೆ ಅಡಗಿಹೋಯಿತು. ಮಂಗಳೂರಿನ ಕಲೆಕ್ಟರನೂ ಕೊಡಗಿನ ಮಿಲಿಟರಿ ಗವರ್ನರನೂ ಕೊಡಗಿನ ಈ ಕಾಟಕಾಯಿಯ ಕೈಫಿಯತ್ತಿನಲ್ಲಿ ಅವನ ಜಾಣ್ಮೆ ಸಾಹಸಗಳನ್ನು ಮನವಾರೆ ಕೊಂಡಾಡಿರುವರು. + +ಮಂಗಳೂರಿನಲ್ಲಿ ಈಗ ಉಡುಪಿ ಶ್ರೀ ಕೃಷ್ಣ ಭವನವಿರುವ ಸ್ಥಳದಲ್ಲಿ ಅವನ ಪುರಾತನದ ದೊಡ್ಡ ಮನೆಯಿತ್ತು. ಆ ಮನೆಯಿಂದಲೇ ಆ ಬೀದಿಗೆ ‘ಕರಣಿಕ ರಸ್ತೆ’ ಎಂದು ಹೆಸರಾಯಿತು. ಸಾರಸ್ವತ ಬ್ರಾಹ್ಮಣರ ಎಲ್ಲೋರಕರ ಕುಟುಂಬದ ಅವನ ಹಿರಿಯರು ಇಕ್ಕೇರಿ ನಾಯಕರ ಕಾಲದಿಂದ ಕರಣಿಕ ವೃತ್ತಿಯನ್ನವಲಂಬಿಸಿಕೊಂಡು ಕೊಂಕಣದಿಂದ ಇಲ್ಲಿಗೆ ಬಂದು ನೆಲಸಿದ್ದರು. ಶರವು ಗಣಪತಿ ದೇವಾಲಯದ ಇದಿರಿಗಿರುವ ‘ಕರಣಿಕ ಸತ್ರ’ ‘ಕರಣಿಕ ಕಟ್ಟೆ’ ಮುಂತಾದುವು ಕರಣಿಕ ದೇವಪ್ಪಯ್ಯನ ಹಲವಾರು ಧರ್ಮಕಾರ್ಯಗಳ ಕುರುಹಾಗಿ ಇಂದಿಗೂ ಉಳಿದಿವೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_458.txt b/Kenda Sampige/article_458.txt new file mode 100644 index 0000000000000000000000000000000000000000..372e0f8ad17c4b5a6ac8947722156088b3b4fdcc --- /dev/null +++ b/Kenda Sampige/article_458.txt @@ -0,0 +1,13 @@ + + +ಕಾನೂನಿನ ಎದುರು ಒಬ್ಬ ದ್ವಾರಪಾಲಕ ನಿಂತಿದ್ದಾನೆ. ಹಳ್ಳಿಯವನೊಬ್ಬ ಅವನ ಹತ್ತಿರ ಬಂದು ಕಾನೂನಿನ ಬಳಿಗೆ ಬಿಡು ಅಂತ ಕೇಳಿದ್ದಕ್ಕೆ ಆ ದ್ವಾರಪಾಲಕ ‘ಈವಾಗ ಬಿಡೋಕೆ ಆಗಲ್ಲ’ ಅಂತಾನೆ. ಬಂದವನು ಯೋಚಿಸಿ, ‘ಹಾಗಾದರೆ ಆಮೇಲೆ ಬಿಡಬಹುದು ಅಂತ ಅರ್ಥಾನ’ ಅಂತ ಕೇಳ್ತಾನೆ. ದ್ವಾರಪಾಲಕ ‘ಆಗಬಹುದೇನೋ, ಆದರೆ ಈಗಲ್ಲ’ ಅನ್ತಾನೆ. ಕಾನೂನಿನ ಹತ್ತಿರ ಬಿಡೋ ಗೇಟು ತೆಕ್ಕೊಂಡೇ ಇರೋದರಿಂದ, ದ್ವಾರಪಾಲಕ ಪಕ್ಕಕ್ಕೆ ನಿಂತಿದ್ದರಿಂದ, ಇವನು ಬಾಗಿಲಿಂದ ಒಳಕ್ಕೆ ಇಣುಕಿ ನೋಡಲು ಬಗ್ಗುತ್ತಾನೆ. ಅದನ್ನು ನೋಡಿ ದ್ವಾರಪಾಲಕ ‘ನಿನಗೆ ಅಷ್ಟೊಂದು ಆಸೆ ಇದ್ದರೆ ನನ್ನ ಮಾತು ಮೀರಿ ಒಳಗೆ ಹೋಗು ನೋಡಣ. ಆದರೆ ನೆನಪಿಟ್ಕೊ: ನಾನು ಬಲಶಾಲಿ. ಅಲ್ಲದೆ ನಾನು ಅತಿ ಕೆಳಗಿನ ಕಾವಲಿನವನು. ಒಳಗೆ ಒಂದೊಂದು ಕೋಣೆಲೂ ಕಾವಲಿನವರು ಇದ್ದಾರೆ. ಒಬ್ಬೊಬ್ಬರೂ ಮುಂಚಿನವರಿಗಿಂತ ಬಲಶಾಲಿಗಳು. ಮೂರನೇ ಕಾವಲುಗಾರನ್ನ ನಾನು ಕಣ್ಣೆತ್ತಿ ನೋಡೋಕೆ ಕೂಡ ಆಗಲ್ಲ.’ ಅಂತ ನಗುತ್ತಾನೆ. + +ಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ. ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ. ಆದರೆ ಈ ದಪ್ಪ ಚರ್ಮದ ಕೋಟು ಹಾಕ್ಕೊಂಡಿರೋ ದ್ವಾರಪಾಲಕನ ನೋಡಿದರೆ, ಅವನ ಚೂಪಾದ ದೊಡ್ಡ ಮೂಗು, ಅವನ ಉದ್ದದ ಸಪೂರದ ಕಪ್ಪು ಗಡ್ಡ ನೋಡಿದರೆ, ಅವನೇ ಅನುಮತಿ ಕೊಡೋ ತನಕ ಕಾಯೋದು ಒಳ್ಳೇದು ಅಂತ ತೀರ್ಮಾನಿಸಿಕೋತಾನೆ. ದ್ವಾರಪಾಲಕ ಅವನಿಗೆ ಒಂದು ಬೆನ್ನಿಲ್ಲದ ಕುರ್ಚಿಕೊಟ್ಟು ಬಾಗಿಲ ಒಂದು ಪಕ್ಕ ಕೂತುಕೊಳ್ಳೋಕೆ ಬಿಡುತಾನೆ. ಅಲ್ಲಿ ಆ ಹಳ್ಳಿಯವನು ತುಂಬಾ ದಿನಗಳು, ವರ್ಷಗಳು ಕೂತುಕೊಂಡೇ ಇರ್ತಾನೆ. ಬೇಕಾದಷ್ಟು ಸಲ ಅನುಮತಿಗಾಗಿ ಪ್ರಯತ್ನ ಪಡ್ತಾನೆ, ಮೇಲಿಂದ ಮೇಲೆ ಇವನ ಬೇಡಿಕೆಗಳಿಂದ ದ್ವಾರಪಾಲಕನನ್ನ ಬೇಜಾರು ಮಾಡಿಬಿಡ್ತಾನೆ. ಕಾವಲುಗಾರ ಇವನಿಗೆ ಆಗಾಗ ಚಿಕ್ಕ ಪುಟ್ಟ ಪರೀಕ್ಷೆ ಮಾಡ್ತಾ ಅವನ ಊರು ಮನೆ ಬಗ್ಗೆ, ಆಮೇಲೆ ಇನ್ನೂ ಏನೇನೋ ಕೇಳ್ತಾನೆ. ಆದರೆ ಆ ಪ್ರಶ್ನೆಗಳಾವುದೂ ಆಪ್ತವಾದ್ದಲ್ಲ. ಬರೇ ಸಭ್ಯರು ಕೇಳೋ ಹಾಗೆ. ಪ್ರತಿಸಲಾನೂ ಕೊನೆಗೆ ಮತ್ತೆ ‘ಒಳಗೆ ಬಿಡೋಕೆ ಆಗಲ್ಲ’ ಅಂತ ಮಾತು ಮುಗಿಸ್ತಾ ಇದ್ದ. ಹಳ್ಳಿಯವನು ಈ ಪ್ರಯಾಣಕ್ಕೆ ಚೆನ್ನಾಗೇ ತಯಾರಾಗಿ ಬಂದಿದಾನೆ. ತನ್ನ ಬಳಿ ಇದ್ದ ಬೆಲೆ ಬಾಳೋದನ್ನೆಲ್ಲಾ ದ್ವಾರಪಾಲಕನಿಗೆ ಲಂಚ ಕೊಟ್ಟು ಕೊಟ್ಟು ಕೈ ಖಾಲಿ ಮಾಡಿಕೊಂಡಿದಾನೆ. ದ್ವಾರಪಾಲಕ ಕೊಟ್ಟಿದ್ದೆಲ್ಲಾ ಒಪ್ಪಿಸ್ಕೊಂಡು, ತಗೊಳ್ತಾ ‘ನಾನು ತಗೊಳ್ತಾ ಇರೋದು, ನೀನು ಯಾವುದೋ ಪ್ರಯತ್ನ ಮಾಡದೆ ಬಿ‌ಟ್ಟೆನಲ್ಲ ಅಂತ ಬೇಜಾರು ಮಾಡ್ಕೋಬಾರ್ದು ಅದಕ್ಕೆ’ ಅಂತ ಹೇಳ್ತಾನೆ. + + + +ಆ ಹಲವು ವರ್ಷಗಳುದ್ದಕ್ಕೂ ಹಳ್ಳಿಯವನು ದ್ವಾರಪಾಲಕನ್ನ ಎಡೆಬಿಡದೆ ಗಮನಿಸ್ತಾನೇ ಇದ್ದಾನೆ. ಅವನಿಗೆ ಬೇರೆ ಕಾವಲುಗಾರರೆಲ್ಲಾ ಮರತೇ ಹೋದರು, ಈ ಮೊದಲನೆಯವನೇ ಕಾನೂನಿನ ಹತ್ತಿರ ಹೋಗೋಕೆ ಇರೋ ಅಡ್ಡಿ ಅನ್ನೋ ಹಾಗೆ ಕಾಣತ್ತೆ. ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ, ದ್ವಾರಪಾಲಕನನ್ನ ಉದ್ದಕ್ಕೂ ಗಮನಿಸ್ತಾ ಅವನ ಮೇಲಂಗಿಯ ಕೊರಳಪಟ್ಟಿಲಿ ಹುಳಗಳು ಇರೋದು ಕಂಡುಹಿಡಕೊಳ್ತಾನೆ. ಕಾವಲಗಾರನ ಮನಸ್ಸು ಬದಲಾಯಿಸೋಕೆ ನೆರವಾಗಿ ಅಂತ ಅವುಗಳ ಹತ್ತಿರಾನೂ ಬೇಡ್ಕೋಳ್ತಾನೆ. ಕೊನೆಗೆ ಅವನ ಕಣ್ಣು ಮಂದ ಆಗ್ತಾ ಆಗ್ತಾ ಸುತ್ತಲೂ ಕತ್ತಲಾಗ್ತಾ ಇದೆಯಾ ಅಥವಾ ಅವನು ಕಣ್ಣು ಮೋಸ ಮಾಡ್ತಾ ಇದೆಯಾ ಅಂತಲೂ ಅವನಿಗೆ ಗೊತ್ತಾಗಲ್ಲ. ಆದರೂ ಕತ್ತಲಲ್ಲಿ ಕಾನೂನಿನ ಬಾಗಲಿಂದ ಮುಚ್ಚಿಹಾಕೋಕೆ ಆಗದಂತ ಬೆಳಕಿನ ಹೊಳೆ ಬರ್ತಿದ್ದುದ್ದು ಗೊತ್ತಾಗತ್ತೆ. + +ಇನ್ನು ಹೆಚ್ಚು ದಿನ ಅವನು ಬದುಕಲ್ಲ. ಸಾಯೋಕೆ ಮುಂಚೆ, ಅಷ್ಟು ವರ್ಷದ ಅನುಭವ ಎಲ್ಲಾ ಅವನ ತಲೇಲಿ ಠಳಾಯಿಸಿ ದ್ವಾರಪಾಲಕನ್ನ ಯಾವತ್ತೂ ಕೇಳದೇ ಇರೋ ಒಂದು ಪ್ರಶ್ನೆಯ ರೂಪ ಪಡಿಯತ್ತೆ. ಅವನು ಕಾವಲಗಾರನನ್ನ ಕೂತ್ತಲ್ಲಿಂದಲೇ ಕರಿತಾನೆ. ಯಾಕಂದರೆ ಅವನಗೀಗ ತನ್ನ ಸೆಟಕೊಂಡ ಮೈನ ಎತ್ತೊಕೂ ಅಗ್ತಿಲ್ಲ. ದ್ವಾರಪಾಲಕ ಈಗ ಬಗ್ಗಿ ಅವನನ್ನ ನೋಡಬೇಕು. ಹಳ್ಳಿಯವನಿಗೆ ಅನುಕೂಲವಲ್ಲದಂತೆ ಅವರಿಬ್ಬರ ನಡುವಿನ ಎತ್ತರದ ಅಂತರ ತುಂಬಾ ಜಾಸ್ತಿ ಆಗಿದೆ. ‘ಈಗಲೂ ನಿನಗೆ ಅದೇನು ತಿಳಕೊಳೋ ಕಾತರ?’ ಅಂದು ದ್ವಾರಪಾಲಕ ‘ನಿನ್ನ ದಾಹ ಯಾವತ್ತಿಗೂ ಆರಲ್ಲ!’ ಅನ್ನುತ್ತಾನೆ. ಅದಕ್ಕೆ ಹಳ್ಳಿಯವನು ‘ಎಲ್ಲರೂ ಕಾನೂನನ್ನು ತಲುಪಬೇಕು ಅಂತ ಕಷ್ಟ ಪಟ್ಟೇ ಪಡ್ತಾರೆ, ಆದು ಹೇಗೆ ಇಷ್ಟು ವರ್ಷ ನನ್ನ ಬಿಟ್ಟು ಬೇರೆ ಯಾರೂ ಒಳಗೆ ಹೋಗಬೇಕು ಅಂತ ಕೇಳಿಲ್ಲ?’ ಅಂತ ಕೇಳ್ತಾನೆ. ದ್ವಾರಪಾಲಕನಿಗೆ ಆ ಹಳ್ಳಿಯವನ ಕೊನೆಗಾಲ ಬಂದಿದೆ ಅಂತ ಗೊತ್ತಾಗಿ, ಅವನ ಮಂದ ಕಿವಿಗೆ ಕೇಳಲಿ ಅಂತ ದನಿಯೇರಿಸಿ ‘ಬೇರೆ ಯಾರನ್ನೂ ಇಲ್ಲಿ ಬಿಡೋ ಹಾಗಿರಲಿಲ್ಲ ಯಾಕೆಂದರೆ ಈ ದ್ವಾರ ನಿನಗೆ ಮಾತ್ರ ಮೀಸಲಾಗಿತ್ತು. ಈಗ ಅದನ್ನು ನಾನು ಮುಚ್ತೀನಿ’ ಅಂತ ಕೂಗಿ ಹೇಳ್ತಾನೆ. + +ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು. \ No newline at end of file diff --git a/Kenda Sampige/article_459.txt b/Kenda Sampige/article_459.txt new file mode 100644 index 0000000000000000000000000000000000000000..0c6a2622e1599af325c5fa4a50f51806515e3e6b --- /dev/null +++ b/Kenda Sampige/article_459.txt @@ -0,0 +1,49 @@ +ಮೇಲಿನ ಸಂಗತಿ ನಡೆದದ್ದು 1970 ರ ದಶಕದಲ್ಲಿ. ಆಗ ನಾನು ಮತ್ತು ನಾರಾಯಣ ಉಪಾಧ್ಯಾಯರು ಒಂದೇ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದೆವು. ಆಮೇಲೆ ನಮಗಿಬ್ಬರಿಗೂ ಬೇರೆ ಬೇರೆ ಊರುಗಳಿಗೆ ಟ್ರಾನ್ಸ್ಫರ್ ಆಯಿತು. ನಮ್ಮ ಸಂಪರ್ಕ ಕಡಿಮೆಯಾಗುತ್ತಾ ಹೋಯಿತು. ಆಗೊಮ್ಮೆ ಈಗೊಮ್ಮೆ ನಾವಿಬ್ಬರೂ ಮಂಗಳೂರು ಅಥವಾ ಉಡುಪಿಗಳಲ್ಲಿ ನಡೆಯುವ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಅಥವಾ ಮೌಲ್ಯಮಾಪನ ಕಾರ್ಯದ ಸಂದರ್ಭದಲ್ಲಿ ಭೇಟಿಯಾದಾಗ ಒಟ್ಟಿಗೆ ಕಾಫಿ ಕುಡಿದು ಹರಟೆ ಹೊಡೆದು ನಮ್ಮ ಸ್ನೇಹವನ್ನು ಊರ್ಜಿತದಲ್ಲಿಟ್ಟುಕೊಂಡೇ ಇದ್ದೆವು. ಆದರೆ ಈಗಿನ ಕಾಲದ ಧಾವಂತದಿಂದಾಗಿ ನಮಗೆ ಇಬ್ಬರಿಗೂ ಒಬ್ಬರ ಮನೆಗೆ ಹೋಗಿ ಒಂದೆರಡು ದಿನ ಬಿಡಿ, ಅರ್ಧ ಗಂಟೆಯ ಕಾಲವೂ ಕುಳಿತು ಹರಟೆಹೊಡೆದು ಬರುವಷ್ಟು ವ್ಯವಧಾನ ಇರಲಿಲ್ಲ. + +ಅನಂತ ಭಟ್ಟನ ಕತೆ ಮಾತ್ರ ನನ್ನನ್ನು ಯಾವಾಗಲೂ ಕಾಡುತ್ತಿತ್ತು. ನಾವು ಭೇಟಿಯಾದಾಗಲೆಲ್ಲಾ ನಾನು ಆ ಬಗ್ಗೆ ವಿಚಾರಿಸುತ್ತಲೇ ಇದ್ದೆ. ಅವರ ಮನೆಯ ಬಾಗಿಲನ್ನು ಒದೆಯುವ ಅನಂತ ಭಟ್ಟನ ಪ್ರೇತಕ್ಕೆ ತಿಲಹೋಮ ಇತ್ಯಾದಿಗಳನ್ನು ಮಾಡಿ ಮುಕ್ತಿ ಮಾಡಿತೆಂದು; ಈಗ ಬಾಗಿಲು ಒದೆಯುವ ಶಬ್ದ ಕೇಳುವುದಿಲ್ಲವೆಂದು ಅವರು ಒಮ್ಮೆ ಹೇಳಿದ್ದರು. ಆನಂತರ ನಾನು ಅನಂತ ಭಟ್ಟನ ಬಗ್ಗೆ ಕೇಳುವುದನ್ನು ಬಿಟ್ಟಿದ್ದೆ.  ಇತ್ತೀಚೆಗೆ ನಾರಾಯಣ ಉಪಾಧ್ಯಾಯರು ನನ್ನ ಮೊಬೈಲಿಗೆ ಕರೆಮಾಡಿ, “ನೀವು ಹಿಂದೊಮ್ಮೆ ನಮ್ಮ ಮನೆಗೆ ಬಂದಿದ್ದಾಗ ನಿಮಗೆ ಅನಂತ ಭಟ್ಟನ ಪ್ರೇತದ ಕತೆ ಹೇಳಿದ್ದೆನಲ್ಲ. ಈಗ ಆ ಕತೆಗೆ ಬೇರೊಂದು ಆಯಾಮ ಸಿಕ್ಕಿದೆ. ನೀವು ನಾಳೆ ಶನಿವಾರ ನಮ್ಮ ಮನೆಗೆ ಬಂದರೆ ನಾವು ಮರುದಿನ ಭಾನುವಾರ ಬಂಟ್ವಾಳಕ್ಕೆ ಹೋಗಿಬರಬಹುದು. ಬಹಳ ಕುತೂಹಲವುಳ್ಳ ಕತೆಯಿದು. ನೀವು ಬರಲೇ ಬೇಕು” ಎಂದರು. ನನಗೆ ಆ ವಾರಾಂತ್ಯ ಬೇರೇನೂ ಕೆಲಸ ಇಲ್ಲದ ಕಾರಣ “ನಾನು ಖಂಡಿತ ಬರುತ್ತೇನೆ” ಎಂದೆ. + +ಮರುದಿನ ಸಂಜೆ ನಾಲ್ಕು ಗಂಟೆಯ ಹೊತ್ತಿಗೆ ಗಂಪದಬೈಲು ತಲುಪಿದೆ. ಈಗ ಬಸ್ಸುಗಳ ಓಡಾಟ ಹೆಚ್ಚಾಗಿದ್ದುದರಿಂದ ಮೂವತ್ತು ವರ್ಷಗಳ ಹಿಂದಿಗಿಂತ ವೇಗವಾಗಿ ತಲುಪಲು ಸಾಧ್ಯವಾಯಿತು. ಆದರೆ ಅಂದಿನ ಪ್ರಯಾಣದಲ್ಲಿ ಲಭಿಸಿದ ಮನೋಲ್ಲಾಸ ಈ ಬಾರಿ ಸಿಗಲಿಲ್ಲ. ಸಂಜೆಯ ಕಾಫಿ, ತಿಂಡಿ ಆದ ನಂತರ ನಾರಾಯಣ ಉಪಾಧ್ಯಾಯರು ನನ್ನನ್ನು ಬಯಲಿನತ್ತ ಕರೆದುಕೊಂಡು ಹೋದರು. ಈಗ ಜನವರಿ ತಿಂಗಳಾದ ಕಾರಣ ಬೈಲಿನಲ್ಲಿ ನೀರು ಇರಲಿಲ್ಲ. ಗದ್ದೆಗಳ ಫಸಲು ಕೊಯ್ದಾಗಿತ್ತು. ಅಲ್ಲಲ್ಲಿ ಕೊಕ್ಕರೆಗಳು ಹೆಜ್ಜೆಹಾಕುತ್ತಾ ಆಹಾರ ಹುಡುಕುತ್ತಿದ್ದವು. ಒಣಗಲಾರಂಭಿಸಿದ್ದ ಖಾಲಿ ಗದ್ದೆಗಳ ನಡುವೆಯೇ ನಡೆದುಕೊಂಡು ಹೋಗಿ ನಾವು ಹಿಂದೆ ಕುಳಿತಿದ್ದ ಅದೇ ಬಂಡೆಯ ಮೇಲೆ ಹೋಗಿ ಕುಳಿತೆವು. ಇಡೀ ಬೈಲು ಗಾಳಿಯ ನದಿಯಂತಿತ್ತು, ನಾವು ಅದರಲ್ಲಿ ಮುಳುಗಿ ಕುಳಿತಂತೆ ಹಿತವಾಗಿತ್ತು. + +ನಾರಾಯಣ ಉಪಾಧ್ಯಾಯರು ಪ್ರಾರಂಭಿಸಿದರು, “ಹಿಂದೊಮ್ಮೆ ನಾನು ನಿಮಗೆ ಕತೆ ಹೇಳಿದ್ದೆನಲ್ಲ, ಈಗ ಅದಕ್ಕೆ ಸಂಬಂಧಿಸಿದ ಇನ್ನೊಂದು ಪೂರ್ವಕತೆ ನನಗೆ ಸಿಕ್ಕಿದೆ. ಅದನ್ನು ನಿಮಗೆ ಹೇಳಬೇಕು. ಆಗ ನಿಮಗೆ ಹಿಂದಿನ ಚಿತ್ರ ಸಮಗ್ರವಾಗಿ ಸಿಗುತ್ತದೆ ಮಾತ್ರವಲ್ಲ, ನಾಳೆ ನಾವು ನೋಡಲಿರುವ ವಿದ್ಯಮಾನವನ್ನು ಸ್ಪಷ್ಟವಾಗಿ ಅರಿತುಕೊಳ್ಳಲು ನೆರವಾಗುವುದು”. ಇಂತಹದೊಂದು ಮುನ್ನುಡಿಯ ನಂತರ ಅವರು ಕತೆ ಹೇಳಲಾರಂಭಿಸಿದರು : ಅದು ಕಲ್ಯಾಣಪ್ಪನ ಕಾಟಕಾಯಿಯ ಕಾಲ. ಅಂದರೆ 1837 ನೆಯ ಇಸವಿ. ಕಲ್ಯಾಣಪ್ಪನ ಹೆಸರು ಹೇಳಿಕೊಂಡು ಅಲ್ಲಲ್ಲಿ ಪುಂಡರಾದ ಶಕ್ತಿವಂತರು, ಆಸುಪಾಸಿನ ಶ್ರೀಮಂತರನ್ನು ದೋಚಿ ಹಣ ಮಾಡಿಕೊಳ್ಳತೊಡಗಿದ್ದರು. ಅಂತಹವರಲ್ಲಿ ಒಬ್ಬ ಬಂಟ್ವಾಳದ ಸಮೀಪದ ನೂತಬೆಟ್ಟಿನ ಗಾಂಪ ಕೊಡ್ಡ ಎಂಬವ. + +ಗಾಂಪ ಕೊಡ್ಡನಿಗೆ ನೂತಬೆಟ್ಟಿನಲ್ಲಿ ಐದಾರು ಎಕರೆ ಗದ್ದೆಯಿತ್ತು. ಅವನು ಸ್ವಲ್ಪ ಖಯಾಲಿ ಮನುಷ್ಯ. ಪುಂಡ ಅಂತ ಕೂಡಾ ಹೇಳಬಹುದು. ಅವನ ಬಗೆಯ ನಾಲ್ಕಾರು ಯುವಕರು ಅವನ ಜತೆಗಾರರಾಗಿದ್ದರು. ಅವರ ದುಶ್ಚಟಗಳಿಗೆ ಬೇಕಾದಷ್ಟು ಉತ್ಪತ್ತಿ ಅವನ ಗದ್ದೆಯಲ್ಲಿ ಸಿಗುತ್ತಿರಲಿಲ್ಲ. ಅಲ್ಲದೆ ಅವನ ಗದ್ದೆಗಳಿಗೆ ಕುಂಪಣಿ ಸರಕಾರ ಸಿಕ್ಕಾಪಟ್ಟೆ ಕಿಸ್ತು (ಕಂದಾಯ) ವಿಧಿಸಿಬಿಟ್ಟಿತ್ತು. ಅದರ ಕತೆ ಬೇರೆಯೇ ಇದೆ. ಈ ಕತೆಯಲ್ಲಿ ಗಾಂಪ ಕೊಡ್ಡನ ಮನೆ ಮತ್ತು ಹಿಡುವಳಿಗೆ ತಾರಾಯಿತೋಟ ಎಂಬ ಹೆಸರು ಬಂದ ವಿಚಾರವೂ ತಿಳಿಯುತ್ತದೆ. ಆದ್ದರಿಂದ ಈ ಕತೆಯನ್ನು ತಿಳಿಯುವುದು ಸೂಕ್ತ. ಕುಂಪಣಿಯವರು ಬಂದು ಸೆಟ್ಲ್ ಮೆಂಟ್ ಮಾಡುವ ಮುಂಚೆ ಶಿವಪ್ಪನಾಯಕನ ಶಿಸ್ತು ಅಥವಾ ಕಿಸ್ತು ಎಂಬ ಭೂಗಂದಾಯ ಇತ್ತಂತೆ. ಅದರ ನಡುವೆ ಮೈಸೂರಿನ ನವಾಬರು ಆಳಿದ್ದರೂ ಶಿವಪ್ಪನಾಯಕನ ಕಾಲದ ಭೂಗಂದಾಯವೇ ಮುಂದುವರಿದಿತ್ತಂತೆ. ಕುಂಪಣಿಯವರು ಈ ದೇಶವನ್ನೆಲ್ಲ ವಶಪಡಿಸಿಕೊಂಡ ಮೇಲೆ ಕಲೆಕ್ಟರ್ ಮನ್ರೋ ಎಂಬವನು ಊರೂರಿಗೆ ಬಂದು ಭೂಮಿ ಕಾಣಿ ನೋಡಿ, ಪೈರು ಪಚ್ಚೆ ಅಳೆದು ತೆರಿಗೆ ನಿರ್ಧಾರ ಮಾಡುತ್ತಾ ಸರ್ಕೀಟು ಹೋಗುತ್ತಿದ್ದನಂತೆ. + +ಹಾಗೆ ಕಲೆಕ್ಟರರ ಸರ್ಕೀಟು ನೂತಬೆಟ್ಟಿಗೂ ಬಂತಂತೆ. ಗಾಂಪ ಕೊಡ್ಡನ ಅಪ್ಪನೋ, ಅಜ್ಜನೋ ಏನೋ – ಆಗ ಇದ್ದವರು. ಅವರಿಗೆ ಕಲೆಕ್ಟರರು ಯಾಕೆ ಬರುವುದು ಎಂದು ತಿಳಿದಿರಲಿಲ್ಲ. ಕೃಷಿ ನೋಡಲು ಬರುವುದೆಂದು ಸುದ್ದಿಯಿತ್ತು, ಆದರೆ ತೆರಿಗೆ ಹಾಕುವ ಉದ್ದೇಶವೆಂದು ಅವರಿಗೆ ತಿಳಿದಿರಲಿಲ್ಲ. ಕೊಡ್ಡನ ಮನೆಯವರು ಕಲೆಕ್ಟರರು ಬಂದಾಗ ತಮ್ಮ ಕೃಷಿ ಎದ್ದು ಕಾಣಬೇಕೆಂದು ಬೇರೆ ಊರಿನಿಂದ ಎಳನೀರು ಗೊನೆಗಳು, ತೆಂಗಿನಕಾಯಿ ಗೊನೆಗಳನ್ನು ತಂದು ಬಹಳ ಕಷ್ಟಪಟ್ಟು ಅವುಗಳನ್ನು ತಮ್ಮ ಬರಡು ತೆಂಗಿನಮರಗಳಿಗೆ ಕಟ್ಟಿದ್ದರಂತೆ.ಕಲೆಕ್ಟರ್ ಮನ್ರೋ ಬಂದು ನೋಡಿ ‘ಆಹಾ! ಈ ಗುಡ್ಡದಲ್ಲೂ ಎಂತಹ ಬೆಳೆ!’ ಎಂದು ಉದ್ಗರಿಸಿ ಆ ಹಿಡುವಳಿಗೆ ತೆರಿಗೆ ಹೆಚ್ಚಿಸಿ ಆದೇಶ ಮಾಡಿದನಂತೆ. ನೂತಬೆಟ್ಟಿನಲ್ಲಿ ಇನ್ನೂ ಒಂದಿಬ್ಬರು ಹಾಗೆ ಮಾಡಿದ್ದರಂತೆ. ಕೊಡ್ಡನ ಮನೆಯವರ ಮೂರ್ಖತನದಿಂದಾಗಿ ಅವರ ಕಿಸ್ತು ಹೆಚ್ಚಾದದ್ದರಿಂದ ಊರವರು ಅವರ ಹಿಡುವಳಿಯನ್ನು ಹಾಸ್ಯವಾಗಿ ತಾರಾಯಿ (ತೆಂಗಿನ ಕಾಯಿ) ತೋಟ ಎಂದು ಕರೆಯತೊಡಗಿದ್ದರು. + + + +ಗಾಂಪ ಕೊಡ್ಡನ ಖಯಾಲಿಗಳಿಗೆ ಹಣದ ಅವಶ್ಯಕತೆ ಹೆಚ್ಚು ಹೆಚ್ಚಾಗುತ್ತಾ ಬಂದ ಕಾಲದಲ್ಲಿಯೇ ಕಲ್ಯಾಣಪ್ಪನ ಕಾಟಕಾಯಿ ಶುರುವಾದದ್ದು ಯೋಗಾಯೋಗ ಎಂದೇ ಹೇಳಬೇಕು. ಕಾಟಕಾಯಿಯ ಸಂದರ್ಭದಲ್ಲಿ ಅಲ್ಲಲ್ಲಿ ಪುಂಡಪೋಕರಿಗಳ ತಂಡಗಳು ಕಲ್ಯಾಣಪ್ಪನ ಹೆಸರು ಹೇಳಿಕೊಂಡು ಊರೂರನ್ನು ದೋಚುತ್ತಾ ತಿರುಗಾಡುತ್ತಿದ್ದವು. ಅಲ್ಪಸ್ವಲ್ಪ ಚಿನ್ನಾಭರಣ ಇದ್ದವರು ಅವುಗಳನ್ನೆಲ್ಲ ಗಂಟುಕಟ್ಟಿ ಅಡಗಿಸಿಡುತ್ತಿದ್ದರು. ಅಥವಾ ಬಾವಿಗಳಿಗೆ ಹಾಕಿಬಿಡುತ್ತಿದ್ದರು.  ನೂತಬೆಟ್ಟಿನವರಿಗೆ ಪುತ್ತೂರಿಗೆ ಕಲ್ಯಾಣಪ್ಪನ ಕಾಟಕಾಯಿ ಬಂದ ಸುದ್ದಿ ಬಂದು ತಲುಪಿದಾಗ ಇನ್ನು ತಮ್ಮ ಗತಿ ಮುಗಿಯಿತೆಂದೇ ಭಯವುಂಟಾಗತೊಡಗಿತು. ಎಲ್ಲರೂ ತಮ್ಮ ತಮ್ಮ ನಗ ನಾಣ್ಯಗಳನ್ನು ಅಡಗಿಸಿಡತೊಡಗಿದರು. ಅದೇ ಸಮಯದಲ್ಲಿ ಗಾಂಪ ಕೊಡ್ಡನಿಗೆ ತನ್ನಂತಹ ಪುಂಡರು ಊರೂರನ್ನು ದೋಚತೊಡಗಿದ್ದ ಸುದ್ದಿ ತಿಳಿಯಿತು. ಇವರು ಕೂಡಾ ಬೇರೆ ಬೇರೆ ಊರುಗಳಿಗೆ ದಾಳಿಮಾಡಿ ಸಿಕ್ಕಸಿಕ್ಕಿದವರನ್ನೆಲ್ಲ ದೋಚಿಕೊಂಡು ಬರತೊಡಗಿದರು. ಬಂಟ್ವಾಳ ತಾಲೂಕಿನಲ್ಲಿ ಸುಮಾರು ಇಪ್ಪತ್ತು – ಮೂವತ್ತು ದಿನಗಳ ಕಾಲ ಗಾಂಪ ಕೊಡ್ಡನ ಹಾವಳಿ ನಡೆದಿತ್ತು. ಆ ನಡುವೆ ಕಲ್ಯಾಣಪ್ಪನ ಸೈನ್ಯ ಬಂಟ್ವಾಳದ ಮೂಲಕ ಹಾದುಹೋಗಿ ಮಂಗಳೂರನ್ನು ಆಳಲು ತೊಡಗಿಯೂ ಆಗಿತ್ತು. + +ಕೊನೆಗೊಮ್ಮೆ “ಬ್ರಿಟಿಷರು ಹಿಂದೆ ಬಂದು ಕಲ್ಯಾಣಪ್ಪನನ್ನೂ ಅವನ ಜತೆಗಾರರನ್ನೂ ಹಿಡಿದು ಗಲ್ಲಿಗೇರಿಸಿದರಂತೆ; ಇನ್ನು ಊರೂರಿಗೆ ಸೈನ್ಯ ಕಳಿಸಿ ಕಲ್ಯಾಣಪ್ಪನ ಕಡೆಯವರನ್ನು ಹಿಡಿದು ಗಲ್ಲಿಗೇರಿಸುತ್ತಾರಂತೆ” ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹರಡಿತು. ಜನರಿಗೆ ಒಮ್ಮೆ ಅಯ್ಯಮ್ಮ ಎಂದು ನಿರಾಳವಾಯಿತು. ಊರೂರು ತಿರುಗಿ ಹಾವಳಿ ಮಾಡುತ್ತಿದ್ದ ಗಾಂಪ ಕೊಡ್ಡನಂತವರು ಒಮ್ಮೆಲೇ ಕಣ್ಮರೆಯಾಗಿಬಿಟ್ಟರು. ಕುಂಪಣಿ ಸೈನ್ಯ ನಿಜವಾಗಿಯೂ ದರೋಡೆಗಾರರನ್ನು ಹುಡುಕುತ್ತ ಅಂತಹವರನ್ನು ಹಿಡಿದು ಶಿಕ್ಷೆ ಕೊಡಲು ಪ್ರಾರಂಭಿಸಿತ್ತು. ಅವರ ಗುಪ್ತಚರರು ಊರೂರಿಗೆ ತಿರುಗಾಡುತ್ತಾ ಕಲ್ಯಾಣಪ್ಪನ ಕಾಟಕಾಯಿಗೆ ಸಹಕರಿಸಿದ ಪುಂಡರ ಗುಂಪುಗಳ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದರು. ಜನರು ಕೂಡಾ ತಾವಾಗಿಯೇ ಕುಂಪಣಿ ಸರಕಾರಕ್ಕೆ ಕಾಟಕಾಯಿಯವರ ಮಾಹಿತಿಯನ್ನು ಕೊಡಲು ಮುಂದಾಗುತ್ತಿದ್ದರು. ಅಂತಹ ಸಂದರ್ಭದಲ್ಲಿ, “ಇನ್ನು ಗಾಂಪ ಕೊಡ್ಡನನ್ನು ಹಿಡಿಯಲು ಬರುತ್ತಾರಂತೆ” ಎಂಬ ಸುದ್ದಿ ನೂತಬೆಟ್ಟಿನಲ್ಲಿ ಹಬ್ಬಿತು. + +ಈಗ ಗಾಂಪ ಕೊಡ್ಡನಿಗೆ ಚಿಂತೆ ಶುರುವಾಯಿತು. ತಾನು ದೋಚಿದ್ದ ಅಪಾರ ಚಿನ್ನಾಭರಣಗಳನ್ನು ಎಲ್ಲಿ ಅಡಗಿಸಿಡುವುದು ಎಂದು ತಿಳಿಯದೆ ಬಹಳ ಯೋಚನೆಮಾಡಿದ ಕೊಡ್ಡ ಕೊನೆಗೆ ಸುಬ್ರಾಯ ಭಟ್ಟರಲ್ಲಿಗೆ ಬಂದ. ಸುಬ್ರಾಯ ಭಟ್ಟರ ಬಳಿ ಒಂದು ಗಂಟನ್ನು ಕೊಟ್ಟು, “ಕುಂಪಣಿಯವರು ನನ್ನನ್ನು ಹುಡುಕುತ್ತಿದ್ದಾರೆ, ನಾನು ಅಡಗಿಕೊಳ್ಳಲು ಎಲ್ಲಿಗೋ ಹೋಗುತ್ತಿದ್ದೇನೆ. ಈ ಗಂಟನ್ನು ನಿಮ್ಮ ಮನೆಯ ಬಾವಿಯಲ್ಲಿ ಅಥವಾ ನಿಮಗೆ ಬೇಕಾದಲ್ಲಿ ಅಡಗಿಸಿಡಿ. ನಾನು ಹಿಂದೆ ಬಂದ ಮೇಲೆ ಇದನ್ನು ಹಿಂದಕ್ಕೆ ಪಡೆಯುತ್ತೇನೆ. ನಿಮ್ಮ ಉಪಕಾರಕ್ಕೆ ತಕ್ಕ ಪ್ರತಿಫಲ ನೀಡಿಯೇನು” ಎಂದ. + +ಸುಬ್ರಾಯ ಭಟ್ಟರು ಬಹಳ ಯೋಚಿಸಿ ಕೊನೆಗೆ ಅವನು ಕೊಟ್ಟ ಚಿನ್ನಾಭರಣಗಳ ಗಂಟನ್ನು ತೆಗೆದುಕೊಂಡು, ಗಾಂಪ ಕೊಡ್ಡನ ಕಣ್ಣೆದುರೇ ಅದನ್ನು ತಮ್ಮ ಕೈಯಾರೆ ತಮ್ಮ ಮನೆಯ ಬಾವಿಯೊಳಗೆ ಹಾಕಿದರು. ಗಾಂಪ ಕೊಡ್ಡ ತೃಪ್ತಿಯಿಂದ ಹೊರಟುಹೋದ. ಕೆಲವೇ ದಿನಗಳಲ್ಲು ಕುಂಪಣಿ ಪೋಲೀಸರು ಬಂದು ಅವನನ್ನು ಹಿಡಿದುಕೊಂಡು ಹೋದರು. ಅವನಿಗೆ ಅಂಡಮಾನಿಗೆ ಗಡೀಪಾರು ಆಗುತ್ತದೋ ಅಥವಾ ಆಯಿತೋ – ಏನೋ ಒಂದು ಸುದ್ದಿ ನೂತಬೆಟ್ಟಿಗೆ ಬಂದು ಮುಟ್ಟಿತು. + +ಅದೇ ವೇಳೆಗೆ ಸುಬ್ರಾಯ ಭಟ್ಟರು ಮತ್ತು ಅವರ ಇಬ್ಬರು ತಮ್ಮಂದಿರೊಳಗೆ ಗಹನವಾದ ಚರ್ಚೆ ನಡೆದಿತ್ತು. “ಗಾಂಪ ಕೊಡ್ಡ ಇನ್ನು ಫಕ್ಕನೆ ಊರಿಗೆ ಹಿಂದಿರುಗಲಿಕ್ಕಿಲ್ಲ. ಫಕ್ಕನೇ ಏನು, ಯಾವತ್ತೂ ಹಿಂದಿರುಗಲಾರ. ಅವನು ಅನ್ಯಾಯದಿಂದ ಸಂಪಾದಿಸಿದ ಹಣವನ್ನು ಇನ್ನು ಕುಂಪಣಿ ಸರಕಾರದವರು ಹಿಡಿದುಕೊಂಡು ಹೋಗುತ್ತಾರೆ. ಅದಕ್ಕಿಂತ ನಾವೇ ಇದನ್ನು ಹಿಡಿದುಕೊಂಡು ದೇಶಾಂತರ ಹೋಗುವ” ಎಂದು ಸುಬ್ರಾಯರ ಒತ್ತಿನ ತಮ್ಮ ವಿಠಲ ಹೇಳಿದ. + +ಸುಬ್ರಾಯ ಭಟ್ಟರಿಗೆ ಅದೂ ಹೌದೆಂದು ಕಂಡಿತು. ಅವರ ಹಿಡುವಳಿ ಮೂವರು ಅಣ್ಣತಮ್ಮಂದಿರ ಸಂಸಾರವನ್ನು ಸಾಕುವಷ್ಟಿರಲಿಲ್ಲ. ಹಾಗಾಗಿ ಅವರೆಲ್ಲ ಗದ್ದೆಯಲ್ಲಿ ದುಡಿಯುವ ಜತೆಗೆ ಅಡಿಗೆ ಕೆಲಸಕ್ಕೆ ಹೋಗುತ್ತಿದ್ದರು. ವಿಠಲ ಭಟ್ಟರು ಹೇಳುವುದರಲ್ಲಿಯೂ ಅರ್ಥವಿದೆ ಅನಿಸಿತು. ಅವರು ಕೊನೆಯ ತಮ್ಮ ರಘುಪತಿ ಭಟ್ಟರತ್ತ ನೋಡಿದರು. “ಇನ್ನೊಬ್ಬರ ಹಣ ನನಗಂತೂ ಬೇಡ. ಅದೂ ಕೂಡಾ ಪಾಪದವರ ತಲೆ ಒಡೆದು ಸಂಪಾದಿಸಿದ ಹಣ ನಮಗೆ ಯಾಕೆ? ನಾನು ಗಂಜಿಯೋ ತಿಳಿಯೋ ತಿಂದುಕೊಂಡು ಇಲ್ಲೇ ಇರುತ್ತೇನೆ” ಎಂದು ರಘುಪತಿ ಭಟ್ಟರು ಹೇಳಿದರು. + +ಹಿರಿಯವರಿಬ್ಬರು ಗಾಂಪ ಕೊಡ್ಡನ ಚಿನ್ನದ ಗಂಟನ್ನು ಹಿಡಿದುಕೊಂಡು ಊರುಬಿಡುವ ಸಿದ್ಧತೆ ಮಾಡಿದರು. ಅದು ಮೇ ತಿಂಗಳ ಕೊನೆಯಾದ ಕಾರಣ ಬಾವಿಯಲ್ಲಿ ಹೆಚ್ಚು ನೀರಿರಲಿಲ್ಲ. ವಿಠಲ ಭಟ್ಟರು ಬಾವಿಗೆ ಇಳಿದು ಚಿನ್ನದ ಗಂಟನ್ನು ಎತ್ತಿ ಸುಬ್ರಾಯ ಭಟ್ಟರು ಇಳಿಸಿದ ಬುಟ್ಟಿಯಲ್ಲಿ ಅದನ್ನಿರಿಸಿದರು. ಗಾಂಪ ಕೊಡ್ಡನ ಕಾಟಕಾಯಿಯ ಫಲ ಹೀಗೆ ಅಣ್ಣತಮ್ಮಂದಿರ ಪಾಲಾಯಿತು. ಅವರಿಬ್ಬರೂ ಮರುದಿನವೇ ಕುಟುಂಬ ಸಮೇತ ಊರುಬಿಟ್ಟರು. ಹಲವಾರು ಮೈಲುಗಳ ಪ್ರಯಾಣ ಮಾಡಿ ಗಂಪದಬೈಲಿನತ್ತ ಬಂದರು. ಸುಬ್ರಾಯ ಭಟ್ಟರು ಆ ಕಾಲದಲ್ಲಿ ಯಾರೂ ಕಂಡು ಕೇಳರಿಯದಷ್ಟು ದೊಡ್ಡ ಮೊತ್ತವಾದ ಇನ್ನೂರು ರೂಪಾಯಿ ಕೊಟ್ಟು ಗಂಪದ ಬೈಲಿನಲ್ಲಿ ದೊಡ್ಡ ಆಸ್ತಿ ತೆಗೆದುಹಾಕಿದರೆ, ವಿಠಲ ಭಟ್ಟರು ಮಾದಯ ಕುಮೆರಿಯಲ್ಲಿ ಮನೆಮಾರು ತೆಗೆದುಕೊಂಡು ಮಜವಾಗಿ ಬದುಕತೊಡಗಿದರು. ಉಳಿದ ಕತೆ ನಿಮಗೆ ಈಗಾಗಲೇ ಹೇಳಿದ್ದೇನೆ. + + + +ನೂತಬೆಟ್ಟಿನಲ್ಲಿ ಉಳಿದುಕೊಂಡ ರಘುಪತಿ ಭಟ್ಟರ ಕತೆ ನಮಗೆ ಇತ್ತೀಚಿನವರೆಗೆ ಗೊತ್ತಿರಲಿಲ್ಲ. ಮೊನ್ನೆ ಮೊನ್ನೆ ನಮ್ಮನ್ನು ಹುಡುಕಿಕೊಂಡು ರಘುಪತಿ ಭಟ್ಟರ ವಂಶದವರು ಇಲ್ಲಿಗೆ ಬಂದಿದ್ದರು. ಅವರು ಹೇಳಿದ ಪ್ರಕಾರ ಗಾಂಪ ಕೊಡ್ಡನಿಗೆ ಹೆಚ್ಚು ವರ್ಷ ಶಿಕ್ಷೆ ಆಗಲಿಲ್ಲವಂತೆ. ಅವನು ದೋಚಿದ್ದ ವಸ್ತುಗಳು ಯಾವುವೂ ಸಿಗದ ಕಾರಣ ಕುಂಪಣಿಯವರು ಅವನನ್ನು ಬಿಟ್ಟರೆಂದು ಕಾಣುತ್ತದೆ. ಅವನು ಊರಿಗೆ ಬಂದವನೇ ರಘುಪತಿ ಭಟ್ಟರ ಮನೆಗೆ ಬಂದು ಸುಬ್ರಾಯರನ್ನು ಕೇಳಿದನಂತೆ. ಅಣ್ಣಂದಿರಿಬ್ಬರೂ ಊರು ಬಿಟ್ಟುಹೋಗಿದ್ದಾರೆ ಎಂದು ರಘುಪತಿ ಭಟ್ಟರು ಹೇಳಿದಾಗಲೇ ಕೊಡ್ಡನಿಗೆ ಸಂಶಯ ಬಂತಂತೆ. ಅವನೇ ಬಾವಿಗಿಳಿದು ಹುಡುಕಿ ಏನೂ ಸಿಗದೆ ಸಿಟ್ಟಿನಿಂದ ಮೇಲೆ ಬಂದನಂತೆ. ರಘುಪತಿ ಭಟ್ಟರನ್ನು ಬೆದರಿಸಿ, ಅವರಿಂದ ಏನೂ ಮಾಹಿತಿ ಸಿಗದೆ ತನ್ನ ಬಂಟರ ಮೂಲಕ ಸುತ್ತಮುತ್ತಲಿನ ಎಲ್ಲಾ ಊರುಗಳನ್ನೂ ಜಾಲಾಡಿಸಿದನಂತೆ. ಗಂಪದಬೈಲು ಬಹಳ ದೂರದ ಊರಾದ ಕಾರಣ ಸುಬಾಯ ಭಟ್ಟರ ಸುದ್ದಿ ಅವನಿಗೆ ತಿಳಿಯಲಿಲ್ಲ ಎಂದು ಕಾಣುತ್ತದೆ. ಆದರೆ ಸುಬ್ರಾಯ ಭಟ್ಟರಿಗೆ ಗಾಂಪ ಕೊಡ್ಡ ತಮ್ಮನ್ನು ಹುಡುಕುತ್ತಿರುವ ಸುದ್ದಿ ಸಿಕ್ಕಿರಬೇಕು, ಅದಕ್ಕಾಗಿಯೇ ಅವರು ಕೇರಳಕ್ಕೆ ಹೋಗಿರಬೇಕು ಎಂದು ನಾವು ಊಹಿಸಬಹುದು. + +ಅತ್ತ ರಘುಪತಿ ಭಟ್ಟರ ಹೆಣ ಮಾತ್ರ ಒಂದು ದಿನ ಚಿನ್ನದ ಬಾವಿಯಲ್ಲಿ ತೇಲಾಡುತ್ತಿತ್ತಂತೆ. ಅವರು ಆತ್ಮಹತ್ಯೆ ಮಾಡಿಕೊಂಡರೆಂದು ಕೇಸು ಮುಚ್ಚಿಹೋದರೂ ಅದು ಗಾಂಪ ಕೊಡ್ಡನದೇ ಕೆಲಸ ಎಂದು ಭಟ್ಟರ ಮನೆಯವರಿಗೆ ಸಂಶಯವಿತ್ತಂತೆ.  ಈ ಕಥಾನಕದ ಸ್ವಾರಸ್ಯಕರ ಅಂಶವೆಂದರೆ ಈಗ ಗಾಂಪ ಕೊಡ್ಡನ ಕುಟುಂಬದ ಮನೆಯಲ್ಲಿ ಈ ಕತೆಗೆ ಸಂಬಂಧಪಟ್ಟ ಮೂವರು ವ್ಯಕ್ತಿಗಳು ಭೂತಗಳಾಗಿ ಪೂಜೆಗೊಳ್ಳುತ್ತಿದ್ದಾರೆ ಎನ್ನುವುದು. ಗಾಂಪ ಕೊಡ್ಡ ‘ಪೊಸ ಬೂತ’ (ಹೊಸ ಭೂತ)ವಾಗಿ ಅವರ ಮನೆಯಲ್ಲಿ ನೆಲೆಸಿ ಕಾಲಕಾಲಕ್ಕೆ ಭೋಗಾದಿಗಳನ್ನು ಸ್ವೀಕರಿಸುತ್ತಾ ಇದ್ದಾನೆ. ಅದರ ಜತೆಗೆ ರಘುಪತಿ ಭಟ್ಟರ ಆತ್ಮವೆಂದು ಊಹಿಸಲ್ಪಟ್ಟಿರುವ ‘ಬೆರಣ ಬೂತ’ (ಬ್ರಾಹ್ಮಣ ಭೂತ) ಎನ್ನುವ ಶಕ್ತಿ ಅವರ ಕುಟುಂಬಕ್ಕೆ ಸಾಕಷ್ಟು ಉಪದ್ರವ ನೀಡಿದ ಬಳಿಕ ಅವರು ಅದನ್ನು ನಂಬಿಕೊಂಡು ಪೂಜಿಸುತ್ತಾ ಬರುತ್ತಿದ್ದಾರಂತೆ. ಆ ಬ್ರಾಹ್ಮಣ ಭೂತಕ್ಕೆ ಅಗೆಲು ಅಥವಾ ನೈವೇದ್ಯ ಬಡಿಸುವ ಕಾರ್ಯಕ್ರಮವನ್ನು ರಘುಪತಿ ಭಟ್ಟರ ವಂಶದವರು ಮಾಡುತ್ತಾ ಬರುತ್ತಿದ್ದಾರಂತೆ. ಯಾಕೆಂದರೆ ಗಾಂಪ ಕೊಡ್ಡನ ಮನೆಯವರು ಮಾಂಸಾಹಾರಿಗಳು, ಅವರ ಇತರ ಭೂತಗಳು ಮಾಂಸಾಹಾರಿಗಳೇ. ಅವುಗಳಿಗೆ ಮನೆಯವರೇ ಮಾಂಸದ ಅಡುಗೆ ಮಾಡಿ ಪರ್ವದಿನಗಳಂದು ಅಗೆಲು ಬಡಿಸುತ್ತಾರೆ. ಆದರೆ ಬ್ರಾಹ್ಮಣ ಭೂತಗಳಿಗೆ ಶುದ್ಧಾಚಾರದಲ್ಲಿ ನೈವೇದ್ಯ ಬಡಿಸಬೇಕಂತೆ! + +ವಿಶೇಷವೆಂದರೆ ಈಗ ಮತ್ತೊಂದು ಭೂತ ಅದರ ಜತೆಗೆ ಸೇರಿಕೊಂಡಿದೆಯಂತೆ. ಅದು ಗಂಪದಬೈಲು ಅನಂತ ಭಟ್ಟನ ಆತ್ಮವೇ ಇರಬೇಕು ಎಂದು ಅಲ್ಲಿನ ದೈವಜ್ಞರು ಅಷ್ಟಮಂಗಲ ಪ್ರಶ್ನೆ ಇಟ್ಟು ವಿಮರ್ಶಿಸಿ ತೀರ್ಮಾನಿಸಿದ್ದಾರಂತೆ. ಯಾವುದಾದರೂ ಇರಲಿ ಎಂದು ಗಾಂಪ ಕೊಡ್ಡನ ಕುಟುಂಬಸ್ಥರು ಈಗ ಎರಡು ಬ್ರಾಹ್ಮಣ ಭೂತಗಳಿಗೆ ರಘುಪತಿ ಭಟ್ಟರ ಮನೆಯವರ ಕೈಯಲ್ಲಿ ನೈವೇದ್ಯ ಇಡಿಸುತ್ತಾ ಇದ್ದಾರಂತೆ – ಎಂದು ಹೇಳಿದ ನಾರಾಯಣ ಉಪಾಧ್ಯಾಯರು ಮುಖ್ಯ ವಿಷಯಕ್ಕೆ ಬಂದರು : + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಈಗ ಒಬ್ಬರು ದೊಡ್ಡ ಜಾನಪದ ವಿದ್ವಾಂಸರು ಸಂಶೋಧನೆ ಮಾಡಿಕೊಂಡು ಹೋಗುವಾಗ ಅವರಿಗೆ ಹೀಗೆ ಬೇರೆ ಜಾತಿಯವರ ಮನೆಯಲ್ಲಿ ಎರಡು ಬ್ರಾಹ್ಮಣ ಭೂತಗಳನ್ನು ಆರಾಧಿಸಿಕೊಂಡುಬರುವ ಸಂಗತಿ ತಿಳಿದುಬಂದು ಬಹಳ ಆಶ್ಚರ್ಯವಾಯಿತಂತೆ. ಆ ವ್ಯಕ್ತಿಗಳ ಇತಿಹಾಸವನ್ನು ತಿಳಿಯುವ ಸಲುವಾಗಿ ನಾಳೆ ನೂತಬೆಟ್ಟಿನ ಗಾಂಪ ಕೊಡ್ಡನ ಕುಟುಂಬದ ಮನೆಗೆ ಬರುತ್ತಾರಂತೆ. ಅವರು ಅದನ್ನು ರಘುಪತಿ ಭಟ್ಟರ ಕುಟುಂಬಸ್ಥರಿಗೆ ಹೇಳಿ, “ಅನಂತ ಭಟ್ಟನಿಗೆ ಸಂಬಂಧಪಟ್ಟ ಕುಟುಂಬದವರು ಗಂಪದಬೈಲಿನಲ್ಲಿ ಯಾರಾದರೂ ಇದ್ದರೆ ನಾಳೆ ಇಲ್ಲಿಗೆ ಬರಮಾಡಿಸಿಕೊಳ್ಳಿ, ಅವರಿಗೆ ಕಾರಿನಲ್ಲಿ ಬಂದುಹೋಗುವ ಖರ್ಚನ್ನು ನಾನು ಕೊಡುತ್ತೇನೆ” ಎಂದು ಹೇಳಿಹೋಗಿದ್ದಾರಂತೆ. ರಘುಪತಿ ಭಟ್ಟರ ಕುಟುಂಬದವರೊಬ್ಬರು ಮೊನ್ನೆ ಇಲ್ಲಿಗೆ ಬಂದು ಪರಿಚಯ ಮಾಡಿಕೊಂಡು ವಿಷಯ ಹೇಳಿಹೋದರು. ಅವರು ಹೇಳಿದ ಕತೆಯನ್ನೇ ನಾನು ನಿಮಗೆ ಹೇಳಿದ್ದು. ನಾಳೆ ನನ್ನ ಜತೆಗೆ ನೀವು ಕೂಡಾ ಬಂದರೆ ನನಗೆ ಕಂಪೆನಿಯೂ ಆಗುತ್ತದೆ; ನಿಮಗೆ ಆಸಕ್ತಿ ಇರುವ ವಿಷಯವೊಂದನ್ನು ಪ್ರತ್ಯಕ್ಷ ಕಂಡ ಹಾಗೂ ಆಗುತ್ತದೆ – ಎಂದು ನಾರಾಯಣ ಉಪಾಧ್ಯಾಯರು ಹೇಳಿದರು. + +ಕತೆಯನ್ನೆಲ್ಲ ಕೇಳಿದ ನನಗೆ ಯಾವ ಪಾಪದ ಪರಿಮಾರ್ಜನೆ ಹೇಗೆ; ಯಾವ ಕ್ರಿಯೆಗೆ ಎಲ್ಲಿ ಯಾಕೆ ಹೇಗೆ ಪ್ರತಿಕಿಯೆ ಹುಟ್ಟುತ್ತದೆ ಎನ್ನುವುದು ಅರ್ಥವಾಗಲಿಲ್ಲ. ಈ ಗೊಂದಲವನ್ನು ಹೇಳಿಕೊಳ್ಳದೆ, ನಾರಾಯಣ ಉಪಾಧ್ಯಾಯರ ಕತೆಗೆ ಒಂದು ಪ್ರತಿಕ್ರಿಯೆ ತೋರಿಸಬೇಕಲ್ಲ ಎಂದು ತೀರಾ ಅಮುಖ್ಯವಾದ, ಆದರೆ ಈಗಿನ ಸಾಂಸ್ಕೃತಿಕ ರಾಜಕೀಯಕ್ಕೆ ಹಾಗೂ ರಾಜಕೀಯ ವಿಕೃತಿಗೆ ಬಹಳ ಆಪ್ಯಾಯಮಾನವಾದ ವಿಶ್ಲೇಷಣೆಯೊಂದನ್ನು ಹೇಳಿದೆ : + +“ಇದನ್ನು ನೋಡಿದರೆ ದೈವಾರಾಧನೆ ಬಹಳ ಸೆಕ್ಯೂಲರ್ ಅನಿಸುತ್ತದಲ್ವ? ಒಂದು ಜಾತಿಯವರ ಮನೆಯಲ್ಲಿ ಇನ್ನೊಂದು ಜಾತಿಯವರ ಭೂತ! ನಮ್ಮ `ಜಾತಿ ಭೂತ’ಕ್ಕೆ ಇದೇ ಉತ್ತರವಾಗಬಲ್ಲುದಲ್ಲವೇ?” ಎಂದೆ. ನಾರಾಯಣ ಉಪಾಧ್ಯಾಯರು ಬೇರೊಂದೇ ಆಯಾಮದಲ್ಲಿ ಯೋಚಿಸುತ್ತಿದ್ದರೆನಿಸುತ್ತದೆ. ಅವರು ಹೇಳಿದರು : “ತುಂಬಾ ದುರಂತವಾದ ಸಾವನ್ನು ಕಂಡವರು ಭೂತಗಳಾಗುವ ಹಲವಾರು ಉದಾಹರಣೆಗಳು ನನಗೆ ತಿಳಿದಿವೆ. ಸಾರ್ವಜನಿಕವಾಗಿ ಆರಾಧನೆಗೊಳ್ಳದ, ಒಂದೊಂದು ಮನೆಗಳಿಗೆ ಮಾತ್ರ ಸಂಬಂಧಿಸಿದ ಇಂತಹ ಚುಂಗುಡಿ ಭೂತಗಳು ಸಾವಿರಾರು ಇವೆ ಎಂದು ಕೇಳಿದ್ದೇನೆ.” + +ನಾನು ಮತ್ತೇನೂ ಮಾತಾಡದೆ, ರಘುಪತಿ ಭಟ್ಟ ಮತ್ತು ಅನಂತ ಭಟ್ಟರೆಂಬವರು ‘ಬೆರಣ (ಬ್ರಾಹ್ಮಣ) ಭೂತ’ಗಳಾಗಿ ಕಾಟಕಾಯಿಯ ಗಾಂಪ ಕೊಡ್ಡನ ಕುಟುಂಬದ ಮನೆಯಲ್ಲಿ ಆರಾಧನೆಗೊಳ್ಳುತ್ತಿರುವ ಪರಿಗೆ ವಿಸ್ಮಯಪಡುತ್ತಾ ಮೌನವಾದೆ. + + + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_46.txt b/Kenda Sampige/article_46.txt new file mode 100644 index 0000000000000000000000000000000000000000..42f6105c0ea16a5c1c41d310e1032ea56ac9fc55 --- /dev/null +++ b/Kenda Sampige/article_46.txt @@ -0,0 +1,23 @@ +ಉಲುವಾಟು ಇಂಡೋನೇಷಿಯಾದ ದಕ್ಷಿಣ ಬಾಲಿಯಲ್ಲಿನ ಒಂದು ಸುಂದರ ಸ್ಥಳ. ಅದು ಅಲ್ಲಿರುವ ಪ್ರಾಚೀನ ದೇವಾಲಯ ಹಾಗೂ ಸುಂದರ ಮತ್ತು ಅದ್ಭುತ ಕಡಲತಡಿಗೆ ಹೆಸರುವಾಸಿಯಾಗಿದೆ. ಭಾರತದಲ್ಲಿನ ಹಲವಾರು ದೇವಾಲಯಗಳಲ್ಲಿ ಮಂಗಗಳು ಜನರ ಕೈಯಲ್ಲಿನ ಆಹಾರ ವಸ್ತುಗಳನ್ನು ಕದಿಯುವುದು ಸಾಮಾನ್ಯವಾಗಿರುವಂತೆ ಇಲ್ಲಿಯೂ ಮಂಗಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಅಲ್ಲಿಗೆ ಭೇಟಿ ನೀಡುವ ಭಕ್ತರಿಗೆ, ಪ್ರವಾಸಿಗರಿಗೆ ತೊಂದರೆ ನೀಡುತ್ತವೆ. ಇಲ್ಲಿರುವ ಮಂಗಗಳು ಮಕಾಕ ಪ್ರಭೇದಕ್ಕೆ ಸೇರಿದ ಬಾಲಿ ಮಕಾಕ್‌ಗಳು ಹಾಗೂ ಅವುಗಳ ವೈಜ್ಞಾನಿಕ ಹೆಸರು ಮಕಾಕ ಫ್ಯಾಸಿಕ್ಯುಲಾರಿಸ್. + +(ಡಾ. ಜೆ. ಬಾಲಕೃಷ್ಣ) + +ಇಲ್ಲಿನ ಮಂಗಗಳ ಕದಿಯುವ ಪ್ರವೃತ್ತಿ ವಿಶಿಷ್ಟವಾದುದು ಹಾಗೂ ಅವು `ವ್ಯವಹಾರ ಚತುರ’ ಮಂಗಗಳಾಗಿವೆ. ಸುತ್ತ ಮುತ್ತಲೂ ಮಂಗಗಳಿರುವುದರಿಂದ ಅಲ್ಲಿಗೆ ಬರುವ ಜನರು ಸಾಮಾನ್ಯವಾಗಿ ತಿಂಡಿ ತಿನಿಸುಗಳನ್ನು ಮಂಗಗಳಿಗೆ ಕಾಣದ ಹಾಗೆ ಬಚ್ಚಿಟ್ಟುಕೊಂಡಿರುತ್ತಾರೆ. ಸುಮಾರು ಮುವ್ವತ್ತು ವರ್ಷಗಳಿಂದ ಉಲುವಾಟು ಮಂಗಗಳು ತಿನ್ನಲು ಆಹಾರ ಪಡೆಯಲು ಹೊಸ `ವ್ಯಾವಹಾರಿಕ’ ವಿಧಾನವೊಂದನ್ನು ಕಲಿತುಕೊಂಡಿವೆ. ಅವು ಜನರ ಬಳಿಯಿರುವ ಅವರ ಕನ್ನಡಕ, ಟೋಪಿ, ಮೊಬೈಲ್, ಚಪ್ಪಲಿ ಇತರ ಯಾವುದೇ `ಅಮೂಲ್ಯ’ ವಸ್ತುಗಳನ್ನು ಕದಿಯುತ್ತವೆ. ಅವು ಅವುಗಳನ್ನು ಕದ್ದು ದೂರ ಓಡಿಹೋಗುವುದಿಲ್ಲ, ಬದಲಿಗೆ ಅಲ್ಲೇ ಮರ ಏರಿ ಕೂರುತ್ತವೆ. ನೀವು ಏನಾದರೂ ಅವುಗಳಿಗೆ ತಿಂಡಿ ನೀಡಿದರೆ, ಆ ತಿಂಡಿ ಅವುಗಳಿಗೆ ಇಷ್ಟವಾಗುವ ಗುಣಮಟ್ಟದ ಅಥವಾ ಪ್ರಮಾಣದಲ್ಲಿದ್ದರೆ ಕದ್ದ ವಸ್ತುವನ್ನು ಕೈಯಿಂದ ಜಾರಿಸಿ ತಿಂಡಿ ತೆಗೆದುಕೊಂಡು ಓಡುತ್ತವೆ. ಈ ವ್ಯವಹಾರವನ್ನು ಅರ್ಥಶಾಸ್ತçದಲ್ಲಿ ವಸ್ತುವಿನಿಮಯ ಅಥವಾ ಬಾರ್ಟರಿಂಗ್ ಎನ್ನುತ್ತಾರೆ. ಮನುಷ್ಯ ಹಣದ ಆವಿಷ್ಕಾರವಾಗುವ ಮೊದಲು ಮಾಡುತ್ತಿದ್ದುದು ಇದೇ ರೀತಿಯ ವ್ಯವಹಾರವನ್ನು. ನಮ್ಮ ಬಾಲ್ಯದ ದಿನಗಳಲ್ಲಿ ಹಳ್ಳಿಗಳಲ್ಲಿ ದವಸ ಧಾನ್ಯ ನೀಡಿ ಮಡಕೆ, ಕಬ್ಬಿಣದ ಸಲಕರಣೆಗಳನ್ನು ಈ ರೀತಿಯಲ್ಲಿ ವಸ್ತುವಿನಿಮಯ `ಖರೀದಿ’ ಮಾಡುತ್ತಿದ್ದುದನ್ನು ನಾವು ಕಂಡಿದ್ದೇವೆ. + +ನಾವು ಉಲುವಾಟುವಿಗೆ ಭೇಟಿ ನೀಡಿದಾಗ ನಮ್ಮ ಕಾರಿನ ಡ್ರೈವರ್ ನಮ್ಮ ಕನ್ನಡಕ, ಟೋಪಿ ಇತ್ಯಾದಿ ವಸ್ತುಗಳ ಬಗ್ಗೆ ಎಚ್ಚರಿಕೆ ನೀಡಿದ್ದ. ನಾವು ಎಪ್ಪತ್ತು ಮೀಟರ್ ಕಡಿದಾದ ಎತ್ತರದಿಂದ ಸಾಗರವನ್ನು ವೀಕ್ಷಿಸುತ್ತ ಮೈಮರೆತಿರುವಾಗ ನನ್ನ ಪಕ್ಕದಲ್ಲಿ ಮಂಗವೊಂದು ತಾಳ್ಮೆಯಿಂದ ಕೂತಿರುವುದನ್ನು ನೋಡಿ ಪ್ರವಾಸಿಗನೊಬ್ಬ ಎಚ್ಚರಿಸಿದ. ನಾನು ನೋಡುತ್ತಿರುವಂತೆ ಮರದ ಮೇಲೆ ಕೂತಿದ್ದ ಮಂಗವೊದು ಅದರ ಕೆಳಗೆ ಹಾದುಹೋದ ಪ್ರವಾಸಿ ಮಹಿಳೆಯೊಬ್ಬಳ ತಲೆಯ ಮೇಲೆ ಸಿಕ್ಕಿಸಿಕೊಂಡಿದ್ದ ಕನ್ನಡಕವನ್ನು ಕಸಕ್ಕನೆ ಕಸಿದು ಬಾಯಲ್ಲಿ ಕಚ್ಚಿಕೊಂಡು ಮರದ ಎತ್ತರಕ್ಕೆ ಏರಿತು. ಆಕೆ ಗಾಭರಿಯಾಗಿ ತಡವರಿಸುತ್ತಿರುವಾಗ ಅಂತಹ ಘಟನೆಗಳನ್ನು ಪರಿಹರಿಸಲು ಅಲ್ಲಿಯೇ ಇದ್ದ ಆ ದೇವಸ್ಥಾನದ ಸಿಬ್ಬಂದಿ ಮಹಿಳೆಯೊಬ್ಬಳು ತನ್ನ ಕೈಯಲ್ಲಿದ್ದ ಚೀಲದಿಂದ ಚಾಕೊಲೇಟ್ ತೆರೆದು ಮರದ ಮೇಲಿರಿಸಿದಳು. ಅದು ಮಿಸುಕಾಡಲಿಲ್ಲ. ನಂತರ ಹಣ್ಣೊಂದನ್ನು ಇರಿಸಿದಳು. ಅದು ಕಚ್ಚಿಕೊಂಡಿದ್ದ ಕನ್ನಡಕ ಬೀಳಿಸಿ ಆ ತಿಂಡಿಗಳನ್ನು ತೆಗೆದುಕೊಂಡು ತಿನ್ನತೊಡಗಿತು. ಆ ವಿದೇಶಿ ಪ್ರವಾಸಿ ಮಹಿಳೆ ಧನ್ಯವಾದ ಹೇಳಿ ಆ ಸಿಬ್ಬಂದಿ ಮಹಿಳೆಗೆ ಟಿಪ್ಸ್ ಕೊಟ್ಟಳು. + +ಉಲುವಾಟು ಮಂಗಗಳ ಈ ರೀತಿಯ ವಸ್ತುವಿನಿಮಯ `ವ್ಯಾವಹಾರಿಕ’ ನಡವಳಿಕೆ ಸುದ್ದಿಯಾಗಿತ್ತೇ ವಿನಃ ಅದರ ಬಗ್ಗೆ ಯಾವುದೇ ವೈಜ್ಞಾನಿಕ ಅಧ್ಯಯನ ನಡೆದಿರಲಿಲ್ಲ. 2010ರಲ್ಲಿ ಬೆಲ್ಜಿಯಂನ ಲೀಜ್ ವಿಶ್ವವಿದ್ಯಾನಿಲಯದ ನಡವಳಿಕೆ ಜೀವಶಾಸ್ತç ವಿಭಾಗದ ಫ್ಯಾನಿ ಬ್ರಾಟ್‌ಕಾರ್ನ್ ಇತರ ವಿಜ್ಞಾನಿಗಳೊಂದಿಗೆ ನಾಲ್ಕು ತಿಂಗಳು ಅಲ್ಲೇ ನೆಲೆಸಿ ಅಧ್ಯಯನ ಮಾಡಿ ಅದರ ಫಲಿತಾಂಶಗಳನ್ನು ವೈಜ್ಞಾನಿಕ ಪತ್ರಿಕೆಯೊಂದರಲ್ಲಿ ಪ್ರಕಟಿಸಿದರು. + + + +ನಡವಳಿಕೆಯ ಕಲಿಕೆಗಳು ಸಮುದಾಯವೊಂದರಲ್ಲಿ ಅಥವಾ ತಲಮಾರಿನಿಂದ ತಲಮಾರಿಗೆ ವರ್ಗಾವಣೆಯಾಗುವುದು `ಪ್ರಜ್ಞೆ’ ಇರುವ ಮಾನವನಲ್ಲಿ ಮಾತ್ರ ಎಂದು ಬಹಳ ದಿನಗಳವರೆಗೂ ನಂಬಲಾಗಿತ್ತು. ಆದರೆ ಹಲವಾರು ಮಂಗ ಮತ್ತು ವಾನರ(Primates)ಗಳಲ್ಲಿ ಕೆಲವು ಸಲಕರಣೆಗಳ ಬಳಕೆಯ ಕಲಿಕೆ ದಾಖಲಾಗಿದೆ. ಆದರೆ ಹೊಸದಾಗಿ ಕಲಿತ ನಡವಳಿಕೆಯನ್ನು ಇತರ ಮಂಗಗಳು ನೋಡಿ ಕಲಿತು ಅವುಗಳನ್ನು ಪ್ರಾಕೃತಿಕ ಪರಿಸರದಲ್ಲಿ ಅನುಕರಿಸುತ್ತಿರುವುದು ಬಹುಶಃ ಇದೇ ಮೊದಲ ಗಮನಿಕೆಯಾಗಿರಬಹುದು. ಪ್ರಯೋಗಾಲಯಗಳಲ್ಲಿ ಮಂಗಗಳಿಗೆ ಈ ರೀತಿಯ ಅನುಕರಣೆಯನ್ನು ಹೇಳಿಕೊಟ್ಟು ಕಲಿಸಲಾಗಿರುವ ಉದಾಹರಣೆಗಳಿವೆ. ಪ್ರಕೃತಿಯಲ್ಲಿ ಒಂದು ಪ್ರಭೇದದ ಜೀವಿಯು ಮತ್ತೊಂದ ಪ್ರಭೇದದ ಜೀವಿಯಿಂದ ಆಹಾರವನ್ನು ಕದಿಯುವ ಸಾಕಷ್ಟು ಉದಾಹರಣೆಗಳಿವೆ. ಆದರೆ ಮಾನವನನ್ನು ಹೊರತುಪಡಿಸಿ ಒಂದು ಜೀವಿಯು ಮತ್ತೊಂದು ಪ್ರಭೇದದ ಜೀವಿಯಿಂದ ವಸ್ತುವನ್ನು ಕದ್ದು ಅದನ್ನು ಅದೇ ಪ್ರಭೇದದ ಜೀವಿಯೊಂದಿಗೆ ವಸ್ತುವಿನಿಮಯ ಮಾಡಿಕೊಳ್ಳುವ `ಸಾಂಸ್ಕೃತಿಕ ನಡವಳಿಕೆ’ ವಿಜ್ಞಾನಿಗಳಿಗೆ ಹೊಸ ವಿಷಯವಾಗಿದೆ. + +ತಮ್ಮ ನಾಲ್ಕು ತಿಂಗಳ ಅಧ್ಯಯನದಲ್ಲಿ ಫ್ಯಾನಿ ಬ್ರಾಟ್‌ಕಾರ್ನ್ ಮತ್ತು ತಂಡದವರು ಈ ರೀತಿಯ ಕದಿಯುವ ಮತ್ತು ವಸ್ತುವಿನಿಮಯ ಮಾಡಿಕೊಳ್ಳುವ 201 ಘಟನೆಗಳನ್ನು ದಾಖಲಿಸಿದರು. ಅವರ ಅಧ್ಯಯನದ ಸಮಯದಲ್ಲಿ ಉಲುವಾಟುವಿನಲ್ಲಿ ತಲಾ ಸುಮಾರು 30ರಿಂದ 50 ಮಂಗಗಳಿರುವ ನಾಲ್ಕು ಗುಂಪುಗಳಿದ್ದು ಅವುಗಳಲ್ಲಿ ಎರಡು ಗುಂಪುಗಳು ಈ ರೀತಿಯ ನಡವಳಿಕೆಯನ್ನು ಹೆಚ್ಚು ಪ್ರದರ್ಶಿಸುತ್ತಿದ್ದವು. ಆ ಅಧ್ಯಯನದ ಸಮಯದಲ್ಲಿಯೇ ಅಲ್ಲಿಗೆ ಆಗಮಿಸಿದ ಹೊಸ ಮಂಗಗಳ ಗುಂಪೊಂದು ಪ್ರಾರಂಭದಲ್ಲಿ ಈ ರೀತಿಯ ನಡವಳಿಕೆ ಪ್ರದರ್ಶಿಸಲಿಲ್ಲ. ಆದರೆ ಕ್ರಮೇಣ ಇತರ ಮಂಗಗಳನ್ನು ನೋಡಿ ಅವುಗಳಲ್ಲಿ ಕೆಲ ಮಂಗಗಳು ಆ ನಡವಳಿಕೆಯನ್ನು ಅನುಕರಿಸಲು ಪ್ರಯತ್ನಿಸಿದವು. ಕೆಲವು ಮಂಗಗಳು ತಮಗೆ ವಿನಿಮಯವಾಗಿ ಸಿಗುವ ಆಹಾರದ ಪ್ರಮಾಣದ ಆಧಾರದ ಮೇಲೆ ಕದ್ದಿರುವ ವಸ್ತುವನ್ನು ಹಿಂದಿರುಗಿಸಿದರೆ, ಕೆಲವು ಅವುಗಳ ಗುಣಮಟ್ಟ ನೋಡಿ ಹಿಂದಿರುಗಿಸಬೇಕೇ ಬೇಡವೇ ಎಂಬುದನ್ನು ತೀರ್ಮಾನಿಸುತ್ತಿದ್ದವು. + +ಅವರ ಅಧ್ಯಯನದ ಮತ್ತೊಂದು ಪ್ರಮುಖ ಅಂಶವೆಂದರೆ, ಗಂಡು ಮಂಗಗಳು ಹೆಚ್ಚು ಕದಿಯುತ್ತಿದ್ದವು ಹಾಗೂ ಹದಿಹರೆಯದ ಗಂಡು ಮಂಗಗಳು ಈ ಕ್ರಿಯೆಯಲ್ಲಿ ಹೆಚ್ಚು ಪಾಲ್ಗೊಳ್ಳುತ್ತಿದ್ದವು. ವಿಜ್ಞಾನಿಗಳು ಹೇಳುವಂತೆ ಹದಿಹರೆಯದ ಮಂಗಗಳು ಹೆಚ್ಚು ಅಪಾಯಕ್ಕೆ ಒಡ್ಡಿಕೊಳ್ಳುವ ನಡವಳಿಕೆ ಹೊಂದಿರುತ್ತವೆ. ಈ ರೀತಿಯ ನಡವಳಿಕೆಯನ್ನು ಉಲುವಾಟು ಮಂಗಗಳು ಮೊದಲಿಗೆ ಹೇಗೆ ಕಲಿತವು ಎಂಬುದೇ ಅಚ್ಚರಿಯ ವಿಷಯವಾಗಿದೆ. ಬಹುಶಃ ಪ್ರಾರಂಭದಲ್ಲಿ ಮನುಷ್ಯರ ಪ್ರಭಾವವಿದ್ದರೂ ಇರಬಹುದು, ಆದರೆ ನಂತರ ಅದು ಹೇಗೆ ಒಂದು `ಸಾಂಸ್ಕೃತಿಕ ನಡವಳಿಕೆ’ಯಾಗಿ ಸಮುದಾಯದಲ್ಲಿ ಪ್ರಸಾರವಾಗಿದೆ ಎನ್ನುವುದರ ಕುರಿತು ಇನ್ನೂ ಹೆಚ್ಚಿನ ಮನೋವೈಜ್ಞಾನಿಕ ಅಧ್ಯಯನ ಅಗತ್ಯವಿದೆ ಎನ್ನುತ್ತಾರೆ ಫ್ಯಾನಿಯವರು. ಈ ರೀತಿಯ ಕಾರ್ಯಕ್ಕೆ ಮಂಗಗಳಿಗೆ ಧೈರ್ಯ ಬೇಕು, ಏಕೆಂದರೆ ಅವು ಮನುಷ್ಯನನ್ನು ಆ ಸಮಯದಲ್ಲಿ ಮುಟ್ಟಬೇಕು ಮತ್ತು ಎಲ್ಲ ಮಂಗಗಳು ಆ ರೀತಿಯ ಧೈರ್ಯ ತೋರುವುದಿಲ್ಲ. ಅಲ್ಲದೆ ಕದ್ದನಂತರ ತಮಗೆ ಬೇಕಾಗಿರುವ ವಸ್ತು ಹಿಂದಿರುಗಿಸುವವರೆಗೂ ತಾಳ್ಮೆ ಮತ್ತು ಸ್ವ-ನಿಯಂತ್ರಣ ಹೊಂದಿರಬೇಕು. ಮಂಗಗಳು ಕದಿಯುವುದಷ್ಟೇ ಅಲ್ಲ, ಈ ರೀತಿಯ ಕೌಶಲ್ಯತೆಗಳನ್ನು ರೂಢಿಸಿಕೊಳ್ಳಬೇಕು. ಏಕೆಂದರೆ ಕದ್ದ ವಸ್ತು ಹಾನಿಗೊಳಗಾದರೆ ತಾವು ನಿರೀಕ್ಷಿಸಿದ ಆಹಾರ ಸಿಗದೇ ಹೋಗಬಹುದು. ಆದರೆ ತಿಂಡಿ ಸಿಕ್ಕನಂತರ ಬಹಳಷ್ಟು ಸಾರಿ ಕೆಳಕ್ಕೆ ಬೀಳಿಸುವ ಕನ್ನಡಕ ಇತ್ಯಾದಿ ಮುರಿದು ಹಾಳಾಗುತ್ತವೆ. ಅವರ ಪ್ರಕಾರ ಈ ಕೌಶಲ್ಯತೆಯನ್ನು ರೂಢಿಸಿಕೊಳ್ಳಲು ಮಂಗಗಳಿಗೆ ಸುಮಾರು ಐದಾರು ವರ್ಷಗಳೇ ಬೇಕಾಗಬಹುದು. ಮಂಗಗಳಿಗೆ ತಮ್ಮ ನಡವಳಿಕೆಯ ಅರಿವಿದೆಯೇ? ಅವು ತಮ್ಮ ಭವಿಷ್ಯದ ಕುರಿತು ಯೋಜಿಸುತ್ತವೆಯೆ? ಈ ಅಧ್ಯಯನಗಳಿಂದ ಮಾನವನ ಬಾಹ್ಯ ಜಗತ್ತಿನ ಗ್ರಹಿಕೆಯ ಸಾಮರ್ಥ್ಯದ ವಿಕಾಸದ ಕುರಿತು ಹಾಗೂ ಮಾನವನ ನಡವಳಿಕೆಯ ವಿಕಾಸದ ಕುರಿತೂ ಅರಿಯಬಹುದೆನ್ನುತ್ತಾರೆ ಅವರು. + + + +ಬಾಲಿಯ ಉಲುವಾಟುವಿನಲ್ಲಿನ ಮಂಗಗಳು ಮಾತ್ರ ಈ ನಡವಳಿಕೆಯನ್ನು ಕಲಿತುಕೊಂಡಿವೆ. ಬಾಲಿಯ ಇತರೆಡೆ ಇದೇ ಪ್ರಭೇದದ ಮಂಗಗಳಿದ್ದರೂ ಅವು ಈ ರೀತಿಯ ನಡವಳಿಕೆಯನ್ನು ಕಲಿತಿಲ್ಲ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_460.txt b/Kenda Sampige/article_460.txt new file mode 100644 index 0000000000000000000000000000000000000000..50ff68be4ecac28996b153b16c491fd05586ef61 --- /dev/null +++ b/Kenda Sampige/article_460.txt @@ -0,0 +1,35 @@ +byಮಂಜುನಾಯಕ ಚಳ್ಳೂರು|Sep 16, 2018|ವಾರದ ಕಥೆ,ಸಾಹಿತ್ಯ| 0 Comments + +”ಮಿಣುಕು ಹುಳುವಿನ ಉಪಟಳ ಹೊಸತೇನಲ್ಲ.ಮೊದಮೊದಲಿಗೆ ಆಗೀಗ ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದ ಅದು ಸಾಸಿವೆ ಕಾಳಷ್ಟು ಬೆಳಕಾಗಿ ಹುಟ್ಟಿದ್ದುದು ದೊಡ್ಡ ರಾಕ್ಷಸನಾಗಿ ಬೆಳೆದುಕೊಂಡು ಅವನನ್ನು ಕಿತ್ತು ಕಿತ್ತು ತಿನ್ನತೊಡಗುತ್ತದೆ.” + +byಕೆಂಡಸಂಪಿಗೆ|Sep 9, 2018|ವಾರದ ಕಥೆ,ಸಾಹಿತ್ಯ| 0 Comments + +“ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು.ಶಂಖ ಊದಲು,ಜಾಗಟೆ ಬಾರಿಸಲು ಜನವಿರಲಿಲ್ಲ.‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು.ಶಂಖ,ಜಾಗಟೆ ಅವರ ಕೈಗೆ ಕೊಟ್ಟರು.ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದರು” + +byಆಶಾ ಜಗದೀಶ್|Sep 3, 2018|ದಿನದ ಪುಸ್ತಕ,ಸಾಹಿತ್ಯ| 0 Comments + +“ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರನ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”.ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ.” + +byಟಿ.ಎಸ್. ಗೊರವರ|Sep 2, 2018|ವಾರದ ಕಥೆ,ಸಾಹಿತ್ಯ| 0 Comments + +“ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು.” + +byಡಾ. ಬಿ. ಜನಾರ್ದನ ಭಟ್|Aug 26, 2018|ದಿನದ ಅಗ್ರ ಬರಹ,ಸಾಹಿತ್ಯ| 0 Comments + +ಕರಡು ಬೆಳೆದ ಆ ಗುಡ್ಡದಲ್ಲಿ ಯಾವ ಸುಳಿವೂ ಇಲ್ಲ.ಸುದ್ದಿಯೂ ಇಲ್ಲ.ಎಲ್ಲವೂ ಇದ್ದಂತೆಯೇ ಇತ್ತು.ಮಧ್ಯಾಹ್ನದ ಬಿಸಿಲಲ್ಲಿ ಎಲ್ಲವೂ ರಣಗುಟ್ಟುತ್ತಿತ್ತು.ಡಾ. ಬಿ. ಜನಾರ್ದನ ಭಟ್ ಸಾದರಪಡಿಸುತ್ತಿರುವ ‘ಓಬೀರಾಯನ ಕಾಲದ ಕತೆಗಳು’ ಸರಣಿಯ ಹತ್ತನೆಯ ಕಥಾನಕ. + +byನಾಗರೇಖಾ ಗಾಂವಕರ|Aug 19, 2018|ವಾರದ ಕಥೆ,ಸಾಹಿತ್ಯ| 0 Comments + +“ಪಾಂಜ ನಿಧಾನಕ್ಕೆ ಬೆಳೆದು ದೊಡ್ಡವನಾಗುತ್ತ ಪ್ರಾಯದ ಹೊಸ್ತಿಲಲ್ಲಿದ್ದ.ಅದಾಗಲೇ ಬಣ್ಣಬಣ್ಣದ ಬಟ್ಟೆಗಳ ತೊಟ್ಟ ಮನುಷ್ಯರು,ಹೆಣ್ಣು ಗಂಡುಗಳು ಆಗಾಗ ಬಂದು ಕೇಕೆ ಹಾಕುವುದು,ಹುಚ್ಚಾಟ ಮಾಡುವುದು ಶುರುವಾಗಿತ್ತು.ಪ್ರಾಯದ ಪಾಂಜ ಅವರನ್ನು ಹೊಸ ಮೋಜಿನಿಂದಲೇ ನೋಡುತ್ತಿದ್ದ.” + +byಡಾ. ಬಿ. ಜನಾರ್ದನ ಭಟ್|Aug 12, 2018|ವಾರದ ಕಥೆ,ಸಾಹಿತ್ಯ| 1 Comment + +ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು.ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು.” + +byಆನಂದ್ ಕುಂಚನೂರ|Aug 5, 2018|ವಾರದ ಕಥೆ,ಸಾಹಿತ್ಯ| 0 Comments + +“ಎವರೆಸ್ಟ್ ಏರಿ ಬಂದ ಖುಷಿ ಅಮ್ಮನ ಸಾವಿನಿಂದ ಮಂಜುಗಡ್ಡೆಯಂತಾಗಿತ್ತು. ಯಾವ ಸನ್ಮಾನ ಸಂಭ್ರಮವೂ ಬೇಡವಾಗಿದ್ದವು.ಆಗ ಬಿಕ್ಕಿ ಬಿಕ್ಕಿ ಅತ್ತು ಒಂಟಿಯಾಗಿದ್ದ ಅಪ್ಪ ಈಗ ಮತ್ತೆ ಇದ್ಯಾವಳೊ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಾನೆ.ಅಪ್ಪನ ಪ್ರಕಾರ ನಾನವಳನ್ನು ಚಿಕ್ಕಮ್ಮ ಅನ್ನಬೇಕಂತೆ,ಬುಲ್ ಶಿಟ್! “ + +byಡಾ. ಬಿ. ಜನಾರ್ದನ ಭಟ್|Jul 29, 2018|ವಾರದ ಕಥೆ,ಸಾಹಿತ್ಯ| 0 Comments + +“ನನಗಿಂತ ಎರಡು ಅಡಿ ಉದ್ದ ಇದ್ದ ಇವನ ಆಕಾರವನ್ನೂ ಇವನ ಮಾತಿನ ದರ್ಪವನ್ನೂ ನೋಡಿ ಕೊಂಚ ಹೆದರಿ “ನನಗೆ ದಂಗೆ” ಎಂದರೇನೆಂಬುದೇ ತಿಳಿಯದು. ‘ಟೊಂಗೆ’ ಎಂಬ ಶಬ್ದ ಮಾತ್ರ ಗೊತ್ತು. ನಾನೊಬ್ಬ ಬಡವ; ಮನೆಗೆ ಹೋಗಲು ಇಲ್ಲಿಗೆ ಬಂದೆ”ಎಂದ.” \ No newline at end of file diff --git a/Kenda Sampige/article_461.txt b/Kenda Sampige/article_461.txt new file mode 100644 index 0000000000000000000000000000000000000000..4a98a909bb77b954b9f1c676cd484019dd077cff --- /dev/null +++ b/Kenda Sampige/article_461.txt @@ -0,0 +1,33 @@ +ನಾನು ಮೊದಲು ಅಕ್ಷರ ಕಲಿತದ್ದು ನಮ್ಮೂರಿನ ದುರುಗಮ್ಮನ ಗುಡಿಯಲ್ಲಿ. ಅದಕ್ಕೆ ಕಾರಣ ದೇವತೆಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಬೇಕು ಎಂದಲ್ಲ. ಆಗ ಕಲಿಕೆ ನಡೆಯುತ್ತಿದ್ದುದೇ ಗುಡಿಯಲ್ಲಿ. ಅದನ್ನು ನಾವು ಸಾಲಿಗುಡಿ ಎನ್ನುತ್ತಿದ್ದೆವು. ಅಲ್ಲಿ ಒಬ್ಬ ಅಯ್ಯನವರು ನಮಗೆ ಗುರುಗಳು. ಅಯ್ಯ ಎನ್ನುವುದು ವೃತ್ತಿ ವಾಚಕವೋ, ಜಾತಿ ಸೂಚಕವೋ ಎಂದು ಯೋಚಿಸುವ ವಯಸ್ಸು ಅದಲ್ಲ. ಎಲ್ಲರೂ ಅವರನ್ನು ಗೌರವಪೂರ್ವಕವಾಗಿ “ಅಯ್ಯನೋರೆ” ಎನ್ನುತ್ತಿದ್ದರು. ಅದೇನೂ ಸರಕಾರದಿಂದ ಮಂಜೂರಾತಿ ಪಡೆದ ಶಾಲೆಯಲ್ಲ. ಅಲ್ಲಿ ಇಂದಿನ ಹಾಗೆ ಹಲವು ಹತ್ತು ವಿಷಯಗಳಿರಲಿಲ್ಲ. ಭಾಷೆ ಮತ್ತು ಲೆಕ್ಕ, ಎರಡನ್ನು ಮಾತ್ರ ಮನದಲ್ಲಿ ಅಚ್ಚೊತ್ತುವಂತೆ ಕಲಿಸುತ್ತಿದ್ದರು. ಭಾಷೆ ಎಂದರೆ ಕನ್ನಡಮಾತ್ರ. ಅಕ್ಷರ ಕಲಿಯುವ ಮೊದಲು ಅಲ್ಲಿ ಪ್ರಭವ, ವಿಭವ ಇತ್ಯಾದಿ ಅರವತ್ತು ಸಂವತ್ಸರಗಳು, ಆರು ಋತುಗಳು, ಚೈತ್ರದಿಂದ ಶುರುವಾಗುವ ಹನ್ನೆರಡು ಮಾಸಗಳ ಹೆಸರುಗಳು, ಇಪ್ಪತ್ತನಾಲಕ್ಕು ಪಕ್ಷ, ಹದಿನೈದು ತಿಥಿ ಮತ್ತು ಅಶ್ವಿನಿ ಭರಣಿ ಮೊದಲಾದ ಇಪ್ಪತ್ತೇಳು ನಕ್ಷತ್ರಗಳು ಬಾಯಿ ಪಾಠವಾಗಬೇಕಿತ್ತು. ಅದರಲ್ಲೂ ಚೈತ್ರ ಶುದ್ಧ ದವನದ ಹುಣ್ಣಿಮೆ, ವೈಶಾಖ ಶುದ್ಧ ಆಗಿಹುಣ್ಣಿಮೆಯಿಂದ ಹಿಡಿದು ಪಾಲ್ಗುಣ ಶುದ್ಧ ಹೋಳಿ ಹುಣ್ಣಿಮೆಯವರೆಗೆ, ಅದೇ ರೀತಿ ಚೈತ್ರ ಬಹುಳಯುಗಾದಿ ಅಮವಾಸ್ಯೆಯಿಂದ ಹಿಡಿದು ಆಶ್ವೀಜದ ಬಹುಳದ ದೀಪಾವಳಿ ಅಮವಾಸ್ಯೆಯವರೆಗಿನ ಹನ್ನೆರಡು ಅಮವಾಸ್ಯೆಗಳ ಹೆಸರನ್ನು ಕೇಳಿದಲ್ಲಿ ಪಟ್ಟನೆ ಹೇಳದಿದ್ದರೆ ಛಡಿ ಏಟು ಬೀಳುತಿತ್ತು. ಅಲ್ಲಿ ಹೆಚ್ಚು ಕಲಿತವರು ಎಂದರೆ ಅಮರಕೋಶ ಹೇಳುವವರು. ರಾಜ, ಭೂಪ, ಅವನಿಪ, ಒಡೆಯ,ಅರಸ, ಭೂಪಾಲ ಹೀಗೆ ಒಂದು ಪದಕ್ಕೆ ಹತ್ತು ಹಲವಾರು ಪರ್ಯಾಯ ಪದಗಳು. ಪದ ಭಂಡಾರವೇ ಕಂಠಸ್ಥವಾಗಿರುತಿತ್ತು. ನಾಲಿಗೆಯ ಮೇಲೆ ಸರಸ್ವತಿಯ ನರ್ತನ. ಅಮರವನ್ನು ಅರಿತವರಿಗೆ ಶಬ್ಧ ದಾರಿದ್ರವಿರುತ್ತಿರಲಿಲ್ಲ. ಗದುಗಿನ ಭಾರತ ವಾಚನ ಮಾಡುವ ಹಂತಕ್ಕೆ ಬಂದರೆ ಪರವಾಗಿಲ್ಲ ಎಂದೂ, ಜೈಮಿನಿ ಭಾರತ ಓದಿ ಅರ್ಥ ವಿವರಣೆ ಕೊಡಬಲ್ಲವರಾದರೆ ಕಲಿತವರೆಂದೂ ಕರೆಯುತ್ತಿದ್ದರು. ಅಂಥವರು ವಿರಳಾತಿ ವಿರಳ. + +ಇನ್ನು ಲೆಕ್ಕ ಎಂದರೆ ಮಗ್ಗಿ ಕಲಿಯುವುದು. ಕನಿಷ್ಟ 20ರ ವರೆಗಿನ ಮಗ್ಗಿ ಕಡ್ಡಾಯ. ಅದರಮೇಲೆ ಚುರುಕಾದವರು ಎರಡ ಹತ್ತಲೆ ಇಪ್ಪತ್ತು ಎಂದು ಮುಗಿಸುತ್ತಿರಲಿಲ್ಲ. ಎರಡ ಹನ್ನೊಂದಲೆ ಇಪ್ಪತ್ತೆರಡು ಎಂದು ಶುರುಮಾಡಿ ಎರಡ ಇಪ್ಪತ್ತಲೆ ನಲವತ್ತು ಎಂದು ಹೇಳುವಷ್ಟು ಕಲಿತರೆ ಅಯ್ಯನವರು ಹುಡುಗ ಪರವಾಯಿಲ್ಲ ಎನ್ನುತ್ತಿದ್ದರು. ಇನ್ನೂ ಜಾಣರು ಮಗ್ಗಿಯನ್ನು ಬುಡದಿಂದ ಪ್ರಾರಂಭಿಸಿ ಮೊದಲವರೆಗೂ ಹೇಳುತ್ತಲಿದ್ದರು. ನನಗಂತೂ ಮೊದಲಿಂದ ಕೊನೆಯವರೆಗೆ ಹೇಳುವಾಗಲೇ ಸಾಕುಬೇಕಾಗುತ್ತಿತ್ತು. ಮಧ್ಯಾಹ್ನ ಮೂರುಗಂಟೆಯ ಮೇಲೆ ಗುಡಿಯು ಮಕ್ಕಳ ಮಗ್ಗಿಯ ಉದ್ಘೋಷದಿಂದ ಗದ್ಘಲಿಸುತಿತ್ತು. ಮೊದಲು ಸಾಮೂಹಿಕವಾಗಿ ಹೇಳಿ ನಂತರ ಒಬ್ಬೊಬ್ಬರಾಗಿ ಒಪ್ಪಿಸಬೇಕಿತ್ತು. ತಪ್ಪಿದರೆ ಪಕ್ಕದವನಿಗೆ ತಿದ್ದಲು ಅವಕಾಶ. ಅವನು ಸರಿಯಾಗಿ ಹೇಳಿ ತಪ್ಪಿದವನ ಮೂಗು ಹಿಡಿದು ಕೆನ್ನೆಗೆ ಎರಡು ಬಾರಿಸಬೇಕಿತ್ತು. ಅದೂ ಮುಟ್ಟಿದಂತೆ ಮಾಡಿದರೆ ಸಾಕಾಗುತ್ತಿರಲಿಲ್ಲ. “ಚಟೀರ್‌..” ಎಂದು ಶಬ್ದ ಕೇಳಿ ಬರುವಂತೆ ಹೊಡೆತ ಇರಬೇಕು. ಎಷ್ಟೋ ಸಲ ಸದಾ ಏಟುತಿನ್ನುವ ಹುಡುಗ ಹೊಂದಾಣಿಕೆ ಮಾಡಿಕೊಳ್ಳುವದೂ ಇತ್ತು, ಶಾಲೆ ಮುಗಿದ ಮೇಲೆ ಬೆಲ್ಲ, ಕಡಲೆ, ಬಾರಿ ಹಣ್ಣು, ಬುಕ್ಕಿ ಹಣ್ಣು, ಹುಣಿಸೆ ಕಾಯಿ, ಮಾವಿನ ಕಾಯಿ ಲಂಚದ ಆಮಿಷ ಒಡ್ಡಿ ಹೊಡೆತದ ಜೋರು ತುಸು ಕಡಿಮೆಯಾಗುವಂತೆ ಮಾಡಿಕೊಳ್ಳುತ್ತಿದ್ದವರೂ ಇದ್ದರು. ಆದರೆ ಅದು ಅಯ್ಯನವರ ಗಮನಕ್ಕೆ ಬಂದರೆ ಇಬ್ಬರಿಗೂ ಲತ್ತೆಯ ಮೇಲೆ ಲತ್ತೆ. + +ಇನ್ನು ಬರಹಕ್ಕೆ ಪೆನ್ನು, ಪೆನ್ಸಿಲ್‌ ಇರಲೇ ಇರಲಿಲ್ಲ. ಮೊದಲಲ್ಲಿ ಸ್ಲೇಟೂ ಬಳಸುವ ಹಾಗಿಲ್ಲ. ಹೊಸದಾಗಿ ಸೇರಿದ ಪ್ರತಿ ಹುಡುಗರ ಮುಂದೂ ಮೂರು ಬೊಗಸೆ ನುಣ್ಣನೆ ಮರಳು. ಅದನ್ನು ಅವರೆ ತಂದುಕೊಳ್ಳಬೇಕಿತ್ತು. ಮುಗಿದ ಮೇಲೆ ಗುಡಿಯ ಮೂಲೆಯಲ್ಲಿ ಗುಡ್ಡೆ ಹಾಕಬೇಕಿತ್ತು. ಆ ಮರಳನ್ನು ಹರಡಿ ಅದರಲ್ಲಿ ತೀಡಬೇಕು. ಅದೂ ಒಂದು, ಎರಡು ದಿನವಲ್ಲ. ತಿಂಗಳು ಗಟ್ಟಲೆ. ಅ ನಿಂದ ಕ್ಷ ವರೆಗೆ ಸ್ಫುಟವಾಗಿ ಬರೆಯುವವರೆಗೆ ತೀಡಲೇಬೇಕು. ಕೊಕ್ಕೆ ಕೋರೆ ಬರೆಯುವ ಹಾಗಿಲ್ಲ. ಅಯ್ಯನವರು ಒಪ್ಪುವ ತನಕ ಅದು ಮುಂದುವರೆಯುತಿತ್ತು. ಎಷ್ಟೋ ಸಲ ಬೆರಳಿಗೆ ಪೋಟು ಬೀಳುತಿತ್ತು. ತುಸು ಸುಧಾರಿಸಿದ ಮೇಲೆ ಕಡ್ಡಿ ಹಿಡಿದು ಬರೆಯಬಹುದು. ಅಂತೂ ಬರವಣಿಗೆಯ ಬುನಾದಿ ಬಹು ಭದ್ರವಾಗಿ ಬೀಳುತಿತ್ತು. ಆ ನಂತರವೆ ಹಲಗೆ ಬಳಪದ ಬಳಕೆ. + +ಶಾಲೆ ಪ್ರಾರಂಭವಾಗುತ್ತಿದ್ದುದು ರೈತರೆಲ್ಲ ಬದುಕಿಗೆ ಹೊಂಟಮೇಲೆ. ಬದುಕು ಎಂದರೆ ಹೊಲದ ಕೆಲಸ. ಸಾಲಿಯಲ್ಲಿಯ ಹಿರಿಯ ಹುಡುಗರಿಗೆ ಆಗ ಬಹು ಹುರುಪು. ಅವರು ಸಾಲಿ ತಪ್ಪಿಸುತ್ತಿದ್ದ ಹುಡುಗರನ್ನು ಹುಡುಕಿ ತರಬೇಕು. ಎಷ್ಟೋ ಹುಡುಗರು ಇಲ್ಲಿನ ಹೊಡೆತ ತಾಳದೆ ಹುಲ್ಲಿನ ಬಣವಿಯಲ್ಲೋ, ಸೊಪ್ಪೆಯ ಮೆದೆಯಲ್ಲೋ ಅಟ್ಟದಮೇಲೋ, ಅಡಕಲಕೋಣೆಯಲ್ಲೋ, ದನದ ಕೊಟ್ಟಿಗೆಯಲ್ಲೋ, ಅಜ್ಜಿಯ ಹಿಂದೋ ಅಡಗಿರುತ್ತಿದ್ದರು. ಅವರನ್ನು ಹುಡುಕಿ ಅಲ್ಲಿಯೇ ನಾಲಕ್ಕು ತದುಕಿ ಕರೆತರುತ್ತಿದ್ದರು. ಅದಕ್ಕೂ ಬಗ್ಗದಿದರೆ ಹೊತ್ತು ತಂದು ಗುಡಿಯಲ್ಲಿ ಕೆಡವುತ್ತಿದ್ದರು. ಅದಕ್ಕೆ ಪೋಷಕರ ಸಹಕಾರವೂ ಪೂರ್ತಿ ಇರುತ್ತಿತ್ತು. “ನಮ್ಮ ಹೈವಾನ, ಅಕ್ಕಿಅನ್ನ ಉಂಡು ಅಕ್ಷರ ಕಲಿಯೋ ಅಂದರೆ, ನವಣೆ ಬಾನ ಉಂಡು ನೇಗಿಲ ಹಿಡಿತಿನಿ ಅಂತಾನಲ್ಲ ಅಯ್ಯನೋರೆ, ನೀವೇ ಎಂಗಾನ ಮಾಡಿ ನಾಲಕಕ್ಷರ ಕಲಿಸಿ. ಕೊನೆಗೆ ಹೆಬ್ಬೆಟ್ಟು ಒತ್ತೋದು ಬಿಟ್ಟು ರುಜು ಹಾಕೋದು ಕಲಿತರೂ ಸಾಕು” ಎಂದು ಹಲುಬುತ್ತಿದ್ದರು. + +(ಎಚ್‌.ಶೇಷಗಿರಿರಾವ್) + +ಇನ್ನು ಆಗಿನ ಶಿಕ್ಷಾ ವಿಧಾನವು ಬಹು ವೈವಿದ್ಯಮಯವಾಗಿತ್ತು. ಆಗ ಗುರುಗಳು ಹೆಚ್ಚು ದಂಡಿಸಿದರೆ ಮಕ್ಕಳು ಹೆಚ್ಚು ಕಲಿಯುವರು ಎಂಬ ನಂಬಿಕೆ ಬಲವಾಗಿತ್ತು. ತಂದೆ ತಾಯಿಯರೆ ಬಂದು “ಅವನಿಗೆ ನಾಲಕ್ಕು ಬಿಗಿದು, ಬುದ್ದಿ ಕಲಿಸಿ” ಎಂದು ಗೋಗರೆಯುತ್ತಿದ್ದರು. ಒಂಟಿಕಾಲಲ್ಲಿ ನಿಲ್ಲಿಸುವದು, ಇನ್ನೊಬ್ಬನನ್ನು ಹೊತ್ತು ನಿಲ್ಲುವುದು, ಮೊಣಕೈ ಸಂದಿಯಲ್ಲಿ ಕೈ ತೂರಿಸಿಕೊಂಡು ಎರಡೂ ಕಿವಿಯನ್ನು ಹಿಡಿದು ಕುಕ್ಕರಗಾಲಿನಲ್ಲಿ ಕೂಡುವುದೂ, ಹಳ್ಳು ಹಚ್ಚಿ ಕಿವಿ ಹಿಂಡುವುದು, ಆಗ ಚಾಲತಿಯಲ್ಲಿದ್ದ ದಂಡನೆಯ ವಿಧಾನಗಳು. ಅತಿ ಮೊಂಡರಿಗೆ ಕೈ ಕಾಲು ಕಟ್ಟಿ ಕೆಡವುತ್ತಿದ್ದರು. ಅದನ್ನು ಕೋದಂಡ ಹಾಕುವುದು ಎನ್ನುವ ವಾಡಿಕೆ ಇತ್ತು. ಅದು ಹೇಗೆ ಆ ರೀತಿ ಬಳಕೆಯಾಯಿತೋ ನನಗಂತೂ ಹೊಳೆದಿಲ್ಲ. ಬಹುಶಃ ಕೈ ಕಾಲು ಒಟ್ಟಿಗೆ ಕಟ್ಟಿದಾಗ ದೇಹ ಬಿಲ್ಲಿನಂತೆ ಬಾಗುವುದರಿಂದ ಆ ಹೆಸರು ಬಂದಿರಬಹುದು. ಆದರೆ ಅದು ಬಹುವಿರಳ. ಇದರ ಪರಿಣಾಮ ಒಂದೋ ಹುಡುಗ ಹಾದಿಗೆ ಬರುತ್ತಿದ್ದ, ಇಲ್ಲವೆ ಸಾಲಿ ಬಿಡುತ್ತಿದ್ದ. ಅಯ್ಯನವರಿಗೆ ಶಾಲಾಶುಲ್ಕ ಇಷ್ಟೇ ನೀಡಬೇಕೆಂಬ ನಿಗದಿಯಾದ ಕಟ್ಟುಪಾಡು ಇರಲಿಲ್ಲ. + +ಅವರು ದೂರದ ಏಳಬಿಂಚಿ ಗ್ರಾಮದವರು. ಅವರಿಗೆ ನಮ್ಮೂರ ಹಿರಿಯ ರೈತನ ಹನ್ನೊಂದು ಅಂಕಣ ಮನೆಯ ಒಂದು ಕೋಣೆಯಲ್ಲಿ ಉಚಿತ ವಸತಿ. ಇನ್ನು ಊಟ, ಕರೆದವರ ಮನೆಯಲ್ಲಿ. ಅದಕ್ಕೆ ಬಿನ್ನ ಎನ್ನುತ್ತಿದ್ದರು. ಹೀಗಾಗಿ ಅವರು ಮನೆಗೆ ಊಟಕ್ಕೆ ಬರುವುದೆಂದರೆ ದೇವರೆ ಬಂದಂತೆ. ಆದರೆ ಅವರು ಬಹುತೇಕ ಜಂಗಮರಿರಬೇಕು. ಹಾಗಾಗಿ ಲಿಂಗಾಯಿತರೊಬ್ಬರ ಮನೆಯಲ್ಲಿ ಬಿನ್ನವಾಗುತಿತ್ತು. ಅವರ ಊಟದ ಪರಿಯೆ ಬಹುಚಂದ. ಅವರನ್ನು ಅಟವಾಳಿಗೆಯಲ್ಲಿ ಚಾಪೆ ಇಲ್ಲವೆ ಕಂಬಳಿಯ ಗದ್ದುಗೆಯ ಮೇಲೆ ಕೂಡಿಸುತ್ತಿದ್ದರು. ಅವರ ಎದುರಲ್ಲಿ ಒಂದೂವರೆ ಅಡಿ ಎತ್ತರ ಹಿತ್ತಾಳೆಯ ಮೂರು ಕಾಲಿನ ಸ್ಟೂಲು. ಅದನ್ನು ಅಡ್ಡಣಿಗೆ ಎನ್ನುವರು. ಅದರ ಮೇಲೆ ಕಂಚಿನ ಗಂಗಾಳ. ಪಕ್ಕದಲ್ಲೆ ಥಳಥಳ ಹೊಳೆಯುವ ಕಂಚಿನ ಚೊಂಬು ಮತ್ತು ವಾಟಗ. ಕುಳಿತ ಕೂಡಲೆ ವಿಭೂತಿ ಉಂಡೆ ಎದುರು ಬರುತಿತ್ತು. ಅದನ್ನು ಕೈನ ಮೂರೂ ಬೆರಳಿಗೆ ಗಾಢವಾಗಿ ಬಳಿದುಕೊಂಡು ಹಣೆಗೆ ಲೇಪಿಸಿಕೊಂಡರೆ ಬಡಿಸಲು ಸಂಕೇತ. ರೊಟ್ಟಿಯೋ, ಅನ್ನವೋ, ಹೋಳಿಗೆಯೋ, ಮಾದಲಿಯೋ ಏನು ಹಾಕಿದರೂ ಶಿವಾರ್ಪಣ ಎಂದು ಮೊದಲ ತುತ್ತು ಎತ್ತುತಿದ್ದರು. ಊಟ ಮಾಡುವಾಗ ಒಂದೇಒಂದು ಅಗಳೂ ಚೆಲ್ಲುತ್ತಿರಲಿಲ್ಲ. ಊಟವಾದ ಮೇಲೆ ಗಂಗಾಳದೊಳಗೆ ಕೈತೊಳೆದು ಆ ನೀರನ್ನೂ ಒಂದು ತೊಟ್ಟು ಬಿಡದೆ ಕುಡಿಯುತ್ತಿದ್ದರು. ಶಿವಾಯನಮಃ ಎಂದು ಎದ್ದರೆ ಊಟ ಮುಗಿದಂತೆ. ದಿನಕ್ಕೆ ಅವರದು ಎರಡು ಊಟವಾದರೆ ಮುಗಿಯಿತು. ನಂತರ ಏನನ್ನು ತಿನ್ನುತ್ತಿರಲಿಲ್ಲ. + +ಹಗಲಿನಶಾಲೆ ರಾತ್ರಿ ಭಜನಾ ಮಂದಿರ. ಯಾರೂ ಸಂಗೀತಗಾರರು ಇರಲಿಲ್ಲ. ಬಹುತೇಕ ಹಾಡುತಿದ್ದುದು ತತ್ವ ಪದಗಳು. ವಾದ್ಯ ಎಂದರೆ ಒಂದು ಏಕತಾರಿ. ಎರಡು ಮೂರು ಜತೆ ತಾಳಗಳು, ಚಿಟಿಕೆಗಳೂ. ದಪ್ಪಡಿ ಎಂದರೆ ಚಿಕ್ಕ ಕೈ ತಮಟೆಗಳು ಇರುತ್ತಿದ್ದವು. ನೇಕಾರ ಭರಮಪ್ಪ, ಕೆಲಸೇರ ಉದ್ದಾನಪ್ಪ, ಕುರುಬರ ಗೌಡಜ್ಜ, ಮಜ್ಜಿಗೆ ಬಸಪ್ಪ ಖಾಯಂ ಸದಸ್ಯರು. ಅಯ್ಯನವರದು ಮುಮ್ಮೇಳವಾದರೆ ಇವರೆಲ್ಲರದು ಹಿಮ್ಮೇಳ. ಅವರು ಹಾಡಿದ ಸಾಲನ್ನೇ ಮತ್ತೆ ಮತ್ತೆ ಒಟ್ಟಾಗಿ ಹಾಡುತ್ತಿದ್ದುದು ವಿಶೇಷ ಮೆರುಗು ಹಾಗೂ ಅರ್ಥವೈಶಾಲ್ಯವನ್ನು ಕೊಡುತ್ತಿದ್ದವು. ವಿಶೇಷ ಎಂದರೆ ಆಗ ಹೊತ್ತು ಕಂತುತಿದ್ದಂತೆ ಊಟ ಮುಗಿಯುತಿತ್ತು. ಭಜನೆ ಮಾಡಲು ಊಟವಾಗಿರಬಾರದೆಂದು ಕಡ್ಡಾಯವಿರಲಿಲ್ಲ. ಎಲ್ಲರೂ ಊಟ ಮುಗಿಸಿ ಸಾಲಿಗುಡಿಯಲ್ಲಿ ಸೇರುವರು ಗರ್ಭಗುಡಿಯ ಹೊಸ್ತಿಲ ಹೊರಗೆ ಆಚೆ ಈಚೆ ಸಾಲಾಗಿ ಕುಳಿತು ಸುಮಾರು ಎರಡು ತಾಸಿನವರೆಗೆ ಭಜನೆ ಮಾಡುವರು. ಕೆಲವರು ತಮ್ಮ ಕಟ್ಟೆಯ ಮೇಲೆ ಕುಳಿತೆ ಕಿವಿಗೊಡುತಿದ್ದರು. ನೀರವ ರಾತ್ರಿಯ ಮೌನದಲ್ಲಿ ಇವರ ಭಜನೆಯ ಸದ್ದು ದೂರದವರೆಗೆ ಕೇಳಿಸುತಿತ್ತು. ಮಂಗಳವಾರ, ಶುಕ್ರವಾರ ದೇವಿಗೆ ಊದು ಬತ್ತಿ ಬೆಳಗುತಿದ್ದರು. ಕಾರ್ತಿಕ ಮಾಸದಲ್ಲಿ ಮಾತ್ರ ಕೊಬ್ಬರಿ ಮಂಡಾಳಿನ ಚರಪು ಇರುತಿತ್ತು. ಆಗ ನಾವು ಹುಡುಗರೂ ಮುಕುರುತಿದ್ದೆವು. + +ಕುರುಬ ಗಡ್ಡಿಯಲ್ಲಿ ಏನಾದರೂ ಪಂಚಾಯತಿ ಆಗಬೇಕೆಂದರೆ ಅಲ್ಲಿಯೇ ಆಗಬೇಕು. ನಮ್ಮ ಊರಲ್ಲಿ ಬಹುತೇಕ ಕುರುಬರೆ ಜಾಸ್ತಿ. ಅವರ ವಿಳೇವು, ಮದುವೆ ಮಾತುಕತೆ, ಉಡಿಕೆ, ಬಿಡುಗಡೆ, ಗಂಡ ಹೆಂಡಿರ ಜಗಳ, ಅಣ್ಣ ತಮ್ಮಂದಿರ ಪಾಲು. ಹೀಗೆ ಎಲ್ಲವನ್ನೂ ಕುಲಸ್ಥರು ಸೇರಿ ತಿರ್ಮಾನ ಮಾಡುವರು ಮತ್ತು ಬಹುತೇಕ ಅವರದೇ ಅಂತಿಮ ಮಾತು. ತಪ್ಪು ಮಾಡಿದವರಿಗೆ ದಂಡ ಹಾಕುವುದು, ನೊಂದವರಿಗೆ ಪರಿಹಾರ ನೀಡುವದು. ಕಿತ್ತಾಡಿದವರನ್ನು ರಾಜಿ ಮಾಡಿಸುವುದು ಹಿರಿಯರಾದ ಪಂಚಾಯತಿದಾರರ ಹೊಣೆ. ಅವರ ಕಟ್ಟಳೆ ಮೀರಿ ಯಾರೂ ನಡೆಯುವಂತಿಲ್ಲ. ಅಷ್ಟು ಅದಕ್ಕೆ ಗೌರವ, ಕೋರ್ಟು ಕಚೇರಿ ಪೊಲೀಸು ಊರಿಗೆ ಬಹುದೂರ. ಎಲ್ಲ ದೇವರ ಎದುರಲ್ಲೆ ಇತ್ಯರ್ಥವಾಗುವವು. ಗುಡಿ ಸಾಮಾಜಿಕ ನೆಮ್ಮದಿಯ ಕೇಂದ್ರವೂ ಆಗಿತ್ತು. ಅಯ್ಯನವರು ಗುಡಿಯಲ್ಲೆ ಇದ್ದರೂ ಊರ ಪಂಚಾಯತಿಯಲ್ಲಿ ಅವರು ಭಾಗವಹಿಸುವಂತಿರಲಿಲ್ಲ. + +ಅಯ್ಯನವರು ಬಾಯಿಬಿಟ್ಟು ಕೇಳದಿದ್ದರೂ ಅವರಿಂದ ಯಾರೂ ಬಿಟ್ಟಿ ಪಾಠ ಹೇಳಿಸಿಕೊಳ್ಳುತ್ತಿಲಿಲ್ಲ. ಕೆಲವರು ವರ್ಷಕ್ಕೆ ಇಷ್ಟು ಎಂದು ಹಣ ನೀಡಿದರೆ ಇನ್ನುಳಿದವರು ದವಸ-ಧಾನ್ಯ, ಕಾಳು ಕಡಿ ಕೊಡುತ್ತಿದ್ದರು. ಅದೂ ಈಗಿನಂತೆ ತಿಂಗಳು ತಿಂಗಳಿಗೆ ಅಲ್ಲ. ಸುಗ್ಗಿಯ ಹಂಗಾಮಿನಲ್ಲಿ ಜೋಳ, ಭತ್ತ, ಶೇಂಗಾ ಅದು ಇದು ಸಂಗ್ರಹವಾಗುತಿತ್ತು. ಅದನ್ನು ಅವರು ಯಾರದಾದರೂ ಹಗೇವಲ್ಲಿ ಇಡುತ್ತಿದ್ದರು. ಉಳಿದವು ಊರ ಗೌಡರ ಕಣಜದಲ್ಲಿ, ಅವರ ಹೆಸರಲ್ಲಿ ಇರುತಿತ್ತು. ವರ್ಷಕ್ಕೋ ಆರು ತಿಂಗಳಿಗೋ ಒಂದು ಸಾರಿ ಅವರು ಊರಿಗೆ ಹೋಗುವಾಗ ಬಂಡಿ ಕಟ್ಟಿಕೊಡುತ್ತಿದ್ದರು. ಅದರಲ್ಲಿ ಅವರನ್ನು, ಅವರ ದವಸ ಧಾನ್ಯವನ್ನು ಅವರ ಊರಿಗೆ ತಲುಪಿಸುತಿದ್ದರು. + +ಶಾಲೆ ಎಂದರೆ ನಮಗೆ ಮನೆಗಿಂತ ಮೇಲು. ಅದರ ಶುಚಿತ್ವ ನಮ್ಮ ಕೆಲಸ. ಜವಾನರು ಇರಲಿಲ್ಲ. ಕೂಲಿಕೆಲಸ ಮಾಡಿಸಲು ಹಣ ಇರಲಿಲ್ಲ. ತರಗತಿವಾರು ತಂಡ ರಚಿಸುತ್ತಿದ್ದರು, ಅದಕ್ಕಾಗಿ ಸರತಿಯ ಮೇಲೆ ಹೊಣೆ ವಹಿಸಬೇಕಿತ್ತು. ದಿನವೂ ಕಸವನ್ನೂ ಖುಷಿಯಿಂದ ಗುಡಿಸುತಿದ್ದೆವು. ವಾರಕೊಮ್ಮೆ ಕಡಪ ಬಂಡೆಗಳನ್ನು ಒರೆಸಬೇಕಿತ್ತು. ಆ ಶಾಲೆಯಲ್ಲಿಯೇ ನಮಗೆ ಕಪ್ಪುಹಲಗೆಯ ಹೆಚ್ಚಿನ ಬಳಕೆಯ ಬಗ್ಗೆ ಅರಿವಾದದ್ದು. ಅಲ್ಲಿನ ಲೆಕ್ಕದ ಮೇಷ್ಟರು ತಾವು ಲೆಕ್ಕ ಮಾಡಿ ತೋರಿಸುವುದಲ್ಲದೆ ವಿದ್ಯಾರ್ಥಿಗಳನ್ನು ಬೋರ್ಡಿನ ಮುಂದೆ ಬಂದು ಮಾಡಲು ಹೇಳುತ್ತಿದ್ದರು. ಅದರಿಂದ ಕಪ್ಪು ಹಲಗೆಯ ಬಳಕೆ ಬಹುವಾಗಿರುತ್ತಿತ್ತು. ಆದರೆ ಅದರ ಹೆಚ್ಚಾದ ಬಳಕೆಯಿಂದ ಬಣ್ಣ ಕಳೆದುಕೊಂಡು ಬರೆದಾಗ ಏನೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಆಗ ಶಾಲೆಗೆ ಬರುವ ಅನುದಾನವೂ ಕಡಿಮೆ. ಬರುವ ಹಣ ಸೀಮೆಸುಣ್ಣಕ್ಕೆ ಸಾಕಾಗುತ್ತಿರಲಿಲ್ಲ. ಅಂದಮೇಲೆ ಅದಕ್ಕೆ ಕರಿ ಪೇಂಟು ಹಚ್ಚುವರು ಯಾರು? ಅಲ್ಲದೆ ಪೇಂಟು ಅಷ್ಟು ಚಾಲತಿಯಲ್ಲೂ ಇರಲಿಲ್ಲ. ಕಪ್ಪುಹಲಗೆಯನ್ನು ನಿರ್ವಹಿಸುವ ಹೊಣೆ ನಮ್ಮದೆ ಆಗಿರುತಿತ್ತು. ಅದಕ್ಕೆ ನಮ್ಮದೆ ಆದ ಪರಿಹಾರವನ್ನು ನಾವು ಕಂಡುಕೊಂಡಿದ್ದೆವು. ಇದ್ದಿಲನ್ನು ಸಣ್ಣಗೆ ಪುಡಿ ಮಾಡಿ ಸೋಸಿ, ನಂತರ ತೊಂಡೆ ತೊಪ್ಪಲನ್ನು ತಂದು ಅದರ ರಸ ತೆಗೆದು ಅದಕ್ಕೆ ಇದ್ದಲ ಪುಡಿಯನ್ನು ಸೇರಿಸಿ ಮಿಶ್ರಣ ತಯಾರಿಸುತ್ತಿದ್ದೆವು. ಹರಕು ಬಟ್ಟೆಯೆ ನಮ್ಮ ಬ್ರಷ್‌. ಅದನ್ನು ಮಿಶ್ರಣದಲ್ಲಿ ಅದ್ದಿ ಬೋರ್ಡಿಗೆ ಹಚ್ಚುತಿದ್ದೆವು. ಸಾಧಾರಣವಾಗಿ ಬೋರ್ಡಿಗೆ ಬಣ್ಣ ಬಳಿಯುವ ಈ ಕೆಲಸವನ್ನು ಶನಿವಾರದಂದು ಶಾಲೆ ಬಿಡುವ ಮುನ್ನವೆ ಮಾಡುವುದು. ಮಾರನೆ ದಿನ ಭಾನುವಾರ ರಜೆ. ಅದರ ಮೇಲೆ ಏನೂ ಬರೆಯಬೇಕಾಗಿರಲಿಲ್ಲ. ಸೋಮವಾರ ಶಾಲೆ ಶುರುವಾಗುವ ಹೊತ್ತಿಗೆ ಅದು ಕಪ್ಪಗೆ ಮಿರಿ ಮಿರಿ ಮಿಂಚುತಿತ್ತು. ಅದರ ಮೇಲೆ ಬರೆದ ಅಕ್ಷರಗಳು ಸುಸ್ಪಷ್ಟವಾಗಿರುತಿದ್ದವು. ಈ ಹೊಳಪು ಕನಿಷ್ಠ ಮೂರು ತಿಂಗಳವರೆಗೆ ಇರುತಿತ್ತು. ನಂತರ ಮತ್ತೆ ಹೊಸದಾಗಿ ತೊಂಡಿ ತೊಪ್ಪಲ ಹರಿಯ ಹೊರಡುತಿದ್ದೆವು. ಇದು ತರಗತಿಯ ಮಾನಿಟರ್‌ ನ ಕೆಲಸ. ಅವನ ಜತೆಯಲ್ಲಿ ನಾಲ್ಕಾರು ಜನ ಈ ಕೆಲಸದ ತಂಡದಲ್ಲಿರುವರು. ಕಪ್ಪು ಹಲಗೆಯ ಮುಂದೆ ಬಹಳ ಸಲ ಹೋಗುವ ನಾನು ಈ ಕೆಲಸವನ್ನು ಉತ್ಸಾಹದಿಂದ ಮಾಡುತಿದ್ದೆ. ಈಗ ಅತ್ಯಾಧುನಿಕ ಬೋರ್ಡುಗಳು ಬಂದಿವೆ. ಮೈಕೈಗೆ ಸುಣ್ಣದ ಧೂಳು ಆಗುವುದಿಲ್ಲ. ಡಸ್ಟರ್‌ ಗೊಡವೆ ಇಲ್ಲ. ಆದರೆ ಶಾಲೆ ನಮ್ಮದು, ಬೋರ್ಡು ನಮ್ಮ ಶ್ರಮದಿಂದ ಬರೆಯುವಂತಾಗಿದೆ ಎಂಬ ಸಾರ್ಥಕ ಭಾವನೆ ಈಗಿನ ಮಕ್ಕಳಲ್ಲಿ ಕಾಣುವುದು ಕಷ್ಟ. + +ಅಲ್ಲಿದ್ದಾಗ ನಾನು ಕಲಿತ ಇನ್ನೊಂದು ವಿದ್ಯೆಯೆಂದರೆ ಇಂಕು ತಯಾರಿಕೆ. ಅದೇ ತಾನೆ ಫೌಂಟೇನ್‌ ಪೆನ್ನು ಯುಗಕ್ಕೆ ನಾವು ಕಾಲಿಟ್ಟಿದ್ದೆವು. ಅದುವರೆಗೂ ಶಾಲೆಯಲ್ಲಿ ಮಸಿ ಕುಡಿಕೆ ಲೆಕ್ಕಣಿಕೆ ಬಳಕೆಯಲ್ಲಿತ್ತಂತೆ. ನಮ್ಮ ಶಾಲೆಯಲ್ಲಿ ಆರು, ಏಳನೆ ತರಗತಿಗೆ ಮಾತ್ರ ಪೀಠೋಪಕರಣ. ಉಳಿದವಕ್ಕೆ ಹಲಗೆಗಳು. ಆಗ ಇರುವವೆಲ್ಲ ಐದುಜನ ಕೂಡುವ ಉದ್ದನೆಯ ಬೆಂಚುಗಳು. ಮಡಚುವ ಬೆಂಚುಗಳು ಬಳಕೆಯಲ್ಲಿರಲಿಲ್ಲ. ಇಬ್ಬರು ಕೂಡಬಹುದಾದ ಡೆಸ್ಕ್ ಗಳಿದ್ದವು. ಅಲ್ಲಿ ನಮ್ಮ ಪುಸ್ತಕದ ಚೀಲಗಳನ್ನು ಇಟ್ಟುಕೊಳ್ಳಲು ಅವಕಾಶವೂ ಇತ್ತು. ಆದರೆ ಇಬ್ಬರು ಕೂಡುವಲ್ಲಿ ಮೂವರೂ ಕೂಡುತಿದ್ದೆವು. ಬರೆಯಲು ಅನುಕೂಲವಾಗಲೆಂದು ಮುಂದಿರುವ ಜಾರು ಮೇಜಿನ ಎರಡು ಕೊನೆಯಲ್ಲಿ ಮಸಿ ಕುಡಿಕೆ ಬೀಳದಂತೆ ಇಡಲು ದುಂಡನೆಯ ಗುಳಿಗಳಿದ್ದವು. ಅಲ್ಲದೆ ಜಾರಿ ಬೀಳದಂತೆ ಲೇಖನಿಯನ್ನಿಡಲು ಜಾಗವನ್ನು ಮಾಡಿರುತಿದ್ದರು. ಹುಡುಗ ಎಂಥ ವಿದ್ಯಾರ್ಥಿ ಎಂದು ಅವನ ಕೈ ನೋಡಿಯೆ ಹೇಳಬಹುದಿತ್ತು. ಅದೇನು ಹಸ್ತ ಸಾಮುದ್ರಿಕೆಯಲ್ಲ. ಹೆಚ್ಚು ಬರೆವ ಹುಡುಗರ ಕೈಗೆ ಮಸಿ ಅಂಟಿರುತಿತ್ತು. ಕಾರಣ ಫೌಂಟೆನ್ ಪೆನ್‌. ಆದರೆ ಅವು ಹೆಸರಿಗೆ ತಕ್ಕಂತೆ ಮಸಿಯ ಕಾರಂಜಿಗಳೆ. ಇಂಕು ಸೋರದ ಪೆನ್ನು ಅಪರೂಪ. ಎಂಟಾಣೆಗೆ, ರೂಪಾಯಿಗೆ ಪೆನ್ನು ಬರುತಿತ್ತು. ಫೈಲಟ್‌, ಪ್ಲೇಟೊ, ಹೀರೋ… ಅದು ಇದು ಎಂದು ಹತ್ತು ಹಲವು ಕಂಪನಿಯ ಪೆನ್ನು ಇದ್ದವು. ಪಾರ್ಕರ್‌ ಪೆನ್ನು ಮಾತ್ರ ವೈಭೋಗದ ವಸ್ತು. ಇನ್ನೆಲ್ಲವೂ ನಮ್ಮ ಕೈಗೆ ಬಂದರೆ ಅಳಲು ಶುರು ಮಾಡುತ್ತಿದ್ದವು. ಒಂದೊಂದು ಬಾರಿ ಅವು ಹುಡುಗಿಯರಿಗೂ ಮೀಸೆ ಮೂಡಿಸಿ ನೋಡುವವರ ಮೊಗದಲ್ಲಿ ನಗೆ ಅರಳಿಸುತಿದ್ದವು. + +ಹಲವು ಸಾರಿ ಪುಸ್ತಕಕ್ಕಿಂತ ಇಂಕಿಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತಿತ್ತು. ಕಾರಣ ಪೆನ್ನಿಗೆ ಹಾಕುವಾಗ ಇಂಕು ಚೆಲ್ಲುವುದು ಸಾಮಾನ್ಯ. ಹಾಕಿದ ಮೇಲೆ ಇಂಕು ಬುಡ್ಡಿಯೇ ಉರುಳಿ ಬೀಳುವುದು ಸಾಮಾನ್ಯವಾಗಿತ್ತು. ಅನೇಕ ರೀತಿಯ ಮಸಿ ಸಿಗುತ್ತಿದ್ದವು. ಕಪ್ಪು, ನೀಲಿ, ಕೆಂಪು ಹಸಿರು, ನೇರಳೆ ಇತ್ಯಾದಿ ಬಣ್ಣಗಳಲ್ಲಿ ದೊರೆಯುತಿದ್ದವು. ನಾವು ಸಾಧಾರಣ ನೀಲಿ ಮತ್ತು ಕೆಂಪು ಇಂಕನ್ನು ಮಾತ್ರ ಬಳಸುತಿದ್ದೆವು. ಕೆಲವು ಸಲ ಸಿದ್ಧವಾದ ಇಂಕು ದುಬಾರಿಯೆಂದು ಮಸಿ ಗುಳಿಗೆ ತಂದು ಬಳಸುತಿದ್ದೆವು. ಆಗ ಇನ್ನೊಂದು ಸಮಸ್ಯೆ ಎದುರಾಗುವುದು. ಒಂದೋ ನೀರು ಹೆಚ್ಚಾಗಿ ಬರೆದರೂ ಕಾಣದಷ್ಟು ತಿಳಿ. ಇಲ್ಲವೆ ನಿಬ್ಬಿನಲ್ಲಿ ಇಳಿಯದಷ್ಟು ಗಟ್ಟಿ. ಆದರೂ ಹೆದರದೆ ಪ್ರಯೋಗ ಮಾಡುತಿದ್ದೆವು. ಒಂದು ಸಲ ಟೋಳಿ ನಮ್ಮ ಹಳ್ಳಿಗೆ ಹೋದಾಗ ಹೊಸ ಯೋಜನೆ ಹೂಡಿದೆವು. ನಮ್ಮ ಹಳ್ಳಿಯಲ್ಲಿ ಈಜಾಡಲು ಬಾವಿಗೆ ಹೋದಾಗ ಗೊಂಡೆ ಹೂವಿನಗಿಡ ಬೇಲಿಯಲ್ಲಿ ಬೆಳೆಯುವುದು. ಅದರ ಹೂವು ರುದ್ರಾಕ್ಷಿಯಂತೆ ಇರುತ್ತವೆ. ಅದರ ಹಣ್ಣು ಕವಳಿ ಹಣ್ಣಿನ ತರಹ ಕಪ್ಪಗೆ ಚಿಕ್ಕವು. ಅವು ಗೊಂಚಲು ಗೊಂಚಲಾಗಿ ಹರಡಿರುವುದು ಕಂಡಿತು. ಗಿಡದಹಣ್ಣಿನ ರಸದಿಂದ ಮಸಿ ಮಾಡಬಹುದೆಂದು ಯಾರೋ ಹೇಳಿದರು. ಸರಿ ಪ್ರಯೋಗಕ್ಕೆ ತಯಾರಾದೆವು. ನಾವು ಇಂಕು ಉಪಯೋಗಿಸಿ ಬರೆಯುವವರು ನಾಲಕ್ಕು ಜನ. ನಾವೆ ತಯಾರು ಮಾಡಿದರೆ ಬಹಳ ದುಡ್ಡು ಉಳಿಯುವುದು ಎಂಬ ಯೋಚನೆ ಬಂತು. ಸರಿ ನಮ್ಮ ಬೇಟೆ ಶುರುವಾಯಿತು. ಖುಷಿಯಿಂದ ರಾಶಿ ಹಣ್ಣು ಕಿತ್ತು ತಂದೆವು. ಅದರ ರಸ ತೆಗೆದೆವು. ಮುಕ್ಕಾಲು ಪಾಲುಬೀಜ ಮತ್ತು ಸಿಪ್ಪೆಯೆ ಬಂದವು. ಅನಂತರ ಅದನ್ನು ಬಿಳಿ ಬಟ್ಟೆಯಲ್ಲಿ ಸೋಸಿದೆವು. ಅದು ನೀಲಿಯಾಗೇನೋ ಇತ್ತು. ಆದರೆ ತುಂಬ ತಿಳಿಯಾಯಿತು. ಅದಕ್ಕೆ ಯಥಾರೀತಿ ನುಣುಪಾದ ಇದ್ದಲು ಪುಡಿ ಸೇರಿಸಿದೆವು. ನಮ್ಮ ಮನೆಯಲ್ಲಿ ಮಾಡಿದ ಇಂಕು ಸಿದ್ಧವಾಯಿತು. ಒಂದು ಚಿಮಣಿ ಎಣ್ಣೆ ಬಾಟಲಿಯಲ್ಲಿ ಅದನ್ನು ತುಂಬಿದೆವು. ಆದರೆ ಅದಕ್ಕೆ ಮುಚ್ಚಳ ಇಲ್ಲ. ಸರಿ ಕಾಗದವನ್ನೆ ಸುರುಳಿ ಸುತ್ತಿ ಬಿರಟೆ ಮಾಡಿದೆವು. ಹೇಗೂ ನಾವು ನಾಲಕ್ಕು ಜನರಿಗೆ ಒಂದು ವರ್ಷವಾದರೂ ಬರುವುದು ಎಂದುಕೊಂಡೆವು. ಒಂದು ವರ್ಷ ಬಳಸಿದರೂ ಎಷ್ಟೆ ಬರೆದರೂ ಮುಗಿಯದು ಎಂದು ಸಂಭ್ರಮಿಸಿದೆವು. ಅದನ್ನು ಬಳಸಿ ನಾವು ಪುಸ್ತಕದಲ್ಲಿ ಬರೆಯಬೇಕಿತ್ತು. ನಮ್ಮ ಖುಷಿ ವಾರದಲ್ಲೆ ಹುಸಿಯಾಯಿತು. ನಮ್ಮ ಪುಸ್ತಕಗಳೆಲ್ಲ ಮಸಿಮಯವಾದವು. ನಾವು ಅದನ್ನು ಪುಸ್ತಕಗಳ ಜತೆ ಗೂಡಿನಲ್ಲಿ ಇಟ್ಟಿದ್ದೆವು. ನಾವು ನಾಲಕು ಜನರೂ ಆಗಾಗ ಅದನ್ನು ಪೆನ್ನಿಗೆ ತುಂಬಿಕೊಳ್ಳುತ್ತಿದ್ದವು. ಅದರ ಕಾಗದದ ಬಿರಟೆಯು ನೆನೆದು ಸಡಿಲವಾಗಿ ಎಲ್ಲ ಮಸಿ ಚೆಲ್ಲಿ ಹೋಗಿತ್ತು. ಮಸಿಯ ಹಣ ಉಳಿಸಲು ಮಾಡಿದ ಸಾಹಸ ಪುಸ್ತಕಕ್ಕೆ ಹೆಚ್ಚಿನ ಹಣ ನೀಡುವಂತೆ ಮಾಡಿತು. + +ಇನ್ನೊಂದು ಘಟನೆಯಂತೂ ಮರೆಯಲಾರದ್ದು; ಏಳನೆ ತರಗತಿಯಲ್ಲಿನ ಗೆಳೆಯನೊಬ್ಬನನ್ನು ನೋಡಿದ ಕೂಡಲೆ ಅಂದಿನ ಘಟನೆ ನೆನಪು ಮರುಕಳಿಸುವುದು. ನಮಗೆ ಸತ್ಯ ಎನ್ನುವ ಸಹಪಾಠಿ ಇದ್ದ. ಅವನು ಸೆಟ್ಟರ ಹುಡುಗ. ದಪ್ಪಗೆ ಕಪ್ಪಗೆ ಇದ್ದ. ಬಹು ಮುಗ್ಧ. ಜತೆಗೆ ತುಸು ಪೆದ್ದನಂತಿದ್ದ. ಒಂದು ಸಲ ಶಾಲೆಯಲ್ಲಿ ಆಟ ಆಡುತ್ತಿರುವಾಗ ಅವನ ಹಣೆಯಲ್ಲಿ ನಾಮ ಹಾಕಿದಂತೆ ನರ ಉಬ್ಬಿರುವುದು ಕಂಡಿತು. ಎಲ್ಲರೂ ಅದೇನು ಎಂದು ಅವನನ್ನು ಕೇಳುವವರೆ. ಮಾರನೆ ದಿನವೂ ಅದು ಇತ್ತು. ನಮ್ಮಲ್ಲಿ ಒಬ್ಬನು ಅದು ಅದೃಷ್ಟ ರೇಖೆಯನ್ನು ಅಳಿಸಿ ಬಿಡುವ ನರ. ಅದನ್ನು ಹಾಗೆಯೇ ಬಿಟ್ಟರೆ ದುರದೃಷ್ಟ ಉಂಟಾಗುವುದು ಎಂದು ಅಪರ ಪಂಡಿತನಂತೆ ಹೇಳಿದ. ಸತ್ಯನಿಗೆ ಪುಕ್ಕಲು ಶುರುವಾಯಿತು. ಅವನು ಓದಿನಲ್ಲಿ ಅಷ್ಟು ಮುಂದಿಲ್ಲ. ಬಹಳ ಕಷ್ಟಪಡುತಿದ್ದ. ಆದರೆ ನೆನಪು ಉಳಿಯುತ್ತಿರಲಿಲ್ಲ. ನಮ್ಮ ಗೆಳೆಯನೊಬ್ಬ ಅವನ ಹಣೆಯಲ್ಲಿನ ಈ ನರವೇ ದೇವರು ಹಣೆಬರಹದಲ್ಲಿನ ಬರೆದ ವಿದ್ಯೆಯನ್ನು ಮಸುಕಾಗುವಂತೆ ಮಾಡಿದೆ ಎಂದು ವಿವರಣೆ ನೀಡಿದ. ಏನಾದರೂ ಮಾಡಿ ಸರಿ ಮಾಡಿ ಎಂದು ಸತ್ಯ ದುಂಬಾಲು ಬಿದ್ದ. ಅಂದು ಮಧ್ಯಾಹ್ನ ಅವನ ಹಣೆಬರಹ ತಿದ್ದುವ ಕೆಲಸ ಶುರುವಾಯಿತು. ಇಬ್ಬರು ಬಲವಾದ ಹುಡುಗರು ಮರಳು ಮತ್ತು ಸೀಮೆಸುಣ್ಣದ ಪುಡಿ ಸೇರಿಸಿ ಅವನ ಹಣೆಯ ಮೇಲಿದ್ದ ಆ ನರವನ್ನು ತೀಡತೊಡಗಿದರು. ಅದು ಬಡ ಪೆಟ್ಟಿಗೆ ಹೋಗಲಿಲ್ಲ. ಇವರು ಬಿಡಲಿಲ್ಲ. ಇನ್ನೂ ಬಲವಾಗಿ ಉಜ್ಜಿದರು. ಹಣೆಯ ಆ ಭಾಗ ಕೆತ್ತಿದಂತಾಗಿ ರಕ್ತ ಬಂದಿತು. ಆದರೆ ಆ ನರ ಗಾಯದಲ್ಲಿ ಮರೆಯಾಯಿತು. ಅವನು ನೋವನ್ನು ನುಂಗಿಕೊಂಡು ಅದು ಹೋಯಿತಾ ಎಂದು ಕೇಳಿದ. ನಾವು ಪೂರ್ತಿ ಹೋಗಿಲ್ಲ, ಆದರೆ ಕೆಲವೆ ದಿನಗಳಲ್ಲಿ ಹೋಗುವುದು ಎಂದು ಸಮಾಧಾನ ಮಾಡಿದೆವು. ಗಾಯ ಒಂದು ವಾರದಲ್ಲೆ ಹಕ್ಕಳಿಕೆ ಗಟ್ಟಿ ನಂತರ ಉದುರಿ ಹೋಯಿತು. ನರದ ಬದಲಾಗಿ ನಾಮದಾಕಾರದ ಗಾಯದ ಗುರುತು ಅವನ ಹಣೆಯ ಮೇಲೆ ಶಾಶ್ವತವಾಗಿ ಉಳಿಯಿತು. ಅವನು ವೈಶ್ಯ. ತಿರುಪತಿ ವೆಂಕಟೇಶನ ಒಕ್ಕಲು. ಆಗೀಗ ಕೆಂಪನೆಯ ನಾಮ ಹಾಕಿಕೊಳ್ಳುತಿದ್ದ. ಹಿನ್ನೆಲೆ ಗೊತ್ತಿಲ್ಲದವರು ಅವನು ಅದೃಷ್ಟವಂತ, ಹುಟ್ಟುವಾಗಲೆ ದೇವರನಾಮ ಅವನ ಹಣೆಯ ಮೇಲಿದೆ ಎಂದು ಅನ್ನಲು ಶುರು ಮಾಡಿದರು. ಅವನು ಅಲ್ಲಗಳೆಯಲು ಹೋಗಲಿಲ್ಲ. ಹಾಗೂ ಹೀಗೂ ಆರನೆ ತರಗತಿ ಮುಗಿಸಿದ. ಕುಲ ವೃತ್ತಿಯಾದ ವ್ಯಾಪಾರ ಮಾಡಿಕೊಂಡು ನೆಮ್ಮದಿಯಾಗಿದ್ದಾನೆ. ಯಾವಾಗಲಾದರೂ ಕಂಡಾಗ ಬದಲಾದ ಅವನ ಅದೃಷ್ಟರೇಖೆಯನ್ನು ಕಂಡು ನಾವು ಮುಗುಳ್ನಗುತ್ತೇವೆ. + +ಅಲ್ಲಿ ನೋಡಿದುದು ಬಡವರು ಬಲ್ಲಿದರು ಎನ್ನುವ ಭೇದವಿಲ್ಲದೆ ಶ್ರಾವಣ ಶನಿವಾರ ತಿರುಪತಿ ಒಕ್ಕಲು ಅದ ಮನೆಯವರ ಮಕ್ಕಳು ಪಾತ್ರೆ ಹಿಡಿದು ಗೋಪಾಳ ಭಿಕ್ಷೆಗೆ ಬರುವರು. ಸಾಧಾರಣವಾಗಿ ಚಿಕ್ಕಮಕ್ಕಳು ಬಡವರ ಮನೆಯವರಾದರೆ ಹತ್ತಿಯ ಸಾದಾ ಪಂಚೆ ಉಟ್ಟುಕೊಂಡು ಕಂಚಿನ ತಂಬಿಗೆ ಹಿಡಿದು, ಸಿರಿವಂತರಾದರೆ ರೇಷ್ಮೆ ಮಡಿ ಉಟ್ಟುಕೊಂಡು ಬೆಳ್ಳಿಯ ತಂಬಿಗೆ ಕೈನಲ್ಲಿ ಹಿಡಿದು ನಾಮ ಹಾಕಿಕೊಂಡು ವೆಂಕಟರಮಣ ಗೋವಿಂದ ಗೋವಿಂದಾ ಎಂದು ಬರುವರು. ಸಾಧಾರಣ ಐದು ಮನೆಗೆ ಹೋಗುವುದು ವಾಡಿಕೆ. ಅವರಿಗೆ ಭಕ್ತಿಯಿಂದ ಅಕ್ಕಿ ಹಾಕುವರು. ಗೊತ್ತಿದ್ದವರ ಮನೆಯ ಹುಡುಗ ಬಾರದಿದ್ದರೆ, ಯಾಕೋ ಶನಿವಾರ ನಮ್ಮ ಮನೆಗೆ ಗೋಪಾಳಕ್ಕೆ ಬರಲಿಲ್ಲ ಎಂದು ವಿಚಾರಿಸುತಿದ್ದರು. ಗೋಪಾಳ ಬೇಡುವುದು ಮತ್ತು ಹಾಕುವುದು ಹೆಮ್ಮೆಯ ವಿಷಯವಾಗಿತ್ತು. + +ಊರಿನ ವಿಶೇಷ ಆಕರ್ಷಣೆ ಎಂದರೆ ನವರಾತ್ರಿಯಲ್ಲಿ ನಡೆವ ಹರಿಕಥೆ. ಕುಕುನೂರಿನ ದಾಸರೊಬ್ಬರು ಪ್ರತಿವರ್ಷ ಅಲ್ಲಿ ಬಂದು ಹರಿಕಥೆ ಮಾಡುವರು. ಅವರಿಗೆ ಬಡಗೇರ ಮಾನಪ್ಪ ಹಾರ್ಮೋನೀಯಂ ಮತ್ತು ಕೆಲಸಿಗರ ವೀರಭದ್ರಪ್ಪ ತಬಲದಲ್ಲಿ ಜೊತೆ ನೀಡುವರು. ಅವರ ಉಡುಪು ಎದ್ದುಕಾಣುವಂತೆ ಇರುತಿತ್ತು. ತಿಳಿಹಳದಿ ಬಣ್ಣದ ರೇಶಿಮೆ ಜುಬ್ಬ, ಕೆಂಪು ಅಗಲದಂಚಿನ ಕಚ್ಚೆ ಪಂಚೆ, ಕೊರಳ ಸುತ್ತ ಶಲ್ಯ, ತಲೆಯ ಮೇಲೆ ಮರಾಠಿ ಶೈಲಿಯ ಪಾಗು, ಜತೆಗೆ ದಿನವೂ ಭಕ್ತರು ಹೆಣೆದು ಹಾಕುತಿದ್ದ ಹೂವಿನ ಹಾರ, ಕಾಲಿಗೆ ಕಿರುಗೆಜ್ಜೆ ಮತ್ತು ಬಲಗೈನಲ್ಲಿ ಚಿಟಿಕೆ ಸಂಗೀತ ಸಾಹಿತ್ಯ ಸೇರಿದ ಕಥೆ ಮಧ್ಯ ಮಧ್ಯ ಹಾಸ್ಯ ಪ್ರಸಂಗಗಳು ಇರುತಿದ್ದವು. ಅವರು ಹೇಳುವ ಕಥೆಗಳಿಗಿಂತ ಉಪ ಕಥೆಗಳು ನಮಗಂತೂ ಬಹಳ ಮಜಾ ಕೊಡುತ್ತಿದ್ದವು. ಆ ದಿನಗಳಲ್ಲಿ ನಗರೇಶ್ವರನ ಗುಡಿಯಲ್ಲಿ ಅರ್ಧ ಊರೇ ಸಂಜೆಗೆ ನೆರೆದಿರುತಿತ್ತು. ಅವರನ್ನು ದಿನಕ್ಕೊಬ್ಬರು ಊಟಕ್ಕೆ ಕರೆಯುತ್ತಿದ್ದರು. ಅದರಲ್ಲೂ ಮೇಲಾಟ. ದಿನನಿತ್ಯದ ಮಂಗಳಾರತಿ ತಟ್ಟೆಯಲ್ಲಿ ಬರುವ ದಕ್ಷಿಣೆಯ ಜೊತೆ ಕೊನೆಯ ದಿನ ಪಟ್ಟಿಹಾಕಿ ಸಂಭಾವನೆ ಕೊಡುತಿದ್ದರು. ಅವರಿಗೆ ಅದು ಆದಾಯದ ಮೂಲವಾಗಿರದೆ ಜೀವನದ ಆಚರಣೆಯ ಭಾಗವಾಗಿತ್ತು.ಜನರಿಗೆ ಹರಿಕಥೆ ಹಬ್ಬದ ಅವಿಭಾಜ್ಯ ಅಂಗವಾಗಿತ್ತು. ಅದೊಂದು ಸಂಜೆಗೆ ಎಲ್ಲರೂ ಒಟ್ಟು ಸೇರುವ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭವಾಗಿತ್ತು ಮಕ್ಕಳಿಗೆ ಸಂಗೀತ ಸಂಸ್ಕೃತಿಯ ಜತೆಜತೆಗೆ, ಉಪ ಕಥೆಗಳಿಂದ ಮನರಂಜಿಸುವ ಆಕರ್ಷಣೀಯ ಕೇಂದ್ರವಾಗಿತ್ತು. ತಂದೆ ತಾಯಿ, ಅಜ್ಜ-ಅಜ್ಜಿ, ನೆರೆಹೊರೆಯವರ ಜತೆ ಬೆರೆತು ಕಲಿಯುವ ತಾಣವಾಗಿತ್ತು. + +ಅಪ್ಪಾಜಿ ಎಂದೇ ಪರಿಚಿತರು. ಹಂಪಿಯ ಹತ್ತಿರ ಇವರ ಊರು. ಹಸ್ತಪ್ರತಿ, ಪುರಾತತ್ವ ಪರಿಣಿತರು. ಚಾರಣ, ಓದು, ಬರಹ ನೆಚ್ಚಿನ ಹವ್ಯಾಸ. ನಿವೃತ್ತರಾಗಿ ಒಂದೂವರೆ ದಶಕ. \ No newline at end of file diff --git a/Kenda Sampige/article_462.txt b/Kenda Sampige/article_462.txt new file mode 100644 index 0000000000000000000000000000000000000000..e3c9e40fdbfcdc2d6b1eb99e295310a38b13d9f3 --- /dev/null +++ b/Kenda Sampige/article_462.txt @@ -0,0 +1,39 @@ +ಪುತ್ತೂರಿನಲ್ಲಿ ಶಿರಸ್ತೆದಾರನಾಗಿದ್ದ ಕರಣಿಕ ದೇವಪ್ಪಯ್ಯ ಒಂದು ಸಣ್ಣ ಸೈನ್ಯವನ್ನು ಇಟ್ಟುಕೊಂಡು ತನ್ನ ಮರ್ಜಿಗನುಸಾರವಾಗಿ ಪರಂಗಿಗಳ ದರ್ಬಾರು ನಡೆಸುತ್ತಿದ್ದ. ಸ್ವಲ್ಪ ದುಷ್ಟ ಕೂಡ. ಕಂಪೆನಿ ಕಾಯ್ದೆ ಜಾರಿ ಮಾಡುವುದರಲ್ಲಿ ಮಹಾಗಟ್ಟಿಗ. ಏನಾದರೂ ಹೆಚ್ಚು ಕಡಿಮೆಯಾಯಿತೇ, ರಂಪ ಮಾಡುತ್ತಿದ್ದ ನೀಚ ಆತ. + +ದೇವಪ್ಪಯ್ಯ ಶಿಸ್ತಿನವನು. ಪರಂಗಿಗಳನ್ನು ಇನ್ನು ಯಾರೂ ಅಡಿಮೇಲು ಮಾಡಲು ಸಾಧ್ಯವಿಲ್ಲ ಎನ್ನುವುದು ಆತನ ಭಾವನೆ. ಹಾಗಾಗಿ ತಾನು ಮಾಡಿದ್ದೇ ಸರಿ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದ. ಏನಾದರೂ ಹೆಚ್ಚು ಕಡಿಮೆಯಾಯಿತೋ ವಿನಾ ಕಾರಣ ದಂಡಿಸುತ್ತಿದ್ದ. ಹಾಗಾಗಿ ದೇವಪ್ಪಯ್ಯನನ್ನು ಕಂಡರೆ ಜನರಿಗೆ ಭಯ. ಹಿಂದಿನಿಂದ ಈ ಮಾರಿ ಯಾವಾಗ ಮಣ್ಣು ತಿನ್ನುತ್ತಾನೋ ಎಂದು ಶಾಪ ಹಾಕುತ್ತಿದ್ದರು. + +ದೇವಪ್ಪಯ್ಯ ಕೊಡಗಿನಲ್ಲಿ ಜನ ಸ್ವಾತಂತ್ರ್ಯಕ್ಕಾಗಿ ಆಗಾಗ್ಗೆ ಸಂಘಟನೆಯಾಗುತ್ತಿರುವುದು, ಮುಖಂಡರಾದ ಅಪರಂಪಾರ, ಕಲ್ಯಾಣಸ್ವಾಮಿಯನ್ನು ಪರೆಂಗಿಗಳು ಹಿಡಿದು ಹಾಕಿದ ವಿಚಾರ ಅರಿತಿದ್ದ. ಕನ್ನಡ ಜಿಲ್ಲೆಯಲ್ಲಿ ಬೀರಣ್ಣ ಬಂಟನ ಉಪಟಳ ಬಿಟ್ಟರೆ ಸಣ್ಣ ಪುಟ್ಟ ಚಿಲ್ಲರೆ ರಗಳೆ ನಡೆದಿದೆ ಹೊರತು ಪರೆಂಗಿಗಳ ಹುಟ್ಟಡಗಿಸುವ ಯಾವ ಸಂಗತಿಯೂ ಗಮನಕ್ಕೆ ಬಾರದೆ ನಿರಾತಂಕವಾಗಿದ್ದ. ಆದರೆ ಒಮ್ಮಿಂದೊಮ್ಮೆಲೇ ಅಟ್ಲೂರು ರಾಮಪ್ಪಯ್ಯನ ಹತ್ಯೆ ದಿಗಿಲೆಬ್ಬಿಸಿತು. ಅಟ್ಲೂರು ರಾಮಪ್ಪಯ್ಯ ಹಾಗೂ ಈತ ಖಾಸ ದೋಸ್ತು ಕೂಡ. ಪರೆಂಗಿಗಳಿಗೆ ನೀರು ಚಿಮುಕಿಸಿ ಗಂಧ ಅರೆದು ಕೊಡುವವರು ಇವರಿಬ್ಬರು. ಒಮ್ಮಿಂದೊಮ್ಮೆಲೇ ರಾಮಪ್ಪಯ್ಯನ ಹತ್ಯೆ ತಿಳಿದ ಮೇಲೆ ಈತ ಭಯದಿಂದ ಕಂಪಿಸಿದ. ಮುಂದಕ್ಕೆ ತನ್ನ ಸರದಿಯೋ ಎನ್ನುವ ಭಯ ಎದುರಾಯಿತು. ಆದರೂ ಧೈರ್ಯ ಕೆಡಲಿಲ್ಲ. ಕೂಡಲೇ ಕಲೆಕ್ಟರ್ ಲೆವಿನ್ಗೆ ಖುದ್ದಾಗಿ ಸುದ್ದಿ ಮುಟ್ಟಿಸಿದ. ಲೆವಿನ್ ಅದೊಂದು ಚಿಲ್ಲರೆ ಸಂಗತಿ ಎಂದು ಮೂಲೆಗೆ ಸರಿಸಿದ್ದ. ‘ದೇವಪ್ಪಯ್ಯ, ಬ್ರಿಟಿಷ್ ಕೋಟೆಯನ್ನು ಮುರಿಯಲು ಯಾರಿಂದಲೂ ಸಾಧ್ಯವಿಲ್ಲ, ಭಯಪಡಬೇಡ’ ಎಂದು ಧೈರ್ಯ ನೀಡಿದಾಗ ತುಸು ಸಮಾಧಾನದಿಂದ ಪುತ್ತೂರಿಗೆ ಬಂದ. + +ಮರುದಿನ ಮಧ್ಯಾಹ್ನವೇರಿದಾಗ ಮತ್ತೊಂದು ಅಘಾತಕಾರಿ ಸುದ್ದಿ ಅವನ ಜಂಘಾಬಲವನ್ನು ನಡುಗಿಸಿತು. ಅಮರ ಸುಳಿಯ ಕಲ್ಯಾಣಸ್ವಾಮಿಯ ನೇತೃತ್ವದಲ್ಲಿ ಸ್ವತಂತ್ರಗೊಂಡಿದೆ ಎಂದು ಘೋಷಣೆ ಮಾಡಿರುವ ವಿಚಾರ ಕೇಳಿದಾಗ ನುಣ್ಣಗೆ ಬೆವರಿದ ದೇವಪ್ಪಯ್ಯ, ಜಿಲ್ಲಾ ಕಲೆಕ್ಟರ್ಗೆ ತನ್ನ ಬಾಡಿಗೆ ಬಂಟರ ಮೂಲಕ ಸುದ್ದಿ ಮುಟ್ಟಿಸಿದ. ಸಾಯಂಕಾಲ ಮತ್ತೊಂದು ಕಳವಳಕಾರಿ ಸುದ್ದಿ ಬಂದಾಗ ದೇವಪ್ಪಯ್ಯ ಮತ್ತಷ್ಟು ಇಳಿದು ಹೋದ. ಸ್ವಾತಂತ್ರ ಹೋರಾಟಗಾರರು ಬೆಳ್ಳಾರೆ ಕೋಟೆಯನ್ನು ಆಕ್ರಮಿಸಿ ವಶಪಡಿಸಿಕೊಂಡಿರುವ ವಿಚಾರ ಅವನ ತಲೆ ಕೆಡಿಸಿತು. ಈ ಬಾರಿ ಮಂಗಳೂರಿಗೆ ಬಾಡಿಗೆ ಬಂಟರನ್ನು ಕಳುಹಿಸುವ ಗೋಜಿಗೆ ಹೋಗಲಿಲ್ಲ. ಸ್ವತಃ ತಾನೇ ಕುದುರೆಯೇರಿ ಮಂಗಳೂರಿಗೆ ದೌಡಾಯಿಸಿದ. + +ಕಲೆಕ್ಟರ್ ಲೆವಿನ್ ತುಸು ಮೋಜುಗಾರ. ಗುಂಡು ಹಾಕಿದರೆ ಅವನನ್ನು ಮಾತನಾಡಿಸುವವರಿಲ್ಲ. ಗುಂಡಿನ ಗಮ್ಮತ್ತಿನಲ್ಲಿ ಏನು ಮಾಡುತ್ತಾನೆಂದು ಎಂದು ಅವನಿಗೇ ಅರಿವಿರುವುದಿಲ್ಲ. ದೇವಪ್ಪಯ್ಯ ಮಂಗಳೂರು ಸೇರಿದಾಗ ನಟ್ಟ ನಡುರಾತ್ರಿ. ನಿತ್ಯ ನೀರವವಾಗಿ, ಪ್ರಶಾಂತವಾಗಿದ್ದ ಅರಬ್ಬಿ ಸಮುದ್ರವು ಕೋಲಾಹಲದಿಂದ ಅರ್ಭಟಿಸಲು ಆರಂಭಿಸಿತ್ತು. ಅದನ್ನು ಗಮನಿಸಿದ ಜನ ಮಳೆಯಾಗಬಹುದೋ ಎಂದು ಶಂಕೆ ವ್ಯಕ್ತಪಡಿಸಿದ್ದರು. + +ಕಲೆಕ್ಟರನನ್ನು ತುರ್ತಾಗಿ ಕಾಣಬೇಕೆಂದು ಚಾಕರಿದಾರರಲ್ಲಿ ಹೇಳಿದಾಗ ಕಲೆಕ್ಟರ್ ಎಲ್ಲಿ ಅಷ್ಟು ಸುಲಭವಾಗಿ ಸಿಗುತ್ತಾನೆ? ಪಾನಮತ್ತನಾಗಿ ಮಾನಿನಿಯರ ಸೇವೆ ಮಾಡುವ ಸಂದರ್ಭದಲ್ಲಿ ದೇವಪ್ಪಯ್ಯನಿಗೆ ಸುದ್ದಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಛೇ ತಾನು ರಾತೋರಾತ್ರಿ ಕೋಟೆಯನ್ನು ಬಿಟ್ಟು ಬರಬಾರದಿತ್ತು ಎನ್ನುವ ಆತಂಕ ಕಾಡಿತ್ತು. ಬಿಟ್ಟು ಇರುವಂತೆಯೂ ಇಲ್ಲ, ಹೋಗುವಂತೆಯೂ ಇಲ್ಲ ಎನ್ನುವ ತಾಕಲಾಟದಲ್ಲಿ ಮುಳುಗಿದ. ಕಡೆಗೆ ಕಲೆಕ್ಟರ್ ಸುದ್ದಿ ಮುಟ್ಟಿಸಲು ಅವನ ಪರಿಚಾರಕರಿಗೆ ಹೇಳಿ ತರಾತುರಿಯಲ್ಲಿ ಬಂದ ದಾರಿಗೆ ಸುಂಕವಿಲ್ಲವೆಂದು ದೇವಪ್ಪಯ್ಯ ಮತ್ತೆ ಪುತ್ತೂರಿಗೆ ಹೊರಟ. ಮರುದಿನ ಬೆಳಿಗ್ಗೆ ಲೆವಿನ್ ನ ಚಾಕರಿಯವರು ಆತನಿಗೆ ರಾತ್ರಿ ದೇವಪ್ಪಯ್ಯ ಹೇಳಿದ ಸುದ್ದಿ ಮುಟ್ಟಿಸಿದರು. ಅದನ್ನು ಕೇಳಿದ ಲೆವಿನ್ ಕೂಡ ಹೌಹಾರಿದ. + +‘ಅಷ್ಟು ಆಹಂಕಾರವೇ ಕಲ್ಯಾಣಪ್ಪನಿಗೆ’ ಎಂದು ಬೈಯ್ದಾಡಿದ, ರೇಗಿದ. ಕೂಡಲೇ ತುಕಡಿ ಸಿದ್ಧ ಮಾಡಿಕೊಂಡು ಪುತ್ತೂರಿನ ರಕ್ಷಣೆಗೆ ಹೊರಡಲು ಸಿದ್ಧತೆ ಮಾಡಿದ. ಈ ನಡುವೆ ಪುತ್ತೂರಿಗೆ ಜನ ಕಳುಹಿಸಿ, ದೇವಪ್ಪಯ್ಯನಿಗೆ ಯಾವುದೇ ಗಳಿಗೆಯಲ್ಲೂ ಸೈನ್ಯ ಬರಬಹುದು, ಎಚ್ಚರದಿಂದಿರು ಎಂದು ಧೈರ್ಯದಿಂದ ಇರಲು ಸುದ್ದಿ ಕಳುಹಿಸಿದ. ಆದರೆ ಲೆವಿನ್ನ ದುರಾದೃಷ್ಟಕ್ಕೆ ಸಾಕಷ್ಟು ಸೈನಿಕರ ಕೊರತೆಯಿತ್ತು. ಒಂದು ವಾರದ ಮುಂಚೆ ಕೇರಳದ ಕಣ್ಣೂರಿನಲ್ಲಿ ನಡೆದ ಹಿಂಸಾಚಾರವನ್ನು ಬಗ್ಗು ಬಡಿಯಲು ಒಂದು ತುಕಡಿ ಹೋಗಿತ್ತು. ಆದರೆ ಮದ್ದು ಗುಂಡುಗಳು, ಫಿರಂಗಿಗಳಿಗೆ ಕೊರತೆಯಿರಲಿಲ್ಲ. ಕೊರತೆಯಿದ್ದದ್ದು ಕಾಲಾಳುಗಳು ಹಾಗೂ ಹೋರಾಡುವ ಸೈನಿಕರದು. ಆದರೂ ಇದ್ದುದ್ದನ್ನು ಒಟ್ಟುಗೂಡಿಸಿ ಹೊರಡುವಾಗ ಮಧ್ಯಾಹ್ನವಾಯಿತು. ಮತ್ತೆ ಪುತ್ತೂರಿಗೆ ಮುಟ್ಟುವಾಗ ರಾತ್ರಿ ವೇಳೆಯಾಯಿತು.ಮಂಗಳೂರಿನಿಂದ ಹೊರಟ ಪರೆಂಗಿ ಸೈನ್ಯದ ಬಲಾಬಲ ತಿಳಿದುಕೊಂಡ ಮಂಗಳೂರಿನ ಸುಬ್ರಾಯ ಶಾನುಭೋಗರು ದೂತರ ಮೂಲಕ ಕಲ್ಯಾಣಸ್ವಾಮಿಗೆ ವರದಿ ಕಳುಹಿಸಿದರು. ಅದು ಕಲ್ಯಾಣಸ್ವಾಮಿಗೆ ಮುಟ್ಟುವಾಗಲೂ ರಾತ್ರಿ ವೇಳೆಯಾಗಿತ್ತು. ಹಾಗಾಗಿ ಕಲ್ಯಾಣಸ್ವಾಮಿಗೆ ಪರೆಂಗಿಗಳ ಬಲವನ್ನು ಅಳೆಯಲು ಸುಲಭವಾಯಿತು.‘ರಾಮೇಗೌಡರೇ, ಪರೆಂಗಿಗಳ ಸೈನ್ಯದ ವಿರುದ್ಧ ಹೋರಾಡಲು ನಮ್ಮ ಒಂದು ತುಕಡಿ ಸಾಕು. ಆದ್ದರಿಂದ ನಾವು ಹಿಮ್ಮೆಟ್ಟುವುದು ಬೇಡ. ಸ್ವಲ್ಪ ಎದುರಾಳಿಯನ್ನು ಮೋಸಗೊಳಿಸಿ ತಂತ್ರಗಾರಿಕೆ ಮಾಡೋಣವೇ?’ ಎಂದು ನಕ್ಕ ಕಲ್ಯಾಣಪ್ಪ.‘ನೀವು ಬಹಳ ಜಾಣರಪ್ಪ. ನಾನು ಏನೋ ಅಂದ್ಕೊಂಡಿದ್ದೆ, ಪರವಾಗಿಲ್ಲ. ಒಳ್ಳೆಯ ತಂತ್ರಗಾರಿಕೆ ತಿಳಿದವರು ನೀವು’ ಎಂದು ಹೊಗಳಿದ. ರಾಮೇಗೌಡ ಈ ನಡುವೆ ಪುತ್ತೂರಿನಲ್ಲಿ ಬೀಡು ಬಿಟ್ಟಿದ್ದ ಕಲೆಕ್ಟರ್ ಸೈನ್ಯದ ಬಲಾಬಲವನ್ನು ತಿಳಿದು ಕಲ್ಯಾಣಪ್ಪನಿಗೆ ವರದಿ ಮಾಡಿದ.ಈ ಬಾರಿ ಕಲ್ಯಾಣಸ್ವಾಮಿಯ ಆತ್ಮವಿಶ್ವಾಸ ಬಹಳ ಎತ್ತರಕ್ಕೆ ಏರಿತ್ತು. ರಾತ್ರಿ ಹೊತ್ತು ಪರೆಂಗಿಗಳ ತುಕಡಿಗೆ ದಾಳಿ ಮಾಡಿ ಅವರನ್ನು ಗಲಿಬಿಲಿಗೊಳಿಸಬೇಕೆಂದು ಆತನ ನಿರ್ಧಾರಕ್ಕೆ ರಾಮೇಗೌಡ, ನಂಜಯ್ಯ ಸಹಮತ ವ್ಯಕ್ತಪಡಿಸಿದರು. ಬೆಳಕು ಹರಿವ ಮೊದಲು ರಾಮೇಗೌಡನ ನೇತೃತ್ವದಲ್ಲಿ ಲೆವಿನ್ನ ಸೇನೆಯ ಮೇಲೆ ದಾಳಿಮಾಡಬೇಕೆಂದು ಮಾತುಕತೆಯಾಯಿತು.ರಾತ್ರಿ ವೇಳೆಯೇ ಸದ್ದಿಲ್ಲದೆ ಬೆಳ್ಳಾರೆಯಿಂದ ಪುತ್ತೂರಿಗೆ ಸೇನೆ ಬಂದಿಳಿಯಿತು. ಸೈ£ಕರಿಗೆ ತುಸು ವಿಶ್ರಾಂತಿ ಪಡೆಯಲು ಹೇಳಿ ರಾಮೇಗೌಡ ದಾಳಿ ಹೇಗೆ ಮಾಡಬೇಕೆಂದು ಮುನ್ಸೂಚನೆ ನೀಡಿದ.ಆದರೆ ಕಲ್ಯಾಣಸ್ವಾಮಿಯ ಸೈನ್ಯ ಪುತ್ತೂರಿಗೆ ಬಂದಾಗ ಅಲ್ಲಿ ಸ್ವಾಗತಿಸಲು ಪರೆಂಗಿಗಳ ಸೇನೆಯಿರಲಿಲ್ಲ. ಅರೇ ಇದೇನು ಕತೆ? ಎಂದು ರಾಮೇಗೌಡ ಬೆರಗಾದ. ಇದರಲ್ಲಿ ಪರೆಂಗಿಗಳ ಪಿತೂರಿಯೇನಾದರೂ ಇದೆಯೇ ಎಂದು ಕಲ್ಯಾಣಸ್ವಾಮಿ ದಂಗಾದ. ನಮ್ಮ ಗೂಢಚಾರರೆಲ್ಲಿ? ಎಂದು ಪ್ರಶ್ನಿಸಿದ ಕಲ್ಯಾಣಸ್ವಾಮಿ.ಬಹುಶಃ ನಿದ್ದೆ ಹೋಗಿರಬೇಕು ಎಂಬ ಉತ್ತರ ಬಂತು. ‘ಎಷ್ಟೊಂದು ನಿರ್ಲಕ್ಷ್ಯ….!ಇಂತಹ ಪರಿಸ್ಥಿತಿಯಲ್ಲಿ ಅಂತಹ ಪ್ರಾಣ ಹೋಗುವ ನಿದ್ದೆಯೇ?’ ಎಂದು ಗುಡುಗಿದ ಕುಕನೂರು ಚೆನ್ನಯ್ಯ. ಅಂತೂ ಬೆಳಗಿನ ಜಾವ ಚುಮು ಚುಮು ಚಳಿಯಲ್ಲಿ ಹೋರಾಟಕ್ಕೆ ಸಿದ್ಧವಾದ ಕಲ್ಯಾಣಪ್ಪನ ಸೇನೆಗೆ ನಿರಾಸೆ ಕಾದಿತ್ತು. ಹಾಗೆಯೇ ಆತಂಕ ಮುಂದುವರಿದಿತ್ತು.ಅಷ್ಟರಲ್ಲಿ ಸೈನಿಕರ ಸದ್ದು ಕೇಳಿ ಗೂಢಚಾರನೊಬ್ಬ ಓಡಿ ಬಂದ.‘ಎಲ್ಲಿ ಹೋಗಿದ್ದೀಯಾ? ನಾವು ನಿನಗಾಗಿ ಕಾಯಬೇಕಿತ್ತಾ?’ ಗುಡುಗಿದ ರಾಮೇಗೌಡ.‘ಅಲ್ಲ ಸ್ವಾಮಿ ತಾವು ಬೆಳಗಾದ ಮೇಲೆ ಬರುವಿರೆಂದು ಸುದ್ದಿ ಕಳುಹಿಸಿದ್ದೀರಿ. ಈಗ ನೋಡುವಾಗ ಬೆಳಗ್ಗಿನ ಜಾವವೇ ಬಂದಿದ್ದೀರಿ. ಹಾಗೆ ನಾವು ಆಯಾಸಗೊಂಡಿದ್ದರಿಂದ ನಿದ್ದೆಗೆ ಶರಣಾಗಬೇಕಾಯಿತು. ನಮ್ಮನ್ನು ಕ್ಷಮಿಸಬೇಕು.’ ಎಂದು ತಪ್ಪೊಪ್ಪಿಕೊಂಡ. ನಿಜವಾಗಿಯೂ ತಪ್ಪು ಇವರದೇ ಆಗಿತ್ತು. ಪುತ್ತೂರಿಗೆ ಬೆಳಿಗ್ಗೆ ಆಕ್ರಮಣ ಮಾಡುವುದೆಂದು ನಿರ್ಣಯವಾಗಿತ್ತು. ಆದರೆ ಪರೆಂಗಿಗಳ ಯುದ್ಧ ಕೌಶಲ್ಯವರಿತ ರಾಮೇಗೌಡ ಬೆಳಗ್ಗಿನ ಜಾವದಲ್ಲಿ ಆಕ್ರಮಣ ಮಾಡುವುದೆಂದು ಕೊನೆಯ ಕ್ಷಣದಲ್ಲಿ ಯೋಜನೆ ಬದಲಿಸಿದ್ದ. ಆ ಸುದ್ದಿ ಗೂಢಚಾರರಿಗೆ ಮುಟ್ಟಿಸಿರಲಿಲ್ಲ.‘ಅದೆಲ್ಲಾ ಸರಿ…. ಈಗ ಪರೆಂಗಿಗಳ ಸೇನೆಯೆಲ್ಲಿ? ಕಲೆಕ್ಟರ್ ಲೆವಿನ್ ಎಲ್ಲಿ ಉಳಕೊಂಡಿದ್ದಾನೆ?’ ಎಂದು ಪ್ರಶ್ನಿಸಿದಾಗ ಗೂಢಚಾರ ಮುಗುಳುನಕ್ಕ.‘ಸ್ವಾಮಿ ಆತ ಬಂದ ದಾರಿಗೆ ಸುಂಕವಿಲ್ಲವೆಂದು ನಿನ್ನೆಯೇ ವಾಪಾಸು ಹೊರಟು ಹೋದ’ ಎಂದಾಗ ಕಲ್ಯಾಣಪ್ಪನಿಗೆ ಅಚ್ಚರಿ. + +‘ನಮ್ಮ ಸೈನ್ಯದ ಅಂದಾಜು ನೋಡಿ ಇನ್ನು ಬೇಳೆ ಬೇಯುವುದಿಲ್ಲವೆಂದು ಪ್ರಾಣಭಯದಿಂದ ಹಿಂದೆ ಓಡಿರಬೇಕು’ ಎಂದು ಹೇಳಿದಾಗ ಈಗ ನಗುವ ಸರದಿ ಕಲ್ಯಾಣಸ್ವಾಮಿ ಹಾಗೂ ರಾಮೇಗೌಡನದು.‘ಅಂದರೆ ಇಲ್ಲಿಯೂ ನಮಗೆ ಕೆಲಸವಿಲ್ಲ. ಛೇ ಏನೆಲ್ಲಾ ಆಲೋಚನೆ ಮಾಡಿಕೊಂಡು ಬಂದಿದ್ದೆವು. ಎಲ್ಲಾ ಹಾಳಾಯಿತು’ ಎಂದು ಹಲ್ಲುಕಡಿದವರು ಕರ್ತು ಹಾಗು ಚೆಟ್ಟಿ ಕುಡಿಯ ಸಹೋದರರು.‘ಒಳ್ಳೆಯದೇ ಆಯಿತು. ಅಂದರೆ ನಮ್ಮ ತಾಕತ್ತು ಯುದ್ಧ ಮಾಡುವ ಮೊದಲೇ ಅವರಿಗೆ ತಿಳಿಯಿತು ಎಂದಾಯಿತು. ನಮ್ಮ ಶ್ರಮ ಉಳಿಯಿತು. ಪಾಪ ನಮ್ಮ ಸೈನಿಕರ ನಿದ್ದೆ ಹಾಳಾಯಿತು’ ಎಂದ ರಾಮೇಗೌಡ.‘ಆತ ಮಂಗಳೂರಿಬಿಂದ ಎಷ್ಟುದೂರ ಓಡಲಿಕ್ಕೆ ಸಾಧ್ಯ? ಹೇಗಿದ್ದರೂ ಮಂಗಳೂರಿನಲ್ಲಿ ಕಾದಾಡಬೇಕಲ್ಲ’ ಎಂದು ನಕ್ಕ ಕಲ್ಯಾಣಪ್ಪ.‘ಇರಲಿ, ಪರೆಂಗಿಗಳ ಪ್ರತಿನಿಧಿಗಳು ಯಾರಾದರೂ ಇದ್ದಾರೆಯೇ ನೋಡಿ, ಹಿಡಿದುಕೊಂಡು ಬನ್ನಿ’ ಎಂದು ಕಲ್ಯಾಣಪ್ಪ ಸೂಚನೆ ನೀಡಿದ ಕೂಡಲೇ ನಂಜಯ್ಯ, ಕುಡಿಯ ಸಹೋದರರು ಗೂಢಚಾರನೊಂದಿಗೆ ಬಿರುಸಿನಿಂದ ಪುತ್ತೂರಿನ ಕೋಟೆಗೆ ಹೊರಟರು. ಚಳಿಗೆ ಬಸವಳಿದಿದ್ದ ಸೈನಿಕರಿಗೆ ವಿಶ್ರಾಂತಿ ಪಡೆಯಲು ಹೇಳಿದ ರಾಮೇಗೌಡ, ಕಲ್ಯಾಣಸ್ವಾಮಿಯೊಂದಿಗೆ ಮುಂದಿನ ಯೋಜನೆಯ ಮಾತುಕತೆ ಆರಂಭಿಸಿದ.ಕಚೇರಿಗೆ ನುಗ್ಗಿದ ಸೇನೆ, ಆತಂಕದಿಂದ ಎದುರು ನೋಡುತ್ತಿದ್ದ ದೇವಪ್ಪಯ್ಯ ಹಾಗೂ ಕೆಲವು ಮಂದಿ ಕಾವಲುಗಾರರನ್ನು ಹಿಡಿದು ಬಂಧಿಸಿತು. ಕಚೇರಿಯ ಎದುರು ವಿಕ್ಟೋರಿಯಾ ರಾಣಿಯ ಭಾವಚಿತ್ರವನ್ನು ತೂಗುಹಾಕಿ ‘ಈಸ್ಟ್ ಇಂಡಿಯಾ ಕಂಪೆನಿ’ ಎಂದು ಬರೆದಿತ್ತು. ಅದರ ಮುಂದೆ ಸಿಂಹಾಸನದ ರೀತಿಯ ಒಂದು ಭವ್ಯವಾದ ಆಸನವಿತ್ತು. ಅದು ಕಲೆಕ್ಟರ್ ಸಾಹೇಬ ಕುಳಿತುಕೊಳ್ಳುವ ಆಸನವಾಗಿತ್ತು. + +‘ಅಂಗ್ರೇಜಿಗಳು ಕುಳಿತುಕೊಳ್ಳುವ ಭಾಗ್ಯ ಕಳೆದುಕೊಂಡರು. ಈ ಪೀಠದಲ್ಲಿ ತಾವೇ ಕುಳಿತುಕೊಂಡು ಇಂಗ್ಲಿಷ್ ಕೈದಿಗಳನ್ನು ವಿಚಾರಣೆ ನಡೆಸಬೇಕು’ ಎಂದು ನಂಜಯ್ಯ ಬೇಡಿದಾಗ ರಾಮೇಗೌಡ ಕಲ್ಯಾಣಸ್ವಾಮಿಯ ಕೈ ಹಿಡಿದು ತಂದು ಆ ಪೀಠದಲ್ಲಿ ಕುಳ್ಳಿರಿಸಿದ.‘ಎಲ್ಲಿ ಆ ದೇವಪ್ಪಯ್ಯ…. ಎಳೆದುಕೊಂಡು ಬನ್ನಿ’ ನಂಜಯ್ಯ ಕೂಗಿದ.‘ಸ್ವಲ್ಪ ಒರಟು, ಪರೆಂಗಿಗಳೆಂದರೆ ಅದೇನೋ ಭಕ್ತಿ. ಎಂಜಲು ತಿನ್ನುವ ನಾಯಿ ಆತ’ ಚೆಟ್ಟಿ ಕುಡಿಯ ಉತ್ತರಿಸಿದ.ಕತ್ತಿ ಕೋವಿ ದೊಣ್ಣೆಗಳನ್ನು ಹಿಡಿದ ಭಟರು ಹಗ್ಗದಿಂದ ಕೈಗಳನ್ನು ಬಿಗಿದು ಕಟ್ಟಿದ ದೇವಪ್ಪಯ್ಯನನ್ನು ತಂದು ಎದುರು ನಿಲ್ಲಿಸಿದರು.‘ದೇವಪ್ಪಯ್ಯ ಅಂದರೆ ನೀನೇನೋ?’ ಕಲ್ಯಾಣಪ್ಪ ಪ್ರಶ್ನಿಸಿದಾಗ ಉತ್ತರ ಬರಲಿಲ್ಲ. ಆಜಾನುಬಾಹು, ಗಿರಿಜಾಮೀಸೆ, ಆಗಲವಾದ ಕಣ್ಣುಗಳು. ಅದರಲ್ಲಿ ಆಹಂಕಾರ ನರ್ತಿಸುತ್ತಿತ್ತು. ಸೆರೆಯಾಗಿದ್ದೇನೆ ಎಂಬ ಎಳ್ಳಷ್ಟು ಪಶ್ಚಾತ್ತಾಪ ದೇವಪ್ಪಯ್ಯನ ಮುಖದಲ್ಲಿ ಕಾಣುತ್ತಿರಲಿಲ್ಲ.‘ಹೇಳೋ, ಬಾಯಿ ಬಿಡೋ…. ಆಂಗ್ರೇಜಿಗಳು ಎಂದರೆ ಅವರ ಪಾದಸೇವೆ ಮಾಡುತ್ತಿದ್ದೆ?’ ಎಂದು ಚೆನ್ನಯ್ಯ ಗರ್ಜಿಸಿದ.‘ಏನು ಬಹಳ ಹಾರಾಡುತ್ತಿದ್ದಿಯಂತೆ. ನಮ್ಮ ಸೈನ್ಯ ಕಪಿ ಸೈನ್ಯ ಅಂತ ಹಂಗಿಸುತ್ತಿದ್ದಿಯಂತೆ. ಎಲ್ಲಿ ಹೋಯಿತೋ ನಿನ್ನ ಅಂಗ್ರೇಜಿ ಸೈನ್ಯ. ಈ ದೇಶದಲ್ಲಿ ಹುಟ್ಟಿ ಪರಕೀಯರಿಗೆ ಮಣೆ ಹಾಕುತ್ತಿದ್ದಿಯಲ್ಲಾ?’ ಎಂದು ಗದರಿಸಿದ ರಾಮೇಗೌಡ.‘ದೇವಪ್ಪಯ್ಯ ತಿಳಿದೋ ತಿಳಿಯದೆಯೋ ಏನೋ ತಪ್ಪು ಮಾಡಿದೆ. ಈಗ ನಿನ್ನ ಆಂಗ್ರೇಜಿಗಳ ದರ್ಬಾರು ಮುಗಿಯಿತು. ತಪ್ಪೊಪ್ಪಿಕೊಂಡು ನಮ್ಮೊಂದಿಗೆ ಇರುತ್ತೀಯಾ’ ಎಂದ ಕಲ್ಯಾಣಸ್ವಾಮಿ ಪ್ರಶ್ನಿಸಿದಾಗ‘ಇಲ್ಲಾ … ಖಂಡಿತ ಸಾಧ್ಯವಿಲ್ಲ…. ನಾನು ನಿಮ್ಮಂತಹ ದರೋಡೆಕೋರರೊಂದಿಗೆ ನನ್ನ ಪ್ರಾಣ ಹೋದರೂ ಇರಲಾರೆ’ ಎಂದು ನಿಷ್ಠುರವಾಗಿ ನುಡಿದ.ಅಷ್ಟರಲ್ಲಿ ಕುಕನೂರು ಚೆನ್ನಯ್ಯ ಆವೇಶಭರಿತನ ಹಾಗೆ ಕತ್ತಿ ಹಿಡಿದು ಅವನ ಮೇಲೆ ಏರಿ ಬಂದ.‘ಏಷ್ಟು ದರ್ಪವೊ ನಿನಗೆ? ನಮ್ಮ ಸ್ವಾಮಿಗಳ ಎದುರು ನಿನ್ನ ಉದ್ದಟತನವೇ? ನೀನು ಯಾರ ಜತೆಯಲ್ಲಿ ಮಾತನಾಡುತ್ತಿ ಎಂಬ ಯೋಚನೆಯಿದೆಯೇನೋ?’ ಎಂದು ರೇಗಾಡಿದಾಗ ಆತನನ್ನು ಸಮಾಧಾನ ಮಾಡಲು ಸಾಕು ಸಾಕಾಯಿತು.‘ಈತನನ್ನು ಬಂಧಿಯಾಗಿ ಇಟ್ಟುಕೊಳ್ಳಿ. ಜತೆಯಲ್ಲಿ ಈ ಪ್ರಾಣಿಯನ್ನು ಮಂಗಳೂರಿಗೆ ಕರೆದುಕೊಂಡು ಹೋಗೋಣ. ಪರೆಂಗಿಗಳ ಸ್ನೇಹ ಮಾಡಿದವರಿಗೆ ಇವನೊಂದು ಪಾಠವಾಗಲಿ’ ಎಂದು ಕಲ್ಯಾಣಸ್ವಾಮಿ ಆದೇಶಿಸಿದಾಗ ಎಲ್ಲರೂ ಸುಮ್ಮನಾದರು.ಪುತ್ತೂರಿನಲ್ಲಿ ಪರೆಂಗಿಗಳ ಕಚೇರಿಯನ್ನು ಜಪ್ತಿ ಮಾಡಿದಾಗ ಖಜಾನೆ ದೊರಕಿತು. ಆದರೆ ಬೆಳ್ಳಾರೆಯಲ್ಲಿ ಸಿಕ್ಕಿದ ಹಾಗೆ ದೊಡ್ಡ ಮೊತ್ತ ಉಳಿದಿರಲಿಲ್ಲ. ಸೈನಿಕರ ಉಗ್ರಾಣದಲ್ಲಿ ಸಾಕಷ್ಟು ಶಸ್ತ್ರಾಸ್ತ್ರಗಳು ಸಿಕ್ಕಿದವು. ದೇವಪ್ಪಯ್ಯನನ್ನು ಹೊರತು ಪಡಿಸಿ ಉಳಿದ ನೌಕರರನ್ನು ಸೈನ್ಯಕ್ಕೆ ಸೇರಿಸಲಾಯಿತು. ಅಂತೂ ಬೆವರು ಸುರಿಸದೆ, ರಕ್ತ ಹರಿಯದೆ ಪುತ್ತೂರು ಕೈ ವಶವಾಯಿತು. + +ಪುತ್ತೂರು ಕೈವಶ ಮಾಡಿಕೊಂಡ ಸಂತೋಷವನ್ನು ಆಚರಿಸಲು ಆ ದಿನ ಮಧ್ಯಾಹ್ನ ಸ್ವಾದಿಷ್ಟವಾದ ಭೋಜನವನ್ನು ಸೈನಿಕರಿಗೆ ನೀಡಲು ಕಲ್ಯಾಣಸ್ವಾಮಿ ಆದೇಶ ಹೊರಡಿಸಿದಾಗ ಸೈನಿಕರಿಂದ ಜಯ ಘೋಷ ಕೇಳಿ ಬಂತು.ಈ ನಡುವೆ ಕನ್ನಡ ರಾಜ್ಯವನ್ನು ಸ್ವತಂತ್ರಗೊಳಿಸಲು ಕನ್ನಡ ಜಿಲ್ಲೆಯ ಸಮಸ್ತ ಪ್ರಜೆಗಳು ಆಯುಧ ಸಮೇತರಾಗಿ ಕಲ್ಯಾಣಸ್ವಾಮಿ ಪರವಾಗಿ ಬರಬೇಕೆಂದು ಇಸ್ತಿಹಾರು ಹೊರಡಿಸಲಾಯಿತು. ಅದನ್ನು ಸುಬ್ಬಯ್ಯ ಕರಣಿಕನ ಮೂಲಕ ಬರೆಯಿಸಿ ಸಶಸ್ತ್ರ ಓಲೆಕಾರರು, ಡಂಗುರ ಹೊರಡಿಸುವ ಮೂಲಕ ಜನರಿಗೆ ತಿಳಿಸಲು ಕಲ್ಯಾಣಪ್ಪ ಆದೇಶಿಸಿದ. ಜನ ಓಲೆಕಾರರ ಡಂಗುರ ಕೇಳಿ ಸಂತೋಷ ಪಟ್ಟರು. ನಮ್ಮ ರಾಜ್ಯ ಸ್ವತಂತ್ರವಾಗುತ್ತದೆ ಎಂದಾಗ ಖುಷಿ ಪಡದೇ ಇರುತ್ತಾರೆಯೇ? ಹುಚ್ಚೆದ್ದು ಕುಣಿಯುವುದೊಂದೆ ಬಾಕಿ.ಆದರೆ ಅಂಗ್ರೇಜಿಗಳನ್ನು ಬೆಂಬಲಿಸುತ್ತಿದ್ದ ಚಾಕರಿದಾರರಿಗೆ, ಅನ್ಯ ಧರ್ಮೀಯರಿಗೆ ಮಾತ್ರ ಆತಂಕವಾಯಿತು. ಅದಕ್ಕೂ ರಾಮೇಗೌಡ ಪರಿಹಾರ ಸೂಚಿಸಿದ. ‘ಯಾರೂ ಆತಂಕ ಪಡಬೇಕಾಗಿಲ್ಲ. ಸ್ವತಂತ್ರ ರಾಜ್ಯದಲ್ಲಿ ಎಲ್ಲರಿಗೂ ಸಮಾನ ಸ್ಥಾನಮಾನ ದೊರಕುತ್ತದೆ’ ಎಂದು ಆಶ್ವಾಸನೆ ಹೊರಡಿಸಿದ. + +ಅಂದು ಪುತ್ತೂರಿನಲ್ಲಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೈನ್ಯ ತಂಗಿತ್ತು. ದೇವಸ್ಥಾನದ ಅರ್ಚಕರು ಮೊದಲು ವಿಷಯ ತಿಳಿಯದೆ ಆಕ್ಷೇಪ ಮಾಡಿದರು. ಚೆನ್ನಯ್ಯ, ನಂಜಯ್ಯ, ಕರ್ತು ಸಹೋದರರು ದೇವಸ್ಥಾನದಲ್ಲಿ ಅವಕಾಶ ನೀಡದಿದ್ದರೆ ದೇವಸ್ಥಾನವನ್ನು ಕೊಳ್ಳೆ ಹೊಡೆಯುತ್ತೇವೆ ಎಂದು ಬೆದರಿಸಿದಾಗ ಅರ್ಚಕರು ತಣ್ಣಗಾದರು. ಭಯಭಕ್ತಿಯಿಂದ ಕಲ್ಯಾಣಸ್ವಾಮಿಯನ್ನು ಸ್ವಾಗತಿಸಿದ ಅರ್ಚಕರು ದೇವಸ್ಥಾನದಲ್ಲಿ ದೇವರಿಗೆ ಕೈಗೊಂಡ ಧರ್ಮಯುದ್ಧಕ್ಕೆ ಜಯಸಿಗಲಿ ಎಂದು ವಿಶೇಷ ಪೂಜೆಗೆ ಏರ್ಪಾಡು ಮಾಡಿದರು. ಕಲ್ಯಾಣಸ್ವಾಮಿಗೆ ವಿಶೇಷ ಸ್ಥಾನಮಾನ ನೀಡಿ ಗೌರವಿಸಲಾಯಿತು. ದೇವಸ್ಥಾನದ ಬಯಲಲ್ಲಿ ಸೈನ್ಯದ ಶಿಬಿರ ಹಾಕಿದ ಡೇರೆಯಲ್ಲಿ ಸೈನಿಕರು ಉಳಿಕೊಂಡರೆ ನಾಯಕರುಗಳಿಗೆ ದೇವಸ್ಥಾನದ ಪೌಳಿಯಲ್ಲಿ ವಿಶ್ರಾಂತಿಗಾಗಿ ಏರ್ಪಾಡಾಯಿತು.ಕಲ್ಯಾಣಸ್ವಾಮಿ ಮಹಾಲಿಂಗೇಶ್ವರ ದೇವಸ್ಥಾನದ ಕೊಳದಲ್ಲಿ ಮಿಂದು ಮಡಿಯುಟ್ಟು ಭಕ್ತಿಭಾವದಿಂದ ಪೂಜೆಯನ್ನು ಅರ್ಪಿಸಿದ. ನಮ್ಮ ಸೈನ್ಯ ಹೋದೆಡೆಯಲ್ಲಿ ವಿಜಯ ದುಂಧುಬಿ ಮೊಳಗಲಿ ಎಂದು ಪ್ರಾರ್ಥಿಸಿದ.ಅರ್ಚಕರಿಗೆ ಕಲ್ಯಾಣಸ್ವಾಮಿ ಬಗ್ಗೆ ತಿಳಿದುಕೊಳ್ಳುವ ಆಸೆ. ಕಲ್ಯಾಣ ಸ್ವಾಮಿಯ ಬಂಧನವಾಗಿದೆ ಎಂಬ ಗುಸುಗುಸು ಸುದ್ದಿ ಹರಡಿತ್ತು. ಈಗ ಎದುರಿಗೆ ಇರುವವನು ಕಲ್ಯಾಣಸ್ವಾಮಿಯೇ ಎಂಬ ಅನುಮಾನ. ಆದರೆ ಕಲ್ಯಾಣಸ್ವಾಮಿಯನ್ನು ನೋಡಿದಾಗ ಅಂತಹ ಸಂಶಯ ಉಂಟಾಗಲಿಲ್ಲ. ಆತನ ಗತ್ತು ದೌಲತ್ತು, ಮಾತಿನ ಮೋಡಿ ಅರ್ಚಕರನ್ನು ಮಂತ್ರ ಮುಗ್ಧಗೊಳಿಸಿತ್ತು. + +‘ಏನು ಅರ್ಚಕರು ನಮ್ಮನ್ನೇ ಎವೆಯಿಕ್ಕಿ ನೋಡುತ್ತಿದ್ದೀರಿ…..?’ ಎಂದು ಅರ್ಚಕರನ್ನು ಪ್ರಶ್ನಿಸಿದಾಗ ಅರ್ಚಕರು ಬೆವರಿ ಹೋದರು.‘ಏನಿಲ್ಲ ತಮ್ಮ ಶೌರ್ಯ, ಪರಾಕ್ರಮವನ್ನು ಕೇಳಿದ್ದೆ. ಈಗ ತಮ್ಮನ್ನು ಕಣ್ಣಾರೆ ಕಂಡು ಕೃತಾರ್ಥನಾದೆ…..’ ಎಂದು ಕೈ ಮುಗಿದರು ಅರ್ಚಕರು.‘ಎಂದರೆ ನಿಮಗೆ ನಮ್ಮ ಮೇಲೆ ಅನುಮಾನವೇ?’ ಮುಗುಳುನಕ್ಕು ರಾಮೇಗೌಡನ ಮುಖ ನೋಡಿ ಕಣ್ಣು ಮಿಟುಕಿಸಿದ.‘ಛೇ…. ದೊರೆಗಳು ಹಾಗೆ ಅನ್ನಬಾರದು, ನಮ್ಮಿಂದ ಅಪರಾಧವಾಗಿದ್ದರೆ ಉಡಿಯಲ್ಲಿ ಹಾಕಿಕೊಂಡು ಕ್ಷಮಿಸಬೇಕು’ ಎಂದು ಕೈ ಮುಗಿದರು ಅರ್ಚಕರು.‘ನಾನು ಈ ರಾಜ್ಯವನ್ನು ಸ್ವತಂತ್ರಗೊಳಿಸಲು, ಪರಕೀಯರ ಕಪಿಮುಷ್ಟಿಯಿಂದ ಬಿಡಿಸಲು ಬಂದವನು, ನನಗೆ ರಾಜಕೀಯ ಮಹತ್ವಾಕಾಂಕ್ಷೆಯಾಗಲಿ, ಧನಕನಕದ ಆಸೆಯಾಗಲಿ ಇಲ್ಲ. ಈ ರಾಜ್ಯವನ್ನು ಸ್ವತಂತ್ರಗೊಳಿಸಿ ಯೋಗ್ಯರ ಕೈಗೆ ಒಪ್ಪಿಸುವುದೊಂದೇ ನನ್ನ ಕರ್ತವ್ಯ. ತಾವು ಈ ಕೈಂಕರ್ಯಕ್ಕೆ ಸಹಾಯ ಮಾಡಬೇಕು’ ಎಂದು ಕಲ್ಯಾಣಪ್ಪ ಬೇಡಿಕೊಂಡ.‘ಅವಶ್ಯವಾಗಿ, ಆ ಮಹಾಮಹಿಮ ಮಹಾಲಿಂಗೇಶ್ವರನ ಕೃಪಕಟಾಕ್ಷದಿಂದ ಎಲ್ಲವೂ ನಿರ್ವಿಘ್ನವಾಗಿ ನೆರವೇರುತ್ತದೆ ಎಂಬ ಭರವಸೆ ನಮಗಿದೆ’ ಎಂದು ಹರಸಿದರು ಅರ್ಚಕರು.ಸೇನೆ ಪುತ್ತೂರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ಮತ್ತೊಂದು ಆತಂಕ ಎದುರಾಯಿತು. ಎಲ್ಲರಿಗೂ ಎದೆ ಡವಡವವಾಯಿತು. ನಾಗಾಲೋಟದಿಂದ ಧೂಳೆಬ್ಬಿಸಿ ಬರುತ್ತಿರುವ ಕಟ್ಟಾಳುಗಳ ಸೈನ್ಯವನ್ನು ಕಂಡು ರಾಮೇಗೌಡನಂತೂ ಬೆವರಿಬಿಟ್ಟ. ಕಲ್ಯಾಣಪ್ಪನು ತುಸು ಹೆದರಿದ. ಪರೆಂಗಿಗಳು ಮೋಸದಿಂದ ತಮ್ಮ ಮೇಲೆ ಆಕ್ರಮಣ ಮಾಡುತ್ತಾರೋ ಎಂಬ ಭಯ ಕಾಡಿತು. ಆರಾಮದಿಂದ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸೈನಿಕರು ಅವಸರ ಅವಸರದಿಂದ ತಮ್ಮ ಆಯುಧಗಳನ್ನು ಕೈಯಲ್ಲಿ ಹಿಡಿದುಕೊಂಡರು.ಆದರೆ ಕವಿದಿದ್ದ ಆತಂಕ ಕ್ಷಣಾರ್ಧದಲ್ಲಿ ಮರೆಯಾಯಿತು. ಬಂದವರು ಬೇರಾರೂ ಅಲ್ಲ, ಪುತ್ತೂರು ಸೀಮೆಯ ಮೋರಜರು ಎಂಬ ಸಿರಿವಂತ ಜಮೀನ್ದಾರರು. ಅಪ್ರತಿಮ ದೇಶಪ್ರೇಮಿಗಳು. ಕರಣಿಕ ಸುಬ್ಬಯ್ಯನ ಸಮೀಪದ ಬಂಧುಗಳು. ನೀರ್ ಮಾರ್ಗದ ಸುಬ್ರಾಯ ಶಾನುಭೋಗರ ದೂರದ ಸಂಬಂಧಿಕರು ಆಗಿದ್ದರು. ಪರೆಂಗಿಗಳ ದೌಲತ್ತಿಗೆ ಹೆದರಿ ಕಲ್ಯಾಣಸ್ವಾಮಿಗೆ ಬಹಿರಂಗವಾಗಿ ಬೆಂಬಲ ಘೋಷಿಸಲು ಹೆದರಿಕೊಂಡರೂ, ಗುಟ್ಟಾಗಿ ತಮ್ಮ ಸೀಮೆಯಲ್ಲಿ ಜಾತಿ ಬಂಧುಗಳನ್ನು, ಕಟ್ಟಾಳು ಯುವಕರನ್ನು ಸೇರಿಸಿ ಪುಟ್ಟ ಸೈನ್ಯವೊಂದನ್ನು ಸಜ್ಜುಗೊಳಿಸಿದ್ದರು. ಸೈನ್ಯದ ತರಬೇತಿಗಾಗಿ, ಆಯುಧ ಹಾಗೂ ಇನ್ನಿತರ ಕೆಲಸಗಳಿಗಾಗಿ ಸಾಕಷ್ಟು ಖರ್ಚು ಮಾಡಿದ್ದರು. ಈ ಪುತ್ತೂರು ಸೀಮೆಯ ಮೋರಜರು ತಮ್ಮ ಪುಟ್ಟ ಕಾಣಿಕೆಯಾಗಿ ದಂಡಿನೊಂದಿಗೆ ಸಾಕಷ್ಟು ಧವಸಧಾನ್ಯಗಳನ್ನು ಹೇರಿಕೊಂಡು, ಕಲ್ಯಾಣಸ್ವಾಮಿಗೆ ಅರ್ಪಿಸಲು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಬಂದು ಸೇರಿದರು. + +ಮೋರಜರ ಕಾರುಬಾರು, ದೇಶಭಕ್ತಿ ನೋಡಿ ಕಲ್ಯಾಣಪ್ಪನಿಗೆ ದಂಗಾಯಿತು. ‘ಪರವಾಗಿಲ್ಲ ಮೋರಜರೇ….. ನಿಮ್ಮ ಈ ಪುಣ್ಯದ ಕೆಲಸವನ್ನು ಹೇಗೆ ಹೊಗಳಬೇಕೆಂದು ತಿಳಿಯುತ್ತಿಲ್ಲ. ನಿಮ್ಮಂತಹ ವಿಶಾಲ ಹೃದಯದವರ ಸಹಾಯದಿಂದ ನಾವು ಈ ಸಾಧನೆ ಮಾಡಲು ಸಾಧ್ಯವಾಯಿತು’ ಎಂದು ಬಿಗಿದಪ್ಪಿಕೊಂಡ.‘ಕಲ್ಯಾಣಪ್ಪನವರೇ, ನಮ್ಮದೇನು ಹೇಳಿಕೊಳ್ಳುವ ಮಹಾಕಾರ್ಯವಲ್ಲ. ಒಂದು ಚಿಕ್ಕ ಕಾಣಿಕೆ. ಒಟ್ಟಿನಲ್ಲಿ ನಮ್ಮ ಹೃದಯಪೂರ್ವಕ ಬೆಂಬಲ ನಿಮಗಿದೆ’ ಎಂದು ಹರಸಿದರು.ಸೀಮೆಯ ಗೌರವಾನ್ವಿತ ವ್ಯಕ್ತಿಯಾದ ಮೋರಜರು ದೇವಾಲಯದ ಹಿಂಭಾಗದಲ್ಲಿದ್ದ ತಮ್ಮ ಆಪ್ತರಲ್ಲಿ ಒಬ್ಬರಾದ ನಟ್ಟೋಜ-ಶ್ಯಾರ ಮನೆಗೆ ಜನ ಕಳುಹಿಸಿ ಕಲ್ಯಾಣಸ್ವಾಮಿ ಹಾಗೂ ಪರಿವಾರದವರಿಗೆ ಎಳನೀರು ಕಳುಹಿಸಿಕೊಡಲು ಆಜ್ಞಾಪಿಸಿದರು. ಸೀಮೆಯ ಗುರಿಕಾರ ಎಂದ ಮೇಲೆ ನಟ್ಟೋಜಶ್ಯಾರು ಕೂಡಲೇ ನೂರು ಸೀಯಾಳಗಳನ್ನು ಹಿಡಿದುಕೊಂಡು ಆಳುಗಳೊಂದಿಗೆ ಬಂದರು. + +‘ನಟ್ಟೋಜ-ಶ್ಯಾರ ನಿನ್ನ ಕಾಣಿಕೆಯೂ ಈ ಎಳನೀರಿನ ರೂಪದಲ್ಲಿ ಇರಲಿ, ಕಲ್ಯಾಣಸ್ವಾಮಿ ಹಾಗೂ ಪರಿವಾರದವರ ಮನಸ್ಸು ತಂಪು ಮಾಡಿದ ಹಾಗೆ ಹೊಟ್ಟೆಯನ್ನು ತಂಪಾಗಿಸು’ ಎಂದಾಗ ಸ್ವತಹ ನಟ್ಟೋಜಶ್ಯಾರೇ ಎಳನೀರನ್ನು ಕೆತ್ತಿ ಕಲ್ಯಾಣಸ್ವಾಮಿಗೆ ಅರ್ಪಿಸಿದರು. ಬಹಳ ಸಂತಸದಿಂದ ಸೀಯಾಳವನ್ನು ಕುಡಿದ ಕಲ್ಯಾಣಸ್ವಾಮಿ. ಆತನಿಗೆ ಸೀಯಾಳದಲ್ಲಿರುವ ಸಿಹಿಯಾದ ತಿರುಳು ಸವಿಯಬೇಕೆನ್ನುವ ಬಯಕೆಯಾಯಿತು. ತುಸು ಸಂಕೋಚವಾದರೂ ಬಾಯಿ ಬಿಟ್ಟು ಕೇಳಿದ.‘ನನಗೆ ಸೀಯಾಳದೊಳಗಿನ ಸಿಹಿಯಾದ ತಿರುಳು ಸವಿಯುವ ಆಸೆ’ ಎಂದು ತನ್ನ ಮನದಾಳದ ಆಸೆಯನ್ನು ನಿಗ್ರಹಿಸಲು ಆಗದೆ ಹೊರಗೆ ಹಾಕಿದ.ಸೀಯಾಳ ಕೆತ್ತಿ ಕೊಡುವ ನಟ್ಟೋಜ-ಶ್ಯಾರವರಿಗೆ ಮುಖಕ್ಕೆ ಹೊಡೆದಂತಹ ಅನುಭವ. ದಿಗಿಲಾಯಿತು. ಒಂದು ಗಳಿಗೆ ಕಲ್ಯಾಣಸ್ವಾಮಿಯ ಮುಖವನ್ನು ದಿಟ್ಟಿಸಿದರು, ತುಸು ವಿಚಲಿತರಾಗಿ ಕಂಡು ಬಂದರೂ ಅದನ್ನು ತೋರಿಸಿಕೊಡಲಿಲ್ಲ. ಸೀಯಾಳವನ್ನು ಹದವಾಗಿ ಕೆತ್ತಿ ಅದರ ತಿರುಳನ್ನು ಸವರಿ ಕಲ್ಯಾಣಸ್ವಾಮಿಗೆ ನೀಡಿದರು.‘ಬಹಳ ಉಪಕಾರವಾಯಿತು ನಟ್ಟೋಜ-ಶ್ಯಾರವರೇ’ ಎಂದಾಗ ಆ ಮಾತು ಮುಖ ಕೆಂಪಗಾಗಿದ್ದವರಿಗೆ ಕೇಳಿರಲಿಕ್ಕಿಲ್ಲ ಕಾಣಬೇಕು. ಅಲ್ಲಿ ಸೇರಿದ್ದ ಎಲ್ಲಾ ಮಹನೀಯರು ಎಳನೀರು ಸವಿದರು. ಕೆಲವರು ನೀರು ಮಾತ್ರ ಕುಡಿದರು. ಇನ್ನು ಕೆಲವರು ನೀರನೊಂದಿಗೆ ತಿರುಳನ್ನು ಸವಿದರು. + +ಕೈ ತೊಳೆದು ನಟ್ಟೋಜ-ಶ್ಯಾರವರು ಮೋರಜರನ್ನು ಹತ್ತಿರಕ್ಕೆ ಕರೆದು ಪಿಸುಮಾತಿನಲ್ಲಿ ತಿವಿದರು.‘ಅಲ್ಲಾ ಮೋರಜರೇ, ಆತ ಕಲ್ಯಾಣಸ್ವಾಮಿ ಅಂತ ನಂಬಿದ್ದೀರಾ…..? ಖಂಡಿತಾ ಇಲ್ಲ. ಆತ ದೀಕ್ಷೆ ತೊಟ್ಟವನಾಗಿದ್ದರೆ ಸೀಯಾಳದ ತಿರುಳಿಗೆ ಏಕೆ ಆಸೆ ಪಡುತ್ತಿದ್ದ? ಆತನ ಚರ್ಯೆ ನೋಡುವಾಗ ಒಂದು ಚೂರು ಗಾಂಭಿರ್ಯವಿಲ್ಲ. ನೀವು ಇಲ್ಲಿ ಆತನಿಗೆ ಆರತಿ ಎತ್ತುತ್ತಿದ್ದೀರಿ!’ ಎಂದು ರೇಗಿದಾಗ, ಮೋರೆಜರರಿಗೆ ಅವನನ್ನು ಸುಮ್ಮನಿರಿಸಲು ಸಾಕುಸಾಕಾಯಿತು.‘ನೀನು ಸ್ವಲ್ಪ ಸುಮ್ಮನಿರು. ಅದೊಂದು ದೊಡ್ಡ ಕಥೆ. ಅದೆಲ್ಲಾ ಈಗ ಮಾತನಾಡುವ ವಿಚಾರವಲ್ಲ. ಒಟ್ಟಿನಲ್ಲಿ ಪರೆಂಗಿಯವರನ್ನು ಈ ದೇಶದಿಂದ ಓಡಿಸಿದರೆ ಸಾಕಪ್ಪ’ ಎಂದು ಪಿಸು ಧ್ವನಿಯಲ್ಲೇ ಉತ್ತರಿಸಿದರು.ಆ ದಿನ ರಾತ್ರಿ ಸೈನಿಕರ ಸಂತೋಷಕ್ಕೆಂದು ಪುತ್ತೂರಿನಲ್ಲಿನ ಪರಿಚಿತ ಯಕ್ಷಗಾನ ವೇಷದಾರಿಗಳು ಯಕ್ಷಗಾನ ಕೂಟವನ್ನು ಏರ್ಪಡಿಸಿ ರಂಜಿಸಿದರು. ಕಲ್ಯಾಣಸ್ವಾಮಿಗೆ, ಕುಕನೂರು ಚೆನ್ನಯ್ಯ, ನಂಜಯ್ಯನವರಿಗೆಲ್ಲಾ ಅಂತಹ ಯಕ್ಷಗಾನ ಕೂಟ ನೋಡಿ ಅಭ್ಯಾಸವಿರಲಿಲ್ಲ. ಆದರೂ ಅರ್ಥದಾರಿಗಳ ವಾಗ್ವಾದ, ನೃತ್ಯ, ಎಲ್ಲವನ್ನು ಸಂತೋಷದಿಂದ ಸವಿದ. + + + +ಈ ನಡುವೆ ತೆಂಕುಂಬಳೆಯ ಪಾಳೆಯಗಾರ ಸುಬ್ರಾಯ ಹೆಗ್ಗಡೆ ಕಳುಹಿಸಿದ ದೂತನೊಬ್ಬ ಕಲ್ಯಾಣಸ್ವಾಮಿಗೆ ನೀಡಿದ ಓಲೆಯ ಒಕ್ಕಣೆ ಓದಿ ಸಂತಸವಾಯಿತು.‘ಹೆಗ್ಗಡೆಯವರಿಗೆ ನಮ್ಮ ಸ್ವಾಗತವಿದೆ. ಆದರೆ ಮಂಗಳೂರಿನಲ್ಲಿ ನಡೆಯುವ ಮಹಾಯುದ್ಧಕ್ಕೆ ಅವರ ಸಹಾಯ ಅಗತ್ಯ ಬೇಕು. ಅವರು ಸಿದ್ಧರಾಗಿ ನಮ್ಮನ್ನು ಮಂಗಳೂರಿನಲ್ಲಿ ಕೂಡಿಕೊಳ್ಳಲಿ. ನಾವು ನಂದಾವರ ಪಾಣೆಮಂಗಳೂರಿನಿಂದ ಹೊರಟಾಗ ಅವರು ಸೋಮೇಶ್ವರದ ನೇತ್ರಾವತಿ ನದಿ ದಂಡೆಯಲ್ಲಿ ನಮಗಾಗಿ ಕಾದು ಕುಳಿತುಕೊಳ್ಳಲಿ’ ಎಂದು ಕರಣಿಕ ಸುಬ್ಬಯ್ಯ ಒಕ್ಕಣೆ ಬರೆದು ಕಳುಹಿಸಿದ.ಅಂತೂ ಕಲ್ಯಾಣಸ್ವಾಮಿಗೆ ಖುಷಿಯ ಮೇಲೆ ಖುಷಿ. ಸಾಗರದಂತೆ ದಿನೇ ದಿನೇ ಬೆಳೆಯುವ ಸೈನ್ಯ. ಹೋದೆಡೆಯಲ್ಲಿ ಸಿಗುವ ಜಯಬೇರಿ, ಸ್ವಾಗತ, ಜನರ ಹುರುಪು ಎಲ್ಲಾ ನಿರೀಕ್ಷಿಸಿದಕ್ಕಿಂತ ಹೆಚ್ಚಾಗಿತ್ತು. ಮುಂದಿನದು ನಂದಾವರ, ಮತ್ತೆ ಬಂಟ್ವಾಳ, ಕೊನೆಯದು ಮಂಗಳೂರು. ಮಂಗಳೂರಿನಲ್ಲಿನ ಬೇಹುಗಾರ ಬಂದು ಮಂಗಳೂರಿನಲ್ಲಿ ಎಲ್ಲಾ ನಿಶ್ಯಬ್ದವಾಗಿದೆ. ಎಲ್ಲೂ ಅಂಗ್ರೇಜಿಗಳ ಮುಖ ಕಾಣಿಸುತ್ತಿಲ್ಲ. ಅವರ ಸೈನ್ಯದ ಚಲನವಲನಗಳು ಗೋಚರಿಸುತ್ತಿಲ್ಲ ಎಂದಾಗ ಎದೆ ಧಸಕ್ಕಿಂದಿತು. ಇದರಲ್ಲಿ ಏನಾದರೂ ಕುತಂತ್ರವಿರಬಹುದೇ ಎಂಬ ಅನುಮಾನ ಮೂಡಿತು. ಆದರೂ ಕಲ್ಯಾಣಸ್ವಾಮಿಯ ದಂಡಿನಲ್ಲಿರುವ ಸಂಖ್ಯೆಗೂ, ಪರೆಂಗಿಗಳ ದಂಡಿನಲ್ಲಿರುವ ಸಂಖ್ಯೆಗೂ ಅಜಗಜಾಂತರ ವ್ಯತ್ಯಾಸ. ಬಹುಶಃ ತಲಚೇರಿ, ಮುಂಬೈನಿಂದ ಹೆಚ್ಚಿನ ಸೈನ್ಯವನ್ನು ತರಿಸಲು ಹವಣಿಸುತ್ತಾರೆ ಎಂಬ ಅನುಮಾನ ಉಂಟಾಯಿತು. ಇನ್ನು ತಡಮಾಡಬಾರದು ಸಾಧ್ಯವಾದಷ್ಟು ಬೇಗ ಮಂಗಳೂರನ್ನು ಆಕ್ರಮಿಸಬೇಕೆಂದು ನಿರ್ಧರಿಸಿದ ಕಲ್ಯಾಣಸ್ವಾಮಿ. + + + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_463.txt b/Kenda Sampige/article_463.txt new file mode 100644 index 0000000000000000000000000000000000000000..cac1d56d8fe24ce495f947ca17211d57b4e9771c --- /dev/null +++ b/Kenda Sampige/article_463.txt @@ -0,0 +1,49 @@ + + +ಟೈಗರ್ ಒಬ್ಬ ಅದೃಷ್ಟವಂತ ನಾಯಿ. ಊರಿಡೀ ಬರದಿಂದ ತತ್ತರಿಸಿ ಜನರು ಎಲುಬಿಗೆ ಮೆತ್ತಿದ ಚರ್ಮ ಮಾತ್ರ ಉಳಿಸಿಕೊಂಡಿದ್ದರೂ ಟೈಗರ್ ಮಾತ್ರ ದಷ್ಟ ಪುಷ್ಟನಾಗಿದ್ದ. ಕೂತರೆ ಕಪ್ಪುಕಂಬಳಿ ಗುಡ್ಡೆಹಾಕಿದಂತೆ ಕಾಣುತ್ತಿದ್ದ. ಅವನ ಬಾಲ ಮತ್ತು ಕಾಲುಗಳು ಬಿಳಿ. ಪೋಲೀಸರ ಅದೇ ಕೋಪ ತಾಪ ಅವನ ಕಂದು ಮಿಶ್ರಿತ ಕೆಂಪು ಕಂಗಳಲ್ಲೂ ಇತ್ತು. + +ಟೈಗರ್ ಯಾವುದೋ ಒಂದು ಬೀದಿಬೊಗ್ಗಿಯ ಮಗ. ಹುಟ್ಟಿದ್ದು ನಗರದ ಮೋರಿಯೊಂದರಲ್ಲಿ. ಈ ಸಂಗತಿಗಳೊಂದೂ ಅವನಿಗೆ ತಿಳಿದಿಲ್ಲ. ಅವನ ನೆನಪು ಶುರುವಾಗುವುದೇ ಪೋಲೀಸ್ ಸ್ಟೇಷನ್ನಿನಿಂದ. ಕತ್ತೆತ್ತಿ ಮೇಲೆ ನೋಡಿದರೆ ಚೌಕಾಕಾರದಲ್ಲಿ ಆಕಾಶ ಕಾಣುವ ನಾಲ್ಕು ಮೂಲೆಯ ಅವನ ಲೋಕವದು. ಖೈದಿಗಳು ಮತ್ತು ಪೋಲೀಸರು ಅವನ ಸಂಗಾತಿಗಳು. ಅವನು ಪ್ರತಿಯೊಬ್ಬರನ್ನೂ ಗುರುತಿಸಬಲ್ಲ. ಇನ್ಸ್‍ ಪೆಕ್ಟರ್ ಮತ್ತು ಟೈಗರ್ ನದ್ದು ಒಂದೇ ರೀತಿಯ ಕಣ್ಣುಗಳು ಎಂದು ಖೈದಿಗಳು ಹೇಳುವುದಿದೆ. + +ಟೈಗರ್ ಖೈದಿಗಳಲ್ಲಿ ವ್ಯತ್ಯಾಸವೇನೂ ಗುರುತಿಸುವುದಿಲ್ಲ. ಕೊಲೆಪಾತಕಿಯೂ, ಕಳ್ಳನೂ, ರಾಜಕೀಯ ಖೈದಿಯೂ ಅವನ ದೃಷ್ಟಿಯಲ್ಲಿ ಒಂದೇ. ಅವನ ಪ್ರಕಾರ ಮನುಷ್ಯರಲ್ಲಿ ಎರಡೇ ವರ್ಗ-ಪೋಲೀಸರು ಮತ್ತು ಖೈದಿಗಳು. ಲಾಕಪ್ಪಿನಲ್ಲಿರುವ ನಲವತ್ತೈದು ಜನರನ್ನೂ ಅವ ಒಂದೇ ರೀತಿ ಕಾಣುತ್ತಾನೆ. ಬೇರೆಯದೇ ಲಾಕಪ್ಪಿನಲ್ಲಿರುವ ನಾಲಕ್ಕು ಜನರು ರಾಜಕೀಯದವರು ಎಂದು ಟೈಗರ್ ಗೌರವಿಸುವುದೇನೂ ಇಲ್ಲ. ಕಾರಣ, ಎಲ್ಲ ಲಾಕಪ್ಪುಗಳ ಸ್ಥಿತಿಯೂ ಒಂದೇ. ಗಾಳಿಬೆಳಕು ಅದರೊಳಗಡೆ ಸುಳಿಯುವಂತಿಲ್ಲ. ಮಲಮೂತ್ರಗಳ ವಾಸನೆಯಲ್ಲಿ, ತಿಗಣೆಗಳಿಂದ ಕಚ್ಚಿಸಿಕೊಂಡು, ಚಿಂದಿ ಬಟ್ಟೆ ಸುತ್ತಿಕೊಂಡು, ಗಡ್ಡಮೀಸೆ ಬಿಟ್ಟುಕೊಂಡ ಮನುಷ್ಯಾಕೃತಿಗಳು ಕತ್ತಲು ಬೆಳಕೆಂದರಿಯದೆ ಅಲ್ಲಿದ್ದಾರೆ. ಇಂತಹ ಅದೆಷ್ಟು ಪೋಲೀಸ್ ಲಾಕಪ್ಪುಗಳು ಊರಾದ ಊರಲ್ಲೆಲ್ಲ ಹಬ್ಬಿಕೊಂಡಿಲ್ಲವೇ? ಅಂತಹ ಲಾಕಪ್ಪುಗಳಿಂದ ಹೊರಬರುವ ಗಬ್ಬು ಮಾನವ ಹೃದಯವನ್ನುಬತ್ತಿಸಿ ಹೊತ್ತಿಸಿ ಬಿಡುತ್ತದೆ. ಆದರೆ, ಖೈದಿಗಳ ಚಿಂತೆ ಇದೊಂದೂ ಅಲ್ಲ. ಊಟದ್ದೊಂದೇ ಅವರ ಚಿಂತೆ. ಅವರೆಲ್ಲ ರಾತ್ರಿ ನಿದ್ದೆ ಮಾಡುವುದು ಬೆಳಗ್ಗಿನ ಗಂಜಿಗಾಗಿ. ಗಂಜಿ ಕುಡಿದಾದರೆ ಮಧ್ಯಾಹ್ನದ ಊಟದ ಯೋಚನೆ. ಅದು ಮುಗಿದರೆ ರಾತ್ರಿಯ ಊಟದ ಚಿಂತೆ. ಒಟ್ಟಿನಲ್ಲಿ ಒಂಥರಾ ತಳಮಳ ಸ್ಥಿತಿ. + +ಅಲ್ಲಿ ಯಾರಿಗೂ ಒಂದು ದಿನವೂ ಹೊಟ್ಟೆ ತುಂಬಿದ್ದಿಲ್ಲ; ಹಸಿವು ತಣಿದದ್ದಿಲ್ಲ. ಅವರೆಲ್ಲರ ಬಯಕೆಯೂ ಒಂದೇ. ಬೇಗ ಶಿಕ್ಷೆ ವಿಧಿಸಲ್ಪಟ್ಟು ಜೈಲು ಸೇರಬೇಕು. ಪೋಲೀಸರು ಹಾಕಿದ ಕೇಸುಗಳಿಂದ ಮುಕ್ತಿ ದೊರೆಯುವುದು ಅಸಾಧ್ಯ ಎಂದು ಅವರಿಗೂ ಗೊತ್ತು. ಶಿಕ್ಷೆಯಾದರೆ ಹೆಚ್ಚು ದಿನ ಲಾಕಪ್ಪಿನಲ್ಲಿ ಇಟ್ಟುಕೊಳ್ಳುವಂತಿಲ್ಲ. ಬೇಗನೇ ಜೈಲಿಗೆ ಹಾಕುತ್ತಾರೆ. ಜೈಲೆಂದರೆ ಖೈದಿಗಳ ಸ್ವರ್ಗ. ಅವರಿಗೆ ನರಕವೆಂದರೆ ಲಾಕಪ್ಪು. ಪ್ರತಿಯೊಬ್ಬ ಖೈದಿಯ ಕಣ್ಣಲ್ಲೂ ಭಯಂಕರ ಕ್ರೋಧವಿದೆ. ಕಣ್ಣುಗಳ ಮೂಲಕ ಅದನ್ನು ಟೈಗರ್ ಮೇಲೆ ಸುರಿಯುತ್ತಾರೆ. ಅವನಿಗದು ದೊಡ್ಡ ಸಂಗತಿಯಲ್ಲ. ಗಂಭೀರವದನನಾಗಿ ಅವನು ಲಾಕಪ್ಪಿನ ಮುಂದೆ ನಡೆಯುತ್ತಾನೆ. ಅಥವಾ ಯಾವುದಾದರೊಂದು ಲಾಕಪ್ಪಿನ ಮುಂದೆ ಹೋಗಿ ಮಲಗುತ್ತಾನೆ. ಊಟದ ಸಮಯದಲ್ಲಿ ಇನ್ಸ್ ಪೆಕ್ಟರ್ ಸಾಹೇಬರ ಕೋಣೆಯ ಬಾಗಿಲ ಬಳಿ ಕಾವಲು ಕೂರುತ್ತಾನೆ. ಇನ್ಸ್ ಪೆಕ್ಟರ್ ಊಟ ಮುಗಿಸಿ ತೇಗುತ್ತಾ ಎಂಜಲೆಲೆ ಎತ್ತಿ ನಾಯಿಯ ಮುಂದೆ ಇಡುತ್ತಾನೆ. ಒಬ್ಬ ಮನುಷ್ಯ ಉಂಡು ತೇಗಬಹುದಾದಷ್ಟು ಊಟವನ್ನು ಟೈಗರ್ ಒಬ್ಬನೇ ಮುಕ್ಕುತ್ತಾನೆ. ಅದು ಕಂಡ ಖೈದಿಗಳ ಬಾಯಲ್ಲಿ ನೀರೂರುತ್ತದೆ. + +ಟೈಗರ್ ಊಟ ಮುಗಿಸಿ ತೋಟದ ಗಿಡಗಳ ನೆರಳಲ್ಲಿ ಮಲಗುತ್ತಾನೆ. ಸಣ್ಣದೊಂದು ನಿದ್ದೆ ಮುಗಿಸಿ ಪುನಹ ಲಾಕಪ್ಪುಗಳ ಮುಂದೆ ಹಾಜರಾಗುತ್ತಾನೆ. ಆಗವನ ಕಣ್ಣುಗಳಲ್ಲಿ ತಿಳಿನಗು ಅರಳಿರುವುದನ್ನು ಗುರುತಿಸಬಹುದು. ಇಲ್ಲಿರುವ ಹಲವರದ್ದು ಕಳ್ಳಕೇಸುಗಳು! ಕೆಲವರು ಜೀವನದಲ್ಲಿ ಒಮ್ಮೆ ಮಾತ್ರ ಕಳ್ಳತನ ಮಾಡಿದವರು. ನಂತರ ಊರಲ್ಲಿ ನಡೆಯುವ ಎಲ್ಲ ಕಳ್ಳತನಗಳಿಗೂ ಅವರೇ ಹೊಣೆಗಾರರು. ಮಾಡದ ತಪ್ಪುಗಳನ್ನೆಲ್ಲ ಅವರು ಲಾಕಪ್ಪಿನೊಳಗಡೆ ಒಪ್ಪಿಕೊಳ್ಳುತ್ತಾರೆ. ಪೋಲೀಸರು ಜೊತೆಗೇ ಇರುವುದರಿಂದ ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟರ ಮುಂದೆಯೂ ಒಪ್ಪಿಕೊಳ್ಳದೆ ಬೇರೆ ದಾರಿಯಿರುವುದಿಲ್ಲ. ಸರಕಾರ ಖೈದಿಗಳ ಊಟಕ್ಕೆಂದು ಪ್ರತಿಯೊಬ್ಬನಿಗೂ ನಿಶ್ಚಿತ ಮೊತ್ತವೊಂದನ್ನು ನಿರ್ಧರಿಸಿದೆ. ಬಹುಷ ಅದರ ಮೂವತ್ತು ಪಟ್ಟು ಒಬ್ಬ ಪೋಲೀಸನ ತಿಂಗಳ ಸಂಬಳವಾಗಬಹುದು. ಪೋಲೀಸರಿಗಾದರೋ ಊಟದ ಖರ್ಚು; ಬಟ್ಟೆಬರೆ; ಹೆಂಡತಿ ಮಕ್ಕಳು; ಬೇರೆ ಅಂತಹ ಅಗತ್ಯಗಳೇನೂ ಇಲ್ಲವೆನ್ನಿ. ಈ ತುಚ್ಛ ಸುಂಬಳದಿಂದ ಅವರಾದರೂ ಹೇಗೆ ದಿನ ದೂಡುತ್ತಾರೆ? ಖೈದಿಗಳು ಸರಳುಗಳೆಡೆಯಿಂದ ಕೈ ಹಾಕಿ ತಮ್ಮ ಕೋಪವನ್ನೆಲ್ಲ ಒಟ್ಟುಗೂಡಿಸಿ ಟೈಗರ್’ನ ಮೈದಡವುತ್ತಾರೆ. + +‘ನಮ್ಮ ಅನ್ನ!’ ಅವರು ಹೇಳುತ್ತಾರೆ.ಟೈಗರ್ ಬಾಲ ಅಲ್ಲಾಡಿಸುತ್ತಾನೆ. + +‘ಹೌದು, ಇದುವೇ ಬದುಕು. ಇದನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಿಲ್ಲ.’ ಎಂಬಂತೆ ಆ ಮೂಕ ಪ್ರಾಣಿ ನೋಡುತ್ತದೆ. ನಿಜಕ್ಕೂ ಸಾಧ್ಯವಿದೆಯೇ? ಮೊದಮೊದಲು ಕೆಲವರು ಹೇಳುತ್ತಿದ್ದರು:‘ನಮ್ಮ ಹಸಿವು ತಣಿದಿಲ್ಲ. ಸರಕಾರದಿಂದ ನಮಗೆ ಸಿಗಬೇಕಾದದ್ದು ನಮಗೆ ಸಿಗಲೇಬೇಕು.’ಆದರೆ ಸಿಕ್ಕಿದ್ದು ಮಾತ್ರ ಪೋಲೀಸರ ಏಟು ಮತ್ತು ಇನ್ಸ್ ಪೆಕ್ಟರ್ ನ ಬೂಟುಕಾಲಿನ ಒದೆ. ಅದರ ಜೊತೆಗೆ ಇನ್ಸ್ ಪೆಕ್ಟರ್ ನ ಬೈಗುಳ:‘ಸರಕಾರ ನಿಶ್ಚಯಿಸಿದ್ದಂತೆ. ಸರಕಾರ ಏನು ನಿಮ್ಮಪ್ಪನಾ?’‘ಸರಕಾರವೆಂದರೆ ಟೈಗರ್!’ಅದೊಂದು ಸರಿಯಾದ ರೂಪಕವಾಗುತ್ತದೆಯೇ? + +ಪ್ರತಿಯೊಬ್ಬ ಖೈದಿಗೂ ಸರಕಾರ ನಿಶ್ಚಯಿಸಿದ್ದ ಹಣಕ್ಕೆ ಊಟ ಕೊಡುವುದಾಗಿ ಒಬ್ಬ ಹೋಟೆಲಿನವ ಒಪ್ಪಿದ್ದ. ಆತ ಪುಟ್ಟದಾಗಿ ಶುರು ಮಾಡಿದ್ದ ಹೋಟೆಲ್ ಈಗ ಖೈದಿಗಳ ದೆಸೆಯಿಂದಾಗಿ ತಕ್ಕಮಟ್ಟಿಗೆ ವ್ಯಾಪಾರ ನಡೀತಾ ಇದೆ. ಅವನು ದೊಡ್ಡ ಮೀಸೆಯ, ಡೊಳ್ಳು ಹೊಟ್ಟೆಯ, ಧಡೂತಿ ದೇಹದ ಮನುಷ್ಯ. ಆತನಿಗೂ ಪೋಲೀಸ್ ಇನ್ಸ್ ಪೆಕ್ಟರಿಗೂ ಒಳ್ಳೆಯ ಗೆಳೆತನ ಇತ್ತು. ಆತನ ಹೋಟೇಲಿನಲ್ಲಿಯೇ ಇನ್ಸ್ ಪೆಕ್ಟರ್ ಮತ್ತು ಸ್ಟೇಷನ್ ರೈಟರ್ ಊಟ ಮಾಡುವುದು. ಅವರು ಊಟಕ್ಕಾಗಲೀ, ಕಾಫಿಗಾಗಲೀ ದುಡ್ಡು ಕೊಡುವುದಿಲ್ಲ. ಬದಲಾಗಿ ಪ್ರತಿ ತಿಂಗಳು ಒಂದು ಮೊತ್ತ ಹೋಟೆಲಿನಿಂದ ಅವರಿಬ್ಬರಿಗೂ ಬಂದು ಸೇರುತ್ತಿತ್ತು. ಆತ ಆ ನಷ್ಟವನ್ನು ಖೈದಿಗಳಿಂದ ವಸೂಲು ಮಾಡುತ್ತಿದ್ದ. ಐವತ್ತರಿಂದ ಅರವತ್ತರಷ್ಟು ಖೈದಿಗಳು ಪ್ರತಿದಿನ ಆ ಸ್ಟೇಷನ್ನಿನ ಲಾಕಪ್ಪಿನಲ್ಲಿರುತ್ತಾರೆ. ಅವರಿಗೆ ಊಟ ಕೊಟ್ಟರೂ ಕೊಡದಿದ್ದರೂ ಕೇಳುವವರಾರು? ಕೋರ್ಟಿನಲ್ಲಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರಾದಾಗ ಹೇಳೋಣವೆಂದರೆ ಅಲ್ಲಿಂದ ಪುನಹ ಇದೇ ಲಾಕಪ್ಪಿಗೆ ತಾನೆಬರೋದು? ಇನ್ಸ್ ಪೆಕ್ಟರ್ ನಗುತ್ತಲೇ ಕೇಳುತ್ತಾನೆ, ಆದರೆ ಆ ನಗು ಮಾತ್ರ…! + +‘ದೂರು ಹೇಳುತ್ತೀಯೇನೋ?’ಅದರ ಬೆನ್ನಿಗೆ ಮೂರ್ಛೆ ಹೋಗುವ ತನಕ ಪೆಟ್ಟು ಬೀಳುತ್ತದೆ. ಇದು ಹಲವು ಸಲ ಪುನರಾವರ್ತನೆಯಾದಾಗ ಖೈದಿಗಳಿಗೆ ದೂರೇ ಇಲ್ಲವೆಂದಾಯಿತು. ಆ ಕೋಪವನ್ನು ಅವರು ಟೈಗರ್ ಮೇಲೆ ತೀರಿಸುತ್ತಾರೆ. ಖೈದಿಗಳಿಗೆ ಟೈಗರ್ ಕಂಡರೆ ಆಗದು ಎಂದು ಎಲ್ಲರಿಗೂ ಗೊತ್ತು. ಇನ್ಸ್ ಪೆಕ್ಟರ್ ಗೆ ಮಾತ್ರ ಆಶ್ಚರ್ಯ! ಆ ಮೂಕ ಪ್ರಾಣಿಯನ್ನು ಇವರೇಕೆ ಪ್ರೀತಿಸುತ್ತಿಲ್ಲ?ಖೈದಿಗಳು ಮಾತ್ರ ನಾಯಿಯನ್ನು ಪ್ರೀತಿಸಲಿಲ್ಲ. ಸಮಯ ಸಿಕ್ಕಾಗ ಅದನ್ನು ನೋಯಿಸುವುದನ್ನೂ ಬಿಡಲಿಲ್ಲ. ಆಪತ್ತು ಇದೆ ಅಂತ ಗೊತ್ತಾದ ತಕ್ಷಣ ನಾಯಿ ಕುಂಯ್ ಗುಡುತ್ತದೆ.‘ಯಾರದು ನಾಯಿಗೆ ಉಪದ್ರ ಮಾಡೋದು?’ ಇನ್ಸ್ ಪೆಕ್ಟರ್ ಲಾಠಿ ಹಿಡಿದು ಹೊರ ಬರುತ್ತಾನೆ.‘ನಾಯಿಗಳಾ, ಟೈಗರ್ ನನ್ನು ಮುಟ್ಟಬಾರದು ಅಂತ ಹೇಳಿದ್ದೆ ತಾನೇ? ಮುಟ್ಟಿದವನು ಮರ್ಯಾದೆಯಿಂದ ಕೈ ಹೊರಕ್ಕೆ ಚಾಚಿದರೆ ಸರಿ.’ಸರಳುಗಳೆಡೆಯಿಂದ ಒಂದು ಕೈ ಹೊರ ಬರುತ್ತದೆ. ಇನ್ಸ್ ಪೆಕ್ಟರ್ ಬೆರಳುಗಳನ್ನು ಹಿಡಿದು ಲಾಠಿಯಿಂದ ಚೆನ್ನಾಗಿ ಹೊಡೆಯುತ್ತಾನೆ. ಸುತ್ತಲ ವಾತಾವರಣದಲ್ಲಿ ಅಳು ಮಡುಗಟ್ಟಿ ನಿಲ್ಲುತ್ತದೆ. ಅಂಗೈ ಊದಿ ಒಡೆಯುತ್ತದೆ. ರಕ್ತ ತೊಟ್ಟಿಕ್ಕುತ್ತದೆ. ಟೈಗರ್ ನೆಲಕ್ಕೆ ಬಿದ್ದ ರಕ್ತವನ್ನು ನೆಕ್ಕುತ್ತಾನೆ. + +(ಇಲ್ಲಸ್ಟ್ರೇಷನ್ ಕಲೆ:ರೂಪಶ್ರೀ ಕಲ್ಲಿಗನೂರ್) + +ಖೈದಿಗಳು ಮಾಡಿದ ತಪ್ಪನ್ನೇ ಪುನರಾವರ್ತಿಸುತ್ತಾರೆ. ಅದರಿಂದ ಸಿಗುವ ಶಿಕ್ಷೆ ಅವರನ್ನು ಇನ್ನಷ್ಚು ಧೈರ್ಯಶಾಲಿಗಳಾಗಿಸುತ್ತದೆ. ಆ ನಾಯಿಯ ತಂಟೆಗೆ ಹೋದರೆಂದು ಅಲ್ಲಿನ ಬಹಳಷ್ಟು ಖೈದಿಗಳಿಗೆ ಈಗಾಗಲೇ ಶಿಕ್ಷೆಯಾಗಿದೆ. ನಾಯಿ ಮಾತ್ರ ಪಂಥಾಹ್ವಾನ ಕೊಡುತ್ತಲೇ ಇರುತ್ತದೆ. + +ಟೈಗರ್ ಅಷ್ಚಾಗಿ ಹೊರಗಡೆ ಹೋಗುವವನಲ್ಲ. ಅವನೊಬ್ಬ ಮಹಾ ಪುಕ್ಕಲ. ಬೇರೆ ನಾಯಿಯೇನಾದರೂ ಆ ಕಡೆ ಬಂದರೆ ಜೋರಾಗಿ ಬೊಗಳುತ್ತಾನೆ. ಆಗವನ ಪರಾಕ್ರಮ ಕಂಡರೆ ಸಿಂಹದ ಮರಿ ಎಂದು ಭಾವಿಸಬೇಕು. ಆದರೆ, ಯಾವಾಗಾದರೂ ಸ್ಟೇಷನ್ನಿನಿಂದ ಹೊರಗೆ ಹೋದಾಗ ಬೀದಿಯ ಯಾವುದಾದರೊಂದು ಸಣಕಲು ನಾಯಿಯನ್ನು ಕಂಡರೂ ಸಾಕು, ಅವನ ಜಂಘಾಬಲವೇ ಉಡುಗಿ ಹೋಗುತ್ತದೆ. ಬಾಲವನ್ನು ತಗ್ಗಿಸಿ, ಕಾಲುಗಳೆಡೆಯಲ್ಲಿ ಸಿಕ್ಕಿಸಿಕೊಂಡು ಓಡಿ ಬಂದು ಸ್ಟೇಷನ್ ಸೇರುತ್ತಾನೆ. ಒಂದು ದಿನ ಹಾಗೇ ಅವ ಬರುತ್ತಿದ್ದಾಗ ರಾಜಕೀಯ ಖೈದಿಗಳಲ್ಲಿ ಒಬ್ಬಾತ ಹೇಳಿದ:‘ನೋಡ್ರೋ, ನಮ್ಮ ಇನ್ಸ್ ಪೆಕ್ಟರ್ ಸಾಹೇಬರು ಬರುತ್ತಿದ್ದಾರೆ!’ + +ಅವರ ನಡುವೆ ಇದ್ದ ದಾರ್ಶನಿಕ ಖೈದಿ ಹೇಳಿದ:‘ನಾವು ಪ್ರತಿಯೊಬ್ಬರೂ ಅವನಂತೆ ಒಬ್ಬೊಬ್ಬ ಇನ್ಸ್ ಪೆಕ್ಟರ್ ಗಳಾಗಿದ್ದೇವೆ.’ + +ಅವನ ಆ ಪ್ರಸ್ತಾವನೆ ದೊಡ್ಡದೊಂದು ವಾದಕ್ಕೆಡೆ ಮಾಡಿತು. ಮೂವರ ಒಂದು ತಂಡಕ್ಕೆ ಒಬ್ಬನೇ ಎದುರಾಳಿಯಾದ. ಜಗಳ ತಾರಕಕ್ಕೇರುತ್ತಿದ್ದಾಗಲೇ ಒಂದು ಸಂತಸದ ಸುದ್ದಿಯೊಂದಿಗೆ ಇನ್ಸ್ ಪೆಕ್ಟರ್ ಬಂದ.‘ಏನಿದು ಜಗಳ?’ಯಾರೂ ಮಾತಾಡಲಿಲ್ಲ.‘ಬಾಗಿಲು ತೆಗಿ.’ ಎಂದು ಕಾವಲುಗಾರನಿಗೆ ಆಜ್ಞೆಯಿತ್ತ.ಇನ್ಸ್ ಪೆಕ್ಟರ್ ಹೇಳಿದ:‘ನಿಮ್ಮನ್ನು ನೋಡೋದಕ್ಕೆ ಯಾರೋ ಬಂದಿದ್ದಾರೆ.’ + +ಹೋಗಿ ನೋಡಿದರೆ ಜಗಳಕ್ಕೆ ಕಾರಣನಾದವನ ಕೆಲವು ಗೆಳೆಯರು ಬಂದಿದ್ದಾರೆ. ಅವರು ಒಂದಷ್ಟು ತಿಂಡಿಗಳನ್ನು ಮತ್ತು ಕಿತ್ತಳೆ ಹಣ್ಣುಗಳನ್ನು ತಂದಿದ್ದರು. ಎರಡು ಹಣ್ಣುಗಳನ್ನು ಇನ್ಸ್ ಪೆಕ್ಟರ್ ತಿಂದ. ಉಳಿದ ತಿಂಡಿಗಳನ್ನು ಅವರೆಲ್ಲ ತಿಂದರು. ಊರ ಸುದ್ದಿಗಳು ಅಷ್ಟೊಂದು ಆಶ್ಚರ್ಯಕರವಾಗಿರಲಿಲ್ಲ. ಇದ್ದ ಬರಗಾಲ ಏರುತ್ತಿದೆ. ಹಸಿವಿನಿಂದ ಜನರು ಸಾಯುತ್ತಿದ್ದಾರೆ; ಜೊತೆಗೆ ಯುದ್ಧದ ಸುದ್ದಿಗಳು ಬರುತ್ತಿವೆ; ಸಾಮಾನುಗಳ ಬೆಲೆಯೇರಿಕೆ; ಒಟ್ಟಿನಲ್ಲಿ ಭೀಕರ ಕ್ಷಾಮ. + +‘ನಮಗೂ ಅದರ ಅನುಭವವಾಗುತ್ತಿದೆ.’ ಜಗಳ ಶುರು ಹಚ್ಚಿದಾತ ಹೇಳಿದ. + +‘ನಿಮಗೇನು, ಊಟಕ್ಕೆ ತೊಂದರೆಯಿಲ್ಲ. ಊರ ಸುದ್ದಿಗಳೊಂದೂ ನಿಮಗೆ ಬೇಡ. ಭಾಗ್ಯವಂತರು ನೀವು!’ಆಗ ಬಾಗಿಲ ಬಳಿ ಬಂದ ಟೈಗರ್ ನನ್ನು ತೋರಿಸುತ್ತಾ ಜಗಳಾಡಿದವ ಹೇಳಿದ:‘ಆ ಟೈಗರ್ ನಾಯಿಯಷ್ಟು ಭಾಗ್ಯ ನಮಗಿರುತ್ತಿದ್ದರೆ?’ + +ಅದು ಕೇಳಿ ಇನ್ಸ್ ಪೆಕ್ಟರ್ ನಕ್ಕ. ಖೈದಿಗಳೂ ನಕ್ಕರು. ಅವರು ಪುನಹ ಲಾಕಪ್ ಸೇರಿದರು. ನಾಲ್ವರಿಗೂ ತೃಪ್ತಿಯಾಗಿತ್ತು. ಹಾಗಾಗಿ ರಾತ್ರಿ ಊಟ ಮುಗಿಸಿದಾಗ ಎಲೆಯಲ್ಲಿ ಅನ್ನ ಬಾಕಿ ಉಳಿದಿತ್ತು. ಅದನ್ನು ಅವರಿಗಿಂತಲೂ ಹಿಂದೆ ಲಾಕಪ್ ಸೇರಿದ್ದವರ ಕಡೆಗೆ ತಳ್ಳಿದರು. ಆ ಲಾಕಪ್ಪಿನೊಳಗಿದ್ದ ಇಪ್ಪತ್ತೆರಡು ಜನರೂ ಆಸೆಯಿಂದ ಬಾಗಿಲ ಬಳಿ ಬಂದರು. ಒಬ್ಬಾತ ಕಂಬಿಗಳೆಡೆಯಿಂದ ಕೈ ಹಾಕಿ ಎಲೆಯನ್ನು ಎಳೆದುಕೊಂಡಾಗ ಸ್ವಲ್ಪ ಚೆಲ್ಲಿತು. ಟೈಗರ್ ನೆಕ್ಕಲು ತಯಾರಾಗಿ ನಿಂತಿದ್ದ. ಲಾಕಪ್ಪಿನ ಇಪ್ಪತ್ತೊಂದು ಜನರೂ ಸಾಲಾಗಿ ಕೂತರು. ಒಬ್ಬಾತ ಬಡಿಸಲು ನಿಂತ. ಇಪ್ಪತ್ತೆರಡು ತುತ್ತು ಅನ್ನವೂ ಅದರಲ್ಲಿರಲಿಲ್ಲ. ಆದರೂ ಹಂಚಿ ತಿನ್ನುವುದೆಂದೇ ತೀರ್ಮಾನಿಸಿದರು. ಬಡಿಸುವಾತ ಐದು ಜನರ ಕೈಗೆ ಚೂರು ಚೂರೇ ಹಾಕಿದ. ಟೈಗರ್ ನೆಲದಲ್ಲಿ ಬಿದ್ದಿದ್ದ ಪಲ್ಯ ನೆಕ್ಕಿತು. ನಂತರ ಕಂಬಿಗೆ ಮೆತ್ತಿದ್ದ ಪಲ್ಯವನ್ನೂ ನೆಕ್ಕತೊಡಗಿತು. ಅಷ್ಟರಲ್ಲಿ ಒಬ್ಬಾತ ಅದರ ಮುಸುಡಿಗೆ ಒದ್ದೇ ಬಿಟ್ಟ. ನಾಯಿ ಪ್ರಾಣ ಭಯದಿಂದ ಬೊಗಳಿತು. ಕಾವಲುಗಾರ ಓಡಿ ಬಂದ; ಉಳಿದ ಪೋಲೀಸರೂ ಬಂದರು. ಇನ್ಸ್ ಪೆಕ್ಟರ್ ಆ ಇಪ್ಪತ್ತೆರಡು ಜನರ ಹೃದಯವನ್ನೇ ಕಿತ್ತುಕೊಳ್ಳುವಂತೆ ಅವರ ಕೈಯಲ್ಲಿದ್ದ ಅನ್ನವನ್ನು ಪುನಹ ಎಲೆಗೆ ಹಾಕಿಸಿ ಹೊರಗೆ ತರಿಸಿ ನಾಯಿಗೆ ಇಟ್ಟ. ಸಾಲದ್ದಕ್ಕೆ ಲಾಕಪ್ಪು ತೆರೆದು ಒಳಗೆ ಹೋಗಿ ಒದೆಗಳ ಮಳೆಗರೆದ. + +ಆ ಸಂಗತಿ ಹಾಗೆ ಮುಗಿಯಿತು. ಅಂದು ರಾತ್ರಿ ಸುಮಾರು ಹತ್ತು ಗಂಟೆ ಹೊತ್ತಿಗೆ ನಾಯಿ ಪುನಹ ಭಯಂಕರವಾಗಿ ಬೊಗಳ ತೊಡಗಿತು. ಆ ಸದ್ದಿಗೆ ಪೋಲೀಸ್ ಸ್ಟೇಷನ್ ನಡುಗಿತು. ಕಾವಲುಗಾರ ಓಡಿ ಬಂದು ನೋಡುವಾಗ ಇಬ್ಬರು ಸೇರಿ ನಾಯಿಯ ಮುಸುಡಿಯನ್ನು ಕಂಬಿಗಳೆಡೆಯಿಂದ ಒಳಕ್ಕೆ ಜಗ್ಗುತ್ತಿದ್ದಾರೆ. ಇಬ್ಬರಿದ್ದರು ಎಂಬುದು ಖಚಿತ. ಒಬ್ಬನ ಗುರುತು ಮಾತ್ರ ಕಾವಲುಗಾರನಿಗೆ ಸಿಕ್ಕಿತ್ತು. + +ಇನ್ಸ್ ಪೆಕ್ಟರ್ ಅವನನ್ನು ಹೊರಗೆ ಕರೆಸಿದ. ಅವನು ಕಳ್ಳತನವೊಂದರಲ್ಲಿ ಆರೋಪಿಯಾಗಿದ್ದ. ನೋಡುತ್ತಿದ್ದಂತೆಯೇ ಇನ್ಸ್ ಪೆಕ್ಟರ್ ಅವನ ಮುಖಕ್ಕೆ ಗುದ್ದಿದ. ಜೊತೆಗೊಂದು ಒದೆಯೂ ಬಿತ್ತು. ಬೋರಲು ಬಿದ್ದವನ ಮೇಲೆ ಪೆಟ್ಟುಗಳ ಸುರಿಮಳೆ! ಕೊನೆಗೆ ಅವನನ್ನು ಎತ್ತಿದರು. ಬಾಯಲ್ಲಿ ರಕ್ತ! ನೆಲದಲ್ಲಿ ಒಂದು ಹಲ್ಲು! ಹಪ್ಪಳದಗಲ ರಕ್ತ! + +ಆ ದೃಶ್ಯವನ್ನು ನಲವತ್ತೈದು ಖೈದಿಗಳೂ ಒಂಬತ್ತು ಪೋಲೀಸರೂ ಟೈಗರೂ ಕಂಡಿದ್ದರು. ನೆಲಕ್ಕೆ ಬಿದ್ದ ರಕ್ತವನ್ನು ಟೈಗರ್ ನೆಕ್ಕಿ ಒಣಗಿಸಿದ.ಇನ್ಸ್ ಪೆಕ್ಟರ್ ಕೇಳಿದ:‘ಇನ್ನೊಬ್ಬ ಯಾವನೋ ಅವನು?’ + +ಆದರೆ, ಆತ ಹೇಳಲಿಲ್ಲ. ಹೇಳದಿರುತ್ತಾನೆಯೇ?… ಅವನ ಎರಡೂ ಕಾಲುಗಳನ್ನು ಸರಳುಗಳ ಎಡೆಯಲ್ಲಿ ತೂರಿಸಿ ಕಟ್ಟಿದರು. ಅಂಗಾಲ ಮೇಲೆ ಲಾಠಿಯಿಂದ ಬೀಸಿ ಬೀಸಿ ಹೊಡೆಯುತ್ತಿದ್ದರೂ ಆತ ಹೇಳಲೇ ಇಲ್ಲ. ಅಂಗಾಲು ಒಡೆಯಿತು. ಒಡೆದು ರಕ್ತ ಚಿಮ್ಮಿದರೂ ಆತ ಬಾಯಿ ಬಿಡಲಿಲ್ಲ. ಅವನ ಪ್ರಜ್ಞೆ ತಪ್ಪಿತ್ತು. ಆದ್ದರಿಂದ ಟೈಗರ್ ತನ್ನ ಗೊರಸು ನಾಲಗೆಯಿಂದ ಅಂಗಾಲನ್ನು ನೆಕ್ಕುತ್ತಿದ್ದರೂ ಆತ ಅಲುಗಾಡದೇ ಬಿದ್ದಿದ್ದ. + +ಟೈಗರ್ ಒಬ್ಬ ಅದೃಷ್ಟವಂತ ನಾಯಿ. + +ಊರು ದಕ್ಷಿಣ ಕನ್ನಡದ ವಿಟ್ಲ. ಹೊಟ್ಟೆಪಾಡು ಕೇರಳದ ಕಲ್ಲಿಕೋಟೆಗೆ ಕಟ್ಟಿ ಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ \ No newline at end of file diff --git a/Kenda Sampige/article_464.txt b/Kenda Sampige/article_464.txt new file mode 100644 index 0000000000000000000000000000000000000000..e267be6de27fa1c4f539f33119168baff674e4cf --- /dev/null +++ b/Kenda Sampige/article_464.txt @@ -0,0 +1,33 @@ + + +“ಇವತ್ತೆಲ್ಲಾ ಜೋರು ಮಳೆ ದಬದಬ ಬೀಳ್ತಾನೆ ಇದೆ. ದಿಗಿಲು ಹುಟ್ಸಿದ್ಹಂಗೆ, ನನ್ನ ಕೈಯಲ್ಲಿ ಹೊರಗೆ ಬರೋಕ್ಕು ಆಗಲ್ಲ, ಒಂದೇ ಸಮಗೆ ಉಸಿರು ಕಟ್ಟಿದ್ಹಾಂಗೂ ಆಗ್ತಿದೆ ಕಣ್ರೀ.” ಕುಂಜಳಿ ತೆಕ್ಕೆಗೆ ಬಂದ ಪಾಂಜನ ಕೊಕ್ಕಲ್ಲಿಕೊಕ್ಕಿಟ್ಟು ನೋವ ಉಲಿಯಿತು. “ಯಾಕೋ? ಮೈ ಹುಷಾರಿಲ್ವಾ? ಹಾಗಾದ್ರೇ ಬೆಚ್ಚೆಗೆ ಮಲ್ಕೋ. ನಾನೊಂದಿಷ್ಟು ಅತ್ತಿತ್ತ ಸುತ್ತಾಡಿ ಬಂದೆ, ಇರು”ಎಂದ ಪಾಂಜ ಎಲ್ಲಿಗೆ? ಎಂದು ಕುಂಜಳಿ ಕೇಳುವ ಮುನ್ನ ಪುರ್ರನೇ ಹಾರೇಬಿಟ್ಟ. + +ಅರೇ! ನಾನೊಬ್ಬನೆ ಬಂದೆ, ಕುಂಜಳಿ ಜೊತೆಗೆ ಇಲ್ಲಾಂದ್ರೇ ಈ ಆಟ-ಹಾರಾಟ ಹೊಂಚು ಹಾಕೋದು ಎಲ್ಲ ಬರೀ ನೀರಸ. ಜೊತೆಗೆ ಅವಳಿದ್ರೆ ಜಗತ್ತನ್ನೆ ಹಾರಬಲ್ಲೆ ನಾನು. ನನಗಾಗೇ ಹುಟ್ಟಿದಂತ ಹೆಣ್ಣಾಕೆ. ಈ ಗಿಡ ಮರ ಬಳ್ಳಿಗಳೆಲ್ಲಾ ಅದೆಂಥ ಮೋಜಿನ ಜಾಗ ಆಗಿತ್ತಲ್ವಾ? ಸರಸ ಅಂದ್ರೇ ಏನು ಅನ್ನೋದಾ ಕುಂಜಳಿ ಕಲಿಸಿಕೊಟ್ಟಿದ್ಳು. ನನ್ನ ಸೌಭಾಗ್ಯ ಅವ್ಳ್ನ ಪಡೆದಿದ್ದು, ಸುಂದರಿ ನನ್ನ ಕುಂಜಳಿ.” ಎದೆಯಲ್ಲಿ ಮಧುರಭಾವ ಮೂಡಿ ಪಾಂಜ ಖುಷಿಯಾದ. ಪಾಂಜನ ಯೋಚನೆಯ ಹರಿವು ಧೀರ್ಘವಾಯಿತು.  ಪಾಂಜ ಆ ಸಣ್ಣ ಮನೆಯಲ್ಲಿ ಸುಖವಾಗಿ ನಲಿದ ಜೀವ. ನಿರ್ಲಿಪ್ತ ಶಾಂತಜೀವನದ ಆಕಾಂಕ್ಷೆ ಅವನದು. ಹಾಗಾಗಿ ತನ್ನ ನೆಲೆ ಎಲ್ಲ ಜಂಜಾಟಕ್ಕೆ ತೆರೆದುಕೊಳ್ಳದಿರಲೆಂದು ದೂರಊರಾಚೆ ಮನೆ ಕಟ್ಟಿಕೊಂಡ. ಊರಲ್ಲಿದ್ದರೆ ಎಲ್ಲರ ಮಾತಿಗೆ ಸದಾ ಗುಣುಗುಡುತ್ತಾ ಗಳಹುತ್ತಾ ಬಾಯಿಯ ಆಹಾರವಾಗುವುದು, ಮತ್ತದೇ ಜಾಯಮಾನ ತಮಗೂ ಚಟವಾಗುವುದು ಬೇಡವೆಂದುಕೊಂಡ. ಕುಂಜಳಿ ಕೂಡಾ ಅಲ್ಲಿ ಖುಷಿಯಿಂದ ಅವನೊಂದಿಗೆ ಕಲೆತು ಬೆರೆತು ಸುಖಪಟ್ಟಿದ್ದಳು. + +ಪಾಂಜನಿಗೆ ಮೊದಲ ಸಲ ಆಕೆ ಮೊಟ್ಟೆಇಟ್ಟ ಸಡಗರ ನೆನಪಾಯಿತು. ಎಷ್ಟೊಂದು ಸಂಭ್ರಮಿಸಿದ್ದೆವು. ಸುರತಸುಖದ ಮಧುರ ಅನುಭವದ ಆ ವಿನೋದ ಅಬ್ಬಾ .. ಹೆಣ್ಣೆ ಕುಂಜಳಿ. ನೀನೆಷ್ಟು ಕಾಡುವೆ ನನ್ನ? ಈ ಮಳೆಯ ಆರ್ಭಟದ ನಡುವೆಯೂ ಪಾಂಜನ ಮೈ ಬೆಚ್ಚಗಾಯಿತು. ಮಧು ನೀಡುವ ಅವಳ ಸುತ್ತಮುತ್ತ ಸುಳಿಯುವುದೇ ತನ್ನ ಕಸುಬಾಗಿತ್ತಲ್ಲ. ನೆನೆದು ಪಾಂಜ ನಾಚಿದ. ಸುತ್ತಮುತ್ತ ನೋಡಿದ. ತನ್ನ ವರ್ತನೆ ತನಗೆ ನಗು ತರಿಸಿತು. ಆಕೆ ರಂಭೆ ಊರ್ವಶಿಯರ ಕುಲದವಳೋ ಎಂಬಂತಿದ್ದಳು. ಆ ರೆಕ್ಕೆಗಳೋ.. ಮೃದು ಮೈ, ಮುದ್ದಾದ ಚುಂಚು, ರಕ್ತ ಚಿಮ್ಮುವ ತೆಳು ಪಾದಗಳು, ಹೂವಿಗಿಂತ ಹಗುರವಾದ ಆಕೆ ಆತನ ಪ್ರೇಮದರಗಿಣಿ. ಆದರೆ ಆ ಸುಖ ನಿಲ್ಲಲಿಲ್ಲ. ಮೊಟ್ಟೆಇಟ್ಟ ಮೂರನೇ ದಿನವೇ ತಾವಿಬ್ಬರು ಆಹಾರ ಹುಡುಕಿ ಹೊರ ಹೋದ ಹೊತ್ತು ಅದೇನೋ ತಿಳಿಯದಂತೆ ಗೂಡು ಅಸ್ತವ್ಯಸ್ತಗೊಂಡಿತ್ತು. ಮೊಟ್ಟೆಗಳು ನೆಲಕ್ಕೆ ಸೇರಿದ್ದವು. ಗೂಡಿದ್ದ ಪೊದೆಯೊಳಗೆ ಯಾರೋ ಬಂದು ಹೋದಂತೆ ಇತ್ತು. ಅದೂ ಅವರೇ ಎರಡು ಕಾಲಲ್ಲಿ ನೆಟ್ಟಗೆ ನಡೆವ ಅವರೇ ಎಂಬುದು ನಿಚ್ಚಳವಾಗಿತ್ತು. ಎಲ್ಲವನ್ನು ಕೊಚ್ಚಿಕೊಲ್ಲುವ ಅವರ ಜಾಯಮಾನ ಆತನಿಗೆ ರೋಷ ಉಕ್ಕಿಸಿತು. ಆದರೆ ಏನೂ ಮಾಡಲಾಗದ ಅಸಹಾಯಕತೆ ಅವನದು. ಎಷ್ಟೋ ದಿನಗಳವರೆಗೆ ಕುಂಜಳಿ ಬದುಕುವ ಆಸೆಯನ್ನೇ ಕಳೆದುಕೊಂಡು ನಿರಾಶಳಾಗಿದ್ದಳು. ಅವಳನ್ನು ಪುನಃ ಬದುಕಿಗೆ ಬೆಸೆದುಕೊಳ್ಳುವಂತೆ ಮಾಡುವಲ್ಲಿ ಹೆಣಗಿದ್ದ ಪಾಂಜ. ಮತ್ತೆ ಮರುಕ್ಷಣ ಮನಸ್ಸು ಮನ ಮುದುಡಿತು. ‘ಆದ್ರೆ ಪಾಪ ಈಗಾಕೆಗೆ ಯಾಕಿಂತ ನೋವು, ಕೈ ಕಾಲು ಸೆಳೆತ ಹೆಚ್ಚಾಗ್ತಿದೆ. ಅಂಥ ವಯಸ್ಸಾಯ್ತ ನಮಗೆ? ಛೇ! ಇಲ್ಲ ಬಿಡು. ಏನೋ ಹೆಚ್ಚು ಕಡಿಮೆ ಆದಂಗ್ಹಿದೆ. ಸರಿ ಹೋಗ್ತಾಳೆ.’ ಎಂದುಕೊಂಡ. + +ಪುರ್.. ಪುರ್… ಸದ್ದುಗದ್ದಲ ಎಲ್ಲ ಕಡೆಯಲ್ಲೂ ಕೇಳಿ ಬರುತ್ತಲೂ ಆಚೀಚೆ ನೋಡಿದ. ತನ್ನಂತೆ ಅದೆಷ್ಟು ಜೀವಗಳು ಹುಡುಕುತ್ತಿವೆ ಹೊಟ್ಟೆಗೆ. ಈ ಹೊಟ್ಟೆಗಾಗೆ ಎಲ್ಲ. ಅಷ್ಟೇ ಅಲ್ಲೊಂದು ದಡಕ್ಕನೇ ಜೋರಾದ ಸದ್ದಿಗೆ ಆತನ ಎದೆ ಜಿಲ್ಲೆಂದಿತು. ಅಯ್ಯೋ ಎನ್ನುವಷ್ಟರಲ್ಲೇ ತನ್ನ ನೆರೆಮನೆಯ ಕಾಕ ಮಾಮ ವಿದ್ಯುತ್ ತಂತಿಗೆ ಬಡಿಸಿಕೊಂಡೇ ಬಿಟ್ಟ. ಪಾಪ.. ಸುಟ್ಟುಹೋದ ಅರೆಕ್ಷಣದಲ್ಲೇ! ಎಲ್ಲ ಮಿತ್ರರೂ ಸೇರಿ ಚೀರಾಡತೊಡಗಿದರು. ಹಾಗೆ ಒಳಗೊಳಗೆ ನೋವು ಬಲಿಯುತ್ತಲೇಇತ್ತು. ಅಸಹಾಯಕ ನಿರುಪದ್ರವಿ ಜೀವಿಗಳ ಬದುಕು ಎಷ್ಟು ಘೋರವಾಗುತ್ತಿದೆ. ಹೋದಲ್ಲಿ ಬಂದಲ್ಲಿ ಹಾರುವಾಗೆಲ್ಲ ಕಾಲಿಗೆ ಅಡರಿಕೊಳ್ಳುವ ಈ ತಂತಿಗಳ ದಾಟಿ ಹೋಗುವುದೇ ಮಹಾ ಪ್ರಯಾಸವಾಗಿತ್ತು. ಅವನಿಗೂ ಒಮ್ಮೆಲೆ ಅದೇನೋ ಎದೆಯಲ್ಲಿ ಸಳಕ್ಕನೇ ಸೆಳೆದಂತಾಯ್ತು. ವಿದ್ಯುತ್ ಶಾಕ್ ಆದ್ಹಾಂಗೆ, ಇನ್ನೆನು ಬಿದ್ದು ಬಿಟ್ಟೆಅನ್ನೋವಷ್ಟರಲ್ಲಿ ಮತ್ತೆ ಸಾವರಿಸಿಕೊಂಡ ಪಾಂಜ. ಮಳೆ ಕಡಿಮೆ ಆಗಿದೆ. ಇಲ್ಲೇ ಎಲ್ಲಾದ್ರೂ ಏನಾದ್ರೂ ಸಿಕ್ಕಿತು. ಮನೆಯ ಏಕ ಕಿಟಕಿಯಂಚಿನ ವಾರೆಯಲ್ಲಿ ಆಗಾಗ ಇಣುಕಿ ಸಂಭ್ರಮಿಸುವ ಕುಂಜಳಿ ನೆನಪಾದಳು. ಬೇಗ ಬೇಗ ಏನಾದರೂ ಹೆಕ್ಕಿ ಕೊಳ್ಳಬೇಕು. ಸಂಗ್ರಹವಾದಲ್ಲಿಯೇ ಇಂದು ಇಬ್ಬರ ಹೊಟ್ಟೆಗೆ ಹಿಟ್ಟು. ಈ ಬಿರು ಬೇಸಿಗೆಯ ದಿನ ಮಳೆಗಾಲಕ್ಕೆ ಹೆಚ್ಚಾಗಿ ಸುರಿಯುವ ಸಡಗರವೇನೋ? ಈ ಮಳೆಗೆ ಈಗೀಗ ಕಾಲದ ಹಂಗೇ ಇಲ್ಲ. ಎಲ್ಲವೂ ಹೀಗೆ. ಯಾರೂ ಯಾರಿಗೂಕಾಯುವುದಿಲ್ಲ. ತಮಗೆ ಬೇಕೆಂದಾಗ ತಮ್ಮದೇ ತೀರ್ಮಾನ. ಹೊಂದಾಣಿಕೆಯೇ ಸತ್ತು ಹೋಗಿದೆ. ಸಹಬಾಳ್ವೆ ಎಲ್ಲಿಯದು? ಸಾಕ್ಷಿಗೆ ಇಳೆಗೂ ಮಳೆಗೂ ಇರಬೇಕಾದ ಸಾಂಗತ್ಯದಲ್ಲಾದ ಈ ವೈರುಧ್ಯವೇ ಸಾಕಲ್ಲ? + +ಆದರೆ ಆ ಮನುಷ್ಯರು ನಮ್ಮಂತೆ ಬರೀ ಹೊಟ್ಟೆಗೆ ಬದುಕುತ್ತಿಲ್ಲ. ಅದೇನೋ ಜಯಿಸ ಹೊರಟಿದ್ದಾರಂತೆ. ಇಡೀ ಬ್ರಹ್ಮಾಂಡ ಅವರದ್ದಂತೆ. ಅವರೇ ಯಜಮಾನರಂತೆ. ರಾತ್ರಿಯೂ ಇನ್ನೊಬ್ಬ ಸೂರ್ಯನ ಸೃಷ್ಟಿಸಿಕೊಂಡವರು ಅವರು. ಅದಕ್ಕೆ ಈ ನಮ್ಮ ಜೀವದಾತೆ ಕಾಳಿಯೇ ಒಡಲಂತೆ. ಅಷ್ಟೇ ಅಲ್ಲ ನಮ್ಮಂತೆ ಆದರೆ ಜೀವವಿಲ್ಲದ ಹಾರುವ ಹಕ್ಕಿಯನ್ನುಇಟ್ಟಿಕೊಂಡಿದ್ದಾರೆ. ಬಹಳ ಯೋಗ್ಯರು. ನಾವಾದರೋ ಅವರ ಗಾಳಕ್ಕೆ ಬರೀ ದಾಳಗಳು. ಅದ್ಯಾಕೋ ಮನಸ್ಸು ಸರಿಯಿಲ್ಲ. ಕಾಕಮಾಮ ಹೇಗೆ ಕ್ಷಣದಲ್ಲಿ ಹೊರಟೇಹೋದ. ಜೀವದ ಬೆಲೆ ಇಷ್ಟೇನಾ? ಎಲ್ಲರೂ ಈ ಭೂಮಿಯ ಮಕ್ಕಳೇ. ಇದು ಅವರಿಗೆ ತಿಳಿದಿಲ್ಲವೇ? ಅವರೇನು ಮೂಢರೇ? ನಮ್ಮ ನೆಲ-ಜಲವನ್ನೆಲ್ಲಾ ಹೇಗೆಲ್ಲ ಆವರಿಸುತ್ತಿದ್ದಾರೆ, ಏನು ಮಾಡೋಣ? ತಪ್ಪಿಸಿಕೊಳ್ಳುವುದು ಅದು ಹೇಗೆ? ಅವರಿಗೆ ಬುದ್ದಿ ಹೇಳುವರಾರು? ಅಲ್ಲಿಲ್ಲಿ ಅದೇನೋ ಕಾಡಿನ ದಾರಿಯುದ್ದಕ್ಕೂ ಸಾಲುಗಂಬಗಳು ನಿಂತಿರುತ್ತವೆ. ಆ ಸದ್ದಿಗೆ ಹತ್ತಿರ ಹೋಗಲು ಭಯವಾಗುತ್ತಪ್ಪ, ಅದೇನೋ ವಿಚಿತ್ರವಾಗಿ ಸದ್ದು ತೆಗೆಯುವುದು. ಏನದು? ಹಲವು ಸಲ ಕುಂಜಳಿ ಆ ಕಂಬಗಳ ತೋರಿಸಿ ಪ್ರಶ್ನಿಸಿದ್ದಾಳೆ. ಅದರೆ ಅದು ತನಗೆ ಗೊತ್ತಿದ್ದರಲ್ಲವೇ? ಆದರೀಗ ಒಂದಂತೂ ಅರಿವಾಯ್ತು. ಹತ್ತಿರ ಹೋದರೆ ಪ್ರಾಣಕ್ಕೆ ಅಪಾಯ ಕಟ್ಟಿಟ್ಟದ್ದು ಎಂದು. ಕಾಕಮಾಮ ಕ್ಷಣದಲ್ಲೇ ಸೀದು ಹೋದ. + +ಪಾಂಜನಲ್ಲಿ ಒಮ್ಮೆಲೆ ತಳಮಳ ಆವರಿಸಿತು. ಕುಂಜಳಿ ಏನು ಮಾಡುತ್ತಿದ್ದಾಳೋ? ಮನೆಯಲ್ಲಿ ಈ ಮಳೆ ರಾದ್ಧಾಂತ ಎಬ್ಬಿಸಿದ್ರೇ ಹೇಗೆ? ಪಾಪ ಆಕೆಗೆ ಹುಷಾರಿಲ್ಲ. ಅವಸರಿಸಿತು ಪಾಂಜನ ಮನ. ಆದರೆ ಏನೂ ಸಿಗುತ್ತಿಲ್ಲ. ಬರಿಗೈಯಲ್ಲಿ ಮನೆಗೆ ಹೋಗಲು ಮನಸ್ಸಾಗಲಿಲ್ಲ. ಅತ್ತಇತ್ತ ಹಾರೇ ಹಾರಿದ ಪಾಂಜ. ಎದೆಯಲ್ಲಿ ಎಲ್ಲಿಂದಲೋ ವಿದ್ಯುತ್ ಶಾಕ್ ಕೊಟ್ಟಂತೆ, ಆಗಾಗ ಸೆಳೆತ ಕಾಡಿದಂತಾಯ್ತು. ಅಷ್ಟೇ ಅಲ್ಲೇ ಕುಸಿದ. ಯಾವ ಎಳೆತ ಹೀಗೆ ತನ್ನ ಜರ್ಜರಿತವಾಗಿಸುತ್ತಿದೆ ಎಂದೆನ್ನಿಸಿತು. ಏಳಬೇಕೆನ್ನಿಸಿದರೂ ಏಳಲಾಗುತ್ತಿಲ್ಲ. ಇನ್ನೊಮ್ಮೆ ಧೈರ್ಯ ಮಾಡಿ ಎದ್ದೆ ಬಿಟ್ಟ. ಬರಲು ಹೊತ್ತಾದರೆ ಪಾಪ ಕುಂಜಳಿ ಹೆದರಿಯಾಳು. ತನ್ನನ್ನು ಬಿಟ್ಟರೆ ಆಕೆಗ್ಯಾರಿಲ್ಲ. ಸಾವರಿಸಿಕೊಂಡ. ಧೈರ್ಯಮಾಡಿ ಹಾರಿದ. ಅಷ್ಟೇ ಅಲ್ಲೇ ಸ್ವಲ್ಪದೂರಕ್ಕೆ ಕಾರಗದ್ದೆಯ ಭತ್ತದ ತೆನೆಗಳು ತೂಯ್ದಾಡುತ್ತಿದ್ದವು. + +ಪಾಂಜ ತರಾತುರಿಯಲ್ಲಿ ಒಂದಿಷ್ಟು ಆಹಾರವನ್ನು ಗಬಗಬನೆ ಹೆಕ್ಕಿಕೊಂಡು ಮನೆಯತ್ತ ಧಾವಿಸತೊಡಗಿದ. ಆಕಾಶದ ಉದ್ದಗಕ್ಕೂ ಮುಕುರಿದ ಕರಿಮೋಡಗಳ ದಂಡು, ಭ್ರಾಂತಿಗೆ ಒಳಗಾದಂತೆ ಒಂದರ ಹಿಂದೊಂದು ಚಲಿಸತೊಡಗಿದ್ದವು. ಇನ್ನೇನು ಆಕಾಶವೇ ಹರಿದು ಭೂಮಿಯ ಮೇಲೆ ಬೀಳುತ್ತದೆಯೋ ಎಂಬಂತೆ ಪ್ರಳಯಕಾಲದ ಮಳೆ ಜಪ್ಪರಿಸಿ ಸುರಿವ ಸುಳಿವು ಕೊಡತೊಡಗಿದವು. ಪುರ.. ಪುರ್.. ಪುರ್.. ಹಕ್ಕಿಗಳ ದಂಡು ಧಾವಂತದಲ್ಲಿ ಗೂಡು ಸೇರುವ ತವಕದಲ್ಲಿತ್ತು. ಪಾಂಜ ಯೋಚಿಸುತ್ತಲೇ ಹಾರುತ್ತಿದ್ದ. + +**** + +ಪಶ್ಚಿಮ ಘಟ್ಟದಲ್ಲಿ ಮೈತುಂಬಿ ಹರಿಯುವ ಕಾಳಿ ನದಿ ಹೆಸರಿಗೆ ತಕ್ಕಂತೆ ಕಪ್ಪುಹೆಣ್ಣು. ಇಕ್ಕೆಲಗಳಲ್ಲಿ ಕಡು ಹಸಿರು ವನರಾಶಿ. ಆಗೆಲ್ಲ ಈ ಎರಡು ಕಾಲಿನವರು ಅದೇ ಮನುಷ್ಯರು ತಮ್ಮ ದನಕರುಗಳ ಜೊತೆಗೆ ನಮ್ಮೊಂದಿಗೆ ಬೆರೆತು ಬಾಳುತ್ತಿದ್ದರು. ಬರಿಗಾಲಿನಲ್ಲೇ ಇಲ್ಲ ಸಣ್ಣ ಪುಟ್ಟ ಗಾಡಿಗಳ ತರುತ್ತಿದ್ದರು. ಆ ಸಹಜೀವನ ಎಂತಹ ಸುಂದರವಾಗಿತ್ತು. ಕಾಡ ನಡುವಿನ ಆ ಗೂಡಲ್ಲಿ ಪಲ್ಲಕ್ಕಿ ತನ್ನ ಪುಟ್ಟ ಮರಿಗೆ ಉಣಿಸು ನೀಡುತ್ತಿದ್ದಳು. ಅಲ್ಲೆ ಸ್ವಲ್ಪದೂರ ಪರಮ ಸುಮ್ಮನೆ ಅಲ್ಲಿಇಲ್ಲಿ ಸುತ್ತುತ್ತ ಸಣ್ಣ ಹುಳಹುಪ್ಪಡಿಗಳ ತಂದು ಸುರುವುತ್ತಿದ್ದ. ಮಗು ಪಾಂಜ ಹೊಸ ಉತ್ಸಾಹದಲ್ಲಿ ಪುಟ ಪುಟ ನೆಗೆದು-ಜಿಗಿದು ಮೋಜಿನಲ್ಲಿ ಕುಪ್ಪಳಿಸುತ್ತಿತ್ತು. ಆಗೊಮ್ಮೆ ಈಗೊಮ್ಮೆ ತಂದೆಯ ಹಿಂದೆ ಹಾರುತ್ತ, ಮತ್ತೆ ಬೆದರಿ ತಾಯಿಯ ಬಳಿಗೋಡಿ ಬರುತ್ತಿದ್ದ. ಅಪೂರ್ವ ಜೀವನದ ಕಸುವನ್ನು ಹೊಂದಿದ ಬದುಕು. ಪಾಂಜ ನಿಧಾನಕ್ಕೆ ಬೆಳೆದು ದೊಡ್ಡವನಾಗುತ್ತ ಪ್ರಾಯದ ಹೊಸ್ತಿಲಲ್ಲಿದ್ದ. ಅದಾಗಲೇ ಬಣ್ಣಬಣ್ಣದ ಬಟ್ಟೆಗಳ ತೊಟ್ಟ ಮನುಷ್ಯರು, ಹೆಣ್ಣು ಗಂಡುಗಳು ಆಗಾಗ ಬಂದು ಕೇಕೆ ಹಾಕುವುದು, ಹುಚ್ಚಾಟ ಮಾಡುವುದು ಶುರುವಾಗಿತ್ತು. ಪ್ರಾಯದ ಪಾಂಜ ಅವರನ್ನು ಹೊಸ ಮೋಜಿನಿಂದಲೇ ನೋಡುತ್ತಿದ್ದ . ಆದರೆ ಪರಮ ವಿಷಾದ ಪಡುತ್ತಿದ್ದ. “ಓ.. ದೇವರೇ ಮುಂದೇನಾಗುವುದೋ? ಈ ಜನ ಇಲ್ಲಿಗೂ ಬಂದರು. ಇವರಿದ್ದಲ್ಲಿ ನದಿಯೂ ಬತ್ತುವುದು, ಹಸಿರೂ ಸಾಯುವುದು. ಏನೇನು ಅನುಭವಿಸಬೇಕೋ” ನಿಟ್ಟುಸಿರು ಹಾಕುವಾಗ ಪಾಂಜನಿಗೆ ಕೊಂಚ ಕೊಂಚ ಅರ್ಥವಾಗುತ್ತಿತ್ತು. ಅವರುಗಳು ಪ್ಲಾಸ್ಟಿಕ್ಕು ಪೊಟ್ಟಣಗಳಲ್ಲಿ ಏನೇನೋ ತಂದುತಿಂದು ಬಿಸಾಕಿ ಹೋಗುತ್ತಿದ್ದರು. ಅವುಗಳನ್ನು ತಿಂದ ಒಂದೆರಡು ದನಕರುಗಳು ನೆಟ್ಟಗೆ ಶಿವನ ಪಾದ ಸೇರಿದ್ದವು. ಆಮೇಲೆ ಪಾಂಜ ಅವರನ್ನು ಕಂಡರೆ ಬೆದರತೊಡಗಿದ. ಇವರು ನವನವೀನರು. ಹಾಲು ಹೈನು ಮಾಡುವ ಆ ಮನುಷ್ಯರಲ್ಲ ಎಂದುಕೊಂಡ. + +ಅದಾಗಿ ಸ್ವಲ್ಪೇ ದಿನಗಳಲ್ಲಿ ಮತ್ತೆ ದೊಡ್ಡದೊಡ್ಡ ವಾಹನಗಳ ಆರ್ಭಟ ಜೋರಾಗಿತ್ತು. ಇಚಲು ಮರದೆತ್ತರದ ಕಂಬಗಳು ಕಾಡಿನ ಮರಗಳ ಉರುಳಿಸಿ ನಡುನಡುವೆ ಎದ್ದು ನಿಂತವು. ಅವನ್ನು ನೆಡುವಾಗ ಅದೇನೋ ಸದ್ದು ಮಾಡುವ ಭಯಂಕರಾಕಾರದ ಯಂತ್ರಗಳು ಎದೆ ಜಲ್ಲೆನ್ನಿಸುವಂತೆ ಕರ್ಕಶವಾಗಿ ನುಡಿಯುತ್ತಿದ್ದವು. ಪಾಂಜ ಮತ್ತು ಪಲ್ಲಕ್ಕಿ ಪರಮ ಸ್ವಲ್ಪದಿನ ಮನೆ ಬಿಟ್ಟುದೂರದ ಒಳ ಕಾಡಿನಜಾಡು ಹಿಡಿದರು. ಅವರಂತೆ ಹಲವರು ಹಿಂದೆ ಬಂದರು. ಅದೊಂದು ದಿನ “ಆದರೆ ಎಷ್ಟು ದಿನವೆಂದು ಹೀಗೆ ಬದುಕುವುದು. ಈ ಮನುಷ್ಯರು ನಮ್ಮ ಗೂಡನ್ನು ಚಿಂದಿ ಉಡಾಯಿಸುವರು. ಅಲ್ಲಿಗೇ ಹೋಗೋಣ” ಪಲ್ಲಕ್ಕಿ ಧೈರ್ಯ ಮಾಡಿ ಎಲ್ಲರನ್ನೂ ಹೊರಡಿಸಿದಳು. ನಾಲ್ಕಾರು ದಿನಗಳಾಗಿದ್ದವು. ಪಾಂಜ ಗೆಳೆಯರೊಡನೆ ಹೊರ ಹೋಗಿದ್ದ. “ದೂರವೆಲ್ಲೂ ಹೋಗಬೇಡ“ ಪಲ್ಲಕ್ಕಿ ಮಗನಿಗೆ ಎಚ್ಚರಿಸಿದ್ದಳು. ಪರಮ ಪಲ್ಲಕ್ಕಿ ಅಲ್ಲೇ ಗೂಡ ಸಮೀಪವೇ ಮಾತಾಡುತ್ತ ಕಲ್ಲುಸಕ್ಕರೆಯಾಗಿದ್ದರು. ನೋಡನೋಡುತ್ತ ಅವರಿದ್ದ ಕಾಡಿನ ಸುತ್ತಲೂ ತರಗೆಲೆಗಳಿಗೆ ಬೆಂಕಿಹೊತ್ತಿಕೊಂಡಿತು. ಅದ್ಯಾರೋ ಮನುಷ್ಯರು ಸಿಗರೇಟಿನ ತುಂಡು ಬಿಸಾಡಿರಬೇಕು. ಬೇಸಿಗೆಯ ಆ ಧಗೆಗೆ ಕಾಳ್ಗಿಚ್ಚು ಕಾಡನ್ನೆ ಸುತ್ತಿಬಿಟ್ಟಿತು. ಪಾಂಜ ಹೊರ ನಿಂತು ಬೊಬ್ಬಿರಿಯತೊಡಗಿದ. ಅರಚತೊಡಗಿದ. ಆದರೆ ಅವರ ಗೂಡಿನ ಸುತ್ತಮುತ್ತ ಆವರಿಸಿದ ಬೆಂಕಿಗೆ ಕ್ಷಣಾರ್ಧದಲ್ಲಿ ಗೂಡಿನೊಟ್ಟಿಗೆ ಪರಮ, ಪಲ್ಲಕ್ಕಿಯರಿಬ್ಬರೂ ಭಸ್ಮವಾಗಿದ್ದರು. ತಾನೆಂದೂ ಮತ್ತೆ ಆ ಕಾಡಿನತ್ತ ಹೋಗಲೇಯಿಲ್ಲ. ಹೆತ್ತವರ ಬಲಿಪಡೆದ ಆ ಜನ ಆ ಕಾಡು, ಆತನ ನೆಮ್ಮದಿ ಕಸಿದಿದ್ದವು. ಮುಂದೆ ಪಾಂಜನಿಗೆ ಕುಂಜಳಿ ಮನದನ್ನೆಯಾಗಿ ಬಂದಿದ್ದಳು. ನೆನಪು ಪಾಂಜನ ಕಣ್ಣಂಚನ್ನು ಒದ್ದೆಯಾಗಿಸಿತು. ಹನಿ ಉದುರಿದವು. ಕಣ್ಣು ಮಂಜಾಯಿತು. ಅರೇ ಮನೆ ಬಂದೇ ಬಿಟ್ಟಿತು. ನಾನು ಅಳುವುದನ್ನು ಕುಂಜಳಿ ನೋಡಿದರೆ? ಬೇಡ.. ಸಮಾಧಾನ ಹೇಳಿಕೊಂಡ ಪಾಂಜ. ಕಣ್ಣೀರೊರೆಸಿ ಹೊಸ್ತಿಲ ಕಡೆ ನೋಡಿದರೆ ಈತನ ದಾರಿಕಾಯುತ್ತ ಕಾವು ಕೊಡುತ್ತ ಕಿಟಕಿಯಂಚಲ್ಲಿ ಮುಖವಿಕ್ಕಿದ ಕುಂಜಳಿ ಕಾಣಿಸಿದಳು. ಯಾವುದೋ ತೃಪ್ತಿ ಮನಸ್ಸಿಗೆ ಆವರಿಸಿತು. ಮೈ ಹುಷಾರಿಲ್ಲವೆಂದ ಕುಂಜಳಿ ಖುಷಿಯಲ್ಲಿದ್ದಳು. ಕಾವು ಕೊಟ್ಟು ಕೃಶವಾದಂತೆ ಕಂಡರೂ ಮುಖದಲ್ಲಿ ಕಳೆ ಹೆಚ್ಚಿತ್ತು. ಕೊಕ್ಕೆತ್ತಿ ಬಾಯಗಲಿಸಿದಳು ಕುಂಜಳಿ. ಪಾಂಜ ಸತಾಯಿಸಿದ. ಹುಸಿಮುನಿಸು ತೋರಿದ ಕುಂಜಳಿ ಮತ್ತೆ ಬಾಯಗಲಿಸಿ ನಿಂತಾಗ ಕಾಳು ಉಣಿಸಿದ ಪಾಂಜ. ಆಕೆಯನ್ನು ಮಗುವಿನಂತೆ ಪಾಲಿಸುತ್ತಿದ್ದವನು ಅವನಿ. ತಮ್ಮ ದಾಂಪತ್ಯ ಕ್ಷಣಕ್ಷಣದ ನವೀನತೆಗೊಂದು ಸಾಕ್ಷಿ ಎಂದುಕೊಂಡ. + +ಇಬ್ಬರೂ ಆ ದಿನವನ್ನು ನೆನೆದರು. ಇಂದಿನ ಹಾಗೆ ಅಂದು ಪಾಂಜ ಕಾಳು ಎತ್ತಿತಂದಿದ್ದ. ಕುಂಜಳಿ ಏನನ್ನೋ ಬಯಸುತ್ತಾ ವೈಯಾರ ತೋರುತ್ತಿದ್ದಳು. ಆಕೆ ಹಾಗೆ ನರ್ತಿಸುತ್ತಿದ್ದರೆ ಪಾಂಜ ಉನ್ಮಲಿತನಾದ. ಆಕೆಯ ಕಣ್ಣುಗಳ ಮಧುರಭಾವ ಅವನನ್ನು ಸೆಳೆಯತೊಡಗಿತು. ಆಕೆಯ ಬಾಯಲ್ಲಿ ಕಾಳು ಇಳಿಸಿ ತಾನು ಮೆದ್ದ. ನಿಧಾನಕ್ಕೆ ಆಕೆಯ ಕೊಕ್ಕಲ್ಲಿ ಕೊಕ್ಕು ತೂರಿದ. ಆಕೆ ರೋಮಾಂಚನಗೊಂಡಳು. ಮೃದುವಾಗಿ ಒತ್ತಿ ಮುದ್ದಿಸಿದ. ಆಕೆಯ ಪಕ್ಕೆಗಳು ಹರಹಿಕೊಂಡವು ವಿಸ್ತಾರವಾದವು ಬಯಕೆ ಬಿಚ್ಚಿತು. ಎದೆಬಡಿತ ಹೆಚ್ಚಿತು. ಕುಂಜಳಿ ಮತ್ತಷ್ಟು ತೆರೆದುಕೊಂಡಳು. ಉಲ್ಲಸಿತನಾದ ಪಾಂಜ ಆಕೆಯನ್ನಾಕ್ರಮಿಸಿದ. ಜಗತ್ತು ಮರೆತು ಹೋಗಿ, ಸುರತ ಸುಖ ಸ್ವರ್ಗದ ಅಮಲನ್ನೆ ಇಳಿಸಿತ್ತು. ಕುಂಜಳಿಯ ಮೈ ಹಿಗ್ಗಿತು. ಮೊಟ್ಟೆ ಇಟ್ಟಳು. + +“ನಿನಗೆ ನಾನೆಂದರೆ ಇಷ್ಟವೇ?” ಈಗಾತನ ಎದೆಗೊರಗಿ ಕೇಳಿದಳು ಕುಂಜಳಿ. ಪಾಂಜ ನಸುನಕ್ಕ. “ಯಾವ ಮಳೆ ಗಾಳಿಗೂ ನನ್ನ ನಿನ್ನ ದೂರ ಮಾಡಲಾಗದು.” ಎಂದ. ಮನಸ್ಸಿನಲ್ಲಿ ಮನುಷ್ಯರ ಆ ಚಿತ್ರಗಳು ಮೂಢಲಾರಂಬಿಸಿದವು. “ಮಕ್ಕಳು ಮರಿ ಮಾಡಿಕೊಂಡು ನೂರಾರು ವರ್ಷ ಹೀಗೆ ನಿನ್ನ ಜೊತೆಜೊತೆಯಾಗಿ ಇರಬೇಕು”. ಮುದ್ದಾಗಿ ಉಲಿದಳು ಕುಂಜಳಿ. ಪಾಂಜ ಏನೋ ಹೇಳುವವನಿದ್ದ. ಅಷ್ಟರಲ್ಲಿ…. ಅದೇ.!. ಅವರೇ.. ಬಂದೇ ಬಿಟ್ಟರು.! ಹುಯ್ಯ್ಲೆಬ್ಬಿಸುತ್ತಾ… ಅವರೇ.. ಅಯ್ಯೋ! ದೇವರೇ.. ಇನ್ನೇನು ಗತಿನೋ? ತಳಮಳಗೊಂಡ ಪಾಂಜ. ಅವರ ಕೈಯಲ್ಲಿ ಅದೇನೋ ಫೋಟೋ ತೆಗೆಯುವ ಕ್ಯಾಮರಾ ಅಂತೆ. ಮತ್ತೊಂದು ಮಗದೊಂದು ಅಂತೆ. ಕುಂಜಳಿ ಬೆದರಿದಳು. “ನಮ್ಮಚಿತ್ರವನ್ನುತೆಗೆದು ಪತ್ರಿಕೆಗಳಲ್ಲಿ ಹಾಕ್ತಾರಂತೆ ಇವರು. ಅದನ್ನು ಬೇರೆಜನ ಓದಿ ನೋಡಿ ಶಹಬ್ಬಾಸ್ ಗಿರಿ ಕೊಡ್ತಾರಂತೆ” ಸಣ್ಣದನಿಯಲ್ಲಿ ಪಾಂಜ ತನಗೆ ಗೊತ್ತಿದ್ದ ಸಂಗತಿ ಹೇಳಿದ. + +ಪೇತಲನಂತವನೊಬ್ಬ ಇವರಿದ್ದ ಗಿಡದ ಹತ್ತಿರ ಬಂದು ಸದ್ದುಗದ್ದಲವಾಗದಂತೆ ನಿಧಾನವಾಗಿ ಫೋಟೋ ಕ್ಲಿಕ್ಕಿಸಿಕೊಂಡ. “ಈ ಸಲ ಪೇಪರಿಗೆ ಗುಬ್ಬಿಗಳ ಬಗ್ಗೆ ಬರೀತಿಯೇನೋ?” ಸಣ್ಣ ಚಡ್ಡಿತೊಟ್ಟ ಅವನೊಂದಿಗಿದ್ದ ಪ್ರಾಯದ ಹುಡುಗಿ ಕೇಳಿದಳು. “ಹೌದು ಕಣೇ! ಅವಗಳ ಜೀವನಕ್ರಮ ಬಹಳೇ ಸ್ವಾರಸ್ಯ ಭರಿತ.” ಎಂದನಾತ. + +ಅವರೇನೇನೋ ಮಾತನಾಡುತ್ತಿದ್ದರು. ಚರ್ಚಿಸುತ್ತಿದ್ದರು. ಕುಂಜಳಿ ಪಾಂಜನ ಎದೆಗೊರಗಿ ಆ ಜನರತ್ತಲೇ ಬೆರಗಿನ ಕಣ್ಣುಗಳಿಂದ ನೋಡುತ್ತಲೇ ಇದ್ದಳು. ಅದೇಕ್ಷಣ ಆ ಹುಡುಗಿಯ ಕೈಲಿದ್ದ ಅದೇನೋ ವಸ್ತು ರಿಂಗಣಿಸತೊಡಗಿತು. ಮರುಕ್ಷಣ ಕುಂಜಳಿ ಬೆವರತೊಡಗಿದಳು. ಕೃಶವಾಗಿದ್ದ ಶರೀರ ಕಂಪಿಸಲಾರಂಭಿಸಿತು. ಆ ರಿಂಗುಣದ ತರಂಗಾಂತರಗಳು ಅಲೆಅಲೆಯಾಗಿ ಏರಿದಷ್ಟೂ ಆಕೆ ನಿತ್ರಾಣಗೊಳ್ಳತೊಡಗಿದಳು. ಆಹುಡುಗಿ ಅದ್ಯಾವುದೋ ಭಾಷೆಯಲ್ಲಿ ನುಲಿಯುತ್ತಾ ಮಾತನಾಡುತ್ತಿದ್ದರೆ, ಕುಂಜಳಿಯ ನರನರಗಳು ಜರ್ಜರಿತವಾಗತೊಡಗಿದವು. ಪಾಂಜನಿಗೂ ಕೂಡಾ ಅಸ್ವಸ್ಥತೆ ಕಾಡಿದಂತೆನ್ನಿಸಿತು. ಆ ಕಂಬಗಳ ಹತ್ತಿರ ಹೋದಾಗಲೆಲ್ಲಾ ತನಗೂ ಅಂತಹ ಅನುಭವ ಆದದ್ದು ಇತ್ತಲ್ಲ. ಈ ಕಾಡಿನ ನಡುನಡುವೆ ತಲೆಎತ್ತಿದ ಆ ಕಂಬಗಳು… ಎತ್ತರದ ಗೋಪುರಗಳು.. ಅದೆನನ್ನೋ ಮಾಟ ಮೋಡಿ ಶಕ್ತಿಯನ್ನು ನಮ್ಮ ಮೇಲೆ ಛೂ ಬಿಟ್ಟಿವೆ ಎಂದುಕೊಳ್ಳುತ್ತಿದ್ದ ಪಾಂಜ. ಈಗದು ಸತ್ಯವಾಗತೊಡಗಿತು. ಆ ತರಂಗಗಳು ಗಿರಕಿ ಹೊಡೆಯಲಾರಂಭಿಸಿದವು. ಕುಂಜಳಿಯ ಉಸಿರು ನಿಧಾನವಾಗಿ ಕುಸಿಯತೊಡಗಿತು.ಆ ಹುಡುಗಿ ಮೋಜಿನಲ್ಲಿ ಕುಲುಕಿ ಬಳುಕಿ ಪೋನಿನ ಸಂಭಾಷಣೆಯಲ್ಲಿದ್ದರೆ ಗೋಪುರದತುದಿಯಿಂದ ಹೊರಡುವ ಆ ತರಂಗಗಳು ಕುಂಜಳಿಯ ಉಸಿರನ್ನು ನಿಧಾನವಾಗಿ ಹೀರತೊಡಗಿದವು. ಪಾಂಜ ಉಮ್ಮಳಿಸಿದ. ಮೊಟ್ಟೆಗಳ ಕಡೆಗೊಮ್ಮೆ ನೋಡಿದ. ಕುಂಜಳಿ.. ಕುಂಜಳಿ… ಪ್ರಲಾಪಿಸಿದ. ಕಣ್ಣ್ತೆರೆಯುತ್ತಿಲ್ಲ ಕುಂಜಳಿ. ಕತ್ತು ನಿಧಾನವಾಗಿ ವಾಲತೊಡಗಿತು. ಆಕೆಯ ಮೈ ತಣ್ಣಗೆ ತಾಕಿದಂತಾಗಿ ಪಾಂಜ ಭಯವಿಹ್ಹಲಿತನಾದ. ಆಗಬಾರದ್ದು ಆಗೇ ಹೋಯಿತು. ಪಾಂಜ ಮೈ ಪರಚಿಕೊಂಡ. ಕುಂಜಳಿಯ ಕೊಕ್ಕಿಗೆ ತನ್ನ ಕೊಕ್ಕ ತೂರಲು ನೋಡಿದ. ಕತ್ತಿನ ಸುತ್ತ ಕೊಕ್ಕಿನಿಂದ ಮುದ್ದಿಸ ಹೋದ. ಮೋಹದ ಮಡದಿ ನುಡಿಗೊಡಲಿಲ್ಲ. ಕಣ್ಣರಳಿಸಲಿಲ್ಲ. + +ಹೆಜ್ಜೆಇಟ್ಟೆ ಬಿಟ್ಟಿತು ಕಾಳಿ ಕಣಿವೆಗೆ ಪ್ರವಾಸೋದ್ಯಮದ ಬೃಹತ್ಯೋಜನೆ. “ಕಾಳಿ ಕಯಾಕಿಂಗ್” ದೇಶವಿದೇಶದ ನೂರಾರು ಜನ ನಾಡಿಗೆ ಬೆಳಕು ನೀಡುವ ಕಾಳಿಯ ಒಡಲ ನೀರಲ್ಲಿ ಮಿಂದೇಳುವ ಸೌಭಾಗ್ಯ ನೆನೆದು ಹುರುಪುಗೊಂಡರು. ಹೊಟೆಲ್ಲು, ಅಂಗಡಿಕಾರರು, ರೆಸಾರ್ಟ್ ಮಾಲೀಕರು ಹಣದ ಹರಿವಿನ ಖುಷಿಯಲ್ಲಿ ಮುಳುಗೆದ್ದರು. ಬಣ್ಣ ಬಣ್ಣದ ಅಂಗಿಗಳ ತೊಟ್ಟ ಅವರುಗಳೆಲ್ಲ ಅಷ್ಟೇ ಬಣ್ಣದ ಕಯಾಕ್ ಗಳ ಮೇಲೆ ನೀರಲ್ಲಿ ಕಸರತ್ತು ಮಾಡುತ್ತ ಮಸ್ತಿಯಲ್ಲಿ ತೊಡಗಿದ್ದರೆ ಕಾಡಿನ ಜೀವಜಗತ್ತು ಸಣ್ಣಗೆ ನಡುಗುತ್ತಿತ್ತು. ಅಲ್ಲಲ್ಲಿ ಪೊದೆಗಳಲ್ಲಿ ಅವಿತುಕೂತು ಬೆರಗುಗಣ್ಣು ಬೆದರುಗಣ್ಣುಗಳಿಂದ ಭಯದ ಹೊದಿಕೆಯಡಿ ಸ್ತಬ್ಧವಾಗಿದ್ದವು.ಬಣ್ಣದ ಕಯಾಕ್ ಗಳು ಕಾಳಿಯ ಬೋರ್ಗೆರೆಯುವ ನೀರಿನಲ್ಲಿ ಹುಟ್ಟು ಹಾಕುತ್ತ ನೀರಧಾರೆಯ ಮೇಲೂ ಕೆಳಗೂ ಸಾಗುತ್ತಿದ್ದರೆ ಅಲ್ಲೊಂದು ಗಿಡದ ಮೇಲೆ ಕುಳಿತ ಏಕಾಂಗಿ ಮೂಕ ಗುಬ್ಬಿಯ ಕಣ್ಣೀರ ಹನಿ ನದಿನೀರಿನೊಂದಿಗೆ ಬೆರೆತು ಹೋಗುತ್ತಿತ್ತು. + +ನಾಗರೇಖಾ ಗಾಂವಕರ ದಾಂಡೇಲಿಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕಿ.‘ಏಣಿ’, ‘ಪದಗಳೊಂದಿಗೆ ನಾನು (ಕವನ ಸಂಕಲನಗಳು), ಪಾಶ್ಚಿಮಾತ್ಯ ಸಾಹಿತ್ಯ ಲೋಕ- (ಪರಿಚಯಾತ್ಮಕ ಲೇಖನಗಳ ಅಂಕಣ ಬರಹ) \ No newline at end of file diff --git a/Kenda Sampige/article_465.txt b/Kenda Sampige/article_465.txt new file mode 100644 index 0000000000000000000000000000000000000000..76b0c47554d7ef1a932b23eba28634f70f1851ed --- /dev/null +++ b/Kenda Sampige/article_465.txt @@ -0,0 +1,25 @@ + + + + +ದೊಡ್ಡ ಔಷಧದ ಅಂಗಡಿಯ ಮುಂದೆ ನೂಕುನುಗ್ಗುಲಾಗುವಷ್ಟು ಗದ್ದಲ. ಎಲ್ಲಿಂದಲೋ ಸರಸರ ಹೆಜ್ಜೆ ಹಾಕುತ್ತ ಬಂದ ಅವನಿಗೆ ಗದ್ದಲ ನೋಡಿ ಗಾಬರಿಯಾಯಿತು. ಅಲ್ಲಿ ನೆರೆದಿದ್ದ ಜನರನ್ನು ನೋಡಿ ‘ಇವತ್ತೇನು ಇಡೀ ಜಗತ್ತೇ ಅಸ್ವಸ್ಥವಾಗಿಬಿಟ್ಟಂತಿದೆ’ ಎಂದುಕೊಂಡ. ಹಿಂದೆಂದೂ ಇಷ್ಟು ಜನ ಸೇರಿರಲಿಲ್ಲ. ಎಲ್ಲರ ಕೈಯಲ್ಲೂ ಒಂದೊಂದು ಚೀಟಿಯಿದೆ. “ನನ್ನದು ಮೊದಲು, ನನ್ನದು ಮೊದಲು” ಅಂತ ಕೂಗಾಡುತ್ತಿದ್ದಾರೆ. ಅಂಗಡಿಯ ಹುಡುಗರು ಅವಸರ ಮಾಡುತ್ತ ಔಷಧ ಕೊಟ್ಟು ಕಳಿಸುತ್ತಿದ್ದಾರೆ. ತನ್ನ ಚೀಟಿಯನ್ನು ನೋಡಿಕೊಳ್ಳುತ್ತ ‘ಎಲ್ಲರ ಚೀಟಿಗಳನ್ನೂ ಇಸಿದುಕೊಳ್ಳಬೇಕು. ಅದರಿಂದ ಜಗತ್ತಿನಲ್ಲಿ ಇರುವ ನೋವನ್ನು ಲೆಕ್ಕ ಹಾಕಬಹುದು’ ಅಂತ ಯೋಚಿಸುತ್ತ ನಿಂತ. ಯಾರೋ ಭುಜ ಹಿಡಿದು ಅಲುಗಾಡಿಸಿದರು. ಗದ್ದಲದ ಕಡೆಯಿಂದ ಬಂದ ಅಮ್ಮ ‘ಬೇಗ ಹೋಗು ಮಗನೇ ಔಷಧಿಗಳು ಖಾಲಿ ಆದಾವು’ ಅಂತ ಜೋರಾಗಿ ಕೂಗಿ ಅವಸರದಿಂದ ನಡೆಯುತ್ತ ಎತ್ತಲೋ ಹೋದಳು. ಇವನು ಗದ್ದಲವನ್ನು ತಳ್ಳಿ ತಳ್ಳಿ ಭೇದಿಸಿಕೊಂಡು ಹೋಗಿ ಹುಡುಗನೊಬ್ಬನನ್ನು ಕರೆದ. ಹುಡುಗ ಬಂದು ಇವನ ಕೈಲಿದ್ದ ಚೀಟಿ ತೆಗೆದುಕೊಂಡು ಅದನ್ನು ಪರಿಶೀಲಿಸಿದ್ದೇ ಗಹಗಹಿಸಿ ನಗತೊಡಗಿದ. ಮತ್ಯಾವನೋ ಆ ಚೀಟಿಯನ್ನು ಕಸಿದುಕೊಂಡು ನೋಡಿ ನಗತೊಡಗಿದ. ಚೀಟಿಯನ್ನು ಒಬ್ಬರಿಗೊಬ್ಬರು ದಾಟಿಸುತ್ತ ನಗತೊಡಗಿದರು. ಇವನ ಕೈಗೆ ಆ ಚೀಟಿಯೇ ಸಿಗುತ್ತಿಲ್ಲ. ಎಲ್ಲರೂ ಅಂಗಡಿ ಉರುಳಿ ಬೀಳುವಂತೆ ನಗುತ್ತಿದ್ದಾರೆ. ಏನು ಬರೆದಿದೆ ಆ ಚೀಟಿಯಲ್ಲಿ? ಯಾಕಿಷ್ಟು ನಗುತ್ತಿದ್ದಾರೆ? ಬೇರೆ ಯಾವುದಾದರು ಚೀಟಿ ಕೊಟ್ಟುಬಿಟ್ಟೆನಾ? ಇಲ್ಲವಲ್ಲ. ಜೇಬಿನಲ್ಲಿ ಇದ್ದದ್ದೇ ಅದೊಂದು ಚೀಟಿ. ಏನಾಯ್ತು..? ಅವರ ನಗು ಕೇಕೆಯಾಗಿ ಮಾರ್ಪಟ್ಟು ತಲೆ ಚಿಟ್ಟು ಹಿಡಿಸುತ್ತಿದೆ… ಎರಡೂ ಕಿವಿಗಳಿಗೆ ಕೈಗಳನ್ನು ಗಟ್ಟಿಯಾಗಿ ಒತ್ತಿಕೊಂಡು ಕಣ್ಣು ಮುಚ್ಚಿದ. + +ಕಣ್ಣು ತೆರೆದವನಿಗೆ ಪಕ್ಕದಲ್ಲಿ ಹಸಿರು ಮಿಣುಕು ಹುಳು ಮಲಗಿರುವುದು ಕಂಡು ಅಸಾಧ್ಯ ಸಿಟ್ಟು ಬಂದಿತು. ಅದನ್ನು ಅಮುಕಿ ಸಾಯಿಸಲು ನೋಡಿದ. ಫೋನ್ ಕೈಗೆ ಸಿಕ್ಕಿತು. ಲಾಕ್ ತೆಗೆದು ನೋಡಿದ. ಏರ್‌ ಟೆಲ್ ನವರು ಏನೋ ಆಫರ್ ಮಾಡಿ ಮೆಸೇಜ್ ಮಾಡಿದ್ದರು. ಸಮಯ ನೋಡಿದ. ಒಂದು ನಲವತ್ಮೂರು. ಡಾಟಾ ಆನ್ ಮಾಡಿದ. ಒಂದಷ್ಟು ವಾಟ್ಸಾಪ್ ಮೆಸೇಜುಗಳು ಜುಳುಜುಳು ಮಾಡಿದುವು. ಮಲಗಿ ಮೂರು ತಾಸುಗಳೂ ಆಗಿಲ್ಲವೆಂದು ನೆನಪಾಯಿತು. ಡಾಟಾ ಆಫ್ ಮಾಡಿ, ಫೋನ್‌ ಲಾಕ್ ಮಾಡಿ ಮುಸುಕೆಳೆದುಕೊಂಡ. ನಿದ್ದೆ ಹತ್ತಲಿಲ್ಲ. ಕನಸು ನೆನಪಾಯಿತು. ಅರೆ ಏನಿತ್ತು ಆ ಚೀಟಿಯಲ್ಲಿ?! ಅದು ಗೊತ್ತಾಗುವವರೆಗಾದರೂ ಕನಸು ಮುಂದುವರಿಯಬೇಕಿತ್ತು.. ಅದೇ ಕನಸು ಈಗ ಮುಂದುವರಿಯಲಿ… ಎಂದುಕೊಳ್ಳುತ್ತ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು ನಿದ್ದೆ ತಂದುಕೊಳ್ಳಲು ಪ್ರಯತ್ನಿಸಿದ. ಮಿಣುಕು ಹುಳು ಬಂದು ತಲೆತುಂಬ ಗುಯ್‌ ಗುಡತೊಡಗಿತು. ಎದ್ದು ಕುಳಿತ. ಫೋನ್ ಲಾಕ್ ತೆಗೆದ. ಮುಂದೇನು ಮಾಡಬೇಕು ಗೊತ್ತಾಗಲಿಲ್ಲ. ಫೋನ್‌ಲಾಕ್ ಮಾಡಿದ. ತೆಗೆದ. ಲಾಕ್ ಮಾಡಿದ… ಐಕಾನ್‌ಗಳನ್ನು ಅತ್ತಿ೦ದಿತ್ತ ಸರಿಸಾಡಿದ. ಮತ್ತೆ ಲಾಕ್ ಮಾಡುವುದು, ತೆಗೆಯುವುದು ಮಾಡತೊಡಗಿದ. ಸಮಾಧಾನವಾಗಲಿಲ್ಲ. “ನೋವೇ ನನ್ನ ಮೇಲೆ ನಿನಗೇಕಿಷ್ಟು ಪ್ರೀತಿ?” ಎಂದು ಸ್ಟೇಟಸ್ ಹಾಕಿದ. ಡಿಪಿಯ ಫೋಟೋ ರಿಮೂವ್ ಮಾಡಿದ. ಇಯರ್ ಫೋನ್ ಕಿವಿಗಿಟ್ಟುಕೊಂಡು ಜೋರಾಗಿ ಹಾಡು ಹಚ್ಚಿಕೊಂಡ. ‘ನೀಲನಭಕೆ ನೂಲ ಏಣಿ… ಕಣ್ಣಂಚಲಿ ಬಿಗಿದೆಯಾ…’ ಕಣ್ಮುಚ್ಚಿ ಕುಳಿತುಕೊಂಡ. ಯಾವುದೋ ನದಿಯಲ್ಲಿ ಕುಳಿತುಕೊಂಡಿರುವಂತೆ, ತನ್ನೆದೆಯೊಳಗೂ ಒಂದು ನದಿ ಹಿಮಗಟ್ಟಿರುವಂತೆ ಎದೆಯಲ್ಲೇನೋ ಮಣಭಾರ.. ಪಾಪೆಗಳು ದಿಕ್ಕೆಟ್ಟವರಂತೆ ಅಲ್ಲಲ್ಲೇ ಸರಿದಾಡುತ್ತಿದ್ದವು. ತಲೆ ತುಂಬ ಮಿಣುಕು ಹುಳು ಅಸಾಧ್ಯ ಗದ್ದಲ ನಡೆಸಿತ್ತು. ಎದೆ ಭಾರವಾಗುತ್ತಲೇ ಇತ್ತು. + +ಎಷ್ಟೋ ಹೊತ್ತು ಕಳೆದ ಮೇಲೆ ಕಣ್ಣೀರು ತಂದುಕೊಳ್ಳುವಲ್ಲಿ ಸಫಲನಾದ. ಸಮಾಧಾನವಾಯಿತು. ನೀರ್ಗಲ್ಲು ಕರಗಿ ಮನಸು ಹಗುರವಾಯಿತು.. ವಾಟ್ಸಾಪ್ ತೆಗೆದು ಹೈಸ್ಕೂಲ್ ಫ್ರೆಂಡ್‌ ಗಳ ಗ್ರೂಪಿನಲ್ಲಿ ಬಂದು ಬಿದ್ದಿದ್ದ ಜೋಕೊಂದನ್ನು ನೋಡಿದ. ನಗು ಬಂತು. ಆ ಜೋಕು ಕಳಿಸಿದ ಶರಣನಿಗೆ ಫೋನು ಮಾಡಬೇಕು ಅಂದುಕೊಳ್ತಾನೇ ಇದ್ದಾನೆ. ಆದರೆ ಆಗುತ್ತಿಲ್ಲ. ಯಾಕೋ ಯಾರನ್ನೂ ಮಾತನಾಡಿಸುವ ಮನಸಿಲ್ಲ.. ಡಿಪಿಗೆ ತನ್ನದೊಂದು ನಗುತ್ತಿರುವ ಚಿತ್ರ ಹಾಕಿದ. ಮೊದಲಿನ ಸ್ಟೇಟಸ್ ತೆಗೆದು ನಗುವ ಬೊಂಬೆಯೊಂದನ್ನಿಟ್ಟ. ಮತ್ತೆ ಸ್ಟೇಟಸ್ ಬದಲಾಯಿಸಬೇಕು ಅನ್ನಿಸಿತು. ನಗುವ ಬೊಂಬೆ ಬೇಡ, ಅಳುವುದನ್ನಿಡಬೇಕು ಎಂಬ ಹಂಬಲ ಹೆಚ್ಚಾಯಿತು. ಹಾಗೇ ಮಾಡಿದ. ಮತ್ತೇನೇನೋ ಯೋಚನೆ ಬಂದು ಡಿಪಿ ಮತ್ತು ಸ್ಟೇಟಸ್ ಎರಡನ್ನೂ ಖಾಲಿ ಇಟ್ಟು ಫೋನ್‌ ಲಾಕ್ ಮಾಡಿಟ್ಟ. ಅಮ್ಮಾ… ಎಂದು ನಿಟ್ಟುಸಿರುಬಿಟ್ಟು ಕಣ್ಣುಮುಚ್ಚಿದರೆ “ಏನಿತ್ತು ಆ ಚೀಟಿಯಲ್ಲಿ?” ಎಂಬ ಪ್ರಶ್ನೆ ಮತ್ತೆ ಎದ್ದು ಬಂದಿತು. ಹಲ್ಲುಕಚ್ಚಿಕೊಂಡು “ಥೂ ನನ್ ಕರ್ಮ” ಎಂದು ಶಪಿಸಿ ಮೇಲಕ್ಕೆದ್ದು ಟಾಯ್ಲೆಟ್ ಕಡೆ ನಡೆದ. + +ಮಿಣುಕು ಹುಳುವಿನ ಉಪಟಳ ಹೊಸತೇನಲ್ಲ. ಮೊದಮೊದಲಿಗೆ ಆಗೀಗ ಕಾಣಿಸಿಕೊಂಡು ಹೈರಾಣು ಮಾಡುತ್ತಿದ್ದ ಅದು ಈಗೀಗ ಅವನನ್ನ ಬೆಂಬಿಡದೆ ಹಿಂಬಾಲಿಸುತ್ತಿದೆ. ಚೂರು ಒಂಟಿಯಾದರೂ ಸಾಕು ಗುಯ್ ಗುಯ್ ಅಂತ ಬಂದೇ ಬಿಡುತ್ತದೆ. ಸಾಸಿವೆ ಕಾಳಷ್ಟು ಬೆಳಕಾಗಿ ಹುಟ್ಟಿದ್ದುದು ದೊಡ್ಡ ರಾಕ್ಷಸನಾಗಿ ಬೆಳೆದುಕೊಂಡು ಅವನನ್ನು ಕಿತ್ತು ಕಿತ್ತು ತಿನ್ನತೊಡಗುತ್ತದೆ. ಆಗೆಲ್ಲಾ ಬದುಕು ಎಷ್ಟು ಕಷ್ಟ! ಬೆಳಗ್ಗೆ ಆಫೀಸಿಗೆ ಹೋಗುವಾಗ ಮತ್ತು ರಾತ್ರಿ ವಾಪಸ್ ಬರುವಾಗ ಮೆಟ್ರೋದಲ್ಲಿನ ಗದ್ದಲದಲ್ಲೂ ಆಗಾಗ ಕೆಲವು ಜನರ ತಲೆಯ ಮೇಲೆ ಒಂದೊಂದು ಮಿಣುಕು ಹುಳುಗಳು ಹಾರಾಡುವುದನ್ನು ನೋಡಿದ್ದಾನವನು. ಅಂಥವರು ಆಗೀಗ ಈ ಶಹರದಲ್ಲಿ ಕಣ್ಣಿಗೆ ಬೀಳುತ್ತಲೇ ಇರುತ್ತಾರೆ. ಅವರೊಂದಿಗೆ ಈ ಕುರಿತು ಮಾತಾಡಬೇಕು ಎಂದುಕೊಳ್ಳುತ್ತಾನೆ. ಆದರೆ ನನಗೆ ಕಾಣುತ್ತಿರುವುದೆಲ್ಲ ಭ್ರಮೆಯಿರಬಹುದು, ನಾನು ಹೇಳುವುದನ್ನು ಕೇಳಿದರೆ ಅವರು ನನ್ನ ಹುಚ್ಚ ಎಂದುಕೊಳ್ಳಬಹುದು ಎಂದು ಯೋಚಿಸಿ ಸುಮ್ಮನಾಗುತ್ತಾನೆ. ಆಗೆಲ್ಲಾ ಅವನು ಸಾಧ್ಯವಾದರೆ ಅವರೊಂದಿಗೆ ಮಾತಿಗೆ ಶುರುವಿಟ್ಟುಕೊಳ್ಳುತ್ತಾನೆ. ಆಗ ಅಂಥವರ ತಲೆಮೇಲಿನ ಮಿಣುಕು ಹುಳುವೂ, ತನ್ನ ಜೀವ ತಿನ್ನುತ್ತಿರುವ ಮಿಣುಕು ಹುಳುವೂ ಮಾಯವಾಗುತ್ತವೆ. ಆದರೆ ಆ ಸಮಾಧಾನ ಜಾಸ್ತಿ ಸಮಯ ಉಳಿದಿದ್ದೇ ಇಲ್ಲ. ಇತ್ತೀಚಿಗೆ ಅವನೊಂದು ಹೊಸ ಉಪಾಯ ಕಂಡುಕೊಂಡಿದ್ದಾನೆ. ಮಿಣುಕು ಹುಳು ಬರುವ ಸೂಚನೆ ಕಂಡಿದ್ದೇ ಸಾಕು ಮೊಬೈಲ್ ತೆಗೆದು “ಜಸದಹದಹದಹಜಸಸಗಕಲಕಲ” ಅಂತ ಮನಸಿಗೆ ಬಂದಂತೆ ಟೈಪ್ ಮಾಡಲು ಶುರುವಿಟ್ಟುಕೊಳ್ಳುತ್ತಾನೆ. ಆಗ ಮಿಣುಕು ಹುಳು ಇಷ್ಟಿಷ್ಟೇ ಸಣ್ಣದಾಗುತ್ತ ಮಾಯವಾಗಿಬಿಡುತ್ತದೆ. + +ಒಂದೆರಡು ವಾರದ ಹಿಂದೆ, ಮೆಟ್ರೊದಲ್ಲಿ ಕಂಡ ತನ್ನಂಥ ಮಿಣುಕುಹುಳುವಿನ ಗಿರಾಕಿಗೆ ಈ ತನ್ನ ಹೊಸ ಐಡಿಯಾವನ್ನು ಹೇಳಲೇಬೇಕು, ಆದದ್ದಾಗಲಿ ಎನ್ನಿಸಿತು. ಆಫೀಸಿಗೆ ತಡವಾದರೂ ಚಿಂತೆಯಿಲ್ಲ ಎಂದುಕೊಂಡು ಆ ಮನುಷ್ಯನನ್ನು ಹಿಂಬಾಲಿಸಿದ. ಆ ಮನುಷ್ಯ ಒಂದು ಗೂಡಂಗಡಿಯ ಮುಂದೆ ನಿಂತು ಸಿಗರೇಟ್, ಚಹಾ ತೆಗೆದುಕೊಂಡು ಹೊಗೆಯುಗುಳುತ್ತ ನಿಂತ. ಇವನೂ ಒಂದು ಚಹಾ ತೆಗೆದುಕೊಂಡು ಅವನತ್ತ ಮುಗುಳ್ನಗೆ ಬೀರಿ “ಇವತ್ತು ತುಂಬ ಛಳಿ ಅಲ್ವಾ?” ಅಂತ ಪೀಠಿಕೆ ಹಾಕಿದ. ಅದೂ ಇದು ಮಾತಾಡುತ್ತ ಅವನನ್ನು ಮಾತಿನ ಲಹರಿಗೆ ತಂದ. ಅವನ ಸಿಗರೇಟು ಮುಗಿಯಲಿಕ್ಕೆ ಬಂದದ್ದೇ ತನ್ನ ಉಪಾಯ ಹೇಳಿಬಿಡಬೇಕೆಂಬ ಆತುರವಾಯಿತು. ಮೆಲ್ಲಗೆ ಪಿಸುಮಾತಿನಲ್ಲಿ ಆ ಮನುಷ್ಯನಿಗೆ, “ನಿಮಗೂ ಮಿಣುಕು ಹುಳದ ಕಾಟವಾ?” ಎಂದು ಕೇಳಿದ. ಆ ಮನುಷ್ಯ, “ಹ್ಞಾ? ಮಿನರ್ವ ಸರ್ಕಲ್ಲಾ?” ಎಂದು ಪ್ರಶ್ನಿಸಿದ. ಇವನು “ಮಿಣುಕು ಹುಳಾ ರೀ… ಫೈರ್‌ ಫ್ಲೈ… ಮೆಟ್ರೊದಲ್ಲಿದ್ದಾಗ ನಿಮ್ ತಲೆ ಸುತ್ತ ಸುತ್ತಿರ್ಲಿಲ್ವಾ?” ಎಂದು ಕೇಳಿದಾಗ ಆ ಮನುಷ್ಯ ಯಾಕೋ ಸುಮ್ಮನಾದ. ಏನೋ ಯೋಚನೆಗೆ ಬಿದ್ದವನಂತೆ ಕಂಡ. ಆಮೇಲೆ ಬಿಲ್ ಕೊಟ್ಟು ಬರುವಾಗ ಮೆಲ್ಲಗೆ ಗುಟ್ಟಿನಲ್ಲಿ ಎಂಬಂತೆ “ಅದು ಮಿಣುಕು ಹುಳ ಅಲ್ಲಾ ರೀ… ಗಿಣಿಮರಿ ಅದು” ಎಂದಾಗ ಇವನಿಗೆ ಆಶ್ಚರ್ಯವಾಯಿತು. ಇವನು, “ದಿನಾಲು ಬಂದು ಕಾಡ್ತದಾ ಅದು?” ಎಂದು ಪ್ರಶ್ನಿಸಿದ. ಆ ಮನುಷ್ಯ, “ಹೌದು ರೀ.. ದಿನಾಲೂ ಇದ್ದದ್ದೇ ಇದರ ಕಾಟ. ಅದು ಬಂದಾಗ್ಲೆಲ್ಲ ನಾನು ಸ್ಮೋಕ್ ಮಾಡೋಕ್ ಶುರು ಮಾಡ್ತೇನೆ. ಸಿಗರೇಟ್ ಹೋಗೇಗೇನೋ ಅದು ಮಾಯವಾಗಿಬಿಡತ್ತೆ” ಎಂದು ನಕ್ಕ. ಇವನಿಗೆ ತನಗಿಂತಲೂ ವಿಚಿತ್ರವಾಗಿ ಇದ್ದಾನಲ್ಲ ಈ ಮನುಷ್ಯ ಎನ್ನಿಸಿತು. “ಅಂದ್ಹಾಗೆ ಈ ವಿಷ್ಯ ಯಾರಿಗೂ ಹೇಳ್ಬೇಡಿ. ಪ್ಲೀಸ್… ನನ್ ಹೆಂಡ್ತಿಗೂ ಗೊತ್ತಿಲ್ಲ ಈ ಗಿಣಿಮರಿ ವಿಷ್ಯ…” ಎಂದನವನು. ಇವನು, “ಇಲ್ಲ ಇಲ್ಲ” ಎಂದು ಭರವಸೆ ಕೊಟ್ಟ. ಅದಕ್ಕವನು ಒಂದು ಥ್ಯಾಂಕ್ಸ್ ಕೂಡ ಹೇಳದೆ, ಮುಂದೆ ಬಂದ ಆಟೋವೊಂದನ್ನು ಏರಿ ಹೊರಟುಹೋದ. ಇವನಿಗೊಂದು ಬಾಯ್ ಕೂಡ ಹೇಳಲಿಲ್ಲ. ಅವನ ಮುಖವೂ ಜ್ಞಾಪಕ ಬರಲಿಲ್ಲ. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಇವನಿಗೆ ಇಷ್ಟರವರೆಗೆ ನಡೆದದ್ದು ಕನಸೋ, ಇಲ್ಲಾ ತನ್ನ ಭ್ರಮೆಯೇ ಆಗಿರಬೇಕು ಎನ್ನಿಸುವಷ್ಟು ಕ್ಷಿಪ್ರವಾಗಿ ಈ ಘಟನೆಗಳು ನಡೆದುಹೋದವು. ಅಯ್ಯೋ ನಾನವನಿಗೆ ನನ್ನ ಹೊಸ ಐಡಿಯಾ ಹೇಳಲಿಲ್ಲ ಎಂದು ಗಿಣಿಮರಿ ಕೇಸ್ ಹೋದ ದಾರಿಯನ್ನೇ ನೋಡುತ್ತ ನಿಂತ.ಆಫೀಸಲ್ಲಿದ್ದ. ಇವತ್ತೇನು ಅಷ್ಟೊಂದು ಕೆಲಸಗಳಿರಲಿಲ್ಲ. ಇದ್ದ ಚೂರುಪಾರು ಕೆಲಸ ಮುಗಿಸಿ ಖಾಲಿ ಆಗಿದ್ದ. ಖಾಲಿಯಾಗಿಬಿಟ್ಟರೆ ಭಯ ಶುರುವಾಗುತ್ತದೆ ಅವನಿಗೆ. ಮಿಣುಕು ಹುಳು ಬಂದುಬಿಡುತ್ತದೆಂಬ ಭಯ. ಮಿಣುಕು ಹುಳು ಬಂದು ಸಣ್ಣಗೆ ಮಿಂಚಿತಾದರೂ ಬೆಳೆವ ಸೂಚನೆಗಳು ಕಾಣುವ ಮೊದಲೇ ಎದ್ದು ಕ್ಯಾಂಟೀನಿಗೆ ಬಂದು ಟೀ ಹೀರತೊಡಗಿದ. ಅಲ್ಲೂ ಬಿಡಲಿಲ್ಲ. ಇವನು ಮಗ್ನನಾಗಿ ಚಹಾ ಹೀರುತ್ತಿರಬೇಕಾದರೆ ಬಂದ ಮಿಣುಕು ಹುಳು ಚಹಾ ಕಪ್‌ ನ ಸುತ್ತ ತಿರುಗತೊಡಗಿತು. ಅದರೊಳಗೆ ಬಿದ್ದೇ ಬಿಡುವಷ್ಟು ಹತ್ತಿರದಲ್ಲಿ ಹಾರಾಡತೊಡಗಿತು. ಅವನಿಗೆ ಕೈಲಿದ್ದ ಟೀ ಕಪ್‌ ಅನ್ನು ತಲೆಗೆ ಚಚ್ಚಿಕೊಳ್ಳಬೇಕು ಎನ್ನಿಸಿತು. ಹಲ್ಲುಕಚ್ಚಿಕೊಂಡು ಟೀ ಅಲ್ಲೆ ಇಟ್ಟು ಸಹೋದ್ಯೋಗಿ ಸ್ನೇಹಿತ ಕೂತಿರುವಲ್ಲಿಗೆ ಹೋಗಿ ನಗುತ್ತ ಮಾತಾಡತೊಡಗಿದ. ಏನೇನೋ ಅಸಂಬದ್ಧವಾಗಿ ಹರಟತೊಡಗಿದ. ಸ್ವಲ್ಪ ಸಮಯದಲ್ಲಿ ಮಿಣುಕುಹುಳು ಮೆಲ್ಲಗೆ ದೂರವಾಯಿತು. ವಾಪಾಸು ಬಂದು ತನ್ನ ಕಂಪ್ಯೂಟರ್ ಹತ್ತಿರ ಕುಳಿತ ತಕ್ಷಣ ಮತ್ತೆ ಬಂದು ತಲೆ ತಿನ್ನತೊಡಗಿತು. ಫೋನ್ ತೆಗೆದು ಅದರಲ್ಲಿ “ಜಸದಹದಹದಹಜಸಸಗಕಲಕಲ” ಅಂತ ಟೈಪ್ ಮಾಡತೊಡಗಿದ. ಬೆರಳಿಗೆ ಸಾಕಾಗುವವರೆಗೂ ಹಂಗೇ ಮಾಡಿದ. ಅಷ್ಟೊತ್ತಿಗೆ ಮಿಣುಕು ಹುಳು ಎಲ್ಲಿಗೋ ಓಡಿ ಹೋಗಿತ್ತು. ಅದೇ ಖುಷಿಯಲ್ಲಿ ಗಡದ್ದಾಗಿ ಬಿರಿಯಾನಿ ತಿಂದು ಮಲಗಿದ. ನಿದ್ದೆಯೂ ಬಂತು. + +ಯಾರನ್ನೋ ಅಟ್ಟಿಸಿಕೊಂಡು ಓಡುತ್ತಿದ್ದಾನೆ? ಅವರ ಕೈಲೊಂದು ಚೀಟಿ. ಓಡುತ್ತಿರುವವರು ದಾರಿಯಲ್ಲಿ ಸಿಕ್ಕ ಮತ್ಯಾರಿಗೋ ಆ ಚೀಟಿ ಕೊಟ್ಟು ಓಡಿ ಹೋದರು. ಅವರು ಅದರೊಳಗೆ ಬರೆದದ್ದನ್ನು ನೋಡಿ ನಗತೊಡಗಿದರು. ಇವನಿಗೆ ಅಸಾಧ್ಯ ಸಿಟ್ಟು. ಅವರೂ ಓಡತೊಗಿದರು. ಇವನ ಕೈಗೆ ಸಿಗುತ್ತಿಲ್ಲ. ದಾರಿಯಲ್ಲಿ ಸಿಕ್ಕ ಕಲ್ಲೊಂದನ್ನು ತೆಗೆದು ಅವರ ತಲೆಗೆ ಗುರಿ ಮಾಡಿ ಬೀಸಿದ. ಪುಣ್ಯಕ್ಕೆ ಗುರಿತಪ್ಪಿತು. ಹೆದರಿ ನಿಂತವರು ಚೀಟಿಯನ್ನು ಇವನ ಕೈಗಿತ್ತು ಹೋದರು. ಇವನಿಗೋ ಅದರೊಳಗಿರುವುದನ್ನು ಆದಷ್ಟು ಬೇಗ ನೋಡಬೇಕೆಂಬ ಆತುರ. ಅಮ್ಮಾ! ಅಂತೂ ಸಿಕ್ಕಿತು! ಎಂದು ಚೀಟಿ ಬಿಡಿಸತೊಡಗಿದ. + +ಎಚ್ಚರವಾಯಿತು. ಮುಖ ಹಸಿ ಹಸಿಯಾಗಿತ್ತು. ಹಸಿರು ಮಿಣುಕು ಹುಳು ಪಕ್ಕದಲ್ಲೇ ಮಲಗಿತ್ತು. ಇದನ್ನಿವತ್ತು ಸಾಯಿಸದೆ ಬಿಡಬಾರದೆಂಬಷ್ಟು ರೊಚ್ಚಾಯಿತು. ಕೈಯಿಂದ ಟಪ್ ಎಂದು ಬಡಿದ. ಹೊಸಕಿ ಹಾಕಲು ನೋಡಿದ. ಸಾಯಲಿಲ್ಲ ಅದು. ಮಿಣುಕುತ್ತ ದೊಡ್ಡದಾಗತೊಡಗಿತು. ಅದು ಬೆಳೆದು ರಾಕ್ಷಸಿಯಾಗಿ ತನ್ನನ್ನು ಕಿತ್ತು ತಿನ್ನುವುದರೊಳಗೆ ಕೊಲ್ಲಬೇಕೆಂದು ನಿರ್ಧರಿಸಿದ. ಅದನ್ನೆತ್ತಿ ಗೋಡೆಗೆಸೆದ. ಫೋನು ಮೂರು ಹೋಳಾಯಿತು. ಮಿಣುಕು ಹುಳು ಬೆಳೆಯುತ್ತಲೇ ಇತ್ತು. ಅಡುಗೆ ಮನೆಗೆ ಹೋಗಿ ಚಾಕು ತೆಗೆದುಕೊಂಡ. ಮೊಂಡ ಇದೆ ಚಾಕು ಅನ್ನಿಸಿತು. ಗೊಡೆಗೆ ಉಜ್ಜತೊಡಗಿದ. ಮಿಣುಕು ಹುಳು ಬೆಳೆಯುತ್ತಲೇ ಇತ್ತು. ಇನ್ನೇನು ರಾಕ್ಷಸಿಯಾಗಿ ತನಗೆ ಬಾಯಿ ಹಾಕುತ್ತದೆ ಎನ್ನುವಾಗ ಚಾಕುವಿನಿಂದ ಚುಚ್ಚತೊಡಗಿದ. ಮಿಂಚು ಹುಳು ಸುಮ್ಮನೆ ಚುಚ್ಚಿಸಿಕೊಳ್ಳುತ್ತ ನಿಂತಿತ್ತು. + +ಬೆಳಗಾಗುವಷ್ಟರಲ್ಲಿ ರಕ್ತ ಬಡ್ ರೂಮ್ ದಾಟಿ ಹಾಲ್‌ ನ ಕಾಲೊರಸನ್ನು ಪೂರ್ತಿ ಒದ್ದೆ ಮಾಡಿ ಹೊಸ್ತಿಲು ದಾಟಿ ಅಲ್ಲೇ ಮಲಗಿದ್ದ ನಾಯಿಮರಿಯ ಮೈಗೆ ತಾಗಿ ಅದನ್ನು ಎಚ್ಚರಿತು. ರಾತ್ರಿಯ ಹಸಿವನ್ನೆಲ್ಲ ಈಗಲೇ ತೀರಿಸಿಕೊಳ್ಳುವಂತೆ ನಾಯಿಮರಿ ಆ ರಕ್ತವನ್ನು ನೆಕ್ಕತೊಡಗಿತು. ಒಂದೆರಡು ಗುಟುಕಷ್ಟೇ ಬಿದ್ದಿರಬೇಕು ಹೊಟ್ಟೆಗೆ, ಅಷ್ಟರಲ್ಲಿ ಏನೋ ಗುಯ್ ಗುಯ್ ಸದ್ದು ನಾಯಿಯ ಕಿವಿ ತುಂಬಿ ಅದರ ತಲೆಚಿಟ್ಟು ಹಿಡಿಯತೊಡಗಿತು. ಮಿಣುಕು ಹುಳು ಅದರ ಕಣ್ಣ ಸುತ್ತ ಸುಳಿ ಸುಳಿ ಸುತ್ತುತ್ತ ಹುಚ್ಚೆಬ್ಬಿಸತೊಡಗಿತು. ನಾಯಿಮರಿ ಕೆಂಡದ ಮೇಲೆ ಕಾಲಿಟ್ಟಂತೆ ಅಲ್ಲಿಂದ ಓಡತೊಡಗಿತು. ಎಲ್ಲಿಯೂ ನಿಲ್ಲದೆ ಓಡತೊಡಗಿತು. ಓಡುತ್ತ ಓಡುತ್ತ ಕಾಲಿಗೆ ಯಾವುದೋ ನಿಲ್ಲದ ಆವೇಗ ಬಂದುಬಿಟ್ಟಿತು. ಈ ಶಹರದ ಬಸ್ಸುಗಳಿಗಿಂತ, ಮೆಟ್ರೋಗಿಂತ, ಕಾರು, ಮೋಟಾರುಗಳಿಂತ ವೇಗವಾಗಿ ನಾಯಿಮರಿ ಓಡತೊಡಗಿತು, ಓಡಿದಷ್ಟೂ ಅದರ ಆವೇಗ ಹೆಚ್ಚತೊಡಗಿತು. + +ಮಂಜುನಾಯಕ ಮೂಲತಃ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಚಳ್ಳೂರಿನವರು. ಸದ್ಯ ಬೆಂಗಳೂರಿನ ನಿವಾಸಿ. ಪತ್ರಿಕೋದ್ಯಮದಲ್ಲಿ ಪದವಿ ಪಡೆದಿರುವ ಮಂಜುನಾಯಕ ಪ್ರಸ್ತುತ ಕಲರ್ಸ್ ಸೂಪರ್ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕತೆಗಳಿಗೆ 2017ರ ಸಾಲಿನ ಟೋಟೋ ಪುರಸ್ಕಾರ ಲಭಿಸಿದೆ. “ಫೂ” ಇವರ ಪ್ರಕಟಿತ ಕಥಾ ಸಂಕಲನ. \ No newline at end of file diff --git a/Kenda Sampige/article_466.txt b/Kenda Sampige/article_466.txt new file mode 100644 index 0000000000000000000000000000000000000000..e4ebc2ed1b5cc242af7aa54f3d1625512bd70144 --- /dev/null +++ b/Kenda Sampige/article_466.txt @@ -0,0 +1,41 @@ + + +ಸೂರ್ಯನು ಆಗ ತಾನೆ ಮೂಡಿ ಎರಡು ಮಾರು ಮೇಲೇರಿದ್ದನು. ತಂಗಾಳಿ ಮೆಲ್ಲ ಮೆಲ್ಲನೆ – ಹೆದರಿ ಹೆದರಿ ಬೀಸುತ್ತಿತ್ತು. ಸಂಪಿಗೆಯ ಕಂಪನ್ನು – ತಂಗಾಳಿ ದಿಕ್ಕು ದಿಕ್ಕಿಗೂ ಹೊತ್ತೊಯ್ಯುತ್ತಿತ್ತು. ಕೂಡಲು ಬಯಲಿಡಿ ಅದರ ಪರಿಮಳಕ್ಕೆ ಘಮ ಘಮಿಸುತ್ತಿತ್ತು. ಒಂದು ಕಡೆಯಿಂದ ಆಹ್ಲಾದಕರವಾದ ತಂಪಿನ ಕಂಪನ್ನು ಹೊತ್ತೊಯ್ಯವ ತಂಗಾಳಿ, ಇನ್ನೊಂದು ಕಡೆಯಿಂದ ಪ್ರಶಾಂತವಾದ ಬೆಳಗ್ಗಿನ ಹವೆ. ಎಂಥಾ ವಿರಾಗಿಯನ್ನೂ ರೋಮಾಂಚನಗೊಳಿಸಿ ಬಡಿದೆಬ್ಬಿಸುತ್ತಿತ್ತು. ಇಂತಹ ಪ್ರಶಾಂತ ವಾತಾವರಣದಲ್ಲಿ ಸುಬ್ಬಯ್ಯನ ದರ್ಬಾರು ನೆರೆದಿತ್ತು. + +ಸಂಪಿಗೆ ಚಾವಡಿಯ ತೂಗುಯ್ಯಾಲೆಯಲ್ಲಿ ಸುಬ್ಬಯ್ಯನು ರಾಜಠೀವಿಯಿಂದ ಮಂಡಿಸಿದ್ದನು. ಕಾಸರಗೋಡು, ಅಂಗಡಿಮೊಗರು, ಮೊಗ್ರಾಲು, ಪಾಡಿ – ಈ ನಾಲ್ಕು ಮಾಗಣೆಗಳ ಪ್ರಮುಖರೂ ಅಲ್ಲಿ ನೆರೆದಿದ್ದರು. ಗಹನವಾದ ವಿಷಯದ ಕುರಿತು ಚರ್ಚಿಸುತ್ತಿದ್ದರು. ಸುಬ್ಬಯ್ಯನ ಮುಖ ಗಂಭೀರವಾಗಿತ್ತು. ಸಭಿಕರೆಲ್ಲರೂ ಮುಖ ಮುಖ ನೋಡುತ್ತಿದ್ದರು. ಸಭೆಯಲ್ಲಿ ತೂಗುಯ್ಯಾಲೆಯ “ಕಿರೀಂ ಕಿರೀಂ” ಶಬ್ದವೊಂದನ್ನು ಬಿಟ್ಟರೆ ಬೇರಾವ ಶಬ್ದವೂ ಕೇಳಿಸುತ್ತಿರಲಿಲ್ಲ. ಸಭಿಕರ ವದನದಲ್ಲಿ ಮೌನದ ಕರಾಳ ಛಾಯೆ ಆವರಿಸಿತ್ತು. + +ಸುಬ್ಬಯ್ಯನ ಗಂಭೀರವಾದ ವಿಶಾಲ ಮುಖದಲ್ಲಿ ತಿರುವಿ ಹುರಿ ಮಾಡಿದ ಮೊನಚಾದ ಗಲ್ಲಿ ಮೀಸೆ! ತೇಜಃಪುಂಜವಾದ ಕಣ್ಣುಗಳು ಹೊಳೆಯುತ್ತಿದ್ದುವು. ಅವುಗಳಿಂದ ಅಪೂರ್ವಕಾಂತಿ ಹೊರಸೂಸುತ್ತಿತ್ತು. ಸುಮಾರು ಅರುವತ್ತರ ಪ್ರಾಯದ ನಸುಕರಿದಾದ ದೀರ್ಘ ದೇಹ ಅವನದು. ಅದಕ್ಕೊಪ್ಪಿದ ವಿಶಾಲವಾದ ಎದೆಕಟ್ಟು ಮೈಮಾಟ ಠೀವಿಯ ಸೂಚಕವಾಗಿತ್ತು. ಕೆಂಪು ಜರಿಯ ರುಮಾಲನ್ನು ತಲೆಗೆ ಪೇಟದಂತೆ ಸುತ್ತಿಕೊಂಡಿದ್ದನು. ಬಿಳಿ ಕಸೆಯ ಧೋತ್ರವನ್ನು ‘ಪಂಚೆಕಚ್ಚೆ’ (ಮುಂದೆಯೂ ಹಿಂದೆಯೂ ನೆರಿಬಿಟ್ಟು ಕಚ್ಚೆ ಹಾಕುವ ಒಂದು ಪದ್ಧತಿ) ಹಾಕಿ ಉಟ್ಟಿದ್ದನು. ತೆಳುವಾದ “ಎಲವಸ್ತ್ರ”ವೊಂದನ್ನು ಮೈತುಂಬಾ ಹೊದ್ದುಕೊಂಡಿದ್ದನು. ಹಣೆಗೆ ಕಸ್ತೂರಿಯ ತಿಲಕವನ್ನಿಟ್ಟು ಕುತ್ತಿಗೆಯಲ್ಲಿ ಮಾಣಿಕ್ಯದ ಸರವನ್ನು ಧರಿಸಿದ್ದನು. ಕೈಗೆ ವಜ್ರದ ಮುಂಗೈ ಸರಪಳಿ, ಕಿವಿಯಲ್ಲಿ ವಜ್ರದ ‘ಗಾಳಿವಂಟಿ’ (ನೇತಾಡುವ ಕುಂಡಲ), ಹತ್ತು ಬೆರಳಿಗೂ ವಿವಿಧ ಹರಳುಗಳ ಉಂಗುರಗಳು, ರಾಜಠೀವಿಯ ಪ್ರತೀಕವಾಗಿದ್ದುವು. ಸುಬ್ಬಯ್ಯನು ತೂಗುಯ್ಯಾಲೆಯಲ್ಲಿ ದಿವ್ಯ ತೇಜಸ್ಸಿನಿಂದ ಶೋಭಿಸುತ್ತಿದ್ದನು. + +ಅಷ್ಟರಲ್ಲಿ ಓರ್ವ ದೂತನು ಓಡೋಡಿ ಬಂದು “ಒಡೆಯಾ ‘ಗುಲ್ಲು’ (ಹಿಂದೆ ಒಂದು ಪುಂಡರ ತಂಡಕ್ಕೆ ಜನರಿಟ್ಟಿದ್ದ ಹೆಸರು) ಸೀರೆ ಹೊಳೆ ದಾಟಿ ಬರುತ್ತಿದೆ. ಸಿಕ್ಕಿ ಸಿಕ್ಕಿದವರನ್ನೆಲ್ಲಾ ಸದೆಬಡಿದು ಸುಲಿದು ಸಾಗುತ್ತಿದೆ. ಕೊಳ್ಳೆಯಿಡುವುದು, ಸುಡುವುದು, ಪ್ರತಿಭಟಿಸಿದವರನ್ನು ಜೀವಂತ ಚರ್ಮ ಸುಲಿದು ಚಿತ್ರ ಹಿಂಸೆ ಕೊಡುವುದು, ನೋಡಿದಲ್ಲೆಲ್ಲ ಕಾಣಿಸುವ ನೋಟ. ಸ್ತ್ರೀಯರ ಮಾನಾಪಹರಣ, ಹಗಲು ದರೋಡೆ, ಬಲಾತ್ಕಾರದ ಸುಲಿಗೆ ಹಿಂಸೆಗಳು ನಡೆಯದ ಜಾಗವಿಲ್ಲ. ‘ಕೊಳ್ಳಿಭೂತ’ಗಳಂತೆ ತಿರುಗುತ್ತಿದ್ದಾರೆ ಭಟರು. ಚಿರಂಜೀವಿ ಸುಬ್ರಾಯನ ಬಲಗೈ ಬಂಟನಾದ ಬೀರಣ್ಣನೆಂಬವನ ಮುಂದಾಳ್ತನದಲ್ಲಿ ಗುಲ್ಲು ಇತ್ತ ಸಾಗಿ ಬರುತ್ತಿದೆ” ಎಂದು ಸೇಂಕುತ್ತಾ, ನಡುಗುತ್ತಾ, ಬಿಕ್ಕುತ್ತಾ ಅರಿಕೆ ಮಾಡಿಕೊಂಡನು. ಸಭೆಯಲ್ಲೆಲ್ಲಾ ಹಾಹಾಕಾರವೆದ್ದಿತು. ಒಬ್ಬೊಬ್ಬರೊಂದೊಂದು ವಿಧವಾಗಿ ಸಲಹೆಗಳನ್ನಿತ್ತರು. + +ಯಾವುದೂ ಸುಬ್ಬಯ್ಯನಿಗೆ ಹಿಡಿಸಲಿಲ್ಲ. ತನ್ನ ಬಲಗೈ ಬಂಟನಾದ ಪುಳ್ಕೂರು ಬಾಚನ ಮುಖವನ್ನು ನೋಡಿದನು. “ನಿನ್ನ ಅಭಿಪ್ರಾಯವೇನು” ಎಂದು ಸನ್ನೆಯಿಂದ ಕೇಳಿದನು. ಬಾಚನು ತನ್ನ ಹುರಿ ಮೀಸೆಗೆ ಕೈಯಿಕ್ಕಿ ಜುಟ್ಟಿನ ಕಟ್ಟನ್ನು ಸರಿಪಡಿಸುತ್ತಾ ವೀರಾವೇಶದಿಂದ – “ಬುದ್ಧಿಯವರು ಅಷ್ಟಕ್ಕೆ ಹೆದರಬೇಕೇ? ನನ್ನ ಈ ತಾಳೆ ಮರದ ದೊಣ್ಣೆಯೊಂದಿದ್ದರೆ ಸಾಕು. ದೊಣ್ಣೆಯ ಒಂದೆ ಬೀಸಾಟಕ್ಕೆ ಈ ಪುಂಡರ ರುಂಡಗಳನ್ನು ಕ್ಷಣಮಾತ್ರದಲ್ಲಿ ಚೆಂಡಾಡಿ ಧೂಳೀಪಟ ಮಾಡಿಬಿಡುವೆನು. ಬಡಿಗೆಯೊಂದು ಕೈಯಲ್ಲಿದ್ದರೆ ಹುಲಿಯೆ ಬರಲಿ – ಸಿಂಹವೆ ಮುತ್ತಲಿ – ಆನೆಗಳ ದಂಡೆ ಎದುರಾಗಲಿ ನನಗೆ ಗಣ್ಯವಿಲ್ಲ! ಮತ್ತೆ ಈ ಪುಂಡು ಪೋಕರಿಗಳು ನನಗೊಂದು ಲೆಕ್ಕವೆ? ಅವರನ್ನೆಲ್ಲಾ ಬಡಿದು – ಪುಡಿಗಟ್ಟಿ ಉಳಿದವರನ್ನು ಹೆಡೆಮುರಿಗಟ್ಟಿ ಈ ಚಾವಡಿಯ ಮುಂದೆ ದನಿಯವರ ಪಾದಗಳಡಿಯಲ್ಲಿ ಕೆಡಹುವೆನು! ನೋಡುತ್ತಿರಿ” ಎಂದು ಬಡಿಗೆಯನ್ನು ಗಾಳಿಯಲ್ಲಿ ಗಿರಗಿರನೆ ಬೀಸಿದನು. ಬಾಚನ ಈ ಮಾತಿನಿಂದ ಎಲ್ಲರಲ್ಲೂ ವೀರಾವೇಶ ತುಂಬಿತು. ಎಲ್ಲರೂ ಕತ್ತಿ, ದೊಣ್ಣೆ, ಹಾರೆ, ಗುದ್ದಲಿ, ಬಡಿಗೆ, ಕೋವಿಗಳನ್ನು ಹಿಡಿದುಕೊಂಡು ಸಿದ್ಧರಾದರು. + +ಕಬ್ಬಿಣದ ಕವಚಗಳನ್ನು ತೊಟ್ಟವರಂತಿದ್ದ ಮೈಕಟ್ಟಿನ ಕಟ್ಟುಮಸ್ತಾಗಿ ವಿಶಾಲವಾದ ಎದೆಯುಳ್ಳ ಮೂಲದ ಹೊಲೆಯರು, ದಷ್ಟಪುಷ್ಟವಾಗಿ ಬೆಳೆದು ಗಟ್ಟಿಮುಟ್ಟಾಗಿದ್ದ ಹೊಂತಕಾರಿ ಒಕ್ಕಲಿಗರು, ಸುಬ್ಬಯ್ಯನ ಸಂಪಿಗೆ ಚಾವಡಿಯಲ್ಲಿ ನೆರೆದರು. ಎಲ್ಲರ ನರನಾಡಿಗಳಲ್ಲೂ ಬಾಚನ ಆವೇಶದ ಮಾತುಗಳಿಂದ ರಕ್ತ ಬಿಸಿಯಾಗಿ ಹರಿಯುತ್ತಿತ್ತು. ಮುನ್ನೂರು ಮಂದಿ ಧಾಂಡಿಗರು ಅಲ್ಲಿ ನೆರೆದರು. ನೂರೈವತ್ತು ಮಂದಿ ಸುಬ್ಬಯ್ಯನ ನೇತೃತ್ವದಲ್ಲೂ, ಅಷ್ಟೆ ಮಂದಿ ಬಾಚನ ಮುಂದಾಳುತನದಲ್ಲೂ ದಂಡುಗಟ್ಟಿ ನಡೆದರು. ಎಲ್ಲರಿಗೂ ಎಲ್ಲಿಲ್ಲದ ವೀರಾವೇಶ ಧೈರ್ಯಗಳು ಬಂದಿದ್ದುವು. ಎರಡೂ ದಂಡುಗಳು ಉಳಿಯತ್ತಡ್ಕಕ್ಕೆ ಬಂದುವು. ಬಾಚನ ಪಂಗಡವನ್ನು ಉಳಿಯತ್ತಡ್ಕದ ಮಧೂರ ತಪ್ಪಲಿನಲ್ಲಿ ಹಳೆಯ ಕೋಟೆಯ ಕಣಿಯಲ್ಲಿ ಮರೆಯಾಗಿ ಕುಳಿತಿರುವಂತೆ ಸುಬ್ಬಯ್ಯನು ಅಪ್ಪಣೆಯಿತ್ತನು. ಕೋಟೆಯ ಹಳೆಯ ಬುರುಜುಗಳು, ಕುರುಚಲು ಕಾಡುಪೊದೆಗಳು ಅವರಿಗೆ ಅಡಗಿರಲು ಸಹಾಯಕವಾದುವು. + + + +ಸುಬ್ಬಯ್ಯನ ಮೇಲ್ತನಿಕೆಯ ದಂಡಾಳುಗಳು ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪ ಹಳೆಯ ಕೋಟೆಯ ಗೋಡೆಗೆ ಅಡ್ಡವಾಗಿ ಅಡಗಿದರು. ಪೊದೆಗಳೆಡೆಯಲ್ಲಿ ಹೊಂಚು ಹಾಕಿ ಕಾದರು. ಸುತ್ತಲೂ ಕಾಡುಬಲ್ಲೆಗಳು ತುಂಬಿ ಇವರ ಸುಳಿವು ಗುಲ್ಲಿನ ಪುಂಡರಿಗೆ ಸಿಗದಂತಿತ್ತು. ಮಧ್ಯಾಹ್ನವಾಯಿತು. ಪುಂಡರ ಸುದ್ದಿ ಇಲ್ಲ. ಸುಬ್ಬಯ್ಯನ ದಂಡು ಬೇಸರವಿಲ್ಲದೆ ಎಚ್ಚರದಿಂದ ಕಣ್ಣಿಗೆ ಎಣ್ಣೆ ಹಾಕಿ ಕಾದಿತ್ತು. ಒಂದು ಹುಳವೂ ಅತ್ತ ಆ ದಿನ ಸುಳಿಯಲಿಲ್ಲ. ಕತ್ತಲಾಯಿತು. ಮರುದಿನ ಬೆಳಗೂ ಆಯಿತು. ಹೊತ್ತು ಮೀರಿ ಮೇಲೇರುತ್ತಿತ್ತು. ದೂರದ ಗುಡ್ಡದ ತುದಿಯಿಂದ ತುತ್ತೂರಿಯ ಶಬ್ದ, ಕದಿನದ ಶಬ್ದ ಕೇಳಿಬಂದಿತು. “ಗುಲ್ಲು ಬಂತೋ ಗುಲ್ಲು” ಎಂದು ಬಾನೆತ್ತರಕ್ಕೆ ಕೇಕೆ ಹಾಕಿ ಬೊಬ್ಬಿಡುತ್ತಾ ಸಿಳ್ಳು ಹಾಕುತ್ತಾ ಬರುತ್ತಿದ್ದರು ವೈರಿಯಾಳುಗಳು. + +ಉಳಿಯತ್ತಡ್ಕದಲ್ಲಿ ಉರುಳಿಟ್ಟರು + +ಈಗ ಬಾಚ ಸುಮ್ಮನಿರಲಿಲ್ಲ. ಎಚ್ಚರ ವಹಿಸಿ ಸುಬ್ಬಯ್ಯನಿಗೆ ಗುಲ್ಲು ಬರುವ ವಾರ್ತೆ ತಿಳಿಸಿದನು. ಇತ್ತ ಸುಬ್ಬಯ್ಯನಾದರೋ ತಾನು ತಂಗಿದ್ದ ಸ್ಥಳದಲ್ಲಿ ಸುತ್ತಲೂ ಕಬ್ಬಿಣದ ಮುಳ್ಳು ಬೇಲಿಯನ್ನು ಮಾಡಿಸಿ ಕಾಯುತ್ತಿದ್ದನು. ರೆಪ್ಪೆ ಮುಚ್ಚದೆ ಕ್ಷಣವನ್ನು ಯುಗವಾಗಿ ಎಣಿಸುತ್ತಾ ಹೊತ್ತು ಕಳೆಯುತ್ತಿದ್ದನು. ದಂಡಾಳುಗಳೆಲ್ಲರೂ ಒಂಟಿಕಾಲಿನ ಮೇಲೆ ನಿಂತಿದ್ದರು. ಪುಂಡರು ಉಳಿಯತ್ತಡ್ಕ ಗುಡ್ಡವನ್ನೇರುತ್ತಿದ್ದರು. ಅವರ ಬೊಬ್ಬೆಯ ಅಬ್ಬರ ಕಿವಿಗಡಚಿಕ್ಕುತ್ತಿತ್ತು. ಬಾಚನೂ ಮಾತಾಡಲಿಲ್ಲ. ಅಲ್ಲಿಂದ ಹಿಂದೆ ಸರಿದು ನಿಂತನು. ತನ್ನ ದಂಡಾಳುಗಳಿಗೆ ಸದ್ದಿಲ್ಲದೆ ಬಳಸಿ ಬರುವಂತೆ ಸೂಚಿಸಿ ಪುಂಡರನ್ನು ಹಿಂಬಾಲಿಸಲು ಅಪ್ಪಣೆಯಿತ್ತನು. + +ಐನೂರು ಮಂದಿ ಪುಂಡರು ಬೀರಣ್ಣ ಬಂಟನ ನೇತೃತ್ವದಲ್ಲಿ ಸಿಳ್ಳು ಹಾಕುತ್ತಾ, ಕೇಕೆಯಿಕ್ಕುತ್ತಾ ಬಾಯಿಗೆ ಬಂದಂತೆ ಒದರುತ್ತಾ ಬರುತ್ತಿದ್ದರು. ಉಳಿಯತ್ತಡ್ಕದ ಬೆಡಿಕಟ್ಟೆಯ ಸಮೀಪಕ್ಕೆ ಗುಲ್ಲು ಮುಟ್ಟುವುದೆ ತಡ ಇಕ್ಕಡೆಗಳಿಂದಲೂ “ಢಂ ಢಂ” ಎಂಬ ಶಬ್ದವಾಯಿತು. ಭಯಂಕರ ಹೊಗೆಯೆದ್ದಿತು. ಬೆಂಕಿ ಉರಿಯಿತು. ಒಂದೇ ಸವನೆ ಎಡೆಬಿಡದೆ ಫಿರಂಗಿಗಳು ಘರ್ಜಿಸಿದುವು. ಗುಲ್ಲಿನ ಪುಂಡರು ಬೆದರಿ ದಿಕ್ಕುಪಾಲಾದರು. ಕಂಪೆನಿಯ ಸೈನ್ಯ ಬಂದಿದೆಯೆಂದು ಭ್ರಮಿಸಿ ಸಿಕ್ಕಿದತ್ತ ಓಡಿದರು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಹಿಂಬಾಲಿಸಿದ ಬಾಚನು ತನ್ನ ಬಡಿಗೆಯನ್ನು “ರೊಂಯ್ಯ ರೊಂಯ್ಯ”ನೆಂದು ಗಾಳಿಯಲ್ಲಿ ಬೀಸುತ್ತಾ ಒಂದು ಪೆಟ್ಟಿಗೆ ನಾಲ್ಕೆಂಟಾಳುಗಳನ್ನು ಕೆಡಹುತ್ತಾ ಅವರನ್ನು ಮುತ್ತಿದನು. ಎದುರುಗಡೆಯಿಂದ ಸುಬ್ಬಯ್ಯನು, ಹಿಂದಿನಿಂದ ಬಾಚನು ಮುತ್ತಿಗೆ ಹಾಕಿ ಹಲವರನ್ನು ಕೊಂದು ಕೆಡಹಿದರು. ಹಲವರು ಸೆರೆ ಸಿಕ್ಕಿದರು. ಉಳಿದವರು ಹೆದರಿ ಸಿಕ್ಕಿಸಿಕ್ಕಿದತ್ತ ಓಡಿದರು. ಮೊದಲೆ ದಟ್ಟವಾದ ಕಬ್ಬಿಣದ ಮುಳ್ಳು ಬೇಲಿಯನ್ನು ಮಾಡಿಸಿದ್ದುದರಿಂದ ದಾರಿ ಸಿಗದೆ ಓಡುತ್ತಿದ್ದವರನ್ನು ಹಿಂದಿನ ಬಾಚನ ದಂಡಾಳುಗಳು ಸೆರೆ ಹಿಡಿದರು. ಒಂದೆ ಸವನೆ ಫಿರಂಗಿಗಳು ಗರ್ಜನೆಗೈಯ್ಯುತ್ತಾ ಸಿಡಿಯುತ್ತಿದ್ದುವು. ಸಿಡಿದ ಗುಂಡುಗಳಿಂದ ಹಲವರ ಮೈ ಸುಟ್ಟುವು. ಸುಬ್ಬಯ್ಯನ ಮತ್ತು ಬಾಚನ ಕತ್ತಿ, ಕೋವಿ, ದೊಣ್ಣೆಯ ಆಳುಗಳು ಎಲ್ಲ ಕಡೆಯಿಂದಲೂ ಬಳಸಿ ಮುತ್ತಿ ಹೊಡೆದು ಬಡಿದರು. ಕಡಿದು ಕುತ್ತಿದರು. + +ಬೀರಣ್ಣ ಸುಬ್ಬಯ್ಯರಿಗೆ ಖಾಡಾ-ಖಾಡಿಯಾಗಿ ಮುಖಾಮುಖಿ ಯುದ್ಧ ಸಾಗಿತು. ಬೀರಣ್ಣನು ತನ್ನ ಕೋವಿಯನ್ನೆತ್ತಿದನು. ಸುಬ್ಬಯ್ಯನು ತನ್ನ ಬಡಿಗೆಯನ್ನು ಬೀಸಿದನು. ದೊಣ್ಣೆಯ ಪೆಟ್ಟು ಕೋವಿಗೆ ತಾಗಲು ಗುಂಡೊಂದು ಸಿಡಿಯಿತು. ಅದೃಷ್ಟವಶದಿಂದ ಸಿಡಿದ ಗುಂಡು ತಲೆಗೆ ತಾಗದೆ ಮುಂಡಾಸಿಗೆ ತಾಗಿ ತೂತು ಕೊರೆದು ಹೊರಟುಹೋಯಿತು. ದೊಣ್ಣೆಯ ಪೆಟ್ಟಿಗೆ ಬೀರಣ್ಣನ ಕೋವಿ ನಿಸ್ತೇಜವಾಗಿ ನೆಲಕ್ಕೆ ಬಿದ್ದಿತು. ಕೋವಿ ನೆಲಕ್ಕೆ ಬೀಳುವುದಕ್ಕೂ ಬಾಚನು ಹಿಂದಿನಿಂದ ಬಂದು ಆತನನ್ನು ಹಿಡಿಯುವುದಕ್ಕೂ ಸರಿಹೋಯಿತು. ಬಾಚನ ಬಂಧನದಿಂದ ಬೀರಣ್ಣನು ಮಿಸುಕಾಡದಂತಾಗಿ ಕಣ್ಣು ಕಣ್ಣು ಬಿಟ್ಟನು. ಕೈಗೆ ಕೋಳ ತೊಡಿಸಿ ಆತನನ್ನು ಬಂಧಿಸಿದರು. ಜಪ್ತಿ ಮಾಡಿದಾಗ ಸೊಂಟದಲ್ಲೊಂದು ತಾಯಿತ ಸಿಕ್ಕಿತು. ಅದರ ಬಲದಿಂದಲೆ ಈ ಪುಂಡಾಟಕ್ಕಿಳಿದಿದ್ದನು. ಸುಬ್ಬಯ್ಯನು ಅದನ್ನು ಸ್ವಾಧೀನಪಡಿಸಿಕೊಂಡನು. ಬೀರಣ್ಣನು ಹಲ್ಲು ಕಳೆದ ವಿಷದ ಹಾವಿನಂತೆ ನಿರ್ವೀರ್ಯನಾದನು. ಅವನೊಡನೆ ಬಂದಿದ್ದ ಪುಂಡರೆಲ್ಲ ಸುಬ್ಬಯ್ಯನಿಗೆ ಶರಣಾದರು. + +ಗುಲ್ಲಿನ ಪುಂಡರನ್ನು ಸುಬ್ಬಯ್ಯನು ಉಪಾಯದಿಂದ ಬಲೆಯಲ್ಲಿ ಕೆಡೆ ಬೀಳಿಸಿ ಸೆರೆಹಿಡಿದನು. ಕಂಪೆನಿಯವರ ದಂಡೆಂದು ಮೊದಲೆ ಭ್ರಮಿಸಿ ಹೆದರಿ ಕಂಗೆಟ್ಟಿದ್ದ ಪುಂಡರು ಸುಬ್ಬಯ್ಯ ಬಾಚರ ಹೊಡೆತಗಳನ್ನು ತಡೆಯಲಾರದೆ ಶರಣಾಗಲೇಬೇಕಾಯಿತು. ಮರುದಿನ ಬೀರಣ್ಣನನ್ನು ಸೆರೆಯಿಂದ ಬಿಡಿಸಿ ಕೈಕೋಳದಲ್ಲಿ ಓಲಗ ಚಾವಡಿಗೆ ತಂದು ಯುದ್ಧ ತಂತ್ರಗಳನ್ನೆಲ್ಲಾ ಅವನಿಗೆ ತೋರಿಸಿದನು. ಮುಳಿ ಹುಲ್ಲುರಿದ ಬೂದಿ, ಕದಿನಗಳ ಹೊದಿಕೆಗಳು ರಾಶಿ ರಾಶಿಯಾಗಿ ಬಿದ್ದಿದ್ದುವು. ಕದಿನಕ್ಕೆ ಸಿಡಿಮದ್ದಿನೊಂದಿಗೆ ರೂಪಾಯಿ ನಾಣ್ಯ ಗಾತ್ರದ ಜೋಡು ಮುಕ್ಕಾಲು ಪಾವಲಿಗಳನ್ನು ಜಡಿದು ಬೆಂಕಿ ಕೊಡಿಸಿ ಫಿರಂಗಿ ಎಂದು ಭ್ರಮೆ ಹುಟ್ಟಿಸಿದ ಬುದ್ಧಿವಂತಿಕೆಯನ್ನು ವಿವರಿಸಿದನು. ಬೀರಣ್ಣ ಬಂಟನು ನಾಚಿಕೆಯಿಂದ ತಗ್ಗಿದ ತಲೆಯನ್ನು ಎತ್ತಲಿಲ್ಲ. ತಾಯಿತವನ್ನು ಕಳೆದುಕೊಂಡು ವಿಷ ಕಳಿದ ಹಾವಿನಂತಾಗಿದ್ದ ಬಂಟನು ಮರುಮಾತಾಡದಿದ್ದನು. ತಲೆ ತಗ್ಗಿಸಿ ನಿಂತಿದ್ದ ಅವನ ತಲೆಯನ್ನು ಬೋಳಿಸಿ ಕತ್ತೆ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿ ಬಿಟ್ಟುಬಿಟ್ಟನು. ಇನ್ನೆಂದೂ ಇಂತಹ ದುಷ್ಕಾರ್ಯದಲ್ಲಿ ತೊಡಗದಂತೆ ಎಚ್ಚರಿಸಿ ಓಡಿಸಿಬಿಟ್ಟನು. + + + +ಕುಂಬಳೆ ಸೀಮೆಯನ್ನು ಪೀಡಿಸುತ್ತಿದ್ದ ಗುಲ್ಲಿನ ಪುಂಡರ ಕೊಲೆ ಸುಲಿಗೆಗಳನ್ನು ಪಿಡುಗನ್ನು ಅವಸಾನಗೊಳಿಸಿ ತಾನು ಮಾಡಿದ ಎಲ್ಲಾ ಕಾರ್ಯಗಳ ವಿವರಗಳನ್ನು ಮಂಗಳೂರಲ್ಲಿದ್ದ ಬಿಳಿಯ ಕಲೆಕ್ಟರ್ ದೊರೆಗೆ ವರದಿ ಮಾಡಿ ಅದಕ್ಕೆ ಸಾಕ್ಷಿಯಾಗಿ ಗುಂಡಿನಿಂದ ತೂತಾದ ತನ್ನ ಮುಂಡಾಸನ್ನು ಹಾಜರುಪಡಿಸಿದನು. ಕಲೆಕ್ಟರರು ಅತ್ಯಾನಂದಗೊಂಡು ಸುಬ್ಬಯ್ಯನ ಶೌರ್ಯಕ್ಕಾಗಿ, ಆತನು ಮಾಡಿದ ಮಹಾಕಾರ್ಯಕ್ಕಾಗಿ ಒಂದು ಸೇರು ತೂಕದ ಎರಡು ಚಿನ್ನದ ಬಳೆಗಳನ್ನೂ, ವಿಕ್ಟೋರಿಯಾ ಮಹಾರಾಣಿಯ ಮುದ್ರೆಯಿರುವ ಒಂದು ಚಿನ್ನದ ಖಡ್ಗವನ್ನೂ ಕೊಟ್ಟು ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದರು. ಬ್ರಿಟಿಷ್ ಸರಕಾರದ ಮುದ್ರೆಯುಳ್ಳ ಒಂದು ಸನದನ್ನೂ ಕೊಟ್ಟು ಗೌರವಿಸಿದರು. + +ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ + +ಸಿರಿಬಾಗಿಲು ವೆಂಕಪ್ಪಯ್ಯ + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_467.txt b/Kenda Sampige/article_467.txt new file mode 100644 index 0000000000000000000000000000000000000000..f15d70d8fa92ba563fef1a16c9ec72bb82a6fbcd --- /dev/null +++ b/Kenda Sampige/article_467.txt @@ -0,0 +1,39 @@ +ಹೊತ್ತು ಆಗಲೇ ನೆತ್ತಿ ಮ್ಯಾಲೆ ಬಂದಿತ್ತು. ಬಿಸಿಲು ದಳ ದಳ ಸುರಿಯತೊಡಗಿತ್ತು. ಅಂಗಳದ ಬೇವಿನಗಿಡದ ಮರದ ನೆರಳೊಳಗೆ ಹತ್ತು-ಹನ್ನೆರಡು ವರ್ಷದ ಮಲ್ಲ ತನ್ನ ಪಾಡಿಗೆ ತಾನು ಮಣ್ಣಾಟವಾಡತೊಡಗಿದ್ದ. ಕೋಳಿಯೊಂದು ಕಳ್ಳ ಹೆಜ್ಜೆ ಇಡುತ್ತಾ ಆ ಕಡೆ ಈ ಕಡೆ ಕತ್ತು ಹೊರಳಿಸಿ ನೋಡುತ್ತಾ ತೆರೆದ ಮನೆಯೊಳಗೆ ಹೊರಟಿತ್ತು. ಮಲ್ಲ ಕೋಳಿ ದಿಟ್ಟಿಸಿದ. ‘ಅವನೌನ್ ಹೊರ್ಗ ಮೇಯೋದು ಬಿಟ್ಟು ಒಳ್ಗ ಕಾಳು ತಿನ್ನಾಕ ಹೊಂಟೈತಿ’ ಎಂದುಕೊಂಡು ಮಣ್ಣಿನ ಸಣ್ಣ ಹೆಂಟೆಯೊಂದನ್ನು ಕೋಳಿ ಕಡೆ ಬೀಸಿದ. ಅದು ಪುಟು ಪುಟು ಹೆಜ್ಜೆ ಹಾಕುತ್ತ ಮಣ್ಣ ಹೆಂಟೆ ಬೀಳುವುದನ್ನು ತಪ್ಪಿಸಿಕೊಂಡು ಹೊರಗೋಡಿತು. ತುಸು ಹೊತ್ತು ಕ್ರಮಿಸಿರಬೇಕು. ಮತ್ತೆ ಕೋಳಿ ಕಳ್ಳ ಹೆಜ್ಜೆ ಹಾಕುತ್ತ ಮನೆಯೊಳಗೆ ಹೋಗಲು ಹೊಂಚು ಹಾಕುತ್ತಿರುವುದು ಮಲ್ಲನ ಕಣ್ಣಿಗೆ ಬಿತ್ತು. ‘ಇವತ್ತು ಹಿಂಗ್ಯಾಕ ಮಾಡತೈತಿ ಇದು. ಓಹೋ, ತತ್ತಿ ಹಾಕಾಕ ಮಾಡ್ತಿರ್ಬೇಕು..’ ಅಂದುಕೊಂಡು ಕೋಳಿ ಮನೆಯೊಳಗೆ ಹೋಗುವ ತನಕ ಸುಮ್ಮನಿದ್ದು ಅದು ಒಳ ಹೋದ ನಂತರ ತಾನೂ ಒಳ ಹೋಗಿ ಕದ ಹಾಕಿದ. ಕೋಳಿ ಅತ್ತಿತ್ತ ಓಡಾಡಿತು. ಇವನು ಹಾಗೂ ಹೀಗೂ ಮಾಡಿ ಹಿಡಿದ. ನಂತರ ಕೋಳಿಯ ಮುಕುಳಿಯೊಳಗ ಕಿರುಬೆರಳು ಹಾಕಿದ. ಬೆರಳಿಗೆ ತತ್ತಿ ತಾಗಿತು. ಅದು ತತ್ತಿ ಹಾಕಲು ಬಂದಿರುವುದನ್ನು ಖಬಲು ಮಾಡಿಕೊಂಡ ಮಲ್ಲ ಇಚಲು ಬುಟ್ಟಿಯಲ್ಲಿ ಮುಚ್ಚಿದ. + +ಮತ್ತೆ ಬೇವಿನ ಮರದ ನೆರಳಿಗೆ ಬಂದ. ಬಾಜು ಮನಿಯ ಈರ ಬಲಗೈ ಮುಷ್ಟಿ ಮಾಡಿಕೊಂಡು ಇವನ ಕಡೆಗೆ ಬಂದ. ಮಲ್ಲ ಮುಚ್ಚಿದ ಆ ಮುಷ್ಟಿಯನ್ನು ಕುತೂಹಲದಿಂದ ಕಣ್ಣಾಡಿಸಿದ. ಈರ ಜಂಬದಿಂದ ಮುಚ್ಚಿದ ಮುಷ್ಟಿಯನ್ನೇ ಅವನಿಗೆ ತೋರಿಸಿದ. ನಿರುಪಾಯನಾದ ಮಲ್ಲ ‘ಏನದು’ ಎಂದು ಕೇಳಿದ. ಈರ ‘ನಮ್ಮಪ್ಪ ಪೆಪ್ಪರುಮಂಟ ಕೊಡಿಸ್ಯಾನ. ನೋಡಿಲ್ಲೆ..’ ಎಂದು ತೋರಿಸಿ ಮತ್ತೆ ಮುಚ್ಚಿಕೊಂಡ. ‘ಈರ ನನಗೊಂದು ಕೊಡ್ಲೆ..’ ಎಂದು ಮಲ್ಲ ದುಂಬಾಲು ಬಿದ್ದ. ‘ಒಲ್ಲೆಪಾ. ನೀನವತ್ತು ಶೇಂಗಾ ಕೊಟ್ಟೆನು ನನ್ಗ..’ ಎಂದು ಆಸೆ ತೋರಿಸುತ್ತಾ ಪೆಪ್ಪರುಮಂಟು ಚೀಪತೋಡಗಿದ. ಮಲ್ಲನ ಬಾಯೊಳಗೆ ನೀರೂರತೊಡಗಿತು. ಇವನು ಪೆಪ್ಪರುಮಂಟನ್ನು ಒಮ್ಮೆಯೂ ತಿಂದಿಲ್ಲ. ಅದರ ರುಚಿ ಹೇಗಿರುತ್ತೋ ತಿಳಿಯದು. ಕೆಂಪು ಬಣ್ಣದ ಚೆಂದನೆಯ ಪೆಪ್ಪರುಮಂಟು ಮಾತ್ರ ಮಲ್ಲನಿಗೆ ಕನಸಾಗಿ ಕಾಡತೊಡಗಿತ್ತು. ಈರ ಪೆಪ್ಪರುಮಂಟು ಚೀಪುತ್ತಾ ತನ್ನ ಮನೆಯ ಕಡೆ ಓಡಿದ. + +ಮಲ್ಲನಿಗೆ ನಿರಾಸೆಯಾಯಿತು. ಪೇಚು ಮೋರೆ ಹಾಕಿದ. ಪೆಪ್ಪರುಮಂಟು ರುಚಿ ಹೇಗಿರಬಹುದೆಂದು ತಿಳಿಯದೆ ಗೊಂದಲ ಅನುಭವಿಸಿದ. ಇಚಲು ಬುಟ್ಟಿಯಲ್ಲಿ ಕೋಳಿ ಮುಚ್ಚಿರುವುದು ನೆಪ್ಪಾಯಿತು. ಕೋಳಿ ಹೊರ ಹೋಗದಂತೆ ಸ್ವಲ್ಪ ಬುಟ್ಟಿ ಎತ್ತಿ ನೋಡಿದ. ತತ್ತಿ ಕಾಣಿಸಿತು. ಬುಟ್ಟಿಯನ್ನು ಪೂರ್ತಿ ಎತ್ತಿದ. ಕೋಳಿ ಓಟ ಕಿತ್ತಿತು. ತತ್ತಿ ತೆಗೆದುಕೊಂಡ. ಇನ್ನೂ ಬಿಸಿ ಇತ್ತು. ತನ್ನೆರಡೂ ಕಣ್ಣಿಗೆ ತತ್ತಿಯ ಬಿಸಿ ತಾಗಿಸಿಕೊಂಡು ಪುಳಕಗೊಂಡ. ಆಮ್ಯಾಲೆ ತತ್ತಿ ಒಯ್ದು ಉಪ್ಪಿನ ಗಡಗಿಯಲ್ಲಿಟ್ಟು ಹೊರ ಬಂದ. + +ಈರ ಮತ್ತೆ ಪೆಪ್ಪರುಮಂಟು ತಿನ್ನುತ್ತಾ ಇವನ ಕಡೆ ಬರತೊಡಗಿದ್ದ. ಈ ಸಲ ಮುಷ್ಟಿ ಮುಚ್ಚಿರಲಿಲ್ಲ. ಮೂರ್ನಾಲ್ಕು ಪೆಪ್ಪರುಮಂಟು ತಿಂದು ಉಳಿದ ಒಂದೇ ಪೆಪ್ಪರುಮಂಟು ಚೀಪುವುದು ಮತ್ತೆ ಕೈಯೊಳಗೆ ಹಿಡಿದುಕೊಳ್ಳುವುದು ಮಾಡತೊಡಗಿದ್ದ. ಈರ ಪೆಪ್ಪರುಮಂಟು ಚೀಪಿದ ಜಿಬಿ ಜಿಬಿಗೆ ನೊಣ ಮುಕ್ಕರತೊಡಗಿದ್ದವು. ಕೈ ಜಾಡಿಸಿದ ತಕ್ಷಣ ಅವು ಹಾರುತ್ತಿದ್ದವು. ಮಲ್ಲನಿಗೆ ಪೆಪ್ಪರುಮಂಟು ತಿನ್ನಲೇಬೇಕೆಂಬ ಬಯಕೆ ಉಕ್ಕತೊಡಗಿತು. ಇನ್ನೇನು ಅವನು ಚೀಪಿದ್ದನ್ನೇ ಕೇಳಬೇಕು ಎನ್ನುವಷ್ಟರಲ್ಲಿ ಈರ ಪೂರ್ತಿ ಬಾಯೊಳಗೆ ಹಾಕಿ ಕಡ್ರುಮು ಕುಡ್ರುಮು ತಿಂದು ಬಿಟ್ಟ. ಕೇಳಬೇಕೆಂದುಕೊಂಡ ಮಲ್ಲನ ಮಾತು ತುಟಿ ದಾಟಲಿಲ್ಲ. ಸುಮ್ಮನೆ ಉಗುಳು ನುಂಗಿದ. + +****ದಿನ ಪೂರ್ತಿ ಚಿಮಣಿ ಬುಡ್ಡಿಯ ಹಾಗೆ ಬೆಳಕು ಚೆಲ್ಲಿದ ಸೂರ್ಯ ತನ್ನ ಗುಡಿಸಲ ಕಡೆ ಪಾದವ ಬೆಳೆಸಿದ. ಕತ್ತಲು ಇಂಚಿಂಚು ಕವಿಯತೊಡಗಿತ್ತು. ಮಲ್ಲ ಅಂಗಳ ಕಸಗೂಡಿಸಿ, ನೀರು ಚಿಮುಕಿಸಿ, ಸೀಳಿದ ಕಟ್ಟಿಗೆಯ ತುಂಡುಗಳನ್ನು ಒಲೆಯ ಮುಂದಿಟ್ಟ. ಐದಾರಿದ್ದ ಕೋಳಿಗಳನ್ನು ಮನೆಯೊಳಗೆ ಓಡಿಸಿ ಒಂದೊಂದಾಗಿ ಹಿಡಿದು ಬುಟ್ಟಿಯಲ್ಲಿ ಮುಚ್ಚಿದ. ಇದು ಇವನ ನಿತ್ಯದ ಹ್ವಾರೆ. ಇಷ್ಟು ಮಾಡುವುದರೊಳಗೆ ಅದ್ಯಾರದೋ ಹೊಲಕ್ಕೆ ಕೂಲಿ ಹೋಗಿದ್ದ ಅವನ ಅಪ್ಪ, ಅವ್ವ, ಅಣ್ಣ, ಅಕ್ಕ ಎಲ್ಲ ಬಂದರು. + +ಎಲ್ಲರೂ ಕೈ ಕಾಲು ಮುಖ ತೊಳೆದುಕೊಂಡು ಅದೂ ಇದೂ ಮಾತಾಡುತ್ತಾ ಕುಳಿತಿರುವಾಗಲೇ ಮಲ್ಲನ ಅಕ್ಕ ರೇಣುಕಾ ಚಹಾ ಕಾಸಿ ತಂದು ಕೊಟ್ಟಳು. ಹೀಗೆ ಚಹಾ ಕುಡಿಯುತ್ತಾ ಕುಳಿತಾಗ ಮಲ್ಲ ಅವರಪ್ಪ ಫಕ್ಕೀರಪ್ಪನಿಗೆ ‘ಎಪ್ಪಾ ಎಂಟಾನೆ ಕೊಡು’ ಎಂದ. ಫಕ್ಕೀರಪ್ಪ ‘ಯಾಕಲೆ. ಎದುಕದು..’ ಎಂದ. ‘ ಪೆಪ್ಪರುಮಂಟು ತಗೋತಿನಿ’ ಎಂದು ವೈಯ್ಯಾರದಿಂದ ಹೇಳಿದ. ‘ಅಡ್ನ್ಯಾಡಿ ಸೂಳೆಮಗ್ನ. ಪೆಪ್ಪರುಮಂಟಂಥ ಇವಂಗ ಪೆಪ್ಪರುಮಂಟ. ಹೊಟ್ಟಿಗೆ ಹತ್ತಾಕಿಲ್ಲ ನೆತ್ತಿಗೆ ಹತ್ತಾಕಿಲ್ಲ. ಯಾಡು ರೊಟ್ಟಿ ತಿಂದು ತಣ್ಣಗ ಮಕ್ಕೊ ಹೋಗು’ ಎಂದು ಜಬರಿಸಿದ. ಮಲ್ಲ ಪೆಚ್ಚು ಮೋರೆ ಹಾಕಿ ಒಲ್ಲದ ಮನಸಿನಿಂದ ಉಂಡು ಅಂಗಳದಲ್ಲಿ ಹಾಸಿದ್ದ ಹಾಸಿಗೆಯಲ್ಲಿ ಅಡ್ಡಾದ. ಪೆಪ್ಪರುಮಂಟು ತಿನ್ನಲು ದುಡ್ಡು ಹ್ಯಾಗೆ ಹೊಂದಿಸಬೇಕೆಂದು ಯೋಚಿಸುತ್ತ ನಿದ್ದೆಗೆ ಜಾರಿದ. + +ಕನಸು ಬಿತ್ತು. ಈರ ಪೆಪ್ಪರುಮಂಟು ತಿನ್ನತೊಡಗಿದ್ದ. ಮಲ್ಲ ನೋಡುತ್ತಲೇ ನೊಣವಾಗಿ ಈರನ ಮುಷ್ಟಿಯಲ್ಲಿ ಹಿಡಿದಿದ್ದ ಪೆಪ್ಪರುಮಂಟಗಳನ್ನು ಒಂದೊಂದೇ ತಿನ್ನ ತೊಡಗಿದ. ತನ್ನ ಕೈಯೊಳಗಿನ ಪೆಪ್ಪರುಮಂಟು ಖಾಲಿಯಾದಂತೆನಿಸಿ ಈರ ಮುಷ್ಟಿ ನೋಡಿಕೊಂಡ. ನೊಣ ಪೆಪ್ಪರುಮಂಟು ತಿನ್ನತೊಡಗಿತ್ತು. ಮುಷ್ಟಿ ಬಿಗಿ ಮಾಡಿ ಹಿಚುಕತೊಡಗಿದ. ನೊಣ ಹೊರ ಬರಲಾರದೆ ಮುಷ್ಟಿಯಲ್ಲೇ ವಿಲ ವಿಲ ಒದ್ದಾಡತೊಡಗಿತು. ಮಲ್ಲನಿಗೆ ದಢಗ್ಗನೆ ಎಚ್ಚರವಾಯ್ತು. ಮೈ ಪೂರ ಬೆವತು ಬಿಟ್ಟಿದ್ದ. ಬಾಯಿ ಆರಿತ್ತು. ಅವರಪ್ಪನ ತಲೆ ದಿಂಬಿನ ಹತ್ತಿರ ನೀರು ತುಂಬಿ ಇಟ್ಟಿದ್ದ ಚರಿಗೆ ತೆಗೆದುಕೊಂಡು ಗಟ ಗಟ ಕುಡಿದು ಮತ್ತೆ ಹಾಸಿಗೆಯಲ್ಲಿ ಅಡ್ಡಾದ. + +ಮರುದಿನ. ಫಕ್ಕೀರಪ್ಪ ತನ್ನ ಅಂಗಿ ಗೂಟಕ್ಕೆ ನೇತು ಹಾಕಿ ಜಳಕಕ್ಕೆ ಹೋಗಿದ್ದ. ಅವನವ್ವ ನೀಲವ್ವ ರೊಟ್ಟಿ ಮಾಡತೊಡಗಿದ್ದಳು. ರೇಣುಕಾ ಹೊರಗೆ ಬಟ್ಟೆ ತೊಳೆಯತೊಡಗಿದ್ದಳು. ಇವನ ಅಣ್ಣ ಬಸ್ಯಾ ಅಂಗಳದಲ್ಲಿ ಒಡಗಟ್ಟಿಗೆ ಸೀಳತೊಡಗಿದ್ದ. ಇದೇ ಸರಿಯಾದ ಸಮಯವೆಂದು ಗೂಟಕ್ಕೆ ನೇತು ಹಾಕಿದ್ದ ಅಂಗಿಯ ಬಕ್ಕಣದಲ್ಲಿ ದುಡ್ಡು ಹುಡುಕಿದ. ಅದರಲ್ಲಿ ಚಪ್ಪಡಿ ಚುಟ್ಟಾದ ಕಟ್ಟೊಂದನು ಬಿಟ್ಟು ನಯಾಪೈಸೆಯೂ ಇರಲಿಲ್ಲ. ಪೆಪ್ಪರುಮಂಟು ತಿನ್ನುವ ಮಲ್ಲನ ಆಸೆಗೆ ಮತ್ತೆ ತಣ್ಣೀರು ಸುರಿದಂತಾಯ್ತು. ಏನೂ ಮಾಡದವನಂತೆ ಸೀದಾ ಹೊರಗೆ ಬಂದ. + + + +ಇವರೆಲ್ಲಾ ಊಟಗೀಟ ಮಾಡಿಕೊಂಡು ಮತ್ತೆ ಕೂಲಿ ಹೋದರು. ಮಲ್ಲನಿಗೆ ಅದೇನೂ ಮಾಡಬೇಕೋ ತಿಳಿಯದಾಯಿತು. ಕಣ್ಣು ಮುಚ್ಚಿದರೂ, ತೆರೆದರೂ ಪೆಪ್ಪರುಮಂಟವೇ ಕಾಣಿಸಿದಂತಾಗಿ ತೀವ್ರ ಚಿಂತೆಗೀಡಾದ. ಮನೆಯೊಳಗೆ ಹೋಗಿ ಅವರವ್ವ ಅದೆಲ್ಲಾದರೂ ರೊಕ್ಕವಿಟ್ಟಿರಬಹುದೇ ಎಂದು ಉಪ್ಪಿನ ಗಡಗಿ, ಸಾಸಿವೆ, ಜೀರಿಗೆ ಡಬ್ಬಿ ಎಲ್ಲ ತಡಕಾಡಿದ. ಒಂದು ಬಿಲ್ಲೆಯೂ ಸಿಗಲಿಲ್ಲ. ಮಲ್ಲನಿಗೆ ಅಳುವೇ ಬಾಯಿಗೆ ಬಂದಂತೆನಿಸಿತು. ಕಣ್ರೆಪ್ಪೆ ತೇವಗೊಂಡವು. ಅಂಗಿಯಿಂದ ಒರೆಸಿಕೊಂಡು ನಿರುಪಾಯನಾಗಿ ಅಂಗಳದಲ್ಲಿನ ಬೇವಿನಗಿಡದ ಕೆಳಗೆ ಬಂದು ಕುಳಿತ. ತನ್ನಪ್ಪ ಊರೊಳಗೆ ಜಾತ್ರೆ ಇದ್ದಾಗಲೇ ರೊಕ್ಕ ಕೊಡದವನು. ಇನ್ನು ಪೆಪ್ಪರುಮಂಟ ತಿನ್ನಲು ಕೊಡಲಾರನೆಂಬುದು ಮಲ್ಲನಿಗೆ ನಿಕ್ಕಿಯಾಯಿತು. ಚಿಂತೆಯಲ್ಲಿ ಮುಳುಗಿದ. ಈರ ಬಂದ. ಮಲ್ಲ ಅವನ ಕೈಗಳನ್ನು ನೋಡಿದ. ಅವು ಖಾಲಿ ಇದ್ದವು. ರಾತ್ರಿ ತಾನು ನೊಣವಾಗಿದ್ದ ಕನಸು ನೆಪ್ಪಾಗಿ ಚೂರು ಭಯವಾಯಿತು. + +‘ಇವತ್ತು ಪೆಪ್ಪರುಮಂಟ ತಂದಿಲ್ಲನು..’ ಎಂದ ಮಲ್ಲ. ‘ನಮ್ಮಪ್ಪ ದಿನಾ ರೊಕ್ಕ ಕೊಡಲ್ಲ ಯಾವಾಗಾದ್ರೊಮ್ಮೆ ಕೊಡ್ತಾನ. ಕೊಟ್ಟಾಗಷ್ಟೇ ನಾನು ಪೆಪ್ಪರುಮಂಟು ತಗೊಂತೀನಿ..’ ಎಂದ ಈರ. ಮಲ್ಲ ಕ್ಷಣ ಹೊತ್ತು ತಡೆದು ‘ಯಾರ ಅಂಗಡ್ಯಾಗ ತಗೊಂತಿ’ ಎಂದ. ‘ಅಲ್ಲೆತಲಾ ಬಸಪ್ಪನ ಅಂಗಡಿ. ಅಲ್ಲೇ ತಗೊಳ್ಳೋದು. ನೀನು ಒಮ್ಮಿನೂ ಪೆಪ್ಪರುಮಂಟು ತಗೊಂಡೇ ಇಲ್ಲನು..’ ಎಂದು ಈರ ಆಶ್ಚರ್ಯ ವ್ಯಕ್ತಪಡಿಸಿದ. ಮಲ್ಲನಿಗೆ ಮುಖದ ಮ್ಯಾಲೆ ಯಾರೋ ರಪ್ಪನೆ ಹೊಡೆದಂಗ ಅನಿಸಿತು. ಏನೂ ಮಾತಾಡದೇ ಮಲ್ಲ ಕಾಲಬೆರಳಿಂದ ನೆಲದ ಮ್ಯಾಲೆ ಚಿತ್ರ ಬಿಡಿಸುತ್ತ ನಿಂತ. ಈರ ತಮ್ಮಪ್ಪ ಬರುವ ಹೊತ್ತಾತೆಂದು ಮನೆಯ ಕಡೆ ಓಟ ಕಿತ್ತ. + +ತುಸು ಹೊತ್ತು ಕಳೆದಿರಬೇಕು. ಮಲ್ಲ ತಮ್ಮ ಓಣಿಯ ಕೊನೆಗೆ ಇರುವ ಬಸಪ್ಪನ ಅಂಗಡಿ ಕಡೆ ಹೊರಟ. ಅದು ಅಂಗಡಿಯೆಂದರೆ ಅಂಗಡಿಯಲ್ಲ. ಕಟ್ಟಿಗೆಯ ಕಪಾಟು. ಅದರೊಳಗೆ ಬಸಪ್ಪ ತರೇಹವಾರಿ ತಿನಿಸು, ಚುಟ್ಟಾ, ಪಾನ್ ಪರಾಗ್, ಎಲೆ- ಅಡಿಕೆ, ಪಾಪಡಿ, ಚಾಕೊಲೆಟ್, ಗಾಜಿನ ಡಬ್ಬದಲ್ಲಿ ಪೆಪ್ಪರುಮಂಟ ಇಟ್ಟಿದ್ದ. ಮಲ್ಲನಿಗೆ ಆ ಗಾಜಿನ ಡಬ್ಬದಲ್ಲಿದ್ದ ಪೆಪ್ಪರುಮಂಟು ಬಾಯೊಳಗೆ ನೀರು ತರಿಸಿದವು. ಅವುಗಳನ್ನೇ ಕಣ್ತುಂಬಿಕೊಳ್ಳುತ್ತಾ ಅಲ್ಲೇ ಕಪಾಟಿನ ಎದುರಿಗಿದ್ದ ಹಾಸುಗಲ್ಲಿನ ಮ್ಯಾಲೆ ಕುಳಿತ. ಆ ಪೆಪ್ಪರುಮಂಟದ ಡಬ್ಬವನ್ನು ಕದ್ದು ಓಟ ಕೀಳಬೇಕೆನಿಸಿತವನಿಗೆ. ಆದರೆ ಅದು ಅಷ್ಟು ಸುಲಭವಲ್ಲವೆಂದು ಭಾವಿಸಿದ. ಮತ್ತೆ ತಾನು ರಾತ್ರಿ ಕನಸಿನಲ್ಲಿ ನೊಣವಾಗಿದ್ದು ನೆನಪಾಯಿತು. ನೊಣವಾಗಿದ್ದರೆ ಆ ಡಬ್ಬದೊಳಗೆ ಹೋಗಿ ಎಲ್ಲ ಪೆಪ್ಪರುಮಂಟ ತಿನ್ನಬಹುದಿತ್ತು ಅಂದುಕೊಂಡ. ಮರುಕ್ಷಣವೇ ತಾನು ಡಬ್ಬದಲ್ಲಿ ಹೋದಾಗ ಬಸಪ್ಪ ಡಬ್ಬ ಮುಚ್ಚಿಬಿಟ್ಟರೆ ಎಂದುಕೊಂಡು ಸಣ್ಣಗೆ ಬೆವರಿದ. + +ಮಧ್ಯಾಹ್ನದ ಹೊತ್ತಾದ್ದರಿಂದ ಬಸಪ್ಪ ಊಟಕ್ಕೆ ಹೋಗಲು ಅಣಿಯಾದ. ಕಪಾಟಿಗೆ ಕದ ಹಾಕಿ ಕೀಲಿಪತ್ತಾ ಒತ್ತಿದ. ಅದು ಲಾಕ್ ಆಯಿತು. ಮಲ್ಲನಿಗೆ ಅಚ್ಚರಿಯಾಯಿತು. ತಮ್ಮ ಮನೆಯಲ್ಲಿ ಪತ್ತಾಕ್ಕೆ ಕೀಲಿ ಹಾಕಬೇಕು. ಇದು ಒತ್ತಿದರೆ ಲಾಕ್ ಆಗಿದ್ದು ಅವನೊಳಗೆ ಬಗೆಹರಿಯದ ಪ್ರಶ್ನೆಯೊಂದು ಒಡಮೂಡಿತು. ಬಸಪ್ಪ ಮನೆಗೆ ಹೋದ. ಇಂವ ಅಲ್ಲೇ ಹಾಸುಗಲ್ಲ ಮ್ಯಾಲೆ ಕುಳಿತು ಕಾಲಹರಣ ಮಾಡತೊಡಗಿದ. ತಾಸೊತ್ತು ಕಳೆದ ಮ್ಯಾಲೆ ಬಸಪ್ಪ ಮತ್ತೆ ಬಂದ. ಪತ್ತಾಕ್ಕೆ ಕೀಲಿ ಹಾಕಿ ತಿರುವಿ, ಕದ ತೆಗೆದ. ಬಸಪ್ಪ ಕೀಲಿ ತೆಗೆದು ಕದದಲ್ಲೇ ಬಿಟ್ಟಿದ್ದರಿಂದ ಮಲ್ಲ ಕುತೂಹಲದಿಂದ ಆ ಕೀಲಿ ಒತ್ತಿದ. ಲಾಕ್ ಆಯ್ತು. ಚಾವಿಯಿಂದ ತಿರುವಿದ. ಕೀಲಿ ತೆರೆಯಿತು. ಹೀಗೆ ಒಂದೆರಡು ಸಲ ಮಾಡಿದ. ಮಜಾ ಅನಿಸಿತು. ಬಸಪ್ಪ ಅದನ್ನು ನೋಡಿ ‘ಮೂರಾಬಟ್ಟಿ ಮಾಡಿಲೇ ಮಾರಾಯ. ಆಡಾಕ ಬ್ಯಾರೆ ಏನೂ ಇಲ್ಲನೂ ನಿನ್ಗ. ಕೀಲಿಗೆ ಗಂಟು ಬಿದ್ದಿಯಲ..’ ಅಂದ. ಇಂವ ಕಸಿವಿಸಿಯಿಂದ ಗಾಜಿನ ಡಬ್ಬದಲ್ಲಿದ್ದ ಪೆಪ್ಪರುಮಂಟವನ್ನು ಕಣ್ಣಲ್ಲೇ ತಿನ್ನುವವನಂತೆ ನೋಡುತ್ತಾ ಅಲ್ಲಿಂದ ಮೆಲ್ಲಗೆ ಜಾಗ ಖಾಲಿ ಮಾಡಿದ.***ರಾತ್ರಿ ಎಲ್ಲರೂ ಹುರಿದ ಶೇಂಗಾ ತಿನ್ನುತ್ತಾ ಕುಳಿತಿದ್ದರು. ಮಲ್ಲ ಶೇಂಗಾ ತಿನ್ನದೆ ಜೋಲು ಮಾರಿ ಹಾಕಿಕೊಂಡು ಆ ಕಡೆ ಕುಳಿತಿದ್ದ. ನೀಲವ್ವ ‘ ಯಾಕಲಾ ಸಪ್ಪಗದಿಯಲಾ. ಏನಾಯ್ತು. ಜ್ವರಗಿರ ಬಂದಾವನು..’ ಎಂದು ಅವನ ಮೈ ಮುಟ್ಟಿ ನೋಡಿದಳು. ಮೈ ಬೆಚ್ಚಗಿರಲಿಲ್ಲ. ‘ಏನಾತು. ಯಾಕ ಸಪ್ಪಗದಿ. ಯಾರರ ಏನಾದ್ರು ಅಂದಾರೆನು..’ ಎಂದು ಕೇಳಿದಳು. ಇಂವ ಅಳು ಧ್ವನಿಯಿಂದ ‘ಇಲ್ಲ’ ಎಂದ. ‘ಮತ್ಯಾಕ ಸಪ್ಪಗದಿ. ಏನಾತು ಹೇಳು. ನನ್ನ ಮಗ ಶ್ಯಾಣೆ .. ’ ಎಂದು ನೀಲವ್ವ ರಮಿಸುವ ಧ್ವನಿಯಲ್ಲಿ ಕೇಳಿದಳು. ಮಲ್ಲ ಜೋರಾಗಿ ಅಳಹತ್ತಿದ. ಎಲ್ಲರೂ ಗಾಬರಿಗೆ ಬಿದ್ದರು. ಇಂವ ದುಃಖಿಸಿ ದುಃಖಿಸಿ ‘ನನಗ ಪೆಪ್ಪರುಮಂಟ ಬೇಕು..’ ಅಂದ. ಎಲ್ಲರೂ ನಗತೊಡಗಿದರು. ನೀಲವ್ವ ‘ರಾಡ್ಯಾ ಪೆಪ್ಪರುಮಂಟಕ್ಕ ಅಳ್ತಾರನು ಯಾರರ. ನಾನು ಏನು ಆಗೇತಪಾ ಅಂತಾ ಗಾಬರಿ ಆಗಿದ್ದೆ. ನೋಡಪಾ ಅಂಗಡ್ಯಾಂದು ತಿನ್ನೋದು ರೂಢಿ ಮಾಡ್ಕೊಬಾರ್ದು. ಅಂಗಡ್ಯಾಂದು ಹೊಟ್ಟಿಗೆ ಹತ್ತಾಕಿಲ್ಲ ನೆತ್ತಿಗೆ ಹತ್ತಾಕಿಲ್ಲ. ಆರಾಮು ಮನಾಗ ಉಂಡು ಇರ್ಬೇಕಪಾ..’ ಎಂದು ಸಂತೈಸಿದಳು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +‘ಪೆಪ್ಪರುಮಂಟ ಕೊಡಿಸಂತ ನಿನ್ನಿಯಿಂದ ಗಂಟು ಬಿದ್ದಾನಿವ. ಅಂತಾವೆಲ್ಲಾ ತಿನ್ಬಾರದಪಾ ಅಂತ ಹೇಳೇನಿ. ಮತ್ತ ಅದ್ನ ಕೇಳಾಕತ್ಯಾನ ನೋಡಿಂವ’ ಎಂದ ಫಕ್ಕೀರಪ್ಪ. ರೇಣುಕಾ ಅವನ ಕಣ್ಣೀರು ಒರೆಸಿ ಹುರಿದ ಶೇಂಗಾ ಕೊಟ್ಟಳು. ಒಂದೊಂದೆ ತಿನ್ನತೊಡಗಿದ. ಆದರೂ ಅವನಿಗೆ ಸಮಾಧಾನ ಅನಿಸಲಿಲ್ಲ. ಕಣ್ಣೆದುರು ಗಾಜಿನ ಡಬ್ಬದಲ್ಲಿದ್ದ ಪೆಪ್ಪರುಮಂಟು ಗೋಚರವಾದಂತೆನಿಸಿ ಮತ್ತೆ ದುಗುಡಗೊಂಡ.***ಪೆಪ್ಪರುಮಂಟು ನೆನಪಾಗಿ ಮತ್ತೆ ಮಧ್ಯಾಹ್ನ ಮಲ್ಲ ಬಸಪ್ಪನ ಅಂಗಡಿ ಕಡೆ ಹೊರಟ. ಬಸಪ್ಪ ಗಲ್ಲೆಪೆಟ್ಟಿಗಿಯಿಂದ ರೊಕ್ಕ ತೆಗೆದು ಎಣಿಸಿ ಮತ್ತೆ ಗಲ್ಲೆ ಮುಚ್ಚಿದ. ಮಲ್ಲ ಅಲ್ಲೇ ಹಾಸುಗಲ್ಲ ಮ್ಯಾಲೆ ಕುಳಿತ. ಸಮಯ ಸರಿಯುತ್ತಲೇ ಇತ್ತು. ಊಟ ಮಾಡಿ ಬಂದಂತಿದ್ದ ಬಸಪ್ಪ ಕುಳಿತಲ್ಲೇ ತೂಕಡಿಸತೊಡಗಿದ್ದ. ಮಲ್ಲನಿಗೆ ಕದದಲ್ಲೇ ಬಿಟ್ಟಿದ್ದ ಕೀಲಿ ಕಾಣಿಸಿತು. ಅದರಲ್ಲಿ ಎರಡು ಚಾವಿ ಇದ್ದವು. ಹಗೂರ ಒಂದು ಚಾವಿ ಬಿಚ್ಚಿಕೊಂಡು ಏನೂ ಆಗೇ ಇಲ್ಲವೆನ್ನುವಂತೆ ಅಲ್ಲಿಂದ ಕಾಲ್ಕಿತ್ತ. ಅವನು ಪೆಪ್ಪರುಮಂಟು ತಿಂದಷ್ಟೇ ಖುಷಿಗೊಂಡಿದ್ದ.ರಾತ್ರಿ ಊಟ ಮಾಡುವಾಗ ನೀಲವ್ವ ಮಲ್ಲನನ್ನು ಗಮನಿಸಿದಳು. ಅಂವ ಉಲ್ಲಸಿತನಾಗಿದ್ದ. ಆಕೆಯ ತುಟಿಯಲ್ಲಿ ಸಮಾಧಾನದ ನಗು ಅರಳಿತು. ಇಂವ ಖುಷಿಯಿಂದ ಇರುವುದನ್ನು ರೇಣುಕಾ ಕೂಡ ಗಮನಿಸಿದಳು. ‘ಏನು ಮಲ್ಲ ಖುಷಿ ಅದಿಯಲ. ಯಾರಾರ ಪೆಪ್ಪರುಮಂಟ ಕೊಡಿಸಿದ್ರನು..’ ಎಂದಳು. ‘ಯಾರೂ ಕೊಡಿಸಿಲ್ಲ. ದಿನಾ ಇರುವಂಗ ಅದೀನಿ..’ ಅಂತ ಮಲ್ಲ ರೇಣುಕಾಳ ಕಡೆ ನಗು ಚೆಲ್ಲಿದ. ‘ನಿಂದೇನೂ ಹಕೀಕತ್ತ ತಿಳಿಯಲ್ಲಪ ನನ್ಗ. ನಿನ್ನೆರ ಸಪ್ಪಗ ಇದ್ದಿ. ಈಗ ನೋಡಿದ್ರ ಖುಷಿಯಿಂದ ಅದಿ’ ಅಂತ ನೀಲವ್ವ ಮಲ್ಲನಿಗೆ ಲಟಿಗೆ ಮುರಿದಳು. ಊಟ ಮುಗಿಸಿ ಎಲ್ಲರೂ ಅಂಗಳದಲ್ಲಿ ಅಡ್ಡಾದರು. + +ರೇಣುಕಾ ಮಲ್ಲನೊಂದಿಗೆ ಅದೂ ಇದೂ ಮಾತಾಡುತ್ತ ಮಲಗಿದಲ್ಲೇ ನಗೆಚಾಟಿಕೆ ಮಾಡತೊಡಗಿದ್ದಳು. ಇಂವ ಗೊಳ್ಳನೆ ನಗುತ್ತಿದ್ದ. ಫಕ್ಕೀರಪ್ಪ ಸಿಟ್ಟಿನಿಂದ ‘ಹೇ ಮಲ್ಕೊಬೇ. ನೀನು ಅವನಂಗ ಸಣ್ಣ ಹುಡುಗಿ ಆಗಿಯನು. ಹೊಲ್ದಾಗ ದಣ್ಕೊಂಡು ಬಂದಿಲ್ಲಾ. ಸುಮ್ನ ಮಲ್ಗಬಾರ್ದ..’ ಅಂದ. ತುಟಿಪಿಟಕ್ಕೆನ್ನದೆ ಸುಮ್ಮನೆ ಮಲಗಿದರು. + +ಮಲ್ಲನಿಗೆ ಮಾತ್ರ ನಿದ್ದೆ ಕಣ್ಣ ಬಳಿ ಸುಳಿಯುತ್ತಿಲ್ಲ. ಚಡ್ಡಿಯ ಜೇಬಿನಲ್ಲಿ ಕೈಯಾಡಿಸಿದ. ಚಾವಿ ತಾಗಿತು. ಅಲ್ಪ ಸ್ವಲ್ಪ ಇದ್ದ ನಿದ್ದೆಯೂ ಓಟ ಕಿತ್ತಿತು. ಊರು ಆಗಲೇ ಮಲಗಿತ್ತು. ಇಂವ ಎದ್ದು ಆ ಕಡೆ ಈ ಕಡೆ ನೋಡಿದ. ಎಲ್ಲರೂ ನಿದ್ದೆಯ ವಶವಾಗಿದ್ದರು. ಎದ್ದವನೆ ಬಸಪ್ಪನ ಅಂಗಡಿ ಕಡೆ ಹೊರಟ. ಚಂದಿರನ ಹರಕು ಮುರುಕು ಬೆಳಕು ಚೆಲ್ಲಿತ್ತು. ದಾರಿಯಲ್ಲಿ ಒಂದೆರಡು ನಾಯಿ ಬೊಗಳಿದವು. ಹೆದರಿಕೆ ಅನಿಸಿತು. ನಂತರ ನಾಯಿ ಬಾಲ ಅಲ್ಲಾಡಿಸುತ್ತ ತೆಪ್ಪಗಾದವು. ಚೂರು ಧೈರ್ಯ ತಂದುಕೊಂಡು ಮತ್ತೆ ಹೆಜ್ಜೆ ಹಾಕಿದ. ಬಸಪ್ಪನ ಕಪಾಟಿನ ಹತ್ತಿರ ಬಂದ. ಅದು ಇವನಿಗಾಗಿಯೇ ಕಾದು ನಿಂತಂತೆ ಗೋಚರಿಸತೊಡಗಿತ್ತು. ಹಾಸುಗಲ್ಲ ಹತ್ತಿರ ನಿಂತು ಸುತ್ತಲೂ ದಿಟ್ಟಿಸಿದ. ನರಪಿಳ್ಳೆಯ ಸುಳಿವೂ ಇರಲಿಲ್ಲ. ಯಾರಾದರೂ ನೋಡಿಯಾರೆಂಬ ಭಯ ಅವನ ಕಣ್ಣುಗಳಲ್ಲಿ ಮಡುಗಟ್ಟಿತ್ತು. ಕೀಲಿ ತಗೆದು ಕದ ತರೆದ. ಕಪಾಟಿನ ಒಳ ಹೋಗಿ ಮತ್ತೆ ಕದ ಮುಚ್ಚಿಕೊಂಡ. ಕಪಾಟಿನ ತುಂಬಾ ಆವರಿಸಿದ ಗವ್ವನೆ ಕತ್ತಲು ಭಯ ತರಿಸಿತು. ಕಣ್ಣಿಗೆ ಏನೂ ಕಾಣುತ್ತಿಲ್ಲ. ಮತ್ತೆ ಹಗೂರ ಕದ ತೆರೆದ. ಕಪಾಟಿನೊಳಗೆ ಚಂದಿರನ ಬೆಳಕು ಚೆಲ್ಲಿತು. ಆ ಕಡೆ ಬುಡ್ಡಿ ಚಿಮಣಿ ಗೋಚರಿಸಿತು. ಅಲ್ಲೇ ಇದ್ದ ಕಡ್ಡಿ ಪೆಟ್ಟಿಗೆ ತೆಗೆದುಕೊಂಡು ಕದ ಮುಚ್ಚಿದ. ಮತ್ತೆ ಕತ್ತಲಾವರಿಸಿತು. ಕಡ್ಡಿ ಗೀರಿ ಬುಡ್ಡಿ ಚಿಮಣಿಗೆ ಹಚ್ಚಿದ. ಕಪಾಟಿನ ತುಂಬಾ ಬೆಳಕು ಪ್ರಜ್ವಲಿಸಿತು. + + + +ಅಂಗಡಿ ತುಂಬಾ ತಿನಿಸುಗಳು ಗೋಚರಿಸಿದವು. ಯಾವುದು ತಿನ್ನಬೇಕು, ಯಾವುದು ತಿನ್ನಬಾರದು ತಿಳಿಯದಾಯಿತು. ಅಲ್ಲಿ ಆ ಕಡೆ ಪೆಪ್ಪರುಮಂಟದ ಡಬ್ಬಿ ಗೋಚರಿಸಿತು. ಆ ಡಬ್ಬಿ ತೆಗೆದುಕೊಂಡ. ಅವನ ಕಣ್ಣೊಳಗೂ ಬುಡ್ಡಿ ಚಿಮಣಿಯ ಬೆಳಕು ಮೂಡಿತು. ಒಂದು ಪೆಪ್ಪರುಮಂಟು ತೆಗೆದುಕೊಂಡು ಬಾಯೊಳಗಿಟ್ಟುಕೊಂಡ. ಅವನ ಸಂತಸಕ್ಕೆ ಪಾರವೇ ಇರಲಿಲ್ಲ. ಅದರ ರುಚಿಗೆ ಮನಸೋತ. ತಿಂದೇ ತಿಂದ. ಈರ ನೆನಪಾದ. ಅವನ ಮುಷ್ಟಿಯಲ್ಲಿದ್ದ ಐದಾರು ಪೆಪ್ಪರುಮಂಟುಗಳು ಕಂಡಂತಾದವು. ತನ್ನ ಕೈಯ್ಯೊಳಗೆ ಪೆಪ್ಪರುಮಂಟದ ಡಬ್ಬಿಯೇ ಇರುವುದು ಅವನೊಳಗೆ ಹೆಮ್ಮೆ ಮೂಡಿಸಿತು. ಪೆಪ್ಪರುಮಂಟ ತಿನ್ನಲು ತಾನು ನೊಣವಾಗಿದ್ದು ನೆಪ್ಪಾಗಿ ಅಧೀರಗೊಂಡ. ಕಪಾಟನ್ನು ಹೊರಗಿನಿಂದ ಯಾರಾದರೂ ಕದ ಹಾಕಿಕೊಂಡು ಹೋದಾರೆನಿಸಿ ಸಣ್ಣಗೆ ಬೆವರಿದ. ಹೊರಗೆ ಯಾರೋ ಕೆಮ್ಮಿದಂತೆನಿಸಿತು. ಕಪಾಟಿನೊಳಗಿನ ಬೆಳಕು ಕಂಡು ಈ ಕಡೆಗೆ ಬಂದಾರು ಎಂದುಕೊಂಡು ಬುಡ್ಡಿ ಚಿಮಣಿ ಆರಿಸಲು ಅವಸರಿಸಿದ. ಉಫ್ ಎಂದು ಊದಿದ. ಅವನು ಊದಿದಾಗ ಬುಡ್ಡಿ ಚಿಮಣಿಯ ದೀಪದ ಕುಡಿ ಹತ್ತಿರದ ಹಾಳೆಗಳಿಗೆ ತಾಗಿ ಸಣ್ಣಗೆ ಉರಿ ಹತ್ತಿಕೊಂಡಿತು. ಅದನ್ನು ಆರಿಸಲು ಹೋದ. ಉರಿ ಇವನಿಗೆ ಮಣಿಯಲಿಲ್ಲ. ಬುಡ್ಡಿಚಿಮಣಿಗೂ ಹತ್ತಿದ್ದರಿಂದ ಕಪಾಟು ದಿಂಗು ದಿಂಗು ಉರಿಯತೊಡಗಿತು. ಉರಿಯ ಕೆನ್ನಾಲಿಗೆಗೆ ರಕ್ತದ ರುಚಿಯೂ ತಾಗಿ, ಉರಿ ಆಕಾಶದೆತ್ತರ ಚಾಚಿಕೊಂಡಿತು. + +ಟಿ.ಎಸ್. ಗೊರವರ ಗದಗ ಜಿಲ್ಲೆಯ ರೋಣ ತಾಲೂಕಿನ ರಾಜೂರ ಗ್ರಾಮದವರು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ. ಭ್ರಮೆ (2007) ಕಥಾ ಸಂಕಲನ, ಆಡು ಕಾಯೋ ಹುಡುಗನ ದಿನಚರಿ (2011) ಅನುಭವ ಕಥನ, ಕುದರಿ ಮಾಸ್ತರ (2012) ಕಥಾ ಸಂಕಲನ, ರೊಟ್ಟಿ ಮುಟಗಿ (2016) ಕಾದಂಬರಿ, ಮಲ್ಲಿಗೆ ಹೂವಿನ ಸಖ (2018) ಕಥಾ ಸಂಕಲನ ಪ್ರಕಟಿತ ಕೃತಿಗಳು.ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ದ.ರಾ.ಬೇಂದ್ರೆ ಗ್ರಂಥ ಬಹುಮಾನ, ಅರಳು ಪ್ರಶಸ್ತಿ, ಪ್ರಜಾವಾಣಿ, ಕನ್ನಡಪ್ರಭ ದೀಪಾವಳಿ ಕಥಾಸ್ಪರ್ಧೆ ಸೇರಿದಂತೆ ಹಲವು ಪುರಸ್ಕಾರಗಳು ಲಭಿಸಿವೆ. ಸದ್ಯ ‘ಸಂಗಾತ’ ತ್ರೈಮಾಸಿಕ ಸಾಹಿತ್ಯ ಪತ್ರಿಕೆ ಸಂಪಾದಕ. \ No newline at end of file diff --git a/Kenda Sampige/article_468.txt b/Kenda Sampige/article_468.txt new file mode 100644 index 0000000000000000000000000000000000000000..4c589bd218979438fb5d6e7924d7078b03cc1b6a --- /dev/null +++ b/Kenda Sampige/article_468.txt @@ -0,0 +1,77 @@ +ಮಂಜಣಾಳ್ವರಿಗೆ ರಾಜಸಭೆಗೆ ಬರಬೇಕೆಂಬ ಅಪ್ಪಣೆ ಬಂದ ಕಾಲ. ಕುಂಬಳೆ, ಕಾಸರಗೋಡು, ಮಂಜೇಶ್ವರ ಮುಂತಾದ ತುಳು ತೆಂಕಣದ ರಾಜ್ಯದಲ್ಲೊಂದು ಪರ್ವ ಕಾಲ.ಮೈಸೂರಿನ ಸುಲ್ತಾನರ ದಂಡು ಬಂದು ಮಂಗಳೂರಿನಿಂದ ತಲಚೇರಿವರೆಗೆ ಸಣ್ಣ ಪುಟ್ಟ ರಾಜರ ರಾಜ್ಯಗಳನ್ನು ಸ್ವಾಧೀನಪಡಿಸಿಕೊಂಡು, ಅವರನ್ನು ಓಡಿಸಿ ಊರನ್ನೂ, ಊರಲ್ಲಿದ್ದ ದೇವಸ್ಥಾನಗಳ ಭಂಡಾರ, ಚಿನ್ನವನ್ನು ಲೂಟಿ ಮಾಡಿ, ಕೆಲವು ದೇವಸ್ಥಾನಗಳನ್ನು ಧ್ವಂಸ ಮಾಡುತ್ತಿತ್ತು. ಊರಿಡೀ ಸಿಡಿಲು ಬಡಿದಂತೆ ಭೀತಿಯ ವಾತಾವರಣ ತುಂಬಿ ಹೋಗಿತ್ತು. ಅನಂತರ ಬಂದ ಕಂಪನಿ ಸರಕಾರವೂ ಅವರ ಕೆಂಪು ಮೂತಿಯ ಫರೆಂಗಿಗಳೂ ಪೇಟೆಯನ್ನು ಮತ್ತೊಮ್ಮೆ ಲೂಟಿ ಮಾಡಿದರು. ಜನರಿಗೆ ಊರು, ವ್ಯಾಪಾರ, ಬೇಸಾಯ ಸಾಕಾಗಿದ್ದ ಕಾಲವದು. + +ಕುಂಬಳೆಯ ಅರಸು ಕೃಷ್ಣ ವರ್ಮರ ಅಳಿಯಂದಿರನ್ನು ಟಿಪ್ಪು ಸುಲ್ತಾನನು ಮಂಗಳೂರಿನ ಪೇಟೆಯಲ್ಲಿ ಮೆರವಣಿಗೆ ಮಾಡಿಸಿ, ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿ, ಶವಗಳನ್ನು ಕೆಲವು ದಿನ ಹದ್ದು – ಕಾಗೆಗಳಿಗೆ ತಿನ್ನಲು ಬಿಟ್ಟು ಊರವರು ಹಾಗೂ ಮಂಗಳೂರು ಪೇಟೆಯವರು ಸುಲ್ತಾನನ ಹೆಸರು ಕೇಳುವಾಗ ಕ್ಯಾಕರಿಸಿ ಉಗುಳುತ್ತಿದ್ದ ಕಾಲ ಕಳೆದು ಐದಾರು ವರ್ಷ ಸಂದಿತ್ತು. ರಾಮಂತರಸರು ತಲಚೇರಿಗೆ ಓಡಿ, ಬ್ರಿಟಿಷರ ಆಶ್ರಯ ಪಡೆದು ಹಿಂದಿರುಗಿದ್ದರು. ಇಂಗ್ಲಿಷರು ಯುದ್ಧದಲ್ಲಿ ಮೈಸೂರಿನ ಹುಲಿ ಟಿಪ್ಪು ಸುಲ್ತಾನನನ್ನು ಶ್ರೀರಂಗಪಟ್ಟಣದಲ್ಲಿ ಕೊಂದು ರಾಜ್ಯದ ಕೆಲವು ಸೀಮೆಗಳನ್ನು ತಮ್ಮ ಸ್ವಾಧೀನಕ್ಕೆ ತೆಗೆದುಕೊಂಡಿದ್ದರು. ಕುಂಬಳೆ, ಕಾಸರಗೋಡು, ಮಂಜೇಶ್ವರ ಸೀಮೆಗಳನ್ನು ರಾಮಂತರಸರಿಗೆ ಬಿಟ್ಟು ಕೊಟ್ಟಿದ್ದರು. ಆ ಕಾಲದಲ್ಲಿ ರಾಮಂತರಸರು ಯುವಕರನ್ನು ಸೇರಿಸಿ ದಂಡು ಕಟ್ಟಲು ಪ್ರಯತ್ನಿಸುತ್ತಿದ್ದರು. ಅದರಲ್ಲಿ ಅವರಿಗೆ ಎಲ್ಲರಿಗಿಂತಲೂ ಹೆಚ್ಚು ಸಹಾಯ ಮಾಡಿದವರು ಇಚ್ಲಂಪಾಡಿಯ ಕೋಚಣ್ಣಾಳ್ವರು ಮತ್ತು ಪಾಡಿ ಸುಬ್ರಾಯ ಶಾನುಭೋಗರು. ಇಬ್ಬರೂ ಅವರ ನೆಚ್ಚಿನ ನಾಯಕರು. + +ಮುಜಂಗಾವು ಪಾರ್ಥಸಾರಥಿ ದೇವಾಲಯದ ನ್ಯಾಯಮಂಟಪದಲ್ಲಿ ಮಾಯಿಪ್ಪಾಡಿಯ ಅರಸರ ರಾಜಸಭೆ ಸೇರಿತು. ಎಂಟು ಮನೆಗಳ ರಾಯರು, ಬಾರಿಕ್ಕಾಡಿಯ ಕಾಮಡರು, ಕೂಡೇಲಿನ ಕೋಟೆ ಕುಂಜಿತ್ತಾಯರು, ಮೊಗ್ರಾಲ್ನ ಇರ್ನಿರಾಯರು, ಆಗಲ್ಪಾಡಿಯ ಕುಣಿಕುಳ್ಳಾಯರು, ಬೇವಿಂಜೆಯ ಕಕ್ಕಿಲ್ಲಾಯರು, ಕುದ್ರೆಪ್ಪಾಡಿಯ ಪೆಜತ್ತಾಯರು ಹೀಗೆ ಎಂಟು ಜನ ಮಂತ್ರಿಗಳ ಸಭೆ ಸೇರಿತು. ಬೇಳ – ಇಚ್ಲಂಪಾಡಿ, ಮುಕ್ಕೂರು, ಕೋಟೆಕುಂಜಿ ಮತ್ತು ಕೋಡಿಂಜಿ – ಮಜಲೋಡಿಗಳೆಂಬ ನಾಲ್ಕು ಮನೆಗಳ ಗುತ್ತಿನ ಬಂಟರ ಸೇನಾಧಿಪತಿಗಳು, ರಾಜ ಪುರೋಹಿತರಾದ ಬಡಾಜೆ ತಂತ್ರಿಗಳು ಕಟ್ಟೆಯಲ್ಲಿ ಕುಳಿತರು. ಇಷ್ಟು ಜನರಲ್ಲದೆ ಬಂಟರ ಗುತ್ತಿನ ಯಜಮಾನರು, ಬಂಬ್ರಾಣ, ಮಂಗಲ್ಪಾಡಿ, ಕೋಡಿಂಗಾರು, ಕೋಡಿಬೈಲು, ಪೇರೂರು, ಪಾವೂರು, ಪಾದೆ, ಮಲಾರು, ಕುಳ, ಕುಂಡಡ್ಕಗಳ ಬಂಟರಿಗೂ ಅರಸರ ಅಪ್ಪಣೆಯಾಗಿತ್ತು. + +ಮಂಜೇಶ್ವರದ ಜೈನ ಸೆಟ್ಟಿಗಳು, ಕೊಂಕಣಿ ಸಮಾಜದ ಹಿರಿಯರಾದ ಭಂಡಾರ ಮಠದ ಭಂಡಾರಿ, ಶಾನುಭೋಗರು, ಭಕ್ತರ ಮಠದ ಭಕ್ತರು, ಮಣಿಯಾಣಿ ಸಮಾಜ, ಬೋವಿ ಸಮುದಾಯ, ಪೂಜಾರಿಗಳು, ಬ್ಯಾರಿಗಳ ಮುಕ್ರಿ, ಮೊಯ್ಲಾರುಗಳು, ಮುಸಲ್ಮಾನ ವರ್ತಕ ಸಂಘದ ನಾಯಕರು, ಬೆಲ್ಚಡರ ಅಚ್ಚಮ್ಮಾರರು ಹೀಗೆ ಎಲ್ಲ ಸಮಾಜ, ಸಮುದಾಯಗಳ ಯಜಮಾನರು, ಬಾಕುಡರು, ಮುಗೇರರ ಹಿರಿಯರು, ನಲಿಕೆಯವರು, ಕೊರಗರು, ದೊಂಬರು, ಪಾಣಾರರು ಎನ್ನುವ ಪರಿಶಿಷ್ಟ ಸಮಾಜಗಳ ಹಿರಿಯರು ಎಲ್ಲರೂ ಮಜಂಗಾವಿನಲ್ಲಿ ಸೇರಿದ್ದರು. ಪಾರ್ಥಸಾರಥಿ ದೇವಸ್ಥಾನದ ಬೆಳಗ್ಗಿನ ಪೂಜೆ ಮಾಡಿಸಿ ಗಂಧ ಪ್ರಸಾದ ತೆಗೆದುಕೊಂಡು ರಾಮಂತರಸರು ಆಸನದಲ್ಲಿ ಕುಳಿತು ಸಭೆ ಪ್ರಾರಂಭಿಸಿದರು. + +“ಕುಂಬಳೆ ರಾಜ್ಯದ ಅಷ್ಟ ಪ್ರಧಾನರೇ, ಸೇನೆಯ ಮುಂದಾಳುಗಳೇ, ಗುತ್ತಿನ ಗುರಿಕಾರರೇ, ಎಲ್ಲ ಸಮಾಜಗಳ ಹಿರಿಯರೇ, ಕದಂಬ ವಂಶ ಈ ಕುಂಬಳೆ ರಾಜ್ಯವನ್ನು ನಿಮ್ಮೆಲ್ಲರ ಸಹಾಯ ಸಹಕಾರದಿಂದ, ಆಶೀರ್ವಾದದಿಂದ ಈ ತನಕ ಆಳುತ್ತಾ ಬಂದಿದೆ. ಭೂಮಿ ನುಂಗುವ ಕಡಲ್ಗಾಳಿಯಾಗಲಿ, ನೆರೆ ಹಾವಳಿಯಾಗಲಿ ಇಲ್ಲದೆ ಕಾಲಕಾಲಕ್ಕೆ ಮಳೆ ಬಂದು, ಊರು ಸುಭಿಕ್ಷೆಯಲ್ಲಿತ್ತು. ಇತ್ತೀಚಿನ ಕೆಲವು ವರ್ಷಗಳಲ್ಲಿ ಮಾತ್ರ ರಾಜ್ಯಕ್ಕೆ ಕೆಲವು ಆಪತ್ತುಗಳು ಬಂದಿವೆ. ಸುಲ್ತಾನನ ದಂಡು, ಇಕ್ಕೇರಿಯವರ ಯುದ್ಧ, ಫರೆಂಗಿ ಪೋರ್ಚುಗೀಸರ ದಾಳಿ ಮುಂತಾದ ಆಪತ್ತುಗಳೆಲ್ಲ ಕಳೆದು, ನಮ್ಮ ರಾಜ್ಯದಲ್ಲಿ ಕಳೆದ ನಾಲ್ಕೈದು ವರ್ಷಗಳಿಂದ ಕಂಪನಿ ಸರಕಾರದವರ ಸಹಾಯದಿಂದ ಶಾಂತಿ ನೆಲೆ ನಿಂತಿದೆ. ಕುಂಬಳೆ ಸೀಮೆಯಲ್ಲಿ ಅವರು ಹಾಳುಗೈದುದನ್ನೆಲ್ಲ ಸರಿ ಮಾಡಿದ್ದೇವೆ, ಒಡೆದು ಹಾಕಿದ್ದುದನ್ನು ಮತ್ತೆ ಕಟ್ಟಿದ್ದೇವೆ. ದೇವಸ್ಥಾನ, ಭೂತಸ್ಥಾನಗಳಿಗೆ ಕಾಲಕಾಲಕ್ಕೆ ಉಂಬಳಿ ಕೊಟ್ಟು ಆಯನ, ಅಂಕ, ಹಬ್ಬಗಳು ನಡೆಯುವಂತೆ ನೋಡಿಕೊಂಡೆವು. ಕೆಲವು ವರ್ಷಗಳಿಂದ ದೇವಸ್ಥಾನ, ಭೂತಸ್ಥಾನ, ಮಸೀದಿಗಳಿಗೆ ಯಾವುದೇ ತೊಂದರೆ ಇಲ್ಲದೆ, ಜಾತಿ, ಧರ್ಮಗಳ ಜಗಳ ಇಲ್ಲದೆ, ನಾವು ಆಳುತ್ತಾ ಬಂದಿದ್ದೇವೆ. ಆದರೆ ಈಗ ಮೂಡಣದ ಗಟ್ಟದಿಂದ, ಕೊಡಗು ನಾಡಿನಿಂದ, ತೆಂಕಣದ ತಲಚೇರಿಯಿಂದ, ಬಡಗಿನ ಮಂಗಳೂರಿನಿಂದ ದಿನಕ್ಕೊಂದು ಸುದ್ದಿ ಬರುತ್ತಿದೆ. ಲಿಂಗಾಯತರಲ್ಲಿದ್ದ ಕೊಡಗಿನ ಆಳ್ವಿಕೆಯನ್ನು ಕಂಪನಿ ಸರಕಾರ ವಹಿಸಿಕೊಂಡ ಮೇಲೆ ಅದೇ ಪಂಗಡದ ಕೊಡಗಿನ ಸ್ವಾಮಿಯೊಬ್ಬ ತಾನೇ ಮಡಿಕೇರಿಯ ಅರಸೊತ್ತಿಗೆಗೆ ವಾರಸುದಾರ ಎನ್ನುತ್ತಾ ಸೇನೆಯನ್ನೂ ಮದ್ದುಗುಂಡುಗಳನ್ನೂ ಒಟ್ಟು ಮಾಡಿ ಮಂಗಳೂರಿಗೆ ಮುತ್ತಿಗೆ ಹಾಕಲು ತಯಾರಿ ನಡೆಸುತ್ತಿದ್ದಾನಂತೆ. ಈ ತನಕ ವಿಟ್ಲ, ಪುತ್ತೂರು, ಸುಳ್ಯ, ಬೆಳ್ಳಾರೆಗಳ ಬಂಟರು, ಗೌಡರ ನಾಯಕರು ಕುಂಬಳೆಯ ಅರಸೊತ್ತಿಗೆಯನ್ನು ಒಪ್ಪಿಕೊಂಡು ನಮ್ಮೊಂದಿಗೆ ಇದ್ದರು. ಈಗ ಅವರು ಕಲ್ಯಾಣ ಸ್ವಾಮಿ ಎನ್ನುವ ಈ ಲಿಂಗಾಯತ ನಾಯಕನೊಂದಿಗೆ ಸೇರಿದ್ದಾರಂತೆ.” + +ಅರಸರು ಇಷ್ಟು ಹೇಳುವಾಗ ಬೇವಿಂಜೆಯ ಕಕ್ಕಿಲ್ಲಾಯರು ಎದ್ದು ನಿಂತು,“ಮಹಾಪ್ರಭು! ಪುಣಿಚತ್ತಬೈಲು, ಬೆಳ್ಳಿಪ್ಪಾಡಿ, ಬೆಳ್ಳಾರೆಗಳ ಬಂಟರು, ಸ್ವರ್ಗ, ಪಡ್ರೆಗಳ ಮೂಲ್ಯರು, ಮುಳಿಯಾರು, ಆದೂರುಗಳ ನಾಯಕರು ಎಲ್ಲರೂ ಇಂದೂ ನಮ್ಮ ಜೊತೆ ಇದ್ದಾರೆ. ಈ ನಮ್ಮ ಸೀಮೆಯವರಿಗೆ ರಕ್ಷಣೆ ಕೊಟ್ಟು ಮನವರಿಕೆ ಮಾಡಿದರೆ, ಅವರ ಸಹಾಯದಿಂದ ಈ ದರೋಡೆಕೋರರ ದಂಡು ಇನ್ನು ಮೇಲೂ ನಮ್ಮ ಸೀಮೆಗೆ ಬಾರದಂತೆ ನೋಡಿಕೊಳ್ಳಬಹುದು.’’“ಹೌದು ಮಂತ್ರಿಗಳೇ, ಅದಕ್ಕೆ ಬೇಕಾಗಿಯೇ ಇಂದು ಈ ಮಹಾಸಭೆಗೆ ನೀವು ಹಿರಿಯರನ್ನೆಲ್ಲ ಕರೆಸಿರುವುದು. ನಮ್ಮ ತೊಂದರೆ ಇಲ್ಲಿಗೇ ಮುಗಿಯಲಿಲ್ಲ, ಸುಬ್ರಾಯ ಶಾನುಭೋಗರೇ, ಉಳಿದುದನ್ನು ವಿವರಿಸಿ.’’ರಾಮಂತರಸರು ಇಷ್ಟು ಹೇಳಿ ಬಲ ಬದಿಗೆ ನೋಡಿದರು. + +ಭಾರೀ ದೇಹದ, ಗಲ್ಲ ಮೀಸೆಯ, ವಿಸ್ತಾರವಾದ ಎದೆಯ ಬ್ರಾಹ್ಮಣರ ಗುರಿಕಾರ ಸುಬ್ರಾಯ ಶಾನುಭೋಗರು ಎದ್ದು ನಿಂತರು. ಉಟ್ಟ ಪಟ್ಟೆ, ಜನಿವಾರ, ತಲೆಯ ಜುಟ್ಟಿನಲ್ಲಿದ್ದ ತುಳಸೀದಳ ಬಿಟ್ಟರೆ ಸುಬ್ರಾಯ ಶಾನುಭೋಗರನ್ನು ಬ್ರಾಹ್ಮಣ ಎಂದು ಯಾರೂ ಎಣಿಸಲಾರರು. ಎದ್ದು ನಿಂತು ಸಭೆಯನ್ನು ನೋಡಿದ ಗತ್ತು ನೋಡಿದರೆ ಅವರನ್ನು ಯಾರೋ ಬಂಟರ ಗುರಿಕಾರನೆಂದೇ ಎಣಿಸಬೇಕು. ಅದೇ ದರ್ಪ, ಅದೇ ಗಾಂಭೀರ್ಯ. ಸುಬ್ರಾಯ ಶಾನುಭೋಗರು ದೇವರ ಕೋಣೆಗೆ ಹೋಗದೆ ವರ್ಷ ಎಷ್ಟಾಯಿತೋ ಏನೋ. ಆದರೆ ಇಂದಿಗೂ ಮುಂಜಾನೆ ಎದ್ದು ವ್ಯಾಯಾಮ ಶಾಲೆಗೆ ಹೋಗಿ ಕಸರತ್ತು ಮಾಡಿಯೇ ಹೊರಡುವುದು. ಕುಂಬಳೆ, ಮುಲ್ಕಿ, ಗರಡಿಯವರನ್ನು ತರಿಸಿ ಕತ್ತಿಯ ಯುದ್ಧ, ಫರೆಂಗಿಯವರಲ್ಲಿ ತುಪಾಕಿಯ ಗುರಿ, ಬೆಳ್ಚಡರಿಂದ ಬಿಲ್ಲುಬಾಣದ ವಿದ್ಯೆ ಕಲಿತವರು ಶಾನುಭೋಗರು. ಅವರ ಮನೆಯಲ್ಲಿಯೇ ತುಪಾಕಿ, ಬರ್ಚಿ, ಕಠಾರಿ ತಯಾರಿಸುವ ಆಚಾರಿಗಳ ಕೊಟ್ಟಿಗೆ, ಅದರಲ್ಲಿ ದುಡಿಯುವ ಹತ್ತೈವತ್ತು ಆಚಾರಿಗಳಿದ್ದರಂತೆ. ಆ ಕಾಲದ ಯಾವುದೇ ದಂಡಿಗೂ ಕಮ್ಮಿಯಿಲ್ಲದಂತಹ ಸಾವಿರ ಆಳಿನ ದಂಡು ಅವರ ನೇತೃತ್ವದಲ್ಲಿತ್ತು. ಗಲ್ಲ ಮೀಸೆಯ ಪಾಡಿ ಸುಬ್ರಾಯ ಶಾನುಭೋಗರು ದೊಡ್ಡ ಜಮೀನ್ದಾರ. ಸಾವಿರ ಮುಡಿ ಗೇಣಿ ಬರುವ ಆಸ್ತಿ ಅವರದು.ಸುಬ್ರಾಯ ಶಾನುಭೋಗರು ಎದ್ದು ನಿಂತು ಸಭೆಯನ್ನು ನೋಡಿದರು. ಸಭೆ ಗಪ್ ಚುಪ್ ಆಗಿ ಅವರನ್ನೇ ದಿಟ್ಟಿಸಿತು. + + + +“ಕುಂಬಳೆ ರಾಜ್ಯದ ಅರಸರಾದ ರಾಮಂತರಸರೇ, ಹತ್ತು ಮಾಗಣೆಗಳ ರಾಯರೇ, ಬೀಡಿನ ಬಲ್ಲಾಳರೇ, ಗುತ್ತಿನ ಗುರಿಕಾರರೇ, ಸಭೆಯ ಸರ್ವರೇ, ಇಂದು ರಾಮಂತರಸರು ನಿಮ್ಮನ್ನೆಲ್ಲ ಇಲ್ಲಿ ಸೇರಿಸಿ, ರಾಜ್ಯಕ್ಕೆ ಬಂದಿರುವ ಗಂಡಾಂತರಗಳನ್ನು ನಿಮ್ಮಲ್ಲಿ ಚರ್ಚೆ ಮಾಡಿ ನಮ್ಮ ಸೇನೆಯ ಮುಖ್ಯಸ್ಥರು ಹೇಳಿರುವುದನ್ನು ನಿಮ್ಮ ಮುಂದೆ ಇಡಲು ಅಪ್ಪಣೆ ಕೊಟ್ಟಿದ್ದಾರೆ……“ಈಗ ಕೊಡಗಿನ ಕಲ್ಯಾಣಪ್ಪ ಬ್ರಿಟಿಷರ ವಿರುದ್ಧ ಹೋರಾಡಲು ದಂಡು ಕಟ್ಟುತ್ತಿದ್ದಾನಂತೆ. ಅವನ ಜನರು ಊರು ಕೊಳ್ಳೆ ಹೊಡೆಯಲು ಪ್ರಾರಂಭಿಸಿದ್ದಾರಂತೆ. ದಂಗೆ, ಚಾಡಿ, ಹೆಣ್ಣು ಮಕ್ಕಳ ಅಪಹರಣ, ಅತ್ಯಾಚಾರ ನಮ್ಮ ಸೀಮೆಯ ಗಡಿಯ ಆಚೆಗೆ ನಿತ್ಯದ ಗೋಳು.’’“ಇದುವೇ ಸಮಯವೆಂದು ನಮ್ಮ ರಾಜ್ಯದ ಕೆಲವು ಪುಂಡು ಪೋಕರಿಗಳು ತೆಂಕುಂಬಳೆಯಲ್ಲಿ ಗಲಭೆ ಮಾಡುವುದರಲ್ಲಿದ್ದಾರಂತೆ. ಕುಂಬಳೆಯ ಹಮ್ಜದರನ್ನು ಮಂಜೇಶ್ವರದ ಸೆಟ್ಟಿಗಳನ್ನು, ಭಂಡಸಾಲೆಯ ಕೊಂಕಣಿಗಳನ್ನು ದೋಚಲು ತಯಾರಿ ನಡೆಯುತ್ತಿದೆಯಂತೆ. ತೆಂಕುಂಬಳೆಯ ಗಲಭೆಯನ್ನು ನಿಲ್ಲಿಸಬೇಕು. ಅವರ ಜೊತೆ ಯುವಕರು ಸೇರದಂತೆ ಮಾಡಲು ನಿಮ್ಮ ಸಹಾಯ ಬೇಕು. ನೀವು ಕೇಳಿರಬಹುದು. ಬಾರಬೈಲಿನ ಬೀರಣ್ಣ ಬಂಟ ಹಾಗೂ ಕಲ್ಲೂರಿನ ಮಾಯಿಲ, ಕಲ್ಯಾಣಪ್ಪನ ದಂಡಿಗೆ ಭಾರೀ ಸಂಖ್ಯೆಯಲ್ಲಿ ಜನ ಸೇರಿಸಿದ್ದಾರಂತೆ. ತೆಂಕುಂಬಳೆಯಲ್ಲಿ ಸುಬ್ರಾಯ ಎನ್ನುವ ನನ್ನದೇ ಶಿಷ್ಯ ಜನ ಒಟ್ಟುಗೂಡಿಸುತ್ತಿದ್ದಾನಂತೆ. ನಾವೇನು ಮಾಡಿದ್ದೇವೆಂದು ನೀವು ಈಗ ಕೇಳಬಹುದು. ನಾವು ಇಚ್ಲಂಪಾಡಿಯ ಕೋಚಣ್ಣಾಳ್ವರ ಕೈಕೆಳಗೆ ಐದು ಸಾವಿರ ಆಳಿನ ದಂಡನ್ನು ತೆಂಕು, ಬಡಗು ದಿಕ್ಕುಗಳಲ್ಲಿ ಸೀಮೆಯ ಕಾವಲಿಗೆ ನಿಲ್ಲಿಸಿದ್ದೇವೆ. ಕೋಚಣ್ಣಾಳ್ವರಿಗೆ ಇಬ್ಬರು ದಂಡನಾಯಕರು ಸಹಾಯಕ್ಕಿದ್ದಾರೆ. ಕುಂಬಳೆ ಸೀಮೆಯಲ್ಲಿ ನನ್ನ ಆಧಿಪತ್ಯದಲ್ಲಿ ಕಾಸರಗೋಡಿನವರೆಗೆ ಐದು ಸಾವಿರ ಆಳಿನ ದಂಡು ಕಾವಲಿಗಿದೆ. ಚಂದ್ರಗಿರಿ ನದಿಯಿಂದ ಸೀರೆ ನದಿಯವರೆಗೆ ಸಮುದ್ರದ ಬದಿಯಲ್ಲಿ ನನ್ನ ಪಡೆ, ಕುಂಬಳೆಯ ಪೇಟೆಯಲ್ಲಿ ದೊಡ್ಡ ರಾಯಪ್ಪನ ಪಡೆ ಕಾವಲು ಕಾಯುತ್ತಿವೆ. ಸುಬ್ರಾಯನನ್ನು ಸ್ವತಃ ನಾನೇ ನೋಡಿಕೊಳ್ಳುತ್ತೇನೆ.’’ + +“ಇಷ್ಟಲ್ಲದೆ ಇಂದು ನಿಮ್ಮ ಮುಂದೆ ಖಾವಂದರ ಒಪ್ಪಿಗೆ ಪಡೆದು ಒಬ್ಬ ಯುವಕನ ಪರಿಚಯ ಮಾಡಿಕೊಡಬೇಕೆಂದಿದ್ದೇನೆ. ರಾಮಂತರಸರ ಸೇನೆಗೆ ಇತ್ತೀಚೆಗೆ ಸೇರಿ, ಕಳೆದ ಕೆಲವು ತಿಂಗಳಲ್ಲಿ ಸೀರೆ ಹೊಳೆಯಿಂದ ಉಳ್ಳಾಲ ಕಡವಿನವರೆಗಿನ ಜನರಿಗೆ, ದೇವಸ್ಥಾನ, ಭೂತಸ್ಥಾನ, ಮಸೀದಿ, ಬಸದಿಗಳಿಗೆ ರಕ್ಷಣೆ ನೀಡುತ್ತಾ, ಗಲಭೆ ಗಲಾಟೆಗಳಿಗೆ ಆಸ್ಪದ ಕೊಡದೆ ಇರುವ ದಂಡನಾಯಕ ಮಜಲೋಡಿ ಸುಬ್ಬಣ್ಣಾಳ್ವರ ಅಳಿಯ ಮಿತ್ತಬೈಲು ಮಂಜಣಾಳ್ವ ಎಂಬ ಯುವಕ ನನ್ನ ಶಿಷ್ಯ.’’ಪಾಡಿ ಸುಬ್ರಾಯ ಶಾನುಭೋಗರು ಇಷ್ಟು ಹೇಳುವಾಗ ಬಡಾಜೆಯ ತಂತ್ರಿಗಳು ಯುವಕನನ್ನು ಸಭೆಯ ಮುಂದೆ ಕರೆಸಿದರು. ಇನ್ನೂ ಮೂವತ್ತು ದಾಟದ, ಆರಡಿ ಎತ್ತರದ, ಸುಂದರವಾದ ಕಂಬಳದ ಕೋಣನಂತಿರುವ ಯುವಕನನ್ನು ತಂತ್ರಿಗಳು ಸಭೆಯ ಮುಂದೆ ನಿಲ್ಲಿಸಿದಾಗ ಆತ ತಂತ್ರಿಗಳ ಕಾಲು ಮುಟ್ಟಿ ಸಭೆಗೆ ಕೈಮುಗಿದು ನಿಂತ. + +“ಮಂಜಣ ಈ ತನಕ ಸಾವಿರ ಆಳಿನ ದಂಡನಾಯಕ. ಇಂದು ಅವನಿಗೆ, ನೀವೆಲ್ಲ ಒಪ್ಪಿಗೆ ನೀಡಿದರೆ ಐದು ಸಾವಿರ ಆಳಿನ ಸೇನಾ ನಾಯಕನ ಪಟ್ಟ ಕಟ್ಟಿ ಮಂಜೇಶ್ವರ, ವರ್ಕಾಡಿ, ಕನ್ಯಾನ, ಬಾಯಾರು, ಪೈವಳಿಕೆ, ಮಂಗಲ್ಪಾಡಿ ಮಾಗಣೆಗಳ ರಕ್ಷಣೆಯ ಜವಾಬ್ದಾರಿಯನ್ನು ವಹಿಸಬೇಕೆಂದು ಸಭೆ ಸರ್ವರಲ್ಲಿಯೂ, ರಾಜ್ಯದ ಅರಸರಲ್ಲಿಯೂ ನನ್ನ ಬಿನ್ನಹ.’’ಮಂಜಣನಿಗೆ ಬೀರಣ್ಣನ ಭಯ. ಆ ವಿಷಸರ್ಪ ಮಿತ್ತಬೈಲಿಗೆ ನುಗ್ಗಿದರೆ ತನ್ನ ಮಿತ್ತಬೈಲಿನ ಮನೆ ಲೂಟಿ, ತನ್ನ ತಂಗಿಯರ ಅತ್ಯಾಚಾರ ಮಾಡದೆ ಬಿಡಲಿಕ್ಕಿಲ್ಲ. ಅವನಿಗೆ ಮಿತ್ತಬೈಲಿನಿಂದ ತನ್ನ ಕುಟುಂಬವನ್ನು ಓಡಿಸಬೇಕೆಂಬ ಹಟ ಇದೆ. ಅದಕ್ಕೆ ಬೇಕಾಗಿಯೇ ಅವನು ಕಲ್ಯಾಣಪ್ಪನ ದಂಡಿಗೆ ಸೇರಿರುವುದು. ಬೀರಣ್ಣ ಬಂಟ ಊರೆಲ್ಲ ಲೂಟಿ ಮಾಡಿ ತಂದ ಸೊತ್ತನ್ನು ಬಾರಬೈಲಿನ ಪೆಠಾರಿಯಲ್ಲಿಟ್ಟಿದ್ದ. ಬೀರಣ್ಣನಿಗೆ ಕಳೆದೊಂದು ವರ್ಷದಿಂದ ಡಕಾಯಿತಿ, ಲೂಟಿ, ಹೆಣ್ಣುಮಕ್ಕಳ ಅತ್ಯಾಚಾರ ಸಾಮಾನ್ಯ ಸಂಗತಿಯಾಗಿತ್ತು. ಅವನ ಜೊತೆ ಇದ್ದ ಕೆಲವು ಬಾಕುಡರು, ಬೆಳ್ಚಡರು ಹಾಗೂ ಗೌಡರ ಮಕ್ಕಳಿಗೂ ಇದುವೇ ಕಸುಬಾಗಿತ್ತು. ಸ್ವಾತಂತ್ರ್ಯ ಎಂದರೆ ಏನೆಂದೇ ಅವರಿಗೆ ಗೊತ್ತಿರಲಿಲ್ಲ. ದೋಚುವುದು, ಗಲಭೆ ಎಬ್ಬಿಸುವುದು, ಹೆಣ್ಣುಮಕ್ಕಳ ಅತ್ಯಾಚಾರ ಮಾಡುವುದೇ ಅವರ ಸ್ವಾತಂತ್ರ್ಯ ಸಮರ. ಹೀಗಾಗಿ ಮೂಡಣ ಸೀಮೆಯಲ್ಲಿ ಬೀರಣ್ಣ ಬಂಟನ ದಂಡು ಬರುತ್ತದೆಂಬ ಸುದ್ದಿ ಸಿಕ್ಕಿದರೆ ಊರಿಗೆ ಊರೇ ಖಾಲಿಯಾಗುತ್ತಿತ್ತು. + +ಮಂಜಣನ ಬೇಹುಗಾರರು ಎರಡು ದಿನಗಳಿಗೊಮ್ಮೆ ಮೂಡಣ ಸೀಮೆಯ ಸುದ್ದಿ ಮುಟ್ಟಿಸುತ್ತಿದ್ದರು. ಅವರ ಸುದ್ದಿಯ ಪ್ರಕಾರ ಕಲ್ಯಾಣಪ್ಪ ದಂಡು ಹಿಡಿದುಕೊಂಡು ಬದಿಯಡ್ಕದಿಂದ ಕುಂಬಳೆಗೆ ಬರುತ್ತಾನೆಂದೂ ಆಗ ದಾರಿಯಲ್ಲಿ ಸಿಗುವ ಎಡನಾಡು, ಇಚ್ಲಂಪಾಡಿಗಳ ಮನೆಗಳನ್ನು ದೋಚುವ ತಯಾರಿ ಮಾಡಿದ್ದಾನೆಂದೂ ಸುದ್ದಿ ಬಂತು. ಬೀರಣ್ಣನ ದಂಡು ಆನೆಕಲ್ಲಿನ ಮೂಲಕವೇ ವರ್ಕಾಡಿಗೆ ನುಗ್ಗಿ, ಮಂಜೇಶ್ವರಕ್ಕೆ ಬಂದು ದೇವಸ್ಥಾನ, ಮಸೀದಿ, ಬಸದಿಗಳನ್ನು ಕೊಳ್ಳೆ ಹೊಡೆಯಲು ತಯಾರಿ ಮಾಡುತ್ತಿತ್ತು. ಅವನು ದೇವಸ್ಥಾನ, ಮಸೀದಿ, ಬಸದಿಗಳಲ್ಲಿ ಲೂಟಿ ಮಾಡಿದ ಸೊತ್ತುಗಳನ್ನು ಕಲ್ಯಾಣಪ್ಪನಿಗೆ ಒಪ್ಪಿಸಬೇಕು. ಮನೆ, ಜನಗಳಿಂದ ದೋಚಿದ ಸಂಪತ್ತನ್ನು ಅವನೂ, ಅವನ ದಂಡಿನವರೂ ಹಂಚಿಕೊಳ್ಳಬೇಕು ಎಂಬುದು ಕಲ್ಯಾಣಪ್ಪನ ಅಪ್ಪಣೆ. ಆದುದರಿಂದ ಕಲ್ಯಾಣಪ್ಪನಿಗೂ ಬೀರಣ್ಣನಿಗೂ ಊರು ಸೂರೆ ಮಾಡುವುದರಲ್ಲೇ ಹೆಚ್ಚು ಆಸಕ್ತಿ.ಹಾಗಾಗಿ ಮಂಜಣಾಳ್ವನಿಗೆ ಊರು ಸೂರೆಗೈಯಲು ಹೊರಟಿರುವ ಬೀರಣ್ಣ ಮಿತ್ತಬೈಲಿಗೆ ನುಗ್ಗಿ ತನ್ನ ತಂಗಿಯರನ್ನು – ಮನೆಯಲ್ಲಿದ್ದ ಕೊಂಕಣಿಗರ ಹೆಣ್ಣುಮಕ್ಕಳನ್ನು ಅತ್ಯಾಚಾರ ಮಾಡಿ, ಮನೆಯಲ್ಲಿದ್ದ ಭಂಡಾರಿಗಳ ಸೊತ್ತನ್ನು ದೋಚಲು ತಯಾರಿ ಮಾಡುತ್ತಿರಬಹುದೆಂಬ ಭಯ. ಬೀರಣ್ಣ ಎಲ್ಲಿಯಾದರೂ ಮಿತ್ತಬೈಲಿಗೆ ದಾಳಿ ಇಟ್ಟರೆ ಅಲ್ಲಿಯೂ ದೊಡ್ಡ ಯುದ್ಧ ಆಗಬಹುದು. ಮಂಜಣಾಳ್ವನಿಗೆ ಇದು ಗೌರವದ ಪ್ರಶ್ನೆ. ಅನಂತರ ದೇವಯ ಭಂಡಾರಿ, ದುರ್ಗಮ್ಮನವರಿಗೆ ಮಾತ್ರವಲ್ಲ, ಇಡೀ ಮಂಜೇಶ್ವರ ಪೇಟೆಗೇ ಮುಖ ತೋರಿಸಲು ಸಾಧ್ಯವಿಲ್ಲ. ಅವರೆಲ್ಲ ಅವನ ಮೇಲೆ ಭರವಸೆ ಇಟ್ಟವರು. ಬೇರೆ ಯಾವುದಲ್ಲದಿದ್ದರೂ ಈ ಸಾವು, ಅತ್ಯಾಚಾರಗಳನ್ನು ನಿಲ್ಲಿಸಲೇಬೇಕು. + +ಮಂಜಣಾಳ್ವ ಕುಂಬಳೆಯಿಂದ ನೇರ ಕನ್ಯಾನವಾಗಿ ಆನೆಕಲ್ಲು ತಲುಪಿದಾಗ ಹೊಳೆ ಬದಿಯ ಹಾದಿಯಲ್ಲಿ ಹೆಣಗಳು, ಅರೆಜೀವದಲ್ಲಿ ಹೊರಳಾಡುತ್ತಿದ್ದವರು. ಕಲ್ಯಾಣಪ್ಪನ ದಂಡಿನ ರಕ್ತದ ದಾಹ, ಸಂಪತ್ತಿನ ಮೋಹವನ್ನು ಸಾರಿ ಹೇಳುತ್ತಿತ್ತು. ದಾರಿಯ ಒಂದು ಮನೆಯಲ್ಲಿಯೂ ಮನುಷ್ಯರ ಸುಳಿವಿರಲಿಲ್ಲ. ಹೆಚ್ಚಿನವರು ಓಡಿಹೋಗಿದ್ದರು. ಉಳಿದವರು ಸತ್ತು ಬಿದ್ದಿದ್ದರು. ಅರೆಜೀವದಲ್ಲಿದ್ದ ಅವನ ಸೈನ್ಯದ ಒಬ್ಬ ಸೈನಿಕ ಸುದ್ದಿಯನ್ನು ತಿಳಿಸಿದ. + +“ನೂರಾಳು ಸೈನ್ಯದ ದಂಡೊಂದು ಬಂದು ಮನೆಗಳನ್ನು ಲೂಟಿ ಮಾಡುತ್ತಾ, ಕೊಳ್ಳಿ ಇಡುತ್ತಾ, ಓಡಲು ಸಾಧ್ಯವಾಗದವರನ್ನು, ಮಕ್ಕಳನ್ನು ಬಾಳೆದಂಡು ಕೊಚ್ಚಿದಂತೆ ಕೊಚ್ಚಿ ಹಾಕಿದರು. ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿ ಮಾನ ಮುಚ್ಚಲು ಬಟ್ಟೆ ಕೂಡಾ ಕೊಡದೆ ಅಲ್ಲೇ ಎಸೆದುಹೋದರು.’’ ಅರೆಜೀವದಲ್ಲಿದ್ದ ಕುಂಬಳೆ ದಂಡಿನ ಆಳು ಆ ಭೀಕರ ಹತ್ಯಾಕಾಂಡವನ್ನು ವಿವರಿಸಿದ. ಈ ನೂರಾಳು ಸೈನ್ಯದಲ್ಲಿ ಒಬ್ಬ ಬಾಕುಡನೂ, ಇಬ್ಬರು ಬೆಳ್ಚಡರೂ ಇದ್ದರು. ಮಿಕ್ಕವರು ಕನ್ನಡ ಮಾತನಾಡುವ ಗೌಡರು. ಕೆಲವರು ಮಲಯಾಳ ಮಾತನಾಡುವವರೂ ಇದ್ದರು. ಸೈನಿಕನಿಗೆ ಗುರುತು ಸಿಕ್ಕಿದ್ದು ನಾಯಕ ಬೀರಣ್ಣ ಬಂಟ ಹಾಗೂ ಅಚ್ಚಮ್ಮಾರ್ ಮಾಯಿಲ ಬೆಳ್ಚಡರದ್ದು ಮಾತ್ರ. ಅವರು ಹೊಳೆಗೆ ಇಳಿದು ಹೋದರು ಎಂದಾಗ ಮಂಜಣನಿಗೆ ಅರ್ಥವಾಯಿತು. ಅವರು ಹೋದುದು ತಮ್ಮ ಮಿತ್ತಬೈಲು ಲೂಟಿ ಮಾಡಲು ಎಂಬುದು ಅವನಿಗೆ ತಿಳಿದುಹೋಯಿತು. ಮಂಜಣನ ಸೇನೆ ಮಂಜೇಶ್ವರದಲ್ಲಿರಬೇಕು ಎಂಬುದು ಬೀರಣ್ಣ ಬಂಟನ ಲೆಕ್ಕಾಚಾರ. ಹಾಗಾಗಿಯೇ ಮಿತ್ತಬೈಲು ಮನೆ ದೋಚುವ ಯೋಜನೆ ಹಾಕಿದ್ದನು. + +ಮಂಜಣನ ಭಯ ನಿಜವಾಯಿತು. ಅವನು ನೂರು ಸೈನಿಕರನ್ನು ಹೊಳೆಗೆ ಇಳಿಸಿ, ನೇರ ಮಿತ್ತಬೈಲಿಗೆ ಧಾವಿಸುವಂತೆ ಹೇಳಿದ. ಅವನ ಲೆಕ್ಕದಲ್ಲಿ ಬೀರಣ್ಣ ದಾರಿಯಲ್ಲಿರುವ ಮನೆಗಳನ್ನು, ಮುನ್ನಿಪ್ಪಾಡಿಯ ಮಸೀದಿಯನ್ನು ದೋಚುತ್ತಿರಬೇಕು. ಮಿತ್ತಬೈಲಿಗೆ ತಲುಪುವುದಕ್ಕೆ ಮೊದಲೇ ಅವರನ್ನು ಎದುರಿಸಬೇಕೆಂದು ಆತ ತನ್ನ ತುಪಾಕಿ ಹಿಡಿದು, ತನ್ನ ಐವತ್ತು ಜನ ಕುದುರೆ ಸವಾರರನ್ನು ಮೇಲಿನ ಗುಡ್ಡಕ್ಕೆ ಓಡಿಸಿದ. ಅಲ್ಲಿಗೆ ತಲುಪುವಾಗ ‘ಅಯ್ಯೋ ಅಯ್ಯೋ’ ಎಂಬ ಕಿರುಚಾಟ ಕೇಳುತ್ತಿತ್ತು. ಗುಡ್ಡೆಯಿಂದ ಅಂಗಳಕ್ಕೆ ಪಂಜು ಹಿಡಿದುಕೊಂಡು, ತುಪಾಕಿಯ ಶಬ್ದದ ಜೊತೆ ನುಗ್ಗುವ ಮಾಯಿಪ್ಪಾಡಿಯ ಸೇನೆಯನ್ನು ನೋಡಿ ಬೀರಣ್ಣನ ಪುಂಡರ ಪಡೆ ಓಡಲು ಪ್ರಾರಂಭಿಸಿತ್ತು. ಅಷ್ಟರಲ್ಲಿ ಬೆಟ್ಟುಗದ್ದೆಯಲ್ಲಿ ಒಂದೆರಡು ಹೆಣಗಳು ಬಿದ್ದಿದ್ದವು. + +“ಜೈ ದುರ್ಗೆ, ಹಿಡಿಯಿರಿ, ಒಬ್ಬನನ್ನೂ ಓಡಲು ಬಿಡಬೇಡಿ” ಎಂದು ಬೊಬ್ಬಿರಿಯುತ್ತಿದ್ದ ಮಂಜಣನ ಸ್ವರ ಕೇಳಿದಾಗ ಅಂಗಳದ ಬದಿಯಲ್ಲಿ ಕಿನ್ಯನನ ಜೊತೆ ಕತ್ತಿ ಯುದ್ಧ ನಡೆಸುತ್ತಿದ್ದ ಬೀರಣ್ಣ ಬಂಟ ‘ಹರ ಹರ ಮಹಾದೇವ, ಓಡಿ’ ಎನ್ನುತ್ತಾ ಎದುರಿನ ಬಾಕಿಮಾರು ಗದ್ದೆಗೆ ಹಾರಿ ಫಸಲಿನ ನಡುವೆ ಓಡಿದ. ಬೈಲಿನತ್ತ ನೋಡುವಾಗ ಮಂಜಣಾಳ್ವನ ನೂರಾಳಿನ ಸೈನ್ಯ ಪಂಜು ಹಿಡಿದುಕೊಂಡು ಐತನ ನಾಯಕತ್ವದಲ್ಲಿ ಮನೆಯತ್ತ ಬರುತ್ತಿತ್ತು. ಬೀರಣ್ಣನ ದಂಡು ಅಡಕತ್ತರಿಯಲ್ಲಿ ಸಿಲುಕಿತು. ಚೆಲ್ಲಾಪಿಲ್ಲಿಯಾಗಿ ಓಡಹತ್ತಿದ ದರೋಡೆಕೋರರ ಗುಂಪನ್ನು ಎದುರಿಗೆ ಸಿಕ್ಕಿದ ಐತನ ಸೇನೆ ಕೊಚ್ಚಿಹಾಕಲು ಪ್ರಾರಂಭಿಸಿದಾಗ ಗದ್ದೆಯ ಕೆಸರಿನಲ್ಲಿ ಬಿದ್ದು ಓಡಲು ಸಾಧ್ಯವಾಗದೆ ‘ದಮ್ಮಯ್ಯ ಕೊಲ್ಲಬೇಡಿ’ ಎನ್ನುವ ಸ್ವರವೇ ದೊಡ್ಡದಾಗಿ ಕೇಳಿಬಂತು. ಬೀರಣ್ಣ ಬಂಟ ಮಾತ್ರ ಹೇಗೋ ತಪ್ಪಿಸಿಕೊಂಡು ಓಡಿಬಿಟ್ಟ. ಅವನು ಹಗಲಲ್ಲಿ ನೋಡಿದ ಹಾದಿಯಲ್ಲವೇ ಮಿತ್ತಬೈಲು! + +ಬೈಲುಗದ್ದೆಯಲ್ಲಿ ಬಿದ್ದಿದ್ದ ದರೋಡೆಕೋರರನ್ನು ಬೆಟ್ಟುಗದ್ದೆಗೆ ಎಳೆದು ತಂದ ಮಂಜಣ ಒಬ್ಬೊಬ್ಬನ ಮುಖವನ್ನೇ ಪಂಜಿನ ಬೆಳಕಿನಲ್ಲಿ ನೋಡಿದ. ಬೀರಣ್ಣ ಓಡಿದ್ದಾನೆ ಎಂಬುದು ಸ್ಪಷ್ಟವಾಯಿತು.“ನಿಮ್ಮ ಮಧ್ಯದಲ್ಲಿ ಮಾಯಿಲ ಬೆಳ್ಚಡ ಇದ್ದಾನೆಯೇ?’’ ಎಂದು ಕೇಳಿದಾಗಯಾರೂ ಉತ್ತರಿಸಲಿಲ್ಲ. ಕೊನೆಗೂ ಕತ್ತಿ ತೋರಿಸಿ, ಜುಟ್ಟು ಹಿಡಿದು ಎತ್ತಿ ಗದರಿಸಿದಾಗ “ನಾನಲ್ಲ ಒಡೆಯಾ ಅವನು” ಎಂದು ಆತ ಬೊಬ್ಬೆ ಹಾಕಿದ. ಅಷ್ಟು ಹೇಳುವಾಗ ಕಂಬಳಿ ಹೊದ್ದು ಕುಳಿತಿದ್ದ ಮಾಯಿಲ, ಗಾಯಗೊಂಡ ಹುಲಿಯಂತೆ ಸೊಂಟದಲ್ಲಿದ್ದ ಕತ್ತಿಯನ್ನು ತೆಗೆದು ಮಂಜಣನ ಮೇಲೆ ಎರಗಲು ಯತ್ನಿಸಿದ. ಮಂಜಣನ ಕತ್ತಿ ಅವನ ಕತ್ತನ್ನು ತುಂಡರಿಸಿ ರುಂಡ – ಮುಂಡಗಳನ್ನು ಬೇರೆ ಮಾಡಿತು. ಕಾಲಡಿಗೆ ಬಿದ್ದ ರುಂಡವನ್ನು ‘ಜೈ ದುರ್ಗೆ’ ಎನ್ನುತ್ತಾ ಚೆಂಡಿನಂತೆ ಒದ್ದಾಗ ಹತ್ತಿರದ ತೆಂಗಿನ ಬುಡ್ಡೆಗೆ ತಾಗಿ ಕೆಳಗಿನ ಗದ್ದೆಗೆ ಬಿತ್ತು. ಮಂಜಣನಿಗೆ ಬೀರಣ್ಣ ತಪ್ಪಿಸಿಕೊಂಡದ್ದು ನಿರಾಶೆ ತಂದಿತ್ತು. ಎಲ್ಲರನ್ನೂ ಕಟ್ಟಿಹಾಕಿ ಪೈವಳಿಕೆಯ ಸೆರೆಮನೆಗೆ ಹಾಕುವಂತೆ ತಮ್ಮಂದಿರಲ್ಲಿ ಹೇಳಿ ಪದವಿಗೆ ಕುದುರೆಯನ್ನು ಓಡಿಸಿದ. ಮನೆಯಂಗಳದಲ್ಲಿ ಕುಳಿತು ನೀರು ಕುಡಿಯುವಷ್ಟೂ ಸಮಯವಿಲ್ಲ. ಓಡಿಹೋದ ಬೀರಣ್ಣನನ್ನು ಹಿಡಿಯದಿದ್ದರೆ ಅವನು ಗಾಯಗೊಂಡ ಹುಲಿಯಂತೆ ಸಿಕ್ಕಿದಲ್ಲೆಲ್ಲಾ ಬಾಯಿ ಹಾಕಬಹುದು. ಕೋಳ್ಯೂರು, ವರ್ಕಾಡಿ ದೇವಸ್ಥಾನಗಳನ್ನು ಕೊಳ್ಳೆ ಹೊಡೆಯಲೂ ಬಹುದೆಂದೂ ಮಂಜಣ ತನ್ನ ದಂಡನ್ನು ವರ್ಕಾಡಿಯುತ್ತ ಓಡಿಸಿದ. ಮಿತ್ತಬೈಲಿನಿಂದ ಓಡಿದ ಬೀರಣ್ಣ, ಕನ್ಯಾನಕ್ಕೆ ಬಂದು ದಂಡನ್ನು ಮಂಗಳೂರಿನ ಕಡೆಗೆ ತಿರುಗಿಸಿದ. ಮುನ್ನೂರು ಸೈನಿಕರು ಮಂಗಳೂರಿಗೆ ಹೊರಟರು. + +ಬೀರಣ್ಣ ಬಂಟ ಕಲ್ಯಾಣಪ್ಪನಿಗೆ ಸುಬ್ರಾಯ ಶಾನುಭೋಗರನ್ನು ಹಿಡಿದುಕೊಡುತ್ತೇನೆ ಎಂದು ಹೇಳಿ ಹೊರಟವ, ಅದನ್ನು ಬಿಟ್ಟು ಮಿತ್ತಬೈಲಿಗೆ ಹೋಗಿ ಕೆಲವು ಸೈನಿಕರನ್ನು ಕಳೆದುಕೊಂಡ. ಅದಕ್ಕಿಂತಲೂ, ಹೇಡಿಯಂತೆ ಓಡಿಬಂದದ್ದು ಅವಮಾನವಾಗಿತ್ತು. ಅವನಿಗೆ ಕಲ್ಯಾಣಪ್ಪನ ಭಯವೂ ಪ್ರಾರಂಭವಾಯಿತು. ಅವನ ಅಪ್ಪಣೆಗೆ ತಪ್ಪಿದರೆ ತಲೆ ತೆಗೆಯುವ ಜಾತಿ ಅವನು. + +ಬೀರಣ್ಣನ ಸೈನಿಕರು ಕನ್ಯಾನದಿಂದ ಉಳಿಯತ್ತಡ್ಕ ತಲುಪಿ ಒಟ್ಟಾದರು. ಅವರು ಸುಬ್ರಾಯ ಶಾನುಭೋಗರ ಮನೆಗೆ ದಾಳಿ ಮಾಡಲು ತಯಾರಿ ಮಾಡುತ್ತಿರುವುದನ್ನು ಶಾನುಭೋಗರ ಬೇಹುಗಾರರು ಬಂದು ತಿಳಿಸಿದರು. ಸೈನ್ಯವನ್ನು ಕುಂಬಳೆಯಲ್ಲಿ ಬಿಟ್ಟು ಬಂದ ಶಾನುಭೋಗರು, ಬೆಳ್ಚಡರ ಬಿಲ್ಲಾಳುಗಳ ದಂಡಿಗೆ ಜನ ಕಳುಹಿಸಿದರು. ಜೊತೆಗಿದ್ದ ಹತ್ತು ಮಂದಿ ಸೈನಿಕರನ್ನೂ, ಹತ್ತು ಮಂದಿ ಒಕ್ಕಲಿನ ಯುವಕರನ್ನೂ ಸೇರಿಸಿಕೊಂಡು ಉಳಿಯತ್ತಡ್ಕ ಪದವಿನಲ್ಲಿ ಬೀರಣ್ಣನ ಸೇನೆಯನ್ನು ಎದುರಿಸಲು ತಯಾರಾದರು.ಇಡೀ ಪದವಿನಲ್ಲಿ ಹುಲ್ಲಿನ ಮತ್ತು ಮುಳಿಹುಲ್ಲಿನ ಕಟ್ಟುಗಳನ್ನು ರಾಶಿ ಹಾಕಿ, ಮಧ್ಯೆ ಸಿಡಿಮದ್ದು ಇಟ್ಟು ಬೆಂಕಿ ಕೊಡಲು ತಯಾರಿ ನಡೆಸಿದರು. ಬೀರಣ್ಣ ಬಂಟನ ಸೇನೆ ಉಳಿಯತ್ತಡ್ಕ ಪದವಿನ ಕೊನೆಯಿಂದ ಶಾನುಭೋಗರ ಮುಳಿಹುಲ್ಲಿನ ಗುಡ್ಡೆಗೆ ತಲುಪುವಾಗ ಒಕ್ಕಲಿನ ಯುವಕರು ಮುಳಿಹುಲ್ಲಿನ ರಾಶಿಗೆ ಬೆಂಕಿ ಕೊಟ್ಟರು. ಬೀರಣ್ಣನ ಸೇನೆ ಮುಳಿಹುಲ್ಲಿನ ರಾಶಿಯಲ್ಲಿದ್ದ ಸಿಡಿಮದ್ದಿನ ಶಬ್ದಕ್ಕೆ ಚಲ್ಲಾಪಿಲ್ಲಿಯಾಯಿತು. ಉಳಿಯತ್ತಡ್ಕ ಪದವು ಇಡೀ ಹೊತ್ತಿಕೊಂಡು, ಪುಂಡರ ಸೇನೆ ಓಡುತ್ತಿರುವಾಗ ಒಕ್ಕಲಿನವರು ಹಾಗೂ ದಂಡಿನವರು ಕಾಯಿಸಿಟ್ಟ ಕೊಬ್ಬರಿ ಎಣ್ಣೆಯನ್ನು ಪುಂಡರ ಮೇಲೆ ಎರಚಿದರು. ಬೀರಣ್ಣ ಬಂಟನ ಪುಂಡು ಸೇನೆಗೆ ಏನಾಗುತ್ತಿದೆ ಎಂದು ತಿಳಿಯುವ ಮೊದಲೇ ಸುಬ್ರಾಯ ಶಾನುಭೋಗರ ಕುದುರೆ ಪದವು ಇಡೀ ತಿರುಗಲು ಪ್ರಾರಂಭಿಸಿತ್ತು. ಅವರ ಖಡ್ಗ ಮೃತ್ಯುವಿನ ನಾಲಗೆಯಂತೆ ಎದುರು ಸಿಕ್ಕವರನ್ನೆಲ್ಲಾ ಬಲಿ ತೆಗೆದುಕೊಂಡಿತು. ಅಷ್ಟಾಗುವಾಗ ಕುಂಬಳೆಯ ಗರಡಿಯ ಬಿಲ್ಲುಗಾರರ ಸೇನೆ ಬಂದು ತಲುಪಿತು. + +ಸುಬ್ರಾಯ ಶಾನುಭೋಗರ ಅಂದು ರಾತ್ರಿಯ ಯುದ್ಧ ದಂತಕತೆಯಾಗಿ ಹೋಯಿತು. ಅವರ ಕತ್ತಿ ಇಪ್ಪತ್ತು, ಮೂವತ್ತು ಜನರನ್ನು ಬಲಿ ತೆಗೆದುಕೊಂಡಿರಬಹುದು. ಮುನ್ನಾರಾಳು ಸೈನ್ಯ ಬಿಟ್ಟು ಓಡಿದವರು ಬದುಕುಳಿದರು. ಮಿಕ್ಕವರು ಶಾನುಭೋಗರ ಕತ್ತಿಗೂ, ಗರಡಿಯ ಯುವಕರ ಬಾಣಗಳಿಗೂ ಬಲಿಯಾದರು. ಯುದ್ಧ ಮುಗಿಯುವಾಗ ಬೀರಣ್ಣ ಬಂಟ ಓಡಿಹೋಗಿದ್ದಾನೆಂದು ತಿಳಿಯಿತು. ಬೆಳಗ್ಗೆ ಬಂದ ಬೇಹುಗಾರರು ಬೀರಣ್ಣ ಮಂಜೇಶ್ವರ ಕಡವಿನ ಬಳಿ ಕಾಣಸಿಕ್ಕಿದುದನ್ನು ತಿಳಿಸಿದರು. ಮಧ್ಯಾಹ್ನವಾಗುವಾಗ ಬಂದ ಬೇಹುಗಾರರು ಆತ ಮಂಜೇಶ್ವರದ ಕಡಲ ಬದಿಯಲ್ಲಿ ಬೊಬ್ಬರ್ಯ ಕಲ್ಲಿನ ಬಳಿ ಅಡಗಿ ಕುಳಿತ ಸುದ್ದಿಕೊಟ್ಟರು. ಬೀರಣ್ಣ ಕುಂಬಳೆಗೆ ಹೋಗಿ ಸುಬ್ರಾಯ ಹೆಗ್ಡೆಯನ್ನು ಹುಡುಕಿ ಅವನೊಂದಿಗೇ ಸೇರಲು ಪ್ರಯತ್ನಿಸಬಹುದೆಂದು ನೆನೆದು ಶಾನುಭೋಗರಿಗೆ ನಿರಾಶೆಯಾಯಿತು. ಇಬ್ಬರನ್ನೂ ಒಂದೇ ದಿಕ್ಕಿನಲ್ಲಿ ಹಿಡಿಯಬೇಕೆಂದು ತಯಾರಿ ಮಾಡಿದವರು ಸುದ್ದಿಯನ್ನು ಮಂಜಣಾಳ್ವನಿಗೆ ತಲುಪಿಸಿದರು. ಅಲ್ಲಿ ಸುಬ್ರಾಯ ಹೆಗ್ಡೆಯ ಕತೆ ಬೇರೆಯೇ ಇತ್ತು.ಎಡನಾಡಿನಲ್ಲೊಂದು ವಿಶೇಷ ನಡೆದು ಹೋಯಿತು. ಎಡನಾಡು ಸುಬ್ರಹ್ಮಣ್ಯ ಭಟ್ಟರ ಮನೆ ಲೂಟಿ ಮಾಡಿ ಇಚ್ಲಂಪಾಡಿಯ ಮನೆ ದೋಚಲೆಂದು ಹೊರಟ ಕಲ್ಯಾಣಪ್ಪನ ದಂಡಿನ ಕತೆಯೇ ಬದಲಾಯಿತು. + +ಸುಬ್ರಹ್ಮಣ್ಯ ಭಟ್ಟರ ಮನೆ ತಲುಪುವಾಗ ಅಂದು ಅವರ ಮನೆಯಲ್ಲಿ ವರ್ಷಂಪ್ರತಿ ನಡೆಯುವ ರಾಮನವಮಿ ಪೂಜೆ, ಊಟಕ್ಕೆ ತಯಾರಿ ನಡೆಯುತ್ತಿತ್ತು. ಆ ಮನೆಯಲ್ಲಿ ರಾಮನವಮಿಯ ಪೂಜೆ ಯಾವಾಗಲೂ ಭಾರಿ ಸಡಗರ ಸಂಭ್ರಮದಿಂದ ನಡೆಯುತ್ತದೆ. ಕಲ್ಯಾಣಪ್ಪನ ದಂಡು ಬೈಲು ಇಳಿದು ಅಂಗಳಕ್ಕೆ ತಲುಪುವಾಗ ಪಾನಕ, ಕೋಸಂಬರಿ ತಯಾರಾಗಿತ್ತು. ಒಳಗೆ ಸುಮಾರು ಇನ್ನೂರು ಜನರಿಗೆ ಪಾಯಸದೂಟ ಸಿದ್ಧವಾಗಿತ್ತು. ನೆಂಟರಿಷ್ಟರು ಚಪ್ಪರದಲ್ಲಿದ್ದರು. ಮಂಗಳಾರತಿಗೆ ಕಾಯುತ್ತಿದ್ದರು. ಬೈಲಿನಿಂದಲೇ ಅಂಗಳಕ್ಕೆ ನುಗ್ಗಿದ ಸೈನಿಕರನ್ನು ನೋಡಿದ ನೆಂಟರೆಲ್ಲಾ ಗುಡ್ಡೆಗೆ ಓಡಿದರು. ಚಪ್ಪರ ಖಾಲಿಯಾಯಿತು. ಮನೆಯಲ್ಲಿ ಸುಬ್ರಹ್ಮಣ್ಯ ಭಟ್ಟರೂ ಎರಡು ಮೂರು ಹೆಂಗಸರು ಮಾತ್ರ ಉಳಿದರು. ಬೆಲ್ಲ, ಏಲಕ್ಕಿ, ಶುಂಠಿ, ಕರಿಮೆಣಸು, ಹಾಕಿ ತಯಾರಿಸಿದ ಪಾನಕವೂ, ಹತ್ತಿರವೇ ಇಟ್ಟಿದ್ದ ಸೌತೆಕಾಯಿ, ಬೇಳೆ, ತೆಂಗಿನಕಾಯಿ ಹಾಕಿ ಕಲಸಿದ್ದ ಕೋಸಂಬರಿಯೂ ದೊಡ್ಡ ಪಾತ್ರೆಯಲ್ಲಿತ್ತು. ಪೂಜೆಗೆ ಕುಳಿತಿದ್ದ ಸುಬ್ರಹ್ಮಣ್ಯ ಭಟ್ಟರು ಏಳಲಿಲ್ಲ. ಹೇಗೂ ಸಾಯುವವ ಯಾಕೆ ರಾಮನ ಪೂಜೆ ಮಾಡುತ್ತಲೇ ಸಾಯಬಾರದೆಂದು ಕಣ್ಣು ಮುಚ್ಚಿಕೊಂಡು ರಾಮ ಮಂತ್ರ ಹೇಳಲು ಪ್ರಾರಂಭಿಸಿದರು. ತನ್ನ ಸರ್ವಸ್ವವನ್ನೂ ಜೀವಮಾನ ಇಡೀ ನಂಬಿದ ಆರಾಧ್ಯ ದೈವ ರಾಮನ ಕೈಗೆ ಕೊಟ್ಟರು. ಹೆಂಡತಿ ರುಕ್ಮಿಣಿಯಮ್ಮನಿಗೆ ಗೊತ್ತಿತ್ತು. ತನ್ನ ಗಂಡ ಪ್ರಾಣ ಹೋದರೂ ಏಳುವುದಿಲ್ಲವೆಂದು. + +ರುಕ್ಮಿಣಿಯಮ್ಮ ಚಪ್ಪರದಡಿಯಲ್ಲಿ ಚಾಪೆ ಹಾಕಿ “ಕುಳಿತುಕೊಳ್ಳಿ ಮಗಾ, ಕುಳಿತುಕೊಳ್ಳಿ” ಎಂದು ಸ್ವಾಗತಿಸಿದಾಗ, ಕಲ್ಯಾಣಪ್ಪನ ದಂಡಿನವರು ಈ ಮುದುಕಿಯನ್ನು ಏನು ಮಾಡುವುದೆಂದು ತಿಳಿಯದೆ, ನಿಂತು ಪೂಜೆ ನೋಡಲು ಪ್ರಾರಂಭಿಸಿದರು. ಕಲ್ಯಾಣಪ್ಪನೂ ತಲೆಯ ಮುಂಡಾಸು, ಕೈಲ್ಲಿದ್ದ ತುಪಾಕಿ, ಕತ್ತಿಗಳನ್ನು ಸೈನಿಕನೊಬ್ಬನ ಕೈಗೆ ಕೊಟ್ಟು ದೇವರ ಕೋಣೆಯ ಎದುರು ಅಂಗಳದಲ್ಲಿ ಕಣ್ಣು ಮುಚ್ಚಿ ನಿಂತುಕೊಂಡ. + +ಸುಬ್ರಹ್ಮಣ್ಯ ಭಟ್ಟರು ಮಂಗಳಾರತಿ ತಟ್ಟೆ ತೆಗೆದುಕೊಂಡರು. ಶಂಖ ಊದಲು, ಜಾಗಟೆ ಬಾರಿಸಲು ಜನವಿರಲಿಲ್ಲ. ‘ರುಕ್ಕೋ’ ಎಂದು ಹೆಂಡತಿಯನ್ನು ಕರೆದರು. ಶಂಖ, ಜಾಗಟೆ ಅವರ ಕೈಗೆ ಕೊಟ್ಟರು. ರುಕ್ಮಿಣಿಯಮ್ಮ ಆಚೀಚೆ ನೋಡಿ ಕಣ್ಣು ಮುಚ್ಚಿ ನಿಂತಿದ್ದ ಕಲ್ಯಾಣಪ್ಪನನ್ನು ‘ಮಗಾ’ ಎಂದು ಕರೆದು ಜಾಗಟೇ ಅವನ ಕೈಗೆ ಕೊಟ್ಟು ಶಂಖ ಊದಲು ಪ್ರಾರಂಭಿಸಿದರು. ಕಲ್ಯಾಣಪ್ಪ ಜಾಗಟೆ ಬಾರಿಸಿದ. ಒಂಬತ್ತು ಬಗೆಯ ದೀಪಾರಾಧನೆ ಆಗಿ ಮಂಗಳಾರತಿ ತಟ್ಟೆ ಹಿಡಿದುಕೊಂಡು ಸುಬ್ರಹ್ಮಣ್ಯ ಭಟ್ಟರು ಹೊರಗೆ ಬರುವಾಗ ಕಲ್ಯಾಣಪ್ಪ ಜಾಗಟೆ ಬಾರಿಸುತ್ತಲೇ ಇದ್ದ. ಭಟ್ಟರು ‘ಸ್ವಾಮಿ’ ಎಂದು ಆರತಿ ತೋರಿಸಿದರು. ಆರತಿ ತೆಗೆದುಕೊಂಡು ಚಪ್ಪರಕ್ಕೆ ಬಂದ ಭಟ್ಟರು ಎಲ್ಲರಿಗೂ ಆರತಿ ತೋರಿಸಿದರು. + + + +ಒಳಗಿಂದ ರುಕ್ಮಿಣಿಯಮ್ಮ ಕಂಚಿನ ಲೋಟ, ಬಾಳೆ ಎಳೆ ಹಿಡಿದುಕೊಂಡು ಹೊರಗೆ ಬಂದು ರಾಮನವಮಿಯ ಪಾನಕ, ಕೋಸಂಬರಿ ಕೊಟ್ಟಾಗ ಸೈನಿಕರು ಸುಮ್ಮನೆ ನಿಂತುಕೊಂಡರು. ಒಬ್ಬರೂ ಪಾನಕವನ್ನಾಗಲೀ, ಕೋಸಂಬರಿಯನ್ನಾಗಲೀ ಮುಟ್ಟಲಿಲ್ಲ. ರುಕ್ಮಿಣಿಯಮ್ಮ ಒಂದು ಲೋಟ ಪಾನಕವನ್ನು ಗಂಡನಿಗೆ ಕೊಟ್ಟು ತಾನೂ ಕುಡಿದು ಕೋಸಂಬರಿ ತಿಂದು ಕೇಳಿದರು,“ಇನ್ನು ತಿನ್ನಬಹುದಾ ಮಗಾ?’’“ಅದ್ಯಾಕೆ ಹಾಗೆ ಕೇಳಿದಿರಿ?” ಕಲ್ಯಾಣಪ್ಪ ಕೇಳಿದ.“ಏನಿಲ್ಲ ನಾವು ಪಾನಕಕ್ಕಾಗಲೀ, ಕೋಸಂಬರಿಗಾಗಲೀ ವಿಷ ಹಾಕಲಿಲ್ಲ. ಮದ್ದು ಹಾಕಲಿಲ್ಲವೆಂದು ನಿಮಗೆ ತೋರಿಸಲು ಹಾಗೆ ಮಾಡಿದೆ ಮಗಾ.’’“ಓಹೋ, ಹಾಗೇಯೋ” ಕಲ್ಯಾಣಪ್ಪ ಜೋರಾಗಿ ನಕ್ಕು ಹೇಳಿದ.“ನೀವು ತಾಯಿ, ಅಂತಹದೇನೂ ಮಾಡಲಿಕ್ಕಿಲ್ಲವೆಂದು ನಮಗೆ ಗೊತ್ತಿದೆ.’’“ಅದ್ಹೇಗೆ ಮಗಾ?’’“ಮಗಾ ಎಂದು ಕರೆದ ತಾಯಿ ಮಕ್ಕಳಿಗೆ ಮದ್ದು ಹಾಕುವುದಿಲ್ಲವೆಂದು ನನಗೆ ಗೊತ್ತಿದೆ. ನಮ್ಮ ಸಮಸ್ಯೆ ಅದಲ್ಲ.’’“ಮತ್ತೇನು?’’“ಪಾನಕ ಕುಡಿದು, ಕೋಸಂಬರಿ ತಿಂದಾದ ಮೇಲೆ ಈ ಮನೆಯನ್ನು ಹೇಗೆ ದೋಚುವುದು? ಚಿನ್ನ, ಹಣ ಹೇಗೆ ಕೊಂಡು ಹೋಗುವುದು? ಎಂಬುದೇ ನಮ್ಮ ಸಮಸ್ಯೆ.’’“ಅಯ್ಯೋ! ಅಷ್ಟೇನಾ ಮಗಾ. ನಮ್ಮ ಮನೆಯಲ್ಲಿದ್ದ ಚಿನ್ನ, ಹಣ ಎಲ್ಲವನ್ನೂ ನಮ್ಮ ಕೈಯಾರೆ ನಿಮಗೆ ಕೊಡುತ್ತೇವೆ. ಪಾನಕ ಕುಡಿದು ಕೋಸಂಬರಿ ತಿನ್ನಿ. ಶ್ರೀರಾಮನ ಆಶೀರ್ವಾದ ಅದು, ಸುಸ್ತಾಗಿ ಹಸಿವಿನಿಂದ ಬಂದಿದ್ದೀರಿ, ಬನ್ನಿ ತಿನ್ನಿ’’ರುಕ್ಮಿಣಿಯಮ್ಮ ಪಾನಕವನ್ನೂ ಕೋಸಂಬರಿಯನ್ನೂ ಕಲ್ಯಾಣಪ್ಪನ ಕೈಗೆ ಕೊಟ್ಟಾಗ ಆತ ಅದನ್ನು ಕುಡಿದು, ತಿಂದ. ಸುಬ್ರಹ್ಮಣ್ಯ ಭಟ್ಟರು ಸೈನಿಕರಿಗೆಲ್ಲ ಹಂಚಿದರು. ಸೈನಿಕರೆಲ್ಲ ಪಾನಕ ಕುಡಿದು ಕೋಸಂಬರಿ ತಿಂದರು. + +ರುಕ್ಮಿಣಿಯಮ್ಮ ಗಂಡನನ್ನು ಕರೆದು ಬೀಗದ ಕೈಗೊಂಚಲನ್ನು ಕೊಟ್ಟರು. ಭಟ್ಟರು ಹಣದ ಪೆಟ್ಟಿಗೆಯನ್ನು ಪೆಠಾರಿಯಿಂದ ತೆಗೆದು ಚಾವಡಿಯಲ್ಲಿಡುವಾಗ, ರುಕ್ಮಿಣಿಯಮ್ಮ ಚಿನ್ನಾಭರಣಗಳ ಪೆಟ್ಟಿಗೆಯನ್ನು ತಂದಿಟ್ಟವರೇ ಒಂದು ಮಾತು ಹೇಳಿದರು.“ಮಗಾ, ಈ ಚಿನ್ನ, ಹಣ, ಒಡವೆಯ ಪೆಟ್ಟಿಗೆ ತೆಗೆದುಕೊಳ್ಳುವುದಕ್ಕಿಂತ ಮೊದಲು ನನ್ನ ಒಂದು ಕೇಳಿಕೆಯಿದೆ. ಬೇಡವೆಂದು ಹೇಳಬಾರದು. ಕೇಳಬಹುದಾ ನಾನು?’’“ಕೇಳಿ, ಏನು ಕೇಳಿತ್ತೀರಿ?’’“ನಾನು ಕೇಳಿದ ಮೇಲೆ ಇಲ್ಲವೆಂದು ಹೇಳಬಾರದು. ನೀವು ಸುಸ್ತಾಗಿ ಬಂದಿದ್ದೀರಿ. ನನ್ನ ಎಣಿಕೆಯಂತೆ ನೀವು ಸರಿಯಾಗಿ ಊಟ ಮಾಡದೆ ಕೆಲವು ದಿನಗಳಾದರೂ ಆಗಿರಬಹುದು. ರಾಮನವಮಿಯ ಊಟ ತಯಾರಾಗಿದೆ. ನೀವೆಲ್ಲರೂ ಊಟ ಮಾಡಿ ಹೋಗಬೇಕು. ಯಾರಿಗಾಗಿ ಅಡುಗೆ ಮಾಡಿದ್ದೋ ಅವರ ಹಣೆಯಲ್ಲಿ ಅದು ಬರೆಯಲಿಲ್ಲ. ನೀವಾದರೂ ಉಂಡು ಹೋದಿರಾದರೆ ಆ ಸೀತಾರಾಮರಿಗೆ ತೃಪ್ತಿಯಾಗಬಹುದು. ನಮಗೆ ಪುಣ್ಯ ಸಿಗಬಹುದು. ಏನು ಹೇಳ್ತಿ?’’“ಅಮ್ಮನ ಅಪ್ಪಣೆಯಾದರೆ ಬೇಡವೆಂದು ಹೇಳುವ ಮಗ ಯಾರಿದ್ದಾನೆ? ಬನ್ನಿ ತಾಯಿ, ನಾನು ಎಲೆ ಹಾಕಬೇಕು. ನೀವು ಬಡಿಸಬೇಕು. ನಾವು ಅದನ್ನು ಉಣ್ಣಬೇಕು. ಅದುವೇ ದೇವರ ಪ್ರಸಾದ ನನಗೆ.’’ಗಳಿಗೆ ಕಳೆದಾಗ ಸುಸ್ತಾಗಿ ಹಸಿದು ಬಂದ ಸೈನಿಕರು ಪಾಯಸದ ಊಟ ಮಾಡಿ “ಹರಹರ ಮಹಾದೇವ’’ ಎಂದು ಹೇಳಿ ಎದ್ದರು. ಹೊರಡುವಾಗ ಚಾವಡಿಯಲ್ಲಿ ನಿಂತಿದ್ದ ರುಕ್ಮಿಣಿಯ್ಮನ ಕಾಲಿಗೆ ಬಿದ್ದ ಕಲ್ಯಾಣಪ್ಪನಿಗೆ ಭಟ್ಟರು ಹೇಳಿದರು.“ಚಿನ್ನ, ಹಣ ತೆಗೆದುಕೊಂಡು ಹೋಗಿ.’’“ಭಟ್ರೆ, ಉಂಡ ಮನೆಗೆ ಕನ್ನ ಹಾಕಿ ದೋಚುವ ಫಟಿಂಗರಲ್ಲ ನಾವು. ನಾವು ಪರದೇಶದಿಂದ, ತುಳುವಮ್ಮನನ್ನು ದೋಚಲು ಬಂದ ಕೆಂಪು ಮೂತಿಯವರನ್ನು ಓಡಿಸಲು ಬಂದ ಸ್ವಾತಂತ್ರ್ಯ ಹೋರಾಟಗಾರರು.’’ಕಾಲಿಗೆ ಬಿದ್ದವನ ತಲೆ ಸವರಿದ ರುಕ್ಮಿಣಿಯಮ್ಮನ ಕಣ್ಣಲ್ಲಿ ನೀರಾಡಿತು. ತಲೆ ಸವರಿ ನಿಂತಿದ್ದ ಅನ್ನಪೂರ್ಣೇಶ್ವರಿಯ ಮುಖ ನೋಡಿದ ಕಲ್ಯಾಣಪ್ಪನ ಕಣ್ಣಲ್ಲೂ ನೀರು ತುಂಬಿ ರುಕ್ಮಿಣಿಯಮ್ಮ ಕೇಳಿದರು,“ನನಗೊಂದು ಭಿಕ್ಷೆ ಕೊಡಲಾರೆಯಾ ಮಗಾ?’’“ಬೇಡುತ್ತಾ, ದೋಚುತ್ತಾ ಹೋಗುವ ಸೈನಿಕನಲ್ಲಿ ಏನು ಕೇಳುತ್ತೀರಮ್ಮಾ? ಕೇಳಿ. ನನ್ನಿಂದ ಸಾಧ್ಯವಾದರೆ ಕೊಡುತ್ತೇನೆ. ಆದರೆ ಇನ್ನೊಂದು ಊಟಕ್ಕೆ ನಿಲ್ಲಲು ಹೇಳಬೇಡಿ. ಸಮಯವಿಲ್ಲ ನನಗೆ.’’“ಮಗಾ, ಈ ಮಾಗಣೆ ಬಡವರ, ದುಡಿಯುವವರ ಊರು. ಇಲ್ಲಿ ಮನೆಗಳನ್ನು ದೋಚಿ, ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡುವುದನ್ನೆಲ್ಲಾ ಬಿಟ್ಟು ನೇರ ಮಂಗಳೂರಿಗೆ ಹೋಗಿ ಆ ಕೆಂಪು ಮೂತಿಯವರ ಭಂಡಾರ ಲೂಟಿ ಮಾಡು. ಬಡವರನ್ನು ದೋಚಿದೆ ಎಂದಾದರೇ ಅವರು ಕೊಡುವ ಶಾಪವಲ್ಲದೆ ಬೇರೇನು ಸಿಗುತ್ತದೆ ಹೇಳು ನಿನಗೆ?’’ಕಲ್ಯಾಣಪ್ಪ ಹಾಗೂ ದಂಡಿನವರು ಮುದುಕಿಯ ಮಾತನ್ನು ಕೇಳಿದರು. ಒಂದು ನಿಮಿಷ ಯಾರೂ ಏನೂ ಮಾತನಾಡಲಿಲ್ಲ. ಒಬ್ಬರ ಮುಖವನ್ನೊಬ್ಬರು ನೋಡುತ್ತಿದ್ದರು. ಎಲ್ಲರೂ ಕಲ್ಯಾಣಪ್ಪನ ಮುಖ ನೋಡಿದಾಗ ಕಲ್ಯಾಣಪ್ಪ ಹೇಳಿದ,“ಹರಹರ ಮಹಾದೇವಾ! ಬನ್ನಿ, ನಾವು ನಮ್ಮ ಈ ತಾಯಿ ಹೇಳಿದ ಮಾತಿಗೆ ಬೆಲೆ ಕೊಟ್ಟು, ಅವರ ಇಂಗಿತವನ್ನು ನಡೆಸಿಕೊಡುತ್ತೇವೆಂದು ಮಾತು ಕೊಡೋಣ. ಈ ಅನ್ನಪೂರ್ಣೇಶ್ವರಿ ಅಮ್ಮನ ಅನ್ನದ ಋಣವನ್ನು ತೀರಿಸಿಕೊಳ್ಳೋಣ. ಬನ್ನಿ, ನಾವು ಉಕ್ಕುಡದಿಂದಲೇ ಕನ್ಯಾನ, ವಿಟ್ಲಕ್ಕೆ ಹೋಗಿ ವಿಟ್ಲದ ಕಂಪನಿ ಸರಕಾರದ ಖಜಾನೆಯನ್ನು ಎತ್ತಿಕೊಂಡು ಮಂಜೇಶ್ವರಕ್ಕೆ ಹೋಗೋಣ. ಇನ್ನು ಮಂಗಳೂರಿನ ಪೇಟೆಗೆ ಮುಟ್ಟುವವರೆಗೆ ಮನೆ ದೋಚುವ ಅಥವಾ ಕೊಳ್ಳಿಯಿಡುವ ಸುದ್ದಿ ನನ್ನ ಕಿವಿಗೆ ಬೀಳಬಾರದು. ಯಾರಾದರೂ ಹೆಣ್ಣು ಮಕ್ಕಳನ್ನು ಅತ್ಯಾಚಾರ ಮಾಡಿದ ಸುದ್ದಿ ನನ್ನ ಕಿವಿಗೆ ಬಿದ್ದರೆ ಸ್ವತಃ ನಾನೇ ಶಿಕ್ಷೆ ಕೊಡುತ್ತೇನೆ. ನೆನಪಿರಲಿ.’’ತಿರುಗಿ ನೋಡದೆ ಕಲ್ಯಾಣಸ್ವಾಮಿ ‘ಉಂಡ ಮನೆಯ’ ಅಂಗಳದಿಂದ ಮರಳಿದನಂತೆ.ಸುಬ್ರಾಯ ಶಾನುಭೋಗರು ಈ ಕತೆ ಹೇಳುವಾಗ ಮಂಜಣಾಳ್ವನಿಗೆ ಒಂದು ಪವಾಡವೇ ನಡೆದಂತಾಯಿತು. + +“ಇನ್ನು….?’’“ಅವರು ಈಗ ಮಂಜೇಶ್ವರಕ್ಕೆ ಬಂದು ಮಂಗಳೂರಿಗೆ ಹೋಗುವುದೆಂದು ತೀರ್ಮಾನವಾಗಿದೆ. ಮಂಜೇಶ್ವರದಲ್ಲಿ ಸುಬ್ರಾಯ ಹೆಗ್ಡೆಯ ದಂಡು ಅವರನ್ನು ಸೇರಿಕೊಂಡು ಇಲ್ಲಿಂದ ಎಲ್ಲಿಗೆ – ಏನು ಎಂದು ಯೋಚಿಸುತ್ತಾರಂತೆ. ಕಲ್ಯಾಣ ಸ್ವಾಮಿಯ ದಂಡು ಸುಮಾರು ಎರಡು ಸಾವಿರ ಇರಬಹುದು. ನಾವು ನಮ್ಮ ಜಾಗ್ರತೆಯಲ್ಲಿರಬೇಕು.’’“ದೋಚಲೆಂದೇ ಬಂದ ಕಲ್ಯಾಣಪ್ಪನ ದಂಡಿನಲ್ಲಿರುವ ಯುವಕರು ದೋಚದೆ ಇರಲು ಸಾಧ್ಯವೇ ಶಾನುಭೋಗರೇ?’’“ಕಲ್ಯಾಣಪ್ಪನ ಭಯದಿಂದ ಹಾಗೂ ನಮ್ಮ ದಂಡಿನ ತಯಾರಿಯನ್ನು ನೋಡಿ ದರೋಡೆಕೋರರು ಹೆಚ್ಚಿನ ಗಲಾಟೆ ಮಾಡದೆ ಮಂಗಳೂರಿಗೆ ಹೋಗಲೂಬಹುದು. ನಾಳೆ ಇಚ್ಲಂಪಾಡಿಯ ಸೇನೆಯೂ ನಮ್ಮ ಪಾಡಿ ಕುಂಬಳೆಯ ಸೇನೆಯೂ ನಿನ್ನೊಂದಿಗೆ ಸೇರಿದರೆ ಮಂಜೇಶ್ವರ ಮಾಗಣೆಯಲ್ಲಿ ಯಾವುದೇ ಗಡಿಬಿಡಿ ಇಲ್ಲದೆ ಹೋಗಲೂಬಹುದು. ನಾನು ಈಗ ಬಂದುದು ಅದನ್ನು ಹೇಳಲು ಅಲ್ಲ. ನಾಳೆ ಸುಬ್ರಾಯ ಹೆಗ್ಡೆ ಹಾಗೂ ಕಲ್ಯಾಣಪ್ಪನ ಸೇನೆ ಮಂಜೇಶ್ವರದಲ್ಲಿ ಒಟ್ಟಾಗುವಾಗ ಅವರಿಗೊಂದು ಊಟ ಹಾಕುವ ವ್ಯವಸ್ಥೆ ಮಾಡಬೇಕು. ಮಂಜೇಶ್ವರದ ವ್ಯಾಪಾರಿಗಳು ಸ್ವಲ್ಪ ಹಣ, ಚಿನ್ನ ಒಟ್ಟು ಮಾಡಿ ಕಲ್ಯಾಣಪ್ಪನಿಗೆ ಕೊಟ್ಟರಾದರೆ ಕಲ್ಯಾಣಪ್ಪ ದಾಂಧಲೆ ಮಾಡದೆ ಊರು ಬಿಡಲೂಬಹುದು.’’“ಅಲ್ಲ ಸ್ವಾಮಿ, ಕಲ್ಯಾಣಪ್ಪನ ಸೇನೆಯ ವಿರುದ್ಧ ನಾವು ಹೋರಾಡಿ ಅವರ ಡಕಾಯಿತಿಯನ್ನು ಅಲ್ಲೇ ಮುಗಿಸುವುದು ಒಳ್ಳೆಯದಲ್ಲವೇ ಸ್ವಾಮಿ?’’“ಮಂಜಣಾಳ್ವ, ನೀನು ಯುವಕ. ನಿನ್ನ ಬಿಸಿ ರಕ್ತಕ್ಕೆ ಯುದ್ಧವೇ ಇಷ್ಟವೆಂದು ನನಗೆ ಗೊತ್ತು. ಆದರೆ ಯೋಚನೆ ಮಾಡು. ಸೋಲು – ಗೆಲುವು ಯಾರದೇ ಆಗಿರಲಿ. ಕಡಿಮೆಯೆಂದರೂ ಎರಡು ಮೂರು ಸಾವಿರ ಸೈನಿಕರು ಸಾಯಬಹುದು. ಎಷ್ಟೋ ಜನ ಕೈಕಾಲು ಕಳೆದುಕೊಳ್ಳಬಹುದು. ಯುದ್ಧದ ಪರಿಣಾಮ ಒಂದು ದಿನ ಅಲ್ಲ, ಎಷ್ಟೋ ವರ್ಷ ಅನುಭವಿಸಬೇಕಾದೀತು. ಎಷ್ಟೋ ಕುಟುಂಬಗಳು, ಎಷ್ಟೋ ಮನೆಗಳು ಈ ಯುದ್ಧದಿಂದಾಗಿ ಹಾಳಾಗುತ್ತವೆ ಗೊತ್ತಾ? ಬೇಸಾಯ ಮಾಡಿಕೊಂಡು ಸುಖದಿಂದ ಗಂಜಿಯೋ, ಅಂಬಲಿಯೋ ಕುಡಿಯುತ್ತಿರುವ ರೈತ, ಲೋಕಕ್ಕೆ ಒಳ್ಳೆಯದಾಗಲೆಂದು ಪೂಜೆ ಮಾಡಿಕೊಂಡು ದೇವರಲ್ಲಿ ಬೇಡುತ್ತಿರುವ ಭಟ್ಟರು, ವ್ಯಾಪಾರ ಮಾಡುತ್ತಿರುವ ಸೆಟ್ಟಿ, ಬ್ಯಾರಿ, ಕೊಂಕಣಿ ಬಂಟ ಬಾರಗೆಯವರು ಎಷ್ಟು ವರ್ಷಗಳವರೆಗೆ ಈ ಯುದ್ಧದ ನೋವನ್ನು ಅನುಭವಿಸಬೇಕಾಗುತ್ತದೆ ಗೊತ್ತಾ?’’“ನಮ್ಮ ರಾಜ್ಯದಲ್ಲಿ ಇಕ್ಕೇರಿಯ ನಾಯಕರು, ಅಬ್ಬಕ್ಕ, ಪೋರ್ಚುಗೀಸರ ಯುದ್ಧ, ಮೈಸೂರು ಸುಲ್ತಾನರ ಕಾಳಗದ ಪರಿಣಾಮ ಈಗಲೂ ನಾವು ಅನುಭವಿಸುತ್ತಿದ್ದೇವೆ.  ಆ ಪುಸಲರನ್ನು ನೋಡು. ಮೈಸೂರು ಸುಲ್ತಾನನ ಸುಬೇದಾರನ ಅಹಂಕಾರದ ಮತಾಂಧತೆಯ ಫಲ ಅವರು. ಹಾಳಾಗಿ ಬಿದ್ದಿರುವ ನಮ್ಮ ಬಸದಿಗಳನ್ನು, ದೈವ, ದೇವರ ಗುಡಿಗಳನ್ನು ನೋಡು. ಅದೆಲ್ಲಾ ಯುದ್ಧದ ಫಲ. ಈ ದಂಡು ಹಿಡಿದುಕೊಂಡು ಬಂದವರು ನಮ್ಮ ದೇವಸ್ಥಾನ, ದೈವಸ್ಥಾನಗಳ ಭಂಡಾರಗಳನ್ನು ದೋಚಿ, ಮೂರ್ತಿಗಳನ್ನು ಪುಡಿಗೈದು ಹೋದರು. ಅಂತಹ ಯುದ್ಧ ನಮ್ಮ ಊರಿಗೆ ಬೇಕೇ ಮಂಜಣಾ? ದಾರಿಯಲ್ಲಿ ಹೋಗುವ ಮಾರಿ ದಾರಿಯಲ್ಲೇ ಹೋಗುವುದು ಒಳಿತಲ್ಲವೇ? ಅದನ್ನು ಮನೆಗೆ ಕರೆಯಬೇಕಾ? ಊರಿಗೆ ಹೋಗಿ ಇನ್ನು ನಾಲ್ಕು ಬೆಟ್ಟು ಗದ್ದೆ ಅಗೆದು ತೆಂಗು, ಬಾಳೆ ನೆಟ್ಟು ಬೆಳೆಸುವುದು ಒಳ್ಳೆಯದಲ್ಲವಾ? ಗುಡ್ಡ ಅಗೆದು ಹೊಳೆಯ ನೀರು, ನೆರೆ, ಮಳೆಗಳ ಜೊತೆ ಹೋರಾಟ ಮಾಡುವುದು ಈ ಕತ್ತಿ, ತುಪಾಕಿಗಳ ಜೊತೆ ಹೋರಾಟ ಮಾಡುವುದಕ್ಕಿಂತ ಎಷ್ಟೋ ಸುಖ. ಅಲ್ಲವೇ ಹೇಳು?’’ಕೇಳುತ್ತಿದ್ದ ಮಂಜಣನಿಗೆ ತಾನು ಅಗೆದು ಮಾಡಿದ ಗದ್ದೆ, ತೋಟಗಳು, ಬಾವಿ, ಕೋಳ, ಏತಗಳೆಲ್ಲಾ ತನ್ನ ಕಣ್ಣೆದುರು ತೇಲಿ ಬಂದವು. + +“ಹೌದು ಸ್ವಾಮಿ, ಮಲಗುವಾಗ ಅದನ್ನೇ ನೆನೆದು ನಿದ್ದೆ ಬರುವುದಿಲ್ಲ. ನಮ್ಮ ಮನೆಯಲ್ಲಿ ಮದುವೆಗೆ ತಯಾರಾಗಿ ಕುಳಿತ ತಂಗಿಯರ ನೆನಪಾಗುತ್ತದೆ. ಕಂಬಳದ ಗದ್ದೆಯನ್ನು ಯಾವಾಗ ಹದಗೊಳಿಸಲಿಲ್ಲವೆಂದಾಗುತ್ತದೆ. ಬಿಟ್ಟರೆ ಈಗಲೇ ಬೈಲಿಗೆ ಓಡಿ, ಹೊಳೆಗೆ ಹಾರಿ ಆ ಬದಿ ಈ ಬದಿ ಈಜೋಣವೆನಿಸುತ್ತಿದೆ.’’“ಏಳು, ಪೇಟೆಗೆ ಹೋಗಿ ಕೊಂಕಣಿಗರ ಸಮಾಜವನ್ನು ವ್ಯಾಪಾರದ ಬ್ಯಾರಿಗಳನ್ನು ಭಂಡಸಾಲೆಯ ಸೆಟ್ಟಿಗಳನ್ನು ಒಟ್ಟು ಮಾಡಿ ನಾಳೆಯ ದಿನವನ್ನು ಹೇಗೆ ಸುಧಾರಿಸುವುದೆಂದು ಯೋಚಿಸೋಣ.’’ಶಾನುಭೋಗರೂ, ಮಂಜಣಾಳ್ವರೂ ಎಲ್ಲರಿಗೂ ಆಳು ಕಳುಹಿಸಿ, ರಥಬೀದಿಯ  ಭಕ್ತರ ಮಠದಲ್ಲಿ ಸೇರಿಸಿ ತಮ್ಮ ಯೋಜನೆಯನ್ನು ಅವರ ಮುಂದಿಟ್ಟರು. ಮಾತುಕತೆ ಮುಗಿದಾಗುವಾಗ ಕಲ್ಯಾಣಪ್ಪನ ದಂಡಿಗೆ ದೇವಸ್ಥಾನದಲ್ಲೂ, ಸುಬ್ರಾಯ ಹೆಗ್ಡೆಯ ಸೇನೆಗೆ ಬಸದಿಯಲ್ಲೂ ಊಟದ ವ್ಯವಸ್ಥೆಯ ಏರ್ಪಾಡಾಯಿತು. ಕುಂಬಳೆ ಸೇನೆಯವರಿಗೆ ಬಡಾಜೆ ತಂತ್ರಿಗಳ ದೇವಸ್ಥಾನದಲ್ಲಿ ಊಟದ ಏರ್ಪಾಡಾಯಿತು. ಕೋಚಣ್ಣಾಳ್ವರ ಸೇನೆಗೆ ತಲಪಾಡಿ ಗುತ್ತಿನಲ್ಲೂ, ಮಂಜಣಾಳ್ವರ ದಂಡಿಗೆ ಭಂಡಾರಿ ಮಠದ ಭಂಡಾರಿಗಳ ಮನೆಯಲ್ಲೂ ಊಟದ ವ್ಯವಸ್ಥೆ ಮಾಡುವುದೆಂದು ತೀರ್ಮಾನವಾಗುವಾಗ ಮಧ್ಯರಾತ್ರಿ ಕಳೆಯಿತು. ಮಂಜಣಾಳ್ವರ ಭಾವ ಕಾಂತಣ್ಣನನ್ನು ಮಿತ್ತಬೈಲು, ಕೋಳ್ಯೂರು, ಸುಂಕದಕಟ್ಟೆಗಳ ಕಾವಲಿಗೆ ಕಳುಹಿಸಿ, ಶಾನುಭೋಗರನ್ನು ಬಡಾಜೆಗೆ ಕಳುಹಿಸಿ ಹೊರಡುವಾಗ ಬೊಬ್ಬರ್ಯ ಕಲ್ಲಿನ ಬಳಿಯಿಂದ ಬೊಬ್ಬೆ ಕೇಳಿಸಿತು. ಹೊಳೆಬದಿಯಲ್ಲಿದ್ದ ಸೇನೆಯವರಲ್ಲಿ ಬೋವಿಗಳ ಮತ್ತು ಪುಸಲರ ಜನ ಬಂದು ದೂರು ಕೊಟ್ಟು ಬೊಬ್ಬೆ ಹೊಡೆಯುತ್ತಿದ್ದರು. + +ವಿಚಾರಿಸುವಾಗ ಬೆಂಗ್ರೆಯಲ್ಲಿ ಎರಡು ಮನೆಗಳಿಗೆ ನುಗ್ಗಿದ ಪುಂಡರು ಇಬ್ಬರು ಹರೆಯದ ಯುವತಿಯರನ್ನು ಎತ್ತಿಕೊಂಡು ಹೋಗಿದ್ದಾರೆಂದು ತಿಳಿದುಬಂತು. ವಿಚಾರಣೆಯಲ್ಲಿ ಮಂಜಣಾಳ್ವರ ಬೇಹುಗಾರರು ಅದು ಬೀರಣ್ಣ ಬಂಟನ ಸೇನೆಯವರು ಮಾಡಿದÀ ಕೃತ್ಯ ಎಂಬ ಸುದ್ದಿಯನ್ನು ತಿಳಿಸಿದರು. ಮಂಜಣ, ಶಾನುಭೋಗರನ್ನು ಬಡಾಜೆಗೆ ಕಳುಹಿಸಿ ಐವತ್ತು ಜನ ಕುದುರೆ ಸವಾರ ಸೈನಿಕರನ್ನು ಕೂಡಿಸಿಕೊಂಡು ಬೊಬ್ಬರ್ಯ ಕಲ್ಲಿನ ಬಳಿಹೋದ. ಊರಿನ ಪುಸಲರನ್ನೂ, ಬೋವಿಗಳನ್ನೂ ಒಟ್ಟು ಸೇರಿಸಿ, ಪಂಜು, ದೀವಟಿಗೆ ಹಿಡಿದು, ಕಡಲ ತೀರದ ಕೇರಿಗಳಲ್ಲಿ ಬೀರಣ್ಣ ಬಂಟನ ಸೈನಿಕರನ್ನು ಹುಡುಕಲು ಹೇಳಿದ. + +ಅಷ್ಟಾಗುವಾಗ ಮಂಜೇಶ್ವರದ ಹೊಳೆ ಬದಿಯಿಂದ ದೇವಯ ಭಂಡಾರಿಗಳ ಹಿತ್ತಲಲ್ಲಿ ಬೊಬ್ಬೆ ಕೇಳಿ ಬಂತು. ಮಂಜಣ ಕೆಲವೇ ಸೈನಿಕರನ್ನು ಕರೆದುಕೊಂಡು ಕುದುರೆಯನ್ನು ಭಂಡಾರ ಮಠದ ಹಿತ್ತಲಿಗೆ ಓಡಿಸಿದ. ಭಂಡಾರಿಗಳ ಹಿತ್ತಲಲ್ಲಿ ಮಲಗಿಕೊಂಡಿದ್ದ ಕುಂಬಳೆ ಸೇನೆಯನ್ನು ಬೀರಣ್ಣನ ಪುಂಡರು ಕೊಚ್ಚಿ ಹಾಕಲು ಪ್ರಾರಂಭಿಸಿದ್ದರು. ಕೈ ಕೈ ಕತ್ತಿಯ ಕಾಳಗ ಭಾರಿ ಜೋರಾಗಿ ನಡೆಯುತ್ತಿತ್ತು. ಮಂಜಣನ ಕುದುರೆ ಅಂಗಳಕ್ಕೆ ನುಗ್ಗಿ ‘ಜೈ ದುರ್ಗೆ’ ಎಂದು ಎರಗಿದಾಗ ಪುಸಲರ ಪುಂಡ ಹುಡುಗರು ಓಡಲು ಪ್ರಾರಂಭಿಸಿದರು. ಮಂಜಣನ ‘ಜೈ ದುರ್ಗೆ’ – ಜಯಕಾರ ಅವನ ಸೇನೆಗೆ ಆನೆಯ ಬಲ ಕೊಟ್ಟಿತು. ಬೀರಣ್ಣನ ಸೇನೆ ಓಡಲೂ ಸಾಧ್ಯವಿಲ್ಲ ನಿಲ್ಲಲ್ಲೂ ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿ ಬಿತ್ತು. ಮಂಜಣಾಳ್ವನ ಕತ್ತಿ ಮೂರ್ನಾಲ್ಕು ಮಂದಿಯನ್ನು ಬಲಿ ತೆಗೆದುಕೆಂಡಿತು. ಆ ಹೊತ್ತಿಗೆ ಭಂಡಾರ ಮಠದ ಚಾವಡಿಯಿಂದ “ಕಾಪಾಡೀ, ಕಾಪಾಡೀ ಆಳ್ವರೇ” ಎಂಬ ದುರ್ಗಮ್ಮನ ಆಕ್ರಂದನ ಕೇಳಿ ಕುದುರೆಯಿಂದ ಹಾರಿ ಚಾವಡಿ ಹತ್ತುವಾಗ ಬೀರಣ್ಣನ ಸೈನಿಕರು ಮಂಜಣಾಳ್ವರ ಕತ್ತಿಯ ಪೆಟ್ಟಿಗೆ ಸಿಕ್ಕಿದರು. ಒಳಗಿಂದ ದುರ್ಗಮ್ಮನ ಸಿರಿಮುಡಿ ಹಿಡಿದು ಎಳೆದುಕೊಂಡು ಬರುತ್ತಿದ್ದ ಬೀರಣ್ಣನನ್ನು ನೋಡಿದ ಮಂಜಣ ಕೈಯಲ್ಲಿದ್ದ ತಲವಾರಿನಿಂದ ಅವನ ಕೈಗೆ ಕಡಿದ. ದುರ್ಗಮ್ಮನ ಕೂದಲು ಬಿಟ್ಟು ತಿರುಗಿದ ಬೀರಣ್ಣ ಇನ್ನೊಂದು ಕೈಯಿಂದ ಬೆತ್ತ ಬೀಸಿದಾಗ ಮಂಜಣ ಆ ಕೈಯನ್ನು ಕಡಿದಾಗ ಬೆತ್ತ, ಕೈ ಎರಡೂ ಉದುರಿದವು. ಬೀರಣ್ಣ ಅಲ್ಲೇ ಚಾವಡಿಯಲ್ಲಿ ಉರುಳಿದ. ಮಂಜಣನ ‘ಜೈ ದುರ್ಗೆ’ ಎಂಬ ಆರ್ಭಟವೂ, ಬೀರಣ್ಣನ ‘ಅಯ್ಯೋ ಅಪ್ಪಾ’ ಎಂಬ ಕೂಗೂ ಒಂದಾದವು. ಚಾವಡಿಯಿಂದ ಬೀರಣ್ಣನನ್ನು ಒದ್ದು ಅಂಗಳಕ್ಕೆ ಹಾಕಿದಾಗ, ರಥಬೀದಿಯಿಂದ ಓಡುತ್ತಾ ಬಂದ ಸೇನೆಯವರು ಬೀರಣ್ಣನ ಸೈನಿಕರನ್ನು ಹಾಗೂ ಕೆಲವು ಓಡದೆ ಇದ್ದ ಪುಸಲರ ಹುಡುಗರನ್ನು ಹಿಡಿದರು. ‘ಹರಹರ ಮಹಾದೇವ’ ಎನ್ನುತ್ತಾ ಓಡಲು ನೋಡಿದ ಬೀರಣ್ಣ ಬಂಟನನ್ನು ಸೈನಿಕರು ಹಿಡಿದು ಕಟ್ಟಿ ಕೊಟ್ಟಿಗೆಗೆ ಹಾಕಿದರು. ಹೆಣಗಳನ್ನು ಚಾವಡಿಯಿಂದ ತೆಗೆಸುವಾಗ ಸೈನಿಕರು ಕಡಲ ಬದಿಯ ಸುದ್ದಿ ತಂದರು. ಅಪಹರಿಸಿದ ಬೋವಿಗಳ ಹೆಣ್ಣುಗಳನ್ನು ಬೊಬ್ಬರ್ಯ ಕಲ್ಲಿನ ಬಳಿ ಹಾಕಿದ್ದರಂತೆ. ಪುಸಲರ ಹೆಣ್ಣೊಂದು ಹೊಯ್ಗೆಯಲ್ಲಿ ಅರೆ ಜೀವದಿಂದ ಬಿದ್ದಿತ್ತು. + +ರಾತ್ರಿ ಬೀರಣ್ಣ ಬಂಟನ ಪುಂಡ ಹುಡುಗರು ಅತ್ಯಾಚಾರ ಮಾಡಿ ಗಾಯಗೊಳಿಸಿದ್ದ ಬೋವಿಗಳ ಹೆಣ್ಣು ಮುಂಜಾನೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿತ್ತು. ಬೋವಿಗಳೆಲ್ಲಾ ಒಟ್ಟಾಗಿ ಕಲ್ಯಾಣಪ್ಪನ ದಂಡನ್ನು ಎದುರಿಸಿ ಕಾದಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಅವರ ಜೊತೆ ಬೆಂಗರೆಯ ಪುಸಲರೂ ಸೇರಿಕೊಂಡಿದ್ದಾರಂತೆ. ಅವರು ಯುದ್ಧ ಪ್ರಾರಂಭಿಸಿದರೆಂದಾದರೆ ಅನರ್ಥವಾಗಬಹುದು. ನಿನ್ನೆಯಿಂದ ಮಾಡಿದ ಎಲ್ಲಾ ಕೆಲಸಗಳೂ ವ್ಯರ್ಥವಾಗಬಹುದು. ಈ ಬೋವಿಗಳೂ, ಪುಸಲರೂ ಯಾರ ಮಾತನ್ನೂ ಕೇಳುವವರಲ್ಲ. ಕೇಳಿದರೆ ಮಂಜಣಾಳ್ವ ಒಬ್ಬನದೇ. ಅದನ್ನು ಹೇಳಲು ಶಾನುಭೋಗರು ಮಂಜಣಾಳ್ವನನ್ನು ಕಾಯುತ್ತಿದ್ದುದು. + +ಶಾನುಭೋಗರಲ್ಲಿ ಮಾತನಾಡಿ ಬೋವಿಗಳು ಹಾಗೂ ಪುಸಲರೊಂದಿಗೇ ಬೆಂಗರೆಗೆ ಬಂದ ಮಂಜಣ, ಅವರ ಮನೆಗೆ ಹೋದಾಗ ಬೋವಿಗಳ ಗುಂಪೇ ಅಲ್ಲಿ ನೆರೆಯಿತು. ಮಂಜಣಾಳ್ವ ಹೆಣ್ಣಿನ ಶವದ ಮುಂದೆ ಮಂಡಿಯೂರಿ ಕೈಮುಗಿದು ಎದ್ದು, ವೃದ್ಧ ತಂದೆ-ತಾಯಿಗಳ ಕಾಲಿಗೆ ಬೀಳಲು ಬಗ್ಗುವಾಗ ನೆರೆದಿದ್ದ ಪುಸಲರ ಯುವಕರು ಹಾಗೂ ಬೋವಿಗಳು “ಜೈ ದುರ್ಗೆ” “ಜೈ ಮಂಜಣಾಳ್ವ’’ ಎಂದು ಜಯಕಾರ ಹಾಕಿದರು. ಮಂಜಣಾಳ್ವ ಬೋವಿಗಳ ಮತ್ತು ಪುಸಲರ ಹಿರಿಯರನ್ನು ಕರೆದು ಸಮಾಧಾನ ಹೇಳಿ, ಬೀರಣ್ಣ ಬಂಟನನ್ನೂ, ಅವನ ಸೈನಿಕರನ್ನೂ ಅವರ ಕೈಗಳಿಂದಲೇ ಗಲ್ಲಿಗೇರಿಸುವುದಾಗಿ ಮಾತು ಕೊಟ್ಟು ಇಬ್ಬರು ಹೆಣ್ಣು ಮಕ್ಕಳ ಶವಗಳನ್ನೂ ಮಂಜೇಶ್ವರ ಗುಡ್ಡಕ್ಕೆ ಒಯ್ದು ಸಂಸ್ಕಾರ ಮಾಡುವಂತೆ ಒಪ್ಪಿಸಿದ. ಶಾಂತಿಯಿಂದ ಈ ಕೆಲಸವನ್ನು ಮಾಡುವುದಾಗಿ ಎರಡೂ ಸಮಾಜಗಳ ಹಿರಿಯರು ಮಾತು ಕೊಟ್ಟರು. ಯುವಕರೇನಾದರೂ ಗಲಾಟೆ ಮಾಡಿದರೆ ತನ್ನದೇ ಸೇನೆ ದಂಗೆಯನ್ನು ನಿಲ್ಲಿಸಬೇಕಾದೀತು ಎಂದು ಭಯ ಹುಟ್ಟಿಸಿ ಮಂಜಣಾಳ್ವ ಪೇಟೆಗೆ ಬಂದ. + +ಬಂಗ್ರ ಮಂಜೇಶ್ವರಕ್ಕೆ ತಲುಪಿದಾಗ ಎಲ್ಲಾ ದಿಕ್ಕುಗಳಿಂದಲೂ ಸುದ್ದಿ ಬಂತು. ಕಲ್ಯಾಣಪ್ಪನ ದಂಡು ಕಡಂಬಾರಿನಿಂದ ಬರುತ್ತಿದೆ. ಸುಬ್ರಾಯ ಹೆಗ್ಡೆಯ ದಂಡು ಐಲದ ಪದವಿಗೆ ತಲುಪಿದೆಯೆಂದು ಸುದ್ದಿ ಬಂದು ಮುಟ್ಟಿತು. ಊರಿನ ಯುವಕರು, ಪುಸಲರು, ಬೋವಿಗಳು ಸುಬ್ರಾಯ ಹೆಗ್ಡೆಯ ದಂಡಿಗೆ ಸೇರುತ್ತಾರೆ ಎನ್ನುವ ಭಯ ಕಡಿಮೆಯಾಗಿತ್ತು. ರಾತ್ರಿ ಇಬ್ಬರು ಹೆಣ್ಣು ಮಕ್ಕಳನ್ನು ಬೀರಣ್ಣ ಬಂಟನ ಸೈನಿಕರು ಅತ್ಯಾಚಾರ ಮಾಡಿದ್ದಾರೆ ಎಂಬ ಸುದ್ದಿ ಬೆಂಕಿಯಂತೆ ಹರಡಿತ್ತು. ಹಾಗಾಗಿ ದಂಡಿಗೆ ಸೇರಲು ತಯಾರಾಗಿದ್ದ ಯುವಕರ ಸಂಖ್ಯೆ ಕಡಿಮೆಯಾಗಿತ್ತು.ನಡುಮಧ್ಯಾಹ್ನ ಕಳೆದು ಗಳಿಗೆಯಾಗುವಾಗ ಕಲ್ಯಾಣಪ್ಪನ ದಂಡು ಮಂಜೇಶ್ವರ ಪೇಟೆಯ ಬಳಿಗೆ ಬಂದು ತಲುಪಿತು. ಕಾಡಿನ ಬಳಿಯ ಪದವಿನಲ್ಲಿ ಕೊಂಕಣಿಗಳ ಸಮಾಜದ ಹತ್ತು ಸಮಸ್ತರು, ಸೆಟ್ಟಿಗಳು ಹಾಗೂ ವ್ಯಾಪಾರದ ಬ್ಯಾರಿಗಳ ಹಮ್ಜದರು ಸೇನೆಯನ್ನು ಎದುರುಗೊಂಡು ಪಾನಕ, ಎಳನೀರು ಕೊಟ್ಟರು. ದಂಡಿಗೆಯಿಂದ ಇಳಿದ ಕಲ್ಯಾಣಸ್ವಾಮಿ ಕುದುರೆಯೇರಿ ಹತ್ತು ಸಮಸ್ತರನ್ನು ಭೇಟಿಯಾದ. ಅವರು ಮಧ್ಯಾಹ್ನದ ಊಟಕ್ಕೆ ಒತ್ತಾಯಿಸಿದಾಗ ಕಲ್ಯಾಣಪ್ಪ ನಕ್ಕ.“ನೀವು ಊಟ ಕೊಡಬೇಕೆಂದಿಲ್ಲ. ನಾವು ಊರು ಸೂರೆ ಮಾಡುವುದನ್ನು ನಿಲ್ಲಿಸಿದ್ದೇವೆ. ಅನ್ನಪೂರ್ಣೇಶ್ವರಿ ದೇವಿಯಂತಿರುವ ರುಕ್ಮಿಣಿಯಮ್ಮನಿಗೆ ಊರು ದೋಚುವುದಿಲ್ಲವೆಂದು ಮಾತು ಕೊಟ್ಟಿದ್ದೇವೆ. ನಿಮಗೆ ಸಾಧ್ಯವಾದರೇ ನಮಗೆ ಸ್ವಲ್ಪ ಹಣ ಕಾಸು ಒಟ್ಟು ಮಾಡಿಕೊಡಿ.’’ಹತ್ತು ಸಮಸ್ತರು ಊಟವಾದ ನಂತರ ತಮ್ಮಿಂದಾದಷ್ಟು ಸಹಾಯವನ್ನು ಒಟ್ಟು ಮಾಡಿಕೊಡುತ್ತೇವೆಂದು ಒಪ್ಪಿಕೊಂಡರು. ಅಷ್ಟಾಗುವಾಗ ಸುಬ್ರಾಯ ಹೆಗ್ಡೆಯ ಸೇನೆಯೂ ಬಂಗ್ರ ಮಂಜೇಶ್ವರಕ್ಕೆ ಬಂದು ಸೇರಿತು. ಹೆಗ್ಡೆ, ಕಲ್ಯಾಣಸ್ವಾಮಿಯನ್ನು ಸೇರಿಕೊಂಡು ಎಲ್ಲ ವಿಷಯ ತಿಳಿಸಿದ. ಇಬ್ಬರೂ ಮಂಜೇಶ್ವರದ ಹತ್ತು ಸಮಸ್ತರ ಸತ್ಕಾರಕ್ಕೆ ಒಪ್ಪಿ, ಸುಬ್ರಾಯ ಹೆಗ್ಡೆಯ ಸೇನೆಯವರು ಬಂಗ್ರ ಮಂಜೇಶ್ವರದ ಬಸದಿಗೂ, ಕಲ್ಯಾಣಪ್ಪನ ಸೇನೆಯವರು ಶ್ರೀಮದನಂತೇಶ್ವರ ದೇವಸ್ಥಾನದ ಅಂಗಣಕ್ಕೂ ಊಟಕ್ಕೆ ಹೊರಟರು. ಬ್ಯಾರಿಗಳ ಹಾಗೂ ಬಾಕುಡರ ಸೇನೆಗೆ ಉದ್ಯಾವರ ಮಾಡದ ಮೈದಾನದಲ್ಲಿ ಊಟದ ಏರ್ಪಾಡಾಯಿತು. + + + +ಊಟ ಮುಗಿಸಿ ಎಲ್ಲ ಸೈನಿಕರೂ ರಥಬೀದಿಯಲ್ಲಿ ಸೇರುವಾಗ ಸಂಜೆಯಾಯಿತು. ದೇವಯ ಭಂಡಾರಿಗಳ ಜನ, ಆದಿ ಸೆಟ್ಟಿಯ ಕೆಲಸದವರು, ಕುಂಞಲಿ ಬ್ಯಾರಿಯ ಹಮ್ಜದರು ದೇವಸ್ಥಾನದ ಕಟ್ಟೆಗೆ ಹತ್ತು-ಹದಿನೈದು ಬೆತ್ತದ ಪೆಟ್ಟಿಗೆಗಳಲ್ಲಿ ಇಕ್ಕೇರಿಯ ಪಗೋಡ, ಸುಲ್ತಾನನ ರೂಪಾಯಿ, ವಿಜಯನಗರ ಕಾಲದ ರಾಮಟಂಕೆಗಳನ್ನು ತಂದು ಕಾಣಿಕೆ ಕೊಟ್ಟರು. ಕಲ್ಯಾಣಪ್ಪ ಸೇನೆಯ ಬೋವಿಯನ್ನು ಕರೆದು ಒಬ್ಬೊಬ್ಬ ಸೈನಿಕನಿಗೆ ಹತ್ತತ್ತು ಬೆಳ್ಳಿಯ ರೂಪಾಯಿ, ಚಿನ್ನದ ರಾಮಟಂಕೆಗಳನ್ನು ಕೊಡಲು ಹೇಳಿದನು. ಈ ಗೌಜಿಯಲ್ಲಿರುವಾಗ ಬೆಂಗರೆಯ ಹಾದಿಯಿಂದ “ಅಲ್ಲಾಹು ಅಕ್ಬರ್” ಎಂದು ಜಯಕಾರ ಹಾಕಿಕೊಂಡು ಶವಯಾತ್ರೆಯೊಂದು ಕುಂಬಳೆಯ ಸೇನೆಯ ಉಸ್ತುವಾರಿಯಲ್ಲಿ ರಥಬೀದಿಯಲ್ಲೇ ಬಂದು ದೇವಸ್ಥಾನದ ಹಿಂದಿನ ಗುಡ್ಡೆಕೇರಿಗೆ ಹೋಗುತ್ತಿತ್ತು. + +ಕಲ್ಯಾಣಪ್ಪ ವಿಚಾರಿಸಿದಾಗ, ಹಿಂದಿನ ರಾತ್ರಿ ನಡೆದ ಅತ್ಯಾಚಾರದ ವಿಷಯ ತಿಳಿಯಿತು. ತಲೆ ತಗ್ಗಿಸಿದ ಕಲ್ಯಾಣಪ್ಪನಿಗೆ ತಾನು ಮಾಡದ ಇಂತಹ ಆದೆಷ್ಟೋ ಕೃತ್ಯಗಳಿಗೆ ತಾನು ಹೊಣೆಗಾರನಾಗಬೇಕಾಯಿತಲ್ಲಾ ಒಂದು ದುಃಖವಾಯಿತು. ಎದ್ದು ಬಂದವನು ಶವಗಳ ಬಳಿ ಬಂದನು. ಒಂದಕ್ಕೆ ತಾನು ಹೊದ್ದುಕೊಂಡಿದ್ದ ಶಾಲು, ಮತ್ತೊಂದು ತನ್ನ ಮುಂಡಾಸು ಬಟ್ಟೆಯನ್ನು ಹೊದೆಸಿ ಕೈ ಮುಗಿದನು. ಶವಗಳ ಮಂದಿದ್ದ ಸರದಾರನನ್ನು ಕರೆಯಿಸಿ ವಿವರ ಕೇಳಿದಾಗ, ಅಲ್ಲೇ ಇದ್ದ ಸುಬ್ರಾಯ ಹೆಗ್ಡೆ ಆ ಯುವಕನ ಪರಿಚಯ ಮಾಡಿಕೊಟ್ಟ. ಮಿತ್ತಬೈಲು ಮಂಜಣಾಳ್ವನನ್ನು ನೋಡಿ ಕಲ್ಯಾಣಪ್ಪನಿಗೆ ಖುಷಿಯಾಯಿತು.“ಮಂಜಣಾಳ್ವರೇ, ಬಹಳ ಕೇಳಿದ್ದೇನೆ ನಿಮ್ಮ ಬಗ್ಗೆ. ಭೇಟಿಯಾಗಿ ಬಹಳ ಸಂತೋಷವಾಯಿತು. ನಿಮ್ಮಂತಹವರು ನಮ್ಮ ಜೊತೆ ಇರಬೇಕಾಗಿತ್ತು. ಆ ಸುದ್ದಿ ಬಿಡಿ, ಈಗ ಈ ಹೆಣ್ಣು ಮಕ್ಕಳ ಸಾವಿಗೆ ಕಾರಣರಾದ ಸೈನಿಕರನ್ನು ಹಿಡಿಯಲು ಆಗಲಿಲ್ಲವೇ ಆಳ್ವರೇ?’’“ಹಿಡಿಯಲು ಆಗದೆ ಏನು ಸ್ವಾಮಿಗಳೇ. ಹಿಡಿದು ಕಟ್ಟಿ ಹಾಕಿದ್ದೇನೆ. ಇಂದಿನ ಕಾರ್ಯ ಶಾಂತಿಯಲ್ಲಿ ನಡೆಯಲಿ. ನಾಳೆ ಸೇನೆಯ ನ್ಯಾಯದಂತೆ ವಿಚಾರಣೆ ನಡೆಸಿ ಶಿಕ್ಷೆ ಕೊಡಿಸಬೇಕೆಂದಿದ್ದೇನೆ.’’“ಏನು? ಅವರ ತಪ್ಪಿನಲ್ಲಿ ಸಂಶಯ ಇದೆಯೇ ಆಳ್ವರೇ? ಪಾಪಿಗಳು ಭೂಮಿಯ ಮೇಲೆ ಇರುವಷ್ಟು ಹೊತ್ತು ಈ ಭೂ ತಾಯಿಗೆ ಭಾರ ಹೆಚ್ಚು. ಅನ್ಯಾಯದ ನೋವೂ ಹೆಚ್ಚು. ತಡ ಮಾಡಬೇಡಿ. ಯಾರವರು ಹೇಳಿ, ನನ್ನ ಸೇನೆಯವರಾದರೆ ನಾನೇ ನಿಂತು ಶಿಕ್ಷೆ ಕೊಡಿಸುವೆ.’’“ನಿಮ್ಮ ಜನರೇ ಸ್ವಾಮಿ! ನೋಡುತ್ತಿರಾ?’’ಮಂಜಣಾಳ್ವರು ಬೀರಣ್ಣ ಬಂಟನನ್ನೂ, ಬದುಕುಳಿದ ಅವನ ಸೈನಿಕರನ್ನೂ ದೇವಯ ಭಂಡಾರಿಗಳ ಹಿತ್ತಲಿನಿಂದ ತರಿಸಿ ಕಲ್ಯಾಣಸ್ವಾಮಿಯ ಮುಂದೆ ನಿಲ್ಲಿಸಿದಾಗ ಕಲ್ಯಾಣಸ್ವಾಮಿಗೆ ಆಶ್ಚರ್ಯವಾಯಿತು.“ಬೀರಣ್ಣ ಬಂಟ! ನಿನ್ನ ಬಗ್ಗೆ ಕೆಲವು ದೂರುಗಳು ಬಂದಿದ್ದವು. ನಂಬಲಿಲ್ಲ ನಾನು. ಪಾಡಿ ಸುಬ್ರಾಯ ಶಾನುಬೋಗರ ತಲೆ ತಂದು ಕೊಡುತ್ತೇನೆ ಎಂದು ಹೊರಟವ ಇದನ್ನಾ ಮಾಡಿದ್ದು? ಇವನಿಗೆ, ಈ ನೀಚ ಕೆಲಸ ಮಾಡಲು ಹೇಗೆ ಕೈ ಬಂತು ಆಳ್ವರೇ? ಥೂ ನಾಯಿ, ಇನ್ನೂ ನೀನು ಬದುಕುಳಿದಿದ್ದಿಯಲ್ಲಾ!’’“ಈ ನಾಯಿ ಒಂದು ಮರ್ಯಾದಸ್ಥ ಮನೆಯ ಹೆಣ್ಣಿನ ಸಿರಿಮುಡಿಗೆ ಕೈ ಹಾಕಿದಾಗ ಕೈಯನ್ನೇ ಕಡಿದು ಬಲಿ ಕೊಟ್ಟಿದ್ದೇನೆ ಸ್ವಾಮಿ. ಈ ಎರಡು ಪಾಪದ ಹೆಣ್ಣು ಮಕ್ಕಳ ಮಾನ ಲೂಟಿ ಮಾಡಿ ಅವರನ್ನು ತನ್ನ ನಾಯಿಗಳಿಗೆ ಹಾಕಿದವನು ಇದೇ ಪಾಪಿ.”“ಅವನ ತಲೆ ತೆಗೆಯದೆ ಯಾಕೆ ಬಿಟ್ಟಿದ್ದೀರಿ ಆಳ್ವರೇ?’’“ತಲೆ ತೆಗೆಯುವುದು ಬಹಳ ಸುಲಭ ಸ್ವಾಮಿ. ಈ ಪಾಪಿ ತಾನು ಮಾಡಿದ ಪಾಪವನ್ನು ನೆನೆಯುತ್ತಾ, ಆ ಹೆಣ್ಣು ಮಕ್ಕಳು ನರಳಿ ಆತ್ಮಹತ್ಯೆ ಮಾಡಿಕೊಂಡಂತೆ ನರಳಿ ಸಾಯಬೇಕು ಸ್ವಾಮಿ.’’“ಆಳ್ವರೇ, ಬೀರಣ್ಣ ನನ್ನ ಹೆಸರು ಹೇಳಿಕೊಂಡು ಇಂತಹ ಎಷ್ಟು ಪಾಪ ಕೃತ್ಯಗಳನ್ನು ಮಾಡುತ್ತಾ ಬಂದಿದ್ದಾನೋ? ನಾನೇ ಇವನಿಗೆ ಶಿಕ್ಷೆ ಕೊಡುವುದು ನ್ಯಾಯ ಅಲ್ಲವೇ ಆಳ್ವರೇ? ಏನು ಹೇಳುತ್ತೀರಿ ನೀವು ಇದಕ್ಕೆ?’’ಕಲ್ಯಾಣಪ್ಪ ಆರು ಸೈನಿಕರಿಗೂ ಬೀರಣ್ಣ ಬಂಟನಿಗೂ ಗಲ್ಲು ಶಿಕ್ಷೆ ವಿಧಿಸಿದ. ಗುಡ್ಡದ ಮೇಲಿನ ಆಲದ ಮರದಲ್ಲಿ ಊರಿಗೆ ಕಾಣುವಂತೆ ಮೂರು ದಿನ ಹೆಣಗಳನ್ನು ನೇತಾಡಿಸುವಂತೆ ಹೇಳಿದ. + +“ಕಲ್ಯಾಣಪ್ಪನ ರಾಜ್ಯದಲ್ಲಿ ಅನ್ಯಾಯಕ್ಕೆ ದಾರಿಯಿಲ್ಲ. ರಾಜ್ಯದಲ್ಲಿ ಹೆಣ್ಣು ಮಕ್ಕಳ ಅತ್ಯಾಚಾರ ಮಾಡಿದವರಿಗೆ ಇದುವೇ ಶಿಕ್ಷೆ. ಅದಕ್ಕೆ ಈ ಹೆಣಗಳು ಉದಾಹರಣೆಯಾಗಲಿ.’’ಬೀರಣ್ಣ ಬಂಟ ಮತ್ತು ಆರು ಸೈನಿಕರ ಹೆಣಗಳು ಆಲದ ಮರದಲ್ಲಿ ನೇತಾಡಿದವು.“ಆಳ್ವರೇ, ನಿಮ್ಮಂತಹ ವೀರ ಇಂದಲ್ಲ ನಾಳೆ ನನ್ನ ಜೊತೆಗೆ ಬರಬೇಕು. ನಾನು ಈ ಪರದೇಶಿಗಳನ್ನು ಓಡಿಸಿ ಜನ ಕಳುಹಿಸುವೆ. ಆಗ ಈ ರಾಜ್ಯವನ್ನು ಸುಭಿಕ್ಷೆಯಲ್ಲಿ ಆಳಲು ನನಗೆ ನಿಮ್ಮಂತಹ ಯುವಕರ ಸಹಾಯ ಬೇಕು. ಆಗ ಇಲ್ಲ ಎನ್ನಬೇಡಿ. ಸುಬ್ರಾಯ ಶಾನುಭೋಗರಿಗೂ, ಕೋಚಣ್ಣಾಳ್ವರಿಗೂ ನನ್ನ ನಮಸ್ಕಾರ ಹೇಳಿ. ಕಲ್ಯಾಣಪ್ಪ ಪರದೇಶಿಗಳನ್ನು ಈ ರಾಜ್ಯದಿಂದ ಓಡಿಸಲು ತನ್ನ ಜೀವ ಒತ್ತೆಯಿಟ್ಟು ಹೋರಾಡುತ್ತಾನೆ. ಸತ್ತರೂ ಸರಿ, ಸ್ವಾತಂತ್ರ್ಯ ನನ್ನ ಜನ್ಮ ಸಿದ್ಧ ಹಕ್ಕು. ಪರದೇಶಿಗಳು ಇಲ್ಲಿಂದ ತೊಲಗಬೇಕು. ಆ ಇಬ್ಬರು ಹಿರಿಯರನ್ನು ಶಾಂತಿಯ ಕಾಲದಲ್ಲಿ ಭೇಟಿಯಾಗುತ್ತೇನೆಂದು ಹೇಳಿ. ನನಗೆ ಗೊತ್ತಿದೆ, ಅವರಿಬ್ಬರೂ ಎಲ್ಲೋ ನಿಂತು ನನ್ನನ್ನು ನೋಡುತ್ತಿದ್ದಾರೆಂದು. ಹರಹರ ಮಹಾದೇವಾ!’’ಕಲ್ಯಾಣಸ್ವಾಮಿ ‘ಹರಹರ ಮಹಾದೇವ’ ಎಂದು ಹೇಳಿಕೊಂಡು ತನ್ನ ಸೈನ್ಯವನ್ನು ಬಂದ ದಾರಿಯಲ್ಲಿಯೇ ಪಾಣೆಮಂಗಳೂರಿಗೆ ಕಳುಹಿಸಿದ. ಸುಬ್ರಾಯ ಹೆಗ್ಡೆಯ ಸೇನೆಯನ್ನು ಉದ್ಯಾವರ – ತಲಪಾಡಿಯಾಗಿ ಉಳ್ಳಾಲದ ಕಡವಿಗೆ ಕಳುಹಿಸಿದ. ಪೇಟೆಯಲ್ಲಿ ನಿಂತಿದ್ದ ‘ಜೈ ದುರ್ಗೆ ಜೈ ಮಂಜಣಾಳ್ವ, ಹರಹರ ಮಹಾದೇವ, ಜೈ ಕಲ್ಯಾಣ ಸ್ವಾಮಿ’ ಎನ್ನುತ್ತಾ ಜಯಕಾರ ಹಾಕಿತು. + +ಸುಬ್ರಾಯ ಹೆಗ್ಡೆಯ ದಂಡು ಉಳ್ಳಾಲ ಕಡವಿಗೆ ತಲುಪಿದಾಗ ಕಲ್ಯಾಣಪ್ಪನ ದಂಡು ಪಾಣೆಮಂಗಳೂರಿಗೆ ಬಂದು ನಂದಾವರದ ಲಕ್ಷ್ಮಪ್ಪ ಬಂಗರಸನನ್ನು ಸೇರಿಕೊಂಡಿತು. ಕಲ್ಯಾಣಪ್ಪನ ದಂಡು ನಂದಾವರ ಅರಮನೆಯ ಎದುರು ಬೀಡು ಬಿಟ್ಟು ಲಕ್ಷ್ಮಪ್ಪ ಬಂಗರಸನಲ್ಲಿ ಊಟ – ತಿಂಡಿ ಮುಗಿಸಿ ಮರುದಿನ ಬೆಳಗ್ಗೆ ಬಂಟ್ವಾಳಕ್ಕೆ ಬಂದು ತಾಲೂಕು ಕಚೇರಿಯನ್ನು ಲೂಟಿ ಮಾಡಿ, ಲಕ್ಷಣಮಪ್ಪ ಬಂಗರಸನ ಜೊತೆ ಮಂಗಳೂರಿನ ಪೇಟೆಗೆ ನಡೆಯಿತು. ಕಲ್ಯಾಣಪ್ಪ ಎಷ್ಟು ಪ್ರಯತ್ನಿಸಿದರೂ ಅವನಿಗೆ ಊರು ಲೂಟಿ ಮಾಡುವುದನ್ನು ನಿಲ್ಲಿಸಲು ಸಾಧ್ಯವಾಗಲಿಲ್ಲ. ಒಂದೇ ಒಂದು ವಿಷಯ ಎಂದರೆ, ಹೆಣ್ಣು ಮಕ್ಕಳ ತಂಟೆಗೆ ಹೋಗಲು ಸೈನಿಕರು ಹೆದರುತ್ತಿದ್ದರು. ಬೀರಣ್ಣ ಬಂಟನನ್ನು ಗಲ್ಲಿಗೇರಿಸಿದ ಸುದ್ದಿ ಅವರಿಗೆ ತಿಳಿದಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_469.txt b/Kenda Sampige/article_469.txt new file mode 100644 index 0000000000000000000000000000000000000000..f86da16230a08b9f558e22ebb3ab8744f885bc1f --- /dev/null +++ b/Kenda Sampige/article_469.txt @@ -0,0 +1,45 @@ + + +ನಾಟಕ ನೋಡಿ ಅಲ್ಲಿಂದ ಹೊರಬಂದು ಮುಂದೆ ಸಾಗುವಾಗ ಅಲ್ಲೊಂದು ದೊಡ್ಡ ಮೈದಾನು. ಅಲ್ಲಿ ಹಲವು ಮಂದಿ ಇರುವೆ ಸಾಲುಗಟ್ಟಿದಂತೆ ಸಾಲಾಗಿ ನಿಂತಿದ್ದರು. ತಲೆಗೆ ಕೆಂಪು ರುಮಾಲು; ಮೈಗೆ ಕಪ್ಪು ಅಂಗಿ ಚಲ್ಲಣ. ಅವರ ಕೈಯಲ್ಲಿ ನನ್ನ ಕೋವಿಯಾಕಾರದ ಏನೋ ಒಂದಿತ್ತು. ಪಕ್ಕದಲ್ಲೇ ಕೈಕೋಳ, ದೊಣ್ಣೆ. ನಾನು ಅಲ್ಲೇ ನಿಂತು ನೋಡುತ್ತಿದ್ದ ಇನ್ನೊಬ್ಬನೊಡನೆ ಇದೇನೆಂದು ಕೇಳಿದೆ. ಅವನು, “ಯಾರೋ ಭಾರಿ ಆಫೀಸರರು ಬರುತ್ತಾರಂತೆ; ಅದಕ್ಕಾಗಿ ಅವರ ಮುಂದೆ “ಕಬಾತು” ಮಾಡಿ ತೋರಿಸಲಿಕ್ಕೆ ಈ ಪೋಲೀಸರು ಆ “ಕಬಾತ್” ಅಭ್ಯಾಸವನ್ನು ಗಟ್ಟಿ ಮಾಡುತ್ತ ಇದ್ದಾರೆ” ಅಂದ.ನಾನು : “ಕಬಾಬು” ಅಂದರೆ? ಇವರಿಗೆ ಕಬಾಟು ಬಾಗಲು ಕಿಡಿಕಿ ಮೊದಲಾದವನ್ನು ಮಾಡಲಿಕ್ಕೂ ಅಭ್ಯಾಸ ಮಾಡಿಸುತ್ತಾರೆಯೇ?”ಅವನು : “ಹಾಗಲ್ಲವಯ್ಯ ‘ಕಬಾಟು’ ಅಲ್ಲ; ‘ಕವಾಯತು”ನಾನು : “ಅದು ಸಾಯಲಿ; ಅವರ ಕೈಯಲ್ಲಿ ಇದೆಯಲ್ಲ, ಅದೇನು?”ಅವನು : “ದಂಬೂಕು (ಬಂದೂಕು)”ನಾನು : “ನನ್ನ ಹೆಗಲ ಮೇಲೆ ಇರುವುದೇನು?”ಅವನು : “ಅದೂ ದಂಬೂಕು”ನಾನು : “ಕೋವಿ ಅಲ್ಲವೇ?”ಅವನು : “ಶುದ್ಧ ತಪ್ಪು; ಕೋವಿಯಲ್ಲ – ದಂಬೂಕು”ನಾನು : “ಹಾಗಾದರೆ ಕೋವಿಗೂ ದಂಬೂಕಿಗೂ ಏನು ಹೆಚ್ಚು ಕಡಿಮೆ?”ಅವನು : “ಇಲಿ ಹೆಗ್ಗಣ ಹಕ್ಕಿ ಹೊಡೆದರೆ ಅದು “ಕೋವಿ” ; ಮನುಷ್ಯ, ಮಂಗ, ಮೃಗಗಳನ್ನು ಹೊಡೆದರೆ ಅದು ‘ದಂಬೂಕು’ನಾನು : “ಇದು ಇಲಿ ಹೆಗ್ಗಣ ಹಕ್ಕಿಯನ್ನೂ ಹೊಡೆಯುವುದಿಲ್ಲ;ಮನುಷ್ಯ ಮಂಗ ಮೃಗಗಳನ್ನೂ ಹೊಡೆಯುವುದಿಲ್ಲ”ಅವನು : “ಅದರೂ ಇದು ದಂಬೂಕೇ! ಏನೋ ಕೆಟ್ಟು ಹೋಗಿರಬಹುದು; ಸರಿ ಮಾಡಿಸು”ನಾನು : “ಸರಿಯಾಗಿ ಇದ್ದಾಗಲೂ ಹೊಡೆದು ನೋಡಿದ್ದೇನೆ; ಒಂದು ನುಸಿಯೂ ಸಾಯಲಿಲ್ಲ!”ಅವನು : “ಬ್ರಹ್ಮಾಸ್ತ್ರದಿಂದಲೂ ಆ ನುಸಿ ಸಾಯಬಾರದೆಂದೇ ಬ್ರಹ್ಮನ ವರ; ಎಲ್ಲ ಮುನಿಸಿಪಾಲಿಟಿಗಳ ಯಾವತ್ತು ಮನೆ, ಸ್ಥಳಗಳಲ್ಲಿಯೂ ಅದು ವಂಶಪರಂಪರೆಯಾಗಿ ಬಾಡಿಗೆ ಇಲ್ಲದೆ ಸುಖ ಸಂಸಾರ ಮಾಡಿಕೊಂಡಿರಲೆಂದೇ ವಿಷ್ಣುವಿನ ವರ; ಕ್ಷಣಕ್ಷಣಕ್ಕೂ ಅದರ ಮಕ್ಕಳು ಮರಿಗಳು ಲಕ್ಷಗಟ್ಟಲೆಯಲ್ಲಿ ಹೆಚ್ಚಿ, ಹಗಲಿರುಳೂ ಮನುಷ್ಯನ ಮೈ ಕೈ ಕಡಿದು, ನಿದ್ರಾಭಂಗ ಮಾಡಿ, ಅವನ ಅಹಂಕಾರ ಮುರಿಯಲೆಂದೇ ಮಹೇಶ್ವರನ ವರ ಎಂದು ನಮ್ಮ ಅಜ್ಜಿ ಹೇಳುತ್ತಿದ್ದಳು. ಹಾಗಾದ್ದರಿಂದ, ದಂಬೂಕಿನ ಏಟಿಗೆ ನುಸಿ ಎಂದಿಗೂ ಸಾಯದು. ಅದು ಹ್ಯಾಗೂ ಇರಲಿ; ಈಗ ನೀನು ಇದು ದಂಬೂಕೇ, ಕೋವಿಯೋ ಎಂಬ ಸಂಶಯ ತಂದು ಹಾಕಿದ್ದರಿಂದ, ಅದನ್ನು ಸೂಕ್ಷ್ಮವಾಗಿ ನೋಡಿ ಹೇಳಬೇಕಾಯಿತು. ನಿನ್ನ ಕೋವಿಯನ್ನಿತ್ತ ತಾ!” + +ನಾನು ಕೋವಿಯನ್ನು ಅವನ ಕೈಗೆ ಕೊಟ್ಟೆ. ಅವನು ತಿರುಗಿಸಿ ನೋಡಿ ಪರೀಕ್ಷಿಸಿ ‘ಇದು ಹಳೆಯದು; ಹರುಕು ಮುರುಕು; ಸವೆದು ಹೋಗಿದೆ; ಮಣ್ಣೂ ಹಿಡಿದಿದೆ; ಆದರೂ ಇದು ದಂಬೂಕೇ ಹೌದಯ್ಯ’ ಎಂದು ಹೇಳಿ ಅಲ್ಲಿಂದ ತನ್ನ ಕೆಲಸಕ್ಕೆ ಹೊರಟು ಹೋದ.ಅಷ್ಟರಲ್ಲಿ ಪೋಲೀಸರ “ಕಬಾಟು” ಭರದಿಂದ ಆರಂಭವಾಗಿತ್ತು; ಯಾರೋ ಒಬ್ಬನೇ ಬೇರೆಯಾಗಿ ಎದುರಿಗೆ ನಿಂತು ಯಾವ ಭಾಷೆಯಲ್ಲಿಯೋ ಏನೇನೋ ಹೇಳುತ್ತಿದ್ದ. ನಾನು ಕೊಂಚ ದೂರದಲ್ಲಿ ನಿಂತುಕೊಂಡು ಇದ್ದದ್ದರಿಂದ ಅವನು ಗಟ್ಟಿಯಾಗಿ ಒದರುವ ಶಬ್ದಗಳು ಮಾತ್ರ ಕೇಳಿಸುತ್ತಿದ್ದುವು. ಅವನು ಮೊದಲು – “ಟಿಂಚನ್” (ಅಂದರೆ “ಎಟೆನ್ಶನ್” = ಲಕ್ಷ್ಯ) ಅಂದ; ಸರಿ; ಪೋಲೀಸರೆಲ್ಲರೂ ಕಣ್ಣು ಅರಳಿಸಿ, ರೆಪ್ಪೆ ಹಾಕದೆ, ಮುಖ ತಲೆ ಎತ್ತಿ, ಕೈಕಾಲು ಜೋಡಿಸಿ, ಮರಕಟ್ಟಿದ ಹಾಗೆ, ಚಿತ್ತಾರದ ಗೊಂಬೆಗಳ ಹಾಗೆ ಮೌನವಾಗಿ ನೆಟ್ಟಗೆ ನಿಂತರು. ‘ಟಿಂಚನ್’ ಅಂದರೆ ಎಲ್ಲಿ ಅಲ್ಲಿ ನೆರೆದವರಿಗೆಲ್ಲ ಕಾಂಚಾನ ಕೊಡುವರೋ ಎಂದು ನಾನು ಹಾರೈಸಿಕೊಂಡಿದ್ದದ್ದು ವ್ಯರ್ಥವಾಯಿತು. + + + +ಆ ಮೇಲೆ ಅವನು ಒಂದೊಂದೇ ಶಬ್ದ ಹೇಳುತ್ತಾ ಹೋದ; ಅವರು ಅಭ್ಯಾಸ ಮಾಡುತ್ತಾ ಬಂದರು. ಅವರು ದಂಬೂಕು ಎತ್ತಿದರು; ಹೆಗಲಿಗೇರಿಸಿದರು; ಇಳಿಸಿದರು; ಮರಳಿ ದಂಬೂಕು ಎತ್ತಿ ಮುಂದಕ್ಕೆ ಹಿಡಿದರು. ಅವರು ಗುಂಡು ಹಾರಿಸಿ ಅದು ನನಗೆ ತಗುಲಬಹುದೆಂದು ನನ್ನ ಎದೆಯಲ್ಲಿ ಅವಲಕ್ಕಿ ಕುಟ್ಟತೊಡಗಿ ನಾನು ನಿಂತಲ್ಲಿಂದ 10 ಮಾರು ಹಿಂದೆ ಸರಿದೆ. ಆ ಮೇಲೆ ಅವರು ದಂಬೂಕು ಹಾರಿಸದ್ದನ್ನು ಕಂಡು, “ನನ್ನ ಕಡೆಗೆ ಗುರಿ ಇಟ್ಟು ಹೊಡೆಕೊಂಡು ತಿರುಗಿ ಮೊದಲಿದ್ದಲ್ಲಿಗೇ ಬಂದು ನಿಂತೆ. ಆಗ – ನಮ್ಮೂರಲ್ಲಿ ಮಣ್ಣು ತುಳಿಯುತ್ತಾರಲ್ಲ ಕುಂಬಾರರು. ಹಾಗೆ ‘ಲೈಟ್’ (‘ರೈಟ್=ಬಲಗಾಲು) “ಲಪಾಟ್” (“ಲೆಫ್ಟ್” = ಎಡಗಾಲು) ಅಂತ ಬಾಯಲ್ಲಿ ಹೇಳಿಕೊಂಡು ಇವರೆಲ್ಲ ಕಾಲು ಬಡಿಯುತ್ತಿದ್ದರು. ಆ ಮೇಲೆ ಅವನು “ಕುಯಿಕ್ ಮಾರ್ಚಿ” (“ಕ್ವಿಕ್ ಮಾರ್ಚ್”= ಬೇಗ ನಡೆಯಿರಿ) ಅಂದ ಕೂಡಲೇ ಅವರು ಬೇಗ ಬೇಗ ಧಡಬಡ ನಡೆದರು. ‘ರೈಟ್ ಅಬೊಟ್ರನ್’ (‘ರೈಟ್ ಎಬೌಟ್ ಟರ್ನ್’= ಬಲ ದಿಕ್ಕಿಗೆ ತಿರುಗಿ) ಎಂದ ಕೂಡಲೇ ಬಲ ದಿಕ್ಕಿಗೆ ತಿರುಗಿದರು. ‘ದಸ್ಬಸ್’ (‘ಡಿಸ್ಬರ್ಸ್=ಚೆದುರಿ) ಅನ್ನುತ್ತಲೇ ಎಲ್ಲರೂ ಅಲ್ಲಿಂದ ಹೊರಡಲಾರಂಬಿಸಿದರು. + +ನಾನು ಅಲ್ಲಿಂದ ಹೊರಟು ನಾಲ್ಕು ಹೆಜ್ಜೆ ಮುಂದೆ ಬರುವುದರೊಳಗಾಗಿ ನನ್ನ ಹಿಂದಿನಿಂದ ಒಬ್ಬ ಗಿಡ್ಡ ಮನುಷ್ಯ ಬಂದು, ತುದಿಗಾಲ ಮೇಲೆ ನಿಂತು ಉದ್ದ, ಮನುಷ್ಯನಾಗಿ ನನ್ನ ಕಿವಿಯಲ್ಲಿ ‘ನೀನು ಡಿಟೆಕ್ಟಿವನೋ?’ (ಪತ್ತೆದಾರ) ಎಂದು ಮೆಲ್ಲಗೆ ಕೇಳಿದ. ನಾನು ತಿರುಗಿ ನೋಡಿ, ‘ನಾನು ಟಕ್ಕಿನವ’ನೋ ಎನ್ನಲು ನೀನು ಯಾರು?’ ಎಂದು ಕೇಳಿದೆ.“ನಾನು ಈ ಊರ ಹೆಡ್ ಕಾನ್ಸ್ಟೇಬಲ್” ಎಂದು ಅವನು ಗರ್ವದಿಂದ ನುಡಿಯುತ್ತಲೇ ‘ಓಹೋ! ನೀನೇಯೋ – ಆ ಹೆಡ್ಡ – ಕನಿಷ್ಟ-ಅಬಲ?’ ನನ್ನ ವಿಚಾರ ನಿನಗೆ ಬೇಡ; ಸುಮ್ಮನೆ ಹೋಗು’ ಎಂದು ಗದರಿಸಿದೆ. ಅವನು ಹೊರಟುಹೋದ.ಆ ಮೇಲೆ ಎರಡು ಹೆಜ್ಜೆ ಹಾಕುವಷ್ಟರಲ್ಲೇ ಒಬ್ಬ ಬಂದು – ‘ಇಲ್ಲಿನ ದಫೇದಾರ ನಾನು; ಕೈಯಲ್ಲಿ ಬಂದೂಕನ್ನು ಹಿಡಿದುಕೊಂಡು ನೀನೆಲ್ಲಿಗೆ ಹೊರಟೆ? ಹೇಳು!’ ಎಂದು ಕೇಳಿದ.ನಾನು : “ಏನಯ್ಯ! ಇದು ಬಂದೂಕಲ್ಲ; ದಂಬೂಕೆಂಬುದು ನಿನಗೆ ತಿಳಿಯದೆ? ನನ್ನ ವಿಚಾರ ನಿನಗೆ ಬೇಡ; ಸುಮ್ಮನೆ ಹೋಗು!”ದಫೆ : ‘ಸುಮ್ಮನೆ ಹೋಗು?’ ಮುಚ್ಚು ಬಾಯಿ ಕಳ್ಳ! ಈ ಬಂದೂಕು ಹಿಡಿದುಕೊಂಡು ನೀನೇನು ಇಲ್ಲಿ ದಂಗೆ ಎಬ್ಬಿಸಲು ಬಂದಿರುವೆಯ?”ನಾನು ನನಗಿಂತ ಎರಡು ಅಡಿ ಉದ್ದ ಇದ್ದ ಇವನ ಆಕಾರವನ್ನೂ ಇವನ ಮಾತಿನ ದರ್ಪವನ್ನೂ ನೋಡಿ ಕೊಂಚ ಹೆದರಿ “ನನಗೆ ದಂಗೆ” ಎಂದರೇನೆಂಬುದೇ ತಿಳಿಯದು. ‘ಟೊಂಗೆ’ ಎಂಬ ಶಬ್ದ ಮಾತ್ರ ಗೊತ್ತು. ನಾನೊಬ್ಬ ಬಡವ; ಮನೆಗೆ ಹೋಗಲು ಇಲ್ಲಿಗೆ ಬಂದೆ” ಎಂದು ಅವನೊಡನೆ ಹೇಳುತ್ತಿದ್ದಾಗಲೇ ಇನ್ನೊಬ್ಬ ಸಿಪಾಯಿ ಬಂದು ‘ನಮ್ಮ ಭೀತಿ ಇಲ್ಲದೆ ಈ ಬಂದೂಕು ಹೀಗೆ ಹಿಡಿದುಕೊಂಡಿರುವೆಯಲ್ಲ! ಎಲಾ ಗಡ್ಡದವನೇ! ನಿನಗೆಷ್ಟು ಸೊಕ್ಕೋ!” ಎಂದು ಕೇಳಿದ.ನಾನು : “ಈ ದಂಬೂಕು ನನ್ನದು; ಅದನ್ನು ಹೊತ್ತ ಹೆಗಲು ನನ್ನದು. ಹಾಗಿರುವಾಗ ನನ್ನ ದಂಬೂಕು ನಾನು ಹಿಡಿದುಕೊಳ್ಳಲು ನಿಮ್ಮ ಭೀತಿ ಏನು? ಹೊಳೆ ನೀರಿಗೆ ಡೊಣ್ಯಪ್ಪ ನಾಯಕನ ಅಪ್ಪಣೆಯೇ?” + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಈ ಮಾತು ಕೇಳಿ ಸಿಪಾಯಿಯ ಮುಖದ ಮೇಲೆ ಸಿಟ್ಟು ಕುಣಿಯುತ್ತಾ ಇದ್ದದ್ದು ಕಂಡಿತು. ಸಿಟ್ಟು ಮಾಡಿ ಕೆಟ್ಟು ಹೋದವರ ಕಥೆ ನೆನಪಾಯಿತು. ಊರ್ವಶಿ ಮೇಲೆ ಸಿಟ್ಟು ಮಾಡಿ ಅರ್ಜುನ ಕೆಟ್ಟ; ಶೂರ್ಪನಖಿ ಮೇಲೆ ಕೋಪಿಸಿಕೊಂಡು ರಾಮ ಹಾಳಾದ; ದ್ರೌಪದಿ ಮೇಲೆ ಮುನಿಸು ತೋರಿಸಿ ಕೌರವ ರಾಜ್ಯ ಕಳೆದುಕೊಂಡ; ಇನ್ನು ಹೆಂಡತಿ ಮೇಲೆ ರೇಗಿಕೊಂಡು ಗಂಡ, ಹುಡುಗರ ಮೇಲೆ ಕ್ರೋಧ ತಾಳಿ ಐಗಳು – ತೊಂದರೆಗೆ ಗುರಿಯಾದ್ದುಂಟು. ಹಾಗೆ ಅಂಥಂಥವರ ಪಾಡೇ ಇಂಥಿಂಥದಾಗಿರುವಾಗ, ಇನ್ನು ಈ ಸಿಪಾಯಿಯ ಪಾಡೇನು? ಇವನೂ ಕೋಪ ಮಾಡಿಕೊಂಡು ವೃಥ ಕೆಟ್ಟು ಹೋಗುತ್ತಾನಲ್ಲ! ಎಂತ ಮನಸ್ಸಿನಲ್ಲೇ ಯೋಚಿಸಿ – “ಸಿಟ್ಟು ಬಂತೇ, ಅದನ್ನು ಕಟ್ಟಿಕೊಳ್ಳಬೇಡಯ್ಯ! ನಮ್ಮ ಅಜ್ಜಿ ಮೇಲೆ ಅಜ್ಜ ಸಿಟ್ಟು ಮಾಡಿ ಜಗಳವಾಡಿ, ಎದೆಯೊಡೆದು, ಆಗಲೇ ನೆಗೆದು ಬಿದ್ದು ಹೋದ!” ಅಂದೆ.ಸಿಪಾಯಿ : ‘ಹೊಟ್ಟೆ ಉರಿಯುವ ಮಾತಿಗೆ ಸಿಟ್ಟು ಯಾಕೆ?’ ಎಂದು ‘ಚಕ್ಕಂದವಾಡಲು ನೋಡುತ್ತೀಯಾ? ಮಾತು ಮರೆಸಿದರೂ ಬಂದ ಕೆಲಸ ಮರೆಯುವವ ನಾನಲ್ಲ. ಈಗ ಹೇಳು! ನಿನ್ನ ಕೈಯಲ್ಲಿ ಆ ಬಂದೂಕು ಇದೆಯಲ್ಲ…’ನಾನು : (ಅರ್ಧದಲ್ಲೇ ತಡೆದು) “ಯಾವ ಬಂದೂಕು? ಬಂದೂಕು? ಚಿಃ! ಇದು ದಂಬೂಕು!”ಸಿಪಾಯಿ : “ಹಾಗೂ ಆಗಲಿ; ಅದಕ್ಕೆ “ಲೈಸನ್” ಇದೆಯೇ? ಹೇಳು!”ನಾನು : “ಬಂದೂಕಿಗಾದರೆ ‘ನ್ಯೂಸೆನ್ಸ್’ (ಜನೋಪದ್ರವ ಎಂದರ್ಥ) ಬೇಕಾದೀತು; ದಂಬೂಕಿಗೂ ಬೇಕೇ?”ಸಿಪಾಯಿ : “ನ್ಯೂಸೆನ್ಸ್’ ಅಲ್ಲ; ‘ಲೈಸೆನ್ಸ್!’ ಅಂದರೆ ಇದನ್ನು ಹಿಡಿಯಲು ಸರಕಾರದ ಅಪ್ಪಣೆ! ಅದನ್ನು ಪಡೆದಿದ್ದೀಯ?”ನಾನು : ‘ನಾನರಿಯೆ; ನಾನಾಗಿ ಕೇಳಿದ್ದಿಲ್ಲ; ಬೇರೆಯವರಾಗಿ ಹೇಳಿದ್ದಿಲ್ಲ – ನನ್ನ ಕೈಯಲ್ಲಿ ನನ್ನ ದಂಬೂಕು ಹಿಡಿಯಲಿಕ್ಕೆ ‘ನಾನ್ಸೆನ್ಸ್’ (ಅರ್ಥವಿಲ್ಲದ್ದು) ಬೇಕೆಂದು ನನಗೇನು ಗೊತ್ತು?’ಸಿಪಾಯಿ : ‘ನಾನ್ಸೆನ್ಸ್’ ಅಲ್ಲವಯ್ಯ; ‘ಲೈಸೆನ್ಸ್’ ಎಂದು ಎಷ್ಟು ಸಲ ಹೇಳಬೇಕು? ‘ಲೈಸೆನ್ಸ್’ ಇಲ್ಲದೆ ಇದನ್ನು ಹಿಡಿಯಲಿಕ್ಕೆ ಇದು ನಿಮ್ಮ ಹಿಂದಿನ ದೊರೆ ಟಿಪ್ಪು ಸುಲ್ತಾನರ ದರಬಾರಲ್ಲ; ಕುಂಪಣಿ ಸರಕಾರದ ದವಲತ್ತು. ಈಗ ನೀನು “ಲೈಸನ್” ಇಲ್ಲದೆ ಬಂದೂಕು ಹಿಡಿದಿದ್ದರೆ ದೊಡ್ಡ ಮೊಕದ್ದಮೆಯಾಗಿ ನಿನಗೆ ಮಾತ್ರವಲ್ಲ – ನಿನ್ನ ಹೆಂಡತಿ, ತಾಯಿ ಮೊದಲಾದವರಿಗೆಲ್ಲ ಗಡಿಪಾರು ಶಿಕ್ಷೆಯೋ ನೇಣು ಹಾಕುವ ದಂಡನೆಯೋ ಆಗಿ ಹೋಗುತ್ತದೆ.”ಕೆಲವರಿಗೆ ಅವರ ತಾಯಿಯರನ್ನು ದೂಷಿಸಿದರೆ, ಬೈದರೆ ಅವಮಾನಿಸಿದರೆ ಪರಮ ಸಂತೋಷ; ಅದೇ ಹೆಂಡಂದಿರ ಮಾತೆತ್ತಿದರೆ ಮಹಾ ಕೋಪ. ನನಗೆ ಎರಡೂ ಇಲ್ಲ; ನಾನೆಂದೆ-‘ಅಷ್ಟು ಮಾಡು ಮಹಾರಾಯ! ನನ್ನ ಹೆಂಡತಿಯನ್ನು ಮೊದಲು ಗಡೀಪಾರು ಮಾಡಿಸು; ಆ ಮೇಲೆ ಅವಳ ತಾಯನ್ನು ನೇಣು ಹಾಕಿಸು; ಆದರೆ ನನ್ನನ್ನು ಮಾತ್ರ ಬಿಟ್ಟುಬಿಡು; ನಿನ್ನ ಹೆಸರು ಹೇಳಿಕೊಂಡು ಬದುಕಿರುತ್ತೇನೆ.”ಸಿಪಾಯಿ : “ಅದೆಲ್ಲ ಭೋಗಾರದುಃಖ ಬೇಡ; ಲೈಸನ್ಸ್’ ಇದೆಯೋ ಇಲ್ಲವೋ ಅಷ್ಟು ಹೇಳು.” + +ಸಿಪಾಯಿಯ ಮಾತುಗಳೆಲ್ಲ ನನಗೆ ಆಶ್ಚರ್ಯವಾಗಿ ತೋರಿದುವು. ‘ಆ ಒಳ್ಳೆ ದೊರೆ ಟಿಪ್ಪು ಸುಲ್ತಾನರ ಆಳಿಕೆ ಕಾಲದಲ್ಲಿ ಆ ಗ್ರಾಮದ ನಾವೆಲ್ಲ ಆತನ ಪ್ರಜೆಗಳಾಗಿ ಅಂಥದೇನೂ ಕುಂದುಕೊರತೆ ಇಲ್ಲದೆ, ಅಂಥದೇನೂ ತೆರಿಗೆ ಕಂದಾಯದ ಭಾರ ಇಲ್ಲದೆ, ಇದ್ದದ್ದರಲ್ಲಿ ಸುಖಜೀವನ ಮಾಡುತ್ತ ಇದ್ದದ್ದು ನನಗೆ ಗೊತ್ತಿತ್ತು. ಆತ ಮುಸಲ್ಮಾನನಾಗಿದ್ದರೂ ಹಿಂದೂ ದಿವಾನ (ಮುಖ್ಯ ಮಂತ್ರಿ) ರನ್ನೇ ನೇಮಿಸಿಕೊಂಡಿದ್ದ; ಹಲವು ಹಿಂದೂ ದೇವಸ್ಥಾನಗಳಿಗೆ ಉಂಬಳಿ ಉತ್ತಾರ ಬಿಟ್ಟಿದ್ದ; ಶೃಂಗೇರಿ ಶಾರದಾ ಪೀಠವನ್ನು ಸುಲಿಯಲು ಮರಾಠಿಯವರು ಬರುತ್ತಾರೆ ಎಂದು ಕೇಳಿದಾಗ “ನಾನಿದ್ದೇನೆ; ಹೆದರಬೇಡಿ” ಅಂತ ಧೈರ್ಯ ಹೇಳಿದ್ದ; ತನ್ನ ದೇಶ ಅತಂತ್ರವಾಗಬಾರದು, ತನ್ನ ಉಸಿರಾಡುವವರೆಗೂ ಪರಾಧೀನವಾಗಲು ಬಿಡಬಾರದು ಎಂಬ ಪ್ರತಿಜ್ಞೆ ಮಾಡಿದವರಂತೆ ತನ್ನ ದೇಶದ ಮೇಲಿನ ಅಭಿಮಾನದಿಂದ ಯಾವ ಕಪ್ಪು ಬಿಳೀ ಶತ್ರುಗಳಿಗೂ ಡೊಗ್ಗು ಸಲಾಂ ಹಾಕದೆ, ಅವರ ವಿರುದ್ಧ ಯುದ್ಧಕ್ಕೇ ಹೊರಟಿದ್ದ – ಎಂಬುದನ್ನು ಜನರ ಬಾಯಿಂದ ಕೇಳಿದ್ದೆ. ಅಂಥ ಸುಲ್ತಾನನನ್ನು ಫಿರಂಗಿಯವರು ದಂಬೂಕಿನಿಂದ ಹೊಡೆದು ಬಿಟ್ಟಿದ್ದರೆ?’ ಎಂದು ಯೋಚಿಸುತ್ತಿದ್ದಾಗ, ಸಿಪಾಯಿ – ‘ಒಳ್ಳೆಮಾತಿನಲ್ಲಿ ‘ಲೈಸನ್ಸ್’ ತೋರಿಸು; ಇಲ್ಲದಿದ್ದರೆ ನಿನ್ನ ಮೇಲೆ ರಾಜದ್ರೋಹ’ದ ದೊಡ್ಡ ಮೊಕದ್ದಮೆಯಾಗುವುದು. ಆ ಕಟ್ಟಿ (ಆಕ್ಟು=ಕಾಯಿದೆ) ನಲ್ಲಿ ಹಾಗೇ ಇದೆ” ಎಂದು ಅಬ್ಬರಿಸಿದ.ನಾನು : “ನನ್ನ ದಂಬೂಕಿಗಿರುವುದು ಒಂದೇ ಹಿತ್ತಾಳಿ ಕಟ್ಟು; ತೋರುವುದಿಲ್ಲವೇ?” + + + +ನಮ್ಮಿಬ್ಬರೊಳಗೆ ಹೀಗೆ ಮಾತುಕಥೆ ನಡೆಯುತ್ತಿರುವಾಗಲೇ, ಮತ್ತೊಬ್ಬ ಸಿಪಾಯಿ ನನ್ನ ಕಡೆಗೆ ಬಂದ; ಅವನ ಹಿಂದೆ ಬಿಳಿ ಫಿರಂಗಿಯವನೊಬ್ಬನೂ ಬಂದ. ಅವನು ಕ್ಷಣ ಕಾಲ ನನ್ನನ್ನು ಪಾದದಿಂದ ತಲೆಯವರೆಗೂ ಚೆನ್ನಾಗಿ ನೋಡಿ ‘ಅರಿಷ್ಟ (‘ಎರೆಸ್ಟ್’=ಕೈದು ಮಾಡು) ಎಂದು ಆ ಸಿಪಾಯಿಗಳಿಗೆ ಹೇಳಿ ಹೊರಟು ಹೋದ. ಅವರು ನನ್ನ ದಂಬೂಕನ್ನು ಕಸಿದುಕೊಂಡರು. ಇದೆಂಥ ‘ಅರಿಸ್ಟ’ ಕೆಲಸ ಮಾಡುತ್ತೀರೆಂದರೂ ಕೇಳದೆ, ‘ದಮ್ಮಯ್ಯ, ಬೇಡ’ ಎಂದರೂ ಬೇಡಿ ತೊಡಿಸಿದರು. ‘ಯಾಕೆ, ಏನು ಮಾಡುತ್ತೀರಿ?’ ಎಂದಾಗ ‘ನಡೆಯೋ, ಬಾಯಿ ಮುಚ್ಚಿಕೊಂಡು’ ಎಂದು ನನ್ನ ಕತ್ತು ಹಿಡಿದು ತಳ್ಳಿದರು. ನಾನು ನಿರುಪಾಯನಾಗಿ ಅವರೊಡನೆ ಹೋದೆ. ನನ್ನ ಹಿಂದೆಯೊಬ್ಬ ಸಿಪಾಯಿ; ಮುಂದೆಯೊಬ್ಬ ಸಿಪಾಯಿ; ಮಧ್ಯದಲ್ಲಿ ನಾನು – ಅಶೋಕವನದ ಹನುಮನ ಹಾಗೆ.” + +ಕಥೆಯ ಹಿನ್ನೆಲೆ + +1947 ರಲ್ಲಿ ಪ್ರಕಟವಾದ ‘ಮುರುಕು ದಂಬೂಕು’ ಕಾದಂಬರಿ ‘ರಿಪ್ ವ್ಯಾನ್ ವಿಂಕಲ್’ ಕತೆಯಿಂದ ಪ್ರೇರಿತವಾದ ಕಾದಂಬರಿ. ಇದನ್ನು ಹುರುಳಿ ಭೀಮರಾಯರು ಬ್ರಿಟಿಷರ ಆಳ್ವಿಕೆಯನ್ನು ವಿರೋಧಿಸುವ ಪ್ರಚ್ಛನ್ನ ಉದ್ದೇಶದಿಂದ ಬರೆದಿರಬಹುದೆನ್ನುವುದಕ್ಕೆ ಕಥಾನಕದಲ್ಲಿ ಸಾಕ್ಷಿಗಳು ಸಿಗುತ್ತವೆ. ಈ ಕಾದಂಬರಿಯ ನಾಯಕ ವಿ. ಚಿತ್ರಮೂರ್ತಿಯು ಪತ್ನಿ ಮತ್ತು ಅತ್ತೆಯನ್ನು ಬೆದರಿಸಲು, ಬೇರೆ ಮದುವೆ ಮಾಡಿಕೊಂಡು ಬರುವೆನೆಂಬ ಸುದ್ದಿ ಹಬ್ಬಿಸಿ ನಾಲ್ಕು ದಿನದ ಮಟ್ಟಿಗೆ ತನ್ನ ಬಾಲ್ಯ ಸ್ನೇಹಿತನ ಮನೆಗೆ ಹೊರಡುತ್ತಾನೆ. ದಾರಿಯಲ್ಲಿ ಒಬ್ಬ ಅಪರಿಚಿತ ಮುದುಕ ಸಿಕ್ಕಿ, ಅವನು ತಂದಿದ್ದ ಮದ್ಯವನ್ನು ಮೂರ್ತಿ ಕುಡಿದು ಐವತ್ತು ವರ್ಷಗಳ ನಿದ್ದೆಗೆ ಬೀಳುತ್ತಾನೆ. + +ಈ ಪ್ರಸಂಗವನ್ನು ಸಾಂಕೇತಿಕವಾಗಿ ಸ್ವೀಕರಿಸಿದರೆ ಪರಕೀಯರು ಬಂದು ನಮ್ಮನ್ನು ವಂಚಿಸಿ, ನಮ್ಮನ್ನು ನಿದ್ದೆಗೆ ತಳ್ಳಿದ್ದನ್ನು ಇದು ಸೂಚಿಸುತ್ತದೆ. “ಕ್ರಮಶಃ ದೆಸೆದಿಕ್ಕೆಲ್ಲಿ, ಆಗಸವೆಲ್ಲಿ, ಎಲ್ಲಿ ಭೂಮಿ ಎಂಬಂತೆ ಹಬ್ಬಿತು ತಮ!” ಎಂದು ಮೂರ್ತಿ ಈ ಸಂದರ್ಭದಲ್ಲಿ ಹೇಳುತ್ತಾನೆ. ಅವನಿಗೆ ಎಚ್ಚರವಾದಾಗ ಬ್ರಿಟಿಷರ ಆಡಳಿತ ವ್ಯವಸ್ಥೆ ಊರಿನಲ್ಲಿ ಜಾರಿಯಲ್ಲಿತ್ತು. ಮೊದಲು ಬಿಳಿಯರಿಂದಲೇ ಬಂದಿದ್ದ ಕೋವಿಯನ್ನು ಮೂರ್ತಿ ಹಿಡಿದುಕೊಂಡಿದ್ದ. ಅದೀಗ ಗೆದ್ದಲು ಹಿಡಿದು ಹರಕು ಮುರುಕಾಗಿ ಹೋಗಿತ್ತು. ಅದನ್ನು ಬಂದೂಕು ಎನ್ನದೆ ‘ದಂಬೂಕು’ ಎಂದೇ ಮೂರ್ತಿ ಹೇಳುತ್ತಿರುತ್ತಾನೆ. ಬಂದೂಕು ಹಿಡಿದುಕೊಂಡುದಕ್ಕಾಗಿ ಮೂರ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತದೆ. ಮೂರ್ತಿಯ ಮುರುಕು ದಂಬೂಕು ಮತ್ತು ಉದ್ದನೆಯ ಗಡ್ಡ ಇವುಗಳನ್ನು ನೋಡಿ ಅವನು ನಾನಾ ಸಾಹೇಬನೆಂದು ಭಾವಿಸಿ, ಬಂಧಿಸಿ ಕೋರ್ಟಿಗೆ ಹಾಜರು ಪಡಿಸುತ್ತಾರೆ. ವಿಚಿತ್ರಮೂರ್ತಿ ತನ್ನ ಐವತ್ತು ವರ್ಷಗಳ ನಿದ್ದೆಯಿಂದೆದ್ದು ಬರುವಾಗಿನ ಸಂದರ್ಭದಿಂದ ಆರಿಸಿದ ಭಾಗ ಕೆಳಗಿನದು. ಅವನು ಟಿಪ್ಪು ಸುಲ್ತಾನರ ಕಾಲದಲ್ಲಿ ಮಲಗಿದವನು, ಎದ್ದಾಗ ಬ್ರಿಟಿಷ್ ಆಳ್ವಿಕೆ ಬಂದಿರುತ್ತದೆ. + +ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ + +ಹುರುಳಿ ಭೀಮರಾವ್ + +ಹುರುಳಿ ಭೀಮರಾವ್ + +ದಕ್ಷಿಣ ಕನ್ನಡ ಜಿಲ್ಲೆಯ ಆದ್ಯ ಪತ್ರಕರ್ತರೂ, ಹಾಸ್ಯ ಸಾಹಿತಿಗಳೂ, ಕಾದಂಬರಿಕಾರರೂ ಆದ ಹುರುಳಿ ಭೀಮರಾಯರು ದಕ್ಷಿಣ ಕನ್ನಡದ ನವೋದಯದ ಒಬ್ಬ ಮುಖ್ಯ ಸಾಹಿತಿಗಳಾಗಿದ್ದಾರೆ. ಮಂಗಳೂರಿನ ನವೋದಯ ಕಾಲದ ಪ್ರಸಿದ್ಧ ಪತ್ರಿಕೆ ‘ಕಂಠೀರವ’ದ ಸಂಪಾದಕರಾಗಿ, ‘ಮುರುಕು ದಂಬೂಕು’ (1947) ಮತ್ತು ‘ಹಾಸನ್ ಟೋಪಿ’ (1952) ಎಂಬ ಪ್ರಸಿದ್ಧ ಕಾದಂಬರಿಗಳ ಲೇಖಕರಾಗಿ ಅವರು ಖ್ಯಾತರು. ಹುರುಳಿ ಭೀಮರಾಯರು (1889 – 1970) ಉಡುಪಿಯಲ್ಲಿ ಸ್ವಲ್ಪ ಕಾಲ ಸಂಸ್ಕೃತ ಕಾಲೇಜಿನಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿ ಕೆಲಸ ಮಾಡಿದ್ದರು. ನಂತರ ಕಲ್ಲಿಕೋಟೆಯ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡಿದರು (1916). ಅದನ್ನು ಬಿಟ್ಟು ಅಲ್ಲಿನ ನೆಡುಂಗಾಡಿ ಬ್ಯಾಂಕಿನಲ್ಲಿ ಕೆಲಸಕ್ಕೆ ಸೇರಿ, ಬ್ಯಾಂಕಿನ ಮಂಗಳೂರು ಶಾಖೆಗೆ ವರ್ಗವಾಗಿ ಬಂದರು. ಮಂಗಳೂರಿಗೆ ಬಂದ ಸ್ವಲ್ಪ ಕಾಲದಲ್ಲಿಯೇ ನೆಡುಂಗಾಡಿ ಬ್ಯಾಂಕ್ ಮುಚ್ಚಿದ್ದರಿಂದ ಅವರು ಜೀವನೋಪಾಯಕ್ಕಾಗಿ ಸ್ವತಂತ್ರ ಪತ್ರಕರ್ತರಾದರು. ‘ಸುವಾಸಿನಿ’, ಶ್ರೀಕೃಷ್ಣ ಸೂಕ್ತಿ, ಸ್ವದೇಶಾಭಿಮಾನಿ ಪತ್ರಿಕೆಗಳಿಗೆ ಅವರು ಬರೆಯುತ್ತಿದ್ದರು. ಮೊದಲು ‘ಕಂಠೀರವ’ ಒಪ್ಪೊತ್ತಿನ ಸಂಪಾದಕರಾಗಿ ಕೆಲಸಮಾಡುತ್ತಿದ್ದರು. ನಂತರ ‘ಕಂಠೀರವ’ದ ಪೂರ್ಣಾವಧಿ ಸಂಪಾದಕರಾಗಿ (1932 – 1967) ತಮ್ಮ ಹರಿತವಾದ ಬರಹಗಳಿಂದ ಮತ್ತು ಹಾಸ್ಯ ಬರಹಗಳಿಂದ ಆ ಪತ್ರಿಕೆಯನ್ನು ಒಂದು ಮುಖ್ಯ ಪತ್ರಿಕೆಯಾಗಿ ರೂಪಿಸಿದ್ದರು. ಇದರ ಜತೆಗೆ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯ ಪ್ರತಿನಿಧಿಯಾಗಿ ಕೆಲಸ ಮಾಡಿದರು. ನಂತರ ಅವರ ಜೀವನ ಮಂಗಳೂರಿನಲ್ಲಿಯೇ ಕಳೆಯಿತು. + +ಹುರುಳಿ ಭೀಮರಾಯರು ಕೆಲಸ ಮಾಡುತ್ತಿದ್ದ ಪತ್ರಿಕೆ ‘ಕಂಠೀರವ’ ಬ್ರಿಟಿಷರ ಪರವಾಗಿದ್ದ ಪತ್ರಿಕೆ. ಅದಕ್ಕೆ ಕಾರಣ ಅದರ ಯಜಮಾನರಾದ ಬೋಳಾರ ವಿಠಲರಾಯರು. ಅವರ ತಂದೆ ತಹಶೀಲ್ದಾರರಾಗಿದ್ದು ಬ್ರಿಟಿಷ್ ಸರಕಾರದ ಬಗ್ಗೆ ಗೌರವಭಾವ ತಾಳಿದ್ದರು. ಅದೇ ಪ್ರವೃತ್ತಿ – ಮನೋಭಾವ ಇವರಿಗೂ ಬಂದಿತ್ತು. ವಿಠಲರಾಯರಿಗೆ ಗಾಂಧೀ ಚಳವಳಿ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಸಹಾನುಭೂತಿ ಇತ್ತೇ ವಿನಹ ಪ್ರತ್ಯಕ್ಷವಾಗಿ ಅವರು ಅದನ್ನು ಬೆಂಬಲಿಸಲೇ ಇಲ್ಲ. “ಅವರ ಈ ಮನೋಗುಣಕ್ಕೆ ವ್ಯತಿರಿಕ್ತವಾಗಿ ನಡೆದುಕೊಳ್ಳುವ ಸ್ವಾತಂತ್ರ್ಯ ನಮ್ಮಲ್ಲಿ ಯಾರಿಗೂ ಇರಲಿಲ್ಲ. ಸ್ವಾಭಿಮಾನಿಗೆ, ರಾಷ್ಟ್ರಹಿತ ಪ್ರತಿಪಾದಕನಾಗಬೇಕೆನ್ನುವವನಿಗೆ ಇಂತಹ ಕಟ್ಟುನಿಟ್ಟಿನ ನಿರ್ಬಂಧ ಸರಿಬೀಳದಿದ್ದರೂ, ಕಾಲಕ್ಕೆ ತಕ್ಕುದಾಗಿ ನಡೆದುಕೊಳ್ಳಬೇಕಾದ ಪಾಡು ನಮ್ಮದಾಗಿತ್ತು” ಎಂದು ಭೀಮರಾಯರು ದಾಖಲಿಸಿದ್ದಾರೆ.(‘ವಿಕ್ರಮ’, ವಿಜಯದಶಮಿ ಸಂಚಿಕೆ – 1969). + +ಸ್ವತಃ ಹುರುಳಿ ಭೀಮರಾಯರು ಪ್ರಾರಂಭದಲ್ಲಿ ಕಾಂಗ್ರೆಸ್ ಪಕ್ಷದ ವಿರೋಧಿಯಾಗಿದ್ದ ಜಸ್ಟಿಸ್ ಪಾರ್ಟಿಯ ಬೆಂಬಲಿಗರಾಗಿದ್ದರು. ಮದ್ರಾಸ್ ಪ್ರೆಸಿಡೆನ್ಸಿಯ ಜಸ್ಟಿಸ್ ಪಾರ್ಟಿ (ಸದರ್ನ್ ಇಂಡಿಯಾ ಲಿಬರಲ್ ಫೆಡರೇಶನ್) 1916 ರಲ್ಲಿ ಸ್ಥಾಪಿತವಾಗಿದ್ದ ಬ್ರಾಹ್ಮಣೇತರ ಸಮುದಾಯಗಳ ಪಕ್ಷ. ಸರಕಾರಿ ನೌಕರಿಗಳಲ್ಲಿ ಬ್ರಾಹ್ಮಣರ ಪ್ರಾಬಲ್ಯವನ್ನು ವಿರೋಧಿಸಿ ಹುಟ್ಟಿಕೊಂಡಿದ್ದ ಪಕ್ಷ. 1920 ರಿಂದ ನಡೆದ ಐದು ಮಹಾಚುನಾವಣೆಗಳಲ್ಲಿ ನಾಲ್ಕನ್ನು ಗೆದ್ದಿತ್ತು. 1937 ರಲ್ಲಿ ಕಾಂಗ್ರೆಸ್ ಪಕ್ಷ ಗೆದ್ದುಬಂದ ಮೇಲೆ ಅದರ ಪ್ರಭಾವ ಕಡಿಮೆಯಾಯಿತು. ಆದರೆ ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿಯವರು ಅದರ ರಾಜಕೀಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಅದನ್ನು ದ್ರಾವಿಡ ಕಳಗ ಚಳುವಳಿಯಾಗಿ ರೂಪಿಸಿದರು. ಜಸ್ಟಿಸ್ ಪಾರ್ಟಿ ಬ್ರಾಹ್ಮಣವಿರೋಧಿ ಚಳುವಳಿಯಾಗಿತ್ತು. ಅವರ ನಿಲುವು ಎಷ್ಟರಮಟ್ಟಿಗೆ ಇತ್ತೆಂದರೆ ದೇಶಕ್ಕೆ ಸ್ವಾತಂತ್ರ್ಯಬಂದರೆ ಬ್ರಾಹ್ಮಣರು ಆಡಳಿತದ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇರುವುದರಿಂದ ಬ್ರಿಟಿಷರೇ ಮುಂದುವರಿಯಲಿ ಎಂದಿತ್ತು. ಅದಕ್ಕಾಗಿ ಅವರು ಗಾಂಧೀಜಿಯವರಿಗೂ, ಕಾಂಗ್ರೆಸಿಗೂ, ಅನ್ನೀ ಬೆಸೆಂಟರ ಹೋಂ ರೂಲ್ ಚಳುವಳಿಗೂ ವಿರುದ್ಧವಾಗಿದ್ದರು. ಈ ಪಕ್ಷ ಮೇಲುವರ್ಗದ ಶೂದ್ರರ ಹಿತಾಸಕ್ತಿಯನ್ನು ಮಾತ್ರ ಪರಿಗಣಿಸುವುದೆಂದು ಅರಿವಾಗಿ ಮುಸ್ಲಿಮರು ಮತ್ತು ದಲಿತರು ಇದರಿಂದ ದೂರವಾದ ಮೇಲೆ ಪಕ್ಷ ಅವನತಿ ಹೊಂದಿತು.ಹುರುಳಿ ಭೀಮರಾಯರು ತಾತ್ವಿಕವಾಗಿ ಜಸ್ಟಿಸ್ ಪಾರ್ಟಿಯ ಜತೆಗೆ ಇದ್ದರೆಂದು ಹೇಳುವುದಕ್ಕಾಗುವುದಿಲ್ಲ, ಕೇವಲ ವೈಯಕ್ತಿಕ ನೆಲೆಯಲ್ಲಿ, ತಮ್ಮ ಮಿತ್ರರಾಗಿದ್ದ ಆ ಪಕ್ಷದ ನಾಯಕರಿಗೆ ಬೆಂಬಲವಾಗಿದ್ದರು. ಅವರ ಸ್ವತಂತ್ರ ಬರಹಗಳೆಲ್ಲ ಪ್ರಚ್ಛನ್ನವಾಗಿ ಬ್ರಿಟಿಷ್ ವಿರೋಧಿಯೇ ಆಗಿದ್ದವು. ಹುರುಳಿಯವರು ಗಾಂಧೀಜಿಯವರ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅಭಿಮಾನವುಳ್ಳವರಾಗಿದ್ದರು ಮತ್ತು ಬ್ರಿಟಿಷರಿಗೆ ವಿರೋಧವಾಗಿದ್ದರು. + +‘ಮುರುಕು ದಂಬೂಕು’ ಟಿಪ್ಪು ಸುಲ್ತಾನನ ಆಳ್ವಿಕೆ ಮುಗಿದು ಬ್ರಿಟಿಷ್ ಆಳ್ವಿಕೆ ಪ್ರಾರಂಭವಾದಾಗಿನ ಸ್ಥಿತ್ಯಂತರದ ಕಾಲದ ಕಥಾನಕ. ಹೊಸ ವ್ಯವಸ್ಥೆ, ವಿದೇಶೀ ಭಾಷೆಗೆ ನಾಯಕ ವಿ. ಚಿತ್ರಮೂರ್ತಿ ತೋರಿಸುವ ವಿಶಿಷ್ಟ ಲೇವಡಿ – ಪ್ರತಿಭಟನೆ ನಗು ಬರಿಸುತ್ತದೆ. ಈ ಮಾತು ನೇರವಾಗಿದೆ: ‘ಆ ಒಳ್ಳೆ ದೊರೆ ಟಿಪ್ಪು ಸುಲ್ತಾನರ ಆಳಿಕೆ ಕಾಲದಲ್ಲಿ ಆ ಗ್ರಾಮದ ನಾವೆಲ್ಲ ಆತನ ಪ್ರಜೆಗಳಾಗಿ ಅಂಥದೇನೂ ಕುಂದುಕೊರತೆ ಇಲ್ಲದೆ, ಅಂಥದೇನೂ ತೆರಿಗೆ ಕಂದಾಯದ ಭಾರ ಇಲ್ಲದೆ, ಇದ್ದದ್ದರಲ್ಲಿ ಸುಖಜೀವನ ಮಾಡುತ್ತ ಇದ್ದದ್ದು ನನಗೆ ಗೊತ್ತಿತ್ತು. ಆತ ಮುಸಲ್ಮಾನನಾಗಿದ್ದರೂ ಹಿಂದೂ ದಿವಾನ (ಮುಖ್ಯ ಮಂತ್ರಿ) ರನ್ನೇ ನೇಮಿಸಿಕೊಂಡಿದ್ದ; ಹಲವು ಹಿಂದೂ ದೇವಸ್ಥಾನಗಳಿಗೆ ಉಂಬಳಿ ಉತ್ತಾರ ಬಿಟ್ಟಿದ್ದ; ಶೃಂಗೇರಿ ಶಾರದಾ ಪೀಠವನ್ನು ಸುಲಿಯಲು ಮರಾಠಿಯವರು ಬರುತ್ತಾರೆ ಎಂದು ಕೇಳಿದಾಗ “ನಾನಿದ್ದೇನೆ; ಹೆದರಬೇಡಿ” ಅಂತ ಧೈರ್ಯ ಹೇಳಿದ್ದ; ತನ್ನ ದೇಶ ಅತಂತ್ರವಾಗಬಾರದು, ತನ್ನ ಉಸಿರಾಡುವವರೆಗೂ ಪರಾಧೀನವಾಗಲು ಬಿಡಬಾರದು ಎಂಬ ಪ್ರತಿಜ್ಞೆ ಮಾಡಿದವರಂತೆ ತನ್ನ ದೇಶದ ಮೇಲಿನ ಅಭಿಮಾನದಿಂದ ಯಾವ ಕಪ್ಪು ಬಿಳೀ ಶತ್ರುಗಳಿಗೂ ಡೊಗ್ಗು ಸಲಾಂ ಹಾಕದೆ, ಅವರ ವಿರುದ್ಧ ಯುದ್ಧಕ್ಕೇ ಹೊರಟಿದ್ದ – ಎಂಬುದನ್ನು ಜನರ ಬಾಯಿಂದ ಕೇಳಿದ್ದೆ. ಅಂಥ ಸುಲ್ತಾನನನ್ನು ಫಿರಂಗಿಯವರು ದಂಬೂಕಿನಿಂದ ಹೊಡೆದು ಬಿಟ್ಟಿದ್ದರೆ?”. + +ಮೂರ್ತಿಯನ್ನು ಬಂಧಿಸಿ ಕೋರ್ಟಿಗೆ ಹಾಜರು ಪಡಿಸಿ ವಿಚಾರಣೆ ನಡೆಸುವ ಪ್ರಕ್ರಿಯೆಯಲ್ಲಿ ದಫೇದಾರ, ಸಿಪಾಯಿ, ಜೂರರ್, ನ್ಯಾಯಾಧೀಶ ಇವರೆಲ್ಲರ ಮಾತುಗಳನ್ನು – ಮುಖ್ಯವಾಗಿ ಇಂಗ್ಲಿಷ್ ಆಡಳಿತ ವ್ಯವಸ್ಥೆಯ ಲೈಸೆನ್ಸ್, ಸರ್ಟಿಫಿಕೇಟು, ಡಾಕ್ಟರ್, ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್, ಆ್ಯಕ್ಟ್, ಅರೆಸ್ಟ್ ಇತ್ಯಾದಿ ಶಬ್ದಗಳನ್ನು ವಿಕೃತಗೊಳಿಸಿಯೇ ಮಾತಾಡುವ ಮೂಲಕ ಮೂರ್ತಿ ಬ್ರಿಟಿಷರ ಆಡಳಿತ ವ್ಯವಸ್ಥೆಯನ್ನು ಲೇವಡಿ ಮಾಡುತ್ತಾನೆ. ಬಿಳಿಯ ನ್ಯಾಯಾಧೀಶನ ಎದುರಿಗೆ ಮೂರ್ತಿ ತನ್ನನ್ನು ‘ನಾವು’ ಎಂದು ಬಹುವಚನದಿಂದಲೇ ಕರೆದುಕೊಳ್ಳುತ್ತಾನೆ. ಅವನ ಸ್ವಾಭಿಮಾನವನ್ನು ರಾವಣನ ಆಸ್ಥಾನದಲ್ಲಿ ಲಾಂಗೂಲಾಸದ ಮೇಲೆ ಕುಳಿತ ಹನುಮಂತನ ಸ್ವಾಭಿಮಾನಕ್ಕೆ ಹೋಲಿಸಬಹುದು. (ಮೂರ್ತಿ ತನ್ನನ್ನು ಬಂಧಿಸಿದ ಸನ್ನಿವೇಶವನ್ನು ಹೀಗೆಯೇ ಹೋಲಿಸುತ್ತಾನೆ – “ನನ್ನ ಹಿಂದೆಯೊಬ್ಬ ಸಿಪಾಯಿ; ಮುಂದೆಯೊಬ್ಬ ಸಿಪಾಯಿ; ಮಧ್ಯದಲ್ಲಿ ನಾನು – ಅಶೋಕವನದ ಹನುಮಂತನ ಹಾಗೆ!”). + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_47.txt b/Kenda Sampige/article_47.txt new file mode 100644 index 0000000000000000000000000000000000000000..b42a536d5ff9952074fb49ff4f8b8e1357effdf1 --- /dev/null +++ b/Kenda Sampige/article_47.txt @@ -0,0 +1,31 @@ +ಕಥೆ ಹುಟ್ಟಲು ಕಾರಣ ಬೇಕಿಲ್ಲ. ವಸ್ತುವಿನ ಕುರಿತು ಕುತೂಹಲ ಮಾತ್ರ ಇರಬೇಕು. ಕುತೂಹಲ ಉಗಮಿಸಲು ಮೂಲ ಕಾರಣ ಆ ವಿಷಯ ಸಂಬಂಧಿಸಿದ ವ್ಯಕ್ತಿಗಳಿಗೆ ಆ ವಿಷಯ ಆಸಕ್ತಿದಾಯಕವಾಗಿರಬೇಕು. ನಾನು ಯಾರು ಎನ್ನುವ ಪ್ರಶ್ನೆಯೇ ಬುದ್ಧಿ ಬರುವ ಹೊತ್ತಿನ ಮೊದಲ ಹುಡುಕಾಟವಾಗಿರುತ್ತದೆ. ಆಗ ಆತನಿಗೆ ಹೆಸರು ಎನ್ನುವ ಆವರಣವನ್ನು ತೊಡಿಸಿ ಅನಾವರಣಗೊಳಿಸಿ ಬಿಡುತ್ತೇವೆ. ಪ್ರಾಣಿಗಾದರೆ ಇದ್ಯಾವುದರ ಸಮಸ್ಯೆ ಇಲ್ಲ. ಅವುಗಳಿಗೆ ಹೆಸರೂ ಬೇಕಿಲ್ಲ, ಅವುಗಳಿಗೆ ವಿಶ್ಲೇಷಣಾ ಸಾಮರ್ಥ್ಯವಿಲ್ಲ. ಅವು ಕೇವಲ ಜೀವಿಗಳು; ಮನುಷ್ಯರು ಹಾಗಲ್ಲ, ಜೀವಿಸಿರುವುದರ ಜೊತೆಗೆ ಬದುಕಿರುವವರು. ಬದುಕು ಎಂದರೆ ಕಟ್ಟಿಕೊಳ್ಳುವುದು. ಜೀವ ಎಂದರೆ ಉಸಿರಿರುವವರೆಗೆ ಜೀವಿಸಿ ನಂತರ ಶವವಾಗುವುದು. ಈ ವಿಶ್ವದ ರಕ್ಷಕರು ನಾವು ಎನ್ನುವ ಬುದ್ಧಿಯನ್ನು ತಲೆಯೊಳಗೆ ತುಂಬಿಕೊಂಡಿರುವ ಮನುಷ್ಯರಿಗೆ ಎಲ್ಲದರ ಕುರಿತೂ ಉತ್ತರಬೇಕು. ಮನಸ್ಸಿನ ಕುತೂಹಲ ಮತ್ತು ಅದನ್ನು ವಿಶ್ಲೇಷಿಸುವ ಬುದ್ಧಿ ಇದಕ್ಕೆ ಮೂಲ. ಈ ಕುತೂಹಲ ಇಲ್ಲಿಂದ ಮುಂದೆ ಸಾಗಿ ತನ್ನೊಟ್ಟಿಗೆ ಇರುವವರ ಸಂಬಂಧಗಳಾದ ಅಮ್ಮ, ಅಪ್ಪ, ಅಣ್ಣ ಅಕ್ಕ-ತಮ್ಮ, ಬಾಂಧವರು ಮನೆ, ಊರು ಹೀಗೆ ಸಾಗುತ್ತದೆ. ಒಂದಕ್ಕೆ ಉತ್ತರ ಸಿಕ್ಕಿತೋ ಮತ್ತೊಂದನ್ನು ಅರಿಯುವುದಕ್ಕೆ ಅದು ನಾಂದಿಯಾಗುತ್ತದೆ. ಸಮನ್ವಿತ ಪ್ರಕಾಶನದಿಂದ ಪ್ರಕಟವಾದ ರಾಜಶೇಖರ ಜೋಗಿನ್ಮನೆಯವರ ಹೊಸ ಕಾದಂಬರಿ “ಕೇಳು ಧನಂಜಯ. . .” ಕೃತಿಯ ವಸ್ತುವಿರುವುದೇ ಈ ಕುತೂಹಲದಲ್ಲಿ. + +(ರಾಜಶೇಖರ ಜೋಗಿನ್ಮನೆ) + +ಅನ್ವೇಷಣೆಯ ವಿಷಯದಲ್ಲಿ ರಾಜಶೇಖರ ಹೆಗಡೆಯವರಿಗೆ ಯಾವುದೋ ಒಂದು ಸೆಳೆತವಿದೆ. ಅವರ ಇನ್ನೊಂದು ಕಥಾಸಂಕಲನ “ಇಗ್ಗಪ್ಪಣ್ಣನ ವಿಗ್ರಹಾನ್ವೇಷಣೆ ಮತ್ತು ಆತ” ಎನ್ನುವ ಕಥೆಗಳಲ್ಲಿ ಈ ಗುಣಗಳನ್ನು ಕಾಣಬಹುದಾಗಿದೆ. ಮೂರ್ತ ಮತ್ತು ಅಮೂರ್ತದ ಎರಡರ ಪ್ರತಿನಿಧಿಗಳು ಆ ಕತೆಗಳು. ಉತ್ತರಕನ್ನಡದ ಎಲ್ಲಾ ಪ್ರಮುಖ ಬರೆಹಗಾರರಂತೆ ರಾಜಶೇಖರ ಹೆಗಡೆಯವರಿಗೂ ಸಹ ತನ್ನ ಹುಟ್ಟೂರಿನ ಕಾನು, ಗಮ್ಯ, ಮಾಸ್ತಿ, ಜಟಕ, ಮನೆದೇವರು. ಬಳಿ, ಗೋತ್ರ ಇವುಗಳಲ್ಲಿ ಅಪರಿಮಿತ ಆಸಕ್ತಿ. ಈ ಆಸಕ್ತಿ ಎನ್ನುವುದು ಮನಸ್ಸಿನಿಂದಾಳದಲ್ಲಿ ಹುಟ್ಟಿದಾಗ ಅದನ್ನು ತಿಳಿದುಕೊಳ್ಳಬೇಕೆನ್ನುವವ ಶಿಷ್ಯ ಭಾವದಲ್ಲಿರುತ್ತಾನೆ. ತನಗೇ ಎಲ್ಲವೂ ತಿಳಿದಿದೆ ಎನ್ನುವ ಅಹಂ ಆತನಲ್ಲಿ ಸುಳಿಯುವುದಿಲ್ಲ. ವಿಧೇಯ ವಿಧ್ಯಾರ್ಥಿಯಾಗಿ ತನ್ನ ಕಿವಿಯನ್ನು ತೆರೆದು ಆಲಿಸುತ್ತಾನೆ. “ಕೇಳು ಧನಂಜಯ” ದ ಧನಂಜಯನಲ್ಲಿ ಇರುವ ಕುತೂಹಲ ಇದೇ ಬಗೆಯದ್ದು. + +ಕೊರೋನಾ ಕಾಲದ ಲಾಕ್ ಡೌನ್ ಹಿನ್ನೆಲೆಯಲ್ಲಿ ನಗರದ ಬದುಕೇ ಅನಿಶ್ಚಿತವಾದಾಗ ಉಸಿರಾಡಲು ಸ್ವಲ್ಪವಾದರೂ ಅವಕಾಶವಿರುವುದು ಹಳ್ಳಿಯಲ್ಲಿಯೇ. ಪ್ರಕೃತಿಯಲ್ಲಿನ ಸಹಬಾಳ್ವೆಯಲ್ಲಿ ಗಮಯವೇ ಇರಲಿ, ಹುಲಿಯೇ ಇರಲಿ ತಾನಾಗಿ ಮನುಷ್ಯರ ಮೈಮೇಲೆ ಬೀಳುವುದಿಲ್ಲ; ತನಗೆ ತೊಂದರೆಯಿಲ್ಲದಿರುವವರೆಗೆ ಎನ್ನುವುದರ ಅರಿವನ್ನು ಹಳ್ಳಿಯ ದಾಮುವಿನ ಮೂಲಕ ಅರ್ಥಮಾಡಿಸುತ್ತಾರೆ. ಪರೋಕ್ಷವಾಗಿ ಮಾನವನಿರ್ಮಿತ ಮಹಾಮಾರಿಯ ಕುರಿತು ಅಸಹನೆಯೂ ಇದೆ. ನೀರು ಕುಡಿಯಲು ಹೋಗುವ ಕಾಡುಕೋಣ ವಾಪಾಸು ಈ ಕಡೆಯೇ ಬರಬೇಕೆಂದಿಲ್ಲ; ಹಾಗೆಯೇ ಆಕಡೆಯೂ ಹೋಗಬಹುದು ಎನ್ನುವ ದಾಮುವಿನ ಮಾತು ಧನಂಜಯನಲ್ಲಿ “ಪ್ರಾಣಿಗಳಿಗೆ ಇಡೀ ಕಾನೇ ಮನೆ, ಅದು ತನ್ನೊಬ್ಬನದ್ದೇ ಅಲ್ಲ, ಎಲ್ಲರನ್ನೂ ಒಳಗೊಂಡ ಮನೆ ಎನ್ನುವ ವಿಚಾರ ಹೊಳೆಯುತ್ತದೆ. ಬೆಳೆದ ಕಾಡು ಅವರ ಮನೆಯಾದರೆ ಕಡಿದ ಕಾಡಿನಲ್ಲಿ ಹಚ್ಚಿದ ತೋಟ, ಕಟ್ಟಿದ ಮನೆ ತಮ್ಮದು ಎಂದುಕೊಂಡಿದ್ದೇವೆ. ಆದರೆ ಇಲ್ಲಿಗೆ ತಾವು ಹೊರಗಿನವರು ಒಳಗೆ ಆದವವರು ಎನ್ನುವ ಹೊಳಹು ಎಲ್ಲೋ ಅಸ್ಪಷ್ಟವಾಗಿ ಮೂಡುತ್ತದೆ. ಅದನ್ನು ತಿಳಿದುಕೊಳ್ಳುವ ಮಾನವಸಹಜ ಕುತೂಹಲ ಅವನಲ್ಲಿ ಮೂಡುತ್ತದೆ. ಅದಕ್ಕೆ ಆತ ಆಶ್ರಯಿಸುವುದು ತನ್ನಜ್ಜ ಅನಂತನಲ್ಲಿ. ಅನಂತಜ್ಜ ಕಾಲೇಜಿನ ಪ್ರಾಂಶುಪಾಲನಾಗಿ ನಿವೃತ್ತಿ ಹೊಂದಿದವ. ಆಧುನಿಕ ವಿಚಾರಧಾರೆ ಮತ್ತು ಹಳ್ಳಿಯ ಬೇರು ಎರಡೂ ಇರುವ ವ್ಯಕ್ತಿ. ಕಾಲ ಕೆಟ್ಟುಹೋಯಿತು ಎಂದು ಮೂಗು ಮುಚ್ಚಿ ಕುಳಿತ ಅಜ್ಜನಲ್ಲ, ಒಂಥರಾ ಮಾಡ್ರನ್ ಅಜ್ಜ. ಮೊಮ್ಮಗ ಓದಿಗಾಗಿ ಹಳ್ಳಿಬಿಟ್ಟು ನಗರಕ್ಕೆ ಹೋದರೂ ಕಾಲದ ಹೊಡೆತಕ್ಕೆ ಅನಿವಾರ್ಯವಾಗಿ ಹಳ್ಳಿಗೆ ಮರಳಿದವ. ಬೇರು ಅಜ್ಜ, ಚಿಗುರು ಮೊಮ್ಮಗ ಇಬ್ಬರೂ ಈ ಕಾರಣಕ್ಕೆ ಸಮಾನ ಪಾತಳಿಯಲ್ಲಿ ನಿಲ್ಲುತ್ತಾರೆ. ಇತಿಹಾಸವನ್ನು ಹೇಳಲು ಅಜ್ಜ ಎತ್ತಿಕೊಳ್ಳುವ ವಾಕ್ಯವೇ ಆಸಕ್ತಿಯನ್ನು ಕೆರಳಿಸುತ್ತದೆ. ಗದ್ದೆ, ಅಲ್ಲಿರುವ ಮಾಸ್ತಿ, ಅಲ್ಲಿದ್ದ ಅಡಿಕೆ ಮರ ಇವೆಲ್ಲ ಇದ್ದವು, ಇಂತಿಪ್ಪ ಇಲ್ಲಿ ಮನುಷ್ಯರು ಇಲ್ಲವಾಗಿತ್ತು, ಇದ್ದರೂ ಮತ್ತೆ ಇಲ್ಲವಾದರು. ಇರುವಿಕೆ ಮತ್ತು ಇಲ್ಲವಾಗುವಿಕೆ ಈ ಎರಡು ಭಾರತೀಯ ತರ್ಕಶಾಸ್ತ್ರದಲ್ಲಿ ಮಹತ್ವದ್ದು. ಇದ್ದಿತ್ತು ಎಂದರೆ ಮೊದಲು ಇಲ್ಲವಾಗಿತ್ತು, ಇಲ್ಲ ಎಂದರೆ ಆ ಮೊದಲು ಇದ್ದಿತ್ತು ಎಂದಾಗುತ್ತದೆ. ಸ್ಥಾಯಿಯಾದ ಪ್ರಕೃತಿಯಲ್ಲಿ ಕುಲವೆನ್ನುವುದು ಜಂಗಮವಾಗುತ್ತದೆ. ಅಂತಹ ಕುಟುಂಬದ ಕಥೆ ಇದು ಎನ್ನುವುದನ್ನು ಲೇಖಕರು ಹೇಳುತ್ತಾರೆ. + +ಇತಿಹಾಸ ಅನಂತಜ್ಜನ ಬಾಯಿಯಿಂದ ಹೀಗೆ ಬಿಚ್ಚಿಕೊಳ್ಳಲು ಆರಂಭವಾಗುತ್ತದೆ. ಕುಲದ ತಳಿಯನ್ನು ವಿವರಿಸುವಾಗ ಅಲ್ಲಿ ಲಿಖಿತ ಮತ್ತು ಅಲಿಖಿತ ಮತ್ತು ಅಸ್ಪಷ್ಟವಾಗಿ ದೊರೆತಿರುವುದನ್ನು ಊಹಾತ್ಮಕವಾಗಿ ಹೇಳುವ ವಿಷಯ ಬರುತ್ತದೆ. ಊಹಾತ್ಮಕ ಎಂದರೆ ಕಟ್ಟುಕಥೆಯಲ್ಲ, ಓಲೆಗರಿಯ ದಾಖಲೆಗಳ ನಡುವೆ ತುಂಡಾದ ಸರಪಣಿಯನ್ನು ಜೋಡಿಸುವ ಹಾಗೂ ಅದು ಒಪ್ಪಿತ ನಿರೂಪಣೆಯಾಗಬೇಕು. ಅಜ್ಜ ಕಥೆಯನ್ನು ವಿವರಿಸುವಾಗ ಅನುಸರಿಸುವ ಮಾರ್ಗ ಇದು. ಇಲ್ಲಿ “ಕುಲದ ಬಳಿ” ಬೆಳೆದುಬಂದ ಬಗೆಯನ್ನು ವಿವರಿಸುವಾಗ ವಂಶವೃಕ್ಷವನ್ನು ಹೇಳುವ “ಹೆಳವರ” ವಿಷಯ ಬರುತ್ತದೆ. ಅವರು ಹೇಳುವ ವಿಷಯವೂ ಅವರ ಪರಂಪರೆಯಲ್ಲಿ ತಂದೆಯಿಂದ ಮಗನಿಗೆ ಬಂದಿರುವುದು, ಸದಾ ಸಂಚಾರಿಗಳಾದ ಹೆಳವರ ಮನೆತನದಲ್ಲಿ ಒಂದು ಕುಟುಂಬಕ್ಕೆ ಇಂತಿಷ್ಟು ಗ್ರಾಮವೆನ್ನುವುದು ನಿರ್ಧಾರವಾಗಿರುತ್ತದೆ. ಇವೆಲ್ಲವೂ ಒಂದರ್ಥದಲ್ಲಿ ದಾಖಲಾದವುಗಳು, ಇದಲ್ಲದೇ ದಾಖಲಾಗದ ಸಂಗತಿಗಳ ಕುರಿತು ರಾಜಶೇಖರ ಹೆಗಡೆಯವರು “ರಾಮನ ಕಥೆ ಮುಗಿದ ಮೇಲೆ ರಾಮಾಯಣವೇ ಮುಗಿಯಿತು ಎನ್ನುತ್ತೇವೆ, ಕುಶ ಏನು ಮಾಡಿದ, ಅವನ ಮಕ್ಕಳು ಏನು ಮಾಡಿದರು ಎಂದು ಯೋಚಿಸುವುದಿಲ್ಲ… (ಪು. 93) ಎನ್ನುತ್ತಾ ನದಿಯ ಪ್ರವಾಹದಂತೆ ಕುಟುಂಬದ ಕಥೆಗಳೂ ಕೆಲವು ಕಡೆ ಗುಪ್ತಗಾಮಿನಿ ಇನ್ನು ಕೆಲವುಕಡೆ ವ್ಯಕ್ತವಾಗಿ ಹರಿಯುತ್ತಿರುತ್ತವೆ. “ನಮ್ಮ ಇತಿಹಾಸವೇ ಹಾಗಲ್ಲವೇ? ಒಮ್ಮೆ ವೈಭವ-ಮಗದೊಮ್ಮೆ ವಿನಾಶ, ಊರುಗಳು ಸೃಷ್ಟಿಯಾಗುತ್ತದೆ. ಕೋಟೆಕೊತ್ತಲಗಳು ಮೇಲೇಳುತ್ತವೆ. ಒಂದಷ್ಟುದಿನ ಮುತ್ತು ರತ್ನಗಳನು ಅಳೆವಂಥ ಸುಖೀರಾಜ್ಯ ಮೈದೆಳೆದಿರುತ್ತದೆ. ಆದರೆ ಅದಕ್ಕೂ ಒಂದಿನ ಸಾವು ಬರುತ್ತದೆ (ಪು 13)” ಎನ್ನುವ ಅನಂತಜ್ಜನ ಮಾತುಗಳಲ್ಲಿ ಜಂಗಮಪುರದ, ಆ ಮೂಲಕ ಅಲ್ಲಿನ ಮೂಲ ಪುರುಷನಾದ ಗೋವಿಂದ ಹೆಗಡೆಯ ಕಥೆ ಮೊದಲ ಭಾಗದಲ್ಲಿ ತೆರೆದುಕೊಳ್ಳುತ್ತದೆ. + +ಭಗವದ್ಗೀತೆಯನ್ನು ಕೃಷ್ಣ ಅರ್ಜುನನಿಗೆ ಹೇಳಿದ್ದಾದರೂ ಅದನ್ನು ಕೇಳಿಸಿಕೊಂಡು ಧೃತರಾಷ್ಟ್ರನಿಗೆ ತಿಳಿಸಿದವ ಸಂಜಯನ ಹಾಗೇ ಇಲ್ಲಿನ ವೆಂಕಟೇಶ ಹೆಗಡೆ ಎನ್ನುವವನ ಮನೆಯ ಚರಿತ್ರೆಯನ್ನು ಅನಂತಜ್ಜನಿಗೆ ಮೊದಲು ತಿಳಿಸುವುದು ವಾರಣಾಸಿಯ ಸಣ್ಣಪ್ಪಜನ ಮೂಲಕವಾಗಿ. ತಾಳೆಗರಿ, ವಂಶಾವಳಿಯನ್ನು ಹೇಳುವ ಹೆಳವರು, ಸಣ್ಣಪ್ಪಜ್ಜ ದೈವ, ಜ್ಯೋತಿಷ್ಯ, ಬುಡಬುಡಿಕೆ ಹಾಗೂ ಜೋಗಿಬೆಟ್ಟದ ಅವಧೂತರ ಕಾರಣಿಕ ನುಡಿಗಳು ಇವೆಲ್ಲವೂ ಚರಿತ್ರೆಯನ್ನು ಹೇಳುವ ಸಾಧನಗಳಾಗಿವೆ. ಒಂದಕ್ಕೊಂದು ಪೂರಕವಾಗಿ ಬರುತ್ತದೆ. ಕುಟುಂಬವೆನ್ನುವುದು ಗ್ರಾಮ ಮತ್ತು ರಾಜ್ಯದ ಭಾಗವಾಗುವುದರಿಂದ ಈ ಮನೆಯ ಇತಿಹಾಸ ಆ ಕಾಲದ ಆಡಳಿತಗರರಾದ ಸೋದೆ, ಗೇರುಸೊಪ್ಪೆಯ ರಾಣಿ, ಕೇಳದಿ ಇಕ್ಕೇರಿ ಹಾಗೇ ವಿಜಾಪುರದ ಪೋರ್ಚುಗೀಸರ ಕಾಲದ ವಿವರಗಳಲ್ಲಿ ಹಾಸುಹೊಕ್ಕಾಗಿದೆ. ಅವೆಲ್ಲವೂ ಇಲ್ಲಿ ಕಥನ ಕಟ್ಟಲು ಪೂರಕವಾಗಿದೆಯೇ ಹೊರತೂ ಅವ್ಯಾವುದೂ ಜಂಗಮಪುರದ ಚರಿತ್ರೆಯಮೇಲೆ ಬಂದು ಕುಳಿತುಕೊಳ್ಳುವುದಿಲ್ಲ. + + + +ಕೊರೋನಾ ಕಾಲಘಟ್ಟದಲ್ಲಿ ಪ್ರಪಂಚವೇ ತನ್ನ ಅಸ್ತಿತ್ವವನ್ನು ಕಳೆದುಕೊಂಡು ಚಡಪಡಿಸುತ್ತಿರುವಾಗ ಅನೇಕ ಕುಟುಂಬಗಳೇ ನಾಶವಾಗಿರುವ ಘಟನೆಯನ್ನು ಗಮನಿಸಿದ್ದೇವೆ. ಅಂಥ ಸಂಕೀರ್ಣದ ಹೊತ್ತಿನಲ್ಲಿ ಅನಂತಜ್ಜ ಹೇಳುವ ಹದಿನಾಲ್ಕನೆಯ ಶತಮಾನದಲ್ಲಿ ಕಾಡಿದ ಪ್ಲೇಗ್‌ ಮಹಾಮಾರಿ ಸುಮಾರು ಹದಿನೈದನೆಯ ಶತಮಾನದ ಕೊನೆಯವರೆಗೂ ಈ ದೇಶವನ್ನು ಕಾಡಿತ್ತಂತೆ. ಅಂತಹ ಯಾವುದೋ ದುರಂತಕ್ಕೆ ಒಳಗಾಗಿ ನಾಶವಾದ ಕುರುಹಿರುವ ಜಂಗಮಪುರದ ತೋಟವೊಂದಕ್ಕೆ ಸಾಗರದ ಜಂಬಗಾರಿನಿಂದ ಬದುಕನ್ನು ಅರಸುತ್ತಾ ಬಂದು ತಳ ಊರಿದ ಗೋವಿಂದ ಹೆಗಡೆಯ ಮುಂದಿನ ತಲೆಮಾರು ಹೊಸತಾಗಿ ನಿರ್ಮಿಸಿದ ವೈಭವದ ಕಾಲ ಮತ್ತೊಮ್ಮೆ ಪ್ಲೇಗಿಗೆ ಬಲಿಯಾಗಿ ಸಮೂಲ ನಾಶವಾಗುವ ಕಥೆ ಮೊದಲ ಭಾಗದಲ್ಲಿ ಬರುತ್ತದೆ. ಗೋವಿಂದ ಮತ್ತು ಸವಿತಾ ದಂಪತಿಗಳ ಸಾಹಸದೊಟ್ಟಿಗೆ ಈ ಕುಟುಂಬದ ವಿವರದ ತೆರೆದುಕೊಳ್ಳುವುದು. ರಾಜಶೇಖರ ಜೋಗಿನ್ಮನೆಯವರಿಗೆ ಕುಟುಂಬದ ಸದಸ್ಯರು ವೈಯಕ್ತಿಕವಾಗಿ ಮುಖ್ಯವಲ್ಲ; ಅವರು ಕಟ್ಟಿಕೊಟ್ಟ ಬದುಕು ಮುಖ್ಯ. ಹಾಗಾಗಿ ಇಲ್ಲಿ ಪ್ರಮುಖ ಪಾತ್ರ ಎಂದು ಯಾವುದೂ ಇಲ್ಲ. ಗೋವಿಂದ ಹೆಗಡೆಯ ಮಕ್ಕಳಾದ ಗೋಪಾಲ, ಶ್ರೀಧರ, ಈಶ್ವರ ನಂತರ ಕಮಲಾಕರ ಹೀಗೆ ಇವರೆಲ್ಲರಿಂದ ತೊಡಗಿ ಮತ್ತೆ ಪ್ರಮುಖ ಪಾತ್ರಧಾರಿಯಾಗಿ ಗಜಾನನ ಹೆಗಡೆ ಕಾಣಿಸಿಕೊಳ್ಳುತ್ತಾರೆ. + +ಪತಿಗೆ ಸಹಾಯಕರಾಗಿ ಹೆಗಲುಕೊಟ್ಟ ಸವಿತಾ, ಶಾಮಲಾ, ವನಜಾ, ತಿಮ್ಮಕ್ಕ, ಸಣ್ ಸುಬ್ಬಿ, ರಾಧಕ್ಕ ಇವರೆಲ್ಲರ ಕೊಡುಗೆಗಳೂ ಬಹು ಮುಖ್ಯವಾಗಿವೆ. ಇಡೀ ಕಾದಂಬರಿಯಲ್ಲಿ ಪಾತ್ರಗಳು ಮುಖಾಮುಖಿಯಾಗುವುದಿಲ್ಲ. ಅವು ಪರಸ್ಪರ ಸಹಕಾರಿ ಭಾವದಿಂದ ಮುಂದುವರಿಯುತ್ತದೆ. ಗೋವಿಂದ ಮನೆಯಲ್ಲಿ ಮಲತಾಯಿಯಿಂದ ತೊಂದರೆಗೊಳಗಾದಾಗ ಅಲ್ಲಿಂದ ಹೊರಟು ಬಂದರೂ ಆತನ ಅಪ್ಪ ವೆಂಕಟೇಶ ಹೆಗಡೆ ಮಗನಿಗೆ ನೆರವಾಗುತ್ತಾನೆ. ಪರಸ್ಪರ ನೆರವಾಗುವ ಗ್ರಾಮೀಣ ಅಪ್ಪಟ ಹವ್ಯಕ ಸಂಸ್ಕೃತಿಯ ಜೀವನ ಇಲ್ಲಿದೆ. ಶಿವಪ್ಪ ಸುಕ್ರಿ ದಂಪತಿಗಳು ಈ ಮನೆಯ ಜೊತೆ ಹೊಂದಿರುವ ಸಹಯಾನವನ್ನು ಚಿದಾನಂದ ಅವಧೂತರು “ದೇವರು ಮನುಷ್ಯನ ಜೊತೆಗೇ ಇದ್ದಾನೆ ಎನ್ನುವುದು ಗೋವಿಂದ-ಶಿವಪ್ಪರ ಬಾಂಧವ್ಯ ನೋಡಿದಾಗ ಗೊತ್ತಾಯಿತು” ಎನ್ನುವ ಮಾತಿನಲ್ಲಿ ಅರ್ಥವಾಗುತ್ತದೆ.. ಕೆಲವೊಮ್ಮೆ ಧನಂಜಯನಾಗಿ ಇನ್ನು ಕೆಲವೊಮ್ಮೆ ಅವರೇ ಅನಂತಜ್ಜನಾಗಿ ನಮ್ಮೆದುರು ಕಾಣಿಸಿಕೊಳ್ಳುತ್ತಾರೆ. ಗೋವಿಂದ ಹೆಗಡೆಯ ನಂತರ ಅದೇಪಾರಿ ಸಜ್ಜನನಾಗಿ ಬದುಕುವ ಗಜಾನನ ಹೆಗಡೆಗೆ ಹಾವು ಕಚ್ಚಿದಾಗ ಆ ವಿಷವನ್ನು ಬಾಯಿಯಿಂದ ಕಚ್ಚಿ ತೆಗೆಯುವ ಮಲ್ಲಿಗೆಯ ವಿಷಯದಲ್ಲಿ ಜಾರಬಹುದಾದ ಎಲ್ಲ ಸಂದರ್ಭಗಳಿದ್ದರೂ ಅವಧೂತರ ವಾಣಿಯಂತೆ ಸಂಭಾವಿತರದ ಕುಟುಂಬದವರು ಹೀಗೆ ಮಾಡಲಾರು ಎನ್ನುವುದನ್ನು ಆತನ ನಡವಳಿಕೆ ತೋರಿಸುತ್ತದೆ. ಕಾಶಿಯಲ್ಲಿ ಕಮಲಾಕರ ಹೆಗಡೆ ದೇಹತ್ಯಾಗ ಮಾಡುವದರೊಂದಿಗೆ ಕಥಾನಕ ಇನ್ನೊಂದು ಮಜಲು ಪ್ರವೇಶಿಸುತ್ತದೆ. + +ಯಾವ ಕರಿಮೆಣಸಿನ ವ್ಯಾಪಾರ ಇವರನ್ನು ರಾಜಸ್ಥಾನದವರೆಗೆ ಕೊಂಡೊಯ್ದಿತ್ತೋ ಅದೇ ವ್ಯಾಪಾರದ ಸಂಪರ್ಕದಿಂದ ಬಂದ ಪ್ಲೇಗು ಇಡೀ ಕುಟುಂಬ ಸರ್ವನಾಶವಾಗುವದು ಮಾತ್ರ ದುರಂತ. ಕನಿಷ್ಟ ಹೆಣ ಎತ್ತುವವರೂ ಇಲ್ಲದೇ ಹೋಗುವ ಘಟನೆ ಮನಸ್ಸನ್ನು ಮಿಡಿಯುತ್ತದೆ. ಸತ್ಯಸಂಧರಾದರೂ ಸಹ ಸಾಮ್ರಾಜ್ಯದ ಇತಿಶ್ರೀ ಆಗಬಾರದೆಂದೇನೂ ಇಲ್ಲವಲ್ಲ. ಗೇರುಸೊಪ್ಪಾದ ಚನ್ನಭೈರಾದೇವಿಗೂ ಕೊನೆಯ ದಿನಗಳೂ ಸಹ ದುರಂತವಾಯಿತು. ಬಹುಶಃ ವ್ಯಾಪಾರ ಮತ್ತು ಲಾಭ ಈ ಕುಟುಂಬವನ್ನು ಕಾಡಿತ್ತೋ ಏನೋ! ಆಕಾಶರಾಹುವಿನ ಪ್ರಕರಣವೇ ಇರಲಿ, ರಾತ್ರಿ ಕಾಲದಲ್ಲಿ ಕೂಗಿದ ಅರಿಷ್ಟದ ಕಾಗೆ ಅನ್ಯಾಯದ ಗೋವು ಇಲ್ಲೆಲ್ಲ ಶಕುನ ಮತ್ತು ಅತೀಂದ್ರಿಯ ಶಕ್ತಿಗಳು ಈ ಕುಟುಂಬವನ್ನು ಆಗಾಗ ಎಚ್ಚರಿಸುವ ಕೆಲಸ ಮಾಡುತ್ತಿರುವುದನ್ನು ಚನ್ನಾಗಿ ಬಳಸಿಕೊಂಡಿದ್ದಾರೆ. ಯಕ್ಷಗಾನ, ತಾಳಮದ್ದಳೆ, ಹಿಂದುಸ್ಥಾನೀ ಸಂಗೀತ ಶಾಸನಗಳು ಇವೆಲ್ಲವೂ ಕಥಾನಕಕ್ಕೆ ಪುಷ್ಟಿಕೊಡುತ್ತವೆ. + +ಎರಡನೇ ಭಾಗದ ನಾಯಕ ಅನಂತಜ್ಜನ ಅಪ್ಪ ಚಿದಂಬರ ಹೆಗಡೆಯದು. ಗೋವಿಂದ ಹೆಗಡೆಗೂ ಚಿದಂಬರ ಹೆಗಡೆಗೂ ಸಾಮ್ಯವಿದೆ. ಅಲ್ಲಿ ಅವಧೂತರು ಗೋವಿಂದನಿಗೆ ಆತನ ಮೂಲವನ್ನು ತೋರಿಸಿಕೊಟ್ಟರೆ ಇಲ್ಲಿ ಶಾಮಾ ಜೋಯಿಸರು ಮತ್ತು ಸಾಕ್ಷಾತ್ ಕೊಲ್ಲೂರು ಮೂಕಾಂಬಿಕೆಯೇ ಆತನ ಬೆಂಬಲಕ್ಕಿದ್ದಾರೆ. ಹಿರಿಯರು ಮಾಡಿರುವ ಸತ್ಕರ್ಮಗಳು ಅವರ ಸಂತಾನವನ್ನು ಪೊರೆಯುತ್ತವೆ. ಅದಕ್ಕೆ ಸಾಕ್ಷಿ ಚಿದಂಬರ ಸತ್ಯವನ್ನೇ ನುಡಿದು ಅಪ್ರಾಯಸ್ಥಳಾದ ಗಿರಿಜೆಯನ್ನು ಮದುವೆಯಾದ “ಗಿರ್ಜೆ ನಂಬ್ರ” ಕೇಸನ್ನು ಗೆದ್ದಿದ್ದು. ಗೋವಿಂದನಿಗಾದರೆ ಜಮೀನು ಮಾಡಲು ರಿಕಾರ್ಡ್‌ಗಳನ್ನೆಲ್ಲ ನೋಡಬೇಕೆಂದಿರಲಿಲ್ಲ. ಜಾಗದ ಗುರುತು ಹಾಕಿಕೊಂಡರಾಗಿತ್ತು. ಅರವತ್ತರ ದಶಕದಲ್ಲಿ ಸ್ವಾತಂತ್ರ್ಯ ಬಂದ ಕಾರಣ ಜಾಗವನ್ನು ಸರಕಾರದಿಂದ ಮಂಜೂರಿ ಮಾಡಿಸಿಕೊಳ್ಳಬೇಕಾಗಿತ್ತು. ಗೋವಿಂದ ಜಂಗಮಪುರಕ್ಕೆ ಬಂದು ತನ್ನ ಮನೆ ಕಟ್ಟಿಕೊಂಡಿರುವುದೂ ಅಲ್ಲಿದ್ದ ಗೋವಿಂದ ಹೆಗಡೆಯ ಗುಂದದಮೇಲೆಯೇ. ಮತ್ತೊಮ್ಮೆ ಚಿದಂಬರ ಹೆಗಡೆಯ ಮನೆಯೂ ಅದೇ ಗುಂದದಲ್ಲಿ ಎದ್ದಿರುವುದನ್ನು ಗಮನಿಸಿದರೆ ಆ ಜಾಗವನ್ನು ಕಾಯುತ್ತಿರುವ ಮಾಸ್ತಿ, ಜಟಕಗಳೆಲ್ಲ ಯಾವುದೋ ಕಾರಣಕ್ಕೆ ಅವರನ್ನು ಕರೆತಂದಿದೆ ಎಂದು ಅನಿಸುತ್ತದೆ. + +ಕಾದಂಬರಿಯ ಪಾತ್ರಗಳು ಎರಡನೆಯ ಭಾಗದಲ್ಲಿ ಮುಖಾಮುಖಿಯಾಗುತ್ತವೆಯಾದರೂ ಅದು ತೀವ್ರತೆಗೆ ಎಡೆಮಾಡುವುದಿಲ್ಲ. ಅಲ್ಲೆಲ್ಲ ಒಂದು ಪಾತ್ರ ಸುಮ್ಮನೆ ಆ ಸ್ಥಳವನ್ನು ಬಿಟ್ಟು ದೂರಸರಿಯುತ್ತದೆ. ಚಿದಂಬರನ ಕಾಲಘಟ್ಟದಲ್ಲಿ ಅರವತ್ತರ ನಂತರದ ಸಾಮಾಜಿಕ ನಡವಳಿಕೆಯನ್ನು ಕಾಣಬಹುದು. ಮೊದಲ ಹಂತದಲ್ಲಿ ಗೋವಿಂದ ಮತ್ತು ಸವಿತಾ ದಂಪತಿಗಳ ಶ್ರಮ ಎದ್ದು ಕಾಣಿಸಿದರೆ ಎರಡನೆಯ ಭಾಗದಲ್ಲಿ ಚಿದಂಬರ ಮತ್ತು ಗಿರಿಜಾ ದಂಪತಿಗಳು ಆ ಪಾತ್ರವನ್ನು ನಿರ್ವಹಿಸಿದ್ದಾರೆ. ಇಬ್ಬರದ್ದೂ ಹೋರಾಟದ ಬದುಕು. ಇಲ್ಲಿ ಬಾಲಗೋಪಾಲ ಜೋಯಿಸರು, ಸುಬ್ರಾಯ ಶಾಸ್ತ್ರಿ, ಸಭಾಹಿತರು, ಹೇರಂಭ, ಜಟ್ಟಿ ಇವರೆಲ್ಲರೂ ಈ ಕಾಲದ ಪ್ರತಿನಿಧಿಗಳಾಗಿ ಮೂಡಿಬಂದಿದ್ದಾರೆ. ಆದರೂ ಗೋವಿಂದ ಹೆಗಡೆಯ ಮನೆತನವನ್ನು ಸಾತ್ವಿಕ ಶಕ್ತಿ ಸದಾ ಕಾಯುತ್ತದೆ. ಈ ಕುಟುಂಬವೆನ್ನುವುದು ದೂರ್ವೆಜಡ್ಡಿನಂತೆ. ಬರಬಂದು ಒಣಗಿದ್ದಾಗ ಸಿಗದ ಅದು ಒಂದು ತುಂತುರು ಮಳೆ ಬಂದರೆ ಸಾಕು, ಹುಲುಸಾಗಿ ಎದ್ದು ನಿಲ್ಲುವಂತೆ ಅದೇ ಗುಂದದಲ್ಲಿ ಮತ್ತೆ ತಲೆಯೆತ್ತಿ ನಿಂತಿದೆ. ಇಡೀ ಕಾದಂಬರಿಯುದ್ದಕ್ಕೂ ಅಲೌಕಿಕ ಶಕ್ತಿಗಳು ಪ್ರಭಾವವನ್ನು ಬೀರುತ್ತವೆ. ಅದನ್ನು ನಿರೂಪಿಸುವಾಗ ಅವೆಲ್ಲವೂ ಗ್ರಾಮೀಣ ಬದುಕಿನ ಭಾಗವಾಗಿ ಸಹಜವಾದ ರೀತಿಯಲ್ಲಿ ಚಿತ್ರಿಸಿದ್ದಾರೆಯೇ ಹೊರತು ಅದನ್ನು ವೈಭವಿಸಿಲ್ಲ. ಆದರೆ ಮಾಟಮಂತ್ರದ ಹೆಸರಿನಲ್ಲಿ ಸುಬ್ರಾಯ ಶಾಸ್ತ್ರಿ ತೋರಿಸಿದ ಗೊಂಬೆಯ ಪವಾಡವನ್ನು ಹೊರತೆಗೆದಿದ್ದಾರೆ. ನಿಧಿಯು ವಿಷಯದಲ್ಲಿಯೂ ಇದೇ ಕಾಳಜಿಯನ್ನು ಇಟ್ಟು ಅದನ್ನು ನೆಲದಲ್ಲಿ ಭದ್ರವಾಗಿ ಇಟ್ಟಿದ್ದಾರೆ. ಈ ನೆಲದಲ್ಲಿ ದೈವವೆನ್ನುವುದು ಪೂರಕವಾಗಿ ಇರುತ್ತದೆಯೇ ಹೊರತೂ ಅದು ಬದುಕನ್ನು ಹಾಳುಮಾಡಲಲ್ಲ ಎನ್ನುವುದರ ಕಾಳಜಿಯನ್ನು ಕಥಾರೂಪಕದಲ್ಲಿ ಸಹಜವಾಗಿ ಬರುವಂತೆ ನೋಡಿಕೊಂಡಿದ್ದಾರೆ. ಲೇಖಕರು ಸಂಭಾಷಣೆಗಿಂತ Narration ನ ಮೂಲಕ ಕಥನವನ್ನು ಅಭಿವ್ಯಕ್ತಿಸುತ್ತಾರೆ. + +“ಭಗವಂತ ಒಂದೇ ಹೆಜ್ಜೆ ದೂರದಲ್ಲಿದ್ದಾನೆ, ಆದರೂ ಆತ ಸಿಗುವುದಿಲ್ಲ; ಯಾಕೆಂದರೆ ಆತನೆಡೆಗೆ ಹೋದೆವು ಅಂತಾದರೆ ಆತ ಮತ್ತೊಂದು ಹೆಜ್ಜೆ ದೂರದಲ್ಲಿ ಇರುತ್ತಾನೆ. ಹಾಗಾಗಿ ಆತನಿಗಾಗಿ ಹುಡುಕಾಡುವುದಲ್ಲ. ಆತನ ಇರವನ್ನು ಗಮನಿಸಿ ನಮ್ಮ ಸುತ್ತಲೂ ತಿರುಗಬೇಕು. ಆಗ ಆತ ನಮ್ಮ ಸುತ್ತಲೂ ವ್ಯಾಪಿಸುತ್ತಾನೆ” ಎನ್ನುವ ಗಿರಿಜೆಯ ಮಾತು ಕಾದಂಬರಿಯ ನೆಲೆಗಟ್ಟು. ಕನ್ನಡ ಸಾಹಿತ್ಯದಲ್ಲಿ ಗಮನಾರ್ಹ ಕಾದಂಬರಿಯಾಗಿ ಈ ಕೃತಿ ಮೂಡಿಬರುವುದು ಇಂತಹ ಕಾರಣಕ್ಕೆ. ತಲೆಮಾರಿನ ಕಥೆಗಳನ್ನು ಹೇಳುವ ಕಥೆಗಳು ಬೇಕಾದಷ್ಟಿದೆ. ಆದರೆ ಇವೆರಡರಲ್ಲಿ ವಿಶಿಷ್ಟರೀತಿಯಲ್ಲಿ ಗಮನ ಸೆಳೆದಿರುವುದು ಈಗ ಕೆಲ ವರ್ಷಗಳ ಹಿಂದೆ ವಿ. ಟಿ. ಹೆಗಡೆ ಶೀಗೆಹಳ್ಳಿಯವರ “ತಲೆಮಾರು”. ಇದು ಸಿರಸಿ ಭಾಗದ ಕುಟುಂಬದ ಪರಿಚಯವನ್ನು ಸಶಕ್ತವಾಗಿ ಮಾಡಿತ್ತು. ಅದರ ನಂತರ ಬಂದಿರುವುದು “ಕೇಳು ಧನಂಜಯ”. ಇದು ತಲೆಗಳಿಯಂತೆ ಸಾಗುವುದಿಲ್ಲ. ಕಾಡಿನಲ್ಲಿ ಸಣ್ಣದಾಗಿ ಹುಟ್ಟಿದ ಅಬ್ಬಿ ತೊರೆಯಾಗಿ ನಂತರ ಸ್ವಾತಿಹೊಳೆಯಾಗಿ ಅಘನಾಶಿನಿಯಲ್ಲಿ ಸೇರಿ ಸಾಗರಕ್ಕೆ ಸಾಗುವಾಗ ಅಡ್ಡಲಾಗಿ ಕಟ್ಟಿದ ಬಾಂಧಾರಗಳಲ್ಲಿ ವಿಶ್ರಮಿಸಿ, ಕಠಿಣವಾದ ಬಂಡೆಯನ್ನು ಬಳಸಿ ತನ್ನ ಗುರಿ ಮುಟ್ಟುವಂತೆ ತಣ್ಣಗೆ ಹರಿಯುತ್ತದೆ. + + + +ಕಾಲ ಸರಿಯುತ್ತಾ ದಿನ ವಾರ ತಿಂಗಳು ಶತಮಾನಗಳಾಗಿ ಅಳೆತೆಗೋಲಿಗೆ ಸಿಗುತ್ತದೆ. ಆದರೆ ಋತವೆನ್ನುವುದು ಶಾಶ್ವತ ಸತ್ಯ; ಕಾಲನ ಹೊಡೆತಕ್ಕೆ ಸಿಕ್ಕಿದರೂ ಮಳೆ ಬಂದಾಗ ಹುಟ್ಟುವ ಗರಿಕೆ ಜಡ್ಡಿನಂತೆ ತಲೆಮಾರನ್ನು ಜತನದಿಂದ ಕಾಪಿಟ್ಟು ಮೌಲ್ಯಗಳನ್ನು ನೆಲೆಗೊಳ್ಳುವಂತೆ ಮಾಡುತ್ತದೆ “ಕೇಳು ಧನಂಜಯ”. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_470.txt b/Kenda Sampige/article_470.txt new file mode 100644 index 0000000000000000000000000000000000000000..9f713672597975ac03e9c3eaa1ddd3f808270d1a --- /dev/null +++ b/Kenda Sampige/article_470.txt @@ -0,0 +1,47 @@ + + +ಎಷ್ಟೋ ಹೊತ್ತು ಹಾಗೆ ನಿಂತವಳು ಈಗ ಗೆಲುವಾದಂತೆ ತುಟಿ ಅಗಲಿಸಿ ನಕ್ಕಳು. ಆ ನಗುವಿನಿಂದ ಮೈ ಮನಸಿಗೊಂದು ಹೊಸ ಕಸುವು ಬಂದಂತೆನಿಸಿ ಹೊರಡಲು ಅಣಿಯಾಗತೊಡಗಿದಳು. ಇವತ್ತು ರಾತ್ರಿಯೇ ಊರು ಬಿಡಬೇಕು. ಹೆಚ್ಚು ಸಮಯ ಇಲ್ಲ. ಸಧ್ಯಕ್ಕೆ ಅಪ್ಪ ಅಥವ ಅವಳು ಯಾರೇ ಈಗ ನನ್ನ ಕೋಣೆಗೆ ಬಂದರೂ ಸುಳಿವು ಸಿಗಬಾರದು. ಅದೇ ಎಚ್ಚರಿಕೆಯಲ್ಲೇ ಬಟ್ಟೆ – ಬರೆ, ಅವಶ್ಯಕ ವಸ್ತುಗಳನೆಲ್ಲ ತುಂಬಿಕೊಂಡು, `ನಿಮ್ಮ ಗಮನಕ್ಕೆ’ ಎಂದು ಒಕ್ಕಣೆ ಹಾಕಿ ತನ್ನ ಪ್ರಯಾಣದ ಉದ್ದೇಶ, ವಿವರಗಳನೆಲ್ಲ ಒಂದು ಚೀಟಿಯಲ್ಲಿ ಬರೆದು ಮೇಜಿನ ಮೇಲಿಟ್ಟು, ಮನೆಯ ಹಿಂಬಾಗಿಲಿನಿಂದ ಹೊರಟಳು ಪೂರ್ಣಾ. ಮಧ್ಯರಾತ್ರಿಗೆ ಇನ್ನೂ ಹತ್ತೋ – ಹದಿನೈದೊ ನಿಮಿಷ ಇದ್ದಿರಬಹುದು. ಅವಳ ಕಳ್ಳ ಹೆಜ್ಜೆಗೂ ಕ್ಯಾರೆ ಎನ್ನದೆ ಒಣಗಿದ ಎಲೆಗಳು ಚರಚರ ಎಂದು ಕೂಗುತ್ತಿದ್ದರೂ ಅದು ನಾಯಿಯೊ ಬೆಕ್ಕೋ ಇರಬೇಕೆಂದು ಅಪ್ಪ ಕೇಳಿಯೂ ಕೇಳಿಸದಂತೆ ಮಗ್ಗಲು ಬದಲಾಯಿಸಿದ. ಅಥವ ‘ಅವಳ’ ತೆಕ್ಕೆಯ ಸುಖದಲ್ಲಿ ಮುಲುಗಿಕೊಂಡ. ಆ ದಿನದ ರಾತ್ರಿಗೆ ಇನ್ನೊಂದಿಷ್ಟು ನಿಶ್ಯಬ್ದ ಹಾಗೂ ಮೌನವನ್ನು ಕಾಣಿಕೆ ನೀಡಿ ಸದ್ದಿಲ್ಲದೆ ಸರಿವ ಚಂದ್ರನಂತೆ ಸರಿದು ಆಚೆ ಬಂದಳು ಪೂರ್ಣಾ. + +ಡಿಸೆಂಬರ್ ತಿಂಗಳ ಕೊರೆವ ಚಳಿ. ಆ ಚಳಿಯಲ್ಲೂ ಪೂರ್ಣಳ ದೇಹ ಬಿಸಿಯಾಗಿ ಬೆವರು ಹಣಿದು ಬಟ್ಟೆ ಅಂಟಿಕೊಳ್ಳುತ್ತಿತ್ತು. ಹೇಳದೆ ಈ ರೀತಿ ಮನೆ ಬಿಟ್ಟು ಬಂದುದಕ್ಕೆ ಅವಳಲ್ಲಿ ಯಾವ ಅಳುಕೂ ಇರಲಿಲ್ಲ. ಬದಲಾಗಿ ಗುರಿ ಸ್ಪಷ್ಟವಾಗಿತ್ತು. ಮೊದಲಿನಿಂದಲೂ ಅಷ್ಟೇ – ಅವಳಲ್ಲಿ ದಿಟ್ಟತನವಿತ್ತೇ ಹೊರತು ಹುಂಬತನವಿರಲಿಲ್ಲ. ಅಂದುಕೊಂಡ ಗುರಿಯನ್ನು ಸಾಧಿಸುವ ಛಲಗಾರಿಕೆ ಅವಳ ಬದುಕಿಗೆ ಗತಿಯನ್ನು ಒದಗಿಸಿತ್ತು. ಥೇಟ್ ಅಥ್ಲಿಟ್ ನಂತೆ ಎತ್ತರದ ಸಪೂರ ದೇಹದವಳು ಅವಳು; ಅವಳ ಕಣ್ಣು, ನಗುವಿನಲ್ಲಿ ಸದಾ ಜಿನುಗುವ ಉತ್ಸಾಹ, ಆತ್ಮವಿಶ್ವಾಸ, ನಡೆಯಲ್ಲಿನ ರಭಸ ನೋಡಿದರೆ ಯಾರಿಗಾದೂ ಈಕೆ ಗಾಳಿಗೂ ಚಲನೆಯನ್ನು ಹೇಳಿಕೊಡಬಲ್ಲಳು ಎನಿಸುವುದು. ಪೂರ್ಣಳ ಶಕ್ತಿ, ಸಾಮರ್ಥ್ಯ ಅವಳ ಗೆಳತಿ ಉಷಾಗೆ ಚೆನ್ನಾಗಿ ಗೊತ್ತು. + +ಪೂರ್ಣಾ ಮನೆಯಿಂದ ಹೊರಬರುತ್ತಲೆ ಮೊದಲೇ ಕ್ಯಾಬ್ ನಲ್ಲಿ ಕಾಯುತ್ತಿದ್ದ ಉಷಾ, `ಬಾರಮ್ಮ ಬೇಗ, ಫ್ಲೈಟ್ ಗೆ ಲೇಟಾಗುತ್ತೆ.’ ಎಂದು ಗಡಿಬಿಡಿ ಮಾಡಿದಳು. ಅಲ್ಲಿಂದ ಶುರುವಾದ ಗಡಿಬಿಡಿ ಏರ್ಪೋರ್ಟ್ ಗೆ ಹೊರಟು, ಚೆಕ್ – ಇನ್ ಆಗಿ, ಪ್ರಯಾಣದ ಎಲ್ಲ ಔಪಚಾರಿಕತೆಗಳನ್ನು ಪೂರೈಸಿ, ತನಗೆಂದೆ ಮೀಸಲಾದ ಸೀಟಿನಲ್ಲಿ ಕೂತು ‘ಉಫ್’ ಎಂದು ಕಣ್ಣುಮುಚ್ಚಿ ದೊಡ್ಡ ನಿಟ್ಟುಸಿರು ಬಿಟ್ಟು ದಣಿವಾರಿಸಿಕೊಳ್ಳುವಷ್ಟರಲ್ಲಿ, `ವಿಮಾನ ಇನ್ನೇನು ಹೊರಡಲಿದೆ, ದಯವಿಟ್ಟು ನಿಮ್ಮ ಮೊಬೈಲ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ವಿಚ್ ಆಫ್ ಮಾಡಿ’ ಎಂಬ ಘೋಷಣೆಗೆ ಬೆಚ್ಚಿ ಬಿದ್ದು, ತನ್ನ ಮೊಬೈಲ್ ಗಾಗಿ ವ್ಯಾನಿಟಿ ಬ್ಯಾಗ್ ಹುಡುಕತೊಡಗಿದಳು. ಊಹ್ಞೂ… ಮೊಬೈಲ್ ತಪ್ಪಿಸಿಕೊಂಡಿತ್ತು. ಶೇ… ಅದು ತನ್ನ ಟೇಬಲ್ ಮೇಲೆಯೆ ಇತ್ತು. ಈ ಕೈಯಿಂದ ಚೀಟಿಯಿಟ್ಟು ಇನ್ನೊಂದು ಕೈಯಿಂದ ಮೊಬೈಲ್ ಎತ್ತುಕೊಳ್ಳಬೇಕು ಎಂದುಕೊಂಡವಳು, ಹೇಗೆ ಮರೆತುಹೋದೆನೋ ಎಂದು ಹಣೆಗೆ ಕೈಯಿಟ್ಟುಕೊಂಡು ಹಲುಬಿದಳಾದರೂ, ಸಂಪರ್ಕಕ್ಕೆ ಅದೊಂದು ಪೀಡೆ ಅಥವ ಅದೊಂದೇ ಇತ್ತು. ಈಗ ಅದೂ ತೊಲಗಿತು. ಸಧ್ಯ, ಇನ್ನು ನಿಶ್ಚಿಂತೆಯಾಗಿ ತನ್ನ ಪ್ರಯಾಣ ಅಂದುಕೊಂಡಂತೆ ಮುಗಿಸಿಕೊಳ್ಳಬಹುದೆಂದು ನಕ್ಕು ನಿರಾಳವಾದಳು. ವಿಮಾನ ಮೇಲಕ್ಕೆ ಏರುತ್ತಿದ್ದಂತೆ ಕೆಳಗೆ ಊರ ಕಾಂಕ್ರೀಟು ಗುಡಿಸಲಿನ ಬಲ್ಬು ದೀಪಗಳೆಲ್ಲ ಮಿಂಚುಹುಳುಗಳಂತೆ ಮಿಂಚಿ ಮರೆಯಾಗುತ್ತಿದ್ದುದನ್ನು ಹಿತವಾಗಿ ಅನುಭವಿಸತೊಡಗಿದಳು. ಬುದ್ಧಿ ವಿಶ್ರಾಂತಿ ಬೇಡುತ್ತಿತ್ತು. ಮೈ ಮನಸುಗಳು ಸಡಿಲಗೊಳ್ಳುತ್ತಿದ್ದವು. ಇದೇ ತಕ್ಕ ಸಮಯವೆಂದು ಸಮಯಸಾಧಕ ನೆನಪುಗಳು ಒಂದೊಂದಾಗಿ ಪೂರ್ಣಳ ತಲೆಯಲ್ಲಿ ನುಗ್ಗತೊಡಗಿದವು. + +ಅವಳು ದಿವ್ಯಾ ಗುರುಂಗ, ನೇಪಾಳಿ. ಅವಳೇ ತನ್ನನ್ನು ಈ ಪರಿಯಾಗಿ ಕೆಣಕಿದ್ದು. ಹದಿಮೂರು ವರ್ಷಕ್ಕೇ ಮೌಂಟ್ ಎವರೆಸ್ಟ್ ಏರಿದ ದಕ್ಷಿಣ ಭಾರತದ ಅತಿ ಕಿರಿಯ ಮಹಿಳೆ ಎಂಬ ಬಿರುದಿಗೆ ಪಾತ್ರವಾಗಿದ್ದ ತನ್ನನ್ನು ಆಫೀಸಿನಲ್ಲಿ ಎಷ್ಟೊಂದು ಗೌರವ, ಅಭಿಮಾನದಿಂದ ನೋಡುತ್ತಾರೆ. ಆಫೀಸ್ ಬಾಯ್ ನಿಂದ ಹಿಡಿದು ಸಿ.ಇ.ಒ.ವರೆಗೂ ಎಲ್ಲರಿಗೂ ತನ್ನ ಬಗ್ಗೆ ಹೆಮ್ಮೆ. ಆದರೆ ಈ ದಿವ್ಯಾ ಮಾತ್ರ, `ಇವಳೇನು ಮಹಾ?’ ಅನ್ನುವ ಧಾಟಿಯಲ್ಲಿ ಎಲ್ಲೆರೆದುರೇ ಮೂಗು ಮುರಿಯುತ್ತಾಳೆ. ಇದು ತೀರ ಅಸಹನೀಯವೆನಿಸಿ, ಅವಳದೇನು ಪ್ರಾಬ್ಲಮ್ ಕೇಳೆ ಉಷಾ ಎಂದಿದ್ದಕ್ಕೆ, ಉಷಾ ಅವಳನ್ನು ಆಫೀಸ್ ಕ್ಯಾಂಟೀನಿನಲ್ಲಿ ಕೇಳಿದಾಗ, `ಅವಳೇನು, ಒಂದು ಮೌಂಟ್ ಎವರೆಸ್ಟ್ ಏರಿ ಬಂದಿದ್ದಕ್ಕೆ ಏನಂಥ ಮಹಾ ಸಾಧನೆ ಮಾಡಿದಂತಾಯ್ತು? ಅದಕ್ಕೆ ಅವಳಿಗೆ ಅಷ್ಟೊಂದು ಮರ್ಯಾದೆ ಬೇರೆ! ನಮ್ಮ ನೇಪಾಳವನ್ನೊಮ್ಮೆ ಸುತ್ತಿ ನೋಡೋಕೆ ಹೇಳು, ಅಲ್ಲಿ ಇನ್ನೂ ಎಂಥೆಂಥ ದಟ್ಟ, ಘೋರ ಪರ್ವತಗಳಿವೆ. ಆ ಪರ್ವತಗಳ ಕಂಕುಳಲ್ಲಿ ದೈತ್ಯಾಕಾರದ ಜೇನುಗೂಡು ಕಟ್ಟುತ್ತವೆ. ಅವನ್ನು ನಮ್ಮ ಗುರುಂಗ ಬುಡಕಟ್ಟಿನವರು ಯಾವುದೇ ಗೈಡ್ ಇಲ್ಲದೆ, ಸುರಕ್ಷೆ ಇಲ್ಲದೆ, ಜೀವದ ಪರಿವೇ ಇಲ್ಲದಂತೆ ಪರ್ವತ ಏರುತ್ತಾರೆ. ಜೇನು ಬೇಟೆಯಾಡುತ್ತಾರೆ. ಅದಕ್ಕೆ ಎಂಟು ಗುಂಡಿಗೆ ಇರಬೇಕು. ಇವಳಿಗೆ ಅಂಥ ಧೈರ್ಯ ಇದೆಯಾ? ಚಿಕ್ಕಂದಿನಲ್ಲಿ ಯಾವುದೊ ಹುರುಪಿನಲ್ಲಿ, ಕೋಚ್ ಸಹಾಯದಿಂದ ಒಂದಿಷ್ಟು ದೂರ ಮೌಂಟ್ ಎವರೆಸ್ಟ್ ಏರಿದುದನ್ನೆ ಸಾಧನೆ ಅಂತಾಳಲ್ಲ, ನಮ್ಮ ಜನರ ಥರ ಒಂದು ಜೇನು ಬಿಡಿಸಲಿ ಸಾಕು, ಇವಳ ಜನ್ಮ ಜಾಲಾಡಿ ಹೋಗುತ್ತದೆ’ ಎಂದು ವಿಚಿತ್ರವಾಗಿ ನಕ್ಕು ಹೋಗಿದ್ದಳು. ಅದನ್ನು ಉಷಾ ತನಗೆ ಹೇಳಿದಾಗ ಮೈಯೆಲ್ಲ ಉರಿದುಹೋಗಿ, ಇಷ್ಟೊಂದು ಅನುಭವ ಸಾಮರ್ಥ್ಯ ಇರುವ ತನ್ನಿಂದ ಇದು ಆಗದ ಕೆಲಸವೇ? ನೋಡಿಯೇ ಬಿಡ್ತಿನಿ… `ಉಷಾ, ಅವಳಿಗೆ ಹೋಗಿ ಹೇಳು – ಅವಳ ಛಾಲೆಂಜ್ ಅನ್ನು ಒಪ್ಪಿದ್ದೇನೆ.’ + +ಛಾಲೆಂಜ್ ಏನೋ ಒಪ್ಪಿದಾಗಿತ್ತು. ಆದರೆ ಅದಕ್ಕೆ ಮಾರ್ಗದರ್ಶನ ಎಲ್ಲಿಂದ? ಯಾರಿಂದ? ಗೂಗಲ್ ಎಂಬ ಆಧುನಿಕ ಸರ್ವಜ್ಞನ ಮೊರೆ ಹೋಗಬೇಕಾಯಿತು. ಮಾಹಿತಿ ಕಲೆ ಹಾಕತೊಡಗಿದ್ದಳು. ಇದರ ಮಧ್ಯೆಯೆ ಅಪ್ಪ, `ಮುಂದಿನ ವಾರ ಗಂಡಿನ ಕಡೆಯವರು ಬರ್ತಾರೆ. ಆಫೀಸಿಗೆ ಒಂದು ದಿನ ರಜಾ ಹೇಳು. ನಿನಗೆ ಸೀರೆ ಉಡೋದಕ್ಕೆ, ಸಿಂಗಾರ ಮಾಡ್ಕೊಳ್ಳೋಕೆ ನಿಮ್ಮ ಚಿಕ್ಕಮ್ಮ ಹೆಲ್ಪ್ ಮಾಡ್ತಾರೆ. ಅವರು ಬಂದಾಗ ಸ್ವಲ್ಪ ಗಂಭೀರವಾಗಿ ಇರೋದನ್ನ ಕಲ್ತುಕೋ. ಹೋದ್ಸಲ ಮಾಡಿದ್ಹಾಗೆ ಚೆಲ್ಲು ಚೆಲ್ಲಾಗಿ ಆಡಿದ್ರೆ ಗ್ರಹಚಾರ ಬಿಡಸ್ತೀನಿ’ ಎಂದು ಏರುದನಿಯಲ್ಲಿ ಹೇಳಿಹೋಗಿದ್ದರು. ಅಪ್ಪ ಈಗ ಒಂಟಿ ಅಲ್ಲ. ಅವಳಿದ್ದಾಳೆ. ತನ್ನನ್ನು ಬೇಗೆ ಮದುವೆ ಮಾಡಿ ಕಳಿಸಬೇಕೆಂಬ ತುರ್ತು ಅವರಿಗೆ. ಇದನ್ನು ಒಪ್ಪಿಕೊಂಡರೆ ತನ್ನನ್ನು ಶಾಶ್ವತವಾಗಿ ಮೂಲೆಗುಂಪು ಮಾಡುವ ಅಖಂಡ ಖೆಡ್ಡಾವೊಂದು ರೂಪುಗೊಂಡಿದೆಯೆಂದು ಸ್ಪಷ್ಟವಾಗಿತ್ತು. ತನ್ನ ಆಸೆ, ಕನಸುಗಳು ಹಿಡಿತದಲ್ಲಿರಬೇಕೆಂದರೆ ಇದನ್ನು ಹೇಗಾದರೂ ಮಾಡಿ ತಪ್ಪಿಸಬೇಕು, ಅದೂ ಈ ಪ್ರಯಾಣದ ಮೂಲಕ. + +ಅಮ್ಮ ತನಗೆ ದುಃಖವಾದಾಗ, ಅಧೀರಳಾದಾಗ ಅಥವ ಗೊಂದಲದಲ್ಲಿದ್ದಾಗ ಕನ್ನಡಿಯ ಮುಂದೆ ನಿಂತು ಮಾತಾಡುತ್ತಿದ್ದಳು. ಆಗ ತನ್ನ ಒಳದನಿಯೆ ಪ್ರತಿಬಿಂಬದ ಮೂಲಕ ಪರಿಹಾರ ಸೂಚಿಸುತ್ತಿತ್ತು. ಅದನ್ನು ನೆನೆದು ತಾನೂ ಕನ್ನಡಿಯ ಮುಂದೆ ನಿಂತು ದೃಢ ಮನಸಿನಿಂದ ಅಪ್ಪನ ಖೆಡ್ಡಾಕ್ಕೆ ಟಾಟಾ ಹೇಳಿ ಮನೆಬಿಟ್ಟು ಬಂದಿದ್ದೇನೆ. ಮತ್ತೊಮ್ಮೆ ಅಮ್ಮನ ನೆನೆದು ಕಣ್ಣು ನೀರಾದವು. ಅವಳಿದ್ದಿದ್ದರೆ ತನ್ನ ಕನಸು ಆಸೆಗಳಿಗೆಲ್ಲ ನೀರೆರೆದು ಪೋಷಿಸುತ್ತಿದ್ದಳು. ನಾನು ಎವರೆಸ್ಟ್ ಕನಸನ್ನು ಹೊತ್ತುಕೊಂಡು ಹೋದ ಕೆಲದಿನಗಳಲ್ಲೇ ಅಮ್ಮ ಹಾರ್ಟ್ ಅಟ್ಯಾಕ್ನಿಂದ ಹೋಗಿಬಿಟ್ಟಿದ್ದಳು. ವಿಷಯ ತಿಳಿದಿರಲಿಲ್ಲ. ಎವರೆಸ್ಟ್ ಏರಿ ಬಂದ ಖುಷಿ ಅಮ್ಮನ ಸಾವಿನಿಂದ ಮಂಜುಗಡ್ಡೆಯಂತಾಗಿತ್ತು. ಯಾವ ಸನ್ಮಾನ ಸಂಭ್ರಮವೂ ಬೇಡವಾಗಿದ್ದವು. ಆಗ ಬಿಕ್ಕಿ ಬಿಕ್ಕಿ ಅತ್ತು ಒಂಟಿಯಾಗಿದ್ದ ಅಪ್ಪ ಈಗ ಮತ್ತೆ ಇದ್ಯಾವಳೊ ತೋಳ ತೆಕ್ಕೆಯಲ್ಲಿ ಬಂಧಿಯಾಗಿದ್ದಾನೆ. ಅಪ್ಪನ ಪ್ರಕಾರ ನಾನವಳನ್ನು ಚಿಕ್ಕಮ್ಮ ಅನ್ನಬೇಕಂತೆ, ಬುಲ್ ಶಿಟ್! ತನ್ನನ್ನು ಯಾವಾಗಲೂ ಹುಡುಗನಂತೆಯೆ ಹುರಿದುಂಬಿಸಿ ಬೆಳೆಸಿದ್ದ ಅಪ್ಪ, ತನ್ನ ಎಲ್ಲ ಬೇಕು – ಬೇಡಗಳಿಗೆ ಕಿವಿಯಾಗಿದ್ದ ಅಪ್ಪ ಈ ರೀತಿಯಾಗಿ ಬದಲಾಗಿದ್ದು ಸರಿನಾ? ಅಥವಾ ಅವಳು ಅದ್ಯಾವ ತನ್ನ ಕರುಣಾಜನಕ ಕಥೆ ಹೇಳಿ ಅಪ್ಪನನ್ನು ತನ್ನ ಬಲೆಗೆ ಬೀಳಿಸಿಕೊಂಡಿದ್ದಾಳೆ? ಯಾರಿಗೆ ಯಾರು ಪೂರಕ, ಮಾರಕ? ಅಥವ ಅವರ ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವಷ್ಟು ನನ್ನ ಮನಸು ಪಕ್ವವಾಗಿಲ್ಲವೇನೋ.ಇತ್ಯಾದಿತ್ಯಾದಿ… + +************* + +ಬೆಳಗಿನ ಜಾವ ಉಷಾ ಎಬ್ಬಿಸಿದಾಗಲೆ ಪೂರ್ಣಾ ಎಚ್ಚರವಾಗಿದ್ದು. ಇಷ್ಟೊಂದು ಮೈಮರೆತು ನಿದ್ದೆ ಮಾಡುತ್ತಿದ್ದೆನಾ ಎಂದು ಅಚ್ಚರಿಯಾಯಿತು ಅವಳಿಗೆ. ವಿಮಾನದಿಂದ ಇಳಿಯುತ್ತಿದ್ದಂತೆಯೆ ಕಠ್ಮಂಡು ಎಂಬ ಫ್ರಿಜ್ಜಿನೊಳಗೆ ಕಾಲಿಟ್ಟಂತಾಯಿತು. ಆ ಚಳಿಗೆ ಚಿಮಣಿಯಂತೆ ಬಾಯಿ ಮೂಗಿನಿಂದ ಉಸಿರಿಗೊಂದಾವರ್ತಿ ಉಗಿ ಹೊರಬರುತ್ತಿತ್ತು. ಮೊದಲೇ ನಿಯೋಜಿಸಿದಂತೆ ಬೆಂಗಳೂರಿನಿಂದ ಹೊರಟ ಪೂರ್ಣಾ, ಉಷಾ ಮತ್ತು ಇದೇ ಪ್ಯಾಕೇಜ್ ಟೂರ್ನಲ್ಲಿ ಬಂದ ಇತರ ಹದಿಮೂರು ಸಹ ಪ್ರಯಾಣಿಕರ ದಂಡನ್ನು ಕಠ್ಮಂಡು ಏರ್ಪೋರ್ಟ್ ನಲ್ಲಿ ಇದಿರುಗೊಂಡು, ಎಲ್ಲರನ್ನೂ ಲಾಡ್ಜ್ ಒಂದರಲ್ಲಿ ಇಳಿಸಿ ಪ್ರತಿಯೊಬ್ಬರನ್ನೂ ಅವರವರ ಕೋಣೆಗೆ ಕಳುಹಿಸಲಾಯಿತು. ಕಳುಹಿಸುವ ಮೊದಲು ಬಿಜಯ್ ಎಂಬ ಹೆಸರಿನ ಗೈಡ್ ತನ್ನನ್ನು ಪರಿಚಯ ಮಾಡಿಕೊಂಡು ಆ ದಿನದ ಎಲ್ಲ ಚಟುವಟಿಕೆಗಳು ಹಾಗೂ ಎಲ್ಲರೂ ಸುರಕ್ಷಿತತೆಯಿಂದಿರಲು ವಹಿಸಬಹುದಾದ ಎಚ್ಚರಗಳು ಎಲ್ಲವನ್ನು ಬಿಡಿಸಿ ಹೇಳುತ್ತಿದ್ದ. ಮೊದಲನೆ ದಿನ `ಕಠ್ಮಂಡು ದರ್ಶನ’ ಟೂರ್ ಹೊಡೆಸುವುದರ ಬಗ್ಗೆ ಹೇಳುವಾಗ ಪೂರ್ಣಾ, `ಹನಿ ಹಂಟಿಂಗ್ ಯಾವಾಗ ಹೋಗೋದು? ನನಗೆ ಸಿಟಿ ಟೂರ್ ಬೇಡ. ಅಲ್ಲಿಗೇ ಮೊದಲು ಹೋಗೋಣವೇ?’ ಎಂದು ತನ್ನ ಆತುರ ವ್ಯಕ್ತಪಡಿಸಿದಾಗ, ಬಿಜಯ್ ಮುಗುಳ್ನಕ್ಕು, `ಮೇಡಮ್, ಈ ಟೂರ್ ಪ್ಯಾಕೇಜ್ ಹೇಗಿದೆಯೊ ಹಾಗೆ ನಾವು ನಿಮ್ಮನ್ನು ನೋಡಿಕೊಳ್ಳಬೇಕಾಗುತ್ತದೆ. ಹನಿ ಹಂಟಿಂಗ್ ಗೆ ನಾಳೆ ಹೋಗೋಣ’ ಎಂದ. ಪೂರ್ಣಳ ಮುಖ ಪೆಚ್ಚಾಯಿತು. + +ಕಠ್ಮಂಡು ಸಿಟಿ ರೌಂಡ್ ಅಪ್ ನಲ್ಲಿ ಪೂರ್ಣಳಿಗೆ ಕೊಂಚವೂ ಉತ್ಸಾಹವಿರಲಿಲ್ಲ. ಜೊತೆಗೆ ಬಂದ ಉಷಾನೋ ಒಂಥರಾ ಸಾಧುಪ್ರಾಣಿ. ಅವಳಿಗೆ ತಾನು ಬಾಯ್ ಫ್ರೆಂಡ್, ಇಲ್ಲ ತನಗೆ ಅವಳು. ಅಷ್ಟೇ ಹಚ್ಚಿಕೊಂಡಿದ್ದಾಳೆ, ಪ್ರೀತಿಸುತ್ತಾಳೆ. ತಾನು ಕರೆದಲ್ಲೆಲ್ಲ ಯಾವ ಮುಲಾಜೂ ಇಲ್ಲದೆ ಓಡಿ ಬರುತ್ತಾಳೆ. ಈಗಲೂ ಅಷ್ಟೇ. ತನ್ನ ಕೈ ಹಿಡಿದುಕೊಂಡೇ ಕೂತಿದ್ದಾಳೆ. ಇಲ್ಲಿ ಬಂದಿರುವ ಸಹಪ್ರಯಾಣಿಕರಲ್ಲಿ ಎಲ್ಲರೂ ಯುವಕರೇನಿಲ್ಲ. ನಮ್ಮನ್ನೂ ಸೇರಿಸಿ ಐದಾರು ಜನ ಇರಬಹುದಷ್ಟೇ. ಮಧ್ಯವಯಸ್ಕರೇ ಹೆಚ್ಚಾಗಿ ತುಂಬಿದ್ದಾರೆ. ಅವರೊಂದಿಗೆ ಅವರ ಹೆಂಡತಿಯರು, ಐದಾರು ಮಕ್ಕಳು ನೇಪಾಳಕ್ಕೆ ಯಾವುದೋ ಕುತೂಹಲದ ಚುಂಗು ಹಿಡಿದು ಬಂದವರಂತೆ ತೋರುತ್ತಿದ್ದರು. ಸುಮ್ಮನೆ ಮೈದಡವಿ ಪರಿಚಯ ಮಾಡಿಕೊಂಡರೆ? ಒಬ್ಬೊಬ್ಬರೂ ಒಂದೊಂದು ಕತೆ ಹೇಳಿ ನಿರುಮ್ಮಳರಾಗುವರಂತೆ ಕಾಣುತ್ತಿದ್ದರು. ಸಧ್ಯ, ಅಂಥ ಸಾಹಸ ಬೇಡವೆಂದು ಪೂರ್ಣಾ ಅನ್ಯಮನಸ್ಕಳಾಗಿದ್ದಳು. ಆದರೂ ಪ್ರಯಾಣದ ಮಧ್ಯೆ ಅನಗತ್ಯ ಅಂತಾಕ್ಷರಿಗಳೂ, ಅಸಹ್ಯ ವಾಂತಿಗಳು, ಅನವಶ್ಯಕ ಜೋಕುಗಳು, ಒಂದಿಷ್ಟು ಪರಿಚಯ, ಡಾನ್ಸೂ ಎಲ್ಲ ನೆರವೇರುವುದರೊಳಗೆ ಎಲ್ಲರ ಮಧ್ಯೆಯೂ ಎಂಥದೊ ಭಾವಬಂಧ ಏರ್ಪಟ್ಟಿತು. ಇಷ್ಟು ವರ್ಷ ಕಳೆದುಹೋಗಿದ್ದ ಸಂಬಂಧವೊಂದು ಈಗ, ಇಷ್ಟು ದೂರದಲ್ಲಿ ಮತ್ತೆ ದೊರಕಿತೆನೊ ಎಂಬಂತೆ ಎಲ್ಲರೂ ಅರೆಕಾಲಿಕ ಆತ್ಮೀಯರಾಗಿಬಿಟ್ಟಿದ್ದರು. ಬರಿ ಅನಾಸಕ್ತಿಯನ್ನೆ ಪ್ರದರ್ಶಿಸುತ್ತಿದ್ದ ಪೂರ್ಣಳನ್ನು ಬಿಜಯ್ ಗಮನಿಸಿ ಅವಳನ್ನು ತಮ್ಮ ಮಾತಿನ ಮಧ್ಯೆ ಎಳೆದು ತರುತ್ತಿದ್ದ. ಪಶುಪತಿನಾಥ ದೇವಸ್ಥಾನಕ್ಕೆ ಹೋದಾಗಲಂತೂ, `ನೋಡಿ, ನೇಪಾಳವನ್ನು ಸುಮಾರು ಹದಿಮೂರು – ಹದಿನಾಲ್ಕನೆ ಶತಮಾನದಲ್ಲಿ ಕರ್ನಾಟಕದ ರಾಜರು ಆಳಿದರು. ಆಗ ಯಕ್ಷಮಲ್ಲನೆಂಬ ರಾಜ, ಈ ಪಶುಪತಿನಾಥನ ಪೂಜೆ ಪುನಸ್ಕಾರಕ್ಕೆ ಕರ್ನಾಟಕದ ಕರಾವಳಿ ಕಡೆಯ ಬ್ರಾಹ್ಮಣರೇ ಆಗಬೇಕೆಂದು ನಿಯಮ ವಿಧಿಸಿದ. ಅಲ್ಲಿಂದ ಇಲ್ಲಿಯವರೆಗೂ ಅದೇ ನಡೆದುಕೊಂಡು ಬಂದಿದೆ. ಬೇಕಾದರೆ ಇಲ್ಲಿಯ ಭಟ್ಟರನ್ನು ಮಾತಾಡಿಸಿ ಅವರು ಕನ್ನಡದಲ್ಲಿ ಮಾತಾಡುತ್ತಾರೆ’ ಎಂದು ಹುರಿದುಂಬಿಸಿದ. ಎಲ್ಲರೂ ನಾಮುಂದು – ತಾಮುಂದು ಎಂದು ಮಾತಾಡಿಸಲು ಮುಗಿಬಿದ್ದರು. ಈ ಐತಿಹ್ಯವನ್ನೆಲ್ಲ ಮೊದಲೇ ಗೂಗಲ್ ನಲ್ಲಿ ಓದಿದ್ದರಿಂದ ಪೂರ್ಣಾ ಅತ್ತಕಡೆ ಕಿವಿಗೊಡದುದಕ್ಕೆ ಬಿಜಯ್ ತಾನು ರೋಮಾಂಚಕಾರಿ ವಿಷಯದಿಂದ ಇವಳನ್ನು ಉಲ್ಲಾಸಗೊಳಿಸಬೇಕೆಂದಿದ್ದ ಆಶೆಗೆ ತಣ್ಣೀರು ಸುರಿದಂತಾಗಿತ್ತು. ಪೂರ್ಣಳ ಸಂಪೂರ್ಣ ಮನಸು ಬುದ್ಧಿ ಎಲ್ಲ ಜೇನುಗೂಡು ಮತ್ತು ಅವನ್ನು ಹೊತ್ತು ಅನ್ನಪೂರ್ಣ ಪರ್ವತಗಳ ಸುತ್ತಲೇ ಸುತ್ತುತ್ತಿದ್ದವು. ಹೇಗೂ ನಾಳೆ ಬೆಳಿಗ್ಗೆಯೆ ಅಲ್ಲಿಗೆ ಹೊರಡುವುದಿದೆ. ಇವತ್ತಿನಂತೆ ಈ ಬಿಜಯನ ಬೆನ್ನುಬಿದ್ದು ಅವಳು ತೋರಿಸಿದ್ದಷ್ಟನ್ನೇ ನೋಡಿ, ಹೇಳಿದ್ದನ್ನಷ್ಟೇ ಕೇಳಿ ಹೋಗುವುದಕ್ಕೆ ತಾನಿಲ್ಲಿ ಬಂದಿಲ್ಲ. ಬದಲಾಗಿ ಈ ಸಂತೆಯಿಂದ ಹೊರಬಂದು ಗುರುಂಗ ಜನರೊಡನೆ ಬೆರೆತು, ಸ್ವತಃ ಪರ್ವತ ಅವರೋಹಣ ಮಾಡಿ ಜೇನು ಸವಿಯಬೇಕು. ಅದನ್ನು ಗರ್ವದಿಂದ ದಿವ್ಯಳಿಗೆ ಒಪ್ಪಿಸಬೇಕು. ಆಗಲಾದರೂ ಅವಳು ತನ್ನ ಸಾಮರ್ಥ್ಯವನ್ನು ಒಪ್ಪಿಕೊಳ್ಳಬಹುದೆಂದು ಪೂರ್ಣ ಲೆಕ್ಕ ಹಾಕುತ್ತಲೇ, ನಾಳೆ ತಾನು ಸಂತೆಯಿಂದ ತಪ್ಪಿಸಿಕೊಳ್ಳುವ ಬಗೆ ಹೇಗೆಂದು ಚಿಂತಿಸತೊಡಗಿದಳು. + + + +ತನ್ನ ಕಣ್ಣನ್ನು ತಾನೇ ನಂಬಲಾಗುತ್ತಿಲ್ಲ. ಇಷ್ಟು ದಿನ ಫೋಟೋಗಳಲ್ಲಿ, ಕಲ್ಪನೆಯಲ್ಲಿ ಕಂಡಿದ್ದ ಜೇನುಗೂಡುಗಳು ಇಲ್ಲಿ ನೋಡಿದರೆ ರಾಕ್ಷಸನಾಕಾರ! ಹೌದು, ಬೆಳಿಗ್ಗೆಯೆ ಕಠ್ಮಂಡುವಿನಿಂದ ಹೊರಟು ಅನ್ನಪೂರ್ಣ ಪರ್ವತಗಳ ತಪ್ಪಲಲ್ಲಿರುವ ಈ ಖುಡಿ ಎಂಬ ಗ್ರಾಮಕ್ಕೆ ಬಂದು, ಅಲ್ಲಿಂದ ಈ ಜೇನು ಬೇಡರ ಹಿಂಡನ್ನು ಹಿಂಬಾಲಿಸಿಕೊಂಡು ಬಂದು ಈ ದೃಶ್ಯವನ್ನು ನೋಡುವವರೆಗೂ ಪೂರ್ಣಳ ಮೈಮನಸು ಯಾವುದೋ ಅಮೂರ್ತದ ಕಡೆಗೆ ನೆಟ್ಟಂತಿತ್ತು. ಅದು ಇಲ್ಲಿ ಈಗ ಮೂರ್ತಗೊಂಡು ತನ್ನೊಳಗೆಲ್ಲಾ ವ್ಯಾಪಿಸುತ್ತಿದ್ದಂತೆ ರೋಮಾಂಚನಗೊಳ್ಳುತ್ತಿತ್ತು. ಗೈಡ್ ಬಿಜಯನಿಗೆ ಇವಳ ಆತುರ, ಉತ್ಸಾಹ ಕಂಡು ಸಂತೋಷವಾಗಿತ್ತಾದರೂ, ಇವಳಿಗೇಕೆ ಈ ವಿಷಯದಲ್ಲಿ ಇಷ್ಟೊಂದು ಆಸಕ್ತಿ? ಬೇರೆ ಉದ್ದೇಶವೇನಾದರೂ ಇರಬಹುದೇ? ಎಂದು ಸಂದೇಹಪಟ್ಟಿದ್ದ. ಅದಕ್ಕೆ ಕಾರಣವೂ ಇತ್ತು. ಇತ್ತೀಚಿಗೆ ಇಲ್ಲಿ ಅಧ್ಯಯನಕ್ಕೆಂದು ಬರುವ ವಿದೇಶಿ ಪ್ರವಾಸಿಗರ ಸಂಖ್ಯೆ ಜಾಸ್ತಿಯಾಗಿತ್ತು. ಇನ್ನು ಕೆಲವರು ಇಲ್ಲಿ ಸಿಗುವ ಕೆಂಪು ಜೇನಿಗಾಗಿ ಆಸೆಪಟ್ಟು ಅದನ್ನು ಮಾರುವ ಇಲ್ಲವೆ ದುಶ್ಚಟಕ್ಕಾಗಿ ಬಳಸುವ ದುರಾಶೆ ಹೊಂದಿದ್ದಾರೆ. ಇದರಿಂದ ಇಲ್ಲಿನ ಗುರುಂಗ ಜನಾಂಗಕ್ಕೆ, ಅವರ ಆಚರಣೆ, ಸಂಸ್ಕೃತಿಗಳಿಗೆ ಧಕ್ಕೆಯಾಗುತ್ತಿದೆ. ಬೇಡಬೇಡವೆಂದರೂ ಈ ಜೇನುಬೇಟೆಯನ್ನು ಕಲಿತುಕೊಳ್ಳಲೋ, ಅದನ್ನು ತಮ್ಮ ಅಧ್ಯಯನದ ತೀಟೆಗೆ ಬಳಸಿಕೊಳ್ಳಲೋ ಅಥವ ಕುತೂಹಲಕ್ಕೋ ಇಲ್ಲಿಗೆ ಬರುವವರ ಸಂಖ್ಯೆ ಮಾತ್ರ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.ಗುರುಂಗ ಅಥವಾ ಟ್ಯಾಮುಗಳು ಪಹಾಡಿಗಳು. ಆದರೆ ಕಾಡೆಲ್ಲ ಕರಗಿಹೋಗಿ ಈಗವರು ಹಳ್ಳಿಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮೂಲದಿಂದ ಬಂದ ತಮ್ಮ ವೃತ್ತಿಯನ್ನು ಮಾತ್ರ ಬಿಟ್ಟಿಲ್ಲ. ವರ್ಷಕ್ಕೆ ಎರಡು ಬಾರಿ, ಅಂದರೆ ಚಳಿಗಾಲ ಮತ್ತು ಚೈತ್ರಕಾಲದಲ್ಲಿ ಇವರು ಜೇನುಬೇಟೆಗಿಳಿಯುತ್ತಾರೆ. ಅವರ ಇಡೀ ಸಮುದಾಯ ಇದನ್ನು ತಾವು ತಮ್ಮ ದೈವಕ್ಕೆ ಮಾಡುವ ಮಹಾಪೂಜೆಯೆಂದೇ ಬಗೆಯುತ್ತಾರೆ. ಸಮುದಾಯದ ಪ್ರತಿ ಕುಟಂಬವೂ ಈ ಬೇಟೆಗೆ ಸಹಾಯ ಮಾಡುತ್ತದೆ. ಸುಮಾರು ಮೂರು ತಿಂಗಳು ಮುಂಚೆಯೆ ನಾರಿನ ಹಗ್ಗ ಹೊಸೆಯುವುದು, ಜೇನು ಸಂಗ್ರಹಣೆಯ ಬುಟ್ಟಿ ಹೆಣೆಯುವುದು, ಹಗ್ಗದ ಏಣಿಯನ್ನು ನಿರ್ಮಿಸುವುದು, ಭರ್ಚಿ ತಯಾರಿಸುವುದು ಇವುಗಳಲ್ಲಿ ತೊಡಗುತ್ತಾರೆ. ಈ ಬೇಟೆಯನ್ನು ಅವರು ತುಂಬಾ ಶ್ರದ್ಧೆಯಿಂದ ಮಾಡುತ್ತಾರೆ. ಸುಮಾರು ಏಳೆಂಟು ಜನರ ತಂಡದಲ್ಲಿ ಒಂದಿಬ್ಬರು ಹಿರಿಯರು ಜೊತೆಗಿರುತ್ತಾರೆ. ಅವರು ಮಾರ್ಗದರ್ಶನ ಮಾಡುವುದಷ್ಟೇ ಅಲ್ಲದೆ ಈ ಕೆಲಸಕ್ಕೆ ಮುಂಚೆ ಕಾಡಿನ ದೇವಿಗೆ ಪೂಜೆ ಮಾಡಿ, ನೈವೇದ್ಯಕ್ಕೆ ಕುರಿ ಅಥವಾ ಕೋಳಿಯನ್ನು ಬಲಿ ಕೊಡುತ್ತಾರೆ. ‘ನೋಡಿ, ಮೇಲೆ ಆ ಯುವಕ ಹೇಗೆ ಜೇನು ಬಿಡಿಸುತ್ತಾನೆಂದು…’ ಬಿಜಯ್ ಅಲ್ಲಿನ ಸ್ಥಳ ಮಹಿಮೆಯ ಸಮೇತ ಗುರುಂಗರ ಬಗೆಗಿನ ಚಿತ್ರಣವನ್ನು ಕೊಡಲಾರಂಭಿಸಿದ್ದ. + +ಅಲ್ಲಿದ್ದ ಎಲ್ಲರಿಗೂ ಒಂದು ರೀತಿಯ ರೋಮಾಂಚನ ಹಾಗೂ ಆ ಜೇನನ್ನು ಮನಸಾರೆ ಸವಿಯಬೇಕೆಂಬ ಬಯಕೆ. ಪೂರ್ಣಳ ಲಕ್ಷ್ಯ ಮಾತ್ರ ಬೇರೆಡೆಗೆ ಇತ್ತು. ಅವಳು ಜೇನು ಬಿಡಿಸುವ ಯುವಕನ ಬಲಾಢ್ಯ ತೋಳು, ಪರ್ವತ ಹತ್ತಿ ಇಳಿಯುವಾಗಿನ ಅವನ ಗಾಂಭೀರ್ಯ, ನಡೆ ಇವನ್ನೇ ಗಮನಿಸುತ್ತಿದ್ದಳು. ಅವನು ಯಾವುದೇ ಜಾಕೆಟ್ ತೊಟ್ಟಿಲ್ಲ. ಅಷ್ಟು ಕಟುಜೇನುಗಳು ಅವನನ್ನು ಮುತ್ತಿ ಕಚ್ಚುತ್ತಿದ್ದರೂ ತನಗೇನೂ ಆಗಿಲ್ಲವೆಂಬಂತೆ ಕೆಲಸ ಮುಗಿಸಿ ಸರಸರನೆ ಜೇನುಗೂಡಿನ ಬುಟ್ಟಿಯನ್ನು ತುಂಬಿಸಿ ಕೆಳಗಿಳಿಸಿ, ತಾನೂ ಇಳಿದು ಬಂದ. ಬಿಜಯ್ ಮತ್ತೆ ತನ್ನ ಕೆಲಸ ಮುಂದುವರೆಸಿದ, ನೋಡಿ, ಇದರಲ್ಲಿ ಎರಡು ತರಹದ ಜೇನು. ಒಂದು ಸಾದಾ ಜೇನು. ಅದನ್ನು ಇವರು ಸಕ್ಕರೆ ಅಥವ ಬೆಲ್ಲದಂತೆ ಚಹಾಕ್ಕೊ ಅಥವ ಅಡಿಗೆಗೋ ಬಳಸುತ್ತಾರೆ. ಅದಕ್ಕೇ ಅವರ ಆಯಸ್ಸು ನೂರಕ್ಕಿಂತ ಜಾಸ್ತಿ. ಇದೋ ನೋಡಿ ಇನ್ನೊಂದು ಥರದ ಜೇನು – ಕೆಂಪು ಜೇನು. ತುಂಬಾ ಪವರ್ ಫುಲ್ ಹಾಗೂ ಡೇಂಜರಸ್. ಇದನ್ನು ಸ್ವಲ್ಪ ತಿಂದರೂ ಸಾಕು. ಮನುಷ್ಯ…’ ಎನ್ನುವಷ್ಟರಲ್ಲಿ ಪೂರ್ಣಾ ಮುಗಿಬಿದ್ದು ಒಂದಿಷ್ಟು ಕೆಂಪುಜೇನು ಬಾಯಿಗೆ ಹಾಕಿಕೊಂಡಳು. ಅಷ್ಟೇ, ಅಲ್ಲಿದ್ದವರಿಗೆಲ್ಲ ಆಶ್ಚರ್ಯ! ಆತಂಕ ಕೂಡ. ಬಿಜಯ್ ಗೆ ಕೋಪ ನೆತ್ತಿಗೇರಿ ಅವಳನ್ನು ಹೊಡೆಯಬೇಕೆಂದೇ ಹೊರಟ. ಪೂರ್ಣಾ ತನ್ನ ಸ್ವಾಧೀನ ಕಳೆದುಕೊಂಡವಳಂತೆ ಉಷಾಳ ಮೈಗೊರಗಿ ವಾಂತಿ ಮಾಡಿಕೊಂಡಳು; ಕಣ್ಣು ನೆತ್ತಿಗೇರಿ ಜ್ಞಾನ ಕಳೆದುಕೊಂಡು ಬಿದ್ದುಬಿಟ್ಟಳು. ಅಲ್ಲಿದ್ದವರೆಲ್ಲ, `ಛೇ, ಇದೇನು ಈ ಹುಡುಗಿಗೆ ಇಷ್ಟು ಆತುರ? ಏನಾಗಿತ್ತಿವಳಿಗೆ?’ ಎಂದು ಹಲುಬುತ್ತಿದ್ದರೆ, ಗುರುಂಗರಿಗೆ ಹೊರಗಡೆಯಿಂದ ಬಂದ ಇಂಥವರು ಮಾಡಿಕೊಳ್ಳುವ ಎಡವಟ್ಟುಗಳನ್ನು ನೋಡಿ ನೋಡಿ ಸಾಕಾಗಿಹೋಗಿತ್ತು. ಈಚಿನ ವರ್ಷಗಳಲ್ಲಿ ಅವರು ಇಂಥ ಆಭಾಸಗಳನ್ನು ಹಲ್ಲುಕಚ್ಚಿ ಸಹಿಸಿಕೊಂಡು ಬಂದಿದ್ದಾರೆ. ಅವರಲ್ಲಿದ್ದ ಹಿರಿಯ ನಾನ್ಯಾ, `ಇಂಥವರಿಂದಲೇ ನಮ್ಮ ದೇವಿ ನಮಗೆ ಸರಿಯಾಗಿ ಜೇನು ಕೊಡುತ್ತಿಲ್ಲ. ನನ್ನ ಎರಡು ಮಕ್ಕಳನ್ನು ಜೇನುಹುಳುಗಳಿಂದ ಕಚ್ಚಿಸಿ ಕೊಂದಳು. ಲಾಮಾ ಗುರುವಿನ ಆಶೀರ್ವಾದದಿಂದ ಈಗ ಮೂರನೆ ಮಗ ಸ್ವಲ್ಪ ಕೈಗೆ ಬಂದಿದ್ದಾನೆ. ನಿಮ್ಮಂಥೋರು ನಮ್ಮ ಕಾಡೊಳಗೆ ಬರುವುದೇ ತಪ್ಪು. ಯಾಕೆ ಬರ್ತೀರಿ, ನಮ್ಮ ಪಾಡಿಗೆ ನಮ್ಮನ್ನು ಬಿಡಿ…’ ಎಂದು ಒದರುತ್ತಿದ್ದ. ಆ ಮುದುಕನ ಮೂರನೇ ಮಗ ಹೇಮನ್ ಸಂದರ್ಭ ಅರಿತು ಪೂರ್ಣಳಿಗೆ ಮದ್ದು ತರಲು ಓಡಿಹೋದ. ಅವು ಯಾವುದೋ ಗಿಡದ ಎಲೆಗಳು. ಅವನ್ನು ಅರೆದು ಬಾಯಿಗೆ ರಸ ಬಿಟ್ಟ. ಅಂಗೈ, ಅಂಗಾಲನ್ನು ಇನ್ನಿಬ್ಬರು ತಿಕ್ಕುತ್ತಿದ್ದರು. ಪೂರ್ಣಾ ಸಂಪೂರ್ಣ ಪ್ರಜ್ಞಾಹೀನಳಾಗಿದ್ದಳು. ಸಂಜೆಯಾಯಿತು. ಅವಳಿಗೆ ಪ್ರಜ್ಞೆ ಬರಬಹುದೆಂದು ಕಾದು ಜನ ಸುಸ್ತಾದರು. ಆ ಕಾಡಿನಿಂದ ಅವಳನ್ನು ಎತ್ತಿಕೊಂಡು ಹೋಗಿ ಕಠ್ಮಂಡುವಿನ ಯಾವುದಾದರೂ ಆಸ್ಪತ್ರೆಗೆ ಸೇರಿಸಬಹುದಲ್ಲ ಎಂದು ಎಲ್ಲರೂ ಒತ್ತಡ ಶುರು ಮಾಡಿದರು. ಅಷ್ಟರಲ್ಲಿ ಮುದುಕ ನಾನ್ಯಾ, `ಆಸ್ಪತ್ರೆಗೆ ಕರೆದುಕೊಂಡು ಹೋದರೆ ಏನೂ ಪ್ರಯೋಜನ ಇಲ್ಲ. ನಾವೇ ಸರಿಮಾಡ್ತೀವಿ. ನೀವು ಬೇಕಾದರೆ ನಾಳೆ ಬನ್ನಿ. ಈಗ ಹೊರಡಿ’ ಎಂದಿದ್ದಕ್ಕೆ ಯಾರೂ ಒಪ್ಪಲು ತಯಾರಾಗಲಿಲ್ಲ. ಬಿಜಯ್ ಹಾಗೂ ನಾನ್ಯಾರ ನಡುವೆ ಎಷ್ಟೋ ಹೊತ್ತು ಚರ್ಚೆ ನಡೆಯಿತು. ಆಮೇಲೆ ಬಿಜಯ್ ಅವಳನ್ನು ಅವರ ಹತ್ತಿರವೆ ಬಿಟ್ಟು ಉಳಿದ ಪ್ರಯಾಣಿಕರು ಕಠ್ಮಂಡುವಿಗೆ ತಲುಪಿಸುವ ವ್ಯವಸ್ಥೆ ಮಾಡತೊಡಗಿದ. ಉಷಾ ಕೂಡ ಅವರೊಟ್ಟಿಗೆ ಹೊರಟಿದ್ದನ್ನು ನೋಡಿ ಬಿಜಯ್ ಗೆ ಸಂದೇಹದ ವಾಸನೆ ಅತಿಯಾಯಿತು. ಉಷಾ ಅವನ ಸಂದೇಹವನ್ನು ಕಣ್ಣಿನಲ್ಲೇ ಗ್ರಹಿಸಿ, ಅರ್ಧ ತುಟಿಯಲ್ಲಿ ನಕ್ಕಳು. + +************* + +ಕಣ್ಣು ಬಿಟ್ಟಾಗ ಪೂರ್ಣಾ ಭಾರವಾಗಿದ್ದಳು. ಇಡೀ ದೇಹ ತೊಯ್ದು ತೊಪ್ಪೆಯಾದ ಹಸಿ ತೊಲೆಯಂತೆ ಬಿದ್ದಂತಾಗಿತ್ತು. ಆದರೆ ಮನಸು ಮಾತ್ರ ತೃಪ್ತಿಯ ನಗೆ ನಗುತ್ತಿತ್ತು. ಹೃದಯ ಹಸಿ ಜೇನಿನಲ್ಲಿ ಅದ್ದಿದಂತೆ ಮಿದುವಾಗಿತ್ತು. ಬುದ್ಧಿ ಜೇನು, ಭಾವ ಜೇನು, ಇಡಿಯ ಅಂತರಂಗವೆ ಜೇನಿನ ಗೂಡಾಗಿ ಸ್ನಿಗ್ಧ ಚೆಲುವಾಗಿತ್ತು. ಅವಳು ಕೊಸರಾಡುತ್ತಿದ್ದಂತೆ ಮನೆಯಲ್ಲಿನ ನಾನ್ಯಾ, ಮಗ ಹೇಮನ್ ಓಡಿಬಂದು ಆತ್ಮೀಯ ನಗೆ ನಕ್ಕರು. ಕುಶಲ ವಿಚಾರಿಸಿದ ಮೇಲೆ ನಾನ್ಯಾ ಅವನ ಮೊಮ್ಮಗನಿಗೆ, `ಕಾಂಛಾ, ಚಹಾ ತಗೊಂಡು ಬಾ’ ಎಂದು ಅವರ ಭಾಷೆಯಲ್ಲಿ ಹೇಳಿದ. ಅದು ಹಿಂದಿ ಮಿಶ್ರಿತವಾದ್ದರಿಂದ ಅರ್ಥ ಮಾಡಿಕೊಳ್ಳಲು ಸುಲಭವಾಗಿತ್ತು. ಮನೆಯಲ್ಲಿನ ಚಿಕ್ಕಮಕ್ಕಳಿಗೆಲ್ಲ ಅವರು ಕಾಂಛಾ ಅಂತಲೆ ಕರೆಯೋದು. ತಾಜಾ ಜೇನಿನಿಂದ ಮಾಡಿದ್ದ ಚಹಾವನ್ನು ಹೀರುತ್ತಲೇ, ಆಹಾ, ಜನುಮದಲ್ಲೆ ಇಂಥ ಚಹಾ ಕುಡಿದಿರಲಿಲ್ಲ ಎಂದು ಕಣ್ಮುಚ್ಚಿ ಅನುಭವಿಸಿದಳು ಪೂರ್ಣಾ. ಆ ಮನೆಯನ್ನು ನೋಡುತ್ತಿದ್ದಂತೆ ತಾನು ಆಗಾಗ ಅಪ್ಪನೊಡನೆ ಅಜ್ಜಿಯ ಊರಿಗೆಂದು ಬೆಟ್ಟದೂರಿಗೆ ಹೋಗುತ್ತಿದ್ದುದು ನೆನಪಾಯಿತು. ಕೊಳ್ಳೆಗಾಲದ ಸಮೀಪ ಬೆಟ್ಟದ ತಪ್ಪಲಿನಲ್ಲಿ ಇಲ್ಲಿಯಂತೆಯೆ ಬೆಟ್ಟದೂರಿನ ಚಿಕ್ಕ ಚಿಕ್ಕ ಗೂಡಿನಂತಹ ಮನೆಗಳು, ಸುತ್ತಲೂ ದಟ್ಟ ಗಿಡಮರಗಳ ಸಾಂದ್ರ ವಾತಾವರಣ, ಬೆಳಗಿನ ಘಾಟು ಹೊಗೆ, ಜನರ ಮಾತು, ಗಲಿಬಿಲಿ ಎಲ್ಲವೂ ಥೇಟ್ ಹಾಗೆಯೇ ಇದೆ. ಇದನ್ನು ನೆನೆಯುತ್ತಿದ್ದಂತೆಯೆ ಏನೋ ವಿಚಾರ ಹೊಳೆಯಿತು – ನಮ್ಮನ್ನು ಮೂಲತಃ ಜೇನುಕುರುಬರೆನ್ನುತ್ತಾರೆ. ಅಂತೆಯೇ ನಾವೂ ಜೇನು ಬಿಡಿಸುವುದು ಮತ್ತು ಕುರಿ ಕಾಯುವ ಕೆಲಸಗಳಲ್ಲಿ ತೊಡಗಿರುವಂಥವರು. ಇಲ್ಲಿ ಇವರದಾದರೂ ಅದೇ ಕೆಲಸವೇ. ಅಂದ ಮೇಲೆ ಎರಡೂ ಸಂಸ್ಕೃತಿಗಳು ಹೆಚ್ಚೂ ಕಮ್ಮಿ ಒಂದೇ ಎಂತಾಯ್ತು. ಸ್ಥಳವಷ್ಟೇ ಬೇರೆ. ಹಾಗಾದರೆ ನಾನೂ ಇವರಲ್ಲಿ ಒಬ್ಬಳು ಎಂದು ಖುಷಿಗೊಳ್ಳುತ್ತಲೇ ಅವಳಿಗೆ ಮೈ ರೋಮಾಂಚನವಾಯಿತು. ಅಪ್ಪ ಏನೋ ನಾಲ್ಕಕ್ಷರ ಓದಿ ಬೆಂಗಳೂರಲ್ಲಿ ಸರ್ಕಾರಿ ಕೆಲಸಕ್ಕೆ ಸೇರಿಕೊಂಡರೇನಾಯಿತು, ಬೆಟ್ಟದೂರಿನ ನಂಟು ಹೋಗುವುದೇ? ನನ್ನ ಪೂರ್ವಜರ ವಂಶವಾಹಿಗಳು ಇನ್ನೂ ರಕ್ತದಲ್ಲಿ ಹಾಗೇ ಇವೆ ಎಂದುಕೊಂಡಳು. + +ಅವನಿಗೆ ತಾನು ವಿಶೇಷವಾಗಿ ಕಂಡಿರಬೇಕು. ಕಾಂಛಾ ಬಾಗಿಲ ಮರೆಯಲ್ಲಿ ನಿಂತು ಪೂರ್ಣಳನ್ನು ಬಹಳ ಆತ್ಮೀಯವಾಗಿ ನೋಡಿ ನಗುತ್ತಿದ್ದ. ಆ ಮುಗ್ಧ ಮೋಡಿಯ ನಗು ಆ ಕ್ಷಣಕ್ಕೆ ತುಂಬಾ ಅಪ್ಯಾಯವೆನಿಸಿತು. ಅವನನ್ನು ಹತ್ತಿರ ಕರೆದಳು. ಅವನು ಅದೇ ನಗುಮೊಗದಿಂದ ಕುಂಟುತ್ತ ಬಂದು ನಿಂತ. ಕಾಲು ನೋಡಿ, ಏನಾಯಿತು ಎಂದಳು. ಮಾತಾಡಲಿಲ್ಲ. ನಿನ್ನ ಹೇಸರೇನೆಂದಳು. ಉತ್ತರಿಸಲಿಲ್ಲ. ಹೇಳೋ, ಏನು ನಿನ್ನ ಹೆಸರು ಎಂದ ಎರಡೂ ಮುಂಗೈ ಹಿಡಿದು ಎಳೆದಳು. ಅವನು ಮತ್ತೆ ನಗುತ್ತಲೆ ಪೂರ್ಣಳನ್ನು ಕೈ ಹಿಡಿದು ಎಳೆದು ತಂದು ತಾಯಿಯ ಹತ್ತಿರ ತಂದು ನಿಲ್ಲಿಸಿದ. ತುಂಬು ಗರ್ಭಿಣಿಯಿದ್ದ ಅವಳು ಸಂದರ್ಭವರಿತವರಂತೆ, `ಅವನ ಹೆಸರು ದೀಪಕ್. ಮೊದಲನೆ ಮಗ. + +ಮೊನ್ನೆ ಅವನಪ್ಪನಂತೆ ತಾನೂ ಬೆಟ್ಟ ಹತ್ತೋಕೆ ಹೋಗಿ ಕಾಲು ಮುರಿದುಕೊಂಡಿದ್ದಾನೆ. ಎಷ್ಟು ಹೇಳಿದರೂ ಕೇಳಲ್ಲ. ತುಂಬಾ ಹಟ. ನಾನಿರೊ ಪರಿಸ್ಥಿತಿಲಿ ಇನ್ನೂ ಎಷ್ಟು ನನ್ನ ಹೊಟ್ಟೆ ಉರಸ್ತಾನೋ’ ಎಂದು ಕಣ್ಣೀರಾಗುತ್ತಿದ್ದಂತೆ ದೀಪಕ್ ಹಣೆ ಚಚ್ಕೊಂಡು ಪೂರ್ಣಳನ್ನು ಹೊರಗೆ ಕರೆದುಕೊಂಡು ಬಂದ. ಓಣಿಯವರ ಕಣ್ಣು ತಪ್ಪಿಸಿ ತಾನೇ ಕಂಡು ಹಿಡಿದ ದಾರಿಯೊಂದರಿಂದ ಕಾಡೊಳಗೆ ನುಗ್ಗಿ ಪೂರ್ಣಳನ್ನು ಕೆಳಗೆ ನಿಲ್ಲಿಸಿ ಬೆಟ್ಟ ಹತ್ತತೊಡಗಿದ. ಪೂರ್ಣ ಎಷ್ಟು ಕೂಗಿಕೊಂಡರೂ ಕೇಳದೆ ಏದುಸಿರು ಬಿಡುತ್ತಾ ಸಿಟ್ಟಿನಲ್ಲಿ ಮೇಲೆ ಏರುತ್ತಿದ್ದ. ಸ್ವಲ್ಪ ಎತ್ತರ ಏರುತ್ತಲೇ ಮುಗ್ಗರಿಸಿ ಬಿದ್ದ ಪೆಟ್ಟಿಗೆ ಮೊದಲೇ ಊನವಾಗಿದ್ದ ಕಾಲಲ್ಲಿ ರಕ್ತ ಸುರಿಯಲಾರಂಭಿಸಿತು. ಪೂರ್ಣಳ ಕರುಳು ಮೊದಲ ಬಾರಿಗೆ ಚುರುಕ್ ಎಂದಿರಬೇಕು. ಅವನನ್ನು ತನ್ನ ಮಡಿಲಲ್ಲಿ ಕೂರಿಸಿಕೊಂಡು ಮಗುವಂತೆ ಆರೈಕೆ ಮಾಡತೊಡಗಿದಳು. ಆಗ ಅವನ ಸನ್ನೆಯಿಂದ ತಿಳಿಯಿತು. ಅವನ ಮಾತನ್ನು ದೇವರು ತನ್ನ ಮೌನದಲ್ಲಿ ಹುದುಗಿಸಿಟ್ಟುಕೊಂಡಿದ್ದಾನೆಂದು. ಪೂರ್ಣಳಿಗೆ ಹೃದಯವೆ ಬಾಯಿಗೆ ಬಂದಂತಾಯ್ತು. + +ಅಷ್ಟರಲ್ಲಿ ದೂರದಲ್ಲಿ ಒಂದಿಷ್ಟು ಜನ ಎದ್ದು ಬಿದ್ದು ಓಡುತ್ತಿದ್ದರು. ಪೂರ್ಣ ದೀಪಕ್ ನನ್ನು ಮನೆಗೆ ಕರೆದುಕೊಂಡು ಬಂದು ಕೇಳಿದಾಗ ನಾನ್ಯಾ ಹೇಳಿದ, `ಅದು ಚಿನ್ನದ ಹೊಗೆ.’ `ಹಾಗೆಂದರೆ?’ `ಅವನ್ಯಾರೊ ಫಾರಿನರ್ ವಿನ್ಸೆಂಟ್ ಅಂತೆ. ಅವನಿಗೆ ನಮ್ಮ ಬಗೆಗಿನ ಎಲ್ಲ ವಿವರ ಬೇಕಂತೆ. ಇಲ್ಲಿಯ ಯಾವನೋ ಒಬ್ಬ ಅವನ ಹತ್ರ ದುಡ್ಡು ತಗೊಂಡು ಕಳ್ಳತನದಿಂದ ಇರಿಸಿಕೊಂಡಿದ್ದ. ಆದರೆ ಆ ಬಡ್ಡಿಮಗ ಅವನ ಹೆಂಡತಿಯ ಮೇಲೆಯೆ ಕಣ್ಣು ಹಾಕಿದ್ದ. ಈಗ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿ ಅವನ ದುಡ್ಡನ್ನೆಲ್ಲಾ ಬೆಂಕಿ ಹಚ್ಚಿ ಬರುತ್ತಾರೆ. ಅದಕ್ಕೆ ಓಡುತ್ತಿದ್ದಾರೆ. ಇಂಥ ಅಸಹ್ಯಗಳು ನಮ್ಮಲಿ ಯಾವಾಗ ಮುಗಿಯುತ್ತೋ’ ಎಂದು ನಿಟ್ಟುಸಿರಾದ. ಒಳಗೆ ಹೇಮನ್ ದೀಪಕ್ನನ್ನು ಮನಬಂದಂತೆ ಹೊಡೆಯುತ್ತಿದ್ದ. ಅವನ ಹೆಂಡತಿ ಬೇಡವೆಂದು ಚೀರುವ ಸದ್ದು ಕೇಳಿ, ಪೂರ್ಣ ಬಂದು ತಡೆದಳು. `ಅಯೋಗ್ಯ ಇವನು. ಮೊದಲೇ ಮಾತು ಬರೋದಿಲ್ಲ. ಹೇಳಿದ್ದು ಕೇಳಲ್ಲ. ಇವನಿಂದ ಯಾವ ಕೆಲಸವೂ ಆಗಲ್ಲ. ಶುದ್ಧ ನಾಲಾಯಕ್. ಇವನು ನಮ್ಮ ವಂಶದಲ್ಲಿ ಹುಟ್ಟಿರೋದೆ ಕಳಂಕ’ ಎಂದು ಹೇಮನ್ ಬೆಂಕಿಯುಗುಳುತ್ತಿದ್ದರೆ, ಅವನ ಹೆಂಡತಿ, `ನೋಡಮ್ಮ, ಅಪ್ಪನೆ ಈ ರೀತಿ ಬೈತಾನೆ. ಇವರಂತೆಯೇ ಓಣಿಯ ಉಳಿದವರೆಲ್ಲ ಇವನನ್ನು ಆಡಿಕೊಂಡು ಗೇಲಿ ಮಾಡುತ್ತಾರೆ. ಸುಮ್ಮನೆ ಇವನನ್ನು ಎಲ್ಲಾದರೂ ದೂರ ಕರೆದುಕೊಂಡು ಹೋಗು. ಅಲ್ಲಾದರೂ ಆರಾಮಾಗಿ ಇರಲಿ’ ಎಂದು ಪೂರ್ಣಳ ಹೆಗಲಿಗೊರಗಿ ಅಳಹತ್ತಿದಳು. + +ದೀಪಕ್ ನನ್ನು ಅಪ್ಪಿ ಹಿಡಿದಿದ್ದ ಪೂರ್ಣಳ ಮನಸು ಆರ್ದ್ರಗೊಂಡಿತ್ತು. ತಂತಾನೆ ಜಿಜ್ಞಾಸೆಗಿಳಿಯಿತು. ನಾನಿಲ್ಲಿ ಬಂದ ಉದ್ದೇಶವಾದರೂ ಏನು? ಅದನ್ನು ಬಿಟ್ಟು ಬೇರೊಂದಕ್ಕೆ ನಾನು ಒಳಗಾಗಿದ್ದೇನೆ. ಒಂದಂತೂ ಸತ್ಯ – ಈ ಜೇನು ಬೇಟೆಯಂತೂ ನನ್ನಿಂದ ಸಾಧ್ಯವಿಲ್ಲ. ಇಷ್ಟಕ್ಕೂ ಪರ್ವಗಳನ್ನು ಏರಿ ಖುಷಿಯಿಂದ ಬೀಗುತ್ತೇವೆಂಬ ಭ್ರಮೆಯೆ ಬಾಲಿಶವೆನಿಸತೊಡಗಿತ್ತು. ನಾವು ಏರಿದ ಮಾತ್ರಕ್ಕೆ ಪರ್ವತ ಕಿರಿದಾಗುತ್ತದೆಯೆ ಅಥವ ನಾವು ದೊಡ್ಡವರಾಗುತ್ತೆವೆಯೆ? ಎವರೆಸ್ಟ್ ಏರಿಬಂದ ಗರ್ವ ನನ್ನಲ್ಲೆ ಒಂದು ಪರ್ವತವಾಗಿ ನಿಂತಿದೆ. ಅದನ್ನು ಏರಲು, ಮೆಟ್ಟಿ ನಿಲ್ಲಲು ಸಾಧ್ಯವಾಗಿಲ್ಲ. ನನ್ನಂತೆಯೆ ಬಹುಶಃ ಎಲ್ಲರಲ್ಲೂ ಅಹಮ್ಮಿನ, ಹೊಟ್ಟೆಕಿಚ್ಚಿನ, ದ್ವೇಷದ, ಲೋಭದ ಪರ್ವತಗಳು ಎಷ್ಟಿಲ್ಲ? ಅವನ್ನು ಮೆಟ್ಟಲಾಗದೆ ಒದ್ದಾಡುತ್ತಿಲ್ಲವೆ? ಜಗತ್ತಿನ ಮಹಾನುಭಾವರೆಲ್ಲ ಭೌತಿಕ ಪರ್ವತಗಳನ್ನು ಏರುವ ಗೋಜಿಗೆ ಹೋಗದೆ ಮಾನಸಿಕ ಪರ್ವತಗಳನ್ನು ಮೆಟ್ಟಿ ನಿಲ್ಲುವ ಸಲುವಾಗಿಯೆ ತಪಸ್ಸು ಮಾಡುತ್ತಿದ್ದಿರಬೇಕು. ಇಲ್ಲದಿದ್ದರೆ ಎಲ್ಲರೂ ಇವತ್ತು ಎವರೆಸ್ಟ್ ಸುತ್ತವೆ ಮನೆ ಮಾಡಿಕೊಂಡು ಅದನ್ನು ದಿನವೂ ಏರುವ ಪ್ರಯತ್ನ ಮಾಡುತ್ತಿದ್ದರೇನೊ! ಮನುಷ್ಯರಲ್ಲಿ ಎಷ್ಟೇ ಹಮ್ಮು – ಬಿಮ್ಮುಗಳಿದ್ದರೂ ಅದರಡಿಯಲ್ಲಿ ಪ್ರೀತಿಯ ಜೇನು ಕಟ್ಟಿರುತ್ತದೆ. ಅದನ್ನು ಬಿಡಿಸಿ ತಿನ್ನಬೇಕು. ಅದನ್ನೇ ಎಲ್ಲರಿಗೂ ಹಂಚಬೇಕು. ಅದೇ ಸಾರ್ಥಕ್ಯವಲ್ಲೆ? ಹೌದು, ನಾನು ನಿಜವಾಗಿಯೂ ಏರಬೇಕಾದ ಪರ್ವತದ ಸ್ಪಷ್ಟತೆ ಈಗ ಗೋಚರಿಸುತ್ತಿದೆ. ಅದನ್ನು ಏರಬೇಕು. ಈ ವಿಷಯದಲ್ಲಿ ದಿವ್ಯಾನೆ ನನಗೆ ಗುರು.ಅಂದು ಧೋ ಎಂದು ಸುರಿದ ಅಕಾಲಿಕ ಮಳೆಯಿಂದಾಗಿ ಬಿಜಯ್ ಬರಲಿಲ್ಲ. ಮರುದಿನ ಬರುವವನಿರಬೇಕು. ಆದರೆ ರಾತ್ರಿ ಮನೆಯ ಮುಂದೆ ದೊಡ್ಡ ಗಲಾಟೆಯೆ ಶುರುವಾಗಿತ್ತು. ವಿನ್ಸೆಂಟ್ ನನ್ನು ಸಾಯುವಂತೆ ಹೊಡೆದಿದ್ದಾನೆಂದು ಹೇಮನ್ ವಿರುದ್ಧ ಪೊಲೀಸಿನವರಲ್ಲಿ ಕಂಪ್ಲೇಂಟ್ ರಿಜಿಸ್ಟರ್ ಆಗಿತ್ತು. ನಾಳೆ ಅವನು ಅರೆಸ್ಟ್ ಆಗುತ್ತಾನೆಂದು, ಹೇಮನ್ ಗೆ ಆಗದ ಗುಂಪೊಂದು ಸುಳ್ಳುಸುಳ್ಳೆ ಮನೆಯ ಮುಂದೆ ಗಲಾಟೆ ಶುರುಮಾಡಿತ್ತು. ಇದನ್ನು ಕೇಳುತ್ತಲೇ ಪೂರ್ಣಳಿಗೆ ಆತಂಕ ಶುರುವಾಯಿತು. ಪೊಲೀಸು ಬಂದರೆ ತನ್ನನ್ನೂ ವಿಚಾರಣೆಗೊಳಪಡಿಸಿ ಇಲ್ಲಿಂದ ಓಡಿಸಬಹುದು. ಅದಕ್ಕೂ ಮುಂಚೆಯೆ ಇಲ್ಲಿಂದ ಕಾಲ್ಕೀಳಬೇಕು ಎಂದು ಬೆಳಗಿನ ಜಾವವೇ ಅಲ್ಲಿಂದ ಹೊರಟಳು, ಯಾರಿಗೂ ಗೊತ್ತಾಗದಂತೆ. ಪಕ್ಕದಲ್ಲೇ ಮಲಗಿದ್ದ ದೀಪಕ್ ಎಚ್ಚರಗೊಂಡು ಅವಳನ್ನು ಹಿಂಬಾಲಿಸಿಕೊಂಡು ಹೋಗಿದ್ದ. ಎಷ್ಟೋ ದೂರ ಹೋದ ಮೇಲೆ ಪೂರ್ಣ ಅವನನ್ನು ಕಂಡಳು. ಅವನಿಗೆ ವಾಪಸ್ ಮನೆಗೆ ಹೋಗು, ನಿನ್ನ ತಂದೆ ತಾಯಿ ಕಾಯ್ತಾ ಇರ್ತಾರೆ, ಇಲ್ದೆಹೋದ್ರೆ ಗಾಬರಿಯಾಗುತ್ತಾರೆ ಎಂದು ಎಷ್ಟೋ ಪರಿಪರಿಯಾಗಿ ಬೇಡಿಕೊಂಡಳು. ದೀಪಕ್ ಅದ್ಯಾವುದನ್ನೂ ಕೇಳಿಸಿಕೊಳ್ಳದೆ ಅವಳನ್ನು ತಬ್ಬಿಹಿಡಿದಿದ್ದ. ಬಹುಶಃ ಈ ಜೀವಕೂ ನನ್ನಂತೆ ಇಲ್ಲಿಂದ ಬಿಡುಗಡೆಯ ಬಯಕೆಯಾಗಿರಬೇಕು. ಆಯಿತು, ಮುಂದಿನದು ದೇವರಿಚ್ಛೆ ಎಂದು ಅವನ ಕೈ ಹಿಡಿದು ಹೆಜ್ಜೆ ಹಾಕತೊಡಗಿದಳು. ಅಲ್ಲಿಂದ ಲಾರಿಯೊಂದರಲ್ಲಿ ಹತ್ತಿ ಕಠ್ಮಂಡುವಿಗೆ ಬಂದು ಮನೆಯ ಹಾದಿ ಹಿಡಿದಳು. + + + +ದೀಪಕ್ ಎದುರುಗಡೆಯ ಸೀಟಿನಲ್ಲಿ ಕಿಟಕಿಗೊರಗಿ ಹೊರಗೆ ಮುಖ ಮಾಡಿ ಕುಳಿತಿದ್ದ. ಮನಸು ನಿರಾಳವಾಗಿತ್ತು. ಪಕ್ಕದ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿಯೊಬ್ಬರಿಂದ ಮೊಬೈಲ್ ತೆಗೆದುಕೊಂಡು ಕಾಲ್ ಮಾಡಿದಳು, `ಹಲೋ ಅಪ್ಪಾ, ನಾನು ಪೂರ್ಣಾ…’ ಆ ಕಡೆಯಿಂದ ಬೈಗುಳಗಳ ಸುರಿಮಳೆ. `ಎಲ್ಲಿದ್ದೀಯ ನೀನು? ಎಷ್ಟು ಗಾಬರಿಯಾಗಿತ್ತು ಗೊತ್ತಾ ನಮಗೆಲ್ಲಾ? ನೀನು ಹೋದಾಗಿನಿಂದ ನಿಮ್ಮ ಚಿಕ್ಕಮ್ಮ ಸರಿಯಾಗಿ ಊಟ ಕೂಡ ಮಾಡಿಲ್ಲ. ಗಂಡಿನ ಕಡೆಯವರಿಗೆ ಉತ್ತರ ಕೊಟ್ಟೂ ಕೊಟ್ಟೂ ಸಾಕಾಗಿದೆ. ನಿನ್ನ ವಿಷಯ ನಿನ್ನೆ ರಾತ್ರಿ ಬಿಜಯ್ ಅನ್ನೋನು ಫೋನ್ ಮಾಡಿ ಹೇಳಿದ. ಬೇಕಾದರೆ ನಾನೇ ಅಲ್ಲಿಗೆ ಬರ್ತೀನಿ ಹೇಳು, ಎಲ್ಲಿದ್ದೀಯಾ…’ ರೈಲು ಮುಂದೆ ಓಡುತ್ತಿತ್ತು. ಅಪ್ಪನ ಮಾತುಗಳು ಗಾಳಿಗೆ ಹಿಂದೆ ಹೋಗುತ್ತಿದ್ದವು. ಯಾವೂ ಕಿವಿಗೆ ಬೀಳುತ್ತಿರಲಿಲ್ಲ. ಅಪ್ಪನ ಅವೇ ಮದುವೆಯ ಮಾತು, ಚಿಕ್ಕಮ್ಮನ ಮಾತು ಮುಂದುವರೆಯುತ್ತಲೇ ಇತ್ತು. ಪೂರ್ಣಾ ದೀಪಕ್ ನ ಕಣ್ಣುಗಳನ್ನೇ ನೋಡುತ್ತಿದ್ದಳು. ಅಲ್ಲಿ ಏನನ್ನೋ ಓದುತ್ತ ಸಾಗಿದ್ದಳು. + +ಅವನ ಕಣ್ಣೂ ಅದನೆ ಹೇಳಿದವು.ತುಟಿಯಗಲಿಸಿ ತೃಪ್ತಿಯಿಂದ ನಕ್ಕಳು. + + + +ಮೂಲತಃ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ಇವರ ಊರು. ಓದಿದ್ದು ಎಮ್. ಫಾರ್ಮಸಿ. ಸದ್ಯ ಬೆಂಗಳೂರಿನ ಖಾಸಗಿ ಔಷಧಿ ಕಂಪನಿಯೊಂದರಲ್ಲಿ ಹಿರಿಯ ವಿಜ್ಞಾನಿಯಾಗಿ ಕೆಲಸ. ಪ್ರಕಟಿತ ಕೃತಿಗಳು: ಕರಿನೆಲ (ಕವನ ಸಂಕಲನ), ವ್ಯೋಮ ತಂಬೂರಿ ನಾದ (ಕವನ ಸಂಕಲನ) ಮತ್ತು ಪಾದಗಟ್ಟಿ (ಕಥಾ ಸಂಕಲನ). \ No newline at end of file diff --git a/Kenda Sampige/article_471.txt b/Kenda Sampige/article_471.txt new file mode 100644 index 0000000000000000000000000000000000000000..34fd58ece3f1c350408fb2beda5a312cc9068366 --- /dev/null +++ b/Kenda Sampige/article_471.txt @@ -0,0 +1,25 @@ + + + + +ಹೊಸ ತಲೆಮಾರಿನ ಕತೆಗಾರರಲ್ಲಿ ತಮ್ಮ ವಿಶಿಷ್ಟ ಕತೆಗಳಿಂದಾಗಿ ಹೊಸ ಸಂಚಲನ ಮೂಡಿಸುತ್ತಿರುವವರಲ್ಲಿ ಟಿ.ಎಸ್. ಗೊರವರ ಅವರು ಪ್ರಮುಖರು. ಶಿಷ್ಟ ಭಾಷೆಯೊಂದಿಗೆ ಜವಾರಿ ಭಾಷೆಯ ದೇಸೀ ಪದಗಳ ಹೆಣಿಗೆ ಇವರ ವೈಶಿಷ್ಟ್ಯತೆ. ಇಲ್ಲಿನ ಕತೆಗಳು ಓದಿಯಾದ ಮೇಲೂ ಕಾಡುವಂತವು. ಆ ಕಾಡುವ ಗುಣವೇ ಅವರನ್ನು ಕನ್ನಡ ಕಥಾಪ್ರಪಂಚದಲ್ಲಿ ಸಾಕಷ್ಟು ದೂರ ನಡೆಸಿಕೊಂಡು ಹೋಗಬಲ್ಲದು. + +ಈಗಾಗಲೇ ತಮ್ಮ ಕುದರಿ ಮಾಸ್ತರ್ , ರೊಟ್ಟಿ ಮುಟಗಿ ಕಾದಂಬರಿಗಳಿಂದ ತಮ್ಮದೇ ಓದುಗ ವಲಯವನ್ನು ಸೃಷ್ಟಿಸಿಕೊಂಡಿರುವ ಈ ಕತೆಗಾರರ ಹೊಸ ಕೊಯ್ಲು “ಮಲ್ಲಿಗೆ ಹೂವಿನ ಸಖ”. ಆರು ಕತೆಗಳುಳ್ಳ ಈ ಪುಸ್ತಕ ತನ್ನ ಪ್ರತಿ ಕತೆಯಿಂದಲೂ ನಮ್ಮನ್ನು ಸೆಳೆಯುತ್ತದೆ. ಇವರ ಹಿಂದಿನ ಕತೆಗಳ ರುಚಿಬಲ್ಲವರನ್ನು ಯಾವುದೇ ಕಾರಣಕ್ಕೂ ನಿರಾಸೆ ಮಾಡುವುದಿಲ್ಲ. ಹೊಸ ಓದುಗರಲ್ಲೂ ಹೊಸದೊಂದು ಅನುಭೂತಿ ಉಂಟು ಮಾಡಬಲ್ಲಷ್ಟು ರುಚಿಕಟ್ಟು. ಒಂದೇ ಗುಕ್ಕಿಗೆ ಪುಸ್ತಕ ನನ್ನೊಳಗಿಳಿದುಬಿಟ್ಟಿತು. ಒಳಗಿಳಿದ ಕತೆಗಳು ಸುಮ್ಮನೇ ಕೂರಲಿಲ್ಲ. ಹಾಗಾಗಿ ಅವನ್ನು ಹೀಗೊಂದು ಬರಹದ ಮೂಲಕ ಹೊರತರಬೇಕಾಯಿತು. ಇದರ ಶ್ರೇಯ ಕತೆ ಹಾಗು ಕತೆಗಾರರಿಗೆ ಸಲ್ಲಬೇಕಾದದ್ದು. + +(ಟಿ.ಎಸ್. ಗೊರವರ ) + +ಮನಸಿನ ವ್ಯಾಪಾರಗಳೇ ಹಾಗೆ ತರ್ಕಕ್ಕೆ ನಿಲುಕದವು. ಈ ಸಂಕಲನದ ಮೊದಲನೆ ಕತೆ “ಮನಸಿನ ವ್ಯಾಪರ”ವೂ ಸಹ ತರ್ಕದಿಂದ ದೂರ ಉಳಿವ ಕನಸಿನೊಂದಿಗೆ ಶುರುವಾಗುತ್ತದೆ. ಸಾಮಾನ್ಯವಾಗಿ ಕನಸೊಂದು ಜೀವಿಸಿದಷ್ಟು ತೀವ್ರವಾಗಿದ್ದಾಗ ಅದು ಕಾಡುವ ರೀತಿ ಕೆಲವೊಮ್ಮೆ ವಿನಾಕಾರಣವೇ. ಜ್ಯೋತಿಷ್ಯದ ಮತ್ತು ಮನೋವೈಜ್ಞಾನಿಕ ನೆಲೆಗಟ್ಟುಗಳನ್ನು ಮೀರಿಯೂ ಕೆಲವು ಕನಸುಗಳು ಸುಮ್ಮನೇ ತೀಡಿ ಬಿಟ್ಟ ನಾದಸ್ವರದ ಸ್ವರಾಲಾಪದಂತೆ ಗುಯ್ಗುಡುತ್ತಾ ಸಂತೆಯೊಳಗೂ ಕಾಡುವ ಏಕಾಂತವನ್ನು ಸೃಷ್ಟಿಸಿಬಿಡುತ್ತವೆ. ಇಲ್ಲಿನ ಪರಮೇಶಿಯ ಕತೆಯೂ ಹಾಗೆ ಕನಸು ಕಾಡಿದ ಪರಿಯಿಂದಾಗಿ ಬರಿದೆ ಕನಸೆಂದು ಉಡಾಫೆಯಿಂದ ಉಫ್ ಎನ್ನಲಾರ. ಬೆಳ್ಳಂಬೆಳಗ್ಗೆ ಕಂಡು ಕೇಳಿದ ಜಗಳ ಮತ್ತು ಅದರ ಧ್ವನಿರೂಪ ಅವನೊಳಗಿನ ಸುಪ್ತ ಬೈಗುಳದ ರಾಶಿಯ ತಿಜೋರಿ ಕೀಲಿಯನ್ನು ಖುಲಾಸೆಗೊಳಿಸಿರಲಿಕ್ಕೂ ಸಾಕು ಅವನ ಆ ದಿನವನ್ನು ನುಂಗಿಹಾಕಲು. ಅದಕ್ಕೆ ಪೂರಕವೇ ಅನಿಸುವಂತೆ ಘಟಿಸುತ್ತಾ ಹೋಗುವ ಘಟನಾವಳಿಗಳು ಕಾಕತಾಳೀಯವಷ್ಟೇ. ಆದರೆ ತರ್ಕವನ್ನು ಬದಿ ಸರಿಸಿ ಅದನ್ನೇ ಸತ್ಯವೆಂದು ನಂಬಲು ತಯಾರಾದ ಮನಸಿಗೆ ಪರಾಮರ್ಷೆಯೇ ಮಿಥ್ಯ… ಅದೇ ಮನಸಿನ ವ್ಯಾಪಾರ. ಇಲ್ಲಿ ಗೊರವರ ಅವರು ಕಟ್ಟಿಕೊಡುವ ಸಣ್ಣ ಸಣ್ಣ ವಿವರಗಳು ಅವರ ಸೂಕ್ಷ್ಮ ದೃಷ್ಟಿಗೆ ಸಬೂತು. ಒಂದು ಸಣ್ಣ ಅನುಭವದ ಮೇಲೆ ನಿಂತಿರುವ ಕತೆ ಕತೆಗಾರನ ಉದ್ದೇಶಿತ ಅನುಭವನ್ನು ಉಂಟುಮಾಡುವುದರಲ್ಲಿ ಸೋಲುವುದಿಲ್ಲ. ಕತೆ ಕಟ್ಟುವಿಕೆಯಲ್ಲಿನ ಬಿಗಿಯೂ ಸಹ ಚೌಕಟ್ಟಿನಾಚೆ ಕತೆ ಹಾಯದಂತೆ ಹಿಡಿದಿಟ್ಟಿದೆ ಮತ್ತು ಓದುಗರನ್ನೂ ಸಹ. + +ಇನ್ನು “ಕತ್ತಲಿನಾಚೆ” ಇಲ್ಲಿನ ಎರಡನೇ ಕತೆ. ಬಹಳಷ್ಟು ಕಾರಣಗಳಿಗಾಗಿ ಇದೊಂದು ಅತಿ ಮುಖ್ಯವಾದ ಕತೆ. ಇಲ್ಲಿ ಗೊರವರ ಅವರು ಕತೆಗಾಗಿ ಬಳಸುವ ಶಿಷ್ಟ ಮತ್ತು ಜವಾರಿ ಭಾಷೆಯ ಪದಪುಂಜಗಳ ಜುಗಲ್ಬಂದಿ ನಿಜಕ್ಕೂ ಚಂದ. ಈ ಕತೆಯ ಕಥಾನಾಯಕಿ ಪದ್ಮ ಸಾಮಾನ್ಯ ಹೆಣ್ಣುಮಗಳೊಬ್ಬಳ ಮೂರ್ತರೂಪ. ಅವಳೂ ತನ್ನದೆನ್ನುವ ಸಣ್ಣ ಏಕಾಂತವನ್ನು ಬಯಸುತ್ತಾಳೆ. ಒಂದು ಸಣ್ಣ ಸ್ವಚ್ಛಂದತೆಗಾಗಿ ಕಾತರಿಸುತ್ತಾಳೆ. ಇನ್ನು ತಾನು ಗರ್ಭದೊಂದಿಗೆ ಹುಟ್ಟಿ ಋತುವಿನೊಂದಿಗೆ ಬದುಕಿರುವಾಗ ಅದರ ಮುಂದಿನ ಹಂತವಾಗಿ ತಾನೊಂದು ಮುದ್ದಾದ ಮಗುವಿಗೆ ತಾಯಾಗಬೇಕೆನ್ನುವುದು ಇತರರ ಬಯಕೆಗಿಂತಲೂ ಅದು ಅವಳ ಅತಿ ಖಾಸಗಿ ಬಯಕೆ ಮತ್ತು ಅದರ ಘನತೆಯೇ ಹೆಚ್ಚು. ಆದರೆ ಸಮಾಜ ಹಾಗಲ್ಲ ಅದರ ದೃಷ್ಟಿಯಲ್ಲಿ ಅವಳ ನೋವೊಂದು ನೋವೇ ಅಲ್ಲ! ಅವಳ ಗಂಡ ಅತ್ತೆ ಮಾವನೂ ಅದಕ್ಕೆ ಹೊರತಲ್ಲ. ಅವಳಿಗೆ ಮಕ್ಕಳಾಗಲಿಲ್ಲವೆಂದು ಗಂಡ ಇನ್ನೊಂದು ಮದುವೆಯಾಗಬಹುದು ಆದರೆ ಹೆಂಡತಿ ಗಂಡನ ಅಸಮರ್ಥತೆಯನ್ನು ಮುಂದಿಟ್ಟುಕೊಂಡು ಅವನದೇ ನಡೆಯನ್ನು ಅನುಸರಿಸಬಾರದು…. ತನ್ನ ಮತಿಭ್ರಮಣಿತ ಸ್ಥಿತಿಯಲ್ಲಿ ಅವಳು ಯಾರದೋ ಮೋಸಕ್ಕೆ ಸಿಕ್ಕಿ ಬಸಿರಾಗುತ್ತಾಳೆ. ಅದನ್ನು ಅತ್ತೆಯಾದವಳು (ಹೆಣ್ಣಾಗಿ ಯೋಚಿಸದಿದ್ದರೂ…) ಮನೆಯ ಮರ್ಯಾದೆಯ ನೆಪದಲ್ಲಿ ಅವಳನ್ನು ಸಮರ್ಥಿಸುತ್ತಾಳೆ (ಅದು ಕನಿಷ್ಟತಮ ಅತ್ತೆಯಿಂದ ಪದ್ಮಳಿಗಾಗುವ ಉಪಕಾರ). ಆದರೆ ಅದನ್ನು ಒಪ್ಪಿಕೊಳ್ಳಲಾರದ ಗಂಡ ಮಗುವಿನ ಹೋಲಿಕೆ ಹಿಡಿದು ಅವಳನ್ನು ಬಳಸಿಕೊಂಡ ಗಂಡಿನ ಜಾಡನ್ನು ಹಿಡಿಯಲು ಹೊರಡುವುದು, ಕೊನೆಗೆ ಅದೇ ಖಿನ್ನತೆಯಲ್ಲಿ ಹುಚ್ಚನಂತಾಗುವುದು ಗಂಡಿನ ರೋಗಗ್ರಸ್ಥ ಮನಸಿಗೆ ಹಿಡಿದ ಕೈಗನ್ನಡಿಯಂತೆ ತೋರುತ್ತದೆ. ಇಲ್ಲಿ ಕತೆಗಾರ ಒಂದು ಜಾಣ್ಮೆಯನ್ನು ವಹಿಸುತ್ತಾರೆ . ಪದ್ಮಾಳಿಗೆ ಹುಚ್ಚು ಹಿಡಿಸಿ ತನ್ನ ಆ ಸ್ಥಿತಿಯಲ್ಲಿ ಅವಳು ಮತ್ತೊಬ್ಬನಿಗೆ ತಾಯಾಗುವಂತೆ ಹಾಗೂ ಹುಚ್ಚು ವಾಸಿಯಾದ ಮೇಲೆ ಗುಟ್ಟಾಗಿಯೇ ಉಳಿದು ಸಮಾಧಿಯಾಗಬೇಕಾದ ಎಲ್ಲವನ್ನೂ ಅವಳ ನೆನಪಿನಿಂದಲೇ ಇಲ್ಲವಾಗಿಸಿ ಸಮಾಜ ಸಹಜವಾಗಿ ಒಪ್ಪಿಕೊಳ್ಳುವುದನ್ನು ಸುಲಭವಾಗಿಸುತ್ತಾರೆ. ಇಲ್ಲವಾಗಿದ್ದರೆ ಸಮಾಜವಿರಲಿ ಅವಳ ಅತ್ತೆಯೂ ಅವಳನ್ನು ಒಪ್ಪಿಕೊಳ್ಳುವುದು ಅಸಂಭವವಿತ್ತು…!? ಅವಳ ಮುಂದಿನ ಜೀವನದ ಭದ್ರತೆ ಇದೇ ಕತ್ತಿಯಂಚಿನ ಮೇಲ ಅಲಗಿನ ಮೇಲೆಯೇ ನಿಂತಿದೆ ಎನ್ನುವುದು ಶೋಚನೀಯ. ಈ ಕತೆ ಹೆಣ್ಣಿನ ಅಸ್ಮಿತೆಯನ್ನು ಸಾದ್ಯಂತ ಕಲಕಿಬಿಡುವ ಕತೆಯಾಗಿಯೂ ಗಮನ ಸೆಳೆಯುತ್ತದೆ ಮತ್ತು ಕನ್ನಡ ಕಥಾಪ್ರಪಂಚದಲ್ಲಿ ಸಾಕಷ್ಟು ಕಾಲ ಉಳಿಯಬಲ್ಲದು ಸಹ. + + + +“ಪೆಪ್ಪರಮೆಂಟ” ಇಲ್ಲಿನ ಮೂರನೆ ಕತೆ. ಓದಿಯಾದ ಮೇಲಿನ ನನ್ನ ಒಂದೆರಡು ಕ್ಷಣಗಳು ನಿರ್ವಾತಗೊಂಡುಬಿಟ್ಟವು. ಶೂನ್ಯ ಆವರಿಸಿಬಿಟ್ಟಿತು. ಎಷ್ಟೊಂದು ವ್ಯಾಕುಲಗೊಳಿಸುತ್ತದೆ ಈ ಕತೆ…?! ಸತ್ಯ ತನ್ನ ಹೊರಮೈ ಕವಚದ ಹಂಗು ತೊರೆದು ಎದುರು ಬಂದು ನಿಂತುಬಿಟ್ಟರೆ ಹೇಗಾಗಬಹುದು!? ಗೊರವರ ಅವರು ಮಕ್ಕಳ ಮನೋಪ್ರಪಂಚವನ್ನು ಎಷ್ಟು ಚಂದ ಪ್ರಸ್ತುತಪಡಿಸುತ್ತಾರೆ ಈ ಪುಟ್ಟ ಕತೆಯಲ್ಲಿ! ಮಗುವೊಂದು ಸಾಧಾರಣ ಪೆಪ್ಪರಮೆಂಟನ್ನು ಪ್ರಾಣಕ್ಕಿಂತಲೂ ಮಿಗಿಲಾಗಿ ಹಂಬಲಿಸುವುದು ಬಡತನದ ತೀವ್ರತೆಯನ್ನು ತೋರಿಸುತ್ತದೆ. ಆದರೆ ಮಗುವಿನ ಆ ಹಂಬಲ ದಾರುಣ ಅಂತ್ಯವನ್ನು ಮುಟ್ಟಿಸಿದಾಗ ಮಾತ್ರ ಅಂತಃಕರಣವಿರುವ ಯಾರ ಹೃದಯವನ್ನಾದರೂ ಚೀತ್ಕರಿಸುವಂತೆ ಮಾಡಿಬಿಡುತ್ತದೆ. ಮಕ್ಕಳೇ ಹಾಗೆ. ಅವರ ಮುಗ್ಧ ಹೃದಯದಷ್ಟು ಶುದ್ಧವಾದ ಜಾಗ ಯಾವ ಮಂದಿರ ಮಸ್ಜಿದ್ ಈಗರ್ಜಿಗಳಲ್ಲೂ ಇರಲಿಕ್ಕಿಲ್ಲ. ಅದಕ್ಕೆ ಮಕ್ಕಳೊಂದಿಗೆ ನಡೆಯುವ ಯಾವುದೇ ಸಣ್ಣ ದುರಂತವೂ ನಮ್ಮದೇ ಎನ್ನುವಷ್ಟು ನಮ್ಮನ್ನು ಕಲಕಿಬಿಡುತ್ತದೆ. ಮಲ್ಲ ನೊಣವಾಗಿಯಾದರೂ ಪೆಪ್ಪರಮೆಂಟನ್ನು ಸವಿಯಬೇಕೆಂದು ಕನಸುವುದು, ಕೊನೆ ಪಕ್ಷ ಈರ ಚೀಪುತ್ತಿರುವ ಪೆಪ್ಪರಮೆಂಟನ್ನು ಕೊಟ್ಟರೂ ತಿಂದುಬಿಡಬೇಕೆಂದು ಆಸೆಪಡುವುದು, ಕೊನೆಗೆ ಪೆಪ್ಪರಮಂಟಿನ ಆಸೆಗೆ ಬಿದ್ದು ಗೂಡಂಗಡಿಯ ಕೀ ಕದ್ದು ಅಪರಾತ್ರಿಯಲ್ಲಿ ಅಂಗಡಿಯ ಒಳ ಸೇರಿ, ಪೆಪ್ಪರಮೆಂಟನ್ನು ಸವಿದು ಅಲ್ಲಿಯೇ ಬಿಂಕಿ ಅವಘಢಕ್ಕೆ ತುತ್ತಾಗಿ ಅಸುನೀಗುವುದು ಕರುಣಾಜನಿಕ. ಪಾಪ ಗುಬ್ಬಚ್ಚಿಯಂತ ಹುಡುಗನ ಪ್ರಾಣವೇ ಅವನ ಸಣ್ಣದೊಂದು ಆಸೆಗೆ ಬೆಲೆ(ಬಲಿ)ಯಾಯಿತಲ್ಲ… ಎನ್ನುವಲ್ಲಿಗೆ ಎಲ್ಲ ಮುಗಿಯಿತು…. ನಿಟ್ಟುಸಿರೊಂದು ಹೊರಚಾಚಿಕೊಳ್ಳುತ್ತದೆ. ಕೊನೆ ಪಕ್ಷ ಸಾಯುವ ಮುಂಚೆ ತನ್ನ ಆಸೆಯನ್ನಾದರೂ ಪೂರೈಸಿಕೊಂಡಿತಲ್ಲ ಮಗು ಇನ್ನದರ ಆತ್ಮ ವಿರಮಿಸುತ್ತದೆ ಎನಿಸಿದರೂ ಮಕ್ಕಳ ಸಣ್ಣ ಪುಟ್ಟ ಆಸೆಗಳನ್ನೂ ಪೂರೈಸಲಾಗದಂತ ಬಡತನ ಭೂಮಿಯ ಮೇಲಿರುವುದೇ ಎನ್ನುವ ದಟ್ಟ ವಿಷಾದ ಮಾತ್ರ ಕಾಡುತ್ತಲೇ ಉಳಿಯುತ್ತದೆ. ಇದೊಂದು ಅತ್ಯಂತ ಗಟ್ಟಿ ಕತೆ. ಬಾಳಿಕೆ ಬರುವಂತದ್ದು. + +ಪುಸ್ತಕದ ಶೀರ್ಷಿಕೆಯಾಗಿರುವ “ಮಲ್ಲಿಗೆ ಹೂವಿನ ಸಖ” ಒಂದು ಅದ್ಭುತ ಅನುಭೂತಿಯ ಕತೆ. ಮಗುವಿದ್ದಾಗಿನಿಂದಲೂ ಅಂಟಿಕೊಂಡು ಬಂದ ಮನೋವ್ಯಾಧಿಯೊಂದು ನಿರುಪದ್ರವಿಯೆಂಬ ಕಾರಣಕ್ಕೆ ಬೆಳೆಯಲು ಅವಾಕಾಶಪಡೆದುಕೊಳ್ಳುತ್ತದೆ ಮತ್ತು ಅದು ಯಾವಾಗ ಸಮಸ್ಯೆಯಾಗಿ ಕಾಡಲು ಶುರುವಾಗುತ್ತದೋ ಆಗ ಎಲ್ಲರೂ ತಮ್ಮ ಬದುಕನ್ನು ಸರಳಗೊಳಿಸಿದ್ದ ಸಮಸ್ಯೆಗೆ ಅಂತ್ಯ ಕಾಣಿಸಲಾಗದೆ ತೊಳಲಾಡತೊಡಗುತ್ತಾರೆ. ಕಥಾನಾಯಕ ಯಮನೂರಪ್ಪ ಸಮಸ್ಯೆಯನ್ನು ಹಚ್ಚಿಕೊಂಡು ಬದುಕಿದವನು ಈಗ ಸಮಸ್ಯೆಯಾ? ಮುಂದಿನ ಬದುಕಾ? ಎನ್ನುವ ದ್ವಂದ್ವದಲ್ಲಿರುವಾಗಲೇ ಮುಂದಿನ ಸಾಕಷ್ಟು ಊಹಾಪೋಹಗಳಿಗೆ ಓದುಗರನ್ನು ಈಡುಮಾಡಿ ಕತೆ ಮಾತ್ರ ತಣ್ಣಗೆ ಮುಗಿದುಳಿಯುತ್ತದೆ. ನಾವೆಲ್ಲರೂ ಒಂದು ನಮೂನಿ ಯಮನೂರಪ್ಪಗಳಾಗಿಯೇ ಕಾಣುತ್ತದೆ. ತೆರಣಿಯ ಹುಳು ತನ್ನ ನೂಲ ತಾನೇ ಸುತ್ತಿ ಸಾಯುವಂತೆ ನಾವೇ ಹಚ್ಚಿಕೊಂಡ ಸಮಸ್ಯೆಯೊಳಗೆ ಸಿಕ್ಕಿ ಹೊರಬರಲಿಚ್ಚಿಸದೆ ಅದರೊಂದಿಗೆ ರಾಜಿಯಾಗಿ ಬದುಕಲು ಹವಣಿಸುವಾಗ ಬದುಕು ಸೃಷ್ಟಿಸುವ ಯಾವುದಾದರೊಂದೇ ಆಯ್ಕೆಯನ್ನು ಆರಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಕ್ಕಿ ನಲುಗುತ್ತಿರುತ್ತೇವೆ ಎನಿಸಿಬಿಡುತ್ತದೆ. + +“ದೇವರಾಟ” ಇಲ್ಲಿನ ಐದನೆ ಕತೆ. ಇದೊಂದು ಸರಳವಾದ ಕತೆ. ಸಾಂಪ್ರದಾಯಿಕ ಒಳಿತು ಕೆಡುಕಿನ ನಡುವಿನ ಸಂಘರ್ಷವನ್ನು ಕಥಾವಸ್ತು ಧ್ವನಿಸುತ್ತದೆಯಾದರೂ ಕತೆಯನ್ನು ನಿರ್ವಹಿಸಿರುವ ರೀತಿ ಮತ್ತು ತಂತ್ರದಿಂದಾಗಿ ಗಮನ ಸೆಳೆಯುತ್ತದೆ. ಮಾವ ಶಂಕ್ರಪ್ಪ ಸೊಸೆಯನ್ನು ಮಗಳಂತೆ ನೋಡುತ್ತಾನೆ, ಆ ಸೊಸೆಯೂ ಮಗಳಂತವಳು. ಆದರೆ ಮಗನ ಬೇಜಾವಾಬ್ದಾರಿತನವೇ ಅವರಿಬ್ಬರ ಶತ್ರು. ಹಾಗಂತ ಶತ್ರುವನ್ನು ತೊಲಗಿಸಬೇಕಿದೆಯೇ ಹೊರತು ಅವನ ಮಗ , ಅವಳ ಗಂಡನಾದ ಹನುಮಂತನನ್ನು ನೀಗಿಸಿಕೊಳ್ಳುವಂತಿಲ್ಲ. ಈ ಸೂಕ್ಷ್ಮವನ್ನು ಅರಿತ ಶಂಕ್ರಜ್ಜ ಧಾರ್ಮಿಕ ನಂಬಿಕೆಯ ದುರ್ಬಳಕೆ (ಒಳಿತಿನ ಕಾರಣಕ್ಕಾಗಿ ಎನ್ನುವ ಮಾಫಿ ಕೊಟ್ಟುಕೊಳ್ಳಬಹುದು) ಮಾಡಿಕೊಂಡು ಮಗನನ್ನು ದಾರಿಗೆ ತರುವ ಮತ್ತು ಅವನ ಸಂಸಾರವನ್ನು ಸರಿಮಾಡುವ ಕೆಲಸ ಮಾಡುತ್ತಾನೆ. ಅದರಲ್ಲಿ ಅವನ ಸ್ವಹಿತಾಸಕ್ತಿಯೂ ಇದೆ. ತಾನು ಕಷ್ಟ ಪಟ್ಟು ಸಂಪಾದಿಸಿದ ಆಸ್ತಿಯನ್ನು ಮಗ ಕ್ಷಣಾರ್ಧದಲ್ಲಿ ಕಳೆಯಲು ನಿಂತಾಗ ಅವನು ವಿಹ್ವಲನಾಗುತ್ತಾನೆ. ಅದು ಅವನ ಜೀವಿತದ ಸಾರಾಂಶ ಮತ್ತು ಅದಿಲ್ಲದೆ ಅವನ ಅಸ್ತಿತ್ವವೇ ಅರ್ಥಹೀನ ಅನಿಸಿಬಿಡುವ ಮನೋಸ್ಥಿತಿಯಲ್ಲಿ ಧಾರ್ಮಿಕ ಆಚರಣೆಯೊಂದು ಅವನ ಪಾಲಿಗೆ ವರವಾಗಿ ಪರಿಣಮಿಸುತ್ತದೆ. ಈ ಕತೆಯ ಹೆಣ್ಣು ಪಾತ್ರಧಾರಿ ಹುಲಗವ್ವ ಸ್ವಾಭಿಮಾನಿ. ಗಂಡನಿಗೆ ಹೆದರುವವಳಾದರೂ ಗಂಡ ತಪ್ಪು ದಾರಿ ಹಿಡಿದಾಗ ಖಂಡಿಸುವ ದಿಟ್ಟೆ. ಬೇಜವಾಬ್ದಾರಿಯುತ ಗಂಡ ಸಂಸಾರದ ಸೂತ್ರ ಹರಿಬಿಟ್ಟಾಗ ಅದನ್ನು ಕೈಗೆತ್ತಿಕೊಂಡು ಸಮತೂಕದಲ್ಲಿ ಮುನ್ನಡೆಸಿದ ಛಲಗಾತಿ. ಅಂತಿಮವಾಗಿ ಅವಳ ಪ್ರಾರ್ಥನೆಯೊಂದೇ. ಈ ಗಂಡನೆನ್ನಿಸಿಕೊಂಡವ ನೆಟ್ಟಗಾಗಲಿ ಎನ್ನುವುದು. ಸಂಸಾರದ ಬಗೆಗಿನ ಅವಳ ಸ್ವಾರ್ಥಕ್ಕೂ ಅರ್ಥವಿದೆ. ಆದರೆ ಗಂಡನಾಗಿ ತಂದೆಯಾಗಿ ಮಗನಾಗಿ ಯಾವೊಂದು ಪಾತ್ರವನ್ನೂ ನೆಟ್ಟಗೆ ನಿರ್ವಹಿಸದ ಗಂಡಿನ ಸ್ವಾರ್ಥವಿಲ್ಲಿ ಅಪ್ಪಟ ಸ್ವಾರ್ಥವಲ್ಲದೆ ಮತ್ತೇನೂ ಅಲ್ಲ. + +ಇನ್ನು ಈ ಸಂಕಲನದ ಆರನೆಯ ಮತ್ತು ಕೊನೆಯ ಕಥೆಯೇ “ಕದ್ದು ನೋಡುವ ಚಂದಿರ”. ತಂತ್ರದ ದೃಷ್ಟಿಯಿಂದ ಪ್ರಯೋಗಾತ್ಮಕವಾದದ್ದು. ಮಾನವ ಹಸ್ತಕ್ಷೇಪವಿರುವಲ್ಲೆಲ್ಲಾ ಚಾಚಿಕೊಳ್ಳುವ ಅವನ ದುಷ್ಟ ಕಬಂಧ ಬಾಹುವಿನ ದಾಹ ಈ ಲೋಕದವನೇ ಅಲ್ಲದ ಚಂದ್ರನಿಗೆ ಕೊನೆಗೂ ಅರ್ಥವಾಗದೆ ವಿಚಿತ್ರವೆನಿಸಿ ತನಗಿದು ಸ್ಥಳವಲ್ಲ ಎಂದು ಇಲ್ಲವಾಗುವಲ್ಲಿಗೆ ಕತೆ ಮುಗಿಯುತ್ತದೆ. ಕದ್ದು ನೋಡುವುದೂ ಅನೈತಿಕವಾಗಿರುವಾಗ ಮಾನವನ ಅನೈತಿಕ ಚಟುವಟಿಕೆಗಳನ್ನು ಮುಗ್ಧನಂತೆ ಗಮನಿಸುವ ಚಂದ್ರನ ಬಗ್ಗೆ ಮರುಕ ಹುಟ್ಟುವುದಿಲ್ಲ.ಕಥನಕ್ರಮ, ತಂತ್ರ ರೂಪಿಸಿಕೊಳ್ಳುವ ಪ್ರತಿಭೆ, ಉತ್ತರ ಕರ್ನಾಟಕದ ಭಾಷೆಯ ಸೊಗಡು ಬಹಳವೇ ಚಂದ ಗೊರವರ ಅವರ ಕತೆಗಳಲ್ಲಿ. ಓದಿಯಾದ ಮೇಲೂ ಮತ್ತೊಂದು ಓದಿಗೆ ಕರೆಯುತ್ತಿದ್ದಾನೆ ಈ “ಮಲ್ಲಿಗೆ ಹೂವಿನ ಸಖ”. + +ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಶಿಕ್ಷಕಿ. ಕತೆ, ಕವಿತೆ, ಪ್ರಬಂಧ ಬರೆಯುವುದು ಇವರ ಆಸಕ್ತಿಯ ವಿಷಯ.ಮೊದಲ ಕವನ ಸಂಕಲನ “ಮೌನ ತಂಬೂರಿ.” \ No newline at end of file diff --git a/Kenda Sampige/article_472.txt b/Kenda Sampige/article_472.txt new file mode 100644 index 0000000000000000000000000000000000000000..0827081a07090a0c1f855deed56439422a712f80 --- /dev/null +++ b/Kenda Sampige/article_472.txt @@ -0,0 +1,31 @@ + + +ಕೂಡಲು ಶಾನಭಾಗರ ಮನೆಯೆಂದರೆ ನಾಲ್ಕೂರಿಗೇ ಹೆಸರಾದುದು. ಕುಂಬಳೆ ಅರಸರ ಕಾಲದಲ್ಲಿ ಕುಂಬಳೆ ಅರಮನೆ, ಈಚಲಂಪಾಡಿ ಬೊಂಬ್ರಾಣ ಗುತ್ತುಗಳು, ಕೂಡಲು ಶಾನಭಾಗರು, ಕುಂಬಳೆ ನಾಯಕರು, ಇವಿಷ್ಟು ಮನೆತನದವರು ಕಲೆತರೆಂದರೆ ಕುಂಬಳೆ ಸೀಮೆಯ ಮೂರು ಸಾವಿರ ಆಳು ಸೇರಿದ ಲೆಕ್ಕ. ಸಂಗೀತ, ಚಿತ್ರ, ಯಕ್ಷಗಾನಾದಿ ಕಲೆಗಳ ಅಭಿಮಾನಿಗಳಾಗಿ ತಲಾಂತರಗಳಿಂದ ಬಾಳಿಬಂದ ತಕ್ಕಿನ ಮನೆತನವೇ ಈ ಕೂಡಲು ಶಾನಭಾಗರದು. + +ಹದಿನೆಂಟನೆಯ ಶತಕದ ಸುಮಾರು ಅಂತ್ಯಕ್ಕೆ ಕೂಡಲು ಮನೆಯಲ್ಲಿ ಸುಬ್ಬಯ್ಯ ಶಾನಭಾಗನ ಕಾರುಭಾರಿನ ಕಾಲ. ಕಾಸರಗೋಡು, ಮೊಗ್ರಾಲ, ಪಾಡಿ, ಅಂಗಡಿಮೊಗರು ಎಂಬ ನಾಲ್ಕು ಮಾಗಣೆಗಳ ಶಾನುಭಾಗನವನು. ಶಾನಭೋಗಿಯ ಭರಮಿನೊಂದಿಗೆ ಮನೆತನದ ಘನತೆಯೂ ಸೇರಿ ಊರಿಗೆ ಅಂಥವನು ಎನಿಸಿದ್ದನು. ಜಾತ್ರೆ, ನೇಮ, ಅಂಕ, ಅಯನ, ಪಂಚಾಯತಿಕೆ, ಕೂಟಗಳಲ್ಲಿ ಅವನಿಗೆ ಮುಂದು ವೀಳ್ಯ. ಶಾನಭೋಗಿಯಲ್ಲಂತೂ ಅವನಿಗೆ ಸರಿಯೆನಿಸಿದವರಿಲ್ಲ. ಹನ್ನೆರಡು ಕೊಡಗಳ ತುಂಬ ಇಕ್ಕೇರಿ ಹೊನ್ನುಗಳನ್ನು ತುಂಬಿಸಿ ಪೆಗದಿಯನ್ನು ನಗರ ಸಂಸ್ಥಾನಕ್ಕೆ ‘ಇರ್ಸಾಲ್’ ಮಾಡುತ್ತಿದ್ದನಂತೆ. ಅವನ ಉರ್ಕನ್ನು ಕಂಡು ಮೆಚ್ಚಿದ ಇಕ್ಕೇರಿಯ ನಾಯಕನು ಅವನಿಗೆ ಹಲವು ಭೋಗಪಟ್ಟೆಗಳನ್ನೂ, ‘ಕೊಲ್ಲುಕೊಲೆ’ ವಿಚಾರಣೆಯ ಅಧಿಕಾರವನ್ನೂ ಕೊಟ್ಟಿದ್ದನಂತೆ. ಹೀಗೆ ಜಕ್ಕಜವ್ವನದಲ್ಲೇ ಅವನ ವರ್ಚಸ್ಸು ಹರಡಿತು. ಮನೆತನದ ಕೀರ್ತಿಯ ಕಳೆಯೇರಿತು. + +ಕಾಲಗತಿಯಲ್ಲಿ ಅರಸುತನವು ಅದಲು ಬದಲಾಯಿತು. ಇಕ್ಕೇರಿ ನಾಯಕರು ಅಳಿದು, ಹೈದರ್ ಟಿಪ್ಪು ಸುಲ್ತಾನರು ಬಿದ್ದು, ತುಳುನಾಡು ಕುಂಪಣಿಯವರ ವಶವಾಯಿತು. ಸರಕಾರವಿನ್ನೂ ನೆಲೆಗೊಂಡಿರಲಿಲ್ಲ. ತುಂಡರಸರು ಅಲ್ಲಲ್ಲಿ ದಂಗೆಯೆಬ್ಬಿಸುತ್ತಿದ್ದರು. ಪುಂಡರು ಕೊಳ್ಳೆಯಿಟ್ಟು ಸೂರೆ ಮಾಡುತ್ತಿದ್ದರು. ಕೊಡಗಿನಿಂದ ‘ಕಲ್ಯಾಣಪ್ಪನ ಕಾಟಕಾಯಿ’ ಆಗಾಗ ಇಳಿದುಬಂದು ಹಾವಳಿಮಾಡುತ್ತಿತ್ತು. ಅದೇ ಸಮಯಕ್ಕೆ ಕಂಬಳೆಕಡೆಯ ಸುಬ್ರಾಯನೆಂಬವನು (ಚಿರಂಜೀವಿ ಸುಬ್ರಾಯ ಎಂಬುದು ರೂಢಿಯ ಹೆಸರು.) ಕೆಲವು ಪುಂಡರನ್ನು ಕಟ್ಟಿಕೊಂಡು, ಅಲ್ಲಲ್ಲಿ ಪುಂಡೆಬ್ಬಿಸುತ್ತ ಕಲ್ಯಾಣಪ್ಪನನ್ನು ಕೂಡಿಕೊಂಡನು. ಕಲ್ಯಾಣಪ್ಪನು ಅವನನ್ನು ಕಂಬಳೆ ಸೀಮೆಯ ಕಡೆಗೆ ಕಳುಹಿಸಿಕೊಟ್ಟನು. ಕಲ್ಯಾಣಪ್ಪನ ಬೆಂಬಲದಿಂದ ಕೊಂಬು ಬಂದಂತಾದ ಸುಬ್ರಾಯನು ಪುಂಡರ ಪಡೆಯನ್ನು ಕೂಡಿಕೊಂಡು, ಸೂರೆ ಸುಲಿಗೆ ಮಾಡುತ್ತ, ಮನೆ ಮಾರುಗಳನ್ನು ಸುಟ್ಟು, ಹಡಲಿಟ್ಟು ಕೊಳ್ಳಿಭೂತದಂತೆ ಊರೂರು ತಿರುಗುತ್ತಿದ್ದನು. + +ಸುಬ್ರಾಯನ ದಂಡು ಕಾಸರಗೋಡಿಗೆ ಬರುತ್ತದೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿತು. ಮನೆಮನೆಯಲ್ಲಿ – ಚಿರಂಜೀವಿ ಸುಬ್ರಾಯನ ದಂಡು ಬಂತಯ್ಯೋ ದಂಡು ಎಂಬ ಗೋಳೆದ್ದಿತು. ಧನವಂತರು ನಗನಾಣ್ಯಗಳನ್ನು ಬಚ್ಚಿಟ್ಟು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಕಾದು ಕುಳಿತರು. ಹೆಂಗಸರು ಮಕ್ಕಳು ಮುಂಡಿಕೆಯ ಕಾಡುಗಳಲ್ಲಿ ಅವಿತುಕೊಂಡರು. ಕಾಡು ಹತ್ತಿರವಾಗಿದ್ದ ಮುದುಕರು ಈ ಗಡಿಬಿಡಿಯಲ್ಲಿ ಹೊರಡಬೇಕಾಯಿತಲ್ಲ ಎಂದು ಕಳವಳಿಸುತ್ತಿದ್ದರು. ಎದೆಗಾರರು ಕೆಲವರು ಗುಂಪುಗುಂಪಾಗಿ ಸೇರಿ ಕತ್ತಿ ದೊಣ್ಣೆ ಕೊಡಲಿಗಳನ್ನು ಹಿಡಿದುಕೊಂಡು ಅಲೆಯುತ್ತಿದ್ದರು. ಮನೆಮಾರಿನ ಹಂಗಿಲ್ಲದ ಉಂಡಾಡಿಗಳು! ಹತ್ತರ ಸಾವು ಮದುವೆಗೆ ಸಮಾನವೆಂಬ ಭಾವನೆಯಿಂದ ತಮಾಷೆ ನೋಡುವ ಆತುರದಲ್ಲಿದ್ದರು. + +ಊರಿಗೆ ಬಂದ ಮಾರಿಯನ್ನು ಹೇಗೆ ನಿವಾರಿಸುವುದೆಂದು ಯೋಚಿಸುತ್ತ ಸುಬ್ಬಯ್ಯ ಶಾನಭಾಗನು ತೂಗುಮಂಚದ ಮೇಲೆ ಕುಳಿತಿದ್ದನು. ಮಂಚವು ಕಿಂರಿ ಕಿಂರೀ ಎಂದು ತೂಗಾಡುತ್ತಿತ್ತು. ಅದರೊಡನೆ ಅವನ ಮನಸ್ಸೂ ಯೋಚನೆಗೆ ಸಿಲುಕಿ ಹಿಂದಕ್ಕೂ ಮುಂದಕ್ಕೂ ಓಲಾಡುತ್ತಿತ್ತು. ಸುಬ್ಬಯ್ಯನಿಗೀಗ ಇಳಿವಯಸ್ಸು. ಎಣ್ಣೆ ಕಪ್ಪಿನ ಗುಂಡಗಿನ ದೇಹವು ತುಂಬಿ ಹೊಳೆಯುತ್ತಿತ್ತು. ಉಟ್ಟ ಸರಪಳಿ ಅಂಚಿನ ಧೋತ್ರ, ತೊಟ್ಟ ಚಿನ್ನದ ನೇವಳ, ಹೆಗಲ ಮೇಲಿನ ಪಾವುಡ ಒಯಿನಾಗಿ ಒಪ್ಪುತ್ತಿತ್ತು. ಮುಖದಲ್ಲಿ ಗಾಂಭೀರ್ಯವು ಎದ್ದು ಕಾಣುತ್ತಿತ್ತು.ತೂಗುತ್ತಿದ್ದ ಮಂಚವನ್ನು ನಿಲ್ಲಿಸಿ, ಕೆಳಗಿಳಿದು, ತಲೆಗೊಂದು ಪಟ್ಟೆ ಸೆಲ್ಲೆಯನ್ನು ಸುತ್ತಿಕೊಂಡು, ಗೋಡೆಗೆ ಒರಗಿಸಿದ್ದ ಬೆಳ್ಳಿಕಟ್ಟಿನ ನಾಗಬೆತ್ತವನ್ನು ಹಿಡಿದುಕೊಂಡು, ಹೊರಗಿಳಿದು ಬಯಲಿನತ್ತ ನಡೆದನು. ಸುಗ್ಗಿಬೆಳೆ ತುಂಬಿ ನಳಿನಳಿಸುತ್ತಿದ್ದ ಆ ಬಯಲು ಪ್ರಕೃತಿದೇವಿಯುಟ್ಟ ಹಸುರ ಸೀರೆಯಂತೆ ಶೋಭಿಸುತ್ತಿತ್ತು. ಮಾರುದ್ದ ಏರಿದ್ದ ನೇಸರ ಜಳಕ್ಕೆ ಕಿರುಕಾಲುವೆಗಳಲ್ಲಿ ಹರಿಯುತ್ತಿದ್ದ ನೀರು ಬೆಳ್ಳಿಯ ಜರಿಯಂತೆ ಮಿರುಗುತ್ತಿತ್ತು. ಧನಿಯ ತಲೆಯನ್ನು ಕಾಣುತ್ತಲೆ ಗದ್ದೆಯಲ್ಲಿದ್ದ ಆಳು ಒಕ್ಕಲುಗಳೆಲ್ಲ ಹಿಡಿದ ಕೆಲಸವನ್ನು ಅಲ್ಲಲ್ಲೇ ಬಿಟ್ಟು ಓಡಿಬಂದು ಕೈಮುಗಿದರು. ಸುಬ್ಬಯ್ಯನು ಅವರಲ್ಲಿ ಹಿರಿಯನೊಬ್ಬನನ್ನು ಕರೆದು ಸಲುಗೆಯಿಂದ ಮಾತೆತ್ತಿದನು. + +“ಏನು ಓಬಣ್ಣಾ! ಸುಬ್ರಾಯನ ದಂಡು ಬರುತ್ತದಂತಲ್ಲಾ ! ಭಾರಿ ದಂಡಂತೆ!”“ಹೌದು ಒಡ್ಯಾ! ಭಾರೀ ದಂಡಂತೆ! ಊರೆಲ್ಲ ಸುಟ್ಟುಸೂರೆ ಮಾಡ್ತಾ ಬರ್ತೇತಂತೆ ದಂಡೂ.”“ಅಯ್ಯೋ! ಹಾಗಾದರೆ ನಾವೇನು ಮಾಡುವ?”“ನಮಗೇನು ಭಯ ಒಡ್ಯಾ? ಹುಲೀನ ಕೆಣಕೋರಿದ್ದಾರಾ? ಬಾಳೊ ಮಕ್ಕಳು ಕೆಣಕಕಿಲ್ಲ. ಸಾಯೊ ಮಕ್ಕಳು ಕೆಣಕಾವು. ಸತ್ತಾವು.”“ಅವರನ್ನು ಹುಲಿ ಹಿಡಿಯಲಿ ಅಂತ ನಾವು ಸ್ವಸ್ಥ ಮುಂಡಿಕೆ ಕಾಡಿನಲ್ಲಿ ಅವಿತುಕೊಂಡರಾಯಿತು, ಅಲ್ಲವೋ?”“ಮುಂಡಿಕೆ ಕಾಡು ಬಳೆ ತೊಟ್ಟ ಹೆಂಗಸರಿಗೆ. ಮೀಸೆ ಹೊತ್ತ ಗಂಡಸರಿಗೆ ಈ ರಟ್ಟೆಗಳು ಬುದ್ದೀ.”“ಅಂದರೆ ಹೊಡೆದಾಟಕ್ಕೆ ನಿಲ್ತಿಯಾ? ಹುಂ!”“ನಿಲ್ದೆ ಬಿಟ್ಟೇನೇ? ಈ ದೊಕ್ಕೆ ಒಂದಿದ್ರೆ ನಿಂತೇನು ಒಡ್ಯಾ.”“ಪೆಟ್ಟು ಗಿಟ್ಟು ಬಿದ್ರೆ?”“ಪೆಟ್ಟು ಬೀಳ್ಳಿ. ಪ್ರಾಣವೇ ಹೋಗ್ಲಿ. ಆ ಪುಂಡನನ್ನು ಹೆಡೆಮುರಿ ಕಟ್ಟಿ ಒಡೆಯರ ಕಾಲಮೇಲೆ ಉರುಳಿಸೇನು.”“ನಿಜವೆ! ಹಾಗಾದರೆ ಬಾ ನೋಡುವ,” ಎನ್ನುತ್ತ ತುಂಟ ನಗೆಯೊಂದನ್ನು ಬೀರಿಸುತ್ತ ಸೇರಿದ್ದ ರೈತರನ್ನೊಮ್ಮೆ ನೋಡಿದನು. “ಚಿರಂಜೀವಿಯಂತೆ! ದಂಡಂತೆ! ಸುಲಿಗೆಯಂತೆ! ಸೆಗಣಿಗೆ ಸಾವಿರದ ಈ ಹುಳಗಳ ದಂಡನ್ನು ಒರಸಿಬಿಡೋಣ! ಬನ್ನಿ!” ಎಂದು ಸುಬ್ಬಯ್ಯನು ಬೆತ್ತವನ್ನು ತಿರುವುತ್ತ ಬಿರುಸಾಗಿ ಸಾಗಿದನು. ಆಗ ಬಯಲಲ್ಲಿ ಗೆಯ್ಮೆಯಾಳುಗಳ ಪರಿಸೆಯೇ ಕೂಡಿತ್ತು. ಕಬ್ಬಿಣದ ಎರಕದಂಥ ಮೈಕಟ್ಟಿನ ಮೂಲಿ ಹೊಲೆಯರು; ಹರವಾದ ಎದೆ, ಹದನಾದ ಕೈಕಾಲುಗಳ ಧಾಂಡಿಗರಾದ ಒಕ್ಕಲುಗಳು; ತಿಂದು ಸೊಕ್ಕಿದ ಊರ ಹೊಂತಗಾರರು; ಎಲ್ಲರೂ ಸುಬ್ಬಯ್ಯನ ಮುಂದಾಳುತನದಿಂದ ಹುರುಪುಗೊಂಡರು. ಎಲ್ಲರ ನರನಾಡಿಗಳಲ್ಲಿ ನೆತ್ತರು ಒತ್ತರದಿಂದ ಹರಿಯಿತು. ಮೈಯುಬ್ಬಿತು. ಆವೇಶ ತುಂಬಿತು. ಎಲ್ಲರೂ ಇರುವೆ ದಂಡಿನಂತೆ ಸಾಲುಕಟ್ಟಿ ಸುಬ್ಬಯ್ಯನನ್ನು ಹಿಂಬಾಲಿಸಿದರು. ಕಟ್ಟಾಳುಗಳ ಆ ದಂಡನ್ನೂ, ಆ ದಂಡಿನ ದಳವಾಯಿ ಸುಬ್ಬಯ್ಯನನ್ನೂ ಕಂಡು ಜನರೆಲ್ಲ ಬೆರಗಾದರು. ಎಲ್ಲರಲ್ಲೂ ಎಲ್ಲಿಲ್ಲದ ಧೈರ್ಯ ತುಂಬಿತು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಉಳಿಯತ್ತಡ್ಕದ ಮಾರ್ಗ ಕವಲೊಡೆವಲ್ಲಿ ದಂಡು ಪಾಳೆಯಬಿಟ್ಟಿತು. ಅಲ್ಲಿ ಮಾಯಿಲ ಕೋಟೆಯ ಹಳೆಯ ಗೋಡೆಗಳು ನೀಡಿದ್ದುವು. ಅಲ್ಲೊಂದು ಇಲ್ಲೊಂದು ಹಳೆಯ ಬುರುಜು ಇತ್ತು. ಸುತ್ತಲೂ ಕರಡು ಬೆಳೆದ ಗುಡ್ಡಗಳು. ಅಲ್ಲಲ್ಲಿ ಕುರುಚಲು ಕಾಡುಗಳು. ಈ ಎಡವಟ್ಟಾದ ಸ್ಥಳದಲ್ಲಿ ಸುಬ್ಬಯ್ಯನು ವ್ಯೂಹವನ್ನು ರಚಿಸಿ ಎಲ್ಲರಿಗೂ ಅವರವರ ಕರ್ತವ್ಯವನ್ನು ಹೇಳಿಕೊಟ್ಟನು. ಸ್ವಲ್ಪ ಹೊತ್ತಿನಲ್ಲಿ ಕರಡು ಬೆಳೆದ ಆ ಗುಡ್ಡದಲ್ಲಿ ಯಾವ ಸುಳಿವೂ ಇಲ್ಲ. ಸುದ್ದಿಯೂ ಇಲ್ಲ. ಎಲ್ಲವೂ ಇದ್ದಂತೆಯೇ ಇತ್ತು. ಮಧ್ಯಾಹ್ನದ ಬಿಸಿಲಲ್ಲಿ ಎಲ್ಲವೂ ರಣಗುಟ್ಟುತ್ತಿತ್ತು.ಚಿರಂಜೀವಿ ಸುಬ್ರಾಯನ ಪಡೆಯು ಅದೇ ದಾರಿಯಾಗಿ ಬರುತ್ತಿದ್ದಿತು. ಸುಬ್ರಾಯನೇ ಪಡೆವಳ. ಕರ್ರಗಿನ ಗಿಡ್ಡಾಳು; ಕೊಬ್ಬಿದ ಅವಯವಗಳು. ಕರಾಳ ಮುಖ. ದಟ್ಟಿಚಲ್ಲಣ ಬಿಗಿದು, ಬಿಳಿಯ ನಿಲುವಂಗಿಯನ್ನು ತೊಟ್ಟು ಜರಿಯ ಕೆಂಪು ಮುಂಡಾಸನ್ನು ಕಟ್ಟಿದ್ದನು. ದಡ್ಡು ಕಟ್ಟಿದ ಕೈಯಲ್ಲಿ ಮದ್ದು ತುಂಬಿದ ಕೋವಿಯಿತ್ತು. ಅವನ ಹಿಂದೆ ಇನ್ನೂರು ಜನ. ಮುಂದೆ ಮುನ್ನೂರು ಜನ. ಎಲ್ಲರ ಕೈಯಲ್ಲೂ ಕತ್ತಿ ಕೊಡಲಿ ಸೋಟೆಗಳು. ಕೆಲವರ ಕೈಯಲ್ಲಿ ಕೋವಿಗಳು. ಅಬ್ಬರಿಸುತ್ತ, ಕೇಕೆ ಹಾಕುತ್ತ ನೆಲವನ್ನು ನಡುಗಿಸುತ್ತ, ಸಿಕ್ಕಿದ್ದನ್ನು ಹಾಳುಕೆಡಹುತ್ತ ಸುಬ್ಬಯ್ಯನ ಪಾಳೆಯವನ್ನು ಸಮೀಪಿಸಿದರು. + +ಸಂಕೇತದ ಅದಿರನ್ನು ದಾಟುತ್ತಲೇ ಸುಬ್ಬಯ್ಯನ ಪಾಳೆಯಲ್ಲಿ ಒಮ್ಮೆಲೆ ಢಂ ಢಂ ಎಂದು ಫಿರಂಗಿಗಳು ಸಿಡಿದವು. ಸಿಡಿಲಂಥ ಶಬ್ದ. ಮೋಡದಂಥ ಹೊಗೆ. ಆ ಮಬ್ಬಿನಲ್ಲಿ ನಾಲ್ಕು ದಿಕ್ಕುಗಳಿಂದ ಕಟ್ಟಾಳುಗಳು ಇಟ್ಟಣಿಸಿ, ಒತ್ತಿ, ಮುತ್ತಿ ಪುಂಡರ ದಂಡನ್ನು ಸದೆಬಡೆಯ ಹತ್ತಿದರು. ಸುಬ್ಬಯ್ಯನ ಪಡೆಯಲ್ಲಿ ಒಂದೇ ಸವನೆ ಫಿರಂಗಿಗಳು ಸಿಡಿಯುತ್ತಿದ್ದುವು. ಸುಬ್ರಾಯನು ಇವು ಕುಂಪಣಿಯವರ ತೋಫುಗಳೋ ಎಂದು ಅಳುಕಿದನು. ಅವನ ಆಳುಗಳೂ ಕೈಕಾಲು ಕೆಟ್ಟರು. ಫಿರಂಗಿಗಳು ಬೆಂಕಿ ಕಾರುತ್ತ ಮಹಾ ಶಬ್ದವನ್ನು ಹೊರಡಿಸುತ್ತಿದ್ದುವು. ಆ ಮಹಾ ಶಬ್ದಕ್ಕೆ ಪುಂಡರ ಎದೆ ಧಸಕ್ಕೆಂದಿತು. ಫಿರಂಗಿ! ಅಯ್ಯೋ ಫಿರಂಗಿ! ಎಂದು ಓಡಹತ್ತಿದರು. ಯಮನ ಕೋರೆಗಳಲ್ಲಿ ಸಿಲುಕಿ ಓಡುವುದೆಲ್ಲಿಗೆ! + +ಸಂದು, ಪೊದೆ, ಮಳೆಗಳಲ್ಲಿ ಅವಿತಿದ್ದ ಸುಬ್ಬಯ್ಯ ಶಾನುಭಾಗನ ಕೆಚ್ಚಾಳುಗಳು ಸರಕ್ಕನೆ ಹಾರಿ ಹಾರಿ, ಬಂದು, ತಾಗಿ ತಳ್ತು, ಇರಿದು ಹಲವರನ್ನು ಕೊಂದೊರಗಿಸಿದರು. ಹಲವರನ್ನು ಕಳವಳಿಸಿ ಕೆಡಹಿದರು. ಹಲವರನ್ನು ಬಳಲಿಸಿ ದೆಸೆಗೆಡಿಸಿದರು. ಅದೇ ಅವಸರದಲ್ಲಿ ಸುಬ್ಬಯ್ಯನು ಬಳಸಿ ಬರುವ ಪುಂಡರನ್ನು ಹೊಡೆದು ಕೆಡಹುತ್ತ ಸುಬ್ರಾಯನ ಮೇಲೆ ಎರಗಿದನು. ಸುಬ್ರಾಯನು ಕೋವಿಯನ್ನು ಹಾರಿಸಿದನು. ಇಟ್ಟ ಗುರಿ ಸುಬ್ಬಯ್ಯನ ತಲೆಯನ್ನು ಒಡೆಯುತ್ತಿತ್ತು. ಪುಣ್ಯವಶದಿಂದ ರವಷ್ಟು ತಪ್ಪಿ ಚಿಲ್ಲೆಯು ಸುಬ್ಬಯ್ಯನ ಮುಂಡಾಸನ್ನು ಕೊರೆದುಕೊಂಡು ಹಾರಿತು. ‘ಬದುಕಿದೆ ಹಾ!’ ಎನ್ನುತ್ತ ಸುಬ್ಬಯ್ಯನು ಆವೇಶಭರದಿಂದ ದೊಣ್ಣೆ ಬೀಸತೊಡಗಿದನು. ಸುಬ್ರಾಯನು ಕೋವಿಗೆ ಮದ್ದು ತುಂಬಿಸಲು ಎಡೆದೊರೆಯದೆ ಬರಿಯ ಕೋವಿಯನ್ನೇ ಕೊತ್ತಳಿಗೆಯಂತೆ ಬೀಸುತ್ತಿದ್ದನು. ಎಡೆ ನೋಡುತ್ತಿದ್ದ ಸುಬ್ಬಯ್ಯನ ದಂಡಾಳುಗಳು ಥಟ್ಟನೆ ಬಂದೆರಗಿ, ಪುಂಡ ಸುಬ್ರಾಯನನ್ನು ಹೊಡೆದು, ಹಣ್ಣುಮಾಡಿ, ಅವನ ಬಿಂಕವನ್ನು ಇಳಿಸಿ, ಹೆಡೆಮುರಿ ಕಟ್ಟಿ ಸುಬ್ಬಯ್ಯ ಶಾನಭಾಗನ ಕಾಲಮೇಲೆ ಕೆಡವಿದರು. ನನ್ನ ಮಾತು ಹೇಂಗೆ ಒಡ್ಯಾ ಎಂದು ಗುಂಪಿನೊಳಗಿಂದ ಓಬಯ್ಯನು ಸ್ವರ ಎಳೆದನು. ‘ನಿನ್ನ ಮಾತಿಗೆ ಒಡೆಯರ ತಲೆ ಸಂಚಕಾರ ಎಂದಮೇಲೆ ನಿನ್ನ ಮಾತು ಹೇಗೆಂದು ಹೇಳಬೇಕೆ ಓಬಣ್ಣಾ?’ ಎಂದು ಸುಬ್ಬಯ್ಯನು ನಕ್ಕನು. + +ಹೊಡೆದಾಟವೆಲ್ಲ ತಣ್ಣಗಾಯಿತು. ಬಳಿಕ ಸುಬ್ರಾಯನನ್ನು ಜಪ್ತಿ ಮಾಡಿ ನೋಡುವಾಗ ಅವನ ಉಡಿದಾರದಲ್ಲಿ ಗೇಣುದ್ದದ ಚಿನ್ನದ ತಾಯಿತವಿದ್ದಿತಂತೆ. ಆ ಯಂತ್ರಬಲದಿಂದಲೆ ಅವನು ಇಷ್ಟೆಲ್ಲ ಪುಂಡಾಟಿಕೆಯನ್ನು ನಡೆಸಲು ಸಾಧ್ಯವಾಯಿತಂತೆ. ಪುಂಡುಗಾರರು ಕೊಳ್ಳೆಹೊಡೆದು ತಂದಿದ್ದ ನಗನಾಣ್ಯಗಳನ್ನು ಸುಬ್ಬಯ್ಯನು ತನ್ನ ದಂಡಾಳುಗಳಿಗೂ ಬಡಬಗ್ಗರಿಗೂ ಹಂಚಿದನು. ಆ ಮೇಲೆ ಸುಬ್ರಾಯನನ್ನು ಹೆಡೆಮುರಿ ಕಟ್ಟಿದ ಕಟ್ಟುಗಳನ್ನು ಬಿಚ್ಚಿಸಿ, ಬುದ್ದಿಹೇಳಿ ಬಿಟ್ಟುಬಿಟ್ಟನು. + +ಸುಬ್ರಾಯನು ಸುಬ್ಬಯ್ಯನಿಗೆ ಕೈಮುಗಿದು ಹೋಗಲು ಎದ್ದನು. ಎದ್ದು ಕೆಂಡಕಾರುತ್ತಿದ್ದ ಫಿರಂಗಿ ಸಾಲನ್ನೊಮ್ಮೆ ನೋಡಿದನು. ಕೋಟೆಗೋಡೆಗಳ ಮರೆಯಲ್ಲಿ, ಸುಬ್ಬಯ್ಯನು ಮುಳಿಹುಲ್ಲಿನ ಹೊರೆಗಳನ್ನು ಸಾಲಾಗಿ ಇರಿಸಿ, ಬೆಂಕಿಕೊಡಿಸಿದ್ದನು. ಅದರ ಹಿಂದೆ ಒಂದೇ ಸವನೆ ಕದನೆ ಮದ್ದನ್ನು ಸುಡಿಸಿ ಪುಂಡುಗಾರರನ್ನು ಭ್ರಮೆಗೊಳಿಸಿದ್ದನು. ಇದನ್ನು ಕಂಡು ಸುಬ್ರಾಯನು ನಾಚಿಕೆಯಿಂದ ನೆಲಕ್ಕಿಳಿದು ಹೋದನು. + + + +“ಹುಲ್ಲುಕಡ್ಡಿಯು ಅಂದು ರಾಮಬಾಣವಾಗಿ ಕಾಕಾಸುರನ ಕಣ್ಣನ್ನು ಕುರುಡುಮಾಡಿತು. ಅದೇ ಮುಳಿಹಲ್ಲು ಫಿರಂಗಿಯಾಗಿ ಇಂದು ಚಿರಂಜೀವಿಯನ್ನು ಸುಟ್ಟಿತು. ಕೂಡಲ ಮೇಳವು ಒಳ್ಳೇ ಆಟ ಆಡಿತಯ್ಯ ಇವತ್ತು! ನನ್ನ ಬಣ್ಣದ ವೇಷವನ್ನು ಕಿತ್ತೊಗೆದು ಮುಖಕ್ಕೆ ಮಸಿ ಹಚ್ಚಿಬಿಟ್ಟಿತು. “ಚಿರಂಜೀವಿ ಕಾಳಗ” ದ ಪ್ರಸಂಗವೆಲ್ಲ ಮುಗಿಯಿತು. ಇನ್ನು ಪೆಟ್ಟಿಗೆ ಕಟ್ಟುವುದೊಂದೇ ಉಳಿಯಿತು. ಅಯ್ಯೋ!” ಎಂದು ತಲೆ ತಗ್ಗಿಸಿಕೊಂಡು ಬಡಗುದಾರಿಯನ್ನು ಹಿಡಿದನು. ಅಳಿದುಳಿದ ಅವನ ಮಂದಿಯು ದಾರಿಯಲ್ಲಿ ಅವನನ್ನು ಸೇರಿಕೊಂಡರು.ಕೆಲವು ದಿನಗಳ ಮೇಲೆ ಸುಬ್ಬಯ್ಯ ಶಾನಭಾಗನು ಸುಬ್ರಾಯನ ದಂಡಿನ ವಿಷಯ ಕಲೆಕ್ಟರರಿಗೆ ಫಿರ್ಯಾದು ಬರೆದುಕೊಂಡನು. ಕ್ರಮದಂತೆ ತನಿಖೆ ನಡೆಯಲು ಸುಬ್ಬಯ್ಯನು ಸುಬ್ರಾಯನ ಪುಂಡಾಟಿಕೆಯ ವಿಷಯ ಕೂಲಂಕುಷ ವರದಿಯನ್ನು ಕೊಟ್ಟನು. ತನ್ನ ಮಾಗಣೆಯಲ್ಲಿ ಪುಂಡನ್ನಡಗಿಸುವುದಕ್ಕೆ ತಾನು ಮಾಡಿದ ಪ್ರಯತ್ನಗಳನ್ನೆಲ್ಲ ಬಿನ್ನವಿಸಿಕೊಂಡು, ಚಿಲ್ಲು ತಾಗಿ ತೂತಾದ ತನ್ನ ಮುಂಡಾಸನ್ನು ಹಾಜರುಪಡಿಸಿ ರುಜುವಾತು ಕೊಟ್ಟನು. ಕಲೆಕ್ಟರನು ಬೆರಗಾಗಿ ಅವನ ಸಾಹಸವನ್ನು ಶ್ಲಾಘಿಸಿದನು. ಸರಕಾರಕ್ಕೆ ಬರೆದು ಒಂದು ಸೇರು ಚಿನ್ನದ ಎರಡು ಬಳೆಗಳನ್ನೂ, ಸರಕಾರದ ಮುದ್ರೆಯುಳ್ಳ ಒಂದು ಖಡ್ಗವನ್ನೂ ತರಿಸಿ ಬಹುಮಾನವಾಗಿ ಕೊಟ್ಟನು. ಆ ಬಿರುದಿನ ಬಳೆಗಳೂ ಶೌರ್ಯದ ಕುರುಹಾದ ಆ ಖಡ್ಗವೂ ಕೂಡಲು ಶಾನಭಾಗರ ಮನೆಯಲ್ಲಿ ಈಗಲೂ ಇವೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_473.txt b/Kenda Sampige/article_473.txt new file mode 100644 index 0000000000000000000000000000000000000000..34204b0a1625fa01043db4cccfe492bd37f996fd --- /dev/null +++ b/Kenda Sampige/article_473.txt @@ -0,0 +1,35 @@ +byಸುನೈಫ್ ವಿಟ್ಲ|Jul 22, 2018|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 0 Comments + +ಆ ರಾಜಕಾರಣಿಯೂ ಯಾರದೋ ಬಲವಂತಕ್ಕಲ್ಲ ರಾಜಕಾರಣಿಯಾದದ್ದು. ಒಳಗಿನ ತುಡಿತವೆಂದರೆ ತಪ್ಪಾಗಲಾರದು.ತನ್ನ ಹದಿನೆಂಟನೆ ವಯಸ್ಸಿನಲ್ಲಿ ರಾಜಕೀಯಕ್ಕೆ ಧುಮುಕಿದ್ದ ಆತ ಒಟ್ಟು ಒಂಭತ್ತು ವರ್ಷಗಳ ಕಾಲ ಜೈಲಿನಲ್ಲೂ ಕಳೆದಿದ್ದ.ಆ ರಾಜಕಾರಣಿಗೆ ಆ ಸಾಹಿತಿಯ ಪರಿಚಯವಿತ್ತು. + +byಡಾ. ಬಿ. ಜನಾರ್ದನ ಭಟ್|Jul 15, 2018|ವಾರದ ಕಥೆ,ಸಾಹಿತ್ಯ| 1 Comment + +“ಏನೂ ತಿಳಿಯದ ಹಳ್ಳಿಯ ಈ ಕುರುಬನಿಗೆ ಒಂದಿಷ್ಟು ವಿದ್ಯೆ ಕಲಿಸಿದಿರಿ. ದಂಡಿನಲ್ಲಿದ್ದು, ಕುದುರೆಯೋಡಿಸುವುದನ್ನೇ ಕಲಿತು, ನಡೆಯುವುದನ್ನೇ ಮರೆತುಬಿಟ್ಟಿದ್ದ ಈ ಕಾಲುಗಳಿಗೆ ಕುಣಿತ ಕಲಿಸಿದಿರಿ. ‘ಹೊಡಿ, ಕಡಿ, ಬಡಿ’ ಎನ್ನುವುದಕ್ಕೆ ಒಗ್ಗಿದ್ದ ನಾಲಿಗೆಗೆ ಒಂದಿಷ್ಟು ‘ಅರ್ಥ ಹೇಳುವ’ ಅಭ್ಯಾಸ ಮಾಡಿದಿರಿ” ಎಂದು ನುಡಿದನು.” + +byಪರಿಮಳ ಜಿ. ಕಮತರ್|Jul 8, 2018|ವಾರದ ಕಥೆ,ಸಾಹಿತ್ಯ| 0 Comments + +”ಅವನು ಸೂಜಿ ದಾರವನ್ನು ಕೈಯಲ್ಲಿ ಹಿಡಿದು ಮನೆಯ ಮುಂದಿರುವ ಬೀದಿ ದೀಪದ ಬೆಳಕಲ್ಲಿ ಹರಿದ ತನ್ನ ಕೋಟಿಗೆ ತೇಪೆ ಹಚ್ಚಲು ಎಷ್ಟು ಬಟ್ಟೆ ಬೇಕಾಗಬಹುದೆಂದು ಅಳತೆ ಮಾಡಿದ. ಚಾಪೆಯ ಕೆಳಗಿಟ್ಟ ಹರಿದ ಬಟ್ಟೆಯ ಗಂಟನ್ನು ಹೊರ ತೆಗೆದು ಆ ಕೋಟಿಗೆ ಸರಿ ಹೊಂದುವ ಬಟ್ಟೆ ನೋಡಿದ.” + +byಡಾ. ಬಿ. ಜನಾರ್ದನ ಭಟ್|Jul 1, 2018|ವಾರದ ಕಥೆ,ಸಾಹಿತ್ಯ| 0 Comments + +”ತಿಂಗಳ ಬೆಳಕಿನಲ್ಲಿ ಎತ್ತರವಾದ ಗಡಾಯಿಕಲ್ಲು ಮಸಕು ಮಸಕಾಗಿ ಕಾಣಿಸುತ್ತಿದ್ದಿತು. ಕೋಟೆಯೊಳಗಿಂದ ಉರಿಯುತ್ತಿದ್ದ ಒಂದು ಪಂಜು ಏನೋ ಸಂಕೇತ ಮಾಡಿತು. ಗಡದ ಕೆಳಗಿನ ಜಮಾಲಬಾದು ನಗರವೆಲ್ಲ ನಿದ್ದೆಯಲ್ಲಿ ಮೈಮರೆತಿತ್ತು. ಸುತ್ತಲೂ ಬೆಟ್ಟಗಳು ಕ್ರರಗಾಗಿ ಕಾಣಿಸುತ್ತಿದ್ದುವು.” + +byಅಬ್ದುಲ್ ರಶೀದ್|Jun 24, 2018|ಸಾಹಿತ್ಯ| 0 Comments + +”ಕನಸಲ್ಲಿ ಬಂದ ಅವಳು ಮರಳಿ ಹೋಗುವಾಗ ನನಗೆ ಎದೆ ನೋವಾದ ಹಾಗೆ ಅನಿಸುತ್ತಿತ್ತು. ಜೀವನಪೂರ್ತಿ ಜೊತೆಗಿರಬೇಕಾಗಿದ್ದ ಅನುರಾಗವೊಂದು ನಡುವಲ್ಲಿ ನೊಂದುಕೊಂಡು ಕೈ ತಿರುಗಿಸಿ ಹೊರಟು ಹೋದಂತೆ ಅನಿಸಿ ಕನಲಿ ಹೋಗಿದ್ದೆ. ನನ್ನ ಕಥೆ ಹೇಳುವ ಹುಚ್ಚು ನನ್ನ ಪ್ರೇಮಿಸುವ ಹುಚ್ಚಿನಷ್ಟೇ ನೋವಿನದ್ದು ಅನಿಸುತ್ತಿತ್ತು.” + +byಡಾ. ಬಿ. ಜನಾರ್ದನ ಭಟ್|Jun 17, 2018|ವಾರದ ಕಥೆ,ಸಾಹಿತ್ಯ| 0 Comments + +”ರಾಣಿಯು ವಿದೇಶೀಯರ ಮೇಲೆ ಕಿಡಿ ಸೂಸುವ ಹೆಣ್ಣು. ರಾಜನಾದರೋ ಆ ಕಾಟಕರನ್ನು ಕಂಡರೆ ಸಿಡಿಮಿಡಿಕೊಳ್ಳುವ ಗಂಡು. ಆ ಸಿಂಹಿಣಿಗೂ ಈ ಶೃಗಾಲಕ್ಕೂ ಸರಿಬೀಳುವುದೆಂತು? ಬಂಗರಾಜನನ್ನು ಆ ಚೌಟ ಕುಮಾರಿ ಕೇವಲ ಪ್ರತಿಷ್ಠೆ ಗೌರವಕ್ಕಾಗಿ ವಿವಾಹವಾಗಿದ್ದಳು. ಗಂಡಹೆಂಡಿರಾಗಿ ಅವರೆಂದೂ ಒಟ್ಟಿಗೆ ಬಾಳಲಿಲ್ಲ. “ + +byಕೆಂಡಸಂಪಿಗೆ|Jun 8, 2018|ವಾರದ ಕಥೆ,ಸಾಹಿತ್ಯ| 2 Comments + +‘ಸಮ್ಮಿಶ್ರ ಕಥೆ’ಯೆಂಬುದು ಸಮ್ಮಿಶ್ರ ಸರ್ಕಾರದಷ್ಟು ಚರ್ಚೆ ಮತ್ತು ಹೀಗಳಿಕೆಗಳಿಗೆ ತುತ್ತಾದ ಪ್ರಯೋಗವೇನಲ್ಲ. ಆದರೂ ಇಂತಹದೊಂದು ಪ್ರಯೋಗಕ್ಕೆ ಕೈ ಹಾಕುವ ಕೆಲಸವನ್ನು ಯಾರೂ ಜಾಸ್ತಿ ಮಾಡಿಲ್ಲ. ಬಹುಶಃ ಸಮ್ಮಿಶ್ರ ಸರ್ಕಾರ ರಚನೆಗಿಂತ ಹೆಚ್ಚಿನ ಕಸರತ್ತುಗಳನ್ನು ಮಾಡುವ ಅವಶ್ಯಕತೆಗಳು ಇಲ್ಲಿರಬಹುದೇನೋ.” + +byಡಾ. ಬಿ. ಜನಾರ್ದನ ಭಟ್|Jun 3, 2018|ವಾರದ ಕಥೆ,ಸಾಹಿತ್ಯ| 0 Comments + +”ಬಾಬ್ರಾಯನೇನೋ ಪಾರಾಗಿ ಬಂದ. ಬಂದು ತನ್ನವರು, ತನ್ನ ಜಾತಿಯವರು, ಮತದವರು ಎಂದು ತಿಳಿದುಕೊಂಡವರ ಬಳಿ ಬಂದು ಬಿದ್ದ. ಆದರೆ ಇದೇನು? ಯಾರೂ ಅವನನ್ನು ಕಣ್ಣೆತ್ತಿಯೂ ನೋಡಲಿಲ್ಲ! ಅವನ ದುಃಖ ದುರಂತಗಳನ್ನು ಯಾರೂ ವಿಚಾರಿಸಲಿಲ್ಲ. ಅವನನ್ನು ಮನುಷ್ಯ ಮನುಷ್ಯನೆಡೆಗೆ ನೋಡುವಂತೆಯೇ ನೋಡಲಿಲ್ಲ!” + +byಶಾಂತಿ ಕೆ. ಅಪ್ಪಣ್ಣ|May 26, 2018|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 4 Comments + +”ಭಗವಂತನ ಸೃಷ್ಟಿಯಲಿ ಅತ್ಯಂತ ಅಪೂರ್ವವಾದದ್ದು ಈ ಕಿನ್ನರಿಗಳದ್ದೇ ಇರಬೇಕು. ಕಿನ್ನರಿಯ ದೇಹದಲ್ಲಿ ಗಂಡಿನ ಕಸುವು, ಹೆಣ್ಣಿನ ಲಾಲಿತ್ಯ ಎರಡೂ ಮೇಳೈಸಿ ಅದು ಸೃಷ್ಟಿಯ ಸೌಂದರ್ಯಕ್ಕೆ ಎಸೆದ ಸವಾಲಾಗಿತ್ತು. ಅದಕ್ಕೇ ಇರಬೇಕು, ಜಗತ್ತು ಅವರ ಪಾಲಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದು! \ No newline at end of file diff --git a/Kenda Sampige/article_474.txt b/Kenda Sampige/article_474.txt new file mode 100644 index 0000000000000000000000000000000000000000..ae0dc302fbe474e825f135724b7a1a33d0da7691 --- /dev/null +++ b/Kenda Sampige/article_474.txt @@ -0,0 +1,155 @@ + + +ಸಹಜ. ನಾವಂತೂ ಸಿಕ್ಕಿಬಿದ್ದು ಮೂರು ದಿವಸ. ಹೇಗಾದರೂ ಇದರಿಂದೊಮ್ಮೆ ನಾವು ಪಾರಾಗಿದ್ದರೆ ಸಾಕಾಗಿತ್ತು.ಆದರೆ ಪಾರಾಗುವ ಸಂಭವವೇ ನಮಗೆ ಕಂಡು ಬರುವುದಿಲ್ಲ. ನಮ್ಮ ಕೈ ಈವಾಗಲೇ ಗಾಣದುದ್ದಕ್ಕೂ ಸಿಕ್ಕಿಬಿದ್ದಾಗಿದೆ. ಇನ್ನು ಹೊರಗೆ ತೆಗೆಯುವ ಹಾಗೆಯೇ ಇಲ್ಲ.ಅಲ್ಲಿ ನೋಡಿ. ಬರುವಾಗ ಎಷ್ಟು ಮೆತ್ತಗಾಗಿ ಬಂದಿದ್ದರಲ್ಲ. ನಮ್ಮೊಡನೆಲ್ಲ ಕೈಮುಗಿದು ಬೇಡಿಕೊಂಡಿದ್ದರು. ನಮ್ಮ ಹೋಬಳಿ ಒಡೆಯರ ಕೂಡೆ ಅಂಗಲಾಚಿಕೊಂಡಿದ್ದರು.ಥೇಟ ದಗಲ್‍ಬಾಜ್, ಇಷ್ಟರ ಮಟ್ಟಿಗೆ ನಮ್ಮನ್ನು ಹೊಂಡದಲ್ಲಿ ಇಳಿಸುತ್ತಾರೆಂತ ನಾನೆಣಿಸಿದ್ದಿಲ್ಲ.ಅಲ್ಲ –  ಯಾರೂ ಇಂಥ ಕೆಲಸ ಮಾಡಲಿಕ್ಕಿಲ್ಲ. ಒಂದೆರಡು ದಿನವೇ? ಈಗ ಎರಡು ತಿಂಗಳು ಕಳೆದು ಹೋಯಿತು. ಆ ಮುನ್ನೂರು ನಾನ್ನೂರು ಮಂದಿಯನ್ನು ಸಾಕಿದವರೇ ನಾವಲ್ಲವೆ? ಎಷ್ಟು ಖರ್ಚು!ಖರ್ಚಿನ ವಿಚಾರ? ನನ್ನೊಂದು ಅಂಗಡಿಗೇ ಮುನ್ನೂರು ವರಹ ಬರಬೇಕಾಗಿದೆ. ಇನ್ನು ಆ ಜವಳಿಯಂಗಡಿಯವರಿಗೆಲ್ಲ!ಅವರು ಬೊಬ್ಬೆಯೇ ಹೊಡಿಯುತ್ತಾರೆ. ಪಾಪ!ಆ ಮಂಡಿ ಮುದ್ದಣ್ಣ ಸೆಟ್ಟರು ಒಬ್ಬರೇ ಈ ತನಕ ಆರುನೂರು ಮುಡಿ ಅಕ್ಕಿ ಒದಗಿಸಿ ಕೊಟ್ಟಿದ್ದಾರಂತೆ!ಅಕ್ಕಿ – ಬತ್ತ ವಸ್ತ್ರ – ದವಸಧಾನ್ಯ ಎಣ್ಣೆ – ಬೆಲ್ಲ ಇವುಗಳನ್ನೆಲ್ಲ ಎಣಿಸಿಕೊಂಡರೆ ಇದೇನು ಸಾಧಾರಣ ಲೆಕ್ಕಾಚಾರವಲ್ಲ!ಈ ಲೆಕ್ಕಾಚಾರ ಬಿಡಿ. ನಮ್ಮ ಸಂಕಣ್ಣಾಚಾರಿ ಈ ಎರಡು ತಿಂಗಳಿಂದಲೂ ಇಪ್ಪತ್ತು ಜನರನ್ನು ಹಿಡಿದುಕೊಂಡು ಕೆಲಸ ಮಾಡುತ್ತಿದ್ದಾನಲ್ಲ? ಅವನಿಗೂ ಲೆಕ್ಕಾಚಾರವಾಗಲಿಲ್ಲವಂತೆ! ಅಂತೂ ನಾವು ಈ ಹೊರಗಿನವರನ್ನು ನಂಬಿದ್ದೇ ಮೋಸ! + +ಸಂಜೆಯ ಹೊತ್ತು. ಇಳಿ ಬೆಳಕಿನ ಸೂರ್ಯನ ಕಿರಣ ಅದೇ ಮುಂದುಗಡೆ ಹರಿಯುತಿದ್ದ ಕಂಡ್ಲೂರು ಹೊಳೆಯ ಕಿನಾರೆಗೆ ತುಸುದೂರ ಒಂದು ದೊಡ್ಡ ಹಡಗು ಲಂಗರು ಹಾಕಿ ನಿಂತಿದ್ದಿತು. ಹಡಗು ಈ ದೇಶದ್ದಲ್ಲ ಪೋರ್ಚುಗೀಸರದ್ದು. ಹದಿನಾರನೇ ಶತಮಾನದಲ್ಲಿ ಈ ಜಿಲ್ಲೆಯ ಕರಾವಳಿಯುದ್ದಕ್ಕೂ ಪೋರ್ಚುಗೀಸ ಹಡಗುಗಳ ಹಲ್ಲೆ ಅವ್ಯಾಹತವಾಗಿ ನಡೆಯುತ್ತ ಇದ್ದಿತ್ತು. ಪದೇ ಪದೇ ಅವರು ಕರಾವಳಿಯ ಪಟ್ಟಣಗಳಿಗೆ ದಾಳಿ ಮಾಡಿ ಲೂಟಿ ಮಾಡುತಿದ್ದುದು ತಪ್ಪಿದ್ದೇ ಅಲ್ಲ. ವಿಜಯನಗರದ ಪ್ರಭುಗಳ ಹತೋಟಿ ಅವರ ಮೇಲೆ ಬಿಗಿಯಾಗಿದ್ದಾಗಲೆಲ್ಲ ಅವರು ಬಹಳ ಮೆತ್ತಗಾಗಿರುತ್ತಿದ್ದರು. ಅದು ಸಡಿಲಾದಂತೆ ಕಾಲಕ್ರಮೇಣ ಅವರ ದಬ್ಬಾಳಿಕೆಯೂ ಅತಿಕ್ರಮಿಸತೊಡಗಿತು. ಗೋವೆಯಲ್ಲಿ ತಳವೂರಲು ವಿಜಯನಗರದರಸರು ಅನುಮತಿ ಕೊಟ್ಟದ್ದೇ ಈ ರಾಜ್ಯಕ್ಕೊಂದು ವಿಷವಾಯಿತು. ಆ ಸುಸಜ್ಜಿತ ಬಂದರದಿಂದ ಅವರು ಪದೇ ಪದೇ ತಮ್ಮ ಹಡಗು ಪಡೆಗಳನ್ನು ಸಮುದ್ರದ ಸುತ್ತೆಲ್ಲ ಅಟ್ಟಿ ಎಲ್ಲರಿಗೂ ಪೀಡೆ ಕೊಡುತ್ತಿದ್ದರು. + +ಎಲ್ಲದಕ್ಕಿಂತಲೂ ಹೆಚ್ಚಾಗಿ ಅವರ ಧಾರ್ಮಿಕ ದಬ್ಬಾಳಿಕೆ ಮತ್ತು ಮತಾಂತರಗಳಿಂದಾಗಿ ಗೋವೆಯ ಜನಾಂಗವೇ ಊರುಬಿಟ್ಟು ಓಡಬೇಕಾಯಿತು. ಅಲ್ಲಿಯ ಕೊಂಕಣಸ್ಥರು ತಮ್ಮ ಮನೆ ಮಠಗಳ ಜಿಂದುಗೆಗಳನ್ನು ಹೊತ್ತುಕೊಂಡು ಅಕ್ಕಪಕ್ಕದ ಊರುಗಳಿಗೆ ವಲಸೆ ಹೊರಟರು. ಹೀಗಾಗಿ ಕಾರವಾರದಿಂದ ತೊಡಗಿ ಕೊಚ್ಚಿಯ ತನಕವೂ ಈ ವ್ಯಾಪಾರೀ ಜನಾಂಗ ಹರಡತೊಡಗಿತು. ಅದೇ ರೀತಿ ಅವರು ಪೋರ್ಚುಗೀಸರ ಕೈಯಿಂದ ಪಡೆದ ಹಾನಿ ಹಾವಳಿಯಾದರೂ ಅಲ್ಪವಾದುದಲ್ಲ. ಮನೆಮಾರುಗಳನ್ನೆಲ್ಲ ಗೋವೆಯಲ್ಲಿ ಬಿಟ್ಟುಬಂದ ಅವರ ಸ್ಥಿತಿಯಾದರೂ ಶೋಚನೀಯ. ಇನ್ನುಳಿದ ಹಲವು ಮಂದಿ ಅವರ ಬಲಾತ್ಕಾರದಿಂದಾಗಿ ಮತಾಂತರಹೊಂದದೆ ನಿರ್ವಾಹವಿಲ್ಲದೆ ಹೋಯಿತು. ಹೀಗೆ ಪೋರ್ಚುಗೀಸರ ಸಾಮ್ರಾಜ್ಯದಾಹಕ್ಕಿಂತಲೂ ಧರ್ಮಪೀಡೆಯೇ ಪ್ರಬಲವಾಗತೊಡಗಿತು. + +ಈ ಜಿಲ್ಲೆಯ ಹಲವು ಆಳರಸರು ಪೋರ್ಚುಗೀಸರನ್ನು ಸದೆಬಡಿದು ಹಾವಳಿಯಡಗಿಸಲು ಯತ್ನಿಸಿದರೂ ಅದು ಕೈಸಾಗಲಿಲ್ಲ. ಒಂದನೆಯದಾಗಿ ಈ ಚಿಕ್ಕ ಪುಟ್ಟ ಅರಸರಲ್ಲಿ ಹೊಗೆಯಾಡುತಿದ್ದ ಪರಸ್ಪರ ವೈಷಮ್ಯವು ಒಂದು ಕಾರಣ. ಎರಡನೆಯದಾಗಿ – ಆ ಫರಂಗಿಗಳಲ್ಲಿದ್ದ ಸೈನಿಕ ಶಿಸ್ತು – ಉತ್ತಮವಾದ ಯುದ್ಧೋಪಕರಣ ನೌಕಾಯುದ್ಧದ ನೈಪುಣ್ಯ. ಇವುಗಳಿಂದಾಗಿ ಹಲಹಲವು ತಡವೆ ಈ ದೇಶೀಯರು ಅವರನ್ನು ಹಿಂದಕ್ಕಟ್ಟಿದರೂ ಅವರು ಮತ್ತೂ ಮತ್ತೂ ಮೇಲೆ ಬಿದ್ದು ಬರುತಿದ್ದರು. ಅವರು ಸಮುದ್ರದಲ್ಲೆ ಹಡಗುನಿಲ್ಲಿಸಿ ದೂರಗುರಿಯ ಫಿರಂಗಿಗಳಿಂದ ಗುಂಡಿನ ಮಳೆ ಸುರಿದಾಗ ಕರಾವಳಿಯ ಎಲ್ಲಾ ಪಟ್ಟಣಗಳೂ ತತ್ತರಿಸುತ್ತಿದ್ದುವು. ಆದುದರಿಂದಲೇ ಸಾಮಾನ್ಯವಾಗಿ ಎಲ್ಲಾ ಅರಸರೂ ಅವರ ಕೂಡೆ ಕಲಹ ಹೂಡದೆ ಅವರ ವಾಂಛಿತದಂತೆ ಎಲ್ಲಾ ಸೌಕರ್ಯಗಳನ್ನು ಒದಗಿಸಿಕೊಡುವ ಕರಾರು ಮಾಡಿಕೊಂಡಿದ್ದರು. + +ಆಗಲಾಗ ಈ ಜಿಲ್ಲೆಯಲ್ಲೂ ಯಾವ ಪ್ರಬಲವಾದ ಆಡಳಿತೆಯೂ ಇದ್ದಿಲ್ಲ. ವಿಜಯನಗರದ ಅರಸರ ಕೊನೆಯ ಕಾಲ ಸನ್ನಿಹಿತವಾಗಿದ್ದುದರಿಂದ ಅವರ ದರ್ಪದ ಕಾವು ಬಹಳವಾಗಿ ತಣ್ಣಗಾಗಿದ್ದಿತು. ಆದುದರಿಂದ ಇಲ್ಲಿಯ ಚಿಕ್ಕ ಚಿಕ್ಕ ಸಂಸ್ಥಾನಿಕರೇ ತಾವು ತಾವೆಂದು ತಲೆಯೆತ್ತುತ್ತಿದ್ದರು. ಆದರೂ ಉಳ್ಳಾಲದ ರಾಣಿ ಅಬ್ಬಕ್ಕ ದೇವಿ ಗಂಗೊಳ್ಳಿಯ ತನಕದ ಕರಾವಳಿಯ ಒಡತಿಯಾಗಿದ್ದು ಅದನ್ನು ಚೆನ್ನಾಗಿ ಕಾದುಕೊಳ್ಳುತಿದ್ದಳು. ಆ ಹದಿನಾರನೇ ಶತಕದ ಪೋರ್ಚುಗೀಸರಿಗೆ ಇಲ್ಲಿ ಏನಾದರೂ ಎದುರಾಡಿದವರಿದ್ದರೆ ಅದು ಆ ಧೀರ ಮಹಿಳೆಯೊಬ್ಬಳೇ ಸರಿ; ಇನ್ನು ಕಲ್ಲಿಕೋಟೆಯ ಝಮೋರಿನ್ನರ ಸಮರ್ಥ ಸೇನಾನಿ ಪೆಕ್ರುಕುಟ್ಟಿ ಈ ಫರಂಗಿಗಳನ್ನು ಕಂಡಕಂಡಲ್ಲೆಲ್ಲ ಬೆನ್ನಟ್ಟುತ್ತಿದ್ದನು. + +ಅಂತೆಯೇ ಹದಿನಾರನೇ ಶತಕದ ಮಧ್ಯಕಾಲದಲ್ಲಿ ಪೋರ್ಚುಗೀಸರ ಹಲ್ಲೆಯ ಹಡಗೊಂದು ಬಲಬದಿ ಮುರಿದುಕೊಂಡು ಹಾಯಿ ಹರಿದುಕೊಂಡು ಬಹಳ ದುಸ್ಥಿತಿಯಿಂದ ಕಂಗೆಟ್ಟು ಬಸ್ರೂರಿನ ಬಳಿ ಕಂಡ್ಲೂರಿನ ಹೊಳೆಯ ಅಳಿವೆ ಬಾಯಿಯಲ್ಲಿ ಬಂದುಬಿದ್ದಿತು. ಕಲ್ಲಿಕೋಟೆಯಿಂದ ಝಮೋರಿನ್ನರ ಹಡಗುಗಳು ಅವರನ್ನು ಬೆನ್ನಟ್ಟಿಕೊಂಡು ಬಂದಿದ್ದುವು. ಆ ಕಡೆ ತುಂಬಾ ಲೂಟಿ ಮಾಡಿ ಜನರನ್ನು ಬಲಾತ್ಕರಿಸುತಿದ್ದ ಇದರ ಕಪ್ತಾನ ಮಸ್ಕರೇಂಞನನ್ನು ಹಿಡಿದವರಿಗೆ ಆ ಅರಸು ಐನೂರು ವರಹಗಳ ಬಹುಮಾನವನ್ನು ಸಾರಿದ್ದ. ಈ ಹಡಗು ನುಸುಳಿ ತಪ್ಪಿಸಿಕೊಂಡು ಬಂದಿತು. ಆದರೆ ಉಳ್ಳಾಲದ ರಾಣಿ ಪೋರ್ಚುಗೀಸರಿಗೆ ವಿರುದ್ಧವಾಗಿದ್ದುದರಿಂದ ಅವಳ ರಾಜ್ಯದ ಗಡಿಯಲ್ಲಿ ತಂಗಲು ಈ ಹಡಗು ಹೆದರಿಕೊಂಡಿತು. ಆ ಕಾರಣದಿಂದಲೇ ತನ್ನ ಅಸಹಾಯಕ ಸ್ಥಿತಿಯಲ್ಲೆ ತಲೆಮರೆಸಿಕೊಂಡು ಅದು ಗಂಗೊಳ್ಳಿ ಗಡಿದಾಟಿ, ಬಸ್ರೂರಿಗೆ ಬಂದಿತ್ತು. ಬಸ್ರೂರು ಬಂದರವು ಸೂರಾಲು ತೋಳಹಾರ ದೊರೆಗಳ ಅಧೀನವಿದ್ದು ಆ ಸಮಯದಲ್ಲಿ ತೋಳಹಾರರಿಗೂ ಪೋರ್ಚುಗೀಸರಿಗೂ ನಡೆದ ಒಂದು ಒಪ್ಪಂದಕ್ಕನುಗುಣವಾಗಿ ಅವರ ಹಡಗುಗಳಿಗೆ ಅಗತ್ಯವಿರುವ ದುರಸ್ತಿ ಮತ್ತು ಸಾಮಾನು ಸಲಕರಣೆಗಳ ಖರೀದಿ ಬಗ್ಗೆ ಸಹ ನಿಲ್ಲಲು ಅವಕಾಶಕೊಟ್ಟುದರಿಂದ ಈ ಹಡಗೂ ಹೊಕ್ಕಿ ಲಂಗರು ಹಾಕಿತು. ಇದಕ್ಕೆ ಬಸ್ರೂರಿನ ಕೋಟೆಯ ಕೊತ್ತವಾಳರು ಸಹಜವಾಗಿಯೇ ಅನುಮತಿ ಕೊಟ್ಟರು. + +ಹಡಗು ಎಷ್ಟು ನಾದುರಸ್ತಿಯಾಗಿತ್ತೆಂದರೆ ಆ ಬಗ್ಗೆ ಅದು ಎರಡು ತಿಂಗಳುಗಳೂ ಮಿಕ್ಕಿ ಅಲ್ಲೇ ಉಳಿಯಬೇಕಾಯಿತು. ಈ ದೀರ್ಘಾವಧಿಯ ಇರುವಿಕೆಗೆ ಬೇಕಾಗುವ ಸಾಮಾನು ಸರಂಜಾವು ಅಕ್ಕಿ ಕಾಳು ಬೇಳೆ – ಈ ಬಗ್ಗೆ ಕಪ್ತಾನ್ ಮಸ್ಕರೇಂಞ ಪಟ್ಟಣ ಸೆಟ್ಟರ ಬಳಿಬಂದು ಕೇಳಿಕೊಂಡ. ಹೋಬಳಿ ಒಡೆಯರ ಬಳಿಗೂ ಹೋಗಿ ಸಹಾಯ ಯಾಚಿಸಿದ. ವಸ್ತು ಸ್ಥಿತಿಯಲ್ಲಿ ಆ ಬಂದರಿನ ವ್ಯಾಪಾರ ಬಹಳವಾಗಿ ಹಿಂದೆ ಬಿದ್ದಿತ್ತು. ಊರೊಳಗೆ ಬೆಳೆಯೂ ಮಳೆಯ ಅಭಾವದಿಂದಾಗಿ ಕೆಟ್ಟಿತ್ತು. ಜನರ ಕೈಯೊಳಗೆ ಯಾವ ಲೇವಾದೇವಿಯ ಬಗ್ಗೆಯೂ ಹಣಕಾಸು ತಿರುಗುತ್ತಿದ್ದಿಲ್ಲ. ಅಷ್ಟೂ ಮುಗ್ಗಟ್ಟು. ಇಂತಹ ಸಂದರ್ಭದಲ್ಲಿ ಅಕಸ್ಮಾತ್ ಒಂದು ಪರದೇಶದ ಹಡಗು ಬಂದು ನಿಂತು ತನ್ನ ಮುನ್ನೂರಕ್ಕೂ ಮಿಕ್ಕಿದ ಜನರ ಬಗ್ಗೆ ಖರೀದಿ ಸಾಮಾನು ಕೇಳುವಾಗ ಯಾವನಿಗೆ ತಾನೇ ಸಂತೋಷವಾಗದೆ ಹೋದೀತು? ಸ್ವಲ್ಪ ಹೆಚ್ಚಿನ ಬೆಲೆಗೇ ಬೇಕಾದ ಸಾಮಾನುಗಳನ್ನು ಪಡೆಯಲು ಹಡಗಿನ ಕಪ್ತಾನ ಒಪ್ಪಿಕೊಂಡ, ಆದರೆ ಹಣದ ಪಾವತಿಯ ಬಗ್ಗೆ ಎರಡು ತಿಂಗಳುಗಳ ವಾಯಿದೆ ಬೇಕೆಂದು ಕೇಳಿಕೊಂಡ. ಬರೆ ಎರಡು ತಿಂಗಳು ಕಳೆಯುವುದರಿಂದ ಏನು ತೊಂದರೆ? – ಎಂದು ಊರಿನ ಮಾರಾಟಗಾರರು ಎಣಿಸಿಕೊಂಡರು. ಸಾಹುಕಾರರು ಹಡಗಿನವರಿಗೆ ಬೇಕಾದ ದವಸ ಧಾನ್ಯಗಳನ್ನು ಒದಗಿಸಿದ್ದು ಮಾತ್ರವಲ್ಲದೆ ಅವರ ದುರಸ್ತಿಯ ಬಗ್ಗೆ ಸಮರ್ಥ ಆಚಾರಿಗಳನ್ನು ಕೂಡಿಸಿಕೊಟ್ಟರು. ಆದರೆ ಯಾರಿಗೂ ಈತನಕ ಹಣ ಪಾವತಿಯಾದುದಿಲ್ಲ. ಏಕೆಂದರೆ ಮೊತ್ತ ಮೊದಲಿಗೇ ಕಪ್ತಾನ ಕೇಳಿಕೊಂಡಿದ್ದ – ಎರಡು ತಿಂಗಳುಗಳ ಮಟ್ಟಿಗೆ ತಡೆದುಕೊಳ್ಳಬೇಕೆಂದು! ಹೀಗಾಗಿ ಇವರ ಮಾತಿನಿಂದಲೇ ಇವರೆಲ್ಲ ಸಿಕ್ಕಿಬಿದ್ದರು! + +ಅಂತೂ ಈಗ ಮಾತನಾಡಿ ಏನೂ ಉಪಯೋಗವಿಲ್ಲ. ಈಗ ನಾವು ಅವರ ಕೂಡೆ ಜಗಳ ಮಾಡಿದರೆ ನಮಗೇ ನಷ್ಟ. ಆದುದರಿಂದ ಬಹಳ ಸೌಜನ್ಯದಿಂದಲೇ ವರ್ತಿಸಬೇಕು. ಅಲ್ಲ ನನ್ನದೊಂದು ವಿಚಾರವಿದೆ. ಎರಡು ತಿಂಗಳು ಎಂತ ನಾವು ಒಪ್ಪಿಕೊಂಡದ್ದಾಯಿತು. ಈಗ ಅರುವತ್ತೈದು ದಿನಗಳು ಕಳೆದು ಹೋದವು. ಎಂದ ಮೇಲೆ ನಾವು ಅವರೊಡನೆ ಮುಖತಃ ಮಾತನಾಡುವುದೇ ಉತ್ತಮ. + +ಏಕೆ? ನಾನು ಈ ದಿನ ಸಾಮಾನಿಗೆ ಬಂದ ಅವರ ಆಳಿನೊಡನೆ ಹೇಳಿಕಳುಹಿಸಿದ್ದೇನೆ. ಹಾಗೆಲ್ಲಾ ಹೇಳಿ ಕಳುಹಿಸಿ ಪ್ರಯೋಜನವಿಲ್ಲ. ಈಗ ಅವರ ಕೈ ಮೇಲಾಗಿದೆ. ಹಾಗಾದರೆ ಬೇಡ. ನಾವು ಕೋಟೆಯವರೊಡನೆ ಏಕೆ ದೂರು ಕೊಡಬಾರದು? + +ಕೋಟೆಯವರೊಡನೆ ಕೇಳಿ ನಾವು ಈ ವ್ಯಾಪಾರ ತೊಡಗಿದ್ದೇವೆಯೆ? ಈಗ ಅವರೊಡನೆ ಕೇಳಿಕೊಂಡರೆ ನಿಮ್ಮ ಪಾಡಿಗೆ ನೀವು ಎಂತ ಹೇಳಿಯಾರು. ಅದೂ ಅಲ್ಲದೆ ಸೂರಾಲರಸರಿಗೂ ಪೋರ್ಚುಗೀಸರಿಗೂ ಸ್ನೇಹಾಚಾರವಿದೆ. ಆದುದರಿಂದ ಕೊತ್ತವಾಳರು ನಮ್ಮ ಈ ದೂರನ್ನು ತೆಗೆದುಕೊಂಡು ಹಡಗಿನವರೊಡನೆ ಕಲಹ ಮಾಡಲು ತಯಾರಿರಲಿಕ್ಕಿಲ್ಲ. ಅಂತೂ ಹೇಗೆ ಮಾಡಿದರೂ ಈ ಸಂದರ್ಭವೇನೂ ಸುಖವಾಗಿಲ್ಲ! + +ಬಸ್ರೂರು ಪೇಟೆಯ ಮಧ್ಯೆ ಗೋಳಿಕಟ್ಟೆಯ ಮೇಲೆ ಕುಳಿತು ಪೇಟೆಯ ಮುಖಂಡರು ಮಾತಾಡುತ್ತಿದ್ದರು. ಇಷ್ಟು ಮಾತಾಡಿಯೂ ಏನು ಮಾಡಬೇಕೆಂದು ನಿರ್ಧಾರವಾಗದುದರಿಂದ ಎಲ್ಲರೂ ನಿಸ್ತೇಜರಾಗಿಯೇ ಕುಳಿತು ತಮ್ಮ ಕಣ್ಣ ಮುಂದಕ್ಕೆ ಹೊಳೆಯಲ್ಲಿ ಕಾಣುತ್ತಿರುವ ಹಡಗನ್ನೇ ನೋಡುತ್ತಿದ್ದರು. ಅಂದು ಎರಡು ತಿಂಗಳುಗಳ ಹಿಂದೆ ಬಂದ ಹಡಗೆಲ್ಲಿ – ಈ ಹಡಗೆಲ್ಲಿ! ಯಾರಿಗೂ ಆಶ್ಚರ್ಯವಾಗಬಹುದು. ಹೊಸಪಕ್ಕೆ ಹೊಸ ಚುಕ್ಕಾಣಿ – ಹೊಸ ಕೂವೆಮರ – ಹೊಸ ಹಾಯಿ. ಎಲ್ಲಾ ಹೊಸತು ಹಾಕಿದ್ದರಿಂದ ಹಡಗೇ ಹೊಸತಾಗಿ ಕಂಡು ಬರುತಿದ್ದಿತು. ಹೊಸತಾಗಿ ಎಣ್ಣೆ ಹಚ್ಚಿ ಮಾಲೀಸು ಮಾಡಿದ್ದರಿಂದ ಅದು ನೀರಿನ ಏರಿಳಿತಗಳಲ್ಲಿ ಸೂರ್ಯ ಪ್ರಕಾಶಕ್ಕೆ ಚಕಚಕನೆ ಹೊಳೆಯುತಿದ್ದಿತು. + +ಎಷ್ಟು ಚಂದ ಹಡಗು?ಜನರೂ ಅಷ್ಟೆ ಮಂದಿಯಿದ್ದಾರೆ. ಎಲ್ಲಾ ಸಿಪಾಯಿಗಳು. ಸಾಧಾರಣಕ್ಕೆ ಅದನ್ನು ಎದುರಿಸುವ ಹಾಗಿಲ್ಲ.ಆದುದರಿಂದಲೇ ತೆಂಕಲಾಗಿನಿಂದ ಬಚಾವಾಗಿ ಬಂದಿದೆ! ಅದು ಸಾಯಲಿ – ನಾವು ಬಚಾವಾಗುವ ವಿಚಾರ ಏನಾದರೂ ಇದ್ದರೆ ಹೇಳಿರಿ ನೋಡುವ.ಪುನಃ ನಿಶ್ಶಬ್ದ!ಸ್ವಲ್ಪ ಹೊತ್ತಿನ ಮೇಲೆ ಪಟ್ಟಣ ಸೆಟ್ಟರು ಹೇಳಿದರು – ನಾನು ಹೇಳುವದಾದರೆ ಒಂದು ಭಲೇ ಜನ ಅವರ ಬಳಿಗೆ ಕಳುಹಿಸಬೇಕು. ನಮ್ಮ ಹಾಲು ಹವಾಲೆ ಚೆನ್ನಾಗಿ ಹೇಳಬೇಕು. ಹಾಗೆಂದರೇನು? ಅವರೂ ಮನುಷ್ಯರಲ್ಲವೆ?ಹೌದು ಭಲೇ ಮನುಷ್ಯನೆಂದರೆ ನಮ್ಮ ಹಾಗೆ ಮಾತುಬಾರದವರು ಪ್ರಯೋಜನವಿಲ್ಲ. ನಮ್ಮ ಮಾತು ಅವರಿಗೆ ಅರ್ಥವಾಗುವುದಿಲ್ಲ. ಅವರದ್ದು ನಮಗಾಗುವದಿಲ್ಲ. ಇನ್ನು ಅವರೊಟ್ಟಿಗಿರುವ ಅವರ ಜಾತಿಗೆ ಸೇರಿದ ನಮ್ಮವರನ್ನು ನಂಬುವುದೇ ಕಷ್ಟ. ಇದಕ್ಕೇನು ಮಾಡುವುದು? + +ನನ್ನದೊಂದು ಅಭಿಪ್ರಾಯ. ನಮ್ಮ ಬಾಬ್ರಾಯನನ್ನು ಕಳುಹಿಸಿಕೊಟ್ಟರೆ ಹೇಗೆ? + +ಎಲ್ಲರೂ ಒಮ್ಮೆ ಮುಖ ಮುಖ ನೋಡಿಕೊಂಡರು. ನಂತರ ಪಟ್ಟಣ ಸೆಟ್ಟರು – ಆಗಬಹುದಿತ್ತು. ಅವನಿಗೆ ಭಾಷೆ ವ್ಯವಹಾರ ಎಲ್ಲಾ ಗೊತ್ತಿದೆ. ಆದರೆ – ನಾವು ಈ ತನಕವೂ ಅವನನ್ನು ಯಾವುದಕ್ಕೂ ನಮ್ಮ ಕೂಡೆ ಸೇರಿಸಿಕೊಂಡದಿಲ್ಲ. ಈಗ ಈ ತಿಲದಾನಕ್ಕಾಗುವಾಗ ಹೇಗೆ ಮುಂದೆ ಕರೆಯುವುದು? ಅದೇ ಕಷ್ಟ. + +ಏನು ಮಾಡುವುದು? ಅಂತೂ ಯಾರಾದರೊಬ್ಬರ ಕುತ್ತಿಗೆಗೆ ತಿಲದಾನ ಕಟ್ಟಲೇಬೇಕಲ್ಲ? ಎಂದ ಮೇಲೆ ಯೋಚಿಸಿ ಪ್ರಯೋಜನವಿಲ್ಲ. ಈಗ ನಾವೇ ಮುಂದೆ ಕರೆಯಬೇಕು. + +ಕಟ್ಟೆ ಪುರಾಣ ಈ ರೀತಿ ಮುಂದುವರಿಯುತಿದ್ದಾಗಲೇ ಬಾಬ್ರಾಯ ರಸ್ತೆಯ ಆ ಕಡೆಯಿಂದ ಬರುತಿದ್ದ. ಸುಮಾರು ಇಪ್ಪತ್ತು ವರ್ಷದ ಹುಡುಗ. ನೀಟವಾಗಿ ಸುಟಿಯಾಗಿದ್ದಾನೆ. ಬಹಳ ಚುರುಕು ಕಣ್ಣು. ತಲೆಕೂದಲು ಕತ್ತರಿಸಿಕೊಂಡಿದ್ದಾನೆ. ಮುಖ್ಯವಾಗಿ ಕಾಣುತಿದ್ದುದು ಅವನ ಬಲ ಭುಜದ ಮೇಲೆ ಅಚ್ಚೊತ್ತಿದಂತಿದ್ದ ಕಿರಿಸ್ತಾನರ ಕ್ರೂಜೆಯ ಚಿತ್ರ! ಆದರೂ ಜನಿವಾರವಿದೆ! + +ಅದೇ ಒಂದು ವಿಚಿತ್ರ. ಪ್ರಾಯಶಃ ಅವನ ಜೀವನವೂ ಅಷ್ಟೇ ವಿಚಿತ್ರವೆನ್ನಬೇಕು. ಅವನ ಹುಟ್ಟಿದೂರು ಗೋವೆ. ಗೋವೆಯಲ್ಲಿ ಪೋರ್ಚುಗೀಸರ ಮತಾಂತರದ ಬಲಾತ್ಕಾರ ಪ್ರಯೋಗ ನಡೆದಾಗ ಇವನು ಬರೇ ಹನ್ನೆರಡು ವರ್ಷದವ. ಇವನ ತಂದೆ ವಿನಾಯಕ ಪ್ರಭುವನ್ನು ಅವರು ಬಲಾತ್ಕಾರವಾಗಿ ಮತಾಂತರಗೊಳಿಸಿದರು. ಆದರೆ ಆ ಪುಣ್ಯಾತ್ಮ ಅದೇ ರಾತ್ರಿ ಆತ್ಮಹತ್ಯ ಮಾಡಿಕೊಂಡ. ತಾಯಿ ಬಾವಿಗೆ ಹಾರಿ ಸತ್ತಳು. ಇದ್ದ ಒಬ್ಬಳೇ ಒಬ್ಬಳು ಅಕ್ಕನನ್ನು ಆ ದೈತ್ಯರು ಬಲಾತ್ಕಾರವಾಗಿ ಕೆಡಿಸಿ ಹಾಳುಮಾಡಿದರು. ಆ ದುರಂತ ಚಿತ್ರ ಈಗಲೂ ಇವನ ಕಣ್ಣ ಮುಂದೆ ಕಟ್ಟಿದಂತಾಗಿದೆ. ರಕ್ತಮಯ ಆ ಕೋಮಲ ಕಳೇವರ ಕಳಚಿ ಬೀಳುವ ಮುಂಚೆ ತನ್ನ ಚಿಕ್ಕ ತಮ್ಮನನ್ನು ಕೂಗಿ ಕರೆದು ಹೇಳಿತು. ಬಾಬೂ! ಇದನ್ನೆಂದಿಗೂ ಮರೆಬೇಡ. ಇದರ ಹಗೆ ತೀರಿಸಲು ಉಳಿಯುವವನು ನೀನೊಬ್ಬನೇ! – ಎಂದು. + +ಹುಡುಗನನ್ನು ಪಾದ್ರಿಗಳು ಕರೆದುಕೊಂಡು ಹೋಗಿ ತಮ್ಮ ಮಠಕ್ಕೆ ಸೇರಿಸಿದರು. ಅಲ್ಲಿ ಇವನಿಗೆ ಆರು ವರ್ಷಗಳ ವಿದ್ಯಾಭ್ಯಾಸ ಮತಬೋಧ ನಡೆಯಿತು. + +ಒಂದು ದಿನ ಕನಸಿನಲ್ಲಿ ರಕ್ತಮಯ ಕಳೇವರವೊಂದು ಕಂಡು ಇವನೊಡನೆ ಹೇಳಿತು – ಬಾಬೂ! ನಾಯಿಯಂತೆ ಎಂಜಲಿನಾಸೆಗೆ ಬಲಿ ಬಿದ್ದೆಯಾ? ಹೊರಡು – ಹೊರಡು! ಒಂದು ಕ್ಷಣವೂ ನಿಲ್ಲಬೇಡ -! + +ಹುಡುಗ ಮಧ್ಯರಾತ್ರಿಯಲ್ಲೆ ಎಚ್ಚರಗೊಂಡು ಅಲ್ಲಿಂದ ಹೊರಟೇಬಿಟ್ಟ. ಆದರೆ ಎಲ್ಲಿಗೆ? ಈ ದಾನವರ ಕೈಯಿಂದ ಪಾರಾಗುವುದಾದರೂ ಹೇಗೆ? – ಎಂಬುದು ಯಾವುದೂ ಅವನಿಗೆ ಅರಿಯದು. ಆದರೆ ಕನ್ನಿಕೆಯ ಕೈಯೊಂದು ಅವನಿಗೆ ಬೆರಳು ನೀಡಿ ದಾರಿ ತೋರಿಸುತ್ತಿದ್ದಿತು. ಅವನಂತೆಯೇ ಆ ದೇಶದಿಂದ ಓಡಿಹೋಗುತಿದ್ದ ದೇಶಭ್ರಷ್ಟರ ಗುಂಪಿನೊಡನೆ ಸೇರಿ ತಲೆಮರೆಸಿಕೊಂಡು ಹೇಗಾದರೂ ರಾತ್ರಿವೇಳೆ ಗೋವೆಯ ಗಡಿದಾಟಿ ಕಾರವಾರದ ಗಡಿಗೆ ಬಂದ. ಅಲ್ಲಿಯಾದರು ಪೋರ್ಚುಗೀಸರ ಪಹರೆಯಿದ್ದಿತ್ತು. ನುಸುಳಿದವರ ತಲೆಗೆ ಗುಂಡು ಬೀಳುತ್ತಿದ್ದಿತ್ತು. ಹಲವರು ಸತ್ತರು ಹಲವರು ಸೆರೆಸಿಕ್ಕಿದರು. ಪಾರಾದವರಲ್ಲಿ ಬಾಬ್ರಾಯನೂ ಒಬ್ಬ. + +ಬಾಬ್ರಾಯನೇನೋ ಪಾರಾಗಿ ಬಂದ. ಬಂದು ತನ್ನವರು, ತನ್ನ ಜಾತಿಯವರು, ಮತದವರು ಎಂದು ತಿಳಿದುಕೊಂಡವರ ಬಳಿ ಬಂದು ಬಿದ್ದ. ಆದರೆ ಇದೇನು? ಯಾರೂ ಅವನನ್ನು ಕಣ್ಣೆತ್ತಿಯೂ ನೋಡಲಿಲ್ಲ – ಮಾತನಾಡಲಿಲ್ಲ! ಅವನ ದುಃಖ ದುರಂತಗಳನ್ನು ಯಾರೂ ವಿಚಾರಿಸಲಿಲ್ಲ. ಅವನನ್ನು ಮನುಷ್ಯ ಮನುಷ್ಯನೆಡೆಗೆ ನೋಡುವಂತೆಯೇ ನೋಡಲಿಲ್ಲ! ಅಯ್ಯೋ – ಇದೇನು ಆಶ್ಚರ್ಯ? ಎಲ್ಲರೂ ಅವನನ್ನು ಸಂಶಯದಿಂದಲೇ ನೋಡುವವರು – ತಾತ್ಸಾರದಿಂದ ನೋಡುವವರು ಬೇರೆ. ಅವನ ಭುಜದ ಮೇಲೆ ಕ್ರೂಜೆಯ ಚಿತ್ರವನ್ನು ಕಂಡಂತೂ ಎಲ್ಲರೂ ಹಾವನ್ನು ಕಂಡವರಂತೆ ಹೌಹಾರುವವರೇ – ಎಂದ ಮೇಲೆ ಇವನ ಅವಸ್ಥೆಯೇನು? + +ಹುಡುಗ ಧೃತಿಗೆಡಲಿಲ್ಲ. ಅವನು ಅಲ್ಲಿ ಬಹುಕಾಲ ನಿಲ್ಲಲಿಕ್ಕೆ ಸಾಧ್ಯವೂ ಆಗಲಿಲ್ಲ. ಅವನು ಹೆಜ್ಜೆ ಮುಂದೆ ಹಾಕಿದ.  ಮುಂದೆ – ಮುಂದೆ ಮತ್ತೂ ಮುಂದೆ! ಹಾಗಾದರೆ ಆ ಹೆಜ್ಜೆಗೆ ಎಲ್ಲಿಯೂ ಸ್ಥಾನವಿಲ್ಲವೆ? + +ಬಂದದ್ದೆ ಮೋಸವಾಯಿತು – ಎಂದು ಕೆಲವೊಮ್ಮೆ ಕಾಣತೊಡಗಿತು. ಆದರೂ ಅವನ ತರುಣ ಹೃದಯದಲ್ಲಿ ಉರಿಯುತಿದ್ದ ಪ್ರತೀಕಾರದ ಜ್ವಾಲೆ ಅವನನ್ನು ಹಿಮ್ಮೆಟ್ಟಲು ಬಿಡಲಿಲ್ಲ. ಅವನ ಅಕ್ಕನ ಆ ಕೊನೆಯ ಬಯಕೆಯ ಬೆಂಕಿ ಅವನ ಬೆಂಬತ್ತಿಯೇ ಬಂದಿದ್ದಿತು. ಅದೇ ಸುಡುತ್ತಿದೆ – ನಿರಂತರವೂ ಸುಡುತ್ತಿದೆ. ಅದು ಆ ದೌರ್ಜನ್ಯದ ಖಾಂಡವವನವನ್ನು ಸುಟ್ಟು ಬೂದಿಮಾಡದೆ ಎಂದೂ ತಣ್ಣಗಾಗುವಂತಿಲ್ಲ! + +ಕಾರವಾರ – ಅಂಕೋಲೆ, ಹೊನ್ನಾವರ – ಬಟ್ಕಳ ಹಾಗೆಯೇ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಬಂದ. ಕೊನೆಗೆ ಅವನ ಭಾರವಾದ ಹೆಜ್ಜೆ ಬಸ್ರೂರಿನ ಬಳಿಗೆ ಬಂದಿತು. ಎಲ್ಲ ಊರು ಒಂದೇ – ಎಲ್ಲಾ ಜನರೂ ಒಂದೇ -! ಮನುಷ್ಯ ಮನುಷ್ಯನನ್ನು ಒಪ್ಪಿಕೊಳ್ಳುವುದಿಲ್ಲ. ಮತಧರ್ಮಗಳ ಮುಸುಕು – ಸಮಾಜದ ಕೂಡುಕಟ್ಟಿನ ಹಿಸುಕು ಇವು ಎಲ್ಲಿಯೂ ತಪ್ಪಿದ್ದಲ್ಲ. ಗೋವೆಯಲ್ಲಿ ಒಂದು ತರದ ದಬ್ಬಾಳಿಕೆಯಾದರೆ ಇಲ್ಲಿ ಮತ್ತೊಂದು ವಿಧ. ಅದು ಪರಕೀಯರದ್ದಾದರೆ ಇದು ಸ್ವಕೀಯರದ್ದು! ಹಾಗಾದರೆ ಇದಕ್ಕೆ ಅಂತ್ಯವೆಲ್ಲಿ? + +ಬಸ್ರೂರಲ್ಲಿ ಸಾಕಷ್ಟು ಕೊಂಕಣಸ್ಥರ ಕೂಟ ಅದಾಗಲೇ ಬಂದು ಸೇರಿ ಬಲವಾಗುತಿದ್ದಿತು. ಬಂದರದ ವ್ಯಾಪಾರ ಅವರ ಕೈಸೇರಿದ್ದಿತು. ಆದುದರಿಂದ ಅನುಕೂಲದ ಮಟ್ಟಿಗೆ ಚೆನ್ನಾಗಿಯೇ ಯಿದ್ದರು. ಅವರ ತಕ್ಕಡಿಯೊಟ್ಟಿಗೆ ಅವರ ಕಾಸು ಬಿಡದ ವೆಂಕಟ್ರಮಣನೂ ಹೊರಟುಬಂದಿದ್ದ! ಬಾಬ್ರಾಯ ಬಸ್ರೂರಿಗೆ ಬಂದು ಒಂದು ವರ್ಷವೂ ಮಿಕ್ಕಿದ್ದಿತು. ಆದರೂ ಅವನೊಡನೆ ಯಾರೂ ಹೊಂದಿಕೊಳ್ಳಲಿಲ್ಲ. + +ಅವನ ಆತ್ಮಚರಿತ್ರೆಯ ಬಗ್ಗೆ ಅನುಕಂಪ ಸೂಚಿಸಿದರೂ, ಕರುಣೆಗೂ ಮಿಕ್ಕಿದ ಸಮಾಜ ಕಾರಣ ಅವರೆಲ್ಲರನ್ನು ಅಸಹಾಯಕರನ್ನಾಗಿ ಮಾಡಿದ್ದಿತು. ಅವನ ಪರಕೀಯ ವಿದ್ಯಾಭ್ಯಾಸ, ರೀತಿ ನೀತಿ, ಇವುಗಳೆಲ್ಲಾ ಅವರಿಗೆ ಅಸಮಂಜಸವಾಗಿ ಕಾಣುತ್ತಿದ್ದಿತು. ಎಲ್ಲದಕ್ಕೂ ಹೆಚ್ಚಿನದಾಗಿ ಅವನ ಬಲ ಭುಜದ ಮೇಲೆ ಮೂಡಿದ್ದ ಆ ಕ್ರೂಜೆ ಅವರ ಆತ್ಮೀಯತೆಗೇ ಒಂದು ಸವಾಲು ಹಾಕುತಿದ್ದಿತು. + +ಆದರೂ ಬಾಬ್ರಾಯ ಯಾರೊಡನೆಯೂ ನಿಷ್ಟುರವಾಗಿ ನಡೆಯಲಿಲ್ಲ. ಯಾರೊಡನೆಯೂ ವಾದ ಹೂಡಲಿಲ್ಲ, ಬೇಡಲಿಲ್ಲ! ತನ್ನ ಕೈಕಾಲುಗಳ ಬಲದ ಮೇಲೆ ನಂಬಿಕೆಯಿಟ್ಟು ದುಡಿಯುತಿದ್ದ. ಅದು ಯಾವ ಕೆಲಸವೇಯಿರಲಿ ಅದನ್ನು ವಿಶ್ವಾಸದಿಂದ ಮುಗಿಸುತಿದ್ದ. ರಸ್ತೆ ಬದಿಯಲ್ಲಿ ಒಂದು ಜೋಪಡಿಯನ್ನು ತಾನೇ ಕಟ್ಟಿಕೊಂಡಿದ್ದ. ಅದರಲ್ಲೇ ಅವನ ವಾಸ್ತವ್ಯ. ಅದರ ಗೋಡೆಯ ಮೇಲೆ ವೆಂಕಟ್ರಮಣ ದೇವರ ಪಟ. ಅದರ ಮುಂದೆ ಕಾಲುದೀಪ. ಇದು ಅವನ ಆತ್ಮವಿಶ್ವಾಸವನ್ನು ಸೂಚಿಸುತ್ತಿದ್ದಿತು. + +ಜನರು ಅದಕ್ಕೂ ಅಂದುಕೊಳ್ಳುತ್ತಿದ್ದರು. ಬಸ್ರೂರಲ್ಲಿ ಆ ಹೊತ್ತಿಗೆ ಕ್ರಿಸ್ತ ಧರ್ಮ ತಳವೂರಿದ್ದಿತು. ಅವರ ಬಗ್ಗೆ ಪೋರ್ಚುಗೀಸರು ಒಂದು ದೇವಾಲಯವ ಕಟ್ಟಲು ತೋಳಹಾರರಿಂದ ಅನುಮತಿಯನ್ನು ಪಡೆದಿದ್ದು ನಿರ್ಮಿಸಿದ್ದರು. ಇಲ್ಲಿಯ ಕ್ರೈಸ್ತ ಜನಾಂಗ ಬಾಬ್ರಾಯನ ಬಗ್ಗೆ ಕುತೂಹಲದಿಂದ ಕಣ್ಣರಳಿಸಿ ಕುಳಿತಿದ್ದಿತು. ನೀನು ಯಾಕೆ ನಮ್ಮ ಸಮಾಜಕ್ಕೆ ಬರಬಾರದೆಂದು ಸೂಚ್ಯವಾಗಿ ಸಲಹೆ ಕೊಡುತಿದ್ದಿತು. ಅಲ್ಲದೆ ಅವನನ್ನು ಬರ್ಸಲೋರ್ ಬಾಬ್ರಾಯನೆಂದೇ ಕರೆಯುತಿದ್ದಿತು. ಪೋರ್ಚುಗೀಸರು ಬಸ್ರೂರನ್ನು ಬರ್ಸಲೋರೆಂದೇ ಕರೆಯುತಿದ್ದರು. ಬಾಬ್ರಾಯನೂ ಇಲ್ಲಿಗೆ ಬಂದ ವೇಳೆ ಈ ಊರನ್ನು ತನ್ನ ವಿದ್ಯಾಭ್ಯಾಸಕ್ಕನುಗುಣವಾಗಿ ಬರ್ಸಲೋರೆಂದೇ ಕರೆಯುತಿದ್ದನು! + +ಕಟ್ಟೆಯ ಮೇಲೆ ಕುಳಿತು ಊರ ಹಿರಿಯರು ಮಾತಾಡುತಿದ್ದುದನ್ನು ಬಾಬ್ರಾಯನೂ ಕಂಡನು. ಅವರ ಉದ್ವೇಗ ನಿರಾಶೆಗಳ ಕಾರಣ ಅವನಿಗೆ ಚೆನ್ನಾಗಿ ಗೊತ್ತಿದ್ದಿತು. ಇವನ ಹೃದಯದೊಳಗಣ ಬೆಂಕಿ ಮತ್ತೊಂದು ವಿಧ. ಅದು ಬರೇ ಬೆಂಕಿಯಲ್ಲ – ಹೊಟ್ಟೆಯ ಬೆಂಕಿ! + +ಬೀದಿಯಲ್ಲಿ ಬರುತಿದ್ದಾಗ ಹಿರಿಯರೆಲ್ಲರೂ ಅವನನ್ನೇ ನೋಡತೊಡಗಿದರು. ಆ ನೋಟದಲ್ಲಿ ಸೋಲಿನ ಲಕ್ಷಣವಿದ್ದಿತು. ಆದರೆ ಅವನನ್ನು ಯಾರು ಕರೆಯಬೇಕೆಂದು ತಿಳಿಯದೆ ಅಂತೆಯೇ ನಿರುತ್ತರ ಕುಮಾರರಾಗಿದ್ದರು. + +ಅವರು ನೋಡುವ ವಿಧದಿಂದ ಬಾಬ್ರಾಯನಿಗೂ, ಇವರಿಗೆ ತನ್ನ ಕೂಡೆ ಏನೋ ಕೇಳುವ ಮನಸ್ಸಿದೆ. ಆದರೆ ಅಂಜುತ್ತಾರೆ. ಕಳ್ಳನ ಮನಸ್ಸು ಹುಳ್ಳ ಹುಳ್ಳಗೆ – ಎಂಬ ಹಾಗಿದೆ – ಎನ್ನುವುದು ತಿಳಿಯಿತು. ಆದುದರಿಂದ ತಾನಾಗಿಯೇ ಮುಂದೆ ಬಂದು ನಿಂತ. + +ಪಟ್ಟಣ ಸೆಟ್ಟರು ಮೆಲ್ಲಗೆ ಹೇಳಿದರು – ಬಾಬ್ರಾಯ …..ಏನಪ್ಪಣೆ?ಕೆಲಸವೆಲ್ಲಾ ಕೆಟ್ಟು ಹೋಯಿತಲ್ಲ. ಏನು ಮಾಡುವುದು.ಹೌದು ನನಗೂ ಅರ್ಥವಾಗಿದೆ. ಅಂದೇ ನನಗೆ ಸಂಶಯವಿದ್ದಿತು. ಇದು ಹೀಗೆಯೇ ಆಗುವುದೆಂದು ಹೇಳಿದ್ದೆ. ಆದರೆ ನೀವುಗಳು –ನೋಡು ಬಾಬ್ರಾಯ ಅದೆಲ್ಲಾ ಒಂದು ಸಂದರ್ಭ. ಆಗ ನಮ್ಮ ಪರಿಸ್ಥಿತಿಯೂ ಹಾಗೆಯೇ ಇದ್ದಿತ್ತು. ಹಣದ ಮುಗ್ಗಟ್ಟು, ಮಾಲಿಗೆ ಗಿರಾಕಿಯಿಲ್ಲ. ವ್ಯಾಪಾರ ನಡೆಯುವುದಿಲ್ಲ. ಬೆಳೆದು ಬಂದ ಹುಡುಗಿಯನ್ನು ಯಾರ ಕುತ್ತಿಗೆಗಾದರೂ ಕಟ್ಟಬೇಕಲ್ಲ. ಅದಕ್ಕೆ ಸರಿಯಾಗಿ ಈ ಗ್ರಹಚಾರದ ಹಡಗು ಬಂದಿತು. ನಾವು ಅವರನ್ನು ನಂಬಿದೆವು. ಅವರು ಕೇಳಿದರು. ನಾವು ಕೊಟ್ಟೆವು. ನಿನಗೆ ಮೊದಲೇ ಬುದ್ಧಿ ಬಂದಿದ್ದರೆ ನಮಗೆ ಈಗ ಬುದ್ಧಿ ಬಂದಿತು. + +ಆಗಲಿ – ಈಗ ಏನು ಮಾಡಬೇಕೆನ್ನುತ್ತೀರಿ? ಜನ ಕಳುಹಿಸಿ ಕೇಳಬಹುದಲ್ಲ?ಅದನ್ನೇ ಈಗ ಯೋಚಿಸುತ್ತಾ ಯಿದ್ದೇವೆ. ಯಾರ ಯಾರೊಡನೆ ಕೇಳಿ ಏನೂ ಉಪಯೋಗವಿಲ್ಲ.ಆಗಲಿ. ಅರ್ಥವಾಯಿತು ಪಟ್ಟಣಸೆಟ್ಟರೆ. ನನಗೆ ಅಪ್ಪಣೆ ಕೊಡಿರಿ. ನಾನು ಹೋಗಿ ಬರುತ್ತೇನೆ. ಆದರೆ……ಆದರೆ ಏನು ಬಾಬ್ರಾಯ? ನಿನ್ನ ಈ ಕೆಲಸವನ್ನು ನಾವು ಎಂದಿಗೂ ಮರೆಯುವುದಿಲ್ಲ. ನಮ್ಮ ನಮ್ಮ ಹಣದಲ್ಲಿ ನಿನಗೂ ………. + +ಬೇಡ. ಅದೇನೂ ಬೇಡ ಸ್ವಾಮೀ. ಇದೊಂದು ದೊಡ್ಡ ಜವಾಬ್ದಾರಿಯ ಕೆಲಸ. ನಾನಂತೂ ಬಿಸಿರಕ್ತದ ಹುಡುಗ. ಇದು ಒಳ್ಳೆಯದೂ ಆಗಬಹುದು ಕೆಟ್ಟದೂ ಆಗಬಹುದು. ಹೇಗಿದ್ದರೂ ನಾನು ನನ್ನ ಆತ್ಮಸಾಕ್ಷಿಗೆ ಸರಿಯಾಗಿ ದೇವರು ಬುದ್ಧಿ ಕೊಟ್ಟಂತೆ ಮಾಡುತ್ತೇನೆ. ಹೇಗಾದರೂ ಮಾಡಿ ನಿಮ್ಮ ಹಣ ನಿಮಗೆ ಸಿಗುವಂತೆ ಮಾಡುತ್ತೇನೆ. ಆ ಕಳ್ಳರು ಈ ಊರಿನ ಹಣವನ್ನು ಅಷ್ಟು ಸುಲಭವಾಗಿ ತೆಗೆದುಕೊಂಡು ಹೋಗಬಾರದು. ಆದರೂ …… + + + +ಆದರೂ ಏನಪ್ಪ? ನಿನ್ನ ಮನಸ್ಸಿನಲ್ಲಿದ್ದುದನ್ನು ಬಾಯಿಬಿಟ್ಟು ಹೇಳಿಬಿಡು. ನಾವು ಈ ತನಕ ನಿನ್ನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲವೆಂದು ಬೇಸರ ಮಾಡಬೇಡ. ಅದೆಲ್ಲಾ ನೋಡು …… + +ಅದೆಲ್ಲಾ ಹೋಗಲಿ, ಬೇಡ. ಆದರೆ ….. ಎಲ್ಲಿಯಾದರೂ ಈ ಕೆಲಸ ಕೆಟ್ಟುಹೋದರೆ ನನ್ನ ನೆನಪೊಂದು ನಿಮ್ಮೆಲ್ಲರ ಮನಸ್ಸಿನಲ್ಲಿರಲಿ. ಈ ಊರು ಈ ಬಡವನ ಹೆಸರು ಹೇಳುವಂತಾಗಲಿ! + +ಕುಳಿತವರಿಗೆಲ್ಲಾ ಮಾತುಕಟ್ಟಿದಂತಾಗಿ ಕಣ್ಣು ತುಂಬಿ ಬಂದಿತು. ಪಟ್ಟಣಸೆಟ್ಟರು ಕುಳಿತಲ್ಲಿಂದ ಜಗ್ಗನೆ ಎದ್ದುನಿಂತು ಬಾಬ್ರಾಯನ ಕೈಹಿಡಿದು ಹೇಳಿದರು – ಬಾಬ್ರಾಯ ಎಲ್ಲಾ ಮರೆತುಬಿಡು. ನಮ್ಮದು ಕುರುಡು ಜನಾಂಗ –  ಅಂಧಃಶ್ರದ್ಧೆ! ಆದರೂ ನಿನ್ನ ಹೆಸರು ಈ ಊರಲ್ಲಿ ಬಹುಕಾಲದ ತನಕವೂ ಉಳಿಯುತ್ತದೆ. ಅದನ್ನು ಯಾರೂ ಮರೆಯುವಂತಿಲ್ಲ! ಇದು ಸತ್ಯ – ಮೂರು ಮಾತಿಗೂ ಸತ್ಯ! + +ಬಾಬ್ರಾಯ ಆ ಹಿರಿಯರೆಲ್ಲರಿಗೂ ಕೈಮುಗಿದು ತನ್ನ ಗುಡಿಸಲಿನ ಕಡೆಗೆ ಹೊರಟುಹೋದನು. ಸ್ವಲ್ಪ ಹೊತ್ತಿನ ಮೇಲೆ ಬಟ್ಟೆ ಬದಲಾಯಿಸಿ ಅಂಗಿ ಹಾಕಿಕೊಂಡು ಹೊಳೆಯ ಬದಿಗೆ ನಡೆದು ಅಲ್ಲಿ ಒಂದು ಚಿಕ್ಕ ದೋಣಿಯೇರಿ ಅವನು ಹಡಗಿನ ಕಡೆಗೆ ಹೋದುದನ್ನು ಎಲ್ಲರೂ ನೋಡಿದರು. ಬಾಬ್ರಾಯ ಹಡಗಿನ ಪಕ್ಕಕ್ಕೆ ಸರಿದು ಪೋರ್ಚುಗೀಸರ ಭಾಷೆಯಲ್ಲಿ ಕೂಗಿ ಹೇಳಿದ – ನಾನು ಸ್ನೇಹಿತ. ಮೇಲೆ ಮಾಡಿಕೊಳ್ಳಿರಿ. ಹಡಗಿನ ಏಣಿ ಕೆಳಗಿಳಿಯಿತು. ಕಾವಲುಗಾರ ಅವನನ್ನು ಮೇಲೇರಿಸಿಕೊಂಡು ಏನುಬೇಕು? ಎಂದು ಕೇಳಿದ.ಕಪ್ತಾನರು ಬೇಕು.ಕೇಳುವವರು ಯಾರು ಎಂದು ಹೇಳಲಿ?ಬರ್ಸಲೋರಿನ ಪ್ರತಿನಿಧಿ!ಸ್ವಲ್ಪ ಹೊತ್ತಿನ ಮೇಲೆ ಕಾವಲುಗಾರ ಮರಳಿ ಬಂದು ಇವನನ್ನು ಬೇರೊಬ್ಬ ಸಿಪಾಯಿಯೊಡನೆ ಮುಂದೆ ಕಳುಹಿಸಿಕೊಟ್ಟ. + +ದೊಡ್ಡ ಹಡಗು. ಯಾವ ಯುದ್ಧಕ್ಕೂ ಅಂಜದಿರುವಂತಹ, ಬಾಳಿಕೆಯದು. ಅಂತೆಯೇ ಸಂಪೂರ್ಣ ಸುಸಜ್ಜಿತವಾಗಿದ್ದಿತ್ತು. ನಾಲ್ಕು ದೊಡ್ಡ ಫಿರಂಗಿಗಳು ಪೀಠದ ಮೇಲಿದ್ದುವು. ಎರಡು ಪಕ್ಕದಲ್ಲೂ ಬೇರೆ ಸಣ್ಣ ಫಿರಂಗಿಗಳು ಬೇರೆ. ಒಂದು ಕಡೆ ತುಫಾಕಿಗಳನ್ನು ಕೂಡಹಾಕಿದ್ದರು. ಇತ್ತೀಚೆಗೆ ಹಡಗು ಸಂಪೂರ್ಣ ದುರಸ್ತಿಯಾಗಿದ್ದುದರಿಂದ ಬಹಳ ಅಚ್ಚುಕಟ್ಟಾಗಿ ಭದ್ರವಾಗಿ ಕಾಣುತಿದ್ದಿತು. ಇನ್ನೂರೈವತ್ತಕ್ಕೂ ಮಿಕ್ಕಿ ಶಿಸ್ತಿನ ಸೈನಿಕರು, ನಾವಿಕರು ಹಡಗಿನ ಕೆಲಸಗಾರರು ಇವರೆಲ್ಲಾ ಬೇರೆ ನೂರು ಮಂದಿ. ಉಗ್ರಾಣ – ಬೊಕ್ಕಸ – ಹಾಗೆಯೇ ಆಯುಧಶಾಲೆ ಇವುಗಳೆಲ್ಲ ಅಡಗಿರಬಹುದು. ಇವುಗಳನ್ನೆಲ್ಲ ಎಣಿಸಿಕೊಳ್ಳುತ್ತ ಸಿಪಾಯಿಯೊಂದಿಗೆ ಕಪ್ತಾನರ ಕೋಣೆಗೆ ಹೋದನು. ಕಪ್ತಾನ್ ಮಸ್ಕರೇಂಞ ಆರಾಮವಾಗಿ ಕಾಲುನೀಡಿ ಕುರ್ಚಿಯ ಮೇಲೆ ಕುಳಿತಿದ್ದ. ಅವನ ಪೊಗರು ಗಡ್ಡ ಮೀಸೆ ಅವನ ಆರಡಿ ಎರಡಂಗುಲದ ದೈತ್ಯ ದೇಹಕ್ಕೊಂದು ಭಯಂಕರ ಅಲಂಕಾರವಾಗಿ ಕಂಡುಬರುತಿದ್ದಿತು. + +ಬಾಬ್ರಾಯ ಅವನಿಗೆ ಸಲಾಂಕೊಟ್ಟು ಯೋಗಕ್ಷೇಮ ವಿಚಾರಿಸಿದ.ಕಪ್ತಾನ ಆಶ್ಚರ್ಯದಿಂದ ಅವನ ಮುಖವನ್ನೇ ನೋಡುತಿದ್ದಾಗ ಹೇಳಿದ – ಸಾಹೇಬರು ತಮ್ಮ ಭಾಷೆಯಲ್ಲಿ ಮಾತಾಡಬಹುದು. ಈ ಜನಕ್ಕೆ ಸ್ವಲ್ಪ ಸ್ವಲ್ಪ ಅದರ ಪರಿಚಯವಿದೆ.ಏನು ನಮ್ಮ ಭಾಷೆಯ ಪರಿಚಯ! ಅದು ಹೇಗೆ? ನೀನು ಎಲ್ಲಿ ಅಭ್ಯಾಸ ಮಾಡಿದ್ದು?ಅಲ್ಲಿಯಿಲ್ಲಿ ಸಾಹೇಬರ ಅನುಗ್ರಹದಿಂದ ಹೆಕ್ಕಿಕೊಂಡದ್ದು.ಸುಳ್ಳುಸುಳ್ಳು, ಹೆಕ್ಕಿಕೊಂಡರೆ ಹೀಗೆ ಮಾತಾಡಲು ಬರುವುದಿಲ್ಲ. ನಮ್ಮ ಭಾಷೆ ಕಲಿಸುವ ಸ್ಥಳ ಗೋವೆ ಮಾತ್ರ – ಆದುದರಿಂದ ನೀನು ಇಲ್ಲಿಯವನಲ್ಲ ಗೋವೆಯವ. + +ಬಾಬ್ರಾಯ ಒಂದುಕ್ಷಣ ಮೌನವಾಗಿದ್ದ. ಆ ಗೋವೆಯ ನೆನಪಿನೊಂದಿಗೇ ಅವನ ರಕ್ತ ಕುದಿಯತೊಡಗಿತು. ಅವನು ಸುಮ್ಮನಿದ್ದುದನ್ನು ನೋಡಿ ಕಪ್ತಾನ ಕೇಳಿದ – + +ಈಗ ಬಂದದ್ದೇನು? + +ಈ ಬರ್ಸಲೋರಿನ ಬಡವರ ಬಗ್ಗೆ ಸಾಹೇಬರಲ್ಲಿ ಬೇಡಿಕೊಳ್ಳಲು ಬಂದಿದ್ದೇನೆ. ಪೋರ್ಚುಗಲ್ಲು ಹಡಗುಗಳ ರಾಣಿ.  ತಾವು ಅದರ ಪ್ರತಿನಿಧಿಗಳು. + +ಏನು ಏನು, ಹಡಗುಗಳ ರಾಣಿ! ಶಹಬಾಸ್ ಚಲೋ ಮಾತಾಡಿದಿ. ನೀನು ಬಹಳ ಹುಶಾರಿದ್ದಿ. ನೀನು ಈ ಗಾಂಪರ ಊರಿಗೆ ಯೋಗ್ಯನೇ ಅಲ್ಲ. ನಮ್ಮ ದೇಶವೇ ನಿನಗೆ ಯೋಗ್ಯ! + +ಅಂತಹ ಯೋಗ್ಯತೆ ನನಗೆಲ್ಲಿ? ಅದೆಲ್ಲ ತಮ್ಮಂತಹ ಬಿಳಿ ಸರದಾರ ಸಾಹೇಬರಿಗೆ ಹೇಳಿಸಿದ್ದು. ನಾವೆಲ್ಲ ಗುಲಾಮರು. + +ಹ್ಹ ಹ್ಹ ಹ್ಹ! ಬೇಷ್ ಬೇಷ್ ಏನು ಹೇಳಿದಿ? ಗುಲಾಮರು. ಹೌದು. ಇದು ಗುಲಾಮರ ರಾಜ್ಯ. ಇದನ್ನು ಆಳಲಿಕ್ಕಾಗಿಯೇ ಏಸುಕ್ರಿಸ್ತ ನಮ್ಮನ್ನಿಲ್ಲಿಗೆ ಕಳುಹಿಸಿದ್ದಾನೆ!ಸಹಜ. ಏಸುಕ್ರಿಸ್ತರು ದೇವದೂತರು. ದಯಾಳುಗಳು. ಅವರ ರಾಜ್ಯದಲ್ಲಿ ಮೋಸ ವಂಚನೆಗಳಾವುವೂ ಇರಲಾರದು!ಮೋಸ ವಂಚನೆ? ಏನದು?ಏನಿಲ್ಲ ಮಹಾಸ್ವಾಮಿ! ಈ ಬರ್ಸಲೋರಿನ ಜನರು ಬಡವರು. ಚಿಕ್ಕ ಚಿಕ್ಕ ವ್ಯಾಪಾರಿಗಳು. ಆದರೂ ಈ ತನಕವೂ ತಮ್ಮನ್ನು ತಮ್ಮ ಪರಿವಾರವನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರೆ.ಅದು ಹೌದು. ಅವರಲ್ಲಿ ನಮ್ಮದೇನೂ ಆಕ್ಷೇಪಣೆಯಿಲ್ಲ, ಚೆನ್ನಾಗಿಯೇ ನೋಡಿಕೊಂಡಿದ್ದಾರೆ. ಅದಕ್ಕಾಗಿ ನಮ್ಮದು ಹಾರ್ದಿಕ ಧನ್ಯವಾದ! + +ಅದು ತಮ್ಮ ದೊಡ್ಡ ಮನಸ್ಸು. ಆದರೆ ಅವರೆಲ್ಲ ಬರೇ ಬಡವರು. ಅವರು ಇನ್ನೂ ಬಡವರಾದರೆ ಅವರಿಗೆಲ್ಲ ಏಸು ಸ್ವಾಮಿಯ ನೆನಪು ಮರೆತುಹೋಗುತ್ತದೆ. ಲುಚ್ಚರಾಗುತ್ತಾರೆ ಮಹಾಸ್ವಾಮಿ. ಏಸು ಪ್ರಭುವಿನ ಗೌರವಕ್ಕಾಗಿ ತಾವು ಈ ಜನರನ್ನು ಬಡವರನ್ನಾಗಿ ಮಾಡಬಾರದು. ತಮ್ಮ ಹೆಸರು ಹೇಳಿ ಅವರು ಬದುಕಬೇಕು. + +ಓಹೋ! ನೀನು ಅವರ ಬಗ್ಗೆ ವಕಾಲತು ಮಾಡಲು ಇಲ್ಲಿಗೆ ಬಂದಂತಿದೆ! + +ನಾನೇನು ವಕಾಲತು ಮಾಡಿಯೇನು? ನಾನು ಬಹಳ ಅಲ್ಪ, ಅದೂ ತಮ್ಮ ಈ ದಿವ್ಯ ಸನ್ನಿಧಾನದಲ್ಲಿ ತಮ್ಮಂತಹ ಪ್ರಜ್ಞಾವಂತರಿಗೆ ನಾನೇನೂ ಹೇಳುವಂತಿಲ್ಲ. ಆದರೂ ಸ್ವಲ್ಪ ಮರೆತುದನ್ನು ನೆನಪುಮಾಡಲು ಮಾತ್ರ ಬಂದಿದ್ದೇನೆ. + +ಅದೇನು ಮರೆತುಹೋದದ್ದು? + +ಸ್ವಲ್ಪ ಆ ಬಡ ಜನರ ಲೆಕ್ಕಾಚಾರ – ದವಸ ಜೀನಸುಗಳ ಕ್ರಯ ತಮ್ಮ ನಿಗಾದಿಂದ ತಪ್ಪಿ ಹೋಗಿರಬಹುದು. ಅದನ್ನು ತಮ್ಮ ಬೊಕ್ಕಸದಿಂದ ಏಸು ಮಹಾತ್ಮನ ಆಶೀರ್ವಾದಪೂರ್ವಕವಾಗಿ ಕೊಟ್ಟರೆ ಅವರೆಲ್ಲ ಧನ್ಯರಾದಾರು. + +ಓಹೋ ಹಾಗೋ! ಹೌದು ನಮ್ಮ ಬೊಕ್ಕಸದಲ್ಲೇನೂ ಕಡಿಮೆಯಿಲ್ಲ. ನಾವು ಕೇರಳದಿಂದ ಈ ಗುಲಾಮರ ಎರಡು ದೇವಸ್ಥಾನಗಳನ್ನು ಲೂಟಿಮಾಡಿ ತಂದಿದ್ದೇವೆ. ಆದುದರಿಂದಲೇ ಆ ಮೂರ್ಖ ಝಮೋರಿನ್ ನಮ್ಮ ಬೆನ್ನಟ್ಟಿಕೊಂಡು ಬಂದ. ಬರೇ ಮುಠಾಳ. ಅವನಿಗೊಂದು ಪಾಲು ಕೊಡುತ್ತೇನೆಂದರೂ ಕೇಳಲಿಲ್ಲ. ಅದೇ ನಮ್ಮ ಬೊಕ್ಕಸ. + +ಬಾಬ್ರಾಯನಿಗೆ ಈ ಕೊಳ್ಳೆಯ ವಿಚಾರ ಕೇಳಿ ರಕ್ತ ಕುದಿಯತೊಡಗಿತು. ಆದರೂ ಅದನ್ನು ತೋರಿಸಿ ಕೊಡದೆ – ಆದರೂ ಈ ಬರ್ಸಲೋರಿನ ಜನರು ಸಾಹೇಬರ ಪಾಲಿಗೆ ಏನೂ ತೊಂದರೆ ಕೊಟ್ಟದ್ದಿಲ್ಲ. ಅವರ ಮೇಲೆ ಸಾಹೇಬರು ಕೋಪಿಸಿಕೊಳ್ಳಬಾರದು. ಪ್ರಸನ್ನರಾಗಬೇಕು – ಎಂದು ವಿನಯದಿಂದ ಕೇಳಿದನು. + +ಕಪ್ತಾನ ಮಸ್ಕರೇಂಞ ಒಮ್ಮೆ ಗಹಗಹಿಸಿ ನಕ್ಕು ತನ್ನ ಗಡ್ಡವನ್ನು ಸವರುತ್ತ ಹೇಳಿದ – ಹೋ! ಆ ಮಾತು ಬಿಟ್ಟು ಬಿಡು. ಈ ಬೊಕ್ಕಸವನ್ನು ನಾವು ಮುಟ್ಟುವ ಹಾಗೆಯಿಲ್ಲ. ಅದು ರಾಜಧನ. ಅದರ ಲೆಕ್ಕಾಚಾರವೇ ಬೇರೆ. ಆದರೂ ನಿನ್ನ ವಿಚಾರವಾಗಿ ನನಗೆ ತುಂಬಾ ಕನಿಕರವಾಗುತ್ತದೆ. ನೀನು ಇನ್ನು ಮುಂದೆ ಈ ಪಶುಗಳೊಂದಿಗೆ ಇರುವುದು ಬೇಡ. ನಮ್ಮೊಡನೆಯೇ ನೌಕರಿ ಮಾಡಬಹುದು. + +ಬಾಬ್ರಾಯ ಹತಾಶನಾದನು. ಈ ಒಣ ಮಾತುಗಳಿಂದೆಲ್ಲಾ ಅವನ ಗಂಟಲು ಬಿಗಿದು ಬರತೊಡಗಿತು. ಇನ್ನು ಏನು ಪ್ರಯೋಗ ನಡೆಸಬೇಕೆಂದು ಅರ್ಥವಾಗಲಿಲ್ಲ. ಆ ಕಡೆ ಸೂರ್ಯ ಕೆಳಕೆಳಗೆ ಇಳಿಯತೊಡಗಿ ಸಂಜೆ ಕಳೆಯತೊಡಗಿತ್ತು. ಈ ಕಡೆ ಹೊಳೆಯ ದಡದ ಮೇಲೆ ಹಲಹಲವು ಮುಖಗಳು ಇವನನ್ನೇ ನಿರೀಕ್ಷಿಸುತ್ತ ನಿಂತು ನೋಡುತ್ತಿದ್ದುವು. ಆದರೆ ಈ ಕಳ್ಳ ಸಾಹೇಬ ಯಾವ ಸೂಚನೆಯನ್ನೂ ಒಪ್ಪಿಕೊಳ್ಳುವಂತೆ ಕಂಡು ಬರಲ್ಲ. ಆದುದರಿಂದ ಒಮ್ಮೆ ಪಶ್ಚಿಮದ ಕಡೆ ನೋಡಿ ಸಾಹೇಬನೊಡನೆ ಹೇಳಿದನು – ಹಾಗಾದರೆ ಖಾವಂದರಿಗೆ ಒಂದಿಷ್ಟೂ ಕನಿಕರ ಬಾರದಿದ್ದರೆ ಏನು ಮಾಡಬಹುದು? ಈ ಕುರಿಜನಗಳ ಗ್ರಹಚಾರವೆನ್ನಬೇಕು. ಆದರೂ ಚಿಂತಿಲ್ಲ, ನಾನು ನೌಕರಿ ಮಾಡಿಯಾದರೂ ಋಣ ತೀರಿಸಿಯೇನು. ಈ ಜನಗಳಿಗೆ ಸ್ವಲ್ಪ ಹಣವನ್ನಾದರೂ, ಕೊನೆಯ ಪಕ್ಷ ಲೆಕ್ಕಾಚಾರದ ಅರ್ಧಾಂಶವನ್ನಾದರೂ ಕಳುಹಿಸಿ ಕೊಡೋಣವಾಗಲಿ! + + + +ಆಗಲಿ. ನೀನು ನಮ್ಮ ಗೋವೆಗೇ ಬಾ. ಲೆಕ್ಕಾಚಾರವನ್ನೆಲ್ಲಾ ಅಲ್ಲಿ ನೋಡೋಣವಂತೆ! ಎಂದು ಹೇಳಿದವನೇ ಕಪ್ತಾನ ಒಬ್ಬ ಸಿಪಾಯಿಯನ್ನು ಕರೆದು ಈ ಹುಡುಗನನ್ನು ಕೆಳಗೆ ಕರೆದುಕೊಂಡು ಹೋಗು – ಎಂದನು.ಬಾಬ್ರಾಯ ಅಲ್ಲಿಯೇ ನಿಂತಿದ್ದ – ಅದೂ ಆಗಬಹುದಲ್ಲ. ಆದರೆ ಈ ವಿಚಾರವನ್ನು ನಮ್ಮ ಜನಕ್ಕೆ ತಿಳಿಸಿಬರಬೇಕು. ಅವರು ನನ್ನ ಹಾದಿಯನ್ನೇ ಕಾಯುತ್ತಿರಬಹುದು. ಮತ್ತೆ ನಿಮ್ಮ ಹಡಗು ಇಲ್ಲಿಂದ ಹೊರಡುವ ದಿನ ಹೇಳಿದರೆ – + +ದಿನ ಹೇಳುವುದೇನಿದೆ? ನಮ್ಮ ಹಡಗು ಈ ರಾತ್ರಿ ಕಳೆದು ಬೆಳಗಿನ ಜಾವದಲ್ಲೆ ಹೊರಡುತ್ತದೆ. ನಿನ್ನನ್ನು ಈಗ ನಾನು ಹೋಗಬಿಟ್ಟರೆ ಮತ್ತೆ ನಿಮ್ಮ ಆ ಕೋಟೆಯ ಫಿರಂಗಿಯನ್ನು ನಮ್ಮ ಕಡೆ ತಿರುಗಿಸಿ ಗಲಾಟೆ ಮಾಡುವ ಯೋಚನೆ ನಿಮಗಿರುವುದಾದರೆ ಅದಕ್ಕೆ ನಾನು ಸಂದರ್ಭವನ್ನೆ ಕೊಡುವ ಮನುಷ್ಯನಲ್ಲ – ಎಂದು ಹೇಳಿ ಕಪ್ತಾನನು ಗಹಗಹಿಸಿ ನಕ್ಕನು. + +ಸಿಪಾಯಿ ಬಾಬ್ರಾಯನನ್ನು ಕೈಹಿಡಿದು ಕರೆದುಕೊಂಡು ಹೋಗಿ ಕೆಳಗಡೆ ಒಂದು ಕೋಣೆ ಸೇರಿಸಿದನು. ಮತ್ತೆ ಬೇರೊಬ್ಬ ಸಿಪಾಯಿಯನ್ನು ಕರೆದು ಇವನನ್ನು ಸ್ವಲ್ಪ ನೋಡಿಕೋ – ಎಂದು ಹೇಳಿ ಹೊರಟು ಹೋದನು. + +ಬಾಬ್ರಾಯನಿಗೆ ತಾನೀಗ ಬಂದಿ ಎಂಬುದು ಅರ್ಥವಾಯಿತು. ಅವನ ಎದೆಯಲ್ಲಿ ದ್ವೇಷದ ಬೆಂಕಿ ಪ್ರಜ್ವಲಿಸತೊಡಗಿತು. ಕತ್ತಲೆಯ ಕರಿಛಾಯೆ ಆ ಕೋಣೆಯೊಳಗೆ ಹಬ್ಬುತ್ತಿದ್ದಂತೆ ಯಾವುದೋ ಒಂದು ಉಜ್ವಲ ಮೂರ್ತಿ ಅವನ ಮುಂದೆ ನಿಂತು – ನೋಡು! ಇದೇ ಸಮಯ, ಹೇಡಿಯಾಗಬೇಡ, ಧೈರ್ಯವಾಗಿರು – ಎಂದು ಹೇಳಿದಂತೆ ಭಾಸವಾಯಿತು. ಅವಳೇ ಅವನ ಅಕ್ಕ! ಆ ದಿನ ಇದೇ ಜನಾಂಗದ ಪಶು ಕೃತ್ಯದಿಂದಾಗಿ ಕುಸಿದುಬಿದ್ದ ಪ್ರಭಾತ ಕುಸುಮ. + +ಹೌದು. ಇದೇ ಸಮಯ. ಇಂತಹ ಸಮಯ ಇನ್ನೆಂದಿಗೂ ಸಿಗಲಾರದು – ಎಂದು ಬಾಬ್ರಾಯ ತನ್ನ ಮನಸ್ಸಿನಲ್ಲೆ ಹೇಳಿಕೊಂಡನು.ಬಹಳ ಭದ್ರವಾದ ಕೋಣೆ. ಕೋಣೆಯ ತುಂಬೆಲ್ಲ ಭರಣಿಗಳು, ಪೀಪಾಯಿಗಳು ತುಂಬಿದ್ದುವು. ಕೋಣೆಯ ಮುಕ್ಕಾಲುವಾಸಿ ಅದೇ ತುಂಬಿತ್ತು. ಕೋಣೆಗೆ ಮೇಲಟ್ಟದಿಂದ ಗಾಳಿ ಕಂಡಿಯಿದ್ದಿತು. ಬಾಗಿಲೂ ಅದೇ ರೀತಿ. ಮುಚ್ಚಿದ ಸರಳಿನ ಬಾಗಿಲ ಬಳಿ ದೀಪವಿರಿಸಿಕೊಂಡು ಪಹರೇದಾರ ಕುಳಿತಿದ್ದನು. + +ಬಾಬ್ರಾಯ ಮೆಲ್ಲನೆ ಹಿಂದೆ ಸರಿದು ಒಂದು ಭರಣಿಯೊಳಗೆ ಕೈತುರುಕಿಸಿ ನೋಡಿದನು. ಅದು ಕಪ್ಪಾಗಿ ಕೈಗೆ ಹಿಡಿಯಿತು. ಮೂಸಿ ನೋಡಿದನು. ಅದೇನು? ಸಿಡಿಮದ್ದು! ಈ ಎಲ್ಲಾ ಭರಣಿಗಳಲ್ಲಿ ಪೀಪಾಯಿಗಳಲ್ಲೂ ಅದೇ ಇರುವುದೆ? ಓಹೋ! + +ಹಡಗಿನ ಮೇಲಟ್ಟದಲ್ಲಿ ತುಂಬಾ ಗಡಿಬಿಡಿಯಾದಂತೆ ಸಪ್ಪಳ ಕೇಳುತಿದ್ದಿತು. ಜನರೆಲ್ಲ ಆ ಕಡೆ ಈ ಕಡೆ ಓಡಾಡುತಿದ್ದರು. ಆಗ ಬಾಬ್ರಾಯನಿಗೆ – ಹಡಗ ಇದೇ ರಾತ್ರಿ ಕಳೆದು ಮುಂಜಾವದಲ್ಲಿ ಹೊರಟು ಹೋಗುವುದೆಂದು ಕಪ್ತಾನನು ಹೇಳಿದ ಮಾತು ನೆನಪಾಯಿತು. ಅದಕ್ಕಾಗಿಯೇ ಸನ್ನಾಹವಾಗುತಿದ್ದಿತು. ಆದುದರಿಂದ ಏನು ಮಾಡಬೇಕೋ ಅದನ್ನು ಈ ಕೂಡಲೇ ಮಾಡಬೇಕು. ಆದರೆ ಮಾಡುವುದೇನನ್ನು? + +ಅವನಿಗೊಂದು ಯೋಚನೆ ಹೊಳೆಯಿತು. ಆ ಯೋಚನೆಯನ್ನು ಸ್ವಲ್ಪಹೊತ್ತು ಮನನಮಾಡುತ್ತ ಕುಳಿತ. ನಂತರ ನಿರ್ಧಾರಕ್ಕೆ ಬಂದವನಂತೆ ಒಮ್ಮೆ ದೀರ್ಘವಾಗಿ ಉಸಿರು ಬಿಟ್ಟನು. ಅಯ್ಯಯ್ಯೋ ಸತ್ತೆ ಸತ್ತೆ! ಚೇಳು –  ಚೇಳು ಕಚ್ಚಿತು! ಅಯ್ಯೋ ದೇವರೆ! – ಎಂದು ಬೊಬ್ಬೆ ಹಾಕುತ್ತ ಒಂದು ಕಾಲನ್ನು ಎತ್ತಿ ಹಿಡಿದುಕೊಂಡು ಬಾಬ್ರಾಯ ಕೋಣೆಯೆಲ್ಲಾ ಓಡಾಡತೊಡಗಿದನು. ಪಹರೇದಾರ ದೇಶೀಯ ಕ್ರೈಸ್ತ. ಇವನೂ ಅದೇ ಭಾಷೆಯಲ್ಲಿ – ಸತ್ತೆನಲ್ಲ ಸತ್ತೆ! ಸ್ವಲ್ಪ ದೀಪ ಈ ಕಡೆ ತಾರಪ್ಪ. ದೊಡ್ಡ ಕೊಂಬು ಚೇಳು. ಇಲ್ಲೇ ಅಡಗಿ ಕೂತಿದೆ – ಎಂದು ಕೂಗಿದನು. ಪಹರೇದಾರ ಮೆಲ್ಲನೆ ಬಾಗಿಲು ತೆರೆದು ಒಳಗೆ ಬಂದು ನೋಡಿದಾಗ ಬಾಬ್ರಾಯನ ಕಾಲಿನಿಂದ ರಕ್ತ ಸುರಿಯುತಿದ್ದಿತು. ಆದುದರಿಂದ ಚೇಳು ಕಚ್ಚಿರಬಹುದೆಂದು ಭಾವಿಸಿ – ನೀನು ಸ್ವಲ್ಪ ಸುಮ್ಮನಿರು ವೈದ್ಯರನ್ನು ಕರೆಯುತ್ತೇನೆ – ಎಂದು ಹೇಳಿ ಬಾಗಿಲು ಹಾಕಿಕೊಂಡು ಹೊರಟುಹೋದನು. + +ಅವನು ಹೋದೊಡನೆಯೇ ಬಾಬ್ರಾಯ ಮೆಲ್ಲನೆ ಬಾಗಿಲು ಬಳಿ ಹೋಗಿ ಅಲ್ಲಿದ್ದ ದೀಪವನ್ನು ಒಳಗೆ ತಂದುಕೊಂಡನು. ಅದನ್ನು ಸ್ವಲ್ಪ ದೂರದಲ್ಲಿರಿಸಿ ಭರಣಿಯಲ್ಲಿದ್ದ ಸಿಡಿಮದ್ದನ್ನು ಎಲ್ಲ ಪೀಪಾಯಿಗಳಿಗೂ ಧಾರೆ ಹಿಡಿದು ಹಾಕಿ ಆ ಧಾರೆಯನ್ನು ಕೋಣೆಯ ಮಧ್ಯೆ ತಂದು ನಿಲ್ಲಿಸಿದನು. ಅಷ್ಟರಲ್ಲಿ ವೈದ್ಯನನ್ನು ಕರೆದುಕೊಂಡು ಬಂದು ಪಹರೆದಾರನು ಇದನ್ನು ನೋಡಿ ಗಾಬರಿಯಿಂದ ಕೇಳಿದನು – ಇದೇನು ಮಾಡುತ್ತಾಯಿದ್ದಿ ಹುಚ್ಚ? ಅದೇನು ಗೊತ್ತೆ? + +ಎಲ್ಲಾ ಗೊತ್ತು. ನೀನು ಹೋಗಿ ನಿನ್ನ ಕಪ್ತಾನರನ್ನು ಕರೆದುಕೊಂಡು ಬಾ – ಎಂದನು ಬಾಬ್ರಾಯ. ದೀಪ ಅವನ ಕೈಯಲ್ಲಿದ್ದಿತ್ತು.ಕಪ್ತಾನ ಮಸ್ಕರೇಂಞ ತನ್ನ ಜನ್ಮದಲ್ಲಿ ಇಷ್ಟು ಗಾಬರಿಯಾದುದಿಲ್ಲ – ಇಷ್ಟು ಅವಸರವಾಗಿ ಓಡಿ ಬಂದುದಿಲ್ಲ. ಬಂದವನೇ ಬಾಗಿಲ ಬಳಿ ನಿಂತು ಬಾಬ್ರಾಯನೊಡನೆ ಹೇಳಿದ. ಹೇ ಹುಡುಗ! ನಿನಗೆ ಒಂದಿಷ್ಟೂ ಬುದ್ಧಿಯಿಲ್ಲವೆ? + +ಈ ತನಕ ಬುದ್ಧಿಯಿರಲಿಲ್ಲ. ಈಗ ತಾನೇ ಬುದ್ಧಿ ಬಂದಿತು. ಆದುದರಿಂದಲೇ ನಿನಗೆ ಬುದ್ಧಿ ಕಲಿಸತೊಡಗಿದ್ದೇನೆ. ನೋಡು – ನೀನು ನಮ್ಮ ಈ ಬಡ ಜನರನ್ನು ಮೋಸ ಮಾಡಿ ಅವರ ಹಣವನ್ನು ದಕ್ಕಿಸಿಕೊಳ್ಳಬೇಕೆಂದು ಯೋಚಿಸಿದಿ. ಆದರೆ ಅವರ ಹಣ ಅವರಿಗೆ ಸಿಕ್ಕಿಯೆ ಸಿಕ್ಕುತ್ತದೆ. ನಿನ್ನ ಹಡಗು ಕಂಡ್ಲೂರು ಹೊಳೆಯನ್ನು ಬಿಟ್ಟು ಹೊರಗೆ ಹೋಗುವುದಿಲ್ಲ! ನಿನ್ನ ಪಾಪಗಳ ಲೆಕ್ಕಾಚಾರ ಇಂದಿಗೇ ಮುಗಿಯುತ್ತದೆ! + +ಕಪ್ತಾನ ಬಹಳ ಮೃದುಸ್ವರದಿಂದ ಸಮಜಾಯಿಸುತ್ತ ಹೇಳಿದ – ಹುಚ್ಚು ಹುಡುಗ! ನಾನೇನಾದರೂ ತಮಾಷೆಗೆಂದು ಹೇಳಿದರೆ ಅದನ್ನು ನಂಬುವುದೇ ? ನಿಮ್ಮ ಜನರ ಹಣ ನನಗೆ ಬೇಕಾಗಿದೆಯೇ? – ಸುಮ್ಮನಾದರೂ – ಎನ್ನುತಿದ್ದಂತೆಯೇ ಅವನ ಬಲಗೈ ಮೇಲೇರುತಿದ್ದಿತು. ಒಡನೆಯೇ ಬಾಬ್ರಾಯ – ನಿನ್ನ ಕೈಯಲ್ಲಿ ಪಿಸ್ತೂಲಿದೆಯೆಂಬುದು ನನಗೂ ಗೊತ್ತಿದೆ. ಆದರೆ ….. ಆದರೆ ಇದು ದೇವರ ಶಾಪದ ಗುಂಡು – ಎನ್ನುತಿದ್ದಂತೆಯೇ ದೀಪದ ಬತ್ತಿಯನ್ನು ಕಾಲಬುಡದ ಸಿಡಿಮದ್ದಿನ ಧಾರೆಯ ಮೇಲೆ ಹಾಕಿ ನೆಲದ ಮೇಲೆ ಕವುಚಿ ಕೈಮುಗಿದು ಬಿದ್ದುಕೊಂಡು – ಅಕ್ಕ! ನನ್ನ ಋಣ ತೀರಿತು – ಋಣ ತೀರಿತು! ಎಂದನು. + +ರಾತ್ರಿ ಹೊತ್ತು ಭಯಂಕರವಾದ ಅಂತಹ ಸ್ಫೋಟವನ್ನು ಈ ತನಕ ಯಾರೂ ಕೇಳಿದ್ದಿಲ್ಲ. ಅದಕ್ಕೆ ಬಸ್ರೂರು ಪೇಟೆಯೇ ನಡುಗಿತು. ಹಡಗಿನ ಕೆಲವು ಚೂರುಗಳು ಗುಂಡಿನಂತೆ ಸಿಡಿದು ಪೇಟೆಯ ಮಧ್ಯ ಭಾಗಕ್ಕೂ ಬಂದು ಬಿದ್ದಿದ್ದುವು. ಎಲ್ಲರೂ ದಿಗಿಲುಗೊಂಡು ಹೊಳೆಯ ಕಿನಾರೆಯ ಕಡೆ ಓಡಿದರು. ಬೆಂಕಿಯ ಕಾವಿಗೆ ಹೊಳೆಯ ನೀರೂ ಕುದಿಯುತಿದ್ದಿತು. ಆದರೆ ಹೊಳೆಯ ಮಧ್ಯದಲ್ಲಿ ಈಗ ಎರಡು ತಿಂಗಳುಗಳಿಂದಲೂ ಹಾಯಿ ಬಿಟ್ಟು ಅವರ ಪಾಲಿಗೆ ಒಂದು ದೊಡ್ಡ ದುಸ್ವಪ್ನದಂತೆ ಮಡಗಿದ್ದ ಹಡಗು ನುಚ್ಚು ನೂರಾಗಿದ್ದಿತು. ಹೊಸ ಬಣ್ಣ ಹಾಕಿ ಎಣ್ಣೆ ತಾಗಿಸಿದ್ದ ಅದರ ಭಾಗಗಳೆಲ್ಲ ಕರ್ಪೂರದಂತೆ ಭಗಭಗನೆ ಸುಡುತಿದ್ದವು. ಇನ್ನು ಅದರಲ್ಲಿದ್ದ ಜನರ ವಿಚಾರ – ಯಾರೂ ಉಳಿದಿರುವಂತೆ ಕಂಡು ಬರಲಿಲ್ಲ. + +ಬೆಳಿಗ್ಗೆ ಅದರ ಅವಶೇಷದ ಲೇಶವೂ ಉಳಿಯಲಿಲ್ಲ. ಆದರೆ ಕಿನಾರೆಯ ಮೇಲೆ ಬೆಳ್ಳಿ ಬಂಗಾರದ ನಗನಾಣ್ಯಗಳು ಅಲ್ಲಲ್ಲಿ ಸಿಡಿದು ಬಿದ್ದಿದ್ದುವು. ಸಮುದ್ರದ ಭರತದ ವೇಳೆ ಕರೆ ಹಿಡಿದ ಕೈಕಾಲು ಕಳೆದುಕೊಂಡು ಅಂಗಾಂಗ ವಿಹೀನರಾದವರ ಹೆಣಗಳು ಹಲವಾರು! + +ಕೋಟೆಯಿಂದ ದಳವಾಯಿಗಳೂ ನೂರಾರು ಸೈನಿಕರೂ ಬಂದು ಅವುಗಳನ್ನೆಲ್ಲ ಸ್ವಾಧೀನ ಪಡಿಸಿಕೊಂಡರು. ಕೊನೆಗೆ ಅರಸರು ಸ್ವತಃ ಬಂದು ಆ ಹಡಗಿನ ವ್ಯಾಪಾರದಲ್ಲಿ ನಷ್ಟಗೊಂಡವರಿಗೆ ಅವರವರ ಲೆಕ್ಕದ ಪ್ರಕಾರ ಹಣ ಸಲ್ಲಿಸಿದರೆಂದು ಹೇಳಲಾಗಿದೆ. + +ಪಾಪ ! ಬಾಬ್ರಾಯನ ಹೆಣವೂ ಸಿಕ್ಕಲಿಲ್ಲ. ಅದು ಸಿಡಿಮದ್ದಿನ ಕೋಣೆಯಲ್ಲೇ ಇದ್ದುದರಿಂದ ಸಂಪೂರ್ಣವಾಗಿ ಸುಟ್ಟುಹೋಗಿರಬೇಕು. ಆದರೂ ಅವನ ಕೋರಿಕೆಯನ್ನು ಬಸ್ರೂರವರು ಮರೆಯಲಿಲ್ಲ. ಅವನನ್ನು ಬೀಳ್ಕೊಟ್ಟ ಕಟ್ಟೆಯ ಮೇಲೆ ಒಂದು ಅಶ್ವತ್ಥದ ಗಿಡವನ್ನು ನೆಟ್ಟು ಅದಕ್ಕೆ ಉಪನಯನ ಮಾಡಿಸಿದರು. ಮತ್ತೊಂದು ಗಿಡ ನೆಟ್ಟು ಮದುವೆ ಮಾಡಿಸಿದರು. ಆ ಎರಡು ಮರಗಳೂ ಈಗ ಸತ್ತು ಹೋಗಿರಬಹುದು. ಆದರೆ ಅದರ ಸಂತತಿ ಈಗಲೂ ಇದೆ. ಅದೇ ಈಗಿನ ಬಾಬ್ರಾಯರ ಕಟ್ಟೆ ! + + + + + +(ಮುಂದಿನ ಕಂತಿನಲ್ಲಿ: ’ಉಳ್ಳಾಲದ ರಾಣಿ’ – ಬೇಕಲ ರಾಮನಾಯಕರ ಕಥೆ) + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_475.txt b/Kenda Sampige/article_475.txt new file mode 100644 index 0000000000000000000000000000000000000000..1de4a332884c1758d04c1289f3878cf4059ca183 --- /dev/null +++ b/Kenda Sampige/article_475.txt @@ -0,0 +1,45 @@ + + +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆಕಟ್ಟಿ, ಬಣ್ಣ ಬಳಿದು, ವೇಷತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ ಮನೆಮಾರುಗಳನ್ನು ಸೇರಿ, ಅಗಲಿದ್ದ ಮಡದಿ ಮಕ್ಕಳ ಮುಖಗಳನ್ನು ಕಾಣಬೇಕು; ತಮಗಿದ್ದ ತುಂಡು ಹೊಲದ ಬೇಸಾಯವನ್ನು ಪೂರೈಸಬೇಕು. ಆ ದಿನ ಎಲ್ಲಾ ಮೇಳಗಳೂ ತಮ್ಮ ತಮ್ಮ ಊರನ್ನು ಸೇರುವುವು. ಅಂದು ರಾತ್ರಿ ತಮ್ಮ ಇಷ್ಟದೇವತೆಯೆದುರು ಕೊನೆಯ ಆಟವನ್ನು ಆಡಿ, ಗೆಜ್ಜೆಪೂಜೆಗೈದು, ಮರುದಿನ ತಮ್ಮ ತಮ್ಮ ಹಾದಿಯನ್ನು ಮೇಳದವರು ಹಿಡಿಯುವರು. ಅವರು ಮುಂದೆ ಒಟ್ಟುಗೂಡುವುದು ಮಳೆಗಾಲದ ಆರು ತಿಂಗಳು ಕಳೆದ ಬಳಿಕ. ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವಾಲಯದ ಮುಂದುಗಡೆಯಲ್ಲಿ ರಂಗಸ್ಥಳವನ್ನು ನಿರ್ಮಿಸಲಾಗಿತ್ತು. ಅಂದೇ ಊರು ಸೇರಿದ ಪಾರ್ತಿಸುಬ್ಬನ ಕಣಿಪುರದ ಶ್ರೀ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಲವು ಅಲ್ಲಿ ತಮ್ಮ ಕೊನೆಯಾಟವನ್ನು ಅಂದು ಆಡುವುದು. + +ಆಗಲೆ ಸಂಜೆಯಾಗಿತ್ತು. ರಂಗಸ್ಥಳದ ಎರಡೂ ಪಕ್ಕಗಳಲ್ಲಿ ಎರಡು ದೊಡ್ಡದಾದ ದೀವಟಿಗೆಗಳು ಉರಿಸಲ್ಪಟ್ಟಿದ್ದುವು. ರಂಗಸ್ಥಳದಲ್ಲಿ ನಿತ್ಯ ವೇಷಗಳಲ್ಲೊಂದಾದ ಕೋಡಂಗಿಗಳು ಕುಣಿಯುತ್ತಿದ್ದುವು. ಸುತ್ತು ಮುತ್ತಲಿನ ಹತ್ತಾರು ಊರುಗಳ ಜನರೆಲ್ಲರೂ ಆ ಗೆಜ್ಜೆಪೂಜೆಯಾಟವನ್ನು ನೋಡಲು ಆಗಲೇ ನೆರೆಯತೊಡಗಿದ್ದರು. ರಂಗಸ್ಥಳದಿಂದ ಸ್ವಲ್ಪದೂರದಲ್ಲಿ ವೇಷಧಾರಿಗಳು ವೇಷ ಧರಿಸುವ ಚೌಕಿಯಿತ್ತು. ಅಲ್ಲಿ ಆಗಲೇ ಚಟುವಟಿಕೆಗೆ ಆರಂಭವಾಗಿತ್ತು. ನಟರೆಲ್ಲರೂ ತಮ್ಮ ತಮ್ಮ ಪಾತ್ರಗಳಿಗನುಗುಣವಾಗಿ, ಮುಖಗಳಿಗೆ ಬಣ್ಣಗಳ ‘ಚುಟ್ಟಿ’ ಬರೆಯುತ್ತಿದ್ದರು. ಅಂದು ಆಡುವ ಪ್ರಸಂಗವು ‘ಅಂಗದ ಸಂಧಾನ’ವೆಂದು ತೀರ್ಮಾನವಾಗಿತ್ತು. ಒಡ್ಡೋಲಗ ಪಾತ್ರಧಾರಿಗಳಾದ ರಾಮಲಕ್ಷ್ಮಣರು ಆಗಲೇ ತಮ್ಮ ವೇಷಭೂಷಣಗಳನ್ನು ಮುಗಿಸಿ ಸಿದ್ಧರಾಗಿ ಕುಳಿತಿದ್ದರು. ರಾವಣ ಪಾತ್ರಧಾರಿಯಾದ ಬಣ್ಣದ ಗೋಪಣ್ಣ ಚೌಕಿಯ ಮಧ್ಯಭಾಗದಲ್ಲಿ ಒಂದು ದೊಡ್ಡ ಪೆಟ್ಟಿಗೆಗೊರಗಿ ಕುಳಿತುಕೊಂಡಿದ್ದನು. ಅವನ ಮುಂದೆ ಒಂದು ದೊಡ್ಡ ಕಾಲುದೀಪ ಉರಿಯುತ್ತಿತ್ತು. ಅವನ ಮುಖಕ್ಕೆ ಭಯಂಕರವಾಗಿ ‘ಪಟ್ಟಿ’ಗಳನ್ನು ಬರೆಯಲಾಗಿತ್ತು. ಪೆಟ್ಟಿಗೆಗೊರಗಿ ಕುಳಿತ ಅವನ ಬಣ್ಣ ಬಳಿದ ಮುಖದ ಸುತ್ತಲೂ ಹಿಟ್ಟಿನ ಮುಳ್ಳುಗಳನ್ನು ಒಬ್ಬನು ಅಂಟಿಸುತ್ತಿದ್ದನು. ಆ ಕೆಲಸ ಮುಗಿದ ಬಳಿಕ, ಮೂಗಿನ ತುದಿಗೆ, ಹಣೆಗೆ, ಹತ್ತಿಯ ಉಂಡೆಗಳನ್ನು ಅಂಟಿಸಿದರು. ಅದೂ ಮುಗಿದ ಬಳಿಕ, ಗೋಪಣ್ಣ ಎದ್ದು ನಿಂತನು. ಒಂದೊಂದಾಗಿ ಉಡಿಗೆ ಆಭರಣಗಳನ್ನು ಅವನಿಗೆ ತೊಡಿಸಿದರು. ಬಣ್ಣ ಬಣ್ಣದ ತೊಡಿಗೆ, ಭುಜಕೀರ್ತಿ, ಎದೆಗಟ್ಟು, ವೀರ ಕಾಸೆ – ಎಲ್ಲವನ್ನೂ ತೊಟ್ಟಾಯಿತು. ಕೊನೆಗೆ, ಬೃಹತ್ತಾದ, ಚಕ್ರಾಕಾರದ ಕಿರೀಟವನ್ನು ತಲೆಗೆ ಕಟ್ಟಿದರು. ಈಗ, ಅವನನ್ನು ನೋಡಿದರೆ ಗಟ್ಟಿಯೆದೆಯ ಜವ್ವನಿಗನು ಕೂಡ ಹೆದರಬೇಕು. ಅಷ್ಟು ಭಯಾನಕವಾಗಿತ್ತು ಆ ವೇಷ! + +ಇನ್ನೊಂದೆಡೆಯಲ್ಲಿ ರಾವಣನ ಮಂತ್ರಿ ಪ್ರಹಸ್ತನ ವೇಷವನ್ನು ರಾಮಚಂದ್ರ ತೊಡುತ್ತಿದ್ದನು. ಹೊಟ್ಟೆಯನ್ನು ದೊಡ್ಡದು ಮಾಡಲು ಎಷ್ಟು ಬಟ್ಟೆಯನ್ನು ಕಟ್ಟಿದರೂ ಅವನಿಗೆ ತೃಪ್ತಿಯಿಲ್ಲ. ಅಂತೂ, ಅವನ ವೇಷವೂ ಸಿದ್ಧವಾಯಿತು. ಮೇಳದ ಭಾಗವತ – ಯಜಮಾನನಾದ ಕವಿ ಪಾರ್ತಿಸುಬ್ಬ, ಎಲ್ಲವನ್ನೂ ದಿಟ್ಟಿಸುತ್ತಾ ಒಂದು ಪೆಟ್ಟಿಗೆಯ ಮೇಲೆ ಗಂಭೀರವಾಗಿ ಕುಳಿತಿದ್ದನು. ನಸುನೀಳವಾದ ಆಕರ್ಷಕವಾದ ಮುಖ. ಭಾವನೆಯ ಕಡಲಲ್ಲೇ ತೇಲುತ್ತಾ, ಕನಸನ್ನೇ ಕಾಣುತ್ತಿರುವ, ಸುಂದರವಾದ ಕಣ್ಣುಗಳು. ಗಟ್ಟಿಮುಟ್ಟಾದ, ಎತ್ತರ ನಿಲುವಿನ ದೃಢದೇಹ. ಪ್ರಾಯವು ಐವತ್ತರ ಗಡಿದಾಟಿತ್ತು. ತಲೆಯಲ್ಲಿ ಬೆಳೆದ ತುಂಬುಗೂದಲು, ಹಣೆಯನ್ನು ಬಿಟ್ಟು ಹಿಂದು ಹಿಂದಕ್ಕೆ ಸರಿಯುವ ಚಿಹ್ನೆ ತಲೆದೋರಿತ್ತು. + +ಪಾತ್ರಧಾರಿಗಳೆಲ್ಲರೂ ತಮ್ಮ ವೇಷ ಸಿದ್ಧವಾದೊಡನೆಯೇ, ತಮ್ಮ ಯಜಮಾನನಾದ ಪಾರ್ತಿಸುಬ್ಬನಿಗೆ ತೋರಿಸಿಕೊಂಡು, ಅವನ ಒಪ್ಪಿಗೆಯನ್ನು ಪಡೆಯುತ್ತಿದ್ದರು. ಪಾರ್ತಿಸುಬ್ಬ ಎಲ್ಲರನ್ನೂ ಸೂಕ್ಷ್ಮ ದೃಷ್ಟಿಯಿಂದ ವಿಮರ್ಶಿಸುತ್ತಾ, ಲೋಪದೋಷಗಳನ್ನು ತಿಳಿಸಿ ಸರಿಗೊಳಿಸುತ್ತಿದ್ದನು. ಬಣ್ಣದ ಗೋಪಣ್ಣನ ಪಾತ್ರವನ್ನು ನೋಡಿ,“ಅದ್ಭುತವಾಗಿದೆ, ಗೋಪಣ್ಣ. ಬಣ್ಣದ ವೇಷದಲ್ಲಿ ನಿನ್ನನ್ನು ಮೀರಿಸುವವರು ಇನ್ನಿಲ್ಲವೆನ್ನುವಂತೆ ಮಾಡಿದ್ದೀಯ” ಎಂದು ಹೊಗಳಿದನು. ಗೋಪಣ್ಣ ಆ ಮಾತಿಗೆ ವಿನಯದಿಂದ ನಸುನಾಚಿ,“ಎಲ್ಲಾ ನಿಮ್ಮ ಪ್ರೀತಿ. ಏನೂ ತಿಳಿಯದ ಹಳ್ಳಿಯ ಈ ಕುರುಬನಿಗೆ ಒಂದಿಷ್ಟು ವಿದ್ಯೆ ಕಲಿಸಿದಿರಿ. ದಂಡಿನಲ್ಲಿದ್ದು, ಕುದುರೆಯೋಡಿಸುವುದನ್ನೇ ಕಲಿತು, ನಡೆಯುವುದನ್ನೇ ಮರೆತುಬಿಟ್ಟಿದ್ದ ಈ ಕಾಲುಗಳಿಗೆ ಕುಣಿತ ಕಲಿಸಿದಿರಿ. ‘ಹೊಡಿ, ಕಡಿ, ಬಡಿ’ ಎನ್ನುವುದಕ್ಕೆ ಒಗ್ಗಿದ್ದ ನಾಲಿಗೆಗೆ ಒಂದಿಷ್ಟು ‘ಅರ್ಥ ಹೇಳುವ’ ಅಭ್ಯಾಸ ಮಾಡಿದಿರಿ. ಅಂತೂ ತಮ್ಮ ದಯೆಯಿಂದಾಗಿ, ಅಲ್ಪಸ್ವಲ್ಪ ಕಲಾಸೇವೆ ಮಾಡುವಂತಾಯಿತು” ಎಂದು ನುಡಿದನು. ಚೌಕಿಯಲ್ಲಿ ಅಷ್ಟು ಜನರಿದ್ದರೂ ಅದು ನಿಶ್ಶಬ್ದವಾಗಿತ್ತು. ಗೋಪಣ್ಣನ ಮಾತನ್ನು ಉಳಿದವರೆಲ್ಲರೂ ಕೇಳಿದರು. ಮೌನವಾಗಿಯೇ ಅವರೆಲ್ಲರೂ ಅವನ ಮಾತಿಗೆ ತಮ್ಮ ಸ್ವರವನ್ನೂ ಸೇರಿಸಿದರು. ಬಣ್ಣದ ಗೋಪಣ್ಣ ಹೇಳಿದುದು ಬರೇ ಹೊಗಳಿಕೆಯ ಮಾತಲ್ಲ. ಪಾರ್ತಿಸುಬ್ಬನ ಯೋಗ್ಯತೆ ಅದಕ್ಕೂ ಮೀರಿದುದು. ಕಲಾಪ್ರಪಂಚದಲ್ಲಿ ಬೆಳೆದ ಬೃಹತ್ತಾದ ಕಲ್ಪವೃಕ್ಷ ಆತ. ಕಡುಬಡವನಾಗಿ ಹುಟ್ಟಿದ್ದರೂ ಕಲೆಯ – ಸಾಹಿತ್ಯದ ಮೇಲಿನ ಆಸಕ್ತಿಯಿಂದ ನಿರಂತರವಾಗಿ ದುಡಿದು, ಯಕ್ಷಗಾನದ ಗಣ್ಯ ಕವಿಯಾಗಿದ್ದನು. ಕುಂಬಳೆಯರಸರ ನೆರವಿನಿಂದ ತಾನೇ ಒಂದು ಯಕ್ಷಗಾನ ಮಂಡಲಿಯನ್ನು ಸ್ಥಾಪಿಸಿ, ಯಕ್ಷಗಾನವನ್ನು ತುಂಬಾ ಪ್ರಚಾರಗೊಳಿಸಿ, ಅದನ್ನು ಕನ್ನಡ ಜಿಲ್ಲೆಯಲ್ಲೆಲ್ಲಾ ಹರಡಿದನು. ಕೆಳದಿನಾಯಕರ, ಟಿಪ್ಪುಸುಲ್ತಾನನ, ಕುಂಬಳೆಯರಸರ ದಂಡಿನಲ್ಲಿದ್ದ ತರುಣರಿಗೆ ಅರ್ಥಗಾರಿಕೆ, ಬಣ್ಣಗಾರಿಕೆ, ಕುಣಿತಗಳನ್ನು ಕಲಿಸಿ ಯಕ್ಷಗಾನದ ನಟರನ್ನಾಗಿ ಮಾಡಿದನು. ಅವರಲ್ಲಿ ಸಿಡಿಲುಮರಿ ಕೆಂಗಣ್ಣ ನಾಯಕ, ಬಣ್ಣದ ಗೋಪಣ್ಣ, ರಾಮಚಂದ್ರ ಮೊದಲಾದವರು ತುಂಬಾ ಹೆಸರು ಪಡೆದು ಪಾರ್ತಿಸುಬ್ಬನ ಪ್ರೀತಿಯ ಶಿಷ್ಯರಾಗಿದ್ದರು. + +ಗೋಪಣ್ಣನ ಹೊಗಳಿಕೆಯ ಮಾತುಗಳನ್ನು ಕೇಳಿದ ಪಾರ್ತಿಸುಬ್ಬ ಗಂಭೀರವಾಗಿ ನಕ್ಕು,“ನಾನೇನು ಮಾಡಿದೆ? ನಿಮ್ಮ ಮನಸ್ಸಿನಲ್ಲಿದ್ದ ಕಲಾಸಕ್ತಿಯೇ ನಿಮ್ಮನ್ನಿಂದು ಈ ಸ್ಥಾನಕ್ಕೆ ಮುಟ್ಟಿಸಿದೆ. ಎಲ್ಲವೂ ಶ್ರೀ ಗೋಪಾಲಕೃಷ್ಣನ ಕೃಪೆ ಗೋಪಣ್ಣ.” ಎನ್ನುತ್ತಾ ದೇವಾಲಯದೆಡೆಗೆ ತಿರುಗಿ ಕೈಮುಗಿದನು. ಅವನೊಡನೆ, ಉಳಿದವರೂ ಆ ಭಕ್ತಿಪ್ರವಾಹದಲ್ಲಿ ತೇಲಿ, ತಮಗರಿಯದಂತೆಯೇ ತಾವೂ ಕೈಗಳನ್ನು ಜೋಡಿಸಿದರು. ರಂಗಸ್ಥಳದಲ್ಲಿ ಸ್ತ್ರೀ ವೇಷ ಕುಣಿಯುತ್ತಿತ್ತು. ಅಲ್ಲಿಂದ ಕೇಳಿ ಬರುತ್ತಿದ್ದ ಮೃದಂಗದ ತಾಳ ಬದ್ಧವಾದ ಸಪ್ಪಳ ಕೇಳುತ್ತಾ ಚೌಕಿಯಲ್ಲಿದ್ದ ನಟರೆಲ್ಲರೂ ಕುಳಿತಲ್ಲಿಯೇ ತಮ್ಮ ಕಾಲುಗಳನ್ನು ಕುಣಿಸುತ್ತಿದ್ದರು. “ಹೊತ್ತು ಕಂತಿ ಆಗಲೇ ನಾಲ್ಕು ಗಳಿಗೆ ಕಳೆಯಿತು. ಇನ್ನು ಪ್ರಸಂಗ ಸುರು ಮಾಡಬೇಕು.” ಪಾರ್ತಿಸುಬ್ಬ ಅಪ್ಪಣೆ ಕೊಡುವ ಸ್ವರದಲ್ಲಿ ನುಡಿದನು. ಮೇಳದ ಆಳೊಬ್ಬನು ಭಾಗವತರ ಅಪ್ಪಣೆಯನ್ನು ಮುಟ್ಟಿಸಲು ರಂಗಸ್ಥಳದೆಡೆಗೆ ಧಾವಿಸಿದನು.“ಏನು ಸಿಡಿಲುಮರೀ, ಇನ್ನೂ ಆಗಿಲ್ಲವೇ?” ಪಾರ್ತಿಸುಬ್ಬ ಕೇಳಿದನು.“ಆಯಿತು ಗುರುಗಳೇ, ಇನ್ನೇನು ಕಿರೀಟ ಕಟ್ಟಿಕೊಳ್ಳುತ್ತಿದ್ದೇನೆ” ಎಂದನು ಕೆಂಗಣ್ಣ ನಾಯಕ. ಕೆಂಗಣ್ಣ ನಾಯಕನು ಆ ಮೇಳದ ಗಣ್ಯ ನಟ; ಪಾರ್ತಿಸುಬ್ಬನ ಮೆಚ್ಚಿನ ಶಿಷ್ಯ. ಅವನ ವಾಕ್ಸಾಮರ್ಥ್ಯ, ನಟನಾ ಚಾತುರ್ಯಗಳಿಗೆ ಮನಸೋತ ಪಾರ್ತಿಸುಬ್ಬ, ಅವನಿಗೆ ‘ಸಿಡಿಲು ಮರಿ’ ಎಂಬ ಬಿರುದನ್ನಿತ್ತಿದ್ದನು. + +‘ಸಿಡಿಲುಮರಿ’ – ಕವಿ ಪಾರ್ತಿಸುಬ್ಬ, ‘ಅಂಗದ ಸಂಧಾನ’ ಯಕ್ಷಗಾನ ಕಾವ್ಯ ಬರೆಯುತ್ತಾ, ಎಳೆಯ ವೀರನಾದ ಅಂಗದನ ಪಾತ್ರಕ್ಕೆ ಮನಸೋತು, ಒಲಿದು, ಕೊಟ್ಟ ಬಿರುದು, “ಸಿಡಿಲು ಮರಿಯಂಗದ”. ಪಾರ್ತಿಸುಬ್ಬನ ಕನಸಿನ ಪಾತ್ರಸೃಷ್ಟಿಯಾದ ಅಂಗದವನ್ನು ಮೂರ್ತಿಮತ್ತಾಗಿ ಜೀವಂತಕಳೆಯಿಂದ ಆಡಿ ತೋರಿಸಲು ಕೆಂಗಣ್ಣ ನಾಯಕನಿಗಲ್ಲದೆ ಇನ್ನಾರಿಗೂ ಆಗುತ್ತಿರಲಿಲ್ಲ. ಆದುದರಿಂದಲೇ ಪಾರ್ತಿಸುಬ್ಬ, ತನ್ನ ಪಾತ್ರದ ಬಿರುದನ್ನು, ಆ ಪಾತ್ರವನ್ನು ಮನವೊಲಿಯುವಂತೆ ಅಭಿನಯಿಸುತ್ತಿದ್ದ ತನ್ನ ಶಿಷ್ಯ ಕೆಂಗಣ್ಣ ನಾಯಕನಿಗೇ ಇತ್ತಿದ್ದನು. “ಕೆಂಗಣ್ಣ ನಾಯಕ” ಎಂಬ ಅವನ ಹೆಸರೇ ಎಲ್ಲರಿಗೂ ಮರೆತು, ಈಗ ಎಲ್ಲರ ಬಾಯಲ್ಲೂ ‘ಸಿಡಿಲುಮರಿ’ಯಾಗಿ ಅವನು ವಿರಾಜಿಸುತ್ತಿದ್ದನು. ಇಂದಿನ ಆಟದಲ್ಲೂ ಸಿಡಿಲು ಮರಿಯು ಸಿಡಿಲು ಮರಿ ಅಂಗದನ ಪಾತ್ರವನ್ನು ವಹಿಸುವನು. ಒಂದೆರಡು ನಿಮಿಷಗಳಲ್ಲಿ ಸಿಡಿಲುಮರಿ ಕೆಂಗಣ್ಣನಾಯಕ ಅಂಗದನಾಗಿ ಬಂದು ತನ್ನ ಗುರುಗಳ ಮುಂದೆ ನಿಂತುಕೊಂಡನು. ಪಾರ್ತಿಸುಬ್ಬ ಅವನ ವೇಷವನ್ನು ಪರಿಶೀಲಿಸಿ ನುಡಿದನು : “ಚೆನ್ನಾಗಿದೆ – ಹೋಗು; ಕಲಾಸರಸ್ವತಿಯ, ಶ್ರೀ ಗೋಪಾಲಕೃಷ್ಣನ ಪ್ರೀತ್ಯರ್ಥವಾಗಿ ಅಭಿನಯಿಸು.”ಗುರುಗಳ ಆಶೀರ್ವಾದದೊಡನೆ ಸಿಡಿಲುಮರಿ ಚೌಕಿಯಿಂದ ಹೊರಗೆ ಕಾಲಿಟ್ಟನು. ಪಾರ್ತಿಸುಬ್ಬ ಅರೆಕ್ಷಣ ಅವನು ಹೋಗುವುದನ್ನೇ ಗಂಭೀರವಾಗಿ ನೋಡುತ್ತಾ ಕುಳಿತನು. ಅನಂತರ ಎದ್ದು ‘ಭಾಗವತರ ಮುಂಡಾಸ’ನ್ನು ತಲೆಗೆ ಕಟ್ಟಿ, ಕಲಾಸರಸ್ವತಿಯನ್ನು ಮನಸ್ಸಿನಲ್ಲಿಯೇ ಧ್ಯಾನಿಸಿ, ತನ್ನ ಜಾಗಟೆಗೆ ನಮಸ್ಕರಿಸಿ ಅದನ್ನು ಕೈಗೆತ್ತಿಕೊಂಡು ರಂಗಸ್ಥಳದೆಡೆಗೆ ನಡೆದನು. ಪಾತ್ರಧಾರಿಗಳೆಲ್ಲರೂ ಅವನನ್ನು ರಂಗಸ್ಥಳದ ಹಿಂಬದಿಯ ತನಕ ಹಿಂಬಾಲಿಸಿದರು. ಪಾರ್ತಿಸುಬ್ಬ ಬಂದೊಡನೆಯೇ ಗೌರವದಿಂದ ಎಲ್ಲರೂ ಎದ್ದು ನಿಂತರು. ಅಷ್ಟರ ತನಕ ಸಭಾಲಕ್ಷಣ ಪದಗಳನ್ನು ಹಾಡುತ್ತಾ ನಿತ್ಯವೇಷಗಳನ್ನು ಕುಣಿಸುತ್ತಿದ್ದ ಕಿರಿಯ ಭಾಗವತ ಎದ್ದು ಬಂದನು. ಪಾರ್ತಿಸುಬ್ಬನು ಮೃದಂಗಕ್ಕೆ ನಮಸ್ಕರಿಸಿ ತನ್ನ ಸ್ಥಾನದಲ್ಲಿ ಕುಳಿತುಕೊಂಡನು. ಅನಂತರ ‘ಪ್ರಸಂಗಪೀಠಿಕೆ’ ಆರಂಭವಾಯಿತು. ಅಷ್ಟರಲ್ಲಿ ಅರಸರು ಆಟ ನೋಡುವುದಕ್ಕಾಗಿ ಬಂದು ಕುಳಿತರು. ಅವರಿಗಾಗಿಯೇ ರಂಗಸ್ಥಳದ ಬದಿಯಲ್ಲಿ ಒಂದು ವೇದಿಕೆಯನ್ನೂ ಕಟ್ಟಿ ಸಿಂಗರಿಸಿದ್ದರು. ಅವರು ಬಂದೊಡನೆಯೇ ಸಭೆ ಗಂಭೀರವಾಗಿ ಎದ್ದು ನಿಂತು ಗೌರವ ಸೂಚಿಸಿತು. + +ಅರಸರ ಅಪ್ಪಣೆಯಂತೆ ಕಥಾಭಾಗವನ್ನು ಪ್ರಾರಂಭ ಮಾಡಲಾಯಿತು. ರಂಗಭೂಮಿಗೆ ಪರದೆಯನ್ನು ಹಿಡಿದರು – ಕ್ರಮದಂತೆ ರಾಮಲಕ್ಷ್ಮಣರ ಒಡ್ಡೋಲಗವಾಯಿತು. ಅನಂತರ ಸುಗ್ರೀವನ ಪ್ರವೇಶವಾಯಿತು. ರಾವಣನೊಡನೆ ಯುದ್ಧ ಹೂಡುವ ಮೊದಲೊಮ್ಮೆ ರಾಯಭಾರಿಯೊಬ್ಬನನ್ನು ಕಳುಹಿಸಬೇಕೆಂಬ ಅಭಿಪ್ರಾಯ ಬಂದಾಗ, ಸುಗ್ರೀವನು, ತನ್ನಣ್ಣನ ಮಗನಾದ ಮಹಾಶೂರ ಅಂಗದನನ್ನು ಕಳುಹಿಸಬಹುದೆಂದು ಸೂಚಿಸಿದನು. ರಾಮ ಲಕ್ಷ್ಮಣರು ಅದಕ್ಕೆ ಒಪ್ಪಿ ಅಂಗದನನ್ನು ಸನ್ನಿಧಿಗೆ ಕರೆಯಲು ದೂತರನ್ನು ಕಳುಹಿಸಿದರು.ಶ್ರೀ ರಾಮನಿಂದ ಕರೆಯಲ್ಪಟ್ಟ ಅಂಗದನು ಇನ್ನು ರಂಗಭೂಮಿಯನ್ನು ಪ್ರವೇಶಿಸಬೇಕು. ಹಿಮ್ಮೇಳವಾದ ಮೃದಂಗ, ಚಂಡೆ, ಜಾಗಟೆಗಳು ತಾರಕಸ್ವರದಲ್ಲಿ ಮೊಳಗುತ್ತಾ ವೀರರಸವನ್ನು ಪ್ರೇಕ್ಷಕರೆದೆಯಲ್ಲಿ ತುಂಬುತ್ತಿದ್ದುವು. ಭಾಗವತರು ಉಚ್ಚಸ್ವರದಲ್ಲಿ ಅಂಗದನ ಪ್ರವೇಶದ ಪದವನ್ನು ಹಾಡುತ್ತಿದ್ದರು : + + + +“ರಾಮನಾಣತಿಯಂತೆ ಸಿಡಿಲುಮರಿಯಂಗದನು….”ಪ್ರೇಕ್ಷಕರೆಲ್ಲರೂ, ವೀರರಸವನ್ನು ಉಕ್ಕೇರಿಸುವ ಸನ್ನಿವೇಶದಲ್ಲಿ ತಲ್ಲೀನರಾಗಿ, ವೀರಮೂರ್ತಿ ಅಂಗದನ ಬರವನ್ನೇ ಹಾರೈಸುತ್ತಾ ಕುಳಿತಿದ್ದರು. ಸನ್ನಿವೇಶ, ಹಾಡು, ಹಿಮ್ಮೇಳಗಳು ಪ್ರೇಕ್ಷಕರನ್ನು ಕುತೂಹಲದಿಂದ ಬಂದಿಯಾಗಿ ಮಾಡಿದ್ದುವು.ಅಂಗದನು ಇನ್ನೇನು ರಂಗಭೂಮಿಯನ್ನು ಪ್ರವೇಶಿಸಬೇಕು – ಅಷ್ಟರಲ್ಲಿ ಕುದುರೆಯೊಂದು ಬಯಲಾಟ ನಡೆಯುತ್ತಿದ್ದೆಡೆಗೆ ನೆಗೆದು ಬಂತು. ಕುದುರೆಯನ್ನೇರಿದ್ದ ಸವಾರನು, ಕುದುರೆಯಿಂದ ಹಾರಿ ಕೆಳಗೆ ನಿಂತನು. ಅವನೊಬ್ಬ ಸೈನಿಕ. ಅರಸನೆಡೆಗೆ ಫಕ್ಕನೆ ಸರಿದು ವಿನಯದಿಂದ ವಂದಿಸಿ :“ಮಹಾಪ್ರಭೂ, ಕ್ಷಮಿಸಬೇಕು” ಎಂದು ತೊದಲಿದನು. ಈ ವಿಚಿತ್ರ ಘಟನೆಯಿಂದ ಗಾಬರಿಗೊಂಡ ಜನರೆಲ್ಲರೂ ಆಶ್ಚರ್ಯ ಭಯಗಳಿಂದ ಪ್ರೇರಿತರಾಗಿ ಎದ್ದು ನಿಂತರು. ಕ್ಷಣದ ಹಿಂದೆ ಅವರಲ್ಲಿ ಒಡಮೂಡಿದ್ದ ವೀರರಸವು ತಾನಾಗಿ ಕರಗಿಹೋಗಿ, ಈಗ ಯಾವುದೋ ಆಶಂಕೆಯ ಅಮಿತ ಭಯವೊಂದು ಅವರನ್ನು ಆವರಿಸಿತ್ತು. ಬಯಲಾಟದ ಕಥಾಭಾಗ, ಸನ್ನಿವೇಶ, ಎಲ್ಲವೂ ಅವರ ಮನದಿಂದ ಮರೆಯಾಗಿದ್ದವು. ಭಯದಿಂದ ತಳ್ಳಂಕಗೊಂಡ ರಾಜರು, ಸೈನಿಕನನ್ನು ಅವಸರವಸರವಾಗಿ ಪ್ರಶ್ನಿಸಿದರು :“ಸೈನಿಕ, ಏನಾಯಿತು? ಏನು ನಡೆಯಿತು? ಏನು ಸುದ್ದಿ?”“ಮಹಾಪ್ರಭೂ, ಕ್ಷಮಿಸಬೇಕು. ಇಂಗ್ಲೀಷರ ಸೈನಿಕರು ಸಾಧಾರಣ ಇನ್ನೂರು ಮಂದಿ ಕಾಸರಗೋಡಿನ ಕಡೆಯಿಂದ ಇಲ್ಲಿಗೆ ಮುನ್ನುಗ್ಗುತ್ತಿದ್ದಾರೆ….” + +ಹಾಯಾಗಿ, ಪುರಾಣ ಪುಣ್ಯಕಥೆಯ ನಂದನೋದ್ಯಾನದಲ್ಲಿ, ಕಲಾದೇವಿಯ ಸಿರಿಭೂಮಿಯಲ್ಲಿ ವಿಹರಿಸುತ್ತಿದ್ದ ಎಲ್ಲರ ಚೈತನ್ಯಗಳ ಮೇಲೂ ಬರಸಿಡಿಲಿನಂತೆ ಸೈನಿಕನ ಈ ಮಾತು ಆಘಾತಿಸಿತು. ಆ ಹೊಡೆತದಿಂದ ಅಲ್ಲಿ ಕೂಡಿದ ಸಾವಿರಾರು ಮಂದಿಯಲ್ಲಿ ಪ್ರಜ್ಞೆ ತಪ್ಪಿದವರೆಷ್ಟೋ, ಜಂಘಾಬಲವೇ ಉಡುಗಿ ನೆಲಕ್ಕೆ ಕುಸಿದು ಕೂತವರೆಷ್ಟೋ! ಹೆಂಗಸರು ಮಕ್ಕಳಂತೂ ತಮ್ಮ ಸರ್ವಸ್ವ ಸೂರೆಯಾದವರಂತೆ ದೊಡ್ಡ ದನಿಯಿಂದ ಅಳತೊಡಗಿದ್ದರು….ಸೈನಿಕ ನುಡಿಯುತ್ತಲೇ ಇದ್ದ :“ಮೈಸೂರಲ್ಲಿ ಟಿಪ್ಪು ಸುಲ್ತಾನನನ್ನು ಶ್ರೀರಂಗಪಟ್ಟಣದ ಕೋಟೆಯ ಬಾಗಿಲಿನಲ್ಲಿ ಇಂಗ್ಲೀಷರು ಕೊಂದು ಹಾಕಿದರಂತೆ. ಟಿಪ್ಪು ಸುಲ್ತಾನನ ಸಾಮ್ರಾಜ್ಯ ನುಚ್ಚು ನೂರಾಯಿತಂತೆ. ಆ ಸಾಮ್ರಾಜ್ಯದ ಮೇಲೆ ಆಘಾತಿಸಿದ ಧೂಮಕೇತು, ಈಗ ಘಟ್ಟದಿಂದ ಕೆಳಗಿಳಿದಿದೆ. ಟಿಪ್ಪು ಸುಲ್ತಾನನ ಸಾಮಂತರಾಗಿದ್ದ ಕನ್ನಡ ಜಿಲ್ಲೆಯ ಒಬ್ಬೊಬ್ಬ ರಾಜನನ್ನೂ ಬಗ್ಗಿಸತೊಡಗಿದ್ದಾರೆ; ಒಂದೊಂದು ಕೋಟೆಯನ್ನೂ ಅಧೀನಪಡಿಸಿಕೊಳ್ಳ ತೊಡಗಿದ್ದಾರೆ. ದಕ್ಷಿಣದಲ್ಲಿ ಬೇಕಲ, ಕಾಸರಗೋಡುಗಳಂತಹ ಸುಭದ್ರವಾದ ಕೋಟೆಗಳನ್ನೇ ಹೊಡೆದು ನುಂಗಿದ ಫಿರಂಗಿ ಯಮರಾಯ, ಈಗ ಉತ್ತರಕ್ಕಾಗಿ ಕುಂಬಳೆಗೆ ದಾಳಿಯಿಡುತ್ತಿದ್ದಾನೆ. ಅವರ ಸೈನ್ಯ ಈಗಾಗಲೇ ಅರ್ಧದಾರಿ ದಾಟಿರಬಹುದು….’ ಸೈನಿಕನ ವಿವರಣೆಗಳೊಂದೂ ಯಾರ ಕಿವಿಯನ್ನೂ ಸೇರುತ್ತಿರಲಿಲ್ಲ. ತನ್ನ ಕರ್ತವ್ಯವನ್ನು ಮಾಡಿ ಮುಗಿಸುವ ಧನ್ಯತೆಯಿಂದಲೋ ಎಂಬಂತೆ ಅವನು ನುಡಿಯುತ್ತಿದ್ದನು. + +ಅರಸರು ಮರಗಟ್ಟಿ ರಾಜಾಸನದಲ್ಲಿ ಒರಗಿದ್ದರು. ಅವರ ಸುತ್ತಮುತ್ತಲೂ ಇದ್ದ ಪರಿವಾರ, ಕೈಯಲ್ಲಿದ್ದ ಆಯುಧಗಳನ್ನೂ ಮರೆತು, ತಮ್ಮ ಆತ್ಮರಕ್ಷಣೆಯನ್ನು ಮಾಡುವ ಉಪಾಯ ತೋರಿಸೆಂದು ದೇವರನ್ನು ಮೊರೆಯಿಡುತ್ತಿತ್ತು. ಹೊಟ್ಟೆ ತುಂಬಿಸುವುದಕ್ಕಾಗಿ ಮಾತ್ರ ರಾಜನನ್ನು ಓಲೈಸುತ್ತಿದ್ದ ಅವರ ಮನಸ್ಸಿನಿಂದ, ಈ ಗಂಡಾಂತರದ ಸಂದರ್ಭದಲ್ಲಿ ರಾಜಭಕ್ತಿ ಮಾಯವಾಗಿತ್ತು. ಅನಿರೀಕ್ಷಿತವಾದ ವಿಧಿಯ ದುಷ್ಟಪೀಡೆ ಎಂಬ ಘಾತದ ಭಯದಿಂದ ಮಂಜುಗಟ್ಟಿ ಅಚಲವಾಗಿದ್ದ ಆ ಗುಂಪಿನಲ್ಲಿ ಕ್ಷಣ ಹೊತ್ತಿನಲ್ಲಿಯೇ ಚೈತನ್ಯ ಸಂಚರಿಸಿತು. ಅಲ್ಲಿ ನೆರೆದಿದ್ದ ಧನಿಕರು, ವರ್ತಕರು, ರೈತರು, ತಮ್ಮ ತಮ್ಮ ಸೊತ್ತುಗಳನ್ನೂ, ಕುಟುಂಬಗಳನ್ನೂ ಸೈನಿಕರ ದುರಾಕ್ರಮಣದಿಂದ ಕಾಪಾಡುವುದಕ್ಕಾಗಿ ತಮ್ಮ ತಮ್ಮ ನಿವಾಸದತ್ತ ಆಕ್ರಂದಿಸುತ್ತಾ ಓಡತೊಡಗಿದರು. ಕ್ಷಣ ಮಾತ್ರದಲ್ಲಿ ರಸಸರಸ್ವತಿಯ ಆರಾಧನಾ ಭೂಮಿಯಾದ ರಂಗಭೂಮಿ, ಮಸಣದ ಭೀಭತ್ಸತೆಯನ್ನು ತಾಳಿತ್ತು. + +ಮೆಲ್ಲಮೆಲ್ಲನೆ ಅರಸರು ಚೇತರಿಸಿಕೊಂಡು ನುಡಿದರು:“ಎಲ್ಲಿ ನಮ್ಮ ಸೇವಕರು? ನಡೆಯೋಣ – ಅರಮನೆಗೆ. ಏನಾದರೂ ಬರುವ ವಿಪತ್ತಿನಿಂದ ರಕ್ಷಣೆಯ ದಾರಿ ನೋಡಬೇಕಲ್ಲ.” ಅರಸರ ಸೇವಕರು ಕೂಡಿದರು; ಅರಸರನ್ನು ಅರಮನೆಗೆ ಕರೆದೊಯ್ಯಲು ಸಿದ್ಧರಾದರು. ಆ ಅನಿರೀಕ್ಷಿತ ಆಘಾತದಿಂದ ನೊಂದುಕೊಂಡ ಪಾರ್ತಿಸುಬ್ಬನು ರಂಗಭೂಮಿಯಿಂದೆದ್ದು ಅರಸರ ಸಮ್ಮುಖಕ್ಕೆ ಬಂದಿದ್ದನು. ಅವನ ದುಃಖಕ್ಕೆ ಮಿತಿಯಿರಲಿಲ್ಲ. ದೇವರ ಸೇವೆಗಾಗಿ ಆಡುತ್ತಿರುವ ಈ ಬಯಲಾಟವನ್ನು, ಮರ್ಯಾದೆಯಿಂದ ಕೊನೆಗಾಣಿಸುವ ಬಯಕೆ – ಹರಕೆ ದೇವರದಲ್ಲವೇನೋ ಎಂದು ಮನಸ್ಸಿನಲ್ಲಿಯೇ ಮಿಡುಕಿಕೊಂಡನು. + +“ಈ ವಿಪತ್ತಿನಿಂದ ಪಾರಾಗುವುದು ಹೇಗೆ?”– ಎಂಬ ಪ್ರಶ್ನೆ ಎಲ್ಲರ ಮನಸ್ಸನ್ನೂ ಕಾಡುತ್ತಿತ್ತು. ತಮ್ಮ ಅರಸರು ಅಷ್ಟು ಶಕ್ತಿಶಾಲಿಯಲ್ಲ. ಈ ಅರಸರ ತಂದೆಯವರ ಕಾಲದಲ್ಲಿಯೇ ಕುಂಬಳೆಯರಸರ ಪರಾಕ್ರಮ – ಅಟ್ಟಹಾಸ ಮುಗಿದುಹೋಗಿತ್ತು. ಆಗ, ಕೆಳದಿಯ ನಾಯಕರ ಸಾಮಂತನಾಗಿದ್ದ ಅರಸು, ಚಂದ್ರಗಿರಿ ನದಿಯ ದಕ್ಷಿಣದ ಮಲೆಯಾಳೀ ರಾಜನಾಗಿದ್ದ ಕೋಲತ್ತರಸನೊಡನೆ ಒಳಸಂಚು ಹೂಡಿ ಕೆಳದಿಯ ನಾಯಕರ ಸಾರ್ವಭೌಮತ್ವದ ಹೊರೆಯನ್ನು ತಪ್ಪಿಸಿಕೊಂಡು ಸ್ವತಂತ್ರರಾಗಲು ಪ್ರಯತ್ನಿಸಿದ್ದರು. ಅದರಿಂದ ಸಿಟ್ಟುಗೊಂಡ ನಾಯಕರು, ಸೈನ್ಯ ಕಳುಹಿಸಿ, ಎರಡು ರಾಜರನ್ನೂ ಸೋಲಿಸಿದ್ದರು. ಕುಂಬಳೆಯರಸರು ಕೈದಿಯಾಗಿ ತಮ್ಮ ಸೆರೆಮನೆಯಲ್ಲಿಯೇ ಕೊಳೆಯುತ್ತಿದ್ದರು. ಆಗ ಅವರ ಕಾವಲುಗಾರರು ಅವರ ಮೇಲೆ ಕನಿಕರಿಸಿ, ಅವರಿಗೆ ಹೆಣ್ಣುವೇಷ ತೊಡಿಸಿ ಸೆರೆಮನೆಯಿಂದ ಪಾರುಮಾಡಿದ್ದರು. ಪರಾಕ್ರಮಿಯಾಗಿದ್ದ ಆ ಅರಸು ಪ್ರಾಣರಕ್ಷಣೆಗಾಗಿ ಹೆಣ್ಣು ವೇಷ ಧರಿಸಿದುದೇ ಅವರ ವಂಶಕ್ಕೆ ಒಂದು ಶಾಪವಾಗಿ ಪರಣಮಿಸಿತೇನೋ! ಅವರ ಅನಂತರ ಪಟ್ಟಕ್ಕೆ ಬಂದ ಅವರ ಮಗ ಈಗಿನ ಅರಸು – ಯುದ್ಧದ ಹೆಸರು ಕೇಳಿದರೇ ನಡುಗುತ್ತಿದ್ದರು. ಅಂತಹವರಿಂದ ಈ ಗಂಡಾಂತರ ಹೇಗೆ ನಿವಾರಿಸಲ್ಪಡಬೇಕು? + +ಅರಸು, ತನ್ನ ಐಶ್ವರ್ಯವನ್ನೂ ಪ್ರಾಣವನ್ನೂ ರಕ್ಷಿಸುವುದಕ್ಕಾಗಿ ಎಲ್ಲಾದರೂ ಓಡಿಹೋಗಿ ಅಡಗಿಕೊಳ್ಳಬೇಕೆಂದು ನಿಶ್ಚಯಿಸಿಕೊಂಡು ಗಡಿಬಿಡಿಯಿಂದ ತನ್ನ ಸೇವಕರೊಡನೆ ತನ್ನ ಅರಮನೆಯತ್ತ ನಡೆದರು. ಈ ಭಯಂಕರವಾದ ವಾರ್ತೆಯನ್ನು ತಂದ ಸೈನಿಕನು ತನಗೆ ಅರಸರ ಅಪ್ಪಣೆಯೇನೆಂದು ಅರಿಯದೆ ಅಲ್ಲಿಯೇ ನಿಂತಿದ್ದನು. ಅವನ ಕುದುರೆಯು ತನಗೇನಪ್ಪಣೆ ಎಂಬ ಪ್ರಶ್ನಿಸುವಂತೆ ಅವನನ್ನೇ ನೋಡುತ್ತಾ ಬಳಿಯಲ್ಲೇ ನಿಂತಿತ್ತು. ಕವಿ ಪಾರ್ತಿಸುಬ್ಬನ ಅಂತರಂಗ ಬಿರುಗಾಳಿಯೆದ್ದ ಕಡಲಿನಂತೆ ಕಲಕಿ ಹೋಗಿತ್ತು. ತನ್ನ ಆಟ ಆಗದುದರಿಂದಲೂ ಹೆಚ್ಚಿನ ದುಃಖವು, ಈ ವಿಚಿತ್ರ ದೈವದಾಟದಿಂದ ಪಾರಾಗುವುದು ಹೇಗೆಂಬ ಯೋಚನೆಯಿಂದ ಅವನ ಅಂತರಂಗ ತುಂಬಿತ್ತು. ಈ ಸಂದರ್ಭದಲ್ಲಿ ಬೇರೆ ದಾರಿಗಾಣದ ಅವನ ಪರಿಪಕ್ವವಾದ ಕವಿ ಹೃದಯವು ತನ್ನ ಇಷ್ಟದೈವವಾದ ಶ್ರೀ ಗೋಪಾಲಕೃಷ್ಣನನ್ನು ‘ತ್ರಾಹಿ’ ಎಂದು ಮೊರೆಯಿಡುತ್ತಿತ್ತು. ಆ ಒಂದು ಕ್ಷಣದಲ್ಲಿ – ಅವರ ಮೇಲೆ ಕವಿದಿದ್ದ ದುಃಖದ ಕಪ್ಪು ಮೋಡದಲ್ಲಿ ಕಣ್ಣು ಕೋರೈಸುವ ಮಿಂಚೊಂದು ಹೊಳೆಯಿತು. ಸಿಡಿಲುಮರಿ ಕೆಂಗಣ್ಣ ನಾಯಕ ಎಲ್ಲಿಂದಲೋ ಹಾರಿ ಬಂದು ಗುರುವಿನ ಪಾದಗಳಿಗೆರಗಿ ಹೇಳಿದನು: + +“ಗುರುವೇ, ನನ್ನನ್ನು ಆಶೀರ್ವದಿಸಿರಿ. ಈ ಶಿಷ್ಯನು ತಮ್ಮ ಅನುಗ್ರಹದಿಂದ ಒಮ್ಮೆ ಮರೆತ ವಿದ್ಯೆಯನ್ನು ಲೋಕಕಲ್ಯಾಣಾರ್ಥವಾಗಿ ಪುನಃ ನೆನಪಿಗೆ ತರಲು ಬಯಸುವನು.”ಪಾರ್ತಿಸುಬ್ಬನಿಗೆ, ಅಚ್ಚರಿಯಾಯಿತು. ಸಿಡಿಲುಮರಿಯನ್ನು ಹಿಡಿದೆತ್ತಿ ತಬ್ಬಿ ಕೊಂಡು ಅರ್ಥವಾಗದವನಂತೆ ತೊದಲಿದನು:“ಅಂದರೇನು ಸಿಡಿಲುಮರೀ, ಯುದ್ಧಕ್ಕೆ ಹೊರಡುವಿಯಾ?”“ಹೌದು – ಪ್ರೀತಿಯಿಂದ ತಾವಿತ್ತ ಸಿಡಿಲುಮರಿಯೆಂಬ ಬಿರುದನ್ನು ಸಾರ್ಥಕಗೊಳಿಸಲು ಬಯಸುವೆ” ಎನ್ನುತ್ತಾ ಬಾಗಿ ಗುರುವಿಗೆ ಚರಣಧೂಳಿಯನ್ನು ಹಣೆಗಿಟ್ಟುಕೊಂಡು ಮರು ಕ್ಷಣದಲ್ಲಿಯೇ ಬಳಿಯಲ್ಲಿದ್ದ ಸೈನಿಕನ ಕುದುರೆಯ ಮೇಲೆ ಟಣ್ಣನೆ ಜಿಗಿದು ಮಿಂಚುನೋಟದಿಂದ ಮರೆಯಾದನು. ಎಲ್ಲರೂ ಬೆರಗಾಗಿ ನೋಡುತ್ತಿದ್ದರು. ತಮ್ಮ ಕಿವಿ ಕಣ್ಣುಗಳ ಮೇಲೆ ಎಷ್ಟೆಂದರೂ ಅವರಿಗೆ ನಂಬಿಕೆ ಹುಟ್ಟದೆ ತೊಳಲಾಟದಲ್ಲಿ ಸಿಲುಕಿದ್ದರು. ಕ್ಷಣಹೊತ್ತು ಕಳೆದಾಗ ಪಾರ್ತಿಸುಬ್ಬನಿಗೆ ನಡೆದುದೇನೆಂಬುದರ ಅರಿವು ಬಂತು. ಆದ ಪ್ರಮಾದಕ್ಕಾಗಿ ಅವನ ಮನಸ್ಸು ಮಿಡುಕಿತು. ಇನ್ನೂರು ಮಂದಿ ಭಯಂಕರರಾದ ಫಿರಂಗಿ ಸೈನಿಕರನ್ನು ಇದಿರಿಸಲು ಏಕಾಂಗಿಯಾದ ಸಿಡಿಲುಮರಿಯಿಂದ ಸಾಧ್ಯವೇ? ತಿಳಿದೂ ತಿಳಿದೂ ಪತಂಗವು ಅಗ್ನಿಕುಂಡಕ್ಕೆ ಹಾರುತ್ತಿದೆಯೆಂದು ಹೆದರಿದನು. ಸುತ್ತಲೂ ತನ್ನಂತೆಯೇ ನಿಬ್ಬೆರಗಾಗಿ ನಿಂತಿದ್ದ ಬಣ್ಣದ ಗೋಪಣ್ಣ, ರಾಮಚಂದ್ರರನ್ನು ಉದ್ದೇಶಿಸಿ ನುಡಿದನು:“ಏನು ನೋಡುತ್ತೀರಿ? ಸಿಡಿಲುಮರಿಯನ್ನು ಸಾವಿನ ಬಾಯಿಗೆ ಬಿಡುವಿರಾ?”ಗುರುವಿನ ಮಾತು ಶಿಷ್ಯರಿಗೆ ಅರ್ಥವಾಯಿತು. ಬಣ್ಣದ ಗೋಪಣ್ಣ, ರಾಮಚಂದ್ರ, ಮತ್ತು ಅವರನ್ನು ಅನುಸರಿಸಿ ಇನ್ನೂ ಹಲವು ವೀರರು ಸಿಡಿಲುಮರಿ ನೆಗೆದೆಡೆಗೆ ಧಾವಿಸಿದರು. ಪಾರ್ತಿಸುಬ್ಬ ಆಹತ ಭಾವನೆಯಿಂದ ಬೆಂದು, ಬಸವಳಿದು, ಕುಸಿದು ಕುಳಿತನು. ಏನೋ ಒಂದು ಪ್ರತ್ಯಾಶೆ ಅವನ ಕಣ್ಣುಗಳನ್ನು ಸಿಡಿಲುಮರಿ ಮರೆಯಾದ ದಿಕ್ಕಿಗೆ ತಿರುಗಿಸುತ್ತಿದ್ದಿತು….. + +ಪಾರ್ತಿಸುಬ್ಬನ ಯಕ್ಷಗಾನ ಮಂಡಲಿ ಚದರಿತ್ತು. ನಟರು, ಹಿಮ್ಮೇಳದವರು ಪಾರ್ತಿಸುಬ್ಬನ ಅಪ್ಪಣೆಯನ್ನು ಪಡೆಯಲು ಅವಕಾಶವಿಲ್ಲದೆ, ತಮ್ಮ ತಮ್ಮ ಊರುಗಳತ್ತ ಧಾವಿಸಿದ್ದರು. ಆ ವರ್ಷ ದೇವರ ಸೇವೆ – ಗೆಜ್ಜೆಪೂಜೆ ನಡೆಯದೆ ಮೇಳ ಚದರಿತು. ಈ ಕೊರಗು ಪಾರ್ತಿಸುಬ್ಬನ ಭಕ್ತಭರಿತವಾದ ಕವಿಹೃದಯವನ್ನು ಕೊರೆಯುತ್ತಿತ್ತು.  ಮರುದಿನ ಸಂಜೆಯ ಹೊತ್ತು. ಕುಂಬಳೆಯ ಶ್ರೀ ಗೋಪಾಲಕೃಷ್ಣ ದೇವಾಲಯದ ಮುಂದಿನ ಮಂಟಪದಲ್ಲಿ ಪಾರ್ತಿಸುಬ್ಬ ಯೋಚನಾಮಗ್ನವಾಗಿ ಕುಳಿತಿದ್ದನು. ತನ್ನ ಪ್ರೀತಿಯ ಸಿಡಿಲುಮರಿ, ಅವನನ್ನು ಹಿಂಬಾಲಿಸಿ ತೆರಳಿದ ಬಣ್ಣದ ಗೋಪಣ್ಣ , ರಾಮಚಂದ್ರರ ಸುದ್ದಿ ತಿಳಿಯದೆ ಅವನ ಕರುಳು ಕಳವಳದ ಪಂಜರವಾಗಿತ್ತು. ಆದರೆ, ಒಂದು ಅಚ್ಚರಿಯ ಸಂಗತಿ, ಯಾವುದಕ್ಕೆ ಹೆದರಿ ನಿನ್ನೆಯ ಆಟ ಅರ್ಧದಲ್ಲೇ ಕಡಿದಿತ್ತೋ, ಅಂತಹ ಸಿಡಿಲಿನಂತಹ ಸುದ್ದಿ, ಸೈನಿಕರು ಅರುಹಿದುದು – ಅದರಂತೆ ಫಿರಂಗಿಯವರ ಸೈನ್ಯ ಕುಂಬಳೆಯತ್ತ ಬರಲೇ ಇಲ್ಲ; ಎಲ್ಲರೂ ಹೆದರಿದ್ದಂತೆ, ಬಂದು ಕುಂಬಳೆಯ ಕೋಟೆಯನ್ನು ಕೆಡವಿ, ಅರಸರ ವಂಶವನ್ನು ತರಿದು, ಬೊಕ್ಕಸವನ್ನು ಸುಲಿದು, ಊರಿಗೆ ಕೊಳ್ಳೆಯಿಟ್ಟು ಅನಾಹುತ ಮಾಡಲೇ ಇಲ್ಲ …. ಹಾಗಾದರೆ, ಆ ಸೈನಿಕನು ಹೇಳಿದುದು ಸುಳ್ಳೇ? – ಪಾರ್ತಿಸುಬ್ಬ ವಿಚಾರಿಸುತ್ತಿದ್ದನು.. ಸೂರ್ಯನು ಕೆಂಪಿನ ಗೋಳವಾಗಿ ಪಡುಕಡಲಿಗೆ ಉರುಳುವುದರಲ್ಲಿದ್ದನು… ಎಲ್ಲೆಲ್ಲೂ ಸ್ಮಶಾನ ಶಾಂತಿ ಒಡಮೂಡಿತ್ತು. ಹಕ್ಕಿಗಳ ಸುಳಿವೂ ಇರಲಿಲ್ಲ. ಆ ರುದ್ರ ಸಂಧ್ಯೆಯಲ್ಲಿ ಇಬ್ಬರು ಯುವಕರು ಯಾವುದೋ ಭಾರವಾದ ವಸ್ತುವನ್ನು ಒಂದು ಬಿದಿರಗಳಕ್ಕೆ ಕಟ್ಟಿ ಹೆಗಲಲ್ಲಿಟ್ಟುಕೊಂಡು ದೇವಾಲಯದತ್ತ ಬಂದರು. ದೇವಾಲಯದ ಮುಂಬಾಗಿಲಿನಲ್ಲಿ ಅದನ್ನಿಳಿಸಿ, ಅವರಲ್ಲೊಬ್ಬನು ಒಳ ನಡೆದನು. + +“ಗುರುಗಳೇ, ತಮ್ಮ ಸಿಡಿಲುಮರಿಯನ್ನು ಕರೆತಂದಿರುವೆವು”- ಎಂದರು ವ್ಯಕ್ತಿಗಳು. ವಿನಯವು ಅವರ ಮಿದುಮಾತಿನಲ್ಲಿ ತುಂಬಿ ತುಳುಕುತ್ತಿತ್ತು.“ಯಾರು ಗೋಪಣ್ಣನೇ?- ಏನು ಸಿಡಿಲುಮರಿ ಬಂದನೇ?” ಪಾರ್ತಿಸುಬ್ಬ ಬಹಿರ್ಮುಖವಾಗಿ ಆಶ್ಚರ್ಯದಿಂದ ಪ್ರಶ್ನಿಸಿದನು.“ಹೌದು ಗುರುದೇವ. ಆದರೆ…..” ಎಂದು ಗೋಪಣ್ಣ ಏನನ್ನೋ ಹೇಳಲು ಬಾಯ್ತೆರೆದನು. ಆದರೆ ಅವನ ಬಾಯಿಯಿಂದ ಮಾತು ಹೊರ ಹೊರಡಲಿಲ್ಲ . ನಾಲಿಗೆ ಕೊರಡಾಗಿತ್ತು. ಪಾರ್ತಿಸುಬ್ಬ ಗೋಪಣ್ಣನ ಮಾತನ್ನು ಕೇಳುವ ಸ್ಥಿತಿಯಲ್ಲಿರಲಿಲ್ಲ . ತನ್ನ ಸಿಡಿಲು ಮರಿಯನ್ನು ಕಾಣುವ ಉತ್ಸಾಹದಲ್ಲಿ ಆಗಲೇ ಅವನು ದೇವಾಲಯದಿಂದ ಹೊರಕ್ಕೆ ಜಿಗಿದಿದ್ದನು. ತನ್ನ ಶಿಷ್ಯನನ್ನು ಕಾಣುವ ಉತ್ಸಾಹ ಅವನ ಚಿಂತೆಯನ್ನು ಹೊಡೆದೋಡಿಸಿತ್ತು. ಆದರೆ….. ವಿಧಿಯಾಟವು ಬೇರೊಂದು ತೆರನಾಗಿತ್ತು. ರಾಮಚಂದ್ರ, ತಾನು ಇಳುಹಿದ ಸಿಡಿಲುಮರಿಯ ಶವ ಬುಡದಲ್ಲಿ ಕುಳಿತು ಆಳುತ್ತಿದ್ದನು. ಪಾರ್ತಿಸುಬ್ಬನು ಬಂದುದನ್ನು ಕಂಡೊಡನೆಯೇ ಅವನ ದುಃಖವು ಉಮ್ಮಳಿಸಿ ಬಂತು. + + + +“ಗುರುದೇವ….” ಎನ್ನುತ್ತಾ ಗುರುವಿನ ಕಾಲನ್ನು ತಬ್ಬಿಕೊಂಡನು. ಪಾರ್ತಿಸುಬ್ಬನಿಗೆ ನಡೆದುದೇನೆಂದು ತಿಳಿಯಿತು. “ಸಿಡಿಲು ಮರೀ….” ಎನ್ನುತ್ತಾ ಕೆಂಗಣ್ಣ ನಾಯಕನ ದೇಹವನ್ನು ಅಪ್ಪಿಕೊಂಡನು. ಪ್ರಾಯಮೀರಿದ ಮೇಲೆ ಅದುತನಕ ಅತ್ತು ಅರಿಯದ ಅವನ ಕಣ್ಣುಗಳಿಂದ ಅಶ್ರುಧಾರೆ ಸತತವಾಗಿ ಸುರಿಯತೊಡಗಿತು…. ಬಣ್ಣದ ಗೋಪಣ್ಣ ಪಾರ್ತಿಸುಬ್ಬನ ಹಿಂದಿನಿಂದಲೇ ಬಂದು ನಿಂತಿದ್ದನು. ಆತನು, ಮೆಲ್ಲ ಮೆಲ್ಲನೆ ನಡೆದಿದ್ದ ಕತೆಯನ್ನು ಹೇಳತೊಡಗಿದನು:“ಗುರುದೇವ, ನಮ್ಮ ಸಿಡಿಲುಮರಿ ಹಾಗೆಯೇ ಸಾಯಲಿಲ್ಲ. ತಾನು ಕೊನೆಯ ಬಾರಿ ಆಡಿದ ಮಾತನ್ನು ಸಾರ್ಥಕಗೊಳಿಸಿದ್ದಾನೆ. ಸಿಡಿಲು ಮರಿಯಾಗಿಯೇ ಇನ್ನೂರು ಮಂದಿ ಫಿರಂಗಿ ಸೈನಿಕರನ್ನು ಕೊಂದು ಕೆಡಹಿದ್ದಾನೆ.”ಪಾರ್ತಿಸುಬ್ಬನಿಗೆ ಅಚ್ಚರಿಯಾಯಿತು. ಗದ್ಗದ ಕಂಠದಲ್ಲಿ ಅಭಿಮಾನ ತುಂಬಿಕೊಂಡು ಕೇಳಿದನು :“ಏಕಾಂಗಿಯಾಗಿ?”“ಹೌದು – ಏಕಾಂಗಿಯಾಗಿಯೇ. ಹೇಗೆಂಬುದರ ವಿವರವು ಆರಿಗೂ ಅರಿಯದು. ಬಹುಶಃ ಕಾಡುದಾರಿಯಲ್ಲಿ ಸೈನಿಕರನ್ನು ದಾರಿತಪ್ಪಿಸಿ – ರಾತ್ರಿ ಕಾಲವಲ್ಲವೇ? ತನ್ನೂರಿಗೆ ಕೊಂಡೊಯ್ದು ತನ್ನ ಗೆಳೆಯರ ಸಹಾಯದಿಂದ ಸದೆಬಡೆದನೆಂದು ತಿಳಿಯುತ್ತದೆ. ಕೊನೆಯ ಗಳಿಗೆಯಲ್ಲಿ ಫಿರಂಗಿಯವರ ಗುಂಡೊಂದು ಸಿಡಿಲುಮರಿಯ ಪ್ರಾಣವನ್ನು ಕುಡಿಯಿತು…. ಅವನ ಊರು ರಣರಂಗವಾಗಿ ರಕ್ತದ ನೆರೆಯಲ್ಲಿ ಮುಳುಗಿದೆ. ಅಲ್ಲಿ ಹೋಗಿ ಹುಡುಕಿ, ಈ ದೇಹವನ್ನು ತಂದೆವು…”ಗೋಪಣ್ಣನ ಮಾತು ತಡೆಯಿತು. ಅಲುಗಾಡದ ಎಲ್ಲರ ದೇಹಗಳೂ ಅಭಿಮಾನದ ಉಸಿರನ್ನು ಸೇದುತ್ತಿದ್ದುವು. + + + +ಡಾ. ಬಿ. ಜನಾರ್ದನ ಭಟ್ ಟಿಪ್ಪಣಿ + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_476.txt b/Kenda Sampige/article_476.txt new file mode 100644 index 0000000000000000000000000000000000000000..d850d1c87c3f50b86cb0f91ce667b649447852d4 --- /dev/null +++ b/Kenda Sampige/article_476.txt @@ -0,0 +1,39 @@ + + + + +ದಿಗಂತದಲ್ಲಿ ಮೊಳಗಿದ ವಿಜಯನಗರದ ಕೀರ್ತಿಯು ಅನೇಕ ವಿದೇಶಿಯರನ್ನು ಇತ್ತ ಆಕರ್ಷಿಸಿತು. 16 ಮತ್ತು 17ನೇ ಶತಮಾನಗಳಲ್ಲಿ ಪೋರ್ಚುಗೀಸರು ಪಶ್ಚಿಮ ಸಮುದ್ರದಲ್ಲಿ ಸಂಚರಿಸುತ್ತ ತುಳುನಾಡ ಕರಾವಳಿಯಲ್ಲಿ ಚಂಚು ಪ್ರವೇಶಮಾಡಿದರು. ಜೀಯೆಂದು ಬೇಡಿ ವ್ಯಾಪಾರ ಕೇಂದ್ರಗಳನ್ನು ಅರಸುತ್ತ ಕಾಲಿಟ್ಟ ಜನರು ಸ್ಥಳಿಕ ರಾಯರ ಸಮರಂಗದಲ್ಲಿ ಕೈಯಿಕ್ಕಿ ಕಾಲುತೊಡಕಾದರು. ಅವರ ಬೇರುಗೊಲೆಗಾಗಿ ಹವಣಿಸಿದವರಲ್ಲಿ ಮಂಗಳೂರಿನ ಒಬ್ಬ ವರ್ತಕ ಶೆಟ್ಟಿಯು ಅಗ್ರಗಣ್ಯನು. + +ಕ್ರಿ.ಶ. 1530 ರಷ್ಟು ಹಿಂದೆಯೇ ಆ ವೀರನು ಅವರನ್ನು ಪ್ರತಿಭಟಿಸಿ ಅಮರನಾದನು. ಪ್ರಾಕ್ ಪದ್ಧತಿಯಂತೆ ಅವನು ಮಂಗಳೂರಲ್ಲಿ ಅಕ್ಕಿ ವ್ಯಾಪಾರವನ್ನು ಸಾಗಿಸುತ್ತಿದ್ದನು. ಪೋರ್ಚುಗೀಸರು ಅವನ ಮೇಲೆ ಸುಂಕವನ್ನು ಹೇರಿದರು. ಶೆಟ್ಟಿಯು ಅದನ್ನು ಅತಿಗಳೆದು ವ್ಯಾಪಾರವನನ್ನು ಮುಂದೊತ್ತಿದನು. ಆಗ ಪೋರ್ಚುಗೀಸ್ ಗವರ್ನರನು ಅವನ ಅದಟನ್ನು ಕಂಡು ಕೋಪಾಟೋಪದಿಂದ ಅವನನ್ನು ಕಟ್ಟಿ ತರುವುದಕ್ಕಾಗಿ ಒಂದು ನೌಕಾಪಡೆಯನ್ನಟ್ಟಿದನು. ಆಗ ಮಂಗಳೂರಿನ ಹರದರೆಲ್ಲ ಒಗ್ಗಾಗಿ ಶತ್ರುನೌಕೆಗಳು ಅಳಿವೆಯೊಳಗೆ ಸುಳಿಯದಂತೆ ತಳಿಗೋಂಟೆಯನ್ನೆಬ್ಬಿಸಿ ಕಾಯುತ್ತಿದ್ದರು. ಆದರೂ ಸುಮಾರು 240 ಮಂದಿ ಯೋಧರು ಕೋವಿ ಗುಂಡುಗಳನ್ನು ಹಿಡಿದುಕೊಂಡು ಒಳನುಗ್ಗಿದರು. ವರ್ತಕ ಶ್ರೇಷ್ಠಿಯು ಬರಿಯ ಕತ್ತಿ ಭಲ್ಲೆಯಗಳನ್ನು ಹಿಡಿದ ಧಡಿಗರ ಒಂದು ದಂಡನ್ನು ಕಟ್ಟಿಕೊಂಡು ಅವರ ಮೇಲೆರಗಿದನು. ಎರಡು ಸೈನ್ಯಗಳೂ ಕಡುಪಿನಿಂದ ಕಾದಾಡಿದುವು. ಆದರೆ ಈ ಅಸಮ ಯುದ್ಧದಲ್ಲಿ ವರ್ತಕರ ದಂಡು ಸೋತುಹೋಯಿತು. ದುರ್ದೈವಿಯಾದ ಶೆಟ್ಟಿಯು ನದಿ ದಾಟುವ ಯತ್ನದಲ್ಲಿ ನೇತ್ರಾವತಿಗೆ ಆಹುತಿಯಾದನು. + +ಹೆಸರು ದೆಸೆಯೊಂದೂ ಅರಿಯದ ಈ ವರ್ತಕ ಶೆಟ್ಟಿಯು ಅಂದಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮಡಿದನಾದರೂ ಅವನು ಹಿಡಿದ ಸ್ವಾತಂತ್ರ್ಯ ಧ್ವಜವನ್ನು ಅಭಿಮಾನ ಮೇರುವಾದ ಎರಡನೇ ಅಬ್ಬಕ್ಕದೇವಿಯು ಎತ್ತಿ ಹಿಡಿದಳು. ತಳರುಗಿಡಿಯಾದ ಅವಳು ಪೋರ್ಚುಗೀಸರನ್ನು ತುಳುನಾಡಿನಿಂದ ಸಮೂಲ ಉಚ್ಚಾಟನೆಗೊಳಿಸಲು ಮೂವತ್ತು ವರ್ಷಗಳ ಕಾಲ ಹಗಲು ಹಸಿವಿಲ್ಲದೆ ರಾತ್ರಿ ನಿದ್ದೆಯಿಲ್ಲದೆ ಸತತವಾಗಿ ಹೋರಾಡಿದಳು. ತನ್ನ ಪಕ್ಷವರ್ತಿಗಳಾದ ಕಲ್ಲಿಕೋಟೆಯ ಸಾಮುದ್ರಿ ರಾಜ, ಕಣ್ಣಾನೂರಿನ ಚರ್ಕಲ್ ರಾಜರು ಪೋರ್ಚುಗೀಸರ ದರ್ಪಕ್ಕೆ ಗುರಿಯಾದಾಗ ಅವಳೊಬ್ಬಳು ಎದೆಗೊಟ್ಟು ನಿಂತಳು. ಅಬ್ಬಕ್ಕ ದೇವಿಯು ಎಡೆಹರೆಯಕ್ಕೆ ಕಾಲಿಟ್ಟಿದ್ದಳು. ಸಿಡಿಲುರುಬೆಗೆ ಸೆಡೆಯದ ಸಿಂಹಿಣಿಯಂತಿದ್ದಳು. ಎಣ್ಣೆಗೆಂಪಿನ ಮೊಗದಲ್ಲಿ ಸ್ವಾಭಿಮಾನದ ಕೆಚ್ಚು ಸೂಸುತ್ತಿದ್ದಿತು. ರೇಶಿಮೆ ದಡಿ ಸೇರೆಯುಟ್ಟು, ಮೆರುಗಿನ ಕುಪ್ಪಸ ತೊಟ್ಟು, ವೀರ ತೊಡರನ್ನಿಟ್ಟ ಆ ಚೌಟ ರಾಣಿಯನ್ನು ಕಂಡರೆ ಮನಸ್ಸಿನಲ್ಲಿ ಅಬ್ಬ ಎನ್ನಿಸುತ್ತಿತ್ತು. ಕ್ರಿ.ಶ. 1555 ರಲ್ಲಿ ಮಂಗಳೂರಿನ ಐಸಿರಿಯ ಅಂಗಡಿಗೇರಿ ಮಳಿಗೆಗಳೆಲ್ಲ ಕಿಚ್ಚಿನಲ್ಲಿ ಸುಡುತ್ತಿದ್ದಾಗ ಡೋಮ್ ಅಲ್ಪರಿಸ್ ಡಿಸಲ್ವೇರಾ ಎಂಬ ನೌಕಾಧಿಕಾರಿಯು 21 ಹಡಗುಗಳೊಂದಿಗೆ ಮುನಿದೆತ್ತಿ ಬಂದು ಉಳ್ಳಾಲವನ್ನು ಮುತ್ತಿದನು. ತುಮುಲ ಯುದ್ಧಕ್ಕೆ ಸನ್ನಣವಾಯಿತು. ಆಗ ಸಾಮುದ್ರಿಯು ನೌಕಾಧಿಕಾರಿಗೂ ರಾಣಿಗೂ ಒಂದು ಒಪ್ಪಂದವನ್ನು ಮಾಡಿಸಿ ಯುದ್ಧವನ್ನು ಒಮ್ಮೆಗೆ ನಿಲ್ಲಿಸಿದನು. + +ಇದಾದ ಮೂರೇ ವರ್ಷಗಳಲ್ಲಿ ಪೋರ್ಚುಗೀಸರು ತಮ್ಮ ತಹಬಂದಿಗೆ ವಿರೋಧವಾಗಿ ಚರ್ಕಲ್ ಅರಸರ ಒಂದು ಖಾಸಗಿ ಹಡಗನ್ನು ಕಡಲಿನಲ್ಲಿ ಹಿಡಿದರು. ಈ ಕೈ ದುಡುಕನ್ನು ಕಂಡು ಕೆರಳಿ ಕೆಂಡವಾಗಿ ರಾಣಿಯು ಚರ್ಕಲ್ ಅರಸನ ಪಕ್ಷ ವಹಿಸಿ ಪೋರ್ಚುಗೀಸರ ವಿರೋಧವನ್ನು ಕಟ್ಟಿಕೊಂಡು ಸುಂಕ ತೆರುವುದನ್ನು ನಿಲ್ಲಿಸಿದಳು. ಆಗ ಲೂಯಿ ಡಿ ಮೆಲ್ಲೋ ಎಂಬ ನೌಕಾಧಿಪತಿಯು ಉರಿದು ಕೆಂಡವಾಗಿ ದಂಡಿನೊಡನೆ ಧಾವಿಸಿದನು. ಆ ಕಾಟಕರ ದಂಡು ಪಸರಿಸಿ ಹಬ್ಬಿ ಉಳ್ಳಾಲದ ಕಲಿ ಸಮೂಹವನ್ನು ಇದಿರಿಸಿ ಅತ್ಯಂತ ಭಯಂಕರ ಕಾಳಗವೆಸಗಿತು. ಈ ಇರುಕಿನಲ್ಲಿ ಸಿಕ್ಕಿಬಿದ್ದ ಪಡೆವಳನು ಈದ ಹುಲಿಯನ್ನು ಕೆಣಕಿ ಕೆಟ್ಟೆನೆಂದು ಕಂಗಾಲಾಗಿ ಏನು ಮಾಡಬೇಕೆಂದರಿಯದೆ ನಗರಕ್ಕೆ ಕೊಳ್ಳಿಯಿಟ್ಟನು. ತನ್ನ ಗೆಲವಿನ ದಾರಿಯಲ್ಲಿ ಸಿಕ್ಕಿದವರನ್ನೆಲ್ಲ ಕೊಂದಿಕ್ಕಿದನು. + +ಕ್ರಿ.ಶ. 1566 ರಲ್ಲಿ ಚರ್ಕಲ್ ಅರಸನೊಡನೆ ಕಾಲು ಕೆದರಿ ಹುಯ್ಲೆಬ್ಬಿಸಿದಾಗ ರಾಣಿಯು ಮುನಿಸಿನಿಂದ ಮಾರಾಂತು ಕದನಕ್ಕೆ ಕರೆ ಕೊಟ್ಟಳು. ಅವಳನ್ನು ಮರ್ದಿಸುವ ಹವಣಿಕೆಯಿಂದ ಪೋರ್ಚುಗಲ್ ಗವರ್ನರನು ಚೋವಾ ಪಿಯೆಕ್ಸೊಟೊ ಎಂಬ ಸಮರ್ಥ ಪಡೆವಳನನ್ನು ಸೇನೆಯೊಂದಿಗೆ ಕಳುಹಿಸಿದನು. ಅವನು ಉರವಣೆಯಿಂದ ಬಂದು ರಾಣಿಯ ದಂಡನ್ನು ಇದಿರಿಸಿದನು. ಎರಡು ಸೇನೆಗಳೂ ಬಿನ್ನಣದಿಂದ ತೊಡರಿಕೊಂಡು ಉಬ್ಬಿನಿಂದ ಸೆಣಸಾಡಿದುವು. ಪುಂಡುಗಾರರನ್ನು ಹಣಿಯುತ್ತ ರಾಣಿಯು ಇಟ್ಟಣಿಸಿ ಬರುವ ರಿಪುದಳವನ್ನು ಪಡಲ್ಪಡಿಸಿ ಪಡೆವಳನನ್ನು ಅಂತ್ಯಗೊಳಿಸಿದಳು. ಹೀಗೆ ಬಲಿತು ಮಲೆತು ಮಾರ್ಮಲೆವ ಆ ಉಚ್ಚಂಡ ಭೈರವಿಯ ಕೋಡು ಮುರಿಯಬೇಕೆಂದು ಪೋರ್ಚುಗೀಸ್ ವೈಸರಾಯ್ ಜೋಮ್ ಅನ್ತಾವೊಡೆ ನರೋನ ಎಂಬವನು ಗೋವೆಯಿಂದ ಏಳು ಹಡಗು ಇಪ್ಪತ್ತು ಬಗಲೆ ಇಪ್ಪತ್ತೇಳು ಮಂಜಿಗಳ ಸಹಿತ 3000 ವೀರ ಯೋಧರ ಒಂದು ದೊಡ್ಡ ನೌಕಾಪಡೆಯನ್ನು ತೆಗೆದುಕೊಂಡು ಉಳ್ಳಾಲಕ್ಕೆ ಸ್ವತಃ ಬಂದಿಳಿದನು. + +12000 ಮಂದಿ ಪೋರ್ಚುಗೀಸ್ ಹೂಣಿಗರು ಅಸ್ತ್ರಶಸ್ತ್ರ ಸಜ್ಜಿತರಾಗಿ ನಗರವನ್ನು ಕಾಯುತ್ತಿದ್ದರು. ನದಿಯಿಂದ ಸಮುದ್ರಕ್ಕೆ ಹೋಗುವ ದಾರಿಯಲ್ಲಿ ಒಂದು ಗೋಡೆ ನಿಂತಿತ್ತು. ಆರಿಸಿದ ಕೆಲವು ಮಂದಿ ವೀರರು ತುಪಾಕಿಗಳನ್ನು ಹಿಡಿದು ಅಲ್ಲಿ ಕಾಪಿಡುತ್ತಿದ್ದರು. ವೈಸರಾಯ್ ಗೋಡೆಯನ್ನೊಡೆದು ನಗರವನ್ನು ಭೇದಿಸಬೇಕೆಂದಿದ್ದ ಒಂದೆಡೆಯಲ್ಲಿ, ಡಾನ್ ಫ್ರಾನ್ಸಿಸ್ಕೊ ಮಸ್ಕರೆನಾಸ್ ಎಂಬ ಪಡೆವಳನು ಚಿಕ್ಕ ದಂಡಿನೊಡನೆ ಹೊಂಚುತ್ತಿದ್ದನು. ಸೈನಿಕರೆಲ್ಲ ಉಗ್ರಾಟೋಪದಿಂದಿದ್ದರು. ಕತ್ತಲು ಮುಸುಕಿದೊಡನೆ ಬೇಕಷ್ಟು ತಿಂದು ಕುಡಿದು ಮದೋನ್ಮತ್ತರಾಗಿ ಮೋಜಿನಲ್ಲಿದ್ದರು. + +ಅಷ್ಟರಲ್ಲಿ ಮೂರರು, ಮರಕಾರರು, ಮುಖಾರಿಗಳಿಂದ ಕೂಡಿದ ಉಳ್ಳಾಲ ರಾಣಿಯ 500 ಮಂದಿ ಕಟ್ಟಾಳುಗಳು ಸೂಟೆಗಳನ್ನು ಬೀಸುತ್ತ ಹಠಾತ್ತನೆ ಮಸ್ಕರೆನಾಸನ ಸೈನ್ಯದ ಮೇಲೆರಗಿದರು. ಅವರ ಹಿಂದೆ ಮತ್ತೂ 1500 ಮಂದಿ ವೀರರು ಭರದಿಂದ ಮೇಲ್ವಾಯ್ದರು. ಸೂಟೆಯ ಅರೆ ಬೆಳಕಿನ ನಸುಕಿನಲ್ಲಿ ಶತ್ರುಗಳು ಕುರುಡರಂತಾಗಿದ್ದರು. ಶತ್ರುಗಳು ಯಾರು ಮಿತ್ರರು ಯಾರೆಂದು ಯಾರಿಗೂ ತಿಳಿಯಲಿಲ್ಲ. ಹಡಗಿನಿಂದ ಇಳಿಯುತ್ತಿದ್ದವರೆಲ್ಲ ನೀರಿಗೆ ಬಿದ್ದರು. ಬೇರೆ ತಾಗುಡಿಗಳಾಗಿ ನಿಲ್ಲಿಸಲ್ಪಟ್ಟವರು ಯಾರಿಗೆ ಸಹಾಯ ಮಾಡಬೇಕೆಂದರಿಯದೆ ಗೊಂಬೆಗಳಂತೆ ನಿಂತಿದ್ದರು. ಎಲ್ಲೆಲ್ಲಿಯೂ ರಾಣಿಯ ಸೈನಿಕರ ಖಡ್ಗಗಳು ಮಿಂಚುತ್ತಿದ್ದುವು. ಸಿಡಿಯುವ ಗುಂಡುಗಳು ಒಂದೇ ಸಮನೆ ಗರ್ಜಿಸುತ್ತಿದ್ದುವು. ಈ ಗಂಡಾಂತರದಲ್ಲಿ ಪೋಚುರ್ಗೀಸ್ ಪಡೆಯು ದಿಕ್ಕೆಟ್ಟೋಡಿತು. + + + +ಇಂಥ ಭೀಕರ ಪರಿಸ್ಥಿತಿಯಲ್ಲಿಯೂ ವೈಸರಾಯ್ ಎದೆಗೆಡಲಿಲ್ಲ. ರಣೋತ್ಸಾಹದಿಂದ ಕಹಳೆಯನ್ನೂದುತ್ತ ತನ್ನ ಬಳಿಯಿದ್ದ ಸೈನಿಕರನ್ನು ಕೂಡಿಕೊಂಡು ಮಸ್ಕರೆನಾಸನ ತಾವಿಗೆ ಸಾಗಿದನು. ಅವನೊಂದಿಗೆ ಕೆಲವೇ ಮಂದಿ ಸೈನಿಕರಿದ್ದರು. ಅವನು ಐದು ತೀವ್ರ ಗಾಯಗೊಂಡಿದ್ದನು. ಉರುಬಿ ತರುಬಿ ಕೈಗೈವ ಶತ್ರುಗಳೊಂದಿಗೆ ಜೀವದಾಸೆ ಬಿಟ್ಟು ಹೊಯ್ದಾಡುತ್ತಿದ್ದನು. ಕ್ರಿ.ಶ. 1568ನೇ ಜನವರಿ 5ರ ಬೆಳಿಗ್ಗೆ ವೈಸರಾಯ ಗೋಡೆಯನ್ನೇರಿ ನಗರವನ್ನು ಎಂತಾದರೂ ಹೊಗಬೇಕೆಂದಿದ್ದನು. ಎಲ್ಲರೂ ಹರುಪಿನಿಂದ ಗೋಡೆಯೆನ್ನೇರಲು ಅಣಿಯಾದರು. ಆಗ ವೈಸರಾಯ ತನ್ನ ಮನಸ್ಸನ್ನು ಕಡಿಕನೆ ಬದಲಾಯಿಸಿ ಯುದ್ಧವನ್ನು ನಾಳೆಗೆ ಮುಂದುವರಿಸೋಣವೆಂದು ಆಜ್ಞಾಪಿಸಿದನು. ಶತ್ರುಗಳ ಮೇಲೆ ಕೆರಳಿ ಕೆಂಡ ಕಾರುತ್ತಿದ್ದ 200 ಮಂದಿ ಪೋರ್ಚುಗೀಸ್ ಸೈನಿಕರು ವೈಸರಾಯ ಆಜ್ಞೆಯನ್ನು ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಗೋಡೆಯನ್ನೇರಿ ಮದೋದ್ರೇಕದಿಂದ ಮುನಿದು ಮುಂಬರಿದು ಇದಿರಾಳುಗಳನ್ನು ನುಗ್ಗು ನುಸಿ ಮಾಡಿ ರಣದಲ್ಲಿ ಮಗ್ಗಿಸಿದರು. ವೈಸರಾಯ ಕ್ರಿಸ್ತನ ಪಟವನ್ನು ಹಿಡಿದುಕೊಂಡು ಕಡಲ ದಡದಲ್ಲಿ ನಿಂತನು. ಆಗ 500 ಮಂದಿ ಹಡಗಿನಿಂದಿಳಿದರು. + +ಮರುದಿನ ಎಪಿಫನಿ ಹಬ್ಬ. ಮಸ್ಕರೆನಾಸನು ಸೈನಿಕರನ್ನು ಕೂಡಿಕೊಂಡು ಇಮ್ಮಡಿ ಹುರುಪಿನಿಂದ ಕಡಂಗಿ ಕಾದಿದನು. ತಮ್ಮ ಸೇಡಿನ ಉಬ್ಬಿಗೆ ಉರಿಯಾದ ರಾಣಿಯ ಸೈನಿಕರನ್ನು ಹತ್ತೊತ್ತಿ ಕೋವಿಯ ಬರ್ಚಿಗಳಿಂದ ದಬ್ಬಿದರು. ಬೇರೆ ಬೇರೆ ಬಾಗಿಲುಗಳಿಂದ ನಗರವನ್ನು ಹೊಕ್ಕು ಒಂದೆಡೆ ಕಲೆತರು. ನಗರವನ್ನು ಸೇರಿದ 6000 ಮಂದಿ ರಾಣಿಯ ಸೈನಿಕರು ಒಟ್ಟಾಗಿ ಕತ್ತಿ ಭಲ್ಲೆಯಗಳನ್ನು ಹಿಡಿದು ನೆತ್ತರ ತೃಷೆಯಿಂದ ಶತ್ರುಗಳನ್ನು ಸದೆಬಡಿದರು. ಆದರೆ ಒತ್ತೊತ್ತಿ ಆವರಿಸುವ ಮಾರ್ಬಲವನ್ನು ಇದಿರಿಲಾರದೆ ತಲ್ಲಣಿಸಿ ಹಿಮ್ಮೆಟ್ಟಿ ಚೆದರಿ ಚೆಲ್ಲಾಪಿಲ್ಲಿಯಾದರು. ರಾಣಿಯು ಉಚ್ಚಿಲ ತಲಪಾಡಿ ಅರಮನೆಯನ್ನು ಸೇರಿದಳು. + +ರಾಣಿಯ ಸೈನಿಕರಲ್ಲಿ 40 ಮಂದಿ ಮಾತ್ರ ಮಡಿದಿದ್ದರು. ಕೆಲವರು ಗಾಯಗೊಂಡಿದ್ದರು. ಪೋರ್ಚುಗೀಸರಲ್ಲಿ 300 ಮಂದಿ ಮಡಿದಿದ್ದರು. ಆದರೆ ಅವರು ನಗರಕ್ಕೆ ಕಿಚ್ಚಿಟ್ಟು ಫಲ ಮರಗಳನ್ನು ಕಡಿದಿಕ್ಕಿ ತಮ್ಮ ಮುಯ್ಯನ್ನು ತೀರಿಸಿಕೊಂಡರು. ಬಳಿಕ ಅವರು ಮಂಗಳೂರಲ್ಲಿ ಒಂದು ಭವ್ಯವಾದ ಕೋಟೆಯನ್ನು ಕಟ್ಟಿಸಿದರು. ಸಂತ ಸೆಬಸ್ಟಿಯನ್ ದಿನ ಕಟ್ಟಲ್ಪಟ್ಟುದರಿಂದ ಅದಕ್ಕೆ ಸಂತ ಸೆಬಸ್ಟಿಯನ್ ಕೋಟೆಯೆಂದು ಹೆಸರಾಯಿತು. ಅದಕ್ಕೆ ನೇರ ಇದಿರಾಗಿ ಉಳ್ಳಾಲದಲ್ಲಿ ರಾಣಿಯು ಇನ್ನೊಂದು ಕೋಟೆಯನ್ನು ಕಟ್ಟಿಸಿದಳು. ಪೋರ್ಚುಗೀಸರೊಡನೆ ಹಲವು ಸಂಗ್ರಾಮಗಳಲ್ಲಿ ಸೋತರೂ ಪ್ರತಾಪಾನ್ವಯದ ಆ ಧೀರೆಯು ತನ್ನ ಅದಟು ಬಿಡಲಿಲ್ಲ. + +ಕ್ರಿ.ಶ. 1570 ರಲ್ಲಿ ಒಮ್ಮೆ ಕಲ್ಲಿಕೋಟೆಯ ಸಾಮುದ್ರಿಯ ನೌಕಾಧೀರ ಕುಟ್ಟಿ ಪೋಕ್ರೆ ಎಂಬವನು ರಾಣಿಯ ಪ್ರೇರಣೆಯಿಂದ ಪೋರ್ಚುಗೀಸರ ಒಂದು ಕೋಟೆಯನ್ನು ಫಕ್ಕನೆ ಹಿಡಿದನು. ಆದರೆ ಶತ್ರುಗಳು ತೋರಿದ ಲಂಚದಾಸೆಯಿಂದ ಪೋಕ್ರೆಯ ಸೈನಿಕರು ಅವರ ವಶರಾದರು. ಇದನ್ನು ಕೇಳಿ ದಶಾಹೀನಳಾದ ರಾಣಿ ಬೊಟ್ಟು ಕಚ್ಚಿಕೊಂಡಳು. ಇಂತ ಎಂಟದೆಯ ರಾಣಿ ಅಬ್ಬಕ್ಕದೇವಿ. ತಿರುಮಲರಾಯ ಚೌಟನಿಗೆ ಅಳಿಯಂದಿರು ಇರಲಿಲ್ಲ. ರಾಯನ ನಂತರ ಆತನ ಪತ್ನಿಯೂ ಪಟ್ಟವೇರಿದಳು. ಅವಳಿಗೂ ಬಾಧ್ಯಸ್ಥರಾರೂ ಇರಲಿಲ್ಲವಾದುದರಿಂದ ಅವಳ ನಂತರ ಈ ಅಬ್ಬಕ್ಕದೇವಿಗೆ ಪಟ್ಟವಾಯಿತು. ಅವಳು ಪಟ್ಟವೇರುವ ಮುಂಚೆಯೇ ಜೈನರಾಜದಲ್ಲಿ ಪ್ರಮುಖನೆನಿಸಿದ್ದ ಲಕ್ಷ್ಮಪ್ಪರಸ ಬಂಗರಾಜನೊಡನೆ ವಿವಾಹವಾಗಿದ್ದಿತು. ಅಬ್ಬಕ್ಕದೇವಿ ಆ ಸಮಯದಲ್ಲಿ ಉಳ್ಳಾಲ ಅರಮನೆಯಲ್ಲಿ ಸುಖವಾಗಿದ್ದಳು. ಲಕ್ಷ್ಮಪ್ಪರಸನು ಬಂಗರ ಕೋಟೆಯಲ್ಲಿದ್ದನು. ವಿಜಯನಗರದ ಅರಸನು ಆ ಹೋಬಳಿಗೆ ತನ್ನ ಒಬ್ಬ ಒಡೆಯನನ್ನು ನೇಮಿಸಿದ್ದರೂ ಮಂಗಳೂರಿನ ಅಧಿಕಾರವೆಲ್ಲ ಬಂಗರಾಯನ ಕೈಯಲ್ಲೇ ಇತ್ತು. ಅವಳ ಅಧೀನ ದೊಡ್ಡ ಸೈನ್ಯವಿತ್ತು. ವಿಪುಳ ಸಂಪತ್ತೂ ಇತ್ತು. + +ಬಂಗರಕೋಟೆ ಆಯತಾಕಾರವಾಗಿತ್ತು. ಕಲ್ಲಿನ ಪಂಚಾಂಗದ ಮೇಲೆ 35 ಅಡಿ ಎತ್ತರದ ಗೋಡೆಗಳು ಆವರಿಸಿದ್ದುವು. ನಾಲ್ಕು ಸುತ್ತುಗಳಲ್ಲಿ ಉನ್ನತವಾದ ಏಳು ಬತ್ತೇರಿಗಳಿದ್ದುವು. ಪೂರ್ವ ದಿಕ್ಕಿನಲ್ಲಿ ಒಂದು ಆಗಸೆ ಬಾಗಿಲಿತ್ತು. ಕೋಟೆಯ ಸುತ್ತಲೂ ಆಳವಾದ ಕಂದಕಗಳಿದ್ದುವು. ತೆಂಕು ದಿಕ್ಕಿನ ಒಂದು ಸುರಂಗದಿಂದ ಹೊಳೆಯ ನೀರು ಹರಿದು ಬಂದು ಅವನ್ನು ತುಂಬಿದ್ದುವು. ಅಂದಿನ ಅಳಿವೆಗೆ ಸಮೀಪವಾದ ಈ ಬೋಳೂರು ವ್ಯಾಪಾರಕ್ಕೆ ಹೆದ್ದಾರಿಯಾಗಿತ್ತು. ಕೋಟೆಯ ನಡುವೆ ಅಂದವಾದ ಉಪ್ಪರಿಗೆ ಅರಮನೆಯಲ್ಲಿ ಬಂಗರಾಜನು ಐಸಿರಿ ಅಯಿಬೋಗದಿಂದ ವಾಸವಾಗಿದ್ದನು. ರಾಣಿಯು ವಿದೇಶೀಯರ ಮೇಲೆ ಕಿಡಿ ಸೂಸುವ ಹೆಣ್ಣು. ರಾಜನಾದರೋ ಆ ಕಾಟಕರನ್ನು ಕಂಡರೆ ಸಿಡಿಮಿಡಿಕೊಳ್ಳುವ ಗಂಡು. ಆ ಸಿಂಹಿಣಿಗೂ ಈ ಶೃಗಾಲಕ್ಕೂ ಸರಿಬೀಳುವುದೆಂತು? ಬಂಗರಾಜನನ್ನು ಆ ಚೌಟ ಕುಮಾರಿ ಕೇವಲ ಪ್ರತಿಷ್ಠೆ ಗೌರವಕ್ಕಾಗಿ ವಿವಾಹವಾಗಿದ್ದಳು. ಗಂಡಹೆಂಡಿರಾಗಿ ಅವರೆಂದೂ ಒಟ್ಟಿಗೆ ಬಾಳಲಿಲ್ಲ. ಹೃದಯ ಒಂದಾಗಿ ಬೆಸೆಯಲಿಲ್ಲ. ಸುಖದುಃಖವನ್ನು ಒಂದುಗೂಡಿ ಸವಿಯಲಿಲ್ಲ. ಆಟಿಗೋ ಸೋಣೆಗೋ ಎಂದಾದರೊಮ್ಮೆ ಕಂಡರಾಯಿತು. ಇದೇ ಅವರ ದಾಂಪತ್ಯದ ಸೌಭಾಗ್ಯ. ಗೃಹ ಕಲಾಪದ ಈ ಕಾಲ್ತೊಡಕನ್ನು ಕಿತ್ತೊಗೆಯಬೇಕೆಂದೆಣಿಸಿ, ಅರಸನು ವಿವಾಹ ಕಾಲಕ್ಕೆ ಕೊಟ್ಟಿದ್ದ ತಾಳಿಬಂದಿ ಒಡವೆ ವಸ್ತುಗಳನ್ನೆಲ್ಲ ಹಿಂತಿರುಗಿ ಕೊಟ್ಟುಬಿಟ್ಟಳು. ರಾಣಿಯ ಈ ತಿರಸ್ಕಾರದ ಸಡಕನ್ನು ಕಂಡು ಬಂಗರಾಜನು ಸಂತಪ್ತನಾದನು. + +ಒಂದು ದಿನ ರಾಣಿಯು ನೇತ್ರಾವತಿಯಲ್ಲಿ ವಿಹರಿಸುತ್ತಿದ್ದಳು. ದಿಗಂತದಲ್ಲಿ ಸೂರ್ಯಾಸ್ತದ ಹೊಂಬೆಳಕು ಬಾನೆಲ್ಲ ತುಂಬಿ ಕುಂಕುಮದೋಕುಳಿಯಂತೆ ಹೊಳೆಯ ನೀರಿನಲ್ಲಿ ಚೆಲ್ಲಿತ್ತು. ತೆರೆಯ ತುಂತುರುಗಳಿಂದ ತೊಯ್ದ ತಂಗಾಳಿಯು ಸುಳಿಯುತ್ತಿತ್ತು. ರಾಣಿಯು ಕುಳಿತ ಹಂಸಾಕಾರದ ನಾವೆಯೂ ನೀರನ್ನು ಸೀಳಿಕೊಂಡು ಮುಂದುವರಿಯುತ್ತಿತ್ತು. ರಾಣಿಯೊಂದಿಗೆ ನಾಲ್ಕಾರು ಮಂದಿ ಮೈಗಾವಲಿನವರು ಮಾತ್ರವಿದ್ದರು. ಒಬ್ಬನು ರಾಣಿಯ ಮೇಲೊಂದು ಸತ್ತಿಗೆಯನ್ನು ಎತ್ತಿ ಹಿಡಿದಿದ್ದನು. + +ಮೇಲೆ ಕಾಯುತ್ತಿದ್ದ ಬಂಗರಾಜನು ರಾಣಿಯನ್ನು ಸೆರೆಹಿಡಿಯಲು ಇದೇ ತಕ್ಕ ಸಮಯವೆಂದು ಹಲವು ದೋಣಿಗಳಲ್ಲಿ ತನ್ನ ಭಟರನ್ನು ಕಳುಹಿಸಿಕೊಟ್ಟನು. ಆ ಓಡಗಳೆಲ್ಲ ಭರದಿಂದ ನುಗ್ಗಿ ನಾವೆಯನ್ನು ಸುತ್ತುಗಟ್ಟಿದುವು. ರಾಣಿಯು ಸೆರೆ ಸಿಕ್ಕಿದಳು. ಭಟರು ಅವಳನ್ನು ಒಯ್ದುಕೊಂಡು ಹೋಗಿ ಅರಸನ ಮುಂದೆ ನಿಲ್ಲಿಸಿದರು. ಅವನ ಕಣ್ಣು ಬೆಳ್ಳಿ ಕೊಡೆಯ ಮೇಲೆ ಬಿತ್ತು. ‘ಬೆಳ್ಳಿ ಸತ್ತಿಗೆಯ ಬಿರುದೇ ಈ ಕುಲ ಕಲಂಕೆಗೆ?’  ಎಂದು ಗುಡುಗುತ್ತ ಸತ್ತಿಗೆಯವನನ್ನು ತಿವಿದು ಸತ್ತಿಗೆಯನ್ನು ಮುರಿದು ನೆಲಕ್ಕೊಗೆದನು. + +ಅಂಥ ಪೋರ್ಚುಗೀಸರನ್ನು ಹಣ್ಣು ಹಣ್ಣು ಮಾಡಿದ ಆ ಧೀರೆಯು ಬಂಗರಾಜನ ಈ ಗರ್ಜನೆಗೆ ಬಗ್ಗುವಳೇ? ಗಂಡೆದೆಯ ಆಕೆಯ ಧೈರ್ಯಗೆಡಲಿಲ್ಲ. ಕೆಚ್ಚನು ಸೂಸುವ ಕಣ್ಣುಗಳಿಂದ ಒಮ್ಮೆ ಅರಸನನ್ನು ನೋಡಿದಳು. ಆ ತೀವ್ರದೃಷ್ಟಿಯನ್ನು ಇದರಿಸಲಾರದೆ ಆ ಹೆಣ್ಣಿಗನು ತಲೆತಗ್ಗಿಸಿಕೊಂಡನು. ಗಂಭೀರವಾಗಿ ಹೂನಗೆಯನ್ನು ಸೂಸುತ್ತ ತನ್ನ ಇಂಪಾದ ದನಿಯಿಂದ ಬಿನ್ನಾಣದ ಮಾತುಗಳನ್ನಾಡಿ ಅವನ ಮನಸ್ಸನು ಒಲಿಸಿಕೊಂಡು ಅವನಿಂದ ಹೇಗೋ ಪಾರಾದಳು. ಆದರೆ ಈ ಅಪಮಾನದಿಂದ ಹೊತ್ತಿದ ಮುನಿಸುಗಿಚ್ಚಿನ ಉಲ್ಪಣವು ಆರದಷ್ಟು ಉಜ್ವಲವಾಗಿತ್ತು. ತನ್ನ ರಾಜ್ಯ ಚಿಹ್ನವಾದ ಬಿರುದಿನ ಸತ್ತಿಗೆ ಮಣ್ಣು ಮುಕ್ಕಿದ ದುಃಖವು ಅವಳ ಮನಸ್ಸನ್ನು ಕೊರೆಯುತ್ತಲೇ ಇತ್ತು. + +ಆಗ ಪೋರ್ಚುಗೀಸರ ಹಾವಳಿಯು ತುಳುನಾಡಿನಲ್ಲಿ ಮಿಕ್ಕು ಮೀರಿದುದನ್ನು ಕಂಡು ಕೋಪಾವಿಷ್ಟನಾಗಿ ಇಕ್ಕೇರಿಯ ವೆಂಕಟಪ್ಪನಾಯಕನು ಅವರ ದರ್ಪವನ್ನು ಅಡಗಿಸಲು ಹವಣಿಸುತ್ತಿದ್ದನು. ಈ ಸಂಧಿಯನ್ನರಿತು ಅಬ್ಬಕ್ಕದೇವಿಯ ಅವನ ಆಶ್ರಯವನ್ನು ಸಾರಿದಳು. ಆಗ ದೋಖಂಡೇರಾಯ ವೆಂಕಟಪ್ಪ ನಾಯಕನು ಪ್ರಬಲವಾದ ಸೈನ್ಯದೊಡನೆ ನೆಲವನ್ನು ನಡುಗಿಸುತ್ತ ಮಂಗಳೂರಿನಲ್ಲಿ ಬೀಡುಬಿಟ್ಟನು. ಬಂಗ ರಾಜನು ಪೋರ್ಚುಗೀಸರ ಮೊರೆಹೊಕ್ಕನು. ಎರಡು ಮಹಾ ಸೈನ್ಯಗಳೂ ಬೋಳೂರಲ್ಲಿ ದುರ್ಧರವಾದ ಕಾಳಗಗೊಟ್ಟವು. ವೆಂಕಟಪ್ಪ ನಾಯಕನು ನಿಸ್ತುಲ ಪರಾಕ್ರಮದಿಂದ ಹೋರಾಡಿ ಕೋಟೆಯನ್ನೆಲ್ಲ ಹಾಳುಗೆಡವಿ ಅರಮನೆಯನ್ನು ನೆಲಸಮ ಮಾಡಿದನು. ರಾಣಿಯು ತನ್ನ ಬಿರುದಿನ ಸತ್ತಿಗೆಯನ್ನು ಮರಳಿ ಪಡೆದಳು. ಅದೇ ಸಮಯದಲ್ಲಿ ತುಳುರಾಯ ದಲ್ಲಣನಾದ ವೆಂಕಟಪ್ಪ ನಾಯಕನು ತುಳುವ ಅರಸರನ್ನೆಲ್ಲ ಹಣ್ಣು ಮಾಡಿ ತನ್ನ ಅಂಕೆಗೆ ತಂದನು. ಇವರಲ್ಲಿ ಪೋರ್ಚುಗೀಸರೊಡನೆ ಒಪ್ಪಂದ ಮಾಡಿಕೊಂಡ ಕಾರ್ನಾಡ ರಾಣಿಯೂ ಇದ್ದಳು. ಮಂಗಳೂರಿನಿಂದ ನಗರಕ್ಕೆ ತೆರಳುವಾಗ ವೆಂಕಟಪ್ಪ ನಾಯಕನು ಪೋರ್ಚುಗೀಸರ ಶಸ್ತ್ರಾಸ್ತ್ರ ನಿಶಾನೆಗಳನ್ನೂ ಕೊಂದವರ ತಲೆಗಳನ್ನೂ ತೆಗೆದುಕೊಂಡು ಹೋಗಿ ಕೋಟೆಯ ಹೆಬ್ಬಾಗಿಲಲ್ಲಿಟ್ಟನು. ಈ ಯುದ್ಧದಿಂದಲಾದರೂ ಪೋರ್ಚುಗೀಸರನ್ನು ಬಗ್ಗು ಬಡಿದುದಕ್ಕಾಗಿ ಅಬ್ಬಕ್ಕದೇವಿಗೆ ತುಸು ಅಭಿಮಾನವುಂಟಾಯಿತು. ತುಳುನಾಡಿನಲ್ಲೆಲ್ಲ ಅವಳ ಕೀರ್ತಿ ಗೌರವವು ಹೆಚ್ಚಿತು. ಜೀವಮಾನವನ್ನೆಲ್ಲ ಪೋರ್ಚುಗೀಸರೊಡನೆ ಹೋರಾಡಿ ಬಳಲಿದ ಆಕೆಯು ಕ್ರಿ.ಶ. 1582 ರಲ್ಲಿ ಚಿರವಿಶ್ರಾಂತಿಯನ್ನು ಪಡೆದಳು. ಪರಾಕ್ರಮಪಟುವಾದ ಆ ಚೌಟ ರಾಣಿಯು ಎತ್ತಿಹಿಡಿದ ಹೆಮ್ಮೆಯ ಬಾವುಟವು ನಮ್ಮ ಜೀವನಾಡಿಗಳಲ್ಲಿ ಚಿರಸ್ಫೂರ್ತಿನ್ನು ತುಂಬದಿರದು. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_477.txt b/Kenda Sampige/article_477.txt new file mode 100644 index 0000000000000000000000000000000000000000..3376d733f5d7b253a1b63ed7a350f908dc99e7f5 --- /dev/null +++ b/Kenda Sampige/article_477.txt @@ -0,0 +1,37 @@ + + +ಕಥೆಗಳನ್ನು ಹೇಳುವುದೆಂದರೆ ನನಗೆ ಬಾಲ್ಯದಿಂದಲೂ ಒಂದು ರೀತಿ ಅನುರಾಗದ ಹಾಗೆ ಬಹಳ ಮೋಹದ ಕೆಲಸ. ಬಹಳ ಇತ್ತೀಚಿನವರೆಗೂ ಅಷ್ಟೇ, ಬೇರೆ ಏನಕ್ಕೋ ಅವರವರ ಕೆಲಸಕ್ಕಾಗಿ ನನ್ನ ಎದುರಿಗೆ ಬಂದು ಕುಳಿತವರೂ ನನ್ನ ಕಥೆಗಳನ್ನು ಕೇಳಲೆಂದೇ ಬಂದವರೆಂದು ತಿಳಿದುಕೊಂಡು ಬಿಡುತ್ತಿದ್ದೆ. ಒಂದು ರಾಗಾಲಾಪನೆಯ ಹಾಗೆ ಅವರಿಗೆ ಕಥೆಗಳನ್ನು ಬಣ್ಣಿಸುತ್ತಾ ಹೇಳುವುದು ದೈವ ನನಗೆ ವಿಧಿಸಿರುವ ಅಣತಿಯೆಂದೇ ಅಂದುಕೊಂಡು ಗಂಟೆಗಟ್ಟಲೆ ಅವರಿಗೆ ಕಥೆ ಹೇಳುತ್ತಾ ಕುಂತಿರುತ್ತಿದ್ದೆ ಅಥವಾ ಮಲಗಿರುತ್ತಿದ್ದೆ. ಕಥೆಗಳನ್ನು ಹೇಳುವಾಗ ಉಯ್ಯಾಲೆಯಂತೆ ಚಲಿಸುವ ನನ್ನ ಮಿದುಳೊಳಗಿನ ಚಕ್ರದಂತಹ ಆ ನೆನಪ ಚಿತ್ರಗಳು, ಆ ಹೊತ್ತಿನ ಆ ಒನಪುಗಳು, ಆ ವಯ್ಯಾರಗಳು ನನಗೆ ಅನುಪಮವಾದ ಸುಖ ಸಂತೋಷಗಳನ್ನು ನೀಡುತ್ತಿದ್ದವು. ನನ್ನ ಸಣ್ಣ ಪುಟ್ಟ ಸೋಲುಗಳನ್ನು ಕಥೆಗಳೊಳಗಿನ ಅನಿರೀಕ್ಷಿತ ತಿರುವುಗಳ ಮೂಲಕ ಮರೆಮಾಚಿ ಹೇಳುವುದು,ನನ್ನ ಪುಟ್ಟ ಪುಟ್ಟ ಗೆಲುವುಗಳನ್ನು ಹೇಳಲು ಸಂಕೋಚವಾಗಿ ಇದ್ದಕ್ಕಿದ್ದಂತೆ ನಿಲ್ಲಿಸಿ ಇನ್ನೊಂದು ಕತೆಯತ್ತ ದಾಂಗುಡಿಯಿಡುವುದು ಇದೆಲ್ಲ ನನಗೆ ಕಥೆ ಬರೆಯುವುದಕ್ಕಿಂತ ಇಷ್ಟದ ವಿಷಯಗಳಾಗಿದ್ದವು. ಕಥೆ ಹೇಳುವಾಗ ಕೇಳುವವರು ಕಣ್ಣೆದುರು ಇರುತ್ತಾರೆ. ಕೇಳುತ್ತ ಕೇಳುತ್ತ ಕಾಣಿಸುವ ಅವರ ಕಣ್ಣಿನ ಮಿಂಚುಗಳು, ಅವರ ಹಣೆಯ ಮೇಲೆ ಮೂಡುವ ನಗು, ವ್ಯಕ್ತವಾಗಿ ಮೂಗಿನ ನೇರಕ್ಕೇ ಕಾಣಿಸುವ ಅವರ ಅಪನಂಬಿಕೆ ಅಥವಾ ಕುತೂಹಲ, ಆಗಾಗ ಸ್ಪೋಟಗೊಳ್ಳುವ ಅಟ್ಟಹಾಸದಂತಹ ನಗು, ಇವೆಲ್ಲವನ್ನೂ ನಾನೂ ಅನುಭವಿಸಿ ಕಥೆ ಹೇಳುವುದು ಬೇರೆಯಲ್ಲ ಕೇಳುವುದು ಬೇರೆಯಲ್ಲ ಎಂಬಂತಹ ಒಂದು ಅನೂಹ್ಯ ಕಾಲವೇ ಅಲ್ಲಿ ಸೃಷ್ಟಿಯಾಗುತ್ತಿದೆ ಅನ್ನಿಸುತ್ತಿತ್ತು. + +ನನ್ನ ಊರಿನ ಕಾಡುದಾರಿಯ ಬದಿಯ ಒಂದು ಸಣ್ಣ ಕಲ್ಲು ಬೆಂಚಿನ ಮೇಲೆ, ಮೈಸೂರಿನ ಮುಸ್ಲಿಂ ಹಾಸ್ಟೆಲಿನ ನೀಲಗಿರಿ ಮರಗಳ ಕೆಳಗಿನ ಕಲ್ಲ ಹಾಸಿನ ಮೇಲೆ, ಕುಕ್ಕರಹಳ್ಳಿ ಕೆರೆಯ ಲತಾ ಮಂಟಪಗಳಲ್ಲಿ, ಮಂಗಳೂರಿನ ತಣ್ಣೀರುಬಾವಿಯ ಕಡಲ ತೀರದ ಗಾಳಿ ಮರಗಳ ಅಡಿಯಲ್ಲಿ, ಮಡಿಕೇರಿಯ ರಾಜಾಸೀಟಿನ ಮೇಲಿನ ಸ್ಟೋನ್ ಹಿಲ್ ಗುಡ್ಡಗಳ ನೆರಳ ಹಾಸಿನ ಕೆಳಗೆ –  ಕಾಲ ದೇಶ ಕತ್ತಲು ಬೆಳಕುಗಳ ಪರಿವೆಯಿಲ್ಲದೆ ಗಂಟೆಗಟ್ಟಲೆ ಕಥೆಗಳನ್ನು ಹೇಳುತ್ತಿದ್ದ ದಿನಗಳನ್ನು ನೆನೆದುಕೊಂಡರೆ ಈಗಲೂ ಬಾಲ್ಯದಂತಹ ಎಳೆಬಿಸಿಲೊಂದು ಮಾಯವಾಗಿ ಮರೆಯಾದಂತೆ ಸಂಕಟವಾಗುತ್ತದೆ. ನನ್ನ ಕಥೆ ಹೇಳುವ ಕಾಲ ಕಳೆದು ಹೋಗಿರದಿದ್ದರೂ ಕಥೆ ಕೇಳುತ್ತಿದ್ದವರು ಆ ರೋಮಾಂಚನವನ್ನು ಕಳೆದುಕೊಂಡಿರುವುದು ನನಗೆ ದೂರದಿಂದಲೇ ಗೊತ್ತಾಗಿಬಿಡುತ್ತಿದೆ. ಒಂದು ಸಣ್ಣಗಿನ ವಿಷಾದ, ಒಂದು ತಣ್ಣಗಿನ ಕ್ರೌರ್ಯದಂತಹ ಸ್ವ ಎಚ್ಚರ ನನ್ನನ್ನು ಇತ್ತೀಚೆಗೆ ಕಥೆ ಹೇಳುವುದರಿಂದ ವಿಮುಖನನ್ನಾಗಿಸುತ್ತಿದೆ. ಎಂತೆಂತಹ ಗೆಳೆಯರು, ಕವಿಗಳು, ಕಥೆಗಾರರು, ಸುಂದರಿಯರು, ಸುಂದರರು ಒಬ್ಬ ರಾಜಕುಮಾರನ ಹಾಗೆ ನನ್ನನ್ನು ಕಣ್ಣಲ್ಲೇ ಆರಾಧಿಸುತ್ತಾ ಕಥೆ ಕೇಳುತ್ತಿದ್ದುದು! ಈಗ ಅವರೆಲ್ಲರೂ ಅವರವರ ಲೋಕದಲ್ಲಿ ವಿರಾಜಮಾನರಾಗಿರುವುದ ನೋಡುತ್ತಿದ್ದರೆ ಕಥೆ ಹೇಳುವುದು ಎಷ್ಟು ದೊಡ್ಡ ಯಾಮಾರಿಸಿಕೊಳ್ಳುವ ಕೆಲಸವಾಗಿತ್ತು ಎಂದು ವ್ಯಗ್ರನಾಗುತ್ತೇನೆ ಜೊತೆಗೆ ಲೋಕದ ಜೊತೆಗೆ ವಿನಾಕಾರಣ ಕಠಿಣನಾಗುತ್ತಿದ್ದೇನೆ. + +ಇದಕ್ಕಿಂತಲೂ ದೊಡ್ಡದಾದ ಕ್ರೂರವಾದ ಮತ್ತು ತಮಾಷೆಯಾದ ವಿಷಯವೆಂದರೆ ನನ್ನ ಕಥೆ ಹೇಳುವ ಕಲೆಯನ್ನೇ ಬಳಸಿಕೊಂಡು ನನಗೆ ರಾಜಕೀಯ ಪಾಠಗಳನ್ನು ಕಲಿಸುವ ವ್ಯವಸ್ಥೆಯೊಂದನ್ನು ನನ್ನ ಯೌವನದ ಕಾಲದಲ್ಲಿ ರೂಪಿಸಲಾಗಿತ್ತು. ಏಕಕಾಲದಲ್ಲಿ ಕ್ರಾಂತಿಕಾರಿಯೂ ಕಥೆಗಾರನೂ ಆಗಿದ್ದ ನಾನು ಗುಪ್ತವಾಗಿ ಒಬ್ಬ ದೊಡ್ಡ ಪ್ರೇಮಿಯೂ ಆಗಿದ್ದೆ. ಕಥೆ ಹೇಳುವುದನ್ನೂ, ಬರೆಯುವುದನ್ನೂ, ಓದುವುದನ್ನೂ, ಕ್ರಾಂತಿಯ ಕೆಲಸಗಳನ್ನೂ ಬಿಟ್ಟು ಇದ್ದಕ್ಕಿದ್ದಂತೆ ಯಾರಿಗೂ ಗೊತ್ತಾಗದಂತೆ ದಿನಗಟ್ಟಲೆ ಮಾಯವಾಗಿ ಬಿಡುತ್ತಿದ್ದೆ. ಅದೊಂದು ತರಹದ ಬೆಳಗಿನ ಹೊತ್ತಿನ ಇಬ್ಬನಿಯ ಹನಿಯಂತಹ ಚುಮುಚುಮು ಪ್ರೇಮ. ಅವಳಿಗೂ ನನಗೂ ಸುಮಾರು ನೂರು ಹರದಾರಿಗಿಂತ ಹೆಚ್ಚು ದೂರವಿತ್ತು. ಇಬ್ಬರಿಗೂ ಕವಿತೆ ಅಂದರೆ ಇಷ್ಟ. ಇಬ್ಬರಿಗೂ ಸಿಕ್ಕಾಪಟ್ಟೆ ಭಯ ಮತ್ತು ನಾಚುಗೆ. ನೂರಾರು ಹರದಾರಿ ದೂರವಿದ್ದ ಅವಳನ್ನು ಸುಮ್ಮನೆ ನೋಡಿ ಬರಲು ನಾನು ಆಗಾಗ ಭೂಗತನಾಗಿ ಬಿಡುತ್ತಿದ್ದೆ. ಹೋದವನು ಅಲ್ಲೂ ಮೈಲಿಗಟ್ಟಲೆ ಕಥೆ ಹೇಳಿ ಕಥೆ ಕೇಳಿ ಅವಳ ಕಣ್ಣ ಅಚ್ಚರಿಗಳನ್ನು ನೋಡಿ ಬರುತ್ತಿದ್ದೆ. ಬಂದವನು ಎಲ್ಲಿ ಹೋಗಿದ್ದೆ ಎಂಬ ಗುಟ್ಟನ್ನು ಯಾರಿಗೂ ಹೇಳುತ್ತಿರಲಿಲ್ಲ. ನನ್ನ ಈ ರೀತಿಯ ಧಿಡೀರ್ ಮಾಯವಾಗುವಿಕೆ ನನ್ನ ಕ್ರಾಂತಿಕಾರೀ ಸಂಗಾತಿಗಳಿಗೆ ಒಂದು ಸವಾಲಾಗಿತ್ತು. ರಾಜಕೀಯ ಕಾರಣಗಳಿಗಾಗಿ ಭೂಗತವಾಗುವುದನ್ನು ಸಕಾರಣವಾಗಿ ಬೆಂಬಲಿಸುವವರಾಗಿದ್ದ ಅವರಿಗೆ ವಿನಾಕಾರಣ ಮಾಯವಾಗುತ್ತಿದ್ದ ನನ್ನ ಕಾಣದಾಗುವಿಕೆ ಒಂದು ವೈಚಾರಿಕವಾದ ಕಗ್ಗಟ್ಟಿನಂತೆ ತೋರತೊಡಗಿತ್ತು. ಇದನ್ನು ಹೇಗಾದರೂ ಬಗೆಹರಿಸಬೇಕೆಂದು ಉನ್ನತಮಟ್ಟದಲ್ಲಿ ತೀರ್ಮಾನಿಸಿದ ಅವರು ಕಥೆ ಹೇಳುವ ನನ್ನ ದೌರ್ಭಲ್ಯವನ್ನು ಬಳಸಿಕೊಂಡರು. + +ನನ್ನ ಕಥೆಗಳನ್ನು ಕೇಳಲೆಂದೇ ದೂರದ ಹೈಕಮಾಂಡಿನಿಂದ ಒಬ್ಬರು ಬಂದರು. ಒಂದು ಇರುಳೆಲ್ಲಾ ಕುಕ್ಕರಹಳ್ಳಿ ಕೆರೆಯ ಲತಾಮಂಟಪದಲ್ಲಿ ಅವರು ನನ್ನ ಪಕ್ಕದಲ್ಲಿ ಮಗುವಿನಂತೆ ಕುಳಿತು ನನ್ನೆಲ್ಲ ಕಥೆಗಳನ್ನು ಕೇಳಿಸಿಕೊಂಡರು. ಅವಳನ್ನು ಹುಡುಕಿಕೊಂಡು ಹೋಗುತ್ತಿದ್ದ ಹಾದಿಯಲ್ಲಿ ಮೂಡುತ್ತಿದ್ದ ಚಂದ್ರ, ಏಳುತ್ತಿದ್ದ ಕಾವಳ, ಹಾರುತ್ತಿದ್ದ ತೇನೆ ಹಕ್ಕಿಗಳು, ಅವಳ ಕದಪುಗಳಲ್ಲಿ ಮೂಡುತ್ತಿದ್ದ ಗುಲಗಂಜಿಯಂತಹ ಪ್ರೇಮದ ಕುರುಹುಗಳು ಮತ್ತು ಮಾಂಸಾಹಾರಿಯಾಗಿದ್ದ ನನ್ನ ಮತ್ತು ಸಸ್ಯಾಹಾರಿಯಾಗಿದ್ದ ಅವಳ ನಡುವೆ ನಡೆಯುತ್ತಿದ್ದ ವೈಚಾರಿಕ ಪ್ರೇಮ ಕಲಹಗಳ ಕುರಿತು ನಾನು ಅರೆನಿಮೀಲಿತ ನೇತ್ರಗಳಿಂದ ಅವರಿಗೆ ಆ ಇರುಳಿನಲ್ಲಿ ಕಥೆ ಹೇಳಿಬಿಟ್ಟಿದ್ದೆ. ಒಂದು ರೀತಿಯಲ್ಲಿ ಹೇಳಿದ್ದು ಒಳ್ಳೆಯದೇ ಆಯಿತು. ಏಕೆಂದರೆ ಇರುಳಿಡೀ ನನ್ನ ಕಥೆ ಕೇಳಿದ ಅವರು ಕೇಂದ್ರಸ್ಥಾನಕ್ಕೆ ತೆರಳಿ ಹೈಕಮಾಂಡಿಗೆ ನನ್ನ ಬಗ್ಗೆ ಒಂದು ವಿವರವಾದ ವರದಿಯನ್ನು ಕೊಟ್ಟುಬಿಟ್ಟಿದ್ದರು. ಅದರಲ್ಲಿ ನನ್ನಲ್ಲಿ ಕ್ರಾಂತಿಕಾರಿಯ ಗುಣಗಳಿಗಿಂತ ಒಬ್ಬ ಮಧ್ಯಮ ವರ್ಗದ ಬೂರ್ಜ್ವಾ ಪ್ರೇಮಿಯ ಗುಣಗಳೇ ಹೆಚ್ಚಿರುವುದೆಂತಲೂ ನನ್ನಿಂದ ಸಮಾಜಕ್ಕೆ ಹೆಚ್ಚಿನ ಪ್ರಯೋಜನಗಳಾಗುವ ಸಾಧ್ಯತೆ ಇಲ್ಲವೆಂದೂ ಹೇಳಲಾಗಿತ್ತು. ಹಾಗಾಗಿ ಕ್ರಾಂತಿಯ ದಾರಿಯಿಂದ ವಿಮುಖನಾದ ನಾನು ಇನ್ನು ಪ್ರೇಮಕ್ಕೆ ಜೈ ಎಂದು ತೀರ್ಮಾನಿಸಿ ಅವಳಲ್ಲಿಗೆ ಮರಳಿ ಹೋಗಿದ್ದೆ. ಆದರೆ ಅಷ್ಟು ಹೊತ್ತಿಗೆ ಆಕೆಯೂ ಒಂದು ಕಠಿಣವಾದ ತೀರ್ಮಾನ ತೆಗೆದುಕೊಂಡು ಬಿಟ್ಟಿದ್ದಳು. (ಅದು ಏನೆಂಬುದು ಇಲ್ಲಿ ಬೇಡ ಬಿಡಿ!) + +ಆದರೆ ಆ ನಂತರ ರಾಜಕೀಯ ಕಾರಣಗಳಿಗಾಗಿ ಕಥೆ ಹೇಳುವುದನ್ನು ಮತ್ತು ಬರೆಯುವುದನ್ನು ನಿಲ್ಲಿಸಿಬಿಟ್ಟಿದ್ದೆ. ಕಥೆ ಹೇಳುವುದಾದರೆ ಪ್ರೇಮ ಯಾಚನೆಯ ಕಾರಣಕ್ಕಾಗಿ ಅಥವಾ ಪ್ರೇಮ ವೈಫಲ್ಯದ ಖಿನ್ನತೆಯಿಂದ ಹೊರಬರುವುದಕ್ಕಾಗಿ ಎಂಬುದು ನನ್ನ ಆನಂತರದ ದಿನಗಳ ಆಲೋಚನೆಯಾಗಿತ್ತು. ಆನಂತರದ ಕಾಲಘಟ್ಟಗಳಲ್ಲಿ ಅದೂ ಬದಲಾಗುತ್ತಾ ಬಂತು. ಕಲೆ, ಕಥೆಗಾರಿಕೆ, ಕಾವ್ಯ ಮತ್ತು ಸೌಂದರ್ಯಗಳನ್ನು ಮಿಕಗಳಂತೆ ಅಟ್ಟಿಸಿಕೊಂಡು ಬೇಟೆಯಾಡುವ ಬೇಟಗಾರನಂತಹ ಖದೀಮ ಕಾಲ ಇದು. ಕಾಲವೆಂಬವನ ಅಸಾಧ್ಯ ಆಟಗಳ ಈ ಕಾಲದಲ್ಲಿ ಕಥೆ ಹೇಳುವುದೂ, ಬರೆಯುವುದೂ, ಕಥೆಯನ್ನು ಆಲಿಸುವವರ ಕಣ್ಣಮಿಂಚಿಗೆ ಕಾಯುವುದೂ, ಓದುಗನ ಪುಳಕಗಳ ನೆನೆದು ರೋಮಾಂಚಿತನಾಗುವುದು ಈ ಎಲ್ಲವೂ ಕೃತಕ ಅನ್ನಿಸಲು ನನಗಂತೂ ತೊಡಗಿದೆ. ಇದನ್ನೆಲ್ಲ ಹೆಚ್ಚು ವಿವರಿಸಲು ಹೋಗದೆ ಗುಣಪಡಿಸಲಾಗದ ಕಾಯಿಲೆಯಂತಾಗಿ ಹೋಗಿದ್ದ ಕಥೆ ಹೇಳುವ ನನ್ನ ಬಾಲ್ಯದ ದಿನಗಳ ಮನೋಹರವೂ ದುರಂತಪೂರ್ವಕವೂ ಆದ ವೃತ್ತಾಂತವೊಂದನ್ನು ನಿಮ್ಮ ಜೊತೆಗೆ ಹಂಚಿಕೊಳ್ಳುವೆ. ನಾನು ಹೋದ ಮೇಲೂ ನನ್ನೊಳಗೆ ಮಣ್ಣಲ್ಲಿ ಮಣ್ಣಾಗಿ ಇದು ಉಳಿದುಕೊಳ್ಳಲಿ ಎಂದು ನಾನು ಬೇಡಿಕೊಳ್ಳುವ ವೃತ್ತಾಂತ ಇದು. ಒಂದು ಅನೂಹ್ಯ ಮಿಂಚಿನಂತೆ ಒಂದು ಅಸಾಧ್ಯ ನೋವಿನಂತೆ ಇದು ಯಾವಾಗಲೂ ನನ್ನನ್ನು ಇರಿಯುವುದು. ಹೆಚ್ಚು ಭಾವುಕನಾಗದೆ ಹೆಚ್ಚು ವಿವರಿಸಲು ಹೋಗದೆ ಇದನ್ನು ಹೇಳಲು ತೊಡಗುವೆನು. + +ನನಗೆ ನೆನಪಿರುವಂತೆ ಸಣ್ಣದಿರುವಾಗ ನಾನು ಹೇಳುವ ಕಥೆಗಳನ್ನು ಕೇಳಲೆಂದೇ ನನ್ನ ತಮ್ಮ ತಂಗಿಯರು ಅವರ ನಡುವೆ ಜಾಗ ಮಾಡಿಕೊಂಡು ನನ್ನನ್ನು ಮಲಗಿಸಿಕೊಳ್ಳುತ್ತಿದ್ದರು. ಜೊತೆಗೆ ದೂರದ ಮಲೆಯೊಂದರ ನಡುವಿನ ಮನೆಯಿಂದ ಕತ್ತಲ ಹೊತ್ತಲ್ಲಿ ಹಸುವಿನ ಹಾಲು ತರುತ್ತಿದ್ದ ಸುಂದರಿಯಾಗಿದ್ದ ಹುಡುಗಿಯೊಬ್ಬಳೂ ಅವರ ನಡುವೆ ಜಾಗ ಮಾಡಿಕೊಂಡು ನನ್ನನ್ನು ಒತ್ತರಿಸಿಕೊಂಡು ಮಲಗಿರುತ್ತಿದ್ದಳು. ಜೊತೆಗೆ ಸಣ್ಣ ವಯಸ್ಸಿನ ನನ್ನ ತಾಯಿಯೂ ಮಲಗಿರುತ್ತಿದ್ದಳು. ಅವರೆಲ್ಲರನ್ನೂ ಏಕಕಾಲಕ್ಕೆ ಒಂದು ಕಥೆಯ ಮೂಲಕ ಮೆಚ್ಚಿಸುವುದು ನನ್ನ ಆ ಇರುಳುಗಳ ಬಹಳ ದೊಡ್ಡ ಕಲೆಗಾರಿಕೆಯಾಗಿತ್ತು. ತಾಯಿಗೂ ಮಗನ ಮೇಲೆ ಮೆಚ್ಚುಗೆಯಾಗಬೇಕು, ತಮ್ಮ ತಂಗಿಯಂದಿರಿಗೂ ಪುಟ್ಟ ಅಣ್ಣನ ಮೇಲೆ ಅಭಿಮಾನ ಬರಬೇಕು, ಜೊತೆಗೆ ಪಕ್ಕದಲ್ಲಿ ಮಲಗಿದ್ದ ನನಗಿಂತ ಕೊಂಚ ದೊಡ್ಡವಳಾಗಿದ್ದ ಆ ಬಾಲಕಿಯೂ ನನ್ನ ಅನುರಾಗದಲ್ಲಿ ಬೀಳಬೇಕು ಎಂದು ಇರುವ ಒಂದು ಕಥೆಯಲ್ಲೇ ಎರಡು ಮೂರು ಉದ್ದೇಶಗಳನ್ನು ಇಟ್ಟುಕೊಂಡು ಕಥೆ ಹೇಳುತ್ತಿದ್ದೆ. ಸಣ್ಣಪುಟ್ಟ ತಿರುವುಗಳು, ದೊಡ್ಡದಾದ ಘಟನೆಗಳು, ಕಣ್ಣೀರು ಬರಿಸುವಂತಹ ಅಂತ್ಯಗಳು, ನಡುನಡುವೆ ಸಂಭವಿಸುವ ತಮಾಷೆಗಳು, ಕುಹಕಗಳು ಮತ್ತು ಮಾನವ ಸಹಜ ಮಲಬಾಧೆ, ಮೂತ್ರಶಂಕೆ, ಹಸಿವು ಇತ್ಯಾದಿ ಮಾನವ ಸಹಜ ವಿದ್ಯಮಾನಗಳು ಇವೆಲ್ಲವನ್ನೂ ಹೇಳುತ್ತ ಹೇಳುತ್ತಲೇ ನಾನು ಆ ಹುಡುಗಿಯ ಅನುರಾಗಕ್ಕಾಗಿ ಕಾತರಿಸುತ್ತಿದ್ದೆ. ಕಥೆ ಕೇಳುತ್ತ ಕಣ್ಣೀರುಗರೆಯುತ್ತಿದ್ದ ಆಕೆಯ ಕಣ್ಣೀರನ್ನು ಆ ಕತ್ತಲೆಯಲ್ಲಿಯೇ ಒರೆಸುವುದು, ಅವಳ ಬೆರಳಲ್ಲಿದ್ದ ತಂಗೀಸಿನ ಉಂಗುರವನ್ನು ಮೆಲ್ಲಗೆ ಕಳಚಿ ನನ್ನ ಬೆರಳಿಗೆ ಬದಲಿಸಿಕೊಳ್ಳುವುದು, ಮತ್ತೆ ಅವಳ ಬೆರಳಿಗೆ ತೊಡಿಸುವುದು, ಭಯಗೊಂಡಿರಬಹುದಾದ ಅವಳ ತೋಳುಗಳಿಗೆ ಆ ಕತ್ತಲೆಯಲ್ಲಿಯೇ ನನ್ನ ಕೆನ್ನೆಗಳನ್ನು ಸೋಕಿಸಿ ಅವಳ ಭಯ ಹೋಗಿರಬಹುದೆಂದು ಭ್ರಮಿಸುವುದು – ಹೀಗೆ ಅವರೆಲ್ಲರೂ ಕಥೆ ಕೇಳುತ್ತ ಕೇಳುತ್ತ ಅವರವರ ಲೋಕದೊಳಕ್ಕೆ ನಿದ್ದೆ ಹೋದಮೇಲೆ ಉಳಿದ ನನ್ನ ಒಂಟಿತನವನ್ನು ಹೇಗೆ ನೀಗಿಕೊಳ್ಳುವುದು ಎಂದು ಯೋಚಿಸುತ್ತಾ ನನಗೂ ತುಂಬ ಹೊತ್ತಿನ ನಂತರ ನಿದ್ದೆ ಬಂದು ಬಿಡುತ್ತಿತ್ತು. + +ಆ ವಯಸಿನಲ್ಲಿ ನಾನು ಈಗಿರುವುದಕ್ಕಿಂತಲೂ ಕೆಟ್ಟ ಹುಡುಗನಾಗಿದ್ದೆ, ಬಹಳ ಕಥೆಗಳನ್ನು ಓದುತ್ತಿದ್ದೆ ಮತ್ತು ಕದ್ದು ಸಿನೆಮಾ ನೋಡುತ್ತಿದ್ದೆ. ಆಗ ನಮ್ಮ ಊರಿಗೆ ಹತ್ತಿರವಿದ್ದ ಸುಳ್ಯ ಪೇಟೆಯಲ್ಲಿ ಎರಡು ಸಿನೆಮಾ ಥಿಯೇಟರುಗಳಿದ್ದವು ಮತ್ತು ಆಗಲೇ ನನ್ನ ಬಳಿಯಲ್ಲಿ ಹಣ ಓಡಾಡುತ್ತಿತ್ತು. ಆ ವಯಸ್ಸಲ್ಲೇ ನಾನು ನಮ್ಮದೇ ತೋಟದಿಂದ ಗೇರುಬೀಜವನ್ನೂ, ಕರಿಮೆಣಸನ್ನೂ ಸ್ವಲ್ಪಸ್ವಲ್ಪ ಕದ್ದು ಅಡಗಿಸಿಟ್ಟು ಅವುಗಳನ್ನು ಅರ್ಧ ಬೆಲೆಗೆ ಮಾರಿ ಆ ಹಣವನ್ನು ನನ್ನ ಸಿನೆಮಾ ಮತ್ತು ಹೋಟೆಲಿನಲ್ಲಿ ತಿನ್ನುವ ಚಟಕ್ಕಾಗಿ ಬಳಸಿಕೊಳ್ಳುತ್ತಿದ್ದೆ. ಜೊತೆಗೆ ಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ನನ್ನ ನಿರಕ್ಷರಿ ಗೆಳೆಯರಿಗೆ ಡೈನಮೇಟ್ ಕೊಂಡುಕೊಳ್ಳಲು ಹಣ ನೀಡುತ್ತಿದ್ದೆ. ಅವರು ಬಹಳ ಸುಂದರವೂ ಪ್ರಶಾಂತವೂ ಆಗಿದ್ದ ನಮ್ಮ ಬಾಲ್ಯದ ಊರಿನ ನದಿಯ ಆಳದ ಗುಂಡಿಗಳಲ್ಲಿ ಡೈನಮೇಟ್ ಸಿಡಿಸಿ ಸತ್ತು ತೇಲುವ ಮೀನುಗಳನ್ನು ಮುಳುಗಿ ಮೇಲೆತ್ತಿ ದಡಕ್ಕೆ ತಂದು ಹಾಕುತ್ತಿದ್ದರು. ಈಗ ಯೋಚಿಸಿದರೆ ಅದೆಲ್ಲವೂ ಬಹಳ ದುಷ್ಟವಾದ ಕೃತ್ಯಗಳೆಂದು ನನಗೆ ಅನಿಸಬಹುದು. ನನ್ನದೇ ತೋಟದ ಉತ್ಪತ್ತಿಯನ್ನು ಕದ್ದು ಮಾರುವುದು, ಒಂದೇ ದಿನದಲ್ಲಿ ಎರಡು ಮೂರು ಸಿನೆಮಾಗಳನ್ನು ಕದ್ದು ನೋಡುವುದು, ಸ್ಪೋಟಕಗಳನ್ನು ಬಳಸಿ ಮೀನುಹಿಡಿಯುವುದು, ಹೊಟ್ಟೆ ಬಿರಿಯುವಂತೆ ಹೋಟೆಲ್ಲುಗಳಲ್ಲಿ ತಿನ್ನುವುದು.ಬಹಳ ಒಳ್ಳೆಯವರೂ ಪಾಪದವರೂ ಆಗಿದ್ದ ನನ್ನ ತಂದೆ (ಅವರು ಈಗ ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ) ವಾರಕ್ಕೊಮ್ಮೆ ನನಗೆ ಕನ್ನಡದ ಕಥೆ ಪುಸ್ತಕಗಳನ್ನೂ ಪತ್ರಿಕೆಗಳನ್ನೂ ತಂದು ಕೊಡುತ್ತಿದ್ದರು. ಅವೆಲ್ಲವನ್ನೂ ನಾನು ನೆಲದ ಮೇಲೆ ಹರಡಿ ಕುಕ್ಕುರುಗಾಲಲ್ಲಿ ಕುಳಿತು ನೆಲಕ್ಕೆ ಕಣ್ಣು ಕೀಲಿಸಿ ಓದುತ್ತಿದ್ದೆ. ಮನಸೊಳಗೆ ಕದ್ದು ನೋಡಿದ ಕನ್ನಡ ತಮಿಳು ಸಿನೆಮಾದ ಕಥೆಗಳು, ಮಿದುಳೊಳಗೆ ಅಪ್ಪ ತಂದಿರಿಸುತ್ತಿದ್ದ ಅರೇಬಿಯಾದ ಸಾವಿರದೊಂದು ರಾತ್ರಿಯ ಕತೆಗಳು, ಹಾತಿಮತಾಯಿಯ ಕಥೆಗಳು, ಜಾತಕದ ಕಥೆಗಳು, ರಾಮಾಯಣ ಮಹಾಭಾರತದ ಕಥೆಗಳು, ಮೀನು ಹಿಡಿಯುತ್ತಿದ್ದಾಗ ಕೇಳುತ್ತಿದ್ದ ಅನೈತಿಕವೂ ಹಾದರದವೂ ಆದ ಪುಳಕದ ಕಥೆಗಳು, ಮದ್ರಸಾದಲ್ಲಿ ಅರಬಿಯಲ್ಲಿ ಕುರಾನು ಕಲಿಯುವಾಗ ಕೇಳುತ್ತಿದ್ದ ಕಣ್ಣೀರಿಟ್ಟು ನ್ಯಾಯ ಕೇಳುವ ಒಂಟೆಗಳ, ಹಾರುವ ಕುದುರೆಗಳ, ತಾವೇ ತಾವಾಗಿ ಚಲಿಸುತ್ತಿದ್ದ ರಕ್ತಸಿಕ್ತ ಖಡ್ಗಗಳ ಕಥೆಗಳು – ನೋಡಿದ, ಕೇಳಿದ, ಅನುಭವಿಸಿದ ಮತ್ತು ಓದಿದ ಆ ದಿನದ ಎಲ್ಲವನ್ನೂ ಒಂದು ಕಥೆಯನ್ನಾಗಿಸಿ ಹೆಚ್ಚುಕಡಿಮೆ ಹಾದರದಂತಿದ್ದ ಅದರಲ್ಲಿ ಸಣ್ಣಗಿನದೊಂದು ನೈತಿಕ ಎಳೆಯನ್ನು ಸೇರಿಸಿ ಇರುಳು ಹೊತ್ತಲ್ಲಿ ಅಮ್ಮನಿಗೂ, ತಮ್ಮ ತಂಗಿಯರಿಗೂ ಮತ್ತು ತಣ್ಣಗಿನ ಚಂದಿರನ ತುಂಡಿನ ಹಾಗಿದ್ದ ಅವಳಿಗೂ ಹೇಳುವುದಿತ್ತಲ್ಲ ಅದು ಬಹಳ ಆಪ್ಯಾಯಮಾನವೂ, ರೋಚಕವೂ ಹಾಗೂ ಹಸಿವು ಮೈಥುನದಷ್ಟೇ ಅಗತ್ಯದ್ದೂ ಆಗಿತ್ತು. + +ಹಾಗಾಗಿ ಕಥೆ ಹೇಳುವುದನ್ನು ನನ್ನ ಸ್ವಾರ್ಜಿತ ಸ್ಥಿರ ಆಸ್ತಿಯೆಂದೇ ಅಂದುಕೊಂಡಿದ್ದೆ ಮತ್ತು ಈಗಲೂ ಅಂದುಕೊಂಡಿರುವೆ, ಆದರೆ ಕಥೆ ಬರೆಯುವುದಿದೆಯಲ್ಲಾ ಅದು ಬಹಳ ಕಷ್ಟದ ಕೆಲಸ. ಅದರಲ್ಲೂ ಕನ್ನಡದ ಈಗಿನ ಸಾಹಿತ್ಯಿಕ, ಸಾಂಸ್ಕೃತಿಕ ಹೊತ್ತಿನಲ್ಲಿ ಇನ್ನೂ ಕಷ್ಟ. ನಾನು ಎಮ್ಮೆ ಎಂದು ಬರೆದರೆ ಕೋಣನೆಂದು ತಿಳಿದುಕೊಂಡು ಅದರ ಹಿಂಬಾಗದಲ್ಲಿ ಇಲ್ಲದನ್ನು ಹುಡುಕುವ ಅಥವಾ ಊಹಿಸುವ ಸಾಂಸ್ಕೃತಿಕ ರಾಜಕಾರಣದ ಈ ಹೊತ್ತಲ್ಲಿ ನನಗೆ ಯಾಕೋ ನಾನು ಪೂರ್ವಸೂರಿಗಳ ಕಾಲದವನು ಅನಿಸುತ್ತದೆ. ಮೊದಲೇ ಕಥೆ ಬರೆ ಎಂದು ಯಾರಾದರೂ ಹೇಳಿದರೆ ಕೊಲ್ಲಲು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಭಯಪಡುವ ನನಗೆ ಕಥೆಯೊಂದನ್ನು ಬರೆದಾದ ಮೇಲೆ ಆಗುವ ಮುಜುಗರಗಳು ಇನ್ನೂ ತಮಾಷೆಯಾಗಿರುತ್ತದೆ. ಬೇಡ ಬಿಡಿ. ಯಾರನ್ನೂ ಇನ್ನು ಮುಂದೆ ಲೇವಡಿ ಮಾಡಬಾರದು ಎಂದು ಯಾವಾಗಲೋ ತೀರ್ಮಾನಿಸಿದ್ದೇನೆ. ಆದರೆ ನಲ್ಲೆಯರಂತಹ ತಮ್ಮ ತಂಗಿಯರಂತಹ ತಾಯಿಯಂತಹ ಓದುಗರ ನೆನೆದುಕೊಂಡು ಕಥೆಗಳನ್ನು ಬರೆಯುವ ಕನಸನ್ನು ಈಗಲೂ ಕಾಣುತ್ತಿರುತ್ತೇನೆ. + +*************** + +ಕಥೆಗಳನ್ನು ಕೇಳುತ್ತಾ ಇರುಳೆಲ್ಲ ಪಕ್ಕದಲ್ಲಿ ಮಲಗಿರುತ್ತಿದ್ದ ಆಕೆ ಕೆಲವು ರಾತ್ರಿ ಹಗಲುಗಳಗಳ ಕಾಲ ಮಾಯವಾಗಿದ್ದಳು. ಹಲವು ದಿನಗಳ ಕಾಲ ಹುಡುಕಿದ ಯಾರಿಗೂ ಅವಳು ಸಿಕ್ಕಿರಲೇ ಇಲ್ಲ. ಅವಳು ಎಲ್ಲಿ ಕಾಣೆಯಾಗಿರಬಹುದು ಎಂದು, ಏನು ಕಥೆ ಹೇಳುವುದು ಎಂದು ಗೊತ್ತಾಗದೆ ನಾನೂ ಅಸ್ತವ್ಯಸ್ತವಾಗಿದ್ದೆ. ಅವಳ ಪೂರ್ಣ ಚಂದ್ರನಂತಹ ಸ್ನಿಗ್ಧ ಬೆಳಕನ್ನು ಎದುರಿಸಲಾಗದೇ ಆಕಾಶದಿಂದ ಇಳಿದ ಜಿನ್ನುಗಳೆಂಬ ದೇವದೂತರು ಅವಳನ್ನು ಕೆಲವು ಹಗಲು ರಾತ್ರಿಗಳ ಕಾಲ ದೇವಲೋಕದಲ್ಲಿ ಅಡಗಿಸಿಟ್ಟುಕೊಂಡು ಮರಳಿ ಭೂಮಿಗೆ ತಂದುಬಿಟ್ಟರು ಎಂದು ಕಥೆಗಾರನಾದ ನನಗೇ ನನ್ನ ತಾಯಿ ರೇಲು ಹತ್ತಿಸಿದ್ದಳು. ಆದರೆ ಭೂಮಿಗೆ ಮರಳಿದ ಆಕೆ ಅಸ್ತವ್ಯಸ್ತವಾಗಿದ್ದಳು. ಆದರೂ ಇರುಳು ನಮ್ಮೆಲ್ಲರ ನಡುವೆ ಮಲಗಲು ಬರುತ್ತಿದ್ದಳು. ಆದರೆ ಯಾವಾಗಲೂ ಕಥೆ ಕೇಳುತ್ತಾ ಕಂಪಿಸುತ್ತಿದ್ದ ಆಕೆಯ ಬೆನ್ನು ಯಾಕೋ ನಿಶ್ಚಲವಾದಂತೆ ಅನಿಸಿ ನಾನು ಆಕೆಯನ್ನು ಮುಟ್ಟಲು ಹೋದರೆ ಆಕೆ ಆ ಇರುಳಲ್ಲಿ ನನ್ನ ಕೆನ್ನೆಗೆ ಸದ್ದಾಗದ ಹಾಗೆ ಹೊಡೆದಿದ್ದಳು. ನನಗೆ ಅಳು ಬಂದಿತ್ತು. ಕಥೆ ಕೇಳುತ್ತಾ ಕೇಳುತ್ತಾ ನನ್ನ ಕಥೆಗಳ ರಾಜಕುಮಾರಿಯೇ ಆಗಿದ್ದವಳು ಕಥೆಗಾರನ ಕೆನ್ನೆಗೇ  ಹೊಡೆದಿದ್ದಳು. ನನಗೆ ಅಳುವೂ ಬರದಷ್ಟು ಅವಮಾನವಾಗಿತ್ತು. ಆನಂತರ ಪುಟ್ಟವಳಾಗಿದ್ದ ಆಕೆಯನ್ನು ಒಬ್ಬ ನಡುವಯಸ್ಸಿನ ಮುಲ್ಲಾನೊಬ್ಬನಿಗೆ ಕೊಟ್ಟು ಮದುವೆ ಮಾಡಿಸಿದ್ದರು. ಮದುವೆಯಾದ ನಂತರ ಆಕೆ ಗಂಡನೊಡನೆ ನಮ್ಮ ಮನೆಗೆ ಔತಣಕ್ಕೆ ಬಂದಿದ್ದಳು. ಆಗ ನನಗೆ ಅಳು ಬಂದಿತ್ತು. ಕಥೆ ಹೇಳುತ್ತಾ ಏಳು ಆಕಾಶಗಳ ಮೇಲೆ ಹಾರಾಡುತ್ತಿದ್ದ ನಾನು ಆಗ ಏಳನೆಯ ಪಾತಾಳವನ್ನೂ ಅನುಭವಿಸಿದ್ದೆ. ಇನ್ನೂ ಮೀಸೆ ಮೂಡದ ಎಳೆಯ ಬಾಲಕನೊಬ್ಬನ ದಾವಾಗ್ನಿಯಂತಹ ವಿರಹ ಮತ್ತು ಆಕ್ರೋಶ (ಈಗ ನನಗೆ ವಯಸ್ಸು ಐವತ್ತು ದಾಟಿದೆ. ಆದರೂ ತಮಾಷೆಯೆಂದರೆ ಆ ಹೊತ್ತಿನ ಅವಮಾನದ ಆ ದಾವಾಗ್ನಿ ಇನ್ನೂ ಹಾಗೇ ಇದೆ!) ಎಂಟನೇ ತರಗತಿಯಲ್ಲಿದ್ದಾಗ ಆದ ಈ ಅವಮಾನವನ್ನು ನೆನೆದುಕೊಂಡು ಹತ್ತನೇ ತರಗತಿಯಲ್ಲಿರುವಾಗ ಒಂದು ಕಥೆ ಬರೆದಿದ್ದೆ. ಬಹುಶಃ ಅದು ನನ್ನ ಮೊದಲ ಕಥೆ. ದೇವರೇ ಎಷ್ಟೊಂದು ಆಕ್ರೋಶ ಮತ್ತು ಕ್ರೋಧ ಮತ್ತು ದುಃಖ ಆ ಕಥೆಯೊಳಗಿತ್ತು. ಕಥೆಯ ಹೆಸರು ಹೇಳಲೂ ಈಗ ನನಗೆ ಸಂಕೋಚವಾಗುತ್ತದೆ. + + + +ಆದರೆ ಆಕೆ ಆಮೇಲೆ ಕೆಲವು ವರ್ಷಗಳಲ್ಲಿ ತೀರಿಹೋದಳು. ತೀರಿಹೋಗುವ ಮೊದಲು ನನ್ನನ್ನು ನೋಡಬೇಕು ಎಂದು ಹೇಳುತ್ತಿದ್ದಳಂತೆ. ಆದರೆ ಆಗ ನಾನು ದೊಡ್ಡವರಿಗೆ ಕಥೆ ಹೇಳುತ್ತಾ, ನನ್ನ ಬಾಲ್ಯದ ಸರಕುಗಳನ್ನು ಅಕ್ಷರಗಳಿಗೆ ವಿನಿಮಯ ಮಾಡುತ್ತಾ, ಕ್ರಾಂತಿಕಾರಿಯಂತೆ ಭಾಷಣ ಮಾಡುತ್ತಾ, ಹಾಡು ಹೇಳುತ್ತಾ ಆ ರೋಮಾಂಚನದಲ್ಲಿ ಅವಳನ್ನು ಮರೆತಿದ್ದೆ. ಇತ್ತೀಚೆಗೆ ಅವಳು ಕನಸಲ್ಲಿ ಬಂದಿದ್ದಳು. ‘ನಾನು ಯಾರು ನೆನಪಿದೆಯಾ?’ ಎಂದು ಕೇಳಿದ್ದಳು. ‘ನೀನು ಬಹಳ ದೊಡ್ಡ ಮನುಷ್ಯನಾಗಿದ್ದೀಯಾ ಆದರೆ ನಿನ್ನ ತಲೆ ನದಿಯ ಕಲ್ಲಿನ ಹಾಗೆ ನುಣುಪಾಗಿದೆಯಲ್ಲಾ’ ಎಂದು ತಮಾಷೆ ಮಾಡಿದ್ದಳು, ನನಗೆ ಅಚ್ಚರಿಯಾಗುವ ಹಾಗೆ ಆಕೆ ತೀರಿಹೋಗಿದ್ದರೂ ಪೂರ್ಣಚಂದ್ರನಂತೆ ಬೆಳಗುತ್ತಿದ್ದಳು. ಆಕೆ ಬದುಕಿದ್ದಾಗ ತನ್ನ ತಲೆಯ ವಸ್ತ್ರವನ್ನು ಬಿಚ್ಚಿ ಆಕಾಶಕ್ಕೆ ತೋರಿಸಿ ನನಗೆ ಚಂದ್ರನನ್ನು ಎಣಿಸಲು ಹೇಳುತ್ತಿದ್ದಳು. ಒಂದನೆಯ ಚಂದ್ರ, ಹತ್ತನೆಯ ಚಂದ್ರ, ಹದಿನಾಲ್ಕನೆಯ ಚಂದ್ರ. ಆಯಾ ಇರುಳಂದು ಅವಳ ಕನ್ನಡಿಕನ್ನಡಿಯ ತಲೆವಸ್ತ್ರದಲ್ಲಿ ಕಾಣಿಸುತ್ತಿದ್ದ ಅಷ್ಟಷ್ಟೇ ಚಂದ್ರಗಳು. ತೀರಿಹೋದ ಮೇಲೆ ಎಷ್ಟೋ ದಶಕಗಳ ನಂತರ ಕನಸಲ್ಲಿ ಬಂದಿದ್ದ ಅವಳಿಗೆ ವಯಸ್ಸೇ ಆಗಿರಲಿಲ್ಲ. ಅವಳಿಗೆ ನಾನು ಹೇಳುತ್ತಿದ್ದ ಕಥೆಗಳು ಇನ್ನೂ ನೆನಪಿರಬಹುದು. ಆದರೆ ಕಥೆ ಹೇಳುತ್ತಿದ್ದ ನನಗೆ ಅವುಗಳು ಮರೆತೇ ಹೋಗಿ ಆ ಜಾಗದಲ್ಲಿ ಹೊಸ ಬಗೆಯ ಕಥೆಗಳು, ಹೊಸ ರೂಪಕಗಳು, ಜಾಗತಿಕ ತಲ್ಲಣಗಳು, ಓದುಗರನ್ನೂ ವಿಮರ್ಶಕರನ್ನೂ ದೆವ್ವದಂತೆ ಕಾಡಿಸುವ ಪ್ರತಿಮೆಗಳು, ಸಾಹಿತ್ಯದ ಅಗಾಧವಾದ ಓದು, ಜ್ಞಾನ, ಮಣ್ಣಾಂಗಟ್ಟಿ ಇತ್ಯಾದಿ ದುಸ್ವಪ್ನಗಳಂತೆ ಕಾಡುತ್ತಿದ್ದವು. ಕನಸಲ್ಲಿ ಬಂದ ಅವಳು ಮರಳಿ ಹೋಗುವಾಗ ನನಗೆ ಎದೆ ನೋವಾದ ಹಾಗೆ ಅನಿಸುತ್ತಿತ್ತು. ನನ್ನದೊಂದು ಪುಪ್ಪುಸ ಕತ್ತರಿಸಿ ಹೋದಂತೆ, ಜೀವನಪೂರ್ತಿ ಜೊತೆಗಿರಬೇಕಾಗಿದ್ದ ಅನುರಾಗವೊಂದು ನಡುವಲ್ಲಿ ನೊಂದುಕೊಂಡು ಕೈತಿರುಗಿಸಿ ಹೊರಟು ಹೋದಂತೆ ಅನಿಸಿ ಕನಲಿ ಹೋಗಿದ್ದೆ. ನನ್ನ ಕಥೆ ಹೇಳುವ ಹುಚ್ಚು ನನ್ನ ಪ್ರೇಮಿಸುವ ಹುಚ್ಚಿನಷ್ಟೇ ನೋವಿನದ್ದು ಅನಿಸುತ್ತಿತ್ತು. ಕಥೆ ಹೇಳುವುದು ಮತ್ತು ಕಥೆಗಳನ್ನು ಬರೆಯುವುದು ಸಾಮಾಜಿಕವೋ ರಾಜಕೀಯವೋ ಪ್ರಜ್ಞಾಪೂರ್ವಕವೋ ಆದ ಒಂದು ಕಸುಬಲ್ಲ; ಅದು ಪ್ರೇಮಿಸುವ ಮತ್ತು ಕಾಮಿಸುವ ಹಾಗೇ ಇರುವ ಒಂದು ಪಡೆದುಕೊಳ್ಳುವ ಮತ್ತು ಕಳೆದುಕೊಳ್ಳುವ ಮನೋವ್ಯಾಧಿ ಎಂದೂ ಅನಿಸಲು ಹತ್ತಿತ್ತು. + +ಕನಸಲ್ಲಿ ಅವಳು ಬಂದು ಹೋದ ಮೇಲೆ ನಾನು ಟೆರೇಸಿನ ಮೇಲೆ ಬಂದು ಯಾವಾಗಲೂ ನೋಡುವ ಒಂದು ನಕ್ಷತ್ರವನ್ನು ನೋಡುತ್ತಿದ್ದೆ. ಅದು ಉತ್ತರದ ಆಕಾಶದಲ್ಲಿ ಅಲುಗದೆ ನಿಂತಿರುವ ದ್ರುವ ನಕ್ಷತ್ರ. ಅದು ಅಲುಗುವುದಿಲ್ಲ ಎಂದು ನನಗೆ ಗೊತ್ತೇ ಇರಲಿಲ್ಲ. ಮೋಡಗಳಿರುವ ಆಕಾಶದಲ್ಲಿ ಅದು ಕಾಣಿಸದಿದ್ದರೆ ಅದು ಯಾಕೋ ಇಂದು ಬಂದಿಲ್ಲ ಅಥವಾ ಸೂರ್ಯನ ಜೊತೆ ಅದೂ ಮುಳುಗಿಹೋಗಿದೆ ಅಂದುಕೊಳ್ಳುತ್ತಿದ್ದೆ. ಆದರೆ ಖಗೋಳಶಾಸ್ತ್ರವನ್ನು ಗಂಭೀರವಾಗಿ ತೆಗೆದುಕೊಂಡಿರುವ ಮಗಳು ‘ಹುಚ್ಚಪ್ಪಾ ನಾವು ನಿಂತಿರುವ ಭೂಮಿ ತಿರುಗಬಹುದು, ಚಂದ್ರ ತಿರುಗಬಹುದು ಸೂರ್ಯನೂ ತಿರುಗಬಹುದು, ಆದರೆ ಪೋಲ್ ಸ್ಟಾರ್ ಅಚರ’ ಅಂದಳು. ಮಗ ಶೇಕ್ಸ್ ಪಿಯರನ ಜೂಲಿಯಸ್ ಸೀಸರನನ್ನು ಉಲ್ಲೇಖಿಸಿ, ‘ಪೆದ್ದು ನಿಂಗೆ ಅಷ್ಟೂ ಗೊತ್ತಿಲ್ವಾ ಅವನೂ ಉತ್ತರದ ಧ್ರುವ ನಕ್ಷತ್ರದಂತೆ ಅಚಲನಾಗಿದ್ದವನು’ ಅಂದನು. ಆದರೂ ನಾನು ಈಗಲೂ ಅದು ಇರುಳು ಹೊತ್ತಲ್ಲಿ ಉತ್ತರದ ಆಕಾಶದಲ್ಲಿ ಕಾಣಿಸದಿದ್ದರೆ ಮೋಡಗಳಿರುವ ಕಾರಣ ಈ ಇರುಳು ಆ ನಕ್ಷತ್ರ ಬರದೇ ಇರುವುದು ಎಂದುಕೊಳ್ಳುವೆನು. ಆದರೆ ಆವತ್ತು ಅವಳು ಕನಸಲ್ಲಿ ಕಂಡ ಆ ಇರುಳು ಧ್ರುವನಕ್ಷತ್ರ ಒಂದು ದುಗುಡ ತುಂಬಿದ ಆಕಾಶಬುಟ್ಟಿಯಂತೆ ಆಕಾಶದಲ್ಲಿ ತೂಗುತ್ತಿತ್ತು. ಎಲ್ಲೋ ಏನೋ ಕೆಡುಕಾಗುತ್ತಿದೆ ಅನಿಸುತ್ತಿತ್ತು. ಕನಸಲ್ಲಿ ಬಂದವಳು ಅವಳಿರಲಿಕ್ಕಿಲ್ಲ ಅನಿಸುತ್ತಿತ್ತು. ಅವಳಿಗಿಂತಲೂ ಅನೂಹ್ಯ ಸೌಂದರ್ಯದ ಖನಿಯೊಂದು, ಅವಳಿಗಿಂತಲೂ ಅಸಾಧ್ಯ ವೇದನೆಯನ್ನು ಅನುಭವಿಸಿದ ನನ್ನ ಪ್ರಾಣದಂತೊಂದು ಅವಳ ರೂಪದಲ್ಲಿ ಬಂದು ಒಂದು ಆಕಾಶಬುಟ್ಟಿಯ ಹಾಗೆ ತೂಗುತ್ತಾ ಹೋಗುತ್ತಿದೆ ಅನಿಸಿತ್ತು ಆ ಇರುಳು. ನನ್ನನ್ನು ಎಷ್ಟೋಂದು ಒಂಟಿಯಾಗಿಸಿ ಹೋದ ಆ ಆಕಾಶ ನಕ್ಷತ್ರ ಬುಟ್ಟಿ. ಈ ಕೊರೆಯುವ ಒಂಟಿತನದಿಂದ ಯಾವ ಕಥೆಗಾರಿಕೆಯೂ, ಯಾವ ಖ್ಯಾತಿಯೂ ನನ್ನನ್ನು ಮೇಲೆತ್ತಲಾರವು ಎಂದು ಎಂದು ಅರುಹಿ ಹೋದ ಆ ಇರುಳು. + + + +ನಾನೆಷ್ಟು ಭಯಂಕರ ಖ್ಯಾತ ಕಥೆಗಾರ ಎಂದು ನಾನು ಅಂದುಕೊಂಡರೂ ಅದು ಎಷ್ಟು ದೊಡ್ಡ ಸುಳ್ಳು ಎಂಬುದನ್ನು ಇಂತಹ ಇರುಳುಗಳು ಅರುಹಿ ಹೋಗುತ್ತಿರುತ್ತವೆ. ಕಥೆ ಹೇಳುತ್ತಾ ಸಾವಿನಿಂದ ತಪ್ಪಿಸಿಕೊಳ್ಳುವ ಅರೆಬಿಯನ್ ಇರುಳುಗಳ ಷಹಜಾದೆಯ ಕಥೆ ನನ್ನ ಪಾಲಿಗೆ ನಿಜವಾಗಿದೆ. ಆದರೆ ನನ್ನ ಕಥೆಗಳನ್ನು ಕೇಳುತ್ತಾ ನನ್ನ ದೇಹದ ಅಂಗವೇ ಆಗಿದ್ದ ಆಕೆ ಈಗ ಉಳಿದಿಲ್ಲ ಎಂಬುದು ಅದಕ್ಕಿಂತಲೂ ದೊಡ್ಡ ನಿಜವಾಗಿದೆ. ಆಕೆಯನ್ನು ನನ್ನ ಕಥೆಗಳಿಂದ ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ವಿಷ ಸವರಿದ ಖಡ್ಗದ ಮೊನೆಯಂತಹ ಸತ್ಯ ನನ್ನನ್ನು ಈಗಲೂ ಕೊಲ್ಲುತ್ತಿರುತ್ತದೆ. + +******** + +ಯಾವ ಬರಹಗಾರನಿಗೂ ಆ ಕಾಲದ ಮೇಲೆ ತನ್ನನ್ನು ತಾನು ಹೇರಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದು ದೊಡ್ಡ ಸತ್ಯ. ಕಾಲ ಮಾತ್ರ ಸಾಹಿತ್ಯವನ್ನೂ ಕಥೆಗಾರರನ್ನೂ ಕವಿಗಳನ್ನೂ ಸೃಷ್ಟಿಸಬಲ್ಲದು. ಅಕಾಲದಲ್ಲಿ ಬರೆಯುವವನು ಎಂತಹ ಅಭಿಜಾತ ಪ್ರತಿಭಾವಂತನಾಗಿದ್ದರೂ ಕಾಲ ಆತನನ್ನು ಅಂಡು ಒರೆಸುವ ಕಾಗದದಂತೆ ಬಳಸಿಕೊಳ್ಳುತ್ತದೆ. ಹಾಗಾಗಿ ತಂತ್ರಗಾರಿಕೆ, ಕಲಾತ್ಮಕತೆ ಇತ್ಯಾದಿಗಳಿಂದ ಸುಸ್ತು ಹೊಡೆಸಿಕೊಳ್ಳದೆ ಬದುಕಿನ ಇತರ ಸೌಂದರ್ಯಗಳತ್ತ ಮುಖ ಮಾಡುವುದು ಜಾಣತನ ಎಂಬುದು ನನ್ನ ಅನುಭವ. ಇದೆಲ್ಲ ಚಿಂತೆಗಳನ್ನು ಬಿಟ್ಟು ಪೂರ್ಣಚಂದ್ರನಂತಹ ಅವಳನ್ನು ಒಲಿಸಿಕೊಳ್ಳಲು ಅಷ್ಟು ಸಣ್ಣ ವಯಸಿನಲ್ಲೇ ಅದೆಷ್ಟು ಒದ್ದಾಡುತ್ತಿದ್ದೆನಲ್ಲಾ ಮತ್ತು ಈಗಲೂ ಹಾಗೆಯೇ ಓಡಾಡುತ್ತಿರುವೆನಲ್ಲಾ ಎಂಬುದು ನನಗೆ ಅತ್ಯಂತ ಹೆಮ್ಮೆಯ ವಿಷಯ. ನಕ್ಷತ್ರದಂತೆ ಕನಸಲ್ಲಿ ಬಂದಿದ್ದ ಅವಳು ಮತ್ತೆ ನಿಜವಾಗಿಯೂ ದುಡುದುಡು ಓಡಿಕೊಂಡು ಬಂದು ಪಕ್ಕದಲ್ಲಿ ಕುಳಿತು ಕಿವಿ ನಿಮಿರಿಸಿದರೆ ಅವಳಿಗೆ ಹೇಳಲು ಎಷ್ಟೊಂದು ಕಥೆಗಳಿವೆಯಲ್ಲಾ ಎಂದು ಇದೀಗ ಮತ್ತೆ ಹುಮ್ಮಸ್ಸುಗೊಳ್ಳುತ್ತಿದ್ದೇನೆ. + +ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು. \ No newline at end of file diff --git a/Kenda Sampige/article_478.txt b/Kenda Sampige/article_478.txt new file mode 100644 index 0000000000000000000000000000000000000000..6bb1dfe54e9e5b037b3667033ac0c064b0fcc52f --- /dev/null +++ b/Kenda Sampige/article_478.txt @@ -0,0 +1,35 @@ +byಡಾ. ಬಿ. ಜನಾರ್ದನ ಭಟ್|May 20, 2018|ವಾರದ ಕಥೆ,ಸಾಹಿತ್ಯ| 0 Comments + +”ಇಟ್ಟಲ ಪೇಟೆಯಿಂದ ಸುಮಾರು ಮೂರು ಹರದಾರಿ ಈಶಾನ್ಯಕ್ಕೆ ಪುಣಚೆ ಗ್ರಾಮವಿದೆ. ಇಟ್ಟಲ ಸೀಮೆಯ ಹದಿನೆಂಟು ದೇವಸ್ಥಾನಗಳಲ್ಲಿ ಒಂದಾದ ಮಹಿಷ ಮರ್ದಿನಿಯ ದೇಗುಲವು ಅಲ್ಲೆ ವಿರಾಜಿಸುತ್ತಿದೆ. ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ. + +byಸೃಜನ್|May 12, 2018|ವಾರದ ಕಥೆ,ಸಾಹಿತ್ಯ| 1 Comment + +”ಸುಂದರ್ ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ಬಾಚಿಕೊಂಡಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ”. + +byಡಾ. ಬಿ. ಜನಾರ್ದನ ಭಟ್|May 6, 2018|ವಾರದ ಕಥೆ,ಸಾಹಿತ್ಯ| 0 Comments + +“ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯಲ್ಲಿ ಸರ್ವೇಯರ್ ಜನರಲ್ ಆಗಿದ್ದ ಕರ್ನಲ್ ಕಾಲಿನ್ ಮೆಕೆಂಜಿ ಎಂಬಾತ ದಕ್ಷಿಣ ಭಾರತದ ಎಲ್ಲೆಡೆ ಸಂಚರಿಸಿ ಇಲ್ಲಿನ ಸಾವಿರಾರು ಶಾಸನಗಳನ್ನು, ನಾಣ್ಯಗಳನ್ನು ಹಾಗೂ ಮೂರ್ತಿಗಳನ್ನು ಸಂಗ್ರಹಿಸಿದ್ದ. ಸ್ಥಳೀಯ ಐತಿಹ್ಯಗಳನ್ನು ಅಲ್ಲಲ್ಲಿನ ಹಿರಿಯರಿಂದ ಕೇಳಿ ದಾಖಲು ಮಾಡಿಕೊಂಡ ಬರಹ ರೂಪದ ಹೇಳಿಕೆಗಳೇ ಕೈಫಿಯತ್ತುಗಳು.” + +byಡಾ. ಬಿ. ಜನಾರ್ದನ ಭಟ್|Apr 22, 2018|ವಾರದ ಕಥೆ,ಸಾಹಿತ್ಯ| 0 Comments + +ಕನಲಿ ಬುಸುಗುಟ್ಟುತ್ತಿದ್ದ ತುಳುಪಡೆಯು, ಈ ಘೋಷವನ್ನು ಕೇಳುತ್ತಲೇ ಗಾರುಡಿಗನ ಮಂತ್ರಕ್ಕೆ ಮಣಿವ ಹಾವಿನಂತೆ ತಲೆ ತಗ್ಗಿಸಬೇಕಾಯಿತು + +byಜೆ.ವಿ.ಕಾರ್ಲೊ|Apr 14, 2018|ಸಾಹಿತ್ಯ| 0 Comments + +“ದೇವದೂತನಿಗಿರಬೇಕಾದ ಗಾಂಭೀರ‍್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ.ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು.” + +byನಂದೀಶ್ ಬಂಕೇನಹಳ್ಳಿ|Apr 7, 2018|ಸಾಹಿತ್ಯ| 1 Comment + +ಅಳುಕಿನಿಂದಲೆ ಮನ್ಯಾತ ತಾಲ್ಲೂಕಾಫಿಸಿನೊಳಗೆ ಹೋದಾಗಲ್ಲೆಲ್ಲಾ ಅಲ್ಲಿನ ಅಧಿಕಾರಿಗಳು ಗ್ರಾ.ಪಂ ಯಿಂದ ಬರೆಸಿಕೊಂಡು ಬನ್ನಿ ಅಂತಲೋ, ಒಂದು ತಿಂಗಳು ಬಿಟ್ಟುಕೊಂಡು ಬನ್ನಿ ಅಂಥಲೋ ಹೇಳಿ ತಲೆ ಗೊಂದಲದ ಗೂಡಾಗುವಂತೆ ಮಾಡುತ್ತಿದ್ದರು. + +byಪ್ರತೀಕ್ ಮುಕುಂದ|Mar 31, 2018|ಸಾಹಿತ್ಯ| 0 Comments + +“ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ. + +byಡಾ. ನಾ. ಡಿಸೋಜ|Mar 24, 2018|ಸಾಹಿತ್ಯ| 0 Comments + +“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ… + +byಮಿತ್ರಾ ವೆಂಕಟ್ರಾಜ|Mar 18, 2018|ವಾರದ ಕಥೆ,ಸಾಹಿತ್ಯ| 0 Comments + +ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು. \ No newline at end of file diff --git a/Kenda Sampige/article_479.txt b/Kenda Sampige/article_479.txt new file mode 100644 index 0000000000000000000000000000000000000000..a4da3d9c3a2058c434554a24cbcca975e5e2dfe6 --- /dev/null +++ b/Kenda Sampige/article_479.txt @@ -0,0 +1,49 @@ + + + + +‘ತೆಯ್ಯು… ತಾಹಿ , ತೆಯ್ಯು… ತಾಹಿ’  ನಾನು ಹೊರಗೆ ವರಾಂಡದಲ್ಲಿ ಕುಳಿತಿದ್ದಾಗ ಒಳಗೆ ಅವಳ ಕಾಲ್ಗೆಜ್ಜೆ ಸದ್ದು,ಮಕ್ಕಳಿಗೆ ನೃತ್ಯ ಕಲಿಸುತ್ತಿದ್ದ ಅವಳ ತಾಳಬದ್ಧ ದನಿ, ಕಿವಿಯನ್ನು ತಾಕುತ್ತಿತ್ತು. ಮುಚ್ಚಿದ್ದ ಬಾಗಿಲಿಗೆ ಅಂಟಿಸಿದ್ದ ಅವಳದೇ ಚಿತ್ರ, ಎಷ್ಟು ಭಾವುಕ ಭಂಗಿ, ಒಂದು ಕೈ ಮೇಲೆತ್ತಿ ಗಗನಕ್ಕೆ ಚಾಚಿ, ಏನನ್ನೋ ಕೇಳುತ್ತಿದೆ, ಹೇಳುತ್ತಿದೆ, ಮತ್ತೊಂದು ಕೈ ಅದಕೆ ತುಸು ಕೆಳಗೆ ಅದೇ ಆಸೆಗೆ ಒತ್ತಾಸೆಯಾಗಿ ನಿಂತ ಹಾಗೆ ಇದೆ. ಕಾಲೊಂದನು ಮಡಚಿ ಭಾವಕ್ಕೆ ತೀವ್ರತೆ ತುಂಬಿದೆ, ಮತ್ತೊಂದು ಕಾಲು ತೀರ ಹೆಬ್ಬೆರಳಿನಾಸರೆಯಲ್ಲಿಯೇ ನಿಂತು ಇಡೀ ಸನ್ನಿವೇಶಕ್ಕೊಂದು ವೇಗ ತಂದಿದೆ. ಅವಳ ಕಣ್ಣುಗಳು ಮುಗಿಲತ್ತ ನೆಟ್ಟು ಏನನ್ನೋ ಧೇನಿಸುತ್ತಿರುವಂತೆ ಕಾಣುತ್ತಿದೆ. ಅವಳನ್ನು ಹಾಗೆ ನೋಡುವಾಗ ಅವಳ ಹೃದಯದೊಳಗೆ ಕಡಲೊಂದನ್ನೇ ಹುಗಿತಿಟ್ಟುಕೊಂಡಿದ್ದಾಳೋ ಏನೋ ಅನಿಸುತ್ತದೆ. ಆಗಸದ ನೀಲಿ ಕರಗಿ ಅವಳ ಕೈಯೊಳಗೆ ಇಳಿದು ಬಿಡುವುದೋ ಎಂದೆನಿಸುತ್ತದೆ. ಕಾಲಡಿಯ ಮಣ್ಣು ಕೊನರಿ ಹೂವಾಗಿಬಿಡುವುದೋ ಎಂದೆನಿಸುತ್ತದೆ, ಅವಳ ಸೊಂಟದ ತಿರುವಿನಲಿ, ಎದೆಯ ಏರಿಳಿತದಲಿ ಬೀಸುಗಾಳಿ ಕೂಡ ತುಸು ನಿಧಾನಿಸಿ ತಂಗಿ ಹೋಗುವುದೋ ಎಂದೆನಿಸುತ್ತದೆ.ಅನಿಸುತ್ತದೆ ಅಷ್ಟೇ. + +ನಿಜದಲ್ಲಿ ಅವಳನ್ನು ಬೆಂಕಿಯ ಕೆನ್ನಾಲಗೆಗಳು ನೆಕ್ಕಿ ಹೋಗುತ್ತಿದ್ದವು. ಹೆಜ್ಜೆಯೂರಿದಲೆಲ್ಲಾ ಕೂರಂಬುಗಳು ಮೊಳೆತು ಅವಳ ಕಾಲಿನ ರಕ್ತದಲಿ ಮೀಯುತ್ತಿದ್ದವು. ಅವಳು ತೀರದ ದಾಹವೊಂದನು ಗಂಟಲಿನಲಿ ಸಿಲುಕಿಸಿಕೊಂಡು ಅನುಕ್ಷಣವೂ ಅದರೊಂದಿಗೆ ಹೋರಾಡುತ್ತಿದ್ದಳು. ಹಗಲಿರುಳೆನ್ನದೆ ನಿತ್ಯವೂ ನೆತ್ತಿ ತೋಯಿಸುವ ಬಿಸಿಲಿನ ಝಳದಲ್ಲಿ ಆಕ್ಷೇಪವನೇ ಎತ್ತದೆ ನಿಂತ ಹೂವಾಗಿದ್ದಳು ಅವಳು. ಅವಳು ಅಭಿರಾಮಿ. ಅವಳು ಅರವಾಣಿ. + +ಬಹುಶಃ ಈಗ ಬಾಗಿಲಿಗೆ ಅಂಟಿಸಿರುವ ಚಿತ್ರ ಇತ್ತೀಚಿನದಿರಬೇಕು, ಹೆಚ್ಚೇನೂ ಬದಲಾಗಿಲ್ಲ, ಹಾಗೆಲ್ಲ ಕಾಲದ ಧಾಳಿಗೆ ಸುಲಭದಲಿ ಶರಣಾಗುವ ನಾಜೂಕಿನ ಚೆಲುವಲ್ಲ ಅವಳದ್ದು. ಸರಿದು ಹೋದ ಈ ಮೂರೂ ಚಿಲ್ಲರೆ ವರ್ಷಗಳಲ್ಲಿ ಅಭಿರಾಮಿಯನ್ನು ಒಂದು ದಿನವಾದರೂ ಮರೆತಿರಲಿಕ್ಕಿಲ್ಲ ನಾನು, ನನ್ನ ನೆನಪಿನಲ್ಲಿ ಉಳಿದ ಅದೇ ಅಭಿರಾಮಿ ಅಷ್ಟೂ ಚೆಲುವಿನೊಂದಿಗೆ ಅರಳಿ ನಿಂತಂತೆ ಇತ್ತು. ಅಭಿರಾಮಿಯನ್ನು ನಾನು ಮೊದಲು ಭೇಟಿ ಮಾಡಿದ್ದು ನನ್ನ ಪತ್ರಿಕೆಯ ಮೂಲಕ. ಅವಳ ಕುರಿತು ಒಂದು ಸ್ಟೋರಿ ಮಾಡಬೇಕಿತ್ತು. ಬಹುಶಃ ಅವೊತ್ತು ನಿವೇದ ಡ್ಯೂಟಿಗೆ ಬಂದಿರುತ್ತಿದ್ದರೆ ನಾನಂತೂ ಅಭಿರಾಮಿಯನ್ನು ಯಾವ ಕಾಲಕೂ ಭೇಟಿ ಮಾಡಿರಲಿಕ್ಕಿಲ್ಲವೇನೋ ಆದರೆ ಕೆಲವೊಂದು ಸಂಗತಿಗಳು ನಮಗೆಂದೇ ಯಾರೋ ಮೊದಲೇ ನಿಗದಿ ಪಡಿಸಿಟ್ಟಿರುತ್ತಾರೋ ಎಂಬಂತೆ ಹೂವು ಬಿರಿದಷ್ಟೇ ಸಹಜವಾಗಿ, ಸರಳವಾಗಿ ನಮ್ಮನ್ನು ಅಲ್ಲಿಗೆ ತಲುಪಿಸಿಬಿಡುತ್ತವೆ. ಅಗಮ್ಯ ಗಮ್ಯಕೆ. ಇದೂ ಹಾಗೆಯೇ! ಇಲ್ಲವಾದರೆ ಯಾವತ್ತೂ ಕೈಗೆತ್ತಿಕೊಂಡ ಅಸೈನ್ಮೆಂಟ್ ಪಕ್ಕಾ ಮಾಡಿ ಮುಗಿಸುವ ನಿವೇದ ಕಡೇ ಘಳಿಗೆಯಲಿ ಕೆಲಸಕೆ ಬಾರದೆ ಯಾಕೆ ಉಳಿಯಬೇಕು? ಎಂದೂ ಆಫೀಸಿಗೆ ಟೈಮಿಗೆ ಹೋಗದ ನಾನು ಅಂದೇಕೆ ಟೈಮಿಗೆ ಮೊದಲೇ ಹೋಗಬೇಕು? ಅಷ್ಟು ಜನರಿರುವ ಆಫೀಸಿನಲಿ ಬಾಸ್ ನನಗೇ ಯಾಕೆ ಫೋನ್ ಹಚ್ಚಿ ಈ ಅಸೈನ್ಮೆಂಟ್ ಮುಗಿಸಿಕೊಡೆಂದು ಕೇಳಬೇಕು. ಅವೊತ್ತು ನನಗೂ ಬೇಕಷ್ಟು ಕೆಲಸಗಳಿದ್ದವು ಆದರೂ ನಾನು ನಿವೇದಳ ಕೆಲಸ ಎತ್ತಿಕೊಂಡು ಅಭಿರಾಮಿಯನ್ನು ಭೇಟಿ ಮಾಡಲು ಯಾಕೆ ಹೋಗಬೇಕು? ಹೌದು ಅವೊತ್ತು ಬಾಸ್ ಕೆಲಸ ಹೇಳಿದಾಗ ನಾನು ಮರುಮಾತಾಡದೆ ಒಪ್ಪಿಕೊಂಡು ಹೊರಟಿದ್ದೆ. ಅಭಿರಾಮಿಯೆಂಬ ನೃತ್ಯಗಾತಿಯನು ಸಂದರ್ಶಿಸಲು. + +ಮರೀನಾ ಕ್ಯಾಂಪ್, ದೊಡ್ಡದಾದ ಬೋರ್ಡ್ ಹೊತ್ತು ನಿಂತ ಆ ಕ್ಯಾಂಪಸ್ ಸ್ಲಮ್ ಕ್ಲಿಯರೆನ್ಸ್ ಬೋನವರು ಕಟ್ಟಿದ್ದಾಗಿತ್ತು. ಕಡಲತಡಿಗೆ ಮುಖ ಮಾಡಿ ನಿಂತ ಅನೇಕ ಮನೆಗಳ ಅಡುಕುಮಾಡಿಯ ಆ ಕ್ಯಾಂಪಸ್ಸಿನೊಳಗೆ ಕಾಲಿಟ್ಟಾಗ ಎಣ್ಣೆ ಕಾಣದ ಮುಖದ ಅನೇಕ ಸಣ್ಣ ಮಕ್ಕಳು ಬಂದು ಮುತ್ತಿಕೊಂಡಿದ್ದವು. ಯಾರು ಬೇಕು ನಿಮಗೆ? ಯಾಕಿಲ್ಲಿ ಬಂದಿದೀರ, ಏನು ಬೇಕು? ಮೀನು ಬೇಕಾ? ಫ್ರೆಶ್ಶಿದೆ. ಈಗ ಹಿಡಕೊಂಡು ಬಂದದ್ದಷ್ಟೇ, ಒಂದ್ ಹತ್ರುಪಾಯಿ ಕೊಡಿ ಸಾಕು. ಒಳ್ಳೆ ಒಳ್ಳೆ ಕಡೆ ಕೊಡಿಸ್ತೀನಿ. ಇಂಥ ಹಲವು ಒಪ್ಪಂದಗಳನು ಮುಂದಿಡುತ್ತ ಸುತ್ತುವರಿದ ಮಕ್ಕಳನು ‘ಅಭಿರಾಮಿ ಮೇಡಂ ಮನೆ ಎಲ್ಲಿ?’ಎಂದು ಕೇಳಿದರೆ ಅವು ಹೊಟ್ಟೆ ಹಿಡಿದುಕೊಂಡು ನಗತೊಡಗಿದ್ದವು. ಒಬ್ಬ ಹುಡುಗನಂತೂ ವಿಚಿತ್ರ ದನಿಯಲಿ ಕೇಕೆ ಹಾಕಿ, ಮೇಡಮ್ಮಾ??? ಎಂದು ಉರುಳುರುಳಿ ನಕ್ಕಿದ್ದ. ಅವನ ಈ ಚರ್ಯೆ ಉಳಿದ ಹುಡುಗರಲಿ ಮತ್ತಷ್ಟು ನಗೆ ಉಕ್ಕಿಸಿ, ಅವು ನಗುತ್ತ ಚದುರಿ ಹೋಗಿದ್ದವು. ಒಬ್ಬ ಹುಡುಗ ಮಾತ್ರ ಗುಂಪಿನಿಂದ ಮೆಲ್ಲಗೆ ಕಳಚಿಕೊಂಡು ಹೊರಬಂದು “ಯಾಕ್ಸಾರ್ ನೋಡ್ಬೇಕು? ಸರಿ ಹಣ ಕೊಡಿ ತೋರಿಸ್ತೀನಿ” ಎಂದು ಪಿಸುಗುಟ್ಟಿದ್ದ. ಈ ರೀತಿಯ ಸನ್ನಿವೇಶವನು ಊಹಿಸಿಕೊಂಡಿರದೇ ಇದ್ದ ನನಗೆ ಈ ಅಭಿರಾಮಿ ಯಾರಾಗಿರಬಹುದು? ಒಂದು ವೇಳೆ ತಪ್ಪಾದ ಅಡ್ರೆಸ್ಸಿಗೆ ಬಂದುಬಿಟ್ಟೆನೋ ಎಂದು ಒಳಗೊಳಗೆ ಸಣ್ಣಗೆ ದಿಗಿಲಾಗಿತ್ತು. ಇನ್ನೇನು ಬಾಸ್ ಗೆ ಫೋನ್ ಹಚ್ಚಿ ವಿಷಯ ಕನ್ಫರ್ಮ್ ಮಾಡ್ಕೊಳ್ಳುವಾಂತ ಯೋಚಿಸುವಷ್ಟರಲಿ ಪಕ್ಕದಲೇ ಕುಳಿತು ಬೀಡಿ ಸೇದುತ್ತ ನಮ್ಮ ತಮಾಷೆ ನೋಡುತ್ತ ಕುಳಿತಿದ್ದ ವೃದ್ದನೊಬ್ಬ “ಏನಪ್ಪ, ಯಾರು ಬೇಕಿತ್ತು, ಏನು ನಿನ್ನ ಸಮಸ್ಯೆ” ಎಂದು ಕುಳಿತಲ್ಲಿಂದಲೇ ಕೇಳಿದ್ದ. ಅವನ ದನಿ, ಮುಖ ಎರಡೂ ಒರಟಾಗಿತ್ತು. “ಅಯ್ಯ ಅಭಿರಾಮಿ ಅನ್ನೋರನ್ನ ನೋಡಬೇಕಿತ್ತು. ಅವರ ಮನೆ ಎಲ್ಲಿದೆ? ಬಿ ಬ್ಲಾಕ್ ಅಂತ ಹಾಕಿದಾರೆ ಡೋರ್ ನಂ ಹಾಕಿಲ್ಲ,” ನಾನು ಮೆತ್ತಗೆ ಕೇಳಿದ್ದೆ. “ಯಾಕೆ? ಯಾಕೆ ನೋಡ್ಬೇಕು ನೀನು?” ಅವನ ದನಿ ಈಗ ಮೊದಲಿಗಿಂತ ಒರಟಾಗಿತ್ತು. “ಅಯ್ಯ ನಾನು ಕಲೈವಾಣಿ ಪೇಪರಿನಿಂದ ಬಂದಿದೀನಿ, ಅವರ ಮನೆ ಎಲ್ಲಿ ಹೇಳಿ, ನಾನು ಮಾತಾಡ್ಕೊತ್ತೀನಿ”. ನಾನೂ ಈ ಬಾರಿ ತುಸು ಒರಟಾಗಿಯೇ ಹೇಳಿದ್ದೆ. “ಎಂಥದೋ ಮಾಡ್ಕೊಂಡು ಹೋಗಿ, ಮೊದಲೇ ಇಂಥವಕ್ಕೆಲ್ಲ ಕಾಲು ನೆಲದ ಮೇಲಿರೋದಿಲ್ಲ, ನೀವು ಬಂದು ಹಾರಾಡೋಕೆ ರೆಕ್ಕೆನೇ ಕಟ್ಟಿಕೊಟ್ಟು ಬಿಡಿ, ನಮ್ಮ ತಲೆ ಮೇಲೆ ಹಾರಾಡಲಿ, ಎಲ್ಲ ನೋಡಬೇಕಾಗಿರೋದು ನನ್ನ ಕರ್ಮ. ಹೋಗು, ಮೂರನೇ ಫ್ಲೋರು, ಮನೆ ನಂ. ಆರು ಹೋಗಿ ನೋಡೋಗು” ಅಂದಿದ್ದ. ಹಾಗೆ ಹೇಳುವಾಗ ಅವನ ಮುಖದಲ್ಲಿ ಕಾಣುತ್ತಿದ್ದ ಹೇವರಿಕೆಯ ತಾಪ ನನ್ನ ಮುಖಕ್ಕೆ ರಪ್ಪನೆ ರಾಚಿತ್ತು. ಸುಮ್ಮನೆ ಇದರಲ್ಲಿ ಸಿಲುಕಿದೆನಲ್ಲ, ಹಾಳಾದವಳು ನಿವೇದ, ಯಾವಾಗಲೂ ಹೀಗೇ ಏನಾದರೊಂದು ವಿಶೇಷವಾದ್ದನ್ನೇ ಆರಿಸಿಕೊಳ್ತಾಳೆ, ಆರಿಸಿಕೊಂಡೋಳು ತಾನೇ ಮಾಡಿ ಮುಗಿಸೋದು ತಾನೆ? ನನ್ನ ತಲೆಗೆ ತಂದಿಟ್ಟಿದ್ದಾಳೆ.” ಅವಳ ಮೇಲೆ ಒಳಗೊಳಗೇ ಸಿಡುಕುತ್ತ ಹೋಗಿ ಮೆಟ್ಟಿಲೇರಿದವನಿಗೆ ಎರಡನೇ ಫ್ಲೋರು ಏರುವಾಗಲೇ ಸುಸ್ತು ಹೊಡೆದಿತ್ತು. ಇರುಕಾದ ಕಡಿದಾದ ಕಿರಿಯ ಮೆಟ್ಟಿಲುಗಳು. ಗುಡಿಸದೆ ತೊಳೆಯದೆ ಗಲೀಜಾಗಿದ್ದವು. ಒಂದೊಂದು ಮನೆಯನ್ನು ಹಾದುಹೋಗುವಾಗಲೂ ಅದರೊಳಗಿನ ಟಿವಿಯ ಸದ್ದು ಎದುರು ಮನೆಯಲ್ಲಿ ಧ್ವನಿಸುತ್ತಿರುವಂತೆ ಒಟ್ಟು ಎರಡೂ ಕಡೆಯೂ ವಿಪರೀತ ಗದ್ದಲ. ನನ್ನನ್ನು ಸುತ್ತುವರಿದಿದ್ದ ಮಕ್ಕಳ ಗುಂಪು ಈಗ ಮತ್ತೆ ಕೇಕೆ ಹಾಕುತ್ತ ಮೆಟ್ಟಿಲಿನ ಮೇಲೆ ಓಡಿ ಹಿಡಿಯಾಟವಾಡುತ್ತಿದ್ದವು. ಮನೆಯ ಮುಂದಿನ ಕಿರಿದಾದ ಖಾಲಿ ಸ್ಥಳದಲ್ಲಿ ಬಟ್ಟೆ ಒಣಹಾಕಿ ಅದೊಂದು ಬಗೆಯ ಮುಗ್ಗು ವಾಸನೆ ರಾಚುತ್ತಿತ್ತು. ಅಲ್ಲಿದ್ದ ಬಹುತೇಕರ ಮನೆಗೆ ಮೀನು ಹಿಡಿಯುವುದೊಂದು ಮುಖ್ಯ ಕಸುಬಾದ ಕಾರಣ, ಮೀನಿನ ವಾಸನೆ ಎಲ್ಲವನ್ನೂ ಹೀರಿಕೊಳ್ಳುತ್ತ ಬಿರಿಯುತ್ತಿತ್ತು. ನೊಣಗಳು ಜೊಂಪೆಜೊಂಪೆಯಾಗಿ ಹಾರಾಡುತ್ತ ತಾರಾಡುತ್ತ ಬೆಳಗಿನ ಬಿಸಿಲಿಗೆ ಹೊಳೆಯುತ್ತಿದ್ದವು. ಅದೆಲ್ಲದರ ನಡುವೆ ಎಲ್ಲರ ಮನೆಯೊಳಗೂ ಒಂದು ನಗು, ಅಬ್ಬರ, ಜೋರು ಮಾತುಕಥೆ, ಹಾಡು ಕೇಕೆ! ಅವರು ಹೃದಯವನು ಒಳಗೆಲ್ಲೋ ಬೈತಿಟ್ಟಿರಲಿಲ್ಲ, ಬದಲಿಗೆ ಬಾಯಿಗೆ ಕಟ್ಟಿಕೊಂಡಿದ್ದರು. ಯಾವೊಂದು ನಾಜೂಕಿನ ಮುಸುಕನ್ನೂ ಹೊಚ್ಚದೆ, ಬಿಸಿಲು ಮಳೆ ಚಳಿಗೆ ಇರುವಂತೆಯೇ ಒಡ್ಡಿಕೊಂಡಿದ್ದರು, ಥೇಟ್ ಕಡಲಿನಂತೆ. ಅದರ ಮೊರೆತ ಇಳಿತ ಭರತ ಎಲ್ಲವೂ ತನ್ನಿಷ್ಟದಂತೆ. ಮೊದಲಿಗೆ ಬೇಸರ ಹುಟ್ಟಿಸಿದ್ದ ಅದೇ ಸ್ಥಳ ಈಗ ಮೆಲ್ಲಗೆ ಕೌತುಕ ಹುಟ್ಟಿಸುತ್ತ, ಅವರ ಅಪಾರ ಜೀವಂತಿಕೆ ಹೃದಯಕ್ಕೆ ಅಪ್ಯಾಯಮಾನವೆನಿಸತೊಡಗಿತ್ತು. ಎಲ್ಲವನೂ ಕಣ್ಣಮೊನೆಯಲ್ಲೇ ತೂಗುತ್ತ ಮೆಟ್ಟಿಲೇರಿ ಮೂರನೇ ಪ್ಲೋರ್ ತಲುಪಿದಾಗ ನನ್ನ ಹಣೆಯ ಮೇಲೆ ಸಣ್ಣಗೆ ಬೆವರಾಡಿ ಸುಸ್ತು ಕಾಡಿತ್ತು. ಹೇಗೂ ಬಂದಿದ್ದಾಗಿತ್ತು. ಆದಷ್ಟು ಬೇಗ ಕೆಲಸ ಮುಗಿಸಿ ಹೊರಬಿದ್ದರೆ ಸಾಕೆಂದುಕೊಂಡು ಬಾಗಿಲು ಬಡಿದರೆ, ಬಾಗಿಲು ತೆರೆದದ್ದೊಬ್ಬ ದೇವತೆ. + +ಅವಳ ದುಂಬಿಗಳಂಥ ಕಪ್ಪು ಕಂಗಳು ನನ್ನನ್ನು ಸುಳಿಯಂತೆ ಸರಕ್ಕನೆ ಸೆಳೆದು ಬಂಧಿಯಾಗಿಸಿದವು. ನಾನೊಂದು ಚೆಲುವಿನ ಕಡಲೊಳಗೆ ಮುಳುಗುತ್ತಿರುವಂತೆ ಭ್ರಾಂತ ನಗುವಿನೊಂದಿಗೆ ಅವಳ ಮನೆಯನ್ನು ಹೊಕ್ಕೆ. ಬಹುಶಃ ಅದಾಗಲೇ ನಿವೇದ ಫೋನಿಸಿ ನಾನು ಬರುತ್ತಿರುವ ವಿಚಾರ ಹೇಳಿದ್ದಿರಬೇಕು. ಅವಳು ಯಾವ ಪ್ರಶ್ನೆಯನ್ನೂ ಹಾಕದೆ ವಿಶಾಲ ನಗುವಿನೊಂದಿಗೆ ನನ್ನನ್ನು ಬರಮಾಡಿಕೊಂಡಿದ್ದಳು. ಅವಳ ಸಿಂಗಲ್ ಬೆಡ್ರೂಮಿನ ಆ ಸಣ್ಣ ಫ್ಲ್ಯಾಟು ಅವಳ ಹಾಗೆಯೇ ತಿದ್ದಿ ತೀಡಿದಂತೆ ಅಚ್ಚುಕಟ್ಟಾಗಿತ್ತು. ಕಡಲಿಗೆ ತೆರೆದುಕೊಂಡ ಅವಳ ಮನೆಯ ಕಿಟಕಿಗಳಿಂದ ಕಡಲಮೇಲಿನ ಗಾಳಿ ಬಿಸಿಲ ಕೋಲುಗಳೊಂದಿಗೆ ಧಾರಾಳವಾಗಿ ಒಳನುಗ್ಗುತ್ತಿತ್ತು. ಕಿಟಕಿಯಿಂದ ಸ್ವಲ್ಪ ಮುಂದೆ ಬಿಸಿಲು ಬೀಳುವ ಸ್ಥಳದಲ್ಲಿ ಸಣ್ಣದೊಂದು ತುಳಸಿಯ ಬೃಂದಾವನ ಇಟ್ಟು, ಮಲ್ಲಿಗೆಯ ದಂಡೆಯಿಂದ ಸಿಂಗರಿಸಿ, ಅದರ ಗೂಡಿನಲಿ ದೀಪ ಮುಟ್ಟಿಸಿ, ಅಗರಬತ್ತಿ ಹಚ್ಚಿದ್ದಳು. ಬೃಂದಾವನದ ಮುಂದೆ ನಾಲ್ಕೆಳೆಯ ರಂಗೋಲಿ. ರಂಗವಲ್ಲಿಯ ಅಳತೆ ಮೀರದ ಎಳೆಗಳು ಅವಳ ಯೋಚನೆಯ ನಿಖರತೆಗೆ ಸಾಕ್ಷಿಯಂತಿದ್ದವು. ಅದಷ್ಟೇ ಅಲ್ಲ, ಅವಳ ಮನೆಯ ಅಚ್ಚುಕಟ್ಟುತನ, ಹೊರಗಿನ ಅಷ್ಟೂ ಗದ್ದಲಗಳನು ದಾಟಿಯೂ ಉಳಿಸಿಕೊಂಡಿರುವ ಮೌನ, ಮನೆಯ ಗೋಡೆಗಳಲಿ ತೂಗಿದ್ದ ಅಪರೂಪದ ಪೇಂಟಿಂಗ್ ಗಳು… ಗೋಡೆಯ ಬದಿಯಲ್ಲಿ ಸಣ್ಣ ಟೇಬಲಿನ ಮೇಲೆ ಜೋಡಿಸಿದ್ದ ನಟರಾಜ ಪ್ರತಿಮೆ, ಅದರ ಬದಿಗೆ ಪೇರಿಸಿಟ್ಟ ಕಾಲ್ಗೆಜ್ಜೆ, ತಾಳ, ತಬಲ, ಕೊಳಲು, ಒಂದಷ್ಟು ಪುಸ್ತಕಗಳು, ಧ್ಯಾನಸ್ಥ ಬುದ್ಧನ ಮಣ್ಣಿನ ಪ್ರತಿಮೆ.. ಎಲ್ಲವೂ ಅವಳ ವ್ಯಕ್ತಿತ್ವವನ್ನು ಪ್ರತಿನಿಧಿಸುತ್ತಿದ್ದವು. ಅವಳ ಪರಿಚಯವಾಗಿದ್ದು ಹಾಗೆ. + +“ನಿಮ್ಮ ಪರಿಚಯ ಹೇಳಿಕೊಳ್ಳಿ, ಬಾಲ್ಯ ಬದುಕು…” ನಾನು ಮಾತು ಶುರು ಮಾಡಿದ್ದೆ. ಹೆಚ್ಚೇನೂ ಹಿಂಜರಿಯದೆ, ದೀರ್ಘಾಲೋಚನೆಯಲ್ಲಿ ಬೀಳದೆ ಏರುಪೇರುಗಳಿಲ್ಲದ ಮೆಲು ದನಿಯಲ್ಲಿ ಅಭಿರಾಮಿ ಮಾತು ಶುರು ಮಾಡಿದ್ದಳು. “ನಮ್ಮಪ್ಪ ಅಮ್ಮನಿಗೆ ನಾನೊಂದೇ ಮಗು ಸರ್. ನಾನು ಹುಟ್ಟಿ ಕೆಲವು ವರ್ಷಗಳಲ್ಲಿ ಅಪ್ಪ ಕಡಲಿಗೆ ಹೋದವನು ಮರಳಿ ಬಾರದೇ ಹೋಗಿದ್ದ. ಇನ್ನು ಅಮ್ಮ, ನಾನು. ಅಪ್ಪ ಇಲ್ಲದೆ ನಾನು ಎಲ್ಲ ಅಪ್ಪನಿಲ್ಲದ ಮಕ್ಕಳ ಹಾಗೆ ಕಷ್ಟ ಪಟ್ಟೆ. ಅದು ದೊಡ್ಡ ವಿಷಯವಲ್ಲ; ಯಾಕೆಂದರೆ ನನ್ನ ಬದುಕಿನ ಮೊದಲ ಹದಿನೈದು ವರ್ಷಗಳಲ್ಲಿ ನಾನು ಪಡೆದುಕೊಂಡಿದ್ದು ಅಪಾರ. ಮುಖ್ಯವಾಗಿ ಅಮ್ಮನ ಅಕ್ಕರೆ ಮತ್ತು ಪ್ರೀತಿ. ಅವಳಿಗೆ ಅದಿನ್ನೇನೋ ತನ್ನ ಮಗು ಎಲ್ಲವನ್ನೂ ಕಲಿಯಬೇಕು ಅನ್ನುವ ಆಸೆ. ಅಪ್ಪ ಇಲ್ಲದ ಮಗು, ಮುಂದೆ ಇದರಲ್ಲಿ ಯಾವುದಾದರೂ ಒಂದು ಉಪಯೋಗಕ್ಕೆ ಬರುತ್ತೆ ಅಂದುಕೊಂಡಳೋ, ಇಲ್ಲ, ಅವಳು ಬಹುಬೇಗ ನನ್ನನ್ನು ಬಿಟ್ಟುಹೋಗಿಬಿಡುತ್ತಾಳೆಂದು ಗಣಿಸಿ ಇಟ್ಟಿದ್ದಳೋ… ಅವಳಿಗೇ ಗೊತ್ತು. ಅಂತೂ ಅವಳು ಸಣ್ಣದಿರುವಾಗಲೇ ಅಮ್ಮ ನನ್ನನ್ನು ವೆಸ್ಟ್ರನ್ ಡ್ಯಾನ್ಸ್ ಕಲಿಯಲು ಕಳಿಸಿದ್ದಳು. ಆದರೆ ನಂಗೆ ಭರತ ನಾಟ್ಯವೇ ಇಷ್ಟವಾಗ್ತಿತ್ತು. ಅಮ್ಮನ ಬಳಿ ಹೇಳದೆ, ವೆಸ್ಟ್ರನ್ ಬದಲು ಭರತನಾಟ್ಯ ಕಲಿತೆ. ಮನೆಯ ಪಕ್ಕದಲ್ಲೆ ಚರ್ಚ್ ಇತ್ತು. ಅದರ ವಿಶಾಲ ಅಂಗಳದಲಿ ಆಡುವುದೊಂದು ಖುಷಿಯಿತ್ತು, ಅಲ್ಲಿ ಹಾಡುತ್ತಿದ್ದ ಏಸುವಿನ ಹಾಡುಗಳ ಮೇಲೆ ಪ್ರೀತಿಯಿತ್ತು. ಹಾಗೇ ಹಾಡ್ತಾ ಹಾಡ್ತಾ ರಾಗ ಕೂಡಿತು. ಪಕ್ಕದ ಮನೆಯ ಅಣ್ಣ ಪೇಂಟಿಂಗ್ ಮಾಡುತ್ತಿದ್ದರು. ಕಾಂಪೋಂಡ್ ವಾಲ್ ಗಳ ಮೇಲೆ ಚಿತ್ರ ಬರೆಯೋದು, ಬೋರ್ಡ್ ಬರೆಯೋದು, ನಾಟಕದ ಪರದೆ ಬರೆಯುವುದು ಹೀಗೆ ಏನೇನೋ ಮಾಡೋರು. ಅವರ ಜೊತೆ ಸೇರಿ ನಾನೂ ಪೇಂಟಿಂಗ್ ಕಲಿತೆ. ಅವರ ಬಳಿ ಆಟೋ ಇತ್ತು, ಹಾಗಾಗಿ ಆಟೋ ಓಡಿಸಲು ಕಲಿತೆ. ನಾನು ಕಲಿಯುತ್ತಿದ್ದೆನೋ ಇಲ್ಲವೋ ಅಮ್ಮ ಯಾವಾಗಲೂ ಅದು ಇದು ಕಲಿ ಎಂದು ದುಂಬಾಲು ಬೀಳುತ್ತಲೇ ಇರುತ್ತಿದ್ದಳು. ಅವಳು ಯಾವತ್ತಿಗೂ ನನ್ನನ್ನು ಬೈದ ನೆನಪೇ ಆಗುವುದಿಲ್ಲ. ಅಂಥ ಅಮ್ಮ, ನಾನು ಹತ್ತನೇ ಕ್ಲಾಸು ಎಕ್ಸಾಂ ಮುಗಿಸಿ ರಜೆಯಲ್ಲಿ ತುಂಬ ಸಂತೊಷವಾಗಿದ್ದಾಗ, ಹೀಗೇ ಚರ್ಚಿನಲ್ಲಿ ಆಟವಾಡುತ್ತ ಇದ್ದ ಒಂದು ಸಂಜೆ ಅಮ್ಮ ಇದ್ದಕ್ಕಿದ್ದಂತೆ ಸತ್ತು ಹೋಗಿದ್ದಳು. ಅವಳಿಗೆ ಮೂರ್ನಾಲ್ಕು ದಿನಗಳಿಂದಲೇ ಜ್ವರವಿತ್ತು, ಆದರೂ ಕೆಲಸಕ್ಕೆ ಹೋಗಿದ್ದಳು. ಅಮ್ಮನಿಗೆ ಆಗಾಗ ಜ್ವರ ಬರುವುದು ಹೋಗುವುದು ಹೊಸದಂತೂ ಆಗಿರಲಿಲ್ಲ, ಆದರೆ ಆ ಸಾವು ನಾನು ಎಂದೂ ಊಹಿಸಿಯೇ ಇರದ ಒಂದಾಗಿತ್ತು. ಅಮ್ಮ ಸತ್ತ ಮೇಲೆ ನನಗೆ ಯಾರಿದ್ದರು? ಆಮೇಲೆಯೇ ನನ್ನ ಅತ್ಯಂತ ಕಷ್ಟದ ದಿನಗಳು ಶುರುವಾದದ್ದು. ಅಮ್ಮ ಸತ್ತ ಮೇಲೆ ನಾನು ಒಂಟಿಯಾದೆ, ಅಕ್ಷರಶಃ ಒಂಟಿ. ಆಗೆಲ್ಲ ಅಮ್ಮನ ನೆನಪಿನಲಿ ಅಮ್ಮನ ಸೀರೆಯನು ಹೊದ್ದು ಮಲಗುತ್ತಿದ್ದೆ. ಆಮೇಲೆ ಅದನ್ನು ಉಟ್ಟೆ ಕಳ್ಳತನದಿಂದ. ನಿಧಾನಕೆ ತಿಳಿಯಿತು. ಒಳಗೆ ಅಭಿರಾಮಿ ಅಡಗಿದ್ದಳು. ಸಣ್ಣ ವಯಸಿನಿಂದಲೇ ನನ್ನ ಬಿಳೀ ಮುಖ, ಕಪ್ಪು ಕಣ್ಣು, ಮಾತುಮಾತಿಗೆ ನಾಚುವುದನ್ನೆಲ್ಲ ನೋಡಿ ಓರಗೆಯ ಮಕ್ಕಳು ಹೆಣ್ಣಪ್ಪಿ ಎಂದು ರೇಗಿಸುತ್ತಿದ್ದುದ್ದಕ್ಕೆ ಹೊಸ ಅರ್ಥ ಸಿಕ್ಕಂತೆ ಬದುಕಿನ ದಿಕ್ಕು ಬದಲಾಗಿ ಬಿಟ್ಟಿತ್ತು. ಆಮೇಲಿನಿಂದ ಪಟ್ಟಿದ್ದು ಅಲ್ಪಸ್ವಲ್ಪ ಕಷ್ಟವಲ್ಲ ಸರ್, ನನಗೊಬ್ಬ ಮಾವನಿದ್ದ. ಅಮ್ಮನ ಅಣ್ಣ. ಅವನು ಮೊದಲೆಲ್ಲ ನಮ್ಮನ್ನು ಏನು ಅಂತಲೂ ಕೇಳದವನು, ಅಮ್ಮ ಸತ್ತ ಕೆಲದಿನಗಳ ಮೇಲೆ ಬಂದು ನನ್ನ ಜೊತೆ ಸೇರಿಕೊಂಡಿದ್ದ. ನನ್ನನ್ನು ಬಲಾತ್ಕಾರ ಮಾಡಿದ ಮೊದಲ ವ್ಯಕ್ತಿ ಅವನೇ. ಅದೂ ಸಾಲದೆಂಬಂತೆ ಆಗಾಗ ಅವನ ಗೆಳೆಯರನ್ನೂ ಮನೆಗೆ ಕರೆತಂದು ಬಿಡುತ್ತಿದ್ದ. ಅವನಿಂದಾಗಿ ನಾನು ಬಹಳವೇ ಕಷ್ಟ ಪಟ್ಟೆ, ಅವನಿಂದಾಗಿ ಆದ ಒಂದೇ ಒಂದು ಉಪಯೋಗವೆಂದರೆ, ಸರಕಾರ ನಾವಿದ್ದ ಗುಡಿಸಲುಗಳನ್ನ ಕೆಡವಿದಾಗ ಅವನ ಹೆಸರಿನಲ್ಲಿ ಹೊಸ ಮನೆ ಕಟ್ಟಿಕೊಟ್ಟರು, ಹೊಸಮನೆಯಲ್ಲಿ ಮೂರು ದಿನ ಕೂಡ ಅವನು ಉಳಿಯಲಿಲ್ಲ. ಹಾಗಾಗಿ ಮನೆ ನನ್ನ ಪಾಲಿಗೆ ಬಂತು. ಒಂದುವೇಳೆ ಮನೆಯೊಂದು ಇಲ್ಲದೆ ಇದ್ದರೆ ನನಗೆ ಬಹಳ ಕಷ್ಟವಾಗಿರೋದು. ಈವಾಗ ನಾನು ಬೆಳಗ್ಗೆ ಪಾರ್ಥಸಾರಥಿ ದೇವಸ್ಥಾನದ ಬಳಿ ಹೂ ಮಾರುತ್ತೇನೆ. ನಾಟಕದ ಪರದೆ ಬರೆವ ಕೆಲಸವೋ, ಬೋರ್ಡ್ ಬರೆವ ಕೆಲಸವೋ ಸಿಕ್ಕಿದರೆ ತೆಗೆದುಕೊಳ್ತೇನೆ. ಆಗೀಗ ಮೀನೂ ಮಾರುತ್ತೇನೆ. ಇನ್ನು ಮನೆಯಲ್ಲಿ ಒಬ್ಬಳೇ ಇರುತ್ತೀನಲ್ಲ ಆಗ, ಬೇಸರಾದಾಗ ನರ್ತಿಸುತ್ತೇನೆ. ಮೊದಲು ಕೆಲವು ಮಕ್ಕಳಿಗೆ ಇಲ್ಲೇ ಡ್ಯಾನ್ಸ್ ಹೇಳಿಕೊಡಲು ಟ್ರೈ ಮಾಡಿದೆ. ಆದರೆ ಎಲ್ಲಿ ಸರ್, ನಮ್ಮ ಹತ್ರ ಎಲ್ಲ ಕಳಿಸೋಕೆ ಜನ ಹಿಂದೆಮುಂದೆ ನೋಡ್ತಾರೆ ಅದೇ ಕಷ್ಟ. ಆದ್ರೂ ಕೆಲವು ಮಕ್ಕಳು ಬರ್ತಾರೆ ಆಗೀಗ ಅಷ್ಟೇ. ನಂದು ಅಭಿಪ್ರಾಯ ಇಷ್ಟೇ, ನಮ್ಮನ್ನು ಕೂಡ ಈ ಸಮಾಜ, ನಿಜವಾದ ನಾಗರಿಕ ಮನಸ್ಥಿತಿಯಿಂದ ನಾವಿರುವಂತೆ ಒಪ್ಪಿಕೊಳ್ಳಬೇಕು.” ಅಂದಿದ್ದಳು… + +ಅವಳು ಮಾಡಿಕೊಟ್ಟ ಕಾಫಿ ಗುಟುಕರಿಸುತ್ತಾ ಅವಳ ಮಾತುಗಳನ್ನು ರೆಕಾರ್ಡ್ ಮಾಡಿಕೊಳ್ಳುತ್ತ ಅವಳು ಕೈಯ್ಯಾಡಿಸುತ್ತ ಕಣ್ಣರಳಿಸುತ್ತ ಮಾತಾಡುವುದನ್ನು ಕಣ್ತುಂಬಿಕೊಳ್ಳುತ್ತ ಅವಳಿಗೆ ನಿಧಾನವಾಗಿ ಶರಣಾಗತೊಡಗಿದ್ದೆ. ಅವಳು ಕಿಟಕಿಯ ಪಕ್ಕ ಕುಳಿತಿದ್ದಳು. ಅದೇ ಮಿಂದು ಬಂದ ಅವಳ ಕೂದಲು ಇನ್ನೂ ಒದ್ದೆಯಾಗಿತ್ತು. ಬಿಸಿಲು ಅವಳ ಕೆನ್ನೆಯ ಪಾರ್ಶ್ವವನ್ನು ಬೆಳಗಿಸಿತ್ತು. ಕೊನೆಯ ಮಾತುಗಳನ್ನು ಹೇಳುವಾಗ ಅವಳ ಕೈಗಳು ಕಿಟಕಿಯ ಸರಳುಗಳನು ಬಿಗಿದವು. ನಾನು ಒಡನೇ ಕ್ಯಾಮೆರಾ ಕ್ಲಿಕ್ಕಿಸಿದ್ದೆ. ನಂತರ ಕೆಲವು ನೃತ್ಯದ ಭಂಗಿಗಳಲ್ಲಿ ನಿಲ್ಲಿಸಿ ಹಲವು ಕೋನಗಳಲ್ಲಿ ಫೋಟೋಗಳನ್ನು ತೆಗೆದುಕೊಂಡು ಹೊರಟವನಿಗೆ ದಾರಿಯುದ್ದಕ್ಕೂ ಅವಳದ್ದೇ ನೆನಪು ಕಾಡಿತ್ತು. ಅವಳ ನಸುನಗು, ದನಿಯನ್ನು ಆದಷ್ಟೂ ತಗ್ಗಿಸಿ ಮಾತಾಡುವ ಪರಿ, ಮಾತಾಡುತ್ತ ಕೈಬೆರಳುಗಳನ್ನು ಮಾಟವಾಗಿ ತಿರುಗಿಸುತ್ತಿದ್ದ ರೀತಿ, ಅವಳು ಕತ್ತು ಕೊಂಕಿಸಿದಾಗೆಲ್ಲ ಅಲ್ಲಾಡುತ್ತ ಶೃದ್ಧೆ ಕೆಡಿಸುತ್ತಿದ್ದ ಅವಳ ಕಿವಿಯ ಝುಮುಕಿ, ಮುಖಕ್ಕೆ ಮುತ್ತುತ್ತಿದ್ದ ಒದ್ದೆ ಮುಂಗುರುಳು… ಅವಳ ಕುರಿತು ಬರೆಯುತ್ತ ಕೂತಾಗ, ಅವಳೇ ಎದುರು ಬಂದು ಕೂತಂತೆ ಅನಿಸಿತ್ತು. ಅಕ್ಕರೆಯಿಂದ ಆಸ್ಥೆಯಿಂದ ಬರೆದ ಲೇಖನ, ನಿಜಕ್ಕೂ ಸದ್ದು ಮಾಡಿತ್ತು. ನಡು ನಡುವೆ ಅದೂ ಇದು ಸಂದೇಹ ಕೇಳಲೆಂಬಂತೆ ಅವಳಿಗೆ ಕರೆ ಮಾಡುತ್ತ, ಕಡೆಗೆ ಲೇಖನ ಪ್ರಕಟವಾದುದರ ಕುರಿತು ಹಂಚಿಕೊಳ್ಳುತ್ತ ಅವಳಿಗೆ ಹತ್ತಿರವಾಗುವ ಒಂದೇ ಒಂದು ಅವಕಾಶವನ್ನೂ ತಪ್ಪಿಸಿಕೊಳ್ಳದಂತೆ ನಾನು ನೋಡಿಕೊಂಡಿದ್ದೆ. ನಾನು ಮೊದಲಿಗೆ ಅಭಿರಾಮಿಯ ಚೆಲುವಿಗೆ ಬೆರಗಾಗಿದ್ದೆ, ಆಮೇಲೆ ನಿಧಾನಕೆ ಕರಗತೊಡಗಿದ್ದೆ, ಆದರೆ ಅವಳ ಮಾತು ನಡೆ ನುಡಿ ನಗು ಮತ್ತು ಪ್ರೇಮಮಯ ಹೃದಯಕ್ಕೆ ಸೋತು ಶರಣಾಗತೊಡಗಿದ್ದೆ. ಲೇಖನ ಪ್ರಕಟವಾದ ಮೇಲೆ ಅವಳ ಕುರಿತಾಗಿ ವಿಚಾರಿಸಿ ಅನೇಕ ಫೋನುಗಳು ಬಂದಿದ್ದವು, ಕೆಲವರು ತಮ್ಮ ಮಕ್ಕಳನ್ನು ಅವಳ ಬಳಿ ನೃತ್ಯ ಕಲಿಕೆಗೆ ಕಳಿಸಲು ಮುಂದೆ ಬಂದಿದ್ದರು. ಅದಕ್ಕಾಗಿ ನಾನೇ ಮುಂದೆ ನಿಂತು ಸ್ಥಳವೊಂದನ್ನು ಗೊತ್ತು ಮಾಡಿಕೊಟ್ಟಿದ್ದೆ. ಅದರ ಜೊತೆಗೆ ಶ್ರೀಕೃಷ್ಣ ದೇವಸ್ಥಾನದ ರಥೋತ್ಸವದಂದು ದೇವಸ್ಥಾನದಲ್ಲಿ ಬಂದು ನರ್ತಿಸುವಂತೆ ಅವಳಿಗೊಂದು ಸದಾವಕಾಶವೂ ಒದಗಿಬಂದಿತ್ತು. ಅಭಿರಾಮಿಯ ಬದುಕು ಸಣ್ಣಗೆ ಕವಲೊಡೆದು ಕುಡಿಯೊಡೆಯತೊಡಗಿತ್ತು. ಜೊತೆಗೆ ನಾನೂ. + +ಅಭಿರಾಮಿ, ಎಂದೂ ಯಾವುದಕ್ಕೂ ನನ್ನನ್ನು ಆಗ್ರಹಿಸಲೇ ಇಲ್ಲ. ತನಗಾಗಿ ಏನನ್ನೂ ಕೇಳಲಿಲ್ಲ. ಅವಳ ಆಸೆಗಳಾದರೂ ಅದೆಷ್ಟು ಸಣ್ಣವಿದ್ದವು. ಆದರೆ ಅದನ್ನು ಪೂರೈಸಲಿಕ್ಕೂ ನನಗೆ ಬಹಳಷ್ಟು ಬಾರಿ ಹಿಂಜರಿಕೆ ಕಾಡುತ್ತಿತ್ತು. ಮೊದಲನೇ ತಡೆ ಆಫೀಸಿನಿಂದಲೇ ಶುರುವಾಗಿತ್ತು. “ಏನಪ್ಪ, ಇತ್ತೀಚೆಗೆ ಒಂದೇ ಏರಿಯಾನ ಜಾಸ್ತಿ ಕವರ್ ಮಾಡ್ತಾ ಇರೋ ಹಾಗಿದೆ” ಎಂದು ಸಣ್ಣ ರೇಗಿಸುವಿಕೆಯೊಂದಿಗೆ ಶುರು ಮಾಡಿದ ಗೆಳೆಯರು, “ಏನೋ ಇದು ಎಲ್ಲ ಬಿಟ್ಟು? ಆರ್ ಯು…..” ಎಂದು ರಾಗವೆಳೆದಿದ್ದರು. “ಎ ಜಸ್ಟ್ ಫ್ರೆಂಡ್ ಕಣೋ, ಯಾಕೆ ಹಾಗಿರಬಾರ್ದೇನು?” ರೇಗಿದ್ದೆ ನಾನು. ಆದರೆ ನನ್ನ ಬೆನ್ನ ಹಿಂದೆ ಶುರುವಾದ ಗುಸುಗುಸು ಮಾತುಗಳೂ, ಎದುರೆದುರೇ ನಿಲ್ಲಿಸಿ ಪ್ರಶ್ನೆ ಕೇಳತೊಡಗಿದ ಗೆಳೆಯರು, ಸುಮ್ಮನೆ ಕುತೂಹಲದ ನೋಟವೊಂದನ್ನು ನನ್ನೆಡೆಗೆ ಹಾಯಿಸುತ್ತಿದ್ದ ಇನ್ನೂ ಕೆಲವರು… ಅಂತೂ ಇವ್ಯಾವುವೂ ನನ್ನನ್ನು ಅಭಿರಾಮಿಯ ಮೇಲಿನ ಸೆಳೆತದಿಂದ ಹಿಂತರಲಾರದೇ ಉಳಿದಿದ್ದವು. ಆದರೆ ಅವಳು ಆಸೆ ಪಟ್ಟಂತೆ ಬೀಚಿನಲ್ಲಿ ಕೈ ಹಿಡಿದು ನಡೆಯುವುದು, ಬೈಕಿನಲಿ ಬೆನ್ನು ತಬ್ಬಿ ಕೂತು ನಿರಾಳವಾಗಿ ಎಲ್ಲ ಪ್ರೇಮಿಗಳಂತೆ ಸುತ್ತುವುದು, ಸಿನಿಮಾಕೆ ಒಟ್ಟಿಗೇ ಹೋಗುವುದು… ಉಹೂಂ ಇದ್ಯಾವುದನ್ನೂ ನನ್ನಿಂದ ನೆರವೇರಿಸಲಾಗಲೇ ಇಲ್ಲ. ಅಪರೂಪಕ್ಕೊಮ್ಮೆ ಅವಳನ್ನು ಡ್ಯಾನ್ಸ್ ಸ್ಕೂಲಿನ ತನಕ ಡ್ರಾಪ್ ಮಾಡುವುದು ಬಿಟ್ಟರೆ ನಾವು ಒಟ್ಟಿಗೆ ಒಂದೇ ಬೈಕಿನಲಿ ಸುತ್ತುತ್ತಲೇ ಇರಲಿಲ್ಲ. ಯಾವಾಗಾದರೊಮ್ಮೆ ಮುಸ್ಸಂಜೆ ದಾಟಿ ಬೀಚಿಗೆ ಹೋಗಿ ಅಲ್ಲಿನ ಒದ್ದೆ ಮರಳಿನ ಮೇಲೆ ಕುಳಿತು ಕತ್ತಲಾಗುವುದನ್ನು ಕಾಯುತ್ತ ಕೂರುವುದು, ಕತ್ತಲಿನ ಮೌನದಲಿ ಕಡಲ ಅಲೆಗಳ ಮೊರೆತವನ್ನು ಕೇಳುತ್ತ ಸುಮ್ಮನೆ ಕೂರುವುದು ಅಭಿರಾಮಿಗೆ ತುಂಬ ಇಷ್ಟವಾಗುತ್ತಿತ್ತು. ಅದೇ ರೀತಿ ಕೂತಿದ್ದ ಒಂದು ರಾತ್ರಿ ಯಾರೋ ಒಬ್ಬಾತ, “ದೊರೆ, ನಿಂದಾದ ಮೇಲೆ ಕಳಿಸ್ತೀಯಪ್ಪ ನಮ್ಕಡೆ” ಎಂದು ವಿಕೃತ ನಗೆಯೊಂದಿಗೆ ಕೇಳಿದ್ದ. ಅದೇ ಆಗಿನ್ನೂ ಕಾಲುತೋಯಿಸಿದ ಕಡಲ ತೆರೆಗಳನ್ನು ನೋಡಿ, “ಈ ದಡದ ಮೇಲೆ ಎಷ್ಟು ಪ್ರೀತಿಯಿರಬೇಕು ಇವಕ್ಕೆ, ಮತ್ತೆ ಮತ್ತೆ ಬರ್ತಾನೇ ಇವೆ ನೋಡು” ಎಂದು ಉದ್ಗರಿಸಿ ಕುಳಿತಿದ್ದ ಅಭಿರಾಮಿ ಅವನ ಮಾತಿಗೆ ಮುಖ ಸಣ್ಣದು ಮಾಡಿಕೊಂಡು, “ಆದರೆ ಇದೇ ನೋಡು ನಮ್ಮ ಜಗತ್ತು” ಎಂದು ಸಣ್ಣಗೆ ಭಾರವಾದ ದನಿಯಲ್ಲಿ ಹೇಳಿದ್ದಳು. ಆದರೆ ಆ ಅವನನ್ನು ಎದ್ದು ಬಯ್ಯಲೋ ಅಥವಾ ಮತ್ತೇನೋ ಅನ್ನಲೋ ನಾನೇಕೆ ಮುಂದಾಗಲಿಲ್ಲವೆಂದು ಇವತ್ತಿಗೂ ನನಗೆ ತಿಳಿಯುವುದಿಲ್ಲ. ಬದಲಾಗಿ ನಾನು “ನಡಿ ಅಭಿರಾಮಿ, ಅದಕ್ಕೇ ಹೇಳೋದು ನಿಂಗೆ ಇಲ್ಲೆಲ್ಲ ಸೇಫಾದ ಸ್ಥಳ ಅಲ್ಲ ಅಂತ” ಎಂದು ಎದ್ದು ಹೊರಡಿಸಿದ್ದೆ. ಅಭಿರಾಮಿ ಮಾತಾಡಿರಲಿಲ್ಲ. ಇನ್ನು ಅವಳ ಮನೆಗೂ ಹೋಗುವಂತಿರಲಿಲ್ಲ. ನಮಗೆ ಒಟ್ಟಿಗೇ ಕೂತು ಕಳೆಯಲೊಂದಿಷ್ಟು ಸ್ವಂತ ಸಮಯವೆಂಬುವುದು ದೊಡ್ಡ ಸವಾಲಿನ ವಿಷಯವಾಗಿತ್ತು. ನಮಗಿದ್ದ ಒಂದೇ ಆಸರೆ ಫೋನ್. ಕೆಲಸದ ನಡುವಿನ ಬಿಡುವಿನ ವೇಳೆ ಅವಳ ಜೊತೆ ಮಾತಾಡಬಹುದಿತ್ತು. ಉಳಿದಂತೆ ಅವಳು ನನಗೆ ದಂಡಿ ದಂಡಿ ಮೆಸೇಜು ಕಳಿಸುತ್ತಿದ್ದಳು. ಜೋಪಾನ, ಹೊರಗೆ ಬಿಸಿಲು, ನೀರು ಕುಡಿ, ಜ್ಯೂಸ್ ಕುಡಿ, ಹೆಲ್ಮೆಟ್ ಹಾಕ್ಕೋ, ಗಾಡೀಲಿ ಜೋಪಾನ… ಇಂಥವೇ ತಾಯ್ಗರುಳಿನ ಮೆಸೇಜುಗಳು. ತನಗಾಗಿ ಅವಳು ಕೇಳಿದ್ದೆಂದರೆ ನನ್ನದೊಂದಿಷ್ಟು ಸಮಯ ಮಾತ್ರವೇ. ಆದರೆ ಅದುವೇ ದುಬಾರಿಯೆನಿಸುತ್ತಿತ್ತು. ನಮ್ಮ ಭೇಟಿಯಾಗಿ ಅದಾಗಲೇ ಮೂರ್ನಾಲ್ಕು ತಿಂಗಳುಗಳಾಗಿದ್ದವು. ಅಷ್ಟರಲ್ಲಾಗಲೇ ನಾವಿಬ್ಬರೂ ಬೆಂಕಿಯಂತೆಯೂ, ಗಾಳಿಯಂತೆಯೂ ಒಬ್ಬರಿಗಾಗೊಬ್ಬರು ತುಡಿಯುತ್ತಿದ್ದೆವು. ಆಗ ಬಂದಿತ್ತು ಚಿತ್ರಾಪೌರ್ಣಮಿಯ ಕೂವಗಂಜಾತ್ರೆ. + +“ಅಭಿರಾಮಿ, ನಾವು ಕೂವಗಂ ಫೆಸ್ಟ್ ನೋಡಲು ಹೋಗೋಣವೇ?” ನಾನು ಅವಳನ್ನು ಡ್ಯಾನ್ಸ್ ಕ್ಲಾಸಿನಲ್ಲಿ ಭೇಟಿಯಾಗಿ ಕೇಳಿದ್ದೆ. ಅದನ್ನು ಕೇಳಿದ್ದೇ ಅವಳ ಕಾಲುಗಳಿಗೆ ಎಲ್ಲಿಲ್ಲದ ಹುರುಪು ತುಂಬಿ ಆಕೆಯ ನಡೆಯೇ ನೃತ್ಯದ ಲಾಘವ ಪಡೆದಿತ್ತು. ಕೆನ್ನೆಗಳು ಕೆಂಪಡರಿ, ಕಂಗಳು ಬೆಳಗಿದ್ದವು. ಅವಳ ಆ ಸಂಭ್ರಮವನ್ನು ಮನಸಾ ಸಂಭ್ರಮಿಸಿದ್ದೆ. ನಾನು ಮೊದಲೇ ನಿರ್ಧರಿಸಿಯೇ ಬಂದಿದ್ದೆ. ನನಗೆ ಅವಳೊಡನೆ ಯಾವ ತಕರಾರಿಲ್ಲದೆ ಸಮಯ ಕಳೆಯಬಹುದಿತ್ತು ಮತ್ತು ನನಗೂ ಕೂವಗಂ ಫೆಸ್ಟಿವಲ್ ನ ಬಗೆ ಒಂದೊಳ್ಳೆ ಸ್ಟೋರಿ ಮಾಡಬಹುದಿತ್ತು. ಹಾಗೆ ನಾವಿಬ್ಬರೂ ಪಾಂಡಿಚೆರಿಯ ಕಡೆ ಹೊರಟಾಗ ಅಭಿರಾಮಿ ಮತ್ತಷ್ಟು ಸಂಭ್ರಮಿಸಿದ್ದಳು. ಅದೂ ಶುದ್ಧ ಮಗು ಸಂಭ್ರಮ. ಅವಳ ಒಂದೊಂದು ಚಲನೆಯಲ್ಲೂ ಅದು ಢಾಳಾಗಿ ವ್ಯಕ್ತವಾಗುತ್ತಿತ್ತು. ಯಾಕೆಂದರೆ ಅದು ನಾವು ಕೈಗೊಂಡ ಮೊದಲನೇ ದೂರ ಪ್ರಯಾಣವಾಗಿತ್ತು. ಅವಳಿಗೆ ಕೂವಗಂ ಜಾತ್ರೆಗೆ ಹೋಗಬೇಕೆಂಬ ಆಸೆಯೇನೂ ಇರಲಿಲ್ಲ, ಆದರೆ ಅದು ಕೂವಗಂ ಅಲ್ಲ, ಬೇರೆಲ್ಲಿಗೇ ಆಗಿದ್ದರೂ, ಕಡೆಗೆ ಸಾಯಲಿಕ್ಕೇ ಆಗಿದ್ದರೂ ಅಭಿರಾಮಿ ಇಷ್ಟೇ ಸಂಭ್ರಮದಿಂದ ನನ್ನೊಡನೆ ಬರುತ್ತಿದ್ದಳೆಂಬುವುದರಲ್ಲಿ ಸಂದೇಹವಿರಲಿಲ್ಲ. ಅವಳ ಬಹುದೊಡ್ಡ ಆಸೆಯಾಗಿತ್ತದು. ಹೀಗೆ ನನ್ನೊಡನೆ ಕೇಳುವವರ ಹಂಗಿಲ್ಲದೆ, ಕೆಲವು ಸಮಯ ಯಾವ ಗಡಿಬಿಡಿಯಿಲ್ಲದೆ ಅವಳಷ್ಟಕೆ ಅವಳಾಗಿ ಇರುವ ಸಮಯ. ಅದಕ್ಕಾಗಿ ಅಭಿರಾಮಿ ಹಂಬಲಿಸಿ ಕಾದಿದ್ದಳು, ಹಾಗಾಗಿ ಈ ಸಣ್ಣದೊಂದು ದೂರ ಪ್ರಯಾಣಕ್ಕೆ ಅಷ್ಟೊಂದು ಬೆಲೆಯಿತ್ತು. ಅದೇ ಮೊದಲ ಬಾರಿ ಅಭಿರಾಮಿ ನನ್ನನ್ನು ಒತ್ತಿದಂತೆ ಹಿಡಿದು ಕುಳಿತುಕೊಂಡಿದ್ದಳು. ಅವಳ ತಲೆ ಸಣ್ಣಗೆ ವಾಲಿ ನನ್ನ ತೋಳಿನ ಮೇಲೆ ಒರಗಿದ ಹಾಗೆ ಇತ್ತು. “ರಾಸ, ಈ ಪ್ರಯಾಣ ಮುಗಿಯಲೇಬಾರದೆಂದು ನನಗೆ ಅನಿಸುತ್ತಿದೆ. ನನ್ನ ಬಹು ದಿನಗಳ ಆಸೆ ಇದು, ಹೀಗೆ ನಿನ್ನೊಂದಿಗೆ ನಿನ್ನ ರಾಸಾತಿಯಾಗಿ ಹೀಗೊಂದು ಪ್ರಯಾಣ ಮಾಡುವುದು. ನಿಜಕ್ಕೂ ನಾ ಅಂದುಕೊಂಡೇ ಇರಲಿಲ್ಲ, ನೀ ನನ್ನ ಹೀಗೆ ಕರಕೊಂಡು ಬರಬಹುದು ಅಂತ. ತುಂಬ ಥ್ಯಾಂಕ್ಸ್ ರಾಸ, ಇದಕ್ಕೆ ಮತ್ತು ಎಲ್ಲದಿಕ್ಕೂ….” ಅಭಿರಾಮಿ ಹೀಗನ್ನುವಾಗ ಅವಳ ದನಿ ಕಟ್ಟಿ ಗೊಗ್ಗರಾಯ್ತು. ಮೊದಲಬಾರಿ ಹೀಗೆ ಒಮ್ಮೆ ಥ್ಯಾಂಕ್ಸ್ ಹೇಳಿದಾಗ ಇದ್ದ ಅದೇ ತೀವ್ರತೆ ಬಹುಶಃ ಅದಕ್ಕೂ ಹೆಚ್ಚಿನದೆನ್ನಬೇಕು ಈಗಲೂ ಇತ್ತು. ಅವಳಿಗೆ ನನ್ನ ಮೇಲೆ ಪ್ರೇಮದಷ್ಟೇ ನನ್ನಿಯಿತ್ತು. ಅಭಿರಾಮಿ ನನ್ನನ್ನು ಪ್ರೇಮದಿಂದ ರಾಸ ಅನ್ನುತ್ತಿದ್ದಳು. ಅಭಿರಾಮಿ ಹಾಗನ್ನುವಾಗ ನಾನು ನನ್ನ ಭುಜಕ್ಕೆ ವಾಲಿಕೊಂಡಿದ್ದ ಅವಳ ತಲೆಯನ್ನು ನೇವರಿಸಿದ್ದೆ. ಅವಳು ಅತೀವ ತೀವ್ರತೆಯೊಂದಿಗೆ ನನ್ನ ತೋಳನ್ನು ಒತ್ತಿದ್ದಳು. ಆಗ ಅವಳ ಕಂಗಳು ಆದ್ರವಾಗಿದ್ದವು. ಈ ನಾಲ್ಕು ತಿಂಗಳಲ್ಲಿ ನಾವು ಆಗೀಗ ಕೆಲವು ಸಂಜೆಗಳನ್ನು ಒಟ್ಟಿಗೆ ಕಳೆಯುತ್ತ, ಫೋನಿನಲ್ಲಿ ಮಾತಾಡುತ್ತ, ಮೆಸೇಜು ಮಾಡುತ್ತ, ಪರಸ್ಪರ ನೆನಪಿನಲಿ ಕಳೆದುಹೋಗುತ್ತ ಮೊದಲೇ ಅದು ಅಲ್ಲಿ ಇತ್ತು, ನಮ್ಮ ನಡುವೆ ಯಾವಾಗಲೋ ಇತ್ತು ಎಂಬಂತೆ ಪ್ರೇಮದ ತೆರೆಯೊಳಗೆ ಮರೆಯಾಗುತ್ತ ಸಾಗಿದ್ದೆವು. ಇನ್ನು ಅವಳೋ… ಅವಳ ಬದುಕಿನಲ್ಲಿ ಖರ್ಚಾಗದೇ ಉಳಿದ ಅಷ್ಟೂ ಪ್ರೇಮ ನನ್ನೆಡೆಗೆ ಸ್ಪುರಿಸಿ ಅದು ಅವಳ ಹೃದಯದಲಿ ಜಮೆಗೊಳ್ಳುತ್ತ, ಜಮೆಗೊಳ್ಳುತ್ತ, ಅವಳ ಪ್ರತಿಯೊಂದು ಮಾತಿನಲಿ, ಮೌನದಲಿ, ಅವಳ ಪ್ರತಿ ಚಲನೆಯಲ್ಲೂ ಪ್ರಕಟಗೊಳ್ಳುತ್ತ ಅಭಿರಾಮಿ ನನ್ನನ್ನು ಜೀವದಂತೆ ಅಥವಾ ಜೀವಕ್ಕೂ ಮಿಗಿಲಾಗಿ ಪ್ರೀತಿಸತೊಡಗಿದ್ದಳು. ಅವಳು ನನ್ನನ್ನು ಉಸಿರಿನಲಿ ಹೊಸೆದುಕೊಂಡು ಬಿಟ್ಟಿದ್ದಳು. ಅವಳ ಸುತ್ತಲಿನ ಜಗತ್ತೆಲ್ಲ ಅವಳ ಕಂಗಳಿಂದ ಮರೆಯಾಗಿ ಅವಳು ಒಂದು ವೃತ್ತದೊಳಗೆ ಬಯಸಿ ಬಯಸಿ ಬಂಧಿಯಾಗಿದ್ದಳು. ಅವಳ ಮನಸು ಹೃದಯ ಬದುಕು ಎಲ್ಲವೂ ನನ್ನ ಸುತ್ತಲೇ ಸುತ್ತತೊಡಗಿತ್ತು. ‘ನೀ ನನ್ನ ಉಸಿರಂತೆ ರಾಸ’ ಎಂದು ಅವಳು ಹೇಳುವಾಗೆಲ್ಲ ಅದರಲ್ಲಿ ಯಾವ ಉತ್ಪ್ರೇಕ್ಷೆಯೂ ಕಾಣುತ್ತಿರಲಿಲ್ಲ. ಬಹುಶಃ ಇದಕ್ಕೇ ನನಗೆ ಭಯವಾಗುತ್ತಿತ್ತು. + + + +ಅವಳು ತನ್ನ ಹೃದಯದೊಳಗೆ ಅದಿನ್ನೆಷ್ಟು ಕನಸುಗಳನ್ನು ಹುಗಿದಿರಿಸಿದ್ದಳೋ ಏನೋ, ನಾನು ತಿಳಿದೋ ತಿಳಿಯದೆಯೋ ಅವಳ ಕನಸಿನ ತಿಜೋರಿಗೆ ಕೈಯಿಟ್ಟಿದ್ದೆ. ಅವಳು ಗಂಧರ್ವಲೋಕದ ಶಾಪಗ್ರಸ್ಥ ಅಪ್ಸರೆಯಂತೆ ಎಲ್ಲಿಗೂ ಸಲ್ಲದವಳಾಗಿ, ಒಂದು ಸಾಮಾನ್ಯ ಬದುಕಿನ ಕನಸೇ ಒಂದು ಅಸಾಮಾನ್ಯ ಕೈಗೆಟುಕಲಾರದ ಕನಸಾಗಿ ಬಿಟ್ಟ ದುರಂತವನ್ನು ಎದೆಯೊಳಗೆ ಬೈತಿರಿಸಿಕೊಂಡು ಸುಮ್ಮನೆ ಬದುಕುತ್ತಿದ್ದವಳ ಹೃದಯದ ಬಾಗಿಲನು ತಟ್ಟುವುದು ಮತ್ತು ಅಲ್ಲಿ ಬೆಳಕು ಹಚ್ಚುವ ಮಾತಾಡುವುದು ಎರಡೂ ಅವಳ ಪಾಲಿಗೆ ಅಪಾರವಾದದ್ದು. ನನ್ನಪಾಲಿಗೂ ಸಹಾ. ಅಭಿರಾಮಿಯನ್ನು ನಾನು ಪ್ರೀತಿಸಬಾರದಿತ್ತು. ತನ್ನ ಏಕಾಂತದೊಡನೆ ರಾಜಿಮಾಡಿಕೊಂಡಿದ್ದವಳ ಮೌನ ಮುರಿದವನು ನಾನು. ಈಗ ಅವಳ ಸಣ್ಣ ಪುಟ್ಟ ಕನಸುಗಳನ್ನೂ ಈಡೇರಿಸಲಾರದೇ ತಪ್ಪಿಸಿಕೊಳ್ಳುವುದು ಎಂಥ ದೊಡ್ಡ ಅಪರಾಧ. ಅವಳ ಬದುಕಿನ ಎಲ್ಲ ದುರಂತಗಳಿಗಿಂತ ದೊಡ್ಡ ದುರಂತ ಇದೇ ಇರಬೇಕು. “ರಾಸ, ನನಗೆ ಏನು ಆಸೆ ಗೊತ್ತಾ, ನಮ್ಮನ್ನು ಕೇಳುವವರಿಲ್ಲದೆ ನಾವು ಒಬ್ಬರ ಕೈಯೊಬ್ಬರು ಹಿಡಿದುಕೊಂಡು ಬೀಚಿನಲ್ಲಿ ಸುತ್ತಾಡಬೇಕು. ನಿನ್ನ ಜೊತೆ ಒಟ್ಟಿಗೆ ಬೈಕಿನಲಿ ತೋಳು ಬಳಸಿ ಹಿಡಿದು ಕೂತು ಲಾಂಗ್ ರೈಡ್ ಹೋಗಬೇಕು, ನಿನ್ನ ತೋಳು ತಬ್ಬಿಕೊಂಡು ಬಾಕ್ಸಿನೊಳಗೆ ಕುಳಿತು ಸಿನಿಮಾ ನೋಡಬೇಕು, ಮ್… ಮತ್ತೇ, ನೀನು ಕೆಲಸ ಮುಗಿಸಿ ಮನೆಗೆ ಬರುವಾಗ ನಾನು ನಿಂಗೋಸ್ಕರ ಕಾಯ್ತಾ ಇರಬೇಕು, ನಿನ್ನ ಆಫೀಸಿಗೆ ಕಳಿಸೋಕೆ ನಿನ್ನ ಡ್ರೆಸ್ ಎಲ್ಲ ನಾನೇ ರೆಡಿ ಮಾಡಿ ಕೊಡ್ಬೇಕು, ಮ್…. ರಾತ್ರಿ ನಿನ್ನ ಕೆಲಸದ ದಣಿವೆಲ್ಲ ನೀಗೋ ಹಾಗೆ ಕೈಕಾಲೆಲ್ಲ ಒತ್ತಿ, ಆಮೇಲೆ… ಅವಳು ಹಾಗೇ ಮಾತಾಡುತ್ತ ಮಾತಾಡುತ್ತ ಉದ್ವೇಗಕ್ಕೊಳಗಾಗುತ್ತಿದ್ದಳು. “ರಾಸ, ನಿಂಗೆ ಹೀಗೆಲ್ಲ ಆಸೆಯಿಲ್ಲ? “ಮಾತಿನ ನಡುವೆಯೇ ಅವಳು ನನ್ನತ್ತ ತಿರುಗುತ್ತಿದ್ದಳು. “ನಂಗೂ ಇಷ್ಟ ರಾಸಾತಿ”. ನಾನು ಅವಳ ಮಾತಿಗೆ ಸಣ್ಣಗೆ ನಗುತ್ತಿದ್ದೆ. “ಮ್..ಮತ್ತೆ?” ಅವಳು ತುಂಟ ನಗುವಿನೊಂದಿಗೆ ಕಣ್ಣರಳಿಸುತ್ತಿದ್ದಳು. “ಲವ್ ಯು” ನಾನನ್ನುತ್ತಿದ್ದೆ. “ತ್ತುಂಬ್ಬ” ಅವಳು ತೋಳುಚಾಚಿ ಆಗಸವನ್ನೇ ತುಂಬಿಕೊಳ್ಳುವಂತೆ ಹಿಂದಕ್ಕೆ ವಾಲಿ ಕಣ್ಣು ಮುಚ್ಚಿ ತುಟಿಯುಬ್ಬಿಸುತ್ತಿದ್ದಳು. “ಭಗವಂತ ಎಷ್ಟು ಚೆಲುವೆ! “ಚೆಲುವೆ!” ನಾನು ಅವಳನ್ನು ನೋಡುತ್ತ ಉದ್ಗರಿಸುತ್ತಿದ್ದೆ. ಅವಳು ಒಡನೇ “ಸುಳ್ಳ ನೀನು” ಎಂದು ನಿರಾಕರಿಸುತ್ತಿದ್ದಳು. ಅಭಿರಾಮಿಯ ಆಸೆಗಳು ಎಷ್ಟು ಸಣ್ಣವಿದ್ದವು, ಒಬ್ಬ ಹೆಂಡತಿ ತನ್ನ ಗಂಡನಿಗೆ ಮಾಡಬಹುದಾದ ದಿನನಿತ್ಯದ ಕೆಲಸಗಳು. ಕಾಲಾಂತರದಲಿ ರೇಜಿಗೆಯೆನಿಸಿಬಿಡಬಹುದಾದ ಅವವೇ ನಿತ್ಯಕರ್ಮಗಳು! ಅವನ್ನೇ ಅಷ್ಟು ಅಮೂಲ್ಯವೆಂಬಂತೆ ಉದ್ಗರಿಸಿ ಉಚ್ಚರಿಸುತ್ತಾಳೆ. ಅವಳ ಅಸೀಮ ಪ್ರೇಮಕೆ ಬದಲಾಗಿ ನನ್ನಿಂದ ಏನನ್ನಾದರೂ ತಿರುಗಿ ಕೊಡಲಾದೀತೆ ಅಂದರೆ ಏನನ್ನು? ಅಭಿರಾಮಿಯ ಮೇಲೆ ನನಗೂ ಪ್ರೇಮವಿತ್ತು, ಅವಳಷ್ಟೇ ಪ್ರೇಮವಿತ್ತು. ಆದರೆ ನನ್ನ ಜಗತ್ತು ಬೇರೆಯದೇ ಇತ್ತಲ್ಲ. ಅವಳ ಪ್ರೇಮದ ಮಾತುಗಳಿಗೆ, ಅವಳ ಪುಟ್ಟ ಪುಟ್ಟ ಕನಸುಗಳಿಗೆ, ಅವಳ ಮಕ್ಕಳಂಥ ಸರಾಸರಿ ಬೇಡಿಕೆಗಳಿಗೆ ನಾನು ಅವಳು ಬಯಸಿದಂತೆ ಎಂದೂ ಸ್ಪಂದಿಸಲು ಎಂದಿಗೂ ಆಗಿರಲಿಲ್ಲ. ಅವಳು ಧಾರಾಳಿ, ಅವಳು ನನ್ನ ಮೇಲಿನ ಪ್ರೀತಿಯನ್ನು ಕವಿತೆಯಾಗಿಸುತ್ತಿದ್ದಳು, ಹಾಡಾಗಿ ಹರಿಸುತ್ತಿದ್ದಳು, ಚಿಕ್ಕ ಚಿಕ್ಕ ವಿಷಯಗಳಲ್ಲೂ ಅಪಾರ ಕಾಳಜಿ ತೋರುತ್ತಿದ್ದಳು. ಅವಳ ಈ ಎಲ್ಲ ಧಾರಾಳತೆಗೂ ಒಂದೇ ಉತ್ತರವೆಂಬಂತೆ ನಾನು “ಲವ್ಯೂ… ರಾಸಾತಿ” ಅನ್ನುತ್ತಿದ್ದೆ. ಹೆಚ್ಚೆಂದರೆ ಒಮ್ಮೊಮ್ಮೆ ಅವಳ ಹಾಗೇ ಆಗಸಕೆ ಕೈ ಚಾಚಿ “ತ್ತುಂಬ್ಬ” ಅನ್ನುತ್ತಿದ್ದೆ. ನಂತರದ ದಾರಿಯಲ್ಲಿ ಅಭಿರಾಮಿ ಹೆಚ್ಚು ಮಾತಾಡಿರಲಿಲ್ಲ. ಅವಳ ಮನಸು ಕಾರಿನ ವೇಗದ ಏರಿಳಿತದಂತೆ ಏರಿಳಿಯುತ್ತಿದ್ದಿರಬೇಕು. ಅವಳ ಅರೆ ಮುಚ್ಚಿದ ಕಣ್ಣುಗಳು ವಾಸ್ತವವನ್ನು ಅರಗಿಸಿಕೊಳ್ಳುವ ಯತ್ನದಲ್ಲಿದ್ದಿರಬೇಕು. ನನ್ನ ಭುಜದ ಮೇಲೆ ಒರಗಿದ ಅವಳ ತಲೆ ದಶಕಗಳ ಭಾರವನು ಇಳಿಸಿಟ್ಟಿರಬೇಕು. ನನ್ನ ತೋಳನ್ನು ಹಿಡಿದುಕೊಂಡಿದ್ದ ಅವಳ ಕೈಗಳು, ಕನಸನ್ನು ನಿರಂತರವಾಗಿ ತನ್ನೊಂದಿಗೇ ಉಳಿಸಿಕೊಳ್ಳುವ ಧಾವಂತದಲಿ ಪರಿತಪಿಸುತ್ತಿದ್ದಿರಬೇಕು. ಅಭಿರಾಮಿ ಮೌನವಾಗಿದ್ದಳು, ನಾವು ಹೋಟೆಲ್ ತಲುಪುವವರೆಗೂ. + +“ಏ ರಾಸ, ಎಷ್ಟು ಚೆಂದ ಇದೆ, ಕಿಟಕಿ ತೆರೆದರೆ ಸಮುದ್ರ ಕಾಣಿಸುತ್ತೆ, ರಾತ್ರಿಯಲ್ಲಿ ಸಮುದ್ರ ತುಂಬ ಚೆಲುವಾಗಿರುತ್ತೆ. ಏ, ಇವೊತ್ತು ರಾತ್ರಿ ಅಲ್ಲಿಗೆ ಹೋಗೋಣ್ವಾ” ಹೋಟೆಲ್ ನಲ್ಲಿ ರೂಂ ಸೇರಿದೊಡನೇ ಅಭಿರಾಮಿ ಹತ್ತಿರ ಬಂದು ಅನುನಯಿಸುವಂತೆ ಕೇಳಿದ್ದಳು. ಅವಳ ಉಸಿರಿನ ಕಾವು ಕೆನ್ನೆಗೆ ತಲುಪಿ ಕಿವಿ ಬೆಚ್ಚಗಾಗಿತ್ತು. “ನನ್ನ ಅಭಿರಾಮಿ, ಹೇಗೆ ಹೇಳಿದರೆ ಹಾಗೆ” ನಾನು ಅವಳ ಕಿವಿಯಲ್ಲಿ ಪಿಸುಗುಟ್ಟಿದಂತೆ ಹೇಳಿದ್ದೆ. ನನ್ನ ಕೈಗಳನು ಹಿಡಿದಿದ್ದ ಕೈಗಳು ಒಡನೇ ಬಿಗಿಯಾಗಿದ್ದವು. ಅವಳ ತಲೆ ತಗ್ಗಿ, ಅವಳ ಕಂಗಳು ನೆಲಕ್ಕೆ ಬಾಗಿದ್ದವು. “ರಾಸಾತಿ, ಲವ್ ಯು..” ನಾನು ಮತ್ತೆ ಪಿಸುಗುಟ್ಟಿದ್ದೆ. ಅಭಿರಾಮಿ ಅಪ್ಸರೆಯಾಗಿದ್ದಳು. ಭಗವಂತನ ಸೃಷ್ಟಿಯಲಿ ಅತ್ಯಂತ ಅಪೂರ್ವವಾದದ್ದು ಈ ಕಿನ್ನರಿಗಳದ್ದೇ ಇರಬೇಕು. ಕಿನ್ನರಿಯ ದೇಹದಲ್ಲಿ ಗಂಡಿನ ಕಸುವು, ಹೆಣ್ಣಿನ ಲಾಲಿತ್ಯ ಎರಡೂ ಮೇಳೈಸಿ ಅದು ಸೃಷ್ಟಿಯ ಸೌಂದರ್ಯಕೆ ಎಸೆದ ಸವಾಲಾಗಿತ್ತು. ಅದಕ್ಕೇ ಇರಬೇಕು, ಜಗತ್ತು ಅವರ ಪಾಲಿಗೆ ನಿರ್ದಯವಾಗಿ ನಡೆದುಕೊಳ್ಳುತ್ತಿರುವುದು! ನಮ್ಮ ಎದುರಾಳಿಯನ್ನು ದೈಹಿಕವಾಗಿ ಸೋಲಿಸುವುದು ಕಷ್ಟವೆನಿಸಿದರೆ ಮೊದಲು ಆತನ ಮನಸನ್ನು ಒಡೆದುಬಿಡಬೇಕು. ಅವನ ಆತ್ಮವನ್ನು ತಾಕಬೇಕು, ಕಲುಷಿತಗೊಳಿಸಬೇಕು; ಹಾಗಾಗಿಬಿಟ್ಟರೆ ಬೇರೇನೂ ಮಾಡದೆಯೇ ಅವನು ಸೋಲುತ್ತಾನೆ. ನನ್ನ ಅಭಿರಾಮಿಯ ಸ್ಪರ್ಶದಲ್ಲಿ ಅದೆಷ್ಟು ಪ್ರೇಮವಿತ್ತು. ಅವಳು ಒಲಿಯುತ್ತ ಒಲಿಸುತ್ತ, ಮಣಿಸುತ್ತ ಮಣಿಯುತ್ತ ನನ್ನನ್ನು ಅಪರೂಪದ ಲೋಕಕ್ಕೆ ಸೆಳೆದೊಯ್ದಳು. ನನ್ನ ತೆಕ್ಕೆಯಲಿ ಶರಣಾಗಿ ಕಣ್ಣೀರಾದಳು. “ಇದು ನಿಜವೇ? ಹೀಗೆ ಇಷ್ಟು ಪ್ರೇಮದಿಂದ ನನ್ನನ್ನು ಮುಟ್ಟಿದ ಒಂದು ಕೈಯನ್ನೂ ನಾನರಿಯೆ, ನನ್ನನ್ನು ಬಲತ್ಕಾರಿಸಿದ ಯಾರಿಗೂ ನನ್ನಲ್ಲಿ ಒಂದು ಆತ್ಮ ಇರುವುದು ಕಂಡಂತಿಲ್ಲ. ನಾನು ಕೂಡ ಒಮ್ಮೆಯೂ ಯಾರ ಕೈಯೊಳಗೂ ಹೀಗೆ ಅರಳಿಯೇ ಇಲ್ಲ. ನಾನು ಎಂದಿಗೂ ಅರಳಲಾರದವಳೆಂದೇ ಬಗೆದಿದ್ದೆ. ಹಾಗೆ ನನ್ನ ಮೇಲೆ ಬಲಾತ್ಕಾರಗಳು ನಡೆದಾಗ ನನ್ನ ಆತ್ಮ ಎಲ್ಲೋ ಮರಕೆ ಜೋತುಬಿದ್ದು ಪ್ರಜ್ಞಾಹೀನವಾಗುತ್ತಿತ್ತೇ ಹೊರತು ಒಮ್ಮೆಯೂ ಎಲ್ಲೂ ಸ್ಪಂದಿಸಲೇ ಇಲ್ಲ. ಇದು ನನ್ನ ಮೊದಲರಾತ್ರಿ. ಇದು ನನ್ನ ಬದುಕು, ಇದು ನನ್ನ ಜಗತ್ತು, ನಾ ಎಷ್ಟೊಂದು ಸಂತೋಷವಾಗಿದೀನಿ, ಅದು ನಿಂಗೆ ಗೊತ್ತಾಗ್ತಾ ಇದೆಯಾ..? ನಂಡ್ರಿ ರಾಸ ನಂಡ್ರಿ” ಅವಳು ಹಾಗನ್ನುತ್ತ ಬಿಕ್ಕಿಬಿಕ್ಕಿ ಅತ್ತಿದ್ದಳು. ನಾನು ಅವಳ ಕೂದಲು ನೇವರಿಸುತ್ತ ಅವಳ ನೆತ್ತಿಯನು ಚುಂಬಿಸಿದ್ದೆ. ಅವಳ ಕಣ್ಣೀರನ್ನು ತುಟಿಗಳಲಿ ಹೀರಿ ಕುಡಿದಿದ್ದೆ. ನನ್ನ ಎದೆಯ ಮೇಲೆ ತಲೆಯಿರಿಸಿ ಅನನ್ಯ ತೃಪ್ತಿಯೊಡನೆ ಮಲಗಿದವಳು ಸ್ವಲ್ಪೇ ಹೊತ್ತಿಗೆ ನಿದ್ದೆಗೆ ಜಾರಿದ್ದಳು. ಅವಳ ತುಟಿಗಳು ನಸುವೇ ಬಿರಿದು, ಯಾವುದೋ ಮಾಯಕದ ರಾಗಕ್ಕೆ ದನಿಗೂಡಿಸುತ್ತಿರುವಂತೆ ಕಾಣುತ್ತಿತ್ತು. ಅವಳ ಆ ನಸುನಗುವ ತುಟಿಗಳನು ಮತ್ತೆ ಮತ್ತೆ ಉನ್ಮತ್ತನಂತೆ ಚುಂಬಿಸಿದ್ದೆ. ಆದರೆ ಪ್ರೇಮಕ್ಕಾಗಿ ಹಂಬಲಿಸಿ ನವೆದಿದ್ದ ಆ ಜೀವವನ್ನು ನಾನು ಅಷ್ಟೊಂದು ಪ್ರೀತಿಸಬಾರದಾಗಿತ್ತು. + + + +ಮಾರನೆಯ ಬೆಳಿಗ್ಗೆ ನಾವು ಕೂವಗಂ ಗೆ ಹೋಗುವಾಗ ಅಭಿರಾಮಿ ಎಷ್ಟು ಚೆಂದಗೆ ಸಿಂಗರಿಸಿಕೊಂಡಿದ್ದಳೆಂದರೆ ನಾನು ಅವಳಿಂದ ಕಣ್ತೆಗೆಯದಾದೆ. ‘ಅಬ್ಬ ಅಭಿರಾಮಿ, ನಿನ್ನಷ್ಟು ಚೆಲುವೆ ಮತ್ತೊಬ್ಬಳು ಖಂಡಿತ ಇರಲಿಕ್ಕಿಲ್ಲ” ನಾನು ಕಾರು ಓಡಿಸುತ್ತ ಅವಳ ಕಡೆ ತಿರುಗದೆಯೇ ಹೇಳಿದ್ದೆ. “ನೀನು ನಿಜವಾಗಲೂ ಸುಳ್ಳಪ್ಪಿ” ಅವಳು ಹುಸಿಮುನಿಸು ತೋರಿಸಿ ನಕ್ಕಿದ್ದಳು. ಅದರಂತೆಯೇ ಕೂವಗಂ ತಲುಪಿದಮೇಲೆ ನನ್ನ ಎಲ್ಲ ಎಣಿಕೆಗಳೂ ತಲೆಕೆಳಗಾಗಿ ಮಕಾಡೆ ಮಲಗಿದವು. ನಿಜಕ್ಕೂ ಅದೊಂದು ಕಿನ್ನರ ಲೋಕವೇ ಆಗಿತ್ತು. ಬಲು ಸೊಗಸಾಗಿ ಸಿಂಗರಿಸಿಕೊಂಡಿದ್ದ, ಮಹಾ ಸುಂದರಿಯರಾದ ಸಾವಿರ ಸಾವಿರ ಕಿನ್ನರಿಗಳನ್ನು ಒಟ್ಟಿಗೇ ಕಂಡು ನಾನು ದಂಗಾಗಿದ್ದೆ. ಅದು ಈ ಪ್ರಪಂಚಕ್ಕೆ ಸಂಬಂಧಿಸದ ವಿಶೇಷ ವಿಶಿಷ್ಟ ಹೊಸತೊಂದು ಜಗತ್ತಾಗಿತ್ತು. ಅಲ್ಲಿಗೆ ಇಡೀ ದೇಶದ ನಾನಾ ಕಡೆಗಳಿಂದ ಕಿನ್ನರಿಗಳು ಬಂದಿದ್ದರು, ಹೊರದೇಶದಿಂದ ಬಂದವರೂ ಇದ್ದರು. ಈ ಜಾತ್ರೆಯ ವಿಶೇಷಗಳನು ವರದಿ ಮಾಡಲು,ಬರಿದೇ ನೋಡಲು, ಇಲ್ಲ ಸಲೀಸಾಗಿ ಯಾರಾದರೂ ಕಿನ್ನರಿ ರಾತ್ರಿಗಳ ಮಟ್ಟಿಗೆ ಒಲಿದುಬಿಡಬಹುದೆಂಬ ಆಸೆಯಿಟ್ಟು ಬಂದ ವಿಟರು, ಕಿನ್ನರಿಗಳಿಂದ ಆರ್ಶೀವಾದ ಪಡೆದರೆ ಒಳಿತಾಗುವುದೆಂಬ ನಂಬಿಕೆಯೊಂದಿಗೆ ಅವರಿಗೆ ಬಾಗಿನ ಕೊಡಬಂದವರು…. ನಾನು ಈ ಜಾತ್ರೆ ಇಷ್ಟು ದೊಡ್ಡದಿರಬಹುದೆಂದು ಖಂಡಿತಾ ಅಂದುಕೊಂಡಿರಲಿಲ್ಲ. “ರಾಸಾತಿ, ಏನಿದೆಲ್ಲ?” ನಾನು ಅಚ್ಚರಿಯಿಂದ ಕೇಳಿದ್ದೆ “ಇನ್ನೇನು? ಇದೇ ಕೂವಗಂ ಫೆಸ್ಟ್, ಇವತ್ತು ಚಿತ್ರಾ ಪೌರ್ಣಮಿ ಬೇರೆ. ಇದೇ ತುಂಬ ವಿಶೇಷ ದಿನ. ಇವೊತ್ತು ಇಲ್ಲೊಂದು ಬಹುದೊಡ್ಡ ರಿಚ್ಯುಅಲ್ ನಡೆಯುತ್ತೆ, ಮಹಾಭಾರತದ ಒಂದು ಕಥೆಯನ್ನು ಆಧರಿಸಿ ನಡೆಸುವ ಸಂಪ್ರದಾಯ ಇದು. ಒಮ್ಮೆ ಕೌರವ ಪಾಂಡವರ ಯುದ್ಧದ ಸಮಯದಲ್ಲಿ ಕೃಷ್ಣನಿಗೆ ಯುದ್ಧದ ಕುರಿತಾಗಿ ಭವಿಷ್ಯ ಕೇಳುವ ಮನಸ್ಸಾಯಿತಂತೆ. ಅವನು ಪಾಂಡವರ ಪರ, ಅವನಿಗೆ ಧರ್ಮ ಸಂರಕ್ಷಕ. ಹಾಗಾಗಿ ಅವನು ಪಕ್ಕಾ ಭವಿಷ್ಯ ನುಡಿವ ಸಹದೇವನಲ್ಲಿಗೆ ಹೋಗಿ ಈ ಕುರಿತು ವಿಚಾರಿಸಿದನಂತೆ, ನೋಡಿದರೆ ಅದೇ ಸಮಯಕೆ ಸರಿಯಾಗಿ ಸುಯೋಧನನೂ ಭವಿಷ್ಯ ಕೇಳಲು ಅಲ್ಲಿಗೆ ಬಂದಿದ್ದನಂತೆ. ಕವಡೆ ಉರುಳಿಸಿ ಗಣಿಸಿದ ಸಹದೇವ, ಇಬ್ಬರಿಗೂ ಗೆಲುವಿನ ಹಾದಿಗಳು ಹೆಚ್ಚುಕಮ್ಮಿ ಒಂದೇ ಮಟ್ಟಲ್ಲಿವೆ; ಹಾಗಾಗಿ ಯಾರು ಮೊದಲು ನಿಮ್ಮಲ್ಲಿ ಅತ್ಯಂತ ಶಕ್ತಿಯೂ, ತೇಜಸ್ಸೂ ಉಳ್ಳ, ಸಕಲ ವಿದ್ಯಾ ಶ್ರೇಷ್ಠ, ಯುದ್ಧ ವೀರನನ್ನು ಮಹಾಕಾಳಿಗೆ ಬಲಿ ಕೊಡುತ್ತೀರೋ ಅವರಿಗೆ ಮಹಾಕಾಳಿಯ ಒಲವಿನಿಂದಾಗಿ ಗೆಲುವು ಸಿಕ್ಕುವುದು ಅಂದನಂತೆ. ಆ ಕ್ಷಣವೇ ಕೃಷ್ಣ ಚಿಂತೆಗೆ ಬಿದ್ದನಂತೆ. ಅವನ ಮನಪಟಲದಲ್ಲಿ ಆ ಸರ್ವಗುಣ ಸಂಪನ್ನ ಒಂದೋ ಅರ್ಜುನ, ಇಲ್ಲ ಸ್ವತಃ ತಾನೇ ಎಂಬ ಸತ್ಯ ಹೊಳೆದು ಏನು ಮಾಡುವುದೆಂಬ ಗೊಂದಲದಲ್ಲಿ ಬಿದ್ದನಂತೆ. ಹಾಗೂ ಕಡೆಗೆ ಪಾಂಡವರನ್ನೆಲ್ಲ ಕರೆದು ಈ ಕುರಿತಾಗಿ ಅಭಿಪ್ರಾಯ ಕೇಳಲಾಗಿ ಯಾರೊಬ್ಬರೂ ಏನೂ ಮಾತಾಡಲಿಲ್ಲವಂತೆ. ಆಗ ಒಬ್ಬ ತೇಜಸ್ಸುಳ್ಳ ಸುಂದರ ಯುವಕ ಮುಂದೆ ಬಂದು ತಾನು ಈ ಶುಭ ಕಾರ್ಯಕೆ ಸಲ್ಲುವೆನೆ? ಎಂದು ಕೇಳಿದನಂತೆ. ಅವನ ಪೂರ್ವಾಪರ ವಿಚಾರಿಸಲಾಗಿ, ಅವನು ಅರ್ಜುನನಿಗೂ, ನಾಗಕನ್ಯೆ ಉಲೂಪಿಗೂ ಜನಿಸಿದ ಮಗ, ಅರವಾಣನೆಂದು ತಿಳಿಯ ಬರುತ್ತದೆ. ಅವನು ಒಬ್ಬ ಶಕ್ತಿಶಾಲಿ ವೀರನೆಂಬುದೂ, ಸಹದೇವ ಸೂಚಿಸಿದ ಗುಣಾತಿಶಯಗಳನ್ನು ಹೊಂದಿದವನೆಂದೂ ಕೃಷ್ಣ ಮನಗಂಡು ಅವನನ್ನೇ ಬಲಿ ಕೊಡಲು ನಿರ್ಧರಿಸುತ್ತಾನಂತೆ. ಹಾಗೆ ಅರವಾಣನನ್ನು ಬಲಿಕೊಡಲು ನಿಶ್ಚಯಿಸಿದ ದಿನವೇ ಚಿತ್ರಾ ಪೂರ್ಣಿಮೆ. ಆ ಸಮಯದಲಿ ಕೃಷ್ಣ ತನ್ನ ಧರ್ಮಬುದ್ದಿಯಿಂದ, ಅರಾವಣನ ಕಡೆಯಾಸೆ ಏನೆಂದು ಕೇಳಲು, ಅವನು ಸಾಯುವ ಮುನ್ನ ಮದುವೆಯಾಗಿ ಹೆಣ್ಣಿನೊಡನೆ ಕೆಲ ಘಂಟೆಗಳನು ಆನಂದದಿಂದ ಕಳೆಯಬೇಕೆಂದು ಬಯಸಿದನಂತೆ. ಆಗ ಕೃಷ್ಣ ಮೋಹಿನೀ ಅವತಾರವೆತ್ತಿ ಅರವಾಣನನ್ನು ಮದುವೆಯಾಗಿ ಆತನ ಕೊನೆಯಾಸೆ ನೆರವೇರಿಸಿದನಂತೆ. ಅದರ ನಂತರ ಅರವಾಣನನ್ನು ದೇವಿಗೆ ಬಲಿಕೊಡಲಾಯಿತಂತೆ. ಅದೇ ನೆನಪಿಗೆ, ಅಂಥದ್ದೇ ಬದುಕನ್ನು ಹೊಂದಿರುವ ಕಿನ್ನರಿಗಳು ಈ ಚಿತ್ರಾಪೌರ್ಣಮಿಯಂದು ಸರ್ವಾಲಂಕಾರ ಭೂಷಿತರಾಗಿ ಅರವಾಣನನ್ನು ಮದುವೆಯಾಗಿ ಮರುದಿನ ಅವನು ಸತ್ತ ಸೂತಕ ಆಚರಿಸುತ್ತಾರೆ. ಇಲ್ಲಿ ಅದರ ಪ್ರತೀಕವಾಗಿ ದೇಗುಲದ ಅರ್ಚಕನಿಂದ ತಾಳಿ ಕಟ್ಟಿಸಿಕೊಳ್ತಾರೆ. ಮರುದಿನ ಅರ್ಚಕರು ಕಿನ್ನರಿಗಳ ತಾಳಿ ಕಳೆದು ಬಳೆ ಒಡೆದು ವಿಧವೆಯಾಗಿಸುತ್ತಾರೆ. ಆಮೇಲೆ ಅವರು ಒಪ್ಪಾರಿಯಿಟ್ಟು ಅತ್ತು ದುಃಖ ಹಂಚಿಕೊಳ್ಳುತ್ತಾರೆ, ಇದು ಸಂಪ್ರದಾಯ. ಆದರೆ ನಾನಂತೂ ಒಮ್ಮೆಯೂ ಈ ಕೆಲಸ ಮಾಡಿಲ್ಲ. ಇಲ್ಲೀತನಕ ಮೂರು ಸಲ ಬಂದಿದ್ದೇನೆ, ಒಮ್ಮೆಯೂ ನನಗೆ ಇದನ್ನು ಮಾಡಬೇಕೆಂದು ಅನಿಸಿಲ್ಲ. ಅಭಿರಾಮಿ ನಕ್ಕಿದ್ದಳು. + +ನಂಗೇನು ಗೊತ್ತಾ, ನಂಗೆ ನಿಜಾ ಮದುವೆ ಆಗ್ಬೇಕು… ಆಮೇಲೆ ಸಂಸಾರ ನಡೆಸ್ಬೇಕು. ಎಲ್ಲರ ಹಾಗೆ” ಅಭಿರಾಮಿ ಕಥೆಹೇಳಿ ಮುಗಿಸಿ ಕೊನೆಯಲ್ಲಿ ಇದನ್ನೂ ಸೇರಿಸಿ ನಕ್ಕಿದ್ದಳು. ‘ಎಷ್ಟು ದುಬಾರಿ ಆಸೆ ಅಲ್ವಾ ನಂದು, ಎಷ್ಟು ಸೊಕ್ಕಿರಬೇಕು ನನಗೆ’ ಹಾಗನ್ನುತ್ತ ನಕ್ಕುನಕ್ಕು ಅವಳ ಕಂಗಳಲಿ ನೀರಾಡಿದವು. “ಸುಮ್ನೆ ಏನಾದರೂ ಹೇಳುವುದು ತಮಾಷೆಗೆ” ಅವಳು ಮಾತು ಮುಗಿಸಿದ್ದಳು. ಇದೇ ಅಲ್ಲದೆ ಅಲ್ಲಿ ವಿವಿಧ ಕಾರ್ಯಕ್ರಮಗಳು ನಡೆದಿದ್ದವು. ಒಂದೆಡೆ ಕಿನ್ನರಿಯರು ಗುಂಪುಗುಂಪಾಗಿ ಕಲೆತು ನರ್ತಿಸುತ್ತಿದ್ದರೆ, ಮತ್ತೊಂದೆಡೆ ಸ್ವಲ್ಪ ಹೆಚ್ಚು ವಯಸ್ಸಾದವರು ಯಾವುದೇ ಭಿಡೆಯಿಲ್ಲದೆ ಗಟ್ಟಿಯಾಗಿ ನಗುತ್ತ, ತಮ್ಮೊಳಗೇ ಏನೋ ತಮಾಶೆ ಮಾಡಿಕೊಂಡು ರೇಗುತ್ತ, ರೇಗಿಸುತ್ತ ಕುಳಿತಿದ್ದರು. ಇನ್ನೊಂದು ಗುಂಪು ಆರೋಗ್ಯದ ಕುರಿತು ಜಾಗೃತಿ ಕಾರ್ಯಕ್ರಮ ಮಾಡುತ್ತಿದ್ದರೆ, ಮತ್ತೊಂದೆಡೆ ಕಿನ್ನರಿಯರ ಫ್ಯಾಶನ್ ಶೋ ಮತ್ತು ಸೌಂದರ್ಯ ಸ್ಪರ್ಧೆ ನಡೆದಿತ್ತು. ಅಂತೂ ನಾನು ಎಂದೂ ಕಂಡಿರದ ಕಲ್ಪಿಸಿರದ ಅತಿ ರಮ್ಯ ಲೋಕವನು ಕ್ಯಾಮೆರಾದಲ್ಲಿ ದಾಖಲಿಸುತ್ತ ಅದರೊಳಗೆ ಕಳೆದುಹೋಗತೊಡಗಿದ್ದೆ. ಇದನ್ನೆಲ್ಲ ನೋಡುತ್ತಿದ್ದರೆ, ತಮ್ಮ ಜನ್ಮದತ್ತ ಪಕೃತಿಯನ್ನು ಬೇರೇನೂ ಮಾಡಲಾಗದೆ, ಇರುವುದರಲಿ ನಗಲು ಕಲಿತ ಈ ಪ್ರೇಮಮಯ ಜೀವಗಳನು ನಾವುಗಳೆಲ್ಲ ತುಳಿತುಳಿದು ಶಾಪಗ್ರಸ್ತ ಜೀವಗಳಾಗಿಸಿ ಬಿಟ್ಟಿದ್ದೇವೆನ್ನದೆ ಬೇರೆ ಏನೆನ್ನಬೇಕು?ಇವರಿಗೆ ಒಂದು ಕನಿಷ್ಟ ಬೆಲೆಯನ್ನೂ ಕೊಡದೆ ನಿಕೃಷ್ಟವಾಗಿ ಕಾಣಬೇಕೆಂದು ಕಲಿತದ್ದಾದರೂ ಹೇಗೆ ನಾವು? ಅವರ ಪರಿತ್ಯಕ್ತ ಹೃದಯ ಅದೆಷ್ಟು ನೊಂದಿರಬಾರದು? ಆ ನೋವೇ ಅವರನ್ನು ಹೀಗೆ ಕಲ್ಲಾಗಿಸಿತೇ? ನೋವಿನ ಮೇಲೆ ನೋವನ್ನು ಸುರಿದು ನಾವು ಅವರನ್ನು ಮರಗಟ್ಟಿಸಿ ಹರಳಾಗಿಸಿಬಿಟ್ಟೆವೆ? ಪ್ರೇಮದ ಒಂದು ಸಣ್ಣ ಬಿಸುಪಿಗೆ ಅಭಿರಾಮಿ ಅದೆಷ್ಟು ಕರಗಿಹೋದಳು. ಅವಳ ಹೃದಯದಲಿ ಹಿಮಗಟ್ಟಿ ಇರಿಯುತ್ತಿದ್ದ ನೋವೆಲ್ಲ ಹರಿದು ಉಕ್ಕಿತ್ತು. ಇಲ್ಲಿರುವ ಅಷ್ಟೂ ಕಿನ್ನರಿಗಳ ಎದೆಯಲ್ಲೂ ಅಂಥ ಹಿಮಗಲ್ಲುಗಳ ತಾಣವಾಗಿರಬೇಕು, ಸಣ್ಣದೊಂದು ಒಲವ ಬಿಸುಪಿಗಾಗಿ ತುಡಿಯುತ್ತಿರುವ ಅವರ ಕಲ್ಲೆದೆಯೊಳಗೆ ತುಯ್ಯುವ ಕಡಲಿರಬೇಕು. ದೇವರೇ ನಿನ್ನ ಯಾವ ವಿಲಾಸದ ಘಳಿಗೆಯಲಿ ಹೀಗೊಂದು ಆಟವಾಡುವ ಮನಸು ಮಾಡಿದೆ ನೀನು? ಅಥವಾ ನಿನ್ನ ಅಸೀಮವೆನಿಸುವ ಸೃಷ್ಟಿಯನು ನಾವೇ ತುಳಿದು ನೆಲಕಚ್ಚಿಸಲು ನಿಂತಿದ್ದೇವೆಯೆ? ನಾನು ನನ್ನೊಳಗೇ ಕಂಪಿಸಿದ್ದೆ. + +ಅಲ್ಲಿ ನಮಗೆ ಅಭಿರಾಮಿಯ ಹಳೆಯ ಗೆಳತಿ ನೀಲಿಮಾ ಭೇಟಿಯಾಗಿದ್ದಳು. ಅವಳು ಸಣ್ಣ ವಯಸ್ಸಿನಲ್ಲೇ ಅಪ್ಪ ಅಮ್ಮನಿಂದ ಪರಿತ್ಯಜಿಸಲ್ಪಟ್ಟು ಬೀದಿಗೆ ಬಿದ್ದಿದ್ದಳು. ಅವಳ ಬದುಕಿನ ಬಹುಭಾಗ ಮುಂಬೈನ ಕಾಮಾಟಿಪುರದಲ್ಲಿ ಕಳೆದಿತ್ತು. ಅವಳ ಎಳೆಯ ವಯಸ್ಸಿನಿಂದಲೇ ಅವಳು ಲೈಂಗಿಕ ಶೋಷಣೆಯನ್ನು ಅನುಭವಿಸಿದ್ದಳು. ನನ್ನೊಂದಿಗೆ ಮಾತಾಡುತ್ತಾ ಅವಳು “ನಾನು ನನ್ನ ಬದುಕಿನಲಿ ಕಳೆದ ಒಂದೊಂದು ದಿನವೂ ನರಕಸ್ವರೂಪವಾಗಿತ್ತು. ಅಷ್ಟಾದರೂ ನನಗೊಂದು ಆಸೆ, ಈ ಕಷ್ಟದ ದಿನಗಳು ಮುಗಿದು ಏನೋ ಒಂದು ಒಳ್ಳೆಯದು ನನಗೂ ನಡೆಯುವುದೆಂದು! ನನ್ನ ನಂತರ ನನಗೆ ಒಬ್ಬ ತಮ್ಮ ಹುಟ್ಟಿದ್ದ, ಎಷ್ಟು ಕೆಂಪಗೆ ಎಷ್ಟು ಚೆಂದವಿದ್ದ. ಅಮ್ಮನಿಗಂತೂ ಅವನೆಂದರೆ ಉಸಿರು. ಆದರೆ ಅಚಾನಕನೆ ಅವನಿಗೊಂದು ಸಣ್ಣ ಜ್ವರ ಬಂದು ತೀರಿಹೋದ. ಅಷ್ಟು ಚಂದದ ಮಗುವನ್ನು, ಅಮ್ಮ ಅಪ್ಪನ ಪ್ರೇಮವನ್ನು ಪಡೆದ ಮಗುವನ್ನು ದೇವರು ವಾಪಸ್ ಕರಕೊಂಡು ನನ್ನನ್ನು ಉಳಿಸಿದ ಅಂದರೆ ಒಂದು ಕಾರಣವಂತೂ ಇದ್ದಿರಬೇಕಲ್ವಾ? ನನಗೆ ಯಾರೂ ದಿಕ್ಕಿಲ್ಲದಂತೆ ಮಾಡಿದ, ಯಾಕೆ? ಬಹುಶಃ ನನ್ನಂಥ ಹಲವಾರು ದಿಕ್ಕಿಲ್ಲದವರನ್ನು ನಾನು ನೋಡಬೇಕೆಂದು ದೇವರು ಬಯಸಿರಬೇಕಲ್ವಾ? ಹ್ಹಹ್ಹ .. ಎಲ್ಲ ನಂದೇ ಯೋಚನೆಗಳು, ಅಂತೂ ಇವು ನನ್ನನ್ನು ಸಾಯದಂತೆ ಕಾಯ್ದ ಆಲೋಚನೆಗಳು. ಇವತ್ತು ನಾ ಮುಂಬೈಯಲ್ಲಿ ಹೆಲ್ಪಿಂಗ್ ಹ್ಯಾಂಡ್ಸ್ ಅನ್ನೋ ಸಂಸ್ಥೆ ನಡೆಸ್ತೀನಿ. ಕಾಮಾಟಿಪುರದ ಎಷ್ಟೋ ಮಕ್ಕಳು ನನ್ನಲ್ಲಿ ಆಶ್ರಯ ಪಡೆದಿವೆ. ಅವರ ಓದು ಬರಹ ಎಲ್ಲ ಸಂಸ್ಥೆಯದ್ದೇ ಹೊಣೆ. ಬಹಳ ಜನ ಕೈಗೂಡಿಸಿದ್ದಾರೆ ಅಂತೂ.. ಈಗ ಬದುಕು ಬದಲಾಗ್ತಾ ಇದೆ” ಅಂದಿದ್ದಳು. + + + +“ರಾಸ ನಾವು ರಾತ್ರಿಯೇ ಹೊರಟು ಬಿಡೋಣ, ನಾಳೆ ಬೆಳಗೆ ತಾಳಿ ಕೀಳುವುದು, ಬಳೆ ಒಡೆಯುವುದು, ಒಪ್ಪಾರಿಯಿಟ್ಟು ಅಳುವುದು, ನಾನಂತೂ ನೋಡಲಾರೆ, ಇವೊತ್ತೇ ಹೊರಟುಬಿಡುವ ಸರಿಯಾ?” ಮದುಮಗಳಂತೆ ಸಿಂಗರಿಸಿಕೊಂಡ ಅನೇಕಾನೇಕ ಕಿನ್ನರಿಯರು ಅರ್ಚಕನಿಂದ ತಾಳಿಕಟ್ಟಿಸಿಕೊಳ್ಳುವುದನ್ನೂ, ಸಂತೋಷದಿಂದ ನರ್ತಿಸುವುದನ್ನೂ ನೋಡುತ್ತಿದ್ದವನ ತೋಳು ಹಿಡಿದು ಕೇಳಿದ್ದಳು ಅಭಿರಾಮಿ. ಅವಳ ಮಾತಿಗೆ ನನ್ನದೂ ಒಪ್ಪಿಗೆಯಿತ್ತು. ನಾವು ಅವೊತ್ತೇ ರಾತ್ರಿ ಹೊರಟು ಪಾಂಡಿಚೆರಿಗೆ ಮರಳಿದ್ದೆವು. ರಾತ್ರಿ ಪಾಂಡಿಚೆರಿಗೆ ಮರಳಿದ ಮೇಲೆ ನಾನು ಅಭಿರಾಮಿಯನ್ನು ಅತೀವ ಮೋಹದಿಂದ ಮೋಹಿಸಿದೆ, ಪ್ರೇಮಿಸಿದೆ, ರಮಿಸಿ, ಲಾಲಿಸಿದೆ. ಅಂಥ ಪ್ರೇಮದ ಒಂದು ನಿರ್ಜರ ಘಳಿಗೆಯಲ್ಲಿ ಅಭಿರಾಮಿ ಕೇಳಿದಳು. “ನನ್ನನ್ನು ನೀನು ಮದುವೆ ಮಾಡಿಕೊಳ್ತೀಯ ರಾಸ?” ಆ ಘಳಿಗೆ ಹಾಗೇ ಅಲ್ಲೇ ಸ್ತಬ್ಧಗೊಂಡಿತು ನನ್ನ ಹೃದಯ ಮಿಡಿತದ ಜೊತೆಗೆ. ಆಕ್ಷಣ ಎಲ್ಲ ಸದ್ದುಗಳು ಮೌನದೊಳಗೆ ಮುಳುಗಿ ನಾನು ನಿರ್ವಾತವೊಂದರಲ್ಲಿ ಮುಳುಗಲಾರದೆ ತೇಲಲಾರದೆ ಸಿಲುಕಿರುವಂತೆ ತೋರಿತು. ಅಭಿರಾಮಿ ಹೃದಯವನ್ನು ಓದಬಲ್ಲವಳು. ಅವಳು ಹಠಾತ್ತನೆ ನಕ್ಕಳು. ನನ್ನ ಕೂದಲನ್ನು ಕೆದರಿ ನೆತ್ತಿಗೆ ಮುತ್ತಿಟ್ಟು ಕಿವಿಯಲ್ಲಿ ಉಸುರಿದಳು. “ಸುಮ್ನೆ ತಮಾಷೆಗೆ ಕೇಳಿದೆ ಅಷ್ಟೇ.” ಅವಳ ದನಿ ಭಾರದಲಿ ತೊಯ್ದಿತ್ತು. ಅವಳ ಕಂಗಳಿಂದ ಎರಡು ಬೆಚ್ಚನೆಯ ಹನಿಗಳು ನನ್ನ ಕಿವಿಯಂಚಿಗೆ ಇಳಿದು ಕೆನ್ನೆಯ ಮೇಲೆ ಹರಿದವು. ನನ್ನ ಕೆನ್ನೆ ಹೊಡೆಸಿಕೊಂಡಂತೆ ಉರಿಯಿತು. ನಾನು ಮಾತಾಡಲಾರದೆ ಅವಳನ್ನು ಸೆಳೆದು ತಬ್ಬಿದೆ. ಅವಳು ಲವ್ಯು ಅಂದಳು. ನಾನು “ತ್ತುಂಬ್ಬ” ಅಂದೆ. ಅಭಿರಾಮಿ ಕಣ್ಮುಚ್ಚಿ, ತುಟಿ ಬಿಗಿದು ದುಃಖ ನುಂಗಿದಳು. ನಾನು ಕಣ್ಣುಮುಚ್ಚಿ ಏನನ್ನೂ ನೋಡದೇ ಉಳಿದೆ. ಅಭಿರಾಮಿ ಏನಂದರೂ ಒಪ್ಪಬಹುದಿತ್ತು, ಆದರೆ ಮದುವೆ? ಅಭಿರಾಮಿಯ ಮೇಲೆ ನನಗೆ ಅಪಾರ ಪ್ರೀತಿಯಿತ್ತು. ಆದರೆ ಮನೆಯಲ್ಲಿ ಅಮ್ಮ, ಅಪ್ಪ, ತಂಗಿ ನಮ್ಮ ಅತಿ ದೊಡ್ಡ ಕುಟುಂಬ! ಹೇಗಾದರೂ ಒಪ್ಪಿಸುವುದು? ಯಾರಾದರೂ ಒಪ್ಪುತ್ತಾರೆಯೇ? ಅಕ್ಕನ ಗಂಡ ಏನಂದಾನು? ತಂಗಿ? ಅವಳ ಮದುವೆಯ ಪಾಡೇನು? ಹೇಗೇ ಯೋಚಿಸಿದರೂ ಇದು ಯಾವ ಕಾರಣಕೂ ಎಂದಿಗೂ ನಡೆಯಲಾರದ ಒಂದು ವಿಷಯವೆಂಬುವುದಷ್ಟೇ ನನ್ನ ಅರಿವಿಗೆ ಬರುತ್ತಿತ್ತು. ಅಭಿರಾಮಿಯ ತೋಳಿನಲ್ಲಿ ತಲೆಯಿಟ್ಟು ಮಲಗಿ ಸೂರು ನೋಡುತ್ತ ಉಳಿದವನಿಗೆ ನಿದ್ರೆಯೇ ಬಂದಿರಲಿಲ್ಲ. ಆ ಹೊಯ್ದಾಟದಲ್ಲಿ ಅದಿನ್ಯಾವಾಗ ನಿದ್ರೆ ಬಂತೋ, ಅಂತೂ ನಾ ಎಚ್ಚರಗೊಂಡಾಗ ಅಭಿರಾಮಿ ಅದಾಗಲೇ ಎದ್ದು ಸ್ನಾನ ಮಾಡಿ, ತೊಯ್ದಕೂದಲನು ಟವೆಲಿನಲಿ ಬಿಗಿದುಕೊಂಡು, ತಿಳಿಗುಲಾಬಿ ಬಣ್ಣದ ನೂಲಿನ ಸೀರೆಯುಟ್ಟು ನಿಂತಿದ್ದಳು. ಹೆಣ್ಣುಮಕ್ಕಳು ಮದುವೆಯ ಧಾರೆಯ ಸಮಯದಲಿ ತೊಡುವ ಅದೇ ನೂಲಿನಸೀರೆ! ಅವಳನ್ನು ಹಾಗೆ ಕಂಡು ನಾನು ಅವಾಕ್ಕಾಗಿದ್ದೆ. ಅವಳು ನನಗಾಗಿ ಬಹುನಿರೀಕ್ಷೆಯಿಂದ ಕಾದವಳಂತೆ ನಾನು ಎದ್ದದ್ದೇ ಎದೆಗೆ ಜೋತು ಕಡಲಾಗಿದ್ದಳು. ಮತ್ತೆ ಅಂತದ್ದೇ ಉನ್ಮತ್ತ ಘಳಿಗೆಯಲ್ಲಿ ನನ್ನ ತಲೆಗೂದಲಿನೊಳಗೆ ಬೆರಳು ನುಗ್ಗಿಸಿ ಬಿಗಿದು ಎದೆಗೆ ಸೆಳೆದುಕೊಂಡು ಕಿವಿಯ ಬಳಿ “ನನ್ನ ಮದುವೆ ಮಾಡಿಕೊಳ್ತೀಯ ಪ್ಲೀಸ್ ” ಎಂದು ಪಿಸುಗುಟ್ಟಿದ್ದಳು. ಅವಳ ದನಿ ಕಣ್ಣೀರಿನಲಿ ತೊಯ್ದಂತೆ ಆರ್ದವಾಗಿತ್ತು.ಅವಳ ಮಾತಿಗೆ ನಾನು ಸುಮ್ಮನೆ “ಮ್ ” ಅಂದಿದ್ದೆ.“ಯಾವಾಗ?” ಅವಳು ಮುಖವನ್ನು ಕೆಂದಾವರೆಯಾಗಿಸಿಕೊಂಡು ಕಾತುರದಿಂದ ಮುಖ ಅರಳಿಸಿ ನನ್ನ ಮುಖವನ್ನೇ ನೇರ ನೋಡುತ್ತ ಕೇಳಿದ್ದಳು.“ಬೇಗ” ನಾನು ಮೆಲುವಾಗಿ ಹೇಳಿದ್ದೆ. ನನ್ನ ದನಿಯ ಭಾರ ಅವಳನ್ನು ತಾಕಿರಬೇಕು. ಅವಳು ನನ್ನನ್ನು ಹತ್ತಿರ ಸೆಳೆದು ಮುದ್ದಿಸುತ್ತ, ಮುದ್ದಿಸುತ್ತ ಮತ್ತೆ ಕಿವಿಯ ಬಳಿ ಪಿಸುಗುಟ್ಟಿದ್ದಳು. “ಸುಮ್ಮನೆ ಕೇಳಿದೆ, ತಮಾಷೆಗೆ ಅಷ್ಟೇ” ಹಾಗನ್ನುವಾಗ ಅವಳ ದನಿಯ ಭಾರ ನನ್ನೆದೆಯ ಮೇಲೆ ಕಲ್ಲುಗಳನ್ನು ಹೇರಿದಂತೆ ಕೂತಿತ್ತು. + +ಅವಳ ಒದ್ದೆ ಕಂಗಳ ತೇವ ನನ್ನ ಕೆನ್ನೆಗಿಳಿದು ದಾಡಿಯೊಳಗೆ ಇಂಗಿತ್ತು. ಪತರಗುಟ್ಟುವ ಅವಳ ಪುಟ್ಟ ಎದೆಯ ಮಿಡಿತ ಜೀವಕ್ಕೆ ಹೋರಾಡುವ ಪತಂಗದ ರೆಕ್ಕೆಗಳಂತೆ ಫಡಫಡಿಸಿ ಮಿಡಿಯುತ್ತಿತ್ತು. ನಾನು ಅವಳನ್ನು ಪದಗಳಿಂದ ಸಮಾಧಾನಿಸಲಾರದೆ ನನ್ನೊಳಗೆ ಸೋಲುತ್ತಿದ್ದೆ. ಕಷ್ಟ ನಷ್ಟ ಅವಮಾನಗಳನ್ನು ಸಹಿಸಿದ್ದ ಹೃದಯ, ಪ್ರೇಮದ ಮೃದು ಸ್ಪರ್ಶಕೆ ಎಷ್ಟೊಂದು ದುರ್ಬಲಗೊಂಡಿತ್ತು! ಯಾವತ್ತೂ ನಗುನಗುತ್ತಲೇ ಇರುತ್ತಿದ್ದ ಅಭಿರಾಮಿ ಈಗ ಎಷ್ಟು ಬೇಗನೆ ಕಣ್ಣೀರಾಗುತ್ತಿದ್ದಳು! “ನೀನಿಲ್ಲದೆ ಬದುಕಿರಲಾರೆ ರಾಸ” ಅನ್ನುವ ಅಭಿರಾಮಿಯ ಬಗೆ ನನಗೆ ಭಯವಿತ್ತು, ನಾನು ಬೇರೆ ಯಾರನ್ನಾದರೂ ಮದುವೆಯಾದರೆ ಅಭಿರಾಮಿ ಉಳಿಯುವಳೇ ಜೀವಂತ ಎಂಬ ಭಯ. ನನ್ನ ಮೇಲಿನ ಪ್ರೀತಿಯಿಂದ ಅಭಿರಾಮಿ ಸಾಯದೇ ಉಳಿಯಬಹುದಿತ್ತು, ನನ್ನ ಮೇಲಿನ ಪ್ರೀತಿಯಿಂದಲೇ, ನನ್ನಿಂದ ದೂರ ಇರುವ ಸಂಕಟ ತಾಳಲಾರದೆ ಅಭಿರಾಮಿ ಸಾಯಲೂಬಹುದಿತ್ತು. ಅದೇ ಭಯದಲ್ಲಿ ನಾನು ಅಭಿರಾಮಿಯ ನುಣುಪು ಕತ್ತನ್ನು ನೇವರಿಸುತ್ತ ಮೆಲ್ಲಗೆ ಹೇಳಿದ್ದೆ “ಏನೇ ಆದರೂ ನಾನು ನಿನ್ನನ್ನು ದೂರ ಮಾಡುವುದಿಲ್ಲ ಅಭಿರಾಮಿ” “ಏನೇ ಆದರೂ ಅಂದರೆ? ನಾಳೆ ನಿನ್ನ ಮದುವೆಯಾದರೂ ಅಂತಲಾ?” ಅಭಿರಾಮಿ ನಕ್ಕಿದ್ದಳು. ಅವಳ ಕಂಗಳಲ್ಲಿ ಇಣುಕಿದ ನೀರು ಬೆಳಕಿಗೆ ಹೊಳೆದಿತ್ತು. ನಾನು ಉತ್ತರಿಸಲಾದರೆ ತಡವರಿಸಿದ್ದೆ. “ಹಾಗೆಲ್ಲ ಏನೂ ಬೇಡಪ್ಪಾ, ಇನ್ನೂ ಏನೂ ಅಲ್ಲದ ನಮ್ಮ ಈ ಸಂಬಂಧದಲ್ಲೇ ನನ್ನಿಂದ ನಿನ್ನನ್ನು ಬೇರೆ ಯಾರೊಂದಿಗೂ ಊಹಿಸಿಕೂಡ ನೋಡಲಾರದಷ್ಟು ಪೊಸೆಸಿವ್ನೆಸ್ ಕಾಡುತ್ತೆ. ನನಗೇ ಹಾಗಿರುವಾಗ,ನಾಳೆ ನಿನ್ನನ್ನು ಮದುವೆಯಾಗುವ ಹುಡುಗಿಗೆ ನಿನ್ನ ಜೊತೆ ನನ್ನ ಸಂಬಂಧ ತಿಳಿದರೆ ಎಷ್ಟು ನೋವಾಗಲಿಕ್ಕಿಲ್ಲ? ನನ್ನ ರಾಜ ನೀನು, ಯಾರೆದುರೂ ತಲೆ ತಗ್ಗಿಸಿ ನಿಲ್ಲಬಾರದು ನೀನು, ನನ್ನದೇನಿದೆ ಹೆಚ್ಚೆಂದರೆ ಈ ಸಣ್ಣಪುಟ್ಟ ಆಸೆಗಳ ಹೊರತಾಗಿ? ನಮ್ಮದೂ ಅಂತ ಒಂದು ಮಗುವನ್ನು ಕೂಡ ಹೆರಲಾರದವಳು ನಾನು. ಆದರೆ ನಂಗೂ ಏನೇನೋ ಕನಸುಗಳು, ಅದು ಪರವಾಗಿಲ್ಲ, ನಿಧಾನಕೆ ಸರಿಯಾಗಬಹುದು, ಇಟ್ಸ್ ಒಕೆ” ಅಂದಿದ್ದಳು. ನನ್ನ ಅಭಿರಾಮಿ. ದೇವರೇ, ನಾನೆಷ್ಟು ಅಸಹಾಯಕನಾಗಿದ್ದೆ. + + + +ಅದೇ ಕೊನೆ; ಮತ್ತೆಂದೂ ಅಭಿರಾಮಿ ಮದುವೆಯ ಮಾತನ್ನೇ ಎತ್ತಿರಲಿಲ್ಲ. ನಾವು ಚೆನ್ನೈಗೆ ಮರಳಿದ ಮೇಲೆ ಮತ್ತೆ ಮತ್ತೆ ಏನಾದರೂ ನೆಪಹೂಡಿ ಪಾಂಡಿಚೆರಿಗೆ ಹೋಗುವುದು ತಂಗುವುದು ನಮಗೆ ವಾಡಿಕೆಯಾಗಿ ಹೋಗಿತ್ತು. ಇತ್ತ ಇಬ್ಬರ ನಡುವಿನ ಪ್ರೇಮ ಬೆಳೆಯುತ್ತ ಸಾಗಿದ್ದರೆ ಅತ್ತ ಮನೆಯಲ್ಲಿ ಮದುವೆಯ ಒತ್ತಡವೂ ಹೆಚ್ಚತೊಡಗಿತ್ತು. ಅಭಿರಾಮಿಯೇನೋ ಮದುವೆಯ ಕುರಿತಾಗಿ ನನ್ನಲ್ಲಿ ಏನನ್ನೂ ಕೇಳದೆ, ಏನೂ ಹೇಳದೆ ಉಳಿದ್ದಿದ್ದಳೇನೋ ನಿಜವೇ. ಆದರೆ ಅವಳೊಳಗಿನ ಕನಸುಗಳನ್ನೂ ಆಸೆಗಳನ್ನೂ ತನ್ನೊಳಗೇ ಜೀವಂತ ಹುಗಿತು ಗೋರಿಕಟ್ಟಲಾರದೆ ಅವಳು ತಲ್ಲಣಿಸುತ್ತಿರುವುದು ನನಗೆ ಅರಿವಾಗುತ್ತಿತ್ತು. ನಾನಾದರೂ ಅವಳನ್ನು ಕುರಿತು ಪರಿತಪಿಸದ ಹಗಲು ರಾತ್ರಿಗಳೇ ಇರಲಿಲ್ಲ. ‘ಏನು ಮಾಡುವುದು, ಅಭಿರಾಮಿಯನ್ನು ಮದುವೆಯಾಗಲು ಮನೆಯಲ್ಲಿ ಒಪ್ಪುವರೆ? ಏನಾದೀತು ಮುಂದೆ? ಹೇಗೆ ಮುಂದಿನ ನಿರ್ಧಾರವೆಂಬ ಯೋಚನೆಯಲ್ಲಿ ನನ್ನ ರಾತ್ರಿಗಳು ಉರಿದು ಕರಕಲಾಗುತ್ತಿದ್ದವು. ಕೆನ್ನೆ ಒಳಕ್ಕಿಳಿದು ಕಣ್ಣ ಸುತ್ತ ಕಪ್ಪು ಸುತ್ತಿ “ರಾಸ, ಯಾಕಿಷ್ಟು ಡಲ್ ಆಗಿದೀಯ? ಏನಾಯ್ತು? ಚೆನ್ನಾಗಿ ಊಟ ಮಾಡ್ತಾ ಇದೀಯ? ನಿದ್ರೆ? ಏನು ಚಿಂತೆ? ಕೆಲಸದ್ದಾ? ನಾನೇನಾದರೂ ಟೆನ್ಶನ್ ಕೊಡ್ತಾ ಇದೀನ? ನನ್ನ ಬಗೆಯೇನಾದರೂ ಯೋಚಿಸ್ತ ಇದೀಯ? “ಅಭಿರಾಮಿ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕುತ್ತಿದ್ದಳು. ನಾನು ಹಾರಿಕೆಯ ಉತ್ತರ ಕೊಡುತ್ತಿದ್ದೆ. ಅವಳು ಸೂಕ್ಷ್ಮಮತಿ. ಇಂಥದ್ದೇ ಒಂದು ಇಳಿಸಂಜೆ ಯಾವೊಂದು ಮುನ್ಸೂಚನೆಯೂ ಕೊಡದೆ, ಏನೊಂದನ್ನೂ ಹೇಳದೆ ಮೊಬೈಲ್ ಆಫ್ ಮಾಡಿಕೊಂಡು ಡ್ಯಾನ್ಸ್ ಸ್ಕೂಲ್ ಕ್ಲೋಸ್ಡ್ ಬೋರ್ಡ್ ತಗುಲಿಸಿ, ಮನೆ ಬಾಡಿಗೆಗೆ ಬಿಟ್ಟು ಅಭಿರಾಮಿ ಎದ್ದುಹೋಗಿದ್ದಳು. ಇದೇ ಈಗ ಅಂಗಳದಲ್ಲಿ ಬಾಲ ಕುಣಿಸುತ್ತ, ಕಾಳುಹೆಕ್ಕುತ್ತ, ಕಣ್ಣಹಬ್ಬವಾಗಿದ್ದ ಮುದ್ದುಹಕ್ಕಿ ಸದ್ದು ಮಾಡದೆ ಹಾರಿಹೋದಂತೆ ಹಾರಿಹೋಗಿದ್ದಳು. ಅವಳನ್ನು ಕಾಣದೆ ನಾನು ಪರಿತಪಿಸಿದ್ದೆ ಆದರೆ ಎಲ್ಲೋ ಅಂತರಾಳದಲ್ಲಿ ಸ್ವಲ್ಪ ಹಗೂರೆನಿಸಿತ್ತೆಂಬುವುದನ್ನು ನಾನು ಎಂದಿಗೂ ತಳ್ಳಿಹಾಕಲಾರೆ. ನನಗಿದ್ದ ದೊಡ್ಡ ಭಯ ಅಭಿರಾಮಿ ಜೀವಕ್ಕೇನಾದರೂ ಅಪಾಯ ಮಾಡಿಕೊಂಡಳೇ ಎಂಬುದಾಗಿತ್ತು. ಆದರೆ ಅವಳು ಮನೆ ಬಾಡಿಗೆಗೆ ಬಿಟ್ಟು ಹೋಗಿರುವುದು ಕಂಡರೆ ಆ ಸಾಧ್ಯತೆ ಕಡಿಮೆಯಿತ್ತು. ಆದರೆ ನಾನಿರದೆ ಹೇಗಿರುವಳೋ.. ಎಂಬ ತಪನೆ ಈ ಎಂದಿಗೂ ಇತ್ತು. ಅಭಿರಾಮಿ ಯಾವತ್ತೂ ಹೇಳುತ್ತಿದ್ದಳು. ಮದುವೆಯಾಗುವ ಹುಡುಗಿಯನ್ನು ಒಮ್ಮೆಯೂ ನೋಯಿಸದಂತೆ ನೋಡಿಕೋ ಎಂದು. ಇದು ಅವಳು ನನ್ನನ್ನು ತೊರೆದು ಹೋದುದರ ಆಶಯವಾಗಿತ್ತು. ‘ನೀನು ಮದುವೆಯಾಗುವುದು, ಮತ್ತು ಎಲ್ಲರಂತೆ ಬದುಕುವುದು. ಅದು ನಿನ್ನ ಹಕ್ಕು, ನಿನ್ನ ಮೇಲೆ ನಿನ್ನ ಮನೆಯವರು ಕಟ್ಟಿರುವ ಕನಸುಗಳು ನಿನ್ನ ಜವಾಬ್ದಾರಿ ಅಂದುಕೊ, ನೀನು ಎಲ್ಲರಂತೆ ಮದುವೆಯಾಗಿ ಚೆನ್ನಾಗಿರು, ಒಂದು ವೇಳೆ ದೇವರು ಬಯಸಿದರೆ ನಮಗೂ ಒಂದು ದಾರಿ ಸಿಗುತ್ತದೆ. “ಅಭಿರಾಮಿ ನನ್ನನ್ನು ಎಷ್ಟೋಬಾರಿ ಹೀಗೆ ಸಂತೈಸಿದ್ದಳು. ಕಡೆಗೆ ನನಗಾಗಿಯೇ ನನ್ನನ್ನು ಬಿಟ್ಟು ಹೋಗಿದ್ದಳು. ಹಾಗೆ ಹೋಗಿ ಅವಳು ನನ್ನ ಬದುಕಿನ ಏಕತ್ರ ಧ್ಯಾನವಾದಳು. ನಾನು ನನ್ನ ಬದುಕನ್ನು ನನ್ನ ಕರ್ತವ್ಯದಂತೆ ಜವಾಬ್ದಾರಿಯಂತೆ ನಿಭಾಯಿಸುತ್ತ ನಡೆಯುತ್ತಿದ್ದುದ್ದಕೆ ನನ್ನೊಳಗೆ ಶಕ್ತಿಯಂತೆ ಉಳಿದ್ದಿದ್ದಳು ಅಭಿರಾಮಿ. ಅವಳು ತೊರೆದ ಮೇಲೂ ನಾನು ಪ್ರತಿವರ್ಷವೂ ಕೂವಗಂಜಾತ್ರೆಗೆ ಹೋಗಿಯೇ ತೀರಿದ್ದೆ. ಅಲ್ಲಿ ಅವಳನ್ನು ಕಂಡಿರಲಿಲ್ಲ. ಇದೇ ಈ ವರ್ಷ, ಅವಳ ಗೆಳತಿ ನೀಲಿಮಾ ಸಿಕ್ಕಿದ್ದಳು. ಅವಳು ಕೊಟ್ಟ ಮಾಹಿತಿ ಹಿಡಿದು ಇಂದು ಇಷ್ಟು ದೂರ ಬಂದು ಅಭಿರಾಮಿಯ ಡ್ಯಾನ್ಸ್ ಸ್ಕೂಲಿನ ವೆರಾಂಡದಲ್ಲಿ ಅವಳಿಗಾಗಿ ಕಾಯುತ್ತ ಕುಳಿತಿದ್ದೇನೆಂದರೆ ದೇವರು ನನ್ನನ್ನು ಸೃಷ್ಟಿಸಿದ ಉದ್ದೇಶ ಏನಿರಬೇಕು. + +ಅಭಿರಾಮಿ ನನ್ನ ನೆನಪಿಟ್ಟಿದ್ದಳೋ ಇಲ್ಲ ಹೊಸಬದುಕು ಕಟ್ಟಿಕೊಂಡಿದ್ದಾಳೋ.. ಅವಳು ಈಗ ನನ್ನ ಕಂಡರೆ ಹೇಗೆ ಪ್ರತಿಕ್ರಿಯಿಸಬಹುದು. ಅವಳ ನೆಮ್ಮದಿಯ ಗೂಡಿಗೆ ಮತ್ತೆ ಬೆಂಕಿ ಇಡುತ್ತಿದ್ದೀನೋ, ಅಡ್ರೆಸ್ ಸಿಕ್ಕಿದೊಡನೇ ಹೊರಟು ಬಂದೇ ಬಿಟ್ಟಿದ್ದೆ. ದಾರಿಯಲ್ಲಿ ಕಾಡಿದ್ದು ಅವಳನ್ನು ಕಾಣಬೇಕೆನ್ನುವ ಪರಿತಪನೆ. ಈಗ ಇಲ್ಲಿರುವುದು ಎದೆ ಹಿಂಡುತ್ತಿರುವ ಯಾತನೆ. ಅವಳು ಏನ್ನೆನ್ನಬಹುದು ಅನ್ನುವುದಕ್ಕಿಂತ ಈ ಭೇಟಿಯಿಂದ ಅವಳಿಗೆ ಏನಾಗಬಹುದು? ಎಂಬ ಚಿಂತೆ ಕಾಡಿ ಎದೆ ಹಿಂಡತೊಡಗಿತ್ತು. ಭಾವ ತೀವ್ರತೆಗೆ ಸಿಲುಕಿ ಅಭಿರಾಮಿಯನ್ನು ಕಾಣಲೇಬೇಕೆಂದು ನಿಂತ ಕಾಲಿನಲಿ ಹೊರಟು ಬಂದವನಿಗೆ ಈಗ ನೇರಾನೇರ ಅವಳದೇ ಸ್ಥಳದಲ್ಲಿ ನಿಂತಮೇಲೆ ಯಾತರ ಹಿಂಜರಿಕೆಯೋ ತಿಳಿಯದಾಗಿತ್ತು. ನಮ್ಮ ನಡುವೆ ಇದ್ದದ್ದು ಒಂದು ಬಾಗಿಲು ಮಾತ್ರವೇ? ನೂಕಿ ಒಳಹೋಗಲು? ಹಾಗಾದರೆ ಸರಿದ ಮೂರೂವರೆ ವರ್ಷಗಳ ಲೆಕ್ಕವೇನು? ನೋವೆಂಬುದು ಪಡೆದ ಪ್ರೀತಿಗೆ ಕಟ್ಟುವ ಕಂದಾಯವೇ? ಈ ಭೇಟಿ ಅಭಿರಾಮಿಯ ಬದುಕನ್ನು ಮತ್ತೆ ಕಡಲಿಗೆ ಎಳೆತಂದು ಹಾಯಿ ಹರಿದ ದೋಣಿಯಲ್ಲಿ ಕುಳ್ಳಿರಿಸಿ ನೋಡುವ ಸಾಹಸವೇ? ಅವಳದೇ ಗತಿಯಲ್ಲಿ ಹೊಸತೊಂದು ನೆಲೆಯತ್ತ ಹೊರಟಿರುವಂತೆ ಕಾಣುವವವಳ್ನು ಅವಳ ಬದುಕಿನೊಂದಿಗೆ ಹಾಗೆಯೇ ಬಿಟ್ಟು ಹೊರಟು ಬಿಡಲೇ? ಮನಸು ಸಂಘರ್ಷಕೆ ಇಳಿಯಿತು. ಕುಳಿತಲ್ಲಿಂದ ಎದ್ದು ಅವಳ ಚಿತ್ರದ ಮೇಲೆ, ಅವಳ ನವುರಾದ ಕೆನ್ನೆಗಳ ಮೇಲೆ ಕೈಯಾಡಿಸಿದೆ. ಅವಳ ಕಾಲುಗಳ ಗೆಜ್ಜೆಗಳನ್ನು ಸವರಿದೆ, ಆಗ ಕಂಡೆ! ಪಟದ ಕೊನೆಯಲ್ಲಿ ಕೆಳಗೆ ಚಿಕ್ಕದಾಗಿ ಬರೆದ ಅವಳ ಹೆಸರು, ಮತ್ತುವಿಳಾಸ.ಅಭಿರಾಮಿ. ವೈಫ್ ಆಫ್……..ಅಲ್ಲಿತ್ತು ನನ್ನ ಹೆಸರು.ನಾನು ಬಾಗಿಲಿನ ಮುಂದೆ ಕೂತು ಬಿಕ್ಕಿಬಿಕ್ಕಿ ಅಳತೊಡಗಿದೆ. + +ಕನ್ನಡದ ಹೊಸ ತಲೆಮಾರಿನ ಕಥೆಗಾರ್ತಿ. ಇವರ ‘ಮನಸು ಅಭಿಸಾರಿಕೆ’ ಸಣ್ಣ ಕತೆಗಳ ಚೊಚ್ಚಲ ಸಂಕಲನ ಹಲವು ಪ್ರಶಸ್ತಿಗಳಿಗೆ ಬಾಜನವಾಗಿದೆ. ಮೂಲತಃ ಕೊಡಗಿನವರು. ಈಗ ಕೆಲಸದ ನಿಮಿತ್ತ ಚೆನ್ನೈನಲ್ಲಿ ವಾಸವಾಗಿದ್ದಾರೆ. \ No newline at end of file diff --git a/Kenda Sampige/article_48.txt b/Kenda Sampige/article_48.txt new file mode 100644 index 0000000000000000000000000000000000000000..3f3994c449c5d9689637578788153d8e801789f7 --- /dev/null +++ b/Kenda Sampige/article_48.txt @@ -0,0 +1,9 @@ +ಒರಿಸ್ಸಾವನ್ನು `ಉತ್ಕಲ’ – ಸುಂದರ ಕಲೆಗಳ ನಾಡು ಎಂದೂ ಕರೆಯಲಾಗುತ್ತದೆ. ಅಲ್ಲಿನ ದೇವಾಲಯಗಳು ತಮ್ಮ ವಾಸ್ತು ಶೈಲಿ ಹಾಗೂ ಶಿಲ್ಪಕಲೆಯಿಂದಾಗಿ ವಿಶ್ವವಿಖ್ಯಾತವಾಗಿವೆ. ಆ ದೇಗುಲಗಳ ಕಲಾ ಸಿರಿವಂತಿಕೆಗೆ ಹಾಗೂ ತಾಂತ್ರಿಕ ಕೌಶಲತೆಗೆ ಸರಿಸಾಟಿಯಾದುದಿಲ್ಲ. ಸುಮಾರು ಕ್ರಿ.ಶ. 6-7ನೇ ಶತಮಾನದಲ್ಲಿ ಆರಂಭವಾದ ದೇಗುಲಗಳ ವಾಸ್ತು ಕಲಾ ನಿರ್ಮಾಣ 11ನೇ ಶತಮಾನದಲ್ಲಿ ಭುವನೇಶ್ವರದಲ್ಲಿನ ಲಿಂಗರಾಜ ದೇವಾಲಯದ ನಿರ್ಮಾಣದ ಹೊತ್ತಿಗೆ ಉತ್ತುಂಗಕ್ಕೇರಿತ್ತು. ಆ ವಾಸ್ತು ನಿರ್ಮಾಣ 13ನೇ ಶತಮಾನದ ನಂತರ ಕ್ರಮೇಣ ಕಡಿಮೆಯಾಗುತ್ತಾ ಬಂತು. ಆದುದರಿಂದಲೇ ಕೊನಾರ್ಕ್‌ನ ಸೂರ್ಯ ದೇಗುಲವನ್ನು ಆರಿಹೋಗುವ ದೀಪದ ಅಂತಿಮ ಕ್ಷಣಗಳ ಉಜ್ವಲ ಜ್ವಾಲೆ ಎಂದು ಕರೆಯುತ್ತಾರೆ. ಒರಿಸ್ಸಾಕ್ಕೆ ಮಾತ್ರ ಸೀಮಿತವಾಗಿರುವ ಈ ವಿಶಿಷ್ಟ ವಾಸ್ತು ಶೈಲಿಯನ್ನು `ಕಳಿಂಗ ಶೈಲಿ’ಯೆಂದು ಕರೆಯಲಾಗಿದೆ. ಈ ವಾಸ್ತು ಶೈಲಿಯ ಪ್ರಭಾವ ಬಂಗಾಳ, ಆಂಧ್ರಪ್ರದೇಶಗಳಲ್ಲದೆ ಭಾರತವನ್ನೂ ದಾಟಿ ಜಾವಾ ದ್ವೀಪಗಳಿಗೂ ಹರಡಿದೆ. ಬಳ್ಳಾರಿ ಜಿಲ್ಲೆಯಲ್ಲಿನ ಅಮೃತೇಶ್ವರ ದೇವಾಲಯ ಮುಖ ಮಂಟಪವೊAದರ ಶಾಸನದಲ್ಲಿ ನಾಗರ, ದ್ರಾವಿಡ ಹಾಗೂ ವೇಸರ ಶೈಲಿಗಳ ಜೊತೆಗೆ ಕಳಿಂಗ ಶೈಲಿಯ ಉಲ್ಲೇಖವೂ ಇದೆಯೆಂದು ಉತ್ಕಲ ವಿಶ್ವವಿದ್ಯಾಲಯದ ಡಾ. ಕೆ.ಎಸ್. ಬೆಹೆರ ಹೇಳುತ್ತಾರೆ. + +(ಡಾ. ಜೆ. ಬಾಲಕೃಷ್ಣ) + +ಒರಿಸ್ಸಾ ಶಿಲ್ಪ ಶಾಸ್ತ್ರದ ಪ್ರಕಾರ ಮೂರು ವಿಧದ ದೇಗುಲಗಳ ನಿರ್ಮಾಣವಿದೆ- ರೇಖಾ, ಪೀಠ ಹಾಗೂ ಖಖರ ಶೈಲಿಗಳು. ಉದ್ದನೆ ಬಾಗಿರುವ ಶಿಖರ (ಭುವನೇಶ್ವರದ ಲಿಂಗರಾಜ ದೇಗುಲ) ರೇಖಾ ಶೈಲಿಯದಾದರೆ ಅದರ ಮುಂದಿರುವ `ಪಿರಮಿಡ್’ ಶಿಖರದ ಜಗಮೋಹನ ಪೀಠ ದೇಗುಲ. ಈಗ ಕೊನಾರ್ಕ್‌ನಲ್ಲಿ ಉಳಿದಿರುವ `ಕಪ್ಪು ಪಗೋಡ’ ಇದೇ ಶೈಲಿಯದು. ರೇಖಾ ಶೈಲಿಯ ಮುಖ್ಯ ಶಿಖರ ಕುಸಿದುಬಿದ್ದು ನೂರಾರು ವರ್ಷಗಳಾಗಿವೆ. + +ಒರಿಸ್ಸಾದ ವಾಸ್ತು ಶಿಲ್ಪಿಗಳು ದೇಗುಲಗಳನ್ನು ದೇವರ ಅಥವಾ ಮಾನವನ ದೇಹಕ್ಕೆ ಹೋಲಿಸಿದ್ದರು. ಆದುದರಿಂದಲೇ ದೇಗುಲದ ವಿವಿಧ ಭಾಗಗಳಿಗೆ ದೇಹದ ಅಂಗಗಳ ಹೆಸರುಗಳನ್ನೇ ನೀಡಿದ್ದಾರೆ: ಪಾಭಗ (ಪಾದ), ಜಂಘ (ಮೊಣಕಾಲು), ಗಂಡಿ, ಮಸ್ತಕ ಮುಂತಾದವು. ಮುಖ್ಯ ಶಿಖರವುಳ್ಳ ದೇಗುಲವನ್ನು ಗಂಡು ಅಥವಾ ಮದುಮಗನೆಂದೂ ಹಾಗೂ ಜಗಮೋಹನ ದೇಗುಲವನ್ನು ಹೆಣ್ಣು ಅಥವಾ ಮದುಮಗಳೆಂದೂ ಭಾವಿಸಲಾಗುತ್ತಿತ್ತು. ಒರಿಸ್ಸಾದ ದೇಗುಲಗಳಲ್ಲಿ ವಾಸ್ತು ಕಲೆ ಹಾಗೂ ಶಿಲ್ಪಕಲೆಯನ್ನು ಪ್ರತ್ಯೇಕವಾಗಿ ನೋಡುವುದು ಸಾಧ್ಯವೇ ಇಲ್ಲ. ಆದುದರಿಂದಲೇ ಕಲಾ ಸಂಶೋಧಕಿ ಡಾ.ಸ್ಟೆಲ್ಲಾ ಕ್ರಮರೀಷ್ `ಒರಿಸ್ಸಾದ ವಾಸ್ತುಕಲೆ ದೈತ್ಯಾಕಾರದ ಶಿಲ್ಪಕಲೆ’ ಎಂದಿದ್ದಾರೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_480.txt b/Kenda Sampige/article_480.txt new file mode 100644 index 0000000000000000000000000000000000000000..b7542b8425564df67b71e8e4c67760c00635b54f --- /dev/null +++ b/Kenda Sampige/article_480.txt @@ -0,0 +1,19 @@ +ಸುನೈಫ್ ವಿಟ್ಲಅನುವಾದಿಸಿದವೈಕ್ಕಂ ಮುಹಮ್ಮದ್ ಬಷೀರ್ಸಣ್ಣ ಕತೆ ಈ ಭಾನುವಾರದ ನಿಮ್ಮ ಓದಿಗಾಗಿ. + + + +ಹೆಜ್ಜೆ ಗುರುತು ಎಂಬ ಈ ಕಥೆಯನ್ನು ಬಹಳ ವರ್ಷಗಳ ಹಿಂದೆ ರಾಜಕಾರಣಿಯೊಬ್ಬ ಸಾಹಿತಿಯೊಬ್ಬನಿಗೆ ಅವನ ಕೋಣೆಯಲ್ಲಿ ಕೂತು ಹೇಳಿದ್ದ. ಈ ಕಥೆ ಕೇಳಿ ತಾನು ಬಹಳ ಹೊತ್ತು ಸ್ಥಂಭೀಭೂತನಾಗಿ ಬಿಟ್ಟಿದ್ದೆ ಎಂದು ಆ ಸಾಹಿತಿ ನನ್ನೊಂದಿಗೆ ಹೇಳಿದ್ದ.ನಾನೀಗ ಆ ಹಳೆಯ ಕಥೆಯನ್ನು ನೆನಪು ಮಾಡಿಕೊಳ್ಳಲೂ ಕಾರಣವಿದೆ. ಅದನ್ನು ಆಮೇಲೆ ಹೇಳುವೆ. ಆ ಸಾಹಿತಿಯಂತೆಯೇ, ಆ ರಾಜಕಾರಣಿಯೂ ಯಾರದೋ ಬಲವಂತಕ್ಕಲ್ಲ ರಾಜಕಾರಣಿಯಾದದ್ದು. ಒಳಗಿನ ತುಡಿತವೆಂದರೆ ತಪ್ಪಾಗಲಾರದು. ತನ್ನ ಸುತ್ತಲಿನ ಜನರ ಬದುಕು ಸುಂದರವಾಗಿಲ್ಲ; ಕೆಡುಕುಗಳಿಂದ ತುಂಬಿದೆ. ದಾಸ್ಯತನ. ಆದ್ದರಿಂದ ಸುಂದರವಾದ, ಆರೋಗ್ಯವಾದ, ಸ್ವತಂತ್ರವಾದ… ಹೀಗೊಂದು ಯೋಚನೆ ಆತನಲ್ಲಿ ಉದಿಸಿತು. ಆತನಿಗೆ ವಿದ್ಯಾಭ್ಯಾಸ ಅಷ್ಟಕ್ಕಷ್ಟೇ. ಜನಿಸಿದ್ದು ಕಡುಬಡತನದಲ್ಲಿ. ತನ್ನ ಹದಿನೆಂಟನೆ ವಯಸ್ಸಿನಲ್ಲಿ ರಾಜಕೀಯಕ್ಕೆ ಧುಮುಕಿದ್ದ ಆತ ಒಟ್ಟು ಒಂಭತ್ತು ವರ್ಷಗಳ ಕಾಲ ಜೈಲಿನಲ್ಲೂ ಕಳೆದಿದ್ದ. ಉತ್ತಮ ವಾಗ್ಮಿ. ಓದು ದೊಡ್ಡ ಹವ್ಯಾಸ. ಬುದ್ದಿಯೂ ಚುರುಕು. ಕೊನೆಗೊಮ್ಮೆ ಆತ… ಆಗಿನ ಅತ್ಯಂತ ಚುರುಕಿನ ಬಹುದೊಡ್ಡ ರಾಜಕೀಯ ಸಂಘಟನೆಯ ಪ್ರೆಸಿಡೆಂಟ್ ಆದ. ಅದಕ್ಕೂ ಮೊದಲೇ ಆ ರಾಜಕಾರಣಿಗೆ ಆ ಸಾಹಿತಿಯ ಪರಿಚಯವಿತ್ತು. ಅವರಿಬ್ಬರೂ ಜೈಲಿನಲ್ಲಿ ಒಂದೇ ಕೋಣೆಯಲ್ಲಿ ಕಾಲ ಕಳೆದಿದ್ದರು. ಅವರಿಬ್ಬರ ನಡುವಿನ ಹಲವು ಭಿನ್ನತೆಗಳಲ್ಲಿ ಮುಖ್ಯವಾದದ್ದು ತಮಾಷೆ. ಆ ರಾಜಕಾರಣಿ ಹಾಸ್ಯಪ್ರಿಯನಲ್ಲದಿದ್ದರೂ ಆ ಸಾಹಿತಿಯೊಂದಿಗೆ ಮಾತ್ರ ನಗುತ್ತಲೇ ಮಾತಾಡುತ್ತಾನೆ. ಸಾಹಿತಿ ರಾಜಕಾರಣಿಯೊಂದಿಗೆ ಆತನ ಬಣ್ಣದ ಬಗ್ಗೆ ಹೇಳುತ್ತಾನೆ: + +“ನಾಯಕರೇ, ನಿಮ್ಮ ಕಣ್ಣಿನ ಬಿಳಿ ಮತ್ತು ಹಲ್ಲುಗಳು ಮಾತ್ರ ಬೆಳ್ಳಗಿರುವುದಲ್ಲವಾ!”“ಉಗುರುಗಳು?”“ಹು, ಉಗುರುಗಳೂ ಇವೆ. ಆದರೂ ನೀವು ಇಷ್ಟೊಂದು ಕಪ್ಪಾಗೋದಕ್ಕೆ ಕಾರಣ ಏನೂಂತ?”“ಧಿಕ್ಕಾರಿ! ನನ್ನ ಮೈಬಣ್ಣದ ಬಗ್ಗೆ ಮಾತಾಡಿ ನನ್ನನ್ನು ಕೆಣಕಲಾಗದು!”. ಪೊಲೀಸರು ಆತನ ಮೈಬಣ್ಣವನ್ನು ಸೇರಿಸಿಯೇ ಬಯ್ಯುತ್ತಿದ್ದರು. ಪೊಲೀಸರಿಗೆ ಬಯ್ಯುವುದಕ್ಕಾಗಲೀ, ಹೊಡೆಯುವುದಕ್ಕಾಗಲೀ ವಿಶೇಷ ಕಾರಣಗಳು ಬೇಕಿಲ್ಲವಲ್ಲ. ಆ ಕಾಲದಲ್ಲಿ ಬಿಳಿಯರು ದೇಶ ಆಳುತ್ತಿದ್ದರು. ಅವರ ದಾಸರಾಗಿ ಕಂದು ಬಣ್ಣದ ರಾಜರುಗಳಿದ್ದರು. ಬಹುಜನರು ಆ ರಾಜರುಗಳ ಗುಲಾಮರಾಗಿದ್ದರು. ಹಾಗಿದ್ದ ಬಹುಜನರಲ್ಲಿ ಒಬ್ಬ, ಅದರಲ್ಲೂ ಕಪ್ಪು ಮನುಷ್ಯನೊಬ್ಬ ರಾಜಕೀಯ ಮಾತಾಡುವುದೆಂದರೆ ಎಷ್ಟು ಸರಿ? ಬಹುಜನರೇ ಆತನನ್ನು ವಿರೋಧಿಸಿದರು. ಆದರೂ ಕಷ್ಟಗಳನ್ನು ಕೋಟಲೆಗಳನ್ನುದಾಟಿ ಆ ರಾಜಕೀಯ ಸಂಘಟನೆ ಬೆಳೆಯಿತು. ಹಾಗೆ ಅದು ಬೆಳೆಯುತ್ತಿದ್ದ ಕಾಲದಲ್ಲಿ… ಒಂದು ರಾತ್ರಿ. ಸರಿಸುಮಾರು ಹತ್ತು ಗಂಟೆಯಾಗಿರಬಹುದು. ಸಾಹಿತಿ ತನ್ನ ಕೋಣೆಯಲ್ಲಿ ಬಾಗಿಲು ಹಾಕಿ ಕೂತು ಯುವತಿಯೊಬ್ಬಳಿಗೆ ಪತ್ರ ಬರೆಯುತ್ತಿದ್ದ. ಆಗ ಹೊರಗಿನಿಂದ ಯಾರದೋ ಸದ್ದು:“ಧಿಕ್ಕಾರಿ ಒಳಗಿದ್ದಾನಾ?”ಸಾಹಿತಿಗೆ ಗುರುತು ಸಿಕ್ಕಿತು. ಆತ ಹೇಳಿದ:“ಇಲ್ಲ. ಏನೋ ಸಾಹಿತ್ಯದ ಕೆಲಸಕ್ಕೆ ದೂರ ಹೋಗಿದ್ದಾರೆ. ನಿಮಗೇನು ಬೇಕು?”“ಧಿಕ್ಕಾರಿ!” ಆತ ಹೇಳಿದ: “ಬಾಗಿಲು ತೆಗಿ”ಸಾಹಿತಿಯ ಉತ್ತರ:“ಮನಸ್ಸಿಲ್ಲ!”ಹೊರಗಿನ ಕತ್ತಲೆಯಿಂದ ಪುನಃ ಸದ್ದು: + +“ನಾನು ಎರಡೂವರೆ ಮೈಲು ನಡೆದು ಬಂದಿದ್ದೇನೆ. ಬರುವಾಗ ಬೇರೆ ಸ್ಥಳವಿಲ್ಲದೆ ಇಲ್ಲಿಗೆ ಬಂದೆ ಅಂತ ತಿಳ್ಕೊಂಡಿದ್ದೀಯಾ? ಬಾಗಿಲು ತೆಗಿ”“ನನ್ನ ಕೋಣೆ ರಾಜಕೀಯ ಭಿಕ್ಷುಕರಿಗೆ ಇರುವ ಧರ್ಮಚತ್ರ ಅಲ್ಲ!”“ನಾನೀಗ ಬಾಗಿಲು ಒಡೆದು ಒಳಗೆ ಬರುವೆ!”“ನಾಯಕರೇ, ಈ ಕೋಣೆಯ ಬಾಡಿಗೆ ಕಟ್ಟುತ್ತಿರುವುದು ನಾನು.”“ಪರವಾಗಿಲ್ಲ. ಈಗ ಬಾಗಿಲು ತೆಗಿ!”“ನಾನೀಗ ನಿಮ್ಮ ಜೊತೆ ಮಾತಾಡುವ ಮನಸ್ಸಲ್ಲಿ ಇಲ್ಲ.”“ಮತ್ತೆ?”“ಒಬ್ಬ ಹೆಣ್ಣು; ಅವಳಿಗೆ ಅರಳಿದ ಹೂವಿನಂತ ಕಂಗಳಿಲ್ಲ, ಅವಳ ಕೂದಲಿಗೆ ರಾತ್ರಿ ಮಲ್ಲಿಗೆಯ ವಾಸನೆಯೂ ಇಲ್ಲ. ಆದರೂ ನಾನೀಗ ಅವಳ ಧ್ಯಾನದಲ್ಲಿದ್ದೇನೆ.”ಹೊರಗಿನಿಂದ ನಗುವ ಸದ್ದು:“ಮನುಷ್ಯನಿಗೆ ಹುಚ್ಚು ಹಿಡಿದರೆ ಏನು ಮಾಡುವುದು?”“ನನಗೆ ಹುಚ್ಚು ಹಿಡಿದಿಲ್ಲ!”“ಹಾಗಾದರೆ ಬಾಗಿಲು ತೆಗಿ.”“ಆಗಲಿ, ಆದರೆ ನನಗೊಂದು ಉಪಕಾರ ಮಾಡಬಹುದಾ?”“ಏನದು?”“ನಿಮ್ಮ ರಾಜಕೀಯದ ಸಂಗಾತಿಗಳು ರಾತ್ರಿ ಹಗಲೆಂದಿಲ್ಲದೆ ಇಲ್ಲಿಗೆ ಬಂದು ಉಪದ್ರ ಕೊಡುತ್ತಿದ್ದಾರೆ. ಅದಕ್ಕೇನಾದರೂ ಮಾಡಬಹುದಾ?”“ಆಗಲ್ಲ!”“ಹೋ!”“ಬಾಗಿಲು ತೆಗಿ.”“ತೆಗೆಯುವೆ. ಆದರೆ, ಒಂದೊಮ್ಮೆ ನೀವು ದೇಶ ಆಳುವಾಗ ನನಗೊಂದು ಸಹಾಯ ಮಾಡಲೇಬೇಕು?”“ಪೋಲಿಸ್ ಕಾನ್ಸ್ಟೇಬಲ್ ಮಾಡುವೆ.”“ಬೇಡ.”“ಪೋಲಿಸ್ ಇನ್ಸ್ಪೆಕ್ಟರ್!”“ಬೇಡ.”“ಕಮಿಷನರ್!”“ಬೇಡ.”“ಸೇನೆಯ ಕಮ್ಯಾಂಡರ್ ಇನ್ ಚೀಫ್!”“ಅದೂ ಬೇಡ!”“ಮತ್ತೆ?”“ರಾಜನನ್ನಾಗಿ ಮಾಡಿದರೆ ಸಾಕು!”“ಅದು ಸಾಧ್ಯವಿಲ್ಲ. ನಮ್ಮ ಅಜೆಂಡಾದಲ್ಲಿ ರಾಜರುಗಳು ಇಲ್ಲ!”“ಅದರೂ ಇತಿಹಾಸದ ಒಂದು ಕುರುಹಾಗಿನ ನಗೆ ರಾಜನ ಪಟ್ಟ ದಯಪಾಲಿಸಬೇಕು. ನನಗೆ ಪ್ರಜೆಗಳು ಬೇಕಿಲ್ಲ. ನಿಜವಾಗಿಯೂ ಹೇಳುತ್ತಿದ್ದೇನೆ. ಆಗಲೂ ನಾನು ಕಥೆ ಬರೆಯುತ್ತೇನೆ. ವಿಷಯ ಹೀಗಿದೆ ನೋಡಿ. ನಮ್ಮ ಆ ನದಿಯ ನಡುವೆ ಒಂದು ದ್ವೀಪ ಇದೆ ಆಲ್ವಾ? ಅಲ್ಲಿ ನನಗೊಂದು ಮನೆ ಕಟ್ಟಿಸಿ ಕೊಡಬೇಕು. ಆ ದ್ವೀಪದ ತುಂಬಾ ಮರಗಳಿರಬೇಕು. ಅದರಲ್ಲಿ ತಾವರೆ ಕೊಳವೂ ಹೂದೋಟವೂ ಬೇಕು.”“ಮತ್ತೆ?”“ಆ ದ್ವೀಪ ಮತ್ತು ಮನೆಗೆ ಬಾಡಿಗೆ ಕೇಳಬಾರದು. ಅಲ್ಲಿ ರೇಡಿಯೋ ಇರಬೇಕು. ಟೆಲಿಫೋನ್ ಬೇಕು. ಒಂದು ಸಣ್ಣ ಇಂಜಿನ್ ಬೋಟ್ ಕೂಡ ಬೇಕು.”“ಒಪ್ಪಿದೆ. ಈಗ ಬಾಗಿಲು ತೆಗಿ!”ಆ ಸಾಹಿತಿ ಬಾಗಿಲು ತೆರೆದ. ಆ ನಾಯಕ ಒಳಗೆ ಬಂದ. ಇದುವರೆಗೂ ಕಂಡಿಲ್ಲದ ವೇಷವದು. ಅಂಗಿಯಿಲ್ಲ: ಲುಂಗಿಯೂ ಇಲ್ಲ. ಸುತ್ತಿರುವುದು ಹಳೆಯದೊಂದು ಟವೆಲ್ ಮಾತ್ರ. ಆತ ಹಾಗೆಯೇ ಸಾಹಿತಿಯ ಆರಾಮ ಕುರ್ಚಿಯಲ್ಲಿ ಕೂತ. ಏನೂ ಆಗಿಯೇ ಇಲ್ಲವೆಂಬಂತೆ ಆತ ಹೇಳಿದ:“ವಿಪರೀತ ದಾಹ, ಹಸಿವೂ ಇದೆ.”ಸಾಹಿತಿ ಹೇಳಿದ:“ದಾಹ ಇದ್ದರೆ ಉಣ್ಣಬೇಕು. ಹಸಿವಾದರೆ… ಹಸಿವಾದರೆ ಏನು ಮಾಡುವುದು?”ಆತ ಅದನ್ನು ಕೇಳಿಸಿಕೊಳ್ಳದೆ ಹೇಳಿದ:“ನನಗೊಂದು ಅಂಗಿ ಮತ್ತು ಲುಂಗಿ ಬೇಕು.”ಸಾಹಿತಿ ತನ್ನ ಪೆಟ್ಟಿಗೆ ತೆರೆದು ಅದರಿಂದ ಒಂದು ಹೊಸ ಅಂಗಿ ಮತ್ತು ಹೊಸ ಲುಂಗಿಯನ್ನು ತೆಗೆದು ಕೊಟ್ಟ.“ನಿಮ್ಮಂತಹ ಕಪ್ಪಗಿನ ಜನರು ಹಾಕುವ ಪೌಡರ್ ಮಾತ್ರ…….”“ನನಗೆ ಹಸಿವಾಗುತ್ತಿದೆ.” ಮಾತು ಗದ್ಗದಿತವಾದಂತೆ ಇತ್ತು. ಕೆಲದಿನಗಳಿಂದ ಏನೂ ತಿಂದಿಲ್ಲವೇನೋ.ತಕ್ಷಣ ಸಾಹಿತಿ ಕೆಳಗಿಳಿದು ಹೋಗಿ ಹೋಟೆಲಿನಿಂದ ಕಟ್ಟಿಸಿಕೊಂಡು ಬಂದ.ಊಟ ಮುಗಿಸಿ, ನೀರು ಕುಡಿದು ದಾಹ ತಣಿಸಿ, ಬೀಡಿ ಸೇದುತ್ತಾ ಆತ ಹೇಳಿದ:“ಹಾ… ಅಧಿಕಾರ ಕೈಗೆ ಬಂದರೆ ಮೊದಲ ಕೆಲಸ ಏನು ಅಂತ ಗೊತ್ತಾ?”“ಗೊತ್ತು!” ಸಾಹಿತಿ ತಕ್ಷಣ ಹೇಳಿದ: “ನನಗೆ ಆ ದ್ವೀಪದ ವಿಷಯ ಸರಿ ಮಾಡಿ ಕೊಡುವುದು!”“ಲೋ ಮೂರ್ಖ ಕೇಳಿಲ್ಲಿ. ಸಾಹಿತಿಗಳನ್ನ ಒಟ್ಟಾಗಿ ಕೊಂದು ಹಾಕುವುದು.”“ಮತ್ತೆ?”ಆತ ಕೇಳಿದ:“ಸಾಹಿತಿಗಳಿಗೆ ಮತ್ತು ರಾಜಕಾರಣಿಗಳಿಗೆ ಇರುವ ವ್ಯತ್ಯಾಸ ಏನು ಗೊತ್ತಾ?”ಸಾಹಿತಿ ಹೇಳಿದ:“ಅದು.. ಅದು ಎಲ್ಲರಿಗು ಗೊತ್ತಿರುವಂತದ್ದೇ ಅಲ್ವಾ?”“ಆದರೂ, ಏನದು?”“ರಾಜಕಾರಣಿಗಳಿಗೆ ಬುದ್ದಿಯಿಲ್ಲ, ಸಾಹಿತಿಗಳಿಗೆ ಬುದ್ದಿ ಇದೆ.”ಆತ ನಗುತ್ತಾ ಹೇಳಿದ:“ಸಾಹಿತಿಗಳು ಸೋಂಬೇರಿಗಳು. ಕಳ್ಳರು. ಗೊತ್ತಾಯ್ತ?”ಸಾಹಿತಿ ಹೇಳಿದ:“ಎದ್ದು ನಿಂತು ನನಗೆ ನಮಸ್ಕಾರ ಮಾಡಿ. ನನ್ನ ಕಾಲು ಮುಟ್ಟಿ ನಮಸ್ಕರಿಸಿ ತಲೆಯಲ್ಲಿ ಇಟ್ಟುಕೊಳ್ಳಿ. ನಾವು ಸಾಹಿತಿಗಳೆಂದರೆ, ನಿಮ್ಮಂತಹ ರಾಜಕಾರಣಿಗಳನ್ನು ಏನು ಬೇಕಾದರೂ ಹೇಳಬಹುದು. ನಾವು ಅಷ್ಟೊಂದು ಒಳ್ಳೆಯವರು. ನಮ್ಮ ಹಾಗೆ ಕಠಿಣ ಪ್ರಯತ್ನ ಮಾಡುವವರು…….”“ನಾನು ಬಂದು ಕರೆದಾಗ ಏನು ಮಾಡುತ್ತಿದ್ದಿರಿ?”“ಒಂದು ಹೆಣ್ಣಿಗೆ, ಅಂದರೆ ಹುಡುಗಿಗೆ ಪತ್ರ ಬರೆಯುತ್ತಿದ್ದೆ. ಆಕೆ ಕಾಲೇಜ್ ಹುಡುಗಿ.”“ಆ ಕಾಲೇಜ್ ಹುಡುಗಿಗೆ ಏನು ಬೇಕಂತೆ?”“ಆಕೆಗೆ ಏನು ಬೇಕು ಅಂತ ನನಗೆ ಗೊತ್ತಿಲ್ಲ. ಅಥವಾ ಗೊತ್ತಿದೆ. ಅವಳು ಕುತಂತ್ರಿ.”“ಹೋ, ಕುತಂತ್ರಿಗಳ ಬಗ್ಗೆ ಎಚ್ಚರ ಇರಬೇಕು.” ಆತ ಮಾತು ನಿಲ್ಲಿಸಿ ಮತ್ತೆ ಮುಂದುವರೆಸಿದ: “ನಾನು ಈ ಸಲ ಸಬ್ ಜೈಲಿನಲ್ಲಿದ್ದಾಗ ನನ್ನಿಂದ ಒಂದು ತಪ್ಪಾಯಿತು!”“ಎಂತ ತಪ್ಪು?”“ಪ್ರೇಮ!”“ಪ್ರೇಮ ತಪ್ಪಾ?”“ಒಬ್ಬ ರಾಜಕಾರಣಿಗೆ, ಅದು ಕೂಡ ಈ ಅನಿಶ್ಚಿತತೆಯ ಕಾಲದಲ್ಲಿ… ಏನೇ ಅದರೂ ನಾನೀಗ ಪ್ರೀತಿಯಲ್ಲಿ ಬಿದ್ದಾಗಿದೆ. ತುಂಬಾ ಕಾಯಿಸದೆ ಬೇಗ ಮದುವೆ ಆಗಬೇಕು. ಒಂದೇ ತೊಂದರೆ ಎಂದರೆ ಅವಳು ತುಂಬಾ ಕಲಿತಿದ್ದಾಳೆ.”“ಚೆಂದ ಇದ್ದಾಳ?”“ಸುರಸುಂದರಿ!”“ಪವಾಡವೇ ಸರಿ! ನಿಮ್ಮಂತ ಒಬ್ಬ ಕಪ್ಪಗಿನ…. ಅದಿರಲಿ. ಇದು ಹೇಗೆ ನಡೆಯಿತು?”“ಅವಳು ನನ್ನ ಅಭಿಮಾನಿ.”“ಅಭಿಮಾನಿಯಾ? ನಿಮಗಾ? ಒಬ್ಬ ಕರಿಯ ರಾಜಕಾರಣಿಗೂ ಅಭಿಮಾನಿಯಾ?”“ಹೌದು. ನನ್ನ ಭಾಷಣ ಕೇಳಿ ಎಷ್ಟು ಹೆಂಗಸರು ಅತ್ತಿದ್ದಾರೆ ಅಂತ ಗೊತ್ತಾ? ಎಷ್ಟೋ ಜನರು ಮೈಮೇಲಿದ್ದ ಆಭರಣಗಳನ್ನು ಬಿಚ್ಚಿ ಕೊಟ್ಟಿದ್ದಾರೆ!”“ನಿಮ್ಮ ಈ ಸುರಸುಂದರಿ ಏನು ಕೊಟ್ಟಳು?”“ಅವಳು ನನ್ನ ಸಂಬಂಧಿಕಳು ಅಂತ ಹೇಳಿ ನನ್ನನ್ನು ನೋಡಲು ಬಂದಳು. ಸಬ್ ಜೈಲಿನ ಹತ್ತಿರವೇ ಅವಳ ಮನೆ ಇದ್ದ ಕಾರಣ ದಿನವೂ ಮನೆಯಿಂದಲೇ ಊಟ ತರಲು ಶುರು ಮಾಡಿದಳು. ಹಾಗೆ ನಾನು ಅದರಲ್ಲಿ ಬಿದ್ದು ಬಿಟ್ಟೆ! ಅದಿರಲಿ, ನಿಮ್ಮ ಈ ಕುತಂತ್ರಿ ಏನು ಮಾಡಿದಳು?”ಸಾಹಿತಿ ಹೇಳಿದ:“ನಾನೊಬ್ಬ ಬಡವ ಎಂಬುದು…..”“ಲೋಕಕ್ಕೇ ಗೊತ್ತು!”“ಹೌದು, ಕಳೆದ ಶುಕ್ರವಾರ ನನ್ನ ಕೈಯಲ್ಲಿ ಒಂದು ಕವರ್ ಕೊಟ್ಟು ‘ಇದರೊಳಗೆ ಒಂದು ಸಣ್ಣ ಕಥೆಯಿದೆ. ಓದಿ ನೋಡಿ ತಿದ್ದಿ ಕೊಡುತ್ತೀರಾ?’ ಅಂತ ಕೇಳಿದಳು. ನಾನು ಇಲ್ಲಿ ಬಂದು ಕವರ್ ತೆರೆದು ನೋಡಿದೆ. ಬೇರೇನೂ ಇಲ್ಲ. ಹತ್ತು ರೂಪಾಯಿಯ ಐದು ನೋಟುಗಳು ಮಾತ್ರ!”“ಇದೇನು ಅವಳ ಸಣ್ಣಕಥೆ? ಐವತ್ತು ರೂಪಾಯಿ!”“ಹೌದು”“ಅದರಲ್ಲಿ ಈಗ ಎಷ್ಟು ಬಾಕಿ ಇದೆ?”“ಅದರಿಂದ ಎರಡು ತಿಂಗಳ ಬಾಕಿಯಿದ್ದ ಬಾಡಿಗೆ ಕೊಟ್ಟೆ ಹೋಟೆಲಿಗೂ ಕೊಡುವುದಿತ್ತು. ಒಂದು ಹೊಸ ಅಂಗಿ ಮತ್ತು ಲುಂಗಿ ಕೊಂಡೆ. ಅದನ್ನೇ ಈಗ ನೀವು ಹಾಕಿಕೊಂಡಿದ್ದೀರಿ… ಬಾಕಿ ಇನ್ನು ಆರೂವರೆ ರೂಪಾಯಿ ಇರಬಹುದು.”“ಅದರಿಂದ ಎರಡು ರೂಪಾಯಿ ನನಗೆ ಬೇಕು.”ಸಾಹಿತಿ ಎರಡು ರೂಪಾಯಿ ಕೊಟ್ಟ. + +ರಾಜಕಾರಣಿ ಕೇಳಿದ:“ನಿಮಗೂ ಅಭಿಮಾನಿಗಳು ಇದ್ದಾರಲ್ವಾ?”“ಬೇಕಾದಷ್ಟು!”“ಅವರಲ್ಲಿ ಯಾರಾದರೂ ನಿಮ್ಮನ್ನು ನೋಡಲು ಬಂದರೆ ನೀವೇನು ಮಾಡುತ್ತೀರಿ?”“ಮೊದಲು ಅವರ ಜೇಬು ತಡಕಾಡಿ ನೋಡುವೆ. ಏನೂ ಇಲ್ಲದಿದ್ದರೆ ಹೊರಗಟ್ಟುವೆ!”“ನನಗೂ ತುಂಬಾ ಅಭಿಮಾನಿಗಳಿದ್ದಾರೆ. ನಾನು ಒಂದು ಕಥೆ ಹೇಳುತ್ತೇನೆ. ಹೇಗೆ ಶುರು ಮಾಡುವುದು ಎಂದೇ ಗೊತ್ತಾಗುತ್ತಿಲ್ಲ!”“ಹೀಗೇ ಹೇಳ್ತಾ ಹೋಗಿ. ಒಂದಾನೊಂದು ಕಾಲದಲ್ಲಿ…”“ಹೌದು.” ರಾಜಕಾರಣಿ ಹೇಳತೊಡಗಿದ: “ಒಂದಾನೊಂದು ಕಾಲದಲ್ಲಿ ನನ್ನ ಹಾಗೆಯೇ ಒಬ್ಬ ಕರಿಯ ರಾಜಕಾರಣಿ ಇದ್ದ. ಹದಿನೆಂಟನೆ ವಯಸ್ಸಿನಲ್ಲಿ ಆತ ರಾಜಕೀಯಕ್ಕೆ ಇಳಿದಿದ್ದ. ಪೋಲಿಸರಿಂದ ಬೇಕಾದಷ್ಟು ಪೆಟ್ಟುಗಳು ಸಿಕ್ಕಿದ್ದವು. ಹಸಿದು ಮಲಗಿದ ದಿನಗಳೆಷ್ಟೋ. ಆ ಮಹಾನ್ ವ್ಯಕ್ತಿ ಈಗ ಕಾರ್ಮಿಕರ, ರೈತರ, ಬುದ್ಧಿಜೀವಿಗಳ ಮಾತ್ರವಲ್ಲ ಜನರ ನೆಮ್ಮದಿಗಾಗಿ ಹಗಲಿರುಳು ದುಡಿಯುವ ಅತ್ಯಂತ ಪ್ರಗತಿಪರವಾದ ರಾಜಕೀಯ ಸಂಘಟನೆಯೊಂದರ ಪ್ರೆಸಿಡೆಂಟ್.“ಆತನ ಮನೆ ಆ ರಾಜಕೀಯ ಸಂಘಟನೆಯ ಆಫೀಸ್ ಕೋಣೆಯಂತೆಯೇ ಆಗಿತ್ತು. ಅದು ರಾಜಕೀಯದವರಿಗೆ ಮಾತ್ರವಲ್ಲ, ಯಾರು ಬೇಕಾದರೂ ಹೋಗಿ ಮಲಗಬಹುದಾದ ಧರ್ಮಚತ್ರ! ಅದರಲ್ಲಿ ಆತನಿಗೆ ಯಾವ ಬೇಜಾರು ಇರಲಿಲ್ಲ. ಜನರಿಗಾಗಿ ಕೆಲಸ ಮಾಡುವವರ ಹತ್ತಿರ ಜನರು ಬರುತ್ತಾರೆ. ರಾತ್ರಿ ಹಗಲೆಂದಿಲ್ಲದೆ ಜನರು ಬರುತ್ತಾರೆ. ಅದರಲ್ಲಿ ತಪ್ಪೇನಿದೆ?“ಹಾಗೆ ಆತನ ಬದುಕು ಸಾಗುತ್ತಿದ್ದ ಒಂದು ರಾತ್ರಿ, ಆತನ ಹತ್ತಿರ ಒಬ್ಬ ಅಭಿಮಾನಿ ಬಂದ. ಸಮಯ ಅರ್ಧ ರಾತ್ರಿ ಕಳೆದಿರಬಹುದು. ಹೊರ ಜಗುಲಿಯಲ್ಲಿ ದೀಪ ಇತ್ತು. ಆಗಷ್ಟೇ ನಮ್ಮ ಕರಿಯ ನಾಯಕ, ತನಗಿದ್ದ ಒಂದೇ ಒಂದು ಅಂಗಿ ಮತ್ತು ಒಂದೇ ಒಂದು ಲುಂಗಿಯನ್ನು ಸೋಪು ಹಾಕಿ ತೊಳೆದು ವರಾಂಡದಲ್ಲಿ ಒಣಗಲು ಹಾಕಿದ್ದ. + +“ದೂರದಿಂದ ನಡೆದು ಬಂದು ಸುಸ್ತಾಗಿದ್ದ ತನ್ನ ಅಭಿಮಾನಿಯ ಬಳಿ ಹೆಚ್ಚೀನೂ ಮಾತಾಡಲಿಲ್ಲ. ಆತ ಹತ್ತಿರದ ಪಟ್ಟಣವೊಂದರಲ್ಲಿ ಕೆಲಸ ಹುಡುಕಿ ಹೊರಟಿದ್ದ.“ಅಭಿಮಾನಿಗೆ ವರಾಂಡದಲ್ಲಿ ಚಾಪೆ ಮಾತ್ತು ತಲೆದಿಂಬು ಹಾಕಿಕೊಟ್ಟ. ‘ಬೆಳಿಗ್ಗೆ ಮಾತಾಡೋಣ’ ಎಂದು ಹೇಳಿ ನಮ್ಮ ನಾಯಕ ಕೋಣೆ ಸೇರಿ ಬಾಗಿಲು ಹಾಕಿಕೊಂಡ. ಎರಡು ಮೂರು ದಿನಪತ್ರಿಕೆಗಳನ್ನು ನೆಲದಲ್ಲಿ ಹಾಸಿ ಅದರಲ್ಲಿ ಮಲಗಿಕೊಂಡ. ಯಾಕೆಂದರೆ, ಬೇರೆ ಚಾಪೆ ಮತ್ತು ತಲೆದಿಂಬು ಇರಲಿಲ್ಲ. ಲೋಕದಲ್ಲಿ ಹಾಗೆ ಅದೆಷ್ಟೋ ಜನರು ಮಲಗುತ್ತಾರೆ ಎಂದು ಆತ ಭಾವಿಸಿದ. ಹಾಗೆಯೇ ನಿದ್ದೆ ಹೋದ.“ನಮ್ಮ ನಾಯಕ ಎದ್ದಾಗ ಗಂಟೆ ಎಂಟು ಕಳೆದಿತ್ತು! ಬಾಗಿಲು ತೆರೆದು ನೋಡಿದರೆ ತನ್ನ ಅಭಿಮಾನಿ ಹೋಗಿದ್ದಾನೆ. ಹೇಳದೇ ಹೋದದಕ್ಕೆ ಆ ನಾಯಕನಿಗೆ…. ಏನೂ ಅನ್ನಿಸಲಿಲ್ಲ. ಎಷ್ಟು ಜನರು ಹೀಗೆ ಮಾಡುವುದಿಲ್ಲ ಹೇಳಿ. ಸ್ವತಹ ಆತನೇ ಯಾರ ಯಾರದೋ ಮನೆಯ ಜಗುಲಿಯಲ್ಲಿ ಮಲಗಿ ಅಲ್ಲಿಂದ ಹೇಳದೇ ಕೇಳದೇ ಎದ್ದು ಬಂದಿದ್ದಾನೆ. ವಿಶೇಷವೆಂದರೆ, ಮಲಗಿದ ಚಾಪೆಯನ್ನು ಮಡಚಿ ಕೂಡ ಇಟ್ಟಿರಲಿಲ್ಲ! ಮಾತ್ರ ಅಲ್ಲ, ಅದರ ನಟ್ಟ ನಡುವೆ, ಚಾಪೆಯ ಹೃದಯ ಭಾಗದಲ್ಲಿ ಎಂಬಂತೆ… ಕೆಮ್ಮಣ್ಣಿನ ಹೆಜ್ಜೆ ಗುರುತು!“ಯಾವತ್ತೂ ಹೀಗೆ ಆಗಿರದಿದ್ದರೂ ಅದನ್ನು ಅಷ್ಟು ವಿಶೇಷವಾಗಿ ಆತ ಕಾಣಲಿಲ್ಲ. ಹೋಗಿ ಸ್ನಾನ ಮುಗಿಸಿ ಬಂದು  ನೋಡುವಾಗ…..” + +“ನೋಡುವಾಗ?” ಸಾಹಿತಿ ಆಶ್ಚರ್ಯದಿಂದ ಕೇಳಿದ. ರಾಜಕಾರಣಿ ತಣ್ಣಗಿನ ಸ್ವರದಲ್ಲಿ ಹೇಳಿದ:“ನೋಡುವಾಗ, ಒಣಗಲು ಹಾಕಿದ್ದ ಅಂಗಿ ಲುಂಗಿ… ಅವೆರಡೂ ಇಲ್ಲ!”“ಇದು ನಿನ್ನೆ ಸಂಜೆ ನಡೆದದ್ದಾ?”“ಹೌದು”ಅವರಿಬ್ಬರೂ ತುಂಬಾ ಹೊತ್ತು ಮೌನವಾಗಿ ಕೂತರು. ಕೊನೆಗೆ ಆತ ಹೊರಟು ಹೋದ. ಅದರ ನಂತರ ಅನೇಕ ವರ್ಷಗಳು ಕಳೆದವು. ಆ ನಡುವೆ ಆತ ಆ ಸುರಸುಂದರಿಯನ್ನು ಮದುವೆಯೂ ಆದ. ನನ್ನಲ್ಲಿ ಈ ಕಥೆ ಹೇಳಿದ ಆ ಸಾಹಿತಿ ತನ್ನ ಅಭಿಮಾನಿಯನ್ನು ಯಾತಕ್ಕೋ ಮದುವೆ ಆಗಲಿಲ್ಲ. ಆ ಕರಿಯ ರಾಜಕಾರಣಿಯನ್ನು ನಾನು ಈಗ ನೆನಪಿಸಲು ಕಾರಣ ಏನು ಎಂದು ತಾನೇ? ಹಳೆಯ ಪೊಲೀಸರಿಂದ ಹೊಸ ಸರಕಾರ ಹೊಡೆಸಿ ಕೊಂದಿರಲೂಬಹುದು, ಹಾವು ಕಚ್ಚಿದ್ದು ಅಂತ ಹೇಳುತ್ತಿದ್ದಾರೆ… ಆತ ಮೊನ್ನೆ ರಾತ್ರಿ ತೀರಿ ಹೋದ ಎಂದು ನಿನ್ನೆಯ ದಿನಪತ್ರಿಕೆಯಲ್ಲಿ ಓದಿದಾಗ ನನ್ನ ಕಣ್ಣ ಮುಂದೆ ಬಂದಿದ್ದು ಆ ಕೆಮ್ಮಣ್ಣಿನ ಹೆಜ್ಜೆ ಗುರುತು! + + + +ಊರು ದಕ್ಷಿಣ ಕನ್ನಡದ ವಿಟ್ಲ. ಹೊಟ್ಟೆಪಾಡು ಕೇರಳದ ಕಲ್ಲಿಕೋಟೆಗೆ ಕಟ್ಟಿ ಹಾಕಿದೆ. ಖಾಸಗಿ ಕಂಪೆನಿಯೊಂದರಲ್ಲಿ ಅಸಿಸ್ಟಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹವ್ಯಾಸಿ ಬರಹಗಾರ \ No newline at end of file diff --git a/Kenda Sampige/article_481.txt b/Kenda Sampige/article_481.txt new file mode 100644 index 0000000000000000000000000000000000000000..993ec4bff9b39adfdc7e2c35e33e0e9e74a6cd43 --- /dev/null +++ b/Kenda Sampige/article_481.txt @@ -0,0 +1,27 @@ +ಕುಂಪಣಿಯವರು ಕೊಡಿಯಾಲವನ್ನು ಹಿಡಿದು, ಆ ರೇವಿನಲ್ಲಿ ಠಾಣ್ಯ ಹಾಕಿ ನೀಲೇಶ್ವರದಿಂದ ಭಟ್ಕಳದವರೆಗಿನ ಕನ್ನಡ ಜಿಲ್ಲೆಯನ್ನು ವಶಪಡಿಸಿಕೊಂಡು ಆಳುವುದಕ್ಕೆ ತೊಡಗಿದ್ದರು. ಘಟ್ಟದ ಬಳಿಯಲ್ಲಿ ಜಮಾಲಗಡವು ಮಾತ್ರ ಅವರ ಕೈಸೇರಿರಲಿಲ್ಲ. ಕ್ರಿ.ಶ. 1799ನೇ ಅಕ್ಟೋಬರ್ ತಿಂಗಳಲ್ಲಿ ಕನ್ನಡ ಜಿಲ್ಲೆಯ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಮುನ್ರೋನು ಕೊಡಿಯಾಲದಿಂದ ಒಂದು ಫೌಜನ್ನು ತೆಗೆದುಕೊಂಡು ಹೋಗಿ, ಗಡಕ್ಕೆ ಮುತ್ತಿಗೆ ಹಾಕಿ, ಅಲ್ಲಿದ್ದ ಕಿಲ್ಲೆದಾರರನ್ನು ಕೆಳಗಿಳಿಸಿ, ಕೌಲು ಮಾಡಿಕೊಂಡು, ಗಡದ ಮೇಲೆ ಟಿಪ್ಪು ಸುಲ್ತಾನನ ಫೌಜನ್ನು ಇರಗೊಡಿಸಿದನು. ಗಡದ ಕೆಳಗೆ ಕೆಲವು ಕುಂಪಣಿ ಸರದಾರರು ಚಾವಣಿ ಮಾಡಿಕೊಂಡು ಕಾವಲು ನಿಂತರು. + +ಆಗ ಬೇಕಲ ಕೋಟೆಯಲ್ಲಿ ಕುಂಪಣಿಯ ಒಂದು ಫೌಜು ಇತ್ತು. ಆ ಫೌಜಿನಲ್ಲಿ ತಿಮ್ಮನಾಯಕನೆಂಬ ಒಬ್ಬ ಜಮಾದಾರನಿದ್ದನು. ಅವನು ಕುಂಪಣಿಯ ಬೊಂಬಾಯಿ ಸೈನ್ಯಕ್ಕೆ ಜನಕೂಡಿಸುವ ಸೆರೆಗಾರಿಕೆಯನ್ನೂ ಮಾಡುತ್ತಿದ್ದನು. ಅವನು ಕ್ಷತ್ರಿಯನು; ಹೊಡೆವಂಗಡದವನು; ಹೆಸರು ಪಡೆದ ಮನೆತನದವನು. ಗರಡಿಸಾಧನೆಯಲ್ಲಿ ನುರಿತು, ಸುಲ್ತಾನರ ಕಾಲದಲ್ಲಿ ಹಲವು ಕಾಳಗಗಳಲ್ಲಿ ಕಾದಾಡಿ ತನ್ನ ಬೆಳಕನ್ನು ಬೀರಿದ್ದನು. ಈ ಸಣ್ಣ ಜಮಾದಾರಿಕೆಯು ಅವನ ಯೋಗ್ಯತೆಗೆ ತಕ್ಕುದಾಗಿರಲಿಲ್ಲ. ಆದರೆ ಕುಂಪಣಿ ಸರಕಾರದಲ್ಲಿ ಅವನಿಗೆ ದೊಡ್ಡ ಹುದ್ದೆ ದೊರೆಯುವ ಹಾಗಿರಲಿಲ್ಲ. ಯಾಕೆಂದರೆ ಸುಲ್ತಾನರ ಕೈಕೆಳಗಿದ್ದ ನೌಕರರಲ್ಲಿ ಅವರಿಗೆ ವಿಶ್ವಾಸವಿರಲಿಲ್ಲ. ಏನಾದರೊಂದು ಪ್ರಾಪ್ತಿ ಬೇಕಲ್ಲ ಎಂದು ಈ ಜಮಾದಾರಿಕೆಗೆ ಆಂತುಕೊಂಡಿದ್ದನಷ್ಟೆ. ಆದರೆ ಅವನ ಮನಸ್ಸು ದೊಡ್ಡ ಹುದ್ದೆಗಾಗಿ ಸದಾ ಹಂಬಲಿಸುತ್ತಿತ್ತು.ಬೊಂಬಾಯಿ ಸೈನ್ಯಕ್ಕೆಂದು ಕೂಡಿಸಿದ್ದ ಇನ್ನೂರು ಮಂದಿ ಹೋರಾಟಗಾರರು ಅವನ ಬಳಿಯಲ್ಲಿದ್ದರು. ಅವರನ್ನು ಕಂಡಾಗಲೆಲ್ಲ ಅವನ ಮನಸ್ಸಿನಲ್ಲಿ ಆಸೆಯ ಕಿರಣವು ಹೊಳೆಯುತ್ತಿತ್ತು. ತಾನೊಬ್ಬ ದಂಡಿನ ದಳವಾಯಿ ಎಂದು ಹಿಗ್ಗುತ್ತಿದ್ದನು. ಆ ಜನಮಸ್ತಿನಿಂದ ಅವನ ತಲೆ ತಿರುಗಿತು. ಯಾವ ಕೋಟೆಯನ್ನು ಹಿಡಿಯಲಿ! ಯಾರನ್ನು ಸಿಗಿದು ತೋರಣ ಕಟ್ಟಲಿ! ಯಾರ ತಲೆ ತಂದು ತಲೆವಾಗಿಲಲ್ಲಿಡಲಿ! ಏನು ಮಾಡಲಿ! ಎಂದು ಕತಕತಿಸುತ್ತಿದ್ದನು ಎಂಥ ಗಂಡಾಂತರಗಳಲ್ಲಿ ನುಗ್ಗುವುದಕ್ಕೂ ತಯಾರಾಗಿದ್ದನು. + +ಆ ಸಮಯಕ್ಕೆ ಕಣ್ಣಾನೂರಿನಿಂದ ಫತೆ ಹೈದರನೆಂಬವನು ತಾನು ಟಿಪ್ಪುಸುಲ್ತಾನನ ಉಪಪತ್ನಿಯ ಮಗನೆಂದೂ ಪಟ್ಟಕ್ಕೆ ಹಕ್ಕುದಾರನೆಂದೂ ಸಾರುತ್ತ ಎಡಬಲದ ಜನಗಳನ್ನು ತಲಬು ಕೊಡುತ್ತೇನೆ, ಸಂಬಳ ಕೊಡುತ್ತೇನೆ ಎಂದು ಮಾಪಿಳ್ಳೆ, ಮಲೆಯಾಳಿ ಮೊದಲಾದ ನೂರಾರು ಎಸಗೆ ಆಳುಗಳನ್ನು ಜಮಾಯಿಸಿಕೊಂಡು ಆದೂರ ಹತ್ತಿರ ಫಿತೂರಿ ನಡೆಸುತ್ತಿದ್ದನು. ಕೊಯಮುತ್ತೂರಲ್ಲಿ ಟಿಪ್ಪುವಿನ ಶಿರಸ್ತೆದಾರನಾಗಿದ್ದ ಪತ್ತುಮುಡಿ ಸುಬ್ರಾಯನೆಂಬವನೂ ಅವನೊಡನೆ ಸೇರಿಕೊಂಡು ಸಂಚು ಮಾಡುತ್ತಿದ್ದನು. ಕುಂಪಣಿಯವರ ವಿರೋಧಿಗಳು ಇವರಿಗೆ ಒಳಗೊಳಗೆ ಸಹಾಯಕಾರಿದ್ದರು. + +ಕೆಲವು ದಿನಗಳಲ್ಲಿ ಫಿತೂರಿಗಾರರ ದಂಡು ಬೆಳೆಯಿತು. ಅವರು ಉಪ್ಪಿನಂಗಡಿ, ಪುತ್ತೂರುಗಳನ್ನು ಸುಲಿಗೆ ಮಾಡಿ ಜಮಾಲಗಡವನ್ನು ಹಿಡಿಯಬೇಕೆಂದು ಅಲ್ಲಿದ್ದ ಟಿಪ್ಪುಸುಲ್ತಾನನ ಫೌಜಿನೊಂದಿಗೆ ಸಂಚು ನಡೆಸುತ್ತಿದ್ದರು. ಆ ಸಂಧಿಯನ್ನು ನೋಡಿಕೊಂಡು ತಿಮ್ಮನಾಯಕನು ತನ್ನ ಇನ್ನೂರು ಮಂದಿ ಕಟ್ಟಾಳುಗಳೊಡನೆ ಸುಬ್ರಾಯನನ್ನು ಸೇರಿದನು. ತಕ್ಕ ಸಮಯದಲ್ಲಿ ಬಂದ ತಿಮ್ಮ ನಾಯಕನನ್ನು ಕಂಡು ಸುಬ್ರಾಯನಿಗೆ ಬಹಳ ಸಂತೋಷವಾಯಿತು. ಸುಲ್ತಾನರ ಕಾಲದಲ್ಲಿ ಅವನು ಮೆರೆದ ಸಾಹಸವನ್ನು ಸುಬ್ರಾಯನು ಸ್ವತಃ ತಿಳಿದಿದ್ದನು. ಸುಬ್ರಾಯನು ತಿಮ್ಮನಾಯಕನನ್ನು ಹೊಗಳಿ, ಹುರಿದುಂಬಿಸಿ, ತನ್ನ ಮಂದಿಯನ್ನೂ ಕೊಟ್ಟು ಜಮಾಲಗಡಕ್ಕೆ ಮುತ್ತಿಗೆ ಹಾಕಲು ಕಳುಹಿಸಿದನು. ತಿಮ್ಮನಾಯಕನು ದಂಡನ್ನು ನಡೆಸಿಕೊಂಡು ದಂಡಿನ ದಳವಾಯಿಯೆಂಬ ಆ ಹೊಸ ಠೀವಿಯಿಂದ ಜಮಾಲಗಡದ ದಾರಿಯನ್ನು ಹಿಡಿದನು. + +ನಡುರಾತ್ರೆಗೆ ಸರಿಯಾಗಿ ದಂಡು ಜಮಾಲಗಡವನ್ನು ತಲಪಿತು. ತಿಂಗಳ ಬೆಳಕಿನಲ್ಲಿ ಎತ್ತರವಾದ ಗಡಾಯಿಕಲ್ಲು ಮಸಕು ಮಸಕಾಗಿ ಕಾಣಿಸುತ್ತಿದ್ದಿತು. ಕೋಟೆಯೊಳಗಿಂದ ಉರಿಯುತ್ತಿದ್ದ ಒಂದು ಪಂಜು ಏನೋ ಸಂಕೇತ ಮಾಡಿತು. ಗಡದ ಕೆಳಗಿನ ಜಮಾಲಬಾದು ನಗರವೆಲ್ಲ ನಿದ್ದೆಯಲ್ಲಿ ಮೈಮರೆತಿತ್ತು. ಸುತ್ತಲೂ ಬೆಟ್ಟಗಳು ಕ್ರರಗಾಗಿ ಕಾಣಿಸುತ್ತಿದ್ದುವು. ಕೆಳಗಿನ ಕೋಟೆಯ ಸುತ್ತಿನಲ್ಲಿ ಕುಂಪಣಿ ಸರದಾರರು ತಮ್ಮ ಚಾವಣಿಗಳಲ್ಲಿ ಮಲಗಿದ್ದರು. ತಿಮ್ಮನಾಯಕನು ಆ ಸರದಾರರನ್ನೆಲ್ಲ ಮಲಗಿದ್ದಲ್ಲೆ ಕಡಿದು ಹಾಕಿ, ತನ್ನ ದಂಡನ್ನು ಸುತ್ತಲೂ ಕಾವಲಿರಿಸಿ, ಸದ್ದಿಲ್ಲದೆ ಗಡವನ್ನೇರಿ ಸುಲ್ತಾನನ ಫೌಜನ್ನು ಸೇರಿದನು. ಆ ಫೌಜಿನಲ್ಲಿದ್ದ ಕೆಲವು ಫಿರಂಗಿ ಕೋವಿಗಳನ್ನು ಕಂಡು ಧೈರ್ಯಗೊಂಡನು. ಫೌಜಿನವರೊಡನೆ ವಿಶ್ವಾಸ ಬೆಳೆಸಿಕೊಳ್ಳುತ್ತ ಯುದ್ಧದ ತಂತ್ರಗಳನ್ನು ಚರ್ಚಿಸುತ್ತ ರಾತ್ರಿಯನ್ನು ಕಳೆದನು. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಮರುದಿನವೇ ಸುದ್ದಿ ತಿಳಿದು ಕೇಪ್ಟನ್ ಮುನ್ರೋನು ದೊಡ್ಡ ಸೇನೆಯೊಡನೆ ಬಂದು ಗಡಕ್ಕೆ ಮುತ್ತಿಗೆ ಹಾಕಿದನು. ಕೆಳಗಿದ್ದ ತಿಮ್ಮನಾಯಕನ ದಂಡು ಅದನ್ನು ಎದುರಿಸಿತು. ಎರಡು ಪಡೆಗಳಿಗೂ ಕೈಗೆ ಕೈ ಹತ್ತಿತು. ಫಿರಂಗಿಗಳು ಸುಟ್ಟು ಸಿಡಿಯಲಾರಂಭಿಸಿದವು. ಕೋವಿಗಳು ಹಾರಿದುವು. ಎರಡು ಕಡೆಗಳಲ್ಲಿಯೂ ಹಲವು ವೀರರು ಹತರಾದರು. ಹಲವರು ಗಾಯಗೊಂಡರು. ಕುಂಪಣಿಯವರ ಒಂದು ದಳವು ಗಡವನ್ನೇರಲು ನೋಡಿತು. ಆದರೆ ಗಡಕ್ಕೇರುವ ಕಡಿದಾದ ಮಾರ್ಗದಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಹೇರಿದ್ದರು. ಅಲ್ಲಲ್ಲಿ ದಸಿಗೂಟಗಳನ್ನು ನೆಟ್ಟು, ಮುಳುವೇಲಿಗಳನ್ನು ಹರವಿ ಕಾಲಿಡಲು ಸಾಧ್ಯವಾಗದಂತೆ ಮಾಡಿದ್ದರು. ಕುಂಪಣಿ ಸೇನೆಯು ಕೆಳೆಗೆ ಕಾದಾಡುತ್ತಿದ್ದಂತೆ ಒಂದು ದಳವು ಗಡಕ್ಕೆ ಸರಿಯಾಗಿ ಎತ್ತರವಾಗಿ ಮಾರ್ಜೆ ಕಟ್ಟ ಹತ್ತಿತು. ಗಡದ ಮೇಲಿಂದ ಒಂದೇ ಸವನೆ ಕಲ್ಲುಗಳು ಕೆಳಕ್ಕುರುಳಿ ಹಲವರನ್ನು ಜಜ್ಜಿತು. ಕಾದಂಬಲಿ ಕಾದೆಣ್ಣೆ ಸುರಿದು ಹಲವರನ್ನು ಸುಟ್ಟಿತು. ಮೂರು ದಿನಗಳವರೆಗೆ ಹೀಗೆ ಕಗ್ಗೊಲೆಯ ಕಾಳಗ ನಡೆದು ಎರಡು ಕಡೆಯವರೂ ಕಂಗೆಟ್ಟರು. + +ಅಷ್ಟರಲ್ಲಿ ಕೆಳಗೆ ಕುಂಪಣಿಯವರು ಮಾರ್ಜೆ ಮೇಲಿನಿಂದ ಕೋವಿ ಗುಂಡುಗಳನ್ನು ಹಾರಿಸತೊಡಗಿದರು. ಗಡದ ಮೇಲೆ ಕೋವಿ ಮದ್ದು ಕಡಿಮೆಯಾಗಿತ್ತು. ಕುಂಪಣಿಯ ಒಂದು ದಳವು ದಾರಿಯನ್ನು ಬಿಡಿಸಿಕೊಳ್ಳುತ್ತ ಗಡವನ್ನೇರ ಹತ್ತಿತು. ತಿಮ್ಮನಾಯಕನು ಫಿರಂಗಿ ಹಾರಿಸಿ ಅವರನ್ನೆಲ್ಲ ಸುಟ್ಟು ಲಯ ಮಾಡುತ್ತಿದ್ದನು. ಕುಂಪಣಿಯವರು ಮೇಲಿದ್ದ ಸಿಡಿ ಮದ್ದನ್ನೆಲ್ಲ ಮುಗಿಸಿ ಬಿಡಬೇಕೆಂದು ಕಾಳಗವನ್ನು ಮುಂದುವರಿಸುತ್ತಿದ್ದರು. ತಿಮ್ಮನಾಯಕನ ಬಳಿಯಿದ್ದ ಸಿಡಿಮದ್ದೆಲ್ಲ ನಿಜಕ್ಕೂ ಮುಗಿದುಹೋಯಿತು. ಅವನ ಫೌಜು ಅಂಜಿ ಹಿಂಜರಿಯಿತು. ಕುಂಪಣಿ ಸೇನೆಯು ಗಡವನ್ನೇರಿ, ನೆರೆಯ ನೀರು ನುಗ್ಗುವಂತೆ ತಿಳ್ಳಿಬಾಗಿಲನ್ನು ಹೊಕ್ಕಿತು. ಆ ಮಹಾ ರಭಸವು ನಾಯಕನ ಪಡೆಯನ್ನು ಕೊಚ್ಚಿಕೊಂಡು ಹೋಯಿತು. ಎಷ್ಟೋ ಮಂದಿ ಗುಂಡಿನ ಬಾಯಿಗೆ ಬಿದ್ದರು. ಹಲವರು ಕಂಗೆಟ್ಟು ಕನ್ನಗಂಡಿಗಳಿಂದ ಪಾರಾದರು.ತಿಮ್ಮನಾಯಕನು ಕೆಲವೇ ಮಂದಿ ಸೈನಿಕರನ್ನು ಕೂಡಿಕೊಂಡು ಕೋವಿ ಹಾರಿಸುತ್ತ ಶತ್ರುಗಳನ್ನು ತಡೆದನು. ಅಷ್ಟರಲ್ಲಿ ಕೆಳಗಿದ್ದ ಕುಂಪಣಿ ಫೌಜು ಫಿತೂರಿಗಾರರನ್ನೆಲ್ಲ ಸೋಲಿಸಿ ದೆಸೆಗೆಡಿಸಿತ್ತು. ಒಂದೊಂದೇ ದಳವು ಸಾಲುಕಟ್ಟಿಕೊಂಡು ಸಜ್ಜಾಗಿ ಮೇಲಕ್ಕೇರುತ್ತಿದ್ದಿತು. ತಿಮ್ಮನಾಯಕನ ತೋಟೆ ಮದ್ದು ಎಲ್ಲ ತೀರುತ್ತ ಬಂತು. ಅವನ ಕೈಯಾಟ ಉಡುಗಿತು. ಅವನ ಆಳುಗಳು ಕನ್ನಗಂಡಿಗಳಿಂದ ಹಾರಿಹೋದರು. ಗತಿಗಾಣದೆ ತಿಮ್ಮನಾಯಕನೂ ಕನ್ನಗಂಡಿಯಿಂದ ಹಾರಿ ತಲೆತಪ್ಪಿಸಿಕೊಂಡನು. ಕೇಪ್ಟನ್ ಮುನ್ರೋನು ಜಮಾಲಗಡವನ್ನು ನಿರಾತಂಕವಾಗಿ ಕೈವಶಪಡಿಸಿಕೊಂಡನು. ಬಳಿಕ ಕುಂಪಣಿ ಸರಕಾರವು ಫಿತೂರಿಗಾರರನ್ನೆಲ್ಲ ಹಿಡಿದು ಶಿಕ್ಷಿಸಿತು. ಎಲ್ಲಿ ಹುಡುಕಿದರೂ ತಿಮ್ಮನಾಯಕನು ಮಾತ್ರ ಸಿಕ್ಕಲಿಲ್ಲ. ಅವನನ್ನು ಹಿಡಿದುಕೊಟ್ಟವರಿಗೆ 500 ರೂಪಾಯಿ ಬಹುಮಾನ ಕೊಡಲಾಗುವುದೆಂದು ಪ್ರಕಟಪಡಿಸಿತು. ಬಹುಮಾನದ ಆಸೆಯಿಂದ ಅವನನ್ನು ಕಂಡುಹಿಡಿಯಲು ಹಲವರು ಪ್ರಯತ್ನಿಸುತ್ತಿದ್ದರು. + +*****ಬೇಕಲ ಕೋಟೆಯ ಹೆಬ್ಬಾಗಿಲಿನೆದರು ಒಂದು ಗಳತೆಯ ದೂರದಲ್ಲಿ ಜಮಾತ್ ಮಸೀದಿಯು ಶಾಂತವಾಗಿ ನಿಂತಿದ್ದಿತು. ಅಂದವಾದ ಕಮಾನುಗಳಿಂದಲೂ, ಕಂಬಗಳಿಂದಲೂ ಕಂಗೊಳಿಸುತ್ತಿತ್ತು. ಅಂಗಳದ ಮಸಣದಲ್ಲಿ ಅಲ್ಲಲ್ಲಿ ಆಡಂಬರವಿಲ್ಲದ ಗೋರಿಕಲ್ಲುಗಳು ನೆಟ್ಟಿದ್ದುವು. ಆ ಜಾಗವೆಲ್ಲ ರಣರಣವೆನಿಸುತ್ತಿತ್ತು. ಮಸೀದಿಯ ಜಗಲಿಯ ಮೇಲೆ ಫಕೀರನೊಬ್ಬನು ಕುಳಿತುಕೊಂಡು ಏನೋ ವಿಚಾರದಲ್ಲಿ ಮುಳುಗಿದ್ದನು. ಅವನು ಚಿಂದಿಗಳಿಂದ ಹೊಲಿದು ಮಾಡಿದ ಒಂದು ನಿಲುವಂಗಿಯನ್ನು ತೊಟ್ಟಿದ್ದನು. ತಲೆ ಮೇಲೊಂದು ಕಾಂಗಿನ ವಸ್ತ್ರವನ್ನು ಮುಸುಕುಹಾಕಿಕೊಂಡು, ಅದು ಜಾರಿ ಬೀಳದಂತೆ ಮಣಿಸರದಿಂದ ಬಿಗಿದಿದ್ದನು. ಮುಸುಕಿ ನೆಡೆಯಿಂದ ಗಡ್ಡ ಬೆಳೆದ ಅವನ ಮುಖವು ಸ್ವಲ್ಪ ಕಾಣಿಸುತ್ತಿತ್ತು. ಅವನ ಕಣ್ಣುಗಳು ತೀಕ್ಷ್ಣವಾದ ಕಳೆಬೀರುತ್ತಿದ್ದುವು. + +ಆಗ ಅದೇ ಕೋಟೆಯಲ್ಲಿದ್ದ ಒಬ್ಬ ನಾಯಿಮಾರ ಸಿಪಾಯಿಯು, ಆ ದಾರಿಯಾಗಿ ಕೋಟೆಗೆ ಬರುತ್ತಿದ್ದವನು ಅವನನ್ನು ಕಂಡನು. ಅವನು ಕುಳಿತ ಭಂಗಿಯು ಎಲ್ಲಿಯೋ ಕಂಡಂತೆ ತೋರುತ್ತಿದ್ದಿತು. ಹಾಗೆಯೇ ಹತ್ತಿರ ಹೋಗಲು ಅವನ ತೀಕ್ಷ್ಣ ದೃಷ್ಟಿಯೂ ಹಿಂದೆಲ್ಲಿಯೋ ಕಂಡಹಾಗಿತ್ತು. ಸಿಪಾಯಿಯ ಸಂದೇಹಗೊಂಡು – ಏನೇ ಆಗಲಿ ನೋಡೋಣವೆಂದು ಸಲಾಂ ಮಾಡಿದನು. ಆಲೇಕುಂ ಸಲಾಂ ಎಂದು ಫಕೀರನು ನುಡಿದನು. ಆ ಸ್ವರವು ಸಿಪಾಯಿಗೆ ಪರಿಚಯದ್ದಾಗಿತ್ತು. ಕೂಡಲೇ ಅವನು ಜಮಾದಾರ್ ಸಾಹೇಬ್! ಎಂದು ಮುಗುಳುನಕ್ಕನು. ಫಕೀರನು ಚಕಿತನಾದನು. + + + +“ಫಕೀರಾಗಿ ಮಸೀದಿ ಸೇರಿಬಿಟ್ಟಿರಲಲಾ ನಾಯಕರೇ!”“ಇಷ್ಟಾ! ಮಾತಾಡಬೇಡ. ನನ್ನ ಗುಟ್ಟು ಗೊತ್ತಾದರೆ ಗುಂಡಿನ ಬಾಯೇಗತಿ. ನನ್ನ ಪ್ರಾಣವೀಗ ನಿನ್ನ ಕೈಯಲ್ಲಿದೆ. ಯಾರಿಗೂ ನನ್ನ ಸುದ್ದಿ ಹೇಳಬೇಡ ಕಂಡ್ಯಾ.”“ನಾಯಕರೇ! ನಾನು ನಿಮ್ಮ ತಾಬೆಯಲ್ಲಿದ್ದವನು. ನಿಮ್ಮನ್ನು ಬಿಟ್ಟು ಹಾಕುವೆನೇ? ಒಂದು ಪಿಳ್ಳೆಗಾದರೂ ನಿಮ್ಮ ಸುಳುವನ್ನು ಕೊಡಲಿಕ್ಕಿಲ್ಲ. ನಂಬಿರಿ. ತಾವು ಬಹಳ ದಣಿದಿರುವಂತೆ ತೋರುತ್ತದೆ. ಬಳಿಯಿಂದ ಎರಡು ಎಳನೀರು ತರಲೇ?”“ಬೇಡ ನಾಯರೇ! ನಿನ್ನ ಪ್ರೀತಿಯೇ ಸಾಕು.”“ಹಾಗಲ್ಲ. ಕ್ಷಣದಲ್ಲಿ ಬಂದೆ. ತಾವು ಇಲ್ಲೇ ಇರಿ.” ಎಂದು ನಾಯರನು ಎಳನೀರನ್ನು ತರುವುದಕ್ಕಾಗಿ ಅವಸರವಸರವಾಗಿ ನಡೆದನು. ಎಳನೀರ ಹೆಳೆಯಿಂದ ಹೋದ ನಾಯರನು ನೆಟ್ಟಗೆ ಕೋಟೆಗೆ ಹೋಗಿ ಕಿಲ್ಲೆದಾರನಿಗೆ ತಿಮ್ಮನಾಯಕನ ಸುಳುವನ್ನು ಕೊಟ್ಟನು. ಕೂಡಲೇ ಕಿಲ್ಲೆದಾರನು ಸೈನಿಕರೊಂದಿಗೆ ಬಂದು ಮಸೀದಿಯನ್ನು ಹೊಕ್ಕು ತಿಮ್ಮನಾಯಕನನ್ನು ಸೆರೆಹಿಡಿದನು. ಬಳಿಕ ಆಗಿನ ಮಿಲಿಟರಿ ಗವರ್ನರನಾಗಿದ್ದ ಕೇಪ್ಟನ್ ಮುನ್ರೋನು ಅವನ ವಿಚಾರಣೆ ನಡೆಸಿ ಅವನನ್ನು ದೇಕಲ ಕೋಟೆಯಲ್ಲಿ ಗಲ್ಲಿಗೇರಿಸಿದನು. ಡಾ|| ಬುಚನನ್ ಮತ್ತು ಸ್ಟರ್ ರೋಕರು ತಮ್ಮ ಗ್ರಂಥಗಳಲ್ಲಿ ಈ ವಿಷಯವನ್ನು ಉಲ್ಲೇಖಿಸಿರುವರು. ಆದರೆ ಈ ಫಿತೂರಿಗಾರನು ಚಂದ್ರಗಿರಿ ಕೃಷ್ಣನಾಯಕನೆಂಬವನೆಂದು ಕೆಲವರು ಹೇಳುತ್ತಾರೆ. ಕೋಟೆಯಿಂದ ಫೌಜು ಬರುವಷ್ಟರಲ್ಲಿ ತಿಮ್ಮನಾಯಕನು ಅದೇ ಮಸೀದಿಯಲ್ಲಿ ಎಲ್ಲಿಯೋ ಅವಿತುಕೊಂಡಿದ್ದನೆಂದೂ ಅವನನ್ನು ಹಿಡಿಯುವುದಕ್ಕೆ ಧೈರ್ಯ ಸಾಲದೆ ಮಸೀದಿಗೆ ಬೆಂಕಿ ಕೊಟ್ಟರೆಂದೂ ಅವನು ಅಲ್ಲಿ ಸುಟ್ಟುಹೋದನೆಂದೂ ಇನ್ನು ಕೆಲವರು ಹೇಳುವರು. ಈ ಘಟನೆ ನಡೆದುದು ಒಂದು ನರಕ ಚತುರ್ದಶಿಯ ದಿನವಾಗಿದ್ದುದರಿಂದ ಬೇಕಲದಲ್ಲಿರುವ ಅವನ ಸಂತತಿಯವರು ಆ ದಿನ ಆಚರಿಸಬೇಕಾದ ಹಬ್ಬವನ್ನು ಇಂದಿಗೂ ಆಚರಿಸುವುದಿಲ್ಲ. ಯಾಕೆ ಆಚರಿಸುವುದಿಲ್ಲವೆಂದು ಕೇಳಿದರೆ, ಈ ಮಸೀದಿಯಲ್ಲಾದ ದುರಂತವನ್ನು ಹೇಳುವುದಿದೆ. ಇದರಿಂದ ಫಿತೂರಿಗಾರನು ತಿಮ್ಮನಾಯಕನೆಂದೇ ಸ್ಪಷ್ಟವಾಗುತ್ತದೆ. + + + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_482.txt b/Kenda Sampige/article_482.txt new file mode 100644 index 0000000000000000000000000000000000000000..c9fd23c09298de546ee2a570908103d958b8f937 --- /dev/null +++ b/Kenda Sampige/article_482.txt @@ -0,0 +1,39 @@ + + +ಅಸ್ತಂಗತವಾಗುತಿರುವ ಸೂರ್ಯನ ಕೆಂಪು ಕಿರಣಗಳೂ ಕಾಣದಷ್ಟು ಮೋಡ ಮುಸುಕಿತ್ತು ಪಡುವಣದಿ. ಇಳಿಸಂಜೆಯ ಕೆಂಬಣ್ಣದ ಕಿರಣಗಳು ಹೊಳಪು ಬೀರುವ ಮುನ್ನವೆ ಕತ್ತಲಲಿ ಮಾಯವಾಗಿದ್ದವು. ಮೋಡಗಳ ದಾಳಿಗೊಳಪಟ್ಟ ಸಂಜೆಯ ಸೂರ್ಯನಂತೆ ಪ್ರಭಾಶಂಕರನೂ ಎಲ್ಲ ಕಡೆಗಳಿಂದ ಕತ್ತಲ ದಾಳಿಗೊಳಪಟ್ಟಿದ್ದ. ಆ ಕತ್ತಲಲೆ ಅವನು ತನ್ನ ಎಲೆ-ಅಡಿಕೆ ಚೀಲವನ್ನು ಬಿಚ್ಚಿದ. ಚೀಲದೊಳು ಇದ್ದದ್ದು ಬರಿ ಒಂದೇ ಎಲೆ. ಅದರಲ್ಲಿ ಅರ್ಧ ಎಲೆ ಒಣಗೇ ಹೋಗಿತ್ತು. ಎಲೆಗಳನ್ನು ತೆಗೆದುಕೊಂಡು ಬಾ ಎಂದು ಎರಡು ದಿನಗಳಿಂದ ತನ್ನ ಮಗ ಹಸ್ಮುಖನಿಗೆ ಹೇಳುತ್ತಿದ್ದರೂ ಅವನು ತಂದಿಲ್ಲ ಎಂದು ಗೊಣಗುತ್ತಾ ಉಳಿದ ಒಂದೆಲೆಯಲ್ಲೆ ಅರ್ಧ ಹರಿದು ಚೀಲದೊಳಿಟ್ಟ. ಇನ್ನರ್ಧ ಎಲೆಗೆ ಸುಣ್ಣ ಹಚ್ಚಿ ತಂಬಾಕೂ ಸೇರಿಸಿ ಬಾಯಿಗಿಟ್ಟುಕೊಂಡ. + +ಮರುದಿನ ಮುಂಜಾನೆ, ಒಳ ನುಸುಳಿದ ಬೀದಿ ದೀಪದ ಬೆಳಕಲ್ಲೆ ಮನೆಯ ಮುಂಬಾಗಿಲ ಕೋಣೆಯ ಗೋಡೆಗೆ ಜೋತು ಹಾಕಿದ ಕೋಟು ಧರಿಸಿ, ಟೊಪಿಗೆ ಹಾಕಿಕೊಂಡು ಕೆಲಸಕ್ಕೆ ಹೊರಡಲು ಸಜ್ಜಾದ. ಪ್ರತಿದಿನ ಹೊರಗೆ ಹೋಗುವಾಗ ಸ್ವಲ್ಪ ನೀರು ಕುಡಿದೇ ಹೋಗುವ ಅಭ್ಯಾಸ ಅವನಿಗೆ. ಅದಕ್ಕೆ, ದಿನವೂ ನೀರಿನ ಲೋಟ ಹಿಡಿದು ಬಾಗಿಲಿಗೆ ನಿಲ್ಲುತ್ತಿದ್ದಳು ಅವನ ಹೆಂಡತಿ ಪಾರ್ವತಿ. ಆದರೆ ಅವನು ಕಳೆದ ಒಂದು ವರ್ಷದಿಂದ ಇಂತಹ ಎಲ್ಲ ಚಿಕ್ಕ ಪುಟ್ಟ ಕೆಲಸಗಳನ್ನು ತಾನೇ ಮಾಡಿಕೊಳ್ಳುತ್ತಿದ್ದಾನೆ. ಆ ದಿನ ಕೆಲಸಕೆ ಹೋಗುವ ಮುನ್ನ, ಎಂದಿನಂತೆ ನೀರು ಕುಡಿದು ತಿರುಗುವಾಗ ಯಾರೋ ಅವನ ಕೋಟಿನ ತೋಳುಗಳನ್ನು ಜಗ್ಗಿ ಹಿಡಿದು ನಿಲ್ಲಿಸಿದಂತಾಯಿತು. ‘ಯಾಕೆ ಪಾರ್ವತಿ, ಏನಾಯಿತು’? ಎಂದ ಪ್ರಭಾಶಂಕರ. ಮೇಲಿಂದ ಮೇಲೆ ಅವನು ಕೇಳುವ ಇಂತಹ ಸಹಜ ಪ್ರಶ್ನೆಗಳಿಗೆ ಉತ್ತರ ಸಿಗದೆ ಕತ್ತಲೆಯ ಮೌನದಲಿ ಕಳೆದು ಹೋಗುತ್ತಿದ್ದವು. + +ತನ್ನ ಹಿರಿಯ ಮಗನ ಸಾವಿನಿಂದಾಗಿ ಪ್ರಭಾಶಂಕರ ಶೂನ್ಯ ಮನಸ್ಕನಾಗಿದ್ದ. ಅವನ ಹೆಂಡತಿಯೂ ಮಾನಸಿಕ ಆಘಾತಕ್ಕೊಳಗಾಗಿದ್ದಳು. ಆಗಿನಿಂದ ಆಕೆ ಪ್ರಭಾಶಂಕರನ ತೋಳುಗಳನ್ನು ಜಗ್ಗಿ ಜಗ್ಗಿ ಮಾತನಾಡುವ ಅಸಹಜ ಅಭ್ಯಾಸ ಬೆಳೆಸಿಕೊಂಡಿದ್ದಳು. ಒಂದು ಕ್ಷಣ ಮೌನವಾದ ಪ್ರಭಾಶಂಕರ ಹಿಂದಿನ ನೆನಪುಗಳನ್ನು ಮೆಲುಕು ಹಾಕತೊಡಗಿದ. ಮದುವೆಯಾಗಿ ಆಗಿನ್ನು ಎರಡೇ ವರ್ಷಗಳಾಗಿರಬಹುದೇನೊ? ಪ್ರಭಾಶಂಕರನ ತಂದೆ-ತಾಯಿ, ಅವರೆಲ್ಲರೂ ಕೂಡಿಯೆ ವಾಸಿಸುತ್ತಿದ್ದರು. ಒಂದು ದಿನ ಮುಂಜಾನೆ ಕೆಲಸಕ್ಕೆ ಹೊರಡುವ ವೇಳೆ ಪಾರ್ವತಿ ಅವನ ತೋಳುಗಳನ್ನು ಜಗ್ಗುತ್ತಾ, ನಾನು ತಾಯಿಯಾಗುತ್ತಿದ್ದೇನೆ ಎಂಬ ಸಂತಸದ ಸುದ್ದಿ ಹೇಳಿದ್ದಳು. + +ಅವರದ್ದು ಸಂಪ್ರದಾಯಸ್ಥ, ಕಟ್ಟು ನಿಟ್ಟಿನ ಕೂಡು ಕುಟುಂಬವಾದ್ದುದರಿಂದ ಪ್ರಭಾಶಂಕರ ತನ್ನ ಹೆಂಡತಿಯೊಡನೆ ಕುಳಿತು ಮಾತಾಡಿದ ಗಳಿಗೆಗಳು ಬಹಳ ಕಡಿಮೆಯೆ. ತನ್ನ ತಂದೆ-ತಾಯಿಗೆ ಭಗವದ್ಗೀತೆ ಓದಿ ಹೇಳುವುದು ಅವನಿಗೆ ಪ್ರತಿರಾತ್ರಿಯ ಕೆಲಸ. ಅದನು ಮುಗಿಸುವ ಹೊತ್ತಿಗೆ, ದಿನದ ಕೆಲಸದ ಭಾರ ಹೊತ್ತು ದಣಿದ ಪಾರ್ವತಿ ಮಂಚದ ತುದಿಗೆ ಬಂದು ಕುಳಿತಿರುತ್ತಿದ್ದಳು. ಅವಳು ಎಚ್ಚರದಿಂದಿರಲು ಪ್ರಯತ್ನಿಸಿದರೂ ಕಣ್ರೆಪ್ಪೆಗಳು ಹಾಗೇ ನಿದ್ದೆಗೆ ಜಾರುತ್ತಿದ್ದವು. + +ಪಾರ್ವತಿ, ಸಾಯುವ ದಿನವೂ ಅವನ ತೋಳನ್ನು ಜಗ್ಗಿ ಹಿಡಿದು, ‘ಇವತ್ತೊಂದು ದಿನ ನೀವು ಕೆಲಸಕ್ಕೆ ಹೋಗದಿದ್ದರೆ ನಡೆಯುವುದಿಲ್ಲವೇನು’? ಎಂದು ಕೇಳಿದ್ದಳು. ಕೆಲಸವನ್ನು ಒಂದು ದಿನವೂ ತಪ್ಪಿಸದ ತನ್ನ ಗಂಡ. ಕರ್ತವ್ಯ ನಿಷ್ಠೆ ನೆನೆದು, ‘ಇಲ್ಲ, ನೀವು ಕೆಲಸ ಬಿಟ್ಟರೆ ನಡೆಯುವುದಿಲ್ಲ ಬಿಡಿ. ನಾನು ಹಾಗೇಕೆ ಕೇಳಿದೆನೊ ತಿಳಿಯದು. ತೆಗೆದುಕೊಳ್ಳಿ, ಈ ನೀರು ಕುಡಿದು ಕೆಲಸಕ್ಕೆ ಹೋಗಿ’ ಎಂದಿದ್ದಳು. ಅದಕ್ಕೇ ಏನೊ, ಪ್ರಭಾಶಂಕರ ಆ ಮುಂಜಾನೆ, ಕೆಲಸಕ್ಕೆ ಹೊರಡುವಾಗ ಮೊಣಕೈ ಹತ್ತಿರ ಹರಿದ ಅವನ ಕೋಟು ಬಾಗಿಲ ಚಿಲಕಕ್ಕೆ ಸಿಕ್ಕು ಅವನನ್ನು ತಡೆದು ನಿಲ್ಲಿಸಿತ್ತು. ಆಗವನು, ‘ಏಕೆ ಪಾರ್ವತಿ, ಏನಾಯ್ತು’? ಎಂದು ಕೇಳಿದ್ದ. ಆಗಿನಿಂದ ಹಾಗೆ ಕೇಳುವುದು ಅವನಿಗೆ ರೂಢಿಯಾಗಿಬಿಟ್ಟಿತ್ತು. ಅವನ ಆ ಪ್ರಶ್ನೆಗೆ ಉತ್ತರವಾದರು ಹೇಗೆ ಸಿಕ್ಕೀತು? ಅವನು ಮತ್ತೆ ಮಾತು ಮುಂದುವರೆಸುತ್ತಾ, ‘ಈ ಕೋಟು ಹರಿದು ಹೋಗಿದೆ ಎಂದು ಹೇಳುತ್ತಿದ್ದೆಯೇನು? ಇದಕ್ಕೆ ತೇಪೆ ಹಚ್ಚಲೇನು? ಹಂಗಾದರೆ ಸೂಜಿ, ದಾರ ಎಲ್ಲಿದೆ’? ಎಂದು ತನಗೆ ತಾನೇ ಮಾತಾಡುತ್ತಾ ಯಾವುದೊ ಯೋಚನೆಯಲ್ಲಿ ಒಂದು ಕ್ಷಣ ನಿಂತಲ್ಲಿಯೆ ನಿಂತ. ಆ ಕ್ಷಣ ಪಾರ್ವತಿಯ ಮುಖದಲ್ಲಿ ಕಳವಳ ಕಂಡವನ ಹಾಗೆ, ‘ನೀನೇ ಹೇಳು, ನಾನೇನು ಮಾಡಲಿ ಇದಕ್ಕೆ? ನಿನಗೆ ಗೊತ್ತು, ನನ್ನ ಕೋಟಿಗೆ ತೇಪೆ ಹಚ್ಚಿಕೊಡೆಂದು ನಾನು ಪದೇ ಪದೇ ನಮ್ಮ ಸೊಸೆಯನ್ನು ಕೇಳಲಾರೆ. ನಾನೇ ತೇಪೆ ಹಚ್ಚಿಕೊಳ್ಳುತ್ತೇನೆ, ಸರಿ ತಾನೇ’? ಎಂದು ತನ್ನ ಪ್ರಶ್ನೆಗಳಿಗೆ ತಾನೇ ಉತ್ತರಗಳ ಕೊಟ್ಟುಕೊಳುತ್ತಾ, ‘ತೇಪೆ, ತೇಪೆ, ತೇಪೆ’ ಎಂದು ಬಾರಿಬಾರಿ ಅನ್ನುತ್ತಾನೆ. ತಕ್ಷಣವೆ ಮತ್ಯಾವುದೊ ವಿಚಾರದಲ್ಲಿ ಮುಳುಗಿ ಬಹಳ ವರ್ಷಗಳ ಹಿಂದೆ ನಡೆದು ಹೋದ ಹಳೆಯ ಘಟನೆಗಳನ್ನು ನೆನೆಸಿಕೊಳ್ಳುತ್ತಾನೆ; ಹಲವು ವರ್ಷಗಳ ಹಿಂದೆ ಅವರ ಇಡೀ ಮನೆ ಬೆಂಕಿಗಾಹುತಿಯಾಗಿದ್ದರಿಂದ ಅವರು ಎಲ್ಲವನ್ನು ಕಳೆದುಕೊಂಡರು. ಅವರಪ್ಪ ಒಬ್ಬ ಅರ್ಚಕ. ಆಗ ಅವನಿಗೆ ಹದಿನೈದೇ ವರುಷ. ಮದುವೆ ವಯಸ್ಸಿಗೆ ಬಂದ ಅಕ್ಕ-ತಂಗಿಯರಿದ್ದರು. ಇಡೀ ಮನೆಯ ಜವಾಬ್ದಾರಿ ಅವನ ಹೆಗಲ ಮೇಲಿದ್ದರಿಂದ ಒಂದು ಅಂಗಡಿಯಲಿ ಅವನು ಬೀಡಿ ಕಟ್ಟುವ ಕೆಲಸಕ್ಕೆ ಸೇರಿಕೊಂಡ. ಆ ನಡುವೆ ವರ್ನಾಕುಲರ ಪೈನಲ್ ಎಕ್ಸಾಮ್ ಪಾಸ್ ಮಾಡಿಕೊಂಡ. ನಂತರ, ಐದು ವರ್ಷಗಳವರೆಗು ಮಾಡುತ್ತಾ ಬಂದ ಬೀಡಿ ಕಟ್ಟುವ ಕೆಲಸ ಬಿಟ್ಟು ದೂರದ ಹಳ್ಳಿಯ ಪ್ರಾಥಮಿಕ ಶಾಲೆಯೊಂದರಲ್ಲಿ ಶಿಕ್ಷಕನಾಗಿ ನೇಮಕಗೊಂಡ. ಸಿಕ್ಕ ಹೊಸ ನೌಕರಿಯಿಂದ ತಿಂಗಳಿಗೆ ಹದಿನೈದೇ ರೂಪಾಯಿ ಸಂಬಳ ಸಿಗುತ್ತಿತ್ತು. ಮನೆಯ ಜವಾಬ್ದಾರಿ, ಅಕ್ಕ-ತಂಗಿಯರ ಮದುವೆ ಇತ್ಯಾದಿ ಹೊಣೆಗಾರಿಕೆ ಮುಗಿಸಿ ತಾನೂ ವೈವಾಹಿಕ ಜೀವನ ಪ್ರವೇಶಿಸುವುದರ ಹೊತ್ತಿಗೆ ಅವನಿಗೆ ಮೂವತ್ತೈದರ ಹರೆಯ. ಮದುವೆಯಾದ ಹೊಸತರಲ್ಲಿ ತನ್ನ ಹೆಂಡತಿಯನ್ನು ಕರೆಯಲೆಂದು ಅತ್ತೆಯ ಮನೆಗೆ ಹೋಗಿದ್ದ. ಅವಳ ಜೊತೆ ಮಾತಾಡುತ್ತಾ, ‘ನೋಡು ಪಾರ್ವತಿ, ಎಲ್ಲರ ಬದುಕಿನಲೂ ಬರುವ ಮುಖ್ಯ ಘಟ್ಟ ತಾರುಣ್ಯಾವಸ್ಥೆ. ನಾನೀಗ ಅದನ್ನು ದಾಟಿದ್ದೇನೆ. ಬದುಕು ಬಳುವಳಿಯಾಗಿ ನೀಡಿದ ಕಷ್ಟಗಳ ಅನುಭವದ ಮೂಸೆಯಲ್ಲಿ ನನ್ನ ಕನಸುಗಳೆಲ್ಲ ಬೆಂದುಹೋಗಿವೆ. ಹೀಗಿರುವಾಗ ನನ್ನ ಜೊತೆಗೆ ನೀನು ಸಂತೋಷದಿಂದ ಬದುಕಲು ಸಾಧ್ಯವೆ’? ಎಂದು ಕೇಳಿದನು. ‘ಹಾಗೇಕೆ ಕೇಳುತ್ತೀರಿ? ನನಗೆ ನೀವೇ ಎಲ್ಲಾ. ನಿಮ್ಮನ್ನು ಬಿಟ್ಟು ನಾನು ಮಾಡುವುದೇನಿದೆ?’ ಎಂದಳು ಪಾರ್ವತಿ. ‘ಆದರೆ ನನ್ನ ಮನೆಗೆ ನಾನೇ ಹಿರಿಯ ಮಗ. ಆದ್ದರಿಂದ ಮನೆಯ ಎಲ್ಲಾ ಜವಾಬ್ದಾರಿಗಳು ನನ್ನ ಮೇಲಿವೆ. ಒಂದು ಮುಗಿಸುವುದರಲೆ ಇನ್ನೊಂದು ತಾಪತ್ರಯ ಶುರುವಾಗುತ್ತದೆ. ಈ ಸಂಸಾರದ ಜಂಜಾಟದಲಿ ನಮ್ಮನೆಯ ಸಮಸ್ಯೆಗಳಿಗೆ ತೇಪೆ ಹಚ್ಚುವುದರಲ್ಲಿಯೇ ನಿನ್ನ ಬದುಕು ಮುಗಿದು ಹೋಗುತ್ತದೆ. ನನ್ನ ಜೊತೆಗಿದ್ದರೆ ನಿನಗ್ಯಾವ ಖುಷಿಯು ಇರದು’ ಎಂದನು. ‘ನನಗೆ ತೇಪೆ ಹಚ್ಚುವುದರಲ್ಲೇನು ಬೇಸರವಿಲ್ಲ ಬಿಡಿ, ಬದುಕಿದರೆ ನಾನು ನಿಮ್ಮೊಂದಿಗೇ ಬದುಕುತ್ತೇನೆ’ ಎಂದು ಮರುನುಡಿದಿದ್ದಳಾಕೆ. + +‘ಆದರೀಗ ಆಕೆ ಎಲ್ಲಿದ್ದಾಳೆ? ತೇಪೆ ಹಚ್ಚಿ ಹಚ್ಚಿ ಅವಳಿಗೂ ದಣಿವಾಯಿತೇನೊ. ಅವಳು ಅದಕ್ಕೆ ನನ್ನ ಬಿಟ್ಟು ಹೋದಳು’ ಎಂದು ಬೇಸರ ವ್ಯಕ್ತಪಡಿಸುತ್ತಾ ತನ್ನ ಮನೆ ದೇವರ ಮುಂದೆ ದೀಪ ಹಚ್ಚಲು ಪ್ರಭಾಶಂಕರ ಕಡ್ಡಿಪೊಟ್ಟಣ ಹುಡುಕತೊಡಗಿದ. ಒಂದು ದೀಪದ ಕಡ್ಡಿಯು ಸಿಗಲಿಲ್ಲ ಅವನಿಗೆ. ಆದರೆ ಯಾವುದೊ ಒಂದು ಕಡ್ಡಿಪೊಟ್ಟಣದಲ್ಲಿ ದೀಪದ ಕಡ್ಡಿಯ ಬದಲು ಆಗಿ ಸೂಜಿ- ದಾರ ಸಿಕ್ಕಿತು. ಆಗ ಅವನು ಸೂಜಿ ದಾರವನ್ನು ಕೈಯಲ್ಲಿ ಹಿಡಿದು ಮನೆಯ ಮುಂದಿರುವ ಬೀದಿ ದೀಪದ ಬೆಳಕಲಿ, ಹರಿದ ತನ್ನ ಕೋಟಿಗೆ ತೇಪೆ ಹಚ್ಚಲು ಎಷ್ಟು ಬಟ್ಟೆ ಬೇಕಾಗಬಹುದೆಂದು ಅಳತೆ ಮಾಡಿದ. ಚಾಪೆಯ ಕೆಳಗಿಟ್ಟ ಹರಿದ ಬಟ್ಟೆಯ ಗಂಟನ್ನು ಹೊರ ತೆಗೆದು ಆ ಕೋಟಿಗೆ ಸರಿ ಹೊಂದುವ ಬಟ್ಟೆ ನೋಡಿದ. ಆದರದು ಸಿಗಲಿಲ್ಲ. ಆ ಹರಿದ ಕೋಟಿನ ತೋಳಿಗೆ ತೇಪೆ ಹಚ್ಚಲು ಒಂದೇ ತರದ ಬಟ್ಟೆ ಹುಡುಕುವುದಾದರು ಹೇಗೆ? + + + +ಹೇಗೊ, ಒಂದು ಬಟ್ಟೆ ತುಂಡು ಸಿಕ್ಕಿತು. ಅದನ್ನು ತೆಗೆದುಕೊಂಡು ಮನೆಯ ಮುಂದೆ ಬಿದ್ದ ಬೀದಿ ದೀಪದ ಬೆಳಕಿನೆಡೆ ನಡೆದ. ಆ ಮಬ್ಬುಗತ್ತಲಿಗೋ, ದೇಹಕೆ ಮುಪ್ಪಡರಿದ ಕಾರಣವೊ ಸೂಜಿಗೆ ದಾರ ಪೋಣಿಸುವ ಸತತ ಪ್ರಯತ್ನದಲಿ ಪ್ರಭಾಶಂಕರ ಸೋತು ಹೋದ. ಅಲ್ಲಿಯೆ ಗೋಡೆಯ ಮೇಲೆ ಅಂಟಿಸಿರುವ ಪ್ಲಾಸ್ಟರ್ ಕೀಳುತ್ತಾ ನಿಂತಿದ್ದ ಹುಡುಗನೊಬ್ಬ, ಸೂಜಿಗೆ ದಾರ ಪೋಣಿಸಲು ಪ್ರಯತ್ನಿಸುತ್ತಲೇ ಇರುವ ಪ್ರಭಾಶಂಕರನನ್ನು ಗಮನಿಸಿದ. ಹಾಗೂ ಕುತೂಹಲದಿಂದ ಇವನೆಡೆ ಬಂದ. ಪ್ರಭಾಶಂಕರ ಅವನನ್ನು ನೋಡಿ, ‘ಮಗಾ ನೀನ್ಯಾರು? ಆ ದಯಾಶಂಕರನ ಮಗ, ಮನು ಅಲ್ಲವೆ ನೀನು?’ ಎಂದು ಕೇಳಿದ. ‘ಹೌದು, ಅಜ್ಜ’ ಎಂದು ಆ ಹುಡುಗ ನೀಡಿದ ಗೌರವಪೂರ್ಣ ಪ್ರತಿಕ್ರಿಯೆಗೆ ಖುಷಿ ಪಟ್ಟ. ‘ತಮ್ಮಾ, ಈ ಸೂಜಿಯಲ್ಲಿ ಸ್ವಲ್ಪ ದಾರ ಪೋಣಿಸಿ ಕೊಡುವೆಯಾ?’ ಎಂದು ಕೇಳಿದ. ‘ಆಯ್ತು ಅಜ್ಜ, ಪೋಣಿಸಿ ಕೊಡುತ್ತೇನೆ. ಆದರೆ ನನದೊಂದು ಶರತ್ತು. ನಾನ್ ಈ ಕೆಲಸ ಮಾಡಿದರೆ ನೀನು ನನಗೊಂದು ಕಥೆ ಹೇಳಬೇಕು’ ಎಂದು ಕೇಳಿದ. ಆಗ ಪ್ರಭಾಶಂಕರ ಮುಗುಳ್ನಗುತ, ‘ನಿಮ್ಮ ಅಜ್ಜಿಗೆ ಕಥೆ ಹೇಳಲು ಬರುತ್ತಿತ್ತು. ನನಗೆ……..’ ಎನ್ನುವುದರಲ್ಲೆ ಮದ್ಯ ಪ್ರವೇಶಿಸಿದ. ‘ಅಜ್ಜ ನೆಪ ಹೇಳಬೇಡ. ಅಜ್ಜಿ ನಿನಗೆ ಹಲವಾರು ಕಥೆಗಳನ್ನು ಹೇಳಿರಬೇಕಲ್ಲವೆ? ಅದರಲ್ಲಿ ಯಾವುದಾದರು ಒಂದನ್ನು ನನಗೆ ಹೇಳು ಪ್ಲೀಜ್’ ಅಂದ. ‘ಆಯ್ತು, ನೀನು ದಾರ ಪೋಣಿಸಿ ಕೊಡು, ನಾನು ಕಥೆ ಹೇಳುತ್ತೇನೆ’ ಎಂದು ಒಪ್ಪಿಕೊಂಡ. ಆ ಹುಡುಗ ಸೂಜಿಯಲ್ಲಿ ದಾರ ಪೋಣಿಸಿ ಕೊಟ್ಟ. ಪ್ರಭಾಶಂಕರ ಕಥೆ ಹೇಳಲು ಶುರು ಮಾಡಿದ. + +‘ಬಹಳ ವರ್ಷಗಳ ಹಿಂದೆ’…………..ಎಂದವನು ಕಥೆ ಶುರು ಮಾಡಿದ ಕೂಡಲೆ ಅವನನ್ನು ತಡೆದ ಮನು, ‘ನೂರು ವರ್ಷಗಳ ಹಿಂದೆಯೆ’? ಎಂದು ಪ್ರಶ್ನಿಸಿದ. ಅದಕ್ಕವನು, ‘ಇಲ್ಲ, ಇದು ಸಾವಿರ ವರುಷಗಳ ಹಿಂದಿನ ಕಥೆ ಎನ್ನುತಾ ಕಥೆ ಮುಂದುವರೆಸಿದ: ‘ಒಂದೂರಿನಲ್ಲಿ ಒಬ್ಬ ರಾಜನಿದ್ದ. ಅವನಿಗೆ ಚಿರಾಯು ಎಂಬ ಒಬ್ಬನೆ ಒಬ್ಬ ಮಗನಿದ್ದ. ಅವನು ಬಹಳ ಸುಂದರವಾಗಿದ್ದ. ನೋಡಿದವರೆಲ್ಲ ಪ್ರೀತಿಸುವಷ್ಟು ಮುದ್ದಾಗಿದ್ದ. ಅವನು ಬೆಳೆದಂತೆ ಅವನ ಸೌಂದರ್ಯವೂ ಇಮ್ಮಡಿಯಾಗುತ್ತಿತ್ತು. ಆದರೆ ಅವನನ್ನು ನೋಡಿದಾಗಲೆಲ್ಲ ರಾಜ- ರಾಣಿಯರ ದುಃಖ ಉಮ್ಮಳಿಸಿ ಕಣ್ಣಿರು ಹಾಕುತ್ತಿದ್ದರು’ ಎಂದೊಡನೆ ‘ಇದೆಂಥಾ ವಿಚಿತ್ರ? ಅವನಷ್ಟು ಸುಂದರವಾಗಿದ್ದರೂ ಅವನನ್ನು ನೋಡಿದಾಗಲೆಲ್ಲ ಖುಷಿಪಡುವುದ ಬಿಟ್ಟು ರಾಜ ರಾಣಿಯರು ಏಕೆ ಅಳುತ್ತಿದ್ದರು’ ಎಂದು ಮನು ಕೇಳಿದ. + +‘ಹೌದು ತಮ್ಮ, ಅವನು ಬಹಳ ಸುಂದರವಿದ್ದುದರಿಂದಲೆ ಅವರು ಚಿಂತಿಸತೊಡಗಿದ್ದರು. ಕಾಲ ಕಳೆದಂತೆ ಅವನ ಸೌಂದರ್ಯವೂ ಮಾಸಿ ಹೋಗುತ್ತದೆ ಎನ್ನುವ ಕಾರಣಕ್ಕೆ ಅವರು ಚಿಂತಿಸತೊಡಗಿದ್ದರು. ರಾಜಕುಮಾರ ಹದಿನಾರರ ಹೊಸ್ತಿಲಲಿ ಕಾಲಿಟ್ಟಾಗ ಇಡಿ ರಾಜ್ಯವೇ ಸಂಭ್ರಮಿಸಿತು. ಅದೆ ಹೊತ್ತಿಗೆ ಅವರ ರಾಜ್ಯಕ್ಕೆ ಪವಾಡ ಪುರುಷ ಸಾಧು ಒಬ್ಬ ಬಂದಿದ್ದಾನೆಂದು, ಆತ ನಗರದ ಹೊರಗಿರುವ ಆಲದ ಮರದ ಕೆಳಗೆ ತಂಗಿದ್ದಾನೆಂಬ ಸುದ್ದಿ ರಾಜನಿಗೆ ತಲುಪಿತು. ಆಗ, ರಾಜ- ರಾಣಿ ಆ ಪವಾಡ ಪುರುಷನನ್ನು ಭೇಟಿಯಾಗಲು ನಿರ್ಧರಿಸಿದರು. ಅವನನ್ನು ಬೇಟಿಯಾದ ಅವರು ಬಂಗಾರದ ತಟ್ಟೆಯಲ್ಲಿ ಹಣ್ಣು ಹಂಪಲುಗಳನ್ನು ಅರ್ಪಿಸುತಾ, ‘ಮಹಾರಾಜರೆ, ದಯವಿಟ್ಟು ನಮ್ಮದೊಂದು ಆಸೆಯನ್ನು ನೆರವೇರಿಸುವಿರಾ?’ ಎಂದು ವಿನಂತಿಸಿದರು. ‘ಹೇಳಿ ಏನಾಗಬೇಕಾಗಿತ್ತು’ ಎಂದು ಸಾಧು ಕೇಳಿದ. ‘ನಮ್ಮ ರಾಜಕುಮಾರ ನಮಗಿರುವ ಒಬ್ಬನೆ ಮಗ. ಅವನಿಗೆ ಈಗಿರುವಷ್ಟೆ ಯವ್ವನ ಮತ್ತು ಆಕರ್ಷಣೆ ಯಾವಾಗಲು ಇರಬೇಕು’ ಎಂದವರು ಕೇಳಿಕೊಂಡರು. ‘ಆಗಲಿ. ನೀವು ಹೇಳಿದಂತೆ ಮಾಡಬಹುದು ಆದರೆ ಇದರ ಕುರಿತು ಇನ್ನೊಮ್ಮೆ ವಿಚಾರಿಸಿ’ ಎಂದ ಸಾಧು. ‘ನಾವು ದಿನವಿಡೀ ಇದರ ಕುರಿತೆ ವಿಚಾರ ಮಾಡುತ್ತೇವೆ. ಇದರ ಬಗ್ಗೆ ಇನ್ನೊಮ್ಮೆ ವಿಚಾರ ಮಾಡುವಂತದೇನು ಇಲ್ಲ’ ಎಂದರು. ‘ಆಯ್ತು, ನಿಮ್ಮಿಚ್ಚೆಯಂತೆ ಮಾಡುವೆ’ ಎಂದ ಸಾಧು, ‘ನಾನೀಗ ನಿಮ್ಮ ಮಗನಿಗೆ ಒಂದು ಮಂತ್ರ ಶಕ್ತಿ ಇರುವ ರೇಶಿಮೆ ಉಡುಪು ಕೊಡುತ್ತೇನೆ. ಇದನ್ನು ಅವನಿಗೆ ತೊಡಿಸಿ. ಆದರೆ ಅವನು ಇದನ್ನು ಯಾವುದೇ ಕಾರಣಕ್ಕೂ ತೆಗೆಯಬಾರದು. ಆ ರೇಶಿಮೆ ಅಂಗಿ ಅವನ ಮೈ ಮೇಲೆ ಇರುವವರೆಗೂ ಅವನ ಮೇಲೆ ಕಾಲ ಯಾವ ಪರಿಣಾಮನ್ನೂ ಬೀರುವುದಿಲ್ಲ. ಅವನಿಗೆ ವಯಸ್ಸೂ ಆಗುವುದಿಲ್ಲ, ಸೌಂದರ್ಯವೂ ನಶಿಸುವುದಿಲ್ಲ’ ಎಂದನು. ರಾಜ- ರಾಣಿಯರಿಗಾದ ಸಂತೋಷ ಇಮ್ಮಡಿಗೊಂಡು ಅವರು ಮತ್ತೆ ಆ ಪವಾಡ ಪುರುಷನಿಗೆ ನಮಸ್ಕರಿಸಿದರು. + +ಆಗ ಸಾಧು ತನ್ನ ಮಾತು ಮುಂದುವರಿಸುತ್ತಾ, ‘ಆದರೆ ಒಂದು ಶರತ್ತು, ನಿಮ್ಮ ಮಗ ಈ ಅಂಗಿಯನ್ನು ಧರಿಸಿದ ನಂತರ ನೀವು ಅವನ ಬಗೆಗೆ ಒಂದು ಸ್ವಲ್ಪವು ಕೆಟ್ಟ ಯೋಚನೆ ಮಾಡಬಾರದು. ನೀವು ಹಾಗೇನಾದರೂ ಅವನ ಬಗ್ಗೆ ಕೆಟ್ಟದಾಗಿ ಯೋಚನೆ ಮಾಡಿದ್ದಾದರೆ ತಕ್ಷಣ ಆ ಅಂಗಿಯ ಮೇಲೊಂದು ತೂತು ಬೀಳುತ್ತದೆ. ಅದು ಕ್ರಮೇಣ ದೊಡ್ಡದಾಗುತ್ತಲೇ ಸಾಗುತ್ತದೆ’ ಎಂದು ಹೇಳಿದ. ಸಾಧುವಿನ ಮಾತು ಕೇಳಿದ ರಾಜ- ರಾಣಿ ಕಳವಳಗೊಂಡರು. ‘ನಾವು ನಮ್ಮ ಮಗನನ್ನು ತುಂಬಾ ಪ್ರೀತಿಸುತ್ತೇವೆ. ಹಾಗಾಗಿ ಅವನ ಕುರಿತು ಕೆಟ್ಟ ವಿಚಾರ ಮಾಡುವ ಕಲ್ಪನೆ ಕೂಡ ಮಾಡಲು ಸಾಧ್ಯವಿಲ್ಲ’ ಎಂದ ರಾಜ, ಮಾತು ಮುಗಿಸುವ ಮುನ್ನವೆ, ರಾಣಿ ಮಧ್ಯ ಪ್ರವೇಶಿಸಿ, ‘ಅಕಸ್ಮಾತ್ ಹಾಗೇನಾದರು ಆದರೆ ಆ ಅಂಗಿಗೆ ತೇಪೆ ಹಚ್ಚಬಹುದೇ?’ ಎಂದು ಕೇಳಿದಳು. ‘ತೇಪೆ ಹಚ್ಚಬಹುದು. ಆದರೆ ಅದು ತುಂಬಾ ಕಷ್ಟದ ಕೆಲಸ’ ಎಂದು ಸಾಧು ಹೇಳುವುದರಲ್ಲಿಯೆ, ‘ಕಷ್ಟ ಏಕೆ?’ ಎಂದು ಆ ದಂಪತಿಗಳು ಕೇಳಿದರು. ಅದಕ್ಕೆ ‘ತೇಪೆ ಹಚ್ಚಲು ಒಪ್ಪಿಕೊಂಡವರು ಆ ಅಂಗಿಗೆ ಎಷ್ಟು ಹೊಲಿಗೆಗಳನ್ನು ಹಾಕುತ್ತಾರೊ ಅಷ್ಟೆ ಸಂಖ್ಯೆಯಲ್ಲಿ ಅವರ ಜೀವಿತಾವಧಿಯ ವರುಷಗಳನ್ನವರು ಸಮರ್ಪಿಸಬೇಕು. ಅಷ್ಟೇ ಅಲ್ಲದೆ ಅವರು ತಮ್ಮ ಆ ಜೀವಿತಾವಧಿಯಲ್ಲಿ ಯಾವ ಪಾಪದ ಕೆಲಸಗಳನ್ನು ಮಾಡಿರಬಾರದು’ ಎಂದನು ಸಾಧು. ಸಾಧುವಿನ ಮಾತು ಕೇಳಿ ಒಂದು ಕ್ಷಣ ಮೌನಕೆ ಶರಣಾದ ರಾಜ- ರಾಣಿ ಅರೆಗಳಿಗೆಯಲಿ ಮೌನ ಮುರಿದು, ‘ಹಾಗೇ ಆಗಲಿ; ಈ ಶರತ್ತುಗಳಿಗೆ ನಮ್ಮ ಒಪ್ಪಿಗೆ ಇದೆ’ ಎಂದರು. ‘ಇದರ ಕುರಿತು ಇನ್ನೊಮ್ಮೆ ಯೋಚಿಸಿ. ಆ ಅಂಗಿಯ ಮೇಲೆ ತೂತು ಬಿದ್ದ ಕ್ಷಣವೆ, ಈ ಮಾಂತ್ರಿಕ ರೇಶಿಮೆ ಅಂಗಿ ಅಷ್ಟು ವರ್ಷಗಳವರೆಗೆ ತಡೆ ಹಿಡಿದ ಕಾಲದ ಪ್ರಭಾವ ಒಮ್ಮೆಲೆ ನಿಮ್ಮ ಮಗನ ಶರೀರದ ಮೇಲೆ ಗೋಚರಿಸುತ್ತದೆ. ಆ ಅಂಗಿಗೆ ತೇಪೆ ಹಚ್ಚುವವರೆಗೂ ಅವನಲ್ಲಿ ಶಾರೀರಿಕ ದೌರ್ಬಲ್ಯ ಹೆಚ್ಚಾಗುತ್ತಾ ಹೋಗುತ್ತದೆ. ಒಟ್ಟಾರೆ ಆ ರೇಶಿಮೆಯ ಅಂಗಿ ಅವನ ಮೈಮೇಲಿರುವವರೆಗೂ ಅವನಿಗೆ ಸಾವಿನ ಭಯವಿಲ್ಲ’. ಸಾಧುವಿನ ಯಾವ ಮಾತೂ ಕೇಳುವ ಒಲವನ್ನು ಅವರು ತೋರದೆ ಆ ಅಂಗಿಯನ್ನು ಕೊಡಬೇಕೆಂದು ಕೇಳಿಕೊಂಡರು. ಆಗ ಸಾಧು ಆ ಅಂಗಿಯ ನಟ್ಟ ನಡುವೆ ಸ್ವಸ್ತಿಕ್ ಚಿಹ್ನೆ ಬರೆದು ಅವರಿಗೆ ಕೊಟ್ಟ. ಆ ಮಾಂತ್ರಿಕ ರೆಶಿಮೆಯ ಅಂಗಿ ಪಡೆದ ರಾಜ- ರಾಣಿ ಸಂತೋಷದಿಂದ ಅರಮನೆಯತ್ತ ಹೆಜ್ಜೆ ಹಾಕಿದರು. ಮರುದಿನವೆ ಅವರು ಏರ್ಪಡಿಸಿದ ಒಂದು ದೊಡ್ಡ ದರ್ಬಾರಿನಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜಕುಮಾರ ಆ ರೇಶಿಮೆಯ ಅಂಗಿ ತೊಟ್ಟು ಆಡಂಬರ ಮತ್ತು ವೈಭವದಿಂದ ವಿಜೃಂಭಿಸಿದ’. + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +‘ಮುಂದೇನಾಯ್ತು’ ಎಂದು ಮನು ಕುತೂಹಲದಿಂದ ಕೇಳಿದೊಡನೆ ಪ್ರಭಾಶಂಕರ ಕಥೆ ಮುಂದುವರೆಸಿದ; ‘ಕಾಲ ಕಳೆದಂತೆ ರಾಜ- ರಾಣಿ ವೃದ್ಯಾಪಕ್ಕೆ ಕಾಲಿಟ್ಟರು. ಚಿರಾಯು ಮಾತ್ರ ತನ್ನ ಸೌಂದರ್ಯ ತುಂಬಿದ ಯೌವನದ ದಿನಗಳನ್ನು ಖುಷಿಯಿಂದ ಕಳೆಯತೊಡಗಿದ. ಅವನು ಮದುವೆ ಮಾಡಿಕೊಂಡ. ಅವನ ಹೆಂಡತಿಗೆ ಸ್ವಲ್ಪ ವಯಸ್ಸಾದಾಗ ಅವಳನ್ನು ಬಿಟ್ಟು ಬೇರೆಯವಳನ್ನು ಮದುವೆಯಾಗುತ್ತಾ ಅನುಭವಿಸಿದ ಅವನ ಖುಷಿಗೆ ಕೊನೆಯೇ ಇರಲಿಲ್ಲ. + +ಒಂದು ದಿನ ರಾಜ- ರಾಣಿ ಬಾಲ್ಕನಿಯಲ್ಲಿ ಕುಳಿತು ಹರಟೆಯಲಿ ತೊಡಗಿದಾಗ ಯಾವುದೋ ಹೆಣ್ಣುಮಗಳು ಅಳುವ ದನಿ ಕೇಳಿದರು. ಅವಳು ಚಿರಾಯುವನ್ನು ಮದುವೆಯಾದ ರಾಜಕುಮಾರಿಯರಲ್ಲಿ ಒಬ್ಬಳಾಗಿದ್ದಳು ಎಂದು ತಿಳಿದೊಡನೆ ಬೇಸರ ವ್ಯಕ್ತಪಡಿಸಿದರು. ಆ ರಾಜಕುಮಾರಿಗೆ ಸ್ವಲ್ಪ ವಯಸ್ಸಾದ ಕಾರಣ ರಾಜಕುಮಾರ ಅವಳನ್ನು ಬಿಟ್ಟು ಬೇರೆಯವಳನ್ನು ಮದುವೆಯಾಗಿದ್ದ. ಅವಳ ದುಃಖಕೆ ಕಾರಣ ತಿಳಿದ ರಾಜ ಅವಳನ್ನು ಸಮಾಧಾನ ಮಾಡಲು ಪ್ರಯತ್ನಿಸಿದ. ಆದರವಳು ವ್ಯಥೆಯಿಂದ ತನ್ನ ನಾಲಿಗೆ ಕಡಿದುಕೊಂಡು ಸತ್ತು ಹೋದಳು. ‘ಇದನ್ನೆಲ್ಲಾ ನೋಡುವುದರ ಬದಲು ಚಿರಾಯುಗೆ ಆ ರೇಶಿಮೆ ಅಂಗಿ ತಂದು ಕೊಡದಿದ್ದರೆ ಚೆನ್ನಾಗಿತ್ತು’ ಎಂದು ವೇದನೆಯಿಂದ ನುಡಿದರು ರಾಜ- ರಾಣಿ. ಆ ಸಾಧು ಭವಿಷ್ಯ ನುಡಿದಂತೆ ಮುಂದೊಂದು ದಿನ ರಾಜಕುಮಾರನ ರೇಶಿಮೆಯ ಅಂಗಿಯ ಮೇಲೆ ತೂತು ಕಾಣಿಸಿಕೊಂಡಿತು. ಆಗ ಅವನ ಶರೀರದೆಲ್ಲೆಡೆ ನೆರಿಗೆಗಟ್ಟಿ ಜೋತುಬಿದ್ದ ಚರ್ಮ ಮತ್ತು ರಕ್ತಸ್ರಾವ ಕಾಣಿಸಿಕೊಂಡಿತು. ಅವನ ಆ ಭಯಂಕರ ದೇಹಸ್ಥಿತಿಯಿಂದಾಗಿ, ಅವನನ್ನು ಕಂಡ ಜನ ಮುಖ ತಿರುಗಿಸಿ ಓಡತೊಡಗಿದರು. ಇದರಿಂದ ದಿಗ್ಭ್ರಾಂತನಾದ ರಾಜಕುಮಾರ ರಾಜ- ರಾಣಿಯರ ಹತ್ತಿರ ಓಡಿ ಬಂದು ಅಳತೊಡಗಿದ. ‘ದಯವಿಟ್ಟು ನನ್ನನ್ನು ರಕ್ಷಿಸಿ, ಇದರಿಂದ ನನ್ನನ್ನು ರಕ್ಷಿಸಿ’ ಎಂದು ಗೋಗರೆದ. ಮಗನ ಆ ದುರ್ಬಲ ಪರಿಸ್ಥಿತಿ ಕಂಡು ರಾಣಿಯ ದುಃಖ ಹೆಚ್ಚಿತು. ಆಗ ಅವಳೂ ಅಳುತ್ತ ತಾನೇ ಅವನ ಅಂಗಿಗೆ ತೇಪೆ ಹಚ್ಚಲು ಮುನ್ನಡೆದಳು. ಆದರೆ ರಾಜ- ರಾಣಿಯರೂ ಒಂದಿಲ್ಲೊಂದು ಪಾಪದ ಕೆಲಸ ಮಾಡಿದ್ದಕ್ಕೊ ಏನೊ, ಒಂದೂ ಹೊಲಿಗೆ ಕೂಡಲಿಲ್ಲ. ರಾಜಕುಮಾರನ ಆ ಹರಿದ ಅಂಗಿಗೆ ತೇಪೆ ಹಚ್ಚುವಲ್ಲಿ ಅರಮನೆಯ ಆಸ್ಥಾನಿಕರೂ ಪ್ರಯತ್ನಿಸಿ ಸೋತರು. ದಿನೆ ದಿನೆ ಅಂಗಿಗೆ ಬಿದ್ದ ಆ ತೂತು ದೊಡ್ಡದಾಗತೊಡಗಿತು. ಅದಕ್ಕೆ ತೇಪೆ ಹಚ್ಚಲು ಒಂದೂ ಕುಂದು ಕೊರತೆಯಿರದ ಮನುಷ್ಯರಾದರು ಎಲ್ಲಿದ್ದಾರೆ? ತಮ್ಮ ಮಗನ ಆ ಭಯಂಕರ ದೇಹ, ಅವನ ವ್ಯಥೆ ನೋಡಲಾಗದೆ ವೇದನೆಯಿಂದ ನರಳಿದ ರಾಜ-ರಾಣಿ ಒಂದು ದಿನ ತೀರಿ ಹೋದರು. ಮುಂದೊಂದು ದಿನ ಚಿರಾಯುವೂ ಮರಣ ಹೊಂದಿದ’. + + + +ಅತ್ಯಂತ ಆಸಕ್ತಿಯಿಂದ ಕಥೆ ಕೇಳಿದ ಮನು, ಪ್ರಭಾಶಂಕರನನ್ನೆ ದಿಟ್ಟಿಸುತ್ತಾ ಗಂಭಿರನಾಗಿ ಕೇಳಿದ, ‘ಅವನ್ಯಾಕೆ ಆ ಅಂಗಿಯನ್ನು ತೆಗೆದು ಚೆಲ್ಲಲಿಲ್ಲ’? ಎಂದು. ‘ಅವನ ಅಂಗಿಗೆ ತೇಪೆ ಹಚ್ಚಲು ಯಾರಾದರು ಸಿಗಬಹುದೇನೋ ಎಂಬ ನಿರೀಕ್ಷೆಯಿಂದಲೂ ಮತ್ತೆ ಅದೆ ಯೌವನ ಪಡೆಯಬೇಕೆಂಬ ಆಸೆಯಿಂದಲೂ ಅವನು ಆ ಅಂಗಿ ತೆಗೆದು ಚೆಲ್ಲಿರಲಿಕ್ಕಿಲ್ಲ’ ಎಂದ ಪ್ರಭಾಶಂಕರ. ‘ಕೆಲವೊಂದು ಸಲ ಈ ಕತ್ತಲೆಯ ರಾತ್ರಿಯಲಿ, ಹರಿದ ಬಟ್ಟೆ ತೊಟ್ಟ ವಯೋವೃದ್ಧನೊಬ್ಬ ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಡುತಾ, ಮನೆ ಮನೆಗೆ ಹೋಗಿ ‘ಇದಕ್ಕೆ ತೇಪೆ ಹಚ್ಚಿಕೊಡುವಿರಾ’? ಎಂದು ಕೇಳುತ್ತಾನಂತೆ. ಸ್ವಲ್ಪ ಹೊತ್ತು ಅವರ ಮನೆಗಳ ಮುಂದೆ ಕಾಯ್ದು, ಆ ಜನರಿಂದ ಮರು ಉತ್ತರ ಬರದಿದ್ದಾಗ ಅಲ್ಲಿಂದ ಹೊರಟು ಹೋಗುತ್ತಾನೆ ಎಂದು ಜನರು ಹೇಳುತ್ತಾರೆ’ ಎಂದ ಪ್ರಭಾಶಂಕರ. ಕೊನೆಗೆ ಹೇಳಿದ ಆ ಮಾತುಗಳ ಬಗೆಗೆ ಯೋಚಿಸುತ್ತಲೆ ಮನು ಮೌನವಾಗುತ್ತಾನೆ. ತಕ್ಷಣವೆ, ತಲೆಯಲಿ ಯಾವುದೆ ವಿಚಾರ ಹೊಳೆದಂತಾಗಿ, ಕಣ್ಣಗಲ ಮಾಡಿ ಹೇಳುತ್ತಾನೆ, ‘ಅಜ್ಜಾ, ನೀನು ಈ ರಾತ್ರಿ ಇದೇ ಈ ಮೆಟ್ಟಿಲುಗಳ ಮೇಲೆ ನಿದ್ದೆ ಮಾಡದೆ ಹಾಗೆ ಕುಳಿತಿರು. ಏಕೆಂದರೆ ಅವನು ಇಲ್ಲಿ ಬಂದರು ಬರಬಹುದು. ಒಂದು ವೇಳೆ, ಇಂದು ನೀನವನನ್ನು ಕಂಡರೆ ದಯವಿಟ್ಟು ನನ್ನನ್ನು ಕರೆ. ನಾವಿಬ್ಬರು ಸೇರಿ ಅವನ ಮೈಮೇಲಿನ ಆ ಅಂಗಿಯನ್ನು ಕಿತ್ತೊಗೆಯೋಣ. ಆಗಲಾದರೂ ತೇಪೆಗಾಗಿ ಅವನ ಅಲೆದಾಟ ತಪ್ಪಬಹುದು’. + +ಮನು ಹೇಳಿದ ಮಾತು ಕೇಳಿದ ಪ್ರಭಾಶಂಕರ, ‘ಆಯ್ತು ಹಾಗೆ ಮಾಡೋಣ’ ಎಂದುತ್ತರಿಸಿದ. ನಂತರ, ಮನು ನಿರಾಳ ಭಾವದಿಂದ ಮನೆಯೆಡೆಗೆ ನಡೆದ. ಸ್ವಲ್ಪ ಹೊತ್ತು ಅಲ್ಲಿಯೇ ಕುಳಿತು ಪ್ರಭಾಶಂಕರ ತನ್ನ ಹರಿದ ಕೋಟಿಗೆ ತೇಪೆ ಹಚ್ಚತೊಡಗಿದ. ಆ ಕ್ಷಣ, ಸೂಜಿ ಅವನ ಬೆರಳೊಳಗೆ ಆಳವಾಗಿ ತೂರಿಕೊಂಡಿತು. ಆಗವನು, ಸ್ಸ್ ಎನ್ನತಾ ಬೆರಳಿಗೆ ಚುಚ್ಚಿದ ಸೂಜಿ ದಾರ ಕೈಯಲ್ಲಿ ಹಿಡಿದು ಮನೆಯ ಮುಂಭಾಗದಲಿ ಆವರಿಸಿದ ಕತ್ತಲಲಿ ಅದೃಶ್ಯನಾದ. + + + +ಕವಯಿತ್ರಿ, ಕಥೆಗಾರ್ತಿ ಮತ್ತು ಅನುವಾದಕಿ. ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾನಿಲಯದ ಆಂಗ್ಲ ಭಾಷಾ ವಿಭಾಗದಲ್ಲಿ ಸಂಶೋಧನೆ ನಡೆಸುತ್ತಿದ್ದಾರೆ. ‘ ಈ ಹೂವ ಹೆಸರು ನಿಮ್ಮಿಚ್ಚೆಯಂತೆ’ ಇವರ ಕವಿತಾ ಸಂಕಲನದ ಹೆಸರು. \ No newline at end of file diff --git a/Kenda Sampige/article_483.txt b/Kenda Sampige/article_483.txt new file mode 100644 index 0000000000000000000000000000000000000000..d2988bbfc83989e4162c1f3e61f6434d768cea2d --- /dev/null +++ b/Kenda Sampige/article_483.txt @@ -0,0 +1,93 @@ + + +ಅಂದೂ ಲಿಪಿ ಬಸ್ಸಿನಲ್ಲಿ ಆಫೀಸಿಗೆ ಹೋಗುತ್ತಿದ್ದಳು. ಬೆಂಗಳೂರಿನ ವೋಲ್ವೋ ಬಸ್ಸಿನಲ್ಲಿ ಒಂದು ಲ್ಯಾಪ್ಟಾಪ್ ಬ್ಯಾಗ್, ಐಡಿ ಕಾರ್ಡ್, ಅಲ್ಲೇನೋ ಫೇಸ್ ಬುಕ್ಕಿನಲ್ಲಿ ಅವಳ ಕಾಲಂಗೆ ಬಂದಿರುವ ಪ್ರತಿಕ್ರಿಯೆಯನ್ನ ನೋಡುತ್ತಾ ಎಂದಿನಂತೆ ಸಾಗುತ್ತಿದ್ದಳು ಲಿಪಿ. ಸಿಲ್ಕ್ ಬೋರ್ಡಿನ ಟ್ರಾಫಿಕ್ ನಿಂದ ಅವಳ ಕಾಲಂ ಹುಟ್ಟುಕೊಂಡಿತ್ತು. ದಿನಾ 2 ಘಂಟೆ ಪ್ರಯಾಣ ಮಾಡಬೇಕಾದುದರಿಂದಲೋ ಏನೋ ಅವಳು ಬರೆಯೋದಕ್ಕೆ ಶುರು ಮಾಡಿದಳು. ಮೊದಮೊದಲು ಯಾರೂ ಅವಳ ಬರಹಗಳನ್ನ ಗಮನಿಸುತ್ತಿರಲಿಲ್ಲ. ನಂತರ ದಿಜಿ ಪ್ಲಾಟ್ ಫಾರ್ಮ್ ಒಂದು ಅವಳ ಲೇಖನವನ್ನ ಪ್ರತಿ ವಾರ ಪ್ರಕಟಿಸಲು ಶುರುಮಾಡಿತ್ತು. ಹೀಗೆ ಒಂದು ವರ್ಷದಿಂದ ಪ್ರತಿ ವಾರ ಬರೆಯುತ್ತಾ ಬರಹಕ್ಕಿಂತ ಅತಿ ಸುಖ ಮತ್ತೊಂದಿಲ್ಲ ಎಂದು ನಂಬಿದ್ದಳು ಲಿಪಿ. ಸೋಮವಾರದಿಂದ ಶುಕ್ರವಾರ ಕೋಡ್ ಬರೆಯೋದು, ಶನಿವಾರ ಭಾನುವಾರ ಕಥೆ ಬರೆಯೋದು. ವಾರಾಂತ್ಯದ ಪುಸ್ತಕ ಓದು, ಬರಹ ಅವೇ ಅವಳಿಗೆ ಇಷ್ಟ. + +ಲಿಪಿ ಖುಷಿಯಾಗಿದ್ದಳು. ಕವನ ಅವಳ ಪ್ರಿಯವಾದ ಓದು. ಬರೆಯೋದಕ್ಕೆ ಪ್ರಯತ್ನ ಪಟ್ಟವಳಿಗೆ ಅದು ಗದ್ಯವೆಂದೇ ಅನ್ನಿಸುತ್ತಿತ್ತು. ಹಂಗೂ ಏನೇನೋ ಬರೆಯೋಳು. ಇವಳ ಲವಲವಿಕೆಯಿಂದ, ಜೀವಂತಿಕೆಯಿಂದ ಅಂಕಣ ಚೆನ್ನಾಗಿ ಹೋಗುತ್ತಿತ್ತು. ಒಂದಿಬ್ಬರು ಬಂದು ಗುರುತೂ ಹಿಡಿಯುತ್ತಿದ್ದರು. ಇವಿಷ್ಟು ಅವಳ ಆಫೀಸಿನ ಗೇಟ್ ಆಚೆಯೇ. ಆಫೀಸಿನ ಒಳಗೆ ಬಂದರೆ ಅವಳ್ಯಾರೋ 800ರಲ್ಲಿ ಒಬ್ಬಳಾಗಿದ್ದಳು. ಒಟ್ಟಿನಲ್ಲಿ ಲಿಪಿ ಖುಷಿಯ ಹುಡುಗಿ. ಫೇಸ್ ಬುಕ್ಕಿನಲ್ಲಿ ಎಲ್ಲಾ ಪದ್ಯ ಪೇಜ್ ಗಳನ್ನ ಫಾಲೋ ಮಾಡುತ್ತಿದ್ದಳು. ಆಗಾಗ ಬರೆದರೂ ರಿಜೆಕ್ಟ್ ಆಗುತ್ತಿತ್ತು. ಹೀಗೆ ಅವಳ ಫೇವರೆಟ್ ಕವಿ ಆರವನ ಕವನಗಳನ್ನ ಹುಚ್ಚು ಹುಚ್ಚಾಗಿ ಓದುತ್ತಿದ್ದಳು. ಅವಳ ಲೇಖನ ಬರುವ ದಿವಸವೇ ಅವನ ಕವನವೂ ಮತ್ತೆಲ್ಲೋ ಪ್ರಕಟವಾಗುತ್ತಿತ್ತು. ಒಟ್ಟಿನಲ್ಲಿ ಇಬ್ಬರೂ ಕನ್ನಡದಲ್ಲಿ ಬರೆಯುವ ಯುವ ಪ್ರತಿಭೆಗಳಾಗಿದ್ದರು. + + + +ಲಿಪಿ ಇಷ್ಟಪಟ್ಟವರನ್ನ ಬಹಳ ಆಸ್ಥೆಯಿಂದ ಗಮನಿಸುತ್ತಿದ್ದ ಹುಡುಗಿ. ಇಬ್ಬರೂ ಫೇಸ್ ಬುಕ್ಕಿನಲ್ಲಿ ಸ್ನೇಹಿತರೆ, ಈಗಿನ ಕಾಲದಲ್ಲಿ ಫೇಸ್ ಬುಕ್ಕಿನಲ್ಲಿನ ಸ್ನೇಹಿತರು ಅಸಲಿಗೆ ಸಿಕ್ಕೇ ಇರೋಲ್ಲ, ಆದರೂ ಇಬ್ಬರಿಗೂ ತುಂಬಾ ಸಮಾನ ಅಭಿರುಚಿ ಇರುವ ಕಾರಣ ಸ್ನೇಹಿತರಾಗುತ್ತಾರೆ. ಇದು ಲಿಪಿ ಮತ್ತು ಆರವ್ ರ ವಿಚಾರದಲ್ಲೂ ಸತ್ಯವಾಗಿತ್ತು. ಅವನೆಲ್ಲೋ ಆಸ್ಟ್ರೇಲಿಯಾದಲ್ಲಿದ್ದ, ಇವಳು ಅಮೇರಿಕಾದಲ್ಲಿದ್ದಳು. ಈಗ ಇಬ್ಬರೂ ಬೆಂಗಳೂರಿಗೆ ಬಂದಿದ್ದಾರೆ. ಒಂದು ದಿವಸ ಭೇಟಿಯಾಗಬೇಕೆಂದು ಅವಳು ಬಯಸಿದ್ದಳು. ಅವನ ಕವನಗಳು ಅವಳಿಗೆ ಒಂದು ಥರಹ ಹುಚ್ಚು ಹಿಡಿಸುತ್ತಿದ್ದವು. ಅವಳು ಇಷ್ಟಿಷ್ಟುದ್ದ ಬರೆಯುವ ಕಥೆಯಲ್ಲದರ ಭಾವವನ್ನ ಅವನು ೪ ಸಾಲಿನಲ್ಲಿ ಇನ್ನೂ ಚೆನ್ನಾಗಿ ಬರೆಯುತ್ತಾನಲ್ಲ ಎಂದು ಅಂದುಕೊಳ್ಳುತ್ತಿದ್ದಳು ಲಿಪಿ. ಅವಳು ಆಪ್ಟಿಮೈಜೇಶನ್ ಇಂಜಿನಿಯರ್ ಆದರೂ ನಿಜವಾಗಲೂ ಆ ಕೆಲಸ ಮಾಡುತ್ತಿದ್ದವನು ಅವನು. + +ಆರವ್ ಹಳ್ಳಿಯಲ್ಲಿ ಬೆಳೆದವನು. ನಂತರ ಸಿಟಿಯಲ್ಲಿ ಇಂಜಿನಿಯರಿಂಗ್, ಆಮೇಲೆ ಯಥಾಪ್ರಕಾರ ಮಾಸ್ಟರ್ಸ್ ಅಮೇರಿಕಾದಲ್ಲಿ ನಂತರ ಕೆಲಸ ಆಸ್ಟ್ರೇಲಿಯಾದಲ್ಲಿ. ಊರನ್ನು, ಬೆಂಗಳೂರನ್ನು, ಅಮೇರಿಕಾವನ್ನು, ಆಸ್ಟ್ರೇಲಿಯಾವನ್ನು ಸಮಾನವಾಗಿ ಪ್ರೀತಿಸುವವನು. ಬ್ಯಾಲೆನ್ಸ್ಡ್ ಮನುಷ್ಯ. ಕವನ ಬರೆದು ಹಾಕಿ, ಅದನ್ನ ಅನ್ ಫಾಲೋ ಮಾಡಿ ಯಾರು ಏನು ಬರೆದರೂ ತಲೆ ಕೆಡಿಸಿಕೊಳ್ಳದವನು. ಯಾರಾದರೂ ಒತ್ತಾಯವಾಗಿ ಬರೆದರು ಹೂ ಅಥವಾ ಉಹೂ ಅನ್ನುವ ಪ್ರತಿಕ್ರಿಯೆ ಬರೆಯುತ್ತಿದ್ದ. ಅವನು ಅವನ ಲೋಕದಲ್ಲಿ ವಿಹಾರಿ. ಹುಡುಗಿಯ ಬಗ್ಗೆ ಪದ್ಯ, ಬಹಳ ಮುದ್ದಾಗಿ ಬರೆಯುತ್ತಿದ್ದ. ಹುಡುಗಿ ಅಸಲಿಗೆ ಇದ್ದಿರಲ್ಲಿಲ್ಲ ಆದರೂ ಅಲ್ಲೆಲ್ಲೋ ಕಂಡವಳ ಬಗ್ಗೆ ಬರೆಯುತ್ತಿದ್ದ. ಜಾಸ್ತಿ ತಲೆ ಕೆಡಿಸಿಕೊಳ್ಳೋದಕ್ಕೆ ಹೋಗುತ್ತಿರಲ್ಲಿಲ್ಲ. ಆದರೆ ಲಿಪಿ ತನ್ನ ಕಥೆಗಳನ್ನೇ ಬರೆಯುತ್ತಿದ್ದಳು, ಆರವ ಎಲ್ಲವನ್ನು ಕಲ್ಪಿಸಿಕೊಂಡು ಬರೆಯುತ್ತಿದ್ದ. ಒಂದು ನಿಜ ಮತ್ತೊಂದು ಕಲ್ಪನೆಯ ಬರಹಗಳು ಫೇಸ್ ಬುಕ್ಕಿನಲ್ಲಿ ಬಹಳ ಚರ್ಚೆಯಾಗುತ್ತಿತ್ತು. + +ಬಸ್ಸಿನಲ್ಲಿ ಇವತ್ತು ಅವಳು ಆರವನನ್ನು ಕಂಡಿದ್ದಳು. ಒಂದೊಮ್ಮೆ ನೋಡಿ ಆಶ್ಚರ್ಯಪಡುತ್ತಾ ಫೇಸ್ಬುಕ್ಕಿನ ಫೋಟೋ ನೋಡಿ ಪದೇ ಪದೇ ಖಾತ್ರಿ ಪಡಿಸಿಕೊಳ್ಳುತ್ತಿದ್ದಳು. ಹೋಗಿ ಅವನನ್ನ ಮಾತಾಡಿಸಲೂ ಯೋಚಿಸಿದಳು. ಅವನೂ ನನ್ನ ಗೆಳೆಯನೇ, ಅವನೇ ಬಂದು ಮಾತಾಡಿಸಲಿ ಎಂಬ ಅಹಂ ಕೂಡ ಬಂತು. ಇದಿಷ್ಟು ಆಗುವಾಗ ಸಿಲ್ಕ್ ಬೋರ್ಡ್ ದಾಟಿದ್ದರು. ಅಲ್ಲೇ ಬೆಳ್ಳಂದೂರಿನಲ್ಲಿ ಇಳಿದರು ಒಂದಷ್ಟು ಜನ. ಇವರಿಬ್ಬರೂ ಇದ್ದರು. ನಡೆಯುತ್ತಿದ್ದಾಗ ಅವಳ ಹಿಂದೆಯೇ ಅವನೂ ಬರುತ್ತಿದ್ದ. ಒಂದೇ ಟೆಕ್ ಪಾರ್ಕ್ ಎಂದು ನಸು ನಕ್ಕಳು ಲಿಪಿ. ಯಾವಾಗದ್ರೂ ಸಿಗ್ತಾನೆ ಬಿಡು ಆ ಕಾಫಿ ಪಾಯಿಂಟಲ್ಲಿ ಎಂದು ಅವಳು ಕಾರ್ಡ್ ಸ್ವೈಪ್ ಮಾಡಿ ಆಫೀಸಿನ ಒಳಗೆ ಹೋದಳು. ಅಲ್ಲಿ ಬಂದ ಮೇಲೆ ಫೇಸ್ಬುಕ್, ವಾಟ್ಸ್ಯಾಪ್ ಎಲ್ಲ ನೋಡೋಕೆ ಪುರಸೊತ್ತು ಇರುತ್ತಿರಲ್ಲಿಲ್ಲವಾದ್ದರಿಂದ ಅವಳ ಕೆಲಸದಲ್ಲೇ ಮಗ್ನಳಾಗಬೇಕಾಯಿತು. + +ಇತ್ತ ಆರವ ಹೊಸದಾಗಿ ಅವಳ ಟೆಕ್ ಪಾರ್ಕಿನಲ್ಲಿರುವ ಮತ್ತೊಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ. ಆಸ್ಟ್ರೇಲಿಯಾದಲ್ಲಿ ಅವನ ಓದಿನ ಸಾಲ ತೀರಿಸಿ, ಒಂದಷ್ಟು ದುಡ್ಡು ಮಾಡಿಕೊಂಡು ಬಂದಿದ್ದ. ಈಗಿನ ಕಾಲದಲ್ಲಿ ಇದೆಲ್ಲಾ ಮಾಮೂಲಾಗಿತ್ತು. ಆಶ್ಚರ್ಯವೆಂದರೆ ಆರವ ಲಿಪಿಯನ್ನ ನೋಡಿದ್ದ. ಅಸಲಿಗೆ ಅವನೂ ಅವಳ ಫ್ಯಾನ್. ಮೊದಲ ದಿನ ಕೆಲಸ ಇಲ್ಲದಿದ್ದರಿಂದ ಅವಳಿಗೆ ಮೆಸ್ಸೆಂಜರಿನಲ್ಲಿ ಮೆಸೇಜ್ ಕಳಿಸಿದ. “ಹಾಯ್ ನಿಮ್ಮನ್ನ ಬಸ್ಸಿನಲ್ಲಿ ನೋಡಿದೆ” ಎಂದು. ಯಾವತ್ತೂ ಅವನು ಎರಡೆರಡು ಘಂಟೆಗೊಮ್ಮೆ ಮೆಸ್ಸೆಂಜರ್ ತೆಗೆದು ನೋಡಿರಲಿಲ್ಲ. ಅವಳು ಮೆಸೇಜ್ ಓದಿಲ್ಲ ಅನ್ನಿಸುತ್ತಿತ್ತು. ನೋಡಿ ನೋಡಿ ಸಾಕಾಯ್ತು. ಉತ್ತರವೇ ಇಲ್ಲ. ಸರಿ ಎಂದು ಅವಳ ಫೇಸ್ ಬುಕ್ಕಿನ ವಿವರವನ್ನ ಪೂರ್ತಿ ಜಾಲಾಡಿದ. ಓದಿರದಿದ್ದ ಲೇಖನವನ್ನೆಲ್ಲಾ ಓದಿದ, ಒಂದಷ್ಟು ಚಿತ್ರಗಳನ್ನ ಲೈಕಿಸಿದ. ನಂತರ ಇದು ಹೇಸಿಗೆ ಎಂದುಕೊಂಡು ಅನ್ಲೈಕ್ ಮಾಡಿದ. ಅವಳೆಲ್ಲೋ ವೆಗಾಸ್ ನಲ್ಲಿ ನಿಂತಿದ್ದ ಚಿತ್ರಗಳು, ಲಿಬರ್ಟಿ ಪ್ರತಿಮೆಯ ಮುಂದಿನವು ಎಲ್ಲಾ ಅವನಿಗೆ ಬಹಳ ಮುದ್ದಾಗಿ ಕಂಡಿದ್ದವು. + +ಸಂಜೆ ಅವಳು ಮೆಸೇಜ್ ನೋಡಿದಾಗ ಆಗಲೇ ಆರು ಘಂಟೆಯಾಗಿತ್ತು. “ಸ್ಸಾರಿ, ನಾನು ಸಹ ನಿಮ್ಮನ್ನ ನೋಡಿದೆ, ಮಾತಾಡಿಸಲು ಹಿಂಜರಿದೆ, ನೀವು ಇದೇ ಬಿಲ್ಡಿಂಗಾ?” ಎಂದೆಲ್ಲಾ ಮೆಸೇಜ್ ಬರೆದು ಅಳಿಸಿದಳು. “ಊಪ್ಸ್ ಸ್ಸಾರಿ ತಡವಾಗಿ ಮೆಸೇಜ್ ಕಳಿಸಿದಕ್ಕೆ” ಎಂದು ಕಳಿಸಿ ಸುಮ್ಮನಾದಳು. ಅವನು “ಸಂಜೆ ಯಾವ ಬಸ್ಸಿಗೆ ಹೊರಡೋದು” ಎಂದು ಕೇಳಿದ. ಇವಳು ಸಮಯ ತಿಳಿಸಿದ ನಂತರ ಗೇಟಿನಲ್ಲಿ ಕಾಯುತ್ತಾ ಕೂತಿದ್ದ. “ನಮಸ್ಕಾರ ಮೇಡಮ್” ಎಂದು ಎಷ್ಟೋ ವರ್ಷಗಳ ಪರಿಚಯವಿದ್ದಂತೆ ಮಾತಾಡಿಸಿದ. ಎಷ್ಟೋ ವರ್ಷಗಳ ಫೇಸ್ ಬುಕ್ ಪರಿಚಯ ಇದ್ದಿತ್ತು. ಪರಸ್ಪರ ಅವರ ಜೀವನದಲ್ಲಿ ಏನಾಗುತ್ತಿದೆ ಎಂಬುದು ಗೊತ್ತಾಗಿತ್ತು. ಹೊಸ ಕಥೆ, ಕವನ, ಪುಸ್ತಕ, ಓಡಾಟ, ತಿರುಗಾಟ ಎಲ್ಲವೂ ಇತ್ತು. ಎಲ್ಲಾ ತಿಳಿದಿದ್ದರು ಒಬ್ಬರಿಗೊಬ್ಬರೂ ಬಹಳ ಗೊತ್ತಿಲ್ಲದವರಂತೆ ಪೋಸ್ ಕೊಡುತ್ತಿದ್ದರು. ಅಂತೂ ಮಾತಾಡುತ್ತಾ ಮಾತಾಡುತ್ತಾ ಬೆಳ್ಳಂದೂರಿನಿಂದ ಸಿಲ್ಕ್ ಬೋರ್ಡಿಗೆ ಮಳೆಯಲ್ಲಿ  ಘಂಟೆ ಕಳೆದ್ದದ್ದೇ ಗೊತ್ತಾಗಲಿಲ್ಲ. + +ಅವನ ಹೊಸ ಕವನಗಳನ್ನ ಗೂಗಲ್ ಕೀಪಿನಲ್ಲಿ ಬರೆದಿದ್ದದ್ದನ್ನು ತೋರಿಸಿದ. ಅಲ್ಲೂ ಮಳೆ, ಆಗಸ, ಚಾರಣ, ಮುದ್ದು ಹುಡುಗಿ ಎಂದೆಲ್ಲಾ ಬರೆದ್ದದ್ದು ನೋಡಿ ಖುಷಿ ಪಟ್ಟಳು ಲಿಪಿ. ಅರೇ ನನ್ನ ಕನಸೇ ಇಲ್ಲಿ ಮುಂದುವರೆದು ಬಂದಿದೆಯೆಲ್ಲಾ ಎಂದು ಅನ್ನಿಸಿತ್ತು ಅವಳಿಗೆ ಸಹಜವಾಗಿ. ಆದರೆ ಮೊದಲ ಭೇಟಿಯಲ್ಲೇ ಇಷ್ಟೆಲ್ಲಾ ಜಡ್ಜ್ ಮಾಡಿ ಪೆದ್ದಾಗಿದ್ದು ಅವಳಿಗೆ ನೆನಪಿತ್ತು. ಸುಮ್ಮನೆ ಮಾತಾಡಿ ಒಂದೆರೆಡು  ಘಂಟೆಗಳ ಕಾಲ ಕಳೆಯೋಣ ಎಂದು ಸಹ ಅನಿಸಿತು. ಇಬ್ಬರೂ ವಿದೇಶದಲ್ಲಿ ಓದಿದ್ದರ ಪರಿಣಾಮ ಹುಡುಗ-ಹುಡುಗಿ ಆರಾಮಾಗಿ ಸ್ನೇಹಿತರಾಗಿರಬಹುದು ಎಂದೂ ತಿಳಿದಿತ್ತು. ಆರವ್ ಸಹ ಅವಳ ಪ್ರತಿಭೆ, ಶಿಸ್ತನ್ನ ನೋಡಿಯೇ ಮಾತಾಡಿಸಬೇಕೆಂದು ಹೋಗಿದ್ದ. + + + +ಹೀಗೆ ಒಂದು ವಾರ ಒಂದೇ ಸಮಯಕ್ಕೆ ಹೋಗೋದು ಬರೋದು, ಸಮಯ ಮಾಡಿಕೊಳ್ಳೋದು ಇವೆಲ್ಲಾ ನಡೆಯುತ್ತಿತ್ತು. ಒಂದು ದಿನ ಬಸ್ ಜಯದೇವ ಸಿಗ್ನಲ್ ಹತ್ತಿರ ಕೆಟ್ಟಿತು. ಜೋರು ಮಳೆ, ಯಾವ ಥರಹ ಎಂದರೆ ಯಾವ ಆಟೋ, ಕ್ಯಾಬ್ ಸಹ ಬರದಿದ್ದಷ್ಟು. ಇನ್ನು ಐದನೇ ಬ್ಲಾಕ್ ಗೆ ನಡೆದುಕೊಂಡೇ ಹೊರಡೋಕೆ ಶುರು ಮಾಡಿದರು. ಒಂದೇ ಛತ್ರಿಯಲ್ಲಿ. ಅಲ್ಲಿ ಅವನ ಕವನ ವಾಚನ ಶುರುವಾಯ್ತು. + +ಮಳೆಯಾಗಮನಕೂ ಆರಿಲ್ಲದ ಜ್ವಾಲೆಯಾವುದಿದುಜಲಧಾರೆ ಬಳಿಯಿದ್ದರೂ ನೀಗಿಲ್ಲದ ದಾಹವಾವುದಿದು…ಸಾಮೀಪ್ಯದ ಪುಣ್ಯವು ಮಳೆಗೋ ಕೊಡೆಗೋ,ಬಳಿಯಿದ್ದರೂ ಕಾಡುವ ದೂರ ಯಾವುದಿದು… + +ಆ ಮಳೆಯಲ್ಲಿ ಒಂದಿಷ್ಟು ಅಳುಕಿನಿಂದಲೇ ಹೇಳಿದ ಆರವ್. ತನ್ನ ಈ ಅಳುಕಿನ ಬಗ್ಗೆ ಅಂದು ಅವನಿಗೇ ಅಚ್ಚರಿಯಾಯಿತು. ಆರವ್ ಯಾವತ್ತೂ ತನಗೆ ಬೇಕಾಗಿರುವಂತೆ ಬರೆದವನು, ಬದುಕಿದವನು. ಆದರೆ ಈ ಹುಡುಗಿಯ ಸಾನಿಧ್ಯದಲ್ಲಿ ಇಂದೇನಾಗುತ್ತಿದೆ? ನಿಜಕ್ಕೂ ಅಚ್ಚರಿ! ಪುಟ್ಟ ಛತ್ರಿಯಡಿಯಲ್ಲಿ ಆರವನಿಗೆ ಅಂಟಿಕೊಂಡೂ ಅಂಟಿಕೊಂಡಿರದಿದ್ದ ಲಿಪಿ ಶಾಯರಿಯಂತಿದ್ದ ಈ ಆಶುಕವಿತೆಯನ್ನು ಕೇಳಿ ತನ್ನಷ್ಟಕ್ಕೆ ಪುಳಕಿತಳಾದಳು. ಮಳೆಯ ದನಿಯ ಹಿನ್ನೆಲೆಯೊಂದಿಗೆ ಬೆರೆತ ಆರವನ ದನಿಯು ಮೆಲುವಾಗಿ ಹಿತವಾಗಿತ್ತು. ”ಏನಂದೆ?”, ಎಂದು ಕೇಳಿಸಲಿಲ್ಲವೆಂಬಂತೆ ಉದ್ದೇಶಪೂರ್ವಕವಾಗಿಯೇ ಮತ್ತೊಮ್ಮೆ ಕೇಳಿದಳು ಲಿಪಿ. ಅವನು ಮತ್ತಷ್ಟು ಹತ್ತಿರಕ್ಕೆ ಬಂದು ಅವಳ ಕಿವಿಯಲ್ಲಿ ಆ ಸಾಲುಗಳನ್ನು ಪಿಸುಗುಟ್ಟಿದ. ತನ್ನ ಕಿವಿ ಸೋಕಿದ ಅವನ ಬಿಸಿಯುಸಿರಿನಿಂದ ಕವಿತೆಯ ಸಾಲುಗಳು ಮತ್ತಷ್ಟು ಮತ್ತನ್ನು ಪಡೆದಂತೆ ಅವಳಿಗೆ ಭಾಸವಾಯಿತು. ”ವ್ಹಾ ಶಾಯರ್ ವ್ಹಾ… ನಿಮ್ಮ ಅಂದಾಝ್ ಒಂದೇ ನನ್ನಂತಹ ಓದುಗರನ್ನು ಕವಿತೆಗಳತ್ತ ಕರೆತಂದಿದ್ದು”, ಎಂದು ನಗುತ್ತಾ ಹೇಳಿದಳು ಲಿಪಿ. ಅವಳ ಶುಭ್ರನಗುವಿನಿಂದ ಅವನ ಮನದಲ್ಲಿ ತಂಗಾಳಿ ಬೀಸಿದಂತಾಯಿತು. + +ಆ ದಿನದ ನಂತರ ಇಬ್ಬರೂ ಭೇಟಿಯಾಗುವುದು ಹೆಚ್ಚಾಗುತ್ತಲೇ ಹೋಯಿತು. ಉಪಹಾರ ದರ್ಶಿನಿಯಲ್ಲೋ, ಕಲಾಕ್ಷೇತ್ರದಲ್ಲೋ, ಚಿತ್ರೋತ್ಸವದಲ್ಲೋ… ನೆಪಗಳಿಗೇನು ಕಮ್ಮಿ. ಕ್ರಮೇಣ ಆರವ್ ತನ್ನ ಜೀವನದ ಭಾಗವಾಗುತ್ತಿರುವಂತೆ ಈಗ ಲಿಪಿಗೆ ಭಾಸವಾಗತೊಡಗಿತ್ತು. ಹೊಸದಾಗಿ ಅಂಟಿಕೊಂಡ ಮಧುರ ಅಭ್ಯಾಸದಂತೆ. ಕನಸು ಕಾಣುವುದನ್ನೇ ಸಂಪೂರ್ಣವಾಗಿ ಮರೆತಿದ್ದ ಹುಡುಗಿಯೊಬ್ಬಳು ಈಗ ಹಗಲುಗನಸು ಕಾಣುತ್ತಿದ್ದಾಳೆಂದರೆ? ಲಿಪಿ ಬೆಚ್ಚಿಬಿದ್ದಿದ್ದು ಆಗಲೇ! ಇಂಥಾ ಭಾವನೆಗಳು ಅವಳಲ್ಲಿ ಮೂಡಿಸುವ ಚಂಡಮಾರುತವು ಅಂತಿಂಥದ್ದಲ್ಲ. ಆಗಲೇ ಸಾಕಷ್ಟು ಘಾಸಿಗೊಂಡ ಹೃದಯ ಬೇರೆ. ಅವಳೊಳಗಿನ ನೋವಿನ ತೀವ್ರತೆ ಎಷ್ಟೆಂದರೆ ಭಾವನೆಗಳೆಲ್ಲವೂ ಮರಗಟ್ಟುವಷ್ಟು. ‘ಇದೆಲ್ಲಾ ಬೇಕಾ ನಿನಗೆ?’, ಅಂದು ಕನ್ನಡಿಯೆದುರು ನಿಂತ ಲಿಪಿ ಮೆತ್ತಗೆ ತನ್ನ ಎರಡೂ ಕೆನ್ನೆಗಳನ್ನು ತಟ್ಟುತ್ತಾ ತನ್ನನ್ನು ತಾನೇ ಎಚ್ಚರಿಸುವವಳಂತೆ ಮಾತಾಡಿಕೊಂಡಳು. ಬುದ್ಧಿ ಮತ್ತು ಮನಸ್ಸಿನ ಈ ತಾಕಲಾಟವನ್ನು ಕಂಡು ಬೇಜಾರಾಯ್ತು ಎಂಬಂತೆ ಅವಳ ಕಣ್ಣುಗಳಲ್ಲಿದ್ದ ಹೊಳಪೀಗ ಒಂದಿಷ್ಟು ಕಮ್ಮಿಯಾಯಿತು. ‘You can’t fall in love… You can’t fall in love… damnit…’, ಎಂದು ಗೊಣಗಿಕೊಳ್ಳುತ್ತಾ ಹಗಲುಗನಸಿನ ಜಾತ್ರೆಯಿಂದ ನೈಜ ಜೀವನಕ್ಕೆ ಮತ್ತೊಮ್ಮೆ ಹೊರಬಂದಳು ಲಿಪಿ. + +ಇತ್ತ ಆರವನ ಸ್ಥಿತಿಯೂ ಕೂಡ ಬಹುತೇಕ ಇಂಥದ್ದೇ. ಆದರೆ ಅಲೆಮಾರಿಯಂತಿದ್ದ ಆತನ ಹೃದಯಕ್ಕೀಗ ಗುರಿಯೊಂದು ಸಿಕ್ಕಿದಂತಾಗಿದೆ. ತನ್ನ ಜೀವಿತಕ್ಕೊಂದು ಕಾರಣವು ಸಿಕ್ಕಂತಾಗಿದೆ. ಕಲ್ಪನೆಯ ಲೋಕದಲ್ಲಿ ಮಿಂದೇಳುತ್ತಿದ್ದ, ಓದುಗರನ್ನೂ ಆ ಸುಂದರ ನಿರಾಕಾರ ಲೋಕಕ್ಕೆ ಕರೆದೊಯ್ಯುತ್ತಿದ್ದಂತಹ ಅವನ ಕವಿತೆ, ಕನಸುಗಳಿಗೀಗ ಲಿಪಿಯು ಆಕಾರವಾಗಿದ್ದಾಳೆ. ಅವನಲ್ಲೀಗ ತಾನು ಇಷ್ಟಪಟ್ಟಂತೆ ಬದುಕುವ ಆವೇಶವಿಲ್ಲ. ಏಕೆಂದರೆ ಅವನೀಗ ಒಬ್ಬಂಟಿಯಲ್ಲ. ಅದು ನಿಜಕ್ಕೂ ಸತ್ಯವೋ ಅಲ್ಲವೋ ಬೇರೆ ಮಾತು. ಆದರೆ ಅವನ ಮಟ್ಟಿಗಂತೂ ಅದು ಸತ್ಯ. ತನ್ನ ಸಾಂಗತ್ಯವನ್ನು ಇಷ್ಟಪಡುವ ಲಿಪಿಯೊಂದಿಗೆ ಈಗ ಜೀವನವಿಡೀ ನನ್ನೊಂದಿಗಿರು ಎಂದು ಹೇಳುವ ಕಾತರ ಅವನಿಗೀಗ. ಯಾವಾಗ ಹೇಳುವುದು, ಹೇಗೆ ಹೇಳುವುದು… ಹೀಗೆ ತಲೆಯಿಡೀ ವೇಳಾಪಟ್ಟಿಯದ್ದೇ ಚಾರ್ಟ್ ಗಳು. ಕೊನೆಗೂ ಜೈಪುರದ ತನ್ನ ಅಫೀಶಿಯಲ್ ಪ್ರವಾಸವನ್ನು ಮುಗಿಸಿ ಬಂದು ತನ್ನ ಭಾವನೆಗಳನ್ನು ಹೇಳೋಣವೆಂದು ಆರವ್ ನಿರ್ಧರಿಸಿದ್ದ. ಭೌತಿಕವಾಗಿ ಹತ್ತಿರವಿರದ ಈ ಒಂದು ವಾರದಲ್ಲಿ ಪ್ರೀತಿ ಮತ್ತಷ್ಟು ಮಡುಗಟ್ಟಲಿ ಎಂಬ ಲೆಕ್ಕಾಚಾರ ಅವನದ್ದು. + +ಅಂತೂ ಔದ್ಯೋಗಿಕ ಪ್ರವಾಸವೆಂದು ಆರವ್ ಕೆಲದಿನಗಳಲ್ಲೇ ಜೈಪುರಕ್ಕೆ ಹಾರಿಬಿಟ್ಟಿದ್ದ. ಈ ದಿನಗಳಲ್ಲಿ ಇಬ್ಬರೂ ಕರೆ ಮಾಡಿ, ವಾಟ್ಸಾಪ್ ನಲ್ಲಿ ಬರೆದು ಬರೆದೇ ಹರಟಿದರು. ಜೀವನವಿಡೀ ಹಂಬಲಿಸಿ ನಂತರ ದೂರ ತಳ್ಳಿದ ಪ್ರೀತಿಯನ್ನು, ಅದರೆಡೆಗಿದ್ದ ತನ್ನೊಳಗಿನ ಅವ್ಯಕ್ತ ಆತಂಕವನ್ನು ಏಕಾಏಕಿ ತೋರಿಸಿ ಆರವನನ್ನು ನೋಯಿಸುವ ಉದ್ದೇಶವು ಲಿಪಿಗಿರಲಿಲ್ಲವಾದ್ದರಿಂದ ಅಂಥದ್ದೇನನ್ನೂ ಅವಳು ತೋರಿಸಿಕೊಳ್ಳಲಿಲ್ಲ. ಅತ್ತ ಆರವ್ ಶೀಘ್ರದಲ್ಲೇ ಮಾಡಬೇಕಾಗಿರುವ ತನ್ನ ಪ್ರೇಮನಿವೇದನೆಗಾಗಿ ಸಿದ್ಧನಾಗತೊಡಗಿದ್ದ. ಆ ನಿಮಿಷಗಳು ಆದಷ್ಟು ಬೇಗ ಬರಲಿ ಎಂದು ಕಾತರದಿಂದ ಕಾಯುತ್ತಿದ್ದ ಅವನ ಮನಸ್ಸಿಗೆ ದಿನಗಳು ಸ್ಲೋ ಮೋಷನ್ನಿನಲ್ಲಿ ಚಲಿಸುತ್ತಿರುವಂತೆ ಭಾಸವಾಗುತ್ತಿದ್ದವು.ಹೀಗೆ ನೋಡನೋಡುತ್ತಲೇ ಹತ್ತು ದಿನಗಳು ಕಳೆದಿದ್ದವು. ಬೆಂಗಳೂರಿಗೆ ಮರಳಿದ್ದ ಆರವ್ ಲಿಪಿಯನ್ನು ಪ್ರಕೃತಿಯ ಮಡಿಲಿನಂತಿದ್ದ ಒಂದು ಸುಂದರವಾದ ಜಾಗಕ್ಕೆ ಕರೆದುಕೊಂಡು ಹೋದ. ”ಬಹಳ ದಿನಗಳಾಯಿತು ಸೂರ್ಯಾಸ್ತವನ್ನು ನೋಡಿ”, ಎಂದಿದ್ದ ಆರವನ ಮಾತಿಗೆ ಲಿಪಿ ಕೂಡ ಖುಷಿಯಿಂದಲೇ ಹೊರಟಿದ್ದಳು. ಆದರೆ ಆರವನ ಬಗ್ಗೆ ತನಗಿದ್ದ ಸಂದೇಹವು ಇಂದು ನಿಜವಾಗಲಿದೆಯೆಂಬ ಸುಳಿವಾದರೂ ಅವಳಿಗೆಲ್ಲಿತ್ತು! + +ನಿನ್ನ ಸತ್ಯಗಳೊಂದಿಗೆ ನನಗೆ ಪ್ರೀತಿಯಾಗಿದೆನಿನ್ನ ಭ್ರಮೆಗಳೊಂದಿಗೆ ನನಗೆ ಪ್ರೀತಿಯಾಗಿದೆ…ಹುದ್ದೆ, ಸೋಗು, ಹಣೆಪಟ್ಟಿಗಳ ಸುಟ್ಟಿರುವೆನಿಂದು,ನಿನ್ನೊಳಗಿನ ಹೆಣ್ಣಿನೊಂದಿಗಷ್ಟೇ ನನಗೆ ಪ್ರೀತಿಯಾಗಿದೆ… + +ತನ್ನ ಮನದಾಳದ ಮಾತನ್ನು ಆ ಇಳಿಸಂಜೆಯಲ್ಲಿ ಆರವ್ ಹೇಳಿಯೇಬಿಟ್ಟಿದ್ದ. ಅಂದು ಲಿಪಿ ಒಳಗೊಳಗೇ ಕುಸಿದುಹೋದಳು. ತಾನು ಆರವನನ್ನು ಇಷ್ಟಪಟ್ಟಿಲ್ಲ ಎಂದರೆ ಅದು ಸ್ವತಃ ತನಗೇ ಹೇಳಿಕೊಳ್ಳುವ ಸುಳ್ಳೆಂಬುದು ಲಿಪಿಗೆ ತಿಳಿದಿತ್ತು. ಆದರೆ ಕೆಲ ಸುಳ್ಳುಗಳು ಜೀವನದ ಮುಳ್ಳಿನ ಹಾದಿಗಳಲ್ಲಿ ನಡೆಯುವಾಗ ರಕ್ಷಣಾಕವಚದಂತೆ ಉಪಯೋಗಕ್ಕೆ ಬರುತ್ತವೆ. ಆರವನ ಸಾಲುಗಳನ್ನು ಕೇಳಿ ಕಣ್ತುಂಬಿ ಬಂದರೂ ಅದು ಸಂತಸದ್ದೋ ಅಥವಾ ದುಃಖದ್ದೋ ಎಂಬ ಗೊಂದಲಕ್ಕೆ ಬಿದ್ದು ಮತ್ತಷ್ಟು ಕುಗ್ಗಿಹೋದಳು ಲಿಪಿ. ಇತ್ತ ಮಂಜಾಗಿದ್ದ ಅವಳ ಕಣ್ಣುಗಳನ್ನು ನೋಡಿ ನಿರಾಶೆಯಾಗಿದ್ದು ಆರವನಿಗೆ. ಅವನ ನಿರೀಕ್ಷೆ, ಲೆಕ್ಕಾಚಾರಗಳಿಗೆ ವಿರುದ್ಧವಾಗಿ ಎಂಥದ್ದೋ ಬೇರೆಯದೇ ಒಂದು ನಡೆದಿತ್ತು ಅಲ್ಲಿ. ಹೀಗಾಗಿ ಇದನ್ನು ಅರಗಿಸಿಕೊಳ್ಳಲಾಗದೆ ಹತಾಶನಾಗಿದ್ದ ಆರವ್. ಕಣ್ತುಂಬಿ, ಗಂಟಲು ಕಟ್ಟಿ, ಮುಂದೇನೂ ಹೇಳಲಾರದೆ ಲಿಪಿ ಅಲ್ಲಿಂದ ಎದ್ದು ಹೋಗಿದ್ದಳು. ಅವಳ ಮೌನವೇ ಆರವನಿಗೆ ಉತ್ತರವನ್ನು ನೀಡಿತ್ತು.**********14 ಫೆಬ್ರವರಿ 2018, ವ್ಯಾಲೆಂಟೈನ್ಸ್ ದಿನ.ಈ ದಿನಾಂಕವನ್ನು ನೋಡುತ್ತಾ ಸುಮ್ಮನೆ ನಿಟ್ಟುಸಿರಿಟ್ಟಳು ಲಿಪಿ. ಅಂದಾಜು ಮೂರು ವರ್ಷಗಳ ಹಿಂದೆ ಆರವ್ ಇಲ್ಲಿದ್ದ. ಇಬ್ಬರೂ ಜೊತೆಯಾಗಿ ಎಲ್ಲಾದರೂ ಹೋಗಬಹುದಿತ್ತು. ತನ್ನ ಲೇಖನಗಳ ಬಗ್ಗೆ, ಅವನ ಕವಿತೆಗಳ ಬಗ್ಗೆ ಹರಟೆ ಹೊಡೆಯಬಹುದಿತ್ತು. ತಾನು ಅವನ ಪ್ರೀತಿಯನ್ನು ನಿರಾಕರಿಸಿದ್ದು ಸರಿಯೇ ಎಂದು ಸಾಕಷ್ಟು ಬಾರಿ ಯೋಚಿಸಿದ್ದಾಳೆ ಲಿಪಿ. ಇತ್ತ ಪ್ರೇಮಿಗಳ ದಿನಕ್ಕೆ ಬೆಂಗಳೂರು ನಗರಕ್ಕೆ ನಗರವೇ ಅಣಿಯಾಗುತ್ತಿದ್ದರೆ ಇವಳ ಮನದಲ್ಲಿ ಮಾತ್ರ ನೀರವ ಮೌನ. ಆರವನಿಗೆ ನಾನು ನೆನಪಿರಬಹುದೇ? ಈ ದಿನ ಒಮ್ಮೆಯಾದರೂ ಅವನು ನನ್ನನ್ನು ನೆನೆಸಿಕೊಳ್ಳಬಹುದೇ? ಎಂದೆಲ್ಲಾ ಹರೆಯದ ಪ್ರೇಮಿಯಂತೆ ಸುಮ್ಮನೆ ಯೋಚಿಸುತ್ತಿದ್ದಾಳವಳು. + +ಸಾಯದ ಸಾಲುಗಳಂತೆ ಕಾಯುತಿರುವೆ ನಾಮಾಗದ ನೆನಪುಗಳಂತೆ ಕಾಯಲಿರುವೆ ನಾ…ಆರಾಧನೆಯ ಪಂಕ್ತಿಗಳಲ್ಲೇ ಸವೆದುಹೋಗಲಿ ಜೀವನ,ಗಾಲಿಬನ ಗುಡಿಸಲಿನಲ್ಲೇ ಲೀನವಾಗುವೆ ನಾ… + +(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್) + +ಪತ್ರದ ಮೇಲಿನ ಆ ಸಾಲುಗಳ ಮೇಲೆ ಕೈಯಾಡಿಸಿದಳು ಲಿಪಿ. ಅದು ಆರವನ ಕೊನೆಯ ಪತ್ರವಾಗಿತ್ತು, ಅವಳಿಗಾಗಿ ಬರೆದ ಕೊನೆಯ ಸಾಲುಗಳು. ವರ್ಷಗಳು ಕಳೆದು ಕೊಂಚ ಶಿಥಿಲವಾದ ಪತ್ರವು ಹಳೆಯ ವೈನ್ ನಂತೆ ಮತ್ತಷ್ಟು ರುಚಿಸುತ್ತಿತ್ತು. ತನಗೇಕೆ ಈತ ಇನ್ನೂ ಕಾಡುತ್ತಿದ್ದಾನೆ? ಪ್ರೀತಿಯೆಂದರೆ ಇದೇನಾ? ಹೀಗೆ ಬಹಳಷ್ಟು ಒಗಟಿನಂತಹ ಪ್ರಶ್ನೆಗಳು. ಆದರೆ ಯಾವತ್ತೂ ಅವುಗಳಿಗೆ ಉತ್ತರವನ್ನು ಕಂಡುಕೊಳ್ಳುವ ಪ್ರಯತ್ನವಾಗಲಿ, ಆರವನನ್ನು ಮತ್ತೆ ಭೇಟಿ ಮಾಡುವ ಪ್ರಯತ್ನವನ್ನಾಗಲಿ ಅವಳು ಮಾಡಿರಲಿಲ್ಲ. ತನ್ನ ನಿರಾಕರಣೆಯ ನಂತರ ಕೆಲ ತಿಂಗಳುಗಳ ಕಾಲ ಆರವ್ ಉತ್ತರಭಾರತಕ್ಕೆ ಹೋಗಿ ನೆಲೆಸಿದ್ದ ಬಗ್ಗೆ ಅವಳಿಗೆ ಮಾಹಿತಿಯಿತ್ತು. ಆದರೆ ಮುಂದೆ ಮತ್ತೆ ಬೆಂಗಳೂರಿಗೇ ಮರಳಿದ್ದ ಆರವ್. ಹಾಗಿದ್ದರೆ ಲಿಪಿಗೆ ಆರವನನ್ನು ಹೋಗಿ ಮಾತನಾಡಿಸಲೇನು ಧಾಡಿ ಅನ್ನುತ್ತೀರಾ? ಇದಕ್ಕೂ ಕಾರಣಗಳಿವೆ. ಈ ಮೂರು ವರ್ಷಗಳಲ್ಲಿ ಕಾಲ ಬದಲಾಗಿದೆ, ಸಂದರ್ಭವೂ ಬದಲಾಗಿದೆ. ಇವರಿಬ್ಬರ ಪ್ರೀತಿ? ಅದನ್ನು ಮಾತ್ರ ಕಾಲವೇ ಹೇಳಬೇಕು. + +ಲಿಪಿ ಈಗ ಯಾವುದೋ ಡಿಜಿ ಜಾಲತಾಣದಲ್ಲಿ ಬರೆಯುವ ಕಾಂಜಿಪೀಂಜಿ ಲೇಖಕಿಯಲ್ಲ. ಇವಳ ಹೆಸರಿನಲ್ಲೀಗ ಪುಸ್ತಕಗಳು ಹೊರಬಂದಿವೆ. ಓದುಗರ ಮನದಲ್ಲಿ ಅವಳಿಗೊಂದು ಬಲು ಎತ್ತರದ ಸ್ಥಾನವಿದೆ. ಇತ್ತ ಆರವ್ ಕೂಡ ಕವಿಯಾಗಿ ಸಾಕಷ್ಟು ಎತ್ತರವನ್ನು ತಲುಪಿದ್ದಾನೆ. ಅವನ ಬತ್ತಳಿಕೆಯಲ್ಲೀಗ ವಿರಹಗೀತೆಗಳೇ ಏಕೆ ಹೆಚ್ಚಿದೆಯೆಂಬುದು ಬಹುಷಃ ಲಿಪಿಯನ್ನು ಹೊರತುಪಡಿಸಿದರೆ ಆರವನ ಕೆಲ ಆಪ್ತರಿಗಷ್ಟೇ ಗೊತ್ತು. ಕಳೆದೆರಡು ವರ್ಷಗಳಿಂದ ಅವನು ಬರೆದ ಪ್ಯಾಥೋ ಗೀತೆಗಳು ಜನಪ್ರಿಯವಾಗಿ ಸಿನೆಮಾ ಲೋಕವನ್ನೂ ತಲುಪಿವೆ. ಅಭಿಮಾನಿಗಳು ಅವನಿಗೆ `ವಿರಹಕವಿ’ ಎಂಬ ಬಿರುದನ್ನು ಬೇರೆ ನೀಡಿದ್ದಾರೆ. ಹೀಗೆ ಲಿಪಿ, ಆರವ್ ಇಬ್ಬರೂ ಈಗ ಖ್ಯಾತಿಯ ರುಚಿಯನ್ನು ಕಂಡವರು. ಸಾಹಿತ್ಯದ ವಲಯದಲ್ಲಿ ಸಾಕಷ್ಟು ಚರ್ಚೆಯಾಗುವವರು. ಅದರಲ್ಲೂ ಯುವಸಮೂಹದಿಂದ ಸಾಕಷ್ಟು ಪ್ರೀತಿ, ಅಭಿಮಾನಿಗಳನ್ನು ಗಳಿಸಿಕೊಂಡವರು. ಹೀಗಾಗಿ ಇಬ್ಬರೂ ಸಾಹಿತ್ಯದ ಹೊರತಾಗಿ ಬೇರೆ ಕಾರಣಗಳಿಂದಾಗಿ ಸುದ್ದಿಯಾಗುವ ಆಸಕ್ತಿಯನ್ನು ಹೊಂದಿದವರಂತೆ ಇರಲಿಲ್ಲ. ಆಗೊಮ್ಮೆ ಈಗೊಮ್ಮೆ ಸಾಹಿತ್ಯೋತ್ಸವಗಳಲ್ಲಿ, ಚಿತ್ರೋತ್ಸವಗಳಲ್ಲಿ ಎಡತಾಕಿದರೂ, ವೇದಿಕೆಗಳಲ್ಲಿ ಮುಖಾಮುಖಿಯಾದರೂ ಸೌಜನ್ಯದ ಹಾಯ್-ಹಲೋಗಳು ಇದ್ದವೇ ಹೊರತು ಖಾಸಗಿಯಾಗಿ ಸಂಪರ್ಕವನ್ನು ಇಬ್ಬರೂ ಉಳಿಸಿಕೊಂಡಿರಲಿಲ್ಲ. ಇಬ್ಬರೂ ನಿಜಕ್ಕೂ ಇದನ್ನೇ ಬಯಸಿದ್ದರೋ? ಗೊತ್ತಿಲ್ಲ! ಆದರೆ ಸದ್ಯದ ಕಥೆಯಂತೂ ಹಾಗಿತ್ತು. + +ಇರಲಿ. ಅದೇನೇ ಆದರೂ ಕಾಲದೊಂದಿಗೆ ಜನರೂ ಬದಲಾಗುತ್ತಾರೆ. ”ಆದದ್ದಾಯಿತು… ಇನ್ನಾದರೂ ಯಾಕೆ ಸಂದರ್ಭಗಳು ಬದಲಾಗಬಾರದು?”, ಎಂದು ಕೇಳಿದ್ದಳು ಲಿಪಿಯ ಆಪ್ತ ಗೆಳತಿ ಸೋಫಿಯಾ. ಯಶಸ್ಸು ದಕ್ಕಿದ್ದರೂ ಲಿಪಿಯೊಳಗಿರುವ ಖಾಲಿತನವನ್ನು ಅರ್ಥೈಸಿಕೊಳ್ಳಲಾರದಷ್ಟು ಸಂವೇದನಾರಹಿತಳಲ್ಲ ಸೋಫಿ. ಲಿಪಿಯ ಮೊಟ್ಟಮೊದಲ ಪ್ರೀತಿ, ಪ್ರೇಮವೈಫಲ್ಯ, ಆಘಾತ, ಸೋಲುಗಳಿಂದ ಹಿಡಿದು ಅಂಕಣ, ಆರವ್, ಕವಿತೆ ಮತ್ತು ಇತ್ತೀಚಿನ ಯಶಸ್ಸಿನವರೆಗೂ ಸೋಫಿಗೆ ಎಲ್ಲವೂ ಗೊತ್ತು. ಆರವ್ ಎಂಬ ಯಶಸ್ವಿ ವಿರಹಕವಿ, ಗೀತರಚನಾಕಾರನ ಸೃಷ್ಟಿಯೊಳಗಿದ್ದ ನಿಜವಾದ ಆತ್ಮವು ಅವಳಿಗೆ ಕಂಡಿದ್ದು ಲಿಪಿ ಇವೆಲ್ಲವನ್ನೂ ಅವಳಿಗೆ ಹೇಳಿದ ನಂತರವೇ. ಅಂದಿನಿಂದ ತನ್ನ ಮ್ಯೂಸಿಕ್ ಪ್ಲೇ-ಲಿಸ್ಟ್ ನಲ್ಲಿ ಆರವನ ಹಾಡುಗಳನ್ನೇ ತುಂಬಿಕೊಂಡು ಅವನನ್ನು ಮತ್ತಷ್ಟು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ ಸೋಫಿ. ಗುಟ್ಟಾಗಿ ಲಿಪಿ ಕೂಡ ಅದನ್ನೇ ಮಾಡುತ್ತಿದ್ದಾಳೆ ಎಂಬ ಬಲವಾದ ಸಂದೇಹ ಮತ್ತು ನಂಬಿಕೆ ಎರಡೂ ಅವಳಿಗೆ. + +ಇನ್ನೂ ನಿನ್ನ ಹಾದಿ ಕಾಯುತಿರುವಹುಚ್ಚುಹೃದಯಕೇನು ಹೇಳಲಿ ನಾ…ನೀನಿಲ್ಲವೆಂಬ ಸತ್ಯವನು ಇಂದು,ಸುಂದರ ಸುಳ್ಳಿನಂತೆ ಹೇಗೆ ಹೇಳಲಿ ನಾ… + +”ನೋಡು… ಹೇಗೆ ಬರೆದಿದ್ದಾನೆ… ರಿಯಲೀ, ಕಾಡುವ ಸಾಲುಗಳಿವು”, ಕಣ್ಣರಳಿಸುತ್ತಾ ಹೇಳಿದಳು ಸೋಫಿ. ಅವಳು ಹೀಗಂದಾಗಲೆಲ್ಲಾ ಲಿಪಿ ಸುಮ್ಮನೆ ಮುಗುಳ್ನಗುತ್ತಾಳೆ. ಆದರೆ ಮತ್ತೊಮ್ಮೆ ಆರವನನ್ನು ಸೇರುವ ಯೋಚನೆಯು ಅವಳಿಗೆ ಅಷ್ಟಾಗಿ ಕೆಟ್ಟ ಐಡಿಯಾದಂತೆಯೂ ಕಾಣುತ್ತಿಲ್ಲ. ಇಬ್ಬರೂ ಈ ಪಯಣದಲ್ಲಿ ಸಾಕಷ್ಟು ದೂರ ನಡೆದು ಬಂದಿದ್ದಾರೆ. ಯಶಸ್ಸು ಲಿಪಿಯಲ್ಲಿ ಧೈರ್ಯ, ಆತ್ಮವಿಶ್ವಾಸಗಳನ್ನು ತುಂಬಿದೆ. ವೈಫಲ್ಯ, ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಕೊಟ್ಟಿದೆ. ಆರವನ ಬಗ್ಗೆ ಗೊತ್ತಿಲ್ಲ. ಆದರೆ ಕಾಲವು ಅವನ ಬಗೆಗಿನ ತನ್ನ ಭಾವನೆಗಳನ್ನು ಒಂದಿಷ್ಟೂ ಅಳಿಸಿಹಾಕಿಲ್ಲ ಎಂಬ ಸತ್ಯವು ಲಿಪಿಗೆ ಚೆನ್ನಾಗಿ ಗೊತ್ತಿದೆ. ಅದು ಬೇರೇನೋ ಆಗಿದ್ದರೆ ಇಷ್ಟು ಹೊತ್ತಿಗೆ ನಾಶವಾಗಬೇಕಿತ್ತು. ಆದರೆ ಕ್ರಮೇಣ ಆ ಅನುಭೂತಿಯು ಅವಳಲ್ಲಿ ಮತ್ತಷ್ಟು ತೀವ್ರವಾಗುತ್ತಾ ಬಂದಿದೆ. ”ಜೀವನಕ್ಕೆ ಎರಡನೇ ಅವಕಾಶವನ್ನು ನೀಡುವುದರಲ್ಲಿ ತಪ್ಪೇನಿದೆ?”, ಎಂದು ತನ್ನ ಅಂಕಣವೊಂದರಲ್ಲಿ ಸ್ವತಃ ಬರೆದಿದ್ದಳು ಲಿಪಿ. ಹಾಗಿರುವಾಗ ವಿನಾಕಾರಣ ತನ್ನನ್ನೇ ತಾನು ದಂಡಿಸಿಕೊಳ್ಳುವ ಈ ಹುಚ್ಚಾಟವೇಕೆ? + +ಕೆಲವು ಸಂಬಂಧಗಳು ಒಂದು ಹಂತದ ನಂತರ ಸರಿಯಾಗಲಾರದಷ್ಟು ವಿರೂಪವಾಗಿಬಿಡುತ್ತವೆ. ರಿಪೇರಿಯಾಗಲು ಕಾಲ ಮಿಂಚಿಹೋಯಿತು ಅನ್ನುವಂತಿರುತ್ತವೆ. ಆದರೆ ಆರವನೊಂದಿಗಿನ ಲಿಪಿಯ ಸಂಬಂಧವು ಯಾವ ಹಂತವನ್ನು ತಲುಪಿತ್ತು ಎಂಬ ಬಗ್ಗೆ ಲಿಪಿಗಂತೂ ಇನ್ನೂ ಸ್ಪಷ್ಟವಾದ ನೋಟವಿರಲಿಲ್ಲ. ಲಿಪಿಯ ಮನವು ಒಳಗೊಳಗೇ ಆರವನೊಂದಿಗೆ ಆತ್ಮಸಾಂಗತ್ಯವನ್ನು ಬಯಸುತ್ತಿದ್ದುದೇನೋ ಸರಿ. ಆದರೆ ಅದು ನಿಜಕ್ಕೂ ಸಾಧ್ಯವೇ? ಇನ್ನು ಇದಕ್ಕೆ ಉತ್ತರವು ಸಿಗಬೇಕಿದ್ದರೆ ಮತ್ತೆ ಈ ಸಂಬಂಧಗಳ ಸುಳಿಯಲ್ಲಿ ಬೀಳಲೇಬೇಕು. ಲಿಪಿಯ ಬಳಿ ಸದ್ಯ ಬೇರೆ ಆಯ್ಕೆಗಳಿಲ್ಲ. ಆದರೆ ಅದೃಷ್ಟವಶಾತ್ ಮೊದಲಿನಷ್ಟು ಅಭದ್ರತೆ, ಆತಂಕಗಳೂ ಅವಳಲ್ಲಿಲ್ಲ. ಕೊನೆಗೂ ಅವಳನ್ನು ಮುನ್ನಡೆಸಲು ಪ್ರೇರಣೆಯಾಗಿದ್ದ ಅಂಶವೆಂದರೆ ಇವುಗಳೇ. ಅಂತೂ ಆರಂಭವಾಗಿದ್ದ ಈ ಕಥೆಯನ್ನು ಸುಖಾಂತ್ಯಗೊಳಿಸಲು, ಒಂದೇ ಮಹಾನಗರದಲ್ಲಿದ್ದರೂ ಸಪ್ತಸಾಗರದಾಚೆಗಿರುವಂತೆ ಬದುಕುತ್ತಿರುವ ಆರವನ ತಲಾಶೆಗೆ ಲಿಪಿ ಹೊರಟಿದ್ದು ಹೀಗೆ.********* + +”ಎಲ್ಲಿ ಹೋಗಿದ್ರಿ ನೀವು? ನಿಮ್ಮನ್ನು ನಾನೇ ಭೇಟಿಯಾಗೋಣವೆಂದು ಮನೆಯವರೆಗೂ ಬಂದಿದ್ದೆ. ಆಗ ನೀವಲ್ಲಿರಲಿಲ್ಲ. ಈಗ ಇಲ್ಲೇ ಬಂದು ನಿಂತಿದ್ದೀರಿ. ಅಂತೂ ಬಂದಿರಲ್ಲ, ಅದೇ ಸಂತೋಷ”, ಎಂದು ಲಿಪಿಗೆ ಬಾಯ್ತೆರೆಯುವ ಅವಕಾಶವನ್ನೇ ನೀಡದೆ ಮಾತನಾಡುತ್ತಾ ಹೋದರು ಸಾಹಿಲ್. ಸಾಹಿಲನ ಮಾತಿಗೆ ಕಿವಿಯಾಗುತ್ತಾ ‘ಇದೇನಪ್ಪಾ, ಅನಿರೀಕ್ಷಿತ ಅಚ್ಚರಿಗಳು ಬೆನ್ನುಬೆನ್ನಿಗೇ ಬರುತ್ತಿವೆ’ ಎಂದು ಒಳಗೊಳಗೇ ಲೆಕ್ಕಹಾಕಿದಳು ಲಿಪಿ. ಮೂರು ವರ್ಷಗಳ ನಂತರ ಕಾಣಲು ಬಂದಾಗ ಆರವ್ ಏನನ್ನುತ್ತಾನೋ ಎಂಬ ಆತಂಕದಲ್ಲಿ ಲಿಪಿ ಇದ್ದರೆ ಆರವನ ಆಪ್ತನಾಗಿರುವ ಸಾಹಿಲ್ ನಾನು ನಿಮ್ಮನ್ನೇ ಕಾಯುತ್ತಿದ್ದೆ ಅನ್ನುತ್ತಿದ್ದಾನೆ. ಸಾಹಿಲ್ ನನ್ನು ಅಲ್ಲೊಮ್ಮೆ ಇಲ್ಲೊಮ್ಮೆ ಈ ಮುನ್ನ ಭೇಟಿಯಾಗಿದ್ದರೂ ಅಂತಹಾ ಸಂಭಾಷಣೆಗಳೇನೂ ಆಗಿರಲಿಲ್ಲ. ಆದರೆ ತಮ್ಮಿಬ್ಬರ ಬಗ್ಗೆ ಆರವನ ಕಡೆಯಿಂದ ಯಾರಿಗಾದರೂ ಗೊತ್ತಿದ್ದರೆ ಅದು ಖಂಡಿತವಾಗಿಯೂ ಸಾಹಿಲನಿಗೆ ಎಂಬುದು ಲಿಪಿಗೆ ತಿಳಿದಿದೆ. ಒಟ್ಟಿನಲ್ಲಿ ಅಷ್ಟು ಕಷ್ಟಪಟ್ಟು ಆರವನ ವಿಳಾಸವನ್ನು ಕಂಡುಹಿಡಿದು ಹುಡುಕುತ್ತಾ ಕೊನೆಗೂ ಬಂದರೆ ಆರವನ ಮನೆಯಲ್ಲಿ ಸಾಹಿಲ್ ನ ಇರುವಿಕೆಯನ್ನು ಕಂಡು ಖುಷಿಪಡಬೇಕೋ, ಬೇಜಾರಾಗಬೇಕೋ ಎಂಬ ಗೊಂದಲದಲ್ಲಿದ್ದಳು ಲಿಪಿ. + +ನಿನ್ನ ನೆನಪ ಇಟ್ಟಿಗೆಯನ್ನಿಟ್ಟು ಕಟ್ಟಿದ ಗೋಡೆಗಳಿವುಮನೆಯೆಂದರೆ ಇದಲ್ಲದೆ ಇನ್ನೇನು… + + + +ಚಿನ್ನದ ಬಣ್ಣದ ಲೋಹಸಮತಲದಲ್ಲಿ ಈ ಸಾಲುಗಳನ್ನು ಸುಂದರ ಕ್ಯಾಲಿಗ್ರಫಿ ಶೈಲಿಯೊಂದರಲ್ಲಿ ಕೊರೆಸಿ ಗೋಡೆಗಂಟಿಸಿಡಲಾಗಿತ್ತು. ಅದು ತನಗಾಗಿಯೇ ಬರೆದ ಸಾಲೆಂಬಂತೆ ಪುಳಕಿತಳಾಗುತ್ತಾ ಅದರ ಮೇಲೆ ಕೈಯಾಡಿಸಿದಳು ಲಿಪಿ. ಇಂಥದ್ದೇ ಬಗೆಬಗೆಯ ಆಕರ್ಷಕ ಸಾಲುಗಳು ಎಲ್ಲೆಲ್ಲೂ ಆರವನ ಈ ಪುಟ್ಟಗೂಡಿನಲ್ಲಿ. ಹೀಗೆ ಆರವನ ಒಂದೊಂದು ಸಾಲುಗಳನ್ನು ತನ್ನೊಳಗೆ ಇಳಿಸಿಕೊಳ್ಳುತ್ತಿರುವಾಗಲೇ ಒಳಗಿನಿಂದ ಕಾಫಿ ಮಗ್ ಗಳನ್ನು ಹಿಡಿದುಕೊಂಡು ಬಂದ ಸಾಹಿಲ್. ಆತ ಒಂದನ್ನು ತನಗಾಗಿ ಪಕ್ಕಕ್ಕಿಟ್ಟು ಇನ್ನೊಂದನ್ನು ಲಿಪಿಗೆ ಕೊಟ್ಟು ಮುಗುಳ್ನಕ್ಕ. ನಗುವನ್ನು ಹೊತ್ತ ಮುಖಗಳೆಂದರೆ ಲಿಪಿಗೆ ಯಾವಾಗಲೂ ಖುಷಿ. ಅಷ್ಟಕ್ಕೂ ಶುಭ್ರನಗುವನ್ನು ಇಷ್ಟಪಡದವರಾರು? + +”ಆರವ್ ನಿಮಗೆ ಫೋನ್ ಮಾಡಿದ್ನಾ? ಆ ಪ್ರೊಡ್ಯೂಸರ್ ಒಬ್ರು ನನ್ನ ಫೋನಿಗೂ ಸುಸ್ತಾಗುವಷ್ಟು ಬೆಳಿಗ್ಗಿನಿಂದ ಕಾಲ್ ಮಾಡ್ತಾನೇ ಇದ್ದಾರೆ”, ಸಾಹಿಲ್ ಕಾಫಿಯನ್ನು ಹೀರುತ್ತಾ ನೇರವಾಗಿ ವಿಷಯಕ್ಕೇ ಬಂದಿದ್ದ. ಆದರೆ ಲಿಪಿಗೆ ಆರವನ ಯಾವ ಸಂಪರ್ಕವೂ ಇಲ್ಲವೆಂದೂ, ಬದಲಾಗಿ ಆಕೆ ಆರವನನ್ನೇ ಹುಡುಕಿಕೊಂಡು ಬಂದಿದ್ದಾಳೆ ಎಂಬುದನ್ನು ಕೇಳಿ ಅವನಿಗೆ ನಿರಾಶೆಯಾಯಿತು. ಸಾಲದ್ದೆಂಬಂತೆ ಸಾಹಿಲ್ ಹೊಸದೊಂದು ನಿರಾಶದಾಯಕ ಸುದ್ದಿಯನ್ನು ಲಿಪಿಯ ಮುಂದಿರಿಸಿದ್ದ. ಅವನು ಹೇಳುವ ಪ್ರಕಾರ ಆರವ್ ಏಕಾಏಕಿ ಬೆಂಗಳೂರನ್ನು ಬಿಟ್ಟು ಬೇರೆಲ್ಲೋ ವಲಸೆ ಹೋಗಿದ್ದಾನೆ. ಆದರೆ ನಿಜಕ್ಕೂ ಎಲ್ಲಿದ್ದಾನೆಂಬುದನ್ನು ಆರವ್ ಇನ್ನೂ ಬಾಯಿಬಿಟ್ಟಿರಲಿಲ್ಲ. ”ಹೋಗಿ ಎರಡು ತಿಂಗಳಾಗುತ್ತಾ ಬಂತು. ಮೊದಲೆರಡು ದಿನ ಸುದ್ದಿಯೇ ಇರಲಿಲ್ಲ ಈ ಆಸಾಮಿಯದ್ದು. ನಾವು ಬಹಳ ಭಯಪಟ್ಟಿದ್ವಿ. ಈಗ ಎರಡು ದಿನಗಳಿಗೊಮ್ಮೆ ಕಾಲ್ ಮಾಡಿ ತಾನಿರುವಲ್ಲಿಂದಲೇ ಕೆಲಸಗಳನ್ನು ನಿಭಾಯಿಸುತ್ತಿದ್ದಾನೆ. ಕೇಳಿದರೆ ನನಗೇನಾಗಿದೆ ಧಾಡಿ. ಗಟ್ಟಿಮುಟ್ಟಾಗಿದ್ದೇನೆ. ಎಲ್ಲಿದ್ದೇನೆ ಎಂದು ಹೇಳಿದರೆ ನೀನು ಮತ್ತೆ ಹುಡುಕಿಕೊಂಡು ಬರುತ್ತೀ. ನೀನು ಆರಾಮಾಗಿರು. ಉಳಿದ ಕೆಲಸಗಳನ್ನು ಇಲ್ಲಿಂದಲೇ ಕುಳಿತುಮುಗಿಸುತ್ತೇನೆ ಅನ್ನುತ್ತಾನೆ. ಡೇಟ್ಸ್ ಗಳು ಇನ್ನೂ ಬಾಕಿಯಿವೆ. ನಾನಾದರೂ ಏನು ಮಾಡಲಿ ಹೇಳಿ…”, ಸಾಹಿಲ್ ಮಾತಾಡುತ್ತಲೇ ಇದ್ದ. + +‘ಛೇ… ಇದೇನಾಗಿಬಿಟ್ಟಿತು’, ಒಳಗೊಳಗೇ ಚಿಂತಿತಳಾದಳು ಲಿಪಿ. ಆರವನ ವಿಚಾರಕ್ಕೆ ಬಂದರೆ ಎರಡು ತಿಂಗಳು ನಿಜಕ್ಕೂ ದೊಡ್ಡ ಅವಧಿ. ಹಾಗೆಲ್ಲಾ ಅವನು ದೀರ್ಘಾವಧಿಗೆ ಹೋಗುವವನಲ್ಲ. ಕಾಲ ನಿಜಕ್ಕೂ ಮಿಂಚಿಹೋಯಿತೇ? ಹೀಗೆ ತನ್ನದೇ ಯೋಚನಾಲಹರಿಯಲ್ಲಿ ಕಳೆದುಹೋಗಿದ್ದಳು ಲಿಪಿ. ”ಆರವ್ ಮುಂದೆಂದಾದರೂ ಮರಳಿ ಬೆಂಗಳೂರಿಗೆ ಬರುತ್ತಾರೆ ಎಂಬ ಭರವಸೆ ನಿಮಗಿದೆಯೇ?”, ಎಂದು ತಣ್ಣಗೆ ಕೇಳಿದಳು ಲಿಪಿ. ಆಕೆಯ ಮುಖದಲ್ಲಿನ ಭಾವಗಳನ್ನು ಸಾಹಿಲ್ ಓದಲು ಪ್ರಯತ್ನಿಸಿದರೂ ಅಷ್ಟೇನೂ ಉಪಯೋಗವಾಗಲಿಲ್ಲ. ”ನೀವಿಬ್ಬರೂ ಹಳೆಯ ಗೆಳೆಯರು ಎಂದು ನನಗ್ಗೊತ್ತು. ಹೀಗಾಗಿ ನಿಮ್ಮಲ್ಲೇನು ಸುಳ್ಳು ಹೇಳುವುದು? ಬಹುಷಃ ಈ ನಗರದ ಋಣ ಅವನಿಗೆ ಮುಗಿದುಹೋಯಿತು ಅನ್ನಿಸುತ್ತಿದೆ. ಕಳೆದ ಒಂದು ವರ್ಷದಿಂದ ಆರವ್ ಬೇರೆ ಕಡೆಯೆಲ್ಲಾದರೂ ನೆಲೆಯೂರುವ ಯೋಜನೆ ಹಾಕುತ್ತಿದ್ದ. ಅವನಿಗೆ ಏಕಾಂತದಲ್ಲಿ ಬರೆಯಬೇಕಂತೆ. ಬರೆಯುತ್ತಲೇ ಇರಬೇಕಂತೆ. ಜೊತೆಗೇ ಈ ಚಮಕ್-ಧಮಕಿನ ಲೋಕಕ್ಕಿಂತ ಕೊಂಚ ದೂರವಿರಬೇಕು ಅನ್ನಿಸುತ್ತಿದೆ ಅನ್ನುತ್ತಿದ್ದ. ಅವನ ಸೋಷಿಯಲ್ ಮೀಡಿಯಾ ಖಾತೆಗಳು ಮುಚ್ಚಿಹೋಗಿವೆ. ಈ ವಿಚಾರ ಸದ್ಯ ನಮ್ಮಿಬ್ಬರಲ್ಲೇ ಇರಲಿ. ಇಲ್ಲಾಂದ್ರೆ ಡೇಟ್ಸ್ ಕೊಟ್ಟ ಪ್ರೊಡ್ಯೂಸರ್ ಗಳು ಮತ್ತೆ ನನ್ನ ತಲೆ ತಿನ್ನೋದು ಗ್ಯಾರಂಟಿ”, ಎಂದ ಸಾಹಿಲ್. + +ಬಿಸಿ ಬಿಸಿ ಕಾಫಿಯನ್ನೇ ಇಷ್ಟಪಡುವ ಲಿಪಿಯ ಕಾಫಿ ಈಗ ತಣ್ಣಗಾಗಿತ್ತು. ಮಗ್ಗಿನಲ್ಲಿ ಇನ್ನೂ ಅರ್ಧದಷ್ಟು ಬಾಕಿಯಿದ್ದರೂ ಅದನ್ನು ಮುಗಿಸದೆ ಟೀಪಾಯಿಯ ಮೇಲಿಟ್ಟು ಹೊರಡಲನುವಾದಳು ಲಿಪಿ. ಲಿಪಿಯ ಚಿಂತೆಯನ್ನು ಅರ್ಥಮಾಡಿಕೊಂಡವನಂತೆ ಸ್ವತಃ ಸಾಹಿಲನೇ ಅವಳಿಗೆ ಸಮಾಧಾನದ ಮಾತನ್ನಾಡಿದ. ”ಅವನು ಭಾರತದಲ್ಲೇ ಇದ್ದಾನೆ. ಮತ್ತೊಮ್ಮೆ ದೇಶ ಬಿಡುವ ಯಾವ ಉದ್ದೇಶಗಳೂ ಅವನಿಗಿಲ್ಲ. ನೀವು ಚಿಂತಿಸಬೇಡಿ. ಅವನಿರುವ ಜಾಗದ ಬಗ್ಗೆ ನನಗಿಂತ ಮೊದಲು ನಿಮಗೆ ತಿಳಿದುಬಂದರೆ ನನಗೆ ತಿಳಿಸಲು ಮಾತ್ರ ಮರೆಯಬೇಡಿ. ನನಗೆ ಗೊತ್ತಾದರೆ ನಾನೇ ನಿಮ್ಮನ್ನು ಸಂಪರ್ಕಿಸುತ್ತೇನೆ”, ಎಂದು ಸೌಜನ್ಯದ ಮಾತನ್ನಾಡಿದ ಹಸನ್ಮುಖಿ ಸಾಹಿಲ್. ಸಾಹಿಲನಿಗೆ ವಿದಾಯವನ್ನು ಕೋರಿ ಹೊರಬಂದಳು ಲಿಪಿ. ಸಾಹಿಲನ ಮಾತಿನ ಧಾಟಿಯನ್ನು ಕೇಳಿದರೆ ಆರವ್ ಮತ್ತೆ ಮರಳಿ ಬರುವವನಂತೆ ಅವಳಿಗಂತೂ ಕಾಣಲಿಲ್ಲ. ನಾನು ತಡಮಾಡಿಬಿಟ್ಟೆನೇ? ಎಲ್ಲಿ ಹೋಗಿರಬಹುದು ಇವನು? ಇದೇನು ವೈರಾಗ್ಯವೇ, ಅನ್ಯಮನಸ್ಕತೆಯೇ, ತಲಾಶೆಯೇ, ಶಕುನವೇ? ಅಂತೆಲ್ಲಾ ಚಿಂತೆಗೆ ಬಿದ್ದಿದ್ದಳು ಲಿಪಿ. ತನ್ನ ಪುಟ್ಟ ಬ್ಯಾಗನ್ನು ಹಿಂದಿನ ಸೀಟಿಗೆಸೆದು ಡ್ರೈವ್ ಮಾಡಲು ಇನ್ನೇನು ಅಣಿಯಾಗಬೇಕು ಎನ್ನುವಷ್ಟರಲ್ಲಿ ಧೋ ಎಂದು ಸುರಿದೇಬಿಟ್ಟಿತು ಮಳೆ.ಜೋರು ಮಳೆಯ ಆ ದಿನ, ಜಯದೇವ ಸಿಗ್ನಲ್, ಐದನೇ ಬ್ಲಾಕ್, ಒಂದೇ ಛತ್ರಿ, ಆರವ್, ಅವನ ಆ ಕವಿತೆ, ಅವನ ಕಣ್ಣುಗಳಲ್ಲಿದ್ದ ಕಾಂತಿ, ಅವನ ಬಿಸಿಯುಸಿರನ್ನು ಸೋಕಿದ್ದ ತನ್ನ ಕಿವಿ… ಹೀಗೆ ಇವೆಲ್ಲವೂ ಅಂದು ಅದ್ಯಾಕೋ ಲಿಪಿಗೆ ನೆನಪಾಗಿಬಿಟ್ಟವು. ‘ತುಮ್ ಇತ್ನಾ ಜೋ ಮುಸ್ಕುರಾ ರಹೇ ಹೋ, ಕ್ಯಾ ಗಮ್ ಹೇ ಜಿಸ್ಕೋ ಛುಪಾ ರಹೇ ಹೋ’, ಎಂದು ಸ್ಟೀರಿಯೋದಲ್ಲಿ ಜಗಜೀತ್ ಸಿಂಗ್ ಹಾಡುತ್ತಿದ್ದರು. ಈಗ ಹೊರಗೂ ಲಿಪಿಯ ಮನದಲ್ಲೂ ಜಡಿಮಳೆಯದ್ದೇ ಆರ್ಭಟ. + +ದೆಹಲಿಯ ನಿಜಾಮುದ್ದೀನ್ ರೈಲ್ವೇ ಸ್ಟೇಷನ್ನಿನಲ್ಲಿಳಿದು, ಚಾವಡೀ ಬಜಾರ್ ವರೆಗೆ ಮೆಟ್ರೋದಲ್ಲಿ ಬಂದು, ಸೈಕಲ್ ರಿಕ್ಷಾ ಹಿಡಿದು ಹಳೇ ದಿಲ್ಲಿಗೆ ಬರುವಷ್ಟರಲ್ಲಿ ಲಿಪಿಗೆ ಸಾಕುಸಾಕಾಗಿತ್ತು. ಮೊದಲೇ ಅವಳದ್ದು ಪರವಾಗಿಲ್ಲ ಎಂಬಂತಹ ಹಿಂದಿ. ಹೀಗಾಗಿ ರಿಕ್ಷಾದವರ ಬಳಿ ಚೌಕಾಶಿ ಮಾಡೋ ಹಾಗೂ ಇಲ್ಲ. ಅಬ್ಬಬ್ಬಾ… ಹಳೇ ದಿಲ್ಲಿಯ ಜೂನ್ ತಿಂಗಳ ರಣಬಿಸಿಲು, ಜನಜಂಗುಳಿ, ಅಸ್ತವ್ಯಸ್ತತೆ ಅವಳಲ್ಲಿ ರೇಜಿಗೆಯನ್ನು ಮೂಡಿಸುತ್ತಿದೆ. ಬಂದಿದ್ದೇನೋ ಹೌದು, ಆದರೆ ಯಾಕಾದರೂ ಬಂದೆನಪ್ಪಾ ಎಂಬ ಪಶ್ಚಾತ್ತಾಪ ಭಾವವನ್ನೂ ಅವಳಲ್ಲಿ ಮೂಡಿಸುತ್ತಿದೆ. ಆದರೇನು ಮಾಡುವುದು? ಬೇಕಿರುವುದನ್ನು ಪಡೆಯಬೇಕಿದ್ದರೆ ಸ್ವಲ್ಪವಾದರೂ ಕಷ್ಟಪಡಬೇಕು. + +ಕೆಲ ವರ್ಷಗಳ ಹಿಂದೆ ಆರವ್ ಜೈಪುರಕ್ಕೆ ಹೋಗಿದ್ದಾಗ ಅವನೊಂದಿಗಿದ್ದ ಒಬ್ಬಿಬ್ಬರನ್ನು ಹುಡುಕಿ, ಅವರನ್ನು ಫೇಸ್ಬುಕ್ ಮೂಲಕ ಸಂಪರ್ಕಿಸಿ, ಅವರ ತಲೆ ತಿಂದು, ಹೇಗೋ ಹಳೇ ದಿಲ್ಲಿಯಲ್ಲೊಂದು ವ್ಯವಸ್ಥೆಯನ್ನು ಮಾಡಿಕೊಂಡಿದ್ದಳು ಲಿಪಿ. ಮುಂದಿನ ಒಂದು ವಾರದಲ್ಲಿ ಆರವನ ಹಳೆಯ ಸಹೋದ್ಯೋಗಿಯೊಬ್ಬಳೊಂದಿಗೆ ಪರಿಚಯ ಮಾಡಿಕೊಂಡು, ಬೀದಿಬೀದಿ ಜಾಲಾಡಿದ್ದೂ ಆಯಿತು. ”ಅಲ್ಲಾ… ಅವನು ಇಲ್ಲೇ ಇದ್ದಾನೆಂದು ಅಷ್ಟು ಖಚಿತವಾಗಿ ಹೇಗೆ ಹೇಳುತ್ತೀರಿ ನೀವು?”, ಎಂದು ಅಚ್ಚರಿಯಿಂದ ಲಿಪಿಯನ್ನು ಕೇಳುತ್ತಿದ್ದಳಾಕೆ. ”ಆ ಸ್ಟುಪಿಡ್ ಫೆಲೋ ಇಲ್ಲಿಲ್ಲದಿದ್ದರೆ ನಾನು ನನ್ನ ಹೆಸರನ್ನೇ ಬದಲಿಸುತ್ತೇನೆ ನೋಡಿ”, ಎಂದು ನಗುತ್ತಾ ಅಂದಿದ್ದಳು ಲಿಪಿ. + +ಲಿಪಿಯ ಲೆಕ್ಕಾಚಾರ ಕೊನೆಗೂ ತಪ್ಪಾಗಲಿಲ್ಲ. ಸುಮಾರು ಹನ್ನೆರಡು ದಿನಗಳು ಕಳೆದ ನಂತರ ಹಳೇ ದಿಲ್ಲಿಗಿಂತ ಒಂದಷ್ಟು ದೂರದಲ್ಲಿರುವ ದರಿಯಾಗಂಜ್ ನ ರಸ್ತೆಬದಿಯ ಪುಸ್ತಕದಂಗಡಿಗಳ ಸಾಲೊಂದರಲ್ಲಿ ಸಿಕ್ಕೇಬಿಟ್ಟಿದ್ದ ಆರವ್. ಅನ್ ಬಿಲೀವಬಲ್ ”Unbelievable”, ಲಿಪಿಯನ್ನು ನೋಡುತ್ತಾ ಉದ್ಗರಿಸಿದ್ದ ಆರವ್. ಅವನಿಗೆ ತನ್ನ ಕಣ್ಣುಗಳನ್ನೇ ನಂಬಲಾರದಂತಾಗಿತ್ತು. ಆರವನನ್ನು ನೋಡುತ್ತಲೇ ಹೃದಯದ ದೊಡ್ಡ ಭಾರವೊಂದು ಒಮ್ಮೆಲೇ ಇಳಿದಂತಾಯಿತು ಲಿಪಿಗೆ. ಜೊತೆಗೇ ಇವನ ಹಿಂದಿನ ಗೆಳೆಯರನ್ನೆಲ್ಲಾ ಹುಡುಕಿ ಬೇಕಾಬಿಟ್ಟಿ ಕಾಲ್ ಮಾಡಿ ಟೆಲಿಫೋನ್ ಕಂಪೆನಿಯವರ ಲಾಭಾಂಶ ಹೆಚ್ಚಿಸಿದ್ದು, ಇಷ್ಟು ದಿನ ದೆಹಲಿಯ ಬಿಸಿಲಿನಲ್ಲಿ ಒಣಗಿದ್ದು, ಇಂಥಾ ಬೊಹೇಮಿಯನ್ ಆಸಾಮಿಯನ್ನು ಹುಡುಕಲು ಬರೋಬ್ಬರಿ ಹನ್ನೆರಡು ದಿನ ಹಳೇದಿಲ್ಲಿಯ ಜನಜಂಗುಳಿಯನ್ನು ಸಹಿಸಿಕೊಂಡಿದ್ದು… ಇತ್ಯಾದಿಗಳು ನೆನಪಾದಾಗಲೆಲ್ಲಾ ತನ್ನನ್ನು ಸತಾಯಿಸಿದ ಆರವನ ಬಗ್ಗೆ ಕೆಟ್ಟ ಕೋಪವೂ ಬಂದಿತು. ಆದರೆ ಅದು ಅಷ್ಟು ಬೇಗ ಇಳಿದುಹೋಗಿದ್ದೂ ಕೂಡ ಸತ್ಯವೇ. ”ಇಲ್ಲೇನೇ ಮಾಡ್ತಾ ಇದ್ದೀಯಾ ಹುಡುಗೀ…”, ಅಚ್ಚರಿಯಿಂದ ಕೇಳುತ್ತಿದ್ದ ಆರವ್. ಇದೇನು ಕನಸೋ ನನಸೋ ಎಂಬ ಗೊಂದಲ ಈಗಲೂ ಅವನಿಗೆ. ”ನಿನ್ನನ್ನೇ ಹುಡುಕ್ತಾ ಬಂದೆ ಹುಡುಗಾ…”, ಎಂದು ಹುಸಿಮುನಿಸನ್ನು ಪ್ರದರ್ಶಿಸುತ್ತಾ ನಾಟಕೀಯವಾಗಿ ಹೇಳಿದಳು ಲಿಪಿ. + +ವಿಧಿಯು ಈ ಒಂದು ಕ್ಷಣಕ್ಕೇ ಕಾಯುತ್ತಿತ್ತು ಎಂಬಂತೆ ಮತ್ತೆ ಎಲ್ಲವೂ ಮಾಯವಾಗಿ ಅಲ್ಲಿ ಲಿಪಿ ಮತ್ತು ಆರವ್ ಮಾತ್ರ ಇರುವಂತೆ ಇಬ್ಬರಿಗೂ ಭಾಸವಾಯಿತು. ಟ್ರಾಫಿಕ್ ಸದ್ದು, ಹೊಗೆ, ಜನಸಮೂಹಗಳೆಲ್ಲವೂ ಕರಗಿಹೋದಂತಿನ ಮಧುರಭಾವ. ಜೋಪಾನವಾಗಿ ಬಚ್ಚಿಟ್ಟುಕೊಂಡು ಕಾಯುತ್ತಿದ್ದ ಕನಸೊಂದು ಕೊನೆಗೂ ನನಸಾದ ಕ್ಷಣ. ಈ ಬಾರಿ ಮಾತಿಗೂ ಕಾಯದೆ, ಇಷ್ಟು ವರ್ಷಗಳ ಮೌನವನ್ನೂ ಮರೆತವನಂತೆ ನೇರವಾಗಿ ಹೋಗಿ ಲಿಪಿಯನ್ನು ಗಾಢವಾಗಿ ಆಲಂಗಿಸಿಬಿಟ್ಟ ಆರವ್. ತನ್ನೊಳಗಿನ ಖಾಲಿತನವೆಲ್ಲಾ ಏಕಾಏಕಿ ಮಾಯವಾದಂತಾಗಿ ಭಾವೋನ್ಮತ್ತಳಾಗಿ ನಿಂತ ನಿಲುವಲ್ಲೇ ತೇಲಿಹೋದಳು ಲಿಪಿ. ”ಅಂತೂ ನೀನು ಮತ್ತೊಮ್ಮೆ ಸಿಗಬೇಕಾದರೆ ನಾನು ಇಷ್ಟು ದೂರ ಬರಬೇಕಾಯಿತು ನೋಡು”, ಲಿಪಿಯ ಗುಳಿಕೆನ್ನೆಯನ್ನು ಚಿವುಟುತ್ತಾ ಅವಳ ಸಪೂರ ಮೂಗನ್ನು ತನ್ನ ತೋರುಬೆರಳ ತುದಿಯಿಂದ ಸ್ಪರ್ಶಿಸುತ್ತಾ ಕೀಟಲೆಯೆಂಬಂತೆ ಹೇಳಿದ ಆರವ್. ”ನೀನು ಬೇಕಿದ್ರೆ ಮಂಗಳ ಗ್ರಹಕ್ಕೇ ಹೋಗಿ ಸೆಟಲ್ ಆಗು. ನಾನು, ನನ್ನ ನೆನಪುಗಳು ಮಾತ್ರ ನಿನ್ನ ಬಿಡೋದಿಲ್ಲ ಮಾರಾಯ”, ಎಂದು ಅವನ ತೋಳುಗಳಲ್ಲಿರುವಂತೆಯೇ ನಕ್ಕಳು ಲಿಪಿ. ಆರವನ ಸಾಂಗತ್ಯದಲ್ಲಿ ಒಮ್ಮೆಲೇ ದಿಲ್ಲಿಯು ಹಾಯೆನಿಸಿತು ಅವಳಿಗೆ. + +”ವೇಟ್ ಎಲ್ಲಾ ಸರಿ… ಆದರೆ ನಾನು ಇಲ್ಲೇ ಇದೀನಿ ಅಂತ ಅದ್ಹೇಗೋ ನಿಂಗೆ ಗೊತ್ತಾಯ್ತು?”, ಕುತೂಹಲದಿಂದ ಕೇಳಿದ ಆರವ್. ಲಿಪಿಯನ್ನು ನೋಡಿದ ಖುಷಿಯಲ್ಲಿ, ಆ ಕ್ಷಣದ ಉತ್ಸಾಹದಲ್ಲಿ ಈ ಬಗ್ಗೆ ಅವನಿಗೆ ಮರೆತೇಹೋಗಿತ್ತು. ಸಾಹಿಲ್ ನೊಂದಿಗೆ ಅವನು ಸಂಪರ್ಕದಲ್ಲಿದ್ದರೂ ಯಾವತ್ತೂ ತಾನಿರುವ ಸ್ಥಳದ ವಿವರಗಳನ್ನು ತಪ್ಪಿಯೂ ಬಿಟ್ಟುಕೊಟ್ಟಿರಲಿಲ್ಲ. ಹಾಗಿದ್ದಾಗ ಲಿಪಿಯು ಹೇಗೆ ಅಲ್ಲಿಗೇ ಹುಡುಕಿಕೊಂಡು ಬಂದಳು ಎಂಬ ಅವನ ಕುತೂಹಲವು ಸಹಜವೇ ಆಗಿತ್ತು. ”ನನ್ನನ್ನೇನು ಕಮ್ಮಿ ಅಂತ ಅನ್ಕೊಂಡ್ಯಾ… ಇಲ್ಲಿಂದ ದೊಡ್ಡ ಕ್ಲೂ ಸಿಕ್ತು ನೋಡು ನಂಗೆ”, ಎಂದು ಕೈಯನ್ನು ತನ್ನ ಬ್ಯಾಗಿನೊಳಗೆ ತೂರಿಸಿ ಅದೇನನ್ನೋ ಹುಡುಕತೊಡಗಿದಳು ಲಿಪಿ. ಅದೇನಪ್ಪಾ ಎಂದು ಆರವ್ ಕುತೂಹಲದಿಂದ ನೋಡಿದರೆ ಲಿಪಿ ತೆಗೆದಿದ್ದು ಒಂದು ಹಳೆಯ ಪತ್ರ. ಹೌದು, ಕೆಲ ವರ್ಷಗಳ ಹಿಂದೆ ಆರವನೇ ಅವಳಿಗಾಗಿ ಬರೆದಿದ್ದ ಕೊನೆಯ ಪತ್ರ. + + + +ಸಾಯದ ಸಾಲುಗಳಂತೆ ಕಾಯುತಿರುವೆ ನಾಮಾಗದ ನೆನಪುಗಳಂತೆ ಕಾಯಲಿರುವೆ ನಾ…ಆರಾಧನೆಯ ಪಂಕ್ತಿಗಳಲ್ಲೇ ಸವೆದುಹೋಗಲಿ ಜೀವನ,ಗಾಲಿಬನ ಗುಡಿಸಲಿನಲ್ಲೇ ಲೀನವಾಗುವೆ ನಾ… + +ತನ್ನ ಮತ್ತು ಮಿರ್ಜಾ ಗಾಲಿಬ್ ನ ಬಗ್ಗೆ ಹೇಳುತ್ತಿದ್ದ ತನ್ನದೇ ಹಳೆಯ ಕವಿತೆಯೊಂದನ್ನು ಕಂಡು ಬೆರಗಾಗಿದ್ದ ಆರವ್. ಇಂಥಾ ಮುದ್ದು ಕೆಲಸಗಳನ್ನು ಮಾಡಿ ನನ್ನನ್ನು ಮತ್ತೆ ಮತ್ತೆ ಮೂಕನನ್ನಾಗಿಸುತ್ತೀಯಾ ನೀನು ಎಂದೂ ಅವಳಲ್ಲಿ ಅರುಹಿದ. ಇತ್ತ ‘ಅದೇನೇ ಆದರೂ ಗೆಲುವು ನನ್ನದೇ’ ಎಂಬಂತೆ ಲವಲವಿಕೆಯಿಂದ ನಕ್ಕಳು ಲಿಪಿ. + +ಅಂದು ರಾತ್ರಿ ಚಾವಡೀ ಬಾಜಾರ್ ಪ್ರದೇಶದ ಆಸುಪಾಸಿನಲ್ಲಿರುವ ರೆಸ್ಟೊರೆಂಟ್ ಒಂದರಿಂದ ಸಾಹಿಲ್ ಗೆ ಕರೆ ಹೋಯಿತು. ”ನಾನು ಮತ್ತು ಲಿಪಿ ಸದ್ಯ ಹಳೇ ದಿಲ್ಲಿಯಲ್ಲಿದ್ದೇವೆ. ನಾಳೆ ಲಿಪಿಗೆ ಇಲ್ಲೇ ಪಕ್ಕದಲ್ಲಿರುವ ‘ಗಾಲಿಬ್ ಕೀ ಹವೇಲಿ’ಯನ್ನು ತೋರಿಸಿ ನಾಡಿದ್ದಿನ ವಿಮಾನದಲ್ಲಿ ನಾವಿಬ್ಬರೂ ಬೆಂಗಳೂರಿಗೆ ಮರಳುತ್ತಿದ್ದೇವೆ”, ಎಂದು ಅತ್ತ ಕಡೆಯಿಂದ ಆರವ್ ಹೇಳುತ್ತಿದ್ದರೆ ಸಾಹಿಲ್ ನ ಮೊಗದಲ್ಲಿ ಅಚ್ಚರಿಯೂ ಸಂತಸವೂ ಏಕಕಾಲದಲ್ಲಿ ವಿಜೃಂಭಿಸುತ್ತಿತ್ತು. + + + + + + + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_484.txt b/Kenda Sampige/article_484.txt new file mode 100644 index 0000000000000000000000000000000000000000..b853ccbb44e406e0a9f96a617eb457c54b846c8b --- /dev/null +++ b/Kenda Sampige/article_484.txt @@ -0,0 +1,99 @@ +ಬಾಬಿಯಕ್ಕ ಒಳಗೆ ಬಂದು ಸೀದಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿ ಚಿಲಕ ಸಿಕ್ಕಿಸಿ ಮಂಚದ ಮೇಲೆ ಬಿದ್ದುಕೊಂಡಳು. ಅವಳಿಗೆ ಎಲ್ಲಿಲ್ಲದ ಸುಸ್ತಾಗಿತ್ತು. ಎರಡೂ ಕೈಗಳಿಂದ ತಲೆಯನ್ನು ಒತ್ತಿ ಹಿಡಿದರೂ ಅದು ಧಿಮಿಗುಡುತ್ತಿತ್ತು. ಅವಳ ದೊಡ್ಡಕ್ಕನ ಮಗ ಶ್ರೀನಿಧಿಯ ಕಣ್ಣಿನ ಆಳ, ಅಲ್ಲಿರುವ ಭಾವನೆಗಳ ಭಾರಕ್ಕೆ ಅವಳು ಸಂಪೂರ್ಣ ಜರ್ಜರಿತಳಾಗಿದ್ದಳು. ಅವನ ಜೋತು ಬಿದ್ದ ಕಣ್ಣ ರೆಪ್ಪೆಗಳ ತಿರುವು ಅವಳಿಗೆ ಏನೇನನ್ನೋ ನೆನಪಿಸಿತ್ತು. + +ಸಂಜೆಯಾಯಿತು; ಕತ್ತಲಾಯಿತು. ಬಾಬಿಯಕ್ಕನ ಮುಚ್ಚಿದ ಬಾಗಿಲುಗಳು ತೆರೆಯುವ ಲಕ್ಷಣಗಳು ಮಾತ್ರ ಕಾಣಲಿಲ್ಲ. + +ಅವಳ ತಂಗಿಯ ಮಗಳು ಆಶಾ ಬಾಗಿಲ ಹೊರಗೆ ನಿಂತು, ‘ದೊಡ್ಮ, ದೊಡಮಾ…..’ ಎಂದು ಕರೆದರೆ ನಿರುತ್ತರ. ಒಬ್ಬರನ್ನೊಬ್ಬರು ನೋಡಿಕೊಂಡು ವಿಚಿತ್ರ ಎಂದು ಕೈ ತಿರುಗಿಸಿದರು. ಬಾಗಿಲ ಸದ್ದಿಲ್ಲ, ಒಳಗಿಂದ ಸುದ್ದಿಶ್ವಾಸವಿಲ್ಲ. ಶ್ರೀನಿಧಿಯೂ ತಪ್ಪಿತಸ್ಥನಂತೆ ಬಂದು ನಿಂತು, ‘ಬಾಬಿಯಕ್ಕ, ಬಾಯಿಯಕ್ಕಾ…….’ ಎಂದು ಬಾಗಿಲಿಗೆ ಕೈ ಕುಟ್ಟಿ ನಿಂತ. + +ರಾತ್ರಿ ಗಂಟೆ ಎಂಟಾದರೂ, ಊಟದ ಪಂಕ್ತಿ ಏಳಲಿಲ್ಲ. ಅಡುಗೆಯ ಪದ್ದಕ್ಕನಿಗೆ ತಡೆಯದೆ, ‘ಬಾಬಿಯಕ್ಕಾ, ಬಾಬಿಯಕ್ಕಾ, ಏಳು. ಊಟದ ಹೊತ್ತಾಯ್ತು. ಪಂಕ್ತಿ ಮಾಡುದಾ?’ ಎಂದಳು. ಬಾಗಿಲ ಮೇಲೆ ಕೈಯಿಟ್ಟು ಸವರುತ್ತ, ಬಾಗಿಲ ಸಂದಿಗೆ ಬಾಯಿಟ್ಟು ಕೇಳಿದಳು. + +ಆಗ ಕೇಳಿತು ಒಂದು ಗುಡುಗು. ನಿರೀಕ್ಷಣೆಯಿದ್ದೂ ಕೆಲವು ಗುಡುಗುಗಳು ಬೆಚ್ಚಿಬೀಳಿಸುತ್ತವಲ್ಲ, ಅಂತಹದೊಂದು ಎದೆಯಾಳಕ್ಕೆ ಬಡಿಯುವ ಗಡಗುಟ್ಟುವ ದನಿ.‘ನನ್ನ ಸುದ್ದಿಗೆ ಬಂದರೆ ಜಾಗ್ರತೆ. ಏನಾರೂ ಬೇಕಾದ್ರೆ ನಾನೇ ಕೇಳ್ತೆ. ಗೊತ್ತಾಯ್ತಲ್ದ?’ + +ಬಾಗಿಲ ಸಂದಿಯಿಂದ ತಪ್ಪಿಸಿಕೊಂಡ ಆ ಗುಡುಗು ಪದ್ದಕ್ಕನ ಕಿವಿಯನ್ನಪ್ಪಳಿಸಿ, ಅಲ್ಲಿದ್ದವರನ್ನೆಲ್ಲ ತಾಂಟಿ, ಇಡೀ ಮನೆಯಲ್ಲಿ ಪ್ರತಿಧ್ವನಿಸಿತು. ನಾಗಿಯ ಎದೆಯಲ್ಲಿ ಚಳಿಯ ನಡುಕ ಹುಟ್ಟಿತು. ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮೂಲೆಯಲ್ಲಿ ಹುದುಗಿ ಕುಳಿತ ಅವಳಿಗೆ ದುಃಖ ಉಮ್ಮಳಿಸಿ ಬರುತ್ತಿತ್ತು. + +ಊಟದ ಮನೆಯಲ್ಲಿ ಮೌನದ ಪಂಕ್ತಿ ನಡೆಯಿತು. ಅನ್ನ ಮೇಲೋಗರಗಳು ತಣಿದು ಮಣ್ಣು ಕಚ್ಚಿದ್ದವು. ಉಂಡವರು ಉಂಡರು. ಬಿಟ್ಟವರು ಬಿಟ್ಟರು. ಬಡಿಸುವವರ ಧ್ಯಾನವೂ ಎಲ್ಲೋ ಏನೋ. ಚಟ್ನಿ ಹಾಕುವಲ್ಲಿ ತಾಳ್ಳು ಬಡಿಸಿದರು. ತಾಳ್ಳಿನ ಜಾಗದಲ್ಲಿ ಹುಳಿ ಸುರಿದರು. ಶ್ರೀನಿಧಿ ಊಟದ ಕೋಣೆಗೆ ಬರದೆಯೇ ಸೀದಾ ಉಪ್ಪರಿಗೆಗೆ ಹೋಗಿಬಿಟ್ಟ. ಮೂಲೆಯಲ್ಲಿ ಹುದುಗಿ ಕುಳಿತ ನಾಗಿ ಅಲ್ಲಿಂದ ಏಳಲೇ ಇಲ್ಲ. + +ರಾತ್ರಿಯಾಗಿ ಬೆಳಗಾಯಿತು. ಬಾಬಿಯಕ್ಕನ ಕೋಣೆಯಿಂದ ಯಾವ ಸದ್ದೂ ಇಲ್ಲ. ಬಾಬಿಯಕ್ಕನ ತಂಗಿ ಭಾಮಳಿಗೆ ಮುನ್ನಾದಿನ ಸಂಜೆಯೇ ಸುದ್ದಿ ಹೋಗಿತ್ತು. ಮನೆಯ ಬಲಬದಿಯ ಓಣಿಯ ಕೊನೆಯಲ್ಲೇ ಅವಳ ಮನೆ. ಅವಳು ಕೆಲಸ ಕಾರ್ಯಗಳನ್ನು ಅಲ್ಲಲ್ಲೇ ಬಿಟ್ಟು ಉಟ್ಟ ಸೀರೆಯಲ್ಲೇ ಬಂದವಳು, ಅಕ್ಕನ ಕೋಣೆಯ ಹೊರಗೆ ನಿಂತು, ‘ಅಕ್ಕ… ಅಕ್ಕಾ…’ ಎಂದು ಕರೆದದ್ದು ವ್ಯರ್ಥವಾಯಿತು. ಏನು ಮಾಡುವುದೆಂದು ತೋಚದೆ ಬಾಗಿಲ ಹೊರಗೆ ಶತಪಥ ತಿರುಗಿದಳು. ಆವತ್ತು ಅವಳು ಮನೆಗೂ ಹೋಗದೆ ಅಲ್ಲೇ ಉಳಿದಳು. + +ಹೊಳೆಬದಿಯ ಏರಿನಲ್ಲಿರುವ ಇನ್ನೊಬ್ಬಳು ತಂಗಿ ಹೇಮಾಳಿಗೆ ಬೆಳಿಗ್ಗೆ ಫೋನು ಹೋಯಿತು. ಮಗನ ಸ್ಕೂಟರಿನ ಹಿಂದೆ ಕುಳಿತು ಅವಳು ಆಗಿಂದಾಗಲೇ ಬಂದವಳು, ಏನಾಯ್ತು? ಎನ್ನುತ್ತ, ‘ನಂಗೆ ನಿನ್ನೆ ಯಾಕೆ ಹೇಳಲಿಲ್ಲ?’ ಎಂಬ ಆಕ್ಷೇಪಣೆಯೊಡನೆ, ಮುಚ್ಚಿದ ಬಾಗಿಲ ಎದುರು ಕಂಗಾಲಾಗಿ ನಿಂತಳು. + +ಬಾಬಿಯಕ್ಕನ ಗಂಡ ಪ್ರಹ್ಲಾದರಾಯ ಸ್ವರ ಎತ್ತರಿಸಿ ಮಾತನಾಡಿದ್ದನ್ನು ಯಾರೂ ಕೇಳಿದವರಿರಲಿಲ್ಲ. ಯಾವತ್ತೂ ಮೃದುದನಿಯಲ್ಲೇ ಮಾತನಾಡುವ ಆತ, ಕೋಣೆಯ ಹೊರಗೆ ಮುಜುಗರದಿಂದ ನಿಂತು ಬಾಗಿಲು ತಟ್ಟಿ, ‘ಮ್ಯಾಡಮ್….’ ಎಂದರು. ತಮಾಶೆಯಲ್ಲೋ, ಅಭಿಮಾನದಲ್ಲೋ ಮ್ಯಾಡಮ್ ಎಂದು ಕರೆಯಲು ಸುರುವಾದದ್ದು, ಕ್ರಮೇಣ ಅವರಿಗೆ ಅದೇ ರೂಢಿಯಾಗಿತ್ತು. ‘ಆ ಶ್ರೀನಿಧಿಗೆ ಬುದ್ಧಿ ಇಲ್ಲೆ. ನೀವ್ ಹೀಂಗ್ ಸಿಟ್ಟ್ ಮಾಡಿರೆ ಹ್ಯಾಂಗೆ?’ ಎಂದು ತನ್ನೊಂದಿಗೆ ನಿಂತಿದ್ದವರನ್ನು ಉದ್ದೇಶಿಸಿ ಎಂಬಂತೆ ಮಾತನಾಡಿದರು. ಆದರೆ ಯಾವುದಕ್ಕೂ ಒಳಗಿನ ಪ್ರತಿಕ್ರಿಯೆ ಮಾತ್ರ ಸೊನ್ನೆ. + +ಆ ದಿನ ಬೆಳಿಗ್ಗೆ ಬಾಬಿಯಕ್ಕ ಸ್ನಾನ ಮಾಡಿ ಬಂದು ಎಂದಿನಂತೆ, ಗಂಜಿ ಹಾಕಿ ತೊಳೆದು ಇಸ್ತ್ರಿ ಹಾಕಿಟ್ಟ ಗರಿಗರಿಯಾದ ಸೀರೆಯೊಂದನ್ನು ಉಟ್ಟು, ಮುಖಕ್ಕೆ ತೆಳ್ಳಗೆ ಪೌಡರು ಹಚ್ಚಿ, ತಲೆ ಬಾಚುತ್ತ ಕುಳಿತಿದ್ದಾಗಲೇ ಇಷ್ಟೆಲ್ಲ ನಡೆದದ್ದು. ಅವಳ ಕೋಣೆಯಲ್ಲಿ ಆಳೆತ್ತರದ ಕನ್ನಡಿಯಿದ್ದರೂ, ಅಲ್ಲಿ ಕತ್ತಲೆಯೆಂದು ಪಡಸಾಲೆಯ ಕಿಟಿಕಿಯ ದಂಡೆಯಲ್ಲಿ ಎಂಟಿಂಚಿನ ಚೌಕ ಕನ್ನಡಿಯೊಂದನ್ನು ಒರಗಿಸಿ ಇಟ್ಟು, ಅದರ ಎದುರು ಮೊಣಕಾಲೂರಿ ತಲೆಬಾಚುವುದು ಅವಳ ಕಟ್ಟಳೆ. ಹಾಗೆ ತಲೆ ಬಾಚುವಾಗಲೇ ಹೆಚ್ಚಾಗಿ ಅಡುಗೆಯ ಪದ್ದಕ್ಕ, ‘ಹೌದನ, ಬಾಬಿಯಕ್ಕ, ಇವತ್ತು ಮೇಲಾರ ಎಂಥ ಮಾಡುದನ?’ ಎಂದು ಕೇಳುವುದು, ಮತ್ತು ಅವಳು – ಮಟ್ಟಿಬದನೆ ಬೋಳು ಹುಳಿ, ಅಲಸಂಡೆ ಕಾಯಿ ಸಾಸಿವೆ ಅರೆದು ಪಲ್ಯ, ಇತ್ಯಾದಿ ಇತ್ಯಾದಿ ಅಂದಿನ ಅಡುಗೆಯ ಪಟ್ಟಿ ಹೇಳುವುದು ವಾಡಿಕೆ. ಬಾಬಿಯಕ್ಕ ಊರಲ್ಲಿಲ್ಲದಿದ್ದರೆ ವಿನಃ, ಉಳಿದಂತೆ ಎಲ್ಲ ದಿನಗಳಲ್ಲೂ ಅವಳ ಹೇಳಿಕೆ ಪ್ರಕಾರವೇ ಅಡುಗೆ ಮಾಡುವುದು ಪದ್ದಕ್ಕನ ರಿವಾಜು. ಪದ್ದಕ್ಕ ಅಂತ ಅಲ್ಲ, ಬಾಬಿಯಕ್ಕನ ಹತ್ತಿರ ಕೇಳದೆ ಆ ಮನೆಯಲ್ಲಿ ಒಂದು ಹಿಡಿಕಡ್ಡಿಯನ್ನು ಆಚಿಂದ ಈಚೆಗೆ ಯಾರೂ ಇಟ್ಟವರಿಲ್ಲ. ಆ ಮನೆಯಲ್ಲಿ ಅವಳು ಎಳೆದದ್ದೇ ಗೆರೆ, ಅವಳು ಹಾಕಿದ್ದೇ ದಾರಿ. + +ಬಾಬಿಯಕ್ಕ ಹುಟ್ಟಿ, ಬೆಳೆದು, ಮಾತ್ರವಲ್ಲ ಮದುವೆಯಾಗಿ ಬಾಳಿದ ಮನೆ ಅದು. ಅವಳ ಅಕ್ಕಂದಿರಿಬ್ಬರು ಮದುವೆಯಾದ ಒಂದೇ ವರ್ಷದಲ್ಲಿ ಒಂದೊಂದು ಮಗಳಂದಿರನ್ನು ಹೆತ್ತು ಸತ್ತ ಮೇಲೆ ಅವಳ ತಂದೆ ರಾಮಪ್ಪಯ್ಯನವರು ದುಃಖ ಭರಿಸಲಾರದೆ, ಬಾಬಿಯಕ್ಕನಿಗೆ ಮನೆ ಅಳಿಯನನ್ನೇ ಮಾಡಿಕೊಂಡಿದ್ದರು. ಅವಳನ್ನು ದೂರ ಕಳಿಸುವುದು ಅವರಿಗೆ ಬೇಡವಾಗಿತ್ತು. ವಕೀಲರಾದ ಅವರು ತಮ್ಮ ಕೈಕೆಳಗೆ ಕೆಲಸ ಮಾಡುವ, ಆಗಷ್ಟೇ ವಕೀಲಿ ಕಲಿತು ಬಂದ ಹುಡುಗ ಪ್ರಹ್ಲಾದನಿಗೆ ಬಾಬಿಯಕ್ಕನನ್ನು ಕೊಟ್ಟು ಮದುವೆ ಮಾಡಿದ್ದರು. ಈಗ ನಾಲ್ಕೈದು ವರ್ಷಗಳ ಹಿಂದೆ ರಾಮಪ್ಪಯ್ಯ ತೀರಿ ಹೋದ ಮೇಲೆ ಮನೆಯ ಆಡಳಿತದ ಹೊಣೆ ತಾನಾಗಿ ಅವಳ ಕೈ ಸೇರಿತ್ತು. ತಂದೆ ಇರುವಾಗಲೂ, ಮನೆಯ ಸಮಸ್ತ ಆಡಳಿತವನ್ನು ಬಾಬಿಯಕ್ಕನೇ ನೋಡಿಕೊಳ್ಳುತ್ತಿದ್ದಳೆಂದರೆ ಸರಿಹೋಗುತ್ತದೇನೋ. ಆ ಊರಿನಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೂ ಹೆಸರು ಮಾಡಿದ ವಕೀಲರಾಗಿದ್ದರೂ, ಮಗಳನ್ನು ಕೇಳದೆ ರಾಮಪ್ಪಯ್ಯನವರು ಯಾವ ಕೆಲಸಕ್ಕೂ ಕೈ ಹಾಕಿದವರಲ್ಲ. ಮಾತು ಮಾತಿಗೆ ಬಾಬೀ.. ಎಂದು ಕರೆದು ಕೇಳದಿದ್ದರೆ ಅವರಿಗೆ ಮನಸ್ಸಮಾಧಾನವಾಗುತ್ತಿರಲಿಲ್ಲ. ಅವಳ ಬಾಯಿಯಿಂದ, ‘ಆಯಿತು ಅಪ್ಪಯ್ಯ’ ಎಂದು ಬಂದ ಮೇಲೇ ಕೆಲಸ ಮುಂದುವರಿಸುತ್ತಿದ್ದರು. ಒಮ್ಮೊಮ್ಮೆ ಆಫೀಸು ಕಡತಗಳ ರಾಶಿಯ ಮಧ್ಯದಿಂದ ತಲೆ ಎತ್ತಿ, ಬಾಬೀ… ಎಂದು ಕೂಗಿದರೆಂದರೆ, ಅವಳು ಎಲ್ಲಿದ್ದರೂ ಅಲ್ಲಿಗೇ ಓಡಿ ಬಂದು ಅವರ ಮಾತಿಗೆ ಕಿವಿಕೊಡಬೇಕು; ಅಂದರೇ ಅವರಿಗೆ ಸಮಾಧಾನ. ಒಕ್ಕಲೆಬ್ಬಿಸುವುದಾದರೂ, ಜಾಗ ಮಾರುವುದಾದರೂ, ಬ್ಯಾಂಕಿನ ವ್ಯವಹಾರವೇ ಆದರೂ, ಮಗಳೊಟ್ಟಿಗೆ ಮಾತುಕತೆ ನಡೆಸದೆ ಹೆಜ್ಜೆ ಮುಂದೆ ಇರಿಸಿದ್ದವರಲ್ಲ. + +ಅವಳ ಗಂಡ ಪ್ರಹ್ಲಾದರಾಯನಾದರೋ ಮನೆ ಅಳಿಯನಿಗೆ ತಕ್ಕ ಜಾಯಮಾನದವನೇ. ಮಾವನ ಎದುರಂತೂ ಸ್ವರ ಏರಿಸುವುದಿರಲಿ, ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಲೂ ಇರಲಿಲ್ಲ. ಇನ್ನು ಹೆಂಡತಿಯೆಂದರೂ ವಿಶೇಷ ಗೌರವವೇ. ಅವಳ ಅಭಿಪ್ರಾಯ, ತೀರ್ಮಾನಗಳೆಂದರೆ, ಮ್ಯಾಡಮ್ ಹೇಳಿದ ಮೇಲೆ ಅದು ಸಮವೇ ಇರಬೇಕು ಎನ್ನುವಂತಹ ಮನೋಧರ್ಮ. + +ತಂದೆ ರಾಮಪ್ಪಯ್ಯನವರಿಂದ ತರಬೇತು ಪಡೆದ ಅವಳು ತುಂಬಿದ ಆ ಮನೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದ ಪರಿಗೆ ಎಲ್ಲರೂ ಅಚ್ಚರಿಪಡುತ್ತಿದ್ದುದಿತ್ತು. ಬಾಬಿಯಕ್ಕನಲ್ಲಿ ರಾಣಿಯ ವರ್ಚಸ್ಸಿದೆಯೆಂದು ಊರವರು ಮಾತನಾಡುತ್ತಿದ್ದರು. ಅವಳ ಮೋರೆಯಲ್ಲಿದ್ದ ಅಧಿಕಾರದ ಗತ್ತು, ಸೀರೆಯ ನೆರಿಗೆಯನ್ನು ಚಿಮ್ಮುತ್ತ ನೆಟ್ಟಗೆ ನಡೆಯುವ ಪರಿ, ಅಧಿಕಾರವಾಣಿಯಿಂದ ಮಾತನಾಡುವಾಗಿನ ಸ್ವರದ ಠೇಂಕಾರ ಈ ಮಾತಿಗೆ ಪುಷ್ಟಿ ಕೊಡುತ್ತಿದ್ದುವು. ಅವರ ಮನೆಯಲ್ಲಿ ಹೆಂಗಸರದೇ ಸಾಮ್ರಾಜ್ಯ ಎಂದು ಹೇಳುವವರೂ ಇದ್ದರು. ಆ ಮಾತಿನಲ್ಲೂ ಹುರುಳಿಲ್ಲದಿರಲಿಲ್ಲ. ಬಾಬಿಯಕ್ಕ, ಅವಳ ಇಬ್ಬರು ಹೆಣ್ಣುಮಕ್ಕಳು, ತೀರಿ ಹೋದ ಅಕ್ಕಂದಿರಿಬ್ಬರ ಮಗಳಂದಿರು, ಊರಲ್ಲೇ ಇದ್ದು ಹಬ್ಬ ಹುಣ್ಣಿಮೆ ಮತ್ತೊಂದೆಂದು ಆಗಿಂದಾಗ ಮನೆಗೆ ಬಂದಿರುತ್ತಿದ್ದ ತಂಗಿಯಂದಿರು, ಅವರ ಹೆಣ್ಣುಮಕ್ಕಳು, ದೂರದ ಸಂಬಂಧಿ ಯಮುನತ್ತೆ, ಅಡುಗೆಯ ಪದ್ದಕ್ಕ, ಪರಿಚಾರಿಕೆಯ ಸಣ್ಣಮ್ಮ, ಕರೆದ ಬಾಯಿಗೆಂದು ಊರಿಂದ ಕರೆತಂದ ಒಕ್ಕಲು ಹುಡುಗಿ ನಾಗಿ-ಬ್ರಾಹ್ಮಣರಾದರೂ ಅಳಿಯಕಟ್ಟಿನವರ ಮರ್ಜಿಯಿತ್ತು ಅವರ ಮನೆಯಲ್ಲಿ ಎನ್ನುವವರೇ ಎಲ್ಲರೂ. + +ಆ ಮನೆಯಲ್ಲಿ ಹೇಗೆಂದರೆ, ಮನೆಯಲ್ಲಿ ಯಾರ್ಯಾರು ಇದ್ದಾರೆಂದು ಎಷ್ಟೋ ಸಲ ಮನೆಯವರಿಗೇ ತಿಳಿಯದಿರುವಂತಹ ಪರಿಸ್ಥಿತಿ ಇರುತ್ತಿದ್ದುದೂ ಇತ್ತು. ಊಟಕ್ಕೋ, ತಿಂಡಿಗೋ, ಇನ್ನೊಂದಕ್ಕೋ ಯಾರು ಯಾರೋ, ಮಕ್ಕಳ ಗೆಳೆಯರೋ, ಶಾಲೆಯ ಅಧ್ಯಾಪಕರೋ, ಬ್ಯಾಂಕಿನ ಸಿಬ್ಬಂದಿಗಳೋ, ಬಂದು ಹೋಗಿಕೊಂಡೇ ಇರುತ್ತಿದ್ದರು. ವಕೀಲರ ಮನೆಯೆಂದರೆ ಒಂದು ಛತ್ರ ಎಂದೇ ಹೇಳುವ ವಾಡಿಕೆ. ಬಾಬಿಯಕ್ಕನ ತಂದೆಯಿರುವಾಗಲಂತೂ, ಅವರು ಎಷ್ಟೋ ಸಲ ಮನೆ ಮಕ್ಕಳನ್ನು ಮನೆಗೆ ಬಂದ ನೆಂಟರೆಂದು ಪ್ರೀತಿಯಿಂದ ಮಾತನಾಡಿಸಿ, ಬಂದ ನೆಂಟರನ್ನು ಮನೆಮಕ್ಕಳೆಂದು ಬೈದ ಎಷ್ಟೋ ಪ್ರಸಂಗಗಳಿದ್ದವು. + +ಬಾಬಿಯಕ್ಕನದು ನೋಡಲು ಆಕರ್ಷಕ ವ್ಯಕ್ತಿತ್ವ. ಕೆಂಪು ಬಿಳಿಯ ಮೈಬಣ್ಣ. ಉದ್ದ ಮುಖದಲ್ಲಿ ಎದ್ದು ಕಾಣುವ ಸಂಪಿಗೆ ಮೂಗು. ಗಂಡನಿಗಿಂತ ಒಂದೂವರೆ ಎರಡಿಂಚಾದರೂ ಉದ್ದದ ಜೀವ. ಮದುವೆಯಾಗುವಾಗ ಅವಳಿಗೆ ಹದಿನೈದು ತುಂಬಿ ಹದಿನಾರು. ಮೆಟ್ರಿಕ್ ಮುಗಿದಿತ್ತಷ್ಟೆ. ಆಗ ಅವಳು ಅಷ್ಟು ಉದ್ದ ಇರಲಿಲ್ಲವಾದರೂ, ಮತ್ತೆ ಒಂದೇ ವರ್ಷದಲ್ಲಿ ಗಂಡನನ್ನು ಮೀರಿಸಿ ಬೆಳೆದವಳು, ಐದೂವರೆ ಅಡಿಗಿಂತಲೂ ಉದ್ದವಾಗಿ, ಅದಕ್ಕೆ ತಕ್ಕಷ್ಟು, ಅಥವಾ ತುಸು ಜಾಸ್ತಿಯೇ ಎನ್ನಬಹುದೇನೋ ಎಂಬಷ್ಟು, ತೋರವಾಗಿದ್ದಳಾಗಿ, ಸಭೆಗೆ ಬಂದರೆ ಎದ್ದುಕಾಣುವಂತಹ ಅಬ್ಬರದ ವ್ಯಕ್ತಿತ್ವ. ನೀಳವಾದ ಮೂಗಿನಿಂದಾಗಿಯೋ, ಎದ್ದು ಕಾಣುವ ವ್ಯಕ್ತಿತ್ವದಿಂದಲೋ, ನರ್ಗೀಸಿನಂತಿದ್ದಾಳೆಂದೂ ಹೇಳುವವರಿದ್ದರು. ಯಾರಾದರೂ ಬಾಯಿಬಿಟ್ಟು “ನೀನು ನರ್ಗೀಸಿನ ಹಾಂಗೆ ಕಾಣ್ತಿಯ” ಎಂದರೆ ಉಕ್ಕುವ ನಗೆಯ ಮಧ್ಯೆಯೂ, ‘ಏ ಸಾಕಾ, ಸುಮ್‌ಸುಮ್‌ನೆ ಏನಾರೂ ಹೇಳ್ಬೇಡ್ವ’ ಅಂತ ಅಲ್ಲಗಳೆಯುತ್ತಿದ್ದಳಾದರೂ, ನರ್ಗೀಸ್ ಅವಳ ಮೆಚ್ಚಿನ ನಟಿಯಾಗಿದ್ದದ್ದಂತೂ ಹೌದು. + +ಕೋರ್ಟಿನ ಕೆಲಸ ಮುಗಿದ ಮೇಲೆ ಕಾರು ಸುಮ್ಮನೆ ಮನೆಯಲ್ಲೇ ಇರುತ್ತದೆಂದು, ಬಾಬಿಯಕ್ಕ ಕಾರು ಬಿಡುವುದನ್ನೂ ಕಲಿತಿದ್ದಳು. ಆ ಸಣ್ಣ ಊರಿನಲ್ಲಿ ಅರವತ್ತು ಎಪ್ಪತ್ತರ ದಶಕದಲ್ಲಿ ಕಾರು ಇರುವ ಮನೆಗಳೇ ಬೆರಳೆಣಿಕೆಯಷ್ಟಿರುವ ಕಾಲದಲ್ಲಿ, ಹೆಂಗಸೊಬ್ಬಳು ಕಾರು ಬಿಡುವುದೆಂದರೆ ತೀರ ವಿಶೇಷವಾಗಿತ್ತು. ಸಂಜೆಯ ಹೊತ್ತು ಒಮ್ಮೊಮ್ಮೆ ಅವಳು ತಂಗಿಯಂದಿರನ್ನು, ಮಕ್ಕಳನ್ನು ಕೂಡಿಸಿಕೊಂಡು ಹೊಳೆ ಬದಿಗೋ, ಕೋಡಿ ಬೀಚಿಗೋ, ನರಿಬೇಣದ ಉದ್ಯಾನಕ್ಕೋ ಕಾರು ಬಿಟ್ಟುಕೊಂಡು ಹೊರಟಳೆಂದರೆ, ಬೀದಿಯಲ್ಲಿ ಹೋಗುವವರೇ ಆಗಲಿ, ಅಂಗಡಿ ಬಾಗಿಲುಗಳಲ್ಲಿ ನಿಂತವರೇ ಆಗಲಿ, ಒಂದು ಗಳಿಗೆ ಬಾಯಿ ಬಿಟ್ಟು ನಿಂತು ನೋಡದೆ ಇರುತ್ತಿರಲಿಲ್ಲ. ಆಗ, ಅವಳ ಒಟ್ಟಿಗೆ ಕುಳಿತವರು ಬೆಟ್ಟು ಮಾಡಿ ಅವಳಿಗೆ ಅದನ್ನು ತೋರಿಸಿ, ‘ಬಾಬಿಯಕ್ಕ, ಅಲ್ಲ್ ಕಾಣ್, ನಿಂತ್ಕಂಡ್ ಕಾಂಬುದು.’ ಎಂದರೆ, ಬಾಬಿಗೆ ಅದೆಲ್ಲ ಕ್ಯಾರೇ ಇರಲಿಲ್ಲ. ‘ಬೇರೆ ಕಸುಬಿಲ್ಲ, ಕಾಂತೊ’ ಎಂದು ನಿಕಾಶೆ ಮಾಡಿಬಿಡುತ್ತಿದ್ದಳು. + +ಚಿಕ್ಕಂದಿನಿಂದಲೇ ಮನೆಯ ಆಡಳಿತದ ನೊಗವನ್ನು ಹೊತ್ತು ಅವಳ ಮನಸ್ಸು ಕಠಿಣವಾಗಿದೆ, ಗಂಡಸರಂತೆ ವರ್ತಿಸುತ್ತಾಳೆ ಎನ್ನುತ್ತಿದ್ದರಾದರೂ, ಒಳಗಿನಿಂದ ಬೆಣ್ಣೆಯಂತಹ ಮೃದು ಹೃದಯವೊಂದೂ ಇದೆಯೆನ್ನುವ ಸತ್ಯ ಮಾತ್ರ ಕೆಲವರಿಗಷ್ಟೇ ಗೊತ್ತಿತ್ತು. ಅವಳೊಂದಿಗೆ ಸಿನೆಮಾ ನೋಡಲು ಹೋದವರಿಗಂತೂ ಸಿನೆಮಾಕ್ಕೇ ಸೀಮಿತವಾದ ಆ ಬೆಣ್ಣೆ ಹೃದಯದ ಪ್ರತ್ಯಕ್ಷ ದರ್ಶನ ಆಗಿಯೇ ಆಗುತ್ತಿತ್ತು. + +ಊರಲ್ಲಿದ್ದ ಎರಡು ಟಾಕೀಸುಗಳಲ್ಲಿ ಯಾವ ಒಳ್ಳೆಯ ಸಿನೆಮಾ ಬಂದರೂ ಅವರ ಮನೆಯ ಪಟಾಲಂ ಹೊರಡುತ್ತಿತ್ತು. ಸಿನೆಮಾದ ಟಿಕೇಟು ಮುಂದಾಗಿಯೇ ಮನೆಬಾಗಿಲಿಗೆ ಬರಬೇಕು ಹಾಗೂ ಎರಡೇ ಮಾರು ದೂರದ ಟಾಕೀಸಿಗೂ ಕಾರಿನಲ್ಲಿಯೇ ಹೋಗಬೇಕು. ಕಾರಿನಿಂದಿಳಿದು, ಸೇನಾಧಿಪತಿಯಂತೆ ಬಾಬಿ ನಡೆಯುತ್ತಿದ್ದರೆ, ಅವಳ ಹಿಂದೆ ಮುಂದೆ ಆಚೆ ಈಚೆ ಉಳಿದವರು ಹೆಜ್ಜೆ ಹಾಕಬೇಕು. ಮನೆಯ ಹೆಂಗಸರು, ಗಂಡಸರು, ಮಕ್ಕಳಲ್ಲದೆ, ಒಬ್ಬಿಬ್ಬ ಮನೆಯಾಳುಗಳೂ ಗಾರ್ಡುಗಳಂತೆ ಜೊತೆಗಿರುತ್ತಿದ್ದರು. ಬಾಬಿಯಕ್ಕನ ಮನೆಯವರು ಸಿನೆಮಾಕ್ಕೆ ಹೋದರೆಂದರೆ ಅದು ಇಡೀ ಊರಿಗೇ ಸುದ್ದಿಯಾಗುತ್ತಿತ್ತು. ಇನ್ನು ಸಿನೆಮಾ ನೋಡಿ ಬಂದ ಮೇಲೆ ಪಡಸಾಲೆಯಲ್ಲಿ ಸುತ್ತಲೂ ಗೋಡೆಗೊರಗಿ ಕುಳಿತು ನಡೆಯುವ ಬಿರುಸಾದ ಚರ್ಚೆಯಲ್ಲಿ ಆ ಚಲನಚಿತ್ರದ ಮೇಲೆ ನಡೆಯುವ ಸೂಕ್ಷ್ಮ ಶಸ್ತ್ರಕ್ರಿಯೆಗೆ ಬಾಬಿಯದೇ ಅಧ್ಯಕ್ಷತೆ. ಯಾರ್ಯಾರ ನಟನೆ, ಯಾವ್ಯಾವ ಹಾಡು ಹೇಗೆ, ಏನು, ಯಾಕೆ, ಇತ್ಯಾದಿಯಾಗಿ ಎಳೆ ಎಳೆಯಾದ ವಿಮರ್ಶೆ ನಡೆಯಬೇಕು. ಪಡಸಾಲೆಯ ಮಧ್ಯದಲ್ಲಿ ಎತ್ತರದ ಹೊಸ್ತಿಲಿನ ಮೇಲೆ ಮುಂಗೈಯಿರಿಸಿ, ಬಾಗಿಲಿಗೊರಗಿ ಕುಳಿತ ಬಾಬಿಯಕ್ಕ ತೀರ್ಮಾನ ಹೊರಡಿಸಬೇಕು. + + + +ಈಗ, ಮೇಲೆ ನಡೆದ ಸಂಗತಿ ನಡೆದುದರ ಮೂಲ ಹುಡುಕಿದರೆ, ಅದು ಸಿನೆಮಾದಲ್ಲೇ ಇದೆಯೆಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆವತ್ತು ಅವರೆಲ್ಲ ನೂತನ್-ಸುನಿಲ್‌ದತ್ ನಟಿಸಿದ ಹಿಂದಿ ಸಿನೆಮಾ ‘ಸುಜಾತಾ’ ನೋಡಿ ಬಂದಿದ್ದರು. ಆಗಲೇ, ಅಂದರೆ ಸಿನೆಮಾ ನೋಡಿ ಬಂದ ಮೇಲೆ ಯಥಾಪ್ರಕಾರ ಚರ್ಚೆ ನಡೆದು ಮೆಚ್ಚುಗೆಯ ಮಹಾಪೂರವೇ ಹರಿದು ಬರತೊಡಗಿದಾಗಲೇ, ಬಾಬಿಯ ದೊಡ್ಡಕ್ಕನ ಮಗ ಶ್ರೀನಿಧಿಯು ವಿಷಯದ ಪ್ರಸ್ತಾಪ ಮಾಡಿದ್ದ. ಅಂದರೆ, ಬ್ರಾಹ್ಮಣ ಹುಡುಗ ಸುನಿಲ್‌ದತ್ತ್ ಕೆಳಜಾತಿಯ ಹುಡುಗಿ ನೂತನಳನ್ನು ಪ್ರೀತಿಸುವ ಆ ಕತೆ ಎಲ್ಲರ ಮನಸೂರೆಗೊಂಡಿತ್ತು. ಅದೆಷ್ಟೋ ದಿನಗಳಿಂದ ಹೇಳಬೇಕೆಂದುಕೊಂಡೂ, ಹೇಳಲು ಎದೆಗಾರಿಕೆ ಬರದೆ ಒದ್ದಾಡುತ್ತಿದ್ದ ಶ್ರೀನಿಧಿಗೆ ಇದ್ದಕ್ಕಿದ್ದಂತೆ, ಹೇಳಿದ್ರೆ ಈಗಲೇ. ಈಗ ಬಿಟ್ರೆ ಇನ್ನ್ ಆಗ್ಲಿಕ್ಕಿಲ್ಲ, ಎಂದು ಅನಿಸಿ, ಅಳ್ಳೆ ಗಟ್ಟಿ ಮಾಡಿಕೊಂಡು ತನ್ನ ಮತ್ತು ನಾಗಿಯ ಬಗ್ಗೆ ಹೇಳುವ ಧೈರ್ಯ ಮಾಡಿದ್ದ. + +ಕ್ಷಣಮಾತ್ರದಲ್ಲಿ ಸಿನೆಮಾ ಜಗತ್ತಿನಿಂದ ವಾಸ್ತವ ಪ್ರಪಂಚಕ್ಕೆ ಬಂದಿಳಿದ ಅವರೆಲ್ಲ ಮೊದಲು ಶ್ರೀನಿಧಿಯೇನೋ ಕುಶಾಲಿಗೆ ಹೇಳುತ್ತಿದ್ದಾನೆಂದೇ ಎಣಿಸಿದರು. ರೇಖಾ ಹಾಗೇ ಹೇಳಲಿಕ್ಕೂ ಹೇಳಿದಳು, ‘ಹೋಗ, ಹೋಗ, ಕುಶಾಲಿಗೂ ಹೊತ್ತ್ ಗೊತ್ತ್ ಅಂದ್ಹೇಳಿ ಇತ್ತ್’‘ಏನಾ, ಮಾಣಿ, ನಿಂಗೆ ಮಂಡೆಗಿಂಡೆ ಸಮ ಉಂಟನ? ಡಾಕ್ಟ್ರತ್ರ ಹೋಯ್ಕ ಹ್ಯಾಂಗೆ?’ ಎಂದು ಭಾಮ ಚಾಟಿ ಬಾರಿಸಿದಳು.‘ಅಬ್ಬೆಯಿಲ್ಲದ ಮಗು ಅಂತ ಕೊಂಡಾಟ ಮಾಡಿದ್ದು ತಲೆಗೇರಿತ್ತಾ ಕಾಂತ್ ಮಾಣಿಗೆ. ಮದಿ ಅಂದ್ರೆ ಆಟ ಅಂತ ಮಾಡ್ಕಂಡಿದ್ಯ? ಕಟ್ಟುಕಟ್ಲೆ ಕ್ರಮ ಅಂತ ಇಲ್ಯ? ಇನ್ನೊಂದ್ಸಲ ನಿನ್ನ ಬಾಯಿಯಿಂದ ಅಂಥ ಮಾತು ಬಂದ್ರೆ ಕಾಣು.’ ಎಂದಳು ಸಟ್ಟನೆ ಸರ್ತ ಕೂತ ಬಾಬಿಯಕ್ಕ. + +ಮತ್ತೆ ತಗೋ, ಒಂದೆರಡಲ್ಲ, ತಲೆಗೊಂದರಂತೆ ಮಾತಿನ ಬಾಣಗಳು ಎರಗಿ ಅವನ ಬಾಯಿ ಸಂಪೂರ್ಣ ಕಟ್ಟಿ ಹೋಯಿತು. ನಾಗಿಗಂತೂ ಮುಖ ಎತ್ತದ ಹಾಗಾಗಿತ್ತು. ಮುಖ ತಗ್ಗಿಸಿ ಮೂಲೆಯಲ್ಲಿ ನಿಂತವಳು ಕಣ್ಣೆತ್ತಿ ಮೇಲೆ ನೋಡುವ ಸಾಹಸವನ್ನೂ ಮಾಡಲಿಲ್ಲ. ಈ ಮನೆಯಲ್ಲಿ ತನ್ನ ದಿನ ಇನ್ನು ಮುಗಿಯಿತು ಎನ್ನುವುದು ಅವಳಿಗೆ ತಕ್ಷಣ ಅರ್ಥವಾಯಿತು. ಧುಮ್ಮುಕ್ಕಿ ಬರುವ ಕಣ್ಣೀರನ್ನು ಹರಪ್ರಯತ್ನದಿಂದ ತಡೆಹಿಡಿದಿದ್ದಳಾಗಿ ಅವಳ ಮೋರೆಯೆಲ್ಲ ಬೀಗಿದಂತಾಗಿ ಕೆಂಪುಕೆಂಪಾಗತೊಡಗಿತ್ತು. + +ಅಬ್ಬೆಯಿಲ್ಲದ ಮಗುವೆಂದು ಶ್ರೀನಿಧಿಯನ್ನು ಅವರು ಎಷ್ಟೇ ಮುದ್ದು ಮಾಡಿ ಬೆಳೆಸಿರಬಹುದು; ನಾಗಿಯ ಸ್ವಭಾವವನ್ನು ನಿಜಕ್ಕೂ ಮೆಚ್ಚಿದ ಅವರು ಅವಳನ್ನು ಎಂದೂ ಕೆಲಸದವಳಂತೆ ನಡೆಸಿಕೊಂಡಿರದೆ ಇರಬಹುದು. ಆದರೆ ಶ್ರೀನಿಧಿ, ನಾ ಮತ್ತ್ ನಾಗಿ…. ನಾವಿಬ್ಬರು…. ನಮಗಿಬ್ಬರಿಗೂ… ನಾವು ಮದುವೆ ಆಪುದೆಂತ ಮಾಡಿತ್ತು. ಎಂದು ತೊದಲಿಕೊಂಡೇ ಆರಂಭಿಸಿದ ಆ ಮಾತನ್ನು ನಂಬುವ ಅಥವಾ ಅದನ್ನು ಒಪ್ಪುವ ಮನಸ್ಸು ಬಿಡಿ, ಅದನ್ನು ಪೂರ್ತಿಯಾಗಿ ಕೇಳಲಿಕ್ಕೂ ಅಲ್ಲಿ ಯಾರೂ ಸಿದ್ಧರಿರಲಿಲ್ಲ. + +ನಿಧಾನವಾಗಿ ವಿಷಯದ ಸಾಂದ್ರತೆ ಅವರೊಳಗೆ ಇಳಿಯುತ್ತಿದ್ದಂತೆ, ಅವರೆಲ್ಲರಿಗೆ ಆದ ದೊಡ್ಡ ಆಘಾತವೆಂದರೆ, ಅದೇ ಮನೆಯಲ್ಲಿ, ಜನಜಂಗುಳಿಯೆಂದು ಧಾರಾಳವಾಗಿ ಹೇಳಬಹುದಾದ ಅಷ್ಟೊಂದು ಮಂದಿಯೆಡೆಯಲ್ಲಿ, ತಮ್ಮ ಮೂಗಿನಡಿಯಲ್ಲಿಯೇ, ಒಂದು ಪ್ರೇಮಕತೆ ನಡೆಯುತ್ತಿರಬಹುದೆಂಬುದರ ಕಡೆಗೆ ತಮ್ಮ ಯಾರೊಬ್ಬರ ಗಮನವೂ ಇದ್ದಿರಲಿಲ್ಲವೆಂದರೆ? ಅಂತಹದೊಂದು ಪ್ರಕರಣ ಅಲ್ಲಿ ನಡೆಯುವ ಸಾಧ್ಯತೆಯ ಬಗ್ಗೆ ಒಂದು ನೂಲುತುಂಡಿನಷ್ಟಾದರೂ ಸಂಶಯವೂ ಬರಲಿಲ್ಲವೆಂದರೆ? ನಾಗಿಯನ್ನು ಕೆಲಸಕ್ಕೆ ಕರೆದಾಗಲೆಲ್ಲ ಅವಳು ಹಿಂದಿನ ಹಿತ್ತಿಲ ಕಡೆಯಿಂದ ಓಡಿ ಬರುತ್ತಾ, ಮಾವಿನಕಾಯಿ ಬಿದ್ದಿತ್ತು, ಹೆಕ್ಕಲು ಹೋಗಿದ್ದೆ ಎನ್ನುವಾಗ, ಏನಿದು ಈಗೀಗ ಮಾವಿನಕಾಯಿ ಬೀಳುವುದು ಜಾಸ್ತಿಯಾಗಿದೆ, ಎಂದುಕೊಂಡರೇ ಹೊರತು, ಬೇರೇನೋ ಮಸಲತ್ತು ನಡೆದಿರಬಹುದೆಂಬುದರ ಕಡೆಗೆ ಯಾರ ಗಮನವೂ ಹೋಗಿರಲಿಲ್ಲವಲ್ಲ. ತಂದಿಟ್ಟ ತಾಂವು ಕಾಗದಗಳು ಬೇಗನೇ ಮುಗಿದುಹೋಗುವುದನ್ನು ಕಂಡೂ, ಯಾರಾದರೂ ಪ್ರೇಮಪತ್ರ ಬರೆಯುತ್ತಾರೆಂಬ ಸಂದೇಹ ಒಬ್ಬರಿಗಾದರೂ ಬಂದಿದ್ದರೆ ಕೇಳಿ. ಬದಲು, ‘ಮ್ಯಾತ್ಸ್ ಪ್ರಾಕ್ಟೀಸ್ ಎಲ್ಲ ಜೋರಲ್ಲಿ ಆಗ್ತ ಉಂಟಂತ ಕಾಣ್‌ತ್’ ಎಂದು ಬಾಬಿಯಕ್ಕನ ಗಂಡ ಖುಶಿಪಟ್ಟುಕೊಂಡು ಮತ್ತಷ್ಟು ಕಾಗದಗಳ ಕಟ್ಟನ್ನು ತಂದು ಜೋಡಿಸಿಟ್ಟಿದ್ದರು. + +ಮಣಿಪಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ರೀನಿಧಿ ಪ್ರತಿ ವಾರಾಂತ್ಯದಲ್ಲಿ ಮಾತ್ರವಲ್ಲ, ವಾರದ ನಡುವೆಯೂ ಮನೆಗೆ ಓಡಿ ಬರುತ್ತಿದ್ದರೆ, ‘ಮಾಣಿಗೆ ಮನೆ ಎಣ್ಣುವುದು ಜಾಸ್ತಿ; ಪಾಪ ಹೋಸ್ಟೆಲ್ಲ್ ಊಟ ಆತ್ತಿಲ್ಲ ಅದ್ಕೆ’ ಎಂದುಕೊಂಡರೇ ವಿನಃ ಇಲ್ಲಿನ ಸೆಳೆತ ಬೇರೆ ಏನಿರಬಹುದೆಂದು ತಲೆಖರ್ಚು ಮಾಡಲು ಹೋದವರಿರಲಿಲ್ಲ. ಅಷ್ಟೊಂದು ಜನರನ್ನು ಸೀಳಿಕೊಂಡು ಅತ್ತಿತ್ತ ಸಿಡಿಯುತ್ತಿದ್ದ ನೋಟದ ಬಾಣಗಳನ್ನಾಗಲೀ, ಹುಬ್ಬಿನ ಸಂಕೇತಗಳನ್ನಾಗಲೀ, ಕೈಯ ಸನ್ನೆಗಳನ್ನಾಗಲೀ ನೋಡಿದವರಿರಲಿಲ್ಲವೋ, ನೋಡಿಯೂ ಅರ್ಥೈಸುವವರಿರಲಿಲ್ಲವೋ, ಅಂತೂ… ಸಿನೆಮಾಗಳಲ್ಲಿ ಸೂಕ್ಷಾತಿಸೂಕ್ಷ್ಮ ಸಂವೇದನೆಗಳನ್ನು, ಕ್ಷಣಮಾತ್ರದಲ್ಲಿ ಗ್ರಹಿಸಿ ಹಿಡಿಯುವ ಮಂದಿಗೆ ಕಣ್ಣೆದುರು ಹರಿಯುತ್ತಿದ್ದ ಭಾವತರಂಗಗಳು ಅಗೋಚರವಾಗಿದ್ದುಬಿಟ್ಟಿದ್ದವು. + +ಪ್ರತಿಯೊಬ್ಬರಿಗೂ, ಸಂಗತಿ ತಮ್ಮರಿವಿಗೆ ಬರದೆಹೋದುದರ ಸಿಟ್ಟು, ಅಪಮಾನ, ಅಸಹಾಯಕತೆಗಳನ್ನು ಅಲ್ಲಗಳೆಯುವ ಅವಸರ ಒಂದೆಡೆಯಾದರೆ, ಮನೆತನದ ಮರ್ಯಾದೆಗೆ ಪೆಟ್ಟಾಗಕೂಡದೆಂಬ ಧಾವಂತ ಇನ್ನೊಂದೆಡೆ. ನಾಗಿಯ ತಂದೆಯನ್ನು ಕೂಡಲೇ ಕರೆಸಿ ಅವಳನ್ನು ಊರಿಗೆ ಕಳುಹಿಸಿಕೊಡುವುದೆಂಬ ನಿರ್ಣಯವನ್ನು ಆಗಿಂದಾಗಲೇ ಕೈಕೊಂಡು, ವಿಷಯಕ್ಕೆ ಪೂರ್ಣವಿರಾಮವನ್ನೂ ಹಾಕಿಯೇ ಬಿಟ್ಟರು. + +ಮುಲ್ಲೆಯಲ್ಲಿ ನಿಂತೇ ಇದ್ದ ನಾಗಿಗೆ ಇನ್ನು ತಡೆಯಲಾಗಲಿಲ್ಲ. ಕೈಯ್ಯಲ್ಲಿದ್ದ ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಅಲ್ಲಿಂದ ಓಡಿದಳು. ಸೆಂಟಿನ ನವಿರಾದ ಪರಿಮಳ ಅವಳ ಮೂಗಿಗೆ ಬಡಿದದ್ದೇ, ಕೆಲವೇ ಗಂಟೆಗಳ ಮೊದಲು ಸಿನೆಮಾ ನೋಡುತ್ತಾ, ಇದೇ ಕರವಸ್ತ್ರದಿಂದ ಬಾಬಿಯಕ್ಕ ಕಣ್ಣೊರೆಸಿಕೊಳ್ಳುತ್ತಿದ್ದುದು ಅವಳಿಗೆ ನೆನಪಾಯಿತು. ಯಾವುದೇ ಸಿನೆಮಾಕ್ಕೆ ಹೋಗಿರಲಿ, ಬಾಬಿಯ ಪಕ್ಕದ ಸೀಟಿನಲ್ಲಿ ನಾಗಿಯೇ ಕುಳಿತುಕೊಳ್ಳಬೇಕೆಂಬುದು ಬಾಯಿಬಿಟ್ಟು ಹೇಳದ ಒಂದು ನಿಯಮವಾಗಿತ್ತು. ಅಲ್ಲಿ ಕುಳಿತವಳಿಗೆ ಕೆಲವು ಚಿಲ್ಲರೆ ಕೆಲಸಗಳೂ ಇದ್ದವು ಎನ್ನಿ,-ಕಣ್ಣೀರು ಬಂದರೆ ಕರವಸ್ತ್ರ ಕೊಡುವುದು, ಬಾಯಿ ಒಣಗಿದರೆ ಶುಂಠಿ ಮಾತ್ರೆ ಒದಗಿಸುವುದು. ಬಾಯಾರಿದರೆ ನೀರು ಕುಡಿಸುವುದು-ಎಲ್ಲ ನಾಗಿಯೇ. ಇನ್ನು ಕಡಲೆಕಾಯಿ ತಿನ್ನುವಾಗ ಪೊಟ್ಟಣ ಇರಬೇಕು ನಾಗಿಯ ಕೈಯ್ಯಲ್ಲಿ; ಆ ಪೊಟ್ಟಣದಿಂದ ಒಂದೊಂದೇ ಕಾಳನ್ನು ತೆಗೆದು ಬಾಬಿಯಕ್ಕ ತನ್ನ ಬಾಯಿಗೆ ಹಾಕಿಕೊಳ್ಳಬೇಕು. ಆವತ್ತಿನ ಸಿನೆಮಾದಲ್ಲಿ ಕೆಲಸದ ಹುಡುಗಿಯಾಗಿದ್ದ ನೂತನಳ ದೀನಾವಸ್ಥೆಯು ಬಾಬಿಯ ಕಣ್ಣಲ್ಲಿ ಸ್ವಲ್ಪ ನೀರನ್ನೇನೂ ಇಳಿಸಿರಲಿಲ್ಲ. ಸಿನೆಮಾ ಮುಗಿದ ಮೇಲೆ ಆ ಒದ್ದೆ ಕರವಸ್ತ್ರವು ನಾಗಿಯ ಕೈಯ್ಯಲ್ಲೇ ಉಳಿದುಬಿಟ್ಟಿತ್ತು. ಈಗ ಅದೇ ಕರವಸ್ತ್ರವು ತಂದ ನೆನಪಿನಿಂದ ನಾಗಿಗೆ ಇನ್ನಷ್ಟು ದುಃಖ ಬಂತು. ಮೆಟ್ಟಿಲಿಳಿದು ಅಂಗಳ ದಾಟಿ ಸೀದ ಹಟ್ಟಿಯ ಹಿಂದಿನ ಭಾಗಕ್ಕೆ ಹೋಗಿ ಗೋಡೆಗೊರಗಿ ನಿಂತು ಮನಸಾರ ಅತ್ತಳು. + +ಹಳ್ಳಿಯಿಂದ ಈ ಮನೆಗೆ ಬರುವಾಗ ನಾಗಿಗೆ ಹದಿಮೂರೋ ಹದಿನಾಲ್ಕೋ ವರ್ಷ. ನವರಾತ್ರಿಯ ಆಚರಣೆಗೆಂದು ಮನೆಯವರೆಲ್ಲ ಹಳ್ಳಿಗೆ ಹೋಗಿದ್ದಾಗ ಹಬ್ಬದ ಕೆಲಸಕಾರ್ಯಕ್ಕೆ ಒಡತಿಗೆ ಸಹಾಯವಾದೀತೆಂದು ಅವರ ಒಕ್ಕಲು ಮಾಲಿಂಗ ತನ್ನ ಮಗಳನ್ನು ತನ್ನೊಟ್ಟಿಗೆ ಕರೆದು ಕೊಡುಬಂದಿದ್ದ, ಹುಡುಗಿಯ ಮುಖ ಲಕ್ಷಣ, ಚುರುಕುತನದ ಓಡಾಟ ನೋಡಿದ ಬಾಬಿಯಕ್ಕ, ‘ಏನಾ ಮಾಲಿಂಗ, ಸಾಲೆ ಬಿಡ್ಸಿದ್ ಯಾಕಾ ಹೆಣ್ಣಿನ್ನ?’ ಎಂದು ಜೋರು ಮಾಡಿದ್ದಳು.‘ಇನ್ನು ಮದಿ ಮಾಡ್ಕಲ್ದ ಒಡ್ತಿ, ಜಾಸ್ತಿ ಕಲ್ತ್ ಜೋರಾತ್ರೆ ಹೆಣ್ಣ್ ಹುಡ್ಗೀರ್’ ಎಂದಿದ್ದ.‘ನಿನ್ನ ಮಂಡೆ. ಮದಿ ಮಾಡ್ತ ಅಂತೆ. ಇಷ್ಟ್ ಸಣ್ಣದಕ್ಕೆ ಮದಿ ಮಾಡೀರೆ, ಹಿಡ್ಕಂಡ್ ಹೋತ್ರ್ ನಿನ್ನ ಪೋಲೀಸ್ರು.’ ಎಂದು ಹೆದರಿಸಿದ್ದಳು. ಹಾಗೆಯೇ, ಹುಡುಗಿಯನ್ನು ಕುಂದಾಪುರಕ್ಕೆ ಕರೆದುಕೊಂಡು ಹೋಗುವ ಯೋಚನೆ ಬಂದಿತ್ತು ಅವಳಿಗೆ. ಅಲ್ಲಿ ಕೆಲಸಕ್ಕೆ ಕೈಕಾಲಿಗೊಂದರಂತೆ ಜನಗಳಿದ್ದರೂ, ಕರೆದ ಬಾಯಿಗೆ ಒಂದು ಹುಡುಗಿಯಿದ್ದರೆ ಒಳ್ಳೆಯದೆಂದು ಬಹುದಿನಗಳಿಂದ ಅವಳ ಮನಸ್ಸಿನಲ್ಲಿತ್ತು. ಒಡತಿ ಹೇಳಿದ ಮೇಲೆ ಮಾಲಿಂಗನೂ ಏನೂ ಹೇಳುವಂತಿರಲಿಲ್ಲ. + +ಹೀಗೆ ಬಾಬಿಯಕ್ಕನ ಮನೆಗೆ ನಾಗಿ ಬಂದು ಈಗ ಏಳೆಂಟು ವರ್ಷಗಳಾದರೂ ಆಗಿವೆ. ಈ ಧೀರ್ಘ ಅವಧಿಯಲ್ಲಿ ನಾಗಿಯ ಸಂಪೂರ್ಣ ವ್ಯಕ್ತಿತ್ವವೇ ಬದಲಾಗಿದೆಯೆಂದರೆ ತಪ್ಪಲ್ಲ. ಬದಲಾಗಿದೆ ಎನ್ನುವುದಕ್ಕಿಂತ ಬಾಬಿಯಕ್ಕನ ಹಾಗೂ ಆ ಮನೆಯ ವಿಶಿಷ್ಟವಾದ ಪ್ರಭಾವದಿಂದ, ಅವಳ ವ್ಯಕ್ತಿತ್ವವು ರೂಪುಗೊಂಡಿದೆ ಎಂದರೆ ಹೆಚ್ಚು ಸರಿಯಾದೀತೇನೋ. ಅಂದಿನ ಏನೂ ಅರಿಯದ ಮುಗ್ದ ಬಾಲಕಿ ಇಂದು ವಿದ್ಯಾವಂತೆ, ತಿಳುವಳಿಕಸ್ತೆಯಾಗಿ ಬೆಳೆದು ನಿಂತ ಇಪ್ಪತ್ತರ ಯುವತಿಯಾಗಿದ್ದಳು. ಕಿರುಗಣೆ ಹಾಕಿಕೊಂಡು, ಬಡಕಟೆಯಾಗಿ ಪಿಟ್ಟೆಯಂತಿದ್ದವಳು ಈಗ ಸವಳುಸವಳಾಗಿ ಉದ್ದಕ್ಕೆ ಬೆಳೆದು ಸೀರೆ ಸುತ್ತುತ್ತಿದ್ದಳು. + +ಬಂದ ಸುರುವಿನಲ್ಲಿ, ಅವಳ ಕೆಲಸಕಾರ್ಯಗಳೆಂದರೆ, – ಕುಡಿಯಲು ನೀರು ತಂದುಕೊಡುವುದು, ಯಾರನ್ನಾದರೂ ಕರೆದು ಬರುವುದು, ತಲೆ ಬಾಚುವುದು – ಇಂತಹ ಪುಡಿ ಜಂಬರಗಳೇ. ಎಲ್ಲರೂ ಈ ಹೆಣ್ಣಿನ ಚುರುಕೇ, ಈ ಹೆಣ್ಣಿನ ಬುದ್ಧಿಯೇ, ಚಿಡ್ ಮಣ್ಣ್ ಚಿಟ್ಟಿ ಇದು, ಎಂದು ಹೊಗಳಿ ಹೊಗಳಿ, ಒಂದು ದಿನ ಅವಳನ್ನು ಶಾಲೆಗೂ ಸೇರಿಸುವಂತಾಯಿತು. ಅದು ಆದದ್ದು ಹೀಗೆ: ಬಾಬಿಯ ಸಣ್ಣಕ್ಕನ ಮಗಳು ರೇಖಾ, ಆಗ ಎಂಟನೆಯ ತರಗತಿಯಲ್ಲಿದ್ದವಳಿಗೆ ಲೆಕ್ಕ ಎಂದರೆ ಹಾಗಲಕಾಯಿ ತಿಂದಂತೆ. ಅವಳು ಬೀಜಗಣಿತದ ಲೆಕ್ಕವನ್ನು ಬಿಡಿಸಲಾಗದೆ ಒದ್ದಾಡುತ್ತಿದ್ದಾಗ, ಅಲ್ಲೆ ಪುಸ್ತಕಗಳನ್ನು ಒರೆಸಿಡುತ್ತಿದ್ದ ನಾಗಿ ತಾನೇ ಮಾಡಿಕೊಟ್ಟಳಂತೆ. ಇದು ಮನೆ ತುಂಬ ಸುದ್ದಿಯಾಯಿತು. ಕಣ್ಣುಗಳು ಅರಳಿದವು. ಹೃದಯಗಳು ಕರಗಿದವು. ಮತ್ತೆ ತಡವಾಗಲಿಲ್ಲ. ಬಾಬಿಯಕ್ಕ, ‘ಹೆಣ್ಣೆ, ನಿಂಗೆ ಶಾಲೆಗ್ ಹೋಯ್ಕ?’ ಎಂದು ಕೇಳಿಯೂ ಆಯ್ತು. ಹೋಗಿ ಸೇರಿಸಿಯೂ ಆಯ್ತು. ರೇಖಾಳ ಜೊತೆಯಲ್ಲೇ ಮನೆಮಗಳಂತೆ ಶಾಲೆಗೆ ಹೋಗುತ್ತ, ಮೆಟ್ರಿಕ್ ವರೆಗೆ ಕಲಿತು ಮುಗಿಸಿದ್ದೂ ಆಯಿತು. + +ಉಟ್ಟುತೊಡುವ ವಿಷಯದಲ್ಲಾಗಲೀ, ತಿಂಡಿತೀರ್ಥದ ಮಟ್ಟಿಗಾಗಲೀ, ಆ ಮನೆಯಲ್ಲಿ ಮನೆಯವರು ಕೆಲಸದವರು ಎಂಬ ಭೇಧ ಯಾವತ್ತೂ ಇರಲಿಲ್ಲ. ಒಮ್ಮೆ ಹಾಗೇ ಆಗಿತ್ತು, ಮಧ್ಯಾಹ್ನ ಮಕ್ಕಳು ಶಾಲೆಯಿಂದ ಬಂದು ಉಣ್ಣುತ್ತಿದ್ದಾಗ, ಪದ್ದಕ್ಕ ತುಪ್ಪ ಬಡಿಸುತ್ತಿದ್ದವಳು, ರೇಖಾ ಮತ್ತಿತರ ಮನೆಯ ಮಕ್ಕಳಿಗೆ ಎರಡೆರಡು ಚಮಚ ಸುರಿದವರು, ನಾಗಿಗೆ ಒಂದೇ ಚಮಚ ಹಾಕಿಕೊಂಡು ಹೋದಳು. ಬಾಬಿಯಕ್ಕ ಅಲ್ಲೇ ನಿಂತಿದ್ದವಳು, ‘ಪದ್ದಕ್ಕ, ಅವಳಿಗೂ ಎರಡು ಚಮಚ ಹಾಕು, ಅವಳೂ ತಾಯಿ ಹೊಟ್ಟೆಲ್ಲೇ ಹುಟ್ಟಿ ಬಂದವಳು.’ ಎಂದಿದ್ದಳು. ಅಂದರೆ, ಅವರೆಲ್ಲ ಅಲ್ಲಿ ನಿಜವಾದ ಅರ್ಥದಲ್ಲಿ ಕೆಲಸದವರಾಗಿರುತ್ತಲೂ ಇರಲಿಲ್ಲ. ಕೆಲಸದವರು ಎಂದರೆ ಅವರು ಹಳತು ಹಪ್ಪಟು ಹರ್ಕಟು ವಸ್ತ್ರಗಳನ್ನೇ ಉಡಬೇಕು ಎನ್ನುವ ಕ್ರಮ ಬಾಬಿಯಕ್ಕನ ಅಮ್ಮನ ಕಾಲದಿಂದಲೂ ಅಲ್ಲಿ ಗೊತ್ತಿರಲಿಲ್ಲ. ಮನೆಯವರು ನಾಲ್ಕು ಸಲ ಉಟ್ಟು ಬೇಜಾರು ಬಂತೆಂದರೆ, ಆ ಸೀರೆಯನ್ನೋ, ಲಂಗವನ್ನೋ, ಶರ್ಟನ್ನೋ ತೆಗೆದು ಯಾರಿಗಾದರೂ ಕೊಟ್ಟುಬಿಡುವುದೇ ಅಲ್ಲಿನ ಕ್ರಮ. ನಾಗಿಯಂತೂ ಶಾಲೆಗೆ ಹೋಗುವ ಹುಡುಗಿ. ಮನೆಮಕ್ಕಳಂತೆ ಅವಳಿಗೂ ಹೊಸ ಸೀರೆ ರವಿಕೆಗಳು ಬರುತ್ತಿದ್ದವು. + +ಒಂದು ಸಲ ಕಾರ್ಕಡ ದೊಡ್ಡಮ್ಮ ಬಂದವರು, ‘ಹೌದನ, ಬಾಬಿ, ನಮ್ಮ್ ಜಾತಿ ಹೆಣ್ಣಿನಾಂಗ್ ಕಾಣುತ್ತಲ್ಲ ಇದು! ಏನು ಒಪ್ಪ, ಏನು ವೈನ!’ ಎಂದು ಅಚ್ಚರಿಪಟ್ಟಿದ್ದರು. ಅಷ್ಟೇ ಅಲ್ಲ, ‘ಜಾಗ್ರತೆ, ಇನ್ಯಾರಾರೂ ಜಾತಕ ಕೇಳ್ಕಂಡ್ ಬಪ್ಪುಕಿತ್ತು ಕಾಣು,’ ಎಂದು ನೆಗೆಯಾಡಿದ್ದರು. ಯಾವ ಬಾಯಲ್ಲಿ ಅವರು ಹಾಗೆ ಹೇಳಿದ್ದರೋ, ಈಗ ಯಾರ್ಯಾರು ಯಾಕೆ, ಮನೆ ಮಾಣಿಯೇ ಕಣ್ಣು ಹಾಕಿತಲ್ಲ ಎಂದು ಅವರಿಗೆಲ್ಲ ಪಿಚ್ಚೆನಿಸಿತು. + +ಇತ್ತೀಚೆಗೆ, ಎಷ್ಟರಮಟ್ಟಿಗೆಂದರೆ ಹಳ್ಳಿಗೆ ಹೋಗಲಿಕ್ಕೇ ಹಿಂದೇಟು ಹಾಕುವಷ್ಟು, ಈ ಮನೆಗೆ, ಮನೆಯ ಆಗುಹೋಗುಗಳಿಗೆ ನಾಗಿ ಒಗ್ಗಿಕೊಂಡುಬಿಟ್ಟಿದ್ದಳು. ಮನೆಯವರಿಗೂ ಅಷ್ಟೆ, ಅರಿವಿಲ್ಲದೆಯೇ, ಅವಳ ಇರವು ಅಭ್ಯಾಸವಾಗಿ ಹೋಗಿತ್ತು. ಬಾಬಿಯಕ್ಕನಿಗಂತೂ ಆ ಹೆಣ್ಣಿಲ್ಲದ್ರೆ ದಿನ ಹೋಗ ಎಂಬಷ್ಟರ ಮಟ್ಟಿಗಾಗಿ, ನಾಗಿ ಅವಳ ಬಲಗೈ ಬಂಟಿಯೇ ಆಗಿದ್ದಳು; ಧೋಬಿಯ ಲೆಕ್ಕ, ಹಾಲಿನ ವಿಲೇವಾರಿಗಳಲ್ಲದೆ, ಒಕ್ಕಲುಮಕ್ಕಳ ಲೇವಾದೇವಿಯನ್ನೂ ಬರೆದಿಡುವವಳು ನಾಗಿಯೇ. ಬಾಬಿಯಕ್ಕನಿಗೆ ತಾಲೂಕು ಆಫೀಸು ಅಥವಾ ಕೃಷಿ ಇಲಾಖೆಗೆ, ಇನ್ನು ಮಹಿಳಾ ಸಮಾಜದ ಸಭೆಗಳಿಗೆ ಹೋಗಲಿಕ್ಕಿದ್ದರೆ ಜೊತೆಯಲ್ಲಿ ನಾಗಿ ಬೇಕೇ. ಇನ್ನು ಉಳಿದವರಿಗೂ ಅಷ್ಟೆ. ಹೇಮಾಳಿಗೆ ಮೈಗ್ರೇನಿನ ತಲೆನೋವು ಬಂತೆಂದರೆ, ‘ಏ ನಾಗಿ, ಮಸಾಜು ಮಾಡ್ ಮಾರಾಯ್ತಿ’ ಅಂತ ಓಡಿಬರುತ್ತಿದ್ದಳು. ಇನ್ನು ಸೀರೆಗಳಿಗೆ ಫಾಲ್ ಹಾಕುವುದು, ರೇಡಿಯೋದಲ್ಲಿ ಬರುವ ಹಿಂದಿ ಸಿನೆಮಾ ಹಾಡುಗಳನ್ನು ಬರೆದುಕೊಡುವುದು, ಹೇಳುತ್ತಾ ಹೋದರೆ ಪಟ್ಟಿಗೆ ಕೊನೆಯಿಲ್ಲ. + +ಜಾತಿ ಅಂತಸ್ತುಗಳನ್ನು ಮೀರಿ, ಅವಳು ಆ ಮನೆಯವರಿಗೆ ಆತ್ಮೀಯಳಾಗಿದ್ದಳು. ಆದರೆ ಈಗ ಇದ್ದಕ್ಕಿದ್ದಂತೆ ಬದಲಾದ ನಿಷ್ಪತ್ತಿಯಲ್ಲಿ, ಎಲ್ಲವೂ ಅಡಿಮೇಲಾಗಿತ್ತು. ಸಂಬಂಧಗಳು ಏರ್ಪಡುವಾಗ ಈ ಜಾತಿ-ಅಂತಸ್ತುಗಳೇ ಪ್ರಮುಖ ಪಾತ್ರ ವಹಿಸುತ್ತದೆನ್ನುವ ಕಟುಸತ್ಯದ ಪೂರ್ಣ ಅಂದಾಜು ಶ್ರೀನಿಧಿಗಾಗಲೀ, ನಾಗಿಗಾಗಲೀ ಇದ್ದಂತಿರಲಿಲ್ಲ. + +ಈಗ ಮಾತ್ರ, ತಲೆಗೊಂದರಂತೆ ಹೊರಟ ವಾಗ್ಬಾಣಗಳಲ್ಲಿ, ಬಪ್ಪಾಗ ಇಲಿ ಹಾಂಗ್ ಇರ್ತೋ, ಹೋತ ಹೋತ ಹುಲಿ ಹಾಂಗ್ ಆತೊ, ಮೆಟ್ಟನ್ನ ಎಲ್ಲಿಡ್ಕೋ ಅಲ್ಲಿಟ್ಟ್‌ರೇ ಚಂದ, ನೆಸಿ ಕೊಟ್ಟ ನಾಯಿ ನೆಸಲ್ ನೆಕ್ಕಿತಂಬ್ರು……. ಎಂದು ಏನೇನೋ ಮಾತುಗಳು ಕೇಳಿಬಂದಿದ್ದವು. ದೊಡ್ಡವರು ಸಣ್ಣವರೆನ್ನದೆ, ಮೇಲಿನಿಂದ ಕೆಳಗಿನವರೆಗೆ, ಅಂದರೆ, ಬಾಬಿಯಕ್ಕನಿಂದ ಹಿಡಿದು, ಪದ್ದಕ್ಕನಾದಿಯಾಗಿ, ಕೆಲಸದ ಸೋಮಿಯವರೆಗೆ ಪ್ರತಿಯೊಬ್ಬರೂ ನಾಗಿಯನ್ನು ಖಂಡಿಸುವವರೇ. ಅವರಿಬ್ಬರ ಬಗ್ಗೆ ಸಹಾನುಭೂತಿಯ ಒಂದೇ ಒಂದು ಸೊಲ್ಲು ಯಾರೇ ಒಬ್ಬರ ಬಾಯಿಯಿಂದಲೂ ಬಂದಿರಲಿಲ್ಲ. + +ಎಂದೂ ಯಾರಿಗೂ ಬೈಯ್ಯದ ಬಾಬಿಯಕ್ಕನ ಗಂಡನೂ ಶ್ರೀನಿಧಿಯನ್ನು ಕರೆದು, ‘ಕಲಿತದ್ದು ದಂಡ ನೀನು. ಅಜ್ಜಯ್ಯನ ಹೆಸರಿಗೆ ಮಸಿ ಬಳಿತಿಯ?’ ಎಂದು ಬೈದದ್ದಾಯಿತು. ಅಂತರ್ಜಾತೀಯ ವಿವಾಹವೆಂದರೆ ಜನರು ಹೆದರುತ್ತಿದ್ದ ಕಾಲ ಇದು. ಹೆದರಿಕೆ ಮಾತ್ರವಲ್ಲ ಅಸಡ್ಡೆ, ತಾತ್ಸಾರ ಕೂಡಾ. ಊರಿನ ಪ್ರಮುಖ ಕ್ರಿಶ್ಚಿಯನ್ ಕುಟುಂಬದ ಹುಡುಗಿಯೊಬ್ಬಳು ಮೆಡಿಕಲ್ ಕಲಿಯುವಾಗ, ಅದೇ ಊರಿನ ಶೆಟ್ಟಿ ಹುಡುಗನೊಬ್ಬನನ್ನು ಪ್ರೀತಿಸಿದ್ದು, ಬಹುದೊಡ್ಡ ಕತೆಯಾಗಿ ಎರಡೂ ಕುಟುಂಬದವರು ಅಡ್ಡ ಬಂದು ಆ ಮದುವೆ ನಡೆಯದಂತೆ ತಡೆದದ್ದು ಮರೆತು ಹೋಯಿತಾ ಎಂದೂ ಕೇಳಿದರು. ಹೀಗಿರುವಾಗ, ಬ್ರಾಹ್ಮಣ ಮನೆತನದಲ್ಲಿ ಹೀಗೇನಾದರೂ ಆದರೆ, ಅದರ ಪರಿಣಾಮವೆಂಬುದು – ಜಾತಿಬಾಂಧವರಿಂದ ಹಿಡಿದು ಪುರೋಹಿತವರ್ಗದ ವರೆಗೆ – ಎಲ್ಲಿಂದ ಎಲ್ಲಿಯವರೆಗೆ ಮುಟ್ಟಬಹುದೆಂದು ಊಹಿಸಲಿಕ್ಕೂ ಸಾಧ್ಯವಿಲ್ಲ. ಮನೆಯಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ಬೇರೆ ಇದ್ದಾರೆ. ಅಜ್ಜಯ್ಯ ಇದ್ದಿದ್ದರೆ ಎದೆಯೊಡೆದು ಸಾಯುತ್ತಿದ್ದರೇನೋ ಎಂದೂ ಹೇಳಿದರು. ಅದಲ್ಲದೆ, ಇಲ್ಲಿ ಪ್ರಶ್ನೆ ಜಾತಿಯದಷ್ಟೇ ಆಗಿರದೆ, ಅಂತಸ್ತಿನದೂ ಆಗಿತ್ತು. + +ಬಾಬಿಯಕ್ಕನ ಕೋಣೆಯ ಹೊರಗೇ ಬೀಡುಬಿಟ್ಟ ಮನೆಮಂದಿಯೆಲ್ಲ ಶ್ರೀನಿಧಿಯನ್ನು ದುರುದುರು ನೋಡುವವರೇ. ಹೋಗು ಕ್ಷಮೆ ಕೇಳು, ನೀ ಮಾಡಿದ್ದು ಕ್ಷಮೆಗೂ ಹೇಳ್ಸಿದ್ದಲ್ಲ, ಎನ್ನುವ ಧೂಷಣಾ ಭಾವವೇ ಅವರ ಕಣ್ಣುಗಳಲ್ಲಿ ತುಂಬಿತ್ತು. ಇಲ್ಲದಿದ್ದರೆ, ನಾಗಿಯನ್ನು ಹಳ್ಳಿಗೆ ಕಳಿಸಿಕೊಡುವುದೆಂತಲೂ, ಶ್ರೀನಿಧಿ ಇನ್ನು ಆ ವಿಷಯ ಎತ್ತಕೂಡದೆಂದೂ ಮುಂಚಿನ ದಿನ ಎಲ್ಲವೂ ಸೈಸಾಲ್ ಆಗಿಯಾಗಿತ್ತು. ಪುನಃ ವಿಷಯ ಎತ್ತುವ ಮೂರ್ಖತನ ಮಾಡಿದ್ದಾದರೂ ಯಾಕಿವ? -ಎಂದು ಕೆಲವರು ಅವನ ಕಿವಿಹಿಂಡಿದರೆ, ಇನ್ನು ಕೆಲವರು ತಲೆ ಕುಟ್ಟಿದರು. ಎಲ್ಲರಿಂದ ತಪ್ಪಿಸಿಕೊಂಡ ಶ್ರೀನಿಧಿಯು ಕೂದಲು ಕೆದರಿಕೊಂಡು, ಮೋರೆ ಬಾಡಿಸಿಕೊಂಡು ಉಪ್ಪರಿಗೆಯ ಕೋಣೆಯಲ್ಲಿ ಬರೇ ನೆಲದ ಮೇಲೆ ಅಂಗಾತ ಬಿದ್ದುಕೊಂಡುಬಿಟ್ಟಿದ್ದ. + +ನಾಗಿಯ ಅವಸ್ಥೆಯಂತೂ ಯಾರಿಗೂ ಬೇಡ. ಮನೆಯವಳಂತೆ, ಮಗಳಂತೆ, ಎಂದೆನ್ನುತ್ತಿದ್ದುದರ ಅರ್ಥ ಇಷ್ಟೆಯೇ ಎಂದು ನಾಗಿಗೆ ದುಃಖ ಒತ್ತರಿಸಿಬರುವಂತಾಗಿತ್ತು. ತಾನಿನ್ನು ಹಳ್ಳಿಗೆ ಹೋಗಲೇಬೇಕಾಯಿತು. ಅಲ್ಲಿಗೂ ಹೊಂದದ, ಒಲ್ಲಿಗೂ ಸಂದದ ಬಾಳ್ವೆಯಾಯಿತು ತನ್ನದು ಎಂದುಕೊಂಡಳು. ಹಿಂದಿನ ದಿನದವರೆಗೂ ಎಲ್ಲರಿಗೂ ಬೇಕಾದವಳಾಗಿದ್ದ ಅವಳನ್ನು, ಈಗ ಯಾರಿಗೂ ಕಂಡರಾಗುತ್ತಿರಲಿಲ್ಲ. ಯಾರದಾದರೂ ಕಣ್ಣಿಗೆ ಬಿದ್ದಳೆಂದರೆ,-ನಾಚಿಕೆಯಿಲ್ಲದವಳು, ಮನೆಹಾಳಿ, ತೋರ್ಸ್‍ಬೇಡ ನಿನ್ನ್ ಸುರ್ಪ, ಸಾಕು ನಿನ್ನ ಹೋಯ್‌ಮಲಿ, ಎಂಬಿತ್ಯಾದಿ  ಸಹಸ್ರನಾಮಗಳೊಂದಿಗೆ ಹೋಗಾಚೆ ಎಂದು ಓಡಿಸಲ್ಪಡುತ್ತಿದ್ದಳು. ಎಣ್ಣಿ ಎಣ್ಣಿ ಮರಕಿ, ಮುಖವೆಲ್ಲ ಸೋರಿ ಹೋಗಿ, ಕಣ್ಣುಗಳು ನಿಸ್ತೇಜವಾಗಿ, ಎರಡೇ ದಿನಗಳಲ್ಲಿ ಬಚ್ಚಿ ಬೆಂಡಾಗಿ ಬಲಿಪಶುವಿನಂತಾಗಿದ್ದ ಅವಳು ಒರಲುಕೊಟ್ಟಿಗೆಯ ಮುಲ್ಲೆಯಲ್ಲಿ ಮಡಚಿದ ಕಾಲುಗಳೆರಡನ್ನೂ ಕೈಗಳಿಂದ ಅವಚಿ ಹಿಡಿದು, ಮುಖವನ್ನು ಕಾಲ್ಗಂಟಿನ ಮೇಲಿರಿಸಿ, ಮುದ್ದೆಯಾಗಿ ಹುದುಗಿ ಕುಳಿತಿದ್ದಳು. + +ಸಿನೇಮಾ ನೋಡಿ ಬಂದ ಮರುದಿನ ಬೆಳಿಗ್ಗೆ ಬಾಬಿಯಕ್ಕ ತಲೆಬಾಚುತ್ತಿರುವಾಗಲೇ ಶ್ರೀನಿಧಿ ಅಲ್ಲಿಗೆ ಬಂದದ್ದು. ಎಡಕೈಯಲ್ಲಿ ಹಿಡಿದ ಚೌರಿಯನ್ನು ಉದ್ದಕ್ಕೂ ಬಾಚಿ, ಫಟಕ್ಕನೆ ಒಮ್ಮೆ ಕೊಡಕಿ, ಅದನ್ನು ತಲೆಯ ಹಿಂಭಾಗದಲ್ಲಿಟ್ಟು, ಕೂದಲಿನೊಟ್ಟಿಗೆ ಹೆಣೆದು, ತುದಿಗೊಂದು ಕಪ್ಪು ದಾರ ಬಿಗಿದು ಮೇಲಕ್ಕೆತ್ತಿ ಉರುಟುರುಟಾಗಿ ಸುತ್ತಿ ಅಂಬಡೆ ಕಟ್ಟಿ ಪಿನ್ನು ಚುಚ್ಚುವಾಗಲೇ, ಶ್ರೀನಿಧಿ ಬಂದು ಅವಳ ಹಿಂದೆ ನಿಂತು, ‘ಸಿನೆಮಾ ಕಂಡ್ಕಂಡ್ ಅಷ್ಟೆಲ್ಲ ಕರಗುವ ನಿನ್ನ ಹೃದಯದ ನಿಜರೂಪ ಇದೇಯಾ, ಬಾಬಿಯಕ್ಕಾ?’ ಎಂದದ್ದು. ಮಾತು ಇಷ್ಟೇ ಆದರೂ ಅದು ಅವಳ ಮರ್ಮಸ್ಥಾನಕ್ಕೆ ತಾಗಿತ್ತು. + +ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು. ಪುನಃ ಕೈ ಎತ್ತಿದವಳನ್ನು ಪದ್ದಕ್ಕ ಹಿಡಿದೆಳೆಯಬೇಕಾಯ್ತು. ಹಣಿಗೆ ಹಾರಿ ಎಲ್ಲಿಯೋ ಬಿದ್ದಿತ್ತು. ಸಿಟ್ಟಿನಲ್ಲಿ ಅವಳ ಮುಖ ಕೆಂಪು ರಟ್ಟುತಿತ್ತು. ‘ಮುಚ್ಚು ಬಾಯಿ, ಕೋಡಂಗಿ.’ ಎಂದು ಕಿರಿಚಿ ಅವಳು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. + +ದೇವರ ಕೋಣೆಯ ಬಾಗಿಲಲ್ಲಿ ಜಪಮಾಲೆ ಹಿಡಿದು ಕುಳಿತಿದ್ದ ಕಣ್ಣು ಕಾಣದ ಯಮುನತ್ತೆಯೋ ಈ ಮೂರು ದಿನಗಳಲ್ಲಿ ಅತ್ತಿತ್ತ ಹೋಗುವವರೊಡನೆ, ಗಳಿಗೆಗೊಂದಾವೃತ್ತಿ ಅಥವಾ ತನ್ನಷ್ಟಕ್ಕೆ ಎಂಬಂತೆ, ಬಾಬಿ ಬಂದ್ಳಾ? ಅಂತಲೋ, ಬಾಗ್ಲು ತೆಗ್‌ದ್ಳ? ಅಂತಲೋ ಕೇಳಿಕೊಂಡೇ ಇದ್ದರು. ಬಾಬಿಯ ಕೋಣೆಯ ಬಾಗಿಲ ಹೊರಗೇ ಕುಳಿತು ಬೆಳಗು ಮಾಡುತ್ತಿದ್ದ ಪದ್ದಕ್ಕನಿಗಂತೂ ರಾತ್ರಿ ಇಡೀ ಅರ್ಧಮ್ಮರ್ಧ ಕನಸುಗಳು, ಅಲ್ಲದ ಭ್ರಮೆಗಳು. ಒಮ್ಮೆಯಂತೂ ನಡುರಾತ್ರಿಯ ಹೊತ್ತಿಗೆ ತೂಕಡಿಸುತ್ತ ಕುಳಿತವಳಿಗೆ, ಶ್ರೀನಿಧಿ ಮತ್ತು ನಾಗಿ ಬಾಬಿಯ ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆ ಅನಿಸಿ, ದಡಬಡಿಸಿ ಎದ್ದು ಕಣ್ಣು ತೆಗೆದರೆ ಯಾರೂ ಇಲ್ಲ; ಮುಚ್ಚಿದ ಬಾಗಿಲು ಮುಚ್ಚಿದಂತೆ. + +ನಾಲ್ಕನೆಯ ಹಗಲಿನ ಕೊನೆಗೆ ಬಾಬಿಯಕ್ಕನ ಕೋಣೆಯೊಳಗಿಂದ ಮಂಚದ ಕರಕರ ಶಬ್ದ ಕೇಳಿತು. ಅವಳ ಕೋಣೆಯ ಬಾಗಿಲಿಗೇ ಒರಗಿಕೊಂಡಿದ್ದ ಮನೆಮಂದಿಯ ಕಿವಿಗಳೆಲ್ಲ ನೆಟ್ಟಗಾದವು. ಸ್ವಲ್ಪ ಹೊತ್ತಿನಲ್ಲಿ ಚಿಲಕ ಕೆಳಗಿಳಿದ ಸದ್ದು ಕೇಳಿದ್ದೇ ಎಲ್ಲರೂ ಗಡಬಡಿಸಿ ಎದ್ದರು. ಮೂರು ದಿನಗಳ ಉಪವಾಸದಿಂದಾಗಿ ಅವಳ ಕಣ್ಣಿನ ಅಡಿ ಕಪ್ಪು ಕರೆ ಕಟ್ಟಿತ್ತಾದರೂ, ಕಣ್ಣೊಳಗಿನ ಹೊಳಪು ಮಾಸಿರಲಿಲ್ಲ. ಜಾರಿ ಬೆನ್ನ ಮೇಲೆ ಬಿದ್ದ ಸೂಡಿಯ ಎಡೆಯಿಂದ ತಪ್ಪಿಸಿಕೊಂಡ ಕೂದಲೆಳೆಗಳು ಗಾಳಿಗೆ ಅವಳ ಮುಖದ ಸುತ್ತು ಹಾರಾಡುತ್ತಿದ್ದುವು. ಬಲಗೈ ಹೆಬ್ಬೆಟ್ಟನ್ನು ಬಾಯಿಯ ಕಡೆಗೆ ಒಯ್ದಂತೆ ಮಾಡಿ, ನೀರು ಬೇಕೆನ್ನುವ ಸನ್ನೆ ಮಾಡಿದ್ದೇ, ಬಾಬಿಯಕ್ಕನಿಗೆ ನೀರು… ನೀರು… ಎಂಬ ಸಂದೇಶ ಒಬ್ಬರಿಂದ ಒಬ್ಬರಿಗೆ ರವಾನಿಸಲ್ಪಟ್ಟು, ಕಾದಾರಿದ ನೀರಿಗೆ ಸ್ವಲ್ಪ ಫ್ರಿಡ್ಜಿನ ನೀರು ಬೆರೆಸಲ್ಪಟ್ಟು ಸಣ್ಣ ಕೌಳಿಗೆಯೊಂದರಲ್ಲಿ ನೀರು ಬಂತು. ಲೋಟೆಗೆ ಬಗ್ಗಿಸಿ ಕೊಟ್ಟ ನೀರನ್ನು ತುಸುವೇ ಕುಡಿದು, ‘ಸ್ನಾನಕ್ಕೆ ಹೋತೆ,’ ಎಂದದ್ದೇ ಸುರುವಾಯ್ತು ಓಡಾಟ. + +ಒಬ್ಬರು ಬೈರಾಸ ತಂದರೆ, ಇನ್ನೊಬ್ಬರು ಮೀಯುವ ತುಂಡು ಹಿಡಿದು ಬಂದರು. ಕೈ ಹಿಡಿದು ಬಚ್ಚಲಿಗೆ ಕರೆದೊಯ್ಯುವವರು ಒಬ್ಬರಾದರೆ, ಜೊತೆಯಲ್ಲಿ ಹೆಜ್ಜೆ ಹಾಕುವವರು ನಾಲ್ಕು ಮಂದಿ. ನೀರು ತೋಡಿಟ್ಟದ್ದೂ ಆಯಿತು; ಚಿಲಕ ಹಾಕಿದರೆ ನೋಡು ಎಂದು ಆಣೆ ಮಾಡಿ ಹೇಳಿದ್ದೂ ಆಯಿತು. + +ಮೀಯುವ ತುಂಡನ್ನು ಸುತ್ತಿಕೊಂಡು, ತಲೆಗೆ ಬೈರಾಸ ಕಟ್ಟಿ ಹೊರಗೆ ಬಂದ ಬಾಬಿಯಕ್ಕ, ಕಾಪಿ ಎಂದದ್ದೊಂದು ಗೊತ್ತು, ಸ್ಟೀಲಿನ ಲೋಟೆ ತುಂಬ ಬಿಸಿಬಿಸಿ ನೊರೆ ಕಾಫಿ ತಯಾರು. ಸೀರೆಯುಡುವಾಗ ಬಾಬಿಯಕ್ಕ, ‘ನಾಲಿಗೆ ಎಲ್ಲ ಕಹಿ ಕುಟ್ಟಿದೆ ಪದ್ದಕ್ಕ. ಒಗ್ಗರಣೆ ಮೆಣಸು ಹಾಕಿ ಉದ್ದಿನ ಹಿಟ್ಟಿನ ಗೊಜ್ಜು ಮಾಡು. ಒಂದು ಮುಷ್ಟಿ ಉಣ್ತೆ.’ ಎಂದಳು.‘ಹಾಂಗೆ ಆಯ್ಲಿ,’ ಎಂದು ಪದ್ದಕ್ಕ, ಅಂತೂ ಊಟದ ವಿಷಯ ಬಂತಲ್ಲ ಎಂಬ ಸಮಾಧಾನದಲ್ಲಿ ಒಳಗೆ ಓಡಿದಳು. + +ಬೈರಾಸವನ್ನು ಎರಡೂ ಕೈಯ್ಯಲ್ಲಿ ಹಿಡಿದು, ಸಪೂರವಾಗಿಸಿ, ಕೂದಲಿಗೆ ಛಟೀರ್ ಎಂದು ಸಿಡಿಸಿ ನೀರು ಹಾರಿಸಿ, ತಲೆಕೂದಲನ್ನು ಒರೆಸುತ್ತ ಜಗಲಿಗೆ ಬಂದ ಬಾಬಿಯಕ್ಕ ಬೈರಾಸವನ್ನು ಜಗಲಿಯ ಗಳದಲ್ಲಿ ನೇತು ಹಾಕಿ ಊಟಕ್ಕೆ ಕುಳಿತಳು. ತಂಗಿಯಂದಿರು, ಮಕ್ಕಳು ಎಲ್ಲರೂ ಸುತ್ತಮುತ್ತ ನಿಂತು ಅವಳಿಗೆ ಬಡಿಸಿದರು; ತಿನಿಸಿದರು; ಗಾಳಿ ಹಾಕಿದರು. + +ಅಂತೂ ಬಾಬಿಯಕ್ಕನ ಓಲೈಕೆಯಲ್ಲೇ ಮನೆಮಂದಿಯೆಲ್ಲಾ ಎಷ್ಟೊಂದು ಮುಳುಗಿದ್ದರೆಂದರೆ, ಬೇರೆ ಯಾವ ಸುದ್ದಿಯೂ ಅವರ ಗೋಷ್ಟಿಗೇ ಬಂದಿರಲಿಲ್ಲ. ಶ್ರೀನಿಧಿ ಮಾಯವಾದದ್ದಾಗಲೀ, ನಾಗಿ ಕಾಣೆಯಾದದ್ದಾಗಲೀ ಅವರ ಗಮನಕ್ಕೆ ಬರುವಾಗ ತುಂಬ ತಡವಾಗಿತ್ತು. + +ಈ ಸಂಗತಿ ನಡೆದು ಈಗ ಮೂವತ್ತು ವರ್ಷಗಳೇ ಮೀರಿವೆ. ಅದು ಆಗ ಆ ಊರಲ್ಲಿ ಎಬ್ಬಿಸಿದ ತರಂಗಗಳ ಬಗ್ಗೆ ನಾನೀಗ ಏನೂ ಹೇಳುವುದಿಲ್ಲ. ಆದರೆ ಬಾಬಿಯಕ್ಕನಂತವರ ಮಾತನ್ನೂ ಮೀರಿ, ಅವಳ ಫರ್ಮಾನಿಗೆ ವಿರೋಧವಾಗಿ ಅದು ಹೇಗೆ ಆ ಮದುವೆ ನಡೆಯಿತು ಎಂದು ಎಲ್ಲರೂ ಇವತ್ತಿಗೂ ಆಶ್ಚರ್ಯ, ಅನುಮಾನಪಡುತ್ತಲೇ ಇರುವಂತಾಯಿತು. ಪದ್ದಕ್ಕ ಒಮ್ಮೆ ಸಿಕ್ಕಿದಾಗ ಅಮ್ಮ ಇದೇ ಮಾತನ್ನು ಕೇಳಿದ್ದಕ್ಕೆ, ‘ಅವಳಿಗೆ ವಿರುದ್ಧವಾಗಿ ಅಂತ ನೀವ್ ಹ್ಯಾಂಗ್ ಹೇಳ್ತ್ರಿ?’ ಅಂದಳಂತೆ. + + + +ಹೆಸರಾಂತ ಕಥೆಗಾರ್ತಿ. ಮೂಲತಃ ಕುಂದಾಪುರದವರು. ಈಗ ಮುಂಬೈ ವಾಸಿ. “ಮಾಯಕದ ಸತ್ಯ”, “ರುಕುಮಾಯಿ” ಮತ್ತು “ಹಕ್ಕಿ ಮತ್ತು ಅವಳು” ಇವರ ಕಥಾಸಂಕಲನಗಳು. “ಪಾಚಿಕಟ್ಟಿದ ಪಾಗಾರ” ಕಾದಂಬರಿ. \ No newline at end of file diff --git a/Kenda Sampige/article_485.txt b/Kenda Sampige/article_485.txt new file mode 100644 index 0000000000000000000000000000000000000000..a0abe21a976060d9591346a5dc8ccc5326d1623d --- /dev/null +++ b/Kenda Sampige/article_485.txt @@ -0,0 +1,39 @@ + + +ವಿಜಯನಗರದಲ್ಲಿ ಚಿನ್ನದೇವರಾಯನು ಸಾಮ್ರಾಟನಾಗಿ ಮರೆಯುತ್ತಿದ್ದನು. ಅವನ ದಯೆ, ಪರಾಕ್ರಮ, ಪ್ರತಿಭೆಗಳ ಕೀರ್ತಿಯು ದೇಶದಲ್ಲೆಲ್ಲ ಹಬ್ಬಿತ್ತು. ಆ ಕಾಲಕ್ಕೆ ತುಳುನಾಡು ಅವನ ಕೈಯೊಳಗೆ ಅಡಗಿತ್ತು. ಆಗಲೇ ಕಾರ್ಕಳದಲ್ಲಿ ಅತ್ಯಂತ ವಿಜೃಂಭಣೆಯಿಂದ ಜರಗಿದ ಗೊಮ್ಮಟನ ಪ್ರತಿಷ್ಠೆಯ ಮಹೋತ್ಸವಕ್ಕೆ ಅವನು ಸ್ವತಃ ವಿಜಯ ಮಾಡಿದ್ದನು. ಆಗ ತುಳುನಾಡಿನ ಸೊಬಗನ್ನೂ, ಐಸಿರಿಯನ್ನೂ ಕಂಡು ಸಂತಸ ಪಡೆದಿದ್ದನು. ಆದರೆ ತುಳು ರಾಯರ ತೆಗಲೆಯು ಎಲ್ಲಿ ಮಿತಿಮೀರಿಬಿಡಬಹುದೋ ಎಂದು ಶಂಕಿಸಿ, ಅವರಲ್ಲಿ ನಂಬಿಕೆ ಸಾಲದೆ, ಅವರ ಮೇಲಿನ ಹಿಡಿತವನ್ನು ಬಿಗಿದನು. ಅವರು ಕೊಡತಕ್ಕ ಕಪ್ಪಕಾಣಿಕೆಗಳನ್ನು ಏರಿಸಿದನು. ಎಲ್ಲರೂ ವಿಜಯನಗರದ ಕಟ್ಟಳೆಯಂತೆ ಸೀಮೆಗಳನ್ನು ಆಳುತ್ತ , ಸಮ್ರಾಟನೊಡನೆ ಸ್ನೇಹ ಸಂಪ್ರೀತಿಯಿಂದ ನಡೆದುಕೊಳ್ಳುತಕ್ಕುದೆಂದು ಶಾಸನ ಬರೆಸಿದನು. ವೈರಿಗಳು ಅರಸು ಅನುಸರಿಗಳ ಕೊಂಡು ಮೋಹರಿಸಿ ಬಹಾಗ, ಆಳು, ಕುದುರೆ, ಅರ್ಥ, ಪ್ರಾಣ ವೆಚ್ಚಿಸಿ ಕಾದುವುದಕ್ಕೆ ತಪ್ಪಲಾಗದೆಂದು ಕೌಲು ಮಾಡಿದನು. ಅವರ ಮೇಲೆ ಕಣ್ಣಿಡುವಂತೆಯೂ, ಸೀಮೆಗಳ ಕರಕಂದಾಯ, ವಂತಿಗೆ ವರಾಡವನ್ನು ವಸೂಲು ಮಾಡುವಂತೆಯೂ ಬಾರ್ಕೂರು ಹೋಬಳಿಯಲ್ಲಿ ಒಬ್ಬ ಒಡೆಯನನ್ನು ನೇಮಿಸಿದನು. + +ಒಂದು ದಿನ ಹೋಬಳಿಯ ಕಛೇರಿಯಲ್ಲಿ ಒಡೆಯ ಚಂದರಸನು ಸೀಮೆಗಳ ಲೆಕ್ಕ ಪಟ್ಟಿಗಳನ್ನು ನೋಡುತ್ತಿದ್ದನು. ಮೂಡುಬಿದರೆಯ ಚೌಟರಸನ ಲೆಕ್ಕಪಟ್ಟಿಗಳೂ ಬಂದಿದ್ದುವು. ಆಗಿನ ಜೈನರಾಯರಲ್ಲೆಲ್ಲ ಮೂಡುಬಿದರೆಯ ಚೌಟ ಅರಸನಾದ ಚಿನ್ನದೇವರಾಯನೇ ಗಣ್ಯನಾಗಿದ್ದನು. ಅವನ ಸೀಮೆ ಏಳಿಗೆಯಲ್ಲಿತ್ತು. ಜನ ನೆಮ್ಮದಿಯಿಂದಿತ್ತು. ಶಾಂತಿ ನೆಲೆಗೊಂಡಿತ್ತು. ಅವನು ವಿಜಯನಗರಕ್ಕೆ ಸಾವಿರ ಹೊನ್ನುಗಳ ಕಪ್ಪ ಕೊಡುತ್ತಿದ್ದನು. ಚಂದರಸನು ಲೆಕ್ಕದೋಲೆಗಳನ್ನು ಪರೀಶೀಲಿಸುತ್ತಿದ್ದಂತೆ, ಧರ್ಮ ಸಮ್ರಾಜ ಚಿನ್ನದೇವರಾಯ ಎಂಬ ಒಪ್ಪವು ಅವನ ಕಣ್ಣು ಕುಕ್ಕಿತು. ಎಲ್ಲ ಓಲೆಗಳಲ್ಲೂ ಅದೇ ಕೈವೊಪ್ಪ, ಅದೇ ಮುದ್ರೆ. ಮುಂದೆ ಓದಲು ಅವನಿಗೆ ಕಣ್ಣೇ ಕಾಣಿಸಲಿಲ್ಲ. ಹಿಡಿದ ಓಲೆ ಹಿಡಿದಲ್ಲೆ. ಮನಸ್ಸಿನಲ್ಲಿ ಯೋಚನೆಗಳೆದ್ದುವು. ಧರ್ಮ ಸಾಮ್ರಾಟ ಚಿನ್ನದೇವರಾಯ ಅಬ್ಬ! ಇವನೇ ಸಾಮ್ರಾಟ! ಇವನೇ ಚಿನ್ನದೇವರಾಯ! ಇನ್ನೇನು ಉಳಿಯಿತು! ಸಾಮ್ರಾಟರ ಬಿರುದು ಈ ಪಾಳಯ ಪಟ್ಟಿನ ಚೌಟಗೆ, ಹೌದು! ಕೇಳುವವರಿಲ್ಲದಿದ್ದರೆ ಯಾವ ಹೆಸರಿಟ್ಟು ಕೊಂಡರೇನು? ಹೇಗೆ ಒಪ್ಪವನ್ನು ಹಾಕಿದರೇನು? ಈ ಚೌಟನ ಅಟ್ಟಹಾಸ ಹದ್ದುಮೀರಿತು. ಇವನೆಷ್ಟು ಕೈಮೀರಿದನೆಂದು ಈ ಕೈವೊಪ್ಪಗಳೇ ಹೇಳುವುದಿಲ್ಲವೇ! ಸಾಮ್ರಾಟರ ಬಿರುದನ್ನು ಲಕ್ಷಿಸದವನು ನನ್ನಂಥ ಹೋಬಳಿಯ ಒಡೆಯನನ್ನು ಗಣ್ಯ ಮಾಡುವನೇಕೆ? ಈತನನ್ನು ಹೀಗೆಯೇ ಬಿಡುವುದು ಸರಿಯಲ್ಲ; ಎನ್ನುತ್ತ, ಯೋಚನೆಯಲ್ಲಿ ಮುಳುಗಿದನು. + +ಚೌಟನು ಸೀಮೆಯನ್ನು ವಿಸ್ತರಿಸಿ, ಗಡಿಗಳಲ್ಲಿ ಕೋಟೆಗಳನ್ನು ಕಟ್ಟಿಸಿ ಮಂದಿ ಮಾರ್ಬಲಗಳನ್ನು ಹೆಚ್ಚಿಸುತ್ತಿರುವನು! ಮಣೇಲ ಸಾವಿರ ಸೀಮೆಯ, ಪೊರಲ ದೇವಿಯ, ಆಯ ದಾಯ ಕೊಡಿ ಚೆಂಡುಗಳ ಪಾರುಪತ್ಯವನ್ನೆಲ್ಲ ತನ್ನ ಕೈಗೇ ತೆಗೆದುಕೊಂಡಿರುವನು! ಜಾತ್ರೆಗೆ ಬರುವಾಗ ಅರ್ಕುಳ ನಾನೂರಾಳರು, ಅಮ್ಮುಂಜೆ ಆರುನೂರಾಳರು ಕೂಡಿ ಮಣೇಲ ಪಟ್ಟಣಸೆಟ್ಟಿ ಸಹಿತ ಮಿಜಾರ ಗಡಿಯಲ್ಲಿ ಮಾನ ಮರ್ಯಾದೆ, ಮೇರುವೆ, ತೋರಣಗಳಿಂದ ತನ್ನನ್ನು ಇದಿರುಗೊಳ್ಳಬೇಕೆಂದು ಕಟ್ಟು ಮಾಡಿರುವನು! ಮಾಗಣೆಗಳ ಸೀಮೆ ಸಾಮ್ಯ ಮೊದಲಾಗಿ ಬಡ್ಡಿ ಸಿದ್ಧಾಯ ಮುಂತಾದುವುಗಳೆಲ್ಲ ತನ್ನ ಬೊಕ್ಕಸಕ್ಕೆ. ಸೀಮೆಯು ಸಂಪತ್ತು ತುಂಬಿ ತುಳುಕುತ್ತಿದೆ! ಆ ಸಾವಿರ ಕಂಬದ ಬಸದಿಗಾಗಿ ಜೈನ ಸೆಟ್ಟರು ಹಣವನ್ನು ನೀರಿನಂತೆ ಚೆಲ್ಲುತ್ತಿದ್ದಾರೆ! ಹೀಗೆ ಹಲವು ಬಗೆಗಳಿಂದ ಸೊಕ್ಕೇರಿದ ಈ ಚೌಟನು ಸಮ್ರಾಜನೆಂದು ಕರೆದುಕೊಳ್ಳದೆ ಇದ್ದಾನೇ? ಸಾಮ್ರಾಟರ ಪಟ್ಟದ ಹೆಸರನ್ನು ಬಿಟ್ಟಾನೇ? ಇಲ್ಲ. ಇಲ್ಲ ಇವನ ಠೀವಿಯೇನು! ಠೇಂಕಾರವೇನು! ಹೋಬಳಿಯ ಒಡೆಯ ಎಂದರೆ ಅವನ ಕಾಲ ಕಸವೆಂದೆಣಿಸಿದ್ದಾನೆ! ಇವನಿಗೆ ಲಂಗು ಲಗಾಮು ಒಂದೂ ಇದ್ದಂತೆ ಕಾಣುವುದಿಲ್ಲ. ಈ ತುಟಿ ಮೀರಿದ ಹಲ್ಲನ್ನು ಕಿತ್ತೊಗೆಯದಿದ್ದರೆ ಪರಿಣಾಮವಿಲ್ಲ. ಹುಂ! ಇವತ್ತು ಬಿರುದಿಗೆ ಕೈಹಾಕಿದ. ನಾಳೆ ಸತ್ತಿಗೆಗೆ, ನಾಡಿದ್ದು ಸದ್ರಿಗೆ. ಮತ್ತೆ ಯಾವುದಕ್ಕೆ ಕೈಯಿಕ್ಕುವನೋ ದೇವರೇ ಬಲ್ಲ! ಪಟ್ಟದ ಕತ್ತಿಗೇ ಕೈಯಿಕ್ಕಿಯಾನು. ರನ್ನ ಗದ್ದುಗೆಗೇ ಕಣ್ಣಿಟ್ಟಾನು. ಇದನ್ನೆಲ್ಲ ಕಂಡೂ ಕಾಣದಂತೆ ನಾನು ಹೇಗಿರಲಿ? ಇದ್ದುದನ್ನೆಲ್ಲ ಇದ್ದಂತೆ ಹುಜೂರಿಗೆ ತಿಳಿಸಿ ಬಿಟ್ಟರೆ ನನ್ನ ಭಾರವು ತಪ್ಪಿತು. ಮೇಲಿನವರಿಗೆ ಮೆಚ್ಚಿಗೆಯಾದರಂತೂ ನನ್ನ ಭಾಗ್ಯವೇ! ಹೀಗೆ ಮನಸ್ಸಿನಲ್ಲಿ ತೆರೆತೆರೆಯಾಗಿ ಎದ್ದ ಯೋಚನೆಗಳು ಓಲೆಗಿಳಿದುವು. ಬಣ್ಣಗೊಂಡು ರೆಕ್ಕೆ ತಾಳಿದ ಹಲವು ದೂರೊಕ್ಕಣೆಗಳು ಹುಜೂರಿಗೆ ಹರಿದುವು. ಮೊದಲೇ ಸಂಶಯ ತಾಳಿದ್ದ ಸಾಮ್ರಾಟನು ಚೌಟನ ನಿರಂಕುಶ ವರ್ತಮಾನವನ್ನು ಕೇಳಿ, ಕೆರಳಿ ಕೋಪಗೊಂಡನು. ಕೂಡಲೆ ಅವನ್ನು ಸೆರೆಹಿಡಿದು ತರುವಂತೆ ತನ್ನ ಸ್ವಂತ ಸೋದರಳಿಯನನ್ನೇ ದಂಡಿನೊಡನೆ ಮೂಡುಬಿದರೆಗೆ ಕಳುಹಿಸಿದನು??? + +(ರೇಖಾಚಿತ್ರ ಕಲೆ: ಶ್ರೀ ಚಂದ್ರನಾಥ ಆಚಾರ್ಯ) + +ಬೆಳದಿಂಗಳ ರಾತ್ರೆ. ಹಾಲು ಚೆಲ್ಲಿದಂತಿದೆ ತಿಂಗಳ ಬೆಳಕು. ಆ ಬೆಳ್ಳಿ ಹೊನಲಿನಲ್ಲಿ ಮಿಂದೆದ್ದು ನಿಂತಿದೆ ಮೂಡುಬಿದರೆಯ ಅರಮನೆ. ಕಂಡಿ ಕವಾಟುಗಳಿಂದ ಹೊರಸೂಸುತ್ತಿದ್ದ ದೀವಿಗೆಗಳ ಬೆಳಕು ಅದಕ್ಕೆ ಒಪ್ಪವಿಡುತ್ತಿದ್ದಿತು. ಹೊರವಲಯದಲ್ಲಿ ಕೋಟೆಯ ಪಾಗಾರಗಳು ಕರ್ರಗಾಗಿ ಕರಾಳವಾಗಿ ಬಳಿಸಿದ್ದುವು. ಅರಮನೆಯ ಮುಂಗಡೆ ವಿಶಾಲವಾದ ರಾಜಾಂಗಣ. ಅದನ್ನು ದಾಟಿ ಒಳಕ್ಕೆ ನಡೆದರೆ, ಅಂದವಾದ ಹುಲಿಮೊಗದ ಗೋಪುರ. ಅದರಾಚೆಗೆ ಒಳ ಅಂಗಣ. ಅದರ ಸುತ್ತ ಚಾವಡಿಗಳು, ನಡುವಿನಲ್ಲಿ ಚಿತ್ತಾರದ ಪಟ್ಟದ ಚಾವಡಿ. ತೆಂಕು ದಿಕ್ಕಿಗೆ ಜಾನಕಿ ಕೋಟೆ. ಪಡುದಿಕ್ಕಿಗೆ ಕುಲದೇವರ ಗುಡಿ. ಬಡಗು ದಿಕ್ಕಿನಲ್ಲಿ ಕಲ್ಲು ಕಟ್ಟಿದ ಕೊಳ. ಕೊಳದ ಕೆಲದಲ್ಲಿ ಕಂಗೊಳಿಸುವ ಉದ್ಯಾನ. ಅಲ್ಲೇ ಹಾಲುಗಲ್ಲಿನ ಮಂಡಪದ ಮೇಲೆ ಚೌಟರಸ ಚಿನ್ನದೇವರಾಯನು ವಿರಮಿಸಿದ್ದನು. ವೃದ್ಧನೂ ಆದ ಪ್ರಧಾನಿ ನರ್ಸಪ್ಪಯ್ಯನು ತುಸು ದೂರದಲ್ಲಿ ಕುಳಿತಿದ್ದನು. ಹೂಗಳ ತನಿಗಂಪಿನೊಡನೆ ತಂಗಾಳಿ ಸುಳಿಯುತ್ತಿತ್ತು. ಆಗಸದಲ್ಲಿ ಚಂದ್ರನು ತಾರೆಗಳ ಗುಂಪಿನಲ್ಲಿ ಸಿಕ್ಕಿಬಿದ್ದು ಗಹಗಹನೆ ನಗುತ್ತಿದ್ದನು. ಸುತ್ತಲೂ ಶಾಂತಿಯು ತುಂಬಿ ತೇಲುತ್ತಿತ್ತು. ಪ್ರಕೃತಿಯ ಸೊಬಗನ್ನು ನೋಡುತ್ತ ಎಳೆ ಹರೆಯದ ಚೌಟ ರಾಯನು ಮೈಮರೆತಿದ್ದನು. ಈ ತುಂಬು ಶಾಂತಿಯಲ್ಲಿ ವೃದ್ಧ ಪ್ರಧಾನಿಯೂ ತನ್ಮಯನಾಗಿದ್ದನು. + +ಅಷ್ಟರಲ್ಲಿ ಫಕ್ಕನೆ ಕೋಟೆಯ ಕಾಪಿನಲ್ಲಿ ಕಹಳೆಯ ಕೂಗು ಕೇಳಿತು. ಕೋಟೆಯಲ್ಲಿ ಕೋಲಾಹಲವೆದ್ದಿತು. ವಿಜಯನಗರದ ದಂಡು ಕೋಟೆಯ ಕಡೆಗೆ ಬರದಿಂದ ಬರುತ್ತಿದ್ದಿತು. ಜೈ ಕರ್ಣಾಟಕ ಸಮ್ರಾಟ ಎಂಬ ಜಯಕಾರವು ಕೋಟೆಯ ಗೋಡೆಗಳಿಗೆ ಬಡಿದು ಮಾರ್ದನಿಗೊಟ್ಟಿತು. ಕನಲಿ ಬುಸುಗುಟ್ಟುತ್ತಿದ್ದ ತುಳುಪಡೆಯು, ಈ ಘೋಷವನ್ನು ಕೇಳುತ್ತಲೇ ಗಾರುಡಿಗನ ಮಂತ್ರಕ್ಕೆ ಮಣಿವ ಹಾವಿನಂತೆ ತಲೆ ತಗ್ಗಿಸಬೇಕಾಯಿತು. ಸಮ್ರಾಟನ ಸೈನ್ಯವನ್ನು ಸಾಮಂತನ ಸೇನೆಯು ಇದಿರಿಸುವುದು ಕೌಲಿಗೆ ವಿರೋಧ. ಚೌಟನೂ, ಪ್ರಧಾನಿಯೂ ಗಾಬರಿಗೊಂಡು ಹೆಬ್ಬಾಗಿಲತ್ತ ನಡೆದರು. ನಾಲ್ಕು ಹೆಜ್ಜೆ ಹೋಗುವಷ್ಟರಲ್ಲಿ ಬಾರ್ಕೂರು ಹೋಬಳಿಯ ಚಂದರಸ ಒಡೆಯನೂ, ವಿಜಯನಗರದ ಸೇನಾಧಿಪತಿಯೂ ಅವರನ್ನು ತಡೆಗಟ್ಟಿದರು. ಸಮ್ರಾಟನಾಣೆ! ನಿಲ್ಲಲ್ಲಿ! ಸ್ವಾಮಿ ದ್ರೋಹಿ! ನಿನ್ನನ್ನು ಸೆರೆಹಿಡಿದು ತರುವಂತೆ ಸಾಮ್ರಾಟರ ಅಪ್ಪಣೆಯಾಗಿದೆ. ಸೀಮೆಯನ್ನು ಈ ಚಂದರಸ ಒಡೆಯರಿಗೆ ಒಪ್ಪಿಸಿಕೊಟ್ಟು, ನೀನು ಈ ಕ್ಷಣ ನಮ್ಮೊಂದಿಗೆ ಹೊರಡತಕ್ಕದ್ದು ಎಂದು ದಳವಾಯಿ ಜಬರಿಸಿದನು. ಚೌಟನು ಹೌಹಾರಿದನು. ಮುದಿ ಪ್ರಧಾನಿಯ ತಲೆಮೇಲೆ ಆಗಸವೇ ಬಿರಿದು ಬಿದ್ದಂತಾಯಿತು. ಹೇಗೂ ಚೇತರಿಸಿಕೊಂಡು ಸ್ವಾಮಿ! ಸ್ವಲ್ಪ ಶಾಂತರಾಗಬೇಕು. ಹಿಂದು ಮುಂದನ್ನು ವಿಚಾರಿಸಿ ದಯೆದೋರಬೇಕು ಎಂದು ದೈನ್ಯದಿಂದ ಬೇಡಿಕೊಂಡನು. ಎಷ್ಟು ಬೇಡಿಕೊಂಡರೂ ಸೇನಾಪತಿಗೆ ದಯೆ ಹುಟ್ಟಲಿಲ್ಲ. ಅವನ ವರಾತ ಹೆಚ್ಚಿತು. ಉಪಾಯವಿಲ್ಲದೆ ಚೌಟನು, ಅಲ್ಲಿಂದಲೇ, ಉಟ್ಟಬಟ್ಟೆಯಲ್ಲೇ ಹೊರಟನು. ಏನು ಕೆಡುಗಾಲ ಬಂತಪ್ಪಾ ಎನ್ನುತ್ತ ಆ ನಂಬಿಗೆಯ ಮುದುಕನೂ ತನ್ನೊಡೆಯನ ಹಿಂದೆಯೇ ನಡೆದನು. ಸೇನೆಯು ರಣವಾದ್ಯದೊಡನೆ ಶಿಸ್ತಿನಿಂದ ಹೆಜ್ಜೆ ಹಾಕುತ್ತ ಮುನ್ನಡೆಯಿತು. ಅರಮನೆಯ ಆಳುಗಳೆಲ್ಲ ಬಾಯಿ ಬಾಯಿಬಿಟ್ಟು ನೋಡುತ್ತಿದ್ದರು. ಏನು ಎಂಥದೆಂದು ಒಂದು ನರಪಿಳ್ಳೆಗೂ ತಿಳಿಯಲಿಲ್ಲ. ಚಂದರಸನು ಅರಮನೆಯಲ್ಲಿ ತನ್ನ ಕಛೇರಿಯನ್ನು ಮಾಡಿದನು + +ಸೇನಾಧಿಪತಿಯು ಬಂದಿಗಳೊಡನೆ ಸೀಮೆಯ ಗಡಿಯನ್ನು ದಾಟಿದನು. ಪಯಣವು ಮುಂದೆ ಮುಂದೆ ಸಾಗಿತು. ಅನೇಕ ನಗರ, ಪಟ್ಟಣ, ಹಳ್ಳಿ ಗ್ರಾಮಗಳನ್ನು ಹಾಯ್ದು ರಾಜಧಾನಿಯನ್ನು ಸಮೀಪಿಸಿದನು. ಅಗಲವಾದ ಬೀದಿಯು ಸಿಕ್ಕಿತು. ಕಣ್ಣು ಹರಿದಲ್ಲೆಲ್ಲ ಹರಿಗಾಲುವೆಗಳು ಹರಿಯುತ್ತಿದ್ದುವು. ಎಲ್ಲೆಲ್ಲೂ ನೆಲ್ಲುಗದ್ದೆಗಳು ಹಸುರು ಜಮಖಾನೆ ಹಾಸಿದಂತೆ ಕಂಗೊಳಿಸುತ್ತಿದ್ದುವು. ಅಲ್ಲಲ್ಲಿ ಬೆಳೆದ ಬೆಳ್ಗಬ್ಬುಗಳ ಬೆಡಗು ಬಾಯಲ್ಲಿ ನೀರು ತರುತ್ತಿದ್ದಿತು. ದಾರಿಯುದ್ದಕ್ಕೂ ತಿಳೀನೀರಿನ ಕೊಳಗಳು, ಉದ್ಯಾನಗಳು, ಹೊಂಗಳಸದ ದೇಗುಲಗಳು. ರಾಜಧಾನಿಯ ಸುತ್ತ ಏಳುಸುತ್ತಿನ ಕೋಟೆಯು ಸುತ್ತಿತ್ತು. ಎಂಟು ದಿಕ್ಕುಗಳಲ್ಲೂ ಕೊತ್ತಳಗಳು ಆಗಸವನ್ನು ತುಡುಕುತ್ತಿದ್ದುವು. ಹುಲಿ ಮೊಗವು ಭೀಕರವಾಗಿ ಬಾಯಿ ತೆರೆದುಕೊಂಡಿದ್ದಿತು. ಹೆಬ್ಬಾಗಿಲನ್ನು ಹೊಕ್ಕು, ಬೀದಿಗಳಿಯಲು ಒಂದು ಕಡೆಯಲ್ಲಿ ದವಸ ಧಾನ್ಯದ ಅಂಗಡಿಗಳು, ಜವುಳಿಯ ಸಾಲು ಮಳಿಗೆಗಳು, ಚಿನಿವಾರ ಕಟ್ಟೆಗಳು, ಪಣ್ಪಸರಗಳು ಎಸೆಯುತ್ತಿದ್ದವು. ಇನ್ನೊಂದು ಕಡೆಯಲ್ಲಿ ಕಂಚುಗಾರರ, ಕೈದುಗಾರರ, ಗುಡಿಗಾರರ, ಬಳೆಗಾರರ ಕೇರಿಗಳು. ಅಗಲವೂ ನಿರ್ಮಲವೂ ಆದ ಬೀದಿಗಳಲ್ಲಿ ಜನರು ಕಿಕ್ಕಿರಿದಿದ್ದರು. ಮುಂದೆ ಹೋದಂತೆ ಮಂತ್ರಿಮನ್ನೆಯರ ಹರ್ಮ್ಯ ಪ್ರಾಸಾದಗಳು ವಿರಾಜಿಸುತ್ತಿದ್ದುವು. ದೂರದಲ್ಲಿ ಅರಮನೆಯ ಹೊಂಗಳಸಗಳೂ ಮಿರುಗಿನ ಗೋಲಗಳೂ ಥಳಥಳಿಸುತ್ತಿದ್ದುವು. ಪಯಾಣದಿಂದ ದಣಿದಿದ್ದ ಸೇನಾಧಿಪನು ಚೌಟನನ್ನೂ, ಪ್ರಧಾನಿಯನ್ನೂ ನೆಟ್ಟಗೆ ಸೆರೆಮನೆಯೊಳಕ್ಕೆ ತಳ್ಳಿ ಮನೆಯನ್ನು ಸೇರಿದನು. ಸೇನೆಯು ಚದುರಿತು. + +ದುರ್ದೈವಿಯಾದ ಚೌಟರಾಯನೂ ಅವನ ಪ್ರಧಾನಿಯೂ ಸೆರೆಮನೆಯಲ್ಲಿ ಸೊರಗುತ್ತಿದ್ದರು. ಸಾಮ್ರಾಟನಿಗೆ ಅವರ ಸುದ್ದಿ ಮರೆತೇ ಹೋಗಿದ್ದಿತು. ನೆನಪುಗೊಡುವ ಕೆಚ್ಚಾದರೂ ಯಾರಿಗೂ ಇರಲಿಲ್ಲ. ದಿನದ ಮೇಲೆ ದಿನ ಉರುಳಿತು. ಒಂದು ವರ್ಷಕ್ಕೆ ಮುಟ್ಟಿತು. ದಸರೆ ಬಂತು. ನಾಡಹಬ್ಬವೆಂದು ನಾಡೆಲ್ಲ ನಲಿಯುತ್ತಿದ್ದಿತು. ಅರಮನೆಯು ಬಣ್ಣ ಬೆಡಗುಗಳಿಂದ ಬೆಳಗುತ್ತಿದ್ದಿತು. ಮಾನೌಮಿಯ ಕಟ್ಟುಕಟ್ಟಳೆಗಳೆಲ್ಲ ಕಳೆದುವು. ವಿಜಯದಶಮಿಯ ದಿನ ಸಮ್ರಾಟನ ಒಡ್ಡೋಲಗ. ಓಲಗಸಾಲೆಯು ಜಗಜಗಿಸುವಂತೆ ನಿರ್ಮಿತವಾಗಿತ್ತು. ಚಿತ್ತಾರದ ಚಿನ್ನದ ಮುಲಾಮಿನ ಕಂಬ ಬೋದಿಗೆಗಳು ರಂಜಿಸುತ್ತಿದ್ದುವು. ತೊಲೆ ನಾಗವಂದಿಗೆಗಳ ಮೇಲೆ ಕೆತ್ತಲ್ಪಟ್ಟ ಗುಲಾಬಿ, ಕಮಲ ಮೊದಲಾದ ಹೂಗಳು ಕಳೆಬೀರುತ್ತಿದ್ದುವು. ಸುತ್ತಲೂ ಮಿಸುನಿಯ ಪಟ್ಟೆಗಳು ಇಳಿಬಿಟ್ಟಿದ್ದುವು. ಬೆಳ್ಳನೆಯ ಮೇಲ್ಗಟ್ಟುಗಳಿಂದ ಮುತ್ತು ರತ್ನಗಳ ಸೂಸಕಗಳು ನೇಲುತ್ತಿದ್ದುವು. ಜಾಜಿ, ಸಂಪಿಗೆ, ಗುಲಾಬಿ ದಂಡೆಗಳ ಜಲ್ಲಿ ಬಿಟ್ಟಿತ್ತು. ರನ್ನ ಗದ್ದುಗೆಯು ಸೆಯಿಗೂಡಿ ಎದ್ದು ನಿಂತಿತ್ತು. ಗದ್ದುಗೆಯ ಮೇಲೆ ಬಿರುದಿನ ಬೆಳ್ಗೊಡೆಯು ಪ್ರಭೆಯನು ಬೀರುತ್ತಿತ್ತು. ತರತರದ ವಾಲಗಗಳ ಮೊರೆತದೊಡನೆ ಕರ್ಣಾಟಕ ರಮಾರಮಣನು ಗದ್ದುಗೆಯನ್ನೇರಿದನು. ಅವನು ಜರತಾರಿಯ ನಿಲುವಂಗಿಯನ್ನು ತೊಟ್ಟಿದ್ದನು. ಪೊನ್ಜರಿಯ ದೊಡ್ಡ ಮುಂಡಾಸಿನ ಮುತ್ತಿನ ತುರಾಯಿಯು ಕೆನ್ನೆಯ ಮೇಲೆ ಆಡುತ್ತಿತ್ತು. ಕೊರಳಲ್ಲಿ ಹಾರ ಪದಕಗಳು ಶೋಭಿಸುತ್ತಿದ್ದವು. ಪಟ್ಟೆದಟ್ಟಿಯಲ್ಲಿ ರತ್ನದ ಹಿಡಿಯ ಪಟ್ಟದ ಕತ್ತಿಯು ಒಪ್ಪುತ್ತಿತ್ತು. ಮುಖವು ಗಂಭೀರವಾಗಿ ತೇಜಃ ಪುಂಜವಾಗಿದ್ದಿತು. ಅವನ ಎಡಬಲಗಳಲ್ಲಿ ಬೆಡಗಿನ ಬೀಸಣಿಗೆಗಳು ಬೀಸುತ್ತಿದ್ದುವು. ಹಗಲು ದೀವಟಿಗೆಗಳು ಬೆಳಗುತ್ತಿದ್ದುವು. ಚಾಮರದ ಎಳವೆಂಗಳು ಚಾಮರವನ್ನು ಡಾಳಿಸುತ್ತಿದ್ದರು. ಕುಂಚ, ಕಾಳಂಜಿ, ಪಾವಡ, ಕನ್ನಡಿ, ಕಟ್ಟಿಗೆಕೋಲುಗಳನ್ನು ಹಿಡಿದ ಊಳಿಗದವರ ಬಳಗವು ಸಾಲುಗೊಂಡು ನಿಂತಿದ್ದಿತು. ಕಾಲ ಕಡಗ, ಕಚ್ಚಳಿ, ಪೆಂಡೆಯ, ವೀರಸಂಕಲೆ ಮೊದಲಾದ ಬಿರುದಿನ ಮಾಂಡಲಿಕರು, ದಳಪತಿಗಳು, ಆಪ್ತಮಂತ್ರಿಗಳು ಉಚಿತಾಸನಗಳಲ್ಲಿ ಮಂಡಿಸಿದ್ದರು. ಕರಣಿಕರು, ಕವಿಗಳು, ಗಾಯಕರು ನೆರೆದಿದ್ದರು. ಸಾಮ್ರಾಟನ ಅಪ್ಪಣೆಯಿಂದ ಹೆಣ್ಮಕ್ಕಳ ಕೋಲಾಟವಾಯಿತು. ನಟಿಯರ ನರ್ತನವಾಯಿತು. ಗಾಯಕರ ಗಾಯನ ನಡೆಯಿತು. ಬಳಿಕ ತೆಲುಗ, ತಿರುಕೊಂಕಣ, ಕೊಂಗ, ತಿಗುಳ, ಕೊಡಗ, ತುಳುವ ಸಾಮಂತರು ಕ್ರಮವಾಗಿ ನಜರು ಕಾಣಿಕೆಗಳನ್ನು ಒಪ್ಪಿಸಿದರು. + +ತುಳುವ ಸಾಮಂತರಲ್ಲಿ ಮೂಡುಬಿದರೆಯ ಚೌಟನು ಇಲ್ಲದಿದ್ದುದನ್ನು ಕಂಡು ಸಾಮ್ರಾಟನು ಕೋಪಗೊಂಡು ಚೌಟನೆಲ್ಲಿ? ಎಂದು ಕೇಳಿದನು. ಮಹಾಪ್ರಧಾನಿಯು ಅವನನ್ನು ಸೆರೆಯಲ್ಲಿಟ್ಟ ಸಂಗತಿಯನ್ನು ಬಿನ್ನವಿಸಿಕೊಂಡನು. ಕೂಡಲೆ, ಕರೆತರುವಂತೆ ಅಪ್ಪಣೆಯಾಯಿತು. ರಾಜದೂತರು ಚೌಟನನ್ನೂ ಅವನ ಪ್ರಧಾನಿಯನ್ನೂ ತಂದು ಮುಂದೆ ನಿಲ್ಲಿಸಿದರು. ಇಬ್ಬರೂ ಅಡ್ಡಬಿದ್ದು ಕೈಮುಗಿದು ನಿಂತರು. ಸಾಮ್ರಾಟನು ಒಮ್ಮೆ ಅತ್ತ ಕಣ್ಣು ಹರಿಯಿಸಿದನು. ಮುಖವು ಕೆಂಪೇರಿತು. ಚೌಟನಿಗೆ ನಡುಕ ಹತ್ತಿತು. ದಿಕ್ಕೇ ತೋರದಾಯಿತು. ಅನುಭವಶಾಲಿಯಾದ ತನ್ನ ಪ್ರಧಾನಿಯು ಏನಾದರೊಂದು ಉಪಾಯ ಕಂಡುಹಿಡಿಯದಿರಲಾರನೆಂದು ಅವನನ್ನೇ ನಂಬಿಕೊಂಡಿದ್ದನು. ಪ್ರಧಾನಿಯಾದರೋ ಒಡೆಯನನ್ನು ವಿಪತ್ತಿನಿಂದ ಹೇಗೆ ಪಾರುಗೊಳಿಸಲಿ ಎಂದು ಚಿಂತೆಯಿಂದ ನೆಲಕ್ಕಿಳಿದು ಹೋಗಿದ್ದನು. + +ಸಾಮ್ರಾಟನು ಗಂಭೀರವಾಣಿಯಿಂದ ಎಲ್ಲವೊ ಚೌಟ! ಸಾವಿರ ಹೆಸರುಗಳಿದ್ದರೂ ನೀನು ನಮ್ಮ ಬಿರುದನ್ನೇ ಇಟ್ಟುಕೊಂಡಿರುವುದು ನಿನ್ನ ಸೊಕ್ಕಲ್ಲವೇ? ಎಂದು ಪ್ರಶ್ನಿಸಿದನು.ಚೌಟ : ಜೀಯಾ! ಜೈನ ಅರಸರಲ್ಲಿ ಯೋಗ್ಯನಾದೊಬ್ಬನನ್ನು ಧರ್ಮದರ್ಶಿಯನ್ನಾಗಿ ಜೈನಗುರುಗಳು ನೇಮಿಸುವ ಪದ್ಧತಿಯಿದೆ. ಆ ಧರ್ಮದರ್ಶಿಯನ್ನು ಧರ್ಮ ಸಮ್ರಾಜನೆಂದು ಕರೆಯುವ ರೂಢಿ ಪರಂಪರೆಯಾಗಿ ಬಂದಿದೆ. ಇದೇ ಮೇರೆಗೆ ತುಳುನಾಡಿನಲ್ಲಿ ನನ್ನನ್ನು ಧರ್ಮಸಮ್ರಾಜನೆಂದು ಕರೆಯುವರು. ಅದು ಬರೇ ಧರ್ಮಸಂಬಂಧ ಸೂಚಕವಾದ ಹೆಸರಲ್ಲದೆ ರಾಜಕೀಯ ಅರ್ಥವುಳ್ಳದಲ್ಲ. ಚಿನ್ನದೇವರಾಯ ಎಂಬ ಹೆಸರನ್ನು ನನ್ನ ಹೆತ್ತವರಿಟ್ಟರು. ಯಾವ ಕಾರಣದಿಂದ ಅವರು ಆ ಹೆಸರನ್ನಿಟ್ಟರೋ ನನಗೆ ತಿಳಿಯದು. ನನ್ನ ಜನನದ ಪೂರ್ವದಿಂದಲೇ ಇರುವ ಈ ವೃದ್ಧನು ತಿಳಿದಿರುವನೋ ಏನೋ. ಆದರೆ ಪರಾಕೆ! ಮನೋವಾಕ್ಕಾ ಯಗಳಲ್ಲಿ ನಾನು ಸಮ್ರಾಟರಿಗೆ ಎರಡೆಣಿಸಿದವನಲ್ಲ.ಸ : (ವೃದ್ಧ ಪ್ರಧಾನಿಯನ್ನು ನೋಡಿ) ನೀನು ತಿಳಿದಿರುವೆಯೋ?ಪ್ರಧಾನಿ : ಹಸಾದ! ತಿಳಿದಿರುವೆನು. ಆ ಹೆಸರಿಗೆ ಸಾಮ್ರಾಟರೇ ಹೊಣೆ. ಹೆಸರಿಟ್ಟವರೂ ಅಲ್ಲ; ಹೆಸರಿಡಿಸಿಕೊಂಡವರೂ ಅಲ್ಲ….ಸು : ಏನು! ಈ ಚೌಟನ ಉಡಾಳತನಕ್ಕೆ ನಾವು ಹೊಣೆಯೆ? ಮುದಿಯಾ! ಯಾರೊಡನೆ ಮಾತಾಡುತ್ತಿರುವೆ? ಜೋಕೆ! + +ತುಳುವ ಸಾಮಂತರಲ್ಲಿ ಮೂಡುಬಿದರೆಯ ಚೌಟನು ಇಲ್ಲದಿದ್ದುದನ್ನು ಕಂಡು ಸಾಮ್ರಾಟನು ಕೋಪಗೊಂಡು ಚೌಟನೆಲ್ಲಿ? ಎಂದು ಕೇಳಿದನು. ಮಹಾಪ್ರಧಾನಿಯು ಅವನನ್ನು ಸೆರೆಯಲ್ಲಿಟ್ಟ ಸಂಗತಿಯನ್ನು ಬಿನ್ನವಿಸಿಕೊಂಡನು. ಕೂಡಲೆ, ಕರೆತರುವಂತೆ ಅಪ್ಪಣೆಯಾಯಿತು. ರಾಜದೂತರು ಚೌಟನನ್ನೂ ಅವನ ಪ್ರಧಾನಿಯನ್ನೂ ತಂದು ಮುಂದೆ ನಿಲ್ಲಿಸಿದರು. ಇಬ್ಬರೂ ಅಡ್ಡಬಿದ್ದು ಕೈಮುಗಿದು ನಿಂತರು. ಸಾಮ್ರಾಟನು ಒಮ್ಮೆ ಅತ್ತ ಕಣ್ಣು ಹರಿಯಿಸಿದನು. ಮುಖವು ಕೆಂಪೇರಿತು. ಚೌಟನಿಗೆ ನಡುಕ ಹತ್ತಿತು. ದಿಕ್ಕೇ ತೋರದಾಯಿತು. ಅನುಭವಶಾಲಿಯಾದ ತನ್ನ ಪ್ರಧಾನಿಯು ಏನಾದರೊಂದು ಉಪಾಯ ಕಂಡುಹಿಡಿಯದಿರಲಾರನೆಂದು ಅವನನ್ನೇ ನಂಬಿಕೊಂಡಿದ್ದನು. ಪ್ರಧಾನಿಯಾದರೋ ಒಡೆಯನನ್ನು ವಿಪತ್ತಿನಿಂದ ಹೇಗೆ ಪಾರುಗೊಳಿಸಲಿ ಎಂದು ಚಿಂತೆಯಿಂದ ನೆಲಕ್ಕಿಳಿದು ಹೋಗಿದ್ದನು. + +ಪ್ರ : ಮಹಾಪ್ರಭು! ಆ ಹೆಸರಿನ ಕತೆ ದೊಡ್ಡದಿದೆ. ಲಾಲಿಸಬೇಕು! ಈ ನನ್ನೊಡೆಯನ ತಾಯಿ ಆಳಿದ ಪದುಮಲಾ ದೇವಮ್ಮಣ್ಣಿಯವರು. ತಂದೆ ವರದಪ್ಪರಸರು. ಅಮ್ಮಣ್ಣಿಯವರಿಗೆ ಹದಿನೆಂಟು ಮಂದಿ ಮಕ್ಕಳು. ಈ ರಾಯರೇ ಹದಿನೆಂಟನೆಯ ಮಗು. ಆ ಹದಿನೆಂಟು ಮಂದಿ ಮಕ್ಕಳಲ್ಲಿ ಉಳಿದಿರುವುದು ಇದೊಂದೇ ಮಗು. ಚೊಚ್ಚಲ ಕೂಸು ಹುಟ್ಟಿದಾಗ. ಮುದ್ದಿನಿಂದ ಅದಕ್ಕೆ ಬಿರ್ಮಣ ಶೇಖ ಎಂದು ಹೆಸರಿಟ್ಟರು. ಒಂದು ತಿಂಗಳಲ್ಲಿ ಅದು ತೀರಿಹೋಯಿತು. ಎರಡನೆಯ ಕೂಸು ಹುಟ್ಟಿತು. ಅದಕ್ಕೆ ಹಮ್ಮಣ ಶೇಖ ಎಂದು ಹೆಸರಿಟ್ಟರು. ಅದೂ ಹೆಚ್ಚುದಿನ ಬದುಕಲಿಲ್ಲ. ಮೂರನೆಯ ಮಗು ಹುಟ್ಟಿತು. ಅದಕ್ಕೆ ಮಾರಣ್ಣ ಶೇಖ ಎಂದು ಹೆಸರಿಟ್ಟರು. ಅದೂ ಉಳಿಯಲಿಲ್ಲ. ಒಂದು ವಾರದೊಳಗೇ ಸತ್ತಿತು. ಮಹಾಪ್ರಭು! ಹೀಗೆ ಹದಿನೇಳು ಮಕ್ಕಳು ಹುಟ್ಟಿದುವು. ಹದಿನೇಳು ಹೆಸರಿಟ್ಟರು. ಹದಿನೇಳೂ ಹೆಸರಳಿದು ಹೋದವು. ಒಂದೂ ಬಾಳಲಿಲ್ಲ. ಅರಸರೂ ಅಮ್ಮಣ್ಣಿಯವರೂ ಅತ್ತು ಕರೆದು ಗೋಳಾಡಿದರು. ಇದ್ದ ದೈವದೇವರುಗಳಿಗೆಲ್ಲ ಹರಿಕೆ ಹೊತ್ತರು. ಸ್ವಲ್ಪ ಕಾಲ ಕಳೆಯಲು ದೇವರು ಕಣ್ಣುಬಿಟ್ಟು. ಈ ಹದಿನೆಂಟನೆಯ ಮಗು ಹುಟ್ಟಿತು. ಸಮ್ರಾಟರು ಈ ರತ್ನ ಸಿಂಹಾಸನವನ್ನೇರಿದ ಶುಭಗಳಿಗೆಯಲ್ಲಿಯೇ ಇದರ ಜನನವಾಯಿತು. ನನ್ನೊಡತಿಯ ಹೊಟ್ಟೆ ತಣ್ಣಗಾಯಿತು. ಕನ್ನಡದ ಮಹಾಮಂಡಲೇಶ್ವರರು ಪಟ್ಟವೇರುವ ಗಳಿಗೆಯಲ್ಲಿ ಜನಿಸಿದ ಮಗುವಿಗೆ ಯಾವ ದಿಟ್ಟಿಬಿಸವೂ ಸೋಂಕದೆಂದು ಅವರು ನಂಬಿದರು. ಮಗುವಿನ ರಕ್ಷೆಗಾಗಿ ಮಹಾಪ್ರಭುಗಳ ಪುಣ್ಯನಾಮವನ್ನೇ ಇಡಬೇಕೆಂದು ಮನಸ್ಸಿನಲ್ಲಿ ನಿಶ್ಚಯಿಸಿಕೊಂಡರು. ಹಾಗೆಯೇ ಹೆಸರಿಡುವ ದಿನವೂ ಬಂತು. ಯಾವ ಹೆಸರಿಡುವ? ಎಂದು ರಾಣಿಯವರು ಅರಸರನ್ನು ಕೇಳಿದರು. ನಾನು ಅಲ್ಲೇ ಬಳಿಯಿಲ್ಲಿದ್ದೆ. ಅರಸರು ಬಹಳ ಹೊತ್ತು ಯೋಚಿಸಿ ದೇವರ ಶೇ….. ಎನ್ನುವಷ್ಟರಲ್ಲಿ ರಾಣಿಯರು ಬೆಚ್ಚಿ, ಅಲ್ಲಪ್ಪ…..ಶೇ…..ಅಲ್ಲ…. ಎಂದು ಕೂಗಿದರು. + +ಅಲ್ಲಪ್ಪ ಶೇಖ ಎಂತಾದರೆ, ಅಲ್ಲಪ್ಪ ಶೇಖ ಆಗಲಿ ಎಂದು ಅರಸರು ನಕ್ಕರು. ಅಲ್ಲಪ್ಪ ಶೇಖ, ಹೌದಪ್ಪ ಶೇಖ – ಹದಿನೇಳು ಶೇಖ ಅಳಿದ ಮೇಲೂ ಅದೇ ಸುಟ್ಟ ಶೇಖ! ಒಳಿತು! ಎಂದು ನಾಲಗೆ ಕಚ್ಚಿ, ಬಾಳುವ ಹೆಸರು ಕರೆಯಿರೀಂದ್ರೆ ಎಂದು ರಾಣಿಯವರು ಛಲ ಮಾಡಿದರು.ಹಾಗಾದರೆ ಆ ಅನಿಷ್ಟದ ಶೇಖ ಬೇಡ. ನಮ್ಮ ಸಾಮ್ರಾಟರು ಪಟ್ಟವೇರಿ ಕನ್ನಡದ ನೆಲಕೆಲ್ಲ ದೊರೆಯೆನಿಸಿದ ಮುಹೂರ್ತದಲ್ಲೇ ಈ ಮಗು ನೆಲಕ್ಕೆ ಬಿತ್ತಾದ ಕಾರಣ, ಇದಕ್ಕೆ ಅವರ ಪುಣ್ಯನಾಮವನ್ನೇ ಇಡೋಣ ಎಂದು ಅರಸರು ಹೇಳಿದರು.ನನ್ನ ಹರಕೆಯೂ ಅದೇ ಆಗಿತ್ತು. ಅವರ ಹೆಸರಿನ ಪುಣ್ಯದಿಂದಾದರೂ ಈ ಮಗು ಬಾಳಲಿ ಎನ್ನುತ್ತ ನನ್ನ ಕಡೆಗೆ ನೋಡಿ, ಏನು ನರ್ಸಣ್ಣನವರು ಮಾತಾಡುವುದಿಲ್ಲ ಎಂದು ಕೇಳಿದರು.ಏನಿಲ್ಲಮ್ಮ , ಆ ಗಿಡದ ಮೇಲೆ ಒಂದು ಹಾಲಕ್ಕಿ ಶಕುನ ನುಡೀತಾ ಇತ್ತು. ಅದನ್ನು ಕೇಳ್ತಾ ಇದ್ದೆ ಎಂದೆ.ಏನೆಂತ ನುಡಿಯಿತದು?ಬಾಳ್ತೈತೆ! ಬದುಕ್ತೈತೆ! ಉದ್ಧಾರವಾಗ್ತೈತೆ! ಎಂತ ನುಡೀತಮ್ಮಾ ಎಂದೆ.ಏನು ಪ್ರಧಾನಿಗಳು ಹಾಲಕ್ಕಿ ನರ್ಸಣ್ಣನಾದುದು ಯಾವಾಗ? ಎಂದು ಅರಸರು ನಗುತ್ತಾ ನನ್ನನ್ನು ಕೇಳಿದರು.ಪ್ರಧಾನಿಗಳು ಎಲ್ಲಾ ವೇಷ ಕಟ್ಟಬೇಕು. ಯಾವ ತಾಳಕ್ಕಾದರೂ ಕುಣಿಯಬೇಕು ಅರಸುಗಳೆ ಎಂದೆ.ನರ್ಸಣ್ಣ ಅಂತ ಸಲುಗೆಯಿಂದ ಕರೆದೆ; ಪ್ರಧಾನಿಗಳೆ, ಸಿಟ್ಟು ಬಂತೇ? ಎಂದರು ಅಮ್ಮಣ್ಣಿಯವರು.ಸಿಟ್ಟು ಯಾಕಮ್ಮ! ನರ್ಸನಿಗೆ ಅಪ್ಪ, ಅಯ್ಯ, ಅಣ್ಣ ಅಂತ ಯಾವ ಬಾಲ ಇಟ್ಟರೂ ಚೆನ್ನಾಗಿ ಹಿಡಿಯುತ್ತದೆ. ಬಾಲಕ್ಕಾಗಿ ಬಡಿದಾಡುವವನಲ್ಲ ಈ ನರ್ಸ.ಹಾಗಾದರೆ ಚಿನ್ನದೇವರಾಯ ಎಂಬ ಹೆಸರನ್ನಿಡುವುದಲ್ಲವೇ ಪ್ರಧಾನಿಗಳೇ? ಎಂದು ಅರಸರು ಕೇಳಿದರು.ಹೌದೌದು. ದೇವರ ಹೆಸರೇ ಬಾಳುವ ಹೆಸರು ಎಂದು ಕೈಮುಗಿದೆ.ಅರ್ತಿಯಿಂದ ಅರಸರು ಸಾಮ್ರಾಟರ ಚರಣಗಳನ್ನು ಸ್ಮರಿಸುತ್ತ ಚಿನ್ನದೇವರಾಯ ಎಂಬ ಶುಭನಾಮವನ್ನು ಮೂರುಬಾರಿ ಕರೆದರು, ಚಿರಕಾಲ ಬಾಳಲಿ ಎಂದು ಎಲ್ಲರೂ ಹರಸಿದರು. ನಾನೂ ಹರಸಿದೆ. + +ಸ : ನೀನು ನಿಜಕ್ಕೂ ನರ್ಸಣ್ಣನೆ, ಬುಡುಬುಡಿಕೆ ಚೆನ್ನಾಗಿ ಬಾರಿಸುವೆ.ಪ್ರ : ಪರಾಕೆ! ನರ್ಸಣ್ಣನಿದ್ದರೂ ಇರಬಹುದು. ನನ್ನ ಹುಟ್ಟು ನನಗೆ ತಿಳಿಯದು. ಆದರೆ ನನ್ನೊಡೆಯರ ಜನ್ಮದ ವೃತ್ತಾಂತವು ನಿಜವು. ನಾನು ಕಣ್ಣಾರೆ ಕಂಡುದನ್ನೇ ಅರಿಕೆ ಮಾಡಿರುವೆನು. ಇದು ಸತ್ಯ! ಸತ್ಯ!!ಸ : ಕತೆ ಮುಗಿಯಿತೇ? + +ಪ್ರ : ಸ್ವಲ್ಪ ಉಳಿದಿದೆ, ಪ್ರಭು ! ಆ ಮಗು ಬದುಕಿತು. ಬಾಲಕನಾಗಿ ಬೆಳೆಯಿತು. ಸಮ್ರಾಟರು ಈ ರತ್ನ ಸಿಂಹಾಸನದಲ್ಲಿ ಜಯಾಭ್ಯುದಯ ಹೊಂದುತ್ತಾ ಬಂದಂತೆ ಈ ಬಾಲನೂ ಮೂಡುಬಿದರೆಯ ಅರಮನೆಯಲ್ಲಿ ವರ್ಧಮಾನನಾಗುತ್ತಾ ಬಂದನು. ತಕ್ಕ ಹರಯದಲ್ಲಿ ರಾಣಿಯರ ಪಟ್ಟವನ್ನೇರಿ, ಈ ವರೆಗೆ ಸೀಮೆಯನ್ನಾಳಿ, ಬಾಳಿದನು. ಈಗ ಸನ್ನಿಧಾನದಲ್ಲಿ ಅಪರಾಧಿಯಾಗಿ ನಿಂದಿರುವನು. ಅವನ ಉಳಿವು ಅಳಿವು ತಮ್ಮ ಕೈಯಲ್ಲಿದೆ. ಉಳಿದರೆ ತಮ್ಮ ಬಾಳ್ಕೆಯ ಹೆಸರು ಬಾಳಿ ದಂತಾಗುವುದು. ಅಳಿದರೆ ತಮ್ಮ ಪುಣ್ಯನಾಮವೂ ಅವನನ್ನು ಬಾಳಿಸಲಿಲ್ಲ ವೆಂದಾಗುವುದು.ಮಹಾಪ್ರಭು! ಅಷ್ಟು ಮಾತ್ರವಲ್ಲ. ಸಮ್ರಾಟರ ಊರ್ಜಿತದೇಳ್ಗೆಯು ಚೌಟರ ಏಳಿಗೆಯೆಂದೂ, ಅವರ ಕೀರ್ತಿಯು ಸನ್ನಿಧಾನದ ಕೀರ್ತಿಯೆಂದೂ ಜನಪ್ರತೀತಿ ಹರಡಿದೆ. ಈಗ ಅವರ ಏಳ್ಗೆಯ ಕುಡಿಯು ಕಡಿಯಿತೆಂದರೆ…. ಅಯ್ಯೋ- ಕರ್ನಾಟಕದ ಕೀರ್ತಿಯ ಕುಡಿ ಏನಾಗುವುದೋ ಎಂದು ಭಯವಾಗುತ್ತಿದೆ ಎನ್ನೊಡೆಯಾ!ಸಾಮ್ರಾಟನ ಮುಖದಲ್ಲಿ ಕಿರುನಗೆಯೊಂದು ಹೊಳೆಯಿತು. ಪ್ರಧಾನಿಗಳೇ! ನಿಮ್ಮ ಕತೆ ಬಹಳ ಸ್ವಾರಸ್ಯವಿದೆ. ನಿಮ್ಮ ಒಡೆಯನಲ್ಲಿ ನಮಗಿನ್ನು ಸಂದೇಹವಿಲ್ಲ. ಬಾರಕೂರಿನ ಒಡೆಯರು ಬರೆದುಕೊಂಡ ದೂರುಗಳು ನಿರಾಧಾರವಾದುದೆಂದು ನಮಗೀಗ ಖಚಿತವಾಯಿತು. ನೀವಿನ್ನು ಚಿಂತಿಸದಿರಿ. + +ಮಂತ್ರಿಮನ್ನೆಯರೆ, ಮೂಡುಬಿದರೆಯ ಈ ಧರ್ಮ ಸಮ್ರಾಜ ಚಿನ್ನ ದೇವರಾಯರು ಇನ್ನು ಮುಂದೆ ನಮ್ಮ ಪರಮ ಮಿತ್ರರು. ನಿಮ್ಮ ಸಾಮ್ರಾಟನ ಏಳಿಗೆಯು ಈ ಚಿನ್ನದೇವರಾಯರ ಏಳಿಗೆಯನ್ನು ಹೊಂದಿಕೊಂಡಿದೆ. ಅವರ ಹೆಸರೇ ನಮ್ಮ ಹೆಸರು. ಅವರ ಕೀರ್ತಿಯೇ ನಮ್ಮ ಕೀರ್ತಿ. ಚಿನ್ನ ದೇವರಾಯರೇ! ಮುಂದೆ ಬನ್ನಿ ಎಂದು ಗದ್ದುಗೆಯಿಂದಿಳಿದು ಬಾಹುಗಳನ್ನು ನೀಡಿದನು. ಇಬ್ಬರೂ ಬಿಗಿಯಾಗಿ ಅಪ್ಪಿಕೊಂಡರು. ಅದನ್ನು ನೋಡುತ್ತಿದ್ದ ಪ್ರಧಾನಿ ನರ್ಸಪ್ಪಯ್ಯನು ಆನಂದಾಶ್ರುವನ್ನು ಸುರಿಸುತ್ತ ಚೌಟ ಸಾಮ್ರಾಟರಿಬ್ಬರೂ ಹೀಗೆಯೇ ಸ್ನೇಹ ಸಂಪ್ರೀತಿಯಿಂದ ಬಾಳಲಿ ಎಂದು ಹರಸಿದನು.ಓಲಗವು ಹಿರಿವ ಸಮಯದಲ್ಲಿ ಸಮ್ರಾಟನು ಸಭಿಕರಿಗೆ ವೀಳೆಯ ಉಡುಗೊರೆಗಳನ್ನಿತ್ತು ಸತ್ಕರಿಸಿದನು. ಬಳಿಕ ಚೌಟರಾಯನನ್ನೂ ಅವನ ಪ್ರಧಾನಿಯನ್ನೂ ಆದರದಿಂದ ಉಪಚರಿಸಿ, ಅಡ್ಡಪಾಲಕಿ, ಹಸುರು ಪಕ್ಕೆ, ಜಾಲಿಸತ್ತಿಗೆ, ನೆಗಳಬಾಯಿ, ಪಂಚದೀವಟಿಗೆ, ವಾಲಗದ ಮೇಳ ಮೊದಲಾದ ತಾಜೀಮುಗಳನ್ನು ಕೊಟ್ಟು ಬೀಳ್ಕೊಟ್ಟನು. + + + + + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_486.txt b/Kenda Sampige/article_486.txt new file mode 100644 index 0000000000000000000000000000000000000000..8a1bad55ac0356267bfab1ad29d97f9855426f65 --- /dev/null +++ b/Kenda Sampige/article_486.txt @@ -0,0 +1,35 @@ +byಶ್ರೀಕಾಂತ್ ಪ್ರಭು|Mar 11, 2018|ವಾರದ ಕಥೆ,ಸಾಹಿತ್ಯ| 0 Comments + +ಆ ಎತ್ತಿನ ಆರ್ತನಾದ ಕೇಳುವದನ್ನು ತಪ್ಪಿಸಿಕೊಳ್ಳಲು ನಾನು ನನ್ನ ಅಂಗಡಿಯ ಹಿಂಭಾಗಕ್ಕೆ ಓಡಿ ಕಿವಿಮುಚ್ಚಿಕೊಂಡು ನೆಲದ ಮೇಲೆ ಪೂರ್ತಿ ಒಂದು ಘಂಟೆ ಬೋರಲಾಗಿ ಬಿದ್ದುಕೊಂಡಿದ್ದೆ. + +byಡಾ. ಯು. ಆರ್ ಅನಂತಮೂರ್ತಿ|Feb 24, 2018|ಸಾಹಿತ್ಯ| 0 Comments + +ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ. + +byಸುನಂದಾ ಪ್ರಕಾಶ ಕಡಮೆ|Feb 17, 2018|ವಾರದ ಕಥೆ,ಸಾಹಿತ್ಯ| 0 Comments + +ಯಮುನಜ್ಜಿ ತನ್ನ ಸವತಿಯ ಜೊತೆಗಿನ ಅನೇಕ ವರ್ಷಗಳ ಕೂಡು ಸಂಸಾರದಲ್ಲಿ ಕಂಡುಕೊಂಡ ಅನುಭವವನ್ನು ನೆನಪಿಸುತ್ತ ಕನವರಿಸುತ್ತಿದ್ದಾಳೆ + +byವಸುಧೇಂದ್ರ|Feb 9, 2018|ದಿನದ ಅಗ್ರ ಬರಹ,ಸಾಹಿತ್ಯ| 0 Comments + +ಕನ್ನಡದ ಅನನ್ಯ ಕಥೆಗಾರ ವಸುಧೇಂದ್ರ ಬರೆದ ಕತೆಯೊಂದು ಈ ಭಾನುವಾರದ ನಿಮ್ಮ ಓದಿಗೆ. + +byಡಾ. ನಾ. ಡಿಸೋಜ|Feb 2, 2018|ಸಾಹಿತ್ಯ| 0 Comments + +‘ತೆಂಗಿನ ಮರಗಳು ಕುಳ್ಳಾಗಿದ್ದು..’ ಕಥೆಗಾರ ಡಾ.ನಾ.ಡಿಸೋಜಾ ತಾವು ಕಲಿತ ಕನ್ನಡದ ಮೊದಲ ಪದ್ಯವೊಂದರ ಕುರಿತು ಇಲ್ಲಿ ಬರೆದಿದ್ದಾರೆ. + +byವೈಶಾಲಿ ಹೆಗಡೆ|Jan 27, 2018|ದಿನದ ಅಗ್ರ ಬರಹ,ವಾರದ ಕಥೆ,ಸಾಹಿತ್ಯ| 1 Comment + +ಅಮೇರಿಕಾದಿಂದ ಊರಿಗೆ ಬಂದಿದ್ದ ಸಮರ್ಥ ಉಣಕಲ್ ಕೆರೆಯ ದಡದಲ್ಲಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು ತನ್ನನ್ನೇ ತಾನು ಕಂಡುಕೊಂಡ. ವೈಶಾಲಿ ಬರೆದ ಕಥೆ + +byಜಯಂತ ಕಾಯ್ಕಿಣಿ|Jan 20, 2018|ಸಾಹಿತ್ಯ| 0 Comments + +ಎಲ್ಲೋ ಘಟ್ಟದ ಮೇಲೆ ಕೆಲಸ ಮಾಡುವ ಲೀಲಾಧರನ ಹೆಂಡತಿಯ ಸಪಾಟಾಗಿ ಹೋದ ಬದುಕಿನಲ್ಲಿ ಒಂದು ಸಣ್ಣ ಅನಿರೀಕ್ಷಿತ ಘಟನೆ. + +byಸುದರ್ಶನ್|Jan 5, 2018|ಸಾಹಿತ್ಯ| 0 Comments + +ಕವಿ, ಪದ್ಯ, ಸಂಪಾದಕ, ಪ್ರಕಟಣೆ ಮತ್ತು ಅದರ ಆಜುಬಾಜಿನ ಹಲವು ಹತ್ತು ಸಂಗತಿಗಳು. ಈ ಭಾನುವಾರದ ನಿಮ್ಮ ಓದಿಗೆ ಇಲ್ಲೊಂದು ನೀಳ್ಗತೆ + +byಸುದರ್ಶನ್|Jan 5, 2018|ಸಾಹಿತ್ಯ| 0 Comments + +ಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ. ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ. \ No newline at end of file diff --git a/Kenda Sampige/article_487.txt b/Kenda Sampige/article_487.txt new file mode 100644 index 0000000000000000000000000000000000000000..ce25d8af8945a0b891f23462ebcbc8c95f2da4e9 --- /dev/null +++ b/Kenda Sampige/article_487.txt @@ -0,0 +1,33 @@ + + +ದೊಡ್ಡ ಮನೆಯೆನ್ನಿಸಿಕೊಳ್ಳುವ ಭಾಗ್ಯವು ಎಲ್ಲ ದೊಡ್ಡ ಮನೆಗಳಿಗಿಲ್ಲ. ಕಿರಿಯದಾದರೂ ಹಿರಿಯ ಮನೆತನಕ್ಕೆ ಸೇರಿದ್ದಾದರೆ ಅದು ದೊಡ್ಡ ಮನೆಯೆನ್ನಿಸಿಕೊಳ್ಳುವುದು. ವಿಜಯ ನಗರದ ಅರಸರ ಕಾಲದಲ್ಲಿ ಅರಸರ ಕೂಡು ಕುಟುಂಬಗಳನ್ನು ಮನೆತನದವರೆಂದು ಕರೆಯುತ್ತಿದ್ದರು. ಕಾಲಕ್ರಮದಲ್ಲಿ ಹೆಸರಾಂತ ಹುದ್ದೆದಾರರ, ಪ್ರಖ್ಯಾತ ಯೋಧರ, ನಾಡ ಮನ್ನೆಯರ ವಸತಿಗಳೂ ಮನೆತನಗಳೆಂದು ಗಣಿಸಲ್ಪಟ್ಟವು. ಅಂಥ ಒಂದು ‘ಮನ್ತಾನ’ದ ಮನೆಯೇ ಈ ದೊಡ್ಡ ಮನೆ. + +ಇಟ್ಟಲ ಸೀಮೆಯಲ್ಲೆಲ್ಲ ಈ ದೊಡ್ಡ ಮನೆಯ ಕೀರ್ತಿಯು ಹರಡಿತ್ತು. ಸೀಮೆಯ ಮಹತೋಭಾರಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಈ ದೊಡ್ಡ ಮನೆಗೆ ಬೆಳ್ಳಿಯ ಹರಿವಾಣದಲ್ಲಿ ಮುಂದು ಪ್ರಸಾದ. ಈ ಮರ್ಯಾದೆಯ ಆ ಮನೆಯ ಸಂತಾನಕ್ಕೆ ಮೊನ್ನೆ ಮೊನ್ನೆಯವರೆಗೂ ರೂಢಿಸಿಕೊಂಡು ಬಂದಿತ್ತು. ಈಗ ಆ ಮನೆಯಲ್ಲಿ ಆ ಪೀಳಿಗೆಯವರು ಯಾರೂ ಇಲ್ಲ. ಅವರ ಕಡೆಯ ಯಾರೋ ಒಬ್ಬನು ಮನೆ ದೇವರಿಗೆ ದೀಪ ಇಡುತ್ತಾ ಬರುತ್ತಿರುವನು. ತುಳುನಾಡಿನ ಗುತ್ತು ಬೂಡುಗಳಿಗೆ ಸರಿದೊರೆಯೆನಿಸಿ ಕನ್ನಡದ ಈ ದೊಡ್ಡ ಮನೆಯ ಹೇಗೆ ಎದ್ದಿತು ಎಂಬುದು ಕುತೂಹಲಜನಕವಾಗಿದೆ. + +ಇಟ್ಟಲ ಪೇಟೆಯಿಂದ ಸುಮಾರು ಮೂರು ಹರದಾರಿ ಈಶಾನ್ಯಕ್ಕೆ ಪುಣಚೆ ಗ್ರಾಮವಿದೆ. ಇಟ್ಟಲ ಸೀಮೆಯ ಹದಿನೆಂಟು ದೇವಸ್ಥಾನಗಳಲ್ಲಿ ಒಂದಾದ ಮಹಿಷ ಮರ್ದಿನಿಯ ದೇಗುಲವು ಅಲ್ಲೆ ವಿರಾಜಿಸುತ್ತಿದೆ. ಪ್ರಕೃತಿ ಸ್ವರೂಪಿಣಿಯಾದ ಆ ದೇವಿಯು ಉಟ್ಟ ಹಸುರು ಸೀರೆಯ ನೆರಿಗೆಗಳಂತೆ ತೆನೆಗಳಿಂದ ತೊನೆಯುವ ಹೊಲಗದ್ದೆಗಳು ಸುತ್ತಲೂ ಹರಡಿವೆ. ಅವುಗಳ ಒಂದಂಚಿನಲ್ಲಿ ಪ್ರಶಸ್ತ ಪರಿವೇಶದಲ್ಲಿ ಉಪ್ಪರಿಗೆಯ ಈ ದೊಡ್ಡ ಮನೆಯು ಕಣ್ಣೆಸೆಯುತ್ತಿದೆ. ಮೌನ ಸಂಕೇತದಿಂದ ಗತಕಾಲದ ತನ್ನ ಐಸಿರಿ ಅಗ್ಗಳಿಕೆಗಳನ್ನು ಸಾರುತ್ತಿದೆ. ಒತ್ತಿನಲ್ಲೇ ಆ ಮನೆಯವರ ಒಂದು ಶಿವಾಲಯವಿದೆ. ಅದಕ್ಕೆ ಹೊಂದಿಕೊಂಡು ವಿಶಾಲವಾದ ಕಲ್ಲು ಕಟ್ಟಿದ ತಿಳಿನೀರಿನ ಒಂದು ತಟಾಕವಿದೆ. ಇದಿರಿನ ಬಾಕಿಮಾರು ಗದ್ದೆಯೇ ಹಿಂದಿನ ಹೆಸರಾದ ಕಂಬಳದ ಗದ್ದೆ. ಈ ಮನೆಯ ಮೂಲಪುರುಷನು ಈಶ್ವರಯ್ಯನೆಂಬ ದಳವಾಯಿ. ಇವನು ಹುಟ್ಟು ಕನ್ನಡಿಗನು. ಕ್ಷತ್ರಿಯನು. ಇಕ್ಕೇರಿ ದಂಡಿನೊಡನೆ ಬಂದು ತೆಂಕನಾಡ ಕೋಟೆಗಳಲ್ಲಿ ದಂಡುಕಡಿದು ಕೀರ್ತಿ ಶಿಖರಕ್ಕೇರಿದವನು. ದಳವಾಯಿ ಪದವಿಯಿಂದ ನಿವೃತ್ತನಾಗಿ ಈ ಮನೆಯಲ್ಲಿ ನೆಲೆಸಿದ್ದನು. ಅಂದಿನ ಇಟ್ಟಲ ಹೆಗ್ಗಡೆಗೆ ಅವನಲ್ಲಿ ತುಂಬ ಸ್ನೇಹ ವಿಶ್ವಾಸ. ಗಂಡುಡೆಯುಟ್ಟು ದೊಡ್ಡ ಮುಂಡಾಸನವನ್ನು ಸುತ್ತಿ ಬಿಳಿಯ ಬಗಲು ಕಸೆಯ ನಿಲುವಂಗಿ, ಜರತಾರಿ ಅಂಗರೇಖು ತೊಟ್ಟು ಬಿಗಿದ ಪಟ್ಟಿದಟ್ಟಿಯಲ್ಲಿ ಬೆಳ್ಳಿ ಹಿಡಿಯ ನೀಳ್ಗತ್ತಿಯನ್ನು ಸಿಕ್ಕಿಸಿಕೊಂಡು ಐವತ್ತರ ಹರಯದ ಆ ವೀರನು ಓಲಗದಲ್ಲಿ ಸುಳಿದನೆಂದರೆ ಅವನ ಗಂಡುಗಾಡಿಯಿಂದ ಪಾರ್ಥಂಪಾಡಿ ಚಾವಡಿಯೆಲ್ಲ ಬೆಳಗುತ್ತಿತ್ತು. + +ಊರಿನ ಎಲ್ಲ ಕೂಟ ಸ್ಥಾನ ಪಂಚಾಯತಿಗಳಿಗೆಲ್ಲ ಅವನೇ ಅಗ್ರಣಿ. ಅವನ ಮಾತಿಗೆ ಇದಿರಿಲ್ಲ. ಸೀಮೆಯ ಸಾವಿರದೈನೂರು ಆಳಿಗೆ ಅವನಲ್ಲಿ ಅಂಥ ಆದರಾಭಿಮಾನ. ಜಾತ್ರೆ, ಸಮಾರಾಧನೆ, ಅಯನ, ಕಂಬಳಗಳಿಗೆ ಹಣ ಸೂರೆಗುಡುತ್ತಿದ್ದನು. ಅವನ ಆ ದೊಡ್ಡ ಮನೆಗೆ ಹಸಿವಿನಿಂದ ಹೋದವರು ಬರಿ ಹೊಟ್ಟೆಯಲ್ಲಿ ಬಂದುದಿಲ್ಲ. ಸಹಾಯ ಬೇಡಲು ಹೋದವರು ಬರಿಗೈಯಲ್ಲಿ ಮರಳಿದುದಿಲ್ಲ. ಇತಿಗಳಿಗೆಲ್ಲ ಅವನೇ ಮೊಕ್ತೇಸರ. ಶುಭ ಶೋಭನಗಳಿಗೆ ಅವನಿಗೆ ಓಲಗದ ಹೇಳಿಕೆ. ಮದುವೆ ಮುಂಜಿಗಳಲ್ಲಿ ಅವನ ಮನೆಗೆ ಮೊದಲು ಸೇಸೆಯ ಮರ್ಯಾದೆ. ಅವನು ಹೋದಲ್ಲೆಲ್ಲ ಅವನಿಗೆ ಮೂರು ಮಣೆಯ ಮನ್ನಣೆ – ಒಂದು ಅವನ ಖಡ್ಗಕ್ಕೆ. ಒಂದು ಮುಂಡಾಸು ಇರಿಸುವುದಕ್ಕೆ, ಒಂದು ಅವನ ಆಸನಕ್ಕೆ. ಎಲ್ಲಿ ಹೋದರೂ ಅವನ ಮಾತುಕತೆ ನಡೆಯುತ್ತಿತ್ತು. ನಡೆದು ನಡೆದು ಅದು ಇಕ್ಕೇರಿಯ ಹೊನ್ನಾಗಿತ್ತು. + +ಕ್ರಿ.ಶ. 1715ರಲ್ಲಿ ಕೆಳದಿಯಲ್ಲಿ ಎರಡನೇ ಸೋಮಶೇಖರ ನಾಯಕನು ಪಟ್ಟವೇರಿ ಪರಮ ಪ್ರಸಿದ್ಧಿಯನ್ನು ಪಡೆದಿದ್ದನು. ನೆಗಳ್ತೆವೆತ್ತ ಶಿವಪ್ಪನಾಯಕನು ಚಂದ್ರಗಿರಿ, ಬೇರ, ಚಿತ್ತಾರಿ ಕೋಟೆಗಳನ್ನು ಬಲ್ಪಗೈಸಿ ನೀಲೇಶ್ವರದವರೆಗೆ ಗಡಿಯನ್ನೊತ್ತಿ ತೊಲಗದ ಕಂಬವನ್ನು ನಿಲ್ಲಿಸಿದ್ದರೂ ಆ ಪ್ರದೇಶದ ಹಿಡಿತವಿನ್ನೂ ಬೇರುಗೊಂಡಿರಲಿಲ್ಲ. ಎಡಬಲದ ಮಲೆಯಾಳಿಗಳು ಆಗಾಗ ಗುಲ್ಲೆಬ್ಬಿಸುತ್ತಿದ್ದರು. ಒಮ್ಮೆ ಕೋಲತ್ತರಸ ರವಿವರ್ಮರಾಜನು ಕುಹಕೋಪಾಯಗಳಿಂದ ಕುಂಬಳೆಯರಸನನ್ನು ಕೂಡಿಕೊಂಡು ನಾಯಿಮಾರ, ಮಾಪಿಳ್ಳೆ ಮೊದಲಾದ ಮಲೆಯಾಳಿ ಜನರ ಪಡೆಯೊಂದಿಗೆ ಬಲವೆತ್ತಿ ಬಂದು ಚಂದ್ರಗಿರಿ ಕೋಟೆಯನ್ನು ಲಗ್ಗೆಯಿಟ್ಟನು. ಪರಿಸರದ ಊರು ಕೇರಿಗಳನ್ನು ಕೊಳ್ಳೆಹೊಡೆದನು. ತಿರುಕಣ್ಣೂರು ತಿರೂರು ಕೋವಿಲಗಳನ್ನು ಸುಲಿದು ಊರಿಗೆ ಕಿಚ್ಚಿಟ್ಟನು. (ಹಾಗೆ ಸುಟ್ಟು ಕರಿಪುಡಿಯಾದ ಭಾಗವು ಈಗಲೂ ಕರಿಪೇಡಿಯೆಂದು ಕರೆಯಲ್ಪಡುತ್ತಿದೆ.) ಇದನ್ನು ಕಂಡು ಸೋಮಶೇಖರ ನಾಯಕನು ಕೆರಳಿ ಮಲೆತು ಮಾರ್ಮಲೆವ ಮಲೆಯಾಳಿಗಳನ್ನು ಹತ್ತಿಕ್ಕುವುದಕ್ಕಾಗಿ ಚಂದ್ರಗಿರಿ ಕೋಟೆಗೆ ಬಲ್ದಂಡನ್ನು ಕಳುಹಿಸಿದನು. ಆ ಕನ್ನಡ ಸೇನೆಯು ಮುನಿದೆತ್ತಿ ಬಂದು ಭೋಂಕನೆ ಬರಸಿಡಿಲಂತೆರಗಿ ಅರಿಪಡೆಯನ್ನು ತರಿದು ತೂರಿ ದೆಸೆಗೆಡಿಸಿತು. ಕೋಲತ್ತರಸನು ಕೈಯೂರಿ ಕೈದುವನಿಕ್ಕಿ ಕೈ ಮುಗಿದು ಮುತ್ತಿಗೆ ಕಿತ್ತು ಕಾಲ್ತೆಗೆದನು. ಕುಂಬಳೆಯರಸನು ಸೆರೆಸಿಕ್ಕಿ ವೇಣುಪುರ ಕೋಟೆಯಲ್ಲಿ ಬಂಧಿತನಾದನು. ಈ ಭೀಕರ ಯುದ್ಧದಲ್ಲಿ ಈಶ್ವರಯ್ಯನ ಪಟುತರ ಭುಜ ಬಲವು ಬೆಳಕಿಗೆ ಬಂತು. + +ಸೋಮಶೇಖರ ನಾಯಕನು ಮಲೆಯಾಳಿಗಳನ್ನು ಹಿಮ್ಮೆಟ್ಟಿಸಿ ಅಷ್ಟಕ್ಕೇ ಸುಮ್ಮನಾಗಲಿಲ್ಲ. ತೆಂಕನಾಡ ಗಡಿಯನ್ನು ಇನ್ನೂ ಮುಂದೊತ್ತಬೇಕೆಂದು ಸೇನೆಯನ್ನಟ್ಟಿದನು. ಆ ಮಹಾಸೈನ್ಯವು ಚಿತ್ತಾರಿ ಕೋಟೆಯಲ್ಲಿ ಪಾಳೆಯ ಬಿಟ್ಟು (ನಡೆ) ತಳಿಗೋಂಟೆಯನ್ನು ನಡೆಸುತ್ತ ಜಂತ್ರದ ಒಡ್ಡವಣೆಯ ಚಳಕದಿಂದ ಒತ್ತೊತ್ತಿ ಮುಂದುವರಿಯುತ್ತ ಇದಿರಾಂತವರನ್ನು ತಳ್ತಿರಿಯುತ್ತ ಉರವಣೆಯಿಂದ ಕಾದಿ ಶತ್ರುಗಳನ್ನು ನೆಲೆಗೆಡಿಸಿ ಅಲವತ್ತನಾಡು ನೀಲೇಶ್ವರಗಳನ್ನು ಹಾಯ್ದು ಪೆರಂಪುಯ ನದಿಯ ವರೆಗೆ ನುಗ್ಗಿ – ಆ ಪ್ರದೇಶವನ್ನೆಲ್ಲ ವಶಪಡಿಸಿಕೊಂಡಿತು. ಸೋಮಶೇಖರ ನಾಯಕನು ಕಾಂಞಂಗಾಡಿನಲ್ಲಿ ‘ಹೊಸದುರ್ಗ’ವನ್ನು ಕಟ್ಟಿಸಿ ಫೌಜನ್ನಿಟ್ಟು ಭದ್ರಪಡಿಸಿದನು. ಈ ಮಹಾ ಕಾಳಗದಲ್ಲಿ ಈಶ್ವರಯ್ಯನ ಪರಾಕ್ರಮಕ್ಕೆ ಕಲಶವಿಟ್ಟಿತು. ಅವನ ಅದಟು, ಆರ್ಪು, ಅಂಗವಣೆಗಳನ್ನು ಕಂಡು ಬಾರಕೂರು ಸೂರಪ್ಪಯ್ಯನೇ ಮೊದಲಾದ ಚಮೂಪತಿಗಳು ಶಹಭಾಸ್ ಎಂದರು. ಶತ್ರು ಸೈನ್ಯವು ಬೆರಗಾಯಿತು. ಸೋಮಶೇಖರ ನಾಯಕನು ಸ್ವತಹ ಅವನ ರಣವಿಕ್ರಮದ ಆಯತಿಕೆಯನ್ನು ಕೊಂಡಾಡಿ ಅವನನ್ನು ದಳವಾಯಿ ಪದವಿಗೇರಿಸಿ ಬಿರುದು ಬಾವಲಿಗಳನ್ನಿತ್ತು ಸನ್ಮಾನಿಸಿದನು. + +ಬಳಿಕ ಸೋಮಶೇಖರ ನಾಯಕನು ತುಳುನಾಡಿನ ವ್ಯವಸ್ಥೆಗಿಳಿದನು. ಆಗ ತುಳುರಾಯರೆಲ್ಲ ಕೆಳದಿಯ ದೊರೆತನವನ್ನು ಲೆಕ್ಕಿಸದೆ ಕಪ್ಪಕಾಣಿಕೆಗಳನ್ನು ಕೊಡದೆ ಕಂಡು ನಡೆಯದೆ ಮನ ಬಂದಂತೆ ವರ್ತಿಸುತ್ತಿದ್ದರು. ಸೋಮಶೇಖರ ನಾಯಕನು ಅವರ ವಿಶಾಲ ರಾಜ್ಯಗಳ ಬಹುಭಾಗವನ್ನು ಕಿತ್ತುಕೊಂಡನು. ಅವರ ಆಯ ಬೀಯಗಳನ್ನು ಬಣಿತೆಗೆ ತಂದು ಅವರು ಕೊಡತಕ್ಕ ಕಪ್ಪಕಾಣಿಕೆ ಹಣ ಮಣಿಹಗಳನ್ನು ಏರಿಸಿದನು. ತೆಂಗು ಮೊದಲಾದ ಫಲಮರಗಳಿಗೆ ಕಂದಾಯವನ್ನು ನಿಗದಿ ಮಾಡಿದನು. ಆಪತ್ತು ಅನುವರ ಬಂದಲ್ಲಿ ಆಳು ಅಂಬು ಅರಿಕೊಪ್ಪರಿಗೆಯಿತ್ತು ನೆರವಾಗಬೇಕೆಂದು ಕಟ್ಟು ಮಾಡಿದನು. ಈ ಕಟ್ಟು ಕಟ್ಟಳೆಗಳನ್ನು ಮೀರಿ ನಡೆಯದಂತೆ ಅಲ್ಲಲ್ಲಿ ಒಡೆಯರನ್ನು ನೇಮಿಸಿದನು. ಹೀಗೆ ತುಳುರಾಯರ ಮಲೆಪನ್ನು ಇಳಿಸಿದನು. + + + +ಆ ಕಾಲದಲ್ಲಿ ಇಟ್ಟಲ ರಾಜ್ಯದಲ್ಲಿ ‘ದೋರ್ದಂಡ ವಿದಾಯ ಶ್ರುತ ಪ್ರತಾಪ’ ರವಿವರ್ಮ ನರಸಿಂಹರಸ ಡೊಂಬ ಹೆಗ್ಗಡೆಯು ಪ್ರಜಾರಂಜಕನಾಗಿ ರಾಜ್ಯವನ್ನಾಳುತ್ತಿದ್ದನು. ಅವನ ಒರ್ನುಡಿಯು ನಿಲವು, ಗುಣೋನ್ನತಿ, ಆರ್ಪುಗಳ ಬೆಳ್ಜಸವು ಹಬ್ಬಿತ್ತು. ಕೆಳದಿಯ ಅಧಿರಾಜರಿಗೆ ಅಧೀನನಾಗಿದ್ದನು. ಆದರೆ ಸೋಮಶೇಖರ ನಾಯಕನು ಅವನ ಒಳವನ್ನು ಅರಿತಿರಲಿಲ್ಲ. ಹೊಸ ಕಟ್ಟುಕವಲುಗಳಿಗೆ ಹೆಗ್ಗಡೆಯೂ ಕಟ್ಟುಬಿದ್ದಿದ್ದನು. ಹೇರಿಸಲ್ಪಟ್ಟ ಕಪ್ಪ ಕಾಣಿಕೆ ಕರ ಕಂದಾಯಗಳನ್ನು ಅವನೂ ತೆರದೆ ನಿರ್ವಾಹವಿರಲಿಲ್ಲ. ಆದರೆ ತೆರುವಷ್ಟು ರಾಜಾದಾಯವಿರಲಿಲ್ಲ. ಸೀಮೆಯ ಹದಿನೆಂಟು ದೇವಸ್ಥಾನ ಹಲವಾರು ಧಾರ್ಮಿಕ ವಿನಿಯೋಗಗಳಿಗೆ ತತ್ವಾರವಾಯಿತು. ಕಪ್ಪ ಕಾಣಿಕೆಯೆಲ್ಲ ಬಾಕಿಬಿತ್ತು. ನಾಯಕನ ಕಟ್ಟಾಣತಿಯಂತೆ ಹೆಗ್ಗಡೆಗೂ ಸೆರೆಮನೆ ಪ್ರಾಪ್ತಿಯಾಯಿತು. ಕಪ್ಪಕಾಣಿಕೆಯನ್ನು ತೆರಲಾರದೆ ಹೆಗ್ಗಡೆಯು ಕೆಳದಿಯ ಸೆರೆಮನೆಯಲ್ಲಿ ಸೊರಗುತ್ತಿದ್ದನು. ಕಪ್ಪವನ್ನು ಹೇಗೆ ತುಂಬಲಿ? ಯಾರ ಮೊರೆ ಸಾರಲಿ? ಏನು ಮಾಡಲಿ? ಎಂಬ ಎದೆಗುದಿಯಿಂದ ಬೇವಸಪಡುತ್ತಿದ್ದನು. + +ಆಗ ಈಶ್ವರಯ್ಯನು ಇಕ್ಕೇರಿಯ ದಳವಾಯಿಯಾಗಿ ಆಸ್ಥಾನದಲ್ಲಿ ವರ್ಚಸ್ಸನ್ನು ಬೀರಿದ್ದನು. ಸೆರೆಮನೆಯ ಅಧಿಕಾರವೂ ಅವನ ಕೈಲ್ಲಿದ್ದಿತು. ಅವನು ರಾಜಕಾರ್ಯದ ಮೇಲೆ ಇಟ್ಟಲ ಸೀಮೆಯನ್ನು ಹಲವು ಬಾರಿ ಸಂದರ್ಶಿಸಿದ್ದನು. ಹೆಗ್ಗಡೆಯನ್ನು ಬಲ್ಲವನಾಗಿದ್ದನು. ಅವನಲ್ಲಿ ಗೌರವಾದರ ತಳೆದಿದ್ದನು. ಅವನಂಥ ಸ್ವಾಮಿನಿಷ್ಠ ಸಾಮಂತನಿಗೆ ಈ ದುರ್ದೆಸೆ ಬಂದುದಕ್ಕಾಗಿ ಸಂತಾಪ ಪಡುತ್ತಿದ್ದನು. ಅವಸರ ದೊರೆತಾಗಲೆಲ್ಲ ಅವನ ಸ್ವಾಮಿನಿಷ್ಠೆ ಧರ್ಮಶ್ರದ್ಧೆಯ ಕುರಿತು ಪ್ರಧಾನಿ ನಿರ್ವಾಣಯ್ಯ, ಅವನ ತಮ್ಮ ಗುರುವಪ್ಪ ಮೊದಲಾದ ಪ್ರಮುಖರೊಡನೆ ಪ್ರಸ್ತಾಪಿಸುತ್ತಾ ಬಂದನು. ಅರಮನೆಯಲ್ಲೆಲ್ಲ ಅವನ ಗುಣೋನ್ನತಿಯ ಮಾತು ಬೆಳೆಯಿತು. ದೊರೆ ಕಿವಿಗೂ ಮುಟ್ಟಿತು. + +ಮಹಾನವಮಿಯ ಸಾಯಂಕಾಲ ಸಮಯ. ಈಶ್ವರಯ್ಯನು ಸೆರೆಮನೆಯ ಸಂದರ್ಶನಕ್ಕೆ ಬಂದವನು ಇಟ್ಟಲರಸನನ್ನು ಕಂಡು ಸಲುಗೆಯಿಂದ ಮಾತೆತ್ತಿದನು.‘ಸುಖವಷ್ಟೆ ಅರಸರೆ?’‘ಸೆರೆಮನೆಯ ಸುಖ ದಳವಾಯಿಗಳೆ.’‘ನಿಮ್ಮ ಸುಖಕ್ಕಾಗಿ ಎಚ್ಚರ ವಹಿಸಲಾಗಿದೆ.’‘ಅದನ್ನು ಬಲ್ಲೆನು ದಳವಾಯಿಗಳೇ. ನಿಮ್ಮ ಉಪಕಾರವನ್ನೆಂದಿಗೂ ಮರೆಯಲಾರೆನು. ಆದರೆ ಸುಖದ ವಿಚಾರ ಹೇಳಿದನಷ್ಟೆ. ಇವತ್ತು ಈ ಸೆರೆ. ನಾಳೆ ಅರಮನೆಯ ಸೆರೆ. ಬದುಕೇ ಒಂದು ಸೆರೆ. ಈ ಸೆರೆಯಿಂದ ಬಿಡುಗಡೆಯೆಂದಿಗೋ? ಸುಖವೆಲ್ಲಿಯೋ? ಕಾಣೆ.’‘ಸತ್ಯವನ್ನರಸುವ ನೀವು ಸುಖವನ್ನು ಕಂಡೇ ಕಾಣುವಿರಿ. ಈ ಸೆರೆಯಿಂದ ವಿಮೋಚನೆಗೊಳ್ಳುವಿರಿ. ಸೆರೆಮನೆಯ ಈ ಕುಲಿಮೆಯಲ್ಲಿ ನಿಮ್ಮ ಧರ್ಮಕೀರ್ತಿಯು ಪುಟಗೊಂಡಿದೆ. ಮಹಾರಾಜರಿಗೆ ನಿಮ್ಮ ಸ್ವಾಮಿನಿಷ್ಠೆಯ ಅರಿವಾಗಿದೆ. ನಾಳೆ ವಿಜಯ ದಶಮಿ. ಮಹಾರಾಜರು ಸಾಮಂತರಿಗೆಲ್ಲ ದರ್ಶನ ಕೊಡುವರು. ನೀವೇನು ಮಾಡುವಿರಿ?’‘ನಾನೇನು ಮಾಡಲಿ? ಮಹಾರಾಜರನ್ನು ಬರಿಗೈಯಲ್ಲಿ ಕಾಣುವುದೇ?’‘ಅದಕ್ಕಾಗಿ ಚಿಂತಿಸಬೇಡಿ ನೀವು. ಸಾವಿರ ಹೊನ್ನನ್ನು ನಾನಿಂದೇ ಒದಗಿಸಿ ಕೊಡುವೆನು. ಅದನ್ನು ಮಹಾರಾಜನಿಗೆ ಕಾಣಿಕೆಯಾಗಿ ಒಪ್ಪಿಸಿ, ಶ್ರೀಮಂತ ನಿರ್ವಾಣ ಶೆಟ್ಟರ ಹೊಣೆಯ ಮೇಲೆ ಕಪ್ಪದ ಹಣಕ್ಕೆ ಸ್ವಲ್ಪ ಅವಧಿಯನ್ನು ಕರುಣಿಸುವಂತೆ ಯಾಚಿಸಿಕೊಳ್ಳಿ. ನಿರ್ವಾಣ ಶೆಟ್ಟರನ್ನು ನಾನು ಒಪ್ಪಿಸುವೆನು.’ + +ಈಶ್ವರಯ್ಯನ ಅಂತಃಕರಣಪೂರ್ವಕವಾದ ಈ ಮಾತುಗಳನ್ನು ಕೇಳುತ್ತಿದ್ದಂತೆ ಹೆಗ್ಗಡೆಯ ಎದೆಯಾಳದಿಂದ ಕೃತಜ್ಞತೆಯು ಉಕ್ಕಿ ಬಂದು ಕಣ್ಣು ನೆನೆಯಿತು. ಕೊರಳು ಕಟ್ಟಿತು. ಅವನ ಚಿತ್ರ ಮುಗ್ಧಾವಸ್ಥೆಯನ್ನು ಕಂಡು ಈಶ್ವರಯ್ಯ ಅಲ್ಲಿ ನಿಲ್ಲಲಾರದಾದ. ವಿಜಯ ದಶಮಿಯ ಕೋಲಾಹಲ. ನಗರವೆಲ್ಲ ತಳಿರು ತೋರಣಗಳಿಂದ ಸಿಂಗರಿಸಲ್ಪಟ್ಟಿದೆ. ನಾಡಹಬ್ಬದ ಆನಂದವೇ ಆನಂದ. ಅರಮನೆಯಲ್ಲಿ ಜನರು ಕಿಕ್ಕಿರಿದು ನೆರೆದಿದ್ದಾರೆ. ಸೋಮಶೇಖರ ನಾಯಕನು ಪಾಲಕಿಯನ್ನೇರಿ ವೈಭವದ ಬನ್ನಿ ಮೆರವಣಿಗೆಯನ್ನು ಮುಗಿಸಿ ಐದಂಕಣದ ರಾಜ ಭವಂತಿಯ ಬಣ್ಣದ ಚಾವಡಿಯಲ್ಲಿ ಓಲಗ ಕೊಡುತ್ತಿದ್ದಾನೆ. ಮಂತ್ರಿ ಮನ್ನೆಯರು ಪರಿಜನರು ನೆರೆದಿದ್ದಾರೆ. ಸಾಮಂತರೆಲ್ಲ ಕಪ್ಪ ಕಾಣಿಕೆಗಳನ್ನು ಹಿಡಿದುಕೊಂಡು ಸಾಲುಕಟ್ಟಿ ನಿಂತಿದ್ದಾರೆ. ಕರಣಿಕನು ಯಿಟ್ಟಲರಸನ ಬಿರುದಿನ ಹೆಸರನ್ನು ಕರೆದನು. ಅವನು ಸೆರೆಮನೆಯಲ್ಲಿರುವನೆಂದು ಸೆರೆಮನೆಯಧಿಕಾರಿ ಈಶ್ವರಯ್ಯನು ಅರಿಕೆ ಮಾಡಿಕೊಂಡನು. ಅವನನ್ನು ಕರೆತರುವಂತೆ ಅಪ್ಪಣೆಯಾಯಿತು. ಭಟರು ಅವನನ್ನು ಕರೆತಂದು ಮುಂದೆ ನಿಲ್ಲಿಸಿದರು. ಹೆಗ್ಗಡೆಯು ‘ಮಹಾರಾಜರಿಗೆ ಜಯವಾಗಲಿ’ಎಂದು ಉದ್ದಂಡ ನಮಸ್ಕರಿಸಿದನು.‘ಕಪ್ಪವನ್ನೇಕೆ ಒಪ್ಪಿಸಲಿಲ್ಲ ಅರಸರೇ? ನಿಮ್ಮ ಅರಿಕೆಯೇನಿದೆ?’ ಎಂದು ಮಹಾರಾಜನು ಕೇಳಿದನು. + + + +‘ಮಹಾಪ್ರಭು! ಕೆಳದಿಯ ರತ್ನ ಸಿಂಹಾಸನಕ್ಕೆ ಇಟ್ಟಲ ಹೆಗ್ಗಡೆಯವರೆಂದೂ ಎರಡೆಣಿಸಿದವರಲ್ಲ. ಧರ್ಮವನ್ನು ಮೀರಿ ನಡೆದವರಲ್ಲ. ಸ್ವಾಮಿ ಭಕ್ತಿಗೆ ತಪ್ಪಿದವರಲ್ಲ. ಕಪ್ಪಕಾಣಿಕೆಗಳು ರಾಜಾದಾಯಕ್ಕೆ ಮಿಕ್ಕಿರುವುದರಿಂದ ಬಾಕಿಯಾಗಿ ಹೋದುದು ನಿಜ. ಅದಕ್ಕಾಗಿ ಕೊರಗುತ್ತಿದ್ದೇನೆ. ಶ್ರೀಮಂತ ನಿರ್ವಾಣ ಶೆಟ್ಟರ ಹೊಣೆಯ ಮೇಲೆ ಸ್ವಲ್ಪ ಅವಧಿಯನ್ನು ಕರುಣಿಸುವ ಕೃಪೆಯಾಗಬೇಕು’ ಎಂದು ಅರಿಕೆ ಮಾಡಿಕೊಂಡು ಸಾವಿರ ಹೊನ್ನು ಕಾಣಿಕೆಯಿಟ್ಟು ಹೆಗ್ಗಡೆಯು ಕೈ ಮುಗಿದನು. ಹೆಗ್ಗಡೆಯ ಧೀರವೃತ್ತಿ ವೀರಕಳೆಯನ್ನು ಕಂಡು ಅವನ ದೈನ್ಯೋಕ್ತಿಯನ್ನು ಕೇಳಿ ಮಹಾರಾಜನಿಗೆ ಹರ್ಷವಾಯಿತು. + +‘ಅರಸರೇ! ಇಟ್ಟಲರಸರೆಲ್ಲ ಕೆಳದಿ ಸಿಂಹಾಸನದ ಏಕನಿಷ್ಠ ಭಕ್ತರೆಂದು ಕೇಳಿರುವೆವು. ನಿಮ್ಮ ಈ ಸ್ವಾಮಿನಿಷ್ಠೆ ಧರ್ಮಕೀರ್ತಿಗಳು ಸಾತತ್ಯವಾಗಿ ನಡೆದು ಬರಲಿ! ನಿಮ್ಮ ಅರಿಕೆಯಂತೆ ಅವಧಿಯನ್ನು ಕರುಣಿಸಲಾಗುವುದು. ನಿಮ್ಮ ಊರ್ಜಿತ ಧರ್ಮಕಾರ್ಯಗಳಿಗಾಗಿ ನೀವು ತೆರತಕ್ಕ ಕಪ್ಪ ಕಾಣಿಕೆಯನ್ನು ಅರ್ಧಕ್ಕಿಳಿಸಿರುವೆವು’ ಎಂದು ಮಹಾರಾಜನು ಅವನನ್ನು ಬಳಿಯಲ್ಲಿ ಕುಳ್ಳಿರಿಸಿಕೊಂಡು ಉಚಿತಾಭರಣಾಂಬರ ತಾಂಬೂಲಗಳನ್ನಿತ್ತು ಸತ್ಕರಿಸಿ ಬೀಳ್ಕೊಟ್ಟನು. ಸೀಮೆಗೆ ಮರಳಿದೊಡನೆ ಯಿಟ್ಟಲ ಹೆಗ್ಗಡೆಯು ಹೊಣೆ ನಿತ್ತು ಮಾನವನ್ನುಳಿಸಿದ ನಿರ್ವಾಣ ಶೆಟ್ಟಿಗೆ ತನ್ನ ಹಿಡಿತದ ಕಾಡುಮಠದಲ್ಲಿಯೂ, ಇಷ್ಟೆಲ್ಲಕ್ಕೂ ಕಾರಣನಾದ ದಳವಾಯಿ ಈಶ್ವರಯ್ಯನಿಗೆ ಪುಣಚೆ ಗ್ರಾಮದಲ್ಲಿಯೂ ಜಹಗೀರನ್ನು ಮಾನ್ಯಬಿಟ್ಟು ಶಾಸನವಿರಿಸಿದನು. ಈಶ್ವರಯ್ಯನು ದಳವಾಯಿ ಪದವಿಯಿಂದ ನಿವೃತ್ತನಾದ ಮೇಲೆ ಈ ಮಾನ್ಯದ ಭೂಮಿಯಲ್ಲಿ ಮಹಿಷಿಮರ್ದಿನಿಯ ಪಾದತಲದಲ್ಲಿ ನೆಲೆಗೊಂಡನು. ಅವನು ವಾಸವಾಗಿದ್ದ ಹೆಸರ್ಗೊಂಡ ಮನೆಯೇ ಈ ದೊಡ್ಡ ಮನೆ. + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_488.txt b/Kenda Sampige/article_488.txt new file mode 100644 index 0000000000000000000000000000000000000000..b3faf457c958e90ae3e0f30f969ca0babfa89549 --- /dev/null +++ b/Kenda Sampige/article_488.txt @@ -0,0 +1,37 @@ + + +‘ಥತ್ ಈ ಬಸ್ಸಿನ್ ದೆಸಿಂದ ಬರ್‌ಕತ್ ಇಲ್ಲ. ಎಲ್ಲರಾ ಹೊಲ್ಟಾಗ್ಲೆ ಇದ್ಕ್ ರೋಗ ಬಂದ್ ಸಾಯಾದ್’ ಎಂದು ಕಾನಳ್ಳಿಯ ಬಸ್‌ಸ್ಟ್ಯಾಂಡಿನ ಮುಂದಿನ ಮೋರಿ ಕಟ್ಟೆಯ ಮೇಲೆ ಕುಳಿತು ಮನ್ಯಾತ ತಾನು ಸೇದುತ್ತಿದ್ದ ಬೀಡಿಗಿಂತ ಹೆಚ್ಚಾಗಿ ತನ್ನ ಅಸಮಾಧಾನದ ಹೊಗೆ ಕಾರುತ್ತಿರುವಾಗಲೇ ಬಸ್ಸು  ಧೂಳೆಬ್ಬಿಸುತ್ತಾ ಬಂದು ಉಫ್ ಎಂದು ಏದುಸಿರು ಬಿಡುತ್ತಾ ಸಶಬ್ದವಾಗಿ ಬಂದು ನಿಂತಿತು. + +ಸಂತೆಯ ದಿನವಾದ್ದರಿಂದ ತುಂಬು ಬಸುರಿಯಂತೆ ತೂಯ್ದಾಡುತ್ತಿದ್ದ ಬಸ್ಸನ್ನು ಕಂಡಕೂಡಲೇ ಮನ್ಯಾತನ ಅಸಮಾಧಾನ ಮತ್ತಷ್ಟು ಏರಿತು. ಆದರೂ ಸಾವರಿಸಿಕೊಂಡು ಬಸನ್ನೇರಿ ಕಂಬಿ ಹಿಡಿದು ನಿಂತ ಮನ್ಯಾತ ಪಡುಗೆರೆ ಪ್ಯಾಟಿ ಎನ್ನುತ್ತಾ ತನ್ನ ಜೇಬಿನಲ್ಲಿ ಚಿಲ್ಲರೆ ತಡಕಾಡುವುದಕ್ಕೂ ಬಸ್ಸಿಗೆ ಅಡ್ಡ ಬಂದ ಕರುವನ್ನು ತಪ್ಪಿಸಲು ಡ್ರೈವರ ಬ್ರೇಕ್ ಹಾಕುವುದಕ್ಕೂ ಸರಿಯಾಗಿ, ಮನ್ಯಾತ ಮುಗ್ಗರಿಸಿ ಮುಂದಿದ್ದ ಕಾಲೇಜು ಹುಡುಗರ ಮೇಲೆ ಆಯ ತಪ್ಪುವಂತೆ ಬಿದ್ದವನ್ನೂ ಸಾವರಿಸಿಕೊಂಡ. + +ಇನ್ನೆನು ಬಿದ್ದೇ ಹೋದೆ ಎಂದುಕೊಂಡು ಜೇಬಿನಲ್ಲಿ ಚಿಲ್ಲರೆ ಹೊರತೆಗೆದವನು ಕಂಬಿ ಹಿಡಿಯುವ ಗಲಿಬಿಲಿಯಲ್ಲಿ ಚಿಲ್ಲರೆ ಸದ್ದು ಮಾಡುತ್ತಾ ಸುತ್ತ ಚದುರಿ ಬಿದ್ದಿತು. ಬಗ್ಗಿ ಹೆಕ್ಕಿಕೊಳ್ಳಲು ಸಾಧ್ಯವಾಗದಿದ್ದಾಗ ಅವನ ಅಸಮಾಧಾನದ ಬೆಂಕಿಗೆ ತುಪ್ಪ ಸುರಿದಂತಾಯಿತು. ಆ ವೇಳೆಗೆ ಪಡುಗೆರೆ ಪ್ಯಾಟೆ ಬರಲು ಮನ್ಯಾತ ಎಲ್ಲ ಪ್ರಯಾಣಿಕರು ಇಳಿದ ನಂತರ ಬಿದ್ದಿದ್ದ ಚಿಲ್ಲರೆಯನ್ನು ಜೇಬಿಗಿಳಿಸಿ ಬಸ್ಸಿಳಿದ. ವಾಹನಗಳ ಸದ್ದು, ಜನರ ಮಾತಿನ ಸದ್ದು ಜನಗಳನಗನ್ನು ಕೂಗಿ ಕರೆಯುವ ಆಟೋ ಜೀಪಿನವರ ಸದ್ದು, ಹಣ್ಣು ತರಕಾರಿ ಮಾರುವವರು ಗಿರಾಕಿಗಳನ್ನು ಆಕರ್ಷಿಸಲು ಮಾಡುವ ಸದ್ದು ಎಲ್ಲವೂ ಸೇರಿ ಮನ್ಯಾತನಿಗೆ ತನ್ನ ಅಸಮಾಧಾನ ಹೆಚ್ಚಲು ಮತ್ತೊಂದು ಕಾರಣ ಸಿಕ್ಕಂತಾಯಿತು. + + + +ತನ್ನ ಅಂಗಿಯ ಜೇಬಿನಲ್ಲಿದ್ದ ಕಾಗದ ಪತ್ರಗಳ ಕಡೆಗೊಮ್ಮೆ ನೋಡಿ ತಾಲ್ಲೂಕಾಫೀಸಿನ ಕಡೆಗೆ ಹೆಜ್ಜೆ ಹಾಕಿದ ಮನ್ಯಾತ. ಕೆಂಪು ಬಣ್ಣ ಹೊಡೆದ ಆ ಸರ್ಕಾರಿ ಕಟ್ಟಡಕ್ಕೆ ಹೊಂದಿಕೊಂಡಂತೇ ಇರುವ ಬ್ಯಾನರ್ ಒಂದರಲ್ಲಿ ನಗುಮೊಗದ ಬರಿಮೈಯ ಗಾಂಧಿ, ಗಾಂಧಿಯ ಮೇಲ್ಭಾಗದಲ್ಲಿ ಗರಿಗರಿಯ ಖಾದಿ ತೊಟ್ಟು ಹತ್ತು ಬೆರಳುಗಳಿಗೆ ಬಗೆಬಗೆಯ ಉಂಗುರ ತೊಟ್ಟು ನಮಸ್ಕಾರ ಬಂಗಿಯಲ್ಲಿರುವ ಮಂತ್ರಿಯೊಬ್ಬರ ಚಿತ್ರದ ಕಡೆಗೊಮ್ಮೆ ನೋಡಿದ. ಈ ಮುಂಚೆ ಬ್ಯಾನರ್ ಇದ್ದ ಜಾಗದಲ್ಲಿ ಟೇಬಲ್ ಒಂದರಲ್ಲಿ ಸೂಟಕೇಸ್ ಇಟ್ಟುಕೊಂಡು ಕುಳಿತುಕೊಳ್ಳುತ್ತಿದ್ದ ಕನ್ನಡಕದಾರಿಯನ್ನು ಹುಡುಕುಗಣ್ಣಿನಿಂದ ನೋಡಿದ. ಅದರೆ ಅವನಾಗಲಿ ಆ ಸೂಟಕೇಸಿನ ಟೇಬಲ್ಲಾಗಲಿ ಕಾಣದಿದ್ದಾಗ ಜಾಗ ಬದಲಿಸಿರಬೇಕೆಂದುಕೊಂಡು ತಾಲ್ಲೂಕಾಫಿಸಿನ ಒಂದು ಸುತ್ತು ಬಂದ. + +ಈ ಹಿಂದೆ ಮನ್ಯಾತ ತನ್ನ ಮಕ್ಕಳನ್ನು ಶಾಲೆಗೆ ಸೇರಿಸಲು ಬೇಕಾದ ಆದಾಯ, ಜಾತಿ ಧೃಡಿಕರಣ ಪತ್ರ ಮತ್ತಿತ್ತರ ದಾಖಲೆಗಳನ್ನು ಮಾಡಿಸಿಕೊಳ್ಳಬೇಕಾರೆ ವಾರದ ಸಂತೆಯ ದಿನ ಪಡುಗೆರೆ ಪ್ಯಾಟಿಗೆ ಬರುತ್ತಿದ್ದ ಮನ್ಯಾತ ತಾಲ್ಲೂಕಾಫೀಸಿನ ಕನ್ನಡಕಧಾರಿಯ ಬಳಿ ಹೋಗಿ ಅರ್ಜಿ ಬರೆಸಿ ಹೇಳಿ ಬರುತ್ತಿದ್ದ, ಪೇಟೆಯ ಕೆಲಸಗಳು ಮುಗಿಸಿಕೊಂಡು ಬರುವಷ್ಟರಲ್ಲಿ ಧೃಡಿಕರಣ ಪತ್ರ ರೆಡಿಯಾಗಿರುತ್ತಿತ್ತು. ಆದರೆ ಈಗ ಆ ಸೂಟ್‌ಕೇಸ್ ಇಟ್ಟಿರುತ್ತಿದ್ದ ಟೇಬಲ್ ಆಗಲಿ, ಆ ಕನ್ನಡಕದಾರಿಯಾಗಲಿ ಅಲ್ಲಿ ಕಾಣಸಲಿಲ್ಲ. + +ಈ ಹಿಂದೆ ಅದೆಷ್ಟೋ ಬಾರಿ ಎಂಥೆಂತದೋ ಕಾಗದ ಪತ್ರಗಳನ್ನು ಮಾಡಿಸಲು ತಾಲ್ಲೂಕಾಫೀಸಿಗೆ ಬಂದಾಗ ಅಲ್ಲಿನ ಅಧಿಕಾರಿಗಳು ಸಬೂಬು ಹೇಳಿ ಸತಾಯಿಸುತ್ತಿದಾಗ ಅದೇ ಕನ್ನಡಕದಾರಿ ತಾಲ್ಲೂಕಾಫೀಸಿನ ಗೇಟಿನ ಬಳಿ ಚಿಂತಾಕ್ರಾಂತನಾಗಿ ನಿಂತಿದ್ದ ಮನ್ಯಾತನ್ನು ಗಮನಿಸಿ ಹತ್ತಿರ ಕರೆದು ವಿಚಾರಿಸಿ ಇಲ್ಲೆ ಕೂತಿರಿ ಈಗ ಬಂದೇ ಎಂದು ತಾಲ್ಲೂಕಾಫೀಸಿನ ಅರ್ಥವೇ ಆಗದ ಅಕ್ಷಯ ಸುಳಿಯೊಳಗೆ ನುಸುಳಿ ಮನ್ಯಾತನಿಗೆ ಬೇಕಾದ ಕಾಗದ ಪತ್ರಗಳನ್ನು ಮನ್ಯಾತನೆದುರು ತಂದು ಇಟ್ಟಿದ್ದ. ಆ ಕನ್ನಡಕದಾರಿಯು ಇಂತಿಷ್ಟೆ ಹಣ ಕೊಡಿ ಎಂದು ಕೇಳಿದವನಲ್ಲ. ‘ನಮ್ಗೂ ಗೊತ್ತಾಗ್ತದೆ, ಬಡವರ್ಯಾರು, ದುಡ್ಡಿರೋರ್ಯಾರು’  ಎನ್ನುತ್ತಾ ಅರ್ಜಿ ಬರೆದುಕೊಟ್ಟಿದಕ್ಕೆ ಮಾತ್ರ ಚಾಕಾಫಿ ಖರ್ಚಿಗೆ ಮಾತ್ರ ಹಣ ತೆಗೆದುಕೊಳ್ಳುತ್ತಿದ್ದ. ಕಾಗದ ಪತ್ರಗಳು ಬೇಕಾದಾಗ, ರೇಷನ್ ಕಾರ್ಡು, ಚುನಾವಣೆ ಗುರುತಿನ ಚೀಟಿ ಮಾಡಿಸುವಾಗಲೆಲ್ಲಾ ಆ ಕನ್ನಡಕದಾರಿ ಬಳಿಯೇ ಮನ್ಯಾತ ಬರುತ್ತಿದ್ದನಾದರೂ ಅವನ ಹೆಸರು ಮಾತ್ರ ಮನ್ಯಾತನಿಗೆ ಗೊತ್ತಿರಲಿಲ್ಲ. ಕನ್ನಡಕದಾರಿಯ ಬಳಿ ಕೆಲಸ ಮಾಡಿಸಿಕೊಳ್ಳಲು ಬರುವವರೆಲ್ಲರೂ ಸಾರ್ ಎಂದೆ ಕರೆಯುತ್ತಿದ್ದರಿಂದ ಮನ್ಯಾತನೂ ಕೂಡ ಹಾಗೇ ಕರೆಯುತ್ತಿದ್ದ. + + + +ಕರೆ ಹಿಡಿದು ಕಪ್ಪಗಾಗಿದ್ದ ಸೂಟ್‌ಕೇಸಿನೊಳಗೆ ಅಸಂಖ್ಯವಾಗಿದ್ದ ಅರ್ಜಿ ಬರೆಯುವ ಕಾಗದಗಳು, ಆದಾಯ, ಜಾತಿ, ಸ್ಥಳ ದೃಡಿಕರಣದ ಅರ್ಜಿ ನಮೂನೆಗಳು. ಬಗೆಬಗೆಯ ಬಣ್ಣದ ಪೆನ್ನುಗಳು, ಇಂಕ್ ಪ್ಯಾಡ್ ಮತ್ತಿತ್ತರ ಸಾಮಾಗ್ರಿಗಳನ್ನು ಕಂಡಾಗ ಕನ್ನಡಕದಾರಿ ಸದಾ ಗೊಂದಲದ ಗೋಜಲುಗೋಜಲಾದ ತಾಲ್ಲೂಕಾಫೀಸಿನ ಏಳುಸುತ್ತಿನಕೋಟೆಯ ಹೆಬ್ಬಾಗಿನ ಕೀಲಿ ಕೈಯಂತೆ ಕಂಡಿದ್ದ ಮನ್ಯಾತನಿಗೆ. ಯಾರಾದರೂ ಅರ್ಜಿ ಬರೆಸಿಕೊಳ್ಳಲು ಆ ಕನ್ನಡಕದಾರಿಯ ಬಳಿ ಬಂದರೆ ಸೂಟ್‌ಕೇಸಿನ ಒಳಗಿನಿಂದ ಬಿಳಿ ಹಾಳೆಯೊಂದನ್ನು ತೆಗೆದು ಸೂಟ್‌ಕೇಸಿನ ಮೇಲಿಟ್ಟು ಪಕ್ಕದಲ್ಲೆ ಇರುವ ಕುರ್ಚಿಯಲ್ಲಿ ಅರ್ಜಿ ಬರೆಸುವವನನ್ನು ಕುಳಿತುಕೊಳ್ಳಲು ಹೇಳಿ ಅರ್ಜಿ ಬರೆಯಲು ಪ್ರಾರಂಭಿಸುತ್ತಿದ್ದ. + +ಅಳುಕಿನಿಂದಲೆ ಮನ್ಯಾತ ತಾಲ್ಲೂಕಾಫಿಸಿನೊಳಗೆ ಹೋದಾಗಲ್ಲೆಲ್ಲಾ ಅಲ್ಲಿನ ಅಧಿಕಾರಿಗಳು ಗ್ರಾ.ಪಂ ಯಿಂದ ಬರೆಸಿಕೊಂಡು ಬನ್ನಿ ಅಂತಲೋ, ಒಂದು ತಿಂಗಳು ಬಿಟ್ಟುಕೊಂಡು ಬನ್ನಿ ಅಂಥಲೋ ಹೇಳಿ ತಲೆ ಗೊಂದಲದ ಗೂಡಾಗುವಂತೆ ಮಾಡುತ್ತಿದ್ದರು. ಹಿಂದೊಮ್ಮೆ ರೇಷನ್ ಕಾರ್ಡಿನಲ್ಲಿ ವಾಸಸ್ಥಳ ಬದಲಾವಣೆ ಮಾಡಬೇಕೆಂದು ತಾಲ್ಲೂಕಾಫಿಸಿಗೆ ಬಂದಾಗ ಆಹಾರ ಶಾಖೆಯಲ್ಲಿದ್ದ ಅಧಿಕಾರಿಯೊಬ್ಬ  ‘ನೀವು ಮುಂಚೆ ಇದ್ದ ಗ್ರಾ.ಪಂಯಲ್ಲಿ ಕಂಪ್ಯೂಟರ್‌ನಲ್ಲಿ ನೇಮ್ ಡಿಲೀಟ್ ಮಾಡ್ಸಿ, ಈಗ ನೀವ್ ಇರೋ ಪಂಚಾಯತಿ ಸಿಸ್ಟಮ್‌ನಲ್ಲಿ ನ್ಯೂ ನೇಮ್ ಸೇರ್ಸಿ, ರೆಸಿಡೆಂಟ್ ಸರ್ಟಿಫಿಕೇಟಿಗೆ ಸೆಕ್ರೆಟರಿ ಸೈನ್ ಮಾಡ್ಸಿ ತನ್ನಿ. ಎಲೆಕ್ಷನ್ ಐಡೆಂಟಿ ಕಾರ್ಡ್, ಒಲ್ಡ್ ರೇಷನ್ ಕಾರ್ಡ್, ಕರೆಂಟ್ ಬಿಲ್, ಕಂದಾಯ ರಶೀದಿ, ಆದಾರ್ ಕಾರ್ಡ್ ಜೆರಾಕ್ಸ್ ಆಲ್ ಮೆಂಬರ್‌ದು ಬೇಕು. ಅಷ್ಷನ್ನೂ ಫುಡ್ ಸೆಕ್ಷನ್‌ನಲ್ಲಿ ಕೊಟ್ಟು ಒಂದು ತಿಂಗಳು ಬಿಟ್ಟು’ ಬನ್ನಿ ಎಂದು ದೇವಸ್ಥಾನದಲ್ಲಿ ಅರ್ಚಕರು ಮಂತ್ರ ಹೇಳುವುದಕ್ಕಿಂತಲೂ ವೇಗವಾಗಿ ಹೇಳಿದ್ದ. ಮನ್ಯಾತನಿಗೆ ಏನೊಂದು ಅರ್ಥವಾಗದೆ, ಅಸಂಖ್ಯಾತ ಒಳಸುಳಿಗಳಿರುವ ಚಕ್ರವ್ಯೂಹದೊಳಗೆ ಪ್ರವೇಶಿಸಿದಂತಾಗಿತ್ತು. + +ಒಳಗೆ ಹೋಗಲೋ ಬೇಡವೋ ಎಂದು ಅರ್ಧ ಮನಸ್ಸಿನಿಂದಲೆ ತಾಲ್ಲೂಕಾಫೀಸಿನೊಳಗೆ ಹೋದ ಮನ್ಯಾತ ಆಹಾರ ಶಾಖೆ ಎಂದು ಬರೆದಿದ್ದ ಕೊಠಡಿಯೊಳಗೆ ಪ್ರವೇಶಿಸಿದ. ಕಂತೆಕಂತೆಗಳಾಗಿ ಜೋಡಿಸಿಟ್ಟಿದ್ದ ಕಾಗದಪತ್ರಗಳ ರಾಶಿಯ ನಡುವೆ ಒಂದಿಬ್ಬರು ಕಂಪ್ಯೂಟರ್ ಪರದೆಯ ಮುಂದೆ ಕೂತು ಟೈಪಿಸುತ್ತಾ ಕುಳಿತಿದ್ದರು. ಕೊಠಡಿಯ ಹೊರಗೆ ಒಂದಷ್ಟು ಗೊಂದಲದ ಮುಖಗಳು ನಿಂತು, ಕುಳಿತು, ಗೋಡೆಗೊರಗಿ ನಾನಾ ಭಂಗಿಗಳಲ್ಲಿ ಕಾಯುತ್ತಿದ್ದರು. ಮನ್ಯಾತ ಕಂಪ್ಯೂಟರ್ ಮುಂದೆ ಕುಳಿತು ಟೈಪಿಸುತ್ತಿದ್ದವನ ಬಳಿ ಹೋಗಿ ದಾಖಲೆ ಪತ್ರಗಳನ್ನು ಕೊಟ್ಟ. ಅದನ್ನೊಮ್ಮೆ ತಿರುವಿ ಹಾಕಿ ಏನಾದ್ರೂ ಕೆಲ್ಸ ಇದ್ರೆ ಮುಗಿಸ್ಕೊಂಡು ಅರ್ಧ ಗಂಟೆ ಬಿಟ್ಟು ಬನ್ನಿ ಎಂದ ಟೈಪಿಸುತ್ತಾ ಕುಳಿತವ. ಮನ್ಯಾತ ಅದುವರೆಗೂ ಉಳಿದವರು ಕಾಯುತ್ತಾ ನಿಂತಿದ್ದ ಆಹಾರ ಶಾಖೆಯ ಮುಂಭಾಗದಲ್ಲಿ ಕಾಯುತ್ತಾ ನಿಂತ. ತನ್ನ ಎಚ್‌ಎಂಟಿ ವಾಚಿನ ಕಡೆಗೊಮ್ಮೆ ನೋಡಿದ. ಸಮಯ ಯಾಕೋ ನಿಧಾನವಾಗಿ ಸರಿಯುತ್ತಿರುವಂತೆ ಅನಿಸಿತ್ತು ಅವನಿಗೆ. ವಾಚಿನ ಸಮಯಕ್ಕಿಂತಲೂ ೧೨ ವರ್ಷಗಳಿಂದ ತನ್ನ ಕೈಯಲ್ಲಿ ಕಂಗೊಳಿಸುತ್ತಿದ್ದ ಎಚ್‌ಎಂಟಿ ವಾಚನ್ನು ಕಂಡು ಹಿಂದೆ ಅದೆಷ್ಟೋ ಬಾರಿ ಅನಿಸಿದಂತೆ ಎದೆಯಲ್ಲಿ ಖುಷಿಯ ನೆನಪಿನ ಭಾವವೊಂದು ಪಸರಿಸಿದಂತಾಗಿ ತುಟಿಅಂಚಲ್ಲಿ ಕಿರುನಗು ಇಣುಕಿತು. + +೧೨ ವರ್ಷದ ಹಿಂದೆ ಮೂಡ್ಗೇರಿ ಪ್ಯಾಟೆಯ ಮಾರ್ವಾಡಿ ಅಂಗಡಿಯಲ್ಲಿ ಯಾರೋ ಅಡವಿಟ್ಟು ಬಿಡಿಸದೇ ಉಳಿದ ಎಚ್‌ಎಂಟಿ ವಾಚನ್ನು ಮನ್ಯಾತ ಅಂಟುವಾಳ ಮಾರಿದ ದುಡ್ಡಿನಲ್ಲಿ ಕೊಂಡಿದ್ದ. ಆಗೆಲ್ಲಾ ಚಿನ್ನವನ್ನು ಅಡವಿಡುವಂತೆ ವಾಚನ್ನು ಕೂಡ ಮಾರ್ವಾಡಿ ಅಂಗಡಿಯಲ್ಲಿ ಅಡವಿಡಲಾಗುತ್ತಿತ್ತು. ಅಡವಿಟ್ಟವರು ವಾಚನ್ನು ಬಿಡಿಸಿಕೊಳ್ಳದೇ ಹೋದಾಗ ವಾಚನ್ನು ಮಾರಾಟ ಮಾಡುವ ಕ್ರಮವಿತ್ತು. ಮನ್ಯಾತ ಹಾಗೆ ಕೊಂಡ ಎಚ್‌ಎಂಟಿ ವಾಚು ದಶಕಕ್ಕೂ ಹೆಚ್ಚು ಕಾಲ ಅವನ ಜೊತೆಯಲ್ಲೆ ಮುಂದಡಿ ಇಡುತ್ತಿತ್ತು. ಇಂದಿಗೂ ಇಡುತ್ತಿದೆ. + +ಎಚ್‌ಎಂಟಿ ವಾಚಿನ ಜೊತೆಗೆ ಮನ್ಯಾತನಿಗೆ ಪ್ರಿಯವಾದ ಮತ್ತೊಂದು ವಸ್ತು ಫಿಲಿಪ್ಸ್ ರೇಡಿಯೋ. ಅವನ ದಿನ ಪ್ರಾರಂಭವಾಗುವುದು ರೇಡಿಯೋದ ಸದ್ದಿನಿಂದಲೇ. ಇತ್ತೀಚೆಗೆ ದೂರದ ಬೆಂಗಳೂರಲ್ಲಿ ಬೇಕರಿಯಲ್ಲಿ ಕೆಲಸ ಮಾಡುತ್ತಿರುವ ಮಗ ಹಲವು ವರ್ಷದ ಹಿಂದೆ ಮನ್ಯಾತನಿಗೆ ತೆಗೆದುಕೊಟ್ಟ ನೋಕಿಯಾ ಮೊಬೈಲ್ ಜೊತೆಗಾಗಿತ್ತು. ಎಚ್‌ಎಂಟಿ ವಾಚು, ನೋಕಿಯಾ ಮೊಬೈಲ್, ಫಿಲಿಪ್ಸ್ ರೇಡಿಯೋ ಮಾತ್ರ ಗ್ಯಾರಂಟಿ ವಸ್ತುಗಳು ಎನ್ನುವುದು ಮನ್ಯಾತನ ಬಲವಾದ ನಂಬಿಕೆ. ಆದರೆ ಎಚ್‌ಎಂಟಿ, ನೋಕಿಯಾ ಕಂಪನಿಗಳು ಬಾಗಿಲು ಮುಚ್ಚಿ ವರ್ಷಗಳೆ ಕಳೆದಿದೆ ಎನ್ನುವ ವಿಷಯ ಮನ್ಯಾತನಿಗೆ ತಿಳಿದಿರಲಿಲ್ಲ. ತಿಳಿದರೂ ನಂಬುತ್ತಲ್ಲೂ ಇರಲಿಲ್ಲ. ರೇಡಿಯೋಗಳು ಬಳಸುವವರೇ ಇಲ್ಲದೆ ಹಿನ್ನಲೆಗೆ ಸರಿದಿದ್ದರೂ ಮನ್ಯಾತ ತನ್ನ ಮನೆಯ ರೇಡಿಯೋವನ್ನು ಮಾತ್ರ ಕೆಟ್ಟಾಗಲೆಲ್ಲಾ ರೆಡಿ ಮಾಡಿಸಿಕೊಂಡು ಬಂದು ಹಾಡಿಸುತ್ತಿದ್ದ. ಒಂದು ದಿನ ರೇಡಿಯೋ ಇಲ್ಲದಿದ್ದರೇ ಅವತ್ತಿನ ದಿನ ಉತ್ಸಾಹ ಇಲ್ಲದಂತಾಗುತ್ತಿತ್ತು ಅವನಿಗೆ. + + + +ಆಹಾರ ಶಾಖೆಯ ಎದುರು ಕುಳಿತು ಕೆಲ ಸವಿನೆನಪುಗಳಲ್ಲಿ ಮುಳುಗಿ ಹೋಗಿದ್ದ ಮನ್ಯಾತ ಪ್ರತಿಮೆಯಂತೆ ಕುಳಿತು, ನಿಂತು, ಒರಗಿ ಕಾಯುತ್ತಿದ್ದ ಜನರಲ್ಲಿ ಗುಸುಗುಸು ಸದ್ದು , ಚಲನೆ ಕಂಡು ಬಂದಾಗ ನೆನಪಿನ ಸುಖದ ಗುಂಗಿನಿಂದ ಹೊರ ಬಂದು ನೆನಪಿನ ಗಗನದಲ್ಲಿ ತೇಲುತ್ತಿದ್ದ ಮನಸ್ಸನ್ನು ಪರಮ ನಿರ್ಜೀವದ ಜಡತ್ವದ ತಾಲ್ಲೂಕಾಫೀಸಿನ ಆಹಾರ ಶಾಖೆಯ ಮುಂಭಾಗದಲ್ಲಿ ತಂದಿಳಿಸಿದ. + +ಮನ್ಯಾತ ಕಂಪ್ಯೂಟರ್ ಮುಂದೆ ಟೈಪಿಸುತ್ತಿದ್ದವನ ಬಳಿ ಹೋಗಿ ಪ್ರಶ್ನಾರ್ಥಕವಾಗಿ ನೋಡಿದ. ಸರ್ವರ್ ಬ್ಯುಸಿ ಇದೆ. ಓಪನ್ ಆಗ್ತಾ ಇಲ್ಲ. ನೀವು ಇವತ್ತು ಹೋಗಿ ನಾಳೆ ಬನ್ನಿ ಎಂದ ಕಂಪ್ಯೂಟರ್ ಮುಂದೆ ಕೂತವ. ಮನ್ಯಾತನಿಗೆ ಇಂಥ ಕೆಲಸಗಳು ಬೇಗ ಆಗುವುದಿಲ್ಲ ಎನ್ನುವ ಅರಿವು ಹಿಂದಿನ ಕೆಲ ಅನುಭವಗಳಿಂದ ಆಗಿದ್ದರಿಂದ ಬೇಸರವೇನೂ ಆಗಲಿಲ್ಲ. ನಿಜವಾಗಿ ಆ ಅರ್ಥವೆ ಆಗದ ಗೊಂದಲಗಳ ಅಕ್ಷಯ ಚಕ್ರವ್ಯೂಹದಿಂದ ಒಮ್ಮೆ ಹೊರಬಂದರೆ ಸಾಕು ಎಂದೆನಿಸಿ ಕಾನಳ್ಳಿಗೆ ಸಾಗಲು ಬಸ್‌ ಸ್ಟ್ಯಾಂಡಿನ ಕಡೆಗೆ ಹೆಜ್ಜೆ ಹಾಕಿದ. + + + +ಹವ್ಯಾಸಿ ಫೋಟೋಗ್ರಾಫರ್. ಕೊಟ್ಟಿಗೆ ಹಾರದಲ್ಲಿ ಪುಟ್ಟ ಅಂಗಡಿ ಇಟ್ಟುಕೊಂಡಿದ್ದಾರೆ. ‘ಮುಖವಾಡ’ ಇವರ ಕವನ ಸಂಕಲನ. \ No newline at end of file diff --git a/Kenda Sampige/article_489.txt b/Kenda Sampige/article_489.txt new file mode 100644 index 0000000000000000000000000000000000000000..1aa832e544c315a260b3a12494d4ab6df7d3f2e8 --- /dev/null +++ b/Kenda Sampige/article_489.txt @@ -0,0 +1,31 @@ + + +ಮಳೆಯ ಮೂರನೆಯ ದಿನ ಮನೆಯೊಳಗೆ ಅವರು ಎಷ್ಟೊಂದು ಏಡಿಗಳನ್ನು ಕೊಂದು ಹಾಕಿದ್ದರೆಂದರೆ ಆ ಗಬ್ಬು ವಾಸನೆಯನ್ನು ಸಹಿಸಲು ಅಸಾಧ್ಯವೆನಿಸಿ ಪೆಲಾಯೊ ಅವುಗಳನ್ನು ತುಂಬಿ, ಮಳೆಯಲ್ಲೇ ನೆನೆದು ಅಂಗಳವನ್ನು ದಾಟಿ ಸಮುದ್ರಕ್ಕೆ ಎಸೆದು ಬಂದ. ಹೊಸದಾಗಿ ಹುಟ್ಟಿದ್ದ ಮಗು ಜ್ವರದಿಂದ ನರಳುತ್ತಿತ್ತು ಮತ್ತು ಅದಕ್ಕೆ ಈ ಗಬ್ಬು ವಾಸನೆಯೇ ಕಾರಣವೆಂದು ಅವರಿಗೆ ಮನದಟ್ಟಾಗಿತ್ತು. ಮಂಗಳವಾರದಿಂದ ಮಳೆ ಒಂದೇ ಸಮನೆ ಹುಯ್ಯುತ್ತಿತ್ತು. ಸಮುದ್ರ ಮತ್ತು ಆಕಾಶ ಒಂದಾಗಿ ಬೂದು ಬಣ್ಣದ ಗೋಡೆಯಂತಾಗಿತ್ತು. ಮಾರ್ಚ್ ತಿಂಗಳಿನಲ್ಲಿ ಬೆಳಕಿನ ಹುಡಿಯಂತೆ ಚೆಲ್ಲಿರುತ್ತಿದ್ದ ದಂಡೆಯ ಮರಳು ಕೊಳೆತ ಕಪ್ಪೆ ಚಿಪ್ಪು ಮಿಶ್ರಣದ ಕೆಸರು ಪಾಯಸವಾಗಿತ್ತು. ನಡು ಮಧ್ಯಾಹ್ನದ ಹೊತ್ತಿನಲ್ಲೂ ಕತ್ತಲು ಕವುಚಿಕೊಂಡು ಏನೂ ಕಾಣಿಸುತ್ತಿರಲಿಲ್ಲ. ಕೊಳೆತ ಏಡಿಗಳನ್ನು ಎಸೆದು ವಾಪಸ್ಸಾಗುತ್ತಿದ್ದ ಪೆಲಾಯೋನಿಗೆ ಅಂಗಳದ ಒಂದು ಮೂಲೆಯಲ್ಲಿ ನರಳಾಡುತ್ತಾ ಸರಿದಾಡುತ್ತಿರುವುದು ಏನೆಂದು ಸರಿಯಾಗಿ ಕಾಣಿಸಲಿಲ್ಲ. ಅವನು ತೀರ ಹತ್ತಿರ ಹೋಗಿ ನೋಡಿದಾಗಲೇ ಅವನಿಗೆ ಗೊತ್ತಾಗಿದ್ದು: ಅದೊಂದು ಮುದುಕನ, ಹಣ್ಣು ಹಣ್ಣು ಮುದುಕನ ದೇಹವೆಂದು! ಮುದುಕ ಮಕಾಡೆ ಬಿದ್ದುಕೊಂಡಿದ್ದ. ಏನೇ ಪ್ರಯತ್ನ ಪಟ್ಟರೂ ಅವನಿಗೆ ಮೇಲೇಳಲು ಆಗುತ್ತಿರಲಿಲ್ಲ. ಅವನ ಅಗಾಧ ರೆಕ್ಕೆಗಳೇ ಅವನಿಗೆ ತೊಡಕಾಗಿದ್ದವು! + +ಈ ದೃಶ್ಯವನ್ನು ಕಂಡು ಕಕ್ಕಾಬಿಕ್ಕಿಯಾದ ಪೆಲಾಯೊ, ಒಳಗೆ ಜ್ವರದಿಂದ ಸುಡುತ್ತಿದ್ದ ಮಗುವಿನ ಹಣೆಯ ಮೇಲೆ ತಣ್ಣೀರು ಬಟ್ಟೆಯನ್ನು ಕಟ್ಟುತ್ತಿದ್ದ ಹೆಂಡತಿ ಎಲಿಸೆಂಡಾಳ ಬಳಿ ಧಾವಿಸಿ ಅವಳನ್ನು ಹೊರಗೆ ಕರೆದುಕೊಂಡು ಬಂದು ತೋರಿಸಿದ. ಅವರಿಬ್ಬರೂ ಗರಬಡಿದಂತೆ ಕೆಸರಿನಲ್ಲಿ ಕೊಸರಾಡುತ್ತಿದ್ದ ಮುದುಕನನ್ನು ನೋಡತೊಡಗಿದರು. ಮುದುಕ ಚಿಂದಿ ಆಯುವವನಂತೆ ಬಟ್ಟೆ ಧರಿಸಿದ್ದ. ಕೆಲವು ನೆರೆತ ಕೂದಲುಗಳನ್ನು ಬಿಟ್ಟರೆ ತಲೆ ಬೋಳಾಗಿತ್ತು. ಬಾಯಲ್ಲಿ ಕೆಲವೇ ಹಲ್ಲುಗಳು ಉಳಿದಿದ್ದವು. ನೆಂದು ತೊಪ್ಪೆಯಾಗಿದ್ದ ಮುದುಕ ಆ ವಯಸ್ಸಿನ ಘನತೆಯನ್ನು ಕಳೆದುಕೊಂಡಿದ್ದ. ಬಹಳಷ್ಟು ಗರಿಗಳನ್ನು ಕಳೆದುಕೊಂಡ ಅವನ ದೊಡ್ಡ ಗಾತ್ರದ ರೆಕ್ಕೆಗಳು ಕೆಸರಿನಲ್ಲಿ ಹೂತು ಕೊಳಕಾಗಿದ್ದವು. ಬಹಳ ಹೊತ್ತಿನಿಂದ ತದೇಕವಾಗಿ ಅವನನ್ನೇ ಗಮನಿಸುತ್ತಿದ್ದ ಪೆಲಾಯೊ ಮತ್ತು ಎಲಿಸೆಂಡಾಳಿಗೆ ಮುದುಕ ಬಹಳ ಚಿರಪರಿಚಿತನಂತೆ ಭಾಸವಾಗತೊಡಗಿತು. ಅವರು ಅವನನ್ನು ಮಾತನಾಡಿಸಿದರು. ಅವನು ಗಟ್ಟಿಯಾದ ನಾವಿಕನ ಸ್ವರದಲ್ಲಿ ಅವರು ಅರಿಯದ ಯಾವುದೋ ಬಾಷೆಯಲ್ಲಿ ಏನೋ ವಟಗುಟ್ಟಿದ. ಅವನ ರೆಕ್ಕೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳದೆ ಅವನು ಅದ್ಯಾವುದೋ ಸಮುದ್ರಪಾಲಾದ ನೌಕೆಯಿಂದ ಬದುಕುಳಿದವನಿರಬೇಕೆಂದು ಅವರು ಊಹಿಸಿದರು. ಆದಾಗ್ಯೂ ಅವರು ತಮ್ಮ ನೆರೆಯ ಹೆಂಗಸೊಬ್ಬಳನ್ನು ಕರೆದು ಅವಳ ಅಭಿಪ್ರಾಯವನ್ನು ಕೇಳಿದರು. ಬದುಕು – ಸಾವಿನ ಬಗ್ಗೆ ಬಹಳಷ್ಟು ತಿಳಿದವಳೆಂದು ಅವಳು ಊರಿನಲ್ಲೇ ಹೆಸರುವಾಸಿಯಾಗಿದ್ದಳು. ಅವಳಿಗೆ ಒಂದೇ ನೋಟ ಸಾಕಾಯಿತು.ಇವನೊಬ್ಬ ಮುದಿ ದೇವದೂತ. ಮಗುವನ್ನು ಕೊಂಡೊಯ್ಯಲು ಬಂದಿರಬೇಕು. ಆದರೆ ಮಳೆಯ ಹೊಡೆತ ತಾಳಲಾರದೆ ಬಿದ್ದು ಬಿಟ್ಟಿದ್ದಾನೆ. ಅವನನ್ನು ಬಡಿದು ಸಾಯಿಸಿಬಿಡಿ! ಎಂದು ತೀರ್ಮಾನ ಕೊಟ್ಟಳು. + +ಪೆಲಾಯೊನ ಮನೆಯಲ್ಲಿ ಮುದಿ ದೇವದೂತನೊಬ್ಬ ಸೆರೆಯಾಗಿ ಬಿದ್ದಿದ್ದಾನೆಂದು ಎಲ್ಲೆಡೆ ಸುದ್ದಿ ಹರಡಿತು. ದೇವರ ವಿರುದ್ಧ ಫಿತೂರಿ ಹೂಡಿ ಸಿಕ್ಕಿಬಿದ್ದ ಇಂತಾ ದೇವದೂತರುಗಳು ಮುಖತಪ್ಪಿಸಿ ಹೀಗೆ ತಿರುಗುತ್ತಿರುತ್ತಾರೆಂದು ಆ ಬುದ್ಧಿವಂತ ಹೆಂಗಸು ಹೇಳಿದ್ದಳಾದರೂ ಅವನನ್ನು ಬಡಿದು ಸಾಯಿಸುವಷ್ಟು ಕ್ರೌರ್ಯ ಅವರಲ್ಲಿರಲಿಲ್ಲ. ಮುದಿ ದೇವದೂತನನ್ನು ಪೆಲಾಯೊ ದಿನವಿಡಿ ಅಡುಗೆಮನೆಯ ಕಿಟಕಿಯಿಂದಲೇ ಗಮನಿಸುತ್ತಿದ್ದ. ಅವನ ಕೈಯಲ್ಲಿ ಬಡಿಗೆಯೊಂದು ಸಿದ್ಧವಾಗಿಯೇ ಇತ್ತು. ರಾತ್ರಿ ಮಲಗುವ ಮುನ್ನ ಪೆಲಾಯೊ ಅವನನ್ನು ಎಳೆದು ತಂತಿ ಬಲೆಯಲ್ಲಿ ಹೆಣೆದ ಕೋಳಿ ಗೂಡಿನೊಳಗೆ ತಳ್ಳಿದ. ಮಧ್ಯ ರಾತ್ರಿಯಲ್ಲಿ ಮಳೆ ನಿಂತಾಗ ಪೆಲಾಯೊ ಮತ್ತು ಎಲಿಸೆಂಡಾ ಏಡಿಗಳನ್ನು ಕೊಲ್ಲುವುದರಲ್ಲೇ ನಿರತರಾಗಿದ್ದರು. ಸ್ವಲ್ಪ ಹೊತ್ತಿನಲ್ಲಿ ಮಗು ಎಚ್ಚರಗೊಂಡಿತು. ಜ್ವರ ಇಳಿದಿತ್ತು. ಅವರಿಬ್ಬರಿಗೂ ಎಷ್ಟೊಂದು ನೆಮ್ಮದಿ ಆಯಿತೆಂದರೆ, ಅವನ ಹಣೆಯಲ್ಲಿ ಬರೆದಂತೆ ಆಗಲಿ ಮುದಿ ದೇವದೂತನನ್ನು ಮೂರು ದಿನಗಳಿಗಾಗುವಷ್ಟು ಆಹಾರ ಮತ್ತು ನೀರು ಕೊಟ್ಟು ಒಂದು ತೆಪ್ಪದಲ್ಲಿ ಸಮುದ್ರಕ್ಕೆ ಬಿಡುವುದೆಂದು ತೀರ್ಮಾನಿಸಿದರು. ಆದರೆ ಮಾರನೆಯ ಬೆಳಿಗ್ಗೆ ಅವರು ಎದ್ದು ಕೋಳಿ ಗೂಡಿನ ಬಳಿ ಬಂದಾಗ ಇಡೀ ಊರೇ ಅವರ ಅಂಗಳದಲ್ಲಿ ನೆರೆದಿತ್ತು. ಮುದಿ ದೇವದೂತ ಒಂದು ಸರ್ಕಸ್ ಪ್ರಾಣಿಯೆಂಬಂತೆ ಜನ ಅವನನ್ನು ಚುಚ್ಚಿ ತಡವಿ ಗೇಲಿ ಮಾಡಿ ಆನಂದಪಡುತ್ತಿದ್ದರು. + +ಅಷ್ಟರಲ್ಲಿ, ಸುದ್ದಿ ತಿಳಿದ ಊರ ಪಾದ್ರಿ ಗೊನ್ಜಾಗ ಅಲ್ಲಿಗೆ ಧಾವಿಸಿ ಬಂದರು. ಆ ಹೊತ್ತಿಗೆ ಅಲ್ಲಿ ನೆರೆದಿದ್ದ ಜನ ಮೊದಲಿನವರಂತೆ ಮುದಿ ದೇವದೂತನನ್ನು ಛೇಡಿಸುವುದನ್ನು ಬಿಟ್ಟು ಅವನ ಭವಿಷ್ಯದ ಬಗ್ಗೆ ಗಂಭೀರ ಚರ್ಚೆಯಲ್ಲಿ ತೊಡಗಿದ್ದರು. ಅವರಲ್ಲೊಬ್ಬ ಮುಗ್ಧ ಅವನನ್ನು ಊರಿನ ಮೇಯರನ್ನಾಗಿ ನೇಮಿಸಿದರೆ ಚೆನ್ನಾಗಿರುತ್ತದೆ ಎಂದ. ಇನ್ನು ಕೆಲವರು ದೇಶದ ದಂಡನಾಯಕನನ್ನಾಗಿ ನೇಮಿಸಬೇಕೆಂದು ಅಭಿಪ್ರಾಯಪಟ್ಟರು. ಮತ್ತೆ ಕೆಲವರು ಅವನಿಗೆ ಬುದ್ಧಿವಂತ ರೆಕ್ಕೆ ಮಾನವರ ಸಂತಾನವನ್ನು ಬೆಳೆಸುವ ಕಾರ್ಯಕ್ಕೆ ಹಚ್ಚಬೇಕೆಂದು ಮಾತನಾಡತೊಡಗಿದರು. ಗೂಡಿನ ಒಂದು ಮೂಲೆಯಲ್ಲಿ ಬಿಸಿಲಿಗೆ ತನ್ನ ರೆಕ್ಕೆಗಳನ್ನು ಒಡ್ಡಿ ಒಣಗಿಸಿಕೊಳ್ಳುತ್ತಿದ್ದ ಅವನು, ಗಲಿಬಿಲಿಗೊಂಡ ಕೋಳಿಗಳ ಮಧ್ಯೆಯಲ್ಲಿ ಒಂದು ದೊಡ್ಡ ಕೋಳಿಯಂತೆ ಕಾಣುತ್ತಿದ್ದ. ಅವನನ್ನು ಹತ್ತಿರದಿಂದ ಕಂಡು ಮಾತನಾಡಿಸಲು ಪಾದ್ರಿಯೇ ಗೂಡಿನೊಳಗೆ ಹೊಕ್ಕು ಮುದಿ ದೇವದೂತನಿಗೆ ದೇವಬಾಷೆ ಲ್ಯಾಟಿನಿನಲ್ಲಿ ಶುಭ ದಿನವನ್ನು ಹಾರೈಸಿದ. ಮುದಿ ದೇವದೂತ ಯಾವುದೋ ಅನ್ಯ ಬಾಷೆಯಲ್ಲಿ ಏನೋ ವಟಗುಟ್ಟಿದ. ದೇವರ ಬಾಷೆಯನ್ನಾಗಲೀ, ಅಥವಾ ಭೂಮಿಯ ಮೇಲೆ ಅವನ ಪ್ರತಿನಿಧಿಯನ್ನು ಹೇಗೆ ಮಾತನಾಡಿಸಬೇಕೆಂದು ಗೊತ್ತಿರದ ಇವನೊಬ್ಬ ಸುಳ್ಳು ದೇವದೂತನೆಂದು ಪಾದ್ರಿ ತೀರ್ಮಾನಿಸಿದ. ಹತ್ತಿರದಿಂದ ಗಮನಿಸಿದಾಗ ಅವನಲ್ಲಿ ದೈವಾಂಶಕ್ಕಿಂತಲೂ ಮಾನವ ಸಹಜ ಗುಣಗಳೇ ಕಂಡವು. ಅವನ ರೆಕ್ಕೆಗಳಲ್ಲಿ ಭೂಲೋಕದ ಹೇನುಗಳೇ ಹರಿದಾಡುತ್ತಿದ್ದವು ಹಾಗೂ ಮಳೆಯ ಹೊಡೆತಕ್ಕೆ ಘಾಸಿಗೊಂಡಿದ್ದವು. + + + +ದೇವದೂತನಿಗಿರಬೇಕಾದ ಗಾಂಭೀರ‍್ಯ, ಘನತೆ ಅವನಲ್ಲಿ ಲವಲೇಶವೂ ಕಾಣಿಸುತ್ತಿರಲಿಲ್ಲ. ಗೂಡಿನಿಂದ ಹೊರಗೆ ಬಂದ ಪಾದ್ರಿ ಭಕ್ತರನ್ನು ಉದ್ದೇಶಿಸಿ ಸೈತಾನನ ಇಂಥ ವಿಕೃತ ಕುಚೇಷ್ಟೆಗಳಿಂದ ದಾರಿತಪ್ಪದಂತೆ ಎಚ್ಚರಿಕೆಯಿಂದಿರಬೇಕೆಂದು ಪುಟ್ಟ ಉಪದೇಶವನ್ನು ಬಿಗಿದರು. ಆದಾಗ್ಯೂ, ತನಗಿಂತ ಮೇಲಿನ ಧರ್ಮಾಧ್ಯಕ್ಷರಿಗೆ ಪತ್ರ ಬರೆದು, ಅವರು ಅವರ ಮೇಲ್ಪಟ್ಟವರಿಗೆ ಪತ್ರ ಬರೆದು, ಅವರು ಪೋಪರಿಗೆ ಪತ್ರ ಬರೆದು ಅವರು ತಮ್ಮ ಧರ್ಮ ಸಂಸತ್ತಿನ ಅಭಿಪ್ರಾಯ ಪಡೆದು ಒಂದು ತೀರ್ಮಾನ ತೆಗೆದುಕೊಳ್ಳುವವರೆಗೆ ಕಾಯಬೇಕೆಂದು ಜನರಿಗೆ ತಿಳಿಸಿದರು. ಪಾದ್ರಿಯ ಮಾತುಗಳಿಗೆ ಜನ ರವಷ್ಟೂ ಬೆಲೆಕೊಡಲಿಲ್ಲ. ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿ ಸುತ್ತಮುತ್ತಲ ಹಳ್ಳಿಗಳಿಂದ ಜನರು ಹಿಂಡು ಹಿಂಡಾಗಿ ಪೆಲಾಯೊನ ಅಂಗಳಕ್ಕೆ ಮುಗಿಬಿದ್ದರು. ಕೊನೆಗೆ ಜನರ ಗುಂಪನ್ನು ನಿಯಂತ್ರಿಸಲು ಪೋಲಿಸರು ಆಗಮಿಸಿಬೇಕಾಯಿತು. ಕಸದಿಂದ ತುಂಬಿದ್ದ ಅಂಗಳವನ್ನು ಗುಡಿಸಿ ಗುಡಿಸಿ ಎಲಿಸೆಂಡಾಳ ಸೊಂಟ ಬಿದ್ದು ಹೋಯಿತು. ಆಗ ಅವರಿಗೊಂದು ಉಪಾಯ ಹೊಳೆಯಿತು. ಅಂಗಳಕ್ಕೆ ಬೇಲಿಯನ್ನು ಹಾಕಿ, ಮುದಿ ದೇವದೂತನನ್ನು ನೋಡಲು ಬರುವ ಒಬ್ಬೊಬ್ಬರಿಂದಲೂ ಐದು ಸೆಂಟು ಶುಲ್ಕ ವಸೂಲು ಮಾಡುವುದು! + +ಬಹಳ ದೂರದೂರದಿಂದ ಜನ ಬರತೊಡಗಿದರು. ಇದೇ ಸಮಯಕ್ಕೆ ಸರಿಯಾಗಿ ಊರಿಗೊಂದು ದೊಂಬರಾಟದ ತಂಡ ಬಂದಿಳಿಯಿತು. ಅದರಲ್ಲೊಬ್ಬ ಹಾರಾಡುವ ಕಲಾವಿದನಿದ್ದ. ಅವನು ಜನರ ಮೇಲೆ ಹಾರಾಡಿ ತೋರಿಸಿದ. ಆದರೂ ಜನ ಅವನ ಕಡೆಗೆ ಆಸಕ್ತರಾಗಲಿಲ್ಲ. ಏಕೆಂದರೆ ಅವನ ರೆಕ್ಕೆಗಳು ದೇವದೂತನ ರೆಕ್ಕೆಗಳಾಗದೆ ಬಾವಲಿಯ ರೆಕ್ಕೆಗಳಾಗಿದ್ದವು. ದೂರ ದೂರದ ಊರುಗಳಿಂದ ಕಾಹಿಲೆಗಳಿಂದ ನರಳುತ್ತಿರುವವರು ಬರತೊಡಗಿದರು: ಬಾಲ್ಯದಿಂದಲೇ ಹೃದಯದ ಕಾಹಿಲೆಯಿಂದ ನರಳುತ್ತಿದ್ದ ಹೆಂಗಸು; ನಕ್ಷತ್ರಗಳ ಸದ್ದಿನಿಂದ ನಿದ್ದೆ ಮಾಡಲಾಗದ ಪೋರ್ಚುಗಿಸ್ ಗಂಡಸು; ಜಾಗೃತ ಅವಸ್ಥೆಯಲ್ಲಿ ಮಾಡಿದ ಕೆಲಸಗಳನ್ನು ನಿದ್ರಾವಸ್ಥೆಯಲ್ಲಿ ಎದ್ದು ಹಾಳುಮಾಡುವವನು; ಮತ್ತೂ, ಕಡಿಮೆ ಗಂಭೀರದ ಕಾಹಿಲೆಯವರು.. ಬರುತ್ತಲೇ ಇದ್ದರು. ಇವರೆಲ್ಲರನ್ನು ಸಂಭಾಳಿಸುತ್ತಾ ಪೆಲಾಯೋ ಮತ್ತು ಎಲಿಸೆಂಡಳ ಹೆಣ ಬಿದ್ದೋಗಿತ್ತಾದರೂ ಅವರು ಬಹಳ ಖುಷಿಯಲ್ಲಿದ್ದರು. ಒಂದೇ ವಾರದಲ್ಲಿ ಅವರ ಮನೆಯ ಕೊಠಡಿ ದುಡ್ಡಿನಿಂದ ತುಂಬಿ ಹೋಗಿತ್ತು. ಆದರೂ, ಮುದಿ ದೇವದೂತನ್ನು ನೋಡಲು ಕಾತರಿಸುತ್ತಿದ್ದ ಜನರ ಸಾಲು ದಿಗಂತದವರೆಗೂ ಹಬ್ಬಿತ್ತು. + +ಇದೆಲ್ಲದರ ಕೇಂದ್ರ ಬಿಂದು ಮುದಿ ದೇವದೂತನಾಗಿದ್ದರೂ, ಅವನು ಮಾತ್ರ ನಿರ್ಲಿಪ್ತನಂತಿದ್ದ. ಅವನು ಕೋಳಿಗೋಡಿನ ದಗೆಯೊಳಗೆ ನೆಮ್ಮದಿ ಕಾಣಲು ಹರ ಸಾಹಸಪಡುತ್ತಿದ್ದ. ಅವನ ಸುತ್ತಾ ಹೊರಗೆ ಹಚ್ಚಿಸಿದ್ದ ದೀಪಗಳಿಂದ, ಪವಿತ್ರ ಮೋಂಬತ್ತಿಗಳಿಂದ ಅವನು ಕಂಗಾಲಾಗಿದ್ದ. ದೇವದೂತರ ಆಹಾರ ನುಸಿಗುಳಿಗೆಗಳೆಂದು ಬುದ್ದಿವಂತ ಹೆಂಗಸು ಹೇಳಿದ್ದರಿಂದ ಮೊದಮೊದಲು ಜನರು ಅವನಿಗೆ ಅವನ್ನು ತಿನ್ನಿಸಲು ಪ್ರಯತ್ನಿಸಿದ್ದರು. ಇದನ್ನು, ಮತ್ತು ಪೋಪರ ಪ್ರಸಾದವೆಂದು ಭಕ್ತರು ತಂದ ಆಹಾರವನ್ನು ಅವನು ಮುಟ್ಟಲೇ ಇಲ್ಲ. ಚೆನ್ನಾಗಿ ಬೇಯಿಸಿದ ಬದನೆಕಾಯಿಯನ್ನು ಮಾತ್ರ ಅವನು ಬಹಳ ಖುಶಿಯಿಂದ ತಿನ್ನುತ್ತಿದ್ದ. ಅವನಲ್ಲಡಗಿದ್ದ ದೈವಿಕ ಕಳೆಯೆಂದರೆ ತಾಳ್ಮೆಯೊಂದೇ! ಶುರುವಿನಲ್ಲಿ ಕೋಳಿಗಳು ಅವನ ರೆಕ್ಕೆಗಳಲ್ಲಡಗಿದ್ದ ದೇವಲೋಕದ ಹೇನುಗಳನ್ನು ಹೆಕ್ಕಿ ಹೆಕ್ಕಿ ತಿನ್ನುತ್ತಿದ್ದಾಗ, ವಿಕಲಾಂಗರು ತಮ್ಮ ಊನ ಅಂಗಗಳಿಗೆ ಸವರಲು ಅವನ ಗರಿಗಳನ್ನು ಕೀಳತೊಡಗಿದಾಗ, ಅವನನ್ನು ಎಬ್ಬಿಸಿ ನೋಡಲು ಕೆಲವರು ಕಲ್ಲುಗಳನ್ನು ಬೀರಿದಾಗ ಅವನು ಪ್ರದರ್ಶಿಸಿದ ತಾಳ್ಮೆ ಊಹಿಸಲಸದಳ! ಅವನು ಬಹಳ ಹೊತ್ತಿನಿಂದ ನಿಶ್ಚಲವಾಗಿ ಬಿದ್ದುಕೊಂಡಿದ್ದಾಗ, ಅವನು ಸತ್ತಿದ್ದಾನೆಂದು ತಿಳಿದು ಕೆಲವರು ಅವನನ್ನು ಕಾದ ಕಬ್ಬಿಣದಿಂದ ಚುರುಗುಟ್ಟಿಸಿದಾಗ ಮಾತ್ರ ಅವನು ಒಮ್ಮೆ ತಾಳ್ಮೆ ಕಳೆದುಕೊಂಡಿದ್ದ. ಅವನು ಉಂಟು ಮಾಡಿದ್ದ ಗೊಂದಲ, ಗದ್ದಲ ಮಾತ್ರ ಖಂಡಿತ ಈ ಈ ಜಗತ್ತಿನದ್ದಾಗಿರಲಿಲ್ಲ. ಅವನ ಪ್ರತಿಕ್ರಿಯೆ ಸಿಟ್ಟಿನದಲ್ಲ, ಬದಲಾಗಿ ನೋವಿನಿಂದುಂಟಾದ್ದು ಎಂದು ಬಹಳ ಜನರಿಗೆ ಅನಿಸಿದ್ದರಿಂದ ಮುಂದೆ ಅವರು ಜಾಗರೂಕರಾಗಿದ್ದರು. + +ಸೆರೆಯಾದ ದೇವದೂತನ ಬಗ್ಗೆ ಪೋಪರ ತೀರ್ಮಾನ ಹೊರ ಬೀಳುವವರೆಗೆ ಪಾದ್ರಿ ಗೊನ್ಜಾಗ ತನ್ನ ಭಕ್ತರ ಆವೇಶವನ್ನು ತಡೆ ಹಿಡಿಯಲು ಬಹಳಷ್ಟು ಪ್ರಯತ್ನಪಟ್ಟಿದ್ದರು. ಆದರೆ, ರೋಮ್ ಪ್ರಭುಗಳಿಗೆ ಯಾವುದೇ ಅವಸರವಿರಲಿಲ್ಲ. ಅವರು, ಇವನಿಗೆ ಹೊಕ್ಕಳಿದೆಯೇ? ಆರ್ಮಾಯಿಕ್ ಭಾಷೆ ಬರುತ್ತದೆಯೇ? ಅಥವಾ, ಇವನು ರೆಕ್ಕೆಗಳಿರುವ ನೋರ್ವೇಜಿಯನ್ ಅಲ್ಲ ತಾನೇ? ಎಂಬ ಕೂದಲು ಸೀಳುವ ಕಾಯಕದಲ್ಲಿ ತೊಡಗಿದ್ದರು. ಈ ಮಧ್ಯೆ ಒಂದು ಘಟನೆ ಜರುಗದಿದ್ದಲ್ಲಿ ಈ ಕಾಯಕ ಯುಗಯುಗಾಂತರಕ್ಕೂ ಮುಂದುವರಿಯುತ್ತಿತ್ತೇನೋ? + +ಆ ದಿನಗಳಲ್ಲಿ ವಿವಿಧ ದೊಂಬರಾಟಗಳ ಮಧ್ಯೆ ಊರಿನಲ್ಲಿ ಹೆತ್ತವರನ್ನು ಕಡೆಗಣಿಸಿದ್ದಕ್ಕಾಗಿ ಜೇಡಳಾಗಿ ರೂಪಾಂತರಗೊಂಡ ಹೆಣ್ಣೊಬ್ಬಳ ಪ್ರದರ್ಶನವೊಂದು ಶುರುಹಚ್ಚಿಕೊಂಡಿತು. ಅವಳನ್ನು ನೋಡುವುದಕ್ಕಾಗಿ ಮುದಿ ದೇವದೂತನಿಗಿಂತಲೂ ಕಡಿಮೆ ಪ್ರವೇಶ ಶುಲ್ಕವಿಡಲಾಗಿತ್ತು. ಅಲ್ಲದೆ ಇವಳನ್ನು ತಡವಿ ನೋಡಲು, ಅವಳ ಬಗ್ಗೆ ಯಾವುದೇ ಪ್ರಶ್ನೆಗಳನ್ನು ಕೇಳಲು ಯಾವುದೇ ಕಟ್ಟುಪಾಡುಗಳಿರಲಿಲ್ಲ. ಅವಳು ಒಂದು ಮೇಕೆಯಷ್ಟು ಗಾತ್ರದ ಟರಾಂಟುಲಾ ಜೇಡಳಾಗಿದ್ದು ಶೋಕತಪ್ತ ಕನ್ನಿಕೆಯ ಮುಖವನ್ನು ಹೊತ್ತಿದ್ದಳು. ಅವಳ ವಿಲಕ್ಷಣ ರೂಪಕ್ಕಿಂತಲೂ ಜನರನ್ನಾಕರ್ಷಿಸಿದ್ದು ಅವಳ ಹೃದಯವಿದ್ರಾವಕ ಕತೆ. ಅವಳಿನ್ನೂ ಬಾಲೆಯಾಗಿದ್ದಳು. ಹೆತ್ತವರ ಕಣ್ಣು ತಪ್ಪಿಸಿ ನೃತ್ಯಕ್ಕೆಂದು ಹೋಗಿ ಸರಿ ರಾತ್ರಿಯಲ್ಲಿ ಮನೆಗೆ ಬರುತ್ತಿದ್ದಳು. ಅದೊಂದು ನಿರ್ಜನವಾದ ಕಾಡು ಪ್ರದೇಶ. ಒಮ್ಮೆಲೆ ಅಗಸದಲ್ಲಿ ಗುಡುಗು ಮಿಂಚುಗಳ ಆರ್ಭಟ ಶುರುವಾಯಿತು. ಆಕಾಶವು ಇಬ್ಭಾಗವಾಗಿ ಗಂಧಕದ ಮಳೆ ಸುರಿದು ಹುಡುಗಿ ಜೇಡಳಾಗಿ ರೂಪಾಂತರಗೊಂಡಳು. ಅವಳ ಮೇಲೆ ಕರುಣೆಪಟ್ಟು ಜನರು ಎಸೆದ ಮಾಂಸದ ತುಣುಕುಗಳೇ ಅವಳ ಆಹಾರವಾಯಿತು. ಜನಸಾಮಾನ್ಯರ ಕಡೆಗೆ ಕತ್ತೆತ್ತಿಯೂ ನೋಡದ ಮುದಿ ದೇವದೂತನಿಗಿಂತಲೂ ಜೇಡಳಾಗಿ ಶಾಪಗ್ರಸ್ತಳಾದ ಬಾಲೆ ಜನರಿಗೆ ಇಷ್ಟವಾದಳು. ಮುದಿ ದೇವದೂತನಿಗೆ ಆರೋಪಿಸಲಾಗಿದ್ದ ಪವಾಡಗಳು ಕೂಡ ವಿಲಕ್ಷಣ ಸ್ವರೂಪದ್ದಾಗಿದ್ದವು: ಕುರುಡನಿಗೆ ದೃಷ್ಟಿಯ ಬದಲು ಮೂರು ಹೊಸ ಹಲ್ಲುಗಳು ಹುಟ್ಟಿದ್ದು, ಪಾರ್ಶ್ವವಾಯು ಪೀಡಿತನಿಗೆ ನಡೆಯುವ ಶಕ್ತಿಯ ಬದಲು ಲಾಟರಿ ಹೊಡೆದಿದ್ದು, ಕುಷ್ಠರೋಗಿಯ ವ್ರಣಗಳಲ್ಲಿ ಸೂರ್ಯಕಾಂತಿಯ ಹೂಗಳು ಅರಳಿದ್ದು! ಇದರಿಂದಾಗಿ ಮುದಿ ದೇವದೂತ ತನ್ನ ಹೆಸರನ್ನು ಕೆಡಿಸಿಕೊಂಡಿದ್ದ. ಈ ಮಧ್ಯೆ ಜೇಡರ ಬಾಲೆಯ ಆಗಮನ ಅವನನ್ನು ಮುಗಿಸಿತೆಂದೇ ಹೇಳಬಹುದು. ಇದರಿಂದಾಗಿ ಪಾದ್ರಿ ಗೊನ್ಜಾಗ ನೆಮ್ಮದಿಯ ಉಸಿರು ಬಿಡುವಂತಾಯಿತು. ಪೆಲಾಯೋನ ಅಂಗಳ ಬರಿದಾಗಿ ಮೊದಲಿನಂತಾಯಿತು. + +ಮನೆಯೊಡೆಯನಿಗೇನು ಬೇಸರವಾಗಲಿಲ್ಲ. ಅವರು ಸಾಕಷ್ಟು ದುಡ್ಡನ್ನು ಸಂಪಾದಿಸಿದ್ದರು. ಪೆಲಾಯೋ ಎರಡಂತಸ್ತಿನ ದೊಡ್ಡ ಮಜಭೂತಾದ ಮನೆಯನ್ನು ಕಟ್ಟಿಸಿದ. ದಾರಿ ತಪ್ಪಿದ ದೇವದೂತರುಗಳು ಒಳಗೆ ಬರದಂತೆ ಕಿಟಕಿಗಳಿಗೆ ಕಬ್ಬಿಣದ ಅಡ್ಡಪಟ್ಟಿಗಳನ್ನು ಹಾಕಿಸಿದ. ಚಳಿಗಾಲದಲ್ಲಿ ಏಡಿಗಳು ಒಳ ಬರದಂತೆ ತನ್ನ ಜಾಗದ ಸುತ್ತ ತಂತಿಬಲೆಯ ಬೇಲಿಯನ್ನು ಹಾಕಿದ. ತನ್ನ ನ್ಯಾಯಾಲಯದ ಜವಾನನ ಕೆಲಸಕ್ಕೆ ರಾಜಿನಾಮೆಯಿತ್ತು ಪೇಟೆಗೆ ಹತ್ತಿರದಲ್ಲೇ ಮೊಲ ಸಾಕಾಣಿಕೆ ಕಸುಬನ್ನು ಶುರು ಮಾಡಿದ. ಅವನ ಹೆಂಡತಿ ಎಂದೂ ನೋಡರಿಯದಿದ್ದ ರೇಶ್ಮೆ ಉಡುಪುಗಳನ್ನು, ಅಪ್ಪಟ ಚರ್ಮದ ಪಾದರಕ್ಷೆಗಳನ್ನು ಕೊಂಡು ಭಾನುವಾರಗಳಲ್ಲಿ ಮೆರೆದಳು. ಕೋಳಿಗೂಡು ಮಾತ್ರ ಯಾವುದೇ ಬದಲಾವಣೆಗಳನ್ನು ಕಾಣದೆ ಯಥಾಸ್ಥಿತಿಯಲ್ಲಿತ್ತು. ಯಾವತ್ತಾದರೂ ಅದನ್ನು ಸ್ವಚ್ಛಗೊಳಿಸಿದ್ದಿದ್ದರೆ ಅದು ಅಲ್ಲಿಂದ ಹೊರಡುತ್ತಿದ್ದ ದುರ್ನಾತಕ್ಕೆ ಹೊರತು ಮುದಿ ದೇವದೂತನ ಪ್ರೀತಿಯಿಂದಲ್ಲ! ಮೊದಮೊದಲು ಮಗು ನಡೆಯಲು ಕಲಿತಾಗ ಅದು ಕೋಳಿಗೂಡಿನ ಕಡೆಗೆ ಹೋಗದಂತೆ ಅವರು ಜಾಗರೂಕರಾಗಿರುತ್ತಿದ್ದರು. ಆದರೆ ಸಮಯ ಕಳೆದಂತೆ. ದುರ್ನಾತಕ್ಕೆ ಅವರ ಮೂಗುಗಳು ಒಗ್ಗಿಕೊಂಡಂತೆ, ಮಗು ಕೋಳಿಗೂಡಿನ ಒಳಗೆ ಹೋಗುವುದು ಅವರಿಗೆ ಅಪಥ್ಯವೆನಿಸಲಿಲ್ಲ. ದೇವದೂತನೂ ಕೂಡ ಮಗುವಿನ ಪುಂಡಾಟಿಕೆಗಳನ್ನು ಸಹಿಸುಕೊಂಡಿರುವಂತೆ ಕಾಣಿಸುತ್ತಿತ್ತು. ಕಾಕತಾಳಿಯವೆಂಬಂತೆ ಮಗುವಿಗೂ ಮುದಿದೇವದೂತನಿಗೂ ಒಮ್ಮೆಲೇ ಸೀತಾಳ ಸಿಡುಬು ಬಂದಿತು. ಮಗುವನ್ನು ಪರೀಕ್ಷಿಸಲು ಬಂದಿದ್ದ ವೈದ್ಯ ದೇವದೂತನನ್ನೂ ಪರೀಕ್ಷಿಸಿದ. ಅದರ ಎದೆಯಿಂದ, ಮೂತ್ರಪಿಂಡಗಳಿಂದ ಎಂತೆಂತವೋ ವಿಚಿತ್ರ ಸದ್ದುಗಳು ಹೊರಟು ಅದು ಬದುಕಿರುವುದೇ ವೈದ್ಯರಿಗೆ ಆಶ್ಚರ್ಯವೆನಿಸಿತು. ವೈದ್ಯರಿಗೆ ಅದಕ್ಕಿಂತ ಆಶ್ಚರ್ಯವೆನಿಸಿದ್ದು ಆ ಅಗಾಧ ರೆಕ್ಕೆಗಳು. ಅವು ಖಂಡಿತವಾಗಿಯೂ ಮಾನವ ಶರೀರದ ಮೇಲೆ ಅವರಿಗೆ ಅಭಾಸವೆನಿಸಲಿಲ್ಲ. ಬೇರೆ ಮಾನವರಿಗೂ ಏಕೆ ರೆಕ್ಕೆಗಳಿಲ್ಲವೆಂದು ಅವರು ವಿಸ್ಮಯಪಟ್ಟರು. + +ಮಗು ಶಾಲೆಗೆ ಸೇರುವ ವಯಸ್ಸಿಗೆ ಕೋಳಿಗೂಡು ಮುರಿದು ಬಿದ್ದಿತ್ತು. ಮುದಿ ದೇವದೂತ ತನ್ನ ರೆಕ್ಕೆಗಳನ್ನು ಎಳೆದುಕೊಂಡು ಎಲ್ಲೆಂದರಲ್ಲಿ ಹೋಗುತ್ತಿದ್ದ. ಈಗ ಅಡುಗೆ ಕೋಣೆಯಲ್ಲಿದ್ದರೆ, ಮತ್ತೊಮ್ಮೆ ಅವರ ಮಲಗುವ ಕೋಣೆಯಲ್ಲಿರುತ್ತಿದ್ದ. ಅವರು ಪೊರಕೆ ಹಿಡಿದು ಅವನನ್ನು ಓಡಿಸುತ್ತಿದ್ದರು. ಅವನು ಸಾಯುತ್ತಿರುವವನಂತೆ ಕಾಣಿಸುತ್ತಿದ್ದ. ಅವನು ಏನೂ ತಿನ್ನುತ್ತಿರಲಿಲ್ಲ. ಅವನ ಮುದಿ ಕಣ್ಣುಗಳಲ್ಲಿ ಪೊರೆ ಬೆಳೆದು ಮುಚ್ಚಿ ಹೋದಂತೆ ಕಾಣಿಸುತ್ತಿದ್ದವು. ಅವನ ರೆಕ್ಕೆಯಲ್ಲಿ ಉಳಿದಿದ್ದ ಗರಿಗಳೂ ಕೂಡ ಉದುರಿಹೋಗುವಂತೆ ಕಾಣಿಸುತ್ತಿದ್ದವು. ಅವನ ಮೇಲೊಂದು ಕಂಬಳಿ ಎಸೆದು ಪೆಲಾಯೋ ಅವನನ್ನು ಶೆಡ್ಡಿನಲ್ಲಿ ಮಲಗಲು ಅನುವು ಮಾಡಿಕೊಟ್ಟ. ಅವನಿಗೆ ಜ್ವರ ಬಂದಿರುವುದು ಅವರಿಗೆ ಆಗಲೇ ಗೊತ್ತಾಗಿದ್ದು. ಜ್ವರದ ತಾಪದಿಂದ ಅವನು ಏನೇನೋ ಬಡಬಡಿಸುತ್ತಿದ್ದ. ಅವನು ಸತ್ತು ಹೋದರೆ ಏನು ಮಾಡುವುದೆಂದು ಅವರು ಚಿಂತೆಗೀಡಾದರು. ಸತ್ತ ದೇವದೂತರನ್ನು ಏನು ಮಾಡುವುದೆಂದು ನೆರೆಯ ಬುದ್ಧಿವಂತ ಹೆಂಗಸು ಅವರಿಗೆ ಹೇಳಿರಲಿಲ್ಲ. + +ಅಂತೂ, ಮುದಿ ದೇವದೂತ ಚಳಿಗಾಲವನ್ನು ದಾಟಿ ಹೇಗೋ ಬಿಸಿಲು ಕಾಣುವಂತಾದ. ಹೇಗೋ ಅಂಗಳದ ಮೂಲೆಗೆ ಸೇರಿ ಬಹಳ ದಿನಗಳವರೆಗೆ ಯಾರ ಕಣ್ಣಿಗೂ ಕಾಣದಂತೆ ಬಿಸಿಲು ಕಾಯಿಸುತ್ತಾ ಬಿದ್ದು ಕೊಂಡಿದ್ದ. ಡಿಸೆಂಬರ್ ತಿಂಗಳ ಆರಂಭದಲ್ಲಿ ಅವನ ರೆಕ್ಕೆಗಳಲ್ಲಿ ಒಂದೊಂದೇ ಹೊಸ ಗರಿಗಳು ಕಾಣಿಸಲಾರಂಭಿಸಿದವು. ಅವನು ನಾವಿಕರ ಹಾಡುಗಳನ್ನು ಗುನುಗತೊಡಗಿದ್ದ. ಒಂದು ಬೆಳಿಗ್ಗೆ ಎಲಿಸೆಂಡಾ ಮಧ್ಯಾಹ್ನದ ಊಟಕ್ಕೆ ತರಕಾರಿಯನ್ನು ಕತ್ತರಿಸುತ್ತಿದ್ದಾಗ ಸಮುದ್ರದ ಕಡೆಯಿಂದ ಬಲವಾಗಿ ಬೀಸಿಬಂದ ಗಾಳಿ ಅಡುಗೆಮನೆಗೂ ನುಗ್ಗಿತು. ಅವಳು ಕಿಟಕಿಯನ್ನು ಮುಚ್ಚಲು ಹೋದಾಗ, ಹೊರಗೆ ಮುದಿ ದೇವದೂತ ಹಾರಾಡಲು ಪ್ರಯತ್ನಪಡುತ್ತಿದ್ದ ದೃಶ್ಯ ಕಾಣಿಸಿತು. ಅವನ ಕೈ ಉಗುರುಗಳು ತರಕಾರಿ ತೋಟದ ಮಣ್ಣನ್ನು ಗೆಬರುತ್ತಿದ್ದವು. ಅವನು ಪ್ರಯಾಸಪಡುತ್ತಾ, ತೂರಾಡುತ್ತಾ ಮೇಲೇರಿದ. ಅವನೆಲ್ಲಿ ಶೆಡ್ಡಿಗೆ ಡಿಕ್ಕಿ ಹೊಡೆದು ಅದನ್ನು ಬೀಳಿಸುತ್ತಾನೋ ಎಂದು ಎಲಿಸೆಂಡಾ ಗಾಬರಿಗೊಂಡಳು. ಹಾಗಾಗದೆ ಮುದಿ ದೇವದೂತ ರೆಕ್ಕೆಗಳನ್ನು ಬಡಿಯುತ್ತಾ ಮೆಲ್ಲಗೆ ಮೇಲೇರಿದ. ಅವಳು ದೀರ್ಘವಾದ ನೆಮ್ಮದಿಯ ನಿಟ್ಟುಸಿರೊಂದನ್ನು ಬಿಟ್ಟಳು. ಅವಳು ನೋಡುನೋಡುತ್ತಿದ್ದಂತೆಯೇ ಮುದಿ ದೇವದೂತ ಒಡ್ಡೊಡ್ಡಾಗಿ ರೆಕ್ಕೆಗಳನ್ನು ಬಡಿಯುತ್ತಾ ಬಹಳ ದೂರ ದೂರ ಸಾಗಿದ. ಅವಳು ನಿಂತಲ್ಲಿಂದ ಅವನು ಒಂದು ಮುದಿ ಹದ್ದಿನಂತೆ ಕಾಣಿಸುತ್ತಿದ್ದ. ದಿಗಂತದಲ್ಲಿ ಅವನು ಒಂದು ಚುಕ್ಕಿಯಂತೆ ಕಾಣಿಸುತ್ತಿರುವವರೆಗೆ ಅವಳು ನೋಡುತ್ತಲೇ ಇದ್ದಳು. + + + +ಕಥೆಗಾರ, ಅನುವಾದಕ, ಕೃಷಿಕ ಮತ್ತು ಕಟ್ಟಡ ನಿರ್ಮಾಣಗಾರ. ಕನ್ನಡ ಮತ್ತು ಕೊಂಕಣಿ ಎರಡು ಭಾಷೆಗಳಲ್ಲೂ ಬರೆಯುತ್ತಾರೆ.’ಗಾಂಧಿಚೆಂ ಪರ್ಜಳಿಕ್ ಪುಢಾರ್ಪೊಣ್’ ಎಂಬ ಅನುವಾದಿತ ಕೃತಿಗೆ 2014 ರಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಪುರಸ್ಕಾರ ಲಭಿಸಿದೆ. ಹುಟ್ಟಿದ್ದು ಸಕಲೇಶಪುರದ ಬಳಿ. ಈಗ ಇರುವುದು ಹಾಸನ. \ No newline at end of file diff --git a/Kenda Sampige/article_49.txt b/Kenda Sampige/article_49.txt new file mode 100644 index 0000000000000000000000000000000000000000..0c3ea8f2be4718000eedf55a043687e661d7ae1c --- /dev/null +++ b/Kenda Sampige/article_49.txt @@ -0,0 +1,7 @@ +(ಡಾ. ಚಂದ್ರಮತಿ ಸೋಂದಾ) + +ಊರಲ್ಲಿ ಗೌಡ್ರ ಮನೆ ಅಂತ ಇದ್ದಿದ್ದೆ ಎರಡು. ಗಂಡುಹುಡುಗ್ರು ಶಾಲಿಗೆ ಬಂದ್ರೂ ಅವ್ರ ಹೆಣ್ಮಕ್ಳನ್ನ ಕಳುಸ್ತಿರ್ಲೆ. ಬ್ರಾಹ್ಮಣ ಹೆಣ್ಮಕ್ಳಷ್ಟೆ ಶಾಲಿಗೆ ಹೋಗ್ತಿದ್ದ. ಅಚ್ಚಿ ಕಲಿಯದ್ರಲ್ಲಿ ಹುಷಾರಿತ್ತು. ಗೊತ್ತಾಗದಿದ್ನ ಕೇಳಕ್ಕೆ ಅಣ್ಣ ಹ್ಯಾಂಗೂ ಮನೇಲಿದ್ದ. ಎರಡನೇ ತರಗತಿ ಮುಗದಾಗ ಕೂಸು ದೊಡ್ಡಾತು ಅಂತ ಸೀರೆ ಉಡಸಕ್ಕೆ ಶುರುಮಾಡಿದ್ದ. ಇಲ್ಲಿವರಿಗೆ ಅಕ್ಕಯ್ಯದಿಕ್ಳು ಹಾಕಿಬಿಟ್ಟ ಅಂಗಿನ ಅಮ್ಮ ಸರಿಮಾಡಿಕೊಡ್ತಿತ್ತು, ಅದ್ನೇ ಅಚ್ಚಿ ಮನೇಲಿ ತೊಟ್ಗಳ್ತಿತ್ತು. ಶಾಲಿಗೆ ಹೋಪ್ಲೆ ಅಂತ ತಂದಿದ್ದ ಎರಡೂ ಅಂಗಿ ಹರದುಹೋಗಿತ್ತು. ಅಂಟವಾಳಕಾಯಿ ಹಾಕಿ ಬಟ್ಟೆ ತೊಳದ್ರೂ ಚೊಕ್ಕ ಆಗದು ಅಷ್ಟರಲ್ಲೇ ಇತ್ತು. ಸಂಜೆಹೊತ್ತಿಗೆ ಕಲ್ಲುಮಣ್ಣಲ್ಲಿ ಆಡದಿದ್ರೆ ಮಕ್ಳಿಗೆ ಆಡದಾಂಗೆ ಅಲ್ಲ.   ಹಿಂಗೆ ಮಣ್ಣಲ್ಲಿ ಆಡಿರೆ ಬಟ್ಟೆ ಯಂತಕ್ಕೆ ಬತ್ತು ಅಂತ ದೊಡ್ಡೋರು ಎಷ್ಟು ಬಾಯಬಡ್ಕಂಡ್ರೂ ಕಿವಿ ಮೇಲೆ ಹಾಕ್ಯಳ ಜಾತಿಯಲ್ಲ ಮಕ್ಕಳು. ಮೈಗೆ ಸೋಪು ಕಂಡಿದ್ದೂ ಅಷ್ಟರಲ್ಲೇ ಇತ್ತು. ಸೀಗೆಪುಡಿನೇ ಮೈಗೆ, ತಲಿಗೆ ಎಲ್ಲವುದಕ್ಕೂ. ಅಚ್ಚಿ ಮೈಸೋಪು ಕಂಡಿದ್ದೇ ಮೊದಲ್ನೇ ಮಗ ಹುಟ್ಟಿದಾಗ ಶಿಶುವಿಗೆ ಅಂತ ಅಣ್ಣ ಸೋಪು ತಂದಾಗ. ಒಂಬತ್ತು ವರ್ಷದೋಳಿಗೆ ಎಷ್ಟು ದೊಡ್ಡ ಸೀರೆ ಬೇಕು. ಅಂಗಡೀಲಿ ಹುಡುಕಿ ಒಂದು ಪುಟ್ಟ ಸೀರೆ(ಕಿರಿಗೆ) ತಂದಿದ್ದ ಅಣ್ಣಯ್ಯ. ಎರಡು ದಿನಕ್ಕೊಂದ್ ಸರ್ತಿ ಸೀರೆ ತೊಳಕಳಕಾಗಿತ್ತು. ಆವಾಗ ದೇವಕಿಯ ಹಳೇ ಸೀರೆತುಂಡೇ ಗತಿಯಾಗಿತ್ತು. ಕೆಂಪಿಸೀರೇನ ಅಮ್ಮ ಕತ್ತರಿಸಿ ಕೊಟ್ಟಿತ್ತು. ಅದ್ನ ಸುತ್ತಿಗ್ಯಂಡು ಮನೆಒಳಗೆ ಕೂತ್ಗಳಕಾಗಿತ್ತು. ಸೀರೆ ಒಣಗಿದ್ದ್ ಮೇಲೆ ಬಾಗಿ ಜೊತಿಗೆ ಆಟ. ʻಶಣ್ಣಕ್ಕಯ್ಯನ ನೋಡು, ಅಮ್ಮನ ಹಳೇಸೀರೆ ಉಟ್ಗಂಡು ಹೊರಗಿದ್ದೋರ್ ಥರ ಮೂಲೇಲಿ ಕೂತಿದ್ದು’ ಅಂತ ಸುಬ್ಬು ತಮಾಶೆ ಮಾಡ್ತಿದ್ದ. ತಮ್ಮನ ಮೇಲೆ ಸಿಟ್ಟುಬಂದ್ರೂ ಹೊಡೆಯಕ್ಕೆ ಆಗ್ತಿರ್ಲೆ. ಅಂವ ಓಡಿಬುಡತಿದ್ದ. ಅವ್ನ ಹಿಂದೆ ಹೋಪ ಹಂಗಿಲ್ಲೆ. ಎಷ್ಟೇ ಕಷ್ಟಾದ್ರು ಅಚ್ಚಿ ಶಾಲೆ ಮಾತ್ರ ತಪ್ಪುಸ್ತಿರ್ಲೆ. ಅಚ್ಚಿಗೂ ಹತ್ತಾಗ್ತಾ ಬಂತು. ಮದ್ವೆ ಮಾಡವ್ವು ಅನ್ನ ಮಾತು ಆಗಲೇ ಮನೇಲಿ ಕೇಳಿಬರ್ತಿತ್ತು. + +ʻಹಿರೇಮಗ ಆಗಿದ್ದಕ್ಕೆ ಅಷ್ಟು ಮಾಡ್ದೆ ಇದ್ರೆ ಹ್ಯಾಂಗೆ ಅಮ. ಆನು ಈ ಮದ್ವೆ ಒಂದ್ ಮಾಡಿ ಮುಗಿಸಿದ್ರೆ ಸಾಕು. ಸುಬ್ಬು ಇನ್ನೂ ಶಣ್ಣಂವ ಹ್ಯಾಂಗೋ ಆಕ್ತು’ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_490.txt b/Kenda Sampige/article_490.txt new file mode 100644 index 0000000000000000000000000000000000000000..d467f895beed0aad8e1ce938a678b2ea895e91fa --- /dev/null +++ b/Kenda Sampige/article_490.txt @@ -0,0 +1,13 @@ +ಬೇಕಲ ರಾಮ ನಾಯಕರ ‘ಬಾಳಿದ ಹೆಸರು’ ಐತಿಹ್ಯ ಕತೆಯಲ್ಲಿ ಬರುವ ಘಟನೆಯು ಮೂಡುಬಿದ್ರಿ ಚೌಟ ಅರಸರ ಕೈಫಿಯತ್ತಿನಲ್ಲಿ ಹೀಗೆ ದಾಖಲಾಗಿದೆ. + +ಸ್ವಸ್ತಿ ಶ್ರೀ ಜಿಯಾಭ್ಯುದಯ ಶಾಲಿವಾಹನ ಶಕವರುಷ 1082 ನೆಯ ವಿಕ್ರಮ ಸಂವತ್ಸರದ…6. (ಯಿವರ ಮಗ) ಬೊಜರಾಯ ಚೌಟರು ಶಕವರುಷ 1238 ನೇಯ ನಳ ಸಂವತ್ಸರದ ಕಾರ್ತೀಕ ಶು|| 15 ಆರಭ್ಯ ಆಳಿದರು. ಆಳುತಿರಲಾಗಿ ಇವರು ರಾಯರು ಎಂಬ ಹೆಸರುಯಿಟ್ಟುಕೊಂಡು ಅರಸ್ತನ ಮಾಡುತ್ತಾರೆಂಬ ವರ್ತಮಾನವು ವಿಜಯನಗರದಲ್ಲು ಅಚ್ಚುತ ಕೃಷ್ಣರಾಯರು ತಿಳಿದು ಇವರನ್ನ ತಮ್ಮ ಬಳಿಗೆ ಬರುವಂತೆ ನಿರೂಪ ಅಪ್ಪಣೆ ಕೊಟ್ಟು ಜಿಲ್ಲೇನ ಹರಕಾರ ಕಳುಹಿಸಿಕೊಟ್ಟು ಕರಶಿದಲ್ಲಿ ಅರಮನೆಯಲ್ಲು ಇವರ ತಮ್ಮ ಲಕ್ಷ್ಮಿ ಅರಸರ ನಿಟ್ಟು ಸಂಗಡಾ ಕರಕೊಂಡು ಜನರ ಪ್ರಧಾನಿ ನಾರಣಪ್ಪಯ ಜನ 1 ಕಳವಳಿಗೆ ನಾರಣ ಶ್ಯಾನಭೋಗ ಜನ 1 ರಾಯಸ್ತದ ಕಾಶಿ ಪತೃ ಜನ 1 ಅವಸರದ ಸುಬ್ಬರಾಯ ಜನ 1 ನಾಯಕವಾಡಿಗಳು ಪದಮ ನಾಯಕ ಜನ 1 ಕೊಟಿ ನಾಯಕ ಜನ 1 ಅಂತು ಇಷ್ಟು ಮಂದಿ ಮುಖ್ಯ ಜನರು ಊಳಿಗದವರು ಜ 40 ಆಯುಧಪಾಣಿ ಜನಗಳಾಗಿ ಹೊರಟು ಶ್ರೀ ಸೋಮನಾಥ ಸ್ವಾಮಿ ದರುಶನ ಮಾಡಿಕೊಂಡು ಹೊರಟು ವಿಜಯನಗರಕ್ಕೆ ಹೋಗಿ ಒಂದು ಬಿಡಾರವನ್ನು ಮಾಡಿಕೊಂಡು ಆರು ತಿಂಗಳು ಪರಿಯಂತ್ರ ಕಾದುಕೊಂಡು ಇರುತ್ತ ರಾಯರ ದರುಶನವು ಆಗದೆ ಬಹಳ ಚಿಂತೆಯಿಂದ ಒಂದಾನೊಂದು ದಿನ ರಾತ್ರೆ ಮಲಗಿ ನಿದ್ರೆಗೈವ ವೇಳ್ಯೆಯಲ್ಲು ಸ್ವಪ್ನದಲ್ಲು ಒಬ್ಬ ಬ್ರಹ್ಮಚಾರಿ ಹುಡುಗನು ಬಂದು ನಾನು ರಾಯರ ಭೇಟಿ ಮಾಡಿಸಿಕೊಡುತ್ತೇನೆ ನಿನ್ನ ಬಿಡಾರದ ಸಮೀಪದ ವಟವೃಕ್ಷದ ಬುಡದಲ್ಲಿ ಒಂದು ದೇವತ ಬಿಂಬ ಇದೆ. ಅದನ್ನು ನಿನ್ನ ಊರಿಗೆ ಕೊಂಡುಹೋಗಿ ದೇವಸ್ಥಾನ ಕಟ್ಟಿಸಿ ಪೂಜೆ ಮಾಡೀಯ ಅಂತ ಕೇಳುವಾಗ್ಯೆ ಆದೀತು ಅಂತ ಹೇಳಿದಲ್ಲಿ ಹಾಗೆ ಎಚ್ಚರಿಕೆ ಆಗಿ ಎದ್ದು ಬೆಳಗಾದ ಬಳಿಕ ತಮ್ಮ ಕಡೆ ಸಮಾಜಿಗರ ಕೈಯ್ಯಲ್ಲಿ ಹೇಳಿ ಅವರನ್ನು ಕರಕೊಂಡು ಆ ಮರದ ಬುಡಕ್ಕೆ ಹೋಗಿ ನೋಡುವಾಗ್ಯೆ ಒಂದು ಶಿಲಾಮೂರ್ತಿಯು ಇದ್ದಲ್ಲಿ ಅದನ್ನು ತಂದು ಬಿಡಾರದಲ್ಲಿ ಇಟ್ಟುಕೊಂಡು ಬ್ರಹ್ಮಚಾರಿಯು ಸ್ವಪ್ನದಲ್ಲಿ ಬಂದು ಹೇಳಿದ ಕಾರಣ ಸುಬ್ಬರಾಯ ದೇವರೆ ಅಂತ ನಿಶ್ಚೈಸಿ ಪ್ರಾರ್ಥನೆಯನ್ನು ಮಾಡಿದ ತರುವಾಯ ಮೂರನೆ ದಿವಸದಲ್ಲಿ ರಾಯರಿಗೆ ಗ್ಯಾಪಕ ಬಂದು ಚೌಟರಸ ಅವರ ಸಾಮಾಜಿಕರ ಸಹಾ ವಡ್ಡೋಲಗದಲ್ಲಿ ಕರೆಸಿಯಂತ ಅಪ್ಪಣೆಯಾಗಿ ಇವರನ್ನ ಕರಕೊಂಡು ಹೋಗಿ ರಾಯರ ಸನ್ನಿಧಾನದ ಆಸ್ಥಾನದಲ್ಲಿ ರಾಯರ ಭೇಟಿ ಆದಲ್ಲಿ ನೀವು ರಾಜ್ಯವನ್ನು ಅನುಭವಿಸಿಕೊಂಡು ನಮಗೆ ಕಪ್ಪವನ್ನು ಕೊಡದೆ ರಾಯರು ಅಂತ ಹೆಸರುಯಿಟ್ಟುಕೊಂಡು ಈ ಮೇರೇಗೆ ಮದಯುಕ್ತರಾಗಿ ನಡೆವ ಕಾರಣವೇನು ಅಂತ ಭೊಜರಾಯ ಚೌಟರ ಕೈಯ ಪರಾಂಬರಿಸಿ ಇವರ ಕಡೆ ಸಾಮಾಜಿಕರ ಮುಖವನ್ನು ನೋಡಿ ಈ ವಿದ್ಯಮಾನ ಏನು ಅಂತ ಅಪ್ಪಣೆ ಆದಲ್ಲಿ ಆಗ್ಯೆ ಕವಳಿಗೆ ನಾರಣ ಶ್ಯಾನುಭಾಗನು ಅರಿಕೆ ಮಾಡಿಕೊಂಡ ವಿವರ ಈ ಚೌಟರ ತಾಯಿಗೆ ಗಂಡು ಮಕ್ಕಳು ಹುಟ್ಟದೆಯಿದ್ದ ಕಾರಣ ಮಗ ಹುಟ್ಟಿದರೆ ರಾಯರ ಹೆಸರು ಇಟ್ಟೆನೆಂತ ಹೇಳಿ ತಮ್ಮ ಚರಣವನ್ನು ಮನದಲ್ಲಿ ಧ್ಯಾನಿಸಿ ಪ್ರಾರ್ಥನೆ ಮಾಡಿಕೊಂಡದರಿಂದ ಈ ಗಂಡು ಕುಮಾರ ಜನಿಸಿದ್ದರಿಂದ ಇವರಿಗೆ ದೇವರ ಪಾದ ಹೆಸರನ್ನಿಟ್ಟಿದ್ದಾರೆ. + +ಮಗನ ಸಂರಕ್ಷಣವೇನಿದ್ದರೂ ದೇವರ ಪಾದಕ್ಕೆ ಕೂಡಿದೆಯಂತ ಅರಿಕೆ ಮಾಡಿದಲ್ಲಿ ಆ ಮಾತನ್ನು ರಾಯರು ಚಿತ್ತಕ್ಕೆ ತಂದು ಕಾಲಗಳಿಗೆ ಪರಿಯಂತ್ರ ಭೊಜರಾಜ ಚೌಟರ ಮುಖವನ್ನು ನೋಡಿ ಆ ಬಳಿಕಾ ನಮಗೆ ಹರಿಕೆ ಹೇಳಿಕೊಂಡು ಹುಟ್ಟಿದ ಮಗನಾದ ಮೇಲೆ ನಮ್ಮಲ್ಲಿ ನಿಮಗೆ ದೇವತಾಭಾವನೆ ಉಂಟಾಯಿತು. ಅದರಿಂದ ಈ ಭೊಜರಾಯನು ನಮಗೆ ಮಗನೆ ಸರಿಯಂತ ಅತ್ತರೆ ಕರದು ಕೂಡಿಸಿಕೊಂಡು ಅಪ್ಪಣೆ ಕೊಟ್ಟ ವಿವರ ನೀವು ಯಾರ ವಂಶಸ್ಥರು ನಿಮ್ಮ ಕುಲದೇವರು ಯಾವ ದೇವರು ಅಂತ ಪರಾಂಬರಿಸಿದಲ್ಲಿ ನಾವು ಸೋಮಾನ್ವಯ ಭೂಪಾಲ ಜನಿತ ಜೈನಕ್ಷೇತ್ರೆಯ ವಂಶದವರು. + +ನಮ್ಮ ಕುಲಸ್ವಾಮಿಯು ನೇತ್ರಾವತಿ ನದಿಯ ಪಶ್ಚಿಮ ಸಮುದ್ರ ಸಂಗಮಸ್ಥಳಕ್ಕೆ ಸಮೀಪವಾದ ಸಮುದ್ರ ತೀರದಲ್ಲಿ ಇರುವ ರುದ್ರಪಾದ ಕ್ಷೇತ್ರವಾದ ಉಳ್ಳಾಲದ ಮಾಗಣೆ ಸೋಮೇಶ್ವರದ ಶ್ರೀ ಸೋಮನಾಥ ಸ್ವಾಮಿಯೆ ನಮ್ಮ ಕುಲದೇವರು ಆ ಸ್ವಾಮಿ ಅನುಗ್ರಹದಿಂದ ನಮ್ಮ  ಹಿರೇರಿಗೆ ಈ ರಾಜ್ಯ ಪ್ರಾಪ್ತಿ ಆದಂತಾದ್ದು ಎಂಬ ವೃತ್ತಾಂತ ಯಾವೊತ್ತು ಅರಿಕೆ ಮಾಡಿದಲ್ಲಿ ಪರಾಂಬರಿಸಿ ಸಂತೋಷಪಟ್ಟು ವೀಳ್ಯವನ್ನು ತರಿಸಿಕೊಟ್ಟು ಈಗ ಬಿಡದಿಗೆ ಹೋಗಿ ನಾಡದು ನಿಮ್ಮ ಸಾಮಾಜಿಕರನ್ನು ಕರಕೊಂಡು ಬನ್ನಿಯಂತ ಅಪ್ಪಣೆ ಕೊಟ್ಟಲ್ಲಿ ಅದೆ ಪ್ರಕಾರ ಬಿಡಾರಕ್ಕೆ ಬಂದು ಮರುದಿವಸ ವಿರೂಪಾಕ್ಷ ದೇವರ ದರುಶನವನ್ನು ಮಾಡಿಕೊಂಡು ಆ ಮರುದಿವಸ ರಾಯರ ಆಸ್ಥಾನದಲ್ಲಿ  ಕುಳಿತಿರುವ ಸಮಯದಲ್ಲಿ ಹೋಗಿ ದರುಶನವನ್ನು ಮಾಡಿ ಕುಳಿತಿರುವಾಗ್ಯೆ ಪರಂಬರಿಸಿ ನಿಮ್ಮ ಊರಿಗೆ ನೀವು ಹೋಗಿ ನಿಮ್ಮ ಸೀಮೆ ನೀವು ಅನುಭವಿಸಿಕೊಂಡು ದೇವತಾ ಧರ್ಮ ಅಗ್ರಹಾರ ಬ್ರಹ್ಮದಾಯ ಮುಂತಾದ ಧರ್ಮಂಗಳ ನಡಸಿಕೊಂಡು ರಾಜಧರ್ಮ ಪದ್ಧತಿ ಪ್ರಕಾರ ನಡಕೊಳ್ಳುತ್ತ ನಿಮ್ಮ ಸೀಮೆ ಪೂರ್ವ ಪ್ರಕಾರ ಉಂಬಳಿಯಾಗಿ ಅನುಭವಿಸಿಕೊಂಡು ನಿಮ್ಮ ವಂಶದಲ್ಲಿ  ಜನ್ನಿತರಾಗಿ ರಾಜ್ಯಭಾರ ಮಾಡುವಂತರಿಗೆ ರಾಯ ಶಬ್ಧ ಪೂರ್ವಕವಾಗಿ ನಾಮಕರಣವಿಟ್ಟು ಸುಖದಿಂದಾ ಧರ್ಮಯುಕ್ತರಾಗಿ ಅಪಯಶಸ್ಸು ಬಾರದಂತೆ ನಡೆಕೊಳ್ಳಿಯಂತ ಅಪ್ಪಣೆಯಾದಲ್ಲಿ ಆಗ್ಯೆ ದೇವರ ಸನ್ನಿಧಾನದಿಂದ ಏನಾದರುವೊಂದು ಧ್ವಜ ಚಿನ್ಹೆಗೆ ಅಪ್ಪಣೆ ಆಗಬೇಕಂತ ಅರಿಕೆಮಾಡಿಕೊಂಡಲ್ಲಿ ನೀವು ನಮ್ಮ ಮಗನೆ ಸರಿಯಂತ ಶಿರಸ್ಸಿನಲ್ಲಿ ಅಭಯ ಹಸ್ತವನ್ನು ಇಟ್ಟು ನಾವು ಹಿರಿಸುವಂಥಾ ಬಿರಿದು ಬಾವಲಿ ನೀವು ಹಿರಿಸಿಕೊಳ್ಳಲಿಯಂತ ಅಪ್ಪಣೆ ಆದ್ದರಿಂದ ಅಪ್ಪಣೆ ತೆಗೆದುಕೊಳ್ಲುವಾಗ್ಯೆ ಮುಂಡಾಸು ಹಚ್ಚಡ ಅಂಗಿ ಶಲ್ಯ ನಡುಕಟ್ಟು ಮುತ್ತಿನ ತುರಾಯಿ ಸರಪದಕ ಹಸ್ತಕಡಗ ಮುಂತಾಗಿ ಉಡುಗೊರೆ ದಯವಿಟ್ಟು ಆ ಬಳಿಕಾ ವಾಹನಯೇನದೆಯಂತ ಪರಾಂಬರಿಶಿ ಪಾಲಕಿಯನ್ನು ದಯವಿಟ್ಟು ಕೊಟ್ಟು ಅಪ್ಪಣೆ ತೆಗೆದುಕೆುಂಡು ಹೊರಡುವಾಗ್ಯೆ ಹಿಡಿಸಿಕೊಂಡು ಬಂದಂತಾ ಬಿರುದು ಬಾವಲಿ ಕುಳಿತುಕೊಂಬಂತಾ ಹಸರು ಸದರು ಹಸರು ಅಲಂಕೃತವಾದ ಪಲಿಕ್ಕೆ ಒಂದು  ಹಸರು ಬಸವನಟ್ಟೀಕೆ ನಿಶಾನಿ ಒಂದು ಹಸರು ಲ್‍ಲ್‍ಖ್ಯ ಎರಡು ಹಸರು ಜಾಲಹತ್ತಿಗೆ ಎರಡು ಹಾಶಸು ರುಮಾಲು ಎರಡು ಹಸರು ಬೀಸಣಿಗೆ ಎರಡು ಹಸರು ಚಉರಿ ಎರಡು ಗಗ್ಗರದಯೀಟ್ಟಿ ಯರಡು ಒಂಟಿಕಶೆ ಇಟ್ಟ 2 ಜಾಡಿ ಹರಗೆ ಎರಡು ಹೊದೆಯದ ಕತ್ತಿ ಹಾಶಸು ರುಮಾಲು ಹಾಕುವವರ ಕೈಯ ಬಗಲಲ್ಲು ಇರುವ ಕತ್ತಿ ಎರಡು ಒಳಗನ ಉಳಿಗದವರ ಕೈಯ ಹಿಟನ ಹುಚಿರ ಕತ್ತಿ ಎರಡು ಉಭಯಂ ಕತ್ತಿ ನಾಲ್ಕು ಬೆಳ್ಲಿ ಕಟ್ಟಿದ ಬೆತ್ತ ಎರಡು ನೆಗಳ ಬಾಯಿ ಸಗ್ಗಳೆ ಚಿಂನ್ನದ ಗಿಂಡಿವೊಂದು ಪಟ್ಟೆ ಎರಡು ರಣಗಾಳೆ ಎರಡು ವಂಟೆಮಾಲೆ ನಗಾರಿ ಎರಡು ಪಟ್ಟದ ಆನೆ ಒಂದು ಪಟ್ಟದ ಕುದಿರ ಎರಡು ಪಂಚ ದೀವಟಿಗೆ ಎರಡು ವಾದ್ಯ ಮೇಳ ಹಲಗೆ ಕೊಂಬು ಪಾಟಕ ಜನ 2 ಮುಂತಾದ ತೂರ್ಯ ಇಂತಿ ಸಂಭ್ರಮದಿಂದಾ ವಿಜಯನಗರದಿಂದಾ ಹೊರಟು ತಮ್ಮ ಸ್ಥಳಕ್ಕೆ ಬಂದರು. ಅಲ್ಲಿ ವಿಜಯನಗರದಿಂದ ಹೊರಡುವಾಗ್ಯೆ ಪಲ್ಲಕಿ ಬೊಯರು ತಮ್ಮ ಮಾರಿಯಮ್ಮ  ದೇವರಿಗೆ ಗುಡಿ ಕಟ್ಟಿಶಿ ಕೊಟ್ಟು ಉಂಬಳಿ ಉತ್ತರ ಬಿಟ್ಟು ಕೊಟ್ಟರೆ ಬಂದೇವು ಎಂತ ಹೇಳಿಕೊಂಡದರಿಂದ ಅದೇ ಪ್ರಕಾರ ಆಗಲಿಯಂತ ಹೇಳಿ ಸಂಗಡ ಬಂದ ಬಳಿಕ ಮೂಡಬರಿಯಲ್ಲು ಮಾರಿಯಮ್ಮನ ಗುಡಿ ಕಟ್ಟಿಸಿಕೊಟ್ಟು ಉಂಬಳಿಯನ್ನು ಬಿಟ್ಟುಕೊಟ್ಟರು. + +| ವಿ | ವಿಜಯನಗರದಲ್ಲು ಸ್ವಪ್ನಚೂಚಕವಾಗಿ ಬಂದ ಸುಬ್ಬರಾಯ ದೇವರ ಮೂರ್ತಿಯನ್ನು ಸಂಗಡಲೆ ಸಾಗಿಸಿಕೊಂಡು ಬಂದು ಕಡಂದಲೆ ಮಾಗಣೆಯಲ್ಲು ದೇವಸ್ಥಾನ ಕಟ್ಟಿಸಿ ಪ್ರತಿಷ್ಠೆ ಮಾಡಿಸಿ ಉಂಬಳಿ ಉತ್ತರ ಬಿಟ್ಟು ಪೂಜೆ ಪುರಸ್ಕಾರ ನಡೆಸುತ್ತ ಬಂದರು ಈ ಭೊಜರಾಯರು ಅತಿ ಸೌಂದರ್ಯ ಪುರುಷರು ಮಿತಭಾಷಿಗಳು ಮಿತ ಆಹಾರಗಳು ಮಧುರವಾದ ಆಹಾರಪ್ರಿಯರು ಸ್ವಸ್ತ್ರಿವ್ರತರು ದೇವತಾ ಭಕ್ತಿಪರರು ಸತ್ಕಥಾ ಶ್ರವಣಾಸತ್ಕರರು ಸತ್ಪಾತ್ರದಾನಿಗಳು ಪ್ರಚಾಪಾಲಕರ ಪಾಪಭೀತರು ಯಶೊವಂತರು ||(ಮೂಲ : ಚಉಟ ಅರಸುಗಳ ಕೈಫಿಯತ್ತು (ಒ – 351. P 259-301)ಇದರಿಂದ ಆಯ್ದ ಭಾಗ) + + + +ಉಡುಪಿ ಜಿಲ್ಲೆಯ ಬೆಳ್ಮಣ್ಣಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು, 2019 ರಲ್ಲಿ ನಿವೃತ್ತರಾಗಿದ್ದಾರೆ’ . ಕತೆ, ಕಾದಂಬರಿ, ಅನುವಾದ, ವಿಮರ್ಶೆ, ಮಕ್ಕಳ ಸಾಹಿತ್ಯ, ಸಂಪಾದಿತ ಗ್ರಂಥಗಳು ಅಲ್ಲದೇ ‘ಉತ್ತರಾಧಿಕಾರ’ , ‘ಹಸ್ತಾಂತರ’, ಮತ್ತು ‘ಅನಿಕೇತನ’ ಕಾದಂಬರಿ ತ್ರಿವಳಿ, ‘ಮೂರು ಹೆಜ್ಜೆ ಭೂಮಿ’, ‘ಕಲ್ಲು ಕಂಬವೇರಿದ ಹುಂಬ’, ‘ಬೂಬರಾಜ ಸಾಮ್ರಾಜ್ಯ’ ಮತ್ತು ‘ಅಂತಃಪಟ’ ಅವರ ಕಾದಂಬರಿಗಳು ಸೇರಿ ಜನಾರ್ದನ ಭಟ್ ಅವರ ಪ್ರಕಟಿತ ಕೃತಿಗಳ ಸಂಖ್ಯೆ 82. \ No newline at end of file diff --git a/Kenda Sampige/article_491.txt b/Kenda Sampige/article_491.txt new file mode 100644 index 0000000000000000000000000000000000000000..f781bea092c49e7352564e905b83d5c8ebd76817 --- /dev/null +++ b/Kenda Sampige/article_491.txt @@ -0,0 +1,89 @@ + + +1996 + +ಪೂರ್ಣಳನ್ನು ನಿದ್ರಿಸುವಾಗ ನೋಡುವುದು ಸುಂದರ್ ಗೆ ತುಂಬಾ ಇಷ್ಟ. ನಿದ್ರಿಸುವಾಗ ಆಕೆಯ ಮುಖ ನಿರ್ಮಲವಾದ ಸರೋವರದಂತಿರುತ್ತದೆ. ಇದ್ದಕ್ಕಿದ್ದಂತೆ ಆಕೆಯ ತುಟಿಗಳ ಮೇಲೆ ಮುಗುಳ್ನಗೆ ಅರಳುತ್ತದೆ. ಕನಸಲ್ಲಿ ದೇವರನ್ನು ನೋಡಿದಂತೆ ಆ ನಗು ತುಂಬಾ ಮನೋಹರವಾಗಿರುತ್ತದೆ. ಆಕೆಯನ್ನು ಹಾಗೆ ನೋಡಲೆಂದೇ ಸುಂದರ್ ನಿದ್ದೆ ಮಾಡದೇ ಸಾಕಷ್ಟು ರಾತ್ರಿಗಳನ್ನು ಕಳೆಯುತ್ತಾನೆ. ಅವರಿಬ್ಬರ  ಮದುವೆಯ ಮೊದಲ ವರ್ಷದ ದಿನಗಳಲ್ಲಿ ಪೂರ್ಣ ರಾತ್ರಿ ಒಂಬತ್ತಕ್ಕೆಲ್ಲಾ ಮಲಗಿಬಿಡುತ್ತಿದ್ದಳು. ಆಕೆ ಎದ್ದುಬಿಡುತ್ತಾಳೆಂಬ ಭಯದಿಂದ ಇಡೀ ರಾತ್ರಿ ಸುಂದರ್ ಎಚ್ಚರದಿಂದಿರುತ್ತಿದ್ದ. ಬರುಬರುತ್ತಾ ಆಕೆಯನ್ನು ಹಾಗೆ ನಿದ್ರಿಸುವಾಗ ನೋಡುವುದು ಅವನಿಗೆ ಅಭ್ಯಾಸವಾಗಿ ಬಿಟ್ಟಿತು. ದಣಿದು ಮೈಮರೆತು ಸಮಸ್ತವನ್ನು ಮರೆತು ಮಗುವಿನಂತೆ ಮಲಗಿರುತ್ತಿದ್ದಳು. ಕನಸುಗಳಲ್ಲಿ ಮೆರವಣಿಗೆ ಹೊರಟಿರುವಂತಿತ್ತು ಅವಳ ನಿದ್ರೆ. ಆ ದಿನಗಳಲ್ಲಿ ಒಂದು ಶುಕ್ರವಾರ ರಾತ್ರಿ ಇಬ್ಬರೂ ಮಧ್ಯರಾತ್ರಿ ಎರಡರವರೆಗೆ ಹರಟೆ ಹೊಡೆಯುತ್ತಾ ಸ್ಟ್ರಾಂಗ್ ಟೀ ಕುಡಿದು ಮಲಗಿದರು. ಮಾರನೇ ದಿನ ಮಧ್ಯಾಹ್ನ ಎರಡು ಗಂಟೆಗೆ ಆತ ನಿದ್ದೆಯಿಂದೆದ್ದಿದ್ದ. ಆಕೆ ಇನ್ನೂ ಮಲಗಿಯೇ ಇದ್ದಳು. ಎದ್ದು ಮುಖ ತೊಳೆದು ಕಾಫಿ ಕುಡಿದು, ತಿಂಡಿತಿಂದು ದೇವರ ಸಾಕ್ಷಾತ್ಕಾರಕ್ಕೆ ಕಾದಿರುವನಂತೆ, ಕ್ಷಣಹೊತ್ತು ತಡೆಯಲಾರದ ಮೋಹ ಪರವಶನಾಗಿ, ಆಕೆಯನ್ನು ಎಬ್ಬಿಸಿ, ಹತ್ತಿರ ಸೆಳೆದು, ಸಾವಿರ ವರ್ಷಗಳಿಂದ ಜಗತ್ತನ್ನು ಹೊತ್ತುಕೊಂಡಿರುವವಳಂತೆ, ಆಕೆಯ ಮುಖದಲ್ಲಿ ದಣಿವನ್ನು ಗಮನಿಸಿ ಆಕೆ ಎಚ್ಚರಗೊಳ್ಳುವವರೆಗೆ ನಿದ್ದೆಯಿಂದ ಎಬ್ಬಿಸಬಾರದೆಂದು ನಿರ್ಧರಿಸಿ, ಪ್ಯಾರಡೈಸ್‍ವರೆಗೆ ಹೋಗಿ ಎರಡು ಬಿರಿಯಾನಿ ಪೊಟ್ಟಣಗಳನ್ನು ತಂದು ಆಕೆಯ ಭುಜಗಳನ್ನು ಹಿಡಿದು ಮೇಲಕ್ಕೆಬ್ಬಿಸಿ, ಆಕೆ ಕಣ್ತೆಗೆದು ದೇವತೆಯಂತೆ ನಸುನಕ್ಕು ಅವನ ತುಟಿಗಳಿಗೆ ಮುತ್ತಿಟ್ಟು ಮತ್ತೇ ನಿದ್ದೆಗೆ ಜಾರುತ್ತಿದ್ದಳು. ಅವಳ ಪಕ್ಕದಲ್ಲೇ ಕೂತು ಆಕೆ ರಾತ್ರಿ ಮಲಗುವ ಮುನ್ನ ಅರ್ಧ ಓದಿ ಬಿಟ್ಟಿದ್ದ ಕಾದಂಬರಿಯನ್ನು ಶ್ರದ್ಧೆಯಿಂದ ಶಾಲಾ ವಿದ್ಯಾರ್ಥಿಯಂತೆ ಓದಿಮುಗಿಸುತ್ತಿದ್ದ. ಆ ಕಾದಂಬರಿ ಪೂರ್ತಿಯಾಗುವಷ್ಟರಲ್ಲಿ ಸಂಜೆ ಐದು ಗಂಟೆಯಾಗುತ್ತಿತ್ತು. ಆಕೆ ಇನ್ನೂ ನಿದ್ದೆಯಿಂದ ಎದ್ದಿರಲಿಲ್ಲ. ಸುಂದರ್‍ಗೆ ವಿಪರೀತ ಹಸಿವಾಗಿತ್ತು. ತನ್ನ ಪುಸ್ತಕ ಸಂಗ್ರಹದಿಂದ ‘ಅಮೃತಂ ಕುರಿಸಿನ ರಾತ್ರಿ’ ಹೊರತೆಗೆದ. ಜೋರು ದನಿಯಲ್ಲಿ ಕವಿತೆ ಓದಲು ಪ್ರಾರಂಭಿಸಿದ. ಸರಿಯಾಗಿ ಆರು ಗಂಟೆಗೆ ನಿದ್ದೆಯಿಂದೆದ್ದಳು ಪೂರ್ಣ. ನೈದಿಲೆಯಂತೆ ಕಣ್ಣರಿಳಿಸಿದಳು. “ಹಸಿವಾಗ್ತಾ ಇದೆ. ತಿನ್ನಲು ಪೋಯೆಟ್ರಿನಾ? ಇನ್ನೇನಾದರೂ ಇದೆಯಾ?” ಎಂದಳು ಮುಗುಳ್ನಗೆಯೊಂದಿಗೆ. ಇಬ್ಬರೂ ಬಿರಿಯಾನಿ ಪೊಟ್ಟಣಗಳನ್ನು ಬಿಚ್ಚಿದರು. ಆಕೆ ತಿನ್ನುವುದನ್ನು ಎಂಜಾಯ್ ಮಾಡುತ್ತಾಳೆ. ಕಣ್ಣುಗಳಲ್ಲಿ ಹೊಳಪು ತುಂಬಿಕೊಂಡು, ಚಿಕ್ಕ ಚಿಕ್ಕ ತುತ್ತುಗಳನ್ನು ಮಾಡಿಕೊಂಡು ತುಂಬಾ ನಾಜೂಕಾಗಿ ಇಷ್ಟದಿಂದ ಸವಿಯುತ್ತಾಳೆ. + +ಭಾನುವಾರ ಸಂಜೆ ಅವರು ರಸ್ತೆಯಂಚಿನ ಪೇವ್‍ಮೆಂಟ್ ಮೇಲೆ ಹೆಜ್ಜೆ ಹಾಕುತ್ತಾ ನಡೆಯುತ್ತಿದ್ದರು. ಅವನ ಪ್ಯಾಂಟ್ ಜೇಬಿನಲ್ಲಿ ಪುಸ್ತಕವಿರುತ್ತಿತ್ತು. ಪೆರೇಡ್ ಗ್ರೌಂಡ್ಸ್ ಸುತ್ತಾಡಿ, ಮೂಲೆಯೊಂದರಲ್ಲಿ ಜನರಿಲ್ಲದ ಜಾಗದಲ್ಲಿ ಕೂಡುತ್ತಿದ್ದರು. ಅವನು ಪುಸ್ತಕ ತೆಗೆದು ಕವಿತೆ ಓದುತ್ತಿದ್ದ. ಓದುವಾಗ ಅವನ ತುಟಿಗಳು ಕದಲುತ್ತಾ, ತನ್ನಲ್ಲಿ ತಾನು ಏನೋ ಗೊಣಗಿಕೊಳ್ಳುತ್ತಿರುವಂತೆ ಕಾಣುತ್ತವೆ. ಇಳಿಸಂಜೆಯ ಚಳಿಗಾಳಿಗೆ ಸೆರಗನ್ನು ಪೂರ್ತಿಯಾಗಿ ಹೊದ್ದುಕೊಂಡು ಅವನೆಡೆ ಇಷ್ಟದಿಂದ ನೋಡುತ್ತಾ; ಕ್ರಮವಾಗಿ ನಿದ್ರೆಯ ಅಮಲು ಆಕೆಯನ್ನು ಆವರಿಸುತ್ತಿತ್ತು. ಅವನ ಭುಜದ ಮೇಲೆ ಒರಗುತ್ತಾ ಅವನು ಪುಸ್ತಕವನ್ನು ಮುಚ್ಚಿಟ್ಟು, ಆಕೆಯ ಅಸ್ತಿತ್ವವನ್ನು, ಸ್ಪರ್ಶವನ್ನು ಎಂಜಾಯ್ ಮಾಡುತ್ತಾ; ಅವೆಲ್ಲಾ ಅದ್ಭುತವಾದ ದಿನಗಳು ಅವರ ಬದುಕಿನಲ್ಲಿ. + +ಆ ದಿನಗಳಲ್ಲಿ ಅವರಿಬ್ಬರಿಗಿಷ್ಟವಾದ ಮತ್ತೊಂದು ಅನುಭವವೆಂದರೆ, ಸಿ.ವಿ. ಯೊಂದಿಗೆ ಮಾತನಾಡುವುದು. ಅವರ ಮನೆಯಿಂದ ನಾಲ್ಕೈದು ಸ್ವಲ್ಪ ದೂರದಲ್ಲಿ ಕಿರಿದಾದ ಕೋಣೆಯೊಂದರಲ್ಲಿ  ವಾಸಿಸುತ್ತಿದ್ದ ಸಿ.ವಿ. ಅವನೊಬ್ಬ  ನಿರುದ್ಯೋಗಿ. ಅನಾರ್ಕಿಸ್ಟ್ ಮತ್ತು ಕವಿ ಇತ್ಯಾದಿ. ಮೀಸೆ ಅಂಟಿಸಿದ ಸೂರ್ಯನಂತೆ, ಹದೆ ಏರಿಸಿದ ಬಿಲ್ಲಿನಂತೆ ಅದ್ಭುತವಾದ ಭಾವನೆಗಳ ಸಂಗಮದಂತಿರುತ್ತಾನೆ. ಪ್ರಜ್ವಲಿಸುತ್ತಿರುತ್ತಾನೆ. ಅವನು ಆಟೋ, ಬಸ್ ಹತ್ತುವುದಿಲ್ಲ. ಎಲ್ಲಿಗಾದರೂ ನಡೆದುಕೊಂಡೇ ಹೋಗುತ್ತಾನೆ. ರಸ್ತೆ ಮೇಲೆ ನಡೆದು ಹೋಗುವಾಗ ತನ್ನ ಜೇಬಿನಲ್ಲಿಯ ಕೊನೆಯ ಹತ್ತು ರೂಪಾಯಿಯನ್ನು ಎದುರಿಗೆ ಕಂಡ ಭಿಕ್ಷುಕನಿಗೆ ಕೊಟ್ಟು ತಾನು ಆ ರಾತ್ರಿಯೆಲ್ಲಾ ಉಪವಾಸ ಮಲಗುತ್ತಾನೆ. ಅವನು ಕವಿತೆಗಳನ್ನು ಬರೆಯುತ್ತಾನೆ. ಆಗಾಗ ಅವು ಪ್ರಕಟಗೊಳ್ಳುತ್ತವೆ. ಆ ಕವಿತೆಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡ ದಿನ ಸುತ್ತಲಿನ ಜನರನ್ನು ಕರೆದು ದೊಡ್ಡ ದನಿಯಲ್ಲಿ ಕವಿತೆಯನ್ನು ಓದಿ ಅರ್ಥ ವಿವರಿಸುತ್ತಾನೆ. ಅವನ ಆ ಉತ್ಸಾಹ ಸುಂದರ್‍ಗೆ ತುಂಬಾ ಇಷ್ಟವಾಗುತ್ತಿತ್ತು. ‘ಯಾವುದೂ ಸರಿಯಾಗಿ ನಡೆಯುತ್ತಿಲ್ಲವೆಂದು’ ಗಂಟೆಗೊಮ್ಮೆಯಾದರೂ ಗೊಣಗಿಕೊಳ್ಳುತ್ತಾನೆ. ಸಿ.ವಿ. ನಿದ್ರೆ ಮಾಡುತ್ತಿರುವ ಪೂರ್ಣಳನ್ನು ನೋಡಿದರೆ ನಿಧಾನಗತಿಯಲ್ಲಿ ಹರಿವ ನದಿ ಮತ್ತು  ಹಚ್ಚಹಸಿರಿನ ದಟ್ಟ ಕಾಡುಗಳು ನೆನಪಿಗೆ ಬರುತ್ತವೆ ಎನ್ನುತ್ತಿದ್ದ. ಸಿ.ವಿ.ಯೊಂದಿಗೆ ಕಳೆದ ಎಷ್ಟೋ ತಾಸುಗಳು ಅವರಿಗೆ ಅತ್ಯಂತ ಇಷ್ಟವಾದ ನೆನಪುಗಳು. ಆರು ತಿಂಗಳ ಗೆಳೆತನದ ನಂತರ ಸಿ.ವಿ. ಇದ್ದಕ್ಕಿದ್ದಂತೆ ಮಾಯವಾಗಿಬಿಟ್ಟ. ಮಡಚಿದ ನ್ಯೂಸ್ ಪೇಪರ್‍ಗಳ ನಡುವೆ ಸುತ್ತಿದ ಫೋಟೋ ಫ್ರೇಮನ್ನು ಸುಂದರ್‍ಗೆ ಕೊಟ್ಟು, ಕೇಳುವ ಮುನ್ನವೇ ಆತುರದಿಂದ ಹೊರಟು ಹೋಗಿದ್ದ. ಅದು ನಿದ್ರೆ ಮಾಡುತ್ತಿರುವ ಪೂರ್ಣಳ ಪೇಯಿಂಟಿಂಗ್. ಆಕಾಶದಂಥ ದೀರ್ಘ ಶೂನ್ಯದಲ್ಲಿ ಒಬ್ಬಳೇ ಮೈಮರೆತು ನಿದ್ರಿಸುತ್ತಿರುವ ದೃಶ್ಯ. ಹೋಗುತ್ತಾ ಹೋಗುತ್ತಾ, ತನ್ನ ಕೋಣೆಯಲ್ಲಿನ ಪುಸ್ತಕಗಳು, ಮರದ ಕುರ್ಚಿ, ಬರೆಯುವ ಮೇಜು, ಚೆಂದನೆ ಮೆತ್ತನೆಯ ಬೂರಗದ ಹೂವಿನ ಹಾಸಿಗೆಯನ್ನು ಅವರಿಗೆ ಕಾಣಿಕೆಯಾಗಿ ಕೊಟ್ಟು ಹೋಗಿದ್ದ. ಅವನು ಮಾಯವಾಗಿ ಹೋದ ನಂತರ ಆಗಾಗ ಅವನಿಂದ ಪತ್ರಗಳು ಬರುತ್ತಿದ್ದವು. ಅವನ ಪತ್ರಗಳು ಕೆಂಪು ಹಕ್ಕಿಗಳಂತಿರುತ್ತಿದ್ದವು. ಸುಮಾರು ಹತ್ತು ಇಪ್ಪತ್ತು ಪುಟಗಳಷ್ಟು ದೀರ್ಘವಾಗಿರುತ್ತಿದ್ದವು. ಸಿ.ವಿ. ಕೊಟ್ಟಿದ್ದ ಬಣ್ಣದ ಹಾಸಿಗೆಯನ್ನು ಅವರು ತುಂಬಾ ಅಪರೂಪದ ಕಾಣಿಕೆಯಂತೆ ಭಾವಿಸುತ್ತಿದ್ದರು. ಕೋಣೆಯ ನಡುವೆ ಹಾಸಿ ಅದನ್ನೊಂದು ‘ಯಾಂಟಿಕ್’ನಂತೆ ನೋಡತೊಡಗಿದರು. ಅದಕ್ಕೆ ‘ಪೊಯೆಟ್ಸ್ ಕಾರ್ನರ್’ಎಂದು ಹೆಸರಿಟ್ಟಿದ್ದರು. ಅದು ಅವರ ಕನಸಿನಲೋಕ. ಅವರ ಆತ್ಮಗಳ ಕನ್ನಡಿ. ಅವರ ದೇಹಗಳ ಮೇಲೆ ಬೀಸುವ ಜಾಜಿ ಮಲ್ಲಿಗೆಯ ಚಂಡಮಾರುತ. ಆ ಹಾಸಿಗೆ ಅವರ ಪುರಾತನ ವಾಂಛೆಗಳನ್ನು ನೆನಪಿಗೆ ತರುವ ಮೋಹಕ ರತ್ನಗಂಬಳಿ. ಅವರ ನಿದ್ರಾಗೃಹ. + +2000 + +ಅವರ ಬದುಕಿನಿಂದ ಮಧುರ ಕ್ಷಣಗಳು ಅದೃಶ್ಯವಾಗುತ್ತಿದ್ದ ಸಮಯವದು. ಸುಂದರ್‍ಗೆ ಇಷ್ಟವಾದ ಚೆಗೆವಾರನ ಚಿತ್ರವಿದ್ದ ಟೀ-ಶರ್ಟ್ ಹರಿದು ತೂತಾದ್ದರಿಂದ ಅದನ್ನು ಭಿಕ್ಷುಕನೊಬ್ಬನಿಗೆ ಕಾಣಿಯಾಗಿ ಕೊಟ್ಟರು. ಹಾಸಿಗೆ ಕೆಳಗಿಟ್ಟಿದ್ದ ಸಿ.ವಿ. ಪತ್ರಗಳು ಕಣ್ಮರೆಯಾಗುತ್ತಿದ್ದವು. ಅವರಿಬ್ಬರ ಬದುಕಿನಲ್ಲಿ ಒಂದು ಮಗು ಬಂತು. ಹುಟ್ಟುವಾಗಲೇ ‘ಸಿಕ್’ ಆಗಿ ಹುಟ್ಟಿದ್ದಳು. ಉಸಿರುಗಟ್ಟಿದವಳಂತೆ ಯಾವಾಗಲೂ ಆಯಾಸಗೊಂಡಂತೆ ಇರುತ್ತಿದ್ದಳು. ಅವಳಿಗೆ ಗಾಳಿಯಾಡಲು ಇಡೀ ದಿನ ಬಾಗಿಲು, ಕಿಟಕಿಗಳನ್ನು ತೆರೆದಿಡುತ್ತಿದ್ದರು. ಚಿಟಿಕೆ ಉಸಿರಿಗಾಗಿ ಆ ಮಗು ಎದೆ ಬಿರಿಯುವಂತೆ ಅಳುತ್ತಿದ್ದಳು. ಅವರಿಬ್ಬರಿಗೂ ಕೂಡ ಗಾಳಿ ಬೀಸುವುದು ನಿಂತು ಹೋದಂತೆ, ಸುತ್ತಲೂ ಕಬ್ಬಿಣದ ಗೋಡೆಗಳು ತಲೆ ಎತ್ತಿದಂತೆ ಭಾಸವಾಗುತ್ತಿತ್ತು. ಏಪ್ರಿಲ್ ತಿಂಗಳಲ್ಲಿ ಮಗುವನ್ನು ಮನೆಯಿಂದ, ಆಸ್ಪತ್ರೆಯ ಐಸಿಯುಗೆ ಕರೆತಂದರು. ಪೂರ್ಣಳ ಕಂಗಳಲ್ಲಿ ಬೆಳಕು ಮಾಯವಾಯ್ತು. ಮಗುವಿನ ಪಕ್ಕದಲ್ಲೇ, ನಿರ್ಭಾವುಕ ನೋಟದಿಂದ ನಿದ್ರೆ ಕೂಡಾ ಮಾಡದೇ ಕೂತಿರುತ್ತಿದ್ದಳು. ಕೊಂಚ ಜೊಂಪು ಹತ್ತಿದರೂ ಬೆಚ್ಚಿಬಿದ್ದು ಎದ್ದು ಬಿಡುತ್ತಿದ್ದಳು. + +ಮೇ ತಿಂಗಳ ಎಂಟನೇ ತಾರೀಖಿನ ಸಂಜೆ ಹೊತ್ತು ಎಲ್ಲ ದಿಕ್ಕಿನಿಂದಲೂ ಸೂರ್ಯನ ಪ್ರಖರತೆಯ ಬೆಂಕಿಯ ಕೆನ್ನಾಲಿಗೆಗಳು ಬೀಸುತ್ತಿದ್ದ ಸಮಯ. ಆಸ್ಪತ್ರೆಯಿಂದ ಅವರಿಬ್ಬರೇ ಮನೆಗೆ ಬಂದರು. ನಂತರ ಆ ಮನೆಯಲ್ಲಿ ಮಗು ಕಾಣಿಸಲೇ ಇಲ್ಲ. + +ಆ ದಿನ ಪೂರ್ಣ ತುಂಬಾ ದಿನಗಳ ನಂತರ ನಿದ್ರೆ ಮಾಡಿದಳು. ಸುಮಾರು ಇಪ್ಪತ್ತಾರು ತಾಸು ನಿದ್ರೆ ಮಾಡಿದಳು. ಆದರೆ ಆ ನಿದ್ರೆಯಲ್ಲಿ ಸುಂದರ್ ಇಷ್ಟ ಪಡುವ ಸೌಂದರ್ಯವಿರಲಿಲ್ಲ. ಜೀವವಿಲ್ಲದ ವ್ಯಕ್ತಿಯಂತೆ ಹಾಸಿಗೆಯ ಮೇಲೆ ನಿಸ್ತೇಜಳಾಗಿ ಬಿದ್ದಿದ್ದಳು. ಸುಂದರ್ ತುಂಬಾ ಸಲ ಆಕೆಯ ಮೂಗಿನ ಬಳಿ ಕೈಯಿಟ್ಟು, ಶ್ವಾಸವಿದೆಯೇ ಇಲ್ಲವೇ ಎಂದು ನೋಡುತ್ತಿದ್ದ. + +2002 + +ಆ ದಿನ ಬೆಳಿಗ್ಗೆಯೇ ಸುಂದರ್ ಎಚ್ಚರಗೊಂಡ, ಪೂರ್ಣ ಆ ಹೊತ್ತಿಗಾಗಲೇ ಎದ್ದು ಪೂರ್ವಕ್ಕೆ ಮುಖ ಮಾಡಿ ಕೂತಿದ್ದಳು. ಕನಸುಗಳು ಆಕೆಯನ್ನು ವಿಚಲಿತಗೊಳಿಸಿದಾಗ ಆಕೆ ಹಾಗೆ ತೆರೆದ ಕಣ್ಣುಗಳೊಂದಿಗೆ ವಿಸ್ಮಯ ಮತ್ತು ಗೊಂದಲಗಳಿಂದ ಸುಸ್ತಾಗುತ್ತಾಳೆ.“ಏನು ಕನಸು ಕಂಡಿದ್ದೀಯಾ?” ಕೇಳಿದ ಸುಂದರ್.“ಕನಸಲ್ಲಿ ಸತ್ತು ಹೋದ ಮಗುವನ್ನು ಹಡೆದಂತೆ… ಮಗು ಸತ್ತಿಲ್ಲ ಮಲಗಿದೆ ಎಂದು ನೀನು ಹೇಳುತ್ತಿದ್ದೀ” ಎಂದಳು ಗಾಢವಾಗಿ ನಿಟ್ಟುಸಿರು ಬಿಡುತ್ತಾ. ಆ ದಿನ ಭಾನುವಾರ. ಸುಂದರ್‍ಗೆ ಹಸಿವಾಗಿತ್ತು. ಪೂರ್ಣ ಎದ್ದು ತಿಂಡಿ ತಯಾರಿಸುವ ಕಾರ್ಯಕ್ರಮದ ಗೊಡವೆಗೆ ಹೋಗಲಿಲ್ಲ. ಒಳ್ಳೆಯ ಕನಸಿಗಾಗಿ ಇನ್ನೊಂದೆರಡು ತಾಸು ಮಲಗಲು ನಿರ್ಧರಿಸಿದ್ದಳು. ಸುಂದರ್ ಹಸಿವೆ ತಡೆಯಲಾರದೇ ಎದ್ದು ಅಡುಗೆ ಕೋಣೆಗೆ ಹೋಗಿ ಆಮ್ಲೆಟ್ ಹಾಕಿಕೊಂಡು ತಿಂದ. + +ಮಧ್ಯಾಹ್ನ ಅವರಿಬ್ಬರೂ ಸಿಟಿಯಲ್ಲಿ ಸುತ್ತಾಡಲು ನಿರ್ಧರಿಸಿದರು. ಪೂರ್ಣ ಲುಂಬಿನಿ ಪಾರ್ಕ್‍ನಲ್ಲಿ ಬೋಟ್ ರೈಡ್ ಮಾಡುತ್ತಿರುವಾಗ ಸುಂದರ್ ಕೋಠಿ ಕಡೆ ಹೋಗಿ ಫ್ರಾಯಿಡ್ ಬರೆದ ‘ಇಂಟರಪ್ಟೇಶನ್ಸ್ ಆಫ್ ಡ್ರೀಮ್ಸ್’ ಪುಸ್ತಕ ಕೊಂಡು ತಂದ. ಬರುವಾಗ ಇಬ್ಬರೂ ಇರಾನಿ ರೆಸ್ಟಾರೆಂಟ್‍ಗೆ ಹೋದರು. ಈಗಲೇ ಬರುತ್ತೇನೆಂದು ಹೇಳಿ ಹೋಗಿ, ಪಕ್ಕದ ಬಾರ್‍ನಲ್ಲಿ ಎರಡು ಪೆಗ್ ವಿಸ್ಕಿ ಸೇವಿಸಿ ಬಂದ. ಆ ಸಂಜೆ ಸುಂದರ್ ವಿಸ್ಕಿ ಕೊಟ್ಟ ಕಿಕ್‍ನಿಂದ ಪೂರ್ಣಳಿಗೆ ಉಚಿತವಾಗಿ ಸಮಕಾಲೀನ ರಾಜಕೀಯ ವಿಶ್ಲೇಷಣೆ ಕೊಟ್ಟ. ಜೇಬಿನಲ್ಲಿ ತುಂಬಾ ದಿನಗಳಿಂದ ಬಚ್ಚಿಟ್ಟುಕೊಂಡಿದ್ದ ಸಿ.ವಿ. ಪತ್ರವನ್ನು ದೊಡ್ಡ ದನಿಯಲ್ಲಿ ಓದಿದ. ಥಟ್ಟನೆ ದುಃಖ ಉಮ್ಮಳಿಸಿ ಬಂದು ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ಜೋರಾಗಿ ಅತ್ತ. ಪೂರ್ಣಳಲ್ಲಿ ಯಾವುದೇ ಸ್ಪಂದನೆ ಇರಲಿಲ್ಲ. ಸಿನಿಮಾದ ದೃಶ್ಯವೊಂದನ್ನು ನೋಡುತ್ತಿರುವಂತೆ ಅವನನ್ನು ನೋಡಿದಳು. + +ಆ ರಾತ್ರಿ ಸುಂದರ್ ‘ಫ್ರಾಯಿಡ್ ಕನಸುಗಳ ವಿಶ್ಲೇಷಣಾ ಪುಸ್ತಕವನ್ನು ಆಸಕ್ತಿಯಿಂದ ಓದಲಾರಂಭಿಸಿದ. ಪೂರ್ಣಳಿಗೆ ಕಳೆದ ಒಂದು ತಿಂಗಳಿಂದ ಬರುತ್ತಿದ್ದ ಕನಸುಗಳನ್ನು ನೋಟ್ ಮಾಡಿಕೊಂಡು, ಅವುಗಳನ್ನು ವಿಶ್ಲೇಷಣೆ ಮಾಡತೊಡಗಿದ. ಪೂರ್ಣ ಕನ್ನಡಿಯ ಮುಂದೆ ಕುಳಿತು, ಕೂದಲಿಗೆ ವಿಧ ವಿಧವಾದ ಎಣ್ಣೆಗಳನ್ನು ಹಚ್ಚಿ ನಾಲ್ಕೈದು ರೀತಿಯಲ್ಲಿ ಬಾಚಿಕೊಂಡಳು. ಆರು ವರ್ಷಗಳ ಹಿಂದೆ ತನ್ನ ತಲೆಕೂದಲು ಎಷ್ಟೊಂದು ಒತ್ತಾಗಿ, ಉದ್ದವಾಗಿದ್ದುದುನ್ನು ನೆನಪಿಸಿಕೊಂಡು ದಿಗಿಲುಗೊಂಡಳು. ಪೂರ್ಣ ರಾತ್ರಿ ತನ್ನ ಕೂದಲಿಗೆ ಮೆಹಂದಿ ಹಚ್ಚಿಕೊಂಡಳು. ಕೂದಲನ್ನು ಒಣಗಿಸಿಕೊಳ್ಳುತ್ತಾ ಮಲಗುವ ಕೋಣೆಗೆ ಬಂದಳು. ಸುಂದರ್ ಓದುತ್ತಿದ್ದ ಫ್ರಾಯಿಡ್ ಪುಸ್ತಕವನ್ನು ಹಾಸಿಗೆ ಕೆಳಗೆ ಬಚ್ಚಿಟ್ಟು, ಹೊಸದಾಗಿ ಕೂದಲಿಗೆ ಬಣ್ಣ ಹಾಕಿ ಹಾರುವ ಕೂದಲಿಂದ, ಕನಸಿನ ಹುಡುಗಿಯಂತಿದ್ದ ಪೂರ್ಣಳನ್ನು ನೋಡುತ್ತಾ “ಎಷ್ಟು ಸುಂದರವಾಗಿದಿಯಾ ಗೊತ್ತ?” ಎಂದ ತನ್ಮಯತೆಯಿಂದ. + +“ಹೂ” ಎಂದಳು ಪೂರ್ಣ. ಸುಂದರ್ ಪಕ್ಕದಲ್ಲೇ ಮಲಗಿ ಫ್ಯಾನ್‍ಗಾಳಿಗೆ ಹಾರುತ್ತಿದ್ದ ಕೂದಲು ಸುಂದರ್ ಮುಖದ ಮೇಲೆ ಹರಡುತ್ತಿದ್ದಂತೆ ಪೂರ್ಣ ತನ್ನ ಹೊಸ ಕನಸಿನ ಕುರಿತು ಹೇಳಲಾರಂಭಿಸಿದಳು.“ನಾನು ಮತ್ತೇ ತಾರ್ನಾಕಕ್ಕೆ ಹೋದೆ. ನನ್ನ ಕೈಯಲ್ಲಿ ಕ್ಯಾಮರಾ. ನಾವು ಸುತ್ತಾಡಿದ ಪ್ರದೇಶಗಳು, ನಮ್ಮ ಹಳೆಯ ಮನೆ, ಸಿ.ವಿ. ವಾಸಿಸುತ್ತಿದ್ದ ಕೋಣೆ, ನೆನಪಿರುವ ಪ್ರತಿಯೊಂದನ್ನು ಫೋಟೋ ತೆಗೆಯುತ್ತಿದ್ದೆ. ಯೂನಿವರ್ಸಿಟಿ ಹಾಸ್ಟೆಲ್ ಹತ್ತಿರ ಸಿ.ವಿ. ಕಾಣಿಸಿದ. ಅಲ್ಲಿನ ಬೆಂಚೊಂದರ ಮೇಲೆ ಮಲಗಿದ್ದ. ಎಬ್ಬಿಸಲು ಹತ್ತಿರ ಹೋಗುವಷ್ಟರಲ್ಲಿ ‘ಎಬ್ಬಿಸಬೇಡಿ ಎಬ್ಬಿಸಬೇಡಿ, ಗಾಢವಾದ ನಿದ್ರೆಯನ್ನು ಕನಸುತ್ತಿದ್ದಾನೆ’ ಎಂದರು ಯಾರೊ. ರಸ್ತೆ ಮೇಲೆ ಒಂದು ದೊಡ್ಡ ಮೆರವಣಿಗೆ. ‘ನಮ್ಮ ನಿದ್ರೆಯನ್ನು ನಮಗೆ ಕೊಡಿ’ ಎಂದು ಕೂಗುತ್ತಿದ್ದಾರೆ. ‘ಮೇಕ್ ಲವ್, ಸ್ಲೀಪ್‍ವೆಲ್’ ಎಂಬ ನಿನಾದಗಳನ್ನು ಮಾಡುತ್ತಿದ್ದರು. ‘ನಾವು ಮತ್ತೇ ಮದುವೆಯಾಗೋಣವೆಂದು’ ಎಸ್.ಎಮ್.ಎಸ್. ಮೂಲಕ ನನಗೆ ಪ್ರಪೋಜ್ ಮಾಡುತ್ತಿದ್ದೀ. ಅಷ್ಟರಲ್ಲಿ ಸಿ.ವಿ. ನಿದ್ರೆಯಿಂದೆದ್ದು ಶಾಲಿನ ಕೆಳಗೆ ಅವಿತಿಟ್ಟಿದ್ದ ರೆಕ್ಕೆಗಳನ್ನು ಬಿಚ್ಚಿ ಹಾರುತ್ತಾ ಹೊರಟು ಹೋದ.” + + + +ಆ ರಾತ್ರಿ ಅವರಿಬ್ಬರೂ ಕನಸುಗಳ ಬಗ್ಗೆ ತುಂಬಾ ಹೊತ್ತು ಮಾತಾಡಿಕೊಂಡರು. ಉತ್ಸಾಹದಿಂದ ಇಷ್ಟದಿಂದ ಪೂರ್ಣಳನ್ನು ಹತ್ತಿರ ಸೆಳೆದುಕೊಂಡ ಸುಂದರ್. ಸುಂದರ್ ಮಲಗಿದ ಮೇಲೂ ಎಚ್ಚರದಿಂದಿದ್ದಳು ಪೂರ್ಣ. ಈಗ ಆಕೆಗೆ ಮಲಗಿದ ತಕ್ಷಣ ನಿದ್ರೆ ಹತ್ತುತ್ತಿಲ್ಲ. ಎರಡು ಮೂರು ತಾಸು ಹಾಗೆಯೇ ಕಣ್ಮುಚ್ಚಿಕೊಂಡು ಸೀಲಿಂಗ್ ಫ್ಯಾನ್ ಕಡೆಗೋ, ದೂರದಲ್ಲಿ ಮಿನುಗುವ ದೀಪದ ಕಡೆಗೋ ನೋಡುತ್ತಿರುತ್ತಾಳೆ. ತುಂಬಾ ಸಲ ನಿಟ್ಟುಸಿರು ಬಿಡುತ್ತಾಳೆ. ವಿನಾಕಾರಣ ಕಣ್ಣಲ್ಲಿ ನೀರು ಉಕ್ಕುತ್ತದೆ. ಸುಂದರ್ ಮೆಲೆ ಕೋಪ ಬರುತ್ತದೆ. ಆಸ್ಪತ್ರೆ ಕೋಣೆ, ಮರಣಿಸಿದ ಮಗು, ಕಿಕ್ಕಿರಿದ ರಸ್ತೆಗಳು, ನಿರ್ಲಿಪ್ತವಾಗಿ ನಡೆಯುತ್ತಿರುವ ಜನ, ಲಾಠೀ ಚಾರ್ಜ್, ಮುಷ್ಕರ, ಮಾರ್ಚುರಿ, ಹೊರಗೆ ಮಲಗಿಸಿದ ಶವಗಳು ಹೀಗೆ ಹಲವಾರು ದೃಶ್ಯಗಳು ಕಣ್ಮುಂದೆ ಸುಳಿದು ಭಯ ಭೀತಳಾಗುತ್ತಾಳೆ ಪೂರ್ಣ. ಸುಂದರ್‍ನನ್ನು ಗಟ್ಟಿಯಾಗಿ ಅವಚಿ ಕೊಂಡು ಬಾರದ ನಿದ್ರೆಗಾಗಿ ಒದ್ದಾಡುತ್ತಾಳೆ. + +ಆ ಮಾರನೆಯ ದಿನ ಸಾಯಂಕಾಲ ಪೂರ್ಣ ಆಫೀಸಿನಿಂದ ಬರುತ್ತಾ ಚಾಕಲೆಟ್, ಮಲ್ಲಿಗೆದಂಡೆ ಕೊಂಡು ಹ್ಯಾಂಡ್‍ಬ್ಯಾಗ್‍ನಲ್ಲಿಟ್ಟುಕೊಂಡಳು. ಯುದ್ಧಭೂಮಿಯಿಂದ ಬರುತ್ತಿದ್ದಂತೆ ಜನ, ಅವರನ್ನು ಹಾಯ್ದುಕೊಂಡು ಬಸ್ ಸ್ಟಾಪಿನಲ್ಲಿ ನಿಂತಿರುವಾಗ, ಮೋಟಾರ್ ಬೈಕ್ ಮೇಲೆ ಹೋಗುತ್ತಿದ್ದ ಇಬ್ಬರು ಹುಡುಗರು, ಆಕೆಯ ಪಕ್ಕದಲ್ಲಿ ಹೋಗುತ್ತಾ ಆಕೆಯ ಹ್ಯಾಂಡ್‍ಬ್ಯಾಗನ್ನು ಸರಕ್ಕನೆ ಎಳೆದು ಕ್ಷಣಗಳಲ್ಲಿ ಮಾಯವಾದರು. ಜನರೆಲ್ಲರೂ ಪೂರ್ಣಳನ್ನು ಸುತ್ತುವರೆದು, ಸಮಾಧಾನ ಹೇಳಿ, ಪೊಲೀಸ್ ಕಂಪ್ಲೇಂಟ್ ಕೊಡಲು ಸಲಹೆ ನೀಡಿದರು. ಅದರಿಂದ ಉಪಯೋಗವಿಲ್ಲವೆಂದು ಪೂರ್ಣಳಿಗೆ ಗೊತ್ತು. ತುಂಬಾ ಹೊತ್ತು ಅಲ್ಲೇ ನಿಂತಿದ್ದಳು ಆಕೆ. ಬಸ್ ಟಿಕೆಟ್‍ಗೆ ಸಹಿತ ಹಣವಿರಲಿಲ್ಲ. ಪೇವ್‍ಮೆಂಟ್ ಮೇಲೆ ನಡೆಯುತ್ತಾ ಮನೆ ಕಡೆ ಹೆಜ್ಜೆ ಹಾಕತೊಡಗಿದಳು.“ಬದುಕು ಹೀಗಾದರೆ ಒಳ್ಳೆಯ ಕನಸುಗಳು, ಒಳ್ಳೆಯ ನಿದ್ರೆ ಬರುವುದಾದರೂ ಹೇಗೆ” ಎಂದು ಕೊಂಡಳು. + +2004 + +ಸುಂದರ್‍ಗೆ ಆ ದಿನ ಸಂಜೆ ಐದು, ಆರು ಗಂಟೆಗಳ ನಡುವೆ ಸುಮಾರು ಇನ್ನೂರಕ್ಕೂ ಹೆಚ್ಚು ಎಸ್‍ಎಂಎಸ್ ಬಂದವು. ಎಲ್ಲ ಮೆಸೇಜ್‍ಗಳಲ್ಲಿ ಅವನನ್ನು ‘ಟ್ರೈಟರ್’ ಎಂದು, ‘ಬ್ರೋಕರ್’ ಎಂದು ‘ಥರ್ಡ್‍ರೇಟ್ ಪಿಂಪ್’ ಎಂದು ಹೇಳಲಾಗದ ಭಾಷೆಯಲ್ಲಿ ಅವನನ್ನು ಬೈಯುತ್ತಾ “ಹಣಕ್ಕಾಗಿ ಈ ಮಟ್ಟಕ್ಕೆ ಇಳಿಯಬೇಕೇ… ಹೋಗಲಿ’’ ಎಂದು ಪೂರ್ಣಳನ್ನು ಕುರಿತು ಅತ್ಯಂತ ಅಸಹ್ಯವಾದ ಬೈಗುಳ ಮೆಸೇಜ್ ನೋಡಿದ ನಂತರ, ಅವನ ಕಣ್ಣುಗಳಲ್ಲಿ ನೀರು ಉಕ್ಕಿಬಂದವು. ದುಃಖ ಮುದ್ರೆಯಲ್ಲಿರುವ ಗೌತಮನಂತೆ ತುಂಬಾ ಹೊತ್ತು ಕಳೆದು, ಮನೆಯಲ್ಲಿ ಉಳಿದಿದ್ದ ಕೊನೆಯ ನೂರು ರೂಪಾಯಿಗಳಿಗೆ ಪರೋಟ, ಒಂದು ಬಿಯರ್ ಪಾರ್ಸಲ್ ಮಾಡಿಸಿಕೊಂಡ. ಬಿಯರ್ ಪೂರ್ತಿಯಾಗಿ ಕುಡಿದು, ಬೆಡ್‍ರೂಮಿಗೆ ಹೋಗಿ ಹಾಸಿಗೆಯನ್ನು ಪ್ರೀತಿಯಿಂದ ನೇವರಿಸಿ, ಎರಡು ಮಸ್ಕಿಟೋ ಕಾಯಿಲ್‍ಗಳನ್ನು ಹೊತ್ತಿಸಿಕೊಂಡು ಏಳು ಗಂಟೆಗೆಲ್ಲಾ ನಿದ್ದೆ ಹೋದ. ನಿದ್ರೆಯಲ್ಲಿ ಅವನೊಬ್ಬ ಹೆಣ್ಣಿನ ಕುರಿತು ಕನಸುಕಂಡ(ಆಕೆ ಪೂರ್ಣಳಲ್ಲ). ಆ ಹೆಂಗಸು ನಗ್ನವಾಗಿ ಮಲಗಿದ್ದಳು. ದೇಹದ ತುಂಬಾ ನೂರರ ನೋಟುಗಳನ್ನು ಹೊದ್ದುಕೊಂಡಿದ್ದಳು. ಸುಂದರ್ ಆಕೆಯ ಮೇಲೆ ಬಾಗಿ, ಆಕೆಯ ತುಟಿಗಳನ್ನು ಚುಂಬಿಸಲು ಪ್ರಯತ್ನಿಸಿದ. ಆಕೆಯ ತುಟಿಗಳು ಕಬ್ಬಿಣದಂತೆ ತುಕ್ಕು ಹಿಡಿದ ವಾಸನೆ ಅಪ್ಪಳಿಸಿ, ಥೂ ಥೂ ಎಂದು ಉಗಿಯುತ್ತಾ ನಿದ್ದೆಯಿಂದೆದ್ದ. ತಣ್ಣನೆ ನೀರಿನಿಂದ ಮುಖ ತೊಳೆದ ಮೇಲೆ ಅವನಿಗೆ ತುಂಬಾ ವಿಷಯಗಳು ಅರ್ಥವಾದವು. ತಾನು ಜೈಲಲ್ಲಿದ್ದ ಹದಿನೈದು ದಿನಗಳಲ್ಲಿ ಸಾಕಷ್ಟು ಸಲ ಮನೆಯ ಮೇಲೆ ದಾಳಿ ನಡೆದಿವೆ. ಭಯಗೊಂಡ ಪೂರ್ಣ ತಿಂಗಳು ತುಂಬಿದ ಮಗುವಿನೊಂದಿಗೆ ತವರಿಗೆ ಹೋಗಿದ್ದಾಳೆ. ಮನೆಯೆಲ್ಲ ಧ್ವಂಸ ಮಾಡಲಾಗಿದೆ. ಸಿಕ್ಕಿದ್ದು ದೋಚಿದ್ದಾರೆ. ನೂರಾರು ಸಿಡಿಗಳು, ಕಂಪ್ಯೂಟರ್, ಮನೆ ಮುಂದಿನ ಮೋಟಾರ್ ಸೈಕಲ್, ಬಟ್ಟೆಗಳು, ಬೀರು ಯಾವುದನ್ನು ಉಳಿಸಿರಲಿಲ್ಲ. + +ಸುಂದರ್ ಹಾಸಿಗೆಯ ಮೇಲೆ ನಿಸ್ತೇಜನಾಗಿ ಕುಳಿತುಕೊಂಡ. ಗೋಡೆಯ ಮೇಲಿನ ಫೋಟೋಗಳು, ಕೊನೆಗೆ ಮದುವೆ ಫೋಟೋ ಕೂಡಾ ಮಾಯವಾಗಿತ್ತು. ಎದೆಯಲ್ಲಿ ಸಣ್ಣದಾಗಿ ನೋವು, ಭರಿಸಲಾರದಷ್ಟಾಗಿ ಉನ್ಮಾದದಿಂದ ಜೋರಾಗಿ ಅತ್ತ. + +ಆಗಸ್ಟ್ ತಿಂಗಳು 2004ನೇ ವರ್ಷ. ಮಳೆಗಾಲ ನಿಂತು ಹೋಗಿ ಮತ್ತೆ ಬೇಸಿಗೆ ಆರಂಭಗೊಂಡಿತ್ತು. ಬಿಸಿಲ ಬೇಗೆ, ತಡೆಯಲಾರದ ಸೆಖೆ. ಎಲ್ಲೂ ಎಳ್ಳಷ್ಟು ಗಾಳಿಯಿಲ್ಲ. ಒಂದು ವರ್ಷದ ಹಿಂದೆ ಸುಂದರ್ ಕೆಲಸ ಕಳೆದುಕೊಂಡಿದ್ದ ಪ್ರಾಥಮಿಕ ಶಾಲಾ ಶಿಕ್ಷಕ ಆತ. ಏಳೆಂಟು ವರ್ಷದ ಮಕ್ಕಳು, ಮಕ್ಕಳ ನಡುವೆ ಕೂತು ಪಾಠ ಹೇಳಿಕೊಡೋದು ಆತನಿಗೆ ಇಷ್ಟ. ಒಬ್ಬನು ತಲೆಗೂದಲಿನಲ್ಲಿ ಕೈತೂರಿಸಿ ಆಟವಾಡಿಕೊಳ್ತಿದ್ದ. ಮತ್ತೊಬ್ಬ, ಸುಂದರನ ಬೆನ್ನ ಮೇಲೆ ಏಟು ಹಾಕುತ್ತಾ, ಇನ್ನೊಬ್ಬ ಆತನ ಜೇಬಿನಿಂದ ಪೆನ್ ತೆಗೆದು, ಆತನ ಕನ್ನಡಕವನ್ನು ಇಟ್ಟುಕೊಂಡು, ಸ್ವಲ್ಪ ಹೊತ್ತು ಆಟವಾಡಿ ಮಕ್ಕಳಿಗೆ ಒಂದಿಷ್ಟು ಪಾಠ ಹೇಳಿ ಕೊಟ್ಟು; ಆದರೆ ಹೆಡ್ ಮಾಸ್ತರರಿಗೆ ಇದು ಇಷ್ಟವಿರುತ್ತಿರಲಿಲ್ಲ. ಮಕ್ಕಳನ್ನು ದಂಡಿಸಿ, ಹೆದರಿಸಿ, ಓದು ಕಲಿಸಬೇಕೆಂದು ಆತನ ಥಿಯರಿ. ‘ಚರ್ಮ ಸುಲಿಯಿರಿ. ಹಾಳಾದವರನ್ನು’ ಎನ್ನುತ್ತಿದ್ದ. ಅದೇ ಹೆಸರಿನ ಶೀರ್ಷಿಕೆಯಿಂದ ಸುಂದರ್ ದಿನಪತ್ರಿಕೆಯೊಂದಕ್ಕೆ ಲೇಖನ ಬರೆದ. ಹೆಡ್‍ಮಾಸ್ತರ್ ಬಗ್ಗೆ, ಶಾಲೆಯ ಬಗ್ಗೆ ಒಟ್ಟು ವ್ಯವಸ್ಥೆಯನ್ನು ಜಾಲಾಡಿದ. ಆ ಲೇಖನ ಬರೆದದ್ದಕ್ಕೆ ಸುಂದರ್‍ಗೆ ಮೆಮೋ ಕೊಟ್ಟರು. ಮತ್ತೊಮ್ಮೆ ಹೆಡ್ ಮಾಸ್ಟರ್ + +ವಿದ್ಯಾರ್ಥಿಯೊಬ್ಬನನ್ನು ಬಿಸಿಲಲ್ಲಿ ಒಂಟಿ ಕಾಲಿನ ಮೇಲೆ ನಿಲ್ಲಿಸಿ ‘ಐ ಯಾಮ್ ಎ ಡಾಂಕಿ’ ಎಂದು ಬಾಯಿ ಪಾಠ ಮಾಡಿಸುತ್ತಿದ್ದರು. ಸಿಟ್ಟು ತಡೆದುಕೊಳ್ಳಲಾರದೇ ಸುಂದರ್, ಹೆಡ್‍ಮಾಸ್ತರ್‍ರ ಕಪಾಳಕ್ಕೆ ಬಾರಿಸಿದ. ನಂತರ ಸಸ್ಪೆನ್ಶನ್ ವಿಚಾರಣೆ, ಅಮಾನತು ಕೋರ್ಟ್‍ಕೇಸು ಇನ್ನೂ ನಡೆಯುತ್ತಿತ್ತು. ಸುಂದರ್‍ಗೆ ಕೆಲಸ ಹೋಗಿ ಆರು ತಿಂಗಳು ದಾಟಿತ್ತು. ಕೆಲಸ ಕಳೆದುಕೊಂಡ ಹೊಸತರಲ್ಲಿ ಪತ್ರಿಕೆಗಳಿಗೆ ಲೇಖನಗಳನ್ನು ಬರೆದು ಬದುಕು ಸಾಗಿಸಬಹುದೆಂದು ಭಾವಿಸಿದ್ದ. ಅದು ಸಾಧ್ಯವಾಗದೆಂದು ಅರ್ಥವಾಯಿತು. ಪಾರ್ಟ್ ಟೈಂ ಕೆಲಸ ಹುಡುಕೋದು ತುಂಬಾ ಸರಳವೆಂದು ಭಾವಿಸಿದ್ದ. ಅದೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಪೂರ್ಣ ಬೋಟಿಕ್ ಅಂಗಡಿಯೊಂದರಲ್ಲಿ ಸೇಲ್ಸ್ ಲೇಡಿಯಾಗಿ ಸೇರಬೇಕಾಗಿಬಂತು. + +ಮಳೆ ಬರುತ್ತಿದ್ದ ಒಂದು ರಾತ್ರಿ ಪೂರ್ಣ ಅವನ ಎದೆಯ ಮೇಲೆ ತಲೆಯಿಟ್ಟು ನಿದ್ರಿಸುತ್ತಿರುವಾಗ, ಸಣ್ಣದಾಗಿ ಮಳೆ ಹನಿಗಳು, ಗುಡುಗು ಸಿಡಿಲುಗಳು; ಎಚ್ಚರಗೊಂಡ ಪೂರ್ಣ ಹೊರಗೆ ಹೋಗಿ ಬಾಗಿಲು ತೆರೆದು ತಂಗಾಳಿ ಬೆರೆತ ಮಳೆಯಲ್ಲಿ ನೆನೆಯುತ್ತಾ ಹಾಡೊಂದನ್ನು ಹಮ್ ಮಾಡುತ್ತಾ; ಆ ಮಳೆ ಮನೋಹರವಾದ ಕನಸಿನಂತೆ ಪೂರ್ಣಳನ್ನು ಆವರಿಸಿ, ಅವಳನ್ನು ಟ್ರಾನ್ಸ್‍ನೊಳಕ್ಕೆ ಕರೆದೊಯ್ಯಿತು. ವರಂಡಾದ ಹೊರಗೆ ಮೋಹಕ ತಂಗಾಳಿಯ ಮತ್ತಿನಲ್ಲಿ ಹಾಗೆಯೇ ನಿದ್ರಾ ಪರವಶಳಾದಳು. + +ನಡುರಾತ್ರಿ ಯಾವಾಗಲೋ ನಿದ್ರೆಯಿಂದೆದ್ದ ಸುಂದರ್ ಹಾಸಿಗೆಯನ್ನು ಸವರಿದ. ಹಾಸಿಗೆ ಪೂರ್ಣಳಂತೆ ವಾಸನೆ ಬಂತಾಗಲೀ, ಪೂರ್ಣ ಅಲ್ಲಿರಲಿಲ್ಲ. ಸುಂದರ್‍ಗೆ ಭಯವಾಯ್ತು. ಉದ್ಯೋಗವಿಲ್ಲವೆಂದು, ಬದುಕಲು ಅಸಾಧ್ಯವೆಂದೂ, ತನ್ನನ್ನು ಬಿಟ್ಟು ಹೋಗಿರಬಹುದೆಂದು… ಭಯದಿಂದ ಕೂಗಿದ ಸುಂದರ್.“ಪೂರ್ಣ ಪೂರ್ಣಾ ಹೀಗೇಕೆ ಮಾಡಿದೆ?” ಎಂದು ಜೋರಾಗಿ ಅತ್ತ. ತುಂಬಾ ಹೊತ್ತು ಆ ರೀತಿ ಅತ್ತ ನಂತರ ಪೂರ್ಣ ಪ್ರತ್ಯಕ್ಷಳಾದಳು.“ಕೆಟ್ಟ ಕನಸೇ? ಹೆದರಿ ಬಿಟ್ರಾ?” ಎಂದಳು.“ಹಾಗೆ ಹೆದರಿ ಬಿಟ್ಟರೆ ಹೇಗೆ?” ಎಂದು ಮುಂದಕ್ಕೆ ಬಾಗಿ, ಅವನ ತಲೆಯನ್ನು ಮೃದುವಾಗಿ ಸವರಿದಳು. ಆ ಸಾಂತ್ವಾನ ಇನ್ನೂ ಸುಂದರ್‍ನಲ್ಲಿ ಇಳಿದಿರಲಿಲ್ಲ. ಅವನನ್ನು ಭಯ ಪೂರ್ತಿಯಾಗಿ ಆವಾಹಿಸಿತ್ತು. ಆ ಭಯದೊಳಗಿಂದ ಹೊಸ ಸುಂದರ್ ಅವತರಿಸಿದ. ಹಿಪ್ನಾಟಿಸಂನಲ್ಲಿ ಹದಿನೈದು ದಿನಗಳ ಕೋರ್ಸ್ ತೆಗೆದುಕೊಂಡ. ಸ್ವಲ್ಪ ತಂತ್ರಶಾಸ್ತ್ರ ಕಲಿತುಕೊಂಡ. ಕ್ರಮವಾಗಿ ಆತ ದೀರ್ಘವಾಗಿ ಆಲೋಚಿಸುವುದು, ತತ್ವಜ್ಞಾನಿಯಂತೆ ಮಾತನಾಡುವುದು(ದಟ್ಟವಾಗಿ ದಾಡಿ ಬೆಳೆಸಿದ), ಸಾಂಕೇತಿಕ ಕನಸುಗಳನ್ನು ಕಾಣಲಾರಂಭಿಸಿದ. ದಿನಪತ್ರಿಕೆಯಲ್ಲಿ ‘ನಿಮ್ಮ ಬದುಕನ್ನು ಬದಲಿಸುವ ಹತ್ತು ಸೂತ್ರಗಳಿಗಾಗಿ ಈ ಮೊಬೈಲ್‍ನಂಬರ್‍ಗೆ ಕರೆ ಮಾಡಿ’ ಎಂದು ಜಾಹಿರಾತು ಕೊಟ್ಟ. + +‘ಗಾಢವಾಗಿ ನಿದ್ರಿಸುವುದು ಹೇಗೆ?’, ‘ವಿಜಯಪಥವನ್ನು ನಿಮ್ಮ ಗುಲಾಮನನ್ನಾಗಿ ಮಾಡಿಕೊಳ್ಳುವುದು ಹೇಗೆ?’ ‘ಆರು ತಿಂಗಳಲ್ಲಿ ಲಕ್ಷಾಧಿಪತಿಯಾಗುವುದು ಹೇಗೆ?, ‘ಬಯಸಿದ ಹೆಣ್ಣನ್ನು ಪಡೆಯುವುದು ಹೇಗೆ?’, ‘ಸೆಕ್ಸ್ ಜೀವನ ಕಹಿಯಾಗಿದೆಯೇ? ಅಮೃತವನ್ನು ಪಡೆಯುವುದು ಹೇಗೆ? ಎಂದು ಸಾಲಾಗಿ ಜಾಹೀರಾತುಗಳನ್ನು ಕೊಟ್ಟ. ಸಾವಿರ ಸಾವಿರ ಸಂಖ್ಯೆಗಳಲ್ಲಿ ಅವನಿಗೆ ಎಸ್‍ಎಂಎಸ್‍ಗಳು ಬಂದವು. ಎಲ್ಲರಿಗೂ ನೂರು ರೂಪಾಯಿಗಳನ್ನು ಕಳಿಸಲು ಕೋರುತ್ತಿದ್ದ. ಇಪ್ಪತ್ತು ಪುಟಗಳ ಪುಸ್ತಕವನ್ನು (ಅವನು ಬರೆದದ್ದೇ) ಅವರಿಗೆ ಅಂಚೆಯಲ್ಲಿ ಕಳಿಸುತ್ತಿದ್ದ. ಅ ಪುಸ್ತಕದಲ್ಲಿ ಸೈಕಾಲಜಿ, ತಂತ್ರ, ತತ್ವಜ್ಞಾನ, ಒಂದಿಷ್ಟು ಪೋಯೆಟ್ರಿ ಇರುತ್ತಿತ್ತು. ಆಶ್ಚರ್ಯವೆಂದರೆ, ಅವುಗಳನ್ನು ಓದಿದವರು ತಮ್ಮ ಬದುಕಿನಲ್ಲಿ ಬದಲಾವಣೆ ಬಂದಿತೆಂದು ಹೇಳುತ್ತಿದ್ದರು. ವರ್ಷ ಕಳೆಯುವಷ್ಟರಲ್ಲಿ ಸುಂದರ್‍ನ ಆದಾಯ ಲಕ್ಷಗಳನ್ನು ದಾಟಿತ್ತು. ಅದೇ ಉತ್ಸಾಹದಿಂದ ‘ಆರ್ಟ್ ಆಫ್ ವಿನ್ನಿಂಗ್’ ಎಂದು ಟ್ರೈನಿಂಗ್ ಕ್ಲಾಸುಗಳನ್ನು ಪ್ರಾರಂಭಿಸಿದ. ಯೋಗಾ, ಮೆಮೊರಿ ಟೆಕ್ನಿಕ್ಸ್, ಪ್ರೀತಿಸುವುದು, ಪ್ರೀತಿಸಲ್ಪಡುವುದು… + +ಸುಂದರ್ ಕೈಗಳು ವಿಶಾಲವಾದವು. ಊಹಿಸಲಾರದಷ್ಟು ಹಣ, ಖ್ಯಾತಿ ಬಂತು. ಪೂರ್ಣಳನ್ನು ಕೆಲಸದಿಂದ ಬಿಡಿಸಿದ. ಪೂರ್ಣ ಮತ್ತೆ ಗರ್ಭಧರಿಸಿದಳು. ತಿಂಗಳು ತುಂಬಿ ಮನೋಹರವಾದ ಕನಸಿನಂತಾದಳು. ಆಕೆಯನ್ನು, ಆ ನಿದ್ರೆಯನ್ನು ನೋಡಿ ಖುಷಿಪಡುವ ಸಮಯ ಸುಂದರ್‍ಗಿರಲಿಲ್ಲ. ಮೆಮರಿ ಪಿಲ್ಸ್ ದುಷ್ಪರಿಣಾಮದಿಂದ ಹತ್ತನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಆಸ್ಪತ್ರೆ ಸೇರಿದ. ‘ಪ್ರೀತಿಸಲ್ಪಡುವುದು’ನಲ್ಲಿ ಕೋರ್ಸ್ ಮಾಡಿದ ಕಾಲೇಜು ಹುಡುಗಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಳು. ಯಾವ ಡಿಗ್ರಿ ಇಲ್ಲದೇ ಕ್ವಾಕ್‍ನಂತೆ ಸೈಕಾಲಜಿ ಕ್ಲಿನಿಕ್ ನಡೆಸುತ್ತಿದ್ದಾನೆಂದು ಪೊಲೀಸರು ಕೇಸ್ ಜಡಿದರು. ‘ಆರ್ಟ್ ಆಫ್ ವಿನ್ನಿಂಗ್’ ಮುಚ್ಚಲ್ಪಟ್ಟಿತು. ಕೋರ್ಸ್‍ಗಳಿಗೆ ಅಡ್ವಾನ್ಸ್ ಕೊಟ್ಟವರು ಅವನ ಮನೆಯ ಮೇಲೆ ದಾಳಿ ಮಾಡಿದರು. + +ಆ ರಾತ್ರಿ ನಿರ್ಜನವಾದ ಮನೆಯ ವರಂಡಾದಲ್ಲಿ ಬೆಳಕಿಲ್ಲದ ಕೋಣೆಯಲ್ಲಿ, ಮೇಲ್ಛಾವಣಿಯಿಂದ ನೂರಾರು ಕೈಗಳು, ಅವನತ್ತ ಬೆರಳು ತೋರಿಸುತ್ತಾ, ‘ಟ್ರೈಟರ್’, ‘ಟ್ರೈಟರ್’ ಎಂದು ಕೋರಸ್‍ನಲ್ಲಿ ಕೂಗುತ್ತಾ, ಹೊರಗೆ ಬೆಳದಿಂಗಳು ಬಿಳುಚಿಕೊಂಡು, ರಾತ್ರಿ ನಿಸ್ತೇಜವಾಗಿ ಕಳೆದು ಕಾಲ ಅವನೆದುರು ಮೊಳಕಾಲೂರಿ ಹೀಗೇಕೆಂದು ಪ್ರಶ್ನಿಸುತ್ತಿರುವಂತೆ, ಆರಂಭದ ದಿನಗಳ ಪೂರ್ಣ ನೆನಪಿಗೆ ಬಂದು, ಮೃದುವಾಗಿ ಆತನ ತಲೆಗೂದಲನ್ನು ನೇವರಿಸುತ್ತಾ “ಎಲ್ಲಿ ಹೋದವು ಆ ಮಧುರವಾದ ದಿನಗಳು’ ಎಂದು ಕೇಳಿದಂತಾಗಿ ದುಃಖದಂತಹ, ಹೇಳಲಾರದಂಥ ಅಳಲು ಆತನನ್ನು ಸುತ್ತುವರೆದು ಆ ರಾತ್ರಿಯೆಲ್ಲಾ ವಿಲವಿಲನೆ ಒದ್ದಾಡಿದ. ಯಾವಾಗಲೋ ಬೆಳಗಿನ ಜಾವ ಒಂದು ನಿದ್ದೆಯ ಮೋಡ ಅವನನ್ನು ಅನುಕಂಪದಿಂದ ಆವರಿಸಿತು. ಆದರೆ ಅದು ಎಂತಹ ನಿದ್ರೆ? ದಯಾ ಮೇಘ ಮಲ್ಹಾರದ ಮೇಲೆ, ಮೋಹಲೋಕಗಳಲ್ಲಿ ಸಂಚರಿಸುವಂತಹ ನಿದ್ರೆಯಲ್ಲ. ಭೀಕರವಾದ ಬೇಸಿಗೆಯ ಬಿರು ಬಿಸಿಲಲ್ಲಿ ಕೆಂಪನೆಯ ಬಂಡೆಗಳ ಮೇಲೆ ಹೊರಳಿದಂತಹ ನಿದ್ರೆ ಅದು. + +2005 + +ಪೂರ್ಣ ನಿದ್ರೆ ಮಾಡುವಾಗ, ಭೀಕರವಾಗಿ ಸದ್ದು ಮಾಡುತ್ತಾ ಹೋಗುವ ಸಿಟಿಬಸ್ ನೆನಪಿಗೆ ಬರುತ್ತದೆ. ಸೊಗಸಾಗಿ ಮಡಚಿಟ್ಟ ಸೀರೆಯ ರಾಶಿ ನೆನಪಿಗೆ ಬರುತ್ತವೆ. ವಿಶಾಲವಾದ ಹಾಸಿಗೆಯ ಮೇಲೆ ಒಂದು ಮೂಲೆಯಲ್ಲಿ ಮುದುರಿಕೊಂಡು ತಲೆಯನ್ನು ರೆಕ್ಕೆಗಳ ನಡುವೆ ಹುದುಗಿಸಿಕೊಂಡ ನೀರ ಬಾತುಕೋಳಿಯಂತೆ ಇರುತ್ತಾಳೆ. ಕನಸುಗಳೆಲ್ಲಾ ಖಾಲಿ ಮಾಡಲ್ಪಟ್ಟ ಕೇವಲ ನಿರ್ಜೀವವಾದ ನಿದ್ರೆ ಅದು. + +ಸುಂದರ್ ಈಗ ಜಾಸ್ತಿ ನಿದ್ರೆ ಮಾಡುವುದಿಲ್ಲ. ಯಾವಾಗಲಾದರೂ ಹಾಗೆ ಕಣ್ಣುಮುಚ್ಚಿದರೆ ನಿದ್ರೆಯಲ್ಲಿ ಆಕಾಶದ ನೇಣುಹಗ್ಗಕ್ಕೆ ಜೋತುಬಿದ್ದ ಚಂದಿರ, ದಾರ ತುಂಡಾಗಿ ಗಾಳಿಯಲ್ಲಿ ಗಿರಕಿ ಹೊಡೆಯುತ್ತಿರುವ ಹಚ್ಚ ಹಸಿರಿನ ಗಾಳಿಪಟ, ಕೊಂಬೆಗಳು ಮತ್ತು ಎಲೆಗಳಿಲ್ಲದ ಬೋಳು ಮರಗಳು, ಕೈಕಾಲುಗಳಿಗೆ ಸರಪಳಿಯೊಂದಿಗೆ ಬೀದಿಗಳಲ್ಲಿ ಸಂಚರಿಸುವ ಮನುಷ್ಯರು, ಕನಸಿನ ರೂಪದಲ್ಲಿ ಸುಂದರ್‍ಗೆ ಎದುರಾಗುತ್ತಾರೆ. + +‘ಬದುಕು ತುಂಬಾ ಸುಂದರವಾಗಿದೆ. ಹೋಗು ಜಗತ್ತೆಲ್ಲಾ ಹೊರಗೇ ಇದೆ. ಹೆಜ್ಜೆ ಹೊರಗಿಡು’ ಎಂದು ತನಗೆ ತಾನೇ ಆಜ್ಞಾಪಿಸಿಕೊಳ್ಳುತ್ತಾನೆ. ಮನೆಯೊಳಗೂ ಹೊರಗೂ ರಸ್ತೆಯ ಮೇಲೆ ಮನುಷ್ಯರು ಮಚ್ಚುಗಳಿಂದ ಲಾಠಿಗಳಿಂದ ಓಡುತ್ತಿರುವಂತೆ, ಒಂದು ಕನಸು. ಮತ್ತೊಂದು ಕನಸು ಸುದೀರ್ಘವಾದುದು. ಅದರಲ್ಲಿ ಅವನ ಭವಿಷ್ಯ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಕನಸಲ್ಲಿ ಅವನೊಬ್ಬ ರಿಯಲ್ ಎಸ್ಟೇಟ್ ಸೇಲ್ಸ್‍ಮನ್. ಅದ್ಭುತವಾದ ವಾಕ್ಚಾತುರ್ಯದಿಂದ, ಎಷ್ಟೋ ಮನೆಗಳನ್ನು ಮಾರಿ ಲಕ್ಷ ಲಕ್ಷ ಸಂಪಾದಿಸುತ್ತಾನೆ. ಜೊತೆಯಲ್ಲಿ ಆತ ವಾಸ್ತು ಪುಸ್ತಕಗಳನ್ನು ಬರೆಯುತ್ತಾನೆ. ವಾಸ್ತು ಮೇಲೆ ಲೆಕ್ಚರ್ ಕೊಡುತ್ತಾನೆ. ಕನಸಿನ ಕೊನೆಯಲ್ಲಿ ಅವನೊಬ್ಬ ಭಿಕಾರಿಯಾಗಿ, ಹರಿದ ಶರಟು, ಸವೆದು ಹೋದ ಚಪ್ಪಲಿಗಳಿಂದ ಕಾಣಿಸುತ್ತಾನೆ. ಕನಸು ಮುಗಿಯುವಷ್ಟರಲ್ಲಿ ಮೂಲೆಯ ಅಪಾರ್ಟ್‍ಮೆಂಟೊಂದರಲ್ಲಿ ಅವನು ಕೊಲೆ ಮಾಡಲ್ಪಟ್ಟಿರುತ್ತಾನೆ. ಅವನ ದೇಹ ಹಾಗೆಯೇ ತಿಂಗಳಗಟ್ಟಲೆ ಫ್ಲಾಟಿನಲ್ಲಿ ಕೊಳೆತು, ಭೀಕರವಾದ ದುರ್ಗಂಧ         ತಾಳಲಾರದೇ ಭಯದಿಂದ ಜೋರಾಗಿ ಕೂಗುತ್ತಾ ನಿದ್ದೆಯಿಂದೇಳುತ್ತಾನೆ. + +ನಿಜ  ಹೇಳಬೇಕೆಂದರೆ  2005ರಲ್ಲಿ  ಸುಂದರ್‍ನ ಚರಿತ್ರೆ ಆ  ಕನಸಿನಿಂದಲೇ ಪ್ರಾರಂಭವಾಯ್ತು. ರಿಯಲ್‍ಎಸ್ಟೇಟ್ ಏಜೆಂಟ್, ವಾಸ್ತು ಪುಸ್ತಕಗಳು, ಪತ್ರಿಕೆಗಳಲ್ಲಿ ವಾಸ್ತುಕುರಿತ ಲೇಖನಗಳು; ಅವನು ಸಾವನ್ನು ಗೆಲ್ಲಲು ಯಾವ  ಕೆಲಸವನ್ನಾದರೂ ಮಾಡಲು ಸಿದ್ಧನಿದ್ದ. ಸದ್ಯ ಸುಂದರ್ ಸಿಕಂದರಾಬಾದ್ ರೇತಿಫೀಲ್ಡ್ ಬಜಾರ್‍ನಲ್ಲಿ ಮೂಲೆಯ ಪ್ರೆಸ್ಸೊಂದರಲ್ಲಿ ಕೆಲಸ ಮಾಡುತ್ತಿದ್ದ. ಆ ಪ್ರೆಸ್‍ನಲ್ಲಿ ಸೆಕ್ಸ್ ಪತ್ರಿಕೆಗಳನ್ನು ರಹಸ್ಯವಾಗಿ ಮುದ್ರಿಸುತ್ತಾರೆ. ಅದರಲ್ಲಿನ ಕಥೆಗಳನ್ನೆಲ್ಲಾ ಸುಂದರ್‍ನೇ ಬರೆಯುತ್ತಾನೆ(ಅದ್ಭುತವಾದ ಕವಿತಾಶೈಲಿಯಲ್ಲಿ). + +ಸುಂದರ್‍ಗೆ ಈಗ ಕನಸುಗಳೆಂದರೆ ಭಯ. ಅವನು ಬರೆದ ಕಥೆಗಳೆಲ್ಲಾ ಕನಸಿನಲ್ಲಿ ಬರುತ್ತವೆ. ಆ ಕನಸುಗಳಲ್ಲಿ ಪೂರ್ಣ ವಿಧ ವಿಧವಾದ ಭಂಗಿಗಳಲ್ಲಿ ಅನೇಕ ಮನುಷ್ಯರೊಂದಿಗೆ; ಸುಂದರ್ ರಾತ್ರಿ ಹೊತ್ತು ನಿದ್ರೆ ಮಾತ್ರೆ ತೆಗೆದುಕೊಂಡು ಮಲಗುತ್ತಾನೆ. ಗಾಢವಾದ ಕನಸುಗಳು ಬಾರದ ನಿದ್ದೆಗಾಗಿ. ಆತನ ಸದ್ಯದ ಬದುಕು ಒಂದು ಕನಸಿನೊಳಗಿನ ದೃಶ್ಯದಂತಿರುತ್ತದೆ. + +ಮೂರು ತಿಂಗಳ ನಂತರ ಪ್ರೆಸ್ ಮಾಲೀಕ ‘ರೋಮ್ಯಾಂಟಿಕ್ ಟಾಕ್’ ಎಂದು ಟೆಲಿಫೋನ್‍ನಲ್ಲಿ ಶೃಂಗಾರ ಸಂಭಾಷಣೆಯ ವ್ಯಾಪಾರ ಶುರುಮಾಡಿದ. ಈಗ ಸುಂದರ್ ದನಿ ನೂರಾರು ಸೆಕ್ಸ್ ಮೇನಿಯಾಕ್‍ರಿಗೆ ತಲುಪುತ್ತಿದೆ. ಅತ್ಯಂತ ಹೇಯವಾದ, ಜಿಗುಪ್ಸೆ  ಹುಟ್ಟಿಸುವ ಸಂಭಾಷಣೆಯನ್ನು ದಿನವೆಲ್ಲಾ ಮಾತನಾಡಿ, ಅವನ ನಾಲಿಗೆ ಗಾಯಗೊಂಡಂತೆ, ಕೆಂಡವನ್ನು ಬಾಯಿಯಲ್ಲಿಟ್ಟುಕೊಂಡಂತೆ ಆತನ ಬಾಯಿ ಪ್ರತಿನಿತ್ಯ ಧಗಧಗಿಸುತ್ತಿರುತ್ತದೆ. ಫೋನ್ ಪಕ್ಕದಲ್ಲಿ ಕೂಲ್‍ಡ್ರಿಂಕ್ ಇಟ್ಟುಕೊಂಡು ಪದೇ ಪದೇ ಗುಟುಕರಿಸುತ್ತಾ ಮಾತುಗಳನ್ನು ಕಕ್ಕುತ್ತಿರುತ್ತಾನೆ. + +ರಾತ್ರಿ ಹೊತ್ತು ಅವನ ಪರಿಸ್ಥಿತಿ ಮತ್ತಷ್ಟು ದುರ್ಭರವಾಗಿರುತ್ತದೆ. ಪ್ರೆಸ್‍ನಿಂದ ಬರುತ್ತಾ ಬಾರ್‍ನಲ್ಲಿ ಗುಂಡು ಹಾಕಿ(ವಿಸ್ಕಿಯಿಂದ ಒದ್ದೆ ಮಾಡಿದರೆ ಆ ನಾಲಿಗೆಯ ಉರಿ ಕಡಿಮೆಯಾಗೋದು) ಬಂದರೆ ಪೂರ್ಣ ಬೇಸರಿಸುತ್ತಿದ್ದಳು. ‘ಪ್ರತಿದಿನ ಈ ಕುಡಿತವೇನೆಂದು?’ ‘ಕುಡಿಯದಿದ್ದರೆ ಸತ್ತು ಹೋಗ್ತೀನಿ’ ಎನ್ನುತ್ತಿದ್ದ. ನಿದ್ರೆಗೆ ಮುಂಚೆ ಪೂರ್ಣಳಿಗೆ ಅವನೊಂದಿಗೆ ತುಂಬಾ ಹೊತ್ತು ಮಾತನಾಡಬೇಕೆನಿಸಿರುತ್ತದೆ. ಅವನು ಬಾಯಿ ತೆರೆಯುತ್ತಿರಲಿಲ್ಲ. ಅವನ ಭಾಷೆ ಸತ್ತು ಹೋಗಿತ್ತು. ಪದಗಳನ್ನೆಲ್ಲಾ ಮರೆತು ಹೋಗಿದ್ದ. ಅವನಿಗೆ ನೆನಪಿದ್ದುದು ಕೇವಲ ಸೆಕ್ಸ್ ಕುರಿತ ಒಂದಿಷ್ಟು ಮಾತುಗಳು. ಬಾಯಿ ತೆಗೆದರೆ ಆ ಮಾತುಗಳು ಎಲ್ಲಿ ಹೊರಗೆ ಬೀಳುವವೋ ಎಂದು ಭಯದಿಂದ ನಡುಗುತ್ತಿದ್ದ. ಪೂರ್ಣ ನಿದ್ರೆ ಹೋದ ನಂತರ ಸುಂದರ್ ಎದ್ದು ಕಿಟಕಿ, ಬಾಗಿಲು ತೆಗೆದು ಮೊಳಕಾಲ ಮೇಲೆ ತಲೆಯಿಟ್ಟುಕೊಂಡು ಕುಳಿತುಕೊಳ್ಳುತ್ತಿದ್ದ. ಬೆಳದಿಂಗಳಲ್ಲಿ ತೊಯ್ದ ತಂಗಾಳಿ ಅವನೊಳಗೆ ಪ್ರವೇಶಿಸಬೇಕೆಂದು, ಒಳಗೆ ಉರಿಯುತ್ತಿರುವ ಕಾಡನ್ನು ಆರಿಸಬೇಕೆಂದು ಕಾಯುತ್ತಿದ್ದ. ಯಾವಾಗಲೋ ನಡುರಾತ್ರಿ ನಿದ್ದೆ ಬಂದು ನಿದ್ರಿಸುತ್ತಿದ್ದ. + +ಆ ದಿನಗಳಲ್ಲಿ ಸುಂದರ್ ಸಿ.ವಿ. ಕುರಿತ ಸುದ್ದಿಯನ್ನು ಪತ್ರಿಕೆಗಳಲ್ಲಿ ಓದಿದ. ಅವನನ್ನು ಅರೆಸ್ಟ್ ಮಾಡಿದ್ದಾರೆಂದು, ವಿಶಾಖಪಟ್ಟಣ ಜೈಲಿನಲ್ಲಿಟ್ಟಿದ್ದಾರೆಂದು. ವೈಜಾಗ್ ಹೋಗಿ ಸಿ.ವಿ.ಯನ್ನು ಭೇಟಿಯಾಗಬೇಕೆಂದು ಆಸೆ ಪಟ್ಟ. ಧೈರ್ಯ ಸಾಲಲಿಲ್ಲ. ಅನಂತರ ‘ಜೈಲುಡೈರಿ’ ಹೆಸರಿಂದ ಸಿ.ವಿ. ಬರೆದ ಕವಿತೆಗಳು ಪತ್ರಿಕೆಗಳಲ್ಲಿ ಬಂದವು. ಹೈಕು ಮಾದರಿಯ ಕವಿತೆಗಳು. ಅವು ಆತ್ಮಕಥೆ ಹೇಳಿಕೊಂಡಂತೆ ಖಾಸಗಿಯಾಗಿದ್ದವು. ಬಾಲ್ಯ, ತಂದೆ ತಾಯಿಗಳು, ಗೆಳೆಯರು, ಬಾಲ್ಯದ ನೆನಪುಗಳು. ಆ ಕವಿತೆಗಳಲ್ಲಿ ಸುಂದರ್, ಪೂರ್ಣ ಕುರಿತ ಪ್ರಸ್ತಾಪ ಬಂದಾಗಲೆಲ್ಲ ಭಯದಿಂದ ನಡುಗುತ್ತಿದ್ದ ಸುಂದರ್. ಆ ದಿನ ಪ್ರೆಸ್‍ಗೆ ರಜೆ ಹಾಕಿ ಆ ಪತ್ರಿಕೆಯನ್ನು ಕೈಯಲ್ಲಿ ಹಿಡಿದು ಊರೆಲ್ಲ ಸುತ್ತಾಡಿದ. ಆ ನಾಲ್ಕೈದು ಸಾಲುಗಳು ದೂರ ಪ್ರದೇಶದಿಂದ ಬಂದ ಅಪರಿಚಿತ ಸಾವಿನ ಸುದ್ದಿಯಂತೆ ಅವನನ್ನು ವಿವಶನನ್ನಾಗಿ ಮಾಡಿದವು. ಅವನಿಗೆ ಒಂದು ರೂಪ ಕಣ್ಣಮುಂದೆ ನಿಲ್ಲುತ್ತಿತ್ತು. ಅದು ಜೈಲು ಗೋಡೆಗಳ ನಡುವೆ ಪೌರಾಣಿಕ ದೇವತಾ ಮೂರ್ತಿಯಂತೆ ಧಗಧಗನೇ ಹೊಳೆಯುತ್ತಾ ಸಿ.ವಿ. ರೂಪವಾಗಿತ್ತು. ತನ್ನ ಸುತ್ತಲೂ ಕೋಟಿ ಕೋಟಿ ಅಶ್ಲೀಲ ಪದಗಳು, ರಸ್ತೆ ನಡುವೆ ಹೆಜ್ಜೆ ಹಾಕುತ್ತಾ. ಒಂದು ಕಡೆ ನಿಂತು ಪತ್ರಿಕೆಯನ್ನು ಮುಖದ ಮೇಲೆ ಮುಚ್ಚಿಕೊಂಡು ದೊಡ್ಡದಾಗಿ ಅತ್ತ ಸುಂದರ್. + +2006 + +ಸಿ.ವಿ.ಸಾವಿನ ಕುರಿತು ಆ ದಿನ ಬೆಳಿಗ್ಗೆ ಪತ್ರಿಕೆಯಲ್ಲಿ ಓದಿದ ಸುಂದರ್. ಇವನು ಸಾಯುವುದೇನು ಎಂದು ತುಂಬಾ ಹೊತ್ತು ಯೋಚಿಸಿದ. ಸ್ವಲ್ಪ ಹೊತ್ತಿನ ಮುಂಚೆ ಅವನೊಂದಿಗೆ ಮಾತನಾಡಿದಂತಿದೆ. ಪತ್ರಿಕೆಗಳಲ್ಲಿ ಸಿ.ವಿ. ಕುರಿತಾದ ಕಥನವನ್ನು ಓದಿದ ಸುಂದರ್‍ಗೆ ‘ಏತಕೆ?’ ಎಂಬ ಪ್ರಶ್ನೆ ಎದುರಾಯ್ತು. ಸಮುದ್ರವನ್ನು ಸೀಳಿ ಹಾಗೆ ನಡೆಯುವುದು ಏತಕೆ? ಜೈಲೊಳಗೆ, ಉಸಿರುಗಟ್ಟಿಸುವ ಸ್ಥಳಗಳಲ್ಲಿ ಹಾಗೆ ನಿರ್ಭಯವಾಗಿ ಹೋಗುವುದು ಏತಕೆ? ಕತ್ತಿ ಅಲಗಿನ ಮೇಲೆ ನಡೆಯುತ್ತಾ ಹೋಗುವ ಸಾಹಸಗಳೇತಕೆ? ಏತಕೆ? ಎಂಬ ಪ್ರಶ್ನೆಗಳೊಂದಿಗೆ ಸುಂದರ್‍ಗೆ ತನ್ನ ಬದುಕು ನೆನಪಿಗೆ ಬಂತು. ನಿನ್ನೆಯ ನವಿರಾದ ನಿದ್ರಾ ಸಮಯಗಳು ನೆನಪಿಗೆ ಬಂದವು. ಒಳಗೆ ಜ್ವರವನ್ನು ಹುದುಗಿಸಿಕೊಂಡಂಥ ಇಂದಿನ ನಿದ್ರೆ ನೆನಪಿಗೆ ಬಂದವು. ತುಂಬಾ ಹೊತ್ತು ಪ್ರಶ್ನೆಗಳ ಮರಕ್ಕೆ ಜೋತುಬಿದ್ದಿದ್ದ ಸುಂದರ್. + +‘ಮನೆ’ ಎಂಬ ಯಂತ್ರ ಎಚ್ಚರಗೊಂಡಿತು. ಪೂರ್ಣ ಅಡುಗೆ ಮನೆಯಲ್ಲಿದ್ದಳು. ಟಿ.ವಿ.ಯಲ್ಲಿ ನಿರಂತರವಾಗಿ ಸುದ್ದಿಗಳು ಬಿತ್ತರಗೊಳ್ಳುತ್ತಿದ್ದವು. ತರಕಾರಿ ಮಾರುವವರ ಕೂಗು, ಆಟೋ ಸದ್ದು, ಎಚ್ಚರಗೊಂಡ ನಗರವೆಂಬ ರಕ್ಕಸಿ ದೊಡ್ಡ ದನಿಯಲ್ಲಿ ಆಕಳಿಸುತ್ತಿರುವ ಸದ್ದು. ಸುಂದರ್‍ಗೆ ಯಾಕೋ ಮನೆಯೆಲ್ಲಾ ಜೋಡಿಸಿಕೊಳ್ಳಬೇಕೆನಿಸಿತು. ಅಟ್ಟದ ಮೇಲಿದ್ದ ಪುಸ್ತಕಗಳನ್ನೆಲ್ಲಾ ಕೆಳಗಿಳಿಸಿ ದೂಳು ಜಾಡಿಸಿದ. ಇಬ್ಬರೂ ಸೇರಿ ಅಡುಗೆ ಮಾಡಿಕೊಂಡರು. ತಿಂಡಿ ತಿನ್ನುತ್ತಾ ಸಿ.ವಿ. ಬಗ್ಗೆ ತುಂಬಾ ಹೊತ್ತು ಮಾತನಾಡಿದರು. ಅಂಗಡಿಗೆ ರಜೆ ಹಾಕಿದಳು ಪೂರ್ಣ. ಅವಸರದಿಂದ ಬಟ್ಟೆ ಹಾಕಿಕೊಂಡು ಹೊರನಡೆದ ಸುಂದರ್. ಪ್ರೆಸ್, ಕೆಂಡ ಉಗುಳುವ ಫೋನ್ ಸಂಭಾಷಣೆ, ಬ್ಯಾಂಕ್ ಲೋನ್, ನಿದ್ದೆಬಾರದ ಕಾಯಿಲೆ, ಬರೆಯಬೇಕಾದ ಪತ್ರ, ಕಡಿಮೆಯಾಗದ ಬಿ.ಪಿ, ಕಪ್ಪಗಾದ ಇಂದಿನ ಆಕಾಶ, ಹಾವಿನ ಹುತ್ತಗಳಂತಹ ಅಪಾರ್ಟ್‍ಮೆಂಟ್ಸ್, ಗಾಳಿರೆಕ್ಕೆಗಳ ಮೇಲಿಂದ ಜಾರುವ ಬೆಳಗಿನ ಚಳಿ, ಇವೆಲ್ಲವುಗಳ ನಡುವೆ ಸುಂದರನನ್ನು ‘ಏತಕೆ?’ ಎಂಬ ಪ್ರಶ್ನೆ ಕಾಡುತ್ತಿತ್ತು. ಎಲ್.ಬಿ.ನಗರ್ ಕಡೆ ಸಿ.ವಿ.ಯ ಹಳೆಯ ಕೋಣೆಯ ದಿಕ್ಕಿನಲ್ಲಿ ಹೆಜ್ಜೆ ಹಾಕಿದ.ಆ ಬೀದಿಯಲ್ಲಿ ಹೆಜ್ಜೆ ಇಡುತ್ತಿದ್ದಂತೆಯೇ ಜ್ವರಬಂದಂತೆ ತೀವ್ರತೆ, ಮೈಯೆಲ್ಲಾ ಬೆವರಿದಂತೆ. + + + +ಸಿ.ವಿ. ಇದ್ದ ಮನೆ ಈಗಿರಲಿಲ್ಲ. ಅಲ್ಲೊಂದು ಅಪಾರ್ಟ್‍ಮೆಂಟ್ ತಲೆ ಎತ್ತಿತ್ತು. ಎದುರಿನ ಚಹಾದಂಗಡಿಯಲ್ಲಿ ಕುಳಿತ ಸುಂದರ್. ಅಂಗಡಿಯ ಮಾಲೀಕನನ್ನು ಮಾತನಾಡಿಸಿದ. ಹೊಗೆ ಉಗುಳುವ ಟೀ ಗ್ಲಾಸನ್ನು ಹಿಡಿದು, ಬಿಸ್ಕಿಟ್ ನಂಜಿಕೊಳ್ಳುತ್ತಾ ಎದುರಿಗೆ ದೃಷ್ಟಿಹಾಯಿಸಿದ. ಎದುರು ಮನೆಯೊಳಗೆ ಸುಮಾರು ಹತ್ತುಜನ ಗಿರಾಕಿಗಳಿದ್ದರು. ಅವರು ಏನೇನೋ ಮಾತಾಡಿಕೊಳ್ಳುತ್ತಿದ್ದರು. ಮಧ್ಯಾಹ್ನದವರೆಗೆ ಅಲ್ಲೇ ಕಳೆದ ಸುಂದರ್. ಸಾಕಷ್ಟು ಸಲ ಟೀ ಕುಡಿದ. ಅಲ್ಲಿಗೆ ಬಂದು ಹೋಗುತ್ತಿದ್ದ ಜನರನ್ನು ನೋಡುತ್ತಿದ್ದ. ಅವರ ಮಾತುಗಳನ್ನು ಶ್ರದ್ಧೆಯಿಂದ ಕೇಳಿಸಿಕೊಂಡ. ಬದುಕಿನ ಕುರಿತು, ಸಮಸ್ಯೆಗಳು, ಕಷ್ಟಗಳು, ಎಲ್ಲೆಲ್ಲೂ ನಿಟ್ಟುಸಿರುಗಳು, ದುಗುಡಗಳು ಅವನ ಬದುಕಿನ ಪ್ರತಿರೂಪಗಳಂತೆ ನಕಲಿನಂತೆ ಗೋಚರಿಸತೊಡಗಿದವು. ತುಂಬಾ ಹೊತ್ತು ಅಲ್ಲಿ ಕುಳಿತ ನಂತರ, ಅವನ ಒಳಗಿನ ಸಂಘರ್ಷ ಸ್ವಲ್ಪ ಕಡಿಮೆಯಾದಂತನಿಸಿತು. ಮಧ್ಯಾಹ್ನ ಎರಡು ಗಂಟೆಗೆ ಮನೆ ಸೇರಿದ. + +ಪೂರ್ಣ ಮನೆಯೆಲ್ಲಾ ಜೋಡಿಸಿದ್ದಳು. ಹೊಸ ಕರ್ಟನ್‍ಗಳನ್ನು ಹಾಕಿದ್ದಳು. ಸಿ.ವಿ. ಉಡುಗೊರೆಯಾಗಿ ಕೊಟ್ಟಿದ್ದ ‘ನಿದ್ರೆ’ ಪೇಯಿಂಟಿಂಗನ್ನು ಶುಭ್ರವಾಗಿ ತೊಳೆದು ಗೋಡೆಗೆ ನೇತು ಹಾಕಿದಳು. ಹಾಸಿಗೆಗೆ ಹೊಸ  ಬಣ್ಣದ ಹೊದಿಕೆ ಹಾಸಿದ್ದಳು. ಮನೆಯೆಲ್ಲ ಹೊಸದಾಗಿ ಮತ್ತೆ ಹುಟ್ಟಿದಂತೆ ಭಾಸವಾಗುತ್ತಿತ್ತು. ಇಬ್ಬರೂ ಸೇರಿ ಊಟ ಮಾಡಿದರು. ಸಿ.ವಿ. ಬಗ್ಗೆ ಮಾತನಾಡುತ್ತಾ ಹಾಗೆಯೇ ನಿದ್ರೆ ಹೋದರು. ತುಂಬಾ ದಿನಗಳ ನಂತರ ಅವರಿಗೆ ಗಾಢ ನಿದ್ರೆ ಬಂತು. + +ನಿದ್ರೆಯಲ್ಲಿ ಪೂರ್ಣ, ಹತ್ತು ವರ್ಷದ ಹಿಂದಿನ ಪೂರ್ಣಮಾಣಿಕ್ಯಳ ಕನಸು ಕಂಡಳು. ಅಂದಿನ ಪೂರ್ಣಮಾಣಿಕ್ಯ ಮರಳಿ ಬಂದು ಮನೆಯೆಲ್ಲಾ ಸುತ್ತಾಡಿದಂತೆ ಮನೆಯೆಲ್ಲಾ ಪೂರ್ಣಮಾಣಿಕ್ಯಳ ವಾಸನೆ ಬಂದಂತೆ ಸುಂದರ್‍ಗೆ ಕೂಡ ಅಂಥದೇ ಕನಸು  ಬಿತ್ತು.  ಪದ್ಯ  ಬರೆಯುತ್ತಿದ್ದ  ದಿನಗಳ  ಸುಂದರ್  ಕನಸಿನೊಳಗೆ  ಬಂದ. ಕನಸಿನಲ್ಲಿ ಸುಂದರ್ ಕವಿತೆಯೊಂದನ್ನು ಓದುತ್ತಿದ್ದಾನೆ. ಎಚ್ಚರವಾದ ಮೇಲೂ ಆ ಕವಿತೆ ಅವನನ್ನು ಹಿಂಬಾಲಿಸುತ್ತಲೇ ಇತ್ತು. + + + +ಕಲಾವಿದ ಮತ್ತು ಅನುವಾದಕ. ಓದಿದ್ದು ಸಂಡೂರು ಹಾಗು ಬಳ್ಳಾರಿ . ವೃತ್ತಿಯಿಂದ ಸಿವಿಲ್ ಇಂಜಿನೀಯರ್ .ರಾಮ್ ಗೋಪಾಲ್ ವರ್ಮ ‘ ನನ್ನಿಷ್ಟ’ ಮೊದಲ ಅನುವಾದ. ‘ಪಚ್ಚೆ ರಂಗೋಲಿ’ ಮೊದಲ ಅನುವಾದ ಕಥೆ.ಸದ್ಯ ಅನುವಾದ ಮತ್ತು ಪೈಂಟಿಂಗ್ಸ್ ಗಳಲ್ಲಿ ಬ್ಯುಸಿ . \ No newline at end of file diff --git a/Kenda Sampige/article_492.txt b/Kenda Sampige/article_492.txt new file mode 100644 index 0000000000000000000000000000000000000000..a004804c2078685e591b66b2955a7ccd052c42c3 --- /dev/null +++ b/Kenda Sampige/article_492.txt @@ -0,0 +1,65 @@ + + +ಮಧ್ಯಾನದ ಬಿಸಿಲು ಎಲ್ಲೆಡೆ ಮಂಕು ಕವಿಸಿತ್ತು. ಇ-ಸಿಟಿಯ ಹೆಬ್ಬಾಗಿಲ ಎದುರಿನ ಬಣ್ಣದ ಕಾರಂಜಿಯು ಪುಟಿಯುತ್ತಿತ್ತು. ಬೆಳಗ್ಗಿನ ಶಿಫ್ಟ್ ಮುಗಿಸಿ ಹೊರಬೀಳುತ್ತಿದ್ದ ಎಂಪ್ಲಾಯೀಗಳನ್ನು ಕರೆದೊಯ್ಯುಲು ಶಟಲ್ ಬಸ್ಸುಗಳು ಸಾಲಾಗಿ ಒಂದರ ಹಿಂದೆ ಒಂದು ಬಂದು ಕಾರಂಜಿಯ ಪ್ರದಕ್ಷಿಣೆ ಹಾಕಿ ಆಫೀಸ್ ಎದುರು ನಿಲ್ಲುತ್ತಿದ್ದವು. ಪುಟಿಯುತ್ತಿದ್ದ ಬಣ್ಣಬಣ್ಣದ ನೀರಿನ ಬುಗ್ಗೆಯನ್ನು ಕಂಡ ಪೋರ ತನ್ನ ಅಮ್ಮನ ಕೈ ಬಿಡಿಸಿಕೊಂಡು ಸಡಗರದಿಂದ ಅರಚುತ್ತ ಅದರೆಡೆಗೆ ಓಡಿದ. ತನ್ನ ಕೊಲೀಗಿನ ಜೊತೆ ಹರಟುತ್ತ ಚಹಾ ಕುಡಿಯುತ್ತಿದ್ದ ಅಮ್ಮ ಧಿಡೀರನೆ ಕೈತಪ್ಪಿಸಿಕೊಂಡು ಓಡಿದ ಮಗನನ್ನು ಕಂಡು ಬೆಚ್ಚಿದಳು. ಅರ್ಧ ಕುಡಿದ ಚಹಾದ ಕಪ್ಪನ್ನು ಅಲ್ಲೇ ಎಸೆದು ಎದ್ದೆನೋ ಬಿದ್ದೆನೋ ಎಂದು ರಸ್ತೆಗೆ ಓಡಿ, ಪೋರ ಇನ್ನೇನು ನೀರನ್ನು ಮುಟ್ಟಿ ಕಾರಂಜಿಯೊಳಗೆ ಹಾರುತ್ತಾನೆನ್ನುವಷ್ಟರಲ್ಲಿ ಅವನ ತೋಳುಗಳನ್ನು ಹಿಡಿದು ಬಲವಾಗಿ ಎಳೆದು, ಕೆನ್ನೆಯನ್ನು ಹಿಂಡಿ ವಾಪಸ್ಸು ಚಹಾದಂಗಡಿಯತ್ತ ಕರೆತಂದು ನಿಟ್ಟುಸಿರು ಬಿಟ್ಟಳು. ಪೋರ ಏನಾಯಿತೆಂದು ತೋಚದೆ ಮಂಕಾದ. ಅಮ್ಮ ಬಿಳುಚಿಹೋಗಿದ್ದಳು. ಅವಳ ಕೊಲೀಗ್ ಕೊಂಚ ದೂರದಲ್ಲೆ ನಿಂತು, “Is everything ok?” ಎಂದು ವಿಚಾರಿಸಿದ. ಕೆಲವೇ ನಿಮಿಶದಲ್ಲಿ ಶಟಲ್ ಬಸ್ಸುಗಳು ಹೊರಟವು. ಎಲ್ಲವೂ ಸಹಜ ಸ್ಥಿತಿಗೆ ಮರಳಿತು ಎನ್ನಬಹುದೇನೊ… + +ಆಫೀಸ್ ಪಕ್ಕದ ರಸ್ತೆಯಲ್ಲಿದ್ದ ಮಲೆಯಾಳೀ ಬೇಕರಿಯ ಎದುರು ಜಸ್ಪ್ರೀತ್ನಿನಾಗಿ ಕಾಯುತ್ತಿದ್ದೆ. ಬೆಳಿಗ್ಗೆ ಆಫೀಸಿನ ರೆಸ್ಟ್ ರೂಮಿನಲ್ಲಿ ಸಿಕ್ಕ ಒಂದು ನಿರಾಳವಾದ ಕ್ಷಣದಲ್ಲಿ ಹಳೆಯ ಗೆಳೆಯ ಜಸ್ಪ್ರೀತ್ ಎದುರಾದ. “ಅರೇ ಯಾರ್! ಎಷ್ಟು ದಿನಾ ಆಗಿತ್ತು ನಿನ್ನ ನೋಡಿ! ನನಗೆ ಮಧ್ಯಾಹ್ನ ಸಿಗ್ತೀಯಾ? ಆಫೀಸ್ ಹೊರಗೆ… ಒಂದು ವಿಷಯ ಹೇಳ್ಬೇಕು” ಎಂದ. ಜಸ್ಪ್ರೀತ್ ನನ್ನ ಇಂಜಿನೀಯರಿಂಗ್ ಸಹಪಾಟಿ. ಕೆಲಸಕ್ಕೆ ಸೇರಿದಾಗ ಚಂದೀಗಡದಲ್ಲಿ ಪೋಸ್ಟಿಂಗ್ ಸಿಕ್ಕಿದರೂ ಬೆಂಗಳೂರಿನಲ್ಲೇ ಇರಬೇಕೆಂದು ಇಚ್ಛಿಸಿ ಇಲ್ಲೇ ಕೆಲಸ ಮಾಡುತ್ತಿದ್ದ. + +ಸುಮಾರು ಹತ್ತು ನಿಮಿಷ ಕಾದ ಮೇಲೆ ಓಡುತ್ತಾ ಬೇಕರಿಯ ಕಡೆಗೆ ಬಂದ. “ಸಾರಿ ಯಾರ್, ಲೇಟ್ ಆಗೋಯ್ತು” ಎನ್ನುತ್ತಾ ತನ್ನ ನೀಲಿ ಬಣ್ಣದ ಪಗಡಿಯನ್ನು ಸರಿಪಡಿಸಿಕೊಂಡ. + +“ನಾನು ಮದುವೆಯಾಗ್ತಾಯಿದ್ದೀನಿ!!” + +“ಅರೇ! ನಿಜ್ವಾಗ್ಲು?!” + +“ಹಾ ಯಾರ್… ಹೋದ ವಾರ ಫಿಕ್ಸ್ ಆಯ್ತು!” + +ಜಸ್ಪ್ರೀತ್ ಬೀಗುತ್ತಲೇ ಪುಟ್ಟದೊಂದು ಆಮಂತ್ರಣ ಪತ್ರವನ್ನು ನನ್ನ ಕೈಯಲ್ಲಿಟ್ಟ. ಮುಂದಿನ ತಿಂಗಳು ಜಲಂದರ್ ನಲ್ಲಿ ಮದುವೆಯೆಂದು, ಖಂಡಿತಾ ಬರೆಬೇಕೆಂದು ಹೇಳುತ್ತಾ ಆಮಂತ್ರಣ ಪತ್ರಕ್ಕಿಂತ ಅಗಲವಾದ ಇನ್ನೊಂದು ಲಕೋಟೆಯನ್ನು ತನ್ನ ಬ್ಯಾಗಿನಿಂದ ತೆಗೆದ. + +“ಆಮೇಲೆ ಇದನ್ನ ತೊಗೊ! This is for you.. Get a makeover man!” ಎಂದು ಲಕೋಟೆಯನ್ನು ನೀಡಿದ. + +ಲೌಂಜಿನಲ್ಲಿದ್ದ ಪುಟ್ಟ ಕೊಳದಲ್ಲಿ ಎರಡು ಬಿಳಿಯ ತಾವರೆಗಳು ತೇಲುತ್ತಿದ್ದವು. ಸೋಫಾದ ಮೇಲೆ ಕೂತ ತಕ್ಷಣ ದುತ್ತೆಂದು ಕಂಡಿದ್ದು ಎದುರಿನ ಗೋಡೆಯ ಮೇಲೆ ಹಾಕಿದ್ದ ಬುದ್ಧನ ಪೈಂಟಿಂಗ್. ಅರ್ಧ ಗೋಡೆಗಿಂತ ಹೆಚ್ಚಿನ ಜಾಗವನ್ನು ತುಂಬಿದ್ದ ಬೃಹತ್ ಚಿತ್ರ; ಸಮಾನ್ಯವಾಗಿ ಎಲ್ಲೆಡೆ ಕಾಣುವ ಬುದ್ಧನ ಚಿತ್ರದಂತಿರಲಿಲ್ಲ. ಹಳದಿ, ಕಂದು ಬಣ್ಣದ ನಗ್ನ ಮೇಲ್ಮೈ. ಮುಖಕ್ಕಿಂತ ಉದ್ದವಾಗಿ ಜೋತು ಬಿದ್ದ ವಿಚಿತ್ರ ಕಿವಿಗಳು. ಕಿವಿಯುದ್ದಕ್ಕೂ ಇದ್ದ ರಂಧ್ರಗಳು. ಗಂಟುಗಂಟಾಗಿ ಸುತ್ತಿಕೊಂಡಿದ್ದ ಜಟೆಗಳು. ಜಟೆಗಳಿಗೆ ಬಿಡಿಸಲಾರದಂತೆ ಸುತ್ತಿಕೊಂಡಿದ್ದ ಮರದ ಎಲೆ ಹಾಗು ರೆಂಬೆಗಳು. ಸಮಾಧಾನದಿಂದ ಮುಚ್ಚಿದ ಕಣ್ಣು ಮತ್ತು ನೆಲವನ್ನು ಮುಟ್ಟಿದ ಅಜಾನುಬಾಹು ಕೈಗಳು. + +“ಇ-ಸಿಟಿಯ ನಾಲ್ಕನೇ ಮೈನಿನಲ್ಲಿ ಹೊಸ ಥಾಯ್ ರೆಸ್ಟಾರೆಂಟ್ ಓಪನ್ ಆಗಿದೆ. ಅಲ್ಲಿನ ಫಿಶ್ ಲಾಕ್ಸಾ ತುಂಬಾ ಚೆನ್ನಾಗಿದೆಯಂತೆ. ಅಲ್ಲಿ ಹೋಗಿ ಊಟ ಮಾಡೋಣ”, ಎಂದು ಹೇಳಿದ. ತಕ್ಷಣ ಮಾಡಬೇಕಾದ ಕೆಲಸ ಏನೂ ಇರದಿದ್ದರಿಂದ ಒಪ್ಪಿಕೊಂಡೆ. ಇ-ಸಿಟಿಯ ಗಲ್ಲಿಗಳಲ್ಲಿ ನಡೆದು ಹೋಗ್ಗುತ್ತಿದ್ದಂತೆ ಯಾವುದೋ ಜಾಹೀರಾತಿನ ಸಂತೆಯಂತೆ ಪಂಜಾಬೀ ಢಾಭಾ, ಆಂಧ್ರಾ ಮೆಸ್ಸು, ಆಂಬೂರ್ ಬಿರಿಯಾನಿ ಹೋಟಲ್, ಕೋಲ್ಕಾತಾ ರೋಲ್ ಆಂಗಡಿ ಸಾಲಾಗಿ ಕಂಡವು. ಜಸ್ಪ್ರೀತ್ ಉತ್ಸಾಹದಿಂದ ಮಾತು ಮುಂದುವರಿಸಿದ. “ಜಲಂದರಿನ ನಿಕ್ಕೂ ಪಾರ್ಕ್ ಪಕ್ಕದಲ್ಲಿರುವ ಕಮ್ಯೂನಿಟಿ ಹಾಲಿನಲ್ಲಿ ಮದುವೆ. ಮೂರು ದಿನ. ರೋಕಾ, ಸಗಾಯಿ ಮತ್ತು ಸಂಗೀತ್. ಮೂರೂ ದಿನ ಇರ್ಬೇಕು!” + +ನಾಲ್ಕನೇ ಮೈನಿನಲ್ಲಿ ಮಿನುಗುತ್ತಿರುವ ಸೀರಿಯಲ್ ಲೈಟುಗಳಿಂದ ಸಿಂಗರಿಸಿದ್ದ ಹೊಸ ಕಟ್ಟಡದ ಮೇಲೆ “ಸುವರ್ಣಭೂಮಿ ಥಾಯ್ ಕಿಚನ್” ಎಂದು ಬೋರ್ಡ್ ಹಾಕಿತ್ತು. ಒಳಗೆ ಹೋದ ಕೂಡಲೆ ಮ್ಯಾನೇಜರ್ ನಮ್ಮ ಹೆಸರನ್ನು ಬರೆದುಕೊಂಡು ಲೌಂಜಿನಲ್ಲಿ ಕೂತಿರಬೇಕೆಂದು, ಟೇಬಲ್ ಖಾಲಿಯಾದ ಕೂಡಲೆ ಕರೆಯುವುದಾಗಿ ಹೇಳಿದ. ಲೌಂಜಿನಲ್ಲಿದ್ದ ಪುಟ್ಟ ಕೊಳದಲ್ಲಿ ಎರಡು ಬಿಳಿಯ ತಾವರೆಗಳು ತೇಲುತ್ತಿದ್ದವು. ಸೋಫಾದ ಮೇಲೆ ಕೂತ ತಕ್ಷಣ ದುತ್ತೆಂದು ಕಂಡಿದ್ದು ಎದುರಿನ ಗೋಡೆಯ ಮೇಲೆ ಹಾಕಿದ್ದ ಬುದ್ಧನ ಪೈಂಟಿಂಗ್. ಅರ್ಧ ಗೋಡೆಗಿಂತ ಹೆಚ್ಚಿನ ಜಾಗವನ್ನು ತುಂಬಿದ್ದ ಬೃಹತ್ ಚಿತ್ರ; ಸಮಾನ್ಯವಾಗಿ ಎಲ್ಲೆಡೆ ಕಾಣುವ ಬುದ್ಧನ ಚಿತ್ರದಂತಿರಲಿಲ್ಲ. ಹಳದಿ, ಕಂದು ಬಣ್ಣದ ನಗ್ನ ಮೇಲ್ಮೈ. ಮುಖಕ್ಕಿಂತ ಉದ್ದವಾಗಿ ಜೋತು ಬಿದ್ದ ವಿಚಿತ್ರ ಕಿವಿಗಳು. ಕಿವಿಯುದ್ದಕ್ಕೂ ಇದ್ದ ರಂಧ್ರಗಳು. ಗಂಟುಗಂಟಾಗಿ ಸುತ್ತಿಕೊಂಡಿದ್ದ ಜಟೆಗಳು. ಜಟೆಗಳಿಗೆ ಬಿಡಿಸಲಾರದಂತೆ ಸುತ್ತಿಕೊಂಡಿದ್ದ ಮರದ ಎಲೆ ಹಾಗು ರೆಂಬೆಗಳು. ಸಮಾಧಾನದಿಂದ ಮುಚ್ಚಿದ ಕಣ್ಣು ಮತ್ತು ನೆಲವನ್ನು ಮುಟ್ಟಿದ ಅಜಾನುಬಾಹು ಕೈಗಳು. ಸಮತೋಲನವೇ ಇಲ್ಲದೆ ಬೆಳೆದಿದ್ದ ದೇಹ ಮತ್ತು ಅಂಗಾಗಳು. ಆದರೂ ವಿಕಾರವಾಗಿರಲಿಲ್ಲ. + +ಟೇಬಲ್ ಖಾಲಿಯಾಯಿತೆಂದು ಒಳಗೆ ಕರೆದರು. ಕಿಟಕಿಯ ಪಕ್ಕದ ಎರಡು ಕುರ್ಚಿಯಿದ್ದ ಟೇಬಲ್ಲಿನಲ್ಲಿ ಕೂತೆವು. ಇ ಸಿಟಿಯ ಸುತ್ತಮುತ್ತಲಿಂದ ಬಂದ ಜನ ರೆಸ್ಟಾರೆಂಟಿನಲ್ಲಿ ತುಂಬಿದ್ದರು. ಕುರ್ಚಿಯ ಬೆನ್ನಿಗೆ ಬ್ಲೇಜರ್ ಹೊದ್ದಿಸಿ ಊಟ ಮಾಡುತ್ತಿದ್ದರು. ಜಸ್ಪ್ರೀತ್ ವೈಟರನ್ನು ಕರೆಯಲು ಹಿಂದೆ ತಿರುಗಿದಾಗ ಅಚ್ಚುಕಟ್ಟಾಗಿ ಸುತ್ತಿದ್ದ ಅವನ ನೀಲಿ ಪಗಡಿಯ ಹಿಂದೆ ನಾಜೂಕಾಗಿ ಹಾಕಿದ್ದ ಮೂರು ಗುಂಡು ಪಿನ್ನುಗಳು ಕಂಡವು. ಎರಡು ಫಿಶ್ ಲಾಕ್ಸಾ ಆರ್ಡರ್ ಮಾಡಿದ. “ತೆಂಗಿನ ಹಾಲು, ಕೆಂಪು ಮೆಣಸಿನಕಾಯಿ, ತುಳಸಿ ಎಲೆ, ಸಣ್ಣಗೆ ಹೆರೆದ ಶುಂಟಿ, ಬೆಳುಳ್ಳಿ, ಮೊಳಕೆ ಹೆಸರುಕಾಳು ಹಾಕಿ ಗಟ್ಟಿಯಾದ ಸೂಪ್ ಮಾಡುತ್ತಾರೆ. ಅದರೊಳಗೆ ಬೆಂದ ನೂಡಲ್ಸ್ ಹಾಕಿ ನಂತರ ಸ್ವಲ್ಪ ಉಪ್ಪು ಹಾಕಿ ಬೇಯಿಸಿದ ಬಾಸಾ ಮೀನನ್ನು ಈ ಸೂಪಿನಲ್ಲಿಹಾಕಿ ಕೊಡುತ್ತಾರೆ. ಮೊದಲು ಮೀನನ್ನು ನೂಡಲ್ಸ್ ಜೊತೆ ತಿಂದುಬಿಡಬೇಕು. ಕೊನೆಯಲ್ಲಿ ಉಳಿದ ಸೂಪನ್ನು ಕುಡಿಯಬೇಕು. ಬೌಲನ್ನೇ ಎತ್ತಿ ಕುಡಿಯಬೇಕು. ಅದು ನಿಜಕ್ಕು ಅದ್ಭುತ!” ಎಂದು ವಿವರಿಸಿದ. ಅವನ ಕಣ್ಣುಗಳು ಹೊಳೆಯುತ್ತಿತ್ತು. + +ಲೌಂಜಿನಲ್ಲಿದ್ದ ಪುಟ್ಟ ಕೊಳದಲ್ಲಿ ಎರಡು ಬಿಳಿಯ ತಾವರೆಗಳು ತೇಲುತ್ತಿದ್ದವು. ಸೋಫಾದ ಮೇಲೆ ಕೂತ ತಕ್ಷಣ ದುತ್ತೆಂದು ಕಂಡಿದ್ದು ಎದುರಿನ ಗೋಡೆಯ ಮೇಲೆ ಹಾಕಿದ್ದ ಬುದ್ಧನ ಪೈಂಟಿಂಗ್. ಅರ್ಧ ಗೋಡೆಗಿಂತ ಹೆಚ್ಚಿನ ಜಾಗವನ್ನು ತುಂಬಿದ್ದ ಬೃಹತ್ ಚಿತ್ರ; ಸಮಾನ್ಯವಾಗಿ ಎಲ್ಲೆಡೆ ಕಾಣುವ ಬುದ್ಧನ ಚಿತ್ರದಂತಿರಲಿಲ್ಲ. ಹಳದಿ, ಕಂದು ಬಣ್ಣದ ನಗ್ನ ಮೇಲ್ಮೈ. ಮುಖಕ್ಕಿಂತ ಉದ್ದವಾಗಿ ಜೋತು ಬಿದ್ದ ವಿಚಿತ್ರ ಕಿವಿಗಳು. ಕಿವಿಯುದ್ದಕ್ಕೂ ಇದ್ದ ರಂಧ್ರಗಳು. ಗಂಟುಗಂಟಾಗಿ ಸುತ್ತಿಕೊಂಡಿದ್ದ ಜಟೆಗಳು. + +ಲಾಕ್ಸಾ ಬಂದಮೇಲೆ ಖಾರ ಹೆಚ್ಚು ಬೇಕೆಂದು ಜಸ್ಪ್ರೀತ್ ಸ್ವಲ್ಪ ಚಿಲ್ಲಿ ಆಯಿಲ್ ತರಲು ಹೇಳಿದ. ನಾನು ಏನೂ ಮಾತಾಡದೇ ಊಟ ಮಾಡುತ್ತಿದ್ದೆ. ಸುಮಾರು ಹತ್ತು ನಿಮಿಷವಾಗಿರಬೇಕು. ಟೇಬಲ್ ಮೇಲೆ ಇಟ್ಟಿದ್ದ ಅವನ ಮೋಬೈಲ್ ಒಂದೆರೆಡು ಬಾರಿ ವೈಬ್ರೇಟಾಯಿತು. ಊಟದಲ್ಲಿ ಮೈಮರೆತಿದ್ದ ಅವನು ಮೊಬೈಲ್ ತೆಗೆದು ನೋಡಿದ. ಮೆಸೇಜ್ ಓದಿ ತಕ್ಷಣ ಕಾಲ್ ಮಾಡಿದ. ಕನೆಕ್ಟ್ ಆಗಲಿಲ್ಲವೇನೋ. ಜಸ್ಪ್ರೀತ್ ಪೆಚ್ಚಾದ. ಆಫೀಸ್ ಕಾಲಾ ಎಂದು ಕೇಳಿದಕ್ಕೆ ಉತ್ತರಿಸಲಿಲ್ಲ. ಚಡಪಡಿಸುತ್ತಾ ಎರಡು ನಿಮಿಷವಾದಮೇಲೆ ಎದ್ದು, “ಸಾರಿ ಯಾರ್.. ನಾನು ಹೊರಡಬೇಕು.. ನೀನು ನಿಧಾನಕ್ಕೆ ಊಟ ಮುಗಿಸು.. ಮದುವೆ ತಪ್ಪಿಸಬೇಡ” ಎಂದು ಹೇಳಿ ಹೊರಟುಬಿಟ್ಟ. ಚಿಲ್ಲಿ ಆಯಿಲ್, ಸೂಪ್ ಎಲ್ಲವೂ ಹಾಗೇ ಉಳಿದಿತ್ತು. + +ಊಟ ಮುಗಿಸಿದ ಮೇಲೆ ತಕ್ಷಣ ಆಫೀಸಿಗೆ ಮರಳಲು ಮನಸ್ಸಾಗಲಿಲ್ಲ. ಮತ್ತೆ ಹೋಗಿ ಲೌಂಜಿನಲ್ಲಿ ಕೂತೆ. ಆಮಂತ್ರಣ ಪತ್ರದ ಜೊತೆಗಿದ್ದ ಅಗಲವಾದ ಲಕೋಟೆಯಲ್ಲಿ ಏನಿರಬಹುದೆಂದು ಕುತೂಹಲವಾಗಿ ಅದನ್ನು ಮೆಲ್ಲಗೆ ಒಡೆದೆ. ಒಂದು ತುದಿಯಿಂದ ಹರಿಯುತ್ತಿದ್ದಂತೆ ಹಳದಿ ಬಣ್ಣದ ಕಾರ್ಡ್ ಕಂಡಿತು. ಅದೊಂದು ಗಿಫ್ಟ್ ವೌಚರ್. + +BODY CRAFT SPA & MASSAGE PARLORMen’s Grooming TherapyValid for one month + +ಕಾರ್ಡಿನ ಹಿಂಬದಿಯಲ್ಲಿ ವಿಳಾಸವಿತ್ತು. + +ರೆಸ್ಟಾರೆಂಟಿನ ಹೊರಗೆ ಹಾದು ಹೋಗುತ್ತಿದ್ದ ಆಟೋ ಒಂದನ್ನು ಕೂಗಿ ನಿಲ್ಲಿಸೇಬಿಟ್ಟೆ. ರಹೇಜಾ ಆರ್ಕೇಡ್ ಎಂದು ಹೇಳಿ ಒಳಗೆ ಕೂತೆ. ನನ್ನ ಕೊಲೀಗ್ ಶ್ರೇಯಾಗೆ ಅರ್ಜೆಂಟಾಗಿ ಒಂದು ಪರ್ಸನಲ್ ಕೆಲಸಕ್ಕಾಗಿ ಹೋಗಬೇಕಾಗಿದೆ, ಏನಾದ್ರು ವಿಷಯವಿದ್ದರೆ ಕಾಲ್ ಮಾಡು ಎಂದು ಮೆಸೇಜ್ ಕಳಿಸಿದೆ. ಮಧ್ಯಾಹ್ನದ ವೇಳೆ ಫ್ಲೈಯೊವರ್ ನಲ್ಲಿ ಯಾವ ಗಾಡಿಯೂ ಇರಲಿಲ್ಲ. ಸಾಲಗಿ ನಿಂತಿದ್ದ ಬಿಲ್ ಬೋರ್ಡುಗಳು, ಅದರೊಳಗೆ ನಗುತ್ತಿದ್ದ ಹುಡುಗಿಯರು, ಹುಡುಗರು, ಸುಖೀ ಕುಟುಂಬಗಳು, ಪ್ರಯಾಣದಲ್ಲಿ ಜೊತೆ ನೀಡಿದವು. ರಹೇಜಾ ಆರ್ಕೇಡ್ ಹತ್ತಿರ ಎಲ್ಲಿ ಹೋಗಬೇಕೆಂದು ಆಟೋದವ ಕೇಳಿದ. ಗೊತ್ತಿಲ್ಲ, ಅಲ್ಲಿ ಹೋಗಿ ಕೇಳಬೇಕೆಂದು ಹೇಳಿದೆ. + +ಕೋರಮಂಗಲದ ರಹೇಜಾ ಆರ್ಕೇಡ್ ತಲುಪಿದೆವು. ಅಕ್ಕ ಪಕ್ಕ ನೋಡಿದಾಗ ಬಾಡಿಕ್ರಾಫ್ಟ್ ಸ್ಪಾ ಕಾಣಿಸಲಿಲ್ಲ. ಐದನೇ ಮೈನ್ ಹುಡುಕುತ್ತ ಮುಂದಕ್ಕೆ ಬಂದು ಬಲಕ್ಕೆ ತಿರುಗಿದಾಗ ಬಹು ಅಂತಸ್ತಿನ ಕಟ್ಟಡವೊಂದರ ಮೇಲೆ ಬಾಡಿಕ್ರಾಫ್ಟಿನ ಚಿಕ್ಕ ಬೋರ್ಡ್ ಕಾಣಿಸಿತು. ಆಟೋದವ ಹಿಂದಿರುಗುವ ದಾರಿಯಲ್ಲಿ ಗಿರಾಕಿಗಳು ಸಿಗುವುದಿಲ್ಲವೆಂದು ಇಪತ್ತು ರುಪಾಯಿ ಹೆಚ್ಚು ಕೇಳಿದ. + +ರಸ್ತೆಯನ್ನು ದಾಟಿ ಕಟ್ಟಡವನ್ನು ಸಮೀಪಿಸುತ್ತಿದ್ದಂತೆ ವಿಚಿತ್ರವಾದ ಕಬ್ಬಿಣದ ಶಟರ್ ತಾನಾಗೆ ತೆರೆಯಿತು. ಕೋರಮಂಗಲಕ್ಕೆ ಬಹಳಷ್ಟು ಬಾರಿ ಬಂದಿದ್ದರೂ ಈ ಜಾಗವನ್ನು ಗಮನಿಸಿರಲಿಲ್ಲ. ನಾಲ್ಕು ಕಾರುಗಳು ದೂರದಲ್ಲಿ ನಿಂತಿದ್ದವು. ಬೆಳಕು ಕಡಿಮೆಯಿತ್ತು. ಬಾಡಿಕ್ರಾಫ್ಟ್ ಎಲ್ಲಿದೆಯೆಂದು ಹುಡುಕುತ್ತಿದ್ದಾಗ ತುಸು ದೂರದಲ್ಲಿ ಮೇಲ್ಮಹಡಿ ಕಂಡಿತು. ಆಕರ್ಷಕವಾದ ವರ್ತುಲಾಕಾರದ ಮರದ ಮೇಲ್ಮಹಡಿ. ಒಂದು ಮಹಡಿಯನ್ನು ಹತ್ತಿದ ಮೇಲೆ ಬಾಡಿಕ್ರಾಫ್ಟಿನ ಮತ್ತೊಂದು ಬೋರ್ಡ್ ಕಂಡಿತು. ಅದರಲ್ಲಿ ಹತ್ತೊಂಭತ್ತನೆಯ ಮಹಡಿಯಲ್ಲಿ ಪಾರ್ಲರ್ ಇರುವ ಸೂಚನೆಯಿತ್ತು. ಮೂಲೆಯಲ್ಲಿದ್ದ ಲಿಫ್ಟಿನೊಳಗೆ ಹೋದೆ. ಲಿಫ್ಟಿನೊಳಗೆ ನಾಲ್ಕೂ ಬದಿಯಲ್ಲಿ ಕನ್ನಡಿಗಳಿದ್ದವು, ಹಾಗು ನನ್ನದೇ ಮುಖದ ಅಸಂಖ್ಯಾತ ಅಪೂರ್ಣ ಬಿಂಬಗಳು. + +ರಸ್ತೆಯನ್ನು ದಾಟಿ ಕಟ್ಟಡವನ್ನು ಸಮೀಪಿಸುತ್ತಿದ್ದಂತೆ ವಿಚಿತ್ರವಾದ ಕಬ್ಬಿಣದ ಶಟರ್ ತಾನಾಗೆ ತೆರೆಯಿತು. ಕೋರಮಂಗಲಕ್ಕೆ ಬಹಳಷ್ಟು ಬಾರಿ ಬಂದಿದ್ದರೂ ಈ ಜಾಗವನ್ನು ಗಮನಿಸಿರಲಿಲ್ಲ. ನಾಲ್ಕು ಕಾರುಗಳು ದೂರದಲ್ಲಿ ನಿಂತಿದ್ದವು. ಬೆಳಕು ಕಡಿಮೆಯಿತ್ತು. ಬಾಡಿಕ್ರಾಫ್ಟ್ ಎಲ್ಲಿದೆಯೆಂದು ಹುಡುಕುತ್ತಿದ್ದಾಗ ತುಸು ದೂರದಲ್ಲಿ ಮೇಲ್ಮಹಡಿ ಕಂಡಿತು. ಆಕರ್ಷಕವಾದ ವರ್ತುಲಾಕಾರದ ಮರದ ಮೇಲ್ಮಹಡಿ. + +ಹತ್ತೊಂಭತ್ತನೆಯ ಮಹಡಿಯಲ್ಲಿ ಲಿಫ್ಟಿನ ಬಾಗಿಲು ತೆರೆದಾಗ ಎದುರಿಗೆ ಬಾಡಿಕ್ರಾಫ್ಟ್ ಪಾರ್ಲರ್ ಕಂಡಿತು. ಹೊರಗೆ ಬಂದು ಎರಡು ಹೆಜ್ಜೆ ಮುಂದಿಟ್ಟ ಕೂಡಲೆ ಮತ್ತೆ ಪಾರ್ಲರಿನ ಎರಡೂ ಬಾಗಿಲು ತಂತಾನೆ ತೆರೆದುಕೊಂಡವು. ರಿಸೆಪ್ಶನ್ನಿನಲ್ಲಿ ಯಾರೂ ಇರಲಿಲ್ಲ. ಕೌಂಟರಿನ ಮೇಲಿದ್ದ ಬ್ರೋಷರ್ಗಳನ್ನು ನೋಡುತ್ತಾ ನಿಂತೆ. ಹತ್ತು ನಿಮಿಷದ ನಂತರ ಮಹಿಳೆಯೊಬ್ಬಳು ಒಳಗಿನಿಂದ ಬಂದಳು. ಏನೂ ಮತಾಡಲಿಲ್ಲ. ನನ್ನ ಬಳಿಯಿದ್ದ ವೌಚರನ್ನು ಲಕೋಟೆಯಿಂದ ತೆಗೆದು ಅವಳಿಗೆ ಕೊಟ್ಟೆ. ಅವಳು ಅದರ ಕಡೆ ಕಣ್ಣು ಹಾಯಿಸಿ, ಸೋಫಾದ ಮೇಲೆ ಕುಳಿತುಕೊಳ್ಳುವಂತೆ ಕೈಮಾಡಿ ಪುನಃ ಒಳಗೆ ಹೋದಳು. ಅಲ್ಲೇ ಕುಳಿತೆ. ಕಿಟಕಿಗಳಿಗೆ ನೀಲಿ ಪರದೆಗಳು ಹಾಕಿದ್ದವು. ಅತ್ತಿತ್ತ ನೋಡುವಷ್ಟರಲ್ಲಿ ಅವಳು ಒಳಗಿನಿಂದ ಬಂದಳು. ನಾನು ಅವಳಿಗೆ ಕೊಟ್ಟ ವೌಚರಿನ ಹಿಂದೆ ಏನೋ ಬರೆದು ನನಗೆ ವಾಪಸ್ಸು ಕೊಟ್ಟಳು. ನಂತರ ಒಳಗಿರುವ ನಾಲ್ಕನೇ ನಂಬರ್ ಕೊಠಡಿಯಲ್ಲಿ ಕಾಯಲು ಹೇಳಿದಳು. ವೌಚರಿನ ಹಿಂದೆ “ಪ್ರಿಮಿಥ್ ಲೇಪ್ಚಾ” ಎನ್ನುವ ಹೆಸರನ್ನು ಸಣ್ಣ ಅಕ್ಷರದಲ್ಲಿ ಬರೆದಿದ್ದಳು. ಅದನ್ನು ಹಿಡಿದು ಒಳಗೆ ಹೋದೆ. ಇಟ್ಟಿಗೆ ಬಣ್ಣದ ಕಾರ್ಪೆಟ್ ಹಾಸಿದ್ದ ನೆಲ. ಮಂದ ಬೆಳಕು. ನಾಲ್ಕನೆಯ ನಂಬರಿನ ಕೊಠಡಿ ಕಾಣಲಿಲ್ಲ. ನೇರ ಹೋದಮೇಲೆ ಪ್ಯಾಸೇಜಿನ ತುದಿಯಲ್ಲಿ, ಎಡಕ್ಕೆ ಒಂದು ಕೋಣೆ ಇರುವಂತೆ ಕಂಡಿತು. ಹತ್ತಿರ ಹೋದರೆ ಕೋಣೆ ಇಲ್ಲ. ಬದಲಾಗಿ ಮತ್ತೊಂದು ವರ್ತುಲಾಕಾರದ ಮೇಲ್ಮಹಡಿ. ಮನುಷ್ಯರ ಸುಳಿವೇ ಇಲ್ಲ. ಅತ್ತಿತ್ತ ನೋಡುತ್ತಾ ಮಹಡಿ ಹತ್ತಿದೆ. ಮೇಲೆ ಹತ್ತುತಿದ್ದಂತೆ ಬೆಳಕು ಇನ್ನೂ ಕಡಿಮೆಯಾಯಿತು. + + + +ಗಾಢವಾದ ನಿಶ್ಯಬ್ದ ಭಯ ಹುಟ್ಟಿಸುವಷ್ಟರಲ್ಲಿ ಸಣ್ಣದಾಗಿ ಹಾಕಿದ್ದ ವಯೊಲಿನ್ ಸಂಗೀತ ಕೇಳಿತು. ಇದು ಎಲ್ಲಿಂದ ಬರುತ್ತಿದೆ ಎಂದು ಹುಡುಕಲು ಪ್ರಯತ್ನಿಸಿದೆ. ಸ್ಪೀಕರ್ ಇದೆಯಾ ಎಂದು ಸುತ್ತಲೂ ನೋಡುತ್ತಿರುವಾಗ ನಾಲ್ಕನೆಯ ನಂಬರ್ ಕೊಠಡಿ ಕಂಡಿತು. ಸಂಗೀತ ಎಲ್ಲಿಂದ ಬರುತ್ತಿದೆ ಎಂದು ನಿಖರವಾಗಿ ಗೊತ್ತಾಗಲಿಲ್ಲ. ಬೇಸರವಾದರೂ ಕೊಠಡಿ ಅಂತೂ ಸಿಕ್ಕಿತೆಂದು ಕೊಂಚ ನಿರಾಳವಾಗಿ ಅದರ ಕಡೆಗೆ ನಡೆದೆ. ಮತ್ತೆ ಕೊಠಡಿಯ ಬಾಗಿಲು ತಂತಾನೆ ತೆರೆಯಿತು. ಒಳಕ್ಕೆ ನಡೆದೆ. ಅದೊಂದು ವಿಶಾಲವಾದ ಕೊಠಡಿ. ಮಧ್ಯಕ್ಕೆ ಸರಿಯಾಗಿ, ಸ್ವಲ್ಪ ಎತ್ತರವಾದ ಮಸಾಜ್ ಬೆಡ್ಡನಿರಿಸಿದ್ದರು. ಹೊರಗೆ ಕೇಳಿದ ಸಂಗೀತವೇ ಇಲ್ಲಿ ಇನ್ನು ಸ್ಫುಟವಾಗಿ ಕೇಳುತಿತ್ತು. ಒಂದು ಬದಿಯಲ್ಲಿದ್ದ ಕುರ್ಚಿಯ ಮೇಲೆ ಕುಳಿತೆ. ಎದುರಿನ ಗೋಡೆಯ ಮೇಲೆ ದೊಡ್ಡದೊಂದು ಪೈಂಟಿಂಗ್ ಕಂಡಿತು. ವಿಶಾಲವಾದ ಸಮುದ್ರ ತೀರ. ಒಂದು ಬದಿಯಿಂದ ಸ್ವಚ್ಛಂದವಾಗಿ ಓಡಿಬರುತ್ತಿರುವ ನಾಲ್ಕು ಕುದುರೆಗಳು. ಉಕ್ಕಿ ಉಕ್ಕಿ ಬರುತ್ತಿರುವ ಅಲೆಗಳು. ಹೊಳೆಯುತ್ತಿರುವ ಕಂದು ಬಣ್ಣದ ಕುದುರೆಯ ಮೈಮೇಲೆ ಚಿಮ್ಮುತ್ತಿರುವ ಅಲೆಗಳ ಉಪ್ಪು, ನೊರೆ. ಶುಭ್ರವಾದ ನೀಲಿ-ಬಿಳಿ ಆಕಾಶ. + +ಬೆಡ್ಡಿನ ಹಿಂದಿನ ಮರದ ಕಟ್ಟೆಯ ಮೇಲೆ ಹಳದಿ ಮೇಣದ ಬತ್ತಿ ಉರಿಯುತಿತ್ತು. ಹೆಂಗಸೊಬ್ಬಳು ಅಷ್ಟರಲ್ಲಿ ಒಳಗೆ ಬಂದಳು. ಮುಖಕ್ಕೆ ತೆಳುವಾದ ಬಿಳಿಯ ಮಾಸ್ಕ್ ಹಾಕಿಕೊಂಡಿದ್ದಳು. ಒಳಗೆ ಬಂದವಳೇ ನಸುನಕ್ಕು, “please lie down sir” ಎಂದಳು. ನನ್ನ ಶೂಸನ್ನು ಕೂತಲ್ಲೆ ಕಳಚಿ ಪಕ್ಕಕ್ಕಿಟ್ಟು ಬೆಡ್ಡಿನ ಮೇಲೆ ಅಂಗಾತ ಮಲಗಿದೆ. ಇವಳೇ ಇರಬಹುದು ಪ್ರಿಮಿಥ್ ಲೇಪ್ಚಾ ಅಂದುಕೊಂಡೆ. ಕೋಣೆಯ ಒಂದು ಬದಿಯಲ್ಲಿದ್ದ ಸಿಂಕಿನಲ್ಲಿ ತನ್ನೆರಡೂ ಕೈಗಳನ್ನು ತೊಳೆದುಕೊಂಡು, ನನ್ನ ತಲೆಯ ಹಿಂದೆ ಬಂದು ಬಾಗಿದಳು. ಗೋಧಿ ಬಣ್ಣ. ದಟ್ಟವಾದ ಕಪ್ಪು ಕೂದಲನ್ನು ಒಟ್ಟುಮಾಡಿ ದುಂಡಗೆ ಕಟ್ಟಿದ್ದಳು. ಸಣ್ಣ ಕಣ್ಣುಗಳು.“Close your eyes and relax sir”, ಎಂದಳು. + +ಕಣ್ಣು ಮುಚ್ಚಿದೆ. ಆದರೆ ಅಷ್ಟು ಸುಲಭವಾಗಿ ರಿಲ್ಯಾಕ್ಸ್ ಆಗಲು ಹೇಗೆ ಸಾಧ್ಯ?! ತಣ್ಣಗಿದ್ದ ತನ್ನೆರಡೂ ಅಂಗೈಯನ್ನು ನನ್ನ ಮುಖದ ಮೇಲಿರಿಸಿದಳು. ನನಗರಿವಿಲ್ಲದೇ ಬಿಗಿಯಾಗಿದ್ದ ನನ್ನ ಹುಬ್ಬುಗಳು ಕಂಪಿಸಿದವು. ಅವಳ ಕೈ ಮೆಲ್ಲಗೆ ಹಣೆಯತ್ತ ಸಾಗಿತು. ಬಿಗಿಯಾಗಿ ಚಡಪಡಿಸುತ್ತಿದ್ದ ನನ್ನ ಹುಬ್ಬುಗಳನ್ನು ನೇವರಿಸಿದಳು. ನನ್ನ ಕಣ್ಣುಗಳು ಮುಚ್ಚಿದ್ದರೂ ವಿಪರೀತ ವಿಚಲಿತವಾಗಿದ್ದನ್ನು ಅವಳು ಸ್ಪರ್ಶದಲ್ಲೇ ಗಮನಿಸಿರಬೇಕು. ತನ್ನ ಬೆರಳುಗಳಿಂದ ಸಮಾಧಾನವಾಗಿ ನನ್ನ ಕಣ್ಣು ರೆಪ್ಪೆಗಳನ್ನು ಮೆಲ್ಲಗೆ ತೀಡುತಿದ್ದಳು. + +ಬೆಡ್ಡಿನ ಹಿಂದಿನ ಮರದ ಕಟ್ಟೆಯ ಮೇಲೆ ಹಳದಿ ಮೇಣದ ಬತ್ತಿ ಉರಿಯುತಿತ್ತು. ಹೆಂಗಸೊಬ್ಬಳು ಅಷ್ಟರಲ್ಲಿ ಒಳಗೆ ಬಂದಳು. ಮುಖಕ್ಕೆ ತೆಳುವಾದ ಬಿಳಿಯ ಮಾಸ್ಕ್ ಹಾಕಿಕೊಂಡಿದ್ದಳು. ಒಳಗೆ ಬಂದವಳೇ ನಸುನಕ್ಕು, “please lie down sir” ಎಂದಳು. ನನ್ನ ಶೂಸನ್ನು ಕೂತಲ್ಲೆ ಕಳಚಿ ಪಕ್ಕಕ್ಕಿಟ್ಟು ಬೆಡ್ಡಿನ ಮೇಲೆ ಅಂಗಾತ ಮಲಗಿದೆ. ಇವಳೇ ಇರಬಹುದು ಪ್ರಿಮಿಥ್ ಲೇಪ್ಚಾ ಅಂದುಕೊಂಡೆ. + +ಸಂಗೀತದ ಲಯ ಕಡಿಮೆಯಾಯಿತು. ಈ ತಂಪಾದ ಸ್ಪರ್ಶ, ನೇವರಿಕೆ ಅಷ್ಟು ಸುಲಭಕ್ಕೆ ಒಗ್ಗುವಂತಿರಲಿಲ್ಲ. ನನ್ನ ಮಂಡಿ ಚಿಪ್ಪುಗಳು, ಕೈಕಾಲಿನ ಬೆರಳುಗಳು ಇದ್ದಲ್ಲೇ ಪ್ರತಿಭಟಿಸುತ್ತಿದ್ದವು. ಕ್ರಮೇಣ ಅಂಗೈಸ್ಪರ್ಶ ಬಿಗಿಯಾಗುತ್ತಿದ್ದಂತೆ ನನ್ನ ದೇಹದ ಪ್ರತೀ ಅಂಗಾಂಗಗಳಿಗೂ ಜೀವಂತಿಕೆ ಬಂದಂತೆನಿಸಿತು. ಹಣೆಯ ಮಧ್ಯದಿಂದ ಪ್ರಾರಂಭಿಸಿ ಎರಡೂ ಕೈಗಳಿಂದ ನಿಧಾನವಾಗಿ ಇಳಿಯುತ್ತ ಕಿವಿಯ ಬಳಿ ನಿಲ್ಲುವಳು. ನಂತರ ಕಿವಿಯ ಹಿಂಭಾಗದಿಂದ ಮೆಲ್ಲಗೆ ಇಳಿಯುತ್ತಾ ನನ್ನೆರಡೂ ಭುಜದವರೆಗೆ ನೀವುತ್ತಿದ್ದಳು. ನಂತರ ಸಣ್ಣದೊಂದು ಟ್ವೀಜರ್ರಿನ ಸಹಾಯದಿಂದ ಮುಖದ ಮೇಲೆ ಇಂಚಿಂಚಿಗೂ ಕವಿದುಕೊಂಡಿದ್ದ ಬ್ಲ್ಯಾಕ್ಹೆಡ್ಗಳನ್ನು ಅತ್ಯಂತ ಆಸ್ಥೆಯಿಂದ ಬಗೆದು ಬಗೆದು ಹೊರಹಾಕಿದಳು. ಅವಳ ದೃಢವಾದ ಸ್ಪರ್ಶಕ್ಕೆ ಸಂಪೂರ್ಣ ಶರಣಾಗದೆ ಬೇರೆ ವಿಧಿಯಿರಲಿಲ್ಲ. ನನ್ನ ಮುಖಕ್ಕೆ ದೇಹದ ಎಲ್ಲೆಡೆಯಿಂದ ರಕ್ತ ನುಗ್ಗಿದಂತಾಗಿ ಕೈಕಾಲುಗಳು ರೋಮಾಂಚನದಿಂದ ಹಿಂಜಿದವು. ಕಣ್ಣುಗಳಲ್ಲಿ ನೀರು ತುಂಬಿ ಕ್ಷಣಾರ್ಧದಲ್ಲಿ ಕಾರ್ಯಕಾರಣವಿಲ್ಲದ ದುಃಖ ಆವರಿಸಿತು. ಅವಳ ಎರಡೂ ಕೈಗಳನ್ನು ಬಿಗಿಯಾಗಿ ಹಿಡಿದು ನಿಲ್ಲಿಸಿಬಿಡು ಎಂದು ಬೇಡಿಕೊಳ್ಳಬೇಕು ಅನ್ನಿಸಿತು. ಅಷ್ಟರಲ್ಲಿ ಅವಳು ಮೆಲ್ಲಗೆ ಭುಜವನ್ನು ತಟ್ಟಿ ಬೋರಲಾಗಿಮಲಗಲು ಹೇಳಿದಳು. ತಿರುಗಿದೆ. ತನ್ನೆರಡೂ ಹೆಬ್ಬೆರಳುಗಳಿಂದ ನನ್ನ ಕತ್ತಿನ ಕೆಳಭಾಗನ್ನು ನೇವರಿಸುತ್ತಿದ್ದಳು. ಸಂಗೀತ ಮತ್ತೆ ಬದಲಾಗಿ ಅನಿರೀಕ್ಷಿತ ಏರಿಳಿತಗಳುಂಟಾದವು. + +ಸಂಗೀತದ ಲಯ ಕಡಿಮೆಯಾಯಿತು. ಈ ತಂಪಾದ ಸ್ಪರ್ಶ, ನೇವರಿಕೆ ಅಷ್ಟು ಸುಲಭಕ್ಕೆ ಒಗ್ಗುವಂತಿರಲಿಲ್ಲ. ನನ್ನ ಮಂಡಿ ಚಿಪ್ಪುಗಳು, ಕೈಕಾಲಿನ ಬೆರಳುಗಳು ಇದ್ದಲ್ಲೇ ಪ್ರತಿಭಟಿಸುತ್ತಿದ್ದವು. ಕ್ರಮೇಣ ಅಂಗೈಸ್ಪರ್ಶ ಬಿಗಿಯಾಗುತ್ತಿದ್ದಂತೆ ನನ್ನ ದೇಹದ ಪ್ರತೀ ಅಂಗಾಂಗಗಳಿಗೂ ಜೀವಂತಿಕೆ ಬಂದಂತೆನಿಸಿತು. ಹಣೆಯ ಮಧ್ಯದಿಂದ ಪ್ರಾರಂಭಿಸಿ ಎರಡೂ ಕೈಗಳಿಂದ ನಿಧಾನವಾಗಿ ಇಳಿಯುತ್ತ ಕಿವಿಯ ಬಳಿ ನಿಲ್ಲುವಳು. + +ಬೆಡ್ಡಿನಿಂದ ಇಳಿದು ಕೋಣೆಯ ಬಾಗಿಲಿನತ್ತ ನಡೆದೆ. ರೆಟ್ಟೆಗಳಲ್ಲಿ ಉಳಿದಿದ್ದ ಎಲ್ಲಾ ಶಕ್ತಿಯಿಂದ ಭಾರೀ ಕಬ್ಬಿಣದ ಬಾಗಿಲನ್ನು ನೂಕಿ ತೆಗೆದೆ. ಹೊರಗೆ ಚುಚ್ಚುವ ಗಾಳಿ ಬೀಸುತ್ತಿತ್ತು. ವಿಶಾಲವಾದ ಕಡಲ ತೀರ. ಸುತ್ತಲು ಮರಳು. ಎಲ್ಲವೂ ಹಗೂರ. ಹಿಂದೆಂದೂ ಕಂಡಿರದ ಸಂತೋಷದ ಘಳಿಗೆ ಅದಾಗಿತ್ತು. ಒಂದೆಡೆಯಿಂದ ಜಿಗಿದು ಬರುತ್ತಿರುವ ಕುದುರೆಗಳು, ಚಿಮ್ಮುವ ಸಮುದ್ರದಲೆಗಳು, ಮತ್ತು ಈಗಷ್ಟೆ ಹುಟ್ಟಿರುವ ನಾನು. ಹತ್ತಿರಕ್ಕೆ ಬಂದ ಕುದುರೆಯೊಂದರ ಜೊತೆ ಸೇರಿ ಓಡಿದೆ. ಸಣ್ಣ ರೋಮ ತುಂಬಿದ ಅದರ ಬಲಿಷ್ಟ ದೇಹವನ್ನು ನೇವರಿಸಿದೆ. ಅದು ಕೆನೆದು ಇನ್ನೂ ಜೋರಾಗಿ ಮುಂದಕ್ಕೆ ನೆಗೆಯಿತು. ದೂರದಲ್ಲಿ, ಮರಳ ರಾಶಿಯಲ್ಲಿ ಕೂತ ಪುಟ್ಟ ಮಕ್ಕಳ ಆಕಾರ ಕಂಡವು. ಹತ್ತಿರ ಹೋದಂತೆ ಸ್ಪಷ್ಟವಾಗಿ ಕಂಡ ಮಕ್ಕಳ ಗುಂಪು. ಮರಳಿನ ಗೋಪುರ ಕಟ್ಟಿ ನಡುನಡುವೆ ಕಪ್ಪೆಚಿಪ್ಪುಗಳನ್ನು ಅದುಮಿಡುತ್ತಿದ್ದವು. ಯಾರ ಮಕ್ಕಳು ಇವರು? ನನಗೆ ಪರಿಚಿತರಲ್ಲವೇ? ಅಪ್ಪ! ಅಮ್ಮ! ನೆರೆಗೂದಲು, ನಡುವಯಸ್ಸು ಮೀರಿದ ಸುಕ್ಕಿ ಸೊರಗಿದ ಮುಖ, ಆದರೆ ಅಂಬೆಗಾಲಿಡುವ ಮಗುವಿನ ದೇಹ! ಒಂದೇ ಸಮನೆ ಮರಳಿನ ಗುಡ್ಡೆಯನ್ನು ಕಟ್ಟುತ್ತಾ ಮನೆಯಾಟ ಆಡುತ್ತಿವೆ. ಪಕ್ಕದಲ್ಲಿ ನನ್ನ ಗೆಳೆಯ. ಈಗಷ್ಟೆ ಮದುವೆಯಾಗಿ ಬದುಕು ಕಟ್ಟಿಕೊಳ್ಳಬೇಕೆನ್ನುವ ಉತ್ಸಾಹದಲ್ಲಿರುವ ಜಸ್ಪ್ರೀತ್ ಇಲ್ಲಿ ಅಸಹಾಯಕ ಶಿಶುವಾಗಿ, ಯಾವುದೋ ಹಟದಲ್ಲಿ ಮರಳನ್ನು ಒಂದೇ ಸಮನೆ ಅಗೆಯುತ್ತಿದ್ದಾನೆ. ಹತ್ತಿರ ಹೋಗಿ ಪಕ್ಕದಲ್ಲಿ ಕೂತ ನನ್ನನ್ನು ಬಲವಾಗಿ ದೂಡಿ ರಚ್ಚೆ ಹಿಡಿದಿದ್ದಾನೆ. ಕೊಂಚ ದೂರದಲ್ಲಿ ಅವಳು. ಅಂಗಾತ ಮಲಗಿದ್ದಾಳೆ. ಮುಖಕ್ಕೆ ಅದೇ ತೆಳುವಾದ ಮಾಸ್ಕ್ ಹಾಕಿದ್ದಾಳೆ. ಕೂದಲು ಬಿಚ್ಚಿ ಹರಡಿವೆ. ನೀಳ ಕೈಬೆರಳುಗಳನ್ನು ಮರಳಿನೊಳಗೆ ಹುಗಿದು, ಎದೆಯನ್ನು ಮುಂದಕ್ಕೆ ಸೆಟೆದು ಮಲಗಿದ್ದಾಳೆ. ಆವಳು ನನ್ನನ್ನು ದಿಟ್ಟಿಸಿ ನೋಡುತಿದ್ದಾಳೆ. ಅದು ಹುಸಿತನಕ್ಕೆ, ಪೊಳ್ಳುತನಕ್ಕೆ ಎಳ್ಳಷ್ಟೂ ಅವಕಾಶ ನೀಡದಂಥ ತೀಕ್ಷ್ಣ ನೋಟ.  “ಯಾಕಿಷ್ಟು ತಡ?” “ಇಷ್ಟು ದಿನ ಎಲ್ಲಿದ್ದೆ?” “ಯಾಕಿಷ್ಟು ಹಿಂಜರಿಕೆ?” ಎಂದು ಅವಳ ಸಣ್ಣಕಣ್ಣುಗಳು ಕಾಳಜಿಯಿಂದ ಎಡಬಿಡದೆ ಪ್ರಶ್ನಿಸುತ್ತಿವೆ. ಕೇಳಿಸುತ್ತಿದ್ದ ಸಂಗೀತದ ಹಿಡಿತ ತಪ್ಪಿತು. ಸ್ವರಗಳು ದಿಕ್ಕಾಪಾಲಾಗಿ ಕಲ್ಪನೆಗೂ ಮೀರಿದ ಎತ್ತರಕ್ಕೆ ಏರಿದವು. + + + +ಹೊಸ ತಲೆಮಾರಿನ ಕಥೆಗಾರ ಮತ್ತು ಛಾಯಾಚಿತ್ರಗ್ರಾಹಕ. ಆಸ್ಟ್ರೇಲಿಯಾದಲ್ಲಿರುವ ಸಾಫ್ಟ್‌ವೇರ್‌ ಉದ್ಯೋಗಿ. \ No newline at end of file diff --git a/Kenda Sampige/article_493.txt b/Kenda Sampige/article_493.txt new file mode 100644 index 0000000000000000000000000000000000000000..4a63802f8222445d9e1719ce25bacadcdeb0dc8a --- /dev/null +++ b/Kenda Sampige/article_493.txt @@ -0,0 +1,29 @@ +ಬದುಕಿನಲ್ಲಿ ಒಂದು ಹಂತಕ್ಕೆ ಬಂದೆ ಅನ್ನುವಾಗ ಹೀಗೆ ಆಯಿತೇ ಅನಿಸುತ್ತದೆ. ಮನೆ ಕಟ್ಟಿದೆ. ಮಗಳ ಮದುವೆ ಮಾಡಿಸಿದೆ. ಮಗನಿಗೊಂದು ಕೆಲಸ ಕೊಡಿಸಿ ಅವನಿಗೂ ಒಂದು ಮದುವೆ ಮಾಡಿಸಿದೆ. ಆತ ತಾನು ಇಲ್ಲಿ ಇರವುದಿಲ್ಲ ಎಂದಾಗ ಅವನಿಗೆ ಕೈ ತುಂಬ ಹಣ ಕೊಟ್ಟು ಅವನನ್ನ ಅಮೆರಿಕೆಗೂ ಕಳುಹಿಸಿದೆ. ಇನ್ನೊ ಎಲ್ಲ ತೀರ್ಮಾನವಾಯಿತು ಎಂದು ನಿಸೂರಾಗಿ ಕುಳಿತಾಗ ಇವಳು ಕೈ ಕೊಟ್ಟಳು. ಈಗ ಕೆಲ ವರ್ಷಗಳಿಂದ ಮೊಣಕಾಲು ನೋವು ಮಂಡಿ ನೋವು ಎದೆಯಲ್ಲಿ ಉರಿ ಅನ್ನುತ್ತಿದ್ದವಳು ಒಂದು ದಿನ ನನ್ನ ಕೈಲಿ ಏನೂ ಆಗುವುದಿಲ್ಲ ಎಂದು ಮಲಗಿಬಿಟ್ಟಳು. ಎದಿರು ಮನೆ ಸಾವಿತ್ರಮ್ಮನನ್ನ ಕರೆದು ಅವಳೇ ಅದು ಇದು ಕೆಲಸ ಮಾಡಿಕೊಂಡಳು. + +“ಇವರಿಗೆ ಎಲ್ಲಾನು ನಾನೇ ಮಾಡಬೇಕು ಸಾವಿತ್ರಮ್ಮ. ಏನು ಮಾಡಲಿ ಮುದಿಗೂಬೆಯಾಗಿ ಮೂಲೇಲಿ ಕೂತಿದೀನಿ…. ಸ್ವಲ್ಪ ಸಹಾಯಮಾಡಿ….” ಎಂದು ಅಲವತ್ತುಕೊಂಡಳು. ಆಕೆಯಿಂದ ಕೆಲಸ ಮಾಡಿಸಿಕೊಂಡಳು. ಆಕೆ ಕೂಡ “ಇರಲಿ ಬಿಡಿ ಗಿರಿಜಮ್ಮ ಏನು ಮಾಡಬೇಕು ಹೇಳಿ ಮಾಡಿಕೊಡ್ತೀನಿ” ಎಂದು ಅವಳ ಸಹಾಯಕ್ಕೆ ನಿಂತರು. ಎದಿರು ಮನೆ ಸಾವಿತ್ರಮ್ಮ ಇಲ್ಲಿ ಒಂಟಿ ಹೆಂಗಸು. ಅವಳ ಮಗ ಅಮೇರಿಕಾ ಸೇರಿ ಎರಡು ವರ್ಷ. ಇಲ್ಲಿ ಸಾವಿತ್ರಮ್ಮ ಒಂಟಿ. ತನಗಾಗಿ ಅನ್ನ ಬೇಯಿಸಿಕೊಂಡು ಸಾರು ಹುಳಿ ಬೇಯಿಸಿಕೊಂಡು ಬದುಕಿದಾಕೆ. ಆಕೆಯ ಒಂಟಿ ಬದುಕಿನ ಬಗ್ಗೆ ಕೇರಿಯ ಎಲ್ಲರಿಗೂ ಅನುಕಂಪ. ಆಕೆ ಪಾಪ ಒಳ್ಳೆಯ ಹೆಂಗಸು. ಒಬ್ಬರ ಹತ್ತಿರ ಮಾತಿಲ್ಲ ಕತೆಯಿಲ್ಲ. ತಾನಾಯಿತು ತನ್ನ ಮನೆಯಾಯಿತು. ಯಾರಿಗಾದರೂ ಉಪಕಾರ ಮಾಡಬೇಕು ಅಂದರೆ ಆಕೆ ಮುಂದೆ. “ಸಾವಿತ್ರಮ್ಮ ಬೇಜಾರಾಗೋದಿಲ್ಲವೇನ್ರಿ” ಎಂದು ಯಾರಾದರೂ ಕೇಳಿದರೆ “ಎಲ್ಲ ನುಂಗಿಕೋಬೇಕಮ್ಮ, ಬೇಜಾರು ಮಾಡಿಕೊಂಡ್ರೆ ಏನು ಪ್ರಯೋಜನ?” ಎಂದು ಮರು ಪ್ರಶ್ನೆ ಕೇಳುವವರು ಸಾವಿತ್ರಮ್ಮ. + +ಹಿಂದೆಲ್ಲ ಬಾಗಿಲಲ್ಲಿ ನಿಂತೇ “ಇದೀರಾ ಗಿರಿಜಮ್ಮ” ಎಂದು ಕೇಳಿ ಒಳಬರುತ್ತಿದ್ದ ಆಕೆ ಗಿರಿಜಮ್ಮ ಇಲ್ಲಿ ಈಗ ಹಾಸಿಗೆ ಹಿಡಿದ ಮೇಲೆ “ಗಿರಿಜಮ್ಮಾ” ಅಂದುಕೊಂಡೇ ಒಳಬರತೊಡಗಿದರು. ಅವಳು ಒಳಗಿನಿಂದ ಬನ್ನಿ ಸಾವಿತ್ರಮ್ಮ ಅನ್ನಬೇಕು. ಆಕೆಗೆ ನಿದ್ರೆಯೋ ಮಂಪರೋ ಬಂದಿದ್ದರೆ ಬನ್ನಿ ತಾಯಿ ಎಂದು ಹೇಳುವ ಸರದಿ ತನ್ನದು. ಹೆಣ್ಣು ಮಕ್ಕಳು ಅವರು ಯಾವುದೇ ವಯಸ್ಸಿನವರಾಗಲಿ ಅವರನ್ನು ತಾಯಿ ಎಂದೇ ಕರೆಯುವವ ತಾನು. ಇದನ್ನ ಮೆಚ್ಚಿಕೊಂಡ ಒಪ್ಪಿಕೊಂಡ ಹೆಂಗಸರೂ ಇದ್ದರು. ಆದರೆ ಆಫೀಸಿನಲ್ಲಿ ಕೆಲಸ ಮಾಡುವ ಕೆಲ ಹುಡುಗಿಯರು ಇದನ್ನು ಸಹಿಸುತ್ತಿರಲಿಲ್ಲ. “ಏನ್ಸಾರ್ ನೀವು ತಾಯಿ ಬಾಯಿ ಅಂತೀರಾ ?” ಎಂದು ಮರುಪ್ರಶ್ನೆ ಕೇಳುತ್ತಿದ್ದರು. ಈ ಎಳೆಯ ಹುಡುಗಿಯರಿಗೆ ತಮ್ಮನ್ನು ಇತರರು ಮೇಡಂ ಎಂದೋ ಇಲ್ಲ ಬೇರೊಂದು ರೀತಿಯಲ್ಲೋ ಕರೆಯಬೇಕು ಅನ್ನುವ ಚಟ. ತಾಯಿ ಅನ್ನಿಸಿಕೊಳ್ಳಲು ಅವರಿಗೆ ಏನೋ ಮುಜುಗುರ. + + + +“ನೋಡಮ್ಮ ಓರ್ವ ಹೆಂಗಸಿಗೆ ಕೊಡಬಹುದಾದ ಬಹಳ ದೊಡ್ಡ ಗೌರವ ಇದು… ತಾಯಿ ಅಂತ ಕರೆಯೋದು ಕರೆಸಿ ಕೊಳ್ಳೋದು ಒಂದು ಪುಣ್ಯದ ಕೆಲಸ…. ಹಾಗೆ ಕರೆಯೋದೇ ಬೇಡ ಅಂದರೆ ಬೇಡ ಬಿಡಿ….. ನಾನು ಮೇಡಂ ಅಂತಾನೋ ಇಲ್ಲ ಲೇಡಿ ಅಂತಾನೋ ಕರೀತೀನಿ ಬಿಡಿ” ಅನ್ನುತಿದ್ದರು ಇವರು. ಹೀಗಾಗಿ ಮನೆ ಬಾಗಿಲಿಗೆ ಒಂದಲ್ಲಾ ಒಂದು ಕೆಲಸ ಮಾಡಿಕೊಡಲು ಬರುವ ಎದಿರು ಮನೆ ಸಾವಿತ್ರಮ್ಮ ಇವರ ಪಾಲಿಗೆ ತಾಯಿ ಆದರು. ಈ ಸಾವಿತ್ರಮ್ಮನ ಬಗ್ಗೆ ಇವರಿಗೆ ಕೂಡ ಅನುಕಂಪವೇ. ಬಹಳ ವರ್ಷಗಳಿಂದ ಅವರನ್ನ ನೋಡಿ ಬಲ್ಲರು. ಸಾವಿತ್ರಮ್ಮನ ಗಂಡ ರಾಮರಾಯರು ಬಹಳ ವರ್ಷಗಳಿಂದ ತಮ್ಮ ಸ್ನೇಹಿತರಾಗಿದ್ದವರೇ, ಅವರೂ ಒಳ್ಳೆಯ ಜನ. ಒಂದು ಕೋಪವಿಲ್ಲ. ಒಂದು ಜಂಬವಿಲ್ಲ. ಸದಾ ಮೆದುನುಡಿ. ಮುಖದ ಮೇಲೆ ಸದಾ ಮಂದಹಾಸ. ಮಗ ಅಮೆರಿಕಕ್ಕೆ ಹೋಗುವ ತನಕ ಇವರದ್ದು ಕೇರಿಯಲ್ಲಿ ಒಂದು ಸುಖದ ಸುಂದರ ಕುಟುಂಬ. ನಂತರ ಕೂಡ ಗಂಡ ಹೆಂಡತಿ ಸುಖವಾಗಿದ್ದರು. ಇಬ್ಬರಿಗೂ ವಯಸ್ಸಾಗಿತ್ತು. ಆದರೂ ಪರಸ್ಪರ ಆಕರ್ಷಣೆ ಕಡಿಮೆ ಆಗಿರಲಿಲ್ಲ. ಒಬ್ಬರನ್ನು ಇನ್ನೊಬ್ಬರು ಅವಲಂಬಿಸಿಕೊಂಡೇ ಇದ್ದರು. ಇದು ಕೇರಿಗೆಲ್ಲ ಒಂದು ವಿಶೇಷವಾಗಿತ್ತು. ಕೇರಿಯಲ್ಲಿರುವ ಯಾವ ಯುವ ದಂಪತಿಗಳೂ ಈ ವೃದ್ಧ ದಂಪತಿಗಳನ್ನ ಕಂಡು ಮತ್ಸರ ಪಡುವಂತಿದ್ದರು. + +ಈಗ ಎರಡು ವರ್ಷಗಳ ಹಿಂದೆ ಅವರ ಮಗ ತನ್ನ ಹೆಂಡತಿಯನ್ನ ಕರೆದುಕೊಂಡು ಮಗನ ಹಾಗೆಯೇ ಅಮೇರಿಕೆಗೆ ಹೋದಾಗ ಇಲ್ಲಿ ರಾಮರಾಯರು ಅವರ ಹೆಂಡತಿ ಸಾವಿತ್ರಮ್ಮ ಅನಾಥರಾದರು. “ಇಷ್ಟು ದಿನ ಮನೆ ತುಂಬ ಜನ ಇರೋರು. ಮಗ ಸೊಸೆ ಮೊಮ್ಮಗ ಇವಳು ಅಂತ ಮಾತು ಗಲಾಟೆ…. ಈಗ ಇವಳು ನಾನು ಇಬ್ಬರೇ” ಎಂದು ರಾಮರಾಯರು ತನ್ನ ಮುಂದೆ ಕೊರಗುತ್ತಿದ್ದರು.“ಪ್ರಾರಂಭದಲ್ಲಿ ನಾವಿಬ್ಬರೇ ಇದ್ದುದು. ಮದುವೆಯಾದ ಹೊಸದರಲ್ಲಿ ಈ ಏಕಾಂತ ಸುಖದ್ದೇ. ಈಗ ಹಾಗಲ್ಲ ಮೊಮ್ಮಗ ಸೊಸೆ ಎದಿರು ಓಡಾಡಬೇಕು ಅನಿಸುತ್ತೆ. ಅವರ ಮಾತು ಕೇಳಬೇಕು ಅನಿಸುತ್ತೆ. ಮೊಮ್ಮಗನ ಬೆಳವಣಿಗೆ ನೋಡಬೇಕು ಅಂತ ಮನಸ್ಸು ಬಯಸುತ್ತೆ. ಆದರೆ ಏನು ಮಾಡೋದು? ಈ ಅಮೇರಿಕ ನಮ್ಮ ಸುಖಾನ ಕಸಿದುಕೊಂಡು ಬಿಡ್ತು” ಎಂದು ಹೇಳಿದ್ದರು ತನ್ನ ಮುಂದೆ. ಆಗ ತಾನು ಅವರಿಗೆ ಸಮಾಧಾನ ಹೇಳಿದ್ದೆ.“ಹಕ್ಕಿ ಮರಿಗಳಿಗೆ ಪುಕ್ಕ ರೆಕ್ಕೆ ಬರೋತನಕ ಮಾತ್ರ ಗೂಡು… ನಂತರ ಅವುಗಳಿಗೆ ಆಕಾಶವೇ ಗೂಡು…. ನಮಗೆ ಮಕ್ಕಳ ಮೇಲೆ ಅದೆಷ್ಟೇ ಮೋಹ ಇರಲಿ ಅವರ ಪ್ರಗತಿಗೆ ಅಡ್ಡ ಬರಲಿಕ್ಕೆ ನಾವು ಯಾರು?” ಎಂದು ರಾಮರಾಯರಿಗೆ ಸಮಾಧಾನ ಹೇಳಿದ್ದೆ. ಆದರೆ ಈ ಘಟನೆ ನಡೆದ ಕೆಲವೇ ದಿನಕ್ಕೆ ನನ್ನ ಮಗ ತಾನು ಅಮೇರಿಕಕ್ಕೆ ಹೋಗುವುದಾಗಿ ಎದ್ದ. + +“ಕೆಟ್ಟು ಹೋಗಿರುವ ದೇಶ ಇದು. ಇಲ್ಲಿ ಜಾತಿ ಕೋಮು ಇನ್ನೊಂದು ಅಂತ ಎಲ್ಲ ಹೊಲಸು. ನಾನು ಇಲ್ಲಿ ಇರೋದಿಲ್ಲ. ನಾನು ಅಮೇರಿಕಾಕ್ಕೆ ಹೊರಟೆ” ಮಗ ಹಟ ಹಿಡಿದ. ಹೆಂಡತಿ ಮಗನ ಜೊತೆಯಲ್ಲಿ ಹೋಗುತ್ತೇನೆ ಎಂದ. ಹೌದು ಹಕ್ಕಿ ಮರಿಗೆ ರೆಕ್ಕೆ ಪುಕ್ಕ ಬಂದಿತ್ತು. ಮಗ ಸೊಸೆ ಮೊಮ್ಮಗನನ್ನ ವಿಮಾನ ಹತ್ತಿಸಿ ಮನೆಗೆ ಬಂದಾಗ ರಾಮರಾಯರು ಅವರ ಮನೆ ಅಂಗಳದಲ್ಲಿ ನಿಂತಿದ್ದರು.“ಹೋಯ್ತೆ ಫ್ಲೈಟು” ಎಂದು ಕೇಳಿದರು. ತಾನು ಉತ್ತರಿಸಲಿಲ್ಲ. ನೇರ ಅವರ ಮನೆಗೇನೆ ಹೋಗಿ ಕುಳಿತೆ. ಮೌನದಿಂದ ಕಣ್ಣೊರೆಸಿಕೊಂಡೆ. ಅಂದಿನಿಂದ ತಮ್ಮೆರಡೂ ಕುಟುಂಬಗಳು ಹತ್ತಿರಹತ್ತಿರ ಆದವು. ತಾನು ರಾಮರಾಯರು ಒಟ್ಟಿಗೆ ಕುಳಿತು ಮಾತನಾಡುವುದು, ಸಂಜೆ ವಾಕಿಂಗ್ ಹೋಗುವುದು, ದೇವಸ್ಥಾನ ಮಾರ್ಕೆಟ್ ವಾಕಿಂಗ್ ಹೋಗುವುದು, ಬಿಡುವಾದಾಗ ಅವರ ಮನೆ ಅಂಗಳ ಇಲ್ಲ ಅವರು ನಮ್ಮ ಮನೆ ಅಂಗಳದಲ್ಲಿ ಕುಳಿತು ಮಾತು ಹರಟೆ. ನನ್ನ ಹೆಂಡತಿ ಮತ್ತು ರಾಮರಾಯರ ಹೆಂಡತಿ ಸಾವಿತ್ರಮ್ಮ ಕೂಡ ಸ್ನೇಹಿತೆಯರಾದರು. ಅವರಿಗೂ ಮಾತನಾಡಲು ಇಲ್ಲ ವಿನಿಮಯ ಮಾಡಿಕೊಳ್ಳುವ ವಿಷಯಗಳು ಇರುತ್ತಿದ್ದವಲ್ಲ. ಅಂತು ತನ್ನ ಮತ್ತು ರಾಮರಾಯರ ಕುಟುಂಬ ಎಂದಿನಂತೆ ಸಾಗಿತು.ಆದರೆ ಈ ನಡುವೆ ನಡೆದದ್ದು ರಾಮರಾಯರ ಅಗಲುವಿಕೆ. ಅದೇನೋ ಎದೆ ನೋವೆಂದು ಮಲಗಿದ ಅವರು ಮತ್ತೆ ಏಳಲಿಲ್ಲ. ಸಾವಿತ್ರಮ್ಮ ಗಂಜಿ ಔಷಧಿ ಎಂದು ಆಸ್ಪತ್ರೆಗೆ ಓಡಾಡುವಾಗಲೇ ಅವರು ತೀರಿಕೊಂಡರು. ಅವರ ನೆಂಟರಿಷ್ಟರೆಲ್ಲ ಬಂದು ಮುಂದಿನ ಕೆಲಸ ನಡೆಸಿಕೊಟ್ಟರು. ಅಮೇರಿಕದಿಂದ ಮಗ ಬರಲಿಲ್ಲ. ತನಗೆ ರಜೆಯಿಲ್ಲ ಮುಂದಿನ ಡಿಸೆಂಬರಿಗೆ ಬರುವೆ ಎಂದು ತಿಳಿಸಿದ. ಡಿಸೆಂಬರ್ ಬಂದು ಹೋದರೂ ಮಗ ಬರಲಿಲ್ಲ. ಇಲ್ಲಿ ಸಾವಿತ್ರಮ್ಮ ಒಂಟಿಯಾಗಿ ಕಾಲ ಕಳೆಯತೊಡಗಿದರು. ಅವರಿಗೆ ಆಸರೆಯಾಗಿ ನಿಂತವಳು ಗಿರಿಜ. ನಿತ್ಯ ತನ್ನ ಮನೆಗೆ ಬರುತ್ತಿದ್ದರು ಆಕೆ. ಎದುರಾದಾಗ ಒಂದು ಮಾತು. + +“ಮಗ ಫೋನು ಮಾಡಿದ್ನೇ?”“ಹಿಂದೆಲ್ಲ ವಾರಕ್ಕೆ ಒಂದು ಸಾರಿ ಮಾತಾಡುತಿದ್ದ… ಈಗ ತಿಂಗಳಿಗೆ ಒಂದು ಎರಡು ಸಾರಿ”“ಪಾಪ. ಆಫೀಸು ಮನೆ ಅಂತ ಓಡಾಡುವುದರಲ್ಲೇ ಸಮಯ ಕಳೆದುಹೋಗುತ್ತೇನೋ….” ಅನ್ನುತ್ತಾರೆ ಸಾವಿತ್ರಮ್ಮ.“ಅಮೇರಿಕಾ ಅಂದರೆ ನಮ್ಮ ಊರಿನ ಹಾಗಲ್ಲ ತಾಯಿ… ಜನ ಯಾವಾಗಲೂ ಅವಸರದಲ್ಲೇ ಇರುತ್ತಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡಲಿಲ್ಲ ಅಂದರೆ ಅಲ್ಲಿ ಬದುಕು ಮಾಡುವುದೇ ಕಷ್ಟ….” ತಾನು ಸಮಾಧಾನ ಹೇಳುತ್ತೇನೆ. ಆಕೆ ಹೌದೋ ಅಲ್ಲವೋ ಅನ್ನುವ ಹಾಗೆ ಮುಖದ ಮೇಲೆ ಮುಗುಳು ನಗೆ ಧರಿಸುತ್ತಾರೆ. ಹೆಂಗಸು ಹಾಗೆಯೇ. ತನ್ನಲ್ಲಿಯೇ ಎಲ್ಲ ನೋವನ್ನ ಹುದುಗಿಸಿ ಇರಿಸಿಕೊಂಡು ನಗುವ ಯತ್ನ ಮಾಡುತ್ತಾಳೆ.“ಅಲ್ಲ ತಾಯಿ, ನೀವೂ ಅಲ್ಲಿಗೆ ಹೋಗಿಬಿಡಿ… ಇಲ್ಲಿ ಒಬ್ಬರೇ ಪರದಾಡುವುದರ ಬದಲು ಅಲ್ಲಿ, ಮಗ ಸೊಸೆ ಮೊಮ್ಮಗನ ಜತೆ ಇರಬಹುದಲ್ಲ….”“ಅಯ್ಯೊ ಇಲ್ಲಿ ನೆಂಟರು ಅಂತ ಇದಾರೆ…. ನಿಲ್ಲಲಿಕ್ಕೆ ಒಂದು ನೆಲ ಅಂತ ಇದೆ…. ಅಲ್ಲಿ ಹೋಗಿ ಅತಂತ್ರ ಸ್ಥಿತಿ ಬಂದರೆ ಏನು ಅಂತ ಚಿಂತೆ…. ಮಗ ಸೊಸೆ ಎಲ್ಲ ಎರಡು ದಿನ, ನಂತರ ಯಾರಿಗೆ ಯಾರೋ ಬೇಡಿ. ಉಸಿರು ಇರೋ ತನಕ ಇಲ್ಲೇ ಇರೋದು….”ಸಾವಿತ್ರಮ್ಮ ಅದೇ ಮುಗುಳು ನಗೆಯನ್ನ ಮುಖದ ಮೇಲೆ ಧರಿಸಿ ನಗುತ್ತಾರೆ. ರಾಮರಾಯರು ಹೋದ ಮೇಲೆ ಅವರು ನಮ್ಮ ಮನೆಯಲ್ಲಿಯೇ ಕಾಲ ಕಳೆಯುವುದು ಹೆಚ್ಚಾಯಿತು. + +“ಅಯ್ಯೋ ಅವರು ಪದೇ ಪದೇ ಇಲ್ಲಿಗೆ ಬರಲಿಕ್ಕೆ ಮುಜುಗರ ಪಡತಾರೆ” ಎಂದಳು ಇವಳು ಒಂದು ದಿನ,“ಯಾಕಂತೋ ?”“ನೀವು ಏನಾದರೂ ತಿಳಕೋತೀರೋ ಅಂತ”“ಹಾಗೇನಿಲ್ಲ ಬಿಡು.. ಒಂಟಿ ಹೆಂಗಸು ಬರಲಿ”ಎಂದೆ ನಾನು. ಆನಂತರ ಸಾವಿತ್ರಮ್ಮ ಈ ಮನೆಯವರೇ ಆದರು. ಹೀಗೆ ಆದಾಗಲೇ ಇವಳು ಮಂಡಿ ನೋವು ಕೈಕಾಲು ನೋವು ಅನ್ನುತ್ತಿದ್ದವಳು ಹಾಸಿಗೆ ಹಿಡಿದಳು. ತಾನು ಸಾವಿತ್ರಮ್ಮ ಇವಳ ಸೇವೆಗೆ ನಿಂತೆವು.“ತಾಯಿ ನಿಮಗೆ ಸುಮ್ಮನೆ ತೊಂದರೆ” ಅಂದರೆ ಸಾವಿತ್ರಮ್ಮ ಎಂದಿನ ನಗೆ ಸೂಸುತ್ತ,“ತೊಂದರೆ ಏನಿಲ್ಲ ರಾಯರೆ. ನಾನು ಮತ್ತೆ ಯಾರ ಸೇವೆ ಮಾಡಬೇಕು ಹೇಳಿ” ಅನ್ನುತ್ತಿದ್ದರು.ಸಾವಿತ್ರಮ್ಮನಿಂದ ಸೇವೆ ಮಾಡಿಸಿಕೊಂಡೇ ಒಂದು ದಿನ ಗಿರಿಜ ಹೊರಟು ಬಿಟ್ಟಳು. ಒಂದು ದಿನ ಬೆಳಿಗ್ಗೆ ಎದ್ದು ಗಿರಿಜಾ ಎಂದು ಕೂಗಿದಾಗ ಅವಳು ಇರಲಿಲ್ಲ. ಅವಳ ಮಂಜುಗೆಡ್ಡೆಯಂತಹಾ ಶವವನ್ನ ಮುಟ್ಟಿ ನೋಡಿ ಗಾಬರಿಯಾದ ತಾನು ಎದುರು ಮನೆಗೆ ಹೋಗಿ “ತಾಯೀ…..” ಎಂದಾಗ ಸಾವಿತ್ರಮ್ಮ ಓಡಿ ಬಂದರು. ಅವರು ಗಿರಿಜೆಯ ಶವ ಮುಟ್ಟಿ ನೋಡಿ ಸಣ್ಣಗೆ ಚೀರಿದರು.“ಹೌದು ಗಿರಿಜಮ್ಮ ನಿಮ್ಮನ್ನ ಬಿಟ್ಟು ಹೋದರು” ಎಂದು ಬಿಕ್ಕಳಿಸಿದರು. ಮಗನಿಗೆ ಸುದ್ದಿ ತಿಳಿಸಿದೆ. ಆತ“ಅಪ್ಪ ನಾನು ಈಗ ಬರಲಾರೆ, ಪಾಪುಗೆ ಒಂದು ಪರೀಕ್ಷೆ. ಇವಳು ಒಂದು ಇಂಟರ್ವ್ಯೂ ಅಟೆಂಡ್ ಮಾಡಬೇಕಾಗಿದೆ… ನಾನು ಇನ್ನು ಆರು ತಿಂಗಳು ಬಿಟ್ಟು ಬರುತೀನಿ….. ಹ್ಯಾಗೂ ಸುಧಾರಿಸಿಕೋ. ಅಕೌಂಟಿಗೆ ಹಣ ಕಳುಹಿಸಿದ್ದೇನೆ” ಎಂದ.ಈ ಸುದ್ದಿ ಕೇಳಿ ಸಾವಿತ್ರಮ್ಮ ಕಣ್ಣೊರೆಸಿಕೊಂಡರು. + +“ಇದೇ ಕಾರಣಕ್ಕೆ ನನ್ನ ಮಗನಿಗೆ ತಂದೆ ಬೇಕಾಗಲಿಲ್ಲ… ನಿಮ್ಮ ಮಗನಿಗೆ ತಾಯಿ… ಇಲ್ಲಿ ನಾವೇ ಸುಧಾರಿಸಿಕೊಂಡು ಹೋಗಬೇಕು…. ಅವನೇ ಹೇಳಿದ್ದಾನಲ್ಲ….” ಎಂದರು.ಗಿರಿಜೆಯ ಅಂತ್ಯಕ್ರಿಯೆ ಮುಗಿಯಿತು. ಹತ್ತಿರದ ಜನ ನೆಂಟರು ಇಷ್ಟರು ಕೇರಿಯ ಜನ ಬಂದರು. ಮುಖ್ಯವಾಗಿ ಸಾವಿತ್ರಮ್ಮ ಮುಂದೆ ನಿಂತು ಎಲ್ಲ ಮುಗಿಸಿದರು. ಬದುಕು ತುಂಬಾ ಕಷ್ಟಕರ ಅನಿಸಿತು. ಇಡೀ ಮನೆಗೆ ತಾನೊಬ್ಬನೇ ಆದೆ. ಮಗ ಸೊಸೆ ಮೊಮ್ಮಗ ಅಮೇರಿಕಾಕ್ಕೆ ಹೋದಾಗಲೂ ಹೀಗೆ ಅನಿಸಿತ್ತು. ಆದರೆ ಆಗ ಗಿರಿಜೆ ಇದ್ದಳು. ಮಾತನಾಡುತ್ತಿದ್ದಳು. ಮನೆಯಲ್ಲಿ ಅವಳ ಓಡಾಟ ಇತ್ತು. ಅವಳ ಬಳೆಗಳ ಸದ್ದು, ಸೀರೆಯ ಸರಬರ, ಅಡಿಗೆ ಮನೆಯಲ್ಲಿ ಅವಳ ಚಟುವಟಿಕೆ. ಈಗ ಎಲ್ಲ ಬರಿದು. ಭೀಕರ ಮೌನ. ಆದರೂ ಇದರ ನಡುವೆ ಕಾಲಕಳೆಯತೊಡಗಿದೆ. ಎಲ್ಲ ಬರಿದಾಗಿಹೋದ ಅನುಭವ. ತನ್ನವರು ಅಂತ ಇದ್ದರೂ ಅವರು ದೂರ. ಅವರು ಬರುತ್ತಾರೋ ಇಲ್ಲವೋ ಅನ್ನುವ ಅನುಮಾನ.ಒಂದು ಸಾರು ಅನ್ನ ಮಾಡಿಕೊಂಡೆ. ಆಗಾಗ್ಗೆ ಸಾವಿತ್ರಮ್ಮ ಬರುತ್ತಿದ್ದರು. ಅವರು ಸಾರು, ಉಪ್ಪಿನಕಾಯಿ, ಒಂದೊಂದು ದಿನ ಚಿತ್ರಾನ್ನ, ಪಾಯಸ ತರುತ್ತಿದ್ದರು. ಹೊರಗಿನ ಹಾಲಿನ ಬಾಗಿಲಿಗೆ ಅವರು ಒರಗಿ ನಿಂತಾಗ ತಾನು ತನ್ನೆದೆಯನ್ನ ಬಚ್ಚಿ ಅವರ ಮುಂದೆ ಇಡುತ್ತಿದ್ದೆ. + +“ತಾಯೀ, ಒಂಟಿ ಬದುಕು ತುಂಬಾ ಅಸಹನೀಯವಾದದ್ದು ಅಲ್ಲವೆ?”“ಹೌದು ಪ್ರೀತಿಸುವ ಒಂದು ಜೀವ ಹತ್ತಿರ ಇಲ್ಲ ಅಂದರೆ ಬದುಕು ನರಕ…. ಹಗಲು ಇರುಳು ಇದು ನಮ್ಮನ್ನ ಕಾಡುತ್ತೆ”ಅವರು ಬಹಳ ಹೊತ್ತು ಅಲ್ಲಿ ನಿಂತಿದ್ದರು. ನಂತರ ಏನೂ ಮಾತನಾಡದೆ ತಮ್ಮ ಮನೆಗೆ ಹೋದರು. ಅವರ ಮನೆಯ ಗೇಟು ತೆರೆದುಕೊಂಡು ನಂತರ ಮುಚ್ಚಿಕೊಂಡಿತು. ಆ ಗೇಟಿನ ಸದ್ದಿನಲ್ಲೂ ಒಂದು ಏನೋ ವೇದನೆ ಇತ್ತು. + + + +ಮತ್ತೆ ಸಾವಿತ್ರಮ್ಮ ಬಂದದ್ದು ಮೂರು ದಿನಗಳ ನಂತರ. ಎಂದಿನಂತೆ ಅವರ ಕೈಲಿ ಒಂದು ಪಾತ್ರೆ.“ಮನಸ್ಸಿಗೆ ಎಷ್ಟೇ ಬೇಸರವಾದರೂ ನಾಲಿಗೆ ಕೇಳೋದಿಲ್ಲ…. ಕೇಸರಿ ಬಾತ್ ಮಾಡಿದ್ದೆ…”“ಅಯ್ಯೋ ಇದನ್ನೆಲ್ಲ ಏಕೆ ತಂದಿರಿ ತಾಯಿ…. ಎಷ್ಟೇ ಸಿಹಿ ತಿಂದರೂ ಮನಸ್ಸಿಗೆ ಆಗಿರುವ ಕಹಿ ಹೋಗೋದಿಲ್ಲ ಅಲ್ವಾ ?”“ಕಹಿಯನ್ನ ಸಿಹಿ ಮಾಡಿಕೊಳ್ಳೋದೇ ಬದುಕು ಅಲ್ವಾ?”ಬಾಗಿಲ ಬಳಿ ಹೋಗಿ ನಿಂತ ಆಕೆ ತನ್ನ ಮಾತನ್ನ ಮುಂದುವರೆಸಿದಳು.“ನಿಮಗೊಂದು ಮಾತು ಹೇಳಬೇಕು ಅಂತಾ….”“ಹೇಳಿ ತಾಯಿ”“ಇನ್ನು ಈ ತಾಯಿ ಅನ್ನೋ ಶಬ್ದ ಬಳಸ ಬೇಡಿ…. ನನಗೆ ಹಿಡಿಸೋದಿಲ್ಲ…”ಅಷ್ಟು ಹೇಳಿ ಸಾವಿತ್ರಮ್ಮ ಅಲ್ಲಿಂದ ಮರೆಯಾದರು. ಅವರ ಮನೆಯ ಕಬ್ಬಿಣದ ಗೇಟನ್ನ ತೆಗೆದು ಹಾಕಿದ ಸದ್ದು ಬೇರೆಯೇ ಆದ ಲಯದಲ್ಲಿ ಕೇಳಿಸಿ ಇವರ ಮೈ ಹುರಿಗಟ್ಟಿತು. + + + +ಹಿರಿಯ ಕಥೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತಿ. ಸಾಗರದಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ಣ ಹೆಸರು ಡಾ.ನಾರ್ಬರ್ಟ್ ಡಿಸೋಜ. \ No newline at end of file diff --git a/Kenda Sampige/article_494.txt b/Kenda Sampige/article_494.txt new file mode 100644 index 0000000000000000000000000000000000000000..d66457487a250b34dfffbc07a926f5bec214e8bb --- /dev/null +++ b/Kenda Sampige/article_494.txt @@ -0,0 +1,19 @@ +ಫ್ರಾಂನ್ಝ್ ಕಾಫ್ಕಾ + +ದೇಶದ ಭದ್ರತಾ ವ್ಯವಸ್ಥೆಯನ್ನು ನಾವು ಬಹಳ ನಿರ್ಲಕ್ಷಿಸಿದ್ದೇವೆ ಅನಿಸುತ್ತದೆ. ಇಲ್ಲಿಯವರೆಗೆ ಅದರ ಬಗ್ಗೆ ಗಮನವನ್ನೇ ಹರಿಸದೇ ನಮ್ಮಷ್ಟಕ್ಕೆ ನಾವು ನಮ್ಮ ನಿತ್ಯಕರ್ಮಗಳಲ್ಲಿ ತೊಡಗಿಕೊಂಡಿದ್ದೆವು. ಆದರೆ ಇತ್ತೀಚಿನ ಕೆಲವು ಘಟನೆಗಳು ನಮ್ಮಲ್ಲಿ ಕಳವಳ ಉಂಟುಮಾಡುತ್ತಿವೆ. + +ಮಹಾರಾಜರ ಅರಮನೆಯ ಎದುರಿನ ಚೌಕದಲ್ಲಿ ನನ್ನದೊಂದು ಚಪ್ಪಲಿಹೊಲಿಯುವ ಅಂಗಡಿ ಇದೆ. ಬೆಳ್ಳಂಬೆಳಗು ನಾನು ಅಂಗಡಿ ಬಾಗಿಲು ಇನ್ನೇನು ತೆರೆಯಬೇಕು ಅನ್ನುವಷ್ಟರಲ್ಲಿ ನನ್ನ ಕಣ್ಣಿಗೆ ಬಿದ್ದದ್ದು ಚೌಕವನ್ನು ಬಂದು ಸೇರುವ ಎಲ್ಲ ಬೀದಿಗಳ ಮೊದಲಲ್ಲಿ ನೇಮಿಸಲಾದ ಈ ಸಶಸ್ತ್ರ ಯೋಧರು. ಆದರೆ ಈ ಸೈನಿಕರು ನಮ್ಮವರಲ್ಲ, ಉತ್ತರದ ಕಡೆಯಿಂದ ಬಂದ ಅಲೆಮಾರಿಗಳು ಎಂದು ಮೇಲು ನೋಟಕ್ಕೇ ಗೊತ್ತಾಗುತ್ತಿತ್ತು. ಗಡಿಯಿಂದ ಬಹಳ ದೂರವಿರುವ ರಾಜಧಾನಿಯ ಒಳಗೆ ನುಗ್ಗಿ ಅದು ಹೇಗೆ ಇವರು ಇಷ್ಟುದೂರ ಬಂದರು ಎಂಬುದೇ ನನಗೆ ಅರ್ಥವಾಗಲಿಲ್ಲ. ಹೇಗಾದರೂ ಸರಿ, ಒಟ್ಟಾರೆ ಈಗವರು ಇಲ್ಲಿ ಇದ್ದಾರೆ. ಪ್ರತಿದಿನ ಬೆಳಿಗ್ಗೆ ಅವರ ಸಂಖ್ಯೆ ಹೆಚ್ಚುತ್ತಲೇ ಇದೆ ಅನ್ನಿಸುತ್ತದೆ. + +ಸ್ವಭಾವಕ್ಕಣುಗುಣವಾಗಿ ಅವರು ತೆರೆದ ಆಕಾಶದ ಕೆಳಗೆ ಬಯಲಲ್ಲೇ ತಮ್ಮ ಠಿಕಾಣಿ ಹೂಡಿದ್ದಾರೆ. ವಾಸದ ಮನೆಗಳೆಂದರೇ ಅವರಿಗೆ ಅಸಹ್ಯ. ಖಡ್ಗಗಳಿಗೆ ಸಾಣೆಹಿಡಿಯುತ್ತ, ಬಾಣಗಳನ್ನು ಚಿಮ್ಮಿಸಿ ಅಭ್ಯಾಸ ಮಾಡುತ್ತ ಅಥವಾ ಕುದುರೆ ಸವಾರಿ ಕಲಿಯುತ್ತಲೋ ಅವರು ತಮ್ಮ ಸಮಯ ಕಳೆಯುತ್ತಾರೆ. ಒಂದುಕಾಲಕ್ಕೆ ಲಕಲಕಿಸುವಂತೆ ಸ್ವಚ್ಚವಾಗಿ ಇರಿಸಿ ತುಂಬಾ ಕಾಳಜಿಪೂರ್ವಕ ನೋಡಿಕೊಂಡ ಶಾಂತಿಯುತ ಚೌಕವನ್ನು ಅವರು ಅಕ್ಷರಶಹ ಕುದುರೆಲಾಯವಾಗಿ ಪರಿವರ್ತಿಸಿದ್ದಾರೆ. ಅಗಾಗ ನಮ್ಮ ಅಂಗಡಿಗಳಿಂದ ಹೊರಗೋಡಿ ಬಂದ ನಾವು ತುಂಬಾ ಕೊಳಕಾದ ಗಲೀಜನ್ನು ಸ್ವಲ್ಪವಾದರೂ ತೆಗೆಯಲು ಪ್ರಯತ್ನಿಸುತ್ತಿರುತ್ತೇವೆ. ಅದೂಕೂಡ ಈಗೀಗ ಕಡಿಮೆಯಾಗುತ್ತಿದೆ; ಯಾಕೆಂದರೆ ನಮ್ಮ ವ್ರಥಾಶ್ರಮದಿಂದ ಯಾವುದೇ ಪ್ರಯೊಜನವಿಲ್ಲ. ಅದೂ ಅಲ್ಲದೇ ದೌಡಾಯಿಸುವ ಆ ಹುಚ್ಚುಕುದುರೆಗಳ ಕಾಲ್ಕೆಳಗೆ ಸಿಕ್ಕೋ ಅಥವಾ ಸವಾರರ ಚಾಟಿ ಏಟುಗಳನ್ನು ತಿಂದೋ ಕೈಕಾಲು ಊನ ಮಾಡಿಸಿಕೊಳ್ಳುವ ಅಪಾಯಕ್ಕೆ ನಾವು ಸಿಕ್ಕಿಕೊಳ್ಳಬೇಕಾಗುತ್ತದೆ. + +ಈ ಅಲೆಮಾರಿಗಳ ಜೊತೆ ಮಾತುಕತೆಯಂತೂ ಸಾಧ್ಯವೇಇಲ್ಲ. ಅವರಿಗೆ ನಮ್ಮ ಭಾಷೆಯ ಪರಿಚಯವೇಇಲ್ಲ. ಅಷ್ಟೇಕೆ ಅವರಿಗೆ ತಮ್ಮದೇ ಆದ ಒಂದು ಸರಿಯಾದ ಭಾಷೆ ಕೂಡಾ ಇಲ್ಲ. ಕಾಗೆಗಳು ಸಂಭಾಷಿಸುವಂತೆ ಅವರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಾರೆ. ಕಾಗೆಗಳ ಕರ್ಕಶ ಕೀಚಲು ಮಾತ್ರ ನಮ್ಮ ಕಿವಿಯಲ್ಲಿ ರಿಂಗಣಿಸುತ್ತಿರುತ್ತದೆ. ನಮ್ಮ ಬದುಕಿನ ರೀತಿ ನಮ್ಮ ಸಂಘಸಂಸ್ಥೆಗಳು ಯಾವುದೂ ಅವರಿಗೆ ಅರ್ಥವಾಗುವದೂ ಇಲ್ಲ. ಮತ್ತು ಆ ನಿಟ್ಟಿನಲ್ಲಿ ಅವರು ಪ್ರಯತ್ನ ಕೂಡಾ ಮಾಡುವದಿಲ್ಲ. ಹಾಗಾಗಿ ನಮ್ಮ ಕೈಸನ್ನೆ, ಸಂಕೇತದ ಭಾಷೆಯನ್ನು ಕೂಡಾ ಅರ್ಥಮಾಡಿಕೊಳ್ಳುವ ಗೋಜಿಗೇ ಅವರು ಹೋಗುವದಿಲ್ಲ. ನಿಮ್ಮ ಬಾಯಿ ಬಿದ್ದುಹೋಗುವವರೆಗೆ, ಇಲ್ಲ ಮಣಿಕಟ್ಟು ಉಳುಕಿಹೋಗುವಷ್ಟು ಕೈ ಸನ್ನೆಮಾಡಿ ಮಾತನಾಡಿಸಿದರೂ ಅವರಿಗದು ಅರ್ಥವಾಗುವದಿಲ್ಲ. ಆಗುವ ಸಾಧ್ಯತೆಯೂಇಲ್ಲ. ಅಗಾಗ ಅವರು ಮುಖ ಕಿವಿಚುತ್ತಿರುತ್ತಾರೆ. ಆಗ ಅವರ ಕಣ್ಣುಗಳು ಮೇಲಕ್ಕೆ ಸೇದಿ ಬಿಳಿಗುಡ್ಡೆಗಳು ಕಾಣಿಸಿ ತುಟಿಗಳ ಮೇಲೆ ನೊರೆ ಮಡುಗಟ್ಟುತ್ತದೆ. ಅದಕ್ಕೆ ಯಾವುದೇ ವಿಷೇಶವಾದ ಅರ್ಥವಿಲ್ಲ. ಹೆದರಿಸಬೇಕು ಅಂತಕೂಡ ಅದನ್ನವರು ಮಾಡುವದಿಲ್ಲ. ಅದು ಅವರ ಪ್ರಕೃತಿಯಲ್ಲೇ ಬಂದಿದೆ; ಹಾಗಾಗಿ ಅವರು ಆ ರೀತಿ ಮುಖ ಕಿವುಚುತ್ತಿರುತ್ತಾರೆ. + +ಏನಾದರೂ ಬೇಕೆನಿಸಿದರೆ ಅದನ್ನವರು ಸುಮ್ಮನೇ ಎತ್ತಿಕೊಳ್ಳುತ್ತಾರೆ. ಜಬರಿಸಿ ಹೆದರಿಸಿ ತೆಗೆದುಕೊಳ್ಳುತ್ತಾರೆ ಅಂತ ಕೂಡಾ ಹೇಳಲಾಗದು. ತಮಗೆ ಬೇಕೆನಿಸಿದ್ದಕ್ಕೆ ಅವರು ಕೈ ಹಾಕಿದಾಗ ನೀವು ಸುಮ್ಮನೇ ಪಕ್ಕಕ್ಕೆ ಸರಿದು ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡುತ್ತೀರಿ. ನನ್ನ ಅಂಗಡಿಯಿಂದ ಕೂಡಾ ಅನೇಕ ಒಳ್ಳೊಳ್ಳೆ ವಸ್ತುಗಳನ್ನವರು ಎತ್ತಿಕೊಂಡು ಹೋಗಿದ್ದಾರೆ. ಆದರೆ ಪಕ್ಕದ ಬೀದಿಯ ಮಾಂಸದಂಗಡಿಯವನ ಗೋಳಿಗೆ ಹೋಲಿಸಿದರೆ ನನ್ನದ್ಯಾವ ಲೆಕ್ಕ. ಅವನು ಅಂಗಡಿಗೆ ಮಾಂಸ ತರುವದಕ್ಕಿಲ್ಲ, ಈ ಅಲೆಮಾರಿಗಳು ಎಲ್ಲವನ್ನೂ ಅವನಿಂದ ಕಿತ್ತುಕೊಂಡು ಕಬಳಿಸಿಬಿಡುತ್ತಾರೆ. ಅವರ ಕುದುರೆಗಳು ಕೂಡಾ ಮಾಂಸ ಗದಕುತ್ತವೆ. ಬಹಳಷ್ಟು ಸಾರಿ ಕುದುರೆ ಮತ್ತು ಅದರ ಒಡೆಯ ಪಕ್ಕಪಕ್ಕದಲ್ಲೇ ಬಿದ್ದುಕೊಂಡು ಒಟ್ಟೊಟ್ಟಿಗೇ ಒಂದೇ ಮಾಂಸದ ತುಂಡಿನ ಎರಡು ತುದಿಗೆ ಬಾಯಿ ಹಾಕಿರುತ್ತಾರೆ. ಮಾಂಸದಂಗಡಿಯವನಿಗೆ ಎಷ್ಟು ಭಯವೆಂದರೆ ಆತ ತಾನು ತರಿಸುವ ಮಾಂಸದ ಸರಬರಾಜನ್ನು ಕೂಡಾ ನಿಲ್ಲಿಸಲಾರ. ನಮಗೆ ಅದು ಅರ್ಥವಾಗುತ್ತದೆ. ಹಾಗಾಗಿ ನಾವೆಲ್ಲರೂ ಹಣ ಚಂದಾಎತ್ತಿ ಆತ ತನ್ನ ಕೆಲಸವನ್ನು ನಿಲ್ಲಿಸದೇ ಮುಂದುವರೆಸುವಂತೆ ಸಹಾಯ ಮಾಡುತ್ತೇವೆ. ಅಕಸ್ಮಾತ್ ಮಾಂಸವೇನಾದರೂ ಸಿಕ್ಕದಿದ್ದಲ್ಲಿ ಈ ಅಲೆಮಾರಿಗಳು ಏನು ಮಾಡಿಬಿಡುತ್ತಾರೋ ಯಾರಿಗೆ ಗೊತ್ತು. ದಿನಂಪ್ರತಿ ಮಾಂಸ ಸಿಗುವಾಗ ಕೂಡಾ ಅವರ ತಲೆಗೆ ಇನ್ನೂ ಏನೇನು ಹೊಳೆಯುತ್ತೋ. + +ಇತ್ತೀಚೆಗೆ ನಡೆದ್ದು ಹೀಗೆ. ಕೊನೇಪಕ್ಷ ಮಾಂಸವನ್ನು ಕಡಿದುತಂದು ಒಪ್ಪಿಸುವ ಶ್ರಮವನ್ನಾದರೂ ತಪ್ಪಿಸಿಕೊಳ್ಳಬಹುದೇನೋ ಎಂದುಕೊಂಡ ಕಟುಕರವನು ಅಂದು ಒಂದು ಜೀವಂತ ಎತ್ತನ್ನೇ ತೆಗೆದುಕೊಂಡುಬಂದ. ಅಂಥ ತಪ್ಪನ್ನು ಮತ್ತೆ ಮಾಡುವ ಧೈರ್ಯವನ್ನು ಆತ ಇನ್ನೆಂದೂ ಮಾಡಲಾರ. ಆ ಎತ್ತಿನ ಆರ್ತನಾದ ಕೇಳುವದನ್ನು ತಪ್ಪಿಸಿಕೊಳ್ಳಲು ನಾನು ನನ್ನ ಅಂಗಡಿಯ ಹಿಂಭಾಗಕ್ಕೆ ಓಡಿ ನನ್ನಲ್ಲಿ ಏನೆಲ್ಲ ದಿಂಬು, ಹೊದಿಕೆ, ಕಂಬಳಿ ಬಟ್ಟೆಬರೆ ಇದೆಯೋ ಅದನ್ನೆಲ್ಲ ತಲೆಗೆ ಹೊದ್ದು ಕಿವಿಮುಚ್ಚಿಕೊಂಡು ನೆಲದ ಮೇಲೆ ಪೂರ್ತಿ ಒಂದು ಘಂಟೆ ಬೋರಲಾಗಿ ಬಿದ್ದುಕೊಂಡಿದ್ದೆ. ಎತ್ತಿನಮೇಲೆ ಎಲ್ಲಕಡೆಯಿಂದ ಜಿಗಿದು ದಾಳಿಮಾಡಿದ ಅಲೆಮಾರಿಗಳು ತಮ್ಮ ಹಲ್ಲುಗಳಿಂದ ಮಾಂಸದ ತುಣುಕುಗಳನ್ನು ಅದು ಬದುಕಿರುವಂತೆಯೇ ಕಿತ್ತು ತಿನ್ನುತ್ತಿದ್ದರು. ನಾನು ಈಚೆ ಬರುವ ಧೈರ್ಯಮಾಡಿದ್ದು ಬಹಳ ಹೊತ್ತಿನ ನಿಶ್ಶಬ್ದ ಕವಿದ ಮೇಲೆಯೇ. ತಿಂದುತಿಂದು ಸುಸ್ತಾದ ಅವರೆಲ್ಲ ಅಳಿದುಳಿದ ಅಸ್ತಿಪಂಜರದ ಸುತ್ತ ಹೆಂಡದ ಪೀಪಾಯಿಯ ಸುತ್ತ ಬಿದ್ದುಕೊಂಡ ಕುಡುಕರಂತೆ ಒರಗಿಕೊಂಡಿದ್ದರು. ಈ ಸಂದರ್ಭದಲ್ಲಿಯೇ ನನಗೆ ಅರಮನೆಯ ಕಿಟಕಿಯ ಬಳಿ ಖುದ್ದು ಮಹರಾಜರನ್ನೇ ನೋಡಿದಂತೆ ಭಾಸವಾಯಿತು. ಸಾಮಾನ್ಯವಾಗಿ ಅವರು ಈ ಹೊರಗಿನ ಕೊಠಡಿಗಳನ್ನು ಪ್ರವೇಶಿಸುವುದೇ ಇಲ್ಲ. ಅವರು ಏನಿದ್ದರೂ ಅರಮನೆಯ ಪೂರ್ತಿ ಒಳಭಾಗದಲ್ಲಿರುವ ತೋಟದಲ್ಲಿಯೇ ತಮ್ಮ ಸಮಯ ಕಳೆಯುವದು. ಆದರೂ ಈ ಸಂದರ್ಭದಲ್ಲಿ ಮಾತ್ರ ಅವರು ಅರಮನೆಯ ಕಿಟಕಿಯ ಬಳಿ ತಲೆತಗ್ಗಿಸಿ ನಿಂತು ತನ್ನ ಮನೆಯ ಮುಂದೆ ನಡೆಯುತ್ತಿರುವ ಘಟಣಾವಳಿಗಳನ್ನು ನೋಡುತ್ತಿದ್ದರು. ಕೊನೇಪಕ್ಷ ನನಗಂತೂ ಹಾಗೆ ಅನ್ನಿಸಿತು. + +“ಮುಂದೇನಾಗಬಹುದು”? ಎಂದು ನಮ್ಮನ್ನು ನಾವೇ ಕೇಳಿಕೊಳ್ಳುತ್ತೇವೆ. + +“ಇನ್ನೆಷ್ಟು ದಿನ ಈ ಕಿರುಕುಳ ಮತ್ತು ಹಿಂಸೆಯನ್ನು ಸಹಿಸಬೇಕು”?ಮಹಾರಾಜರ ಅರಮನೆ ಈ ಅಲೆಮಾರಿಗಳನ್ನು ಇಲ್ಲಿಗೆ ತರಿಸಿದೆ. ಆದರೆ ಅವರನ್ನು ಮತ್ತೆ ಇಲ್ಲಿಂದ ಓಡಿಸುವದು ಹೇಗೆ ಎಂದು ಅವರಿಗೆ ಗೊತ್ತಿಲ್ಲ. ಅರಮನೆಯ ಮಹಾದ್ವಾರ ಮುಚ್ಚಿಕೊಂಡಿದೆ. ಮೊದಲೆಲ್ಲ ಸಡಗರದಿಂದ ಹಿಂದೆಮುಂದೆ ಓಡಿಯಾಡಿಕೊಂಡು ಗಸ್ತು ಹೊಡೆಯುತ್ತಿದ್ದ ಅರಮನೆಯ ಕಾವಲು ಭಟರು ಈಗ ಒಳಗೆ ಭದ್ರಕಿಟಕಿಗಳ ಹಿಂದೆ ಸೇರಿಕೊಡಿದ್ದಾರೆ.ದೇಶವನ್ನು ಉಳಿಸುವ ಕೆಲಸ ಈಗ ನಾವು ಕುಶಲಕರ್ಮಿಗಳು ಮತ್ತು ವ್ಯಾಪಾರಸ್ಥರ ಪಾಲಿಗೆ ಬಂದಿದೆ. ಆದರೆ ಇಂಥ ಕೆಲಸಕ್ಕೆ ನಾವು ಲಾಯಕ್ಕಾದವರಲ್ಲ. ಇದು ನಮ್ಮ ಕೈಲಾಗುತ್ತೆ ಅಂತ ಕೂಡ ನಾವು ಯಾವತ್ತೂ ಹೇಳಿಕೊಂಡಿಲ್ಲ. ಇದು ಒಂದು ಬಗೆಯ ತಪ್ಪು ತಿಳುವಳಿಕೆ. ಇದು ನಮ್ಮನ್ನು ನಾಶಮಾಡಿಬಿಡುತ್ತದೆ. + +ಲೇಖಕ ಮತ್ತು ಕಿರುಚಿತ್ರ, ಸಾಕ್ಷ್ಯಚಿತ್ರಗಳ ನಿರ್ಮಾಪಕ. ಚಿತ್ರ ಸಮಾಜ ಚಳುವಳಿಯೊಂದಿಗೆ ಬೆಳೆದವರು. \ No newline at end of file diff --git a/Kenda Sampige/article_495.txt b/Kenda Sampige/article_495.txt new file mode 100644 index 0000000000000000000000000000000000000000..a52c855629c2c29c4bc3aa4c96f17c163908829c --- /dev/null +++ b/Kenda Sampige/article_495.txt @@ -0,0 +1,23 @@ +ದುರ್ಗದಬೈಲ್ ಬಸ್-ಸ್ಟ್ಯಾಂಡ್. ಸಂಜೆ ಸುಮಾರು ಐದೂವರೆ. ವಿದ್ಯಾನಗರದ ಕಡೆ ಹೋಗುವ ಬಸ್ಸು ಹತ್ತಲು ಜನ ಇರುವೆಗಳಂತೆ ಹರಿದು ಬರುತ್ತಿದ್ದರು. ಒಂದಷ್ಟು ಜನ ಪಿಚಕ್ ಎಂದು ಗುಟ್ಕಾ ಉಗುಳುತ್ತ, ಕೆಲವರು ಕೈಯಲ್ಲಿ ತರಕಾರಿ, ಹಣ್ಣಿನ ಚೀಲ ಜೋಲಿಸುತ್ತ, ಮತ್ತೊಂದಿಷ್ಟು ಕಾಲೇಜು ತಪ್ಪಿಸಿ ಸಿನಿಮ ನೋಡಿ ಮರಳುತ್ತಿರುವ ಹುಡುಗರು, ಹುಡುಗಿಯರು ಅದೇ ತಾನೇ ನೋಡಿದ ಸಿನಿಮ ವಿಶ್ಲೇಷಿಸುತ್ತ, ಒಂದೆರಡು ಅಮ್ಮಂದಿರು ಮಕ್ಕಳ ರಟ್ಟೆ ಎಳೆಯುತ್ತ ಓಡುತ್ತಾ, ಬಸ್ಸಿನ ಪಕ್ಕ ಒಬ್ಬರದೊಬ್ಬ ಪಕ್ಕೆ ತಿವಿಯುತ್ತ ತಮ್ಮನು ಬಸ್ಸಿನೊಳಕ್ಕೆ ತುರುಕಿಕೊಳ್ಳಲು ಹವಣಿಸುತ್ತಿದ್ದರು. ಇವರೆಲ್ಲರ ಸಾಲಿನಲ್ಲಿ ಬಸ್ ಹತ್ತಲು ತೊಡಗಿದವಳು ಗುಲಾಬೋ. ಕಂಡಕ್ಟರನ ಧ್ವನಿ ಏರಿ ಬಂತು- “ಮಂದಿ ಹತ್ಲಿಕ್ಕತ್ತಾರ ಕಾಣ್ಸಂಗಿಲ್ಲೇನ, ಸೈಡಿಗ್ ಸರದ ನಿಂದರ… ಹಿಜಡಾ ನನ್ನ ಮಗನ..” ಬಸ್ ಹತ್ತುತ್ತಿರುವ ಒಂದಷ್ಟು ಜನ ಹಿಂತಿರುಗಿ ನೋಡಿ ಏನೂ ಆಗಿಲ್ಲವೆಂಬಂತೆ ಮುನ್ನಡೆದರೆ, ಮತ್ತೊಂದಿಷ್ಟು ಜನ ಕಿಸಪಿಸ ನಕ್ಕು ಹೊರಟರು. ಒಂದಷ್ಟು ಪಡ್ಡೆ ಹುಡುಗರು, ಕೈಚಪ್ಪಾಳೆ ತಟ್ಟಿ ಅಣಕಿಸುವುದೋ ಬೇಡವೋ, ಮತ್ತವಳ ಬಾಯಿಗೆ ಬಿದ್ದು ಮರ್ಯಾದಿ ತೆಗೆಸಿಕೊಳ್ಳುವುದೋ ಎಂದು ಅರೆಬರೆ ಕೀಟಲೆಯಲ್ಲಿ ಬಸ್ ಹತ್ತತೊಡಗಿದರು. “ನಾನೇನ್ ಮಂದಿ ಗತಿ ಕಾಣ್ಸನ್ಗಿಲ್ಲೇನ್”.. ಎಂದು ಕೇಳಬೇಕೆನಿಸಿದರೂ ಗುಲಾಬೋ, ಆ ಹೊಲಸು ಕಂಡಕ್ಟರನ ಬಾಯಿಗೇನು ಬೀಳುವುದು ಎಂದು ಸುಮ್ಮನಾದಳು. + +ಬಿಳಿ ಹೂಹೂವಿನ ಕಂದುಕೆಂಪು ಬಣ್ಣದ ಸೀರೆ, ಕಾಲಲ್ಲಿ ಆಧುನಿಕ ಮಾದರಿಯ ಅಗ್ಗದ ಚಪ್ಪಲಿ, ತಲೆಗೆ ಎಣ್ಣೆ ಹಾಕಿ ಎಳೆದು ಕಟ್ಟಿದ ಕಪ್ಪುಕೂದಲಿಗೊಂದು ರಬ್ಬರ್ ಬ್ಯಾಂಡ್, ಅಬ್ಬಲಿಗೆ ಮಾಲೆ. ನುಣ್ಣನೆಯ ಮುಖದಲ್ಲಿ ಸರಿಯಾಗಿ ಗಮನಿಸಿದರೆ ಕಾಣುವ ಗಡ್ಡ ಹೆರೆದ ಹಸಿರು ಛಾಯೆ, ಸ್ವಲ್ಪ ಎತ್ತರೆವೆ ಎನ್ನಿಸುವ ನಿಲುವು. ಹಿಂದಿನಿಂದ ಇವಳನ್ನು ನೋಡಿದವರು, ಅವಳನ್ನು ದಾಟಿದಾಗ ಹಿಂತಿರುಗಿ ನೋಡದೆ ಹೋಗುತ್ತಿರಲಿಲ್ಲ. ಹಾಗೆ ನೋಡಿದವರೂ ಮುಜುಗರಪಟ್ಟೊ, ಮುಖ ತಿರುಗಿಸಿಯೋ, ಇಲ್ಲ ಅಣಕಿಸಿಯೋ ಹೋಗುವುದು ಅವಳಿಗೂ ರೂಢಿ. ಅಂತೂ ವಿದ್ಯಾನಗರ ಬಸ್ಸು ನೋಡನೋಡುತ್ತಿದ್ದಂತೆ ತುಂಬತೊಡಗಿತು. ಕುಳಿತುಕೊಳ್ಳುವ ಜಾಗ ಎಲ್ಲ ತುಂಬಿ ಒಂದಷ್ಟು ಜನ ಕಂಬ ಹಿಡಿದು ನಿಲ್ಲತೊಡಗಿದ್ದರು ಬೇರೆ. ಆದರೂ ಗುಲಾಬೋಗೆ ಹತ್ತಲು ಇನ್ನೂ ಕಂಡಕ್ಟರ್ ಬಿಟ್ಟಿರಲಿಲ್ಲ. ಡ್ರೈವರ್ ಇಂಜಿನ್ ಗುರುಗುಡಿಸತೊಡಗಿದ್ದನು. ಅಷ್ಟರಲ್ಲಿ, ಒಂದಷ್ಟು ದೂರದಲ್ಲಿ, ನಾಲ್ಕೈದು ಗುಲಾಬೋಗಳ ಗುಂಪು ಬಸ್ಸಿನೆಡೆಗೆ ಧಾವಿಸುತ್ತ ಬರುತ್ತಿತ್ತು. ಅವರಲ್ಲಿ ಯಾರೋ ಒಬ್ಬ(ಳು) ಕೂಗಿದ(ಳು)- “ಲೇ.. ಅ ಬಸ್ ನಿಂದರಸ” ಬಸ್ಸಿನೊಳಗಿದ್ದವರಿಗೇನೋ ಚಡಪಡಿಕೆ. ಇನ್ನೆಷ್ಟು ತುಂಬ್ತೀರ್ರೀ ಸರ.. ಲಗೂನ್ ಬಸ್ ಬಿಡ್ರೆಲಾ.. ಎಂದು ಹಿಂದಿನಿಂದ ಒಬ್ಬ ಮಹಾಶಯ ಕೂಗಿದರು. ಈ ಗುಲಾಬೋ ಬಸ್ಸಿನ ಮೊದಲ ಮೆಟ್ಟಿಲ ಮೇಲೆ ಕಾಲಿಟ್ಟು ಹತ್ತಿ ಇನ್ನೇನು ಡ್ರೈವರನಿಗೆ ಕೈ ಮಾಡಬೇಕು ಎನ್ನುವಷ್ಟರಲ್ಲಿ, ಸೀಟಿ ಊದಿದ ಕಂಡಕ್ಟರ್.. ರೈಟ್ ರೈಟ್.. ಕಾದಿದ್ದವನಂತೆ ಬಸ್ ಎಕ್ಸಲರೇಟರ ಒತ್ತಿದ ಡ್ರೈವರ್. ಮೆಟ್ಟಿಲ ಮೇಲೆ ಒಂದು ಕಾಲು, ನೆಲದಿಂದ ಸ್ವಲ್ಪವೇ ಬಿಟ್ಟ ಇನ್ನೊಂದು ಕಾಲು, ಆಯತಪ್ಪಿ ಬಿದ್ದಳು ಗುಲಾಬೋ, ದೂರದಿಂದ ಓಡೋಡಿ ಬಂದ ಆ ಗುಲಾಬೋ ಗೆಳೆಯ/ತಿಯರ ತಂಡ ಇವಳನ್ನು ಬಸ್ ಅಡಿಗಾಗುವುದನ್ನು ತಪ್ಪಿಸಿ ಎಳೆದು ಕೂಗಿದ್ದು, ಬಸ್ ನ ಎಂಜಿನ್ ಶಬ್ದದಲ್ಲಿ ಅಸ್ಪಷ್ಟವಾಗಿ ಕೇಳಿಸಿತ್ತು.. “ಮಂದಿ ಹತ್ತೂದ ಕಾಣ್ಸಂಗಿಲ್ಲೇನ.. ಕಣ್ಣ ಕಿತ್ತ್ ಕುಂಡಿ ಅಡಿಗ ಇಟ್ಟೀಯೇನಲೇ.. ಮಗನ…..” ಇನ್ನೂ ನಡೆಯುತ್ತಿದ್ದ ಬೈಗುಳದ ಸುರಿಮಳೆಗೆ ಕಿವಿಗೊಡದೆ ಮುಂದುವರಿದಿತ್ತು ಬಸ್ಸು ವಿದ್ಯಾನಗರದ ದಾರಿ ಹಿಡಿದು. + +*** + +ಮಧ್ಯಮವರ್ಗದ ಕುಟುಂಬ. ಅಪ್ಪ ಕಾಲೇಜು ಪ್ರೊಫೆಸರ್, ಅಮ್ಮ ಗೃಹಿಣಿ. ಇಬ್ಬರು ಮಕ್ಕಳು. ಎಷ್ಟು ಚೆನ್ನಾಗಿತ್ತಲ್ಲ ಬಾಲ್ಯ! ಬೆಳೆದಿದ್ದು, ಓದಿದ್ದು ಎಲ್ಲ ಇಲ್ಲೇ. ಪ್ರತಿಯೊಂದು ಓಣಿಯೂ ಎಷ್ಟೊಂದು ಆಪ್ತ! ಆದರೆ ಎಲ್ಲಿ ಹೋದರೂ ಈಗ ಇರುಸುಮುರುಸು, ಎಲ್ಲ ತನ್ನನ್ನೇ ನೋಡುತ್ತಿದ್ದಾರೋ ಎಂಬಂತೆ ಭ್ರಮೆ. ಮನೆಯಲ್ಲಿ ಹೇಳುವುದಾದರೂ ಹೇಗೆ. ಪುಣ್ಯಕ್ಕೆ ತಂಗಿಯ ಮದುವೆಯಾಗಿದೆ, ಇಲದಿದ್ದರೆ ನಡೆಯುವ ರಾದ್ಧಾಂತ ಊಹಿಸಿಕೊಳ್ಳಲೂ ಅಸಾಧ್ಯ. ಅಮ್ಮನಿಗೆ ಹೃದಯಾಘಾತವೇ ಆಗಿಬಿಡುವುದೇ? ಅಮ್ಮನ ಶ್ರಾವಣ ಶುಕ್ರವಾರದ ಅರಿಶಿಣ ಕುಂಕುಮ ಗೆಳತಿಯರೆಲ್ಲ ಅವಳನ್ನು ಬಹಿಷ್ಕರಿಸಿಬಿಡುವರೋ ಏನೋ. ಅಪ್ಪ ಹೇಳುವ ಮೊದಲನೇ ವಾಕ್ಯವನ್ನು ಊಹಿಸಿಕೊಳುವುದು ಕಷ್ಟವೇನಲ್ಲ. “ನಿನ್ನನ್ನು ನಾವು ಮುಂದೆ ಓದಲಿ ಎಂದು ಕಷ್ಟಪಟ್ಟು ದುಡಿದ ದುಡ್ಡೆಲ್ಲ ಸುರಿದು ಅಮೆರಿಕಾಕ್ಕೆ ಕಳುಹಿಸಿದ್ದೆ ತಪ್ಪಾಗಿ ಹೋಯಿತು….” ಇದರಲ್ಲಿ ಅಮೆರಿಕದ್ದೇನು ತಪ್ಪು? ಇಲ್ಲಿ ಯಾರನ್ನೋ ಮದುವೆಯಾಗಿ, ಮೋಸದ ಬದಕು ಬದಕುವುದಕ್ಕಿಂತ ನನ್ನನ್ನು ನಾನು ಕಂಡುಕೊಂಡಿದ್ದರಲ್ಲಿ ಏನು ತಪ್ಪು? ಹೇಗೆ ವಿವರಿಸುವುದು? ಅಮ್ಮ ಬೇರೆ ಬಂದಿಳಿಯುವುದಕ್ಕೆ ಪುರುಸೊತ್ತಿಲ್ಲ.. ಫೋಟೋಗಳ ಫೈಲ್ ಹಿಡಿದು ಕೂತುಬಿಟ್ಟಿದ್ದಾರೆ. ಯಾವ ಹುಡುಗಿಯರು ಅಂತ ಆರಿಸಿಕೊಡು, ನೋಡಿಕೊಂಡು ಬರೋಣ. ಹೀಗೆ ಏನೇನೋ.. ತಲೆ ಸಿಡಿದಂತಾಗಿ ಏನೂ ಕೇಳಿಸಿರಲಿಲ್ಲ. ಮನೆಯಲ್ಲಿ ಉಸಿರುಕಟ್ಟಿದಂತಾಗಿ, ಹೊರಗೆ ಸುತ್ತಾಡಿಕೊಂಡು ಬಂದರಾಯಿತು ಎಂದು ಹೊರಟಾಗ, ಅಪ್ಪ ಖುಷಿಯಲಿ ಕಾರ್ ಕೀ ಕೊಟ್ಟಿದ್ದರು. ಕಾರ್ ಕೊಳ್ಳಿ ಎಂದು ಮುಂಚೆಯೇ ದುಡ್ಡು ಕಳಿಸಿದ್ದರೂ ಕೊಂಡಿರಲಿಲ್ಲ. ಈಗ ಮಗ ಅಮೆರಿಕದಿಂದ ಬರುತ್ತಾನೆಂದು ಒಂದು ಹೊಸ ಮಾರುತಿ ಜೆನ್ ಮನೆಗೆ ಬಂದಿದೆ. ಆದರೂ ಇಲ್ಲೆಲ್ಲಾ ಬಸ್ ನಲ್ಲಿ, ರಿಕ್ಷಾದಲ್ಲಿ ಎಲ್ಲ ಓಡಾಡಿ ಎಷ್ಟು ದಿನವಾಯಿತು ಎಂದುಕೊಂಡು ಬಸ್ಸಿಗೆ ಬಂದಿದ್ದ ಸಮರ್ಥನ ತಲೆ ತುಂಬಾ ಪರಿಸ್ಥಿತಿಯನ್ನು ಎದುರಿಸುವ, ಬಯಲುಗೊಳಿಸುವ ದಾರಿಕಾಣದ ಯೋಚನೆಗಳೇ. ಬಸ್ಸಿನ ಹಿಂದಿನ ಬಾಗಿಲಿನ ಹತ್ತಿರ ನಿಂತಿದ್ದವನಿಗೆ, ಹೊರಗೆ ನಡೆದ ಪ್ರಹಸನಕ್ಕೂ ತನಗೂ ಹೆಚ್ಚಿನ ವ್ಯತ್ಯಾಸವಿಲ್ಲ, ಆ ಅವಮಾನ ತನ್ನದೇನೋ ಎನ್ನಿಸತೊಡಗಿತು. ಈ ಮಂದಿಯಲ್ಲದ ಮಂದಿಯ ಗುಂಪಿಗೆ ತಾನೂ ಎಳೆಎಳೆಯಾಗಿ ಇಳಿದುಹೋಗಿದ್ದು ತಿಳಿದರೂ ತಿಳಿಯದಂತೆ ಇದ್ದುಬಿಟ್ಟಿದ್ದ. ತಾನು ಸಾಮಾನ್ಯ ಮಂದಿಯಂತೆ ಇವರಿಗೆಲ್ಲ ಕಾಣುವುದು ಸಾಧ್ಯವೇ? + +“ಕಾಮರ್ಸ್ ಕಾಲಜ್ ಯಾರದೀರ್ರೀ?” ಕಂಡಕ್ಟರನ ಕೂಗಿಗೆ ಎಚ್ಚರವಾದಂತಾಗಿ ದಡದಡನೆ ಇಳಿದ. ಇಳಿದ ಮೇಲೆ ಹೊಳೆಯಲಿಲ್ಲ ತಾನಿಲ್ಲಿ ಇಳಿದಿದ್ದೇಕೆಂದು. ಎದುರಿನ ಜ್ಯೂಸ್ ಅಂಗಡಿಗೆ ಹೋಗಿ ಸುಮ್ಮನೆ ಕುಳಿತ. ಮತ್ತೆ ನೆನಪುಗಳು… ಇಂಜಿನಿಯರಿಂಗ್ ಕಾಲೇಜಿನ ಆ ದಿನಗಳು. ಇಂಜಿನಿಯರಿಂಗಿನಲ್ಲಿ ಹುಡುಗಿಯರು ಕಡಿಮೆ ಎಂದು.. ಗೆಳೆಯರ ಬಳಗವೆಲ್ಲ ಬಂದು ಈ ಜ್ಯೂಸ್ ಅಂಗಡಿಯಲ್ಲಿ ಜಮಾಯಿಸುತ್ತಿತ್ತು. ಎದುರಿನ ಕಾಮರ್ಸ್ ಕಾಲೇಜಿನ ಹುಡುಗೀರು, ಪಕ್ಕದ ಮೆಡಿಕಲ್ ಕಾಲೇಜಿನ ಭಾವೀ ವೈದ್ಯೆಯರು ಸಾಕಷ್ಟು ಕಾಣಸಿಗುವುದೇ ಜ್ಯೂಸ್ ಅಂಗಡಿಯವನಿಗೆ ಭರ್ಜರಿ ವ್ಯಾಪಾರ. ಗುಂಪಿನಲ್ಲಿ ಗೋವಿಂದ ಎಂಬಂತೆ ತಾನೂ ಕುಳಿತುಕೊಳ್ಳುತ್ತಿದ್ದ ಆ ಮೂಲೆ ತನ್ನನ್ನು ನೋಡಿ ಅಣಕಿಸುತ್ತಿದೆಯೇ? ಆ ಮೂಲೆಗೆ ಆಗಲೇ ತಿಳಿದಿತ್ತೆ ಯಾರನ್ನೂ ಚುಡಾಯಿಸದಿರುವ ತನ್ನ ಸಭ್ಯತೆಯ ಹಿಂದಿನ ಅರ್ಥ? ಅಥವಾ ತಾನು ನಿಜಕ್ಕೂ ಸಭ್ಯನೆ ಆಗಿದ್ದು ಹಾಗೆ ನಡೆದುಕೊಂಡೆನೆ? ಸುಮ್ಮನೆ ಒಂದು ಲಿಂಬುಸೋಡಾ ಕುಡಿದು ರಸ್ತೆಗುಂಟ ಕಾಲೆಳೆಯತೊಡಗಿದ. ದಿಕ್ಕು ಸ್ಪಷ್ಟವಾಗಿದ್ದರೂ ದಾರಿ ಗೊತ್ತಿಲ್ಲದಂತೆ ಬೀಳುತ್ತಿತ್ತು ಹೆಜ್ಜೆ. + + + +ತಲೆತುಂಬ ಬರೀ ನೆನಪುಗಳು ಆಪ್ತವೆನಿಸಿದರೂ ಅಸ್ಥಿರವಾಗಿಸುವ ನೆನಪುಗಳು. ಈಗ ಸರಿಸುಮಾರು ಎರಡು ವರ್ಷಕ್ಕೆ ಬಂತೇನೋ. ಎಂಎಸ್ ಮಾಡುವಾಗಿನ ಸಮಯ. ಅಲ್ಲಿನ ಹೇಳುಕೇಳುವರಿಲ್ಲದ ವಾತಾವರಣ. ಆದರೂ ಮನಸ್ಸಿಗೇನೋ ಕಳವಳ. ತನ್ನಷ್ಟಕ್ಕೆ ಕೀಳರಿಮೆ. ಯಾಕೆ ಎಂದು ತನಗೇ ತಿಳಿದಿರಲಿಲ್ಲ. ಗೆಳೆಯರ ದೊಡ್ಡ ತಂಡವೇ ವಾರವೆಲ್ಲ ಮಾತಾಡಿಕೊಂಡು ವೀಕೆಂಡಿಗೆ ಪ್ಲಾನ್ ಹಾಕುತ್ತ ಕ್ಲಬ್ಬಿಗೆ ಹೋದದ್ದು. ಕಣ್ಣು ಬಾಯಿ ಬಿಟ್ಟುಕೊಂಡು ರಂಗದ ಮೇಲೆ ಕಳಚುತ್ತ ಕುಣಿಯುತ್ತಿರುವ ಸುಂದರಿಯರನ್ನು ನೋಡಿ ಅವರೆಲ್ಲ ಏನೋ ಸಾಧಿಸಿದವರ ವಿಜಯಘೋಶದಲ್ಲಿದ್ದರೆ ತಾನು ಬೋರಾಗಿ ಹೊರನಡೆದು ಒಂದು ಸುತ್ತು ಡೌನ್ಟೌನ್ ಸುತ್ತಿ ಬಂದಿದ್ದೆ. ಹಾಗೆ ಆರಂಭವಾದ ತನ್ನ ಮೇಲೆ ತನಗೆ ಬಂದ ಸಂಶಯ ಸಂಪೂರ್ಣ ತಿಳಿಯಾಗಿದ್ದು ಆ ಮಬ್ಬುಗತ್ತಲಿನ ಬಾರೊಂದರಲ್ಲಿ. ನನ್ನೆಲ್ಲ ಗುಟ್ಟುಗಳೂ ಗೊತ್ತು ಎಂಬಂತೆ ನೀಲಿಕಂಗಳ ಅವನು ನೇರ ಬಂದು ಕೈಹಿಡಿದುಕೊಂಡಾಗ ಇರುಸುಮುರುಸಾದರೂ ಹಿತವೆನಿಸಿತ್ತು. ಇಲ್ಲಿಯವರೆಗೆ ಅರಸುತ್ತಿದ್ದ ಮಿಂಚಿನ ಸುಖವೊಂದು ಮೊದಲಬಾರಿಗೆ ಎದುರಲ್ಲಿ ನಿಂತಿತ್ತು. ಅಲ್ಲಿಂದ ಆರಂಭಿಸಿದ ಸಮರ್ಥ, ರಿಚರ್ಡನ ಪ್ರೇಮಸಂಬಂಧಕ್ಕೆ ಈಗ ಸರಿಸುಮಾರು ಎರಡು ವರ್ಷ. ಮೊದಮೊದಲು ಗೆಳೆಯರ ಬಳಗದ ಕಣ್ತಪ್ಪಿಸಿ ಅವನನ್ನು ಭೇಟಿಯಾಗಲು ಹೋಗುತ್ತಿದ್ದವ ಗ್ರಾಜುಯೇಟ್ ಆಗುವಷ್ಟರಲ್ಲಿ ಇಬ್ಬರೂ ಸೇರಿ ಮನೆ ಬಾಡಿಗೆ ಹಿಡಿದಿದ್ದರು. ಒತ್ತಿಗಿರಲು ಆರಂಭಿಸಿದ ಒಂದು ವರ್ಷಕ್ಕೆ ಥ್ಯಾಂಕ್ಸ್ ಗಿವಿಂಗ್ ಊಟಕ್ಕೆಂದು ರಿಚರ್ಡ್ ಕರೆದುಕೊಂಡು ಹೋದಾಗ ಅವನ ಮನೆಯಲ್ಲೇ ಎಷ್ಟೊಂದು ರಾಮಾಯಣವಾಗಿ ಹೋಗಿತ್ತು. ಅಂಥಾದ್ದರಲ್ಲಿ ಇಲ್ಲಿ, ಇನ್ನು ನಾನು ಹೇಗೆ ಹೇಳಲಿ… “ನಾನೊಬ್ಬ ಗೇ”, ಎಂದು? + +ರಿಚರ್ಡ್ ಒಬ್ಬ ಕ್ಯಾಥೊಲಿಕ್ ಮನೆಯಿಂದ ಬಂದ ಹುಡುಗ. ಪ್ರತಿ ಭಾನುವಾರ ತಪ್ಪದೆ ಚರ್ಚಿಗೆ ಹೋಗುವ ಪರಿಪಾಠವಿಲ್ಲದಿದ್ದರೂ ಆಗಲೋ ಈಗಲೋ, ಕ್ರಿಸ್ಮಸ್ ಈಸ್ಟರ್ ಎಂದು ಹೋಗುವ ಜನ. ಮಕ್ಕಳನ್ನು ಮುಕ್ತವಾಗಿಯೇ ಬೆಳೆಸಿದವರು ಮಿಸ್ಟರ್ ಅಂಡ್ ಮಿಸೆಸ್ ಜೆಫ್ರಿ. ಹಿರಿಯಣ್ಣ ಲಾಯರ್. ಎರಡನೆಯವ ಸೈನ್ಯ ಸೇರಿ ಇರಾಕಿನಲ್ಲಿದ್ದಾನೆ ಈಗ. ಹಿರಿಯಣ್ಣ ಒಬ್ಬಳು ಟೈವಾನೀಸ್ ಹುಡುಗಿಯನ್ನು ಮದುವೆಯಾಗಿದ್ದಾನೆ. ಎರಡನೆಯವನಿಗಿನ್ನೂ ಮದುವೆಯಾಗಿಲ್ಲ, ಆದರೆ ಪ್ರತಿ ಸಾರಿ ಮನೆಗೆ ಬರುವಾಗ ಹೊಸ ಒಬ್ಬಳು ಹುಡುಗಿಯನ್ನು ಗರ್ಲ್ ಫ್ರೆಂಡ್ ಎಂದು ಪರಿಚಯಿಸುತ್ತಾನೆ. ರಿಚರ್ಡ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮಾಡಿ ಈಗ ಪ್ರಸಿದ್ಧ ಕಾರು ಕಂಪನಿಯೊಂದರಲ್ಲಿದ್ದಾನೆ. ಯಾವತ್ತೂ ಮನೆಗೆ ಫ್ರೆಂಡ್ ಎಂದು ಯಾರನ್ನೂ ಕರೆತಂದವನಲ್ಲ. ಈ ಎಲ್ಲವನ್ನೂ ನಾರ್ಮ್ ಎನ್ನುವಂತೆ ಒಪ್ಪಿಕೊಂಡಿರುವ ಮಿಸ್ಟರ್ ಅಂಡ್ ಮಿಸೆಸ್ ಜೆಫ್ರಿಯ ಅಂದಿನ ಪ್ರತಿಕ್ರಿಯೆ ರಿಚರ್ಡ್ಗೆ ಆಶ್ಚರ್ಯ ತಂದಿತ್ತು. ಬಹುಮುಂಚೆಯೇ ತನ್ನ ಒಲವು ಎತ್ತ ಎಂಬುದನ್ನು ಕಂಡುಕೊಂಡಿದ್ದವನಿಗೆ ಮನೆಯಲ್ಲಿ ವಿವರಿಸುವುದು ಇದುವರೆವಿಗೂ ಸಾಧ್ಯವಿರಲಿಲ್ಲ. ಸತ್ಯ ಇನ್ನಾದರೂ ಹೊರಬರಲೇಬೇಕು ಎಂದುಕೊಂಡು ಥ್ಯಾಂಕ್ಸ್ ಗಿವಿಂಗಿಗೆ ಸಮರ್ಥನನ್ನು ಕರೆದುಕೊಂಡು ಹೋಗಿದ್ದ. ತನ್ನನ್ನು ಮನೆಯವರೆಲ್ಲ ಜಮಾಯಿಸಿರುವಾಗ ಕರೆದುಕೊಂಡು ಹೋಗಿದ್ದು ಬೇಡಿತ್ತೇನೋ. ಊಟ ಮುಗಿಯುವವರೆಗೂ ಮಿಸೆಸ್ ಜೆಫ್ರಿ ಕೋಣೆ ಹೊಕ್ಕವರು ಹೊರಬರಲೇ ಇಲ್ಲ. ಎಲ್ಲ ಒಂದೂ ಮಾತಾಡದೆ ಒಬ್ಬರು ಇನ್ನೊಬ್ಬರ ಕಣ್ತಪ್ಪಿಸಿ ಉಂಡರು. ಇನ್ನೇನು ಹೊರಡಬೇಕು ಎನ್ನುವಾಗ ಇಳಿದುಬಂದು, ಎಲ್ಲರೂ ದಯವಿಟ್ಟು ಫ್ಯಾಮಿಲಿ ರೂಮಿನಲ್ಲಿ ಹೋಗಿ ಕುಳಿತಿರಿ ಎಂದು ಅಪ್ಪಣೆಯಿತ್ತರು. ಹಾಗೆ ಹೇಳಿದರೆ ಅದು ಮನೆಯವರೆಲ್ಲರಿಗೂ ಗೊತ್ತು, ಫ್ಯಾಮಿಲಿ ಮೀಟಿಂಗ್ ಎಂದು. ತಾನು ಊಟದ ಕೋಣೆಯಲ್ಲಿ ಕುಳಿತೆ ಇದ್ದೆ ಮಿಸೆಸ್ ಜೆಫ್ರಿ ಬಂದು ನೀನೂ ಬಾ ಎಂದು ಕರೆಯುವವರೆಗೆ. ಅಲ್ಲಿ ಆರಂಭವಾದ ಮಾತು, ಜಗಳ, ಜಟಾಪಟಿ, ಅಳು, ಸಿಟ್ಟು ಕೊನೆಗೂ ಎಲ್ಲರೂ ಎಲ್ಲರನ್ನು ಅಪ್ಪಿಕೊಳ್ಳುವುದರಲ್ಲಿ ಮುಗಿದಿತ್ತು. ನಿಮ್ಮ ನಿಮ್ಮ ಹಣೆಬರಹ ಏನೋ, ದೇವರು ಹರಸಲಿ ಎಂದು ಹೇಳಿ ಮತ್ತೆ ಕೋಣೆಹೊಕ್ಕಿದ್ದರು. ರಿಚರ್ಡ್ನಿಗೆ ಮಹಾಭಾರವೊಂದು ಇಳಿದಿದ್ದರ ಅನುಭವವಾಗಿತ್ತು. ಎಲ್ಲ ಸರಿಯಾಗುತ್ತೆ ಬಾ ನಾವಿನ್ನು ಹೊರಡೋಣ ಎಂದು ತನ್ನನ್ನು ದಬ್ಬಿಕೊಂಡೆ ಹೊರನಡೆದಿದ್ದ. + +*** + +ನಡೆಯುತ್ತಾ ನಡೆಯುತ್ತಾ ಸಮರ್ಥ ಈಗಾಗಲೇ ಉಣಕಲ್ ಕೆರೆಯವರೆಗೆ ನಡೆದಿದ್ದ. ನಿನ್ನ ಇಕ್ಕಟ್ಟಿಗೆ ತಾನೂ ಏನೂ ಮಾಡಲಾರೆ ಎಂಬಂತೆ ಸೂರ್ಯನೂ ಆಗಷ್ಟೇ ನುಣುಚಿಕೊಂಡಿದ್ದ. ಇವನ ವ್ಯಗ್ರತೆಗೆ ಸಾಕ್ಷಿಯೆಂಬಂತೆ ಆಗಸವೂ ಕೆಂಪಾಗಿ ನೀರೆಲ್ಲ ಕೇಸರಿಯಾಗಿ ಹೊಳೆಯುತ್ತಿತ್ತು. ದೂರದಲ್ಲಿ ಮೋಟರ್ ಬೋಟುಗಳಲ್ಲಿ ಒತ್ತಿಕುಳಿತು ನಗುತ್ತಿರುವ ಜೋಡಿಗಳು, ಪಕ್ಕದಲ್ಲೇ ಹುಲ್ಲಿನ ಮೇಲೆ ಆಡುತ್ತಿರುವ ಮಕ್ಕಳು, ಹರಟುತ್ತಿರುವ ಅಮ್ಮಂದಿರು, ದಂಡೆಯ ಮೇಲೆ ನೀರಲ್ಲಿ ಕಾಲಿಳಿದುಬಿಟ್ಟು ಅಂತ್ಯಾಕ್ಷರಿ ಆಡುತ್ತಿರುವ ಹುಡುಗಿಯರ ಗುಂಪು, ಅವರ ಹಿಂದೆ ಹಾದುಹೋಗುವ ಅಕಸ್ಮಾತ್ತಾಗಿ ಯಾರೊಡನೆಯಾದರೂ ದೃಷ್ಟಿ ಸಂಧಿಸುವುದೋ ಎಂಬಂತೆ ಕನವರಿಸುತ್ತ ಈಗಾಗಲೇ ೩ ರೌಂಡು ಹೊಡೆದಿರುವ ಹುಡುಗರದೊಂದು ಗುಂಪು, ಎಲ್ಲರೂ ಅನ್ಯಲೋಕದ ಜೀವಿಗಳಂತೆ ತೋರುತ್ತಿದ್ದರು ಸಮರ್ಥನಿಗೆ. ಬಾನಕೆಂಪು ಕಪ್ಪಾಗುತ್ತ ಸುತ್ತಲ ಜಗತ್ತೆಲ್ಲ ಕೆರೆಯ ಅಂಚಿಂದ ಕರಗತೊಡಗಿತ್ತು. ಮನೆಗೆ ಬಸ್ಸು ಹಿಡಿಯಬೇಕಲ್ಲ ಎಂದುಕೊಳ್ಳುತ್ತ ಎದ್ದವನಿಗೆ ಕಂಡಿದ್ದು ದಂಡೆಗೆ ಬಂದ ಮೋಟಾರು ಬೋಟಿನಿಂದ ಇಳಿಯುತ್ತಿದ್ದವರು- ಗುಲಾಬೋ, ಮತ್ತು ಗೆಳತಿ(ಯ)ರು. ಅವರೆಲ್ಲ ಏನಾದರೂ ಮರೆತೇವೆ, ಬಿಟ್ಟೆವೆ ಬೋಟಿನಲ್ಲಿ, ಎಂದು ಖಚಿತಪಡಿಸಿಕೊಳ್ಳುತ್ತಾ ಬರುತ್ತಿದ್ದರು. ಮುಳುಗಿದ ಸೂರ್ಯನ ಅಳಿದುಳಿದ ಕಿರಣಗಳಲ್ಲಿ ಕಂಡ ಸ್ಪಷ್ಟ ಆಕೃತಿಗಳು. ಕೆರೆಗೆ ಬೆನ್ನು ತಿರುಗಿಸಿ ಹೆಜ್ಜೆಯಿಡುತ್ತಿದ್ದ ಮಂದಿಗುಂಪಿನ ನೆರಳು ಗುಲಾಬೋ ನೆರಳಿಗಿಂತ ಭಿನ್ನವಾಗೇನೂ ಇರಲಿಲ್ಲ. ನಿಧಾನ ಎದ್ದು ನಿಂತು ತನ್ನದೇ ನೆರಳನ್ನು ಮುಟ್ಟಿ ಮುಟ್ಟಿ ನೋಡಿಕೊಂಡ ಸಮರ್ಥ. + +ನಡೆದು ಹೋಗಿ ಗುಲಾಬೋಳನ್ನು ಗಟ್ಟಿಯಾಗಿ ತಬ್ಬಿಕೊಂಡು “ನೀನೂ ಮಂದೀನSSS, ನಾನೂ ಮಂದೀನ ಆದರ ಈ ಮಂದಿಯಲ್ಲದ ಮಂದಿಗ್ ಅದು ತಿಳಿಯೂದಿಲ್ಲಾ….” ಎಂದು ಹೇಳಿ ಹಿಂತಿರುಗಿ ನೋಡದೆ ಬಿರಬಿರನೆ ಹೆಜ್ಜೆಯಿಡತೊಡಗಿದ. + +ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ. \ No newline at end of file diff --git a/Kenda Sampige/article_496.txt b/Kenda Sampige/article_496.txt new file mode 100644 index 0000000000000000000000000000000000000000..c961ac88057d88ce65fd08da0e6529f96700a171 --- /dev/null +++ b/Kenda Sampige/article_496.txt @@ -0,0 +1,41 @@ +ಅದೆಲ್ಲ ಚಿಟಿಕೆ ಬಾರಿಸುವುದರೊಳಗೆ ಆಗಿಹೋಯಿತು. ತರಕಾರಿ ಪೇಟೆಯಿಂದ ಮರಳುವಾಗ ದಾರಿಯಲ್ಲಿ ಹಠಾತ್ತನೆ ಜಡಿಯತೊಡಗಿದ ಮಳೆಗೆ ತತ್ತರಿಸಿದ ಭವಾನಿ ಪಕ್ಕದ ಅಂಗಡಿ ಮಾಡಿನ ಮರೆಗೆ ಚಿಮ್ಮಿ ತೂರಿಕೊಂಡಳು. ಅದಾಗಲೇ ಅಲ್ಲಿ ಇನ್ನಷ್ಟು ಜನ ನಿಂತು ಇಕ್ಕಟ್ಟಾಗಿತ್ತು. ಅಂಗಡಿಯ ಒಸ್ನಗಾರ ಕಿಟ್ಟ “ಬರ್ರಿ, ಒಳಗೆ ಬಂದು ಕೂತ್ಕೊಳ್ರಿ” ಎಂದು ಕರೆದದ್ದೆ ನುಸುಳಿ ಮಟ್ಟಲೇರಿ ಕಟ್ಟಿಗೆಯ ಬೆಂಚಿನ ಮೇಲೆ ಒದ್ದೆ ಸೀರೆಯಲ್ಲಿ ಕೂತಾಗಲೇ ಝಗ್ಗನೆ ಹೊಳೆದು ಹೋಯಿತು ಭವಾನಿಗೆ- “ಅರೆರೆ ಇದು ಸೊನಗಾರನ ಅಂಗಡಿ” -ಎಂದು. ಒಂದು ಬಗೆಯ ರೋಮಾಂಚನದಲ್ಲಿ ಚಳಿಗೆ ಸಣ್ಣಗೆ ನಡುಗಿದಳು. + +ಈ ಊರಿಗೆ ಸೊಸೆಯಾಗಿ ಬಂದ ಕಳೆದ ಹತ್ತಾರು ವರ್ಷಗಳಲ್ಲಿ ಭವಾನಿ ಸಾವಿರಾರು ಸಲವಾದರೂ ಈ ರಸ್ತೆಯಲ್ಲಿ ನಡೆದಿದ್ದಾಳೆ. ಪ್ರತಿಸಲ ನಡೆವಾಗಲೂ ಕಡೆಗಣ್ಣಿಂದ,ಈ ಸೊನಗಾರನ ಅಂಗಡಿಯ ಕಪಾಟುಗಳಲ್ಲಿ ಮಿರುಗುವ ಬೆಳ್ಳಿ ಬಂಗಾರದ ಪ್ರಭೆಯನ್ನು ಗಮನಿಸಿದ್ದಾಳೆ. ಇದೇ ಬೆಂಚಿನಲ್ಲಿ ಕೂತು ಸೊನಗಾರನೊಂದಿಗೆ ಚೌಕಾಶಿ ನಡೆಸುವ ಹೆಂಗಸರ ಭಾಗ್ಯಕ್ಕೆ ಕರುಬಿದ್ದಾಳೆ. ತಾನೂ ಒಂದು ದಿನ ಈ ಅಂಗಡಿಯಲ್ಲಿ ಕೂತು ಚಿನ್ನದ ಚೌಕಾಶಿ ನಡೆಸಿಯೇನು ಎಂಬ ಕನಸನ್ನು ಕೆಲದಿನ ಕಂಡವಳು ನಂತರ ಕ್ರಮೇಣ ಅದನ್ನೂ ಬಿಟ್ಟುಕೊಟ್ಟು, ಕೇರಿಯ ಯಾವುದಾದರೂ ಪರಿಚಿತ ಹೆಂಗಸು ಬಳೆಗಿಳೆ ಮಾಡಿಸಿಕೊಳ್ಳುವುದಿದ್ದರೆ ಅವಳ ಜೊತೆಗಾದರೂ ಹೋಗಿ ನೋಡಬೇಕು ಎಂಬ ಆಸೆ ಹೊಂದಿ, ಅದೂ ಕೈಗೂಡಿರಲಿಲ್ಲ. ಈ ಅಂಗಡಿಯಲ್ಲಿ ಕಂಡುಬರುವುದೇ ಒಂದು ಮಹಾಯೋಗ ಊರ ಹೆಂಗಸರಿಗೆ, ಅವರಿಗಾಗ ಎಲ್ಲಿಲ್ಲದ ಠೀವಿ. ಸಾದಾ ಮಾತುಗಳಿಗೂ ಬೇರೆಯದೇ ಗತ್ತು. ಕಿರಾಣಿ ಅಂಗಡಿಗೆ ಆತುಕೊಂಡು ಎದುರಿನ ಬುಟ್ಟಿಯಿಂದ ಅಕ್ಕಿ, ಗೋಧಿ, ಕಾಳುಗಳನ್ನು ಬೊಗಸೆಯಲ್ಲಿಟ್ಟುಕೊಂಡು ಹಾರಿಸಿ ಹಾರಿಸಿ ಪರಿಕಿಸುವುದಕ್ಕೂ, ಇಲ್ಲಿ ಗುಲಾಬಿ ಬಣ್ಣದ ಕಾಗದದಲ್ಲಿಟ್ಟ ಬಳೆ, ಬೆಂಡೋಲೆ, ಹರಳುಗಳನ್ನು ನಿಟ್ಟಿಸುವ ಶೈಲಿಗೂ ಅಜಗಜಾಂತರವಿದೆ. ಸೊನಗಾರನ ಅಂಗಡಿಯಲ್ಲಿಯ ತಮ್ಮ ಉಪಸ್ಥಿತಿಯನ್ನು ನೋಡಲು ರಸ್ತೆಯಲ್ಲಿ ಯಾರೂ ಇರದಿದ್ದರೆ ಹೆಂಗಸರಿಗೆ ಎಲ್ಲಾ ವ್ಯರ್ಥ ಅನಿಸಿಬಿಟ್ಟು “ಗಡಿಬಿಡಿಯಲ್ಲಿ ಕಿಟ್ಟಿ ಆರಾಮವಾಗಿ ಆಗ್ಲಿ” -ಎಂದು ಸೊನಗಾರನಿಗೆ ಏನೇನೂ ಅವಸರ ಮಾಡದೆ ರಸ್ತೆಯ ಗಮನ ಸೆಳೆಯುತ್ತಾ ಕಾಲಹರಣ ಮಾಡುತ್ತಿದ್ದರು. ಹೀಗೊಂದು ವಿಚಿತ್ರ ಶಕ್ತಿ ಸ್ಥಳವಾಗಿ ಬಿಟ್ಟಿರುವ ಈ ಸೊನಗಾರನ ಅಂಗಡಿಯಲ್ಲಿ ಯಾವ ಪೂರ್ವಕಲ್ಪನೆಯೂ ಇರದೆ ಈಗ ಕೂತು ಬಿಟ್ಟಿರುವ ಭವಾನಿಗೆ ಎನೇನೋ ಆಗಿಹೋಯಿತು. ಕಣ್ತೆರೆದು ಕಪಾಟಿನ ಒಡವೆ, ಬೆಳ್ಳಿಲೋಟ, ಉಂಗುರಗಳನ್ನೆಲ್ಲ ನೋಡಲೂ ವಿಚಿತ್ರ ಹಿಂಜರಿಕೆಯಾಗಿ, ಒಮ್ಮೆ ರಸ್ತೆಕಡೆ, ಒಮ್ಮೆ ಸೊನಗಾರನ ಪುಟ್ಟ ಆಟಿಕೆಯಂಥ ತಕ್ಕಡಿಯ ಕಡೆ ನೋಡುತ್ತ ತಳಮಳಪಟ್ಟಳು. + +ಆದರೂ ಒಳಗೆಲ್ಲ ಸಣ್ಣ ಖುಷಿ. ಸೊನಗಾರನ ಅಂಗಡಿಯಲ್ಲಿ ತಾನೂ ಕಂಡುಬಂದೆ ಅಂತ. ಮಳೆ ಸ್ವಲ್ಪ ಹೊಳವಾದದ್ದೆ ಕಿಟ್ಟನತ್ತ ಕೃತಜ್ಞತೆಯಿಂದ ತಲೆ ಅಲ್ಲಾಡಿಸಿ ರಸ್ತೆಗಿಳಿದುಬಿಟ್ಟಳು. ಈವತ್ತು ಎರಡೆರಡು ಮನೆಯಲ್ಲಿ ಸಂತರ್ಪಣೆಯ ಅಡಿಗೆಗೆ ಹೋಗಲಿಕ್ಕಿತ್ತು. ಅವಸರದಿಂದ ಮನೆ ತಲುಪಿದವಳೇ ಬಾಗಿಲಲ್ಲಿ ತೆಂಗಿನ ಮಡಲು ಹೆಣೆಯುತ್ತ ಕೂತಿದ್ದ ಮುದಿ ಅತ್ತೆಗೆ ದೇವಸ್ಥಾನಕ್ಕೆ ಹೋಗುತ್ತೇನೆ ಅಂತ ಹೇಳಿ ಮೂಲೆ ಮನೆಯ ಅಡಿಗೆಗೆ ಹೊರಟುಬಿಟ್ಟಳು. ನಾಲ್ಕಾರು ತೆಂಗಿನ ಮರಗಳ ಸಣ್ಣ ಹಿತ್ತಲಿನ ಮನೆಯಲ್ಲಿ ಅತ್ತೆ ಸೊಸೆ ಇಬ್ಬರೇ ಇರುತ್ತಿದ್ದರು. ಮುಪ್ಪಿನಿಂದ ಕಣ್ಣು ಮಂಕಾಗಿರುವ ಅತ್ತೆ ಇಡೀ ದಿನ ತೆಂಗಿನಗರಿ ಹೆಣೆಯುತ್ತ ಕೂತಿರುತ್ತಿದ್ದಳು. ಗಂಡ ಲೀಲಾಧರ ಘಟ್ಟದ ಮೇಲೆ ಸಿರ್ಸಿಯ ಸಮೀಪದ ಹಳ್ಳಿಯ ಹೆಲ್ತ್ ಸೆಂಟರಿನಲ್ಲಿ ಕೆಲಸ ಮಾಡುತ್ತಿದ್ದ. ಅದೆಷ್ಟೋ ವರ್ಷಗಳಿಂದ ಅವನು ಅಲ್ಲೇ ಇದ್ದ ಊರ ಕಡೆಗೆ ವರ್ಗಾ ಮಾಡಿಸಿಕೊಂಡು ಬರುವ ಆಸೆಯೇ ಅವನಿಗಿದ್ದಂತಿರಲಿಲ್ಲ. ಬಂದಾಗಲೆಲ್ಲಾ ಭವಾನಿ ದುಂಬಾಲು ಬೀಳುತ್ತಿದ್ದಳು- “ಇಲ್ಲಿಗೇ ಸಮೀಪ ಎಲ್ಲಾದರೂ ವರ್ಗ ಮಾಡಿಸಿಕೊಂಡು ಬನ್ನಿ” -ಅಂತ. ಅವನಿಗದರ ಪರಿವೆಯೇ ಇರಲಿಲ್ಲ. ಈ ಮನೆಯ ಮೇಲೆ ಕಣ್ಣಿಟ್ಟುಕೊಂಡಿರುವ ದಾಯಾದಿಯೊಬ್ಬನ ಭಯ ಇದ್ದಂತಿತ್ತು ಅವನಿಗೆ. + +ಬರೇ ಹೆಂಗಸರೇ ಇದ್ದರೆ ಯಾರೂ ಏನೂ ಮಾಡುವುದಿಲ್ಲ. ತಾನು ಬಂದುಬಿಟ್ಟರೆ ಸಾಕು. ಮಾತು ಚರ್ಚೆ ಜಗಳ ಕೋರ್ಟು ಎಲ್ಲಾ ಶುರುವಾಗಬಹುದು ಎಂದು ಕಳ್ಳನಂತೆ ಬಂದು ಹುಳ್ಳಗೆ ಎರಡು ದಿನ ಇದ್ದು ಮತ್ತೆ ನಸುಕಿನ ಬಸ್ಸಿಗೇ ಘಟ್ಟ ಏರಿಬಿಡುತ್ತಿದ. ತನ್ನದೂ ಒಂದು ಮನೆ, ಸಂಸಾರ ಎಂಬೆಲ್ಲ ಕನಸುಗಳೊಂದಿಗೆ ಸಮುದ್ರದ ಈ ಊರಿಗೆ ಸೊಸೆಯಾಗಿ ಬಂದಿದ್ದ ಭವಾನಿಯ ಬಾಳು ಸಂತರ್ಪಣೆಯ ಅಡಿಗೆ, ಕೇರಿಯ ಬಾಳಕ ಸಂಡಿಗೆ, ಇರುವ ಎರಡು ಹಸುಗಳ ಕೊಟ್ಟಿಗೆಗಳ ದಿನಚರಿಯಲ್ಲಿ ಒಂದು ಹಪ್ಪಳದ ಮಣೆಯಂತೆ ಗೋಲವಾಗಿ ಸಪಾಟಾಗಿ ಆಗಿಹೋಯಿತು. ಮಂದಕಣ್ಣಿನ ಮುದಿ ವಿಧವೆ ಅತ್ತೆಯ ಜೊತೆ ಜಗಳ ಕಾಯಲೂ ಪ್ರಲೋಭನೆಗಳಿರಲಿಲ್ಲ. ಸಾರಿಗೆ ಉಪ್ಪು ಜಾಸ್ತಿ ಆಯಿತು, ತೆಂಗಿಗೆ ನೀರು ಹಾಕಲು ಸ್ವಲ್ಪ ತಡವಾಯಿತು. ಇಂಥ ಕಾರಣಗಳಲ್ಲಿ ದಮ್ಮೇ ಇರಲಿಲ್ಲ. ಹೀಗಾಗಿ ಅತ್ತೆಯ ಕಣ್ಣು ತಪ್ಪಿಸಿ ಸಂತರ್ಪಣೆಯ ಅಡಿಗೆಗೆ ಹೋಗುವುದರಲ್ಲಿ ಅವಳಿಗೊಂದು ಹುರುಪು ಬರತೊಡಗಿತು. ಅಲ್ಲಿ ಸಿಕ್ಕ ದಕ್ಷಿಣೆ, ಪದಾರ್ಥಗಳನ್ನು ಕದ್ದು ಮುಚ್ಚಿ ಕೂಡಿಡತೊಡಗಿದಳು. ನಡುರಾತ್ರಿ ಯಾವುದಾದರೂ ಮನೆಗೆ ಟೂರಿಸ್ಟು ಬಸ್ಸು ಬಂದುಬಿಟ್ಟರೆ ಬೇರೆ ಬೇರೆ ಮನೆಗಳಿಂದ ಸೈಕಲ್ ಬಿಟ್ಟುಕೊಂಡು ಮಾಣಿಗಳು “ಭವಾನಕ್ಕಾ… ಅಡಿಗೆಗೆ ಬರಬೇಕು” -ಎಂದು ಬಾಗಿಲು ತಟ್ಟಿ ಕೂಗಿ ಹೋಗುತ್ತಿದ್ದರು. ತೆಪ್ಪಗೆ ಹೋಗಿ ಆ ಮನೆಯ ಹೆಂಗಸರ ಜತೆಗೂಡಿ ದೊಡ್ಡ ಬಾಣೆಲೆಗಳಲ್ಲಿ ಅಡಿಗೆಗಿಡಿಗೆ ಮುಗಿಸಿ- ಮತ್ತೊಮ್ಮೆ ಉಂಡು-ಒಂದಿಷ್ಟು ಪದಾರ್ಥ, ಲಾಡು ಕಟ್ಟಿಸಿಕೊಂಡು ಸದ್ದಾಗದಂತೆ ಬಂದು ಮಲಗಿಬಿಡುತ್ತಿದ್ದಳು. ತಾನು ಕೂಡಿಟ್ಟ ಪುಡಿಗಾಸುಗಳನ್ನೆಲ್ಲ ಸೇರಿಸಿ ಒಂದು ದಿನ ಖಂಡಿತ ಬಳೆ ಮಾಡಿಸಿಕೊಳ್ಳಬೇಕು ಎಂದು ಹಂಬಲಿಸಿದಳು- “ಚಿನ್ನ ಹಾಕಿಕೊಂಡ್ರೆ ನನಗೆ ಮೈಯೆಲ್ಲಾ ನವೆ ಆಗ್ತದೆ. ಅದೇನೋ ಸ್ಪರ್ಶಪಿತ್ಥವಂತೆ” -ಎಂದು ಆಡಿಕೊಂಡು, ಎಲ್ಲರ ಕಣ್ಣು ತಪ್ಪಿಸಿಕೊಂಡು ಇರುತ್ತಿದ್ದಳು. ಲೀಲಾಧರ ಮನಸ್ಸು ಬಂದರೆ ಮಾತ್ರ ಹಣ ಕಳಿಸುತ್ತಿದ್ದ. ಹೀಗಾಗಿ ಹಾಲು ಮಾರಿ ಬಂದ ಪುಡಿಗಾಸಿನಲ್ಲಿ ಎಲ್ಲ ನಿಭಾಯಿಸುವಲ್ಲಿ ಸುಸ್ತಾಗಿ ಹೋಗುತ್ತಿತ್ತು. ಮಕ್ಕಳೂ ಆಗಿಬಿಟ್ಟಿದ್ದರೆ ಪರಿಸ್ಥಿತಿ ಹೇಗಿರುತ್ತಿತ್ತೊ ಎಂದು ಆ ಕೊರಗನ್ನೂ ಹೊಟ್ಟೆಯಲ್ಲಿ ಹಾಕಿಕೊಂಡುಬಿಟ್ಟಿದ್ದಳು. + +ಈವತ್ತು ಅಚಾನಕವಾಗಿ ನಡೆದುಹೋದ ಸೊನಗಾರನ ಅಂಗಡಿಯ ಪ್ರವೇಶ ಭವಾನಿಯ ಮೈಮನಗಳಿಂದ ಬೇಗ ಅಳಿಸಿಹೋಗುವಂತಿರಲಿಲ್ಲ. ಎಷ್ಟು ಸರಾಗವಾಗಿ ಆ ಪುಟ್ಟ ಬೆಂಚಿನಲ್ಲಿ ತಾನು ಕೂತು ಬಂದುಬಿಟ್ಟೆ ತನ್ನನ್ನು ಯಾರ್‍ಯಾರು ನೋಡಿಬಿಟ್ಟಿರಬಹುದು. ಅಡಿಗೆಗೆ ಹೋದಲ್ಲಿ ಯಾರಾದರೂ ಕೇಳಿಯಾರೆ ಎಂದು ಆಸೆ ಪಟ್ಟಳು. ದೂರದಲ್ಲಿ ಹೆಂಗಸರು ಕಿಸಿಪಿಸಿ ಅಂತರಂಗ ಮಾಡಿಕೊಂಡರೆ ತನ್ನ ಬಗ್ಗೆಯೇ ಇರಬಹುದು ಎಂದು ಜಾಗರೂಕಳಾದಳು. ಊರ ಹೆಂಗಸರ ಕಣ್ಣಲ್ಲಿ ಹೇಗೋ, ಆದರೆ ತನ್ನ ಅಂತಸ್ತು ಏರಿದವಳಂತೆ ಸಲೂಪ ಭಾರವಾಗಿ ನಡೆದಳು. + +ಇದಾದ ಕೆಲವೇ ದಿನಗಳ ನಂತರ ಒಮ್ಮೆ ಮೂಲೆಮನೆಯಲ್ಲಿ ಬೂಂದಿಲಾಡು ಕಟ್ಟಲು ಕೂತಿದ್ದಳು. ಯಾರೋ “ಲೀಲಾಧರಾ”-ಎಂದಂತಾಯಿತು. ಆ ಕಡೆ ನೋಡಿದರೆ ಬಾವಿಕಟ್ಟೆಯ ಬದಿಯ ಹಿಂಬಾಗಿಲಿನಲ್ಲಿ ಬೆನ್ನಿಗೆ ಬಿಸಿಲುಕಟ್ಟಿಕೊಂಡು ಲೀಲಾಧರ ನಿಂತಿದ್ದಾನೆ. ಅರೆ, ಚೂರೂ ಪೂರ್ವಸೂಚನೆಯೇ ಇಲ್ಲದೆ ಊರಿಗೆ ಬಂದು, ನೇರವಾಗಿ ಈ ಯಾರದೋ ಅಡಿಗೆಮನೆಯ ಹಿಂಬಾಗಿಲಿನಲ್ಲಿ ನುಗ್ಗಿ ಬಂದುಬಿಟ್ಟಿದ್ದಾನೆ. ಹಿನ್ನಲೆಯ ಝಳದಿಂದಾಗಿ ಆತನ ಮುಖವೇ ಅಸ್ಪಷ್ಟವಾಗಿದೆ. ಭವಾನಿ ಏಳಬೇಕೋ, ನಗಬೇಕೋ, ಬಾಯ್ಬಿಡಬೇಕೋ ಎಂಬ ತಬ್ಬಿಬ್ಬಿನಲ್ಲಿದ್ದಾಗಲೇ, ತಪ್ಪು ನಾಟಕದಲ್ಲಿ ಪ್ರವೇಶಗೈದ ಪಾತ್ರಧಾರಿಯಂತೆ ಸೀದ ಅವಳೆಡೆಗೆ ನುಗ್ಗಿ ಬಂದ. ಏನಾಗುತ್ತಿದೆಯೆಂದು ತಿಳಿಯುವುದರ ಮೊದಲೇ ಅವಳ ಕೈಲಿದ್ದ ಬೂಂದಿ ಲಾಡುವೊಂದನ್ನು, ಕಸಿದುಕೊಂಡು ಧಪ್ ಎಂದು ಅವಳ ತಲೆಗೆ ಹೊಡೆದ. “ನಡೆ  ಮನೆಗೆ” ಎಂದು ಒದರಿದ. ಲೀಲಾಧರನ ಈ ರೂಪವನ್ನು, ಅದೂ ಸಾರ್ವಜನಿಕವಾಗಿ, ಎಂದೂ ಕಂಡರಿಯದ ಭವಾನಿ ಅತ್ತಿತ್ತ ಹೆಂಗಸರತ್ತ ಬೆಪ್ಪುನಗೆಯಲ್ಲಿ ನೋಡುತ್ತ ಎದ್ದು ನಿಂತಳು. ಎರಡೇ ಸೆಕೆಂಡಿನ ಹಿಂದೆ ಬೈತಲೆಯ ಮೇಲೆ ನುಚ್ಚುನೂರಾದ ಬೂಂದಿಲಾಡುವಿನ ಸದ್ದು ಕನಸಿನಂತೆ ಮತ್ತೊಮ್ಮೆ ಮನದಲ್ಲಿ ಮರುಕಳಿಸಿ ಮಾಯವಾಯಿತು. ಈ ಎರಡೇ ಮಾನಸಿಕ ಲಾಡೂಪ್ರಹಾರಕ್ಕೆ ತತ್ತರಿದವಳಂತೆ, ಅದೇನಾಯಿತೋ ಧೊಪ್ಪೆಂದು ಅವನ ಪದತಲದಲ್ಲಿ ಉರುಳಿಬಿದ್ದು ಅವನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡು “ನನ್ನ ಇಲ್ಲಿ ಬಿಡಬೇಡ್ರೋ, ನಿಮ್ ಜತೆಗೇ ಸಿರ್ಸಿಗೆ ಕರ್ಕೊಂಡ್ ಹೋಗ್ರೋ…. ಒಪ್ಪೊತ್ತು ಊಟ ಮಾಡ್ತೆ… ಇಲ್ಲಿ ನನ್ನ ಬೇವರ್ಸಿಯಾಗಿ ಬಿಡ್ ಬೇಡ್ರೋ…” -ಎಂದು ಕೂಗತೊಡಗಿದಳು. ಲೀಲಾಧರನ ಎರಡೂ ಕಾಲುಗಳನ್ನು ಹಿಡಿದು ಅವಳು ಅಲಿಗಿಸುತ್ತಿದ್ದುದರಿಂದ ಅವನ ಮುಂದಿನ ಚಲನವಲನಗಳು ಸಂಪೂರ್ಣವಾಗಿ ಅನಿಯೋಜಿತವಾಗಿಬಿಟ್ಟು, ಎರಡು ಕ್ಷಣ ಬಿರುಗಾಳಿಗೆ ಸಿಕ್ಕ ತೆಂಗಿನ ಮರದಂತೆ ಓಲಾಡಿ ನಂತರ ಅವನೂ ಅವಳ ತಲೆಯ ಮೇಲಿಂದ ಆಚೆಕಡೆಗೆ ಬಿದ್ದುಬಿಟ್ಟನು. ಒಂದರ ಬೆನ್ನಿಗೊಂದರಂತೆ ಜರುಗಿದ ಈ ಪಾತ್ರಗಳ ಸದ್ದಿಗೆ ಬೆಚ್ಚಿದವರು ನಗಬೇಕೋ ಬೇಡವೋ ಎಂಬ ಫಜೀತಿಯಲ್ಲೆ ಧಾವಿಸಿ ಬಂದು ಸನಿಹದ ಲಾಡೂ ಬುಟ್ಟಿಗಳನ್ನು ಸುರಕ್ಷಿತ ಜಾಗಗಳಿಗೆ ಒಯ್ದರು. ಅಷ್ಟರಲ್ಲಿ ಆ ಮನೆಯ ಹಿರಿಯ ದತ್ತಣ್ಣ ಬಂದು ಇಬ್ಬರನ್ನೂ ಎಬ್ಬಿಸಿ, ಇಬ್ಬರಿಗೂ ಅಕ್ಕಪಕ್ಕ ಬಾಳೇ ಬಡಿಸಿ ನವದಂಪತಿಗಳಿಗೆ ಉಪಚರಿಸುವಂತೆ ಎದುರು ಕೂತು ಉಣಬಡಿಸಿ, ಲಾಡೂಗೀಡೂ ತಿನ್ನಿಸಿ ಮನೆಗೆ ಅಂತ ಪೊಟ್ಟಣದಲ್ಲೂ ಕಟ್ಟಿಸಿ ಕೈಗಿತ್ತು ಕಳಿಸಿಕೊಟ್ಟನು. ಖಾಸಗೀ ಗಂಟೊಂದು ಧಡಲ್ ಎಂದು ಸಾರ್ವಜನಿಕವಾಗಿ ಬಿಚ್ಚಿಕೊಂಡ ನಂತರದ ವಿಚಿತ್ರ ಮೌನವೊಂದು ಈಗಾಗಲೇ ಇಬ್ಬರಲ್ಲಿ ಸೇರಿಕೊಂಡಿತ್ತು. ಆ ಕುರಿತು ಚಕಾರವನ್ನೂ ಎತ್ತಲಾರದಷ್ಟು ಬಿಗಿಯಾಗಿ ಅದು ಆವರಿಸಿಕೊಂಡಿತ್ತು. + +ರಾತ್ರೆ ತಮ್ಮ ತಮ್ಮ ಚಾಪೆಗಳಲ್ಲಿ ಬಿದ್ದುಕೊಂಡಲ್ಲೆ ಇಬ್ಬರೂ ಕಣ್ಣುಬಿಟ್ಟುಕೊಂಡು ಕತ್ತಲನ್ನು ನೋಡಿದರು. ಆಘಾತ ಮತ್ತು ಎಚ್ಚರಗಳ ನಡುವಿನ ಅರ್ಥವಾಗದ ತಳಮಳದ ವಲಯದಲ್ಲಿದ್ದರು. ಲಾಡೂ ಪ್ರಹಾರ ಪ್ರಸಂಗ, ಅಂಗಿಯನ್ನು ಒಳಹೊರ ಉಪರಾಟಿ ಮಾಡಿ ಕುಡುಗಿದಂತೆ, ಇಬ್ಬರನ್ನೂ ಕುಡುಗಿ ಸುಳ್ಳು ಹೂರಣಗಳೆನ್ನೆಲ್ಲ ಬಯಲಾಗಿಸಿ ಝಳಝಳ ಮಾಡಿದಂತಿತ್ತು. “ಚಿನ್ನ ಮಾಡಿಸಿಕೊಳ್ಳಲು ಹೋಗಿದ್ದೀಯೇನೇ ರಂಡೆ” ಎಂದು ಲೀಲಾಧರ ಕೂಗಿದ್ದರೆ ಅಪಮಾನಕ್ಕೊಂದು ಅರ್ಥ ಒದಗಿದಂತಾಗುತ್ತಿತ್ತು. ಕನಿಷ್ಟಪಕ್ಷ “ಕದ್ದು ಅಡಿಗೆಗೆ ಹೋಗಿ ಹಣ ಮಾಡುತ್ತಿದ್ದಿಯೇನೆ? ಎಷ್ಟು ಅಡಗಿಸಿಟ್ಟೆ ಹೇಳು?” -ಎಂದಾದರೂ ಎಲ್ಲರೆದುರು ಆತ ಅರಚಬೇಕಿತ್ತು -ಎಂದು ಭವಾನಿಗೆ ಅನಿಸಿತು. ಪ್ರಸಂಗ ನಡೆದಾಗ ತಮ್ಮ ತಮ್ಮ ಬಾಳೆಲೆಯಲ್ಲಿ ತಂತಮ್ಮ ಲಾಡು ತಿನ್ನುತ್ತ ನಿರಾತಂಕವಾಗಿ ಮುನ್ನಡೆದ ಊರ ಜನತೆಯ ಮುದ್ರೆಯಲ್ಲಿ ಸಮಾಜವೆಂಬ ಪೆಡಂಭೂತದ ಪೊಳ್ಳುತನವೆಲ್ಲ ಬಯಲಾದ ಭಾಸವೂ ಆಯಿತು. ಲೀಲಾಧರನಿಗೆ ಅದೇ ಹೊಳೆಯಿತೋ ಎಂಬಂತೆ ಮಲಗಿದಲ್ಲೆ ದೊಡ್ಡಕ್ಕೆ ನಕ್ಕುಬಿಟ್ಟ. ಭವಾನಿಗೆ ತಡೆಯಲಾಗಲಿಲ್ಲ. ಚಾಪೆಯಲ್ಲಿ ಅವನತ್ತ ಸರಿದು “ಮದುವೆಯಾದ ಹದಿನೈದು ವರ್ಷಗಳಲ್ಲಿ ಮಕ್ಕಳು ಮರಿ ಹೋಗಲಿ, ಒಂದು ಬಳೆಯೂ ನನ್ನ ಕೈಲಾಗಲಿಲ್ಲ” -ಎಂದು ಬಿಕ್ಕಿ ಬಿಕ್ಕಿ ಅಳತೊಡಗಿದಳು. ಲೀಲಾಧರ ಕತ್ತಲನ್ನೆ ಸ್ಪರ್ಶಿಸುವಂತೆ ರವಿಕೆಯಿಲ್ಲದ ಅವಳ ಬೆನ್ನ ಮೇಲೆ ಮೂಡಿದ್ದ ಚಾಪೆ ಹೆಣಿಗೆಯ ಚಿತ್ತಾರಗಳನ್ನು ಬೆರಳುಗಳಿಂದ ಸೋಕಿದ. ಕತ್ತಲು, ಸ್ಪರ್ಶ ಎರಡಕ್ಕೂ ಅಸಹನೀಯ ಮೌನವಿತ್ತು. ಮಾನಸಿಕತೆ ಮತ್ತು ದೈಹಿಕತೆ ಎರಡಕ್ಕೂ ಎರವಾದ ಅಭದ್ರ ಸ್ಥಿತಿಯನ್ನು ಈ ಮೌನ ಇನ್ನೂ ವಿರೂಪಗೊಳಿಸುತ್ತಿತ್ತು. + +ಈ ಸಲ ಹೋದ ಲೀಲಾಧರ ಮತ್ತೆ ಊರ ಕಡೆ ಸುಳಿಯಲಿಲ್ಲ. ಸಿರ್ಸಿಯ ಹಳ್ಳಿಗಳಲ್ಲಿ ಓಡಾಡಬೇಕಿದ್ದವನು ಹಠಾತ್ತನೆ ದಿಶೆ ಬದಲಿಸಿದ ನದಿಯಂತೆ ಯಲ್ಲಾಪುರದ ಮಲೆಸೀಮೆಯ ಅಡವಿಗಳಲ್ಲಿ ಅಲೆಯತೊಡಗಿದ. ಅತ್ತ ಸಿರ್ಸಿ ಹೆಲ್ತ್ ಸೆಂಟರಿನವರು ಊರಿಗೆ ಪತ್ರ ತಂತಿ ಕಳಿಸಿದರು. ಅವನು ಎರಡು ತಿಂಗಳಿಂದ ಸಂಬಳವನ್ನೂ ತೆಗೆದುಕೊಂಡಿರಲಿಲ್ಲ. ಯಲ್ಲಾಪುರದ ಅರಣ್ಯ ಇಲಾಖೆಯ ನಾಟಿನ ಡಿಪೋದಲ್ಲಿ ಕೂತುಕೊಂಡು ಶಿಕ್ಷಣ ಇಲಾಖೆಯ, ಆರೋಗ್ಯ ಇಲಾಖೆಯ ಸಮಸ್ಯೆಗಳ ಬಗ್ಗೆ ದಿನಪತ್ರಿಕೆಗಳ ವಾಚಕರವಾಣಿಗೆ ಪತ್ರಗಳನ್ನು ಬರೆದು ಅಂಚೆಗೆ ಹಾಕತೊಡಗಿದ. ಅಲ್ಲದೆ ಹೆಲ್ತ್ ಸೆಂಟರಿನಿಂದ ತಂದಿದ್ದ ವಿಟಾಮಿನ್ ಟಾನಿಕ್, ಗುಳಿಗೆಗಳನ್ನು ಸಿದ್ದಿ ಆದಿವಾಸಿಗಳ ತಾಂಡಗಳಲ್ಲಿ ಹಂಚತೊಡಗಿದ. ಆಫೀಸ್ ಡ್ಯೂಟಿಯ ಮೇಲಿದ್ದವನಂತೆ ಗಂಭೀರವಾಗಿ ಕಾಗದದ ಮೇಲೆ ಏನೇನೋ ಬರೆದು ಅವರ ಸಹಿ, ಹೆಬ್ಬೆಟ್ಟು ಎಲ್ಲ ತೆಗೆದುಕೊಂಡು ನಂತರ ಆ ಕಾಗದಗಳನ್ನು ಅಡವಿಯಲ್ಲಿ ಹರಿದುಹಾಕುತ್ತಿದ್ದ. ಮಾತೇ ಆಡುತ್ತಿರಲಿಲ್ಲವಾದ್ದರಿಂದ ಜನಕ್ಕೆ ಅವನ ಚಿತ್ತಭ್ರಮಣೆಯ ಅಂದಾಜೇ ಹತ್ತುತ್ತಿರಲಿಲ್ಲ. ಅವನು ಕೊಟ್ಟ ಗುಳಿಗೆಗಳನ್ನು ತಾಂಡಾದವರಷ್ಟೇ ಭಯಭಕ್ತಿಯಿಂದ ತೆಗೆದುಕೊಳ್ಳುತ್ತಾರೆ ಎಂಬುದು ಅವನಿಗೆ ಸರಿಯಾಗೇ ಗೊತ್ತಿತ್ತು. ಪೇಟೆ, ನಾಟಿನ ಡಿಪೋಗಳಲ್ಲಿ ಎಲ್ಲರೂ ಅವನನ್ನು ವಲಸೆಹುಚ್ಚನಂತೆ ನೋಡತೊಡಗಿದರು. ಬೇರೆ ಬೇರೆ ರೀತಿಯಿಂದ ಸುದ್ಧಿಗಳು ತಲುಪಿದಾಗ ಭವಾನಿಯ ಕೈಕಾಲೇ ಬಿದ್ದು ಹೋಯಿತು. ಅತ್ತೆಗೆ ಹೇಳಲೂ ಹೆದರಿಕೆಯಾಯಿತು. ಯಲ್ಲಾಪುರ ಬಸ್‌ಸ್ಟಾಂಡಿನಲ್ಲಿ ಲೀಲಾಧರ ಹಗಲಿಡೀ ಮಲಗಿರುತ್ತ್ತಾನೆ ಎಂದು ಕಾಮತರ ಟ್ರಕ್ಕಿನ ಡ್ರೈವರನಿಂದ ಅಧಿಕೃತ ಮಾಹಿತಿ ಸಿಕ್ಕ ಮೇಲಂತೂ ಅವಳಿಂದ ಏನೇನೂ ತಡೆಯಲಾಗಲಿಲ್ಲ. “ಇವರಿಗೆ ಹುಷಾರಿಲ್ಲವಂತೆ. ಹೋಗಿ ಒಂದೆರೆಡು ವಾರ ಇದ್ದು ಬರ್ತೇನೆ. ಸ್ವಲ್ಪ ಗೆಲುವಾದರೆ ಊರಿಗೇ ಕರ್ಕೊಂಡು ಬರ್ತೇನೆ” -ಎಂದು ಅತ್ತೆಗೆ ಮೃದುವಾಗಿ ಹೇಳಿ, ಪಕ್ಕದ ಮನೆಯ ಚಚ್ಚಕ್ಕನ ಹತ್ರ “ಸ್ವಲ್ಪ ಲಕ್ಷ್ಯ ಕೊಡು” -ಅಂತ ವಿನಂತಿಸಿ ಇದ್ದ ಎರಡು ಸೀರೆ, ಒಂದಿಷ್ಟು ಕಾಸು ಕಟ್ಟಿಕೊಂಡು ಮಧ್ಯಾಹ್ನದ ಬಸ್ಸು ಹತ್ತಿದಳು. + +ಸಂಜೆ ಯಲ್ಲಾಪುರ ಬಸ್‌ಸ್ಟಾಂಡಿನಲ್ಲಿಳಿದಾಗ ಅವಳ ಎದೆ ಹೊಡೆದುಕೊಳ್ಳುತ್ತಿತ್ತು. ಯಾರನ್ನು ಏನು-ಅಂತ ಕೇಳುವುದು. ಲೀಲಾಧರ ಅಂದರೆ ಯಾರಿಗೆ ಗೊತ್ತಾದೀತು? ಹೆದರುತ್ತ ಬಸ್‌ಸ್ಟಾಂಡಿನೊಳಗಿನ ಸಿಮೆಂಟಿನ ಬೆಂಚುಗಳನ್ನು ನೋಡಿದಳು. ಎಲ್ಲ ಬೆಂಚುಗಳಲ್ಲೂ ಜನ ಕೂತಿದ್ದರು. ಯಾವುದೂ ಖಾಲಿ ಇರಲಿಲ್ಲ. ಎಲ್ಲೂ ಯಾವ ಮನುಷ್ಯಾಕೃತಿಯೂ ಮಲಗಿರಲಿಲ್ಲ. ಇವಳ ಬಳಿ ಓಡಿ ಪೇಪರಿನ ಹುಡುಗ “ಎಲ್ಲಿ ಹೋಗ್ಬೇಕು, ಯಾರು ಬೇಕು?” -ಎಂದು ನೆರವಿನ ದನಿಯಲ್ಲಿ ಕೇಳಿದ. ಭವಾನಿ ಧೈರ್ಯ ವಹಿಸಿ “ಇಲ್ಲಿ ಹಗಲಿಡೀ ಮಲಗುತ್ತಾರಂತಲ್ಲ. ಹೆಲ್ತ್ ಸೆಂಟರ್…” ಎಂದು ತೊದಲಿದ್ದೇ ಎಲ್ಲ ತಿಳಿದವನಂತೆ ಅವನು ಮಾತಾಡಿ, ನಾಟಿನ ಡಿಪೋದ ದಾರಿ ತೋರಿಸಿದ. ಭವಾನಿ ಅಪರಿಚಿತ ದಾರಿಯಲ್ಲಿ ಸಟ ಸಟ ನಡೆದಳು. ಹತಾಶತೆಯಲ್ಲೇ ಹುಟ್ಟುವ ಧೈರ್ಯವೊಂದು ಅವಳ ನಡಿಗೆಯಲ್ಲಿತ್ತು. “ಅವನಾ? ಅವನು ಹಗಲೆಲ್ಲಾ ಮಲಿಕ್ಕಂಡೇ ಇರ್ತಾನೆ. ಬೆಂಚು ಖಾಲಿ ಇದ್ರೆ ಇಲ್ಲಿ, ಇಲ್ದಿದ್ರೆ ನಾಟಿನ ಡಿಪೋದಲ್ಲಿ… ರಾತ್ರಿ ಆದದ್ದೇ ಸುತ್ತುತ್ತಾನೆ. ಇಡೀ ರಾತ್ರಿ ಮುಚ್ಚಿದ ಪೇಟೇ, ಖಾಲೀ ಓಣಿ ಕೇರೀಲಿ ಸುತ್ತುತಿರ್ತಾನೆ” ಎಂದ ಸಣ್ಣ ನಗುವಿನ ಲೇಪದ ಹುಡುಗನ ವಾಕ್ಯ ಅವಳ ಕರುಳನ್ನೆಲ್ಲ ಜಾಲಾಡಿಬಿಟ್ಟಿತ್ತು. ಅವಳ ಮನಸ್ಸಿನಲ್ಲೂ ಬಹುವಚನದಲ್ಲೇ ಬರುತ್ತಿದ್ದ ಲೀಲಾಧರ ಈ ಪರದೇಶಿ ಹುಡುಗನ ಬಾಯಲ್ಲಿ ಏಕವಚನಕ್ಕಿಳಿದ ರೀತಿಗೆ ಅವಳು ಒಂದು ಕಡೆ ನಿಲ್ಲುವಂತೆಯೇ ಇರಲಿಲ್ಲ. ನಾಟಿನ ಡಿಪೋದಲ್ಲಿದ್ದ ಸಣ್ಣ ಚಾ ಅಂಗಡಿಗೆ ತಗುಲಿಕೊಂಡಿದ್ದ ಹಲಗೆಯ ಕೋಣೆಯನ್ನು ಅವಳು ತಲುಪಿದಳು. ಅಲ್ಲಿದ್ದವರು ಬೆರಳಿಟ್ಟು ತೋರಿಸಿದರು. ಕತ್ತರಿಸಿದ ನಾಟಿನ ಹಸಿ ಹಲಗೆಯ ರಾಶಿಯ ಮೇಲೆ ವಾರಸುದಾರರಿಲ್ಲದ ಪರದೇಶಿ ಹೆಣದಂತೆ ಲೀಲಾಧರ ಮಲಗಿದ್ದ. ನೊಣ, ಗಡ್ಡ, ಕೊಳೆಯಾದ ಪೈರಾಣ, ಊದಿಕೊಂಡಂತಿದ್ದ ಹಳದಿಗಟ್ಟಿದ ಮೊಣಗಂಟುಗಳು. ಸಡಿಲು ದೇಹ ನಿದ್ದೆಯಲ್ಲಿ ಆಗಾಗ ಅದುರುತ್ತಿತ್ತು. ಯುದ್ದೋಪಾದಿಯಲ್ಲಿ ಭವಾನಿ ಚಿಕ್ಕ ಖೋಲಿಯನ್ನು ಬಾಡಿಗೆಗೆ ಹಿಡಿದು, ನಾಟಿನ ಮಧ್ಯದಿಂದ ಲೀಲಾಧರನನ್ನೆಬ್ಬಿಸಿ ಕೈಹಿಡಿದು ನಡೆಸಿಕೊಂಡು ಬಂದಳು. + + + +ಸ್ವಪ್ನದಲೆ ಕಂಡವನಂತೆ ಲೀಲಾಧರ ಕೈಹಿಡಿದು ಬಂದ. ಸ್ವಪ್ನವನ್ನು ನೋಡುವಂತೆ ಅವಳನ್ನು ನೋಡಿದ. “ನಾನು ಬಂದಿದ್ದೇನಲ್ಲ, ಇನ್ನೆಲ್ಲ ಸರಿಹೋಗುತ್ತದೆ” -ಎಂದು ಸಂತೈಸುವ ದನಿಯಲ್ಲೆ “ನಮ್ಮನ್ನೆಲ್ಲ ಮರ್‍ತು ಬಿಟ್ರಾ?” ಎಂದು ಕೇಳಿದಳು. ಅವನ ಕಣ್ಣುಗಳು ಏನೂ ಹೇಳುತ್ತಿರಲಿಲ್ಲ. ಅವು ಬರೇ ನೋಡುತ್ತಿದ್ದವು. ನಾಲ್ಕು ಬಕೀಟು ಬಿಸಿ ಬಿಸಿ ನೀರಿನಲ್ಲಿ ಅವನಿಗೆ ಸ್ನಾನ ಮಾಡಿಸಿದಳು. ಹೊಸ ಸೀಮೆ ಎಣ್ಣೆ  ಫಳಫಳ ಸ್ಟೋವು, ಅದರ ವಾಸನೆ ಸದ್ದು, ಹೊಸ ಬಕೀಟು, ಹೊಸ ನೀರು, ಹೊಸ ಬೆವರಿನಲ್ಲಿ ಹಗುರಾಗಿ ಅವನು ಕುಕ್ಕುರು ಕೂತಲ್ಲೆ, ದೇವರಿಗೆ ಹಣ್ಣುಗಾಯಿ ನೀಡುವವನಂತೆ ಬಾಗಿ ಎರಡೂ ಕೈ ಮುಂದುಮಾಡಿ ಅವಳ ಕೈಗಳನ್ನು ಬೇಡಿದ. ನಂತರ ಆ ಕೈಗಳನ್ನು ತಾನೆ ತನ್ನ ಕತ್ತು ಕೆನ್ನೆಗಳ ತುಂಬ ರಭಸದಿಂದ ಸವರಿ ಕಣ್ಣಿಗೊತ್ತಿಕೊಂಡು ಕೂತ. ಆ ಹಿಡಿತದಲ್ಲಿ ಹಿತದ ಗುಟ್ಟೊಂದಿರುವಂತಿತ್ತು. ಹೋಟಲಿನಿಂದ ತಂದ ಚಪಾತಿ ಪಲ್ಯ ತಿನ್ನಿಸಿ ಅವನನ್ನು ಅಡ್ಡಾಗಿಸಿದಳು. ಆದರೆ ಅವನು ನಿದ್ರೆಯ ಸಮೀಪ ಬರಲಿಲ್ಲ. ತನ್ನ ನಿತ್ಯದ ನಿಶಾಸಂಚಾರಕ್ಕೆಂದು ಎದ್ದುನಿಂತ. ಅವನೆದುರು ಅಳುಕುತ್ತಲೇ ವಿನಂತಿಸಿದಳು. “ನಾನು ಬಂದಿದ್ದೇನೆ ಈಗ. ನಿಮ್ಮ ಸಂತಿಗೇ ಇರ್ತೇನೆ” -ಎಂದೆಲ್ಲ ಅವಳು ಬಳಸಿದ ಮಾತುಗಳು ಅವನನ್ನು ತಲುಪುವಂತೆ ತೋರಲಿಲ್ಲ. ಜೋರಾಗಿ ಗದರಿಸಿದಳು. ಯಾವುದಕ್ಕೂ ನಿಲುಕದೆ ಲೀಲಾಧರ ಬಾಗಿಲು ದಾಟಿ ರಾತ್ರಿಯೊಳಗೆ ನಡೆದುಬಿಟ್ಟ. ರಾತ್ರಿ ಪಾಳಿಯ ಕಾರ್ಮಿಕನ ಹೆಂಡತಿಯಂತೆ ಭವಾನಿ ಹತ್ತು ಚದರಡಿಯ ಈ ಬಾಡಿಗೆ ಖೋಲಿಯನ್ನು ತುಂಬಾ ತಿಕ್ಕಿ ತಿಕ್ಕಿ ತೊಳೆದಳು. ಅಪವೇಳೆಯಲ್ಲಿ ಮನೆತೊಳೆದ ನೀರು ಧಾರೆಧಾರೆಯಾಗಿ ಹೊರಗೆ ಕತ್ತಲಲ್ಲಿ ಹರಿದುಹೋಯಿತು. ಚಿಮಣಿ ಎಣ್ಣೆ, ಬಲ್ಬು, ಕಸಬರಿಗೆ ಎಂದು ನೆರವಾದ ಪಕ್ಕದ ಖೋಲಿಯ ಹೆಂಗಸು ಈಗ ತನ್ನ ದೀಪ ಆರಿಸಿಕೊಂಡು ಕದ್ದು ಮುಚ್ಚಿ ಈ ಕಡೆಗೇ ಕಣ್ಣಿಟ್ಟು ಕೂತಿದ್ದಳು. ಎಂದಿನಂತೆ ಯಲ್ಲಾಪುರದ ರಾತ್ರಿಯ ಬಿಕೋ ಬೀದಿಗಳಲ್ಲಿ ತನ್ನಷ್ಟಕ್ಕೆ ಪಿಸುಗುಡುತ್ತ ನಡೆದ ಲೀಲಾಧರ ಎಷ್ಟೋ ಹೊತ್ತು ಅಲೆದು ನಸುಕಿನ ಮೊದಲೇ ಬಸ್‌ಸ್ಟಾಂಡಿನ ಕೆಂಪು ಸಿಮೆಂಟಿನ ಬೆಂಚಿನ ಮೇಲೆ ಒರಗಿದ. ನಸುಕಿನಲ್ಲಿ ಭವಾನಿ ವ್ರತ ಕೈಗೊಂಡವಳಂತೆ ಬಂದು ಲೀಲಾಧರನನ್ನು ಎಬ್ಬಿಸಿ ಖೋಲಿಗೆ ಕರೆದು ತಂದಳು. + +ತನ್ನ ಜಗತ್ತೇ ಕುಸಿದು ಬೀಳಬಹುದೆಂಬ ಭಯದಲ್ಲೇ ಯಲ್ಲಾಪುರಕ್ಕೆ ಬಂದಿದ್ದ ಭವಾನಿಯಲ್ಲಿ ಹೊಸತೊಂದು ನಿರ್ಗುಣ ಆವೇಶ ಮೈಗೂಡ ತೊಡಗಿತು. ಲೀಲಾಧರ ಕವುಚಿಕೊಂಡು ನಿದ್ರೆಯಲ್ಲಿ ಲೀನನಾಗಿದ್ದನು. ಅವನ ನಿದ್ರೆಯೇ ಬೇರೆಯಾಗಿತ್ತು. ಇದ್ದುದರಲ್ಲಿಯೇ ಸಂಭಾಳಿಸಿ ಅಡಿಗೆ ಗಿಡಿಗೆ ಚಾ ಉಪ್ಪಿಟ್ಟು ಮಾಡಲಾರಂಭಿಸಿದಳು. ತುತ್ತು ನುಂಗುವಾಗಿನ ಅವನ ಕಣ್ಣುಗಳ ತೇವವೂ ವಿಚಿತ್ರವಾಗಿತ್ತು. ಮಿಕಿ ಮಿಕಿ ನೋಡುತ್ತ ಊಟ ಮಾಡುತ್ತಿದ್ದನು. ಅವನ ಹಳೆಯ ತಲೆ ಎತ್ತಿ ಗಟ ಗಟ ನೀರು ಕುಡಿವ ರೀತಿಯೂ ಬದಲಾಗಿತ್ತು. ಕಚ್ಚಿಕೊಂಡು, ಮೈಮೇಲೆ ಚೆಲ್ಲುವಂತೆ ನೀರು ಕುಡಿಯುತ್ತಿದ್ದನು. ಬಾಗಿಲಲ್ಲಿ ಕೂತು ಯೂ ಶಟಪ್, ಐ ನೋ ಇಂಗ್ಲಿಷ್ ಎಂದು ರಸ್ತೆಯತ್ತ ನೋಡಿಕೊಂಡು ಮಂಪರಿನಲ್ಲಿ ನುಡಿಯುತ್ತಿದ್ದನು. ನಂತರ ಬೃಹತ್ ಹೊರೆಯೊಂದನ್ನು ತಲೆಯಿಂದಿಳಿಸುವಂತೆ ಹುಶ್ ಎಂದು ಬೆವರೊರೆಸಿ ಕೊಳ್ಳುತ್ತ ದಣಿದವನಂತೆ ಮಲಗಿಬಿಡುತ್ತಿದ್ದನು. ಅವಳೆದುರಾಗಿ ಒಂದೂ ಮಾತಾಡದೆ, ಪ್ರಶ್ನೆ ಸಹ ಕೇಳದೆ -ಗಡ್ಡ ಮಾಡಿಕೋ ಎಂದರೆ ಗಡ್ಡ ಮಾಡಿಕೊಂಡು, ಮುಖ ತೊಳೆದುಕೋ ಎಂದರೆ ತೊಳೆದುಕೊಂಡು, ಅಕ್ಕಿ ಆರಿಸಿಕೊಡು ಎಂದರೆ ಆರಿಸಿಕೊಡುತ್ತ ಊರು, ಮನೆ, ತಾಯು, ಪತ್ನಿ ಯಾವುದರ ಸುಳಿವೂ ಇರದ ಮುಕ್ತಗೊಂಬೆಯಂತಿದ್ದನು. + +ಒಂದು ಮಧ್ಯಾಹ್ನ ಅವಳ ತೊಡೆಯ ಮೇಲೆ ತಲೆಯಿಟ್ಟು ಮಲಗಿದವನು ಮಗುವೊಂದು ಅಚ್ಚರಿಯಿಂದ ಅರಸುವಂತೆ ಅವಳ ರವಿಕೆಯನ್ನು ಸವರುತ್ತ ಹೊಸಬನಂತೆ ಮುಗಿಬಿದ್ದನು. ಅರೆ ಇವನ್ಯಾರು ಎನ್ನುವುದರೊಳಗೇ ಬತ್ತಲಾಗಿ ನಿಂತುಬಿಟ್ಟನು. ಭವಾನಿ ಬೆಚ್ಚಿಬಿದ್ದಳು. ಮೊಟ್ಟಮೊದಲ ಬಾರಿಗೆ ಹೀಗೆ ಝಳಝಳ ಹಗಲಲ್ಲೆ ಎದುರು ನಿಂತ ಬತ್ತಲದೇಹದ ಅದ್ಭುತ ಅಪರಿಚಿತತೆಯೆ ಅವಳನ್ನು ಸೆಳೆದುಕೊಳ್ಳತೊಡಗಿತು. ಸಲುಗೆ, ಬಯಕೆಗಳಲ್ಲಿ ಮುಚ್ಚಿಹೋದಂತಿದ್ದ ಕಾಮನೆಗಳೆಲ್ಲ ಈ ಒಂದು ಅಪರಿಚಿತತೆಯ ಸ್ಪರ್ಶಕ್ಕೆ ಧಿಗ್ಗೆಂದು ಚಿಗುರಿಬಿಟ್ಟವು. ಅವನ ಬಿಸಿ ಬೆರಳುಗಳು ಸೋಕಿದಲ್ಲೆಲ್ಲ ಮೊಂಬತ್ತಿಯಂತೆ ಕರಗಿದಳು. ಅವನ ಕಣ್ಣು, ಹಿಡಿತ, ಜೀಕು, ಲಲ್ಲೆ, ಉಸಿರು ಎಲ್ಲ ಹೊಸದಾಗಿದ್ದವು. ತನ್ನ ದೇಹದ ಎಲ್ಲ ವಾಸನೆಗಳೂ ಬದಲಾದಂತಾಗಿ, ಹೊಸ ಮಣ್ಣಲ್ಲಿ ಹರಿವ ಹೊಳೆಯಂತೆ, ಮಾನಸಿಕತೆಯ ಸೋಂಕೇ ಇಲ್ಲದ ಶುದ್ಧ ದೈಹಿಕ ಸಂಗದ ಪಲುಕುಗಳಲ್ಲಿ ಹೊಸಬಳಾದಳು. ನಂತರ ಹಾಡುಗಳು ಮುಗಿದ ರೇಡಿಯೋದಂತೆ ಅವನು ತೆಪ್ಪಗಿದ್ದರೂ, ಇವಳಲ್ಲಿ ಮಾತ್ರ ಹೊಸ ಹಾಡು ಹೂವನ್ನರಸಿಕೊಂಡು ಟೊಂಗೆ ಟಿಸಿಲುಗಳಲ್ಲಿ ಪಲ್ಲವಿಸತೊಡಗಿತು. + +ನೀರಸವಾಗಿದ್ದ ವಾಡಿಕೆಯಾಗಿದ್ದ ಬಾಳಿಗೊಂದು ಜೀವ ಬಂದಂತೆ ಭವಾನಿ ಹತ್ತು ವರ್ಷ ಸಣ್ಣವಳಾಗಿಬಿಟ್ಟಳು. ಹೊಸ ಬತ್ತಿ ಸ್ಟೋವು, ಲೋಟ ತಾಟು, ತುರುಬಿಗೆ ಹಾಕಲು ಬಣ್ಣದ ಹೇರ್‌ಬ್ಯಾಂಡುಗಳು, ಚಪ್ಪಲಿ -ಎಲ್ಲಾ ಕೊಂಡಳು. ಸೋವಿಯೆಂಬ ಒಂದೇ ಕಾರಣಕ್ಕೆ ಸದಾ ಆಯುರ್ವೇದದ ನೆಪ ಹೇಳಿಕೊಳ್ಳುತ್ತಿದ್ದ ಹಳೇ ಸ್ನಾನದ ಸಾಬೂನಿನ ವಾಸನೆಯೂ ಅವಳಿಗೆ ವಾಕರಿಕೆ ತರತೊಡಗಿತು. ಹೊಸಾ ಪರಿಮಳದ ಸಾಬೂನು ಕೊಂಡಳು. ಆ ಸಾಬೂನಿನ ಕಾಗದದ ಖೊಟ್ಟೆಯನ್ನು ಸೀರೆಗಳ ನಡುವೆ ಇಟ್ಟಳು. ಪ್ರೇಮ ಉಕ್ಕಿದಂತೆ ಅವನನ್ನು ಏಕವಚನದಲ್ಲೇ ಕರೆದಳು. ಯಲ್ಲಾಪುರ ಪೇಟೆಯ ಜನ ಈ ತಲೆತಿರುಕನ ಹೆಂಡತಿಯನ್ನು ಕೌತುಕದಿಂದ ನೋಡಿದರು. ಈ ನಡುವೆ ಅಲ್ಲಿಂದಲೇ ನೇರ ಸಿರ್ಸಿಗೆ ಹೋಗಿ ಹೆಲ್ತ್ ಸೆಂಟರಿನಲ್ಲಿ ಕಾಡಿ, ಬೇಡಿ, ಹೇಳಿಸಿ, ಸಂಬಳದ ಬಾಕಿಯನ್ನು ಹಿಡಿದುಕೊಂಡು ಬಂದಳು. ಲೀಲಾಧರ ಚಾಚೂ ತಪ್ಪದೆ ನಾಟಿನ ಡಿಪೋಕ್ಕೆ ಹೋಗಿ ಎಂದಿನಂತೆ ಮರದ ದಿಮ್ಮಿಗಳ ನಡುವೆ ಕೂತು ಇಂಗ್ಲೀಷು ಮಿಶ್ರಿತ ಬಡಬಡಿಕೆ ನಡೆಸುತ್ತಿದ್ದ. ಅಡವಿಯಿಂದ ಸೊಪ್ಪು ಸೌದೆ ತರುವ ಹೆಂಗಸರು ಶಾಲೆಯ ಮಕ್ಕಳು ಬೇಲಿಯಾಚಿನಿಂದ ನೋಡಿ ಮುಸಿ ಮುಸಿ ನಗುತ್ತ “ನಾಟುಗಳಿಗೆ ಪಾಠ ನಡೀತಿದೆ” -ಎನ್ನುತ್ತ ಹೋಗ್ಗುತ್ತಿದ್ದರು. ಇವನನ್ನು ಅರಸಿಕೊಂಡು ಭವಾನಿ ಬಂದರೆ ಡಿಪೋದ ಆಳುಕಾಳುಗಳೆಲ್ಲಾ ಕಟ್ಟಿಗೆ ಸಂದಿಯನ್ನು ತೋರಿಸುತ್ತಾ “ಸರ್….. ನಿಮ್ಮ ಲೇಡೀಸ್ ಬಂದಾರ್ರಿ” -ಎಂದು ಕೂಗಿ ಹೇಳುತ್ತಿದ್ದರು. ಕಿಂಚಿತ್ತೂ ಅವಮಾನಿತಳಾಗದೆ ಭವಾನಿ, ಅವರೆಲ್ಲರ ನಗುವಿನ ಭಾಗದಂತೆ ಕೂತಿರುತ್ತಿದ್ದ ಅವನನ್ನೆಬ್ಬಿಸಿ, ಶಾಲೆಯಿಂದ ಮಗುವನ್ನು ಬೇಗ ಬಿಡಿಸಿಕೊಂಡು ಬರುವ ತಾಯಿಯಂತೆ ಎಳೆದುಕೊಂಡು ಹೋಗುತ್ತಿದ್ದಳು. ಅವನಿಗಾಗಿ ಹೊಲಿಸಿದ ಹೊಸ ಶರ್ಟು, ಪೈಜಾಮದಲ್ಲಂತೂ ಲೀಲಾಧರ ಅವಳ ಕಣ್ಣಿಗೆ ಹೈಸ್ಕೂಲ್ ಮಾಸ್ತರನಂತೆ ಕಂಡ. ಅವನಲ್ಲಿ ಕಿಂಚಿತ್ತೂ ಹಳೆಯ ಸುಳಿವುಗಳಿಲ್ಲದಿರುವುದರಲ್ಲೇ ಅವಳ ಹೊಸ ಸ್ಪೂರ್ತಿಯಿದ್ದಂತಿತ್ತು. ಕಂಪನಿ ನಾಟಕದಲ್ಲಿ ದುರಂತದ ಬರಸಿಡಿಲು ಬಡಿಯುವ ಮುನ್ನ ತೋರಿಸಲಾಗುವ ಚೊಕ್ಕ ಖುಷಿಯ ಸಂಸಾರದ ಲಕ್ಷಣಗಳೆಲ್ಲವನ್ನೂ ಶರವೇಗದಲ್ಲಿ ಅಳವಡಿಸಿಕೊಳ್ಳಲು ಭವಾನಿ ಮುಂದಾದಳು. ಒಂದು ದಿನ ಧೈರ್ಯ ವಹಿಸಿ ಯಲ್ಲಾಪುರದ ಟೂರಿಂಗ್ ಟಾಕೀಸಿನ ಚಿತ್ರಕ್ಕೂ ಅವನನ್ನು ಕರೆದುಕೊಂಡು ಹೋಗಿಬಂದಳು. + +ಈ ಹೊಸ ಪುರುಷನ ತಾಟಸ್ಥದಲ್ಲಿ ಭವಾನಿಯ ಸ್ವಾತಂತ್ರ್ಯ ಸಗ್ಗವಿತ್ತು. ಆಯಾಚಿತವಾಗಿ ತನ್ನ ಬಾಳಿನಲ್ಲಿ ಬಂದಿರಿವ ಈ ಹೊಸಬನಿಗೆ ತಾನೇನಾಗಬೇಕು ಎಂದು ಭವಾನಿಗೆ ಆಗಾಗ ಯೋಚನೆಯಾಗತೊಡಗಿತು. ಯಾಕೋ ಈ ವಿಷಯ ಸ್ಪಷ್ಟವಾಗುವತನಕ ತನ್ನ ಈಗಿನ ಸಮಾಧಾನವೆಲ್ಲ ಅಪೂರ್ಣವೆನಿಸಿತು. ಬಡಿಸುವಾಗ ಎರೆಯುವಾಗ “ಹೇಳು. ನಾನು ಯಾರು? ನಾನ್ಯಾರು ಅಂತ ಹೇಳಿದ್ರೆ … ಏನೋ ವಿಶೇಷ ಸಿಹಿ ಉಂಟು” -ಎಂದು ವಿಚಿತ್ರ ರೀತಿಯಲ್ಲಿ ಅವನನ್ನು ಚುಡಾಯಿಸತೊಡಗಿದಳು. ಅವಳ ಏಕವಚನಕ್ಕೇ ವಿಚಲಿತನಾಗದವನಿಗೆ ಈ ಎಲ್ಲ ಕೊಕ್ಕೆ ಪ್ರಶ್ನೆಗಳೇನು ಮಹಾ. ಮಿಕಿಮಿಕಿ ನೋಡುತ್ತಿದ್ದ. ತನ್ನ ಅವಶ್ಯಕತೆ ಖಂಡಿತ ಇದೆ. ಇಲ್ಲವಾದರೆ ಇಷ್ಟು ವಿಧೇಯನಾಗಿ, ಸುಭಗನಾಗಿ ಯಾಕೆ ಆಡಿಕೊಂಡಿರುತ್ತಿದ್ದ-ಎಂದು ಸಮಾಧಾನ ಮಾಡಿಕೊಂಡಳು. ಈ ಉಸಾಬರಿಯೇ ಬೇಡ ಅಂತ ಸುಮ್ಮನಾದರೂ ಅತೀವ ಕ್ಷೋಭೆಯಾದಾಗ “ಲೀಲಾಧರಾ … ಹೇಳು ನಾನು ಯಾರು?” ಎಂದು ಗಲ ಗಲ ಹಿಡಿದು ಅಲ್ಲಾಡಿಸಿದಳು. ಮರುಕ್ಷಣ ‘ಲೀಲಾಧರಾ’  ಎಂಬ ಹೆಸರೇ ಇಲ್ಲಿ ವಿಚಿತ್ರವೆನಿಸಿ ಮೂಕಳಾದಳು. ಮಾನಸಿಕತೆಯೆ ಇಲ್ಲದ ಈ ನಂಟಿಗೆ ಅವಳಿಗೆಂಥದೋ ಹೆದರಿಕೆ ಬರತೊಡಗಿತು. ಇಂಗ್ಲೀಷು ಸ್ವಗತದಲ್ಲಿದ್ದ ಅವನ ಲಹರಿಯನ್ನು ಮುರಿದು ಸಂಗಕ್ಕೆ ಉದ್ದೀಪಿಸಿದಳು. ಹೊಸ ತೆಂಗಿನಮರ ಹತ್ತುವವನಂತೆ ತನ್ನನ್ನು ಅವಚಿಕೊಂಡು ದೆವ್ವ ಹಿಡಿದವನಂತೆ ತನ್ನೆಲ್ಲ ಕಾಲ, ದೇಶ, ಸಂಗ ಮರೆತು ಅನಾಮಿಕ ಏಕಾಕಿಯಾಗಿ ಏಕುತ್ತಿರುವ ಇವನು ಹುಸ್ಸೆಂದು ತನ್ನ ಹಳೇ ಭಾರದಿಂದಲೇ ಎದೆಯ ಮೇಲೆ ಬಿದ್ದಾಗ-ಕಸಿವಿಸಿಗೊಂಡಳು. ಎಲ್ಲಾ ಪ್ರಚೋದನೆಯನ್ನು ಪಡೀತ ಕಣ್ಣೆದುರೇ ತನ್ನದೇ ವೀರ್ಯಸ್ವರ್ಗ ಪಡೆಯುತ್ತಿರುವ ಈ ತೇಲುನೋಟದ ತೇಲುಮನುಷ್ಯನಿಗೆ ಈ ಕ್ಷಣದಲ್ಲೂ ಬಟ್ಟೆ ತೊಳೆಯುವ, ಅಡಿಗೆ ಬೇಯಿಸುವ ಚಾಕರಿಗಿಂತ ಮಿಗಿಲಾದದ್ದೇನೂ ತನ್ನಿಂದ ಸಿಗುತ್ತಿಲ್ಲವಲ್ಲ ಅನಿಸಿ ತೀವ್ರ ಅಲವರಿಕೆಯಾಯಿತು. + +ಮರುದಿನ ಬೆಳಗೆದ್ದು ತಾನು ಕೊಂಡ ಹೊಸ ಪಾತ್ರೆ, ಲೋಟ, ತಾಟುಗಳಿಗೆಲ್ಲ ಸ್ಟೀಲಿನಂಗಡಿಯಲ್ಲಿ ಕಿರ್‌ರ್ ಯಂತ್ರದಿಂದ ‘ಶ್ರೀಮತಿ ಭವಾನಿ’ ಎಂದು ಹೆಸರು ಹಾಕಿಸಿಕೊಂಡು ಬಂದಳು. ಎಲ್ಲಾ ಪಾತ್ರೆಗಳನ್ನು ಹುಣಸೆಹಣ್ಣು ಹಾಕಿ ಉಜ್ಜಿ ಫಳಫಳ ಹೊಳೆಸಿಟ್ಟಳು. ಪಕ್ಕದ ಮನೆಯ ಹೆಂಗಸು “ಯಾವ ಜನ್ಮದ ಪುಣ್ಯವೋ ಅವರದ್ದು. ನಿಮ್ಮಂಥ ಹೆಂಡ್ತಿ ಸಿಕ್ಕಳು” -ಎಂದಾಗ ಅವಳಿಗೆ ಹೇಗೋ ಆಯಿತು. ತಲೆ ಮಿಂದು ಸಿಡಿಲು ಒದ್ದೆ ಕೂದಲಿಗೆ ಟವೆಲ್ಲು ಸುತ್ತಿಕೊಂಡು ಬಿಡಾರದ ಮೆಟ್ಟಲಲ್ಲಿ, ಸಣ್ಣ ತಾಟಿನಲ್ಲಿ ಪುಟ್ಟ ಅಕ್ಕಿಯ ಗುಡ್ಡೆಯನ್ನಿಟ್ಟುಕೊಂಡು ತಾಸುಗಟ್ಟಲೆ ಆರಿಸುತ್ತ ಕೂತಳು. ಆದರೆಲ್ಲೋ ಒಳಗೆ ಪರಪುರುಷರೊಡನೆ ಕದ್ದು ಚೆಲ್ಲಾಟ ನಡೆಸಿದಂತೆ, ಅಥವಾ ಎರಡನೆಯ ಹೆಂಡತಿಯಾಗಿ ಬೇರೆ ಬಿಡಾರ ಹೂಡಿದಂತೆ ಒಂದು ಬಗೆಯ ಅನಧಿಕೃತತೆ ಅವಳನ್ನು ಕಿತ್ತುತಿನ್ನತೊಡಗಿತು. ನಾಟಿನ ಡಿಪೋದಿಂದ ಅವನನ್ನು ಕರೆತರಲು ಹೊರಟಾಗ ರಸ್ತೆಯಲ್ಲಿ ಪಾಸಾದ ಊರಿನ ಕೆಂಪು ಬಸ್ಸು ನೋಡಿದ ಮೇಲಂತೂ, ಊರು ಮನೆ, ಸಂತರ್ಪಣೆಯ ಅಡಿಗೆ, ಏಕಾಕಿ ಅತ್ತೆ, ಹಸು, ದಾಸಾಳ, ತುಳಸೀಕಟ್ಟೆ ಎಲ್ಲ ಉಮ್ಮಳಿಸಿ ಬಂದವು. ಅಲ್ಲಿಯ ಗಿಳಿಗೂಟಕ್ಕೆ ತೂಗಿದ್ದ ಹಳೆ ಪಂಚೆಯ ತುಣುಕಿನಲ್ಲಿರುವ ಪುಡಿಗಾಸಿನ ಗುಪ್ತನಿಧಿ ಮತ್ತೆ ಮತ್ತೆ ಕಣ್ಣೆದುರು ಸುಳಿಯಲಾರಂಭಿಸಿತು. ಇಪ್ಪತ್ನಾಲ್ಕು ಗಂಟೆಯ ನೇರ ಖುದ್ದು ಒಡನಾಟದ ನಂಟಿನಲ್ಲೂ ಶಕ್ಯವಾಗದೇ ಹೋದ ಕೌಟುಂಬಿಕತೆ ತುಂಬ ನಿಚ್ಚಳವಾಗಿ ಅವಳನ್ನು ಕುಕ್ಕತೊಡಗಿತು. ಅವನ ಸಹವಾಸವಿಲ್ಲದೆ ಊರಲ್ಲಿ ಆರಾರು ತಿಂಗಳು ಅರೆಹೊಟ್ಟೆ ಕಷ್ಟಕಾರ್ಪಣ್ಯಗಳಲ್ಲೂ ಇದರ ಅಭಾವ ಕಾದಿರಲಿಲ್ಲ. ಏನನಿಸಿತೋ ಪಕ್ಕದ ಮನೆಯ ಹೆಂಗಸನ್ನು ಹರಟೆಗೆ ಕರೆದು ತನ್ನ ಮದುವೆಯ ವಿಧಿ ವಿಧಾನ, ಗಂಡನ ಮನೆಯ ಅಡುಗೆ ಪದ್ಧತಿ, ಅತ್ತೆಗೆ ಕಣ್ಣಿನ ಮೋತಿ ಬಂದು ಆಪರೇಷನ್ ಆಗಬೇಕು ಎಂದೆಲ್ಲ ತುಂಬಾ ಮಾತಾಡಿದಳು. “ನಾಳೆ ಗಂಡನನ್ನು ಕರೆದುಕೊಂಡು ಊರಿಗೆ ಹೋಗುತ್ತಿದ್ದೇನೆ. ಪಾತ್ರೆ ಪಡಗ ಚಾದರದಲ್ಲಿ ಕಟ್ಟಿ ನಿಮ್ಮನೆಯಲ್ಲಿಡುತ್ತೇನೆ” -ಎಂದು ಹೇಳಿ ಅವನನ್ನು ಅರಸಿಕೊಂಡು ಹೋದಳು. ನಾಟಿನ ಡಿಪೋದಲ್ಲೂ ಸಿಗದೆ ಅವನು ಬಂಕಾಪುರದ ರಸ್ತೆಯ ಅಂಚಿನಲ್ಲಿರುವ ಸಿದ್ದಿತಾಂಡಾದಲ್ಲಿ ಸಿಕ್ಕಿದ. ಹತ್ತಾರು ಹೆಂಗಸರು ಮಕ್ಕಳ ಜತೆ ಇಂಗ್ಲೀಷು ಬಳಸಿ ಏನೇನೋ ಮಾತಾಡುತ್ತ ಕೂತಿದ್ದ. ಅವರು ನಕ್ಕಾಗ ಅವನೂ ನಗುತ್ತಿದ್ದ. ಇವಳನ್ನು ನೋಡಿದ್ದ್ದೇ ಪಿಸಿ ಪಿಸಿ ಏನೋ ತೊದಲಿ ತಲೆ ತಗ್ಗಿಸಿದ. ಹೆಂಗಸರು, ಅಜ್ಜಿಯರು, ಮಕ್ಕಳು ತುಂಬಾ ಗಮ್ಮತ್ತಿನಿಂದ ನಕ್ಕರು. ಇವಳು ಸಮೀಪ ಹೋದದ್ದೆ ಅಜ್ಜಿಯೊಬ್ಬಳ ಬೆನ್ನ ಹಿಂದೆ ಅವಚಿ ಅಡಗಿ ಕೂತ. ಮತ್ತೆಲ್ಲರೂ ನಕ್ಕರು. ತಲೆ ರೋಸಿಹೋಗಿ ಇವಳು ಹೊರಟು ಬಂದುಬಿಟ್ಟಳು. ಹಿಂತಿರುಗಿ ನೋಡಿದರೆ ಪುಂಡ ಹುಡುಗನಂತೆ ಹಿಂಬಾಲಿಸಿ ಇವಳು ನಿಂತಾಗ ತಾನೂ ನಿಲ್ಲುತ್ತ ಬತುತ್ತಿದ್ದ. + +ರಾತ್ರಿಯೇ ಮರುದಿನ ಹೊರಡುವ ತಯಾರಿ ಮುಗಿಸಿದಳು. ಈ ಕುರಿತು ಏನೇನೂ ಮುನ್ಸೂಚನೆ ಕೊಡದೆ ಬೆಳೆಗ್ಗೆ ಒಂಬತ್ತರ ಬಸ್ಸಿಗೆಂದು ಬೇಗ ಬಸ್‌ಸ್ಟಾಂಡಿಗೆ ಅವನ ಅಜ್ತೆ ಬಂದಳು. ಬಸ್‌ಸ್ಟಾಂಡಿನ ಕ್ಯಾಂಟೀನಿನಲ್ಲಿ ದೋಸೆ ಆರ್ಡರ್ ಮಾಡಿ ಆಯ್ ವಾಂಟ್ ಸಡನ್‌ಲೀ ಎಂದು ಕೂಗಿದ. ಹುಬ್ಬಳ್ಳಿಯಿಂದ ಬರಬೇಕಿದ್ದ ಬಸ್ಸಿಗೆ ತುಂಬಾ ತಡವಾಯಿತು. ಸಿಮೆಂಟು ಬೆಂಚಿನ ಮೇಲೆ ಇಬ್ಬರೂ ಕೂತರು. ಕೂತಲ್ಲೆ ನಿದ್ದೆ ಹತ್ತಿ ಜೋಲಿ ಹೊಡೆಯಲಾರಂಭಿಸಿದ. ಅವನನ್ನು ಬೀಳದಂತೆ ಒಂದು ಕೈಲಿ ಹಿಡಿದಳು. ಪೂರ್ತಿ ಗಾಢ ನಿದ್ದೆಯಲ್ಲಿದ್ದವನನ್ನು ತನ್ನ ತೊಡೆಯ ಮೇಲೆ ವಾಲಿಸಿಕೊಂಡಳು. ಅವನೀಗ ಜಾರದಂತೆ ಎರಡೂ ಕೈಗಳಿಂದ ಅವಳ ಸೊಂಟವನ್ನು ಬಳಸಿಕೊಂಡು ಅಸ್ಪಷ್ಟವಾಗಿ ಗೊರಕೆ ಹೊಡೆಯಹತ್ತಿದ. ಅಪರಿಚಿತ ಪ್ರಯಾಣಿಕರ ಮಧ್ಯೆ ಜಾರದಂತೆ ಅವಚಿಕೊಂಡು ತೊಡೆಯ ಮೇಲೆ ನಿದ್ದೆ ಹೋಗಿರುವ ಈ ಪರಾವಲಂಬಿ ಜೀವದ ಮೇಲೆ ಅವಳಿಗೆ ಎದೆ ತುಂಬಿ ಬಂತು. ಹಠಾತ್ತನೆ ಮಡಿಲಲ್ಲಾತ ಮಗುವಾದಂತೆ ಅನಿಸಿತು. ಉಕ್ಕಿ ಬಾಗಿ ಅವನ ತಲೆಯನ್ನು ಮುದ್ದಿಸಿದಳು. ತೆಂಗಿನೆಣ್ಣೆಯ ಜತೆಗೆ ಅವನದೇ ಆದ ಹಸಿನಾಟಿನ ಸೊಗಡಿತ್ತು. ಅವನನ್ನು ಬೀಳದಂತೆ ಹಿಡಿಯುವ ನೆವದಲ್ಲಿ ಎಳೆದುಕೊಂಡಳು. ಈ ಒಂದು ಬೆಚ್ಚನೆ ಭಂಗಿಯಲ್ಲೆ ತಣಿವು ಮನಗಂಡವಳಂತೆ ಕಣ್ಮುಚ್ಚಿಕೊಂಡಳು. + +ಬಸ್ಸು ಬಂದಿದ್ದೇ ಗಡಬಡಿಸಿ ಎದ್ದು ಜನ ಹಿಂದೆ ಮುಂದೆ ಓಡತೊಡಗಿದರು. ಅರ್ಧ ನಿದ್ದೆಯಲ್ಲಿದ್ದವ ವಿಚಿತ್ರವಾಗಿ ಚೀರಾಡಿದ. ಅವನನ್ನೆಳೆದುಕೊಂಡು ಬಸ್ಸಿನ ಬಳಿ ಓಡಿದಳು. ಬಸ್ಸನ್ನು ನೋಡಿ ಹಿಂಜರಿದವನನ್ನು ಹೇಗೋ ತಳ್ಳಿ ಒಳಗೆ ಹತ್ತಿ ಸೀಟು ಹಿಡಿದು ಪುಸಲಾಯಿಸಿ ಕೂರಿಸಿದಳು. “ಯೂ ಶಟಪ್. ಹೂ ಆರ್ ಯೂ?”ಎಂದು ಕೂಗತೊಡಗಿದ. “ನಿನಗ್ಯಾರು ಅಧಿಕಾರ ಕೊಟ್ಟರು. ಯಾರು ನೀನು?” ಎಂದು ಅವಳೆಂದೂ ಕೇಳಿರದಷ್ಟು ದೊಡ್ಡ ದನಿಯಲ್ಲಿ ಚೀರಿ, ನೇವರಿಸಿ ಹಿಡಿಯಲು ಬಂದ ಅವಳ ಕೈಗಳನ್ನು ಛೀ ಎಂದು ಕೊಸರಿಕೊಂಡು ತಳ್ಳಿದ. ಇಡೀ ಬಸ್ಸು ತಿರುಗಿ ನೋಡುವಂತೆ “ಯಾರು ನೀನು?” ಎಂದು ಕೂಗಿದ. ಕೂತವರೆಲ್ಲ ಎದ್ದು ನಿಂತು ಫಾಜೀಲು ಕುತೂಹಲದಿಂದ ನೋಡತೊಡಗಿದರು. ಇವಳಿಗೆ ಸಾಕಾಗಿ ಹೋಯಿತು. + +(ಕಥೆಗಾರ ಜಯಂತ್) + +ಸಕಲ ಶಕ್ತಿ ಹಾಕಿ ಗಂಟಲು ನರ ಹರಿಯುವಂತೆ “ಟೆಲ್ ಮೀ… ಹೂ ಆರ್ ಯೂ?ನನ್ನನ್ ಎಳಕೊಂಡ್ ಹೋಗ್ಲಿಕ್ಕೆ ಯಾರ್ ನೀನು?” -ಎಂದು ಬಸ್ಸೇ ತತ್ತರಿಸುವಂತೆ ಅಬ್ಬರಿಸಿದ. ಮತ್ತೆಂಥ ಪ್ರಕೋಪವಾದೀತೋ ಎಂಬ ಭಯದಲ್ಲಿ ಬಣ್ಣಗೆಟ್ಟ ಅವಳ ಬಾಯಿ ಕಟ್ಟಿಹೋಯಿತು. ಇಡೀ ಬಸ್ಸು ಸ್ತಬ್ಧವಾಗಿ ತುದಿಗಾಲಲ್ಲಿ ನಿಂತು ನೋಡುತ್ತಿತ್ತು. ಈ ಮೌನದಿಂದಲೇ ಪ್ರೋತ್ಸಾಹಿತನಾದವನಂತೆ “ಇಟ್ಟುಕೊಂಡವಳ ಜಬರು…. ಕಟ್ಟಿಕೊಂಡವಳಿಗಿಂತ ಜಾಸ್ತಿ…. ಹುಂ” ಎಂದು ಗೊಣಗುತ್ತ ಬಸ್ಸಿನಿಂದ ಇಳಿದು ಮಾಮಲೇದಾರನ ಗತ್ತಿನಲ್ಲಿ ನಡೆದೇ ಬಿಟ್ಟ. ಮಾತೇ ಹೋದವಳಂತೆ ನಿಂತಿದ್ದವಳು, ಒಂದು ಕ್ಷಣದಲ್ಲಿ ಸಾವರಿಸಿಕೊಂಡು ಬಗ್ಗಿ ಬಸ್ಸಿನ  ಕಿಟಕಿಯಲ್ಲಿ ತಲೆ ತೂರಿಸಿ “ಏ” ಎಂದು ತೊದಲಿದಳು. ಏನೂ ಕೇಳಿಸಿಕೊಳ್ಳದಂತೆ ಅವನು ದೂರ ದೂರವಾಗುತ್ತಿದ್ದ. “ಈ ಸಲ ಬಳೆ ಮಾಡಿಸ್ಕಳ್ಳದೇ ಹೋದ್ರೆ ನಾನು ಭವಾನೀನೇ ಅಲ್ಲಾ” ಎಂದು ತನ್ನಷ್ಟಕ್ಕೆ ವಿಚಿತ್ರ ದನಿಯಲ್ಲಿ ಚೀರಿಕೊಂಡಳು. + +ಕವಿ, ಕಥೆಗಾರ, ಕನ್ನಡದ ಜನಪ್ರಿಯ ಸಿನೆಮಾ ಗೀತ ರಚನೆಗಾರ. ಮೂಲತ: ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದವರು. ಈಗ ಇರುವುದು ಬೆಂಗಳೂರು. \ No newline at end of file diff --git a/Kenda Sampige/article_497.txt b/Kenda Sampige/article_497.txt new file mode 100644 index 0000000000000000000000000000000000000000..cffb774de5f48599066beaecc7016419b7777c12 --- /dev/null +++ b/Kenda Sampige/article_497.txt @@ -0,0 +1,139 @@ +ಬಳ್ಳಾರಿಯಿಂದ ಸಂಡೂರಿಗೆ ಹೋಗುವ ಬಸ್ಸಿನಲ್ಲಿ ಸೀಟ್ ಹಿಡಿಯುವುದೆಂದರೆ, ಅದೂ ಬಸ್ಸಿನ ಮೇಲಲ್ಲ- ಒಳಗೆ, ಕಡಿಮೆ ಸಾಹಸದ್ದಲ್ಲ. ಕೇವಲ ಅರವತ್ತು ಸೀಟುಳ್ಳ ಬಡಪಾಯಿ ಬಸ್ಸಿಗೆ ಒಂದಿನ್ನೂರು ಜನ ದಾಳಿ ನಡೆಸಿದಾಗ, ಅವರ ಮಧ್ಯೆ ವೀರಾವೇಶದಿಂದ ಹೋರಾಡಿ ಕಿಟಕಿಯಲ್ಲಿ ತೂರಿ ಸೀಟಿನ ಮೇಲೆ ಟವಲ್ ಅಥವಾ ಕೈ ಚೀಲ ಅಥವಾ ಚಪ್ಪಲಿ ಅಥವಾ ಕೈಯಲ್ಲಿನ ಕೂಸನ್ನು ಹಾಕುವದೆಂದರೆ ಸಾಮಾನ್ಯರಿಂದ ಸಾಧ್ಯವಾಗುವ ಕಾರ್ಯವಲ್ಲ. ಆದ್ದರಿಂದಲೆ ಕಮಲಕ್ಕಗೆ ತನ್ನ ಮಗ ವಾಜಿ ಸೀಟ್ ಹಿಡಿದಾಗ `ಮಗ ಕೈಗೆ ಬಂದ’ ಅಂತ ಅನ್ನಿಸಿ ಹೃದಯ ತುಂಬಿ ಬಂತು. ಕಾಯಿಪಲ್ಯ ತುಂಬಿಸಿದ ಗೋಣೀಚೀಲವನ್ನು ತನ್ನ ತಲೆಯ ಮೇಲಿಟ್ಟುಕೊಂಡ ವಾಜಿ, ಥೇಟ್ ಕೂಲಿಯವರಂತೆ ಸರಸರನೆ ಬಸ್ಸಿನ ಮೇಲಕ್ಕೆ ಹತ್ತಿ ಚೀಲವನ್ನಿಟ್ಟು ಬಂದ. ಹಿಂದಕ್ಕೆ ಎಷ್ಟೋ ಸಲ ಕಮಲಕ್ಕ ಕೂಲಿಯವರಿಗೆ ಇದೇ ಕೆಲಸಕ್ಕಾಗಿ ನಾಲ್ಕೈದು ರೂಪಾಯಿ ಕೊಟ್ಟಿದ್ದಾಳೆ. + +ಕಿಟಕಿಯ ಬಳಿ ಕುಳಿತ ಕಮಲಕ್ಕ, ಶ್ಯಾವಿಗೆ ಸಜ್ಜಿಗೆಯ ಗಂಟನ್ನು ತೊಡೆಯ ಮೇಲಿಟ್ಟುಕೊಂಡಳು. ಮಲ್ಲಿಗೆಯ ಮೊಗ್ಗಿನ ಗಂಟನ್ನು ವಾಜಿ ಸಾಮಾನುಗಳನ್ನಿಡುವ ಹಲಗೆಯ ಮೇಲಿಟ್ಟ. ಶ್ಯಾವಿಗೆ ಸಜ್ಜಿಗೆಯನ್ನು ಹೂವಿನ ಪಕ್ಕ ಇಡುವಂತಿಲ್ಲ. ಅದು ಸೂಕ್ಷ್ಮವಾದ ಪದಾರ್ಥ. ಮಲ್ಲಿಗೆಯ ವಾಸನೆ ಬಡಿಯಿತೆಂದರೆ, ಜಪ್ಪಯ್ಯ ಎಂದರೂ ಶ್ಯಾವಿಗೆ ಮಾಡಲಾಗುವದಿಲ್ಲ. ಎಳೆ ಹರಿದು ಹರಿದುಹೋಗುತ್ತದೆ. + +ವಾರದ ಹಿಂದೆ ಗೋಪಣ್ಣ ಧೋತ್ರ, ಶ್ಯಾಟಿ ಖರೀದಿಸಲು ಬಂದಾಗ `ಕಮ್ಲಿ, ಊರಿಗೆ ಬರ್ತಾ ಎರಡು ಸೇರು ಶ್ಯಾವಿಗೆ ಸಜ್ಜಿಗೆ, ಎರಡು ಸೇರು ಹೂವು, ಕಾಯಿಪಲ್ಯ ತೊಗೊಂಡು ಬಾ. ಸೌತೆಕಾಯಿ ಮರೀಬೇಡ’ ಅಂತ ಹೇಳಿದ್ದ. ಗೋಪಣ್ಣ ಅದನ್ನು ಹೇಳುವುದೂ ಬೇಕಿರಲಿಲ್ಲ. ಪ್ರತೀ ವರ್ಷವೂ ರಾಯರ ಆರಾಧನೆಗೆ ತಪ್ಪದೇ ಅಣ್ಣನ ಮನೆಗೆ ಕಮಲಕ್ಕ ಹೋಗಿದ್ದಾಳೆ. ಹೋಗುವಾಗ ಶ್ಯಾವಿಗೆ ಸಜ್ಜಿಗೆ, ಹೂವು ಹಾಗೂ ಕಾಯಿಪಲ್ಯ ತಪ್ಪದೇ ಒಯ್ದಿದ್ದಾಳೆ. + +ರಥಬೀದಿಯ ಗಲ್ಲಿಯಲ್ಲಿರುವ ಕಾಸಿಂಸಾಬರ ಮನೆಗೆ ಹೋಗಿ ಎರಡು ಸೇರು ಶ್ಯಾವಿಗೆ ಸಜ್ಜಿಗೆಯನ್ನು ನಿನ್ನೆಯೇ ಕೊಂಡಿದ್ದಳು. ಹೋದ ವರ್ಷ ಹದಿನೈದು ರೂಪಾಯಿಗೆ ಸೇರಿನಂತೆ ಕೊಟ್ಟಿದ್ದ ಸಾಬಿ, ಈ ಸಲ ಇಪ್ಪತ್ತು ರೂಪಾಯಿ ತೆಗೆದುಕೊಂಡ. `ಏನ್ ಮಾಡಾದು ಕಮಲಕ್ಕ, ಗೋದಿ ಬೆಲೆ ಜಾಸ್ತಿ ಆಗ್ಯದೆ. ಬೇರೆಯವರಿಗೆ ಇಪ್ಪತ್ತೆರಡು ರೂಪಾಯಿಗೆ ಸೇರಿನಂತೆ ಮಾರ್ತೀನಿ. ಆದ್ರೆ ನೀವು ದೇವರ ಕಾರ್ಯಕ್ಕೆ ತೊಗಳ್ತೀರಂತ ಗೊತ್ತು. ಅದಕ್ಕೆ ಎರಡು ರೂಪಾಯಿ ಕಮ್ಮಿ ಮಾಡೀನಿ’ ಅಂತ ಪಕ್ಕಾ ವ್ಯವಹಾರದ ಮಾತನಾಡಿದ್ದ. ಕಮಲಕ್ಕ `ಭಾರೀ ದುಬಾರಿಯಾಯ್ತು’ ಅಂತ ಎರಡೆರಡು ಸಲ ಅಂದಳಾದರೂ, ಎರಡು ಸೇರು ಸಜ್ಜಿಗೆ ಖರೀದಿಸಿದ್ದಳು. ಮತ್ತೇನು ತಾನೆ ಮಾಡಲು ಸಾಧ್ಯ? ಇಡೀ ಬಳ್ಳಾರಿ ಜಿಲ್ಲೆಗೆ ಒಳ್ಳೆಯ ಶ್ಯಾವಿಗೆ ಸಜ್ಜಿಗೆ ಸಿಗುವುದು ಕಾಸಿಂಸಾಬರ ಬಳಿ ಮಾತ್ರ. + +ನಂತರ ಹೂವಿನ ಬಜಾರಕ್ಕೆ ಹೋಗಿ, ನರಸಕ್ಕನ ಬಳಿ ಸ್ವಲ್ಪ ಕಷ್ಟ-ಸುಖ ಮಾತಾಡಿಕೊಂಡು, ಎರಡು ಸೇರು ಮೊಗ್ಗನ್ನು ಖರೀದಿಸಿದ್ದಳು. `ಘಂ’ ಎನ್ನುವ ಹಡಗಲಿಯ ಸಣ್ಣಮೊಗ್ಗು! ಹೂವು ಬಾಡದಿರಲು ವದ್ದಿ ಮಾಡಿದ ಸಣ್ಣಂಗೊಸ್ತ್ರದಲ್ಲಿ ಗಂಟು ಕಟ್ಟಿ ತಂದಿದ್ದಳು. ಬಳ್ಳಾರಿ ಬಿಸಿಲಿಗೆ ಆ ಸಣ್ಣಂಗೊಸ್ತ್ರವು ಅರ್ಧ ಗಂಟೆಗೊಮ್ಮೆ ಒಣಗಿಹೋಗುತ್ತಿತ್ತು. ಆಗೊಮ್ಮೆ ಈಗೊಮ್ಮೆ ಅದಕ್ಕೆ ನೀರು ಸಿಂಪಡಿಸುತ್ತಿದ್ದಳು. + +ಇರುವೆಯೂ ನುಸಳದಂತೆ ಬಸ್ಸು ತುಂಬಿಹೋಗಿತ್ತು. ಯಾವುದೋ ಸಣ್ಣ ಮಗುವೊಂದು `ಯವ್ವಾ, ಉಚ್ಚಿ ಬಂದೈತಬೇ…’ ಎಂದು ಅಳುತ್ತಿತ್ತು. ಆದರೆ ಆ ಗಲಾಟೆಯಲ್ಲಿ ಮಗುವನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತೆ ಒಳ ನುಗ್ಗುವುದೆಂದರೆ ಅಸಾಧ್ಯವಾದದ್ದು. `ಗದ್ದಲದಾಗೆ ಎಲ್ಲಂತ ಕರ್ಕೊಂಡ್ಹೋಗ್ಲೋ ಶಿವನ. ಸುಮ್ಕೆ ಕುಕ್ಕರಬಡಿ. ಸಂಡೂರಿಗೋದ್ಮೇಲೆ ಏಟು ಬೇಕೋ ಆಟು ಉಚ್ಛಿ ಹೊಯ್ವಂತಿ’ ಅಂತ ಅವರಮ್ಮ ಗದರಿಸಿದಳು. ಬಿಸಿಲಿನ ಧಗೆಗೆ ಒಳಗೆ ಕುಳಿತವರೆಲ್ಲಾ ಬೆಂದು ಹೋಗಿದ್ದರು. ಕೈಯಲ್ಲಿದ್ದ ದಿನ ಪತ್ರಿಕೆಯಿಂದಲೋ, ಸೀರೆ ಸೆರಗಿನಿಂದಲೊ, ಧೋತ್ರದ ತುದಿಯಿಂದಲೋ ಗಾಳಿ ಬೀಸಿಕೊಳ್ಳುತ್ತ `ಉಸ್’ ಎಂದು ನಿಟ್ಟುಸಿರು ಬಿಡುತ್ತಿದ್ದರು. ಯಾರೋ ಮುದುಕರು ಅಸಹನೆಯಿಂದ `ಎಲ್ಲಿ ಸುಡುಗಾಡಿಗೆ ಹೋಗ್ಯಾನಪ್ಪಾ ಡ್ರೈವರು’ ಅಂತ ಕೂಗಿದರು. `ಕಾಫಿ ಕುಡೀಲಿಕ್ಕೆ ಹೋಟ್ಲಿಗೆ ಹೋಗ್ಯಾನಪ್ಪಾ. ಒಂದು ರವಷ್ಟು ತಡ್ಕಾ. ಇನ್ಹತ್ತು ಮಿನಿಟಿನಾಗೆ ಬರ್ತಾನೆ’ ಮತ್ಯಾವುದೋ ಮೂಲೆಯಲ್ಲಿದ್ದ ವ್ಯಕ್ತಿ ಉತ್ತರಿಸಿದ. `ಕಾಫಿ ಲೋಟದಾಗೆ ಕುಡೀಲಿಕ್ಹತ್ತಾನ, ಇಲ್ಲಾ ಕೊಡದಾಗ ಕುಡೀಲಿಕ್ಹತ್ತಾನ? ಅರ್ಧ ಗಂಟೆ ಆಯ್ತು, ಸುದ್ದಿಲ್ಲ’ ಅಂತ ಮುದುಕರು ಮತ್ತೆ ಗೊಣಗಿದರು. + +ಕಮಲಕ್ಕಗೆ ಈ ಬಾಹ್ಯದ ಗಲಾಟೆಗಳ ಕಡೆಗೆ ಗಮನವಿರಲಿಲ್ಲ. ಮನಸ್ಸಿನಲ್ಲಿ ಮತ್ತೆ ಮತ್ತೆ `ನಾನು ಹರಪನಹಳ್ಳಿ ಹೆಣ್ಣು, ಯಾರಿಗೂ ಜಗ್ಗಂಗಿಲ್ಲ. ಈ ಸಲ ವಾಜಿ ಕೈಲಿ ಮಡಿ ಅಡಿಗಿ ಮಾಡೇ ಮಾಡಿಸ್ತೀನಿ. ಅಲಂಕಾರದ ಬ್ರಾಹ್ಮಣರಿಗೂ ಬಡಸ್ಲಿ’ ಅಂತ ನಿರ್ಧಾರ ಮಾಡಿಕೊಳ್ಳುತ್ತಿದ್ದಳು. ಹೀಗೆ ನಿರ್ಧಾರ ಮಾಡಿಕೊಂಡ ಸ್ವಲ್ಪ ಹೊತ್ತು ಮನಸ್ಸಿಗೆ ನೆಮ್ಮದಿಯೆನಿಸುತ್ತದೆ. ಆದರೆ ಕೆಲವೇ ನಿಮಿಷಗಳಲ್ಲಿ ಮತ್ಯಾರದೋ ಮುಖ ಜ್ಞಾಪಕಕ್ಕೆ ಬಂದು, ಅವರು ಕಮಲಕ್ಕನ ಜೊತೆ ಜಗಳಕ್ಕೆ ನಿಂತು `ತೊನ್ನು ಮೈಯ ಹುಡುಗನ ಕೈಲಿ ಮಡಿ ಅಡಿಗಿ ಹೆಂಗವ್ವಾ ಮಾಡಿಸ್ತಿ? ಧರ್ಮ ಕರ್ಮ ನಡೀ ಬೇಕೋ ಬ್ಯಾಡ್ವೋ ಊರಾಗೆ’ ಅಂತ ಗದರಿಸಿದಂತಾಗಿ, ಸ್ವಲ್ಪ ಹೊತ್ತಿನ ಕೆಳಗೆ ಮೂಡಿದ್ದ ನೆಮ್ಮದಿ ಬುಡ ಸಮೇತ ಕುಸಿದು ಬೀಳುತ್ತದೆ. ಹೀಗೆ ಜಗಳಕ್ಕೆ ನಿಂತ ವ್ಯಕ್ತಿ ಯಾರಾದರೂ ಆಗಿರಬಹುದು. ಮೂಲೆ ಮನೆ ವೆಂಕಣ್ಣ, ಪುರೋಹಿತರಾದ ಕೃಷ್ಣಾಚಾರ್ ಅಥವಾ ಗುಡೇಕೋಟಿ ಗೋವಿಂದಾಚಾರ್. ಒಮ್ಮೊಮ್ಮೆ ಗೋಪಣ್ಣನ ಹೆಂಡತಿ ರಾಧಕ್ಕನೇ ಆ ಪಾತ್ರ ವಹಿಸಬಹುದು. ಕಮಲಕ್ಕ ಕಿಟಕಿಯಿಂದ ಕತ್ತನ್ನು ಹೊರಳಿಸಿ ವಾಜಿಯ ಕಡೆ ನೋಡಿದಳು. ಬಲಗೆನ್ನೆಯ ಮೇಲೆ, ಕಿವಿಗೆ ಹತ್ತಿರ ಎರಡು ಬಿಳಿಯ ಮಚ್ಚೆಗಳು ಶೂಲದಂತೆ ಅವಳ ಹೃದಯವನ್ನು ಇರಿಯುವಂತಾಯ್ತು. ಒಂದು ನಿಂಬೆ ಹಣ್ಣಿನ ಗಾತ್ರದ್ದು, ಮತ್ತೊಂದು ಹುಣಸೇ ಬೀಜದ ಗಾತ್ರದ್ದು. + +ಈ ಸಮಸ್ಯೆ ಪ್ರಾರಂಭವಾಗಿದ್ದು ಕೇವಲ ಎರಡು ವರ್ಷಗಳ ಹಿಂದೆ, ಪುರಂದರದಾಸರ ಪುಣ್ಯ ತಿಥಿಯಂದು. ನಾಲ್ಕು ತಿಂಗಳ ಹಿಂದಷ್ಟೇ ಕಮಲಕ್ಕ ವಾಜಿಯ ಮುಂಜಿ ಮಾಡಿದ್ದಳು. ವಾಜಿ ಮೂರು ಹೊತ್ತೂ ತಪ್ಪದೆ ಸಂಧ್ಯಾವಂದನೆ ಮಾಡುವಂತೆ ನೋಡಿಕೊಳ್ಳುತ್ತಿದ್ದಳು. ದಾಸರ ಪುಣ್ಯತಿಥಿಯ ಕಾರಣ ಕಮಲಕ್ಕ ಸಂಡೂರಿಗೆ ಬಂದಿದ್ದಳು. ಬೆಳಿಗ್ಗೆ ಸ್ನಾನ ಮಾಡಿದ ನಂತರ ವಾಜಿ ಯಥಾಪ್ರಕಾರ ಸಂಧ್ಯಾವಂದನೆಗೆ ಕುಳಿತಿದ್ದ. ಅಲ್ಲೇ ಹತ್ತಿರದಲ್ಲಿ ರಾಧಕ್ಕ ಕಾಯಿಪಲ್ಯ ಹೆಚ್ಚುತ್ತಿದ್ದಳು. ಕಮಲಕ್ಕ ರಾತ್ರಿ ಭಜನೆಗೆಂದು ಭೀಮಕ್ಕವ್ವನ ಹಾಡಿನ ಪುಸ್ತಕ ಹುಡುಕುತ್ತಿದ್ದಳು. ಇದ್ದಕ್ಕಿದ್ದಂತೆಯೇ ಮಾಡುತ್ತಿದ್ದ ಕೆಲಸವನ್ನು ಬಿಟ್ಟು, ಈಳಿಗೆಯನ್ನು ಮಡಿಸಲೂ ಮರೆತು, ರಾಧಕ್ಕ ವಾಜಿಯ ಬಳಿ ಹೋಗಿ ಅವನ ಬಲಗೆನ್ನೆಯನ್ನು ಪರೀಕ್ಷಿಸಲಾರಂಭಿಸಿದಳು. + +`ಕಮಲಕ್ಕ, ಸ್ವಲ್ಪ ಇಲ್ಲಿ ಬಾ’ ಕಮಲಕ್ಕ ಎದ್ದು ವಾಜಿಯ ಬಳಿ ಹೋಗಿದ್ದಳು. `ಕಿವಿ ಹತ್ತಿರ ಏನೋ ಬೆಳ್ಳಗೆ ಕಾಣ್ತದ್ನೋಡು. ಚಿಕ್ಕ ಬೊಕ್ಕೆ’. ಕಮಲಕ್ಕಗೂ ರಾಧಕ್ಕನ ಮಾತು ಸರಿಯೆನ್ನಿಸಿತು. ಹೌದೋ ಅಲ್ಲವೋ ಎನ್ನುವಂತೆ ಇತ್ತೀಚಿನ ಥಳಕು ಬಳಕು ಹುಡುಗಿಯರು ಹಣೆಯ ಮೇಲಿಡುವ ತಿಲಕದ ಗಾತ್ರದಷ್ಟು ಬಿಳಿಯ ಕಲೆ! ಆದರೆ ಮನಸ್ಸು ಅದನ್ನು ತೊನ್ನೆಂದು ಒಪ್ಪಲು ಸಿದ್ಧವಿರಲಿಲ್ಲ. `ಗೋಪೀಚಂದನದ ಕಲೆ ಇರ್ಬೇಕು’ ಎಂದ ಕಮಲಕ್ಕ ಉಗುರಿನಿಂದ ಆ ಕಲೆಯನ್ನು ಕೆರೆಯತೊಡಗಿದಳು. `ಮಡೀಲಿದ್ದೀನಿ, ಮುಟ್ಟಿಬಿಟ್ಟಿಯಲ್ಲೇ…’ ಅಂತ ವಾಜಿ ಕೂಗಿದ್ದ. ಕಮಲಕ್ಕ ಎಷ್ಟೇ ಕೆರೆದರೂ ಆ ಕಲೆ ಹೋಗಲಿಲ್ಲ. ಅಷ್ಟಕ್ಕೇ ಸಮಾಧಾನವಾಗದೆ ವಾಜಿಯನ್ನು ಬೆಳಕಿದ್ದ ಕಡೆಗೆ ಕರೆದುಕೊಂಡು ಹೋಗಿ, ಕೊಂಚ ನೀರನ್ನು ಹಾಕಿ, ಉಗುರಿನಿಂದ ಕೆರೆದು ಪರೀಕ್ಷಿಸಿದಳು. ಆ ಬಿಳಿಯ ಕಲೆಯ ಮೇಲೆ ಕೆರೆದದ್ದರಿಂದ, ಆ ಭಾಗ ಕೆಂಪಾಗಿ ಹೋಗಿ ಉರಿಯಲಾರಂಭಿಸಿತ್ತು. + +ಆ ದಿನದಿಂದ ಕಮಲಕ್ಕ ವಾಜಿಯ ಮುಖವನ್ನು ಯಾವಾಗ ನೋಡಿದರೂ ಕಣ್ಣು ತಾನೇ ತಾನಾಗಿಯೇ ಬಲಗೆನ್ನೆಯ ಕಿವಿಯ ಬಳಿ ನಿಲ್ಲುತ್ತಿತ್ತು. ಯಾವುದೋ ಒಂದು ಶುಭದಿನ ಅದು ತಾನೇ ತಾನಾಗಿ ಮಾಯವಾಗುತ್ತದೆಂದು ದೃಢವಾಗಿ ನಂಬಿದ್ದಳು. ಆದರೆ ಕಮಲಕ್ಕನ ಅದೃಷ್ಟ ತುಂಬಾ ಕೆಟ್ಟದ್ದು! ಆ ಬಿಳಿಯ ಬೊಕ್ಕೆ ಮಾಯವಾಗುವದಿರಲಿ, ದಿನ ದಿನಕ್ಕೆ ವಾಮನನಂತೆ ಬೆಳೆಯಲಾರಂಭಿಸಿತು. ಅಷ್ಟೇ ಸಾಲದೆಂಬಂತೆ, ಮತ್ತೊಂದು ಮರಿಯನ್ನೂ ಹಾಕಿ ಕಮಲಕ್ಕಗೆ ದಿಕ್ಕು ತೋಚದಂತೆ ಮಾಡಿತ್ತು. ಬರೀ ಚಿಕ್ಕ ಬೊಕ್ಕೆಯಾಗಿದ್ದರೆ, ಗೋಪೀಚಂದನದ ಮುದ್ರೆಯನ್ನು ಆ ಭಾಗಕ್ಕೆ ಒತ್ತಿ ಮಾಯ ಮಾಡಬಹುದು. ಹೇಗೂ ವಾಜಿ ದಿನಕ್ಕೆ ಮೂರು ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಾನೆ. ಆದರೆ ತ್ರಿವಿಕ್ರಮನಂತೆ ಬೆಳೆದು, ರಕ್ತ ಬೀಜಾಸುರನಂತೆ ಮರಿಹಾಕುವ ತೊನ್ನನ್ನು ಬಚ್ಚಿಡುವುದಾದರೂ ಹೇಗೆ? + +ಕಮಲಕ್ಕ ಧೃತಿಗೆಟ್ಟಿದ್ದಳು. `ಇದ್ದೊಂದು ಅಗಳು ಗಂಜಿಯಾಯ್ತಲ್ಲ ದೇವರೆ’ ಅಂತ ದಿನನಿತ್ಯ ಕೊರಗಲಾರಂಭಿಸಿದಳು. ರಾಯರ ಗುಡಿಯಲ್ಲಿ ಹೆಜ್ಜೆ ನಮಸ್ಕಾರ ಹಾಕಿದರೂ ಯಾಕೋ ದೇವರು ಕಣ್ತೆರೆಯಲಿಲ್ಲ. ಆಯುರ್ವೇದಿಕ್, ಅಲೋಪತಿಕ್ ಹಾಗೂ ಹೋಮಿಯೋಪತಿ ವೈದ್ಯರನ್ನು ಕಂಡು ಬಂದರೂ ಬಿಳಿಯ ಕಲೆ ಕುಗ್ಗಲಿಲ್ಲ. ಅದರ ಬದಲು ಆರ್ಥಿಕ ಮುಗ್ಗಟ್ಟಿನಿಂದ ಕಮಲಕ್ಕ ಕುಗ್ಗಿದ್ದಳು! + +`ಕಮಲಕ್ಕ, ಇದೆಲ್ಲಾ ಮನುಷ್ಯರ ಕೈಲೆ ಸರಿ ಮಾಡುವಂಥದ್ದಲ್ಲ. ಸ್ವಾದಿಗೆ ಹೋಗಿ ಭೂತರಾಯರ ಸೇವೆ ಮಾಡ್ಸು. ಎಲ್ಲಾ ಸರಿಹೋಗ್ತದೆ’ ಅಂತ ಹಿತೈಷಿಗಳ್ಯಾರೋ ಹೇಳಿದ್ದರು. ಕಮಲಕ್ಕಗೂ ಅದು ಹೌದೆನ್ನಿಸಿತ್ತು. ಆದರೆ ಭೂತರಾಯರು ಕಮಲಕ್ಕಗೆ ಎಟಕುವಷ್ಟು ಹತ್ತಿರದಲ್ಲಿರಲಿಲ್ಲ, ದೂರದ ಸ್ವಾದಿಯಲ್ಲಿ! ಎಷ್ಟೇ ಕೈ ಬಿಗಿ ಹಿಡಿದರೂ, ನೂರಿನ್ನೂರು ರೂಪಾಯಿಯಾದರೂ ಬೇಕು. ಹಪ್ಪಳ ಮಾರಿ ಬದುಕು ಸಾಗಿಸುವ ಕಮಲಕ್ಕಗೆ ಅದು ದೊಡ್ಡ ಮೊತ್ತವೇ ಸರಿ. ಮತ್ತೆ ಮತ್ತೆ ಗೋಪಣ್ಣನನ್ನು ಕೇಳಲು ಮನಸ್ಸು ಒಪ್ಪಲಿಲ್ಲ. ಆದರೂ ಭೂತರಾಯರಿಗೆ ಸೇವೆ ಮಾಡಿದರೆ ಖಂಡಿತಾ ಬಿಳಿಯ ಕಲೆಗಳು ಮಾಯವಾಗುತ್ತದೆಂಬ ನಂಬಿಕೆ ಬಲವಾಗುತ್ತಾ ಹೋಯ್ತು. ಕೊನೆಗೆ ಮನೆಯಲ್ಲಿದ್ದ ಒಂದೇ ಒಂದು ಬಂಗಾರದ ವಸ್ತು, ಕಮಲಕ್ಕಗೆ ಮದುವೆಯಲ್ಲಿ ಗೋಪಣ್ಣ ಕೊಟ್ಟಿದ್ದು, ತುರುಬಿನ ಹೂವನ್ನು ಒತ್ತೆ ಇಟ್ಟಿದ್ದಳು. ಅದನ್ನು ವಾಜಿಯ ಹೆಂಡತಿಯಾಗುವವಳಿಗೆ ಅಂತ ಅಂದುಕೊಂಡಿದ್ದಳಾದ ಕಾರಣ, ಒತ್ತೆ ಇಟ್ಟು ಬಂದ ನಂತರ ಗೋಳೋ ಎಂದು ಅತ್ತಿದ್ದಳು. + +ಸ್ವಾದಿಯಲ್ಲಿ ವಾಜಿಯ ಸೊಂಟಕ್ಕೆ ತೆಂಗಿನಕಾಯಿಯನ್ನು ಕಟ್ಟಿ, ಪುಷ್ಕರಣಿಯಲ್ಲಿ ಪ್ರತೀ ಪ್ರದಕ್ಷಿಣಿಗೊಮ್ಮೆ ಮುಳುಗು ಹಾಕಿ ಏಳು ದಿನ ತಪ್ಪದೆ ಸೇವೆ ಮಾಡಿಸಿದಳು. ಬೆಳಿಗ್ಗೆ ವಾಜಿ ಕಣ್ಣು ತೆರೆದ ತಕ್ಷಣ `ಕನಸು ಗಿನಸು ಬಿತ್ತೇನೋ?’ ಅಂತ ಆತುರದಿಂದ ಕೇಳುತ್ತಿದ್ದಳು. ಆದರೆ ವಾಜಿಗೆ ರಾತ್ರಿ ಉಂಡು ಮಲಗಿದ್ದೊಂದೇ ನೆನಪಿರುತ್ತಿತ್ತೇ ವಿನಾಃ ಮತ್ತೇನೂ ಜ್ಞಾಪಕಕ್ಕೆ ಬರುತ್ತಿರಲಿಲ್ಲ. ಅವನ ವಯಸ್ಸಾದರೂ ಎಷ್ಟು? ಕಮಲಕ್ಕಗೆ ಕಸಿವಿಸಿಯಾಗಲಾರಂಭಿಸಿತು. ಇಷ್ಟು ಸೇವೆ ಮಾಡಿದ್ರೂ ಭೂತರಾಯರಿಗೆ ಪ್ರೀತಿ ಆಗ್ಲಿಲ್ಲಲ್ಲಾ ಅಂತ ಯೋಚನೆಗಿಟ್ಟುಕೊಂಡಿತು. ಆದರೆ ಏಳನೆಯ ದಿನ ಬೆಳಿಗ್ಗೆ ಯಥಾಪ್ರಕಾರ ವಾಜಿ ಎದ್ದಾಗ, `ಕನಸು ಬಿದ್ದಿತ್ತೇನೋ?’ ಎಂದು ಕೇಳಿದ್ದಕ್ಕೆ ವಾಜಿ `ಹೂಂ’ ಎಂದಿದ್ದ. `ಇಷ್ಟು ದಿನದ ಮೇಲೆ ಭೂತರಾಯ ಕಣ್ಣು ತೆರೆದನಲ್ಲ’ ಅಂತ ಕಮಲಕ್ಕ ಕುಳಿತಲ್ಲಿಂದಲೇ ಕೈ ಮುಗಿದಿದ್ದಳು. + +`ಏನಂತ ಕನಸು ಬಿತ್ತೋ?’ ಅಂತ ಆತುರದಿಂದ ಕೇಳಿದ್ದಳು. ವಾಜಿ ತಬ್ಬಿಬ್ಬಾದ. ಆ ಕನಸು ಹೇಳ್ಬೇಕೋ ಹೇಳ್ಬಾರದೋ ಎಂದು ಅನುಮಾನಿಸಲಾರಂಭಿಸಿದ. `ವಾಜಿ ಏನಂತ ಕನಸು ಬಿತ್ತಪ್ಪಾ? ಭೂತರಾಜರು ಬಂದಿದ್ರಾ ಇಲ್ಲಾ ವಾದಿರಾಜರು ಬಂದಿದ್ರಾ?’ ಮತ್ತೊಮ್ಮೆ ಕಮಲಕ್ಕ ಬಲವಂತ ಮಾಡಿದ್ದಕ್ಕೆ ವಾಜಿ ಬಾಯಿ ತೆರೆದ. `ಅಂಥಾದ್ದೇನೂ ಇಲ್ಲಮ್ಮ. ಭಾರತ-ಪಾಕಿಸ್ತಾನದ ಜೋಡಿ ಕ್ರಿಕೆಟ್ ಆಟ ಆದಂಗಿತ್ತು. ಕಪಿಲ್ ದೇವ್ ಸಿಕ್ಸರ್ ಬಾರಿಸಿದ್ದ’ ಅಂದ. ‘ಕಪಿಲ್ ದೇವ್ನಂತೆ’, ಅಷ್ಟೇ ಜೋರಾಗಿ, ಕಮಲಕ್ಕ ವಾಜಿಯ ಕೆನ್ನೆಗೆ ಬೀಸಿದ್ದಳು. `ಪುಣ್ಯಕ್ಷೇತ್ರಕ್ಕೆ ಬಂದಾಗಲೂ ಆ ಹಾಳು ಕ್ರಿಕೆಟ್ ಆಟದ ಬಗ್ಗೆ ಯೋಚ್ನೀ ಮಾಡ್ತೀಯಲ್ಲೋ…’ ಎಂದು ಕೋಪದಿಂದ ಕಿರುಚಿದ್ದಳು. ವಾಜಿಯ ಕೆನ್ನೆಯ ಮೇಲೆ ಕಮಲಕ್ಕನ ಕೈ ಬೆರಳ ಗುರುತುಗಳು ಕೆಂಪಗೆ ಮೂಡಿದ್ದವು. ತಾನೇನೂ ತಪ್ಪು ಮಾಡದಿದ್ದರೂ ಅಮ್ಮ ಹೀಗೆ ಹೊಡದಿದ್ದಕ್ಕೆ ವಾಜಿಗೆ ಕೋಪ ಹಾಗೂ ಅಳು ಬಂದಿತ್ತು. `ಇವತ್ತು ನಾನು ಸೇವೆ ಮಾಡಂಗಿಲ್ಲ ಹೋಗು’ ಅಂತ ಕೂಗಿ ಹೊರಗೆ ಹೋದ. + +ಸ್ವಲ್ಪ ಸಮಯದ ನಂತರ ಕಮಲಕ್ಕಗೆ ಏನೋ ಹೊಳೆದಂತಾಯ್ತು. ಮೈಯಲ್ಲಿ ಭೂತ ಸಂಚಾರವಾದರೇನೇ ಸಿಕ್ಸರ್ ಬಾರಿಸಲಿಕ್ಕೆ ಸಾಧ್ಯ. ಅಂದರೆ ಭೂತರಾಯರು ಕಪಿಲ್ ದೇವ್ ರೂಪದಲ್ಲಿ ಬಂದಿದ್ರಾ? ಸಿಕ್ಸರ್ ಬಾರಿಸೋದು ಅಂದ್ರೆ ಆಟದಲ್ಲಿ ಗೆಲ್ಲೋ ಲಕ್ಷಣ. ಜೊತೆಗೆ ಪಾಕಿಸ್ತಾನಿಗಳು ನಮ್ಮ ವೈರಿಗಳು- ಅಂದ್ರೆ ತೊನ್ನು ಇದ್ದಂಗೆ. ಅವರ ಮೇಲೆ ಗೆಲುವನ್ನು ಸಾಧಿಸೋದು ಅಂದ್ರೆ, ವಾಜಿಯ ಬಿಳಿಯ ಕಲೆಗಳು ಮಾಯವಾಗುತ್ತವೆ ಎಂದೇ ಅರ್ಥ ಅಲ್ಲವಾ? ಈ ವಿವರಣೆ ಸ್ವಲ್ಪ ಸಮಾಧಾನ ನೀಡಿತಾದರೂ, ಸಂಪೂರ್ಣ ತೃಪ್ತಿಯನ್ನು ಕೊಡಲಿಲ್ಲ. + +ಮರುದಿನ ವಾಜಿಯ ಪರವಾಗಿ ಕಮಲಕ್ಕನೇ ಸೇವೆಯನ್ನು ಪ್ರಾರಂಭಿಸಿದಳು. `ಭೂತರಾಯ, ನನ್ನ ಮಗ ಸಣ್ಣೋನು. ಇನ್ನೂ ತಿಳುವಳಿಕೆ ಬಂದಿಲ್ಲ. ಅವನು ಸಿಟ್ಟು ಮಾಡ್ಕೊಂಡ್ರೆ ಹೊಟ್ಟಾಗೆ ಹಾಕ್ಕೋ. ಅವನ ಬದಲಿ ನನ್ನ ಸೇವಾ ಸ್ವೀಕಾರ ಮಾಡು. ಈ ಸೇವೆಯ ಫಲವೆಲ್ಲಾ ಅವನಿಗೇ ಸೇರಲಿ. ತಾಯಿ ಹಾಗೂ ಮಗನಲ್ಲಿ ಯಾರು ಸೇವೆ ಮಾಡಿದ್ರೂ ಒಂದೆ ಅಲ್ಲೇನು?’ ಎಂದು ಪ್ರಾರ್ಥಿಸಿ ಸೇವೆಯನ್ನು ಮೊದಲಿಟ್ಟಳು. + +ಮೊದಲನೆಯ ದಿನವೇ ಕಮಲಕ್ಕಗೆ ಕನಸು ಬಿತ್ತು. ಅದೂ ಬೆಳಗಿನ ಜಾವದಲ್ಲಿ! ಕಮಲಕ್ಕ ಪುಷ್ಕರಣಿಯ ಕಡೆಯ ಮೆಟ್ಟಿಲ ಬಳಿ ನಿಂತಂತೆ, ವಾಜಿ ಅವಳ ಪಕ್ಕದಲ್ಲಿ ಇದ್ದಂತೆ. ಅಲ್ಲೇ ಹತ್ತಿರದಲ್ಲಿ ಒಬ್ಬ ಅಜಾನುಬಾಹು ವ್ಯಕ್ತಿ ನಿಂತಿದ್ದಾನೆ. ಅವನ ಪಕ್ಕದಲ್ಲಿ ಕಸಬರಿಗೆಯೊಂದಿದೆ. ಅವನಿಗಿಂತಲೂ ಮೇಲೆ, ಕೆಲವೇ ಮೆಟ್ಟಿಲುಗಳ ಅಂತರದಲ್ಲಿ, ಸುಂದರನಾದ ಒಬ್ಬ ಬ್ರಾಹ್ಮಣ ಕುಳಿತಿದ್ದಾನೆ. ಬ್ರಾಹ್ಮಣನ ಹತ್ತಿರದಲ್ಲೇ ಬಿಳಿಯ ಕುದುರೆಯೊಂದು ಓಡಾಡುತ್ತಿದೆ. ಆ ಕುದುರೆಯ ಬಿಳುಪು ಕಣ್ಣಿಗೆ ಕುಕ್ಕುವಷ್ಟು ಶೋಭಾಯಮಾನವಾಗಿದೆ. ಆ ಅಜಾನುಬಾಹು ವ್ಯಕ್ತಿ ಕಮಲಕ್ಕನನ್ನು ಉದ್ದೇಶಿಸಿ ಮಾತನಾಡಲಾರಂಭಿಸಿದ. `ಕಮಲಕ್ಕಾ ಹೆದರಬೇಡ, ನಿನ್ನ ಮಗ ವಾಜಿಗೆ ಏನೂ ಆಗಿಲ್ಲ. ಅದು ತೊನ್ನೇ ಅಲ್ಲ. ಅವನು ಎಲ್ಲಾ ದೇವರ ಕಾರ್ಯದಾಗೂ ಇರಬಹುದು. ನೀ ಪುಣ್ಯ ಮಾಡಿದ್ದಿ. ನಿನ್ನ ಮಗ ಮುಂದೆ ದೊಡ್ಡ ಮನುಷ್ಯ ಆಗ್ತಾನೆ’. ಅಜಾನುಬಾಹುವಿನ ಮಾತಿಗೆ ಹೌದೆನ್ನುವಂತೆ ಬ್ರಾಹ್ಮಣನೂ ತಲೆಯಾಡಿಸಿದ. ಅವನ ಹತ್ತಿರದಲ್ಲೇ ಇದ್ದ ಕುದುರೆ ಕೇಂಕರಿಸಿತು. ಬ್ರಾಹ್ಮಣ ಕಮಲಕ್ಕನ ಕಡೆ ನೋಡಿ `ಇಲ್ಲಿ ಬಾ’ ಅಂತ ಕಣ್ಣಿಂದಲೇ ಆಜ್ಞೆ ಮಾಡಿದಂತಾಯ್ತು. ಕಮಲಕ್ಕಗೆ ಮಡಿ ಹೆಂಗಸು ಬ್ರಾಹ್ಮಣನ ಬಳಿ ಹೋಗ್ಬೇಕೋ, ಬೇಡವೋ ಅಂತ ಅನುಮಾನವಾಯ್ತು. ಅದಕ್ಕಾಗಿ ವಾಜಿಯನ್ನು ಆ ಬ್ರಾಹ್ಮಣನ ಹತ್ತಿರ ಕಳುಹಿಸಿದಳು. ಆ ಬ್ರಾಹ್ಮಣ `ಕೈ ಹಿಡಿಯೋ’ ಅಂತ ಆಜ್ಞೆ ಮಾಡಿದ. ವಾಜಿ ಕೈ ಒಡ್ಡಿದ. ಬ್ರಾಹ್ಮಣ ತನ್ನ ಮುಷ್ಟಿಯಲ್ಲಿದ್ದ ಫಲ ಮಂತ್ರಾಕ್ಷತೆಯನ್ನು ವಾಜಿಯ ಕೈಗೆ ಹಾಕಿದ್ದ. + +ತಕ್ಷಣ ಕಮಲಕ್ಕಗೆ ಎಚ್ಚರವಾಯ್ತು. ಎಚ್ಚರವಾದ ನಂತರವೂ ಸ್ವಲ್ಪ ಹೊತ್ತು ಆ ಕನಸಿನ ಪ್ರಪಂಚದಲ್ಲೇ ಇದ್ದಂತಿತ್ತು. ಕೆಲವು ನಿಮಿಷಗಳ ನಂತರ ಕಮಲಕ್ಕಗೆ ಎಲ್ಲಾ ಸ್ಪಷ್ಟವಾಯ್ತು. ಕನಸಿನ ಅರ್ಥ ಸಂಪೂರ್ಣವಾಗಿ ಹೊಳೆದುಬಿಟ್ಟಿತ್ತು. ಆ ಅಜಾನುಬಾಹು ವ್ಯಕ್ತಿ ಬೇರ್ಯಾರೂ ಅಲ್ಲ, ಸಾಕ್ಷಾತ್ ಭೂತರಾಜರು. ಅದಕ್ಕೇ ಅವರ ಹತ್ತಿರದಲ್ಲಿ ಕಸಬರಿಗೆಯೂ ಇದೆ. ಇನ್ನು ಆ ಬ್ರಾಹ್ಮಣನ ದಿವ್ಯ ತೇಜಸ್ಸಿನಿಂದಲೇ ಗೊತ್ತಾಗುತ್ತೆ, ಅವರು ಸಾಕ್ಷಾತ್ ವಾದಿರಾಜರು ಅಂತ. ಸ್ವಾದಿಯಲ್ಲಿ ದಿವ್ಯ ತೇಜಸ್ಸಿನ ಬ್ರಾಹ್ಮಣ ಬೇರೆ ಯಾರು ತಾನೆ ಆಗಿರಲಿಕ್ಕೆ ಸಾಧ್ಯ? ಸಾಕ್ಷಿಯಾಗಿ ಹಯವೂ ಬಳಿಯಲ್ಲಿ ನಿಂತಿದೆ. ವಾದಿರಾಜರ ಬಳಿ ಕುದುರೆ ನಿಂತಿದೆಯೆಂದ ಮೇಲೆ ಅದು ದೇವರಲ್ಲದೆ ಮತ್ತಿನ್ಯಾರು? `ದೇವರೇ, ಅಂತೂ ಬಡ ರಂಡೆಯ ಮೇಲೆ ಕಣ್ತೆರೆದೆಯಲ್ಲಪ್ಪಾ’ ಎಂದು ಮನಸಾ ವಂದಿಸಿ ಬಳ್ಳಾರಿಗೆ ವಾಪಾಸಾದಳು. + + + +ಸಾಕ್ಷಾತ್ ವಾದಿರಾಜರೇ ವಾಜಿಯ ಬಿಳಿಯ ಕಲೆಗಳನ್ನು ತೊನ್ನಲ್ಲವೆಂದು ದೃಢೀಕರಿಸಿದರೂ, ಸಮಾಜ ಎಳ್ಳಷ್ಟೂ ಇದರಲ್ಲಿ ನಂಬಿಕೆ ತೋರಲಿಲ್ಲ. ಬಳ್ಳಾರಿಗೆ ಬಂದ ನಂತರ ಕಮಲಕ್ಕ ತನ್ನನ್ನು ಕಾಣಲು ಬಂದವರಿಗೆ ಹಾಗೂ ತಾನೇ ಕಾಣಲು ಹೋದಾಗ ಸ್ವಾದಿ ಯಾತ್ರೆ ಹಾಗೂ ಕನಸನ್ನು ವರ್ಣರಂಜಿತವಾಗಿ ವಿವರಿಸಿದಳು. ಭೂತರಾಯರು `ಅದು ತೊನ್ನೇ ಅಲ್ಲ’ ಅಂತ ಅಂದ ಮಾತನ್ನು ಎರಡೆರಡು ಬಾರಿ ಹೇಳಿದಳು. + +ಗುಡಿ ಬೀದಿಯ ರುಕ್ಮಿಣಮ್ಮ ಕಮಲಕ್ಕನ ಯಾತ್ರೆ ಹಾಗೂ ಕನಸನ್ನು ಸವಿಸ್ತಾರವಾಗಿ ಕೇಳಿ `ಏನ್ ಪುಣ್ಯಾ ಮಾಡಿ ಕಮಲಕ್ಕಾ, ವಾದಿರಾಜರಿಂದ ಫಲಮಂತ್ರಾಕ್ಷತೆ ಪಡೆಯೋದಂದರೆ ಸಾಮಾನ್ಯ ಆತೇನು?’ ಎಂದಳು. ಆದರೆ ಮನೆಗೆ ಹಿಂತಿರುಗುವಾಗ, ಅಲ್ಲೇ ಕುಳಿತಿದ್ದ ವಾಜಿಯನ್ನು ನೋಡಿ `ಏನಪ್ಪಾ ವಾಜಿ, ಸೊಂಟಕ್ಕೆ ಕಾಯಿ ಕಟ್ಟಿಕೊಂಡು ಸೇವಾ ಮಾಡ್ದೇನು?’ ಎಂದಳು. ರುಕ್ಮಿಣಮ್ಮ ವಾಜಿಯನ್ನು `ವಾಜಿ’ ಎಂದು ಸಂಬೋಧಿಸಿದ್ದನ್ನು ಕಂಡು ಕಮಲಕ್ಕಗೆ ಹೊಟ್ಟೆಯಲ್ಲಿ ಬೆಂಕಿ ಇಟ್ಟಂತಾಯ್ತು! + +`ಯಾಕವ್ವಾ ರುಕ್ಮಿಣಿ, ಇಷ್ಟು ದಿನ `ಅಳಿಯ’, `ಅಳಿಯ’ ಅಂತಿದ್ದಾಕಿ ಈವೊತ್ತು `ವಾಜಿ’ ಅಂತೀಯಲ್ಲ? ನನ್ನ ಮಗ ಅಳಿಯ ಆಗೋದು ಇಷ್ಟ ಆಗಂಗಿಲ್ಲೇನು?’ + +`ಹಂಗಲ್ಲೆ ಕಮಲಕ್ಕ. ಈಗ ಕಾಲ ಬದಲಾಗ್ತ ಅದೆ. ಈಗಿನ ಕಾಲದ ಹುಡುಗರು ತಮ್ಮ ಮನಸ್ಸಿಗೆ ಬಂದ ಹಾಗೆ ನಡ್ಕೊಳ್ಳಿಕ್ಹತ್ತಾರೆ. ಅಂಥಾದ್ರಾಗೆ ಸುಮ್ ಸುಮ್ನೆ ಈಗ್ಲಿಂದ್ಲೇ ನಾವ್ಯಾಕೆ ಹೆಸರು ಹಚ್ಚಬೇಕೇಳು?’ ರುಕ್ಮಿಣಮ್ಮ ತಿಪ್ಪೆ ಸಾರಿಸಿದಳು. + +`ಒಮ್ಮಿಂದೊಮ್ಮೆಲೆ ಈವೊತ್ತೇ ನಿಂಗೆ ಹಿಂಗನಿಸ್ಲಿಕ್ಹತ್ತದಲ್ಲಾ? ಇಲ್ಲೀತನಕ ನಿಂಗೆ ಕಾಲ ಬದಲಾಗ್ಯದೆ ಅಂತ ಅನಿಸ್ಲೇ ಇಲ್ಲೇನು?’ + +ರುಕ್ಮಿಣಮ್ಮ ಹೆಚ್ಚು ಮಾತನಾಡದೆ ಹೊರಟು ಹೋಗಿಬಿಟ್ಟಿದ್ದಳು. ಇನ್ನೊಂದು ದಿನ ಗಾಂಧಿಬಜಾರದಲ್ಲಿರುವ ಹನುಮಂತಾಚಾರ್ ಕಮಲಕ್ಕನ ಮನೆಗೆ ಬಂದು, ಆಕೆಯ ಯಾತ್ರೆ ಮತ್ತು ಕನಸನ್ನು ಸವಿಸ್ತಾರವಾಗಿ ಕೇಳಿದ ನಂತರ `ನಾಳೆ ನಮ್ಮನ್ಯಾಗೆ ನನ್ನ ಮಗನ ಮುಂಜಿ ಅದೆ. ಮಡೀ ಅಡಿಗೀಯೆಲ್ಲಾ ನಿಂದೇ ನೋಡು ಕಮಲಕ್ಕಾ. ಐವತ್ತು ಎಲಿ ಆಗ್ತದೆ’ ಅಂದ. `ಹಂಗೇ ಆಗ್ಲೇಳು ಹನುಮ್ಯಾ. ಆದ್ರೆ ನಂಗೂ ವಯಸ್ಸಾಯ್ತು ನೋಡು. ಒಬ್ಬಾಕಿ ಕೈಯಿಂದ್ಲೇ ಎಲ್ಲಾ ಬಗೆ ಹರಿಯಂಗಿಲ್ಲ. ವಾಜೀನ್ನೂ ಕರ್ಕೊಂಬರ್ತೀನಿ. ಹೂರ್ಣನಾದ್ರೂ ರುಬ್ಬಿ ಕೊಡ್ತಾನೆ’ ಅಂತ ಅವನನ್ನು ಸಂದಿಗ್ಧಕ್ಕೆ ಸಿಕ್ಕಿಸಿದಳು. + +ಕಮಲಕ್ಕ ಐವತ್ತು ಜನಕ್ಕಲ್ಲ, ನೂರು ಜನಕ್ಕಾದರೂ ಯಾರ ಸಹಾಯವಿಲ್ಲದೆ ಅಡಿಗಿ ಮಾಡಬಲ್ಲಳು ಎನ್ನುವುದು ಹನುಮಂತಾಚಾರ್ ಗೂ ಗೊತ್ತು, ಕಮಲಕ್ಕಗೂ ಗೊತ್ತು. ತೊನ್ನಿನ ಹುಡುಗನ ಕೈಲೆ ಅಡಿಗಿ ಮಾಡಿಸ್ಲಿಕ್ಕೆ ಹುನ್ನಾರ ಮಾಡ್ಯಾಳೆ ಅಂತ ಹನುಮಂತಾಚಾರ್ ಗೆ ಸಿಟ್ಟು ಬಂತು. ಹಾಗಂತ ಮಾತಿನಲ್ಲಿ ಖಾರ ತುಂಬುವುದು ಅವನ ಜಾಯಮಾನವಲ್ಲ. ಒಂದೆರಡು ನಿಮಿಷ ಸುಮ್ಮನಿದ್ದು ಅನಂತರ ಕೆಮ್ಮಿ ಹೊರಗೆ ಹೋಗಿ ಕಾಲುವೆಯಲ್ಲಿ ಕಫ ಉಗುಳಿ ಬಂದು `ನೋಡವ್ವಾ ಕಮಲಕ್ಕಾ…’ ಅಂತಂದು ಒಂದಷ್ಟು ಹೊತ್ತು ಸುಮ್ಮನಾದ. + +`ವಾದಿರಾಜರೇ ಅದು ತೊನ್ನಲ್ಲ ಅಂತ ಹೇಳ್ಯಾರಂದ್ಮೇಲೆ `ಹೌದು’ ಅನ್ಲಿಕ್ಕೆ ನಾನೆಷ್ಟರವನಾಗ್ತೀನಿ? ಅಷ್ಟಕ್ಕೂ ಎಷ್ಟಾದ್ರೂ ವಾಜಿ ನಮ್ಮ ಹುಡುಗ. ನನ್ನ ಕಡಿಂದ ಏನೂ ತಕರಾರಿಲ್ಲ ನೋಡು.’`ಖರೇ ಮಾತಂತಿ ನೋಡು. ವಾದಿರಾಜರಿಗೆ ಎದುರು ಮಾತಾಡ್ಲಿಕ್ಕೆ ನಾನೂ-ನೀನೂ ಎಷ್ಟರವರ್ಹೇಳು? ಅವರು ಕಾಲಿಂದ ಅಪ್ಪಣೆ ಮಾಡಿದ್ದನ್ನು ನಾವು ತಲೆಯಿಂದ ಮಾಡಬೇಕು.’`ಆದರೆ ಎಲ್ಲಾ ಮಂದೀನೂ ನಮ್ಮ ಥರಾನೇ ಇರ್ತಾರೆ ಅಂತ ಹೆಂಗೆ ಹೇಳಾದು ಕಮಲಕ್ಕ? ಅದರಾಗೆ ಗುಡೇಕೋಟಿ ಗೋವಿಂದಾಚಾರ್ ಬರ್ತಿದ್ದಾನೆ. ಮಡಿ, ಮಡಿ ಅಂತ ಹೆಗರಿ ಹೆಗರಿ ಕುಣೀತಾನೆ. ನಿಂಗೊತ್ತದಲ್ಲಾ? ಅಂಥಾತ ಸುಮ್ನಿರ್ತಾನೇನವ್ವಾ? ಅಷ್ಟೇ ಅಲ್ಲ, ಸ್ಮಾರ್ತ ಮಂದೀನೂ ಬರ್ತದೆ. ಅವರಿಗೆ ವಾದಿರಾಜರಂದ್ರೆ ನಂಬಿಕೀನೂ ಇರಂಗಿಲ್ಲ. ಅದ್ಕೇ, ಸುಮ್ನೆ ನೀನೊಬ್ಬಾಕೀನೇ ಅಡಿಗಿ ಮಾಡು ಕಮಲಕ್ಕ. ಹೂರ್ಣ ರುಬ್ಬಲಿಕ್ಕೆ ಬೇಕಂದ್ರೆ ನನ್ಹೆಣ್ತಿಗೇಳ್ತೀನಿ.’ + +ಒಳ್ಳೆ ಮಾತಾಡಿ ಕುಂಡಿ ಚಿವುಟ್ತಾನೆ ರಂಡೆಗಂಡ. ಇರ್ಲಿ, ಬಳ್ಳಾರಿನಾಗೆ ಹುಟ್ಟಿದವ್ನೆ ಇಷ್ಟು ಚಾಲಾಕಿನ ಮಾತಾಡಿದ್ರೆ, ನಾನು ಹರಪನಹಳ್ಳಿಯಾಕಿ, ಸುಮ್ನೆ ಇರಂಗಿಲ್ಲ. + +`ನಿನ್ನಿಷ್ಟ ನೋಡು ಹನುಮ್ಯಾ, ನಾನು ಅಡಿಗಿ ಮಾಡಿದ್ರೆ ವಾಜಿನ್ನೂ ಕರ್ಕೊಂಬರಾಕಿ. ವಾದಿರಾಜರ ಮಾತಿಗೆ ದ್ರೋಹ ಮಾಡಿ ಪಾಪ ಕಟ್ಗೊಳ್ಳಿಕ್ಕೆ ನಾನಂತೂ ತಯಾರಿಲ್ಲ.’ + +ಹನುಮಂತಾಚಾರ್ ಮತ್ತೆ ಮಾತಾಡಲಿಲ್ಲ. ಹಾಗೇ ಎದ್ದು ಹೋಗಿದ್ದ. ಕಮಲಕ್ಕಗೆ ಏನೋ ವಿಜಯ ಸಾಧಿಸಿದಂತಾದರೂ, ಸುಮ್ ಸುಮ್ನೆ ನೂರು ರೂಪಾಯಿ ಆದಾಯ ಕಳ್ಕೊಂಡ್ನಲ್ಲಾ ಅಂತ ಮನಸ್ಸಿಗೆ ಚುರ್ ಅನ್ನಿಸ್ತು. ಅಲ್ಲೇ ಕುಳಿತಿದ್ದ ವಾಜಿಯನ್ನು ನೋಡಿದ್ದೇ ಕಮಲಕ್ಕಗೆ ಸಿಟ್ಟು ಬಂದು `ದೊಡ್ಡವರ ಮಾತು ಕೇಳ್ಕೊಂತಾ ಕೂತಿಯಲ್ಲೋ ಹುಚ್ಚ, ಪುಸ್ತಕ ಓದಿ ಉದ್ಧಾರ ಮಾಡು ಹೋಗು’ ಅಂತ ಬೈಯ್ದುಬಿಟ್ಟಳು. + +ಇತ್ತೀಚೆಗೆ ಕೆಲವೊಮ್ಮೆ ಅನವಶ್ಯಕವಾಗಿ ಕಮಲಕ್ಕ ವಾಜಿಯ ಮೇಲೆ ಸಿಟ್ಟು ಮಾಡಿಕೊಳ್ಳುತ್ತಾಳೆ. ಎಷ್ಟೋ ವೇಳೆ ಮಡಿಯಲ್ಲಿದ್ದೇನೆಂಬ ಅರಿವಿಲ್ಲದೆ ಅವನನ್ನು ಹೊಡೆದು ನಂತರ ಮತ್ತೊಮ್ಮೆ ಬಾವಿಗೆ ಹೋಗಿ ಎರಡು ಬಿಂದಿಗೆ ನೀರು ಸುರುವಿಕೊಂಡು ಬರ್ತಾಳೆ. ಹೊಡಿಸಿಕೊಂಡು ವಾಜಿ ಮೂಲೆಯಲ್ಲಿ ಅಳುತ್ತಾ ಕುಳಿತಾಗ `ನಂಗೇನು ಹೋಗೋ ರೋಗ ಬಂದಿತ್ತು ಅಂತೀನಿ. ಸುಮ್ ಸುಮ್ನೆ ಕೂಸಿನ್ನ ಹೊಡದ್ನಲ್ಲಾ’ ಅಂತ ಪಶ್ಚಾತ್ತಾಪವಾಗಿ ಸಮಾಧಾನ ಮಾಡುತ್ತಾಳೆ. ರಾತ್ರಿ ಮಲಗಿದಾಗ ನಿದ್ದೆ ಬರದ ಹೊತ್ತಿನಲ್ಲಿ `ವಾಜಿ ಅಪ್ಪಂಗೇನಾದ್ರೂ ತೊನ್ನಿತ್ತಾ?’ ಅಂತ ಯೋಚಿಸುತ್ತಾಳೆ. `ಇರ್ಲೇ ಇಲ್ಲ’ ಅಂತ ಖಡಾಖಂಡಿತವಾಗಿ ಹೇಳೋದಕ್ಕೆ ಕಷ್ಟವೆನ್ನಿಸುತ್ತದೆ. ಆತನ ಪೂರ್ತಿ ಮೈ ಬೆಳಕಿನಲ್ಲಿ ಎಂದಾದರೂ ನೋಡಿದ್ದೇನೆಯೆ?  ರಾತ್ರಿ ಕತ್ತಲಾದ ಮೇಲೆ, ಎಲ್ಲರೂ ಮಲಗಿಯಾಯ್ತೆಂದು ಎರಡೆರಡು ಬಾರಿ ಗೊರಕೆಯ ಸದ್ದನ್ನು ಆಲಿಸಿ ದೃಢೀಕರಿಸಿಕೊಂಡು, ದೀಪವಾರಿಸಿದ ಮೇಲೆಯೆ ಅವರ ಮೈ ಮುಟ್ಟಲು ಧೈರ್ಯವಾಗುತ್ತಿತ್ತು. ಅದೂ ತಾನ್ಯಾವುದೋ ಕೊಲೆಯಂತಹ ಅಪರಾಧ ಮಾಡುತ್ತಿದ್ದಂತೆ, ಬೇರೆ ಯಾರಾದರೂ ನೋಡಿಬಿಟ್ಟರೆ ಸಿಕ್ಕು ಬೀಳುತ್ತೇನೆಂಬ ಭಯದಲ್ಲಿ ಭಾಗವಹಿಸುತ್ತಿದ್ದೆ. ಅವರ ಮೈಯ ಗುಪ್ತ ಭಾಗಗಳ ಸ್ಪರ್ಶ ಜ್ಞಾನವಿತ್ತೇ ಹೊರತು ಕಣ್ಣಿಂದ ನೋಡಿದ್ದಿಲ್ಲ. ನನ್ನಲ್ಲಿ ಸುಖದ ಸೂರೆ ಹೊಡೆಯಬೇಕೆಂಬ ಬಯಕೆ, ಧೈರ್ಯ ಮೂಡುವ ವೇಳೆಗೆ ಹಜಾಮರವನ ಮುಂದೆ ತಲೆಯೊಡ್ಡಿಯಾಗಿತ್ತು! + +ಬೋಳು ತಲೆಯ ಮೇಲೆ ಕೆಂಪು ಸೀರೆಯನ್ನೆಳೆದುಕೊಂಡ ಎರಡನೆಯ ದಿನವೇ ವಾಂತಿ ಶುರುವಾಗಿತ್ತು. ಅಳಿಯ ಸತ್ತಾಗಲೂ ದುಃಖ ನುಂಗಿಕೊಂಡಿದ್ದ ಅಪ್ಪ, ನಾನು ಬಸಿರೆಂದು ತಿಳಿದಾಗ `ಎಂಥಾ ದುರಾದೃಷ್ಟನೇ ಕಮ್ಲೀ ನಿಂದು’ ಎಂದು ಹೋ ಎಂದು ಅತ್ತಿದ್ದ. ಹದಿನೈದು ವರ್ಷವಾಯ್ತು! ಹಪ್ಪಳ ಮಾರಿ ಜೀವನ ಸಾಗಿಸುವ ಮಗಳನ್ನು ನೋಡಿ ಹೊಟ್ಟೆ ತಂಪು ಮಾಡಿಕೊಳ್ಳಲು ಅಪ್ಪ-ಅಮ್ಮನೂ ಇಲ್ಲ, ಮಗನನ್ನು ನುಂಗಿ ನೀರು ಕುಡಿದ ಸೊಸೆ ಮಂದಿ ಮನೆಗೆ ಮಡಿ ಅಡಿಗಿ ಮಾಡುವದನ್ನು ನೋಡಲು ಅತ್ತೆ-ಮಾವಂದಿರೂ ಇಲ್ಲ. ಬೆನ್ನಿಗೆ ಬಿದ್ದ ಅಣ್ಣನೊಬ್ಬನಿದ್ದಾನೆ. `ನೀನೇನೂ ಯೋಚ್ನೆ ಮಾಡ್ಬೇಡಪ್ಪಾ, ಕಮ್ಲೀ ನಂಗೆ ಭಾರ ಆಗ್ತಾಳೇನು?’ ಅಂತಂದ ಅಣ್ಣನ ಮಾತನ್ನು ಕೇಳಿ ಅಪ್ಪ ನೆಮ್ಮದಿಯಿಂದ ಕಣ್ಣು ಮುಚ್ಚಿದ್ದ. ಗೋಪಣ್ಣ ಆಡಿದ ಮಾತಿನಂತೆ ನಡೆದುಕೊಳ್ಳುವವನಾದ್ರೂ, ರಾಧಕ್ಕನನ್ನು ಎದುರಿಸಿ ನಿಲ್ಲಬಲ್ಲ ಗಂಡೆದೆಯವನಲ್ಲ. ಅವನಾದ್ರೂ ಏನು ಮಾಡಿಯಾನು, ಕಮ್ಲೀ ಅದೃಷ್ಟಾನೇ ಕೆಟ್ಟದ್ದು. ಬರೀ ಹೂ ಬತ್ತಿ ಹೊಸೆದು, ಮಂದಿ ಮನಿ ನೀರು ಅಡಿಗಿ ಮಾಡಿ, ಹಪ್ಪಳ ಮಾರಿ ಬದುಕುವುದೇ ನನ್ನ ಹಣೆಯಲ್ಲಿ ಬರೆದಿದೆ. + +ಆದರೆ ಇದ್ಯಾವುದಕ್ಕೂ ಹೆದರುವ ಹೆಣ್ಣು ಕಮಲಕ್ಕನಲ್ಲ. ಗಂಡಿನಂತೆ ದುಡಿಯುವ ಶಕ್ತಿಯಿದೆ, ಧೈರ್ಯವಿದೆ, ಜಗಳವಾಡುವ ಗಯ್ಯಾಳಿತನವೂ ಇದೆ. ಆದರೆ ಈ ಬಿಳಿಯ ಕಲೆಗಳು ಮಾತ್ರ ಆಕೆಯ ಜಂಘಾಬಲವನ್ನೇ ಉಡುಗಿಸಿಬಿಟ್ಟಿವೆ. ವಾಜಿ ಮುಂದೆ ದೊಡ್ಡವನಾದ ಮೇಲೆ ಹೆಣ್ಣು ಕೊಡುವವರೂ ದಿಕ್ಕಿಲ್ಲದಂತೆ ತಬ್ಬಲಿಯಾದಂತೆ ಭಾಸವಾಗಿ ಬಾಯಿ ಕಟ್ಟಿಬಿಡುತ್ತದೆ. ಇಲ್ಲದಿದ್ದರೆ ಆ ದಿನ ಸ್ವಾಮಿಗಳು `ತಳ್ರೋ ಈ ಚಾಂಡಾಲನ್ನ ಹೊರಗೆ, ತಳ್ರೋ’ ಅಂತ ಕೂಗಿದಾಗ ಒಂದೂ ಮಾತನಾಡದೆ, ಎದುರು ಜವಾಬೂ ಕೊಡದೆ ಸುಮ್ಮನಿರುತ್ತಿದ್ದಳೆ? + +`ವಾಜೀಗೂ ಮುದ್ರಾಧಾರಣ ಆಗ್ಲಿ’ ಅಂತ ಅಂದ್ಕೊಂಡು, ಅವನು ಶಾಲೆಗೆ ಹೋಗುವದನ್ನು ತಪ್ಪಿಸಿ, ಮಠಕ್ಕೆ ಕರೆದುಕೊಂಡು ಹೋಗಿದ್ದಳು. ನಿಗಿ ನಿಗಿ ಕೆಂಡದಲ್ಲಿ ಕಾದ ಬೆಳ್ಳಿಯ ಶಂಖು, ಚಕ್ರದ ಮುದ್ರೆಗಳು ಕೆಂಪಗೆ ಕಾಣುತ್ತಿದ್ದವು. ವಾಜಿ ಅವನ್ನು ನೋಡಿ ಹೆದರಿ ಅಳಲಾರಂಭಿಸಿದಾಗ ಕಮಲಕ್ಕ ಸಮಾಧಾನ ಮಾಡಿದ್ದಳು. `ಹಂಗೆಲ್ಲಾ ಅಳಬಾರ್ದೋ ರಾಜ, ಮೈಮೇಲೆ ಮುದ್ರೆ ಹಾಕಿಸ್ಕೊಂಡ್ರೆ ಒಂಚೂರೂ ಸುಡಂಗಿಲ್ಲ, ತಣ್ಣಗಿರ್ತದೆ’ ಅಂತ ಸುಳ್ಳನ್ನೂ ಹೇಳಿದ್ದಳು. ಹೆದರುತ್ತಲೇ ವಾಜಿ ಬೆತ್ತಲೆ ಎದೆಯನ್ನು ಸ್ವಾಮಿಗಳ ಮುಂದೆ ಚಾಚಿದಾಗ, ಸ್ವಾಮಿಗಳು ಅವನ ಕೆನ್ನೆಯನ್ನು ನೋಡಿದ್ದೇ `ತಳ್ರೋ ಈ ಚಾಂಡಾಲನ್ನ ಹೊರಗೆ, ತಳ್ರೋ’ ಅಂತ ಕೂಗಿಬಿಟ್ಟಿದ್ದರು. ಶಿಷ್ಯರೊಂದಿಬ್ಬರು ವಾಜಿಯ ರಟ್ಟೆಯನ್ನು ಹಿಡಿದು ದರದರನೆ ಹೊರಗೆ ಎಳೆದುಕೊಂಡು ಹೋಗಿಬಿಟ್ಟಿದ್ದರು. ಮತ್ತೊಂದಿಬ್ಬರು `ಬುದ್ಧೀ ಶಾಂತ ಆಗ್ರಿ. ನಾವು ಎಷ್ಟು ಹೇಳಿದ್ರೂ ಈ ಹೆಣ್ಮಗಳು ನಮ್ಮ ಮಾತು ಕೇಳ್ಲಿಲ್ಲ’ ಅಂತ ಕಮಲಕ್ಕನನ್ನು ತೋರಿಸಿದ್ದರು. ಸ್ವಾಮಿಗಳು ರುದ್ರಾವತಾರವನ್ನೇ ತಾಳಿ `ಹುಚ್ಚು ರಂಡೆ, ಮೂಲ ರಾಮದೇವರನ್ನು ಪೂಜೆ ಮಾಡಿದ ಕೈಲೆ ತೊನ್ನು ಮೈಯವನಿಗೆ ಮುದ್ರೆ ಹಾಕಿಸಿ ನರಕಕ್ಕೆ ಕಳಿಸಬೇಕಂತ ಮಾಡೀಯೇನು?’ ಎಂದು ಗುಡುಗಿದ್ದರು. ಕಮಲಕ್ಕನ ಬಾಯಿ ಕಟ್ಟಿ ಹೋಗಿತ್ತು. ಒಂದೂ ಮಾತಾಡದೆ ಮನೆಗೆ ಬಂದು ಬಿಟ್ಟಿದ್ದಳು. `ಕೂಡ್ಲಿಗಿ ಸೂಳೇರ ಪಕ್ಕ ಮಲ್ಕೊಂಡು ಬರೋ ಗುಡೇಕೋಟಿ ಗೋವಿಂದಾಚಾರ್ ಗೆ ಮುದ್ರೆ ಹಾಕ್ತೀರಿ ಬುದ್ಧಿ. ನನ್ನ ಕೂಸು ಮಾಡಿರೋ ತಪ್ಪಾದ್ರೂ ಏನು?’ ಅಂತ ತಾನ್ಯಾಕೆ ಕೇಳಲಿಲ್ಲ ಅಂತ ಮನೆಗೆ ಬಂದ ಮೇಲೆ ಆಶ್ಚರ್ಯವಾಗಿತ್ತು. + +ಆದರೆ ಇಂದಿನ ಪರಿಸ್ಥಿತಿಯೇ ಬೇರೆ. `ವಾದಿರಾಜರೇ ಅದು ತೊನ್ನಲ್ಲ ಅಂತ ಹೇಳ್ಯಾರೆ. ಅವರನ್ನೇ ತಪ್ಪು ಅಂತೀರಾ ಬುದ್ಧಿ’ ಅಂತ ಸವಾಲೆಸೆಯುವಷ್ಟು ಧೈರ್ಯ ಬಂದಿದೆ. ಅಷ್ಟಕ್ಕೂ ಸಂಡೂರಲ್ಲಿ ನನ್ನ ಮಾತಿನ ಹೊಡೆತಕ್ಕೆ ನಿಲ್ಲೋ ಗಂಡಸು ಯಾರಿದ್ದಾರೆ?  ನಾನೂ ನೋಡೇ ಬಿಡ್ತೀನಿ. ಈ ಸಲ ವಾಜಿ ಮಡಿ ಅಡಿಗಿಯಲ್ಲಿ ಸೇರ್ಕೊಂಡೇ ಸೇರ್ಕೊಳ್ತಾನೆ, ಅಲಂಕಾರದ ಬ್ರಾಹ್ಮಣರಿಗೂ ಬಡಿಸ್ತಾನೆ. ಹೀಗಂತ ಕಮಲಕ್ಕ ನಿರ್ಧಾರಕ್ಕೆ ಬರುವುದಕ್ಕೆ ಸರಿಯಾಗಿ ಡ್ರೈವರ್ ಬಸ್ ಹತ್ತಿ ಒಮ್ಮಿಂದೊಮ್ಮೆಲೆ ಸ್ಟಾರ್ಟ್ ಮಾಡಿದ್ದರಿಂದ ಸೀಟಿನಿಂದ ನೂಕಿದಂತಾಗಿ, ಕಮಲಕ್ಕನ ಕೆಂಪು ಸೀರೆಯ ಸೆರಗು ತಲೆಯ ಮೇಲಿಂದ ಜಾರಿ ಬಿದ್ದು, ತುಂಡು ತುಂಡೇ ಕಪ್ಪು-ಬಿಳುಪು ಕೂದಲು ತುಂಬಿದ್ದ ಬೋಡು ತಲೆ ಪ್ರದರ್ಶನಗೊಂಡಿತ್ತು. ಸೆರಗು ತಲೆಯಿಂದ ಜಾರಿದ ವಿಷಯ ಮನಸ್ಸಿಗೆ ಗೊತ್ತಾಗುವದಕ್ಕೆ ಮುಂಚೆಯೇ ದೇಹ ಪ್ರತಿಕ್ರಿಯಿಸಿ, ಕೈ ಮತ್ತೆ ಸೆರಗನ್ನು ತಲೆಯ ಮೇಲೆ ಹೊದ್ದಿಸಿಬಿಟ್ಟಿತ್ತು. ನಿದ್ದೆ ಮಾಡುವ ಮನುಷ್ಯನನ್ನು ಸೊಳ್ಳೆ ಕಚ್ಚಿದಾಗ ಕೈ ತಾನೇ ತಾನಾಗಿಯೇ `ಫಟ್’ ಎಂದು ಹೊಡೆದು ಆ ಸೊಳ್ಳೆಯನ್ನು ಕೊಲ್ಲುವಂತೆ! + +ಬಸ್ಸು ಸಂಡೂರನ್ನು ತಲುಪಿದಾಗ ಸಂಜೆಯಾಗಿತ್ತು. ಮೈನ್ಸ್ ಲಾರಿಗಳ ಓಡಾಟದಿಂದ ಎದ್ದ ಧೂಳು (ಗೋಧೂಳಿಯಲ್ಲ, ಲಾರಿಧೂಳಿ) ಕ್ರಮೇಣವಾಗಿ ಭೂಮಿಗೆ ಸೇರಿಕೊಂಡು ವಾತಾವರಣ ಸ್ವಚ್ಛವಾಗುತ್ತಿತ್ತು. ಮನೆಗೆ ಬಂದಾಗ ಕಮಲಕ್ಕನನ್ನು ಮೊದಲು ನೋಡಿದ್ದು ರಾಧಕ್ಕ. ಅಂಗಳಕ್ಕೆ ನೀರು ಹಾಕುತ್ತಿದ್ದಳು. + +`ಬಾ ಕಮಲಕ್ಕ. ಮಧ್ಯಾಹ್ನದಿಂದ ಹಾದಿ ಕಾಯ್ಲಿಕ್ಹತ್ತೀವಿ. ಈಗ ಬರ್ತಾಳೆ, ಇನ್ನು ಸ್ವಲ್ಪ ಹೊತ್ತಿಗೆ ಬರ್ತಾಳೆ ಅಂತ. ಬಸ್ಸಿನಾಗೆ ಸೀಟ್ ಸಿಕ್ಕಿತ್ತೇನು?’`ವಾಜಿ ಇದ್ನಲ್ಲ ವೈನಿ, ಹೊಡದಾಡಿ ಸೀಟ್ ಹಿಡಿದ’. ಕಮಲಕ್ಕಗೆ ವಾಜಿಯ ಮೇಲೆ ಅಭಿಮಾನ. ರಾಧಕ್ಕ ಅಲ್ಲಿಯವರೆಗೆ ವಾಜಿಯನ್ನು ಗಮನಿಸಿರಲಿಲ್ಲ. ತರಕಾರಿ ಚೀಲವನ್ನು ಹೊತ್ತು ನಿಂತ ಅವನನ್ನು ನೋಡಿದ ತಕ್ಷಣ ಕಮಲಕ್ಕನ ಸಂಚು ಅರ್ಥವಾಯ್ತು.`ಏನಪ್ಪಾ ವಾಜಿ, ಸಾಲಿ ಚಕ್ಕರ್ರಾ?’ ಅಂತ ಹಂಗಿಸಿದಳು. ವಾಜಿ ನಾಚಿ ನೀರಾದ. `ಇಲ್ಲ ವೈನಿ, ನಾನು ಬರಂಗಿಲ್ಲ ಅಂದೆ. ಆದ್ರೆ ಅಮ್ಮ ಬೈದು ಕರ್ಕೊಂಬಂದ್ಲು’ ಕಮಲಕ್ಕಗೆ ಇಂತಹ ಏಟು-ಪೋಟು ಮಾತುಗಳು ಅರ್ಥವಾಗುವದಿಲ್ಲವೆ?`ಯಾಕವ್ವಾ ವೈನಿ, ಅವನೂ ಚೂರು ಪಾರು ಸೇವಾ ಮಾಡೋದು ಬ್ಯಾಡ ಅಂತೀ ಏನು?’`ನಾನೆಲ್ಲಿ ಹಂಗದ್ನೆ ಕಮಲಕ್ಕ. ಅವ್ನೂ ಮಾಡ್ಲೇಳು. ರಾಯರ ಆರಾಧನೆಗೆ ಗಂಡು ಹುಡುಗರಲ್ದೆ ನಾವು ಹೆಂಗಸರು ಕೆಲ್ಸ ಮಾಡ್ಲಿಕ್ಕಾಗ್ತದೇನು?  ಈಗ ಮೊದಲು ಒಳಗೆ ನಡಿ. ಇವ್ರು ಆವಾಗ್ಲಿಂದ ನಿನ್ನ ಹಾದಿ ನೋಡ್ಲಿಕ್ಹತ್ತಾರೆ.’ + +ಗೋಪಣ್ಣ ಒಳ ಮನೆಯಲ್ಲಿ ತೆಂಗಿನಕಾಯಿ ಸುಲಿಯುತ್ತಿದ್ದ. ಕಮಲಕ್ಕನನ್ನು ಕಂಡೊಡನೆ ಅವನಿಗೆ ಖುಷಿಯಾಗಿದ್ದು ಅವನ ಮುಖದಲ್ಲಿ ಅರಳಿದ ನಗುವಿನಿಂದಲೇ ಗೊತ್ತಾಗುತ್ತಿತ್ತು. ತಲೆಯ ಮೇಲಿನ ಜುಟ್ಟನ್ನು ತುರುಬಿನಂತೆ ಸುತ್ತಿಕೊಳ್ಳುತ್ತಾ ಮಾತಾಡಿದ. `ಬಾ ಕಮ್ಲಿ. ಆವಾಗ್ಲಿಂದ ನಿನ್ನ ಹಾದೀನೇ ಕಾಯ್ತಾ ಇದ್ದೀನಿ ನೋಡು. ಮೊದ್ಲು ಬಾವಿ ಮೇಲೆ ಸ್ನಾನ ಮಾಡೇಳು. ಸ್ವಲ್ಪ ಹಾಯ್ ಅನಿಸ್ತದೆ. ಚುಕ್ಕಿ ಬಾಳೇಹಣ್ಣು ತಂದೀನಿ. ಮಡಿ ಉಟ್ಗೊಂಡು ತಿನ್ವಂತಿ. ಮತ್ತೆ ನಾಳೆ ಎಷ್ಟು ಹೊತ್ತಿಗೆ ಊಟಾನೋ ಏನ್ ಕತೀನೋ. ಅಲಂಕಾರದ ಬ್ರಾಹ್ಮಣರು ಊಟ ಆಗೋ ತನ್ಕಾ ಉಪಾಸ ಇರ್ಬೇಕು.’ + +ಕಮಲಕ್ಕ ಬಾವಿಯ ಮೇಲೆ ಸ್ನಾನ ಮಾಡುವಾಗ ಹಂದಿಯೊಂದು ಹಿತ್ತಲಿಗೆ ಬಂತು. ಮುಟ್ಟಿದರೆ ಮೈಲಿಗೆಯಾದೀತೆಂದು ಕಮಲಕ್ಕ `ಹಚಾ’ ಎಂದಳು. ಕಮಲಕ್ಕನ ಧ್ವನಿ ಅಡಿಗಿ ಮನೆಯಲ್ಲಿದ್ದ ರಾಧಕ್ಕನಿಗೆ ಕೇಳಿಸಿಬಿಟ್ಟಿತು. ಆಕೆ ಅನಾಹುತವಾದಂತೆ ಮಾಡುತ್ತಿದ್ದ ಕೆಲಸವನ್ನು ಬಿಟ್ಟು ಹಿತ್ತಲಿಗೆ ಓಡಿ ಬಂದಳು. ಹಂದಿಯನ್ನು ನೋಡಿದ್ದೇ `ರ್ರೀ, ಬರ್ರೀ ಹಂದಿ ಬಂದದೆ’ ಎಂದು ಕಿರುಚಲಾರಂಭಿಸಿದಳು. ರಾಧಕ್ಕನ ಧ್ವನಿ ಕೇಳಿದ್ದೆ ಗೋಪಣ್ಣ ಕೂಡಾ ಹಿತ್ತಲಿಗೆ ಓಡಿ ಬಂದು `ಹಚಾ’ ಎಂದು ಹಂದಿಯನ್ನು ಓಡಿಸಲಾರಂಭಿಸಿದ. ಅಷ್ಟೇ ಅಲ್ಲದೆ ಅಕ್ಕ-ಪಕ್ಕದ ಮನೆಯ ಹುಡುಗರೂ ಬಂದು ಅದಕ್ಕೆ ಕಲ್ಲಿಂದ ಹೊಡೆಯಲಾರಂಭಿಸಿದರು. ಅಷ್ಟು ಜನರನ್ನು ಕಂಡಿದ್ದೇ ಹಂದಿಗೆ ದಿಕ್ಕು ತೋಚದಂತಾಗಿ ಭಯದಿಂದ ಕಿರುಚಲಾರಂಭಿಸಿತು. ಗೇಟಿನಿಂದ ಹೊರಗೆ ಹೋಗಲೂ ಅದಕ್ಕೆ ತಿಳಿಯದಂತಾಯ್ತು. ಅಷ್ಟರಲ್ಲಿ ವಾಜಿಯೂ ಹಿತ್ತಲಿಗೆ ನುಗ್ಗಿದ್ದ. ಸಂಡೂರಿನ ಬಸ್ಸಲ್ಲಿ ಸೀಟನ್ನು ಹಿಡಿದು ಪರಾಕ್ರಮವನ್ನು ಮೆರೆದಿದ್ದ ವಾಜಿ ಇಲ್ಲಿ ಸುಮ್ಮನಿದ್ದಾನೆಯೆ? ಸ್ವಲ್ಪ ದೊಡ್ಡ ಕಲ್ಲನ್ನೇ ತೆಗೆದುಕೊಂಡು ಇದ್ದ ಬದ್ದ ಶಕ್ತಿಯನ್ನೆಲ್ಲಾ ಸೇರಿಸಿ ಹಂದಿಗೆ ಬೀಸಿದ್ದ. ಗುರಿ ತಪ್ಪಲೇ ಇಲ್ಲ. ಕಮಲಕ್ಕ `ಅದನ್ಯಾಕೆ ಹೊಡಿತೀಯೋ…’ ಅಂತ ಕೂಗಿದ್ದು ಅವನಿಗೆ ಕೇಳಿಸಲಿಲ್ಲ. ಕಲ್ಲು ಸ್ವಲ್ಪ ಚೂಪಾಗಿದ್ದರಿಂದ ಅದು ಹಂದಿಯ ದಪ್ಪ ಚರ್ಮವನ್ನು ಭೇದಿಸಿ ರಕ್ತವನ್ನು ಚಿಮ್ಮಿಸಿಬಿಟ್ಟಿತು. ಕಪ್ಪು ಚರ್ಮದ ಹಂದಿಯ ಮೈಯಲ್ಲಿ ಕೆಂಪು ರಕ್ತವಿತ್ತು. ಹಂದಿ ನೋವಿನಿಂದ, ಎಂಥ ಕಾಠಿಣ್ಯರ ಹೃದಯದಲ್ಲೂ ಕರುಣಾರಸ ಸ್ರವಿಸುವಂತೆ, ಆರ್ತನಾದ ಗೈಯುತ್ತಾ ಗೇಟಿನಿಂದ ಓಡಿಹೋಯ್ತು. ತಕ್ಷಣ ರಾಧಕ್ಕ ಗೇಟನ್ನು ಹಾಕಿ `ಊರಾಗಿನ ಹಂದಿಗಳೆಲ್ಲಾ ಬ್ರಾಹ್ಮಣರ ಕೇರ್ಯಾಗೆ ಬಂದು ಸಾಯ್ತವೆ. ಕೊಂದು ತಿನ್ನೋ ರಂಡೆಗಂಡರು ಹಾಯಾಗಿ ಅವರ ಮನ್ಯಾಗೆ ಮಲ್ಕೊಂಡಾರೆ. ಏನೇನೆಲ್ಲ ದರಿದ್ರಗಳನ್ನು ನಾವು ಅನುಭವಿಸಬೇಕೋ…’ ಎಂದು ವಟಗುಟ್ಟಿದಳು. + +ಕಮಲಕ್ಕಗೆ ಈ ದೃಶ್ಯ ತೀರಾ ವಿಚಿತ್ರವೆನ್ನಿಸಿತು. ಸಂಡೂರಿನ ಓಣಿಗಳಲ್ಲಿ, ಹಿತ್ತಲಲ್ಲಿ ಹಂದಿಗಳು ಓಡ್ಯಾಡುವುದು ಸರ್ವೇ ಸಾಮಾನ್ಯ. ಗೋಪಣ್ಣನ ಹಿತ್ತಲಿಗೂ ಬರುತ್ತಲೇ ಇರುತ್ತವೆ. ಆದರೆ ಎಂದೂ ರಾಧಕ್ಕನಾಗಲಿ, ಗೋಪಣ್ಣನಾಗಲಿ ಈ ತರಹ ಹಂದಿಯನ್ನು ಹೊರ ಗೋಡಿಸಲು ಪ್ರಯತ್ನಪಟ್ಟಿದ್ದಿಲ್ಲ. ಈವೊತ್ತೇನಪಾ ಹೊಸದು? + +`ಗೋಪಣ್ಣ, ಹಂದಿನ್ಯಾಕೆ ಅಂಥಾ ಪರಿ ಹೊಡ್ದು ಓಡಿಸ್ತೀರೋ. ಏನೋ ಪಾಪ ಹಿತ್ತಲಾಗಿನ ಎಂಜಲೆಲಿ ಆಸಿಗೆ ಬಂದಿರಬೇಕು.’ಕಮಲಕ್ಕನ ಮಾತಿಗೆ ಉತ್ತರಿಸಿದ್ದು ರಾಧಕ್ಕ. `ನೋಡ್ಲಿಲ್ವಾ ಕಮಲಕ್ಕಾ, ಆ ಹಂದಿ ಬಸುರಾಗ್ಯದೆ.’`ಅದು ಬಸುರಾದ್ರೆ ಏನಾಯ್ತು ವೈನಿ?’`ಅದಕ್ಕೆ ದಿನಾ ತುಂಬ್ಯಾವೆ. ಹಡೀಲಿಕ್ಕೆ ಜಾಗ ಹುಡುಕ್ಲಿಕ್ಹತ್ತದೆ. ನಮ್ಮ ಮನಿ ಹಿತ್ತಲು ಬೆಚ್ಚಗದ್ನೋಡು, ಅದ್ಕೇ ಹೊಂಚು ಹಾಕಿ ಆ ಜಾಗದಾಗೆ ಹಡೀಲಿಕ್ಕೆ ಪ್ರಯತ್ನ ಮಾಡ್ಲಿಕ್ಹತ್ತದೆ. ಹತ್ತು ಹತ್ತು ಮರಿ ಅದು ಹಡದ್ರೆ, ಅದರ ಸಂಸಾರೆಲ್ಲಾ ನಮ್ಮನಿ ಹಿತ್ಲಾಗೆ ಆಗ್ತದೆ. ಆಮೇಲಕ್ಕೆ `ಜಪ್ಪಯ್ಯ’ ಅಂದ್ರೂ ಅದು ಕದಲಂಗಿಲ್ಲ. ಓಡಿಸ್ಲಿಕ್ಹೋದ್ರೆ ನಮ್ಮ ಮೈಮ್ಯಾಲೆ ಜಗಳಕ್ಕೆ ಬರ್ತದೆ. ಮರಿ ಹಾಕಿದ್ಮೇಲೆ ಹಂದೀಗೆ ಎರಡರಷ್ಟು ಶಕ್ತಿ ಬರ್ತದೆ. ಏನ್ ಮಾಡ್ಲಿಕ್ಕೂ ಹೇಸಂಗಿಲ್ಲ.’ + +`ಅಯ್ಯೋ ಪಾಪ, ಬಸುರಾದರೇನು? ಅಲ್ಲ ವೈನಿ, ನಾವು ಹಿಂಗೆ ಓಡಿಸಿದ್ರೆ ಅದು ಎಲ್ಲಿ ಹೋಗಿ ಹಡೀಬೇಕಂತೀನಿ? ಅದೇನು ಕಾಡ್ನಾಗಿರೋ ಪ್ರಾಣಿ ಏನು- ಊರು ಬಿಟ್ಟು ಹೋಗು ಅನ್ಲಿಕ್ಕೆ? ಬ್ರಾಹ್ಮಣರ ಕೇರ್ಯಾಗೆ ಸುತ್ತಿಗೊಂಡಿರ್ತವೆ.’`ನಮ್ಮನಿ ಹಿತ್ತಲೇ ಆಗಬೇಕಂದರೆ ಹೆಂಗ್ಹೇಳು ಕಮಲಕ್ಕ? ಊರಾಗೆ ಬೇರೆ ಜಾಗಿಲ್ಲೇನು ಅವಕ್ಕೆ? ತಿಪ್ಯಾಗೆ ಕೂತು ಹಡೀಬೇಕವ್ವ.’ + +ಕಮಲಕ್ಕ ಮತ್ತೆ ಮಾತಾಡಲಿಲ್ಲ. ಆದರೆ ತಿಪ್ಪೆಯಲ್ಲಿ ನಾಯಿ ಕಾಟ ಜಾಸ್ತಿ ಅಂತ ಅನ್ನಿಸ್ತು. ಸ್ನಾನ ಮಾಡುವಾಗ ಹೇಳಿ ಕೊಳ್ಳುತ್ತಿದ್ದ `ಗಂಗೇಚ, ಯಮುನೇಚ…’ ಮಂತ್ರವೂ ಮರೆತುಹೋಗಿ `ಹಂದಿ ಎಲ್ಲಿ ಹಡೀತದೋ ಏನೋ…’ ಎಂದು ಅದರ ಬಗ್ಗೆಯೇ ಯೋಚಿಸಲಾರಂಭಿಸಿದಳು.ಆ ರಾತ್ರಿ ರಾಧಕ್ಕ ಉಂಡ ಎಂಜಲೆಲೆಯನ್ನು ಬಿಸಾಡಲು ತಿಪ್ಪೆಯ ಕಡೆಗೆ ಹೋದಾಗ, ಅದೇ ಸಮಯವನ್ನು ಕಾಯುತ್ತಿದ್ದಂತೆ ಕಮಲಕ್ಕ `ಗೋಪಣ್ಣ’ ಅಂತ ಮೆತ್ತಗೆ ಅಣ್ಣನನ್ನು ಕರೆದಳು.`ಏನವ್ವಾ ಕಮ್ಲಿ?’`ನಾಳೆ ಮಡೀ ಅಡಿಗಿನಾಗೆ ವಾಜಿ ಕೂಡಾ ಇರ್ಲೋ… ವಾದಿರಾಜರೇ ಅಪ್ಪಣೆ ಕೊಡಿಸ್ಯಾರೆ.’ಗೋಪಣ್ಣ ಬೀಸಿಕೊಳ್ಳುತ್ತಿದ್ದ ಬೀಸಣಿಗೆಯನ್ನು ನಿಲ್ಲಿಸಿದ.`ಕಮ್ಲಿ, ಆಚಾರ್ ಮಂದಿ ಒಪ್ಗೊಳ್ಳಂಗಿಲ್ಲ. ತೊನ್ನು ಇದ್ದವರು ಮಡೀಗೆ ಬರಂಗಿಲ್ಲ ಅಂತಾರೆ.’`ಅದು ತೊನ್ನೇ ಅಲ್ಲ ಅಂತ ವಾದಿರಾಜರೇ ಹೇಳ್ಯಾರಲ್ಲೋ, ಇನ್ನು ಇವರದೆಲ್ಲ ಮಾತು ಯಾಕೆ ಕೇಳ್ಬೇಕಂತೀನಿ.’`ನಿನ್ನ ಕನಸಿನಾಗೆ ಹೇಳಿದ್ದು ಅವರಿಗ್ಹೆಂಗವ್ವಾ ಗೊತ್ತಾಗ್ತದೆ?’`ಹಂಗಂತ ವಾದಿರಾಜರು ಪ್ರತ್ಯಕ್ಷ ಬರ್ಲಾಕ್ಕಾಗ್ತದೇನೂ ಗೋಪಣ್ಣ?’`ಕಮ್ಲಿ, ಯಾಕೆ ಹಿಂಗೆ ಹಟ ಮಾಡ್ತಿ? ಬರೀ ಮಡಿ ಅಡಿಗಿ ಮಾಡಿದ್ರೇನೇ ರಾಯರ ಸೇವಾ ಅಂತಾರೇನು? ಮೈಲಿಗಿ ಕೆಲಸ ರಾಶಿ ರಾಶಿ ಇರ್ತದೆ. ಅದೆಲ್ಲಾ ಮಾಡ್ಲೇಳು.’ + +ಒಮ್ಮಿಂದೊಮ್ಮೆಲೆ ಕಮಲಕ್ಕ ಬಿಕ್ಕಳಿಸಲಾರಂಭಿಸಿದಳು. `ಬೆನ್ನಿಲೆ ಬಿದ್ದ ನೀನೆ ವಾಜಿನ್ನ ದೂರ ಇಟ್ರೆ ಮಂದಿ ಸುಮ್ನಿರ್ತಾರೇನೋ? ಮಂದಿ ಎಲ್ಲಾ ವಾಜಿನ್ನ ಹೊಲೆ ಮಾದಿಗನಂತೆ ದೊಬ್ಬಿದ್ರೆ ನಾ ಹೆಂಗೆ ಬದುಕಿರ್ಲೋ?’ + +ಗೋಪಣ್ಣಗೆ ಕಮಲಕ್ಕ ಅಳುವದನ್ನು ನೋಡಿ ಸಂಕಟವಾಯ್ತು. ಎಷ್ಟಾದರೂ ಸ್ವಂತ ತಂಗಿ, ಕಷ್ಟ ಪಡುತ್ತಿರುವ ಜೀವ. `ಅಳ್ಬೇಡ ತೆಗಿ ಕಮ್ಲಿ. ರಾತ್ರಿ ಹೊತ್ನಾಗ್ಯಾಕೆ ಕಣ್ಣೀರು ಹಾಕ್ತಿ. ಆಯ್ತೇಳು, ಮಂದಿ ನಿನ್ನ ನಂಬದಿದ್ರೂ ನಾನು ನಿನ್ನ ನಂಬ್ತೀನಿ. ವಾಜಿ ಅಲಂಕಾರದ ಬ್ರಾಹ್ಮಣರಿಗೆ ಬಡಸಲೇಳು. ಯಾರಾದ್ರೂ ಏನಾದ್ರೂ ಅಂದ್ರೆ ಸ್ವಲ್ಪ ಗಟ್ಟಿ ಮಾತಾಡಿ ಬಾಯಿ ಮುಚ್ಚಿಸಿದ್ರಾಯ್ತು. ಒಂದೈವತ್ತು ರೂಪಾಯಿ ದುಡ್ಡು ಕೊಟ್ರಾಯ್ತು, ಸುಮ್ನಾಗ್ತಾರೆ. ಆದ್ರೆ ವಾಜಿ ಇನ್ನೂ ಸಣ್ಣ ಹುಡುಗ. ಅಡಿಗಿ ಮಾಡ್ಲಿಕ್ಕೆ ಗೊತ್ತಾಗಂಗಿಲ್ಲ. ಅದ್ಕೇ, ಬಡಸ್ಲಿ ಅಂದಿದ್ದು. ಯಾವ್ದಾದ್ರೂ ಒಂದೇ ನೋಡು. ಒಟ್ಟಾರೆ ಮಡಿಯೊಳಗೆ ಸೇರಿಸ್ಕೊಂಡ್ರಾಯ್ತು.’ ಗೋಪಣ್ಣನ ಮಾತು ಕಮಲಕ್ಕಗೆ ಸಮಾಧಾನವನ್ನು ನೀಡಿತು. `ನೀ ಹೇಳ್ದಂಗಾಗ್ಲೇಳು ಗೋಪಣ್ಣ’ ಎಂದು, ತನ್ನ ಸೊಂಟದಲ್ಲಿ ಕಟ್ಟಿದ ಬಾಳೇಕಾಯಿ ಗಂಟಿನಿಂದ ಐವತ್ತರ ಐದು ನೋಟುಗಳನ್ನು ತೆಗೆದು ಗೋಪಣ್ಣನ ಮುಂದಿಟ್ಟು `ದಕ್ಷಿಣೀಗೆ’ ಎಂದು ಹೇಳಿದಳು. + +ಎಲೆ ಬಿಸಾಡಿ ರಾಧಕ್ಕ ಮನೆಯೊಳಗೆ ಬಂದಾಕ್ಷಣ ಕಮಲಕ್ಕ-ಗೋಪಣ್ಣ ಸುಮ್ಮನಾಗಿಬಿಟ್ಟರು. ರಾಧಕ್ಕನಿಗೆ ಇದು ಅರ್ಥವಾಗದಿರುತ್ತದೆಯೆ? `ಏನ್ರಿ, ಕಮಲಕ್ಕ ಏನಾಂತಾಳೆ?’`ಏನೂ ಇಲ್ಲೇಳು. ಹಿಂಗೇ ಸುಮ್ನೆ ಕಷ್ಟ-ಸುಖ ಮಾತಾಡ್ಕೊಳ್ತಿದ್ವಿ’ ಗೋಪಣ್ಣ ಮರೆಮಾಚಿದ. ರಾಧಕ್ಕ ಧಡ ಧಡ ಹೆಜ್ಜೆಗಳನ್ನಿಡುತ್ತಾ ಅಡಿಗೆ ಮನೆಗೆ ಹೋದಳು. + +ಮರುದಿನ ಬೆಳಿಗ್ಗೆ ಎರಡು ಗಂಟೆಯಿಂದಲೇ ಗಡಿಬಿಡಿ ಪ್ರಾರಂಭವಾಯ್ತು. ಗಂಡಸರಾಗಲೇ ಗಣೇಶನನ್ನು ಸ್ಮರಿಸಿ ಒಲೆ ಹಚ್ಚಿದ್ದರು. ಒಲೆಯ ಪಕ್ಕದಲ್ಲಿಯೇ ಮತ್ತೊಬ್ಬರು ಶ್ಯಾವಿಗೆ ಮಾಡುತ್ತಿದ್ದರು. ಬರೀ ಗಂಡಸರೇ ಅಡಿಗಿ ಮಾಡಬೇಕು. ಹೆಂಗಸರು ಕೈ ಹಚ್ಚುವಂತಿಲ್ಲ. ಸನ್ಯಾಸಿಗಳಿಗೆ ಹೆಂಗಸರು ಮಾಡಿದ ಅಡಿಗೆ ನಿಷಿದ್ಧ. ಕಮಲಕ್ಕ ಅಡಿಗೆ ಮಾಡುತ್ತಿದ್ದವರಿಗೆ `ಮೈಸೂರು ಪಾಕ ಇನ್ನೂ ಚೂರು ಹದಕ್ಕೆ ಬರ್ಲಿ’, ‘ಶ್ಯಾವಿಗಿ ಎಳಿ ಇನ್ನೂ ಸ್ವಲ್ಪ ತೆಳ್ಳಗಾಗ್ಲಿ’ ಅಂತ ನಿರ್ದೇಶನವನ್ನು ಕೊಡುತ್ತಿದ್ದಳು. ಅವರಿಗೆ ಅಡಿಗೆಗೆ ಬೇಕಾದ ಎಲ್ಲಾ ಪದಾರ್ಥಗಳನ್ನು ತಾನೇ ಉತ್ಸಾಹದಿಂದ ಒದಗಿಸುತ್ತಿದ್ದಳು. ರಾಧಕ್ಕ ಅಕ್ಕಪಕ್ಕದ ಹೆಂಗಸರೊಡನೆ ಸೇರಿ ಹೂ ಕಟ್ಟುತ್ತಿದ್ದಳು. ಇಂತಹ ಸಂದರ್ಭದಲ್ಲಿ ಜನ ಎಷ್ಟಿದ್ದರೂ ಕಮ್ಮಿ. ಹತ್ತು ಕೈ ಸೇರಿದರೆ ಇನ್ನಿಪ್ಪತ್ತು ಕೆಲಸ ಹುಟ್ಗೊಳ್ತವೆ. + +ಹುಡುಗರೆಲ್ಲಾ ಏಳುವ ವೇಳೆಗೆ ರಾಧಕ್ಕ ಉಪ್ಪಿಟ್ಟು ಮಾಡಲಾರಂಭಿಸಿದಳು- ಮಕ್ಕಳು ಮತ್ತು ಹೆಂಗಸರಿಗಾಗಿ. ಊಟ ಆಗುವುದು ಮಧ್ಯಾಹ್ನ ಎರಡು ಅಥವಾ ಮೂರು ಗಂಟೆಗೆ- ಅಲ್ಲಿಯವರೆಗೆ ಹಸಿವೆ ತಡೆಯಲು ಏನಾದರೂ ಬೇಕಲ್ಲ? ಮಡಿಯಲ್ಲಿರುವ ಗಂಡಸರಿಗೆ ಉಪ್ಪಿಟ್ಟಿಲ್ಲ, ಕೇವಲ ಬಿಸಿ ಹಾಲು ಕುಡಿಯಬಹುದು- ಅಷ್ಟೇ! ಕಮಲಕ್ಕ ಹಾಗೂ ಗೋಪಣ್ಣ `ಅಪ್ಪನ ಕಾಲಕ್ಕೆ ಹಾಲೂ ಕುಡೀತಿದ್ದಿಲ್ಲ. ಈಗ ಕಾಲ ಬದಲಾಗ್ಯದೆ’ ಎನ್ನುತ್ತಾರೆ. + +ಮಠದಲ್ಲಿ ಅಷ್ಟೋತ್ತರ ಮುಗಿಸಿಕೊಂಡು ಬಂದ ಗೋಪಣ್ಣ `ಕಮ್ಲೀ’ ಅಂತ ಕೂಗಿದ. ಕಮಲಕ್ಕ ಕೋಣೆಯಿಂದ ಹೊರಬಂದಳು.`ಹೆಂಗೋ ಏನೋ, ವಾಜಿ ಮಡೀಲೆ ಬಡಿಸ್ಲಿಕ್ಕಿರ್ತಾನೆ ಅಂತ ಗುಡೇಕೋಟಿ ಗೋವಿಂದಾಚಾರ್ಯರಿಗೆ ಗೊತ್ತಾಗ್ಯದೆ. ಆಗ್ಲೇ ಗುಸುಗುಸು, ಪಿಸಪಿಸ ನಡಿಸ್ಯಾನೆ. ಆದರೆ ನಾನೇ ಎಲ್ಲಾರ ಮುಂದೆ ಕಮಲಕ್ಕ ಐವತ್ತು ರೂಪಾಯಿ ದಕ್ಷಿಣಿ ಕೊಡ್ತಾಳೆ ಅಂತ ಹೇಳಿ ಬಂದೀನಿ’ ಅಂದ.`ಎಲ್ಲಾ ಸುಮ್ನಾಗ್ತಾರೇಳು ಗೋಪಣ್ಣ. ಯಾರಾದ್ರೂ ಕಿಮಕ್-ಕುಮಕ್ ಅಂದ್ರೆ ನಾನು ಮಾತಾಡ್ತೀನಿ, ನೀನು ಯೋಚ್ನಿ ಮಾಡ್ಬೇಡ’ ಎಂದು ಆತ್ಮವಿಶ್ವಾಸದ ಮಾತನಾಡಿ ಮತ್ತೆ ಕಮಲಕ್ಕ ಅಡಿಗಿ ಮಾಡುವವರಿಗೆ ನಿರ್ದೇಶನ ಕೊಡಲಾರಂಭಿಸಿದಳು. + +ಯಾವುದೋ ವಸ್ತು ಬೇಕೆಂದು ಅಡಿಗೆಯವರು ಕೇಳಿದಾಗ, ಕಮಲಕ್ಕ ಕೋಣೆಗೆ ಬಂದವಳೆ ಹೌಹಾರಿಬಿಟ್ಟಳು. ರಾಧಕ್ಕ ಒಂದು ತಟ್ಟೆಗೆ ಉಪ್ಪಿಟ್ಟನ್ನು ಹಾಕಿ ವಾಜಿಗೆ ಕೊಡುತ್ತಿದ್ದಳು! ಕಮಲಕ್ಕ ವಾಜಿಯ ಕಡೆ ಧಾವಿಸಿ, ಅವನ ತಟ್ಟೆಯನ್ನು ಕಿತ್ತುಕೊಂಡಳಲ್ಲದೆ ಕೆನ್ನೆಗೆ ಎರಡೇಟು ಬಿಗಿದಳು.`ಹುಚ್ಚು ರಂಡೆಗಂಡ, ನೀನು ಮಡೀಲೆ ಬಡಿಸ್ಬೇಕು ಅಂತ ನನ್ನ ಜೀವ ತೇಯ್ತಾ ಇದ್ದೀನಿ. ನೀನಿಲ್ಲಿ ಉಪ್ಪಿಟ್ಟು ತಿನ್ಲಿಕ್ಕೆ ತಯಾರಾಗಿಯೇನೋ?’ ಎಂದು ಸಂಕಟದಿಂದ ಮತ್ತೆರಡು ಏಟನ್ನು ಕೆನ್ನೆಗೆ ಬಿಗಿದಳು. ಕಮಲಕ್ಕಗೆ ಸಿಟ್ಟು ನೆತ್ತಿಗೇರಿತ್ತು. ರಾಧಕ್ಕನನ್ನು ನೋಡಿ-`ವೈನಿ, ಅವ್ನು ಮಡೀಲೆ ಬಡಿಸ್ಬೇಕು ಅಂತ ಗೊತ್ತಿಲ್ಲೇನು? ಅವನಿಗ್ಯಾಕೆ ಉಪ್ಪಿಟ್ಟು ಕೊಡ್ತಿದ್ದಿ?’ ಅಂತ ದಬಾಯಿಸಿದಳು. ರಾಧಕ್ಕ ತಪ್ಪು ಮಾಡಿ ಸಿಕ್ಕಿ ಬಿದ್ದವರಂತಾಗಿದ್ದಳು.`ಸಣ್ಣ ಹುಡುಗ, ಉಪ್ಪಿಟ್ಟು ತಿನ್ತೀನಿ ಅಂದ್ರೆ ಬ್ಯಾಡ ಅನ್ಲೇನು? ಅವ್ನೇ ಕೇಳ್ದ, ಅದ್ಕೇ ಕೊಟ್ಟೆ.’`ಹೆಂಗಾರ ಮಾಡಿ ಅವ್ನ ಮೈಲಿಗಿ ಮಾಡ್ಸಿ, ಮಡೀಲೆ ಬರದಂಗೆ ಮಾಡಾದೆ ನಿನ್ನ ಉದ್ದೇಶ ಅಲ್ಲಾ ವೈನಿ?’ರಾಧಕ್ಕ ಈಗ ಅಳಲಾರಂಭಿಸಿದಳು. ಕಣ್ಣಲ್ಲಿ ನೀರು ತರಿಸುವದರಲ್ಲಿ ಮಹಾಚತುರೆ.`ನಂದೇ ತಪ್ಪಾದಂಗೆ ಆಡ್ತೀ ಅಲ್ಲಾ ಕಮಲಕ್ಕ. ಮಕ್ಕಳಿಗೆ ತಿನ್ಲಿಕ್ಕೆ ಕೊಟ್ರೂ ತಪ್ಪಾಗಿ ಬಿಡ್ತದೇನವ್ವಾ? ನಮ್ಮ ಮನ್ಯಾಗೆ ನಾನೇ ಪರದೇಶಿ ಆದ್ನೋಡು.’ + +ಗೋಪಣ್ಣ ಅಲ್ಲಿಗೆ ಬಂದ. ಹೆಂಡತಿಯ ಮಾತಿನಿಂದಲೇ ನಡೆದ ಘಟನೆ ಅರ್ಥವಾಯ್ತು. ಆದರೆ ರಾಧಕ್ಕಗೆ ಎದುರು ಮಾತನಾಡಲಾರ. ಸುಮ್ಮನೆ ಹಿಂತಿರುಗಿ ಅಡುಗೆಯ ಮನೆಯಲ್ಲಿ ಕೆಲಸದಲ್ಲಿ ಮಗ್ನನಾದ. ಕಮಲಕ್ಕ ಅನಂತರ ವಾಜಿಯ ಮೇಲೆ ಒಂದು ಕಣ್ಣನ್ನಿಟ್ಟಳು. ಅವನು ಹಾಲು ಮಾತ್ರ ಕುಡಿಯಬಹುದಿತ್ತು, ಬೇರೇನೂ ತಿನ್ನುವಂತಿರಲಿಲ್ಲ. + +ಆರಾಧನೆಗೆ ಪ್ರತಿ ವರ್ಷದಂತೆ ಈ ವರ್ಷವೂ ಕಳೆದ ವರ್ಷಕ್ಕಿಂತ ಹೆಚ್ಚು ಜನ ಸೇರಿತ್ತು. ಮಕ್ಕಳ ಅಳು-ನಗು, ಹೆಂಗಸರ ಹರಟೆ, ಮೈಕಾಸುರನ ಹಾವಳಿ ಏಕಕಾಲಕ್ಕೆ ಸಮ್ಮಿಶ್ರಣಗೊಂಡು ಒಂದು ಆಹ್ಲಾದಕರ ಗಲಾಟೆಯನ್ನು ಸೃಷ್ಟಿಸಿದ್ದವು. ರಾಯರಂತೂ ಹೂವಿನ ಹಾರದಲ್ಲಿ ಮುಳುಗಿ ಹೋಗಿದ್ದರು. ಹೊದಿಸಿದ ರೇಶ್ಮೆ ಶಲ್ಯ ಮಿರಮಿರನೆ ಮಿಂಚುತ್ತಿತ್ತು. ಅಡುಗೆ ಸಾಲೆಯಿಂದ ಭಟ್ಟರ ಬೂದುಗುಂಬಳಕಾಯಿಯ ಹುಳಿಯ ವಾಸನೆ ಘಮ್ಮೆಂದು ಮೂಗಿಗೆ ಬಡಿದಾಗ, `ಇನ್ನೂ ಊಟ ಎಷ್ಟು ತಡಾನೋ ಏನೋ’ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. + + + +ವಾಜಿಯ ಮಡಿ ಸ್ನಾನಕ್ಕೆ ಗೋಪಣ್ಣನೇ ಬಾವಿಯಿಂದ ನೀರು ಸೇದಿ ಹಾಕಿದ. ಕಮಲಕ್ಕ ಬಾವಿಯ ಕಟ್ಟೆಯಮೇಲೆ ನಿಂತು, ವಾಜಿಯ ಬೆನ್ನು ಸರಿಯಾಗಿ ತೊಯ್ದಿದೆಯೋ ಇಲ್ಲವೋ ಅಂತ ಪರೀಕ್ಷಿಸಿದಳು. ಮೈಯ ಪ್ರತಿಯೊಂದು ಭಾಗವೂ ನೀರಿನಿಂದ ತೊಯ್ದಾಗಲೇ ಮಡಿ, ಇಲ್ಲದಿದ್ದರೆ ಮೈಲಿಗೆ. ತನ್ನಂತಹ ಹತ್ತು ಜನರು ಸೇರಿ ಉಡಬಹುದಾದಂತಹ ಬಿಳಿಯ ಧೋತ್ರವನ್ನು ಎರಡು ಮಡತೆ ಮಡಿಸಿ, ವಾಜಿ ಕಚ್ಚಿ ಹಾಕಿ ಉಟ್ಟುಕೊಂಡ. ನಂತರ ಕೈಯಲ್ಲಿ ಮಡಿನೀರಿನ ತಂಬಿಗೆ ಹಿಡಿದುಕೊಂಡು, ಮಠಕ್ಕೆ ಹೋಗುವ ಹಾದಿಯಲ್ಲಿ ಹೆಜ್ಜೆ ಹೆಜ್ಜೆಗೂ ನೀರನ್ನು ಹಾಕುತ್ತಾ, ನೀರು ಹಾಕಿದ ಜಾಗದಲ್ಲೇ ಕಾಲನ್ನೂರುತ್ತಾ ವಾಜಿ ನಡೆಯುವದನ್ನು ಕಂಡು ಹೃದಯ ತುಂಬಿ ಬಂತು. ಅವನ ಹಿಂದೆಯೇ ಅವಳೂ ನಡೆದಳು. + +ಮಠದಲ್ಲಿ ಅಲಂಕಾರದ ಊಟ ಸ್ವಲ್ಪ ತಡವಾಗಿಯೇ ಪ್ರಾರಂಭವಾಯ್ತು. ಮಠದಲ್ಲಿ ನಡೆದ ಒಂದು ಚಿಕ್ಕ ಜಗಳವೇ ಇದಕ್ಕೆಲ್ಲಾ ಕಾರಣ. ಅರ್ಚಕರು ತೆಂಗಿನಕಾಯನ್ನು ಒಡೆದ ನಂತರ ಮೇಲಿನ ಬಟ್ಟಲನ್ನು ತಾವಿಟ್ಟುಕೊಂಡು, ಕೆಳಗಿನ ಜುಟ್ಟಿರುವ ಬಟ್ಟಲನ್ನು ಮಾತ್ರ ಭಕ್ತಾದಿಗಳಿಗೆ ಕೊಡುತ್ತಿದ್ದರು. ಅಷ್ಟೇ ಅಲ್ಲದೆ, ಬಹು ಚಾಕಚಕ್ಯತೆಯಿಂದ ಮೇಲಿನ ಬಟ್ಟಲು ದೊಡ್ಡದಾಗುವಂತೆಯೂ, ಜುಟ್ಟು ಇರುವ ಕೆಲಭಾಗದ ಬಟ್ಟಲು ಚಿಕ್ಕದಾಗುವಂತೆಯೂ ಕಾಯನ್ನು ಒಡೆಯುತ್ತಿದ್ದರು. ಅಲ್ಲದೆ ಈ ರೀತಿ ಸಂಗ್ರಹಿಸಿದ ಎಲ್ಲಾ ಕೊಬ್ಬರಿ ಬಟ್ಟಲುಗಳನ್ನು ಊರಿನ `ಹರಿಪ್ರಸಾದ್’ ಹೋಟಲ್ಲಿಗೆ ಮಾರಿಕೊಳ್ಳುತ್ತಿದ್ದರು. ಇದನ್ನು ಯಾರೋ ಕಿಡಿಗೇಡಿ ಭಕ್ತಾದಿಗಳು ಪ್ರತಿಭಟಿಸಿದ್ದೇ ಜಗಳ ಪ್ರಾರಂಭವಾಗಿಬಿಟ್ಟಿತ್ತು. ಹೀಗೆ ಪ್ರಾರಂಭವಾದ ಜಗಳ ಯಾವು ಯಾವುದೋ ತಿರುವುಗಳನ್ನು ಪಡೆದುಕೊಂಡು ಕೊನೆಗೆ ಕೆಲವೊಂದು ಜನ ಸ್ಮಾರ್ತ-ವೈಷ್ಣವರ ಜಗಳಕ್ಕೂ, ಮತ್ತೂ ಕೆಲವು ಜನರು ಉತ್ತರಾದಿ ಮಠ- ರಾಯರ ಮಠದ ಜಗಳಕ್ಕೂ, ಮತ್ತೂ ಕೆಲವೊಂದು ಜನ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಯಾವುದೋ ತಮ್ಮ ಮನೆಯ ಆಸ್ತಿಯ ವಿಚಾರವಾಗಿ ಜಗಳವಾಡುವದಕ್ಕೂ ನಾಂದಿಯಾಗಿಬಿಟ್ಟಿತ್ತು. ಹಾಗೇ ಸುಮ್ಮನಿದ್ದರೆ ಜಗಳ ಸಂಜೆಯವರೆಗೆ ಮುಂದುವರೆಯುವಷ್ಟು ಶಕ್ತಿಯುತವಾಗಿತ್ತು. ಆದರೆ ಯಾರೋ ಬುದ್ಧಿವಂತರು ರಾಯರಿಗೆ ಮಂಗಳಾರತಿ ಮಾಡಿ, ಹತ್ತಾರು ಹುಡುಗರ ಕೈಲೆ ಜಾಗಟೆಯನ್ನು ಏಕಪ್ರಕಾರವಾಗಿ ಹತ್ತು ಹದಿನೈದು ನಿಮಿಷ ಬಾರಿಸಿಸಿದರು. ಜಾಗಟೆಯಿಂದ ಮೂಡಿದ ಶಬ್ದದಿಂದಾಗಿ ಜನರು ಸುಮ್ಮನಾದರು. ಭಕ್ತಾದಿಗಳು ತಮ್ಮ ಜಗಳ ನಿಲ್ಲಿಸಿ, ಕೈಗಳನ್ನು ಜೋಡಿಸಿಕೊಂಡು, ಮಂಗಳಾರತಿ ಮಾಡುವಾಗ ರಾಯರ ಮುಖ ಕಣ್ಣಿಗೆ ಬಿದ್ದರೆ ಸಾಕೆಂದು ಕತ್ತನ್ನು ಗುಂಪಿನಲ್ಲಿ ತೂರಿಸುವ ಸಾಹಸ ಮಾಡಲಾರಂಭಿಸಿದರು. ಅಂತೂ ರಾಯರಿಗೆ ನೈವೇದ್ಯವಾಗಿ, ಅಲಂಕಾರದ ಬ್ರಾಹ್ಮಣರಿಗೆ ಎಲೆ ಹಾಕುವ ವೇಳೆಗೆ ಮಧ್ಯಾಹ್ನ ಎರಡು ಗಂಟೆಯಾಗಿತ್ತು. + +ಐದು ಜನ ಬ್ರಾಹ್ಮಣರಿಗೆ, ಪ್ರತಿಯೊಬ್ಬರಿಗೂ ಐದೈದು ಎಲೆಗಳನ್ನು ಜೋಡಿಸಿ ದೊಡ್ಡ ಎಲೆಯನ್ನು ಮಾಡಲಾಗಿತ್ತು. ಎಲೆಯ ಮುಂದೆ ಬಣ್ಣದ ರಂಗೋಲಿಯಿಂದ ಚಿತ್ತಾರವನ್ನು ಬಿಡಿಸಿದ್ದರು. ಸುವಾಸನೆ ಭರಿತ ಊದಿನ ಕಡ್ಡಿಗಳನ್ನು ಪ್ರತಿಯೊಂದು ಎಲೆಯ ಪಕ್ಕದಲ್ಲೂ ಅಕ್ಕಿ ತುಂಬಿದ ಲೋಟದಲ್ಲಿ ಚುಚ್ಚಿಡಲಾಗಿತ್ತು. ಐದು ಎಲೆ ಹಾಕಿದ ಹಿಂಭಾಗದಲ್ಲಿದ್ದ ಗೋಡೆಯ ಮೇಲೆ ಪ್ರದ್ಯುಮ್ನ, ಅನಿರುದ್ಧ, ಅಧೋಕ್ಷಜ, ನಾರಾಯಣ ಹಾಗೂ ವಾಸುದೇವ ಎಂದು ಕೆಂಪು ಬಣ್ಣದಿಂದ ಬರೆಯಲಾಗಿತ್ತು. ಎಲ್ಲಕ್ಕೂ ಮುಖ್ಯವಾಗಿ, ಕಮಲಕ್ಕನ ಐವತ್ತು ರೂಪಾಯಿ ನೋಟುಗಳು ಕಣ್ಣು ಕೋರೈಸುವಂತೆ ತಾಂಬೂಲದಲ್ಲಿದ್ದವು. + +ಇನ್ನೇನು ಬಡಿಸಲು ಪ್ರಾರಂಭಿಸಬೇಕು ಎನ್ನುವಾಗ, ರಾಧಕ್ಕನ ಪಕ್ಕದ ಮನೆಯ ಚಿಕ್ಕ ಹುಡುಗಿಯೊಬ್ಬಳು ಬಣ್ಣ ಬಣ್ಣದ ರೇಶ್ಮೆ ಲಂಗ ಉಟ್ಟುಕೊಂಡು `ಅಜ್ಜಿ, ಇಕೋ ತುಪ್ಪ’ ಅಂತ ತುಪ್ಪದ ಬಟ್ಟಲನ್ನು ತಂದು ರಾಧಕ್ಕನ ಮುಂದೆ ಹಿಡಿದಳು. ಹಿಂದೆ ಮುಂದೆ ನೋಡದೆ ಓಡಿ ಬಂದಿದ್ದ ಹುಡುಗಿ, ಅಲ್ಲೇ ನಿಂತಿದ್ದ ವಾಜಿಯ ತೀರಾ ಹತ್ತಿರದಿಂದ ನುಗ್ಗಿಬಿಟ್ಟಿದ್ದಳು. ಅದನ್ನು ನೋಡಿದ್ದೇ ಗುಡೇಕೋಟಿ ಗೋವಿಂದಾಚಾರ್ `ಅಯ್ಯೋ ವಾಜಿನ್ನ ಮುಟ್ಟಿಬಿಟ್ಟಿಯಲ್ಲೇ ಹುಡುಗಿ. ವಾಜಿ, ನಿಂಗೆ ಮೈಲಿಗಿಯಾಯ್ತಪ್ಪ. ಹೊರಗೆ ಹೋಗು’ ಎಂದುಬಿಟ್ಟ. ಅವರು ಆ ಮಾತಂದಿದ್ದೇ ತಡ ರಾಧಕ್ಕನೂ `ಹೌದ್ಹೌದು. ಪರಕ್ಯಾರ ತಾಕ್ತು. ನಾನೂ ನೋಡೀನಿ’ ಎಂದು, ಅತ್ಯಂತ ಪ್ರೀತಿಯಿಂದೆಂಬಂತೆ ವಾಜಿಯ ತಲೆ ಸವರಿಬಿಟ್ಟಳು. ಹುಡುಗಿಯ ಪರಕ್ಯಾರ ವಾಜಿಗೆ ತಾಕಿತ್ತೋ ಇಲ್ಲವೋ, ಈಗಂತೂ ರಾಧಕ್ಕ ವಾಜಿಯ ತಲೆಯ ಮೇಲೆ ಕೈ ಸವರಿದ್ದರಿಂದ ಖಂಡಿತವಾಗಿಯೂ ಮೈಲಿಗೆಯಾಗಿಬಿಟ್ಟಿದ್ದ. ಕಮಲಕ್ಕಗೆ ಒಂದು ಕ್ಷಣ ಏನಾಯ್ತೆಂದು ಅರ್ಥವಾಗಲಿಲ್ಲ. ನಂತರ ಗುಡೇಕೋಟಿ ಗೋವಿಂದಾಚಾರ್ಯರ ಹುನ್ನಾರ ತಿಳಿದುಹೋಯ್ತು. + +`ಸುಮ್ ಸುಮ್ನೆ ಮೈಲಿಗಿ ಆಯ್ತಂತ ಅಂತೀರಲ್ರೀ ಗೋವಿಂದಾಚಾರ್ರೇ. ಆ ಹುಡುಗಿ ಪರಕ್ಯಾರ ತಾಕ್ಲೇ ಇಲ್ಲ, ನಾನೂ ನೋಡೀನಿ’ ಅಂತ ದಬಾಯಿಸಿದಳು.`ನಾನ್ಯಾಕೆ ಸುಳ್ಳು ಹೇಳ್ಲಿ ಕಮಲಕ್ಕ. ಬೇಕಂದ್ರೆ ಕೃಷ್ಣಾಚಾರ್ಯನ್ನ ಕೇಳು. ಏನಪ್ಪಾ ಕಿಟ್ಟಣ್ಣ, ನೀನೇನಂತಿ?’ಗಲಿಬಿಲಿಗೊಂಡ ಕೃಷ್ಣಾಚಾರ್ಯರು, ಕನ್ನಡಕವನ್ನು ಕಣ್ಣಿಗೇರಿಸಿ `ಹೌದ್ಹೌದು, ಪರಕ್ಯಾರ ತಾಕ್ತು. ನಾನೂ ನೋಡೀನಿ. ಆಷ್ಟಕ್ಕೂ ರಾಧಕ್ಕ ಕೂಡಾ ವಾಜಿ ತಲಿ ಸವರಿಬಿಟ್ಳಲ್ಲ? ಈಗ ವಾಜಿ ಬಾವಿ ಮೇಲೆ ಒಂದು ಮುಳುಗು ಹಾಕ್ಲೇ ಬೇಕು’ ಎಂದು ಹೂಂಗುಟ್ಟಿದ.ಕಮಲಕ್ಕ ಎಷ್ಟೇ ಗಯ್ಯಾಳಿಯಾದರೂ, ಮೈಲಿಗೆಯಾದ ಹುಡುಗನಿಂದ ಅಲಂಕಾರದ ಬ್ರಾಹ್ಮಣರಿಗೆ ಬಡಿಸಿ ನರಕಕ್ಕೆ ಹೋಗಲು ತಯಾರಾಗಿರಲಿಲ್ಲ. ಆದರೂ ಇವರೆಲ್ಲರ ಕುತಂತ್ರದಿಂದ ದಿಕ್ಕು ತೋಚದಂತಾಗಿತ್ತು.`ಗೋಪಣ್ಣ, ನೀನಾರ ಹೇಳು. ಆ ಹುಡುಗಿ ಪರಕ್ಯಾರ ತಾಕ್ತೇನು?’ಗೋಪಣ್ಣಗೆ ಯಾರ ಪರ ವಹಿಸಬೇಕೆಂದು ತಿಳಿಯಲಿಲ್ಲ. `ಕಮ್ಲಿ, ನಾನು ಆ ಕಡಿ ನೋಡ್ಲೇ ಇಲ್ಲ. ಮತ್ತೆ ಹೆಂಗೇಳ್ಲಿ? ಈಗಂತೂ ವಾಜಿ ಮೈಲಿಗೆ ಆಗ್ಯಾನಲ್ಲ, ಹೋಗಿ ಒಂದು ಕೊಡ ನೀರು ಸುರುವಿಕೊಂಡು ಬರ್ಲಿ. ಬಾವಿ ಹತ್ತಿರದಾಗೇ ಅದಲ್ಲ?’ + +ಕಮಲಕ್ಕಗೆ ಬರೀ ವಾದ ಮಾಡಿ ಪ್ರಯೋಜನವಿಲ್ಲವೆನ್ನಿಸಿತು. ವಾಜಿಯ ಕೈ ಹಿಡಿದುಕೊಂಡು ಹೊರಗೆಳೆದುಕೊಂಡು ಬಂದಳು. ಅಲ್ಲಿಯೇ ಹತ್ತಿರದಲ್ಲಿ ವಾಜಿಯನ್ನು ಮೈಲಿಗೆ ಮಾಡಿದ ಹುಡುಗಿ ಗಾಬರಿಯಾಗಿ ನಿಂತಿತ್ತು. ಅದರ ತಲೆಗೊಂದು ಮುಷ್ಟಿಯಿಂದ ಮೊಟುಕಿದ ಕಮಲಕ್ಕ `ಹುಚ್ಚು ರಂಡೆ, ಮೈ ಮೇಲೆ ಅರಿವಿಲ್ಲದಂಗೆ ನುಗ್ಗಿ ಬಂದ್ಯಲ್ಲೇ’ ಅಂತ ಬೈಯ್ದುಬಿಟ್ಟಳು. ಅನಿರೀಕ್ಷಿತ ಆಕ್ರಮಣದಿಂದ ಕಂಗೆಟ್ಟ ಹುಡುಗಿ `ಹೋ’ ಎಂದು ಅಳಲಾರಂಭಿಸಿದಳು. + + + +ಮಠದ ಬಳಿಯಲ್ಲೇ ಇದ್ದ ಬಾವಿಯ ಬಳಿ ವಾಜಿಯನ್ನು ಕರೆದುಕೊಂಡು ಬಂದಾಗ ಅಲ್ಲಿ ಆಗಲೇ ಹತ್ತಾರು ಬ್ರಾಹ್ಮಣ ವಟುಗಳು ಸ್ನಾನ ಮಾಡಲು ಸಿದ್ಧರಾಗಿದ್ದರು.`ನಮ್ಮ ವಾಜಿಗೊಂದಿಷ್ಟು ನೀರು ಸೇದಿ ಹಾಕ್ರಪ್ಪ, ಅಲಂಕಾರದ ಬ್ರಾಹ್ಮಣರಿಗೆ ಬಡಿಸ್ಬೇಕು’ ಎಂದು ಅಲ್ಲಿದ್ದವರನ್ನು ಕೇಳಿದಳು.ಆ ಬ್ರಾಹ್ಮಣ ವಟುಗಳೇನು ಸಾಮಾನ್ಯರೆ? ಅವರಿಗೆ ಕಮಲಕ್ಕನ ಸಂಚು ಗೊತ್ತಿಲ್ಲವೆ? ತೊನ್ನು ಮೈಯ ಹುಡುಗನಿಂದ ಬ್ರಾಹ್ಮಣರಿಗೆ ಬಡಿಸಲು ತಯಾರಾಗಿರುವ ಕಮಲಕ್ಕಗೆ ಸಹಾಯ ಮಾಡಿ, ಬ್ರಾಹ್ಮಣಿಕೆಯನ್ನೇ ನಾಶಮಾಡಲು ಸಾಧ್ಯವಿರಲಿಲ್ಲ.`ಆಗಂಗಿಲ್ಲ ಕಮಲಕ್ಕ, ನಮ್ದೆಲ್ಲಾ ಸ್ನಾನ ಆಗೋತನ್ಕಾ ಕಾಯ್ಬೇಕ್ನೋಡು. ಆಗ್ಲೇ ಹೊತ್ತಾಗ್ಯದೆ. ನಾವೂ ತಾಸೊತ್ತಿಂದ ಕಾಯ್ಕೊಂಡೀವಿ.’`ಒಂದೆರಡು ಕೊಡ ನೀರು ಸೇದಿ ಹಾಕಿದ್ರೆ ನಿಮ್ಮ ಕೈಯೇನೂ ಸೇದಿ ಹೋಗಲ್ಲ. ಹಂಗ್ಯಾಕೆ ಇಲ್ಲ ಅಂತೀರೋ?’ ಕಮಲಕ್ಕನ ಅಸಹಾಯಕ ಮಾತು.`ಆಗಂಗಿಲ್ಲ ಅಂದ್ರೆ ಆಗಂಗಿಲ್ಲ. ನೀ ಏನ್ ಮಾಡ್ತೀಯೋ ಮಾಡ್ಕೋ’ ಎಂದುಬಿಟ್ಟರು. ಕಮಲಕ್ಕಗೆ ಆ ಸಂದರ್ಭದಲ್ಲಿ ಜಗಳವಾಡಲು ಸಮಯವಿರಲಿಲ್ಲ. ವಾಜಿಯನ್ನು ಓಡು ನಡಿಗೆಯಲ್ಲಿ ಮನೆಗೆ ಕರೆದುಕೊಂಡು ಬಂದಳು. ತಮ್ಮ ಮನೆಯ ಬಾವಿಯಲ್ಲಿ ತನ್ನನ್ನು ತಡೆಯುವರ್ಯಾರು? + +ತಾನೇ ಬಾವಿಯ ಗಾಲಿಗೆ ಹಗ್ಗ ಹಾಕಿ, ಒಂದು ಚೂರೂ ನೀರಿರದಂತೆ ಒರೆಸಿದ ತಾಮ್ರದ ಕೊಡಕ್ಕೆ ಕುಣಿಕೆಯನ್ನು ಕಟ್ಟಿ, `ಬಡ ಬಡ ಸೇದಿ ಮೂರು ಕೊಡ ನೀರು ಹಾಕ್ಕೋ, ಅಲ್ಲಾಗ್ಲೇ ಹೊತ್ತಾಗಿ ಹೋಗ್ಯದೆ’ ಎಂದು ಅವಸರಿಸಿದಳು. ವಾಜಿ ಸಲೀಸಾಗಿ ಬಾವಿಯ ತಳದತನಕ ಕೊಡವನ್ನು ಬಿಟ್ಟು ತುಂಬಿಸಿದ. ಆದರೆ ತುಂಬಿದ ಕೊಡವನ್ನು ಎಳೆಯಲು ಪ್ರಯತ್ನಿಸಿದಾಗಲೇ ಅದು ಹೆಣ ಭಾರವಾಗಿದೆ ಎಂದು ಗೊತ್ತಾದದ್ದು. ಎಷ್ಟೇ ತಿಣುಕಿದರೂ ಆ ತುಂಬಿದ ಕೊಡವನ್ನು ಮೇಲೆತ್ತಲಾಗಲಿಲ್ಲ. + +`ಅಮ್ಮಾ, ಬಾಳ ಭಾರ ಅದೆ. ಎಳೀಲಿಕ್ಕಾಗ್ತಾ ಇಲ್ಲ’ ಎಂದು ಗೋಗರೆದ. ಕಮಲಕ್ಕ ಇದನ್ನು ನಿರೀಕ್ಷಿಸಿರಲಿಲ್ಲ. ಅವಸರದಲ್ಲಿ ಕೈಗೆ ಸಿಕ್ಕ ಕೊಡವನ್ನೇ ಕುಣಿಕೆಗೆ ಕಟ್ಟಿ ಬಿಟ್ಟಿದ್ದಳು. ಈಗ ಮಾಡುವದಾದರೂ ಏನು? ಹೆಂಗಸಾದ ತಾನು ಅವನಿಗೆ ಮಡಿ ನೀರು ಸೇದಿ ಸ್ನಾನ ಮಾಡಿಸುವಂತಿಲ್ಲ. ರಾಯರ ಸೇವೆಗೆ ಹೆಂಗಸರ ಮಡಿ ಸಲ್ಲುವುದಿಲ್ಲ. ಮನೆಯಲ್ಲಿ ಬೇರೆ ಗಂಡಸರ್ಯಾರೂ ಇಲ್ಲ, ಎಲ್ಲರೂ ಮಠಕ್ಕೆ ಹೋಗಿದ್ದಾರೆ. + +`ಹಂಗೆ ಒಂಚೂರು ಶಕ್ತಿ ಹಾಕಿ ಎಳಿಯಪ್ಪಾ, ಬರ್ತದೆ’ ಎಂದು ಹುರಿದುಂಬಿಸಿದಳು. ವಾಜಿ ಪ್ರಯತ್ನಿಸಿದನಾದರೂ ಸಾಧ್ಯವಾಗಲಿಲ್ಲ. ಈಗಾಗಲೇ ಕೊಡ ತುಂಬಿರುವದರಿಂದ ಅದರಲ್ಲಿನ ನೀರನ್ನು ಚೆಲ್ಲುವಂತೆಯೂ ಇಲ್ಲ. ಕಮಲಕ್ಕಗೆ ಬೇರೆ ದಾರಿಯಿಲ್ಲದೆ ತಾನೇ ಹಗ್ಗಕ್ಕೆ ಕೈ ಹಾಕಿ ಕೊಡವನ್ನು ಮೇಲೆ ತಂದಳು. + +ಮತ್ತೆ ಮನೆಯೆಲ್ಲಾ ಹುಡುಕಾಡಿದರೂ ತಾಮ್ರದ ಬಿಂದಿಗೆಯಿರಲಿಲ್ಲ. ಬರೀ ದೊಡ್ಡ ದೊಡ್ಡ ಕೊಡಗಳಿದ್ದವೇ ಹೊರತು, ಚಿಕ್ಕ ಬಿಂದಿಗೆ ಇರಲಿಲ್ಲ. ಇದ್ದ ಒಂದು ಸಣ್ಣ ಬಿಂದಿಗೆಯನ್ನು ಮಠಕ್ಕೆ ಒಯ್ದು ಬಿಟ್ಟಿದ್ದರು. ಕಮಲಕ್ಕ ಕೈಗೆ ಸಿಕ್ಕ ತಾಮ್ರದ ತಂಬಿಗೆಯನ್ನೇ ವಾಜಿಗೆ ಕೊಟ್ಟಳು. ವಾಜಿ ತಂಬಿಗೆಯನ್ನು ಬಾವಿಗೆ ಬಿಟ್ಟು ಸೇದಿದನಾದರೂ, ಒಂದು ತಂಬಿಗೆಯ ನೀರು ತುಂಬಾ ಸ್ವಲ್ಪವಾಯ್ತು. ಪೂರ್ತಿ ಮೈಯೆಲ್ಲಾ ತೊಯ್ಯಲು ಕನಿಷ್ಟ ಹದಿನೈದು ಬಾರಿಯಾದರೂ ತಂಬಿಗೆಯನ್ನು ಬಾವಿಯಿಂದ ಎಳೆಯಬೇಕಾಯ್ತು. ಕಡೆ ಕಡೆಗಂತೂ ಅವನ ಕೈ ಸೋತು ಹೋಗಿ, ಹಗ್ಗವನ್ನು ಎಳೆದದ್ದರಿಂದ ಅಂಗೈ ಕೆಂಪಗಾಗಿ ಉರಿಯಲಾರಂಭಿಸಿತ್ತು. ಅದಾಗಲೇ ಹೊತ್ತು ಮೀರಲಾರಂಭಿಸಿದ ಕಾರಣ ಕಮಲಕ್ಕ ಚಡಪಡಿಸಲಾರಂಭಿಸಿದಳು. ಅಲಂಕಾರ ಬ್ರಾಹ್ಮಣರ ಊಟ ಮುಗಿದೇ ಹೋಗಿರುತ್ತೋ ಏನೋ ಎಂಬ ಅನುಮಾನ ಪ್ರಾರಂಭವಾಯ್ತು. ಕಡೆಯ ಪಕ್ಷ ವಾಜಿ ಮೊಸರನ್ನವನ್ನಾದರೂ ಬಡಿಸಿದರೂ ಸಾಕು ಎಂದುಕೊಂಡಳು. + +ಮಧ್ಯಾಹ್ನದ ರಣ ರಣ ಬಿಸಿಲಿನಲ್ಲಿ, ಕಾವಲಿಯಂತೆ ಕಾದ ನೆಲದ ಮೇಲೆ ವಾಜಿಯನ್ನು ಬರಿಗಾಲಿನಿಂದ ಮಠಕ್ಕೆ ಕರೆದುಕೊಂಡು ಬರುವ ವೇಳೆಗೆ ಕಮಲಕ್ಕನ ಅನುಮಾನ ನಿಜವಾಗಿಹೋಯ್ತು. ಆಗಲೇ ಸಾರ್ವಜನಿಕರ ಊಟಕ್ಕೆ ಪ್ರಾರಂಭವೆಂಬಂತೆ `ವೆಂಕಟರಮಣ ಗೋವಿಂದ, ಗೋವಿಂದ…’ ಎಂದು ಕಿರುಚಿದ್ದು ಕಿವಿಗಪ್ಪಳಿಸಿತು. ಅಲಂಕಾರ ಬ್ರಾಹ್ಮಣರು ತಿನ್ನದೇ ಚೆಲ್ಲಿದ್ದ ಮಂಡಿಗೆ, ಚಕ್ಕುಲಿ, ಪೇಣಿ, ರವೆ ಉಂಡೆ, ಮೈಸೂರು ಪಾಕು, ಬೇಸನ್ನು ಮುಂತಾದವುಗಳನ್ನು ಅವರ ಹೆಂಡಂದಿರು ತೆಗೆದುಕೊಳ್ಳುತ್ತಿದ್ದರು. ಅವುಗಳನ್ನು ರಾಯರ ಪ್ರಸಾದವೆಂದು ಸ್ವೀಕರಿಸಲು ಹೊರಗಡೆ ಎಷ್ಟೋ ಭಕ್ತಾದಿಗಳು ಕಾಯುತ್ತಿದ್ದರು. ಕೆಲವೊಂದು ಹೆಂಗಸರು ತಮ್ಮ ಎಳೆಯ ಕಂದಮ್ಮಗಳ ಮೈಮೇಲಿನ ಬಟ್ಟೆಗಳನ್ನೆಲ್ಲಾ ಬಿಚ್ಚಿ, ಅಲಂಕಾರ ಬ್ರಾಹ್ಮಣರ ಎಂಜಲೆಲೆಯಲ್ಲಿ ಹೊರಳಾಡಿಸಿ ಮುಂದೆ ಎಂದೆಂದೂ ಆ ಕಂದಮ್ಮಗಳಿಗೆ ಚರ್ಮ ವ್ಯಾಧಿ ಬರದಂತೆ ರಾಯರ ಅನುಗ್ರಹ ಪಡೆಯಲು ಸಿದ್ಧರಾಗಿದ್ದರು. + +ಕಮಲಕ್ಕ ಮಡಿಯಲ್ಲಿದ್ದ ವಾಜಿಯನ್ನು ತಬ್ಬಿಕೊಂಡು, ಅವನನ್ನು ಮೈಲಿಗೆ ಮಾಡಿ `ಮೋಸ ಮಾಡಿದ್ರಲ್ಲೋ ವಾಜಿ’ ಅಂತ ಅತ್ತುಬಿಟ್ಟಳು. ಗೋಪಣ್ಣಗೆ ಆ ದೃಶ್ಯವನ್ನು ನೋಡಲಾಗಲಿಲ್ಲ. ರಾಧಕ್ಕಗೂ ಹೊಟ್ಟೆಯಲ್ಲಿ ಸಂಕಟವಾಯ್ತು.`ಕಮ್ಲಿ, ಯಾಕೆ ಅಸಮಾಧಾನ ಆಗ್ತಿ ಬಿಡು. ಹೆಂಗೂ ಮುಂದಿನ ವರ್ಷ ಆರಾಧನೆ ಬಂದೇ ಬರ್ತದಲ್ಲ, ಆಗ ವಾಜಿ ಕೈಲಿ ಸೇವಾ ಮಾಡಿಸೋಣಂತೇಳು’ ಎಂದು ಗೋಪಣ್ಣ ಹೇಳಿದ.`ಕಮಲಕ್ಕಾ, ಸಮಾಧಾನ ಮಾಡ್ಕೋ. ಆದಿದ್ದಾಯ್ತು, ಈಗೇನು ಮಾಡ್ಲಿಕ್ಕದೆ? ನಡಿ, ಊಟ ಮಾಡ್ವಂತಿ. ಕೂಸು ವಾಜಿ ಕೂಡಾ ಹಸ್ಗೊಂಡದೆ. ಆಗ್ಲೇ ಮೂರು ಗಂಟ್ಯಾಯ್ತು’ ಅಂತ ರಾಧಕ್ಕನೂ ಸಮಾಧಾನದ ಮಾತುಗಳನ್ನಾಡಿದಳು. + +ಆದರೆ ಕಮಲಕ್ಕ ಸಮಾಧಾನದ ನುಡಿಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿರಲಿಲ್ಲ. ಕಣ್ಣುಗಳನ್ನು ಒರೆಸಿಕೊಂಡು, ನಿರ್ಧಾರದ ಧ್ವನಿಯಲ್ಲಿ, ವಾಜಿಯ ಕೈ ಹಿಡಿದು `ನಡಿಯೋ ಹೋಗಾಣ’ ಅಂತ ಎಳೆದುಕೊಂಡು ಹೊರಟೇಬಿಟ್ಟಳು. `ಎಲ್ಲಿಗ್ಹೊಂಟಿ ಕಮ್ಲೀ’ ಅಂತ ಗೋಪಣ್ಣ ಕೂಗಿದರೂ ಓಗೊಡಲಿಲ್ಲ. ಕಮಲಕ್ಕನನ್ನು ಕೈ ಹಿಡಿದು ನಿಲ್ಲಿಸಬೇಕೆಂದರೂ, ತಾನು ಮಡಿಯಲ್ಲಿದ್ದುದು ನೆನಪಾಗಿ ಗೋಪಣ್ಣ ಸುಮ್ಮನಾಗಿಬಿಟ್ಟ.ವಾಜಿಯನ್ನು ದರದರನೆ ಎಳೆದುಕೊಂಡು ಮನೆಗೆ ಬಂದ ಕಮಲಕ್ಕ ತನ್ನ ಹಾಗೂ ವಾಜಿಯ ಬಟ್ಟೆಗಳನ್ನು ಗಂಟು ಕಟ್ಟಿಕೊಂಡಳು.`ವಾಜಿ, ಬಳ್ಳಾರಿಗ್ಹೋಗೋಣ. ಇಲ್ಲಿ ಬ್ಯಾಡ’ ಎಂದಳು.`ಹಸಿವಾಗ್ಲಿಕ್ಹತ್ತದೆ. ಊಟ ಮಾಡಿ ಹೋಗಾಣ’ ವಾಜಿ ಹೆದರಿಕೆಯ ಧ್ವನಿಯಲ್ಲಿ ಹೇಳಿದ.`ಇಲ್ಲಿ ಬ್ಯಾಡ. ಬಳ್ಳಾರಿಗ್ಹೋಗಿ ಅಡಿಗಿ ಮಾಡ್ಕೊಂಡು ಊಟ ಮಾಡಾಣ. ಈವೊತ್ತು ಏಕಾದಶಿ ಅಂದ್ಕೊ’ ಎಂದುಬಿಟ್ಟಳು. + +ಸರಿಯಾಗಿ ಅದೇ ಸಮಯಕ್ಕೆ ಹಿತ್ತಲಿನಲ್ಲಿ ಸದ್ದಾಯ್ತು. ಯಾರೋ ಹಿತ್ತಲಿನ ಬೇಲಿಯ ಬಾಗಿಲನ್ನು ತೆರೆಯುತ್ತಿರುವಂತೆ ಭಾಸವಾಯ್ತು. ಕಮಲಕ್ಕ ಹಿತ್ತಲಿಗೆ ಹೋದಳು. ವಾಜಿಯೂ ಹಿಂಬಾಲಿಸಿದ. ಅಲ್ಲಿ ಬೆಳಿಗ್ಗೆ ವಾಜಿಯಿಂದ ಕಲ್ಲಿನೇಟು ತಿಂದ ಹಂದಿ ಗೇಟನ್ನು ನೂಕುತ್ತಿತ್ತು. ಕಮಲಕ್ಕಗೆ ಅದೇನನ್ನಿಸಿತೋ ಏನೋ, ಸೀದಾ ಹೋಗಿ ಗೇಟನ್ನು ತೆರೆದುಬಿಟ್ಟಳು. ಹಂದಿ ಒಳ ನುಗ್ಗಿ ಮಲ್ಲಿಗೆಯ ಹಂದರದ ಕೆಳಗೆ ಸ್ವಲ್ಪ ಮಣ್ಣು ಕೆದರಿ ಕುಳಿತುಕೊಂಡುಬಿಟ್ಟಿತು. ಕಮಲಕ್ಕ ಆ ಹಂದಿಯನ್ನು ನೋಡಿ `ರಾಯರೆ, ಹಂದಿ ಹಡವಣಿಗಿ ಸುಸೂತ್ರ ಆಗ್ಲಪ್ಪ’ ಅಂತ ಮನಸ್ಸಿನಲ್ಲೇ ಪ್ರಾರ್ಥಿಸಿ ವಾಜಿಯ ಕೈ ಹಿಡಿದುಕೊಂಡು ಬಸ್ ನಿಲ್ದಾಣದ ಕಡೆ ಹೊರಟುಬಿಟ್ಟಳು. ಆದರೆ ಹಸಿವು ಮತ್ತು ಅವಮಾನಗಳಿಂದ ಕಂಗಾಲಾದ ವಾಜಿ ಈಗ ಬಸ್ಸಿನಲ್ಲಿ ಸೀಟನ್ನು ಹಿಡಿಯುತ್ತಾನೆಂಬುದು ಸಂಶಯದ ವಿಷಯ. + +ವಸುಧೇಂದ್ರ ಮೂಲತಃ ಬಳ್ಳಾರಿ ಜಿಲ್ಲೆಯ ಸಂಡೂರಿನವರು. ಸುಮಾರು 20 ವರ್ಷಗಳ ಕಾಲ ಸಾಫ್ಟ್ ವೇರ್ ಕ್ಷೇತ್ರದಲ್ಲಿ ಕೆಲಸ ಮಾಡಿರುವ ವಸುಧೇಂದ್ರರು ಸಧ್ಯ ಬರವಣಿಗೆಯಲ್ಲಿ ಹಾಗೂ ತಮ್ಮ ಛಂದ ಪುಸ್ತಕ ಪ್ರಕಾಶನದ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಮನೀಷೆ, ಯುಗಾದಿ, ಚೇಳು, ಹಂಪಿ ಎಕ್ಸ್ ಪ್ರೆಸ್, ಮೋಹನಸ್ವಾಮಿ, ವಿಷಮ ಭಿನ್ನರಾಶಿ, ಕೋತಿಗಲು, ನಮ್ಮಮ್ಮ ಅಂದ್ರೆ ನಂಗಿಷ್ಟ, ರಕ್ಷಕ ಅನಾಥ, ವರ್ಣಮಯ, ಐದು ಪೈಸೆ ವರದಕ್ಷಿಣೆ, ಹರಿಚಿತ ಸತ್ಯ, ಮಿಥುನ, ತೇಜೋ ತುಂಗಭದ್ರಾ ಸೇರಿದಂತೆ ಹಲವಾರು ಕೃತಿಗಳನ್ನ ರಚಿಸಿದ್ದಾರೆ. \ No newline at end of file diff --git a/Kenda Sampige/article_498.txt b/Kenda Sampige/article_498.txt new file mode 100644 index 0000000000000000000000000000000000000000..fa5226a0daf80ea69c7c5817b1c019c20460c0cd --- /dev/null +++ b/Kenda Sampige/article_498.txt @@ -0,0 +1,43 @@ +ಎಪ್ಪತ್ತೈದು ದಾಟಿ ಎಂಭತ್ತರ ಸನಿಹ ತಲುಪಿದ ಯುಮುನಜ್ಜಿ ಇಂದು ಮುಂಜಾನೆಯಿಂದ ಈ ಮನೆಯಲ್ಲಿ ತನ್ನ ಹಕ್ಕನ್ನು ದಿನಕ್ಕಿಂತ ಹೆಚ್ಚಿನ ಪ್ರಮಾಣದಲ್ಲೇ ಚಲಾಯಿಸುವ ಆವೇಶ ತುಂಬಿಕೊಂಡವಳಂತೆ ಕಾಣುತ್ತಿದ್ದಳು. ಹೊರ ಥೆಣೆಯಲ್ಲಿ ಎಡಬದಿಗೆ ಉತ್ತರಾಭಿಮುಖವಾಗಿ ಕೂತು ದೊಡ್ಡಮ್ಮನ ತಿಥಿಗೆಂದು ಶ್ರದ್ಧೆಯಿಂದ ತಯಾರಿ ನಡೆಸುತ್ತಿದ್ದ ಮಗ ಸದಾನಂದನ ಬಳಿ ಹೋಗಿ ನಿಂತವಳೇ ‘ನಿನ್ನ ದೊಡ್ಡಮ್ಮನಿಗೆ ಕೆಸುವಿನ ಪತ್ರೊಡೆ ಎಂದರೆ ಪಂಚ ಪ್ರಾಣವಾಗಿತ್ತು. ಎಷ್ಟು ಹೇಳಿದರೂ ನಿನ್ನ ಹೆಂಡತಿ ಕೆಸುವಿನ ಓಳಿಯ ಬದಿಗೆ ಹೋದಂತೆಯೇ ಕಾಣಲಿಲ್ಲ, ನೀನಾದರೂ ಸ್ವಲ್ಪ ಹೇಳೋ’ ಎಂದಿದ್ದಾಳೆ. ‘ಯಾಕಷ್ಟು ಅವಸರ? ಮಾಡುತ್ತಾಳೆ ಬಿಡು’ ಅಂತ ಸದಾನಂದ ತನ್ನ ಎಂದಿನದೇ ಆದ ತಣ್ಣಗಿನ ದನಿಯಲ್ಲಿ ಉಸುರಿದ. + +ಬೆಳಿಗ್ಗೆ ಎದ್ದಾಗಿನಿಂದ ಒಂದೇ ಸಮ ಒಲೆಯ ಮುಂದೆ ಗುದ್ದಾಡಿ ಹೈರಾಣಾಗಿ ಹೋದ ನಲ್ವತ್ತೈದರ ಶಾಲಿನಿ, ಒಳ ಬಂದ ಗಂಡನ ಹತ್ತಿರ, ‘ಪತ್ರೊಡೆ ಮಾಡಲು ಇವತ್ತು ಸಾಧ್ಯವೇ ಇಲ್ಲ, ಅದೇನದು ಯಾವ ವರ್ಷವೂ ಇಲ್ಲದ್ದು, ಈ ವರ್ಷ ಮಾತ್ರ ನಿಮ್ಮ ಅಮ್ಮನಿಗೆ ಜ್ಞಾಪಕಕ್ಕೆ ಬಂದದ್ದು?’ ಎಂದು ಗುನುಗುನಿಸಿ, ರವೆ ಪಾಯಸಕ್ಕೆಂದು ಎಳೆಯ ತೆಂಗಿನ ಕಾಯಿ ಹೆಕ್ಕಿ ಒಡೆಯತೊಡಗಿದಳು. ‘ಅವಶ್ಯವಿದ್ದಷ್ಟೇ ಆಗಲಿ ಈಗ, ಸುಮ್ಮನೆ ಒಂದೂ ಮತ್ತೊಂದು ಅಂತ ಕೆಲಸ ಬೆಳೆಸಿಕೊಂಡರೆ, ಅಲ್ಲಿ ಭಟ್ಟರು ಬಂದರೂ ಇಲ್ಲಿ ಅಡುಗೆ ಮುಗಿಯುವುದಿಲ್ಲ` ಎಂದು ದನಿಯೆತ್ತರಿಸಿ ಹೇಳುತ್ತ, ಶಾಲಿನಿ ಉದ್ದಿನ ಅಂಬೊಡೆಗೆ ಅರೆಯುವುದಿನ್ನೂ ಬಾಕಿ ಉಳಿದಿದೆಯೆಂದು ನೆನಪು ಮಾಡಿಕೊಂಡು ಗಡಿಬಿಡಿಗೆ ಬಿದ್ದಳು. + +‘ಪುರೋಹಿತರು ಬರುವುದು ಒಂದೋ ಒಂದೂವರೆಯೋ ಆದೀತು, ಅಷ್ಟರೊಳಗೆ ಬೇಳೆಯ ತೊವ್ವೆಗೊಂದು ಒಣಮೆಣಸಿನ ವಗ್ರಣೆ ಹಾಕಿಬಿಡು, ವಗ್ಗರಣೆಯ ಮೆಣಸು ತುಸು ಕರ್ರಗೆ ಹುರಿಯಲಿ, ಅದನ್ನೇ ಅನ್ನದಲ್ಲಿ ನುರಿದೂ ನುರಿದೂ ಉಣ್ಣುತ್ತಿತ್ತದು’ ಎಂದು ಅಡಿಗೆ ಖೋಲಿಯ ಮೆಟ್ಟಿಲಲ್ಲೇ ಕೂತು ಯಮುನಜ್ಜಿ ಆಜ್ಞಾಪಿಸುತ್ತಿದ್ದಾಗ ಆಗಲೇ ಹನ್ನೆರಡು ಹೊಡೆದಿತ್ತು. ಪಡುವಲಕಾಯಿಯ ಗೊಜ್ಜಿಗೆ ಅರೆಯಲು ಹಿಡಿದು ಕೂತ ಶಾಲಿನಿಗೆ ರೇಗಿ ಹೋಯಿತು. + +ಯಮುನಜ್ಜಿ ಸವತಿ ಗಂಗಜ್ಜಿ ಸತ್ತು ಮೂವತ್ತು ವರ್ಷಗಳೇ ಕಳೆದಿವೆ. ವರ್ಷಂಪ್ರತಿ ಬರುವಂತೆ ವಟಸಾವಿತ್ರಿ ಹುಣ್ಣಿಮೆಯ ಈ ಮಿಥಿಗೇ ಅವಳ ಶ್ರಾದ್ದದ ದಿನ, ತಾನು ಹೋಗುತ್ತಿದ್ದೇನೆ ಅಂತ ಹೇಳಿ ಸತ್ತ ಗಂಗಜ್ಜಿ ಅವಳು. ತನ್ನ ಆ ಅಕ್ಕನಿಗೆ ಯಾವ ಅಡಿಗೆಗೆ ಏನೇನು ಹಾಕಿ ರುಚಿಕಟ್ಟಾಗಿ ಮಾಡಿದರೆ, ಸೇರುತ್ತಿತ್ತು ಎಂಬುದನ್ನೆಲ್ಲ ಯಮುನಜ್ಜಿ ತನ್ನ ಸವತಿಯ ಜೊತೆಗಿನ ಅನೇಕ ವರ್ಷಗಳ ಕೂಡು ಸಂಸಾರದಲ್ಲಿ ಕಂಡುಕೊಂಡ ಅನುಭವವನ್ನು ನೆನಪಿಸುತ್ತ ಕನವರಿಸುತ್ತಿದ್ದಾಳೆ. + + + +ದೊಡ್ಡ ಅರೆಯುವ ಕಲ್ಲಿನಲ್ಲಿ ಇಷ್ಟೇ ಇಷ್ಟು ಪಡುವಲಕಾಯಿ ಗೊಜ್ಜು ಅರೆಯಲು ಹಾಕಿಕೊಂಡು ಕೂತಿದ್ದು, ಅದು ಅತ್ತಿತ್ತ ಸಿಡಿಯುವ ರಭಸಕ್ಕೆ ಅಸಮಾಧಾನಗೊಂಡಿದ್ದ ಶಾಲಿನಿ, ‘ಅವಸರ ಮಾಡಿದರೆ ನನ್ನ ಕೈಲಾಗೊಲ್ಲ, ಹೊರಗೆ ಹೋಗಿ ನೀವು’ ಎಂದು ಅತ್ತೆಯ ಮುಖದ ಮೇಲೆ ಹೊಡೆದಂತೆ ಹೇಳಿಬಿಟ್ಟಳು. ಅದೇ ಅವಮಾನದ ಸೆಡವು ಹೊತ್ತ ಯುಮುನಜ್ಜಿ ‘ಈಗೀಗ ಬಂದು ಹೊಕ್ಕವರಿಗೆಲ್ಲ ಎಂಥ ಅಹಂಕಾರ ನೋಡು’ ಎಂದು ಗೊಣಗುತ್ತ ಹೊರ ನಡೆದಳು. ‘ಪ್ರತಿಸಲದ ತಿಥಿಗೂ ಏನಾದರೊಂದು ಇದ್ದದ್ದೇ ಇವರದು` ಎಂದುಕೊಳ್ಳುತ್ತಲೇ ಶಾಲಿನಿ, ಗೊಜ್ಜನ್ನು ಪಾತ್ರೆಯಲ್ಲಿ ತೆಗೆಯುತ್ತ ಅರೆಯುವ ಕಲ್ಲನ್ನು ಅಗತ್ಯಕ್ಕಿಂತ ಹೆಚ್ಚೇ ಗಡಗಡ ಸದ್ದು ಮಾಡಿ ತೊಳೆದಳು. ಅತ್ತೆ ಸೊಸೆಯ ಮಧ್ಯೆ ತನ್ನದೊಂದು ಯಾಕೆ ರಾಮಾಯಣ ಅಂತ ಯೋಚಿಸುತ್ತ ಸದಾನಂದ ಏನೊಂದೂ ಕೇಳಿಸಿಕೊಳ್ಳದವನಂತೆ, ಗಂಟೆ ಆರತಿಗಳನ್ನು, ಅಗರಬತ್ತಿ ಅರಿಸಿಣಕೊಂಬುಗಳನ್ನು ಹೂವಿನತಟ್ಟೆ ಹಾಗೂ ಮಣೆಗಳನ್ನೂ ಜೋಡಿಸಿಟ್ಟು, ಎಲ್ಲ ಸರಿಯಾಗಿದೆಯೇ ಅಂತ ಇನ್ನೊಮ್ಮೆ ಪರೀಕ್ಷಿಸಿದ. ಏನೋ ನೆನಪಾದವನಂತೆ ಥಟ್ಟನೆ ಎದ್ದು, ‘ಶಾಲೀ, ಸ್ವಲ್ಪ ನವಧಾನ್ಯ ಹಾಕಿ ತಂದಿಡು ಭಟ್ಟರಿಗೆ ಕೊಡಲು’ ಎಂದು ಗೊಗರೆಯುವ ಧಾಟಿಯಲ್ಲಿ ಹೇಳಿದ. ‘ನನ್ನ ಕೈ ಖಾಲಿ ಇಲ್ಲ ಇಲ್ಲಿ, ನೀವೇ ನೋಡಿ ತೆಗೆದಿಡಿ’ ಶಾಲಿನಿ ಒಳಗಿಂದಲೇ ಗುಡುಗು ಹಾಕಿದಳು. + +ಯಮುನಜ್ಜಿಯ ಮೈಯೆಲ್ಲ ಉರಿದು ಹೋಯಿತು. ಪತ್ರೊಡೆಯ ಸಂಗತಿಯನ್ನು ಈ ಸೊಸೆಯ ಬಳಿ ಅಂಗಲಾಚುವಂತೆಯೇ ಇಲ್ಲ. ಅಸಹಾಯಕತೆ ಸುತ್ತಿಕೊಳ್ಳತೊಡಗಿದಂತೆ ಯಮುನಜ್ಜಿ, ಬಾವಿಯ ಬದಿಯ ಹೊಂಡದಲ್ಲಿ ಬೆಳೆಸಿದ್ದ ಕೆಸುವಿನ ಓಳಿಯ ಬದಿಗೆ ತಾನೇ ಬಿರ್ರನೆ ನಡೆದಳು. ಐದಾರು ದೊಡ್ಡ ಬಲಿತ ಎಲೆಗಳನ್ನು ಕೈಯಲ್ಲೇ ಮುರಿದುಕೊಂಡು ಎದೆಗವುಚಿ ಹಿಡಿದು ಮನೆ ತಲುಪುವಷ್ಟರಲ್ಲಿ ಮೈ ಕೈಯೆಲ್ಲ ತುರಿಕೆಯೆದ್ದು ಥಖಧಿಮಿ ಕುಣಿದಾಡುವಂತಾಗಿಬಿಟ್ಟಿತು. ‘ನಿನಗೆ ಬೇಡದ ಉಸಾಬರಿ ಯಾಕಾಗಿತ್ತು? ನೋಡೀಗ’ ಎನ್ನುತ್ತ ಸದಾನಂದ ತುರಿಕೆ ಬಂದೆಲ್ಲೆಲ್ಲ ತಿಕ್ಕಿಕೊಳ್ಳುವಂತೆ ಹುಣಸೆ ಉಪ್ಪುಗಳನ್ನು ನೀಡಿದ. ಹುಣಸೆ ಹುಳಿಯಲ್ಲೇ ಮೈ ಕೆರೆದುಕೊಳ್ಳುತ್ತ, ‘ಇಂದು ಪತ್ರೊಡೆ ಮಾಡಿ ಪಿಂಡದ ನೈವೇದ್ಯಕ್ಕೆ ಬಡಿಸದಿದ್ದರೆ ನಾನು ಯಮುನೆಯೇ ಅಲ್ಲ, ಸವತಿಗಾಗಿ ಅಷ್ಟೂ ಮಾಡದಿದ್ದರೆ ನಾನಿದ್ದೇನು ಪ್ರಯೋಜನ?’ ಎಂದು ಪ್ರತಿಜ್ಞೆ ಗೈದಂತೆ ಹೇಳಿ, ಹುಶ್, ಹುಶ್ ಎಂದು ಅಗ್ಗು ತೆಗೆಯುತ್ತಲೇ ಯಮುನಜ್ಜಿ ಸೊಂಟ ಬಗ್ಗಿಸಿ ಒಂದು ಬಕೇಟಿಗೆ ಕೊಡದ ನೀರು ಬಗ್ಗಿಸಿ, ಕೆಸುವಿನ ಎಲೆಗಳನ್ನು ತೊಳೆಯಲು ಮುಂದಾದಳು. + +‘ಆ ಪತ್ರೊಡೆಗೆ ಎಂಥದು ಅವಸರ ಈಗ? ನಾನು ಅನ್ನಕ್ಕಿಡಬೇಕು, ಭಟ್ಟರು ಬರುವ ಹೊತ್ತಾಯ್ತು, ಅನ್ನ ಬಿಸಿಯಿದ್ದರೆ ಪಿಂಡ ಕಟ್ಟುವಾಗ ಕೈ ಸುಡ್ತದೆ, ಸ್ವಲ್ಪ ಮುಂಚೇ ಅನ್ನ ಮಾಡಿ ತಣಿಯಲು ಹಾಕಿಡು ಅಂತ ಇವರು ಸಿಟ್ಟು ಮಾಡ್ತಾರೆ` ಎಂದು ಉರಿ ಉರಿ ಮುಖ ಹೊತ್ತು ಪುನಃ ಸಿಡುಕಿದ್ದಾಳೆ ಶಾಲಿನಿ. ಯಮುನಜ್ಜಿಯ ರೋಷ ಎಲ್ಲಿತ್ತೋ, ಎಷ್ಟು ದಿನದ್ದು ಬಾಕಿಯಿತ್ತೋ, ಒಮ್ಮೆಗೆ ಅದು ಏರಿ ಬಂದಂತೆ ‘ಸತ್ತು ಹೋದವಳು ನನ್ನ ಅಕ್ಕ, ಸವತಿಯಾಗಿದ್ದರೂ ಅದು ಒಂದು ದಿನವೂ ನಿನ್ನಂತೆ ಕಾಡಲಿಲ್ಲ, ನಾನು ಮತ್ತು ಅದು ಆಳಿದ ಮನೆ ಇದು, ನೀನು ಈಗ ಬಂದವಳು ಎಲ್ಲವೂ ನನ್ನ ಮಗ ಕೊಟ್ಟ ಸಲಿಗೆ’ ಯಮುನಜ್ಜಿಯ ದನಿ ಏರುತ್ತ ಸಾಗಿದ್ದು ನೋಡಿ, ‘ಎಲ್ಲ ಗೊತ್ತಿದೆ ನಂಗೆ, ಈಗ ದೊಡ್ಡದಾಗಿ ಹೇಳಲು ಬರಬೇಡಿ, ಪಾಪ ಅವರನ್ನು ಕೆಲಸದಾಳಿಗಿಂತ ಕಡೆಯಾಗಿ ಕಂಡಿದ್ದೀರಂತೆ ನೀವು’ ಎಷ್ಟು ಹೇಳಬಾರದೆಂದುಕೊಂಡರೂ ಎಂಥದೋ ಬಾಯಿ ತುರಿಕೆ ಎದ್ದು, ರಾಶಿ ದಿನಗಳಿಂದ ಮನಸ್ಸಿನಲ್ಲಿದ್ದ ಮಾತು ಹೇಳಿಯೇ ಬಿಟ್ಟಿದ್ದಳು ಶಾಲಿನಿ. + + + +ಶಾಲಿನಿಯ ಮಾತು ಹರಿತ ಬಾಣದಂತೆ ಎದೆ ಹೊಕ್ಕಿದ್ದೇ ಯಮುನಜ್ಜಿ ಕೈ ಕಾಲು ಸೋತಂತೆ ಬವಳಿ ಬಂದು ಬೀಳುವ ಹಾಗಾಗಿ ಅಲ್ಲೇ ಕುಸಿದು ಕೂತು, ‘ಅಯ್ಯೋ ಅಯ್ಯೋ ಯಾರು ಹೇಳಿದರೇ ಚಾಂಡಾಲಿ ನಿನಗಿದೆಲ್ಲ? ಅಯ್ಯೋ ಅಯ್ಯೋ ಎಂಥೆಂಥ ಕಷ್ಟ ಕಂಡಿದ್ದೇನೆ ಈ ಮನೆಯಲ್ಲಿ, ಏನಿತ್ತು ನಾನಿಲ್ಲಿ ಬಂದಾಗ? ಬರೀ ಮಣ್ಣಿನ ಗುಡಿಸಲು, ನನ್ನ ಮಗ ಗದ್ದೆ ಭಾಗಾಯತ ಅಂತ ಹಗಲೂ ರಾತ್ರಿ ದುಡಿದು ಈ ಹಂಚಿನ ಇಮಾರತು ಕಟ್ಟಿದ್ದು, ಹಾಗಾಗಿ ನಿಂಗೆ ನೆಲವೇ ಕಾಣೋದಿಲ್ಲ. ಅಯ್ಯೋ ಅಯ್ಯೋ ಬಾಯಿ ಮುಚ್ಕೊಂಡು ಪತ್ರೊಡೆಗೆ ಬೇಳೆ ನೆನೆಯಿಡು’ ಹೇಳುತ್ತ ಹೇಳುತ್ತ ಒಳಗೆಲ್ಲೋ ತತ್ತರ ನಡುಗಿ ಹೋದಳು ಯಮುನಜ್ಜಿ. ಏನಕ್ಕೋ ಒಳಬಂದ ಸದಾನಂದ ಹೆಂಡತಿಗಷ್ಟೇ ಕೇಳುವಂತೆ ‘ನಮ್ಮಮ್ಮನ ಬಾಯಲ್ಲಿ ಕೋಲು ಹಾಕಲು ಈ ದಿನವೇ ಆಗಬೇಕಿತ್ತೇ?’ ಎಂದು ಸಣ್ಣಗೆ ಗದರಿದ. + +ಈಗ ಮಾತಾಡಿ ಪ್ರಯೋಜನವಿಲ್ಲವೆಂಬಂತೆ ಶಾಲಿನಿ, ಒಲೆಯ ಬೆಂಕಿ ಮುಂದೂಡುತ್ತ, ಮರಳುತ್ತಿದ್ದ ಎಸರಿಗೆ ತೊಳೆದಿಟ್ಟಿದ್ದ ಅಕ್ಕಿ ಹೊಯ್ದಳು. ಹಸಿ ಕಟ್ಟಿಗೆ ಬೇರೆ ಜರಜರ ಬೆಂಕಿಯಾಗದೇ ಹೊಗೆಯಿಂದ ಉಸಿರುಕಟ್ಟಿಸಿದಂತಾಗುತ್ತಿತ್ತು. ಬೆಳಿಗ್ಗೆ ಎದ್ದು ಅರೆದಿಟ್ಟ ಉದ್ದಿನ ಹಿಟ್ಟಿಗೆ ಅರಿಸಿಣ ಬೆರಸಿ, ಉಪ್ಪು ಹಾಕಿ ತಿರುವಿ ಹಂಚನ್ನೆತ್ತಿದ ಶಾಲಿನಿ, ದೋಸೆ ಹೊಯ್ಯುತೊಡಗಿದ್ದೇ, ಯಮುನಜ್ಜಿಗೆ ತನ್ನ ಪತ್ರೊಡೆಯಿಂದು ತಯಾರಾಗುವುದಿಲ್ಲ ಎಂದು ಖಾತ್ರಿಯಾಗಿಬಿಟ್ಟಿತು. + +‘ಮಕ್ಕಳಿಲ್ಲದ ಈ ಮನೆಗೆ ಬೆಳಕು ಹಚ್ಚಲು ನನ್ನನ್ನು ತಂದದ್ದು ಅದೇ, ಮಹಾಸತಿ ಅದು, ಅಂಥ ತ್ಯಾಗವಂತಳ ತಿಥಿಗೆ ಎರಡು ಪತ್ರೊಡೆ ಮಾಡಿ ಹಾಕಲು ನನ್ನಿಂದಾಗಿಲ್ಲ ಅಂದರೆ ನಾನು ಯಾಕಿರಬೇಕು ಈ ಭೂಮಿಯಲ್ಲಿ` ಯಮುನಜ್ಜಿಯ ಸರಭರಾಟ ಇನ್ನೂ ಹೆಚ್ಚುತ್ತಲೇ ಇತ್ತು. ಎದ್ದು ಎತ್ತಲಾದರೂ ಓಡಿ ಹೋಗಿಬಿಡಬೇಕು ಎನ್ನುವಷ್ಟು ಒತ್ತಡವಾದದ್ದೇ ಹೊರ ಜಿಗಿದು ಬಂದ ಶಾಲಿನಿ, ‘ಸ್ವಲ್ಪ ಒಳಗೆ ಬನ್ನಿರಿಲ್ಲಿ, ಏನು ನಡೀತಿದೆ ನೋಡಿರಿಲ್ಲಿ, ಪದೇ ಪದೇ ತನ್ನ ಸವತಿಯ ಮಹಾ ತ್ಯಾಗದ ಗುಣಗಾನ ಮಾಡುವುದು ನೋಡಿ ಅವರು, ಅಂಥ ತ್ಯಾಗ ನನ್ನಿಂದಾಗಿಲ್ಲ ಅಂತಲೇ ಅವರು ಹೇಳುತ್ತಿರುವುದು’ ಅನ್ನುತ್ತ ನಡು ನಡುಗಿ ಹೊರಬಂದ ದನಿಯ ಹಿಂದೆಯೇ ಶಾಲಿನಿಗೆ ದುಃಖ ಉಮ್ಮಳಿಸಿ ಬಂತು. ‘ಅದು ವಿಷಯವೇ ಅಲ್ಲ, ಸುಮ್ಮನಿದ್ದು ಬಿಡು, ಇದ್ದುಬಿಡು ಸುಮ್ಮನೆ` ಎಂದು ರಮಿಸುತ್ತ ಸದಾನಂದ ಎಲ್ಲರಿಂದ ಬಿಡಿಸಿಕೊಳ್ಳುವಂತೆ ಆರಾಮ ಖುರ್ಚಿಯಲ್ಲಿ ಕೂತು, ಗಂಟುಬಿದ್ದ ಹೊಸ ಜನಿವಾರದ ಎಳೆಯನ್ನು ಹಿಡಿದು ನಿಧಾನ ಬಿಡಿಸತೊಡಗಿದ. + +‘ನಿನ್ನ ಬಳಿ ಆಗದಿದ್ದರೆ ಬಾಯ್ಬಿಟ್ಟು ಹೇಳ್ಬಿಡು, ನಾನೇ ಮಾಡುವೆ, ನನ್ನ ಕರ್ಮ ಅದು, ಎಲ್ಲ ನನ್ನ ಮಗ ಕೊಟ್ಟ ಸವಲತ್ತು ಇದು’ ಎಂದ ಯಮುನಜ್ಜಿ, ತೊಗರೀ ಬೇಳೆಯ ಡಬ್ಬ ಹುಡುಕ ತೊಡಗಿದಾಗ ಶಾಲಿನಿ, ಡಬ್ಬ ಇದ್ದ ಜಾಗೆ ಮಾತ್ರ ಹೇಳಲಾರೆನೆಂಬಂತೆ ಬಾಯ್ಮುಚ್ಚಿಕೊಂಡು, ಅತ್ತ ಒಂದು ಕಣ್ಣಿಟ್ಟೇ ಇತ್ತ ಬೆಂದ ಅನ್ನವನ್ನು ಬಾಗಲು ಹಾಕುವಾಗ, ಅದರ ಗಂಜಿ ಚೂರು ಕೈ ತಾಗಿ, ಉರಿವ ಬೆರಳನ್ನು ಸರಸರ ಝಾಡಿಸಿದಳು. ‘ಎಲ್ಲ ಗೊತ್ತಂತೆ, ಗೊತ್ತಿರೋದೇನು ಮಣ್ಣು? ಹೇಳಿಕೆ ಮಾತು ಕೇಳಿ ಕುಣಿತದೆ, ಪತ್ರೊಡೆ ಮಾಡೆಂದರೆ ಎಷ್ಟೆಲ್ಲ ಮಾತು ಅದು’ ಸೊಂಟ ನೆಟ್ಟಗೆ ಮಾಡಿ ನಿಂತು ಡಬ್ಬ ತಡಕಾಡುತ್ತಿದ್ದ, ಯಮುನಜ್ಜಿಯ ಮಿಂದ ತಲೆಯ ಮುಡಿಯಲ್ಲಿರುವ ತೆಳ್ಳಗಿನ ಕೂದಲು, ಗಂಟು ಹಾಕುತ್ತಲೇ ಮತ್ತೆ ಮತ್ತೆ ಬಿಚ್ಚಿಕೊಳ್ಳುತ್ತಿತ್ತು. ಅತ್ತೆ ಮಾಡೆಂದು ಒತ್ತಾಯಿಸುತ್ತಿದ್ದ ಪತ್ರೊಡೆಯನ್ನು ಮಾಡಲೇ ಕೂಡದೆಂದು, ಸೊಸೆ ಮಾಡಲು ಮನಸ್ಸು ಮಾಡದ ಪತ್ರೊಡೆಯನ್ನು ಮಾಡಿಯೇ ತೀರಬೇಕೆಂದು ಶಪಥ ಮಾಡಿದವರಂತೆ ಜಿದ್ದಿಗೆ ಬಿದ್ದಿದ್ದರು. + +ಇಬ್ಬರನ್ನೂ ಸುಮ್ಮನುಳಿಸುವ ಏಕೈಕ ಅಸ್ತ್ರವೆಂಬಂತೆ ಸದಾನಂದ ‘ಭಟ್ರು ಬಂದ್ರು ಭಟ್ರು’ ಎನ್ನುತ್ತ ಒಳಹೋಗಿ ‘ಅಮ್ಮನಿಗೆ ಹಸಿವಾಗಿದೆ, ದಿನಾ ಇಷ್ಟೊತ್ತು ಗಂಜಿ ಗಿಂಜಿ ಉಂಡು ಮಲಗಿರುತ್ತಿತ್ತು, ಮೊಸರಿದ್ದರೆ ಅದಕ್ಕೊಂದಿಷ್ಟು ಅವಲಕ್ಕಿ ಬೆರೆಸಿ ಕೊಡು’ ತಣ್ಣಗೆ ಹೆಂಡತಿಯ ಕಿವಿಯಲ್ಲಿ ಅಂದ. ‘ನೀವೇ ಚೂರು ಮಾಡಿ ಕೊಟ್ಟರಾಗದೇ?’ ಗಂಡನ ಮೇಲೆ ಹತ್ತಿಕೊಂಡೇ ಬಂದಳು ಶಾಲಿನಿ. ಸದಾನಂದ ಬಾಯಿ ಮುಚ್ಚಿಕೊಂಡು ಕಪಾಟಿನ ಸಾಲಿನಲ್ಲಿ ಅವಲಕ್ಕಿ ಡಬ್ಬ ತಡಕತೊಡಗಿದ. ಮೊಸರವಲಕ್ಕಿ ಹೊಟ್ಟೆ ಸೇರಿದ್ದೇ ಯಮುನಜ್ಜಿಯ ಕಿಚ್ಚು ಇದ್ದಲ್ಲೇ ತಣ್ಣಗಾಗುತ್ತ ನಡೆಯಿತು. + +ಹೊರಗೆ ಭಟ್ಟರು ಬಂದ ಸದ್ದು, ‘ಕಾಲಿಗೊಂದು ಚಂಬು ನೀರು ತಾರೇ ಯಜಮಾನತೀ’ ಕೂಗಿದ್ದು ಕೇಳಿತು. ಹಿತ್ತಲಿನ ಬಚ್ಚಲ ಹಿತ್ತಾಳೆ ತಂಬಿಗೆಯಲ್ಲಿ ನೀರು ತುಂಬಿಕೊಂಡು ಹೊರಬಾಗಿಲಿಗೆ ತಂದಿಟ್ಟಳು ಶಾಲಿನಿ. ಅದನ್ನು ಎತ್ತಿಕೊಂಡ ಭಟ್ಟರು ‘ಒಳಗೆ ನಿನ್ನ ಅಡಿಗೆ ಮುಗಿದಿದ್ದರೆ, ಹೊರಗೆ ನನ್ನ ಮಂತ್ರ ಶುರು ಮಾಡ್ತೆ` ಅಂದರು. ಈ ಮಧ್ಯೆ ಮೈಮೇಲೆ ಸಣ್ಣ ಹಲ್ಲಿ ಮರಿಯೊಂದು ಹರಿದು ಬಿತ್ತು ಎಂಬ ಸಂಶಯ ತಾಳಿದ ಯಮುನಜ್ಜಿ ಇನ್ನೊಮ್ಮೆ ಮಿಂದು ಬಂದಳು. ಬಚ್ಚಲಿನಿಂದ ಹೊರಬರುವಾಗಲೇ ಪತ್ರೊಡೆಯನ್ನು ಮರೆತಂತಿತ್ತು. ಹೊರ ಬಂದು ಕೂತ ಯಮುನಜ್ಜಿ ಭಟ್ಟರ ಹತ್ತಿರ ‘ನನ್ನ ಸವತಿ ಗಟ್ಟಿಗಿತ್ತಿ, ಒಂದು ಗಂಡಸಿನ ಹಾಗೆ ದುಡಿತ, ಎಲ್ಲ ಚೊಕ್ಕ ಪಕ್ಕ ವ್ಯವಹಾರ, ಕಳ್ಳ ಕಾಕರನ್ನೆಲ್ಲ ನಡುಗಿಸುತ್ತಿತ್ತು, ಮಾತು ಮಾತಿಗೆ ನಾನು ಮಾಡಿದ್ದು, ನಾನು ಬೆಳಸಿದ್ದು, ನಾನು ಕಷ್ಟಪಟ್ಟಿದ್ದು ಅಂತ ಹೇಳಿ ಹೇಳಿಯೇ ಹೋದಳು….’ ಅಂತೆಲ್ಲ ನೆನಪು ಮಾಡಿಕೊಂಡಳು. ಮಣೆಯ ಮೇಲೆ ಪದ್ಮಾಸನ ಹಾಕಿಕೂತ ಭಟ್ಟರು, ದರ್ಬೆಯನ್ನು ಮಡಚಿ ನೀರಲ್ಲಿ ನೆನೆಸಿ ಕರಿ ಎಳ್ಳಿನಲ್ಲಿ ಅದ್ದುತ್ತ, ‘ ಗಂಡಸಿನ ಹಾಗೆ ಏನು? ಗಂಡಸೇ ಅವಳು, ನಿಮ್ಮ ಕಾಲವೆಂಥದು, ಬಿಲ್ಲಿ ತೂತುಬಿಲ್ಲಿಗಳ ಕಾಲ’ ಎನ್ನುತ್ತ ನಕ್ಕರು. ‘ಯಮುನಜ್ಜಿ, ನಿನ್ನ ಸವತಿಯ ಅಪ್ಪನ ಮನೆ ಗೋತ್ರ ಜ್ಞಾಪಕವಿದೆಯೇ?’ ಭಟ್ಟರು ಮಂತ್ರದ ಮಧ್ಯೆಯೇ ಕೇಳಿದ್ದಕ್ಕೆ ಯಮುನಜ್ಜಿ ‘ಧರಾ ವರ್ಷ ಕೇಳಿ ಧರಾ ವರ್ಷ ಮರೆಯುತ್ತೀರಲ್ಲ, ನನಗೂ ಮರೆತು ಹೋಗಿದೆ` ಎಂದು ತಲೆಕರೆದುಕೊಂಡಳು. + +‘ಏ ಯಜಮಾಂತೀ, ಪಿಂಡಕ್ಕೆ ಅನ್ನ ತಂದು ಹುಯ್ಯೇ’ ಒಳ ಇಣುಕಿ ಒದರಿದರು ಭಟ್ಟರು. ತಟ್ಟೆಯಲ್ಲಿ ತಣಿಯಲ್ಲಿಟ್ಟಿದ್ದ ಅನ್ನ ತಂದು ಬಾಳೆಲೆಗೆ ಸುರಿಯಲು ಬಗ್ಗಿದಾಗ ಶಾಲಿನಿಗೆ ಭಟ್ಟರು ಯಾಕೋ ಒಂದು ಥರ ನೋಡಿದಂತೆನಿಸಿತು. ಸೆರಗು ಹೊದ್ದು ಎರಡು ಹೆಜ್ಜೆ ಹಿಂದಕ್ಕೆ ಸರಿದು ಒಳಗೆ ಹೋದಳು. ಇದ್ದಕ್ಕಿದ್ದಂತೆ ಯಮುನಜ್ಜಿಯ ತಲೆಯಲ್ಲಿ ಪತ್ರೊಡೆ ಪುನಃ ಜಾಗ್ರತವಾಗಿ ಬಿಟ್ಟಿತು. ‘ಪತ್ರೊಡೆ ಅಂದರೆ ನನ್ನ ಸವತಿಗೆ ರಾಶಿ ಸೇರುವ ಬದುಕಾಗಿತ್ತು’ ಎಂದೇನೋ ಪಿರ್ಯಾದು ಒಪ್ಪಿಸುವಾಗ ಭಟ್ಟರು, ‘ನಾಕು ಹಸೀ ಬೇಳೆ ತಂದು, ಕೆಸುವಿನ ಎಲೆ ಚೂರಿನಲ್ಲಿ ಸುತ್ತಿ ನೈವೇಧ್ಯಕ್ಕೆ ಹಾಕೇ, ನಿನ್ನ ಸವತಿ ಅಲ್ಲೇ ಬೇಯಿಸಿಕೊಂಡು ತಿನ್ನಲಿ’ ಅಂತ ತಮಾಷೆ ಮಾಡುತ್ತಾ, ಹಾಲು, ಬಾಳೆಹಣ್ಣು ತಂದಿಡುತ್ತಿದ್ದ ಶಾಲಿನಿಯನ್ನೇ ನೋಡುತ್ತಾ, ‘ನಿನ್ನ ಮಾವನ ತಿಥಿಗೆ ಮರೀದೆ ಪತ್ರೊಡೆ ಮಾಡೇ’ ಎಂದು ನಕ್ಕು, ಅಕ್ಕಿ ತೆಂಗಿನಕಾಯಿಯ ಪಡಿಯನ್ನು ಕಟ್ಟಿಕೊಂಡು, ಕೊಟ್ಟ ದಕ್ಷಿಣೆಯನ್ನು ಬಿಚ್ಚಿಯೂ ನೋಡದೇ ಎದ್ದು ಹೋದರು. + +ಪ್ರತಿ ಅಮವಾಸ್ಯೆಗೆ ಕಾಗೆಗೆ ಅನ್ನ ಹಾಕುವ, ಮುರಿದು ಬಿದ್ದ ಹಳೇ ಕೊಟ್ಟಿಗೆಯ ಆಳೆತ್ತರದ ಗೋಡೆಯಲ್ಲಿ, ಸದಾನಂದ ಆ ಜಾಗೆಗಿಷ್ಟು ನೀರು ಚಿಮುಕಿಸಿ, ಕಾಗೆಗೆ ಬಡಿಸಿದ ಎಲೆಯನ್ನು ಇಟ್ಟು, ಎ..ಎ..ಎ..ಎ.. ಎಂಬ ರಾಗವನ್ನೇ ಮೂರು ಬಾರಿ ಒದರಿದ. ಒಂದೆರಡು ಕಾಗೆಗಳು ಹಾರಾಡುತ್ತ ದೂರವೇ ಕೂತು ಕೂಗಿದವು. ಕಾಗೆಗಳು ಅನ್ನ ತಿನ್ನಲು ಅನುಮಾನಿಸಿದ್ದನ್ನು ನೋಡಿ ಯಮುನಜ್ಜಿ, ಬಾಗಿಲಲ್ಲಿ ನಿಂತೇ ‘ಪತ್ರೊಡೆಯ ಆಸೆ ನೋಡು, ಅದಕ್ಕೆ ಅದು ಅನ್ನ ಮುಟ್ಟುತ್ತಿಲ್ಲ’ ಒಂದೆರಡು ಬಾರಿ ಹೆಚ್ಚೇ ಹಲುಬಿದಳು. ‘ಅಲ್ಲೇ ನಿಂತುಳಿದರೆ ಕಾಗೆ ಹೇಗೆ ಬರ್ತದೆ? ಇತ್ತ ಬನ್ನಿ ನೀವು’ ಎಂದು ಜೋರು ಮಾಡಿ ಕರೆದಳು ಶಾಲಿನಿ. ಸದಾನಂದ ಇತ್ತ ಬೆನ್ನು ತಿರುಗಿಸಿದ್ದೇ ತಡ, ನಾಲ್ಕೈದು ಕಾಗೆಗಳು ಬಂದು ಮುತ್ತಿಗೆ ಹಾಕಿ, ತನ್ನ ಬಳಗವನ್ನೆಲ್ಲ ಕರೆಯತೊಡಗಿದವು. ಯಮುನಜ್ಜಿಗೆ ಖುಷಿಯಾಗಿ ‘ನೋಡು ನೋಡು’ ಎನ್ನುತ್ತ ಅವಳಿಗರಿವಿಲ್ಲದೆಯೇ ಮುಖದಲ್ಲಿ ನಗು ಉಕ್ಕಿತು. ನೀರಲ್ಲಿ ಬಿಡಲೆಂದು ತೆಗೆದಿರಿಸಿದ್ದ ಪಿಂಡದ ಬಾಳೆಎಲೆಯನ್ನು ಒಂದು ಟವಲಿನಲ್ಲಿ ಕಟ್ಟಿಕೊಂಡ ಸದಾನಂದ. + +ಅತ್ತೆ ಸೊಸೆ ಕೂಡಿ, ಶ್ರಾದ್ಧ ಮಾಡಿದ ಜಾಗೆಯಲ್ಲಿ ಹರಡಿದ ಅಕ್ಕಿ ಹೂವಿನ ಪ್ರಸಾದ ಒಡೆದ ತೆಂಗಿನಕಾಯಿ ಪೂಜಾ ಸಾಮಾನುಗಳೆನ್ನಲ್ಲ ಒಂದೂ ಮಾತಿಲ್ಲದೇ ಚೊಕ್ಕಗೊಳಿಸಿದರು. ಸದಾನಂದ ಸನಿಹದ ಹಳ್ಳದಲ್ಲಿ ಪಿಂಡಗಳನ್ನು ಬಿಟ್ಟು ಬಂದದ್ದೇ, ಮೂವರೂ ಕೂತು ಉಂಡರು. ಪಾಯಸಕ್ಕೆ ಬೆಲ್ಲ ಹನಿ ಕಮ್ಮಿಯಾಗಿದೆಯೆಂದು ಒಂದೇ ಮಾತು ಆಡಿದ ಯಮುನಜ್ಜಿ, ಎರಡು ಸೌಟು ಹೆಚ್ಚೇ ಬಡಿಸಿಕೊಂಡು ದೋಸೆಯನ್ನು ಅದ್ದಿ ಅದ್ದಿ ತಿಂದದ್ದನ್ನು ಗಮನಿಸುತ್ತ ಸದಾನಂದ ಹೆಂಡತಿಯ ಮುಖ ನೋಡಿ ಹುಬ್ಬೇರಿಸಿ, ಅಮ್ಮನ ಬಲಿ ತೋರಿಸಿದ. ಅವಳು ‘ನಿಮಗೆ ಇನ್ನೊಂದೆರಡು ಅಂಬೊಡೆ ಹಾಕಲೇ?’ ಎಂದು ಗಂಡನನ್ನು ಕೇಳಿದ್ದಕ್ಕೆ ಯಮುನಜ್ಜಿ, ‘ನನಗೂ ಎರಡು ತಾ’ ಅಂದಳು. + +ಉಂಡು ಮಲಗೆದ್ದು ಸಂಜೆಯ ಸುಮಾರಿಗೆ, ಕೆಸುವಿನ ಎಲೆ ಒಣಗಿ ಹೋಗುವ ಮುಂಚೆ ಪತ್ರೊಡೆ ಮಾಡಿಬಿಡುವಾ ಅಂತ ಕೂತಿದ್ದಳು ಶಾಲಿನಿ. ಆ ಬೇಳೆ ಹುರಿದ ಘಮ ಘಮ ಪರಿಮಳ ಯಮುನಜ್ಜಿಯನ್ನು ಅಡಿಗೆ ಮನೆಗೆ ಸೆಳೆದಿತ್ತು. ‘ಈಗ್ಯಾಕೆ ಮಾಡುತ್ತಿದ್ದೀ ಅದನ್ನು? ನನ್ನ ತಿಥಿಗೇ ಮಾಡಿ ಹಾಕುವಿಯಂತೆ’ ಎಂದು ಬೇಕೆಂದೇ ಸೊಸೆಯನ್ನು ಬೈಯಲು ಹೋದಂತೆ ನಟಿಸಿದಳು ಯಮುನಜ್ಜಿ. ಅತ್ತೆಯ ವ್ಯಂಗ್ಯ ಗಮನಿಸಿದ ಶಾಲಿನಿ, ಒಳಗೊಳಗೇ ನಗುತ್ತಾ, ‘ನಿಮ್ಮ ತಿಥಿಗೆಲ್ಲ ಪತ್ರೊಡೆ ಗಿತ್ರೊಡೆ ಮಾಡಲು ಸಾಧ್ಯವಿಲ್ಲ, ಇದ್ದ ಬದ್ದ ಕೆಲಸವೇ ಒಂದು ಹೊರೆ ಇರ್ತದೆ ಇಲ್ಲಿ, ಸತ್ತ ಮೇಲೆ ಪತ್ರೊಡೆಗೆ ಆಸೆ ಪಡಬೇಡಿ ನೀವು, ಏನಿದ್ದರೂ ಈಗಲೇ ತಿಂದು ಮುಗಿಸಿ’ ಎನ್ನುತ್ತ ಪ್ಲೇಟಿನ ತುಂಬ ಬಿಸಿ ಬಿಸಿ ಪತ್ರೊಡೆ ಹಾಕಿ ಅತ್ತೆಯ ಕೈಯಲ್ಲಿರಿಸಿದಳು. ಅದು ನೋಡ ನೋಡುತ್ತ ಯಮುನಜ್ಜಿಯ ಬಾಯಲ್ಲಿ ನೀರೊಡೆಯಿತು, ಆ ಪ್ಲೇಟಿನೊಂದಿಗೆ ಹಗುರಾಗಿ ಹೊರ ಚಿಟ್ಟಿಗೆ ಹೋಗಿ ಕುಳಿತಳು. ‘ಸ್ವರ್ಗ ಆಹಾ, ಇಲ್ಲೇ ಬಂದಿದೆ ಅದು, ನನ್ನ ಬದಿ ಪ್ಲೇಟಿನಲ್ಲೇ ಬಂದು ಕೂತಿದೆ ಅದು, ಸತ್ತರೆ ಈ ಪತ್ರೊಡೆಗಳನ್ನು ಖಾಲಿ ಮಾಡೇ ಸಾಯಬೇಕು, ನನ್ನ ಸೊಸೆಯ ಹಾಗೆ ಇಷ್ಟು ಹದವಾಗಿ ಪತ್ರೊಡೆ ಮಾಡಲು ಆ ನನ್ನ ಸವತಿಗೂ ತಿಳಿಯುತ್ತಿರಲಿಲ್ಲ’ ಇನ್ನು ತಡ ಮಾಡಿದರೆ, ಪತ್ರೊಡೆಯೆಲ್ಲ ತಣ್ಣಗಾಗಿ ಅದರ ರುಚಿಯೆಲ್ಲ ವಾತಾವರಣದಲ್ಲಿ ಕಲೆಸಿ ಹೋದೀತು ಅನ್ನಿಸಿದ್ದೇ, ಪ್ಲೇಟೆನ್ನೆತ್ತಿ ತೊಡೆಯ ಮೇಲಿಟ್ಟುಕೊಂಡು ಒಂದೊಂದೇ ಮೆಲ್ಲತೊಡಗಿದಳು. + +ಎದುರಿನ ಮರದಲ್ಲಿ ಕಾ..ಕಾ…ಕಾ.. ಎಂದು ಕಿರುಚುತ್ತ ಕೂತ ಕಾಗೆಗಳನ್ನು ಎಡಗೈಯಲ್ಲಿ ಹಾಚ್ ಹಾಚ್ ಅಂತ ಹೊಡೆದಳು. ಪತ್ರೊಡೆಯ ಒಗರು ಒಗರು ರುಚಿ ಯಮುನಜ್ಜಿಯ ನಾಲಿಗೆಯಲ್ಲಿ ಮೆಲ್ಲಗೆ ಪಸರಿಸತೊಡಗಿತು. + + + +ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ. \ No newline at end of file diff --git a/Kenda Sampige/article_499.txt b/Kenda Sampige/article_499.txt new file mode 100644 index 0000000000000000000000000000000000000000..626001c27d041be995909d5d33d26b2d5ee307e0 --- /dev/null +++ b/Kenda Sampige/article_499.txt @@ -0,0 +1,21 @@ +ನಾನು ಪಂಡಿತ ಪುತ್ರ. ನನ್ನ ತಂದೆಯವರು ಶಾಲೆಯ ಉಪಾಧ್ಯಾಯರಾಗಿದ್ದರಿಂದ ಅವರು ಶಾಲೆಯ ಮಕ್ಕಳಿಗೆ ಕಲಿಸಲೆಂದು ಬರೆದಿಟ್ಟ ಒಂದು ಕವನ ಸಂಕಲನ ನಾನು ಓದಿದ ಮೊದಲ ಪುಸ್ತಕ. ಆಗ ನನಗೆ ಕೇವಲ ಐದು ಇಲ್ಲ ಆರು ವರ್ಷ. ಕೈ ಬರಹದಲ್ಲಿಯೇ ಇದ್ದ ಈ ಪುಸ್ತಕದಲ್ಲಿ ರಾಜರತ್ನಂ, ಹೊಯ್ಸಳ, ನಾ. ಕಸ್ತೂರಿ, ಕುವೆಂಪು ಅವರು ಬರೆದ ಹಲವು ಪದ್ಯಗಳು ಇದ್ದವು. ಈ ಪದ್ಯಗಳಲ್ಲಿ ಕೆಲವನ್ನು ನಾನು ಬಾಯಿ ಪಾಠ ಮಾಡಿದ್ದೆ. ಹೀಗೆ ನಾನು ಕಲಿತ ಒಂದು ಪದ್ಯ ಇಂದಿಗೂ ನನ್ನ ನೆನಪಿನಲ್ಲಿ ಇದೆ, ಅದು… + +ತೆಂಗಿನ ಮರಗಳು ಕುಳ್ಳಾಗಿದ್ದುಕಾಯ್ಗಳು ಕೈಗೆ ಸಿಗುವಂತಿದ್ದುಕೊಬ್ಬರಿ ಎಲ್ಲ ಮೇಲ್ಗಡೆ ಇರಲುಎಳನೀರಿನ ಮುಚ್ಚಳ ತೆಗೆದಿರಲುಇನ್ನೂ ಚೆನ್ನಾಗಿರುತಿತ್ತುಎಷ್ಟೋ ಚೆನ್ನಾಗಿರುತ್ತಿತ್ತು. + +ಇದು ನನ್ನಲ್ಲಿ ಹಲವು ಕಲ್ಪನೆಗಳನ್ನ ಭಾವನೆಗಳನ್ನ ಚಿಗುರಿಸಿದ ಪದ್ಯ. ಅಂದು ತೆಂಗಿನ ಮರಗಳೆಲ್ಲ ನೂರು ನೂರೈವತ್ತು ಅಡಿ ಎತ್ತರಕ್ಕೆ ಬೆಳೆಯುತ್ತಿದ್ದವು. ಕಾಯಿ ಕೀಳಬೇಕು ಅನ್ನುವುದಾದರೆ ಆ ಎತ್ತರಕ್ಕೆ ಏರ ಬಕಿತ್ತು. ಕಾಯಿ ಕಿತ್ತ ನಂತರವಾದರೂ ಸುಖವಿದೆಯೇ? ಕತ್ತಿಯಿಂದ ಅದನ್ನ ಹೆರೆಯಬೇಕು. ನೀರಿಗಾಗಿ ತಡಕಾಡಬೇಕು. ಒಳಗೆ ಇರುವ ಕೊಬ್ಬರಿಯನ್ನ ಪಡೆಯುವುದೂ ಒಂದು ಕಷ್ಟವೇ. ಈ ಎಲ್ಲ ರಗಳೆ ಇಲ್ಲವಾದರೆ ಎಷ್ಟು ಚೆನ್ನಾಗಿ ಇರುತ್ತಿತ್ತಲ್ಲ ಅನ್ನುವುದು ಈ ಪದ್ಯದ ಸಾರಾಂಶ. + +ಮಗುವಾಗಿ ನಾನು ಬಯಸುತ್ತಿದ್ದುದು ಇದನ್ನೇ. ಹೀಗೆ ಬಯಸಲು ನನ್ನ ಮನಸ್ಸು ಸದಾ ಫ್ಯಾಂಟಸಿಯನ್ನ ನಿರೀಕ್ಷಿಸುತ್ತಿತ್ತು ಅನ್ನುವುದರ ಜೊತೆಗೆ ಅಂದಿನ ದಿನ (ಸುಮಾರು 1945 ರ ಕಾಲ) ಆಧುನಿಕತೆ ಅನ್ನುವುದು ನಮ್ಮನ್ನ ಮರಳು ಮಾಡಿತ್ತು. ಯಂತ್ರಗಳು ಎಲ್ಲೆಲ್ಲೂ ಕಾಣಿಸಿಕೊಂಡು ವೇಗವನ್ನ ಮೀರಿ, ಕಾಲವನ್ನ ಮುಂದಕ್ಕೆ ತಳ್ಳಿ, ಎಲ್ಲ ಸುಖ ಸೌಲಭ್ಯಗಳನ್ನ ತಂದು ಕೊಡಲು ಕಾದು ನಿಂತಿದ್ದವು. + +ಈ ಪದ್ಯದ ರಚನೆಯ ಹಿಂದೆ ಕೂಡ ಇಂತಹಾ ಒಂದು ಮನೋಭಾವ ಇರುವುದನ್ನ ನಾವು ಗಮನಿಸಬಹುದು. ಕವಿ ಮಕ್ಕಳಿಗೆ ಮನರಂಜನೆ ನೀಡಬೇಕು ಅನ್ನುವ ಉದ್ದೇಶದಿಂದ ನಿಸರ್ಗಕ್ಕೆ ವಿರುದ್ಧವಾದ ಒಂದು ಪ್ರಕ್ರಿಯೆಗೆ ಒತ್ತು ಕೊಟ್ಟು ಈ ಪದ್ಯವನ್ನ ರಚಿಸಿದ್ದಾನೆ. ತೆಂಗಿನ ಮರ ಎತ್ತರಕ್ಕೆ ಬೆಳೆಯುವುದು, ಅದರ ಕಾಯಿ ಸಿಪ್ಪೆ ಗಟ್ಟಿಯಾಗಿರುವುದು, ಎಳನೀರು ಕೊಬ್ಬರಿ ಒಳಗೆ ಅಡಗಿಕೊಂಡು ಇರುವುದು, ಎಲ್ಲ ಪ್ರಕೃತಿ ನಿಯಮ. ಇದನ್ನು ಮೀರಿದ ಒಂದು ಕೆಲಸ ಆಗಬೇಕು ಎಂದು ಕವಿ ಹೇಳುತ್ತಾನೆ. ಹೀಗೆ ಹೇಳುವುದರ ಮೂಲಕ ಆತ ಮಕ್ಕಳ ಮನಸ್ಸಿನಲ್ಲಿ ಒಂದು ಕುತೂಹಲ, ಅಚ್ಚರಿ, ಬೆರಗನ್ನ ಉಂಟು ಮಾಡುತ್ತಾನೆ. ಮಕ್ಕಳಲ್ಲಿ ಒಂದು ನಿರೀಕ್ಷೆಯನ್ನ ಹುಟ್ಟು ಹಾಕುತ್ತಾನೆ. ಹೀಗಾದರೆ ಎಷ್ಟು ಚೆನ್ನಾಗಿ ಇರುತ್ತಿತ್ತಲ್ಲ ಎಂದು ಮಕ್ಕಳು ಆಶಿಸುವಹಾಗೆ ಮಾಡುತ್ತಾನೆ. + +ಇಂದಿನ ದಿನ ಈ ಪದ್ಯವನ್ನು ಎದಿರು ಇರಿಸಿಕೊಂಡು ವಿಚಾರ ಮಾಡಿದಾಗ ಎಲ್ಲವೂ ಸುಲಭವೂ ಸರಳವೂ ಆಗಬೇಕೆ ಅಂದೆನಿಸುತ್ತದೆ. ಹೀಗೆ ಆದರೆ ಬದುಕಿನ ಒಂದು ಥ್ರಿಲ್ ಹೊರಟು ಹೋಗುತ್ತದಲ್ಲ ಎಂದು ಗಾಬರಿ ಕೂಡ ಆಗುತ್ತದೆ. ಆದರೆ ಹೀಗೆ ಅನಿಸುವುದರ ಜೊತೆಗೆ ಈ ಪದ್ಯ ತನ್ನ ಸರಳತೆ, ನೇರ ದೃಷ್ಟಿ, ಕಲ್ಪನೆ, ಸೊಗಸುಗಾರಿಕೆಗಳಿಂದಾಗಿ ತನ್ನ ಆಕರ್ಷಣೆಯನ್ನ ಉಳಿಸಿಕೊಳ್ಳುತ್ತದೆ. + +ಇವತ್ತು ತೆಂಗಿನ ಮರಗಳೆಲ್ಲ ತಮ್ಮ ಎತ್ತರವನ್ನ ಕಳೆದುಕೊಂಡು ಕಿರಿದಾಗಿವೆ. ನಾಳೆ ಎಳನೀರಿನ ಮುಚ್ಚಳ ತೆರೆದ, ಕೊಬ್ಬರಿ ಎಲ್ಲ ಮೇಲ್ಗಡೆ ಇರುವ ತೆಂಗಿನ ಮರಗಳು ಬರಬಹುದು, ಆಗ ಈ ಪದ್ಯ ತನ್ನ ಆಕರ್ಷಣೆಯನ್ನ ಕಳೆದುಕೊಳ್ಳುತ್ತದೆ. ಆದರೂ ಈ ಸಂದರ್ಭ ಬರುವವರೆಗೆ ಈ ಪದ್ಯಕ್ಕೆ ಸಾವಿಲ್ಲ ಎಂದು ನನಗೆ ಅನಿಸುತ್ತದೆ. + +ಹಾಗೆಯೇ ಒಂದು ಪದ್ಯ ಬಾಲ್ಯದಲ್ಲಿ ಒಂದು ಅನುಭವ ನೀಡಿ ನಾವು ಬೆಳೆದಾಗ ಆ ಅನುಭವಕ್ಕೆ ವ್ಯತಿರಿಕ್ತವಾದ ಮತ್ತೊಂದು ಅನುಭವದ ಕಡೆ ನಮ್ಮನ್ನ ಕರೆದೊಯ್ಯುತ್ತದೆ ಅಂದರೆ ಅದು ಆ ಪದ್ಯದ ದೋಷವೋ ಇಲ್ಲ ನಮ್ಮ ಬೆಳವಣಿಗೆಯ ಫಲವೋ ನಾವು ವಿಚಾರ ಮಾಡಬಹುದು.  ಜೊತೆಗೇನೆ ಈ ಎರಡೂ ಅನುಭವಗಳಿಗೆ ಒಂದೇ ಪದ್ಯ ಕಾರಣವಾಯಿತಲ್ಲ ಅನ್ನುವುದು ಕೂಡ ಗಮನಿಸಬೇಕಾದ ವಿಷಯವೇ. ಅಲ್ಲದೆ ಪದ್ಯ ಅದೇ ಆಗಿ ಅದನ್ನ ನೋಡುವ ನನ್ನ ದೃಷ್ಟಿ ಬೇರೆಯಾಗಿದೆ ಅನ್ನುವುದು ಕೂಡ ಇಲ್ಲಿ ಮುಖ್ಯ. ಇದಕ್ಕಿಂತ ಅಂದು ಓದಿ ಮೆಚ್ಚಿಕೊಂಡ ಪದ್ಯವೇ ಇಂದಿನ ನನ್ನ ಬದಲಾದ ಅಭಿಪ್ರಾಯಕ್ಕೂ ಕಾರಣ ಅನ್ನುವುದು ಮತ್ತೊಂದು ವಿಶೇಷ ಎಂದು ನಾನು ತಿಳಿಯುತ್ತೇನೆ. ಇಷ್ಟಾದರೂ ಆ ಪದ್ಯವನ್ನ ನಾನು ಬಿಡಲಾರೆ. ಆಗಾಗ್ಗೆ ನಾನದನ್ನ ಗುಣಗುಣಿಸುತ್ತಿರುತ್ತೇನೆ. ಸಭೆ ಸಮಾರಂಭಗಳಲ್ಲಿ ಮಕ್ಕಳಿಗೆ ಹೇಳುತ್ತಿರುತ್ತೇನೆ. ಚಪ್ಪಾಳೆಗಳೂ ಬೀಳುತ್ತವೆ. ಅಂದರೆ ಇಂದಿನ ಮಕ್ಕಳೂ ಆ ಪದ್ಯವನ್ನ ಮೆಚ್ಚಿಕೊಂಡಿದ್ದಾರೆ. + +ಬದುಕಿನ ಒಂದು ವಾಸ್ತವತೆ ತಟ್ಟನೆ ಬೇರೊಂದು ಅವಾಸ್ತಿಕತೆಯತ್ತ ಕರೆದೊಯ್ಯುವುದು ಕೆಲ ಬಾರಿ ಮಕ್ಕಳ ಸಾಹಿತ್ಯದ ವಿಷತೆ ಆಗುತ್ತದೆ. ಈ ಪದ್ಯ ಈ ಮಾತಿಗೆ ಒಂದು ಉದಾಹರಣೆಯಾಗಿದೆ. + + + +ಹಿರಿಯ ಕಥೆಗಾರ, ಕಾದಂಬರಿಕಾರ, ಮಕ್ಕಳ ಸಾಹಿತಿ. ಸಾಗರದಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ಣ ಹೆಸರು ಡಾ.ನಾರ್ಬರ್ಟ್ ಡಿಸೋಜ. \ No newline at end of file diff --git a/Kenda Sampige/article_5.txt b/Kenda Sampige/article_5.txt new file mode 100644 index 0000000000000000000000000000000000000000..150c2d9a3f63d4c493da4625f65969e502e2c364 --- /dev/null +++ b/Kenda Sampige/article_5.txt @@ -0,0 +1,35 @@ +byರಂಜಾನ್ ದರ್ಗಾ|Oct 7, 2024|ಸರಣಿ| 1 Comment + +ಅವರು ಬಹಳ ಕಷ್ಟಪಟ್ಟು ಮಠವನ್ನು ಬೆಳೆಸಿದರು. ಅವರು ಶ್ರಮಜೀವಿಗಳಂತೆ ಕಾರ್ಯ ಮಾಡಿದರು. ಯಾವುದೇ ಆರ್ಥಿಕ ಸೌಲಭ್ಯಗಳಿಲ್ಲದ ವೇಳೆ ಡಂಬಳದಿಂದ ಗದಗಿಗೆ ಮತ್ತು ಗದಗದಿಂದ ಡಂಬಳದ ವರೆಗೆ ಕಾಲ್ನಡಿಗೆಯಲ್ಲಿ ಸುತ್ತುತ್ತ, ಬಾವಿ ತೋಡುವಂಥ ಕಠಿಣ ಕಾಯಕ ಮಾಡಿದರು. ಜೊತೆಗಿದ್ದ ಭಕ್ತರ ಮತ್ತು ಆಳುಗಳು ಬಾವಿ ತೋಡಿ, ರಾತ್ರಿ ಸುಸ್ತಾಗಿ ಮಲಗಿದ್ದಾಗ ಅವರ ಅರವಿಗೆ ಬಾರದಂತೆ ಪಾದಗಳಿಗೆ ಔಷಧಿ ಹಚ್ಚುವುದನ್ನೂ ಮಾಡಿದರು!ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ + +byಎಚ್. ಗೋಪಾಲಕೃಷ್ಣ|Oct 4, 2024|ಸರಣಿ| 0 Comments + +ಮತ್ತಿಕೆರೆ ಎನ್ನುವ ಬೆಂಗಳೂರಿನ ಹೊರ ಮೂಲೆಯಲ್ಲಿದ್ದ ಒಂದು ಪುಟ್ಟ ಹಳ್ಳಿ ಇವತ್ತು ಜಗತ್ತಿನ ಒಂದು ಪ್ರಮುಖ ಸ್ಥಳವಾಗಿ ಮಾರ್ಪಾಟು ಆಗಿರುವಲ್ಲಿ ಎಂ ಎಸ್ ರಾಮಯ್ಯ ಅವರ ಕಾರ್ಯಕ್ಷೇತ್ರ ಎದ್ದು ಕಾಣುತ್ತದೆ. ಮತ್ತಿ ಕೆರೆ ಸಂಪಂಗಪ್ಪ ರಾಮಯ್ಯ ಹೀಗೆ ಜಗತ್ತಿನ ಭೂಪಟದಲ್ಲಿ ಬೆಂಗಳೂರು ಮತ್ತು ಮತ್ತಿ ಕೆರೆಗೆ ಒಂದು ವಿಶಿಷ್ಠ ಸ್ಥಾನ ದೊರಕಿಸಿ ಕೊಟ್ಟಿದ್ದಾರೆ. ಬಹುಶಃ ಜಗತ್ತಿನಲ್ಲಿ ಇಂತಹ ಉನ್ನತ ಮಟ್ಟಕ್ಕೆ ಏರಿದ ವ್ಯಕ್ತಿ ಅಪರೂಪದಲ್ಲಿ ಅಪರೂಪವೇ.ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ನಲವತ್ನಾಲ್ಕನೆಯ ಕಂತು ನಿಮ್ಮ ಓದಿಗೆ + +byಸುಧಾ ಆಡುಕಳ|Oct 3, 2024|ಸರಣಿ| 2 Comments + +ಸೀತಜ್ಜಿ, ಗೌರಜ್ಜಿ, ಅಮ್ಮಣ್ಣೆಜ್ಜಿ ಇವರ ಕತೆಗಳೂ ಇದಕ್ಕಿಂತ ಬೇರೆಯೇನಿರಲಿಲ್ಲ. ಅವರೆಲ್ಲರೂ ತಮ್ಮ ಮದುವೆಯ ಕತೆಯನ್ನು ಯಾವುದೇ ವಿಷಾದಗಳಿಲ್ಲದೇ ಹೇಳಿಕೊಳ್ಳುತ್ತಿದ್ದರು. ಆದರೆ ಇವರ ನಂತರದ ತರುವಾಯದವರಾದ ಕೆಂಪಿ, ಗಣಪಿ, ನಾಗವೇಣಿಯರು ತಮ್ಮ ಮದುವೆಯ ಕತೆಯನ್ನು ಇಷ್ಟು ತಣ್ಣಗೆ ಹೇಳುತ್ತಿರಲಿಲ್ಲ. ಅವರ ಮಾತುಗಳಲ್ಲಿ ಕಹಿ, ಸಿಟ್ಟು, ಹತಾಶೆ ಎಲ್ಲವೂ ಮಡುಗಟ್ಟಿದ್ದವು.ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಹದಿನೆಂಟನೆಯ ಕಂತು ನಿಮ್ಮ ಓದಿಗೆ + +byಸುಮಾ ಸತೀಶ್|Oct 2, 2024|ಸರಣಿ| 0 Comments + +ಹೊಸ್ದಾಗಿ ಮದ್ವೆ ಆಗಿದ್ದ ಅಳಿಯ ಅತ್ತೆ ಮನೇಗೆ ಬಂದ್ನಂತೆ. ಅತ್ತೆ ಕಡುಬು ಮಾಡಿದ್ರು. ತೆಳ್ಳಗೆ, ಸಣ್ಣವು. ಹೊಸ ಅಳಿಯನಿಗೇಂತ ಕಷ್ಟ ಪಟ್ಟು ಸಣ್ಣ ಸಣ್ಣಕೆ ಮಾಡಿದ್ರು. ಅಳಿಯನ ತಟ್ಟೇಗೆ ಬಡಿಸಿದ್ರು. ಅವ್ನು ಒನೊಂದು ಸತೀಗೆ ಒಂದು ಗುಳುಂ ಮಾಡ್ತಿದ್ದ. ಅಳಿಯನ ಅಪ್ಪ ಥೋ ನಮ್ ಮರ್ವಾದೆ ತೆಗೀತಾವ್ನೆ ಅಂತ ಮೆಲ್ಲಕೆ ಮೂಗ್ಸನ್ನೆ ಮಾಡೀರು. ಒಂದು ಮುರಿದು ಎರ್ಡು ಭಾಗ ಮಾಡಿ ತಿನ್ನಾಕೆ ಸೈಗು (ಸನ್ನೆ) ಮಾಡಿದ್ರು.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಚಿಕ್ಮಾಲೂರಿನ ಅಜ್ಜ-ಅಜ್ಜಿಯರ ಕುರಿತ ಬರಹ ಇಲ್ಲಿದೆ + +byಪೂರ್ಣೇಶ್ ಮತ್ತಾವರ|Oct 2, 2024|ಸರಣಿ| 0 Comments + +ಜೋಗಿ ಕಿಂದರಿ ಬಾರಿಸತೊಡಗಿದೊಡನೆ ಜಗತ್ತನ್ನೇ ಮೋಹಿಸುವ ಅದರ ನಾದಕ್ಕೆ ಇಲಿಗಳು ಅನ್ನದ ಮಡಕೆಯನ್ನು ಆಗಲಿ, ಟೋಪಿಯ ಗೂಡನ್ನು ತ್ಯಜಿಸಿ, ಅಂಗಿಯ ಜೇಬು, ಕಾಲು ಚೀಲಗಳನ್ನೆಲ್ಲಾ ಬಿಟ್ಟು ಹಾರುತ್ತಾ, ಓಡುತ್ತಾ, ನೆಗೆದು ಬಂದು ಅವನನ್ನೇ ಹಿಂಬಾಲಿಸಿ ಹೋಗುವಂತೆ ಹೌಸ್ ಮಾಸ್ಟರ್‌ರ ಹುಣಸೆ ಬರಲಿನ ಬಾರಿಸುವಿಕೆಗೆ ನಮ್ಮ ಗೆಳೆಯರು ಟ್ರಂಕ್ ಕಪಾಟುಗಳ ಒಳಗಿನಿಂದ, ಹಾಸಿಗೆ ದಿಂಬುಗಳ ಕೆಳಗಿನಿಂದ, ವೆಂಟಿಲೇಟರ್ ಸಂದಿಯಿಂದ, ಫ್ಯಾನ್ ರೆಕ್ಕೆಯ ಮೇಲಿನಿಂದ, ಟಾಯ್ಲೆಟ್ ರೂಮಿನ ಹೆಂಚಿನ ತಳದಿಂದ, ಮರ ಗಿಡಗಳ ಮರೆಯಿಂದ ನೋಟ್ ಬುಕ್‌ಗಳನ್ನು ಎತ್ತಿ ತರಲಾರಂಭಿಸಿದ್ದರು.ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿ + +byಸಂಜೋತಾ ಪುರೋಹಿತ|Oct 2, 2024|ಸರಣಿ| 0 Comments + +ನನ್ನಂತೆಯೇ ಹಲವರಿದ್ದಾರೆ, ಈಗಲೂ ಅವರಿಗೆ ನಾಯಿಗಳ ಬಗ್ಗೆ ಹೆಚ್ಚಿನದ್ದೇನೂ ಗೊತ್ತಿಲ್ಲ ಎಂಬ ಕಾರಣಕ್ಕಾಗಿಯೇ ಕೂರಾಪುರಾಣ ಶುರು ಮಾಡಿದ್ದು. ಥಿಯರಿ ಓದಿದರೆ ಪ್ರಾಕ್ಟಿಕಲ್ ಮಾಡಲು ಸ್ವಲ್ಪ ಧೈರ್ಯ ಹುಟ್ಟಬಹುದು ಎಂಬ ಕಾರಣಕ್ಕೆ. ಯಾಕೆಂದರೆ ನಾಯಿಗಳೊಡನೆ ಹುಟ್ಟಿಕೊಳ್ಳುವ ನಂಟು, ಅವುಗಳ ಸ್ನೇಹಕ್ಕೆ ಭಾಜನರಾಗುವ ಯೋಗ್ಯತೆ, ಮುಗ್ಧ ಪ್ರೀತಿಯನ್ನು ಅನುಭವಿಸುವ ಯೋಗವನ್ನು ಎಲ್ಲರು ಪಡೆದುಕೊಳ್ಳಬೇಕು ಎಂಬುದೇ ನನ್ನ ಆಸೆ.ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಏಳನೆಯ ಕಂತು + +byಡಾ. ವಿಶ್ವನಾಥ ಎನ್ ನೇರಳಕಟ್ಟೆ|Oct 1, 2024|ಸರಣಿ| 0 Comments + +ಉತ್ತರ ಕೊರಿಯಾದಲ್ಲಿ ಕಲೆ, ಸಂಸ್ಕೃತಿ ಇವೆಲ್ಲವೂ ಕೂಡಾ ಬೆಳವಣಿಗೆ ಕಾಣುತ್ತಿರುವುದು ರಾಷ್ಟ್ರೀಯತೆಯ ಹೆಸರಿನಲ್ಲಿ. ಎಲ್ಲಾ ರೀತಿಯ ಕಲಾಕೃತಿಗಳ, ಪ್ರದರ್ಶನ ಕಲೆಗಳ ಅಂತಿಮ ಉದ್ದೇಶ ರಾಷ್ಟ್ರದ ಪ್ರಗತಿ ಮತ್ತು ರಾಷ್ಟ್ರಕ್ಕೆ ಸಾಂಸ್ಕೃತಿಕ ಅಸ್ಮಿತೆಯನ್ನು ಒದಗಿಸಿಕೊಡುವುದು ಎಂಬ ಭಾವನೆಯನ್ನು ಬಲವಾಗಿ ರೂಪಿಸಲಾಗುತ್ತಿದೆ. ಉತ್ತರ ಕೊರಿಯಾದ ಪ್ರಮುಖ ಶಿಲ್ಪಕಲಾಕೃತಿಗಳು ಯಾವುವು ಎಂದು ಗಮನಹರಿಸಿದಾಗ ಕಿಮ್ ಇಲ್ ಸುಂಗ್ ಅವರ ಪ್ರತಿಮೆಗಳು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತವೆ.ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ + +byಎಸ್. ಜಯಶ್ರೀನಿವಾಸ ರಾವ್|Sep 30, 2024|ಸರಣಿ| 0 Comments + +ಅವರು ರಮಣೀಯ ದೃಶ್ಯಗಳನ್ನು ಕಲ್ಪಿಸಿಕೊಳ್ಳುವುದಿಲ್ಲ; ಬದಲಿಗೆ ದಿನನಿತ್ಯದ ವಿದ್ಯಮಾನಗಳ ಜತೆಗೆ ನಗರ ಮತ್ತು ಅದರ ನಿವಾಸಿಗಳ ಜತೆ ಜರಗಿದ ಮಾತುಕತೆಗಳಲ್ಲಿ ಅವರು ಪಡೆದ ಸಂತೋಷಕ್ಕೆ ಒತ್ತು ನೀಡುತ್ತಾರೆ. ಈ ಕವಿತೆಗಳ ವಿಶಿಷ್ಟ ಛಾಪು ಕವಿಯ ಮೌಖಿಕ ವಾಕ್ಚಾತುರ್ಯವೂ ಆಗಿದೆ; ಲಯ ಮತ್ತು ಮನವಿ ಜತೆಯಾಗಿರುವ ಕವಿತೆಗಳಿವು, ಮತ್ತು ಈ ಕವನಗಳು ವೋಲ್ಡ್‌ ಅವರಿಗೆ ವಿಶಾಲವಾದ ಮತ್ತು ನಿಷ್ಠಾವಂತ ಓದುಗರ ಸಮೂಹವನ್ನು ತಂದುಕೊಟ್ಟಿತ್ತು.ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೋರ್ವೇ (Norway) ದೇಶದ ಕವಿ ಯಾನ್ ಎರಿಕ್ ವೊಲ್ಡ್-ರ (Jan Erik Vold) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ + +byಸುಮಾವೀಣಾ|Sep 30, 2024|ಸರಣಿ| 0 Comments + +ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು…ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ \ No newline at end of file diff --git a/Kenda Sampige/article_50.txt b/Kenda Sampige/article_50.txt new file mode 100644 index 0000000000000000000000000000000000000000..32df161becd57a47baa4d9bc40102c7e023c506e --- /dev/null +++ b/Kenda Sampige/article_50.txt @@ -0,0 +1,25 @@ +`ಜಗನ್ನಾಥ್ ಬಳಿ ಸೂರ್ಯನಿಗಾಗಿ ನಿರ್ಮಿಸಿರುವ ದೇಗುಲವೊಂದಿದೆ. ಎಲ್ಲವನ್ನೂ ಟೀಕಿಸುವವರೂ, ಯಾವುದನ್ನೂ ಒಪ್ಪದೇ ಇರುವವರೂ ಸಹ ಆ ಅಗಾಧ, ಭವ್ಯ ದೇಗುಲವನ್ನನು ನೋಡಿ ಬೆರಗಾಗುವವರು’ ಎಂದು ಮುಘಲ್ ದೊರೆ ಅಕ್ಬರನ ಆಸ್ಥಾನ ವೃತ್ತಾಂತಕಾರ ಅಬುಲ್ ಎ-ಫಜ಼ಲ್ (ಕ್ರಿ.ಶ. 1556-1605) ತನ್ನ ಐನ್-ಎ-ಅಕ್ಬರಿಯಲ್ಲಿ ದಾಖಲಿಸಿದ್ದಾನೆ. + +ಕ್ರಿ.ಶ. ಸುಮಾರು 1255ರಲ್ಲಿ ನಿರ್ಮಿತವಾದ, ಯೂರೋಪಿನ ನಾವಿಕರು `ಕಪ್ಪು ಪಗೋಡ’ ಎಂದು ಕರೆದ ಆ ಸೂರ್ಯ ದೇಗುಲದ ಅವಶೇಷಗಳು ಇಂದಿಗೂ ನೋಡುಗರನ್ನು ಬೆರಗುಗೊಳಿಸುತ್ತವೆ. ಅದರ ಅಗಾಧತೆ, ಕುಸುರಿಯಂಥ ಕೆತ್ತನೆ ಹಾಗೂ ಶಿಲ್ಪ ಸೌಂದರ್ಯ ಮಂತ್ರಮುಗ್ಧಗೊಳಿಸುತ್ತವೆ. ಆದರೆ ಇಂದು ಅಬುಲ್ ಫಜ಼ಲ್ ಕಂಡಿದ್ದ, ಸುಮಾರು ಎರಡು ನೂರು ಅಡಿ ಎತ್ತರದ ಮುಖ್ಯ ದೇಗುಲ ಇಲ್ಲ, ಕಾಲನ ಹೊಡೆತಕ್ಕೆ ಬಲಿಯಾಗಿ ಎಂದೋ ಕುಸಿದು ಬಿದ್ದಿದೆ. ಉಳಿದಿರುವ ಜಗಮೋಹನ ದೇಗುಲವನ್ನೂ ಸಹ ಕಲ್ಲು, ಕಬ್ಬಿಣ, ಶಿಲ್ಪಗಳ ಚೋರರು, ವಿಗ್ರಹ ಭಂಜಕರು ನಾಶಗೊಳಿಸಿದ್ದಾರೆ. ಉಳಿದಿರುವ ಪಾಳು ದೇಗುಲಗಳ ಸಮುಚ್ಛಯವನ್ನು ಕೌತುಕದಿಂದ ನೋಡುವಾಗ, ನಮಗೆ ಕಾಲವನ್ನು ಹಿಂದೆ ಸರಿಸಲು ಸಾಧ್ಯವಾಗುವಂತಿದ್ದರೆ ಅಥವಾ ನಾವೇ ಕಾಲಯಂತ್ರದಲ್ಲಿ ಭೂತಕಾಲಕ್ಕೆ ಹೋಗಿ ಆ ಸೂರ್ಯದೇಗುಲದ ಮೊದಲಿನ ಭವ್ಯತೆಯನ್ನು ಕಣ್ಣಾರೆ ಕಾಣಲು ಸಾಧ್ಯವಾಗುವ ಹಾಗಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಅನ್ನಿಸುತ್ತದೆ. + +(ಡಾ. ಜೆ. ಬಾಲಕೃಷ್ಣ) + +ಒರಿಸ್ಸಾ ರಾಜ್ಯದ ಪುರಿ ಜಿಲ್ಲೆಯಲ್ಲಿ ಬಂಗಾಳಕೊಲ್ಲಿಯ ಕಡಲ ತಡಿಯಿಂದ ಮೂರು ಕಿ.ಮೀ. ದೂರವಿರುವ ಕೊನಾರ್ಕ್ ಒಂದು ಹಳ್ಳಿ. ಆ ಪ್ರದೇಶ ಮೊದಲಿನಿಂದಲೂ `ಅರ್ಕ’ (ಸೂರ್ಯ) ಕ್ಷೇತ್ರವೆಂದು ಪ್ರಸಿದ್ಧಿ ಪಡೆದಿದೆ. ಮಹಾಭಾರತದ ಶ್ರೀ ಕೃಷ್ಣನ ಮಗ ಸಾಂಬ ಅತ್ಯಂತ ಸ್ಫುರದ್ರೂಪಿಯಾಗಿದ್ದು ಅದರಿಂದಾಗಿ ಆತನಿಗೆ ಅತಿಯಾದ ಗರ್ವವಿತ್ತಂತೆ. ಆ ಗರ್ವದಿಂದಾಗಿ ಒಮ್ಮೆ ನಾರದನನ್ನು ಲೇವಡಿ ಮಾಡಿದಾಗ ನಾರದ ಮುನಿ ನಾಟಕವೊಂದನ್ನು ಹೂಡಿ ಶ್ರೀ ಕೃಷ್ಣನಿಂದಲೇ ಸಾಂಬನಿಗೆ ಕುಷ್ಠರೋಗ ಬರುವಂತೆ ಶಾಪ ಕೊಡಿಸುತ್ತಾನೆ. ನಂತರ ಸಾಂಬ ಚಂದ್ರಬಾಗ ನದಿಯಲ್ಲಿ ಹನ್ನೆರಡು ವರ್ಷ ಸ್ನಾನ ಮಾಡಿ ಸೂರ್ಯದೇವನನ್ನು ಆರಾಧಿಸಿ ತನ್ನ ರೋಗ ವಾಸಿ ಮಾಡಿಕೊಳ್ಳುತ್ತಾನೆ ಹಾಗೂ ಅಲ್ಲಿ ಸೂರ್ಯನಿಗಾಗಿ ದೇವಾಲಯವೊಂದನ್ನು ಕಟ್ಟಿಸಿದನೆಂದೂ ಅದೇ ಈ `ಅರ್ಕ ಕ್ಷೇತ್ರ’ವೆಂಬ ನಂಬಿಕೆಯಿದೆ. ಚರಿತ್ರೆಕಾರರ ಪ್ರಕಾರ ಕೊನಾರ್ಕ ಎಂಬ ಹೆಸರು ಅರ್ಕ ಹಾಗೂ ಕೋನ ಎಂಬುದರಿಂದ ಬಂದಿದೆ. ಕೊನಾರ್ಕ್‌ನ ನೈರುತ್ಯ ದಿಕ್ಕಿಗೆ ಒಂಭತ್ತು ಕಿ.ಮೀ. ದೂರದಲ್ಲಿ ಕುಶಾಭದ್ರ ನದಿಯ ದಂಡೆಯ ಮೇಲೆ `ತಿಕೋನ’ ಎಂಬ ಸ್ಥಳವಿದೆ. ಗಂಗರ ರಾಜರ ತಾಮ್ರಪಟಗಳು ಮೂರನೇ ಅನಂತ ಭೀಮನ ಮಗ ಗಂಗರ ರಾಜ ನರಸಿಂಹದೇವ (ರಾಜ್ಯಭಾರ ಕ್ರಿ.ಶ. 1238-1264) ತ್ರಿಕೋಣದ ಮೂಲೆಯೊಂದರಲ್ಲಿ `ಉಷ್ಣರಶ್ಮಿಗೆ ಮಹತ್ ಕುಠೀರ’ ನಿರ್ಮಿಸಿದನೆಂದು ಹೇಳುತ್ತವೆ. + +ಕೊನಾರ್ಕ್‌ನ ಸೂರ್ಯದೇಗುಲವನ್ನು ಅರುಣನ ಸಾರಥ್ಯದಲ್ಲಿ ನಭೋಮಂಡಲದಲ್ಲಿ ಸಾಗುವ ಬೃಹತ್ ರಥದೋಪಾದಿಯಲ್ಲಿ ನಿರ್ಮಿಸಲಾಗಿದ್ದು ದೇಗುಲದ ಸುತ್ತ ಸುಮಾರು ಹತ್ತು ಅಡಿ ಎತ್ತರದ ಚಿತ್ತಾರದ ಇಪ್ಪತ್ತನಾಲ್ಕು ಚಕ್ರಗಳಿವೆ. ಒಂದು ಜೊತೆ ಚಕ್ರಗಳು ಒಂದೊಂದು ತಿಂಗಳನ್ನು ಸಂಕೇತಿಸುತ್ತವೆಂದು ಹೇಳಲಾಗಿದೆ. ಆ ರಥವನ್ನು ಎಳೆದೊಯ್ಯಲು ಏಳು ಸುಂದರ ಕುದುರೆಗಳನ್ನು ಕೆತ್ತಲಾಗಿದ್ದು ಆ ಏಳು ಕುದುರೆಗಳು ವಾರದ ಒಂದೊಂದು ದಿನವನ್ನು ಸಂಕೇತಿಸುತ್ತವೆ. ಕ್ರಿ.ಶ. ಏಳನೇ ಶತಮಾನದಲ್ಲಿ ಆರಂಭವಾಗಿ, ಕ್ರಿ.ಶ. 11-13ನೇ ಶತಮಾನದಲ್ಲಿ ಉತ್ತುಂಗಕ್ಕೇರಿ ಕ್ರಮೇಣ ಕ್ಷೀಣಿಸಿದ ಒರಿಸ್ಸಾದ ವಿಶಿಷ್ಟ ವಾಸ್ತುಕಲೆಯ `ಕಳಿಂಗ ಶೈಲಿ’ಯ ಅತ್ಯುನ್ನತ ಸಾಧನೆ ಈ ಸೂರ್ಯದೇಗುಲ, ನಂದಿ ಹೋಗುವ ದೀಪದ ಅಂತಿಮ ಕ್ಷಣಗಳ ಉಜ್ವಲ ಜ್ವಾಲೆ ಈ ಕಲಾ ಮಂದಿರ. + +ಸೂರ್ಯದೇವನ ಪ್ರತಿಮೆಯಿದ್ದ ಮುಖ್ಯ ದೇಗುಲದ ಶಿಖರ ಕುಸಿದುಬಿದ್ದು ನೂರಾರು ವರ್ಷಗಳಾಗಿವೆ. ವಿದ್ವಾಂಸರ ಪ್ರಕಾರ ಅದರ ಅಂದಾಜು ಎತ್ತರ ಎರಡು ನೂರು ಅಡಿಗಳನ್ನೂ ಮೀರಿತ್ತು. ಅದರ ಕುಸಿತಕ್ಕೆ ಅಡಿಪಾಲ ಕುಸಿತವೇ ಕಾರಣವೆಂದು ಕೆಲ ವಾಸ್ತು ವಿಜ್ಞಾನಿಗಳು ಹೇಳಿದರೆ, ಇನ್ನು ಕೆಲವರು ಭೂಕಂಪ ಅಥವಾ ಸಿಡಿಲು ಕಾರಣವಾಗಿರಬಹುದೆನ್ನುತ್ತಾರೆ. ವಾಸ್ತು ವಿದ್ವಾಂಸ ಪರ್ಸಿ ಬ್ರೌನ್, `ದೇಗುಲದ ನಿರ್ಮಾಣ ಸಂಪೂರ್ಣವಾಗುವ ಮೊದಲೇ ಅದರ ಶಿಖರ ಕುಸಿದುಬಿದ್ದಿರಬೇಕು. ಆ ದೇಗುಲದ ನಿರ್ಮಾಣದ ಕಲ್ಪನೆ ಒಬ್ಬ ಮೇಧಾವಿಯದೇ ಆಗಿದ್ದರೂ ಸಹ ಅದರ ಬೃಹದಾಕಾರ ಅದರ ನಿರ್ಮಾಣ ಕಾರ್ಯದಲ್ಲಿ ತೊಡಗಿದವರ ಸಾಮರ್ಥ್ಯವನ್ನು ಮೀರಿತ್ತು. ಅಂಥ ಅತ್ಯದ್ಭುತ, ಅಮೋಘ ಮಹಾಕಾಯವನ್ನು ನಿರ್ಮಿಸುವ ಹಂತದಲ್ಲಿ ಆ ವಾಸ್ತುಶಿಲ್ಪಿಗಳು ಸೋತರು. ಆದರೂ ಅವರದು ಮಹಾವೈಭವದ ಸೋಲು’ ಎಂದು ತಮ್ಮ ಇಂಡಿಯನ್ ಆರ್ಕಿಟೆಕ್ಚರ್ ಕೃತಿಯಲ್ಲಿ ಹೇಳಿದ್ದಾರೆ. ಆದರೆ ಆ ದೇಗುಲ ಸಂಪೂರ್ಣವಾಗಿರಲಿಲ್ಲ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ; ಅದು ಸಂಪೂರ್ಣವಾಗಿ ಅಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತಿದ್ದವು ಎನ್ನುವುದಕ್ಕೆ ಪ್ರಾಚೀನ ಶೋಧನಶಾಸ್ತçದ ಹಾಗೂ ಸಾಹಿತ್ಯಕ ಆಧಾರಗಳಿವೆ. 1848ರವರೆಗೂ ಆ ಶಿಖರದ ಸುಮಾರು 120 ಅಡಿ ಎತ್ತರದ ತುಣುಕೊಂದು ಉಳಿದಿತ್ತು ಎನ್ನುವುದನ್ನು ಹಲವಾರು ಆಂಗ್ಲರು ದಾಖಲಿಸಿದ್ದಾರೆ. ಕ್ರಿ.ಶ. 1510ರಲ್ಲಿ ಕವಿಡಿಂಡಿಮ ಜೀವ ದೇವಾಚಾರ್ಯ ರಚಿಸಿರುವ ಸಂಸ್ಕೃತ ಕೃತಿ ಭಕ್ತಿ ಭಾಗವತದಲ್ಲಿ ಕೊನಾರ್ಕ್‌ ದೇವಾಲಯದ ಉಲ್ಲೇಖವಿದ್ದು ಅದರ ಶಿಖರದ ಧ್ವಜ ಸ್ವರ್ಗವನ್ನು ಮುಟ್ಟುತ್ತಿತ್ತು ಎಂದಿದ್ದಾರೆ. + + + +ಸ್ಥಳೀಯ ನಂಬಿಕೆಗಳ ಪ್ರಕಾರ ಒರಿಸ್ಸಾದ ಮುಘಲ್ ಗವರ್ನರ್ ಆಗಿದ್ದ ಬಾಖರ್ ಖಾನ್ ಸೂರ್ಯದೇಗುಲವನ್ನು ಅಪವಿತ್ರಗೊಳಿಸಿದ್ದರಿಂದ ಸೂರ್ಯದೇವನ ವಿಗ್ರಹವನ್ನು ಪುರಿಯ ಜಗನ್ನಾಥ ಮಂದಿರಕ್ಕೆ ಸಾಗಿಸಲಾಯಿತು. ಅಲ್ಲಿ ಪ್ರಚಲಿತವಿರುವ ದಂತ ಕತೆಯ ಪ್ರಕಾರ ದೇವಳದ ಶಿಖರದ ತಾಮ್ರದ ಕಳಸಕ್ಕೆ ಆಯಸ್ಕಾಂತ ಶಕ್ತಿಯಿದ್ದು ಅದು ಸಮುದ್ರದಲ್ಲಿ ಹಾದು ಹೋಗುವ ಹಡಗುಗಳನ್ನು ತನ್ನೆಡೆಗೆ ದಡಕ್ಕೆ ಆಕರ್ಷಿಸುತ್ತಿತ್ತಂತೆ. ಇದರಿಂದ ರೋಸಿದ ಕೆಲ ನಾವಿಕರು ದೇವಳದ ಶಿಖರವನ್ನೇರಿ ಅದರ ಕಳಸವನ್ನು ತೆಗೆದುಬಿಟ್ಟರಂತೆ. ಈ ರೀತಿ ದೇಗುಲ ಅಪವಿತ್ರಗೊಂಡಿದ್ದರಿAದ ವಿಗ್ರಹವನ್ನು ಪುರಿಗೆ ಸಾಗಿಸಲಾಯಿತು. ಅದಾದನಂತರ ದೇಗುಲದಲ್ಲಿ ಯಾವುದೇ ಪೂಜೆ ಪುನಸ್ಕಾರಗಳು ನಡೆಯದೆ ದೇಗುಲ ಶಿಥಿಲಗೊಂಡು ಯಾವುದೇ ಜೀರ್ಣೋದ್ಧಾರ ಕಾರ್ಯಗಳು ನಡೆಯದೆ ಹಾಳುಬಿದ್ದಿರಬಹುದು. ಪ್ರಕೃತಿಯ ವಿಕೋಪಗಳಿಗೆ ಒಂದಷ್ಟು ಬಲಿಯಾದೆ ಮನುಷ್ಯನ ದುರಾಸೆ, ಬುದ್ಧಿಗೇಡಿತನಕ್ಕೆ ಮತ್ತಷ್ಟು ಬಲಿಯಾಯಿತು. ಹತ್ತಿರದ ಖುರ್ದಾದ ರಾಜ ತನ್ನ ಕೋಟೆಯಲ್ಲಿ ಕಟ್ಟಿಸುವ ದೇವಾಲಯಕ್ಕೆ ಬೇಕೆಂದು ಕೊನಾರ್ಕ್ ದೇಗುಲದ ಕ್ಲೋರೈಟ್ ಶಿಲೆಗಳನ್ನು ಹಾಗೂ ವಿಗ್ರಹಗಳನ್ನು ಕದ್ದು ಕೊಂಡೊಯ್ದ. ಆತನ ಜೊತೆಗೆ ಸ್ಥಳೀಯ ಜನರೂ ಸಹ ಕಲ್ಲು ಹಾಗೂ ಕಬ್ಬಿಣಕ್ಕಾಗಿ ಶಿಥಿಲ ದೇಗುಲವನ್ನು ಮತ್ತಷ್ಟು ಹಾಳುಗೆಡವಿದರು. 1868ರಲ್ಲಿ ರಾಜೇಂದ್ರ ಲಾಲ್ ಎಂಬ ವಿದ್ವಾಂಸ ಅಲ್ಲಿಗೆ ಭೇಟಿ ಕೊಟ್ಟಾಗ, `ಅಲ್ಲಿ ಮರಗಿಡಗಳು ಬೆಳೆದಿದ್ದ ಕಲ್ಲುಗಳ ಪರ್ವತವೇ ಇತ್ತು’ ಎಂದು ದಾಖಲಿಸಿದ್ದಾನೆ. + +ಅಷ್ಟೊಂದು ಶಿಥಿಲವಾಗಿದ್ದ ದೇವಾಲಯದ ಜೀರ್ಣೋದ್ಧಾರ ಕಾರ್ಯ ಎಷ್ಟು ವ್ಯಾಪಕವಾಗಿತ್ತೆಂದರೆ ಅದೂ ಸಹ ದೇವಾಲಯದ ಚರಿತ್ರೆಯ ಒಂದು ಭಾಗವೇ ಆಗಿದೆ. ಆಂಗ್ಲರು 1806ರಲ್ಲೇ ಅದರ ಜೀರ್ಣೋದ್ಧಾರ ಕಾರ್ಯ ಆರಂಭಿಸಿದರಾದರೂ ಹಣಕಾಸಿನ ವ್ಯವಸ್ಥೆಯಿಲ್ಲದೆ ತೀರಾ ಮಂದಗತಿಯಲ್ಲಿ ಸಾಗಿತ್ತು. 1900ರಲ್ಲಿ ಅಲ್ಲಿಗೆ ಭೇಟಿ ನೀಡಿದ ಬಂಗಾಳದ ಲೆಫ್ಟಿನೆಂಟ್ ಗವರ್ನರ್ ಸರ್ ಜಾನ್ ವುಡ್‌ಬರ್ನ್ ದೇಗುಲದ ಅವಸ್ಥೆ ನೋಡಿ ಕೂಡಲೇ ಜೀರ್ಣೋದ್ಧಾರದ ಕಾರ್ಯ ತೀವ್ರವಾಗುವಂತೆ ಮಾಡಿದ. ಈಗ ಉಳಿದಿರುವ `ಕಪ್ಪು ಪಗೋಡ’ ಜಗಮೋಹನದ ಛಾವಣಿಯೂ ಕುಸಿಯಿತ್ತಿದ್ದುದರಿಂದ ಅದನ್ನು ಶಾಶ್ವತವಾಗಿ ಉಳಿಸಲು ಅದರ ಒಳಭಾಗವನ್ನು ಸಂಪೂರ್ಣವಾಗಿ ಮರಳಿನಿಂದ ತುಂಬಿ ಮುಚ್ಚಿಬಿಡಲಾಯಿತು. ಇಂದು ನಾವು ಅದರ ಹೊರಭಾಗವನ್ನು ಮಾತ್ರ ನೋಡಬಹುದು. + +ಈಗ ಶಿಖರವೇ ಇಲ್ಲದಿರುವ ಮುಖ್ಯ ದೇಗುಲದ ಉಳಿದಿರುವ ಪೀಠ ಭಾಗದ ಪಶ್ಚಿಮ, ಉತ್ತರ ಹಾಗೂ ದಕ್ಷಿಣ ಭಾಗಗಳಲ್ಲಿ ಕ್ಲೋರೈಟ್ ಶಿಲೆಯಿಂದ ನಿರ್ಮಿಸಿರುವ ಸೂರ್ಯನ ಮೂರು ಪಾರ್ಶ್ವ ದೇವತಾ ವಿಗ್ರಹಗಳಿವೆ. ಆ ವಿಗ್ರಹಗಳ ಮೇಲಿನ ಒಡವೆ, ಆಭರಣಗಳ ಕುಸರಿ ಕಲೆಯಂತೂ ಚಿನಿವಾರನ ಕುಸರಿ ಕಲೆಯಷ್ಟೇ ಸೂಕ್ಷ್ಮ ಹಾಗೂ ಸುಂದರವಾಗಿವೆ. ವಿಶೇಷವೆಂದರೆ ಈ ಪಾರ್ಶ್ವ ದೇವತೆಗಳು ಬೂಟುಗಳನ್ನು ಧರಿಸಿವೆ. ಅವುಗಳ ಶಿಲ್ಪಿಗಳು ಯವನ*ರಾಗಿದ್ದು ಅವರ ಸಂಸ್ಕೃತಿಯ ಪ್ರಭಾವ ಈ ಶಿಲ್ಪಗಳಲ್ಲಿವೆಯೆಂದು ಶಿಲ್ಪ ಕಲಾತಜ್ಞರು ಹೇಳುತ್ತಾರೆ. (ಫುಟ್ ನೋಟ್: ಯವನರು ಯಾರು ಎಂಬುದು ಬಹು ಚರ್ಚಿತ ವಿಷಯವಾಗಿದ್ದು ಅವರು ಬಹುಪಾಲು ಮ್ಯಾಸಿಡೋನಿಯಾ ಅಥವಾ ಬ್ಯಾಕ್ಟಿçಯನ್ ಗ್ರೀಕರಾಗಿದ್ದರು ಎನ್ನುತ್ತಾರೆ. ಪುರಾಣಗಳಲ್ಲಿ ಅವರನ್ನು ತೂರ್ವಾಸುವಿನ ವಂಶಜರೆಂದು ಹೇಳಲಾಗಿದ್ದು ಅವರು ವಾಯುವ್ಯ ಪ್ರಾಂತ್ಯಗಳವರು ಎನ್ನಲಾಗುತ್ತದೆ.)ಶ್ರೀಲಂಕಾದ ಖ್ಯಾತ ಕಲೆ-ಸಂಸ್ಕೃತಿ ಚಿಂತರ-ವಿದ್ವಾಂಸ ಆನಂದ ಕೂಮಾರಸ್ವಾಮಿ ಹೇಳುವಂತೆ ಆ ದೇಗುಲ ಸೂರ್ಯ ದೇಗುಲವಾಗಿರುವುದಷ್ಟೇ ಅದರ ವಿಶಿಷ್ಟತೆಯಲ್ಲ, ಅದರ ವಾಸ್ತುಕಲೆ ಹಾಗೂ ಶಿಲ್ಪಕಲೆಯಿಂದಾಗಿ ಭಾರತದ ಮಧ್ಯಯುಗದ ಕಲೆಯ ಅತ್ಯಂತ ಶ್ರೇಷ್ಠ ಸ್ಮಾರಕವಾಗಿದೆ. + + + +ಏಷಿಯಾ ನಾಗರಿಕತೆಗಳ ವಿದ್ವಾಂಸ ಎ.ಎಲ್.ಭಾಷಂ, `ಒರಿಸ್ಸಾ ಶಿಲ್ಪಕಲೆಯ ಅತ್ಯಂತ ಸುಂದರ ಮಾದರಿಗಳು ಕೊನಾರ್ಕ್‌ನ ಸೂರ್ಯ ದೇಗುಲದಲ್ಲಿವೆ. ಅಲ್ಲಿನ ಬಲಶಾಲೆ ಕುದುರೆಗಳೂ, ದೈತ್ಯಾಕಾರದ ಆನೆ ಶತ್ರುವೊಬ್ಬನನ್ನು ಸೊಂಡಿಲಿನಲ್ಲಿ ಹಿಡಿದಿರುವುದು ಹಾಗೂ ಅಲ್ಲಿನ ಇನ್ನಿತರ ಪ್ರಾಣಿ ಶಿಲ್ಪಗಳ ಸುಂದರ ಕಲೆ ಪ್ರಪಂಚದ ಬೇರೆಡೆ ಇರುವುದು ತೀರಾ ಅಪರೂಪ…’ ಎಂದಿದ್ದಾರೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_500.txt b/Kenda Sampige/article_500.txt new file mode 100644 index 0000000000000000000000000000000000000000..b0f9f094a628e5a720d91fce782efb24e60388f8 --- /dev/null +++ b/Kenda Sampige/article_500.txt @@ -0,0 +1,155 @@ + + +ಫೋಟೋ: ಎ.ಎನ್.ಮುಕುಂದ + +ಜಯತೀರ್ಥ ಆಚಾರ್ಯರು ರಾತ್ರೆ ಒಂಬತ್ತು ಗಂಟೆಯ ತನಕ ಗೋವಿಂದನ್ ನಾಯರ್ ಆಡುವ ಮಾತುಗಳನ್ನು ಕೇಳಿಸಿಕೊಂಡು, ಆಮೇಲೆ ನಿದ್ದೆ ಹೋಗಿ, ಬೆಳಿಗ್ಗೆ ಐದು ಗಂಟೆಗೆ ಗರಗಸದಿಂದ ಕುಯ್ದಂಥ ಶಬ್ದ ಮಾಡಿ ಸತ್ತದ್ದು. ಅವರು ಹಾಸಿಗೆ ಹಿಡಿದು ಮಲಗಿದ್ದೆಂದರೆ ಕೇವಲ ಇಪ್ಪತ್ತು ದಿನಗಳು. ಸಾಯುವಾಗ ಅವರಿಗೆ ಬೇಕಾದವರೆಲ್ಲ ಅವರ ಬಳಿಯೇ ಇದ್ದರು. ದೆಹಲಿಯಿಂದ ಅಪ್ಪನ ಖಾಹಿಲೆ ಕೇಳಿ ಬಂದಿದ್ದ ಮಗ, ಅವನ ಸಂಸಾರ, ನಲವತ್ತು ವರ್ಷಗಳಿಂದ ಮುಖ ನೋಡದೇ ಇದ್ದ ಅವರ ಯೌವನದ ಗೆಳೆಯ- ಕೇರಳದ ಕಮ್ಯುನಿಸ್ಟ್ ಗೋವಿಂದನ್ ನಾಯರ್, ಹೆಂಡತಿ, ವಿಧವೆಯಾಗಿ ಮನೆ ಸೇರಿದ ಮಗಳು ಮತ್ತು ಅವಳ ಹನ್ನೆರಡು ವರ್ಷದ ಮಗ. ಮುಖ್ಯವಾಗಿ ಅವರ ಈ ಇಪ್ಪತ್ತು ವರ್ಷಗಳ ಪ್ರೇಯಸಿ, ಗಂಗೂಬಾಯಿ ಕೂಡ. ಅವಳು ಶಿವಮೊಗ್ಗದವಳು. ಆಚಾರ್ಯರಿಗೆ ಖಾಹಿಲೆಯೆಂದು ಕೇಳಿದವಳೇ ಹಿಂದು ಮುಂದು ನೋಡದೆ ಬಂದವಳು. ಅವಳೊಬ್ಬಳು ಅವರಿಗೆ ಇದ್ದಾಳೆಂಬುದು ಜನಜನಿತವಾಗಿದ್ದರೂ ಅವಳು ಹೀಗೆ ಪ್ರತ್ಯಕ್ಷವಾಗಿದ್ದು ಈಗಲೇ. ಅವಳು ಬಂದಾಗ ಆಚಾರ್ಯರು ಬೇಡವೆನ್ನಲಿಲ್ಲ. ಹೆಂಡತಿ ರುಕ್ಮಣಿಯಮ್ಮ ಒಳಗಿಂದೊಳಗೇ ಮಗಳ ಹತ್ತಿರ, ಮಡಿ- ಮೈಲಿಗೆ, ಮಾನ-ಮರ್ಯಾದೆಯೆಂದು ರಂಪಮಾಡಿದರು. + +ಆದರೆ ಗಂಡನ ಪರಿಸ್ಥಿತಿಯಿಂದಾಗಿ, ‘ಯಾವ ಜನ್ಮದ ಋಣವೋ ತೀರಬೇಕಲ್ಲ’ ಎಂದು ಬಾಯಿ ಮುಚ್ಚಿಕೊಂಡಿದ್ದರು. ಎಲ್ಲರನ್ನೂ ನಗುಮುಖದಿಂದ ಮಾತಾಡಿಸುತ್ತ ಗಂಗೂಬಾಯಿ ಮೌನವಾಗಿ ಆಚಾರ್ಯರ ಶುಶ್ರೂಷೆಯನ್ನು ವಹಿಸಿಕೊಂಡಳು. ಅವರನ್ನು ಮಲಗಿಸಿದ್ದ ಹಾಸಿಗೆ ಗಂಟು ಗಂಟಾಗಿರುವುದನ್ನು ಕಂಡು ಹೊಸದಾದ ಮೆತ್ತನೆಯ ಹಾಸಿಗೆ ಮಾಡಿಸಿದಳು. ಬೆಡ್‌ಶೀಟುಗಳನ್ನು ಶುಭ್ರವಾಗಿ ಒಗೆದು ಕೆಂಡದ ಇಸ್ತ್ರಿಪಟ್ಟಿಗೆಯಲ್ಲಿ ಅವನ್ನೆಲ್ಲ ಗರಿಗರಿಯಾಗಿ ಇಸ್ತ್ರಿ ಮಾಡಿ ನಿತ್ಯ ಬದಲಾಯಿಸಿದಳು…. ‘ಹಾಲಿನ ವ್ಯಾಪಾರವನ್ನು ಯಾರು ನೋಡಿಕೊಳ್ಳುತ್ತಾರೆ?’ ಎಂದು ಆಚಾರ್ಯರು ರಗಳೆ ಮಾಡಿಕೊಂಡಾಗ ತನಗೆ ವ್ಯವಹಾರ ಗೊತ್ತಿಲ್ಲವೆ? ಅದಕ್ಕೆಲ್ಲ ತಕ್ಕ ಏರ್ಪಾಡು ಮಾಡಿ ಬಂದಿದ್ದೇನೆ ಎಂದಳು. ಸ್ಕೂಲಿಗೆ ಎಷ್ಟು ದಿನ ರಜ ಹಾಕಿದ್ದೀಯ? ಎಂದಿದ್ದಕ್ಕೆ ನಿಮಗೆ ಹುಷಾರಾಗೋ ತನಕ ಎಂದು ನಕ್ಕುಬಿಟ್ಟಿದ್ದಳು. ಅವಳು ಪ್ರೈಮರಿ ಸ್ಕೂಲಲ್ಲಿ ಮೇಡಂ ಎಂದು ಗೊತ್ತಾದ ಮೇಲೆ ಆಚಾರ್ಯರ ವಿಧವೆಯಾದ ಮಗಳು ಸಾವಿತ್ರಿಯ ಮುಜಗರ ಕಡಿಮೆಯಾದದ್ದು. ಹೆಂಡತಿಯ ಹತ್ತಿರ ಅವಳ ಇರವಿನ ಬಗ್ಗೆ ಮುಕ್ತವಾಗಿ ಯಾವತ್ತೂ ಮಾತಾಡದಿದ್ದ ಆಚಾರ್ಯರು ಈ ದಿನಗಳಲ್ಲಿ ಅವಳೂ ತನ್ನ ಮನೆಯ ಒಂದು ಭಾಗವೆಂಬಂತೆ ಸಂಕೋಚವಿಲ್ಲದೆ ನಡೆದುಕೊಂಡದ್ದು ಕಂಡರೆ ಅವರಿಗೆ ತಾನು ಸಾಯಬಹುದೆಂಬ ಅರಿವು ಮೂಡಿದ್ದಿರಬಹುದೆ ಎಂದು ಅವರ ಮಗ ಕೃಷ್ಣಮೂರ್ತಿಗೆ ಅನುಮಾನವಾಗುತ್ತದೆ. + +ಇಲ್ಲದಿದ್ದಲ್ಲಿ ನಲವತ್ತು ವರ್ಷಗಳ ಹಿಂದಿನ ಗೆಳೆಯನಿಗೆ ಯಾಕೆ ಬರಲು ಕಾಗದ ಹಾಕುತ್ತಿದ್ದರು? ಖಾಯಿಲೆ ಬೀಳುವ ಮುಂಚೆ ಅವನನ್ನು ಆಗ ಈಗ ನೆನಸಿಕೊಂಡದ್ದಿದೆ. ಪೇಪರಿನಲ್ಲಿ ಅವನ ಸುದ್ದಿ ಓದಿದಾಗೆಲ್ಲ ಗೆಳೆಯನ ಹಿಂಸಾತ್ಮಕ ಚಟುವಟಿಕೆಗಳ ಬಗ್ಗೆ ಅಸಮಾಧಾನದಿಂದ ಮಗನ ಬಳಿ ಮಾತಾಡಿದ್ದಿದೆ. ಐದು ವರ್ಷಗಳ ಹಿಂದೊಂದು ನಡೆದ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ಕಾಫಿ ತೋಟದ ಕೆಲಸಗಾರರ ಬೋನಸ್ ಬಗ್ಗೆ ಮಂತ್ರಿಯೊಬ್ಬನನ್ನು ಭೇಟಿ ಮಾಡಲು ನಾಯರ್ ಹೋಗಿದ್ದನಂತೆ. ಮಂತ್ರಿಯ ಹೇಳಿಕೆ ಪ್ರಕಾರ, ಮಾತಿಗೆ ಮಾತು ಬೆಳೆದು ನಾಯರ್ ಚೀಲದಿಂದ ಒಂದು ಆಸಿಡ್ ಬಾಂಬ್ ತೆಗೆದು ಹೊಡೆಯಲು ಬಂದನಂತೆ. ನಾಯರ್ ಕೋರ್ಟ್‌ನಲ್ಲಿ ಕೊಟ್ಟ ಹೇಳಿಕೆ ಪ್ರಕಾರ, ಆಸಿಡ್ ಬಾಂಬ್ ದಾಳಿಯಲ್ಲಿ ಮಂತ್ರಿಯನ್ನವನು ಕೊಲ್ಲಬೇಕಿತ್ತು; ಆದರೆ ದುರದೃಷ್ಟವಶಾತ್ ಮಂತ್ರಿಯನ್ನು ಮೆಟ್ಟಿನಲ್ಲಿ ಹೊಡೆಯುವುದು ಮಾತ್ರ ಅವನಿಗೆ ಸಾಧ್ಯವಾದದ್ದು. + +ಹೊಡೆಯಲು ಹೋದಾಗ ಟೇಬಲ್ಲಿನ ಮೇಲೆ ಮಂತ್ರಿ ಮುಗ್ಗುರಿಸಿ ಬಿದ್ದು ಹಣೆಗೆ ಗಾಯವಾಗಿತ್ತು. ನಾಯರ್ ಐದು ವರ್ಷ ಜೈಲಿಗೆ ಹೋಗಿ ಹೊರಗೆ ಬಂದವನು ಭ್ರಷ್ಟಾಚಾರದ ಜನವೈರಿಗಳನ್ನು ಕೊಲ್ಲುವುದೇ ತನ್ನ ಮುಂದಿನ ಯೋಜನೆಯೆಂದು ಹೇಳಿಕೆ ಕೊಟ್ಟಿದ್ದ. ಆಗಲೇ ಆಚಾರ್ಯರಿಗೆ ಅವನಿಗೆ ಬರೆದು ಅವನ ಚಟುವಟಿಕೆಯನ್ನು ಖಂಡಿಸಬೇಕೆನ್ನಿಸಿತ್ತು. ತನ್ನ ಜೀವನಕ್ರಮದಿಂದ ಯದ್ವಾತದ್ವ ಬೇರೆಯಾಗಿಬಿಟ್ಟಿದ್ದ. ಈ ಯೌವನದ ಗೆಳೆಯನಿಗೆ ಹೇಗೆ ಏನು ಬರೆಯಬೇಕೆಂದು ತಿಳಿಯದೆ ಆಗ ಸುಮ್ಮನಾಗಿಬಿಟ್ಟಿರಬಹುದು. ಅಥವಾ ಸುಮ್ಮನಾಗಲು ಅದೊಂದೇ ಕಾರಣವೂ ಇರಲಾರದು. ಊರಿನ ಶ್ರೀಮಂತರ ಮನೆಗಳ ಪಾಲು, ಪತ್ರದ ವ್ಯವಹಾರದಲ್ಲೆ, ಅವರಿವರಿಗಾಗಿ ಕೋರ್ಟ್‌ಗಳನ್ನು ಅಲೆಯುವುದರಲ್ಲೆ ಸದಾ ಮಗ್ನರಾಗಿರುತ್ತಿದ್ದ ತನ್ನ ತಂದೆಗೆ ತಾತ್ತ್ವಿಕ ಕಾರಣಕ್ಕಾಗಿ ಜೀವವನ್ನು ಕೊಡಲು ಕೊಲ್ಲಲು ತಯಾರಾಗಿದ್ದ ಹಿಂದಿನ ಗೆಳೆಯನ ಮನಸ್ಸನ್ನು ಅರಿಯುವ ವ್ಯವಧಾನ ಕೂಡ ಇರಲಿಲ್ಲವೇನೊ. + +ಈ ಘಟನೆ ನಂತರ ನಾಯರ್ ಬಗ್ಗೆ ವಾರಪತ್ರಿಕೆಯೊಂದರಲ್ಲಿ ಒಂದು ಲೇಖನ ಬಂದಿತ್ತು. ಇವನು ಇಂತಹ ಮನುಷ್ಯನಾಗುತ್ತೇನೆಂಬುದು ದೆಹಲಿಯಲ್ಲಿ ರೈಲ್ವೆ ಸರ್ವೀಸ್‌ಗೆ ಇಬ್ಬರೂ ಒಟ್ಟಿಗೆ ಸೇರಿದಾಗ ತನ್ನ ತಂದೆಗೆ ಗೊತ್ತಾಗುವುದು ಸಾಧ್ಯವಿತ್ತೆ? ಒಂದೇ ರೂಮಲ್ಲಿ ಇಬ್ಬರ ವಾಸವಂತೆ. ತನ್ನ ಒಳಜೀವನದ ಗುಟ್ಟುಗಳನ್ನೆಲ್ಲ ನಾಯರಿಗೆ ಹೇಳಿಕೊಂಡಿದ್ದರಂತೆ. ಆಚಾರ್ಯರು ಬ್ರಾಹ್ಮಣರಾದ್ದರಿಂದ ಅವರೇ ಅಡಿಗೆ ಮಾಡುವುದು, ನಾಯರ್ ತರಕಾರಿ ಹೆಚ್ಚಿಕೊಡುವುದು, ಅಂಗಡಿಗೆ ಹೋಗಿ ವ್ಯಾಪಾರ ಮಾಡುವುದು. ಆಚಾರ್ಯರು ಒಲೆಹೊತ್ತಿಸಿ ಅಡಿಗೆ ಮಾಡುತ್ತಿರುವಾಗ ನಾಯರ್ ಬೀಡಿ ಸೇದುತ್ತ ಯಾವುದಾದರೂ ಕಥೆಯ ಪುಸ್ತಕವನ್ನು ಗಟ್ಟಿಯಾಗಿ ಓದುವುದು. ಆಗ ಇಬ್ಬರಿಗೂ ಪ್ರಿಯವಾಗಿದ್ದ ಕಥೆಗಳೆಂದರೆ ಗೋಲ್ಡ್ಸ್ಮಿತ್ ಮತ್ತು ರೇನಾಲ್ಡ್ಸ್ ಬರೆದವು. ನಾಯರ್ ಸುಖವನ್ನು ಬಯಸುತ್ತಿದ್ದವನೆಂದೇ ಆಚಾರ್ಯರ ನೆನಪು. ಸುಖಬಯಸುತ್ತಿದ್ದ ಗೆಳೆಯ ಆ ಸುಖಗಳನ್ನು ರಕ್ಷಿಸುವ ವ್ಯವಸ್ಥೆಯನ್ನೇ ಬುಡಮೇಲು ಮಾಡಬೇಕೆಂಬ ಮನುಷ್ಯ ಯಾಕಾದ?ಆಚಾರ್ಯರು ಮೆಡಿಕಲ್ ಪರೀಕ್ಷೆಯಲ್ಲಿ ಪಾಸಾಗಲಾರದೆ ಕೆಲಸ ಕಳೆದುಕೊಂಡರು. ಮಲೆನಾಡಿನ ಮಲೇರಿಯಾದಲ್ಲಿ ಪಡೆದ ಜ್ವರಗೆಡ್ಡೆ ಡಾಕ್ಟರರ ಒತ್ತುವ ಕೈಗೆ ಗಟ್ಟಿಯಾಗಿ ಸಿಕ್ಕಿ ಕೆಲಸ ಹೋದದ್ದು. ಆಮೇಲೆ ಅಂಗಡಿಗಳಲ್ಲಿ ಲೆಕ್ಕ ಬರೆಯಲು ಆಚಾರ್ಯರು ಶುರುಮಾಡಿದರು. ಎರಡು ವರ್ಷಗಳ ನಂತರ ಇದೂ ಸಾಕಾಗಿ, ತಾನು ಕಟ್ಟಿಕೊಂಡ ಮೈನೆರೆಯದ ಎಳೆಯ ಹೆಂಡತಿ, ಅಪ್ಪ, ಅವರ ಪೂಜೆಯ ದೇವಸ್ಥಾನ- ಇವೆಲ್ಲ ನೆನಪಾಗಿ ದೆಹಲಿ ಬಿಟ್ಟು ಬಂದದ್ದು….. + +ಸ್ವಾತಂತ್ರ್ಯ ಬಂದನಂತರದ ಸ್ಟ್ರೈಕ್‌ನಲ್ಲಿ ಭಾಗವಹಿಸಿ ನಾಯರನೂ ಕೆಲಸ ಕಳದುಕೊಂಡ. ಆಮೇಲೆ ಕೇರಳದ ಸ್ವಂತ ಊರಿಗೆ ಹೋಗಿ ರೈತರ ಜೊತೆ ಕೆಲಸಮಾಡಲು ಪ್ರಾರಂಭಿಸಿ ಕಮ್ಯುನಿಸ್ಟ್ ಆದ. ನಂತರ ತನ್ನ ಪಕ್ಷ ರಷ್ಯಾದ ಮಾತು ಕೇಳಿ ದೇಶದ್ರೋಹಿ ಕಾಂಗ್ರೆಸ್ ಜೊತೆ ಕೆಲಸ ಮಾಡಲು ಪ್ರಾರಂಭಿಸಿತೆಂದು ಪಕ್ಷಕ್ಕೆ ರಾಜೀನಾಮೆ ಕೊಟ್ಟು ಏಕಾಂಗಿಯಾದ. ಆದರೆ ಕಮ್ಯುನಿಸ್ಟ್ ಆಗಿಯೇ ಮುಂದುವರಿದ. ಅವನ ಜೀವನ ಕ್ರಮವನ್ನು ಪತ್ರಿಕೆ ರಸವತ್ತಾಗಿ ಬಣ್ಣಿಸಿತ್ತು. ಯಾರಾದರೊಬ್ಬರ ಚಾವಡಿಯಲ್ಲಿ ಅವನು ಮಲಗಿ, ಅವರ ಹಿತ್ತಲಿನ ಕೊಳದಲ್ಲಿ ಬಟ್ಟೆಯೊಗೆದು ಸ್ನಾನ ಮಾಡಿ ಹೊರಗೆ ಹೊರಡುವುದು. ಎಕ್ಸರ್ಸೈಸ್ ಪುಸ್ತಕದ ರಟ್ಟುಗಳನ್ನು ಮಕ್ಕಳಿಂದ ಪಡೆದು, ಅವುಗಳನ್ನು ಬೀಸಣಿಗೆ ಮಾಡಿ, ಸೀದ ಆಸ್ಪತ್ರೆಗೆ ಹೋಗಿ ಅಲ್ಲಿದ್ದ ರೋಗಿಗಳ ಕ್ಷೇಮವನ್ನು ವಿಚಾರಿಸಿ, ಅವರಿಗೆ ಗಾಳಿ ಹಾಕಿಕೊಳ್ಳಲು ಈ ಬೀಸಣಿಕೆಗಳನ್ನು ಕೊಡುವುದು. ಮಧ್ಯಾಹ್ನ ಊರಿನ ನಡುವಿದ್ದ ಹೋಟೆಲಲ್ಲಿ ಕೂತಿರುವುದು. ಅಲ್ಲಿ ಚಹಾ ಕುಡಿಯಲು ಬಂದ ಕೂಲಿಕಾರರಿಗೋ ರೈತರಿಗೋ ಅವರ ಕೆಲಸಗಳನ್ನು ಮಾಡಿಕೊಟ್ಟು ಅವರು ಕೊಡಿಸಿದ್ದನ್ನು ತಿಂದು, ಚಹಾ ಕುಡಿದು ಬೀಡಿ ಸೇದಿ ಊರಲ್ಲಿ ಓಡಾಡಿಕೊಂಡಿರುವುದು. ರೇಷನ್ ಶಾಪು, ಕಚೇರಿ, ಪೋಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ಅಲ್ಲಿ ಬಡಬಗ್ಗರ ಪರವಾಗಿ ಅಧಿಕಾರಿಗಳ ಜೊತೆ ಜಗಳ ಮಾಡಿ ಕೆಲಸ ಮಾಡಿಸಿಕೊಡುವುದು. ಸಂಜೆ ಮತ್ತೆ ಹೊಟೇಲಲ್ಲಿ ಕೂತು ಬರೆದು ಕೊಡುವುದನ್ನು ಮಾಡಿ, ಅವರು ಕೊಡಿಸಿದ್ದನ್ನು ತಿಂದು, ಇನ್ನೊಂದು ಚಾವಡಿ ಮೇಲೆ ಮಲಗುವುದು. + +ಮಾರನೇ ದಿನದ ಖರ್ಚಿಗೆಂದು ಒಂದು ನಯಾಪೈಸೆ ಜೇಬಲ್ಲಿ ಇಟ್ಟುಕೊಂಡಿದ್ದಿಲ್ಲ. ಬಡವರಿಗೆ ಕೆಲಸ ಮಾಡಿ ಕೊಡುವಾಗ, ಶೋಷಣೆ, ಕ್ರಾಂತಿ, ಹೊಸ ಸಮಾಜ ಇತ್ಯಾದಿ ಬಗ್ಗೆ ಅವರಿಗೆ ತಿಳಿಯ ಹೇಳುವುದು- ಇದು ನಾಯರನ ದಿನಚರಿ. ಜನರ ಶತ್ರುಗಳಿಗೆ ಆತ ಮೆಟ್ಟಲ್ಲಿ ಹೊಡೆದದ್ದು ಅದು ಮೊದಲ ಸಲವಲ್ಲ. ಅವನಿಂದ ಏಟು ತಿಂದದ್ದು ಮಂತ್ರಿಯಾದ್ದರಿಂದ ಅದೊಂಡು ದೊಡ್ಡ ಸುದ್ದಿಯಾಯಿತು- ಅಷ್ಟೆ. ಕೂದಲು ಬೆಳೆದ ಕಿವಿಯಲ್ಲೊಂದು ಪೆನ್ಸಿಲ್ ಸಿಕ್ಕಿಸಿಕೊಂಡು, ಮುಂಡು ಉಟ್ಟು, ಕೈಯಲ್ಲಿ ರಟ್ಟುಗಳನ್ನು ಹಿಡಿದು ಚುರುಕಾಗಿ ಓಡಾಡುವ ಈ ಬಿಳಿ ಬಟ್ಟೆಯುಟ್ಟ ಮನುಷ್ಯನನ್ನು ಊರಿನ ಜನ ಕರೆಯೋದು ‘ಮಾಸ್ತರ್’ ಎಂದು. ತನ್ನಂತೆಯೇ ಪರರಿಗೆ ಬದುಕುವಾತ; ಆದರೆ ಎಷ್ಟು ವ್ಯತ್ಯಾಸ. + +ಆಚಾರ್ಯರು ಲೇಖನ ಓದಿ ಕೈಯಲ್ಲಿ ಚಿಟಿಕೆ ನಸ್ಯ ಹಿಡಿದು ತುಂಬ ಯೋಚಿಸಿದ್ದರು. ದೆಹಲಿಯಿಂದ ಬಂದಿದ್ದ ಮಗನಿಗೆ ಲೇಖನ ಓದಿಸಿ, ಏನೋ ಹೇಳಲು ಹೋಗಿ, ಮಾತನ್ನು ಅರ್ಧಕ್ಕೆ ನಿಲ್ಲಿಸಿದ್ದರು. ಇವೆಲ್ಲ ಅವರ ಮಗ ಕೃಷ್ಣಮೂರ್ತಿಗೆ ಅಪ್ಪ ಸತ್ತ ಮೇಲೆ ನಿಗೂಢವೆನ್ನಿಸಿದ್ದುವು. ಖಾಯಿಲೆ ಬಿದ್ದೊಡನೆಯೇ, ವಿಳಾಸವಿಲ್ಲದ ನಾಯರಿಗೆ- ಅದೇ ಲೇಖನದ ತಲೆಬರೆಹವಾಗಿತ್ತು- ಆಚಾರ್ಯರು ಊರಿನ ಹೆಸರು ಮಾತ್ರ ಬರೆದು ಬಾ ಎಂದು ಒಂದು ಕಾಗದ ಹಾಕಿದ್ದರು. ಗಂಗೂಬಾಯಿಗೆ ಮಾತ್ರ ಖಾಯಿಲೆಯೆಂದು ಬರೆದಿದ್ದರೇ ವಿನಹ ಮಗನಿಗೂ ನಾಯರಿಗೂ ಬರೆದಂತೆ ಬಾ ಎಂದು ಬರೆದಿರಲಿಲ್ಲ. ಆದರೆ ನಾಯರ್ ಕಾಫಿ ತೋಟದ ಕೆಲಸಗಾರರ ಮುಷ್ಕರದಲ್ಲಿ ತೊಡಗಿದ್ದರಿಂದ ಆಚಾರ್ಯರು ಸಾಯುವ ಹಿಂದಿನ ಮಧ್ಯಾಹ್ನ ಬಂದ. + +ತನ್ನ ಅಪ್ಪನ ಹೆಸರನ್ನು ಮೊಟಕುಮಾಡುವುದು ಅಸಾಧ್ಯವೆಂದೇ ಕೃಷ್ಣಮೂರ್ತಿ ತಿಳಿದಿದ್ದ. ಆದರೆ ನಾಯರ್ ಅವರನ್ನು ಇಂಗ್ಲಿಷಿನಲ್ಲಿ ‘ಏನು ಜಯ’ ಎಂದು ಆಪ್ತವಾಗಿ ಸಲೀಸಾಗಿ ಕರೆದು, ಬಗಲಿಗೆ ಸಿಕ್ಕಿಸಿಕೊಂಡು ಬಂದ ಅವನ ಸರ್ವಸ್ವವನ್ನೂ ತುರುಕಿದ್ದ ಚೀಲವನ್ನು ಕೆಳಗಿಟ್ಟು, ಹಾಸಿಗೆ ಬಳಿ ಕೂತಾಗ ಅವನು ತಬ್ಬಿಬ್ಬಾದ. ನಿನ್ನೆ ತಾನೆ ಗೆಳೆಯನನ್ನು ಬಿಟ್ಟು ಹೋದದ್ದು ಎನ್ನಿಸುವಂತೆ ನಾಯರ್ ಆಚಾರ್ಯರು ತೆಗೆದುಕೊಳ್ಳುತ್ತಿದ್ದ ಔಷಧಗಳನ್ನೆಲ್ಲ ಪರೀಕ್ಷಿಸಿ, ಬಾವು ಬಂದ ಕಾಲುಗಳನ್ನು ಒತ್ತಿ ನೋಡಿದ. ಕೇರಳದವನಲ್ಲವೆ? ಅಪ್ಪನಂತೆ ಅವನೂ ಆರ್ಯುವೇದ ಪ್ರೇಮಿಯಾಗಿದ್ದ. ನಾಡಿ ಪರೀಕ್ಷೆ ಮಾಡಿ, ಬಾಯಿ ಕಳೆಸಿ ನಾಲಗೆ ನೋಡಿ, ಕಣ್ಣುಗಳನ್ನು ಬಿಡಿಸಿ, ನಿಟ್ಟಿಸಿರಿಟ್ಟು, ಚೀಲದಿಂದ ಭಸ್ಮ ತೆಗೆದು ಜೇನುತುಪ್ಪದಲ್ಲಿ ಕಲಿಸಿ ನೆಕ್ಕಿಸಿದ. ಅಲೋಪತಿ ಹೇಗೆ ದೇಶೀಯ ಪದ್ಧತಿಯನ್ನು ನಾಶಮಾಡಿತು, ಇದು ಹೇಗೆ ನಿಯೋಕಲೋನಿಯಲ್ ವ್ಯವಸ್ಥೆಯಲ್ಲಿ ಅನಿವಾರ್ಯ, ಈ ದೃಷ್ಟಿಯಿಂದ ನೆಹರೂ ಹೇಗೆ ದೇಶ ದ್ರೋಹಿ ಇತ್ಯಾದಿಗಳನ್ನು ಅವಸರ ಅವಸರವಾಗಿ ಹೇಳಿ, ಚೀಲದಿಂದ ತಾನು ಬರೆದು ಪ್ರಕಟಿಸಿದ್ದ ಒಂದು ಪ್ಯಾಂಪ್ಲೆಟ್ಟನ್ನು ಅಪ್ಪನ ಕೈಯಲ್ಲಿ ಕೊಟ್ಟ-ಅಪ್ಪನ ಖಾಯಿಲೆಗೆ ಕೂಡ ಎಲ್ಲೊ ನೆಹರೂನೇ ಕಾರಣವೆಂಬಂತೆ. + +ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಕೃಷ್ಣಮೂರ್ತಿ ಕೆಲಸ ಮಾಡುತ್ತಿರುವುದೆಂದು ಕೇಳಿ ವಿಷಾದದಿಂದ ನಕ್ಕು ನೀವೆಲ್ಲ ಒಂದೋ ರಷ್ಯಾದ ದಾಸರು, ಅಥವಾ ಅಮೇರಿಕಾದ ದಾಸರು. ಈ ದೇಶದ ವಿದ್ಯಾವಂತರಲ್ಲಿ ದೇಶಪ್ರೇಮಿಗಳೇ ಉಳಿದಿಲ್ಲ ಎಂದ. ಅವನ ತತ್ಪರತೆ ಕೃಷ್ಣಮೂರ್ತಿಗೆ ಪ್ರಾರಂಭದಲ್ಲಿ ಹಾಸ್ಯಾಸ್ಪದವೆನ್ನಿಸಿ ಕ್ರಮೇಣ ಒಗಟಾಯಿತು. ಮೈ ಮುಖಗಳೆಲ್ಲ ಬಾತುಕೊಂಡಿದ್ದ ರೋಗಿಯಾದ ಸ್ನೇಹಿತನನ್ನು ಹೆಣ್ಣಿನಂತೆ ಮೃದುವಾಗಿ ಹಣೆ ಸವರಿ ಸಂತೈಸುತ್ತ, ಒರಟಾದ ಶಬ್ದಗಳಲ್ಲಿ ಇಡೀ ವ್ಯವಸ್ಥೆಯನ್ನು ಜರೆಯುತ್ತ ಕೂತ ಈ ನಾಯರನನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ತಿಳಿಯಲಿಲ್ಲ. ಈ ನಲವತ್ತು ವರ್ಷ ಏನು ಮಾಡಿಕೊಂಡಿದ್ದಿ ಇತ್ಯಾದಿ ಒಂದು ಮಾತೂ ಕೇಳಬಾರದೆ? ಅಪ್ಪನಿಗಂತೂ ಮೈಯಲ್ಲಿ ಸ್ವಸ್ಥವಿಲ್ಲದೆ ಮಾತಾಡಲಿಲ್ಲ-ಸರಿ, ಹೀಗಾಗಿ ಅಪ್ಪ ಏನನ್ನು ಕೇಳಬೇಕೆಂದು, ಅಥವಾ ಹೇಳಬೇಕೆಂದು ನಾಯರನನ್ನು ಕರೆಸಿದ್ದು ಎಂಬುದು ಬಗೆಹರಿಯಲೇ ಇಲ್ಲ. ಪಥ್ಯದಲ್ಲಿದ್ದ ಅಪ್ಪನಿಗೆ, ರಾತ್ರೆ ನಿನಗೆ ಇಷ್ಟವಾದ್ದನ್ನು ತಿನ್ನು ಎಂದು ನಾಯರ್ ಹೇಳಿದ್ದು ನೋಡಿದರೆ ಅಪ್ಪ ಸಾಯಬಹುದೆಂದು ನಾಯರಿಗೂ ಅನ್ನಿಸಿರಬಹುದೆ? ಬಾಯಿ ರುಚಿಯೇ ಇಲ್ಲ ಎಂದರು ಅಪ್ಪ. ನಲವತ್ತು ವರ್ಷಗಳ ಹಿಂದಿನದನ್ನು ನೆನಸಿಕೊಂಡು ನಾಯರ್, ದೆಹಲಿಯಲ್ಲಿ ಮಾವಿನ ಹಣ್ಣಿನ ಗೊಜ್ಜೊಂದು ಹಾತೊರೆಯುತ್ತಿದ್ದಿಯಲ್ಲ ಎಂದಾಗ ಅಪ್ಪ ನಕ್ಕರು. ಅವರು ಹಾಗೆ ಮುಗುಳ್ನಕ್ಕದ್ದನ್ನು ಕೃಷ್ಣಮೂರ್ತಿ ನೋಡಿದ್ದೇ ಕಡಿಮೆ-ಖಾಯಿಲೆ ಬಿದ್ದ ಮೇಲಂತೂ ಹಾಗೆ ನಕ್ಕಿದ್ದೇ ಇಲ್ಲ. ಬೆಪ್ಪಾಗಿ ಸೂರಿನ ಜಂತಿಯನ್ನು ನೋಡುತ್ತ ಆಗೀಗ ಪಂಚಾಂಗವನ್ನೊ, ಆರ್ಯುವೇದದ ಅಷ್ಟಾಂಗ ಹೃದಯವನ್ನೊ ಓದುತ್ತ ಮಲಗಿರುತ್ತಿದ್ದರು. ಮಾವಿನ ಗೊಜ್ಜು ಪಿತ್ಥವಲ್ಲವೆ? ಎಂದು ಅಪ್ಪ ಅನುಮಾನಿಸುತ್ತ ಹೇಳಿದ್ದಕ್ಕೆ ನಾಯರ್ ಅದಕ್ಕೆ ನನ್ನಲ್ಲಿ ಮದ್ದಿದೆ ಎಂದ. + +ಆಮೇಲಿಂದ ನಾಯರ್ ಪಕ್ಕದಲ್ಲೆ ಕೂತಿದ್ದು ತಾನು ಬರೆದ ಪ್ಯಾಂಪ್ಲೆಟ್ಟನ್ನು ಓದಿದ-ಅಪ್ಪನ ಪ್ರತಿಕ್ರಿಯೆಯನ್ನೆ ಆಶಿಸದವನಂತೆ. ರಾತ್ರಿಯಾದ ಬಳಿಕ ಗಂಗೂಬಾಯಿ ಆಚಾರ್ಯರನ್ನು ಹಿಡಿದು ಕೂರಿಸಿದಳು. ಮಗಳು ಕಲಸಿಕೊಟ್ಟ ಗೊಜ್ಜಿನ ಅನ್ನವನ್ನು ಎರಡು ತುತ್ತು ತಿಂದು ‘ಸೇರುವುದಿಲ್ಲ’ ಎಂದು ಮಲಗುತ್ತ ನಾಯರನನ್ನು ಮುಂದೇನು ಎಂದರು. ಆ ಪ್ರಶ್ನೆಯನ್ನು ಅವರು ಕೇಳಿದ ಕ್ರಮ, ಅದನ್ನು ಅರ್ಥ ಮಾಡಿಕೊಂಡು ನಾಯರ್ ಕೊಟ್ಟ ಉತ್ತರಗಳು ಅವರು ಸಾಯುವ ಹಿಂದಿನ ರಾತ್ರಿಯಾಗಿದ್ದರಿಂದ ಕೃಷ್ಣಮೂರ್ತಿಗೆ ಮುಖ್ಯವೆನಿಸುತ್ತವೆ. ಬೀಡಿಗೆ ಬೆಂಕಿಕಡ್ಡಿ ಗೀರುತ್ತ ಶಾಂತವಾಗಿ ನಾಯರ್ ಹೇಳಿದ: + +ನನ್ನ ಮಟ್ಟಿಗೆ ಮುಂದೇನು ಅನ್ನುತ್ತೀಯ? ನಾನೊಂದು ಬೀಜದಂತೆ ಫಲವತ್ತಾದ ಮಣ್ಣು ಹುಡುಕಿ ಬೀಳಬೇಕೆಂದಿದ್ದೇನೆ. ನನ್ನ ಡೈರಿಯಲ್ಲಿ ಬರುವ ಮುಂಚೆ ಬರೆದಿದ್ದೇನೆ- ಇಕೊ ನೋಡು ಎಂದು ಡೈರಿ ಬಿಚ್ಚಿ ಓದಿದ: ನನ್ನ ಮಾತು ಕೇಳುತ್ತಿದ್ದ ಕಾಫಿತೋಟದ ಕೆಲಸಗಾರರು ಆಸೆಬುರುಕರಾಗಿ ನನ್ನ ಕೈಬಿಟ್ಟರು. ಕೇರಳದ ರಾಜಕೀಯದ  ಅತ್ಯಂತ ದೊಡ್ಡ ಫಟಿಂಗನಾದ ಎಂ.ವಿ.ವಾರಿಯರ್ನಿಂದ ಮೋಸ ಹೋದರು. ಅವನನ್ನು ನಡುಬೀದಿಯಲ್ಲಿ ನಿಲ್ಲಿಸಿ ಚೂರಿ ಹಾಕಿ ಕೊಲ್ಲಬೇಕೆಂದಿದ್ದೇನೆ ಡೈರಿಯನ್ನು ಮುಚ್ಚಿ ಚೀಲದಲ್ಲಿಡುತ್ತ ನಾಯರ್ ಹೇಳಿದ- ಕೊನೆ ಮಾತೆಂಬಂತೆ: ಇವನ್ನೆಲ್ಲ ಇಗೋ ಬರೆದಿಟ್ಟು ಇಲ್ಲಿ ಬಂದಿದ್ದೇನೆ. ನಾಳೆ ಹೋಗುತ್ತೇನೆ… + +ಅಪ್ಪ ಕೇಳಿದ ಪ್ರಶ್ನೆಗೆ ಉತ್ತರವಾಗಿ ಇಡೀ ದೇಶದ ಬಗ್ಗೆ ಮಾತಾಡಿದ ಈ ಅಸಾಮಿ ಎಂಥವನು? ಅಪ್ಪ ಮಾತಾಡಲಿಲ್ಲ. ಯಾಕೆ ಮಾತಾಡಲಿಲ್ಲ? ತಿಳಿಯದೆಯೋ? ಅಥವಾ ನಿತ್ರಾಣದಿಂದಲೋ? ಅವರ ಮನಸ್ಸಲ್ಲಿ ಏನು ನಡೆದಿರಬಹುದು ಊಹಿಸುವುದು ಕಷ್ಟ. ನಾಯರ್ ಕೃತಿಯ ಫಲ ತಿಳಿಯಲೂ ಅಪ್ಪ ಉಳಿಯಲಿಲ್ಲ. ನಾಯರ್ ಹೇಳಿದಂತೆಯೇ ಮಾಡಿದ, ನಡುಬೀದಿಯಲ್ಲಿ ಜನರ ಸಮಕ್ಷಮ ಎಂ.ವಿ.ವಾರಿಯರ್ನನ್ನು ನಿಲ್ಲಿಸಿ ತನ್ನ ಉದ್ದೇಶವನ್ನು ಗಟ್ಟಿಯಾಗಿ ಹೇಳಿ ಚೂರಿಯನ್ನು ಹೊರಗೆ ತೆಗೆದ. ಪರಿಣಾಮ ಯಾರಾದರೂ ಮೊದಲೇ ಊಹಿಸುವಂತೆ ಆಗಿತ್ತು. ಎಂ.ವಿ.ವಾರಿಯರ್ ಹಿಮ್ಮೆಟ್ಟಿ ಓಡಿದ. ಅಟ್ಟಿಸಿಕೊಂಡು ಓಡಿದ ನಾಯರ್ನನ್ನು ಜನರು ಹಿಡಿದು ಚೂರಿ ಇಸಕೊಂಡರು. ಕೊಲೆಯ ಯತ್ನದ ಆಪಾದನೆ ಮೇಲೆ ಅವನನ್ನು ಬಂಧಿಸಲಾಯಿತು. + +ಅರವತ್ತು ವರ್ಷ ವಯಸ್ಸಿನ ನಾಯರ್ ನಿಜವಾಗಿಯೂ ನಲವತ್ತರ ಹರೆಯದ ವಾರಿಯರ್ನನ್ನು ಕೊಲ್ಲುತ್ತೇನೆಂದು ತಿಳಿದಿದ್ದನೊ? ಅವನ ಉದ್ದೇಶ ಎಷ್ಟು ಗಂಭೀರವಾಗಿತ್ತು. ಅದೊಂದು ನಾಟಕವಲ್ಲವೆ?-ಎಂದು ಮುಂದೆ ಕೃಷ್ಣಮೂರ್ತಿ ಯೋಚಿಸಿದ್ದಿದೆ. ಯಾಕೆಂದರೆ ನಾಯರನ ಭೆಟ್ಟಿ ಕೃಷ್ಣಮೂರ್ತಿಯ ಜೀವನಕ್ರಮಕ್ಕೂ ಸವಾಲಾಗಿ ಪರಿಣಮಿಸಿತ್ತು. ಅಪ್ಪ ಸತ್ತದ್ದೇ ಹೊರಟು ನಿಂತ. ನಾಯರ್ ಹೇಳಿದ್ದ: ನಿನ್ನ ಅಪ್ಪ ಮೂರ್ಖನಂತೆ ಬದುಕಿ ಸತ್ತ. ನೀನೂ ಅವನ ದಾರಿ ಹಿಡಿದಂತೆ ಕಾಣುತ್ತೆ ಶವಸಂಸ್ಕಾರ…. ಕೃಷ್ಣಮೂರ್ತಿ ತಡವರಿಸುತ್ತ ಹೇಳಿದ. ನಾಯರ್ ಮಾತಿನಲ್ಲಿದ್ದ ಕ್ರೌರ್ಯ ಕಣ್ಣಲ್ಲಿರಲಿಲ್ಲವೆಂಬುದು ನಿಜ. ಆದರೂ ಅವನ ಮಾತಿನ ನಿರ್ದಯ  ಕೃಷ್ಣಮೂರ್ತಿಯನ್ನು ಅಲುಗಿಸಿತ್ತು. ಉಳಿದಿರೋದು ಏನು? ಹೂತರೆ ಒಳ್ಳೆ ಗೊಬ್ಬರ. ಆದರೆ ನೀವು ಬ್ರಾಹ್ಮಣರು ಸುಡುತ್ತೀರಿ… ಗೆಳೆಯ ಕರೆದನೆಂದು ನನ್ನ ಕೆಲಸವನ್ನೆಲ್ಲ ಬಿಟ್ಟು ಬಂದೆ. ಆದರೆ ಇನ್ನು ಸಮಯ ಹಾಳು ಮಾಡಲಾರೆ. ನನ್ನ ದಾರಿ ಖರ್ಚನ್ನೀಗ ನೀನು ಕೊಡಬೇಕು. ಒಂದು ದಿವಸದ ಊಟ ಮತ್ತು ಬಸ್ಸಿನ ಖರ್ಚು ಒಟ್ಟು ಇಪ್ಪತ್ತೈದಾಗುತ್ತೆ. + +ಸ್ವಲ್ಪ ಹೆಚ್ಚು ಹಣ ಕೊಡೋಣವೆ ಎನ್ನಿಸಿತ್ತು. ಆದರೆ ಭಯವಾಗಿತ್ತು. ಮೊದಲೇ ಪೊದೆ ಹುಬ್ಬು, ಕೂದಲು ಬೆಳೆದ ಕಿವಿಗಳು, ಅದಕ್ಕೆ ಸಿಕ್ಕಿಸಿದ ಪೆನ್ಸಿಲ್ ಇತ್ಯಾದಿಗಳಿಗಾಗಿ ನಾಯರನನ್ನು ದ್ವೇಷಿಸಿದ್ದ  ಕೃಷ್ಣಮೂರ್ತಿಯ ಹೆಂಡತಿ ಮೀರಾ ಅವನು ಹೋದದ್ದೆ, ‘ಅಸಭ್ಯ’ ಎಂದು ಗೊಣಗಿದಳು. ಸಾಯುವ ಮನುಷ್ಯನ ಪಕ್ಕದಲ್ಲಿ ಕೂತಿದ್ದು ಬೀದಿ ಭಾಷಣ ಮಾಡುವುದೆ? ಹೊರಟಾಗ ಹೀಗೆ ಅನ್ನುವುದೆ?  ಕೃಷ್ಣಮೂರ್ತಿಗೂ ನಾಯರನ ವರ್ತನೆಯಿಂದ ಕಷ್ಟವಾಗಿದ್ದರೂ ಹೆಂಡತಿಯನ್ನು ಗದರಿಸಿದ್ದ. ನಿನಗೆ ತಿಳಿಯದ ವಿಷಯಗಳಲ್ಲಿ ತಲೆ ಹಾಕಬೇಡ, ಯಾಕೆ ಇಂಥ ನಾಯರನನ್ನೂ ಅಪ್ಪ ನಲವತ್ತು ವರ್ಷಗಳ ನಂತರ ನೋಡಲು ಬಯಸಿದ್ದು? ತನ್ನ ಹೆಂಡತಿ, ದೆಹಲಿ, ತಾನು ಮಾಡುವ ‘ಪಂಚವಾರ್ಷಿಕ ಯೋಜನೆ ಮತ್ತು ಗೇಣಿಶಾಸನ’ ಎಂಬುವ ಮೌಲ್ಯರಹಿತ ರಿಸರ್ಚ್ ಈ ಎಲ್ಲವೂ ಬೇಸರ ತರಿಸಿದಾಗ ನಾಯರ್ ಮತ್ತು ಅಪ್ಪನ ಸಂಬಂಧ ಮತ್ತು ಕೊನೆಯ ಭೇಟಿಗಳ ಸಂದಿಗ್ಧ ಕುರಿತು ಹೀಗೆ ಕೃಷ್ಣಮೂರ್ತಿ ತಲೆಕೆಡಿಸಿಕೊಳ್ಳುವುದುಂಟು. + +ಹೀಗೆ ಅವನು ಯೋಚಿಸುವುದಕ್ಕೆ ಇನ್ನೂ ಒಂದು ಘಟನೆ- ಅಪ್ಪ ಸಾಯುವ ಮಂಚಿನದು- ಕಾರಣವೆನ್ನಬಹುದು. ಗಂಗೂಬಾಯಿ ಬಂದಾಗ ಊರಲ್ಲೆಲ್ಲಾ ಮಹಾ ಮರ್ಯಾದಸ್ಥರೆನ್ನಿಸಿಕೊಂಡ ಅಪ್ಪ ಮುಜುಗರ ಪಡದೇ ಇದ್ದದ್ದು  ಕೃಷ್ಣಮೂರ್ತಿಗೆ ಆಶ್ಚರ್ಯವನ್ನುಂಟು ಮಾಡಿದಂತೆಯೇ, ಅಪ್ಪನ ದಾತಾರರಲ್ಲೊಬ್ಬನಾದ ಜಮೀಂದಾರ ವಿಷ್ಣುಮೂರ್ತಿ ಮನೆಗೆ ಬಂದಾಗ ಅಪ್ಪ ತೋರಿಸಿದ ತಿರಸ್ಕಾರವೂ ಅಪ್ಪನ ಕೊನೆಗಾಲದ ಮನಸ್ಥಿತಿಯನ್ನು ತಿಳಿಯಲು ಅಗತ್ಯವೆನ್ನಿಸಿತ್ತು. ದತ್ತಿಗೆ ಸಂಬಂಧಿಸಿದ ವಿಷ್ಣುಮೂರ್ತಿಗೆ ವ್ಯವಹಾರವನ್ನು ಈ ಹತ್ತು ವರ್ಷಗಳಿಂದ ನಡೆಸಿಕೊಡುತ್ತ ಬಂದದ್ದು ಆಚಾರ್ಯರು. ವಿಷ್ಣುಮೂರ್ತಿಯನ್ನು ದತ್ತಿಗೆ ಪಡೆದುಕೊಂಡ ನರಸಿಂಹಭಟ್ಟರು  ಸತ್ತಮೇಲೆ ಅವರ ಹೆಂಡತಿ ಸಾಕುಮಗನ ಜೊತೆಯಲ್ಲಿ ಇದ್ದು ಅವನನ್ನು ಬೆಳೆಸಿದರು. ಅವರಿಗೆ ಒಬ್ಬ ತಮ್ಮನಿದ್ದ- ಪ್ರೀತಿಯ ತಮ್ಮ. ಅವನಿಗೊಬ್ಬ ಗಂಡುಮಗುವಾದೊಡನೆ ಅವರ ಪ್ರೀತಿ ಈ ಹುಡುಗನ ಕಡೆ ಹರಿಯಿತು. ಅಷ್ಟು ಹೊತ್ತಿಗಾಗಲೇ ಮೈನರ್ ಅವಸ್ಥೆದಾಟಿದ್ದ ವಿಷ್ಣುಮೂರ್ತಿಗೆ ಅವನ ಸ್ವಂತ ತಂದೆತಾಯಿಯರು ಆಸ್ತಿಯ ಬಗ್ಗೆ ಎಚ್ಚರಿಕೆ ಹೇಳಿ ಬಂಗಾರವನ್ನಿಟ್ಟಿದ್ದ ತಿಜೋರಿಗೆ ಇನ್ನೊಂದು ಬಲವಾದ ಬೀಗ ಹಾಕಿಸಿದರು. ಅಲ್ಲಿಂದ ಶುರುವಾಯ್ತು ವ್ಯಾಜ್ಯ. ವಿಷ್ಣುಮೂರ್ತಿ ಹೊಡೆದು ಬಡಿದು ಸಾಕುತಾಯನ್ನು ಮನೆಯಿಂದ ಅಟ್ಟಿದ. ಆಕೆ ಈತ ನಿಜವಾಗಿಯೂ ತನ್ನ ದತ್ತಲ್ಲ. ಆ ಬಗ್ಗೆ ಆದ ರಿಕಾರ್ಡ್‌ಗಳು ನಿಜವಲ್ಲ, ತನ್ನ ಆಸ್ತಿ ತನಗೇ ಸೇರತಕ್ಕದ್ದೆಂದು ಕೇಸ್ ಹಾಕಿದರು. ತನ್ನ ತಮ್ಮನನ್ನೂ ಉಳಿದ ಬಳಗವನ್ನೂ ಸೇರಿಸಿಕೊಂಡು ಮನೆಗೆ ಧಾಳಿಯಿಟ್ಟರು. ಇಷ್ಟರಲ್ಲಿ ವಿಷ್ಣುಮೂರ್ತಿ ತಿಜೋರಿಗೆ ಸಾಕುತಾಯಿ ಹಾಕಿದ್ದ ಬೀಗ ಒಡೆಸಿ, ಅದರಲ್ಲಿದ್ದ ಬಂಗಾರವನ್ನೆಲ್ಲ ಒಂದು ಟ್ರಂಕಿಗೆ ತುಂಬಿ ಜಯತೀರ್ಥ ಆಚಾರ್ಯರ ಮನೆಯಲ್ಲಿ ತಂದಿಟ್ಟಿದ್ದ. ಜಯತೀರ್ಥ ಆಚಾರ್ಯರು ಲಾಯರನ್ನು ಇಡಿಸಿ ಹೆಜ್ಜೆ ಹೆಜ್ಜೆಗೂ ಏನು ಮಾಡತಕ್ಕದ್ದೆಂದು ವಿಷ್ಣುಮೂರ್ತಿಗೆ ದಾರಿ ತೋರಿಸುವವರಾಗಿದ್ದರು. ಆಚಾರ್ಯರ ಮನೆಗೆ ವರ್ಷಕ್ಕೊಮ್ಮೆ ಬೇಕಾದ ಅಕ್ಕಿ ವಿಷ್ಣುಮೂರ್ತಿಯಿಂದ ಸರಬರಾಜಾಗುತ್ತಿತ್ತು. + +ವಿಷ್ಣುಮೂರ್ತಿಗೆ  ಎಲ್ಲರಿಗೂ ತಿಳಿದಂತೆ ಮಹಾ ಮಿಣ್ಣನೆಯ ಮನುಷ್ಯ. ಸಿಲ್ಕ್ ಅಂಗಿ, ಗ್ಯಾಬರ್ಡೀನ್ ಕೋಟು, ಅಡ್ಡ ಉಟ್ಟ ಮಲ್ಲಿನ ಬಿಳಿ ಪಂಚೆ, ತಲೆಮೇಲೊಂದು ಕಪ್ಪು ಟೊಪ್ಪಿ ಧರಿಸಿ ನಾಜೂಕಾಗಿ ಬರುತ್ತಿದ್ದ ವಿಷ್ಣುಮೂರ್ತಿಯನ್ನು ಆಚಾರ್ಯರ ಹೆಂಡತಿ ರುಕ್ಮಿಣಿಯಮ್ಮ ಬಹು ಗೌರವದಿಂದ ಉಪಚರಿಸುವುದು. ಎಲ್ಲರಿಗೂ ಅನ್ನ ಕಾಣಿಸುತ್ತಿದ್ದ ಮನುಷ್ಯನಲ್ಲವೆ? ಆದರೆ ವಿಷ್ಣುಮೂರ್ತಿಯ ಸ್ವಾರ್ಥ ಕ್ರೌರ್ಯಗಳು ಆಚಾರ್ಯರಿಗೆ ಗೊತ್ತಿರಲಿಲ್ಲವೆಂದಲ್ಲ. ಸಾಕುತಾಯನ್ನು ಹಿಂಸೆ ಮಾಡಿ ಅವನು ಹೊರಹಾಕಿದ್ದ ಬಗೆ ಅವರಿಗೆ ತಿಳಿದದ್ದೇ. ಆದರೆ ಅಲ್ಲೊಂದು ಕಾನೂನಿನ ಪಾಯಿಂಟನ್ನೂ ಸಾಕುತಾಯಿಯ ಮೋಸವನ್ನೂ ಕಂಡಿದ್ದ ಆಚಾರ್ಯರು ಅದನ್ನು ಕಾನೂನು ಬಾಹಿರವೆಂದು ತಿಳಿದಿರಲಿಲ್ಲ. ಎಲ್ಲ ನೈತಿಕ ಮೌಲ್ಯಗಳನ್ನೂ ಕಾನೂನಿನ ಚೌಕಟ್ಟಿನಲ್ಲಿ ಅರ್ಥ ಮಾಡಿಕೊಳ್ಳುತ್ತಿದ್ದ ಅಪ್ಪನಿಗೆ ವಿಷ್ಣುಮೂರ್ತಿಯ ಒಂದು ಕ್ರಿಯೆ ಮಾತ್ರ ಬಹಳ ಧರ್ಮಸಂಕಟವನ್ನುಂಟುಮಾಡಿತ್ತು. + +ವೆಂಕಪ್ಪನಾಯಕ ಎನ್ನುವ ಹಳೇ ಪೈಕದವನ್ನೊಬ್ಬ ವಿಷ್ಣುಮೂರ್ತಿಯ ಹತ್ತಿರ ಕೆಲಸಕ್ಕಿದ್ದ. ಕಟ್ಟುಮಸ್ತಾದ ಕರಿಮೈಕಟ್ಟಿನ ಆಳು. ವಿಷ್ಣುಮೂರ್ತಿಗೆ ಆಪ್ತ ಬೇರೆಯಾದ್ದರಿಂದ ಮನೆಯ ಒಳಗುಟ್ಟೆಲ್ಲ ಬಲ್ಲವ. ಸಾಹುಕಾರರ ಕಮಾನುಗಾಡಿಯನ್ನು ಹೊಡೆಯುವ ಕೆಲಸ ಅವನದ್ದು. ಅದರ ಎತ್ತುಗಳೆಂದರೆ ವಿಷ್ಣುಮೂರ್ತಿಗೆ  ತುಂಬ ಜಂಬ. ಅಷ್ಟು ಎತ್ತರ, ಅಷ್ಟು ಲಕ್ಷಣ ಅವು. ನಂಬಿಕೆಯ ಆಳೆಂದು ಅವನಿಗೆ ವಿಷ್ಣುಮೂರ್ತಿಗೆ  ತನಗೆ ಸೇರಿದ ಗದ್ದೆಯಲ್ಲಿ ಎರಡು ಏಕರೆಯನ್ನು ಬಿಟ್ಟುಕೊಟ್ಟಿದ್ದ-ಚಾಲಗೇಣಿಗೆ. + +ಈ ವೆಂಕಪ್ಪನಾಯ್ಕನಿಗೆ ವಿಷ್ಣುಮೂರ್ತಿಯ ಹೆಂಡತಿಯ ತಂಗಿಯ ಮೇಲೆ ಮನಸಾಯಿತೋ, ಅಥವಾ ವಿಧವೆಯಾಗಿ ಅಕ್ಕನ ಮನೆಗೆ ಅವಳ ಬಾಣಂತನ ಮಾಡಲು ಬಂದ ಮೈಕೈತುಂಬಿಕೊಂಡ ಈ ಹುಡುಗಿಗೇ ಅವನ ಮೇಲೆ ಮನಸಾಯಿತೋ-ಈಗ ಹೇಳುವವರು ಉಳಿದಿಲ್ಲ. ವಿಧವೆ ಬಸುರಾದಳು, ವೆಂಕಪ್ಪನಾಯಕನ ಕೊಲೆಯಾಯಿತು. ಬಸುರು ತೆಗೆಸಿಕೊಂಡ ವಿಧವೆ ಬಾಯಿ ಮುಚ್ಚಿಕೊಂಡಿದ್ದಳು. ಕೊಲೆಯಾದ್ದು ಹೀಗೆ-ವೆಂಕಪ್ಪನಾಯಕಗೆ ಚಿಕ್ಕಂದಿನಿಂದ ವೈರಿಯಾಗಿದ್ದ ಅವನ ದಾಯಾದಿಯೊಬ್ಬ ಕಾಡಿನಲ್ಲಿ ಅವನನ್ನು ಸಿಗಿದು ಹೂಳಿಬಂದ. ಕೇಸಾಯಿತು. ವಿಷ್ಣುಮೂರ್ತಿ ಬಗ್ಗೆಯೂ ಗುಮಾನಿ ಬಂತು. ವಿಷ್ಣುಮೂರ್ತಿಗೆ  ಆಚಾರ್ಯರ ಕೈಕಾಲು ಕಟ್ಟಿಕೊಂಡ. ಸುದ್ದಿ ಆಚಾರ್ಯರ ಕಿವಿಯನ್ನೂ ತಟ್ಟಿತ್ತು. ಅದರಿಂದ ಅವರಿಗೆ ಧರ್ಮಸಂಕಟವಾಗಿದ್ದರೂ ವಿಷ್ಣುಮೂರ್ತಿಯನ್ನವರು ಸತ್ಯಕ್ಕಾಗಿ ಒತ್ತಾಯಪಡಿಸಲಿಲ್ಲ. ತನಗೇನೂ ತಿಳಿಯದೆಂದೂ, ತಾನು ನಿರಪರಾಧಿಯೆಂದೂ, ಕೊಲೆ ಮಾಡಿದ ದಾಯಾದಿಯನ್ನು ವೆಂಕಪ್ಪನಾಯಕ ಮೊದಲು ಹೊಡೆಯಲು ಹೋದದ್ದೆಂದೂ, ಅವನ ಮೈಮೇಲೂ ಗಾಯಗಳಿವೆಯೆಂದೂ, ಆತ್ಮರಕ್ಷಣೆಗಾಗಿ ಈ ಕೊಲೆ ಸಂಭವಿಸಿದ್ದೆಂದೂ ವಿಷ್ಣುಮೂರ್ತಿ ಹೇಳಿದ್ದನ್ನು ಪ್ರಯತ್ನಪಟ್ಟು ನಂಬಿಯೇ ಬಿಟ್ಟರು. ಬೇರೆಯವರು ನಂಬುವಂತೆಯೂ ದಾಯಾದಿಗಳಿಗೆ ಹಿಂದಿನಿಂದಿದ್ದ ಜಗಳಗಳ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ತಯಾರುಮಾಡಿ, ಒಬ್ಬ ಅತ್ಯುತ್ತಮ ಕ್ರಿಮಿನಲ್ ಲಾಯರನ್ನು ಗೊತ್ತು ಮಾಡಿ ವಿಷ್ಣುಮೂರ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿಸಿ ಅಂತೂ ಕೇಸನ್ನು ಗೆಲ್ಲಿಸಿಕೊಟ್ಟರು. ವಿಷ್ಣುಮೂರ್ತಿ ನಿರಪರಾಧಿಯೆಂದೂ, ದಾಯಾದಿ ಆತ್ಮರಕ್ಷಣೆಗೆ ಕೊಲೆ ಮಾಡಿದ್ದೆಂದೂ, ಹೆಣ ಹುಗಿದು ಮುಚ್ಚಿಟ್ಟದ್ದು ಭಯದಿಂದ ಎಂದೂ ಕೋರ್ಟಿನಲ್ಲಿ ಪ್ರೂವಾಯ್ತು. ಇಷ್ಟೆಲ್ಲ ಆದಮೇಲೆ ಮಗನ ಹತ್ತಿರ ಮಾತ್ರ ಆಚಾರ್ಯರು ಗುಟ್ಟಾಗಿ ಹೇಳಿದ್ದರು: ನರಕಾಂತ ಇದ್ದರೆ ಈ ವಿಷ್ಣು ಅದರಲ್ಲಿ ಸತ್ತಮೇಲೆ ನರಳ್ತಾನೆ ಕಣಯ್ಯ ಕಿಟ್ಟು. ಮಹಾಕ್ರೂರಿ ಮನುಷ್ಯ. + +ಆದರೆ ನೀವೇ ಅವರನ್ನು ಬಚಾವು ಮಾಡಿಸಿದಿರಲ್ಲ. ಛೇ- ಅದು ಕಾನೂನಿಗೆ ಬಿಟ್ಟದ್ದು. ಕಾನೂನಿನ ಪ್ರಕಾರ ಒಬ್ಬ ಗಿಲ್ಟಿಯಾದ ಮನುಷ್ಯ ತಪ್ಪಿಸಿಕೊಂಡರೂ ಚಿಂತೆಯಿಲ್ಲ. ಆದರೆ ಒಬ್ಬ ಇನ್ನೋಸೆಂಟ್ ಸಫರ್ ಆಗಕೂಡದು.  ಪೊಲೀಸ್ ಕೇಸ್ ತುಂಬ ವೀಕಾಗಿತ್ತು. ಅದಕ್ಕೇ ವಿಷ್ಣು ಬಚಾವಾದ. ಅಪ್ಪ ಈ ಮಾತುಗಳನ್ನು ಪ್ರಾಮಾಣಿಕವಾಗಿಯೇ ಆಡಿದ್ದರು. ಇದರಿಂದ ಕೃಷ್ಣಮೂರ್ತಿ ಆಶ್ಚರ್ಯಪಟ್ಟಿದ್ದ- ಕಾನೂನಿಗೆ ಅಪ್ಪ ಕೊಟ್ಟಿದ್ದ ಪ್ರಾಶಸ್ತ್ಯ ಕಂಡು. ಯಾವ ನೈತಿಕ ಪ್ರಶ್ನೆಯೂ ಬಾಧಿಸದಂತೆ ಕಾನೂನು ಅವರಿಗೆ ವಜ್ರಕವಚವಾಗಿದ್ದರಬಹುದು- ಪ್ರಾಯಶಃ ಸಾಯುವ ತನಕ? ತಾನು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಮಾಡುತ್ತಿದ್ದ ಕೆಲಸದ ಬಗ್ಗೆಯೂ ನಾಯರ್ ಇದೇ ಬಗೆಯ ಅಭಿಪ್ರಾಯದ ಮಾತಾಡಿದ್ದ. ಇಂಥ ವಾದ ಕೂಡ- ಸೋಶಿಯಲ್ ಸೈನ್ಸ್ ರಿಸರ್ಚ್  ವ್ಯಾಲೂ ಫ್ರೀಯಾಗಲು ಸಾಧ್ಯತೆ ಇತ್ಯಾದಿ- ಕೃಷ್ಣಮೂರ್ತಿಗೇನೂ ಹೊಸದಲ್ಲ. ಆದರೆ ದಿಗಿಲಾಗುತ್ತದೆ- ಶ್ರೀಮಂತರ ಚಾಕರಿಯಲ್ಲಿ ಸತ್ತ ಅಪ್ಪನನ್ನು ನೆನೆದರೆ. + +ಸಾವು ದಿಗ್ಗೆಂದು ಎದುರಾದಾಗ ಇಂಥ ಸಮಾಧಾನಗಳನ್ನೂ ನಾವು ಕೈಬಿಡಬಹುದೆ ಎಂದು ಕೃಷ್ಣಮೂರ್ತಿ ಅನುಮಾನಿಸುವುದಕ್ಕೆ ಸಾಯುತ್ತಿದ್ದ ಅಪ್ಪ ವಿಷ್ಣುಮೂರ್ತಿ ಜೊತೆ ನಡೆದುಕೊಂಡ ರೀತಿಯೂ ಕಾರಣ. ವಿಷ್ಣುಮೂರ್ತಿಯನ್ನು ದತ್ತು ತೆಗೆದುಕೊಂಡ ಪ್ರಶ್ನೆ ಇನ್ನೂ ಬಗೆಹರಿದಿರಲಿಲ್ಲ.  ಕೇಸಿತ್ತು. ಈ ಮಧ್ಯೆ ದತ್ತಿನ ಮೂಲಕ ಬಂದ ಅವನ ಜಮೀನಿನ ಬಗ್ಗೆಯೂ ಹೊಸ ಗೇಣಿ ಶಾಸನಗಳಿಂದ ಅನೇಕ ಸಂದಿಗ್ಧಗಳು ಎದ್ದಿದ್ದುವು. ಒಳ್ಳೆ ಫಲಕೊಡುವ ತೋಟವೊಂದನ್ನು ಅವನ ಸಾಕುತಾಯಿಯ ತಮ್ಮ ಗೇಣಿಗೆ ಹಿಡಿದಿದ್ದ. ಅದನ್ನು ಅವನಿಂದ ಬಿಡಿಸಿ ಕೊಳ್ಳುವುದು ಸಾಧ್ಯವಾಗಿರಲಿಲ್ಲ. ವಿಷ್ಣುಮೂರ್ತಿಯ ಪುಂಡಾಟಗಳಿಗೆ ನೂರರಷ್ಟು ಹೆಚ್ಚಿನ ಗುಂಡಾಗಿರಿ ಈ ತಮ್ಮನದು. ಈ ಮಧ್ಯೆ ವಿಷ್ಣುಮೂರ್ತಿ ಕಾಪಾಡಲೆಂದು ಸುಮಾರು ಒಂದು ಲಕ್ಷ ಬೆಲೆಬಾಳುವ ನಗನಾಣ್ಯಗಳನ್ನು ಆಚಾರ್ಯರಲ್ಲಿ ಬಚ್ಚಿಟ್ಟಿದ್ದನೆಂದು ಹೇಳಿದೆಯಷ್ಟೆ. ಅಚಾರ್ಯರಿಗೆ ಆರೋಗ್ಯವಿಲ್ಲೆಂದು ತಿಳಿದಿದ್ದೇ ವಿಷ್ಣುಮೂರ್ತಿಗೆ ಈ ನಗನಾಣ್ಯಗಳ ಬಗ್ಗೆ ಕಾತರ ಉಂಟಾಗಿರಬೇಕು. ಸಿಲ್ಕ್ ಅಂಗಿ, ಗ್ಯಾಬರ್ಡೀನ್ ಕೋಟು, ಮಲ್ ಪಂಚೆಯುಟ್ಟು ಬಂಗಾರದಿಂದ ಕಟ್ಟಿದ ಹಲ್ಲುಗಳನ್ನು ತೋರಿಸುತ್ತ, ಆರೋಗ್ಯ ವಿಚಾರಿಸಿಕೊಳ್ಳುತ್ತ ಕೂತ ವಿಷ್ಣುಮೂರ್ತಿಗೆ ಮುಖಕ್ಕೆ ಮುಖಕೊಡದೆ ಅಪ್ಪ ಹೂ ಹೂ ಎಂದಷ್ಟೆ ಉತ್ತರ ಹೇಳಿದ್ದರು. ತಾಯಿ ರುಕ್ಮಿಣಿಯಮ್ಮ ಬೆಳ್ಳಿ ಬಟ್ಟಲಲ್ಲಿ ಸ್ಪೆಶಲ್ ಆಗಿ ಮಾಡಿ ತಂದುಕೊಟ್ಟ ಬಿಸಿ ಬಿಸಿ ಕಾಫಿಯನ್ನು ಉತ್ತರೀಯದಿಂದ ಹಿಡಿದು ಹೀರುತ್ತ, ‘ಆಚಾರ್ರೆ ಶಿವಮೊಗ್ಗದಿಂದ ಡಾಕ್ಟರನ್ನು ಕರಕೊಂಡು ಬರಲ? ಮದ್ದೇನಾದರೂ ಬೇಕಿದ್ದರೆ ತಂದುಕೊಡುವೆ ಶಿವಮೊಗ್ಗದಿಂದ. ನನ್ನ ಹತ್ತಿರ ನಿಮಗೆ ದಾಕ್ಷಿಣ್ಯಬೇಡ- ಏನು?’ ಎಂದು ಪೀಠಿಕೆ ಹಾಕಿದ.ಇವನು ಹಾಕುತ್ತಿರುವುದು ಪೀಠಿಕೆಯೆಂದು ಅಪ್ಪನಿಗೆ ಗೊತ್ತಾಗಿರಬೇಕು. ‘ಏನು ಬಂದದ್ದು ಹೇಳು. ನನಗೆ ಮೈಯಲ್ಲಿ ನಿತ್ರಾಣ. ಹೆಚ್ಚು ಮಾತಾಡಲಾರೆ’ ಎಂದು ಬಿಗಿಯಾಗಿ ಹೇಳಿದರು. ‘ಅಂಥದೇನೂ ವಿಶೇಷವಿಲ್ಲ ಆಚಾರ್ರೆ, ನಿಮ್ಮ ಆರೋಗ್ಯ ಸರಿಯಿಲ್ಲವೆಂದು ಕೇಳಿದೆನಲ್ಲ ಹಾಗೆಯೇ ಶಿವಮೊಗ್ಗದಲ್ಲಿ ಬ್ಯಾಂಕಲ್ಲಷ್ಟು ಕೆಲಸವಿತ್ತು. ನನ್ನ ಇವಳಿಗೆ ನೋಡಿ ಕತ್ತಿನ ಮೇಲೊಂದು ಬಾಕು ಎದ್ದಿದೆ. ಆಪರೇಶನ್ ಮಾಡಿಸಬೇಕು. ಖರ್ಚಿಗೆ ಈ ಕೋರ್ಟಿಗೆ ಅಲೆಯೋದರಲ್ಲಿ, ನಿಮಗೆ ಗೊತ್ತಲ್ಲ, ಕೈಯಲ್ಲಿ ನಾಲ್ಕು ಕಾಸೂ ಉಳಿದಿಲ್ಲ. ಸ್ವಲ್ಪ ನಗಾನ್ನ ತಗೊಂಡು ಹೋಗಿ ಬ್ಯಾಂಕಲ್ಲಿಟ್ಟು….’ + + + +ಇವಳೇ ಎಂದು ಆಚಾರ್ಯರು ಹೆಂಡತಿಯನ್ನು ಕೂಗಿದರು. ಮನೆಗೆ ಅಕ್ಕಿ ಸಪ್ಲೈ ಮಾಡುವ ವಿಷ್ಣುಮೂರ್ತಿಯನ್ನು ಯಾವಗಲೂ ಸಂತೋಷಪಡಿಸಲು ಪ್ರಯತ್ನಿಸುವ ಹೆಂಡತಿ ಲಗುಬಗೆಯಿಂದ ಬಂದು ಮೂಗುಬಟ್ಟನ್ನು ತಿರುವುತ್ತ ನಿಂತದ್ದು ಕಂಡು ಆಚಾರ್ಯರಿಗೆ ರೇಗಿತು. ಸಿಟ್ಟಿನ ಧ್ವನಿಯಲ್ಲಿ ‘ಆ ಟ್ರಂಕನ್ನು ತಂದುಕೊಡು’, ಎಂದರು ದೊಡ್ಡದೊಂದು ಮರದ ಫೆಟಾರಿಗೆ ಬೀಗ ಹಾಕಿ ಅದರೊಳಗೆ ಬಚ್ಚಿಟ್ಟ ಈ ಟ್ರಂಕನ್ನು ಹೊರಗೆ ತೆಗೆಯುವುದು, ಅದರ ಒಳಗಿನ ಬಂಗಾರದ ನಗನಾಣ್ಯಗಳ ಮೇಲೆ ಕಣ್ಣುಹಾಯಿಸುವುದು ರುಕ್ಮಿಣಿಯಮ್ಮನಿಗೊಂದು ಹಬ್ಬವಿದ್ದಂತೆ. ಕೈಯಲ್ಲೆರಡು ಬಳೆ ತಾಳಿಗಳ ಹೊರತಾಗಿ ಬೇರೇನೂ ಬಂಗಾರ ಉಳಿಸಿಕೊಳ್ಳಲಾರದೆ ಹೋದ ಅವಳಿಗೆ ಈ ಟ್ರಂಕು ತನ್ನ ಸುಪರ್ದಿನಲ್ಲಿದೆಯೆಂಬುದೇ ಒಂದು ಹೆಮ್ಮೆಯ ಸಂಗತಿ. + +‘ಇಲ್ಲಿ ತರೋದು ಬೇಡ, ನಾನೇ ಬರ್ತೇನೆ?’ ಎಂದು ವಿಷ್ಣುಮೂರ್ತಿ ಎದ್ದು ನಿಂತ. ‘ವಿಷ್ಣು, ನನಗೆ ಖಾಯಿಲೆ ನೋಡು. ಹೇಗೋ ಏನೋ ಹೇಳಕ್ಕೆ ಆಗಲ್ಲ. ಆ ಟ್ರಂಕನ್ನ ತಗೊಂಡು ಹೋಗು. ಪ್ರತಿವರ್ಷ ಇನ್ನು ಮುಂದೆ ನೀನು ಅಕ್ಕಿ ಕಳಿಸೋದು ಬೇಡ. ಆರೋಗ್ಯವಾದ ಮೇಲೆ ನಾವೆಲ್ಲ ದೆಹಲೀಲಿ ಮಗನ ಜೊತೆ ಹೋಗಿರುತ್ತೀವಿ.’ ಆಚಾರ್ಯರ ಕಟುಧ್ವನಿ ಕೇಳಿ ವಿಷ್ಣುಮೂರ್ತಿ, ‘ಛೆ ಛೆ ಆಚಾರ್ರೆ ಹಾಗೆಲ್ಲ ನೀವು ಅನ್ನಬಾರದು. ನನ್ನ ತಂದೆಗೆ ಸಮಾನ ನೀವು…’ ಎಂದ. ‘ದುಡ್ಡಿನ ವಿಷಯಕ್ಕೆ ಬಂದಾಗ ನೋಡು ವಿಷ್ಣು. ಅಪ್ಪನೂ ಇಲ್ಲ, ಅಮ್ಮನೂ ಇಲ್ಲ, ಮಗನೂ ಇಲ್ಲ. ಹಣವಂತರಿಗಾಗಿ ನಡೆಸಿದ ಚಾಕರಿ ಜೀವನ ನನಗೆ ಸಾಕು ಸಾಕಾಗಿದೆ’. ಎಂದು ಆಚಾರ್ಯರು ಹೇಳಿ ಇನ್ನು ಹೆಚ್ಚು ಮಾತು ಬೇಕಿಲ್ಲವೆನ್ನುವಂತೆ ಕಣ್ಣು ಮುಚ್ಚಿ ಮಗ್ಗುಲಾದರು. ವಿಷ್ಣುಮೂರ್ತಿ  ಟ್ರಂಕಿನ ಸುತ್ತ ಒಂದು ಕಂಬಳಿ ಸುತ್ತಿ ಮೂಟೆಯಂತೆ ಕಟ್ಟಿಸಿಕೊಂಡು, ಇನ್ನೊಂದೂ ಮಾತಾಡದೆ ಕಾರಿನ ಬೂಟಿನಲ್ಲದನ್ನು ಇಟ್ಟುಕೊಂಡು ಕಳ್ಳನಂತೆ ಹೊರಟುಹೋದ. + +ವಾರಿಯರ್ ಕೊಲೆಯತ್ನದ ಆಪಾದನೆ ಮೇಲೆ ನಾಯರ್ ವಿಚಾರಣೆ ನಡೆಯುತ್ತಿದ್ದಾಗ ಕೃಷ್ಣಮೂರ್ತಿ ಅವನಿಗೊಂದು ಕಾಗದ ಬರೆದ. ಅದರಲ್ಲಿ ಈ ಮೇಲಿನ ಘಟನೆ ವಿವರಿಸಿ.ಆದ್ದರಿಂದ ನನ್ನ ಅಪ್ಪನನ್ನು ಮೂರ್ಖನೆನ್ನುವುದು ಸಾಧ್ಯವಿಲ್ಲ. ಅವರೂ ಈ ಧನವಂತರ ಸಂಪರ್ಕದಿಂದ ಹೇಸಿದ್ದರು. ಆದರೂ ತುಂಬುಜೀವನ ನಡೆಸಿ ಸತ್ತ ಅವರಿಗೆ ನಿಮ್ಮನ್ನು ಹೋಲಿಸಿದರೆ ನೀವೊಬ್ಬ ತೀರಾ ಸರಳ ಮನಸ್ಸಿನ ನಾಟಕೀಯ ವ್ಯಕ್ತಿ ಎನ್ನಿಸುತ್ತೆ. ಅದಕ್ಕೆ ನಾಯರ್ ಡುಂಡಗಿನ ಅಕ್ಷರದಲ್ಲಿ ಕ್ರಾಂತಿಕಾರೀ ಶುಭಾಶಯಗಳು ಎಂದು ಇಂಗ್ಲಿಷಿನಲ್ಲಿ ಪ್ರಾರಂಭಿಸಿ ಬರೆದಿದ್ದ.ಶ್ರೀಮಂತರಿಂದ ಅವರ ಹಿತಕ್ಕಾಗಿ ಮಾತ್ರ ನಿಯಂತ್ರಿತವಾದ ಈ ಸಮಾಜವನ್ನು ನಾನು ಅತ್ಯಂತ ತೀವ್ರವಾಗಿ ದ್ವೇಷಿಸುತ್ತೇನೆ. ಒಂದು ಪ್ರಣಯ ಪ್ರಸಂಗದಿಂದ ಜಾಗೃತನಾಗಿ, ಮಾರ್ಕ್ಸ್‌ರ ಹೇಳುವ ‘ಗ್ರಾಮೀಣ ಬದುಕಿನ ಈಡಿಯಸಿ’ ಯಿಂದ ತಪ್ಪಿಸಿಕೊಳ್ಳಲೆಂದು ನಲವತ್ತು ವರ್ಷಗಳ ಹಿಂದೆ ದೆಹಲಿಗೆ ಹೋಗಿದ್ದ ನಿನ್ನ ಅಪ್ಪನ ಜೀವನದ ಸಂಭ್ರಮವನ್ನೆಲ್ಲ ನಾಶಮಾಡಿದ್ದು ಈ ಶ್ರೀಮಂತರ ಚಾಕರಿ ಅಲ್ಲವೆ? ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಪ್ರೀತಿಯ ಸಂಬಂಧಗಳು- ಈ ಎಲ್ಲವನ್ನೂ ಬಂಡವಾಳಶಾಹಿ ಪದ್ಧತಿಯ ಮೂಲವಿಗ್ರಹವಾದ ಹಣ ನಾಶ ಮಾಡುತ್ತದೆ. ನನ್ನಂಥವರ ಹೋರಾಟದಿಂದ ಮಾತ್ರ ಮಾರ್ಕ್ಸ್‌ರ ಕಂಡ ಮಾರ್ಗದಲ್ಲಿ ಮನುಷ್ಯ ಮತ್ತೆ ತನ್ನ ನೈಜ ಮನುಷ್ಯತ್ವವನ್ನು ಪಡೆದಾನು. ನನ್ನ ಜೀವನವೇ ಒಂದು ವಿಚಾರವಾಗಲೆಂದ ನಾನು ಮಾಡುತ್ತಿರುವ ಕ್ರಿಯೆಗಳ ನಿನಗೆ ಬರಿಯ ನಾಟಕವಾಗಿ ಕಂಡಲ್ಲಿ ಅದಕ್ಕಿಂತ ಉತ್ತಮವಾದ್ದನ್ನು ತಿಳಿಸು. ಅದನ್ನೇ ನಾನು ಅನುಸರಿಸುತ್ತೇನೆ. ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಕೊಬ್ಬಿದ ಹಂದಿಗಳನ್ನು ನನಗೆ ಕೊಲ್ಲಬೇಕೆನ್ನಿಸುವುದೇನೂ ಖಂಡಿತ ನಾಟಕವಲ್ಲ. ನಿನ್ನ ತಂದೆಯ ಜೀವನದಂತೆ ನಿನ್ನದೂ ವ್ಯರ್ಥ ಆಗಬಾರದೆಂದು ಆಶಿಸುತ್ತೇನೆ. ಸಾಯುವಾಗ ಬರುವ ಅರಿವಿಗೆ ನಾನು ಮಹತ್ವ ಕೊಡುವುದಿಲ್ಲ- ಬದುಕಿರುವಾಗಿನ ಪ್ರತಿಕ್ಷಣದ ಪರಿಣಾಮ ಸಮುದಾಯದ ಮೇಲೆ ಏನಾಗುತ್ತದೆ ನನಗೆ ಮುಖ್ಯ. ಕ್ರಾಂತಿಗೆ ಜಯವಾಗಲಿ. ನಾಯರ್ ಬರೆದ ಪ್ರಣಯ ಪ್ರಸಂಗ ಯಾವುದೆಂದು ಕೃಷ್ಣಮೂರ್ತಿಗೆ ಗೊತ್ತಿರಲಿಲ್ಲ. ಆ ಬಗ್ಗೆ ಗೊತ್ತಿದ್ದವಳೆಂದರೆ, ಆಚಾರ್ಯರ ಸಾವಿನ ದಿನಗಳಲ್ಲಿ ಅದನ್ನೇ ಕುರಿತು ಯೋಚಿಸುತ್ತಿದ್ದವಳೆಂದರೆ, ಗಂಗೂಬಾಯಿ ಮಾತ್ರ. + +ಜಯತೀರ್ಥ ಆಚಾರ್ಯರ ಕಾಲು ಮಡಿಸಿ, ಖಾಲಿನೆಲದ ಮೇಲೆ ಮಲಗಿಸಿ, ಮೇಲೊಂದು ಕೆಳಗೊಂದು ತೆಂಗಿನಕಾಯಿ ಚಿಪ್ಪಲ್ಲಿ ದೀಪವನ್ನು ಹತ್ತಿಸಿಟ್ಟ ನಂತರ, ಗೋವಿಂದನ್ ನಾಯರ್ ಹೊರಟುಹೋದದ್ದು. ಗಂಡನ ಪಾದಗಳಿಗೆ, ನೆತ್ತಿಗೆ, ಕೊನೆಯ ಶುಶ್ರೂಷೆಯಾಗಿ ಎಣ್ಣೆಯನ್ನು ಹಚ್ಚುತ್ತ ಅಳುತ್ತ ಕೂತಿದ್ದ ರುಕ್ಮಿಣಿಯಮ್ಮನಿಗೆ ಈ ನಾಯರ್ ಹೋದದ್ದರಿಂದ ಸಮಾಧಾನವೇ ಆಯಿತೆನ್ನಬಹುದು. ಅವಳಿಗೆ ಈ ಸಾವಿನಿಂದಾಗಿ ತಲೆಯ ಮೇಲೆ ಆಕಾಶವೇ ಕಳಚಿಬಿದ್ದಂತಾಗಿದೆ. ಅವರು ಮಂಡಿ ಮತ್ತು ಬ್ಯಾಂಕುಗಳಲ್ಲಿ ಎಷ್ಟು ಸಾಲ ಮಾಡಿದ್ದರೋ ಏನು ಕಥೆಯೋ ಯಾರಿಗೆ ಗೊತ್ತು? ಇನ್ನು ಮಗ- ಅವನಿಗೆ ಕೊರಳಲ್ಲಿ ಜನಿವಾರ ಉಂಟೋ ಇಲ್ಲವೋ ತಿಳಿಯದು. ಪುರೋಹಿತರು ಏನೆಂದು ಕೊಂಡಾರು? ಹೆತ್ತವರ ಮಾತು ಕೇಳದೆ ಅವಳನ್ನು ಕಟ್ಟಿಕೊಂಡ- ಉತ್ತರ ದೇಶದವಳನ್ನು ಯಾವ ಜಾತಿಯೋ ಯಾವ ಭಾಷೆಯೋ. ಆ ಕೊರಗಿನಲ್ಲೇ ಅರ್ಧ ಇವರು ಸತ್ತದ್ದು. ಅವನಿಗಾಗಲೀ ಅವಳಿಗಾಗಲೀ ಮಡಿ ಮೈಲಿಗೆಯೆಂದರೆ ತಿಳಿಯದು. ಸಿಟ್ಟಿನಲ್ಲಿವರು ಹೇಳಿಬಿಟ್ಟರು- ವಿಷ್ಣುಮೂರ್ತಿಗೆ. ಆದರೆ ಮಗನ ಜೊತೆ ದೆಹಲಿಯಲ್ಲಿ ಹೋಗಿ ಇರುವುದು ಸಾಧ್ಯವಿತ್ತೆ? ಅದೂ ವಿಧವೆಯಾಗಿದ್ದ ತನ್ನ ಮಗಳು ಮತ್ತು ಮೊಮ್ಮಗನನ್ನು ಒಟ್ಟಿಗೆ ಇಟ್ಟುಕೊಂಡು? ಮಗಳು ಸಾವಿತ್ರಿ ಕೈಸನ್ನೆ ಬಾಯಿಸನ್ನೆ ಮಾಡಿ ಸೊಸೆಗೆ ಮಡಿ ಮೈಲಿಗೆ ತಿಳಿಸಬೇಕು. ‘ಹೆಂಡತಿಗೆ ಬುದ್ದಿ ಹೇಳೊ’ ಎಂದರೆ ಕೃಷ್ಣಮೂರ್ತಿ ರೇಗುವನು. ಈ ಮಧ್ಯೆ ಶನಿಯಂತೆ ಶಿವಮೊಗ್ಗದಿಂದ ಈ ವಯ್ಯಾರಿ ಗಂಗೂಬಾಯಿ ಬೇರೆ ವಕ್ಕರಿಸಿದ್ದಾಳೆ. ಸತ್ತವರ ಮುಖದರ್ಶನಕ್ಕೆ ಬಂದವರೂ ಅವಳನ್ನು ಕುತೂಹಲದಿಂದ ನೋಡುತ್ತಾರೆ. + +ವಿಷ್ಣುಮೂರ್ತಿ ಕಾರಿನಿಂದಿಳಿದು ಬಂದದ್ದು ರುಕ್ಮಿಣಿಯಮ್ಮನಿಗೆ ಹಗುರೆನ್ನಿಸಿತು. ಇವರು ಸಾಯುವ ಮುಂಚೆ ಅವನ ಮೇಲೆ ರೇಗಿದ್ದರೂ ಅವನು ಈ ವಿಶೇಷ ಖರ್ಚುಗಳ  ಹೊತ್ತಲ್ಲಿ ತನ್ನ ಕೈಬಿಡಲಾರ. ಮೈಮೇಲೊಂದು ಬಿಳಿಯ ಶಲ್ಯ ಹೊದ್ದು ಬಂದ ವಿಷ್ಣುಮೂರ್ತಿ ಕೈಗಳನ್ನು ಕಟ್ಟಿಕೊಂಡು ಮೂಲೆಯಲ್ಲಿ ನಿಂತ. ಅವನ ಸರೀಕರಾರೂ ಇನ್ನೂ ಬಾರದಿದ್ದನ್ನು ಕಂಡು ಅಳುವಿನ ಧ್ವನಿಯಲ್ಲಿ ಕೃಷ್ಣಮೂರ್ತಿಗೆ ಹೇಳಿದ: ನಿಮ್ಮ ತಂದೆಗೆ ಸಮಾನರು ಈ ಪ್ರಾಂತದಲ್ಲಿ ಯಾರೂ ಇಲ್ಲ, ಮಹರಾಯರೆ. ಅವರಿಗೆ ಗೊತ್ತಿಲ್ಲದ ಕಾನೂನು ಇರಲಿಲ್ಲ. ಅವರೊಬ್ಬರಿಂದ ಈ ಪ್ರಾಂತದ ನನ್ನಂಥವರು ಈ ಕೆಟ್ಟ ಕಾಲದಲ್ಲಿ ಅಷ್ಟಿಷ್ಟು ಜಮೀನು ಮನೆ ಉಳಿಸಿಕೊಂಡು ಹೀಗೆ ಮರ್ಯಾದೆಯಿಂದ ಬದುಕೋದು ಸಾಧ್ಯವಾದದ್ದು. ಮೊನ್ನೆ ನಾನು ಬಂದಾಗ ಮಾರಾಯರೇ ಹೀಗಾಗತ್ತೆ ಅಂತ ಕನಸುಮನಸಲ್ಲಿ ನಾನು ತಿಳಿದಿರಲಿಲ್ಲ. ಆಯಿತ? ನಮ್ಮನ್ನೆಲ್ಲ ಪರದೇಶಿ ಮಾಡಿ ಹೋಗಿಬಿಟ್ಟರು- ಪುಣ್ಯಾತ್ಮರು. ಕೊನೆಯ ಮಾತಿನಿಂದಾಗಿ ರುಕ್ಮಿಣಿಯಮ್ಮನಿಗೆ ದುಃಖ ಉಮ್ಮಳಿಸಿ ಬಂತು. ಮಗಳು ಸಾವಿತ್ರಿ ಬಂದು ಅವಳನ್ನು ಎಬ್ಬಿಸಿಕೊಂಡು ಹೋದಳು. ಸಂತೈಸಲೆಂದು ವಿಷ್ಣುಮೂರ್ತಿಯೂ ಒಳಗೆ ಹೋದ. ಮುಖದರ್ಶನಕ್ಕೆ ಬಂದಿದ್ದ ಸುತ್ತಮುತ್ತಲಿನ ಹಳ್ಳಿಯವರು ಒಂದು ಚೂರೂ ಅಳದೆ ಗಂಭೀರವಾಗಿ ನಿಂತಿದ್ದ ಕೃಷ್ಣಮೂರ್ತಿಗೆ ಏನು ಸಂತೈಕೆ ಹೇಳಬೇಕು ತಿಳಿಯದೆ ನಿಂತಿದ್ದರು. + +ಶಾಂತವಾಗಿ ಮಲಗಿದ್ದಂತೆ ಕಂಡ ಅಪ್ಪನಿಗೆ ಈ ಶೋಕ ಪ್ರದರ್ಶನದಿಂದ ಅವಮಾನವೆಂದೇ ಕೃಷ್ಣಮೂರ್ತಿಗೆ ಅನ್ನಿಸುತ್ತಿತ್ತು. ಅಪ್ಪ ಅತ್ತಿದ್ದನ್ನು ಅವನು ಕಂಡದ್ದಿಲ್ಲ. ಸ್ವಾಭಿಮಾನಿಯಾಗಿ ಅವರು ಬದುಕಿದ್ದು, ಸತ್ತದ್ದು. ನಾಯರ್ ಇಂಥದನ್ನು ನೋಡಲು ಇಷ್ಟಪಡದೇ ಹೋದದ್ದಿರಬೇಕು. ಅಪ್ಪನ ಪ್ರೀತಿಯ ಕ್ರಮ ಅವನಿಗೂ ಗೊತ್ತಿರಬಹುದು. ತಾನು ಮೈಸೂರಲ್ಲಿ ಓದುತ್ತಿದ್ದಾಗ ಒಮ್ಮೆ ಜೋರು ಗಂಟಲು ನೋವಾಗಿ ಮಾತೇ ನಿಂತು ಹೋಗಿ ಜ್ವರ ಬಂತು. ರೂಮಲ್ಲಿ ಒಬ್ಬನೇ ಇದ್ದಕ್ಕಿದ್ದಂತೆ ಒಂದು ಬೆಳಿಗ್ಗೆ ಅಪ್ಪ ಹಾಜರಾದರು. ಅವರ ಕಪ್ಪು ವ್ಯಾಸಕೋಟಿನ ಜೇಬಲ್ಲಿ ಹೊಸದಾಗಿ ಕೊಂಡು ತಂದ ಥರ್ಮಾಮೀಟರನ್ನು ಕೊಂಡುಕೊಂಡು ಬಂದುಬಿಟ್ಟೆ ನೋಡು ಎಂದು ಪಕ್ಕದಲ್ಲಿ ಕೂತು ಥರ್ಮಾಮೀಟರನ್ನು ಬಾಯಲ್ಲಿಟ್ಟರು. ಎರಡು ದಿನವಿದ್ದು ಶುಶ್ರೂಷೆ ಮಾಡಿದರು. ಮೂಸಂಬಿಯ ತೊಳೆ ಬಿಡಿಸಿಕೊಡುತ್ತ. ಅವರಿಗೆ ಪ್ರಿಯವಾಗಿದ್ದ ಅಸ್ಟ್ರಾನಮಿಯ ಬಗ್ಗೆ ಮಾತಾಡುತ್ತ ತನ್ನ ಆಯಾಸವನ್ನು ಹಗುರ ಮಾಡಿದ್ದರು. + +ಈ ಅಸ್ಟ್ರಾನಮಿಯ ನಡುವೆ ಆಸ್ತಿಗೆ ಸಂಬಂಧಿಸಿದ ಕಾನೂನುಗಳ ಸೂಕ್ಷ್ಮರೂಪವನ್ನೂ ತನಗವರು ಹೇಳಬೇಕು. ಈ ಕಾನೂನು ಪ್ರಪಂಚವೂ ಆಕಾಶದ ನಕ್ಷತ್ರಲೋಕದಷ್ಟೇ ಅವರಿಗೆ ಸೋಜಿಗವಾಗಿ ಕಾಣುತ್ತಿದ್ದುದು ಕೃಷ್ಣಮೂರ್ತಿಗೆ ವಿಪರ್ಯಾಸವೆಂದು ಯಾವಾಗಲೂ ಅನ್ನಿಸುತ್ತಿತ್ತು. ಹಳ್ಳಿಯ ಸಾಹುಕಾರರ ದಯೆಯ ಮೇಲೆ ಬದುಕುತ್ತಿದ್ದ ಅವರಿಗೆ ಸ್ವತಃ ದುಡ್ಡಿನ ಮೇಲೇನೂ ಆಸೆಯಿದ್ದಿರಲಿಲ್ಲ. ಆದರೆ ಉಳಿದವರ ಆಸ್ತಿಯನ್ನು ಉಳಿಸುವುದೊಂದು ಜೀವನ ತನಗೊಡ್ಡಿದ ದೊಡ್ಡಸವಾಲು ಎಂಬಂತೆ ತಿಳಿದ ಅಪ್ಪ ನಾಯರ್ ಹೇಳಿದಂತೆ ಮೂರ್ಖನೇ ಇರಬೇಕು ಅನ್ನಿಸುತ್ತದೆ. ತನ್ನ ಮದುವೆ ಅವರಿಗೆ ದೊಡ್ಡ ಆಘಾತವೇ ಆಗಿರಬೇಕು. ಮದುವೆಗೆ ಮುಂಚೆ ದೇವ ಋಣ ಪಿತೃ ಋಣಗಳ ಮಾತೆತ್ತಿದರು. ಯಾವತ್ತೂ ತನ್ನ ಭಾವನೆಗಳನ್ನು ಹೇಳಿಕೊಳ್ಳದವರು ನನ್ನ ಶ್ರಾದ್ಧ ಮಾಡಲು ಇಷ್ಟವಿಲ್ಲದ್ದರಿಂದ ನೀನು ಹೀಗೆ ಜಾತಿಯ ಹೊರಗೆ ಮದುವೆಯಾಗುತ್ತಿರೋದು ಎಂದು ಗುಡುಗಿ ಬರೆದರು. ಆಮೇಲೆ ತಾನು ಕಳಿಸುತ್ತಿದ್ದ ಹಣವನ್ನವರು ಮುಟ್ಟುತ್ತಿರಲಿಲ್ಲವಾದ್ದರಿಂದ ತಾಯಿಗೆ ಮನಿಯಾರ್ಡರ್ ಕಳಿಸಲು ಪ್ರಾರಂಭಿಸಿದ. ಮೊಮ್ಮಗ ಹುಟ್ಟಿದ ಮೇಲೆ ಮಗನನ್ನೂ ಸೊಸೆಯನ್ನೂ ಕರೆಸಿಕೊಂಡು ಎಲ್ಲವನ್ನೂ ಮರೆತವರಂತೆ ವ್ಯವಹರಿಸಿದರು. ಸಾಯುವ ಮುಂಚೆ ವಿಷ್ಣುಮೂರ್ತಿ ಹತ್ತಿರ ತಾನು ದೆಹಲಿಯಲ್ಲಿ ಹೋಗಿ ಇರುತ್ತೇನೆ ಎಂದದ್ದು, ನಾಯರನನ್ನು ಕರೆಸಿಕೊಂಡದ್ದು, ಗಂಗೂಬಾಯನ್ನು ಮನೆಯವಳಂತೆಯೇ ಒಪ್ಪಿಕೊಂಡದ್ದು ನೋಡಿದರೆ ತನ್ನ ಮದುವೆಯ ಕಹಿಯನ್ನವರು ಸಂಪೂರ್ಣ ಜೀರ್ಣಿಸಿಕೊಂಡರೆಂದೇ ಕೃಷ್ಣಮೂರ್ತಿಗೆ ಅನ್ನಿಸುತ್ತದೆ. ಆದರೆ ದೆಹಲಿಯಲ್ಲಿ ತಾನು ಬಂದಿರುತ್ತೇನೆ ಎಂದು ಅಪ್ಪ ಹೇಳಿದಾಗ ಅವನಿಗೆ ಸಂತೋಷದ ಜೊತೆ ದಿಗಿಲೂ ಆಗಿತ್ತು. ಒಂದು ಸಣ್ಣ ಪ್ಲ್ಯಾಟಿನಲ್ಲಿ ಎಲ್ಲರೂ ಒಟ್ಟಿಗಿರುವುದು ಸಾಧ್ಯವೆ? ಹೆಂಡತಿ ಮೀರಾ ಇದನ್ನು ಒಪ್ಪುವವಳೆ? + +ಅಪ್ಪನ ಕಾಲುಬುಡದಲ್ಲಿ ಉರಿಯುತ್ತಿದ್ದ ದೀಪವನ್ನೂ, ಅಂಗಳದಲ್ಲಿ ದೆಬ್ಬೆಗಳನ್ನು ಜೋಡಿಸಿ ಕಟ್ಟುತ್ತಿದ್ದ ಚಟ್ಟವನ್ನೂ ನೋಡುತ್ತ ನಿಂತಿದ್ದ ತನ್ನ ಗಮನ ಸೆಳೆಯಲು ಮೀರ ಪ್ರಯತ್ನಿಸುತ್ತಿರುವುದು ಕಾಣಿಸಿತು. ಕಕ್ಕಸ್ಸಿಗೆ ಕೂರಲು ಚಂಡಿಹಿಡಿದಿದ್ದ ಮಗ ಶ್ರೀನಾಥನ ಜೊತೆ ಅವಳ ಯಥಾಪ್ರಕಾರದ ನಿತ್ಯದ ಹೋರಾಟ ನಡೆದಿತ್ತು. ಅದಕ್ಕೆ ಗಂಡನ ಸಹಾಯ ಅವಳಿಗೆ ಬೇಕಿತ್ತು. ಇಂಥ ಕೆಲಸಗಳಲ್ಲಿ ಹೆಂಡತಿಗೆ ಸಹಾಯ ಮಾಡುವುದರಿಂದ ತಾನು ತಾಯಿಗೂ ಅಕ್ಕನಿಗೂ ಹೆಣ್ಣಿಗನಂತೆ ಕಾಣುತ್ತೇನೆಂದು ಅವನಿಗೆ ಮುಜುಗರ. ಈ ಹೊತ್ತಲ್ಲಿ ತಾನು ಶವದ ಬಳಿಯಿಂದ ಹೊರಟು ಹೋಗುವುದು ಸರಿಯೇ ತಪ್ಪೇ ತಿಳಿಯದೆ ನಿಂತೇ ಇದ್ದ. ಈ ಸೂಕ್ಷ್ಮಗಳಿಗೆ ಪರಕೀಯಳಾದ ಮೀರಾ ಮುನಿಸಿನಿಂದ ಗಂಡನನ್ನು ದುರುಗಟ್ಟಿ ನೋಡುತ್ತ ಮಗನ ಕೈಹಿಡಿದು ಜಗ್ಗುತ್ತಿದ್ದಳು. + +ಹೊರಡುವಾಗ ನಾಯರ್ ಅಪ್ಪನ ಬಗ್ಗೆ ಹೇಳಿದ್ದನ್ನೆ ಕೃಷ್ಣಮೂರ್ತಿ ಚಿಂತಿಸುತ್ತ ಚಂಡಿ ಹಿಡಿದ ಮಗನನ್ನು ಎತ್ತಿಕೊಂಡು ಅಂಗಳಕ್ಕೆ ಹೋದ. ಅಂಗಳದಲ್ಲಿ ಕಟ್ಟಿಹಾಕಿದ ಎತ್ತುಗಳು ಹುಲ್ಲನ್ನು ನಿಧಾನವಾಗಿ ಮೇಯುತ್ತ ಬುಸುಗುಟ್ಟುತ್ತಿದ್ದವು. ನಾಯಿಯೊಂದು ಬಿಸಿಲಿಗೆ ಮೈಚಾಚಿ ಮಲಗಿತ್ತು. ಅಂಗಳದಲ್ಲಿ ಅಲ್ಲಿ ಇಲ್ಲಿ ಇನ್ನೂ ತೆಗೆಯದ ಸಗಣಿ. ಅಪ್ಪ ಸತ್ತಿದ್ದರಿಂದ ಬೆಳಗಿನ ಯಥಾಪ್ರಕಾರದ ಗುಡಿಸುವ ಸಾರಿಸುವ ಕೆಲಸಗಳು ನಡೆದಿರಲಿಲ್ಲ. ಬಲಭಾಗಕ್ಕೆ ದೂರದಲ್ಲಿ ಕೊಟ್ಟಿಗೆ. ಕೊಟ್ಟಿಗೆಯ ಪಕ್ಕದಲ್ಲಿ ಗೊಬ್ಬರ್ ಗ್ಯಾಸ್ ಸಿಲೆಂಡರ್ ಅಪ್ಪನ ಆಧುನಿಕತೆಗೆ ಸಾಕ್ಷಿಯಾಗಿ ನಿಂತಿತ್ತು. ಇವತ್ತು ಒಲೆ ಹಚ್ಚಿಲ್ಲ. ಕೊಟ್ಟಿಗೆಯಲ್ಲಿ ದನಗಳನ್ನು ಹಾಲುಕರೆಸಿ ಬಿಟ್ಟಿರಲಿಲ್ಲವಾದ್ದರಿಂದ ಅವು ಹಗ್ಗ ಜಗ್ಗುತ್ತಿದ್ದುವು. ಸಾವಿತ್ರಿಯಕ್ಕ ದನಗಳ ಕೊರಳಿನ ಕಣ್ಣಿಯನ್ನು ಕಳಚುತ್ತಿರುವುದು ಕಂಡಿತು. ಹೀಗೆ ಹಾಲು ಕರೆಸದೆ ದನಗಳನ್ನು ಅಮ್ಮ ಯಾವತ್ತೂ ಈ ಮನೆಯಲ್ಲಿ ಹೊರೆ ಬಿಟ್ಟಿದ್ದು ಇಲ್ಲ. ಸಾಮಾನ್ಯವಾಗಿ ಬೆಳಿಗ್ಗೆ ದನಗಳ ಹಾಲುಕರೆದು ಹೊರಗಟ್ಟಿಯಾದ ಮೇಲೆ, ಕಲಗಚ್ಚು ಕುಡಿದು ಹುಲ್ಲು ತಿಂದಾದ ಕರುಗಳ ಮೂತಿಗೆ ಅಮ್ಮ ಮುಳ್ಳಿನ ಬುಟ್ಟಿಯನ್ನು ಕಟ್ಟುವುದು. ಈ ಕ್ರೌರ್ಯವನ್ನು ಮಗ ಪ್ರತಿಭಟಿಸಿದಾಗ ಅಮ್ಮ ನಕ್ಕು “ನಿಂಗೇನು ಗೊತ್ತು? ಪೇಟೆಮಂಗನಾಗಿದಿ ನೀನು. ಅವು ಹಾಲನ್ನೆಲ್ಲ ಕದ್ದು ಮುಚ್ಚಿ ಕುಡಿದುಬಿಡುತ್ತವೆ. ಆ ಗೌರಿಯಂತೂ ಕಣ್ಣು ತಪ್ಪಿಸಿ ಬಂದು ಹಾಲನ್ನು ಕುಡಿಸಿಬಿಡುತ್ತೆ” ಎನ್ನುವರು. ಇವತ್ತು ಆ ಯಾವ ನಿಗವನ್ನೂ ವಹಿಸದ್ದರಿಂದ ಕರುಗಳಿಗೆ ಹಬ್ಬ. + +ಪ್ಲಾಸ್ಟಿಕ್‌ನ ಪಾಟಿಯನ್ನು ಕೊಳೆಯಾಗದ ಅಂಗಳದ ಮೂಲೆಯಲ್ಲಿಟ್ಟು ಒಲ್ಲದ ಮಗನನ್ನು ಬಲತ್ಕಾರವಾಗಿ ಅದರ ಮೇಲೆ ಕೂರಿಸಲು ಕೃಷ್ಣಮೂರ್ತಿ ಪ್ರಯತ್ನಿಸಿದ. ದೆಹಲಿಯ ಸಿಮೆಂಟ್ ಲೋಕದಲ್ಲಿ ಬೆಳೆದ ಮಗು ಈ ಅಂಗಳಕ್ಕೆ ಹೇಸಿಕೊಂಡಿತ್ತು. ಮೀರಾಗೂ ಈ ಮನೆಗೆ ಬರುವುದೆಂದರೆ ಮುಜುಗರ. ಅಮ್ಮನ ಮಡಿ ಮೈಲಿಗೆಗಳ ಕಾಟ ಮತ್ತು ಬಿದಿರು ಕಟ್ಟಿದ, ಬಾಗಿಲಿಲ್ಲದ ಕಕ್ಕಸಿನಲ್ಲಿ ಕೂರುವ ಭಯಗಳೇ ಇದಕ್ಕೆ ಮುಖ್ಯ ಕಾರಣವೆನ್ನಬಹುದು. ಮಗನಿಗೆ ಏನೇನೋ ಆಸೆತೋರಿಸಿ ಗದರಿಸಿ ಪಾಟಿಯ ಮೇಲೆ ಕೂರಿಸಿದ್ದಾಯಿತು. ಆಪ್ತನಾಗಿ ಸಿಕ್ಕ ಗಂಡನಿಗೆ ಏನೋ ಹೇಳಲು ಮೀರ ಪ್ರಯತ್ನಿಸಿರುವಂತಿತ್ತು. ಬಿಸಿಲಲ್ಲಿ ಮಲಗಿದ್ದ ನಾಯಿ ಎದ್ದು ನಿಂತಿತ್ತು. ಕೊಟ್ಟಿಗೆಯಿಂದ ಮುದಿ ದನ, ಗಂಗ, ಎತ್ತುಗಳು ತಿನ್ನುತ್ತಿದ್ದ ಒಣಹುಲ್ಲಿಗೆ ಬಾಯಿಹಾಕಲು ಬಂದಾಗ, ಎತ್ತುಗಳು ಹಾಯುವಂತೆ ಮಾಡಿ ಜಗಿಯುತ್ತಲೇ ಉಸಿರಾಡುತ್ತಿದ್ದವು. ಅಂಗಳದ ಎಡಭಾಗದಲ್ಲಿ ಚಟ್ಟಕಟ್ಟುವವರು ಹಗ್ಗದಿಂದ ಬಿದಿರುಗಳನ್ನು ಬಿಗಿಯುತ್ತಿದ್ದರು. ಮುದಿದನ ಎತ್ತುಗಳ ಕಣ್ಣು ತಪ್ಪಿಸಿ, ಒಂದು ಬಾಯಿ ಹುಲ್ಲನ್ನು ಸಂಪಾದಿಸಿಕೊಂಡು ದೂರ ನಿಂತು ತಿನ್ನಲು ಶುರುಮಾಡಿತು. ಮಗ ಪಾಟಿಯಲ್ಲಿ ದಯಪಾಲಿಸುತ್ತಿದ್ದಾನೆಂಬುದನ್ನು ವಾಸನೆಯಿಂದ ಗ್ರಹಿಸಿ ಮೀರ ಒಳಗಿಂದ ಹರ್ಷಪಡುತ್ತಿರುವುದು, ಸೊಂಟದ ಮೇಲೆ ಕೈಯಿಟ್ಟು, ಬಾಬ್ ಕೂದಲನ್ನು ಟೇಪಿನಿಂದ ಬಿಗಿದು ನಿಂತ ಅವಳ ಮುಖಭಾವದಿಂದಲೇ ತಿಳಿಯುವಂತಿತ್ತು. ಕೊಟ್ಟಿಗೆಯಿಂದ ಸಾವಿತ್ರಿಯಕ್ಕ ಕೃಷ್ಣಮೂರ್ತಿಗೆ ಕೈಸನ್ನೆ ಮಾಡಿ ಕರೆಯುತ್ತಿದ್ದಾಗ ಅವನಿಗೆ ಅನ್ನಿಸಿತು: ಹೀಗೆ ಒಂದು ಯಃಕಶ್ಚಿತ್ತಾದ ಸಾಮಾನ್ಯ ಬೆಳಗ್ಗೆ ತನ್ನ ಅಪ್ಪ ಸತ್ತಿರುತ್ತಾನೆ ಎಂದು ಅವನು ಎಂದೂ ಭಾವಿಸಿರಲಿಲ್ಲ. ಸಹಸ್ರಾರು ಕಾಲಿನ ಚಕ್ಕಲಿ ಹುಳ ಮಿಣ್ಣಗೆ ಕಾಲುಬುಡದ ಕಡೆ ಹರಿದು ಬರುತ್ತಿದ್ದುದನ್ನು ಕಂಡು ಪಾಟಿಯಿಂದ ಹೆದರಿ ಎದ್ದ ಮಗನನ್ನು ಮತ್ತೆ ಕುಳ್ಳಿರಿಸಿ, ಮೀರ ಕಾಲಿನ ತುದಿಯಿಂದ ಅದನ್ನು ಮುಟ್ಟಿದಳು. ಅದು ಚಕ್ಕಲಿಯಂತೆ ಸುತ್ತಿಕೊಂಡಿತು. ಕೃಷ್ಣಮೂರ್ತಿ ಅದನ್ನು ಕಡ್ಡಿಯಿಂದ ಎತ್ತಿ ಎಸೆದಿದ್ದರಿಂದ ಮಗನಿಗೆ ಸಮಾಧಾನವಾಯಿತು. + +ನಾಯರ್ ಅಪ್ಪನ ಒಟ್ಟು ಜೀವನದ ಬಗ್ಗೆ ಹೇಳಿದ್ದು ಮತ್ತೆ ನೆನಪಾಗಿ ಕೃಷ್ಣಮೂರ್ತಿ ‘ಬಂದೆ’ ಎಂದು ಅಕ್ಕ ಕರೆಯುತ್ತಿದ್ದ ಕೊಟ್ಟಿಗೆಗೆ ಹೋಗುವಾಗ ‘ಇಲ್ಲ- ಅಪ್ಪ ಮೂರ್ಖನಾಗಿ ಸಾಯಲಿಲ್ಲ. ಹಚ್ಚಿಕೊಂಡ ಉಪದ್ವ್ಯಾಪಗಳನ್ನೆಲ್ಲ ಕೈಬಿಟ್ಟು ದೆಹಲಿಗೆ ತನ್ನ ಜೊತೆ ಬರುವ ನಿರ್ಧಾರ ಮಾಡಿದ್ದರು, ಎಂದುಕೊಂಡ. ಬರಿದಾದ ಕೊಟ್ಟಿಗೆಯಲ್ಲಿ ಮುರವನ್ನೂ ಬೇಯಿಸುವ ಒಲೆಯ ಹತ್ತಿರ ಅಕ್ಕ ಅವನನ್ನು ಕರೆದುಕೊಂಡು ಹೋದಳು. ಯಾರೂ ನೋಡಲಾರದ ಜಾಗಕ್ಕೆ ಅವಳು ಯಾಕೆ ತನ್ನ ಕರೆದಿರಬಹುದೆಂದು ಕುತೂಹಲದ ಜೊತೆಗೇ ಇದ್ದಕ್ಕಿದ್ದಂತೆ ಮತ್ತೊಂದು ಅನ್ನಿಸಿತು. ಅವರ ಇಷ್ಟದಂತೆ ತಾನು ಮದುವೆಯಾಗಿದ್ದಲ್ಲಿ, ಅವರು ಆಸ್ತಿವಂತರ ಚಾಕರಿಯಿಂದ ನಿವೃತ್ತರಾಗಿ ತನ್ನ ಜೊತೆ ಬಂದು ಇರುವ ಕನಸನ್ನು ಮೊದಲಿಂದ ಕಂಡಿದ್ದರು. ಜೀವನದ ಉದ್ದಕ್ಕೂ ಅವರಿಗಿದ್ದ ಆಸೆಯಾದ ಖಗೋಳಶಾಸ್ತ್ರದ ಬಗ್ಗೆ ಪುಸ್ತಕಗಳನ್ನು ದೆಹಲಿಯಲ್ಲಿ ಕೂತು ಓದಬೇಕೆಂದಿದ್ದರು. ಅಥವಾ ತಾಯಿಯನ್ನೂ ಅಕ್ಕನನ್ನೂ ತನಗೊಪ್ಪಿಸಿ ಗಂಗೂಬಾಯಿ ಜೊತೆ ಬದುಕಬೇಕೆಂದೂ ಅವರಿಗಿದ್ದಿರಬಹುದು. ಅವರ ಖಾಯಿಲೆ ಸುದ್ದಿ ಕೇಳಿ ಅವನು ದೆಹಲಿಯಿಂದ ಬಂದ ದಿನವೇ ಎತ್ತಲಾರದ ಕಾಲುಗಳನ್ನು ಮಡಚಿ ಗಂಗೂಬಾಯಿ ತಂದಿಟ್ಟ ದಿಂಬುಗಳಿಗೆ ಒರಗಿ, + +‘ಇಕೊ ನೀನು ಬಂದೆಯಲ್ಲ- ವಿಮಾನದಲ್ಲಿ ಬಂದಿರಬೇಕು- ತುಂಬ ಖರ್ಚಲ್ಲವ?, ಹೋಗಲಿ ಬಿಡು, ಅಂತೂ ಬಂದೆಯಲ್ಲ. ಎಂದು ಏನೇನೋ ಬಡಬಡಿಸಿ, ನಾಯರ್ ಗೂ ಬರಲು ಬರೆದಿದ್ದೇನೆ ಕಣಯ್ಯ. ಈಗ ಎಷ್ಟೋ ವಾಸಿ’ ಎಂದು ತಾವು ವಾರದ ಕೆಳಗೆ ಓದಿದ ವಿಷಯವೊಂದರ ಬಗ್ಗೆ ಬೆರಗಿನಿಂದ ಮಾತಾಡಿದ್ದರು. + +ಆಕಾಶದಲ್ಲಿರುವ ಕಪ್ಪುರಂಧ್ರಗಳ ಬಗ್ಗೆ, ‘ಇವು ನಕ್ಷತ್ರಗಳಂತಯ್ಯ, ಅಗಾಧವಾದ ನಕ್ಷತ್ರಗಳಂತೆ. ಕುಸಿಯುತ್ತಿದ್ದಾವಂತೆ. ಕುಸಿಯುವಾಗ ಅವುಗಳ ಅಪಾರ ಗುರುತ್ವಾಕರ್ಷಣ ಶಕ್ತಿಯಿಂದಾಗಿ ಬೆಳಕಿನ ಒಂದೇ ಒಂದು ಕಿರಣವೂ ಹೊರಹೋಗದಂತೆ ಎಲ್ಲವನ್ನೂ ತಮ್ಮೊಳಗೇ ಹೀರುತ್ತ ಹೀರುತ್ತ ಇರುತ್ತವಂತೆ, ಈ ರಾಕ್ಷಸನಕ್ಷತ್ರಗಳು. ಇಲ್ಲಿ ಕಾಲ ಚಲಿಸುವುದಿಲ್ಲವಂತೆ, ಎಷ್ಟು ಅದ್ಭುತವಯ್ಯ! ನೋಡು ಕಿಟ್ಟು, ಅದಕ್ಕೇ ಹೇಳೋದು, ಶಂಕರಾಚಾರ್ಯರಂತೆ ಈ ಜಗತ್ತೇ ಸುಳ್ಳು ಎಂದವನು ಈ ಅದ್ಭುತಗಳನ್ನು ಸುಲಭವಾಗಿ ಪರಿಹರಿಸಿಕೊಂಡುಬಿಡುತ್ತಾನೆ. ಆದರೆ ನಮ್ಮ ಆನಂದತೀರ್ಥರಿಗೆ ಈ ಜಗತ್ತು ನಿಜ. ಸತ್ಯಂ ಜಗತ್, ಬೇಧಗಳೆಲ್ಲ ನಿಜ. ಆದ್ದರಿಂದಲೇ ಈ ಜಗತ್ತನ್ನು ಕಂಡು ಬೆರಗಾಗೋದು ಸಾಧ್ಯ. ಇದು ನಿಜವಾದ್ದರಿಂದ ಇದನ್ನು ತಿಳಿಯೋದರಲ್ಲೂ ಅರ್ಥವಿದೆ ಎಂದ ಹಾಗಾಗುತ್ತೆ, ಅಬೇಧ ಹೇಳಲಿಕ್ಕೆ ಹೊರಟರೆ ಆವಾಗ…’ + +ಅಪ್ಪ ಆ ಪಾಯಿಂಟಿಂದ ಆಸ್ತಿ ಪಾಸ್ತಿ ಸಮಾನತೆ ಇತ್ಯಾದಿಗಳ ಖಂಡನೆಗೆ, ಕಾನೂನಿನ ಪ್ರಾಮುಖ್ಯತೆಗೆ ಬಂದುಬಿಟ್ಟಿದ್ದರು. ಅಂದರೆ ಅರ್ಥ?- ಕೃಷ್ಣಮೂರ್ತಿ ಇವನ್ನೆಲ್ಲ ಯೋಚಿಸುತ್ತಿರುವಾಗ ಅಕ್ಕ ಸೀರೆಯ ಸೆರೆಗಿನ ಗಂಟಿನಿಂದ ಏನನ್ನೋ ಬಿಚ್ಚುತ್ತಿದ್ದವಳು,‘ಅಂಗಿ ಬಿಚ್ಚು’ ಎಂದಳು.‘ಯಾಕೆ?’ ಅಂದ ಕೃಷ್ಣಮೂರ್ತಿ,‘ಇದನ್ನ ಹಾಕ್ಕೊಳ್ಳಕ್ಕೆ’ಅಕ್ಕ ತನ್ನ ಮಸಿ ಕೈಗಳಲ್ಲಿ ಹೊಸ ಜನಿವಾರವನ್ನು ತಿಕ್ಕುತ್ತಿದ್ದಳು. ಅದು ತಮ್ಮನ ಕೊರಳಲ್ಲಿ ಹಳೆಯದಂತೆ ಕಾಣಲಿ ಎಂದು.‘ನನಗೆ ಈ ನಾಟಕ ಇಷ್ಟವಿಲ್ಲ.’‘ಇಲ್ಲಾಂದರೆ ಬ್ರಾಹ್ಮಣ ಅಲ್ವ? ಅಪ್ಪನ ದಿನಕರ್ಮ ಮಾಡೋದಿಲ್ವ?’‘ಅಪ್ಪನಿಗೂ ಈ ನಾಟಕವೆಲ್ಲ ಇಷ್ಟವಾಗ್ತಿರ್ಲಿಲ್ಲ ಅಕ್ಕ, ನೋಡು ಆ ಗಂಗೂಬಾಯಿ ಜೊತೆ…’‘ಅವೆಲ್ಲ ಋಣಾನುಬಂಧ. ಯಾರ ಕೈಯಿಂದಲೂ ತಪ್ಪಿಸಿಕೊಳ್ಳೋಕೆ ಆಗಲ್ಲ.’ಅಕ್ಕ ಮರೆಯಾಗಿ ನಿಂತಿದ್ದಳು. ಕೃಷ್ಣಮೂರ್ತಿ ಅಂಗಿಯನ್ನು ಬಿಚ್ಚಿ ಜನಿವಾರವನ್ನು ಹಾಕಿಕೊಂಡ.‘ಅಕ್ಕ, ಅಪ್ಪ ಸಾಯೋಕೆ ಮುಂಚೆ ಈ ಹಾಳು ಜಮೀಂದಾರ ಸೂಳೇಮಕ್ಕಳ ಚಾಕರಿಗೆ ಬೇಸತ್ತಿದ್ದರು. ಅದಕ್ಕೆ ನಾಯರನ್ನ ಕರೆಸಿಕೊಂಡರು. ಅವನು ಗೊತ್ತ-ಶ್ರೀಮಂತರನ್ನೆಲ್ಲ ಕೊಲ್ಲಬೇಕೂಂತ ಹೊರಟವನು. ಹಾಗೇನೇ ಅವರಿಗೆ ಈ ಮಡಿ ಮೈಲಿಗೇಂದರೆ ನಿಜವಾಗ್ಯೂ ನಂಬಿಕೆ ಇರಲಿಲ್ಲ. ಇದ್ದಿದ್ರೆ ಗಂಗೂಬಾಯಿ ಜೊತೆ…’ + +ಸಾವಿತ್ರಿಗೆ ಆ ವಿಷಯ ಮಾತಾಡಲು ಇಷ್ಟವಿರಲಿಲ್ಲ. ‘ಇವೆಲ್ಲ ನಮ್ಮ ಕೈಯಲ್ಲಿರೋದೂಂತ ನೀನು ಹೇಳ್ತಿರೋದ? ಋಣಾನುಬಂಧ ಬಿಡಲ್ಲಾಂತ ಅದಕ್ಕೇ ನಾನು ಹೇಳೋದು. ಈಗ ನೀನು ಮದುವೆಯಾದ್ದೇ ನೋಡು. ನಮ್ಮ ಮೇಲೆಲ್ಲ ಎಷ್ಟೊಂದು ಜೋರು ಹೊಡಕೊಂಡು ಇದ್ದ ನೀನು ಈಗ ಹೇಗಾದಿ ನೋಡು..’. + +ಅಕ್ಕನಿಗೆ ಕೊಂಕು ಮಾತಾಡುವ ಉದ್ದೇಶವಿಲ್ಲದಿದ್ದರೂ ಬಾಯಿತಪ್ಪಿ ಅಂದಿದ್ದಳು. ಈ ಘಟನೆಯನ್ನು ಮುಂದೆ ಕೃಷ್ಣಮೂರ್ತಿ ದೆಹಲಿಯ ತನ್ನ ಪ್ಲ್ಯಾಟಿನಲ್ಲಿ ಒಂದು ಭಾನುವಾರ ಊಟದ ಹೊತ್ತಿಗೆ ಜ್ಞಾಪಿಸಿಕೊಳ್ಳಬೇಕಾಯಿತು. ಅಪ್ಪ ತನ್ನ ಜೊತೆ ಬಂದಿರಬೇಕೆಂದು ಯೋಚಿಸಿದ್ದರೆಂದು ಅವರು ಸಾಯುವಾಗ ಸಂತೋಷಪಟ್ಟಿದ್ದರೂ ಕ್ರಮೇಣ ಅದು ಹೇಗೆ ಅಸಾಧ್ಯವಾಗುತ್ತೆಂಬುದೂ ಅವನಿಗೆ ಮನದಟ್ಟಾಗಿತ್ತು. ಬಂದಿರುವುದು ಇರಲಿ- ಅಪ್ಪ ಬಿಟ್ಟುಹೋದ ಇಪ್ಪತ್ತೈದು ಸಾವಿರ ರೂಪಾಯಿ ಸಾಲವೇ ತನ್ನ ಜೀವನದ ಸಂತೋಷವನ್ನೆಲ್ಲ ಬತ್ತಿಸಿತ್ತು. ತಿಂಗಳಿಗೆ ಐನೂರು ರೂಪಾಯಿಗಳನ್ನು ಈ ಸಾಲ ತೀರಿಸಲು ಕಟ್ಟಬೇಕಾಗಿ ಬಂದಿದ್ದರಿಂದ ಮಗನನ್ನು ಒಳ್ಳೆಯ ಸ್ಕೂಲಿಂದ ತಪ್ಪಿಸಿ ಸಾಮಾನ್ಯ ಸ್ಕೂಲಿಗೆ ಹಾಕಬೇಕಾಯಿತು. ಸಂಸಾರದ ಜೊತೆಗೆ ವಾರಕ್ಕೆರಡು ಸಿನಿಮಾ ನೋಡಿ ಹೊರಗೆ ಊಟ ಮಾಡುತ್ತಿದ್ದುದನ್ನು ನಿಲ್ಲಿಸಬೇಕಾಯಿತು. ಈ ಮಧ್ಯೆ ಹೆಂಡತಿಗೆ ತಿಳಿಯದಂತೆ ತಿಂಗಳಿಗೆ ಇನ್ನೂರು ರೂಪಾಯಿಗಳನ್ನಾದರೂ ತಾಯಿಗೆ ಕಳಿಸಬೇಕಾಗಿತ್ತು. ‘ಅಪ್ಪ ನೋಡು, ಎಷ್ಟು ಶ್ರೀಮಂತರ ಚಾಕರಿ ಮಾಡಿದರೂ ಅವರಿಂದ ದುಡ್ಡು ತಗೊಳ್ಳುತ್ತಿರಲಿಲ್ಲ. ತುಂಬ ಮಾನವಂತ. ಆದ್ದರಿಂದಲೇ ಸಾಲವಾದ್ದು; ನನ್ನನ್ನು ಓದಿಸಲೆಂದು ತ್ಯಾಗಮಾಡಿದರು. ಅವರೊಬ್ಬ ದೊಡ್ಡ ಅಸ್ಟ್ರಾನಮರ್ ಆಗಬಹುದಿತ್ತು. ಸುಪ್ರೀಂಕೋರ್ಟ್ ವಕೀಲರಾಗಬಹುದಿತ್ತು, ಇತ್ಯಾದಿಗಳನ್ನು ಪ್ರತಿತಿಂಗಳೂ ಗಟ್ಟಿಯಾಗಿ ಹೇಳುತ್ತ, ಇದನ್ನು ಕೇಳಿಸಿಕೊಳ್ಳುವಾಗ ಹೆಂಡತಿ ಮೀರ ಮೌನವಾಗಿ ತನ್ನ ಅಸಹನೆಯನ್ನು ವ್ಯಕ್ತಪಡಿಸುವುದೂ ನ್ಯಾಯವಾದ್ದೇ ಎಂದು ತಿಳಿಯುತ್ತ ಮುಂದಿನ ದಿನಗಳಲ್ಲಿ ಕೃಷ್ಣಮೂರ್ತಿ ಅಪ್ಪನ ನೆನಪಿನ ಜೊತೆ ಗುದ್ದಾಡಬೇಕಾಗಿ ಬಂದಿತ್ತು. ಅಂಥ ಒಂದು ಭಾನುವಾರದ ಮಧ್ಯಾಹ್ನ ಊಟ ಮಾಡುತ್ತಿದ್ದಾಗ ಹೆಂಡತಿ ಕಟುವಾಗಿ ಹಾಸಿಗೆಯಿದ್ದಷ್ಟು ಕಾಲು ಚಾಚೋದು ಸರಿ ಎಂದಾಗ ಕೃಷ್ಣಮೂರ್ತಿ ಜೈಲಿನಲ್ಲಿ ಕೊಳೆಯುತ್ತಿದ್ದ ನಾಯರ್ ಮಾತ್ರ ಇವನ್ನೆಲ್ಲ ಮೀರಿದವನು, ನಮ್ಮನ್ನೂ ಮೀರಿಸಬಲ್ಲವನು, ಅವನು ನನ್ನ ತಂದೆಯ ಪ್ರಾಣಸ್ನೇಹಿತನಾಗಿದ್ದ ಎಂದು ಒಣಗಿದ ಗಂಟಲಲ್ಲಿ ವಾದಿಸಿದ್ದ. ಅವತ್ತು ಸಿನಿಮಾಕ್ಕೆ ಕರೆದುಕೊಂಡು ಹೋಗಲಿಲ್ಲೆಂದು ಬುಸುಗುಡುತ್ತ ಮೀರ ಹೇಳಿದ್ದಳು: + +‘ಯಾಕೆ ಮಾತಿನಲ್ಲಿ ತೀಟೆ ತೀರಿಸ್ಕೋತೀರಿ? ನೀವೂ ಒಂದು ಚೂರಿ ಹಿಡಿದು ಹೊರಡಿರಿ ಹಾಗಾದರೆ,’ ಕೃಷ್ಣಮೂರ್ತಿ ಮಂಕಾಗಿ ಯೋಚಿಸಿದ್ದ. ಗಂಗೂಬಾಯಿ, ನಾಯರ್ ನಂತವರ ಸ್ನೇಹ, ಆಕಾಶದ ಕಾಳರಂಧ್ರಗಳು- ಈ ಎಲ್ಲವೂ ಹಣಕ್ಕಾಗಿ ಪರದಾಡುವುದರ ಆಯಾಸವನ್ನು ಕೆಲವು ಕ್ಷಣ ಮರೆಸುವ ಸಾಧನಗಳೋ ಏನೋ. ಮದುವೆಗೆ ಮುನ್ನ ಸುಂದರವೂ ಕೋಮಲವೂ ಆಗಿದ್ದ ಮೀರಳ ಮುಖದಲ್ಲಿ ಈಗ ಸಿಟ್ಟು ಸ್ಥಾಯೀಭಾವವಾಗಿ ನಿಂತು ಗೆರೆಗಳನ್ನು ಕೊರೆಯುತ್ತಿವೆ. ಈ ಗೆರೆಗಳಲ್ಲೂ ಅವನು ಅಪ್ಪನ ಜೀವನ ಕ್ರಮದ ಅರ್ಥಹೀನತೆಯನ್ನು ಅರಿಯಲು ಪ್ರಯತ್ನಿಸುತ್ತಾನೆ. ನಿರ್ದಯವಾದ ಮಾತಾಡುವಾಗಲೂ ಕರುಣೆಯಿಂದ ನಗುವ ನಾಯರ್ ನ ಮುಖವನ್ನೂ ನೆನೆಯುತ್ತಾನೆ. ಆದರೆ ಅವನೊಬ್ಬ ಹಾಸ್ಯಾಸ್ಪದನಾದ ಎಕ್ಸೆಂಟ್ರಿಕ್ ಕೂಡ ಎಂದೂ ಅವನಿಗೆ ಅನ್ನಿಸುವುದರಿಂದ- ಅವನ ಪ್ರಶ್ನೆಗಳು ಗಂಟುಗಂಟಾಗುತ್ತ ಹೋಗುತ್ತವೆ. ಅನೇಕ ಸಾಧ್ಯತೆಗಳಿದ್ದ ಅಪ್ಪನ ಜೀವನ ಬರಡಾಯಿತೆ? ಯಾಕೆ? ನಾನೂ ಅವರ ಹಾದಿಯಲ್ಲಿ ಇದ್ದೇನೆಯೆ? ತಿಳಿಯುವುದಿಲ್ಲ. + +ಪಂಚಭೂತಗಳಿಂದ ಪ್ರಾಪ್ತವಾದ ಈ ನಶ್ವರ ಶರೀರವನ್ನು ಮತ್ತೆ ಪಂಚಭೂತಗಳಿಗೆ ಒಪ್ಪಿಸಲೆಂದು ನದಿಯಲ್ಲಿ ಮುಳುಗುಹಾಕಿ, ಪಾಣಿಪಂಚೆಯುಟ್ಟು, ಹೊಳೆಯ ದಡದಲ್ಲಿ ಕಟ್ಟಿಗೆಯ ಮಂಚದ ಮೇಲೆ ನೀರಲ್ಲಿ ತೊಳೆದು ಮಲಗಿಸಿದ್ದ ದೇಹಕ್ಕೆ ತೂತು ಮಡಿಕೆಯಲ್ಲಿ ನೀರು ತುಂಬಿಸಿಕೊಂಡು ಸುತ್ತು ಬಂದು ಆ ಮಡಿಕೆಯನ್ನು ಒಡೆಯುವಂತೆ ಬೆನ್ನಿಂದ ಹಿಂದಕ್ಕೆ ಬಿಸಾಕಿ, ಸೀಮೆಎಣ್ಣೆ ಸುರಿದ ದೇಹಕ್ಕೆ ಬೆಂಕಿಹೊತ್ತಿಸಿ ಬಣ್ಣಬಣ್ಣದ ನೆಗೆಯುವ ಜ್ವಾಲೆಯನ್ನು ನೋಡುತ್ತ ಕೃಷ್ಣಮೂರ್ತಿ ಕೂತ. ಬೆಂಕಿ ಕ್ರಮೇಣ ಹರಡಿ, ಕ್ರಮೇಣ ಒಟ್ಟಾಗಿ, ವಟಗುಟ್ಟುತ್ತ ಮೊಗ್ಗಿನಂತೆ, ಹೂವಿನಂತೆ ಉರಿಯಿತು. ತಲೆಯ ಬುರುಡೆಗೆ ಅದರ ಸರ್ವಶಕ್ತನಾಲಗೆಗಳು ಅಮರಿಕೊಂಡವು. ತನಗಿನ್ನಷ್ಟು ಸಮಾಧಾನವಾಗಲೆಂದು ತಾನು ಜ್ವರದಲ್ಲಿದ್ದ ಬೆಳಿಗ್ಗೆ ಅವರು ಥರ್ಮಾಮೀಟರು ತಂದಿದ್ದನ್ನು ಇಷ್ಟಪಟ್ಟು ನೆನಸಿಕೊಳ್ಳುತ್ತಿದ್ದಾಗ, ಶವದ ಸುತ್ತಲೂ ಕೂತಿದ್ದ ಅಪ್ಪನ ಅಸಂಖ್ಯ ಸ್ನೇಹಿತರೂ ಹಿತೈಷಿಗಳೂ ತಮ್ಮ ಸಮಾಧಾನಕ್ಕಾಗಿ ಗಟ್ಟಿಯಾಗಿ ಮಾತಾಡಿಕೊಳ್ಳುತ್ತಿದ್ದರು. ಶವಸಂಸ್ಕಾರ ಹೇಗೊಂದು ಪಿಕ್ನಿಕ್ ಆಗಿಬಿಡುತ್ತದೆಂಬುದು ಸೋಜಿಗದ ಸಂಗತಿ ಎಂದು ಕೃಷ್ಣಮೂರ್ತಿಗೆ ಅನ್ನಿಸಿತು. ಯಾರೋ ಗಟ್ಟಿಯಾಗಿ ಹೇಳುತ್ತಿದ್ದರು. ಉಳಿದವರನ್ನು ಆರ್ಡಿಯನ್ಸ್ ಮಾಡಿಕೊಂಡು, ‘ಆಚಾರ್ಯರು ಬಹಳ ಜಾಣರು, ನಿಜವಾದ ಲೌಕಿಕರು. ಗೇಣಿಶಾಸನ ಬರುತ್ತದೆಂದು ಮೊದಲೇ ಅವರಿಗೆ ಗೊತ್ತಿತ್ತು. ರೈತಸಂಘ ಸ್ಥಾಪನೆಯಾಯ್ತಲ್ಲ, ಆ ಪೂಜಾರಿ ಜಾತಿಯ ವೆಂಕನಾಯ್ಕ ಶುರು ಮಾಡಿದನಲ್ಲ, ಉಳುವವನೇ ಹೊಲದೊಡೆಯ ಅಂತ, ಆಗಲೇ ಆಚಾರ್ಯರು ನಮ್ಮನ್ನೆಲ್ಲ ಕರೆಸಿಹೇಳಿದರು. ಈಗಲೇ ನಿಮ್ಮ ಮನೆಯ ಪಾಲು ಪಂಚಾಯ್ತಿ ಮಾಡಿಕೊಂಡು ಬಿಡಿ. ನಿಮಗೆ ನಿಜವಾಗಿ ಸಲ್ಲತಕ್ಕಷ್ಟನ್ನು ಇಟ್ಟುಕೊಂಡು ಎಷ್ಟು ಬೆಲೆ ಬರುತ್ತೊ ಅಷ್ಟಕ್ಕೆ ಉಳಿದದ್ದನ್ನು ಮಾರಿಬಿಡಿ. ಪಾಪ ನಿಮ್ಮ ರೈತನೇ ಕೊಂಡುಕೊಳ್ಳಲು ಇಷ್ಟಪಟ್ಟ ಎನ್ನಿ, ಅವನು ಬೆವರು ಸುರಿಸಿ ಬೆಳೆದದ್ದಲ್ಲವೆ-ಅವನಿಗೇ ಮಾರಿಬಿಡಿ. ಸ್ವಲ್ಪ ಕಡಿಮೆ ಬೇಕಾದರೂ ಅವ ಕೊಡಲಿ, ಕಂತಲ್ಲಾದರೂ ಕೊಡಲಿ-ಅವನಿಗೇ ಮಾರಿಬಿಡಿ. ಅವಕ್ಕೆ ಕೃತಜ್ಞತೆ ಇಲ್ಲಬಿಡಿ-ಆ ಮಾತು ಬೇರೆ. ಇಲ್ಲವಾದರೆ ರಕ್ತಪಾತವಾಗುತ್ತೆ ಅಂದರು. ಅವರ ಮಾತು ಕೇಳಿದ ನಾವು ಬುದುಕಿದೆವು. ಉಳಿದವರು ಇದ್ದದ್ದನ್ನೆಲ್ಲ ಕಳಕೊಂಡರು. ಎಂಥೆಂಥ ಫಟಿಂಗರನ್ನೂ ಅವರು ಕಾನೂನು ಜ್ಞಾನದಿಂದ ಬದುಕಿಸಿದ್ದಾರೆಂದರೆ, ಅವರಿಲ್ಲದಿದ್ದರೆ ಈ ರೈತಸಂಘದ ಪುಂಡಾಟಿಕೇಲಿ ನಾವು ಉಳಿಯೋದು ಸಾಧ್ಯವಿತ್ತ ಹೇಳಿ…’ + +ಅಪ್ಪನ ತಲೆ ಬುರುಡೆ ತೆಂಗಿನಕಾಯಿಯ ಕರಟದಂತೆ ಬಣ್ಣಬಣ್ಣವಾಗಿ ಉರಿದು ಸಿಡಿಯುವುದನ್ನು ನೋಡುತಿದ್ದ ಕೃಷ್ಣಮೂರ್ತಿಗೆ ‘ಇಷ್ಟೇ ನಿಜವಲ್ಲ’ ‘ಇಷ್ಟೇ ನಿಜವಲ್ಲ’ ಎಂದು ಕಿರುಚಿಕೊಳ್ಳಬೇಕೆನ್ನಿಸುತ್ತಿತ್ತು. ಇದನ್ನೂ ದೆಹಲಿಯ ಪ್ಲ್ಯಾಟಿನಲ್ಲವನು ನೆನಸುತ್ತಾನೆ. ಈ ಅರಿವು ಇತ್ಯಾದಿ ಬಗ್ಗೆ ಅವನ ಲೆಫ್ ಟಿಸ್ಟ್ ಮಿತ್ರರ ಜೊತೆ ಚರ್ಚಿಸಿ ಚರ್ಚಿಸಿ ಅತೃಪ್ತನಾಗಿಯೇ ಉಳಿಯುತ್ತಾನೆ. + +ಶವವನ್ನು ಸಂಸ್ಕಾರಕ್ಕೆ ಕೊಂಡೊಯ್ದು ನಂತರ ಕೊಟ್ಟಿಗೆಯ ಆಚೆಗಿದ್ದ ಹಲಸಿನ ಮರ ಒಂದರ ಬುಡದಲ್ಲಿ ಹೋಗಿ ಗಂಗೂಬಾಯಿ ಕೂತಳು. ತನ್ನ ತೆಳ್ಳಗೆ ಬೆಳ್ಳಗೆ ಇದ್ದ ಉದ್ದನೆಯ ಮೈಯಿ, ಹಣೆಮೇಲಿನ ಕುಂಕುಮ, ವಯಸ್ಸು ನಲವತ್ತಾದರೂ ಸುಕ್ಕುಗಟ್ಟದೇ ಇದ್ದ ಮುಖ- ಇವು ಆಚಾರ್ಯರು ತನ್ನಿಂದ ಪಡೆದ ಸುಖವನ್ನು ಉಳಿದ ಹೆಂಗಸರು ಯೋಚಿಸುವಂತೆ ಮಾಡೀತೆಂದು ಅವಳಿಗೆ ಸಂಕೋಚವಾಗಿತ್ತು. ತಾನಿಲ್ಲದಿದ್ದರೆ ಹೆಂಗಸರು ನಿರ್ಭಿಡೆಯಿಂದ ಅತ್ತಾರು, ಅಳಲಿ; ಆಚಾರ್ಯರನ್ನು ಮುಕ್ತಕಂಠದಿಂದ ಹೊಗಳುವುದು ಸಾಧ್ಯವಾಗಲಿ; ತನ್ನಿಂದ ಕಳಂಕ ತಟ್ಟುವುದು ಬೇಡ ಎಂದು ಅವಳಿಗೆ ಅನ್ನಿಸಿತ್ತು. + +ಅವಳಿಗೆ ಆಚಾರ್ಯರ ಬಾಲ್ಯ ಜೀವನ ಗೊತ್ತು. ಅವರು ಆಕೆಗೆ ಹೇಳದೇ ಇದ್ದ ಸಂಗತಿಯಿಲ್ಲ. ಆಕಾಶದ ಬಗ್ಗೆ ಅವಳ ಹತ್ತಿರ ಮಾತಾಡಬೇಕು. ಕಾನೂನಿನ ಬಗ್ಗೆ ಮಾತಾಡಬೇಕು. ತನ್ನ ಪ್ರೀತಿಯ ಮಗನ ಬಗ್ಗೆ ಮಾತಾಡಬೇಕು. ನಾಯರ್ ಬಗ್ಗೆ ಮಾತಾಡಬೇಕು. ಒಂದಲ್ಲ-ಎರಡಲ್ಲ. + +ಇಪ್ಪತ್ತು ವರ್ಷಗಳ ಸಹವಾಸ ಪ್ರಾರಂಭವಾದದ್ದು ಶಿವಮೊಗ್ಗದಲ್ಲಿ ತನ್ನ ತಾಯಿ ಇಟ್ಟಿದ್ದ ಹೋಟೆಲಿನ ಮಹಡಿ ಮೇಲೆ ಅವರೊಂದು ಕಚೇರಿ ಸ್ಥಾಪಿಸಿದಾಗ. ಅದರ ಹೆಸರು ‘ಭೂಮಾಲೀಕರ ಸಂಘ’. ಆಚಾರ್ಯರು ಅದರ ಕಾರ್ಯದರ್ಶಿ. ಆಮೇಲೆ ಅದರ ಹೆಸರು ‘ಮಲೆನಾಡು ಬೆಳೆಗಾರರ ಸಂಘ’ವೆಂದು ಬದಲಾಯ್ತು. ಪ್ರೈಮರಿಶಾಲೆಯ ಉಪಾಧ್ಯಾಯಿನಿಯಾಗಿ ಆಗತಾನೇ ಸೇರಿದ್ದ ತಾನು ಮನೆಯನ್ನು ದೀಡು ಮಾಡಿಕೊಡುವುದಕ್ಕೆ ಅಗತ್ಯವಾದ ಪತ್ರವನ್ನು ಬರೆಸಲೆಂದು ಮೊದಲು ಆಚಾರ್ಯರನ್ನು ಭೆಟ್ಟಿಯಾದ್ದು. ತನಗೆ ಆಗ ಮದುವೆಯಾಗಿತ್ತು. ಆದರೆ ತಾಯಿಗೆ ತನ್ನ ಮಗಳನ್ನು ಯಾವನೋ ಒಬ್ಬ ಕ್ರೂರಿಗೆ ಎರಡನೇ ಸಂಬಂಧವಾಗಿ ಮಾಡಿಕೊಡುತ್ತಿದ್ದೇನೆಂಬ ಅರಿವು ಇರಲಿಲ್ಲ. ಗಂಡನ ಮನೆಯ ಹಿಂಸೆ ತಾಳಲಾರದೆ ಓಡಿಬಂದು ಶಾಲೆಯ ಉಪಾಧ್ಯಾಯಿನಿಯಾಗಿ ಸೇರಿದ್ದು. ಆಮೇಲಿಂದ ಆಚಾರ್ಯರು ತನಗೆ ಡೈವೋರ್ಸ್ ಪಡೆಯುವ ಉಪಾಯಗಳನ್ನೂ ಹೇಳಿಕೊಟ್ಟರು. ತಂದೆಯಿಲ್ಲದ ಅನಾಥೆ ಇಲ್ಲವಾದಲ್ಲಿ ಗಂಡನ ಮನೆಯ ಕೀಳು ಕೆಲಸದವಳಾಗಿ ಗೆಯ್ದುಕೊಂಡಿರಬೇಕಾಗಿ ಬರುತ್ತಿತ್ತು. + +ಆಗಲೇ ಈ ಸಂಬಂಧ ಶುರುವಾದದ್ದು. ತಾಯಿ ಸತ್ತಮೇಲೆ ಹೋಟೆಲನ್ನು ಮುಚ್ಚಬೇಕಾಯಿತು. ಆಚಾರ್ಯರ ಸಹಾಯವನ್ನು ಪಡೆದು, ಇದ್ದಬದ್ದದುದ್ದೆಲ್ಲವನ್ನೂ ಕೂಡಿಸಿಕೊಂಡು ಹಸುಗಳನ್ನು ಸಾಕಿ ಹಾಲು ಮಾರಲು ಆಮೇಲಿಂದ ಪ್ರಾರಂಭ. ಕಟ್ಟಿಕೊಂಡ ಗಂಡನಿಗಿಂತ ಹೆಚ್ಚಿನವರಾದರು ಆಚಾರ್ಯರು. ಅವರಿಗೆ ಆಗುತ್ತಿರುವುದಕ್ಕಿಂತ ಹೆಚ್ಚಿನ ಅವಮಾನ ಆಗದೇ ಇರಲೆಂದು ಗಂಗೂಬಾಯಿ ಮಗು ಬೇಡವೆಂದು ಎರಡುಸಾರಿ ಬಸಿರಿಳಿಸಿಕೊಂಡದ್ದು. ಸಾಯುವಾಗ ಸಂಕೋಚಪಡದೆ ತನ್ನನ್ನು ಒಪ್ಪಿಕೊಂಡರಲ್ಲ-ಅದರಿಂದ ಧನ್ಯಭಾವ ಬಂದಂತಾಗಿದೆ. + +ಅವರದೊಂದು ಸಾಹಸದ ಜೀವನ. ಅವರ ಅಪ್ಪ ರಾಮದೇವರ ಒಂದು ದೇವಸ್ಥಾನದ ಪೂಜಾರಿ. ಮನೆಯಲ್ಲೇ ಮಗನಿಗೆ ಮಂತ್ರ ತಂತ್ರಗಳ ವಿದ್ಯಾಭ್ಯಾಸ. ಈ ದೇವಸ್ಥಾನವಿದ್ದದ್ದು ಇಪ್ಪತ್ತು ಬ್ರಾಹ್ಮಣ ಮನೆಗಳಿದ್ದ ತುಂಗಾನದೀ ತೀರದ ಒಂದು ಹಳ್ಳಿಯಲ್ಲಿ. ವರ್ಷಕ್ಕೊಮ್ಮೆ ನಡೆಯುವ ಈ ದೇವಸ್ಥಾನದ ರಥೋತ್ಸವ ಆಸುಪಾಸಿನಲ್ಲೆಲ್ಲ ಹೆಸರಾದ್ದು. ಮನೆಯಲ್ಲಿ ಮಂತ್ರ ತಂತ್ರ ಕಲಿಯುತ್ತ, ಅವರಿವರ ಮನೆಗೆ ವ್ರತಗಿತ ಮಾಡಿಸಲು ಹೋಗುತ್ತ ಆಚಾರ್ಯರ ಬಾಲ್ಯ ಕಳೆಯಿತು. ಒಟ್ಟಿನಲ್ಲಿ ಅಪ್ಪನಿಗೆ ಸಹಾಯ ಮಾಡುವುದು ಈ ಏಕಮಾತ್ರ ಪುತ್ರನ ಕೆಲಸವಾಗಿತ್ತು. ಆಚಾರ್ಯರು ಮೊದಲಿಂದಲೂ ಅತೃಪ್ತರು. ಆಕಾಶದ ನಕ್ಷತ್ರಗಳನ್ನೆಲ್ಲ ಹೆಸರು ಹಿಡಿದು ಗುರುತಿಸುತ್ತಿದ್ದ ಅವರು ಇಡೀ ರಾತ್ರಿ ಒಮ್ಮೊಮ್ಮೆ ದೇವಸ್ಥಾನದ ಅಂಗಳದಲ್ಲಿ ಚಾಪೆಹಾಸಿ ಕೆಂಡಸಂಪಿಗೆ ಮರದಡಿಯಲ್ಲಿ ಕಣ್ಣುಬಿಟ್ಟು ಮಲಗಿರುತ್ತಿದ್ದುದು ಉಂಟು. ಒಂದಾನೊಂದು ದಿನ ಸತ್ಯನಾರಾಯಣ ವ್ರತ ಮುಗಿಸಿಕೊಂಡು ಹಳ್ಳಿ ದಾರಿಯಲ್ಲಿ ನಡೆದು ಬರುತ್ತಿದ್ದ ಆಚಾರ್ಯರಿಗೆ ಸೈಕಲ್ ಮೇಲೆ ಬರುತ್ತಿದ್ದ ಪಾದ್ರಿಯೊಬ್ಬ ಇಂಗ್ಲಿಷ್ ಭಾಷೆ ಕಲಿಯಬೇಕೆನ್ನುವ ಹುಚ್ಚು ಹಿಡಿಸಿದನಂತೆ. ಆಕಾಶದ ಹುಚ್ಚಿನ ಜೊತೆ ಈ ಹುಚ್ಚೂ ಸೇರಿ ದೇವಸ್ಥಾನದ ಕಂಬವೊಂದರ ಕೆಳಗೆ ಕೂತು ಗಂಧವನ್ನು ತೇಯುತ್ತ ಆಚಾರ್ಯರು ಏನೇನೋ ಕನಸು ಕಾಣಲು ಪ್ರಾರಂಭಿಸಿದರು. ದೂರದೂರದ ಊರುಗಳಿಂದ ಪೂಜೆ ಮಾಡಿಸಲು ಬರುತ್ತಿದ್ದ ವಿದ್ಯಾವಂತ ಆಸ್ತಿಕರಿಂದ ಇಂಗ್ಲಿಷ್ ಅಕ್ಷರ ಕಲಿತರು. ಓದುವುದಕ್ಕೆ ಹೇಳಿಸಿಕೊಂಡರು. ಇಂಗ್ಲಿಷ್ ಕನ್ನಡ ಸ್ವಯಂಬೋಧಿನಿ ತರಿಸಿಕೊಂಡು ಬರೆಯುವಷ್ಟು ಕಲಿತರು. ದೂರದ ಊರುಗಳಿಗೆ ಹೋಗಬೇಕೆಂಬ ಹಂಬಲ ಬೆಳೆಸಿಕೊಂಡರು. + +ಆಚಾರ್ಯರಿಗೆ ಹದಿನಾರು ವಯಸ್ಸಿದ್ದಾಗಲೇ ಎಂಟುವರ್ಷ ವಯಸ್ಸಿನ ರುಕ್ಮಿಣಿಯಮ್ಮನ ಜೊತೆ ಮದುವೆಯಾಗಿತ್ತು. ಹೆಣ್ಣು ನೋಡಲೆಂದು ಅವರ ಅಪ್ಪ ಆಕೆಯ ಊರಿಗೆ ಹೋದಾಗ ಆಕೆ ಮಾವಿನ ಮರ ಒಂದನ್ನು ಹತ್ತಿ ಕೂತಿದ್ದಳಂತೆ. ಆಕೆಯ ತಂದೆ ‘ಗೋಪಾಲಾಚಾರ್ಯರ ಮನೆ ದಾರಿ ಎಲ್ಲಿ?’ ಎಂದು ಕೇಳಿದಾಗ ಮಾವಿನ ಹಣ್ಣು ತಿನ್ನುತ್ತ ಮರದ ಮೇಲೆ ಕೂತ ಈ ಹುಡುಗಿಯೇ ‘ಅಕೋ ಅಲ್ಲಿ’ ಎಂದು ತೋರಿಸಿದ್ದಂತೆ. ಈಗ ಅಂಥ ಸಂತೋಷಗಳೇ ಇರದಿದ್ದ ಹೆಂಗಸಿನಂತೆ ಅವರು ಕಾಣುತ್ತಾರೆ. ಮೈನೆರೆಯದ ಹುಡುಗಿಯಲ್ಲವೆ? ಮದುವೆಯಾದ ಮೇಲೆ ಐದಾರು ವರ್ಷ ಆಕೆ ತೌರಲ್ಲೇ ಉಳಿದಳು. ಮದುವೆಯಾದ್ದರಿಂದ ಆಚಾರ್ಯರಿಗೆ ವಿವಾಹದ ಪೌರೋಹಿತ್ಯಗಳೂ ಸಿಗುವಂತಾಗಿ ವರಮಾನ ಹೆಚ್ಚಾಯಿತು. + +ಈ ನಡುವೆ ಆಚಾರ್ಯರ ಜೀವನದಲ್ಲೊಂದು ಮಹತ್ತರವಾದ ಘಟನೆ ನಡೆಯಿತು. ಆ ಹಳ್ಳಿಯಲ್ಲೆಲ್ಲ ತುಂಬ ಶ್ರೀಮಂತ ಬ್ರಾಹ್ಮಣರ ಮನೆಯೊಂದಿತ್ತು-ದೇಶಸ್ಥ ಜಾತಿಯವರದ್ದು. ರಾಮದೇವಸ್ಥಾನದ ಯಜಮಾನರೆಂದರೆ ಅವರೇ. ಮೊದಲು ಅವರಿಗೇ ತೀರ್ಥವಾಗಬೇಕು. ಆ ಮಹಾಶಯನ ಹೆಂಡತಿ ಕುರುಡಿಯಾಗಿ ಬಿಟ್ಟಿದ್ದಳಂತೆ. ಅವರಿಗೆ ತುಂಬ ಚೆಲುವಿಯಾದ ಒಬ್ಬಳೇ ಮಗಳು-ಗಂಡುಮಕ್ಕಳಿಲ್ಲ. ಆದ್ದರಿಂದಲೇ ಏನೋ ಮಗಳು ಒಳಗೆ ಉಳಿಯಲಿ ಎಂದು ಅವಳ ಸೋದರಮಾವನಿಗೇ ಕೊಟ್ಟು ಮದುವೆ ಮಾಡಿದ್ದು. + +ಹತ್ತು ವರ್ಷ ಗಂಡನ ಮನೆಯಲ್ಲಿದ್ದು ಬೇಸತ್ತು ಅವಳು ತಂದೆಯ ಮನೆಗೇ ಬಂದು ಬಿಟ್ಟಳು. ಅವಳಿಗೆ ಮಕ್ಕಳಾಗದ್ದು ನೋಡಿದರೆ ಗಂಡನೇನಾದರೂ ಷಂಡನೋ ಎಂದು ಊರಲ್ಲಿ ಎಲ್ಲರಿಗೂ ಅನುಮಾನ. ತಂದೆ ಬಹಳ ವ್ಯಥೆಪಟ್ಟು ಕೊರಗಿ ಕಣ್ಣುಮುಚ್ಚಿಯಾದ ಮೇಲೆ ಆ ದೊಡ್ಡ ಅರಮನೆಯಂಥ ಮನೆಗೆಲ್ಲ ಇಬ್ಬರೇ ಆದರು: ಕುರುಡಿಯಾದ ತಾಯಿ ಮತ್ತು ಮಗಳು. ಮತ್ತೆ ಆ ಮೂಲೆ ಈ ಮೂಲೆ ಹಿಡಿದು ಕೂತಿರುವ ಅಡುಗೆ ಮಾಡಲು ಸೇರಿಕೊಂಡ ಅನಾಥ ವಿಧವೆಯರು ಮತ್ತು ಚಾವಡಿಯಲ್ಲಿ ಮಲಗಿರುತ್ತಿದ್ದ ಉಂಡು ಹೋಗಲು ಬರುವ ಸಂಭಾವನೆಯವರು, ದೇವಸ್ಥಾನದ ಅರ್ಚನೆಗೆ ಬರುವ ಪಟ್ಟಣದ ಶ್ರೀಮಂತರು-ಹೀಗೆ ಹೊರಗಿನವರೇ ಆ ಮನೆಯಲ್ಲಿ ಇರುತ್ತಿದ್ದದ್ದು. ದೊಡ್ಡ ದೊಡ್ಡ ದೇವರ ಪಠಗಳನ್ನು ಹಾಕಿದ, ಬೆಳ್ಳಿಕಟ್ಟಿದ ಮಣೆಗಳನ್ನು ಒರಗಿಸಿಟ್ಟ, ಉಯ್ಯಾಲೆಗಳಿದ್ದ ಎತ್ತರವಾದ ಮನೆ ಅದು. + +ಆಚಾರ್ಯರಿಗಿಂತ ಈ ಹುಡುಗಿ ನಾಲ್ಕು ವರ್ಷವಾದರೂ ದೊಡ್ಡವಳು. ಅಲಕಾದೇವಿ ಎಂದು ಅವಳ ಹೆಸರು. ದೇವಸ್ಥಾನದಲ್ಲಿ ಪೂಜೆಯಾದ ಮೇಲೆ ಅವರ ಮನೆ ದೇವರ ಪೂಜೆಗೆ ನೈವೇದ್ಯಕ್ಕೆ ಆಚಾರ್ಯರು ಹೋಗಬೇಕು. ಆಚಾರ್ಯರಿಗೆ ಹದಿನೆಂಟೋ ಹತ್ತೊಂಬತ್ತೋ ವಯಸ್ಸು. ಅಲಕಾದೇವಿ ಯಾವತ್ತೂ ರೇಷ್ಮೆಯ ಪತ್ತಲ ಉಟ್ಟು, ಆಗಿನ ಕಾಲಕ್ಕೆ ಫ್ಯಾಶನ್ ಆದ ವಾರೆಬೈತಲೆ ತೆಗೆದು, ಉಬ್ಬಿದ ತೋಳುಗಳ ಕುಪ್ಪಸ ತೊಟ್ಟಿರುವುದು. ಅಲಕಾದೇವಿಗೂ ಅಷ್ಟಿಷ್ಟು ಇಂಗ್ಲಿಷ್ ಓದಲು ಬರುತ್ತಿತ್ತು-ಮುದ್ದಿನ ತಂದೆ ಕಲಿಸಿಕೊಟ್ಟದ್ದು. ಆಕೆ ತಂದೆಯ ಲೈಬ್ರರಿಯಿಂದ ಡ್ಯೂಮಾ, ಸ್ಕಾಟ್, ಗೋಲ್ಡ್ ಸ್ಮಿತ್ ಇತ್ಯಾದಿ ಪುಸ್ತಕಗಳನ್ನು ಆಚಾರ್ಯರಿಗೆ ಓದಲು ಕೊಡುವುದು. ಅವನ್ನು ಆಚಾರ್ಯರು ಇಂಗ್ಲಿಷೆಂದರೆ ಮೈಲಿಗೆಯೆಂದು ತಿಳಿದ ಅಪ್ಪನಿಗೆ ಗೊತ್ತಾಗದಂತೆ ಓದುವುದು, ಓದಿದ್ದನ್ನು ಮೊದಲು ಹೆದರುತ್ತ ಆಮೇಲೆ ಉಯ್ಯಾಲೆ ಮೇಲೆ ಕೂತು ತೂಗಿಕೊಳ್ಳುವ ಅಲಕಾವತಿಗೆ ನಿರ್ಭಿಡೆಯಿಂದ ವಿವರಿಸುತ್ತ ಅವಳ ಕಣ್ಣುಗಳು ಬೆರಗಿನಲ್ಲಿ ತೆರೆಯುವಂತೆ ಮಾಡುವುದು. ಹೀಗೆ ಆ ಕಾಡಿನಿಂದ ಆವೃತವಾದ ಹಳ್ಳಿಯಲ್ಲಿ ರಾಮದೇವರ ಮೌನ ಸಾನ್ನಿಧ್ಯದಲ್ಲಿ ಅಲಕಾದೇವಿ ಅವರ ಕನಸಿನ ರಾಣಿಯಂತೆ ಬೆಳೆಯುತ್ತ ಹೋದಳು. + +ತಾವಿಬ್ಬರೂ ಈ ಅದ್ಭುತ ಕಥೆಗಳ ಪಾತ್ರಗಳೆಂಬಂತೆ ಅಲಕಾವತಿ ವರ್ತಿಸುವುದು. ಕಚ್ಚೆಹಾಕಿ ಪಂಚೆಯುಟ್ಟು ಮೈಮೇಲೆ ಬಿಳಿ ಧೋತ್ರ ಹೊದ್ದು, ದೊಡ್ಡ ಜುಟ್ಟನ್ನು ಗಂಟು ಕಟ್ಟಿ ಮನೆಗೆ ಬರುತ್ತಿದ್ದ ಆಚಾರ್ಯರನ್ನು ಅವಳು ಛದ್ಮವೇಶದಲ್ಲಿದ್ದ ರಾಜಕುಮಾರನೆಂದೋ ಯೋಧನೆಂದೊ ತಿಳಿದಿದ್ದಳು. ಇಪ್ಪತ್ತೆರಡು ವರ್ಷದ ಈ ಚೆಲುವೆಯ ತಾಯಿ ಕುರುಡಿಯಲ್ಲವೆ? ಈ ಶ್ರೀಮಂತಳಿಗೆ ಹೇಳುವವರು ಯಾರು ಕೇಳುವವರು ಯಾರು? ದಿನಕ್ಕೊಂದು ಪತ್ತಲವುಟ್ಟು ಉಯ್ಯಾಲೆಯಲ್ಲಿ ತೂಗಿಕೊಳ್ಳುತ್ತ, ಪಂಜರದಲ್ಲಿಟ್ಟ ಗಿಣಿಯನ್ನು ಮಾತಾಡಿಸುತ್ತ ಅಲಕಾದೇವಿ ಆಚಾರ್ಯರು ತರುವ ತೀರ್ಥಕ್ಕೆ ಕಾಯುವುದು. ತೀರ್ಥ ಕುಡಿದು ಪ್ರಸಾದವನ್ನು ಹೆರಳಿಗೆ ಮುಡಿದಾದ ಮೇಲೆ, ಆಚಾರ್ಯರನ್ನು ಪಕ್ಕದಲ್ಲಿ ಕೂರಿಸಿಕೊಂಡು ಅವಳ ವಿಶಾಲವಾದ ಕೊಠಡಿಯಲ್ಲಿ ತೂಗಿಕೊಳ್ಳುತ್ತ ದೇಶಾಂತರದ ವಿಷಯಗಳನ್ನು ಮಾತನಾಡುವುದು. + +ಈ ಘಳಿಗೆಗಾಗಿ ಆಚಾರ್ಯರು ಇಡೀ ದಿನ ಕಾದಿರುತ್ತಿದ್ದರು. ವ್ರತ ಮಾಡಿಸಲೋ ಮದುವೆ ಮಾಡಿಸಲೋ ಬೇರೆ ಊರಿಗೆ ಹೋಗಬೇಕಾಗಿ ಬಂದರೆ ಅವರಿಗೆ ತುಂಬ ಬೇಸರವಾಗಿಬಿಡುತ್ತಿತ್ತು. ಅಲಕಾವತಿಗೆ ಸಿಟ್ಟುಬಂದುಬಿಡುತ್ತಿತ್ತು. ನಿಮಗೊಂದು ಕುದುರೆ ಕೊಡಿಸುತ್ತೇನೆ ಎಂದೂ ಅವಳು ಅಂದದ್ದು ಇದೆಯಂತೆ-ಎಲ್ಲಿ ಹೋದರೂ ಬೇಗ ಹಿಂದಕ್ಕೆ ಬರುವುದು ಸಾಧ್ಯವಾಗಲಿ ಎಂದು. + +ಅವರಿಬ್ಬರ ಸಂಬಂಧ ಎಲ್ಲ ನಮೂನೆಯ ಹಂತಗಳಲ್ಲೂ ಬೆಳೆಯಿತು. ಒಡತಿ ಮತ್ತು ಆಪ್ತಸೇವಕ, ರಾಣಿ ಮತ್ತು ಯೋಧ, ದೇವಿ ಮತ್ತು ಭಕ್ತ, ಕಾದಂಬರಿಯ ನಾಯಕಿ ಮತ್ತು ನಾಯಕ-ಹೀಗೆ. ಸಾಯಂಕಾಲ ಹಸುಗಳು ಕೊರಳಿನ ಗಂಟೆ ಸದ್ದು ಮಾಡುತ್ತ ಹಿಂದಕ್ಕೆ ಬರುವಾಗ, ಬೆಳದಿಂಗಳಿನ ರಾತ್ರೆ ತೇನೆ ಮೈಮರೆತು ಕೂಗುವಾಗ, ಡಿಸೆಂಬರಿನ ಚಳಿಯಲ್ಲಿ ಮಾವಿನ ಮರಗಳೆಲ್ಲ ಹೂಬಿಟ್ಟಾಗ, ಮೌನದ ನಡುರಾತ್ರೆಯಲ್ಲಿ ತುಂಗೆ ಹರಿಯುವ ಶಬ್ದ ಕೇಳಿಸುವಾಗ ಆಚಾರ್ಯರು ಒಂದು ಬಗೆಯ ಅಲೌಕಿಕ ಬೇಗೆಯಿಂದ ಒದ್ದಾಡುವರು. ಅವರ ಈ ಬೇಗೆಗೆ ಕಾರಣ: ಅಲಕಾದೇವಿ ಮತ್ತು ಆಕಾಶವನ್ನು ತಿಳಿಯುವ ಹಸಿವು ಆಗಿದ್ದವು. + +ತನ್ನ ಕಿರಿ ಬೆರಳು ಅವಳಿಗೆ ತಾಕಿದರೂ ತಾನು ಉರಿದುಹೋಗಿಬಿಡುವೆ ಎಂದು ಆಚಾರ್ಯರು ಹೆದರುತ್ತಿದ್ದರಂತೆ. ಅಲಕಾದೇವಿ ಅವರಿಗೆ ಸೂಚ್ಯವಾಗಿ ಎಲ್ಲ ಹೇಳಿದ್ದಳು. ತನ್ನ ಗಂಡನಿಗೆ ಪುರುಷತ್ವ ಸಾಲದ್ದರಿಂದ ತಾನು ಅಕ್ಷತಕನ್ನೆಯಾಗಿಯೇ ಉಳಿದಿದ್ದೇನೆ ಎಂದೂ ಹೇಳಿದ್ದಳು. ಪುರುಷತ್ವ ಕಡಿಮೆ ಎಂದರೆ ಏನು ಅರ್ಥವೆಂದು ಆಚಾರ್ಯರು ತುಂಬ ದಿಗಿಲು ಪಟ್ಟಿದ್ದರಂತೆ. ಒಂದು ದಿನ ಮಧ್ಯಾಹ್ನ ಯಥಾಪ್ರಕಾರ ತೀರ್ಥ ತೆಗೆದುಕೊಂಡು ಮಹಡಿ ಹತ್ತಿ ಅಲಕಾವತಿಯ ಕೋಣೆಗೆ ಹೋದಾಗ ಅವಳು ತನ್ನ ದೊಡ್ಡ ಕಣ್ಣುಗಳನ್ನು ತೆರೆದು, ‘ನನಗೊಂದು ಉಪಕಾರ ಮಾಡುತ್ತೀರ?’ ಎಂದಳಂತೆ. ಆಚಾರ್ಯರು ಆಗಲಿ ಎನ್ನುವಂತೆ ತಟ್ಟೆಯ ತೀರ್ಥ ಹಿಡಿದು ನಿಂತಿದ್ದಾಗ ‘ನನ್ನನ್ನು ಮುಟ್ಟಿದರೆ ಈಗ ನೀವು ಮತ್ತೆ ಸ್ನಾನಮಾಡಬೇಕ?’ ಎಂದಳಂತೆ. ಮಾಡಿದರಾಯಿತು. ಹಾಗಾದರೆ ತಟ್ಟೆಯನ್ನು ಅಲ್ಲಿಟ್ಟು ಗಂಧವನ್ನು ತನ್ನಿ. ನನ್ನ ಬೆನ್ನಿನ ಮೇಲೊಂದು ಕುರ ಎದ್ದಿದೆ. ಅದಕ್ಕೆ ಗಂಧ ಹಚ್ಚುತ್ತೀರ? ಆಚಾರ್ಯರು ಕೆಂಪಾದರು. ‘ಆಗಲಿ’ ಎಂದರು. ಅವರ ಮುಖ ನೋಡಿ ಅಲಕಾವತಿ ನಗುತ್ತ. + +‘ನೀವು ಒಳ್ಳೆಯವರಲ್ಲವ? ನನ್ನ ಬೆನ್ನನ್ನು ನೋಡದಂತೆ ಕಣ್ಣುಮುಚ್ಚಿಕೊಂಡು ಹಾಗಾದರೆ ಹಚ್ಚುತ್ತೀರಲ್ಲ?’ ಎಂದು ಬೆನ್ನು ತಿರುಗಿಸಿ ಸೆರಗನ್ನೂ ಇಳಿಬಿಟ್ಟು ರವುಕೆಯ ಗುಂಡಿ ಬಿಚ್ಚಿದಳು. ಹಾಲಿನ ಬಣ್ಣದ ಚರ್ಮದ ಬೆನ್ನಿನ ಬಲ ಮೂಲೆಯಲ್ಲಿ ಕೆಂಪಗಿದ್ದ ಒಂದು ಗುಳ್ಳೆಯಿತ್ತು. ಆಚಾರ್ಯರು ನಡುಗುತ್ತಿದ್ದ ಕೈಯಿಂದ ಅದಕ್ಕೆ ಗಂಧವನ್ನು ಮೃದುವಾಗಿ ಹಚ್ಚುತ್ತಿದ್ದಾಗ ಅಲಕಾವತಿ ಥಟ್ಟನೆ ತಿರುಗಿ ಅವರ ಮುಖವನ್ನು ತನ್ನ ಎರಡು ಕೈಗಳಿಂದಲೂ ಅದೊಂದು ಮಗುವಿನ ಮುಖವೆಂಬಂತೆ ಹಿಡಿದು, + +‘ನಾನು ಕೆಟ್ಟವಳು ಅಲ್ಲವಾ? ‘ಎಂದಳು. ಆಗ ಅವಳ ಮುಖ ಗೆಲುವಿನಿಂದ ನಗುತ್ತಿತ್ತಂತೆ. ಆಚಾರ್ಯರಿಗೆ ಮೈಯೆಲ್ಲ ಬೆವತಂತಾಗಿ, ಅವಳ ತೋಳುಗಳನ್ನು ಹಿಡಿದು ನಿಲ್ಲಿಸಿ, ತಾವೂ ಅವಳ ಎದುರು ನಿಂತರಂತೆ. ಮುಂದೇನು ತಿಳಿಯುವುದರ ಒಳಗೆ ಅವಳನ್ನು ತಬ್ಬಿದ್ದರಂತೆ. ಆಗ ಮೃದುವಾಗಿ ತನ್ನನ್ನು ಒತ್ತಿಕೊಂಡ ಅಲಕಾವತಿಯ ದೇಹದಲ್ಲಿ ತಾನು ಕರಗಿ ಹೋಗುತ್ತಿದ್ದಂತೆ ಭಾಸವಾಗಿ, ಇಡೀ ಮೈಯೆಲ್ಲ ಕಂಪಿಸಿ ಅವರ ಮೈ ಇಳಿದುಬಿಟ್ಟಿತಂತೆ. ಪುಣ್ಯದಿಂದ ಇದು ಅಲಕಾವತಿಗೆ ತಿಳಿಯದಿರಬಹುದು ಎಂದು ಕೊಂಡು ಉಯ್ಯಾಲೆ ಮೇಲೆ ಕುಸಿದು ಕೂತರಂತೆ. ಅಲಕಾವತಿ ಅವರ ಕಾಲು ಬುಡದಲ್ಲಿ ಬಂದು ಕೂತಳಂತೆ. + +ಅಲ್ಲಿಂದ ಪ್ರಾರಂಭವಾಯಿತು ಅವಳ ಬಗ್ಗೆ ಅದಮ್ಯ ಬಯಕೆ, ಜೊತೆಗೇ ಭಯ, ಮಾರನೇ ದಿನ ತೀರ್ಥಕೊಡಲು ಬಂದಾಗ ಸಂಪೂರ್ಣ ಸೆರಗು ಹೊದ್ದು ತಾನೊಬ್ಬ ಪುಟ್ಟ ಹುಡುಗಿ ಎಂದು ಭಾಸವಾಗುವಂತೆ, ಅಕ್ಕರೆ ಹುಟ್ಟಿಸುವಂತೆ ಮುದುಡಿ ಕೂತಿದ್ದಳು. ನಡುಗುವ ಕೈಯಿಂದ ಆಚಾರ್ಯರು ಅವಳಿಗೆ ತೀರ್ಥ ಮತ್ತು ಕೆಂಡಸಂಪಿಗೆ ಹೂಗಳನ್ನು ಕೊಟ್ಟು ಏನು ಮಾತಾಡಲೂ ತೋಚದೆ ಹಿಂದಕ್ಕೆ ಬಂದರು. ಇಡೀ ದಿನ ಅವಳನ್ನು ಕೂಡುವ ಬಯಕೆ ಆಚಾರ್ಯರಲ್ಲಿ ಬೆಳೆಯುತ್ತ ಹೋಯಿತು. ರಾತ್ರೆ ದೇವಸ್ಥಾನದ ಅಂಗಳದಲ್ಲಿ, ಕೆಂಡಸಂಪಿಗೆ ಮರದ ಬುಡದಲ್ಲಿ. ಚಂದ್ರನಿಲ್ಲದೆ ನಕ್ಷತ್ರಗಳಿಂದ ಉಕ್ಕುವ ಕಪ್ಪಾದ ಆಕಾಶ ನೋಡುತ್ತ ದೆವ್ವ ಬಡಿದವರಂತೆ ಮಲಗಿದ್ದಾಗ ಅಲಕಾವತಿಯನ್ನು ಕೂಡುವ ಬಯಕೆ ತಡೆಯದಾಗಿ ಎದ್ದು ಕೂತರು. ಕತ್ತಲೆಯಲ್ಲಿ ಆವೇಶದಲ್ಲಿ ಬಸುಗುಡುತ್ತ ಅವಳ ಮನೆಕಡೆ ನಡೆದರು. ಅರ್ಧರಾತ್ರೆಯಾಗಿದ್ದರಿಂದ ಒಂದು ನರಹುಳ ಹೊರಗಿರಲಿಲ್ಲ. ಅಲಕಾವತಿಯ ಮನೆ ಮುಂದೆ ನಿಂತರು. ಹೆಬ್ಬಾಗಿಲನ್ನು ತಟ್ಟಿ ತೆರೆಸುವಂತಿಲ್ಲ. ಹಿಂದಿನ ದಿನ ಸುಣ್ಣ ಹೊಡೆಯುತ್ತಿದ್ದವರು ಮನೆಯ ಹಿಂದೆ ಇಟ್ಟಿದ್ದ ಏಣಿಯನ್ನು ಹತ್ತಿ ಬಟ್ಟೆ ಒಣಗಿ ಹಾಕುವ ಅಟ್ಟದಲ್ಲಿ ಇಳಿದರು. ಅಲ್ಲಿಂದ ಮೆತ್ತನೆಯ ಹೆಜ್ಜೆಗಳನ್ನಿಡುತ್ತ, ಹೊಡೆದುಕೊಳ್ಳುತ್ತಿದ್ದ ಎದೆಯನ್ನು ಶಲ್ಯದಿಂದ ಒತ್ತಿ ಹಿಡಿದು, ಮಹಡಿಯನ್ನು ಬಳಸಿ ಅಲಕಾವತಿ ಮಲಗುವ ಕೋಣೆಗೆ ಬಂದರು. + +ಅವಳು ಮಂಚದ ಮೇಲೆ ಮಲಗಿದ್ದಳು. ಪಕ್ಕದಲ್ಲಿ ಲಾಟೀನು ಉರಿಯುತ್ತಲೇ ಇತ್ತು. ಅವಳ ಎದೆಯ ಮೇಲೊಂದು ಓದುತ್ತಿದ್ದ ಪುಸ್ತಕ ಬಿಡಿಸಿಕೊಂಡಿತ್ತು. ಪಂಜರದಲ್ಲಿದ್ದ ಗಿಣಿ ರೆಕ್ಕೆಯನ್ನು ಬಡಿದು ಸದ್ದುಮಾಡಿತು. ಆಚಾರ್ಯರು ಅಲಕಾವತಿಯ ಶಾಂತವಾದ ಮುಖವನ್ನೆ ನೋಡುತ್ತ ಎಷ್ಟೋ ಹೊತ್ತು ನಿಂತೇ ಇದ್ದರು. ಮೆತ್ತಗೆ ಅಲಕಾವತಿ, ಅಲಕಾವತಿ ಎಂದು ಕರೆದರು. ಅವಳಿಗೆ ಎಚ್ಚರಿಲ್ಲದಿದ್ದಾಗ ಅವಳ ಮೈಯನ್ನು ಮುಟ್ಟಿ ಎಬ್ಬಿಸುವುದು ಸರಿಯಲ್ಲವೆನ್ನಿಸಿತು. ದೇವರ ನಾಮಸ್ಮರಣೆ ಮಾಡುವಂತೆ ನೂರುಬಾರಿಯಾದರೂ ಅವರು ಅಲಕಾವತಿ ಅಲಕಾವತಿ ಎಂದು ಕರೆದಿರಬೇಕು. ಅಲಕಾವತಿ ಮೆಲ್ಲನೆ ಕಣ್ಣುತೆರೆದು, ಎದುರಿಗಿದ್ದವರನ್ನು ಗಾಬರಿ ಪಟ್ಟುಕೊಳ್ಳದೆ ಗುರುತಿಸಿ, ಈ ಪೂಜೆ ತನಗೆ ಸಲ್ಲತಕ್ಕದ್ದು ಎಂಬಂತೆ ಆಚಾರ್ಯರ ಕೈಯನ್ನು ಹಿಡಿದು ತನ್ನ ಪಕ್ಕದಲ್ಲಿ ಕುಳ್ಳಿರಿಸಿಕೊಂಡಳು. ಆಚಾರ್ಯರು ಆಗ ಮೈಮೇಲೆ ಬಂದವರಂತೆ ಇದ್ದರೇ ವಿನಹ ಮನುಷ್ಯರಾಗಿರಲಿಲ್ಲ. ಬುಸುಗುಡುತ್ತ ನಿಸ್ಸಹಾಯಕರಂತಿದ್ದ ಅವರನ್ನು ಪಕ್ಕದಲ್ಲಿ ಮಲಗಿಸಿಕೊಂಡು ಮೈತಡವಿ ಸಂತೈಸುತ್ತ ಹೇಳಿದಳಂತೆ: ನಿಮ್ಮನ್ನು ನಾನು ಮನಸ್ಸಿನಲ್ಲಿ ವರಿಸಿದ್ದೇನೆ. ಆದರೆ ಮೈಯಲ್ಲಿ ವರಿಸಲಾರೆ ಅಂತ. ಪಕ್ಕದಲ್ಲಿ ಮಲಗಿದ್ದ ಆಚಾರ್ಯರು ಅದಕ್ಕಿಂತ ಮುಂದಿನದನ್ನು ಬಯಸಲಾರದಷ್ಟು ತೀವ್ರ ತುದಿಯನ್ನು ಮುಟ್ಟಿಬಿಟ್ಟಿದ್ದರು. ಆದರೆ ಮಾರನೇ ದಿನ ಹೀಗೆಯೇ ಅರ್ಧರಾತ್ರೆಯ ನಂತರ ಹೋದವರು ಅವಳ ಮೈಯನ್ನು ಕೂಡುವುದನ್ನೂ ಬಯಸಿದರು. ಅಲಕಾವತಿ ಮೃದುವಾಗಿ ಅವರನ್ನು ಬೇಡವೆಂದು ತಳ್ಳಿದಳು. ಅದರ ಮಾರನೇ ದಿನ ಮಧ್ಯಾಹ್ನ ತೀರ್ಥ ಕೊಡಲು ಹೋದವರೇ ಅವಳನ್ನು ಗಟ್ಟಿಯಾಗಿ ಅಪ್ಪಿ ತನ್ನನ್ನು ಕೂಡುವಂತೆ ಬೇಡಿಕೊಂಡರು. ಅವಳು ಮುಂದೆ ಏನೆಂದು ಕಾತರಳಾಗಿ ಕೇಳಿದಳು. ಆಚಾರ್ಯರು ‘ಮದುವೆಯಾಗೋಣ’ ಎಂದರು. ಅಲಕಾವತಿ ಅದೆಲ್ಲಿ ಸಾಧ್ಯ? ಎಂದು ನಿಟ್ಟುಸಿರಿಟ್ಟಳು. ಅವಳು ಹೇಳಿದಂತೆ ಅದು ಸಾಧ್ಯವಿರಲಿಲ್ಲ. ಆಚಾರ್ಯರು ದೇವಸ್ಥಾನದ ಪೂಜಾರಿ, ಮದುವೆಯಾದವರು, ಅದಕ್ಕೂ ಮಿಗಿಲಾಗಿ ಅಲಕಾವತಿ ವಿವಾಹಿತ ಹೆಣ್ಣು. ಅವರಿಗಿಂತ ವಯಸ್ಸಾದವಳು. ಆಚಾರ್ಯರು ಅಮೇಲಿಂದ ಭ್ರಾಂತರಂತೆ ಆಗಿಬಿಟ್ಟರು. ಸಮಯ ಸಿಕ್ಕಾಗಲೆಲ್ಲ ಹೋಗಿ ಅಲಕಾವತಿಯನ್ನು ಅಂಗಲಾಚಲು ಶುರು ಮಾಡಿದರು. ಅವಳು ಅವರನ್ನು ಮುದ್ದಿಸುತ್ತಿದ್ದಳಂತೆ. ಆದರೆ ಅವರು ತನ್ನಲ್ಲಿ ಪರವಶರಾಗುತ್ತ ಹೋದಂತೆ ಹಿಂದೆ ಸರಿದುಬಿಡುತ್ತಿದ್ದಳಂತೆ. ಹೀಗೇ ಎರಡು ತಿಂಗಳು ಕಳೆದ ಆಚಾರ್ಯರು ಸೊರಗುತ್ತ ಹೋದರಂತೆ. ಒಂದು ದಿನ ಅಲಕಾವತಿಯೇ ಆಚಾರ್ಯರಿಗೆ ನೀವು ಈ ಊರು ಬಿಟ್ಟುಹೋಗಿ ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಿ. ಆಮೇಲೆ ನನ್ನನ್ನು ಕರೆಸಿಕೊಳ್ಳಿ ಎಂದಳಂತೆ. + +ಆಚಾರ್ಯರಿಗೆ ಅದು ಸರಿ ಎನ್ನಿಸಿತು. ಊರುಬಿಟ್ಟು ತಾನು ಓಡಿಹೋಗುವ ದಿನವನ್ನು ನಿರ್ಧರಿಸುತ್ತಿದ್ದಂತೆಯೇ ಅಲಕಾವತಿ ಅವರನ್ನು ಪೀಡಿಸಲು ಶುರುಮಾಡುತ್ತಿದ್ದಳಂತೆ. ನನ್ನಿಂದ ದೂರವಾಗಲು ನೀವು ಹೋಗುತ್ತಿರೋದು. ಆಮೇಲೆ ಮರೆತು ಬಿಡುತ್ತೀರಿ ಎಂದು. ಆಚಾರ್ಯರು ಹೋಗಲ್ಲ-ಬೇಡ ಎಂದು ಅವಳನ್ನು ಕೂಡುವ ಬಯಕೆ ವ್ಯಕ್ತಪಡಿಸಿದಾಗ ‘ನಿಮಗೆ ಬೇಕಾಗಿರೋದು ಈ ನನ್ನ ಮೈಮಾತ್ರ ಅಲ್ಲವ?’ ಎನ್ನುತ್ತಿದ್ದಳಂತೆ. + +ಒಂದು ದಿನ ಆಚಾರ್ಯರು ಹಳ್ಳಿಯನ್ನು ತೊರೆದು ಹೊರಟೇ ಹೋದರು. ಅಲಕಾವತಿ ಅವರ ಪ್ರಯಾಣದ ಖರ್ಚಿಗೆ ಬೇಕಾದ ಹಣವನ್ನು ಕೊಟ್ಟಿದ್ದಳು. ತನ್ನನ್ನು ಬೇಗ ಕರೆಸಿಕೊಳ್ಳಿರೆಂದು ಅತ್ತು ಕರೆದಿದ್ದಳು. ಹೊರಡುವ ಹಿಂದಿನ ರಾತ್ರೆ ಕೂಡುವ ಬಯಕೆಯನ್ನೂ ತೋರಿಸಿದ್ದಳು. ಆದರೆ ಅವಳನ್ನು ತಾನೆಷ್ಟು ಪ್ರೀತಿಸುತ್ತೇನೆ ಎಂಬುದು ಅವಳಿಗೆ ಗೊತ್ತಾಗಲೆಂದು ಆಚಾರ್ಯರೆ ಕೂಡುವುದು ಬೇಡವೆಂದಿದ್ದರು. + +ದೆಹಲಿಯಲ್ಲಿ ನಾಯರ್ ಸಹವಾಸದಲ್ಲಿ ಎರಡುವರ್ಷವಿದ್ದು, ಕೆಲಸಗಳನ್ನು ಕಳೆದುಕೊಂಡು ಹಿಂದೆ ಬಂದು ನೋಡಿದಾಗ ಅಲಕಾವತಿ ಬದಲಾಗಿದ್ದಳು. ಸಣಕಲು ದೇಹದ ತನ್ನ ಗಂಡನನ್ನು ಕರೆಸಿಕೊಂಡಿದ್ದಳು. ಅವಳ ಗಂಡನದ್ದು ಗೋಟುತಲೆ, ಸೋಡಾಬಾಟ್ಲು ಕನ್ನಡಕ, ಒಟ್ಟಿನಲ್ಲಿ ಹ್ಯಾಪನಾದ ಮನುಷ್ಯ. ಆಚಾರ್ಯರ ಹೆಂಡತಿಯೂ ಮೈನೆರೆದು ಗಂಡನ ಮನೆಗೆ ಬಂದಿದ್ದಳು. ಮಗ ಓದಿ ವಿದ್ಯಾವಂತನಾಗಿ ಹಿಂದಕ್ಕೆ ಬಂದನೆಂದು ಅವರ ಅಪ್ಪನಿಗೂ ಖುಷಿಯಾಗಿತ್ತು. ಅಲಕಾವತಿ ಈಗ ರೇಷ್ಮೆಯ ಪತ್ತಲಗಳನ್ನುಡುವುದಿಲ್ಲ. ಕುರುಡಿಯಾಗಿದ್ದ ತಾಯಿ ಸತ್ತಿದ್ದಳು. ಸಾದಾ ಸೀರೆಯನ್ನುಟ್ಟು ತೀರ್ಥಕ್ಕಾಗಿ ದೇವಸ್ಥಾನಕ್ಕೇ ಬರುತ್ತಿದ್ದಳು. ಮನೆ ದೇವರನ್ನು ಗಂಡನೇ ಪೂಜಿಸುತ್ತಿದ್ದ. ಅದೊಂದು ಬಿಟ್ಟು ಬೇರೆ ಯಾವ ಕೆಲಸವೂ ಅವನ ಕೈಯಿಂದ ಆಗದು. + +ಆಚಾರ್ಯರಿಗೆ ನಿರಾಸೆಯಾಗಿತ್ತು. ಈ ಹಳ್ಳಿಯನ್ನು ಬಿಡುವುದೆಂದು ನಿರ್ಧರಿಸಿದರು. ಅಲಕಾವತಿ ತನ್ನ ಸಾಧ್ವಿತನವನ್ನು ಮನದಟ್ಟು ಮಾಡುವವಳಂತೆ ದೇವಸ್ಥಾನಕ್ಕೆ ಬಂದಾಗ ಆಚಾರ್ಯರನ್ನು ಕಣ್ಣೆತ್ತಿ ನೋಡುತ್ತಿರಲಿಲ್ಲ. ಒಂದು ದಿನ ಅವಳು ಒಂಟಿಯಾಗಿರುವುದನ್ನು ಕಾದು ಅವಳ ಮನೆಗೆ ಹೋದರು. ಆಚಾರ್ಯರು ಆಗ ಕ್ರಾಪು ಬಿಟ್ಟಿದ್ದರು. ಅಂಗಿಯನ್ನು ಹಾಕುತ್ತಿದ್ದರು. ನಾನು ಈ ಊರು ಬಿಡುತ್ತಿದ್ದೇನೆ ಎಂದಾಗ ಅಲಕಾವತಿ ಮುಖ ಎತ್ತದೆ ಮೌನವಾಗಿ ಅಳುತ್ತಿರುವುದನ್ನು ಆಚಾರ್ಯರು ಗಮನಿಸಿ, ಅವಳ ಕೈಯನ್ನು ಹಿಡಿದು ಮೃದುವಾಗಿ ‘ಬೇರೇನು ಸಾಧ್ಯ?’ ಎಂದರು. ನಾನು ಈಗ ನಿಮಗೆ ಬೇಕಿಲ್ಲ ಅಲ್ಲವೆ?’ ಎಂದಳು. ಅಲಕಾವತಿ ಕೈಗಳನ್ನು ಬಿಡಿಸಿಕೊಂಡು. ಆಚಾರ್ಯರಿಗೆ ಅವಳನ್ನು ಕೂಡುವ ಬಯಕೆ ಈ ಮಾತಿನಿಂದ ಕುದುರಿತು. ಅವಳನ್ನು ಅಪ್ಪಿದರು. ಅಲಕಾವತಿ ಅವರ ಎದೆಯ ಮೇಲೆ ಮುಖ ಮುಚ್ಚಿಕೊಂಡು ಅತ್ತಳು. + +ಆಚಾರ್ಯರು ತಮ್ಮ ಹಳ್ಳಿಯ ಹತ್ತಿರದಲ್ಲಿದ್ದ ಪೋಸ್ಟ್ ಆಫೀಸಿನಲ್ಲಿ ಪೋಸ್ಟ್ ಮಾಸ್ತರರಾದರು. ಅಲಕಾವತಿ ಎಷ್ಟು ಉಪಾಯಗಾರಳೆಂಬುದು ಅವರಿಗೆ ಕ್ರಮೇಣ ತಿಳಿಯುತ್ತ ಹೋಯಿತು. ತನ್ನ ತಂಡನಿಗೆ ವ್ಯವಹಾರ ಜ್ಞಾನ ಸಾಲದೆಂದು ಆಚಾರ್ಯರನ್ನು ತನ್ನ ಎಸ್ಟೇಟಿನ ರೈಟರ್ ಆಗಿ ನೇಮಿಸಿದಳು. ಎಸ್ಟೇಟಿನ ಮೇಲಿದ್ದ, ಕಾಡಿನಿಂದ ಆವೃತವಾದ ಒಂದು ಗುಡ್ಡದಲ್ಲಿ ಒಂದು ಆಫೀಸಿಗೆ ಹೋಗುವುದು; ಅಲ್ಲಿ ಅವರನ್ನು ಸಂಜೆ ಅಲಕಾವತಿ ಭೆಟ್ಟಿಯಾಗುವುದು. ಊರಿನ ದೊಡ್ಡ ಶ್ರೀಮಂತಳಲ್ಲವೆ-ಜನರು ಎದುರು ಆಡಿಕೊಳ್ಳಲು ಹೆದರುತ್ತಿದ್ದರು. ಪರಸ್ಪರ ಸಂಧಿಸುವ ನೂರಾರು ಉಪಾಯಗಳನ್ನು ಹುಡುಕುವುದರಲ್ಲೇ ಇಬ್ಬರ ಬುದ್ಧಿಶಕ್ತಿಯೂ ವ್ಯಯವಾಗುತ್ತ ಹೋಯಿತು. ಪ್ರಪಂಡ ಬಯಕೆಯಾಗಿ ಆಚಾರ್ಯರನ್ನು ಕಾಡಿದ್ದು ಕ್ರಮೇಣ ಮೈಮನಸ್ಸುಗಳನ್ನು ತಣಿಸುವ ದೈನಿಕ ಅಗತ್ಯವಾಯಿತು. ಆಕೆಯ ಎಸ್ಟೇಟಿನ ಸಂಬಂಧಪಟ್ಟ ವ್ಯಾಜ್ಯಗಳ ನಿರ್ವಹಣೆಯಲ್ಲಿ ಅವರ ಕಾನೂನಿನ ಚಟವೂ ಹುಟ್ಟಿಕೊಂಡದ್ದು. + +ಅವರ ಹೆಂಡತಿಯ ಚಿಕ್ಕಪ್ರಾಯದ ಗುಂಡಗಿನ ಮುಖದಲ್ಲಿ ಮಾತ್ರ ಒಂದು ಬಗೆಯ ಅತೃಪ್ತಿ ಮತ್ತು ದುಗುಡ ಬೇರೂರಿತು. ಆಚಾರ್ಯರಿಗೆ ಎಲ್ಲಾದರೂ ದೇಶಾಂತರ ಹೋಗಿಬಿಡಬೇಕೆಂದು ಅನ್ನಿಸುತ್ತಿತ್ತು- ಈ ಕಪಟ ನಾಟಕದಿಂದ ಬೇಸರವಾದಾಗ. ಆದರೆ ಅಲಕಾವತಿ ತನ್ನ ಮೈಯ ರುಚಿಯನ್ನು ಹೆಚ್ಚಿಸುತ್ತ, ಅದು ಗುಪ್ತ ಲಭ್ಯವಾದ್ದರಿಂದ ಆ ಸುಖವನ್ನು ಇನ್ನಷ್ಟು ಕಟುವಾಗಿಸುತ್ತ ಆಚಾರ್ಯರನ್ನು ಇನ್ನಷ್ಟು ಬಿಗಿಯಾಗಿ ಹಿಡಿಯುತ್ತ ಹೋದಳು. + +ಕ್ರಮೇಣ ಆಚಾರ್ಯರಿಗೆ ತನ್ನ ಸ್ವಮರ್ಯಾದೆ ನಷ್ಟವಾಗುತ್ತಿದೆ ಎಂಬ ಭಾವನೆ ಬೆಳೆಯಲು ಶುರುವಾಯಿತು. ಈ ಭಾವನೆ ಗಮನಿಸಿದ ಅಲಕಾವತಿ ಇನ್ನಷ್ಟು ಹೆಚ್ಚು ತನ್ನ ಸಂಗದ ಸುಖ ಅವರಿಗೆ ಬೆಳೆಯುವಂತೆ ಪ್ರಣಯದ ಕಲೆಯಲ್ಲಿ ನಿಷ್ಣಾತಳಾಗುತ್ತ ಹೋದಳು. ಪ್ರತಿದಿನ ಅವರಿಗೆ ಅವಳು ಹೊಸಬಳೆನ್ನುವಂತೆ ಮೈಯನ್ನು ಕೊಟ್ಟಳು. ಈ ಮೈಯಿ ಅಕ್ಷಯವಾಗಿ ಪರಸ್ಪರ ಸಂಗದಲ್ಲಿ ಬಿಚ್ಚಿಕೊಳ್ಳಬಹುದೆಂದು ತೋರಿಸಿ. ಅವರನ್ನು ಬೆರಗಿನಲ್ಲೇ ಉಳಿಸಿದಳು. + +ಎರಡು ವರ್ಷಗಳು ಹೀಗೇ ಕಳೆದುವು. ಅಲಕಾವತಿ ಬಸುರಾದಳು. ಅವಳ ಗಂಡ ಬಾಯಿ ಮುಚ್ಚಿಕೊಂಡಿದ್ದು ಅದು ತನ್ನಿಂದಲೇ ಎಂಬುವಂತೆ ಸಂಭ್ರಮದಿಂದ ತಿರುಗಿದ. ಅವನ ದೈನ್ಯದಿಂದ ಆಚಾರ್ಯರಿಗೆ ತುಂಬ ಅಸಹ್ಯವಾಗುತ್ತಿತ್ತು. ಅಲಕಾವತಿ ಮಾತ್ರ ನೀತಿ ನಿಯಮಗಳಿಂದ ಅಬಾಧಿತಳಾಗಿದ್ದಳು. ಬಸುರಿಯಾದವಳು ಕಣ್ಣಿಗೆ ಹೊಳೆಯುವ ದೇವಿಯಂತಿದ್ದಳು. ಮತ್ತೆ ಅವಳ ರೇಷ್ಮೆಯ ಪತ್ತಲಗಳನ್ನೆಲ್ಲ ಉಟ್ಟು ವಜ್ರದ ಓಲೆಯನ್ನು ಧರಿಸಿರುತ್ತಿದ್ದಳು. ಅವರಿವರು ಕಂಡಾರೆಂಬ ಸಂಕೋಚವಿಲ್ಲದೆ ಇದು ತನಗೆ ಸಲ್ಲತಕ್ಕದ್ದೆಂಬಂತೆ ಆಚಾರ್ಯರ ಜೊತೆ ಆಪ್ತವಾಗಿರುತ್ತಿದ್ದಳು. ಅವರ ಹೆಂಡತಿಗೆ ಒಡವೆ ವಸ್ತ್ರಗಳು ಕಡಿಮೆಯಾಗದಂತೆ ಕೇಳಿದಷ್ಟು ಹಣವನ್ನು ಆಚಾರ್ಯರಿಗೆ ಕೊಡುತ್ತಿದ್ದಳು. ಬಸಿರು ಬೆಳೆದಂತೆ ಅವಳ ಮೈ ಮೊಗ್ಗಾಯಿತು. ತನ್ನಲ್ಲೆ ಅಡಕವಾಯಿತು; ಗುಪ್ತವಾಯಿತು. ಆಚಾರ್ಯರು ಇದರಿಂದ ಬಿಡುಗಡೆಯ ನಿಟ್ಟುಸಿರಿಟ್ಟು ತನ್ನ ಕಾನೂನು ಮತ್ತು ಆಕಾಶಗಳ ಅಧ್ಯಯನದಲ್ಲಿ ನಿರತರಾದರು. + +ಬಸಿರಾಗಿದ್ದ ಅಲಕಾವತಿ ಹೆರುವಾಗ ಹೊಟ್ಟೆಯಲ್ಲಿ ಮಗು ಸತ್ತು ಪ್ರಾಣಬಿಟ್ಟಳು. ಆಚಾರ್ಯರು ತಬ್ಬಿಬ್ಬಾದರು. ಹೆಂಡತಿಗೆ ಹತ್ತಿರವಾಗಲು ಪ್ರಯತ್ನಿಸಿ ಸೋತರು. ಕೊನೆಗೊಂದು ದಿನ ಹಳ್ಳಿಯನ್ನು ತೊರೆದು ಈ ಗ್ರಾಮಕ್ಕೆ ಬಂದು ಬಿಟ್ಟರು. + +ಅಲಕಾವತಿಯನ್ನು ಮರೆಯಲು ಆಚಾರ್ಯರು ತಮ್ಮ ಕೋರ್ಟು ವ್ಯಾಜ್ಯಗಳ ಚಟ ಬೆಳೆಸಿಕೊಂಡರೋ, ಶ್ರೀಮಂತ ಚಾಕರಿ ಅಗತ್ಯವಾಗಿ ಅದನ್ನವರು ಬೆಳೆಸಿಕೊಂಡರೋ, ಅಥವಾ ಚಟವೇ ಮೂಲವಾಗಿ ಶ್ರೀಮಂತರು ಅದಕ್ಕೆ ನೆವವಾದರೋ, ಅಂತೂ ತಾನೊಬ್ಬಳು ಈ ಇಪ್ಪತ್ತು ವರ್ಷ ಅವರಿಗೊಬ್ಬಳು ನೆಮ್ಮದಿಯ ದೀಪವಾಗಿದ್ದೆ. ಮುದ್ದಿನ ಮಗನ ಮದುವೆಯ ಅಘಾತವನ್ನವರು ಸಹಿಸುವುದು ಸಾಧ್ಯವಾದದ್ದೂ ತನ್ನಿಂದಲೇ ಪ್ರಾಯಶಃ + +ಆಚಾರ್ಯರ ಭೌತಿಕ ಶರೀರವೆಲ್ಲ ಸುಟ್ಟು ಭಸ್ಮವಾದ ನಂತರ ಎಲ್ಲರೂ ಸ್ನಾನ ಮಾಡಿ ಹಿಂದೆ ಬರುತ್ತಿರುವುದನ್ನು ನೋಡಿದ ಗಂಗೂಬಾಯಿ ಮರದ ಬುಡದಿಂದ ಎದ್ದು ಮನೆಗೆ ಬಂದಳು. ತನ್ನ ಪೆಟ್ಟಿಗೆಯಿಂದ ಐದುಸಾವಿರ ರೂಪಾಯಿಗಳನ್ನು ತೆಗೆದು ಆಚಾರ್ಯರ ಹೆಂಡತಿ ರುಕ್ಮಿಣಿಯಮ್ಮನಿಗೆ ಕೊಟ್ಟಳು. ರುಕ್ಮಿಣಿಯಮ್ಮ ಇದರಿಂದ ಚಕಿತಳಾಗಿ ಬೇಡವೆಂದಳು.‘ಅವರ ಶುಶ್ರೂಷೆಗೆಂದು ಇದನ್ನು ತಂದೆ. ಇದು ಅವರಿಗೇ ಸೇರಬೇಕಾದ್ದು. ಅವರ ದಿನ ಕರ್ಮಗಳಿಗೆ ಇದನ್ನು ಖರ್ಚು ಮಾಡಿ ನನಗಷ್ಟು ಪುಣ್ಯ ಸಿಗುವಂತೆ ನೀವು ಮಾಡಬೇಕು.’ + +ಗಂಗೂಬಾಯಿ ಅಳುತ್ತ ಹೇಳಿದಳು. ಮನೆಯಲ್ಲಿ ಹಣವಿರಲಿಲ್ಲ; ಮಗನ ಹತ್ತಿರ ಇದೆಯೋ ಇಲ್ಲವೋ, ವಿಷ್ಣುಮೂರ್ತಿಗಳನ್ನು ಕೇಳುವುದು ಹೇಗೆ ಎಂದು ಒದ್ದಾಡುತ್ತಿದ್ದ ರುಕ್ಮಿಣಿಯಮ್ಮ ಬೇಡ ಬೇಡವೆಂದು ಕೊನೆಗೂ ಆ ಹಣವನ್ನು ತೆಗೆದುಕೊಂಡರು. ‘ನಾನೀಗ ಶಿವಮೊಗ್ಗೆಗೆ ಹೋಗುತ್ತೇನೆ. ಅವರ ವೈಕುಂಠ ಸಮಾರಾಧನೆಗೆ ಪ್ರಸಾದ ಪಡೆಯಲು ಮತ್ತೆ ಬರುತ್ತೇನೆ’ ಎಂದು ಗಂಗೂಬಾಯಿ ಹೇಳಿದಾಗ ರುಕ್ಮಿಣಿಯಮ್ಮ ಕಣ್ಣು ಒರೆಸಿಕೊಂಡು ಎಂದರು. ‘ಋಣಾನುಬಂಧ, ನೀನೂ ಇಲ್ಲೇ ಇರಬಹುದಲ್ಲ’ ಸ್ಕೂಲಿಗೆ ರಜವಿಲ್ಲೆಂದು ನೆವಹೇಳಿ ಗಂಗೂಬಾಯಿ ಸಂಜೆಯ ಬಸ್ಸು ಹಿಡಿದು ಶಿವಮೊಗ್ಗೆಗೆ ಹೊರಟು ಹೋದಳು. + +ಈ ಘಟನೆಯಾದ ಎರಡು ವರ್ಷಗಳ ನಂತರ ದೆಹಲಿಯಲ್ಲಿ ಒಂದು ಬೇಸಿಗೆಯ ಸಂಜೆ ಕೃಷ್ಣಮೂರ್ತಿ ಆರಾಮಕುರ್ಚಿಯ ಮೇಲೆ ಕೂತು ಗಾಳಿ ಹಾಕಿಕೊಳ್ಳುತ್ತಿದ್ದ. ಹಗಲೆಲ್ಲ ಅಸಹನೀಯವಾದ ಬಿಸಿಲು ಕಾದಿತ್ತು. ಪಕ್ಕದಲ್ಲಿ ಹೆಂಡತಿ ಕೂತು ಮಗನ ಅಂಗಿಗೆ ಗುಂಡಿ ಹೊಲೆಯುತ್ತಿದ್ದಳು. ಬಹಳ ದಿನಗಳ ನಂತರ ಕೃಷ್ಣಮೂರ್ತಿಗೊಂದು ಬಗೆಯ ನೆಮ್ಮದಿ ಸಿಕ್ಕಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಡಿಫ್ತೀರಿಯಾದಲ್ಲಿ ಸತ್ತು ಬಿಡುತ್ತಾನೆಂದು ಹೆದರಿದ್ದ ಅವನ ಮಗ ಅಪಾಯದಿಂದ ಪಾರಾಗಿ ಬದುಕಿ ಉಳಿದದ್ದು. ಮಗನ ಹಾಸಿಗೆಯ ಬುಡದಲ್ಲಿ ನಿದ್ದೆ ಆಹಾರಗಳಿಲ್ಲದೆ ಕಾದು ಕೂತ ಗಂಡಹೆಂಡಿರು ಈಗ ಅನ್ಯೋನ್ಯವಾಗಿದ್ದರು. ಮಗನಿಂದಾಗಿ ಹತ್ತಿರವಾಗಿದ್ದರು. ಹಣಕಾಸಿನ ಜಂಜಡಗಳೆಲ್ಲ ಇಬ್ಬರಿಗೂ ಕ್ಷುಲ್ಲಕವೆನ್ನಿಸಿತು. ಜೊತೆಗೇ ಕೃಷ್ಣಮೂರ್ತಿ ಇಡೀ ಮೂರು ಪುಸ್ತಕವನ್ನು ಬೇರೆ ಹೆಸರಿಟ್ಟುಕೊಂಡು ಬರೆದು ಹದಿನೈದು ಸಾವಿರ ರೂಪಾಯಿ ಗಳಿಸಿ ತಂದೆಯಿಂದಾದ ಋಣವನ್ನೆಲ್ಲ ಪರಿಹರಿಸಿಕೊಂಡಿದ್ದ. ಇಂಥ ಒಂದು ಗೈಡನ್ನು ಬರೆಯಬೇಕಾಗಿ ಬಂತೆಂದು ಅವನು ಅವಮಾನಿತನಾಗಿದ್ದರೂ ಒಟ್ಟಾಗಿ ಸಿಕ್ಕ ಹಣದಿಂದ ಅವನ ನೂರೆಂಟು ತಾಪತ್ರಯಗಳ ನಿವಾರಣೆಯಾಗಿತ್ತು. + +ಆಕಾಶ ಮತ್ತು ಬೆಕ್ಕು ಕಥಾ ಸಂಕಲನ (ಪ್ರಕಟಣೆಯ ವರ್ಷ ೧೯೮೧) + +ಇದ್ದಕ್ಕಿದ್ದಂತೆ ಕೃಷ್ಣಮೂರ್ತಿಗೆ ಅನ್ನಿಸಿತು. ಅಪ್ಪ ಮೂರ್ಖನಾಗಿ ಬದುಕಿ ಸತ್ತರೋ, ಅಥವಾ ಸಾಯುವಾಗ ಅವರಿಗೆ ಅರಿವು ಮೂಡಿತ್ತೋ ಹೇಳುವುದು ಹೇಗೆ? ಅವರು ಸಾಯುವ ಮುಂಚೆ ಆಡಿದ್ದ ಒಂದು ಮಾತು ಈವರೆಗೂ ಅವನಿಗೆ ಅಷ್ಟು ಮಹತ್ವದ್ದೆಂದು ಅನ್ನಿಸಿದ್ದಿಲ್ಲ. ಈಗ ಯಾಕೋ ಅನ್ನಿಸುತ್ತದೆ. ನಾಯರ್ ಹತ್ತಿರ ಮಾತಾಡುತ್ತಿದ್ದವರು ನಿದ್ದೆಹೋದರು. ಮಧ್ಯರಾತ್ರೆಯೋ ಏನೋ, ಕೃಷ್ಣಮೂರ್ತಿ ಅರ್ಧ ನಿದ್ರೆಯಲ್ಲಿದ್ದ. ಅಪ್ಪ ಮಲಗಿರುತ್ತಿದ್ದ ಕೋಣೆಗೆ ಹೊದಿಸಿದ ಮರದ ಹಲಗೆಗಳ ಅಟ್ಟದಲ್ಲೊಂದು ಬೆಕ್ಕು ಮರಿ ಹಾಕಿತ್ತು. ಅದು ಸದ್ದು ಮಾಡುತ್ತಿದೆಯೆಂದು ಅಕ್ಕನ ಮಗ ಹರಿಕುಮಾರ ಅಟ್ಟವನ್ನು ಹತ್ತಿ ಬೆಕ್ಕಿನ ಮರಿಗಳಿದ್ದ ಬುಟ್ಟಿಯನ್ನು ಎತ್ತಲು ಹೋದ, ಆಗ ಬೆಕ್ಕು ಅವನನ್ನು ಕಚ್ಚಿ ಪರಚಲು ಎಗರಿ ಬಂದು ಕೂಗಿತು. ಮಲಗಿದ್ದ ಅಪ್ಪ ನರಳುತ್ತ ಹೇಳಿದರು: + +‘ಏ ಹರಿ. ಪಾಪ ಆ ಬೆಕ್ಕನ್ನು ಯಾಕೆ ಗೋಳು ಹೊಯ್ತಿಯೊ. ಅಲ್ಲೇ ಇರಲಿ ಬಿಡು ಅದು.’ ಅದೇ ಅವರು ಆಡಿದ್ದ ಕೊನೆಯ ಮಾತು. ದಯೆಯಿಂದ ಗದ್ಗದವಾಗಿತ್ತು ಅದು. ಆದರೆ ಅಷ್ಟೇ ಸಾಲದೆಂದು ತಾನು ಯಾಕೆ ಹೀಗೆ ಪರಿತಪಿಸುತ್ತಿದ್ದೇನೆ? + + + +ಕನ್ನಡದ ಮೇರು ಕಥೆಗಾರ, ಚಿಂತಕ. ಜ್ಞಾನಪೀಠ ಪ್ರಶಸ್ತಿ ವಿಜೇತ ಬರಹಗಾರ. ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಅವರು ಹುಟ್ಟಿದ್ದು (೧೯೩೨, ಡಿಸೆಂಬರ್ ೨೧) ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಎಂಬ ಹಳ್ಳಿಯಲ್ಲಿ. \ No newline at end of file diff --git a/Kenda Sampige/article_501.txt b/Kenda Sampige/article_501.txt new file mode 100644 index 0000000000000000000000000000000000000000..3560136d36591cc924030b823dff14899812e159 --- /dev/null +++ b/Kenda Sampige/article_501.txt @@ -0,0 +1,99 @@ +ಪ್ಲಾಸ್ಟಿಕ್ ಚೇರಿನ ಎತ್ತರದ ಹಿಡಿಗಳನ್ನು ಭದ್ರವಾಗಿ ಹಿಡಕೊಂಡು ಹಿಂದಿನ ಸಾಲಲ್ಲಿ ಕೂತಿದ್ದ ಇವರಿಗೆ ಏನೇನೋ ನೆನಪು ಆವರಿಸಿ ಅಲ್ಲಾಡಿಸುತ್ತಿತ್ತು. ಕತ್ತನ್ನು ನೋವಾಗುವಷ್ಟು ಚಾಚಿ ಸ್ಟೇಜಿನ ಮೇಲೆ ನಡೆಯುವುದನ್ನು ನೋಡುತ್ತಿದ್ದರೂ ಮನಸ್ಸು ಎಲ್ಲೆಲ್ಲೋ ಅಲೆಯುತಿತ್ತು. ಎಪ್ಪತ್ತು ದಾಟಿದ್ದ ಇವರ ಕುಗ್ಗಿದ ಸಣ್ಣ ದೇಹ, ಬಾಗಿದ ಬೆನ್ನು ಗೌರವಕ್ಕಿಂತ ಹೆಚ್ಚಾಗಿ ಕನಿಕರವನ್ನೇ ಹುಟ್ಟಿಸುತ್ತಿತ್ತು. ಆ ವಯಸ್ಸಿನಲ್ಲಿ ನೆನಪಿಗೇನು ಬರ. ತುಂಬಿ ಭೋರ್ಗರೆಯುವಷ್ಟಿತ್ತು. ಆದರೆ ಯಾಕೋ ಯಾವುದೂ ಸ್ಪಷ್ಟವಲ್ಲ. ನೆನ್ನೆ ಮೊನ್ನೆಯ ಸಂಗತಿ ಹತ್ತಾರು ವರ್ಷ ಹಳೆಯದು ಎಂಬಂತೆ ಮತ್ತು ಹತ್ತಾರು ವರ್ಷ ಹಳೆಯದು ನೆನ್ನೆ ತಾನೆ ನಡೆದುದು ಅನಿಸುತ್ತಿತ್ತು. ಈ ಪ್ಲಾಸ್ಟಿಕ್ ಚೇರುಗಳಿಗಿಂತ ಮಡಚುವ ಗೋಡ್ರೆಜ್ ಚೇರಿನಲ್ಲಿ ಕೂತು, ಪಕ್ಕದ ಕಂಬಿಯನ್ನೇ ಹಿಡಿಯಾಗಿ ಹಿಡಿಯುವುದು ಇವರಿಗೆ ಸುಲಭ. + +ಕವನಸಂಕಲನದ ಬಿಡುಗಡೆ ಸಮಾರಂಭ ಇವರಿಗೆ ಹೆಚ್ಚೇನೂ ಸೊಗಸುವುದಿಲ್ಲ. ಹಾಗೆ ನೋಡಿದರೆ ಇವರನ್ನೂ ಅಹ್ವಾನಿಸಿ ಸ್ಟೇಜಿನ ಮೇಲೆ ಕೂಡಿಸಿ ಭಾಷಣ ಮಾಡಿಸಬೇಕಿತ್ತು. ಆದರೆ ಅದರ ಬಗ್ಗೆ ಇವರಿಗೇನು ಬೇಸರವಿರಲಿಲ್ಲ. ಅಷ್ಟೇ ಅಲ್ಲ ಸ್ಟೇಜಿನಲ್ಲಿ ಕೂರುವುದು, ಪದ್ಯದ ಬಗ್ಗೆ ಮಾತಾಡೋದು ಇವರಿಗೆ ಮುಜುಗರದ ಸಂಗತಿಯೇ. ಅಂದು ಇವರ ಉದ್ವೇಗ ಬೇರೆ ಬಗೆಯದು. ಸಮಾರಂಭದ ಕವಿ ಕೆಟ್ಟ ಕೆಟ್ಟ ಪದ್ಯಗಳನ್ನು ಬರೆದು ಜನಪ್ರಿಯವಾಗಿದ್ದರೂ ಕೂಡ ಅವನ ಬಗ್ಗೆ ಇವರಿಗೆ ಏನೋ ಕುತೂಹಲ. ಹೀಗೆಲ್ಲಾ ಇದ್ದುಕೊಂಡೂ ಕಾವ್ಯ ಬರೆಯಬಹುದಾ ಅಂತ. ಅವನ ಸಾಲುಗಳ ಚಂದ ಮತ್ತು ಜಾಣ್ಮೆ ಹಿಡಿಸಿತ್ತು. ಆ ಜಾಣ್ಮೆ ಎಂದೂ ಅಹಂಕಾರವಾಗದೆ, ಸರಿಯಾದ ವಿಚಾರದ ಬಗ್ಗೆಯೇ ಇರುವುದೂ ಹಿಡಿಸಿತ್ತು. ಯಾವುದೋ ದೊಡ್ಡ ಕಂಪನಿಯ ಪ್ರಾಯೋಜನೆಯ ಅಡಿ ನಡೆಯುತ್ತಿದ್ದ ಆ ಸಮಾರಂಭದ ಜಗಮಗಿಸುವ ಬೆಳಕು, ಊರೆಲ್ಲಾ ಕೇಳಿಸುವಂಥ ಸದ್ದು ಗದ್ದಲಕ್ಕೆ ಬೇಸರಕ್ಕಿಂತ ಹೆಚ್ಚಾಗಿ ಒಳಗೊಳಗೇ ನಗುತ್ತಿದ್ದರು. + +ಹಾರ ತುರಾಯಿಗಳೆಲ್ಲಾ ಮುಗಿದು ಕವಿ ತನ್ನೆರಡು ಪದ್ಯವನ್ನು ಓದಲು ನಿಂತಾಗ ಇವರು ಕಿವಿ ಚುರುಕಾಗಿಸಿ ನೆಟ್ಟಗೆ ಕೂತರು. ಅದಕ್ಕಾಗಿಯೇ ಅಲ್ಲಿಗೆ ಬಂದಿದ್ದು. ಅಷ್ಟು ಚೆನ್ನಾದ ಸಾಲುಗಳನ್ನು ಕವಿಯ ಬಾಯಿಂದಲೇ ಕೇಳುವುದಕ್ಕೆ ಇಳಿವಯಸ್ಸಿನಲ್ಲೂ ಇವರಿಗೆ ರೋಮಾಂಚನವಾಗುತ್ತಿತ್ತು. ಆದರೆ ವಿಚಿತ್ರವೆಂದರೆ ಕವಿ ಮೊದಲೆರಡು ಸಾಲು ಓದುವಷ್ಟರಲ್ಲೇ ಇವರ ಮನಸ್ಸು ಏಲ್ಲೋ ಹೋಗಿಬಿಟ್ಟಿತ್ತು. ಪದ್ಯದ ಮೊದಲಲ್ಲೇ ಬರುವ “ನೋಟದ ಬಾಣ ಹೂಡಲು ಬಿಲ್ಲಾದ ಹುಬ್ಬು” ಎಂಬ ಸಾಲು ಇವರನ್ನು ತುಂಬಾ ದೂರ ಒಯ್ದುಬಿಟ್ಟಿತ್ತು. ತನ್ನ ಪ್ರೇಯಸಿ ಎಂದು ತಾವು ಗುಪ್ತವಾಗಿ ಖುಷಿಪಡುತ್ತಿದ್ದ ಆ ಹುಡುಗಿಯ ಹುಬ್ಬುಗಳು, ಅವಳ ಒಡನಾಟ ತದೇಕಚಿತ್ತದ ನೋಟ ಏಲ್ಲಾ ನೆನಪಾದವು. ಆದರೆ ಆ ನೆನಪಿಂದ ಇಹಕ್ಕೆ ಮರಳುವಷ್ಟರಲ್ಲಿ ಕವಿಯ ಎರಡು ಪದ್ಯಗಳೂ ಮುಗಿದು ವಂದನಾರ್ಪಣೆಯೂ ಮುಗಿದಿತ್ತು. ಜನ ಏಳುತ್ತಿದ್ದರು. ತಾವು ಎಲ್ಲೋ ಕಳೆದು ಹೋಗಿರುವುದು ಎಲ್ಲರಿಗೂ ಗೊತ್ತಾಗಿಬಿಟ್ಟಿತೇನೋ ಎಂದು ದಡಬಡಿಸಿದರು. ಅಲ್ಲದೆ ತಮ್ಮ ಪ್ರೇಯಸಿಯ ಹುಬ್ಬಿನ ಸಂಗತಿ ಎಲ್ಲರಿಗೂ ಗೊತ್ತಾಗಿ ಬಿಟ್ಟಿತೋ ಎಂಬಂತೆ ನಾಚಿಕೆಯಿಂದ ಅತ್ತಿತ್ತ ನೋಡಿ ತಲೆ ತಗ್ಗಿಸಿ ಹೊರನಡೆದರು. + +ಕಣ್ಣು ಕುಕ್ಕುವ ಬೆಳಕಿನ ಸಭಾಂಗಣದಿಂದ ಹೊರಗೆ ಬೀದಿಗೆ ಬಂದೊಡನೆ ಕತ್ತಲೆಯಲ್ಲಿ ಒಂದೆರಡು ನಿಮಿಷ ಕಣ್ಣು ಕಾಣದೆ ಇವರು ಹಾಗೇ ನಿಂತರು. ನಿಧಾನಕ್ಕೆ ಕತ್ತಲು ಕಣ್ಣಿಗೆ ಒಗ್ಗಿದಂತೆ ದೂರದಲ್ಲಿರುವ ಬಸ್‌ಸ್ಟಾಪ್ ಕಂಡಿತು. ಆ ದಿಕ್ಕಿಗೆ ಹೋಗುವುದು ನಡುವೆ ಯಾವುದಾದರೂ ಆಟೋ ಸಿಕ್ಕರೆ ಸರಿ ಎಂದುಕೊಂಡರು. ಜನರೆಲ್ಲಾ ಸ್ಕೂಟರ್, ಕಾರುಗಳಲ್ಲಿ ಸರಸರ ಹೊರಡುತ್ತಿದ್ದಂತೆ ಸಣ್ಣಗೆ ಮಳೆ ಶುರುವಾಯಿತು. ಒಂದೆರಡು ಹನಿಗಳು ಇವರ ಹೆಜ್ಜೆಯನ್ನು ಚುರುಕುಗೊಳಿಸಿತು. ಅಷ್ಟರಲ್ಲಿ ಇವರ ಪಕ್ಕ ಒಂದು ಕಾರು ಹತ್ತಿರದಲ್ಲೇ ಹಾದು ಹೋಯಿತು. ಕೊಂಚ ಗಾಬರಿಯೇ ಆಗಿ ಪಕ್ಕಕ್ಕೆ ನಿಂತುಬಿಟ್ಟರು. ಆದರೆ ಕಾರು ತುಸುವೇ ದೂರ ಹೋಗಿ ನಿಂತಿತು. ಅದರಿಂದ ಚೆನ್ನಾಗಿ ಶೇವ್‌ಮಾಡಿಕೊಂಡ ಒಳ್ಳೆ ಶರ್ಟು ಪ್ಯಾಂಟು ತೊಟ್ಟ ಇಪ್ಪತ್ತರ ಹುಡುಗ ಇಳಿದ. ನಗು ನಗುತ್ತಾ ಇವರತ್ತಲೇ ಬಂದ. ಗುರುತು ಹತ್ತಲಿಲ್ಲ. ಬಂದವನೇ ಇವರ ಕೈ ಹಿಡಿದು ನಮಸ್ಕಾರ ಹೇಳಿದ. ಇವರು ಪಿಳಿಪಿಳಿ ನೋಡುತ್ತಲೇ ಇದ್ದರು. ತಮ್ಮ ಹಳೆಯ ಕವನವೊಂದರ ಸಾಲು ನೆನಪಾಯಿತು. ಸಾಲಿನ ಪದಗಳಲ್ಲ ಅದರಲ್ಲಿ ಬರುವ ಚಿತ್ರ. ಇವನನ್ನೇ ಮನಸ್ಸಿನಲ್ಲಿಟ್ಟುಕೊಂಡು ಅದನ್ನು ಬರೆದನ ಅಂತ ಅನುಮಾನವಾಯಿತು. ಆದರೆ ಆ ಸಾಲು ಬರೆದು ದಶಕಗಳೇ ಕಳೆದಿದ್ದವು. ಏನದು ಸಾಲು ಎಂದು ಮಾತ್ರ ಹೊಳೆಯಲಿಲ್ಲ. ಇವರ ತಲೆಯಲ್ಲಿ ಇಂದಿನ ಇವನೇ ಅಂದಿನ ಸಾಲಿಗೆ ಪ್ರೇರಣೆ ಎಂಬ ಭಾವ ಬಲವಾಯಿತು. ಅದು ಸಾಧ್ಯವಿಲ್ಲ ಅನಿಸಿದರೂ ಕೂಡ. ಯಾಕೆ ಸಾಧ್ಯವಿಲ್ಲ ಅಂತ ಮನಸ್ಸಿನ ಇನ್ನೊಂದು ಭಾಗ ತಕರಾರು ಮಾಡುತ್ತಿತ್ತು. + +ಅಷ್ಟರಲ್ಲಿ ಹುಡುಗ ಏನೋ ಹೇಳಿದ್ದಕ್ಕೆ ಇವರು ಸರಿ ಎಂದು ತಲೆಯಾಡಿಸಿಬಿಟ್ಟಿದ್ದರು. ಹುಡುಗ ಮೆಲ್ಲನೆ ಕೈಹಿಡಿದು ಇವರನ್ನು ಕಾರಿನಲ್ಲಿ ಕೂಡಿಸಿಯೂ ಆಗಿತ್ತು. ಕಾರು ನಿಂತೇ ಇದೆ ಎಂಬಂತೆ ಭಾಸವಾಗುತ್ತಿದ್ದರೂ ಕಿಟಕಿಯ ಹೊರಗೆ ಬೆಳಕು ಪಟಪಟನೆ ಹಾದು ಹೋಗುತ್ತಿತ್ತು. ಈ ಊರಿನಲ್ಲಿ ಇಷ್ಟು ಜೋರಾಗಿ ಕಾರು ಬಿಡಬಹುದ ಎಂದು ಕೇಳಬೇಕನಿಸಿತು. ಡ್ರೈವ್ ಮಾಡುತ್ತಿದ್ದ ಹುಡುಗ ತಮ್ಮ ಭೋಳೇತನಕ್ಕೆ ನಗಬಹುದು ಎಂದು ಸುಮ್ಮನಾದರು. ಇವರಿಗೆ ಹಾಗನಿಸಿದ್ದು ಆ ಹುಡುಗನಿಗೆ ಗೊತ್ತಾದಂತೆ ತಿರುಗಿ ಹಲ್ಲು ಬಿಟ್ಟು ನಕ್ಕ. ಅವನೂ ಮೊದಲಿನ ಹುಡುಗನಂತೇ ಕಂಡ. ಬಾಗಿ ಮುಂದೆ ಕೂತಿದ್ದ ಮೊದಲ ಹುಡುಗನನ್ನು ನೋಡಿದರು. ಅವನು ತಿರುಗಿ “ಏನು ಸಾರ್‍? ನೀರು ಬೇಕ?” ಎಂದು ನೀರಿನ ಬಾಟಲು ಚಾಚಿದ. ಇವರು “ಬೇಡ” ಎಂದು ತಲೆಯಾಡಿಸಿ ಹೊರಗೆ ನೋಡಿದರು. ಕಾರು ಯಾವ ದಿಕ್ಕಲ್ಲಿ ಹೋಗುತ್ತಿದೆ ಎಂದು ತಿಳಿಯಲಿಲ್ಲ. ಡ್ರೈವ್ ಮಾಡುತ್ತಿದ್ದ ಹುಡುಗನ ಕಡೆ ತಿರುಗಿ “ಎಲ್ಲಿ ಬಂದಿವಿ…” ಎಂದು ಅನುಮಾನದಿಂದಲೇ ರಾಗವೆಳೆದರು. ತಟ್ಟನೆ ಆ ಹುಡುಗ “ನಿಮ್ಮನೆ ಗೊತ್ತು ಸಾರ್ ನನಗೆ. ಒಂದು ಚೂರು ಈ ಕಡೆ ಕೆಲಸ ಇತ್ತು‍. ಅದನ್ನ ಮುಗಿಸಿಕೊಂಡು ಸೀದ ಹೊರಟುಬಿಡೋಣ” ಎಂದು ಇನ್ನೇನೇನೋ ಹೇಳತೊಡಗಿದ. ಬಸ್ಸೋ ಆಟೋನೋ ಸಿಕ್ಕಿ ಮನೆ ತಲುಪುವದಕ್ಕಿಂತ ಏನೆಂದರೂ ಇದು ಬೇಗ ಆಗುತ್ತದೆ ಎಂದು ಸುಮ್ಮನಾದರು. + +ತೇಲುವಂತೆ ಅನಿಸುತ್ತಿತ್ತು. ಕಾರು ಹೆಚ್ಚೆಚ್ಚು ಜೋರಾಗಿ ಹೋಗುತ್ತಿದೆಯೇನೋ ಅಂತ ಅನಿಸಿದರೂ ಏನೂ ಹೇಳಲಿಲ್ಲ. ಈ ತೇಲುವುದು ಯಾಕೆ ಖುಷಿಕೊಡುತ್ತದೆ ಎಂದು ಮನಸ್ಸಲ್ಲಿ ಏನೇನೋ ವಿಚಾರಗಳ ಅಲೆಗಳೆದ್ದವು. ತೇಲುವಾಗ ಕಾಲಿನ ಹಂಗಿಲ್ಲ ಎಂತಲೇ ಇರಬೇಕು ಅಂದುಕೊಂಡರು. ಮರುಕ್ಷಣ ಅಲ್ಲ ಅಲ್ಲ ಹೆಜ್ಜೆಗುರುತು ಮೂಡಿಸುವ ಗೋಜೇ ಇಲ್ಲ ಅಂತಲೇ ಇರಬೇಕು ಅಂತ ಖಾತ್ರಿಯಾಯಿತು. ತೇಲು, ಕಾಲು, ಹೆಜ್ಜೆ, ಗೋಜು ಎಂದು ಮತ್ತೆ ಮತ್ತೆ ಹೇಳಿಕೊಳ್ಳಬೇಕನಿಸಿತು. ಅದೇ ಪದಗಳು ಹೊಸದಾಗಿ ಕಾಣತೊಡಗಿತು. ಎಷ್ಟು ಚೆನ್ನಾಗಿದೆಯಲ್ಲ ಎಂದು ಪದಗಳನ್ನು ಮತ್ತೆ ಮತ್ತೆ ಮುಟ್ಟಿ ನೋಡಿದರು. ಕೈಗೆತ್ತಿಕೊಂಡು ಆಡಿಸತೊಡಗಿದರು. ಅವುಗಳು ಕೈಯಲ್ಲಿ ಕಚಗುಳಿ ಕೊಡುವಂತೆ ಕುಣಿಯುತ್ತಾ ಜಾರುತ್ತಾ ಇದ್ದವು. ಇವರಿಗೂ ನಗು ಬಂದಿತು. ಅಷ್ಟರಲ್ಲಿ ‘ಹುಷಾರಾಗಿ ಹೋಗು ಅಷ್ಟೆ’ ಎಂದೇನೋ ಹೇಳಿದರೆಂದು ಕಾಣುತ್ತದೆ. ಡ್ರೈವ್ ಮಾಡುತ್ತಿದ್ದ ಹುಡುಗ ತಿರುಗಿ “ಸರಿ ಸಾರ್” ಎಂದು ತನ್ನ ಸಂಗಾತಿಯನ್ನು ನೋಡಿ ನಕ್ಕ. ಅವನೂ ಹಿಂದೆ ಬಗ್ಗಿ ಇವರನ್ನು ನೋಡಿ ನಕ್ಕ. ಆ ನಗುವಿನಲ್ಲಿ ಕೃತ್ರಿಮತೆ ಏನೂ ಅವರಿಗೆ ಕಾಣಲಿಲ್ಲ. ಅವರ ತೇಲುವ ಸುಖದಲ್ಲಿ ಅದು ಇದ್ದಿದ್ದರೂ ಕಾಣುವುದು ಸಾಧ್ಯವಿರಲಿಲ್ಲ. ಕಣ್ಣು ಮುಚ್ಚಿ ಕೂತರು. + +ಕಣ್ಣು ಬಿಟ್ಟಾಗ ಕಾರಿನಲ್ಲಿ ಇವರ ಪಕ್ಕದಲ್ಲೆ ಇನ್ನೊಬ್ಬ ಹೊಸ ಹುಡುಗ ಇದ್ದ. ಸ್ವಲ್ಪ ಕುಳ್ಳಗೆ ಕಪ್ಪಗೆ ದಪ್ಪಗಿದ್ದ. ಅವನೂ ಮುಂಚಿನ ಇನ್ನಿಬ್ಬರಂತೆ ಹಚ್ಚಗೆ ನಕ್ಕ. ಇವರ ಕೈಹಿಡಿದು ಹಣೆಗೆ ಒತ್ತಿಕೊಂಡ. ನಿನ್ನ ಹೆಸರೇನು ಎಂದು ಕೇಳಬೇಕೆಂದು ಅನಿಸಿದರೂ, ಆ ಹುಡುಗನ ಬೆಚ್ಚಗಿನ ಕೈ ತನ್ನ ಕೈ ಮುಟ್ಟಿದ್ದೇ ತುಂಬಾ ಹಿತವಾಯಿತು. ತುಂಬಾ ಎಳೆಯ ಕೈಯದು. ದಪ್ಪಗೆ ಕುಳ್ಳಗಿದ್ದವನ ಕೈ ಒರಟಿರಬೇಕಾಗಿತ್ತಲ್ಲ ಎಂದು ಇವರಿಗೆ ಯಾಕೋ ಅನಿಸಿದ್ದು ಅದು ಹಾಗಿಲ್ಲದಾಗ ಅರಿವಿಗೆ ಬಂದಿತು. ಬಲವಾಗಿ ಹಿಡಿದುಕೊಳ್ಳದಿದ್ದರೂ, ಹಿಡಿತ ಬಿಡಿಸಿಕೊಳ್ಳಲಾಗದಂತೆ ಇದೆಯಲ್ಲ ಎಂದು ಅಚ್ಚರಿಪಟ್ಟರು. ಯಾಕೋ ತನ್ನ ಬಾಲ್ಯದ ಗೆಳೆಯ ಶಂಕರ ನೆನಪಾದ. ಮೊನ್ನೆ ಕೂಡ ಅವನೊಡನೆ ಮಾತಾಡಿದ್ದೆನ ಎಂದು ಕೇಳಿಕೊಂಡರು. ಅದು ಹೇಗೆ ಸಾಧ್ಯ ಎಂದು ಆ ಹುಡುಗ ನಕ್ಕಂತೆ ಅನಿಸಿತು. ಇವನಿಗೇನು ಗೊತ್ತು ಎಂಬಂತೆ ಮುನಿದುಕೊಂಡರು. ಶಂಕರನ ಅಮ್ಮ ಶುಭ್ರವಾದ ಮಾಸಿದ ಸೀರೆಯುಟ್ಟು ಸ್ಕೂಲಿನ ಗೇಟಿನ ಒಳಗೆ ಬರದೆ ನಿಲ್ಲುವುದು. ಅಲ್ಲಿಂದಲೇ ಪಿಯೂನ್ ಕರೆದು ಫೀಸ್ ಕಟ್ಟುತ್ತಿದ್ದುದ್ದು ಎಲ್ಲ ಮತ್ತೆ ನೋಡಿದರು. ಮತ್ತೆ ಎಂದಿನಂತೆ ಕಣ್ಣು ತೇವವಾಯಿತು, ಗಂಟಲಲ್ಲಿ ಗಂಟಿಕ್ಕಿಕೊಂಡಿತು. ಶಂಕರ ತನ್ನ ಬೆಚ್ಚಗಿನ ಕೈಯನ್ನು ಹೀಗೇ ಹಿಡಿದು ಮಾತಾಡುತ್ತಿದ್ದುದು. ಕ್ಷುಲ್ಲಕಗಳನ್ನು ಅತ್ಯಂತ ದಟ್ಟವಾಗಿ, ಹೊಳಪಿನಿಂದ ಹೇಳುತ್ತಾ ಕಣ್ಣಲ್ಲಿ ಕಣ್ಣಿಟ್ಟು ನಮ್ಮ ಗುಟ್ಟಿದು ಎನ್ನುವಂತೆ ನೋಡುತ್ತಿದ್ದ. ಶಂಕರನ ಕೈ ಮಾತ್ರ ಒರಟಾಗಿ ಇರುತ್ತಿತ್ತಲ್ಲ ಎಂದು ಈ ಹುಡುಗನ ಕೈ ನೋಡಿದರು. ಇವರ ಕಣ್ಣಿನ ತೇವ ನೋಡಿ ಅವನು “ಏನು ಸಾರ್ , ಕಣ್ಣಿಗೇನಾದರೂ ಧೂಳು ಬಿತ್ತ?” ಅಂತ ಕೇಳಿದಾಗ ತಾನು ಈ ಹುಡುಗರ ಜತೆ ಯಾವುದೋ ಬಿಲ್ಡಿಂಗಿನ ಒಳಗೆ ಲಿಫ್ಟಿನಲ್ಲಿರುವುದು ಅರಿವಿಗೆ ಬಂದಿತು. + +ಲಿಫ್ಟ್ ಬಾಗಿಲು ತೆರೆದಾಗ ಹೊರಗೆ ಕಾಲಿಡಬೇಕೆಂದು ಇವರಿಗೆ ಅನಿಸಲೇ ಇಲ್ಲ. ಒಂದು ಕ್ಷಣ ಹುಡುಗರೂ ಕಾದರು. ಕೂಡಲೇ ಇವರ ನಿಧಾನಕ್ಕೆ ಅಸಹನೆಗೊಂಡಂತೆ ಒಬ್ಬ ಇವರನ್ನು ಮೆದುವಾಗಿ ಆದರೆ ಬಲವಾಗಿ ಬಾಗಿಲತ್ತ ತಳ್ಳಿದ. ತಟ್ಟಕ್ಕನೆ ತಾನಿವರ ಬಂಧಿ ಅಂತ ಅನಿಸಿ ಇವರು ಹೆಜ್ಜೆ ಇಡಲು ಹಿಂಜರಿದರು. ಆದರೆ, ಆ ಪುಟ್ಟ ದೇಹಕ್ಕೆ ಹಿಂದಿನಿಂದ ತಳ್ಳಿದ ಕೈ ಯಾಕೋ ತುಂಬಾ ದೊಡ್ಡದು ಅನಿಸಿತು. ಆ ಕೈಗಳ ಹಿಂದೆ ವಿಚಿತ್ರವಾದ ಶಕ್ತಿ ಇರುವಂತೆ. ಕ್ರೂರ ಮನಸ್ಸಿರುವಂತೆ ತನಗೆ ಯಾಕೆ ಅನಿಸುತ್ತಿದೆ ಎಂದು ಕೇಳಿಕೊಂಡರು. ಎಮರ್ಜನ್ಸಿಯ ದಿನಗಳಲ್ಲಿ ಒಂದು ವಾರ ಜೈಲಲ್ಲಿ ಕಳೆದಾಗ ನಗುತ್ತಿದ್ದ ಪೋಲೀಸ್ ಕೂಡ ಹೀಗೇ ಗಟ್ಟಿಯಾಗಿ ಹಿಡಿಯುತ್ತಿದ್ದ. ತನ್ನ ಪದ್ಯಗಳನ್ನು ಓದಿಲ್ಲದಿದ್ದರೂ ತಾನು ಕವಿ ಎಂದು ಆ ಪೋಲೀಸಿಗೆ ಗೊತ್ತಿತ್ತಂತೆ. “ಏನು ಮಾಡೋದು ಸಾರ್? ನಮಗಿದು ಇಷ್ಟಾನೇ? ಮೇಲಿಂದ ಆರ್ಡರ್ ಆಗಿದೆ” ಎಂದು ಪೆಚ್ಚುಪೆಚ್ಚಾಗಿ ನಗುತ್ತಿದ್ದ. ಆ ಪೇದೆಯ ಚೂಪು ಚೂಪು ತುಟಿಗಳ ಮೇಲೆ ಗೆರೆಯೆಳೆದಂತ ಮೀಸೆ ನೋಡಿ ಇವರಿಗೆ ನಗು ಬಂದಿತ್ತು. ಕ್ರೌರ್ಯ ಇದ್ದದ್ದು ಪೇದೆಯಲ್ಲಿ ಅಲ್ಲ ಅವನು ಕಾಪಾಡುತ್ತಿದ್ದ ಅವನ ಮೇಲಿನವರಲ್ಲಿ. ಅದಕ್ಕೇ ಅವನನ್ನು ನೋಡಿದರೆ ನಗು ಮತ್ತು ಹೆದರಿಕೆ ಎರಡೂ ಆಗುತ್ತಿತ್ತು. + +ಕಾಲಿನಡಿಯ ನೆಲದ ನುಣುಪು ಅವರು ಹೆಜ್ಜೆಯನ್ನು ಬಲವಾಗಿ ಇಡುವಂತೆ ಮಾಡುತ್ತಿತ್ತು. ತಿರುಗಿ ನೋಡಿದರೆ ಹಿಂದೆ ಯಾರೂ ಇಲ್ಲ. ಮೂರೂ ಜನ ಹುಡುಗರು ಪಕ್ಕದಲ್ಲಿದ್ದಾರೆ. ಒಬ್ಬನ ಕೈ ಮಾತ್ರ ತಮ್ಮ ಬೆನ್ನಿಗಿದೆ. ಲಿಫ್ಟಿನಲ್ಲಿ ಮುಂದಕ್ಕೆ ಹೋಗಲು ಬಲವಾಗಿ ಒತ್ತಾಯಿಸುತ್ತಿದ್ದ ಕೈಯದು ಈಗ ನಾಜೂಕಾಗಿ ಸವರುತ್ತಿದೆ. ಆದರೆ ಸುತ್ತ ಕಂಪ್ಯೂಟರುಗಳಿರುವ ರೂಮಿನಲ್ಲಿ ನಿಂತಿದ್ದೇನೆ ಎಂದು ಗೊತ್ತಾಗಿ ಅತೀವ ಗೊಂದಲವಾಯಿತು. ತನ್ನ ಪುಟ್ಟ ಮನೆಯ ಬಾಗಿಲ ಪಕ್ಕದ ಕಿಟಕಿಯಲ್ಲಿ ಹೆಂಡತಿ ಹೊರಗೆ ನೋಡುತ್ತಾ ನಿಂತಿರುವುದು ಚಿತ್ರದಂತೆ ಕಂಡಿತು. ಅನ್ನ ಬಡಿಸಿಟ್ಟ ತಟ್ಟೆ ಕಂಡಿತು. ಮನೆಗೆ ಹೋಗಬೇಕು ಅನಿಸುತ್ತಿರುವುದು ಇಲ್ಲಿ ತಾನು ಬಂಧಿ ಎಂಬ ಭಾವದಿಂದಲೇ ಇರಬೇಕು ಅನಿಸಿತು. ಈ ಪುಟ್ಟ ಹುಡುಗರು ತನಗೇನು ಮಾಡಬಲ್ಲರು ಎಂದುಕೊಳ್ಳುವಾಗಲೇ ಅವರ ಸ್ವಚ್ಛ ನಗುಗಳ ನೆನಪು ಯಾಕೋ ಇವರನ್ನು ನಡುಗಿಸಿತು. ಅಂತಹ ಸ್ವಚ್ಛ ನಗು ಹೊಮ್ಮಿಸಲು ಅವರ ಮನಸ್ಸೂ ಅಷ್ಟೇ ಸ್ವಚ್ಛವಾಗಿರಬೇಕಲ್ಲವೆ. ಅದು ಸಾಧ್ಯವೆ? ಇಲ್ಲದಿದ್ದರೆ ಇದು ತೋರಿಕೆಯ ನಗುವಿರಬಹುದೇ? ಅಷ್ಟೊಂದು ಸ್ವಚ್ಛವಾಗಿ ತೋರಿಕೆಗಾಗಿ ನಗಲು ಸಾಧ್ಯವೆ? ಹೌದಾದರೆ ಈ ಪುಟ್ಟವರೆಷ್ಟು ಅಪಾಯಕಾರಿಗಳು. ಏನೇ ಆಗಲಿ ತನಗೆ ಇಲ್ಲೇನು ಕೆಲಸ ಎಂದು ಅವರತ್ತ ನೋಡಿದರು. ಚಿನಕುರಳಿಯಂತೆ ಓಡಾಡುವ, ಬಾಬ್ಕಟ್, ಪ್ಯಾಂಟು ಶರ್ಟಿನ ಹುಡುಗಿಯೊಬ್ಬಳು ಅಲ್ಲಿದ್ದ ಕಂಪ್ಯೂಟರ್ ಪರದೆ ಒಂದೊಂದಾಗಿ ಹೊತ್ತಿಸುತ್ತಿದ್ದಳು. ರೂಮಿನಲ್ಲಿ ಅಷ್ಟೇನೂ ಬೆಳಕಿರಲಿಲ್ಲ. ಸಂಜೆಗತ್ತಲಲ್ಲಿ ಮನೆಯ ಎದುರು ದೀಪ ಹೊತ್ತಿಸುವಂತೆ ಇವರಿಗೆ ಕಂಡಿತು. ಇವಳು ಎಲ್ಲಿಂದ ಬಂದಳು? ಯಾವಾಗ ಬಂದಳು? ಬೇಕಂತಲೇ ತನಗೆ ಮುಖ ತೋರಿಸುತ್ತಿಲ್ಲವಲ್ಲ ಎಂದು ಇವರಿಗೆ ಕಸಿವಿಸಿಯಾಯಿತು. ಏನೋ ಕೇಳಬೇಕೆಂಬಷ್ಟರಲ್ಲಿ ಮೊದಲು ಸಿಕ್ಕ ಹುಡುಗನೂ ಹೋಗಿ ಒಂದು ಕಂಪ್ಯೂಟರ್ ಮುಂದೆ ಕೂತ. ಕಾರು ಡ್ರೈವ್ ಮಾಡಿದವ ಮತ್ತು ಕಪ್ಪಗೆ ಕುಳ್ಳಗಿನವ ದೂರದಲ್ಲಿ ಪಿಸಿಪಿಸಿ ಮಾತಾಡುತ್ತಿದ್ದರು. ಆ ಕುಳ್ಳಹುಡುಗ ಇವರತ್ತ ನೋಡಿ ಹತ್ತಿರ ಬಂದು ಪಕ್ಕದಲ್ಲಿದ್ದ ಚೇರು ಸರಿಸಿ “ಕೂತ್ಕೊಳ್ಳಿ ಸಾರ್” ಎಂದು ಬಂದಷ್ಟೇ ವೇಗವಾಗಿ ವಾಪಸಾದ. ಅವರೆಲ್ಲಾ ಏನೋ ಕೇಳಲು ತಯಾರಿ ಮಾಡಿಕೊಳ್ಳುತ್ತಿರುವಂತಿತ್ತು. ಆ ಬಾಬ್ಕಟ್ ಹುಡುಗಿ ಕೂಡ ಕಂಪ್ಯೂಟರ್‍ ಮುಂದೆ ಇವರಿಗೆ ಬೆನ್ನು ಹಾಕಿ ಕೂತು ಏನೋ ವೇಗವಾಗಿ ಕುಟ್ಟುತ್ತಿದ್ದಳು. + +ಇವರೆಲ್ಲಾ ಎಷ್ಟು ಗಂಭೀರವಾಗಿ, ಎಷ್ಟು ನಿಚ್ಚಳ ಮನಸ್ಸಿನವರ ಹಾಗೆ ಕಾಣುತ್ತಾರಲ್ಲ ಎಂದು ಇವರಿಗೆ ಆಶ್ಚರ್ಯವಾಯಿತು. ಆ ವಯಸ್ಸೇ ಅಂಥಾದ್ದು. ಎಲ್ಲವೂ ಸ್ಪಷ್ಟ. ಗೊಂದಲ ಕಡಿಮೆ. ನಿಜವಾದ ಗೊಂದಲ ಹುಟ್ಟಲು, ತುಳಿದ ದಾರಿಯ ಬಗ್ಗೆ ಅನುಮಾನ ಬರಲು ಇನ್ನೊಂದೈದು ಹತ್ತು ವರ್ಷ ಹೋಗಬೇಕು ಅನಿಸಿ ತಟ್ಟನೆ ನಾಚಿಕೆಯೂ ಆಯಿತು. ತಾನೇನು ಇವರಿಗೆ ಶಾಪ ಹಾಕುವಂತೆ ಯೋಚಿಸುತ್ತಿದ್ದೇನೆ. ಬಹುಶಃ ಇವರಿಗೆ ಗೊಂದಲವೇ ಬರದಿರಬಹುದು. ಎಲ್ಲವೂ ಕೊನೆಯವರೆಗೂ ಸ್ಪಷ್ಟವಾಗಿಯೇ ಉಳಿಯಬಹುದು. ಹೀಗೆಲ್ಲಾ ಅನಿಸುತ್ತಿರುವಾಗ “ಯಾರಿಗೆ ಗೊತ್ತು?” ಎಂದು ಮಾತ್ರ ಜೋರಾಗಿ ಹೇಳಿದರೆಂದು ಕಾಣುತ್ತದೆ. ಮೂಲೆಯಲ್ಲಿದ್ದ ಹುಡುಗರ ಜತೆಗೆ ಮೊದಲು ಸಿಕ್ಕವ ಮತ್ತು ಹುಡುಗಿ ಇವರತ್ತ ಒಟ್ಟಿಗೇ ತಿರುಗಿದರು. ಮೂಲೆಯ ಹುಡುಗರು ಹತ್ತಿರ ಬಂದು “ಏನಿಲ್ಲ ಸರ್. ನಿಮ್ಮ ಪದ್ಯಗಳನ್ನೆಲ್ಲಾ ಕಂಪ್ಯೂಟರೈಸ್ ಮಾಡೋಣ ಅಂತ ಯೋಚನೆ. ಅದಕ್ಕೆ ನಿಮ್ಮ ಅನುಮತಿ ಬೇಕು” ಅಂದು ಇವರನ್ನೇ ನೋಡುತ್ತಾ ನಿಂತರು. ಹಾಗೆ ಮಾಡಿದರೆ ಏನಾಗತ್ತೆ ಎಂದು ಕೇಳಬೇಕು ಅಂತ ಅಂದುಕೊಳ್ಳುವಾಗಲೇ ಆ ಹುಡುಗಿ “ಆವಾಗ ಇಂಟರ್ನೆಟ್ಟಿನಲ್ಲಿ ಎಲ್ಲರೂ ನಿಮ್ಮ ಪದ್ಯ ಓದಬಹುದು ಸರ್” ಎಂದಳು. ಅವಳ ಮುಖವನ್ನೇ ನೋಡಿದರು. ಆ ಮುಖದಲ್ಲಿನ ದಿಟ್ಟತನಕ್ಕೇ ಇವರು ಮಾರು ಹೋದರು. “ನೀನು ನನ್ನ ಪ್ರೇಯಸಿಯಾಗುತ್ತೀಯ?” ಎಂದು ಕೇಳಬೇಕು ಎಂಬ ತುಂಟ ಯೋಚನೆ ತಲೆಯಲ್ಲಿ ಮೂಡಿ ತುಟಿಯಲ್ಲಿ ಅಷ್ಟೇ ತುಂಟ ನಗುವೊಂದನ್ನು ಮಿಂಚಿಸಿತು. ಎಷ್ಟು ಚಿಕ್ಕವಳು ಇವಳು, ನನ್ನ ಪ್ರೇಯಸಿ ಹೇಗಾದಾಳು. ಈ ಹುಡುಗರಲ್ಲೇ ಇವಳಿಗೆ ಯಾರ ಮೇಲೋ ಮನಸ್ಸಿರಬಹುದು. ಯಾರು ಇವಳಿಗೆ ಸರಿಹೋಗುತ್ತಾರೆ ಎಂದು ಮೂರೂ ಹುಡುಗರನ್ನು ನೋಡಿದರು. ಮೊದಲು ಸಿಕ್ಕ ಹುಡುಗ ಇವರ ನಗು ಗಮನಿಸಿ “ಏನೋ ಹುಚ್ಚು ವಿಚಾರ ಅಂತ ನಗಬೇಡಿ ಸರ್. ತುಂಬಾ ಜನ ಕವಿಗಳ ಪದ್ಯಗಳನ್ನು ಈಗಾಗಲೇ ಕಂಪ್ಯೂಟರೈಸ್ ಮಾಡಿಬಿಟ್ಟಿದ್ದೀವಿ. ನೀವು ಕೈಗೇ ಸಿಗದೆ ಕಷ್ಟ ಆಗಿತ್ತು.” ಎಂದು ಏನೋ ಒತ್ತಾಯಿಸುವವನ ಧಾಟಿಯಲ್ಲಿ ಹೇಳಿದ. ಇವರ ತಲೆಯಲ್ಲಿ ಮೂಡಿದ ಹುಚ್ಚು ವಿಚಾರವನ್ನು ಹೇಳುವ ಧೈರ್ಯ ಎಂದಿನಂತೆ ಇರಲಿಲ್ಲ. ಆ ಹುಡುಗಿಗೆ ಏನಾದರೂ ಅರ್ಥವಾಯಿತ ಎಂದು ಅನುಮಾನವಾಯಿತು. ಯಾಕೆಂದರೆ ಅವಳ ಮುಖ ಕೊಂಚವೇ ರಂಗೇರಿ ತಲೆ ಕೆಳಗೆ ಹಾಕಿದಳು. ಕೂಡಲೇ ಸಾವರಿಸಿಕೊಂಡು ತಲೆಯೆತ್ತಿ ಇವರನ್ನೇ ಕಣ್ಣಲ್ಲಿ ಕಣ್ಣಿಟ್ಟು ನೋಡಿದಳು. ಈಗ ನಾಚಿ ತಲೆ ತಗ್ಗಿಸುವ ಸರದಿ ಇವರದಾಯಿತು. + +ಅಷ್ಟರಲ್ಲಿ ಕುಳ್ಳುಹುಡುಗ ಹತ್ತಿರ ಬಂದ. “ಒಂದು ದೊಡ್ಡ ಕಂಪನಿ ನಮ್ಮನ್ನ ಈ ಕೆಲಸಕ್ಕೆ ಹಚ್ಚಿದೆ. ನಿಮಗೆ ಇಲ್ಲೀ ತನಕ ಯಾರೂ ಕೊಟ್ಟಿರದಷ್ಟು ದುಡ್ಡು ಕೊಡತೀವಿ. ಸಾಲಿಗಿಷ್ಟು ಅಂತ ಬೇಕೋ, ಪದ್ಯಕ್ಕೆ ಇಷ್ಟೂ ಅಂತ ಬೇಕೋ, ಪೇಜಿಗೆ ಇಷ್ಟೂ ಅಂತ ಬೇಕೋ ನೀವೇ ಹೇಳಿ. ಅಥವಾ ಒಟ್ಟಾರೆ ಇಷ್ಟೂ ಅಂತ ಕೊಟ್ಟುಬಿಡಿ ಅಂದರೆ ಅದೂ ಸರಿ. ಏನು ಬೇಕಾದರೂ ಡೀಲ್ ಮಾಡಬಹುದು. ಆದರೆ ಈವತ್ತು ನಿಮ್ಮ ಪದ್ಯದ ಕೆಲಸ ಶುರು ಮಾಡಲೇಬೇಕು.” ಅಂದ. ಅವನ ಮಾತಲ್ಲೇನೂ ನೇರವಾಗಿ ಕಠಿಣತೆ ಇಲ್ಲದಿದ್ದರೂ ಅವನು ಹೇಳ್ತಿರೋದನ್ನ ಅರಗಿಸಿಕೊಳ್ಳೋದು ಇವರಿಗೆ ಕಠಿಣವೇ ಆಯ್ತು. ಇವರು ಬರೆದಿರುವುದೇ ಕಡಿಮೆ. ಆದರೆ ಬರೆದದನ್ನ ಕನ್ನಡ ಸಾಹಿತ್ಯದಲ್ಲಿ ಮೈಲಿಗಲ್ಲು ಅಂತ ಕರೆದಿದ್ದಾರೆ. ಅದರ ಬಗ್ಗೆ ಇವರಿಗೆ ಹೆಮ್ಮೆನೂ ಇದೆ. ಜತೆಗೆ ಅನುಮಾನಾನೂ ಇದೆ. ತನ್ನ ಪದ್ಯಾನ ತನ್ನದೂ ಅಂತ ಹೇಳಿಕೊಳ್ಳೋದೇ ಕಷ್ಟ ಆಗಿರೋವಾಗ. ಯಾರದೋ ಸಾಲು ನನ್ನ ತಲೇನಲ್ಲಿ ಇನ್ನೇನೋ ಆಗುವಾಗ. ಯಾರದೋ ಬದುಕಿನ ವಿವರ ನನಗೆ ಸಾಮಗ್ರಿಯಾಗಿರುವಾಗ. ಯಾರದೋ ನಗು, ಯಾರದೋ ಅಳು. ಎಲ್ಲ ತುಂಬಿರೋ ಪದ್ಯ ಮಾತ್ರ ನನ್ನದು ಅನ್ನೋದು ಹೇಗೆ. ಇವೆಲ್ಲಾ ಬಲೇ ಗೋಜಲು. ವಯಸ್ಸು ಆದ ಹಾಗೆ ಈ ಗೋಜಲೆಲ್ಲಾ ಕಡಿಮೆಯಾಗತ್ತೆ ಅನ್ನೋದು ಮಹಾ ಬೂಟಾಟಿಕೆ. “ಥತ್ ಇನ್ನು ಮೇಲಾದರೂ ನಾನೇನೂ ಬರದೇ ಇಲ್ಲ ಅಂದುಬಿಡಬೇಕು” ಅಂತ ಹತ್ತಾರು ಸಲ ಈ ಮುಂಚೇನೆ ಹೇಳಿಕೊಂಡಿದ್ದಾರೆ. ಅದಕ್ಕೂ ಧೈರ್ಯ ಬೇಕಲ್ಲ. + +ಇವರು ತಮ್ಮ ಬಗ್ಗೆ ಅನುಮಾನಪಡುತ್ತಿದ್ದಾರೆ ಅಂತ ಡ್ರೈವ್ ಮಾಡಿದ ಹುಡುಗನಿಗೆ ಅನಿಸಿರಬೇಕು. ಹತ್ತಿರ ಬಂದು ಕೂತ. ಅವರ ಕೈಹಿಡಿದು “ಸಾರ್, ನಿಮಗಿಂತ ನಾನು ತುಂಬಾ ಚಿಕ್ಕವನು. ನೀವು ಹಿರಿಯರು, ಅನುಭವಸ್ತರು. ನಿಮಗೆ ನಾನು ಏನು ಹೇಳೋದಿದೆ. ಆದರೂ ಹೇಳ್ತಿದೀನಿ. ಯಾಕೆ ಅಂದರೆ, ಇದು ಈ ಕಾಲದ ಸಮಾಚಾರ ಅದಕ್ಕೆ. ನಿಮ್ಮ ಕಾಲವೇ ಬೇರೆ, ನಮ್ಮ ಕಾಲವೇ ಬೇರೆ”. ಇವರಿಗೆ ಅವನ ಕಪಾಳಕ್ಕೆ ಒಂದು ಬಾರಿಸದರೆ ಹ್ಯಾಗೆ ಅನಿಸಿತು. ಆಡದ ಮಾತು, ಮಾಡದ ಕೆಲಸ ಯಾರಿಗೆ ಗೊತ್ತಾಗಬೇಕು. ಹುಡುಗ ಮುಂದುವರಿಸಿದ “ನೋಡಿ ಸಾರ್. ನಾವು ಇದನ್ನೆಲ್ಲಾ ಮಾಡ್ತಾ ಇರೋದು ಕನ್ನಡದ ಮೇಲಿನ ಪ್ರೀತಿಯಿಂದ. ನಮ್ಮ ಭಾಷೆ, ಸಾಹಿತ್ಯದ ಮೇಲಿನ ಮಮತೆಯಿಂದ. ಬೇರೆ ಏನಾದರೂ ಕೆಲಸದಲ್ಲಿ ಇಷ್ಟೇ ಆಸ್ಥೆ ವಹಿಸಿದರೆ ಇಷ್ಟೊತ್ತಿಗೆ ನಾವು ಕೋಟ್ಯಾಂತರ ಮಾಡಬಹುದಾಗಿತ್ತು. ಅವಕಾಶಗಳು ಇದ್ದಾಗಲೂ…” ಅವನ ಕಿವಿಯನ್ನು ಜೋರಾಗಿ ಹಿಂಡಿ ಅಲ್ಲಿಂದ ಎದ್ದು ಹೋಗಿಬಿಡೋಣ ಅನಿಸಿತು. ಆದರೆ ಮಾಡಲಿಲ್ಲ. ಯಾಕೆಂದು ಅವರಿಗೇ ಗೊತ್ತಿಲ್ಲ. ಯಾತಕ್ಕಾಗಿ ನಾನಿಲ್ಲಿ ಕೂತಿದ್ದೀನಿ ಅಂತ ಕೇಳಿಕೊಂಡರು. ನಿಮಗಿರೋ ಅಷ್ಟು ದಿಟ್ಟತೆ ನನಗಿಲ್ಲ ಕಣ್ರೋ. ಆದರೆ ಅದು ಮುಖ್ಯ ಅಲ್ಲ. ಹಾಗಂತ ನನ್ನ ಪದ್ಯಾನೂ ಮುಖ್ಯ ಅಲ್ಲ. ಅಂತೆಲ್ಲಾ ಉದ್ದಕ್ಕೆ ಹೇಳಬೇಕು ಅಂತ ಉಸಿರೆಳೆದುಕೊಂಡರು. ಆದರೆ ಅಷ್ಟರಲ್ಲಿ ಆ ಹುಡುಗನನ್ನು ಪಕ್ಕಕ್ಕೆ ಸರಿಸಿ, ಬಾಬ್ಕಟ್ ಹುಡುಗಿ ಬಂದು ಪಕ್ಕದಲ್ಲೇ ಕೂತಳು. ಮಲ್ಲಿಗೆಯ ಪರಿಮಳ ತಟ್ಟನೆ ಮೂಗಿಗೆ ಅಡರಿತು. ಹುಡುಗಿ ಮಲ್ಲಿಗೆ ಮುಡಿದಿಲ್ಲ. ಆದರೂ ಪರಿಮಳ! ಎಲ್ಲಿಯದು? ಇದು ಬರೀ ತನ್ನ ತಲೆಯಲ್ಲೋ? ಹುಡುಗಿ ಹಚ್ಚಿಕೊಂಡ ಪರ್ಫ್ಯೂಮ್ ಇಷ್ಟೆಲ್ಲಾ ತಲೆ ಕೆಡಿಸುವ ವಯಸ್ಸಲ್ಲ ಇವರದು. ಆದರೆ ನೆನಪಿಗೆ, ನೆನಪು ಹುಟ್ಟಿಸುವ ಮೈ ಶಾಖಕ್ಕೆ ಎಲ್ಲಿಯ ವಯಸ್ಸು? + +ಆ ಹುಡುಗಿ “ಅಂಕಲ್, ನೀವು ನಮ್ಮ ತಂದೆಯ ತಂದೆ ವಯಸ್ಸಿನವರು. ಆದರೆ ಅವರಿಗಿಂತ ಹೆಚ್ಚು ಪ್ರತಿಭಾವಂತರು. ನಿಮ್ಮ ಪದ್ಯಗಳು ಮುಂದಿನ ತಲೆಮಾರಿಗೆ ಸಿಕ್ಕದೆ ಕಳೆದು ಹೋದರೆ ತುಂಬಾ ನಷ್ಟ ತಾನೆ? ಮುಂದಿನ ಪೀಳಿಗೆಯವರಿಗೆ ನಮ್ಮ ಆಸ್ತಿಯಾದ ನಿಮ್ಮ ಪದ್ಯಗಳನ್ನು ಉಳಿಸಬೇಕಂತ ನಾವು ಇಷ್ಟೆಲ್ಲಾ ಪರದಾಡತಾ ಇರೋದು. ಯಾಕೆಂದರೆ, ನಿಮ್ಮ ಕಾಲದ ನಂತರ…” ಆ ಮಾತು ಕೇಳಿದ್ದೇ ಇವರಿಗೆ ತಟ್ಟನೆ ಕೋಪ ಉಕ್ಕಿಬಂತು. ಅವಳ ಕಪಾಳಕ್ಕೆ ಒಂದು ಹೊಡೆದೇ ಬಿಟ್ಟರು. ಕುರ್ಚಿಯಿಂದ ಬೀಳುವಂತಾದ ಅವಳನ್ನು ಹಿಡಿಯಲು ಉಳಿದ ಹುಡುಗರು ಸಹಾಯಕ್ಕೆ ನುಗ್ಗಿದರು. ಮೊದಲು ಕಾರಿಗೆ ಹತ್ತಿಸಿದ ಹುಡುಗ “ನಿಮ್ಮನ್ನ ಏನೋ ಅನ್ಕೊಂಡಿದ್ವಿ ಸಾರ್! ಹುಡುಗಿ ಮೇಲೆ ಕೈಮಾಡೋ ಅಷ್ಟು ನೀಚರು ಅಂತ ಗೊತ್ತಿರಲಿಲ್ಲ” ಎಂದು ಹೇಳುವಾಗ ಉಳಿದಿಬ್ಬರು ಅವಳನ್ನು ಹೊರಗೆ ಕರಕೊಂಡು ಹೋದರು. ಏನೇನೋ ಬಡಬಡಿಸಿ ಈ ಹುಡುಗನೂ ಅವರ ಹಿಂದ ಧಡಾರನೆ ಬಾಗಿಲು ಹಾಕಿಕೊಂಡು ಹೋದ. ಇವರೊಬ್ಬರೇ ರೂಮಿನಲ್ಲಿ. ಮೆಲ್ಲನೆ ಬಾಗಿಲತ್ತ ಹೋಗಿ ತೆರೆಯಲು ನೋಡಿದರು. ಆಗಲಿಲ್ಲ. “ತಪ್ಪಾಯಿತು” ಎಂದು ಪಿಸುಗುಡುವಂತೆ ಹೇಳಿದರು. ಅದು ಹೇಗೆ ಅಷ್ಟು ಸುಲಭವಾಗಿ ಹುಡುಗಿಯ ಮೇಲೆ ಕೈಯೆತ್ತಿಬಿಟ್ಟೆ ಎಂದು ನಾಚಿಕೆಯಾಯಿತು. ಹುಡುಗರ ಮುಂದೆ ಕುನ್ನಿಯಂತೆ ಇದ್ದವನಿಗೆ ಆ ಹುಡುಗಿಯ ಮುಂದೆ ಮಾತ್ರ ಹೇಗೆ ಧೈರ್ಯವಾಯಿತು. ಇದೆಂತ ಗಂಡಸುತನ ತನ್ನದು ಅಂತೆಲ್ಲಾ ಪೇಚಾಡಿಕೊಂಡು ಬಾಗಿಲಿಗೆ ಒರಗಿ ನಿಂತರು. ಹೊರಗೆ ಅತ್ತಿತ್ತ ಓಡಾಡುವ ಬೂಟಿನ, ಚಪ್ಪಲಿಯ ಸಪ್ಪಳಕ್ಕೆ ಕಿವಿಗೊಟ್ಟರು. ಸುಸ್ತಾದರೂ ಯಾಕೋ ತಾವು ಬಂಧಿ ಅನ್ನುವ ವಿಚಾರ ಹೆದರಿಸುವ ಬದಲು ಒಳಗಿಂದಲೇ ಶಕ್ತಿ ಕೊಡಲು ಶುರ ಮಾಡಿತು. + +ಬಾಗಿಲು ಎಷ್ಟು ಜಗ್ಗಿದರೂ ತೆರೆಯದಾಗ, “ಯಾರಾದರೂ ಇದ್ದೀರ?” ಎಂದು ಕೂಗಿದಾಗಲೂ ಯಾರೂ ಓಗೊಡದಾಗ ತಮ್ಮ ಬಂಧನ ಖಾತ್ರಿಯಾಯಿತು. ಅಂದರೆ ಇನ್ನು ಉಳಿದಿರುವುದು ಇಲ್ಲಿಂದ ತಪ್ಪಿಸಿಕೊಳ್ಳುವ ಬಗೆಯನ್ನು ಹುಡುಕುವುದು. ಎಲ್ಲಾ ಬಂಧನದ ಕತೆಗಳಲ್ಲೂ ಹೀಗೇ ಅಲ್ಲವೆ ಆಗೋದು. ಪದ್ಯಗಳಲ್ಲಿ ಮಾತ್ರ, ಬಂಧನ ಮತ್ತು ವಿಮೋಚನೆ ಒಂದಾದ ಮೇಲೆ ಒಂದು ಬರುವುದಿಲ್ಲ. ಅಥವಾ ಬಂಧನದ ನಂತರ ವಿಮೋಚನೆಯೂ ಇಲ್ಲ. ಎರಡೂ ಒಟ್ಟಿಗೆ ಅಥವಾ ವಿಮೋಚನೆಯ ನಂತರದ ಬಂಧನ. ಹೀಗೇ ಕಿಂಚಿತ್ತೂ ಲಾಭವಿಲ್ಲದ ವಿಷಯಗಳನ್ನೇ ಯೋಚಿಸುತ್ತಾ ಹೊರಗೆ ಏನೂ ಕಾಣದ ಕಿಟಕಿಯ ಬಳಿ ಸುಮಾರು ಹೊತ್ತು ನಿಂತಿದ್ದರು. ಯಾರೋ ಬೆನ್ನು ತಟ್ಟಿದರು. ತಿರುಗಿ ನೋಡಿದರೆ. ತಮ್ಮನ್ನು ಕೂಡಿಹಾಕಿದ ನಾಲ್ಕೂ ಜನ ನಿಂತಿದ್ದರು. ಏನೂ ಆಗದವರಂತೆ ಇವರನ್ನೇ ನೋಡುತ್ತಿದ್ದಾರೆ. ಆ ಹುಡುಗಿಯೂ ಕೂಡ! ಇವರು ಅಗಲವಾಗಿ ನಕ್ಕರು. ಅಲ್ಲಿಂದ ತಪ್ಪಿಸಿಕೊಳ್ಳಲು ಇರುವುದು ಅದೊಂದೇ ದಾರಿ ಎಂಬುದು ಅವರ ತಲೆಯಲ್ಲಿ ಹೊಕ್ಕಿರುವಂತಿತ್ತು. ಆದರೆ, ಹುಡುಗರೂ ನಗುತ್ತಾ ಹತ್ತಿರ ಬಂದು ಒಂದು ಟೇಬಲ್ಲಿನ ಎದುರು ಕೂಡಿಸಿದರು. ಏನೋ ಎಲ್ಲಾ ನಿರ್ಧಾರವಾಗಿ ಹೋಗಿದೆ ಅನ್ನುವಂತೆ ಇವರೂ ಮತ್ತು ಆ ಹುಡುಗರೂ ಒಪ್ಪಿಕೊಂಡಂತೆ ಇತ್ತು. ಇದು ಹೇಗಾಯಿತು ಎಂದು ಯಾರೂ ಪ್ರಶ್ನಿಸುವ ಯೋಚನೆ ಮಾಡಲಿಲ್ಲ. ಇವರು ನಿರಾಳದಿಂದ ತಮ್ಮ ಮುಂದಿನ ನುಣುಪಾದ ಟೇಬಲ್ಲಿನ ಮೇಲೆ ಕೈ ಚಾಚಿ ಅಗಲಕ್ಕೂ ಸವರಿದರು. ತುಂಬಾ ಸುಖವಾಯಿತು. ಆದರೆ ತಮ್ಮ ಸುಖವನ್ನು ಜೋರಾಗಿ ಜಗತ್ತಿಗೆ ಸಾರುವಂತೆ ಕೈ ಸವರಿದ ಸದ್ದು ಹತ್ತುಪಟ್ಟಾಗಿ ಕೇಳಿತು. ತಮಗೆ ಹೀಗೇಕೆ ಆಗುತ್ತಿದೆ ಎಂದುಕೊಳ್ಳುವಷ್ಟರಲ್ಲಿ “ಸಾರ್ ಹುಷಾರು” ಅನ್ನುತ್ತಾ ಅವರ ಎದುರಿದ್ದ ಮೈಕನ್ನು ಕಾರು ಹತ್ತಿಸಿದ ಹುಡುಗ ಸ್ವಲ್ಪ ಹಿಂದಕ್ಕಿಟ್ಟ. + +ಕಿವಿಗೆ ದೊಡ್ಡ ಹೆಡ್‌ಪೋನ್ ಹಾಕಿಕೊಂಡು ಪಕ್ಕದಲ್ಲೇ ಇದ್ದ ಕಂಪ್ಯೂಟರ್ ಮುಂದೆ ಕೂತಿದ್ದ ಹುಡುಗಿ ಎಲ್ಲರಿಗೂ ಸುಮ್ಮನಿರುವಂತೆ ಬಾಯಿಗೆ ಬೆಟ್ಟಿಟ್ಟು, ಕಂಪ್ಯೂಟರ್ ಕೀ ಒತ್ತಿ ನಂತರ ತಂಬ್ಸ್ ಅಪ್ ಮಾಡಿದಳು. ಎಲ್ಲರೂ ಇವರತ್ತ ನೋಡಿದರು. ಇವರಿಗೆ ಏನು ಮಾಡಬೇಕೆಂದು ಯಾರೂ ಹೇಳೇ ಇರಲಿಲ್ಲ. ಕುಳ್ಳುಹುಡುಗ ಮೈಕ್ ತೋರಿಸಿ ಅದರಲ್ಲಿ ಹೇಳಿ ಅನ್ನುವಂತೆ ಸನ್ನೆ ಮಾಡಿದ. ಇವರು ಮೈಕಿನತ್ತ ನೋಡಿದರು. ಜೋರಾಗಿ ಗಂಟಲು ಸರಿ ಮಾಡಿಕೊಂಡರು. ಹುಡುಗಿ ಒಮ್ಮೆ ಮುಖ ಕಿವುಚಿದಳು. ಎಲ್ಲರೂ ಅವಳತ್ತ ನೋಡಿ ಸಣ್ಣಗೆ ನಕ್ಕರು. ಇವರು ತಮಗೆ ಏನು ಮಾಡಬೇಕು ಏನು ಹೇಳಬೇಕು ಎಂದು ಗೊತ್ತಿದೆ ಅನ್ನುವಂತೆ ಸ್ವಲ್ಪ ಮುಂದಕ್ಕೆ ಬಾಗಿ ಮೈಕಿಗೆ ಹತ್ತಿರವಾದರು. ಇವರ ತಲೆಯಲ್ಲಿ ಹತ್ತು ಹಲವಾರು ವಿಚಾರಗಳು ಹಾದು ಹೋದಂತಿತ್ತು. ಯಾವುದೂ ಮಾತಾಗಲು ಒಪ್ಪುತ್ತಿಲ್ಲವೆನ್ನುವಂತಿತ್ತು. ಪದ್ಯ, ಬದುಕು, ಪ್ರೇಯಸಿ, ಶಾಲೆಯ ಶಂಕರ. ಅವನ ಒರಟು ಕೈ, ಗೇಟಾಚೆ ನಿಂತ ಅವನ ಅಮ್ಮ, ಎಮರ್ಜನ್ಸಿಯ ಪೇದೆಯ ಮೀಸೆ, ಕಿಟಕಿಯೆದುರು ನಿಂತ ಹೆಂಡತಿ, ಆಕೆಯಿಟ್ಟ ಊಟದ ತಟ್ಟೆ ಯಾವುದೂ ಮಾತಿನಲ್ಲಿ ಘನವಾಗುತ್ತಿಲ್ಲ ಎಂದು ಆತಂಕಗೊಂಡಂತಿತ್ತು. ಹೇಗೆ ಇದನ್ನೆಲ್ಲಾ ಹೇಳೋದು? ಹೇಳಿದರೂ ಈ ಹುಡುಗರಿಗೆ ಅದು ಮುಖ್ಯ ಅನಿಸಲು ಹೇಗೆ ಸಾಧ್ಯ? ಆ ಹುಡುಗರಿಗೆ ಕನ್ನಡ ಭಾಷೆ ಮತ್ತು ಸಾಹಿತ್ಯ ಮುಖ್ಯವಂತೆ. ಅದನ್ನು ಮುಂದಿನ ತಲೆಮಾರಿಗೆ ತಲುಪಿಸುವುದು ಮುಖ್ಯವಂತೆ. ಇವರಿಗೋ ತಮ್ಮ ಬದುಕನ್ನು ಒಂದು ಹನಿಯೂ ಬಿಡದ ಹಾಗೆ ಹೀರುವುದು, ಹೀರುವಾಗಿನ ಆನಂದವನ್ನು ಹೇಳುವುದು, ಅಷ್ಟೆ. ನಾವೆಲ್ಲಾ ಒಂದೇ ರೂಮಿನಲ್ಲಿದ್ದರೂ ಇವೆಲ್ಲಾ ಅಜಗಜಾಂತರವಾಯಿತಲ್ಲ ಎಂದು ಸುಮ್ಮನೆ ಕಣ್ಣುಮುಚ್ಚಿ ಕೂತರು. ಇವರು ಗಹನವಾದ್ದು ಹೇಳಲು ಶುರುಮಾಡುತ್ತಾರೆ ಎಂದು ಆ ಹುಡುಗರು ಕಾದೇ ಕಾದರು. ಗಂಟೆಗಳೇ ಕಳೆದಿರಬಹುದು. ಒಬ್ಬರನ್ನೊಬ್ಬರು ನೋಡಿಕೊಂಡರು. ಅಸಹನೆ ಮೆಲ್ಲನೆ ತೆವಳುತ್ತಾ ಬಂದು ಎಲ್ಲರ ಕಾಲು ನೆಕ್ಕುತ್ತಿತ್ತು. ಎಷ್ಟು ಓಡಿಸಿದರೂ ದೂರ ಹೋಗುತ್ತಿಲ್ಲ. ಕಾಲಿನ ಮೂಲಕ ಮೈಯೆಲ್ಲಾ ಸೇರಿಕೊಂಡಿತು. ಬಾಬ್ಕಟ್ ಹುಡುಗಿ ನಿಟ್ಟುಸಿರುಬಿಟ್ಟು ಕಂಪ್ಯೂಟರ್ ಮೇಲೆ ಫಟ್ ಎಂದು ಕುಟ್ಟಿ “ರೆಡಿಯಾದಾಗ ಹೇಳಿ, ರೆಕಾರ್ಡ್ ಸ್ಟಾರ್ಟ್ ಮಾಡ್ತೀನಿ” ಎಂದು ತಲೆಕೆಳಗೆ ಹಾಕಿದಳು. ಇವರು ಬೆಚ್ಚಿ ಕಣ್ಣುಬಿಟ್ಟರು. + +ಡ್ರೈವ್ ಮಾಡಿದ ಹುಡುಗ “ಯಾಕೆ ಸಾರ್ ಸುಮ್ಮನಾದರಿ? ನಿಮಗೆ ತುಂಬಾ ಇಷ್ಟವಾದ ನಿಮ್ಮ ಪದ್ಯ ಒಂದು ಹೇಳಿಬಿಡಿ. ನಾವು ಮಾಡ್ತಿರೋ ವೆಬ್‌ಸೈಟಿಗೆ ನಿಮ್ಮದೇ ರೆಕಾರ್ಡಿಂಗ್ ಹಾಕಬೇಕು. ನಿಮ್ಮ ಕಾಲದ ನಂತರ…” ಹೇಳಬಾರದನ್ನು ಹೇಳಿದವನಂತೆ ತುಟ್ಟಿ ಕಚ್ಚಿ ಸುಮ್ಮನಾದ. ಅವನ ಮಾತನ್ನು ಮರೆಸುವಂತೆ ಕುಳ್ಳು ಹುಡುಗ “ಎಷ್ಟೋ ಜನಕ್ಕೆ ನಿಮ್ಮ ಧ್ವನಿಯಲ್ಲೇ ನಿಮ್ಮ ಪದ್ಯ ಕೇಳೋ ಆಸೆ ಇರತ್ತಲ್ಲ ಅದಕ್ಕೆ. ಯಾವುದಾದರೂ ಪರವಾಗಿಲ್ಲ. ಚಿಕ್ಕದಾದರೆ ಒಳ್ಳೇದು. ದೊಡ್ಡ ಪದ್ಯ ಇಂಟರ್ನೆಟ್‌ನಲ್ಲಿ ಕೇಳೋಕೆ ಕಷ್ಟ ಆಗಬಹುದು…” ನನಗೆ ಇಷ್ಟವಾದ್ದು ದೊಡ್ಡದಾಗಿದ್ದರೆ? ಎಂದು ಕೀಟಲೆ ಮಾಡಬೇಕು ಅನಿಸಿಯೂ ಸುಮ್ಮನಾದರು. ಯಾಕೆಂದರೆ ಅವರ ಆತಂಕ ಬೇರೇನೇ ಆಗಿತ್ತು. ತನ್ನ ಪದ್ಯಗಳಲ್ಲಿ ತನಗೆ ಇಷ್ಟವಾದ್ದು ಯಾವುದು ಎಂದು ಅವರು ಯೋಚಿಸಿಯೇ ಇರಲಿಲ್ಲ. ಯಾವುದೋ ಒಂದನ್ನು ಆರಿಸಿಕೊಳ್ಳೋಣ ಅಂದರೆ ಯಾವುದೂ ನೆನಪಿಗೆ ಬರುತ್ತಿಲ್ಲ. ಇದೆಂತಾ ಗೋಳು ಅಂತ ಗೊಣಗಿಕೊಂಡರು. ಯಾಕೆ ಒಂದು ಸಾಲೂ ನೆನಪಿಗೆ ಬರುತ್ತಿಲ್ಲ? ತನ್ನ ಪದ್ಯಗಳ ಬಗ್ಗೆ ಪುಟಗಟ್ಟಲೆ ಬರೆದಿದ್ದಾರಲ್ಲ, ನನಗೆ ಒಂದು ಸಾಲೂ ನೆನಪಾಗ್ತಿಲ್ಲವಲ್ಲ ಎಂದು ಪೇಚಾಟವಾಯಿತು. ಕಿವಿಯಿಂದ ಹೆಡ್‌ಫೋನ್ ತೆಗೆದ ಹುಡುಗಿಯ ಮುಖವನ್ನು ನೋಡಿದರು. ಅವಳು ಮುಜುಗರದಿಂದ ಕಂಪ್ಯೂಟರಿಗೆ ಮುಖ ತಿರುಗಿಸಿ ಏನೋ ಮಾಡಲು ತೊಡಗಿದಳು. ತಾವು ಬರೆದ ಒಂದು ಪದ್ಯ ನೆನಪಾಯಿತು. ಇಂಥದೇ ಹುಡುಗಿಯ ಸೊಂಟ ತೊಡೆ ಮೊಲೆಗಳ ಬಗ್ಗೆ ಬರೆದಿದ್ದೆನಲ್ಲ. ಒಂದು ಚೂರೂ ಅಶ್ಲೀಲವಾಗದ ಹಾಗೆ… ಎಂದು ನೆನಪಿಸಿಕೊಳ್ಳಲು ಕಷ್ಟಪಟ್ಟರು. ಅದನ್ನು ಮನುಷ್ಯನ ಆಂತರಿಕ ಹೊಯ್ದಾಟದ ಅಭೂತಪೂರ್ವ ಚಿತ್ರಣ ಅಂತ ಯಾರೋ ಹೊಗಳಿದ್ದರು. ಅಲ್ಲ ಕಣ್ರೋ! ನನ್ನ ಪ್ರೇಯಸಿಯನ್ನು ಹತ್ತಿರದಿಂದ ನೋಡುವ ಆಸೆಯನ್ನು ತೋಡಿಕೊಂಡಿದ್ದೆ. ಹೌದು ಅದು ನಿಜವಾಗಿಯೂ ನನ್ನ ಕಾಮದ ಅನುಭವ ಆಗಿತ್ತು ಮತ್ತು ಆಸೆಗಳ ಬಗ್ಗೆ ಆಗಿತ್ತು. ಹೌದು ಅಶ್ಲೀಲವಾಗಿಯೇ ಬರೀಬೇಕಿತ್ತು. ಆವಾಗ ಯಾರೂ ಅದನ್ನ ಇಲ್ಲದ ವ್ಯಾಖ್ಯಾನ ಮಾಡಿ ವಿವರಿಸೋಕೆ ಆಗ್ತಾ ಇರಲಿಲ್ಲ. ಆದರೆ, ಹಾಗೆ ಬರೆಯೋದಕ್ಕೆ ನನಗೆ ಎದೆಗಾರಿಕೆ ಇತ್ತ? ಈಗಲಾದರೂ ಅದನ್ನ ಹೇಳ್ತೀನಿ. ನೋಡೋಣ ಏನಗತ್ತೆ ಅಂತ. ಅವಳ ಮೈಯುದ್ದಕ್ಕೂ ನನ್ನ ಕೈಯನ್ನು ಹರಿದಾಡಿಸುವ ಸಾಲುಗಳು ಯಾವುದದು? ಬಹುಶಃ ಅದೇ ನನ್ನ ಇಷ್ಟವಾದ್ದು ಇರಬೇಕು. ಅದಕ್ಕೇ ನೆನಪಾಗುತ್ತಿದೆ. ಆದರೆ ಸಾಲುಗಳು ನೆನಪಾಗ್ತಾ ಇಲ್ಲ. ಮೊದಲ ಪದ ನೆನಪಾದರೆ, ಸಾಲು ನೆನಪಾಗಬಹುದು. ಮೊದಲ ಪದವಿರಲಿ ಆ ಪದ್ಯದ ಹೆಸರೇನು? ಏನೇನೋ ಹೆಸರು ಯೋಚಿಸಿ ಕಡೆಗೆ ತಾನಿಟ್ಟ ಹೆಸರು ಯಾವುದು? ಪ್ರೇಯಸಿಯ ಕೈಕಾಲು ಮೈಮಾಟ ಇವೇ ಚೆನ್ನಾಗಿ ಕಣ್ಣ ಮುಂದೆ ಹಾದು ಹೋದವೇ ಹೊರತು, ಪದ್ಯದ ಶುರುವಾಗಲೀ ಅಥವಾ ಅದರಲ್ಲಿ ಬರುವ ಬೇರೆ ಒಂದು ಪದವೂ ನೆನಪಾಗುತ್ತಿಲ್ಲ. + +ರೂಮಿನಲ್ಲಿದ್ದವರಿಗೆ ಇವರ ಮೌನ ಅರ್ಥವಾಗಲಿಲ್ಲ. ಒಟ್ಟಿಗೇ ಗುಸುಗುಸು ಮಾತಾಡಿಕೊಳ್ಳಲು ಶುರುಮಾಡಿದರು. ಇವರು ಯಾಕೆ ಹಟಮಾಡ್ತಾ ಇದ್ದಾರೆ ಅಂತ ಅವರಿಗೆ ಗೊಂದಲ ಶುರುವಾಗಿತ್ತು. ತಮ್ಮ ತಮ್ಮಲ್ಲೇ ಏನೋ ಮಾತಾಡಿಕೊಂಡರು. ಇವರಿಗೆ ಏನೂ ಸರಿಯಾಗಿ ಕೇಳಲಿಲ್ಲ. ಕಿವಿ ಎಷ್ಟು ಚುರುಕಾಗಿಸಿದರೂ ಪ್ರಯೋಜನವಾಗಲಿಲ್ಲ. ಹುಡುಗರು ಏನೋ ನಿರ್ಧಾರಕ್ಕೆ ಬಂದವರಂತೆ ಕಂಡಿತು. ಮೊದಲು ಕಾರು ಹತ್ತಿಸಿದ ಹುಡುಗ ಇವರ ಬಳಿ ಬಂದು ಬಗ್ಗಿ – “ನಿಮಗೆ ದುಡ್ಡು ಜಾಸ್ತಿ ಬೇಕಂದರೆ ಹೇಳಿ. ಈಗಲೇ ಫೋನ್‌ ಮಾಡಿ ವಿಚಾರಿಸ್ತೀನಿ. ಅವೆಲ್ಲಾ ಒಪ್ಪಿಗೆ ಆಗಿತ್ತು ಅನ್ಕೊಂಡಿದ್ವಿ” ತುಂಬಾ ಮೆದುವಾಗಿ ಹೇಳಿದ. ತಾನು ಏನಕ್ಕೆ ಒಪ್ಪಿಕೊಂಡಿದ್ದೆ ಎಂದು ಇವರಿಗೆ ಹೊಳೆಯಲಿಲ್ಲ. ಏನು ಒಪ್ಪಿಗೆಯಾಗಿತ್ತು ಅನ್ನುವುದೂ ತಿಳಿಯಲಿಲ್ಲ. ಯಾವಾಗ ಮಾತಾಡಿದೆವು ಎಂದು ಕೇಳಬೇಕು ಅಂದುಕೊಂಡದ್ದು ಗಂಟಲಲ್ಲೇ ಉಳಿಯಿತು – “ನನಗೆ ಯಾವ ಸಾಲೂ ನೆನಪ ಆಗ್ತಾ ಇಲ್ಲ” ಅಂತ ಪುಟ್ಟ ಶಾಲೆಯ ಹುಡುಗನಂತೆ ಹೇಳಿದರು. ನಾಳೆ ಗಟ್ಟು ಮಾಡಿಕೊಂಡು ಬರುತ್ತೀನಿ ಅನ್ನುವ ವರಸೆಯಲ್ಲಿ. ಆ ಹುಡುಗ ಏನೋ ಹೊಳೆದವನಂತೆ ಇವರನ್ನು ಕೈ ಹಿಡಿದು ಎಬ್ಬಿಸಿದ. ಮೂಲೆಯಲ್ಲಿದ್ದ ಕಿಟಕಿಯ ಬಳಿ ಕರೆದುಕೊಂಡು ಹೋದ. ಅಲ್ಲಿಂದ ಏನೂ ಕಾಣುವುದಿಲ್ಲವಲ್ಲ ಎಂದು ಇವರು ಯೋಚುಸುವಾಗಲೇ ಅವನು ಕಿಟಕಿಯ ಪಕ್ಕ ಒಂದು ಬಟನ್ ಒತ್ತಿದ. ಕಿಟಕಿಗೆ ಜೀವ ಬಂದಂತೆ ಹೊರಗೆ ಕಾಣತೊಡಗಿತು. ಹೊರಗೆಂದರೆ ಬೆಟ್ಟ ಬಯಲು ರೋಡು ರಸ್ತೆ ಅಲ್ಲ. ಅದೇ ದೊಡ್ಡ ಬಿಲ್ಡಿಂಗಿನ ಇನ್ನೊಂದು ಭಾಗ. ದೂರದಲ್ಲಿ ಕೆಳಗಿನ ಒಳಾಂಗಣದಲ್ಲಿ ತುಂಬಾ ಬೆಳಕಿತ್ತು. ಇವರ ಕಣ್ಣು ಕುಕ್ಕುವಂತಾಗಿ ಕಿರಿದು ಮಾಡಿಕೊಂಡರು. ಮತ್ತೆ ಕಣ್ಣು ಒಗ್ಗಿಕೊಂಡಾಗ ಕೆಳಗೆ ಯಾವುದೋ ಉತ್ಸವದಂತೆ ದೊಡ್ಡ ಪಾರ್ಟಿ ನಡೆಯುತ್ತಿರುವುದು ಕಂಡಿತು. ಮೆಲ್ಲನೆ ಆ ಪಾರ್ಟಿಯಲ್ಲಿರುವವರೆಲ್ಲಾ ಇವರಿಗೆ ಗುರುತಾಯಿತು. + +ಪಕ್ಕದಲ್ಲಿ ನಿಂತ ಹುಡುಗನಿಗೆ “ಅದೆಲ್ಲಿ ನಡೀತಿದೆ?” ಎಂದು ಕೇಳಿದರು. “ನೀವು ಅವರ ಮೂಲಕಾನೇ ಹಾದು ಬಂದರಲ್ಲ” ಎಂದು ಇವರಿಗೆ ಮತ್ತಷ್ಟು ಅಚ್ಚರಿ ಹುಟ್ಟಿಸಿದ. ಇವರಿಗೆ ನೆನಪಾಗಲಿಲ್ಲ. ಅಲ್ಲಿದ್ದ ಸಣ್ಣ ವಯಸ್ಸಿನ ಕವಿಗಳನ್ನೆಲ್ಲಾ ನೋಡಿದರು. ತುಂಬಾ ಖುಷಿಯಿಂದ ಮಾತಾಡಿಕೊಂಡಿದ್ದರು. ಗಾಜಿನ ಕಿಟಕಿಯಾಚೆ ಅವರ ಮಾತುಗಳು ಕೇಳಿಸುತ್ತಿರಲಿಲ್ಲ. ತನ್ನ ವಯಸ್ಸಿನವರೂ ಅಲ್ಲಿ ಇದ್ದದ್ದು ಕಂಡು ಬೆಚ್ಚಿದರು. ಅವರೂ ಜೋರಾಗಿ ಏನೋ ಮಾತಾಡುತ್ತಾ ನಗುತ್ತಿದ್ದರು. ಎಲ್ಲರ ಕೈಯಲ್ಲೂ ಗಾಜಿನ ಲೋಟಗಳು ಅದರಲ್ಲಿ ಬಣ್ಣದ ಪಾನೀಯ ಕಂಡಿತು. ಚಂದ ಚಂದದ ಸೀರೆ ತೊಟ್ಟುಕೊಂಡ, ಬಣ್ಣಬಣ್ಣದ ಹತ್ತು ಹಲವಾರು ಬಗೆಯ ಉಡುಗೆ ತೊಡುಗೆಯ ಹೆಂಗಸರು, ಹೆಣ್ಣು ಮಕ್ಕಳು ಓಡಾಡಿಕೊಂಡಿದ್ದರು. ಅವರಲ್ಲೂ ಕೆಲವರು ಕವಿಗಳು ಎಂದು ಇವರಿಗೆ ಗೊತ್ತಿತ್ತು. ಏನು ನಡೀತಿದೆ ಎಂದು ಕೇಳಬೇಕೆಂದುಕೊಂಡರೂ ಮೊದಲು ಎಲ್ಲ ನೋಡಿಬಿಡೋಣ ಎಂಬ ತವಕದಿಂದ ಎಂಬಂತೆ ಕಿಟಕಿಯ ಹತ್ತಿರಕ್ಕೆ ತುಸು ಸರಿದರು. ತನಗೆ ಗೊತ್ತಿದ್ದ ಒಬ್ಬ ಕವಿ ಒಂದು ಚೆಂದದ ಹುಡುಗಿಯ ಹಿಂದೆ ಓಡಾಡುತ್ತಿದ್ದುದು ಕಂಡು ಇವರಿಗೆ ನಗು ಬಂದಿತು. ಈಗ ಅವನು ಸಿನೆಮಾಕ್ಕೂ ಬರೀತಾನೆ ಅಂತ ಗೊತ್ತಾಗಿತ್ತು. ಅವನ ಜತೆ ಮಾತಾಡುತ್ತಿರುವವಳು ಸಿನೆಮಾ ನಟಿಯೇ ಇರಬೇಕು. ವಯ್ಯಾರ ಮಾಡುತ್ತಿದ್ದಾಳಲ್ಲ. ಅವಳ ಹೆಗಲಿಗೆ ಕೈಯಿಕ್ಕಿ ತುಂಬಾ ಸಲಿಗೆ ತೋರಿಸುತ್ತಿದ್ದಾನಲ್ಲ. ತನಗೆ ಹೊಟ್ಟೆಯುರಿಯೆ ಎಂದು ಕೇಳಿಕೊಂಡರು. ಅದಕ್ಕೆ ಉತ್ತರಿಸಿಕೊಳ್ಳುವಷ್ಟರಲ್ಲಿ ಕಿಟಕಿಗೆ ಕರೆತಂದ ಹುಡುಗ ತಟ್ಟನೆ ಬಟನ್ ಒತ್ತಿಬಿಟ್ಟ. ಮತ್ತೆ ಕಿಟಕಿಯಾಚೆ ಕತ್ತಲು. ಇನ್ನೊಂದು ಚೂರು ನೋಡಬೇಕು ತೋರಿಸಪ್ಪಾ ಅನ್ನುವ ಮಗುವಿನಂತೆ ಅವನತ್ತ ನೋಡಿದರು. ಅವನು ಗಂಭೀರವಾಗಿ “ಅವರೆಲ್ಲಾ ನಾವು ಕೇಳಿದ ತಕ್ಷಣ ಪದ್ಯ ಹೇಳಿಬಟ್ಟರು. ಕೆಲವರಂತೂ ನೆನಪಿಂದಲೇ ತಮ್ಮ ಇಡೀ ಪುಸ್ತಕ ಒಂದು ಪದ ಆಚೀಚೆ ಆಗದಂತೆ ಹೇಳಿದರು. ನಿಮಗ್ಯಾಕೋ ಇನ್ನೂ ನಮ್ಮ ಬಗ್ಗೆ ಅನುಮಾನ ಇರೋ ಹಾಗಿದೆ.” ಎಂದು ಬಿರುಸಾಗಿ ನುಡಿದ. + +ಒಂದು ಕ್ಷಣ ಇವರಿಗೆ ಎದೆ ನಡುಗಿತು. ಸಣ್ಣ ಹುಡುಗನಾದರೂ ಅವನು ಸ್ಕೂಲಿನ ಮೇಷ್ಟ್ರಂತೆ ದೊಡ್ಡದಾಗಿ ಕಂಡ. ಇವರಿಗೆ ಬಾಯಿ ಒಣಗಿ ಬಂತು. ಇನ್ನೊಂದಿಷ್ಟು ಕಿಟಕಿಯಾಚೆಯ ತನ್ನ ಪರಿಚಯದವರನ್ನ ನೋಡಿದ್ದರೆ ಚೆನ್ನಿತ್ತು ಅಂತ ಅನಿಸುವಾಗಲೇ ನಾನೀಗ ಏನಾದರೂ ಹೇಳಬೇಕು ಎಂಬ ಒತ್ತಾಯ ಒಳಗಿಂದ ಮೂಡಿತು. ಏನು ಹೇಳಲು ಹೊರಟರೂ ಪದಗಳೆಲ್ಲಾ ತೊದಲುತ್ತೆನ್ನುವ ಭಯ ಮಾತಾಡದಿದ್ದರೂ ಅನಿಸತೊಡಗಿತು. ತಮಗೇ ಅಂಕೆಯಿಲ್ಲದ ಹಾಗೆ “ಇನ್ನೊಂದು ಚೂರು ಕಿಟಕಿಯಾಚೆ ತೋರಿಸುತ್ತೀಯ, ದಯವಿಟ್ಟು!” ಎಂದು ಬಿಟ್ಟರು. ಯಾಕೆ ಬೇಡುತ್ತಿದ್ದೇನೆ ಅಂತ ಅರಿವಾಗಲಿಲ್ಲ. ಆದರೆ ಆ ಹುಡುಗ ಅಲ್ಲಿಂದ ತಿರುಗಿ ಹೊರಟು ಬಿಟ್ಟ. ಇವರು ಸಣ್ಣ ಮಗುವಿನಂತೆ ಅವನನ್ನು ಹಿಂಬಾಲಿಸಿದರು. “ಒಂದೇ ಒಂದು ಸಲ.. ಎರಡೇ ನಿಮಿಷ” ತಾನೇಕೆ ಮಗುವಿನ ತರ ಆಡ್ತಿದ್ದೀನಿ? ತನ್ನ ಮೇಲೆ ತನಗೇ ಹತೋಟಿ ಇಲ್ಲವಲ್ಲ. ಇವರೆಲ್ಲಾ ಏನು ಮೋಡಿ ಹಾಕಿದ್ದಾರೆ? “ಒಂದು ಸಲ ಕಿಟಕಿ ಹೊರಗೆ ತೋರಿಸಿದರೆ, ಏನು ಬೇಕಾದರೂ ಮಾಡ್ತೀನಿ” ಎಂದು ಅವನ ಅಂಗಿ ತೋಳು ಹಿಡಿದು ಜಗ್ಗಿದರು. ಅಲ್ಲೇ ಇದ್ದ ಬಾಬ್ಕಟ್ ಹುಡುಗಿ “ಒಂದು ಪದ್ಯ ಹೇಳಿಬಿಡಿ. ಆಮೇಲೆ ಎಷ್ಟು ಬೇಕಾದರೂ ನೋಡಿವಿರಂತೆ” ಎಂದು ಮೆಲ್ಲನೆ ಮತ್ತೆ ಮೇಜಿನ ಮುಂದೆ, ಮೈಕೆದುರು ಕೂಡಿಸಿದಳು. ಡ್ರೈವ್ ಮಾಡಿದ ಹುಡುಗ ಮತ್ತು ಕುಳ್ಳು ಹುಡುಗ ಎದುರು ಕೂತಿದ್ದಾರೆ. ಸರಿ ಒದರಿ ಬಿಡ್ತೀನಿ ಎಂದು ಮೇಜಿನ ಮೇಲೆ ಕೈಯೂರಿ ನೆಟ್ಟಗೆ ಕೂತರು. ಹುಡುಗಿ ಮತ್ತೆ ಕಿವಿಗೆ ಹೆಡ್‌ಫೋನ್ ಏರಿಸಿಕೊಂಡು ತಂಬ್ಸ್ ಅಪ್ ಮಾಡಿದಳು. + +“ಬಾಲ್ಯದ ಗೆಳೆಯನ ಒರಟು ಕೈಯಲ್ಲಿದ್ದ ಗೆರೆಗಳು ಅವನ ಕೈಮೀರಿ ಬೆಳೆಯುತ್ತದೆ” ಎಂದು ಶುರು ಮಾಡಿದರು. ಲಯವೇ ಇರಲಿಲ್ಲ. ಪದ್ಯದ ಬದಲು ಕತೆ ಹೇಳುತ್ತಿರುವಂತೆ ಅವರಿಗೇ ಅನಿಸಿತು. ಈಗ ನಿಲ್ಲಿಸಬಾರದು ಎಂದು ಹಟತೊಟ್ಟಂತೆ “ಕೈಮೇಲಿದ್ದ ಗೆರೆಗಳಿಗಿಂತ ಕೈ ಮೀರಿ ಬೆಳೆದ ಗೆರೆಗಳೇ ಅವನ ಬದುಕನ್ನ ಹಿಡಿದು ಅಲ್ಲಾಡಿಸಿದ್ದು. ಅವನೆಷ್ಟು ಹಿಡಿತದಲ್ಲಿಟ್ಟುಕೊಂಡರೂ ಆ ಗೆರೆಗಳೇ ಅವನಿಗೆ ಕುಡಿತ ಕಲಿಸಿತು. ಕಡೆಕಡೆಗೆ ಆ ಗೆರೆಗಳ ಸುಕ್ಕುಸುಕ್ಕೇ ಪಾಶದಂತೆ ಅವನ ಕೊರಳು ಬಿಗಿದು ಕೂಪದಲ್ಲಿ ನರಳುವಂತೆ ಮಾಡಿತು…” ದೂರದಲ್ಲಿ ಕಂಪ್ಯೂಟರ್‍ ಮುಂದೆ ಕೂತಿದ್ದ ಮೊದಲು ಕಾರು ಹತ್ತಿಸಿದ ಹುಡುಗ ಥಟ್ಟನೆ ತಿರುಗಿ “ಒಂದು ನಿಮಿಷ ತಡೀರಿ” ಎಂದು ಕೈ ಎತ್ತಿದ. ಕುಳ್ಳು ಹುಡುಗ “ತುಂಬಾ ಚೆನ್ನಾಗಿದೆ ಸಾರ್!” ಎನ್ನುತ್ತಲೇ ಎಲ್ಲರೂ ಕೈಯೆತ್ತಿದವನತ್ತ ತಿರುಗಿದರು. ಏನೋ ಕಂಡು ಹಿಡಿದವನಂತೆ ಇವರನ್ನೇ ದುರುಗುಟ್ಟಿ ನೋಡಿದ. ಇವರಿಗೆ ಏನೆಂದು ಅರ್ಥವಾಗದೆ ಪಿಳಿಪಿಳಿ ಕಣ್ಣುಬಿಟ್ಟುಕೊಂಡು ಕೂತೇ ಇದ್ದರು. ಇವನು ನಿಜವಾದ ಮೇಷ್ಟ್ರೇ ಇರಬೇಕು ಎಂದು ಹೆದರಿಕೆ ಆಯಿತು. ಕೂಡಲೆ “ನಾನೇನು ಇನ್ನೂ ಶಾಲೆ ಹುಡುಗನೇ?” ಎಂದು ಧೈರ್ಯ ಹೇಳಿಕೊಂಡರು. ಆದರೂ ಒಳಗೊಳಗೇ ಅಳುಕು. + +ಕೈಯೆತ್ತಿದ ಹುಡುಗ “ಅದು ನಿಮ್ಮ ಪದ್ಯ ಅಲ್ಲ. ನಮಗೆ ಬೇಕಾಗಿರೋದು ನಿಮ್ಮ ಪದ್ಯ” ಅಂದುದು ಕೇಳಿ ಇವರಿಗೆ ತುಸು ನಿರಾಳವೂ ಸಿಟ್ಟೂ ಒಟ್ಟೊಟ್ಟಿಗೆ ಆಯಿತು. ನನ್ನ ಪದ್ಯ ಅಲ್ಲ ಅಂತ ಇವನಿಗೆ ಹೇಗೆ ಗೊತ್ತು ಎನಿಸುತ್ತಲೇ “ನಿಮ್ಮ ಎಲ್ಲ ಪದ್ಯ ಈ ಕಂಪ್ಯೂಟರಿನಲ್ಲಿ ಇದೆ. ಅದರಲ್ಲಿ ಪದಪದಾನೂ ಹುಡುಕಬಹುದು. ಸಾಲುಸಾಲೂನು ಹುಡುಕಬಹುದು. ನಿಮ್ಮ ಇಡೀ ಪದ್ಯಗಳಲ್ಲಿ ಯಾವ ಯಾವ ಪದ ಹೆಚ್ಚು ಉಪಯೋಗಿಸಿದ್ದೀರಿ ಅಂತ ಲೆಕ್ಕ ಹಾಕಬಹುದು. ಯಾವ ಸಾಲಿನ ಪ್ಯಾಟರ್ನ್ ಮತ್ತೆ ಮತ್ತೆ ಬಂದಿದೆ. ಯಾವ ಪದಕ್ಕೆ ಯಾವ ವಿಭಕ್ತಿ ಪ್ರತ್ಯಯ ಜಾಸ್ತಿ ಉಪಯೋಗಿಸ್ತೀರ. ನಿಮ್ಮ ಪದ್ಯಗಳ ಸರಾಸರಿ ಉದ್ದ ಎಷ್ಟು. ಪದಗಳ ಲೆಕ್ಕದಲ್ಲಿ ಎಷ್ಟುದ್ದ. ಸಾಲಿನ ಲೆಕ್ಕದಲ್ಲಿ ಎಷ್ಟು. ಸರಾಸರಿ ನಿಮ್ಮ ಪದ್ಯದ ಸಾಲಿನ ಉದ್ದ ಎಷ್ಟು. ಅದನ್ನೂ ಅಕ್ಷರಗಳಲ್ಲಿ ಲೆಕ್ಕ ಹಾಕಬಹುದು. ಪದಗಳಲ್ಲಿ ಲೆಕ್ಕ ಹಾಕಬಹುದು. ಹೀಗೆ ವೈಜ್ಞಾನಿಕವಾಗಿ ಏನು ಬೇಕಾದರೂ ಮಾಪನಗಳನ್ನು ಮಾಡಬಹುದು” ಎಲ್ಲರೂ ಒಬ್ಬರನ್ನೊಬ್ಬರು ನೋಡಿಕೊಂಡು ಬೀಗುತ್ತಾ ಮುಗಳ್ನಕ್ಕರು. ನಿರಾಳಕ್ಕಿಂತ ಸಿಟ್ಟೇ ಹೆಚ್ಚಾಗಿ ಇವರು ಥಟ್ಟನೆ “ನಾನು ಬರೀದೆ ಇರೋ ಪದ್ಯಗಳನ್ನ ಹೇಗೆ ಲೆಕ್ಕಾಚಾರ ಹಾಕ್ತೀರ? ನಾನೀಗ ಹೇಳೋಕೆ ಶುರು ಮಾಡಿದ ಪದ್ಯ ನಾನಿನ್ನೂ ಬರದೇ ಇಲ್ಲ. ನನ್ನ ತಲೆನಲ್ಲಿ ಆಗಾಗ ಬಂದು ಹೋಗಿ, ಮೂಡಿ ಮುಳಗತಾ ಇದೆ. ಅದನ್ನ ನನ್ನದು ಅಲ್ಲ ಅಂತ ಹ್ಯಾಗೆ ಹೇಳ್ತೀಯ?” ಸ್ವಲ್ಪ ಜೋರಾಗಿಯೇ ಕೂಗಿದರೆಂದು ಕಾಣುತ್ತದೆ. ಭಾಷಣ ಬಿಗಿದ ಹುಡುಗ ಸ್ವಲ್ಪ ಮೆತ್ತಗಾದಂತೆ ತೋರಿತು. + +“ನೋಡಿ, ನೀವು ಬರೀದೇ ಇರೋ ಪದ್ಯದ ಬಗ್ಗೆ ಎರಡು ತೊಡಕಿದೆ. ಒಂದು ಅದು ನಿಮ್ಮದು ಅಂತ ನೀವು ಸಾಧಿಸಿ ತೋರಿಸೋಕೆ ಆಗಲ್ಲ. ಈ ಮೊದಲೇ ಪ್ರಕಟ ಆಗಿದ್ದರೆ ಅದು ನಿಮ್ಮ ಹೆಸರಲ್ಲಿ ಇರತ್ತೆ. ಆಗ ಯಾರೂ ಪ್ರಶ್ನೆ ಎತ್ತೋ ಹಾಗಿಲ್ಲ.” + +“ಏನಯ್ಯ ಹೇಳ್ತಿದ್ಯ? ಅದಕ್ಕೇನಾದರೂ ಅರ್ಥಪರ್ಥ ಇದೆಯ? ಎಲ್ಲಾ ಪದ್ಯಗಳೂ ಹಾಗೇ ಅಲ್ವ? ಮೊದಲಿಗೆ ಪ್ರಕಟ ಆದಾಗಲೂ ಹಾಗೇ ಕೇಳಬಹುದಲ್ವ? ಸಂಪಾದಕರು ಇದು ನಿಮ್ಮದೇ ಪದ್ಯ ಅಂತ ಆಧಾರ ಕೊಡಿ ಅಂದರೆ ಒಂದು ಪದ್ಯಾನೂ ಪ್ರಕಟವೇ ಆಗಲ್ಲ… ನೀವಿನ್ನೂ ಎಳಸು, ಬದುಕು ಹೇಗೆ ಏನು ಅಂತ ನಿಮಗಿನ್ನೂ ಗೊತ್ತಿಲ್ಲ. ಬದುಕ್ಕಲ್ಲಿ ವಿಶ್ವಾಸ ಇರಬೇಕು. ಕವಿಗೆ ಪದ್ಯದ ಮೇಲೆ. ಸಂಪಾದಕನಿಗೆ ಕವಿ ಮೇಲೆ. ಜನರಿಗೆ ಸಂಪಾದಕನ ಮೇಲೆ. ಮುಖ್ಯವಾಗಿ ಕವಿಗೆ ಓದುವ ಜನರ ಮೇಲೆ. ಈ ಸಂಬಂಧ ಇದೆಯಲ್ಲಾ – ಇದು ಯಾವ ಕಾಲ ಆದರೂ, ಯಾವ ತಲೆಮಾರಾದರೂ ಅಷ್ಟೆ…” + +ಇಷ್ಟರವರೆಗೆ ಸುಮ್ಮನಿದ್ದ ಡ್ರೈವ್ ಮಾಡಿದ ಹುಡುಗ ಗಂಟಲು ಸರಿಮಾಡಿಕೊಂಡು “ಅದಕ್ಕೆ ನೋಡಿ ಸಾರ್ ಕಾಲ ಬದಲಾಗಿದೆ ಅನ್ನೋದು. ಈಗಿನ ತಲೆಮಾರಿನವರು ಯೋಚಿಸೋ ರೀತೀನೇ ಬೇರೆ. ಅವನು ಹೇಳೋ ಮಾತು ಪೂರ್ತಿ ಕೇಳಿ” ಎಂದು ಮೊದಲು ಭಾಷಣ ಮಾಡಿದ ಹುಡುಗನತ್ತ ಕೈಮಾಡಿದ. + +ಮತ್ತೆ ತನ್ನ ಸರದಿ ಎಂಬಂತೆ ಆ ಹುಡುಗ “ಎರಡನೇ ತೊಡಕು ಏನಪ್ಪ ಅಂದರೆ…” ಎನ್ನುವಷ್ಟರಲ್ಲೇ ಇವರಿಗೆ ಸಿಟ್ಟು ಬಂದು ಮೈಕು ಹಿಂದಕ್ಕೆ ತಳ್ಳಿ ಎದ್ದು ನಿಂತರು. ಅವರ ಕೈ ನಡುಗುತ್ತಿತ್ತು, ತುಟಿ ಅದುರುತ್ತಿತ್ತು, ಸಣ್ಣಗೆ ಬೆವರುತ್ತಿದ್ದರು. ಅದು ವಯಸ್ಸಿನಿಂದಲೋ ಸಿಟ್ಟಿನಿಂದಲೋ ಹೇಳುವುದು ಕಷ್ಟ. ಅಲ್ಲಿಂದ ಹೊರಟು ಬಿಡಬೇಕನ್ನುವ ನಿರ್ಧಾರವಂತೂ ಚೆನ್ನಾಗಿ ಕಾಣುತ್ತಿತ್ತು. ಬಾಬ್ಕಟ್ ಹುಡುಗಿ ಹತ್ತಿರ ಬಂದು ದಿಟ್ಟವಾಗಿ ಅವರ ಹೆಗಲಿಗೆ ಕೈಹಾಕಿ “ಕೂತ್ಕೊಳ್ಳಿ ಅಂಕಲ್. ಸಿಟ್ಟಾಗ ಬೇಡಿ. ಪದ್ಯಗಳನ್ನ ಬರಹಗಳನ್ನ ನೋಡೋ ರೀತಿ ಓದೋ ರೀತಿ ಈಗ ಬದಲಾಗಿದೆ. ನೀವು ಅದನ್ನ ಅರ್ಥಮಾಡಿಕೋ ಬೇಕು. ಆಗ ನಿಮ್ಮ ಎಲ್ಲ ಗೊಂದಲಕ್ಕೂ ಪರಿಹಾರ ಸಿಕ್ಕತ್ತೆ. ನೀವು ವಿಶ್ವಾಸದ ಬಗ್ಗೆ ಮಾತಾಡಿದರಲ್ಲ. ಅದನ್ನ ಈಗೀಗ ಬೆಳಸ್ಕೊಳ್ಳೋ ರೀತೀನೆ ಬೇರೆ. ನಾವು ಒಬ್ಬ ಕವಿಯ ಪದ್ಯಗಳ ರಚನೆ, ಪದಗಳ ಉಪಯೋಗ, ಸಾಲಿನ ಆಕೃತಿ ಎಲ್ಲವನ್ನೂ ವಿಶ್ಲೇಷಿಸಿ ಗ್ರಾಫ್‌ಗಳ ಮೂಲಕ ಜನರಿಗೆ ಪರಿಚಯಿಸ್ತೀವಿ. ಆಗ, ನೀವು ಹೊಸದೊಂದು ಬರೆದರೆ ಅದು ನಿಮ್ಮದೋ ಅಲ್ಲವೋ ಅಂತ ತಾನೇ ತಾನಾಗಿ ಜನಕ್ಕೆ ಗೊತ್ತಾಗಿ ಬಿಡತ್ತೆ. ಈವತ್ತು ನೀವು ಹೇಳಿದ ಪದ್ಯ ನಿಮ್ಮ ಮುಂಚಿನ ಯಾವ ಪದ್ಯದ ರಚನೆಗೂ ಆಕೃತಿಗೂ ಹತ್ತಿರವಾಗಿಲ್ಲ. ನಿಮಗೆ ಒಂದೊಂದು ಪದ್ಯವೂ ವಿಶಿಷ್ಟ ಅನ್ನಿಸಬಹುದು. ಆದರೆ, ಎಲ್ಲದರ ಅಡಿಗೂ ಒಂದು ಸಾಮಾನ್ಯ ವಿನ್ಯಾಸ ಇರತ್ತೆ. ಆ ವಿನ್ಯಾಸವೋ ಪ್ಯಾಟರ್ನೋ ನಿಧಾನಕ್ಕೆ ಬದಲಾಗಬಹುದು. ಆದರೆ ಒಂದೇ ಸಲ ಮುರಿಯಲ್ಲ, ಬದಲಾಗಲ್ಲ. ಇದು ವೈಜ್ಞಾನಿಕ ತಿಳಿವಳಿಕೆ. ಅದನ್ನು ಒಪ್ಪದೇ ಇರೋಕೆ ತುಂಬಾ ಗಟ್ಟಿಯಾದ ವಾದ ಹುಟ್ಟಹಾಕಬೇಕು…” + +“ಯಾಕೆ ಹುಟ್ಟಹಾಕಬೇಕು? ವಾದ ಯಾಕೆ ಬೇಕು? ನಾನೇನು ಲಾಯರ್ ಅಲ್ಲ. ವಿಜ್ಞಾನಿ ಅಲ್ಲ. ನಾನು ಒಬ್ಬ ಮನುಷ್ಯ. ಪದ್ಯ ಬರೀತೀನಿ. ಅದಕ್ಕೆ ಜನ ನನ್ನನ್ನ ಕವಿ ಅಂತಾರೆ. ಎಷ್ಟೋ ಸಲ ನನ್ನ ಪದ್ಯ ನನ್ನದು ಅಲ್ಲವೇ ಅಲ್ಲ ಅಂತ ಅನ್ನಿಸಿದೆ. ಅದಕ್ಕೆ ವೈಜ್ಞಾನಿಕ ವಿಶ್ಲೇಷಣೆ ಬೇಕಾಗಿಲ್ಲ. ಅದು ಎಲ್ಲಿಂದ ಹುಟ್ಟತು ಯಾವುದರಿಂದ ಹುಟ್ಟತು… ಅಷ್ಟೇ ಸಾಕು. ಸುಮ್ಮನೆ ಟೈಮ್ ವೇಸ್ಟ್ ಮಾಡ್ತಾ ಇದ್ದೀರ… ಎಷ್ಟು ಹುಡುಕಿದರೂ ನಿಮಗೆ ಕಾವ್ಯ ಸಿಗಲ್ಲ… ಬೇರೆ ಎಲ್ಲಾ ಸಿಗತ್ತೆ… ಆದರೆ ಕಾವ್ಯ ಸಿಗಲ್ಲ…” + +ಕುಳ್ಳು ಹುಡುಗ “ಹಾಗೆ ಹೇಳಬೇಡಿ ಸಾರ್. ಅದಕ್ಕೂ ಇದಕ್ಕೂ ಸಂಬಂಧ ಇಲ್ಲ… ಬೇಕಾದವರಿಗೆ ಅವೆಲ್ಲಾ ಇರತ್ತೆ. ನನ್ನಂತವರಿಗೆ ನಿಮ್ಮ ಪದ್ಯಗಳ ಸಾಲುಗಳೂ ಇರ್ತವೆ. ಈಗ ನೋಡಿ ನಿಮ್ಮ ಹರಿಗೋಲು ಅನ್ನೋ ಪದ್ಯ ನನಗೆ ತುಂಬಾ ಇಷ್ಟ. ನೀವು ಹರಿಗೋಲನ್ನ ಬರೇ ರಮ್ಯವಾಗಿ ದಾಟಿಸುತ್ತದೆ ಎಂದು ನೋಡಲ್ಲ. ಮೊದಲ ಸಲ ಓದಿದಾಗ ಭಕ್ತಿಯ ರೂಪಕ್ಕಿಂತ ಇಲ್ಲಿ ಬೇರೆ ಏನೋ ಇದೆ ಅನ್ನಿಸಿತು. ಅಮೇಲೆ ಅದು ಮೂಲವಾಗಿ ನಂಬಿಕೆಯ ಬಗ್ಗೆ ಅಂತ ಹೊಳೀತು. ಆಮೇಲೆ ಮತ್ತೆ ಓದಿದಾಗ ಥಟ್ಟನೆ ಹರಿಗೋಲನ್ನು ಹರಿ-ಕೋಲೆಂದು, ರಾಜದಂಡದ ರೂಪವಾಗಿ ಕೂಡ ಬಳಿಸಿದ್ದೀರಲ್ಲಾ ಅಂತ ಅಚ್ಚರಿಯಾಯಿತು. ಹಾಗೆ ಅನ್ನಿಸಿದಾಗ ಎಷ್ಟು ಖುಷಿಯಾಯ್ತು ಅಂದರೆ, ಆ ಖುಷಿನಲ್ಲಿ ಆ ಪದ್ಯಾನ ಹತ್ತಾರು ಸಲ ಓದಿದೆ. ಫ್ರೆಂಡ್ಸ್‌ಗೆ ಓದಿ ಹೇಳಿದೆ. ಈಗೀಗ ಆ ಹರಿ-ಕೋಲು ಬರೇ ದಶಗುಣ ಕಲಿಸುವ ದಂಡಕ್ಕಿಂತ, ದಶಗುಣವನ್ನು ಅಳೆಯುವ ಕೋಲಾಗಿ ಕಾಣ್ತಾ ಇದೆ…” + +ಇವರಿಗೆ ನಿಜಕ್ಕೂ ಧಿಗ್ಭ್ರಮೆಯಾಯಿತು. ಅವಕ್ಕಾಗಿ ಆ ಹುಡುಗನನ್ನೇ ನೋಡುತ್ತಾ ಕುಳಿತರು. ಅವನು ತನ್ನ ಪದ್ಯಕ್ಕೆ ತೆರೆದುಕೊಂಡ ರೀತಿ, ಅದನ್ನು ಅರಿತುಕೊಂಡ ರೀತಿ, ಎಲ್ಲ ಕೇಳಿ ಅವನನ್ನು ಅಲ್ಲೇ ಅಪ್ಪಿಕೊಳ್ಳಬೇಕು ಅನಿಸಿತು. ಆ ವಯಸ್ಸಿನ ಹುಡುಗರೆಲ್ಲಾ ಬರೇ ಮೋಜಿನಲ್ಲಿ ಮುಳುಗಿರುತ್ತಾರೆ ಅಂತ ಅಂದುಕೊಳ್ಳೋದೇ ದೊಡ್ಡ ಅಪರಾಧ ಅನ್ನಿಸಿತು. ಅವನ ಮೃದುವಾದ ಕೈ ಹಿಡಿದು “ತಪ್ಪಾಯಿತು” ಅಂದು ಬಿಟ್ಟರು. ಹೇಳುವ ಅಗತ್ಯವಿರಲಿಲ್ಲ. ಆದರೆ ಅನಿವಾರ್ಯತೆ ಇತ್ತು. ಯಾಕೋ ಆ ಹುಡುಗನ ಬಗ್ಗೆ ತುಂಬಾ ಹೆಮ್ಮೆ ಅನಿಸಿತು. ತಮ್ಮ ಪದ್ಯವನ್ನು ಹೊಗಳಿಬಿಟ್ಟ ಅನ್ನುವುದಕ್ಕಿಂತ ಅವನ ಅರಿವಿನ ಶಕ್ತಿ ಮತ್ತು ಅದನ್ನು ಬಳಸಿದ್ದಕ್ಕಾಗಿ. + +ಆ ಹುಡುಗನ ಕೈಹಿಡಿದು ಕುರ್ಚಿಯಿಂದ ಎದ್ದು ಅಲ್ಲೇ ಟೇಬಲ್ಲಿನ ಬುಡದಲ್ಲಿ ನೆಲದಲ್ಲಿ ಕೂತುಬಿಟ್ಟರು. ಬೇರೆ ದಾರಿಕಾಣದೆ ಆ ಹುಡುಗನೂ ಇವರ ಎದುರು ಕೂತ. ಎದುರು ಕೂತ ಹುಡುಗನ ಕಣ್ಣು ನೋಡಿದಂತೆಲ್ಲಾ ತಮ್ಮನ್ನು ಮರೆತು ಹೊರದೇಶದಲ್ಲಿರೋ ಮಗನ ನೆನಪು ತುಂಬಾ ಆಯಿತು. + +“ನನ್ನ ಮಗನಿಗೆ ಪದ್ಯದ ಬಗ್ಗೆ ಒಂದಿಷ್ಟೂ ಒಲವಿಲ್ಲ. ಬೇಡ ಅವನು ಸಾಫ್ಟ್‌ವೇರ್ ಇಂಜಿನಿಯರ್. ನಿಮ್ಮ ಥರ. ಆದರೆ ತನ್ನ ಮಕ್ಕಳಿಗೆ ಕನ್ನಡವನ್ನೂ ಕಲಿಸಿಲ್ಲ. ಆ ಮಕ್ಕಳಿಗೆ ತನ್ನ ತಂದೆ ಕವಿ ಅಂತ ಕೂಡ ಹೇಳಿಲ್ಲ. ತಿಂಗಳು ತಿಂಗಳು ದುಡ್ಡು ತಪ್ಪದೆ ಕಳಿಸ್ತಾನೆ. ನಾಕೈದು ವರ್ಷಕ್ಕೊಮ್ಮೆ ಬಂದು ತಪ್ಪದೆ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪೂರ್ತಿ ಟೆಸ್ಟ್ ಮಾಡಿಸ್ತಾನೆ. ಸಾಕಾ ಹೇಳಿ? ನನ್ನ ಹೆಂಡತಿ ವಾರಕ್ಕೊಮ್ಮೆ ತಪ್ಪದೆ ಫೋನು ಬರಲಿಲ್ಲ ಅಂತ ಹಂಬಲಿಸ್ತಾಳೆ. ಈ ಪದ್ಯ ಯಾವುದೂ ನನ್ನದಲ್ಲ. ಯಾಕೆಂದರೆ ಈಗೀಗ ಅನ್ನಿಸೋದು ಏನು ಗೊತ್ತ? ನನ್ನ ನಿಜವಾದ ನೋವನ್ನ, ಖುಷಿನ, ಆಸೆನ ನಾನು ಪದ್ಯದಲ್ಲಿ ಬರದೇ ಇಲ್ಲ. ಯಾರದೋ ಮಾತಿಗನುಗುಣವಾಗಿ ಬರದಿದೀನಿ ಅಂತ ಹೆದರತೀನಿ. ಬರೀವಾಗ ಅದು ನನ್ನ ಅಪ್ಪಟ ಅನುಭವ ಅನಿಸಿತ್ತು, ಆಗಿತ್ತು ಕೂಡ. ಒಂದು ಚೂರು ಅನುಮಾನ ಇರಲಿಲ್ಲ. ಆದರೆ ಈಗೀಗ…” ಕಣ್ಣೊರೆಸಿಕೊಂಡು ಏನಾದರೂ ಮಾಡಿಕೊಳ್ಳಿ ಎಂಬಂತೆ ಕೂತುಬಿಟ್ಟರು. ಕಂಪ್ಯೂಟರಿನ ಪರದೆಗಳು ಒಂದೊಂದಾಗಿ ಕಪ್ಪಾಗಿ ಏನೇನೋ ಆಕೃತಿಗಳನ್ನು ಚಿತ್ರವಿಚಿತ್ರವಾಗಿ ತೋರಿಸ ಹತ್ತಿದವು. ಒಂದೇ ಒಂದು ಪದವೂ ಇಲ್ಲದೆಯೂ ಇರುವ ಚಂದವನ್ನು ಅಚ್ಚರಿಯಿಂದ ಬಾಯಿಬಿಟ್ಟುಕೊಂಡು ನೋಡುತ್ತಾ ಇದ್ದರು. ಚುಕ್ಕೆಗಳು, ಗೀಟುಗಳು, ಬಣ್ಣಗಳು, ಚೌಕಗಳು, ಗೋಲಗಳು. ಚೌಕವಾಗುವ ಗೋಲಗಳು. ಬಣ್ಣ ಬದಲಿಸುವ ಹೂವು, ಮೋಡ, ಹುಲ್ಲು ಕಣಿವೆ ಬೆಟ್ಟ. ಇವನ್ನೇ ನೋಡುತ್ತಾ ಕೂತವರಿಗೆ ಎಷ್ಟು ಹೊತ್ತಾಯಿತು ಎಂದೇ ತಿಳಿಯಲಿಲ್ಲ. ನಂತರ ಕಣ್ಣು ಮುಚ್ಚಿದಾಗ ಕಣ್ಣಿನ ಒಳಗೂ ಅವೇ ಆಕೃತಿಗಳು ಬಂದು ಹೋಗತೊಡಗಿದವು. ತಮ್ಮ ನರನಾಡಿಗಳಲ್ಲಿ ತಾವೇ ಸಂಚಾರ ಹೊರಟಂತೆ ಕಂಡಿತು. ನರನಾಡಿಗಳ ಕಾಡುಮೇಡು ಸುಂದರವಾಗೇ ಇದ್ದವು. + +ಇದ್ದಕ್ಕಿದ್ದ ಹಾಗೆ ಯಾರೋ ಪಿಸುಗುಟ್ಟಿದಂತಾಯಿತು. ಆ ಪಿಸುಗುಟ್ಟುವುದರಲ್ಲಿ ಆತಂಕವೂ ಇರುವಂತೆ ಭಾಸವಾಯಿತು. ಏನು ಆತಂಕ? ಆತಂಕವಿರಬೇಕಾದ್ದು ತನಗಲ್ಲವೆ? ಬಂಧಿತ ತಾನಲ್ಲವೆ? ಎಂಬೆಲ್ಲಾ ಪ್ರಶ್ನೆಗಳು ಇವರ ತಲೆಯಲ್ಲಿ ಹರಿದಾಡಿದವು. ಅವುಗಳಿಗೆ ಉತ್ತರ ಹುಡುಕುವ ಗೋಜಿಗೆ ಹೋಗುವುದೇ ಬೇಡ ಎನ್ನುವಂತೆ ಕಣ್ಣುಮುಚ್ಚಿಕೂತೇ ಇದ್ದರು. ಮತ್ತೆ ಮತ್ತೆ ಪಿಸುಗುಡುವುದು ಕೇಳಿತು. ಸಣ್ಣ ಮಗುವಿನ ದನಿಯಂತೆ ಕೇಳಿತು. ಉತ್ತರ ಬೇಡ ಅನಿಸಿದರೂ ಈಗ ಕುತೂಹಲ ಹೆಚ್ಚಾಯಿತು. ಕಣ್ಣು ಬಿಟ್ಟರೆ ಎದುರಿಗೆ ಕುಳ್ಳು ಹುಡುಗನೂ ತನ್ನೊಡನೆ ಕೂತೇ ಇದ್ದಾನೆ. ಆ ರೂಮಿನಲ್ಲಿ ಇನ್ನಾರೂ ಇಲ್ಲ ಎಂದು ಸುತ್ತ ನೋಡದೆಯೂ ಅರಿವಿಗೆ ಬಂದಿತು. + +ಇವರು ಕಣ್ಣು ಬಿಡುವುದನ್ನೇ ಕಾದಿದ್ದ ಹುಡುಗ “ಬೇಗ ಹೊರಡಬೇಕು ಸಾರ್. ತಪ್ಪಿಸಿಕೊಳ್ಳೋಕೆ ಈಗಲೇ ಒಳ್ಳೆ ಚಾನ್ಸು. ಅವರು ವಾಪಸ್ಸು ಬಂದು ಬಿಟ್ಟರೆ ಕಷ್ಟ. ಬೇಗ ಏಳಿ ಸಾರ್.” ಎಂದು ಕೈಹಿಡಿದು ಒತ್ತಾಯಿಸಿದ. ವಯಸ್ಸಿನ ಅಂತರನೋ ಮತ್ತೇನೋ ಆ ಹುಡುಗ ತೋರಿಸುತ್ತಿದ್ದ ಆತಂಕದ, ಗಡಿಬಿಡಿಯ ಕಿಂಚಿತ್ತು ಭಾಗವೂ ಇವರಲ್ಲಿ ಇರಲಿಲ್ಲ. ಸಣ್ಣಗೆ ನಕ್ಕರು ಎಂದು ಕಾಣುತ್ತದೆ. ಆ ಹುಡುಗ “ತಮಾಷೆ ಅನ್ಕೋಬೇಡಿ ಸಾರ್. ನಿಮಗೆ ಗೊತ್ತಿಲ್ಲ. ಅವರು ವಾಪಸು ಬಂದರೆ ನಿಮ್ಮನ್ನು ಸುಮ್ಮನೆ ಬಿಡಲ್ಲ. ತುಂಬಾ ಗೋಳು ಹೋಯ್ಕೋತಾರೆ. ನೀವು ಬದುಕಿ ಉಳೀಬೇಕಾದರೆ ಬೇಗ ಓಡಿ ಹೋಗಬೇಕು” ಎಂದು ಮತ್ತಷ್ಟು ಗಾಬರಿ ಹುಟ್ಟಿಸಲು ಹವಣಿಸಿದ. ಇವರಿಗೆ ಎಲ್ಲಿಗೆ ಓಡಿಬೇಕು, ಯಾರಿಂದ ಓಡಬೇಕು, ಹೇಗೆ ಓಡಬೇಕು ಎಂಬುದು ಹೊಳೆಯಲೇ ಇಲ್ಲ. ಹುಡುಗರು ಒಳ್ಳೆಯವರಂತಲೇ ಕಂಡರಲ್ಲ? ಡ್ರೈವ್ ಮಾಡುವ ಹುಡುಗ ಇಲ್ಲದೆ ಓಡುವುದು ಹೇಗೆ? ಮನೆಗಾದರೆ ಹತ್ತಿರದಲ್ಲೇ ಬಸ್ ಸ್ಟಾಪೋ ಆಟೋನೋ ಸಿಗೊಲ್ಲವ? ಅಷ್ಷರಲ್ಲಿ ಹುಡುಗ ನೆಲದ ಮೇಲೆ ತೆವಳುತ್ತಾ ಬಾಗಲಿಗೆ ಹೋಗಿ ಅದರ ಕೀಲಿ ಕೈ ಕಿಂಡಿಯಿಂದ ಹೊರಗೆ ಇಣುಕ ತೊಡಗಿದ. ಇದು ನಾಟಕವೋ ನಿಜವೋ ಇವರಿಗೆ ಗೊತ್ತಾಗಲಿಲ್ಲ. ಎಲ್ಲ ಸರಾಗವಾಗಿ ನಡೀತಿತ್ತಲ್ಲ. ಈಗೆಲ್ಲಿ ಶುರುವಾಯಿತು ಈ ಕಳ್ಳ ಪೋಲೀಸ್ ಆಟ? ಕಣ್ಣಾ ಮುಚ್ಚಾಲೆ? ಯಾರು ಕಳ್ಳರು – ಅವರ ನಾವ? ಅವರು ನಮ್ಮನ್ನು ಹಿಡಿಯಲು ಬರುತ್ತಿದ್ದಾರೆಂದ ಮೇಲೆ ಅವರು ಕಳ್ಳರಿರಬೇಕು. ಯಾಕೆಂದರೆ ನಾವು ಒಳ್ಳೆಯವರಲ್ಲವೆ ಎಂದು ಪಕಪಕ ನಗಲು ತೊಡಗಿದರು. ಹುಡುಗ ಹಿಂದೆ ಇವರತ್ತ ತಿರುಗಿ ಶ್! ಎಂದು ಹುಬ್ಬುಗಂಟಿಕ್ಕಿ ಬೆರಳೆತ್ತಿ ಸಣ್ಣಗೆ ಗದರಿದ. ಇವರು ಗಪ್ಪನೆ ನಗು ನಿಲ್ಲಿಸಿ ಸೆಟೆದು ಕೂತರು. + +ಹುಡುಗ ಸರಕ್ಕನೆ ತಿರುಗಿ “ಬಂದರು, ಬಂದರು – ಬರ್ತಾ ಇದ್ದಾರೆ. ಇಲ್ಲೇ ಬಚ್ಚಿಟ್ಟುಕೊಳ್ಳೋಣ ಬನ್ನಿ…” ಎಂದು ಇವರನ್ನು ಎಳೆದುಕೊಂಡು ಅಲ್ಲೇ ಮೂಲೆಯ ಕತ್ತಲಿಗೆ ಎಳೆದುಕೊಂಡು ಹೋಗಿ ಅಲುಗಾಡದಂತೆ ತಬ್ಬಿ ಹಿಡಿದ. ಇವರಿಗೆ ಈಗ ತಾನು ಇನ್ನೊಂದು ರೀತಿಯ ಬಂಧಿ ಅನಿಸತೊಡಗಿತು. ಈ ಹುಡುಗ ಅಪ್ಪಿರುವುದು ಪ್ರೀತಿಯಿಂದಲೋ, ಹೆದರಿಕೆಯಿಂದಲೋ ಅಥವಾ ತಾನು ಓಡಿಹೋಗದಂತೆ ನೋಡಿಕೊಳ್ಳಲೋ ಎಂದು ಗೊತ್ತಾಗಲಿಲ್ಲ. ಆ ಹಿತವಾದ ಹಿಡಿತದಲ್ಲಿ ಎಲ್ಲವೂ ಕೊಂಚ ಕೊಂಚ ಇತ್ತೆಂದು ಇವರಿಗೆ ಆ ಹಿಡಿತವೇ ಹೇಳುತ್ತಿತ್ತು. ಅದಕ್ಕೆ ಯಾವ ಪುರಾವೆಯೂ ಬೇಕಾಗಿರಲಿಲ್ಲ. ಈ ಮೂಲೆ ಎಷ್ಟು ಕತ್ತಲೆಯಲ್ಲಾ ಎಂದು ಅಚ್ಚರಿಯಾಯಿತು. ಈ ಕತ್ತಲೆ ಮುಂಚೆ ಇತ್ತೆ ಅಥವಾ ತಮಗೋಸ್ಕರ ಈ ಕ್ಷಣ ಹುಟ್ಟಿತೆ ಎಂದು ಕೇಳಬೇಕೆಂದುಕೊಂಡ ಪ್ರಶ್ನೆ “ಇಲ್ಲಿ ನಿಂತರೆ ಅವರಿಗೆ ಕಾಣೋಲ್ವ?” ಎಂಬ ರೂಪ ಪಡೆಯಿತು. ಎಷ್ಟು ಬಾಲಿಶ ಪ್ರಶ್ನೆಯಾಯಿತಲ್ಲ ಎಂದು ಇವರಿಗೇ ಅಚ್ಚರಿಯಾಯಿತು. ಆದರೆ ಇವರ ಪ್ರಶ್ನೆಗೆ ಉತ್ತರಕೊಡುವುದು ಹುಡುಗನಿಗೆ ಬೇಕಾಗಿರಲಿಲ್ಲ. ಅವನು ಇವರತ್ತ ನೋಡಲೂ ಇಲ್ಲ. ಅವನ ದೃಷ್ಟಿ, ಗಮನ ನೂರಕ್ಕೆ ನೂರರಷ್ಟು ಆ ಬಾಗಿಲ ಮೇಲೆ. ಆ ಹುಡುಗನ ತಲೆ ನೇವರಿಸಲು ಕೈ ಬಿಡಿಸಕೊಂಡರು. ಹುಡುಗನ ತಲೆ ಮುಟ್ಟಿದ್ದೇ ಕಿರಿಕಿರಿಗೊಂಡು ತಲೆ ದೂರ ಸರಿಸಿ ಮತ್ತೆ ಕೈ ಹಿಡಿದುಕೊಂಡ. ಅವನು ಉಸಿರೇ ಆಡುತ್ತಿಲ್ಲ ಅನಿಸುತಿತ್ತು. + +ಧಡಕ್ಕನೆ ಬಾಗಿಲು ತೆಗೆದುಕೊಂಡಿತು. ರೂಮೆಲ್ಲಾ ಬೆಳಕಾಯಿತು. ಮೂಲೆಯಲ್ಲಿ ಇವರು ಅವಿತಿದ್ದ ಕತ್ತಲು ಥಟ್ಟನೆ ಹಾರಿಹೋಯಿತು. ರೂಮಿನ ಹೊರಗೆ ಇಷ್ಟು ಬೆಳಕು ನಮಗಾಗಿ ಕಾದಿತ್ತೆ ಎಂದು ಹುಟ್ಟಿದ ಅಚ್ಚರಿ ಕ್ಷಣಾರ್ಧದಲ್ಲಿ ಆ ಹುಡುಗನ ನಡುಗುವ ಕೈಗಳಿಂದಾಗಿ ಮಾಯವಾಗಿ ಇವರೂ ಉಸಿರು ಬಿಗಿ ಹಿಡಿದರು. ಬಾಗಿಲಿಗೆ ಯಾರಾದರೂ ಬರಬಹುದು ಎಂದು ಕಾದರು. ಕೆಲವು ಹೊತ್ತು ಯಾರೂ ಬರಲಿಲ್ಲ. ಹೊರಗೆ ಜೋರು ಜೋರಾದ ಮಾತುಗಳು ಕೇಳಿದವು. ಇವರಿಗೆ ಆ ಧ್ವನಿಗಳು ಗುರುತು ಹತ್ತಿ ಬಾಗಿಲಿಗೆ ಹೋಗಬೇಕು ಅನಿಸಿತು. ಕಿಟಕಿಯಿಂದ ಕೆಳಗೆ ನೋಡಿದವರೆಲ್ಲಾ ಅಲ್ಲೇ ಬಾಗಿಲ ಪಕ್ಕವೇ ಹೋಗುತ್ತಿದ್ದಾರೆ. ಎಷ್ಟು ಜೋರಾಗಿ ಮಾತಾಡುತ್ತಿದ್ದಾರೆ! ಹೊರಗೆ ಕಣ್ಣುಕುಕ್ಕುವಷ್ಟು ಬೆಳಕಿದೆ. ನಾನೂ ಹೋಗಬೇಕೆಂದರೆ ಈ ಕುಳ್ಳು ಹುಡುಗ ಬಿಡುತ್ತಿಲ್ಲ. ಅಷ್ಟರಲ್ಲಿ ತನಗೆ ಗುರುತಿನ ಸಣ್ಣವಯಸ್ಸಿನ ಕವಿಯೊಬ್ಬ ಬಾಗಿಲಲ್ಲಿ ನಿಂತು ಯಾರಿಗೋ ಪದ್ಯ ಬರೆಯುವುದು ಹೇಗೆ ಎಂದು ಹೇಳುತ್ತಿದ್ದುದು ಕೇಳಿತು. ಮೂರೇ ಹೆಜ್ಜೆಯಂತೆ. ಆ ಮೂರು ಹೆಜ್ಜೆಯನ್ನು ಕರಗತ ಮಾಡಿಕೊಂಡರೆ ಲೋಕ ಅಲುಗಾಡಿಸುವಂತ ಪದ್ಯ ಬರೆಯುಬಹುದಂತೆ. ಇವರಿಗೆ ಏನದು ಮೂರು ಹೆಜ್ಜೆ ಎಂದು ಕೇಳಬೇಕು ಅನ್ನುವ ತವಕ. ತಮಗೆ ಯಾಕೆ ಪದ್ಯ ಬರೆಯಲು ಅಷ್ಟು ಕಷ್ಟವಾಗುತ್ತದೆ. ಮೂರು ಹೆಜ್ಜೆ ಸಾಕಂತಲ್ಲ ಎಂದು ತಮ್ಮನ್ನೇ ಕೇಳಿಕೊಂಡರು. ನಾನು ಅಷ್ಟು ಪೆದ್ದನ ಹಾಗಾದರೆ? ಅಥವಾ ಅವನೇನಾದರೂ ಕೀಟಲೆ ಮಾಡುತ್ತಿರಬಹುದ? ಗೊತ್ತಾಗಬೇಕಾದರೆ ಮುಖ ನೋಡಬೇಕು. ಮುಖನೋಡೋದಿರಲಿ ಆ ಕತ್ತಲಿದ್ದ, ಈಗ ಬೆಳ್ಳಂಬೆಳಕಾಗಿರೋ ಮೂಲೆಯಿಂದ ಒಂದು ಹೆಜ್ಜೆ ಹೋಗಲೂ ಈ ಹುಡುಗ ಬಿಡುತ್ತಿಲ್ಲ. ಅವನು ಇವರನ್ನು ರಕ್ಷಿಸುತ್ತಿದ್ದಾನೋ ಅಥವಾ ಇವರಿಂದ ರಕ್ಷಣೆ ಪಡೆಯುತ್ತಿದ್ದಾನೋ ಹೇಗೆ ಹೇಳುವುದು. ಇವರ ತಲೆಯಲ್ಲೂ ಅದೇ ಯೋಚನೆ ಸುಳಿದು ಹೋಯಿತು. ಏಕೆಂದರೆ ಅಷ್ಟರಲ್ಲಿ ಬಾಗಿಲಿಗೆ ಆ ಹುಡುಗಿ ಬಂದು ನಿಂತು ಹೊರಗೆ ಯಾರೊಡನೆಯೋ ವಯ್ಯಾರದಿಂದ ಮಾತಾಡುತ್ತಿದ್ದಳು. ಬಾಬ್ಕಟ್ ಕೂದಲಿನ ಕುಳ್ಳು ಕೂದಲನ್ನೇ ಹಣೆಯಿಂದ ಪಕ್ಕಕ್ಕೆ ಸರಿಸಿಕೊಳ್ಳುತ್ತಿದ್ದಳು. ನಾಚುತ್ತಿದ್ದಳೇ? ಇಷ್ಟು ಕೆಂಪಗಿದ್ದಳೇ ಈ ಹುಡುಗಿ. ಮೊದಲು ಹಾಗನಿಸಲಿಲ್ಲವಲ್ಲ? ಅಥವಾ ನಾಚಿಕೆಯಿಂದ ಕೆಂಪಾಗಿರಬೇಕು. ಏನದು ಅಂಥ ನಾಚುವಂಥ ಸಮಾಚಾರ ಎಂದು ಇವರಿಗೆ ಕುತೂಹಲ ಕೆದರಿತು. ತನಗೆ ಗೊತ್ತಿದ್ದ ಸಣ್ಣ ವಯಸ್ಸಿನ ಕವಿ ಜೋರಾಗಿ ಪದ್ಯ ಬರೆಯುವ ಮೂರು ಹೆಜ್ಜೆಗಳ ಬಗ್ಗೆ ಭಾಷಣ ಬಿಗಿಯುತ್ತಲೇ ಇದ್ದ. ಆ ಹುಡುಗಿ ಏನೋ ಮೆಲ್ಲಗೆ ಉಸಿರಿ ರೂಮಿನ ಒಳಗೆ ತಿರುಗಿದಳು. + +ತಿರುಗಿದ್ದೇ ಏನೋ ನೆನಪಾದವಳಂತೆ ಥಟ್ಟನೆ ನಿಂತಳು. ಇಡೀ ರೂಮನ್ನು ಒಮ್ಮೆ ನೋಡಿದಳು. ಇವರಿಬ್ಬರ ದಿಕ್ಕಿನಲ್ಲೂ ನೋಡಿದಳು. ಇವರು ಅವಳಿಗೆ ಕಂಡೇ ಇಲ್ಲದಂತೆ ಮುಖ ನಿರಾಳವಾಯಿತು. ಮತ್ತೆ ಬಾಗಿಲ ಕಡೆ ತಿರುಗಿ “ಬನ್ನಿ ಬನ್ನಿ” ಎಂದಳು. ಒಳಗೆ ಅವನು ಕಾಲಿಟ್ಟೊಡನೆ “ಏ ಹೇಗಿದ್ದೀಯ?” ಎಂದು ಇವರಿಗೆ ಕೂಗಬೇಕನಿಸಿತು. ತನಗಿಂತ ಒಂದೆರಡು ವರ್ಷವಷ್ಟೇ ಚಿಕ್ಕವನಾದ ಜನಪ್ರಿಯ ಕವಿ. ಕೂಗಿದ್ದರೂ ಕೇಳುತ್ತಿರಲಿಲ್ಲವೇನೋ ಎಂದು ಬಲವಾಗಿ ಅನಿಸಿದ್ದರಿಂದ ಸುಮ್ಮನಾದರು. ಆ ಹುಡುಗಿಗೆ ತಾನು ಕಾಣಲೇ ಇಲ್ಲವಲ್ಲ. ತನ್ನನ್ನು ಹಿಡಿದ ಹುಡುಗನಿಗೆ “ಅವರ ಕಣ್ಣಿಗೆ ನಾವು ಕಾಣಲ್ವ?” ಎಂದು ಮಕ್ಕಳಂತೆ ಕೇಳಿದರು. ಅವನು ಅಷ್ಟೇ ಮೆದುವಾಗಿ “ಅಲ್ಲಾಡಬೇಡಿ. ಮಾತಾಡಬೇಡಿ. ಅವರಿಗೆ ಗೊತ್ತಾಗಲ್ಲ. ಗೊತ್ತಾದರೂ ಅಲ್ಲಾಡದಿದ್ದರೆ ಅವರ ಗಮನಕ್ಕೆ ನಾವು ಬರಲ್ಲ” ಅಂದ. ಇವರಿಗೆ ಅರ್ಥವಾಗಲಿಲ್ಲ. ಅದು ಹೇಗೆ ಸಾಧ್ಯ ಎಂದು ಕೇಳಬೇಕನಿಸಿತು. ಆದರೆ, ನಿಯಮ ಹಾಗಿದ್ದರೆ ಒಳ್ಳೇದೇ ಅನಿಸಿ ಸುಮ್ಮನಾದರು. ಅವರಿಗೆ ಆ ಪಟಿಂಗ ಏನು ಮಾಡ್ತಾನೋ ನೋಡಬೇಕಾಗಿತ್ತು. + +ಆ ಹುಡುಗಿ ವಯ್ಯಾರವಾಗಿ ಅವನತ್ತ ಆಗಾಗ ತನ್ನ ಚೆಲುವಿನ ನೋಟ ಬೀರುತ್ತಾ ನಡೆದು ಕಂಪ್ಯೂಟರ್ ಮುಂದೆ ಹೋಗಿ ಕೂತಳು. ಆ ಕವಿ ಕೈಯಲ್ಲಿದ್ದ ಗ್ಲಾಸಿಂದ ಕುಡಿಯುತ್ತಾ ಅವಳ ಪಕ್ಕದಲ್ಲೇ, ಅವಳ ಹೆಗಲಿಗೆ ಕೈಹಾಕಿ ನಿಂತ. ಅವಳು ಕಂಪ್ಯೂಟರಿನಲ್ಲಿ ಏನೋ ತೆರೆದು ತೋರಿಸಲು ತೊಡಗಿದೊಡನೆ ಅವನ ಕೈ ಅವಳ ಕತ್ತನ್ನು ಮೆಲ್ಲನೆ ಸವರಿತು. ಆ ಹುಡುಗಿಗೆ ಮುಜುಗರವಾಗಿ ಅತ್ತಿತ್ತ ಕತ್ತನ್ನು ತಪ್ಪಿಸಲು ನೋಡಿದಳು. ಆ ಹುಡುಗಿ ತೋರಿಸಿದ ಕಂಪ್ಯೂಟರ್ ಸ್ಕ್ರೀನನ್ನು ಕಷ್ಟಪಟ್ಟು ಕನ್ನಡಕದ ಮೂಲಕ ನೋಡಲು ಬಹಳೇ ಕಷ್ಟಪಡುತ್ತಿದ್ದ. ಅಲ್ಲಿ ಏನೋ ಕಂಡೊಡನೆ ಆ ಹುಡುಗಿ ಥಟ್ಟನೆ ಅವನತ್ತ ತಿರುಗಿ ನಕ್ಕಳು. ಅವನ ಮುಖದಲ್ಲೂ ನಗು ಮೂಡಿತು. ಒಂದಿಷ್ಟು ಉತ್ಸಾಹ ಬಂದವನಂತೆ ಜೋರಾಗಿ “ಬೇರೊಂದು ಮರವ ಹತ್ತಿ ಎಲೆಗಾಗಿ ಬಾಯ್ದೆರೆದು…” ಎಂದು ಉಸಿರು ಬಿಡದೆ ಪದ್ಯದ ಸಾಲುಗಳನ್ನು ಹೇಳಿದ. ಹುಡುಗಿ ಕಂಪ್ಯೂಟರ್ ಮೇಲೆ ತಟಪಟನೆ ಟೈಪ್‌ಮಾಡಿ “ಆ ಪದ್ಯ ನಿಮ್ಮದ?” ಎಂದು ಕೇಳಿದಳು. ಇವರು “ಅಲ್ಲ – ಅವನದಲ್ಲ… ಕಳ್ಳ… ಅದು ನನ್ನ ಸಾಲು” ಎಂದು ಚೀರಲು ಬಾಯ್ತೆರೆದರು. ಅಷ್ಟರಲ್ಲಿ ಇವರೊಡನಿದ್ದ ಹುಡುಗ ತಟ್ಟನೆ ಅವರ ಬಾಯಿ ಮುಚ್ಚಿಬಿಟ್ಟ. ಅವನಿಗೆ ಇವರ ಪ್ರತಿಕ್ರಿಯೆಯ ಬಗ್ಗೆ ಮುಂಚೆಯೇ ಗೊತ್ತಿರುವಂತಿತ್ತು. ಆ ಕವಿ ಮೆಲ್ಲನೆ ತುಂಬಾ ಬಿಗುಮಾನದಿಂದ ಹೌದೆಂಬಂತೆ ತಲೆಹಾಕಿದ. ಆ ಹುಡುಗಿ ತಲೆ ತಗ್ಗಿಸಿಯೇ ಏನೋ ಯೋಚಿಸುವಂತೆ ಕಾಣುತ್ತಿತ್ತು. ಕುಳ್ಳು ಹುಡುಗ ಇವರತ್ತ ನೋಡಿ ಸಣ್ಣಗೆ ನಕ್ಕ. ಇವರಿಗೆ “ನೀವೆಲ್ಲಾ ಬೆಪ್ಪುಗಳು… ಅವನು ಸುಳ್ಳು ಹೇಳ್ತಾ ಇದ್ದಾನೆ…” ಎಂದು ಹೇಳ ಹೊರಟಿದ್ದು, ಹುಡುಗ ಮುಚ್ಚಿದ ಕೈಯಡಿ ಗವಗವ ಎಂದಷ್ಟೇ ಆಯಿತು. ಅಷ್ಟರಲ್ಲಿ ಆ ಬಾಬ್ಕಟ್ ಹುಡುಗಿ ತಲೆಯೆತ್ತಿ – “ಸಾರ್. ಯಾಕೆ ಸುಳ್ಳು ಹೇಳ್ತಾ ಇದ್ದೀರ? ಅದು ನಿಮ್ಮ ಪದ್ಯ ಅಲ್ಲ… ಅದು…” ಎಂದು ಮಾತು ಪೂರ್ತಿ ಮಾಡುವಷ್ಟರಲ್ಲಿ ಆ ಕವಿಯ ಮುಖದ ಮೇಲಿನ ನಗು ಮಾಯವಾಗಿ ಬಿಗುವಾಯಿತು. “ಹಾ… ಎಲ್ಲಾರೂ… ಹಾಗೇ ಹೇಳೋದು… ಅವನು ಅದು ನನ್ನಿಂದ ಕದ್ದಿದ್ದು… ನಾನು ಎಷ್ಟೋ ಹಿಂದೆ ಬರೆದಿದ್ದ ಪದ್ಯದ ಸಾಲದು. ಪ್ರಕಟ ಆಗಿರಲಿಲ್ಲ. ಅವನಿಗೆ ತೋರಿಸಿದ್ದೆ…” ಇವರು ಹುಡುಗನ ಕೈಯಿಂದ ಬಿಡಿಸಿಕೊಳ್ಳಲು ಒದ್ದಾಡುತ್ತಲೇ ಇದ್ದರು. ಕವಿಯ ಕೈ ಹುಡುಗಿಯ ಕತ್ತನ್ನು ಬಿಟ್ಟು ಜಗಳಕ್ಕೆ ನಿಲ್ಲುವಂತೆ ತನ್ನ ಸೊಂಟಕ್ಕೆ ಏರಿತು. + +ಆ ಹುಡುಗಿ ಮತ್ತೆ ಏನೋ ಒಂದಷ್ಟು ಟೈಪ್ ಮಾಡಿದೊಡನೆ – ಕಂಪ್ಯೂಟರ್ ಪರದೆಯ ಮೇಲೆ ಒಂದು ಗ್ರಾಫ್ ಚಿತ್ರ ಮೂಡಿತು. ಆ ಕವಿ ಅದನ್ನು ತನ್ನ ಕಣ್ಣಿನ ಕೊನೆಯಿಂದ ನೋಡುತ್ತಾ ನಿಂತಿರುವಾಗ ಆ ಹುಡುಗಿ – “ಇದು ನೋಡಿ ಸಾರ್…” ಎಂದು ಅವರ ಗಮನ ಸೆಳೆದಳು. ಕವಿ ಅದರತ್ತ ಉಡಾಫೆಯಿಂದ ನೋಡುತ್ತಾ ನಿಂತಿದ್ದು ನೋಡಿ ಆ ಹುಡುಗಿ “ನಿಮ್ಮ ಪದ್ಯಗಳ ಅನಾಲಿಸಿಸ್ ಪ್ರಕಾರ, ಅದು ನಿಮ್ಮ ಸಾಲು ಆಗಿರಲಿಕ್ಕೆ ಸಾಧ್ಯವೇ ಇಲ್ಲ. ಬರೇ ಸರ್ಫೇಸ್, ಅಂದರೆ ಮೇಲುಮೇಲಿನ ಅನಾಲಿಸಿಸ್‌ನಿಂದಾನೆ ಇದು ಗೊತ್ತಾಗತ್ತೆ. ಇನ್ನೂ ಆಳದ ಅನಾಲಿಸಿಸ್ ಮಾಡಿದರೆ ಖಾತ್ರಿ ಆಗತ್ತೆ. ವಿವರಿಸಬೇಕೂಂದರೆ ಈಗ ನೋಡಿ, ನೀವು ‘ಬೇರೊಂದು’ ಪದವನ್ನು ಮತ್ತೊಂದು ಅನ್ನೋ ಅರ್ಥದಲ್ಲೇ ೯೯.೫% ಸಲವೂ ತಂದಿದ್ದೀರ. ಆದರೆ ಇಲ್ಲಿ ಅದು ‘ಒಂದು ಬೇರು’ ಅನ್ನುವ ಅರ್ಥದಲ್ಲಿ ಬಂದಿದೆ. ನಿಮ್ಮ ಪದ್ಯದಲ್ಲಾಗಿದ್ದರೆ ‘ಒಂದು ಬೇರು’ ಎಂದೇ ಬರುತ್ತಿತ್ತು ಎಂದು ಈ ಅನಾಲಿಸಿಸ್ ಹೇಳುತ್ತದೆ. ನಿಮ್ಮ ಪದ್ಯಗಳಲ್ಲಿ ‘ಬೇರು’ ಎಂದು ನೀವು ಎಂದೂ ಬರದೇ ಇಲ್ಲ – ಯಾವಾಗಲೂ ‘ಬೇರುಗಳು’ ಅಂತಲೇ ಬರದಿದ್ದೀರ – ನೂರಕ್ಕೆ ನೂರರಷ್ಟು ಸಲವೂ. ಇದು ಬರೇ ವರ್ಡ್ ಯೂಸೇಜ್ ವಿಷಯದಲ್ಲಿ. ಇನ್ನು ಪ್ರತಿಮೆಗಳ ವಿಷಯಕ್ಕೆ ಬಂದರೆ… ನೀವು ಮರ, ಬೇರು, ಎಲೆ ಇವುಗಳನ್ನು ರೂಪಿಸುವ ಪ್ರತಿಮೆ ಬೇರೆ ಬಗೆಯದು… ಈ ಅನಾಲಿಸಿಸ್ ನೋಡಿ ಇಲ್ಲಿ – ಯೂಸೇಜ್ ಆಫ್ ಇಮೇಜರಿ ಅನಾಲಿಸಸಿನ ಪ್ರಕಾರ…” ಕವಿಗೆ ಸಿಟ್ಟು, ಅವಮಾನ ಹತಾಶೆ ಎಲ್ಲಾ ಒಟ್ಟಿಗೆ ಆದ ಹಾಗಾಗಿ ಆ ಹುಡುಗಿಯ ಮಾತು ಮುಗಿಸಲು ಕಾಯದೆ ರೂಮಿಂದ ಹೊರಗೆ ನಡೆದು ಬಿಟ್ಟ. ಆತ ಅಲ್ಲಿ ಇಲ್ಲದಿರುವುದನ್ನು ನೋಡಿ ಆ ಹುಡುಗಿ ನಿರಾತಂಕವಾಗಿ ಕಂಪ್ಯೂಟರಿನ ಪರದೆಯನ್ನು ಆರಿಸಿ ಮೆಲುನಗೆ ನಗುತ್ತಾ ತಾನೂ ಅಲ್ಲಿಂದ ಹೊರಟಳು. ಇದನ್ನೆಲ್ಲಾ ನೋಡುತ್ತಾ ಇವರಿಗೆ ಖುಷಿ ತಡೆಯಲಾರದೆ ಆ ಹುಡುಗನನ್ನು ಬಲವಾಗಿ ಅಪ್ಪಿಕೊಂಡರು. + +ಆ ಹುಡುಗಿ ಬಾಗಿಲು ಹಾಕಿಕೊಂಡು ಹೋದೊಡನೆ ಮತ್ತೆ ಇವರಿಬ್ಬರನ್ನು ಕತ್ತಲು ತಬ್ಬಿತು. ಇವರಿಗಂತೂ ಆ ಹುಡುಗಿ ಮತ್ತು ಉಳಿದ ಹುಡುಗರ ಬಗ್ಗೆ ಈ ಕಪ್ಪು ಕುಳ್ಳು ಹುಡುಗ ಸುಳ್ಳು ಹೇಳುತ್ತಿದ್ದಾನೆ ಎಂದು ಅನುಮಾನವೇ ಉಳಿಯುಲಿಲ್ಲ. ಅವನಿಂದ ತಪ್ಪಿಸಿಕೊಳ್ಳಲು ಆಗದಷ್ಟು ಬಿಗಿಯಾಗಿ ಹಿಡಿದಿದ್ದಾನೆ. ಆ ಹಿಡಿತವೇ ಅವನ ಕ್ರೌರ್ಯವನ್ನು ಸಾಬೀತು ಮಾಡುವಂತಿತ್ತು. ಅವನ ನೋಟ ಕೂಡ ಅದೇ ಕತೆ ಹೇಳುತ್ತಿರುವಂತೆ ಇವರಿಗೆ ಭಾಸವಾಯಿತು. ಆದರೆ, ಈಗ ಏನೂ ಮಾಡುವಂತಿರಲಿಲ್ಲ. ಆ ಗಟ್ಟಿ ಕೈಗಳು ಸಡಿಲಾಗುವವರೆಗೂ ಕಾಯುವುದು ಒಂದನ್ನು ಬಿಟ್ಟು. ಈಗ ಮತ್ತೆ ಯಾರಿಂದ ತಪ್ಪಿಸಿಕೊಳ್ಳಬೇಕು, ಯಾರು ತನ್ನನ್ನು ಬೇಟೆಯಾಡುತ್ತಿದ್ದಾರೆನ್ನುವುದು ಇವರಿಗೆ ತಿಳಿಯದಂತ ಸ್ಥಿತಿ ನಿರ್ಮಾಣಗೊಂಡಿತು. ಈ ಹುಡುಗನ ಹಿಡಿತದಲ್ಲಿದ್ದ ಪ್ರೀತಿ ಈಗ ಕಾಣೆಯಾಗಿ ಬರೇ ಹುಂಬತನ ಮತ್ತು ಒರಟುತನ ಕಾಣತೊಡಗಿತು. ಇವನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಯೋಚಿಸತೊಡಗಿದರು. ಯಾವುದೇ ದಾರಿ ತೋರದೆ ಒಂದು ಬಗೆಯ ಹತಾಶೆ ಇವರನ್ನು ಆವರಿಸಿತು. + +ಇವರ ಹತಾಶೆ ಗೊತ್ತಾದಂತೆ ಆ ಹುಡುಗ “ಬೇಸರ ಪಡಬೇಡಿ ಸಾರ್. ನಿಮ್ಮನ್ನ ನಾನು ಮನೆಗೆ ಕರಕೊಂಡು ಹೋ‌ಗ್ತೀನಿ. ಬನ್ನಿ” ಎಂದು ಕೈ ಹಿಡಿದು ದರದರನೆ ಬಾಗಿಲಿನ ಎದುರಿನ ಗೋಡೆ ಕಡೆ ಎಳೆದುಕೊಂಡು ಹೋದ. ಅಲ್ಲೆಲ್ಲಿ ಹೋಗೋದು ಎಂದು ಕೇಳುವಷ್ಟರಲ್ಲಿ ಅಲ್ಲೊಂದು ಗೋಡೆಯಲ್ಲಿದ್ದ ಬಾಗಿಲನ್ನು ಆ ಹುಡುಗ ತೆಗೆದ. ಅರೆ ಅಲ್ಲೊಂದು ಬಾಗಿಲು ಇತ್ತ? ಏನಿದು ತನ್ನ ಸುತ್ತಲೂ ಇದ್ದದ್ದು ಕಾಣ್ತಿಲ್ಲ, ಇದ್ದಕ್ಕಿದ್ದ ಹಾಗೆ ಅಲ್ಲಿವರೆಗೂ ಕಾಣದ್ದು ಧುತ್ತನೆ ಅವತರಿಸಿಬಿಡತ್ತೆ. ಈ ಜಗತ್ತಿನ ನಿಯಮಗಳೇನು ಎಂದು ಈ ಹುಡುಗನನ್ನು ಕೇಳಬೇಕು ಎನಿಸಿ ಅವನತ್ತ ನೋಡಿದರೆ, ಅವನು ಇವರ ಯಾವುದೇ ತಾಕಲಾಟಕ್ಕೂ ಮನಸ್ಸು ಕೊಡದೆ ಅಲ್ಲಿಂದ ತಪ್ಪಿಸಿಕೊಳ್ಳುವ ದಾರಿ ಹುಡುಕುವುದರಲ್ಲಿ ಮಗ್ನವಾಗಿದ್ದಂತಿತ್ತು. ಇವರನ್ನು ಕರೆದುಕೊಂಡು ಲಿಫ್ಟಿನ ಎದುರೇ ಹೋಗುವಾಗ ಲಿಫ್ಟಲ್ಲಿ ಹೋಗಬಹುದಲ್ಲ ಎಂದು ಅನಿಸಿತು. ಆ ಹುಡುಗ “ಲಿಫ್ಟ್‌ ಬೇಡ ಸಾರ್. ಕೆಳಗೆ ಕಾಯ್ತಾ ಇರತಾರೆ. ಅವರ ತಲೆ ಹೇಗೆ ಓಡತ್ತೆ ಅಂತ ನನಗ್ಗೊತ್ತು. ನೀವು ಹೀಗ್ಬನ್ನಿ” ಎಂದು ಇನ್ನೆತ್ತಲೋ ಎಳೆದೊಯ್ದ. ಅಲ್ಲಿದ್ದ ಮೆಟ್ಟಿಲೊಂದನ್ನು ಹತ್ತಿಸತೊಡಗಿದ. ಕೆಳಗೆ ಹೋಗಬೇಕಲ್ಲ. ಈಗಷ್ಟೇ ಅವನೇ ಹೇಳಿದನಲ್ಲ. “ಈಗೇನು ಮೇಲಕ್ಕೆ?” ಎಂದು ಕೇಳಿದರು. ಅವನು ಬಾಯಿಗೆ ಬೆಟ್ಟಿಟ್ಟು ಸುಮ್ಮನೆ ಮೆಟ್ಟಿಲು ಹತ್ತಿಸಿದ. ಒಂದು ಮಹಡಿ. ಎರಡು ಮಹಡಿ. ಮೂರು. ನಾಕು… ಇವರಿಗೆ ಏದುಸಿರು ಬರಹತ್ತಿತ್ತು. ಆ ಹುಡುಗ ತಿರುಗಿ “ಆಗತ್ತ ಸಾರ್?” ಎಂದು ತುಂಬಾ ಕಾಳಜಿಯಿಂದ ಕೇಳಿದೊಡನೆ ಇವರಿಗೆ ಮನಸ್ಸು ಕರಗಿತು. ತನಗಾಗಿ ಇಷ್ಟು ಕಷ್ಟಪಡುತ್ತಿದ್ದಾನಲ್ಲ ಅನಿಸಿ ಪರವಾಗಿಲ್ಲ ಎಂದು ಮೆಟ್ಟಿಲು ಹತ್ತಿದರು. ಮತ್ತೊಂದು ಮಹಡಿ, ಮತ್ತೆ ಮೇಲಕ್ಕೆ. ಏದುಸಿರು ಬಂದು ಸುಧಾರಿಸಿಕೊಳ್ಳಲು ನಿಂತು ಆ ಹುಡುಗನ ಕೈಹಿಡಿದು “ಇನ್ನೂ ಎಷ್ಟು ಹತ್ತಬೇಕು?” ಎಂದು ಕೇಳಿದರು. ಆ ಹುಡುಗ ಮೇಲೆ ನೋಡಿ “ಇನ್ನೊಂದು ಐದಾರು ಮಹಡಿ ಅಷ್ಟೆ ಸಾರ್. ತಾರಸಿಗೆ ಹೋದಕೂಡಲೆ…” ಇವರಿಗೆ ಗಕ್ಕನೆ ಚುಚ್ಚಿದಂತಾಯಿತು. ಇವನ್ಯಾಕೆ ತಾರಸಿಗೆ ಕರಕೊಂಡು ಹೋಗ್ತಾ ಇದ್ದಾನೆ. ಸರಿಯಾಗಿ ಪದ್ಯ ಹೇಳಲಿಲ್ಲ ಅಂತಾನೋ, ತನ್ನ ಯಾವ ಪದ್ಯದ ಸಾಲೂ ನೆನಪಿರದಕ್ಕೆ ಸಿಟ್ಟಾಗಿದಾನ. ಮೇಲಿಂದ ತಳ್ಳಿ ಕೊಲ್ಲೋ ಯೋಚನೆ ಇರಬಹುದ. ಇವರ ಹೆಜ್ಜೆ ನಿಧಾನವಾದವು. ಸುಸ್ತಿನ ಜತೆ ಅನುಮಾನ ಭಯ ಏನೆಲ್ಲಾ ಸೇರಿಕೊಂಡವು. ಎದೆ ಡವಡವ ಅನ್ನುತ್ತಿತ್ತು. + +ಒಂದು ಮಹಡಿಗೆ ಬಂದೊಡನೆ ಪಕ್ಕದ ಬಾಗಿಲಿನ ಹೊರಗೆ ಏನೇನೋ ಮಾತುಗಳು ಕೇಳತೊಡಗಿತು. ಕೆಲವು ದನಿಗಳು ಇವರಿಗೆ ಪರಿಚಯವಾಯಿತು. ಆ ಹುಡುಗಿ ಮತ್ತು ಉಳಿದ ಹುಡುಗರ ನಡುವೆ ಆತಂಕದ ಮಾತುಗಳು ಅಸ್ಪಷ್ಟವಾಗಿ ಕೇಳುತ್ತಿದ್ದವು. ಜತೆಗೆ ಕೆಲವು ಕವಿ ಗೆಳೆಯರ ಮಾತುಗಳೂ ಸೇರಿಕೊಂಡಿದ್ದವು. ಆಗಾಗ ಮಾತು ಪಿಸುಮಾತಿಗೆ ಇಳಿಯುತ್ತಿತ್ತು. ಏನು ನಡೀತಿದೆ ಅವರ ನಡುವೆ ಅನ್ನುವ ಕುತೂಹಲ ಇವರನ್ನು ತಿನ್ನುತಿತ್ತು. ಪಿಸುಮಾತಿನಲ್ಲೂ ಇವರ ಹೆಸರು ಕೇಳಿಬಂದಂತೆ ಅನಿಸಿತು. ಅಂದರೆ ಅವರೆಲ್ಲಾ ಎನೋ ಪಿತೂರಿ ನಡೆಸುತ್ತಿದ್ದಾರೆಯೆ? ಈ ಹುಡುಗ ಹೇಳುವುದು ನಿಜವಿರಬಹುದು. ಇಲ್ಲಿಯವರೆಗಿನದೆಲ್ಲಾ ತನ್ನನ್ನು ನಂಬಿಸಲು ನಡೆದ ನಾಟಕವಿರಬೇಕು. ತಾನು ಅಷ್ಟು ಬೇಗೆ ಮೋಸಹೋದೆನಲ್ಲ. ಹೀಗೆಲ್ಲಾ ತಲೆಯಲ್ಲಿ ಅನುಮಾನದ ಅಸ್ಪಷ್ಟ ಅಲೆಗಳು ಏಳುತ್ತಿರುವಾಗ ಏನು ಮಾಡಲೂ ತೋಚದೆ ಕುಳ್ಳು ಹುಡುಗನತ್ತ ನೋಡಿದರು. ಇವರ ಮುಖದಿಂದಲೆ ಮನದ ತಳಮಳ ಅರಿತುಕೊಂಡವನಂತೆ ಆ ಹುಡುಗ ಬಾಗಿಲಿಗೆ ಕಿವಿಗೊಟ್ಟು “ನಾನು ಹೇಳಲಿಲ್ಲವ? ನೋಡಿ-ನನಗೆ ಗೊತ್ತಿತ್ತು” ಎಂದು ಇವರ ಕೈಯನ್ನು ಬಿಗಿಯಾಗಿ ಹಿಡಿದ. ಇವನಿಂದ ಬಿಡಿಸಿಕೊಂಡು ಆ ಬಾಗಿಲ ಬಳಿ ಹೋಗಿ ಸ್ಪಷ್ಟವಾಗಿ ಕೇಳಬೇಕು ಅಂತ ಇವರಿಗೆ ಬಲವಾಗಿ ಅನಿಸಿತು. ಆದರೆ ಆ ಹುಡುಗ ಇವರನ್ನು ಬಾಗಿಲಿಂದ ದೂರ ಹಿಡಿದಿದ್ದ. “ಸಾರ್. ಅವರು ತುಂಬಾ ಅಪಾಯ! ಆಗಲೇ ಹೇಳಿದನಲ್ಲ, ಅರ್ಥವಾಗಲಿಲ್ಲವ!” ಎಂದು ಎಚ್ಚರಿಸುವಂತೆ ದನಿಯೆತ್ತರಿಸಿ ಹೇಳಿದ್ದು ಇವರನ್ನು ಮೆತ್ತಗಾಗಿಸಿತು. ಅವನು ಎಚ್ಚರಿಸದಿದ್ದರೂ ಅವನಲ್ಲದೆ ಇವರಿಗೆ ಈಗ ಯಾರು ಗತಿ ಎಂಬಂತಾಗಿತ್ತು. ಅವನ ಜತೆ ಮೆಟ್ಟಿಲು ಹತ್ತ ತೊಡಗಿದರು. + +ಹುಡುಗ ಥಟ್ಟನೆ ನಿಂತುಬಿಟ್ಟ. ಇವರನ್ನು ಅಲ್ಲೇ ಹಿಡಿದು ನಿಲ್ಲಿಸಿಕೊಂಡ. ಏನೆಂದು ಇವರು ಇಣುಕಿ ನೋಡಲೂ ಬಿಡದೆ “ತಡೀರಿ ಸಾರ್, ಮುಂದೆ ಹೋಗೋದು ಬೇಡ… ಥೂ… ನಾಚಿಕೆ ಬಿಟ್ಟವರು…” ಎಂದ. ಇವರ ಕುತೂಹಲ ದ್ವಿಗುಣವಾಯಿತು. ತಮ್ಮ ನಡುಗುವ ಕೈಗಳಿಂದ ಬಿಡಿಸಿಕೊಂಡು ಇಣುಕಲು ಹಾತೊರೆಯುವಾಗ, ಆ ಕುಳ್ಳು ಹುಡುಗ ಸೋತವನಂತೆ ಇವರ ಕೈಬಿಟ್ಟು ಅಲ್ಲೇ ದಬ್ಬಕ್ಕನೆ ಕೂತುಬಿಟ್ಟ. ಮುಖ ಮುಚ್ಚಿಕೊಂಡು ಮುಸಿಮುಸಿ ಅಳುತೊಡಗಿದ. ಇವರಿಗೆ ಕಳವಳವಾಯಿತು. ಅಂತಹದೇನದು ಎಂಬಂತೆ ಒಂದು ಮೆಟ್ಟಿಲು ಮೇಲೆ ಹತ್ತಿ ನೋಡಿ ಇವರು ಅವಕ್ಕಾದರು. ಬಾಬ್ಕಟ್ ಹುಡುಗಿಯೂ, ಡ್ರೈವ್ ಮಾಡಿದ ಹುಡುಗನೂ ಚುಂಬಿಸುತ್ತಾ ಒಬ್ಬರನ್ನೊಬ್ಬರು ಮುದ್ದಿಸುತ್ತಾ ಮೈಮರೆತ್ತಿದ್ದರು. ಇವರು ಕೈಗೆ ಬಾಯಿಟ್ಟು ಒಂದು ಹೆಜ್ಜೆ ಹಿಂದಕ್ಕೆ ಬಂದೊಡನೆ, ಆ ಹುಡುಗಿಗೆ ಯಾರೋ ನೋಡಿದರು ಎಂದು ಅನಿಸಿರಬೇಕು. ಥಟ್ಟನೆ ದೂರ ಸರಿದು ಕೂದಲು ಬಟ್ಟೆ ಸರಿ ಮಾಡಿಕೊಂಡು ಮೆಟ್ಟಿಲು ಇಳಿದು ಬಂದಳು. ಇವರು ಬಂದು ಆ ಹುಡುಗನ ಬಳಿ ನಿಂತೊಡನೆ ಆ ಹುಡುಗಿಯೂ ಕೂತ ಹುಡುಗನ ಬಳಿ ಬಂದು ಅವನ ಬೆನ್ನಿಗೆ ಕೈಹಾಕಿ ಕೂತಳು. ಅವನ ಕಿವಿಯಲ್ಲಿ ಏನೋ ಪಿಸುಗುಟ್ಟುತ್ತಲೇ ಇದ್ದಳು. ಅಳುತ್ತಿದ್ದ ಹುಡುಗ ಅವಳನ್ನು ದೂರ ತಳ್ಳುತ್ತಾ ತಲೆಯಾಡಿಸುತ್ತಲೇ ಇದ್ದ. ಅವನ ಭುಜದ ಮೇಲೆ ಕೈ ಹಾಕಿ ಸಾಂತ್ವನ ಮಾಡುತ್ತಲೇ ಇದ್ದಳು. ಇಬ್ಬರೂ ತಮ್ಮನ್ನು ಮರೆತವರಂತೆ ಇರುವುದು ನೋಡಿ ಇವರ ಮನಸ್ಸಿನಲ್ಲಿ ವಿಚಿತ್ರವಾದ ಭಾವಗಳು ಮೂಡಿತು. ತನ್ನನ್ನು ಕಡೆಗಣಿಸುತ್ತಿದ್ದಾರೆ ಎಂದೇ? ತಮ್ಮದೇ ಲೋಕದಲ್ಲಿ ಕಳೆದುಹೋಗಿದ್ದಾರೆ ಎಂದೇ? ತಮ್ಮ ಬಗ್ಗೆ ತೋರಿದ ಆಸಕ್ತಿಯೆಲ್ಲಾ ಸುಳ್ಳು ಎಂದೇ? ಒಂದೂ ಗೊತ್ತಾಗಲಿಲ್ಲ. ಗಂಟಲು ಸರಿಪಡಿಸಿಕೊಳ್ಳುವಂತೆ ಸದ್ದು ಮಾಡಿದರು. ಕೂಡಲೇ ತಮ್ಮ ಬಗ್ಗೆಯೇ ನಾಚಿಕೆಯಾಯಿತು. ಏನನ್ನೋ ಪರಿಹರಿಸಿಕೊಳ್ಳುತ್ತಿರಬೇಕಾದರೆ ತನ್ನದು ಸ್ವಾರ್ಥ ಅನಿಸಿತು. ತಮ್ಮ ಇರವನ್ನು ನೆನಪಿಸುವುದು ಅತಿ ಕ್ಷುಲ್ಲಕ ಅನಿಸಿತು. + +ಒಂದು ಹೆಜ್ಜೆ ಮೇಲೆ ಹೋಗಿ ಸುಸ್ತಾದವರಂತೆ, ಕಾಯುವವರಂತೆ ಕೂತುಬಿಟ್ಟರು. ಕ್ಷಣ ಕಳೆದು ಇಬ್ಬರೂ ಗುಸುಗುಸು ಎಂದು ಮಾತಾಡಿಕೊಳ್ಳುತ್ತಲೇ ಎದ್ದು ನಿಂತರು. ಆ ಹುಡುಗಿ ಇವರತ್ತ ತಿರುಗಿ “ಇಲ್ಲೇ ಇರಿ. ಒಂದು ನಿಮಿಷ ಬರುತೀವಿ” ಎಂದವಳೇ ಇಬ್ಬರೂ ಮೆಟ್ಟಿಲು ಇಳಿದು ಹೊರಟು ಬಿಟ್ಟರು. ಇವರಿಗೆ ಒಳಗೆ ಹೊರಗೆ ಮೇಲೆ ಕೆಳಗೆ ಎಲ್ಲ ಬಿಕೋ ಅನಿಸತೊಡಗಿತು. ಏನು ಯೋಚಿಸುವುದೂ ಅರ್ಥಹೀನ ಅನಿಸಿತು. ಯಾವುದಕ್ಕೂ ಬೆಲೆಯಿಲ್ಲ ಎಂಬಂತೆ ಮೂಡಿದ ಭಾವಕ್ಕೆ ತಾವೇ ಬೆಚ್ಚಿಬಿದ್ದರು. ತಮ್ಮ ಹೆಂಡತಿಯನ್ನು ಮೊದಲು ಭೇಟಿಮಾಡಿದ ದಿನ. ಅವಳು ಕಾಲೇಜಿಗೆ ಹೋಗುತ್ತಾ ತಮ್ಮತ್ತ ಬೀರಿದ ಕುಡಿನೋಟ. ತಮ್ಮ ತಲೆಯಲ್ಲಿ ಎದ್ದ ಹುಚ್ಚು ಅಲೆ. ಹಲವಾರು ದಿನ ಅವಳು ಹೋಗಿ ಬಂದತ್ತ ಅಲೆದದ್ದು. ಯಾವುದೋ ಲೇಖಕರ ಭಾಷಣಕ್ಕೆ ಆಕೆ ಬಂದಿದ್ದು ನೋಡಿ ಇವರಿಗೆ ಸ್ವರ್ಗವೇ ಸಿಕ್ಕಂತಾಗಿದ್ದು. ಕಾಲೇಜಲ್ಲಿ ಇಲ್ಲದ ಧೈರ್ಯ ಅಲ್ಲಿ ಹೇಗೇ ಉಕ್ಕಿ ಬಂದು ಅವಳ ಪಕ್ಕವೇ ಹೋಗಿ ಕೂತು ಮಾತು ಶುರುಮಾಡಿದ್ದು. ಅದು ಹರಟೆಯಾಗಿದ್ದು. ಭಾಷಣಕ್ಕೆ ಇಬ್ಬರೂ ಕಿವಿಗೊಡದೆ ಮಾತಾಡುತ್ತಾ ಅಕ್ಕಪಕ್ಕದವರ ಕೈಯಲ್ಲಿ ಶ್ಶ್ ಅನ್ನಿಸಿಕೊಂಡದ್ದು, ಅನ್ನಿಸಿಕೊಂಡದ್ದಕ್ಕೆ ಏನೋ ಅರ್ಥವಿದೆ ಅಂತ ಇಬ್ಬರಿಗೂ ಅನಿಸಿತ್ತು. ಇಬ್ಬರೂ ಕೇಳದ ಭಾಷಣ ಮುಗಿದಿದ್ದೇ ಆಕೆ ಥಟ್ಟನೆ ಹೊರಟುಹೋಗಿದ್ದು. ಮರುದಿನ ಕಾಲೇಜಲ್ಲಿ ಏನೂ ಆಗದವಳಂತೆ, ತನ್ನ ಗುರುತೇ ಇಲ್ಲದವಳಂತೆ ಇದ್ದದ್ದು ನೆನಪಾಗಿ ಮೈ ಬೆಚ್ಚಗಾಯಿತು. ಯಾಕೋ ನಾವು ಅಂದಿನ ಹರಟೆ ಮುಗಿಸಲೇ ಇಲ್ಲ. ಆಮೇಲೆ ಏನೇನೋ ಮಾತಾಡಿದ್ದೇವೆ. ಆದರೆ ಆ ಮೊಟ್ಟಮೊದಲ ಹರಟೆಗೆ ಮರಳಿಯೇ ಇಲ್ಲ. ಅದನ್ನು ಮುಗಿಸಿಲ್ಲ ಎಂದು ತೀವ್ರ ಕಳವಳವಾಯಿತು. ಹೆಚ್ಚು ದಿನ ಉಳಿದಿಲ್ಲ ಎಂಬಂತ ಭಾವ ಮೊದಲ ಬಾರಿಗೆ ಎದೆ ನಡುಗಿಸಿತು. + +ಎದೆ ನಡುಗಿದ್ದೇ ಬೇಗ ಮನೆಗೆ ಹೋಗಬೇಕು ಎಂಬ ತವಕ ಹತ್ತಿಕೊಂಡಿತು. ಮನೆ ತಲುಪಿದ್ದೇ ಆ ಹರಟೆಯನ್ನು ಮುಗಿಸಬೇಕು ಅಂತ ತಮಗೇ ಮೇಷ್ಟ್ರು ಮಗುವಿಗೆ ಹೇಳಿಕೊಂಡಂತೆ ಹೇಳಿಕೊಂಡರು. (ಮಗುವಿನ ಮನಸ್ಸಿನ ಚಂಚಲತೆಯಿಂದ ಅದು ಮರೆಬಹುದು ಎಂಬ ಮೇಷ್ಟ್ರಿನ ವಿವೇಕ ಬಲವಾಗಿತ್ತು.) ಎದ್ದು ಬಟ್ಟೆ ಕೊಡವಿಕೊಂಡು ಮೂಲೆಯಲ್ಲಿ ಕಾಣುತ್ತಿದ್ದ ಬಾಗಿಲಿಗೆ ನಡೆದರು, ಇನ್ನೇನು ಬಾಗಿಲಿಗೆ ಕೈಹಚ್ಚಬೇಕು ಅನ್ನುವಾಗ ಅದು ಧಡಕ್ಕನೆ ತೆಗೆದುಕೊಂಡು ಆ ಹುಡುಗಿ ಕಾಣಿಸಿಕೊಂಡಳು. ಅವಳ ಮುಖದಲ್ಲಿ ಕಿಂಚಿತ್ತೂ ನಾಚಿಕೆಯಾಗಲಿ ಇಲ್ಲದ್ದು ಇವರಿಗೆ ಸೋಜಿಗವಾಯಿತು. ಆ ಹುಡುಗನ ಜತೆ ಮುದ್ದಾಡುತ್ತಿದ್ದವಳು ಇವಳೆಯೇ ಎಂದು ಕೇಳಿಕೊಂಡರು. ಆ ಹುಡುಗಿ ಬಂದವಳೇ ಇವರನ್ನು ತಬ್ಬಿಕೊಂಡು ಬಿಟ್ಟಳು. ಪಿಸುಮಾತಲ್ಲಿ “ನಿಮ್ಮ ಬಗ್ಗೆ ಎಷ್ಟು ಆತಂಕವಾಗಿತ್ತು ಗೊತ್ತ? ಸದ್ಯ ಸಿಕ್ಕಿದರಲ್ಲ!” ಎಂದು ಅವರ ಭುಜ ಹಿಡಿದು ಚಂದವಾಗಿ ನಕ್ಕಳು. ಇವರಿಗೆ ಅವಳ ನಗುವಿನಲ್ಲಿದ್ದ ಎಲ್ಲ ಭಾವಗಳೂ ಅರ್ಥವಾದ ಹಾಗನಿಸಿತು. “ಆ ಹುಡುಗನ ಜತೆ ನೀನು…” ಎಂದು ಏನೋ ಹೇಳಲು ಹೊರಟವರನ್ನು ಅವಳೇ ತಡೆದು “ನಮ್ಮ ಪ್ರಾಜೆಕ್ಟ್‌ನಲ್ಲೆಲ್ಲಾ ನಾನೇ ಒಬ್ಬಳೇ ಹುಡುಗಿ. ನನಗೆ ಒಬ್ಬನ ಮೇಲೇ ಮನಸ್ಸಿರೋದು. ಉಳಿದವರು ಕಷ್ಟ ಕೊಡಬಹುದು ಅಂತ ಅವರ ಜತೆ ಸಲಿಗೆಯಿಂದ ನಡಕೋತೀನಿ. ಅದನ್ನೋಡಿ ತಪ್ಪು ತಿಳಕೋಕೂಡದು…” ಇವರಿಗೆ ತಟ್ಟನೆ ನಾಚಿಕೆಯಾಗಿ “ಛೆ! ಇಲ್ಲ ಇಲ್ಲ… ತಪ್ಪು ಯಾಕೆ ತಿಳಕೋಬೇಕು.” ಎಂದು ಅವಳು ಮೊಮ್ಮಗಳು ಎನ್ನುವಂತೆ ತಲೆ ನೇವರಿಸಲು ಕೈಯಿಟ್ಟೊಡನೆ ಅವಳು “ನೀವಲ್ಲ ಅಂಕಲ್. ಇದಾರೆ ಜನ. ನೀತಿ ನಿಯತ್ತು ಇಲ್ಲದೋರು. ನನಗೆ ಪ್ರಾಜೆಕ್ಟ್‌ಗಿಂತ ಹುಡುಗರಲ್ಲೇ ಹೆಚ್ಚು ಆಸಕ್ತಿ ಅಂತ ಮೊದಲೇ ಅಂದುಕೊಂಡು ಮಾತು ಶುರು ಮಾಡ್ತಾರೆ. ತೆಗೆದು ಕಪಾಳಕ್ಕೆ ಬಾರಿಸಬೇಕು ಅನ್ಸತ್ತೆ. ಅಯ್ಯೋ ನನ್ನ ಕತೆ ಬಿಡಿ… ನೀವೀಗ ಏನು ಮಾಡಬೇಕು ಅಂತಿದೀರಿ?” ಎಂದು ನಿಂತು ಮುಂದಿನ ಹೆಜ್ಜೆ ನಿರ್ಧರಿಸುವಂತೆ ಕೇಳಿದಳು. + +“ಅಂದುಕೊಂಡ ಹಾಗೆ ಏನೂ ಆಗ್ತಿಲ್ಲ, ಆಗಿದ್ದನ್ನ ನಾನು ಅಂದುಕೊಂಡೇ ಇರಲಿಲ್ಲ. ಆಗೋದು ನಮ್ಮ ಅನಿಸಿಕೆಯನ್ನು ರೂಪಿಸಿಬಿಡತ್ತೆ. ಎಚ್ಚರವಾಗಿರಬೇಕು.” ಎಂದೆಲ್ಲಾ ಹೇಳಬೇಕನಿಸಿತೇ ಹೊರತು ಬೇಗ ಮನೆಗೆ ಹೋಗಬೇಕು, ಮುಖ್ಯವಾದ ಕೆಲಸ ಇದೆ ಎಂದು ಹೇಳಲು ಬಾಯೇ ಬರಲಿಲ್ಲ. ಅದರ ಬದಲು “ನನ್ನನ್ನ ಇಲ್ಲಿ ಯಾಕೆ ಕರಕೊಂಡು ಬಂದಿರಿ?” ಎಂದು ಮಾತ್ರ ಕೇಳಿದರು. “ನಾವೆಲ್ಲಿ ಕರಕೊಂಡು ಬಂದಿವಿ? ನೀವೇ ಬಂದಿದ್ದಲ್ವ? ಕಂಪ್ಯೂಟರ್ ಅಂದರೆ ತುಂಬಾ ಆಸಕ್ತಿ. ನಿಮ್ಮ ಪದ್ಯಗಳನ್ನೆಲ್ಲಾ ಅದರಲ್ಲಿ ಹಾಕಿ ಮುಂದೆ ಬರೋ ತಲೆಮಾರಿಗೆ ಉಳಿಸಬೇಕು. ಅದೊಂದು ಆಸೆ ಉಳಿಕೊಂಡಿದೆ ಅಂದಿದ್ರಂತೆ?” ಆ ಹುಡುಗಿಯ ಮಾತನ್ನು ನಿರಾಕರಿಸಲು ಬಾಯೇ ಬರಲಿಲ್ಲ. ಅವಳು ನಿಜ ಹೇಳುತ್ತಿರಬಹುದೆಂಬ ಅನುಮಾನಕ್ಕಿಂತ ಹೆಚ್ಚಾಗಿ ಅದನ್ನು ನಿರಾಕರಿಸಿ ಸಾಧಿಸುವುದು ಹೇಗೆ ಅಂತ ಅವರಿಗೆ ತೋಚಲಿಲ್ಲ. “ಅದು ಹಾಗಲ್ಲ. ಕಂಪ್ಯೂಟರ್ ಬಗ್ಗೆ ನನಗೂ ಆಸಕ್ತೀನೆ. ಆದರೆ…” ಎಂದು ಪದಗಳಿಗೆ ಹುಡುಕವಾಗ ಆ ಹುಡುಗಿಯೇ ಇವರ ಕಷ್ಟ ನೋಡಲಾಗದೆ “ಹೋಗಲಿ ಬಿಡಿ. ಡ್ರೈವ್ ಮಾಡೋನು ಬರ್ತಾನೆ ಆದಷ್ಟು ಬೇಗ ಇಲ್ಲಿಂದ ತಪ್ಪಿಸಿಕೊಂಡು ಹೋಗೋಣ” ಅಂದಿದ್ದೆ ಅರೆ ಈ ಹುಡುಗಿಯೂ ತಪ್ಪಿಸಿಕೊಳ್ಳುವ ಮಾತಾಡ್ತಾ ಇದ್ದಾಳಲ್ಲ. ಯಾರಿಂದ ಎಂದು ಯಾರೂ ಹೇಳಲ್ಲ. “ಯಾಕಮ್ಮ ತಪ್ಪಿಸಿಕೋಬೇಕು?” ಎಂದು ಕೇಳಿಯೇ ಬಿಟ್ಟರು. ಆ ಹುಡುಗಿ ತಟ್ಟನೆ “ನಿಮ್ಮನ್ನ ಇಲ್ಲಿ ಕರಕೊಂಡು ಬಂದನಲ್ಲ ಅವನಿಂದ ತಪ್ಪಿಸಿಕೊಳ್ಳದೇ ಇದ್ದರೆ ಅಷ್ಟೆ. ನಿಮ್ಮನ್ನ ಮೇಲೆ ಕರಕೊಂಡು ಹೋಗಿ ಕೆಳಗೆ ತಳ್ಳಬೇಕು ಅಂತ ಪ್ಲಾನ್ ಮಾಡಿದ್ದನಂತೆ. ಈಗ ಬಿಡಿ ಉಪಾಯದಿಂದ ಇಲ್ಲಿಂದ ಕರಕೊಂಡು ಹೋಗಿ ಅವನನ್ನು ರೂಮಲ್ಲಿ ಕೂಡಿ ಹಾಕಿ ಬಂದಿದ್ದೀನಿ” ಎಂದು ಹೇಳುವಾಗಲೇ ಪಾರ್ಟಿ ನಡೆದ ಜಾಗಕ್ಕೆ ಬಂದರು. ಅಲ್ಲಿ ಪಾರ್ಟಿ ನಡೆದಿತ್ತು ಅಂತ ಅಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ತಟ್ಟೆ ಲೋಟದಿಂದ ಹೇಳಬಹುದಿತ್ತು. ಆದರೆ ಇವರಿಗೆ ಆಶ್ಚರ್ಯವಾಗಿದ್ದು ಅಲ್ಲಿ ಬಿದ್ದಿದ್ದ ಬಟ್ಟೆ ಬರೆ, ಚಪ್ಪಲಿ ಶೂಸು ನೋಡಿ. ಏಲ್ಲಿ ಹೋಗಿದ್ದಾರೆ ಇವರೆಲ್ಲಾ? ಇಲ್ಲಿ ಯಾಕೆ ಇವೆಲ್ಲ ಬಿದ್ದಿದೆ ಎಂದು ಯೋಚಿಸುವಾಗಲೇ ಆ ಹುಡುಗಿ “ಈ ಕಡೆ ಬನ್ನಿ. ನಮ್ಮ ಜನಕ್ಕೆ ಒಂದು ಚೂರೂ ಬುದ್ಧಿ ಇಲ್ಲ. ನೋಡಿ ಹೇಗೆ ಕಸ ಮಾಡಿದ್ದಾರೆ. ಕ್ಲೀನರ್ಸ್ ಬೆಳಿಗ್ಗೆ ಬರೋವರಗೂ ಹೀಗೆ ಇರತ್ತೆ. ಥತ್, ಮಾನ ಮರ್ಯಾದೆ ಬಿಟ್ಟವರು.” ಎಂದು ಹೇಳುತ್ತಾ ಕಾಲಿಗೆ ಸಿಕ್ಕ ಚಪ್ಪಲಿಯನ್ನು ಪಕ್ಕಕ್ಕೆ ಒದ್ದದ್ದು ನೋಡಿ ಇವರಿಗೆ ಆ ಹುಡುಗಿಯ ಬಗ್ಗೆ ಯಾಕೋ ತುಂಬಾ ಅಭಿಮಾನವಾಯಿತು. ಅವಳ ಹೃದಯ ಸರಿಯಾದ ಕಡೆಯೇ ಇದೆ ಎಂದು ಖಾತ್ರಿಯಾಯಿತು. + +ಆದರೂ ಚಪ್ಪಲಿ ಶೂಸು ಬಗೆಹರಿಯಲಿಲ್ಲ. ಅದನ್ನೇ ನೋಡುತ್ತಾ ನಿಂತವರನ್ನು ಹೊರಡಿಸುವಂತೆ ಅವಳು “ಇಲ್ಲಿ ಗಲಾಟೆಯಾಗಿದ್ದು ನಿಮಗೆ ಗೊತ್ತಿಲ್ವ? ಎಲ್ಲೆಲ್ಲಿಂದಲೋ ಪೋಕರಿಗಳೆಲ್ಲಾ ಬಂದು ಕಲ್ಲು ಹೊಡೆದಿದ್ದು, ಪಾರ್ಟಿಯೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಒಂದಿಬ್ಬರಿಗೆ ಕಲ್ಲು ತೂರಾಟದಿಂದ ಏಟಾಗಿ ರಕ್ತ ಹರಿದಿದ್ದು? ಅವರೆಲ್ಲಾ ಬಡವರಂತೆ, ತಿನ್ನೋಕೆ ಇಲ್ವಂತೆ. ಅದಕ್ಕೆ ಇಲ್ಲಿ ಬಂದು ಕಲ್ಲು ಹೊಡೆದರೆ ಊಟ ಸಿಗತ್ತ? ಹೋಗಿ ಗೌರ್ಮೆಂಟನ್ನ ಕೇಳಬೇಕು” ಎಂದು ಸಿಡುಕಿನಿಂದ ಹೇಳಿದಳು. ಅವಳಿಗೆ ಅರ್ಥವಾಗುವಂತೆ ಹೇಳಬೇಕು ಅನಿಸಿದರೂ, ಇಲ್ಲಿ ಗಲಾಟೆಯಾಗಿದ್ದು, ಅದು ತಮಗೆ ಗೊತ್ತಾಗದೇ ಹೋಗಿದ್ದು ಇವೇ ಇವರನ್ನು ಆವರಿಸಿಕೊಂಡುಬಿಟ್ಟಿತು. ಅದು ಹೇಗೆ ಒಂದೇ ಬಿಲ್ಡಿಂಗನಲ್ಲಿದ್ದೂ ನಡೆಯೋ ಘಟನೆ ಗೊತ್ತಾಗೋದೇ ಇಲ್ಲ? ಗೊತ್ತಾದರೂ ಯಾರು ಯಾಕೆ ಗಲಾಟೆ ಮಾಡಿದರು ಅನ್ನೋದು ಎಷ್ಟು ಬೇಗ ಪುರಾಣ ಆಗಿ ಹೋಗತ್ತಲ್ಲ. ಪುರಾಣದ ಸುಳ್ಳಿನ ಮೂಲಕ ಸತ್ಯ ಬಿಚ್ಚಿಡಬಹುದು. ಆದರೆ ನಮ್ಮ ಚಾಣಾಕ್ಷತನದಲ್ಲಿ ಪುರಾಣಗಳನ್ನು ಸತ್ಯ ಬಚ್ಚಿಡೋದಕ್ಕೆ ಬಳಸ್ತೀವಲ್ಲ? ಇದೆಲ್ಲಾ ಬಗೆಹರೀದೆ ಇವಳಿಗೆ ಹೇಗೆ ಅರ್ಥಮಾಡಿಸೋದು? ಕಾಲಲ್ಲಿ ಏನೋ ಚುರಕ್ ಅಂದ ಹಾಗಾಯಿತು. ಸ್ಸ್ ಎನ್ನುತ್ತಾ ಕೂತು ಕಾಲಿಗೆ ಚುಚ್ಚಿಕೊಂಡ ಗಾಜಿನ ತುಂಡನ್ನು ಕಿತ್ತುಕೊಂಡರು. ಸವೆದ ಚಪ್ಪಲಿ ಒಳಗಿಂದ ಚುಚ್ಚಿತ್ತು. ರಕ್ತ ಬಳಕ್ಕನೆ ಚಿಮ್ಮಿತು. ಹುಡುಗಿ “ಅಯ್ಯೋ, ತಡೀರಿ ಬ್ಯಾಂಡೇಜ್ ತರ್ತೀನಿ” ಅಂತ ಓಡಿದಳು. ಇವರು ಸುತ್ತ ಕಿಟಕಿ ಬಾಗಿಲು ನೋಡಿದರು. ಒಂದೂ ಗಾಜೂ ಒಡೆದಿರಲಿಲ್ಲ. ಇದೆಲ್ಲಿಂದ ಬಂತು ಹಾಗಾದರೆ ಎಂದು ಕೈಯಲ್ಲಿದ್ದ ಗಾಜು ನೋಡದಾಗ ಅದು ಯಾವುದೋ ಲೋಟದ ಪೀಸು ಅಂತ ಗೊತ್ತಾಯಿತು. ಅಷ್ಟರಲ್ಲಿ ಆ ಬಾಬ್ಕಟ್ ಹುಡುಗಿ ಚುರುಕಾಗಿ ಬಂದು ಗಾಯ ಒರೆಸಿ, ಬ್ಯಾಂಡೇಜ್ ಅಂಟಿಸಿಬಿಟ್ಟಳು. ಅವಳ ಚುರುಕುತನಕ್ಕೆ ಇವರು ಬೆರಗಾದರು. ನೀನು ನರ್ಸ್ ಆಗಬೇಕಿತ್ತು ಎಂದು ಅನಿಸಿದ್ದನ್ನು ಹೇಳಲಿಲ್ಲ. ಎಂತ ಕ್ಲೀಷೆ ಅನಿಸಿತು. ಇವರ ಕಾಲಿಗೆ ಇನ್ನೆಲ್ಲಾದರೂ ಏಟಾಗಿದೆಯ ಎಂದು ನೋಡುತ್ತಾ “ನಮ್ಮ ಕೆಲಸ ಈ ಪುಂಡರಿಗೆ ಅರ್ಥ ಆಗಲ್ಲ. ಅದಕ್ಕೆ ನಮ್ಮನ್ನ ಅನುಮಾನದಿಂದ ನೋಡ್ತಾರೆ. ಚಾನ್ಸ್ ಸಿಕ್ಕಿದ ತಕ್ಷಣ ಕಲ್ಲು ಹೊಡೀತಾರೆ. ಒಂದಿಷ್ಟೂ ಕಂಟ್ರೋಲೆ ಇಲ್ಲ.” ಎಂದು ಗೊಣಗಿಕೊಳ್ಳುವಾಗ ದೂರದಿಂದ ಡ್ರೈವ್ ಮಾಡಿದ ಹುಡುಗ ಪೋಕರಿಯಂತೆ ನಿಂತು ಇವರನ್ನೇ ನೋಡುತ್ತಿದ್ದ. + +ಇವರು ಆ ಹುಡುಗ ಯಾರೋ ಎಂದು ಗೊತ್ತಾಗದೆ ಹೆದರಿ ಆ ಹುಡುಗಿಯನ್ನು ಮೆದುವಾಗಿ ತಿವಿದರು. ಅವಳು ತಲೆಯೆತ್ತಿ ಇವರ ದೃಷ್ಟಿ ಅನುಕರಿಸಿ ಅವನನ್ನು ನೋಡಿ ಕೈಮಾಡಿ ಕರೆದಳು. ಅವನು ಬೇಡ ನೀವೇ ಬನ್ನಿ ಎಂಬಂತೆ ಸನ್ನೆ ಮಾಡಿದ. ಆ ಹುಡುಗಿ “ಇವನೊಬ್ಬ ದಡ್ಡ” ಎನ್ನುತ್ತಾ ಅವನ ಬಳಿ ಇವರನ್ನು ಕೈ ಹಿಡಕೊಂಡು ಹೋದಳು. ಹತ್ತಿರ ಹೋದೊಡನೆ ಅವನೇ ಅವಳ ಬಳಿ ಬಂದು ಪಿಸುದನಿಯಲ್ಲಿ ಇವರಿಗೆ ಕೇಳದ ಹಾಗೆ ಏನೇನೋ ಹೇಳಿದ. ಅವಳು ಅದಕ್ಕೆ ಸಮಜಾಯಷಿಯನ್ನೂ ಹೇಳಿದಳು. ಸ್ವಲ್ಪ ಮುಂಚೆಯಷ್ಟೇ ಮೆಟ್ಟಿಲಲ್ಲಿ ನಿಂತು ಒಬ್ಬರಲ್ಲೊಬ್ಬರು ಮೈಮರೆತಿದ್ದರಲ್ಲ. ಈಗ ಎಷ್ಟು ಗಂಭೀರವಾಗಿ ಮಾತಾಡುತ್ತಿದ್ದಾರಲ್ಲ. ಇಬ್ಬರ ಕಣ್ಣಲ್ಲೂ ಮೋಹದ ಅಮಲಿಲ್ಲವಲ್ಲ ಎಂದು ಮತ್ತೆ ಮತ್ತೆ ಅವರ ಕಣ್ಣುಗಳಲ್ಲಿ ಹುಡುಕಿದರು. + +ನೋಡ ನೋಡುತ್ತಾ ಇವರನ್ನು ಕಾರಿನ ಬಳಿ ಕರಕೊಂಡು ಬಂದು ಇಬ್ಬರೂ ಒಳಗೆ ಕೂಡಿಸಿದರು. ಇದ್ದಕ್ಕಿದ್ದ ಹಾಗೆ ಆ ಹುಡುಗಿ ತಾನೂ ಬಗ್ಗಿ ಇವರನ್ನೂ “ಬಗ್ಗಿ ಬಗ್ಗಿ” ಎಂದು ಒತ್ತಾಯಿಸಿದಳು. ಇವರು ಯಾಕೆಂದು ಅರ್ಥವಾಗದಿದ್ದರೂ ಆ ಹುಡುಗಿಯ ದನಿಯಲ್ಲಿದ್ದ ಆತುರತೆಯನ್ನು ಗುರುತಿಸಿ ಬಗ್ಗಿಬಿಟ್ಟರು. ಹೊರಡಬೇಕಾಗಿದ್ದ ಕಾರು ಹೊರಡದೇ ಇರುವಾಗ “ಹೊರಡೋ… ಬೇಗ!” ಎಂದು ಪಿಸುಗುಟ್ಟಿದ್ದಳು. ಡ್ರೈವ್ ಮಾಡುವ ಹುಡುಗ “ಅವರು ನೋಡಿ ಬಿಟ್ಟಿದ್ದಾರೆ.” ಎನ್ನುವಾಗಲೇ ಇವರ ಕಿಟಕಿ ಬಳಿ ಮೊದಲು ಸಿಕ್ಕ ಹುಡುಗ ಬಂದು ನಿಂತಿದ್ದ. ಇನ್ನೊಂದು ಕಿಟಕಿ ಬಳಿ ಕುಳ್ಳುಹುಡುಗ. ಇಬ್ಬರೂ ಆವೇಶದಿಂದ ಇದ್ದರು. ಅವರ ಹಿಂದ ಕೈಯಲ್ಲಿ ದೊಣ್ಣೆ ಖಡ್ಗ ಹಿಡಿದ ಹಲವಾರು ಕಾರಿನ ಬಳಿ ಬರಲು ನುಗ್ಗುತ್ತಿದ್ದರು. ಇವರಿಬ್ಬರು ಅವರನ್ನೆಲ್ಲಾ ತಡೆದು ಹಿಂದಕ್ಕೆ ಹಿಡಿದಂತಿತ್ತು. ಹುಡುಗಿ ಹಿಂದೆ ತಿರುಗಿ ನೋಡಿ ಚಿಟ್ಟನೆ ಚೀರಿದಳು. ದೂರದಲ್ಲಿ ಒಂದು ಕಾರು ಧಗಧಗ ಎಂದು ಉರಿಯುತ್ತಿತ್ತು. ಅದನ್ನು ನೋಡಿ ಇವರು ಹುಡುಗಿಯ ಕೈಯನ್ನು ಬಲವಾಗಿ ಹಿಡಿದರು. “ಹೆದರಬೇಡಿ. ಇವರಿಬ್ಬರು ಇದ್ದಾರಲ್ಲ. ಏನೂ ಆಗಲ್ಲ” ಎಂದು ಅವಳು ಹೇಳುತ್ತಿದ್ದರೂ ಇವರಿಗೆ ಗೊತ್ತಿರುವ ಹುಡುಗರೇ ಹೆದರಿಕೆ ಹುಟ್ಟಿಸುವಂತಿದ್ದರು. ಅವರ ಕಣ್ಣುಗಳೂ ಉಳಿದವರ ಕಣ್ಣುಗಳಂತೆ ನಿಗಿನಿಗಿ ಉರಿಯುತ್ತಿದೆಯೋ ಅಥವಾ ಅದು ಬರೇ ನನ್ನ ಭ್ರಮೆಯೋ ಎಂದು ಕೇಳಿಕೊಳ್ಳುವಾಗಲೇ ಮೊದಲು ಸಿಕ್ಕ ಹುಡುಗ ಹಚ್ಚಗೆ ನಕ್ಕ. ಮೊದಲು ಸಿಕ್ಕಾಗಲೂ ಹೀಗೇ ನಕ್ಕಿದ್ದ ಅಂದುಕೊಂಡರು. ತನ್ನ ಹಳೇ ಪದ್ಯದ ನಾಯಕನಲ್ಲವೇ ಇವನು ಎಂದು ಇವರೂ ನಕ್ಕರು. ಆದರೆ ಒಳಗೊಳಗೆ ಆ ನಗುವಿನ ಹಿಂದೆ ಸಣ್ಣ ಅಣಕವೂ ಇದ್ದಂತೆ ಅನಿಸಿ ಬೆವತರು. + +ಅಷ್ಟರಲ್ಲಿ ಆ ಕುಳ್ಳು ಹುಡುಗ ಡ್ರೈವ್ ಮಾಡುವವನಿಗೆ ಹೋಗೆನ್ನುವಂತೆ ಸೂಚಿಸಿದ. ಇವರಿಗೆ ತಲೆಬಾಗಿ ಕೈಮುಗಿದ. ಇವರಿಗೆ ಏನು ಮಾಡಬೇಕೆಂದು ಹೊಳೆಯಲಿಲ್ಲ. ಅವನ ಮೃದು ಕೈಗಳನ್ನಾದರೂ ಒಮ್ಮೆ ಹಿಡಿಯಬೇಕನಿಸಿತು. ಅನಿಸಿದ್ದು ತಡೆಯಲಾರದ ಒತ್ತಡವಾಗಿ “ಕಾರು ನಿಲ್ಸಿ” ಎಂದು ಪಿಸುಗುಟ್ಟಿದರು. ಆ ಹುಡುಗಿ ತಟ್ಟನೆ “ಬೇಡ… ಬೇಡ…ಬೇಗ ಹೋಗು… ನಿಮಗೇನಾಗಿದೆ?” ಎಂದು ಕೇಳಿದರು. ಇವರಿಗೆ ತನ್ನ ಬಾಲ್ಯದ ಗೆಳೆಯ ಶಂಕರನ ಬಗ್ಗೆ ಈ ಹುಡುಗಿಗೆ ಎಲ್ಲ ಹೇಳಬೇಕು ಅನಿಸಿ ಎಲ್ಲಿ ಶುರು ಮಾಡುವುದು ಎಂದು ಯೋಚಿಸಿದರು. ಆ ಗಳಿಗೆಯಲ್ಲೇ ಇವರಿಗೆ ತನಗೆ ಕತೆ ಹೇಳಲು ಬರೋದಿಲ್ಲ ಅನಿಸಿತು. ಪದ್ಯ ಬರೀಬಹುದು. ಆದರೆ ಕತೆ ಹೇಳಲಿಕ್ಕೆ ಹೋದರೆ ಕತೆ ಹೇಳಿಸಿಕೊಂಡವರು ಮತ್ತು ಕೇಳಿದವರು ಇಬ್ಬರಿಗೂ ತಾನು ಅಪಚಾರ ಮಾಡಿದಂತಾಗುತ್ತದಲ್ಲ. ಇದೆಂತಾ ಸಂದಿಗ್ಧ ಎಂದು ಹಿಡಿದಿದ್ದ ಆ ಹುಡುಗಿಯ ಕೈಬಿಡುತ್ತಾ “ನಿನ್ನ ಕೈ ಕೂಡ ತುಂಬಾ ಮೃದುವಾಗಿದೆ” ಅಂದರು. ಆ ಹುಡುಗಿ ಅಸಹ್ಯದಿಂದೆಂಬಂತೆ ಕೈ ತಟ್ಟನೆ ಹಿಂದಕ್ಕೆಳೆದುಕೊಂಡು ಹೊರನೋಡುತ್ತಾ ಕುಳಿತಳು. + +ಇವರ ಮನೆಯ ರಸ್ತೆಗೆ ತಿರುಗುವುದು ಬೇಡ, ನೋಡಿದವರು ಏನಂದುಕೊಂಡಾರು ಎಂದು ಆತಂಕದಿಂದ ಇವರು “ಇಲ್ಲೇ ಬಿಡಿ” ಎಂದೊಡನೆ ಇವರ ಮಾತಿನ ಇಂಗಿತ ಅರಿತವನಂತೆ ಡ್ರೈವ್ ಮಾಡುತ್ತಿದ್ದ ಹುಡುಗ ನಿಲ್ಲಿಸಿದ. ಇವರು ನಿಧಾನಕ್ಕೆ ನಡೆದು ಮನೆಯ ಬಾಗಿಲವರೆಗೂ ಹಿಂದೆ ತಿರುಗಿ ನೋಡಲಿಲ್ಲ. ನೋಡಿದರೆ ಏನೋ ಕಾದಿದೆ ಎಂಬಂತ ಆತಂಕದಲ್ಲೇ ನಡೆದರು. ಬಾಗಿಲು ತಟ್ಟಿ ಕಡೆಗೊಮ್ಮೆ ಎಂಬಂತೆ ಹಿಂದಕ್ಕೆ ತಿರುಗಿ ನೋಡಿದರು. ಕಾರು ಹೊರಟು ಹೋಗಿತ್ತು. ದಡಬಡನೆ ಬಾಗಿಲು ತೆಗೆದ ಹೆಂಡತಿ “ಇಷ್ಟು ಬೇಗ ಬಂದುಬಿಟ್ಟರ? ಆಟೋಲಿ ಬಂದರ? ಆಟೋ ಸದ್ದೇ ಆಗಲಿಲ್ಲ” ಎನ್ನುವಾಗ ಒಳಗೆ ಬಂದು ಚಪ್ಪಲಿ ಬಿಚ್ಚಿ ಕಾಲು ತೊಳೆದುಕೊಳ್ಳಲು ಒಳಗೆ ಹೋಗುವಾಗ ಹೆಂಡತಿ ಬಾಗಿಲು ಹಾಕುವ ಸದ್ದು ಕೇಳಿ ದಡಬಡನೆ ಬಚ್ಚಲಿಂದ ಹೊರಬಂದು “ಬಾಗಿಲು ಹಾಕಬೇಡ, ತೆಗೆದೇ ಇರಲಿ… ” ಎಂದು ಹೇಳಿ ಮತ್ತೆ ಮೆಲ್ಲಗೆ ಬಚ್ಚಲಿಗೆ ನಡೆದರು. + +ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು. \ No newline at end of file diff --git a/Kenda Sampige/article_502.txt b/Kenda Sampige/article_502.txt new file mode 100644 index 0000000000000000000000000000000000000000..26c883bdb88c11669f3adede6f575422bedc977e --- /dev/null +++ b/Kenda Sampige/article_502.txt @@ -0,0 +1,35 @@ +byರಾಜು ಹೆಗಡೆ|Dec 20, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byಸಿಡ್ನಿ ಶ್ರೀನಿವಾಸ್|Dec 20, 2017|ಸಾಹಿತ್ಯ| 0 Comments + +ಜೋಯಿಸರು ಶ್ರೀಧರನ ಬಳಿ ಬಂದು ‘ನೀವು ಒಳಗೆ ಬನ್ನಿ’ ಎಂದು ಪಕ್ಕದ ವಿಶಾಲವಾದ ಕೊಠಡಿಗೆ ಕೊಂಡೊಯ್ದರು. ಅದೇ ನಿಜವಾದ ಚಿತಾಗಾರ. ದೊಡ್ಡ ಕಿಟಕಿಯ ಮುಂದೆ ಶವದ ಪೆಟ್ಟಿಗೆಯನ್ನು ಕನ್ವೆಯರ್ ಮೇಲೆ ಇಡಲಾಗಿದೆ. + +byಸಹ್ಯಾದ್ರಿ ನಾಗರಾಜ್|Dec 19, 2017|ಸಾಹಿತ್ಯ| 0 Comments + +‘ಮುಗಿಲು ಅಳುತ್ತಿದೆ ನನ್ನ ಬದಲು’ ಎಂದು ನಮ್ಮನ್ನು ನಾವೇ ಸಮಾಧಾನಿಸಿಕೊಂಡರೂ ಅದ್ಯಾಕೋ ಈ ಮೊದಲ ಮಳೆ ಒಮ್ಮೊಮ್ಮೆ ರೇಜಿಗೆ. ಮೋಡಗಳಿಗೆ ಗಾಳ ಹಾಕಿ ನಿಲ್ಲಿಸಿ ಆಕಾಶಕ್ಕೊಂದು ದೂರು ಬಿಸಾಕುವ ಉಮೇದು ನಮಗೆ. + +byಸಹ್ಯಾದ್ರಿ ನಾಗರಾಜ್|Dec 19, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byಸಂಧ್ಯಾ ಸಂಧ್ಯಾ|Dec 19, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byಎಸ್.ಬಿ. ಜೋಗುರ|Dec 19, 2017|ವಾರದ ಕಥೆ,ಸಾಹಿತ್ಯ| 0 Comments + +ಮೀನು ತಿನ್ನುವವಳನ್ನು ಮದುವೆಯಾದಂದಿನಿಂದಲೂ ಅದನ್ನು ಕಲಿತವನು. ತನ್ನದೇ ಜೊತೆಗೆ ಕೆಲಸ ಮಾಡುವ ಕಮಲಾಕರ ದೇಸಾಯಿ ಗಂತೂ ದಿನಾಲೂ ಮೀನು ಬೇಕೇ ಬೇಕು. + +byನಾಗಶ್ರೀ ಶ್ರೀರಕ್ಷ|Dec 18, 2017|ಸಾಹಿತ್ಯ| 0 Comments + +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. + +byಹೇಮಾ ವೆಂಕಟ್|Dec 18, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byಹೇಮಾ ವೆಂಕಟ್|Dec 18, 2017|ಸಾಹಿತ್ಯ| 0 Comments + +ಇಷ್ಟಾಗಿಯೂ ವೆಂಕಟ್ ಬದುಕಿಗೊಂದು ದಾರಿ ಮಾಡಿಕೊಂಡಿರಲಿಲ್ಲ. ಪಿತ್ರಾರ್ಜಿತವಾಗಿ ಬಂದ ತುಂಡು ಆಸ್ತಿಯನ್ನು ಮಾರಿ ಹಣಕಾಸಿನ ಸಂಸ್ಥೆ ನಡೆಸಿದ್ದು ಬದುಕಿನಲ್ಲಿ ಮಾಡಿದ ಒಂದೇ ತಪ್ಪು ನಿರ್ಧಾರ. \ No newline at end of file diff --git a/Kenda Sampige/article_503.txt b/Kenda Sampige/article_503.txt new file mode 100644 index 0000000000000000000000000000000000000000..cd3e1320e7d6d1efe8f6e39e0e106160d5d20b89 --- /dev/null +++ b/Kenda Sampige/article_503.txt @@ -0,0 +1,11 @@ +ಕಾನೂನಿನ ಎದುರು ಒಬ್ಬ ದ್ವಾರಪಾಲಕ ನಿಂತಿದ್ದಾನೆ. ಹಳ್ಳಿಯವನೊಬ್ಬ ಅವನ ಹತ್ತಿರ ಬಂದು ಕಾನೂನಿನ ಬಳಿಗೆ ಬಿಡು ಅಂತ ಕೇಳಿದ್ದಕ್ಕೆ ಆ ದ್ವಾರಪಾಲಕ ಈವಾಗ ಬಿಡೋಕೆ ಆಗಲ್ಲ ಅಂತಾನೆ. ಬಂದವನು ಯೋಚಿಸಿ, ಹಾಗಾದರೆ ಆಮೇಲೆ ಬಿಡಬಹುದು ಅಂತ ಅರ್ಥಾನ ಅಂತ ಕೇಳ್ತಾನೆ. ದ್ವಾರಪಾಲಕ ‘ಆಗಬಹುದೇನೋ, ಆದರೆ ಈಗಲ್ಲ’ ಅನ್ತಾನೆ. ಕಾನೂನಿನ ಹತ್ತಿರ ಬಿಡೋ ಗೇಟು ತೆಕ್ಕೊಂಡೇ ಇರೋದರಿಂದ, ದ್ವಾರಪಾಲಕ ಪಕ್ಕಕ್ಕೆ ನಿಂತಿದ್ದರಿಂದ, ಇವನು ಬಾಗಿಲಿಂದ ಒಳಕ್ಕೆ ಇಣುಕಿ ನೋಡಲು ಬಗ್ಗುತ್ತಾನೆ. ಅದನ್ನು ನೋಡಿ ದ್ವಾರಪಾಲಕ ‘ನಿನಗೆ ಅಷ್ಟೊಂದು ಆಸೆ ಇದ್ದರೆ ನನ್ನ ಮಾತು ಮೀರಿ ಒಳಗೆ ಹೋಗು ನೋಡಣ. ಆದರೆ ನೆನಪಿಟ್ಕೊ: ನಾನು ಬಲಶಾಲಿ. ಅಲ್ಲದೆ ನಾನು ಅತಿ ಕೆಳಗಿನ ಕಾವಲಿನವನು. ಒಳಗೆ ಒಂದೊಂದು ಕೋಣೆಲೂ ಕಾವಲಿನವರು ಇದ್ದಾರೆ. ಒಬ್ಬೊಬ್ಬರೂ ಮುಂಚಿನವರಿಗಿಂತ ಬಲಶಾಲಿಗಳು. ಮೂರನೇ ಕಾವಲುಗಾರನ್ನ ನಾನು ಕಣ್ಣೆತ್ತಿ ನೋಡೋಕೆ ಕೂಡ ಆಗಲ್ಲ.’ ಅಂತ ನಗುತಾನೆ. + +ಹಳ್ಳಿಯಿಂದ ಬಂದವ ಇಷ್ಟೆಲ್ಲಾ ತಾಪತ್ರಯ ಇರತ್ತೆ ಅಂದುಕೊಂಡಿರಲಿಲ್ಲ. ಅವನು ಅನ್ನಿಸೋದು ಕಾನೂನು ಎಲ್ಲರಿಗೂ ಯಾವಾಗಲೂ ನಿಲುಕೋ ಹಾಗಿರಬೇಕು ಅಂತ. ಆದರೆ ಈ ದಪ್ಪ ಚರ್ಮದ ಕೋಟು ಹಾಕ್ಕೊಂಡಿರೋ ದ್ವಾರಪಾಲಕನ ನೋಡಿದರೆ, ಅವನ ಚೂಪಾದ ದೊಡ್ಡ ಮೂಗು, ಅವನ ಉದ್ದದ ಸಪೂರದ ಕಪ್ಪು ಗಡ್ಡ ನೋಡಿದರೆ, ಅವನೇ ಅನುಮತಿ ಕೊಡೋ ತನಕ ಕಾಯೋದು ಒಳ್ಳೇದು ಅಂತ ತೀರ್ಮಾನಿಸಿಕೋತಾನೆ. ದ್ವಾರಪಾಲಕ ಅವನಿಗೆ ಒಂದು ಬೆನ್ನಿಲ್ಲದ ಕುರ್ಚಿಕೊಟ್ಟು ಬಾಗಿಲ ಒಂದು ಪಕ್ಕ ಕೂತುಕೊಳ್ಳೋಕೆ ಬಿಡುತಾನೆ. ಅಲ್ಲಿ ಆ ಹಳ್ಳಿಯವನು ತುಂಬಾ ದಿನಗಳು, ವರ್ಷಗಳು ಕೂತುಕೊಂಡೇ ಇರ್ತಾನೆ. ಬೇಕಾದಷ್ಟು ಸಲ ಅನುಮತಿಗಾಗಿ ಪ್ರಯತ್ನ ಪಡ್ತಾನೆ, ಮೇಲಿಂದ ಮೇಲೆ ಇವನ ಬೇಡಿಕೆಗಳಿಂದ ದ್ವಾರಪಾಲಕನನ್ನ ಬೇಜಾರು ಮಾಡಿಬಿಡ್ತಾನೆ. ಕಾವಲುಗಾರ ಇವನಿಗೆ ಆಗಾಗ ಚಿಕ್ಕ ಪುಟ್ಟ ಪರೀಕ್ಷೆ ಮಾಡ್ತಾ ಅವನ ಊರು ಮನೆ ಬಗ್ಗೆ, ಆಮೇಲೆ ಇನ್ನೂ ಏನೇನೋ ಕೇಳ್ತಾನೆ. ಆದರೆ ಆ ಪ್ರಶ್ನೆಗಳಾವುದೂ ಆಪ್ತವಾದ್ದಲ್ಲ. ಬರೇ ಸಭ್ಯರು ಕೇಳೋ ಹಾಗೆ. ಪ್ರತಿಸಲಾನೂ ಕೊನೆಗೆ ಮತ್ತೆ ‘ಒಳಗೆ ಬಿಡೋಕೆ ಆಗಲ್ಲ’ ಅಂತ ಮಾತು ಮುಗಿಸ್ತಾ ಇದ್ದ. ಹಳ್ಳಿಯವನು ಈ ಪ್ರಯಾಣಕ್ಕೆ ಚೆನ್ನಾಗೇ ತಯಾರಾಗಿ ಬಂದಿದಾನೆ. ತನ್ನ ಬಳಿ ಇದ್ದ ಬೆಲೆ ಬಾಳೋದನ್ನೆಲ್ಲಾ ದ್ವಾರಪಾಲಕನಿಗೆ ಲಂಚ ಕೊಟ್ಟು ಕೊಟ್ಟು ಕೈ ಖಾಲಿ ಮಾಡಿಕೊಂಡಿದಾನೆ. ದ್ವಾರಪಾಲಕ ಕೊಟ್ಟಿದ್ದೆಲ್ಲಾ ಒಪ್ಪಿಸ್ಕೊಂಡು, ತಗೊಳ್ತಾ ‘ನಾನು ತಗೊಳ್ತಾ ಇರೋದು, ನೀನು ಯಾವುದೋ ಪ್ರಯತ್ನ ಮಾಡದೆ ಬಿ‌ಟ್ಟೆನಲ್ಲ ಅಂತ ಬೇಜಾರು ಮಾಡ್ಕೋಬಾರ್ದು ಅದಕ್ಕೆ’ ಅಂತ ಹೇಳ್ತಾನೆ. + +ಆ ಹಲವು ವರ್ಷಗಳುದ್ದಕ್ಕೂ ಹಳ್ಳಿಯವನು ದ್ವಾರಪಾಲಕನ್ನ ಎಡೆಬಿಡದೆ ಗಮನಿಸ್ತಾನೇ ಇದ್ದಾನೆ. ಅವನಿಗೆ ಬೇರೆ ಕಾವಲುಗಾರರೆಲ್ಲಾ ಮರತೇ ಹೋದರು, ಈ ಮೊದಲನೆಯವನೇ ಕಾನೂನಿನ ಹತ್ತಿರ ಹೋಗೋಕೆ ಇರೋ ಅಡ್ಡಿ ಅನ್ನೋ ಹಾಗೆ ಕಾಣತ್ತೆ. ಮೊದಮೊದಲ ವರ್ಷಗಳಲ್ಲಿ ಜೋರಾಗಿ ಸಿಟ್ಟಿಂದ ತನ್ನ ದುರ್ದೆಸೆನ ಬೈಕೋತಾ ಇದ್ದ. ಆಮೇಲೆ ವಯಸ್ಸಾದ ಹಾಗೆ ತನಗೆ ತಾನೇ ಬರೇ ಗೊಣಗಿಕೊಂಡು ಇದ್ದು ಬಿಟ್ಟ. ಬರಬರ್ತಾ ಮಕ್ಕಳ ತರ ಎಳಸಎಳಸಾಗಿ ಆಡ್ತಾನೆ, ದ್ವಾರಪಾಲಕನನ್ನ ಉದ್ದಕ್ಕೂ ಗಮನಿಸ್ತಾ ಅವನ ಮೇಲಂಗಿಯ ಕೊರಳಪಟ್ಟಿಲಿ ಹುಳಗಳು ಇರೋದು ಕಂಡುಹಿಡಕೊಳ್ತಾನೆ. ಕಾವಲಗಾರನ ಮನಸ್ಸು ಬದಲಾಯಿಸೋಕೆ ನೆರವಾಗಿ ಅಂತ ಅವುಗಳ ಹತ್ತಿರಾನೂ ಬೇಡ್ಕೋಳ್ತಾನೆ. ಕೊನೆಗೆ ಅವನ ಕಣ್ಣು ಮಂದ ಆಗ್ತಾ ಆಗ್ತಾ ಸುತ್ತಲೂ ಕತ್ತಲಾಗ್ತಾ ಇದೆಯಾ ಅಥವಾ ಅವನು ಕಣ್ಣು ಮೋಸ ಮಾಡ್ತಾ ಇದೆಯಾ ಅಂತಲೂ ಅವನಿಗೆ ಗೊತ್ತಾಗಲ್ಲ. ಆದರೂ ಕತ್ತಲಲ್ಲಿ ಕಾನೂನಿನ ಬಾಗಲಿಂದ ಮುಚ್ಚಿಹಾಕೋಕೆ ಆಗದಂತ ಬೆಳಕಿನ ಹೊಳೆ ಬರ್ತಿದ್ದುದ್ದು ಗೊತ್ತಾಗತ್ತೆ. + +ಇನ್ನು ಹೆಚ್ಚು ದಿನ ಅವನು ಬದುಕಲ್ಲ. ಸಾಯೋಕೆ ಮುಂಚೆ, ಅಷ್ಟು ವರ್ಷದ ಅನುಭವ ಎಲ್ಲಾ ಅವನ ತಲೇಲಿ ಠಳಾಯಿಸಿ ದ್ವಾರಪಾಲಕನ್ನ ಯಾವತ್ತೂ ಕೇಳದೇ ಇರೋ ಒಂದು ಪ್ರಶ್ನೆಯ ರೂಪ ಪಡಿಯತ್ತೆ. ಅವನು ಕಾವಲಗಾರನನ್ನ ಕೂತ್ತಲ್ಲಿಂದಲೇ ಕರಿತಾನೆ ಯಾಕಂದರೆ ಅವನಗೀಗ ತನ್ನ ಸೆಟಕೊಂಡ ಮೈನ ಎತ್ತೊಕೂ ಅಗ್ತಿಲ್ಲ. ದ್ವಾರಪಾಲಕ ಈಗ ಬಗ್ಗಿ ಅವನನ್ನ ನೋಡಬೇಕು. ಹಳ್ಳಿಯವನಿಗೆ ಅನುಕೂಲವಲ್ಲದಂತೆ ಅವರಿಬ್ಬರ ನಡುವಿನ ಎತ್ತರದ ಅಂತರ ತುಂಬಾ ಜಾಸ್ತಿ ಆಗಿದೆ. ‘ಈಗಲೂ ನಿನಗೆ ಅದೇನು ತಿಳಕೊಳೋ ಕಾತರ?’ ಅಂದು ದ್ವಾರಪಾಲಕ ‘ನಿನ್ನ ದಾಹ ಯಾವತ್ತಿಗೂ ಆರಲ್ಲ!’ ಅನ್ನುತ್ತಾನೆ. ಅದಕ್ಕೆ ಹಳ್ಳಿಯವನು ‘ಎಲ್ಲರೂ ಕಾನೂನನ್ನು ತಲುಪಬೇಕು ಅಂತ ಕಷ್ಟ ಪಟ್ಟೇ ಪಡ್ತಾರೆ, ಆದು ಹೇಗೆ ಇಷ್ಟು ವರ್ಷ ನನ್ನ ಬಿಟ್ಟು ಬೇರೆ ಯಾರೂ ಒಳಗೆ ಹೋಗಬೇಕು ಅಂತ ಕೇಳಿಲ್ಲ?’ ಅಂತ ಕೇಳ್ತಾನೆ. ದ್ವಾರಪಾಲಕನಿಗೆ ಆ ಹಳ್ಳಿಯವನ ಕೊನೆಗಾಲ ಬಂದಿದೆ ಅಂತ ಗೊತ್ತಾಗಿ, ಅವನ ಮಂದ ಕಿವಿಗೆ ಕೇಳಲಿ ಅಂತ ದನಿಯೇರಿಸಿ ‘ಬೇರೆ ಯಾರನ್ನೂ ಇಲ್ಲಿ ಬಿಡೋ ಹಾಗಿರಲಿಲ್ಲ ಯಾಕೆಂದರೆ ಈ ದ್ವಾರ ನಿನಗೆ ಮಾತ್ರ ಮೀಸಲಾಗಿತ್ತು. ಈಗ ಅದನ್ನು ನಾನು ಮುಚ್ತೀನಿ’ ಅಂತ ಕೂಗಿ ಹೇಳ್ತಾನೆ. + + + +ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು. \ No newline at end of file diff --git a/Kenda Sampige/article_504.txt b/Kenda Sampige/article_504.txt new file mode 100644 index 0000000000000000000000000000000000000000..b3c167e2aad25c1bddf491b1d6415b70135b1146 --- /dev/null +++ b/Kenda Sampige/article_504.txt @@ -0,0 +1,23 @@ +ತನ್ನ ಸಖ ವೆಂಕಟ್ ಮೋಂಟಡ್ಕ ಕುರಿತು ಕವಯಿತ್ರಿ,ಪತ್ರಕರ್ತೆ ಹೇಮಾ ಇಲ್ಲಿ ಬರೆದಿದ್ದಾರೆ. + +ವೆಂಕಟ್ ನನಗೆ ಪರಿಚಯವಾಗುವಾಗ ಅವರೊಬ್ಬ ಸಾಹಿತ್ಯ, ಸಂಘಟನೆ ಅಂತ ಓಡಾಡುವ ಉತ್ಸಾಹಿ ಯುವಕ. ಚಿತ್ರಕಲಾವಿದ, ರಂಗ ಸಂಗೀತಗಾರ, ನಟ. ಸುಳ್ಯದ ಹಿರಿಯ ಮತ್ತು ಕಿರಿಯ ಎಲ್ಲ ಸಾಹಿತಿ, ಕಲಾವಿದರನ್ನು ಒಟ್ಟುಗೂಡಿಸುತ್ತಾ ಸುಳ್ಯವನ್ನು ಜೀವಂತವಾಗಿಟ್ಟವರು. ತಮ್ಮದೇ ಆದ ‘ಪರಸ್ಪರ ಚಿಂತನ ವೇದಿಕೆ’ ಮೂಲಕ ಕಥಾ ಸಂವೇದನಾ ಶಿಬಿರ, ಕಾವ್ಯ ಕಮ್ಮಟ, ಪುಸ್ತಕ ಬಿಡುಗಡೆ, ವಿಚಾರ ಸಂಕಿರಣ ಹೀಗೆ ಹತ್ತಾರು ಚಟುವಟಿಕೆಗಳನ್ನು ನಡೆಸುತ್ತಿದ್ದರು. + +ಕೀಬೋರ್ಡ್ ನುಡಿಸುತ್ತಿದ್ದರು. ಅಭಿನಯ ಸುಳ್ಯ ನಾಟಕ ತಂಡದ ನಾಟಕಗಳಿಗೆ ಸಂಗೀತ ನೀಡುತ್ತಿದ್ದರು. ಖ್ಯಾತ ರಂಗ ನಿರ್ದೇಶಕ ದ್ರುವರಾಜ ದೇಶಪಾಂಡೆ ನಿರ್ದೇಶಿಸಿದ ಜೂಲಿಯಸ್ ಸೀಸರ್ ನಾಟಕಕ್ಕೆ ಸಂಗೀತ ನೀಡಿದ್ದರು. ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರದರ್ಶನ ಕಂಡ ನಾಗಮಂಡಲ ನಾಟಕಕ್ಕೆ ವೆಂಕಟ್ ನೀಡಿದ ಸಂಗೀತವನ್ನು ಈಗಲೂ ನೆನಪು ಮಾಡಿಕೊಳ್ಳುವವರಿದ್ದಾರೆ. + +ಸುಳ್ಯದಲ್ಲಿ ವಾಣಿಜ್ಯ ಪದವಿ ವಿದ್ಯಾರ್ಥಿಯಾಗಿದ್ದಾಗ ಮಿಮಿಕ್ರಿ ಕಲಾವಿದನಾಗಿ ಕೂಡಾ ಗಮನ ಸೆಳೆದಿದ್ದರಂತೆ. ನಂತರ ಮಂಗಳೂರಿನ ಜಾಹೀರಾತು ಕಂಪನಿಯಲ್ಲಿ ವಿನ್ಯಾಸಕನಾಗಿಯೂ ದುಡಿದು ಮತ್ತೆ ಊರಿಗೆ ಮರಳಿ ಸುಳ್ಯದಿಂದ ಪ್ರಕಟಗೊಳ್ಳುತ್ತಿದ್ದ ‘ಚೇತನ’ ವಾರಪತ್ರಿಕೆಯನ್ನು ಕಲಾತ್ಮಕವಾಗಿ ಹೊರತಂದಿದ್ದರು. ಹೀಗೆ ನಮ್ಮ ಮದುವೆಯಾಗುವ ತನಕ ಹತ್ತಾರು ಸಾಹಸ ಮಾಡಿ ಮುಗಿಸಿದ್ದರು. ಸುಳ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಕಾರ್ಯದರ್ಶಿಯಾಗಿ ಪರಿಷತ್ತನ್ನು ಸಮ್ಮೇಳನಕ್ಕಷ್ಟೇ ಸೀಮಿತಗೊಳಿಸದೆ ಅದೊಂದು ಸಾಹಿತ್ಯದ ಪರಿಚಾರಕ ಸಂಸ್ಥೆಯಾಗಿ ರೂಪಿಸಿದ್ದರು. + +ನಮ್ಮ ಮದುವೆಯ ನಂತರವೂ ಇದು ಹೀಗೆ ಮುಂದುವರಿಯಿತು. ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ತಾತ್ವಿಕ ಹೋರಾಟ, ಪ್ರತಿಭಟನೆಗೆ ವೆಂಕಟ್ ಮುಂದಾಳತ್ವ ಎಲ್ಲರಿಗೂ ಬೇಕಾಗಿತ್ತು. ವೆಂಕಟ್ ಮೀಟಿಂಗ್ ಕರೆದರೆಂದರೆ ಅಲ್ಲಿ ಏನೋ ನ್ಯಾಯ ಇದೆ ಎಂಬ ನಂಬಿಕೆ ಎಲ್ಲರಿಗೂ. ಇಂತಹ ಅನೇಕ ಸಂದರ್ಭಗಳಲ್ಲಿ ಎಲ್ಲರೂ ಭಿನ್ನಾಭಿಪ್ರಾಯ ಮರೆತು ಸೇರುತ್ತಿದ್ದರು. ಒಂದು ಅಭಿಪ್ರಾಯಕ್ಕೆ ಎಲ್ಲರನ್ನೂ ಒಪ್ಪಿಸುವ ಜಾಣ್ಮೆ ವೆಂಕಟ್ ಗಿತ್ತು. + +ಇಷ್ಟಾಗಿಯೂ ವೆಂಕಟ್ ಬದುಕಿಗೊಂದು ದಾರಿ ಮಾಡಿಕೊಂಡಿರಲಿಲ್ಲ. ಪಿತ್ರಾರ್ಜಿತವಾಗಿ ಬಂದ ತುಂಡು ಆಸ್ತಿಯನ್ನು ಮಾರಿ ಹಣಕಾಸಿನ ಸಂಸ್ಥೆ ನಡೆಸಿದ್ದು ಬದುಕಿನಲ್ಲಿ ಮಾಡಿದ ಒಂದೇ ತಪ್ಪು ನಿರ್ಧಾರ. ಒಂದಿಷ್ಟು ದಿನ ನೆಮ್ಮದಿ ಖುಷಿಯ ಬದುಕು ನಮ್ಮದಾಗಿತ್ತು. ಸಂಬಂಧಿಗಳು, ಗೆಳೆಯರು ಸುತ್ತಮುತ್ತಲು ತುಂಬಿದ್ದರು. ನಂತರದ್ದು ದುರಂತ. ಆಗ ಎಲ್ಲರೂ ದೂರಾದರು. ಬದುಕು ಮೂರಾಬಟ್ಟೆಯಾಗಿದ್ದರೂ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ಎಲ್ಲರೊಂದಿಗೂ ನಗುನಗುತ್ತಾ ಇರುತ್ತಿದ್ದರು. ಆಗಲೂ ಸಾಹಿತ್ಯದ ಗೆಳೆಯರು ಭಿನ್ನಾಭಿಪ್ರಾಯ ಹಿಡಿದುಕೊಂಡು ವೆಂಕಟ್ ಮುಂದೆ ಬರುತ್ತಿದ್ದರು. ಮತ್ತೆ ನಮ್ಮನೆಯೇ ಮೀಟಿಂಗ್ ಪ್ಲೇಸ್. + +ಈ ಮಧ್ಯೆ ಮತ್ತೆ ಸುದ್ದಿ ಬಿಡುಗಡೆ ಪತ್ರಿಕೆಯ ಸಾಹಿತ್ಯ ಪುಟದ ಜವಾಬ್ದಾರಿ ವಹಿಸಿಕೊಂಡು ಅದನ್ನೊಂದು ಸುಳ್ಯದ ಸಾಹಿತ್ಯ ಚರಿತ್ರೆಯ ಮಹತ್ವದ ದಾಖಲೆಯಂತೆ ಮಾಡಿದರು. ಪ್ರತಿ ವಾರವೂ ಹಿರಿಯ ಕಥೆಗಾರರೊಬ್ಬರ ಕಥೆಯೊಂದನ್ನು ಧಾರಾವಾಹಿಯಾಗಿ ಪ್ರಕಟಿಸುವುದಲ್ಲದೆ ಕಥೆಗಾರರ ಬಗ್ಗೆ ಪುಟ್ಟದೊಂದು ಟಿಪ್ಪಣಿ ಇರುತ್ತಿತ್ತು. ಕಥೆಗಳಿಗೆ ಪೂರಕ ಚಿತ್ರವೂ ಇವರದೇ. ಹಾಗೆಯೇ ಹೊಸ ಬರಹಗಾರರ ಕಥೆ, ಕವನ ಕೂಡಾ ಇರುತ್ತಿತ್ತು. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರಿತ್ತೆಂದರೆ ಹಿರಿಯ ಕಥೆಗಾರರೂ ತಮ್ಮದೊಂದು ಕಥೆ ಪ್ರಕಟವಾಗುವುದನ್ನು ಕಾಯುವಂತೆ ಮಾಡಿತ್ತು. + +ಅಚಾನಕ್ಕಾಗಿ ಇಬ್ಬರೂ ದುಡಿಯುವ ನಿರ್ಧಾರ ಮಾಡಿ ಬರಿಕೈಯಲ್ಲಿ ಬೆಂಗಳೂರಿಗೆ ಬಂದೆವು. ಜೊತೆಗೆ ಎಲ್ಲವನ್ನೂ ಗಮನಿಸುತ್ತ ಏನೂ ಆಗದವನಂತೆ ಇರುವ ಮಗ ನೇಸರ. ಮತ್ತೆ ವೆಂಕಟ್ ಜರ್ಜರಿತರಾದರು. ಕಾಲಿಗೆ ಎಡವುವಷ್ಟು ಕಲಾವಿದರಿರುವ ಬೆಂಗಳೂರಿನಲ್ಲಿ ಅಂದುಕೊಂಡಷ್ಟು ಕೆಲಸ ಸಿಗಲಿಲ್ಲ. ನನಗೂ ಕೆಲಸ ಸಿಗಬೇಕಾದರೆ ಆರು ತಿಂಗಳು ಹಿಡಿಯಿತು. ನಮ್ಮವರು, ಸಂಬಂಧಿಗಳು ಯಾರೂ ಇಲ್ಲದ ಇಲ್ಲಿ ಅನಾಮಿಕರಾಗಿ ಬದುಕಿದೆವು. ಆದರೆ ಗೊತ್ತೇ ಇಲ್ಲದ ಅನೇಕರು ಸಹಾಯ ಮಾಡಿದರು. + +*** + +ವೆಂಕಟ್ ತಡವಾಗಿ ಕಥೆ ಬರೆಯತೊಡಗಿದವರು. ಅವರು ಬರೆದ ಮೊದಲ ಕಥೆ ‘ಸೈರನ್’ ವಿಜಯ ಕರ್ನಾಟಕ ಪತ್ರಿಕೆ ನಡೆಸಿದ ಯುಗಾದಿ ಕಥಾಸ್ಪರ್ಧೆಯಲ್ಲಿ ಮೂರು ಬಹುಮಾನಿತ ಕಥೆಗಳ ನಂತರ ಆಯ್ದ ಹತ್ತು ಕಥೆಗಳಲ್ಲಿ ಮೊದಲನೆಯದಾಗಿತ್ತು. ಆದರೆ ಅದೇ ಸಂದರ್ಭದಲ್ಲಿ ಅದು ಸುಧಾದಲ್ಲಿ ಪ್ರಕಟಗೊಂಡಿತ್ತು. ಎರಡನೇ ಕಥೆ ‘ವೇಸ’ ಕೂಡಾ ಸುಧಾದಲ್ಲಿ ಪ್ರಕಟಗೊಂಡಿತು. ಮೂರನೇ ಕಥೆ ‘ಪಾಲು’ ಎರಡು ವರ್ಷದ ಹಿಂದೆ ವಿಕ್ರಾಂತ ಕರ್ನಾಟಕ ನಡೆಸಿದ ಗಾಂಧೀ ಕಥಾ ಸ್ಫರ್ಧೆಯಲ್ಲಿ ತೃತಿಯ ಬಹುಮಾನ ಪಡೆಯಿತು. ನಂತರ ಬರೆದ ಎರಡು ಕಥೆಗಳು ಅಪ್ರಕಟಿತ. + +ವೆಂಕಟ್ ಬರೆದ ಐದೂ ಕಥೆಗಳಲ್ಲಿ ತಾವು ಕಂಡ ಸುತ್ತಲಿನ ಘಟನೆಯ ಒಂದೆಳೆ ಇದ್ದೇ ಇದೆ. ಮತ್ತು ಪ್ರತಿ ಕಥೆಯನ್ನೂ ಮತ್ತೆ ಮತ್ತೆ ತೃಪ್ತಿಯಾಗುವವರೆಗೂ ತಿದ್ದುತ್ತಿದ್ದರು. ಪ್ರತಿ ಬಾರಿ ತಿದ್ದಿ ಬರೆದಾಗಲೂ ನನಗೆ, ಓದಿ ಅಭಿಪ್ರಾಯ ಹೇಳು ಎನ್ನುತ್ತಿದ್ದರು. ಒಂದೋ ಎರಡೋ ವರ್ಷಕ್ಕೆ ಒಂದು ಕಥೆ ಬರೆಯುತ್ತಿದ್ದರು. ಕಡೇಪಕ್ಷ ಒಂದು ಕಥೆಯನ್ನು ತಿದ್ದಿ ತೀಡಿ ಮುಗಿಸಲು ಆರು ತಿಂಗಳು ಬೇಕಾಗುತ್ತಿತ್ತು. ಹೀಗೆ ಹತ್ತು ವರ್ಷದಲ್ಲಿ ಐದು ಕಥೆ ಬರೆದದ್ದು. ಆದರೆ ಅವರೆಂದೂ ತನ್ನ ನೋವುಗಳನ್ನು ಕಥೆಯಲ್ಲಿ ತುರುಕಲಿಲ್ಲ. ಇದಕ್ಕೆ ಅವರ ‘ಸಂಬಂಧ’ ಕಥೆಯೇ ಸಾಕ್ಷಿ. ಈ ಕಥೆ ಅವರು ತೀರಿಹೋಗುವ (ಸೆಪ್ಟೆಂಬರ್ 23, 2009) ಸ್ವಲ್ಪ ಹಿಂದೆಯಷ್ಟೆ ಬರೆದಿದ್ದರು. ಅವರಿದ್ದಿದ್ದರೆ ಇನ್ನೂ ಕತೆಯನ್ನು ಬೆಳೆಸುತ್ತಿದ್ದರೋ ಏನೋ. + +ಲೇಖಕಿ, ಬೆಂಗಳೂರಿನಲ್ಲಿ ಪತ್ರಕರ್ತೆ. ಸುಳ್ಯದ ಬಳಿಯ ಗುತ್ತಿಗಾರಿನವರು. \ No newline at end of file diff --git a/Kenda Sampige/article_505.txt b/Kenda Sampige/article_505.txt new file mode 100644 index 0000000000000000000000000000000000000000..14df0bb76da1a9b16efd878fe89fb8a00255ca13 --- /dev/null +++ b/Kenda Sampige/article_505.txt @@ -0,0 +1,19 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುರಾಜು ಹೆಗಡೆಬರೆದ ಕವಿತೆ. + + + + + + + + + + + +ಇಂಡಿಯಾ ಮತ್ತು  ಈರುಳ್ಳಿ + +ನಾನು ಈರುಳ್ಳಿ ಸುಲಿಯುತ್ತಿದ್ದೆಗೆಳೆಯ ಹೇಳುತ್ತಿದ್ದಮುಸ್ಲಿಮರನ್ನು ಮುಗಿಸಬೇಕುಒಂದು ಸಿಪ್ಪೆಯ ಸುಲಿದೆಕ್ರೈಸ್ತರನ್ನು ಕಳಿಸಬೇಕುಇನ್ನೊಂದು ತೆಗೆದೆಹಿಂದುಳಿದವರನ್ನು ಹಿಮ್ಮೆಟ್ಟಿಸಬೇಕುಮತ್ತೊಂದು ತೆಗೆದೆಹೀಗೆ ನಾನು ತೆರೆಯುತ್ತ ಹೋದೆಗೆಳೆಯ ಸುಲಿಯುತ್ತ ಹೋದ + +ಕೊನೆಗೆ ಉಳಿದಿದ್ದುನನ್ನ ಅವನ ಕಣ್ಣುಗಳಲ್ಲಿ ನೀರು ಮಾತ್ರ + +ಕವಿಗಳು, ಲೇಖಕರು ಮತ್ತು ಸಿರಸಿಯ ಎಂ ಎಂ ಕಾಲೇಜಿನಲ್ಲಿ ಉಪನ್ಯಾಸಕರು. \ No newline at end of file diff --git a/Kenda Sampige/article_506.txt b/Kenda Sampige/article_506.txt new file mode 100644 index 0000000000000000000000000000000000000000..00e4870840babdcf60a20a50ef250cc2c4fe30ea --- /dev/null +++ b/Kenda Sampige/article_506.txt @@ -0,0 +1,27 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುಸಹ್ಯಾದ್ರಿ ನಾಗರಾಜ್ಬರೆದ ದಿನದ ಕವಿತೆ. + +ಪಿ.ಲಂಕೇಶರಿಗೆ + +ಮತ್ತದೇ ಅಮೃತಾಂಬುಧಿಯನ್ನುಹುಡುಕುತ್ತಿದ್ದೇನೆ,ಜೊತೆಗೆ ನಿಮ್ಮನ್ನೂ! + +ವೀರಾವೇಶ, ಮಾರಾಮಾರಿಗಳಿಲ್ಲಇದ್ದರೂ ಕೆರೆಯಿಲ್ಲ-ಇದ್ದಲ್ಲಿ ಸಂಪಿಗೆಯ ವನವಿರಲಿಲ್ಲ!ದುಡುದುಡು ನುಡಿವ ಶ್ಯಾಮಲೆಮಿಡಿವ ತಿಪ್ಪಣ್ಣನಿಲ್ಲ! + +‘ಥತ್ ಇಂಥವೂ ಒಂದೂರೇ’ಅಂತ ಜಾಡಿಸಿನಮ್ಮೂರ ಕೆರೆದಿನ್ನೆಯಲಿಸಿಗರೇಟು ಸುಡುತ್ತಾಕುಂತಿದ್ದೇನೆ, ಲಂಕೇಶರೇ…..ಸ್ತ್ರೀವಾದಿಗಳೆಲ್ಲಾ ಸೇರಿಶ್ಯಾಮಲೆಗೆ ಮರುಮದುವೆಮಾಡುತ್ತಿದ್ದಾರಂತೆಹೇಳಿ, ಏನಂತೀರಿ….???? + + + +ನಮ್ಮೂರಿನ ಗೋಮಾಳ ಹರಾಜಿಗಿದೆ + +ಅಗೋ…. ಕೆಂಪು ನೆಲದ ಅಷ್ಟಗಲಕ್ಕೆಹಸುರು ಹಾಸಿದ್ದ ನಮ್ಮವ್ವಬಿತ್ತಿದ್ದ ನಮ್ಮಪ್ಪಗೋಣು ಬಗ್ಗಿಸಿ ಕಣ್ಣಗಲಿಸಿ ಕುಂತವ್ರೆಅವರಿಬ್ಬರ ಆಶೆಗಳು ಹರಾಜಿಗಿವೆ..? + +ಬಸಿರುಗಟ್ಟಿದ ಮಾಡುಮಳೆ ಸುರಿಸಿ ಫಸಲಾಗಿಕೈಗೆ ಮುತ್ತುಗದ ಹೂವಡರಿರಾಶಿ ಪೂಜುವ ಹೊತ್ತಿಗೆ ಸರಿಯಾಗಿನಮ್ಮೂರಿನ ಗೋಮಾಳ ಹರಾಜಿಗಿದೆ. + +ದೊಡ್ಡಕೇರಿಯ ಜನರಹರಿಗೊಂಡ ಮೀಸೆ-ಮಾಂಸಗಳೆದುರುನೆಣ ಕರಗಿ ನಡು ತೇದಮಾಸು ಬಟ್ಟೆಯ ಮಂದಿಯಬೆವರು ಮಾರಾಟಕ್ಕಿದೆ..?? + +‘ನಿಮ್ಮ್ ಮನೆ ಹಾಳಾಗಾ….’ಸಿಟ್ಟು ಕೆಡಹುವ ಹುಡುಗಿಯರ ಲಟಿಕೆ ಸದ್ದು. + +ಬೈಗಿನತನಕ ಹೊಲ ಗೆಯ್ಯುವಗಟ್ಟಗಿತ್ತಿಯರಿಗೆನಮ್ಮಂಥ ನಪುಂಸಕರು ಹುಟ್ಟಬಾರದಿತ್ತು;ನಮ್ಮೂರಿನ ಗೋಮಾಳ ಹರಾಜಿಗಿದೆ. + +ಹೊಲದ ರಾಗಿ ಬಣವೆಯ ಹಿಂದೆಕೈಕಟ್ಟಿ ನಿಂತ ಮುತ್ತುಗದ ಮರಗಳಿಗೆನಾಲ್ಕೈದು ದಿನದಲ್ಲೇ ಕೊಡಲಿ ಪೆಟ್ಟು. + +ಹುಟ್ಟಲೇಬಾರದಿತ್ತು……ಅಂದುಕೊಳ್ಳುವುದಿಲ್ಲ.ಕ್ಷಮಿಸಿ,ನಮ್ಮೆದೆಯ ಬಿಕ್ಕುಗಳು ಬಿಕರಿಗಿಲ್ಲ. \ No newline at end of file diff --git a/Kenda Sampige/article_507.txt b/Kenda Sampige/article_507.txt new file mode 100644 index 0000000000000000000000000000000000000000..5f096c0063a273dc0e0addb43627dd01e92b77c6 --- /dev/null +++ b/Kenda Sampige/article_507.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುಸಂಧ್ಯಾಬರೆದ ದಿನದ ಕವಿತೆ. + +ನೀನಿಲ್ಲಿರಬೇಕಿತ್ತು + +ನಿದ್ದೆ ಬಾರದ ರಾತ್ರಿಗಳಲಿಕಿಟಕಿ ಬದಿ ಹಚ್ಚಿಟ್ಟ ದೀಪ ತುಯ್ಯುತ್ತದೆ,ರೆಪ್ಪೆ ಸೇರದ ಕಂಗಳಲಿರಾತ್ರಿ ಉರಿಯುತ್ತದೆ + +ಉಸಿರೆತ್ತದೆ, ಪ್ರಶ್ನೆ ಕೇಳದೆ, ಶರತ್ತು ಹಾಕದೆಕರಿಮಣಿಯ ಜಾಮೀನು ಕೇಳದೆನಿನ್ನೊಡನೆ ಹೆಜ್ಜೆ ಹಾಕುತ್ತಾಇದೆಲ್ಲಿ ಬಂದೆ ನಾನು ಗೆಳೆಯಾ?ಬಾನ ಚಂದಿರನ ಅಂದ ಸವಿಯುತ್ತಾ, ಮನೆಗೊಂದುದೀಪ ಹಚ್ಚಿಡುವುದ ಮರೆತವಳು,ಕಡಲ ಭೋರ್ಗರೆತಕ್ಕೆ ಮೈ ಮರೆತು, ಕುಡಿಯಲುಕೊಡ ನೀರು ಹಿಡಿಯುವುದ ಮರೆತವಳು,ಇಬ್ಬನಿ ಹನಿಯಲಿ ಮುತ್ತ ಹುಡುಕಿದವಳು.. + +ನಿನ್ನ ಕಣ್ಣಲ್ಲೇ ಕರಗುತ್ತಾ ಹೆಜ್ಜೆ ಹಾಕಿದ ನನಗೆಬಂದ ದಾರಿಯ ಅರಿವಿಲ್ಲ,ಈಗ ನಿನ್ನ ಕೈ, ನನ್ನ ಕೈಯಿಂದ ಸರಿದಂತಾದರೆಬೆಚ್ಚುತ್ತೇನೆ, ಎಲ್ಲಿ ಹೋಗಲಿ ನಾನು?ದೀಪ ತುಯ್ದಾಡುತ್ತದೆ.. + +ಗೆಳೆಯಾ ಈಗ ನೀನಿಲ್ಲಿರಬೇಕಿತ್ತು + +ದೀಪ ತುಯ್ದಾಡುತ್ತದೆ.. + +ಗಾಳಿ ಬೀಸಿ ದೀಪ ನಡುಗುತ್ತದೆ..ದೀಪ ದಿಟ್ಟಿಸುತ್ತದೆ, ನಾನುದಿಟ್ಟಿ ತಗ್ಗಿಸುತ್ತೇನೆ… \ No newline at end of file diff --git a/Kenda Sampige/article_508.txt b/Kenda Sampige/article_508.txt new file mode 100644 index 0000000000000000000000000000000000000000..1595e561855bf0c3fc673bd9b68e678815c097a7 --- /dev/null +++ b/Kenda Sampige/article_508.txt @@ -0,0 +1,7 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಾಗಶ್ರೀ ಶ್ರೀರಕ್ಷಬರೆದ ದಿನದ ಕವಿತೆ. + +ಬಂಡೆಯಲ್ಲ ಕೆತ್ತನೆಯಾಗುತ್ತೇನೆ + +ನನಗೂ ಅರ್ಥವಾಗಬಾರದೆಂದುಬರೆಯುತ್ತೇನೆಗಡಿಯಾರದ ಮುಳ್ಳಿನ ಲಯಬದ್ದ ಚಲನೆಗೆಎದೆ ಬಡಿತವನ್ನು ಹೊಂದಿಸಲು ಹವಣಿಸಿಗದ್ದಲವೆನಿಸಿ, ಕಣ್ಣು ಬಿಟ್ಟುಧ್ಯಾನಸ್ಥ ಸ್ಥಿತಿಯಲ್ಲಿ ಬಂಡೆಯಲ್ಲಕೆತ್ತನೆಯಾಗುತ್ತೇನೆದಿನ ಉದುರುವ ತಲೆಗೂದಲುಕಳಚಿ ತುಂಬಿಕೊಂಡು,ಕಿವಿ ಹಿಂಡಿದರೆನೋವು ದೂರದಿಂದ ತಲೆದೂಗಿತ್ತುಕರೆದರೆ ಓ ಗೊಡದೆಧ್ವನಿ ನನಗೆ ಮಾತ್ರ ಕೇಳಿಸಿತುಆಚೆ ಕೇಳಲಿಲ್ಲವೆಂಬ ಸುಖದಗ್ನಿಯೇಒಂದು ಸುಖನನಗೂ ತುಂಬಿ ತುಂಬಿ ಬರುತ್ತಿದೆಎದೆ ಹೊಟ್ಟೆಯೊಳಗೆ ಚೇಳು ಕಚ್ಚಿಹೆಪ್ಪುಗಟ್ಟಿದ ಕೆಂಪು ಬಂಡೆಯಲ್ಲ ಕೆತ್ತನೆಗೆನೀಲಿ ಚರ್ಮದ ಕವಚ…ಇನ್ನೂ ಬಡಿತವಿದೆಮುಗಿದ ಗಳಿಗೆಯ ಕಣ್ಣ ಕೆಂಪು ಹನಿಯಲ್ಲಿಯಾರನ್ನ ನೋಡಲಿ?ಪಾರದರ್ಶಕಲ್ಲವದುಬಣ್ಣದ ಬದುಕಿನ ಕೊಂಕು ಹನಿಯಲ್ಲಿಯಾರ ಬಿಂಬವೂ ಕಾಣುವುದಿಲ್ಲಬದುಕಿಬಿಟ್ಟೆ + +ತನ್ನ ಮೂವತ್ತಮೂರನೆಯ ಎಳವೆಯಲ್ಲೇ ಗತಿಸಿದ ಕನ್ನಡದ ಅನನ್ಯ ಕವಯಿತ್ರಿ. ಮೂಲತಃ ಉಡುಪಿಯವರು. ಕೆಂಡಸಂಪಿಗೆ ಅಂತರ್ಜಾಲ ಪತ್ರಿಕೆಯಲ್ಲಿ ಸಹಾಯಕ ಸಂಪಾದಕಿಯಾಗಿದ್ದವರು. ‘ನಕ್ಷತ್ರ ಕವಿತೆಗಳು’ ಇವರ ಏಕೈಕ ಕವಿತಾ ಸಂಕಲನ. \ No newline at end of file diff --git a/Kenda Sampige/article_509.txt b/Kenda Sampige/article_509.txt new file mode 100644 index 0000000000000000000000000000000000000000..d727f60a6c7184abe14164596669324feb1656a5 --- /dev/null +++ b/Kenda Sampige/article_509.txt @@ -0,0 +1,75 @@ +ಅವನು ಶ್ರೀಧರ, ಅವಳು ಉಮಾ. ಎಲ್ಲಾ ಸ್ನೇಹದಂತೆ ಇವರ ಸ್ನೇಹ; ನದಿಯಂತೆ ಎನ್ನಿ. ಅದರ ಪ್ರಾರಂಭ ಏಕೆ, ಹೇಗೆ ಹೇಳುವುದು ಕಷ್ಟ ಅಲ್ಲವೆ? ಇವರ ಸ್ನೇಹವೂ ಹಾಗೆಯೇ. ಯಾವಾಗಲೋ, ಹೇಗೋ ಪ್ರಾರಂಭವಾಯಿತು, ಹೇಗೋ, ಮುಂದುವರೆಯಿತು. ಅವನ ಮಗಳು ಮೀರಾ ಮತ್ತು ಆಕೆಯ ಮಗಳು ನೀತು ಹತ್ತಾರು ವರ್ಷಗಳ ಹಿಂದೆ ಒಟ್ಟಿಗೆ ಭರತನಾಟ್ಯ ಕಲಿಯುತ್ತಿದ್ದರು. ಆ ಕ್ಲಾಸುಗಳಿಗೆ ಅವನು ತನ್ನ ಮಗಳನ್ನು ಕರೆದುಕೊಂಡು ಹೋಗುತ್ತಿದ್ದ. ಆಕೆ ಅವಳ ಮಗಳನ್ನು ಕರೆದುಕೊಂಡು ಬರುತ್ತಿದ್ದಳು. ಒಬ್ಬೊರನ್ನೊಬ್ಬರು ನೋಡಿ ಮುಗುಳ್ನಗುತ್ತಿದ್ದರು. ಆಕೆಯ ಮನೆ ಇವನ ಮನೆ ಹತ್ತಿರವೇ. ಒಮ್ಮೊಮ್ಮೆ ಇವನಿಗೆ ಮತ್ತಾವುದೋ ಕೆಲಸವಿದ್ದಾಗ ಆಕೆಯೇ ಮೀರಾಳನ್ನು ಮನೆಗೆ ಬಿಡುತ್ತಿದ್ದಳು. ಇವನು ಅವಳ ಮಗಳನ್ನು ಅವರ ಮನೆ ತಲಪಿಸಿದ್ದೂ ಉಂಟು. ನಂತರ ಅಲ್ಲಿ ಇಲ್ಲಿ ಸಿಕ್ಕರೆ ಹಲೋ ಹೇಳಿ ಮಾತನಾಡಿಸುತ್ತಿದ್ದ. ಅವಳೂ ನಗು ನಗುತ್ತಾ ಮಾತಾಡುತ್ತಿದ್ದಳು. ಅವನಿಗೆ ಇನ್ನೇನು ಬೇಕು, ಹೇಳಿ. + +ಅವನೊಬ್ಬ ರಸಿಕ; ಯಾವುದೇ ಸುಂದರ ವಸ್ತು ಸಿಕ್ಕರೂ ಹತ್ತಿರ ಹೋಗುತ್ತಿದ್ದ, ಹೆಂಗಸರೂ ಸೇರಿದಂತೆ. ಅವರೊಡನೆ ಮಾತನಾಡಿ, ನಗಿಸಿ ಸಂತೋಷ ಪಡುತ್ತಿದ್ದ. ಇದು ಅವನಿಗೆ ಬಹಳ ಮೋಜು ಎನಿಸಿತ್ತು. ಆದರೆ ಅವನು ಸಭ್ಯ, ಯಾವುದೇ ದುರುದ್ದೇಶವಿರಲಿಲ್ಲ; ಮಾತುಕತೆ ಸ್ನೇಹ ಅಷ್ಟಕ್ಕೆ ಸೀಮಿತ. + +ಒಂದು ನಿಜ. ಅವಳು ಸ್ಫುರದ್ರೂಪಿ. ರೂಪಕ್ಕೆ ಸರಿಯಾದ ಉಡುಗೆ ಕೂಡ. ಕೆಲವೊಮ್ಮೆ ಸರಳ, ಸೌಮ್ಯತೆ ಹೊರಸೂಸಿದಂತೆ. ಕೆಲವೊಮ್ಮೆ ಉದ್ರೇಕ ತರುವ ಉಡುಗೆ; ಯಾರಾದರೂ ಬಲೆ ಬೀಳುವಂತೆ. ಅವನು ಮನಸೋತಿದ್ದು ಸ್ವಾಭಾವಿಕ. ಅವಳೊಡನೆ ಮಾತಾಡುತ್ತಾ ಇರಬೇಕೆಂಬ ಹಂಬಲ, ಅವಳನ್ನೇ ನೋಡುತ್ತಿರುವ ಹಂಬಲ ಅವನಿಗೆ. ಹೀಗಾಗಿ ಬಲು ಬೇಗ ಅವಳು ಸಿಗಬಹುದಾದ ಜಾಗಗಳನ್ನು ಪತ್ತೆ ಹಚ್ಚಿದ. ಅವಳ ಮನೆ, ಹತ್ತಿರವಿದ್ದ ರೈಲ್ವೆ ಸ್ಟೇಷನ್, ವಾರದಲ್ಲಿ ನಾಲ್ಕಾರು ಬಾರಿಯಾದರೂ ಹೋಗಬೇಕಾಗಿದ್ದ ಶಾಪಿಂಗ್ ಇಲ್ಲೆಲ್ಲಾ ಅವಳನ್ನು ಹುಡುಕಿಕೊಂಡು ಹೋಗುತ್ತಿದ್ದ. ಕೆಲವೊಮ್ಮೆ ಸಿಗುತ್ತಿದ್ದಳು, ಕೆಲವೊಮ್ಮೆ ಇಲ್ಲ. ಸಿಕ್ಕಾಗ ಏನಾದರೂ ಮಾತುಕತೆ, ನಗೆ. ಅವಳಿಗೂ ಇದು ಬೇಕು ಅನ್ನಿಸಿರಬೇಕು. + +ಅವನ ಮನೆಯಲ್ಲೋ ಅತಿ ವಿಚಿತ್ರ. ಅವನ ಹೆಂಡತಿ ಶೀಲಾ. ಇಪ್ಪತ್ತೈದು ವರ್ಷಗಳ ಹಿಂದೆಯೇ ಮದುವೆ ಆಗಿತ್ತು. ನಲ್ಮೆಯ ಸಂಸಾರವೂ ಸಾಗಿತ್ತು. ಆದರೆ ಮಗಳು ಮೀರಾ ಹುಟ್ಟಿದ ಮೇಲೆ ಅವಳ ಸ್ವಭಾವವೇ ಬೇರೆ ಆಯಿತು. ಅವಳಿಗೆ ಜೀವನವೇ ಬೇಡ ಅನ್ನಿಸಿತು. ಬದಲಾಗಿ ದೇವರ ಕಡೆ ಮನ ಹೊರಳಿತು. ಸಿಡ್ನಿಯಲ್ಲಿರುವ ಗುಡಿಗಳಿಗೆಲ್ಲಾ ಹೋಗುತ್ತಿದ್ದಳು. ಅಲ್ಲದೆ ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್, ಸಾಯಿಬಾಬಾ ಮಂದಿರ ಇವು ಬೇರೆ. ಹೋದ ಹಲವಾರು ವರ್ಷಗಳಿಂದ ಇದೇ ಅವಳ ಜೀವನ. ವಿಷ್ಣು ಸಹಸ್ರ ನಾಮ, ಲಲಿತಾ ಸಹಸ್ರ ನಾಮ, ಹನುಮಾನ್ ಚಾಲೀಸ, ಕೋಟಿ ಈ ಜಪ, ಕೋಟಿ ಆ ಜಪ, ಲೆಕ್ಕವಿಲ್ಲ. ಯಾರಾದರೂ ಸ್ವಾಮಿಗಳು, ಗುರುಗಳು ಸಿಡ್ನಿಗೆ ಬಂದರೆ ಶೀಲಾ ಮತ್ತು ಅವಳ ಗೆಳತಿಯರಿಗೆ ಎಲ್ಲಿಲ್ಲದ ಉತ್ಸಾಹ, ಸಂಭ್ರಮ ಮತ್ತು ಲವಲವಿಕೆ. ಅಲ್ಲಿ ಇಲ್ಲಿ ಅವರಿಗೆ ಪಾದ ಪೂಜೆ; ಸರಿ, ಇವಳು ಐವತ್ತು ಜನರಿಗೆ ಬೆಳಗಿನ ಉಪಹಾರ ತಿಂಡಿ, ಇಡ್ಲಿ, ದೋಸೆ ಮಾಡಿಕೊಂಡು ಹೊರಡಬೇಕು, ಅದೂ ಬೆಳಗ್ಗೆ ಆರಕ್ಕೆ. ಇನ್ನು ಮಧ್ಯಾಹ್ನ, ರಾತ್ರಿಯ ಪೂಜೆಗೆ ಎಲ್ಲಾ ಸೇರಿ ಅಡಿಗೆ ಮಾಡುವುದು. ನಂತರ ಸ್ವಾಮಿಗಳ ಪ್ರವಚನ- ಗೀತೆಯ ಬಗ್ಗೆ, ಭಾಗವತದ ಬಗ್ಗೆ. ಈ ಜನರೇ ಸ್ವಾಮಿಗಳ ಶ್ರೋತೃಗಳು. ಸುಸ್ತಾಗಿ ರಾತ್ರಿ ಮನೆಗೆ ಹಿಂದಿರುಗಿ ಸುಮ್ಮನಿರುತ್ತಾಳೆಯೇ? ಹೋದ ಕಡೆ ಆದ ಮಾತುಕತೆ, ಜಗಳಗಳನ್ನು ಕುರಿತು ತನ್ನ ಗೆಳತಿಯರೊಂದಿಗೆ ಗಂಟಾನುಗಟ್ಟಲೆ ಟೆಲಿಫ಼ೋನಿನಲ್ಲಿ ಪೋಸ್ಟ್ ಮಾರ‍್ಟಮ್. ಹೀಗಾಗಿ ಮನೆಯ ಕಡೆ, ಗಂಡನ ಕಡೆ ನಿಗ ಇಡಲು ಸಮಯವೇ ಇಲ್ಲ. ಈ ಕಾರ್ಯಕ್ರಮ ಇಲ್ಲದೇ ಹೋದಾಗ ಆಫೀಸಿಗೆ ಹೋಗಿ ಕೆಲಸ ಮಾಡುವುದು. ಬಂದ ಸಂಬಳವೆಲ್ಲಾ, ಈ ತರಹ ಸತ್ಕಾರ್ಯಗಳಿಗೆ ವಿನಿಯೋಗ, ಅಲ್ಲದೆ ಆಗಾಗ್ಗೆ ಭಾರತಕ್ಕೆ ತೀರ್ಥಯಾತ್ರೆ ಬೇರೆ! ಇದು ಶ್ರೀಧರನಿಗಷ್ಟೇ ಅಲ್ಲ, ಅವನ ಮಗಳು ಮೀರಾಳಿಗೂ ಬೇಸರ ತಂದಿತ್ತು. ಲಂಡನ್ನಿನಲ್ಲಿ ಯಾವುದೋ ಕೆಲಸ ಸಿಗುತ್ತಿದ್ದಂತೆ ಅವಳು ಅಲ್ಲಿಗೆ ಹೋಗಿಬಿಟ್ಟಳು. ಇನ್ನು ಅವಳ ಮದುವೆ ಪ್ರಶ್ನೆ, ಅವನೇ ಆಗಾಗ್ಗೆ ಅವಳಿಗೆ ಫ಼ೋನ್ ಮಾಡಿ ವಿಚಾರಿಸಿಕೊಳ್ಳುತ್ತಿದ್ದ- ‘ಸರಿಯಾದ ಹುಡುಗನನ್ನು ನಾನೇ ಹುಡುಕಿಕೊಳ್ಳುತ್ತೇನೆ’ ಎಂಬ ಖಾಯಂ ಉತ್ತರ! + +ಅವನು ಕೆಲಸ ಮಾಡುವುದು ನಾರ್ತ್ ಸಿಡ್ನಿಯ ಟೇಫಿನಲ್ಲಿ; ಬಾರತದ ಪಾಲಿಟೆಕ್ನಿಕ್ ಇರುವ ಹಾಗೆ. ಉನ್ನತ ಹುದ್ದೆಯಲ್ಲೇ ಇರುವ ಅವನಿಗೆ ಅಂತಹ ಒತ್ತಡ ಏನೂ ಇಲ್ಲ. ಹೆಚ್ಚೂ ಕಡಿಮ ಸಲೀಸಾದ ಕೆಲಸ. ಹೋಗಿ ತನ್ನ ಪಾಠ, ಪ್ರವಚನ ಮಾಡಿ ಮನೆಗೆ ಬಂದುಬಿಡಬಹುದು. ಅಲ್ಲದೆ ಅವನು ಓದಿದವನು, ಅತಿ ಬುದ್ಧಿವಂತ. + +ಮನೆಯಲ್ಲಿದ್ದ ಪ್ರತಿಕೂಲ ವಾತಾವರಣದಿಂದಾಗಿ ಅವನಿಗೆ ಉಮಾಳನ್ನು ನೋಡಿದರೆ ಏನೋ ಖುಷಿ, ಏನೋ ಸಮಾಧಾನ. ಮನೆಯಲ್ಲಿ ಸಿಗದ ಶಾಂತಿ ಅವಳನ್ನು ಮಾತನಾಡಿಸಿದಾಗ ಸಿಗುತ್ತಿತ್ತು. ವಾರಕ್ಕೆ ಒಮ್ಮೆಯಾದರೂ ಅವಳನ್ನು ನೋಡಬೇಕು. ಸಾಧ್ಯವಾಗದಿದ್ದರೆ ಪರಿತಪಿಸುತ್ತಿದ್ದ ಶ್ರೀಧರ. ಇನ್ನು ಆಕೆಯ ಬಗ್ಗೆ ಹೇಳಬೇಕಾದರೆ ಅವಳು ಮದರಾಸು ಅಥವ ಕೇರಳದ ಕಡೆಯವಳು, ಗಂಡ ರಾಮನಾಥನ್ ಇಮಿಗ್ರೇಷನ್ ಆಫೀಸಿನ ಉದ್ಯೋಗಿ, ಅವಳು ಬ್ಯಾಂಕ್ ಉದ್ಯೋಗಿ. ಇಬ್ಬರು ಮಕ್ಕಳು, ನವೀನ್ ಮತ್ತು ಅವನ ಮಗಳ ಜೊತೆಯ  ನೀತು. ನವೀನ್ ಈಗ ಅಮೆರಿಕದಲ್ಲಿ ಕೆಲಸದಲ್ಲಿದ್ದಾನೆ, ನೀತು ಅವನ ಮಗಳ ಜತೆ ಲಂಡನ್ನಿನಲ್ಲಿದ್ದಾಳೆ. ಉಮಾ ಸ್ನೇಹಪರತೆಯನ್ನು ತೋರಿಸಿದರೆ ಅವಳ ಗಂಡ ತದ್ವಿರುದ್ಧ. ಅವನಿಗೆ ಯಾರ ಸ್ನೇಹವೂ ಬೇಡವೇನೋ! ಶ್ರೀಧರನನ್ನು ನೋಡಿದರೆ ಗುರ್ ಎನ್ನುತ್ತಿದ್ದ. ಅವನೇನು ಅದನ್ನು ಕೇರ್ ಮಾಡಲಿಲ್ಲ. + +ಹೀಗೇ ಹತ್ತಾರು ವರ್ಷಗಳು ಉರುಳಿದವು. ಉಮಾ ಮತ್ತು ಶ್ರೀಧರನ ಮಧ್ಯೆ ಉಬ್ಬು ತಗ್ಗುಗಳು ಸಹಜವಾಗಿ ಇದ್ದವು. ಕೆಲವೊಮ್ಮೆ ನಗು ನಗುತ್ತಾ ಮಾತನಾಡಿಸುವ ಅವಳು ಕೆಲವೊಮ್ಮೆ ಮುಖ ತಿರುಗಿಸಿಕೊಂಡು ಹೋಗುತ್ತಿದ್ದಳು. ಇನ್ನು ಗಂಡ ಜೊತೆಗಿದ್ದರೆ ಬಾಯಿ ತೆಗೆಯುತ್ತಿರಲಿಲ್ಲ. ಇವನೇ ಮೇಲೆಬಿದ್ದು ಮಾತನಾಡಿಸುತ್ತಿದ್ದ. ಗಂಡ ಅವನಿಗೆ ಹಲೋ ಹೇಳುವುದಕ್ಕೇ ನಾಲ್ಕಾರು ವರ್ಷ ಹಿಡಿದವು. + +ಈ ಸಂಬಂಧಕ್ಕೆ ತಿರುವು ಸಿಕ್ಕಿದ್ದು ಇತ್ತೀಚೆಗೆ, ಎರಡು ವರ್ಷಗಳ ಹಿಂದೆ. ಶ್ರೀಧರ ತನ್ನ ಡಯಾಬಿಟಿಸ್ ಚೆಕ್ ಅಪ್ ಗಾಗಿ ಆರ್‌ಪಿಏ ಆಸ್ಪತ್ರೆಗೆ ಹೋಗಿದ್ದ. ಸಿಡ್ನಿಯಲ್ಲಿ ಐವತ್ತು ವರ್ಷ ಸಮೀಪದ ಗಂಡಸರಿಗೆ ಇದು ಬಹಳ ಸಾಮಾನ್ಯವಾಗಿ ಬರುವ ಖಾಯಿಲೆ; ಅವನಿಗೂ ಬಂದಿತ್ತು. ತನ್ನ ಕೆಲಸವಾದ ನಂತರ ಕೆಳಗಿಳಿಯಲು ಎಂಟನೆ ಮಹಡಿಯಲ್ಲಿ ಲಿಫ಼್ಟ್ ಪ್ರವೇಶಿಸಿದ. ಆಶ್ಚರ್ಯವಾಯಿತು. ಅಲ್ಲಿ ಉಮಾ ಮತ್ತು ರಾಮನಾಥನ್ ಇದ್ದಾರೆ.‘ಏನು, ಇಲ್ಲಿ?’ ಸ್ವಲ್ಪ ಗಾಬರಿಯಲ್ಲೇ ಕೇಳಿದ.‘ಏನೂ ಇಲ್ಲ, ಬರೀ ಚೆಕ್ ಅಪ್ ಗೋಸ್ಕರ ಬಂದಿದ್ವಿ’, ಅಂದಳು ಆಕೆ.ಇನ್ನು ಹೆಚ್ಚು ಮಾತನಾಡಲಿಲ್ಲ. ಲಿಫ಼್ಟ್ ಕೆಳಗೆ ಬಂದಾಗ ‘ಬೈ’ ಅಂದವರೇ ಇಬ್ಬರೂ ಎಲ್ಲೋ ಮಾಯವಾಗಿಬಿಟ್ಟರು. + +ಮಿಲಿಮಿಲಿ ಒದ್ದಾಡಿದ, ಶ್ರೀಧರ- ‘ಯಾರಿಗೆ ಚೆಕ್ ಅಪ್ ಇದು? ಯಾರಿಗೆ ಏನಾಗಿದೆ? ಅದೂ ಈ ಆಸ್ಪತ್ರೆಗೆ ಬರುವುದಕ್ಕೆ! ನನಗೇಕೆ ಇದರ ಯಾವ ಸುಳಿವನ್ನೂ ಕೊಟ್ಟಿಲ್ಲ ಆಕೆ?’ ಅವರ ಮನೆಗೆ ಫ಼ೋನ್ ಮಾಡಿ ವಿಚಾರಿಸೋಣ ಅನ್ನಿಸಿತು. ‘ಆಕೆ ಫ಼ೋನ್ ತೆಗೆದುಕೊಂಡರೆ ಪರವಾಗಿಲ್ಲ. ಬದಲಾಗಿ ಆತ ತೆಗೆದುಕೊಂಡರೆ ಏನನ್ನುತ್ತಾನೋ ಏನೋ?’ ಅನ್ನಿಸಿತು. ಸುಮ್ಮನಾದ. + +ಇದಾದ ಎರಡು ದಿನಗಳ ನಂತರ ಹತ್ತಿರವೇ ಇದ್ದ ವುಲ್ ವರ್ತ್ ಸ್ಟೋರಿನಲ್ಲಿ ಶ್ರೀಧರ ಅವಳನ್ನು ಕಂಡ. ಒಮ್ಮೊಮ್ಮೆ ಅವನನ್ನು ನೋಡಿ ಮತ್ತೆಲ್ಲೋ ಹೋಗುತ್ತಿದ್ದ ಉಮಾ ಅಂದು ಅವನ ಬಳಿಯೇ ಬಂದು ನಿಂತಳು. ಅವನು ಎಂದಿನಂತೆ ಮುಗುಳ್ನಕ್ಕು ಕೇಳಿದ ‘ಅವತ್ತು ಆರ್‌ಪಿಏನಲ್ಲಿ’ + +ಅವನು ಮಾತು ಮುಗಿಸುವ ಮುಂಚೆಯೇ ತಾನು ಆರಂಭಿಸಿದಳು,‘ಒಂದು ಬ್ಯಾಡ್ ನ್ಯೂಸ್ ನಿಮಗೆ ಹೇಳಬೇಕಾಗಿದೆ.’ಅವನಿಗೆ ನಿಜಕ್ಕೂ ಗಾಬರಿ ಆಯಿತು.‘ರಾಮ್ ಕ್ಯಾನ್ಸರ್’ ಎನ್ನುತ್ತಿದ್ದಂತೇ ಅವಳಿಗೆ ಅಳು ಬಂದು ಮಾತೇ ಹೊರಡದಾಯಿತು.‘ಧೈರ್ಯ ತೊಗೋಳಿ, ಎಲ್ಲಿ ಕ್ಯಾನ್ಸರ್ ಆಗಿರೋದು?’ಆಗ ಗೊತ್ತಾಯಿತು ರಾಮನಾಥನ್ ನ ಅನ್ನನಾಳದಲ್ಲಿ ಕ್ಯಾನ್ಸರ್ ಆಗಿದೆ.‘ಈಗೇನು, ಅದಕ್ಕೂ ಪರಿಹಾರ ಹುಡುಕಿದ್ದಾರೆ, ತುಂಬಾ ಗಾಬರಿ ಬೇಡವೇನೋ’‘ನನಗೇನೂ ಗೊತ್ತಾಗುತ್ತಿಲ್ಲ. ನೀವೇ ಬಂದು ಅವರಿಗೆ ಧೈರ್ಯ ಹೇಳಿ’ ಅಂದವಳೇ ಹೊತ್ತಾಯಿತು ಎಂದು ಹೊರಟು ಹೋದಳು. + +ಇದನ್ನು ಕೇಳಿ ಶ್ರೀಧರನಿಗೆ ಅಯ್ಯೋ ಪಾಪ ಅನ್ನಿಸಿತು. ಮನೆಗೆ ಬಂದು ಹೆಂಡತಿಗೆ ಹೇಳಿದ. ‘ಅವರಿವರ ಕ್ಯಾನ್ಸರ್ ಕಟ್ಟಿಕೊಂಡು ನಮಗೇನಾಗಬೇಕು’, ಎಂದುಬಿಟ್ಟಳು. ವರ್ಷಾನುಗಟ್ಟಲೆ ಮಾಡಿದ ವಿಷ್ಣುಸಹಸ್ರನಾಮದ ಫ಼ಲ ಇಷ್ಟೇನೇ ಎಂದುಕೊಂಡು ಸುಮ್ಮನಾದ. + +ರಾಮನಾಥಂಗೆ ಬಂದ ಕ್ಯಾನ್ಸರಿನಿಂದ ಶ್ರೀಧರನಿಗೆ ಸ್ವಲ್ಪ ಅನುಕೂಲವೇ ಆಯಿತು ಎನ್ನಬಹುದು. ಅವಳ ಮನೆಗೆ ಹೋಗಲು ಅವನಿಗೆ ನೆವ ಸಿಕ್ಕಿತು. ಮೊದಮೊದಲು ಮನೆಗೆ ಹೋದಾಗ ರಾಮನಾಥನ್ ಇನ್ನೂ ಗುರ್ ಎನ್ನುತ್ತಲೇ ಇದ್ದ. ಉಮಾ ಹೇಳುತ್ತಿದ್ದಳು- ‘ಸುಮ್ಮನೇ ವಿಚಾರಿಸಿಕೊಂಡು ಹೋಗೋಕೆ ಬಂದಿದ್ದಾರೆ, ಮಾತಾಡಿ’ ಅಂತ. ಆತ ಹಲೋ ಎಂದು ಸುಮ್ಮನಾಗುತ್ತಿದ್ದ. ಶ್ರೀಧರ ಇವನ ಸ್ವಭಾವಕ್ಕೆ, ವಿವಿಧ ಮೂಡುಗಳಿಗೆ ಅನುಸರಿಸಿಕೊಳ್ಳುವುದನ್ನು ಕಲಿತ; ರಾಮನಾಥನಿಗೆ ತನ್ನ ಯಾವ ಪ್ರತಿಕ್ರಿಯೆಯನ್ನೂ ತೋರಿಸುತ್ತಿರಲಿಲ್ಲ; ಕಾರಣ ಅವಳು. ಅವಳಿಗೆ ನೋವಾಗುವ, ಕೋಪ ಬರುವ ಯಾವ ಮಾತನ್ನೂ ಆಡುವಂತಿಲ್ಲ! ನಿಜ ಹೇಳಬೇಕಾದರೆ, ಶ್ರೀಧರನಿಗೆ ಇವನ ಕ್ಯಾನ್ಸರ್, ಇವನ ಆರೋಗ್ಯ ಇವಾವುದರ ಬಗ್ಗೆಯೂ ಆಸಕ್ತಿ ಇರಲಿಲ್ಲ. ಅವನಿಗೆ ಬೇಕಾಗಿದ್ದು ಅವಳು, ಅವಳ ಸ್ನೇಹ, ಅವಳ ಜೊತೆ ಮಾತುಕತೆ, ಅವಳ ಸಂಗ. ಅವಳು ಸ್ನೇಹಪರತೆ ಆದರೂ ಕೆಲವೊಮ್ಮೆ ವಿಚಿತ್ರವಾಗಿ ವರ್ತಿಸುತ್ತಿದ್ದಳು. ಅಡುಗೆಮನೆಯಲ್ಲಿ ಸೇರಿಕೊಂಡು ಹೊರಬರುತ್ತಿರಲಿಲ್ಲ, ಮಹಡಿಯ ಮೇಲೆ ಹೋಗಿ ಅಲ್ಲಿಯೇ ಇದ್ದುಬಿಡುತ್ತಿದ್ದಳು. ಶ್ರೀಧರ ಇವೆಲ್ಲವನ್ನೂ ಸಹಿಸಿಕೊಂಡು ಅವನ ಜತೆ ಅದೂ ಇದೂ ಮಾತನಾಡಿ ಹೊರಬರುತ್ತಿದ್ದ. + +ಒಮ್ಮೆ ಆಕೆ ಫ಼ೋನ್ ಮಾಡಿ ‘ನಿಮಗಾದರೆ ದಯವಿಟ್ಟು ಮನೆಯ ಹತ್ತಿರ ಬನ್ನಿ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕು’, ಎಂದಳು. ಶ್ರೀಧರ ಖುಶಿಯಾಗಿಯೇ ಹೊರಟ. ಅಂದು ರಾಮನಾಥನ ಸ್ಥಿತಿ ಉಲ್ಬಣವಾಗಿತ್ತು. ತುರ್ತಾಗಿ ಆಸ್ಪತ್ರೆಗೆ ಹೋಗಬೇಕಾಗಿತ್ತು. ಮೂವರೂ ಅವರ ಕಾರಿನಲ್ಲಿ ಹೊರಟರು; ಆಕೆಯೇ ಡ್ರೈವ್ ಮಾಡಿದಳು. ಆತ ಮುಂದಿನ ಸೀಟಿನಲ್ಲಿ ಕುಳಿತ್ತಿದ್ದ. ಶ್ರೀಧರ ಹಿಂದಿನ ಸೀಟಿನಲ್ಲಿ;  ಅವಳನ್ನು ಮನಸಾರೆ ನೋಡಿ ಆನಂದ ಪಟ್ಟ; ಕತ್ತೆತ್ತಿದರೆ ಅವಳ ಮುಂದಿದ್ದ ಕನ್ನಡಿಯಲ್ಲಿ ಅವಳದೇ ಮುದ್ದು ಮುಖ. ಅರ್ಧ ಗಂಟೆಯ ಡ್ರೈವ್. ಶ್ರೀಧರನಿಗೆ ಮನಸ್ಸಿನಲ್ಲಿ ಕೆಟ್ಟ ಯೋಚನೆ ಹೊಳೆಯಿತು ‘ಇನ್ನೇನು ಸ್ವಲ್ಪ ದಿನಕ್ಕೆ ಇವನು ಸಾಯುತ್ತಾನೆ. ನಂತರ ನಮ್ಮಿಬ್ಬರ ಮಧ್ಯೆ ಯಾರೂ ಇರುವುದಿಲ್ಲ!’ ಅವನ ಅನ್ನಿಸಿಕೆಗೆ ಅವನೇ ತೆಗಳಿಕೊಂಡ. ‘ಏನು, ಆತನನ್ನು ಆಸ್ಪತ್ರೆಗೆ ಕೊಂಡೊಯ್ಯುವಾಗಲೂ ಇಂತಹ ಯೋಚನೆಯೇ? ಎಂತಹ ನೀಚ ನಾನು!’ + +ಆಸ್ಪತ್ರೆಗೆ ಹೋಗಿ ವೈದ್ಯರನ್ನು ಕಂಡಿದ್ದಾಯಿತು. ಕ್ಯಾನ್ಸರ್ ಹರಡಿರುವುದು ಖಚಿತವಾಯಿತು. ಆಕೆಯ ಕೈಕಾಲುಗಳು ನಡುಗಲಾರಂಭಿಸಿದವು. ವಾಪಸ್ ಬರುವಾಗ ಶ್ರೀಧರನೇ ಕೇಳಿ ಕಾರಿನ ಕೀ ಪಡೆದು ಡ್ರೈವ್ ಮಾಡಿದ. ಆಕೆ ಹೇಳಿದಳು, ‘ಹೀಗಾಗಬಹುದು ಎಂಬ ಅನುಮಾನವಿತ್ತು ನನಗೆ. ಧೈರ್ಯಕ್ಕೆ ನಿಮ್ಮನ್ನ ಕರೆದೆ. ನಿಮಗೆ ತೊಂದರೆ ಕೊಟ್ಟೆ’ ‘ಇಂತಹ ಸಂದರ್ಭದಲ್ಲಿ ತೊಂದರೆ, ಕಷ್ಟ ಅಂತ ನೋಡ್ತಾರ? ನೀವು ಮಾಡಿದ್ದು ಒಳ್ಳೇದಾಯಿತು. ಯಾವಾಗ ಬೇಕಾದರೂ ನನ್ನನ್ನ ಕರೀರಿ.’ + +ಡ್ರೈವ್ ಮಾಡುವಾಗ ಮುಂದಿದ್ದ ಕನ್ನಡಿಯಲ್ಲಿ ಅವಳ ಮುಖ ಕಂಡಿತಾದರೂ ಶ್ರೀಧರ ಮತ್ತೆ ಅತ್ತ ನೋಡಲಿಲ್ಲ. ಅವಳು ಕಣ್ಣೀರು ಹಾಕುತ್ತಿದ್ದಳು, ಇವನಿಗೆ ನೋಡಲಾರದ ದೃಶ್ಯ. + +ಮನೆಗೆ ಬಂದ ತಕ್ಷಣ ತನ್ನ ಹಾಸಿಗೆಯಲ್ಲಿ ಕುಸಿದು ಬಿದ್ದ ರಾಮನಾಥನ್ ಶ್ರೀಧರನ ಕೈ ಹಿಡಿದುಕೊಂಡು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದ. ‘ನನಗೆ ಯಾರ ಸಹಾಯವೂ ಬೇಡ. ನನ್ನನ್ನು ನಾನೇ ನೋಡಿಕೊಳ್ಳುತ್ತೇನೆ ಅಂತ ಜಂಭ ಪಟ್ಟಿಕೊಂಡಿದ್ದೆ. ಈಗ ಏನಾಯಿತು ನೋಡಿ.’ ಶ್ರೀಧರ ಅವನಿಗೆ ಸಮಾಧಾನ ಹೇಳಿ ಹೊರಬಂದ. + +ಕ್ಯಾನ್ಸರ್, ಇದರ ಬಗ್ಗೆ ಹೇಳಬೇಕಾಗಿಲ್ಲ. ಮನುಷ್ಯನನ್ನು ತಿಂದುಹಾಕಿ ಬಿಡುತ್ತದೆ. ರಾಮನಾಥನ್ ಕೆಲಸ ಬಿಡಬೇಕಾಗಿ ಬಂತು. ಇನ್ಷೂರೆನ್ಸ್ ಕಡೆಯಿಂದ ಸಾಕಷ್ಟು ಹಣ ಎರಡು ವಾರಕ್ಕೊಮ್ಮೆ ಬರುತ್ತಿತ್ತು, ಹಣಕಾಸಿನ ಬಗ್ಗೆ ಯೋಚಿಸುವ ಪ್ರಮೇಯವಿರಲಿಲ್ಲ. ಸಮಯ ಕಳೆಯುವುದು ನಿಜವಾದ ಸಮಸ್ಯೆ ಆಗಿತ್ತು. ಮನೆಯಲ್ಲೇ ಸದಾ ಇರುವುದು ಕಷ್ಟದ ಕೆಲಸ. ಶ್ರೀಧರನನ್ನು ಕೇಳಿಕೊಂಡ- ‘ದಿನಾ ಒಮ್ಮೆ ಬಂದು ಹೋಗಿ.’ ಇವನೋ ಸದಾ ಸಿದ್ಧ. ಹೋಗಿ ಬರುತ್ತಿದ್ದ, ಅವನಿಗೋಸ್ಕರವೋ, ಅವಳಿಗೋಸ್ಕರವೋ! ಆದರೆ ಅವನನ್ನು ಈ ಸ್ಥಿತಿಯಲ್ಲಿ ನೋಡಿ ಶ್ರೀಧರನಿಗೆ ಅವನ ಮೇಲೆ ಅಪಾರ ಕರುಣೆ ಬರಲಾರಂಭಿಸಿತು. ಅವನು ಕೇಳಿದ ಪುಸ್ತಕ, ಸೀಡಿ, ಡಿವಿಡಿಗಳನ್ನು ಎಲ್ಲಿಂದಾದರೂ ತಂದು ಒದಗಿಸುತ್ತಿದ್ದ. ಅವನು ಪುಸ್ತಕ ಓದುತ್ತಾ, ಸೀಡಿ ಕೇಳುತ್ತಾ, ಡಿವಿಡಿ ನೋಡುತ್ತಾ ಸಮಯ ಕಳೆಯುವುದು ಸುಲಭವಾಯಿತು, ತನ್ನ ಕ್ಯಾನ್ಸರ್ ಅಲ್ಲದೆ ಮಿಕ್ಕ ವಿಚಾರಗಳತ್ತ ಗಮನ ಹರಿಸುವುದು ಸಾಧ್ಯವಾಯಿತು. ವಿವೇಕಾನಂದರ ಜೀವನ ಚರಿತ್ರೆ, ಕೊಲೊಂಬೋ ಇಂದ ಆಲ್ಮೋರಾಕ್ಕೆ, ರಾಮಕೃಷ್ಣರ ಜೀವನ ಚರಿತ್ರೆ, ವಾರ್ ಅಂಡ್ ಪೀಸ್ ಇಂತಹ ಪುಸ್ತಕಗಳನ್ನು, ಎಂಎಸ್ ಸುಬ್ಬಲಕ್ಷ್ಮಿ ಮುಂತಾದವರ ಸೀಡಿಗಳನ್ನು, ಇಂಗ್ಲಿಷ್, ತಮಿಳು ಮತ್ತು ಹಿಂದಿ ಚಿತ್ರಗಳ ಡಿವಿಡಿಗಳನ್ನು ಸರಬರಾಜು ಮಾಡಿದ. ಶ್ರೀಧರನ ಮನೆಯಲ್ಲಿ ಭಕ್ತಿ, ಹಿಂದೂ ಧರ್ಮಕ್ಕೆ ಸಂಭಂದಿಸಿದ ಪುಸ್ತಕಗಳಿಗೆ ತೊಂದರೆ ಇರಲಿಲ್ಲ, ಯಥೇಚ್ಚವಾಗಿದ್ದವು. ರಾಮನಾಥನ್ ಮಲಗುತ್ತಿದ ಕೊಠಡಿಯಲ್ಲಿ ದೊಡ್ಡದಾದ ಮೊನಾಲೀಸಾ ಚಿತ್ರವಿತ್ತು. ಆತನಿಗೆ ಕಲೆಯಲ್ಲಿ ಸ್ವಲ್ಪ ಆಸಕ್ತಿ ಇದ್ದಂತಿತ್ತು. ಶ್ರೀಧರನಿಗೋ ಕಲೆಯಲ್ಲಿ ಅಪಾರ ಪರಿಶ್ರಮ. ಮೊನಾಲೀಸಾ, ಲಿಯೊನಾರ್ಡೋ ಡ ವಿಂಚಿ, ಮೈಕೇಲ್ ಆಂಜಲೊ ಕುರಿತು ಆಗಾಗ ಮಾತನಾಡುತ್ತಿದ್ದ. ಸಮಯ ಹೋಗಿದ್ದೇ ಗೊತ್ತಾಗುತ್ತಿರಲಿಲ್ಲ. ಕಾಲಕ್ರಮೇಣ ರಾಮನಾಥನ್ ಇಹದ ಮೇಲಿನ ಮಮತೆಯನ್ನು ಕಳೆದುಕೊಂಡ. ಮುಂದಿನದನ್ನು ನೆನಸಿಕೊಂಡು ಅಳುವುದು ಕಡಿಮೆ ಆಯಿತು. + +ಈ ವಿಚಾರ ಬಂದಾಗಲೆಲ್ಲಾ, ಶ್ರೀಧರನ ಮನೆಯಿಂದ ಪುಸ್ತಕ ಮುಂತಾದುವುಗಳ ಸರಬರಾಜು ಆಗುವುದನ್ನು ಕಂಡಾಗಲೆಲ್ಲಾ ಶೀಲಾ ಕಿಡಿಕಾರುತ್ತಿದ್ದಳು- ‘ಹೋಗಿ ಅವರ ಮನೆ ಚಾಕರಿ ಮಾಡಿಬನ್ನಿ. ನಿಮಗೆ ಮಾಡೋದಕ್ಕೆ ಕೆಲಸ ಇಲ್ಲ’ ಈತ ಲೆಕ್ಕಿಸಲಿಲ್ಲ. + +ಒಮ್ಮೊಮ್ಮೆ ಶ್ರೀಧರ ಮನೆಗೆ ಬಂದಾಗ ರಾಮನಾಥನ್ ಮಲಗಿರುತ್ತಿದ್ದ. ಆಗ ಇವನಿಗೆ ಉಮಾಳೊಡನೆ ಮಾತನಾಡುವ ಸಡಗರ. ಕೆಲವು ಸಲ ಅವಳು ಮುಖಕೊಟ್ಟು ಅವನೊಂದಿಗೆ ಮಾತನಾಡುತ್ತಿದ್ದಳು. ಇಲ್ಲದಿದ್ದರೆ ‘ಅವರು ಮಲಗಿದ್ದಾರೆ’ ಎಂದು ಬಾಗಿಲಲ್ಲೇ ಹೇಳಿ ಕಳುಹಿಸುತ್ತಿದ್ದಳು. ‘ಈ ಹೆಂಗಸರೇ ಹೀಗೆ. ನಗುನಗುತ್ತಾ ನನ್ನ ಜೊತೆ ಒಂದೆರಡು ಮಾತಾಡಿದರೆ ಇವಳಿಗೇನು ಹೋಗುತ್ತೆ?’ ಅಂದುಕೊಂಡು ಹಿಂತಿರುಗುತ್ತಿದ್ದ. + +ಕೀಮೋ ಚಿಕಿತ್ಸೆ ಆಯಿತು, ಒಂದಲ್ಲ ಎರಡು ಬಾರಿ. ವ್ಯಕ್ತಿ ಮತ್ತಷ್ಟು ಬಡವಾದನೇ ಹೊರತು ಸುಧಾರಣೆ ಏನೂ ಕಾಣಲಿಲ್ಲ. ವೈದ್ಯರು ಹೇಳಿದರು, ‘ಈಗ ಕ್ಯಾನ್ಸರ್ ನಾಲ್ಕನೆ ಮಟ್ಟಕ್ಕೆ ಹೋಗಿದೆ. ಇನ್ನು ನಾಕು ದಿವಸದಲ್ಲಿ ಸಾವು ಬರಬಹುದು ಅಥವಾ ನಾಲ್ಕು ವರ್ಷದಲ್ಲಿ ಬರಬಹುದು.’ + +ತಕ್ಷಣ ಮಕ್ಕಳಿಗೆ ವಿಷಯ ತಿಳಿಸಲಾಯಿತು. ಇಬ್ಬರೂ ಒಮ್ಮೆಗೇ ಧಾವಿಸಿ ಬಂದರು. ಇಬ್ಬರೂ ಶ್ರೀಧರನನ್ನು ತಬ್ಬಿಕೊಂಡು, ‘ಅಂಕಲ್ ನೀವೇ ಎಲ್ಲಾ ನೋಡಿಕೋಬೇಕು’ ಎಂದು ಹೇಳಿದರು. ಒಂದು ವಾರ ಸಿಡ್ನಿಯಲ್ಲೇ ಇದ್ದು ಇಬ್ಬರೂ ವಾಪಸ್ ತಂತಮ್ಮ ಊರುಗಳಿಗೆ ಹೊರಟರು. + +ಕ್ಯಾನ್ಸರ್ ತಗುಲಿದವರ ಬದುಕು ಜಾರೋ ಬಂಡೆಯಲ್ಲವೆ? ಈಗ ರಾಮನಾಥನ್ ದಿನೇ ದಿನೇ ಬದಲಾಗ ತೊಡಗಿದ. ಕೆಲವೊಮ್ಮೆ ಸುಮ್ಮನೆ ಅಳುತ್ತಾ ಕುಳಿತು ಬಿಡುತ್ತಿದ್ದ. ಶ್ರೀಧರನನ್ನು ನೋಡಿದಾಗ ಅಳು ಇನ್ನೂ ಹೆಚ್ಚಾಗುತ್ತಿತ್ತು. ‘ಏನೋ ದೇವರು ಕಳಿಸಿದ ಹಾಗೆ ನೀವು ಬಂದಿದ್ದೀರಿ. ನಾನು ಇಂದೋ ನಾಳೇನೋ ಹೋಗುವುದು ಗ್ಯಾರಂಟಿ. ನವೀನ್, ನೀತು ಇಬ್ಬರಿಗೂ ಮದುವೆ ಆಗಿಬಿಟ್ಟಿದ್ದರೆ ಚನ್ನಾಗಿರೋದು. ಯಾವುದೂ ನಮ್ಮ ಕೈಯ್ಯಲ್ಲಿ ಇಲ್ಲ. ನಾನು ಹೋದಮೇಲೆ ಇತ್ತ ಬರುವುದನ್ನ ನಿಲ್ಲಿಸಬೇಡಿ.’ಶ್ರೀಧರ ಹೇಳಿದ, ‘ಯೋಚನೆ ಮಾಡಬೇಡಿ. ನಾನು ಆಗಾಗ ಬಂದು ಉಮಾನ ವಿಚಾರಿಸುತ್ತಿರುತ್ತೀನಿ, ನವೀನ್, ನೀತು ಅವರಿಗೂ ಫ಼ೋನ್ ಮಾಡುತ್ತಾ ಇರಿತ್ತೀನಿ.’‘ಅಷ್ಟು ಮಾಡಿ, ದಮ್ಮಯ್ಯ’ ಅಂದ ಆತ. ಅವರಿಬ್ಬರೂ ಇಷ್ಟೆಲ್ಲಾ ಮಾತಾಡಿದರೂ ಉಮಾ ಮಾತ್ರ ತನ್ನ ರೂಮಿನಿಂದ ಹೊರಬರಲಿಲ್ಲ. + +ಆ ದಿನವೂ ಬೇಗಲೇ ಬಂತು. ಮನೆಯಲ್ಲಿ ಕುಸಿದುಬಿದ್ದ ರಾಮನಾಥನನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮತ್ತೆ ಶ್ರೀಧರನೇ ಜೊತೆಗೆ ಹೋಗಿದ್ದ. ಅಷ್ಟೇನೂ ಮಾತನಾಡಲಿಲ್ಲ, ಉಮಾ. ಈ ವೇಳೆಗೆ ಆರ್‌ಪಿಏ ಆಸ್ಪತ್ರೆಯ ವೈದ್ಯರು, ನರ್ಸುಗಳು ಎಲ್ಲಾ ಶ್ರೀಧರನ ಪರಿಚಿತರಾಗಿಬಿಟ್ಟಿದ್ದರು. ಪ್ರಮುಖ ವೈದ್ಯರು ಅವನನ್ನು ಮತ್ತು ಉಮಾಳನ್ನು ತಮ್ಮ ಆಫ಼ೀಸಿಗೆ ಕರೆದು ಹೇಳಿದರು, ‘ಇಷ್ಟೇ ಇನ್ನು, ಮಕ್ಕಳನ್ನು ಕರೆಸಿಬಿಡಿ.’ ಎರಡು ದಿನಗಳಲ್ಲಿ ನವೀನ್ ಮತ್ತು ನೀತು ಬಂದರು, ಮೌನವಾಗಿ ಅಪ್ಪನ ಮುಂದೆ ನಿಂತರು. ಅಂದು ಸಂಜೆ ಉಮಾ ಮತ್ತು ಮಕ್ಕಳು ಶ್ರೀಧರನನ್ನು ಆಸ್ಪತ್ರೆಯಲ್ಲೇ ಇರುವಂತೆ ಹೇಳಿ, ದೇವರಿಗೆ ಕೈಮುಗಿದು ಬರುವುದಾಗಿ ದೇವಸ್ಥಾನಕ್ಕೆ ಹೋದರು. ಇತ್ತ ರಾಮನಾಥನ್ ಶ್ರೀಧರನ ಕೈ ಹಿಡಿದಿರುವಂತೆಯೇ ಕಣ್ಮುಚ್ಚಿದ. ಶ್ರೀಧರ ಹೊರಬಂದು ಕುಳಿತ. ಆಫ಼್ ಆಗಿದ್ದ ಮೊಬೈಲನ್ನು ಆನ್ ಮಾಡಿ ಉಮಾ ಮತ್ತು ಮಕ್ಕಳಿಗೆ ವಿಷಯ ತಿಳಿಸಬೇಕೇ? ಅವರು ಡ್ರೈವ್ ಮಾಡುತ್ತಾ ಇರುತ್ತಾರೆ ಬೇಡವೇನೋ ಎಂದೆಲ್ಲಾ ಯೋಚಿಸುತ್ತಿದ್ದಾಗ ಮೂರೂಜನ ಬಂದು ಅವನ ಮುಂದೆ ಪ್ರಶ್ನಾರ್ಥಕವಾಗಿ ನಿಂತರು. ಶ್ರೀಧರ ವಾರ್ಡಿನ ಕಡೆ ಕೈಮಾಡಿ ತೋರಿಸಿದ. ಒಳಗೆ ಹೋದ ಯಾರೂ ಹೆಚ್ಚು ಅಳಲಿಲ್ಲ. ನೀತು ಹೊರಬಂದು ಶ್ರೀಧರನನ್ನು ಕುರಿತು ಹೇಳಿದಳು, ‘ಡ್ಯಾಡಿ ಬೇಗ ಹೋಗಿಬಿಡಲಿ, ತುಂಬಾ ಸಫ಼ರ್ ಮಾಡುವುದು ಬೇಡ ಅಂತ ನಾವು ದೇವರಲ್ಲಿ ಬೇಡಿಕೊಂಡಿವಿ. ಒಂದು ರೀತೀಲಿ ಒಳ್ಳೆಯದೇ ಆಯಿತು.’ ಆದರೂ ಕಣ್ಣೀರು ಧಾರಾಕಾರವಾಗಿ ಹರಿದಿತ್ತು. + +ಅವರನ್ನೆಲ್ಲಾ ಮನೆ ತಲುಪಿಸಿ ಶ್ರೀಧರ ಮನೆಗೆ ಹೋದಾಗ ಅಲ್ಲಿ ಶೀಲಾ ಅವನನ್ನು ದುರುಗುಟ್ಟಿಕೊಂಡು ನೋಡಿದಳು, ‘ಅಲ್ಲಾರೀ ನಾನು ಇವತ್ತು ಬ್ರಿಸ್ಬೇನ್ ನಿಂದ ಬರ್ತೀನಿ, ಸ್ವಾಮಿಗಳ ಪ್ರವಚನ ಮುಗಿಸಿಕೊಂಡು ಅಂತ ಹೇಳಿದೀನಿ. ಏರ್ಪೋರ‍್ಟಿಗೆ ಬಂದು ಪಿಕಪ್ ಮಾಡಿ ಅಂತ ಹೇಳಿದೀನಿ. ಎಲ್ಲಿ ಹೋಗಿದ್ರಿ ನೀವು? ಮೊಬೈಲ್ ಗೆ ಮಾಡಿದ್ರೂ ಉತ್ತರ ಇಲ್ಲ. ಏನು ಅವಳ ಮನೆ ಚಾಕರಿಗೆ ಹೋಗಿದ್ರ?’‘ಆಸ್ಪತ್ರೇಲಿ ಮೊಬೈಲ್ ಆಫ಼್ ಮಾಡಬೇಕಾಯಿತು. ರಾಮನಾಥನ್ ಹೋಗ್ಬಿಟ್ಟ.’ ಸಾವಿನ ಸುದ್ದಿ ಕೇಳಿ ತಣ್ಣಗಾದಳು ಶೀಲಾ. + +ಮಾರನೆ ದಿವಸ ಉಮಾ, ಮಕ್ಕಳು ಮತ್ತು ಶ್ರೀಧರನ ಮೀಟಿಂಗ್, ಮುಂದಿನ ವ್ಯವಸ್ಥೆ ಕುರಿತು. ‘ಗ್ರಾಂಡ್ ಫ಼್ಯೂನೆರಲ್ಸ್’ ಎಂಬ ಸಂಸ್ಥೆಯ ಇಬ್ಬರು ಅಧಿಕಾರಿಗಳು ಆಗಮಿಸಿದರು. ರಾಮನಾಥನ್ ಅವರಿಗೆ ವಿಶೇಷವಾದ ಬೀಳ್ಕೊಡುಗೆ  ಕೊಡುವುದಾಗಿ ಆಶ್ವಾಸನೆ ನೀಡಿದರು. ಅವರ ಫ಼ೀಸು ಆರು ಸಾವಿರ ಡಾಲರ್. ಇದಕ್ಕೆ ರಾಮನಾಥನ್ ಹಿಂದೆಯೇ ಇನ್ಷೂರನ್ಸ್ ತೆಗೆದುಕೊಂಡಿದ್ದರಿಂದ ಯಾರಿಗೂ ಹೊರೆ ಆಗಲಿಲ್ಲ. ಸಂಸ್ಕಾರದ ಮೊದಲು ಶವಕ್ಕೆ ಯಾವ ಉಡುಪು ತೊಡಿಸಬೇಕು ಎಂಬ ಪ್ರಶ್ನೆ ಬಂತು. ಉಮಾ ಕೂಡಲೆ ಸೂಟು ಮತ್ತು ಟೈ ಇರಲಿ, ಅದು ಅವರಿಗೆ ಬಹಳ ಇಷ್ಟವಾದ ಡ್ರೆಸ್ಸು ಎಂದಳು. ಒಳಹೋಗಿ ಸೂಟು ಟೈ ಎಲ್ಲವನ್ನೂ ತಂದು ಅವರ ಮುಂದಿಟ್ಟಳು. ನಂತರ ಬಂದವರು ಜೋಯಿಸರು. ಇವರಾಗಲೇ ತಿಥಿ ನಕ್ಷತ್ರ ಎಲ್ಲವನ್ನೂ ನೋಡಿ ಬರುವ ಶನಿವಾರ ಸಂಸ್ಕಾರಕ್ಕೆ ಒಳ್ಳೇ ದಿನವೆಂದು ನಿಶ್ಚಯಿಸಿದ್ದರು. ಉಳಿದಿದ್ದ ಒಂದು ಪ್ರಶ್ನೆ ಶವವನ್ನು ಮನೆಗೆ ತರಬೇಕೆ ಅಥವ ಆಸ್ಪತ್ರೆಯಿಂದ ನೇರ ಚಿತಾಗಾರಕ್ಕೆ ಕೊಂಡೊಯ್ಯಬೇಕೆ? ಉಮಾ ‘ಮನೆಯಿಂದಲೇ ಅವರು ತೆರಳಬೇಕು, ಮೊದಲು ಬಾಡೀನ ಮನೇಗೆ ತರೋಣ, ಆಮೇಲೆ ಚಿತಾಗಾರ ಗೊತ್ತೇ ಇದೆ’ ಎಂದಳು. ಮಕ್ಕಳು ಇದಕ್ಕೆ ಒಪ್ಪಲಿಲ್ಲ. ‘ಡ್ಯಾಡಿಗೆ ಯಾವುದರಲ್ಲೂ ನಂಬಿಕೆ ಇರಲಿಲ್ಲ. ಈಗ ಈ ಮಂತ್ರ, ತಂತ್ರ ಏನೂ ಬೇಡ. ಗ್ರೇವ್ ಬಳಿ ಬಾಡೀನ ವ್ಯೂಇಂಗಿಗೆ ಇಟ್ಟು ಅಲ್ಲೇ ಬರ್ನ್ ಮಾಡೋಣ’, ಎಂದು ಹಟ ಹಿಡಿದರು. ಶ್ರೀಧರ ಉಮಾಳ ಪರ ವಕಾಲತ್ತು ವಹಿಸಿದ. ‘ನಿಮ್ಮ ಮಮ್ಮಿಯ ಆಸೆಗೂ ಸ್ವಲ್ಪ ಗೌರವ ಕೊಡಿ’ ಎಂದು ಹೇಳಿದ. ಉಮಾ ಮುಖಸನ್ನೆಯಲ್ಲೇ ಅವನಿಗೆ ಥ್ಯಾಂಕ್ಸ್ ಹೇಳಿದಳು. ಅವಳ ಆಸೆಯಂತೆಯೇ ಶವವನ್ನು ಅರ್ಧ ಗಂಟೆಯಷ್ಟು ಮನೆಗೆ ತರುವುದು, ನಂತರ ಚಿತಾಗಾರಕ್ಕೆ ಎಂಬ ತೀರ್ಮಾನವಾಯಿತು. ಮನೆಯಲ್ಲಿ ಶಾಸ್ತ್ರಕ್ಕೆ ಬೇಕಾದ ಸಾಮಾನೆಲ್ಲವನ್ನೂ ತಾವೇ ತರುವುದಾಗಿ ಜೋಯಿಸರು ತಿಳಿಸಿದರು. + +ಶನಿವಾರ, ಸಂಸ್ಕಾರದ ದಿನ. ಶ್ರೀಧರನ ಬಲಾತ್ಕಾರದ ಮೇಲೆ, ಶೀಲಾ ಬಂದು ಭಾಗವಹಿಸಿದಳು. ಸೂಟು ಟೈ ತೊಟ್ಟ ರಾಮನಾಥನ್ ದೇಹ, ಸ್ವಲ್ಪ ಊದಿಕೊಂಡಂತಿತ್ತು. ಮನೆಯಲ್ಲಿ ಮೊಟಕುಗೊಳಿಸಿದ ಶಾಸ್ತ್ರ ಕರ್ಮಗಳೆಲ್ಲಾ ಜರುಗಿದವು. ಅಲ್ಲಿಂದ ಶವವನ್ನು ಚಿತಾಗಾರಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ಅವನಿಗೆ ಬೀಳ್ಕೊಡುಗೆ. ಸುಮಾರು ಐವತ್ತು ಮಂದಿ ನೆರೆದಿದ್ದರು, ರಾಮನಾಥನ್ ಮತ್ತು ಉಮಾ ಅವರ ದೂರ ಸಂಬಂಧಿಗಳು, ಅವರಿಬ್ಬರ ಆಫ಼ೀಸಿನಿಂದ ಕೆಲವರು ಹೀಗೆ. ಶವಪೆಟ್ಟಿಗೆಯನ್ನು ವೇದಿಕೆಯ ಬಳಿ ಇಡಲಾಯಿತು.  ನಂತರ ಅದರ ಮುಚ್ಚಲವನ್ನು ತೆರೆಯಲಾಯಿತು. ಜೋಯಿಸರಿಂದ ಕಿರು ಭಾಷಣ (ಅವರಿಗೆ ರಾಮನಾಥನ್ ಬಗ್ಗೆ ಏನೇನೂ ಗೊತ್ತಿಲ್ಲದಿದ್ದರೂ!), ನಂತರ ಮಕ್ಕಳು ನವೀನ್ ಮತ್ತು ನೀತು ಭಾಷಣ. ಧೈರ್ಯವಾಗಿಯೇ ಮಾತಾಡಿದರು. ಬಂದ ಜನರೆಲ್ಲಾ ಶವವನ್ನು ನೋಡಿ ಅಕ್ಕಿ ಹಾಕಿದಮೇಲೆ ಚಿತಾಗಾರದ ಸಿಬ್ಬಂದಿಗಳು ಪೆಟ್ಟಿಗೆ ಮುಚ್ಚಲ ಮುಚ್ಚಿದರು. ಜನರನ್ನು ಹೊರಕಳಿಸಲಾಯಿತು. + +ಜೋಯಿಸರು ಶ್ರೀಧರನ ಬಳಿ ಬಂದು ‘ನೀವು ಒಳಗೆ ಬನ್ನಿ’ ಎಂದು ಪಕ್ಕದ ವಿಶಾಲವಾದ ಕೊಠಡಿಗೆ ಕೊಂಡೊಯ್ದರು. ಅದೇ ನಿಜವಾದ ಚಿತಾಗಾರ. ದೊಡ್ಡ ಕಿಟಕಿಯ ಮುಂದೆ ಶವದ ಪೆಟ್ಟಿಗೆಯನ್ನು ಕನ್ವೆಯರ್ ಮೇಲೆ ಇಡಲಾಗಿದೆ. ಅದರ ಸುತ್ತಾ ಜೋಯಿಸರು, ಶ್ರೀಧರ, ನವೀನ್ ಮತ್ತೆ ಯಾರೋ ಇಬ್ಬರು, ರಾಮನಾಥನ್ ಕಡೆಯವರಂತೆ. ಶವದ ಪೂಜೆ ಮಾಡಿಸಿದರು ಜೋಯಿಸರು. ಅಲ್ಲಿಯೇ ಒಂದು ಪ್ಯಾನೆಲ್ ಮೇಲೆ ನಾನಾ ಸೂಚಕಗಳು. ಒಂದು ಕುಲುಮೆಯ ಒಳಗಿನ ಉಷ್ಣಾಂಶ ಹೇಳುತ್ತಿತ್ತು. ಅದು ೭೫೦ ಡಿಗ್ರೀ ತೋರಿಸುತ್ತಿದ್ದಂತೇ ಅಲ್ಲಿಯ ಅಟೆಂಡರ್ ಜೋಯಿಸರ ಕಡೆ ನೋಡಿದ. ಅವರು ನವೀನನ ಕಡೆ ನೋಡಿದರು, ಅವನು ಬಿಕ್ಕಿ ಬಿಕ್ಕಿ ಅಳುತ್ತಿದ್ದ. ಶ್ರೀಧರನ ಕಡೆ ನೋಡಿದರು. ಅವನು ‘ಸರಿ’ ಎಂಬ ಸೂಚನೆ ಕೊಟ್ಟ. ಆ ಸೂಚನೆ ಜೋಯಿಸರನ್ನು ತಲುಪಿ ಅಲ್ಲಿಂದ ಅಟೆಂಡರ್ ನನ್ನು ತಲುಪಿತು. ಕೂಡಲೆ ಅವನು ಒಂದು ಗುಂಡಿ ಒತ್ತಿದ. ಹಿಂದಿದ್ದ ಕಿಟಕಿ ತೆರೆದುಕೊಂಡಿತು, ಶವದ ಪೆಟ್ಟಿಗೆ ಮುಂದೆ ಚಲಿಸಿ ಕಾದು ಕೆಂಪಾಗಿದ್ದ ಕುಲುಮೆಯಲ್ಲಿ ದೊಪ್ಪನೆ ಬಿತ್ತು. ಒಂದೆರಡು ಸೆಕೆಂಡುಗಳಲ್ಲಿ ಪೆಟ್ಟಿಗೆ ಧಗ್ ಎಂದು ಉರಿಯಲಾರಂಭಿಸಿತು. ಕಿಟಕಿ ಹಾಕಿಕೊಂಡಿತು. + +‘ಸೋಮವಾರ ಬಂದು ಬೂದಿ ತೆಗೆದುಕೊಳ್ಳಿ, ರೆಡಿ ಮಾಡಿರುತ್ತೀನಿ’ ಎಂದ ಅಟೆಂಡರ್ ಅಲ್ಲಿಂದ ಹೊರಟ. ಎಲ್ಲರೂ ಅಲ್ಲಿಂದ ನಿರ್ಗಮಿಸಿದರು. ಹೋದವಾರ ರಾಮಾನಾಥನ್ ಆಗಿದ್ದವನು ಇಂದು ಶವ ಆಗಿದ್ದ, ಈಗ ‘ಬೂದಿ’ ಆದ. + +ಮತ್ತೆ ಮನೆಯಲ್ಲಿ ಮೀಟಿಂಗ್ ಆಯಿತು. ವೈಕುಂಠ ಸಮಾರಾಧನೆಯ ಬಗ್ಗೆ. ಜೋಯಿಸರು ಇದಕ್ಕೆ ದಿನವೊಂದನ್ನು ಸೂಚಿಸಿದ್ದರು. ಆದರೆ ಎಲ್ಲರೂ ಬಂದು ಭಾಗವಹಿಸುವಂತೆ ಅದನ್ನು ಭಾನುವಾರಕ್ಕೆ ಮುಂತಳ್ಳಲಾಯಿತು. ನವೀನ್ ಶ್ರೀಧರನ ಜೋಬಿನಲ್ಲಿ ಕೆಲವು ನೋಟುಗಳನ್ನಿರಿಸಿ ‘ಅಂಕಲ್ ಏನೂ ತಿಳಿದುಕೊಳ್ಳಬೇಡಿ. ದಯವಿಟ್ಟು ನೀವೇ ಎಲ್ಲಾ ಏರ್ಪಾಟನ್ನೂ ಮಾಡಿ. ನಮಗೇನೂ ಗೊತ್ತಾಗುವುದಿಲ್ಲ’ವೆಂದ. ಶ್ರೀಧರನಿಗೆ ಮನೆಯಲ್ಲಿ ಸಾಕಷ್ಟು ವಿರೋಧವಿದ್ದರೂ, ಒಪ್ಪಿಕೊಂಡ, ಉಮಾಳ ಮುಖ ನೋಡಿ! ಸುಮಾರು ನೂರು ಜನ ಆಗಮಿಸಿ ರಾಮನಾಥನನ್ನು ವೈಕುಂಠ ತಲುಪಿಸಿದರು. ಸ್ಥಳೀಯ ಚರ್ಚ್ ಒಂದರಲ್ಲಿ ಶ್ರೀಧರನೇ ವೈಕುಂಠದ ವ್ಯವಸ್ಥೆ ಮಾಡಿದ್ದ. ರುಚಿಯಾದ ಊಟ, ಬಂದ ಕೆಲವರ ಪ್ರಾಮಾಣಿಕ ಕಂಬನಿ, ಕೆಲವರ ಮೊಸಳೆ ಕಣ್ಣೀರು. ಮತ್ತೆ ಕೆಲವರು ಇದಾವುದೋ ಪಾರ್ಟಿ ಎಂಬಂತೆ ನಗುನಗುತ್ತಾ, ಗೇಲಿ ಮಾಡುತ್ತಾ ಕಾಲ ಕಳೆದರು. ಮಾರನೆಯ ದಿನ ನವೀನ್ ಮತ್ತು ನೀತು ಶ್ರೀಧರನ ಮನೆಗೆ ಬಂದು ಅವನಿಗೆ ಥ್ಯಾಂಕ್ಸ್ ಹೇಳಿ ತಬ್ಬಿಕೊಂಡು ಅತ್ತು ತಂತಮ್ಮ ಊರುಗಳಿಗೆ ಹೋದರು. + +ಈ ನಡುವೆ ರಾಮನಾಥನ್, ಆಸ್ಪತ್ರೆ, ಸಾವು, ಸಂಸ್ಕಾರ ಇವುಗಳ ನಡುವೆ ಮಾಯವಾಗಿದ್ದ ಶ್ರೀಧರನ ಅಂತರಂಗದ ಭಾವನೆಗಳು ಮತ್ತೆ ಹೊರಬರಲಾರಂಬಿಸಿದವು. ಅವನಿಗೆ ಅನ್ನಿಸಿತು, ‘ಈಗ ನನ್ನ ಲೈನ್ ಕ್ಲಿಯರ್ ಆಯಿತೆ? ನಡುವೆ ಇದ್ದ ರಾಮನಾಥ ಮರೆಯಾದ. ಇನ್ನು ನನ್ನ ಮತ್ತು ಉಮಾಳ ಮಧ್ಯೆ ಏನೂ ಇಲ್ಲ, ಯಾರೂ ಇಲ್ಲ. ಈಗ ನನ್ನ ಮತವನ್ನ ಚಲಾಯಿಸಬಹುದೆ?’ + +ಅವಳ ಮಕ್ಕಳು ತೆರಳಿ ಎರಡು ವಾರಗಳು ಉರುಳಿದವು. ಅವಳಿಂದ ಏನು ಸುದ್ದಿಯೂ ಇಲ್ಲ. ‘ಹೋಗಿ ವಿಚಾರಿಸೋಣ, ಸಾಧ್ಯವಾದರೆ ಹಾಗೇ ಮಾತಾಡುತ್ತಾ ಕಾಲ ಕಳೆಯಬಹುದು’ ಎಂದು ಊಹಿಸಿ ಅವಳ ಮನೆಯ ಬಳಿ ಹೋದ. ಕಾರ್ ಹೊರಗೇ ಇತ್ತು. ಬೆಲ್ ಮಾಡಿ ಕಾದು ನೋಡಿದ. ಉತ್ತರವಿಲ್ಲ. ಆಶ್ಚರ್ಯವಾಯಿತು, ಒಳಗೆ ಟೀವಿಯ ಶಬ್ದ ಬರುತ್ತಿತ್ತು. ಏನೋ ಇಲ್ಲವೇನೋ ಅಂದುಕೊಂಡು ವಾಪಸ್ ಹೊರಟ. ಒಮ್ಮೆ ಫ಼ೋನ್ ಮಾಡಿನೋಡಿದ. ಉತ್ತರವಿಲ್ಲ. ಪ್ರಾಯಶಃ ಇವಳಿಗೆ ಏನೂ ಬೇಡವಾಗಿರಬೇಕು ಎಂದುಕೊಂಡು ಸುಮ್ಮನಾದ. ಒಮ್ಮೆ ಶಾಪಿಂಗ್ ಸೆಂಟರಿನಲ್ಲಿ ಅವಳನ್ನು ನೋಡಿದ. ಹೋಗಿ ಮಾತನಾಡಿಸುವಷ್ಟರಲ್ಲಿ ಮಾಯವಾಗಿ ಬಿಟ್ಟಿದ್ದಳು. ಹೇಗಾದರೂ ಇವಳನ್ನು ನೋಡಲೇಬೇಕು ಎಂಬ ಹಟ ದೃಢವಾಯಿತು. ಆದರೆ ಹೇಗೆ? + +‘ಮುಂದೇನು ಮಾಡುವುದು? ಇವಳನ್ನು ಮರೆತುಬಿಟ್ಟು ಸುಮ್ಮನಿರಲೆ? ಅಥವ ಹೇಗೋ ಅವಳನ್ನು ಬೇಟಿಮಾಡಿ ಸ್ನೇಹವನ್ನು ನವೀಕರಿಸಲೆ?’, ಯೋಚಿಸತೊಡಗಿದ. ಒಮ್ಮೆ ಅನ್ನಿಸಿತು, ‘ಅವಳಾರೋ, ನಾನಾರೋ. ಮೇಲೆ ಬಿದ್ದುಕೊಂಡುಹೋಗಿ ಸಿಗುವುದಾದರೂ ಏನು?’ ಇಂತಹ ಯೋಚನೆಯನ್ನು ಶ್ರೀಧರ ಉಮಾಳ ಪರಿಚಯವಾದ ಮೇಲೆ ಹಲವಾರು ಬಾರಿ ಮಾಡಿದ್ದ. ಸದ್ಯಕ್ಕೆ ಸುಮ್ಮನಿರದೆ ಮಾರ್ಗವಿಲ್ಲ ಎನಿಸಿತು. ಆದರೆ ನವೀನ್ ಅವನಿಗೆ ಕೊಟ್ಟಿದ್ದ ಹಣಕ್ಕೆ ಸರಿಯಾದ ಲೆಕ್ಕ ಸಲ್ಲಿಸಿ ಮಿಕ್ಕಿದ್ದನ್ನು ವಾಪಸ್ ಕೊಡುವ ಕೆಲಸವೂ ಉಳಿದಿತ್ತು. ಪಾಪ ಆ ಹುಡುಗ ಗೊತ್ತಿಲ್ಲದೆ ಐದು ಸಾವಿರ ಡಾಲರ್ ಕೊಟ್ಟಿದ್ದ. ಖರ್ಚಾಗಿದ್ದು ಸಾವಿರದ ಐನೂರು ಮಾತ್ರ. + +ಕೆಲದಿನಗಳ ನಂತರ ಅವಳ ಮನೆಯ ಮುಂದೆಯೇ ಹೋಗುತ್ತಿದ್ದ, ಯಾವುದೋ ಕೆಲಸದ ನಿಮಿತ್ತ. ಅವಳು ಎಲ್ಲಿಂದಲೋ ಕಾರಿನಲ್ಲಿ ಬಂದು ಇಳಿಯುತ್ತಿದ್ದಳು. ಅವನನ್ನು ನೋಡಿ ಮುಗುಳ್ನಕ್ಕು ನಿಂತಳು. ಸ್ವರ್ಗ ಸಿಕ್ಕಿದವನಂತೆ ಅವನೂ ನಕ್ಕು ನಿಂತ. ‘ನಿಮ್ಮನ್ನು ಸ್ವಲ್ಪ ನೋಡಬೇಕಾಗಿತ್ತು. ನಾಳೆ ಸಂಜೆ ಬರುವುದು ಸಾಧ್ಯವೇ?’ ಎಂದು ಕೇಳಿದಳು. ಇವನೆಂದ, ‘ಓಹೋ ಅದಕ್ಕೇನು ಬರುತ್ತೇನೆ.’ ‘ಸರಿ’, ಎಂದ ಅವಳು ಮನೆಯ ಒಳಗೆ ಹೋಗಿಬಿಟ್ಟಳು. + +ಶ್ರೀಧರನಿಗೆ ರಾತ್ರಿಯೆಲ್ಲಾ ನಿದ್ದೆ ಇಲ್ಲ. ಏನು ಕಾರಣಕ್ಕೆ ಕರೆದಿರಬಹುದು? ‘ನಾನು ಅವಳನ್ನು, ಅವಳ ಸಂಗವನ್ನು ಬಯಸಿದಂತೆ, ಅವಳೂ ನನ್ನನ್ನು ಬಯಸಿದ್ದಾಳೆಯೆ? ಸಾಧ್ಯತೆ ಕಡಿಮೆ, ಆದರೂ ಹೇಳುವುದಕ್ಕೆ ಆಗುವುದಿಲ್ಲ. ಮತ್ತೇನಾದರೂ ನಿಗೂಢವಾದ ಸಮಾಚಾರವಿತ್ತೆ?’ ಬೆಳಿಗ್ಗೆ ಶೀಲಾಗೆ ಹೇಳಿದ. ಬಂದ ಉತ್ತರ  ‘ಏನೋ ಜವಾನ ಚಾಕರಿ ಇರಬೇಕು. ಹೋಗಿ ಮಾಡಿ ಬನ್ನಿ. ಇನ್ನೇನು ಕೆಲಸ ನಿಮಗೆ! ಎಲ್ಲಾ ಗಂಡಸರ ತರ ಇರೋದಕ್ಕೆ ನಿಮಗೆ ಆಗಲ್ಲ ಅಂತ ಕಾಣ್ಸುತ್ತೆ. ಕೆಲಸ ಆಗಬೇಕು ಅಂದರೆ ಅವಳೇ ಮನೇಗೆ ಬರೋಕ್ಕೆ ಏನಂತೆ? ನಿಮ್ಮನ್ನ ಏನಕ್ಕೆ ಕರೀಬೇಕು? ನೀವುಂಟು, ಅವಳುಂಟು. ಏನಾದರೂ ಮಾಡಿಕೊಳ್ಳಿ. ಅವಳ ವಿಷಯ ನನ್ನ ಹತ್ತಿರ ತರಬೇಡಿ. ಅಲ್ಲದೆ ಇವತ್ತು ಸಂಜೆ ಟೌನ್ ಹಾಲಿನಲ್ಲಿ ಸ್ವಾಮಿಗಳು ಹನುಮಾನ್ ಚಾಲೀಸದ ಮೇಲೆ ಮಾತಾಡ್ತಾ ಇದಾರೆ. ನಾನು ಮನೇಲಿರೊದಿಲ್ಲ.’ + +ಒಂದು ರೀತಿಯಲ್ಲಿ ಶ್ರೀಧರನಿಗೆ ಇದು ಒಳ್ಳೆಯದೇ ಆಯಿತು. ಅವಳ ಮನೆಗೆ ಹೋಗುವ ಮುನ್ನ ಇವಳ ಮಾತುಗಳನ್ನು ಮತ್ತೆ ಕೇಳಬೇಕಾಗಿಲ್ಲ! ಇವಳ ಮುಖ ನೋಡಬೇಕಾಗಿಲ್ಲ. ಸಂಜೆ ಆಗುತ್ತಿದ್ದಂತೇ ಅವನು ಅವನಿಗೆ ಪ್ರಿಯವಾದ ಪ್ಯಾಂಟು, ಶರ್ಟು ಎಲ್ಲವನ್ನೂ ತೊಟ್ಟು, ಕನ್ನಡಿಯ ಮುಂದೆ ಕಾಲುಗಂಟೆ ತಲೆಬಾಚಿಕೊಂಡು ಹೊರಟ. ನಡೆದೇ ಹೋಗಬಹುದಾಗಿತ್ತು. ಆದರೂ ಕಾರಿನಲ್ಲಿ ಹೊರಟ. + +ಬೆಲ್ ಮಾಡಿದ ತಕ್ಷಣ ಬಂದು ಬಾಗಿಲು ತೆಗೆದಳು. ಕುರ್ಚಿ ತೋರಿಸಿ ಕೂರ ಹೇಳಿ ತಾನೂ ಕುಳಿತಳು. ಶ್ರೀಧರ ನಿರೀಕ್ಷಿಸಿದ ಹಾಗೆ ಬಾಡಿದ ಮುಖವಿರಲಿಲ್ಲ, ತಲೆ ಕೆದರಿರಲಿಲ್ಲ. ಬದಲಾಗಿ ಪ್ಯಾಂಟ್ ತೊಟ್ಟು, ಅದಕ್ಕೆ ಸರಿಹೋಗುವ ಶರ್ಟನ್ನು ಧರಿಸಿದ್ದಳು. ಶ್ರೀಧರ ಪ್ರಾರಂಭಿಸಿದ,‘ಹೀಗಾಗಿದ್ದು ತುಂಬಾ ಅನ್ಯಾಯ.’‘ಹೌದು. ಆದರೆ ಅವರ ನರಳಾಟ ನೋಡೋದು ಕಷ್ಟ ಆಗೋದು.’‘ನಿಮಗೆ ಯಾವ ರೀತಿಯ ಸಹಾಯ ಬೇಕಾದರೂ ಕೇಳಿ. ನನಗೇನೂ ತೊಂದರೆ ಆಗುವುದಿಲ್ಲ.’‘ನನಗೆ ಚನ್ನಾಗಿ ಗೊತ್ತು ಅದು. ಪಾಪ ಅವರಿಗೆ ಬಹಳ ಮಾಡಿದಿರಿ ನೀವು. ಈಗಿನ ಕಾಲದಲ್ಲಿ ಸಂಬಂಧಿಗಳೂ ಅಷ್ಟು ಮಾಡೋದಿಲ್ಲ.’ಶ್ರೀಧರನಿಗೆ ದುಡ್ಡಿನ ಜ್ಞಾಪಕ ಬಂತು. ಜೊತೆಯಲ್ಲೇ ತಂದಿದ್ದ.‘ನವೀನ್ ನನಗೆ ಜಾಸ್ತೀನೇ ದುಡ್ಡು ಕೊಟ್ಟಿದ್ದ, ಆಗೋ ಖರ್ಚಿಗೆ ಅಂತ. ಉಳಿದಿರೋ ಹಣ ಇಲ್ಲಿದೆ’ ಎಂದು ಹೇಳಿ ಅಲ್ಲಿಯೇ ಇದ್ದೆ ಕಾಫಿ ಟೇಬಲ್ಲಿನ ಮೇಲಿಟ್ಟ.‘ಸರಿಯಾಗಿ ನೋಡಿಕೊಳ್ಳಿ, ಸಾಕಷ್ಟು ಖರ್ಚಾಗಿರಬೇಕು. ದುಡ್ಡು ಮಿಕ್ಕಿದೆ ಅಂದರೆ ನಂಬೋದು ಕಷ್ಟ. ಹೇಗೆ ಸಾಧ್ಯ?’ಶ್ರೀಧರ ವಿವರವಾಗಿ ವರ್ಣಿಸ ಹೋದ. ಆಕೆ ಕೇಳಿಸಿಕೊಳ್ಳಲಿಲ್ಲ.‘ರಾಮ್ ಯಾವಾಗಲೂ ಹೇಳುತ್ತಿದ್ದರು. ಅವರ ರೂಮಿನಲ್ಲಿದ್ದ ಮೊನಾಲೀಸಾ ಚಿತ್ರವನ್ನು ನಿಮಗೆ ಕೊಡು ಅಂತ. ದಯವಿಟ್ಟು ತೆಗೆದುಕೊಂಡು ಹೋಗಿ. ತೆಗೆದು ಪ್ಯಾಕ್ ಮಾಡಿ ಇರಿಸಿದ್ದೇನೆ’ ಎಂದು ಹೇಳಿ ಒಂದು ದೊಡ್ಡ ಪಾರ್ಸೆಲ್ ತೋರಿಸಿದಳು.‘ಬೇಡ, ಬೇಡ, ನಿಮ್ಮ ಮನೆಯಲ್ಲೇ ಅದು ಚನ್ನಾಗಿತ್ತಲ್ಲಾ’ ಅಂದೆ‘ರಾಮ್ ಅವರ ಆಸೆ ಅದು. ಬೇಡ ಅನ್ನಬೇಡಿ. ಅಲ್ಲದೆ ನನಗೆ ಪೈಂಟಿಂಗ್ ಅಥವಾ ಯಾವುದೇ ಕಲೆಯಲ್ಲಿ ಆಸಕ್ತಿ ಇಲ್ಲ. ಈ ಚಿತ್ರ ನಿಮ್ಮ ಹತ್ತಿರ ಇದ್ದರೆ ಕ್ಷೇಮ.’ಮಾತುಕತೆ ಎತ್ತಲೋ ಸಾಗುತ್ತಿದೆ; ಅವನಿಗೆ ಬೇಜಾರು ಆಗ ಹತ್ತಿತು. ‘ನನ್ನನ್ನು ಈಕೆ ಏಕೆ ಕರೆಸಿಕೊಂಡಿದ್ದಾಳೆ? ಆ ಪಾಯಿಂಟಿಗೇ ಬರಲಿಲ್ಲವಲ್ಲ.’ ಒಳಗೆ ಹೋಗಿ ಒಂದು ಲೋಟ ಕಾಫಿಯೊಡನೆ ಹಿಂದಿರುಗಿ ಅವನ ಮುಂದೆ ಇಟ್ಟಳು.‘ನಾನು ನಿಮ್ಮನ್ನು ಬರಹೇಳಿದ್ದು ಇದಕ್ಕೆ. ನನಗೆ ಆಸ್ಟ್ರೇಲಿಯಾದಲ್ಲಿ ಮುಂದೆಯೂ ಇರುವ ಅವಶ್ಯಕತೆ ತೋರುತ್ತಿಲ್ಲ. ಇಲ್ಲಿಗೆ ಗಂಡನೊಡನೆ ಬಂದೆ, ಮಕ್ಕಳಾದುವು, ಕೆಲಸ ಆಯಿತು. ಮನೆ ಮಾಡಿಕೊಂಡೆವು, ಎಲ್ಲಾ ಚನ್ನಾಗಿಯೇ ಇತ್ತು. ಈಗ ಗಂಡ ಹೋಗಿಬಿಟ್ಟರು, ಮಕ್ಕಳು ಲಂಡನ್, ಅಮೆರಿಕಾ ಅಂತ ದೂರವಾದರು. ಅವರು ವಾಪಸ್ ಬರುವ ಸೂಚನೆ ಇಲ್ಲ. ಇಲ್ಲಿ ನಾನೊಬ್ಬಳಿದ್ದು ಏನು ಮಾಡಲಿ? ಮಧುರೆಯಲ್ಲಿ ಅಮ್ಮ ಒಬ್ಬಳೇ ಇದ್ದಾಳೆ ಈಗ. ಅವಳಿಗೆ ಎಂಭತ್ತೈದು ವರ್ಷ. ಮಗ ಸೊಸೆ ಜೊತೆ ಸರಿಹೋಗುತ್ತಿಲ್ಲ ಅಂತಾಳೆ. ನಾನೇ ಹೋಗಿ ಅವಳ ಜೊತೆ ಇದ್ದು ಬಿಟ್ಟರೆ ಇಬ್ಬರಿಗೂ ವಾಸಿ ಅನ್ನಿಸುತ್ತೆ.’ + +ಇಷ್ಟು ಹೇಳಿ ಅವನ ಮುಖ ನೋಡಿದಳು.‘ಇನ್ನು ಈ ಮನೆ ಏನು ಮಾಡುತ್ತೀರಾ?’‘ಮಕ್ಕಳಿಗೆ ಬಿಟ್ಟ ಪ್ರಶ್ನೆ ಅದು. ನವೀನ್ ಗೆ ಹೇಳಿದ್ದೀನಿ ಎಲ್ಲಾ. ಅವನು ಇನ್ನು ಮೂರು ತಿಂಗಳಲ್ಲಿ ಬಂದು ಡಿಸೈಡ್ ಮಾಡ್ತಾನೆ- ಮಾರಿ ಬಿಡೋದಾ ಅಥವ ಬಾಡಿಗೆ ಕೊಡೋದ ಅಂತ. ನೀತೂಗೆ ಇದಾವುದರಲ್ಲೂ ಆಸಕ್ತಿ ಇಲ್ಲ. ಎಷ್ಟಾದರೂ ಹೆಣ್ಣು ಹುಡುಗಿ.’‘ನಾನು ಹೇಳೋದು ಏನೂ ಇಲ್ಲ. ಎಲ್ಲಾ ನಿಮ್ಮ ನಿರ್ಧಾರ. ನನ್ನ ಸಹಾಯ ಏನು ಬೇಕು?’ ಎಂದ ಇವನು.‘ಮನೆ ಬೀಗದ ಕೈ ನಿಮ್ಮ ಕೈಲಿ ಕೊಡುತ್ತೀನಿ. ಆಗಾಗ ಬಾಗಿಲು ತೆಗೆದು ಒಳ ಬಂದು ನೋಡ್ತಾ ಇರಿ. ಅಕಸ್ಮಾತ್ ಅಲಾರಂ ಆನ್ ಆದರೆ ಬಂದು ಏನು ಸಮಾಚಾರ ನೋಡಿ. ಮನೆ ಅಲಾರಂ ಪಿನ್ ನಂಬರ್ ಇಲ್ಲಿ ಬರೆದಿಟ್ಟಿದ್ದೀನಿ’ ಎಂದು ಅವನ ಮುಂದೆ ಬೀಗದಕೈ ಮತ್ತು ಒಂದು ಚೀಟಿಯನ್ನು ಇರಿಸಿದಳು.‘ಅಲ್ಲದೆ ಮನೆ ಬಾಡಿಗೆ ಕೊಡೋದು ಅಥವಾ ಮಾರೋ ವಿಷಯದಲ್ಲಿ ನವೀನ್ ಗೆ ನಿಮ್ಮ ಸಹಾಯ ಬೇಕಾಗಬಹುದು. ಅವನು ನಿಮ್ಮನ್ನ ಕೇಳ್ತಾನೆ.’‘ಅದಕ್ಕೇನೀಗ, ನನ್ನನ್ನ ಕೇಳಲಿ, ಎಲ್ಲಾ ಸಹಾಯ ಮಾಡ್ತೀನಿ. ನೀವು ಹೊರಡೋದು..?’‘ಈ ಶನಿವಾರ ಹೊರಡ್ತಾ ಇದೀನಿ. ಶೀಲಾಗೂ ಹೇಳಿಬಿಡಿ. ಅವರ ಹತ್ತಿರ ಹೆಚ್ಚು ಮಾತಾಡೊದಕ್ಕೆ ಆಗಲೇ ಇಲ್ಲ.’ಅವನಿಗೊ ಮುಂದೆ ಏನು ಹೇಳಬೇಕೋ ಗೊತ್ತಾಗಲಿಲ್ಲ.‘ನಿಮ್ಮನ್ನ ಶನಿವಾರ ಏರ‍್ಪೋರ್ಟಿಗೆ ಡ್ರಾಪ್ ಮಾಡ್ಲಾ?’ ಎಂದ.‘ಬೇಡ, ಬೇಡ. ನನ್ನ ಆಫೀಸಿನ ಸ್ನೇಹಿತರು ಕರೆದುಕೊಂಡು ಹೋಗ್ತಾ ಇದಾರೆ.’‘ಸರಿ, ಆಲ್ ದಿ ಬೆಸ್ಟ್’ಮೋನಾಲೀಸಾ ಚಿತ್ರದೊಡನೆ ಹೊರಬಂದ ಶ್ರೀಧರ. ಉಮಾ ಬೈ ಹೇಳಿ ಬಾಗಿಲು ಹಾಕಿಕೊಂಡಳು. ಎಂದೋ ಹುಟ್ಟಿದ ಸ್ನೇಹನದಿ ಇಂದು ಬತ್ತಿಹೋಯಿತೇ ಎಂದುಕೊಂಡು, ರಾಮನಾಥನ ಕೊನೆಯ ಉಡುಗೊರೆಯನ್ನು ಕಾರಿನಲ್ಲಿ ಇರಿಸಿಕೊಂಡು ಶ್ರೀಧರ ಅಲ್ಲಿಂದ ಹೊರಟ. \ No newline at end of file diff --git a/Kenda Sampige/article_51.txt b/Kenda Sampige/article_51.txt new file mode 100644 index 0000000000000000000000000000000000000000..142c597ccb3522e6676b85a75c97a2363312cbe1 --- /dev/null +++ b/Kenda Sampige/article_51.txt @@ -0,0 +1,43 @@ +ಮಲ್ಲಿಕಾರ್ಜುನ ಮನ್ಸೂರರನ್ನು ಒಮ್ಮೆ ಯಾರೋ ಕೇಳಿದರಂತೆ: ನೀವು ಸ ರಿ ಗ ಮ ಎಂದು ಸ್ವರ ಯಾಕೆ ಹಾಡುವುದಿಲ್ಲ-ಎಂದು. ಅದಕ್ಕೆ ಮನ್ಸೂರರು-ಅದೆಲ್ಲ ಬೇರೆ ಬೇರೆ ಅಲ್ಲ, ಒಂದರಿಂದಲೇ ಮತ್ತೊಂದು, ಸಂಗೀತ ತುಂಡುಗಡಿಯದ ಪ್ರವಾಹ ಎಂದರಂತೆ. ರಶೀದರೆ ಕವಿತೆ ಕೂಡಾ ಹಾಗೇ, ಅವರ ಕವಿತೆಯ ವಿಶೇಷವೇ ಅದು ಒಂದು ಧಾರೆ, ಒಂದು ಹರಿವಿನಂತಿರುವುದು, ತರ್ಕ, ವಿಚಾರ, ಬುದ್ಧಿ, ಶಬ್ದಾರ್ಥ ಇದೆಲ್ಲ ಕರಗಿ ಒಂದು ಸಂವೇದನೆಯಾಗಿ ಹರಿಯುವುದು. + +(ಅಬ್ದುಲ್‌ ರಶೀದ್‌) + +ಕರಗಿ-ಹರಿಯುವ- ಈ ಶಬ್ದಗಳನ್ನು ಬಳಸಬೇಕಾಗುವುದರಿಂದ ರಶೀದರದ್ದು ಒಂದು ‘ದ್ರವ ಪ್ರತಿಭೆ’! ತನ್ನನ್ನು ಪೂರಾ ಬಿಟ್ಟುಕೊಟ್ಟೇ ಹರಿದುಹೋಗುವಂತಿರುವುದು ನದಿಯ ಜೀವಂತಿಕೆ ತಾನೇ? + +ಇಷ್ಟು ಹೇಳಿದರೆ ರಶೀದರ ಕವಿತೆಯ ಗುಣವನ್ನು ಪೂರ್ತಿ ಹೇಳಿದಂತಾಗುವುದಿಲ್ಲ. ಅಷ್ಟು ವೈಚಿತ್ರ್ಯಗಳನ್ನು ಒಳಗೊಂಡುದು ಅದು. ಮಾತಿನಲ್ಲಿ ಪ್ರತಿಮೆಯಲ್ಲಿ ಚಿಂತನೆಯಲ್ಲಿ ಭಾವನೆಯಲ್ಲಿ ಹಾಗೆ ವಿಚಿತ್ರವಾದುದು. ಒಂದು ಕಾರಣ: ಇದು ಕವಿತೆಗೆ ಸೇರುವುದು. ಇದು ಸೇರಲಾರದ್ದು ಎಂಬ ಭೇದವಿರದೆ ಏನೆಲ್ಲವನ್ನು ಬೇಕಾದರೂ ಒಳಗೊಳ್ಳುವಂಥದು. ಹಾಗಿದ್ದೂ ಅಂತಿಮವಾಗಿ ಸಹಜತೆಯೇ ಹೆಗ್ಗುರುತಾದ್ದು. + +ಅಂದರೆ ಅದು ಜೀವದ ಸಹಜ ಹರಿವು. ಹರಿವಿಗೆ ಮಲಿನ ನಿರ್ಮಲದ ಹಂಗೇನಿದೆ? ಮತ್ತು ಅದಕ್ಕೆ ಯಾವುದೇ ತತ್ವ, ವಿಚಾರಗಳ ನಿರ್ಬಂಧವೂ ಇಲ್ಲ. ಹಾಗಾಗಿ ಬುದ್ದಿಯನ್ನು ಬಳಸಿ ಹಾಯ್ದು ಜೀವವನ್ನು ನೇರವಾಗಿ ಮುಟ್ಟುವುದು ಅದರ ಹವಣಿಕೆ. ಮತ್ತೆ ಸಂಗೀತದ ಹಾಗೆ! ಆದರೆ ‘ಕಿಂಚಿದೂನ’ವಾಗಿ. + +ಆ ಜೀವ ಈ ಕವಿತೆಗಳಲ್ಲಿ ಗೆಳತಿ, ಎಡೆಬಿಡದ ಸಂಗಾತಿ. ಆದರೂ ಅವಳು ಸ್ವಭಾವತಃ ಚಂಚಲೆ, ಪಾತರಗಿತ್ತಿ. ಗುರು, ದೇವರು ಯಾವುದನ್ನೂ ಗಟ್ಟಿಯಾಗಿ ನಂಬಲಾಗದ ಕನಸಿನ ಈ ಬದುಕಿನಲ್ಲಿ, ನಂಬಿಕೆ ಸಾಧ್ಯವಾಗದಿದ್ದರೂ ತುಸು ಹೆಚ್ಚು ನೆಚ್ಚಿಕೊಳ್ಳಬೇಕೆನಿಸುವ ಮಾಯೆ-ಹೆಣ್ಣು. ಅದೊಂದು ‘ಕಾಮಕಲುಷಿತ ಪ್ರೇಮ’ + +ನದಿಗಳಿಗೆ ನೀವಿಟ್ಟ ಹೆಸರು ಹಿಡಿದುಮಲೆಗಳಿಗೆ ನೀವಿಟ್ಟ ಹೆಸರು ಹಿಡಿದುಎಂದು ಶುರುವಾಗುವ ‘ಧರ್ಮಗುರುವಿಗೆ’ ಎಂಬ ಪದ್ಯ ನೋಡಿ, ದೇವರು ಸೃಷ್ಟಿ ಮಾಡುತ್ತಾನೆ. ಅದಕ್ಕೆ ಹೆಸರಿಟ್ಟು ಕರೆಯುವವನು ಗುರು. ಎಲ್ಲ ಹೆಸರೂ ದೇವನ ಹೆಸರೇ. ಆದರೆ ಎಲ್ಲ ಹೆಸರೂ ಬರೀ ಇಟ್ಟ ಹೆಸರೇ ಆಗಿರುವುದರಿಂದ ಅವ ನಿಜವಲ್ಲ. ನಿಜ ದೇವರಾದರೆ, ಭಾಷೆ ನಾವು ಮಾಡಿಕೊಂಡಿದ್ದು-ಸುಳ್ಳು, ಗುರು, ದೈವದ ಬಗ್ಗೆ ನಮ್ಮ ಕಲ್ಪನೆಯೂ ಕೃತಕವೇ. ನಮ್ಮ ಅರಿವಿನ ಮೊತ್ತವೂ ಅಂಥದೇ ಹಾಗಾಗಿ ಈ ಕವಿ ಆ ಬಗೆಯ ಅರಿವಿನ ಬಗ್ಗೆ ಒಲವುಳ್ಳವರಲ್ಲ, ಈ ಬಗೆಯ ಮನಸ್ಥಿತಿಯ ಎದುರಾಗುವವರು ಮೂವರು ಹುಡುಗಿಯರು. ನೀರ ಮೇಲೆ ಬರೆದ ಚಿತ್ತಾರದಂತೆ ನರಕವಾಗಿ ನಿಜವೆನ್ನಿಸುವವರು. ಹೀಗೆಲ್ಲ ಜಿಜ್ಞಾಸೆಯ ಮೂಲಕ ಹಾದು ಬರುವ ಕವಿ ಮನಸ್ಸು ಗಳಿಸುವುದು ಒಂದು ಅನನ್ಯವಾದ ದೈವಿಕತೆಯನ್ನು, ಅದೇ ಬದುಕಿನ ಗುಣವೆಂದು ಸೂಚಿಸುವುದು ರಶೀದ್ ಕವಿತೆ. ಈ ಕವಿಯ ಜೀವಾಳವೂ ಇದೇ-ಬುದ್ಧಿಗೆಟಕುವ ಸುಲಭವಾದ ಸತ್ಯ ಮಿಥ್ಯಗಳನ್ನು ಪರಿಗಣಿಸದ, ಸುಲಭವಾದ ಸರಿ-ತಪ್ಪು, ಶೀಲ- ಅಶ್ಲೀಲಗಳನ್ನು ಕಡೆಗಣಿಸಿದ ಈ ‘ಹುಚ್ಚು ಬತ್ತಲೆ ದಿವ್ಯತೆ’, ರಶೀದರ ಕವಿತೆ ಇಂಥ ಅಪರೂಪದ ಸಾಹಸದ ‘ನಾಚಿಕೆಗೆಟ್ಟ’ ಕವಿತೆ. ಹಾಗಾಗಿಯೇ ಅದು ನಮ್ಮನ್ನು ಅಚ್ಚರಿಗೊಳಿಸುವಷ್ಟು ಚಂದ, ವಿಶೇಷ! + + + +ಅವರು ಅನುವಾದಿಸಿರುವ ಸೂಫಿ ಸಂತ ರೂಮಿಯ ಬಗ್ಗೆ ಅವರಿಗಿರುವ ಪ್ರೇಮಕ್ಕೂ ಇದೇ ಕಾರಣ. + +ರಶೀದರ ಕವಿತೆಯಲ್ಲಿ ಹೀಗೆ ಯಾವುದೇ ಅರ್ಥವನ್ನು ಹೆಕ್ಕಿ ತೆಗೆದ ತಕ್ಷಣ ಅದು ಹಾಗಲ್ಲ, ಅದು ತಾನಷ್ಟೇ- ಎಂಬಂತೆ ಮೋಹಕವಾಗಿರುತ್ತದೆ. ಇಲ್ಲಿ ‘ಮೋಹಿತನ ಪದ್ಯಗಳು’ ಎಂದು ಬರೆದ ಹಲವು ಪುಟ್ಟ ಪದ್ಯಗಳಿವೆ. ಜೀವನವನ್ನು ಅರ್ಥೈಸುವ ಉದ್ಯೋಗಕ್ಕಿಂತ ಅದರ ಹುಚ್ಚು ಮೋಹಕತೆ ಮತ್ತು ಅದರ ಬಗ್ಗೆ ಹುಚ್ಚು ಮೋಹಿತತೆ ಲೋಕದಲ್ಲಿ ಕವಿತೆಯನ್ನು ಹುಟ್ಟಿಸುತ್ತದೆ-ಎಂಬುದು ರಶೀದರ ಧೋರಣೆ. + +ಇಂಥ ಜೀವದ ಜಟಿಲತೆಯನ್ನು ವ್ಯಕ್ತಪಡಿಸುವ ‘ಬಂದೇ ನವಾಜ್’ ಇಲ್ಲಿರುವ ಮುಖ್ಯ ಕವಿತೆ. ‘ಹಜ್ ಹಬ್ಬದ ನೆನಪ’ಲ್ಲಿ ಹೊರಟ ಬಾಲಕ ಈಗೊಮ್ಮೆ ‘ಬಂದೇ ನವಾಜ್’ ತಲುಪಿದ್ದಾನೆ. ಈವರೆಗೆ ಹೇಳಿದ್ದೆಲ್ಲಕ್ಕಿಂತ ಬೇರೆಯದೊಂದು ಅಂಶವನ್ನು ಒಳಗೊಂಡ ಕವಿತೆ ಇದು. ಬಹುಷಃ ಆರ್ತ ಪ್ರಾರ್ಥನೆಯ ಅಂಶ ಅದು. ಯಾವುದೂ ಕಚ್ಚಿ ನಿಲ್ಲದ, ಎಲ್ಲವೂ ಹರಿದು ಹೋಗುವ ಕನಸಿನಂಥ ಬದುಕಿನೊಳಗಿಂದ ಹೊಮ್ಮುವ ಮೊರೆ ಅದು ಅಂತಿಮವಾದ್ದು. ಮನುಷ್ಯನ ಒಳದ್ರವ್ಯದ್ದು. + +ಇದರ ಪ್ರಾರ್ಥನೆಯಾದರೂ-ನನ್ನನ್ನು ಇಲ್ಲದಂತಾಗಿಸು ಬಂದೇ ನವಾಜ್ ಎಂದೇ. ಯಾಕೆಂದರೆ ಆತನೂ ಇಲ್ಲದಂತೆಯೇ ಇರುವವನು ಅಥವಾ ಇರುವಂತೆ ಇಲ್ಲದಿರುವವನು;‘ಕನಸಲ್ಲಿ ನಿನ್ನ ಖರಪುಟ ಸದ್ದು ಆಕಾಶದಲ್ಲ ಹಾಹಾಕಾರʼ + +‘ಈ ಅರೆ ಚಂದ್ರ ಇರುಳು ಈ ನಕ್ಷತ್ರ ರಾತ್ರಿಈ ಮಿಂಚಿಲ್ಲದ ಸದ್ದಿಲ್ಲದ ಆಗಸದಲ್ಲಿ ತೋರಿಸು ನಿನ್ನ ಇರುವುʼ + +‘ನಾ ಪರಾಧೀನ ನಿನ್ನ ಪಾದಗಳಲಿ ಹಣೆಯಿಟ್ಟು ಚುಂಬಿಸುತಿರುವೆ ನನ್ನನೇ ನಾನುʼ + +(ಭ್ರಮೆ ಮಾತ್ರ ಇರಬಹುದು. ಅಥವಾ ಅನ ಹಲ್‌ ಹಕ್‌ ಎಂಬಂತಿರಬಹುದು)ಬೊಗಸೆಯಲ್ಲಿ ನರಿವ ಬೆಂಕಿ ಚೆಲುವ ಚೆಲ್ಲುತ್ತ ಹಸಿರು ಮಾಂಸ ನೆತ್ತರು ಹೊತ್ತು ನಡೆಯುತ್ತಿರುವಈ ಚೆಲುವೆಯರು ಆಹಾ ಇವರ ಕಣ್ಣುಗಳು ಇವರ ಗಾಢ ಬೆವರುʼ + +(ಇಂದ್ರಿಯಗಳಿಗೆ ಆಗುತ್ತಿರುವ ಈ ಅನುಭವ ಮಾತ್ರ ಸುಲಭವಾಗಿ ಕಡೆಗಣಿಸಲಾಗದಷ್ಟು ನಿಜವೆನಿಸುವಂತಿದೆ!) + +ಮತ್ತು ಈ ಕವಿತೆಯ ಹಿಂದೆ ಈ ಮೊರೆ-‘ಕಣ್ಣಿಂದ ಕಾಣಿಸುತ್ತಿರುವ ಎಲ್ಲವ ಇಲ್ಲದಂತಾಗಿಸು ಹೇ ಗೇಸುದರಾಜ್ನಾ ಇಲ್ಲಿಂದ ಹೋಗುತಿರುವೆನುಇಲ್ಲದ ಆ ಇನ್ನೊಂದು ಶಹರಿನ ದಾರಿ ತೋರಿಸುʼ + +-ಸಾವು, ಇರುವು, ಅತೀತತೆ ಎಲ್ಲಕ್ಕೂ ಆಗಿಬರುವ ಈ ಸರಳ ಶಬ್ದಗಳ ಸಹಜ ಸಂಕೀರ್ಣತೆ ಈ ಬದುಕಿನ ಗುಣವೇ ಆಗಿದೆ. + + + +ನನಗನ್ನಿಸುವಂತೆ ಈ ನಾಡಿನಲ್ಲಿ ಇದು ಕವಿತೆಯ ಕಾಲವಲ್ಲ. ಅಭಿಪ್ರಾಯದ ಕಾಲ. ಪ್ರಜಾಪ್ರಭುತ್ವದ ಕಡಾಯಿಯ ಕುದಿತ ಜೋರಾಗಿರುವುದರಿಂದ ಇರಬಹುದು. ಇಂಥ ವೇಳೆ ಅಬ್ದುಲ್‌ ರಶೀದರ ಬಿಲ್‌ಕುಲ್‌ ಅಭಿಪ್ರಾಯ ಶೂನ್ಯವಾದ ಬರೀ ಚೆಲುವಾದ ಕವಿತೆಗಳು ನಮ್ಮ ಕೈಯಲ್ಲಿದ್ದು ನಗುತ್ತಿವೆ. ಹಲವರನ್ನು ಮುದಗೊಳಿಸಬಲ್ಲ ಇದು ಕವಿತೆಗೆ ಕವಿತೆಗಿಂತ ಬೇರೆ ಉದ್ದೇಶಗಳನ್ನು ಮುಖ್ಯವಾಗಿಸುವವರನ್ನು ಪೆಚ್ಚಾಗಿಸಲೂಬಹುದು. ಹೇಗೆಂದರೆ ಯುದ್ಧಕ್ಕೆ ಹೊರಟವನಿಗೆ ಹೂಗುಚ್ಛ ಕೊಟ್ಟ ಹಾಗೆ! + +ರಶೀದರ ಕವಿತೆಗೆ ಏನು ಸಿಕ್ಕುತ್ತದೋ, ಅದರಿಂದ ನಾವು ಏನು ಪಡೆಯಬಲ್ಲೆವೋ ಅದು ನಮ್ಮ-ಅದರ ಲಭ್ಯ.‌ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_510.txt b/Kenda Sampige/article_510.txt new file mode 100644 index 0000000000000000000000000000000000000000..2e5c98eba753dd3b0d178da6cff39115910135eb --- /dev/null +++ b/Kenda Sampige/article_510.txt @@ -0,0 +1,21 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಕೃಷ್ಣ ಜನ್ಮಾಷ್ಟಮಿಗಾಗಿಹೇಮಾಬರೆದ  ಕವಿತೆಗಳು. + +ಕೃಷ್ಣಾರ್ಪಣೆ + +ನನ್ನ ಕಷ್ಟಗಳನ್ನೆಲ್ಲಾನಿನ್ನ ಕೊಳಲಿನಲ್ಲಿನುಡಿಸಿಬಿಡು ಕೃಷ್ಣಾಸುಖದ ಗಾನವಾಗಿಬಿಡಲಿ. + +ನನ್ನ ಕಷ್ಟಗಳನ್ನೆಲ್ಲಾ ಹೆಣೆದುನಿನ್ನ ಕೊರಳಿನ ಹಾರಮಾಡಿಕೊ ಕೃಷ್ಣಾಎಂದಿಗೂ ಉರುಳಾಗದಿರಲಿ. + +ನನ್ನ ಕಷ್ಟಗಳನ್ನೆಲ್ಲಾ ಸುರಿದುನಿನ್ನ ಕಾಲಿನಗೆಜ್ಜೆ ಮಾಡಿಕೊ ಕೃಷ್ಣಾಯಾರ ಕಾಲಿಗೂ ಮುಳ್ಳಾಗದಿರಲಿ. + +ನನ್ನ ಕಷ್ಟಗಳನ್ನೆಲ್ಲಾನಿನ್ನ ಒಡವೆಯವಜ್ರವಾಗಿಸಿಕೊ ಕೃಷ್ಣಾಕೂತುಬಿಡಲಿ ಅಲ್ಲೇ ಗಟ್ಟಿಯಾಗಿ. + +ನನ್ನ ಕಷ್ಟಗಳನ್ನೆಲ್ಲಾನಿನ್ನ ಕೊಳದ ನೀರಾಗಿಸಿಕೊ ಕೃಷ್ಣಾನಿನ್ನ ಚೇಷ್ಟೆಗದುಇಂಗಿಹೋಗಲಿ. + +ಕೊಳ + +ಕೃಷ್ಣ ಕಾಲಾಡಿಸಿ ಹೋದಕೊಳದಲ್ಲಿನೂರಾರು ರಾಧೆಯರು + +ಮೈ ತೊಳೆಯುತ್ತಾರೆಕೃಷ್ಣನನ್ನು ಬೊಗಸೆ ತುಂಬಿ ಕುಡಿಯುತ್ತಾರೆಎದೆಯ ಮೇಲೆ ಸುರಿಯುತ್ತಾರೆಬೆತ್ತಲಾಗುತ್ತಾರೆಕತ್ತಲಿಗೂ ಕಾಯದೆ ! + +ಲೇಖಕಿ, ಬೆಂಗಳೂರಿನಲ್ಲಿ ಪತ್ರಕರ್ತೆ. ಸುಳ್ಯದ ಬಳಿಯ ಗುತ್ತಿಗಾರಿನವರು. \ No newline at end of file diff --git a/Kenda Sampige/article_511.txt b/Kenda Sampige/article_511.txt new file mode 100644 index 0000000000000000000000000000000000000000..4aea1a30dcca1ef1b1359225a63e98dfc64beae1 --- /dev/null +++ b/Kenda Sampige/article_511.txt @@ -0,0 +1,23 @@ +‘ಮುಗಿಲು ಅಳುತ್ತಿದೆ ನನ್ನ ಬದಲು’ ಎಂದು ನಮ್ಮನ್ನು ನಾವೇ ಸಮಾಧಾನಿಸಿಕೊಂಡರೂ ಅದ್ಯಾಕೋ ಈ ಮೊದಲ ಮಳೆ ಒಮ್ಮೊಮ್ಮೆ ರೇಜಿಗೆ. ಮೋಡಗಳಿಗೆ ಗಾಳ ಹಾಕಿ ನಿಲ್ಲಿಸಿ ಆಕಾಶಕ್ಕೊಂದು ದೂರು ಬಿಸಾಕುವ ಉಮೇದು ನಮಗೆ. ಆದರೂ ಗುಲ್ ಮೊಹರ್ ನ ಕೆಂಪುಕೆಂಪಾದ ಕಂಪು ಮಾಯವಾಗುವ ಮುನ್ನವೇ ಮಣ್ಣವಾಸನೆಯ ಕೀಲಿ ತೆಗೆದು ಮತ್ತೇರಿಸುವ ಪ್ರಕೃತಿಯ ಮನ್ಸೂನ್ ಮ್ಯಾಜಿಕನ್ನು ಬೇಡ ಎನ್ನಲಾದೀತೇ! + +ಆಷಾಢದ ಮಳೆಯಂತೆ ಬರೀ(ಒಂದೇ ತೆರನಾದ)ಮಾತಿಗಷ್ಟೇ ಗಂಟುಬೀಳೋದು ಬೇಡ. ಜನವರಿಯಲ್ಲಿ ಸುರಿಯುವ ಸಂಜೆಮಳೆ, ಜೂನ್ ನಲ್ಲಿ ಬೆರಗಿನ ಚಿತ್ತಾರ ಮೂಡಿಸುವ ಬಿಸಿಲುಮಳೆ, ಹುಚ್ಚು ಹಿಡಿದಂತೆ ನರ್ತಿಸುವ ಒನಕೆಮಳೆ, ಮಾದಕ ನೃತ್ಯವನ್ನು ಪ್ರಾಕ್ಟೀಸು ಮಾಡುವ ಸೋನೆಮಳೆ…. ಹೀಗೆ ವೆರೈಟಿ-ವೆರೈಟಿ ಇರುವಾಗ ಜಸ್ಟ್ ಮಾತ್ ಮಾತಲ್ಲಿ ಅಂದ್ರೆ ಸಿಕ್ಕಾಪಟ್ಟೆ ಬೋರು! ಕಾವ್ಯಶಾಲೆಯಲ್ಲಿ ಸೆರೆಹೊಡೆದ ಒಂದಷ್ಟು ಹೂಗಳು ಇಲ್ಲಿವೆ ನೋಡಿ…. + +ನಿನಗೆಂದೇ ಅರಳಿದನನ್ನೆದೆವನದ ಕೆಂಗುಲಾಬಿಗಳನ್ನುಹಳ್ಳದ ದಂಡೆಯಲಿ ಬಚ್ಚಿಟ್ಟಿದ್ದೇನೆ:ನಾಳೆ ಮೊದಲ ಮಳೆಯಂತೆಹುಡುಕಿಕೋ ನೋಡುವಾ….! + +ಮೊದಲ ಮಳೆಯಲಿ ತೋಯ್ದಅವನ ಪ್ರೇಮಪತ್ರಗಳೀಗಇನ್ನಷ್ಟು ಸ್ವಚ್ಛ..! + +ಮಳೆಬಿಲ್ಲನ್ನು ಕೂರಿಸಿಕೊಂಡುಮಳೆಹನಿಯೊಂದುಕಳೆದ ಜನುಮದ ಕಥೆ ಹೇಳುತಿತ್ತು:ಮೊದಲ ಮಳೆಯಲಿ ಅವತ್ತುಅವಳನ್ನು ಹುಡುಕುತ್ತಾ‘ಸೂರ್ಯಕಾಂತಿ’ಯೊಳಗೆಕಳೆದುಹೋದೆ. + +ಮೊದಲ ಮಳೆಯಲಿಅವಳೊಟ್ಟಿಗೆಮಲ್ಲಿಗೆ ಬಿಡಿಸಿ ಮುಗಿಸಿದಾಗಬಿಡಿಸಲಾಗದ ಮಲ್ಲಿಗೆಯೊಂದುಕಣ್ಣೆದುರಿತ್ತು. + +ಮೊದಲ ಮಳೆಯಥಂಡಿಯೊಳಗೆಸೌತೆಗೆ ಖಾರ ಸವರಿಚಪ್ಪರಿಸಿಕೊಂಡು ಮೆಲ್ಲುವಅವಳ ಸೊಗಸುಗಾರಿಕೆಯನ್ನುಬೇಸಿಗೆಯಲಿ ನೆನಪಿಸಿಕೊಳ್ಳುತ್ತೇನೆ-ಎದೆ ತಂಪು..!ಜೊತೆಯಾಗಿ ನಡೆಯುವಸಿಹಿಗನಸನ್ನು ನನಸಾಗಿಸಿದಮೊದಲ ಮಳೆಗೂಅವಳ ಕೊಡೆಗೂಧನ್ಯವಾದ ಹೇಳಿಬಿಡಲೇ?! + +ಮೊದಲ ಮಳೆ ತಂದನೆಲದ ನರುಗಂಪಿನೊಲವಿನಲಿಅರಳಿದ ಮಲ್ಲಿಗೆಗಳುಅವಳಕಪ್ಪು ಕೊಡೆಯ ಅಡಿಯಲ್ಲೂಬೆಳ್ಳಗೆ ನಗುತ್ತಿದ್ದವು. + +ಕನ್ಯೆಯರ ಕೆನ್ನೆಮೇಲೆಚೆಲುವಿನ ಮುತ್ತು ಪೋಣಿಸುವಮೊದಲ ಮಳೆಗೂನನಗೂಅಷ್ಟಕ್ಕಷ್ಟೆ..! + +ಮೊದಲ ಮಳೆಗೆಬಣ್ಣ ಹಚ್ಚಲೆಂಬಂತೆಸಾಲು ಸಾಲುಗುಲ್ ಮೊಹರ್ ಮರಗಳುಕುಂಚ ಹರವಿಕೊಂಡು ಕುಂತಿವೆ-ಆಕಾಶಕ್ಕೆ ಹೊಟ್ಟೆಕಿಚ್ಚು..! + +ಮೊದಲ ಮಳೆಯಬರಸೆಳೆಯುವ ಪ್ರೀತಿಗೆತೂಕಡಿಸುತ್ತಿದ್ದಹೊಸನದಿ ಗಾಬರಿ..! + +ಮೊದಲ ಮಳೆಯಪಿರಿಪಿರಿಯೊಳಗೂಅವಳು ಸಿಗುತ್ತಾಳೆ ಅಂದೊಡನೆಮಲ್ಲಿಗೆ ಅರಳುತ್ತದೆ;ಗಿಡದಲ್ಲಷ್ಟೇ ಅಲ್ಲಎದೆಯಲ್ಲೂ..! \ No newline at end of file diff --git a/Kenda Sampige/article_512.txt b/Kenda Sampige/article_512.txt new file mode 100644 index 0000000000000000000000000000000000000000..39d470cedd726a53c0efbce4f77e0789cc29b230 --- /dev/null +++ b/Kenda Sampige/article_512.txt @@ -0,0 +1,35 @@ +byಸರ್ವಮಂಗಳ ಸರ್ವಮಂಗಳ|Dec 18, 2017|ಸಾಹಿತ್ಯ| 0 Comments + +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. + +byವಾಸುದೇವ ನಾಡಿಗ್|Dec 18, 2017|ಸಾಹಿತ್ಯ| 0 Comments + +ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. + +byಬಾಗೇಶ್ರೀ ಬಾಗೇಶ್ರೀ|Dec 15, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byಪ್ಯಾಪಿಲಾನ್|Dec 15, 2017|ಸಾಹಿತ್ಯ| 0 Comments + +ಶತಮಾನದ ಪ್ರೇಮಗೀತೆ ಎಂದು ಕರೆಸಿಕೊಳ್ಳುವ ಇದನ್ನು ಆತ ಇನ್ನೊಬ್ಬ `ಫ್ರೆಂಚ್ ಗೀತೆ’ಗಳ ಅನನ್ಯ ಹಾಡುಗಾರ್ತಿ ಜ್ಯೂಲಿಯೆಟ್ ಗ್ರೆಕೋ(Juliette Gréco)ಳಿಗಾಗಿ ಬರೆದ ಎಂದೂ ಹೇಳುತ್ತಾರೆ. + +byಕೆ.ವಿ. ತಿರುಮಲೇಶ್|Dec 14, 2017|ಸಾಹಿತ್ಯ| 0 Comments + +ನಾಡಿಗ್ ಮತ್ತು ನಾನು ಭೇಟಿಯಾದಾಗಲೆಲ್ಲ ಕವಿತೆ, ಕವಿಮಿತ್ರರು, ಪ್ರಕಟಣೆ ಇತ್ಯಾದಿಗಳ ಕುರಿತಾಗಿಯೇ ಮಾತು. ನಾಡಿಗರ ಬಳಿ ಯಾವಾಗಲೂ ಕವಿತೆಗಳು ಇದ್ದೇ ಇರುತ್ತವೆ. + +byಕೆ.ವಿ. ತಿರುಮಲೇಶ್|Dec 14, 2017|ಸಾಹಿತ್ಯ| 0 Comments + +ಹೀಗೆ ಮಾತಿನ ಶೈಲಿಯಲ್ಲಿನ ಭಿನ್ನತೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಕೆಲವೊಂದು ಸ್ವರಗಳನ್ನು ಕನ್ನಡ ಬರಹದಲ್ಲಿ ಅಭಿವ್ಯಕ್ತಿಸುವಂತೆಯೂ ಇಲ್ಲ. ಧಾರವಾಡ ಕಡೆಯ ಕನ್ನಡದಲ್ಲಿ ಕೆಲವೆಡೆ ಅನುನಾಸಿಕ ಸ್ವರಗಳಿವೆ; + +byಕೆ.ವಿ. ತಿರುಮಲೇಶ್|Dec 14, 2017|ಸಾಹಿತ್ಯ| 0 Comments + +ದ್ದರಿಂದ ಹೆಸರು, ವಿಳಾಸ, ಚಿತ್ರ ಇಲ್ಲದ ಇಂಥ `ವಿನಾಶಕಾರಿ’ ಪ್ರತಿಕ್ರಿಯೆಗಳನ್ನು ಪ್ರಕಟಿಸಬಾರದು, ಪ್ರಕಟಿಸಿದರೆ ತಾನು ಈ ಪತ್ರಿಕೆಗೆ ಬರೆಯುವುದಿಲ್ಲ ಎನ್ನುವುದು ಅವರ ಶರತ್ತು. + +byಕೆ.ವಿ. ತಿರುಮಲೇಶ್|Dec 14, 2017|ಸಾಹಿತ್ಯ| 0 Comments + +ಯಾವಾಗಲೂ ಗಂಭೀರವಾಗಿ ಕವಿತೆಗಳನ್ನು ಬರೆಯುವ ಸಂಸ್ಕೃತಿ ಚಿಂತಕರಾದ ಕೆ.ವಿ. ತಿರುಮಲೇಶ್ ಅವರು ನಿಮಗಾಗಿಯೇ ವಿಶೇಷವಾಗಿ ನಿಮ್ಮ ಮನಸ್ಸನ್ನು ಮುದಗೊಳಿಸುವ ಒಂದಷ್ಟು ಕವನಗಳನ್ನು ರಚಿಸಿದ್ದಾರೆ. + +byಕೆ.ವಿ. ತಿರುಮಲೇಶ್|Dec 14, 2017|ಸಾಹಿತ್ಯ| 0 Comments + +ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. \ No newline at end of file diff --git a/Kenda Sampige/article_513.txt b/Kenda Sampige/article_513.txt new file mode 100644 index 0000000000000000000000000000000000000000..8cc4b029d3accb17d7b94bf5e435f5cdf5cc8d05 --- /dev/null +++ b/Kenda Sampige/article_513.txt @@ -0,0 +1,31 @@ +ಆ ಕೈಗಳಿಗೆ ಈಗ ಎಂಟು ತುಂಬಿರಬಹುದು.. ಅವನ ಕಣ್ಣುಗಳಲ್ಲಿ ಮಾತ್ರ ಎಂಬತ್ತರ ನಿಸ್ತೇಜವಿದೆ.. ಯಾವ ಕನಸುಗಳೂ ಅಲ್ಲಿ ಅಪ್ಪಿ ತಪ್ಪಿ ಮಿಸ್ ಕಾಲ್ ಥರಾ ಇಣುಕಿದಂತೆ ಕಾಣುವದಿಲ್ಲ.  ಆಟಪಾಠಗಳ ಹಂಗು ಹರಿದು, ಪಾಪಿ ಪೇಟಕಾ ಸವಾಲಿಗೆ ಉತ್ತರ ಹುಡುಕಲು ಆ ಪುಟ್ಟ ಕೈಗಳು ಚರಕ್.. ಚರಕ್ ಎಂದು ಬೆಣಚುಕಲ್ಲಿನ ಮೇಲೆ ಕತ್ತಿ ಮಸೆಯುತ್ತಿವೆ. ಹೌದು, ನಿಜವಾಗಿಯೂ ಆ ಎಳೆಯ ಕೈಗಳು ಕತ್ತಿ ಮಸೆಯುತ್ತಿವೆ. + +ಹಾಗೆ ನೊಡಿದರೆ ಆ ಕೈಗಳಿಗೆ ನೀಗದ ಕೆಲಸವದು. ಆದರೂ ನಿಭಾಯಿಸಲೇಬೇಕು. ಹಾಗೆಂದು ಹೆತ್ತವರೇ ಕರಾರು ಮಾಡಿದ್ದಾರೆ. ತ್ರಾಣವಿಲ್ಲದ ರಟ್ಟೆಗಳು ಕತ್ತಿ ಮಸೆಯುವಾಗ, ಸೋತು ಬಂದರೂ ತುಸು ಹೊತ್ತು ಝಾಡಿಸಿಕೊಳ್ಳಲೂ ಪುರುಸೊತ್ತಿರದ ಗಳಿಗೆಯದು. + +ಕೆದರಿದ ಕೂದಲು, ತೊಳೆಯದ ಮುಖ, ಮಾಸಿದ ಉಡುಗೆ, ಬಟನ್ ಹರಿದ ಅಂಗಿ, ತೂತು ಬಿದ್ದ ಚಡ್ದಿ, ಬೆತ್ತಲೆ ಪಾದ, ಬಡಕಲು ಶರೀರ ಇವಿಷ್ಟು ಅಳತೆಗೆ ಸಿಗುವ ಆ ಹುಡುಗನ ಹೊರನೊಟ. ಒಳನೋಟದಲ್ಲಿ ಅಳತೆಗೆ ಸಿಗದ ನೂರೆಂಟು ನೋವು, ತಾಪತ್ರಯಗಳು ಒತ್ತರಿಸಿ ಬಂದು, ಮುಖದಲ್ಲಿ ಜೋತು ಬಿದ್ದಿವೆ. ಆ ಹುಡುಗನ ಹೆಸರು ಶಬ್ಬೀರ, ಅವನ ತಂದೆ ಅಬ್ಬಾಸ್, ಅಲ್ಲೇ ಮೀನಿನ ಮಾರುಕಟ್ಟೆಯ ಹಿಂಬದಿ ಅಕ್ರಮ ಸಕ್ರಮ ಜಾಗದಲ್ಲಿ ಒಂದು ಶೆಡ್ ಹಾಕಿ, ಠಿಕಾಣಿ ಹೂಡಿರುವ ಸಂಸಾರ. ಅಬ್ಬಾಸ್ ಗೆ ಒಟ್ಟು ಮೂರು ಜನ ಮಕ್ಕಳು. ಒಂದು ಹೆಣ್ಣು, ಎರಡು ಗಂಡು. ಶಾಲೆಯ ಮೆಟ್ಟಿಲನ್ನೇ ಹತ್ತದ ಅವನು ಸುಣ್ಣ ಬಳಿಯುವದನ್ನೇ ಕಸುಬು ಮಾಡಿಕೊಂಡು ದಿನ ದೂಡಿದವನು. ತನ್ನಂತೆಯೇ ಮಕ್ಕಳಿಗೂ ಓದು ಬರಹ ಕಲಿಸದೇ ತನ್ನ ಕೆಲಸಕ್ಕೇ ಸಾಥೀ ಮಾಡಿಕೊಂಡ. ಹಿರಿಯ ಹುಡುಗ ಸಲೀಂ ಅಪ್ಪನ ಕೆಲಸವನ್ನೇ ಅಪ್ಪಿಕೊಂಡು, ಮತ್ತೂ ಒಂದು ಹೆಜ್ಜೆ ಮುಂದೆ ಹೋಗಿ ಸುಣ್ಣದೊಂದಿಗೆ ಬಣ್ಣ, ಡಿಸ್ಟಂಪರ್ ಬಳಿಯುವದನ್ನೂ ಕಲಿತ. ಕಿರಿಯ ಮಗ ಶಬ್ಬೀರ ಮಾತ್ರ ಒಂಟೆಲುವಿನ ಹುಡುಗ. ಇಂಥಾ ಕೆಲಸ ಅವನಿಗೆ ನೀಗುವದಿಲ್ಲ ಎನ್ನುವದು ಅಬ್ಬಾಸನ ತರ್ಕ. ಹಾಗೆಂದು ಸುಮ್ಮನುಳಿದರೆ ದಿನಕ್ಕೆ ಸಿಗಬಹುದಾದ ಆ ಐವತ್ತು ರೂಪಾಯಿಯಾದರೂ ಕೊಡುವವರು ಯಾರು? ಎಂದು ಯೋಚಿಸಿ, ಅವನನ್ನು ಅಲ್ಲೇ ಹತ್ತಿರ ಇರೋ ಧಾರವಾಡದ ಮೀನು ಮಾರುಕಟ್ಟೆಯ ಕಲಾಲ್ ಸೈಪನ್ ಬಳಿ ಬಿಡಲಾಗಿತ್ತು. ಮೊದ ಮೊದಲು ಶಬ್ಬೀರಗೆ ಮೀನು ಕತ್ತರಿಸುವದು, ತೊಳೆಯುವದು ಕಷ್ಟವೆನಿಸುತ್ತಿತ್ತು. ಆದರೆ ತನದೇ ಓರಿಗೆಯ ಹುಡುಗರು ಅತ್ಯಂತ ನೀಟಾಗಿ ಮೀನು ಕತ್ತರಿಸುವದು, ತೊಳೆಯುವದನ್ನು ನೋಡಿ, ಮಾಡಿ ಅವನೂ ತಯಾರಾದ. + +ಧಾರವಾಡ ಮೀನು ಮಾರುಕಟ್ಟೆಯೇನೋ ತಕ್ಕಮಟ್ಟಿಗಿದೆ, ಇಲ್ಲಿ ಬರುವ ಮೀನು ಮಾತ್ರ ಅಷ್ಟ್ಟಕ್ಕಷ್ಟೇ. ಕಾರವಾರ, ಅಂಕೋಲಾ, ಕುಮಟಾ ಮೂಲದಿಂದ ಬರೋ ಮೀನು, ಮೊದಲು ಹುಬ್ಬಳ್ಳಿಯ ಗಣೇಶ ಪೇಟೆಯ ಮಾರುಕಟ್ಟೆಯಲ್ಲಿ ಹರಾಜಾಗುತ್ತದೆ. ಆಮೇಲೆ ಧಾರವಾಡದ ಮಾರುಕಟ್ಟೆಯನ್ನು ತಲುಪುತ್ತದೆ. ರವಿವಾರವನ್ನು ಹೊರತುಪಡಿಸಿದರೆ ಮಿಕ್ಕ ದಿನಗಳಲ್ಲಿ ಇಲ್ಲಿ ದೊರೆಯುವ ಮೀನೆಂದರೆ ಬಂಗಡೆ ಬಿಟ್ಟರೆ ತೋರಿ (ಭೂತಾಯಿ), ಕೆರೆಯ ಮೀನುಗಳಾದ ಬಾಳೆ, ಕಟ್ಲಾ ಇವೂ ಸಿಗುತ್ತವೆ. ರವಿವಾರದ ದಿನ ಮಾತ್ರ ಧಾರವಾಡದ ಮೀನು ಮಾರುಕಟ್ಟೆಗೆ ಒಂದು ಬಗೆಯ ರಮಜು. ಬೆಳಿಗ್ಗೆ ಒಂಬತ್ತು ಘಂಟೆೆಯಿಂದ ತುಂಬಿಕೊಂಡರೆ ಹೊತ್ತು ಏರುತ್ತಾ ಹೋದ ಹಾಗೆ ಖಾಲಿಯಾಗುವದು. ಆ ದಿನ ಪಾಂಪ್ರೆಟ್, ಪ್ರಾನ್ಸ್, ಕಾಣೆ, ಬೆಳೆಂಜಿ ಇಂಥಾ ಟೇಸ್ಟೀ ಮೀನುಗಳೂ ಸಿಗುತ್ತವೆ. ರವಿವಾರಕ್ಕೊಮ್ಮೆ ಶಬ್ಬೀರ ಕಡಿಮೆಯೆಂದರೂ ನೂರು ರೂಪಾಯಿ ದುಡಿಯುತ್ತಾನೆ. ಆ ದಿನ ಎಷ್ಟೋ ಮನೆಗಳ, ಯಾರದೋ ಮೀನನ್ನು ತೊಳೆಯುವಲ್ಲಿ, ಸ್ವಚ್ಚ ಮಾಡುವಲ್ಲಿ ಶಬ್ಬೀರನ ಆ ಪುಟ್ಟ ಕೈಗಳು ಚಡಪಡಿಸುತ್ತಿರುತ್ತವೆ. ಇಂಥಾ ಅನೇಕ ಶಬ್ಬೀರರು ಇಲ್ಲಿದ್ದಾರೆ. ಅರ್ಧ ಕಿಲೋ ಮೀನು ಕೊಂಡವರು ಸ್ವಚ್ಚ ಮಾಡಲಿಕ್ಕೆ ಕೊಡುವದು ಐದೇ ರೂಪಾಯಿ, ಮೂರು ಕಿಲೋ ಕೊಂಡವರು ಕೂಡಾ ಕೊಡೋದು ಐದೇ ರೂಪಾಯಿ. ಕೆಲ ಬಾರಿಯಂತೂ ಗಟ್ಟಿ ಜಾತಿಯ ಮೀನುಗಳು ಶಬ್ಬೀರ ಪಾಲಿಗೆ ಬಂದರೆ ಸ್ವಚ್ಚ ಮಾಡಲು ಅರ್ಧ ಘಂಟೆಯೂ ಪುರಾಟಾಗುತ್ತಿರಲಿಲ್ಲ. ಆ ರವಿವಾರ ಹಾಗೇ ಆಯಿತು. ಒಬ್ಬ ಗಿರಾಕಿ ಕಾಂಗಳಸೇ ಅನ್ನೋ ಜಾತಿಯ ಮೀನೋಂದನ್ನು ಖರೀದಿಸಿದ, ಅದನ್ನು ಕತ್ತರಿಸಿ ಸ್ವಚ್ಚ ಮಾಡಲು ಶಬ್ಬೀರ ಕಡೆಗೆ ಕೊಡಲಾಯಿತು. ಅದರ ಮೇಲಿನ ಹಿಂಜು ತಗೆಯುವಲ್ಲಿಯೇ ಇವನಿಗೆ ಸಾಕು ಬೇಕಾಯಿತು. ಅಷ್ಟೆಲ್ಲಾ ತ್ರಾಸು ಪಟ್ಟು ಕ್ಲೀನ್ ಮಾಡಿದ ಮೇಲೆ ಅವನಿಗೆ ಸಿಕ್ಕದ್ದು ಕೇವಲ ಮೂರು ರೂಪಾಯಿ ಮಾತ್ರ. ಶಬ್ಬೀರ ಸೊಟ್ಟು ಮುಖ ಮಾಡಿ, + +‘ಸರ್ ಐದು ರೂಪಾಯಿ ಕೊಡ್ರಿ’‘ಚೋಟೀದಿ ಅದೆಂತಾ ಐದು ಕೊಡ್ತಾರ..? ಮೂರೂ ಹೆಚ್ಚಾಯಿತು’‘ಇಲ್ಲ ಸರ್, ಎಲ್ಲರೂ ಅಷ್ಟೇ ಕೊಡೊದು’‘ನೀನೇನು ಸ್ವಚ್ಚ ಮಾಡೀದಿ..? ಕರ್ಮ..! ಮನಿಗೋಗಿ ಮತ್ತೆ ಮಾಡಬೇಕು, ಎಲ್ಲಾ ಡಬಲ್ ಕೆಲಸ’ ಅಂತ ಆ ಆಸಾಮಿ ಕೈ ಬೀಸತಾ ನಡದೇ ಬಿಟ್ಟ. ಆಗ ಶಬ್ಬೀರ ಅವನ ಬೆನ್ನ ಹಿಂದೆಯೇ ಒಂದೆರಡು ಹೊಲಸು ಬೈಗುಳಗಳನ್ನು ಗುನಗುನಸಿ ಸುಮ್ಮನಾದ. ಶಬ್ಬೀರನ ಸುತ್ತಮುತ್ತಲೂ ಮೂರ್ನಾಲ್ಕು ಬೆಕ್ಕುಗಳು ತಮ್ಮ ಸಂಸಾರ ಸಮೇತ ಕುಳಿತುಕೊಂಡು ಅವನ ಕೈಯನ್ನೇ ದಿಟ್ಟಿಸುತ್ತಿದ್ದವು. ಅವನು ಮೀನನ್ನು ಕತ್ತರಿಸುವಾಗ ಅದರ ತಲೆ ತುಂಡಾಗಿ ಅವುಗಳ ಮುಂದೆಯೇ ಹೋಗಿ ಬಿದ್ದರೂ ಅವು ಅದೇ ಸ್ಥಿತಿಯಲ್ಲಿ ದಿಟ್ಟಿಸುತ್ತಿದ್ದವೇ ಹೊರತು ಸುತಾರಾಂ ಬಾಯಿ ಹಾಕುತ್ತಿರಲಿಲ್ಲ. ಬಹುಷ: ಅವುಗಳ ಬಾಯಿ ಕೆಟ್ಟಂತಾಗಿರಬೇಕು. ದಿನಾಲು ಒಂದೇ ಜಾತಿಯ ಮೀನು ತಿಂದೂ ತಿಂದೂ ಅವುಗಳಿಗೂ ಬೇಸರವಾಗಿರಬೇಕು. ಇಲ್ಲವೇ ಚೆಲ್ಲಾಟ ಆಡಿ ತಿನ್ನುವ ಮಜಾ ಹೀಗೆ ಕತ್ತಿಯಿಂದ ತುಂಡಾದ ತಲೆಯಲ್ಲಿ ಅವುಗಳಿಗೆ ಸಿಗಲಿಕ್ಕಿಲ್ಲ. + +ರಾಜೀವ ಸ್ಟೇಟ್ ಬ್ಯಾಂಕ್ ನೌಕರ. ಅವನು ಮೊದಲಿನಿಂದಲೂ ಮೀನು ತಿನ್ನುವವನಲ್ಲ. ಮೀನು ತಿನ್ನುವವಳನ್ನು ಮದುವೆಯಾದಂದಿನಿಂದಲೂ ಅದನ್ನು ಕಲಿತವನು. ಬಾಗಲಕೋಟೆಯಿಂದ ಧಾರವಾಡಕ್ಕೆ ವರ್ಗವಾಗಿ ಬಂದ ಮೇಲಂತೂ ಸ್ವತ: ಖುದ್ದಾಗಿ ಮೀನು ಮಾರುಕಟ್ಟೆಗೆ ಹೋಗಿ ಬರುತ್ತಿದ್ದ. ತನ್ನದೇ ಜೊತೆಗೆ ಕೆಲಸ ಮಾಡುವ ಕಮಲಾಕರ ದೇಸಾಯಿ ಗಂತೂ ದಿನಾಲೂ ಮೀನು ಬೇಕೇ ಬೇಕು. ಮಂಗಳೂರು ಮೂಲದ ದೇಸಾಯಿ, ರಾಜೀವನಿಗೆ ತರಾವರಿ ಮೀನುಗಳನ್ನು ಪರಿಚಯ ಮಾಡಿಕೊಟ್ಟಿದ್ದ. ಇಂಗ್ಲಿಷ್ ದಿನಪತ್ರಿಕೆಯೊಂದರಲ್ಲಿ ಮೀನು ಸೇವನೆಯ ಲಾಭಗಳ ಬಗೆಗೆ ಒಂದು ಲೇಖನ ಪ್ರಕಟವಾಗಿತ್ತು. ಅದನ್ನು ದೇಸಾಯಿ ಮ್ಯಾನೇಜರ್ ಆದಿಯಾಗಿ ಬ್ಯಾಂಕಿನ ಜೀಪ್ ಡ್ರೈವರ್ ವರೆಗೂ ಎಲ್ಲರೆದುರು ಓದಿ ಹೇಳಿ, ತಾನು ಆ ಕಾರಣಕ್ಕಾಗಿಯೇ ದಿನಾಲು ಮೀನು ತಿನ್ನುವದು ಎಂದು ಬೀಗಿದ್ದ. ಮೊದಲೇ ಅವನು ಚುರುಕು ದೇಸಾಯಿ, ಬೆರಕೀ ದೇಸಾಯಿ ಎಂದು ಹೆಸರು ಪಡೆದವನು. ಈ ಲೇಖನವನ್ನು ಎಲ್ಲರಿಗೂ ತೋರಿಸಿದ ನಂತರ ‘ಅದು ಎಷ್ಟೇ ಆಗಲಿ ಮೀನು ತಿಂದ ತಲಿ’ ಅಂತ ಇಡೀ ಬ್ರ್ಯಾಂಚಲ್ಲಿ ಮಾತನಾಡಲಿಕ್ಕೆ ಶುರು ಮಾಡಿದ್ದರು. + +ಈ ದೇಸಾಯಿ ದೇವರು, ದಿಂಡರು ಆಚರಣೆಗಳ ಬಗ್ಗೆ ಅಷ್ಟಕ್ಕಷ್ಟೇ. ಹಾಗಾಗಿಯೇ ಶ್ರಾವಣ ಮಾಸದಲ್ಲಿಯೂ ಇವನು ಮೀನು ತಿನ್ನುವದನ್ನು ಬಿಡುತ್ತಿರಲಿಲ್ಲ. ರಾಜೀವನ ಹತ್ತಿರ ಬಂದು ‘ಒಂದು ಮಾತು ಹೇಳಲಾ..?’ ಎಂದು ಕಿವಿಯ ಹತ್ತಿರ ಹೋಗುತ್ತಿದ್ದ. + +‘ನಿಜವಾಗಿಯೂ ಮೀನು, ಕೋಳಿ ತಿನ್ನುವವರಾಗಿದ್ರೆ ಈ ಶ್ರಾವಣದಲ್ಲಿಯೇ ತಿನಬೇಕು ಯಾಕೆಂದರೆ ಬಹಳ ಜನ ಆಗ ತಿನ್ನುವದಿಲ್ಲ ಕಡಿಮೆ ದರ ಹೆಚ್ಚಿನ ಗುಣಮಟ್ಟ’ ಎಂದು ಮುಸು ಮುಸು ನಗುತ್ತಿದ್ದ. ಆಗ ರಾಜೀವನಿಗೂ ಈ ದೇಸಾಯಿ ನಿಜವಾಗಿಯೂ ತುಂಬಾ ಚಾಲಾಕಿ ಮನುಷ್ಯ ಎನಿಸಿತ್ತು. ರಾಜೀವ್ ಧಾರವಾಡಕ್ಕೆ ಬಂದ ಹೊಸತರಲ್ಲಿ ಮೀನು ಮಾರುಕಟ್ಟೆಗೆ ಹೆಜ್ಜೆ ಊರಿದ್ದೇ ಈ ದೇಸಾಯಿ ಜೊತೆಯಾಗಿ. ಇವನು ಮಾರುಕಟ್ಟೆ ಗೆ ಎಂಟ್ರಿ ಕೊಟ್ಟಿದ್ದೇ ಮೀನು ಮಾರುವವರು ಇವನ ಹೆಸರಿಡಿದು‘ಆವೋ ದೇಸಾಯಿ ಮಾಮಾ.. ಅಚ್ಚಾ ಸುರಮಾ ಹೈ ದೇಖೋ’‘ಆಯಿಯೇ ಶೇಠ್, ಕಾರವಾರಕಾ ಬಂಗಡೆ ಹೈ ದೇಕೋ’‘ಓ ಸಾಬ್ ಫéಸ್ಟ್ ಕ್ಲಾಸ್ ಬೆಳಂಜಿ ಹೈ ದೇಕೋ’ ಅಂತ ಕೂಗವರು. ಇವನೋ ‘ಏಕ ಮಿನಿಟ್’ ಅಂತಾ ಮುಂದೆ ಹೋಗವನು. ಇಡೀ ಮೀನು ಮಾರುಕಟ್ಟೆ ಇವನಿಗೆ ಪರಿಚಯವಿದೆಯಲ್ಲ..! ಅಂತ ರಾಜೀವಗೆ ಅಚ್ಚರಿಯಾಗಿತ್ತು. ದೇಸಾಯಿ ತಾನು ದಿನಾಲು ಖರೀದಿ ಮಾಡುವ ಜಾಗಕ್ಕೆ ಇವನನ್ನು ಕರೆದು‘ಮೀನು ಫ್ರೆಶ್ ಇದೆಯೋ ಇಲ್ಲವೋ ಅಂತ ಹ್ಯಾಂಗ ತಿಳಿಯೂದು..?’‘ನನಗೆ ಗೊತ್ತಿಲ್ಲ’‘ಇಲ್ನೊಡು’ ಎಂದು ಒಂದು ಬಂಗಡೆ ಮೀನನ್ನು ಕೈಗೆತ್ತಿಕೊಂಡು ಅದರ ಕಿವಿಯನ್ನು ತೆರೆದು ತೋರಿಸಿ‘ಹೀಗೆ ಕೆಂಪು ಬಣ್ಣ ಇರಬೇಕು. ಬಿಳಿ ಇಲ್ಲವೇ ಬೂದು ಬಣ್ಣ ಇದ್ದರೆ ಸರಿ ಇಲ್ಲ ಅಂತ ಅರ್ಥ’ ಹಾಗೆ ಅವನು ಹೇಳಿದ ದಿನದಿಂದ ರಾಜೀವ ಮೀನು ಖರೀದಿ ಮಾಡುವಾಗ ಕಿವಿ ತಪಾಷಣೆ ಮಾಡದೇ ಇರುತ್ತಿರಲಿಲ್ಲ. ರಾಜೀವನ ಹೆಂಡತಿ ಸುಮಾಗೆ ಇವನು ಮೀನಿನ ಮಾರುಕಟ್ಟೆಗೆ ಹೋಗುವದು, ಒಳ್ಳೆಯ ಮೀನನ್ನೇ ತರುವದನ್ನು ಗಮನಿಸಿ ‘ನೀವು ಮುಂಚಿನಿಂದಲೂ ಮೀನು ತಿಂತಿದ್ರಿ ಅಂತ ಕಾಣುತ್ತದೆ ಇಲ್ಲಾಂದ್ರೆ ಹೀಗೆ..’ ಅನ್ನುವದರೊಳಗೆ ‘ನೋಡು ಅದೆಲ್ಲಾ ಬ್ಯಾಡ, ಚುಲೋ ಇದೆಯೋ ಇಲ್ಲವೋ ಅಷ್ಟು ಸಾಕು’ ಅಂತಿದ್ದ. + +ದೇಸಾಯಿ ಯಾವಾಗಲೂ ಅದೇ ಅಂಗಡಿಯಲ್ಲಿಯೇ ಮೀನನ್ನು ಖರೀದಿಸುತ್ತಿದ್ದ. ಮಿಕ್ಕವರ ಬಳಿ ಅವನಿಗಿಂತಲೂ ಬಹಳಷ್ಟು ಪ್ರಕಾರದ ಮೀನುಗಳು ಇರುತ್ತಿದ್ದವಾದರೂ ಅಲ್ಲಿ ಖರೀದಿಸುತ್ತಿರಲಿಲ್ಲ. ಅದಕ್ಕೆ ಏನು ಕಾರಣವಿರಬಹುದೆಂದು ಮೊದಮೊದಲು ರಾಜೀವನಿಗೆ ಹೊಳೆಯಲಿಲ್ಲ. ಆಮೇಲೆ ಗೊತ್ತಾಯಿತು. ಅವನು ಈ ದೇಸಾಯಿಯ ಕೊಂಕಣಿ ಭಾಷೆಯನ್ನೇ ಮಾತನಾಡುವದು, ಅದಕ್ಕಿಂತಲೂ ಮುಖ್ಯವಾಗಿ ಅವನದೇ ಪ್ರಾದೇಶಿಕತೆಯವನು. ಹಾಗಾಗಿಯೇ ತೂಕದ ಮೇಲೆ ಒಂದು ಮೀನು ಯಾವಾಗಲೂ ಇವನ ಜೋಳಿಗೆಗೆ ಹೆಚ್ಚಿಗೆ ಬೀಳುತ್ತಿತ್ತು. ಅವನ ಬಳಿ ಒಂದೊಮ್ಮೆ ಬಿಲ್ಕುಲ್ ಮೀನು ಇಲ್ಲವೆಂದಾಗ ಮಾತ್ರ ಬೇರೆಯವರ ಬಳಿ ಇವನು ಮೀನು ಕೊಳ್ಳುತ್ತಿದ್ದ. ಶಬ್ಬೀರನಿಗೆ ಈ ದೇಸಾಯಿಯನ್ನು ಕಂಡರೆ ಆಗುತ್ತಿರಲಿಲ್ಲ. ಇವನ ಮೀನು ಏನಾದರೂ ಕಟ್ ಮಾಡಬೇಕಾಗಿ ಬಂದಾಗ ಬಹುತೇಕ ಹುಡುಗರು ‘ನಾ ಒಲ್ಲೆ ತಾ ಒಲ್ಲೆ’ ಅಂತ ಇವನ ಚೀಲವನ್ನು ಎತ್ತಿ ಇಡುತ್ತಿದ್ದರು. ‘ಎ ಹುಡುಗರೆ, ಐದು ರೂಪಾಯಿ ಕೊಡ್ತೀನಿ ಸ್ವಚ್ಚ ಮಾಡ್ರೋ’ ಅಂತ ಹೇಳಿ ಮುಗಿದಾದ ನಂತರ ಮತ್ತೆ ಈತ ಕೊಡೊದು ಮೂರೇ ರೂಪಾಯಿ. + +‘ಎ ಝೂಟ್ ಭೋಲತಾ ಹೈ’ ಅಂತ ಶಬ್ಬೀರ ಬಾಕಿ ಹುಡುಗರಿಗೆ ಇಷಾರೆ ಮಾಡುತ್ತಿದ್ದ. ರಾಜೀವ ಇವನ ಸಂಗಡಾನೇ ಬರೋದನ್ನು ನೋಡಿದ ಆ ಹುಡುಗರು ‘ಸಾಬ್ ಕಟ್ ಮಾಡಲಿಕ್ಕ ಐದು ರೂಪಾಯಿ ನೋಡ್ರಿ’ ಅಂತ ಕಂಡೀಶನ್ ಹಾಕುತ್ತಿದ್ದರು. ರಾಜೀವ ನಗುತ್ತ ಐದು ರೂಪಾಯಿ ಮುಂಗಡವಾಗಿಯೇ ಕೊಟ್ಟಿರುತ್ತಿದ್ದ. + +*** + +ಒಂದು ಕಾಲದಲ್ಲಿ ಮೀನಿನ ವಾಸನೆಗೆ ‘ತಲೆ ದಿಮ್ ಅಂತೈತಿ’ ಅನ್ನೋ ರಾಜೀವಗೆ ಈಗ ಮೀನು ಇಲ್ಲದೇ ನಡೆಯೋದಿಲ್ಲ. ಅವತ್ತು ಯಾವದೋ ಒಂದು ಅಮವಾಸ್ಯೆ ಬೆಳ್ಳಂಬೆಳಿಗ್ಗೆ ದೇಸಾಯಿ ಅವನಿಗೆ ಪೋನ್ ಮಾಡಿ ‘ಮೀನು ಬೇಕಂದರೆ ಇವತ್ತು ಸಸ್ತಾ ಸಿಗ್ತದೆ’ ಅಂದ. ರಾಜೀವ ಹೆಂಡತಿಯ ಮುಂದೆ ವಿಷಯ ಹೇಳಿದ ‘ಇವತ್ತು ಹೇಳೀಕೇಳಿ ಅಮವಾಸ್ಯೆ ಇವತ್ತು ಬೇಡ’ ಅಂದಳು. ಅದನ್ನೇ ರಾಜೀವ ದೆಸಾಯಿಗೆ ಹೇಳಿದ. + +‘ಆಯ್ತು ತರಕಾರಿಯಾದರೂ ತಗೊಳುವಂತೆ ಬಾ ನನ್ನ ಸಂಗಡ’ ಅಂದ.‘ಸರಿ ಬರ್ತೇನೆ’ ಎಂದು ರಾಜೀವ್ ಮನೆಯಲ್ಲಿ ತರಕಾರಿಯಾದರೂ ತರ್ತೇನೆ ಅಂತ ಹೊರಟ. ಮೊದಲು ಮೀನು ಮಾರುಕಟ್ಟೆಗೆ ಹೋದರು. ಅಲ್ಲಿ ನೊಡಿದರೆ ಅವತ್ತು ಬಿಲ್ಕುಲ್ ಮೀನು ಇರಲಿಲ್ಲ. ಇದ್ದದ್ದು ಒಬ್ಬನ ಹತ್ತಿರ ಮಾತ್ರ. ಅದು ಕೇವಲ ಎರಡೇ ಜಾತಿಯ ಮೀನು. ಬಂಗಡೆ ಬಿಟ್ಟರೆ ಸ್ವಲ್ಪ ಬೆಳಂಜಿ. ಹೀಗಾಗಿ ಆತ ರೇಟೂ ಸಿಕ್ಕಾ ಪಟ್ಟೆ ಹೇಳುತ್ತಿದ್ದ. ಇದ್ದುದರಲ್ಲಿಯೇ ಬೆಳಂಜಿ ಚೆನ್ನಾಗಿದೆ ಆದರೆ ಎರಡು ನೂರು ರೂಪಾಯಿ ಅಂತಾ ಇದ್ದ. ದೇಸಾಯಿ ಗೆ ಇರೋ ಐದಾರು ಜನರಲ್ಲಿ ಯಾರಾದರೂ ತಗೊಂಡೇ ತಗೋತಾರೆ ಅನ್ನೋ ಗ್ಯಾರಂಟೀ ಇತ್ತು. ಹಾಗೆ ಒಂದೊಮ್ಮೆ ಆದರೆ ತನಗೆ ಮೀನು ಸಿಗೋದಿಲ್ಲ ಅನ್ನೂದು ಅವನಿಗೆ ಖಾತ್ರಿ ಆಯ್ತು. ರಾಜೀವ ನನ್ನು ಹತ್ತಿರ ಕರೆದು ಕಿವಿಯಲ್ಲಿ ಏನೋ ಹೇಳಿದ. ರಾಜೀವ ತುಸು ದೂರದಲ್ಲಿ ನಿಂತ. ದೇಸಾಯಿ ಮೆಲ್ಲಗೆ ಮೀನು ಮಾರುವವನ ಬಳಿ ಬಂದು, + +‘ಹ್ಯಾಂಗ ಮಾಡಿಯೋ ಬೆಳಂಜಿ ರೇಟು..?’ ಅಲ್ಲೇ ಬಾಜೂ ಇದ್ದ ಇನ್ನೊಬ್ಬ ಗಿರಾಕಿ‘ಎರಡು ನೂರು ಹೇಳ್ತಾನ’‘ಅವನೇನು ಐದುನೂರೂ ಹೇಳ್ತಾನ, ತಗೋಳವರು ಬೇಕಲ್ಲ.. ಕೊಡೂದು ಹೇಳು’‘ಇವತ್ತ ಮೀನೇ ಇಲ್ಲ, ಇರೋದೇ ಅಷ್ಟು’ ಅಂದ. ದೇಸಾಯಿ ಒಂದೆರಡು ಬೆಳಂಜಿ ಮೀನನ್ನು ಎತ್ತಿ ಮೂಗಿಗೆ ಹಿಡಿದು ಮುಖ ಕಿವುಚುತ್ತಾ‘ಓಹೋ ಇದರ ಕಥೆ ಮುಗಿಲಿಕ್ಕ ಬಂದೈತಿ, ನೀ ಪುಗ್ಸಟ್ಟೆ ಕೊಟ್ಟರೂ ಬ್ಯಾಡ’ ಅಂತ ನಡದ. ನಂತರ ರಾಜೀವ ಬಂದು ಬೆಳೆಂಜಿಯನ್ನು ಕೈಯಲ್ಲಿ ಹಿಡಿದು ಹಿಚುಕಿದಂತೆ ಮಾಡಿ,‘ಇದೇನು ಮಾರಾಯಾ..? ಮೀನು ಮುಗ್ಗಾಗಲಿಕ್ಕೆ ಬಂದೈತಲ್ಲ..!’ ಅಂದ. ಆ ಮೀನು ಮಾರುವವನು‘ಬ್ಯಾಡಾಂದ್ರ ಬಿಡ್ರಿ, ನಾ ಏನು ಫéೋರ್ಸ್ ಮಾಡಾಕತ್ತಿಲ್ಲ’ ಅನ್ನುತ್ತಿರುವಂತೆಯೇ ಅಲ್ಲಿದ್ದ ಐದಾರು ಗಿರಾಕಿಗಳು ಬಿಟ್ಟು ಬರ ಬರ ನಡೆದರು. ಇದನ್ನೇ ಕಾಯುತ್ತಿದ್ದ ದೇಸಾಯಿ‘ನೋಡು, ಒಂದು ರೇಟ್ ಮಾಡಿ ಕೊಡು’ ಅಂದ.‘ಚುಲೋ ಇಲ್ಲ ಅಂತೀರಿ ಮತ್ಯಾಕ ತಗೋತೀರಿ..?’‘ಊಟಕ್ಕಲ್ಲ ಮಾರಾಯಾ.. ಮನ್ಯಾಗ ಒಂದೆರಡು ಬೆಕ್ಕು ಅದಾವ, ಅವುಗಳಿಗೆ ಬೇಕೇ ಬೇಕು’ ಮಕ್ಕಳನ್ನೇ ಇವನು ಬೆಕ್ಕು ಅಂದದ್ದನ್ನು ಕೇಳಿ ರಾಜೀವ ಮುಖಾ ತಿರುಗಿಸಿ ನಗುತ್ತಿದ್ದ.‘ಲಾಸ್ಟ್ ನೂರೈವತ್ತು ನೋಡ್ರಿ ಬೇಕಂದರ ತಗೊರಿ, ಬ್ಯಾಡಂದ್ರ ಬಿಡ್ರಿ’ ಅಂತ ಕಡ್ಡಿ ಮುರಿದ ಹಾಗೆ ಹೇಳಿದ್ದೇ ದೇಸಾಯಿ ಮತ್ತೆ ಯಾರಾದರೂ ಗಿರಾಕಿ ಬಂದಾರು..? ಅಂತ ಆ ಬದಿ ಈ ಬದಿ ನೋಡಿದ್ದೇ.. + +‘ಆಯ್ತಪಾ ಅರ್ಧ ಕಿಲೋ ಕೊಡು’‘ಒಂದು ಕಿಲೋನರೇ ತಗೋರಿ’‘ಬೆಕ್ಕಿಗಿ ಅಂತ ಹೇಳಲಿಲ್ಲಾ..?’ಕ್ಲೀನ್ ಮಾಡಬೇಕು ಅಂತ ಹೇಳಿದ್ದೇ ಅಲ್ಲೇ ಬಾಜೂ ಕುಳಿತ ಹುಡುಗ ಶಬ್ಬೀರ ಮೆಲ್ಲಗೆ ಎದ್ದು ಪುಸಂಗನೇ ಮಾಯವಾಗಿಬಿಟ್ಟಿದ್ದ. ದೇಸಾಯಿ ಅತ್ತಿತ್ತ ಕಣ್ಣಾಡಿಸಿದ. ಕ್ಲೀನ್ ಮಾಡುವ ಬೇರೆ ಯಾವ ಹುಡುಗರೂ ಅಲ್ಲಿರಲಿಲ್ಲ. ಅದೇ ಮೀನನ್ನು ಇನ್ನೊಬ್ಬ ಗಿರಾಕಿಗೆ ಆತ ಎರಡು ನೂರು ರೂಪಾಯಿಯಂಗೆ ಮಾರಿದ್ದ. ಆ ಗಿರಾಕಿ ದುಡ್ಡು ಕೊಟ್ಟಾದ ಮೇಲೆ‘ನೀವು ಹ್ಯಾಂಗ ತಗೊಂಡರಿ..?’ ಅಂತ ಕೇಳಿದಾಗ ದೇಸಾಯಿ ನೂರಾ ಐವತ್ತು ರೂಪಾಯಿ ಅಂತ ಹೇಳಿ ಅಲ್ಲಿಂದ ಪುಸಂಗನೇ ಕಾಲು ಕೀಳಿದ್ದ. ಆ ಗಿರಾಕಿ ‘ಒಬ್ಬರಿಗೊಂದು ಇನ್ನೊಬ್ಬರಿಗೊಂದು ಮಾಡೂದಾದ್ರ ಮೀನೇ ಬ್ಯಾಡ’ ಅಂತ ತಕರಾರು ತಗದ. ಅಲ್ಲ್ಲಿ ಜೋರು ಜೋರಾಗಿ ಬಾಯಿ ಮಾಡುವ ಸದ್ದು ಕೇಳುತ್ತಿತ್ತು. ದೇಸಾಯಿಯ ಬೈಕ್ ಕಿಕ್ ನಲ್ಲಿ ಆ ಅವಾಜ್ ಕಳೆದುಹೋಯಿತು. + +ಕಥೆಗಾರ ಮತ್ತು ಪತ್ರಕರ್ತ.ಸಿಂದಗಿಯವರು. ಈಗ ಧಾರವಾಡ ವಾಸಿ. \ No newline at end of file diff --git a/Kenda Sampige/article_514.txt b/Kenda Sampige/article_514.txt new file mode 100644 index 0000000000000000000000000000000000000000..a2126b786ea3d1b14d44f7a57bd91e1110568397 --- /dev/null +++ b/Kenda Sampige/article_514.txt @@ -0,0 +1,23 @@ +ಕವಿ ಸುಮತೀಂದ್ರ ನಾಡಿಗರಿಗೆ ಎಪ್ಪತ್ತೈದು ಎಂದು ಪತ್ರಿಕೆಗಳಲ್ಲಿ ಓದಿ ಅಚ್ಚರಿಯಾಯಿತು. ಎಲ್ಲಾದರೂ ಉಂಟೆ? ಇಪ್ಪತ್ತೈದು ಎಂದು ಇರಬೇಕಾದುದು ಅಕ್ಷರ ತಪ್ಪಾಗಿ ಎಪ್ಪತ್ತೈದು ಆಗಿರಬೇಕು! ಯಾಕೆಂದರೆ ನಾಡಿಗರಿಗೆ ಎಷ್ಟೇ ವಯಸ್ಸಾದರೂ ಅದು ಇಪ್ಪತ್ತೈದನ್ನು ದಾಟುವುದಿಲ್ಲ! ಅಷ್ಟೊಂದು ಲವಲವಿಕೆ, ಜೀವನೋತ್ಸಾಹ ಇಟ್ಟುಕೊಂಡ ಕವಿ ಇವರು. ಆದರೆ ಇವರ ಮಟ್ಟಿಗೆ ಲವಲವಿಕೆ ಎಂದೂ `ಲವ್ ಲವಿಕೆ’ ಆಗಲಿಲ್ಲ; ಅಮೇರಿಕದಲ್ಲಿ ಇದು ಆಗುವ ಸಂಭವವಿದ್ದಾಗಲೇ, ಬಹುಶಃ ಅದೇ ಕಾರಣಕ್ಕೆ, ಅವರು ಪಿಎಚ್.ಡಿ. ಮುಗಿಸದೆ ಭಾರತಕ್ಕೆ ಮರಳಿದರು. ಇದನ್ನವರು ತಮ್ಮ `ದಾಂಪತ್ಯಗೀತೆ’ಯಲ್ಲಿ ಸೂಚಿಸಿದ್ದಾರೆ. ಮದಿರೆ ಮತ್ತು ಮಾನಿನಿಯರಲ್ಲಿ ನಾಡಿಗರು ಎರಡನೇದನ್ನು ತ್ಯಜಿಸಿ ಪುರುಷೋತ್ತಮರಾದರೂ ಮೊದಲನೆಯದನ್ನು ತ್ಯಜಿಸಿ ಮರ್ಯಾದಸ್ತರಾಗಲಿಲ್ಲ. ನಾನು ನಾಡಿಗರನ್ನು ಮುಖತಃ ಭೇಟಿಯಾಗದೆ ಹಲವಾರು ವರ್ಷಗಳಾಗಿವೆ; ಆದರೂ ನಾನು ಹೈದರಾಬಾದಿನಲ್ಲಿದ್ದಾಗ ಕೆಲವೊಮ್ಮೆ ಅವರ ಜತೆ ಫೋನ್ ನಲ್ಲಿ ಮಾತಾಡಿದ್ದಿದೆ. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಕೆಲವು ಸಲ ನಾಡಿಗರ ಫೋನ್ ಕರೆ ಬರುತ್ತಿತ್ತು; ಅಷ್ಟರಲ್ಲಿ ಅವರ ಮಾತು ತೊದಲುವುದಕ್ಕೆ ಸುರುವಾಗಿರುತ್ತಿತ್ತು. ಕ್ಷಮಿಸಿ, ನಾಡಿಗ್ ಅತ್ಯಂತ ಸಾಚಾ ಮನುಷ್ಯ; ಯಾವ ಸೋಗೂ ಅವರಿಗೆ ಹಿಡಿಸುವುದಿಲ್ಲ. ಆದ್ದರಿಂದ ಸ್ವಲ್ಪ ಸ್ವಾತಂತ್ರ್ಯ ತೆಗೆದುಕೊಂಡು ಮುಕ್ತವಾಗಿಯೇ ಇದೆಲ್ಲ ಬರೆಯುತ್ತಿದ್ದೇನೆ. + +ನಾಡಿಗರನ್ನು ನಾನು ಮೊದಲು ಭೇಟಿಯಾದುದು ಅರುವತ್ತರ ದಶಕದ ಕೊನೆಯಲ್ಲಿ, ಅಡಿಗರ ಐವತ್ತನೇ ಹುಟ್ಟುಹಬ್ಬವನ್ನು ಉಡುಪಿಯಲ್ಲಿ ಸಾಹಿತ್ಯೋತ್ಸವವಾಗಿ ಆಚರಿಸಿದಾಗ ಎಂದು ಕಾಣುತ್ತದೆ. ನಾಡಿಗ್, ಅನಂತಮೂರ್ತಿ, ಲಂಕೇಶ್, ಬಹುಶಃ ಶಾಂತಿನಾಥ ದೇಸಾಯಿ ಎಲ್ಲರೂ ಒಂದೇ ಹೋಟೆಲಿನಲ್ಲಿ ಇಳಿದುಕೊಂಡಿದ್ದರು. ಸಮೀಪದ ಕಾಸರಗೋಡಿನವನೂ ಆ ಕಾಲಕ್ಕೆ ಕವಿತಾಕ್ಷೇತ್ರದಲ್ಲಿ ಅಂಬೆಗಾಲಿಡುತ್ತಿದ್ದವನೂ ಆದ ನಾನೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದು ಅದೇ ಹೋಟೆಲಿನಲ್ಲಿ ತಂಗಿದ್ದೆ. ಅದು ನವ್ಯಸಾಹಿತ್ಯದ ಪ್ರಾದುರ್ಭಾವದ ಕಾಲ. ಈ ಹೊಸ ಸಾಹಿತ್ಯದ ಘಟಾನುಘಟಿಗಳನ್ನು ಮುಖತಾ ನಾನು ಅದೇ ಮೊದಲ ಬಾರಿ ಭೇಟಿಯಾಗುತ್ತಿದ್ದುದು. ಎಳೆಯನ ಅಳುಕು ನನ್ನಲ್ಲಿತ್ತು. ಆಗ ಈತ ಎಳೆಯ, ಅಪ್ರಸಿದ್ಧ ಎಂಬ ಯಾವ ಭೇದಭಾವವೂ ಇಲ್ಲದೆ, ಕಾವ್ಯಾಸಕ್ತ ಎಂಬ ಒಂದೇ ಕಾರಣಕ್ಕೆ ನನ್ನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡವರು ನಾಡಿಗರು. ಮಾತ್ರವಲ್ಲ ನನಗೆ ಇತರರ ಜತೆಯೂ ಬೆರೆಯುವುದಕ್ಕೆ ಅವಕಾಶಮಾಡಿಕೊಟ್ಟರು. ನಾಡಿಗರ ನಿರ್ವ್ಯಾಜ ಕಾವ್ಯಪ್ರೇಮ ಕಂಡು ನನಗೆ ಖುಷಿಯಾಯಿತು. ಸದಾ ಹಸನ್ಮುಖಿ, ತನ್ನನ್ನು ತಾನೇ ನಗಾಡುವ ವ್ಯಕ್ತಿ, ತಾನು ನಾಡಿಗನ ನಕಲು, ನೆಗೆಟಿವ್ ಎಂದು ಹೇಳಿಕೊಳ್ಳುವವರು. ಅಂದಿನಿಂದಲೇ ನನಗೆ ನಾಡಿಗರ ಗೆಳೆತನ ಸುರುವಾದ್ದು. ನಂತರದ ದಿನಗಳಲ್ಲಿ ನಮ್ಮ ನಡುವೆ ಹಲವು ಪತ್ರಗಳು ಆಚೀಚೆ ಹರಿದಾಡಿವೆ. ಆದರೂ ನಮ್ಮ ನಮ್ಮ ಕಾರ್ಯಕ್ಷೇತ್ರಗಳು ಬದಲಾದಂತೆ ಇದು ನಿಂತುಹೋಯಿತು. ನಾಡಿಗರು ಈ-ಮೇಲ್, ಇಂಟರ್ ನೆಟ್ ಮುಂತಾದವನ್ನು ಬಳಸುವುದಿಲ್ಲ. ದೂರವಿರುವ ನಾನು ಟೆಲಿಫೋನ್ ಮಾಡುವುದು ಕಷ್ಟವಾಗುತ್ತದೆ. ಹೀಗೆ ನಮ್ಮ ಸಂಪರ್ಕ ಕಡಿಯುತ್ತ ಬಂತು. + +ಈ ಮಧ್ಯೆ ನಾನೆಲ್ಲಾದರೂ ಅಪರೂಪಕ್ಕೆ ಬೆಂಗಳೂರು ಕಡೆ ಹೋದರೆ ಅವರ ಮನೆಗೆ ಹೋಗಲೇಬೇಕೆನ್ನುವುದು ಅವರ ಹಟ. ನನಗೆ ಸಮಯವೇ ಅಲ್ಪ; ಅದರಲ್ಲಿ ಅವರ ದೂರದ ಮನೆಗೆ ಹೋಗುವುದು ಕಷ್ಟವಾಗುತ್ತಿತ್ತು; ಆದರೂ ಹೋಗಿದ್ದೇನೆ. ಅವರ ಮತ್ತು ಮಾಲತಿ ನಾಡಿಗರ ಆತಿಥ್ಯ ಸ್ವೀಕರಿಸಿದ್ದೇನೆ. ನಾಡಿಗ್ ಮತ್ತು ನಾನು ಭೇಟಿಯಾದಾಗಲೆಲ್ಲ ಕವಿತೆ, ಕವಿಮಿತ್ರರು, ಪ್ರಕಟಣೆ ಇತ್ಯಾದಿಗಳ ಕುರಿತಾಗಿಯೇ ಮಾತು. ನಾಡಿಗರ ಬಳಿ ಯಾವಾಗಲೂ ಕವಿತೆಗಳು ಇದ್ದೇ ಇರುತ್ತವೆ. ಅವುಗಳನ್ನು ಅವರು ನಿರ್ಭಿಡೆಯಾಗಿ ಓದುತ್ತಾರೆ. ನನ್ನದು ಸಂಕೋಚ ಸ್ವಭಾವ; ನಾನು ನನ್ನ ಬಳಿ ಕವಿತೆಗಳನ್ನು ಇರಿಸಿಕೊಂಡಿರುವುದಿಲ್ಲ. ನನ್ನ ಕವಿತೆಗಳನ್ನು ಇತರರಿಗೆ ಓದಿ ಹೇಳುವುದಂತೂ ನನ್ನಿಂದ ಆಗದ ಕೆಲಸ. ನಾಡಿಗರ ಸಮಗ್ರ ಕಾವ್ಯ ಸಮೀಕ್ಷೆ ನಡೆಸುವುದಕ್ಕೆ ನನ್ನಿಂದ ಇದುವರೆಗೆ ಸಾಧ್ಯವಾಗಿಲ್ಲ. ಆದರೆ ಅವರ ಮಹತ್ವದ ಕವನ `ಪಂಚಭೂತಗಳು’ ಬಗ್ಗೆ ನಾನು ಲೇಖನವೊಂದನ್ನು ಬರೆದಿದ್ದೇನೆ. ಅದರ ಪ್ರಾಯೋಗಿಕತೆಯನ್ನು ನಾನು ಇಷ್ಟಪಟ್ಟಿದ್ದೆನೆ. + +ಲವಲವಿಕೆಯುಳ್ಳ ಮನುಷ್ಯನೇ ಕವಿಯಾಗಬಲ್ಲ, ಪ್ರಯೋಗಗಳನ್ನೂ ಮಾಡಬಲ್ಲ. `ಪಂಚಭೂತಗಳು’ ಮೊದಲಿನ `ದಾಂಪತ್ಯಗೀತೆ’ ಕೂಡಾ ಒಂದು ಪ್ರಯೋಗವೇ; ಇದಕ್ಕೆ ಬೇಂದ್ರೆಯವರ `ಸಖೀಗೀತ’ ಒಂದು ಮಾದರಿಯಾಗಿರಬಹುದು; ನರಸಿಂಹಸ್ವಾಮಿಯವರ ದಾಂಪತ್ಯಪ್ರೀತಿಯ ಕವಿತೆಗಳು ಇನ್ನೊಂದು. ಆದರೆ ನಾಡಿಗರ ಗೀತೆಗಳು ಇವಕ್ಕಿಂತ ಭಿನ್ನವೂ ಹೌದು; ಅವು ವರ್ಡ್ಸ್ ವರ್ತ್ ನ ಪ್ರಿಲ್ಯೂಡ್ ತರದ ಜೀವನಚರಿತ್ರೆ ಕೂಡಾ, ಎಂದರೆ ಬದುಕನ್ನೇ ಕವಿತೆಯಾಗಿಸುವ ಪ್ರಯೋಗ. ಕವಿತೆಯನ್ನು ಬದುಕಾಗಿಸಿದ ಮನುಷ್ಯನಿಂದ ಮಾತ್ರವೇ ಬದುಕನ್ನು ಕವಿತೆಯಾಗಿಸುವುದು ಸಾಧ್ಯ. ನಾಡಿಗ್ ಇಂಥವರ ಸಾಲಿಗೆ ಸೇರಿದವರು. ಅವರಿಗೆ ಜೀವನವೇ ಒಂದು ಕಾವ್ಯ. ಹಾಗೆಂದು ಅವರು ತೇಲುಗಣ್ಣಿನ ವಾಸ್ತವದೂರ ಕಾವ್ಯವ್ಯಸನಿಯೂ ಅಲ್ಲ. + +ಯಾಕೆಂದರೆ ನಾಡಿಗರು ಏಕಕಾಲದಲ್ಲಿ ಸ್ವರ್ಗಮರ್ತ್ಯಗಳಲ್ಲಿ ಓಡಾಡಬಲ್ಲರು. ಬಿಳಿಗೂದಲಿನ ನಾಡಿಗ ಒಬ್ಬ `ಕಪ್ಪುದೇವತೆ’. ಬಹಳ ಕಾರ್ಯಚತುರರೂ ಹೌದು. ಬಹುಶಃ ಬೆಂಗಳೂರಿನಂಥ ನಗರದಲ್ಲಿ ಅವರಂಥ ಬಡ ಹಿನ್ನೆಲೆಯವರು ಜೀವಿಸಬೇಕಾದರೆ ಹಾಗಿರಲೇಬೇಕು ಎನಿಸುತ್ತದೆ. ಆದರೂ ನಾಡಿಗರು ಉದಾರಿ, ಪರೋಪಕಾರಿ, ನಿಸ್ವಾರ್ಥಿ. ಹಿಂದೆ ಮುಂಬೈಯಲ್ಲಿದ್ದಾಗ ನಾಡಿಗ್, ಶಾಂತಿನಾಥ ದೇಸಾಯಿ ಮುಂತಾದವರು ಎಮ್.ಎನ್.ರಾಯ್ ಪ್ರಭಾವಕ್ಕೆ ಒಳಗಾದರು. ಪ್ರತಿಯೊಂದು ರಾಜಕೀಯ ಶಕ್ತಿಗೂ ಅದರದೇ ದಿನ ಬರುತ್ತದೆ. ಕರ್ನಾಟಕದಲ್ಲಿ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ನಾಡಿಗರ ದೆಸೆ ಉತ್ತಮವಾಯಿತು. ಯಾಕೆಂದರೆ ಬೊಮ್ಮಾಯಿ ಕೂಡಾ ಒಬ್ಬ ರಾಯಿಸ್ಟ್ ಆಗಿದ್ದ ವ್ಯಕ್ತಿ. ನಾಡಿಗರು ತಮ್ಮ ರಾಜಕೀಯ ಪ್ರಭಾವವನ್ನು ಸ್ವಾರ್ಥಕ್ಕೆ ಬಳಸಿಕೊಂಡರು ಎನ್ನುವುದು ಸಲ್ಲದು. ಅವರಿಗೆ ಏನೇನು ಸಿಕ್ಕಿತೋ (ಉದಾಹರಣೆಗೆ, ಎನ್.ಬಿ.ಟಿ. ಚೇರ್ಮನ್ ಶಿಪ್) ಅದೆಲ್ಲದಕ್ಕೂ ಅವರು ಯೋಗ್ಯರೇ; ಮಾತ್ರವಲ್ಲ, ಅವೆಲ್ಲವೂ ಅವರಿಗೆ ಮೊದಲೇ ಸಿಗಬೇಕಿತ್ತು. ತಮ್ಮ ಪ್ರಭಾವ ಬಳಸಿ ತಮ್ಮಿಂದ ಏನು ಸಾಧ್ಯವೋ ಅದನ್ನು ನಾಡಿಗರು ಬೇರೆಯವರಿಗಾಗಿ ಮಾಡುತ್ತಿದ್ದರು; ಅಡಿಗ, ದಿವಾಕರ್ ಮುಂತಾದವರಿಗೆ ಅವರು ಮಾಡಿದ ಸಹಾಯ ಇತರರಿಗೊಂದು ಆದರ್ಶವಾಗಬೇಕು. ಈಗಲೂ ನಾಡಿಗರಲ್ಲಿ ಅಂಥ ಕೈನೀಡುವ ಗುಣವಿದೆ: ನಿನ್ನ ಹಸ್ತಪ್ರತಿಗಳು ಏನೇನು ಇವೆ, ಅವನ್ನೆಲ್ಲ ಪ್ರಕಟಿಸುವುದಕ್ಕೆ ನಾನು ಏರ್ಪಾಡು ಮಾಡುತ್ತೇನೆ ಎಂದು ನನಗೆ ಹಲವು ಬಾರಿ ಅಂದಿದ್ದಾರೆ. ನಾನು ಮಾತ್ರ ಅವರ ಔದಾರ್ಯವನ್ನು ಬಳಸಿಕೊಳ್ಳುವುದು ಸಾಧ್ಯವಾಗಿಲ್ಲ. + +ಇತರರಿಗೆ ಸಹಾಯ ಮಾಡಬೇಕು ಎಂಬ ಇರಾದೆಗಾಗಿಯೇ ನಾಡಿಗರಿಗೆ ಒಂದು ತರದ ಇಂಪ್ರೆಸಾರಿಯೋ ಗುಣ ಬಂದಿರುವುದು. ಅವರು ಪ್ಲಾನ್ ಮಾಡುತ್ತಾರೆ, ಅದೊಂದು ಗುಫ್ತಗೂ, ಆಗ ಅದಕ್ಕೊಂದು ಪಿತೂರಿಯ ಲಕ್ಷಣ ಕಾಣಿಸಿದರೆ ಆಶ್ಚರ್ಯವಿಲ್ಲ! (ತನಗೆ ಸಿಗದಿದ್ದರೂ ಪರವಾಯಿಲ್ಲ, ಇತರರಿಗೆ ಸಿಗಬೇಕೆನ್ನುವ ಧಾರಾಳತನವನ್ನು ಶಾಂತಿನಾಥ ದೇಸಾಯರಲ್ಲೂ ನಾನು ಕಂಡಿದ್ದೇನೆ.) ಮತ್ತು ಇದು ಕೇವಲ ಸಾಹಿತ್ಯಕ್ಕೆ ಸೀಮಿತವೂ ಅಲ್ಲ; ಜೀವನದ ಎಲ್ಲ ಕ್ಷೇತ್ರಗಳಿಗೂ ಸಂಬಂಧಿಸಿದುದು. ನನಗಿನ್ನೂ ಮದುವೆಯಾಗಿರದಿದ್ದಾಗ, ನಾಡಿಗ್ ನನಗೊಂದು ಮದುವೆ ಮಾಡಿಸಿಬಿಡಬೇಕು ಎಂದು ಶ್ರಮಿಸಿದ್ದಿದೆ. ನಂತರ ನನಗೆ ಗೊತ್ತಾದುದು ಸ್ವತಃ ನಾಡಿಗರಿಗೆ ಮದುವೆಯಾಗದೆ ಇದ್ದ ಸಂದರ್ಭದಲ್ಲಿ ಶಾಂತಿನಾಥ ದೇಸಾಯಿ ಕೂಡಾ ಇಂಥ ಪ್ರಯತ್ನ ನಡೆಸಿ ಸೋತಿದ್ದರು ಎನ್ನುವುದು! ದೇಸಾಯಿ ಈ ಬಗ್ಗೆ ಒಂದು ಕತೆಯನ್ನೇ ಬರೆದಿದ್ದಾರೆ. (ನಾಡಿಗರದೂ ಒಂದು ಪದ್ಯವಿದೆ `ಮದುವೆಯಾಗಲ್ಲ’ ಎಂದೇನೋ ಅದರ ಹೆಸರು.) ಮುಗ್ಧ ಓದುಗರಿಗೇನು ಗೊತ್ತು ಯಾವ ಕತೆಯ ಹಿಂದೆ ಯಾವ ಕತೆಯಿದೆ, ಯಾವ ಕವಿತೆಯ ಹಿಂದೆ ಯಾವ ವ್ಯಥೆಯಿದೆ ಎನ್ನುವುದು! ಪಿ. ಲಂಕೇಶ್ ಅವರ `ಉಮಾಪತಿಯ ಸ್ಕಾಲರ್ ಶಿಪ್ ಯಾತ್ರೆ’ ಎನ್ನುವ ಕತೆಯೊಂದಿದೆ: ಇದರಲ್ಲಿ ಅನಂತಮೂರ್ತಿ ಬರುತ್ತಾರೆ, ಪ್ರೊಫೆಸರ್ ಸಿಡಿಎನ್ ಬರುತ್ತಾರೆ, ಬೇರೆ ಹೆಸರಿನಿಂದ; ಲಂಕೇಶರ `ಬಿರುಕು’ವಿನಲ್ಲೂ ಇವರಿದ್ದಾರೆ. ಅಂತೆಯೇ ಲಂಕೇಶ್ ಜತೆ ಜಗಳವಾದ ನಂತರ ನಾಡಿಗ್ `ಕಾರ್ಕೋಟಕ’ ಎಂಬ ಕತೆ ಬರೆದು ಲಂಕೇಶ್ ಮೇಲಿನ ಕೋಪ ಪ್ರಕಟಿಸಿಕೊಂಡುದೂ ಇದೆ. + +ಈ ಸಿಟ್ಟು ಸೆಡವುಗಳು ಕೂಡಾ ನಾಡಿಗರದೊಂದು ಸ್ವಭಾವ: ಮನುಷ್ಯರು ಕೇವಲ ಮನುಷ್ಯರು ಎನಿಸುತ್ತದೆ. ಮನುಷ್ಯರಲ್ಲಿರುವ ಒಳ್ಳೆಯ ಗುಣಗಳೇ ನಮಗೆ ಕಾಣಿಸಬೇಕು, ಯಾಕೆಂದರೆ ಆದರ್ಶ ಕವಿ, ಆದರ್ಶ ಸಾಹಿತಿ ಎಲ್ಲೂ ಇಲ್ಲ. ನಾಡಿಗರು ಸಿಟ್ಟಾದರೆ ತೀರಾ ಮಗುವಿನಂತೆ ವರ್ತಿಸುತ್ತಾರೆ, ಬಯ್ಯುತ್ತಾರೆ, ವೈಚಾರಿಕವಾಗಿ ಯೋಚಿಸುವುದೇ ಇಲ್ಲ. ನಮ್ಮ ಕಾಲದ ಅದ್ಭುತಗಳನ್ನು ನೋಡಿ: ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಕಂಬಾರ, ನಿಸ್ಸಾರ್ ಅಹಮ್ಮದ್, ಚಂದ್ರಶೇಖರ ಪಾಟೀಲ, ಅರವಿಂದ ನಾಡಕರ್ಣಿ, ಸಿದ್ಧಲಿಂಗ ಪಟ್ಟಣಶೆಟ್ಟಿ ಮುಂತಾದ ಹಲವು ಶ್ರೇಷ್ಠ ಸಾಹಿತಿಗಳು ಅಡಿಗೋತ್ತರ ಕಾಲದಲ್ಲಿ ಬಂದು ಕನ್ನಡದಲ್ಲಿ ಆಧುನಿಕತೆ ಸ್ಥಿರಗೊಳ್ಳುವಂತೆ ಮಾಡಿದರು. ಇವರಲ್ಲಿ ನಾಡಿಗರಿಗೆ ಅವರದೇ ಆದ ಸ್ಥಾನವಿದೆ. ಎಲ್ಲರೂ ತಂತಮ್ಮ ವೈಯಕ್ತಿಕ ಕೊಡುಗೆಗಾಗಿ ಮಹತ್ವದವರು. ಯಾರೂ ಇನ್ನೊಬ್ಬರಂತೆ ಬರೆದವರಲ್ಲ, ಅನುಸರಿಸಿದವರೂ ಅಲ್ಲ. ಆದರೆ ಇವರಲ್ಲಿ ಹಲವರ ನಡುವೆ ಹೊರ ಜಗಳ, ಒಳಜಗಳಗಳು ಕೂಡ ನಡೆದಿವೆ. ನಾಡಿಗರು ಅನಂತಮೂರ್ತಿ, ಲಂಕೇಶ್, ನಿಸ್ಸಾರ್, ಚಂದ್ರಶೇಖರ ಪಾಟೀಲ, ಡಿ.ಆರ್. ನಾಗರಾಜ್ ಮುಂತಾದವರ ಜತೆ ಯಾವ ಯಾವ ಕಾರಣಕ್ಕೋ ಜಗಳಾಡಿದ್ದಾರೆ, ನಂತರ ರಾಜಿಮಾಡಿಕೊಂಡಿದ್ದಾರೆ. ಅನಂತಮೂರ್ತಿಯವರ `ಮೌನಿ’ ಅಮೇರಿಕನ್ ಕಾದಂಬರಿಕಾರ ಬರ್ನಾರ್ಡ್ ಮಲಮೂಡ್ ನ ಕತೆಯೊಂದರ ಚೌರ್ಯ ಎಂದು ನಾಡಿಗ್ ಘೋಷಿಸಿದರು; ನಂತರ ಅನಂತಮೂರ್ತಿಯವರ ಕೈಯಿಂದಲೇ ತಮ್ಮ ಕವನಸಂಕಲನವೊಂದಕ್ಕೆ ಮುನ್ನುಡಿ ಬರೆಸಿಕೊಂಡರು. ಈ ಪತ್ತೇದಾರಿ ಗುಣವೂ ನಾಡಿಗರದೊಂದು ವೈಶಿಷ್ಟ್ಯ; ಬೇಂದ್ರೆ ತಮ್ಮ ಕಾವ್ಯಕ್ಕೆ ಮರಾಠಿಯಿಂದ ಅದೆಷ್ಟನ್ನು ಪಡೆದುಕೊಂಡರು ಎನ್ನುವುದನ್ನು ನಾಡಿಗರು ತಮ್ಮ ಸಂಶೋಧನೆಯಿಂದ ಕಂಡುಹಿಡಿದಿದ್ದಾರೆ. ಖುದ್ದಾಗಿ ಬೇಂದ್ರೆ ಇದನ್ನೆಲ್ಲೂ ಹೇಳಿಕೊಂಡಿಲ್ಲ. ಇದು ನಿಜಕ್ಕೂ ಬೇಂದ್ರೆ ಸಾಹಿತ್ಯ ಅಧ್ಯಯನಕ್ಕೆ ನಾಡಿಗರ ಕೊಡುಗೆ. ಇಂಥ ದಫ್ತರಗಳು ಅವರ ಬಳಿ ಇನ್ನಷ್ಟು ಇರುವುದು ಸಾಧ್ಯ. ನಾಡಿಗರು ಪ್ರೀತಿಸಿದರೆ ತುಂಬಾ ಪ್ರೀತಿಸುತ್ತಾರೆ, ಕೋಪಿಸಿದರೆ ಅಷ್ಟೇ ತೀವ್ರತೆಯಿಂದ ಕೋಪಿಸುತ್ತಾರೆ. ಈಚೆಗೆ ಬೆಂಗಳೂರಲ್ಲಿ ನಾಡಿಗರ ಕುರಿತು ನಡೆದ ಸಮಾರಂಭದಲ್ಲಿ ಚಂದ್ರಶೇಖರ ಪಾಟೀಲ್ ಭಾಗವಹಿಸಿದ್ದರು ಎನ್ನುವುದು ಪಾಟೀಲರೇ ಬರೆದ ಲೇಖನವೊಂದರಲ್ಲಿ ಓದಿ ನನಗೆ ಖುಷಿಯಾಯಿತು. ಪಾಟೀಲರೂ ಒಬ್ಬ ಶ್ರೇಷ್ಠ ಕವಿ, ಅಷ್ಟೇ ವಿಲಕ್ಷಣ ವ್ಯಕ್ತಿ. ಸಂಕ್ರಮಣ ಪತ್ರಿಕೆಯ ಮೊದಲ ಸಂಚಿಕೆಯನ್ನು ನಾಡಿಗರೇ ಉದ್ಘಾಟಿಸಿದರು ಎಂದು ಪಾಟೀಲರು ಈ ಲೇಖನದಲ್ಲಿ ಉಲ್ಲೇಖಿಸುತ್ತಾರೆ. ಖಾರವಾದ ಬಿಚ್ಚು ಮಾತಿಗೆ ಹೆಸರಾದ ಪಾಟೀಲ್ ಈ ಲೇಖನವನ್ನು ಮಮತೆಯಿಂದಲೇ ಬರೆದಿದ್ದಾರೆ. ಮನುಷ್ಯರು ಜಗಳಾಡುವುದು ನನಗೆ ಗಾಬರಿ ತರುತ್ತದೆ, ರಾಜಿಯಾಗುವುದು ಸಂತೋಷ ತರುತ್ತದೆ; ಇದರರ್ಥ ನಾವು ಪರಸ್ಪರ ತಾತ್ವಿಕ ನಿಲುವುಗಳಲ್ಲಿ ರಾಜಿಮಾಡಿಕೊಳ್ಳಬೇಕೆಂದಲ್ಲ. ಪಾಟೀಲ್ ತಮ್ಮ ಲೇಖನದಲ್ಲಿ ತಾವು ಮೊದಲಿಂದಲೂ ಟೀಕಿಸುತ್ತ ಬಂದಿರುವ ನಾಡಿಗರ ಹಿಂದೂ ರಾಷ್ಟ್ರೀಯತೆಯ ಒಲವನ್ನು ಟೀಕಿಸಲು ಮರೆತಿಲ್ಲ. ಆದರೆ ಇದು ವೈಯಕ್ತಿಕತೆಯನ್ನು ಮೀರಿದ ಸಂಗತಿ. + +ನಾಡಿಗರ ಈ ಒಲವು ನನಗೂ ಅಚ್ಚರಿ ಹುಟ್ಟಿಸಿದೆ. ಯಾಕೆಂದರೆ ನಾನು ತಿಳಿದುಕೊಂಡ ನಾಡಿಗರೇ ಬೇರೆ. ಆ ನಾಡಿಗರು ನವ್ಯದ ಕ್ರಾಂತಿಕಾರಿ ಕವಿ; ಎಲ್ಲಾ ತರದ ಕಟ್ಟುಕಟ್ಟಳೆಗಳನ್ನೂ ಕಿತ್ತೊಗೆಯುವ ಕವಿ. ನವ್ಯದ ನಾಯಕ ಅಡಿಗರೂ ಕೂಡಾ ಕ್ರಾಂತಿಕಾರಿ ಕವಿಯೇ; ಆದರೆ ಆದರ್ಶವೊಂದನ್ನು ಇಟ್ಟುಕೊಂಡು ಸಮಕಾಲೀನ ಸಮಾಜದ ವಿರುದ್ಧ ಬಂಡೆದ್ದವರು. ಅವರ ಆದರ್ಶ ಮುಂಗಾಮಿಯಾಗಿದ್ದೂ ಹಿಂಗಾಮಿತನದಿಂದ ತಪ್ಪಿಸಿಕೊಳ್ಳಲಿಲ್ಲ. ಸುವರ್ಣಯುಗದ ಕಲ್ಪನೆಯೇ ಆಧುನಿಕ ವಿಚಾರಕ್ಕೆ ಒಗ್ಗದ್ದು; ಆದರೂ ಅಡಿಗರು ಅಂಥದೊಂದು ಯುಗವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದರು. ಒಂದು ರೂಪಕವಾಗಿಯಾದರೂ ಅವರಿಗೆ ರಾಮಾಯಣ ಮಹಾಭಾರತಗಳು ಆದರ್ಶವಾಗಿದ್ದುವು. ನಾಡಿಗರು ಅಡಿಗರನ್ನು ಬಹಳ ಮೆಚ್ಚಿಕೊಂಡವರು; ಅಡಿಗರ ಕವಿತೆಗಳಿಗೆ ಪ್ರಪ್ರಥಮವಾಗಿ ಪ್ರವೇಶಿಕೆ ಬರೆದವರೂ ಅವರೇ. ಅಡಿಗಾನಂತರ ನಾಡಿಗರು ನವ್ಯದಿಂದ ದೂರವಾಗುವುದನ್ನು ಕಾಣುತ್ತೇವೆ. `ಉದ್ಘಾಟನೆ’, `ಭಾವಲೋಕ’ ಮುಂತಾದ ಕವನಸಂಕಲನಗಳಲ್ಲಿ ಇದರ ಸೂಚನೆಗಳೂ ಇವೆ, ವ್ಯಕ್ತ ಹೇಳಿಕೆಗಳೂ ಇವೆ. ನವ್ಯ ಭಾವಶೂನ್ಯವಾಗಿದೆ, ಕವಿತೆಗೆ ಭಾವನೆಯೇ ಮುಖ್ಯ ಎನ್ನುವುದು ನಾಡಿಗರ ವಾದವಾಗಿತ್ತು. ನವ್ಯದ ಗದ್ಯತೆ ಮತ್ತು ವೈಚಾರಿಕತೆಯ ವಿರುದ್ಧ ಹೊಸ ದಾರಿಗಳನ್ನು ಕಂಡುಕೊಂಡುದು ನಾಡಿಗರು ಮಾತ್ರವೇ ಅಲ್ಲ; ಚಂದ್ರಶೇಖರ ಕಂಬಾರರು ದೇಸಿಯನ್ನು ಹಿಡಿದರು, ಪಾಟೀಲರು ಬಂಡಾಯವನ್ನು ಎತ್ತಿಕೊಂಡರು, ತೇಜಸ್ವಿ ಅನುಭವಮೂಲ ವಾಸ್ತವತೆಯತ್ತ ಹೊರಳಿದರು. ಭಾವಲೋಕವನ್ನು ಪ್ರವೇಶಿಸಬೇಕೆಂದು ಹೊರಟ ನಾಡಿಗರು ಅದರಲ್ಲಿ ಯಶಸ್ವಿಯಾದರೇ? + +ಇಲ್ಲ, ನಾಡಿಗರ ವ್ಯಕ್ತಿತ್ವಕ್ಕೆ ಭಾವವಾಗಲಿ ಗೇಯವಾಗಲಿ ಹಿಡಿಸುವಂಥದು ಆಗಿರಲಿಲ್ಲ. ಅವರ ವ್ಯಕ್ತಿತ್ವ ಇದೆಲ್ಲಕ್ಕಿಂತ ದೊಡ್ಡದೊಂದನ್ನು ಎಳಸುತ್ತಿತ್ತು: ಬಹುಶಃ ಆರ್ಷೇಯತೆಯನ್ನು. ಪ್ರಾಚೀನ ಹಿಂದೂ ಋಷಿಮುನಿಗಳ ಮಾರ್ಗ ಅದು; ಸನ್ಯಾಸಿಯದಲ್ಲ, ಗೃಹಸ್ಥನದು. ಶಂಕರರದಲ್ಲ, ಮಂಡನಮಿಶ್ರರದು. ಆದ್ದರಿಂದಲೇ `ದಾಂಪತ್ಯಗೀತೆ’, ಆದ್ದರಿಂದಲೇ `ಪಂಚಭೂತಗಳು’, ಆದ್ದರಿಂದಲೇ ಅವರು ಸದ್ಯ ಬರೆಯುತ್ತಿರುವ `ಶ್ರೀವತ್ಸಸ್ಮೃತಿ’: ಇದೆಲ್ಲ ಪ್ರಯತ್ನಗಳೂ ಮುಂದಿನದೊಂದು ಉತ್ತಮ ಸಮಾಜವನ್ನು ಹಿಂದಣ ಆದರ್ಶಕಲ್ಪನೆಯ ಮೇಲೆ ಕಟ್ಟುವ ವಿಧಾನ; ಎಂದರೆ ಅಡಿಗರು ಸೂಚಿಸಿದ ನೀಲಿನಕಾಶೆಯ ಮೇಲೆ ನಾಡಿಗರು ಕಟ್ಟಡವೊಂದನ್ನು ಕಟ್ಟುತ್ತಿದ್ದಾರೆ ಎನಿಸುತ್ತದೆ. ಇದಕ್ಕೆ ಅವರು ಪುರಾತನದ ಆರ್ಷತೆಯನ್ನು ಬಳಸಿಕೊಂಡಿದ್ದಾರೆ ನಿಜ, ಆದರೆ ಅಷ್ಟಕ್ಕೆ ಅವರೊಬ್ಬ ಮೂಲಭೂತವಾದಿಯೆಂದು ಹೇಳಲಾಗದು. ಅಡಿಗರಾಗಲಿ ನಾಡಿಗರಾಗಲಿ ರೂಪಿಸಬಯಸುವ ಭವಿಷ್ಯ ಎಲ್ಲ ಜಾತಿಮತ ಮತ್ತು ವರ್ಗದವರಿಗೋಸ್ಕರ ಎಂದು ನನ್ನ ಭಾವನೆ. ನಾಡಿಗರು ದಲಿತ-ಬಂಡಾಯದ ಬ್ಯಾಂಡ್ ವ್ಯಾಗನ್ ಏರಲಿಲ್ಲ; ಆದರೆ ದಲಿತ ಕವಿ ಸಿದ್ಧಲಿಂಗಯ್ಯನಂಥವರ ಬಗ್ಗೆ ಅವರಿಗೆ ಸದ್ದುಗದ್ದಲವಿಲ್ಲದ ಪ್ರೀತಿಯಿದೆ. + +ನಾಡಿಗರ ಮುಂಬರುವ `ಶ್ರೀವತ್ಸಸ್ಮೃತಿ’ (ಅದರ ಹೆಸರು ಇದೇ ರೀತಿ ಇರುತ್ತದೋ ಗೊತ್ತಿಲ್ಲ) ಹೇಗೆ ಬರುತ್ತದೆ ಎನ್ನುವುದು ನನಗೆ ತಿಳಿಯದು. ನಾನು ಊರಲ್ಲಿದ್ದಾಗ ಅವರು ಈ ಕಾವ್ಯದ ಕೆಲವು ಪುಟಗಳನ್ನು ನನಗೆ ಕಳಿಸಿಕೊಟ್ಟಿದ್ದರು. ಓದಿ ನನಗನಿಸಿದ್ದನ್ನು ಟಿಪ್ಪಣಿ ಮಾಡಿ ವಾಪಸು ಮಾಡಿದೆ. ನನಗನಿಸಿದ್ದು: ನಾಡಿಗರು ಜನರಿಗೆ ಹೇಗೆ ಜೀವಿಸಬೇಕು ಎಂಬುದನ್ನು ತಿಳಿಸುತ್ತ ಹೋಗುತ್ತಾರೆ, ಇದೊಂದು ತರದ ಪ್ರವಚನ. `ಪಂಚಭೂತಗಳ’ಲ್ಲೂ ಅವರು ಇದನ್ನು ಮಾಡಿದ್ದಾರೆ. ಕನ್ನಡದಲ್ಲಿ ಉಪದೇಶಕಾವ್ಯಗಳ (didactic poetry) ದೊಡ್ಡ ಪರಂಪರೆಯೇ ಇದೆ: ಶಿವಶರಣರ ಹಲವು ವಚನಗಳು, ದಾಸರ ಕೀರ್ತನೆಗಳು, ತತ್ವಪದಗಳು, ತ್ರಿಪದಿಗಳು, ಶತಕಗಳು, ಜನಪದ ಹಾಡುಗಳು ಮತ್ತು ನಮ್ಮದೇ ಕಾಲದ ಡಿ.ವಿ.ಜಿ.ಯ `ಮಂಕುತಿಮ್ಮನ ಕಗ್ಗ’ ಈ ಮಾರ್ಗಕ್ಕೆ ಸೇರಿದಂಥವು. ನಾಡಿಗರು ಈ ಮಹಾಕಾವ್ಯದ ಹೆಸರೇ ಹೇಳುವಂತೆ ಹಳೆ ಮಾದರಿಯ ಮೇಲೆ ಹೊಸಕಾಲಕ್ಕೆ ಹೊಂದುವಂಥ `ಸ್ಮೃತಿ’ಯೊಂದನ್ನು ಬರೆಯುತ್ತಿದ್ದಾರೆ. ಎಲ್ಲಾ ಬಿಟ್ಟು ಅವರು ಯಾಕೆ ಇಂಥ `ಸ್ಮೃತಿ’ಯೊಂದನ್ನು ಬರೆಯಲು ಹೊರಟರು ಎನ್ನುವುದಕ್ಕೆ ಅವರ ಒಟ್ಟಾರೆ ವ್ಯಕ್ತಿತ್ವದಲ್ಲೇ ಸಮಾಧಾನವಿದೆ: ನಾಡಿಗರು ಒಬ್ಬ ಸಮಗ್ರ ವ್ಯಕ್ತಿ; ಎಂದರೆ ಜೀವನವನ್ನು ಇಡಿಯಾಗಿ ನೋಡುವವರು. ಆದ್ದರಿಂದಲೇ ಅವರು ಕೈಯಾಡಿಸದ ಪ್ರಕಾರಗಳಿಲ್ಲ: ಕಾವ್ಯವೇ ಅಲ್ಲದೆ, ಮಕ್ಕಳ ಸಾಹಿತ್ಯ, ಕನ್ನಡ ಬಾಲಪಾಠ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಲೇಖನ, ಅನುವಾದ, ಸಾಹಿತ್ಯ ಸಂಪಾದನೆ ಇತ್ಯಾದಿ ಹತ್ತು ಹಲವು ಸಂಗತಿಗಳು. ನಾಡಿಗರ ಆಸಕ್ತಿ ಮನುಷ್ಯಸಮಾಜದ ಒಟ್ಟಾರೆ ಬೆಳವಣಿಗೆ: ದಾಂಪತ್ಯ ಅದರ ಕೀಲಿಗೈ. ದಾಂಪತ್ಯ ಚೆನ್ನಾಗಿದ್ದರೆ ಕುಟುಂಬ ಚೆನ್ನಾಗಿರುತ್ತದೆ. ಕುಟುಂಬವನ್ನು ಉದ್ಧರಿಸಿದರೆ ವ್ಯಕ್ತಿಯನ್ನು, ವ್ಯಕ್ತಿಯ ಮೂಲಕ ಸಮಾಜವನ್ನು, ಸಮಾಜದ ಮೂಲಕ ರಾಷ್ಟ್ರವನ್ನು ಬೆಳೆಸಬಹುದು ಎನ್ನುವ ಧೋರಣೆ ಕಾಣುತ್ತದೆ. ಕಾವ್ಯಕ್ಕೂ ವ್ಯಕ್ತಿವಿಕಸನಕ್ಕೂ ವ್ಯತ್ಯಾಸವಿಲ್ಲವೇ ಎಂದು ನಾವು ಕೇಳಬಹುದು. ಅಂತಿಮವಾಗಿ ಇಲ್ಲ ಎನ್ನಬಹುದು ನಾಡಿಗರು; ಅಥವ ಅವರಲ್ಲಿ ಇನ್ನೊಂದು ಸಮಾಧಾನ ಇದೆಯೋ ಏನೋ. ಕಾವ್ಯದ ಗುರಿ ಮೋಕ್ಷ ಎನ್ನುವವರಿದ್ದಾರೆ. ಅದಾದರೆ ಬಹುದೊಡ್ಡ ಮಾತಾಯಿತು. ನನ್ನಂಥವರಿಗಂತೂ ಕಾವ್ಯದ ಗುರಿಯ ಬಗ್ಗೆ ನಿರ್ದಿಷ್ಟವಾದ ಅರಿವಿಲ್ಲ. `ಜನ ಬದುಕಲೆಂದು’ ಎನ್ನಬಹುದು. ಆದರೆ ಏನೀ ಮಾತಿನ ಅರ್ಥ? ಆರ್ಥಿಕ, ಸಾಮಾಜಿಕ, ನೈತಿಕ ಬೆಳವಣಿಗೆಯೇ? ಈ ಎಲ್ಲ ವಿಚಾರಗಳೂ ತಾವಾಗಿ ಎಷ್ಟು ಉತ್ತಮವಾಗಿದ್ದರೂ, ಇವು ಯಾವುದಕ್ಕೂ ಕಾವ್ಯವನ್ನು ನಿರ್ಬಂಧಿಸುವುದು ಸರಿಕಾಣುವುದಿಲ್ಲ. + +ಈ ಕಾರಣಕ್ಕೆ ಉಪದೇಶಕಾವ್ಯ ನಿಜಕ್ಕೂ ಕಾವ್ಯವೇ ಅಲ್ಲ ಎನ್ನುವವರಿದ್ದಾರೆ; ಆದರೂ ಇಲ್ಲಿ ಉಲ್ಲೇಖಿಸಿದ ಹಲವಾರು ಕೃತಿಗಳಲ್ಲಿ ಸಾಕಷ್ಟು ಕಾವ್ಯಾತ್ಮಕತೆ ಇದೆ. ನಾಡಿಗರೂ ಇದನ್ನು ತರಬಹುದು. ನಾಡಿಗರಿಗೆ ನಾನು ಬರೆದುದು `ಪಂಚಭೂತಗಳು’ ಕೃತಿಯ ಪರಿಶೀಲನೆಯಲ್ಲಿ ಮಾಡಿದಂಥ ಒಂದು ವಿಷಯವನ್ನೇ: ನೀತಿ ಮತ್ತು ಕಾವ್ಯವನ್ನು ಒಂದಾಗಿಸುವಲ್ಲಿನ ಸಮಸ್ಯೆ. ಕವಿತೆಯಾಗಲಿ ಕಾವ್ಯವಾಗಲಿ ಬರೆಯುವವರು ತಾವು ಕವಿತೆ ಬರೆಯುತ್ತೇವೆ, ಕಾವ್ಯ ಬರೆಯುತ್ತೇವೆ ಎಂದು ಹೊರಡುವುದಿಲ್ಲ; ಕವಿತೆ ಮತ್ತು ಕಾವ್ಯ ಪರಿಣಾಮವಾಗಿ ಬರಬೇಕಲ್ಲದೆ ಉದ್ದೇಶವಾಗಬಾರದು. ಲಕ್ಷ್ಮೀಶನಂಥ ಕವಿ ಅಲ್ಲಲ್ಲಿ ಕಾವ್ಯಕ್ಕಾಗಿ ಕಾವ್ಯ ಬರೆಯುವಂತೆ ತೋರುತ್ತದೆ; ರಾಘವಾಂಕ ಹಾಗಲ್ಲ, ಕಾವ್ಯ ಅವನಿಗೆ ಪರಿಣಾಮವಾಗಿ ಬರುವಂಥದು. ನವ್ಯ ಸಾಹಿತ್ಯ ತಿರಸ್ಕರಿಸಿದ್ದೇ ಕಾವ್ಯಾತ್ಮಕತೆಯನ್ನು; ನಾಡಿಗರ ಸಮಸ್ಯೆ ಕಾವ್ಯಾತ್ಮಕತೆಯಲ್ಲ, ಗದ್ಯತೆ. ನೀತಿ, ಉಪದೇಶ ಮುಂತಾದವಕ್ಕೆ ಗದ್ಯ ಸರಿಯಾದ ವಿಧಾನ, ಪದ್ಯವಲ್ಲ; ಆದರೆ ಅತ್ತ ಕಾವ್ಯಾತ್ಮಕತೆಗೂ ಹೋಗದೆ ಇತ್ತ ಗದ್ಯತೆಗೂ ಸಾಗದೆ ಇಂಥ ಕಾವ್ಯವನ್ನು ಬರೆಯುವುದು ಹೇಗೆ? ಡಿ.ವಿ.ಜಿ. ಅದಕ್ಕೆ ಚೌಪದಿಯ ಕಟ್ಟೊಂದನ್ನು ಹಾಕಿಕೊಂಡರು; ಒಂದೊಂದು ಪದ್ಯವೂ ಇಡಿಯಾಗಿ, ಪ್ರಾಸ, ಲಯ, ಉಪಮೆ, ರೂಪಕ ಮುಂತಾದವನ್ನು ಇರಿಸಿಕೊಂಡು, ಆದರೆ ತತ್ವಪದವಾಗಿ. ನಾಡಿಗರು ಆಧುನಿಕ ಕವಿಯಾಗಿ ಮುಕ್ತಛಂದಸ್ಸನ್ನು ಇಷ್ಟಪಡುವವರು; ಆದರೆ ಈ ಛಂದಸ್ಸಿನಲ್ಲಿ ತತ್ವೋಪದೇಶ ಹೇಳಹೊರಟಾಗ ಅದು ತೀರಾ ಗದ್ಯರೂಪ ಪಡೆದುಕೊಳ್ಳುತ್ತದೆ. ಉಪಮೆ, ರೂಪಕ ಮುಂತಾದ ಅಲಂಕಾರಗಳನ್ನು ರೂಪಿಸುವುದು ಮಾತ್ರ ಉಳಿದ ದಾರಿ. ಅಥವಾ ಸಂಸ್ಕೃತದ ಯೋಗಸೂತ್ರಗಳಂತೆ ಅರ್ಥಗರ್ಭಿತವಾಗಿ ಹೇಳುವುದು-ಕನ್ನಡ ಭಾಷೆಗೆ ಅದು ಒಗ್ಗುತ್ತದೋ ನನಗೆ ತಿಳಿಯದು. ಈ ಸಮಸ್ಯೆಯನ್ನು ನಾಡಿಗರು ಹೇಗೆ ನಿಭಾಯಿಸುತ್ತಾರೆ ಎಂದು ನಾನು ಕುತೂಹಲದಿಂದ ಎದುರು ನೋಡುತ್ತೇನೆ; ಅವರು ಕಳಿಸಿದ್ದ ಪುಟಗಳಲ್ಲಿ ನನಗೆ ಇದಕ್ಕೆ ಉತ್ತರ ಸಿಕ್ಕಿರಲಿಲ್ಲ. ಆದರೆ ಮಹತ್ವದ ಸಂಗತಿಗಳನ್ನು ಮಾಡಲು ಯತ್ನಿಸಿ ಅದರಲ್ಲಿ ಸೋಲುವುದು ಕೂಡಾ ಒಂದು ಗೆಲುವೇ ಎಂದು ತಿಳಿದುಕೊಂಡವನು ನಾನು. ಆದ್ದರಿಂದ ನಾಡಿಗರ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಬೆಂಬಲ ಮತ್ತು ಶುಭಾಶಯ. + +ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು. \ No newline at end of file diff --git a/Kenda Sampige/article_515.txt b/Kenda Sampige/article_515.txt new file mode 100644 index 0000000000000000000000000000000000000000..42484f5195f672add0bcc1b3e761674ca53f01ac --- /dev/null +++ b/Kenda Sampige/article_515.txt @@ -0,0 +1,553 @@ +ಪ್ರೀತಿಯ ಮಕ್ಕಳೆ, + +ಇವತ್ತು ಮಕ್ಕಳ ದಿನಾಚರಣೆ, ನಿಮ್ಮ ದಿನ, ಚಾಚಾ ನೆಹರೂ ರವರ ಹುಟ್ಟಿದ ದಿನ. ಮಕ್ಕಳನ್ನು ಕಂಡರೆ ತುಂಬಾ ಇಷ್ಟಪಡುತ್ತಿದ್ದ, ಮಮತೆಯ ಮಳೆಗರೆಯುತ್ತಿದ್ದ ಚಾಚಾ ನೆಹರೂ ಅವರ ಹುಟ್ಟುಹಬ್ಬವನ್ನು ನಿಮ್ಮ ಖುಷಿಗಾಗಿ, ಸಂತೋಷಕ್ಕಾಗಿ, ನಿಮ್ಮ ದಿನವನ್ನಾಗಿ ಆಚರಿಸುವುದು ನಿಮಗೂ ಗೊತ್ತು. ಯಾವಾಗಲೂ ಗಂಭೀರವಾಗಿ ಕವಿತೆಗಳನ್ನು ಬರೆಯುವ ಸಂಸ್ಕೃತಿ ಚಿಂತಕರಾದಕೆ.ವಿ. ತಿರುಮಲೇಶ್ಅವರು ನಿಮಗಾಗಿಯೇ ವಿಶೇಷವಾಗಿ ನಿಮ್ಮ ಮನಸ್ಸನ್ನು ಮುದಗೊಳಿಸುವ ಒಂದಷ್ಟು ಕವನಗಳನ್ನು ರಚಿಸಿದ್ದಾರೆ. ಆ ಕವನಗಳಿಗೆಚರಿತಾಅಕ್ಕ ಚಿತ್ರಗಳನ್ನು ಬಿಡಿಸಿದ್ದಾರೆ. ಇವನ್ನೆಲ್ಲ ಒಪ್ಪ ಓರಣವಾಗಿ ಸಿಂಗರಿಸಿದ ಕೆಂಡಸಂಪಿಗೆ ನಿಮಗಾಗಿ ನಳನಳಿಸುತ್ತಿದೆ. + +ಎಷ್ಟಾನೆಬೆಟ್ಟದ ಮೇಲಿಂದ ಎಷ್ಟಾನೆ ಬಂದಾವುಪುಟ್ಟ ನೀನೆಣಿಸಿದೆಯಾ + +ಕಾಡಾನೆ ಊರಾನೆ ನೀರಾನೆ ಬಾರಾನೆಎಷ್ಟಾನೆ ಬಂದಾವು ಎಷ್ಟಾನೆ ಹೋದಾವುಒಟ್ಟಾರೆ ಎಷ್ಟಾನೆ ದೇವರಾನೆಪುಟ್ಟ ನೀನೆಣಿಸಿದೆಯಾ + +ಪುಟು ಪುಟು ಪುಟ್ಟಾನೆಧುಡು ಧುಡು ದೊಡ್ಡಾನೆಒಂದಾನೆ ಎರಡಾನೆ ನನಗಾನೆ ನಿನಗಾನೆಸೂರ್ಯದೇವರಿಂಗೆ ನೂರಾನೆ + +ಹಿಂದೊಂದು ಮುಂದೊಂದುಆನೆ ಬಂದಾನೆದುಂಡಾನೆ ಮೊಂಡಾನೆಹಿಂಡು ಹಿಂಡಾನೆ + +ದಪ್ಪನೆ ಕಿವಿಯಾನೆಡೊಂಕು ಸೊಂಡಿಲ ಆನೆಕಂಭದ ಕಾಲಾನೆಗುಲಗುಂಜಿ ಕಣ್ಣಾನೆ + +ಅಲ್ಲಿ ನೋಡಿದರಾನೆಇಲ್ಲಿ ನೋಡಿದರಾನೆಎಲ್ಲಿ ನೋಡಿದರಲ್ಲಿಆನೆಯೆ ಆನೆ + +ಘೀಳುಡುವಾನೆಕಲ್ಮರ ಸೀಳಿಡುವಾನೆತಾಳೆ ಬಾಳೆಗಳ ಹೂಳಿಡುವಾನೆಕಾಲು ಹೂತರೆ ಘೋರ ಗೋಳಿಡುವಾನೆ + +ಮದಕರಿ ನಾಯಕಾರಮದ ಬಂದ ಆನೆಎಚ್ಚಮನಾಯಕರಮುದ್ದು ಮುದ್ದಾನೆ + +ದೇವ ರಾಯರ ಯುದ್ಧ ಗೆದ್ದಾನೆಸದ್ದಿಲ್ಲದೆ ಕಬ್ಬು ಮೆದ್ದಾನೆಖುಶೀಬತಾನೆ ಮುಸೀಬತಾನೆಹಳ್ಳಕ್ಕೆ ಬಿದ್ದರೆ ಒಂದು ಗುದ್ದಾನೆ + +ದುರ್ಗದ ಆನೆ ಸ್ವರ್ಗದ ಆನೆನಿಸರ್ಗದ ಆನೆ ವಿಸರ್ಗದ ಆನೆಅರಮನೆ ಅಂಬಾರಿ ಹೊತ್ತು ಬರುವಾನೆರಾಜಕುಮಾರಿಯ ಕರೆತರುವಾನೆ + +ಅಚ್ಚ ಕನ್ನಡದಾನೆಸ್ವಚ್ಛ ಕನ್ನಡದಾನೆದೇಸಿ ಕನ್ನಡದಾನೆಪರದೇಸಿ ಆನೆ + +ನಮ್ಮೆಲ್ಲ ಕನಸುಗಳ ತುಂಬ ತುಂಬಾನೆನಮ್ಮೆಲ್ಲ ನೆನಸುಗಳ ಪ್ರತಿಬಿಂಬ ಆನೆಈಗೆಲ್ಲಿ ಆಗೆಲ್ಲಿ ಆನೆ ಬಂತಾನೆಗಲ್ಲಿ ಗಲ್ಲಿಯ ನಮ್ಮ ಮಾಯಾ ಆನೆ + + + +ಬೆಕ್ಕಿನ ಗೋಳುಬೆಕ್ಕಿನ ಮಾಡಿದಿರಾ ನನ್ನಬೆಕ್ಕಿನ ಮಾಡಿದಿರಾಮುದ್ದಿನ ಬೆಕ್ಕಲ್ಲ ಸೊಕ್ಕಿನ ಬೆಕ್ಕಲ್ಲಬಿದ್ದರೆ ಬೆನ್ನಿಗೆ ಗುದ್ದಿನ ಬೆಕ್ಕು + +ಬಿಸಿ ಬಿಸಿ ಹಾಲನು ನನ್ನೆದುರು ಇರಿಸಿಮೂತಿಯನುರಿಸಿದಿರಾಹಾಲೆಂದರೆ ಇನ್ನೆಂದಿಗು ನಾನುಭಯ ಪಡುವ ಹಾಗೆ ಮಾಡಿದಿರಾ + +ಒಂಭತ್ತು ಜೀವಗಳ ಕತೆಯನು ಕಟ್ಟಿಒಂಭತ್ತು ಸಲವೂ ಕೊಲಿಸಿದಿರಾಎಷ್ಟೆತ್ತರದಿಂದ ಬಿದ್ದರು ಪುಟಿದೇಳುವೆನೆಂದುತಾರಸಿಯಿಂದ ಕೆಳ ದೂಡಿದಿರಾ + +ಅಡ್ಡಬಂದರೆ ಭಾರೀ ಅಪಶಕುನವೆಂದುಜನರಲಿ ನಂಬಿಕೆ ಬರಿಸಿದಿರಾಸರಿದಾರಿಯಲೆಂದೂ ನಾ ನಡೆಯದ ಹಾಗೆಅಡ್ಡದಾರಿಯ ನನಗೆ ಹಿಡಿಸಿದಿರಾ + +ಲಡ್ಡುಮಿಠಾಯಿ ಡಬ್ಬವನೆಲ್ಲಅಟ್ಟದ ಮೇಲೆ ಇರಿಸಿದಿರಾಏರುವ ಏಣಿಯ ದೂರಕೆ ಸರಿಸಿಸುಮ್ಮಗೆ ನನ್ನ ಕುಣಿಸಿದಿರಾ + +ದಂಡ ಕಮಂಡಲ ಕೈಯಲಿ ಹಿಡಿಸಿಕಳ್ಳ ಸನ್ಯಾಸಿಯೆಂದು ಕರೆಸಿದಿರಾಬೆಣ್ಣೆಯ ತೂಗಲು ಮಂಗನ ನೇಮಿಸಿನನ್ನನೆ ಮಂಗ ಮಾಡಿದಿರಾ + +ಮೀಸೆಗೆ ಬೆಣ್ಣೆಯ ಲೇಪಿಸಿ ನಾನೇಕದ್ದವನೆಂದು ದೂರಿದಿರಾಹಾಲಿನ ಪಾತ್ರೆಯ ಹೆಗ್ಗಣ ಕೆಡವಲುನನ್ನ ತಲೆಗೇ ಇಕ್ಕಿದಿರಾ + +ಬೀದಿಯ ನಾಯನು ಮನೆಯೊಳಗಿರಿಸಿಅತಿ ಮುದ್ದು ತೋರಿದಿರಾಮನೆಯ ಬೆಕ್ಕನು ಹೊರಗಡೆ ನೂಕಿಕದವಿಕ್ಕಿ ಚಿಲಕವ ಹಾಕಿದಿರಾ + +ಸ್ವರ್ಗದ ಬಾಗಿಲ ದಾರಂದದಲ್ಲಿ ನಾತಲೆಗೆ ಮೆಟ್ಟುವ ಕತೆ ಕಟ್ಟಿದಿರಾಶ್ವಾನ ಯಜಮಾನರ ಪುಣ್ಯವ ಬೊಗಳುತಹೊಗಳುತ ಬರುವುದ ಕಂಡಿದಿರಾ + +ಮಾರ್ಜಾಲ ಕಂಠದ ಮಧುರ ಸಂಗೀತಕ್ಕೆಬೆಲೆಯೇ ಇಲ್ಲದೆ ಮಾಡಿದಿರಾಶ್ವಾನಧ್ವನಿಯೇ ನಿಮ್ಮ ಆವೇಶಕಾಲಾಯ ತಸ್ಮೈ ಎನ್ನುವಿರಾ + +ಅಂತೂ ಗಲಾಟೆಯಲಿ ನಿದ್ದೆಯೆ ಇಲ್ಲಇನ್ನೆಲ್ಲಿ ಬೇಸಿಗೆಯ ಸುಖಸ್ವಪ್ನಆದುದರಿಂದಲೆ ಹಗಲು ತೂಕಡಿಕೆಹಟಯೋಗ ಮತ್ತು ಏಕೋ ಧ್ಯಾನ + + + +ಗುಮ್ಮರೆ ಗುಮ್ಮಗುಮ್ಮ ಕೂತಿರುವುದು ನಮ್ಮ ಗಿಳಿಬಾಗಿಲಲ್ಲಿಗುಮ್ಮರೆ ಗುಮ್ಮಛೂ ಎಂದರೆ ಹೋಗುವುದಿಲ್ಲಬಾ ಎಂದರೆ ಬರುವುದು ಇಲ್ಲಸತ್ತಂತಿದೆ ಮಾತಾಡದ ಗುಮ್ಮಗುಮ್ಮರೆ ಗುಮ್ಮ + +ಎಲ್ಲರ ಜತೆ ನಾ ಎಲ್ಲರಂತಿರಲುಪೇಟೆಪಟ್ಟಣಕೆ ತೆರಳಿದರೆಬೆನ್ನು ಬಿಡದ ಜಂಗಮ ಗುಮ್ಮಹಿಂಬಾಲಿಸುವುದು ಮುಂಬಾಲಿಸುವುದುಕಿವಿ ಕೊರೆದು ನನ್ನ ಸತಾಯಿಸುವ ಗುಮ್ಮಗುಮ್ಮರೆ ಗುಮ್ಮ + +ಊರು ಸಾಕಾಯಿತು ಕಾಡೇ ಸರಿಯೆಂದುಕಾಡಿಗೆ ಹೋದರೆ ವನಗುಮ್ಮಘೀಳಿಡುವುದು ಊಳಿಡುವುದುಕತ್ತಲ ಮರೆಯಲಿ ಕಾಡಿಸಿ ಪೀಡಿಸಿಊರಿಗೇ ಕಾಲು ಕೀಳಿಸುವ ಗುಮ್ಮಗುಮ್ಮರೆ ಗುಮ್ಮ + +ಜಳಕವಾಡಲೆಂದು ನೀರಿಗೆ ಇಳಿದರೆತೆರೆಯಾಗಿ ಹೊಡೆಯುವುದು ಜಲಗುಮ್ಮಮುಳುಗಿಸಿಯೇ ಸರಿಯೆಂದು ಬೆದರಿಸಿಬಿಡುವುದುಕ್ಷಣದಲ್ಲೆ ನನ್ನ ದಡ ಸೇರಿಸುವ ಗುಮ್ಮಗುಮ್ಮರೆ ಗುಮ್ಮ + +ವಿದ್ವತ್ ಸಭೆಯಲಿ ನಾ ಮಾತಾಡಹೊರಟರೆಗುಸುಗುಸು ಎನುವುದು ತುಟಿಗುಮ್ಮಸರಿಯಾದ ಮಾತಿಗೆ ನಕ್ಕು ತಲೆದೂಗದೆತಪ್ಪು ಮಾತಿಗೆ ಚಪ್ಪಾಳೆ ತಟ್ಟುವ ಗುಮ್ಮಗುಮ್ಮರೆ ಗುಮ್ಮ + +ಹವಾಸೇವನೆಗೆ ನಾ ಸುಮ್ಮಗೆ ನಡೆದರೆಬಟಾಬಯಲಲಿ ನೆಲಗುಮ್ಮಮಾಯಾಬಜಾರುಗಳನೆಬ್ಬಿಸಿ ಉಬ್ಬಿಸಿದಾರಿ ತಪ್ಪಿಸುವುದು ಇರುಳೆಲ್ಲಾ ಗುಮ್ಮಗುಮ್ಮರೆ ಗುಮ್ಮ + +ಅಗತ್ಯ ಕಾರ್ಯಕೆ ಮನೆಯಿಂದ ಹೊರಟರೆಮಳೆಗರೆಯುವುದು ಆಕಾಶಗುಮ್ಮಆಲಿ ಕಲ್ಲೇನು ಬರಿ ಕಲ್ಲೇನುಹೊಡೆದೇ ಬಿಡುವುದು ರಪ ರಪ ಗುಮ್ಮಗುಮ್ಮರೆ ಗುಮ್ಮ + +ಗೀತೆಯೊಂದನು ನಾ ರಚಿಸಲು ಕೂತರೆಅಕ್ಷರ ನುಂಗುವುದಕ್ಷರಗುಮ್ಮಪದಗಳ ಭಂಜಿಸಿ ವ್ಯಾಕರಣ ಉಲ್ಲಂಘಿಸಿಅರ್ಥ ಕಿತ್ತಾಕುವ ಅನರ್ಥ ಗುಮ್ಮಗುಮ್ಮರೆ ಗುಮ್ಮ + +ಗತಿಯಿಲ್ಲದೆ ನಾ ಬ್ರಹ್ಮನ ಮರೆಹೊಕ್ಕರೆಅಹಂ ಬ್ರಹ್ಮಾಸ್ಮಿ ಎನ್ನುವ ಗುಮ್ಮಸಂಸ್ಕೃತ ಕನ್ನಡ ಗೊತ್ತಿರೋ ಗುಮ್ಮಇಂಗ್ಲಿಷ್‌ನಲ್ಲೂ ಐ ಆಮ್ ಗುಮ್ಮಬ್ರಹ್ಮನಿಗಿಂತಲು ಮೊದಲಿದ್ದ ಗುಮ್ಮಅನಾದಿ ಗುಮ್ಮ ಅನಂತ ಗುಮ್ಮಹೀಗಾದರೆ ನಮ್ಮ ಗತಿಯೇನು ಗುಮ್ಮಗುಮ್ಮರೆ ಗುಮ್ಮ + + + +ಪಂಪ್ಕಿನ್ಮಕ್ಕಳು ಬಂದು ಕೇಳುತ್ತಾರೆಹಾಲೋವಿನ್ ದಿವಸಮಂತ್ರ ಬೇಕೋ ನಿಮಗೆತಂತ್ರ ಬೇಕೋ?ಪಂಪ್ಕಿನ್ ಅವರ ಕೈಯಲ್ಲಿ + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆಅದು ಸುಮ್ಮಗಿದೆಯೆಂದರ್ಥವಲ್ಲಸುಮ್ಮಗೆ ಇರಬೋದು ಬಿಮ್ಮಗೆ ಇರಬೋದುಅದರೊಳಗೊಂದು ಗುಮ್ಮ ಇರಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆಅದರೊಳಗೊಂದು ಬುದ್ಧನೆ ಇರಬೋದುಬುದ್ಧನಿರಬಹುದು ಶುದ್ಧನಿರಬೋದುಕಣ್ಣಿಗೆ ಕಾಣದ ಮಹಾಯುದ್ಧವೆ ಇರಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆಅದರೊಳಗೊಂದು ಬೂತ ಇರಬೋದುಬೂತವಿರಬಹುದು ಕೆಂಬೂತವಿರಬೋದುಭೂತಭವಿಷ್ಯಗಳ ಸರಮಾಲೆ ಇರಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆಅದರೊಳಗೇನೋ ಅರ್ಥವಿರಬೋದುಅರ್ಥವಿರಬೋದು ಅದು ಅರ್ಧ ಇರಬೋದುಇನ್ನುಳಿದರ್ಥ ಗರ್ಭವಿರಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆಅದು ಯೋಚಿಸೋಲ್ಲವೆಂದರ್ಥವಲ್ಲಯೋಚಿಸಿ ಯೋಚಿಸಿ ಹಣ್ಣಾಗಿರಬೋದುಕತ್ತಿಗೆ ಕಾಯುತ್ತಿರಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆಅದು ಸುಮ್ಮಗೆ ಇದೆಯೆಂದರ್ಥವಲ್ಲಕೀಟಗಳದನು ಕೊರೀತಿರಬೋದುಹೆಗ್ಗಣವೊಂದು ಕೆರೀತಿರಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಪಂಪ್ಕಿನ್ ಒಂದು ಸುಮ್ಮಗೆ ಇದ್ದರೆನಾವೂ ಸುಮ್ಮಗೆ ಇರಬೇಕಿಲ್ಲಯಾತಕೆ ಪಂಪ್ಕಿನ್ ಎಲ್ಲಿಯ ಪಂಪ್ಕಿನ್ಎಂದೆಲ್ಲಾ ಚಿಂತಿಸಬೋದು + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + +ಯಾರಿದು ಕರಡಿ ಯಾರಿದು ತೋಳಕುರುಬ ಯಾರು ಕತ್ತೆ ಕಿರುಬ ಯಾರುನೀವಿಲ್ಲಿರಿಸಿದ ಮುದ್ದಿನ ಪಂಪ್ಕಿನ್‌ನಕದ್ದವರ‍್ಯಾರು ಈ ಹಾಲೋವಿನ್ ದಿವಸ + +ಮಂತ್ರ ಬೇಕೋ ನಿಮಗೆತಂತ್ರ ಬೇಕೋ? + + + +ಇರುವೆ ಸಾಲುಎಲ್ಲಿಂದೆಲ್ಲಿಗೊ ಹೊರಟಿದೆ ಒಂದುಪುಟ್ಟಿರುವೆಗಳ ಸಾಲುಸಾಲಿನ ನಡುವೆ ಕೆಲವಿರುವೆಗಳುಸಾಗಿಸುತಿವೆಯೊಂದು ಅಕ್ಕೀಕಾಳು + +ಪುಟ್ಟವೋ ಅಷ್ಟು ಪುಟ್ಟವು ಅಲ್ಲನಾ ಭೂತಗನ್ನಡಿ ಹಿಡಿದು ಕೂತಿರುವೆಕಟ್ಟು ಮಸ್ತಿನ ಆಳುಗಳೇ ಸರಿಆ ಅಕ್ಕೀಕಾಳೂ ಗಜಗಾತ್ರ + +ಕೆಲವಿರುವೆಗಳು ವಾಪಸು ಬರುತಿವೆಅದೇನೊ ಸಂದೇಶವ ಹೊತ್ತುಧಾವಂತದಲ್ಲೂ ಅರಬರ ಹಾಗೆನೀಡುತ್ತವೆ ಕೆನ್ನೆಗೆ ಮುತ್ತು + +ದಾರಿ ತುಂಬಾ ಬೆಟ್ಟ ಕಣಿವೆಗಳುದೈತ್ಯಾಕಾರದ ಬಂಡೆಗಳುಏರಿಯೊ ಇಳಿದೋ ಸುತ್ತು ಬಳಸಿಯೊಅಂತೂ ದಾರಿ ಸಾಗಲೆ ಬೇಕು + +ನನಗೋ ನೆನಪು ನಾವೂ ಹೀಗೆಗಂಟುಮೂಟೆಗಳ ಕಟ್ಟಿಎತ್ತಣಿಂದೆತ್ತ ರಾತ್ರಿಗೆ ಮೊದಲೆಊರಿಂದೂರಿಗೆ ಸಾಗಿದ ಹಾಗೆ + +ಬ್ರಹ್ಮನದೊಂದು ದಿನಮನುಷ್ಯರ ಯುಗವಂತೆನಮ್ಮೊಂದು ದಿನ ಈ ಇರುವೆಗಳಿಗೆಷ್ಟು ದಿನದಿನಕ್ಕೆಷ್ಟು ಗಂಟೆ? + +ಕಂಡಿದ್ದೆ ನಾನು ಇನ್ನೊಂದು ದಿನಈ ಇಂಥದೆ ಒಂದು ಸಾಲುತಮ್ಮಲ್ಲೊಬ್ಬನ ಕಳೇಬರ ಹೊತ್ತುಇವು ಸಾಗಿಸುವಂಥ ರೀತಿ + +ಸದ್ದು ಗದ್ದಲವಿಲ್ಲ ಅದೇನು ಯೋಚನೆಯೊಮೌನವೆಂದರೆ ಸ್ಮಶಾನ ಮೌನ!ಓ ದೇವರೆ! ತೃಣಮಪಿ ನಚಲತಿ ತೇನ ವಿನಾತೇನ ವಿನಾ + +ಎಲ್ಲೋ ಬಿರುಗಾಳಿ ಎಲೆಗಳ ಸದ್ದುಈ ಇರುವೆಗಳಿನ್ನೂ ನಡುದಾರಿಹೊಡೆದರೆ ಮಳೆ ಈ ಜೀವಗಳ ಗತಿಯೇನುನಾನಾದರು ಏನೂ ಮಾಡುವಂತಿಲ್ಲ + +ಅಕ್ಕಿಯಾರಿಸುವಾಗ ಕೆಳಗೊಂದು ಬಿದ್ದರೆಅದನಂತೆಯೆ ಬಿಟ್ಟು ಬಿಡೋಣಇಷ್ಟೇ ನಾವು ಮಾಡಬಹುದಾದ್ದುಇಷ್ಟೇ ಬಹುಶಃ ನೀನು ಸಹಾ + + + +ಯಾರೀ ಗುಮ್ಮಯಾರೀ ಗುಮ್ಮಮುಗುಮ್ಮ + +ಸುಮ್ಮನೆ ಕಂಬಳಿ ಹೊದ್ದುಕೋಟು ಬೂಟುಗಳ ತೊಟ್ಟುಬೆತ್ತಲು ತಿರುಗುತಕತ್ತಲು ಸುತ್ತುತ + +ಪಿರಿ ಪಿರಿ ಮಾಡುತಮಾತಾಡದೆ ಮೌನವಾಗಿರುತಯಾವಾಗಲು ಪ್ರಶ್ನೆ ಕೇಳುತಯಾವುದಕೂ ಉತ್ತರ ಕೊಡದಿರುತ + +ತನಗೆ ತಾನೇ ನಗುತಅಥವಾ ಎಂದೂ ನಗದಿರುತದೊಡ್ಡಕೆ ಆಕಳಿಸುತಸುಕಾಸುಮ್ಮನೆ ಅಳುತ + +ಗ ಗಬ ತಿನುತತನಗೇ ಬೇಕೆನುತಢರ್ರನೆ ತೇಗುತಹೊಟ್ಟೆ ಬೆಳೆಸಿಕೊಂಡು ಬೀಗುತ + +ಬಾಗುತ ಸಾಗುತದಾರಿ ಕೇಳಿದವರ ದಾರಿ ತಪ್ಪಿಸುತಥಟ್ಟನೆ ಕಾಣಿಸುತಅಷ್ಟೇ ಬೇಗನೆ ಮಾಯವಾಗುತ + +ಹೆಂಗಸು ಮಕ್ಕಳ ಪೀಡಿಸುತಹಾಲಿನ ಪಾತ್ರವ ಕೆಡವುತಮಂಡಿ ಮನೆಯಲಿ ಕಾಯುತತಿಂಡಿ ಪೋತ ಮಹಾ ಕಬೂತ + + + +ಪುಟ್ಟನ ಕೈಯಲಿಪುಟ್ಟನ ಕೈಯಲಿ ಗುಮ್ಮ ಸಿಕ್ಕಿದರೆಗುಮ್ಮ ಫಡ್ಚಪುಟ್ಟನ ಛೂಮಂತ್ರ ತುಂಬಾ ಸುಭದ್ರಹಾಕುವುದು ದಿಗ್ಬಂಧ + +ಆಮೇಲೆ ಗುಮ್ಮ ಆಚೆಗು ಹೋಗದೆಈಚೆಗು ಬರದೆಚಡಪಡಿಸುವುದು ಮೊರೆಯಿಡುವುದುಬಿಟ್ಟುಬಿಡೋ ನನ್ನ ಪುಟ್ಟ + +ಇನ್ನೆಂದಿಗು ನಿಮ್ಮೂರತಂಟೆಗೆ ಬರೆನುಮನೆಗುಮ್ಮನಾದರು ನೆಲಗುಮ್ಮನಾದರುಬೆಟ್ಟಕೆ ಹೋಗಿ ತಲೆ ಮರೆಸಿಕೊಳ್ಳುವೆನು + +ಪುಟ್ಟ ಅನ್ನುವನು: ನಿನ್ನ ಮಾತನುಎಂದಿಗು ನಾ ನಂಬಲಾರೆಬರಕೊಡು ಹಾಗಿದ್ರೆ ಮುಚ್ಚಳಿಕೆಛಾಪು ಕಾಗದದಲ್ಲಿ ಸಹಿ ಹಾಕಿ + +ಮುಚ್ಚಳಿಕೆ ಬರೆದು ಸೀಲು ಮಾಡಿತಾಯಿತದಲ್ಲಿರಿಸಿ ಗುಮ್ಮ ನೀಡುವುದುಆಮೇಲೆ ತಾನು ಜೀವವಿದ್ದರೆಬೇಡಿ ತಿನುವೆನೆಂದು ಓಡಿಹೋಗುವುದು + +ಆದರು ಕೆಲವು ಸಲ ಮಸುಕಿನ ಸಮಯಗವಾಕ್ಷಿಯಲೊಂದು ರೂಪಕಂಡರೆ ಅಚ್ಚರಿಯಿಲ್ಲ ಅಥವಾಬೇಲಿಯ ಮೇಲೊಂದು ಪಾಪ + +ಯಾರೇನೂ ಬೆದರುವ ಕಾರಣವಿಲ್ಲಗುಮ್ಮ ಸಹಿ ಹಾಕಿದ ಮುಚ್ಚಳಿಕೆಯಿದೆಅದು ತಾಯಿತದೊಳಗಿದೆಪುಟ್ಟನ ಕೈಯಲಿ ಭದ್ರವಾಗಿದೆ + + + +ಪಾತರಗಿತ್ತಿಪಾತರದವಳೆ ಪಾತರಗಿತ್ತಿಹೂವಿಂದೂವಿಗೆ ಹಾರುವಾಕಿರಂಭೆ ಊರ್ವಶಿ ಮೇನಕಿಏನೀ ಬಣ್ಣದ ಶೋಕಿ + +ನಿಂತಲಿ ನಿಲ್ಲದೆ ಆಚಿಂದೀಚೆಗೆಸುಳಿಯುವಿ ನೀ ಬೀಳುವಿ ಜೋಕಿಹೂವಿನೊಳೆಲ್ಲೋ ಗಿಡದಲ್ಲೆಲ್ಲೋಸುಮ್ಮನೆ ಸಿಗಹಾಕಿ + +ಹಿಡಿಬೇಕೆಂದರುಹಿಡಿಯಲು ಸಿಗದಾಕಿಹಿಡಿದು ಬಿಟ್ಟರೆಕೈಯಲೇನೋ ಬಾಕಿ + +ಕೈಯಲಿ ಬಾಕಿ ಮೈಯಲಿ ಬಾಕಿಮನಸಿನಲೂ ಸಹ ಬಾಕಿನಮ್ಮ ತೋಟದಲಿರೆ ಪಾತರಗಿತ್ತಿಸ್ವರ್ಗನರಕಗಳ ಬಿಸಾಕಿ + + + +ಕಣ್ಣುಕಣ್ಣು ಕಣ್ಣು ಎಷ್ಟೊಂದು ಕಣ್ಣು + +ಸೈಕಲಿಗೊಂದೇ ಕಣ್ಣುಸೈಕ್ಲೋಪಿಗು ಒಂದೇ ಕಣ್ಣುಮೀನಿಗೆ ಎರಡು ಕಣ್ಣುಮೀಂಚುಳ್ಳಿಗು ಎರಡು ಕಣ್ಣುಬೆಕ್ಕಿಗು ನಾಯಿಗು ಕುದುರೆಗು ಆನೆಗುಮನುಷ್ಯರಿಗೆಲ್ಲಾಎರಡೆರಡೇ ಕಣ್ಣು + +ತಾಳೆ ಹಣ್ಣಿಗೆ ಮೂರು ಕಣ್ಣುಶಿವನಿಗು ಮೂರು ಕಣ್ಣುಗಂಡಭೇರುಂಡಕೆ ನಾಲಕು ಕಣ್ಣುದೋಸೆಗೆ ಸಾವಿರ ಕಣ್ಣುಅಂತರಿಕ್ಷಕೆ ಲಕ್ಷಾಂತರ ಕಣ್ಣು + +ಒಳಗಣ್ಣು ಹೊರಗಣ್ಣುಒಳಗೊಂದು ಕಣ್ಣುಹೊರಗೊಂದು ಕಣ್ಣುಎಷ್ಟೊಂದು ಕಣ್ಣುಋಷಿಮುನಿ ಜನಕೆ ಅಂತರಂಗದ ಕಣ್ಣುತುಬ್ಬುಗಾರರಿಗೆ ಎಲ್ಲೆಲ್ಲು ಕಣ್ಣುಇಂದ್ರನಿಗಾದರೆ ಮೈಯೆಲ್ಲಾ ಕಣ್ಣುಚಂದ್ರನಿಗೋ ಸೂರ್ಯನೆ ಕಣ್ಣುಸೂರ್ಯನಿಗಿಲ್ಲ ಇನ್ನೊಂದು ಕಣ್ಣುಸೂರ್ಯನಿಗವನೆ ಕಣ್ಣು + + + +ಅವಕಾಶಎಲ್ಲರ ಊಟ ಆಗೇ ಹೋಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಬರತ್ತೆ ಬರತ್ತೆ ಸುಮ್ಮನಿರೀಗಎನ್ನುತ್ತದೆ ದೈವ + +ಎಲ್ಲರ ಪಾಠ ಆಗೇ ಹೋಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಬರತ್ತೆ ಬರತ್ತೆ ಸುಮ್ಮನಿರೀಗಎನ್ನುತ್ತದೆ ದೈವ + +ಎಲ್ಲರ ನೌಕರಿ ಆಗೇ ಹೋಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಬರತ್ತೆ ಬರತ್ತೆ ಸುಮ್ಮನಿರೀಗಎನ್ನುತ್ತದೆ ದೈವ + +ಎಲ್ಲರು ಮನೆಮಠ ಕಟ್ಟಿಸಿ ಆಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಬರತ್ತೆ ಬರತ್ತೆ ಸುಮ್ಮನಿರೀಗಎನ್ನುತ್ತದೆ ದೈವ + +ಎಲ್ಲರು ಮದ್ವೆ ಮಾಡ್ಕೊಂಡಾಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಬರತ್ತೆ ಬರತ್ತೆ ಸುಮ್ಮನಿರೀಗಎನ್ನುತ್ತದೆ ದೈವ + +ಎಲ್ಲರು ಕಾರು ಕೊಂಡ್ಕೊಂಡಾಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಬರತ್ತೆ ಬರತ್ತೆ ತಾಳ್ಮೆ ತಾಳ್ಮೆಎನ್ನುತ್ತದೆ ದೈವ + +ಎಲ್ಲರು ವೋಟು ಚಲಾಯಿಸಿ ಆಯ್ತುನನ್ನವಕಾಶ ಯಾವಾಗ ಬರತ್ತೆಎನ್ನುತ್ತಾನೆ ಪುಟ್ಟಲಿಸ್ಟ್ ನಲಿ ನಿನ್ನ ಹೆಸರೇ ಇಲ್ಲಹೊರಟೋಗಯ್ಯ ಎನ್ನುತ್ತದೆ ದೈವ + + + +ಕುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + +ಬೂದಿಗೊಂದು ಬೂದುಗುಂಬಳಕಾಸಿಗೊಂದು ಕಾಸಿಗುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ + +ಕಂಬಳ ಓಡದ ಕಂಬಳಿ ಹೊದೆಯದಉಂಬುಳು ಕಚ್ಚದ ಸಿಂಬಳ ಸುರಿಸದಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + +ಕಳ್ಳ ಕುಂಬಳ ಸುಳ್ಳ ಕುಂಬಳಸಿಂಡರೆಲ್ಲಳ ಮಾಯಾಗುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + +ಹಾದಿಗುಂಬಳ ಬೀದಿಗುಂಬಳಸಂತೆಗುಂಬಳ ಸೊಂತಗುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + +ಆತ್ತಗುಂಬಳ ಇತ್ತಗುಂಬಳಯಾರಿಗಾಗಿ ಸತ್ತಗುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + +ಹಾವಗುಂಬಳ ಭಾವಗುಂಬಳರಾತ್ರಿ ತೋಟ ಕಾವಗುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + +ಆದಿಗುಂಬಳ ಅನಾದಿಗುಂಬಳಬ್ರಹ್ಮಗುಂಬಳ ಬ್ರಹ್ಮಾಂಡಗುಂಬಳಬೂದುಗುಂಬಳ ಕಾಸಿಗುಂಬಳಏನು ಸಂಬಳ ನಿಮಗೆ? + + + +ಪುಟ್ಟನ್ ಕೆಟ್ಟನ್ನಮ್ಮ ಕೇರಿಯ ಪುಟ್ಟನ್ಈಚೆಗೆ ತುಂಬ ಕೆಟ್ಟನ್ಹಾಲೋವಿನ್ ದಿವಸವನ್ಪುಂಡರ ಜತೆ ಸೇರಿ ಅವನ್ಹೀಗೆ ಆಚರಿಸುವನ್ + +ಹುಲಿಯಾಗಿ ಬರುವನ್ಸುತ್ತಿ ಬೀದಿ ತಿರುವನ್ಜನರನಚಾನಕ ಬೆದರಿಸುವನ್ಯಾರೋ ಎಂದರೆ ಗುರ್ರಮ್ ಗುರ್ರಮ್ಹಲ್ಲು ಮಾತ್ರ ಮರೆತಿರುವನ್ + +ತೋಳವಾಗಿ ನುಗ್ಗುವನ್ಬಾಳೆ ಹಣ್ಣಿನ ತೋಟವನ್ಕುಯ್ಯೋ ಕುಯ್ಯೋ ಕೂಗುವನ್ಯಾರೋ ಎಂದರೆ ಅಯ್ಯೋ ಅಯ್ಯೋಬಾಲ ಮಾತ್ರ ಮರೆತಿರುವನ್ + +ಬೆಕ್ಕಾಗಿ ಅಟ್ಟವನ್ಹತ್ತಿ ಏನೊ ಹುಡುಕುವನ್ಕರ್ರ್ ಕರ್ರ್ ಸದ್ದನು ಮಾಡುವನ್ಯಾರೋ ಎಂದರೆ ಮಿಯಾಂ ಮಿಯಾಂಮೀಸೆ ಮಾತ್ರ ಮರೆತಿರುವನ್ + +ಊಟಕೆ ಬಾರೊ ಪುಟ್ಟನ್ ಎಂದರೆಓಡೋಡಿ ಬರುವನ್ ಪುಟ್ಟನ್ಎಲ್ಲೋಗಿದ್ದಿಯೊ ಪುಟ್ಟನ್ ಎಂದರೆಪುಟ್ಟನ್? ಯಾರು ಪುಟ್ಟನ್?ಪುಟ್ಟನ್ ಘಟ್ಟ ಹತ್ತಿದನ್ನಾ ವೇಷದ ಪುಟ್ಟನ್ ಎನುವನ್!ಅಡ್ಡಿಯಿಲ್ಲ ಪುಟ್ಟನ ಊಟವನ್ನಾನೆ ಮಾಡುವೆನ್! + + + +ಮಾಯಾ ಕುದುರೆ + +ಪುಟ್ಟನಿಗೊಂದು ಮಾಯಾ ಕುದುರೆಎಲ್ಲಿಂದಲೊ ಏನೋ ಸಿಕ್ಕಿಬಿಟ್ಟಿದೆಹೆಂಗೆ ಓಡಿಸ್ತಾನೆ ನೋಡಿದಿರಾ + +ಬೆಟ್ಟ ಕಣಿವೆ ಲೆಕ್ಕಕ್ಕಿಲ್ಲಹಳ್ಳ ಕೊಳ್ಳ ಒಂದೇ ಎಲ್ಲಇಳಿಸುತ್ತಾನೆ ಏಳು ಸಮುದ್ರಏಳಿಸುತ್ತಾನೆ ಎಂಟೂ ತೀರ + +ಗೊಂಡಾರಣ್ಯಗಳ ನುಗ್ಗಿಸುತಾನೆಬ್ರಹ್ಮಾಂಡಗಳ ಬಗ್ಗಿಸುತಾನೆನಾಕ ನರಕಗಳ ನೂಕಿಸುತಾನೆಸ್ವರ್ಗಕೆ ಲಗ್ಗೆ ಹಾಕಿಸುತಾನೆ + +ದಿಗಂತದಾಚೆಗೆ ಆತನ ಕಣ್ಣುಚಂದ್ರನೂರಿಗೂ ಹೊರಿಸುವ ಮಣ್ಣುಕುದುರೆಗೆ ಕುಡಿಸಿ ತಾಜಾ ಇಬ್ಬನಿಏರಿದವನೇ ಮಹಮ್ಮದ್ ಘಜನಿ + +ಜನ ಬೆರಗಿಂದ ಕಾಯುತಿದಾರೆಎಲ್ಲಿ ಪುಟ್ಟ ಎಲ್ಲಿ ಕುದುರೆಕಬ್ಬಿನ ತೋಟದಿ ಕಂಡವರಿದ್ದಾರೆಬಾಳೆಯ ತೋಟದಲು ನೋಡಿದವರಿದ್ದಾರೆ + +ಬಾಳೆಗೊನೆಯ ಹೂವಿನ ಒಳಗೆಮಧುವನು ಕದಿಯುವ ಆತುರದಲ್ಲಿಪುಟ್ಟನು ಕುದುರೆಯು ಸಿಕ್ಕಿಬಿದ್ದಿದ್ದಾರೆಬಾಳೆಗೊನೆಯ ಹೂವಿನಲಿ + +ಯಾರಾದರು ಹೋಗಿಸಂಜೆಯ ಮೊದಲೆಹೂವನು ಕಿತ್ತು ಬಿಡಿಸದೆ ಇದ್ದರೆಮಾಯಾ ಪುಟ್ಟ ಮಾಯಾ ಕುದುರೆ! + + + +ಜಗಳಕಂಟ ಪುಚ್ಚೆ ಮಂಗು ಪುಚ್ಚೆಬೆಳಗಿನಿಂದಲೂ ರಣಾರಣಪ್‌ರ್ರ್ ಎನ್ನುತ್ತವೆ ಗ್‌ರ್ರ್ ಎನ್ನುತ್ತವೆಬೀಳುವಂತೆ ಹೆಣ + +ಏನಪಾತಂದರೆ ಹಾತೆಯೊಂದುಇಬ್ಬರ ಗುರಿಯಾಗಿದೆಒಂದು ಹೊಂಚು ಹಾಕುತಿದ್ದುದಇನ್ನೊಂದು ಹಿಡಿದು ನುಂಗಿದೆ + +ಹಾತೆಗೋಸುಗ ಜಗಳವೆತೋಟ ತುಂಬ ಇಲ್ಲವೆನಿಮಗಂತಾನೆ ಬೆಳೆಸಿದ್ದೇವೆಹುಳ ಹುಪ್ಪಟೆ ಕೂಡ ಅವೆ + +ಯಾರು ಯಾವುದ ಹಿಡಿದರೇನುಯಾರು ಹಿಡಿದರೊ ಅವರಿಗೆಮಾಡುವ ಮೊದಲೆ ಗೊತ್ತಿದೆಯೇನುಯಾವ ಊಟ ಯಾರಿಗೆ + +ಮಿಯಾಂ ಅಂತದೆ ಮಂಗುಮಿಯಾಂ ಅಂತದೆ ಕಂಟಒಂದು ಮಿಯಾಂ ಹೌದುಇನ್ನೊಂದು ಮಿಯಾಂ ಅಲ್ಲ + +ಯಾವ ಮಿಯಾಂ ಹೌದು ಮತ್ತುಯಾವ ಮಿಯಾಂ ಅಲ್ಲದೇವರಿಗಾದರು ಗೊತ್ತಿದೆಯೇನಮಗಂತೂ ಇಲ್ಲ + + + +ಎತ್ತಿಗೆ ಬಂದರೆ ಜ್ವರಎತ್ತಿಗೆ ಬಂದರೆ ಜ್ವರಕೋಣನಿಗ್ಯಾಕೋ ಬರೆ? + +ಕೋಣನ ಬೆನ್ನು ಹರವಾಗೈತೆಅಲ್ದೆ ಚರ್ಮ ದಪ್ಪಾಗೈತೆಅದಕ್ಕೇ ಬರೆ ಕೋಣನಿಗೆಎತ್ತಿಗೆ ಬಂದರು ಜ್ವರ + +ಪುಟ್ಟನು ಕದ್ದರೆ ಲಡ್ಡುಕಿಟ್ಟನಿಗ್ಯಾಕೋ ಗುದ್ದು? + +ಆಮೇಲೇಳ್ತೀನೀಗನಿದ್ದೆ ಮಾಡ್ಬೆಕು ಹೊದ್ದು! + + + +ಸುವ್ವಿ ಸುವ್ವಿಸುವ್ವಿ ಸುವ್ವಿ ಸುವ್ವಾಲೆ ಸುವ್ವಿಗವಿಯಲಿ ಯಾರು ಬಾವಿಲಿ ಯಾರುಗವಿಯಲಿ ಸಿಂಹ ಬಾವಿಲಿ ಗುಮ್ಮಸುವ್ವಿ ಸುವ್ವಿ ಸುವ್ವಾಲೆ ಸುವ್ವಿ + +ಕರಡಿ ಕರಡಿ ಪಾತಾಳಗರಡಿಬೆಟ್ಟದಿ ಯಾರು ಬಯಲಲಿ ಯಾರುಬೆಟ್ಟದಿ ತೋಳ ಬಯಲಲಿ ಕುರಿಕರಡಿ ಕರಡಿ ಪಾತಾಳಗರಡಿ + +ಸುವ್ವಿ ಸುವ್ವಿ ಸುವ್ವಾಲೆ ಸುವ್ವಿಒಲೆಯಲಿ ಯಾರು ಬಲೆಯಲಿ ಯಾರುಒಲೆಯಲಿ ಅನ್ನ ಬಲೆಯಲಿ ಮೀನುಸುವ್ವಿ ಸುವ್ವಿ ಸುವ್ವಾಲೆ ಸುವ್ವಿ + +ಕರಡಿ ಕರಡಿ ಪಾತಾಳಗರಡಿಸೆರೆಯಲಿ ಯಾರು ಮರೆಯಲಿ ಯಾರುಸೆರೆಯಲಿ ಸುಳ್ಳ ಮರೆಯಲಿ ಕಳ್ಳಕರಡಿ ಕರಡಿ ಪಾತಾಳಗರಡಿ + +ಸುವ್ವಿ ಸುವ್ವಿ ಸುವ್ವಾಲೆ ಸುವ್ವಿಆಲೆಯಲಿ ಯಾರು ಮಲೆಯಲಿ ಯಾರುಆಲೆಯಲಿ ಕಬ್ಬು ಮಲೆಯಲು ಮಬ್ಬುಸುವ್ವಿ ಸುವ್ವಿ ಸುವ್ವಾಲೆ ಸುವ್ವಿ + +ಕರಡಿ ಕರಡಿ ಪಾತಾಳಗರಡಿಮರದಲಿ ಯಾರು ನೆಲದಲಿ ಯಾರುಮರದಲಿ ಜೇನು ನೆಲದಲಿ ಕರಡಿಕರಡಿ ಕರಡಿ ಪಾತಾಳಗರಡಿ + + + +ದೋಸೆ ಪರೀಕ್ಷಕಎಲ್ಲರ ಮನೆ ದೋಸೆ ತೂತು ಅಂತಜನ ಅಂತಾರೆ ನೋಡೋಣಾಂತಬಂದಿಹೆ ನಾನು ದೋಸೆ ಪರೀಕ್ಷಕನಿಮ್ಮನೆ ದೋಸೆ ತೂತೋ ಅಂತನೋಡ್ಕೊಂಡು ಸುಮ್ಮನೆ ಹೋಗೋಣಾಂತದೋಸೆ ಇದ್ದರೆ ಕೊಡಿ ಅತ್ತೆಸ್ವಲ್ಪ ಚಟ್ಣೀನೂ ಸೇರಿಸಿದರೆ ಚೆನ್ನಗಿರತ್ತೆ + +ಒಂದನೆ ದೋಸೆ ಗುಳುಂಎರಡನೆ ದೋಸೆ ಖತಂಮೂರನೆ ದೋಸೆ ಗುಳುಂನಾಲ್ಕನೆ ದೋಸೆ ಖತಂಐದನೆ ದೋಸೆ ಗುಳುಂಆರನೆ ದೋಸೆ ಖತಂಏಳನೆ ದೋಸೆ ಗುಳುಂಎಂಟನೆ ದೋಸೆ ಖತಂಒಂಬತ್ನೆ ದೋಸೆ ಗುಳುಂಹತ್ತನೆ ದೋಸೆ ಖತಂನಾಳೆ ನೊಡೋಣ ಇನ್ನುಳಿದುವಂ + + + +ದಿವಾಳಿಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ಕಬ್ಬು ಮಾರ‍್ತ ಕೂತಿದಾನೆ ಪುಟ್ಟಏನೋ ಪುಟ್ಟ ಕಬ್ಬು ಮಾರ‍್ತಿದೀಯಾನಾಚಿಕೆಯಾಗಲ್ವ ಕಬ್ಬು ಮಾರಾಕೆಎಂದರೆ ಕಬ್ಬನು ಧರ್ಮಕೆ ಕೊಟ್ಟ + +ಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ಬೆಲ್ಲ ಮಾರ‍್ತ ಕೂತಿದಾನೆ ಪುಟ್ಟಏನೋ ಪುಟ್ಟ ಬೆಲ್ಲ ಮಾರ‍್ತಿದೀಯಾನಾಚಿಕೆಯಾಗಲ್ವ ಬೆಲ್ಲ ಮಾರಾಕೆ?ಎಂದರೆ ಬೆಲ್ಲವ ಧರ್ಮಕೆ ಕೊಟ್ಟ + +ಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ಹೂವನು ಮಾರ‍್ತ ಕೂತಿದಾನೆ ಪುಟ್ಟಏನೋ ಪುಟ್ಟ ಹೂ ಮಾರ‍್ತಿದೀಯಾನಾಚಿಕೆಯಾಗಲ್ವ ಹೂ ಮಾರಾಕೆಎಂದರೆ ಹೂವನು ಧರ್ಮಕೆ ಕೊಟ್ಟ + +ಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ಜೌಳಿ ಮಾರ‍್ತ ಕೂತಿದಾನೆ ಪುಟ್ಟಏನೋ ಪುಟ್ಟ ಜೌಳಿ ಮಾರ‍್ತಿದೀಯಾನಾಚಿಕೆಯಾಗಲ್ವ ಜೌಳಿ ಮಾರಾಕೆಎಂದರೆ ಜೌಳಿಯ ಧರ್ಮಕೆ ಕೊಟ್ಟ + +ಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ಅನ್ನ ಮಾರ‍್ತ ಕೂತಿದಾನೆ ಪುಟ್ಟಏನೋ ಪುಟ್ಟ ಅನ್ನ ಮಾರ‍್ತಿದೀಯಾನಾಚಿಕೆಯಾಗಲ್ವ ಅನ್ನ ಮಾರಾಕೆಎಂದರೆ ಅನ್ನವ ಧರ್ಮಕೆ ಕೊಟ್ಟ + +ಅಂತಾರಾಷ್ಟ್ರೀಯ ವಣಿಕರ ದಿವಸಎಲ್ಲರು ಏನೋ ಮಾರ‍್ತಿದಾರೆಪುಟ್ಟ ಮಾರೋದೇನನ್ನ? + +ದಿವಾಳಿಯಾಗಿಬಿಟ್ಟ! + + + +ಮಂಕು ತಿಮ್ಮಪುಟ್ಟನ ಕ್ಲಾಸ್ ಮೇಟ್ ತಿಮ್ಮಮಂಕಾಗಿರ‍್ತಾನ್ ಯಾವಾಗ್ಲೂನೂಅತ್ತರೆ ಮಂಕು ನಕ್ಕರೆ ಮಂಕುಯಾಕೋ ತಿಮ್ಮ ಮಂಕಾಗಿದ್ದೀಅಂದರೆ ಅಂತಾನ್ ನನ್ನಮಂಕ್ತಿಮ್ಮ ಮಾಡಿದ್ದು ಡಿವಿಜಿಅದೇನು ಹಗೆಯೋ ಪೂರ್ವಜನುಮದ್ದುನಾನೊಡೆದುದು ಒಂದು ನೀರಿನ ಹೂಜಿಕದ್ದುದು ಎರಡು ಗುಂಡು ಸೂಜಿಅಷ್ಟಕೆ ನನ್ನ ಜನ್ಮ ಜಾಲಾಡಿಸಿಮಂಕ್ತಿಮ್ಮ ಅಂತ ಮಾಡಿಯೆ ಬಿಟ್ಟರು + +ನಾ ನಿಮ್ಮಂತೆಯೆ ಇನಿಶಿಯಲ್ ಹಾಕಿಎಂಟಿ ಆಗ್ತೇನೆಂದರೆ ಬಿಡರುಎಂಟಿ ನೀ ಆಗಲೆ ಇದ್ದಿಅದ್ನ ಲೋಕಕೆ ಸಾರೋದಕ್ಕೇನೈತೆಎಂಟಿಯು ಒಂದೇ ಮಂಕೂ ಒಂದೇಅಚ್ಚಗನ್ನಡದ ಮಂಕ್ತಿಮ್ಮ ಎಂದೇನೂರ‍್ಕಾಲ ಇಂಗೇ ಇರ‍್ತೀ ನೀನುಅಂತ ಆಶೀರ್ವದಿಸಿ ಹೋದರು ನೋಡೋನಾನಿನ್ನೆಲ್ಲೂ ತಿಮ್ಮ ಅನ್ನಂಗಿಲ್ಲದಾಖಲೆಯಲ್ಲೂ ತಿದ್ದಿ ಆಗಿದೆಅತ್ತರೆ ಮಂಕು ನಕ್ಕರೆ ಮಂಕುಸಕ್ಕರೆ ಮಿಠಾಯಿ ಎಲ್ಲಾ ಮಂಕುಎಳವೆಯಲೇ ಅಧ್ಯಾತ್ಮದ ಮಂಕುಅರ್ಥಾತ್ ವೃದ್ಧ್ಯಾಪ್ಯದ ಸೋಂಕುನೋಡ್ದೆಯಏನೇನ್ ಮಾಡ್ವುದು ಕವಿಗಳ ಇಂಕುನನ್ನ ಕೆರೀಯರ್ ಸಿದ್ಧವೆ ಆಗಿದೆಕೊರಳಿಗೆ ಮಾಲೆ ಕೈಗೆ ಕಂಸಾಳೆ + + + +ಜಾತ್ರೆಉತ್ಸವಕಿಂತಲು ಜಾತ್ರೆ ನಂಗಿಷ್ಟಅಂತಾನೆ ಪುಟ್ಟಜಾತ್ರೆಯಲಾದರೆ ಮಡಿ ಮೈಲಿಗೆ ಇಲ್ಲಮನುಷ್ಯ ಮನುಷ್ಯರಿಗೆ ವ್ಯತ್ಯಾಸ ಇಲ್ಲಎಲ್ಲಕ್ಕಿಂತಲು ದೊಡ್ಡದು ಎಂದರೆಮೇಷ್ಟರ ಕಾಣುವ ಭಯ ಇಲ್ಲ + +ಜಾತ್ರೆಗಿಂತಲು ಜಾತ್ರೆ ಕಳೆದ ಜಾಗ ನಂಗಿಷ್ಟಅಂತಾನೆ ಪುಟ್ಟಜಾತ್ರೆ ಕಳೆದ ಜಾಗದಲಾದರೆ ಸದ್ದು ಗದ್ದಲ ಇಲ್ಲಸುಮ್ಮಗೆ ಸಿಗುವ ವಸ್ತುಗಳಿಗೆ ಲೆಕ್ಕವೆ ಇಲ್ಲಚೂರು ಪಾರು ಬೇಗಡೆ ಚೂರು ಇಸ್ಪೀಟೆಲೆ ನೂರು ಆರುಎಲ್ಲಕ್ಕಿಂತಲು ದೊಡ್ಡದು ಎಂದರೆದುಡ್ಡು ಕೊಡುವ ಅಗತ್ಯವೆ ಇಲ್ಲ + + + +ಉಯ್ಯಾಲೆಉಯ್ಯಾಲಪ್ಪೊ ಉಯ್ಯಾಲೆಮುಂದಕೆ ಮುಂದಕೆ ಉಯ್ಯಾಲೆಹಿಂದಕೆ ಹಿಂದಕೆ ಉಯ್ಯಾಲೆಮೇಲಕೆ ಮೇಲಕೆ ಉಯ್ಯಾಲೆಕೆಳ ಕೆಳಕ್ಕೆ ಉಯ್ಯಾಲೆ + +ನಿದ್ದೆ ತೂಗಿಸುವ ಉಯ್ಯಾಲೆಕನಸು ತರಿಸುವ ಉಯ್ಯಾಲೆಆಕಾಶ ತೋರಿಸುವ ಉಯ್ಯಾಲೆನಕ್ಷತ್ರ ಎಣಿಸುವ ಉಯ್ಯಾಲೆ + +ಸೂರ್ಯದೇವರ ಉಯ್ಯಾಲೆಚಂದ್ರದೇವರ ಉಯ್ಯಾಲೆಕಾಮನ ಬಿಲ್ಲಿನ ಉಯ್ಯಾಲೆಶ್ರೀರಾಮನ ತೂಗಿದ ಉಯ್ಯಾಲೆ + + + +ಗುಮ್ಮನ ಗೋಳುಎಷ್ಟೋ ಪುಟ್ಟರ ಕಂಡಿದ್ದೇನೆಇಂಥಾ ಪುಟ್ಟನ ಕಂಡಿದ್ದಿಲ್ಲಎನ್ನುತ್ತದೆ ಗುಮ್ಮ + +ಅಟ್ಟ ಹತ್ತಿದರು ಪುಟ್ಟಘಟ್ಟ ಹತ್ತಿದರು ಪುಟ್ಟಹಟ ಬಿಡದ ಪುಟ್ಟ ಸ್ವಭಾವ ಬಿಡದ ಪುಟ್ಟತ್ರಿವಿಕ್ರಮ ಪುಟ್ಟ + +ಗುಮ್ಮನ ಕಂಡರೆ ಕಿಂಚಿತ್ತು ಭಯವಿಲ್ಲಗುಮ್ಮನೆಂದರೆ ತನ್ನ ತಮ್ಮ ಅಂತಿದ್ದಾನೆಕಿವಿ ಹಿಂಡುತಾನೆ ಬೆನ್ನಿಗೆ ಗುದ್ದುತಾನೆಗೋಳು ಹುಯ್ಯಿಸುತಾನೆ ಸಿಕ್ಕು ಸಿಕ್ಕಲ್ಲಿ ಓಡಿಸುತಾನೆ + +ಮರ ಹತ್ತಿ ಕೂತರೆ ಹೊಗೆ ಹಾಕುತಾನೆಬಾವಿಗೆ ಬಿದ್ದರೆ ಕಲ್ಲು ತೂರುತಾನೆಹುಲ್ಲ ಬಣಬೆಯಲಿ ಅಡಗಿದರೆಅಲ್ಲಾಡಿಸುತಾನೆ + +ನಾಡಿನಲುಳಿಗಾಲವಿಲ್ಲವೆಂದುನಾ ಕಾಡಿಗೆ ಬಂದರೆಇವ ಕಾಡಿನಲ್ಲೂ ನನ್ನ ಕಾಡುವನುಮರಗಿಡಗಳ ಒದ್ದು ಜಾಡಿಸುವನು + +ನಾನಿನ್ನು ಹೊರಟೆ ವಾರಣಾಸಿಗೆಕಳ್ಳ ಸನ್ಯಾಸಿಯ ವೇಷದಲಿಕಾವಿಯ ಧರಿಸಿ ಗಡ್ಡವ ಅಂಟಿಸಿದಮ್ಮೆಳೆಯುತ್ತ ಕೂಡುವೆ ಅಲ್ಲಿ + +ಅಲ್ಲಿಗು ಬಂದು ಗಡ್ಡವ ಹಿಡಿದುಗದ್ದಲ ಮಾಡಿದರೆಗಂಗಾಮಾಯಿ ನೀನೇ ಗತಿಯೆಂದುನದಿಯಲಿ ಹಾರಿ ಮಾಯವಾಗುವೆ + + + +ಗುಮ್ಮನ ಕಂಡಿರೆಗುಮ್ಮನ ಕಂಡಿರೆ ನೀವು ನಮ್ಮಗುಮ್ಮನ ಕಂಡಿರೆ ಅಮ್ಮ + +ಕಿಟಿಕಿಯಲಿತ್ತುಬಾಗಿಲಲಿತ್ತುಹೂವಿನ ಪೊದೆಯಲಿ ಇತ್ತುಮಾವಿನ ಮರದಲಿ ಇತ್ತುಮಂಗನ ಬೆದರಿಸುತಿತ್ತುಅಲ್ಲಿಂದದು ಧುಡುಮ್ಮನೆ ಬಿತ್ತುಬಾವಿ ಕಟ್ಟೆಗೆ ನೀರಿಗೆ ಬರುವಅಂಗನೆಯರನು ಗದರಿಸುತಿತ್ತುಬೆಳೆದ ಕಬ್ಬನು ಜಗಿಯುತ್ತಿತ್ತುಬಾಳೆ ಹಣ್ಣನು ಮೆಲ್ಲುತ್ತಿತ್ತು + +ಕಪ್ಪು ಕಂಬಳಿ ಹೊದ್ದಿತ್ತುಕುರುಬನ ಹಾಗೆ ತೂಕಡಿಸುತಿತ್ತುಕುರಿಗಳ ಬಡಿದು ಓಡಿಸುತಿತ್ತುಹಕ್ಕಿಗಳೆಲ್ಲವ ಕಕ್ಕಾಬಿಕ್ಕಿದಿಕ್ಕು ತಪ್ಪಿಸುತಿತ್ತು + +ದೋಣಿಯೊಳಗೆ ಸ್ವತಾ ಅಂಬಿಗನಂತೆಹುಟ್ಟು ಹಿಡಿದು ಜನರ ಕರೆಯುತ್ತಿತ್ತುನದೀ ಮಧ್ಯದಲವರ ಕೈಬಿಟ್ಟುತಮಾಷೆ ನೋಡುತ್ತಿತ್ತು + +ಮನೆಯಲಿ ಸಕ್ಕರೆ ಉಪ್ಪಿನ ಡಬ್ಬಬದಲಾಯಿಸಿ ತೊಂದರೆ ಕೊಡುತಿತ್ತುಯಾರೂ ಇರದಿರೆ ಸಾರಿಗೆ ಹೆಚ್ಚೇಖಾರದ ಪುಡಿ ಸೇರಿಸುತಿತ್ತು + +ಅಟ್ಟದಲೇನೋ ಹುಡುಕಲಿತ್ತುಏಣಿಯನೆಲ್ಲೋ ಅಡಗಿಸುತಿತ್ತುಸಕ್ಕರೆ ಮಿಠಾಯಿ ಕದಿಯುತ್ತಿತ್ತುಕುಡಿಕೆ ಹಣವ ಮಾಯಿಸುತಿತ್ತು + +ಬೇಡದ ಕಡೆ ಠಳಾಯಿಸುತಿತ್ತುಬೇವಿನ ಗಿಡಗಳ ಸಾಯಿಸುತಿತ್ತುಚಪ್ಪಲಿ ಜತೆಯ ಹಾರಿಸುತಿತ್ತುಹಿಪ್ಪಲಿ ತಿಂದು ತೂಕಡಿಸುತಿತ್ತು + +ಪುಟ್ಟನಿಗೆ ಮಾತ್ರವೆ ಹೆದರುತ್ತಿತ್ತುಅವನಿಲ್ಲದ ಸ್ಥಳವ ಹುಡುಕುತ್ತಿತ್ತುಮಂಚದ ಕೆಳಗೆ ಸಂಚಿಯ ವಳಗೆಆರಲು ಹಾಕಿದ ಪಂಚೆಯ ಸುಳಿಗೆ + +ಗುಮ್ಮನ ಕಂಡಿರೆ ನೀವು ನಮ್ಮಗುಮ್ಮನ ಕಂಡಿರೆ ಅಮ್ಮಬಿಳಿಗಿರಿರಂಗನ ಮುದ್ದಿನ ಗುಮ್ಮಅಳಗಿರಿ ಪುಟ್ಟನ ಗುದ್ದಿನ ಗುಮ್ಮ + + + +ಗುಡು ಗುಡು ಗುಮ್ಮಟ ದೇವರುಗುಡು ಗುಡು ಗುಮ್ಮಟ ದೇವರು ಬರುವರುದಾರಿಬಿಡಿಗುಡು ಗುಡು ಬರುವರು ಧುಡು ಧುಡು ಬರುವರುಎದುರು ಸಿಕ್ಕಿದವರ ತುಳಿದು ಹೋಗುವರು + +ಸಿಟ್ಟಿನ ದೇವರು ಗುಟ್ಟಿನ ದೇವರುಹಟದ ದೇವರು ಕಠೋರ ದೇವರುಎಲ್ಲಿಂದ ಬಂದರು ಎಲ್ಲಿಗೆ ಹೋದರುಎಲ್ಲೂ ನಿಲ್ಲದ ಉರುಳು ದೇವರು + +ಮೀನಿನ ಬುಟ್ಟಿ ಆಚೆಗೆ ಸರಿಸಿಹೂವಿನ ಬುಟ್ಟಿ ಈಚೆಗೆ ಇರಿಸಿಶಾಲಾಮಕ್ಕಳ ಸಾಲಾಗಿ ನಿಲ್ಲಿಸಿಕನ್ನಿಕೆಯರಿಂದ ಆರತಿ ಬೆಳಗಿಸಿ + +ಜಾಗಟೆ ಬಡಿಯಿರಿ ಠಣ್ ಠಣ್ ಠಣ್ನಗಾರಿ ಬಾರಿಸಿ ಢಂ ಢಂ ಢಂತುತ್ತುರಿ ಊದಿರಿ ಪೋಂ ಪೋಂ ಪೋಂತಾಳ ಹಾಕಿ ಚಂ ಚಂ ಚಂ + +ಸಿಗದಿದ್ದರೆ ಬರಿ ತಪ್ಪಲೆ ಬಾರಿಸಿಅಥವಾ ಮಕ್ಕಳ ಬೆನ್ನಿಗೆ ಬಾರಿಸಿಪಟಾಕಿ ದುರುಸು ಆಕಾಶಕೆ ಹಾರಿಸಿಬಾವುಟವಿರದಿರೆ ಬಟ್ಟೆನ ಹಾರಿಸಿ + +ಈಗೂದದ ಶಂಖ ಇನ್ನು ಯಾವಾಗ ಊದೋದುಊದಿರಿ ಭೂಂ ಭೂಂ ಭೂಂಈಗ ಪಠಿಸದ ಮಂತ್ರ ಇನ್ನು ಯಾವಾಗ ಪಠಿಸೋದುಪಠಿಸಿರಿ ಹ್ರಾಂ ಹ್ರೀಂ ಹ್ರೂಂ + +ಹೊಗಳು ಭಟ್ಟರಿಂದ ಹಾಕಿಸಿ ಪರಾಕುತೊಡಿಸಿ ಅವರಿಗೆ ರಂಗಿನ ಪೋಷಾಕುಅಂತೂ ಇಂತೂ ಗುಮ್ಮಟ ದೇವರುನಮ್ಮೂರ ಹಾದೊಮ್ಮೆ ಹೋದರೆ ಸಾಕು + +ಕೋಪಿಸಿಬಿಟ್ಟರೆ ಗುಮ್ಮಟ ದೇವರುನಮಗಿನ್ನು ಬೇರೆ ದಾರಿಯೆ ಇಲ್ಲಸಾವಿರ ಸಂಖ್ಯೆಲಿ ಜನ ಸಾಯುವರುಉಳಿದವರೆಲ್ಲಾ ಹುಲ್ಲು ಮೇಯುವರು + + + +ನವರಾತ್ರಿ ಬೊಂಬೆಹಕ್ಕಿಯ ಮಾಡಿ ಇಟಕೊಂಡಿರುವರುನಿಜವಾದ ಹಕ್ಕಿ ಯಾರಿಗು ಬೇಡ + +ಬೆಕ್ಕಿನ ಮಾಡಿ ಇಟಕೊಂಡಿರುವರುನಿಜವಾದ ಬೆಕ್ಕು ಯಾರಿಗು ಬೇಡ + +ನಾಯಿಯ ಮಾಡಿ ಇಟಕೊಂಡಿರುವರುನಿಜವಾದ ನಾಯಿ ಯಾರಿಗು ಬೇಡ + +ಕುರಿಮರಿ ಮಾಡಿ ಇಟಕೊಂಡಿರುವರುನಿಜವಾದ ಕುರಿಮರಿ ಯಾರಿಗು ಬೇಡ + +ಅಳಿಲನು ಮಾಡಿ ಇಟಕೊಂಡಿರುವರುನಿಜವಾದ ಅಳಿಲು ಯಾರಿಗು ಬೇಡ + +ಮೊಲವನು ಮಾಡಿ ಇಟಕೊಂಡಿರುವರುನಿಜವಾದ ಮೊಲ ಯಾರಿಗು ಬೇಡ + +ಆನೆಯ ಮಾಡಿ ಇಟಕೊಂಡಿರುವರುನಿಜವಾದ ಆನೆ ಯಾರಿಗು ಬೇಡ + +ಸಿಂಹವ ಮಾಡಿ ಇಟಕೊಂಡಿರುವರುನಿಜವಾದ ಸಿಂಹ ಯಾರಿಗು ಬೇಡ + +ಹುಲಿಯನು ಮಾಡಿ ಇಟಕೊಂಡಿರುವರುನಿಜವಾದ ಹುಲಿ ಯಾರಿಗು ಬೇಡ + +ಒಂಟೆಯ ಮಾಡಿ ಇಟಕೊಂಡಿರುವರುನಿಜವಾದ ಒಂಟೆ ಯಾರಿಗು ಬೇಡ + +ಕುದುರೆಯ ಮಾಡಿ ಇಟಕೊಂಡಿರುವರುನಿಜವಾದ ಕುದುರೆ ಯಾರಿಗು ಬೇಡ + +ಕತ್ತೆಯ ಮಾಡಿ ಇಟಕೊಂಡಿರುವರುನಿಜವಾದ ಕತ್ತೆ ಯಾರಿಗು ಬೇಡ + +ಆಕಳ ಮಾಡಿ ಇಟಕೊಂಡಿರುವರುನಿಜವಾದ ಆಕಳ ಯಾರಿಗು ಬೇಡ + +ಮಂಗನ ಮಾಡಿ ಇಟಕೊಂಡಿರುವರುನಿಜವಾದ ಮಂಗ ಯಾರಿಗು ಬೇಡ + +ಗೊರಿಲ್ಲನ ಮಾಡಿ ಇಟಕೊಂಡಿರುವರುನಿಜವಾದ ಗೊರಿಲ್ಲ ಯಾರಿಗು ಬೇಡ + +ಕರಡಿಯ ಮಾಡಿ ಇಟಕೊಂಡಿರುವರುನಿಜವಾದ ಕರಡಿ ಯಾರಿಗು ಬೇಡ + +ತಿಮಿಂಗಿಲ ಮಾಡಿ ಇಟಕೊಂಡಿರುವರುನಿಜವಾದ ತಿಮಿಂಗಿಲ ಯಾರಿಗು ಬೇಡ + +ಗುಮ್ಮನ ಮಾಡಿ ಇಟಕೊಂಡಿರುವರುನಿಜವಾದ ಗುಮ್ಮ ಯಾರಿಗು ಬೇಡ + +ಪುಟ್ಟನ ಮಾಡಿ ಇಟಕೊಂಡಿರುವರುನಿಜವಾದ ಪುಟ್ಟ ಯಾರಿಗು ಬೇಡ + +ಏನರ್ಥ?ನವರಾತ್ರಿ ಬೊಂಬೆ ಶಿವಾರಾತ್ರಿ ನಂಬೆ! + + + +ನಾಲ್ವರು ಕಳ್ಳರುಕಾಕಳ್ಳ ಅರೆಕ್ಕಳ್ಳಮುಕ್ಕಾಕಳ್ಳ ಇಡೀ ಕಳ್ಳನಾಲ್ಕೂ ಕಳ್ಳರು ಕುಳ್ಳರುಮನೆ ಕಳ್ಳಲು ಹೊರಟರು + +ಕಾಕಳ್ಳ ಹಳ್ಳಕೆ ಬಿದ್ದಅರೆಕ್ಕಳ್ಳ ಕೊಳ್ಳಕೆ ಬಿದ್ದಮುಕ್ಕಾಕಳ್ಳ ಬಾವಿಗೆ ಬಿದ್ದಇಡೀ ಕಳ್ಳ ನೋಡುತ ಇದ್ದಬೀಳೋದಕ್ಕೆ ಜಾಗವೆ ಇಲ್ಲಇಡೀ ಕಳ್ಳ ಮುಗ್ಗರಿಸಿ ಬಿದ್ದ + + + +ಬಿರುದೆಂತೆಂಬರ ಗಂಡಒಂದೇ ಕೈಯಲಿ ತೆಂಗಾಯಿ ಸುಲಿದರುಎರಡೂ ಕೈಯಲಿ ಆನೆಯ ಹಿಡಿದರುಮೂರನೆ ಕೈಯೊಂದು ಇಲ್ಲದ ಕಾರಣಕಾಲಲಿ ಒದ್ದು ಬಂಡೆಯನೊಡೆದರುಬಿರುದೆಂತೆಂಬರ ಗಂಡ + +ಭತ್ತದ ಕದಿರಿನ ಮೀಸೆನಾರುಡೆ ವೀರಗಾಸೆಕೈಯಲಿ ತಗೊಂಡು ಭೈರವ ಕತ್ತಿದೇಶದ ಗಡಿ ವಿಸ್ತರಿಸಿದರುಬಿರುದೆಂತೆಂಬರ ಗಂಡ + +ಲಗಾಮಿಲ್ಲದ ಕುದುರೆಯನೇರಿಕರಾಳ ಶಕ್ತಿಗಳ ತೊಡೆ ತಟ್ಟಿ ಕರೆದುಎದುರು ಬಂದವರ ತತ್ತರಿಸಿದರುಅವರ ಕೊರಳ ಕತ್ತರಿಸಿದರುಬಿರುದೆಂತೆಂಬರ ಗಂಡ + +ನೀರೇ ಇಲ್ಲದೆ ಸ್ನಾನವ ಮಾಡಿಕನ್ನಡಿಯಿಲ್ಲದೆ ಮೋರೆಯ ನೋಡಿದೇವರೆ ಇಲ್ಲದ ಗುಡಿ ಸುತ್ತುವರುತಾನೇ ದೇವರು ಎನ್ನುವರುಬಿರುದೆಂತೆಂಬರ ಗಂಡ + +ಅಣೆಗಟ್ಟುಗಳನು ಒಡೆದುಹಾಕಿದರುಹೊಲಗದ್ದೆಗಳನು ಬಂಜರು ಬಿಟ್ಟರುಮರಗಿಡಗಳನು ಕಡಿದು ಸುಟ್ಟರುಎಲ್ಲಾ ಬಿಟ್ಟು ಭಂಗಿ ನೆಟ್ಟರುಬಿರುದೆಂತೆಂಬರ ಗಂಡ + +ಹೇಳಲು ಬಂದವರ ಹೊರಗಟ್ಟಿದರುವಿರೋಧಿಸಿದವರ ಸೆರೆಯಲ್ಲಿಟ್ಟರುಒಂದೊಂದಾಗಿ ಎಲ್ಲರ ತರಿದರುನಂತರ ತನ್ನನು ತಾನೇ ಕೊಂದರುಬಿರುದೆಂತೆಂಬರ ಗಂಡ + + + +ರಾಮ ರಾಮಇಲ್ಲೊಂದು ಅಳಿತ್ತು ರಾಮ ರಾಮಮೂರು ನಾಮಗಳಿದ್ವು ರಾಮ ರಾಮ + +ಮುದ್ದಾಗಿ ಇದ್ದಿತು ರಾಮ ರಾಮಅದು ಮರವೇರಿ ಇಳಿತಿತ್ತು ರಾಮ ರಾಮ + +ಏನೇನೋ ತರುತಿತ್ತು ರಾಮ ರಾಮಎಲ್ಲೋ ಬಚ್ಚಿಡುತಿತ್ತು ರಾಮ ರಾಮ + +ಏನೆಂದು ಮರೆತಿತ್ತು ರಾಮ ರಾಮಎಲ್ಲೆಂದು ಮರೆತಿತ್ತು ರಾಮ ರಾಮ + +ಈಗೆಲ್ಲಾ ಹುಡುಕುತಿದೆ ರಾಮ ರಾಮಎಲ್ಲೂ ಸಿಗುತ್ತಿಲ್ಲ ರಾಮ ರಾಮ + +ಚಳಿಗಾಲ ಬರುತಿದೆ ರಾಮ ರಾಮಉಳಿಗಾಲವಿಲ್ಲವೊ ರಾಮ ರಾಮ + +ಇನ್ನೇನು ಮಾಡಲಿ ರಾಮ ರಾಮಇನ್ನೆಂತು ಬದುಕಲಿ ರಾಮ ರಾಮ + +ಬಚ್ಚಿಟ್ಟ ಜಾಗವ ರಾಮ ರಾಮಎಲ್ಲೆಂದು ತೋರಿಸೊ ರಾಮ ರಾಮ + + + +ಯಾರಿಗೆ ಏನುಂಟುಯಾರಿಗೆ ಏನುಂಟು ಗಣನಾಯಕ + +ನದಿಗೆ ನೀರುಂಟು ನೀರಿಗೆ ಮೀನುಂಟುಮೀನಿಗೆ ಕಣ್ಣುಂಟು ಗಣನಾಯಕ + +ಕಬ್ಬಿಗೆ ರಸವುಂಟು ರಸಕೆ ಸಕ್ಕರೆಯುಂಟುಸಕ್ಕರೆಗೆ ಸಿಹಿಯುಂಟು ಗಣನಾಯಕ + +ಗಿಡಕೆ ರೆಂಬೆಗಳುಂಟು ರೆಂಬೆಗೆ ಹೂವುಂಟುಹೂವಿಗೆ ಪರಿಮಳವುಂಟು ಗಣನಾಯಕ + +ಕಾಯಕ್ಕೆ ಕೈಯುಂಟು ಕೈಗೆ ಬೆರಳುಗಳುಂಟುಬೆರಳಿಗುಂಗುರವುಂಟು ಗಣನಾಯಕ + +ಹೊಲಕೆ ಪೈರುಂಟು ಪೈರಿಗೆ ತೆನೆಯುಂಟುತೆನೆತೆನೆಗೆ ಭತ್ತವುಂಟು ಗಣನಾಯಕ + +ಮನೆಗೆ ಕಿಟಿಕಿಯುಂಟು ಕಿಟಿಕಿಗೆ ಸರಳುಂಟುಸರಳಿಗೆ ನೆರಳುಂಟು ಗಣನಾಯಕ + +ಊರಿಗೆ ಗುಡಿಯುಂಟು ಗುಡಿಗೆ ದೇವರು ಉಂಟುದೇವರಿಗೆ ಉತ್ಸವವುಂಟು ಗಣನಾಯಕ + +ಹಬ್ಬಕೆ ಶಾವಿಗೆಯುಂಟು ಶಾವಿಗೆಗೆ ಎಳೆಯುಂಟುಎಳೆ ಎಳೆಗೆ ರಸಾಯನವುಂಟು ಗಣನಾಯಕ + +ಶಾಲೆಗೆ ಕ್ಲಾಸುಂಟು ಕ್ಲಾಸಿಗೆ ಪಾಠವುಂಟುಪಾಠಕ್ಕೆ ಆಟವುಂಟು ಗಣನಾಯಕ + +ನಿದ್ದೆಗೆ ಕನಸುಂಟು ಕನಸಿಗಾಕಾಶವುಂಟುಆಕಾಶಕೆ ನಕ್ಷತ್ರವುಂಟು ಗಣನಾಯಕ + +ಮುಂಜಾನೆ ಮಂಜುಂಟು ಮಂಜಿಗಿಬ್ಬನಿ ಉಂಟುಇಬ್ಬನಿಗೆ ಮುತ್ತುಂಟು ಗಣನಾಯಕ + + + +ತೆಂಗಿನ ಮರಿತೆಂಗಿನ ಮರಿ ತೆಂಗಿನ ಮರಿಎಷ್ಟೊಂದು ಛಂದ ನಿನ್ನ ಗರಿ + +ಬೆಳೆಯುವಿ ಸೊಂಪಾಗಿನಿನಗೆ ನೀನೇ ತಂಪಾಗಿ + +ಎಷ್ಟೊಂದೆತ್ತರ ಬೆಳೆಯುವುದಿದೆ ನೀಎಷ್ಟೊಂದು ಬಿತ್ತರ ನೋಡುವುದಿದೆ ನೀ + +ಹಾರುವ ಹಕ್ಕಿಗಳ ಜತೆ ಮಾತಾಡಿಮೂಡುವ ಚುಕ್ಕಿಗಳ ಚೆಲ್ಲಾಟವಾಡಿ + +ತೆಂಕಣ ಗಾಳಿಯ ಉಯ್ಯಾಲೆ ತೂಗಿಸಿಮುಂಗಾರಿನ ಮಳೆ ಮನಮೊಹಕವಾಗಿಸಿ + +ಸುಗ್ಗಿಯ ಕರೆಯುವಿ ಮಾಗಿಯ ಕರೆಯುವಿವಸಂತವ ಕರೆಯುವಿ ವೈಶಾಖವ ಕರೆಯುವಿಎಲ್ಲಾ ಋತುಗಳ ಸಮಾನ ಕಾಣುವಿ + +ಸಂಜೆಗೆ ಮೊದಲೇ ಸಂಜೆಯ ಕಾಣುವಿಮುಂಜಾನೆಗೆ ಮೊದಲೇ ಮುಂಜಾನೆಯ ಕಾಣುವಿಹಗಲು ರಾತ್ರಿಗು ಸಿಡಿಲು ಮಿಂಚಿಗುಕಾಮನ ಬಿಲ್ಲಿಗು ಸೋಮನ ಸೊಲ್ಲಿಗುಎಲ್ಲೋ ಬಿದ್ದ ಉಲ್ಕಾಪಾತಕುಅಷ್ಟೇನಲ್ಲದ ಇಬ್ಬನಿ ಹುಲ್ಲಿಗು ಮಾಡಿನ ಹೊಗೆಗೂನೀ ಸಾಕ್ಷಿಯಾಗುವಿ + +ಕಲ್ಪವೃಕ್ಷವಾಗುವಿಬೇಕಾದವರಿಗೆ ಬೇಡಿದ್ದು ಕೊಡುವಿನಿನ್ನ ಶಿರದ ಸುತ್ತಲು ಗರಿಯಲ್ಲವೋ ಅದುದೇವಲೋಕದ ಪ್ರಭಾವಳಿ + +ಓ ಮುದ್ದಿನ ಮರಿಓ ತೆಂಗಿನ ಮರಿ + + + +ಬರೀ ಪುಟ್ಟ ಬರೀಬರೀ ಪುಟ್ಟ ಬರೀ + +ಅಕ್ಷರ ಬರೀ ಅನಕ್ಷರ ಬರೀಪದಾ ಬರೀ ಜನಪದವ ಬರೀವಾಕ್ಯ ವ್ಯಾಕರಣಗಳ ಬರೀ + +ಪ್ರಾಣಾಪ್ರಾಣಗಳ ಬರಿವಿಸರ್ಗ ನಿಸರ್ಗಗಳ ಬರಿಅನುಸ್ವಾರ ಬಿಂದುಗಳ ಬರಿಅರ್ಕಾವೊತ್ತು ಬರಿಋಕಾರವ ಪ್ರತ್ಯೇಕ ಬರಿಸ ಶ ಷ ಬರಿಬರಿ ವಸುಧಾವಲಯ ವಿಶದ ವಿಷಯ ವಿಶೇಷಗಳ ಬರಿ + +ಗೆರೆಗಳ ಮೇಲೆ ಮುದ್ದಾಗಿ ಬರಿಗೆರೆಯಾಚೆಗೆ ಮುದ್ದಾಂ ಬರಿಚಿತ್ರಗಳ ಬರಿ ವಿಚಿತ್ರಗಳ ಬರಿಜನ ತಲೆದೂಗುವಂತೆ ಬರಿಜನ ಬೆರಗಾಗುವಂತೆ ಬರಿ + +ಬರೀ ಪುಟ್ಟ ಬರೀ + +ಕವಿತೆ ಕಾವ್ಯಗಳ ಬರಿಕತೆ ಕಾದಂಬರಿಗಳ ಬರಿಲೇಖನಗಳ ಬರಿಕಾಗದದಲ್ಲಿ ಬರಿ ಕಂಪ್ಯೂಟರಿನಲ್ಲಿ ಬರಿಗೆಳೆಯರಿಗೆ ಪತ್ರಗಳ ಪ್ರತ್ಯೇಕ ಬರಿ + +ಬರೀ ಚಿತ್ರಗಳ ಬರೀಗಿಡಗಳ ಮೇಲೆ ಹೂವುಗಳ ಬರೀಹುಲ್ಲಿನ ಮೇಲೆ ಗೋವುಗಳ ಬರೀಬರೀ ವಿಚಿತ್ರಗಳ ಬರೀಹಂಡೆಗಳ ಒಳಗೆ ಮನುಷ್ಯರ ಬರೀಬಂಡೆಗಳ ಮೇಲೆ ಮಂಡೆಗಳ ಬರೀದಂಡೆಗಳಿಲ್ಲದ ಸಮುದ್ರಗಳ ಬರೀನೆರಳಿಲ್ಲದ ಮರಗಳ ಬರೀಪ್ರತಿಫಲಿಸದ ಕನ್ನಡಿಗಳ ಬರೀ + +ಬರೀ ಪುಟ್ಟ ಬರೀ + +ಕಾಮನಬಿಲ್ಲಿಗೆ ಬಣ್ಣವ ಬರೀಆಕಾಶಕ್ಕೆ ಮೋಡವ ಬರೀಜ್ವಾಲಾಮುಖಿಗೆ ಬೆಂಕಿಯ ಬರೀಧೂಮಕೇತುವಿಗೆ ಬಾಲವ ಬರೀಮಳೆಗೆ ಹನಿಗಳ ಬರೀಸಿಡಿಲಿಗೆ ಧ್ವನಿಯ ಬರೀ + +ಬರೀ ಪುಟ್ಟ ಬರೀ + +ತಂತಿಗೆ ರಾಗವ ಬರೀಮೃದಂಗಕೆ ತಾಳವ ಬರೀವಾದ್ಯವೃಂದಕೆ ನಾದವ ಬರೀಕಾಲಿಗೆ ಹೆಜ್ಜೆಯ ಬರೀಕುಣಿತಕೆ ಗೆಜ್ಜೆಯ ಬರೀ + +ಬರೀ ಪುಟ್ಟ ಬರೀ + +ಪದಕೆ ಅರ್ಥವ ಬರೀಅರ್ಥಕೆ ಅನರ್ಥವ ಬರೀಪ್ರಶ್ನೆಗೆ ಉತ್ತರ ಬರೀಉತ್ತರಕೆ ದಕ್ಷಿಣ ಬರೀ + +ಬರೀ ಪುಟ್ಟ ಬರೀ + +ಅಂಕೆಗೆ ಸಂಖ್ಯೆ ಬರೀಸಂಖ್ಯೆಗೆ ಸೊನ್ನೆ ಬರೀಕಳೆತಕೆ ಕೂಡಿಸಿ ಬರೀಗುಣಿತಕೆ ಭಾಗಿಸಿ ಬರೀ + +ಬರೀ ಪುಟ್ಟ ಬರೀ + +ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು. \ No newline at end of file diff --git a/Kenda Sampige/article_516.txt b/Kenda Sampige/article_516.txt new file mode 100644 index 0000000000000000000000000000000000000000..53b4d295847c70cc761bd46d0f39629272030958 --- /dev/null +++ b/Kenda Sampige/article_516.txt @@ -0,0 +1,13 @@ +ದೇವನೂರ ಮಹಾದೇವ ಕೆಂಡಸಂಪಿಗೆಗೆಬರೆದ ಪತ್ರಓದಿ ನನ್ನ ಮನಸ್ಸಿಗೆ ಅನಿಸಿದ್ದನ್ನು ಎಲ್ಲರ ಜತೆ, ಮುಖ್ಯವಾಗಿ ಮಹಾದೇವರ ಜತೆ, ಹಂಚಿಕೊಳ್ಳಲು ಈ ಟಿಪ್ಪಣಿ ಬರೆಯುತ್ತಿದ್ದೇನೆ. ಸಂಪಾದಕರೊಂದಿಗೆ  ಈಮೇಲ್ ವಿನಿಮಯ ಮಾಡುತ್ತಿದ್ದಾಗ ಅವರೂ ಬರೆಯಿರಿ ಎಂದು ನನಗೆ ಸೂಚಿಸಿದರು. ಕೆಂಡಸಂಪಿಗೆ ಒಂದು ಉತ್ತಮ ವಿದ್ಯುನ್ಮಾನ ಪತ್ರಿಕೆ. ಮಹಾದೇವ ಈ ಪತ್ರಿಕೆಯಿಂದ ಯಾವ ಕಾರಣಕ್ಕೂ ದೂರವಾಗಬಾರದು ಎನ್ನುವುದು ನನ್ನ ಮನಸ್ಸಿನಲ್ಲಿದೆ. + +ಮೊತ್ತ ಮೊದಲಾಗಿ ಹೇಳಬೇಕಾದ್ದೆಂದರೆ ಮಹಾದೇವ ತಮ್ಮ ಲೇಖನಕ್ಕೆ ಬಂದ ಕೆಲವು ಪ್ರತಿಕ್ರಿಯೆಗಳಿಂದ ಬೇಸರಗೊಂಡಿದ್ದಾರೆ ಎನ್ನುವುದು. ಇದಕ್ಕೆ ಕಾರಣ ಅವು ವ್ಯಕ್ತಿಗತ ನಿಂದೆಗಳಂತೆ ಇರುವುದು; ಲೇಖಕರ ತೇಜೋವಧೆ ಇವುಗಳ ಉದ್ದೇಶದಂತಿದೆ, ವೈಚಾರಿಕ ವಿಮರ್ಶೆಯಲ್ಲ. ಬರೆದವರು ಯಾರೆನ್ನುವುದೇ ಗೊತ್ತಾಗುವುದಿಲ್ಲ. ಈ-ಮೇಲ್ ನ ಬೇನಾಮಿತನ ಒಂದು ತರದ ಬೇಜವಾಬ್ದಾರಿಗೆ ಎಡೆಮಾಡುತ್ತದೆ. ಇದು `ವಿನಾಶಕಾರಿ’ ಎನ್ನುತ್ತಾರೆ ಮಹಾದೇವ. ಇದರ ಅರ್ಥ ಯಾವುದೇ ಲೇಖನ ಸವಾಲುರಹಿತವಾಗಿ ಸ್ವೀಕೃತಗೊಳ್ಳಬೇಕು ಎಂದಲ್ಲ. ಜವಾಬ್ದಾರಿಯುತವಾದ ಮಾತುಕತೆಯನ್ನು ಮಹಾದೇವ ಬಯಸುತ್ತಾರೆ ಎಂದು ಅರ್ಥ. + +ಆದ್ದರಿಂದ ಹೆಸರು, ವಿಳಾಸ, ಚಿತ್ರ ಇಲ್ಲದ ಇಂಥ `ವಿನಾಶಕಾರಿ’ ಪ್ರತಿಕ್ರಿಯೆಗಳನ್ನು ಪ್ರಕಟಿಸಬಾರದು, ಪ್ರಕಟಿಸಿದರೆ ತಾನು ಈ ಪತ್ರಿಕೆಗೆ ಬರೆಯುವುದಿಲ್ಲ ಎನ್ನುವುದು ಅವರ ಶರತ್ತು. ಆದರೆ ಕೆಂಡಸಂಪಿಗೆಯ ಸಂಪಾದಕರ ಮೇಲೆ ಮಹಾದೇವ ವಿಧಿಸಿದ ಈ ಶರತ್ತು ಸಾಧುವೆಂದು ನನಗೆ ಅನಿಸುವುದಿಲ್ಲ. ಇದು ಬಹುಶಃ ಅವರು ಭಾವುಕರಾಗಿ ಆಡಿದ ಮಾತು ಇರಬಹುದು. ಲೇಖಕರೂ ಸಹಾ ಮನುಷ್ಯರೇ; ಆಕ್ರಮಣಗಳಿಗೆ ಒಳಗಾದಾಗ ಲೇಖಕರು ತೀರ ವೈಚಾರಿಕವಾಗಿ ಪ್ರತಿಕ್ರಿಯಿಸಬೇಕು ಎಂದು ಆಶಿಸುವುದು ಸರಿಯಲ್ಲ. ಆದರೂ ಮಹಾದೇವ ಈ ಬಗ್ಗೆ ಇನ್ನೊಮ್ಮೆ ಯೋಚಿಸಬೇಕು: ಅವರು ವಿಧಿಸಿದ ಶರತ್ತು ಪ್ರಾಯೋಗಿಕವೂ ಅಲ್ಲ ಮುಕ್ತ ಅಭಿವ್ಯಕ್ತಿಗೆ ಸಹಕಾರಿಯೂ ಅಲ್ಲ. ಲೇಖಕನಿಗೆ ಅಭಿಪ್ರಾಯ ಮುಖ್ಯವೇ ಹೊರತು ಅದನ್ನು ಯಾರು ಹೇಳಿದರು ಎನ್ನುವುದು ಆಗಿರಬಾರದು. ಮಾತ್ರವಲ್ಲ, ಹೀಗೆ ಒತ್ತಾಯಿಸಿದರೆ ಒಂದು ತರದ ಸೆನ್ಸರ್ ಶಿಪ್ ಇಟ್ಟುಕೊಂಡಂತಾಗುತ್ತದೆ. ಓದುಗರ ಆಶುವಿಚಾರ ಹೇಗಿರುತ್ತದೆ ಎನ್ನುವುದು ಲೇಖಕನಿಗೆ ಗೊತ್ತಾಗುವುದೇ ಇಲ್ಲ. ಹೆಸರು ವಿಳಾಸ ನೀಡಿ ಬರೆಯುವವರೂ ಕೂಡ ಒಂದು ತರದ ಸ್ವಯಂನಿಯಂತ್ರಣಕ್ಕೆ ಒಳಗಾಗಬಹುದು; ಎಂದರೆ ಅವರೂ ಸಹಾ ಮಾತನ್ನು ತೂಗಿ ಅಳೆದು ಹೇಳಬೇಕಾಗುತ್ತದೆ. + +ಲೇಖಕ ಎಲ್ಲರಿಂದಲೂ ಕೇಳಿಸಿಕೊಳ್ಳಬೇಕಾಗುತ್ತದೆ, ಇಂದಲ್ಲದಿದ್ದರೆ ನಾಳೆ. ಕೆಲವರು ಥಟ್ಟನೆ ಏನೋ ಹೇಳಿಬಿಡುತ್ತಾರೆ; ನಂತರ ತಿದ್ದಿಕೊಳ್ಳುತ್ತಾರೆ. ನಾನೇ ಇಂಥ ಹಲವು ಉದ್ವೇಗದ ಮಾತುಗಳನ್ನು ಆಡಿ ಮತ್ತೆ ಪಶ್ಚಾತ್ತಾಪಿಸಿದ್ದಿದೆ. ಯಾರು ಏನುಬೇಕಾದರೂ ಮುಕ್ತ ಹೃದಯದಿಂದ ಹೇಳಲಿ; ಅದನ್ನು ಸ್ವಾಗತಿಸಬೇಕು. ಕನಿಷ್ಠ ಅವರು ಓದುತ್ತಾರೆ ಎನ್ನುವುದಕ್ಕಾದರೂ. ಅಥವಾ ಅವರ ಮಾತುಗಳಲ್ಲೂ ಸ್ವಲ್ಪ ಸತ್ಯ ಇದ್ದರೂ ಇರಬಹುದು ಎನ್ನುವುದಕ್ಕೆ. (ಈ ಮಾತನ್ನು ನಾನು ಸದ್ಯದ ಸಂದರ್ಭಕ್ಕೆ ಸಂಬಂಧಿಸಿ ಹೇಳುವುದಲ್ಲ, ಸಾರ್ವಕಾಲಿಕವಾಗಿ.) ಆ ಅನುಮಾನ ಇಟ್ಟುಕೊಳ್ಳೋಣ; ಅದು ಆರೋಗ್ಯಕರವಾದ್ದು. ಇತರರು ಮಾದರಿಯಾಗಬೇಕು ಎನ್ನುವುದಕ್ಕಿಂತ ನಾವೇ ಮಾದರಿಯಾಗಿರುವುದು ಒಳ್ಳೆಯದು. + +ಕೆಲವರು ಕೆಟ್ಟದಾಗಿ ಮಾತಾಡುತ್ತಾರೆ. ಹಾಗೆ ಆಡಿದವರೇನೂ ಪಾರಾಗಲಾರರು. ಯಾಕೆಂದರೆ ಅವರ ಮಾತು ತನಗೆ ತಾನೇ ನಾಚಿಕೆ ಹುಟ್ಟಿಸುವಂಥದು. ಬಹುಶಃ ಬರೆದವರಿಗೇ ಯಾಕಾದರೂ ಬರೆದೆನೋ ಎನ್ನಿಸುವಂಥದು. ಕೊನೆಗೂ ಮನುಷ್ಯನಿಗೆ ಸ್ವಯಂ ಬೋಧೆ ಬರಬೇಕು. ಜನ ಯಾಕೆ ಹೀಗೆ ಬರೆಯುತ್ತಾರೆ ಎಂದು ನಾನು ಕೆಲವೊಮ್ಮೆ ಯೋಚಿಸಿದ್ದಿದೆ: ಮುಖ್ಯ ಅವರಿಗೆ ಚಿಂತಿಸಲು, ಬರೆಯಲು ತಾಳ್ಮೆಯೇ ಇಲ್ಲ. ಸರಿಯಾದ ಮಾತು ಹೇಗೆ ಆಡುವುದೆಂದು ಗೊತ್ತಿರದಿದ್ದಾಗ ಮನುಷ್ಯ ತಪ್ಪಾಗಿ ಆಡುತ್ತಾನೆ. ಅದು ಕ್ಷಮಾರ್ಹ. + +ಭಿನ್ನಾಭಿಪ್ರಾಯ, ವಾಗ್ವಾದ, ವಿವಾದ ಜೀವಂತಿಕೆಯ ಲಕ್ಷಣ. ಕೆಂಡಸಂಪಿಗೆಯಲ್ಲಿ ಬರುವ ಪ್ರತಿಕ್ರಿಯೆಗಳನ್ನು ನಾನು ಕುತೂಹಲದಿಂದ ನೋಡುವುದಿದೆ. ಪ್ರತಿಯೊಂದರಲ್ಲೂ ನನಗೆ ಜೀವ ಸತ್ವ ಕಾಣಿಸುತ್ತದೆ. ಕತೆ, ಕವಿತೆ, ಲೇಖನ ಓದುತ್ತಾರಲ್ಲ, ಖುದ್ದಾಗಿ ಬರೆಯುತ್ತಾರಲ್ಲ, ಪ್ರತಿಕ್ರಿಯಿಸುತ್ತಾರಲ್ಲ ಎಂದು ಸಂತೋಷವಾಗುತ್ತದೆ. ಕೆಂಡಸಂಪಿಗೆಯಂಥ ಮಾಧ್ಯಮಗಳು ಇದಕ್ಕೆಲ್ಲ ಒಂದು ವೇದಿಕೆಯೊದಗಿಸುತ್ತದೆ. ಮಹಾದೇವ ಇವನ್ನು ಅಂತೆಯೇ ಸ್ವೀಕರಿಸುತ್ತಾರೆ ಎಂದು ಆಶಿಸುತ್ತೇನೆ. ನಾವು ಮಂದಿಯ ಜತೆ ಸಿಟ್ಟಾಗಬಹುದು, ಆದರೆ ಅವರಿಂದ ವಿಮುಖವಾಗುವಂತಿಲ್ಲ. ಅವರಲ್ಲದಿದ್ದರೆ ಇನ್ನು ಯಾರಿದ್ದಾರೆ? + +ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು. \ No newline at end of file diff --git a/Kenda Sampige/article_517.txt b/Kenda Sampige/article_517.txt new file mode 100644 index 0000000000000000000000000000000000000000..3ab1eaefa429947019579777c9b6863e61a0a381 --- /dev/null +++ b/Kenda Sampige/article_517.txt @@ -0,0 +1,225 @@ +`ಕೆಂಡಸಂಪಿಗೆ’ಯಲ್ಲಿ ಪ್ರಕಟವಾದ`ಡಿ.ಎನ್. ಶಂಕರಭಟ್ಟರೊಂದಿಗೆ ಒಂದು ಉದ್ದದ ಮಾತುಕತೆ‘  ಓದಿದೆ. ಅದರಲ್ಲಿ ಮತ್ತು ಇತರ ಕೆಲವೆಡೆ ಕನ್ನಡದ ಮಹತ್ವದ ಭಾಷಾವಿಜ್ಞಾನಿ ಪ್ರೊಫೆಸರ್ ಭಟ್ ಅವರು ಪ್ರಕಟಿಸಿದ ಅಭಿಪ್ರಾಯಗಳನ್ನು ಮನಸ್ಸಿನಲ್ಲಿ ಇರಿಸಿಕೊಂಡು ಈ ಕೆಲವು ಟಿಪ್ಪಣಿಗಳನ್ನು ಬರೆಯುತ್ತಿದ್ದೇನೆ. ಸಂಸ್ಕೃತದಿಂದ ಕನ್ನಡಕ್ಕೆ ಅನ್ಯಾಯವಾಗಿದೆ, ಅದನ್ನು ಸರಿಪಡಿಸಿ ಕನ್ನಡಕ್ಕೆ ನ್ಯಾಯ ದೊರಕಿಸಿಕೊಡಬೇಕು, ಆ ಮೂಲಕ ಬಹುಜನ ಕನ್ನಡದವರಿಗೆ, ಮುಖ್ಯವಾಗಿ ಇದುವರೆಗೆ ಶಿಕ್ಷಣವಂಚಿತರಾದ ದಲಿತ ವರ್ಗಗಳ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ ಎಂದು ಮುಂತಾದ ಅವರ ವಾದ ಈಗ ಸಾಕಷ್ಟು ಪ್ರಚಾರ ಪಡೆದಿದೆ. (ಇಂಥ ಅಭಿಪ್ರಾಯವುಳ್ಳ ಇತರ ಹಲವರಿದ್ದಾರೆ.) ಈ ಉದ್ದೇಶಕ್ಕೆ ಅವರು ಹಾಕಿಕೊಂಡ ಕಾರ್ಯಕ್ರಮಗಳೆಂದರೆ, ಕನ್ನಡದ ಲಿಪಿ ಪರಿಷ್ಕರಣ, ಸಂಸ್ಕೃತ ಪದಗಳನ್ನು ಕಡಿಮೆ ಮಾಡುವುದು, ಆದಷ್ಟೂ ಪಾರಿಭಾಷಿಕ ಪದಗಳನ್ನು ಅಚ್ಚಕನ್ನಡದೊಳಗಿಂದಲೇ ಹೊಸೆದುಕೊಳ್ಳುವುದು ಮುಂತಾದುವು. ಭಟ್ ಅವರ ಮೂಲ ಆಶಯ ಮತ್ತು ಕಳಕಳಿ ನನ್ನ ವಿಚಾರಗಳಿಗೆ ಹತ್ತಿರವಾದ ಕಾರಣ ಸಕಾರಾತ್ಮಕ ಧೋರಣೆಯಿಂದಲೇ ಸ್ಪಂದಿಸುತ್ತಿದ್ದೇನೆ. ಕನ್ನಡ ನುಡಿ ಮತ್ತು ಜನಪದವನ್ನು ನಾವೆಲ್ಲರೂ ಪ್ರೀತಿಸುತ್ತೇವೆ; ಹಾಗೂ ಭಟ್ ಅವರು ಉದ್ದೇಶಿಸುವ ಅವಕಾಶವಂಚಿತರ ಹಿತದೃಷ್ಟಿ ಎಲ್ಲರ ಮನಸ್ಸಿನಲ್ಲೂ ಇದೆ. ಆದರೂ ಭಟ್ ಅವರ ಕೆಲವು ಚಿಂತನೆಗಳು ಮತ್ತು ಕ್ರಮಗಳು ಆತುರ, ಅತಿಶಯೋಕ್ತಿ, ತಪ್ಪು ವಿಶ್ಲೇಷಣೆ, ಮತ್ತು ಅತಿರೇಕಗಳಿಂದ ಕೂಡಿವೆ ಎಂದು ನನಗನಿಸುತ್ತದೆ. + +ಅಲ್ಪಪ್ರಾಣ, ಮಹಾಪ್ರಾಣ: ಏನು ಹಾಗಂದರೆ? + +ಭಟ್ ಅವರು ತೆಗೆದುಹಾಕಬೇಕೆಂದಿರುವ ಮಹಾಪ್ರಾಣ ಅಕ್ಷರಗಳ ವಿಚಾರವನ್ನು ಇಲ್ಲಿ ಸ್ವಲ್ಪ ಬಿಡಿಸಿನೋಡುವುದು ಅಗತ್ಯ. ಯಾಕೆಂದರೆ ಈ ಅಕ್ಷರಗಳು ಅನಗತ್ಯ, ಸಾಮಾನ್ಯರಿಗೆ ಉಚ್ಚರಿಸಲು ಆಗುವುದಿಲ್ಲ ಎಂದು ಅವರು ಹೇಳುತ್ತಾರೆ. ನನಗೆ ಹಾಗನಿಸುವುದಿಲ್ಲ; ಕೆಲವರ ಮಾತಿನಲ್ಲಿ ಇವು ಇಲ್ಲದಿರಬಹುದು, ಇನ್ನು ಕೆಲವರ ಮಾತಿನಲ್ಲಿ ಇವೆ, ಹಾಗೂ ಇಲ್ಲದವರು ಕಲಿತುಕೊಳ್ಳಬಹುದಾದಂಥವು. + +ಕನ್ನಡ ವರ್ಣಮಾಲೆಯಲ್ಲಿ ಒಟ್ಟು 25 ವರ್ಗೀಯ ವ್ಯಂಜನಾಕ್ಷರಗಳು (ಅಕ್ಷರ ಎಂದರೆ ಧ್ವನಿಸಂಕೇತ ಎಂದು ತಿಳಿದುಕೊಳ್ಳಬೇಕು): ಕ ಚ ಟ ತ ಪ ಎಂಬುದಾಗಿ ಬಾಯಿಯ ಹಿಂಭಾಗದಿಂದ ತುಟಿಗಳ ತನಕ ಜನನ ಸ್ಥಾನಕ್ಕೆ ಅನುಸಾರ ಇವನ್ನು ವರ್ಗೀಕರಿಸಲಾಗಿದೆ. ಒಂದೊಂದು ವರ್ಗದಲ್ಲೂ ಐದು ಅಕ್ಷರಗಳಿದ್ದು ಅದು ಅನುನಾಸಿಕದಲ್ಲಿ ಕೊನೆಗೊಳ್ಳುತ್ತದೆ. ಆದರೆ ಅನುನಾಸಿಕಗಳಿಗೆ ಅಲ್ಪಪ್ರಾಣ, ಮಹಾಪ್ರಾಣ ಎಂಬ ಭೇದ ಹತ್ತದ ಕಾರಣ ಅವುಗಳನ್ನು ಇಲ್ಲಿ ಪರಿಗಣಿಸುವ ಅಗತ್ಯವಿಲ್ಲ. ಇನ್ನುಳಿದ 20 ವ್ಯಂಜನಗಳು ಹೀಗಿವೆ: + +ಕ ಖ ಗ ಘಚ ಛ ಜ ಝಟ ಠ ಡ ಢತ ಥ ದ ಧಪ ಫ ಬ ಭ + +ಇವೆಲ್ಲವೂ ಸ್ಫೋಟಗಳು (plosives or stops), ಎಂದರೆ ಇವನ್ನು ಉಚ್ಚರಿಸುವಲ್ಲಿ ನಿಶ್ವಾಸವನ್ನು ಬಾಯಲ್ಲಿ ಆಯಾ ಧ್ವನಿಗೆ ತಕ್ಕ ಸ್ಥಾನಗಳಲ್ಲಿ ಪೂರ್ಣ ತಡೆದು ನಂತರ ಒಮ್ಮೆಲೇ ಹೊರ ಹಾಕಲಾಗುತ್ತದೆ. (ಈ ಕಾರಣಕ್ಕೆ ಅವನ್ನು ಸ್ಪರ್ಶಗಳೆಂದೂ ಕರೆಯುತ್ತಾರೆ. ಆದರೆ ಸ್ಪರ್ಶಗಳಲ್ಲಿ ಅನುನಾಸಿಕವೂ ಸೇರುವುದರಿಂದ ನಾನಿಲ್ಲಿ ಸ್ಫೋಟ ಎಂಬ ಪದ ಬಳಸಿದ್ದೇನೆ.) ಪ್ರತಿಯೊಂದು ವರ್ಗದಲ್ಲೂ ಎರಡೆರಡು ಜತೆಗಳನ್ನು ಕಾಣಬಹುದು, ಕ-ಖ, ಗ-ಘ ಎಂದು ಮುಂತಾಗಿ. ಇವುಗಳಿಗೆ ಸಂಬಂಧಿಸಿ ಎರಡು ವ್ಯತಾಸಗಳಿವೆ: + +1. ಕ, ಖ ಮುಂತಾದವು ಅಕಂಪನಗಳು (unvoiced); ಎಂದರೆ ಇವನ್ನು ಉಚ್ಚರಿಸುವಾಗ ಕೊರಳ ಬುಡದಲ್ಲಿರುವ ಧ್ವನಿತಂತುಗಳು (vocal chords) ಕಂಪಿಸುವುದಿಲ್ಲ. ಗ, ಘ ಮುಂತಾದವು ಕಂಪನಗಳು ಅಥವಾ `ನಾದ’ಗಳು (voiced); ಇವನ್ನು ಉಚ್ಚರಿಸುವಾಗ ಧ್ವನಿತಂತುಗಳು ಕಂಪಿಸುತ್ತವೆ. + +2. ಪ್ರತಿ ವರ್ಗದ ಮೊದಲನೇ ಮತ್ತು ಮೂರನೇ ಅಕ್ಷರಗಳು ಅಲ್ಪಪ್ರಾಣ; ಎರಡನೇ ಮತ್ತು ನಾಲ್ಕನೇ ಅಕ್ಷರಗಳು ಮಹಾಪ್ರಾಣ. ಇಲ್ಲಿ `ಪ್ರಾಣ’ ಎಂದರೆ ಉಸಿರು ಎಂದು ಅರ್ಥ. ಅಲ್ಪಪ್ರಾಣ ಮತ್ತು ಮಹಾಪ್ರಾಣ ಎನ್ನುವುದು ಸ್ಫೋಟಗಳಿಗೆ ಮಾತ್ರವೇ ಸಂಬಂಧಿಸಿ ಉಸಿರಿನ ತೌಲನಿಕ ಪ್ರಮಾಣವನ್ನು ಸೂಚಿಸುವ ಪದಗಳು. ಮಹಾಪ್ರಾಣ ಅಕ್ಷರಗಳನ್ನು ಉಚ್ಚರಿಸುವಾಗ ಅಲ್ಪಪ್ರಾಣ ಅಕ್ಷರಗಳನ್ನು ಉಚ್ಚರಿಸುವುದಕ್ಕಿಂತ ತುಸು ಜಾಸ್ತಿ ಉಸಿರು (ಎಂದರೆ ಒತ್ತಡ) ಬೇಕಾಗುತ್ತದೆ. ಪ್ರಕೃತ ಚರ್ಚೆಯಲ್ಲಿ ನಮಗೆ ಪ್ರಸ್ತುತವಾಗಿರುವುದು ಈ ಎರಡನೇ ವ್ಯತ್ಯಾಸ. + +ಇದನ್ನಿಲ್ಲಿ ವಿಸ್ತರಿಸಿ ಯಾಕೆ ಹೇಳುತ್ತಿದ್ದೇನೆಂದರೆ ಮಹಾಪ್ರಾಣದ ಉಚ್ಚಾರ ಬಹಳ ಕಷ್ಟ ಎನ್ನುವ ಕಲ್ಪನೆಯನ್ನು ತೊಡೆದುಹಾಕುವುದಕ್ಕೆ. ಮಹಾಪ್ರಾಣಕ್ಕೆ ಉಸಿರಿನ ನಿರಪೇಕ್ಷ (absolute) ಒತ್ತಡ ಎಷ್ಟು ಬೇಕು ಎನ್ನುವುದು ಮುಖ್ಯವಲ್ಲ, ಅಲ್ಪಪ್ರಾಣಕ್ಕಿಂತ ಸ್ವಲ್ಪ ಹೆಚ್ಚಿದ್ದರೆ ಸಾಕು; ಎಂದರೆ ಮುಖ್ಯವಾಗುವುದು ಸಾಪೇಕ್ಷ (relative) ಒತ್ತಡ. ಉದಾಹರಣೆಗೆ, ದನ ಮತ್ತು ಧನ ಎಂಬ ಪದಗಳು. ಇವುಗಳಲ್ಲಿ ಕ್ರಮಪ್ರಕಾರವಾಗಿ ಅಲ್ಪಪ್ರಾಣ ಮತ್ತು ಮಹಾಪ್ರಾಣ ಅಕ್ಷರಗಳು ಬಂದಿವೆ: ದ ಮತ್ತು ಧ. ಮಹಾಪ್ರಾಣವನ್ನು ಭಾರೀ ಶಕ್ತಿಯೊಂದಿಗೆ ತಲೆ ಸಿಡಿಯುವಂತೆ ಉಚ್ಚರಿಸಬೇಕಾದ ಅಗತ್ಯವಿಲ್ಲ, ಯಾರೂ ಹಾಗೆ ಮಾಡುವುದು ಕೂಡ ಇಲ್ಲ; ದ ಮತ್ತು ಧ ನಡುವಿನ ವ್ಯತ್ಯಾಸವನ್ನು ಇರಿಸಿಕೊಳ್ಳುವುದಕ್ಕೆ ಎಷ್ಟು ಬೇಕೋ ಅಷ್ಟು ಉಚ್ಚರಿಸಿದರೆ ಸಾಕು. ಇದೇ ಮಾತು ಉಳಿದೆಲ್ಲಾ ಮಹಾಪ್ರಾಣಗಳಿಗೂ ಒಪ್ಪುತ್ತದೆ. ಹಲವು ಸಂದರ್ಭಗಳಲ್ಲಿ ಈ ವ್ಯತ್ಯಾಸ ಅರ್ಥವ್ಯತ್ಯಾಸಕ್ಕೆ ಕಾರಣವಾಗುತ್ತದೆ ಎನ್ನುವುದೂ ಮುಖ್ಯ: ದನ ಮತ್ತು ಧನ ಎಂಬಲ್ಲಿ ಹೀಗೆ ಆಗುತ್ತದೆ. ಯಾವುದೇ ಭಾಷೆಯೂ ಇಂಥ ಧ್ವನಿವ್ಯತ್ಯಾಸದಿಂದಲೇ ಅರ್ಥವನ್ನು ಸೂಚಿಸುವುದು. ಅರ್ಥವ್ಯತ್ಯಾಸ ಆಗದ ಕಡೆಯೂ ಮಹಾಪ್ರಾಣಗಳನ್ನು ಉಚ್ಚರಿಸುವುದು ವಿದ್ಯಾಕನ್ನಡದ ಲಕ್ಷಣ. ಮತ್ತು ಈ ಸೂಕ್ಷ್ಮವಾದ ಧ್ವನಿವ್ಯತ್ಯಾಸ ತರುವುದು ಯಾರಿಗೇ ಆದರೂ ಅಸಾಧ್ಯವೆಂದು ತಿಳಿದುಕೊಳ್ಳಬಾರದು. (ಕೆಲವೊಮ್ಮೆ ಶಾಲೆಯಲ್ಲಿ ಅಧ್ಯಾಪಕರು ಕಲಿಸುವಾಗ ಸ್ವಲ್ಪ ಅತಿಶಯವಾಗಿ ಮಹಾಪ್ರಾಣ ಅಕ್ಷರಗಳನ್ನು ಉಚ್ಚರಿಸಬಹುದು, ಹಾಗೂ ವಿದ್ಯಾರ್ಥಿಗಳನ್ನು ಒತ್ತಾಯಿಸಬಹುದು. ಕಲಿಕೆಯ ಸಂದರ್ಭದಲ್ಲಿ ಅತಿಶಯ ಇದ್ದೇ ಇರುತ್ತದೆ. ಆದರೆ ವಿವೇಚನೆ ಇರುವ ಅಧ್ಯಾಪಕರಿಗೆ ಇದನ್ನು ಸರಿಯಾಗಿ ಕಲಿಸುವುದಕ್ಕೆ ಗೊತ್ತಿರುತ್ತದೆ.) + +ಇಂಗ್ಲಿಷ್ ನ ಉದಾಹರಣೆ ತೆಗೆದುಕೊಳ್ಳೋಣ. ನಮ್ಮಲ್ಲಿ ಹೆಚ್ಚಿನ ವಿದ್ಯಾರ್ಥಿಗಳೂ ಇಂಗ್ಲಿಷ್ ಕಡ್ಡಾಯವಾಗಿ ಕಲಿಯುತ್ತಾರೆ. ಇಂಗ್ಲಿಷ್ ನಲ್ಲಿ ಕೂಡಾ ಮಹಾಪ್ರಾಣಗಳಿವೆ. ಇವನ್ನು aspirated ಎಂದು ಕರೆಯಲಾಗುತ್ತದೆ. ಇಂಗ್ಲಿಷ್ ನಲ್ಲಿ ಆರು ಸ್ಫೋಟಗಳಿವೆ: ಠಿ-b, ಣ-d, ಞ-g. ಇವುಗಳಲ್ಲಿ ಠಿ, ಣ, ಞ ಗಳು ಅಕಂಪನಗಳು ಮತ್ತು b, d, g ಗಳು ಕಂಪನಗಳು. ಅಕಂಪನ ಸ್ಫೋಟಕಗಳು ಸ್ವರ್ಜದ (syllable) ಆದಿಯಲ್ಲಿದ್ದು ಅವುಗಳ ಮೇಲೆ ಒತ್ತು (stress) ಬಿದ್ದಾಗ ಅವನ್ನು ಫ, ಠ, ಖ ಎಂಬಂತೆ ಉಚ್ಚರಿಸಬೇಕು. ಉದಾಹರಣೆಗೆ kiss ಎನ್ನುವುದನ್ನು `ಖಿಸ್’ ಎಂದೂ, pen ಎನ್ನುವುದನ್ನು `ಫೆನ್’ ಎಂದೂ, tea ಎನ್ನುವುದನ್ನು `ಠೀ’ ಎಂದೂ ಉಚ್ಚರಿಸುವುದು ಕ್ರಮ. (ಕನ್ನಡದ ಠ ಮತ್ತು ಇಂಗ್ಲಿಷ್ ನ ಠದಲ್ಲಿ ಸ್ವಲ್ಪ ವ್ಯತ್ಯಾಸವಿದೆ.) ಹೀಗೆ ಉಚ್ಚರಿಸದೆ ಇದ್ದರೆ ಅರ್ಥವ್ಯತ್ಯಾಸವೇನೂ ಆಗುವುದಿಲ್ಲ, ಯಾಕೆಂದರೆ ಇಂಗ್ಲಿಷ್ ನ ಈ ಒತ್ತು ಅರ್ಥಾತೀತವಾದುದು. ಆದರೂ ಒತ್ತು ಇದ್ದಲ್ಲಿ ಈ ಸ್ಫೋಟಗಳನ್ನು ಮಹಾಪ್ರಾಣಗಳಾಗಿ ಉಚ್ಚರಿಸುವುದು ಇಂಗ್ಲಿಷ್ ನ ಪದ್ಧತಿ. ಇಂಗ್ಲಿಷ್ ಸರಿಯಾಗಿ ಉಚ್ಚರಿಸುವುದಕ್ಕೆ ಇವುಗಳನ್ನು ಕಲಿಯಲೇ ಬೇಕಾಗುತ್ತದೆ. + +ಕೀಳರಿಮೆ? + +ಕನ್ನಡದ ಜನಸಾಮಾನ್ಯ ಮಕ್ಕಳಿಗೆ ಮಹಾಪ್ರಾಣಗಳು, ಮತ್ತು ಋಕಾರ ಷಕಾರ ಮುಂತಾದುವು ಉಚ್ಚರಿಸಲಿಕ್ಕೆ ಬರುವುದಿಲ್ಲ, ಕಾರಣ ಅವು ಅವರ ನುಡಿಯಲ್ಲಿಲ್ಲ; ಅವನ್ನು ಕಲಿಯಲು ಒತ್ತಾಯಿಸಿದರೆ ಅವರು `ಕೀಳರಿಮೆ’ಯಿಂದ ನರಳುತ್ತಾರೆ, ಆದ್ದರಿಂದ ಅವನ್ನೆಲ್ಲ ಕಿತ್ತುಹಾಕಬೇಕು ಎನ್ನುವುದು ಭಟ್ ಅವರ ವಾದ. ಆದರೆ ನಮ್ಮ ಸಾಮಾಜಿಕ ಕಳಕಳಿ ಮಹಾಪ್ರಾಣಗಳಲ್ಲೇ ಯಾಕೆ ನಿಲ್ಲಬೇಕು? ಸ ಶ ಷ ಗಳಲ್ಲಿ ಷಕಾರ ಮಾತ್ರವೇ ಯಾಕೆ ತೆಗೆದುಹಾಕಬೇಕು? ಶಕಾರವನ್ನೂ ಆಡದ ಜನ ಎಷ್ಟಿಲ್ಲ! ಎಲ್ಲಕ್ಕೂ ಮಿಗಿಲಾಗಿ ಹಕಾರ ಅಕಾರಗಳ ಅದಲು ಬದಲು ಗಮನಾರ್ಹ. ಹಲವರ ಕನ್ನಡದಲ್ಲಿ ಹಾಲು ಆಲಾಗುತ್ತದೆ, ಆಳು ಹಾಳಾಗುತ್ತದೆ. ಅಂಥವರಿಗೆ ಹಕಾರವೂ ಕೀಳರಿಮೆಗೆ ಕಾರಣವಲ್ಲವೇ? ಆದ್ದರಿಂದ ಹಕಾರವನ್ನೂ ತೆಗೆದುಹಾಕಬೇಡವೇ? ಹಕಾರವಿರುವಲ್ಲಿ ಒಂದೋ ಪಕಾರವನ್ನು (ಹಳೆಗನ್ನಡದಲ್ಲಿ ಇದ್ದಂತೆ), ಇಲ್ಲವೇ ಅಕಾರವನ್ನು (ಕೆಲವರ ನುಡಿಯಲ್ಲಿರುವಂತೆ) ಇರಿಸಿಕೊಂಡರೆ ಸಾಕು. ಇನ್ನು ಹಲವರಿಗೆ ಪದಾರಂಭದಲ್ಲಿ ಸಂಯುಕ್ತ ವ್ಯಂಜನಗಳು ಬಂದರೆ ಉಚ್ಚರಿಸುವುದಕ್ಕೆ ತೊಡಕಾಗುತ್ತದೆ: ಆದ್ದರಿಂದ ಸ್ತ್ರೀ ಇಸ್ತ್ರಿಯಾಗುತ್ತದೆ, ಸ್ಕೂಲು ಇಸ್ಕೂಲಾಗುತ್ತದೆ, ಪ್ರಸಂಗ ಪರಸಂಗವಾಗುತ್ತದೆ. `ಸಾಮಾಜಿಕ ನ್ಯಾಯ’ ಪ್ರಾಮಾಣಿಕವಾಗಬೇಕಿದ್ದರೆ ಇಂಥ ಪದಗಳನ್ನೂ ಕಿತ್ತುಹಾಕಬೇಕಾಗುತ್ತದೆ. ಇದು ಭಟ್ಟರ ವಾದದ ತಾರ್ಕಿಕ ಅಂತ್ಯ ಎನ್ನುವುದನ್ನು ತೋರಿಸಿಕೊಡಲು ಮಾತ್ರವೇ ನಾನಿದನ್ನು ಇಲ್ಲಿ ಹೇಳ್ತ ಇದ್ದೇನೆ. + +ಹೀಗೆ `ಅರಿಸಿದ’ ಕನ್ನಡದಲ್ಲಿ ಬೆಳೆದ ಮಕ್ಕಳು ಮುಂದೆ ಇಂಗ್ಲಿಷ್ ಭಾಷೆಯನ್ನು ಕಲಿಯಹೊರಟಾಗ ಏನಾಗುತ್ತದೆ? ಇಂಗ್ಲಿಷ್ ನ `ಸ್ಟ್ರೆಸ್’ ಪದ್ಧತಿ, ಮಹಾಪ್ರಾಣ ಅಕ್ಷರಗಳು, `ವಿಲಕ್ಷಣ’ವೆಂದು ಅನಿಸಬಹುದಾದ ಅವೆಷ್ಟೋ ಧ್ವನಿಗಳು, ಮಾತಿಗೂ ಬರಹಕ್ಕೂ ಸಂಬಂಧವೇ ಇಲ್ಲದಂತೆ ಕಾಣಿಸುವ ಲಿಪಿವ್ಯವಸ್ಥೆ ಮುಂತಾದವು ಅವರಿಗೆ ಕೀಳರಿಮೆ ಉಂಟುಮಾಡಬಹುದೇ? ಹೀಗೆ ಅಂದುಕೊಳ್ಳುವುದೇ ತಪ್ಪು. ಇದು ಮುಖ್ಯವಾಗಿ, ದಲಿತರು, ಕೆಳವರ್ಗದವರು, ಬಡವರು ತಮಗೆ ಗೊತ್ತಿರುವುದನ್ನಲ್ಲದೆ ಉಳಿದ ಏನನ್ನೂ ಕಲಿಯಲಾರರು ಎಂಬ ಪರಂಪರಾಗತ ತಪ್ಪು ಕಲ್ಪನೆಯೊಂದನ್ನು ತೋರಿಸುತ್ತದೆ. ಮಹಾಪ್ರಾಣ, ಷ, ಋ ಮುಂತಾದ ಅಕ್ಷರಗಳನ್ನು (ಎಂದರೆ ಅವು ಸೂಚಿಸುವ ಧ್ವನಿಗಳನ್ನು) ಕನ್ನಡದ ಈ ಬಹುಜನಸಮೂಹ ಕಲಿಯಲಾರದು ಎನ್ನುವುದು ಸರಿಯಲ್ಲ; ಕಲಿಯುವ ಅಗತ್ಯವಿಲ್ಲ ಎಂದರೆ ಆ ಮಾತು ಬೇರೆ. ಚೆನ್ನಾಗಿ ಕಲಿಸುವ, ಕಲಿಯುವ ವಾತಾವರಣವಿದ್ದರೆ ಯಾರು ಏನನ್ನು ಬೇಕಾದರೂ ಕಲಿಯಬಹುದು. ಅಂಥ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಗುರಿಯಾಗಬೇಕಲ್ಲದೆ ಇದ್ದಲ್ಲೇ ಕಾಲುಚಾಚಿ ಎನ್ನುವುದಲ್ಲ. ಮುಖ್ಯ ಸಂಗತಿಯೆಂದರೆ ಈಗಾಗಲೇ ಉನ್ನತ ಭಾಷೆಯಿಂದ ಅವಕಾಶವಂಚಿತರಾಗಿರುವ ಮಂದಿ ಇನ್ನೊಮ್ಮೆ ಹಾಗೆ ಆಗಬಾರದು. + +ನನಗೆ (ಹಾಗೂ ಭಟ್ ಅವರಿಗೆ) ಪರಿಚಯವಿರುವ ದಕ್ಷಿಣ ಕನ್ನಡ ಪ್ರದೇಶದಲ್ಲಿ ತುಳು, ಹವ್ಯಕ, ಕೋಟೆ, ಕೊಂಕಣಿ, ಮರಾಠಿ, ಮಲೆಯಾಳ ಮುಂತಾದ ಭಾಷೆಗಳು ಮನೆಮಾತಾಗಿರುವ ಅದೆಷ್ಟೋ ಮಂದಿ ಇದ್ದಾರೆ. ಇವರು ಯಾರೂ ಶಾಲಾಕನ್ನಡವನ್ನು ಮನೆಯಲ್ಲಿ ಆಡುವವರಲ್ಲ. ಹಾಗೂ ಮರಾಠಿ, ಕೊಂಕಣಿ ಮತ್ತು ಮಲೆಯಾಳದ ಕೆಲವು ಪ್ರಭೇದಗಳನ್ನು ಹೊರತುಪಡಿಸಿದರೆ ಇತರರ ಮನೆಮಾತಿನಲ್ಲಿ ಮಹಾಪ್ರಾಣಗಳು ಇಲ್ಲ. ಭಟ್ ಅವರ ಥಿಯರಿಯ ಪ್ರಕಾರ ಮಹಾಪ್ರಾಣಗಳಿರುವ ಪ್ರಭೇದದ ಕೆಲವು ಮರಾಠಿ, ಕೊಂಕಣಿ, ಮಲೆಯಾಳ ಭಾಷಿಕರ ಮಕ್ಕಳಿಗೆ ಶಾಲೆಯಲ್ಲಿ ಕನ್ನಡ ಕಲಿಯುವಾಗ ಹೆಚ್ಚಿನ ಲಾಭವಿದ್ದು ಉಳಿದವರು `ಕೀಳರಿಮೆ’ಯಿಂದಾಗಿ ಕನ್ನಡ ಕಲಿಯುವುದರಲ್ಲಿ ಹಿಂದಿರಬೇಕಿತ್ತು. ಈ ಕುರಿತಾಗಿ ನಾನು ಅಧ್ಯಯನ ನಡೆಸಿಲ್ಲವಾದರೂ ನನ್ನ ಮನಸ್ಸು ಮತ್ತು ಅನುಭವ ಹೇಳುವುದು ಹೀಗೇನೂ ಇರಲಾರದು ಎಂದು. ಯಾಕೆಂದರೆ ಮನೆಮಾತಿಗೂ ಕನ್ನಡ ಕಲಿಕೆಗೂ ಹೆಚ್ಚಿನ ಸಂಬಂಧವಿಲ್ಲ. ಸಂಬಂಧವಿರುವುದು ವರ್ಗ, ಆರ್ಥಿಕತೆ, ಪ್ರೋತ್ಸಾಹ, ಕಲಿಸುವ ಪದ್ಧತಿ, ಶಾಲೆಗೆ ಹೋಗುವ ವಯಸ್ಸು, ಮನೆ ಹಾಗೂ ಪರಿಸರ ಮತ್ತಿತರ ಅಂಶಗಳ ಜತೆ. ಕರ್ನಾಟಕದ ಉಳಿದೆಡೆಗಳಲ್ಲೂ ಇದು ಹೀಗೆಯೇ ಎಂದು ನನ್ನ ಊಹೆ. + +ಸಂಸ್ಕೃತದ ಪ್ರಭಾವ + +ಸಂಸ್ಕೃತ ಒಂದು ಇಂಡೋ-ಯುರೋಪಿಯನ್ ಮೂಲದ ಭಾಷೆ, ಇಂಡೋ-ಆರ್ಯನ್ ವರ್ಗಕ್ಕೆ ಸೇರಿದ್ದು; ಇದರ ದಾಯಾದಿ ಭಾಷೆಯಾದ ಲ್ಯಾಟಿನ್ ನಂತೆಯೇ ಸಂಸ್ಕೃತ ಕೂಡಾ ಇಂದು ಆಡುನುಡಿಯಾಗಿ ಉಳಿದಿಲ್ಲ. ಆದರೆ ಲ್ಯಾಟಿನ್ ಹೇಗೆ ಇಟಾಲಿಯನ್, ಫ್ರೆಂಚ್, ಸ್ಪ್ಯಾನಿಶ್, ಪೋರ್ಚುಗೀಸ್ ಮುಂತಾದ ರೊಮಾನ್ಸ್ ಭಾಷೆಗಳಿಗೆ ಕಾರಣವಾಯಿತೋ ಸಂಸ್ಕೃತ ಸಹಾ ಹಿಂದಿ, ಮರಾಠಿ, ಕೊಂಕಣಿ, ಪಂಜಾಬಿ, ಬೆಂಗಾಲಿ ಮುಂತಾದ ಇಂದಿನ ಜೀವಂತ ಭಾಷೆಗಳಿಗೆ ಕಾರಣವಾಯಿತು; ನಾನಿಲ್ಲಿ ಸಂಸ್ಕೃತವನ್ನು ಪ್ರಾಕೃತ, ಪಾಲಿ ಮುಂತಾದ ಪ್ರಭೇದಗಳನ್ನು ಒಳಗೊಂಡಂತೆ ತೋರವಾಗಿ ಹೇಳುತ್ತಿರುವುದು. ಪ್ರಾಕೃತ, ಪಾಲಿ ಮುಂತಾದ ಪ್ರಭೇದಗಳು ಆಡುಮಾತಾಗಿ ಇದ್ದಿರಬಹುದು; ಆದರೆ ಸಂಸ್ಕೃತ ಎಂದಾದರೂ ಆಡುಭಾಷೆಯಾಗಿ ಇತ್ತೇ ಇರಲಿಲ್ಲವೇ ಎನ್ನುವುದು ಚರ್ಚಾಸ್ಪದ ವಿಷಯ. ಅಂತೂ ಭಾಷೆಯಂತೂ ಇತ್ತು, ಅದರ ಅಪಾರ ಸಾಹಿತ್ಯದಲ್ಲಿ ಕೆಲವೊಂದು ಭಾಗ ಇಂದಿಗೂ ಲಭ್ಯ. + +ಭಾರತದ ಉಪಖಂಡದ ದ್ರಾವಿಡಭಾಷೆಗಳು ಸಂಸ್ಕೃತದ ಜತೆ (ಎಂದರೆ ಪ್ರಾಕೃತ, ಪಾಲಿ ಸೇರಿದ ವಿಸ್ತೃತ ಅರ್ಥದಲ್ಲಿ) ಯಾವಾಗ ಸಂಪರ್ಕಕ್ಕೆ ಬಂದುವೋ ತಿಳಿಯದು; ಈ ಸಂಪರ್ಕ ಆದಿದ್ರಾವಿಡದಿಂದಲೇ ಮೊದಲಾಗಿ ಆದಿದ್ರಾವಿಡವು ತಮಿಳು, ತೆಲುಗು, ಕನ್ನಡ, ಮಲಯಾಳ ಮುಂತಾಗಿ ಬೇರ್ಪಟ್ಟ ನಂತರವೂ ಹಲವು ಕಾಲ ಒಂದಲ್ಲ ಒಂದು ರೀತಿಯಲ್ಲಿ ಮುಂದುವರಿದಿರಬೇಕು. ಕನ್ನಡದ ಮಟ್ಟಿಗಂತೂ ಇತಿಹಾಸದ ಆರಂಭಕ್ಕೇ ಸಂಸ್ಕೃತ ಸಂಪರ್ಕ ಇದ್ದುದು ಕಂಡುಬರುತ್ತದೆ: ಸಂಸ್ಕೃತದ ಪ್ರಭಾವವಿಲ್ಲದ ಕನ್ನಡವನ್ನು ನಾವು ಊಹಿಸಲೂ ಸಾಧ್ಯವಿಲ್ಲ. ಸಂಸ್ಕೃತದಲ್ಲಿ ಆವಾಗಲೇ ಅಕ್ಷರಸಂಸ್ಕೃತಿ ಇದ್ದುದರಿಂದ ಅದು ಸಹಜವಾಗಿ ದೇಸಿಯ ಮೇಲೆ ಪ್ರಭಾವ ಬೀರಿತು. ಕನ್ನಡದ ಲಿಪಿ ಬ್ರಾಹ್ಮಿಯಾದರೂ ವರ್ಣಮಾಲೆ ಸಂಸ್ಕೃತವನ್ನು ಅನುಸರಿಸಿ ಅಕಾರದಿಂದ ಆರಂಭವಾಗಿ ಹಳಕ್ಷಜ್ಞದಲ್ಲಿ ಅಂತ್ಯಗೊಳ್ಳುತ್ತದೆ.ಅಕ್ಷರಸಂಸ್ಕೃತಿಯೆಂದರೆ ಶಿಕ್ಷಣಸಂಸ್ಕೃತಿ. ಸಂಸ್ಕೃತದ ಶಿಕ್ಷಣಸಂಸ್ಕೃತಿ ಕನ್ನಡ ಶಿಕ್ಷಣಕ್ಕೂ ಮಾರ್ಗದರ್ಶನ ನೀಡಿದ್ದರಲ್ಲಿ ಆಶ್ಚರ್ಯವಿಲ್ಲ. ಸಂಸ್ಕೃತದ ಸಾಂಸ್ಕೃತಿಕ ಸಂಪತ್ತು (ಸಾಹಿತ್ಯ, ಕಲೆ, ಸಂಗೀತ) ದ್ರಾವಿಡಕ್ಕಿಂತ ಮುಂದಿದ್ದುದರಿಂದ ದ್ರಾವಿಡವರ್ಗ ಸಂಸ್ಕೃತವನ್ನೊಂದು ಆದರ್ಶವಾಗಿ ಕಂಡಿರಬೇಕು. ಹೀಗೆ ಸಂಸ್ಕೃತದ್ದು ಯಾಜಮಾನ್ಯ ಸಂಸ್ಕೃತಿ ಎನಿಸಿತು. ಹೊರಗಿನವರು ನಾಡಿಗೆ ಬಂದು ಯಜಮಾನರೂ ಆದಾಗ ಅವರ ಸಂಪರ್ಕಕ್ಕೆ ಬರುವ ದೇಸೀಯರಲ್ಲಿ ಮೇಲ್ವರ್ಗದವರೇ ಹೆಚ್ಚು. ಈ ವಿದ್ಯಮಾನವನ್ನು ಇತಿಹಾಸದ ಉದ್ದಕ್ಕೂ ಕಾಣುತ್ತೇವೆ. ಇಲ್ಲಿಯೂ ಇದೇ ಆಯಿತು. ಕಾರಣ, ಶಿಕ್ಷಣ ಮೇಲ್ವರ್ಗದವರ ಕೈಗೆ ಸಿಕ್ಕಿ ಕೆಳವರ್ಗದವರು ವಂಚಿತರಾದರು. ಈ ಮಹಾ ವಿಭಜನೆ (Great Divide) ಇಂದಿನ ತನಕವೂ ಮುಂದುವರಿದುಕೊಂಡು ಬಂದಿರುವುದನ್ನು ಕಾಣುತ್ತೇವೆ; ಹಾಗೂ ಇದಕ್ಕೆ ಆರ್ಯನರು ಪ್ರಚಾರಕ್ಕೆ ತಂದ ಜಾತಿಪದ್ಧತಿ, ಮುಖ್ಯವಾಗಿ ಸವರ್ಣೀಯ-ಅವರ್ಣೀಯ ಭಿನ್ನತೆ, ಒಂದು ಮಾತಿನಲ್ಲಿ ಹೇಳುವುದಾದರೆ ಅಸ್ಪೃಶ್ಯತೆ, ಪ್ರಮುಖ ಕಾರಣವೆನ್ನುವುದರಲ್ಲಿ ಸಂದೇಹವಿಲ್ಲ. ವಿದ್ಯಾಭ್ಯಾಸಕ್ಕೆ ಮತ್ತು ಸಮೂಹಕಲ್ಪನೆಗೆ ಮಾರಕವಾದ ಅಸ್ಪೃಶ್ಯತೆ, ಜಾತಿಪದ್ಧತಿ ಮುಂತಾದ ಕಂದಕಗಳನ್ನು ಅಳಿಸಿಹಾಕುವುದು ನಮ್ಮ ಕಾರ್ಯಕ್ರಮವಾಗಿರಬೇಕು. ಭಾರತದ ಸಂವಿಧಾನ ಇದನ್ನು ಸ್ವೀಕರಿಸಿದೆಯಾದರೂ ಜನರ ಮನೋಧರ್ಮದಲ್ಲಿ ಮೂಲಭೂತ ಪರಿವರ್ತನೆ ಆಗಿಲ್ಲ ಎನ್ನುವುದು ಸತ್ಯ. + +ಈ ಹಿನ್ನೆಲೆಯಲ್ಲಿ ಆರ್ಯನರ ಭಾಷೆಯಾದ ಸಂಸ್ಕೃತದ ವಿರುದ್ಧ ಬಹುಜನರಿಗೆ ದ್ವೇಷವಿದ್ದರೆ ಆಶ್ಚರ್ಯವಿಲ್ಲ. ಆದರೆ ಭಾಷೆಯನ್ನು ಅದರ ಬಳಕೆಯವರು ಮಾಡಿದ ತಪ್ಪಿನಿಂದ ಪ್ರತ್ಯೇಕಿಸುವುದು ಅಗತ್ಯ. ಇತಿಹಾಸವನ್ನು ನೋಡಿದರೆ ಗೊತ್ತಾಗುತ್ತದೆ, ತಮ್ಮ ಮೇಲೆ ಧಾಳಿ ಮಾಡಿದವರ ಭಾಷೆಗಳಿಂದಲೇ ಆಂಗ್ಲೋ-ಸ್ಯಾಕ್ಸನರು ತಮಗೆ ಬೇಕಾದ್ದನ್ನು ತೆಗೆದುಕೊಂಡರು. ನಾರ್ವೆ ನಾಲ್ಕು ಶತಮಾನಗಳ ಕಾಲ ಡೆನ್ಮಾರ್ಕಿನ ವಶ ಇದ್ದಿತು; ಅನೇಕ ಡೇನಿಶ್ ಪದಗಳು ನಾರ್ವೇಜಿಯನ್ ಭಾಷೆಯನ್ನು ಪ್ರವೇಶಿಸಿದವು. ನಾರ್ವೆ ಸ್ವತಂತ್ರವಾದ ಮೇಲೆ ಈ ಡೇನಿಶ್ ಪದಗಳನ್ನೆಲ್ಲ ಕಿತ್ತುಹಾಕಬೇಕೆಂಬ ಚಳುವಳಿಯೊಂದು ಸುರುವಾಯಿತು. ಈ ಚಳುವಳಿಗೆ ನಾರ್ವೇಜಿಯನ್ ರಾಷ್ಟ್ರೀಯತೆಯ ಉಪ್ಪುಖಾರ ಇದ್ದೂ ಜನ ಬೆಂಬಲ ಸಿಗಲಿಲ್ಲ. ಪ್ರಸಿದ್ಧ ನಾರ್ವೇಜಿಯನ್ ನಾಟಕಕಾರ ಹೆನ್ರಿಕ್ ಇಬ್ಸೆನ್ ಖುದ್ದಾಗಿ ಇದನ್ನು ವಿರೋಧಿಸಿದ. ಹಲವು ಶತಮಾನಗಳ ಕಾಲ ಜಪಾನ್ ಮತ್ತು ಚೀನಾ ದೇಶಗಳು ವೈರಿಗಳಾಗಿದ್ದುವು; ಜಪಾನ್ ದೇಶವನ್ನು ಚೀನೀ ಅರಸರು ಆಳಿದ ಪರಿಣಾಮವಾಗಿ ಅಲ್ಲಿ ಚೀನೀ ಭಾಷೆ ಒಂದು ಫ್ಯಾಶನ್ ಆಯಿತು. ಜಪಾನೀ ಬರಹದಲ್ಲಿ ನೂರಾರು ಚೀನೀ ಲಿಪಿಗಳು ಸೇರಿಕೊಂಡುವು; ಇವಕ್ಕೆ ಕಾಂಜಿ ಎಂದು ಕರೆಯುತ್ತಾರೆ. ಜಪಾನು ಚೀನೀ ಹಿಡಿತದಿಂದ ಮುಕ್ತವಾದ ಮೇಲೆ ಜಪಾನಿಯರೇನೂ ಈ ಚೀನೀ ಮೂಲದ ಲಿಪಿಗಳನ್ನು ತೆಗೆದುಹಾಕಲಿಲ್ಲ. ಆಡುವವರ ಪಾಪವನ್ನು ನುಡಿಯ ತಲೆಗೆ ಕಟ್ಟುವುದು ಸರಿಯಲ್ಲ. ರಾಜಕೀಯದಲ್ಲಿ, ಹಣಕಾಸಿನಲ್ಲಿ, ಅಂತಾರಾಷ್ಟ್ರೀಯ ಸಂಬಂಧದಲ್ಲಿ, ಸಾಹಿತ್ಯ ಕಲೆಗಳಲ್ಲಿ, ವೈಯಕ್ತಿಕ ಬದುಕಿನಲ್ಲಿ ಸಹಾ ನಮಗೆ ಯಾವುದು ಒಳ್ಳೆಯದೋ ಅದನ್ನು ಎಂಥವರಿಂದಲೂ ಸ್ವೀಕರಿಸುತ್ತೇವೆ. ಭಾಷೆಯಲ್ಲಿ ಯಾಕಿಲ್ಲ? + +ಒಂದೊಂದು ಭಾಷೆಯೂ ಅನ್ಯಭಾಷೆಗಳಿಂದ ಪದಗಳನ್ನು ಎರವಲು ಪಡೆದುಕೊಂಡಾಗ ಕೆಲವೊಮ್ಮೆ ಇದ್ದಂತೆಯೇ ತೆಗೆದುಕೊಳ್ಳುತ್ತದೆ: ಇದು ತತ್ಸಮ. ಕೆಲವೊಮ್ಮೆ ಅಲ್ಪಸ್ವಲ್ಪದಿಂದ ಹಿಡಿದು ಪೂರ್ತಾ ಬದಲಾವಣೆಗಳನ್ನು ಮಾಡಿಕೊಳ್ಳುತ್ತದೆ. ಇಂಗ್ಲಿಷ್ ತನಗೆ ಬೇಕಾದ ಪದಗಳನ್ನು ಇತರ ಭಾಷೆಗಳಿಂದ ಪಡೆದಾಗಲೂ ಹೀಗೆ ಆಯಿತು. ಗ್ರೀಕ್ ಮೂಲದ psycho ಪದ `ಪ್ಸೈಕೋ’ ಆಗಿ ಉಳಿಯದೆ `ಸೈಕೋ’ ಆಗುತ್ತದೆ. ಆದರೆ ಸ್ಪೆಲ್ಲಿಂಗ್ ನಲ್ಲಿ ಅದು ಪಕಾರವನ್ನು ಇರಿಸಿಕೊಂಡಿತು ಎಂಬುದು ಕೂಡಾ ಒಂದು ಸತ್ಯ. ಇನ್ನು ಕೆಲವೆಡೆ ಸ್ಪೆಲ್ಲಿಂಗ್ ನಲ್ಲಿ ಸಹಾ ತನಗೆ ಬೇಕಾದ ಬದಲಾವಣೆಗಳನ್ನು ಇಂಗ್ಲಿಷ್ ಮಾಡಿಕೊಂಡಿದೆ. ಗುಲಾಬಿ ಹೂ rose ಲ್ಯಾಟಿನ್ನ rosa. ಇಂಗ್ಲಿಷ್ ನಲ್ಲಿ ನಾವು ನೋಡುವ Exit (ಹೊರಕ್ಕೆ) ಎನ್ನುವುದು ನಿಜಕ್ಕೂ ಲ್ಯಾಟಿನ್ ನಲ್ಲಿ ಒಂದು ಇಡೀ ವಾಕ್ಯ: `ಅವನು (ಅವಳು/ಅದು) ಹೊರಕ್ಕೆ ಹೋಗುತ್ತಾನೆ’ ಎಂದು ಅರ್ಥ. + +ಇಂಗ್ಲಿಷ್ ಹೊರ ಪ್ರಭಾವಗಳಿಗೆ ಒಳಗಾಗುತ್ತಲೇ ಆ ಕಾರಣಗಳಿಂದಾಗಿ ತನ್ನ ಆಂತರಿಕ ರಚನೆಯಲ್ಲೂ ಬದಲಾಗುತ್ತ ಬಂದಿದೆ; ಎಂದರೆ ತಾನು ಪಳಗಿಸಿದ್ದಲ್ಲದೆ, ತಾನೂ ಪಳಗಿದೆ. ಅದರ ಕೆಲವು ಧ್ವನಿಗಳು, ಅಕ್ಷರಗಳು ಫ್ರೆಂಚ್ ನಿಂದ ಬಂದುವು. ವ್ಯಾಕರಣ ಸಂಬಂಧಿಯಾದ ಕೆಲವು ಪದಘಟಕಗಳು (prepositions, articles, pronouns) ಡೇನಿಶ್ ನಿಂದ ಬಂದುವು. ಗ್ರೀಕ್ ಮತ್ತು ಲ್ಯಾಟಿನ್ ನಿಂದ ಪದಗಳನ್ನು ಪಡೆದಾಗ ಅದು ಧ್ವನಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರುವುದು ನಿಜ; ಆದರೆ ಸ್ಟ್ರೆಸ್ ನಲ್ಲಿ ಹಾಗೆ ಮಾಡಲಿಲ್ಲ. ಇಂಗ್ಲಿಷ್ ನ ಮೂಲ ಜರ್ಮಾನಿಕ್ ಭಾಷಾಪರಿವಾರದಲ್ಲಿ ಸ್ಟ್ರೆಸ್ ಪದದ ಎರಡನೇ ಸ್ವರ್ಜ್ಯದ ಮೇಲೆ ಬರುವುದು; ಗ್ರೀಕ್ ಮತ್ತು ಲ್ಯಾಟಿನ್ ನಲ್ಲಿ ಅಂಥ ನಿಯತಿಯಿಲ್ಲ; ಆದ್ದರಿಂದ ಇಂದು ಇಂಗ್ಲಿಷ್ ನ ಸ್ಟ್ರೆಸ್ ಪದ್ಧತಿ ಕಲಿಯಲು ಸಾಕಷ್ಟು ಶ್ರಮಿಸಬೇಕು. ಇಂಗ್ಲಿಷ್ ನ ಸ್ಪೆಲ್ಲಿಂಗ್ ಹದಿನೇಳನೇ ಶತಮಾನಕ್ಕೆ ಸ್ಥಿರಗೊಳ್ಳತೊಡಗಿತು, ಆದರೆ ಧ್ವನಿಗಳು ವ್ಯತ್ಯಾಸವಾಗುತ್ತ ಬಂದುವು. ಆದ್ದರಿಂದಲೇ ಇಂದು ಇಂಗ್ಲಿಷ್ ನ ಧ್ವನಿ ಮತ್ತು ಅಕ್ಷರಗಳಿಗೆ ತಾಳಮೇಳ ಇಲ್ಲದಂತೆ ಅನಿಸುವುದು. ಇದನ್ನೆಲ್ಲ ಬದಲಿಸಿ ಇಂಗ್ಲಿಷ್ನ್ನ ಒಂದು ಫೊನೆಟಿಕ್ ಭಾಷೆಯಾಗಿ (ಬರೆದಂತೆ ಓದುವುದು, ಓದುವಂತೆ ಬರೆಯುವುದು) ಮಾಡಬೇಕೆಂಬ ಕೆಲವರ ಯತ್ನ ಸಫಲವಾಗಲಿಲ್ಲ. ಜರ್ಮಾನಿಕ್ ಮೂಲದಲ್ಲಿ ಅದು ಹಾಗಿತ್ತು! ವಾಸ್ತವದಲ್ಲಿ ಇಂಗ್ಲಿಷ್ ಅಕ್ಷರಪದ್ಧತಿಯ ಅಂತರ್ಯವನ್ನು ಕಲಿತುಕೊಂಡರೆ ಸ್ಪೆಲ್ಲಿಂಗ್ ಅಷ್ಟೇನೂ ಕಷ್ಟವಲ್ಲ. ಅದೇ ರೀತಿ ಸ್ಟ್ರೆಸ್ ಕೂಡಾ. ಆದರೆ ಕಲಿಯುವ ಮೊದಲೇ ಕಷ್ಟವೆಂದರೆ ನಿಜಕ್ಕೂ ಕಷ್ಟವಾಗುತ್ತದೆ! + +ಇನ್ನು ಸಂಸ್ಕೃತದ ಪದಗಳನ್ನು ಕನ್ನಡ ಹಾಗೇ ಇಟ್ಟುಕೊಂಡಿದೆ ಎನ್ನುವಂತಿಲ್ಲ. ಸಂಸ್ಕೃತದ ಹಲವು ಪದಗಳು ಧ್ವನಿ (ಕೆಲವೊಮ್ಮೆ ಅರ್ಥ ಸಹಿತ) ವ್ಯತ್ಯಾಸಗೊಂಡು ಕನ್ನಡದಲ್ಲಿ ಸೇರಿವೆ; ಇವು ತದ್ಭವಗಳು. ಇವುಗಳಲ್ಲಿ ಕೆಲವೊಂದು ಕನ್ನಡದಲ್ಲಿ ಎಷ್ಟು ಬೆರೆತುಹೋಗಿವೆ ಎಂದರೆ ಮೂಲತಃ ಇವು ಕನ್ನಡದ್ದಲ್ಲ ಎನ್ನುವುದು ಕೂಡಾ ನಮಗೆ ಗೊತ್ತಿಲ್ಲ. ಉದಾಹರಣೆಗೆ ಅರಸ ಎನ್ನುವ ಪದ ರಾಜ ಎಂಬ ಸಂಸ್ಕೃತದಿಂದ ಆದಿದ್ರಾವಿಡ ಕಾಲದಲ್ಲೇ ರೂಪಾಂತರಕ್ಕೆ ಒಳಗಾಗಿ ಕನ್ನಡಕ್ಕೆ ಬಂದದ್ದು. ಸಕ್ಕರೆ (ಶರ್ಕರಾ), ಐಸಿರಿ (ಐಶ್ವರ್ಯ), ಸಂಜೆ (ಸಂಧ್ಯಾ) ಎಂದು ಮುಂತಾಗಿ ಅಚ್ಚಗನ್ನಡವೆನಿಸುವ ತದ್ಭವಗಳ ಸಂಖ್ಯೆ ಅಪಾರ. ಆದರೆ ಭಟ್ ಹೇಳುವಂತೆ ಕೆಲವೊಮ್ಮೆ ತದ್ಭವ ಮತ್ತು ತತ್ಸಮ ಎರಡೂ ಇದ್ದಾಗ ಅವುಗಳಲ್ಲಿ ಮೌಲ್ಯವ್ಯತ್ಯಾಸ ಬರಬಹುದು. ರಾಕ್ಷಸ (ಸಂಸ್ಕೃತ) ಶಬ್ದಕ್ಕೆ ರಕ್ಕಸ ಎಂಬ ತದ್ಭವ ಇದ್ದೂ ಉನ್ನತವರ್ಗದವರು ರಾಕ್ಷಸ ಎಂದೇ ಉಪಯೋಗಿಸುತ್ತಾರೆ, ಆದ್ದರಿಂದ ರಕ್ಕಸ ಎಂಬ ಪದವನ್ನು ಎರಡನೇ ದರ್ಜೆಯದಾಗಿ ಮಾಡಿಬಿಟ್ಟಿದ್ದಾರೆ ಎನ್ನುತ್ತಾರೆ ಅವರು. ಮೌಲ್ಯದಲ್ಲಿ ಇಂಥ ವ್ಯತ್ಯಾಸವಿದೆ ಎನ್ನುವುದಾದರೆ, ರಾಕ್ಷಸ ಎಂಬ ಪದವನ್ನೇ ಎಲ್ಲರೂ ಉಪಯೋಗಿಸಬಹುದು. ಆದರೆ ಅದರಲ್ಲಿ ಷಕಾರವಿರುವುದರಿಂದ ಅದನ್ನು ನುಡಿಯಲು ಬರದೆ `ಕೀಳರಿಮೆ’ಗೆ ಕಾರಣವಾಗುತ್ತದೆ ಎನ್ನುವುದು ಭಟ್ ಅವರ ವಾದ. ಇದಕ್ಕೆ ಅವರು ಸೂಚಿಸುವ ಪರಿಹಾರ ಕನ್ನಡದಿಂದ ರಾಕ್ಷಸ ಎಂಬ ಪದವನ್ನೇ ತೊಡೆದುಹಾಕುವುದು. ಒಂದು ಒತ್ತಾಯವನ್ನು ತೆಗೆದು ಅದರ ಜಾಗದಲ್ಲಿ ಇನ್ನೊಂದನ್ನು ಇರಿಸುವುದೇ? ಎರಡೂ ಪದಗಳು ಇದ್ದರೆ ಬೇಕಾದವರು ಬೇಕಾದ್ದನ್ನು ಅಗತ್ಯಕ್ಕೆ ಅನುಸಾರ ಆಯ್ದುಕೊಳ್ಳುತ್ತಾರೆ ಎನ್ನುವುದು ನನ್ನ ಸಲಹೆ. ಮಾತ್ರವಲ್ಲ, ಪುಸ್ತಕ ಎಂಬ ಪದಕ್ಕೆ ಹೊತ್ತಗೆ ಎನ್ನುವ ತದ್ಭವ ಇರುವುದೇನೋ ನಿಜ; ಆದರೆ ಇಂದು ಹೊತ್ತಗೆ ಎಂಬ ಪದ ಬಳಸಿದರೆ ಅದು ಗ್ರಾಂಥಿಕವಾಗಿ ಅನಿಸುತ್ತದೆ. ಪುಸ್ತಕ ಎಂಬ ಪದವೇ ಬಳಕೆಯಲ್ಲಿದೆ; ಆದ್ದರಿಂದ ಅದರ ಮೂಲ ಏನೇ ಇರಲಿ, ಅದನ್ನು ಕನ್ನಡವೆಂದೇ ಕಾಣಬೇಕು. ಆದರೆ ಎಲ್ಲಾ ಕಡೆ ಹೀಗೆ ಆಗಿಲ್ಲ: ಹಕ್ಕಿ-ಪಕ್ಷಿ, ಚಿನ್ನ-ಸ್ವರ್ಣ, ಕಂಭ-ಸ್ತಂಭ ಎಂದು ಮುಂತಾದಲ್ಲಿ ಎರಡೂ ಪದಗಳು ಬಳಕೆಯಲ್ಲಿವೆ; ಅವುಗಳಲ್ಲಿ ಸಂದರ್ಭವ್ಯತ್ಯಾಸ ಇಲ್ಲವೆಂದಿಲ್ಲ. + +ಇನ್ನು ತತ್ಸಮ ಪದಗಳಿಗೆ ಬಂದರೆ ಭಟ್ ಅವರು ಹೇಳುವಂತೆ ಮೌಲ್ಯದ ಕುರಿತಾದ ಕೆಲವು ಸಮಸ್ಯೆಗಳನ್ನು ಕಾಣಬಹುದು. `ಪ್ರಜಾವಾಣಿ’ ಪತ್ರಿಕೆ ನಾಯಿ ಎಂಬ ಸಾಮಾನ್ಯ ಪದವನ್ನು ಬಿಟ್ಟು ಶ್ವಾನ ಎಂಬ ಸಂಸ್ಕೃತ ಪದವನ್ನು ಬಳಸುತ್ತದೆ ಎಂದು ಭಟ್ ಹೇಳುತ್ತಾರೆ. ಸಂದರ್ಭ ಇದರ ಬಳಕೆಯನ್ನು ಬೆಂಬಲಿಸದೆ ಇದ್ದರೆ ಇದೊಂದು ಆಭಾಸ. ಆದರೆ ಕೆಲವು ಸಲ ಪತ್ರಿಕಾಕರ್ಕರು ಶೈಲಿಯ ಪರಿಣಾಮಕ್ಕಾಗಿ ಸಾಧಾರಣ ಸಂದರ್ಭದಲ್ಲಿ ಬಳಸದ ಪದವನ್ನು ಉಪಯೋಗಿಸುತ್ತಾರೆ: ಶ್ವಾನಕಡಿತ, ಶ್ವಾನಹತ್ಯೆ ಇತ್ಯಾದಿ. ಇದರ ಅರ್ಥ ಈ ಪತ್ರಿಕಾಕರ್ತರು ನಾಯಿ ಎಂಬ ಕನ್ನಡ ಪದವನ್ನು ತುಚ್ಛವಾಗಿ ಕಾಣುತ್ತಾರೆ ಎಂದಲ್ಲ. ಅದೇ ರೀತಿ, ದಂತಚಿಕಿತ್ಸೆ, ದಂತಕಳ್ಳ, ಕಳ್ಳದಂತ ಸಾಗಾಣಿಕೆ ಮುಂತಾದ ಪದಗಳೂ ಬಳಕೆಯಲ್ಲಿವೆ. ಇಂಗ್ಲಿಷ್ ನಲ್ಲಿ ಕೂಡಾ ಡಾಗ್ ಎಂಬ ದೇಸೀ ಪದದ ಜತೆ ಕ್ಯಾನೈನ್ ಎಂಬ ಲ್ಯಾಟಿನ್ ಮೂಲದ ಪದವೂ ಇದೆ. ಕೆಲವು ಸಂದರ್ಭಗಳಲ್ಲಿ ಅಲ್ಲೂ ಲ್ಯಾಟಿನ್ ಮೂಲದ ಪದ ಬಳಕೆಯಾಗಬಹುದು: `ಕ್ಯಾನೈನ್ ನ್ಯೂಸೆನ್ಸ್’, `ಕ್ಯಾನೈನ್ ಬೈಟ್’ ಎಂಬ ಪತ್ರಿಕಾ ಶೀರ್ಷಿಕೆಗಳನ್ನು ನಾನು ಊಹಿಸಿಕೊಳ್ಳಬಲ್ಲೆ. ಇವು ಓದುಗರನ್ನು ಆಕರ್ಷಿಸುತ್ತವೆ. ಕೆಲವೊಮ್ಮೆ ಉದ್ದೇಶ ತಿಳಿಹಾಸ್ಯವಾಗಿರುತ್ತದೆ; ಹಾಗಿದ್ದಾಗ ಗೇಲಿಗೊಳಗಾಗುವುದು ಸಂಸ್ಕೃತವೇ! ಇನ್ನು ಇಂಗ್ಲಿಷ್ ನಲ್ಲಿ ಸಹಾ ದಂತವೈದ್ಯರಿಗೆ ಟೂಥ್ ಡಾಕ್ಟರ್ ಅನ್ನುವುದಿಲ್ಲ: ಡೆಂಟಿಸ್ಟ್ ಅನ್ನುತ್ತಾರೆ. `ಪ್ರಜಾವಾಣಿ’ಯ ಪತ್ರಕರ್ತರು ಕೂಡಾ ಕನ್ನಡಿಗರೇ; ತಮಗೆ ಲಭ್ಯವಿರುವ ಪರ್ಯಾಯಪದಗಳನ್ನು ಸಂದರ್ಭವರಿತು ಹೇಗೆ ಬಳಸಬೇಕು ಎನ್ನುವುದು ಅವರಿಗೆ ಗೊತ್ತಿರುತ್ತದೆ ಎಂದುಕೊಳ್ಳುತ್ತೇನೆ. ನಾಯಿಗೊಂದು ಸಂದರ್ಭವಿರುವಂತೆ ಶ್ವಾನಕ್ಕೂ ಇರುತ್ತದೆ! ಅದೇ ರೀತಿ ಹಲ್ಲಿಗೂ, ದಂತಕ್ಕೂ. ಇದು ವಿವರಣೆ (description), ನಿದರ್ಶನವಲ್ಲ (prescription). ಯಾಕೆಂದರೆ ಸಮೂಹದ ಕುರಿತಾದ  ಕಲ್ಪನೆ ಎಲ್ಲರನ್ನೂ ಒಳಗೊಳ್ಳಬೇಕು, `ಪ್ರಜಾವಾಣಿ’ಯ ಪತ್ರಿಕಾಕರ್ತರೂ ಸೇರಿದಂತೆ. + +ತತ್ಸಮ ಪದಗಳು ಕನ್ನಡಮೂಲದ ಪದಗಳನ್ನೆಲ್ಲ ಬಳಕೆಯಿಂದ ಹೊರಗೆಸೆದೂ ಇಲ್ಲ: `ಕನ್ನಡಿ’ಗೆ `ದರ್ಪಣ’ವೆಂದು ಸಾಮಾನ್ಯ ಬಳಕೆಯಲ್ಲಿ ಅನ್ನುವುದಿಲ್ಲ; ಅದೇ ರೀತಿ, ತಲೆ-ಶಿರ, ಕೈ-ಹಸ್ತ, ಹೊಟ್ಟೆ-ಉದರ (ಇಂಥ ದೇಹಾಂಗ ವಿಷಯದಲ್ಲಿ), ಹೆಸರು-ನಾಮ, ತಾಯಿ/ಅಮ್ಮ-ಮಾತೆ, ತಂದೆ/ಅಪ್ಪ-ಪಿತ, ಮಗ-ಪುತ್ರ, ಮಗಳು-ಪುತ್ರಿ, ಹೂವು-ಪುಷ್ಪ, ಹಣ್ಣು-ಫಲ, ಕಿಟಿಕಿ-ಗವಾಕ್ಷಿ, ಕೊಡೆ-ಛತ್ರಿ, ಹೊಗೆ-ಧೂಮ, ಮೋಡ-ಮೇಘ, ನೆರಳು-ಛಾಯೆ, ಕಲ್ಲು-ಶಿಲೆ, ಮೆಟ್ಟಲು-ಸೋಪಾನ, ಉಪ್ಪು-ಲವಣ, ಹಾಲು-ಕ್ಷೀರ, ಮೊಸರು-ದಧಿ ಮುಂತಾದ ಕಡೆ ಕನ್ನಡಮೂಲದ ಪದಗಳು ಕೆಳದರ್ಜೆಯನ್ನೇನೂ ಪಡೆದಿಲ್ಲ, ಬಳಕೆಯಿಂದಲೂ ಹೋಗಿಲ್ಲ. + +ತತ್ಸಮಗಳನ್ನು ಕನ್ನಡ ಸ್ವೀಕರಿಸಿದ ಬಗೆ + +ತತ್ಸಮ ಪದಗಳನ್ನೂ ಕನ್ನಡ ಇದ್ದಹಾಗೇ ಸ್ವೀಕರಿಸಿಕೊಳ್ಳಲಿಲ್ಲ. ಕನ್ನಡ ಇವುಗಳಲ್ಲಿ ಮಾಡಿಕೊಂಡ ಬದಲಾವಣೆ ಸೂಕ್ಷ್ಮವಾದುವು, ಕಣ್ಣಿಗೆ ಹೊಡೆದು ಕಾಣಿಸುವಂಥವಲ್ಲ. ಇವುಗಳಲ್ಲಿ ಕೆಲವು ಇಲ್ಲಿವೆ: + +1. ಈ ಪದಗಳಿಗೆ ಕನ್ನಡ ತನ್ನದೇ ಆದ -ಇಸು ಪ್ರತ್ಯಯವನ್ನು ಹಚ್ಚಿ ತನ್ನದನ್ನಾಗಿ ಮಾಡಿಕೊಂಡಿತು. ಉದಾಹರಣೆಗೆ: ಪೂಜಿಸು, ನಮಿಸು, ವಂದಿಸು, ಆರಾಧಿಸು, ಪ್ರೀತಿಸು ಇತ್ಯಾದಿ. ಇದೇ ಕ್ರಿಯಾ ಪ್ರತ್ಯಯವನ್ನು ಅದು ಇಂಗ್ಲಿಷ್ ಹೊರತಾದ ಇತರ ಮೂಲದ ಪದಗಳಿಗೂ ಹಚ್ಚುತ್ತದೆ: ಖರೀದಿಸು, ದಾಖಲಿಸು (ಅರಬಿ). ಇತರ ಮೂಲದ ಪದಗಳನ್ನು ಬೇಕಾದಂತೆ ಬಗ್ಗಿಸಿಕೊಳ್ಳುವ ಕನ್ನಡ ಸಂಸ್ಕೃತದ ಪದಗಳ ಮಹಾಪ್ರಾಣಗಳನ್ನು ಯಾಕೆ ಕೈಬಿಡಬಾರದು ಎಂದು ಜೋರು ಮಾಡುವವರು ಇದನ್ನು ಗಮನಿಸಬೇಕು: -ಇಸು ಪ್ರತ್ಯಯವನ್ನು ಇಂಗ್ಲಿಷ್ ಪದಗಳಿಗೆ ಯಾಕೆ ಹಚ್ಚುವುದಿಲ್ಲ? ಯಾಕೆ `ಪಾಸ್ ಮಾಡು’, ಯಾಕೆ `ಪಾಸಿಸು’ ಇಲ್ಲ? ಪಾಸಿಸುವೇ ಹೆಚ್ಚು ಸರಳವಲ್ಲವೇ? ಯಾಕೆ ಪಾಸಿಸುವನ್ನು ಬಳಸಬಾರದು? `ವಾಸಿಸು’ ಇದೆಯಲ್ಲ. ಇಷ್ಟೆ: ಪಾಸಿಸು ತಮಾಷೆಯಾಗಿ ತೋರುತ್ತದೆ, ಜನರಿಗೆ ಅದು ಬೇಡ. ಅದೇನಿದ್ದರೂ -ಇಸು ಪ್ರತ್ಯಯ ಹಚ್ಚುವುದರ ಮೂಲಕ ಸಂಸ್ಕೃತಮೂಲದ ಪದಗಳನ್ನು ಕನ್ನಡ ತನ್ನವನ್ನಾಗಿ ಮಾಡಿಕೊಂಡಿದೆ. (-ಇಸು ಪ್ರತ್ಯಯವನ್ನು ಇಂಗ್ಲಿಷ್ ಪದಗಳಿಗೆ ಹಚ್ಚುವ ಹಾಗಿಲ್ಲ: `ಅರೆಸ್ಟಿಸು’ ಎಂದರೆ ಆಭಾಸ, `ಅರೆಸ್ಟ್ ಮಾಡು’ ಸ್ವೀಕೃತ’. ಅದೇ ರೀತಿ `ತನಿಖೆ’ ಇಂಗ್ಲಿಷ್ ಆಗಲಿ ಅಲ್ಲದಿದ್ದರೂ `ತನಿಖಿಸು’ ಸರಿಯಲ್ಲ; `ತನಿಖೆ ಮಾಡು’ ಸರಿ. ಎಂದರೆ -ಇಸು ಸೇರಿಸುವುದು ಸಿಂಥೆಟಿಕ್ ವಿಧಾನ; ಮಾಡು ಸೇರಿಸುವುದು ಅನಲಿಟಿಕ್. ಈ ವ್ಯತ್ಯಾಸ ಯಾಕೆ ಎಂದು ಇಲ್ಲಿ ವಿವರಿಸಲಾರೆ.) + +2. ಹಲವು ತತ್ಸಮಪದಗಳ ಅಂತ್ಯಕ್ಕೆ ಎಕಾರವನ್ನು ಹಚ್ಚಿ ಕನ್ನಡ ಅವನ್ನು ತನ್ನದನ್ನಾಗಿ ಮಾಡಿಕೊಂಡಿದೆ. ಉದಾಹರಣೆಗೆ: ಆರಾಧನೆ, ವಂದನೆ, ಪ್ರಾರ್ಥನೆ, ಕವಿತೆ, ಪತ್ರಿಕೆ, ಸ್ವಂತಿಕೆ ಮುಂತಾಗಿ. ಕೆಲವೊಮ್ಮೆ ಇಂಗ್ಲಿಷ್ ಇದ್ದಹಾಗೇ ಸ್ವೀಕರಿಸಿದಲ್ಲಿ ಕನ್ನಡ ಈ ತರ ಎಕಾರ ಹಚ್ಚಿದ್ದು ಕಾಣಿಸುತ್ತದೆ: matrix ಇಂಗ್ಲಿಷ್ ಗೆ ಲ್ಯಾಟಿನ್ ನಿಂದ ಬಂತು; ಸಂಸ್ಕೃತದ ಮಾತೃಕಾ ಮತ್ತು ಈ ಲ್ಯಾಟಿನ್ ಪದ ಇಂಡೋ-ಯುರೋಪಿಯನ್ ಮೂಲದವು. ಸಂಸ್ಕೃತದ ಮಾತೃಕಾ ಕನ್ನಡದಲ್ಲಿ ಮಾತೃಕೆ ಆಯಿತು. + +3. ಸಂಸ್ಕೃತ ಪದ -ವಾನ್ ಎಂದು ಅಂತ್ಯವಾದಲ್ಲಿ ಅದನ್ನು ಕನ್ನಡ -ವಂತ ಮಾಡಿಕೊಂಡಿತು: ಬುದ್ಧಿವಂತ, ಶ್ರೀಮಂತ, ಧನವಂತ, ಗುಣವಂತ, ಭಾಗ್ಯವಂತ ಇತ್ಯಾದಿ. ಈ ಮಾದರಿಯಲ್ಲಿ ಸಂಸ್ಕೃತವಲ್ಲದ ಮಡಿವಂತ, ಹಣವಂತ ಮುಂತಾದ ರಚನೆಗಳು ಹುಟ್ಟಿಕೊಂಡುವು. ಇವುಗಳಲ್ಲಿ ಕೆಲವಕ್ಕೆ ಈ ಮೇಲೆ ಹೇಳಿದ ಎಕಾರವನ್ನೂ ಹಚ್ಚಿಕೊಂಡಿತು: ಬುದ್ಧಿವಂತಿಕೆ, ಶ್ರೀಮಂತಿಕೆ ಇತ್ಯಾದಿ. + +4. ತತ್ಸಮ ಪದಗಳಿಗೆ ತನ್ನದೇ ಆದ ಲಿಂಗವಾಚಕ, ಸಂಖ್ಯಾವಾಚಕ ಪ್ರತ್ಯಯಗಳನ್ನು ಹಚ್ಚಿಕೊಂಡಿತು: ಲೇಖಕ-ಲೇಖಕಿ, ಅಧ್ಯಾಪಕ-ಅಧ್ಯಾಪಕಿ, ಲೇಖಕರು, ಲೇಖಕಿಯರು ಇತ್ಯಾದಿ; ಯಜಮಾನ-ಯಜಮಾನ್ತಿ, ಗುಣವಂತ-ಗುಣವಂತೆ, ಯಜಮಾನರು, ಯಜಮಾನ್ತಿಯರು, ಗುಣವಂತರು, ಗುಣವಂತೆಯರು ಇತ್ಯಾದಿ; ನದಿ-ನದಿಗಳು, ನಕ್ಷತ್ರ-ನಕ್ಷತ್ರಗಳು ಇತ್ಯಾದಿ. + +5. ಇವೆಲ್ಲಕ್ಕೂ ತನ್ನದೇ ವಿಭಕ್ತಿಪ್ರತ್ಯಯಗಳನ್ನು ಬಳಸಿತು: ನದಿ, ನದಿಯನ್ನು, ನದಿಯ, ನದಿಯಿಂದ, ನದಿಯಲ್ಲಿ ಇತ್ಯಾದಿ. + +6. ಸಂಸ್ಕೃತ ಪದ ವಿಸರ್ಗದಲ್ಲಿ ಕೊನೆಯಾದಾಗ ಕನ್ನಡ ವಿಸರ್ಗವನ್ನು ಕೈಬಿಟ್ಟಿತು: ಶಾಂತಿಃ-ಶಾಂತಿ, ಭಕ್ತಿಃ-ಭಕ್ತಿ. + +7. ಸಂಸ್ಕೃತ ಪದ `ಆ’ಕಾರದಲ್ಲಿ ಕೊನೆಯಾದಾಗ ಕನ್ನಡ ಅದನ್ನು ಎಕಾರ ಮಾಡಿತು: ಶ್ರದ್ಧಾ-ಶ್ರದ್ಧೆ, ಸುಧಾ-ಸುಧೆ, ಗಂಗಾ-ಗಂಗೆ. + +8. ಹಲಂತದಲ್ಲಿ ಕೊನೆಯಾಗುವ ಬೃಹತ್, ಸಂಪತ್, ವಿದ್ವತ್, ಯಶಸ್, ಮನಸ್ ಮುಂತಾದ ಪದಗಳಿಗೆ ಉಕಾರ ಸೇರಿಸಿ ಬೃಹತ್ತು, ಸಂಪತ್ತು, ವಿದ್ವತ್ತು, ಯಶಸ್ಸು, ಮನಸ್ಸು ಮುಂತಾಗಿ ಮಾಡಿತು. + +9. ನಶ್ವರ, ಆದ್ಯ, ಕಲಾತ್ಮಕ, ಭಿನ್ನ ಮುಂತಾದ ವಿಶೇಷಣ ಪದಗಳಿಗೆ -ತೆ ಹಚ್ಚಿ ನಶ್ವರತೆ, ಆದ್ಯತೆ, ಕಲಾತ್ಮಕತೆ, ಭಿನ್ನತೆ ಮುಂತಾದ ಪದೋತ್ಪತ್ತಿ ಮಾಡಿಕೊಂಡಿತು. + +10. ಅಗತ್ಯವಾದಾಗ ಅರಿಸಮಾಸ ಮಾಡಿಕೊಂಡಿತು: ಮುನ್ಸೂಚನೆ, ಮುಂಭಾಗ, ಹಿಂಭಾಗ, ಹಿಂಬಾಲಕ, ಬೆಂಬಲ, ಹೊರಾಂಗಣ, ಒಳಾಂಗಣ, ಕೈಭಾಷೆ, ಕೈಂಕರ್ಯ, ಅಪನಂಬಿಕೆ, ಕೂಡಲಸಂಗಮ ಇತ್ಯಾದಿ; ಇದಲ್ಲದೆ ಮನೆಮಠ, ಧನದೌಲತ್ತು, ಕೆಲಸಕಾರ್ಯ ಮುಂತಾದ ಅರ್ಥವರ್ಧಕ ಸಮಾಸಪದಗಳು. + +ಈ ಎಲ್ಲ ವಿಷಯಗಳನ್ನು ನೋಡಿದರೆ ಸಂಸ್ಕೃತದಿಂದ ತತ್ಸಮ ಪದಗಳನ್ನು ಕನ್ನಡ ಹಾಗೇ ತೆಗೆದುಕೊಂಡಿದೆ ಎಂದು ಖಡಾಖಂಡಿತವಾಗಿ ಹೇಳುವುದಕ್ಕೆ ಬರುವುದಿಲ್ಲ. + +ಷ ಮತ್ತು ಋ + +ಮಹಾಪ್ರಾಣಗಳು ಜನಸಾಮಾನ್ಯರಿಗೆ ಕಷ್ಟವಾದರೆ, ಷ ಮತ್ತು ಋ ಎಲ್ಲರಿಗೂ ಅಸಾಧ್ಯ ಎನ್ನುವುದು ಭಟ್ ಅವರ ಅಭಿಪ್ರಾಯ; ಈ ಧ್ವನಿಗಳೇ ಅಸಂಬದ್ಧ ಎನ್ನುತ್ತಾರೆ ಅವರು. + +“ಶಕಾರವನ್ನು [ಷಕಾರವನ್ನು] ಯಾರಿಗೂ ಉಚ್ಚರಿಸಲು ಬರುವುದಿಲ್ಲ. ಕನ್ನಡದವರಿರಲಿ ಸಂಸ್ಕೃತವಿದ್ವಾಂಸರಿಗೂ ಸರಿಯಾಗಿ ಇದನ್ನು ಉಚ್ಚರಿಸಲು ಆಗುವುದಿಲ್ಲ. ಇದನ್ನು ನಾನು ಚಾಲೆಂಜ್ ಮಾಡಿ ನೋಡಿದ್ದೇನೆ. ಕೃಪೆ ಎನ್ನುವ ಶಬ್ದವನ್ನು ಉಚ್ಚಾರಣೆಯಲ್ಲಿ ಕ್ರುಪೆ ಎಂದು ಹೇಳುತ್ತೇವೆ. ಸಂಸ್ಕೃತ ಭಾಷೆಯ ರಚನೆಯ ಪ್ರಕಾರ `ಋ’ ಒಂದು ಸ್ವರ. ಹಾಗಾಗಿ ಕ್+ಅ+ಋ ಈ ಅನುಕ್ರಮದಲ್ಲಿ ಎರಡು ಸ್ವರಗಳು ಒಟ್ಟಿಗೆ ಬರಲು ಸಾಧ್ಯವಿಲ್ಲ. ಬಹುಶಃ ಋಗ್ವೇದದ ಕಾಲದಲ್ಲೂ ಹೀಗೆ ಉಚ್ಚರಿಸುತ್ತಿದ್ದರೋ ಏನೋ ಗೊತ್ತಿಲ್ಲ. ಹಾಗೇ ಮಹಾಪ್ರಾಣಗಳು ಉಚ್ಚಾರಣೆಯಲ್ಲಿ ಇಲ್ಲ. ಬರಹಕನ್ನಡದಲ್ಲಿ ಮಾತ್ರ ಇದೆ. ಸಂಸ್ಕೃತ ಪಂಡಿತರು ಮಾತ್ರ ಇವನ್ನು ಉಚ್ಚರಿಸಬೇಕು ಎನ್ನುತ್ತಾರೆ.” + +ಭಟ್ ಅವರ ಮಾತುಕತೆಯ ಈ ಭಾಗವನ್ನು ಯಾಕೆ ಎತ್ತಿ ಕೊಡುತ್ತಿದ್ದೇನೆ ಎಂದರೆ ಅವರ ವಾದದ ದೌರ್ಬಲ್ಯ ಇದರಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಭಟ್ ಅವರ ಅರಿವರ್ಗಗಳಲ್ಲಿ ಷ, ಋ, ಮತ್ತು ಒಟ್ಟು ಹತ್ತೂ ಮಹಾಪ್ರಾಣಗಳು ಮುಖ್ಯ ಪಾತ್ರ ವಹಿಸುತ್ತವೆ. ವಿಸರ್ಗ, ಅರ್ಕಾವೊತ್ತು, ಬಿಂದು ಮುಂತಾದವುಗಳ ಪಾತ್ರ ಕಿರಿದು. ಇವೆಲ್ಲವೂ ಕನ್ನಡ ಅಕ್ಷರಮಾಲೆಗೆ ಸಂಸ್ಕೃತದಿಂದ ಬಂದುವು ಎನ್ನುವುದನ್ನು ಗಮನಿಸಿದರೆ ಭಟ್ ಅವರು ಏನು ಮಾಡಲು ಹೊರಟಿದ್ದಾರೆ ಎನ್ನುವುದು ಗೊತ್ತಾಗುತ್ತದೆ: ಸಂಸ್ಕೃತಜನ್ಯವಾದ ಎಲ್ಲವನ್ನೂ ಕಿತ್ತುಹಾಕುವುದು! “ಕನ್ನಡದ ಜಾಯಮಾನಕ್ಕೆ ಹೊಂದುವ ಹಾಗೆ ಬದಲಾವಣೆಗಳನ್ನು ಮಾಡಬೇಕೆಂದು ಸ್ವಲ್ಪ ಹಠದಿಂದಲೇ ಇದನ್ನೆಲ್ಲ ಮಾಡುತ್ತಿದ್ದೇನೆ” ಎಂದು ಅವರೇ ಹೇಳಿದ್ದಾರೆ. ಇಂಥ ಹಟದಿಂದ ಎಡವಟ್ಟಾಗುತ್ತದೆ. ಸಮಸ್ಯೆಯೆಂದರೆ ಅವರು ವಾದಿಯೂ ತೀರ್ಪುಗಾರನೂ ಒಬ್ಬನೇ ಆಗಲು ಬಯಸುವುದು. + +ಷಕಾರವನ್ನು (`ಕೆಂಡಸಂಪಿಗೆ’ಯಲ್ಲಿ ಪ್ರಕಟವಾದಂತೆ ಶಕಾರವನ್ನಲ್ಲ; ಶಕಾರಕ್ಕೆ ಭಟ್ ಅವರು ಆಕ್ಷೇಪಿಸುವುದಿಲ್ಲ) ಯಾರಿಗೂ ಸರಿಯಾಗಿ ಉಚ್ಚರಿಸಲು ಬರುವುದಿಲ್ಲ, ಕನ್ನಡಿಗರನ್ನು ಬಿಡಿ, ಸಂಸ್ಕೃತಪಂಡಿತರಿಗೂ ಆಗುವುದಿಲ್ಲ ಎಂದು ಅವರು `ಚಾಲೆಂಜ್’ ಮಾಡುತ್ತಾರೆ. + +ಎಂದರೆ ಅದನ್ನು `ಸರಿಯಾಗಿ’ ಹೇಗೆ ಉಚ್ಚರಿಸಬೇಕು ಎನ್ನುವುದು ಅವರೊಬ್ಬರಿಗೆ ಮಾತ್ರವೇ ಗೊತ್ತಿದೆ ಎಂದಾಗುತ್ತದೆ. ಹಾಗಿದ್ದರೆ ಅವರು ಹೇಳಿದ್ದೇ ಯಾವತ್ತೂ ಸರಿ. ಇನ್ನು ಚಾಲೆಂಜ್ನ ಪ್ರಶ್ನೆ ಎಲ್ಲಿ ಬಂತು? ಯಾರಿಗೂ ಬರುವುದಿಲ್ಲ ಎಂದು ಅವರು ತೀರ್ಮಾನಿಸಿ ಆಗಿದೆ! ಈ ಚಾಲೆಂಜ್ ಎನ್ನುವ ಮಾತೇ ಸಂವಾದಕ್ಕೆ ಸರಿಹೊಂದುವುದಿಲ್ಲ. + +ಆದರೆ ನನಗೆ ನಿಜಕ್ಕೂ ಅಚ್ಚರಿ ಮೂಡಿಸಿದ್ದು `ಕೃ’ಪೆಯಲ್ಲಿನ `ಕೃ’ ಅಕ್ಷರವನ್ನು ಅವರು ಬಿಡಿಸುವ ರೀತಿ ನೋಡಿ. ಕೃ ಎಂದರೆ ಕ್+ಅ+ಋ ಎನ್ನುತ್ತಾರೆ ಅವರು! ಇದು ಆಶ್ಚರ್ಯ. ಯಾಕೆಂದರೆ ನಾನು ಇದುವರೆಗೆ ತಿಳಿದುಕೊಂಡ ಪ್ರಕಾರ ಕೃ ಎನ್ನುವುದು ಕ್+ಋ. ಹಲಂತಕ್ಕೆ (ಅರ್ಧಾಕ್ಷರಕ್ಕೆ) ಯಾವುದೇ ಸ್ವರ ಹಚ್ಚಿದಾಗ ಅದು ಹಲಂತವಾಗಿ ಉಳಿಯುವುದಿಲ್ಲ; ಋ ಹಚ್ಚಿದಾಗ `ಕ್’ ಎಂಬುದನ್ನು `ಕ’ದಂತೆ ಬರೆಯುವುದು ಪದ್ಧತಿ ಹೊರತು `ಕೃ’ನಲ್ಲಿ ಕಕಾರವಿದೆ ಎಂದಲ್ಲ. (ಇದು ಸಂಸ್ಕೃತ ಲಿಪಿಯಲ್ಲೂ ಹೀಗೇ. ಕನ್ನಡವು ಇಲ್ಲಿ ಸಂಸ್ಕೃತದ ಮಾದರಿಯನ್ನು ಅನುಸರಿಸಿದೆ ಅಷ್ಟೆ.) ಆದ್ದರಿಂದ ಇಲ್ಲಿ ಗೊಂದಲಕ್ಕೆ ಕಾರಣವೇ ಇಲ್ಲ. ಭಟ್ ಅವರು `ಕೃ’ಗೆ ನೀಡಿದ ವಿಶ್ಲೇಷಣೆಯನ್ನು ತೆಗೆದುಕೊಂಡರೆ, `ಕೂ’, `ಕೋ’ ಮುಂತಾದ ಅಕ್ಷರಗಳೂ ಅಸಂಬದ್ಧವೇ. ಯಾಕೆಂದರೆ ಅವರ ಪ್ರಕಾರ, `ಕೂ’ ಎಂದರೆ ಕ್+ಅ+ಊ, `ಕೋ’ ಎಂದರೆ ಕ್+ಎ+ಓ ಆಗಬೇಕು! ಅಷ್ಟು ಮಾತ್ರವೂ ಅಲ್ಲ, ಕನ್ನಡದ ಒತ್ತಕ್ಷರಗಳ ಒಟ್ಟಾರೆ ಪದ್ಧತಿಯೇ ಅತಾರ್ಕಿಕವಾಗಿದ್ದು ಅದನ್ನೂ ಸುಧಾರಿಸಬೇಕಾಗುತ್ತದೆ. ಉದಾಹರಣೆಗೆ, ತ್ಯಾಗ ಎಂಬ ಪದದ ಉಚ್ಚಾರಣೆಯಲ್ಲಿ `ಆ’ಕಾರ ಬರುವುದು `ಯ’ಕಾರಕ್ಕಲ್ಲದೆ `ತ’ಕಾರಕ್ಕೆ ಅಲ್ಲ; ತ್ಯಾ ಎನ್ನುವುದು ತ್+ಯಾ. (ದೇವನಾಗರಿಯಲ್ಲಿ ಇದು ಸರಿಯಾಗಿದೆ.) ಆದರೆ ಕನ್ನಡದಲ್ಲಿ `ಆ’ಕಾರ `ತ’ಕಾರಕ್ಕೆ ಬರುವಂತೆ ಕಾಣಿಸುತ್ತದೆ. ಬಿಂದುವನ್ನು ಉಳಿದಂತೆ ಎಲ್ಲಾ ವಿಜಾತೀಯ ಸಂಯುಕ್ತಾಕ್ಷರಗಳು ಬಂದಾಗಲೂ ಒತ್ತಕ್ಷರಗಳೂ ಹೀಗೆಯೇ. ಎಂದರೆ ಕನ್ನಡದ ಲಿಪಿಕಾರರು ಇಲ್ಲಿ ಎಡವಿದರೇ? ಇಲ್ಲ, ಅವರೇನೂ ಎಡವಲಿಲ್ಲ. ಬರಹವೆನ್ನುವುದು ಒಂದು ಸಂಜ್ಞಾಪದ್ಧತಿ, ಅದು ಅದರಷ್ಟಕ್ಕೇ ತರ್ಕಬದ್ಧವಾಗಿದ್ದರೆ ಸಾಕು, ಅದೊಂದು ರೀತಿಯ ಒಪ್ಪಂದ ಎನ್ನುವ ಅರಿವು ಅವರಿಗಿತ್ತು. + +ಋ ಷ ನಿಗೂಢತೆಯ ಅನಾವರಣ + +ನಾನು ಇಂಗ್ಲಿಷ್ ಕಲಿಯಲು ಆರಂಭಿಸಿದಾಗ ಎಲ್ಲವೂ ಒಂದು `ನಿಗೂಢತೆ’ಯಂತೆ ನನಗೆ ಅನಿಸಿತ್ತು: ಯಾಕೆ ಬರೆದಂತೆ ಓದುವುದಿಲ್ಲ, ಯಾಕೆ ಓದಿದಂತೆ ಬರೆಯುವುದಿಲ್ಲ? ಯಾಕೆ ಈ ದೊಡ್ಡಕ್ಷರಗಳು (capital letter)? ಈ ಮಿಸ್ಟರಿಯನ್ನು ಪರಿಹರಿಸುವುದಕ್ಕೆ ಅಧ್ಯಾಪಕರಾದರೂ ಪ್ರಯತ್ನಿಸಲಿಲ್ಲ. ಸ್ಟ್ರೆಸ್ನ ಮಿಸ್ಟರಿಯಂತೂ ಬಹುಕಾಲ ಮುಂದರಿಯಿತು. ನಾನೇ ಇಂಗ್ಲಿಷ್ ಭಾಷಾವಿಜ್ಞಾನ ಕಲಿಸಲು ತೊಡಗಿ ಸ್ವಂತ ಪರಿಶ್ರಮದಿಂದ ಇದನ್ನು ಕಲಿತುಕೊಳ್ಳಬೇಕಾಯಿತು. ನಿಗೂಢತೆಗಳನ್ನು ಬಿಡಿಸುವುದು ಅಧ್ಯಾಪಕರ ಕೆಲಸ, ಅದನ್ನು ಹೆಚ್ಚಿಸುವುದಲ್ಲ. ಒಬ್ಬ ಭಾಷಾವಿಜ್ಞಾನಿಯಾಗಿ ಭಟ್ ಅವರಿಂದ ಜನಕ್ಕೆ ಇದೇ ನಿರೀಕ್ಷೆ; ಆದರೆ ಅವರ ಮಾತುಗಳು ಸಂಸ್ಕೃತಮೂಲದ ಕೆಲವು ಧ್ವನಿಗಳ ಬಗ್ಗೆ ಗೊಂದಲ ಹುಟ್ಟಿಸುವಂತಿವೆ. + +ಮಹಾಪ್ರಾಣಗಳನ್ನು ಉಚ್ಚರಿಸುವುದು ಹೇಗೆನ್ನುವ ಬಗ್ಗೆ ಈಗಾಗಲೇ ಹೇಳಿಯಾಯಿತು. ಈಗ ಋಕಾರ ಷಕಾರಗಳ ಬಗ್ಗೆ ನೋಡೋಣ. ಯಾರೂ ಉಚ್ಚರಿಸಲಿಕ್ಕೆ ಆಗುವುದಿಲ್ಲ ಎನ್ನುವುದಾದರೆ ಅಂಥ ಧ್ವನಿಗಳು ಭಾಷೆಯಲ್ಲಿ ಇರುತ್ತಲೇ ಇರಲಿಲ್ಲ ಎಂದು ಹೇಳಿ ಸುಮ್ಮನಿರಬಹುದು; ಆದರೆ ಅದು ನನ್ನ ಉದ್ದೇಶವಲ್ಲ. ಈ ಧ್ವನಿಗುಮ್ಮಗಳ ನಿಜವನ್ನು ನೋಡುವುದು ನನ್ನ ಉದ್ದೇಶ. ಭಟ್ ಅವರೇ ಹೇಳುವಂತೆ ಋಕಾರ ಸಂಸ್ಕೃತದಲ್ಲಿ ಸ್ವರವಾಗಿ ಬರುತ್ತದೆ: ಸ್ವತಂತ್ರವಾಗಿಯೂ ಇತರ ವ್ಯಂಜನಗಳಿಗೆ ಒತ್ತಕ್ಷರವಾಗಿಯೂ (ಎಂದರೆ ಸಂಯುಕ್ತಾಕ್ಷರವಾಗಿ). ಕನ್ನಡ ಇಂಥ ಪದಗಳಲ್ಲಿ ಹಲವನ್ನು ತತ್ಸಮವಾಗಿ ತೆಗೆದುಕೊಂಡಿದೆ: ಋಣ, ಕೃಪೆ, ತೃಪ್ತಿ ಮುಂತಾಗಿ. + +ವ್ಯಂಜನವೊಂದು ಸ್ವರ್ಜವಾಗಿ ಬಳಕೆಯಾದಾಗ ಅದು ಸ್ವರದಂತೆ ಕೆಲಸಮಾಡುತ್ತದೆ; ಇಲ್ಲಿ ರಕಾರ ಹೀಗೆ ಆಗಿದೆ. ಋ ಎನ್ನುವುದು ಸ್ವರ್ಜ್ಯ ರಕಾರ (syllabic r). ಸ್ವರ್ಜ (syllable) ಎಂದರೆ ಒಂದು ನಿಸ್ವಾಸ ಘಟಕ. ಕನ್ನಡದಲ್ಲಿ ಇದನ್ನೇ ಅಕ್ಷರವೆಂದು ಹೇಳುವುದು ವಾಡಿಕೆ; ಆದರೆ ಅಕ್ಷರಕ್ಕೆ ಚಿಹ್ನೆ ಎಂಬ ಅರ್ಥವೂ ಇರುವುದರಿಂದ ಇದಕ್ಕೆ ಇಲ್ಲಿ ಸ್ವರ್ಜ ಎಂಬ ಪದವನ್ನು ಬಳಸಿದ್ದೇನೆ. (ಬಹುಶಃ ವ್ಯಂಜನಾಕ್ಷರಗಳನ್ನೂ ಸಹಾ ಸ್ವರ ಸೇರಿಸಿ ಕ, ಕಾ, ಕಿ, ಕೀ ಮುಂತಾಗಿ ನಮೂದಿಸುವುದು ವಾಡಿಕೆಯಾದ್ದರಿಂದ `ಅಕ್ಷರ’ಕ್ಕೆ ಸಿಲಬಲ್ `ಸ್ವರ್ಜ’ದ ಅರ್ಥ ಬಂದಿದೆ.) + +ಪ್ರತಿಯೊಂದು ಸ್ವರ್ಜಕ್ಕೂ ಒಂದು ಸ್ವರದ ಅಗತ್ಯವಿರುತ್ತದೆ: ಕ, ಕಾ ಇತ್ಯಾದಿಗಳು ಸ್ವರ್ಜಗಳು, ಆದರೆ `ಕ್’ ಅಲ್ಲ. ಎಲ್ಲ ಸ್ವರಾಕ್ಷರಗಳೂ ಸಹಜವಾಗಿಯೂ ಸ್ವರ್ಜಗಳೇ: ಅ, ಇ, ಎ ಮುಂತಾಗಿ. ಇದು ಎಲ್ಲ ಭಾಷೆಗಳಿಗೂ ಅನ್ವಯಿಸುವ ಸಂಗತಿ. ಯಾಕೆಂದರೆ ಎಲ್ಲ ಭಾಷೆಗಳೂ ವ್ಯಂಜನ ಮತ್ತು ಸ್ವರಾಕ್ಷರಗಳನ್ನು ಬಳಸಿಯೇ ರಚನೆಗೆ ಬರುತ್ತವೆ ಹಾಗೂ ಸ್ವರ್ಜಗಳು ಎಲ್ಲಾ ಭಾಷೆಗಳಲ್ಲೂ ಇವೆ. ಅಪರೂಪಕ್ಕೆ ಕೆಲವು ವ್ಯಂಜನಗಳೂ ಸ್ವರದ ಕೆಲಸ ನಿರ್ವಹಿಸಬಹುದು. ಹೀಗೆ ಸ್ವರದ ಕೆಲಸವನ್ನು ವ್ಯಂಜನ ನಿರ್ವಹಿಸಿದಾಗ ಅದಕ್ಕೆ ಸ್ವರ್ಜ್ಯ (syllabic consonant) ಎನ್ನುತ್ತಾರೆ. ಇಂಗ್ಲಿಷ್ ನಲ್ಲಿ ಟ, ಟಿ, ಟ, ಡಿ ಕೆಲವೆಡೆ ಇಂಥ ಕೆಲಸ ನಿರ್ವಹಿಸುತ್ತವೆ. ಉದಾಹರಣೆಗೆ, ಬಾಟ್ಲ್, ಕೆಟ್ಲ್ ಮುಂತಾದ ಕಡೆ; ಇಲ್ಲಿ `ಲ್’ ಸ್ವರ್ಜ್ಯವಾಗಿ ಬರುವುದು ಕಡ್ಡಾಯ. ಆದರೆ `ನ್’ ಮೇಲೆ ಅಂಥ ಒತ್ತಾಯವಿಲ್ಲ: ಬಟನ್ ಎಂಬಲ್ಲಿ `ನ್’ ಸ್ವರ್ಜ್ಯವಲ್ಲ, ಆದರೆ ಬಟ್ನ್ ಎಂಬಲ್ಲಿ ಹೌದು, ಮತ್ತು ಇವೆರಡೂ ಉಚ್ಚಾರಣೆಗಳು ಚಾಲ್ತಿಯಲ್ಲಿವೆ. ಇಂಗ್ಲಿಷ್ `ಆರ್’ ಕೂಡಾ ಅಪರೂಪಕ್ಕೆ ಸ್ವರ್ಜ್ಯವಾಗಿ ಬರುವುದಿದೆ: ಕೆಲವು ಅಮೇರಿಕನ್ ಉಚ್ಚಾರಣೆಯ particular `ಪರ್ಟಿಕ್ಯುಲರ್’ prticular `ಪೃಟಿಕ್ಯುಲರ್’ ಎಂದು ಕೇಳಿಸುತ್ತದೆ, ಆದರೆ ಬಿಬಿಸಿ ಇಂಗ್ಲಿಷ್ ನಲ್ಲಿ ಇದಿಲ್ಲ; Hungary ಮತ್ತು  hungry ಪದಗಳಲ್ಲಿ ಹೆಚ್ಚಾಗಿ ಎಲ್ಲೆಡೆಯ ಇಂಗ್ಲಿಷ್ ನಲ್ಲಿ ಮೊದಲನೆಯ ಪದಾಂತ್ಯದ ಗಕಾರಕ್ಕೆ ಸ್ವರ್ಜ್ಯ ರಕಾರವನ್ನು (ಎಂದರೆ ಋ) ಹಚ್ಚಿ ಉಚ್ಚರಿಸಲಾಗುತ್ತದೆ. ಇದನ್ನು ಕನ್ನಡದಲ್ಲಿ `ಹಂಗೃಇ’ ಎಂದು ಬರೆಯಬೇಕಾಗುತ್ತದೆ. Hungryಯಲ್ಲಿ ಎರಡು ಸ್ವರ್ಜಗಳಿದ್ದರೆ Hungaryಲ್ಲಿ ಮೂರು; ಇವೇ ಈ ಎರಡು ಪದಗಳನ್ನು ಪ್ರತ್ಯೇಕಿಸುವುದು. (ಕೆಲವರು Hungaryಯನ್ನು ಹಂಗರಿ ಎಂದು ಉಚ್ಚರಿಸುವುದಿದೆ.) ಆದರೆ ಇಂಗ್ಲಿಷ್ ನ ಆರ್ ಎಂದೂ ಪದಾದಿಯಲ್ಲಿ ಸ್ವರ್ಜ್ಯವಾಗಿ ಬರುವುದಿಲ್ಲ. ಕೆಲವು ಆಫ್ರಿಕನ್ ಭಾಷೆಗಳಲ್ಲಿ ನ್ ಮತ್ತು ಮ್ಗಳು ಪದಾದಿಯಲ್ಲಿ ಸ್ವರ್ಜ್ಯವಾಗಿ ಬರುತ್ತವೆ: `ನ್ ಗೂಗಿ’ ಎಂಬ ನೈಜೀರಿಯನ್ ಲೇಖಕನ ಹೆಸರಿನ ಆದಿಯಲ್ಲಿ ನ್ ಸ್ವರ್ಜ್ಯವಾದ್ದು (syllabic); ಎಂದರೆ `ನ್ ಗೂಗಿ’ ಎಂಬ ಪದದಲ್ಲಿ ಮೂರು ಸ್ವರ್ಜಗಳಿವೆ (syllables). (ನೋಡಿ: Peter Roach,English Phonetics and Phonology, 3rd ed. Cambridge: Cambridge Univ. Press, 2000.) + +ಸಂಸ್ಕೃತದ ಋ ಹೀಗೆ ಪದಾರಂಭದಲ್ಲೂ ಇತರ ಕಡೆಯೂ ಸ್ವರ್ಜ್ಯವಾಗಿ ಬರುವ ರಕಾರ. ಕನ್ನಡ ಇದನ್ನೇ ಸ್ವೀಕರಿಸಿಕೊಂಡುದು. ರಕಾರ ಹುಟ್ಟುವುದು ಟವರ್ಗದ ಜಾಗದಲ್ಲಿ, ಎಂದರೆ ಅದೊಂದು ಮೂರ್ಧನ್ಯಾಕ್ಷರ. ರಕಾರಕ್ಕೂ ಋಕಾರಕ್ಕೂ ಇರುವ ಭೇದವೆಂದರೆ ರಕಾರ ಅಕಾರವನ್ನು ಸೇರಿಸಿದ ರ್; ಋಕಾರ ತಾನೇ ಸ್ವರವಾಗಿ ಹೊರಹೊಮ್ಮುವ ರ್, ಆದ್ದರಿಂದ ಸ್ವರ್ಜ್ಯ. ರ್ ಬೇರೆ ಸ್ವರಗಳನ್ನು ಆಶ್ರಯಿಸಿದಾಗ ವ್ಯಂಜನವಾಗುತ್ತದೆ. ರ್ ಮತ್ತು ಋ ಎರಡೂ ಅವ್ಯಾಹತಗಳು `ತಡೆರಹಿತ’ (continuant), ಎಂದರೆ ಅವನ್ನು ಉಚ್ಚರಿಸುವಾಗ ನಿಶ್ವಾಸ ನಿರಾಳವಾಗಿರುತ್ತದೆ. ಭಟ್ ಅವರು ಹೇಳುವುದೆಂದರೆ ಕನ್ನಡದವರು ಋಕಾರವನ್ನು ಸ್ವರ್ಜ್ಯವಾಗಿ ಬಳಸುವುದಿಲ್ಲ, ಆದ್ದರಿಂದ ಕೃತಿ ಕ್ರುತಿಯಾಗುತ್ತದೆ ಎಂಬುದಾಗಿ. (ಈ ಮೊದಲು ಉಲ್ಲೇಖಿಸಿದಂತೆ, ಅವರ ಪ್ರಕಾರ ಋಕಾರ ಅಸಾಧ್ಯವಾದಂಥ ಒಂದು ಧ್ವನಿ ಕೂಡಾ.) ಹಲವಾರು ಕನ್ನಡಿಗರು ಯಾವುದೇ ಪ್ರಯಾಸವಿಲ್ಲದೆ `ಕೃಪೆ’ಯನ್ನು `ಕೃಪೆ’ ಎಂದೇ ಉಚ್ಚರಿಸಬಲ್ಲರು ಎಂದು ನನಗೆ ಅನಿಸುತ್ತದೆ. `ಕ್ರುಪೆ’ ಎನ್ನುವುದಕ್ಕಿಂತ `ಕೃಪೆ’ಯೇ ಸುಲಭ. ಆದರೆ ಭಟ್ ಅವರು-ಅಲ್ಲ, ಕೃಪೆ ಎನ್ನುವುದಕ್ಕೆ ಯಾರಿಗೂ ಬರುವುದಿಲ್ಲ, ಕೃಪೆಯನ್ನು ಕ್ರುಪೆಯೆಂದೇ ಎಲ್ಲರೂ ಎನ್ನುತ್ತಾರೆ, ಕೃಪೆ ಅಸಾಧ್ಯ ಎಂದು ಹಟ ಹಿಡಿದರೆ ಯಾರೇನು ಮಾಡುವುದಕ್ಕೂ ಆಗುವುದಿಲ್ಲ. ಹಲವರ ಮಟ್ಟಿಗೆ ಅವರನ್ನುವುದು ಸರಿಯಿರಬಹುದು; ಆದರೆ ಎಲ್ಲರ ಮಟ್ಟಿಗೆ ಅಲ್ಲ. ಮಾತೃಭೂಮಿಯನ್ನು `ಮಾತುರುಬೂಮಿ’ಯೆಂದೂ ಪಿತೃಭಕ್ತಿಯನ್ನು `ಪಿತುರುಬಕ್ತಿ’ಯೆಂದೂ ಹಲವರು ಹೇಳಲೂ ಬಹುದು, ಆದರೆ ಎಲ್ಲರೂ ಹಾಗನ್ನುತ್ತಾರೆ ಎನ್ನುವಂತಿಲ್ಲ. + +ಇನ್ನು ಷಕಾರದ ವಿಷಯ. ಶ-ಷ-ಸ ಕಾರಗಳು ಕೂಡಾ ಅವ್ಯಾಹತಗಳು, ಆದರೆ ಅವು ತುಸು ಕರ್ಷಣೆಯನ್ನು ತೋರಿಸುವುದರಿಂದ ಕರ್ಷಕಗಳು (fricatives) ಹಾಗೂ ಅವುಗಳ ಜನನ ಸ್ಥಾನಗಳು ಬೇರೆ ಬೇರೆ: ಶಕಾರ ಚವರ್ಗಕ್ಕೆ ಸೇರಿದ ತಾಲವ್ಯ; ಷಕಾರ ಟವರ್ಗಕ್ಕೆ ಸೇರಿದ ಮೂರ್ಧನ್ಯ; ಮತ್ತು ಸಕಾರ ತವರ್ಗಕ್ಕೆ ಸೇರಿದ ದಂತ್ಯ. (ಈ ಪಾರಿಭಾಷಿಕ ಪದಗಳು ಒಂದು ವೇಳೆ ಓದುಗರಿಗೆ ಅರ್ಥವಾಗದಿದ್ದರೂ ಸಂದರ್ಭದಿಂದ ಅವನ್ನು ಊಹಿಸಿಕೊಳ್ಳಬಹುದು.) ಉಚ್ಚಾರಣೆಯ ವೇಳೆ ನಾಲಿಗೆ ಎಲ್ಲಿರುತ್ತದೆ, ಹೇಗಿರುತ್ತದೆ ಎಂಬುದನ್ನು ಹೊಂದಿಕೊಂಡು ಇವುಗಳ ನಡುವೆ ಇತರ ಭಿನ್ನತೆಗಳೂ ಇವೆ. ಮುಖ್ಯವಾಗಿ ಶಕಾರ ಮತ್ತು ಷಕಾರದ ನಡುವಣ ಭಿನ್ನತೆ ಇಲ್ಲಿ ಪ್ರಸ್ತುತ: ಶಕಾರ ನಾಲಿಗೆ ಮಧ್ಯದ್ದಾದರೆ ಷಕಾರ ಸಕಾರದಂತೆಯೇ ನಾಲಿಗೆ ತುದಿಯದ್ದು; ಆದರೆ ಷಕಾರವನ್ನು ಉಚ್ಚರಿಸುವಾಗ ನಾಲಿಗೆ ತುದಿ ಮೇಲೆದ್ದು ಸ್ವಲ್ಪ ಮಟ್ಟಿಗೆ ಹಿಂದಕ್ಕೆ ಮಡಚಿರುತ್ತದೆ (retroflex)-ಳಕಾರ, ಣಕಾರಗಳನ್ನು ಉಚ್ಚರಿಸುವ ರೀತಿಯಲ್ಲಿ; ಆದ್ದರಿಂದ ಷಕಾರದ ಉಚ್ಚಾರಣೆಯಲ್ಲಿ ಬಾಯಲ್ಲಿ ಹೆಚ್ಚು ಗಾಳಿ ತುಂಬಿದ ಅನುಭವವಾಗುತ್ತದೆ. ಸಕಾರದಲ್ಲಿ ಹೀಗಾಗುವುದಿಲ್ಲ. + +ಶಕಾರ ಮತ್ತು ಷಕಾರದ ವ್ಯತ್ಯಾಸವೆಂದರೆ ನಾಲಿಗೆಯ ತುದಿ ಹೀಗೆ ಮಡಚಿದೆಯೋ ಇಲ್ಲವೋ ಎನ್ನುವುದು; ನಾಲಿಗೆ ಮಡಚಿಲ್ಲದೆ ಇದ್ದು ಅದರ ಮಧ್ಯದಲ್ಲಿ ಕರ್ಷಣೆಯುಂಟಾದರೆ ಶಕಾರ; ನಾಲಿಗೆ ಮಡಚಿದ್ದು ತುದಿಯಲ್ಲಿ ಕರ್ಷಣೆಯುಂಟಾದರೆ ಷಕಾರ; ಇನ್ನು ನಾಲಿಗೆ ಮಡಚದೆ ತುದಿಯಲ್ಲಿ ಕರ್ಷಣೆಯುಂಟಾದರೆ ಅದು ಸಕಾರ. ಈ ಜಾಗಗಳನ್ನು ನೀವು ಸ್ವತಃ ಪರೀಕ್ಷೆ ಮಾಡಿಕೊಳ್ಳಬಹುದು: ಆಯಾ ವ್ಯಂಜನಗಳನ್ನು ಉಚ್ಚರಿಸಲು ನಾಲಿಗೆಯನ್ನು ಸಿದ್ಧಪಡಿಸಿಕೊಳ್ಳಿ. ಆದರೆ ಗಾಳಿಯನ್ನು ಹೊರಹಾಕುವ ಬದಲು ಒಳಕ್ಕೆ ಎಳೆದುಕೊಳ್ಳಿ. ಆಗ ಕರ್ಷಣ ನಡೆಯುವ ಜಾಗ ತಂಪಾದ ಅನುಭವ ಬರುತ್ತದೆ. ಇಲ್ಲೂ ಈ ಅಕ್ಷರಗಳ ನಡುವಣ ವ್ಯತ್ಯಾಸ ಸಾಪೇಕ್ಷವಾದ್ದು (relative), ನಿರಪೇಕ್ಷವಾದ್ದಲ್ಲ(absolute). ಎಂದರೆ ಷಕಾರದ ಉಚ್ಚಾರಣೆಯನ್ನು ಅತಿಶಯಗೊಳಿಸುವ ಅಗತ್ಯವಿಲ್ಲ. ಒಂದು ವೇಳೆ ಷಕಾರವನ್ನು ಶಕಾರದಂತೆ ಉಚ್ಚರಿಸಿದರೆ ಆಕಾಶ ಹರಿದು ಬೀಳುವುದೇ? ಖಂಡಿತಾ ಇಲ್ಲ! ಇಲ್ಲಿಯೂ ಬೇಕಾದವರು ಬೇಕಾದಂತೆ ಉಚ್ಚರಿಸಿಕೊಳ್ಳಲಿ ಎನ್ನುವುದು ನನ್ನ ಸಲಹೆ. ಆದರೆ ಬರಹದಲ್ಲಿ ಷಕಾರ ಇರುವುದೇ ಸರಿ. ಇಲ್ಲದಿದ್ದರೆ ಷಕಾರವನ್ನು ಉಚ್ಚರಿಸಲೇ ಬೇಡಿ ಎಂದು ಒತ್ತಾಯಿಸಿದಂತೆ ಆಗುತ್ತದೆ. ಜನರ ಆಯ್ಕೆಯ ಸ್ವಾತಂತ್ರ್ಯವನ್ನು ಇಲ್ಲದೆ ಮಾಡುವುದು ಒಳ್ಳೆಯದಲ್ಲ. + +ನಮಗೆಂಥಾ ಕನ್ನಡ ಬೇಕು? + +ನಮಗೆಂಥಾ ಕನ್ನಡ ಬೇಕು ಎಂಬಲ್ಲಿ ಭಟ್ ಅವರ ಚಿಂತನೆಗಿಂತ ನನ್ನ ಚಿಂತನೆ ಭಿನ್ನವಾಗಿರುವಂತೆ ಅನಿಸುತ್ತದೆ-ನಮ್ಮಿಬ್ಬರ ಚಿಂತನೆಗಳೂ ಸಮಸ್ತ ಕನ್ನಡಿಗರ ಏಳಿಗೆಯನ್ನು ಬಯಸುತ್ತಿದ್ದರೂ ಸಹಾ. ಭಟ್ ಅವರು ಉದ್ದೇಶಿಸುತ್ತಿರುವುದು ಎಷ್ಟು ಅಗತ್ಯವೋ ಅಷ್ಟು ಮಾತ್ರ ಅಗತ್ಯದ `ಆಪತ್ಕಾಲೀನ’ ಕನ್ನಡ, Functional Kannada. ಅಂಥ ಕನ್ನಡ ಸ್ಕೂಲು ದಾಟುವಂಥದಲ್ಲ. ಇದು ಸರ್ವಶಿಕ್ಷಣದ ಮೂಲ ಉದ್ದೇಶವನ್ನೇ ಮೊಟಕುಗೊಳಿಸಿದಂತೆ. ನನ್ನ ಮನಸ್ಸಿನಲ್ಲಿರುವುದು ಸವ್ರಶಕ್ತ ಕನ್ನಡ. ಜ್ಞಾನಗ್ರಹಣ, ಜ್ಞಾನಸಂವಹನ ಮತ್ತು ಜ್ಞಾನೋತ್ಪತ್ತಿ ಎಲ್ಲವೂ ಸಾಧ್ಯವಾಗುವಂಥದು. ಕೆಲವು ವರ್ಷಗಳ ಹಿಂದೆ ಇಂಗ್ಲಿಷ್ ನಲ್ಲಿ Basic English ಎಂಬ ಚಳುವಳಿಯೊಂದು ಸುರುವಾದ್ದು ನೆನಪಿಗೆ ಬರುತ್ತದೆ. ಜನಬಳಕೆಯ ಎಂಟುನೂರೋ ಒಂಭೈನೂರೋ ಪದಗಳ ಇಂಗ್ಲಿಷ್ ಇದು. ಆದಷ್ಟೂ ಇಂಗ್ಲಿಷ್ ಮೂಲದ (Anglo-Saxon) ಪದಗಳನ್ನು ಬಳಸುವುದು, ಒಂದೇ ಪದವನ್ನು ಆದಷ್ಟೂ ಹೆಚ್ಚು ಹಲವು ಅರ್ಥಗಳಲ್ಲಿ ಉಪಯೋಗಿಸುವುದು, ದಿನಬಳಕೆಯ ಸರಳ ಪದಗಳನ್ನು ಮಾತ್ರ ಇಟ್ಟುಕೊಳ್ಳುವುದು ಮುಂತಾದುವು ಬೇಸಿಕ್ ಇಂಗ್ಲಿಷ್ ನ ತತ್ವಗಳಾಗಿದ್ದುವು. ಇಂಥ ಇಂಗ್ಲಿಷ್ ಒಬ್ಬ ವ್ಯಕ್ತಿಯನ್ನು ಎಷ್ಟು ದೂರಕ್ಕೆ ಒಯ್ಯಬಹುದು ಎನ್ನುವುದನ್ನು ಯಾರು ಬೇಕಾದರೂ ಊಹಿಸಿಕೊಳ್ಳಬಹುದು. ಬೇಸಿಕ್ ಇಂಗ್ಲಿಷ್ ಬಂದಂತೆಯೇ ಹೊರಟು ಹೋಯಿತು. ತೀರಾ ಈಚೆಗೆ ಭಾರತದಲ್ಲಿ ಯೋಜಿಸಿ `ಅತ್ಯಗತ್ಯದ ಇಂಗ್ಲಿಷ್’ Functional English  ಎಂಬ ಕೋರ್ಸನ್ನು ಡಿಗ್ರೀ ಮಟ್ಟದಲ್ಲಿ ಹುಟ್ಟುಹಾಕಿತು. ಹಲವೆಡೆ ಇದು ಪ್ರಯೋಗಕ್ಕೂ ಬಂತು. ಆದರೆ ಯಾರಿಗೂ ಹಿಡಿಸಿದಂತೆ ಕಾಣುವುದಿಲ್ಲ. ಭಟ್ ಅವರ ಕನ್ನಡವೂ ಹೀಗೇ ಆಗುವ ಸಾಧ್ಯತೆ ಜಾಸ್ತಿ. ನಮಗೆ ಬೇಕಾದ್ದು ಲೋಕ ತೆರೆದುಕೊಡುವ ಕನ್ನಡ, ಲೋಕ ಮುಚ್ಚುವ ಕನ್ನಡವಲ್ಲ. + +ಋಕಾರವನ್ನು ವರ್ಣಮಾಲೆಯಿಂದ ತೆಗೆದುಹಾಕಬೇಕು ಎನ್ನುವ ಯತ್ನವನ್ನು ಹಲವರು ವಿರೋಧಿಸಿದರು. ಭಟ್ ಅವರೇ ಹೇಳುವಂತೆ ಅಂಥವರಲ್ಲಿ ಕೆ.ವಿ. ಸುಬ್ಬಣ್ಣ ಮತ್ತು ನಾನೂ ಇದ್ದೆವು. ನಾವಿಬ್ಬರೂ ನಮ್ಮ ನಮ್ಮ ಕಾರಣಗಳನ್ನು ವಸ್ತುನಿಷ್ಠವಾಗಿ ಪ್ರಕಟಿಸಿದ್ದೇವೆ. ಅವು ಯಾವುವನ್ನೂ ಎತ್ತಿಕೊಳ್ಳದೆ ಭಟ್ ಅವರು ನಮ್ಮನ್ನು ಸಂಸ್ಕೃತವೆಂದರೆ ದೇವಭಾಷೆ ಎನ್ನುವವರ ಪೈಕಿಯಲ್ಲಿ ಸೇರಿಸಿ ಆ ಕಾರಣಕ್ಕೆ ಋಕಾರಹರಣವನ್ನು ವಿರೋಧಿಸಿದೆವು ಎಂಬಂತೆ ತಳ್ಳಿಹಾಕುವುದು ಎಷ್ಟು ಸರಿ? ನನ್ನ ಮಾತು ಬದಿಗಿರಲಿ, ಸುಬ್ಬಣ್ಣ ಕನ್ನಡಕ್ಕಾಗಿ (ಕನ್ನಡಿಗರಿಗಾಗಿ) ಮಾಡಿದ ಕೆಲಸ ತೆರೆದ ಪುಸ್ತಕದಂತಿರುವುದು ಯಾವನೇ ಸಂವೇದನಾಶೀಲ ವ್ಯಕ್ತಿಗೂ ಗೊತ್ತಿರುವ ಸಂಗತಿ. ಯಾರೂ ಯಾರ ಮಾತನ್ನೂ ವಿಮರ್ಶಾರಹಿತವಾಗಿ ಸ್ವೀಕರಿಸಬಾರದು ನಿಜ; ಆದರೆ ತಮ್ಮ ಹಟದಲ್ಲಿ ಭಟ್ ಅವರಿಗೆ ಇತರ ದೃಷ್ಟಿಕೋನಗಳನ್ನು ಪರಾಮರ್ಶಿಸುವ ತಾಳ್ಮೆಯೇ ಇಲ್ಲ. ಇದೇ ಅಸಹನೆಯನ್ನು ಅವರು ನೃಪತುಂಗ (ಮಾರ್ಗಕಾರ), ಶೆಲ್ಡನ್ ಪೋಲಕ್, ಶೆಟ್ಟರ್ ಮುಂತಾದವರ ವಿಷಯದಲ್ಲೂ ತೋರುತ್ತಾರೆ. ಅವರನ್ನೆಲ್ಲ ಭಟ್ ಅವರು ಒಂದೊಂದು ವಾಕ್ಯದಲ್ಲಿ `ಡಿಸ್ ಮಿಸ್’ ಮಾಡುತ್ತ ಹೋಗುತ್ತಾರೆ. ಸಂಸ್ಕೃತ ಮತ್ತು ಮೂಲಕನ್ನಡವನ್ನು ಹಿತಮಿತವಾಗಿ ಬೆರೆಸಿ ಬಳಸಿದರೆ ಚೆನ್ನಾಗಿರುತ್ತದೆ ಎಂಬ ನೃಪತುಂಗನ ಮಾತು ಸಾಹಿತ್ಯಭಾಷೆಯ ಕುರಿತಾದ್ದು ಎಂದು ತಳ್ಳಿಹಾಕುತ್ತಾರೆ; ಶಿಕ್ಷಣಭಾಷೆ ಸಾಹಿತ್ಯಭಾಷೆಗೆ ಹತ್ತಿರ ಎಂಬ ಸತ್ಯ ಅವರಿಗೆ ಕಾಣಿಸುವುದಿಲ್ಲ. ಅಥವಾ ಶಿಕ್ಷಣಭಾಷೆ ಆಡುನುಡಿ ಆಗಿರಬೇಕು ಎನ್ನುವುದೇ ಅವರ ಆಶಯವಿದ್ದೀತು. ಆಡುನುಡಿಯಲ್ಲಿ ಮತ್ತು ಮೌಖಿಕ ಸಂಪ್ರದಾಯದಲ್ಲಿ ಶಿವಶರಣರು ರಚಿಸಿದ ಕನ್ನಡ ವಚನಗಳು ಹೇಗೆ ನೃಪತುಂಗನ ಸಲಹೆಗೆ ಹತ್ತಿರವಾಗಿವೆ ಎನ್ನುವುದನ್ನು ಭಟ್ ಅವರು ಪರಿಶೀಲಿಸಬೇಕು. ಈ ವಚನಗಳಿಂದ ಸಂಸ್ಕೃತ ಪದಗಳನ್ನು ಕಿತ್ತುಹಾಕಿ ಅವುಗಳ ಜಾಗದಲ್ಲಿ ಕನ್ನಡ ನುಡಿಗಳನ್ನು ಇರಿಸಿದರೆ ಅವು ಏನಾಗುತ್ತವೆ ಎನ್ನುವುದನ್ನು ಗಮನಿಸಬೇಕು. ನೃಪತುಂಗನ ನಂತರದ ಕವಿಗಳಲ್ಲಿ ಕೆಲವೇ ಮಂದಿಯನ್ನು ಬಿಟ್ಟರೆ ಉಳಿದವರೆಲ್ಲರೂ `ಮುತ್ತಂ ಮಣಿಯಂ’ ಕೋದಂತಿರುವ ಹದವಾದ ಶೈಲಿಯಲ್ಲಿ ಬರೆದವರು. ಇದೇ ಅಸಹನೆಯಲ್ಲಿ ಭಟ್ ಅವರು ಷ. ಶೆಟ್ಟರ “ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ” ಎಂಬ ವಿದ್ವತ್ಪೂರ್ಣ ಕೃತಿಯನ್ನೂ ತಳ್ಳಿಬಿಡುತ್ತಾರೆ-ಶೆಟ್ಟರ್ ಅದರಲ್ಲಿ ಪದಗಳ ಬಗ್ಗೆ ಮಾತಾಡುತ್ತಾರಲ್ಲದೆ ಭಾಷೆಯ ಬಗ್ಗೆ ಅಲ್ಲ ಎಂದು! ಇದು ನಿಜಕ್ಕೂ ಆಶ್ಚರ್ಯದ ಸಂಗತಿ; ಯಾಕೆಂದರೆ ಶೆಟ್ಟರ್ ಅವರ ಲಕ್ಷ್ಯವೇ ನಾಡು-ನುಡಿ; ಪದಗಳ ಪ್ರಸ್ತಾಪ ಬರುವುದು ಯಥಾವಕಾಶವಾಗಿ ಮಾತ್ರ. (ಶೆಟ್ಟರ್ ಅವರ ಪುಸ್ತಕದಲ್ಲಿ ಬ್ರಾಹ್ಮೀಲಿಪಿಯ ಪ್ರಸ್ತಾಪ ಬರುತ್ತದೆ, ಪ್ರಾಚೀಕಾಲದ ಅಕ್ಷರಸ್ಥ ಸಮಾಜ ನಿರ್ಮಾಣದ ಬಗ್ಗೆ ಅವರು ಚರ್ಚಿಸುತ್ತಾರೆ; ಮುಖ್ಯವಾಗಿ ಅವರ ಪುಸ್ತಕದ `ದಕ್ಷಿಣ ಭಾರತ ಬೆಸೆದ ಬ್ರಾಹ್ಮೀ ಲಿಪಿ’ ಎಂಬ ನಾಲ್ಕನೇ ಅಧ್ಯಾಯ ಸದ್ಯದ ವಿಷಯಕ್ಕೆ ಪ್ರಸ್ತುತವಾಗಿದೆ.) ಅತಿಸಂಸ್ಕೃತ ಮತ್ತು ಅತಿಕನ್ನಡ ಎರಡನ್ನೂ ನೃಪತುಂಗ ಉದಾಹರಣೆ ಸಮೇತ ವಿರೋಧಿಸಿದ. ಎಂದರೆ ಕನ್ನಡದಲ್ಲಿ ಇವೆರಡೂ ಮಿತಿಗಳಾಗಿದ್ದುವು. ಒಂದು ಮಿಲೆನಿಯಮ್ ನಂತರ ಮುದ್ದಣ ಕೂಡಾ ಇದನ್ನೇ ಪ್ರಸ್ತಾಪಿಸುತ್ತಾನೆ ಎಂದ ಮೇಲೆ ಈ ಎರಡೂ ಒಲವುಗಳು ಕನ್ನಡದಲ್ಲಿ ಯಾವತ್ತೂ ಹರಿದುಬಂದಿವೆ ಎಂದಾಯಿತು. ಹೆಚ್ಚಿನ ಜನರೂ ನೃಪತುಂಗನ ವಿವೇಕವನ್ನೇ ಮಾದರಿಯಾಗಿ ಸ್ವೀಕರಿಸಿದ್ದಾರೆ. ಕೆಲವರು ಮಾಡುತ್ತಿರಬಹುದಾದ ಅತಿಸಂಸ್ಕೃತದ ತಪ್ಪನ್ನು ಸರಿಪಡಿಸಲು ಇಂದು ಭಟ್ ಅವರು ಅತಿಕನ್ನಡದತ್ತ ಹೊರಳುತ್ತಿದ್ದಾರೆ ಅನಿಸುತ್ತದೆ. ಈ `ಸರಿಪಡಿಸುವಿಕೆ’ಯೇ ಇನ್ನೊಂದು ತಪ್ಪಾಗಬಾರದು. + +ಸರ್ವಶಿಕ್ಷಣ ಕ್ರಾಂತಿಯ ಸಂದರ್ಭದಲ್ಲಿ ಬಹುಜನಸಮೂಹಕ್ಕೆ ವಿದ್ಯಾಭ್ಯಾಸ ದೊರಕಬೇಕಾದರೆ ಅವರು ಆಡುವ, ಅವರಿಗೆ ಅರ್ಥವಾಗುವ, ಅವರಿಗೆ ಗಾಬರಿಯನ್ನಾಗಲಿ, `ಕೀಳರಿಮೆ’ಯನ್ನಾಗಲಿ ಉಂಟುಮಾಡದ ದಿನಬಳಕೆಯ ಕನ್ನಡವನ್ನು ಮಾತ್ರವೇ ಬಳಸಬೇಕು ಎನ್ನುವುದು ಭಟ್ ಅವರ ಅಭಿಪ್ರಾಯ. ಆದರೆ ಅದನ್ನು ವಾದಿಸುವುದಕ್ಕಾಗಿ `ಸಂಸ್ಕೃತಪ್ರೀತಿ’ ಎಂಬ ಕಲ್ಪನೆಯೊಂದನ್ನು ನಿರ್ಮಿಸುವುದು ಬೇಡ. ಕನ್ನಡದ ಸಂಸ್ಕೃತೀಕರಣ ಯಾರಿಗೆ ಬೇಕು? ಯಾರಿಗೂ ಬೇಡ. ಪ್ರಕೃತ ಚರ್ಚೆಯಲ್ಲಿ ಭಾಗವಹಿಸುತ್ತಿರುವ ಎಲ್ಲರೂ ನಿಜವಾದ ಕನ್ನಡಿಗರೇ. ಕನ್ನಡದ ಹಿತವನ್ನೇ (ನಾಡು-ನುಡಿ-ಜನಪದ ಎಂದು ನೃಪತುಂಗ ಒಟ್ಟಾಗಿ ಅಂದಂತೆ) ಎಲ್ಲರೂ ಬಯಸುವುದು. ಅವರು ಬೇರೆ ಬೇರೆ ವರ್ಗಗಳಿಂದಲೂ ಜಾತಿಮತಗಳಿಂದಲೂ ಬಂದವರು ಇರಬಹುದು. ಆದರೆ ಅವರಿಗೆ ಒಟ್ಟಾರೆಯಾದ ಸಮೂಹದ ಕಲ್ಪನೆ ಇಲ್ಲ ಎಂದು ಭಟ್ ಅವರು ಅಂದುಕೊಳ್ಳಬಾರದು. ಕನ್ನಡದ ಅಸ್ತಿತ್ವ, ಬೆಳವಣಿಗೆ, ಘನತೆ ಗೌರವ, ಪ್ರೀತಿ ಎಲ್ಲರ ಮನಸ್ಸಿನಲ್ಲಿದೆ. ಈ ಸತ್ಯವನ್ನು ಮೊದಲು ಸ್ವೀಕರಿಸಿಕೊಳ್ಳಬೇಕು. ಸಂಸ್ಕೃತಪ್ರೀತಿ, ಇಂಗ್ಲಿಷ್ ಮೋಹ ಮುಂತಾದ ಮಾತುಗಳನ್ನಾಡಿದರೆ ಅಲ್ಲಿ ಸಂವಾದ ಇರುವುದಿಲ್ಲ, ಬರೇ ವಾದ ಮಾತ್ರ ಇರುತ್ತದೆ. + +ನನ್ನ ಮಟ್ಟಿಗೆ ಹೇಳುವುದಾದರೆ, ನಾನೇನೂ ಸಂಸ್ಕೃತದ ಸನ್ನದು ಹಿಡಿದುಕೊಂಡು ಓಡಾಡುತ್ತಿಲ್ಲ. ಸಂಸ್ಕೃತಮಯವಾದ ಕನ್ನಡ ನನ್ನ ಒಲವಲ್ಲ. ಸಂಸ್ಕೃತ ನನಗೆ ಬರುವುದೂ ಇಲ್ಲ. ನಾನು ಕಲಿತುದು ಇಂಗ್ಲಿಷ್. ಆದರೆ ಒಬ್ಬ ಕನ್ನಡಿಗನಾಗಿ ಕನ್ನಡಿಗರೆಲ್ಲರ ಹಿತದೃಷ್ಟಿಯಿಂದ ನನಗೆ ಅನಿಸುವುದು ಕನ್ನಡಕ್ಕೆ ಏನೇನು ಬೇಕೋ ಅದನ್ನೆಲ್ಲಾ ಇರಿಸಿಕೊಳ್ಳಬೇಕು, ಎಲ್ಲಾ ಕಡೆಯಿಂದಲೂ ಪಡೆಯಬೇಕು, ಬೆಳೆಸಬೇಕು ಎಂದು. ಸದ್ಯ ಕನ್ನಡಕ್ಕೆ ಇಂಗ್ಲಿಷ್ ಪದಗಳು ನೀರಿನಂತೆ ಹರಿದುಬರುತ್ತಿವೆ. ಉನ್ನತ ಕ್ಷೇತ್ರಗಳಲ್ಲಿ ಕನ್ನಡ ಬಳಸುವವರು ಹೆಚ್ಚಾಗಿ ಇಂಗ್ಲಿಷ್ ಕಲಿತವರೂ ಆಗಿರುತ್ತಾರೆ, ಎಂದರೆ ದ್ವಿಭಾಷಿಗಳು. ಮುಂದಿನ ಕನ್ನಡದಲ್ಲಿ ಸಂಸ್ಕೃತದಂತೆಯೇ ಇಂಗ್ಲಿಷ್ ಪದಗಳು ತುಂಬಿದ್ದರೆ ಆಶ್ಚರ್ಯವಿಲ್ಲ. ಪದಗಳು ಮಾತ್ರವಲ್ಲದೆ ವಾಕ್ಯರಚನೆ ಕೂಡಾ ಇಂಗ್ಲಿಷ್ ಪ್ರಭಾವಕ್ಕೆ ಒಳಗಾಗುತ್ತಿರುವುದನ್ನು ಗಮನಿಸುತ್ತಿದ್ದೇವೆ. ಇದು ಯಾವುದನ್ನೂ ನಾವು ಯಾವ ವಿಧೇಯಕದಿಂದಲೂ ತಡೆದು ನಿಲ್ಲಿಸಲಾರೆವು. ಆದರೂ ಮುಂದೆ ಇಂಗ್ಲಿಷ್ ಮಿಶ್ರಿತ ಆಗುತ್ತದೆ ಎಂದುಕೊಂಡು ಇಂದು ನಾವು ಅಂಥ ಇಂಗ್ಲಿಷ್ ಮಿಶ್ರಿತ `ಕಂಗ್ಲಿಷ್’ ಕನ್ನಡವನ್ನು ಗಂಭೀರವಾಗಿ ಪ್ರಯೋಗಿಸುವಂತೆಯೂ ಇಲ್ಲ. ಕನ್ನಡದಲ್ಲಿ ಹಲವಾರು ಜ್ಞಾನಕ್ಷೇತ್ರಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಹೇಗೆ ಬರೆಯಬಹುದು ಎನ್ನುವ ಬಗ್ಗೆ ನನಗೆ ಕುತೂಹಲವಿದೆ. ಕನ್ನಡದ ದಿನಪತ್ರಿಕೆಯೊಂದರಲ್ಲಿ ನಾನು ಪ್ರತಿ ಶುಕ್ರವಾರವೂ ಬರೆಯುವ ಲೇಖನಗಳು ಇಂತಹದೊಂದು ಪ್ರಯೋಗ. ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿ ಗಹನವಾಗಿ ಬರೆಯಲು ಶ್ರಮಿಸುತ್ತೇನೆ. ಇದು ಹಲವು ಓದುಗರಿಗೆ ಕ್ಲಿಷ್ಟವಾಗಿ ಕಂಡಿದೆ. ಆದರೆ ಇಂಥ ವಿಷಯಗಳ ಕುರಿತು `ಸುಲಿದ ಬಾಳೆಯ ಹಣ್ಣಿನಂದದಿ ಸುಲಭವಹ ಕನ್ನಡದಲಿ’ ಹೇಗೆ ಬರೆಯಬೇಕೋ ನನಗೆ ತಿಳಿಯದು. ತಿಳಿದವರು ಬರೆಯಬೇಕೆಂದೇ ನನ್ನ ಆಸೆ. ನಾನಿಲ್ಲಿ ಹೇಳುತ್ತಿರುವುದು ಪ್ರಾಥಮಿಕ ಮಟ್ಟದ ಮಾಹಿತಿ ಬರಹಗಳಲ್ಲ, ಪ್ರಗಲ್ಭ ಮಟ್ಟದ ಬರಹಗಳನ್ನು. ನನ್ನ ಲೇಖನಗಳು ಪ್ರಾಥಮಿಕ ಮಟ್ಟದಲ್ಲಿ ಇರಬೇಕು ಎನ್ನುವವರು ನನ್ನ ಉದ್ದೇಶವನ್ನೇ ತಿಳಿದುಕೊಂಡಿಲ್ಲ. ಎಂದರೆ ಸಾರ್ವಜನಿಕ ಜಾಗಕ್ಕೆ ವೈಚಾರಿಕ ಮತ್ತು ವಿದ್ವತ್ಪೂರ್ಣ ಕನ್ನಡವನ್ನು ತರುವುದು ನನ್ನ ಉದ್ದೇಶ. ಅಂಥ ಕನ್ನಡವೇನೂ ಪದದಲ್ಲಾಗಲಿ ವಾಕ್ಯರಚನೆಯಲ್ಲಾಗಲಿ ತಯಾರಾಗಿ ಕೂತಿಲ್ಲ, ನಾವೇ ಅದನ್ನು ನಿರ್ಮಿಸಬೇಕಾಗಿದೆ. ಆಗ ಸಂಸ್ಕೃತದಿಂದ, ಇಲ್ಲವೇ ಇಂಗ್ಲಿಷ್ ನಿಂದ ಪಾರಿಭಾಷಿಕ ಪದಗಳನ್ನು ತರಬೇಕಾಗುತ್ತದೆ. ಕನ್ನಡದಲ್ಲಿ ಇಂಥ ಚರ್ಚೆಗಳು ಆಗದಿದ್ದರೆ ನಮ್ಮ ಕನ್ನಡ ಬೀದಿ ಮಟ್ಟದಲ್ಲೇ ಉಳಿಯುತ್ತದೆ, ಪ್ರಬುದ್ಧ ಮಟ್ಟಕ್ಕೆ ಎಂದೂ ಏರುವುದಿಲ್ಲ. ಆದ್ದರಿಂದ ಈ ಕೆಲಸವನ್ನು ಮುಂದೆಹಾಕುವಂತಿಲ್ಲ. + +ಭಟ್ ಅವರು ಈ ಸಮಸ್ಯೆಯನ್ನು ಕಂಡಿದ್ದಾರೆ ಎಂದುಕೊಳ್ಳುತ್ತೇನೆ. ಯಾಕೆಂದರೆ ಭಾಷಾಂತರಕ್ಕೆ `ನುಡಿಮಾರು’, ಭಾಷೆಗೆ `ಸೊಲ್ಲು,’ ಉದಾಹರಣೆಗೆ `ಎತ್ತುಗೆ’ ಮೊದಲಾದ `ಅಚ್ಚಗನ್ನಡ’ ಪದಗಳನ್ನು ಅವರು ಸೂಚಿಸುತ್ತಿದ್ದಾರೆ. ಕೆ.ವಿ. ನಾರಾಯಣ ಅವರು ಪ್ರಶ್ನೆಗೆ `ಕೇಳ್ವಿ’, ಧಾತುವಿಗೆ `ತಿರುಳು’, ಕ್ರಿಯಾಪದಕ್ಕೆ `ಕೆಲಸದ ಪದ’, ನಾಮಪದಕ್ಕೆ `ಹೆಸರಿನ ಪದ’ ಮುಂತಾಗಿ ಬಳಸುವುದನ್ನು ನೀವು ಗಮನಿಸಿರಬಹುದು. ಆದರೆ ಇವೆಲ್ಲವೂ ಸಮುದ್ರಕ್ಕೆ ಕಲ್ಲೆಸೆದ ಹಾಗೆ. ಯಾವುದಾದರೂ ಗಂಭೀರವಾದ ಜ್ಞಾನಕ್ಷೇತ್ರದಲ್ಲಿ ಪುಸ್ತಕವೊಂದನ್ನು ಬರೆದು ನೋಡಿ: ಉದಾಹರಣೆಗೆ, ಮನೋವಿಜ್ಞಾನಕ್ಕೆ ಸಂಬಂಧಿಸಿ. ಆಗ ಈ ಸಮಸ್ಯೆಯ ನಿಜವಾದ ಸ್ವರೂಪ ಗೊತ್ತಾಗುತ್ತದೆ. ಆದರೆ ಭಟ್ ಮತ್ತು ನಾರಾಯಣ್ ಮಾಡುವ ಇಂಥ ಪ್ರಯತ್ನಗಳನ್ನು ನಾನು ಟೀಕಿಸುವುದಿಲ್ಲ. ನನಗೆ ಎಲ್ಲ ಪ್ರಯೋಗಗಳೂ ಸ್ವಾಗತಾರ್ಹ. ಯಾಕೆಂದರೆ ಎಲ್ಲಿಂದ ಏನು ಒಳ್ಳೆಯದು ಬರುತ್ತದೋ ಹೇಳುವಂತಿಲ್ಲ. ಜನ ಇವುಗಳನ್ನು ಸ್ವೀಕರಿಸಿದರೆ ಸರಿ; ಇಲ್ಲದಿದ್ದರೆ ಈಗ ಬಳಕೆಯಲ್ಲಿರುವ ಪದಗಳು ಮುಂದರಿಯುತ್ತವೆ. ಭಾಷಾಂತರ, ಅನುವಾದ, ತರ್ಜುಮೆ ಎಂಬ ಪದಗಳು ಈಗಾಗಲೇ ಇವೆ; `ನುಡಿಮಾರು’ ಕೂಡಾ ಸೇರಿಕೊಂಡರೆ ಅಭ್ಯಂತರವಿಲ್ಲ. ಹೆಚ್ಚು ಪರ್ಯಾಯ ಪದಗಳು ಇದ್ದಷ್ಟೂ ಆ ಭಾಷೆಯ ಶೈಲಿ ವೈವಿಧ್ಯ ಜಾಸ್ತಿಯಾಗುತ್ತದೆ. ಆದರೆ ಭಟ್ ಅವರ ಕಾರ್ಯಕ್ರಮ ಅದಲ್ಲ; ಭಾಷಾಂತರ ಮುಂತಾದ ಪದಗಳನ್ನು ತೆಗೆದುಹಾಕಿ ಅವುಗಳ ಜಾಗದಲ್ಲಿ `ನುಡಿಮಾರ’ನ್ನು ಕೂಡಿಸುವುದು. ಇದು reinventing the wheelಚಕ್ರವನ್ನು ಹೊಸದಾಗಿ ಕಂಡುಹುಡುಕಿದಂತೆ ಅಲ್ಲವೇ? ನಮ್ಮ ಶಕ್ತಿ ಹೀಗೆ ವ್ಯಯವಾಗಬೇಕೇ ಎನ್ನುವುದು ನನ್ನ ಪ್ರಶ್ನೆ. ಈಗ ಇರುವ ಪದಗಳನ್ನು ಪರಕೀಯವೆಂದು ನೋಡುವುದಕ್ಕಿಂತ ನಮ್ಮದೇ ಎಂದು ನೋಡಿದರೆ ಅದ್ಭುತವಾದ ಪರಿಣಾಮ ಮೂಡೀತು: ಯಾಕೆಂದರೆ ಪದಗಳು ಮತ್ತು ಭಾಷೆ ಯಾರು ಪ್ರೀತಿಸುತ್ತಾರೋ ಅವರದು; ಅವುಗಳ ಮೇಲೆ ಯಾರಿಗೂ ಏಕಸ್ವಾಮ್ಯವಿಲ್ಲ. + +ಮನೋವಿಜ್ಞಾನಿ ಫ್ರಾಯ್ಡ್ ಆಗಲಿ, ತತ್ವಜ್ಞಾನಿಗಳಾದ ಇಮ್ಮಾನ್ಯುವೆಲ್ ಕಾಂಟ್ ಆಗಲಿ ಹುಸರ್ಲ್, ಹೈಡೆಗರ್ ಆಗಲಿ ತಮ್ಮ ಮಾತೃಭಾಷೆಯಾದ ಜರ್ಮನ್ ನಲ್ಲೆ ಬರೆದರು ಎನ್ನುವುದು ನಿಜ. ಅವರಿಗೂ ಈ ಕೆಲಸಕ್ಕೆ ಪೂರ್ವಸಿದ್ಧ ಜರ್ಮನ್ ಭಾಷೆಯೇನೂ ಇರಲಿಲ್ಲ; ತಾವು ಬರೆಯುತ್ತಲೇ ಅವರು ಭಾಷೆಯನ್ನೂ ಬೆಳೆಸಿದರು. ಇದು ಕನ್ನಡದಲ್ಲೂ ಆಗಬೇಕು ಎನ್ನುವುದೇ ನನ್ನ ಇರಾದೆ. ಎಂದರೆ ಮೂಲಚಿಂತನೆಗಳು ನಮ್ಮ ಜನರಿಂದ ನಮ್ಮ ಭಾಷೆಯಲ್ಲಿ ಹುಟ್ಟಿಬರಬೇಕು. ಈ ದಾರಿಯಲ್ಲಿ ನಾವು ಈಗಾಗಲೇ ಇರುವ ಸಂಪತ್ತನ್ನು ಬಳಸದೆ ಇರುವುದಕ್ಕೆ ಯಾವ ಕಾರಣವೂ ಇಲ್ಲ; ಈ ಸಂಪನ್ಮೂಲ ಅಚ್ಚಗನ್ನಡವಾದರೂ ಸರಿ, ಸಂಸ್ಕೃತ, ಅರೆಬಿಕ್, ಪರ್ಶಿಯನ್, ಮರಾಠಿ, ಇಂಗ್ಲಿಷ್ ಆದರೂ ಸರಿ. ಎಂದರೆ ನನ್ನ ಕಲ್ಪನೆಯ `ನಮ್ಮ ಕನ್ನಡ’ ಎಲ್ಲರನ್ನೂ ಒಳಗೊಳ್ಳುವಂಥದು; ಹೀಗೆ ಒಳಗೊಳ್ಳುವುದಕ್ಕೆ ಈಗಿರುವ ಕನ್ನಡದಿಂದ ಏನನ್ನೂ ಹೊರಹಾಕುವ ಅಗತ್ಯವಿಲ್ಲ, ಇನ್ನಷ್ಟನ್ನು ಒಳಗೊಂಡರೆ ಸರಿ. + +ಸಂಸ್ಕೃತದಿಂದ ಆದ ಲಾಭನಷ್ಟ + +ಸಂಸ್ಕೃತದ ಪ್ರಭಾವದಿಂದ ಕನ್ನಡಕ್ಕೆ ಆಗಿರುವ ಲಾಭನಷ್ಟಗಳೇನು? ಕನ್ನಡ ಎಂಬ ಭಾಷೆಯನ್ನು ನಾವಿಂದು ಅದರ ಒಟ್ಟಾರೆಯಾದ ಓಂಟಾಲಜಿಯಿಂದ (ಜೀವರೂಪದಿಂದ) ಪ್ರತ್ಯೇಕಿಸಿ ನೋಡುವುದೇ ಸಾಧ್ಯವಿಲ್ಲದಿರುತ್ತ ಇಂಥ ಪ್ರಶ್ನೆ ಬರೇ ಎಕಡಮಿಕ್ (ಅಧ್ಯಯನ) ಎಂದು ತಿಳಿಯಬೇಕಾಗುತ್ತದೆ. ಯಾಕೆಂದರೆ ಹಲವು ಕಾಲ ಒಂದೆಡೆ ನೆಲಸಿದ ಜನರಿಂದ ಕೆಲವರನ್ನು ಬೇರ್ಪಡಿಸಿ ನೀವು ಯಾವ ಮೂಲದವರು, ನಿಮ್ಮಿಂದ ನಮಗೆ ಆದ ಲಾಭ ಏನು, ಹೊರಟುಹೋಗಿ ಎಂದು ಹೇಳುವಂತೆ ಇದು. ಈ ಹಿಂದೆ ಹೇಳಿದಂತೆ ಇತಿಹಾಸಪೂರ್ವದಿಂದ ಕನ್ನಡವು ಸಂಸ್ಕೃತದ ಸಂಪರ್ಕ ಹೊಂದಿ ತನಗೆ ಬೇಕಾದ್ದನ್ನು ಪಡೆದಿದೆ. ಅಥವಾ ಒಂದೊಮ್ಮೆ ನಮಗದರ ಇತಿಹಾಸ ಗೊತ್ತಿದ್ದರೂ ಏನಾಯಿತು? ಉರ್ದು, ಪರ್ಶಿಯನ್, ಅರೆಬಿಕ್ ಮೂಲದ ಪದಗಳು ಕನ್ನಡಕ್ಕೆ ಹೇಗೆ ಯಾವಾಗ ಬಂದುವು ಎಂಬುದನ್ನು ನಾವು ಅಧ್ಯಯನದ ಮೂಲಕ ಕಂಡುಕೊಳ್ಳಬಹುದು. ಅಷ್ಟಕ್ಕೆ ಅವನ್ನು ಪ್ರತೇಕಿಸಿ ಉಚ್ಚಾಟಿಸುವಂತೆ ಇಲ್ಲ-ಅವು ಕನ್ನಡವನ್ನು ಪ್ರವೇಶಿಸಿದ ಸಂದರ್ಭಗಳು ಯಾವಾಗಲೂ ನಾವು ಹೆಮ್ಮೆಪಟ್ಟುಕೊಳ್ಳುವಂಥವು ಆಗಿರಲಿಲ್ಲ ಎನ್ನುವುದು ಗೊತ್ತಿದ್ದೂ. ಯಾಕೆಂದರೆ ಈಗ ಅವೆಲ್ಲವೂ ಕನ್ನಡದ್ದೇ ಆಗಿವೆ. ಹಿಂದೂಕುಶ್ ಎಂಬ ಪರ್ವತಾವಳಿಯೊಂದು ಮಧ್ಯ ಏಶಿಯಾದಲ್ಲಿ ಇದೆ: ಇದರ ಅರ್ಥ `ಹಿಂದುಗಳನ್ನು ಹತಗೈಯುವ ಸ್ಥಳ’ ಎಂಬುದಾಗಿ ನಾನೆಲ್ಲೋ ಓದಿದ ನೆನಪು. ಇದು ತಿಳಿದು ಈ ಹೆಸರನ್ನು ಬದಲಾಯಿಸಬೇಕು ಎನ್ನುವವ ನಾನಲ್ಲ. ಪದ ಇದ್ದಾಗಲೇ ನಮಗೆ ಇತಿಹಾಸ ದೊರಕುವುದು; ಬದಲಾಯಿಸಿದಾಗ ಇತಿಹಾಸದ ಸ್ಮೃತಿ ಮಾಯ್ದು ಹೋಗುತ್ತದೆ. + +ಆದರೂ ಎಕಡೆಮಿಕ್ ದೃಷ್ಟಿಯಿಂದ ಈ ಪ್ರಶ್ನೆ ಕೇಳಿದರೆ, ನನಗನ್ನಿಸುವುದು ಲಾಭನಷ್ಟ ಎರಡೂ ಆಗಿವೆ. ಇದನ್ನು ತಿಳಿದುಕೊಳ್ಳಬೇಕಾದರೆ ಬೇರೆ ಭಾಷೆಗಳಲ್ಲಿ ಏನಾಗಿದೆ ಎಂದು ನೋಡುವುದು ಒಳ್ಳೆಯದು; ಅಲ್ಲದಿದ್ದರೆ ನಮಗೆ ನೋಟದ ಹರ (perspective) ಸಿಗುವುದಿಲ್ಲ. ಡೇನಿಷ್ ಭಾಷಾವಿಜ್ಞಾನಿ ಓಟ್ಟೋ ಯೆಸ್ಪರ್ಸನ್ (Otto Jesperson) ಇಂಗ್ಲಿಷ್ ಭಾಷೆಗೆ ಸಂಬಂಧಿಸಿದಂತೆ ಬಹಳ ಕೆಲಸ ಮಾಡಿದವ. ಅವನGrowth and Structure of Englishಇಂದು ಒಂದು ಪ್ರಮಾಣಗ್ರಂಥವಾಗಿ ಸ್ವೀಕೃತವಾಗಿದೆ. ಭಾಷೆಯ ಕುರಿತಾಗಿ ಯಾವ ಆವೇಶವಿಲ್ಲದೆ ವಸ್ತುನಿಷ್ಠವಾಗಿ ಹೇಗೆ ಬರೆಯಬಹುದು ಎನ್ನುವುದಕ್ಕೆ ಈ ಕೃತಿಯೊಂದು ಮಾದರಿ. ಇದು ಇಪ್ಪತ್ತನೇ ಶತಮಾನದ ಆರಂಭಕಾಲದಲ್ಲಿ ಬಂದುದು ಎನ್ನುವುದನ್ನು ನೆನೆದರೆ ಆ ಕಾಲಕ್ಕೇ ಯೆಸ್ಪರ್ಸನ್ ಎಷ್ಟು ಮುಂದುವರಿದವನಿದ್ದ ಎನ್ನುವುದು ಗೊತ್ತಾಗುತ್ತದೆ. ಇಲ್ಲಿ ನಾನು ಪ್ರಕೃತ ವಿಷಯಕ್ಕೆ ಸಂಬಂಧಿಸಿದ ಒಂದೆರಡು ಸಂಗತಿಗಳನ್ನು ಮಾತ್ರ ನಮೂದಿಸಲು ಬಯಸುತ್ತೇನೆ. + +ಇಂಗ್ಲಿಷ್ ನ ವೈಶಿಷ್ಟ್ಯಗಳಲ್ಲಿ ಯೆಸ್ಪರ್ಸನ್ ಪ್ರಕಾರ ಅದರಲ್ಲಿನ ಸಂಯುಕ್ತಾಕ್ಷರಗಳೂ ಒಂದು. ಇದು ಧ್ವನಿಮಟ್ಟದಲ್ಲಿ ಭಾಷೆಗೊಂದು ಶಕ್ತಿಯನ್ನು ತಂದುಕೊಡುತ್ತದೆ ಎನ್ನುತ್ತಾನೆ ಅವನು. ಪ್ರತಿಯೊಂದು ಸ್ವರ್ಜವೂ (syllable) ಸ್ವರದಲ್ಲಿ ಕೊನೆಗೊಂಡಾಗ ಆ ಭಾಷೆಗೆ ಲಾಲಿತ್ಯವೇನೋ ಬರಬಹುದು, ಆದರೆ ಗಟ್ಟಿತನ ಬರುವುದಿಲ್ಲ. ಮೂಲಕನ್ನಡದ ಬರಹ ಭಾಷೆಯಲ್ಲಿ ಸ್ವರ್ಜಗಳು ಹೆಚ್ಚಾಗಿ ಹೀಗೆ ಸ್ವರದಲ್ಲಿ ಕೊನೆಗೊಳ್ಳುತ್ತವೆ. ಅದರಲ್ಲಿ ಸಂಯುಕ್ತಾಕ್ಷರಗಳು ಬರುವುದು ಸ್ವಜಾತಿ ವ್ಯಂಜನಗಳು ಒತ್ತಾಗಿ ಬಂದಾಗ ಮಾತ್ರ: ಅಮ್ಮ, ಅಕ್ಕ, ಅಪ್ಪ; ಮತ್ತೆ ಅನುನಾಸಿಕಗಳ ಜತೆ: ತಂದೆ, ಇಂಪು, ಸಂತೆ; ಇಲ್ಲಿಗೆ ಮುಗಿಯಿತು. ಆದರೆ ಆಡುಮಾತಿನಲ್ಲಿ ಮಾತ್ರ ಸ್ವರಗಳು ಲೋಪವಾಗುವುದರಿಂದ ವಿಜಾತೀಯ ಸಂಯುಕ್ತಧ್ವನಿಗಳು ಕೂಡಾ ಬರುತ್ತವೆ: ಏನ್ ಮಾಡ್ತೀ? ಎಷ್ಟೊತ್ನಿಂದ ಅಳ್ತಾ ಇದ್ದಾನೆ, ಎಂದು ಮುಂತಾಗಿ. ಆದರೆ ಆಡುಮಾತಿನಲ್ಲೂ ಅಚ್ಚಗನ್ನಡದಲ್ಲಿ ಯಾವ ಪದವೂ ಸಂಯುಕ್ತಾಕ್ಷರದಲ್ಲಿ ಸುರುವಾಗುವುದಿಲ್ಲ. ಸಂಸ್ಕೃತದ ತತ್ಸಮ ಪದಗಳು ಕನ್ನಡಕ್ಕೆ ಬಂದಾಗ ಈ ಪರಿಸ್ಥಿತಿ ಬದಲಾಯಿತು: ಪ್ರತ್ಯೇಕ, ಸ್ವರ್ಗ, ಕ್ಷಿಪ್ರ ಮುಂತಾದ ಕಡೆ ವಿಜಾತೀಯ ಸಂಯುಕ್ತಾಕ್ಷರಗಳೂ ಇವೆ, ಅವು ಪದಾದಿಯಲ್ಲೂ ಬಂದಿವೆ. ಯೆಸ್ಪರ್ಸನ್ ವಿಜಾತೀ ಸಂಯುಕ್ತಾಕ್ಷರಗಳು ಹೇಗೆ ಭಾಷೆಗೆ (ಇಂಗ್ಲಿಷ್ ಗೆ) ಶಕ್ತಿ ಕೊಡುತ್ತವೆ ಎನ್ನುವುದರ ಬಗ್ಗೆ ಹೇಳುತ್ತಾನೆ. ಅವನ ಮಾತು ಸರಿಯಾದರೆ, ಇಂಥ ಸಂಯುಕ್ತ ಧ್ವನಿಗಳನ್ನು ಸಂಸ್ಕೃತ ಕನ್ನಡಕ್ಕೆ ನೀಡಿ ಕನ್ನಡದ ಶಕ್ತಿವರ್ಧನೆಗೆ ಕಾರಣವಾಗಿದೆ ಎನ್ನಬೇಕು. ಇನ್ನು ಪದಾಂತ್ಯದಲ್ಲಿ ಸ್ವರ ಬಳಸುವುದು ಕನ್ನಡದ ಜಾಯಮಾನ; ಇಂಥ ಸ್ವರಾಂತ್ಯ ಕೇಳಲು ಲಲಿತ ಅನಿಸಿದರೂ ಭಾಷೆಯ ಶಕ್ತಿಯನ್ನು ಕುಂದಿಸುತ್ತದೆ ಎಂದು ಯೆಸ್ಪರ್ಸನ್ ಹೇಳುತ್ತಾನೆ. ಅವನ ಮಾತು ನನಗೆ ನಿಜವೆನ್ನಿಸುತ್ತದೆ. ಇಂಥ ಕಡೆ ಸಾಧ್ಯವಿದ್ದಲ್ಲೆಲ್ಲ ಅರ್ಧಾಕ್ಷರಗಳನ್ನು (ಹಲಂತಗಳನ್ನು) ವೈವಿಧ್ಯಕ್ಕಾದರೂ ಬಳಸಬೇಕು ಎನ್ನುವುದು ನನ್ನ ಸಲಹೆ. ಉದಾಹರಣೆಗೆ,`ಇಂಗ್ಲೆಂಡಿನಲ್ಲಿ’ ಎನ್ನುವುದನ್ನು `ಇಂಗ್ಲೆಂಡ್ ನಲ್ಲಿ’ ಎನ್ನಬಹುದು. ಇದರಲ್ಲೊಂದು ಆಧುನಿಕತೆ ಇದೆ ಕೂಡ ಹಲವು ಹೆಸರುಗಳಲ್ಲಿ ನಾವು ಈ ಪರಿಷ್ಕಾರವನ್ನು ಕಾಣುತ್ತೇವೆ: ರಮೇಶ್, ಗಣೇಶ್, ಕುಮಾರ್ ಮುಂತಾಗಿ. + +ಇಂಗ್ಲಿಷ್ ನ ಸಮೃದ್ಧಿ ಇನ್ನೆಲ್ಲಕ್ಕಿಂತಲೂ ಹೆಚ್ಚು ಪರ್ಯಾಯ ಪದಗಳಲ್ಲಿ ಕಾಣಿಸುತ್ತವೆ ಎನ್ನುತ್ತಾನೆ ಯಸ್ಪರ್ಸನ್: + +More than in anything else the richness of the English language manifests itself in its great number of synonyms, whether we take this word in its strict sense of words of exactly the same meaning or in the looser sense of words with nearly the same meaning. It is evident that the latter class must be the most valuable, as it alloow speakers to express subtle shades of thought.Juveniledoes not signify the same thing asyouthful, ponderousasweighty,portionasshare,miserableaswretched. (Growth and Struture of the English Language, 9th edition. Bristol: Indian Branch of OUP, 1938, pp. 124-25.) + +ಯೆಸ್ಪರ್ಸನ್ ಇನ್ನೂ ಬಹಳಷ್ಟು ಉದಾಹರಣೆಗಳನ್ನು ಕೊಡುತ್ತಾನೆ, ಹಾಗೂ ಇಂಥ ಪರ್ಯಾಯಪದ ದ್ವಯಗಳಲ್ಲಿನ ಲ್ಯಾಟಿನ್ ಮೂಲದ ಪದಗಳಿಗೂ ಜರ್ಮಾನಿಕ್ ಮೂಲದವಕ್ಕೂ ಇರುವ ಸೂಕ್ಷ್ಮ ಅರ್ಥವ್ಯತ್ಯಾಸಗಳನ್ನು ವಿಶ್ಲೇಷಿಸುತ್ತಾನೆ. ಸಂಸ್ಕೃತ ತತ್ಸಮಗಳ ಕಾರಣ ಕನ್ನಡದ ಶಬ್ದಭಂಡಾರವೂ ಬೆಳೆದಿದೆ; ಕನ್ನಡದಲ್ಲೂ ಪರ್ಯಾಯ ಪದಗಳು ನಿರ್ಮಾಣವಾಗಿವೆ. ಉದಾಹರಣೆಗೆ: + +ದೇವಸ್ಥಾನ-ಗುಡಿದೇಶ-ನಾಡುಭಾಷೆ-ನುಡಿಅರಣ್ಯ-ಕಾಡುಪರ್ವತ-ಬೆಟ್ಟಸ್ವಪ್ನ-ಕನಸುದೇಹ-ಒಡಲುಶ್ವಾಸ-ಉಸಿರುಮುಖ-ಮೋರೆಕಡಲು-ಸಮುದ್ರಹುಲಿ-ವ್ಯಾಘ್ರ + +ಇಂಥ ಅನೇಕ ಉದಾಹರಣೆಗಳನ್ನು ಕೊಡುತ್ತ ಹೋಗಬಹುದು; ಈ ಯುಗಳಗಳಲ್ಲಿ ಕೆಲವನ್ನು ಎಲ್ಲಾ ಸಂದರ್ಭಗಳಲ್ಲೂ ಪರ್ಯಾಯವಾಗಿ ಬಳಸುವುದಕ್ಕೆ ಬರುತ್ತದೆ, ಕೆಲವರ ನಡುವೆ ಅರ್ಥವ್ಯತ್ಯಾಸಗಳು ಇರುವುದರಿಂದ ಅವುಗಳ ಬಳಕೆ ಸಂದರ್ಭಗಳನ್ನು ಹೊಂದಿಕೊಂಡಿರುತ್ತವೆ. ಪರ್ಯಾಯಪದಗಳ ಅರ್ಥಸಾಮ್ಯ ಹತ್ತಿರವಾದಲ್ಲಿ ಒಂದೇ ಪದವನ್ನು ಉಪಯೋಗಿಸಿ ಬೇಸರ ಬರುವಲ್ಲಿ ಅವು ಈ ಬೇಸರವನ್ನು ತೊಲಗಿಸುತ್ತವೆ. ಪರ್ಯಾಯಪದಗಳು ಕಡಿಮೆಯಿರುವ ಭಾಷೆಯಲ್ಲಿ ವೈವಿಧ್ಯವಿರದೆ ಏಕತಾನತೆ ಇರುತ್ತದೆ. ಭಟ್ ಅವರ ಪ್ರೋಗ್ರಾಮ್ ಪರ್ಯಾಯ ಪದಗಳನ್ನು ಹೆಚ್ಚಿಸುವುದಾದರೆ ಒಳ್ಳೆಯದು, ಕಡಿಮೆಗೊಳಿಸುವುದಾದರೆ ಅಲ್ಲ. + +ಕೆಲವೊಂದು ಕಡೆ ಪರ್ಯಾಯಪದಗಳ ನಡುವೆ ಪ್ರಮಾಣ ಅಥವ ಇನ್ನಿತರ ವ್ಯತ್ಯಾಸ ಇರಬಹುದು: ಪರ್ವತ ಎನ್ನುವುದು ಬೆಟ್ಟಕ್ಕಿಂತ ದೊಡ್ಡದು ಎನಿಸುತ್ತದೆ. ಆದ್ದರಿಂದ ಹಿಮಾಲಯ ಪರ್ವತ ಎನ್ನುವುದು ಹಿಮಾಲಯ ಬೆಟ್ಟ ಎನ್ನುವುದಕ್ಕಿಂತ ಚೆನ್ನಾಗಿರುತ್ತದೆ. ಪರ್ವತ, ಬೆಟ್ಟ, ಘಟ್ಟ, ಗುಡ್ಡ ಮುಂತಾದುವು ಹೀಗೆ ಯಾವ ಯಾವುದೋ ನವಿರಾದ ವ್ಯತ್ಯಾಸಗಳನ್ನು ಸೂಚಿಸುತ್ತವೆ. ಇವುಗಳಲ್ಲಿ ಯಾವುದನ್ನು ಕಿತ್ತುಹಾಕಿದರೂ ಈ ನವಿರು ಹೊರಟುಹೋಗುತ್ತದೆ. ಇಂಥ ಅನೇಕ ಪರ್ಯಾಯ ಪದಗಳಿವೆ. ಇವುಗಳಲ್ಲಿ `ಹೆಚ್ಚಿನ ಮೌಲ್ಯ’ ಸಂಸ್ಕೃತ ಮೂಲದವಕ್ಕೆ ಇರಬಹುದು. ಇದಕ್ಕೆ ನಾವು ಕರುಬುವ ಅಗತ್ಯವಿಲ್ಲ, ಆ ಪದಗಳೂ ನಮ್ಮವೇ ಎಂದುಕೊಂಡರೆ. ಹಾಗೂ ಈ ಪದಗಳು ವಿದ್ಯಾಕ್ಷೇತ್ರದಲ್ಲೇ ಹೆಚ್ಚು ಕಾಣಿಸಬಹುದು. ಹೇಗಿದ್ದರೂ ಸರ್ವಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯೆ ಸರ್ವರಿಗೂ ದೊರಕುವ ಕಾರಣ ಎಲ್ಲರೂ ಇವನ್ನು ಕಲಿತುಕೊಳ್ಳುತ್ತಾರೆ. ಆದ್ದರಿಂದ ಮುಂದೆ ಈ ಪದಗಳು ಕೆಲವೇ ಕೆಲವರ ಸೊತ್ತು ಎನಿಸುವುದಿಲ್ಲ. ಆದರೆ ವರ್ಗ ಸಮಾಜ ಮುಂದೆಯೂ ಹೀಗೇ ಇರುತ್ತದೆ ಎಂದಾದರೆ ನಾವು ಚಿಂತಿಸುವ ಅಗತ್ಯವಿದೆ. ವರ್ಗ ಭೇದವನ್ನು ತೊಡೆದುಹಾಕುವಲ್ಲಿ ಅಥವಾ ಕಡಿಮೆಮಾಡುವಲ್ಲಿ ಈ ಹಿತಮಿತವಾದ ಕನ್ನಡ ಸಹಕಾರಿಯಾಗಬಹುದು. + +ಗ್ರೀಕ್ ಮತ್ತು ಲ್ಯಾಟಿನ್ ಅಭಿಜಾತ ಭಾಷೆಗಳಿಂದ ಇಂಗ್ಲಿಷ್ ಪದಗಳನ್ನು ಸ್ವೀಕರಿಸಿದಾಗ ಉಂಟಾದ ಕೆಲವು ಸಮಸ್ಯೆಗಳನ್ನೂ ಯೆಸ್ಪರ್ಸನ್ ಚರ್ಚಿಸುತ್ತಾನೆ. ಇವುಗಳಲ್ಲಿ ಒಂದು ನಾವು ಈಗಾಗಲೇ ನೋಡಿದ ಸ್ಟ್ರೆಸ್ ಗೆ ಸಂಬಂಧಿಸಿದುದು: ಮೂಲ ಜರ್ಮಾನಿಕ್ ನಲ್ಲಿ ಸ್ಟ್ರೆಸ್ ದ್ವಿತೀಯ ಅಕ್ಷರದ ಮೇಲೆ ಬರುತ್ತಿತ್ತು; ಇದು ನೆನಪಿಟ್ಟುಕೊಳ್ಳುವುದಕ್ಕೆ ಸುಲಭ. ಆದರೆ ಗ್ರೀಕ್ ಮತ್ತು ಲ್ಯಾಟಿನ್ ನಲ್ಲಿ ಅದು ದ್ವಿತೀಯ ಅಕ್ಷರದ ಮೇಲೆಯೇ ಬರಬೇಕೆಂದೇನೂ ಇಲ್ಲ; ಕೆಲವು ಕಡೆ ಇನ್ನಿತರ ಅಕ್ಷರಗಳ ಮೇಲೂ ಬರುತ್ತದೆ. ಪದಗಳನ್ನು ಕೊಂಡಾಗ ಇಂಗ್ಲಿಷ್ ಇವುಗಳ ಸ್ಟ್ರೆಸ್ಸನ್ನು ಬದಲಾಯಿಸದೆ ಹಾಗೇ ಇಟ್ಟುಕೊಂಡಿತು. ಆದ್ದರಿಂದ ಇಂದು ಇಂಗ್ಲಿಷ್ ನಲ್ಲಿ ಸ್ಟ್ರೆಸ್ ವ್ಯವಸ್ಥೆ ಸುಲಭವಾಗಿಲ್ಲ; ಈ ವಿದೇಶೀಮೂಲದ ಪದಗಳು ಆಡುಗರಿಗೆ ಒಂದು ಸಮಸ್ಯೆಯೇ ಸರಿ. ಈ ಸಮಸ್ಯೆಯನ್ನು ನಾವು ಬೇಕಾದರೆ ಕನ್ನಡದಲ್ಲಿನ ಮಹಾಪ್ರಾಣಗಳ ಮತ್ತು ಋಕಾರ, ಷಕಾರದ ಸಮಸ್ಯೆಗಳಿಗೆ ಹೋಲಿಸಬಹುದು. + +ಗ್ರೀಕ್ ಮತ್ತು ಲ್ಯಾಟಿನ್ ನಿಂದ ಪಡೆದ ಪದಗಳು ಇಂಗ್ಲಿಷ್ ನ ಪರ್ಯಾಯಪದಗಳನ್ನು ಹೆಚ್ಚಿಸಿವೆ ಎನ್ನುತ್ತಲೇ ಯೆಸ್ಪರ್ಸನ್ ಇವುಗಳು ಕೆಲವೊಮ್ಮೆ ಮೂಲ ಇಂಗ್ಲಿಷ್ ಪದಗಳ ಅಪಮೌಲ್ಯಕ್ಕೆ ಕಾರಣವಾಗಿರುವುದನ್ನೂ ಉಲ್ಲೇಖಿಸುತ್ತಾನೆ; ಇದು ಭಟ್ ಅವರು ಹೇಳುವ ಕನ್ನಡದಲ್ಲಿನ `ಅತಿಸಂಸ್ಕೃತ’ ಸಮಸ್ಯೆಗೆ ಸಮನಾದುದು. ಯೆಸ್ಪರ್ಸನ್ ನ ಮಾತುಗಳು ಇವು: + +The worst thing, however, that can be said against the words that are occupying us here is their difficulty and the undemocratic character which is a natural outcome of their difficulty. A great many of them will never be used or understood by anybody that has not had a classical education. There are usually no association of ideas between them and the ordinary stock of words, and no likeness in root or in the formative elements to assist the memory. We have here none of those invisible threads to that knit words together in the human mind. Their great number in the language is therefore apt to form or rather to accentuate class divisions, so that a man’s culture is largely judged by the extent to which he is able correctly to handle these hard words in speech and in writing-certainly not the highest imaginable standard of a man’s worth. (p. 133) + +ಇಂಥ ಕಠಿಣ ಶಬ್ದಗಳಲ್ಲಿ ಈಗ ಚಾಲ್ತಿಯಲ್ಲಿಲ್ಲದ ಕೆಲವು ವಿದ್ವಾಂಸರಿಗೆ ಕೂಡಾ ಸರಿಯಾಗಿ ಅರ್ಥವಾಗುವಂತಿಲ್ಲ ಎಂದು ಯೆಸ್ಪರ್ಸನ್ ಅಡಿಟಿಪ್ಪಣಿಯಲ್ಲಿ ಸೇರಿಸುತ್ತಾನೆ. ಆದರೆ ವಿದೇಶೀಮೂಲದ ಪದಗಳ ಲೆಕ್ಕದಲ್ಲಿ ಜನಸಾಮಾನ್ಯರ ಬಳಕೆಯ cry ಅಥವಾ  crown  ಎಂಬ ಪದಗಳಿಗೆ ಬೇರೇ ಸ್ಥಾನವಿದೆ ಎನ್ನುತ್ತಾನೆ ಯೆಸ್ಪರ್ಸನ್, ಯಾಕೆಂದರೆ ಇಂಥವು ಚಾರಿತ್ರಿಕವಾಗಿ ಆಂಗ್ಲೋ-ಸಾಕ್ಸನ್ ಅಲ್ಲವಾದರೂ ಜನಮನದಲ್ಲಿ ದೇಸಿಯೆಂದೇ ಗುರುತಿಸಲ್ಪಡುತ್ತವೆ. + +ಹಳೆಯ ಸರಳ ಪತ್ರಿಕಾಶೈಲಿಗೂ ಆಧುನಿಕ ಪಂಡಿತ ಶೈಲಿಗೂ ಇರುವ ವ್ಯತ್ಯಾಸದತ್ತ ಅವನು ನಮ್ಮ ಗಮನ ಸೆಳೆಯುತ್ತಾನೆ. ಉದಾಹರಣೆಗೆ: + +ಹಳತು: A great crowd came to see.ಹೊಸತು: A vast concourse was assembled to witness.ಹಳತು:   Great fire + +ಹೊಸತು: Disastrous conflagration + +ಇಂಥ ವಿದ್ವತ್ ಪ್ರದರ್ಶನ ತಮಾಷೆಗೂ ಕಾರಣವಾಗುತ್ತದೆ ಎನ್ನುವುದಕ್ಕೆ ಅನೇಕ ನಿಜ ಸನ್ನಿವೇಶಗಳ ಉದಾಹರಣೆಗಳನ್ನು ಯೆಸ್ಪರ್ಸನ್ ಕೊಡುತ್ತಾನೆ. ಇಂಗ್ಲಿಷ್ ಜನರಿಗೆ ಈ ಸಮಸ್ಯೆಯ ಅರಿವಿದ್ದು ಅವರೂ ಭಾಷೆಯನ್ನು ಸರಳಗೊಳಿಸಲು ಆಗಿಂದಾಗ್ಗೆ ಯತ್ನಿಸುತ್ತಲೇ ಇದ್ದಾರೆ ಎನ್ನುವುದನ್ನೂ ಯೆಸ್ಪರ್ಸನ್ ಹೇಳುತ್ತಾನೆ. ಆಂಗ್ಲೋ-ಸ್ಯಾಕ್ಸನ್ ಪದಗಳಲ್ಲಿ ಕೆಲವೊಂದನ್ನು ಪಾರಿಭಾಷಿಕ ಪದಗಳಾಗಿ ಬಳಸಿದರೆ ಜನರಿಗೆ ಸುಲಭವಾಗಿ ಅರ್ಥವಾಗುತ್ತದೆ ಎಂದೂ ಹೇಳುತ್ತಾನೆ. ಎಂದರೆ ಭಟ್ ಅವರ ಆಶಯಗಳು ಕೆಲವು ಯೆಸ್ಪರ್ಸನ್ ನ ವಿಚಾರಕ್ಕೆ ಹತ್ತಿರವಾಗಿವೆ. ಆದರೆ ವ್ಯತ್ಯಾಸವೆಂದರೆ, ಯೆಸ್ಪರ್ಸನ್ ಗ್ರೀಕ್ ಮತ್ತು ಲ್ಯಾಟಿನ್ ಮೂಲದ ಈ ಅಭಿಜಾತ ಪದಗಳನ್ನು ಕಿತ್ತುಹಾಕಬೇಕೆಂದು ಹೇಳುವುದಿಲ್ಲ; ಹಾಗೆ ಮಾಡುವುದೀಗ ಸಾಧ್ಯವಿಲ್ಲ ಎನ್ನುವುದು ಅವನಿಗೆ ಗೊತ್ತಿದೆ. ಅವುಗಳನ್ನು ಸಂದರ್ಭ ಅರಿತು ಬಳಸಬೇಕು ಎನ್ನುವುದು ಅವನ ಸೂಚನೆ. ಇದೇ ಮಾತು ಕನ್ನಡಕ್ಕೂ ಸರಿ ಎನಿಸುತ್ತದೆ. + +ಈ ವಿಷಯದಲ್ಲಿ ಅವನ ಉಪಸಂಹಾರವನ್ನು ಇಲ್ಲಿ ಸ್ವಲ್ಪ ದೀರ್ಘವಾಗಿ ಎತ್ತಿಕೊಡುವುದು ಉಚಿತವಾದೀತು: + +To sum up: the classical words adopted since the Renaissance have enriched the English language very greatly and have especially increased its number of synonyms. But it is not every ‘enrichment’ that is an advantage, and this one comprises much that is really superfluous, or worse than superfluous, and has, moreover, stunted the growth of native formations. The international currency of many words is not a full compensation for the undemocratic character they give to the vocabulary. While the composite character of the language gives variety and to some extent precision to the style of the greatest masters, on the other hand, it encourages an inflated turgidity of style. Without siding completely with Milton’s teacher Alexander Gill, who says that classical studies have done the English language more harm than ever the cruelties of the Danes or the devastations of the Normans, we shall probably be near the truth if we recognize in the latest influence from the classical languages ‘something between a hindrance and a help’. (p. 139) + +ಯೆಸ್ಪರ್ಸನ್ ಒಬ್ಬ ಡೇನಿಷ್ ಆದ್ದರಿಂದಲೋ ಏನೋ ಅವನಿಗೆ ಇಂಗ್ಲಿಷ್ ಭಾಷೆಯನ್ನು ಸಮತೂಕದಲ್ಲಿ ನೋಡಲಿಕ್ಕೆ ಸಾಧ್ಯವಾಗಿದೆ. ಅವನ ಈ ಅಭಿಪ್ರಾಯಗಳು ಕನ್ನಡದ ಮಟ್ಟಿಗೂ ಸರಿಯೆನಿಸುತ್ತವೆ. ಈ ಸಮಚಿತ್ತ ಇಂದು ನಮಗೆ ಅಗತ್ಯವಾಗಿದೆ. + +ಯೆಸ್ಪರ್ಸನ್ ಹೇಳುವ ಪಾಂಡಿತ್ಯ ಪ್ರದರ್ಶನದ ಸಮಸ್ಯೆ ಯಾವಾಗ ಬರುತ್ತದೆ ಎಂದರೆ ಬರೆಯುವವನ ಅಥವ ಮಾತಾಡುವವನ ಉದ್ದೇಶ ವಿಷಯವಾಗಿರದೆ, ಪಂಡಿತನಂತೆ ತೋರಿಸಿಕೊಳ್ಳಬೇಕು ಎನ್ನುವ ಇರಾದೆಯಾದಾಗ. ಮಾತು ಬರಹ ವಿಷಯಕೇಂದ್ರಿತ ಆಗಿರಬೇಕು, ಸ್ವಕೇಂದ್ರಿತವಲ್ಲ. ವಿಷಯವೇ ನಿಮ್ಮ ಆಸಕ್ತಿಯಾದಾಗ ನಿಮಗೆ ಸಹಜವೆನಿಸುವ ಪದಗಳನ್ನೂ ವಾಕ್ಯಬಂಧಗಳನ್ನೂ ನೀವು ಆರಿಸಿಕೊಳ್ಳುತ್ತೀರಿ; ಅದರಲ್ಲಿ ಒಂದು ತರದ ಅನಿವಾರ್ಯತೆ ಇರುತ್ತದೆ. ಈ ಅನಿವಾರ್ಯತೆ ಇಲ್ಲದಿದ್ದಾಗಲೇ ಆಭಾಸ ಎನಿಸುವುದು. ಈ ಅನಿವಾರ್ಯತೆ ನಾವು ಎಲ್ಲಿ ಯಾವ ಮಟ್ಟದಲ್ಲಿ ಮಾತಾಡುತ್ತೇವೆ, ಬರಯುತ್ತೇವೆ ಎನ್ನುವುದನ್ನು ಹೊಂದಿಕೊಂಡಿರುತ್ತದೆ. + +ಒಳಭಾಷೆ ಹೊರಭಾಷೆ + +ಯು.ಆರ್. ಅನಂತಮೂರ್ತಿಯವರು `ಹಿತ್ತಿಲ ಭಾಷೆ,’ `ಚಾವಡಿ ಭಾಷೆ’ ಎಂದು ಕನ್ನಡ ಮತ್ತು ಇಂಗ್ಲಿಷ್ ನಡುವೆ ವ್ಯತ್ಯಾಸವೊಂದನ್ನು ಮಾಡಿಕೊಂಡಾಗ ಅವರ ಮಾತು ಕೆಲವು ವಲಯಗಳಲ್ಲಿ ಸ್ವಲ್ಪ ಅಚ್ಚರಿ ಉಂಟುಮಾಡಿತು. ಆದರೂ ಈ ವ್ಯತ್ಯಾಸದಲ್ಲಿ ಒಂದು ವಾಸ್ತವತೆ ಇದೆ ಎಂದು ನನಗನಿಸುತ್ತದೆ, ಕನ್ನಡ-ಇಂಗ್ಲಿಷ್ ದ್ವಂದ್ವಕ್ಕೆ ಸಂಬಂಧಿಸಿ ಮಾತ್ರವಲ್ಲ, ಕನ್ನಡಕ್ಕೆ ಮಾತ್ರವೇ ಸಂಬಂಧಿಸಿ ಕೂಡಾ. ಈ ವ್ಯತ್ಯಾಸವನ್ನು ನಾನು ಒಳಭಾಷೆ, ಹೊರಭಾಷೆ ಎಂದು ಕರೆಯುತ್ತೇನೆ. ಯಾವುದೇ ಹೊರ ಪ್ರಭಾವಕ್ಕೆ ಒಳಗಾದ ಜೀವಂತ ಭಾಷೆಯಲ್ಲೂ ಇಂಥ ಪ್ರಭೇದ ಸೂಕ್ಷ್ಮವಾಗಿಯಾದರೂ ಇರುತ್ತದೆ. ಕನ್ನಡಕ್ಕೆ ಸಂಬಂಧಿಸಿ ಹೇಳುವುದಾದರೆ, ಭಟ್ ಅವರು ಸೂಚಿಸುವ `ಕನ್ನಡದ್ದೇ ಆದ’ ಪದಗಳು ಕನ್ನಡದ ಒಳಭಾಷೆಗೆ ಸೇರಿದುವು, ಸಂಸ್ಕೃತ ಮೂಲದ ಪದಗಳು ಹೊರಭಾಷೆಗೆ ಸೇರಿದುವು. (ನೃಪತುಂಗ ಇದನ್ನೇ ದೇಸಿ ಮತ್ತು ಮಾರ್ಗ ಎಂದು ಶೈಲಿಗೆ ಹೊಂದಿಸಿ ಹೇಳಿದ.) ಈ ವ್ಯತ್ಯಾಸವನ್ನು ನಾವು ಅಕ್ಷರಶಃ ತೆಗೆದುಕೊಳ್ಳದೆ ನಮ್ಮ ಭಾವಲೋಕದ ಹಿನ್ನೆಲೆಯಾಗಿ ತೆಗೆದುಕೊಳ್ಳಬೇಕು, ಹಾಗೂ ಈ ದ್ವಂದ್ವಗಳು ಕಪ್ಪು-ಬಿಳುಪಿನಂತೆ ಯಾವಾಗಲೂ ಪರಸ್ಪರ ನಿರಾಕರಿಸುವಂಥವೂ ಅಲ್ಲ, ಎಣ್ಣೆ-ಸೀಗೆಯಂತೆ ವಿರೋಧಿಗಳೂ ಅಲ್ಲ. ಅದೊಂದು ವರ್ಣಸಂಕಿರಣದಂತೆ, ಒಂದಾಗಿದ್ದೂ ಭಿನ್ನ, ಭಿನ್ನವಾಗಿದ್ದೂ ಒಂದು. + +ಏನು ನಾನು ಹೇಳುತ್ತಿರುವುದು? ಇಷ್ಟೆ: ಅಚ್ಚಗನ್ನಡದ ಪದಗಳು, ಶೈಲಿ, ಗಾದೆಮಾತು, ನುಡಿಗಟ್ಟು ಮುಂತಾದುವು ನಮ್ಮ ಒಳಭಾಷೆಗೆ, ಎಂದರೆ ನಮ್ಮ ಜೀವಕ್ಕೆ ಅತ್ಯಂತ ಹತ್ತಿರವಾಗಿ ಇರುವಂಥವು, ಅವು ನಮ್ಮ ಕಿಬ್ಬೊಟ್ಟೆಗೆ, ಮರ್ಮಕ್ಕೆ, ರಹಸ್ಯಕ್ಕೆ ಸೇರಿದಂಥವು. ಸಂಸ್ಕೃತದಿಂದ ಪಡೆದ ಪದಗಳನ್ನು ನಾವಿನ್ನೂ ಆ ರೀತಿ ಸಂಪೂರ್ಣವಾಗಿ ಪರಿಗಣಿಸಿಲ್ಲ. ಭಟ್ ಅವರು ನೀಡುವ ದೃಷ್ಟಿಕೋನಕ್ಕಿಂತ ಬೇರೆಯಾದ ದೃಷ್ಟಿಕೋನ ಇದು. ಹೀಗೆ ನೋಡಿದಾಗ ನಮಗೆ ಯಾಕೆ ಪುಸ್ತಕ, ಶಾಲೆ, ಪರೀಕ್ಷೆ, ಅಧ್ಯಾಪಕ, ವಿದ್ಯಾರ್ಥಿ ಮುಂತಾದ ಪದಗಳು ಸಂಸ್ಕೃತಮೂಲದವು ಎನ್ನುವುದು ಗೊತ್ತಾಗುತ್ತದೆ. ಯಾಕೆಂದರೆ ಇವೆಲ್ಲ ನಮ್ಮದೇ ಮೂಲದಿಂದ ನೋಡಿದರೆ ಹೊರಭಾಷೆಗೆ ಸೇರಿದಂಥವು. ನಮ್ಮ `ಹೊರಗೆಲಸ’ಗಳಿಗೆಲ್ಲ ಹೊರಭಾಷೆಯ ಪದಗಳನ್ನು ಉಪಯೋಗಿಸುತ್ತೇವೆ: ಈ ಪದಗಳು ಇಂಥ ಹೊರಗೆಲಸಗಳ ಜತೆಗೇ ಬಂದವು ಕೂಡಾ. ಈಗಲೂ ಈ ಪದ್ಧತಿ ಮುಂದುವರಿಯುತ್ತಿದೆ. ನಮ್ಮ ವೈಚಾರಿಕ ಕೆಲಸಗಳಿಗೆ ಹೊರಭಾಷೆಯನ್ನೇ ಬಳಸುತ್ತೇವೆ; ಒಳಭಾಷೆಯನ್ನು ನಾವಿನ್ನೂ ನಮ್ಮ ಭಾವಲೊಕದ ಹಿತ್ತಿಲಾಗಿ, ಒಳಮನೆಯಾಗಿ, ಅಂತರಂಗವಾಗಿ ಇರಿಸಿಕೊಂಡಿದ್ದೇವೆ. ಹೊರಭಾಷೆಯೆಂದರೆ ಅದು ಪರಕೀಯವಾಗಿದೆ ಎಂದಲ್ಲ; ಹೊರಕಾರ್ಯಗಳಿಗೆ, ಸಾರ್ವಜನಿಕವಾಗಿ ಬಳಸುವ ಭಾಷೆ ಎಂದು ತಿಳಿಯಬೇಕು. + +ದೀರ್ಘ ಇತಿಹಾಸವಿರುವ ಯಾವುದೇ ಭಾಷೆಯಲ್ಲೂ ಈ ಒಳ-ಹೊರ ಭೇದಗಳು ಇದ್ದೇ ಇರುತ್ತವೆ: ಇಂಗ್ಲಿಷ್ ನಲ್ಲಿ ಆಂಗ್ಲೋ-ಸಾಕ್ಸನ್ (ಜರ್ಮಾನಿಕ್) ಮೂಲದ ಪದಗಳು ಅದರ ಒಳಭಾಷೆಗೆ ಸೇರಿದವು; ಗ್ರೀಕ್, ಲ್ಯಾಟಿನ್, ಫ್ರೆಂಚ್ ಮುಂತಾದ ಭಾಷೆಗಳಿಂದ ಸ್ವೀಕರಿಸಿದ ಪದಗಳು ಹೊರಭಾಷೆಗೆ ಸೇರಿದವು. ಆದ್ದರಿಂದಲೇ ಶಿಕ್ಷಣಮಾಧ್ಯಮದಲ್ಲಿ ಹಾಗೂ ಉನ್ನತಮಟ್ಟದಲ್ಲಿ ಹೊರಭಾಷೆಯ ಇಂಗ್ಲಿಷ್ ಬಳಕೆಯಾಗುತ್ತಿರುವುದು. + +ಒಳಭಾಷೆಯೊಂದು ಹೇಗೆ ಸಂಪೂರ್ಣವಾಗಿ ಒಳಸೇರಿರುವುದು ಸಾಧ್ಯ ಎನ್ನುವುದಕ್ಕೆ ಭಟ್ ಮತ್ತು ನನ್ನ ಮನೆಮಾತಾಗಿರುವ ದಕ್ಷಿಣ ಕನ್ನಡ ಕಡೆಯ ಹವ್ಯಕ ಒಂದು ದೊಡ್ಡ ಉದಾಹರಣೆ. ಇದು ಹವ್ಯಕರ ಅಂತರಂಗದ ಭಾಷೆ: ಎಷ್ಟರ ಮಟ್ಟಿಗೆ ಎಂದರೆ ಹವ್ಯಕರು ಇದನ್ನು ಹವ್ಯಕರಲ್ಲದವರ ಜತೆ ಮಾತಾಡುವುದಿಲ್ಲ. ಆದ್ದರಿಂದ ಹವ್ಯಕಸಮಾಜದ ಹೊರಗಿನ ಸ್ಥಳಗಳಲ್ಲಿ ಹವ್ಯಕರು ಇದನ್ನು ಬಳಸುವುದೂ ಇಲ್ಲ. + +ಈ ಹಿಂದೆಯೇ ಹೇಳಿದಂತೆ ಇದರ ಅರ್ಥ ಸಂಸ್ಕೃತಪದಗಳು ಕನ್ನಡ ಒಳಭಾಷೆಯನ್ನು ಸೇರಿಯೇ ಇಲ್ಲ ಎಂದಲ್ಲ. ಮತ್ತು ಸಮಾಜ ಹೆಚ್ಚೆಚ್ಚು ಗಣತಂತ್ರೀಯವಾದಂತೆ ಈ ಒಳ-ಹೊರ ಭಿನ್ನತೆಗಳು ಕಡಿಮೆಯಾಗಬಹುದು; ಆದರೆ ಅವು ಸಂಪೂರ್ಣ ಅಳಿಸಿಹೋಗುತ್ತವೆ ಎನ್ನಲಾಗದು. ಮನುಷ್ಯರಿಗೆ `ಸಮೂಹ’ ಕಲ್ಪನೆ ಮತ್ತು ಹಿತ್ತಿಲ ಕಲ್ಪನೆಗಳು ಇರುವ ತನಕ ಅವರು ಅದರೊಳಗೆ ಸಲ್ಲುವಂಥ ನುಡಿಯನ್ನು ಬೇರೆಯೇ ಆಗಿ ಇಟ್ಟುಕೊಳ್ಳುತ್ತಾರೆ. + +ಈ ನುಡಿಗಳು ಒಳಭಾಷೆಗೆ ಸೀಮಿತವಾಗಿರುವುದರಿಂದಲೇ ಅವನ್ನು ನಾವು ಸಾರ್ವಜನಿಕ ಕ್ಷೇತ್ರದಲ್ಲಿ ಬಳಸುವುದು ಕಡಿಮೆ; ಇದೇ ಕಾರಣ ಅವನ್ನು ಪಾರಿಭಾಷಿಕ ಪದಗಳಾಗಿ ಬಳಸಲೂ ಹಿಂಜರಿಯುತ್ತೇವೆ. ಆದ್ದರಿಂದಲೇ `ನುಡಿಮಾರು,’ `ಸೊಲ್ಲು,’ `ಕೇಳ್ವಿ’ ಮುಂತಾದ ಪದಗಳಿಗೆ ಅಲ್ಲಿ ಸದ್ಯ ಅವಕಾಶ ಕಡಿಮೆ. ಪಾರಿಭಾಷಿಕ ಪದಗಳಿಗೆ ಸಂಸ್ಕೃತಮೂಲದ ಯಾವುದೇ ಪದಗಳೂ ನಡೆಯುತ್ತವೆ ಎನ್ನುವವ ನಾನಲ್ಲ. ಎಂಜಿನಿಯರ್, ಡಾಕ್ಟರ್, ಪೊಲೀಸ್ ಮುಂತಾದ ಈಗಾಗಲೇ ಬಳಕೆಯಲ್ಲಿರುವ ಪದಗಳನ್ನು ತೆಗೆದುಹಾಕುವ ಅಗತ್ಯವಿಲ್ಲ; ಇದೇ ಮಾತು ಅನುವಾದ, ಭಾಷೆ, ಉದಾಹರಣೆ ಮುಂತಾದ ಪದಗಳಿಗೂ ಸರಿ. ಅವನ್ನು ಈಗಿರುವಂತೆಯೇ ಇಟ್ಟುಕೊಳ್ಳುವುದು ಒಳ್ಳೆಯದು. ಎಂದರೆ, ಹೊರಭಾಷೆ ಸ್ವಲ್ಪ `ವಿದೂರತೆ’ಯನ್ನು ಬಯಸುತ್ತದೆ. ನಮ್ಮ ಒಳನುಡಿಗಳನ್ನು ಒಮ್ಮೆಲೇ ಆ ಕಾರ್ಯಕ್ಕೆ ಬಳಸುವುದಕ್ಕೆ ಕಷ್ಟವಾಗುತ್ತದೆ, ಯಾಕೆಂದರೆ ಜನ ಅದನ್ನು ಸ್ವೀಕರಿಸುವುದಿಲ್ಲ. + +ಇದೇ ಮಾತು ಶೈಕ್ಷಣಿಕ ಕನ್ನಡಕ್ಕೂ ಅನ್ವಯವಾಗುತ್ತದೆ: ಯಾಕೆಂದರೆ ನಾವು ಒಪ್ಪಲಿ ಬಿಡಲಿ, ಶಿಕ್ಷಣವೇ ಒಂದು ವಿದೂರತೆ ಅರ್ಥಾತ್ ಏಲಿಯನೇಶನ್ (alienation). ಇಂಗ್ಲಿಷ್ ನ ನೇಚರ್ (nature) ಮತ್ತು ನರ್ಚರ್ (nurture) ವಿಭಿನ್ನತೆ ಇದನ್ನು ಸೂಚಿಸುತ್ತದೆ. ಹಾಗಿದ್ದರೂ ಶೈಕ್ಷಣಿಕ ಭಾಷೆ ಜನಭಾಷೆಗೆ ಆದಷ್ಟೂ ಹತ್ತಿರ ಇರಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೆ ಅದು ಸಂಪೂರ್ಣವಾಗಿ ಒಳಭಾಷೆಯಾಗಿರಬೇಕು ಎನ್ನುವುದನ್ನು ಒಪ್ಪುವುದಿಲ್ಲ: ಒಳಭಾಷೆ, ಹೊರಭಾಷೆಗಳ ನಡುವೆ ಹೊಕ್ಕುಬಳಕೆ ಬೇಕು, ಆದರೆ ಒಂದು ಇನ್ನೊಂದರ ಅಗತ್ಯವನ್ನು ಪೂರೈಸಲಾರದು. ಈ ಹೊಕ್ಕುಬಳಕೆಗೆ ಎರಡೂ ಕಡೆಯಿಂದ ಪ್ರಯತ್ನ ಅಗತ್ಯ: `ಅತಿಸಂಸ್ಕೃತ’ವನ್ನು ತೊರೆದಂತೆಯೇ `ಅತಿಕನ್ನಡ’ವನ್ನೂ (ಎಂದರೆ ಹಳೆಕನ್ನಡವನ್ನು) ಕಮ್ಮಿಮಾಡುವುದು. ಎರಡನ್ನೂ ಹಿತಮಿತವಾಗಿ ಬಳಸುವುದು. ನನ್ನ ಮನಸ್ಸಿನಲ್ಲಿರುವುದು ಹೆಚ್ಚೊಂದು `ಪೊಲೀಸಿಂಗ್’ ಇರದ ಮಿಶ್ರಕನ್ನಡ. ಸಹಸ್ರ ವರ್ಷಗಳ ಹಿಂದೆ ನೃಪತುಂಗ ಹೇಳಿದ್ದೂ ಇದೇ ಎಂದು ನನ್ನ ಗ್ರಹಿಕೆ. + +ನುಡಿ ಮತ್ತು ಬರಹ + +ಒಂದೆಡೆ ಕನ್ನಡದ ಜನಸಮೂಹಕ್ಕೆಲ್ಲಾ ಅನ್ವಯವಾಗುವಂಥ `ಸಂಸ್ಕೃತರಹಿತ’ ಕನ್ನಡವನ್ನು ಶಿಕ್ಷಣಮಾಧ್ಯಮ ಮಾಡಬೇಕೆಂಬ ಭಟ್ ಅವರು ಅದೇ ಉಸಿರಲ್ಲಿ ಪ್ರಾದೇಶಿಕ ಭಿನ್ನತೆಗಳ ಬಗ್ಗೆಯೂ ಮಾತಾಡುತ್ತಾರೆ. ಕನ್ನಡ ಪತ್ರಿಕೆಗಳು ಆಯಾ ಪ್ರದೇಶಗಳ  ಉಪಭಾಷೆಗಳಲ್ಲಿ ಆವೃತ್ತಿಗಳನ್ನು ತರಬೇಕೆನ್ನುವುದು ಅವರ ಆಶಯವಿರುವಂತೆ ಅನಿಸುತ್ತದೆ. ಪ್ರಾದೇಶಿಕ ಭಿನ್ನತೆಗಳ ಜತೆಗೇ ವರ್ಗಭಿನ್ನತೆಗಳೂ ಸೇರಿದರೆ ಹಲವು ಕನ್ನಡಗಳಾಗುತ್ತವೆ. ಹಾಗಿದ್ದರೆ ಶಾಲೆ ಕಾಲೇಜುಗಳಲ್ಲಿ ಯಾವ ತರದ ಕನ್ನಡ ಇರಬೇಕು ಎನ್ನುವ ಪ್ರಶ್ನೆ ಏಳುತ್ತದೆ. ಸಂಸ್ಕೃತ ಪದಗಳನ್ನು ಕಿತ್ತುಹಾಕಿದ ಮಾತ್ರಕ್ಕೆ ಈ ಪ್ರಶ್ನೆ ಇಲ್ಲದಾಗುವುದಿಲ್ಲ. + +ಪ್ರಾದೇಶಿಕ ಪ್ರಭೇದಗಳ ಬಗ್ಗೆ ಎಲ್ಲರಿಗೂ ಗೌರವಾದರ ಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಭಿನ್ನತೆಗಳಿದ್ದಲ್ಲೆಲ್ಲಾ ವರ್ಗಭಿನ್ನತೆಗಳೂ ಇವೆ. ಈ ಕೆಲವೇ ದಶಕಗಳ ಹಿಂದೆ ಒಂದು ಪ್ರದೇಶದವರು ಇನ್ನೊಂದು ಪ್ರದೇಶದವರ ಮಾತನ್ನು, ಒಂದು ವರ್ಗದವರು ಇನ್ನೊಂದು ವರ್ಗದವರ ಮಾತನ್ನು ಗೇಲಿ ಮಾಡುವುದಿತ್ತು. ಇಂಥ ಮನೋಧರ್ಮ ಈಗಲೂ ಕೆಲವರಲ್ಲಿ ಇದ್ದೀತು. ಆದರೆ ಸಮಾಜ ಹೆಚ್ಚೆಚ್ಚು ಗಣತಂತ್ರೀಯವಾಗುತ್ತ ಹೋದಂತೆ, ಚಲನೆ, ಸಂಹವನ, ಬೆರಕೆ ಜಾಸ್ತಿಯಾದಂತೆ ಈ ಪ್ರಬೇಧಗಳೂ ಕಡಿಮೆಯಾಗುತ್ತವೆ, ಇವುಗಳ ಕುರಿತಾದ ಪೂರ್ವಗ್ರಹಗಳೂ ಇಲ್ಲದಾಗುತ್ತವೆ. ಸಂಪರ್ಕಹೀನತೆ ಮತ್ತು ಸಂಸರ್ಗಹೀನತೆಗಳೇ ಮುಖ್ಯವಾಗಿ ಪೂರ್ವಗ್ರಹಗಳಿಗೆ ಕಾರಣ. + +ಪ್ರಾದೇಶಿಕ ಉಪಭಾಷೆಗಳನ್ನು ಇಷ್ಟಪಡುವವರಲ್ಲಿ ನಾನೂ ಒಬ್ಬ. ಕೆಳವರ್ಗಗಳ ಕನ್ನಡದ ಸೊಗಸನ್ನೂ ನಾನು ಮೆಚ್ಚುತ್ತೇನೆ. ಭಟ್ ಅವರು ಹೆಸರಿಸುವ ಕೆಲವು ಲೇಖಕರು ನನ್ನ ಮಿತ್ರರು, ಅವರ ಕೃತಿಗಳನ್ನು ನಾನು ಓದಿದ್ದೇನೆ, ಮೆಚ್ಚಿದ್ದೇನೆ ಮತ್ತು ಅವುಗಳ ಕುರಿತು ಬರೆದಿದ್ದೇನೆ ಸಹಾ. ಈ ನನ್ನ ಒಲವೇನೂ ಈಚಿನದಲ್ಲ. ಆಳುವ ಭಾಷೆ (=ವರ್ಗ) ಹೇಗೆ ಬುಡಕಟ್ಟಿನ ಜನರ ಮಾತನ್ನು ಸದ್ದಿಲ್ಲದೆ ಮಾಡಬಹುದು ಎನ್ನುವುದನ್ನು ಸಾಂಕೇತಿಕವಾಗಿ ಚಿತ್ರಿಸುವ ಬ್ರಿಟಿಷ್ ನಾಟಕಕಾರ ಹೆರಾಲ್ಡ್ ಪಿಂಟರ್ ನದೊಂದು ನಾಟಕವಿದೆ: The Mountain Languageಕೆಲವು ವರ್ಷಗಳ ಹಿಂದೆ ಈ ನಾಟಕವನ್ನೋದಿ ಪ್ರಭಾವಿತನಾಗಿ ನಾನಿದನ್ನು ನನ್ನ `ಸಾಮಾಜಿಕ ಭಾಷಾವಿಜ್ಞಾನ’ ಕೋರ್ಸಿನ ಉಪಪಠ್ಯವಾಗಿ ಉಪಯೋಗಿಸಿದ್ದಿದೆ. ಯಾವುದೇ ಭಾಷೆಯನ್ನೂ ಇಡಿಯಾಗಿ  ಅರಿಯಬೇಕೆನ್ನುವವರು ಅದನ್ನು ಬಿಡಿಬಿಡಿಯಾಗಿಯೊ ಅರಿಯಬೇಕು. ಭಾಷಾವಿಜ್ಞಾನದ ಮೊದಲ ಪಾಠವೇ ಭಾಷೆಯೆನ್ನುವುದು ಇಲ್ಲ, ಇರುವುದು ಉಪಭಾಷೆಗಳು ಎನ್ನುವುದು. ಯಾಕೆಂದರೆ ಭಾಷೆಯೆನ್ನುವುದೊಂದು ಅಮೂರ್ತ ಕಲ್ಪನೆ. ಇಂಗ್ಲಿಷ್ ಎಲ್ಲಿದೆ? ಹಿಂದಿ ಎಲ್ಲಿದೆ? ಕನ್ನಡ ಎಲ್ಲಿದೆ? ಹುಡುಕಿದರೆ ನಮಗೆ ಸಿಗುವುದು ಪ್ರಾದೇಶಿಕ ಮೂರ್ತರೂಪಗಳು ಮಾತ್ರ. ಇಲ್ಲೂ ಕೆಲವು ವಿಶೇಷಗಳಿವೆ: ಗಡಿಪ್ರಾಂತದ ಕನ್ನಡಗಳು ಒಳಪ್ರಾಂತದ ಕನ್ನಡಗಳಿಗಿಂತ ಭಿನ್ನವಾಗಿರುತ್ತವೆ. ಗಡಿಪ್ರಾಂತದ ಕನ್ನಡಗಳಲ್ಲಿ ತಮಿಳು, ಮಲೆಯಾಳ, ತೆಲುಗು, ಮರಾಠಿ ಪ್ರಭಾವಗಳಿರುತ್ತವೆ. ಇನ್ನು ಕರ್ನಾಟಕದ ಒಟ್ಟಾರೆ ಜನಸಂಖ್ಯೆಯನ್ನು ತೆಗೆದುಕೊಂಡರೆ `ಅಚ್ಚಕನ್ನಡಿಗರು’ ಬಹುಶಃ ಅಲ್ಪಸಂಖ್ಯಾತರಾಗುತ್ತಾರೆ; ಹಲವಾರು ಕನ್ನಡಿಗರ ಮನೆಮಾತು ಕನ್ನಡವೇ ಅಲ್ಲ! ಆದ್ದರಿಂದಲೇ `ಕನ್ನಡ’ ಕನ್ನಡವೇ ಆಗಿರದೆ `ಕನ್ನಡಂಗಳ್’ ಆಗಿರುವುದು. ಕನ್ನಡದ ಯಾವುದೇ ಪ್ರಾದೇಶಿಕ ಪ್ರಭೇದವನ್ನು ಶಿಕ್ಷಣ ಮಾಧ್ಯಮವಾಗಿ ಆರಿಸಿಕೊಂಡರೂ ಉಳಿದವನ್ನು ಬಿಟ್ಟುಬಿಡಬೇಕಾಗುತ್ತದೆ. ಬರೇ ಮಹಾಪ್ರಾಣಗಳನ್ನು ಮತ್ತು ಷಕಾರಾದಿಗಳನ್ನು ಕೈಬಿಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. + +ಆದ್ದರಿಂದ ಬರಹದ ಭಾಷೆ (ಶಿಕ್ಷಣಮಾಧ್ಯಮದ ಹಾಗೂ ಉನ್ನತ ಮಟ್ಟದ ಭಾಷೆ) ನಿಜದಲ್ಲಿ ಯಾರೂ ಮನೆಯಲ್ಲೋ ಬೀದಿಯಲ್ಲೋ ಮಾತಾಡುವಂತೆ ಇರದಿದ್ದರೆ ಅದೊಂದು ದೊಡ್ಡ ವಿಷಯವಲ್ಲ. ಲೋಕದ ಎಲ್ಲಡೆಯೂ ಹೀಗೇ ಇರುತ್ತದೆ. ಯಾಕೆಂದರೆ ಅದೊಂದು `ಅಮೂರ್ತತೆ’, ಅಬ್ ಸ್ಟ್ರಾಕ್ಷನ್, ಆದರ್ಶ. ಯಾವುದೇ ಭಾಷೆಯನ್ನೂ ಶಿಕ್ಷಣಮಾಧ್ಯಮಕ್ಕೆ ಆರಿಸಿಕೊಂಡಾಗ ಅದು ಅಕ್ಷರಶಃ ಅರ್ಥದಲ್ಲಿ `ಸಂಸ್ಕೃತ’ ಆಗುತ್ತದೆ (ಸಂಸ್ಕೃತ ಎಂದರೆ ಭಟ್ಟಿಯಿಳಿಸಿಕೊಂಡದ್ದು, ಪರಿಷ್ಕರಿಸಿದ್ದು ಎಂಬ ಅರ್ಥ). ಹಾಗೆಂದು ಅದು ಯಾರಿಗೂ ಅರ್ಥವಾಗದ ವಿಚಿತ್ರ ಪ್ರಭೇದವೂ ಅಲ್ಲ, ಆಗಿರಬಾರದು. ಯಾವುದೇ ಉಪಭಾಷೆಯನ್ನು ನಾವು ಶಿಕ್ಷಣ ಮಾಧ್ಯಮವಾಗಿ ತೆಗೆದುಕೊಂಡಾಗಲೂ ಅದು ಆವಾಗಲೇ ತನ್ನ ಸಂದರ್ಭದಿಂದ ದೂರ ಬರುತ್ತದೆ: ಯಾಕೆಂದರೆ ಶಿಕ್ಷಣಭಾಷೆ ಅನೇಕ ಜ್ಞಾನಶಾಖೆಗಳನ್ನು ನಿಭಾಯಿಸಬೇಕಾಗುತ್ತದೆ. + +ಶಾಸ್ತೀಯ ಭಾಷೆ, ಶಾಸ್ತ್ರಭಾಷೆ, ಸಾಹಿತ್ಯಭಾಷೆ + +ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಮನ್ನಣೆಯೇನೋ ಸಿಕ್ಕಿತು; ಇದೊಂದು ರೀತಿಯ `ಕನ್ನಡ ರಾಷ್ಟ್ರೀಯತೆ’ಯ ಫಲ. ಆದರೆ ಕನ್ನಡ ಶಾಸ್ತ್ರೀಯ ಭಾಷೆ ಎಂದು ಹಿಂದಕ್ಕೆ ಹೋಗುವುದಲ್ಲ, ಕನ್ನಡ `ಶಾಸ್ತ್ರಭಾಷೆ’ಯೂ ಆಗಬೇಕಾಗುತ್ತದೆ. ಶಾಸ್ತ್ರಭಾಷೆಯೆಂದರೆ ಅದು ಶಿಕ್ಷಣದ ಭಾಷೆ ಎಂದು ಅರ್ಥ. ಹಾಗೆಂದು ಪ್ರಾಥಮಿಕ ಹಂತದಲ್ಲೇ ಉನ್ನತಮಟ್ಟದ ಕನ್ನಡವನ್ನು ಬಳಸಬೇಕು ಎಂದು ಹೇಳುತ್ತಿಲ್ಲ. ಆದರೆ ಅಂತಿಮ ಗುರಿ ಅದಾಗಿರಬೇಕು. ಆರಂಭದಲ್ಲೇ ಇದಕ್ಕೆ ಸಿದ್ಧತೆ ಮಾಡಿಕೊಳ್ಳದಿದ್ದರೆ ಇದು ಕೈಗೂಡದು. + +ಸಾಹಿತ್ಯದಲ್ಲಿ ಉಪಭಾಷೆಗಳು ಸಾಧ್ಯವಿರುತ್ತ ಶಿಕ್ಷಣದಲ್ಲಿ ಯಾಕೆ ಸಾಧ್ಯವಿಲ್ಲ ಎಂದು ಕೇಳುವವರಿದ್ದಾರೆ; ಭಟ್ ಅವರು ಆ ಪ್ರಶ್ನೆ ಕೇಳದಿದ್ದರೂ ಅವರ ವಾದದ ಹಿಂದೆ ಆ ನಿಲುವು ಇದೆ. ದೇವನೂರು ಮಹಾದೇವ, ಕುಂವಿ, ರಾಘವೇಂದ್ರ ಪಾಟೀಲ, ಕವಿ ಸಿದ್ಧಲಿಂಗಯ್ಯ ತಮ್ಮ ಕೃತಿಗಳಲ್ಲಿ ಬಳಸುವ ಕನ್ನಡವನ್ನು ಯಾಕೆ ಶಿಕ್ಷಣಮಾಧ್ಯಮವಾಗಿ ಮಾಡಬಾರದು ಎನ್ನುವುದು ಈ ಪ್ರಶ್ನೆ. ಈ ಭಾಷೆಗಳನ್ನು ಶಾಲೆಕಾಲೇಜುಗಳಲ್ಲಿ ಮಾತಿನಲ್ಲಿ ಬಳಸಬಾರದು ಎಂದೇನೂ ಇಲ್ಲ. ಆದರೆ ಪಠ್ಯಮಾಧ್ಯಮವಾಗಿ ಬಳಸುವುದು ಸಾಧ್ಯವೇ? ಅಮೇರಿಕನ್ ಕತೆಗಾರ ಮಾರ್ಕ್ ಟ್ವೇನ್ ನ ಬರಹಗಳು ಲೋಕಪ್ರಸಿದ್ಧ. ಅವನ Adventures of Hucklebury Finn ಎಂಬ ಕಾದಂಬರಿ ಒಂದು ಆಧುನಿಕ ಕ್ಲಾಸಿಕ್. ಈ ಇಡೀ ಕಾದಂಬರಿಯ ನಿರೂಪಣೆ ಒಂದು ಅಮೇರಿಕನ್ ಇಂಗ್ಲಿಷ್ ಉಪಭಾಷೆಯಲ್ಲಿದೆ. ಹಾಗೂ ಕೃತಿಯಲ್ಲಿ ಮಾರ್ಕ್ ಟ್ವೇನ್ ಮಿಸ್ಸಿಸ್ಸಿಪಿ ನದಿಯ ಉದ್ದಕ್ಕೂ ಕಾಣಿಸುವ ಇತರ ಐದಾರು ಉಪಭಾಷೆಗಳನ್ನು ತರುತ್ತಾನೆ; ಸೂಕ್ಷ್ಮವಾಗಿ ಓದಿದವರಿಗೆ ಇವುಗಳ ವ್ಯತ್ಯಾಸ ಗೊತ್ತಾಗುತ್ತದೆ. ಮಾರ್ಕ್ ಟ್ವೇನ್ ಸ್ಪೆಲ್ಲಿಂಗ್ ನಲ್ಲಿ ವ್ಯತ್ಯಾಸ ತಂದು ಆದಷ್ಟೂ ಮಟ್ಟಿಗೆ ಈ ಉಪಭಾಷೆಗಳನ್ನು ಧ್ವನಿಸಲು ಯತ್ನಿಸುತ್ತಾನೆ. `ಹಕ್ಲ್ ಬರಿ ಫಿನ್’ನ ಮೆಚ್ಚದ ಓದುಗರೇ ಇಲ್ಲ ಎನ್ನಬಹುದು. ನಾನಂತೂ ಅದಕ್ಕೆ ಮಾರುಹೋಗಿದ್ದೇನೆ. ಆದರೂ ಅದರಲ್ಲಿ ಬರುವ ಯಾವುದೇ ಉಪಭಾಷೆಯೂ ಅಮೇರಿಕದಲ್ಲಾಗಲಿ ಇನ್ನೆಲ್ಲಿಯೇ ಆಗಲಿ ಶಿಕ್ಷಣಮಾಧ್ಯಮವಾಗಿ ಬಂದಿಲ್ಲ. + +ಕಾರಣ ಸ್ಪಷ್ಟ. ಕತೆ ಕಾದಂಬರಿಗಳು ಇದ್ದುದನ್ನು ಇದ್ದಹಾಗೆ `ಚಿತ್ರಿಸಲು’ ಪ್ರಯತ್ನಿಸುತ್ತವೆ. ಆದ್ದರಿಂದ ಅವುಗಳ ಭಾಷೆಗೆ ಸಂದರ್ಭ ಬದ್ಧತೆ, ಸ್ಥಳೀಯತೆ, ಸ್ವಕೀಯತೆ ಮುಂತಾದ ಗುಣಗಳು ಅಗತ್ಯವಾಗುತ್ತವೆ. ಆದರೆ ಶಿಕ್ಷಣಭಾಷೆ ಒಂದು ತರದ ಪ್ರಭಾಷೆ (metalanguage), ಅದು ಇತರೆಲ್ಲ ಸಂಗತಿಗಳ ಬಗ್ಗೆ ವೈಚಾರಿಕವಾಗಿ ಹೇಳುವಂಥದು; ಯಾವುದನ್ನೂ ಚಿತ್ರಿಸುವಷ್ಟಕ್ಕೆ ಸೀಮಿತವಾಗುವುದಿಲ್ಲ, ಎಲ್ಲವನ್ನೂ ವಿವರಿಸುತ್ತದೆ, ವಿಮಶರ್ಿಸುತ್ತದೆ, ಅನ್ವೇಷಿಸುತ್ತದೆ. ಭಟ್ ಅವರಾಗಲಿ ಇನ್ನು ಯಾರೇ ಆಗಲಿ, ಕನ್ನಡವನ್ನು ಶಿಕ್ಷಣಕ್ಕೆ ರೂಪಿಸುವಾಗ ಅವರು ಅದನ್ನು ಸಶಕ್ತಗೊಳಿಸಬೇಕಾಗುತ್ತದೆ; ಹೀಗೆ ಮಾಡುತ್ತಲೇ ಅದು ಸಾಮಾನ್ಯಜನಪದದಿಂದ ಸ್ವಲ್ಪಮಟ್ಟಿಗೆ ದೂರವಾಗಿಯೂ ಆಗುತ್ತದೆ. ಈ ತರ್ಕದಿಂದ ಯಾರೂ ತಪ್ಪಿಸಿಕೊಳ್ಳಲಾರರು. + +ಓಟ್ಟೋ ಯೆಸ್ಪರ್ಸನ್ ಇಂಗ್ಲಿಷ್ ನಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಪದಗಳ ಅತಿ ಬಳಕೆಯ ಒಲವು ಮತ್ತು ಅದರೆ ದುಷ್ಪರಿಣಾಮಗಳ ಕಡೆ ನಮ್ಮ ಗಮನ ಸೆಳೆದಿರುವುದನ್ನು ಈಗಾಗಲೇ ನೋಡಿದ್ದೇವೆ. ಆದರೆ ಅವನು ಈ ಪದಗಳ ಹಿತಮಿತವಾದ ಮಿಶ್ರಣ ಇಂಗ್ಲಿಷ್ ಗೆ ಬೇಡ ಎಂದು ಹೇಳುವುದಿಲ್ಲ; ಬದಲು ಅವನು ಅಂಥದೇ ಇಂಗ್ಲಿಷ್ ಬೇಕೆನ್ನುವಂತೆ ಕಾಣಿಸುತ್ತದೆ. ಅವನದೇ ಇಂಗ್ಲಿಷ್ ಬರಹದಲ್ಲಿ ಇದನ್ನು ಕಾಣುತ್ತೇವೆ. ಉದಾಹರಣೆಗೆ,Growth and Structure of the English Languageಸುರುವಾಗುವುದು ಹೀಗೆ: + +It will be my endeavour in this volume to characterize the chief peculiarities of the English language, and to explain the growth and significance of those features in its structure which have been of permanent importance”. (p.1) + +ಈ ವಾಕ್ಯದಲ್ಲಿ ಬರುವ endeavour, volume, characterize, peculiarities, language, explain, significance, features, structure, permanent, importance ಎಲ್ಲವೂ ಲ್ಯಾಟಿನ್ ಮೂಲದವು. ಎಂದರೆ ಏನರ್ಥ? ಯೆಸ್ಪರ್ಸನ್ ಖುದ್ದಾಗಿ ಲ್ಯಾಟಿನ್ ಇಂಗ್ಲಿಷ್ ಮೋಹಿಯೇ? ಖಂಡಿತಾ ಅಲ್ಲ. ಈ ಸಂದರ್ಭದಲ್ಲಿ ಈ ಪದಗಳು ಅಗತ್ಯವಿವೆ, ಹಾಗೂ ಇವು ಶೈಕ್ಷಣಿಕ ಇಂಗ್ಲಿಷ್ನಲ್ಲಿ ಬಳಕೆಯಾಗಿಯೂ ಇವೆ. ಈ ಹಿಂದೆ ಹೇಳಿದಂತೆ, ವಿಷಯಕೇಂದ್ರಿತವಾಗಿ ಬರೆಯುವವ ಯಾವ `ಅತಿ’ಯನ್ನೂ ಮಾಡುವುದಿಲ್ಲ; ಸ್ವಕೇಂದ್ರಿತವಾದವ ಅತಿಯನ್ನು ಮಾಡುತ್ತಾನೆ. ಯೆಸ್ಪರ್ಸನ್ ಈ ಮೊದಲ ವರ್ಗಕ್ಕೆ ಸೇರಿದವ; ಆದ್ದರಿಂದ ಅವನ ಶೈಲಿ ಲ್ಯಾಟಿನ್ ಮಯವೆಂದು ನಮಗೆ ಅನಿಸುವುದಿಲ್ಲ. ಬದಲು ಈ ಲ್ಯಾಟಿನ್ ಪದಗಳನ್ನು ಬಳಸಬಾರದು ಎಂದು ಅವನಿಗೆ ನಿರ್ದೇಶಿಸಿದರೆ ಅವನು ಬರಯುವುದನ್ನೇ ನಿಲ್ಲಿಸುತ್ತಾನೆ. + +ಈಗ ಷ. ಶೆಟ್ಟರ್ ಅವರ ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿಯಿಂದ ಒಂದು ಉದಾಹರಣೆಯನ್ನು ಎತ್ತಿಕೊಳ್ಳುತ್ತೇನೆ: + +ಸ್ಥಳಮಾಹತ್ಮೆ, ಪುರಾಣ, ಐತಿಹ್ಯ, ದಂತಕತೆಗಳನ್ನು ಅಕ್ಷರಶಃ ನಂಬುವುದು ಎಷ್ಟು ಅಪಾಯಕಾರಿಯೋ ಅವನ್ನು ಸಂಪೂರ್ಣವಾಗಿ ಉಪೇಕ್ಷಿಸುವುದೂ ಅಷ್ಟೇ ದುರದೃಷ್ಟಕರ. ಇವುಗಳನ್ನು ಸರಿಯಾಗಿ ದುಡಿಸಿಕೊಳ್ಳುವ ಸಾಮರ್ಥ್ಯದ ಮೇಲೆ ಇತಿಹಾಸಕಾರನ ನೈಪುಣ್ಯ ನಿರ್ಧಾರವಾಗುವುದರಿಂದ ಅವನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಳ್ಳಬೇಕಾಗುವುದು. ಇದು ಏನೇ ಇರಲಿ, ಐತಿಹ್ಯಗಳೂ ಇತಿಹಾಸ ರಚನೆಗೆ ಒಂದು ಬಗೆಯ ಅಮೂಲ್ಯ ಆಕರಗಳನ್ನು ಒದಗಿಸುವುವು ಎಂಬುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಇದನ್ನು ವಿಜ್ಞಾನಿಗಳು ಒಪ್ಪಬಹುದು ಇಲ್ಲವೇ ಒಪ್ಪದಿರಬಹುದು” (ಷ. ಶೆಟ್ಟರ್, ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ. ಬೆಂಗಳೂರು: ಅಭಿನವ ಪ್ರಕಾಶನ, 2007, ಪು. 64). + +ಇದರಲ್ಲಿ ಸಂಸ್ಕೃತ ಮೂಲದ ಪದಗಳೆಷ್ಟು, ಅಚ್ಚಗನ್ನಡದವೆಷ್ಟು ಎಂದು ಲೆಕ್ಕ ಹಾಕುವ ಕೆಲಸವನ್ನು ನಾನು ಓದುಗರಿಗೆ ಬಿಟ್ಟುಬಿಡುತ್ತೇನೆ. ಶೆಟ್ಟರ್ ಬರೆಯುವಾಗ ಬಹುಶಃ ಅವರು ಇದನ್ನೆಲ್ಲ ಎಣಿಸಿ ಬರೆದದ್ದಲ್ಲ; ಅವರ ಮುಂದೆ ಅವರನ್ನು ಆಕಷರ್ಿಸಿದ ವಿಷಯವೊಂದಿತ್ತು, ಅವರ ಕನ್ನಡದಲ್ಲಿ ಈ ಕುರಿತು ಬರೆಯಲು ಅವರಿಗೆ ಸವಲತ್ತೂ ಇತ್ತು. ಕನ್ನಡ ಕಲಿತ ಯಾವನಿಗೂ ಶೆಟ್ಟರ್ ಇಲ್ಲಿ ಹೇಳುತ್ತಿರುವುದೇನು ಎಂದು ಅರ್ಥವಾಗದೆ ಇರದು. ಆದರೆ ಭಟ್ ಅವರ `ಪೊಲೀಸಿಂಗ್’ ನಡೆದರೆ ಇಂಥ ಕನ್ನಡವನ್ನೇ ಎತ್ತಿ ಹೊರಗೆ ಹಾಕಬೇಕಾಗುತ್ತದೆ! ಈ ರೀತಿ ಬರೆಯುವುದು ಕನ್ನಡವಲ್ಲ ಎಂದಾದರೆ ಇನ್ನು ಯಾವುದು ಕನ್ನಡವೋ ನನಗೆ ತಿಳಿಯದು. + +ನುಡಿದಂತೆ ಬರೆ, ಬರೆದಂತೆ ನುಡಿ? + +ಓದುವ ಹಾಗೆ ಬರೆಯಬೇಕು, ಬರೆದ ಹಾಗೆ ಓದಬೇಕು ಎನ್ನುವ ಭಟ್ ಅವರ ಆಗ್ರಹದಲ್ಲಿ ನುಡಿ ಮತ್ತು ಬರಹದಲ್ಲಿ ಸಂಪೂರ್ಣ ಅಭೇದ ಕಲ್ಪಿಸುವ ಆಶಯವಿದೆ. ಬರಹವಿರುವ ಯಾವ ಭಾಷೆಯಲ್ಲೂ ಇದು ಸಾಧ್ಯವಾಗಿಲ್ಲ, ಆಗುವುದೂ ಇಲ್ಲ. ಇದಕ್ಕೆ ಹಲವಾರು ಕಾರಣಗಳಿವೆ. ನುಡಿಯ ಭಾಷೆ ತುಟಿಯ ಭಾಷೆಯಾದರೆ, ಬರಹದ ಭಾಷೆ ಕಣ್ಣಿನದು ಎನ್ನುವುದು ಈ ಕಾರಣಗಳಲ್ಲಿ ಒಂದು. ಕೆಲವೇ ಕೆಲವು ಸಂದರ್ಭಗಳಲ್ಲಿ ಮಾತ್ರ ಓದುಗ ಪ್ರತಿಯೊಂದು ಅಕ್ಷರವನ್ನೂ ಸ್ಪಷ್ಟವಾಗಿ ಬಿಡಿಸಿ ಓದಬೇಕಾದ ಅಗತ್ಯವಿರುತ್ತದೆ: ಪರೀಕ್ಷೆಯಲ್ಲಿ, ಟೀವಿ ಸುದ್ದಿ ಓದುತ್ತಿರುವಾಗ, ಉಕ್ತಲೇಖನದ ವೇಳೆ ಇತ್ಯಾದಿ. ಉಳಿದ ಕಡೆ ನಾವು ನಮಗೆ ಸಹಜವೆನಿಸುವ ಮಾರ್ಪಾಡುಗಳನ್ನು ಮಾಡಿಕೊಳ್ಳುತ್ತೇವೆ. ಇದಕ್ಕೆ ಯಾರೇನೂ ಆಕ್ಷೇಪ ಹೇಳುವುದಿಲ್ಲ. ಹೆಚ್ಚಿನ ವೇಳೆಯೂ ನಮ್ಮ ಓದು ಮೌನವಾಗಿಯೇ ನಡೆಯುವಂಥದು. + +ಅಕ್ಷರಮಾಧ್ಯಮ ಧ್ವನಿಮಾಧ್ಯಮಕ್ಕಿಂತ ಹೆಚ್ಚು ಸ್ಥಿತಿಸ್ಥಾಪಕವಾದುದು. ಧ್ವನಿ ಒಬ್ಬನಿಂದ ಒಬ್ಬನಿಗೆ ಭಿನ್ನವಿರುತ್ತದೆ, ಒಬ್ಬನೇ ವ್ಯಕ್ತಿ ಒಂದೇ ಪದವನ್ನು ಎರಡು ಬಾರಿ ಓದುವಾಗ ಅಥವಾ ಹೇಳುವಾಗ ಅವುಗಳಲ್ಲಿ ವ್ಯತ್ಯಾಸವಿರಬಹುದು. ಬೇರೆ ಬೇರೆ ಜನ ಒಂದೇ ಬರಹವನ್ನು ಬೇರೆ ಬೇರೆ ತರದಲ್ಲಿ ಓದಬಹುದು. ಆದರೆ ಇಂಥ ವ್ಯತ್ಯಾಸಗಳು ಅರ್ಥಕ್ಕೆ ತೊಂದರೆ ಕೊಡುವುದಿಲ್ಲ. + +ಪ್ರಾದೇಶಿಕ, ವರ್ಗೀಯ ಭಿನ್ನತೆಗಳು ನೂರಾರು. ಅವನ್ನೆಲ್ಲ ಒಂದೇ ಬರಹದಲ್ಲಿ ನೂರಕ್ಕೆ ನೂರರಷ್ಟು ಸರಿಯಾಗಿ ಪ್ರತಿನಿಧೀಕರಿಸಲು ಆಗುವುದಿಲ್ಲ. ಅವುಗಳ ಸೂಚನೆ ಮಾತ್ರವೇ ಕೊಡುವುದು ಸಾಧ್ಯ. ಬರಹಕ್ಕೆ ಅಷ್ಟು ಸಾಕು. ಬರಹವೆಂದರೆ ಟೇಪ್ರೆಕಾರ್ಡರ್ ಅಲ್ಲ. ಉದಾಹರಣೆಗೆ: + +ಹಾಗೇನು-ಹಂಗೇನು_ಅಂಗೇನು-ಹಂಗಾ-ಅಂಗಾಬರಬಹುದು-ಬರ್ಬಹುದು-ಬರಬೋದು-ಬರ್ಬೋದು-ಬರ್ಬೌದುಇದೆ-ಅದೆ-ಐತೆ-ಐತಿಯಾಕೆ ಸ್ವಾಮಿ-ಯಾಕ್ಸ್ವಾಮಿ-ಯಾಕ್ಸಾಮಿ-ಯಾಕ್ರೀ-ಯಂತಕೆ ಸಾಮಿಏನು ಮಹಾರಾಯರೆ-ಎಂತ ಮಾರಾಯರೆ-ಎಂತ ಮಾರಾಯ್ರೆ-ಏನ್ ಮಾರಾಯ್ರೆಕೂತುಕೋ-ಕೂತ್ಕೋ-ಕುಂತುಕೋ-ಕುಂತ್ಕೋಹಾಳಾಗಿಹೋಗಲಿ-ಹಾಳಾಗಿಹೋಗ್ಲಿ-ಹಾಳಾಗೋಗ್ಲಿ-ಆಳಾಗೋಗ್ಲಿಓದಲಿಕ್ಕೆ ಹೊರಟಿದ್ದಾನೆ-ಓದಾಕೆ ಹೊರಟಾನೆ-ಓದಾಕ ಹೊಂಟಾನ-ಓದಾಕ ಹತ್ಯಾನ- ಓದಾಕತ್ಯಾನ + +ಹೀಗೆ ಮಾತಿನ ಶೈಲಿಯಲ್ಲಿನ ಭಿನ್ನತೆಗಳನ್ನು ಪಟ್ಟಿಮಾಡುತ್ತ ಹೋಗಬಹುದು. ಕೆಲವೊಂದು ಸ್ವರಗಳನ್ನು ಕನ್ನಡ ಬರಹದಲ್ಲಿ ಅಭಿವ್ಯಕ್ತಿಸುವಂತೆಯೂ ಇಲ್ಲ. ಧಾರವಾಡ ಕಡೆಯ ಕನ್ನಡದಲ್ಲಿ ಕೆಲವೆಡೆ ಅನುನಾಸಿಕ ಸ್ವರಗಳಿವೆ; ಅದೇ ರೀತಿ ದಕ್ಷಿಣ ಕನ್ನಡದ ಹವ್ಯಕದಲ್ಲಿ ಕೂಡಾ: ಅವ (`ಅವನು’ ಎಂಬ ಅರ್ಥದಲ್ಲಿ) ಎನ್ನುವಲ್ಲಿ `ವ’ದ ಅಕಾರ ಅನುನಾಸಿಕ. ಯಾವುದೇ ಭಾಷೆಯಲ್ಲೂ ಪ್ರತಿ ಕ್ಷಣದಲ್ಲೂ ಧ್ವನಿವ್ಯತ್ಯಾಸಗಳು ಆಗುತ್ತಲೇ ಇರುತ್ತವೆ. ಮಾತಿನ ವೈವಿಧ್ಯಕ್ಕೆ ಮಿತಿಯೇ ಇಲ್ಲ. ಶಿಕ್ಷಣಮಾಧ್ಯಮ ಮತ್ತು ಅದು ಬಳಸುವ ಬರಹ ಅವುಗಳೊಂದಿಗೆ ಪೈಪೋಟಿ ಹೂಡುವ ಅಗತ್ಯವಿಲ್ಲ. ಅವನ್ನು ಸಂಪೂರ್ಣವಾಗಿ ಪ್ರತಿನಿಧೀಕರಿಸಬೇಕೆಂದೂ ಇಲ್ಲ. ದೊಡ್ಡ ದೊಡ್ಡ ವ್ಯಾಪಕ ವ್ಯತ್ಯಾಸಗಳು ಬಂದು ಸ್ಥಿರಗೊಂಡಾಗ ಮಾತ್ರವೇ ಮಾಧ್ಯಮದಲ್ಲಿ ಮತ್ತು ಬರಹದಲ್ಲಿ ಬದಲಾವಣೆಯಾದರೆ ಸಾಕು. + +ಸರಿಸುಮಾರು ಒಂದೇ ತರದ ಶಿಕ್ಷಣಭಾಷೆ ಮತ್ತು ಬರಹ ಇದ್ದರೆ ಎಲ್ಲ ಕನ್ನಡವೂ ಒಂದೇ ಎನ್ನುವ ಭಾವ ಬರುತ್ತದೆ. ಈ ಶಿಕ್ಷಣಭಾಷೆ ಸ್ವಲ್ಪ ಕೃತಕವೆಂದುಕೊಂಡರೂ ಅದರ ಅಗತ್ಯವಿದೆ. ಎಲ್ಲಾ ದೇಶಗಳಲ್ಲೂ ಶಿಕ್ಷಣಭಾಷೆ ತುಸು `ಕೃತಕ’ವಾಗಿಯೇ ಇರುತ್ತದೆ. ಯಾಕೆಂದರೆ ಈ ಹಿಂದೆ ಹೇಳಿದಂತೆ ಅದೊಂದು ಪ್ರಭಾಷೆ. ಆಡುಮಾತಿನಲ್ಲಿ ಹೆಚ್ಚೆಚ್ಚು ಪ್ರಭೇದಗಳಿರುವ ಅರೆಬಿಕ್, ಹಿಂದಿ, ಸ್ಪ್ಯಾನಿಷ್, ಫ್ರೆಂಚ್ ಮತ್ತು ಇಂಗ್ಲಿಷ್ನಲ್ಲಿ ಕೂಡಾ ಶಿಕ್ಷಣ ಮತ್ತು ಬರೆಯುವ ಭಾಷೆಯಲ್ಲಿ ಇಂಥ ಪ್ರಮಾಣಬದ್ಧತೆಯನ್ನು ಕಾಣುತ್ತೇವೆ. + +ಬರಹದಲ್ಲಿ ಮಹಾಪ್ರಾಣಗಳಿದ್ದು ಒಂದು ವೇಳೆ ಅವುಗಳನ್ನು ಮಹಾಪ್ರಾಣಗಳಾಗಿ ನುಡಿಯಲು ಕೆಲವರಿಂದ ಆಗುವುದಿಲ್ಲ ಎಂದಿದ್ದರೆ ಅಂಥವರು ತಮಗೆ ಅನಿಸಿದಂತೆ ನುಡಿಯಲಿ. ಆದರೆ ಅದಕ್ಕಾಗಿ ಅವನ್ನು ಬರಹದಿಂದ/ಮುದ್ರಣದಿಂದ ಕಿತ್ತುಹಾಕುವ ಅಗತ್ಯವಿಲ್ಲ. ಯಾಕೆಂದರೆ ಅವು ಬೇಕೆನ್ನುವವರಿಗೆ ಇದರಿಂದ ತೊಂದರೆಯಾಗುತ್ತದೆ. ಅಕ್ಷರಗಳು ಮತ್ತು ಪದಗಳು ಸಾಕಷ್ಟಿದ್ದರೆ ಆಯ್ದುಕೊಳ್ಳುವುದಕ್ಕೆ ಆಗುತ್ತದೆ. ಕಡಿಮೆ ಮಾಡಿದರೆ ಜನರು ನಿರ್ಬಂಧಕ್ಕೆ ಒಳಗಾಗುತ್ತಾರೆ. + +ಕೊನೆಯದಾಗಿ ನನ್ನ ಅಭಿಪ್ರಾಯ: ಸರ್ವಶಿಕ್ಷಣವೆನ್ನುವುದು ಒಂದು ಮಹಾಕ್ರಾಂತಿ. ಅದರ ನಿಜವಾದ ಅರ್ಥ ಮತ್ತು ಉದ್ದೇಶಕ್ಕೆ ತಕ್ಕ ಕಾರ್ಯಕ್ರಮಗಳು ನಮಗೆ ಬೇಕು. ನಮ್ಮ ಹಠ ಮತ್ತು ಶಕ್ತಿ ಈ ದಿಕ್ಕಿಗೆ ಹರಿಯಲ್ಲಿ. ಮುಖ್ಯವಾಗಿ ಕನ್ನಡ ಬೋಧನೆಯನ್ನು ಆಕರ್ಷಕವಾಗಿ ಮಾಡಬೇಕು. ನಾನೇನೂ ಯಥಾಸ್ಥಿತಿವಾದಿಯಲ್ಲ; ಕನ್ನಡವನ್ನು ಇನ್ನಷ್ಟು ಮುಂದಕ್ಕೆ ಒಯ್ಯಬೇಕು ಎನ್ನುವವನು, ಹಿಂದಕ್ಕೆ ಅಲ್ಲ. ಕನ್ನಡಿಗರು ಕನ್ನಡದಲ್ಲೇ ಕಲಿತು ಎಲ್ಲಾ ಕ್ಷೇತ್ರಗಳಲ್ಲೂ ಜಗತ್ತಿನ ಇತರ ಭಾಷಿಕರಿಗೆ ಸರಿಸಮನಾದರೆ ಎಷ್ಟು ಒಳ್ಳೆಯದು! ಇದು ಭಟ್ ಅವರ ಪ್ರೋಗ್ರಾಮಿನಿಂದ ಸಾಧ್ಯವಾಗುವುದಾದರೆ ನನಗೆ ಸಂತೋಷವೇ. + +ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು. \ No newline at end of file diff --git a/Kenda Sampige/article_518.txt b/Kenda Sampige/article_518.txt new file mode 100644 index 0000000000000000000000000000000000000000..bca2ec6f16d9f739f0e0a42c8c09183938b2c8e1 --- /dev/null +++ b/Kenda Sampige/article_518.txt @@ -0,0 +1,5 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದು ಬಿಲ್ಕಿಸ್  ಝುಫೀರುಲ್ ಹಸನ್ ರ “suicide” ಕವಿತೆಯನ್ನುಬಾಗೇಶ್ರೀಅನುವಾದಿಸಿದ್ದಾರೆ . + +ಶ್ರೇಷ್ಠ ಮಾರ್ಗ + +ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಹಲವು ಹಾದಿಗಳುಂಟು.ಆಯ್ಕೆ ಸಂಪೂರ್ಣ ಅವಳದ್ದೇ.ವಿಷ ಕುಡಿಯಬಹುದು.ಸೀಮೆಎಣ್ಣೆ ಸುರಿದುಕೊಂಡು ಸುಟ್ಟುಕೊಳ್ಳಬಹುದು.ಏಳನೆ ಮಹಡಿಯಿಂದ ಕೆಳಗೆ ಜಿಗಿಯಬಹುದು.ಓಡುವ ರೈಲಿನ ಮುಂದೆ ತಣ್ಣನೆ ಮಲಗಬಹುದು.ಫ್ಯಾನಿಗೆ ಹಗ್ಗ ಬಿಗಿದು ನೇಣು ಹಾಕಿಕೊಳ್ಳಬಹುದು.ಸುಮ್ಮನೆ ಸಮುದ್ರಕ್ಕೆ ಹಾರಿಬಿಡಬಹುದು.ಸತ್ಯವಾಗಿಯೂ ಹೇಳ್ತೀನಿ, ಸಾಯುವ  ಹಾದಿಗಳಿಗೇನೂ ಬರವಿಲ್ಲ.ಒಂದಕ್ಕಿಂದ ಒಂದು ಭಯಾನಕ, ತುಂಬ ಸುಲಭ.ಆದರೆ ಎಲ್ಲಕ್ಕಿಂತ ಭಯಾನಕವಾದದ್ದು ಬದುಕಿದ್ದೂ ಸಾಯೋದು.ಸತ್ತಿರೋದು ಯಾರಿಗೂ ಗೊತ್ತು ಕೂಡಾ ಆಗೋದಿಲ್ಲ.ಇದೇನೂ ಅವಳೇ ಹೊಸತಾಗಿ ಕಂಡುಹಿಡಿದ ಹಾದಿ ಅಲ್ಲ ಬಿಡಿ.ಹಿಂದೆ ಸಾವಿರಾರು ಜನ ಪ್ರಯತ್ನಪಟ್ಟು ಸಫಲರೂ ಆಗಿದ್ದಾರೆ.ಇದು ಎಲ್ಲಕ್ಕಿಂತ ಶ್ರೇಷ್ಠ ಮಾರ್ಗ ಅನ್ನೋದು ಯಾಕೆ ಗೊತ್ತಾ?ಏನೋ ಎಡವಟ್ಟಾಗಿ ಬಚಾವಾಗಿಬಿಟ್ಟರೆ ಏನು ಗತಿಯಪ್ಪ ಎಂಬಭಯ ಈ ಹಾದಿಯಲ್ಲಿ ಸುಳಿಯೋದೇ ಇಲ್ಲ! \ No newline at end of file diff --git a/Kenda Sampige/article_519.txt b/Kenda Sampige/article_519.txt new file mode 100644 index 0000000000000000000000000000000000000000..1bf3078d6ced9ea7ce8c05ec9fcdd136967b4a61 --- /dev/null +++ b/Kenda Sampige/article_519.txt @@ -0,0 +1,13 @@ +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನವಾಸುದೇವ ನಾಡಿಗ್ಬರೆದ ಕವಿತೆ. + +ಕವಿತೆಗೆ + +ನೆಚ್ಚಿಕೊಂಡು ಕೂತಿದ್ದೇನೆನಿನ್ನನುಪ್ರಾಣಧಾರಣೆ ಮಾಡಲಾಗದಕವಿತೆಯೇ,ಕಂಡ ವಸ್ತುಗಳೊಳಗೆಲ್ಲ ಹೊಕ್ಕುಉಕ್ಕಿಸುವ ಭಾವನನ್ನದಲ್ಲ ಎನಿಸುತಿರುವಾಗಹೇಗೆ ನೆಚ್ಚಲಿನಿನ್ನಪ್ರಾಣಧಾರಣೆ ಮಾಡಲಾಗದಕವಿತೆಯೇ + +ತುಂಬು ಗರ್ಭಿಣಿಯ ನಾಟಕಮೋಡತೊಟ್ಟು ನೀರ ತೊಟ್ಟಿಕ್ಕಿಸುತ್ತಿದೆಗಾಳಿಗೆಹೆದರಿ ಕಕ್ಕಾಬಿಕ್ಕಿ ಬಾಗಿಲಹಿಂದೆಅಪ್ರಾಪ್ತ ಕ್ಷಣಗಳನ್ನುಜಪಿಸಿದೆಯಾವ ಕಾಲಗರ್ಭದ ಶಾಪವೋಅಕಾಲ ಪಾತಗಳಲಿಗರ್ಭ ಅಶಕ್ತವಾಗಿದೆ! + +ಪಕಳೆ ಅಗಲಿಸುವುದುಬೀಜಕ್ಕ ಬೇರಪೋಣಿಸುವುದುನೋವುಗಳು ನುಸುಳದಂತೆಹೃದಯದ ಗೋಡೆಎತ್ತರಕ್ಕೇರಿಸುವುದುಸಾಧ್ಯವಾಗದುಕವಿತೆಯೇನಿನ್ನನೇ ನೆಚ್ಚಿಕೊಂಡುಕೂತಿದ್ದೇನೆ. + +ಮುಚ್ಚಲಾರದ ರೆಪ್ಪೆಗಳುನಡುವೆಅಸೀಮ ಕಡಲುದಕ್ಕಿದ ಭಾವದಲೆಗಳುಪರಕೀಯವಾಗಿ ಕಾಡಲುನಿನ್ನನೇನೆಚ್ಚಿಕೊಂಡು ಕೂತಿದ್ದೇನೆಪ್ರಾಣಧಾರಣೆ ಮಾಡಲಾಗದಕವಿತೆಯೇ. + +ವಾಸುದೇವ ನಾಡಿಗ್ ಮೂಲತಃ ಶಿವಮೊಗ್ಗದ ಭದ್ರಾವತಿಯವರು. ಕುವೆಂಪು ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ತುಮಕೂರು ಸಿದ್ದಗಂಗಾ ಶಿಕ್ಷಣ ಮಹಾವಿದ್ಯಾಲಯ ದಲಿ ಬಿ. ಎಡ್. ಪದವಿ ಪಡೆದಿದ್ದಾರೆ. ೨೦ ವರ್ಷಗಳಿಂದ ಜವಾಹರ ನವೋದಯ ವಿದ್ಯಾಲಯದಲಿ ಕನ್ನಡ ಅಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ವೃಷಭಾಚಲದ ಕನಸು, ಹೊಸ್ತಿಲು ಹಿಮಾಲಯದ ಮಧ್ಯೆ, ಭವದ ಹಕ್ಕಿ, ನಿನ್ನ ಧ್ಯಾನದ ಹಣತೆ, ವಿರಕ್ತರ ಬಟ್ಟೆಗಳು, ಅಲೆ ತಾಕಿದರೆ ದಡ, ಅವನ ಕರವಸ್ತ್ರ ಅನುಕ್ತ ( ಈವರೆಗಿನ ಕವಿತೆಗಳು) ಇವರ ಪ್ರಕಟಿತ ಕವನ ಸಂಕಲನಗಳು. ಬೇಂದ್ರೆ ಅಡಿಗ, ಕಡೆಂಗೋಡ್ಲು ಶಂಕರಭಟ್ಟ, ಮುದ್ದಣ, ಜಿ ಎಸ್ ಎಸ್ ಕಾವ್ಯ ಪ್ರಶಸ್ತಿ ಇವರಿಗೆ ದೊರೆತಿವೆ. \ No newline at end of file diff --git a/Kenda Sampige/article_52.txt b/Kenda Sampige/article_52.txt new file mode 100644 index 0000000000000000000000000000000000000000..0442ff4b689f5aaff6f1341d5b0546bc7bb4dadd --- /dev/null +++ b/Kenda Sampige/article_52.txt @@ -0,0 +1,25 @@ +“ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ ” ಈ ಭಾವನಾತ್ಮಕ ಹೆಸರಿನ ಕವಿತಾ ಸಂಕಲನದ ಕರ್ತೃ ಪತ್ರಕರ್ತರಾಗಿ ಪ್ರಸಿದ್ಧರಾಗಿರುವ  ಕೊಡಗಿನ ಜಗದೀಶ್ ಜೋಡುಬೀಟಿ.  ಪತ್ರಕರ್ತರಿಗೆ ಇರಲೇಬೇಕಾದ ಸಮಾಜದ ಕುರಿತ ಕಾಳಜಿ ಇಲ್ಲಿನ ಕವಿತೆಗಳಲ್ಲಿಯೂ ಪಡಿಮೂಡಿ, ಸಮಾಜಮುಖಿ ಧೋರಣೆಯ ಹೆಚ್ಚಿನ ಕವಿತೆಗಳನ್ನು ನಾವಿಲ್ಲಿ ಕಾಣಬಹುದು. + +ಎಲ್ಲಾ ಪುರುಷರು ಹೀಗೆ ಇರುವುದಿಲ್ಲ, ಶೌಚಾಲಯ, ನಾಯಕರು ಸ್ವಾಮಿ ಇವರು, ಮಾಯವಾಗಿದೆ, ಕವಿತೆ ನರಳುತ್ತಿದೆ ಇತ್ಯಾದಿ  ಕವಿತೆಗಳು ದೈನಂದಿನ ಬದುಕಿನ ಆಗು ಹೋಗುಗಳೇ ಆಗಿದ್ದರೂ ಇಲ್ಲಿರುವ ಒಳನೋಟ ಪ್ರತಿಯೊಬ್ಬ ಸಭ್ಯ ನಾಗರಿಕನನ್ನು ಎಚ್ಚರಿಸುವಂಥವು. ನಮ್ಮ ನಡುವಿನ ಈ ಪ್ರಪಂಚವನ್ನು ನನಗ್ಯಾಕೆ ಎಂದು ನಿರ್ಲಕ್ಷಿಸದೆ ಸಮಾಜಮುಖಿಯಾಗಿ ನಿಂತು ನೋಡುವ ಅಪರೂಪದ ಗುಣ ಇವರ ಕವಿತೆಗಳಲ್ಲಿದೆ. + +(ಜಗದೀಶ್‌ ಜೋಡುಬೀಟಿ) + +“ಬರುವುದಾದರೆ ಬಾ” ಈ ಸಂಕಲನದಲ್ಲಿರುವ ಒಂದು ಅರ್ಥಗರ್ಭಿತ ಕವಿತೆ. ಬರುವುದಾದರೆ ಬಾ ನನ್ನೆದೆಯ ಗರ್ಭಗುಡಿಗೆ/ ಆಚಾರ ವಿಚಾರ ಮಡಿ ಮೈಲಿಗೆಗಳ ಕಟ್ಟು ಪಾಡುಗಳಿಲ್ಲ / ಜಾತಿ ಭೇದಗಳ ಬೆಸೆಯುವಿಕೆಗೆ ಮನ್ನಣೆಯಿಲ್ಲ.. ಹೀಗೆ ಸಾಗುತ್ತದೆ.ವಾಸ್ತವದಲ್ಲಿ ಇವರ ಕವಿತೆಗಳೆಲ್ಲವೂ ನಿಜ. ಇವು ಕಲ್ಪನೆಗಳೋ, ಅನುಭವಗಳೋ ಏನೇ ಆದರೂ ಇಲ್ಲಿರುವ ತಾತ್ವಿಕ ಹುಡುಕಾಟದಲ್ಲಿ ನೈಜತೆಯಿದೆ, ಸ್ಪಷ್ಟತೆಯಿದೆ ಮತ್ತು ಹುರುಳಿದೆ. ಗಾಂಧಿ ಮತ್ತೊಮ್ಮೆ ಸತ್ತ ಎಂಬ ಅಭಿವ್ಯಕ್ತಿಯಲ್ಲಿ ವಾಸ್ತವದ ವಿಚಾರಗಳೆಲ್ಲವು ಹೇಗೆ ಮನಸ್ಸಿಗೆ ಕಾಡುವಂತೆ ಅಭಿವ್ಯಕ್ತಿಗೊಂಡಿದೆ ಎಂದರೆ ಸಂಕೇತಗಳ ಮೂಲಕವೇ ಕವಿತೆ ಗೆದ್ದಿದೆ. ಗಾಂಧಿ ತತ್ವಗಳು ಮತ್ತೊಮ್ಮೆ ಸತ್ಯವಾಗಲಿ ಎಂಬ ಭಾವನೆ ಮನದಲ್ಲಿ ಮೂಡುತ್ತದೆ. + +“ಒಂಟಿ ಹುಡುಗಿ ಹನ್ನೆರಡರ ರಾತ್ರಿ ನಡೆದು ಹೋಗುತಿದ್ದಾಳಲ್ಲಅಲ್ಲೇ ಅಲ್ಲೇ ನನಗೆ ನನಗೆ ಗಾಂಧಿ ಸಿಕ್ಕ!ಹುಡುಗಿಯ ಕೈಯಲ್ಲಿಯ ಸಿಗರೇಟುಬೀರು ಬಾಟಲಿ ಕಂಡು ಕಿಸಕ್ಕನೆ ನಕ್ಕ!” + +ಇಂಥ ಕಟು ವಾಸ್ತವಗಳ ಎಳೆಗಳನ್ನು ಬಿಡಿಸಿಟ್ಟ ಸತ್ಯದ ಸಾಲುಗಳಲ್ಲಿ ಕವಿತೆಗಳ ಗಟ್ಟಿತನವಿದೆ. ಗಾಂಧಿಯ ಕುರಿತಾಗಿ, ಗಾಂಧಿ ಧ್ಯಾನ, ಕವಿತೆಗಳಿಗೆ ವಿಚ್ಛೇದನ ನೀಡಲಾಗಿದೆ. ಕವಿತೆಗಳಲ್ಲಿ ಗಾಂಧಿಯ ಸತ್ವಗಳ ಸಾರವಿದೆ. ಇವರ ಕವಿತೆಗಳು ವಿಶಿಷ್ಟವೆನಿಸುವುದು ಯಾವುದನ್ನು ಮುಚ್ಚಿಡದೆ ನಿರ್ಭಿಡೆಯಿಂದ ಮನಸ್ಸು ತೆರೆದು ಹೇಳುವುದರಿಂದ ಕವಿತೆಗಳು ಭಿನ್ನವಾಗಿದೆ.ಬಡವರ ಎಲುಬಿನಲ್ಲೇ ಕಟ್ಟುವವರು ಮೂರು ಅಂತಸ್ತಿನ ಮಹಲು / ಇವರು ನಮ್ಮ ನಾಯಕರು ಸ್ವಾಮಿ / ನಮ್ಮನಾಳುವ ನಾಯಕರು. ಈ ಅರ್ಥವತ್ತಾದ ಕವಿತೆಯಲ್ಲಿ ನ್ಯಾಯವನ್ನು ಛೇಡಿಸಿರುವುದು ಸಮಾಜದ ಪರವಾದ ಧ್ವನಿಯಾಗಿದೆ. ಇಂತಹ ಸಾವಿರಾರು ಒಳಧ್ವನಿಗಳು ಹೊರಹೊಮ್ಮಬೇಕು, ಅನ್ಯಾಯವನ್ನು ಮೆಟ್ಟಿ ನಿಲ್ಲಬೇಕು ಎಂಬುದು ಕವಿತೆಯ ಆಶಯ. + +“ಅಪ್ಪನ ಗೋರಿಯಲ್ಲಿ ಕನಸುಗಳ ಬಿಕ್ಕಳಿಕೆ” ಈ ಸಂಕಲನದಲ್ಲಿ ವೈವಿಧ್ಯಮಯ ವಿಷಯಗಳ ಕವಿತೆಗಳು ಅಡಕವಾಗಿದೆ. ಪ್ರೀತಿ, ಅನುಕಂಪ, ಮಾನವೀಯತೆಯನ್ನೊಳಗೊಂಡ ನಯ ನಾಜೂಕಿನ ಸಾಲುಗಳ ನಡುವೆಯೂ ಬಂಡಾಯದ, ಆಕ್ರೋಶದ ಸ್ವರವು ಹೊರಹೊಮ್ಮುತ್ತದೆ.  ಇವರದು ಬಡವರ, ಅಸಹಾಯಕರ, ಜೊತೆಗೆ ಹೆತ್ತವರ ನೋವು ನಲಿವುಗಳನ್ನು ಸೂಕ್ಷ್ಮವಾಗಿ ಅರಿತ ಸಹೃದಯ ಕವಿ ಮನಸ್ಸು.“ದಲಿತ ತಾಯಿಯ ಎದೆ ಹಾಲಿಗೆ / ಬ್ರಾಹ್ಮಣರ ಹಸುಳೆ ತುಟಿಯನ್ನಿಟ್ಟು ಹಸಿವ ನೀಗಿಸಿಕೊಂಡಿತ್ತು / ಜಾತಿ ಧರ್ಮ ಎನ್ನುವವರಿಗೆ ಹೊಟ್ಟೆ ತುಂಬಿದ ಮಗುವಿನ  ಕಿರುನಗೆ ಪರಿವರ್ತನೆಯ ಪಠ್ಯ / ಸಾಹುಕಾರ ಕೂಲಿ ಕಾರ್ಮಿಕ ಒಂದೇ / ಪುನರ್ಚೆತನ ಕೇಂದ್ರಗಳಲ್ಲಿ ಆಶ್ರಿತರು …ಹೀಗೆ ಸಾಗುವ ಕವಿತೆಯಲ್ಲಿ ಪ್ರಕೃತಿಯ ಶಾಪಕ್ಕೆ ತಲೆ ಬಾಗಿದ ಕೊಡಗಿನ ಜನಜೀವನದ ನಿರ್ದಯತೆಯಿದೆ. + + + +ಇಲ್ಲಿನ ಕವಿತೆಗಳಲ್ಲಿ ಅತಿರಂಜಿತ ಕಲ್ಪನೆಗಳಿಗಿಂತ ತನ್ನ ನಡುವಿನ ಬದುಕನ್ನೇ ಭಿನ್ನವಾಗಿ ಅವಲೋಕಿಸುತ್ತ, ಆ ಮೂಲಕವೇ ತನ್ನ ಭಾವನೆಗಳನ್ನು ಮಿಳಿತಗೊಳಿಸಿ ಕವಿತೆಯಲ್ಲಿ ಸ್ಪುರಿಸುತ್ತಾರೆ.  ಕಾವ್ಯದಿಂದಲೇ ಏನನ್ನೋ ಗೆಲ್ಲಬಯಸುತ್ತೇನೆ  ಎಂಬ ಸಣ್ಣ ಆಸೆಯಿಂದ, ಜೊತೆಗೆ  ಆಸ್ಥೆಯಿಂದ ಹೇಳುವಂಥದನ್ನು ಹೇಳಿಕೊಂಡಿದ್ದಾರೆ.  ಮಾತಿಗಿಂತ ಕಾವ್ಯವೇ  ತನ್ನ ಅಭಿವ್ಯಕ್ತಿ ಮಾಧ್ಯಮ ಎನಿಸುವಂತಹ ಜೀವಂತಿಕೆಯ ಸಾಲುಗಳು ಕವಿತೆಗಳಲ್ಲಿವೆ.“ಅಮ್ಮಾ ನೀನು ಮನೆಯಲ್ಲಿಲ್ಲದಿದ್ದರೆ ಅಪ್ಪನ ಸಿಗರೇಟಿನ ಹೊಗೆ ಕೋಣೆ ತುಂಬಿರುತ್ತದೆ/ ನಲ್ಲಿ ನೀರು ಗುಟುರು ಹಾಕುತ್ತಾ ಹನಿಯುತ್ತದೆ / ಖಾಲಿ ಕೊಡಗಳು, ಕೋಣೆಗಳು ಎಲ್ಲವೂ ಅಪಹಾಸ್ಯ ಮಾಡುತ್ತವೆ.” ಎಷ್ಟೊಂದು ಸುಂದರವಾದ ಸಾಲುಗಳಿವು. ಅಮ್ಮನತ್ತಿರ ಏನು ಹೇಳದೆ ಕವಿತೆಯಲ್ಲಿ ಎಲ್ಲವನ್ನೂ ಹೇಳಿದ್ದಾರೆ ಎಂಬಂತೆ ಭಾಸವಾಗುವ ಸಾಲುಗಳಿವು. ತುಂಬಾ ಸರಳವಾಗಿ, ಆಪ್ತವಾಗಿ ಆದರೆ ಗಟ್ಟಿಯಾಗಿ ನೇಯ್ದ ಇಂತಹ ಹಲವಾರು ಕವಿತೆಗಳು ಸಂಕಲನದಲ್ಲಿದೆ. + +“ಅಪ್ಪ ಸತ್ತಿದ್ದಾರೆ ಅನ್ನುತ್ತಿದ್ದಾರೆ / ಅಕ್ಕ ಪಕ್ಕ ಮನೆಯವರು, ನೆಂಟರಿಷ್ಟರು/ಸತ್ತಿದ್ದು ಅಪ್ಪನಲ್ಲ / ಕೈ ಬಳೆ, ಕಾಲುಂಗುರ ಸಿಂಧೂರ, ಬಿಳಿಸೀರೆ ಉಟ್ಟು ಅಪ್ಪನ ಆತ್ಮದೊಡನೆ ಮಾತನಾಡುವ ಅಮ್ಮ/ ಅಪ್ಪ ಸತ್ತಂತೆ ನಟಿಸುತ್ತಿದ್ದಾರೆ / ಗೋಡೆಯ ಮೇಲಿನ ಚಿತ್ರದಲ್ಲಿ.”ಇಂತಹ ಅದ್ಭುತ ಸಾಲುಗಳ ಕವಿತೆಯನ್ನು ಕೇವಲ ವರ್ಣನೆಗೆ  ಮಾತ್ರ ಸೀಮಿತಗೊಳಿಸದೆ ಗಂಡ ಹೆಂಡತಿಯ ಸಂಬಂಧಕ್ಕೆ ಚಂದನೆಯ ಚೌಕಟ್ಟು ನೀಡಿದ್ದಾರೆ. ಸಂಬಂಧಗಳಿಗೆ ಮಹತ್ವ ಕೊಡುವ ಇಂತಹ ಸಾಲುಗಳಲ್ಲಿ ನೈಜ್ಯ ಅನುಕಂಪದ ಸಂವೇದನೆಯಿದೆ. ನಮ್ಮ ಎದೆಯಲ್ಲೂ ಇದು ಮಾರ್ದನಿಸುತ್ತದೆ. ಇಂತಹ ಹೃದಯ ಆರ್ದ್ರಗೊಳಿಸುವ ಕವಿತೆಗಳು ಇನ್ನೂ ಹೆಚ್ಚೆಚ್ಚು ರೂಪುಗೊಳ್ಳಲಿ ಎಂಬುದು ನಮ್ಮೆಲ್ಲರ ಆಶಯ. + + + +ಇಲ್ಲಿನ ಕವಿತೆಗಳನ್ನು ಓದಿದ ನಂತರ “ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?” ಎಂಬ ಕುವೆಂಪು ವಾಣಿಯ ಸಾಲೊಂದು ಮನಸ್ಸಿನಲ್ಲಿ ಬಂದು ಬೇರೂರಿದಂತೆ ಭಾಸವಾಗುತ್ತದೆ. ಡಾ. ತೀತೀರ ರೇಖಾ ವಸಂತ ಹಾಗೂ ಭಾರದ್ವಾಜ್ ಕೆ. ಆನಂದ ತೀರ್ಥರ ಮುನ್ನುಡಿಗಳೊಂದಿಗೆ, ಚೀ. ಜ. ರಾಜೀವ ಇವರ ಬೆನ್ನುಡಿ ಯೊಂದಿಗೆ ಚಂದು ಪ್ರಕಾಶನದಿಂದ ಈ ಕೃತಿ ಪ್ರಕಟಗೊಂಡಿದೆ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_520.txt b/Kenda Sampige/article_520.txt new file mode 100644 index 0000000000000000000000000000000000000000..4be6458e76cba0d32e55c8340cfb789b41ccc49f --- /dev/null +++ b/Kenda Sampige/article_520.txt @@ -0,0 +1,35 @@ +byಮಿತ್ರಾ ವೆಂಕಟ್ರಾಜ|Dec 14, 2017|ಸಾಹಿತ್ಯ| 0 Comments + +ಹಣಿಗೆ ಹಾರಿ ಎಲ್ಲಿಯೋ ಬಿದ್ದಿತ್ತು. ಸಿಟ್ಟಿನಲ್ಲಿ ಅವಳ ಮುಖ ಕೆಂಪು ರಟ್ಟುತಿತ್ತು. ‘ಮುಚ್ಚು ಬಾಯಿ, ಕೋಡಂಗಿ.’ ಎಂದು ಕಿರಿಚಿ ಅವಳು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. + +byಕುಸುಮಾ ಶಾನಭಾಗ|Dec 14, 2017|ಸಾಹಿತ್ಯ| 0 Comments + +ಮನೆಗೆ ಬೀಗ ಹಾಕಿ ಹೊರಟದ್ದು ಮಾತ್ರವಲ್ಲ, ಶುಭಾ ಕೋಣೆ ಬಾಗಿಲಿನ ಚಿಲಕವನ್ನೂ ಏರಿಸಿ ಬಂದು ಬಿಟ್ಟಿದ್ದೇನೆ. ಕೋಣೆಯೊಳಗೆ ಅವಳು ಬಂಧಿಯಾಗಿದ್ದಾಳೆ. ಅವಳ ಮೊಬೈಲು ಕೋಣೆಯೊಳಗಿಲ್ಲವಂತೆ. + +byಎಚ್.ವೈ. ರಾಜಗೋಪಾಲ್|Dec 14, 2017|ಸಾಹಿತ್ಯ| 0 Comments + +ಈ ಸತ್ಕಾರ್ಯಗಳನ್ನೆಲ್ಲ ಅವನು ಮಾಡುತ್ತಿದ್ದುದು ಅವನ ಮನಸ್ಸಿನಲ್ಲಿ ಅದರ ಬಗ್ಗೆ ಎಚ್ಚರವಿದ್ದಾಗ ಮಾತ್ರ. ಆದರೆ ಆಗಾಗ ಅವನಿಗೆ ಆ ಎಚ್ಚರ ತಪ್ಪುತ್ತಿತ್ತು. ಅದೊಂದು ಲೋಪ ಅವನಲ್ಲಿ. + +byವೈಶಾಲಿ ಹೆಗಡೆ|Dec 14, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byವೈಶಾಲಿ ಹೆಗಡೆ|Dec 14, 2017|ಸಾಹಿತ್ಯ| 1 Comment + +ಸುತ್ತಲ ಗದ್ದಲದ ನಡುವೆ ಒಂಚೂರು ನನ್ನದೇ ಜಾಗ ಬೇಕೆಂದು ಅನಿಸಿದಾಗ, ಸುಮ್ಮಸುಮ್ಮನೆ ಒಂಟಿಯಾಗಿ ಕೂತುಬಿಡಬೇಕು ಎಂದೆನಿಸಿದಾಗ ನೆರವಿಗೆ ಬರುವುದು ಕವಿತೆಗಳು. + +byಪ್ರಸಾದ್. ಜಿ|Dec 14, 2017|ಸಾಹಿತ್ಯ| 0 Comments + +ಅದು ನಾನು ಕಾಸರಗೋಡಿನಲ್ಲಿ ಚೈಲ್ಡ್ ಲೈನ್ ಎಂಬ ಸಂಸ್ಥೆಯಲ್ಲಿ ಪ್ಲೆಸ್ ಮೆಂಟ್ ಮಾಡುತ್ತಿದ್ದ ಸಮಯ ” ಒಂದು ಸಲ ಮನೆ ಕಡೆ ಬಂದು ಹೋಗಿಯೆಂದು” ಒಂದೆರಡು ಬಾರಿ ಕರೆ ಮಾಡಿದ್ದರು. + +byರಾಜೀವ ನಾರಾಯಣ ನಾಯಕ|Dec 13, 2017|ಸಾಹಿತ್ಯ| 0 Comments + +“ಓ ಥ್ಯಾಂಕ್ಸ್ ಹೇಳ್ಬೇಕಲ್ವಾ ನಂಗೆ… ಇರ್ಲಿ ಬಿಡು. ನಿಂಜೊತೆ ಮಾತಾಡಬೇಕು ಅನಿಸ್ತು. ನಿನ್ನ ದೋಸ್ತ ರಮೇಶ ನಂಬರ್ ಕೊಟ್ಟ. ಮನೆಯವ್ರೆಲ್ಲಾ ಮಲಗಿದ್ದಾರೆ. + +byಶ್ರೀನಿವಾಸ ವೈದ್ಯ|Dec 11, 2017|ಸಾಹಿತ್ಯ| 0 Comments + +ನಮ್ಮದು ನರಸಿಂಹನ ಒಕ್ಕಲು. ನಮ್ಮ ತಂದೀದು ಶ್ರೀಮದ್ಗಾಂಭಿರ್ಯದಿಂದೊಪ್ಪುವ, ತುಸು ಮಟ್ಟಿಗೆ ಉಗ್ರವೇ ಎನ್ನಬಹುದಾದ ರೂಪ. ಸಾಮಾನ್ಯಕ್ಕಿಂತ ಸ್ವಲ್ಪ ಎತ್ತರವೇ, ದಪ್ಪವೇ ಎನ್ನಬಹುದಾದ ಮೈಕಟ್ಟು. + +byಮಾಲಾ ರಾವ್|Dec 11, 2017|ಸಾಹಿತ್ಯ| 0 Comments + +ಅವಳ ಮನ ಮರುಭೂಮಿಯಾಗಿತ್ತು. ತಲೆ ಮೇಲೆ ಸುಡುಸುಡುವ ಸೂರ್ಯ ಪಾದಗಳ ಕೆಳಗೆ ಕೆಂಪಗೆ ಕಾದ ಮರಳು. ಒಂದೆಡೆ ಪ್ರಾಜೆಕ್ಟ್ ಡೆಡ್ ಲೈನ್ಸ್ ಇನ್ನೊಂದೆಡೆ ಸಂಸಾರ ಭಾರ…ಉಸಿರು ಕಟ್ಟಿದಂಥಾ ಅನುಭವ. \ No newline at end of file diff --git a/Kenda Sampige/article_521.txt b/Kenda Sampige/article_521.txt new file mode 100644 index 0000000000000000000000000000000000000000..455653025e6999b472f64b7cac72a4fbbcc53229 --- /dev/null +++ b/Kenda Sampige/article_521.txt @@ -0,0 +1,41 @@ +ಸಂಗೀತದ ಅನೇಕ  genreಗಳಲ್ಲಿ  Chanson Francaise  (ಫ್ರೆಂಚ್ ಹಾಡು) ಕೂಡ ಒಂದು. ಈ ಪ್ರಕಾರದ ಇತಿಹಾಸವು 1800 ರ ಆಸುಪಾಸಿನಿಂದ ಆರಂಭವಾಗಿ, ಬಳಿಕ ಅನೇಕ ಅದ್ಭುತ ತಿರುವುಗಳಿಗೆ ಸಾಕ್ಷಿಯಾಗಿ ಬೆಳೆಯಿತು. ಇದರ ಇತಿಹಾಸ, ಮನೋಹರವೂ-ಅನನ್ಯವೂ ಆದ ಹಾಡುಗಳು, ಹಾಡುಗಾರರ ಕುರಿತು ಬರೆಯಲು ತುಂಬ ಇರುವುದರಿಂದ, ಅದನ್ನು ಇನ್ನೊಮ್ಮೆ ಬರೆಯುತ್ತೇನೆ. + +ಈಗ, ಈ ಹಾಡುಗಾರರಲ್ಲಿ, ನನ್ನ ಅತ್ಯಂತ ಮೆಚ್ಚಿನ ಹಾಡುಗಾರ ಝಾಕ್ ಬ್ರೆಲ್ (Jaques Brel) ಸಾವಿರದ ಒಂಬೈನೂರ ಐವತ್ತೊಂಬತ್ತರಲ್ಲಿ ಬರೆದು ಹಾಡಿದ ಒಂದು ಅಪೂರ್ವ anti-romantic rendering ಅನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದೇನೆ. 1929ರಲ್ಲಿ ಬೆಲ್ಜಿಯಂನಲ್ಲಿ ಹುಟ್ಟಿದ ಫ್ರೆಂಚ್ ಅನ್ನು ತನ್ನ ಮಾಧ್ಯಮವಾಗಿ ಬಳಸಿಕೊಂಡ ಈ ಗಾಯಕ ಸಂಗೀತಗಾರ, ಕಮೆಡಿಯನ್ ನ ಹಾಡುಗಳಲ್ಲಿ `ne me quitte pas’ (ಬಿಟ್ಟು ಹೋಗದಿರು ನನ್ನ)ಕ್ಕೆ ಎತ್ತರದ ಸ್ಥಾನವಿದೆ. ಶತಮಾನದ ಪ್ರೇಮಗೀತೆ ಎಂದು ಕರೆಸಿಕೊಳ್ಳುವ ಇದನ್ನು ಆತ ಇನ್ನೊಬ್ಬ `ಫ್ರೆಂಚ್ ಗೀತೆ’ಗಳ ಅನನ್ಯ ಹಾಡುಗಾರ್ತಿ ಜ್ಯೂಲಿಯೆಟ್ ಗ್ರೆಕೋ(Juliette Gréco)ಳಿಗಾಗಿ ಬರೆದ ಎಂದೂ ಹೇಳುತ್ತಾರೆ. + +ಫ್ರೆಂಚ್ ನಲ್ಲೂ ಪ್ಲೆಮಿಶ್ ನಲ್ಲೂ ಬ್ರೆಲ್ ನೇ ಹಾಡಿದ ಈ ಹಾಡನ್ನು ನಾನಿಲ್ಲಿ ಭಾವಾನುವಾದ ಮಾಡಿಲ್ಲ. ವ್ಯಾಕರಣದ ತೊಡಕುಗಳಿಂದ ಶಬ್ದಶಃ ಅಥವಾ ಸಾಲುಶಃ ಅನುವಾದಿಸಲಾಗದಿದ್ದರಿಂದ; ಮತ್ತು ಇದನ್ನು ಗೆಳೆಯನೊಬ್ಬನ ಹುಟ್ಟಿದ ದಿನದ ಕೊಡುಗೆಯಾಗಿ ಅವನಿಗೆ ಕೇಳಿಸಲೂ ಅನುವಾದಿಸಿದ್ದರಿಂದ- ಪ್ಯಾರಗಳಂತೆ ಅನುವಾದಿಸಿದ್ದೇನೆ. ಒಂದು ಸಾಲನ್ನು ಮಾತ್ರ (`lombre de ta main’  -ನಿನ್ನ ಕಯ್ಯ ನೆರಳು) ಅನ್ನು ಪ್ರಾಸದ ಕಾರಣಕ್ಕಾಗಿ, `ನಿನ್ನ ಬೆರಳುಗಳ ನೆರಳು’ ಎಂದು ಅನುವಾದಿಸಿದ್ದೇನೆ. + +ಬಿಟ್ಟು ಹೋಗದಿರು ನನ್ನ + +ಮರೆಯುವುದನಿವಾರ್ಯಎಲ್ಲವನ್ನೂ- ಮರೆಯಬಹುದುಇನ್ನಿಲ್ಲದೆಲ್ಲವನ್ನೂ.ಮರೆ ಎಲ್ಲ ಅಪಾರ್ಥಗಳ ಕಾಲವನ್ನೂಮತ್ತು ಕಳೆದುಹೋದ ಕ್ಷಣಗಳನ್ನೂ.ಅರಿ, ಹೇಗೆಕೊಡಹಬೇಕೆಂದು ನಿನ್ನನ್ನಾಗಾಗಕೊಲ್ಲುವ ನಿಮಿಷಗಳನ್ನು.ಮಾಡು ಇದೆಲ್ಲವನ್ನೂ-ಏಕೆಂಬ ಪ್ರಶ್ನೆ ಏಳುವ ಮೊದಲೇನೆನಪಿಸಿಕೊಂಡು ಆ ಸುಂದರಘಳಿಗೆಗಳನ್ನು. + +ಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನ + +ನೀಡುವೆ ನಾ-ನಿನಗೆವರ್ಷಧಾರೆಯಿರದ ನೆಲದಮಳೆಹನಿಯ ಮುತ್ತುಗಳನ್ನು.ನಾನಿನ್ನಿಲ್ಲದ ಮೇಲೂಕಾಪಿಡುವೆ ನೆಲವನ್ನುಹೂಳಲು- ಬಂಗಾರದ, ಬೆಳಕಿನನಿನ್ನ ತನುವನ್ನು.ಸೃಷ್ಟಿಸುವೆ ನಾನೊಂದು ಸ್ವರ್ಗ-ಎಲ್ಲಿ ಪ್ರೀತಿಯೇ ಎಲ್ಲಪ್ರೀತಿಯೇ ರಾಜಪ್ರೀತಿಯೇ ನೀತಿ.ಪ್ರೀತಿಯಿಲ್ಲದೇನಿಲ್ಲ.ನೀನಲ್ಲಿ ರಾಣಿ. + + + + + + + + + + + +ಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನ + +ಹುಡುಕುವೆ ನಿನಗಾಗಿಹುಚ್ಚು ಪದಗಳನ್ನುಅರ್ಥೈಸಿಕೊಳ್ಳಬಲ್ಲೆ ಅವುಗಳನ್ನು ನೀನು.ಮಾತಾಡುವೆ ನಾನಲ್ಲಿ:ಜಗತ್ತೆರಡು ಬಾರಿ ನೋಡಿದಪ್ರೇಮಿಗಳ ಕುರಿತುನಿನ್ನ ಸೌಂದರ್ಯವ ನೋಡದೇಸತ್ತ ರಾಜನ ಕತೆ ಹೇಳುವೆ ನಿನಗೆ. + +ಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನ + +ಅನೇಕರು ಆಗಾಗ ನೋಡಿದಪುರಾತನ ವಾಲ್ಕೆನೊವಿನಚಾಚಿದ ಬೆಂಕಿ ನಾಲಿಗೆಗಳು-ನೆಲವನ್ನು ನೆಕ್ಕಿಒಂದೊಳ್ಳೆಯ ವೈಶಾಖದಲ್ಲಿತುಂಬ ಗೋಧಿ ಕೊಟ್ಟಾವು.ಆಗ ಹೊಳೆದೀತು ಆಕಾಶಕಪ್ಪು-ಕೆಂಪುಗಳ ತನ್ನಸೌಂದರ್ಯದಲ್ಲಿ.ಮರುಳಾಗಿ-ಮದುವೆಯಾಗಿಬಿಡದಿರುದಿರುನೀನವುಗಳನ್ನು. + +ಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನ + +ಅಳಲಾರೆ ನಾನಿನ್ನು;ಆಡಲಾರೆ ಮಾತು.ಇರಲಿಷ್ಟ ನನಗೆ, ಅಡಗಿ ಕೂತು-ನಿನ್ನ ನೋಡುತ್ತನಿನ್ನರ್ತನ, ನಗುವ ಕಣ್ತುಂಬಿಕೊಳ್ಳುತ್ತ;ನಿನಗೆ ಕಿವಿಯಾಗುತ್ತ-ಮತ್ತೆ ಮತ್ತೆ ನಿನ್ನಹಾಡಿಗೆ, ನಗುವಿಗೆ.ಆಗಲು ಬಿಡು ನನ್ನ-ನಿನ್ನ ಹೆಸರಿನ ನೆಳಲುನಿನ್ನ ಬೆರಳುಗಳ ನೆರಳುನಿನ್ನ ನಾಯಿಯ ನೆರಳು. + +ಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನಬಿಟ್ಟು ಹೋಗದಿರು ನನ್ನ + + + +`ಪ್ಯಾಪಿಲಾನ್’ ಎನ್ನುವುದು ಆಫ್ರಿಕಾ ಖಂಡದ ಆಗ್ನೇಯ ಕರಾವಳಿ ಮಡಗಾಸ್ಕರ್ ನಲ್ಲಿ ರುವ ತರುಣ ಕನ್ನಡಿಗರೊಬ್ಬರ ಕಾವ್ಯನಾಮ \ No newline at end of file diff --git a/Kenda Sampige/article_522.txt b/Kenda Sampige/article_522.txt new file mode 100644 index 0000000000000000000000000000000000000000..c2f4e4dda972446d0cb0df31810e6772079b6296 --- /dev/null +++ b/Kenda Sampige/article_522.txt @@ -0,0 +1,27 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ. ಈ ದಿನ ಇಲ್ಲಿಕೆ.ವಿ.ತಿರುಮಲೇಶ್ಬರೆದ ಎರಡು ಕವಿತೆಗಳಿವೆ. + +ಮನದ ಮಾಯ + +ಮನೆ ಬಿಟ್ಟವರಿದ್ದಾರೆ ಮಠ ಬಿಟ್ಟವರಿದ್ದಾರೆತತ್ವಜ್ಞಾನದ ಮೋಹದಲ್ಲಿದೇಶ ತೊರೆದವರು ವಿಷ ಕುಡಿದವರುಅಮೃತದಂತೆ ಮದ್ಯವನ್ನೂವ್ಯಸನವಾಗಿಸಿಕೊಂಡವರು ಹಾಗೂತಬ್ಬಿಕೊಂಡವರುಅಪ್ಸರಸಿಯರಂತೆ ಸೂಳೆಯರನ್ನೂ + +ಏನೀ ಆಕರ್ಷಣೆ ಎಂದು ನಾನೂನಡೆದು ನೋಡುತ್ತೇನೆಒಂದಷ್ಟು ದೂರಹರಡಿದ ಮಬ್ಬಲ್ಲದೆ ಇನ್ನೇನೂಕಾಣಿಸುವುದಿಲ್ಲನನಗೋ ಸಮೀಪದೃಷ್ಟಿಯಾರೂ ಬಿಟ್ಟ ದಾರಿಗುರುತುಗಳಿಲ್ಲಇದ್ದರೂ ಅವನ್ನು ಬಳಸುವಂತಿಲ್ಲಇಷ್ಟು ಮಾತ್ರ ತಿಳಿದಿದ್ದೇನೆ:ತತ್ವಜ್ಞಾನ ಹೀಗೆಯೇ ಆವಾಗಲೂ ಯಾವಾಗಲೂದೇಶಭ್ರಷ್ಟ! + +ಕಾವ್ಯವೂ ಅರ್ಧ ಹಾಗೆಯೇಇನ್ನರ್ಧ ಹೀಗೆಕವಿ ನಡೆಯುತ್ತಾನೆ ಬರಿಜೇಬಿನಲ್ಲೂ ಮಹಾರಾಜನ ಹಾಗೆಎಲ್ಲರನ್ನೂ ಕೂಡಿಕೊಂಡೇಕಾಡುಮೇಡುಗಳಲ್ಲಿ ಮತ್ತುವಾರದ ಸಂತೆಗಳಲ್ಲಿ ಒಬ್ಬನೇ ಆದರೂ ಬರೀಒಬ್ಬನೂ ಅಲ್ಲ + +ದೇವಯಾನಿ ಶರ್ಮಿಷ್ಠ ಮತ್ತಿನ್ನು ಯಾರು ಆಅಪ್ಸರಸಿ ಸರಸಿ ಯವನೀ ರಮಣಿ ಕೂಡಅವನಿಗಿಷ್ಟ + +ಇತ್ತ ಈ ಫಿಲಾಸಫರಿಗಾದರೆ ಮೈಮನಸ್ಸಿಗೆ ಗಾಯಆದರೂ ಆಹ ಅದೆಂಥಾ ಮೋಹ ಎಂದಿಗೂಪರವಶತೆ ಬಿಡದ ಮನದ ಮಾಯ. + +ನಿನ್ನ ತಾಟಸ್ಥ್ಯದಲಿ ನನ್ನ + +If I am not for myself, who will be for me?If I am for myself only, what am I?If not now-when? + +Talmudic saying + +ಎಲ್ಲರಿಗೆ ನಾನಿದ್ದೇನೆ ನನಗೆ ಯಾರಿದ್ದಾರೆಅಥವ ಹಾಗೆ ಯೋಚಿಸುವುದೂ ಕೂಡ ಪಾಪಎಲ್ಲಿ ನಾನು ಕೊನೆಗೊಳ್ಳುತ್ತೇನೆ ಎಲ್ಲಿ ಇನ್ನೊಬ್ಬಆರಂಭಗೊಳ್ಳುತ್ತಾನೆ ನನಗೆ ಗೊತ್ತಿಲ್ಲಎಲ್ಲಿ ಸ್ವಾರ್ಥ ಮುಗಿಯುತ್ತದೆ ಎಲ್ಲಿ ನಿಸ್ವಾರ್ಥಸುರುವಾಗುತ್ತದೆ ನನಗೆ ಗೊತ್ತಿಲ್ಲಎಲ್ಲಿ ಮಾತು ತಡೆಯುತ್ತದೆ ಮೌನಮೊದಲಾಗುತ್ತದೆ ಅದೂ ಗೊತಿಲ್ಲಎಲ್ಲಿ ವೈರುಧ್ಯಗಳು ಪರಸ್ಪರ ಎದುರಾಗಿಗುರುತಿಲ್ಲದಂತೆ ಸರಿದುಹೋಗುತ್ತವೆಒಂದು ಹೂವಿಗೂ ಗೊತ್ತಿರುತ್ತದೆಯಾವಾಗ ಅರಳಬೇಕು ಯಾವಾಗ ದಳಉದುರಬೇಕು ನಾನೋ ತೀರವ್ಯವಹಾರಶೂನ್ಯ ಜನ್ಮತಃ ಯಾವುದೋ ಕೊರತೆಆದರೂ ಸ್ವಯಂ ಶೂನ್ಯನಾಗಲು ನಾನೂಬಯಸಿದ್ದಿದೆ ಓ ದೈವವೇಶೂನ್ಯಸ್ಥಲವೇ ಇಲ್ಲದ ಲೋಕವ ಮಾಡಿಇರಿಸಿದಿ ನನ್ನನ್ನಿಲ್ಲಿ ಈ ಮಬ್ಬಿನಲ್ಲೇದಿಕ್ಕೆಂದು ಹೊರಟು ದಿಗ್ಭ್ರಮೆಗೊಂಡೆ ನಾನುನೀರ ಮೇರೆಯ ಹುಡುಕುವ ಮೀನಿನಂತೆಸಿಕ್ಕ ಸಿಕ್ಕಲ್ಲಿ ಸಿಗಹಾಕಿಕೊಂಡೆ + +ಗೋಡೆಯ ಮೇಲೆ ಬಿದ್ದ ನೆರಳೇ ನೀನೆಷ್ಟುನನ್ನದು ನಾನೆಷ್ಟು ನಿನ್ನದು ಎಂದು ಕೇಳಲೇಈ ದೈತ್ಯಾಕಾರವನ್ನೆ ನಾನೆಂದುಸಂಭ್ರಮಿಸಲೇಸಣಕಲ ನಾನು ಆದರೂ ಎಲೆ ಅಸ್ತಮಯಸೂರ್ಯನೇಸಕಲ ವಸ್ತುಗಳ ಮೇಲೆ ಸುವರ್ಣವರ್ಣವ ಸುರಿದಿನನ್ನ ಮುಖದ ಮೇಲೂ ಇದೀಗನನ್ನ ಮುಖವಲ್ಲ ನಿನ್ನದೇನಾಳೆ ಮುಂಜಾನೆ ಉದಿಸುವಿ ನೀನುನಿನಗೋಸ್ಕರ ಕಾಯುವ ಜೀವಕೋಟಿಗಳಿದ್ದಾವೆನನಗೋಸ್ಕರ ಯಾರಿದ್ದಾರೆಮುಂಜಾನೆ ನನಗೆ ಎಚ್ಚರಾಗಬೇಕೆಂದೆ ಇಲ್ಲನಿದ್ರಿಸದೆ ಅದೆಷ್ಟೊ ವರ್ಷಗಳಾಗಿವೆರೆಪ್ಪೆಗಳು ಮೇಲೆ ಮಣಭಾರ ಕುಳಿತಂತೆತೂಕಡಿಸುತ್ತಿವೆ ಲೋಕದ ಭಾರವ ತಾವೆಹೊತ್ತುಕೊಂಡಂತೆ ಇನ್ನೂ ಭ್ರಮಿಸುತ್ತವೆ ಇದುಭ್ರಮೆಯೆಂದು ತಿಳಿದೂಆದರೂ ಮುಚ್ಚಲಾರವು ಅವುಕನಸುಗಳ ಭಯಕ್ಕೆಒಂದು ಕ್ಷಣ ನಿಲ್ಲು ಸಂಜೆಯ ಬೆಳಕೇನಿನ್ನ ತಾಟಸ್ಥ್ಯದಲಿ ನನ್ನ ಸ್ವೀಕರಿಸು. + + + +ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು. \ No newline at end of file diff --git a/Kenda Sampige/article_523.txt b/Kenda Sampige/article_523.txt new file mode 100644 index 0000000000000000000000000000000000000000..a954a5b98f5a0630ede88952190c30618ad97598 --- /dev/null +++ b/Kenda Sampige/article_523.txt @@ -0,0 +1,7 @@ +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನಸರ್ವಮಂಗಳಬರೆದ ಕವಿತೆ. + +1ಮಣ್ಣಾಗಿದ್ದಾನವಕಣ್ಣ ಮುಂದೆಯೇ.ಕಣ್ಣೊಳಗೆ ಕಣ್ಣಿಟ್ಟುಎವೆಯೊಳಗೆ ಬಚ್ಚಿಟ್ಟುನೋಟವಾಗುತ್ತೇನೆಂದು,ಕೂಟವಿತ್ತು ಮಾಟವಾಗುತ್ತೇನೆಂದುಮಾತು ಕೊಟ್ಟುಕೈಬಿಟ್ಟುಕಲ್ಲಾಗಿದ್ದವನಿಂದುಮಣ್ಣಾಗಿದ್ದಾನೆ.‘ಕ್ಷಮಯಾಧರಿತ್ರಿ’ಯ ಕಿರೀಟ ತೊಟ್ಟುಬದುಕ ಕಾದುಕುದಿವ ನೆಲವಾಗಿದ್ದವಳೀಗಕಲ್ಲಾಗುವ ದಾರಿ ಕಾಣದೆಕಂಗಾಲು. + +2ಕಣ್ಣಲ್ಲೊಂದಿಷ್ಟು ನಿದ್ದೆತೆಪ್ಪಗೆ ನುಸುಳಲು ಬಿಡುಕದಡಬೇಡ ಕನಸುಅಲ್ಲೇ ಸುಮ್ಮನಿದ್ದುಬಿಡುಹಾಡಿದ್ದೇ ಹಾಡುಯುಗಯುಗ ಅಳಿದರೂಬದಲಿಲ್ಲ ಸಾಲುಹುಳಿಯಲ್ಲ ಹಾಲುಒಪ್ಪಲಿಲ್ಲ ಒಮ್ಮೆಯೂ ನೀನುಒಲವು ಸಾಕಾರಜೀವಜಲದಾಳಬತ್ತಿಹೋಗಿದೆ ಕಡಲುಕಡೆಯಬೇಡ ನೋವಿನೊಡಲುಅಲ್ಲೇ ಸುಮ್ಮನಿದ್ದುಬಿಡುಬಾನಹಿಗ್ಗು ನೆಲದ ಪುಳಕನೆಲದ ಹಿಗ್ಗು ಹಸಿರು ಕನಕಎಳೆಯ ಬಾಳೆಯ ಸುಳಿಗೆಬಡಿದಂತೆ ಸಿಡಿಲುಛಿದ್ರವಾಗಿದೆ ಮಡಿಲುಅಲ್ಲೇ ಸುಮ್ಮನಿದ್ದುಬಿಡುಒಡಲ ತುಂಬ ಒಲವ ಕೆಂಡಕದಡಬೇಡ ಕಣಸುಅಲ್ಲೇ ಸುಮ್ಮನಿದ್ದುಬಿಡು. + +3ಅಪರಾಧಿ ನನಗೆಸುಖವೆಲ್ಲಿಂದ ಬಂದೀತು ಹೇಳುನಡುಮನೆಯ ಗೂಡಿಗೆಹಣತೆಯೆಂದು ಹಿಡಿಯಬಂದದ್ದು.ಸೂರ್ಯನೆಂಬ ಅರಿವುಇರಲಿಲ್ಲ ಆಗಮುಸುಕು ಕವಿದ ಮೋಹಜಾಲಭೂಮಿಗೊಬ್ಬನೇ ಆಸರಾ ನೇಸರಉಂಟೆ ಅವಗೆ ಕಟ್ಟುಪಾಡು; ಬಂಧನ!ಉರಿದುರಿದು ಬೂದಿಯಾಗುತಿದೆ ಚಂದನನನ್ನ ಸಂಕಟವಿಷ್ಟೇಯಾವ ಜೋಗಿಗೋ ಚಂದದ ಲೇಪನಹೂವಿನ ಹಂಬಲ ದುಂಬಿಗೂಇತ್ತೆ?ಕೇಳುವ ಮೊದಲೇ ನನ್ನನ್ನಿತ್ತೆ.ಸುಖವೆಲ್ಲಿಂದ ಬಂದೀತು ಹೇಳು?ನಗು ತುಟಿಯ ಮೇಲೆಅಳು ನಾಭಿಯಿಂದೆದ್ದು ಕೊರಳಲ್ಲಿ ಸೆರೆಕಂಗಳ ಕೊಳದಲ್ಲಿ ನೀನು ಮೀನುಗಾಳಸುಖ ಎಂದರೇನೆಂದೆಗೆಳೆಯಾ ನನ್ನ ಉತ್ತರ …….ನೀನು! ! ! \ No newline at end of file diff --git a/Kenda Sampige/article_524.txt b/Kenda Sampige/article_524.txt new file mode 100644 index 0000000000000000000000000000000000000000..fbcdc86f649f29384282d6763b455e9e9f990fe0 --- /dev/null +++ b/Kenda Sampige/article_524.txt @@ -0,0 +1,21 @@ +ಕೆಲಸದಿಂದ ಬರುವಾಗಲೆ ತಡವಾದ್ದರಿಂದ ಹೋಟೆಲ್ಲಿನಲ್ಲಿ ಊಟ ಮುಗಿಸಿ ರೂಮು ತಲುಪಿದ ತಕ್ಶಣವೇ ಹಾಸಿಗೆ ಮೇಲೆ ಬಿದ್ದುಕೊಂಡ. ಇನ್ನೇನು ನಿದ್ದೆ ಬಿತ್ತು ಅನ್ನುವಾಗ ಮೊಬೈಲ್ಲಿನ ಮೆಸೇಜ್ ಟೋನ್ ಅಚ್ಯುತನನ್ನು ಅಲುಗಾಡಿಸಿತು. ಈ ನಡುರಾತ್ರಿ ಯಾರ ಎಸೆಂಮೆಸ್ಸು? ಕತ್ತಲಲ್ಲೇ ಮೊಬೈಲ್ ತಡಕಾಡಿ ನೋಡಿದ. ಯಾರದೋ ಅಪರಿಚಿತ ನಂಬರ್. ಓಪನ್ ಮಾಡಿ ಓದಿದ. + +“ಹಲೋ ತುಚ್ಛ! ಹ್ಯಾಂಗಿದ್ದೀಯೊ?” ಎಂದಿತ್ತು.ಅಚ್ಯುತನಿಗೆ ಪೂರ್ತಿ ಎಚ್ಚರಾಯ್ತು. ಅರೆ! ಜಾನಕಿಯಲ್ಲವೇ! ಹೌದು ಅವಳೇ. ಅವಳು ಮಾತ್ರ ತನ್ನನ್ನು ಹೀಗೆ ಕರೆಯೋದು. ಅಚ್ಯುತ ಉದ್ವಿಗ್ನಗೊಂಡು ಕತ್ತಲಲ್ಲೇ ಅಕ್ಷರಗಳಿಗಾಗಿ ತಡಕಾಡಿದ.“ಯೇ ಜಾನ್ಕಿ.. ನೀನು! ನನ್ ಹೆಸ್ರನ್ ಸರಿಯಾಗಿ ಅನ್ನೋಕೆ ಏನೇ ದಾಡಿ ನಿಂಗೆ? ನೀನಿನ್ನೂ ಹಳೇ ಚಾಳಿ ಬಿಟ್ಟಿಲ್ವಾ?”“ಏನ್ ಮಾಡಲಿ? ನೀ ನನ್ನ ಪ್ರೀತಿಯ ತುಚ್ಛ ಅಲ್ವಾ?”“ಸಾಕ್ ಮಾಡು, ಈ ನಡು ರಾತ್ರಿ ಯಾಕೆ ಡಿಸ್ಟರ್ಬ್ ಮಾಡ್ದೆ ಹೇಳು.”“ಏನ್ ತಪಸ್ ಮಾಡ್ತಿದ್ಯಾ? ಅಥವಾ ಸನ್ಯಾಸತ್ವ ಸ್ವೀಕರಿಸಿದೆಯಾ?”“ತಪಸ್ಸು ಇಲ್ಲಾ ಮಣ್ಣೂ ಇಲ್ಲಾ… ನಿದ್ದೆ ಮಾಡ್ತಿದ್ದೆ.”“ಮತ್ತೆ ಕನಸಲ್ಲಿ ಯಾರು ಬರ್ತಿದ್ರೊ?”“ನೀನಂತೂ ಖಂಡಿತ ಅಲ್ಲಾ, ಗೂಬೆ”” ನಿನ್ನ ಸಿಟ್ಟಿನ್ನೂ ಇಳ್ದಿಲ್ವಾ? ಟೆಂಪೊಕ್ಲೀನರ್ಕಿ ಮಾಡ್ತಿದ್ರೆ ನಿನ್ಯಾರು ಲವ್ ಮಾಡ್ತಾರೆ ಅಂದದಕ್ಕೆ ಊರ್ ಬಿಟ್ಟಿಯಲ್ಲ ಪುಣ್ಯಾತ್ಮ”“ಅದೊಂದೇ ನಿನ್ನಿಂದ ನಂಗಾಗಿರೊ ಉಪಕಾರ. ನಿನ್ನ ಮಾತು ಮನಸಿಗೆ ತಾಗದಿದ್ರೆ ನಾನು ಊರ್ ಬಿಡ್ತಿರಲಿಲ್ಲಾ. ಇನ್ನೂ ಕುಮ್ಟಾ ಬಸ್ ಸ್ಟ್ಯಾಂಡಿನಲ್ಲಿ ‘ಗೋಕ್ರಣ್ ಗೋಕ್ರಣ್’ ಅಂತ ನಿನ್ನಂತ ಗೂಬೆ ಪ್ಯಾಸೆಂಜರ್ ಹುಡುಕ್ತಿರ್ತಿದ್ದೆ. ಇಲ್ಲೀಗ ತಿಂಗಳ ತಿಂಗಳ ಪಗಾರ ತಕ್ಕಂತಿ. (ಏನ್ ಕೆಲಸ ಅಂತಾ ಮಾತ್ರ ಕೇಳಬ್ಯಾಡ)” + +” ಓ ಥ್ಯಾಂಕ್ಸ್ ಹೇಳ್ಬೇಕಲ್ವಾ ನಂಗೆ… ಇರ್ಲಿ ಬಿಡು. ನಿಂಜೊತೆ ಮಾತಾಡಬೇಕು ಅನಿಸ್ತು. ನಿನ್ನ ದೋಸ್ತ ರಮೇಶ ನಂಬರ್ ಕೊಟ್ಟ. ಮನೆಯವ್ರೆಲ್ಲಾ ಮಲಗಿದ್ದಾರೆ. ಅವ್ರಿಗೆ ಡಿಸ್ಟರ್ಬಾಗ್ತದೆ ಅಂತ ಎಸೆಂಮೆಸ್ ಮಾಡ್ತಿದ್ದೇನೆ. ಟೋನ್ ವೊಲ್ಯುಮ್ ಕಮ್ಮಿ ಮಾಡಿದ್ದೇನೆ. ಯಾಕೋ ಇಂದು ನಿನ್ನ ನೆನಪು ತುಂಬಾ ಆಗ್ತಿದೆ ಮಾರಾಯಾ. ನಿನ್ನ ಪಾಪದ ಮುಖ,ಗುಳಿಬೀಳುವ ಕೆನ್ನೆಗಳು ಕಣ್ಮುಂದೆ ಬರ್ತಿವೆ.”“ಯೇ ಡಾಂಕಿ, ಇದೇನೆ ನಿನ್ನ ಹೊಸ ಅವತಾರ? ಈ ಥರದ ಮಾತಾಡ್ತಿದ್ದಿ. ನೀನು ಜಾನಕಿ ಹೌದೊ ಅಲ್ವೊ?”“ಅಚ್ಯುತ ನನ್ನ ತಡಿಬೇಡ ಪ್ಲೀಸ್. ನಿನ್ನ ಬಗ್ಗೆ ಈವರೆಗೆ ಬರೀ ಕೀಟಲೆ ಮಾಡಿದೆ, ಕೆಟ್ಟದ್ದನ್ನೇ ಆಡಿದೆ…ನಿಂಗೊತ್ತಾ, ಆಗೆಲ್ಲಾ ನಿನ್ನ ಆ ನಿಶ್ಪಾಪ ಮುಖ ಎಷ್ಟು ಲವೇಬಲ್ ಆಗಿರ್ತಿತ್ತು ಅಂತಾ? ….ಈ ಎಸೆಂಮೆಸ್ ಎಂಥ ಚಂದ ಅಲ್ವಾ? ಎದುರಿಗಿದ್ರೆ ಮನಸಿನ ಮಾತುಗಳು ಭಿನ್ನಗೊಂಡು ಹೊರಬರುತ್ತವೆ. ಕಾಗದದಲ್ಲಿ ಬರೆಯೋಣ ಅಂದ್ರೆ ಕಾಯುವ ಕಾಲವಲ್ಲವಿದು. ಎಸೆಂಮೆಸ್ ಪರ್ಫೆಕ್ಟ್. ಈ ಕ್ಶಣಕ್ಕೇ ಜೀವ ಚಿಗುರಿಸುತ್ತದೆ…” + +“ಅಂತೂ ನಿಂಗೂ ಹೃದಯ ಇದೆ ಅನ್ನು!!….ಮಜಕ್ಕಂದೆ, ನಂಗೊತ್ತಿತ್ತು ನಿನ್ನ ಮನಸೆಂಥದ್ದು ಅಂಥ….ನಾನು ಪಿಯುಸಿಯಲ್ಲಿ ಫೇಲ್ ಆದಾಗ ಅಪ್ಪ ‘ಗದ್ದೆ ಕೆಲಸಕ್ಕೆ ಬಾ’ ಅಂದ. ನೀವೆಲ್ಲಾ ಕುಮಟಾ ಬಾಳಿಗಾ ಕೊಲೇಜಿಗೆ ಸೇರ್ಕೊಂಡ್ರಿ. ಭೂಮಿಗೆಳದ ನೇಗಿಲ ಸಾಲುಗಳೂ ನಿನ್ನ ಗುಂಗುರು ಕೂದಲ ನೆನಪು ತಂದರೆ ನಾನೇನು ಮಾಡಲಿ…ಬಿಟ್ಟೆ. ಯಂಕ್ಟಣ್ಣನ ಟೆಂಪೊ ಕ್ಲೀನರ್ ಆದೆ….ಅಘನಾಶಿನಿ ದಾಟುವಾಗ ಬೀಸುವ ತಂಗಾಳಿಯಲ್ಲಿ ಚದುರಿದ ನಿನ್ನ ಕಪ್ಪು ಕೂದಲು ಕನಸಲ್ಲೂ ನನ್ನ ಮುಖಕ್ಕೆ ಕಚಗುಳಿಯಿಟ್ಟವು….” + +“ಹಾಂ ಹಾಂ ಕವಿಪುಂಗವ ಸಾಕಮಾಡು. ಮಾದನಗೇರಿಯಲ್ಲಿ ಇಳಿವಾಗ ಕಾಸು ಕಾಸಿಗೂ ಕಿತ್ತಾಡ್ತಿದ್ದೆಯಲ್ಲೋ ಕತ್ತೆ… ಅದೆಲ್ಲಾ ಈಗ ಇರ್ಲಿ ನಿಂಗೊಂದು ವಿಷಯ ಹೇಳ್ತೇನೆ…. ಬೇಡ ಬೇಡ ನೀನೇ ಗೆಸ್ ಮಾಡು. ಊರು ಬಿಟ್ಟ ಮೇಲಾದರೂ ಜಾಣ ಆಗಿಯೊ ನೋಡೋಣ.” + +“ಕುಶಾಲು ಮಾಡೊದು ಸಾಕು. ನಂಗೂ ನಿವೇದಿಸಿಕೊಳ್ಳೋದಿದೆ. ನಿನ್ನ ಎದುರಂತೂ ನನ್ನ ನಾಲಿಗೆ ಮರಗಟ್ಟುತ್ತದೆ…..ನೀ ನನ್ನ ಲೇವಡಿ ಮಾಡಿದೆ, ಫ್ರೆಂಡ್ಸ್ ಜೊತೆ ಸೇರಿ ನನ್ನನ್ನು ಹಳಿದು ಬಿದ್ದುಬಿದ್ದು ನಕ್ಕೆ. ಆದರೆ ನಿನ್ನ ನಗುವಿನ ಕೊನೆಯಲ್ಲಿ ನಿನ್ನ ಕಣ್ಣುಗಳಲ್ಲಿ ಜಿನುಗುವ ಆ ಪ್ರೀತಿಯ ತೇವಕ್ಕಾಗಿ ನಾನು ಕಾದೇ ಇರುತ್ತಿದ್ದೆ…. ನೀ ಅಂದದ್ದು ನಿಜ, ಈ ಎಸೆಂಮೆಸ್ ಗೆ ಅಂತರ್ಗಮಿಸುವ ಭಾವನದಿ ಹರಿಬಿಡುವ ಶಕ್ತಿಯಿದೆ… ಈಗ ನೋಡು ನಿನ್ನೆದುರು ಎಂದಾದರೂ ‘ಐ ಲವ್ ಯೂ’ ಅನ್ನೋ ಧೈರ್ಯ ಬರ್ತಿತ್ತಾ… ಐ ಲವ್ ಯು ಜಾನಕಿ..” + +ಹೀಗೆ ಟಾಯ್ಪಿಸಿದನ್ನು ಇನ್ನೊಮ್ಮೆ ಓದಿದ. ಕೊನೆಯ ಅಕ್ಷರಗಳು ರೋಮಾಂಚನ ಉಂಟು ಮಾಡಿದವು. ಸೆಂಡ್ ಮಾಡುವಾಗ ಅಚ್ಯುತನ ಕೈಗಳು ಕಂಪಿಸಿದವು. ‘ಮೆಸೇಜ್ ನಾಟ್ ಸೆಂಟ್’ ಅಂತ ಬಂತು. ಬರೆದದ್ದನ್ನು ಇನ್ನೊಮ್ಮೆ ಓದಿ ಕೊನೆಯಲ್ಲಿ ‘ರಿಯಲೀ ಐ ಲವ್ ಯು’ ಎಂದು ಸೇರಿಸಿ ಮತ್ತೆ ಸೆಂಡ್ ಮಾಡಿದ. ‘ಚೆಕ್ ದಿ ಬ್ಯಾಲನ್ಸ್’ ಅಂತ ಬಂತು. ಅಯ್ಯೋ ಕರ್ಮವೆ! ಹತ್ತು ಪೈಸೆ ಮಾತ್ರ ಬ್ಯಾಲನ್ಸಿದೆ. ನೋ ಔಟ್ ಗೋಯಿಂಗ್, ಇನ್ ಕಮಿಂಗ್ ಮಾತ್ರ. ಅಚ್ಯುತ ಕತ್ತಲನ್ನೇ ಅಲುಗಾಡಿಸುವವನಂತೆ ಆಕಡೆ ಈಕಡೆ ತಿರುಗಿದ. + +“ಅದೆಷ್ಟು ಹೊತ್ತೋ ಗೆಸ್ ಮಾಡೋಕೆ, ಬೆಳಗು ಮಾಡ್ತಿಯೇನೋ ಮಂಕಿ”“……………………………………”ಹೋಗ್ಲಿಬಿಡು ನಾನೇ ಹೇಳ್ತೀನಿ. ನಂಗೆ ಮದುವೆ ನಿಶ್ಚಯ ಆಯ್ತು ಮಾರಾಯ. ಹುಡ್ಗ ಐಟಿ ಇಂಜಿನಿಯರ್, ಬೆಂಗಳೂರಲ್ಲಿದ್ದಾನೆ. ಒಂಚೂರು ಕುಳ್ಳ ಅನ್ನೋದು ಬಿಟ್ರೆ ವೆರಿ ಹ್ಯಾಂಡ್ಸಮ್. ಮನೆಗೆ ಬಂದು ನಿಂಗೆ ಒಪ್ಗೆನಾ? ಅಂದ. ಅವನಿಗೆ ಮಾತು ಮಾತಿಗೆಕಣ್ಣುಪಡ್ಚೋ ಅಭ್ಯಾಸ ಇದ್ದಂಗಿದೆ. ನಾನು ‘ಹೂಂ’ ಅಂತ ಕಣ್ಣುಪಡ್ಚಿದೆ. ಅವನ ಮುಖ ನೋಡಬೇಕಿತ್ತು ನೀನು….ಆಮೇಲೆ ಮನೆಯವರತ್ರ ಬೈಸಿಕೊಂಡೆ. ‘ಈ ತರಲೆತನ ಬಿಡದಿದ್ರೆ ನಿನ್ಯಾರು ಕಟ್ಕೊತಾರೆ?’ ಅಂದ್ರು….ಹುಡುಗ ಒಪ್ಪಿದಕ್ಕೆ ಮನೆಯವರೆಲ್ಲಾ ಖುಷಿ ಆಗಿದ್ದಾರೆ. ಮತ್ತೆ ನಾನೂ. ಈ ಗಳಿಗೆಯಲ್ಲಿ ನೀ ನೆನಪಾದೆ. ನಿನ್ನ ಪಾಪದ ಮುಖ ನೆನಪಾಯ್ತು. ನೀನೊಂಥರಾ ವಿಶಾದ ಇದ್ದಂಗೆ ಮಾರಾಯ. ಎಂಥ ಸಂತಸದ ಗಳಿಗೆಯಲ್ಲೂ ಜೊತೆಯಲ್ಲೇ ಇರುವೆ…..ಮೊಬೈಲ್ ಗಿಫ್ಟ್ ಕೊಟ್ಟು ‘ಮಾತಾಡ್ತಿರು’ ಅಂತ ಹೇಳಿ ಹೋಗಿದ್ದಾನೆ. ( ಮಾತಾಡು ಅಂದಿದ್ದು ಅವನ ಜೊತೆ. ನಾನು ನಿಂಜೊತೆ ಹರಟೆ ಹೊಡಿತಿದೀನಿ)” + +“………………………………”“ಅರೆ, ಏನ್ ನೆಗೆದು ಬಿದ್ದ್ ಹೊದ್ಯೇನೋ ಕೋತಿ?”“……………………………….”“ಅಚ್ಯತ ಸತಾಯಿಸಬೇಡವೋ. ಬೇಕಾದ್ರೆ ಬೈದುಬಿಡೋ.”“…………………………………..”” ಹೀಗೆ ಮೌನದಲ್ಲಿ ಕೊಲ್ಲಬೇಡವೋ ಕತ್ತೆ”“………………………………………”“ತುಚ್ಛ ನೀನು” + +(sms- save my soul) + +ಉತ್ತರ ಕನ್ನಡದ ಅಂಕೋಲಾ ತಾಲ್ಲೂಕಿನ ವಾಸರೆ ಗ್ರಾಮದವರು. ಸದ್ಯ ಮುಂಬೈನಲ್ಲಿ ಸರ್ಕಾರಿ ಉದ್ಯೋಗದಲ್ಲಿದ್ದಾರೆ. \ No newline at end of file diff --git a/Kenda Sampige/article_525.txt b/Kenda Sampige/article_525.txt new file mode 100644 index 0000000000000000000000000000000000000000..90550782637a648cb18c0ce96c2b64824484c1e0 --- /dev/null +++ b/Kenda Sampige/article_525.txt @@ -0,0 +1,99 @@ +ತಮ್ಮ `ಹಳ್ಳ ಬಂತು ಹಳ್ಳ’ ಕಾದಂಬರಿಗಾಗಿ ಈ ಬಾರಿಯ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಶ್ರೀನಿವಾಸ ವೈದ್ಯರಸಣ್ಣ ಕಥೆ ‘ಶ್ರದ್ಧಾ’ ಇಲ್ಲಿದೆ. + +ಮಾಘ ಮಾಸದ ಶುಕ್ಲಪಕ್ಷದ ದ್ವಾದಶಿ ನಮ್ಮ ತಂದೆಯವರ ಶ್ರಾದ್ಧದ ದಿನ. ಅದು ಸಾಧಾರಣ ಜನೆವರಿ- ಫೆಬ್ರುವರಿ ತಿಂಗಳಿನ್ಯಾಗ ಯಾವಾಗೋ ಬರತದ. ಆ ಸುಮಾರಕ್ಕ ನನ್ನ ಸ್ವರ್ಗಸ್ಥ ತಂದೆಯವರ ನೆನಪು ನನ್ನನ್ನು ಎಡೆಬಿಡದೆ ಕಾಡುತ್ತಿರುತ್ತದೆ. + +ಹಂಗ ನೋಡಿದರ ನಮ್ಮ ತಂದೀದು ಸಾಕಷ್ಟು ವಿರೋಧಾಭಾಸಗಳಿಂದ ಕೂಡಿದ ಮರೆಯಲಾಗದ ವ್ಯಕ್ತಿತ್ವ. ಇಡೀ ವರುಷನ ಅವರ ನೆನಪು ಬಿಟ್ಟಿರೂದಿಲ್ಲ. ಆದರೂ ಮಾಘ ಮಾಸದ ಶುಕ್ಲಪಕ್ಷದ ಸುಮ-ಸುಮಾರಿಗೆ ಅವರ ಸ್ಮೃತಿ ತೀವ್ರವಾಗಿ ಇನ್ನೇನು ಮನೆಯ ಯಾವುದೋ ಒಂದು ಮೂಲೆಯಿಂದ ಅವರು ಎದ್ದು ಬಂದು ಬಿಡತಾರೇನೋ ಅನ್ನುವಷ್ಟು ಸ್ಫುಟವಾಗಿ ತೀಕ್ಷ್ಣವಾಗಿ ಮನಸ್ಸನ್ನು ಕೆಣಕತದ. + +ನಮ್ಮ ತಂದಿ ಲೋಕಮಾನ್ಯ ಟಿಳಕರ ಭಕ್ತರು. ಟಿಳಕರ ತತ್ವಗಳನ್ನೂ ಕಠೋರ ಶಿಸ್ತನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹವಣಿಸಿದವರು. ಒಂದೆರಡು ಸಲ ಜೇಲು ಕಂಡವರು. ಅಂತೆಯೇ ಅವರಿಗೆ ಈ ನಾಲ್ಕಾಣೆ ಎರಡಾಣೆ ಚಿಲ್ಲರೆಗಳಿಂದ ತುಂಬಿದ ವ್ಯಾವಹಾರಿಕ ಜಗತ್ತಿನಲ್ಲಿ ವ್ಯವಹರಿಸಲು ಬರಲೇ ಇಲ್ಲ. + +ನಮ್ಮದು ನರಸಿಂಹನ ಒಕ್ಕಲು. ನಮ್ಮ ತಂದೀದು ಶ್ರೀಮದ್ಗಾಂಭಿರ್ಯದಿಂದೊಪ್ಪುವ, ತುಸು ಮಟ್ಟಿಗೆ ಉಗ್ರವೇ ಎನ್ನಬಹುದಾದ ರೂಪ. ಸಾಮಾನ್ಯಕ್ಕಿಂತ ಸ್ವಲ್ಪ ಎತ್ತರವೇ, ದಪ್ಪವೇ ಎನ್ನಬಹುದಾದ ಮೈಕಟ್ಟು. ದುಂಡು ಮುಖಕ್ಕೆ ಒಪ್ಪದ ಕೆಂಡಗಣ್ಣು. ಎತ್ತರ ಮಟ್ಟಸವಾದ ಹಣೆ. ಮುಖದ ಮೇಲೆ ಎರಡೋ ಮೂರೋ ದಿವ್ಸದ ಕಳೆ. ತಿದ್ದಿ ತಿದ್ದಿ ತೀಡಿ ತೀಡಿ ಎರಡೂ ಕಡೆ ಚೂಪಾಗಿ ಬೆಳೆಸಿದ ಜೊಂಡು ಮೀಸೆ. ಮಶಿನ್ ಕಟ್ ತಲೆ. ಮಂಗಳಾರತಿ ಬತ್ತಿಯಷ್ಟು ಚಂಡಿಕೆ. ನಿತ್ಯಪೂಜೆ ಮಾಡಿಯೂ ಕೂಡ ಸಾಂಸಾರಿಕ ಸೋಲುಗಳನ್ನು ಎದುರಿಸಲಾರದ್ದಕ್ಕೊ ಏನೋ ಮುಖದಲ್ಲಿ ಮೂಡಿದ ನಿರಂತರ ಸಿನಿಕ ಕಳೆ, ಸಾತ್ವಿಕ ಸಂತಾಪದ ಕ್ರುದ್ಧ ಭಾವ. + +ಅವರು ಸದೋದೀತ ಎರಡೂ ಕೈಯಿಂದ ಮೀಸೆ ತಿರುಚಿ, ತಿರುಚಿ ಒಂದೊಂದು ತುದಿಗೂ ಒಂದೊಂದು ಲಿಂಬೆಹಣ್ಣು ಚುಚ್ಚಲಿಕ್ಕೆ ಬರುವಂತೆ ಚೂಪಾದ ಮೀಸೆ ಬೆಳೆಸಿದ್ದರು, ಕ್ರಾಂತಿಕಾರಿ ಚಂದ್ರಶೇಖರ ಆಜಾದನಂತೆ. + +ಯಾವಾಗಲೂ ಎಡಗೈಯಿಂದ ಬಲಗಡೆ ಮೀಸೆ, ಬಲಗೈಯಿಂದ ಎಡಗಡೆ ಮೀಸೆ ನೇವರಿಸುತ್ತಿದ್ದರು. ಈ ಕೈಯಿಂದ ಆ ಮೀಸೆ, ಆ ಕೈಯಿಂದ ಈ ಮೀಸೆ! ಯಾವುದಾದರೊಂದು ಕೈ ಖಾಲಿ ಇಲ್ಲದಿದ್ದರೆ ನವೆ ಅನುಭವಿಸುತ್ತಾ ಹಾಗೇ ಇರುತ್ತಿದ್ದರೇ ಹೊರತು, ಅದೇ ಕೈಯಿಂದ ಅದೇ ಮೀಸೆಯನ್ನು ಎಂದೂ ನೇವರಿಸುತ್ತಿದ್ದಿಲ್ಲ. ತತ್ವನಿಷ್ಠೆ ಅಂದರೆ ಅದು! + +ಆ ಕಾಲದ ತಂದೆಯವರದ್ದೊಂದು ವಿಚಿತ್ರನೂ ಇತ್ತು. ಮಕ್ಕಳ ಸಂಗ್ತೀ ನೇರವಾಗಿ ಡಾಯಿರೆಕ್ಟ್‌ ಆಗಿ, One to one ಆಗಿ Face to face ಎಂದೂ ಮಾತಾಡತಿದ್ದಿಲ್ಲ. ಏನೇ ಇದ್ದರೂ ಅದು ತಮ್ಮ ಶ್ರೀಮತಿಯ ಮುಖಾಂತರ ಅಂದರೆ ನಮ್ಮ ತಾಯಿಯವರ ಮುಖಾಂತರವೇ. ಟಿಳಕರು ತಮ್ಮ ಮಕ್ಕಳನ್ನು ಹೀಂಗ ಬೆಳೆಸಿದರು ಅಂತ ಕೇಳಿದ್ದೆ. ಬಹುಶಃ ಪ್ರೀತಿ ಅಂತಃಕರಣ, ಮಮತೆ, ಸ್ನೇಹ, ವಾತ್ಸಲ್ಯ ಇಂತಹ ದುರ್ಬಲ ಭಾವನೆಗಳಿಗೆ ಆಸ್ಪದ ಕೊಟ್ಟರೆ ಮಕ್ಕಳು ಎಲ್ಲಿ ಕೆಟ್ಟು ಹೋದಾರೋ ಎಂಬ ಭಯ. + +ಅಷ್ಟೂ ಅಲ್ಲ ಪರೋಕ್ಷವಾಗಿ, Indirect ಆಗಿ ಸಹಿತ ಏನೇ ಮಾತಾಡಿದರೂ ಅದು ಕೂಡ ಅತ್ಯಂತ ವೈಭವೋಪೇರಿತಲಾದ, ತೀಕ್ಷ್ಣವಾದ, ಹರಿತವಾದ, ಉಗ್ರವಾದ ವ್ಯಂಗ್ಯದಿಂದ ಕೂಡಿರುತ್ತಿತ್ತು. ಅಬ್ಬಬ್ಬ! ಅಂತಹ ರುದ್ರ ಗಂಭೀರ ಶ್ರೀಮಂತ ವ್ಯಂಗ್ಯವನ್ನು ನಾನು ಆಮೇಲೆ ಕೇಳಲೇ ಇಲ್ಲ. ಅನುಭವಿಸಲೇ ಇಲ್ಲ. + +ಈ ರೀತಿ ನಮ್ಮ ಹಿರಿಯರ, ನಿಷ್ಠುರ ಕಠೋರ ದರ್ಪದ ಆಡಳಿತದಲ್ಲಿ ನಾನೂ ನನ್ನ ಅಕ್ಕ ಸರೋಜಕ್ಕ ಇಬ್ಬರೂ ಬೆಳೆದವು. ಸರೋಜಕ್ಕನ ಜತೆಗೆ ಮಾತ್ರ ಆಗಾಗ ಸ್ವಲ್ಪ ಮಮತೆಯಿಂದ ಪ್ರೀತಿಯಿಂದ ಕಾಲ ಕಳೆಯುತ್ತಿದ್ದರು ನಮ್ಮ ತಂದೆ. ಬಹುಶಃ ಅವಳು ಕುಲಕ್ಕೆ ಹೊರಗಾಗಬೇಕಾದ ಹೆಣ್ಣು ಎಂತಲೋ ಎನೋ? ನನ್ನ ಜತೆ ಮಾತ್ರ ಯಾವಾಗಲೂ ಎದುರಾಳಿಯಂತೆ ಅದೂ ಆಟದ ಎದುರಾಳಿಯಲ್ಲ, ಕಾಳಗದಲ್ಲಿಯ ಎದುರಾಳಿಯಂತೆ. + +ಒಂದು ಸಲ ಬಹುಶಃ ನಾನು ಹತ್ತು ಹನ್ನೆರಡು ವರುಷದವನಿದ್ದಾಗ “ಅವ್ವಾ ದಿನಾ ಜೋಳದ ಭಕ್ರಿ ತಿಂದು ಬ್ಯಾಸರ ಬಂದದ. ಇವತ್ತೊಂದು ದಿವ್ಸ ಚಪಾತಿ ಮಾಡವ್ವ” ಅಂದೆ. ಅವತ್ತೇ ಮನ್ಯಾಗ ಗೋಧಿ ಇದ್ದಿದ್ದಿಲ್ಲ ಅಂತ ಕಾಣಸ್ತದ. ನಮ್ಮ ಜಿವ್ಹಾ ಚಾಪಲ್ಯದ ಸುದ್ದಿ ನಮ್ಮ ತೀರ್ಥರೂಪರ ಕಿವಿಗೆ ಬಿತ್ತು. ತೊಗೋ… ಮಂತ್ರಪುಷ್ಪ ಸುರೂನ ಆತು. + +“ನಾನು ಒಬ್ಬ ನತದೃಷ್ಟ ದಟ್ಟ ದರಿದ್ರ ಬಡ ಕಾರಕೂನ. ಅಧಮಾಧಮ. ನನಗೆ ಬರೋ ಕೂಲೀ ದುಡ್ಡಿನೊಳಗ ಗೋದಿ ತರಲಿಕ್ಕೆ ಆಗೂದುಲ್ಲ ಅಂತ ಹೇಳ್ರಿ. ನಾಳೆ ನಮ್ಮ ಚಿರಂಜೀವರೇನು ದಿವಾಣ ಸಾಹೇಬರು ಆಗ್ತಾರಲ್ಲ… ಆದ ಮ್ಯಾಲ ದಿನಾಲೂ ಹೋಳಿಗೆ… ತುಪ್ಪ … ಕಡಬೂ…. ಪಾಯಸ… ಮಂಡಿಗೆ ಇತ್ಯಾದಿಯಲ್ಲಾ ಪಂಚಭಕ್ಷ್ಯ ಪರಮಾನ್ನ ತಿಂದು ತುಪ್ಪದಾಗ ಕೈತೊಳಕೊಳ್ಳಲಿಕ್ಕೆ ಹೇಳ್ರಿ… ತುಪ್ಪದಾಗ ಕೈತೊಳೆದುಕೊಂಡು ತಲೀ ಬೋಳಿಸಿಕೊಳ್ಳಲಿಕ್ಕೆ ಹೇಳ್ರಿ.” + +ಈ ತಲೆ ಬೋಳಿಸಿಕೊಳ್ಳುವ ಮಾತು ನಮ್ಮ ನಿತ್ಯ ಜೀವನದ ಪ್ರತಿಕ್ಷಣದ ಒಂದು ಅವಿಭಾಜ್ಯ ಅಂಗವೇ ಆಗಿತ್ತು. ಅದು common factor, bracket ನ ಹೊರಗ ಇದ್ದಾಂಗ. ಉಳಿದದೆಲ್ಲ bbracket ನ ಒಳಗ, ಉದಾಹರಣೆಗೆ, + +“ಕುಮಾರ ಕಂಠೀರವ ಅವರಿಗೆ ಸ್ನಾನಾ ಮಾಡಿ ತಲಿ ಬೋಳಿಸಿಕೊಳ್ಳಲಿಕ್ಕೆ ಹೇಳ್ರಿ.”“ಯಜಮಾನರು ಊಟಾ ಮುಗಿಸಿ ತಲೀ ಬೋಳಸಿಗೋತಾರೇನು ಕೇಳ್ರಿ.”“ಪಡಸಾಲ್ಯಾಗಿಂದು ಆ ದರಿದ್ರ ಮಾರೀ ಸಾಯಿಕಲ್ ಹೊರಗಿಟ್ಟು ತಲೀ ಬೋಳಸಿಕೊ ಅನ್ನರಿ ನಿಮ್ಮ ಚಿರಂಜೀವರಿಗೆ.”“ಇವತ್ತ ಗುರುವಾರ ಅದೂ ರಾಯರ ವಾರ. ನಿಮ್ಮ ಮಿರ್ಜಾ ಸಾಹೇಬರಿಗೆ ಸ್ನಾನಾ ಮುಗಿಸಿ ಒಂದಿಷ್ಟು ಗುರುಸ್ತೋತ್ರ ಅಂದು ತಲೀ ಬೋಳಿಸಿಕೊಳ್ಳಿಕ್ಕೆ ಹೇಳ್ರಿ.”“ನಿಮ್ಮ ಪುತ್ರರತ್ನರಿಗೆ ಸ್ವಲ್ಪ ನಾರಾಯಣಾಚಾರ ಮನೀ ತನಕ ಹೋಗಿ ವೈಷ್ಣವರ ಏಕಾದಶಿ ಯಂದ… ಅಂತ ಕೇಳಿಕೊಂಡ ಬಂದು ತಲೀ ಬೋಳಸಿಕೊಳ್ಳಲಿಕ್ಕೆ ಹೇಳ್ರಿ.” + +ಈ ರೀತಿ ಅಸ್ಮಾದಿಕರು ಯಾವುದೇ ಕಾರ್ಯವನ್ನು ಮಾಡಿದರೂ ಅದು ನಮ್ಮ ತಲೆ ಬೋಳಿಸಿಕೊಳ್ಳುವುದರಲ್ಲಿ ಪರ್ಯವಸಾನವಾಗುತ್ತಿತ್ತು. + +ನಮ್ಮ ತೀರ್ಥರೂಪರಿಗೆ ನನ್ನ ಕೇಶರಾಶಿಯ ಮೇಲಿದ್ದ ಈ ಅಪೂರ್ವ ಪ್ರೀತಿ ವಾತ್ಸಲ್ಯಗಳನ್ನು ಕಂಡು ನಾವು ಎಳೆಯರು ಅವರಿಗೆ ಮುಂಡನ ಮಿಶ್ರರು ಅಂತ ನಾಮಕರಣ ಮಾಡಿದ್ದೆವು. + +ಹಿಂದಿನ ಕಾಲದ ರಾಜಮನೆತನಗಳಿಗೆಲ್ಲ ಒಂದೊಂದು ಲಾಂಛನ, ಧ್ವಜ ಇರುತ್ತಿತ್ತಂತೆ. ಹುಲಿಯನ್ನು ಹೊಯ್ಯುತ್ತಿದ್ದ ಹೊಯ್ಸಳ, ಮಹಾಭಾರತದ ಮಹಾರಥಿಗಳಾದ ಕಪಿಧ್ವಜ, ಉರಗಪತಾಕ, ಗಂಡಭೇರುಂಡದ ಮೈಸೂರ ಅರಸರು ಹೀಗೆ ಒಂದೊಂದು ವಂಶಕ್ಕೂ ಒಂದೊಂದು ಪತಾಕೆ, ಒಂದೊಂದು ಚಿಹ್ನೆ, ಒಂದು ವೇಳೆ ನಮ್ಮದೇನಾದರೂ ಅಂತಹ ರಾಜ ಮನೆತನವಾಗಿದ್ದರೆ, ನಮ್ಮ ಚಿಹ್ನೆಯಾಗಿ ಒಂದು ಉಗ್ರಮುಖದ ಮುಂಡ ಮೋಚಿದ ರುಂಡ ಮಾತ್ರ ಇರುತ್ತಿತ್ತು. ಮತ್ತೂ ನಾವೂ ಹೊಯ್ಸಳರಂತೆ ಬೋಳ್ತಲೆಯವರೆಂದು ಪ್ರಸಿದ್ಧರಾಗಿರುತ್ತಿದ್ದೆವು. + +ವೀರಾಧಿವೀರರಾದ ನಮ್ಮ ವಂಶದ ಹಿರಿಯರು ಕದಂಬರ ಜತೆಗೋ ಹೊಯ್ಸಳರ ಜತೆಗೋ ಘನ ಘೋರ ಕಾಳಗದಲ್ಲಿ ತೊಡಗಿದ್ದಾಗ, ನಮ್ಮ ಸೇನಾ ತುಕಡಿಗಳು ನಮ್ಮ ವಂಶದ ಬೋಳ್ತಲೆ ಪತಾಕೆ ಹಿಡಿದು, ‘ಹೊಯ್ಸಳ ಮುರದಾಬಾದ್‌ ಬೋಳ್ತಲೆ ಜಿಂದಾಬಾದ್‌, ಬೋಳ್ತಲೆಯವರಿಗೆ ಜಯವಾಗಲಿ’ ಎಂದು ವೀರಾವೇಶದ ಘೋಷಣೆಗಳನ್ನು ಕೂಗುತ್ತಾ ಸಮರಾಂಗಣದಲ್ಲಿ ಶತ್ರು ಸೈನಿಕರನ್ನು ಬೆನ್ನಟ್ಟಿ ಹಿಡಿ ಹಿಡಿದು ಅವರ ತಲೆ ಬೋಳಿಸುತ್ತಿದ್ದರೋ ಏನೋ. + +ಇರಲಿ, ಮುಂಡನಮಿಶ್ರರು ಗ್ರಾಮೋದ್ಯೋಗದ ಕುಸಬಿ ಎಣ್ಣೆಯ ಕೇಂದ್ರದಾಗ ಅಕೌಂಟ್ಸ್‌ ಅಸಿಸ್ಟಂಟ್‌ ಅಂತ ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯ ಸಿಕ್ಕ ಮೇಲೆ ಟಿಳಕರ ಅನುಯಾಯಿಗಳು, ಗಾಂಧೀ ಭಕ್ತರು ಇಂತಹ ಕೆಲವು ಕೈಲಾಗದ ಅಪಹಾತ ದೇಶಭಕ್ತರಿಗೆ ಜೀವನೋಪಾಯಕ್ಕೆ ಇರಲೀಂತ ಸರಕಾರದವರು ಖಾದೀ ಗ್ರಾಮೋದ್ಯೋಗ, ನೀರಾ ಕೇಂದ್ರ, ಅಂಬರ ಚರಖಾದಂತಹ ಕೆಲಕೆಲವು ಅಳುಬುರುಕ ರಣಹೇಡಿ ಡಿಪಾರ್ಟಮೆಂಟಗಳನ್ನು ಸೃಷ್ಟಿಸಿದ್ದರು. ಉಳಿದ ಘಟ್ಟುಳ್ಳ ದೇಶಭಕ್ತರೆಲ್ಲ ಮಂತ್ರಿಗಳೂ ಉಪಮಂತ್ರಿಗಳೂ ಆಗಿ ದೇಶವನ್ನು ಬಾಚಿಕೊಳ್ಳಲಿಕ್ಕೆ ಸುರು ಮಾಡಿದ್ದರು ಆಗಲೇ! + +ನಮ್ಮ ತಂದೆಯವರೇನೋ ಗ್ರಾಮೋದ್ಯೋಗದಲ್ಲಿ ಅತ್ಯಂತ ನಿಷ್ಠೆಯಿಂದ ಶ್ರದ್ಧಾಭಕ್ತಿಗಳಿಂದ, ಗರಗದ ರೈತ ಗದಿಗೆಪ್ಪನಿಗೆಕುಶಿಬಿ ಬಾಬ್ತು ರೂ. ೧೨. ಆ. ೬. ಪೈ. ೪ಚಕ್ಕಡಿ ಬಾಡಿಗೆ ರೂ. ೦. ಆ. ೮. ಪೈ. ೫ಹಮಾಲಿ ರೂ. ೦. ಆ. ೬. ಪೈ. ೧ + +ಹಿಂತಾ ಹುಚ್ಚ ಹುಚ್ಚ ಲೆಕ್ಕ ಬರೀತಿದ್ದರು. ಆದರೆ ಅವರ ಮಗನಾದ ನನಗ ಮಾತ್ರ ಲೆಕ್ಕ ಅಂದ್ರ ಅಷ್ಟಕ್ಕಷ್ಟೆ. + +ಒಮ್ಮೆ, ಬಹುಶಃ ನಮ್ಮ ಆರನೇ ಇಯತ್ತೆಯ ಪರೀಕ್ಷೆಯಲ್ಲಿ ಗಣಿತ ಪೇಪರಿನಲ್ಲಿ ನನಗೆ ಗುಂಡು ಗುಂಡಾದ ಒಂದು ಸೊನ್ನೆ ಪ್ರಾಪ್ತವಾಗಿತ್ತು. ಅಬ್ಬ! ಮುಂಡನಮಿಶ್ರರ ಅಂದಿನ ಆ ಆರ್ಭಟ, ಕೋಪಾಟೋಪ, ಹಿರಣ್ಯಕಶಿಪುನಂತಹ ಉಗ್ರರೂಪ, ಒದರಾಟ ಚೀರ್‍ಯಾಟ ಎಂದಿಗೂ ಮರೆಯಲಿಕ್ಕಾಗದು. ಏನು ಅಂದಿನವರೆಗೆ ಜಗತ್ತಿನಲ್ಲಿ ಯಾರಿಗೂ ಗಣಿತ ಪೇಪರಿಗೆ ಸೊನ್ನೆ ಬಿದ್ದಿದ್ದೆ ಇಲ್ಲವೇ? ಶೂನ್ಯ ಸಂಪಾದನೆಯ ಈ ಪ್ರಥಮ ಶ್ರೇಯಸ್ಸು ನಮಗೇ ಸಲ್ಲಬೇಕೇನು? ಇದೆಲ್ಲ ತಿಳೀಬೇಕಲ್ಲ! ಇಲ್ಲ, ಬರೇ ಥಥೈ ಥತಥೈ ಅಂತ ಕುಣಿದೇ ಕುಣದ್ರು ಕುಣದ ಕುಣದರು ಇಡೀ ದಿವಸ. + +ಆವತ್ತ ನಾವು ಅಡಿಗೀ ಮನಿಯೊಳಗ ದೊಡ್ಡ ಖಂಬದ ಹಿಂದೆ ಅಡಗಿ ಕುಳಿತಿದ್ದೆವು. ಪಕ್ಕದಲ್ಲಿ ನಮ್ಮ ಮಾತೋಶ್ರೀಯವರು ಭಕ್ರೀ ಬಡಕೋತ ಕೂತಿದ್ದರು. ಅದೇ ಸಮಯಕ್ಕೆ ರಕ್ಕಸನಾದ ಆ ಹಿರಣ್ಯಕಶಿಪು ಕೋಪೋದ್ರಿಕ್ತನಾಗಿ ಖಡ್ಗವನ್ನು ಝಳಪಿಸುತ್ತಾ ಧಾವಿಸಿ ಬಂದು ನಮ್ಮ ಬಡ ತಾಯಿಗೆ “ನಿಮ್ಮ ಚಿರಂಜೀವರಿಗೆ… ನಿಮ್ಮ ವಂಶದ ಕುಡಿಗೆ ಯಷ್ಟು ಮಾರ್ಕ್ಸ ಬಿದ್ದಾವ ನೋಡೀರೇನು?… ನಮ್ಮ ಸಮಸ್ತ ಮನೆತನದ ಮರ್ಯಾದಿ ಈ ಕಡೆಯಿಂದ ಆ ಕಡೆ ಹಾಯ್ದು ಹೋಗೋ ಅಷ್ಟು ಬಿದ್ದಾವ… ಇಷ್ಟು ದಿವಸ ಈ ನಿಮ್ಮ ವಂಶೋದ್ಧಾರಕರು… ಈ ನಿಮ್ಮ ಕುಲದೀಪಕರು… ಈ ದೇವಾಂಶ ಸಂಭೂತರು ತಮ್ಮ ತಲೀ ಅಷ್ಟ ಬೋಳಿಸಿಕೋತಿದ್ದರು… ಇವತ್ತ ತಮ್ಮದಷ್ಟ ಅಲ್ಲದ ನಮ್ಮದೂ… ನಮ್ಮ ಪಿತೃಗಳದೂ… ಪಿತಾಮಹ ಪ್ರಪಿತಾಮಹಗಳದೂ…ಎಲ್ಲಾರದೂ ತಲೀ ಬೋಳಿಸಿ ಒಗದು ಬಿಟ್ಟಾರ… ಇನ್ನೊಂದ ಸ್ವಲ್ಪ ದಿವ್ಸ ಹೀಂಗ ಬಿಟ್ಟರ ಅವರನ್ನ ಹೆತ್ತ ಹೊತ್ತ ತಪ್ಪಿಗೆ ನಿಮ್ಮದನ್ನೂ ಮುಗಿಸಿ ಬಿಡತಾರ… ಒಂದು ಸಣ್ಣಮಣೀ ತಂದು ಅದರ ಮ್ಯಾಲ ಕೂಡಂತಾರ ನಿಮಗ .. ಯಲ್ಲಿದ್ದಾರ… ಯಲ್ಲಿದ್ದಾರ ? … ನಿಮ್ಮ ಪುತ್ರರತ್ನರು ಯಲ್ಲಿದ್ದಾರ…? ಈ ಮನೆತನದ ಮೇಧಾವಿ ಗಣಿತಜ್ಞ ಶ್ರೀನಿವಾಸನ್ ರಾಮಾನುಜಂರವರು ಯಲ್ಲಿದ್ದಾರ…. ? ದೈವೀ ಕಳೆಯಿಂದ ತುಂಬಿ ತುಳುಕುತ್ತಿರುವ ಅವರ ಆ ದರಿದ್ರ ವದನಾರವಿಂದದ ದರ್ಶನ ಮಾಡಿಕೊಂಡು ಹಾಳಾಗಿ ಹೋಗಬೇಕಂತೇನಿ…ಯಲ್ಲಿದ್ದಾರ… ಯಲ್ಲಿದ್ದಾರ…?” + +…ಈ ರೀತಿ ಒದರ್‍ಯಾಡಿಕೋತ…. ಚೀರ್‍ಯಾಡಿಕೋತ…. ಹಣಿ ಹಣಿ ಬಡಕೋತ, ಭಕ್ತಪ್ರಲ್ಹಾದ ನಾಟಕದಾಗಿನ ಹಿರಣ್ಯಕಶಿಪುನ್ಹಂಗ ರಂಗದ ಇನ್ನೊಂದು ಭಾಗಕ್ಕೆ ನಿಷ್ಕ್ರಮಿಸಿದರು. ಇಷ್ಟೆಲ್ಲ ಯಾಕ ಅಂದ್ರ ಅದೊಂದು ಸೊಟ್ಟ ಮಾರಿ ಗಣಿತದಾಗ ಜೀರೋ ಬಿದ್ದಿದ್ದಕ್ಕ. ಹಂಗ ನೋಡಿದರ ಅದೊಂದೇ ಸಲ ನನಗೆ ಜೀರೋ ಬಿದ್ದಿದ್ದು, ಅದಕ್ಕೂ ಮೊದಲೆಲ್ಲ ಛೊಲೋತನ್ಯಾಗ ಏಳು… ಎಂಟು… ಮಾರ್ಕ್‌ ಬೀಳತಿದ್ದವು. + +ಏನೇ ಇರಲಿ, ಅವತ್ತಿನ ನಮ್ಮ ಪಿತಾಶ್ರೀಯವರ ಹಿರಣ್ಯಕಶಿಪುನ ಆರ್ಭಟಕ್ಕೆ ಖಂಬದ ಹಿಂದ ನಾವೂ ಖಂಬದ ಒಳಗ ಸಾಕ್ಷಾತ್‌ ನರಸಿಂಹಸ್ವಾಮಿಯೂ ಗಡ ಗಡ ಗಡ ಗಡ ನಡುಗುತ್ತ ಕುಳಿತದ್ದು ಸುಳ್ಳಲ್ಲ. + +ಆವತ್ತ ಸ್ವಲ್ಪ ಹೊತ್ತಾದ ಮ್ಯಾಲ ಯಂದೂ ನನಗೆ ಏನೂ ಅನ್ನದ ನಮ್ಮ ಅವ್ವ “ಶೀನಪ್ಪ ನೀನರ ಹಿಂಗ್ಯಾಕ ಮಾಡತೀಯೋ? ನಿನ್ನ ಸಲುವಾಗಿ ಎಷ್ಟು ಕೆಟ್ಟ ಕೆಟ್ಟ ವಾಗತ್ಯದ ಮಾತೆಲ್ಲ ಕೇಳಬೇಕಾಗತದಲ್ಲೋ ನನಗೆ? ಸ್ವಲ್ಪ ಛೋಲೋತ್ನಾಗಿ ಓದಿಕೋಬಾರದೇನೋ…” ಎನ್ನುತ್ತಲೇ ನಾವೂ ತಂದೆಯಷ್ಟೇ ಕ್ರುದ್ಧರಾಗಿ, “ಸುಮ್ಮನಿರವ್ವಾ, ನಿನಗೇನು ತಿಳೀತದ… ಈ ಸಮಸ್ತ ಇಳಾ ತಳದೊಳಗ …. ಭೂಮಂಡಲದಲ್ಲಿ…. ಧರಿತ್ರಿಯ ಮ್ಯಾಲ………Under the sun on the earth ………………..ಆ ಅನಂತಕೋಟಿ ಬ್ರಹ್ಮಾಂಡ ನಾಯಕನು ಸೃಷ್ಟಿಸಿದ ಈ ಮಾನವ ಪ್ರಪಂಚದಲ್ಲಿ ನನಗೊಬ್ಬನಿಗೇ ಏನು ಈ ಶೂನ್ಯ ಸಂಪಾದನೆಯಾದದ್ದು” ಎಂದು ಆಕ್ರೋಶಿಸಿದ್ದೆವು. + +ಅಂತೂ ಪಿತಾ- ಪುತ್ರ ಭಾಷಾಡಂಬರದ ಈ ಮಸ್ತಿಯಲ್ಲಿ, ವಾಗ್ವೈಖರಿಯ ಈ ಕುಸ್ತಿಯಲ್ಲಿ ಪಾಪ ನಮ್ಮ ತಾಯಿ ನುಗ್ಗು ನುಗ್ಗಾಗಿ ಹೋಗಿದ್ದರು. + +ನಮ್ಮ ತಂದೆಯಿಂದ ನನಗೇನು ಬಳುವಳಿಯಾಗಿ ಬಂತೋ ಗೊತ್ತಿಲ್ಲ. ಆದರ ಈ ಪದಲಾಲಿತ್ಯದ ಮೋಹ, ಶಬ್ದಾಡಂಬರದ ಈ ಗುಡಗುಡಾಟ ಮಾತ್ರ ಅವರದ್ದೇ. + +ತಮ್ಮದೊಂದೇ ರೌದ್ರ ಕ್ರೌರ್ಯ ಸಾಲದೇನೋ ಎಂಬಂತೆ, ನಮ್ಮ ತಂದೆ ಆಗೀಗ ಶಾಲೆಗೆ ಬಂದು ಮಾಸ್ತರಿಗೆ ಸಹಿತ “ನನ್ನ ಮಗಾ ಅಂತ ಅನಮಾನ ಮಾಡಬ್ರಾಡ್ರೀ. ತಪ್ಪ ಮಾಡಿದಾ ಅಂದ್ರ ಇಕ್ಕರಿಸಿರಿ… ಏನರ ಮಾಡಿದ ಅಂದ್ರ ಇಕ್ಕರಿಸಿರಿ….” ಅಂತ ಬಜಾಯಿಸಿ ಹೋಗಿದ್ದರು. ಕೇಳಬೇಕ? ಮೊದಲ ಮಂಗ್ಯಾನಂತಹ ಮಾಸ್ತರಗೋಳ ಅವರು…. ಮುಂದ ಮುಂದ ಕೇವಲ ಇವನ ಮಗ…. ಈ ತಿರಸಷ್ಟನ ಮಗ ಅಂತ ತಪ್ಪ ಮಾಡಲಿ ಬಿಡಲಿ ಇಕ್ಕರಸಲಿಕ್ಕೆ ಹತ್ತಿದರು. + +ಯಾರಿಗೆ ಹೇಳೋದದ? ಹಿಂಗ ಅನುಭವಿಸಿದಿವಿ. ಆವಾಗಿನ ಕಾಲಕ್ಕ ಈಗಿನ ಹಂಗ ಪ್ರಾಣಿ ದಯಾ ಸಂಘ ಸಂಸ್ಥೆಗಳೂ ಇರಲಿಲ್ಲ. + +ಒಮ್ಮೊಮ್ಮೆ ನಮ್ಮ ತಂದಿನ್ನ ನೋಡಿ ನನಗೆ ಕೆಟ್ಟ ಅನಸತಿತ್ತು ಪಾಪ! ಅವರು ತಾವು ನೆಚ್ಚಿದ ಆದರ್ಶಗಳಿಗೆ, ನಂಬಿದ ತತ್ವಗಳಿಗೆ ನಿಷ್ಟರಾಗಿ ಬದುಕಲಿಕ್ಕೆ ಒದ್ದ್ಯಾಡತಿದ್ದರು. ಆದರೆ ಸುಳ್ಳು ಮೋಸ, ವಂಚನೆಯಿಂದ ತುಂಬಿದ ಈ ನಿತ್ಯದ ಬದುಕಿನ ಜತೆಗೆ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳಲಿಕ್ಕೆ ಬರಲೇ ಇಲ್ಲ. ಈ ಸುಮಾರಿಗೇ ಅವರ ಅಣ್ಣ ತಮ್ಮಂದಿರು- ನಮ್ಮ ಕಕ್ಕಂದಿರು – ಸಹಿತ ಕೈಕೊಟ್ಟರು. ಅತ್ಯಂತ ಸಣ್ಣತನ ಮಾಡಿ ಧೂರ್ತತನ ಮಾಡಿ ಅವರ ಆಸ್ತಿ ಪಾಸ್ತಿಯೆಲ್ಲ ಎಗರಿಸಿಬಿಟ್ಟರು. ಆಸ್ತಿ ಪಾಸ್ತಿ ಕಳಕೊಂಡದ್ದಕ್ಕ ಅವರಿಗೆ ಕೆಟ್ಟ ಅನಸಲಿಲ್ಲ. ಆದರ ಮನುಷ್ಯರೆಂಬುವರ, ವಿಶೇಷತಃ ತನ್ನವರೆಂಬುವವರ ಸಣ್ಣತನ ನೋಡಿ, ಕ್ಷುದ್ರತನ ನೋಡಿ ಆವರು ಗಾಬರಿಯಾಗಿ ಬಿಟ್ಟಿದ್ದರು. ಒಮ್ಮೊಮ್ಮೆ ತಾವೊಬ್ಬರೇ ಇದ್ದಾಗ, “ಪಂಚ ಮಹಾಭೂತಯೆಲ್ಲಾ ಸುಳ್ಳು, ಮನಿಶ್ಯಾನ್ನ ಬರೇ ಮಣ್ಣಿನಿಂದ ಮಾಡ್ಯಾರ… ಬರೇ ಮಣ್ಣು…. ಆಕಾಶ…. ಕರುಣೆಯ ಆಪ ಯಲ್ಲಾ ಎಲ್ಲ್ಯದ ಬರೇ ಮಣ್ಣು ಮಣ್ಣು… ಪಂಚ ಮಹಾಭೂತಗಳನ್ನುಳಿದು ಒಂದು ಅಕರಾಳ ವಿಕರಾಳ ಆರನೇ ಭೂತ ಆಗ್ಯಾನ ಮನಶಾ ಆರನೇ ಭೂತ” ಎಂದು ತಮ್ಮಷ್ಟಕ್ಕೇ ತಾವೇ ಒಟಗುಡುತಿದ್ದರು. ಮುಗ್ಧ ಹೆಂಡತಿ, ಅಬೋಧ ಮಕ್ಕಳು ಹಿಂಗಾಗೀ ಅವರ ಭಾವನಾ ಪ್ರಪಂಚದಾಗ ಯಾರ ಜತೆಗೂ ಹಂಚಿಕೊಳ್ಳಲಾಗದ ಒಂದು ಬೃಹತ್ ಶೂನ್ಯತೆ ಅವರಿಸ ತೊಡಗಿತ್ತು. ಒಂದು ತರಹದ ಪರದೇಶೀತನ ಅವರ ಮುಖದ ಮ್ಯಾಲ ಹೊಡೀತಿತ್ತು. ಅಂತರಂಗದ ಅವ್ಯಕ್ತ ಭೀತಿಗೆ, ಬೆಂಬಿಡದ ಪರದೇಶೀತನದ ಭಾವನೆಗೆ ಬೇಸತ್ತು. ಮೌಲ್ಯ ರಹಿತ ಸಮಾಜದಲ್ಲಿ ಬದುಕಲಿಕ್ಕಾಗದೇ, ಕ್ರುದ್ಧರಾಗಿ ಅವರು ಇಡೀ ವಿಶ್ವದ ತಲೆ ಬೋಳಿಸಲಿಕ್ಕೆ ಹೊರಟಂತಿತ್ತು. ಒಂದು ದೃಷ್ಟಿಯಿಂದ ಅವರೊಬ್ಬ Angry old man !ನಮ್ಮ ತಂದೆಯವರು ಯಾವಾಗಲೂ ಸಿಡಿಮಿಡಿ ಸ್ವಭಾವದವರು, ತಿರಸಷ್ಟರು ಇದ್ದರು ನಿಜ. ಆದರೆ ಅವರ ಮನದಲ್ಲಿ ಮಮತೆಯ ವಾತ್ಸಲ್ಯದ ಸೆಲೆ ಬತ್ತಿ ಹೊಗಿತ್ತಂತಲ್ಲ. ಆದರೆ ಅವರ ಮಮತೆ, ವಾತ್ಯಲ್ಯಗಳು ಕೂಡ ಅತ್ಯುಗ್ರ ರೂಪದಲ್ಲಿಯೇ ಪ್ರಕಟವಾಗುತ್ತಿದ್ದವು. + +ಒಮ್ಮೆ ನಾನು ಶಾಲೆಯಲ್ಲಿ ಯಾವದೋ ಆಟದಲ್ಲಿ ಬಿದ್ದು ಕೈಮುರಿದುಕೊಂಡು ಬ್ಯಾಂಡೇಜು ಕಟ್ಟಿಕೊಂಡು ಮನೆಗೆ ಬಂದು ನರಳುತ್ತ ಮಲಗಿದ್ದೆ. ಸುದ್ದಿ ತಿಳಿದು ಓಡೋಡಿ ಬಂದ ನಮ್ಮ ತಂದೆ ನನ್ನ ಹಾಸಿಗೆಗೆ ಧಾವಿಸಿ “ನೀ ಅಷ್ಟು ಸುಖದಿಂದ ಇದ್ದದ್ದನ್ನು ನೋಡಿ, ತಲೀ ಬೋಳಿಸಿಕೊಂಡು ಸಾಯಬೇಕಂತೇನಲ್ಲೊ….” ಎಂದು ಹಣೆ ಹಣೆ ಚಚ್ಚಿಕೊಂಡಿದ್ದರು ಆತಂಕದಲ್ಲಿ. ಅಂತಹ ನೋವಿನಲ್ಲೂ ಸಹ ಅಂದು ಅವರು ನನ್ನನ್ನು ಏಕವಚನದಲ್ಲಿ ಸಂಬೋಧಿಸಿದ್ದನ್ನು ಕಂಡು ಒಂದು ವಿಚಿತ್ರ ತೃಪ್ತಿಯನ್ನು ಅನುಭವಿಸಿದ್ದೆ. + +ಅಂತೂ ಶಾಲೆಯ ಓದಿನಲ್ಲಿ, ಬಾಲ್ಯದ ಆಟ ಪಾಠಗಳಲ್ಲಿ ಸರೋಜಕ್ಕನ ಜತೆ ಜಗಳಾಟದಲ್ಲಿ ದಿನ ಕಳೆದದ್ದೇ ತಿಳಿಯಲಿಲ್ಲ. + +ಒಂದು ದಿನ ಇದ್ದಕ್ಕಿದ್ದಂತೆ ದೊಡ್ಡವನಾಗಿ graduation ಮುಗಿಸಿ ಮುಂಬಯಿಗೆ ಹೊರಟು ನಿಂತು ಬಿಟ್ಟಿದ್ದೆ. ಆಗಿನ ದಿನದಾಗ ಸಾಲೀ ಕಾಲೇಜಿನ ಓದು ಮುಗಿಯೂತಲೆ ಯಲ್ಲಾರೂ ಬುದು ಬುದು ಅಂತ ಮುಂಬಯಿಗೆ ಹೋಗಿ ಬಿಡುತ್ತಿದ್ದರು. ಹುಟ್ಟಿಸಿದ ದೇವರು ಹುಲ್ಲು ಮೇಯಿಸಿದರೂ ಅದನ್ನ ಮುಂಬಯಿಯೊಳಗ ಮೇಯಿಸತಿದ್ದ. ಹೀಂಗಾಗಿ ಆ ಬುದು ಬುದುದೊಳಗ ನಾನೂ ಒಬ್ಬಾವ ಬುದು ಆಗಿ ಬುದ್ದು ಆಗಿ ಮುಂಬಯಿಗೆ ಹೊರಟಿದ್ದೆ. + +೧೯೫೯ ಮೇ ತಿಂಗಳಿನ ೨೯ನೇ ತಾರೀಖು ನನಗೆಂದಿಗೂ ಮರೆಯದ ದಿನ. ಅವತ್ತ ನಾ ಧಾರವಾಡದ ತಾಯಿಗೆ ಶರಣು ಹೊಡೆದಿದ್ದೆ. ನನ್ನ ಜೀವನದ ಬಾಲ್ಯಕಾಂಡ ಮುಗಿದು ಸುಂದರಕಾಂಡನೋ ಇಲ್ಲ ಬಂದರ ಕಾಂಡನೋ ಯಾವುದೋ ಒಂದು ಹೊಸ ಅಧ್ಯಾಯ ಪ್ರಾರಂಭ ಆಗೋದಿತ್ತು. + +ಅವತ್ತ ಮಧ್ಯಾಹ್ನ ೩.೫೮ಕ್ಕ ಪೂನಾ ಮೇಲ್‌ ಧಾರವಾಡ ಸ್ಟೇಶನ್ ಬಿಡೋದಿತ್ತು. ಮರುದಿವ್ಸ ಮುಂಜಾನೆ ಪುಣೆದಾಗ ಗಾಡಿ ಬದ್ಲ ಮಾಡಿ ಮುಂಬಯಿಗೆ ಹೋಗಬೇಕು. ಕಳೆದ ಏಳೆಂಟು ದಿನಗಳಿಂದ ಮನೆಯಲ್ಲಿ, ಗೆಳೆಯರ ಬಳಗದಲ್ಲಿ ಅದ ಮಾತ ನಡದಿತ್ತು. ‘ಗಾಡಿ ಹ್ಯಾಂಗ ಹತ್ತಬೇಕು…. ಪುಣೆದಾಗ ಪ್ಲ್ಯಾಟಫಾರ್ಮ್‌ ಹ್ಯಾಂಗ ಬದಲ ಮಾಡಬೇಕು… ಪುಣೇದ ಹಮಾಲರು ಭಾಮಟ್ಯಾಗೋಳು ಇರತಾರ. ಅವರ ಸಂಗ್ತಿ ಹೆಂಗ ಜಿಕೇರಿ ಮಾಡಬೇಕು. ಮುಂಬಯಿ ವ್ಹಿ.ಟಿಯ ಸ್ಟೇಶನದೊಳಗ ಯಂಕಣ್ಣ ಕಾಕಾ ಕರೀಲಿಕ್ಕೆ ಬಂದಿದ್ದಿಲ್ಲಾ ಅಂದ್ರ ಏನ ಮಾಡಬೇಕು… ಏನ ಮಾಡಬಾರದು…’ ತಲೀ ಚಿಟ್ಟ ಹಿಡಿದುಹೋಗಿತ್ತು. ಅವ ಅವ ಮಾತ ಕೇಳಿ ಕೇಳಿ; ಮೊನ್ನೆಯಿಂದ ಯಾಕೋ ನಮ್ಮ ಪಿತಾಶ್ರೀಯವರೂ ಸ್ವಲ್ಪ ಮೆತ್ತಗಾಗಿದ್ದರು. ನನಗೆ ಕೇಳಸೋ ಹಂಗ ನಮ್ಮ ತಾಯಿಗೆ, “ವ್ಯಾಳ ವ್ಯಾಳ್ಯಾಕ್ಕ ಸರಿಯಾಗ ಊಟಾ ಮಾಡಲಿಕ್ಕೆ ಹೇಳ್ರಿ… ಪ್ರಕೃತಿ ಸಂಭಾಳಿಸಲಿಕ್ಕೆ ಹೇಳ್ರಿ…. ಏನರ ಅನವು ಅಪತ್ತು ಬಂದ್ರ ಪತ್ರ ಬರೀಲಿಕ್ಕೆ ಹೇಳ್ರಿ ಯಷ್ಟ ತ್ರಾಸಾದರೂ ಚಿಂತಿಲ್ಲ ರೊಕ್ಕ ಕಳಸ್ತೇನಿ…” ಅಂತ ಪದೇ ಪದೇ ಹೇಳತಿದ್ದರು. + +ಅವ್ವ ಒಂದು ಬಿಳಿಯ ಅಲೀಮನಿ ಡಬ್ಬೀ ತುಂಬ ಹೆಸರಿಟ್ಟಿನ ಉಂಡಿ ಮಾಡಿ ಕೊಟ್ಟಿದ್ದಳು. ಸರೋಜಕ್ಕ ದೀಪಾವಳೀ ಆರತಿ ಒಳಗ ಕೂಡಿಸಿದ್ದು ಹತ್ತು ರೂಪಾಯಿ ನನ್ನ ಕೈಯಾಗ ಕೊಟ್ಟು ಒಂದು ಜತೆ ಲೋಲಕ್ ತರಲಿಕ್ಕೆ ಹೇಳಿದ್ದಳು. + +ಅವತ್ತ ಧಾರವಾಡ ಸ್ಟೇಶನ್‌ಕ್ಕ ನನ್ನ ಬೀಳ್ಕೊಡಲಿಕ್ಕೆ ಅಂತ ನನ್ನ ಅನೇಕ ಗೆಳೆಯರು, ಸರೋಜಕ್ಕ ಹಾಗೀ ಆಕಿ ಕೆಲವು ಗೆಳತಿಯರು ಬಂದಿದ್ದರು. ನನ್ನ ಅವ್ವ ಅಪ್ಪ ಮಾತ್ರ ಮನಿಯಿಂದನ ಆಶೀರ್ವಾದ ಮಾಡಿ ಕಳಿಸಿದ್ದರು. ಪ್ಲ್ಯಾಟ್‌ಫಾರಂ ಮ್ಯಾಲೆ ಸರೋಜಕ್ಕನ ಗೆಳತೇರು ಒಂದು ಕಡೆ, ನಾವೆಲ್ಲ ಗಂಡು ಹುಡುಗೂರು ಒಂದು ಕಡೆ ಗುಂಪು ಗುಂಪಾಗಿ ನಿಂತು ಹರಟಿ ಹೋಡೀಲಿಕ್ಕೆ ಹತ್ತಿದ್ವಿ. ಗಾಡೀ ಬರಲಿಕ್ಕೆ ಇನ್ನೂ ಹತ್ತು ಹದಿನೈದು ಮಿನೀಟು ಇತ್ತು. + +“ಮುಂಬಯಿ ಒಳಗ ಯಾವ್ಯಾವ ಫಿಲ್ಮಿ ಸ್ಟಾರ್ ಯೆಲ್ಲೆಲ್ಲಿ ಇರತಾರ… ಸ್ಕೂಲ್‌ ಆಫ್ ಇಕಾನೊಮಿಕ್ಸದಾಗ ಎಂ.ಎ. ಮಾಡಿದರ ಹೆಂಗ… ಮರಾಠಿ ಹುಡಿಗೇರು ಭಾಳ ನಖರಾ ಮಾಡತಾರ…” ಇತ್ಯಾದಿ ಇತ್ಯಾದಿ ನಮಗರಿವಿಲ್ಲದಂತೆಯೇ ಹರಟೆಗೆ ರಂಗು ಏರಲಿಕ್ಕೆ ಹತ್ತಿತ್ತು. ಅಷ್ಟರಾಗ A.S.M ಬಂದು ಕಡೀ ಘಂಟೆ ಹೊಡದಾ. ನನ್ನ ಗೆಳೆಯರು ಒಂದೊಂದ ಬ್ಯಾಗ ಎತ್ತಲಿಕ್ಕೆ ಹತ್ತಿದರು. ಸರೋಜಕ್ಕ ಬಂದು ‘ಇನ್ನ ಮ್ಯಾಲ ಸಿಗರೇಟು ಸೇದೂದುಲ್ಲ’ ಅಂತ ಆಣಿ ಮಾಡಿಸಿಕೊಂಡಳು. ಆಕೀ ಗೆಳತಿಯರು ‘ಶೀನೂ ದೀಪಾವಳಿಗೆ ಬಾ ಪಗಡಿ ಆಡೋಣ’ ಅನ್ನಲಿಕ್ಕೆ ಹತ್ತಿದ್ದರು. ದೂರ ನವಲೂರ ತಿರುವಿನ ಹತ್ತಿರ ಪೂನಾ ಮೇಲಿನ ಝಕ್ ಝಕ್ ಹೊಗೆ ಕಾಣಿಸಲಿಕ್ಕೆ ಹತ್ತಿತ್ತು. ಅಷ್ಟರಾಗ ಪಾಟೀಲ ಪರಮೇಶಿ ನನ್ನ ಹತ್ತಿರ ಬಂದು “ಶೀನೂ ನಿಮ್ಮ ಫಾದರ್‌ ಬರಲಿಕ್ಕೆ ಹತ್ಯಾರ ನೋಡು” ಅಂದ. ನಾ ಗೇಟಿನ ಕಡೆ ನೋಡಿದೆ. + +ನಮ್ಮ ಅಪ್ಪ ಧೋತರ ಎತ್ತಿ ಹಿಡಿದು ದಾಪುಗಾಲು ಹಾಕುತ್ತ ಏದುಸಿರು ಬಿಟಗೋತ ಧಾವಿಸಿ ಧಾವಿಸಿ ಗೇಟಿನೊಳಗ ಬರಲಿಕ್ಕೆ ಹತ್ತಿದ್ದರು. ನಾನು ಲಗುಬಗೆಯಿಂದ ಅವರ ಬಳಿ ಧಾವಿಸಿ “ಅಪ್ಪಾ ಈ ಬಿಸಿಲಾಗ ನೀವ್ಯಾಕ ಬರಲಿಕ್ಕೆ ಹೋಗಿದ್ರಿ?” ಎನ್ನುತ್ತಿದ್ದಂತೆಯೇ ಅವರು ಬೆವರೊರೆಸಿಕೊಳ್ಳತ್ತಾ “ಉಶ್ಯಪ್ಪ ಎಲ್ಲಿ ಗಾಡಿ ಹೋಗಿ ಬಿಟ್ಟಿರತದೋ ಅನಕೋತ ಓಡೋಡಿ ಬಂದೆ” ಅನಕೋತ ತಮ್ಮ ಕೋಟಿನ ಕಿಶೇಯಿಂದ ನೂರರ ಎರಡು ನೋಟು ತಗದು ನನ್ನ ಕೈಯಾಗ ಜುಲುಮಿಯಿಂದ ಇಟ್ಟರು. ನಾನು “ಕೊಟ್ಟಿಯಲ್ಲ ಮತ್ಯಾಕ” ಎಂದು ಪ್ರತಿಭಟಿಸುತ್ತಿದ್ದಂತೆಯೇ “ಇರಲಿ ಇಟಗೋ ಬೇಕಾಗತದ…” ಅನಕೋತ ನನ್ನೆರಡೂ ಕೈ ಕ್ಷಣ ಹೊತ್ತು ಘಟ್ಟಿ ಬಿಗಿ ಹಿಡಿದು ನನ್ನ ಮುಖದ ಮ್ಯಾಲೆಲ್ಲ ಕಣ್ಣಾಡಿಸಿದರು. + +ನಾನು ಬಗ್ಗಿ ನಮಸ್ಕಾರ ಮಾಡಿ ಅವರ ಪಾದಸ್ಪರ್ಶ ಮಾಡಿದೆ. ಕೂಡಲೇ ಅವರು ಎರಡೂ ಕೈಲೆ ನನ್ನ ಬಾಚಿ ಎಬ್ಬಿಸಿ ನನ್ನ ಬೆನ್ನ ಮೇಲೆ ಕೈಯಾಡಿಸಿ, ಹೌದೋ ಅಲ್ಲೋ ಅನ್ನುವಷ್ಟು ನನ್ನನ್ನು ತಬ್ಬಿ ಹಿಡಿದು, “ನಡಿ ಇನ್ನ ಗಾಡೀ ಬಿಟ್ಟೀತು…” ಅನಕೋತ ನನ್ನ ದೂರ ಮಾಡಿದರು. ಅಷ್ಟರಾಗನ ಪರಮೇಶ ಮತ್ತ ಸರೋಜಕ್ಕ ಓಡೋಡಿ ಬಂದು “ಶೀನೂ ಗಾಡಿ ಬಿಡತದ ನಡಿ” ಅಂತ ನನ್ನ ಓಡಿಸಿದರು. ನಾನು ಅವರ ಜತೆ ಜತೆಯಲ್ಲೇ ಓಡುತ್ತ ಒಂದು ಕ್ಷಣ ನಿಂತು ಹೊರಳಿ ನೋಡಿದೆ. ನೋಡಬಾರದಿತ್ತು ನೋಡಿದೆ. + +ನಮ್ಮ ಹಿರಣ್ಯಕಶಿಪು ತಂದೆ, ಧಾರವಾಡ ಸ್ಟೇಶನ್‌ದ ಬೃಹತ್ ಗಾತ್ರದ ಲೋಹದ ಕಂಬಕ್ಕೆ ಆತುಗೊಂಡು ನಿಂತು, ಬಲಗೈಯಿಂದ ಧೋತರ ಚುಂಗಿನಿಂದ ಕಣ್ಣೊರಸಿಕೊಳ್ಳುತ್ತ ತಮ್ಮ ನಡುಗುವ ಎಡಗೈ ಮೇಲತ್ತಿ ನನಗೆ ವಿದಾಯ ಹೇಳುತ್ತಿದ್ದರು. ಅವರ ಮುಖದ ಮ್ಯಾಲೆ ಇನ್ನಿಲ್ಲದ ದೈನ್ಯ ಒಟ್ಟುಗೂಡಿ ಒಂದು ತೆರದ ಅನಾಥ ಪರದೇಶಿ ಕಳೆ ಸುರೀಲಿಕ್ಕೆ ಹತ್ತಿತ್ತು. ಅವರು ಒಮ್ಮೆಲೆ ಒಂದಿಪ್ಪತ್ತು ವರುಷ ಹೆಚ್ಚಿದ ನಿರ್ವಿಣ್ಣ, ನಿತ್ರಾಣ ಮುದುಕನಂತೆ ಕಾಣಸಲಿಕ್ಕೆ ಹತ್ತಿದ್ದರು. + +ನನ್ನ ಜೀವನದ ಪ್ರಥಮೋಧ್ಯಾಯದ ಸಮಾಪ್ತಿ ಕಾಲದಲ್ಲಿ ಅವತ್ತ ಧಾರವಾಡ ಬಿಡುವಾಗಿನ ತೀರ ಕೊನೆಯ ಕ್ಷಣದಲ್ಲಿ, ನಾನು ನನ್ನ ಕಣ್ಣುಗಳೊಳಗ, ಮನಸ್ಸಿನೊಳಗ, ಹೃದಯದೊಳಗ, ನನ್ನ ಹೆತ್ತ ತಂದೆಯ ಈ ಕರುಣಾರ್ದ್ರ, ದೈನಾಸ ಮೂರ್ತಿಯನ್ನು ತುಂಬಿಕೊಂಡು ಊರು ಬಿಟ್ಟೆ. + +ಗಾಡಿ ಬಿಟ್ಟಿತು. ಗಾಡೀ ಜತೆಗೇನ ಓಡೋಡಿ ಬಂದು ಟಾ…ಟಾ ಹೇಳಿಕೋತ ಗೆಳೆಯರು ಹಿಂದುಳಿದರು. ಕಣ್ಣು ತುಳುಕಿಸುತ್ತ ನಿಂತಿದ್ದ ಸರೋಜಕ್ಕ, ಅಕೀ ಗೆಳತಿಯರು ದೂರಾದರು. ಧಾರವಾಡದ ಸ್ಟೇಶನ್ನು, ಬಾರಾಕೋಟ್ರಿ, ಯುನಿವರ್ಸಿಟಿ ಲೆವಲ್ ಕ್ರಾಸಿಂಗ ಯಲ್ಲಾ ಹಿಂದ ಹಿಂದ ಸರದವು, ಆದರ ಪ್ಲ್ಯಾಟ್‌ಫಾ‍ರ್ಮಿನ ಮೇಲೆ ಖಂಬಕ್ಕೊರಗಿ ಧೋತರ ಚುಂಗಲೇ ಕಣ್ಣೊರಿಸಿಗೋತ ನಿಂತ ನಮ್ಮ ಮುದಿ ತಂದೆ ಮಾತ್ರ ನನ್ನ ಜತೆಗೇ ಬಂದು ಬಿಟ್ರು. + +ಆವತ್ತ ರೇಲ್ವೆ ಡಬ್ಬಿಯೊಳಗ ತರ ತರದ ಜನ ತುಂಬಿದ್ದರು. ಬಿಕ್ಕೆಯವರೂ, ಹಾಕರ್ಸೂ ತಮ್ಮ ಕಂಠ ಶೋಷಣೆ ನಡೆಸಿದ್ದರು. ಕಿಟಕಿ ಹೊರಗ ನಾಗಲಾವಿ, ಕಂಬಾರ ಗಣವಿ ಆಚೆಗೆ ಅಳ್ನಾಣಾವರದ ಜಂಗಲ್ಲು ಚಾಚಿಕೊಳ್ಳಲಿಕ್ಕೆ ಹತ್ತಿತ್ತು. ನನಗ ಇದ್ಯಾವದರ ಕಡೆನೂ ಲಕ್ಷ ಇದ್ದಿಲ್ಲ. ಧಾರವಾಡ ಸ್ಟೇಶನ್ ಮ್ಯಾಲ ಬಿಟ್ಟು ಬಂದ ಆ ಮುದಿ ಜೀವಕ್ಕ ನಾನು ಆರ್ತನಾಗಿ, ದೀನನಾಗಿ, ಕೇಳಿಕೊಳ್ಳಲಿಕ್ಕೆ ಹತ್ತಿದ್ದೆ. + +“ಅಪ್ಪಾ..ಅಪ್ಪಾ.. ಈ ದೈನ್ಯ ಈ ಕಾರುಣ್ಯ ನಿಮಗ ಒಪ್ಪುದಿಲ್ಲಪ್ಪ… ನೀವು ಮೊದಲಿನ ಹಂಗ ಉಗ್ರರಾಗಿಯೇ ಇರಬೇಕಪ್ಪ… ನೀವು ಹಿಂಗ ಸಣ್ಣ ಮಾರಿ ಮಾಡಿ ಕಣ್ಣೀರ ಹಾಕಿದ್ರ ಅದು ಮನೆತನಕ್ಕೆ ಒಳ್ಳೆಯದಲ್ಲಪ್ಪಾ… ನನ್ನ ಬಗ್ಗೆ ಏನೇನೂ ಚಿಂತಿ ಮಾಡಬ್ಯಾಡಪ್ಪ… ನಾ ಹೊತ್ತ ಹೊತ್ತಿಗೆ ಊಟ ತಿಂಡಿ ಮಾಡಿಕೋತ ಪ್ರಕೃತಿ ಸಂಭಾಳಿಸತೇನಪ್ಪಾ… ಕಾಳಜೀ ಮಾಡಬ್ಯಾಡಪ್ಪಾ… ಯಾವುದೇ ದೃಷ್ಟಿಯಿಂದ ನಿನ್ನ ಹೆಸರಿಗೆ ಕಳಂಕ ಬರದಂತೆ ಮನೆತನದ ಮರ್ಯಾದಿಗೆ ಧಕ್ಕೆ ಬರದಂತೆ ಬದಕತೇನಪ್ಪಾ… ನಿಮ್ಮಿಬ್ಬರನೂ ಮುಪ್ಪಿನ ಕಾಲಕ್ಕೆ ಗಿಳಿ ಸಾಕಿಧಾಂಗ ಸಾಕತೇನಪ್ಪ… ಅಕ್ಕನ ಲಗ್ನ ಮಾಡೋಣಪ್ಪ… ನಾ ದುಡ್ಡು ಕಳಸತೇನಪ್ಪ.. .. ನೀ ಅಗದೀ ಏನೇನೂ… ಬಿಲ್ಕೂಲ್‌ ಚಿಂತಿ ಮಾಡಬ್ಯಾಡಪ್ಪ…. ನಾ ಮುಂಬಯಿಗೆ ಹೋದ ಕೂಡಲೇ ತಲಿ ಬೋಳಸಿಕೋತೇನಪ್ಪಾ…” + +************ + +ಅದೆಲ್ಲ ಹಳೇ ಕಥಿ. ಸರೋಜಕ್ಕನ ಲಗ್ನ ಆತು. ಆಕಿನ್ನ ಹುಬ್ಬಳ್ಳಿಗೆ ಕೊಟ್ಟಿವಿ. ಈಗ ಅವರಿಬ್ಬರೂ ಗಂಡ ಹೆಂಡತಿ ಪರದೇಶಕ್ಕ ಹೋಗಿ ಕೂತು ಬಿಟ್ಟಾರ. ಸುದ್ದಿ ಇಲ್ಲ ಸುಖ ದುಃಖ ಇಲ್ಲ. ಮುಂದ ಎಂಟ ಹತ್ತು ವರುಷದಾಗ ತಾಯಿ ತಂದಿ ಇಬ್ಬರೂ ಹೋಗಿ ಬಿಟ್ಟರು. ಈಗ ನಾನೂ ನನ್ನ ಹೇಣ್ತಿ ಮಕ್ಕಳು ಯಲ್ಲಾರೂ ಕೂಡಿ ಹಿರಿಯರ ಶ್ರಾದ್ಧ ಕರ್ಮಗಳನ್ನು ಮಾಡತೀವಿ. ಮಾಘ ಮಾಸದ ಶುಕ್ಲಪಕ್ಷದ ದ್ವಾದಶಿ ನಮ್ಮ ತಂದಿ ಶ್ರಾದ್ಧ. ವೈದಿಕರು ಏನೇನೋ ಮಣ ಮಣ ಮಂತ್ರ ಅಂತಾರ. ಶ್ರದ್ದೆಯಿಂದ ಮಾಡೋದ ಶ್ರಾದ್ದ ಅಂತಾರ. ಎಳ್ಳು ನೀರಿನ ತರ್ಪಣ ಬಿಡಿರಿ ಅಂತಾರ. + +ಪ್ರತಿ ಮಾಘ ಮಾಸ ಶುಕ್ಲ ಪಕ್ಷದ ದ್ವಾದಶಿ ದಿವಸ ಧಾರವಾಡ ಸ್ಟೇಶನದೊಳಗ ಖಂಬಕ್ಕೊರಗಿ ಧೋತರ ಚುಂಗಲೇ ಕಣ್ಣೊರಸಿಕೊಳತಿದ್ದ ನಮ್ಮ ತಂದೀ ನೆನಪು ತೀವ್ರವಾಗಿ ಬರತದ. ಅವರನ್ನ ನೆನೆಯುವದೇ ನಾನು ತೋರುವ ಶ್ರದ್ಧೆ. ಆಗ ನನ್ನ ಕಣ್ಣಂಚಿನಲ್ಲಿ ತುಳುಕುವ ಎರಡು ಹನಿಯೇ ತರ್ಪಣ. + +ಶ್ರೀನಿವಾಸ ವೈದ್ಯರು ಹುಟ್ಟಿದ್ದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ. ನಗೆಬರಹ, ಹಾಸ್ಯಪ್ರಧಾನ ಸಾಹಿತ್ಯ ಹಾಗೂ ಲಲಿತ ಪ್ರಬಂಧಕಾರರಾಗಿ ಪರಿಚಿತರು. ಆ ಕೈಬರಹದ ಪತ್ರಿಕೆ ‘ನಂದಾದೀಪ’ವನ್ನು ಆರಂಭಿಸಿದ್ದ ಇವರು ಸಾಂಸ್ಕೃತಿಕ ಚಟುವಟಿಕೆಗಳನ್ನು ಗುರುತಿಸಿಕೊಳ್ಳುತ್ತಿದ್ದ ವೈದ್ಯರು ಕಾಲೇಜು ದಿನಗಳಲ್ಲೇ ವಿ.ಕೃ.ಗೋಕಾಕರ ಪ್ರಭಾವಕ್ಕೆ ಒಳಗಾದವರು. 1959ರಲ್ಲಿ ಮುಂಬಯಿಯಲ್ಲಿ ಕೆನರಾ ಬ್ಯಾಂಕಿನಲ್ಲಿ ಅಧಿಕಾರಿಯಾಗಿ ಸೇರಿ ಬೆಳಗಾವಿ, ಗೋವಾ, ಧಾರವಾಡ, ದೆಹಲಿ, ಚೆನ್ನೈ ಮತ್ತು ಬೆಂಗಳೂರುಗಳಲ್ಲಿ ಕಾರ್ಯನಿರ್ವಹಿಸಿದ ಅವರು 1996ರಲ್ಲಿ ನಿವೃತ್ತರಾದರು. ನಿವೃತ್ತಿಯ ನಂತರ ಬೆಂಗಳೂರಿನಲ್ಲಿ ನೆಲೆಸಿದರು. \ No newline at end of file diff --git a/Kenda Sampige/article_526.txt b/Kenda Sampige/article_526.txt new file mode 100644 index 0000000000000000000000000000000000000000..5be7e4f2adebd9e21ae145af788ffca7d927aeb9 --- /dev/null +++ b/Kenda Sampige/article_526.txt @@ -0,0 +1,99 @@ +ಬಾಬಿಯಕ್ಕ ಒಳಗೆ ಬಂದು ಸೀದಾ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿ ಚಿಲಕ ಸಿಕ್ಕಿಸಿ ಮಂಚದ ಮೇಲೆ ಬಿದ್ದುಕೊಂಡಳು. ಅವಳಿಗೆ ಎಲ್ಲಿಲ್ಲದ ಸುಸ್ತಾಗಿತ್ತು. ಎರಡೂ ಕೈಗಳಿಂದ ತಲೆಯನ್ನು ಒತ್ತಿ ಹಿಡಿದರೂ ಅದು ಧಿಮಿಗುಡುತ್ತಿತ್ತು. ಅವಳ ದೊಡ್ಡಕ್ಕನ ಮಗ ಶ್ರೀನಿಧಿಯ ಕಣ್ಣಿನ ಆಳ, ಅಲ್ಲಿರುವ ಭಾವನೆಗಳ ಭಾರಕ್ಕೆ ಅವಳು ಸಂಪೂರ್ಣ ಜರ್ಜರಿತಳಾಗಿದ್ದಳು. ಅವನ ಜೋತು ಬಿದ್ದ ಕಣ್ಣ ರೆಪ್ಪೆಗಳ ತಿರುವು ಅವಳಿಗೆ ಏನೇನನ್ನೋ ನೆನಪಿಸಿತ್ತು. + +ಸಂಜೆಯಾಯಿತು; ಕತ್ತಲಾಯಿತು. ಬಾಬಿಯಕ್ಕನ ಮುಚ್ಚಿದ ಬಾಗಿಲುಗಳು ತೆರೆಯುವ ಲಕ್ಷಣಗಳು ಮಾತ್ರ ಕಾಣಲಿಲ್ಲ. + +ಅವಳ ತಂಗಿಯ ಮಗಳು ಆಶಾ ಬಾಗಿಲ ಹೊರಗೆ ನಿಂತು, ‘ದೊಡ್ಮ, ದೊಡಮಾ…..’ಎಂದು ಕರೆದರೆ ನಿರುತ್ತರ. ಒಬ್ಬರನ್ನೊಬ್ಬರು ನೋಡಿಕೊಂಡು ವಿಚಿತ್ರ ಎಂದು ಕೈ ತಿರುಗಿಸಿದರು. ಬಾಗಿಲ ಸದ್ದಿಲ್ಲ, ಒಳಗಿಂದ ಸುದ್ದಿಶ್ವಾಸವಿಲ್ಲ. ಶ್ರೀನಿಧಿಯೂ ತಪ್ಪಿತಸ್ಥನಂತೆ ಬಂದು ನಿಂತು, ‘ಬಾಬಿಯಕ್ಕ, ಬಾಯಿಯಕ್ಕಾ…….’ ಎಂದು ಬಾಗಿಲಿಗೆ ಕೈ ಕುಟ್ಟಿ ನಿಂತ. + +ರಾತ್ರಿ ಗಂಟೆ ಎಂಟಾದರೂ, ಊಟದ ಪಂಕ್ತಿ ಏಳಲಿಲ್ಲ. ಅಡುಗೆಯ ಪದ್ದಕ್ಕನಿಗೆ ತಡೆಯದೆ, ‘ಬಾಬಿಯಕ್ಕಾ, ಬಾಬಿಯಕ್ಕಾ, ಏಳು. ಊಟದ ಹೊತ್ತಾಯ್ತು. ಪಂಕ್ತಿ ಮಾಡುದಾ?’ ಎಂದಳು. ಬಾಗಿಲ ಮೇಲೆ ಕೈಯಿಟ್ಟು ಸವರುತ್ತ, ಬಾಗಿಲ ಸಂದಿಗೆ ಬಾಯಿಟ್ಟು ಕೇಳಿದಳು. + +ಆಗ ಕೇಳಿತು ಒಂದು ಗುಡುಗು. ನಿರೀಕ್ಷಣೆಯಿದ್ದೂ ಕೆಲವು ಗುಡುಗುಗಳು ಬೆಚ್ಚಿಬೀಳಿಸುತ್ತವಲ್ಲ,-ಅಂತಹದೊಂದು ಎದೆಯಾಳಕ್ಕೆ ಬಡಿಯುವ ಗಡಗುಟ್ಟುವ ದನಿ.‘ನನ್ನ ಸುದ್ದಿಗೆ ಬಂದರೆ ಜಾಗ್ರತೆ. ಏನಾರೂ ಬೇಕಾದ್ರೆ ನಾನೇ ಕೇಳ್ತೆ. ಗೊತ್ತಾಯ್ತಲ್ದ?’ + +ಬಾಗಿಲ ಸಂದಿಯಿಂದ ತಪ್ಪಿಸಿಕೊಂಡ ಆ ಗುಡುಗು ಪದ್ದಕ್ಕನ ಕಿವಿಯನ್ನಪ್ಪಳಿಸಿ, ಅಲ್ಲಿದ್ದವರನ್ನೆಲ್ಲ ತಾಂಟಿ, ಇಡೀ ಮನೆಯಲ್ಲಿ ಪ್ರತಿಧ್ವನಿಸಿತು. ನಾಗಿಯ ಎದೆಯಲ್ಲಿ ಚಳಿಯ ನಡುಕ ಹುಟ್ಟಿತು. ಎದೆಯನ್ನು ಗಟ್ಟಿಯಾಗಿ ಹಿಡಿದುಕೊಂಡು ಮುಲ್ಲೆಯಲ್ಲಿ ಹುದುಗಿ ಕುಳಿತ ಅವಳಿಗೆ ದುಃಖ ಉಮ್ಮಳಿಸಿಬರುತ್ತಿತ್ತು. + +ಊಟದ ಮನೆಯಲ್ಲಿ ಮೌನದ ಪಂಕ್ತಿ ನಡೆಯಿತು. ಅನ್ನ ಮೇಲೋಗರಗಳು ತಣಿದು ಮಣ್ಣು ಕಚ್ಚಿದ್ದವು. ಉಂಡವರು ಉಂಡರು. ಬಿಟ್ಟವರು ಬಿಟ್ಟರು. ಬಳಸುವವರ ಧ್ಯಾನವೂ ಎಲ್ಲೋ ಏನೋ. ಚಟ್ನಿ ಹಾಕುವಲ್ಲಿ ತಾಳ್ಳು ಬಡಿಸಿದರು. ತಾಳ್ಳಿನ ಜಾಗದಲ್ಲಿ ಹುಳಿ ಸುರಿದರು. ಶ್ರೀನಿಧಿ ಊಟದ ಕೋಣೆಗೆ ಬರದೆಯೇ ಸೀದಾ ಉಪ್ಪರಿಗೆಗೆ ಹೋಗಿಬಿಟ್ಟ. ಮುಲ್ಲೆಯಲ್ಲಿ ಹುದುಗಿ ಕುಳಿತ ನಾಗಿ ಅಲ್ಲಿಂದ ಏಳಲೇ ಇಲ್ಲ. + +ರಾತ್ರಿಯಾಗಿ ಬೆಳಗಾಯಿತು. ಬಾಬಿಯಕ್ಕನ ಕೋಣೆಯಿಂದ ಯಾವ ಸದ್ದೂ ಇಲ್ಲ. ಬಾಬಿಯಕ್ಕನ ತಂಗಿ ಭಾಮಳಿಗೆ ಮುನ್ನಾದಿನ ಸಂಜೆಯೇ ಸುದ್ದಿ ಹೋಗಿತ್ತು. ಮನೆಯ ಬಲಬದಿಯ ಓಣಿಯ ಕೊನೆಯಲ್ಲೇ ಅವಳ ಮನೆ. ಅವಳು ಕೆಲಸ ಕಾರ್ಯಗಳನ್ನು ಅಲ್ಲಲ್ಲೇ ಬಿಟ್ಟು ಉಟ್ಟ ಸೀರೆಯಲ್ಲೇ ಬಂದವಳು, ಅಕ್ಕನ ಕೋಣೆಯ ಹೊರಗೆ ನಿಂತು, ‘ಅಕ್ಕ…ಅಕ್ಕಾ…’ ಎಂದು ಕರೆದದ್ದು ವ್ಯರ್ಥವಾಯಿತು. ಏನು ಮಾಡುವುದೆಂದು ತೋಚದೆ ಬಾಗಿಲ ಹೊರಗೆ ಶತಪಥ ತಿರುಗಿದಳು. ಆವತ್ತು ಅವಳು ಮನೆಗೂ ಹೋಗದೆ ಅಲ್ಲೇ ಉಳಿದಳು. + +ಹೊಳೆಬದಿಯ ಏರಿನಲ್ಲಿರುವ ಇನ್ನೊಬ್ಬಳು ತಂಗಿ ಹೇಮಾಳಿಗೆ ಬೆಳಿಗ್ಗೆ ಫೋನು ಹೋಯಿತು. ಮಗನ ಸ್ಕೂಟರಿನ ಹಿಂದೆ ಕುಳಿತು ಅವಳು ಆಗಿಂದಾಗಲೇ ಬಂದವಳು, ಏನಾಯ್ತು? ಎನ್ನುತ್ತ, ‘ನಂಗೆ ನಿನ್ನೆ ಯಾಕೆ ಹೇಳಲಿಲ್ಲ?’ ಎಂಬ ಆಕ್ಷೇಪಣೆಯೊಡನೆ, ಮುಚ್ಚಿದ ಬಾಗಿಲ ಎದುರು ಕಂಗಾಲಾಗಿ ನಿಂತಳು. + +ಬಾಬಿಯಕ್ಕನ ಗಂಡ ಪ್ರಹ್ಲಾದರಾಯ ಸ್ವರ ಎತ್ತರಿಸಿ ಮಾತನಾಡಿದ್ದನ್ನು ಯಾರೂ ಕೇಳಿದವರಿರಲಿಲ್ಲ. ಯಾವತ್ತೂ ಮೃದುದನಿಯಲ್ಲೇ ಮಾತನಾಡುವ ಆತ, ಕೋಣೆಯ ಹೊರಗೆ ಮುಜುಗರದಿಂದ ನಿಂತು ಬಾಗಿಲು ತಟ್ಟಿ, ‘ಮ್ಯಾಡಮ್….’ ಎಂದರು. ತಮಾಶೆಯಲ್ಲೋ, ಅಭಿಮಾನದಲ್ಲೋ ಮ್ಯಾಡಮ್ ಎಂದು ಕರೆಯಲು ಸುರುವಾದದ್ದು, ಕ್ರಮೇಣ ಅವರಿಗೆ ಅದೇ ರೂಢಿಯಾಗಿತ್ತು. ‘ಆ ಶ್ರೀನಿಧಿಗೆ ಬುದ್ಧಿ ಇಲ್ಲೆ. ನೀವ್ ಹೀಂಗ್ ಸಿಟ್ಟ್ ಮಾಡಿರೆ ಹ್ಯಾಂಗೆ?’ ಎಂದು ತನ್ನೊಂದಿಗೆ ನಿಂತಿದ್ದವರನ್ನು ಉದ್ದೇಶಿಸಿ ಎಂಬಂತೆ ಮಾತನಾಡಿದರು. ಆದರೆ ಯಾವುದಕ್ಕೂ ಒಳಗಿನ ಪ್ರತಿಕ್ರಿಯೆ ಮಾತ್ರ ಸೊನ್ನೆ. + +ಆ ದಿನ ಬೆಳಿಗ್ಗೆ ಬಾಬಿಯಕ್ಕ ಸ್ನಾನ ಮಾಡಿ ಬಂದು ಎಂದಿನಂತೆ, ಗಂಜಿ ಹಾಕಿ ತೊಳೆದು ಇಸ್ತ್ರಿ ಹಾಕಿಟ್ಟ ಗರಿಗರಿಯಾದ ಸೀರೆಯೊಂದನ್ನು ಉಟ್ಟು, ಮುಖಕ್ಕೆ ತೆಳ್ಳಗೆ ಪೌಡರು ಹಚ್ಚಿ, ತಲೆ ಬಾಚುತ್ತ ಕುಳಿತಿದ್ದಾಗಲೇ ಇಷ್ಟೆಲ್ಲ ನಡೆದದ್ದು. ಅವಳ ಕೋಣೆಯಲ್ಲಿ ಆಳೆತ್ತರದ ಕನ್ನಡಿಯಿದ್ದರೂ, ಅಲ್ಲಿ ಕತ್ತಲೆಯೆಂದು ಪಡಸಾಲೆಯ ಕಿಟಿಕಿಯ ದಂಡೆಯಲ್ಲಿ ಎಂಟಿಂಚಿನ ಚೌಕ ಕನ್ನಡಿಯೊಂದನ್ನು ಒರಗಿಸಿ ಇಟ್ಟು, ಅದರ ಎದುರು ಮೊಣಕಾಲೂರಿ ತಲೆಬಾಚುವುದು ಅವಳ ಕಟ್ಟಳೆ. ಹಾಗೆ ತಲೆ ಬಾಚುವಾಗಲೇ ಹೆಚ್ಚಾಗಿ ಅಡುಗೆಯ ಪದ್ದಕ್ಕ, ‘ಹೌದನ, ಬಾಬಿಯಕ್ಕ, ಇವತ್ತು ಮೇಲಾರ ಎಂಥ ಮಾಡುದನ?’ ಎಂದು ಕೇಳುವುದು, ಮತ್ತು ಅವಳು – ಮಟ್ಟಿಬದನೆ ಬೋಳು ಹುಳಿ, ಅಲಸಂಡೆ ಕಾಯಿ ಸಾಸಿವೆ ಅರೆದು ಪಲ್ಯ, ಇತ್ಯಾದಿ ಇತ್ಯಾದಿ ಅಂದಿನ ಅಡುಗೆಯ ಪಟ್ಟಿ ಹೇಳುವುದು ವಾಡಿಕೆ. ಬಾಬಿಯಕ್ಕ ಊರಲ್ಲಿಲ್ಲದಿದ್ದರೆ ವಿನಃ, ಉಳಿದಂತೆ ಎಲ್ಲ ದಿನಗಳಲ್ಲೂ ಅವಳ ಹೇಳಿಕೆ ಪ್ರಕಾರವೇ ಅಡುಗೆ ಮಾಡುವುದು ಪದ್ದಕ್ಕನ ರಿವಾಜು. ಪದ್ದಕ್ಕ ಅಂತ ಅಲ್ಲ, ಬಾಬಿಯಕ್ಕನ ಹತ್ತಿರ ಕೇಳದೆ ಆ ಮನೆಯಲ್ಲಿ ಒಂದು ಹಿಡಿಕಡ್ಡಿಯನ್ನು ಆಚಿಂದ ಈಚೆಗೆ ಯಾರೂ ಇಟ್ಟವರಿಲ್ಲ. ಆ ಮನೆಯಲ್ಲಿ ಅವಳು ಎಳೆದದ್ದೇ ಗೆರೆ, ಅವಳು ಹಾಕಿದ್ದೇ ದಾರಿ. + +ಬಾಬಿಯಕ್ಕ ಹುಟ್ಟಿ, ಬೆಳೆದು, ಮಾತ್ರವಲ್ಲ ಮದುವೆಯಾಗಿ ಬಾಳಿದ ಮನೆ ಅದು. ಅವಳ ಅಕ್ಕಂದಿರಿಬ್ಬರು ಮದುವೆಯಾದ ಒಂದೇ ವರ್ಷದಲ್ಲಿ ಒಂದೊಂದು ಮಗಳಂದಿರನ್ನು ಹೆತ್ತು ಸತ್ತ ಮೇಲೆ ಅವಳ ತಂದೆ ರಾಮಪ್ಪಯ್ಯನವರು ದುಃಖ ಭರಿಸಲಾರದೆ, ಬಾಬಿಯಕ್ಕನಿಗೆ ಮನೆ ಅಳಿಯನನ್ನೇ ಮಾಡಿಕೊಂಡಿದ್ದರು. ಅವಳನ್ನು ದೂರ ಕಳಿಸುವುದು ಅವರಿಗೆ ಬೇಡವಾಗಿತ್ತು. ವಕೀಲರಾದ ಅವರು ತಮ್ಮ ಕೈಕೆಳಗೆ ಕೆಲಸ ಮಾಡುವ, ಆಗಷ್ಟೇ ವಕೀಲಿ ಕಲಿತು ಬಂದ ಹುಡುಗ ಪ್ರಹ್ಲಾದನಿಗೆ ಬಾಬಿಯಕ್ಕನನ್ನು ಕೊಟ್ಟು ಮದುವೆ ಮಾಡಿದ್ದರು. ಈಗ ನಾಲ್ಕೈದು ವರ್ಷಗಳ ಹಿಂದೆ ರಾಮಪ್ಪಯ್ಯ ತೀರಿ ಹೋದ ಮೇಲೆ ಮನೆಯ ಆಡಳಿತದ ಹೊಣೆ ತಾನಾಗಿ ಅವಳ ಕೈ ಸೇರಿತ್ತು. ತಂದೆ ಇರುವಾಗಲೂ, ಮನೆಯ ಸಮಸ್ತ ಆಡಳಿತವನ್ನು ಬಾಬಿಯಕ್ಕನೇ ನೋಡಿಕೊಳ್ಳುತ್ತಿದ್ದಳೆಂದರೆ ಸರಿಹೋಗುತ್ತದೇನೋ. ಆ ಊರಿನಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲೂ ಹೆಸರು ಮಾಡಿದ ವಕೀಲರಾಗಿದ್ದರೂ, ಮಗಳನ್ನು ಕೇಳದೆ ರಾಮಪ್ಪಯ್ಯನವರು ಯಾವ ಕೆಲಸಕ್ಕೂ ಕೈ ಹಾಕಿದವರಲ್ಲ. ಮಾತು ಮಾತಿಗೆ ಬಾಬೀ.. ಎಂದು ಕರೆದು ಕೇಳದಿದ್ದರೆ ಅವರಿಗೆ ಮನಸ್ಸಮಾಧಾನವಾಗುತ್ತಿರಲಿಲ್ಲ. ಅವಳ ಬಾಯಿಯಿಂದ, ‘ಆಯಿತು ಅಪ್ಪಯ್ಯ’ ಎಂದು ಬಂದ ಮೇಲೇ ಕೆಲಸ ಮುಂದುವರಿಸುತ್ತಿದ್ದರು. ಒಮ್ಮೊಮ್ಮೆ ಆಫೀಸು ಕಡತಗಳ ರಾಶಿಯ ಮಧ್ಯದಿಂದ ತಲೆ ಎತ್ತಿ, ಬಾಬೀ…….. ಎಂದು ಕೂಗಿದರೆಂದರೆ, ಅವಳು ಎಲ್ಲಿದ್ದರೂ ಅಲ್ಲಿಗೇ ಓಡಿ ಬಂದು ಅವರ ಮಾತಿಗೆ ಕಿವಿಕೊಡಬೇಕು; ಅಂದರೇ ಅವರಿಗೆ ಸಮಾಧಾನ. ಒಕ್ಕಲೆಬ್ಬಿಸುವುದಾದರೂ, ಜಾಗ ಮಾರುವುದಾದರೂ, ಬ್ಯಾಂಕಿನ ವ್ಯವಹಾರವೇ ಆದರೂ, ಮಗಳೊಟ್ಟಿಗೆ ಮಾತುಕತೆ ನಡೆಸದೆ ಹೆಜ್ಜೆ ಮುಂದೆ ಇರಿಸಿದ್ದವರಲ್ಲ. + +ಅವಳ ಗಂಡ ಪ್ರಹ್ಲಾದರಾಯನಾದರೋ ಮನೆ ಅಳಿಯನಿಗೆ ತಕ್ಕ ಜಾಯಮಾನದವನೇ. ಮಾವನ ಎದುರಂತೂ ಸ್ವರ ಏರಿಸುವುದಿರಲಿ, ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಲೂ ಇರಲಿಲ್ಲ. ಇನ್ನು ಹೆಂಡತಿಯೆಂದರೂ ವಿಶೇಷ ಗೌರವವೇ. ಅವಳ ಅಭಿಪ್ರಾಯ, ತೀರ್ಮಾನಗಳೆಂದರೆ, ಮ್ಯಾಡಮ್ ಹೇಳಿದ ಮೇಲೆ ಅದು ಸಮವೇ ಇರಬೇಕು ಎನ್ನುವಂತಹ ಮನೋಧರ್ಮ. + +ತಂದೆ ರಾಮಪ್ಪಯ್ಯನವರಿಂದ ತರಬೇತು ಪಡೆದ ಅವಳು ತುಂಬಿದ ಆ ಮನೆಯನ್ನು ಸಮರ್ಥವಾಗಿ ನಡೆಸಿಕೊಂಡು ಬರುತ್ತಿದ್ದ ಪರಿಗೆ ಎಲ್ಲರೂ ಅಚ್ಚರಿಪಡುತ್ತಿದ್ದುದಿತ್ತು. ಬಾಬಿಯಕ್ಕನಲ್ಲಿ ರಾಣಿಯ ವರ್ಚಸ್ಸಿದೆಯೆಂದು ಊರವರು ಮಾತನಾಡುತ್ತಿದ್ದರು. ಅವಳ ಮೋರೆಯಲ್ಲಿದ್ದ ಅಧಿಕಾರದ ಗತ್ತು, ಸೀರೆಯ ನೆರಿಯನ್ನು ಚಿಮ್ಮುತ್ತ ಅವಳು ನೆಟ್ಟಗೆ ನಡೆಯುವ ಪರಿ, ಅಧಿಕಾರವಾಣಿಯಿಂದ ಮಾತನಾಡುವಾಗಿನ ಸ್ವರದ ಠೇಂಕಾರ ಈ ಮಾತಿಗೆ ಪುಷ್ಟಿ ಕೊಡುತ್ತಿದ್ದುವು. ಅವರ ಮನೆಯಲ್ಲಿ ಹೆಂಗಸರದೇ ಸಾಮ್ರಾಜ್ಯ ಎಂದು ಹೇಳುವವರೂ ಇದ್ದರು. ಆ ಮಾತಿನಲ್ಲೂ ಹುರುಳಿಲ್ಲದಿರಲಿಲ್ಲ. ಬಾಬಿಯಕ್ಕ, ಅವಳ ಇಬ್ಬರು ಹೆಣ್ಣುಮಕ್ಕಳು, ತೀರಿ ಹೋದ ಅಕ್ಕಂದಿರಿಬ್ಬರ ಮಗಳಂದಿರು, ಊರಲ್ಲೇ ಇದ್ದು ಹಬ್ಬ ಹುಣ್ಣಿಮೆ ಮತ್ತೊಂದೆಂದು ಆಗಿಂದಾಗ ಮನೆಗೆ ಬಂದಿರುತ್ತಿದ್ದ ತಂಗಿಯಂದಿರು, ಅವರ ಮಗಳಕ್ಕಳು, ದೂರದ ಸಂಬಂಧಿ ಯಮುನತ್ತೆ, ಅಡುಗೆಯ ಪದ್ದಕ್ಕ, ಪರಿಚಾರಿಕೆಯ ಸಣ್ಣಮ್ಮ, ಕರೆದ ಬಾಯಿಗೆಂದು ಊರಿಂದ ಕರೆತಂದ ಒಕ್ಕಲು ಹುಡುಗಿ ನಾಗಿ-ಬ್ರಾಹ್ಮಣರಾದರೂ ಅಳಿಯಕಟ್ಟಿನವರ ಮರ್ಜಿಯಿತ್ತು ಅವರ ಮನೆಯಲ್ಲಿ ಎನ್ನುವವರೇ ಎಲ್ಲರೂ. + +ಆ ಮನೆಯಲ್ಲಿ ಹೇಗೆಂದರೆ, ಮನೆಯಲ್ಲಿ ಯಾರ‍್ಯಾರು ಇದ್ದಾರೆಂದು ಎಷ್ಟೋ ಸಲ ಮನೆಯವರಿಗೇ ತಿಳಿಯದಿರುವಂತಹ ಪರಿಸ್ಥಿತಿ ಇರುತ್ತಿದ್ದುದೂ ಇತ್ತು. ಊಟಕ್ಕೋ, ತಿಂಡಿಗೋ, ಇನ್ನೊಂದಕ್ಕೋ ಯಾರು ಯಾರೋ, ಮಕ್ಕಳ ಗೆಳೆಯರೋ, ಶಾಲೆಯ ಅಧ್ಯಾಪಕರೋ, ಬ್ಯಾಂಕಿನ ಸಿಬ್ಬಂದಿಗಳೋ, ಬಂದು ಹೋಗಿಕೊಂಡೇ ಇರುತ್ತಿದ್ದರು. ವಕೀಲರ ಮನೆಯೆಂದರೆ ಒಂದು ಛತ್ರ ಎಂದೇ ಹೇಳುವ ವಾಡಿಕೆ. ಬಾಬಿಯಕ್ಕನ ತಂದೆಯಿರುವಾಗಲಂತೂ, ಅವರು ಎಷ್ಟೋ ಸಲ ಮನೆ ಮಕ್ಕಳನ್ನು ಮನೆಗೆ ಬಂದ ನೆಂಟರೆಂದು ಪ್ರೀತಿಯಿಂದ ಮಾತನಾಡಿಸಿ, ಬಂದ ನೆಂಟರನ್ನು ಮನೆಮಕ್ಕಳೆಂದು ಬೈದ ಎಷ್ಟೋ ಪ್ರಸಂಗಗಳಿದ್ದವು. + +ಬಾಬಿಯಕ್ಕನದು ನೋಡಲು ಆಕರ್ಷಕ ವ್ಯಕ್ತಿತ್ವ. ಕೆಂಪು ಬಿಳಿಯ ಮೈಬಣ್ಣ. ಉದ್ದ ಮುಖದಲ್ಲಿ ಎದ್ದು ಕಾಣುವ ಸಂಪಿಗೆ ಮೂಗು. ಗಂಡನಿಗಿಂತ ಒಂದೂವರೆ ಎರಡಿಂಚಾದರೂ ಉದ್ದದ ಜೀವ. ಮದುವೆಯಾಗುವಾಗ ಅವಳಿಗೆ ಹದಿನೈದು ತುಂಬಿ ಹದಿನಾರು. ಮೆಟ್ರಿಕ್ ಮುಗಿದಿತ್ತಷ್ಟೆ. ಆಗ ಅವಳು ಅಷ್ಟು ಉದ್ದ ಇರಲಿಲ್ಲವಾದರೂ, ಮತ್ತೆ ಒಂದೇ ವರ್ಷದಲ್ಲಿ ಗಂಡನನ್ನು ಮೀರಿಸಿ ಬೆಳೆದವಳು, ಐದೂವರೆ ಅಡಿಗಿಂತಲೂ ಉದ್ದವಾಗಿ, ಅದಕ್ಕೆ ತಕ್ಕಷ್ಟು, ಅಥವಾ ತುಸು ಜಾಸ್ತಿಯೇ ಎನ್ನಬಹುದೇನೋ ಎಂಬಷ್ಟು, ತೋರವಾಗಿದ್ದಳಾಗಿ, ಸಭೆಗೆ ಬಂದರೆ ಎದ್ದುಕಾಣುವಂತಹ ಅಬ್ಬರದ ವ್ಯಕ್ತಿತ್ವ. ನೀಳವಾದ ಮೂಗಿನಿಂದಾಗಿಯೋ, ಎದ್ದು ಕಾಣುವ ವ್ಯಕ್ತಿತ್ವದಿಂದಲೋ, ನರ್ಗೀಸಿನಂತಿದ್ದಾಳೆಂದೂ ಹೇಳುವವರಿದ್ದರು. ಯಾರಾದರೂ ಬಾಯಿಬಿಟ್ಟು “ನೀನು ನರ್ಗೀಸಿನ ಹಾಂಗೆ ಕಾಣ್ತಿಯ” ಎಂದರೆ ಉಕ್ಕುವ ನಗೆಯ ಮಧ್ಯೆಯೂ, ‘ಏ ಸಾಕಾ, ಸುಮ್‌ಸುಮ್‌ನೆ ಏನಾರೂ ಹೇಳ್ಬೇಡ್ವ’ ಅಂತ ಅಲ್ಲಗಳೆಯುತ್ತಿದ್ದಳಾದರೂ, ನರ್ಗೀಸ್ ಅವಳ ಮೆಚ್ಚಿನ ನಟಿಯಾಗಿದ್ದದ್ದಂತೂ ಹೌದು. + +ಕೋರ್ಟಿನ ಕೆಲಸ ಮುಗಿದ ಮೇಲೆ ಕಾರು ಸುಮ್ಮನೆ ಮನೆಯಲ್ಲೇ ಇರುತ್ತದೆಂದು, ಬಾಬಿಯಕ್ಕ ಕಾರು ಬಿಡುವುದನ್ನೂ ಕಲಿತಿದ್ದಳು. ಆ ಸಣ್ಣ ಊರಿನಲ್ಲಿ ಅರವತ್ತು ಎಪ್ಪತ್ತರ ದಶಕದಲ್ಲಿ ಕಾರು ಇರುವ ಮನೆಗಳೇ ಬೆರಳೆಣಿಕೆಯಷ್ಟಿರುವ ಕಾಲದಲ್ಲಿ, ಹೆಂಗಸೊಬ್ಬಳು ಕಾರು ಬಿಡುವುದೆಂದರೆ ತೀರ ವಿಶೇಷವಾಗಿತ್ತು. ಸಂಜೆಯ ಹೊತ್ತು ಒಮ್ಮೊಮ್ಮೆ ಅವಳು ತಂಗಿಯಂದಿರನ್ನು, ಮಕ್ಕಳನ್ನು ಕೂಡಿಸಿಕೊಂಡು ಹೊಳೆ ಬದಿಗೋ, ಕೋಡಿ ಬೀಚಿಗೋ, ನರಿಬೇಣದ ಉದ್ಯಾನಕ್ಕೋ ಕಾರು ಬಿಟ್ಟುಕೊಂಡು ಹೊರಟಳೆಂದರೆ, ಬೀದಿಯಲ್ಲಿ ಹೋಗುವವರೇ ಆಗಲಿ, ಅಂಗಡಿ ಬಾಗಿಲುಗಳಲ್ಲಿ ನಿಂತವರೇ ಆಗಲಿ, ಒಂದು ಗಳಿಗೆ ಬಾಯಿ ಬಿಟ್ಟು ನಿಂತು ನೋಡದೆ ಇರುತ್ತಿರಲಿಲ್ಲ. ಆಗ, ಅವಳ ಒಟ್ಟಿಗೆ ಕುಳಿತವರು ಬೆಟ್ಟು ಮಾಡಿ ಅವಳಿಗೆ ಅದನ್ನು ತೋರಿಸಿ, ‘ಬಾಬಿಯಕ್ಕ, ಅಲ್ಲ್ ಕಾಣ್, ನಿಂತ್ಕಂಡ್ ಕಾಂಬುದು.’ ಎಂದರೆ, ಬಾಬಿಗೆ ಅದೆಲ್ಲ ಕ್ಯಾರೇ ಇರಲಿಲ್ಲ. ‘ಬೇರೆ ಕಸುಬಿಲ್ಲ, ಕಾಂತೊ’ ಎಂದು ನಿಕಾಶೆ ಮಾಡಿಬಿಡುತ್ತಿದ್ದಳು. + +ಚಿಕ್ಕಂದಿನಿಂದಲೇ ಮನೆಯ ಆಡಳಿತದ ನೊಗವನ್ನು ಹೊತ್ತು ಅವಳ ಮನಸ್ಸು ಕಠಿಣವಾಗಿದೆ, ಗಂಡಸರಂತೆ ವರ್ತಿಸುತ್ತಾಳೆ ಎನ್ನುತ್ತಿದ್ದರಾದರೂ, ಒಳಗಿನಿಂದ ಬೆಣ್ಣೆಯಂತಹ ಮೃದು ಹೃದಯವೊಂದೂ ಇದೆಯೆನ್ನುವ ಸತ್ಯ ಮಾತ್ರ ಕೆಲವರಿಗಷ್ಟೇ ಗೊತ್ತಿತ್ತು. ಅವಳೊಂದಿಗೆ ಸಿನೆಮಾ ನೋಡಲು ಹೋದವರಿಗಂತೂ ಸಿನೆಮಾಕ್ಕೇ ಸೀಮಿತವಾದ ಆ ಬೆಣ್ಣೆ ಹೃದಯದ ಪ್ರತ್ಯಕ್ಷ ದರ್ಶನ ಆಗಿಯೇ ಆಗುತ್ತಿತ್ತು. + +ಊರಲ್ಲಿದ್ದ ಎರಡು ಟಾಕೀಸುಗಳಲ್ಲಿ ಯಾವ ಒಳ್ಳೆಯ ಸಿನೆಮಾ ಬಂದರೂ ಅವರ ಮನೆಯ ಪಟಾಲಂ ಹೊರಡುತ್ತಿತ್ತು. ಸಿನೆಮಾದ ಟಿಕೇಟು ಮುಂದಾಗಿಯೇ ಮನೆಬಾಗಿಲಿಗೆ ಬರಬೇಕು ಹಾಗೂ ಎರಡೇ ಮಾರು ದೂರದ ಟಾಕೀಸಿಗೂ ಕಾರಿನಲ್ಲಿಯೇ ಹೋಗಬೇಕು. ಕಾರಿನಿಂದಿಳಿದು, ಸೇನಾಧಿಪತಿಯಂತೆ ಬಾಬಿ ನಡೆಯುತ್ತಿದ್ದರೆ, ಅವಳ ಹಿಂದೆ ಮುಂದೆ ಆಚೆ ಈಚೆ ಉಳಿದವರು ಹೆಜ್ಜೆ ಹಾಕಬೇಕು. ಮನೆಯ ಹೆಂಗಸರು, ಗಂಡಸರು, ಮಕ್ಕಳಲ್ಲದೆ, ಒಬ್ಬಿಬ್ಬ ಮನೆಯಾಳುಗಳೂ ಗಾರ್ಡುಗಳಂತೆ ಜೊತೆಗಿರುತ್ತಿದ್ದರು. ಬಾಬಿಯಕ್ಕನ ಮನೆಯವರು ಸಿನೆಮಾಕ್ಕೆ ಹೋದರೆಂದರೆ ಅದು ಇಡೀ ಊರಿಗೇ ಸುದ್ದಿಯಾಗುತ್ತಿತ್ತು. ಇನ್ನು ಸಿನೆಮಾ ನೋಡಿ ಬಂದ ಮೇಲೆ ಪಡಸಾಲೆಯಲ್ಲಿ ಸುತ್ತಲೂ ಗೋಡೆಗೊರಗಿ ಕುಳಿತು ನಡೆಯುವ ಬಿರುಸಾದ ಚರ್ಚೆಯಲ್ಲಿ ಆ ಚಲನಚಿತ್ರದ ಮೇಲೆ ನಡೆಯುವ ಸೂಕ್ಷ್ಮ ಶಸ್ತ್ರಕ್ರಿಯೆಗೆ ಬಾಬಿಯದೇ ಅಧ್ಯಕ್ಷತೆ. ಯಾರ‍್ಯಾರ ನಟನೆ, ಯಾವ್ಯಾವ ಹಾಡು ಹೇಗೆ, ಏನು, ಯಾಕೆ, ಇತ್ಯಾದಿಯಾಗಿ ಎಳೆ ಎಳೆಯಾದ ವಿಮರ್ಶೆ ನಡೆಯಬೇಕು. ಪಡಸಾಲೆಯ ಮಧ್ಯದಲ್ಲಿ ಎತ್ತರದ ಹೊಸ್ತಿಲಿನ ಮೇಲೆ ಮುಂಗೈಯಿರಿಸಿ, ಬಾಗಿಲಿಗೊರಗಿ ಕುಳಿತ ಬಾಬಿಯಕ್ಕ ತೀರ್ಮಾನ ಹೊರಡಿಸಬೇಕು. + +ಈಗ, ಮೇಲೆ ನಡೆದ ಸಂಗತಿ ನಡೆದುದರ ಮೂಲ ಹುಡುಕಿದರೆ, ಅದು ಸಿನೆಮಾದಲ್ಲೇ ಇದೆಯೆಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆವತ್ತು ಅವರೆಲ್ಲ ನೂತನ್-ಸುನಿಲ್‌ದತ್ ನಟಿಸಿದ ಹಿಂದಿ ಸಿನೆಮಾ ‘ಸುಜಾತಾ’ ನೋಡಿ ಬಂದಿದ್ದರು. ಆಗಲೇ, ಅಂದರೆ ಸಿನೆಮಾ ನೋಡಿ ಬಂದ ಮೇಲೆ ಯಥಾಪ್ರಕಾರ ಚರ್ಚೆ ನಡೆದು ಮೆಚ್ಚುಗೆಯ ಮಹಾಪೂರವೇ ಹರಿದು ಬರತೊಡಗಿದಾಗಲೇ, ಬಾಬಿಯ ದೊಡ್ಡಕ್ಕನ ಮಗ ಶ್ರೀನಿಧಿಯು ವಿಷಯದ ಪ್ರಸ್ತಾಪ ಮಾಡಿದ್ದ. ಅಂದರೆ, ಬ್ರಾಹ್ಮಣ ಹುಡುಗ ಸುನಿಲ್‌ದತ್ತ್ ಕೆಳಜಾತಿಯ ಹುಡುಗಿ ನೂತನಳನ್ನು ಪ್ರೀತಿಸುವ ಆ ಕತೆ ಎಲ್ಲರ ಮನಸೂರೆಗೊಂಡಿತ್ತು. ಅದೆಷ್ಟೋ ದಿನಗಳಿಂದ ಹೇಳಬೇಕೆಂದುಕೊಂಡೂ, ಹೇಳಲು ಎದೆಗಾರಿಕೆ ಬರದೆ ಒದ್ದಾಡುತ್ತಿದ್ದ ಶ್ರೀನಿಧಿಗೆ ಇದ್ದಕ್ಕಿದ್ದಂತೆ, ಹೇಳಿದ್ರೆ ಈಗಲೇ. ಈಗ ಬಿಟ್ರೆ ಇನ್ನ್ ಆಗ್ಲಿಕ್ಕಿಲ್ಲ, ಎಂದು ಅನಿಸಿ, ಅಳ್ಳೆ ಗಟ್ಟಿ ಮಾಡಿಕೊಂಡು ತನ್ನ ಮತ್ತು ನಾಗಿಯ ಬಗ್ಗೆ ಹೇಳುವ ಧೈರ್ಯ ಮಾಡಿದ್ದ. + +ಕ್ಷಣಮಾತ್ರದಲ್ಲಿ ಸಿನೆಮಾ ಜಗತ್ತಿನಿಂದ ವಾಸ್ತವ ಪ್ರಪಂಚಕ್ಕೆ ಬಂದಿಳಿದ ಅವರೆಲ್ಲ ಮೊದಲು ಶ್ರೀನಿಧಿಯೇನೋ ಕುಶಾಲಿಗೆ ಹೇಳುತ್ತಿದ್ದಾನೆಂದೇ ಎಣಿಸಿದರು. ರೇಖಾ ಹಾಗೇ ಹೇಳಲಿಕ್ಕೂ ಹೇಳಿದಳು, ‘ಹೋಗ, ಹೋಗ, ಕುಶಾಲಿಗೂ ಹೊತ್ತ್ ಗೊತ್ತ್ ಅಂದ್ಹೇಳಿ ಇತ್ತ್, ’‘ಏನಾ, ಮಾಣಿ, ನಿಂಗೆ ಮಂಡೆಗಿಂಡೆ ಸಮ ಉಂಟನ? ಡಾಕ್ಟ್ರತ್ರ ಹೋಯ್ಕ ಹ್ಯಾಂಗೆ?’ ಎಂದು ಭಾಮ ಚಾಟಿ ಬಾರಿಸಿದಳು.‘ಅಬ್ಬೆಯಿಲ್ಲದ ಮಗು ಅಂತ ಕೊಂಡಾಟ ಮಾಡಿದ್ದು ತಲೆಗೇರಿತ್ತಾ ಕಾಂತ್ ಮಾಣಿಗೆ. ಮದಿ ಅಂದ್ರೆ ಆಟ ಅಂತ ಮಾಡ್ಕಂಡಿದ್ಯ? ಕಟ್ಟುಕಟ್ಲೆ ಕ್ರಮ ಅಂತ ಇಲ್ಯ? ಇನ್ನೊಂದ್ಸಲ ನಿನ್ನ ಬಾಯಿಯಿಂದ ಅಂಥ ಮಾತು ಬಂದ್ರೆ ಕಾಣು.’ ಎಂದಳು ಸಟ್ಟನೆ ಸರ್ತ ಕೂತ ಬಾಬಿಯಕ್ಕ. + +ಮತ್ತೆ ತಗೋ, ಒಂದೆರಡಲ್ಲ, ತಲೆಗೊಂದರಂತೆ ಮಾತಿನ ಬಾಣಗಳು ಎರಗಿ ಅವನ ಬಾಯಿ ಸಂಪೂರ್ಣ ಕಟ್ಟಿ ಹೋಯಿತು. ನಾಗಿಗಂತೂ ಮುಖ ಎತ್ತದ ಹಾಗಾಗಿತ್ತು. ಮುಖ ತಗ್ಗಿಸಿ ಮುಲ್ಲೆಯಲ್ಲಿ ನಿಂತವಳು ಕಣ್ಣೆತ್ತಿ ಮೇಲೆ ನೋಡುವ ಸಾಹಸವನ್ನೂ ಮಾಡಲಿಲ್ಲ. ಈ ಮನೆಯಲ್ಲಿ ತನ್ನ ದಿನ ಇನ್ನು ಮುಗಿಯಿತು ಎನ್ನುವುದು ಅವಳಿಗೆ ತಕ್ಷಣ ಅರ್ಥವಾಯಿತು. ಧುಮ್ಮುಕ್ಕಿ ಬರುವ ಕಣ್ಣೀರನ್ನು ಹರಪ್ರಯತ್ನದಿಂದ ತಡೆಹಿಡಿದಿದ್ದಳಾಗಿ ಅವಳ ಮೋರೆಯೆಲ್ಲ ಬೀಗಿದಂತಾಗಿ ಕೆಂಪುಕೆಂಪಾಗತೊಡಗಿತ್ತು. + +ಅಬ್ಬೆಯಿಲ್ಲದ ಮಗುವೆಂದು ಶ್ರೀನಿಧಿಯನ್ನು ಅವರು ಎಷ್ಟೇ ಮುದ್ದು ಮಾಡಿ ಬೆಳೆಸಿರಬಹುದು; ನಾಗಿಯ ಸ್ವಭಾವವನ್ನು ನಿಜಕ್ಕೂ ಮೆಚ್ಚಿದ ಅವರು ಅವಳನ್ನು ಎಂದೂ ಕೆಲಸದವಳಂತೆ ನಡೆಸಿಕೊಂಡಿರದೆ ಇರಬಹುದು. ಆದರೆ ಶ್ರೀನಿಧಿ, ನಾ ಮತ್ತ್ ನಾಗಿ…. ನಾವಿಬ್ಬರು…. ನಮಗಿಬ್ಬರಿಗೂ… ನಾವು ಮದುವೆ ಆಪುದೆಂತ ಮಾಡಿತ್ತು. ಎಂದು ತೊದಲಿಕೊಂಡೇ ಆರಂಭಿಸಿದ ಆ ಮಾತನ್ನು ನಂಬುವ ಅಥವಾ ಅದನ್ನು ಒಪ್ಪುವ ಮನಸ್ಸು ಬಿಡಿ, ಅದನ್ನು ಪೂರ್ತಿಯಾಗಿ ಕೇಳಲಿಕ್ಕೂ ಅಲ್ಲಿ ಯಾರೂ ಸಿದ್ಧರಿರಲಿಲ್ಲ. + +ನಿಧಾನವಾಗಿ ವಿಷಯದ ಸಾಂದ್ರತೆ ಅವರೊಳಗೆ ಇಳಿಯುತ್ತಿದ್ದಂತೆ, ಅವರೆಲ್ಲರಿಗೆ ಆದ ದೊಡ್ಡ ಆಘಾತವೆಂದರೆ, ಅದೇ ಮನೆಯಲ್ಲಿ, ಜನಜಂಗುಳಿಯೆಂದು ಧಾರಾಳವಾಗಿ ಹೇಳಬಹುದಾದ ಅಷ್ಟೊಂದು ಮಂದಿಯೆಡೆಯಲ್ಲಿ, ತಮ್ಮ ಮೂಗಿನಡಿಯಲ್ಲಿಯೇ, ಒಂದು ಪ್ರೇಮಕತೆ ನಡೆಯುತ್ತಿರಬಹುದೆಂಬುದರ ಕಡೆಗೆ ತಮ್ಮ ಯಾರೊಬ್ಬರ ಗಮನವೂ ಇದ್ದಿರಲಿಲ್ಲವೆಂದರೆ? ಅಂತಹದೊಂದು ಪ್ರಕರಣ ಅಲ್ಲಿ ನಡೆಯುವ ಸಾಧ್ಯತೆಯ ಬಗ್ಗೆ ಒಂದು ನೂಲುತುಂಡಿನಷ್ಟಾದರೂ ಸಂಶಯವೂ ಬರಲಿಲ್ಲವೆಂದರೆ? ನಾಗಿಯನ್ನು ಕೆಲಸಕ್ಕೆ ಕರೆದಾಗಲೆಲ್ಲ ಅವಳು ಹಿಂದಿನ ಹಿತ್ತಿಲ ಕಡೆಯಿಂದ ಓಡಿ ಬರುತ್ತಾ, ಮಾವಿನಕಾಯಿ ಬಿದ್ದಿತ್ತು, ಹೆಕ್ಕಲು ಹೋಗಿದ್ದೆ ಎನ್ನುವಾಗ, ಏನಿದು ಈಗೀಗ ಮಾವಿನಕಾಯಿ ಬೀಳುವುದು ಜಾಸ್ತಿಯಾಗಿದೆ, ಎಂದುಕೊಂಡರೇ ಹೊರತು, ಬೇರೇನೋ ಮಸಲತ್ತು ನಡೆದಿರಬಹುದೆಂಬುದರ ಕಡೆಗೆ ಯಾರ ಗಮನವೂ ಹೋಗಿರಲಿಲ್ಲವಲ್ಲ. ತಂದಿಟ್ಟ ತಾಂವು ಕಾಗದಗಳು ಬೇಗನೇ ಮುಗಿದುಹೋಗುವುದನ್ನು ಕಂಡೂ, ಯಾರಾದರೂ ಪ್ರೇಮಪತ್ರ ಬರೆಯುತ್ತಾರೆಂಬ ಸಂದೇಹ ಒಬ್ಬರಿಗಾದರೂ ಬಂದಿದ್ದರೆ ಕೇಳಿ. ಬದಲು, ‘ಮ್ಯಾತ್ಸ್ ಪ್ರಾಕ್ಟೀಸ್ ಎಲ್ಲ ಜೋರಲ್ಲಿ ಆಗ್ತ ಉಂಟಂತ ಕಾಣ್‌ತ್’ ಎಂದು ಬಾಬಿಯಕ್ಕನ ಗಂಡ ಖುಶಿಪಟ್ಟುಕೊಂಡು ಮತ್ತಷ್ಟು ಕಾಗದಗಳ ಕಟ್ಟನ್ನು ತಂದು ಜೋಡಿಸಿಟ್ಟಿದ್ದರು. + +ಮಣಿಪಾಲದಲ್ಲಿ ಇಂಜಿನಿಯರಿಂಗ್ ಓದುತ್ತಿದ್ದ ಶ್ರೀನಿಧಿ ಪ್ರತಿ ವಾರಾಂತ್ಯದಲ್ಲಿ ಮಾತ್ರವಲ್ಲ, ವಾರದ ನಡುವೆಯೂ ಮನೆಗೆ ಓಡಿ ಬರುತ್ತಿದ್ದರೆ, ‘ಮಾಣಿಗೆ ಮನೆ ಎಣ್ಣುವುದು ಜಾಸ್ತಿ; ಪಾಪ ಹೋಸ್ಟೆಲ್ಲ್ ಊಟ ಆತ್ತಿಲ್ಲ ಅದ್ಕೆ’ ಎಂದುಕೊಂಡರೇ ವಿನಃ ಇಲ್ಲಿನ ಸೆಳೆತ ಬೇರೆ ಏನಿರಬಹುದೆಂದು ತಲೆಖರ್ಚು ಮಾಡಲು ಹೋದವರಿರಲಿಲ್ಲ. ಅಷ್ಟೊಂದು ಜನರನ್ನು ಸೀಳಿಕೊಂಡು ಅತ್ತಿತ್ತ ಸಿಡಿಯುತ್ತಿದ್ದ ನೋಟದ ಬಾಣಗಳನ್ನಾಗಲೀ, ಹುಬ್ಬಿನ ಸಂಕೇತಗಳನ್ನಾಗಲೀ, ಕೈಯ ಸನ್ನೆಗಳನ್ನಾಗಲೀ ನೋಡಿದವರಿರಲಿಲ್ಲವೋ, ನೋಡಿಯೂ ಅರ್ಥೈಸುವವರಿರಲಿಲ್ಲವೋ, ಅಂತೂ… ಸಿನೆಮಾಗಳಲ್ಲಿ ಸೂಕ್ಷಾತಿಸೂಕ್ಷ್ಮ ಸಂವೇದನೆಗಳನ್ನು, ಕ್ಷಣಮಾತ್ರದಲ್ಲಿ ಗ್ರಹಿಸಿ ಹಿಡಿಯುವ ಮಂದಿಗೆ ಕಣ್ಣೆದುರು ಹರಿಯುತ್ತಿದ್ದ ಭಾವತರಂಗಗಳು ಅಗೋಚರವಾಗಿದ್ದುಬಿಟ್ಟಿದ್ದವು. + +ಪ್ರತಿಯೊಬ್ಬರಿಗೂ, ಸಂಗತಿ ತಮ್ಮರಿವಿಗೆ ಬರದೆಹೋದುದರ ಸಿಟ್ಟು, ಅಪಮಾನ, ಅಸಹಾಯಕತೆಗಳನ್ನು ಅಲ್ಲಗಳೆಯುವ ಅವಸರ ಒಂದೆಡೆಯಾದರೆ, ಮನೆತನದ ಮರ್ಯಾದೆಗೆ ಪೆಟ್ಟಾಗಕೂಡದೆಂಬ ಧಾವಂತ ಇನ್ನೊಂದೆಡೆ. ನಾಗಿಯ ತಂದೆಯನ್ನು ಕೂಡಲೇ ಕರೆಸಿ ಅವಳನ್ನು ಊರಿಗೆ ಕಳುಹಿಸಿಕೊಡುವುದೆಂಬ ನಿರ್ಣಯವನ್ನು ಆಗಿಂದಾಗಲೇ ಕೈಕೊಂಡು, ವಿಷಯಕ್ಕೆ ಪೂರ್ಣವಿರಾಮವನ್ನೂ ಹಾಕಿಯೇ ಬಿಟ್ಟರು. + +ಮುಲ್ಲೆಯಲ್ಲಿ ನಿಂತೇ ಇದ್ದ ನಾಗಿಗೆ ಇನ್ನು ತಡೆಯಲಾಗಲಿಲ್ಲ. ಕೈಯ್ಯಲ್ಲಿದ್ದ ಕರವಸ್ತ್ರದಿಂದ ಮುಖ ಮುಚ್ಚಿಕೊಂಡು ಅಲ್ಲಿಂದ ಓಡಿದಳು. ಸೆಂಟಿನ ನವಿರಾದ ಪರಿಮಳ ಅವಳ ಮೂಗಿಗೆ ಬಡಿದದ್ದೇ, ಕೆಲವೇ ಗಂಟೆಗಳ ಮೊದಲು ಸಿನೆಮಾ ನೋಡುತ್ತಾ, ಇದೇ ಕರವಸ್ತ್ರದಿಂದ ಬಾಬಿಯಕ್ಕ ಕಣ್ಣೊರೆಸಿಕೊಳ್ಳುತ್ತಿದ್ದುದು ಅವಳಿಗೆ ನೆನಪಾಯಿತು. ಯಾವುದೇ ಸಿನೆಮಾಕ್ಕೆ ಹೋಗಿರಲಿ, ಬಾಬಿಯ ಪಕ್ಕದ ಸೀಟಿನಲ್ಲಿ ನಾಗಿಯೇ ಕುಳಿತುಕೊಳ್ಳಬೇಕೆಂಬುದು ಬಾಯಿಬಿಟ್ಟು ಹೇಳದ ಒಂದು ನಿಯಮವಾಗಿತ್ತು. ಅಲ್ಲಿ ಕುಳಿತವಳಿಗೆ ಕೆಲವು ಚಿಲ್ಲರೆ ಕೆಲಸಗಳೂ ಇದ್ದವು ಎನ್ನಿ,-ಕಣ್ಣೀರು ಬಂದರೆ ಕರವಸ್ತ್ರ ಕೊಡುವುದು, ಬಾಯಿ ಒಣಗಿದರೆ ಶುಂಠಿ ಮಾತ್ರೆ ಒದಗಿಸುವುದು. ಬಾಯಾರಿದರೆ ನೀರು ಕುಡಿಸುವುದು-ಎಲ್ಲ ನಾಗಿಯೇ. ಇನ್ನು ಕಡಲೆಕಾಯಿ ತಿನ್ನುವಾಗ ಪೊಟ್ಟಣ ಇರಬೇಕು ನಾಗಿಯ ಕೈಯ್ಯಲ್ಲಿ; ಆ ಪೊಟ್ಟಣದಿಂದ ಒಂದೊಂದೇ ಕಾಳನ್ನು ತೆಗೆದು ಬಾಬಿಯಕ್ಕ ತನ್ನ ಬಾಯಿಗೆ ಹಾಕಿಕೊಳ್ಳಬೇಕು. ಆವತ್ತಿನ ಸಿನೆಮಾದಲ್ಲಿ ಕೆಲಸದ ಹುಡುಗಿಯಾಗಿದ್ದ ನೂತನಳ ದೀನಾವಸ್ಥೆಯು ಬಾಬಿಯ ಕಣ್ಣಲ್ಲಿ ಸ್ವಲ್ಪ ನೀರನ್ನೇನೂ ಇಳಿಸಿರಲಿಲ್ಲ. ಸಿನೆಮಾ ಮುಗಿದ ಮೇಲೆ ಆ ಒದ್ದೆ ಕರವಸ್ತ್ರವು ನಾಗಿಯ ಕೈಯ್ಯಲ್ಲೇ ಉಳಿದುಬಿಟ್ಟಿತ್ತು. ಈಗ ಅದೇ ಕರವಸ್ತ್ರವು ತಂದ ನೆನಪಿನಿಂದ ನಾಗಿಗೆ ಇನ್ನಷ್ಟು ದುಃಖ ಬಂತು. ಮೆಟ್ಟಿಲಿಳಿದು ಅಂಗಳ ದಾಟಿ ಸೀದ ಹಟ್ಟಿಯ ಹಿಂದಿನ ಭಾಗಕ್ಕೆ ಹೋಗಿ ಗೋಡೆಗೊರಗಿ ನಿಂತು ಮನಸಾರ ಅತ್ತಳು. + +ಹಳ್ಳಿಯಿಂದ ಈ ಮನೆಗೆ ಬರುವಾಗ ನಾಗಿಗೆ ಹದಿಮೂರೋ ಹದಿನಾಲ್ಕೋ ವರ್ಷ. ನವರಾತ್ರಿಯ ಆಚರಣೆಗೆಂದು ಮನೆಯವರೆಲ್ಲ ಹಳ್ಳಿಗೆ ಹೋಗಿದ್ದಾಗ ಹಬ್ಬದ ಕೆಲಸಕಾರ್ಯಕ್ಕೆ ಒಡತಿಗೆ ಸಹಾಯವಾದೀತೆಂದು ಅವರ ಒಕ್ಕಲು ಮಾಲಿಂಗ ತನ್ನ ಮಗಳನ್ನು ತನ್ನೊಟ್ಟಿಗೆ ಕರೆದು ಕೊಡುಬಂದಿದ್ದ, ಹುಡುಗಿಯ ಮುಖ ಲಕ್ಷಣ, ಚುರುಕುತನದ ಓಡಾಟ ನೋಡಿದ ಬಾಬಿಯಕ್ಕ, ‘ಏನಾ ಮಾಲಿಂಗ, ಸಾಲೆ ಬಿಡ್ಸಿದ್ ಯಾಕಾ ಹೆಣ್ಣಿನ್ನ?’ ಎಂದು ಜೋರು ಮಾಡಿದ್ದಳು.‘ಇನ್ನು ಮದಿ ಮಾಡ್ಕಲ್ದ ಒಡ್ತಿ, ಜಾಸ್ತಿ ಕಲ್ತ್ ಜೋರಾತ್ರೆ ಹೆಣ್ಣ್ ಹುಡ್ಗೀರ್’ ಎಂದಿದ್ದ.‘ನಿನ್ನ ಮಂಡೆ. ಮದಿ ಮಾಡ್ತ ಅಂತೆ. ಇಷ್ಟ್ ಸಣ್ಣದಕ್ಕೆ ಮದಿ ಮಾಡೀರೆ, ಹಿಡ್ಕಂಡ್ ಹೋತ್ರ್ ನಿನ್ನ ಪೋಲೀಸ್ರು.’ ಎಂದು ಹೆದರಿಸಿದ್ದಳು. ಹಾಗೆಯೇ, ಹುಡುಗಿಯನ್ನು ಕುಂದಾಪುರಕ್ಕೆ ಕರೆದುಕೊಂಡು ಹೋಗುವ ಯೋಚನೆ ಬಂದಿತ್ತು ಅವಳಿಗೆ. ಅಲ್ಲಿ ಕೆಲಸಕ್ಕೆ ಕೈಕಾಲಿಗೊಂದರಂತೆ ಜನಗಳಿದ್ದರೂ, ಕರೆದ ಬಾಯಿಗೆ ಒಂದು ಹುಡುಗಿಯಿದ್ದರೆ ಒಳ್ಳೆಯದೆಂದು ಬಹುದಿನಗಳಿಂದ ಅವಳ ಮನಸ್ಸಿನಲ್ಲಿತ್ತು. ಒಡತಿ ಹೇಳಿದ ಮೇಲೆ ಮಾಲಿಂಗನೂ ಏನೂ ಹೇಳುವಂತಿರಲಿಲ್ಲ. + +ಹೀಗೆ ಬಾಬಿಯಕ್ಕನ ಮನೆಗೆ ನಾಗಿ ಬಂದು ಈಗ ಏಳೆಂಟು ವರ್ಷಗಳಾದರೂ ಆಗಿವೆ. ಈ ಧೀರ್ಘ ಅವಧಿಯಲ್ಲಿ ನಾಗಿಯ ಸಂಪೂರ್ಣ ವ್ಯಕ್ತಿತ್ವವೇ ಬದಲಾಗಿದೆಯೆಂದರೆ ತಪ್ಪಲ್ಲ. ಬದಲಾಗಿದೆ ಎನ್ನುವುದಕ್ಕಿಂತ ಬಾಬಿಯಕ್ಕನ ಹಾಗೂ ಆ ಮನೆಯ ವಿಶಿಷ್ಟವಾದ ಪ್ರಭಾವದಿಂದ, ಅವಳ ವ್ಯಕ್ತಿತ್ವವು ರೂಪುಗೊಂಡಿದೆ ಎಂದರೆ ಹೆಚ್ಚು ಸರಿಯಾದೀತೇನೋ. ಅಂದಿನ ಏನೂ ಅರಿಯದ ಮುಗ್ದ ಬಾಲಕಿ ಇಂದು ವಿದ್ಯಾವಂತೆ, ತಿಳುವಳಿಕಸ್ತೆಯಾಗಿ ಬೆಳೆದು ನಿಂತ ಇಪ್ಪತ್ತರ ಯುವತಿಯಾಗಿದ್ದಳು. ಕಿರುಗಣೆ ಹಾಕಿಕೊಂಡು, ಬಡಕಟೆಯಾಗಿ ಪಿಟ್ಟೆಯಂತಿದ್ದವಳು ಈಗ ಸವಳುಸವಳಾಗಿ ಉದ್ದಕ್ಕೆ ಬೆಳೆದು ಸೀರೆ ಸುತ್ತುತ್ತಿದ್ದಳು. + +ಬಂದ ಸುರುವಿನಲ್ಲಿ, ಅವಳ ಕೆಲಸಕಾರ್ಯಗಳೆಂದರೆ, – ಕುಡಿಯಲು ನೀರು ತಂದುಕೊಡುವುದು, ಯಾರನ್ನಾದರೂ ಕರೆದು ಬರುವುದು, ತಲೆ ಬಾಚುವುದು – ಇಂತಹ ಪುಡಿ ಜಂಬರಗಳೇ. ಎಲ್ಲರೂ ಈ ಹೆಣ್ಣಿನ ಚುರುಕೇ, ಈ ಹೆಣ್ಣಿನ ಬುದ್ಧಿಯೇ, ಚಿಡ್ ಮಣ್ಣ್ ಚಿಟ್ಟಿ ಇದು, ಎಂದು ಹೊಗಳಿ ಹೊಗಳಿ, ಒಂದು ದಿನ ಅವಳನ್ನು ಶಾಲೆಗೂ ಸೇರಿಸುವಂತಾಯಿತು. ಅದು ಆದದ್ದು ಹೀಗೆ: ಬಾಬಿಯ ಸಣ್ಣಕ್ಕನ ಮಗಳು ರೇಖಾ, ಆಗ ಎಂಟನೆಯ ತರಗತಿಯಲ್ಲಿದ್ದವಳಿಗೆ ಲೆಕ್ಕ ಎಂದರೆ ಹಾಗಲಕಾಯಿ ತಿಂದಂತೆ. ಅವಳು ಬೀಜಗಣಿತದ ಲೆಕ್ಕವನ್ನು ಬಿಡಿಸಲಾಗದೆ ಒದ್ದಾಡುತ್ತಿದ್ದಾಗ, ಅಲ್ಲೆ ಪುಸ್ತಕಗಳನ್ನು ಒರೆಸಿಡುತ್ತಿದ್ದ ನಾಗಿ ತಾನೇ ಮಾಡಿಕೊಟ್ಟಳಂತೆ. ಇದು ಮನೆ ತುಂಬ ಸುದ್ದಿಯಾಯಿತು. ಕಣ್ಣುಗಳು ಅರಳಿದವು. ಹೃದಯಗಳು ಕರಗಿದವು. ಮತ್ತೆ ತಡವಾಗಲಿಲ್ಲ. ಬಾಬಿಯಕ್ಕ, ‘ಹೆಣೆ, ನಿಂಗೆ ಶಾಲೆಗ್ ಹೋಯ್ಕ?’ ಎಂದು ಕೇಳಿಯೂ ಆಯ್ತು. ಹೋಗಿ ಸೇರಿಸಿಯೂ ಆಯ್ತು. ರೇಖಾಳ ಜೊತೆಯಲ್ಲೇ ಮನೆಮಗಳಂತೆ ಶಾಲೆಗೆ ಹೋಗುತ್ತ, ಮೆಟ್ರಿಕ್ ವರೆಗೆ ಕಲಿತು ಮುಗಿಸಿದ್ದೂ ಆಯಿತು. + +ಉಟ್ಟುತೊಡುವ ವಿಷಯದಲ್ಲಾಗಲೀ, ತಿಂಡಿತೀರ್ಥದ ಮಟ್ಟಿಗಾಗಲೀ, ಆ ಮನೆಯಲ್ಲಿ ಮನೆಯವರು ಕೆಲಸದವರು ಎಂಬ ಭೇಧ ಯಾವತ್ತೂ ಇರಲಿಲ್ಲ. ಒಮ್ಮೆ ಹಾಗೇ ಆಗಿತ್ತು, ಮಧ್ಯಾಹ್ನ ಮಕ್ಕಳು ಶಾಲೆಯಿಂದ ಬಂದು ಉಣ್ಣುತ್ತಿದ್ದಾಗ, ಪದ್ದಕ್ಕ ತುಪ್ಪ ಬಡಿಸುತ್ತಿದ್ದವಳು, ರೇಖಾ ಮತ್ತಿತರ ಮನೆಯ ಮಕ್ಕಳಿಗೆ ಎರಡೆರಡು ಚಮಚ ಸುರಿದವರು, ನಾಗಿಗೆ ಒಂದೇ ಚಮಚ ಹಾಕಿಕೊಂಡು ಹೋದಳು. ಬಾಬಿಯಕ್ಕ ಅಲ್ಲೇ ನಿಂತಿದ್ದವಳು, ‘ಪದ್ದಕ್ಕ, ಅವಳಿಗೂ ಎರಡು ಚಮಚ ಹಾಕು, ಅವಳೂ ತಾಯಿ ಹೊಟ್ಟೆಲ್ಲೇ ಹುಟ್ಟಿ ಬಂದವಳು.’ ಎಂದಿದ್ದಳು. ಅಂದರೆ, ಅವರೆಲ್ಲ ಅಲ್ಲಿ ನಿಜವಾದ ಅರ್ಥದಲ್ಲಿ ಕೆಲಸದವರಾಗಿರುತ್ತಲೂ ಇರಲಿಲ್ಲ. ಕೆಲಸದವರು ಎಂದರೆ ಅವರು ಹಳತು ಹಪ್ಪಟು ಹರ್ಕಟು ವಸ್ತ್ರಗಳನ್ನೇ ಉಡಬೇಕು ಎನ್ನುವ ಕ್ರಮ ಬಾಬಿಯಕ್ಕನ ಅಮ್ಮನ ಕಾಲದಿಂದಲೂ ಅಲ್ಲಿ ಗೊತ್ತಿರಲಿಲ್ಲ. ಮನೆಯವರು ನಾಲ್ಕು ಸಲ ಉಟ್ಟು ಬೇಜಾರು ಬಂತೆಂದರೆ, ಆ ಸೀರೆಯನ್ನೋ, ಲಂಗವನ್ನೋ, ಶರ್ಟನ್ನೋ ತೆಗೆದು ಯಾರಿಗಾದರೂ ಕೊಟ್ಟುಬಿಡುವುದೇ ಅಲ್ಲಿನ ಕ್ರಮ. ನಾಗಿಯಂತೂ ಶಾಲೆಗೆ ಹೋಗುವ ಹುಡುಗಿ. ಮನೆಮಕ್ಕಳಂತೆ ಅವಳಿಗೂ ಹೊಸ ಸೀರೆ ರವಿಕೆಗಳು ಬರುತ್ತಿದ್ದವು. + +ಒಂದು ಸಲ ಕಾರ್ಕಡ ದೊಡ್ಡಮ್ಮ ಬಂದವರು, ‘ಹೌದನ, ಬಾಬಿ, ನಮ್ಮ್ ಜಾತಿ ಹೆಣ್ಣಿನಾಂಗ್ ಕಾಣುತ್ತಲ್ಲ ಇದು! ಏನು ಒಪ್ಪ, ಏನು ವೈನ!’ ಎಂದು ಅಚ್ಚರಿಪಟ್ಟಿದ್ದರು. ಅಷ್ಟೇ ಅಲ್ಲ, ‘ಜಾಗ್ರತೆ, ಇನ್ಯಾರಾರೂ ಜಾತಕ ಕೇಳ್ಕಂಡ್ ಬಪ್ಪುಕಿತ್ತು ಕಾಣು,’ ಎಂದು ನೆಗೆಯಾಡಿದ್ದರು. ಯಾವ ಬಾಯಲ್ಲಿ ಅವರು ಹಾಗೆ ಹೇಳಿದ್ದರೋ, ಈಗ ಯಾರ‍್ಯಾರು ಯಾಕೆ, ಮನೆ ಮಾಣಿಯೇ ಕಣ್ಣು ಹಾಕಿತಲ್ಲ ಎಂದು ಅವರಿಗೆಲ್ಲ ಪಿಚ್ಚೆನಿಸಿತು. + +ಇತ್ತೀಚೆಗೆ, ಎಷ್ಟರಮಟ್ಟಿಗೆಂದರೆ ಹಳ್ಳಿಗೆ ಹೋಗಲಿಕ್ಕೇ ಹಿಂದೇಟು ಹಾಕುವಷ್ಟು, ಈ ಮನೆಗೆ, ಮನೆಯ ಆಗುಹೋಗುಗಳಿಗೆ ನಾಗಿ ಒಗ್ಗಿಕೊಂಡುಬಿಟ್ಟಿದ್ದಳು. ಮನೆಯವರಿಗೂ ಅಷ್ಟೆ, ಅರಿವಿಲ್ಲದೆಯೇ, ಅವಳ ಇರವು ಅಭ್ಯಾಸವಾಗಿ ಹೋಗಿತ್ತು. ಬಾಬಿಯಕ್ಕನಿಗಂತೂ ಆ ಹೆಣ್ಣಿಲ್ಲದ್ರೆ ದಿನ ಹೋಗ ಎಂಬಷ್ಟರ ಮಟ್ಟಿಗಾಗಿ, ನಾಗಿ ಅವಳ ಬಲಗೈ ಬಂಟಿಯೇ ಆಗಿದ್ದಳು; ಧೋಬಿಯ ಲೆಕ್ಕ, ಹಾಲಿನ ವಿಲೇವಾರಿಗಳಲ್ಲದೆ, ಒಕ್ಕಲುಮಕ್ಕಳ ಲೇವಾದೇವಿಯನ್ನೂ ಬರೆದಿಡುವವಳು ನಾಗಿಯೇ. ಬಾಬಿಯಕ್ಕನಿಗೆ ತಾಲೂಕು ಆಫೀಸು ಅಥವಾ ಕೃಷಿ ಇಲಾಖೆಗೆ, ಇನ್ನು ಮಹಿಳಾ ಸಮಾಜದ ಸಭೆಗಳಿಗೆ ಹೋಗಲಿಕ್ಕಿದ್ದರೆ ಜೊತೆಯಲ್ಲಿ ನಾಗಿ ಬೇಕೇ. ಇನ್ನು ಉಳಿದವರಿಗೂ ಅಷ್ಟೆ. ಹೇಮಾಳಿಗೆ ಮೈಗ್ರೇನಿನ ತಲೆನೋವು ಬಂತೆಂದರೆ, ‘ಏ ನಾಗಿ, ಮಸಾಜು ಮಾಡ್ ಮಾರಾಯ್ತಿ’ ಆಂತ ಓಡಿಬರುತ್ತಿದ್ದಳು. ಇನ್ನು ಸೀರೆಗಳಿಗೆ ಫಾಲ್ ಹಾಕುವುದು, ರೇಡಿಯೋದಲ್ಲಿ ಬರುವ ಹಿಂದಿ ಸಿನೆಮಾ ಹಾಡುಗಳನ್ನು ಬರೆದುಕೊಡುವುದು, ಹೇಳುತ್ತಾ ಹೋದರೆ ಪಟ್ಟಿಗೆ ಕೊನೆಯಿಲ್ಲ. + +ಜಾತಿ ಅಂತಸ್ತುಗಳನ್ನು ಮೀರಿ, ಅವಳು ಆ ಮನೆಯವರಿಗೆ ಆತ್ಮೀಯಳಾಗಿದ್ದಳು. ಆದರೆ ಈಗ ಇದ್ದಕ್ಕಿದ್ದಂತೆ ಬದಲಾದ ನಿಷ್ಪತ್ತಿಯಲ್ಲಿ, ಎಲ್ಲವೂ ಅಡಿಮೇಲಾಗಿತ್ತು. ಸಂಬಂಧಗಳು ಏರ್ಪಡುವಾಗ ಈ ಜಾತಿ-ಅಂತಸ್ತುಗಳೇ ಪ್ರಮುಖ ಪಾತ್ರ ವಹಿಸುತ್ತದೆನ್ನುವ ಕಟುಸತ್ಯದ ಪೂರ್ಣ ಅಂದಾಜು ಶ್ರೀನಿಧಿಗಾಗಲೀ, ನಾಗಿಗಾಗಲೀ ಇದ್ದಂತಿರಲಿಲ್ಲ. + +ಈಗ ಮಾತ್ರ, ತಲೆಗೊಂದರಂತೆ ಹೊರಟ ವಾಗ್ಬಾಣಗಳಲ್ಲಿ, ಬಪ್ಪಾಗ ಇಲಿ ಹಾಂಗ್ ಇರ‍್ತೊ, ಹೋತ ಹೋತ ಹುಲಿ ಹಾಂಗ್ ಆತೊ,  ಮೆಟ್ಟನ್ನ ಎಲ್ಲಿಡ್ಕೋ ಅಲ್ಲಿಟ್ಟ್‌ರೇ ಚಂದ, ನೆಸಿ ಕೊಟ್ಟ ನಾಯಿ ನೆಸಲ್ ನೆಕ್ಕಿತಂಬ್ರು,  ……. ಎಂದು ಏನೇನೋ ಮಾತುಗಳು ಕೇಳಿಬಂದಿದ್ದವು. ದೊಡ್ಡವರು ಸಣ್ಣವರೆನ್ನದೆ, ಮೇಲಿನಿಂದ ಕೆಳಗಿನ ವರೆಗೆ, ಅಂದರೆ, ಬಾಬಿಯಕ್ಕನಿಂದ ಹಿಡಿದು, ಪದ್ದಕ್ಕನಾದಿಯಾಗಿ, ಕೆಲಸದ ಸೋಮಿಯ ವರೆಗೆ ಪ್ರತಿಯೊಬ್ಬರೂ ನಾಗಿಯನ್ನು ಖಂಡಿಸುವವರೇ. ಅವರಿಬ್ಬರ ಬಗ್ಗೆ ಸಹಾನುಭೂತಿಯ ಒಂದೇ ಒಂದು ಸೊಲ್ಲು ಯಾರೇ ಒಬ್ಬರ ಬಾಯಿಯಿಂದಲೂ ಬಂದಿರಲಿಲ್ಲ. + +ಎಂದೂ ಯಾರಿಗೂ ಬೈಯ್ಯದ ಬಾಬಿಯಕ್ಕನ ಗಂಡನೂ ಶ್ರೀನಿಧಿಯನ್ನು ಕರೆದು, ‘ಕಲಿತದ್ದು ದಂಡ ನೀನು. ಅಜ್ಜಯ್ಯನ ಹೆಸರಿಗೆ ಮಸಿ ಬಳಿತಿಯ?’ ಎಂದು ಬೈದದ್ದಾಯಿತು. ಅಂತರ್ಜಾತೀಯ ವಿವಾಹವೆಂದರೆ ಜನರು ಹೆದರುತ್ತಿದ್ದ ಕಾಲ ಇದು. ಹೆದರಿಕೆ ಮಾತ್ರವಲ್ಲ ಅಸಡ್ಡೆ, ತಾತ್ಸಾರ ಕೂಡಾ. ಊರಿನ ಪ್ರಮುಖ ಕ್ರಿಶ್ಚಿಯನ್ ಕುಟುಂಬದ ಹುಡುಗಿಯೊಬ್ಬಳು ಮೆಡಿಕಲ್ ಕಲಿಯುವಾಗ, ಅದೇ ಊರಿನ ಶೆಟ್ಟಿ ಹುಡುಗನೊಬ್ಬನನ್ನು ಪ್ರೀತಿಸಿದ್ದು, ಬಹುದೊಡ್ಡ ಕತೆಯಾಗಿ ಎರಡೂ ಕುಟುಂಬದವರು ಅಡ್ಡ ಬಂದು ಆ ಮದುವೆ ನಡೆಯದಂತೆ ತಡೆದದ್ದು ಮರೆತು ಹೋಯಿತಾ ಎಂದೂ ಕೇಳಿದರು. ಹೀಗಿರುವಾಗ, ಬ್ರಾಹ್ಮಣ ಮನೆತನದಲ್ಲಿ ಹೀಗೇನಾದರೂ ಆದರೆ, ಅದರ ಪರಿಣಾಮವೆಂಬುದು – ಜಾತಿಬಾಂಧವರಿಂದ ಹಿಡಿದು ಪುರೋಹಿತವರ್ಗದ ವರೆಗೆ – ಎಲ್ಲಿಂದ ಎಲ್ಲಿಯವರೆಗೆ ಮುಟ್ಟಬಹುದೆಂದು ಊಹಿಸಲಿಕ್ಕೂ ಸಾಧ್ಯವಿಲ್ಲ. ಮನೆಯಲ್ಲಿ ಮದುವೆಯಾಗುವ ಹೆಣ್ಣು ಮಕ್ಕಳು ಬೇರೆ ಇದ್ದಾರೆ. ಅಜ್ಜಯ್ಯ ಇದ್ದಿದ್ದರೆ ಎದೆಯೊಡೆದು ಸಾಯುತ್ತಿದ್ದರೇನೋ ಎಂದೂ ಹೇಳಿದರು. ಅದಲ್ಲದೆ, ಇಲ್ಲಿ ಪ್ರಶ್ನೆ ಜಾತಿಯದಷ್ಟೇ ಆಗಿರದೆ, ಅಂತಸ್ತಿನದೂ ಆಗಿತ್ತು. + +ಬಾಬಿಯಕ್ಕನ ಕೋಣೆಯ ಹೊರಗೇ ಬೀಡುಬಿಟ್ಟ ಮನೆಮಂದಿಯೆಲ್ಲ ಶ್ರೀನಿಧಿಯನ್ನು ದುರುದುರು ನೋಡುವವರೇ. ಹೋಗು ಕ್ಷಮೆ ಕೇಳು, ನೀ ಮಾಡಿದ್ದು ಕ್ಷಮೆಗೂ ಹೇಳ್ಸಿದ್ದಲ್ಲ, ಎನ್ನುವ ಧೂಷಣಾ ಭಾವವೇ ಅವರ ಕಣ್ಣುಗಳಲ್ಲಿ ತುಂಬಿತ್ತು. ಇಲ್ಲದಿದ್ದರೆ, ನಾಗಿಯನ್ನು ಹಳ್ಳಿಗೆ ಕಳಿಸಿಕೊಡುವುದೆಂತಲೂ, ಶ್ರೀನಿಧಿ ಇನ್ನು ಆ ವಿಷಯ ಎತ್ತಕೂಡದೆಂದೂ ಮುಂಚಿನ ದಿನ ಎಲ್ಲವೂ ಸೈಸಾಲ್ ಆಗಿಯಾಗಿತ್ತು. ಪುನಃ ವಿಷಯ ಎತ್ತುವ ಮೂರ್ಖತನ ಮಾಡಿದ್ದಾದರೂ ಯಾಕಿವ? -ಎಂದು ಕೆಲವರು ಅವನ ಕಿವಿಹಿಂಡಿದರೆ, ಇನ್ನು ಕೆಲವರು ತಲೆ ಕುಟ್ಟಿದರು. ಎಲ್ಲರಿಂದ ತಪ್ಪಿಸಿಕೊಂಡ ಶ್ರೀನಿಧಿಯು ಕೂದಲು ಕೆದರಿಕೊಂಡು, ಮೋರೆ ಬಾಡಿಸಿಕೊಂಡು ಉಪ್ಪರಿಗೆಯ ಕೋಣೆಯಲ್ಲಿ ಬರೇ ನೆಲದ ಮೇಲೆ ಅಂಗಾತ ಬಿದ್ದುಕೊಂಡುಬಿಟ್ಟಿದ್ದ. + +ನಾಗಿಯ ಅವಸ್ಥೆಯಂತೂ ಯಾರಿಗೂ ಬೇಡ. ಮನೆಯವಳಂತೆ, ಮಗಳಂತೆ, ಎಂದೆನ್ನುತ್ತಿದ್ದುದರ ಅರ್ಥ ಇಷ್ಟೆಯೇ ಎಂದು ನಾಗಿಗೆ ದುಃಖ ಒತ್ತರಿಸಿಬರುವಂತಾಗಿತ್ತು. ತಾನಿನ್ನು ಹಳ್ಳಿಗೆ ಹೋಗಲೇಬೇಕಾಯಿತು. ಅಲ್ಲಿಗೂ ಹೊಂದದ, ಒಲ್ಲಿಗೂ ಸಂದದ ಬಾಳ್ವೆಯಾಯಿತು ತನ್ನದು ಎಂದುಕೊಂಡಳು. ಹಿಂದಿನ ದಿನದವರೆಗೂ ಎಲ್ಲರಿಗೂ ಬೇಕಾದವಳಾಗಿದ್ದ ಅವಳನ್ನು, ಈಗ ಯಾರಿಗೂ ಕಂಡರಾಗುತ್ತಿರಲಿಲ್ಲ. ಯಾರದಾದರೂ ಕಣ್ಣಿಗೆ ಬಿದ್ದಳೆಂದರೆ,-ನಾಚಿಕೆಯಿಲ್ಲದವಳು, ಮನೆಹಾಳಿ, ತೋರ‍್ಸ್‌ಬೇಡ ನಿನ್ನ್ ಸುರ್ಪ, ಸಾಕು ನಿನ್ನ ಹೋಯ್‌ಮಲಿ, ಎಂಬಿತ್ಯಾದಿ  ಸಹಸ್ರನಾಮಗಳೊಂದಿಗೆ ಹೋಗಾಚೆ ಎಂದು ಓಡಿಸಲ್ಪಡುತ್ತಿದ್ದಳು. ಎಣ್ಣಿ ಎಣ್ಣಿ ಮರಕಿ, ಮುಖವೆಲ್ಲ ಸೋರಿ ಹೋಗಿ, ಕಣ್ಣುಗಳು ನಿಸ್ತೇಜವಾಗಿ, ಎರಡೇ ದಿನಗಳಲ್ಲಿ ಬಚ್ಚಿ ಬೆಂಡಾಗಿ ಬಲಿಪಶುವಿನಂತಾಗಿದ್ದ ಅವಳು ಒರಲುಕೊಟ್ಟಿಗೆಯ ಮುಲ್ಲೆಯಲ್ಲಿ ಮಡಚಿದ ಕಾಲುಗಳೆರಡನ್ನೂ ಕೈಗಳಿಂದ ಅವಚಿ ಹಿಡಿದು, ಮುಖವನ್ನು ಕಾಲ್ಗಂಟಿನ ಮೇಲಿರಿಸಿ, ಮುದ್ದೆಯಾಗಿ ಹುದುಗಿ ಕುಳಿತಿದ್ದಳು. + +ಸಿನೇಮಾ ನೋಡಿ ಬಂದ ಮರುದಿನ ಬೆಳಿಗ್ಗೆ ಬಾಬಿಯಕ್ಕ ತಲೆಬಾಚುತ್ತಿರುವಾಗಲೇ ಶ್ರೀನಿಧಿ ಅಲ್ಲಿಗೆ ಬಂದದ್ದು. ಎಡಕೈಯಲ್ಲಿ ಹಿಡಿದ ಚೌರಿಯನ್ನು ಉದ್ದಕ್ಕೂ ಬಾಚಿ, ಫಟಕ್ಕನೆ ಒಮ್ಮೆ ಕೊಡಕಿ, ಅದನ್ನು ತಲೆಯ ಹಿಂಭಾಗದಲ್ಲಿಟ್ಟು, ಕೂದಲಿನೊಟ್ಟಿಗೆ ಹೆಣೆದು, ತುದಿಗೊಂದು ಕಪ್ಪು ದಾರ ಬಿಗಿದು ಮೇಲಕ್ಕೆತ್ತಿ ಉರುಟುರುಟಾಗಿ ಸುತ್ತಿ ಅಂಬಡೆ ಕಟ್ಟಿ ಪಿನ್ನು ಚುಚ್ಚುವಾಗಲೇ, ಶ್ರೀನಿಧಿ ಬಂದು ಅವಳ ಹಿಂದೆ ನಿಂತು, ‘ಸಿನೆಮಾ ಕಂಡ್ಕಂಡ್ ಅಷ್ಟೆಲ್ಲ ಕರಗುವ ನಿನ್ನ ಹೃದಯದ ನಿಜರೂಪ ಇದೇಯಾ, ಬಾಬಿಯಕ್ಕಾ?’ ಎಂದದ್ದು. ಮಾತು ಇಷ್ಟೇ ಆದರೂ ಅದು ಅವಳ ಮರ್ಮಸ್ಥಾನಕ್ಕೆ ತಾಗಿತ್ತು. + +ಅವಳು ಕೈಯ್ಯಲ್ಲಿದ್ದ ಹಣಿಗೆಯಿಂದಲೇ ರಪ್ಪೆಂದು ಅವನ ಮುಖಕ್ಕೆ ಬೀಸಿದ್ದಳು. ‘ಬಾಬಿಯಕ್ಕ…..’ ಎಂದು ಅವನು ಮುಖವನ್ನು ಅಡ್ಡಕ್ಕೆ ತಿರುಗಿಸಿದರೂ, ಹಣಿಗೆಯ ಹಲ್ಲಿನ ಅಚ್ಚು ಕೆಂಪಾಗಿ ಅವನ ಕೆನ್ನೆಯ ಮೇಲೆ ಮೂಡಿಯಾಗಿತ್ತು. ಪುನಃ ಕೈ ಎತ್ತಿದವಳನ್ನು ಪದ್ದಕ್ಕ ಹಿಡಿದೆಳೆಯಬೇಕಾಯ್ತು. ಹಣಿಗೆ ಹಾರಿ ಎಲ್ಲಿಯೋ ಬಿದ್ದಿತ್ತು. ಸಿಟ್ಟಿನಲ್ಲಿ ಅವಳ ಮುಖ ಕೆಂಪು ರಟ್ಟುತಿತ್ತು. ‘ಮುಚ್ಚು ಬಾಯಿ, ಕೋಡಂಗಿ.’ ಎಂದು ಕಿರಿಚಿ ಅವಳು ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಳು. + +ದೇವರ ಕೋಣೆಯ ಬಾಗಿಲಲ್ಲಿ ಜಪಮಾಲೆ ಹಿಡಿದು ಕುಳಿತಿದ್ದ ಕಣ್ಣು ಕಾಣದ ಯಮುನತ್ತೆಯೋ ಈ ಮೂರು ದಿನಗಳಲ್ಲಿ ಅತ್ತಿತ್ತ ಹೋಗುವವರೊಡನೆ, ಗಳಿಗೆಗೊಂದಾವೃತ್ತಿ ಅಥವಾ ತನ್ನಷ್ಟಕ್ಕೆ ಎಂಬಂತೆ, ಬಾಬಿ ಬಂದ್ಳಾ? ಅಂತಲೋ, ಬಾಗ್ಲು ತೆಗ್‌ದ್ಳ? ಅಂತಲೋ ಕೇಳಿಕೊಂಡೇ ಇದ್ದರು. ಬಾಬಿಯ ಕೋಣೆಯ ಬಾಗಿಲ ಹೊರಗೇ ಕುಳಿತು ಬೆಳಗು ಮಾಡುತ್ತಿದ್ದ ಪದ್ದಕ್ಕನಿಗಂತೂ ರಾತ್ರಿ ಇಡೀ ಅರ್ಧಮ್ಮರ್ಧ ಕನಸುಗಳು, ಅಲ್ಲದ ಭ್ರಮೆಗಳು. ಒಮ್ಮೆಯಂತೂ ನಡುರಾತ್ರಿಯ ಹೊತ್ತಿಗೆ ತೂಕಡಿಸುತ್ತ ಕುಳಿತವಳಿಗೆ, ಶ್ರೀನಿಧಿ ಮತ್ತು ನಾಗಿ ಬಾಬಿಯ ಕೋಣೆಯಿಂದ ಹೊರಗೆ ಹೋಗುತ್ತಿದ್ದಂತೆ ಅನಿಸಿ, ದಡಬಡಿಸಿ ಎದ್ದು ಕಣ್ಣು ತೆಗೆದರೆ ಯಾರೂ ಇಲ್ಲ; ಮುಚ್ಚಿದ ಬಾಗಿಲು ಮುಚ್ಚಿದಂತೆ. + +ನಾಲ್ಕನೆಯ ಹಗಲಿನ ಕೊನೆಗೆ ಬಾಬಿಯಕ್ಕನ ಕೋಣೆಯೊಳಗಿಂದ ಮಂಚದ ಕರಕರ ಶಬ್ದ ಕೇಳಿತು. ಅವಳ ಕೋಣೆಯ ಬಾಗಿಲಿಗೇ ಒರಗಿಕೊಂಡಿದ್ದ ಮನೆಮಂದಿಯ ಕಿವಿಗಳೆಲ್ಲ ನೆಟ್ಟಗಾದವು. ಸ್ವಲ್ಪ ಹೊತ್ತಿನಲ್ಲಿ ಚಿಲಕ ಕೆಳಗಿಳಿದ ಸದ್ದು ಕೇಳಿದ್ದೇ ಎಲ್ಲರೂ ಗಡಬಡಿಸಿ ಎದ್ದರು. ಮೂರು ದಿನಗಳ ಉಪವಾಸದಿಂದಾಗಿ ಅವಳ ಕಣ್ಣಿನ ಅಡಿ ಕಪ್ಪು ಕರೆ ಕಟ್ಟಿತ್ತಾದರೂ, ಕಣ್ಣೊಳಗಿನ ಹೊಳಪು ಮಾಸಿರಲಿಲ್ಲ. ಜಾರಿ ಬೆನ್ನ ಮೇಲೆ ಬಿದ್ದ ಸೂಡಿಯ ಎಡೆಯಿಂದ ತಪ್ಪಿಸಿಕೊಂಡ ಕೂದಲೆಳೆಗಳು ಗಾಳಿಗೆ ಅವಳ ಮುಖದ ಸುತ್ತು ಹಾರಾಡುತ್ತಿದ್ದುವು. ಬಲಗೈ ಹೆಬ್ಬೆಟ್ಟನ್ನು ಬಾಯಿಯ ಕಡೆಗೆ ಒಯ್ದಂತೆ ಮಾಡಿ, ನೀರು ಬೇಕೆನ್ನುವ ಸನ್ನೆ ಮಾಡಿದ್ದೇ, ಬಾಬಿಯಕ್ಕನಿಗೆ ನೀರು….. ನೀರು… ಎಂಬ ಸಂದೇಶ ಒಬ್ಬರಿಂದ ಒಬ್ಬರಿಗೆ ರವಾನಿಸಲ್ಪಟ್ಟು, ಕಾದಾರಿದ ನೀರಿಗೆ ಸ್ವಲ್ಪ ಫ್ರಿಡ್ಜಿನ ನೀರು ಬೆರೆಸಲ್ಪಟ್ಟು ಸಣ್ಣ ಕೌಳಿಗೆಯೊಂದರಲ್ಲಿ ನೀರು ಬಂತು. ಲೋಟೆಗೆ ಬಗ್ಗಿಸಿ ಕೊಟ್ಟ ನೀರನ್ನು ತುಸುವೇ ಕುಡಿದು, ‘ಸ್ನಾನಕ್ಕೆ ಹೋತೆ,’ ಎಂದದ್ದೇ ಸುರುವಾಯ್ತು ಓಡಾಟ. + +ಒಬ್ಬರು ಬೈರಾಸ ತಂದರೆ, ಇನ್ನೊಬ್ಬರು ಮೀಯುವ ತುಂಡು ಹಿಡಿದು ಬಂದರು. ಕೈ ಹಿಡಿದು ಬಚ್ಚಲಿಗೆ ಕರೆದೊಯ್ಯುವವರು ಒಬ್ಬರಾದರೆ, ಜೊತೆಯಲ್ಲಿ ಹೆಜ್ಜೆ ಹಾಕುವವರು ನಾಲ್ಕು ಮಂದಿ. ನೀರು ತೋಡಿಟ್ಟದ್ದೂ ಆಯಿತು; ಚಿಲಕ ಹಾಕಿದರೆ ನೋಡು ಎಂದು ಆಣೆ ಮಾಡಿ ಹೇಳಿದ್ದೂ ಆಯಿತು. + +ಮೀಯುವ ತುಂಡನ್ನು ಸುತ್ತಿಕೊಂಡು, ತಲೆಗೆ ಬೈರಾಸ ಕಟ್ಟಿ ಹೊರಗೆ ಬಂದ ಬಾಬಿಯಕ್ಕ, ಕಾಪಿ ಎಂದದ್ದೊಂದು ಗೊತ್ತು, ಸ್ಟೀಲಿನ ಲೋಟೆ ತುಂಬ ಬಿಸಿಬಿಸಿ ನೊರೆ ಕಾಫಿ ತಯಾರು. ಸೀರೆಯುಡುವಾಗ ಬಾಬಿಯಕ್ಕ, ‘ನಾಲಿಗೆ ಎಲ್ಲ ಕಹಿ ಕುಟ್ಟಿದೆ ಪದ್ದಕ್ಕ. ಒಗ್ಗರಣೆ ಮೆಣಸು ಹಾಕಿ ಉದ್ದಿನ ಹಿಟ್ಟಿನ ಗೊಜ್ಜು ಮಾಡು. ಒಂದು ಮುಷ್ಟಿ ಉಣ್ತೆ.’ ಎಂದಳು.‘ಹಾಂಗೆ ಆಯ್ಲಿ,’ ಎಂದು ಪದ್ದಕ್ಕ, ಅಂತೂ ಊಟದ ವಿಷಯ ಬಂತಲ್ಲ ಎಂಬ ಸಮಾಧಾನದಲ್ಲಿ ಒಳಗೆ ಓಡಿದಳು. + +ಬೈರಾಸವನ್ನು ಎರಡೂ ಕೈಯ್ಯಲ್ಲಿ ಹಿಡಿದು, ಸಪೂರವಾಗಿಸಿ, ಕೂದಲಿಗೆ ಛಟೀರ್ ಎಂದು ಸಿಡಿಸಿ ನೀರು ಹಾರಿಸಿ, ತಲೆಕೂದಲನ್ನು ಒರೆಸುತ್ತ ಜಗಲಿಗೆ ಬಂದ ಬಾಬಿಯಕ್ಕ ಬೈರಾಸವನ್ನು ಜಗಲಿಯ ಗಳದಲ್ಲಿ ನೇತು ಹಾಕಿ ಊಟಕ್ಕೆ ಕುಳಿತಳು. ತಂಗಿಯಂದಿರು, ಮಕ್ಕಳು ಎಲ್ಲರೂ ಸುತ್ತಮುತ್ತ ನಿಂತು ಅವಳಿಗೆ ಬಡಿಸಿದರು; ತಿನಿಸಿದರು; ಗಾಳಿ ಹಾಕಿದರು. + +ಅಂತೂ ಬಾಬಿಯಕ್ಕನ ಓಲೈಕೆಯಲ್ಲೇ ಮನೆಮಂದಿಯೆಲ್ಲಾ ಎಷ್ಟೊಂದು ಮುಳುಗಿದ್ದರೆಂದರೆ, ಬೇರೆ ಯಾವ ಸುದ್ದಿಯೂ ಅವರ ಗೋಷ್ಟಿಗೇ ಬಂದಿರಲಿ. ಶ್ರೀನಿಧಿ ಮಾಯವಾದದ್ದಾಗಲೀ, ನಾಗಿ ಕಾಣೆಯಾದದ್ದಾಗಲೀ ಅವರ ಗಮನಕ್ಕೆ ಬರುವಾಗ ತುಂಬ ತಡವಾಗಿತ್ತು. + +ಈ ಸಂಗತಿ ನಡೆದು ಈಗ ಮೂವತ್ತು ವರ್ಷಗಳೇ ಮೀರಿವೆ. ಅದು ಆಗ ಆ ಊರಲ್ಲಿ ಎಬ್ಬಿಸಿದ ತರಂಗಗಳ ಬಗ್ಗೆ ನಾನೀಗ ಏನೂ ಹೇಳುವುದಿಲ್ಲ. ಆದರೆ ಬಾಬಿಯಕ್ಕನಂತವರ ಮಾತನ್ನೂ ಮೀರಿ, ಅವಳ ಫರ್ಮಾನಿಗೆ ವಿರೋಧವಾಗಿ ಅದು ಹೇಗೆ ಆ ಮದುವೆ ನಡೆಯಿತು ಎಂದು ಎಲ್ಲರೂ ಇವತ್ತಿಗೂ ಆಶ್ಚರ್ಯ, ಅನುಮಾನಪಡುತ್ತಲೇ ಇರುವಂತಾಯಿತು. ಪದ್ದಕ್ಕ ಒಮ್ಮೆ ಸಿಕ್ಕಿದಾಗ ಅಮ್ಮ ಇದೇ ಮಾತನ್ನು ಕೇಳಿದ್ದಕ್ಕೆ, ‘ಅವಳಿಗೆ ವಿರುದ್ಧವಾಗಿ ಅಂತ ನೀವ್ ಹ್ಯಾಂಗ್ ಹೇಳ್ತ್ರಿ?’ ಅಂದಳಂತೆ. + +****** + +‘ಒಂದು ಒಸಗೆ ಒಯ್ಯುವುದಿತ್ತು’ ಕತೆಗೆ ರಾಷ್ಟ್ರೀಯ ಮಟ್ಟದ ಕಥಾ ಪ್ರಶಸ್ತಿ ಪಡೆದ ಮಿತ್ರಾ ವೆಂಕಟ್ರಾಜ ಸೂಕ್ಷ್ಮ ವಿವರಗಳಿಂದ ತುಂಬಿದ ಅರ್ಥಪೂರ್ಣ ಬರವಣಿಗೆಗೆ ಹೆಸರಾದವರು. ಕುಂದಾಪುರ ಮೂಲದ ಇವರು ಈಗ ಮುಂಬೈಯ್ಯಲ್ಲಿ ನೆಲೆಸಿದ್ದಾರೆ. ದಕ್ಷಿಣ ಕನ್ನಡದ ಚಿಕ್ಕ ಹಳ್ಳಿ ಇರಬಹುದು ಅಥವಾ ಮುಂಬೈ, ನ್ಯೂಯಾರ್ಕ್ ಗಳಂಥಾ ಬೃಹತ್ ಶಹರುಗಳಿರಬಹುದು – ಅಲ್ಲಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುವ ಮಿತ್ರಾ ಅವರ ಪ್ರಕಟಿತ ಕಥಾಸಂಕಲನಗಳು ‘ರಕುಮಾಯಿ’ ಮತ್ತು ‘ಹಕ್ಕಿ ಮತ್ತು ಅವಳು’. + +ಹೆಸರಾಂತ ಕಥೆಗಾರ್ತಿ. ಮೂಲತಃ ಕುಂದಾಪುರದವರು. ಈಗ ಮುಂಬೈ ವಾಸಿ. “ಮಾಯಕದ ಸತ್ಯ”, “ರುಕುಮಾಯಿ” ಮತ್ತು “ಹಕ್ಕಿ ಮತ್ತು ಅವಳು” ಇವರ ಕಥಾಸಂಕಲನಗಳು. “ಪಾಚಿಕಟ್ಟಿದ ಪಾಗಾರ” ಕಾದಂಬರಿ. \ No newline at end of file diff --git a/Kenda Sampige/article_527.txt b/Kenda Sampige/article_527.txt new file mode 100644 index 0000000000000000000000000000000000000000..14080a092521fcef1de3c5e44281a2503487cd06 --- /dev/null +++ b/Kenda Sampige/article_527.txt @@ -0,0 +1,89 @@ +ನಮಸ್ಕಾರ. ಹೇಗಿದ್ದೀರಿ? ಮನೆ ಕಡೆ ಎಲ್ಲಾ ಆರಾಮ ತಾನೇ…? ಇದೇನು… ನಿಟ್ಟುಸಿರು ಬಿಡುತ್ತಿದ್ದೀರಿ…? ಏನು ಆರಾಮವಪ್ಪಾ…. ಮಳೆ ಇಲ್ಲಾ ಬೆಳೆ ಇಲ್ಲಾ ಇರೋದೊಂದೇ ಈ ಧಗೆ…. ಎನ್ನುತ್ತಿದ್ದಿರಾ… ಹೌದು ಭಾರಿ ಸೆಕೆ… ಬನ್ನಿ.. ಹೀಗೆ ಬನ್ನಿ ನಿಮ್ಮ ಅಂಗಳದಲ್ಲೇ ಕೂತು ಮಾತಾಡೋಣ… + +ಓ… ಎಷ್ಟು ಚೆಲುವಾದ ಹೂ ಅರಳಿದೆ ನಿಮ್ಮ ಗಿಡದಲ್ಲಿ! ಈ ಪುಟ್ಟ ಹೂ ಮುದ್ದಾಗಿದೆ, ಆ ದೊಡ್ಡಹೂ ಭವ್ಯವಾಗಿದೆ ಪುಟ್ಟದಾದರೂ ದೊಡ್ಡದಾದರೂ ಹೂವು ಹೂವೇ.. ಚೆಲುವು ಚೆಲುವೇ… ಏನಂತೀರಿ…? ಈ ಹೂವಿನ ಚೆಲುವನ್ನು ನಿಮ್ಮ ಕಣ್ಣುಗಳಲ್ಲಿ ತುಂಬಿ ಕೊಳ್ಳುವಿರಾ? ಈ ಬಣ್ಣದ ಸೊಬಗನ್ನೂ, ದಳಗಳ ಲಾಸ್ಯವನ್ನೂ ನೋಡಿದಿರಾ? ಬಳುಕುವ ಶಲಾಕೆಯೂ, ಗಂಭೀರವಾಗಿ ನಿಂತ ಪರಾಗ ಕೇಸರಗಳೂ ಒಡಗೂಡಿದ ಈ ದೃಶ್ಯ ರಮ್ಯವೆನಿಸದೇ? ಒಮ್ಮೆ ಹೂವನ್ನು ಮೆಲ್ಲನೆ ನೇವರಿಸಿ ಹೂ ನಿಮ್ಮೊಂದಿಗೆ ಮಾತಾಡುತ್ತದೆ ಮೌನದಲ್ಲಿ… + +ನಮ್ಮಲ್ಲಿ ಗಿಡವಿದೆ ಹೂವಿಲ್ಲ ಎಂಬ ಕೊರಗೇ? ನಿಮ್ಮ ಗಿಡವೂ ಎಷ್ಟು ಸುಂದರವಾಗಿದೆ ನಿಮ್ಮ ಗಿಡವನ್ನೇ ಒಮ್ಮೆ ನೇವರಿಸಬಾರದೇಕೆ? ಇಗೋ.. ನಿಮ್ಮ ಸ್ಪರ್ಶದಿಂದ ಗಿಡ ತಲೆದೂಗಿ ನಿಮ್ಮೊಂದಿಗೆ ಮಾತಿಗಿಳಿಯಿತು…ಈಗ ಬನ್ನಿ… ನಾವು ಈ ಕಥೆ ಓದೋಣಾ… + +ಅವಳ ಮನ ಮರುಭೂಮಿಯಾಗಿತ್ತು. ತಲೆ ಮೇಲೆ ಸುಡುಸುಡುವ ಸೂರ್ಯ ಪಾದಗಳ ಕೆಳಗೆ ಕೆಂಪಗೆ ಕಾದ ಮರಳು. ಒಂದೆಡೆ ಪ್ರಾಜೆಕ್ಟ್ ಡೆಡ್ ಲೈನ್ಸ್ ಇನ್ನೊಂದೆಡೆ ಸಂಸಾರ ಭಾರ… ಉಸಿರು ಕಟ್ಟಿದಂಥಾ ಅನುಭವ. ಅದೇ ಹಳಸಿದ ದಾರಿಯಲ್ಲಿ ನಡೆದು ಅದೇ ಬೆವರ ಗಂಧ ಕುಡಿದು… ಬಸವಳಿದಿದ್ದಳು. ಆಗಲೋ ಈಗಲೋ ಉಪಕಾರ ಮಾಡುವಂತೆ ಬೀಸುವ ಗಾಳಿಯೂ ಬಿಸಿ. ಜೊತೆಗೆ ಮುಖಕ್ಕೆ ರಾಚುವ ಧೂಳು. ಬಿಸಿ ಗಾಳಿ ಬೀಸಿದರೆ ಸದ್ಯ ಗಾಳಿ ಬೀಸಿತೆಂದು ಸಂತೋಷ ಪಡಬೇಕೋ ಗಾಳಿ ಬಿಸಿಯೆಂದು ಸಿನಿಕತೆ ತೋರಬೇಕೋ…? ತಿಳಿಯದೆ ಬೆಪ್ಪಾಗಿದ್ದಳು… ಜೊತೆಗೆ ಹೇಗೂ ಧೂಳು ಫ್ರೀ… + +ಆಕಾಶವೇ ಹತ್ತಿ ಉರಿಯುತ್ತಿದೆಯೇನೂ…? ತಲೆ ಕಾಯುವ ದೇವನೇ ಬೆಂಕಿ ಸುರಿಯುತ್ತಿರಲು ತನು ಕಾಯ್ವ ಭೂತಾಯಿ ಹುರಿದ ಮರಳಾಗಿರುವಳು ಇನ್ನು ಈ ಹುರಿದ ಮರಳಲಿ ತೆವಳುತಿರುವ ಜೀವನ… ಅದರ ಮಾತೇ ಬೇಡಾ. ಧಗೆ.. ಧಗೆ.. ಧಗೆ… ಹೊರಗೂ… ಒಳಗೂ. ಗಂಟಲು ಆರಿ ನಾಲಿಗೆ ಬತ್ತುತ್ತಿದೆ. ಅಗೋ…. ಅಲ್ಲಿ ನೀರು…! ಅಳಿದುಳಿದ ಶಕ್ತಿಯಷ್ಟೂ ಬಳಸಿ ತೇಕುತ್ತಾ ಓಡಿದರೆ ಅಯ್ಯೋ… ಅದು ಮರೀಚಿಕೆ! + +****** + +ಆಗಲೇ ಅವಳು ಎಲ್ಲಿಗೋ ಹೋಗಲು ನಿರ್ಧರಿಸಿದಳು…ಯು ನೋ ಯುವರ್ ಪ್ರಾಜೆಕ್ಟ್ ಡೆಡ್ ಲೈನ್ಸ್… ರೈಟ್?ಸ್ಟಿಲ್ ಯು ವಾಂಟು ಗೋ ಲೈಕ್ ದಿಸ್…?ಯು ಬೆಟರ್ ಗಿವ್ ಅ ಥಾಟ್ ಅಂಡ್ ಡಿಸೈಡ್…-ಅವಳ ಬಾಸ್ + +ನೀನು ಹೀಗೆ ಏಕಾಏಕಿ ಹೊರಟು ನಿಂತರೆ ಮನೆ ಗತಿ ಯೇನು?ನಂಗೆ ಊಟ, ತಿಂಡಿಗೆ ಎಷ್ಟು ಕಷ್ಟ ಆಗುತ್ತೆ ಅಂತ ಯೋಚ್ನೆ ಮಾಡಿದೀಯಾ…?ನಿಂಗೇನು ಕಡಿಮೆ ಮಾಡಿದೀನಿ ಅಂತ ಹೀಗಾಡ್ತಿದೀಯಾ…?-ಅವಳ ಗಂಡ + +ಆರ್ ಯೂ ಕ್ರೇಝಿ…? ಫರ್ಗೆಟ್ ಇಟ್… ಯೂಆರ್ ನಾಟ್ ಗೋಯಿಂಗ್ ಎನೀವೇರ್… ವಿವಿಲ್ ಡೂ ಸಂ ತಿಂಗ್ ಎಬೌಟ್ ಇಟ್… ಕಮಾನ್ ಐ ವಿಲ್ ಹೆಲ್ಪ್ ಯೂ ಔಟ್… ಲೆಟ್ಸ್ ಹ್ಯಾವ್ ಅ ಟಾಕ್…-ಅವಳ ಒಬ್ಬ ಸ್ನೇಹಿತೆ. + +ಎಷ್ಟು ಖರ್ಚಾಗುತ್ತೆ?ವಾಟ್ ಈಸ್ ಯುವರ್ ಐಟಿನರಿ…? ವಾಟ್ ಆರ್ ಯುವರ್ ಪ್ಲ್ಯಾನ್ಸ್…?-ಅವಳ ಒಬ್ಬ (ಲೆಕ್ಕಾಚಾರಸ್ಥ ) ಸಹೋದ್ಯೋಗಿ + +ಆದರೂ ಅವಳು ಹೊರಟು ನಿಂತಳು ಗಮ್ಯ ಕಾಣದ ಹಾದಿಯಲ್ಲಿ…. + +ಅವಳು ಆ ಕಲ್ಯಾಣಿಯ ಕೊನೆಯ ಮೆಟ್ಟಿಲಂಚಿನಲ್ಲಿ ಕೂತಿದ್ದಾಳೆ. ನೀರಿನಲ್ಲಿ ಅರೆ ಮುಳುಗಿದ ಬಿಳಿ ಪಾದಗಳನ್ನು ಪುಟಾಣಿ ಬಣ್ಣದ ಮೀನುಗಳು ಕಚ್ಚಿದಾಗಲೆಲ್ಲಾ ಅವಳಿಗೆ ಕಚಗುಳಿಯಾಗುತ್ತಿದೆ. ಸೀರೆಯ ಅಂಚು ಒಡತಿಗೆ ತಿಳಿಯದಂತೆ ಗುಟ್ಟಾಗಿ ನೀರಿನ ಸ್ನೇಹ ಬೆಳೆಸಿ ತಂಪು ಹೀರುತ್ತಿದೆ. ನೀಲಿ ಆಕಾಶದಲ್ಲಿ ಮಲ್ಲಿಗೆ ನಕ್ಕ ಹಾಗೆ ಪುಟ್ಟ ಪುಟ್ಟ ಮೋಡಗಳು ತೇಲುತ್ತಿವೆ. ಹೊರಗಿನ ತಂಪು ಅವಳ ಒಳಗೆ ಇಳಿಯುತ್ತಿಲ್ಲ. ಹತ್ತಿರದ ದೇಗುಲದ ಘಂಟಾನಾದ ಕೇಳುತ್ತಿದೆ. ನಿಟ್ಟುಸಿರೊಂದನ್ನು ಬಿಟ್ಟು ನಿಧಾನವಾಗಿ ಮೆಟ್ಟಿಲು ಏರುತ್ತಾ ಅವಳು ದೇಗುಲದೆಡೆಗೆ ಸಾಗುತ್ತಾಳೆ. + +******* + +ತಂಗಾಳಿಯಲ್ಲಿ ತೂಗುತ್ತಿರುವ ಮಾವಿನ ಮರಕ್ಕೊರಗಿ ಅವಳು ನಿಂತಿದ್ದಾಳೆ. ಅವಳ ಮುದ್ದಾದ ಮುಂಗುರುಳು ಮಾಂದಳಿರ ಜೊತೆ ಸ್ಪರ್ಧಿಸುತ್ತಾ ತಾನೂ ಲಾಸ್ಯವಾಡುತ್ತಿದೆ. ಸುತ್ತಲೂ ಮಾವಿನ ಹೂಗಳ ನರುಗಂಪು ಅನತಿ ದೂರದಲ್ಲಿ ಬಾಲ-ಬಾಲೆಯರು ಒಟ್ಟಾಗಿ ಹಾಡುತ್ತಾ ಆಟವಾಡುತ್ತಾ ಇದ್ದಾರೆ. ಆ ಮನೋಹರ ದೃಶ್ಯವನ್ನವಳು ಮುದದಿಂದ ನೋಡುತ್ತಿದ್ದಾಳೆ. ಅವಳ ತುಟಿಗಳ ಮೇಲೆ ನಸು ನಗು ಹೌದೋ ಇಲ್ಲವೋ ಎಂಬಂತೆ… ಆದರೂ ಮನಸ್ಸಿನಾಳದಲ್ಲೆಲ್ಲೋ ತಳಮಳ… ಬರು ಬರುತ್ತಾ ಆ ತಳಮಳ ದೊಡ್ಡದಾಗಿ ಬೆಳೆದು ಆ ನಸುನಗುವನ್ನು ನುಂಗಿ ಹಾಕಿ ಬಿಡುತ್ತದೆ… ಅವಳು ನಿಟ್ಟುಸಿರು ಬಿಡುತ್ತಾ ಅಲ್ಲಿಂದ ಸಾಗುತ್ತಾಳೆ… + +ಅವಳು ಸಮುದ್ರ ತಡಿಯಲ್ಲಿ ಸೂರ್ಯಾಸ್ತದ ಮನೋಹರ ನೋಟ ನೋಡುತ್ತಾ ಕೂತಿದ್ದಳು. ಬೆಳ್ಳಕ್ಕಿಗಳು ನಸುಗೆಂಪಾದ ಆಕಾಶದ ಹಿನ್ನಲೆಯಲ್ಲಿ ಹಾರಿ ಹೋಗುತ್ತಿವೆ. ಮೀನುಗಾರರು ತನ್ಮಯತೆಯಿಂದ ಹುಟ್ಟು ಹಾಕುತ್ತಿರುವುದು ದೂರದಲ್ಲಿ ಕಾಣುತ್ತಿದೆ. ಪ್ರತಿ ಬಂಗಾರದಲೆಯೂ ಸೋ.. ಎಂದು ಅವಳಿಗಾಗಿಯೇ ಎಂಬಂತೆ ಹಾಡುತ್ತಾ ದಡಮುಟ್ಟಿ (ಅವಳ ಮನಮುಟ್ಟಲು ವಿಫಲವಾಗಿ) ಮುತ್ತಿನ ಮಣಿಯ ನೊರೆಯಾಗಿ ನಿರ್ಗಮಿಸುತ್ತಿವೆ. ಆಕಾಶವು ಕೆಂಪು ನೀಲಿ ಬಂಗಾರವಾಗಿ ಸಾವಿರ ಬೆಳಕಿನ ಚಿತ್ತಾರದ ತೋರಣವಾಗಿ ಸಾಗರದ ಅಲೆ ಅಲೆಗಳಲ್ಲಿ ಪ್ರತಿಫಲಿಸಿ ನಲಿಯುತ್ತಿದೆ. ಆದರೆ ಅವಳ ಮನದ ನಲಿವಿನ ಪಾತ್ರೆಯ ತಳ ತೂತಾಗಿ ಅವಳ ನಲಿವೆಲ್ಲಾ ಸೋರಿ ಹೋಗುತ್ತಿದೆಯೇನೋ ಅನ್ನಿಸುತ್ತಿದೆ. ಅವಳು ಉಸಿರು ಬಿಡುತ್ತಾ ಅಲ್ಲಿಂದ ಏಳುತ್ತಾಳೆ. + +ಮುತ್ತಿನ ಮಣಿಯಂಥಾ ನೀರು ತುಂಬಿದ ಆ ಸರಸ್ಸು ಬಿಳಿದಾವರೆ ಹೂಗಳಿಂದ ತುಂಬಿ ಕಂಗೊಳಿಸುತ್ತಿದೆ. ಶ್ವೇತ ಹಂಸಗಳು ಚಂದ್ರಕಾಂತಿಯಂತೆ ಹೊಳೆವ ತಾವರೆಗಳ ನಡುವಲ್ಲಿ ಕೊರಳು ಕೊಂಕಿಸುತ್ತಾ ವಿಹರಿಸುತ್ತಿವೆ ಆ ತಿಳಿನೀರು… ಬಿಳಿದಾವರೆ… ಹಂಸ ಲಾಸ್ಯ… ಆದರೆ ಅವಳ ಮನ ಅಶಾಂತಿಯ ಗೂಡು… + +ಹಸಿರು ಗದ್ದೆಯ ಅಂಚಿನಲ್ಲಿ ಅವಳು ಸುಳಿದಾಡುತ್ತಾಳೆ. ಗಿಳಿಯ ಮೈ ಬಣ್ಣದ ಭತ್ತದ ಗರಿಗಳು ಅವಳನ್ನು ಕೈ ಬೀಸಿ ಕರೆಯುತ್ತವೆ. ಆದರೆ ಅವಳ ಮನದ ಆನಂದದ ಪಾತ್ರೆ ಬರಿದು. + +ಅವಳು ನೀಲ ಮುಗಿಲ ಹಿನ್ನಲೆಯಲ್ಲಿ ಧೀರ ಗಂಭೀರವಾಗಿ ನಿಂತ ಪರ್ವತ ಶ್ರೇಣಿಯನ್ನು ದಿಟ್ಟಿಸುತ್ತಿದ್ದಾಳೆ. ಹಸಿರು ಮೇಖಲೆ ಧರಿಸಿ ಸೂರ್ಯನ ಹೊಂಬಿಸಿಲಿನಲ್ಲಿ ಬೆಳ್ಳಿಯಾಗಿ ಬಂಗಾರವಾಗಿ ಹೊಳೆವ ಪರ್ವತ ಮಾಲೆ ನೀಲಿ ಬಾನಿನಲ್ಲಿ ಮಂದವಾಗಿ ಚಲಿಸುತ್ತಿರುವ ಮೋಡಗಳಿಂದ ಚಾಮರ ಸೇವೆಗೊಳ್ಳುವ ರಾಜನಂತೆ ವಿರಾಜಮಾನವಾಗಿದೆ. ಆದರೆ ಅವಳ ಮನ ಶಾಂತಿಯಿಂದ ಆನಂದದಿಂದ ತುಂಬಿ ಬರಲಿಲ್ಲ. + +ನಿರಾಸೆಯ ದಪ್ಪ ಚಾದರ ಹೊದ್ದು ಭಾರ ಭಾರ ಮನದೊಂದಿಗೆ ಅವಳು ತನ್ನ ಮನೆಗೆ ಮರಳಿದಳು…. + +***********ಭಾಗ ಎರಡು_____________________________ + +ಅದೊಂದು ಬೆಳಗು ಅವಳು ತನ್ನ ಮನೆಯಂಗಳಕ್ಕೆ ಬಂದಳು. ಆಗ ತಾನೇ ಅರಳಿದ ಹೂವೊಂದು ಅವಳನ್ನೇ ನೋಡಿತು. ಹೂವನ್ನು ಕ್ಷಣಹೊತ್ತು ನೋಡಿದ ಅವಳಿಗೆ ಏನೂ ಅನ್ನಿಸಲಿಲ್ಲ. ಸುಮ್ಮನಿದ್ದು ಬಿಟ್ಟಳು. ಆ ಹೂವು ನಸು ನಗುತ್ತಾ ಏನೋ ಹೇಳ ಹೊರಟಿತು. ಆದರೆ ಆ ಹೂವಿನ ಮಾತು ಅವಳಿಗೆ ಕೇಳಿಸಲೇ ಇಲ್ಲ. ಅವಳು ಹೂವಿಗೆ ಬೆನ್ನು ತಿರುಗಿಸಿ ಹೊರಟು ಹೋಗುವುದರಲ್ಲಿದ್ದಳು.ಆಗ… ಆಗ ಅವಳಿಗೆ ಕೇಳಿತು ಆ ಧ್ವನಿ!“ಆ ಹೂವಿನ ಸೊಬಗನ್ನು ನಿನ್ನ ಕಣ್ಣಲ್ಲಿ ತುಂಬಿ ಕೊಳ್ಳಲಾರೆಯಾ?”‘ಯಾರು…? ಯಾರದೂ…?’ + +ಅವಳು ಸುತ್ತಲೂ ತಿರುಗಿ ನೋಡಿದಳು. ಯಾರೂ ಕಾಣಿಸಲಿಲ್ಲ. ಎಷ್ಟೋ ಕಾಲದಿಂದ ಮಾತೇ ಬಾರದಂತೆ ಮೂಕವಾಗಿದ್ದ ಆ ಧ್ವನಿ ‘ಇನ್ನು ಸಹಿಸಲಾರೆ’ ಎಂಬಂತೆ ಅಂದು ಸುದೀರ್ಘ ಮೌನ ಮುರಿದು ಮಾತಾಡಿತ್ತು. ಅವಳಿಗೆ ಆ ಧ್ವನಿಯ ಪರಿಚಯವಿದ್ದರೆ ತಾನೇ ಅವಳು ಅದನ್ನು ಗುರುತಿಸುವುದು..? ಅವಳೊಳಗಿನ ಆ ಧ್ವನಿಯನ್ನು ಅವಳು ಈ ಮೊದಲು ಎಂದೂ ಆಲಿಸಿರಲಿಲ್ಲ. ಇಂದು ಕೇಳಲು ‘ಮನಸ್ಸು’ ಮಾಡಿದಳು. ಧ್ವನಿ ಮಾತಾಡಿತು, ಅವಳು ಕಿವಿಯಾದಳು. + +********** + +‘ಸುಂದರವಾಗಿ ಅರಳಿರುವ ಆ ಹೂವನ್ನು ನೋಡು… ತಂಗಾಳಿಗೆ ಮುಖವೊಡ್ಡಿ ಮನ ತೆರೆದು ನಗುತಿದೆ. ದಿನದ ಸ್ವಾಗತಕ್ಕಾಗಿ ಹಗುರಾಗಿ ಎದೆ ತೆರೆದು ನಿಂತಿದೆ. ನೀನೂ ಆ ಹೂವಿನಂತೆ ದಿನವನ್ನು ಸಂತೋಷದಿಂದ ಸ್ವಾಗತಿಸಲಾರೆಯಾ..? ಹೊಸದಾದ ತಂಗಾಳಿಗೆ ನಿನ್ನ ಮನದ ಮನೆಯ ಬಾಗಿಲು ತೆರೆಯಲಾರೆಯಾ..?’ಧ್ವನಿ ಕೇಳಿತುಅವಳು ‘ಹೂಂ’ ಗುಟ್ಟಿದಳು“ಆದರೆ ಸಂಜೆಗೆ ಈ ಹೂ ಬಾಡಿ ಹೋಗಿ ಬಿಡುವುದು…” ಎಂದಳು“ಒಂದು ಹೂ ಅರಳಿ ಸಂಜೆಗೆ ಬಾಡಿದ ಮಾತ್ರಕ್ಕೆ ಗಿಡ ಹೂ ತಳೆಯುವುದನ್ನೇ ನಿಲ್ಲಿಸಿ ಬಿಡುವುದೇ…?ಅವಳು ಮಾತಾಡಲಿಲ್ಲ. + +“ದಿನ ದಿನವೂ ಗಿಡ ಇನ್ನಷ್ಟು ಹೂ ತಳೆಯುವುದು ದಿನದಿನವೂ ಹೊಸಗಾಳಿಗೆ ಹೊಸ ಚೇತನಕ್ಕೆ ಮೈ ತೆರೆದು ಕೊಳ್ಳುವುದು”ಅವಳು ಕೇಳುತ್ತಿದ್ದಳು.“ಹೂ ಅರಳುವುದೆಂದರೆ ಏನು ಗೊತ್ತೆ…?”“ಏನು..?”“ಹೃದಯ ಮತ್ತು ಮನಸ್ಸು ತೆರೆದು ಸೂರ್ಯ ರಶ್ಮಿಯನ್ನು ಬರಮಾಡಿ ಕೊಳ್ಳುವುದು”” ಈ ಹೂವಿನ ಹಾಗೇನಾ…” ಅವಳೆಂದಳು + +“ಈ ಪುಟ್ಟ ಗಿಡ ದಿನ ದಿನವೂ ಮಾಡುವ ಈ ಕಾರ್ಯವನ್ನು ಇಲ್ಲಿಯವರೆಗೆ ನೀನು ಒಮ್ಮೆಯೂ ಮಾಡದೇ ಹೋದೆಯಲ್ಲಾ…? ” ಧ್ವನಿ ಛೇಡಿಸಿತುಅವಳು ಕಣ್ಣು ರೆಪ್ಪೆ ಬಡಿಯದೇ ಆ ಹೂವನ್ನೇ ನೋಡಿದಳು.“ಅರಳುವುದು ಎಂಬುದು ಸದಾ ನಡೆಯುತ್ತಲೇ ಇರುವ ನಡೆಯುತ್ತಲೇ ಇರಬೇಕಾದ ಕಾರ್ಯ”ಅವಳಿಗೆ ಏನೂ ಅರ್ಥವಾಗಲಿಲ್ಲ ಸುಮ್ಮನೆ ಹೂಂ ಗುಟ್ಟಿದಳು.“ಏಕೆ?” ಅವಳ ಪ್ರಶ್ನೆ.“ಪ್ರತಿ ದಿನವೂ ಹೊಸದಾಗಿ ಅರಳಿದರೆ ಅನಂತ ಸಾಧ್ಯತೆಗಳು ನಿನ್ನ ಮುಂದೆ ತೆರೆದು ಕೊಳ್ಳುವುದು ಮತ್ತು ನೀನು ಯಾವುದನ್ನು ಬೇಕಾದರೂ ಆರಿಸಿಕೊಳ್ಳ ಬಹುದು.”” ನಾನು ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದೇ…?” ಮಗುವಿನಂಥಾ ಆಸೆಯ ಕಂಗಳಿಂದ ಅವಳು ಕೇಳಿದಳು.” ಹೂಂ… ಯಾವುದು ಬೇಕಾದರೂ…. ಆದರೆ ನೀನು ದಿನದಿನವೂ ಅರಳ ಬೇಕಷ್ಟೇ…”ಎಂದಿತು ಧ್ವನಿ.“ಹೂಂ… ಸರಿ” ಒಪ್ಪಿಕೊಂಡಳು ಅವಳು.“ಆದರೆ ಈ ಅನಂತ ಸಾಧ್ಯತೆಗಳಿಂದ ನಾನೇನು ಮಾಡಬಹುದು? ಇದೇಕೆ ನನಗೆ ಬೇಕು…?” ಅವಳ ಸಂದೇಹ“ನಿನ್ನಿಷ್ಟದ ಸಾಧ್ಯತೆಗೆ ನಿನ್ನನ್ನೊಡ್ಡಿಕೊಂಡು, ನಿನ್ನನ್ನು ನೀನು ಅರಿತು ಕೊಳ್ಳಲು ಈಗಿರುವುದಕ್ಕಿಂಥಾ ಇನ್ನೂ ಹೆಚ್ಚಾಗಿ ಅರಿತು ಕೊಳ್ಳಲು…“ನಿನ್ನ ಸುತ್ತಲಿನವರನ್ನು ಅರಿತುಕೊಳ್ಳಲು…”“ಪ್ರಕೃತಿಯನ್ನೂ ಗಿಡ ಮರ ಪ್ರಾಣಿ ಪಕ್ಷಿವಸ್ತುಗಳನ್ನು ಅರಿತುಕೊಳ್ಳಲು…”“ಅರಿತು ಕೊಳ್ಳುವುದೆಂದರೇನು..?”ಹೊಸ ಗೊಂದಲವಾಯಿತು ಅವಳಿಗೆ + +“ಹೊಸ ದೃಷ್ಟಿಯಿಂದ ಹೊಸ ಬೆಳಕಲ್ಲಿ ನೋಡುವುದು” ವಿವರಿಸಿತು ಧ್ವನಿ“ನೋಡಿದ ಹೊಸ ಬೆಳಕಲ್ಲಿ ಮಿಂದು ನಿನ್ನನ್ನು ನೀನು ತಿದ್ದಿ ತೀಡಿ ಕೊಳ್ಳುವುದು… ತಿದ್ದಿ ತೀಡಿ ಚೆಂದಗೊಳಿಸಿ ಕೊಳ್ಳುವುದು ಬರೀ ತನುವಿಗಷ್ಟೇ ಸಾಕು ಎಂದು ಭಾವಿಸಿದೆಯಾ…” ಕೇಳಿತು ಧ್ವನಿ + +ಅವಳು ರೆಪ್ಪೆ ಅಲುಗಿಸದೆ ಕೆಳತುಟಿ ಕಚ್ಚುತ್ತಲೊಮ್ಮೆ ಯೋಚಿಸಿದಳು… + +“ಉಹುಂ… ಮನವನ್ನೂ ಹೊಸ ಬೆಳಕಿನ ಪ್ರಭೆಯಲ್ಲಿ ಚೆಂದಗಾಣಿಸಿಕೊಂಡು ಪುಟವಿಟ್ಟ ಬಂಗಾರವಾಗುವುದು, ಸ್ಪರ್ಶ ಮಣಿಯಾಗುವುದು. ಆ ಬೆಳಕಿನ ಹೊಳೆಯಲ್ಲಿ ಹಿತವಾಗಿ ತೇಲಿ ಹಗುರಾಗುವುದು ಹಾಗೆ ಹಗುರಾಗಿ ಮೇಲೇರುವುದು…” + +ಕ್ಷಣ ಕಾಲ ಮೌನ…“ಹೊಸ ಬೆಳಕು ..? ಅದೆಲ್ಲಿಂದ ಬರುತ್ತದೆ..?” ತಟ್ಟನೆ ಕೇಳಿದಳವಳು.“ನಾನು ಹೇಳುವುದಿಲ್ಲ. ನೀನೇ ಯೋಚಿಸಿ ಹೇಳು” ಸವಾಲು ಹಾಕಿತು ಧ್ವನಿ.ಮತ್ತೆ ಮೌನದ್ದೇ ಸಾಮ್ರಾಜ್ಯ. ತಂಗಾಳಿ ಮೆಲ್ಲನೆ ಬೀಸಿತು. ಹೂ ನಸು ನಕ್ಕು ತಲೆ ಅಲುಗಿಸಿತು.ಅವಳು ಕೆಲಕಾಲ ಯೋಚಿಸಿ ನಿಧಾನವಾಗಿ ಹೇಳಿದಳು“ಸೂರ್ಯ ರಶ್ಮಿಯಿಂದ ಬೆಳಕು ಬರುತ್ತದೆ”“ಆಮೇಲೆ?” ಕೇಳಿತು ಧ್ವನಿ“ಆದರೆ ನಾನು ಹೃದಯ ಮನಸ್ಸು ತೆರೆದು ಸೂರ್ಯ ರಶ್ಮಿಯನ್ನು ಬರಮಾಡಿ ಕೊಳ್ಳಬೇಕು”ಅವಳ ಕಣ್ಣುಗಳಲ್ಲೀಗ ಮಂದಹಾಸ“ಈ ಹೂವಿನ ಹಾಗೇ…” ಎಂದಿತು ಆ ಧ್ವನಿಅವಳು ನಸು ನಕ್ಕಳು“ಹಾಗೆ ಬರ ಮಾಡಿಕೊಳ್ಳುವುದಕ್ಕೆ ಏನೆನ್ನುತ್ತಾರೆ?” ಧ್ವನಿ ತುಂಟತನದಿಂದ ಪ್ರಶ್ನಿಸಿತು“ಅರಳುವುದು”ಅವಳು ಅಷ್ಟೇ ತುಂಟ ನಗುವಿನಿಂದ ಉತ್ತರಿಸಿದಳು“ಅಲ್ಲಿಗೆ ನಾವು ಒಂದು ಸುತ್ತು ಬಂದೆವು” ಎಂದಿತು ಧ್ವನಿ + +******** + +“ಈ ಹೂವಿನ ಹೃದಯದಲ್ಲೊಮ್ಮೆ ಇಣುಕಿ ನೋಡು” ಧ್ವನಿ ಹೇಳಿತು.“ನೀಲಿ ಮೋಡಗಳು… ಮಂದ ಮಾರುತ… ಸೂರ್ಯ ರಶ್ಮಿ… ಖನಿಜಗಳು… ಕಾಲ… ಭೂಮಿ…. ಇಡೀ ಬ್ರಹ್ಮಾಂಡವೇ ಕಾಣ ಬರುತ್ತದೆ… ಮೋಡಗಳಿಲ್ಲದೇ ಮಳೆ ಇಲ್ಲ ಮಳೆ ಇಲ್ಲದೆ ಹೂವೇ ಇಲ್ಲ ಹಾಗೆ ನೋಡಿದರೆ ಭೂಮಿಯ ನೆಲೆ ಇಲ್ಲದೆ, ಕಾಲದ ನೆರವಿಲ್ಲದೆ ಹೂ ತಾನೇ ಹೇಗೆ ಅರಳೀತೂ? ಹೂ ಕೇವಲ ಹೂವಷ್ಟೇ ಅಲ್ಲ. ಅದು ಇಡೀ ಬ್ರಹ್ಮಾಂಡವನ್ನೇ ಒಳಗೊಂಡಿದೆ. ಬ್ರಹ್ಮಾಂಡದ ಅಗಣಿತ ಅಂಶಗಳ ಮೇಲೇ ಪೂರ್ತಿ ಅವಲಂಬಿತವಾಗಿದೆ… ಹೀಗೆ ಅವಲಂಬಿತವಾದ ಹೂವಿಗೆ ತನ್ನ ಸ್ವಾತಂತ್ರ್ಯವೆಂಬುದು ಇಲ್ಲವೇ ಇಲ್ಲ ಎಂದು ಅನ್ನಿಸುತ್ತದೆ ಯಲ್ಲವೇ?”, ಅವಳು “ಹೌದು” ಎಂದಳು + +“ಆದರೆ ಈ ಹೂವಿನ ದಳಗಳ ಬಣ್ಣವನ್ನೂ, ಅದರ ಸುಕೋಮಲತೆಯನ್ನೂ, ಬಾಗಿದ ಅದರ ಮಾಟವನ್ನೂ, ಜೇನು ತುಂಬಿದ ಹೃದಯವನ್ನೂ ನೋಡು. ನಾಳೆಗಳನ್ನು ತಿದ್ದಿ ತೀಡುವ ಹುರುಪಿನಿಂದ ಠೀವಿಯಿಂದ ಲಾಸ್ಯ ವಾಡುತ್ತಾ ನಿಂತಿರುವ ಇದನ್ನು ನೋಡಿದರೆ ಇದು ಸುಂದರ, ಸ್ವತಂತ್ರ ಅನ್ನಿಸುವುದಿಲ್ಲವೇ…”ಅವಳು ಆಗಲೂ “ಹೌದು” ಎಂದಳು“ಹೀಗೆ ಒಂದೇ ಕಾಲಕ್ಕೆ ಇದು ಸ್ವಾತಂತ್ರ್ಯವಿಲ್ಲದ್ದೂ ಹೌದು… ಸ್ವತಂತ್ರವಾದುದ್ದೂ ಹೌದು” ಹೇಳಿತು ಧ್ವನಿ. ಅವಳ ಮನಸ್ಸೀಗ ಶಾಂತ ಪ್ರಶಾಂತವಾಗಿತ್ತು…. + +“ಅರ್ಥವಾಯಿತೇ.?”“ಹೂಂ.. ಅರ್ಥವಾಯಿತು” + +********* + +ನಂತರ ಅವಳು ಅವಳಾಗಿ ಉಳಿಯಲಿಲ್ಲ. ಅದೊಂದು ಹೊಸ ಹುಟ್ಟು… ಅವಳೊಳಗಿನ ಚೇತನದ ಹೊಸ ಜನ್ಮ… ಹಳೆಯ ಕೊಳೆ ಕಳೆದ ಪುನೀತ ಗಂಗಾಸ್ನಾನ… ಕಗ್ಗತ್ತಲಿನ ಮಹಾಸುರಂಗದ ಆ ತುದಿಯಲ್ಲೊಂದು ಬೆಳಕಿನ ಕಿರಣದ ದರ್ಶನ… ಹೊಸ ಶೈಶವ ಪಡೆದ ಅವಳು ಪುಟ್ಟ ಪುಟ್ಟ ಹೆಜ್ಜೆ ಇಡುತ್ತಾ ಮುಂದೆ ಮುಂದೆ ಸಾಗುತ್ತಿರಲು… + +******** + +ಅವಳೀಗ ಕಲ್ಯಾಣಿಯ ಅಂಚಿನಲ್ಲಿ ಕೂತು ತಂಪಾದ ನೀರಿನಲ್ಲಿ ಕಾಲು ಇಳಿಬಿಟ್ಟರೆ ಮೀನುಗಳು ಕಚ್ಚಿದಾಗ ಕಚಗುಳಿ ಆಗುತ್ತದೆ. ಜೊತೆಗೆ ಮೀನುಗಳ ಕಿಲಕಿಲ ನಗು ಕೇಳುತ್ತದೆ. ತಂಗಾಳಿಯಲ್ಲಿ ತೂಗುವ ಮಾಂದಳಿರ ನೆರಳಲ್ಲಿ ಆಡುವ ಹಾಡುವ ಮಕ್ಕಳ ಹಾಡು ಮನಸ್ಸಿಗೆ ಮುದ ತರುತ್ತದೆ. ಒಮ್ಮೆಮ್ಮೆ ತಾನೂ ಮಕ್ಕಳೊಂದಿಗೆ ಮಗುವಾಗಿ ದನಿ ಬೆರೆಸುತ್ತಾಳೆ. ಸಮುದ್ರ ತೀರದ ಬಂಗಾರದ ಬಣ್ಣದ ಸಾವಿರ ಬೆಳಕಿನ ಚಿತ್ತಾರ ತೆರೆತೆರೆಯಾಗಿ ಅವಳ ಮನದ ನಲಿವಿನ ಪಾತ್ರೆ ತುಂಬಿಸುತ್ತದೆ. ಹಸಿರು ಗದ್ದೆಯ ಗಿಣಿಯ ಮೈ ಬಣ್ಣದ ಗರಿಗಳನ್ನು ಅವಳು ನೋಟದಲ್ಲೇ ಮುದ್ದಿಸುತ್ತಾಳೆ. ಮುತ್ತಿನ ಮಣಿಯಂಥಾ ನೀರುಳ್ಳ ಚಂದ್ರಕಾಂತಿ ಬೀರುವ ಬಿಳಿದಾವರೆ, ಹಂಸದಿಂದ ತುಂಬಿದ ಕೊಳವು ಅವಳಲ್ಲಿ ಪ್ರಶಾಂತತೆ ತುಂಬುತ್ತದೆ. ಹಸಿರು ಮೇಖಲೆ ಧರಿಸಿ ಸೂರ್ಯನ ಬೆಳಕಲ್ಲಿ ಬೆಳ್ಳಿಯಾಗಿ ಬಂಗಾರವಾಗಿ ಹೊಳೆವ ಧೀರ ಗಂಭೀರ ಪರ್ವತ ಶ್ರೇಣಿಯ ದೃಶ್ಯದಿಂದ ಅವಳ ಮನ ಶಾಂತಿಯಿಂದ ಆನಂದದಿಂದ ತುಂಬಿ ಬರುತ್ತದೆ. + +ಅವಳ ಮನೆಯ ಅಂಗಳದಲ್ಲಿ ದಿನ ದಿನವೂ ಅರಳುವ ಹೂವಿನಂತೆ ಅವಳೂ ದಿನ ದಿನವೂ ಅರಳುತ್ತಾಳೆ. + +********* + +ಮನೆಯ ಮುಂದೆ ಅಂಗಳವೂ, ಗಿಡವೂ, ಹೂವೂ ಇಲ್ಲದವರಿಗೊಂದು ಮಾತು. ಇದು ನಮ್ಮ ನಮ್ಮಲ್ಲೇ ಇರಲಿ. + +ನೀವು ತರಕಾರಿ ಅಂಗಡಿಗೆ ಹೋದಾಗ ನಿಮ್ಮಾಕೆ ಹೇಳಿದಳೆಂದು ಕೊತ್ತಂಬರಿ ಸೊಪ್ಪು ಕೊಳ್ಳುತ್ತೀರಲ್ಲವೇ? ಒಂದು ಕಟ್ಟು ಕೊತ್ತಂಬರಿ ಸೊಪ್ಪು ಎತ್ತಿ ಅದು ಬಾಡಿದೆಯೇ ಕೊಳೆತಿದೆಯೇ ಎಂದು ತಿರುಗಿಸಿ ತಿರುಗಿಸಿ ನೋಡಿ ‘ಎಷ್ಟಮ್ಮಾ..?’ ಎಂದು ಕೇಳುವ ಹೊತ್ತಿನಲ್ಲಿ ಹೀಗೆ ಮಾಡಿ… + +ಕೊತ್ತಂಬರಿ ಗಿಡವನ್ನಷ್ಟು ಗಮನಿಸಿ “ಇದು ನಾಳೆ ದೋಸೆಗೆ ಚಟ್ನಿಯಾಗುವ ಸರಕು ಅಷ್ಟೇ…” ಎಂದು ದಯವಿಟ್ಟು ತಾತ್ಸಾರ ಮಾಡಬೇಡಿ ನಿಧಾನವಾಗಿ ನೋಡಿ… ಅದರ ಎಳೆ ಹಸುರಿನ ಕಾಂಡವೆಷ್ಟು ಮೃದುವಾಗಿದೆ… ಪಚ್ಚೆ ಬಣ್ಣದ ಅದರ ಎಲೆಯನ್ನು ದಿಟ್ಟಿಸಿ ನೋಡಿ.. ಆಕಾಶದಲ್ಲಿ ಗರಿ ಬಿಚ್ಚಿ ಹಾರುವ ಹಕ್ಕಿಯ ಚಿತ್ತಾರದ ರೆಕ್ಕೆಯಂತಿರುವ ಆ ಎಲೆಯ ಸೊಬಗೇ ಸೊಬಗು ಅಲ್ಲವೇ..? ಪ್ರತಿ ಎಲೆಯದೂ ಹೊಸ ಆಕಾರ… ಹೊಸ ಚಿತ್ತಾರ.. ಅಪರೂಪಕ್ಕೊಮ್ಮೆ ಠೀವಿಯಿಂದ ಕೊರಳು ಕೊಂಕಿಸಿ ನಿಂತ ಅಚ್ಚ ಬಿಳಿ ಬಣ್ಣದ ಹೂವಿನ ದರ್ಶನವೂ ಆಗಬಹುದು ನಿಮಗೆ.ಪ್ರಯಾತ್ನಿಸುತ್ತೀರಾ..? ದಯವಿಟ್ಟು ಒಮ್ಮೆ ಪ್ರಯತ್ನಿಸಿ… + +******** + +ಓದುಗ ಮಹಾಶಯ,ನಾನು ಈ ಕಥೆಗೆ ಮೊದಲು “ನಮ್ಮ ಮನೆಯಂಗಳದಿ ಬೆಳೆದೊಂದು ಹೂವು”ಎಂಬ ಹೆಸರಿಡಬೇಕೆಂದಿದ್ದೆ. ನಂತರ ಇದು ನಿಮ್ಮ ಮನೆಯ ಅಂಗಳದಲ್ಲೂ ಬೆಳೆಯಬಹುದಾದ ಹೂವೆಂದು ಅರಿವಾಯಿತು. ನಿಮ್ಮ ಮನೆಯ ಹೂವಿಗೆ ನಾನು ಹೇಗೆ ಹೆಸರಿಡುವುದು..? ನಿಮ್ಮ ಮನೆಯಂಗಳದ ಹೂವಿಗೆ ನೀವು ಹೆಸರಿಡುವುದೇ ಸರಿ ಅನ್ನಿಸಿತು ನೀವೂ ಒಪ್ಪುತ್ತೀರಲ್ಲವೇ…?ಅದಕ್ಕೇ ಕೊನೆಗೆ ನಾನಿದನ್ನು “ಹೆಸರಿಲ್ಲದ ಕಥೆ “ಎಂದೇ ಕರೆದೆಇನ್ನು ಮಿಕ್ಕಿದ್ದು ನಿಮ್ಮ ಚಿತ್ತ… \ No newline at end of file diff --git a/Kenda Sampige/article_528.txt b/Kenda Sampige/article_528.txt new file mode 100644 index 0000000000000000000000000000000000000000..9e33fe699ce4e6f9b65f36dbef3659823e56b10b --- /dev/null +++ b/Kenda Sampige/article_528.txt @@ -0,0 +1,35 @@ +ಸುತ್ತಲ ಗದ್ದಲದ ನಡುವೆ ಒಂಚೂರು ನನ್ನದೇ ಜಾಗ ಬೇಕೆಂದು ಅನಿಸಿದಾಗ, ಸುಮ್ಮಸುಮ್ಮನೆ ಒಂಟಿಯಾಗಿ ಕೂತುಬಿಡಬೇಕು ಎಂದೆನಿಸಿದಾಗ ನೆರವಿಗೆ ಬರುವುದು ಕವಿತೆಗಳು. ಹಾಗೆ ಆಗಾಗ ಸೆಳೆಯುವುದು ರಿಲ್ಕನ ಕವಿತೆಗಳು. ಅವನ ಕವಿತೆಗಳಲ್ಲಿ ತುಂಬಿದ ಸಂಕೋಲೆಯ ಬಿಗಿದಿಟ್ಟಂತ  ಒಂಟಿತನ, ಅಪೂರ್ಣತೆ, ಹೇಳಹೊರಟು ಹೇಳದೆ ಬಿಟ್ಟ ಎಷ್ಟೊಂದು ಭಾವನೆಗಳಿಗೆ ವಿಚಿತ್ರ ಚುಂಬಕ ಶಕ್ತಿಯಿದೆ. ಕವಿತೆಯ ಕರ್ತೃವಿನ ಭಾವನೆ ಆ ಕವಿತೆಯ ಹಿಂದೆ ಏನಿದೆಯೋ.. ಆದರೆ ಅವನ ಕವಿತೆಗಳು ನನ್ನ ಭಾವಕ್ಕೆ ತಕ್ಕಂತೆ ಬದಲಾಗುತ್ತ ಹೋಗುತ್ತವೆ! + +ಹಾಗೆಯೇ ರಿಲ್ಕನಿಗೆ ತದ್ವಿರುದ್ಧ ಎನಿಸುವ ಝೆನ್ ಕವಿತೆಗಳು. ಅವು ನಿರ್ಲಿಪ್ತ ಭಾವದಲ್ಲಿ ನಿರುಮ್ಮಳ ಶಾಂತಿಯ ಒಂಟಿತನದಿಂದ ತುಂಬಿವೆ. ಅಸಂಬದ್ಧವೂ ಅಸಂಗತವೂ ಎನಿಸುವಂತೆ ತೋರುವ ಹಲವುಗಳಲ್ಲಿ ಸಂತೈಸುವ ಆಕರ್ಷಣೆಯಿದೆ.ಕೆಂಡಸಂಪಿಗೆಯ ಜಾಣ ಓದುಗರಿಗಾಗಿ  ನಾನು ಸುಮ್ಮನೇ ಅನುವಾದಿಸಿದ ಕೆಲವು ರಿಲ್ಕ್ ಹಾಗಾ ಝೆನ್ ಕವಿತೆಗಳು. + +ಮತ್ತೆ ಮತ್ತೆ + +ಮತ್ತೆ ಮತ್ತೆ, ನಮಗೆಷ್ಟೆಲ್ಲಾ ಅರಿವಿರುವ ಈ ಪ್ರೀತಿಯ ಹೂದೋಟಮತ್ತಲ್ಲಿ ಕಾಣುವ ಪುಟ್ಟ ಮಸಣ, ಅದರಲ್ಲಿನ ಶೋಕಿಸುತ್ತಿರುವ ಹೆಸರುಗಳು,ಹೆದರಿಸುವ ಮೌನಗಳ ಪಾತಾಳ ಆಳ-ದೊಳಗೆ  ಬೀಳುವ ಉಳಿದೆಲ್ಲ ಲೋಕಮತ್ತೆ ಮತ್ತೆ   ನಾವಿಬ್ಬರೂ ಒಟ್ಟೊಟ್ಟಿಗೆ ನಡೆಯುತ್ತೇವೆಆ ಪುರಾತನ ಮರಗಳ ಛಾವಣಿಯಡಿಯಲ್ಲಿ, ಅಡ್ಡಲಾಗುತ್ತೇವೆ ಹಾಗೆಯೇ ಮತ್ತೆ ಮತ್ತೆಆ ಹೂವುಗಳ ನಡುವೆ, ಆಗಸದ ಮುಖಕ್ಕೆ ಮುಖ ಕೊಟ್ಟು + +ಮುನ್ಸೂಚನೆ + +ನಾನೊಂದು ಖಾಲಿ ಅನಂತದ ನಟ್ಟನಡುವಿನ ಬಾವುಟಮುಂಬರುವ ಗಾಳಿಯ ಸುಳಿವು ಸಿಕ್ಕರೂ ಉಳಿಯಬೇಕುಅದು ದಾಟುವವರೆಗೂಜಗದ ವಸ್ತುಗಳೆಲ್ಲ ಕದಲದೆ ನಿಂತರೂಕದಗಳು ಮೆಲ್ಲಗೆ ಮುಚ್ಚಿಕೊಳ್ಳುತ್ತವೆ, ಚಿಮಣಿಗಳಲ್ಲಿ ತುಂಬಿದೆಮೌನಕಿಟಕಿಗಳಿನ್ನೂ ಕಿಂಕಿಣಿಸುತ್ತಿಲ್ಲ, ನೆಲದ ಧೂಳಿನ್ನೂ ಮಲಗಿದೆ ಅಲ್ಲೇನನಗೆ ಚಿರಪರಿಚಿತ ಬಿರುಗಾಳಿ, ಕಡಲ ಸಂಕಟದಂತೆ ನನ್ನೊಡಲುಬೊಬ್ಬಿರಿದು ಹಾರುವೆ, ಮತ್ತಲ್ಲೇ ಮಗಚುವೆಎತ್ತಿ ಎಸೆಯುವೆ ನನ್ನನ್ನೇ, ಆದರೂ ಒಂಟಿ.. ಒಬ್ಬೊಂಟಿಈ ಜೋರು ಬಿರುಗಾಳಿಯ ಮಧ್ಯೆ + +ಓ ಕತ್ತಲೆ + +ಹಾ ಕತ್ತಲೆ, ನಾ ಹುಟ್ಟಿಬಂದೆ ಅದರೊಳಗಿಂದಜಗತ್ತಿಗೆ ಬೇಲಿ ಹಾಕುವಎಲ್ಲ ಬೆಂಕಿಗಳಿಗಿಂತಲೂ ಹೆಚ್ಚು  ಪ್ರಿಯ ನೀನು ನನಗೆಬೆಂಕಿ ಎಲ್ಲರಿಗೂ ಬೆಳಕಿನ ವರ್ತುಲ ಬರೆದುಕೊಟ್ಟಿದೆಹಾಗಿದ್ದರೂ ಹೊರಗುಳಿದವರು ನಿನ್ನನ್ನು ಅರಿಯರು + +ಆದರೆ ಕತ್ತಲು ಒಳ ಸೆಳೆಯುತ್ತದೆ ಎಲ್ಲವನ್ನೂ-ಆಕಾರಗಳನ್ನೂ ಮತ್ತು ಬೆಂಕಿಯನ್ನೂ, ಜೀವಿಗಳನ್ನೂ ಮತ್ತು ನನ್ನನೂಬಹು ಸುಲಭದಲ್ಲಿ ಒಟ್ಟುಗೂಡಿಸಿಬಿಡುತ್ತಲ್ಲ ಎಲ್ಲವನ್ನೂ! –ಅಧಿಕಾರಗಳನ್ನೂ ಮತ್ತು ಜನರನ್ನೂ- + +ಅನಿರ್ವಚನೀಯ ಅಸ್ತಿತ್ವವೊಂದು  ನನ್ನೆಡೆ ಸರಿಯುತ್ತಿದೆರಾತ್ರಿಗಳಲ್ಲಿ ನಂಬಿಕೆ ನನಗೆ + +ಝೆನ್ ಕವಿತೆಗಳು + +೧ + +ನನ್ನೆಲ್ಲ ಭಾವನೆಗಳು ಬಸವಳಿದು ಹೋದಾಗಕಾಡುಹಾದಿಯಲೆಲ್ಲೋ ಕಳೆದುಹೋಗುತ್ತೇನೆನಿರಂತರ ಅರಳುವ ಹೂಗಳ ಆರಿಸುತ್ತ + +ಮಂದಾನಿಲದಲ್ಲಿ ಮಿಂದು ಸುರಿಯುತ್ತಿದೆ ಹಿಮಹಿಮದಲ್ಲೇ ಹೊಸೆದು ಹುಯಿಲಿಡುವ ಗಾಳಿಅಗ್ಗಿಷ್ಟಿಕೆಯ ಬಳಿ ಕುಳಿತು ನೀವಿಕೊಳ್ಳುವ ಕಾಲಸುತ್ತ ಕಾಲ ಖಾಲಿ ಹೊರಳುತ್ತಿದೆದಿನಗಳ ಗುಣಿಸುತ್ತ ಗುಮ್ಮನೆ ಕುಳಿತ ಗೂಡಲ್ಲಿಶಿಶಿರವೂ ಹಾಗೆ ಬಂದು ಹೀಗೆ ಹೊರಟಿದೆಒಂದು ಸುಂದರ ಕನಸಿನಂತೆ + +ಸಣ್ಣ ತೊರೆಯೊಂದು ಹಾವಸೆಗಲ್ಲುಗಳಕೊರಕಲಿಂದ ಬಸಿದು ಹರಿದಂತೆನಾನೂ ಸದ್ದಿಲ್ಲದೇ ತಿಳಿಯಾಗುತ್ತಿರುವೆ + +೨ + +ಬಹಳ ಸಾಧಿಸಬೇಕೆಂಬ ಆಸೆಯೇನಿಲ್ಲ, ತುಂಬಾ ಆಲಸಿ ನಾನುಜಗದ ಉಸಾಬರಿಯೇ ಬೇಡ ಎಂದು ಹಾಗೇ ಬಿಟ್ಟಿರುವೆಹತ್ತುದಿನದ ತುತ್ತಿಗಾಗುವಷ್ಟು ಅಕ್ಕಿ ಸಾಕು ಜೋಳಿಗೆಯೊಳಗೆಅಗ್ಗಿಷ್ಟಿಕೆಯ ಪಕ್ಕ ಒಂದೆರಡು ಒಣಕೊರಡುಸುಮ್ಮನೆ ಮಾತೇಕೆ ಮರುಳೋ ಇಲ್ಲ ತಿಳಿವಿನರಳೋ, ಏನೋ ಒಂದುನನ್ನ ಸೂರಿನ ಮೇಲೆ ಸುರಿವ ಮಳೆಹನಿಯ ಆಲಿಸುತ್ತ ಈ ರಾತ್ರಿಬೆಚ್ಚಗೆ ಕುಳಿತಿರುವೆ ಎರಡೂ ಕಾಲ್ಗಳ ನೀಡಿ ಬೆಂಕಿ ಕಾಯಿಸುತ್ತಾ + +ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ. \ No newline at end of file diff --git a/Kenda Sampige/article_529.txt b/Kenda Sampige/article_529.txt new file mode 100644 index 0000000000000000000000000000000000000000..bdffaa3c6196165a9ec832a08d18e476b8870884 --- /dev/null +++ b/Kenda Sampige/article_529.txt @@ -0,0 +1,17 @@ +ಬಸ್ಸು ಇನ್ನೇನು ಹುಣಸೂರು ತಲುಪಬೇಕು, ಮೊಬೈಲು ಬಡಿದುಕೊಳ್ಳತೊಡಗಿತು. ಹತ್ತಿರ ಕುಳಿತವರು ಆ ಶಬ್ದಕ್ಕೆ ಬೆಚ್ಚಿದಂತೆ ತೋರಿತು. ಅವರು ಬೆಚ್ಚಿದರೂ ಆಶ್ಚರ್ಯ ಇರಲಿಲ್ಲ. ಯಾಕೆಂದರೆ ನನ್ನ ಮೊಬೈಲು ರಿಂಗಾಗುತ್ತಿರಲಿಲ್ಲ. ಬಡಿದುಕೊಳ್ಳುತ್ತಿತ್ತು. ವೃದ್ಧಾಪ್ಯದ ಮೆಟ್ಟಿಲ ಬುಡಕ್ಕೆ ಬಂದು ನಿಂತಿರುವ ನನಗೆ ಕಿವಿ ಸ್ವಲ್ಪ ಮಂದವಾಗಿತ್ತು. ಹಾಗಾಗಿ ಕರೆ ಬಂದಾಗ ಕೇಳಿಸಲೆಂದು ನನ್ನ ತಂಗಿಯ ಮಗಳು ಶುಭಾ ಹೀಗೆ ಶಬ್ದ ಕೊಟ್ಟಿದ್ದಳು. ಬಸ್ಸಿನ ಶಬ್ದಕ್ಕೆ ನನಗೆ ಆಚೆ ಕಡೆಯಿಂದ ಮಾತಾಡುವುದು ಕೇಳುತ್ತಿರಲಿಲ್ಲ. ನಿಲ್ದಾಣ ತಲುಪಿದ ಮೇಲೆ ನಾನೆ ಕರೆ ಮಾಡಿದರಾಯಿತೆಂದು ಮೊಬೈಲು ಬಂದು ಮಾಡಿದೆ. + +ನಿಲ್ದಾಣದಲ್ಲಿ ಮೊಬೈಲಿಗೆ ಬಂದ ಕರೆ ನೋಡುತ್ತೇನೆ, ಯಾವುದೊ ಹೊಸ ನಂಬರು. ಅದಕ್ಕೆ ಕರೆ ಮಾಡಿದೆ. ನನ್ನ ಪಕ್ಕದ ಮನೆಯವರ ಮಗ ಚೇತನಕೃಷ್ಣ ಕರೆ ಮಾಡಿದ್ದ. ಮುಖ-ಮುಖ ಕಂಡರೂ ನಾವು ಮಾತಾಡುವುದಿಲ್ಲ. ಹಾಗಿದ್ದ ಮೇಲೆ ಕರೆ ಯಾಕೆ ಮಾಡಿದ ಎಂದು ಸಂಶಯದಿಂದಲೇ ಮಾತಾಡಿದೆ. ಅವನು ಮಾತಾಡಿದ ಮೇಲೆ ಗೊತ್ತಾಯಿತು, ನಾನು ಪ್ರಮಾದ ಮಾಡಿಕೊಂಡೇ ಮನೆ ಬಿಟ್ಟಿರುವುದು. ಮನೆಗೆ ಬೀಗ ಹಾಕಿ ಹೊರಟದ್ದು ಮಾತ್ರವಲ್ಲ, ಶುಭಾ ಕೋಣೆ ಬಾಗಿಲಿನ ಚಿಲಕವನ್ನೂ ಏರಿಸಿ ಬಂದು ಬಿಟ್ಟಿದ್ದೇನೆ. ಕೋಣೆಯೊಳಗೆ ಅವಳು ಬಂಧಿಯಾಗಿದ್ದಾಳೆ. ಅವಳ ಮೊಬೈಲು ಕೋಣೆಯೊಳಗಿಲ್ಲವಂತೆ. ಬೆಳಿಗ್ಗೆ ಎಂಟಕ್ಕೆಲ್ಲ ಕಾಲೇಜಿಗೆ ಹೊರಡಬೇಕಾದವಳು ಕೋಣೆಯೊಳಗೇ ಇದ್ದಾಳೆ. ಕಿಡಿಕಿ ಬಾಗಿಲು ತೆಗೆದು ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕೂಗಿ ಕರೆದು, ಪಕ್ಕದ ಮನೆಯವರಿಗೆ ರಸ್ತೆ ಬಳಿ ಬರುವಂತೆ ಕೇಳಿಕೊಂಡಳಂತೆ. ಏನೊ ಅನಾಹುತ ನಡೆದುಹೋಗಿದೆ ಎಂದು ಚೇತನಕೃಷ್ಣ ಓಡಿ ಹೋಗಿದ್ದಾನೆ. ಶುಭಾ ಅವನೊಡನೆ ಗೋಳು ತೋಡಿಕೊಂಡು ನನಗೆ ಫೋನು ಮಾಡಿಸಿದ್ದಾಳೆ. + +ಗಂಟೆ ನೋಡಿದೆ ಹತ್ತೂ ಮುಕ್ಕಾಲು ಆಗಿತ್ತು. ಎರಡು ದಿನ ಇದ್ದು ಬರಲು ಮಡಿಕೇರಿಗೆ ಹೊರಟಿದ್ದೆ. ಇನ್ನೇನು ಎರಡು ಗಂಟೆ ದಾರಿಯಷ್ಟೆ ಬಾಕಿ ಇತ್ತು. ನಾನು ಮಾಡಿದ ಅನಾಹುತದಿಂದ ಗಾಬರಿಯಾಯಿತು. ಬೆಳಿಗ್ಗೆಯಿಂದ ಕೋಣೆಯೊಳಗೆ ಅಂದರೆ, ಶೌಚಕ್ಕು ಹೋಗಲಾಗದೆ ಒದ್ದಾಡುತ್ತಿಬೇಕು, ಕಾಲೇಜು ಬೇರೆ ತಪ್ಪಿ ಹೋಯಿತು. ನಕಲಿ ಕೀಲಿ ಮತ್ತೊಂದು ಕೋಣೆಯಲ್ಲಿದೆ. ಅವಳ ಒದ್ದಾಟವನ್ನು ಊಹಿಸಿಕೊಂಡಷ್ಟು ನನಗೆ ಗಾಬರಿಯೇ ಆಗುತ್ತಿತ್ತು. ತಿರುಗಿ ಬೆಂಗಳೂರಿಗೆ ಹೋಗಲು ಬಸ್ಸು ಇಳಿದೆ. ಬೆಂಗಳೂರಿಗೆ ಹೋಗುವ ಬಸ್ಸಿಲ್ಲದಿದ್ದರೆ, ಮೈಸೂರಿಗಾದರು ಬಸ್ಸು ಸಿಗಬಹುದು. ಅಲ್ಲಿಂದ ನಾನ್ ಸ್ಟಾಪು ಹಿಡಿಯುವುದು ಎಂದೆಲ್ಲ ಯೋಚಿಸಿಕೊಂಡು ಬಸ್ಸಿಗಾಗಿ ಹುಡುಕಾಡಿದೆ. ಅತ್ತ ಹೋಗುವ ಬಸ್ಸು ಒಂದೂ ಇರಲಿಲ್ಲ. ಬರಬಹುದೆಂದು ಕಟ್ಟೆಯಲ್ಲಿ ಕುಳಿತೆ. + +ಹೀಗೆ ಮಾಡಿಕೊಂಡು ನಾನು ಯಾಕೆ ಮಡಿಕೇರಿಗೆ ಹೊರಟೆ? ಶುಭಾ ಕೋಣೆ ಬಾಗಿಲೇರಿಸಿ, ಹೊರಗಿನಿಂದ ಎಷ್ಟು ಹೊತ್ತಿಗೆ ಚಿಲಕ ಹಾಕಿದೆನೊ ನನಗೇ ಗೊತ್ತಾಗುತ್ತಿಲ್ಲ. ತಲೆದಿಂಬಿನ ಕೆಳಗೆ ಯಾವತ್ತೂ ಅವಳ ಮೊಬೈಲು ಇರುತ್ತದೆ. ಆದರೆ ಈಗ ಇಲ್ಲ ಅಂದರೆ, ಅದನ್ನೂ ನಾನೇ ತೆಗೆದು ಹೊರಗೆ ಇಟ್ಟೆನೆ…. ನಾನು ಹೀಗೆ ಮಾಡಿದ್ದೂ ನೆನಪಾಗುತ್ತಿಲ್ಲ. ನನಗೆ ನನ್ನನ್ನೇ ವಿಚಿತ್ರವಾಗಿ ಕಾಣತೊಡಗಿತು. ಮೊನ್ನೆ ಇದ್ದಕ್ಕಿದ್ದಂತೆ ಒಂದು ದೊಡ್ಡ ದೇವಸ್ಥಾನದ ಅರ್ಚಕರು ನೆನಪಾದರು. ಅದೂ ಐದಾರು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ವರದಿಯಿಂದ! ಅವರು ಅವರ ಮಗನನ್ನು ಕೈ-ಕಾಲುಗಳಿಗೆ ಚೈನು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರಂತೆ. ಅವನು ಬುದ್ಧಿಮಾಂದ್ಯ, ಅವನನ್ನು ನೋಡಿಕೊಳ್ಳುವುದು ತೊಂದರೆ ಎಂದು ಆರೇಳು ವರ್ಷದ ಬಾಲಕನಾಗಿದ್ದಾಗಿನಿಂದಲೂ ಹೀಗೆ ಕೋಣೆಯೊಳಗೆ ಇಟ್ಟಿದ್ದರಂತೆ. ಅವನಿಗೆ ಮೂವತ್ತೈದು ವರ್ಷವಾದಾಗ ವಿಷಯ ಹೇಗೋ ಬಯಲಾಗಿ, ಅರ್ಚಕರ ವಿರುದ್ಧ ಮಾನವ ಹಕ್ಕುಗಳ ಆಯೋಗ ಕ್ರಮ ತೆಗೆದುಕೊಂಡು, ಮಗನನ್ನು ಮಾನಸಿಕ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿತ್ತು. ವರದಿ ಓದಿ ಆ ಅರ್ಚಕನನ್ನು ನಾನು ಮನಸಾರೆ ಶಪಿಸಿದ್ದೆ. ಪೂಜೆ, ಭಕ್ತಿ, ಕ್ರೌರ‍್ಯಗಳ ಸಮ್ಮಿಲನದ ಆ ಅರ್ಚಕರ ವ್ಯಕ್ತಿತ್ವ ವಿಚಿತ್ರವೆನಿಸಿತ್ತು. + +ಅದಕ್ಕು, ಈಗ ನಾನು ಬೀಗ ಹಾಕಿ ಬಂದಿರುವುದಕ್ಕು ನಂಟು ಬೆಸೆಯುತ್ತಲೇ ಇತ್ತು ನನ್ನ ಮನಸ್ಸು. ಶುಭಾ ನನ್ನ ಕೊನೆ ತಂಗಿ ಮಗಳು. ಮಂಗಳೂರಿನ ಹುಡುಗಿ. ಅವಳಿಗೆ ಬೆಂಗಳೂರಿನಲ್ಲೆ ಎಂಜಿನಿಯರಿಂಗ್ ಓದಬೇಕೆಂದು ಹಟ. ನನ್ನ ತಂಗಿಯೂ ಅವಳ ಹಟಕ್ಕೆ ತಲೆ ಬಗ್ಗಿಸಿದ್ದಳು. ಅಲ್ಲಿ ಸರಿಯಿಲ್ಲ, ಇಲ್ಲಿ ಸರಿಯಿಲ್ಲ ಎಂದು ಸೇರಿದ ಹಾಸ್ಟೆಲ್, ಪಿಜಿ ಬಿಟ್ಟು ನನ್ನ ಮನೆಗೆ ಬಂದಿದ್ದಳು. ನನಗೊ ‘ಇಲ್ಲ’ ಎಂದು ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಒಡಹುಟ್ಟಿದ ತಂಗಿ. ನಾವು ಸಹಾಯ ಮಾಡದೆ ಯಾರು ಮಾಡುವುದು. ಆರು ವರ್ಷದ ಹಿಂದೆ ಬಂದಿದ್ದ ಕ್ಯಾನ್ಸರ್ ಕಾಯಿಲೆ ನನ್ನ ಶಕ್ತಿಯನ್ನೆಲ್ಲ ಹೀರಿ ಬಿಟ್ಟಿತ್ತು. ಶುಭಾನನು ನನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು ಎಂದು ಅನಿಸಿತಾದರು ‘ಇಲ್ಲ’ ಎಂದು ಹೇಳಲು ಸಾಧ್ಯವಾಗಲಿಲ್ಲ. ನನ್ನ ಸಮಸ್ಯೆಗೊತ್ತಿದ್ದ ತಂಗಿಯೂ ಮಗಳಿಗೆ ನನಗೆ ಸಹಾಯ ಮಾಡಿಕೊಡುವಂತೆ ಕಿವಿಮಾತು ಹೇಳಿ ಹೋಗಿದ್ದಳು. ನನ್ನ ತಂಗಿಯ ಮುದ್ದಿನ ಮಗಳಿಗೆ ಕೆಲಸ ಮಾಡಿ ಗೊತ್ತಿಲ್ಲ. ಓದಲಿಕ್ಕಾಗಿಯೇ ಬಂದಿರುವ ಅವಳಿಗೆ ತೊಂದರ ಕೊಡುವುದು ಬೇಡವೆನಿಸಿತು ನನಗೆ. ಕೆಲವೊಮ್ಮೆ ಕೆಲಸ ಮಾಡಿಕೊಳ್ಳಲಾಗದೆ ಆಯಾಸವಾಗುತ್ತಿತ್ತು. ಕಿರಿ-ಕಿರಿಯಾಗುತ್ತಿತ್ತು. ಅವಳಿಗೆ ಜೋರು ಮಾಡಿಬಿಡಬೇಕು ಎಂದೆಲ್ಲ ಅನಿಸುತ್ತಿತ್ತು. + +ಈಗಿನ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಗದರಿದರೆ ಕೊರಗಬಹುದು, ಆಗ ಓದಲು ತೊಂದರೆಯಾಗಬಹುದು ಎಂದೆಲ್ಲ ಯೋಚಿಸಿ ಸುಮ್ಮನಾಗುತ್ತಿದ್ದೆ. ಜೊತೆಗೆ ಅದೇನೊ ‘ಸ್ಪೇಸ್’ ಬೇಕು ಹೇಳಿಕೊಂಡು, ಫೋನು ಬಂದಾಗಲೆಲ್ಲ ಕೋಣೆ ಬಾಗಿಲು ಹಾಕಿಕೊಳ್ಳುತ್ತಿದ್ದಳು. ಕೊನೆಗೆ ಸ್ಪೇಸ್ ಸಾಲದು ಎಂದು ಮನೆ ಟೆರೇಸಿಗೆ ಮೊಬೈಲು ಹಿಡಿದು ಓಡುತ್ತಿದ್ದಳು. ಇವೆಲ್ಲ ನನಗೆ ಯಾವತ್ತು ವಿಷಯವೇ ಆಗಲಿಲ್ಲ. ಅವಳ ಸೋಮಾರಿತನ, ನಾಜೂಕುಗಳಿಂದ ನನ್ನ ಮನಸ್ಸು ವರ್ಕ್‌ಶಾಪ್ ಆಗುತ್ತಿದ್ದದ್ದು ನಿಜ. ಅವಳು ಕಾಲೇಜಿಗೆ ಹೊರಡುವಾಗ ಕೈಯಲ್ಲಿ ಹಾರ್ಲಿಕ್ಸ್ ಲೋಟ ಹಿಡಿದು ನಿಂತಾಗ, ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿ ಚೀಲಕ್ಕೆ ಹಾಕುವಾಗ, ಕಾಲೇಜಿನಿಂದ ಬಂದವಳಿಗೆ ಬಿಸಿಯಾಗಿ ಟೀ ಮಾಡಿಕೊಡುವಾಗ ಈ ವರ್ಕ್ ಶಾಪ್ ಗಪ್ ಚಿಪ್ ಆಗುತ್ತಿತ್ತು. ರಾತ್ರಿ ಮಲಗುವಾಗ ಕೆಲಸ ಶುರು ಮಾಡುತ್ತಿತ್ತು. ಬೆಳಿಗ್ಗೆ ಅವಳು ಹಾರ್ಲಿಕ್ಸ್ ಕುಡಿಯಲು ಬರುವಾಗ ನನಗೆ ಆಗುವ ತೊಂದರೆ ಹೇಳಿಬಿಡಬೇಕು, ಸ್ವಲ್ಪವಾದರು ಕೆಲಸ ಮಾಡಿಕೊಡು, ಮನೆ ಕೆಲಸ ಮಾಡಿಕೊಂಡು ಎಂಜಿನಿಯರಿಂಗ್ ಓದುವ ಮಕ್ಕಳಿಲ್ಲವೆ…., ಬೀದಿ ದೀಪಗಳ ಕೆಳಗೆ ಓದಿ ಮುಂದೆ ಬಂದವರಿಲ್ಲವೆ… ನೀನು ಬೆಂಗಳೂರೇ ಬೇಕೆಂದು ಬಂದಾಗ ಇಲ್ಲಿ ಬಂದ ತೊಂದರೆಗಳನ್ನು ಎದುರಿಸಲು ಕಲಿಯಬೇಕು, ಅದು ಬಿಟ್ಟು ಸುಖ ಹುಡುಕಿಕೊಳ್ಳುವುದು ನಿಲ್ಲಿಸಬೇಕು ಎಂದೆಲ್ಲ ಭಾಷಣ ಬಿಗಿಯುತ್ತೇನೆ ಎಂದು ಯೋಚಿಸಿಕೊಳ್ಳುವುದು, ಬೆಳಿಗ್ಗೆ ಅವಳು ಅಡುಗೆ ಕೋಣೆಗೆ ಬಂದಾಗ ಹಾರ್ಲಿಕ್ಸ್ ತಣ್ಣಗಾಯಿತ? ಬಿಸಿ ಮಾಡಬೇಕ? ಮಧ್ಯಾಹ್ನಕ್ಕೆ ಸ್ವಲ್ಪ ಜಾಸ್ತಿ ಪಲಾವು ಹಾಕಿದ್ದೇನೆ. ನಿನಗೆ ಇಷ್ಟ ತಾನೆ, ಹಾಕಿದ್ದೆಲ್ಲ ತಿನ್ನು…. ಹೀಗೆ ಸಾಗುತ್ತಿತ್ತು ನನ್ನ ಮಾತು. ‘ಆಗಲಿ… ದೊಡ್ಡಮ್ಮ…’ ಎಂದು ರಾಗ ಎಳೆದು ಸವಿನಯದಿಂದ ಶುಭನೂ ಹೇಳುತ್ತಿದ್ದಳು. ಪಾಪದ ಹುಡುಗಿ, ಅವಳಿಗೆ ಹೇಗೆ ಗೊತ್ತಾಗಬೇಕು ನನ್ನ ತಾಕಲಾಟಗಳು! + +ಸೋಮವಾರಪೇಟೆ ಬೆಂಗಳೂರು ಬಸ್ಸು ಬರುವುದು ಕಾಣಿಸಿತು. ದಡಬಡ ಎದ್ದು ಬಸ್ಸು ನಿಲ್ಲುವ ಮೊದಲೇ ಹತ್ತುವ ಆತುರ ಮಾಡಿದೆ. ಕೈಯಲ್ಲಿದ್ದ ಒಂದು ಚೀಲ ಬಿತ್ತು. ನನ್ನ ತಮ್ಮನ ಮಗ ಸುಧಾಂಶುಗೆ ಕೊಂಡಿದ್ದ ಒಂದು ಕೆಜಿ ಕೇಕನ್ನು ಬಹಳ ಜಾಗರೂಕತೆಯಿಂದ ಹಿಡಿದುಕೊಂಡು ಬಂದಿದ್ದೆ. ನನ್ನ ಹಾಗೆ ಬಸ್ಸು ಹತ್ತಲು ಆತುರ ಮಾಡಿದ ಮತ್ತೊಬ್ಬರು ಅದನ್ನು ಮೆಟ್ಟಿದರು. ನಾನು ಜೋರಾಗಿ ಕಿರುಚಿಕೊಂಡೆ. ಥಟ್ಟನೆ ಎಚ್ಚರವಾಯಿತು. ಓಹ್ ಕನಸು…! ಮನಸ್ಸಿನ ಉದ್ವೇಗವೆಲ್ಲ ಮಂಜಿನಂತೆ ಕರಗಿ ಹೋಯಿತು. ಶುಭಾನಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನಕ್ಕೆ ಇರುವ ಬುತ್ತಿಯನ್ನು ಡಬ್ಬಿಗೆ ಹಾಕಿ ಕುಳಿತ್ತಿದ್ದ ನನಗೆ, ಅಲ್ಲೆ ನಿದ್ದೆ ಬಂದು ಹೋಗಿತ್ತು, ನನ್ನ ಮೊಬೈಲು ಬಡಿದುಕೊಳ್ಳುತ್ತಿದೆ. ಇದು ಕನಸಲ್ಲವಲ್ಲ ಎಂದು ಧೈರ್ಯದಿಂದ ಅದನ್ನು ಎತ್ತಿಕೊಂಡೆ. ಶುಭಾನ ಫೋನು. ‘ಕೋಣೆಯಿಂದ ನಡುಕೋಣೆಗೆ ಫೋನು ಮಾಡಬೇಕ? ಬಂದು ಮಾತಾಡು’ ಹೇಳಿದೆ. + +‘ದೊಡ್ಡಮ್ಮ, ನೀವು ಕೋಣೆ ಚಿಲುಕ ಹಾಕಿಬಿಟ್ಟಿದ್ದೀರಿ. ತೆಗೀತೀರ…. ನಾನು ಕಾಲೇಜಿಗೆ ಹೊರಡಬೇಕಲ್ಲ.’ಏನು ಹೇಳಲಿ… ಅರ್ಚಕರ ವ್ಯಕ್ತಿತ್ವ! + +ಹಿರಿಯ ಪತ್ರಕರ್ತೆ. ಕಥೆಗಾರ್ತಿ. ‘ನೆನಪುಗಳ ಬೆನ್ನೇರಿ’ ಇವರ ಕಥಾ ಸಂಕಲನ. ‘ಕಾಯದ ಕಾರ್ಪಣ್ಯ’ ಲೈಂಗಿಕ ಕಾರ್ಯಕರ್ತೆಯರ ಕುರಿತ ಕಥನ. \ No newline at end of file diff --git a/Kenda Sampige/article_53.txt b/Kenda Sampige/article_53.txt new file mode 100644 index 0000000000000000000000000000000000000000..ec57d5757c8c524b72a89b9a1b321c45441d4e59 --- /dev/null +++ b/Kenda Sampige/article_53.txt @@ -0,0 +1,27 @@ +ಮಧು. ವೈ.ಎನ್‌. ಅವರು “ಕನಸೇ ಕಾಡು ಮಲ್ಲಿಗೆ” ಮೂಲಕ ಕನ್ನಡ ಕಾದಂಬರಿ ಪ್ರಕಾರಕ್ಕೆ ತಮ್ಮ ಚೊಚ್ಚಲ ಕೊಡುಗೆ ನೀಡಿದ್ದಾರೆ. ಗದ್ಯ ಸಾಹಿತ್ಯದಲ್ಲಿ ಹಿಡಿತ ಸಾಧಿಸಿರುವ ಮಧು ಅವರು ಈಗಾಗಲೇ ‘ಕಾರೇಹಣ್ಣು’ ಮತ್ತು ‘ಫೀಪೋ’ ಎಂಬ ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ತಂತ್ರಜ್ಞಾನ ಕುರಿತ ಇವರ ಲೇಖನಗಳ ಸಂಗ್ರಹ ‘ಡಾರ್ಕ್ ವೆಬ್’ ಅತಿ ಹೆಚ್ಚು ಚರ್ಚೆಗೊಳಗಾದ ಕೃತಿ. ಇವರ ಡಾರ್ಕ್ ವೆಬ್ ಕೃತಿ ಓದಿದಾಗ ನನಗೆ ಅಚ್ಚರಿಯಾಗಿತ್ತು. ಅದು ಟೆಕ್ನಾಲಜಿ ಅವೇರ್ನೆಸ್ ಮೂಡಿಸುವ ಕೃತಿಯಾದುದರಿಂದ ಅದೊಂದು ಮಾಹಿತಿ ಪೂರ್ಣ‌ ಹೊತ್ತಿಗೆಯಾಗಿದೆ, ಕಠಿಣ ವಿಚಾರಗಳೊಂದಿಗೆ ನೀರಸಭಾವ ಕಾಡುತ್ತದೆ ಎಂದು ಭಾವಿಸಿದ್ದೆನು. + +ಈ ಕೃತಿಯನ್ನು ಓದಲು ಕೈಗೆತ್ತಿಕೊಂಡಾಗ ನನಗೆ ಈ ಕೃತಿಯಲ್ಲಿದ್ದ ತಂತ್ರಜ್ಞನಿಗಿಂತ ಮಧು ಅವರಲ್ಲಿದ್ದ ಕಥೆಗಾರನೇ ಹೆಚ್ಚು ಪ್ರಬಲವಾಗಿ ಪ್ರಕಟಗೊಂಡಿದ್ದಾನೆಂದು ಅನಿಸಿತು. ಸೊಗಸಾದ ನಿರೂಪಣೆ, ತಲುಪಿಸಬೇಕಾದ ಸಂಕೀರ್ಣ ವಿಷಯವನ್ನು ದೈನಿಕ ಘಟನೆಗಳೊಂದಿಗೆ ಸಮೀಕರಿಸಿ ಸರಳವಾಗಿ ಅರ್ಥೈಸುವ ಇವರ ನಿರೂಪಣೆ ಓದುಗರನ್ನು ಆವರಿಸಿಬಿಡುತ್ತದೆ. + +(ಮಧು ವೈ.ಎನ್.‌) + +ಈಗ ಈ ಮೂರು ಕೃತಿಗಳಿಗಿಂತ ವಿಭಿನ್ನತೆಗೆ ತೆರೆದುಕೊಂಡ ಕಾದಂಬರಿ ‘ಕನಸೇ ಕಾಡು ಮಲ್ಲಿಗೆ’. ಲೇಖಕರು ಬೆಳೆದ ತುಮಕೂರು ಮತ್ತು ಶಿರಾ ಪ್ರದೇಶಗಳ ಭಾಷಾ ಸೊಗಡನ್ನು ಗರ್ಭೀಕರಿಸಿಕೊಂಡು ಅಪ್ಪಟ ಗ್ರಾಮೀಣ ಶೈಲಿಯಲ್ಲಿ ಮೈದಾಳಿದ ಪ್ರೇಮ ಕಾದಂಬರಿ ಇದಾಗಿದೆ. ತನ್ನದೇ ಮೂಲ ಭಾಷೆಯಲ್ಲಿ ಬರೆದಾಗ ತನ್ನೆದೆಯ ಮಾತುಗಳನ್ನು, ಮೌನತಾಳಿದ್ದ ದನಿಯನ್ನು ಅತ್ಯಂತ ಪ್ರಾಮಾಣಿಕವಾಗಿ ವ್ಯಕ್ತಪಡಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಮಧು ಅವರ ಈ ಪುಸ್ತಕ ಓದುವರನ್ನು ಸೆಳೆಯುತ್ತದೆ. + +ರೆಸಿಡೆನ್ಷಿಯಲ್ ಶಾಲೆಯೊಂದರಲ್ಲಿ ಮುಗ್ಧ ಹುಡುಗ ಹುಡುಗಿಯ ನಡುವೆ ಅರಳುವ ಪ್ರೇಮ ಭಾವಗಳ ಕೌತುಕ ವಿಷಯವಸ್ತುವನ್ನು ಹೊಂದಿದ ಈ ಕಾದಂಬರಿ ರೋಮಾಂಚನಕಾರಿಯಾಗಿ ಮೂಡಿದೆ. ಈ ಕೃತಿಯಲ್ಲಿ ವಿಶಿಷ್ಟ ಎನಿಸಿದ ಅಂಶವೆಂದರೆ ‘ಮೊದಲಿಗಿಂತ ಮೊದಲು’ ಎಂಬ ಲೇಖನ ಗೋವಾ ಬೀಚ್‌ನ ರಮಣೀಯತೆಯೊಂದಿಗೆ ಕಾದಂಬರಿಗೆ ಎಂಟ್ರಿ ನೀಡಿ ‘ಕೊನೆಯ ನಂತರದ ಕೊನೆ’ ಲೇನನವು ಓದುಗರನ್ನು ಕಾದಂಬರಿಯಿಂದ ಎಕ್ಸಿಟ್ ಮಾಡುತ್ತದೆ. + +ಇಲ್ಲಿ ನಲವತ್ತೊಂಬತ್ತು ಪುಟ್ಟ ಪುಟ್ಟ ಅಧ್ಯಾಯಗಳು ಇಡೀ ಕಾದಂಬರಿಯ ಸಾರಸತ್ವವನ್ನು ಉಣಬಡಿಸುತ್ತವೆ. ಹದವರಿತ ಭಾಷೆಯಲ್ಲಿ ಮೈನವಿರೇಳಿಸುವ ಸಂಭಾಷಣೆಗಳು ಓದುಗರಿಗೆ ಕಚಗುಳಿ ಇಡುತ್ತವೆ. ಲೇಖಕರ ಬಾಲ್ಯದ ಅನುಭವಗಳ ಒಟ್ಟು ಮೊತ್ತ ಈ ಕನಸೇ ಕಾಡು ಮಲ್ಲಿಗೆ. ಇಲ್ಲಿ ಬಹುತೇಕ ನೈಜ ಅನುಭವಗಳೆ ಕಾದಂಬರಿಯ ಜೀವ ದ್ರವ್ಯವಾಗಿದ್ದರೂ ಲೇಖಕರು ತಮ್ಮ ಬರಹದ ಸ್ವಾತಂತ್ರ್ಯವನ್ನು ಬಳಸಿಕೊಂಡು ಸಂದರ್ಭೋಚಿತವಾಗಿ ಪೂರಕ ಪಾತ್ರಗಳನ್ನ ಕಲ್ಪಿಸಿಕೊಂಡು ಆ ಕಥೆಗೆ ವಿಭಿನ್ನ ಆಯಾಮಗಳನ್ನು ಕಲ್ಪಿಸಿದ್ದಾರೆ. + + + +ಲೇಖಕರ ಬಾಲ್ಯ ಗ್ರಾಮ್ಯ ಜಗತ್ತಿನೊಂದಿಗೆ ಬೆಸೆದುಕೊಂಡಿದ್ದರಿಂದ ಗ್ರಾಮೀಣ ಪ್ರದೇಶಗಳ ವರ್ಣನೆ ಹಾಗೂ ಪ್ರಕೃತಿಯ ಮನಮೋಹಕ ದೃಶ್ಯಾವಳಿಗಳು ಇಂದಿನ ಆಧುನಿಕ ಜನರಿಗೆ ಹೊಸದೊಂದು ಆಪ್ತ ಲೋಕವನ್ನು ಪರಿಚಯಿಸುತ್ತವೆ. ವಸತಿ ಶಾಲೆಗಳು ಅಲ್ಲಿನ ಮಕ್ಕಳ ಅನುಭವಗಳು ಯಥೇಚ್ಛವಾಗಿ ಇಡಿಕಿರಿದಿವೆ‌. ಯುವ ಲೇಖಕರಾದ ಮಧು ಅವರು ತಮ್ಮ ವಯೋಸಹಜ ಭಾವನೆಗಳನ್ನು ಹಸಿ ಬಿಸಿಯಾಗಿಯೇ ತಾನು ಸೃಷ್ಟಿಸಿದ ಪಾತ್ರಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಆದರೂ ಸೌಜನ್ಯದ ಚೌಕಟ್ಟನ್ನು ಮೀರದೆ ಹದಿಹರೆಯದ ತರಲೆ ತುಂಟಾಟಗಳನ್ನು ಸೊಗಸಾದ ನಿರೂಪಣೆಯಲ್ಲಿ ಬಂಧಿಸಿದ್ದಾರೆ. ಬಾಲ್ಯದನುಭವಗಳ ಕಣಜವಾದ ಕಾದಂಬರಿ ಓದುಗರನ್ನು ತಮ್ಮ ಬಾಲ್ಯಕ್ಕೆ ಕರೆದೊಯ್ಯುತ್ತವೆ. + +ಈ ಕಾದಂಬರಿಯಲ್ಲಿ ಹಾಸ್ಯ, ವ್ಯಂಗ್ಯ, ನೋವು, ಹತಾಶೆ, ಹಂಬಲಿಕೆ, ಹರುಷ, ನಿರಾಸೆ, ದುಃಖ, ಪ್ರೀತಿ, ಪ್ರೇಮ, ಸರಸ, ಭಾವಗಳು ಮಿಳಿತವಾಗಿವೆ. ಹಳ್ಳಿಗಾಡಿನ ಬೈಗುಳಗಳನ್ನ ಯತೇಚ್ಛವಾಗಿ ಬಳಸಿಕೊಂಡಿರುವ ಲೇಖಕರು ವಿಷಯದ ತೀವ್ರತೆಗೆ ಕೆಲವೊಂದು ನುಡಿಗಟ್ಟುಗಳನ್ನು ಪರಿಚಯಿಸಿದ್ದಾರೆ. ಸಂಯೋಜಿತ ದೀರ್ಘ ವಾಕ್ಯಗಳ ರಚನೆಯ ಗೋಜಿಗೆ ಹೋಗದೆ ಸರಳ ವಾಕ್ಯಗಳ ಮೂಲಕ ಕಾದಂಬರಿಗೆ ಸುಂದರ ರೂಪ ಕೊಟ್ಟಿದ್ದಾರೆ. + +ಈ ಕಾದಂಬರಿ ದೃಶ್ಯ ಕಥನದ ಅನುಭೂತಿ ನೀಡುತ್ತದೆ. ಓದುತ್ತಾ ಹೋದಂತೆ ಪಾತ್ರಗಳು, ಸಂಭಾಷಣೆಗಳು, ಸ್ಥಳ, ಘಟನೆಗಳು ನಮ್ಮೊಳಗೆ ಇರುವಂತೆ, ನಮ್ಮ ಅಕ್ಕಪಕ್ಕ ಸರಿದು ಹೋದಂತೆ ಭಾಸವಾಗುತ್ತವೆ. ಅಂತಹ ಶಾಬ್ದಿಕ ಚಮತ್ಕಾರಿಕೆ ಭಾವನಾತ್ಮಕತೆ ಇಲ್ಲಿ ಕಾಣುತ್ತದೆ.ಅತಿರೇಖಕ್ಕೆ ಆಸ್ಪದವಿಲ್ಲದ ಪದ ಭಾವಗಳ ಪ್ರಯೋಗಶೀಲತೆ ಗಮನ ಸೆಳೆಯುತ್ತದೆ. ವಿಶಿಷ್ಟ ಲಹರಿ, ಗಹನವಾದ ಸಂಗತಿಗಳ ಚರ್ಚೆ, ಸೂಕ್ಷ್ಮ ವಿಚಾರಗಳ ಜಾಣ್ಮೆಯ ಅವಲೋಕನ, ಕಲ್ಪನಾಲೋಕದಲ್ಲಿ ವಿಹರಿಸುವಂತೆ ಮಾಡುವ ಸನ್ನಿವೇಶಗಳು ಮನೋಜ್ಞವಾಗಿ ಮೂಡಿಬಂದಿದ್ದು ಓದುಗರಿಗೆ ಅಪ್ಯಾಯಮಾನವಾಗುತ್ತವೆ. + +ಪ್ರೀತಿ ಪ್ರೇಮ ಅಂದಿಗೂ ಇಂದಿಗೂ ಸಾಮಾಜಿಕ ಮಾನ್ಯತೆ ಪಡೆಯುವಲ್ಲಿ ಪೂರ್ಣ ಯಶಸ್ಸು ಸಾಧಿಸಿಲ್ಲ. ಹಾಗಾದರೆ ಈ ಪ್ರೇಮ ಕಾದಂಬರಿಯಲ್ಲಿ ಪ್ರೇಮವನ್ನು ಸಮಾಜ ಒಪ್ಪಿ ಮನ್ನಣೆ ನೀಡಿತಾ? ತಿರಸ್ಕರಿಸಿತಾ? ಪ್ರೇಮಿಗಳು ಒಂದಾಗಿ ಪ್ರೇಮ ಲೋಕದಲ್ಲಿ ಬದುಕಿದರಾ? + + + +ಇಲ್ಲಿ ಪ್ರೇಮಕಥೆ ದುರಂತ ಕಂಡಿತಾ? ಅಥವಾ ಸುಖಾಂತ್ಯಗೊಂಡಿತಾ? ಈಎಲ್ಲಾ ಪ್ರಶ್ನೆಗಳೊಂದಿಗೆ ಸಾಗುವ ಕುತೂಹಲಕಾರಿ ಕಾದಂಬರಿಯೇ ಕನಸು ಕಾಡುಮಲ್ಲಿಗೆ. ಇವುಗಳಿಗೆಲ್ಲ ಉತ್ತರ ದೊರೆಯಲು ಕಾದಂಬರಿಯನ್ನು ನೀವೊಮ್ಮೆ ಓದಲೇಬೇಕು. ಈ‌ ಕಾದಂಬರಿ ಮುಂದಿನ ದಿನಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಹೊಸ ಆಯಾಮದಲ್ಲಿ ಪ್ರಕಟಗೊಳ್ಳುವ ಲಕ್ಷಣಗಳನ್ನು ಹೊಂದಿದೆ ಎಂಬ ಭಾವ ಮೂಡಿಸುತ್ತದೆ. + +ಅನುಸೂಯ ಯತೀಶ್ ಅವರು ಇತಿಹಾಸ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ವೃತ್ತಿಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದಾರೆ. ಕಥೆ ಕವನ ಗಜಲ್ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಬರೆಯುವ ಇವರ ಮೆಚ್ಚಿನ ಆದ್ಯತೆ ವಿಮರ್ಶೆಯಾಗಿದೆ. ಈಗಾಗಲೆ ಅನುಸೂಯ ಯತೀಶ್ ಅವರು ‘ಕೃತಿ ಮಂಥನ’, ‘ನುಡಿಸಖ್ಯ’, ‘ಕಾವ್ಯ ದರ್ಪಣ’ ಎಂಬ ಮೂರು ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. \ No newline at end of file diff --git a/Kenda Sampige/article_530.txt b/Kenda Sampige/article_530.txt new file mode 100644 index 0000000000000000000000000000000000000000..adea2a8d8dd69dd42a1e564888fa69368c760fce --- /dev/null +++ b/Kenda Sampige/article_530.txt @@ -0,0 +1,35 @@ +byರಜನಿ ಗರುಡ|Dec 11, 2017|ಸಂಪಿಗೆ ಸ್ಪೆಷಲ್,ಸಾಹಿತ್ಯ| 0 Comments + +ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. + +byಫಕೀರ್ ಮುಹಮ್ಮದ್ ಕಟ್ಪಾಡಿ|Dec 11, 2017|ಸಾಹಿತ್ಯ| 0 Comments + +ಅವನ ತಂದೆ ಕಾಡ್ಯ ಪೂಜಾರಿ ಊರ ಗುರಿಕಾರ. ತೆಂಗಿನಮರದಿಂದ ಕಳ್ಳು ತೆಗೆದು ಕಾಡ್ಯ ಪೂಜಾರಿ ಕೆಳಗಿಳಿದು ಬಂದವನೇ ಮೊದಲು ಮಕ್ಕಳನ್ನು ಗದರಿಸಿ ಓಡಿಸಿದ. + +byಸುನಂದಾ ಪ್ರಕಾಶ ಕಡಮೆ|Dec 11, 2017|ಸಾಹಿತ್ಯ| 0 Comments + +ನಾವು ದೇವರಿಂದ ಗಳಿಸಿಕೊಳ್ಳಲಾರದ್ದನ್ನು, ಹಿರಿಯರೂ ತಂದೆ ಸಮಾನರೂ ಆದ ಗೌರೀಶರಿಂದ ಪಡೆದಿದ್ದೇವೆ ಎಂಬುದಕ್ಕೆ ಈ ಮೇಲಿನ ಪ್ರಸಂಗ ಹೇಳಿದೆ. ಗೌರೀಶರ ಮನೆ ಇಂದಿಗೂ ನಮ್ಮ ಪಾಲಿಗೆ ಒಂದು ಮಧುರ ಅನುಭೂತಿಯ ಮಂದಿರವೇ ಸರಿ. + +byಸುಪ್ರೀತ್ ಕೆ.ಎಸ್|Dec 9, 2017|ಸಾಹಿತ್ಯ| 0 Comments + +ನಿಸ್ಸಂಶಯವಾಗಿ ಭೈರಪ್ಪ ಒಬ್ಬ ಅದ್ಭುತ ಕಾದಂಬರಿಕಾರ. ಕಾದಂಬರಿಯ ವಸ್ತು, ತಂತ್ರ, ಭಾಷಾ ಪ್ರಯೋಗ, ಸಂಭಾಷಣೆಗಳ ನೈಜತೆ, ಪ್ರಾದೇಶಿಕತೆ ಮೊದಲಾದವುಗಳನ್ನು ಅತೀವ ಶ್ರದ್ಧೆಯಿಂದ ರಚಿಸುತ್ತಾರೆ. ಪಾತ್ರಗಳ ಒಳತೋಟಿಯನ್ನು ಅತ್ಯಂತ ಸಮರ್ಥವಾಗಿ ಭಾಷೆಯಲ್ಲಿ ಬಿಂಬಿಸುತ್ತಾರೆ. + +byಸುಪ್ರೀತ್ ಕೆ.ಎಸ್|Dec 9, 2017|ಸಾಹಿತ್ಯ| 0 Comments + +ಈಗ ಪರೇಡು ನಡೆಯವ ಕ್ರೀಡಾಂಗಣಕ್ಕೆ ಹೋಗಲೇಬೇಕೆಂಬ ಕಟ್ಟಳೆಯಿಲ್ಲ. ಬಿಳಿಯ ಬಟ್ಟೆ , ಬಿಳಿ ಸಾಕ್ಸು, ಬಿಳಿ ಕ್ಯಾನ್ವಾಸ್ ಶೂಗಳಿರಬೇಕೆಂಬ ನಿಯಮವಿಲ್ಲ. ಬೆಳಗಿನ ಹಾಲು ಬ್ರೆಡ್ಡಿನ ಉಪವಾಸವಿಲ್ಲ. + +byವಿಕಾಸ್ ನೇಗಿಲೋಣಿ|Dec 8, 2017|ಸಾಹಿತ್ಯ| 0 Comments + +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. + +byದೇವನೂರ ಮಹಾದೇವ|Dec 8, 2017|ಸಾಹಿತ್ಯ| 0 Comments + +ಭಾರತವು ಏನೇನೋ ಹುಟ್ಟುಹಾಕಿದೆ. ಹುಟ್ಟಿಸುವುದರಲ್ಲಿ ನಾವು ನಿಸ್ಸೀಮರು.  ಈಗ ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದೆ ಸಲಹೆಯೊಂದನ್ನಿಡುವೆ… ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ. + +byದೇವನೂರ ಮಹಾದೇವ|Dec 8, 2017|ಸಾಹಿತ್ಯ| 1 Comment + +ಏನೇನು ಮಾಡಬಹುದಿತ್ತು? ಮೊದಲ ಹೆಜ್ಜೆಯಾಗಿ, ವರ್ತಮಾನದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಜೆಗಳನ್ನು ರೂಪಿಸಲು ಶಿಕ್ಷಣ ಕ್ಷೇತ್ರವನ್ನು ತೆಪ್ಪ ಮಾಡಿಕೊಳ್ಳಬಹುದಿತ್ತು. ಶಿಕ್ಷಣ ಪಡೆಯುವ ಎಳೆಯರು ಆ ವಿದ್ಯೆಯಲ್ಲೆ ನಾಗರಿಕರೂ ಆಗುವಂತೆ ಶಿಕ್ಷಣವನ್ನೂ ರೂಪಿಸಬಹುದಿತ್ತು. + +byದೇವನೂರ ಮಹಾದೇವ|Dec 8, 2017|ಸಾಹಿತ್ಯ| 0 Comments + +ನಿನ್ನೆಯ ಗಾಂಧಿ ಇಂದಿಗೆ ಬದಲಾಯಿಸಿರುತ್ತಾರೆ. ಇಂದಿನ ಗಾಂಧಿ ನಾಳೆಗೆ ಬದಲಾಯಿಸಿರುತ್ತಾರೆ. ಒಬ್ಬ ಮನುಷ್ಯ ನಡೆಯುತ್ತಿರುವ ಕ್ರಮದಲ್ಲೇ ಗಾಂಧಿ ಆಸೆ ಚಿಂತನೆಗಳಿಗೂ ನಡಿಗೆ ಇದೆ. \ No newline at end of file diff --git a/Kenda Sampige/article_531.txt b/Kenda Sampige/article_531.txt new file mode 100644 index 0000000000000000000000000000000000000000..ec4b2164513799fc92856c1a8a7082d1282fa95e --- /dev/null +++ b/Kenda Sampige/article_531.txt @@ -0,0 +1,37 @@ +ಅದು ಸುಮಾರು ಮಧ್ಯಾಹ್ನ ಮೂರರ ಹೊತ್ತು. ಮೋಡ ಕವಿದಿತ್ತು. ನನ್ನ ಕೈಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, ಕಾಸರಗೋಡು, ಗಡಿ ನಾಡ ಘಟಕದವರು ಕತೆಗೆ ಪ್ರಥಮ ಬಹುಮಾನವಿತ್ತ ಪ್ರಶಸ್ತಿ ಪತ್ರವಿತ್ತು. ಆ ದಿನ ನನ್ನ ನೆಚ್ಚಿನ ಕತೆಗಾರ ಎಂ.ವ್ಯಾಸ ಬರುವರೆಂದು ಕಾತುರದಲ್ಲಿ ಕಾದಿದ್ದೆ. ಹೊತ್ತು ಕಳೆದರೂ ಮಧ್ಯಾಹ್ನ ದಾಟಿದರೂ ಅವರು ಬರದಿದ್ದುದರಿಂದ ಅವರ ಮನೆಗೆ ಹೋಗಬೇಕೆಂದು ಹೊರಟು ನಿಂತೆ. ಹೇಗೋ ಅವರ ಮನೆಯ ನಂಬರ್ ಪಡೆದುಕೊಂಡು ಫೋನಿಸಿದೆ. ಭೇಟಿಯಾಗುವ ಬಯಕೆ ನಿವೇದಿಸಿದೆ. ಆಹ್ವಾನವಿತ್ತರು. + +ಸಾಹಿತ್ಯವನ್ನು ಓದುವುದಕ್ಕೆ ಮೊದಲು ಶುರು ಹಚ್ಚಿದ್ದು ಕುವೆಂಪು ಮತ್ತು ವ್ಯಾಸರನ್ನು ಓದುತ್ತಾ. ಅದರಲ್ಲೂ ವ್ಯಾಸರು ನನ್ನನ್ನು ಯಾವ ಪರಿ ಆವರಿಸಿಕೊಂಡಿದ್ದರೆಂದರೆ ಈ ಮನುಷ್ಯ ಮನುಷ್ಯನ ಅಂತರಂಗವನ್ನು ಹೇಗೆ ಇಷ್ಟು ಗಾಢವಾಗಿ ಬಗೆದು ಬರೆಯುತ್ತಾರೆಯೆಂದು ಅಚ್ಚರಿ ಪಡುತ್ತಲೇ, ಬಿಡಿಬಿಡಿಯಾಗಿ ತುಷಾರ, ಉದಯವಾಣಿ, ಮಯೂರದಲ್ಲಿ ಬರುತ್ತಿದ್ದ ಅವರ ಬರಹಗಳನ್ನು ಓದುತ್ತಲೇ ಬೆಳೆದೆ. + +ಈ ಕತೆಗಳು ನನ್ನನ್ನು ಎಷ್ಟರ ಮಟ್ಟಿಗೆ ತಟ್ಟಿ  ಬಿಟ್ಟಿದ್ದವೆಂದರೆ ಅವರ ‘ಬಿಂಬ’ ಎಂಬ ಕತೆಯಲ್ಲಿ ‘ಮಹೀ’ ಯೆಂಬ ಕಥಾನಾಯಕ ಹೇಳುವ ಸಂಭಾಷಣೆ ಹೀಗಿದೆ: “ಹೀಗೆ ಹೇಳಿದರೆ ಅಪರಾಧವಾಗುತ್ತೋ ಗೊತ್ತಿಲ್ಲ. ಆದರೂ ಹೇಳದಿರಲಾರೆ. ಜನದಟ್ಟಣೆಯ ಬೀದಿಗಳಲ್ಲಿ ಅಲೆದಾಗ, ಬಸ್ಸುಗಳಲ್ಲಿ, ರೈಲುಗಳಲ್ಲಿ, ಹೆಣ್ಣು ಮೈಗಳಿಗೆ ಒತ್ತಿ ನಿಂತಾಗ, ಅಂಗೈಗಳಲ್ಲಿ, ಮುಂಗೈಗಳಲ್ಲಿ ಮತ್ತು ದೇಹದ ಎಲ್ಲಾ ಭಾಗಗಳಿಂದಲೂ ಆಕಾರವನ್ನು, ಮೃದುವನ್ನು, ಬಿಸಿಯನ್ನು ಮುಟ್ಟಿದಾಗ ಕಾಮವೊಂದೇ ಜಾಗೃತವಾಗುತ್ತಿರಲಿಲ್ಲ ಪದ್ದೀ… ಒಂದು ರೀತಿಯ ಭದ್ರತೆ ನೆಮ್ಮದಿ, ಶಾಂತಿ ಮನಸ್ಸನ್ನು ಆಹ್ಲಾದಕರವಾಗಿ ಆವರಿಸಿಬಿಡುತ್ತಿತ್ತು. ಇದರ ಮೆಲುಕಾಟದಲ್ಲಿ ಮಂಗಳೂರಿನ ಜನದಟ್ಟಣೆಯ ಸರ್ವೀಸ್ ಬಸ್ಸು, ಸಿಟಿ ಬಸ್ಸುಗಳಲ್ಲಿ ಹೆಂಗಳೆಯರ ಮೈಯನ್ನು ಸ್ಪರ್ಶಿಸಲು ಹಾತೊರೆಯುತ್ತಿರುವ, ಮಗಳನ್ನು ಪಕ್ಕದಲ್ಲಿಟ್ಟುಕೊಂಡು ಹೆಂಗಸೊಬ್ಬಳ ಹಿಂಡಿ ಹಿಪ್ಪೆ ಮಾಡಲು ಕೈ ಚಾಚಿದ ಜೀವಗಳಲ್ಲಿ ಇಂತಹದ್ದೆ ಭಾವವಿತ್ತೇ???!!!” ಎಂದು ಪ್ರಶ್ನಿಸಿಕೊಳ್ಳುತ್ತಾ ವ್ಯಾಸರ ಬರಹ ಮನುಷ್ಯನ ಬದುಕಿನ ವಿಕ್ಷಿಪ್ತತೆಗಳಿಗೆ ಎಷ್ಟು ಸನಿಹ ಎಂದುಕೊಂಡಿದ್ದೇನೆ. + +ಇಂದಿಗೂ ನನ್ನನ್ನು ವ್ಯಾಸರಷ್ಟು ಗಾಢವಾಗಿ ತಟ್ಟಿದ ಬರಹಗಾರನಿಲ್ಲ. ಈ ಬಗ್ಗೆ ಸುಳ್ಳು ಹೇಳಬೇಕೆಂದಿಲ್ಲ. ಬೇರೆ ಬರಹಗಾರರು ನಾನಾ ಕಾರಣಕ್ಕೆ ಇಷ್ಟವಾಗುತ್ತಾರೆ. ಆದರೆ, ವ್ಯಾಸರು ನನ್ನನ್ನು ಆವರಿಸುತ್ತ ಬರೆಯುವ ಹಸಿವನ್ನು ಹುಟ್ಟಿಸಿದರು. ಅಂತಹ ಕತೆಗಾರನನ್ನು ಜೀವನದಲ್ಲಿ ಓಮ್ಮೆಯಾದರೂ ಕಾಣುವ ಆಸೆ ನನ್ನದಾಗಿತ್ತು. ಅದು ಈ ದಿನ ಸಫಲಗೊಳ್ಳುವುದರಲ್ಲಿತ್ತು. + +ಕಾಸರಗೋಡು ಹಳೇ ಬಸ್ಸು ನಿಲ್ದಾಣದಿಂದ ಸಿಟಿ ಬಸ್ಸು ಹಿಡಿಯಬೇಕಿತ್ತು. ಹಿಡಿದೆ. ನಾನು ಕಾಸರಗೋಡಿಗೆ ಕಾಲಿತ್ತಿದ್ದೇ ಮೊದಲು. ಅವರಿವರಲ್ಲಿ ಕೇಳುತ್ತಾ ಮಧೂರು ಹೋಗುವ ಬಸ್ಸಿನಲ್ಲಿ ಹತ್ತಿ ರಾಮದಾಸ ನಗರ ಸಮೀಪ (ಮನೆಯ ವಿಳಾಸ ಈಗ ಸರಿ ನೆನಪಿಲ್ಲ) ಬಸ್ಸು ನಿಲ್ದಾಣದಲ್ಲಿ ಇಳಿದೆ. ಆಗ ಜೋರು ಮಳೆ ಹುಯ್ಯುತ್ತಿತ್ತು. ರಸ್ತೆಯಲ್ಲಿ ನೀರು ಹರಿಯುತ್ತಿತ್ತು. ಸಮೀಪ ನಿಲ್ದಾಣದಲ್ಲಿ ನಿಂತು ಅವರ ಹೆಸರು ಹೇಳಿದೆ ಒಂದೆರಡು ಅಪರಿಚಿತರಿಗೆ. ಯಾರಿಗೂ ಗೊತ್ತಾಗಲಿಲ್ಲ. ಕೆಲ ಮಲೆಯಾಳಿಗಳಲ್ಲಿ ಕೇಳಲು ಭಾಷೆಯ ತೊಡಕಿತ್ತು. ಆಗ ಬಂದ ಹೆಂಗಸೊಬ್ಬಳು ಆ ಡಾಕ್ಟ್ರ ಮನೆಯಲ್ವಾ? ಇದೆಯೆಂದು ನಿಲ್ದಾಣ ಹಿಂದಿನ ಮನೆ ತೋರಿಸಿದರು. ಕೃಪಾನಿಧಿ ಮನೆಯ ಹೆಸರು. + +ನನ್ನ ಮನ ಲೋಕದಲ್ಲಿ ಶಂಕರಿ ನದಿಯ ತಟಗಳು, ದುರ್ಗಾಪುರಗಳು ತುಂಬಿದ್ದವು. ಕಬ್ಬಿಣದ ಗೇಟಿನ ಬಾಗಿಲಿದ್ದ ಮನೆ. ಅದರ ಪಕ್ಕದಲ್ಲಿ ಇನ್ನೊಂದು ಮನೆ. ಸುತ್ತಾ ತೋಟ. ಜೋರು ಮಳೆಯಲ್ಲಿ ಸಂಪೂರ್ಣ ಒದ್ದೆಯಾಗಿದ್ದೆವು ನಾನು ಮತ್ತು ನನ್ನ ಗೆಳತಿ. ಬಾಗಿಲಲ್ಲಿ ನಿಂತಿದ್ದ ಉದ್ದನೆಯ ಜೀವ ನಮ್ಮನ್ನು ಒಳ ಕರೆಯಿತು. ಅವರ ಕಥಾ ಪಾತ್ರಗಳಲ್ಲಿ ಬರುವ ಪಾತ್ರವೇ ಎದುರು ನಿಂತಂತೆ ಗೋಚರಿಸಿತ್ತು ಕಪ್ಪು ಕಣ್ಣುಗಳ ಸುತ್ತಾ ಕಪ್ಪಾಗಿದ್ದವು. + +ಒದ್ದೆ ಮೈಯನ್ನು ಒರೆಸಲು ಕೊಟ್ಟ ಟವೆಲಿನಲ್ಲಿ ಮೈವರೆಸುತ್ತಾ ನನ್ನ ಪರಿಚಯ ಹೇಳಿಕೊಂಡೆ. ಆಗಲೇ ಗೊತ್ತಾಗಿದ್ದು ನನ್ನ ಕತೆಯನ್ನು ಆರಿಸಿದವರಲ್ಲಿ ಅವರು ಒಬ್ಬರಾಗಿದ್ದರಂತೆ. ಮಾತುಗಳು ಮುಂದುವರೆಯಿತು. ನನ್ನ ಗೆಳತಿಗೋ ಸಾಹಿತ್ಯವೆಂದರೆ ಸುಡು ತಿಂದರೂ ತಿಳಿಯದು. ಇಂಗ್ಲೀಷ್ ಸಾಹಿತ್ಯ ಬರೀ ಪರೀಕ್ಷೆಗಾಗಿ ಓದಿಕೊಂಡವಳು ಅವರ ಪತ್ನಿಯೊಡನೆ ಮಾತಿಗೆ ನಿಂತಳು ಮನೆಯೊಳಗೆ ಆ ದಿನ ನಾವು ಸಾಹಿತ್ಯದ ಬಗ್ಗೆಗೆನೂ ಹೆಚ್ಚಾಗಿ ಚರ್ಚಿಸಲಿಲ್ಲ. ಮಾತು ನನ್ನ ಕುಟುಂಬ ಅವರ ಕುಟುಂಬದತ್ತ ಹೊರಳಿತು. + +ಅವರ ಮೊಮ್ಮಗನ ಕಲಾಕೃತಿಯನ್ನು ತೋರಿಸಿದರು. ಹೀಗೆ ಮಾತನಾಡುತ್ತಾ ಅವರ ಕತೆಗಳ ಬಗ್ಗೆ ಹೊರಳಿಕೊಂಡೆ. ನಾ ಓದಿದ ಅವರ ಕತೆಗಳ ಬಗ್ಗೆ ಹೇಳಿದೆ. ಸ್ವಲ್ಪ ಉತ್ಸುಕರಾದಂತೆ ಕಂಡರು. ಕಿರಿ ವಯಸ್ಸಿನಲ್ಲಿ ಬರೆಯಲು ಶುರು ಹಚ್ಚಿಕೊಂಡಿದ್ದನ್ನು ನುಡಿದರು. ನಿಧಾನವಾಗಿ ಬರವಣಿಗೆ, ಆ ಬಾಲ್ಯದಲ್ಲಿ ನಡೆದ ದುರಂತದ ಬಗ್ಗೆ ಹೇಳಿಕೊಂಡರು. + +ಅವರ ಕತೆಗಳ ಬಗ್ಗೆ ಸಾಹಿತ್ಯ ಲೋಕ ಹೆಚ್ಚು ಗಮನ ಹರಿಸದಿದ್ದುದರ ಬಗ್ಗೆ ನಿರ್ಲಿಪ್ತತೆ ತೋರಿಸಿದರು. ಒಂದು ಸಲ ಯಾವುದೋ ಸನ್ಮಾನಕ್ಕೆ ಕರೆದಿದ್ದರಂತೆ. ಸನ್ಮಾನಕ್ಕೆ ಹೋದರೆ ನಮ್ಮನ್ನು ಮಾತನಾಡಿಸುವವರಿಲ್ಲ ಕನಿಷ್ಠ ಸನ್ಮಾನಿಸುವಾಗ ನಮ್ಮ ಮುಖ ಕೂಡಾ ನೋಡುವುದಿಲ್ಲ ಬರೇ ಪತ್ರಿಕೆಗಳಿಗೆ ಪೋಸ್ ಕೊಡುತ್ತಾರೆ. ಅದೇ ಕೊನೆ ಮತ್ತೆ ಯಾವುದೇ ಸನ್ಮಾನಕ್ಕೆ ಹೋಗುವುದಿಲ್ಲ ಎಂದರು. ಹೌದು ವ್ಯಾಸರೆಂದರೆ ಸಭೆ ಸನ್ಮಾನಗಳಿಂದ ಬಹು ದೂರ. + +ವ್ಯಾಸರ ಬರಹದ ಬಗ್ಗೆ ಸಾಹಿತ್ಯ ಲೋಕದಲ್ಲಿ ಸರಿಯಾದ ಚರ್ಚೆ ನಡೆಯಲಿಲ್ಲ. ಅವರು ಪ್ರಚಾರದಿಂದ ದೂರವಿದ್ದರು. ಒಂದು ರೀತಿ ಅಸ್ಪೃಶ್ಯನಂತೆ. ಒಂದಿಬ್ಬರೂ ಅವರ ಬರಹದ ಬಗ್ಗೆ ಪಿ.ಹೆಚ್.ಡಿ ಮಾಡಲು ಬಂದಿದ್ದರೂ ಮತ್ತೆ ಬರಲಿಲ್ಲವಂತೆ. ಅಥವಾ ಇನ್ನೇನೋ ಕಾರಣಗಳಿಂದ ಸಾಧ್ಯವಾಗಲಿಲ್ಲವಂತೆ. + +ಮತ್ತೆ ನನ್ನ ಬರವಣಿಗೆಯ ವಿಷಯಕ್ಕೆ ಬಂದಾಗ ‘ವಿಮರ್ಶಕರಿಗೆ ಜಾಸ್ತಿ ಮಣೆ ಕೊಡಬೇಡ, ನೀನೆ ಕತೆಯ ಪಾತ್ರವಾಗಿ ಬರೆ, ಪಾತ್ರಕ್ಕೆ ತಕ್ಕುದಾದ ಸಂಭಾಷಣೆ ಇರಲಿ. ಸಾಮಾನ್ಯನ ಬಾಯಿಯಿಂದ ದೊಡ್ಡ ಮಾತುಗಳನ್ನು ಹೇಳಿಸಬೇಡ, ಮಾತು ಪಾತ್ರದ ಬೌದ್ಧಿಕ ಮಟ್ಟದಲ್ಲಿರಲಿ’ಯೆಂದರು. ಎಂ.ವ್ಯಾಸರು ಕನ್ನಡದ ವಿಶಿಷ್ಟ ರೀತಿಯ ಬರಹಗಾರರು. ಕನ್ನಡದ ಮಾತ್ರವಲ್ಲ. ಭಾರತದ್ದು ಕೂಡಾವೆಂದು ಯಾರೋ ಬರೆದುದನ್ನು ಹೇಳಿದರು. + +ಆ ದಿನ ಕಾಫಿ , ತಿಂಡಿಗಳ ನಂತರ, ಕೊನೆಗೆ ಹಿಂತಿರುಗುವ ಮುನ್ನಾ ಇದು ಇತ್ತೀಚೆಗಿನ ಹೊಸ ಪ್ರಯೋಗ ಓದಿ ಎನ್ನುತ್ತಾ “ದಡ” ಎಂಬ ಕತೆಯನ್ನು ಕೈಗಿಟ್ಟು ಮನೆಯ ಸಮೀಪದ ಬಸ್ಸು ನಿಲ್ದಾಣದವರೆಗೆ ಬಂದು ಬೀಳ್ಕೊಟ್ಟಿದ್ದರು. ಮತ್ತೆ ನಮ್ಮ ಮಾತುಕತೆ ಪೋನಿನಲ್ಲಿ ನಡೆಯುತ್ತಿತ್ತು. ಒಂದು ಸಲ ‘ಅಷ್ಟು ಸಣ್ಣದಾಗಿ ಯಾಕೆ ಕವನ ಬರೆಯುತ್ತೀ?’ ಆಕ್ಷೇಪವೆತ್ತಿದ್ದರು. ಮತ್ತೊಂದು ಬಾರಿ ಸುಮಾರು ದಿನದನಂತರ ಪೋನಿಸಿ ” ಕೆಲವು ಹಿರಿ ಜೀವಗಳು ತೀರಿಕೊಂಡಿದ್ದುದರಿಂದ ಮನಸ್ಸಿಗೆ ಬೇಸರವಾದುದ್ದರಿಂದ ಕರೆ ಮಾಡಲಾಗಲಿಲ್ಲ” ಎನ್ನುತ್ತಾ ಬೇಸರಿಸಿದರು. + +ಅವರಿಗೆ ಸಾಹಿತ್ಯ ಲೋಕ ತನ್ನನ್ನು ಗುರುತಿಸಿಲ್ಲವೆಂಬುದು ಬೇಸರ ತರಿಸಿರಬಹುದು ಹೊರಗೆ ಹೇಳಿಕೊಳ್ಳಲು ಆಗದಿದ್ದರೂ. ಆ ದಿನ ಮುರಳೀಧರ ಉಪಾಧ್ಯಾಯರು ಅವರ ಬಗ್ಗೆ ಎರಡು ಮಾತು ಉದಯವಾಣಿಯಲ್ಲಿ ಬರೆದಾಗ ಕರೆ ಮಾಡಿ ‘ಉಪಾಧ್ಯಾಯರು ನನ್ನ ಬಗ್ಗೆ ಬರೆದಿದ್ದಾರೆ ಓದಿದ್ದಿರಾ’ ಎಂದು ಕೇಳಿದರು. ಹೌದೆಂದೆ. ಅದರನಂತರ ಕೊನೆಯ ಹೊತ್ತಿನಲ್ಲಿ ತಂಗಾಳಿಯಾಗಿ ಬೀಸಿದಿರಿ ಎನ್ನುವ ಅರ್ಥದ ಮರು ಉತ್ತರ ಕಳುಹಿಸಿದ್ದನ್ನು ಉದಯವಾಣಿಯಲ್ಲಿ ಪ್ರಕಟಿಸಿದ್ದು ನೆನಪಿದೆ. ಇದಾದ ಮೇಲೆ ವ್ಯಾಸರು ಜಾಸ್ತಿ ದಿನ ಬದುಕಿರಲಿಲ್ಲ. + +ಅದು ನಾನು ಕಾಸರಗೋಡಿನಲ್ಲಿ ಚೈಲ್ಡ್ ಲೈನ್ ಎಂಬ ಸಂಸ್ಥೆಯಲ್ಲಿ ಪ್ಲೆಸ್ ಮೆಂಟ್ ಮಾಡುತ್ತಿದ್ದ ಸಮಯ ” ಒಂದು ಸಲ ಮನೆ ಕಡೆ ಬಂದು ಹೋಗಿಯೆಂದು” ಒಂದೆರಡು ಬಾರಿ ಕರೆ ಮಾಡಿದ್ದರು. ಕೆಲಸದ ಒತ್ತಡದಿಂದ ಹೋಗಲಾಗಲಿಲ್ಲ. ಇನ್ನೆರಡು ದಿನ ಬಿಟ್ಟು ಹೋಗೊಣವೆಂದು ಸುಮ್ಮನಾದೆ. ಮತ್ತೆ ಹೋಗುವುದಕ್ಕೆ ಆಗಲಿಲ್ಲ. ಇದಾಗಿ ಜಾಸ್ತಿ ದಿನವಾಗಿರಲಿಲ್ಲ. ಜುಲೈ ೨೩ಕ್ಕೆ ಅವರು ಇಹ ಲೋಕ ತ್ಯಜಿಸಿದನ್ನು ಹಾಯ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸುಲೋಚನಾ ಕರೆ ಮಾಡಿ ಹೇಳುವಾಗಲೆ ಗೊತ್ತಾಗಿದ್ದು. + +ಅವರಿಲ್ಲದ ಶೂನ್ಯವೊಂದು ಮನಸ್ಸಿನಲ್ಲಿದೆ. ಅವರಿಂದ ನನ್ನ ಕಥಾಸಂಕಲನಕ್ಕೆ ಎರಡು ಮಾತು ಬರೆಯಿಸಿಕೊಳ್ಳಬೇಕೆಂಬ ಕನಸು ಕಳಚಿದೆ. ಅವರ ನಂಬರ್ ನನ್ನ ಸೆಲ್‍ನಲ್ಲಿ ಇನ್ನೂ ಹಾಗೆ ಇದೆ. ಮತ್ತೆ ಕಾಸರಗೋಡಿಗೆ ಹೋಗುವ ಅವಕಾಶ ಸಿಕ್ಕಿದೆ. ಆದರೆ ನನ್ನ ತಿದ್ದಿದ ವ್ಯಾಸರಿಲ್ಲ. + +ವ್ಯಾಸರಂತೆ ಬರೆಯಲು ಕನ್ನಡದ ಯಾವ ಬರಹಗಾರನಿಗೂ ಸಾಧ್ಯವಿಲ್ಲವೆಂದೆನಿಸುತ್ತಿದೆ. ಅವರ ಬರಹ ನೋಡುವಾಗ ಹಾಗನಿಸುತ್ತದೆ. ಅದೆಲ್ಲಿಂದ ವಾಕ್ಯಗಳನ್ನು ಸೃಜಿಸುತ್ತಿದ್ದರೋ ನೋಡಿ: + +ಹೊರೆಯಾಗುತ್ತಿರುವ ಬಸಿರು ಭಾವಕೋಶ ಬಿರಿದು ಕೋಶ ಸುರಿದುಸ್ತಬ್ದ ಸರೋವರದಲ್ಲಿ ಅಲೆಗಳಾದ ವಿಲಿವಿಲಿಶಬ್ದಗಳುನಿತ್ಯೋತ್ಸವ-ದತ್ತ ಯಾತ್ರೆಗಾಗಿ ಇಕ್ಕಿದ; ಎಳೆದೆಳೆದು ಇಕ್ಕಿದ ತೇಕು ಹೆಜ್ಜೆ-ಗೀರು ಹೆಜ್ಜೆಗಳಲ್ಲಿ ಸ್ಥಗಿತ ಚಲನಅಮೂರ್ತ ಚಿತ್ರಗಳಂತಹಾ ಚಿತ್ತ ಭ್ರಮೆಗಳುಬಾನಂಗಳದ ನಕ್ಷತ್ರಗಳು ವಿಲಿವಿಲಿ ಒದ್ದೆಸ್ನಾನ ಸುಖ ಸ್ನಾನ ಘಟ್ಟಗಳಲ್ಲಿ ಪ್ರತಿಬಿಂಬ ಬಿಂಬ(ಕವನ: ಭುವನದ ಭಾಗ್ಯ. ಪ್ರಕಟಣೆ: ಶಬ್ದಗುಣ ಪಾಕ್ಷಿಕ ಪತ್ರಿಕೆ) + +ಕನ್ನಡದ ಈ ವಿಶಿಷ್ಟ ಬರಹಗಾರ ನಮ್ಮನ್ನು ಅಗಲಿ ಇಂದಿಗೆ (ಜುಲೈ ೨೩) ಒಂದು ವರುಷವಾಗುತ್ತಿರುವ ಹೊತ್ತಿನಲ್ಲಿ ಅವರೊಂದಿಗಿನ ಕೆಲದಿನದ ಒಡನಾಟದ ನೆನಪಿನಲ್ಲಿ ಅಶ್ರುತರ್ಪಣ. + +ಕವಿ, ಕಥೆಗಾರ, ಸಿನೆಮಾಗಳಿಗೂ ಚಿತ್ರ ಕಥೆಗಾರ.ಮೂಲತಃ ಉಡುಪಿಯವರು. \ No newline at end of file diff --git a/Kenda Sampige/article_532.txt b/Kenda Sampige/article_532.txt new file mode 100644 index 0000000000000000000000000000000000000000..f06906fdf560344819460800759df7ed1fedcf43 --- /dev/null +++ b/Kenda Sampige/article_532.txt @@ -0,0 +1,47 @@ +ಬಗ್ದಾದಿನ ಒಬ್ಬಾನೊಬ್ಬ ಸೂಫಿ ಗುರುವಿನ ಶಿಷ್ಯ ಒಂದು ದಿನ ತನ್ನ ಎಂದಿನ ಪದ್ಧತಿಯಂತೆ ಅಲ್ಲಿನ ಸತ್ರವೊಂದರ ಮೂಲೆಯಲ್ಲಿ ಕುಳಿತಿದ್ದ. ಪಕ್ಕದಲ್ಲೇ ಇನ್ನಿಬ್ಬರು ಕುಳಿತು ಏನೋ ಮಾತಾಡಿಕೊಳ್ಳುತ್ತಿದ್ದರು. ಅವರ ಮಾತು ಕೇಳಿಸಿಕೊಂಡ ಶಿಷ್ಯನಿಗೆ ಅವರ ಪೈಕಿ ಒಬ್ಬ ಮೃತ್ಯುದೂತನೆಂದು ಎಂದು ಅರಿವಾಯಿತು. + +‘ಬರುವ ಮೂರು ದಿನಗಳಲ್ಲಿ ನಾನು ಇಲ್ಲಿ ಅನೇಕರನ್ನು ಕಾಣಬೇಕಾಗಿದೆ’ ಎಂದ ಮೃತ್ಯುದೂತ ತನ್ನ ಜೊತೆಗಾರನಿಗೆ. + +ಅದನ್ನು ಕೇಳಿದ ಶಿಷ್ಯ ಕುಳಿತಲ್ಲೇ ಗಡಗಡ ನಡುಗಿದ. ಅವರು ಅಲ್ಲಿಂದ ಹೋಗುವವರೆಗೂ ಅವರ ಕಣ್ಣಿಗೆ ಕಾಣದಂತೆ ಎಲ್ಲೋ ಹುದುಗಿಕೊಂಡಿದ್ದು, ಅವರು ಅಲ್ಲಿಂದ ಹೋದಮೇಲೆ ತಾನು ಅವರಿಂದ ಬಚಾವಾಗುವುದು ಹೇಗೆ ಎಂದು ಯೋಚಿಸಿದ. ಬಗ್ದಾದಿನಿಂದ ಎಷ್ಟು ದೂರವಿದ್ದರೆ ಅಷ್ಟು ಕ್ಷೇಮ ಎನ್ನಿಸಿತು ಅವನಿಗೆ. ಕೂಡಲೆ ಹೋಗಿ ಅತಿ ವೇಗವಾಗಿ ಓಡುವ ಕುದುರೆಯೊಂದನ್ನು ಕೊಂಡು ಅದೇ ರಾತ್ರಿ ಅಲ್ಲಿಂದ ದೂರದ ಸಮರ್ಕಂಡ್ ಕಡೆಗೆ ದೌಡಾಯಿಸಿದ. + +ಮಾರನೆ ದಿನ ಮೃತ್ಯುದೂತ ಆ ಶಿಷ್ಯನ ಗುರುವನ್ನು ಕಂಡು ಅವರಿವರ ಬಗ್ಗೆ ಮಾತಾಡುತ್ತ, ‘ಅಂದ ಹಾಗೆ ಆ ನಿಮ್ಮ ಶಿಷ್ಯ ಒಬ್ಬನಿದ್ದಾನಲ್ಲ, ಎಲ್ಲಿ ಅವನು?’ ಎಂದು ಕೇಳಿದ. + +‘ಓ ಅವನೇ, ಇಲ್ಲೇ ಎಲ್ಲೋ ಇರುತ್ತಾನೆ. ಬಹುಶಃ ಊರೊಳಗೆ ಯಾವುದೋ ಕಾರವಾನ್‌ಸೆರಾಯ್‌ನಲ್ಲಿ ಕುಳಿತು ಏನೋ ಧ್ಯಾನಮಾಡುತ್ತಿರುತ್ತಾನೆ,’ ಎಂದ ಗುರು. + +‘ಆಶ್ಚರ್ಯ! ನಾನು ನೋಡಬೇಕಾದವರ ಪಟ್ಟಿಯಲ್ಲಿ ಅವನ ಹೆಸರೂ ಇದೆ. ಇದೋ, ಇಲ್ಲಿ ನೋಡಿ, ಅನುಮಾನವೇ ಇಲ್ಲ! ಆದರೆ ನಾನು ಅವನನ್ನು ಇನ್ನು ನಾಲ್ಕು ವಾರ ಕಳೆದು ಎಲ್ಲ ಬಿಟ್ಟು ಸಮರ್ಕಂಡ್‌ನಲ್ಲಿ ಕಾಣಬೇಕು ಎಂದು ಆಜ್ಞೆಯಾಗಿದೆಯಲ್ಲ ನನಗೆ, ಏನು ವಿಚಿತ್ರ!’ ಎಂದ ಮೃತುದೂತ. + +[ಒಂಬತ್ತನೆ ಶತಮಾನದಲ್ಲಿ ಗತಿಸಿದ ಸೂಫೀಫಿದಾಯಿಲ್ ಇಬ್ನ್ ಅಯಾದ್ಹೇಳಿದ ಈ ಕತೆ ಮಧ್ಯಪ್ರಾಚ್ಯದಲ್ಲೆಲ್ಲ ಒಂದು ಜಾನಪದ ಕತೆಯಾಗಿ ಪ್ರಖ್ಯಾತವಾಗಿದೆ.] + +ಹಿಂದೆ ಒಬ್ಬಾನೊಬ್ಬ ಸತ್ಪುರುಷನಿದ್ದ. ತನ್ನ ಜೀವಿತವನೆಲ್ಲ ಅವನು ಮುಂದೆ ಸ್ವರ್ಗ ಪ್ರಾಪ್ತಿಯಾಗಲು ಏನೇನು ಸತ್ಕಾರ್ಯಗಳನ್ನು ಮಾಡಬೇಕೆಂದು ಹೇಳಿದೆಯೋ ಅವನ್ನೆಲ್ಲ ಮಾಡುವುದರಲ್ಲಿ ತೊಡಗಿಸಿದ್ದ. ಬಡಬಗ್ಗರಿಗೆ ಧಾರಾಳವಾಗಿ ದಾನ ಮಾಡುತ್ತಿದ್ದ. ಎಲ್ಲರನ್ನೂ ಪ್ರೀತಿಯಿಂದ ಕಂಡು ಅವರಿಗೆ ಸೇವೆ ಸಲ್ಲಿಸುತ್ತಿದ್ದ. ಜೀವನದಲ್ಲಿ ಸಹನೆ ಎಂಬುದು ಎಷ್ಟು ಮುಖ್ಯ ಎಂಬುದನ್ನು ಅರಿತುಕೊಂಡು, ಎಂತೆಂಥ ಕಷ್ಟಗಳು ಬಂದರೂ ಅದನ್ನೆಲ್ಲ-ಎಷ್ಟೋ ಸಲ ಇತರರ ಸಲುವಾಗಿ ಕೂಡ-ತಾಳಿಕೊಂಡು ಇರುತ್ತಿದ್ದ. ಜ್ಞಾನಾರ್ಜನೆಗೆಂದು ಆಗಾಗ ದೇಶಪರ್ಯಟನೆ ಮಾಡಿಬರುತ್ತಿದ್ದ. ಅವನ ವಿನಯ ಹಾಗೂ ಆದರ್ಶಪ್ರಾಯ ನಡವಳಿಕೆಯಿಂದಾಗಿ ಅವನ ಖ್ಯಾತಿ ನಾಲ್ಕು ದಿಕ್ಕುಗಳಲ್ಲೂ ಹರಡಿತ್ತು. + +ಈ ಸತ್ಕಾರ್ಯಗಳನ್ನೆಲ್ಲ ಅವನು ಮಾಡುತ್ತಿದ್ದುದು ಅವನ ಮನಸ್ಸಿನಲ್ಲಿ ಅದರ ಬಗ್ಗೆ ಎಚ್ಚರವಿದ್ದಾಗ ಮಾತ್ರ. ಆದರೆ ಆಗಾಗ ಅವನಿಗೆ ಆ ಎಚ್ಚರ ತಪ್ಪುತ್ತಿತ್ತು. ಅದೊಂದು ಲೋಪ ಅವನಲ್ಲಿ. ಅದರಿಂದಾಗಿ ನೆರೆಹೊರೆಯಲ್ಲಿದ್ದ ಹಲವು ಬಡಜನರ ಕಷ್ಟಕ್ಕೆ ಅವನೂ ಏನೂ ಮನಸ್ಸು ಕೊಟ್ಟಿರಲಿಲ್ಲ. ಅವರಿಗೆ ಅವನಿಂದ ಏನೂ ಸಹಾಯ ಸಿಕ್ಕಿರಲಿಲ್ಲ. ಒಂದೊಂದು ಸಲ ತನ್ನ ಸ್ವಂತ ಆಸೆ-ಆಕಾಂಕ್ಷೆಗಳು, ಕೆಲಸಗಳು ಇವೇ ಹೆಚ್ಚು ಮುಖ್ಯವಾಗಿ ಇತರರ ಬಗೆಗೆ ಸಲ್ಲಿಸಬೇಕಾದ ಪ್ರೀತಿ, ಸೇವೆಗಳು ಹಿಂದೆ ಬೀಳುತ್ತಿದ್ದವು. ಇಷ್ಟಾದರೂ ಅವನ ಮನಸ್ಸಿನಲ್ಲಿ  ತಾನು ಇದುವರೆಗೆ ಮಾಡಿರುವ ಸತ್ಕಾರ್ಯಗಳನ್ನೆಲ್ಲ ಎಣಿಸಿದರೆ ಇದೇನೂ ಅಷ್ಟು ದೊಡ್ಡ ಲೋಪವಲ್ಲ ಎಂಬ ಭಾವನೆ ಇತ್ತು. + +ಅವನಿಗೆ ನಿದ್ದೆಯೆಂದರೆ ಮಹಾಪ್ರೀತಿ. ಅದರಿಂದಾಗಿ ಎಷ್ಟೋ ಸತ್ಕಾರ್ಯಗಳನ್ನು ಮಾಡುವ, ಜ್ಞಾನಾರ್ಜನೆ ಮಾಡುವ, ಉತ್ತಮ ಆದರ್ಶಗಳನ್ನು ಪರಿಪಾಲಿಸುವ, ತನ್ನ ನಡವಳಿಕೆಯನ್ನು ಉತ್ತಮಪಡಿಸಿಕೊಳ್ಳುವ ಸದವಕಾಶಗಳು ಅವನ ಕೈಬಿಟ್ಟುಹೋಗಿದ್ದವು. ಒಂದು ಸಲ ಹೋದ ಅವಕಾಶ ಮತ್ತೆ ಬಂದೀತೇ? ಅವನ ಸದ್ಗುಣಗಳ ಹಾಗೇ ಈ ಒಂದು ದುರ್ಗುಣವೂ ಅವನ ಜೀವಿತದ ಮೇಲೆ ತನ್ನ ಮುದ್ರೆಯೊತ್ತಿತ್ತು. + +ಕಡೆಗೊಂದು ದಿನ ಆ ಸತ್ಪುರುಷ ಸತ್ತ. ಇಹಲೋಕದ ಬದುಕನ್ನು ದಾಟಿಹೋದ ಅವನು ದೇವರ ತೋಟದ ಮಹಾಪ್ರಾಕಾರದ ಬಳಿಗೆ ಬಂದು ನಿಂತ. ತೋಟದ ಬಾಗಿಲು ಮುಚ್ಚಿತ್ತು. ಅಲ್ಲಿ ನಿಂತಾಗ ಅವನ ಮನಸ್ಸು ಆತ್ಮಪರೀಕ್ಷೆಯಲ್ಲಿ ತೊಡಗಿತು. ಈ ಎತ್ತರದ ಪ್ರಾಕಾರದ ಬಾಗಿಲನ್ನು ಪ್ರವೇಶಿಸುವ ಅರ್ಹತೆ ತನ್ನಲ್ಲಿದೆಯೇ ಎಂದು ಅವನ ಮನಸ್ಸು ಕೇಳಿತು. ಹಾಗೇ ಚಿಂತಿಸಿ ಕಡೆಗೆ ಆ ಸತ್ಪುರುಷ ನಾನು ಸಾಕಷ್ಟು ಪುಣ್ಯಕಾರ್ಯಗಳನ್ನು ಮಾಡಿದ್ದೇನೆ, ಅದರಿಂದ ಈ ಬಾಗಿಲನ್ನು ಪ್ರವೇಶಿಸುವ ಅರ್ಹತೆ ನನ್ನಲ್ಲಿದೆ ಎಂಬ ತೀರ್ಮಾನಕ್ಕೆ ಬಂದು ಸಮಾಧಾನಪಟ್ಟುಕೊಂಡ. + +ಸದ್ಯದಲ್ಲೇ ಅವನಿಗೊಂದು ದನಿ ಕೇಳಿಸಿತು: ‘ಎಚ್ಚರವಾಗಿರು. ಈ ಬಾಗಿಲು ನೂರು ವರ್ಷಕ್ಕೊಂದು ಸಲ ಮಾತ್ರ ತೆರೆಯುವುದು.’ ಆ ಮಾತು ಕೇಳಿ ಅವನಿಗೆ ಸಂತೋಷವೇ ಆಯಿತು – ಒಳಗೆ ಹೋಗುವ ಅವಕಾಶವಿದೆಯಲ್ಲ ಎಂದು. ಆದರೆ ಅವನಿಗೆ ಜನರ ಒಳಿತಿಗಾಗಿ ಪ್ರತಿ ಕ್ಷಣವೂ ದುಡಿಯುತ್ತಿರಬೇಕೆಂಬ ಎಚ್ಚರ ಹೇಗೆ ಆಗಾಗ ತಪ್ಪುತ್ತಿತ್ತೋ ಹಾಗೇ ಈಗಲೂ ಎಚ್ಚರ ತಪ್ಪಿತು. ಒಂದು ಯುಗವೇ ಕಳೆದುಹೋಯಿತೇನೋ ಅನ್ನುವಷ್ಟು ಕಾಲ ಎಚ್ಚರವಾಗಿದ್ದ ಅವನಿಗೆ ಈಗ ನಿದ್ರೆ ಕವಿದು ಬಂತು. ಒಂದು ಕ್ಷಣ ಅವನ ಅವನ ಕಣ್ಣು ಮುಚ್ಚಿತು. ಆದರೆ ಅದೇ ಕ್ಷಣದಲ್ಲಿ ಆ ದಿವ್ಯನಂದನದ ಬಾಗಿಲು ತೆರೆಯಿತು.  ಅವನು ಪೂರ್ತಿ ಕಣ್ಣುಬಿಟ್ಟು ನೋಡುವಷ್ಟರಲ್ಲಿ ಬಾಗಿಲು ಮತ್ತೆ ಮುಚ್ಚಿತು – ಸತ್ತವರನ್ನೂ ಎಚ್ಚರಿಸುವಂಥ ಮಹಾಶಬ್ದ ಮಾಡುತ್ತ. + +(ಈ ಕತೆ ಜನರಲ್ಲಿ ಬಹಳ ಪ್ರಚಲಿತವಾಗಿದ್ದರೂ ಅದರ ಹುಟ್ಟಿನ ಬಗ್ಗೆ ಸಾಕಷ್ಟು ತಿಳಿಯದು. ಏಳನೆಯ ಶತಮಾನದಲ್ಲಿದ್ದ ನಾಲ್ಕನೆಯ ಕಲೀಫ್ ಹದ್ರತ್ ಅಲಿ ಹೇಳಿದ್ದು ಆ ಕತೆ ಎನ್ನುತ್ತಾರೆ ಕೆಲವರು. ಇನ್ನು ಕೆಲವರು ಸೂಫೀ ಪಂಥದಲ್ಲಿ ಈ ಕತೆ ಗಳಿಸಿರುವ ಪ್ರಾಮುಖ್ಯತೆಯನ್ನು ಗಮನಿಸಿ ಇದನ್ನು ಪ್ರವಾದಿ ಮಹಮ್ಮದನೇ ಹೇಳಿದನೆಂದೂ ಅನ್ನುತ್ತಾರೆ. ಇಲ್ಲಿ ಹೇಳಿರುವ ರೀತಿ ೧೭ನೇ ಶತಮಾನದ ಅಮಿಲ್ ಬಾಬಾ ಎಂಬ ಡರ್ವಿಷನದು. ‘ನಿಜವಾದ ಗ್ರಂಥಕರ್ತ ಎಂದರೆ ಹೆಸರು ಹೇಳಿಕೊಳ್ಳದೆ ಅನಾಮಿಕನಾಗಿ ಉಳಿದುಕೊಳ್ಳುವವನೇ, ಏಕೆಂದರೆ ಆಗ ಕಲಿಕೆಗೂ ಕಲಿಯುವವನಿಗೂ ಮಧ್ಯೆ ಯಾರೂ ಅಡ್ಡಿ ಇರುವುದಿಲ್ಲ’ – ಎನ್ನುತ್ತಿದ್ದನಂತೆ ಅವನು.) + +[ಮೂಲ:ಇದ್ರೀಸ್ ಶಾ ಅವರ ‘Tales of the Dervishes’] + +ಒಂದಾನೊಂದು ಕಾಲದಲ್ಲಿ ಒಂದು ಹಕ್ಕಿ ಇತ್ತು. ಅದಕ್ಕೆ ಹಾರುವ ಸಾಮರ್ಥ್ಯವಿರಲಿಲ್ಲ. ಒಂದು ಕೋಳಿಮರಿಯಂತೆ ನೆಲದ ಮೇಲೆ ನಡೆದಾಡುತ್ತಿತ್ತೇ ವಿನಃ ಮೇಲಕ್ಕೆ ಹಾರುತ್ತಿರಲಿಲ್ಲ. ಆದರೆ ಅದಕ್ಕೆ ಗೊತ್ತಿತ್ತು ಅನೇಕ ಹಕ್ಕಿಗಳು ಆಕಾಶದಲ್ಲಿ ಹಾರಬಲ್ಲವು ಎಂದು.ಹೀಗಿರುತ್ತ ಒಂದು ಸಲ ಏನೋ ವಿಚಿತ್ರ ಘಟನೆಗಳ ಸಂಯೋಗದಿಂದ ಒಂದು ಹಾರುವ ಸಾಮರ್ಥ್ಯವುಳ್ಳ ಹಕ್ಕಿಯ ಮೊಟ್ಟೆಗೆ ಕಾವು ಕೊಟ್ಟು ಮರಿ ಮಾಡುವ ಸಂದರ್ಭ ಈ ಹಕ್ಕಿಗೆ ಒದಗಿತು. + +ಈ ಹಕ್ಕಿ ಶ್ರದ್ಧೆಯಿಂದ ಕಾವು ಕೊಟ್ಟಿತು. ಆ ಮೊಟ್ಟೆ ಒಡೆದು ಚಿಕ್ಕ ಮರಿ ಹೊರಬಂತು. ಸಂತಸದಿಂದ ನೆಲದಮೇಲೆ ಓಡಾಡಿತು. ದಿನ ಕಳೆದಂತೆ ಅದು ತನ್ನ ಸಾಕುತಾಯನ್ನು ಕೇಳಲು ಮೊದಲಿಟ್ಟಿತು: “ಎಂದಿಗೆ ನಾನು ಹಾರುವುದು?” + +ಸಾಕುತಾಯಿ ಹೇಳಿದಳು: “ಹಾರುವ ನಿನ್ನ ಪ್ರಯತ್ನ ನೀನು ಮಾಡುತ್ತಲೇ ಇರು ಇತರರಂತೆ. ಒಂದು ದಿನ ನೀನೂ ಹಾರುತ್ತೀಯೆ.”ಆದರೆ ನಿಜದ ಸಂಗತಿ ಏನೆಂದರೆ ಆ ಸಾಕುತಾಯಿಗೆ ಈ ಮರಿಗೆ ಹಾರಲು ಹೇಳಿಕೊಡುವುದು ಹೇಗೆಂದು ತಿಳಿದಿರಲಿಲ್ಲ. ಹಾರುವ ಹಕ್ಕಿಗಳು ತಮ್ಮ ಮರಿಗಳನ್ನು ಗೂಡಿನಿಂದ ಹೊರನೂಕಿ ಹಾರುವುದನ್ನು ಕಲಿಸುವ ರೀತಿ ಈ ಹಾರಲಾರದ ಸಾಕುತಾಯಿಗೆ ತಿಳಿದಿರಲಿಲ್ಲ. + +ಆದರೆ ಆ ಚಿಕ್ಕ ಮರಿಗೆ ತನ್ನ ಸಾಕುತಾಯಿಗೆ ತನಗೆ ಹಾರಲು ಕಲಿಸುವ ಸಾಮರ್ಥ್ಯವೇ ಇಲ್ಲ ಎಂಬ ಸತ್ಯ ತಿಳಿದಿರಲಿಲ್ಲ. ಆ ಪುಟ್ಟ ಮರಿಯ ಹೃದಯದಲ್ಲಿ ತನಗೆ ಕಾವುಕೊಟ್ಟು ಹೊರತಂದ ಸಾಕುತಾಯಿಯ ಬಗ್ಗೆ ಕೃತಜ್ಞತೆಯೊಂದೇ ತುಂಬಿಕೊಂಡಿತ್ತು. “ಈ  ತಾಯಿ ನನಗೆ ಶಾಖ ಕೊಡದೇ ಇದ್ದಿದ್ದರೆ, ನಾನಿನ್ನೂ ಮೊಟ್ಟೆಯೊಳಗೇ ಹುದುಗಿರುತ್ತಿದ್ದೆ,” ಎಂದುಕೊಳ್ಳುತ್ತಿತ್ತು ಮರಿ. + +ಹಾಗೇ ತನ್ನ ಆಲೋಚನೆ ಮುಂದುವರೆಸುತ್ತ, ನನಗೆ ಕಾವು ಕೊಟ್ಟು ಹೊರತಂದವರಿಗೆ ನನಗೆ ಹಾರಲು ಹೇಳಿಕೊಡುವ ಸಾಮರ್ಥ್ಯವೂ ಇರಲೇಬೇಕು… ಆ ಕಾಲ ಬರಬೇಕು, ಅಷ್ಟೆ. ನಾನಾಗ ಹಾರುತ್ತೇನೆ… ಅಥವಾ ಅದಕ್ಕಾಗಿ ನಾನು ಸತತವಾಗಿ ಪ್ರಯತ್ನಿಸಬೇಕೇನೋ… ಅಥವಾ ಅದೊಂದು ವಿಶಿಷ್ಟ ಜ್ಞಾನವೋ!  ಅದೆಲ್ಲ ಏನೇ ಇರಲಿ, ಇದಂತೂ ನನ್ನ ಮನಸ್ಸಿಗೆ ನಿಶ್ಚಯ: ನನ್ನನ್ನು ಇದುವರೆಗೆ ನಡೆಸಿರುವ ಶಕ್ತಿಯೇ ನನ್ನನ್ನು ಇನ್ನು ಮುಂದಿನ ಸ್ಥಿತಿಗೂ ಕರೆದೊಯ್ಯುತ್ತದೆ.” + +ಹೀಗೆಂದುಕೊಳ್ಳುತ್ತ ಆ ಮರಿಹಕ್ಕಿ ತನ್ನ ಮುಂದಿನ ಸ್ಥಿತಿಯನ್ನು ಎದುರುನೋಡುತ್ತಲೇ ಇತ್ತು… + +(ಹನ್ನೆರಡನೇ ಶತಮಾನದ ಸೂಫಿ ಸಂತ ಸುಹ್ರವರ್ದಿಯ ಕೃತಿಗಳಲ್ಲಿ ಈ ಕತೆ ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುವುದಂತೆ. ಶಿಷ್ಯನ (ಸಾಧಕನ) ಆಧ್ಯಾತ್ಮಿಕ ಮಟ್ಟಕ್ಕೆ ಅನುಸಾರವಾಗಿ ಈ ಕತೆಯ ಸಂದೇಶ ಅರಿವಾಗುತ್ತದೆ. + +ಮೂಲ: ಇದ್ರೀಸ್ ಷಾ ಅವರ  Tales of  the Dervishes] + + + +ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹಿರಿಯ ಲೇಖಕರು.‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರಲ್ಲೊಬ್ಬರು. \ No newline at end of file diff --git a/Kenda Sampige/article_533.txt b/Kenda Sampige/article_533.txt new file mode 100644 index 0000000000000000000000000000000000000000..c0b3658695fedbadef0a6394174ce9254f170f7f --- /dev/null +++ b/Kenda Sampige/article_533.txt @@ -0,0 +1,11 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುವೈಶಾಲಿ ಹೆಗಡೆಬರೆದ ನಾಲ್ಕು ಚುಟುಕುಗಳು. + +ಚುಟುಕಗಳು೧ಸಣ್ಣಗೆ ಬೆನ್ನಮೇಲೆ ತಟ್ಟಿದಂತೆತಿರುಗಿನೋಡಿದರೆ ಬರೀ ಭ್ರಮೆಸ್ಫಟಿಕ ನೀಲಿ ಕೊಳದಮೇಲೆ ಮಂದಾನಿಲದಂತೆಸಣ್ಣಗೆ ಅದುರಿದ ಅಲೆಮತ್ತೆಲ್ಲ ಮುಗುಳ್ನಗೆ + +೨ಬೆಟ್ಟ ಹತ್ತುವಾಗ ಹಾದಿಯಲೆಲ್ಲೋ ನಕ್ಕವರುಜತೆಗೊಂಚೂರು ನಡೆದು ಮತ್ಯಾವುದೋಕಾಲುದಾರಿಯಲ್ಲಿ ಕೈಬೀಸಿ ಇಳಿದು ಹೋಗುತ್ತಾರೆಮನದಲ್ಲೇ ಉಳಿದು ಹೋಗುತ್ತಾರೆ + +೩ಫಕ್ಕನೆ ಮಿಂಚಿ ಮರೆಯಾದ ವಕ್ರಬೆಳಕಿನ ರೇಖೆಅರೆಕ್ಷಣವಾದರೂ ಬೆಳಗಿತು ಕಾರಿರುಳ ಹಾದಿಅಡ್ಡ ಹಾದಿ ಉದ್ದ ಹಾದಿ, ಅಡ್ಡತಿದ್ದ ಹಾದಿಬಿದ್ದ ಬೆಳಕಲ್ಲಿ  ನೇರವೆಷ್ಟೋ ವಕ್ರವೆಷ್ಟೋ + +೪ಬಿಸಿಲ ಹೊತ್ತಲ್ಲಿ ಪುಟಿವ ಕಾರಂಜಿ ನಡುವಲ್ಲಿನೀರ ಕಣವೆಲ್ಲ ಹುಟ್ಟಿಸಿದ ಮಳೆಬಿಲ್ಲುಅವಳ ಕಣ್ಣಲ್ಲಿ ಸುಂದರ ಕಾಮನಬಿಲ್ಲುಅವನಿಗದು ಬೆಳಕಿನ ವಕ್ರೀಭವನ + +ಊರು, ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ. ಅಮೆರಿಕಾದ ಬಾಸ್ಟನ್ ಸಮೀಪ ಈಗ ಕಟ್ಟಿಕೊಂಡ ಸೂರು. ತಂತ್ರಜ್ಞಾನದ ಉದ್ದಿಮೆಯಲ್ಲಿ ಕೆಲಸ. ದೇಶ ಸುತ್ತುವುದು, ಬೆಟ್ಟ ಹತ್ತುವುದು, ಓಡುವುದು, ಓದು, ಸಾಹಸ ಎಂಬ ಹಲವು ಹವ್ಯಾಸ. ‘ಒದ್ದೆ ಹಿಮ.. ಉಪ್ಪುಗಾಳಿ’ ಇವರ ಪ್ರಬಂಧ ಸಂಕಲನ. “ಪ್ರೀತಿ ಪ್ರಣಯ ಪುಕಾರು” ನೂತನ ಕಥಾ ಸಂಕಲನ. \ No newline at end of file diff --git a/Kenda Sampige/article_534.txt b/Kenda Sampige/article_534.txt new file mode 100644 index 0000000000000000000000000000000000000000..10d39271071e4c8be200cf0ff200884e34d7f560 --- /dev/null +++ b/Kenda Sampige/article_534.txt @@ -0,0 +1,5 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ. ಆದರೆ ಇವೆಲ್ಲವೂ ಕನ್ನಡದ ಕವಿತೆಗಳು. ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ. ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ.ವ್ಯಾಲಂಟೈನ್ ದಿನವಾದ ಇಂದುರಜನಿ ಗರುಡಅನಂತಮೂರ್ತಿಯವರಿಗೆ ಬರೆದ ಪ್ರೇಮ ಕವಿತೆ ಇದೆ. + +ಅನಂತಮೂರ್ತಿಯವರಿಗೊಂದು ಪ್ರೇಮಪತ್ರ!!!ವ್ಯಾಲೆಂಟೈನ್ ದಿನ!ಯಾರಿಗೆ ಕೊಡಲಿ ಹೂ?ಹುಡುಕಿದೆ,ಕೈಯಲ್ಲಿ ಹೂ ಹಿಡಿದುಸುತ್ತಾಡಿದೆ.ಸಿಗಲಿಲ್ಲ ಯಾರೂ……….ನೀವು ತುಂಗೆಯ ತಡಿಯಲ್ಲಿ ಬೆಳೆದರೆ,ನಾನು ಅಘನಾಶಿನಿಯಲ್ಲಿ ಆಡಿದ್ದೇನೆ!ಮಳೆಯ ನೆರಳಿನ ನಾಡಿನಲ್ಲಿ ನೀವುವಿರಾಮದ ದಿನ ಕಳೆಯುತ್ತಿದ್ದರೆ,ನಾನು ಬೇಂದ್ರೆ ನೆಲದಲ್ಲಿದುಡಿಯುತ್ತಿದ್ದೇನೆ!ನನ್ನ ಪುಸ್ತಕದ ಸಂಗ್ರಹಗಳಲ್ಲಿ,ದಿನಪತ್ರಿಕೆಗಳಲಿ, ಸುದ್ದಿ ವಾಹಿನಿಗಳಲಿ,ಬುದ್ಧಿಜೀವಿಗಳೊಂದಿಗೆ,ಕಥೆಕಾದಂಬರಿಗಳಲಿ,ನಿಮ್ಮದೇಸುದ್ದಿ!!ನಟರನ್ನು ಮೀರಿಸುವ ಭಾವಭಂಗಿಯುವಕರು ನಾಚಿಸುವಂತದಿರಿಸು ಧರಿಸಿ,ಸಮಾಜವಾದದ ಗಡ್ಡವನ್ನುಟ್ರಿಮ್ಮಾಗಿಸಿ,ಭಾಷಣದ ಗತ್ತು ಗೈರತ್ತಿಗೆ ಮರುಳಾದವರೆಷ್ಟು?ನಿತ್ಯ ಜೀವನ ಪ್ರೇಮಿ!ಈ ಯುಗದ ಮಾತುಗಾರ!!ಕನ್ನಡಕ್ಕೆ ಇಂಗ್ಲೀಷನ್ನು ಕಸಿಮಾಡುತ್ತ,ಗಾಂಧೀ, ಅಂಬೇಡ್ಕರ್, ಮಾರ್ಕ್ಸ್‌ರನ್ನೆಲ್ಲ,ಸಮಾಜವಾದದ ಕಣ್ಣಲ್ಲೆ ನೋಡುತ್ತಮಠಮಾನ್ಯರನ್ನೆಲ್ಲ ಕೆಣಕುತ್ತ,ವೈದಿಕರಿಗೆ ಉಗಿಯುತ್ತ, ಉಗಿಸಿಕೊಳ್ಳುತ್ತ,ನಿತ್ಯ ಸುದ್ದಿಯಲ್ಲಿರುವ ವಿಪ್ರೋತ್ತಮ!!ಹೆಜ್ಜೆ ಸೋತಾಗ ನಿಮ್ಮ ನೆನೆಯುತ್ತೇನೆ,ಸೋಲಿಗೊಮ್ಮೆ ದಿಕ್ಕೆಟ್ಟು,ಗೆಲುವಿಗೊಮ್ಮೆ  ಕ್ಷಣ ಮೈದುಂಬಿಕೊಳ್ಳುವನಾನು, ನನ್ನ ಅರಿಯದೆ ತಡಕುತ್ತೇನೆ-ಮಿಡುಕುತ್ತೇನೆ.ಇಟ್ಟ ಹೆಜ್ಜೆಗುರುತು ಮಾಯವಾಗಿ,ಕ್ರಮಿಸಬೇಕಿರುವ ದೂರದ ದಾರಿಹುಸಿಗುರಿಗೆ ಮುಖಮಾಡಿವೆ.ನಿಮ್ಮ ಬದುಕ ಸವಿಗೆಮಾರುಹೋಗುತ್ತೇನೆ,ದಟ್ಟ ಜೀವನಪ್ರೀತಿಗೆಬೆರಗಾಗಿದ್ದೇನೆ!ಹೇಳಿ,ನಿಮಗಲ್ಲದೇ ಯಾರಿಗೆ ಕೊಡಲಿ ಹೂ?ಆಯ್ಕೆ ಇಲ್ಲ ನನಗೆ………….ಗಂಧ ಒಲ್ಲದ, ಮೋಹಕತೆ ಇಲ್ಲದ,ಸಹ್ಯಾದ್ರಿಯ ಕಾಡು ಹೂ… + +ಮೂಲತಃ ಶಿರಸಿಯವರು. ಈಗ ಧಾರವಾಡದಲ್ಲಿ ನೆಲಸಿದ್ದಾರೆ. ನೀನಾಸಂ ರಂಗಶಿಕ್ಷಣ ಪಡೆದು ರಂಗಭೂಮಿಯ ಕೆಲಸಗಳಲ್ಲಿ ಸಕ್ರಿಯರಾಗಿದ್ದಾರೆ. ಗೊಂಬೆಮನೆ ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಸಂಗೀತ, ನೃತ್ಯ, ನಟನೆ, ನಿರ್ದೇಶನ, ರಂಗತರಬೇತಿ ಶಿಬಿರಗಳು, ಗೊಂಬೆ ತಯಾರಿಕೆ ಮತ್ತು ಪ್ರದರ್ಶನ ಹೀಗೆ ಹಲವು ಆಸಕ್ತಿಯ ಕ್ಷೇತ್ರಗಳು. ಹವ್ಯಾಸಿ ಬರಹಗಾರರು. \ No newline at end of file diff --git a/Kenda Sampige/article_535.txt b/Kenda Sampige/article_535.txt new file mode 100644 index 0000000000000000000000000000000000000000..f9be4638f017f125b1cbb41e8938fb795bb4a36a --- /dev/null +++ b/Kenda Sampige/article_535.txt @@ -0,0 +1,35 @@ +ಆಗಸ್ಟ್ ಹದಿನೈದು, ಸ್ವಾತಂತ್ರ್ಯ ದಿನಾಚರಣೆಯೆಂದರೆ ನನಗೆ ಏನು? + +ಬಹುಶಃ ಈ ಪ್ರಶ್ನೆಯನ್ನು ೧೪೯೮ರಲ್ಲಿ ಕಲ್ಲಿಕೋಟೆಯ ಬಳಿಯ ಕಪ್ಪಕಡವು ಬಂದರಿಗೆ ಬಂದಿಳಿದ ಪೋರ್ಚುಗಲ್ ನಾವಿಕ ವಾಸ್ಕೋ ಡ ಗಾಮನನ್ನು ಬರ ಮಾಡಿಕೊಂಡ ಸಾಮೂದರಿ ರಾಜನೂ, ಪೋರ್ಚುಗೀಸರ ವ್ಯಾಪಾರವನ್ನು ವಿರೋಧಿಸಿದ ಸ್ಥಳೀಯ ಅರಬ್ ವ್ಯಾಪಾರಿಗಳೂ ಕೇಳಿಕೊಂಡಿರಲಾರರು. + +ಪ್ಲಾಸಿ ಕದನದಲ್ಲಿ ಸೋತು ರಾಬರ್ಟ್ ಕ್ಲೈವ್ ನ ಕೈವಶವಾದ ಬಂಗಾಳದ ಅಧಿಕಾರವನ್ನು ನೆನೆಯುತ್ತ ಪ್ರಾಣ ಬಿಟ್ಟ ಬಂಗಾಳದ ನವಾಬನು, ಬಕ್ಸರ್ ಕದನದಲ್ಲಿ ಬಿಹಾರ, ಒರಿಸ್ಸಾಗಳನ್ನು ಕಳೆದುಕೊಂಡ ಸ್ಥಳೀಯ ಆಡಳಿತಗಾರರು, ಮಹಾರಾಜ ರಣಜಿತ್ ಸಿಂಗನ ಸಾವಿನ ನಂತರ ಪಂಜಾಬವನ್ನು ಉಳಿಸಿಕೊಳ್ಳಲು ಎರಡು ಭೀಕರ ಕಾಳಗಗಳಲ್ಲಿ ಕಾದಾಡಿದ ವೀರ ಯೋಧರು ಕೇಳಿಕೊಂಡಿರಲಾರರು. + +ಇಂಗ್ಲೆಂಡು ದೊರೆಗಳ, ಧರೆಗೆ ಶ್ರೇಷ್ಠರಾದವರ ಕೈಲಿರುವ ಚಾವಟಿಯಿಂದ ಛಡಿ ಏಟುಗಳ ತಿಂದು ಅವರ ಕುದುರೆಗಳಿಗೆ ದಾರಿ ಬಿಟ್ಟು ಕೊಡುತ್ತ, ಅವರ ಚರ್ಮದ ಬೂಟುಗಳು ಮಿರಮಿರನೆ ಹೊಳೆಯುವಂತೆ ಪಾಲೀಶು ತಿಕ್ಕುತ್ತಾ, ತಮಗೆ ಕೊಟ್ಟ ಬಂದೂಕಿನಲ್ಲಿ ಹಾಕಿದ ಹಸು ಹಾಗೂ ಹಂದಿಯ ಕೊಬ್ಬಿನ ಕೀಲೆಣ್ಣೆಯ ದೆಸೆಯಿಂದ ಅಸಹನೆಯಲ್ಲಿ ಕುದಿದು ಸ್ಫೋಟಗೊಂಡ ಬಂಡಾಯದಲ್ಲಿ ಭಾಗವಹಿಸಿದ ಸಿಪಾಯಿಗಳು ಕೇಳಿಕೊಂಡಿರಲಾರರು. + +ಪರದೇಶದ ಶೋಷಕರನ್ನು ಕಿತ್ತೊಗೆಯುವ ಏಕ ಮನಸ್ಸಿನಿಂದ ಪ್ರಾಣವನ್ನೇ ಪಣವೊಡ್ಡಿ ಅತಿ ಅಪಾಯಕಾರಿ ಜೂಜನ್ನು ಆಡಿದ ಯುವಕರು, ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಟ್ಟು ಆ ಕನಸಿನ ಸಾಕಾರಕ್ಕಾಗಿ ರಕ್ತವನ್ನು ಬೇಡಿದ ನೇತಾಜಿಯ ಕರೆಗೆ ಓಗೊಟ್ಟು ಓಡಿದ ವೀರರು, ಗಾಂಧೀಜಿಯ ಅಹಿಂಸೆಯ, ಅಸಹಕಾರದ ಪ್ರತಿಭಟನೆಯಲ್ಲಿ ನಂಬಿಕೆಯಿಟ್ಟು ಬೆನ್ನ ಮೇಲೆ ಬಿದ್ದ ನೂರು ಬಾಸುಂಡೆಗಳಿಗೆ, ಮುರಿದ ಬೆರಳು, ಸುಲಿದ ಚರ್ಮಕ್ಕೆ ಪ್ರತಿಯಾಗಿ ಅಹಿಂಸೆಯನ್ನೇ ಕೊಟ್ಟ ಅಸಂಖ್ಯ ಯುವಕ, ಯುವತಿಯರು, ಮುದುಕರು, ಮಕ್ಕಳು, ಹೆಂಗಸರು, ಗಂಡಸರು, ರೈತರು, ವಕೀಲರು, ಕಾಲೇಜು ತೊರೆದು, ನೌಕರಿ ತೊರೆದು, ವ್ಯಾಪಾರ ತೊರೆದು, ತೊಟ್ಟಿಲಲ್ಲಿ ಮಲಗಿದ ಹಸುಗೂಸನ್ನು ತೊರೆದು ಬೀದಿಗೆ ಇಳಿಯುವಾಗ ಯಾರೆಂದರೆ ಯಾರೂ ಸಹ ಈ ಪ್ರಶ್ನೆಯನ್ನು ಕೇಳಿಕೊಂಡಿರಲಾರರು. + +ನಾನೀಗ ಕೇಳಿಕೊಳ್ಳಬೇಕು. ಆಗಸ್ಟ್ ತಿಂಗಳ ಹದಿನೈದನೆಯ ತಾರೀಖು ನನಗೆ ಏನು? + +ನಾನೊಬ್ಬನೇ ಅಲ್ಲ, ನನ್ನ ಹಾಗೆ ಹುಟ್ಟಿನಿಂದಲೇ ಸ್ವಾತಂತ್ರ್ಯವನ್ನೂ ಸಹ ಬೆಳಗಿನ ಹಬೆಯಾಡುವ ಕಾಫಿ, ಗರಿಗರಿಯಾದ ನ್ಯೂಸ್ ಪೇಪರು, ಗಿಜಿ ಗುಡುವ ಶಾಲೆ, ಓದುವುದಕ್ಕೆ ಪುಸ್ತಕ, ದುಡಿಯುವುದಕ್ಕೆ ಅವಕಾಶ ಪಡೆದು ಬೆಳೆದ ಎಲ್ಲರೂ ಕೇಳಿಕೊಳ್ಳಬೇಕು. + +ಸ್ವಾತಂತ್ರ್ಯ ದಿನವೆಂದರೆ ನನಗೆ ಹಬ್ಬ. ಹೊಸ ಬಟ್ಟೆಯಿಲ್ಲ, ಮುಂಜಾನೆಯ ಚಳಿಯಲ್ಲಿ ಎಣ್ಣೆ ನೀರು ಸ್ನಾನವಿಲ್ಲ ಎನ್ನುವುದು ಹೊರತು ಪಡಿಸಿದರೆ ಆ ದಿನ ಹಬ್ಬದ ದಿನವೇ. ಬೆಳಕು ಹರಿಯುವ ಮೊದಲೇ ಏಳುವುದು, ಹಿಂದಿನ ದಿನವೇ ನೀಲಿ ಹಾಕಿ ಒಗೆದಿರಿಸಿದ ಬಿಳಿಯ ಯೂನಿಫಾರ್ಮ್, ಬಿಳಿಯ ಸಾಕ್ಸ್, ಬಿಳಿಯ ಕ್ಯಾನ್ವಾಸ್ ಶೂ ತೊಟ್ಟುಕೊಂಡು, ಬಿಳಿಯ ಅಂಗಿಯ ಜೇಬಿಗೆ ತ್ರಿವರ್ಣದ ಕಾಗದದ ಧ್ವಜವನ್ನು ಕೇಸರಿ ಮೇಲಕ್ಕೆ ಹಸಿರು ಕೆಳಕ್ಕೆ ಬರುವ ಹಾಗೆ ಸರಿಯಾಗಿ ನೋಡಿ ಸಿಕ್ಕಿಸಿಕೊಂಡು, ಕೈಯಲ್ಲಿ ಪ್ಲಾಸ್ಟಿಕ್ ಬಾವುಟವನ್ನು ಹಿಡಿದುಕೊಂಡು, ಶೆಟ್ಟಿ ಅಂಗಡಿಯಿಂದ ತಂದ ಮೋತೀಸ್ ಬನ್ನನ್ನು ಹಾಲಿನಲ್ಲಿ ಅದ್ದಿಕೊಂಡು ತಿಂದು ರಸ್ತೆಗೆ ಬೀಳುವುದು. ಘಟ್ಟದ ಕಾಡಿನಲ್ಲಿ ಸಣ್ಣದಾಗಿ ಹರೆಯುವ ತೊರೆಯ ಹಾಗೆ ರಸ್ತೆಯಲ್ಲಿ ಆಗಲೇ ಸಾಗಿದ್ದ ಬಿಳಿ ಯೋಧರ ಸಾಲಿನಲ್ಲಿ ಸೇರಿಕೊಂಡು ಸ್ಕೂಲು ತಲುಪುವುದು. ಪಿ.ಟಿ ಮಾಷ್ಟ್ರ ಸೀಟಿಯ ಆಜ್ಞಾನುಸಾರ ಕೈಚಾಚಿ ಅಳತೆ ಹಿಡಿದು ಸಾಲು ಮಾಡಿ  ನಿಲ್ಲುವುದು. ಪ್ರತಿ ದಿನದ ಪ್ರಾರ್ಥನೆಯ ಬೇಸರ ಕಳೆಯುವ ಹೊಸ ಪ್ರಾರ್ಥನೆಗಳನ್ನು ಎತ್ತರದ ಧ್ವನಿಯಲ್ಲಿ ಹಾಡುವುದು. ಹಾಡಿನಲ್ಲಿ ತಿಳಿಯದ, ನೆನಪಾಗದ ಸಾಲುಗಳು ಬಂದಾಗ ಗಳ ಗಳನೆ ಧ್ವನಿಯ ಅಬ್ಬರದಲ್ಲಿ ಅದನ್ನು ತೇಲಿಸಿ ನೆನಪಿರುವ ಸಾಲು ಬರುವವರೆಗೆ ಕಾಯುವುದು. ಹೆಡ್ ಮಾಸ್ಟರ್ ಶಾಲೆಯ ಧ್ವಜ ಸ್ತಂಭದ ಬಳಿಗೆ ಬಂದು ಆ ದಿನದ ವಿಶೇಷ ಅತಿಥಿಯ ಕೈಲಿ ಕಂಬಕ್ಕೆ ಕಟ್ಟಿದ ಹಗ್ಗವನ್ನೆಳೆಸಿದ ತಕ್ಷಣ ಕಂಬದ ತುದಿಯಲ್ಲಿ ಮುದುರಿ ಕುಳಿತಿದ್ದ ಬಾವುಟ ರೆಕ್ಕೆ ಬಿಚ್ಚಿಕೊಳ್ಳುವುದು, ಅದರೊಳಗೆ ಇಟ್ಟಿದ್ದ ಗುಲಾಬಿ, ದಾಸವಾಳ, ಸೇವಂತಿಗೆ ಹೂಗಳ ಪಕಳೆಗಳ ವೃಷ್ಟಿಯಾಗುವುದು, ಕೇಸರಿ ಬಿಳಿ ಹಸಿರು ಬಣ್ಣದ ಧ್ವಜವು ಗಾಳಿಗೆ ಪಟಪಟಿಸುವುದನ್ನು ಕಂಡು ಕಿವುಡಾಗುವಂತೆ ಚಪ್ಪಾಳೆ ತಟ್ಟುವುದು. ಬಲಗೈ ಸೆಟೆಸಿ ಸೆಲ್ಯೂಟ್ ಹೊಡೆಯುತ್ತ ಧ್ವಜದಲ್ಲಿ ಸೃಷ್ಟಿ ನೆಟ್ಟು ‘ಸಾರೇ ಜಹಾ ಸೇ ಅಚ್ಛಾ…’ ಹಾಡುವುದು. + +ತಮ್ಮ ತಲೆಗೂದಲಲ್ಲಿ ಸಿಲುಕಿಕೊಂಡ ಧ್ವಜದಿಂದ ಚಿಮ್ಮಿದ ಹೂ ಪಕಳೆಗಳನ್ನು ಹೊರತೆಗೆದು ವಿಶೇಷ ಅತಿಥಿಗಳು, ಹೆಡ್ಮಾಸ್ಟರು ಭಾಷಣಕ್ಕೆ ತಯಾರಾಗುವುದು, ಪಿಟಿ ಮೇಷ್ಟ್ರು ದೊಡ್ಡ ದೊಡ್ಡ ಪೆಪ್ಪರಮೆಂಟಿನ ಚೀಲಗಳ ಬಾಯಿ ಒಡೆಯುತ್ತಾ ಹರಿವಾಣದಲ್ಲಿ ಅವನ್ನು ಗುಡ್ಡೆ ಹಾಕುವುದನ್ನು ನೋಡುತ್ತಾ ನಿಂತಲ್ಲಿಯೇ ಜಾಗ ಮಾಡಿಕೊಂಡು ಬಿಳಿಯ ಚಡ್ಡಿ ಕೊಳೆಯಾಗದಂತೆ ಕರವಸ್ತ್ರ ಹಾಕಿಕೊಂಡು ಕುಳಿತುಕೊಳ್ಳುವುದು. ಪ್ರತಿ ವರ್ಷದ ಭಾಷಣಗಳಲ್ಲಿ ಕೇಳಿ ಬರುತ್ತಿದ್ದ ಗಾಂಧೀಜಿ, ನೆಹರೂ, ಸುಭಾಷ್ ಚಂದ್ರಬೋಸ್ ರ ಕತೆಗಳನ್ನು ನೆನೆಯುತ್ತಾ ಕೈಗೆ ಸಿಕ್ಕ ಚಿಕ್ಕ ಎಲೆಗಳನ್ನು, ಪೇಪರ್ ತುಂಡುಗಳನ್ನು ಹರಿದೆಸೆಯುತ್ತಾ, ಸಣ್ಣ ಕಲ್ಲುಗಳನ್ನು ಮುಂದೆ ಕೂತಿರುವ ಹುಡುಗನ ಗಮನಕ್ಕೆ ಬರದಂತೆ ಆತನ ಚಡ್ಡಿಯೊಳಕ್ಕೆ ಹಾಕುತ್ತ ಸ್ಟೇಡಿಯಂಗೆ ಹೋಗುವ ಕ್ಷಣದ ಗಣನೆ ಮಾಡುತ್ತ, ದೂರದಲ್ಲಿ ನಿಲ್ಲಿಸಿದ್ದ ಟ್ಯಾಬ್ಲೋದ ಸೌಂದರ್ಯವನ್ನು ಆಸ್ವಾದಿಸುವುದು. ಭಾಷಣಗಳು ಮುಗಿದ ನಂತರ ಸಿಕ್ಕುತ್ತಿದ್ದ ಎರಡು ಮೂರು ಪೆಪ್ಪರಮೆಂಟುಗಳಲ್ಲಿ ಒಂದನ್ನು ಬಾಯಿಗೆ ಹಾಕಿಕೊಂಡು ಇನ್ನೆರಡನ್ನು ಕಬಳಿಸುವ ಮುಹೂರ್ತವನ್ನು ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡು ಶಾಲೆಯಿಂದ ಸ್ಟೇಡಿಯಂಗೆ ಹೊರಟ ಸಾಲಿನಲ್ಲಿ ಹೆಜ್ಜೆ ಹಾಕುವುದು. + +ಶಾಲೆಯ ವಿಶಾಲ ಬಯಲಿನಲ್ಲಿ ಕಂಡ ಬಿಳಿ ಯೂನಿಫಾರ್ಮಿನ ಹುಡುಗ ಹುಡುಗಿಯರ ಸಾಗರವನ್ನೇ ಮರೆಸುವಷ್ಟು ವಿಶಾಲವಾಗಿ ಚಾಚಿಕೊಂಡ ಸ್ಟೇಡಿಯಮ್ಮಿನ ಉದ್ದಗಲಗಳನ್ನು ಲೆಕ್ಕ ಹಾಕುತ್ತಾ ಕ್ಲಾಸ್ ಲೀಡರು ತೋರಿದ ಜಾಗದಲ್ಲಿ ಕೂರುವುದು. ಅಲ್ಲಿ ಇಲ್ಲಿ ಅಲೆಯುವ ಐಸ್ ಕ್ಯಾಂಡಿ, ಸೀಬೆ ಕಾಯಿ, ಹುರಿಗಡಲೆ, ಬಟಾಣಿ ಮಾರುವವರ ಮೇಲೆ ಕಣ್ಣಿಟ್ಟು ಪಥ ಸಂಚಲನದಲ್ಲಿ ತೊಡಗಿದ ಹೋಂ ಗಾರ್ಡುಗಳು, ಪೊಲೀಸರು, ಎನ್.ಸಿ.ಸಿ, ಸ್ಕೌಟ್,ಗೈಡ್‌ಗಳ ಹುಡುಗ ಹುಡುಗಿಯರು, ನಮ್ಮದೇ ಶಾಲೆಯ ವಿದ್ಯಾರ್ಥಿಗಳನ್ನು ಕುತೂಹಲದಿಂದ ನೋಡುವುದು. ಸುತ್ತಮುತ್ತಲಿನ ಗದ್ದಲ, ಗಲಿಬಿಲಿಯಲ್ಲಿಯೇ ಟ್ಯಾಬ್ಲೋಗಳ ಮೇಲೆ ಬರೆದ ಸಂದೇಶಗಳನ್ನು ಓದುವುದು, ಪಾತ್ರಧಾರಿಗಳ ವೇಷ ಭೂಷಣ,ಹಾವ ಭಾವವನ್ನು ಗ್ರಹಿಸುತ್ತಾ ಅವರ ಪಾತ್ರವನ್ನು ಅಂದಾಜಿಸುವುದು. ಸ್ಪೀಕರಿನಿಂದ ಅಸ್ಪಷ್ಟವಾಗಿ ಹೊರಡುವ ಕಾರ್ಯಕ್ರಮ ನಿರೂಪಕರ ಧ್ವನಿಯೆಡೆಗೆ ನಿರ್ಲಕ್ಷ್ಯ ತಾಳಿ ಅತ್ತಿಂದಿತ್ತ ಚಟುವಟಿಕೆಯಿಂದ ಓಡಾಡುವ ಕ್ಯಾಮರ, ಮೈಕ್ ಹಿಡಿದ ವ್ಯಕ್ತಿಗಳನ್ನು ಗಮನಿಸುವುದು. ಏರಿದ ಬಿಸಿಲನ್ನು ಮರೆ ಮಾಡುವ ಶಾಮಿಯಾನಾದಡಿಯಲ್ಲಿ ಕುಳಿದ ಗಣ್ಯರನ್ನು ಗುರುತಿಸುವ ಹಿಂದಿನ ಸಾಲಿನ ದೊಡ್ಡ ತರಗತಿಯ ವಿದ್ಯಾರ್ಥಿಗಳನ್ನು ಬೆರಗಿನಿಂದ ನೋಡುತ್ತಲೇ ವಿವಿಧ ಬಗೆಯ ನೃತ್ಯ, ದೈಹಿಕ ಕಸರತ್ತಿನ ಮನರಂಜನಾ ಕಾರ್ಯಕ್ರಮಗಳಿಗೆ ಸಾಕ್ಷಿಯಾಗುವುದು. + +ಕಾರ್ಯಕ್ರಮಗಳು ಒಂದೊಂದೇ ಮುಗಿಯುತ್ತಿದ್ದಂತೆಯೇ ಏರುತ್ತಿದ್ದ ಬಿಸಿಲಿನ ಝಳದ ದೆಸೆಯಿಂದಲೋ, ಕ್ಲಾಸ್ ಟೀಚರು, ಪಿಟಿ ಮಾಷ್ಟ್ರ ಕಣ್ಮರೆ ಒದಗಿಸಿದ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವ ನೆಪದಿಂದಲೋ ಅಲ್ಲಿಂದ ತಪ್ಪಿಸಿಕೊಂಡು ಸೀದಾ ಮನೆಯೆಡೆಗೆ ಓಡುವುದು. + +ಬೆಳಗಿನ ಬ್ರೆಡ್ಡು ಹಾಲಿನ ಉಪವಾಸವನ್ನು ನೆನೆಯುತ್ತ ಟಿವಿಯಲ್ಲಿ ಪ್ರಸಾರವಾಗುವ ಪರೇಡ್, ಪ್ರಧಾನ ಮಂತ್ರಿಯವರ ಕೆಂಪು ಕೋಟೆಯ ಭಾಷಣವನ್ನು ನೋಡುತ್ತಾ ಊಟ ಮಾಡಿ ಮಲಗುವುದು. ಎಚ್ಚರವಾದಾಗ ಹೊರಗೆ ಅಲೆದಾಡಿ ಕ್ರಿಕೆಟ್, ಗೋಲಿ, ಐಸ್ ಪೈಸು ಆಟದ ಕಾರ್ಯಕ್ರಮವು ಎಲ್ಲಾದರೂ ಶುರುವಾಗಿದೆಯೇ ಎಂದು ಗಮನಿಸುವುದು. ಭಾಗವಹಿಸುವ ಅವಕಾಶವಿದ್ದರೆ ಪ್ರತಿಭಾ ಪ್ರದರ್ಶನಗೈದು ಮನೆಗೆ ಹಿಂದಿರುವುದು. ಹಿಂದಿನ ದಿನವೇ ಹೋಂ ವರ್ಕು ಮುಗಿದಿದ್ದರೆ ಸಂಜೆಯೆಲ್ಲಾ ಟಿವಿ ಸಖ್ಯ ಸಾಧ್ಯವಾಗುತ್ತಿತ್ತು. ಟಿವಿಯಲ್ಲಿ ಮೂರನೆಯ ಬಾರಿಗೋ ನಾಲ್ಕನೆಯ ಬಾರಿಗೋ ಬಾರ್ಡರ್ ಸಿನೆಮಾ ನೋಡಿ ದಿನ ಆಯಾಸಕ್ಕೆ ಗೌರವ ಕೊಟ್ಟು ನಿದ್ರೆಗೆ ಶರಣಾಗುವುದು. + +ಈಗ ನಾನು ಸ್ಕೂಲು ಹುಡುಗನಲ್ಲ. ಹುಡುಗಾಟಿಕೆಗೆ ಮಾಫಿ ಸಿಗುವ ಕಾಲ ಎಂದೋ ಕಳೆಯಿತು. ಈಗ ನನಗೆ ಸ್ವಾತಂತ್ರ್ಯ ದಿನವೆಂದರೇನು? + +ಈಗಲೂ ಅದು ಹಬ್ಬವೇ! + +ಮೊಬೈಲಿನ ಇನ್ ಬಾಕ್ಸಿನಲ್ಲಿ ಶೇಖರಗೊಳ್ಳುವ ಶುಭಾಶಯಗಳ, ಇನ್ ಬಾಕ್ಸಿಗೆ ಬಂದು ಬೀಳುವ ಭಾರತೀಯನಾಗುವುದಕ್ಕೆ ಹೆಮ್ಮೆ ಏಕೆ ಪಡಬೇಕೆಂದು ಪುಟಗಟ್ಟಲೆ ವಾದ ಮಂಡಿಸುವ ಇ-ಮೇಲುಗಳ, ಸ್ವಾತಂತ್ರ್ಯ ಹೋರಾಟವನ್ನು , ಹೋರಾಟಗಾರರನ್ನು ನೆನೆಯುವ ಟಿವಿ ಚಾನಲ್ಲುಗಳ ಕಾರ್ಯಕ್ರಮ, ಪತ್ರಿಕೆಗಳ ವಿಶೇಷ ಪುರವಣಿಗಳು, ದೇಶ ಭಕ್ತಿ ಉಕ್ಕುಕ್ಕಿ ಹರಿಯುವ ಬ್ಲಾಗುಗಳು ಇವುಗಳ ನಡುವೆ ಮುಳುಗಿ ಏಳುತ್ತಾ, “ಈ ಹಬ್ಬಗಳು ನಮಗೆ ಏಕೆ ಅವಶ್ಯಕವೆಂದರೆ” ಎಂದು ಪ್ರತಿ ಹಬ್ಬಗಳನ್ನು ಸ್ವಾಗತಿಸುವಂತೆ ಆಗಸ್ಟ್ ಹದಿನೈದನ್ನೂ ಕಳೆಯುವುದು. + +ಈಗ ಪರೇಡು ನಡೆಯವ ಕ್ರೀಡಾಂಗಣಕ್ಕೆ ಹೋಗಲೇಬೇಕೆಂಬ ಕಟ್ಟಳೆಯಿಲ್ಲ. ಬಿಳಿಯ ಬಟ್ಟೆ , ಬಿಳಿ ಸಾಕ್ಸು, ಬಿಳಿ ಕ್ಯಾನ್ವಾಸ್ ಶೂಗಳಿರಬೇಕೆಂಬ ನಿಯಮವಿಲ್ಲ. ಬೆಳಗಿನ ಹಾಲು ಬ್ರೆಡ್ಡಿನ ಉಪವಾಸವಿಲ್ಲ. ಸಾಲಾಗಿ ನಿಂತು ಪ್ರಾರ್ಥನೆ ಹಾಡಬೇಕೆಂಬ, ಕಾರ್ಯಕ್ರಮವಿಡೀ ಮೌನವಾಗಿರಬೇಕೆಂಬ, ಬಿಸಿಲಲ್ಲಿ ಕಾದು ಭಾಷಣ ಕೇಳಬೇಕೆಂಬ ಕಾಯಿದೆಯಿಲ್ಲ. ಮೂರು ತುಂಡು ಪೆಪ್ಪರಮೆಂಟಿಗಾಗಿ ಗಂಟೆಗಳ ಕಾಲ ಕಾಯಬೇಕಿಲ್ಲ. ಸಿಕ್ಕ ಮೂರು ಪೆಪ್ಪರಮೆಂಟನ್ನು ತೀರಾ ಮುತುವರ್ಜಿಯಿಂದ ಖರ್ಚು ಮಾಡಬೇಕಾದ ಅನಿವಾರ್ಯತೆಯಿಲ್ಲ. + +ಈಗ ಬೆಳೆದವನು ನಾನು. ನಿಜ, ನಾನೀಗ ಸ್ವತಂತ್ರನು. ಆದರೂ ಬಿಳಿ ಯೂನಿಫಾರ್ಮ್ ತೊಟ್ಟು ಗೆಳೆಯರ ಸಾಲಿನಲ್ಲಿ ಶಿಸ್ತಾಗಿ ಕೂತು, ಕಾಯಲು ನಿಂತ ಮೇಷ್ಟ್ರ ಕಣ್ಣಿಗೆ ಬೀಳದಂತೆ ಕೂಗಳತೆಯ ದೂರದಲ್ಲಿರುವ ತಳ್ಳುಗಾಡಿಗಳ ಮೇಲೆ ಆಸೆಯ ದೃಷ್ಟಿ ಬೀರುತ್ತಾ ಕೂರುವುದು ಅದ್ಯಾಕೆ ಸುಖವೆನ್ನಿಸುತ್ತದೆಯೋ ಕಾಣೆ! + +[ಚಿತ್ರಗಳು-ಸಂಗ್ರಹದಿಂದ] \ No newline at end of file diff --git a/Kenda Sampige/article_536.txt b/Kenda Sampige/article_536.txt new file mode 100644 index 0000000000000000000000000000000000000000..8a2b1b7d1d18256d08b7061e57771f9d7750f2ab --- /dev/null +++ b/Kenda Sampige/article_536.txt @@ -0,0 +1,13 @@ +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನವಿಕಾಸ ನೇಗಿಲೋಣಿಬರೆದ ಕವಿತೆ ಇಲ್ಲಿದೆ + +ನನ್ನ ರಾತ್ರಿ ಎಲ್ಲರ ರಾತ್ರಿಗಳ… + +ನನ್ನ ರಾತ್ರಿ ಎಲ್ಲರ ರಾತ್ರಿಗಳ ಥರ-ಅಲ್ಲ.ದೂರದಲ್ಲಿ ನಾಯಿಯೊಂದು ಬೊಗಳುತ್ತದೆ.ಸೈರನ್ ಹನ್ನೆರಡಕ್ಕೆಡ್ಯೂಟಿ ಮಾಡುತ್ತದೆ.ಯಾರೋ ಬೈಕ್ ಜೋರಾಗಿ ಓಡಿಸಿಕೊಂಡುಈ ಜಗತ್ತಿನಿಂದ ದೂರ ಹೋಗುವಗಡಿಬಿಡಿಯಲ್ಲಿದ್ದಂತಿದ್ದಾರೆ.ಜಗಳಗಳು ನಿದ್ರಿಸುತ್ತವೆ.ಪ್ರೀತಿಗಳು ಕೈಲಿ ಕೈ ಬೆಸೆದುಕೊಂಡುವಿರಮಿಸಿವೆ. + +ಬೀದಿ ಕೊನೆಯಲ್ಲಿ ಹಚ್ಚಿದ ಟೈರ್ ನ ಬೆಂಕಿಈಗ ತಾನೇ ಆರುತ್ತಿದೆ.ಬೂದಿಯಲ್ಲಿ ಕೆಂಡದ ಕಾವುಕಾಣೆಯಾಗುವ ಹಂತದಲ್ಲಿದೆ.ಅಮ್ಮನ ಕಾಲ್ಗಳ ಬಿರುಕುನೋಯುತ್ತಿಲ್ಲಅಥವಾ ನೋವು ಅವಳ ನಿದ್ದೆಯಮಧ್ಯೆ ಗೊತ್ತಾಗದಂತಿದೆ.ನನ್ನ ರಾತ್ರಿ ಎಲ್ಲರ ರಾತ್ರಿಗಳ ಥರ-ಅಲ್ಲ. + +ತೂಕಡಿಸುತ್ತಾರಾತ್ರಿ ಪಾಳಿ ನಡೆದಿದೆ,ಕಳ್ಳನಿಗೂ ಬೇಡ ಬೇಡ ಎಂದರೂನಿದ್ದೆ ಹತ್ತಿದೆ.ಕತ್ತರಿಗಳು, ಔಷಧಗಳು, ಆಸ್ಪತ್ರೆಯಪ್ರಾಣ, ಪಕ್ಷಿಗಳುಡಾಕ್ಟರ್ ಸ್ಟೆತೋಸ್ಕೋಪು, ಬಿಳಿ ಬಟ್ಟೆ,ಮಗುವಿನ ಉಚ್ಚೆ, ಹೇಲುಗಳಬಟ್ಟೆ,ರಾತ್ರಿ ಎಲ್ಲಾ ನೋವು ಕೊಟ್ಟುಶಾಂತವಾಗಿರುವ ಬಸುರಿ ಹೊಟ್ಟೆ,ಎಲ್ಲಾ ಸದ್ದುಗಳೂ ಪ್ರಜ್ಞೆಗಳಾಚೆ,ನಿದ್ದೆಯ ಆಚೀಚೆ.ನನ್ನ ರಾತ್ರಿ, ಎಲ್ಲರ ರಾತ್ರಿಗಳ ಥರ-ಅಲ್ಲ. + +ಏನಾಯಿತು ಹಸಿವು,ಯಾಕಾಯಿತು ಜಗಳ,ಯಾವ ವೀಣೆಯಿಂದೆದ್ದ ಸ್ವರ,ಸಾರು ನೀರಾ, ಬೇಕಾ ಖಾರಾ,ಎಷ್ಟು ದಿನದಿಂದಿದೆ ಜ್ವರ,ನಾಯಿಗೆ ಅನ್ನ ಹಾಕುವುದ ಮರೆತಿರಾ,ಹಗಲೆಲ್ಲಾ ಕೊಂದಿತೇ ಬೆನ್ನು ನೋವು,ರಾತ್ರಿ ಪೂರಾ ಸತ್ತಿತೇ ಕಾಮ ಕಾವು,ಸುಳ್ಳು, ಪಾಪಪ್ರಜ್ಞೆ,ಸೂಕ್ಷ್ಮ ಸಂವೇದನೆ, ವೇದನೆ,ಬುದ್ಧಿಜೀವಿಗಳು, ದೇಶಭ್ರಷ್ಠತೆ, ಕೋಮು ಗಲಬೆ,ರಾಜಕೀಯ ಪ್ರಜ್ಞೆ, ಯುವ ಜಾಗೃತಿ, ಮತದಾನದ ಹಕ್ಕು ಮತ್ತು ಕರ್ತವ್ಯ,ಮಹಿಳಾ ಮೀಸಲಾತಿ, ಸಮಾನತೆ, ಸ-ಮಾನ--ತೆಗೆಹಗೆ, ಹೊಗೆ, ಅನಿಷ್ಠ, ಇಷ್ಟ, ಕಷ್ಟ….ಶ್ ರಾತ್ರಿಯಾಯಿತು, ಮಲಗು.ನನ್ನ ರಾತ್ರಿ. ಎಲ್ಲರ ರಾತ್ರಿ. ಥರ-ಅಲ್ಲ. + +ಕವಿ, ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ. ಊರು ಉಡುಪಿ. ಇರುವುದು ಬೆಂಗಳೂರು. \ No newline at end of file diff --git a/Kenda Sampige/article_537.txt b/Kenda Sampige/article_537.txt new file mode 100644 index 0000000000000000000000000000000000000000..94a3bda7d230096b8bd89a28489f7cea589b0e9f --- /dev/null +++ b/Kenda Sampige/article_537.txt @@ -0,0 +1,15 @@ +ನಾನು, ಪ್ರಕಾಶ್ ಹಾಗೂ ಮಕ್ಕಳು ಸೇರಿ, ಪ್ರತಿಯೊಂದು ಹಬ್ಬಗಳಿಗೆಂದು ನಮ್ಮೂರು ಕಡಮೆಗೆ ಹೋದಾಗಲೆಲ್ಲ ಸಂಜೆಯ ವೇಳೆ ತಪ್ಪದೇ ಗೋಕರ್ಣಕ್ಕೆ ಹೋಗುವ ರೂಢಿಯಿರಿಸಿಕೊಂಡಿದ್ದೆವು. ಆಗ ನಮ್ಮ ಅತ್ತೆಯವರು ‘ಹಾಗೇ ದೇವಸ್ಥಾನಕ್ಕೂ ಸ್ವಲ್ಪ ಹೋಗಿಬನ್ರೋ’ ಎಂದು ಕೊಂಚ ಗದರುವ ಸ್ವರದಲ್ಲೇ ಹೇಳುವರು. ಆಗೆಲ್ಲ ಪ್ರಕಾಶ್‌ನ ತಮ್ಮಂದಿರು ಮುಸಿ ಮುಸಿ ನಗುತ್ತಿದ್ದರು. ಅವರಲ್ಲಿ ಒಬ್ಬ ತಮ್ಮನಂತೂ ದೊಡ್ಡ ಜೋಕು ಮಾಡುವವನಂತೆ, ಅವಸರವಸರವಾಗಿ ತೆಂಗಿನಕಾಯಿ ಹಣ್ಣು ಹೂ ಕಡ್ಡಿ ಕರ್ಪೂರ ಹುಡುಕಿ ತಂದು ಒಂದು ಚೀಲದಲ್ಲಿ ಹಾಕಿ ನಮ್ಮ ಕೈಯಲ್ಲಿ ಹಿಡಿಸಲು ಮುಂದಾಗುತ್ತಿದ್ದ. ನಾವು ಗೋಕರ್ಣಕ್ಕೆ ಹೋಗುತ್ತಿದ್ದುದೇ ಗೌರೀಶರ ಸನ್ನಿಧಿಗೆ ಮತ್ತು ಕಡಲ ದಂಡೆಯಲ್ಲಿ ಸೂರ್ಯಾಸ್ತ ನೋಡಲು ಎಂಬ ಸಂಗತಿ ಮನೆಯವರಿಗೆಲ್ಲ ಮೊದಲೇ ಗೊತ್ತಿರುತ್ತಿತ್ತು. ತನ್ನ ಪ್ರಚಂಡ ಬಂಡಾಯವು ತಮ್ಮಂದಿರ ಕಣ್ಣಿನಲ್ಲಿ ಹೀಗೆ ನಗೆಪಾಟಲಾದ ಆ ಸ್ಥಿತಿಯಲ್ಲಿ ಪ್ರಕಾಶ್‌ನ ಕಣ್ಣು ಇದ್ದಲ್ಲೇ ಕೆಂಪಗಾಗುವದು. ಈ ದುರ್ವಾಸ ಮುನಿಯ ಅವಸ್ಥೆಯನ್ನು ಕಂಡು ನಾನು ಮನಸ್ಸಲ್ಲೇ ನಗುತ್ತಿದ್ದೆ. ಪ್ರತಿಸಲ ಗೋಕರ್ಣಕ್ಕೆ ಹೊರಟಾಗಲೂ ಇಂಥದೊಂದು ತಮಾಷೆ ಮನೆಯಲ್ಲಿ ನಡೆಯುತ್ತಿತ್ತು. ನಮ್ಮ ಪ್ರಕಾಶ್, ಗೋಕರ್ಣದ ಭದ್ರಕಾಳಿ ಜ್ಯೂನಿಯರ್ ಕಾಲೇಜಿನಲ್ಲಿ ಗೌರೀಶರ ಶಿಷ್ಯರು. ಪ್ರಕಾಶನ ಇಂಥ ದುರ್ಗತಿಯನ್ನು ನಾನೊಂದು ದಿನ ಗೌರೀಶರ ಬಳಿಯೂ ಹೇಳಿದೆ. ಅದಕ್ಕೆ ಪೂರಕವಾಗಿ ಅವರು ತಮ್ಮದೇ ಸ್ವಂತ ಅನುಭವವೊಂದನ್ನು ನೆನಪಿಸಿದ್ದರು. ಬಹಳ ಹಿಂದೆ ಗೌರೀಶರೊಮ್ಮೆ ಯಾರದೋ ವ್ಯಾಜ್ಯದ ವಹಿವಾಟಿನಲ್ಲಿ ಸಾಕ್ಷಿ ಪುರುಷನಾಗಿ ಕೋರ್ಟಿನ ಕಟಕಟೆಯಲ್ಲಿ ನಿಲ್ಲಬೇಕಾಯಿತಂತೆ. ಅಲ್ಲಿಯ ಕರಣಿಕರು ‘ದೇವರಾಣೆ ಮಾಡಿ ಸತ್ಯ ಹೇಳುತ್ತೇನೆಂದು ಪ್ರಮಾಣ ತೆಗೆದುಕೊಳ್ಳಿ’ ಅಂದರಂತೆ. ಸಂದಿಗ್ಧದಲ್ಲಿ ಸಿಲುಕಿದ ಗೌರೀಶರು ‘ಸತ್ಯದ ಆಣೆಯಾಗಿ ಸತ್ಯವನ್ನೇ ಹೇಳುತ್ತೇನೆ, ದೇವರ ಆಣೆ ಮಾಡಲು ನಾನು ದೇವರನ್ನು ನಂಬುವುದಿಲ್ಲ, ಆದರೆ ಸತ್ಯವನ್ನು ನಂಬುತ್ತೇನೆ ಒಪ್ಪಿಸಿಕೊಳ್ಳಿ’ ಅಂದರಂತೆ. ಹೀಗೆ ತಾನು ನಂಬಿದ್ದನ್ನು ತನ್ನ ಮಟ್ಟಿಗಾದರೂ ಪ್ರತಿಪಾದಿಸುವ ಗಂಡೆದೆ ಸಹಜವಾಗಿ ಬರಬೇಕು ಎಂದು ಗೌರೀಶರು ಪ್ರಕಾಶ್‌ನ ಮುಖವನ್ನು ಓರೆಗಣ್ಣಿನಿಂದ ನೋಡುತ್ತ ಹೇಳಿದ್ದರು. + +ನಾವು ದೇವರಿಂದ ಗಳಿಸಿಕೊಳ್ಳಲಾರದ್ದನ್ನು, ಹಿರಿಯರೂ ತಂದೆ ಸಮಾನರೂ ಆದ ಗೌರೀಶರಿಂದ ಪಡೆದಿದ್ದೇವೆ ಎಂಬುದಕ್ಕೆ ಈ ಮೇಲಿನ ಪ್ರಸಂಗ ಹೇಳಿದೆ. ಗೌರೀಶರ ಮನೆ ಇಂದಿಗೂ ನಮ್ಮ ಪಾಲಿಗೆ ಒಂದು ಮಧುರ ಅನುಭೂತಿಯ ಮಂದಿರವೇ ಸರಿ. ‘ಮಂದಿ ನಮ್ಮೊಡನೆ ಹೇಗೆ ನಡೆದುಕೊಳ್ಳಬೇಕೆಂದು ನಮ್ಮ ಅಪೇಕ್ಷೆಯೋ ಅದರಂತೆ ನಾವು ಮಂದಿಯೊಂದಿಗೆ ನಡೆದುಕೊಳ್ಳಬೇಕು’ ಎನ್ನುತ್ತಿದ್ದ ಗೌರೀಶರ ಆಳವಾದ ಅನುಭವಶೀಲತೆ ಯಾವ ಸೂಫಿ ಸಂತನಿಗೂ ಕಡಿಮೆಯಿರಲಿಲ್ಲ. ಅವರ ಸ್ವಭಾವದಲ್ಲಿ ಎಂದಿಗೂ ಮೂರ್ತಿಭಂಜಕ ಪ್ರವೃತ್ತಿಯಿರಲಿಲ್ಲ. ‘ನಮ್ಮ ಮಟ್ಟಿಗೆ ನಾವು ಸರಿಯಿದ್ದರಾಯ್ತು. ಸರಿ ಕಂಡವರು ಬೇಕಿದ್ದರೆ ಅದನ್ನು ಅನುಕರಿಸಬಹುದು’ ಎನ್ನುತ್ತಿದ್ದ ಗೌರೀಶರು ಎಂದೂ ತಮ್ಮ ಅಭಿಪ್ರಾಯವನ್ನು ಇನ್ನೊಬ್ಬರ ಮೇಲೆ ಹೇರಿದವರಲ್ಲ. ಸಾಹಿತ್ಯದಿಂದ ಸಮಾಜ ಸುಧಾರಣೆಯಾಗುತ್ತದೆಯೇ? ಎಂಬ ನಮ್ಮದೊಂದು ಸಣ್ಣ ಅನುಮಾನಕ್ಕೆ ಗೌರೀಶರು ಮೆಲುದನಿಯಲ್ಲಿ ‘ಕಿಟಕಿಯಿಂದ ಗಾಳಿ ಬೀಸಿದಾಗ ಗೋಡೆಗೆ ಹಚ್ಚಿದ ಭೂಪಟ ಹಾರಾಡ್ತದೆ, ಹಾಗಂತ ಭೂಕಂಪ ಆಗುತ್ತದೆಯೇ?’ ಹೀಗೆನ್ನುತ್ತ ನಕ್ಕು ಬಿಟ್ಟಿದ್ದರು. + +೧೯೯೦ ರ ಸುಮಾರಿಗೆ ಇರಬಹುದು, ಗೌರೀಶರ ಸಮಗ್ರ ಸಾಹಿತ್ಯದ ಮೊದಲ ಸಂಪುಟದ ಬಿಡುಗಡೆ ಕಾರ್ಯಕ್ರಮದಲ್ಲಿ ಅನಿಸುತ್ತದೆ. ಗೌರೀಶರ ಪರಿಚಯವಾಗಿ ನನಗಿನ್ನೂ ಹೊಸದು. ಗೌರೀಶರ ಅಮೋಘ ಭಾಷಣದ ಕೌಶಲ್ಯ ನಾನು ಪ್ರಥಮವಾಗಿ ಆಲಿಸಿದ್ದು ಆಗಲೇ. ಅಂದು ಅವರು ವೇದಿಕೆಯಲ್ಲಿ ಮಾತಾಡುತ್ತ ‘ನಮ್ಮ ಸಂಸ್ಕೃತಿ ಏಕರೂಪವಾಗಿಲ್ಲ, ಅದೊಂದು ನೂರಾರು ಚಿಂದಿಗಳಿಂದ ಮಕ್ಕಳು ಕಟ್ಟಿದ ಚೆಂಡಿನಂತೆ, ಆ ಚೆಂಡಿನಿಂದ ಚಿಂದಿಗಳನ್ನು ಬೇರೆ ಮಾಡಿದರೆ ಚೆಂಡು ಉಳಿಯಲಿಕ್ಕಿಲ್ಲ, ಆದರೆ ಒಳ್ಳೆಯದೆಲ್ಲವೂ ಮಾನವ ಸಂಸ್ಕೃತಿಯದು’ ಅಂದಾಗ ಒಮ್ಮೆಲೇ ಸಭಾ ಕಂಪನ ಉಂಟಾದದ್ದು ಇಂದಿಗೂ ನನಗೆ ನೆನಪಿದೆ. ಗೌರೀಶರ ಭಾಷಣಗಳೆಂದರೇ ಹಾಗೆ. ನಾವು ಕೇಳರಿಯದ ಹೊಸ ಶಬ್ದ ಸಂಪತ್ತಾಗಲೀ ಭೌದ್ಧಿಕ ಘರ್ಷಣೆಯ ಹೊಸ ಹೊಂಬೆಳಕಾಗಲೀ ಶೋತೃಗಳಿಗೆ ದೊರೆತಿರಲೇ ಬೇಕು. ಅವರ ಮಾತಲ್ಲಿ ಅವರ ಬರಹಗಳಿಗಿಂತಲೂ ಭಿನ್ನವಾದ ಚಲನೆಯಿರುವುದು ಅಚ್ಚರಿಮೂಡಿಸುವಂಥದು. ಒಂದು ವಿಷಯವನ್ನು ಬಿಡಿಸುವ ಮಾತಿನ ಸುಲಲಿತ ವೈಖರಿ, ಪದಗಳನ್ನು ಒಂದರ ಹಿಂದೊಂದರಂತೆ ಹೂಮಾಲೆ ಪೋಣಿಸುವಂತೆ ಜೋಡಿಸುವ ಕಲೆ, ಗೌರೀಶರಿಗೆ ಅವರ ಅಗಾಧ ಅಧ್ಯಯನಶೀಲತೆಯಿಂದಲೇ ಒದಗಿ, ಒಲಿದು ಬರುತ್ತಿತ್ತು ಅನಿಸುತ್ತದೆ. ಈಗಾಗಲೇ ರೂಢಿಗತವಾಗಿದ್ದ ಚರ್ವಿತ ಚರ್ವಣ ಮಾತನ್ನು ಅವರು ಎಂದೂ ಬಳಸುತ್ತಲೇ ಇರಲಿಲ್ಲ. ಶಬ್ದವನ್ನು ಒಡೆದು ಮಾತಾಡುವ, ವಾಕ್ಯವನ್ನು ತಿರುವು ಮುರುವಾಗಿ ಹೆಣೆದು ಚಿಕಿತ್ಸೆಗೊಳಪಡಿಸಿ, ಅದರ ಅರ್ಥ ಮತ್ತು ಭಾವಗಳ ಜೊತೆ ಸರಸವಾಡುವ ಈ ಅಪೂರ್ವ ಕಲೆ, ನನಗೆ ತಿಳಿದಂತೆ ನಮ್ಮ ಜಿಲ್ಲೆಯಲ್ಲಿ ಗೌರೀಶರೊಬ್ಬರಿಗೇ ಸಿದ್ಧಿಸಿತ್ತು. ಒಂದೇ ಸಂಗತಿಯನ್ನು ಇನ್ನೊಮ್ಮೆ ಕೇಳಿದ್ದೇ ಆದರೆ ಬೇರೆಯದೇ ಶಬ್ದಗಾರುಡಿ ನಿರ್ಮಿಸಿರುತ್ತಿದ್ದರು. ಪ್ರತಿ ಸರ್ತಿ ಅವರನ್ನು ಭೇಟಿಯಾದಾಗಲೂ ನಮ್ಮ ವಿವೇಚನೆಗೆ ಮೀರಿದ ಹಲವು ಸಂಗತಿಗಳು ಸತ್ಯಗಳು ನಮಗೆ ನಿಲುಕಿರುತ್ತಿತ್ತು. ಇದೀಗ ಆನುದಾದಾ(ಜಯಂತ)ನ ಬಳಿ ಮಾತಾಡಿದಾಗಲೂ ಹಾಗೆಯೇ ಅನಿಸುವುದುಂಟು. + +ಆಡು ಮುಟ್ಟದ ಸೊಪ್ಪಿಲ್ಲ ಎನ್ನುವಂತೆ ಗೌರೀಶರ ಬರಹದ ವೈಶಾಲ್ಯ ವೈವಿಧ್ಯತೆ ಮತ್ತು ವಿಶಿಷ್ಟತೆ. ಈ ದಟ್ಟ ಕಾಡಿನಲ್ಲಿ ಒಂದಿಡೀ ಜಗತ್ತು ಓದುಗರಿಗೆ ದೊರೆಯುತ್ತದೆ. ರಾಘವೇಂದ್ರ ಪ್ರಕಾಶನದಿಂದ ಹೊರಬಂದ ಗೌರೀಶರ ಸಮಗ್ರ ಹತ್ತು ಸಂಪುಟಗಳನ್ನು ಹೊರಳಿಸಿ ಹಾಕಿದರೆ ಮತ್ತು ಇನ್ನೂ ಹತ್ತು ಸಂಪುಟಕ್ಕಾಗುವಷ್ಟಿದ್ದ ಅವರ ಬಿಡಿ ಬರಹಗಳನ್ನು ನೆನೆದರೆ ಅಂಥ ಅಚ್ಚರಿಯೊಂದು ನಮ್ಮನ್ನು ಎಚ್ಚರಿಸುತ್ತದೆ. ಇಂಥ ವಿಫುಲ ಬರವಣಿಗೆಯ ಹಿಂದಿರುವ ಗೌರೀಶರ ಮನಸ್ಸು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿವ ಸೂಕ್ಷ್ಮಗ್ರಾಹೀ ಸಂವೇದನೆಯಿಂದ ಸಂಪನ್ನವಾಗಿತ್ತು ಅನಿಸುತ್ತದೆ. ಹೊಸ ಯೋಚನೆ ಹೊಸ ಚಿಂತನೆ ಹೊಸ ಅರಿವು ಹೊಸ ತಿಳಿವು ಇದು ಗೌರೀಶರ ಬರಹ ಹಾಗೂ ಮಾತಿನ ಅಪ್ಪಟ ಶೈಲಿ. ಅವರಿಗೆ ಈ ಜಾತಿ ವ್ಯವಸ್ಥೆಯ ಕುರಿತು ತೀವ್ರ ಆಕ್ರೋಶವಿತ್ತು. ಗೋಕರ್ಣದಂಥ ಸಂಪೂರ್ಣ ವೈದಿಕ ಪ್ರಪಂಚದಲ್ಲಿದ್ದೂ ಅವರು ತಮ್ಮ ನಿರ್ಭಿಡೆಯ ವಿಚಾರವಾದವನ್ನು ಪ್ರತಿಪಾದಿಸುತ್ತಲೇ ಬಂದವರು. ‘ಇಲ್ಲಿಯ ಭಕ್ತಿ ನಿಜವಾದದ್ದಲ್ಲ, ಮಾರ್ಕೆಟಿಂಗ್ ಭಕ್ತಿಯಿದು’ ಎಂದು ಯಾವಾಗಲೂ ಅನ್ನುತ್ತಿದ್ದರು. + +ನಾನು ಈ ಹಿಂದೆ ಶಾಂತಾಮಮ್ಮಿಯಿಂದ ಕೇಳಿ ತಿಳಿದಂತೆ ಬಾಲ್ಯದಲ್ಲಿ ಗೌರೀಶರು ಬೆಳೆದು ಬಂದ ಮನೆಯಲ್ಲಿ ಪುರಾಣ ಪುಣ್ಯ ಕಥೆಗಳ ಶ್ರವಣ ಒದಗಿ ಬರುತ್ತಿತ್ತಂತೆ. ಆಗಲೇ ಗೌರೀಶರಿಗೆ ಸಂಗೀತದ ಅಭಿರುಚಿ ಬೆಳೆದದ್ದು. ಗೌರೀಶರ ಅಮ್ಮ ಹಾಗೂ ದೊಡ್ಡಮ್ಮನವರ ಭಕ್ತಿ ಶ್ರದ್ಧಾಮಯ ಸಂಸ್ಕಾರ ಇವರ ಮೇಲೆಯೂ ಮೊದ ಮೊದಲು ಬಹಳವಾಗಿಯೇ ಆಯಿತು. ಆಗಲೇ ಗೌರೀಶರು ಮರಾಠಿಯಲ್ಲಿ ಪದ್ಯ ರಚನೆ ಆರಂಭಿಸಿದ್ದರಂತೆ. ಹೀಗೆ ಕ್ರಮೇಣ ಅವರಿಗರಿವಿಲ್ಲದಂತೆ ಗೀತರಚನೆ, ಕನ್ನಡ ಗದ್ಯರಚನೆ ಶುರುವಾದದ್ದು. ಕನ್ನಡ, ಮರಾಠಿ, ಹಿಂದಿ, ಇಂಗ್ಲೀಷ್ ಹಾಗೂ ಕೊಂಕಣಿ ಭಾಷೆಗಳ ಕತೆ ಕಾದಂಬರಿ ವಿಚಾರ ಸಾಹಿತ್ಯದ ಪುಸ್ತಕಗಳ ವ್ಯಾಸಂಗ ಅವರಲ್ಲಿ ಒಂದು ತಪಸ್ಸಿನಂತೆ ಬಲಿಯುತ್ತ ಹೋಯಿತು. ನಂತರ ಈ ಐದೂ ಭಾಷೆಗಳಲ್ಲಿ ಎಪ್ಪತ್ತಕ್ಕೂ ಹೆಚ್ಚು ಕೃತಿಗಳು ಹೊರಬಂದವು. ಅದಲ್ಲದೇ ಚಾಟು ಚತುರೋಕ್ತಿಗಳ ಸಂವಾದಗಳಿಂದ ಯುಕ್ತವಾದ ನಾಟಕಗಳನ್ನು ಅವರು ಬರೆದರು, ಅವು ರೇಡಿಯೋ ನಾಟಕಗಳಾದವು. ಅವರ ಮೊದಲಿನ ಪ್ರಧಾನ ಬರಹಗಾರಿಕೆ ತಾತ್ವಿಕ ಗ್ರಂಥಗಳು, ಮನೋವಿಜ್ಞಾನ, ಮಾರ್ಕ್ಸ್ ವಾದ, ನವಮಾನವತಾವಾದ ಮುಂತಾದವು. ಕನ್ನಡ ಮತ್ತು ಇಂಗ್ಲೀಷಿನ ಕಾವ್ಯ ಹಾಗೂ ಮರಾಠಿ ಗಾಯನ ಅವರಿಗೆ ಬಹು ಪ್ರಿಯವಾಗಿದ್ದವು. ಮುದ್ದಿನ ಮೊಮ್ಮಗಳು ಗೊಂಟಿ(ಸೃಜನಾ) ತಂದು ಕೊಟ್ಟ ಮರಾಠಿ ಗಾಯನದ ದ್ವನಿ ಸುರುಳಿಯನ್ನು ಅವರು ಪುನಃ ಪುನಃ ಆಲಿಸುತ್ತಿದ್ದರು. + +ರೆಸೆಲ್, ಎರಿಕ್ ಫ್ರಾಂ, ವೈಲ್ಡ್, ಬರ್ನಾಡ್ ಶಾ ಇಂಥ ಪಾಶ್ಚಿಮಾತ್ಯ ಲೇಖಕರ ಪ್ರಭಾವ ಗೌರೀಶರ ಪ್ರಜ್ಞೆಯ ಮೇಲೆ ಆತ್ಯಂತಿಕವಾಗಿ ಆದದ್ದನ್ನು ಹಾಗೂ ಬೇಂದ್ರೆ, ಮಾಸ್ತಿ, ಶಂಬಾ, ಕಾರಂತ ಮತ್ತು ಶ್ರೀರಂಗರಂಥ ವಿಭೂತಿಗಳ ಪ್ರಭಾವ ಅವರ ಕನ್ನಡ ಶೈಲಿಯ ಮೇಲೆ ಅಗಾಧವಾಗಿರುವುದನ್ನು ಅಲ್ಲಲ್ಲಿ ಕೆಲ ವಿಮರ್ಶಕರು ಗುರುತಿಸಿದ್ದಾರೆ. ಹೀಗೆ ತಮ್ಮ ಮಾತು ಹಾಗೂ ಬರವಣಿಗೆಗಳಿಂದ ಹಲವು ಕಟು ಸತ್ಯಗಳನ್ನು ಕಾಣಿಸಿ, ನಮ್ಮ ಮನಸ್ಸಿಗೆ ಹಾಗೂ ಬುದ್ಧಿಗೆ ಮುಸುಕಿದ ಮಂಜನ್ನೂ ಧೂಳನ್ನೂ ಒರೆಸಿ ತಮ್ಮದೇ ಆದ ವೈಚಾರಿಕ ಬೀಜಗಳನ್ನು ಬಿತ್ತಿದ, ಸಹಸ್ರಾರು ಪುಟಗಳಲ್ಲಿ ಒಡಮೂಡಿದ ಅಪಾರ ಅಕ್ಷರ ಸಂಪತ್ತುಗಳೇ ಗೌರೀಶರು ನಮಗೆ ನೀಡಿದ ಬಾಗಿನ. ಹೀಗೆ ಓದುಗರ ಮನಸ್ಸಿನಲ್ಲಿ ಆಳವಾಗಿ ನಿಲ್ಲುವುದೂ ಮತ್ತು ಎಲ್ಲರನ್ನೂ ಎಲ್ಲವನ್ನೂ ಒಳಗೊಳ್ಳುತ್ತ ಕೇವಲ ಅಕ್ಷರ ಮಾತ್ರದಿಂದ ಶಾಶ್ವತವಾಗಿ ಬದುಕಿರುವುದೂ ನಿಜಕ್ಕೂ ಸಾಹಿತ್ಯವೆಂಬ ಅರ್ಥದ ಗಹನತೆಗೆ ಸಾಕ್ಷಿ. ಪ್ರೊ. ಕಾಲ್ಡವೆಲ್ ಅವರ ಮಾತು ಈ ಸಂದರ್ಭದಲ್ಲಿ ಯಾಕೋ ನೆನಪಿಗೆ ಬರುತ್ತಿದೆ ‘ಸರಳ ಜೀವನದ ಕುರಿತು ಮಾತಾಡಲು, ಬರೆಯಲು ನಾವು ಹಿಂಜರಿಯುವುದಿಲ್ಲ, ಆದರೆ ಹಾಗೆ ಬದುಕಲು ನಾವು ಹಿಂಜರಿಯುತ್ತೇವೆ.’ ಹಾಗೊಂದು ಸರಳವಾದ ಬದುಕನ್ನೂ ಸಹ ಅಳವಡಿಸಿಕೊಂಡು ಪರಿಶುದ್ಧ ಮನಸ್ಸಿನಿಂದ ಬದುಕಿ ತೋರಿದವರು ನಮ್ಮ ಗೌರೀಶರು. + +ಈ ದಿನ ಗೌರೀಶರಿಗೆ ತೊಂಬತ್ತೇಳು ತುಂಬಿತು. ನನ್ನ ಹಾಗೂ ಆನುದಾದಾನ ಈ ನಲ್ಮೆಯ ಮುದ್ದು ಪಪ್ಪನಿಗೆ, ಅವರ ಬುದ್ಧಿ ಹಾಗೂ ಭಾವಗಳ ಜಗತ್ತಿಗೆ ಇದೊಂದು ಅಕ್ಕರೆಯ ಅಕ್ಷರಪುಷ್ಪ ನಮನ. + +ಕಥೆಗಾರ್ತಿ ಸುನಂದಾ ಕಡಮೆ ಉತ್ತರ ಕನ್ನಡ ಜಿಲ್ಲೆ, ಅಂಕೋಲಾ ತಾಲ್ಲೂಕಿನ ಅಲಗೇರಿ ಗ್ರಾಮದವರು. ಸದ್ಯ ಹುಬ್ಬಳ್ಳಿ ನಿವಾಸಿ. ಪುಟ್ಟ ಪಾದದ ಗುರುತು, ಗಾಂಧಿ ಚಿತ್ರದ ನೋಟು, ಕಂಬಗಳ ಮರೆಯಲ್ಲಿ, ತುದಿ ಮಡಚಿಟ್ಟ ಪುಟ ಇವರ ಪ್ರಕಟಿ ನಾಲ್ಕು ಕಥಾಸಂಕಲನಗಳು. ಬರೀ ಎರಡು ರೆಕ್ಕೆ, ದೋಣಿ ನಡೆಸೊ ಹುಟ್ಟು, ಹೈವೇ ನಂ. 63, ಎಳೆನೀರು (ಕಾದಂಬರಿಗಳು). ಪಿಸುಗುಡುವ ಬೆಟ್ಟಸಾಲು, ಪಡುವಣದ ಕಡಲು, ಕತೆಯಲ್ಲದ ಕತೆ ಇವು ಮೂರು ಪ್ರಬಂಧ ಸಂಕಲನಗಳು ಹಾಗೂ ಸೀಳುದಾರಿ ಎಂಬ ಕವನ ಸಂಕಲನಗಳೂ ಪ್ರಕಟವಾಗಿವೆ. \ No newline at end of file diff --git a/Kenda Sampige/article_538.txt b/Kenda Sampige/article_538.txt new file mode 100644 index 0000000000000000000000000000000000000000..9b873c3d0ce29063167a4663d7c46f775e10265e --- /dev/null +++ b/Kenda Sampige/article_538.txt @@ -0,0 +1,25 @@ +ಮಧ್ವ ಸಿದ್ಧಾಂತದ ಬಗ್ಗೆ ಕುವೆಂಪು ಅವರಿಗಿದ್ದ ಅಸಹನೆಯನ್ನು- ಮನುಷ್ಯರಾದರೆ ಸಾಕು- ಅರ್ಥ ಮಾಡಿಕೊಳ್ಳಬಹುದು. ಮಧ್ವ ಸಿದ್ಧಾಂತದ ನಿತ್ಯ ಮುಕ್ತ, ನಿತ್ಯ ಸಂಸಾರಿ, ನಿತ್ಯ ನಾರಕಿ- ಈ ದೃಷ್ಟಿಕೋನ ಈ ಜಗತ್ತು, ಮನುಷ್ಯ ಬದಲಾಗುವುದಿಲ್ಲ ಎಲ್ಲವೂ ನಿತ್ಯ ಅಂದರೆ ಶಾಶ್ವತ ಎಂದು ಸಮಾಜವನ್ನು ಜಡಗೊಳಿಸಿ ಚಲನರಹಿತ ಮಾಡಿ ನರಕವನ್ನೇ- ತಾರತಮ್ಯವನ್ನೇ ಸಿದ್ಧಾಂತಗೊಳಿಸಿಬಿಟ್ಟಿದೆ. + +ಇಂಥ ಕಡೆ ವಿಶ್ವೇಶ್ವರ ತೀರ್ಥರು ಹುಟ್ಟಿದ್ದಾರೆ. ಈ ಸಿದ್ಧಾಂತದ ಮಠಕ್ಕೆ ಶ್ರೀಗಳಾಗಿದ್ದಾರೆ. ಆದರೆ ಚಲನೆಯನ್ನು ಬಯಸುವಂತೆ ಕಾಣುತ್ತಾರೆ. ಹಾಗಾಗಿ, ತನ್ನ ಸಿದ್ಧಾಂತದ ಚೌಕಟ್ಟನ್ನು ಮೀರಲು- ಇವರು ಒದ್ದಾಡುತ್ತಿರುವಂತೆ ಕಾಣಿಸುತ್ತಿದೆ. ಈ ಒದ್ದಾಟ ಬಲೆಗೆ ಸಿಕ್ಕಿಕೊಂಡು ಕೈಕಾಲು ಬಡಿಯುತ್ತಿರುವ ಒಂದು ಗುಬ್ಬಚ್ಚಿಯ ಒದ್ದಾಟದಂತಿದೆ. ಇದನ್ನು ನೋಡಿದಾಗ ಇವರು ಅಲ್ಲಿರಬೇಕಾದವರಲ್ಲ, ನಮ್ಮ ಜೊತೆ ಇರಬೇಕಾದವರು ಅಂತ ಒಂದೊಂದು ಸಲ ಅನ್ನಿಸುತ್ತದೆ. + +ಆದರೆ ಇವರ ಒದ್ದಾಟವು ಆಳವಾದ ಧಾರ್ಮಿಕತೆಯಿಂದ ಬಂದುದೇ? ಅಂತರಂಗದ್ದೇ? ಎಂದು ಪ್ರಶ್ನಿಸಿಕೊಂಡಾಗ- ಧೈರ್ಯವಾಗಿ ಹೌದು ಎಂದು ಹೇಳಲು ಕಷ್ಟವಾಗುತ್ತದೆ. “ಕೀಳಿಂಗಲ್ಲದೆ ಹಯನು ಕರೆಯದು” ಎಂದರೆ, ತಾನು ತನ್ನ ಅಹಂ ಅನ್ನು ಅಲ್ಪವಾಗಿಸದೆ ಮೋಕ್ಷವಿಲ್ಲ- ಎಂಬ ತುಡಿತದಿಂದಾಗಿ ಅಹಂ ಅಲ್ಪವಿರುವ ಮೇಲರಿಮೆ ಇಲ್ಲದ ತಳ ಸಮುದಾಯವನ್ನು ಶ್ರೇಷ್ಠವೆಂದು ಭಾವಿಸಿದ ವಚನಕಾರರ ನಡೆ ಕಂಡಾಗ, ಶ್ರೀಪೇಜಾವರರ ಪಾದಯಾತ್ರೆ  ಧಾರ್ಮಿಕವಲ್ಲವೇನೋ ಧರ್ಮರಾಜಕಾರಣವಿರಬೇಕು ಎಂಬ ಅನುಮಾನ ಹುಟ್ಟಿಸುತ್ತದೆ. “ತಮ್ಮ ಮಠಕ್ಕೆ ಉತ್ತರಾಧಿಕಾರಿಯಾಗಿ ಕುರುಬರನ್ನಾದರೂ ಮಾಡುತ್ತೀರಾ” ಎಂದು ಕೇಳಿದರೆ, “ಬ್ರಾಹ್ಮಣರನ್ನು ಮಾತ್ರ ಕೇಳುತ್ತೀರಿ? ಕ್ರಿಶ್ಚಿಯನ್ನರನ್ನು ಕೇಳುತ್ತೀರಾ? ಲಾಮಾ ಮಾಡು ಎಂದು ಬೌದ್ಧರನ್ನು ಕೇಳುತ್ತೀರಾ?” ಎಂದು ಪೇಜಾವರರು ಸಹನೆ ಕಳೆದುಕೊಳ್ಳುತ್ತಾರೆ. + +“ನಾನು ಕ್ರಿಶ್ಚಿಯನ್, ನಾನು ಬೌದ್ಧ, ನಾನು ಯಾಕೆ ಮಠಾಧಿಪತಿಯಾಗಬಾರದು?” ಎಂದು ಆ ಧರ್ಮಗಳಲ್ಲಿರುವ ಯಾರೇ ಪ್ರಶ್ನಿಸಬಹುದು. ಇದಕ್ಕೆ ಆ ಧರ್ಮಗಳಲ್ಲಿ ಅವಕಾಶ ಇದೆ. ಕೆಲವು ಕಡೆ ಸಾಧ್ಯವೂ ಆಗಿದೆ. ಹಿಂದೂ ಎಂದುಕೊಂಡಿರುವ ಜಾತಿಧರ್ಮದಲ್ಲಿ ಇದು ಸಾಧ್ಯವೇ? ಹೊರಗೆ ನಿಂತಿರುವ ಕನಕದಾಸನ ಕುರುಬರು ನಿಮ್ಮ ಸಮಾಜಕ್ಕೆ ಸೇರಿಲ್ಲವೇ? ಅವರ ಧರ್ಮವೇ ಬೇರೆಯೇ? ಅಥವಾ ಪ್ರತಿ ಜಾತಿಯೂ ಒಂದೊಂದು ಧರ್ಮವೇ? + + + +ಹಾಗಾದರೆ ಧರ್ಮ ಎಂದರೇನು? ಜಾತಿಗಳ ಮೇಲು-ಕೀಳು ನಿಷಿದ್ಧಗಳ ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಅದಕ್ಕೇ ಪೇಜಾವರರನ್ನು ತಿರುಪತಿಯಲ್ಲಿ ಪೂಜೆಗೆ ಬಿಡುವುದಿಲ್ಲ ಎಂದರೆ -ನಾವೆಂಥ ಕ್ಷುದ್ರಜೀವಿಗಳು ಎಂದು ನಮಗನಿಸುವುದಿಲ್ಲ. ಈ ನಮ್ಮ ಮಠ, ದೇವಸ್ಥಾನ, ಪೂಜಾಸ್ಥಳಗಳಾದರೂ ಅಂಧಃತಮಸ್ಸಿನಿಂದ ಹೊರಬರಲು  ಇನ್ನೆಷ್ಟ್ಟು ವರ್ಷಗಳು ಕಾಯಬೇಕು? “ನಿನ್ನನ್ನು ನನ್ನ ಮಠದ ಉತ್ತರಾಧಿಕಾರಿಯನ್ನಾಗಿ ಮಾಡುತ್ತೇನೆ, ಮತಾಂತರ ಆಗಬೇಡ” ಎನ್ನಲು ಬಾಯಿಬಾರದ ಮಠಾಧಿಪತಿ “ಮತಾಂತರ ಆಗಬಾರದು” ಎಂದು ನೈತಿಕತೆ ಕಾಡದೆ ಹೇಳಿದರೂ ಅದರೊಳಗಿನ ನಿರ್ಲಜ್ಜತೆ ನಮಗೆ ಕಾಣಿಸುವುದಿಲ್ಲ. “ನೀನು ಹೊರಗಿರುವುದೇ ನಮ್ಮ ಸಂಪ್ರದಾಯ” ಎನ್ನುವುದರ ಕ್ರೌರ್ಯವೂ ನಮಗೆ ತಟ್ಟುವುದಿಲ್ಲ. + +ಈಗ ಪೇಜಾವರ ಶ್ರೀಗಳು ದಲಿತರಿಗೆ ವೈಷ್ಣವ ದೀಕ್ಷೆ ಕೊಡಲು ಹೊರಟಿದ್ದಾರೆ. ಈಗಾಗಲೇ ವೈಷ್ಣವ ದೀಕ್ಷೆ ಪಡೆದ ಅನೇಕ ದಲಿತ ದಾಸ ಒಕ್ಕಲುಗಳು ಇವೆ. ಶಂಖ-ಜಾಗಟೆಯನ್ನು ಪ್ರತ್ಯೇಕವಾಗಿ ಮಡಿಯಾಗಿ ಇಟ್ಟುಕೊಂಡು, ಆ ಇಟ್ಟಿರುವ ಜಾಗಕ್ಕೆ ಉಳಿದವರಿಗೆ ಪ್ರವೇಶ ಕೊಡದೆ, ದಾಸ ಒಕ್ಕಲುಗಳಲ್ಲೇ ಮದುವೆಗೆ ಹೆಣ್ಣು ಗಂಡು ಹುಡುಕುತ್ತಿವೆ. ಇದು ಭೇದವನ್ನು ಹೆಚ್ಚಿಸಿರುವುದೇ ಹೊರತು ಐಕ್ಯತೆಯನ್ನಲ್ಲ. ಪೇಜಾವರ ಶ್ರೀಗಳ ಪಾದಯಾತ್ರೆಯಿಂದ ದಲಿತರಲ್ಲಿ ಇನ್ನಷ್ಟು ದಾಸರು ಹೆಚ್ಚಾಗಬಹುದು. ಶಂಖಜಾಗಟೆ ಬಾರಿಸಬಹುದು!  ಎಷ್ಟೇ ಶಂಖ ಜಾಗಟೆ ಬಾರಿಸಿದರೂ ಅವರ ಅಸ್ಪೃಶ್ಯ ಸ್ಥಿತಿಯಿಂದ ಚಲನೆ ಕಾಣದು, ಯಾಕೆಂದರೆ ವೈಷ್ಣವ ದೀಕ್ಷೆ ಎಂದರೆ ಸೇವಕತನದ ದಾಸ ದೀಕ್ಷೆ. + +ಹೀಗಿರುವಾಗ ಶ್ರೀ ಪೇಜಾವರರು ವೈಷ್ಣವದೀಕ್ಷೆಯನ್ನು ಪುನರ್ ಪರಶೀಲಿಸುವುದು ಒಳಿತೇನೋ. ಬದಲಾಗಿ ದ್ವಿಜರಿಗೆ ತ್ರಿಜ ದೀಕ್ಷೆ ಕೊಡುವುದು ನಮ್ಮ ಸಮಾಜದ ಆರೋಗ್ಯ ಐಕ್ಯತೆ ಸಮತೋಲನಕ್ಕೆ ಅಗತ್ಯವೇನೋ ಅನ್ನಿಸುತ್ತದೆ. ಹಾಲಿ ದ್ವಿಜ ದೀಕ್ಷೆಯು ಬುದ್ಧಿ ಕೇಂದ್ರಿತವಾಗಿದೆ. ದ್ವಿಜ ದೀಕ್ಷೆಯ ಗಾಯತ್ರೀ ಮಂತ್ರದಲ್ಲಿ, ಬುದ್ಧಿ ಪ್ರಚೋದನೆಯಾಗಲಿ ಎಂಬ ಆಶಯವಿದೆ. ಬುದ್ಧಿಯಿಂದ ಒಡಕು ವಂಚನೆ ಮೇಲರಿಮೆ ಕೀಳರಿಮೆ ಇತ್ಯಾದಿಗಳು ಹೆಚ್ಚಲೂಬಹುದು. ಭಾರತದ ಸಮಾಜಕ್ಕೆ ಇಂದು ತುರ್ತಾಗಿ ಬೇಕಾಗಿರುವುದು- ಕರುಳು ಅಂದರೆ ಅಂತಃಕರಣ ಅಂದರೆ ಬಂಧುತ್ವ- ಇದರ ಪ್ರಚೋದನೆಗಾಗಿ, ಅಂದರೆ ಕಾರುಣ್ಯದ ಪ್ರಚೋದನೆಯಾಗಲಿ ಎಂಬ ಆಶಯದ ನವ ದೀಕ್ಷೆಯನ್ನು ನೀಡಿ ಎಂದು ಅವರಲ್ಲಿ ಪ್ರಾರ್ಥಿಸುವೆ. ನನ್ನ ಈ ಪ್ರಾರ್ಥನೆಯನ್ನು ಉದ್ಧಟತನವೆಂದು ಅವರು ಭಾವಿಸದಿರಲಿ. (ಈ ತ್ರಿಜ ದೀಕ್ಷೆಯ ಪರಿಕಲ್ಪನೆಯನ್ನು ಯು.ಆರ್. ಅನಂತಮೂರ್ತಿಯವರು ಏನಾರೂ ಕೇಳಿಸಿಕೊಂಡರೆ ಈ ತ್ರಿಜತ್ವ ದೀಕ್ಷೆಯನ್ನು ನೀನೇ ನನಗೆ ಕೊಡಯ್ಯಾ ಎಂದು ಕೇಳೇ ಕೇಳುತ್ತಾರೆಂಬ ಗ್ಯಾರಂಟಿ ನನಗಿದೆ!) + +ಭಾರತವು ಏನೇನೋ ಹುಟ್ಟುಹಾಕಿದೆ. ಹುಟ್ಟಿಸುವುದರಲ್ಲಿ ನಾವು ನಿಸ್ಸೀಮರು.  ಈಗ ಒಂದು ಹೊಸ ಹುಟ್ಟಿಗಾಗಿ ಪೇಜಾವರ ಶ್ರೀಗಳ ಮುಂದೆ ಸಲಹೆಯೊಂದನ್ನಿಡುವೆ… ನಮ್ಮದು ಜನ್ಮಾಂತರಗಳನ್ನು ನಂಬುವ ದೇಶ. ಈ ಜನ್ಮದ ತರ್ಕಕ್ಕೆ- ಕಳೆದ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸಿದವರೇ ಈ ಜನ್ಮದಲ್ಲಿ ಅದನ್ನು ಅನುಭವಿಸಲು ಅಸ್ಪೃಶ್ಯರಾಗಿ ಹುಟ್ಟಿದ್ದಾರೆ. ಈ ಜನ್ಮದಲ್ಲಿ ಅಸ್ಪೃಶ್ಯತೆ ಆಚರಿಸುವವರು ಮುಂದಿನ ಜನ್ಮದಲ್ಲಿ ಅಸ್ಪೃಶ್ಯರಾಗಿ ಹುಟ್ಟುವರು. -ಜನ್ಮ ನಿಜವಿದ್ದರೆ ಆ ಜನ್ಮಾಂತರದ ಕರ್ಮಫಲವನ್ನು ಉಣ್ಣಬೇಕಾದ್ದೂ ನಿಜವಿರಬಹುದಲ್ಲವೇ. ಏನೇನೋ ಹುಟ್ಟು ಹಾಕುವವರು ಇದನ್ನೂ ಯಾಕೆ ಹುಟ್ಟು ಹಾಕಬಾರದು?! ಯಾಕೆ ಮಠಾಧೀಶರುಗಳು ಇದನ್ನು ಪ್ರಚಾರ ಮಾಡಬಾರದು? ತಾರತಮ್ಯಕ್ಕಾಗಿ ತರ್ಕಿಸಿ ಸಾಯುವ ಭಾರತದ ಮನಸ್ಸು ಐಕ್ಯತೆಗಾಗಿ ಯಾಕೆ ತರ್ಕಿಸಬಾರದು? + +ಸುಸ್ತಾಗುತ್ತಿದೆ. ಯಾಕೋ ಮುಗಿಯುತ್ತಿಲ್ಲ. ಪ್ರೀತಿ-ಸಮಾನತೆಯ ಆಸೆ ಇಟ್ಟುಕೊಂಡು ಇತಿಹಾಸಕಾಲದಿಂದಲೂ ಜೀವಿಸುತ್ತಿದ್ದೇವೆ. ಪೇಜಾವರಶ್ರೀಗಳ ಪಾದಯಾತ್ರೆಯಿಂದಾಗಿ ಕೆಲವರಾದರೂ ಎಳೆಯ ದ್ವಿಜರು ತ್ರಿಜರಾಗಿ ತ್ರಿಜತ್ವ ಪಡೆದು ತಮ್ಮದಲ್ಲದ ಜಾತಿಯಲ್ಲಿ ಮದುವೆಯಾಗಿ ಹೊಸ ಮನುಷ್ಯ ಸಂತಾನ ಹುಟ್ಟಲು ಶ್ರೀ ಪೇಜಾವರರ ಈ ಪಾದಯಾತ್ರೆ ಪ್ರಚೋದನೆಯನ್ನು ಉಂಟು ಮಾಡಲಿ ಎಂದು ಕನಸು ಕಾಣುವೆ. ನನ್ನ ಕನಸು ನನಸಾಗಲಿ. + +(ಲೇಖಕರು ಮೈಸೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಮತ್ತು ವಿಸ್ತರಣಾ ಕೇಂದ್ರದಲ್ಲಿ ಮಾಡಿದ ಭಾಷಣದ ಆಯ್ದ ಭಾಗ) + +(ಲೇಖಕರ ಬಯಕೆಯಂತೆ ‘ಅನಾಮಿಕ’ ಪ್ರತಿಕ್ರಿಯೆಗಳಿಗೆ ಕಡಿವಾಣ ಹಾಕಲಾಗಿದೆ) + +ಕನ್ನಡದ ಅಪ್ರತಿಮ ಬರಹಗಾರ, ಚಿಂತಕ, ಸಂಘಟಕ, ಹೋರಾಟಗಾರ. ದ್ಯಾವನೂರು (ಕಥಾಸಂಕಲನ), ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ದೇವನೂರರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_539.txt b/Kenda Sampige/article_539.txt new file mode 100644 index 0000000000000000000000000000000000000000..3d83eb869eed58fce0335b323a41ac769d5c71cb --- /dev/null +++ b/Kenda Sampige/article_539.txt @@ -0,0 +1,35 @@ +byಮೊಗಳ್ಳಿ ಗಣೇಶ್|Dec 8, 2017|ಸಾಹಿತ್ಯ| 0 Comments + +ಡಾ. ಮೊಗಳ್ಳಿ ಗಣೇಶ್ ಕನ್ನಡದ ಕಥೆಗಾರರಾಗಿ ಹೆಸರಾದವರು. ಅವರ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ. + +byಬಸವರಾಜು|Dec 7, 2017|ಸಾಹಿತ್ಯ| 0 Comments + +ಈ ಎಂಬತ್ತು ವರ್ಷಗಳ ನಿರಂತರ ಸ್ವಾರ್ಥರಹಿತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಫಲವಾಗಿ ಇಂದು ಸಿದ್ಧಗಂಗಾ ಮಠ ಬೃಹತ್ ಮಠವಾಗಿ ಬೆಟ್ಟದಂತೆ ಬೆಳೆದು ನಿಂತಿದೆ. + +byಬಸವರಾಜು|Dec 7, 2017|ಸಾಹಿತ್ಯ| 0 Comments + +ಛೇ, ಎಂಥ ದರಿದ್ರ ದೇಶನಯ್ಯ ಇದು, ಆ ಕಂಬಾರ್ರು ಏನ್ ಮಾಡ್ತಿದಾರೋ, ಇಸ್ಮಾಯಿಲ್ ಏನೋ ಹೇಳಿದ್ದ, ಓಡಾಡ್ತಿದೀನಿ ಅಂತ… ಏ ನೀವೂ ಅಷ್ಟೇ, ಕತ್ತೆಗಳು, ಅದೇನ್ ಮೆಟೀರಿಯಲ್ ಸಿಕ್ಕುತ್ತೋ ಅದನ್ನು ತಗೋಂಡೋಗಿ ಕಂಬಾರ್ರಿಗೆ ಕೊಟ್ಟು ಹೌಸಲ್ಲಿ ಚರ್ಚೆಯಾಗುವಂತೆ ಮಾಡ್ರಯ್ಯ…’ + +byಜ್ಯೋತಿ ಗುರುಪ್ರಸಾದ್|Dec 7, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byಸುದರ್ಶನ್|Dec 5, 2017|ಸಾಹಿತ್ಯ| 0 Comments + +ಕಡಲನ್ನೇ ನೋಡಿರದ ದೀತಿಗೆ, ಕಡಲಿಂದ ನೂರಾರು ಮೈಲುಗಳ ತನ್ನ ಊರಲ್ಲೇ – ದೂರದಲ್ಲಿ ಹಕ್ಕಿಯಂತೆ ರೆಕ್ಕೆ ಬಿಚ್ಚಿದ ಹಾಯಿ ಹಡಗೊಂದು ಕಂಡಂತಾಗಿ, ಯಾವುದೋ ಪ್ರಯಾಣಕ್ಕೆ ನಾಂದಿ ಎಂದು ಅನಿಸುವುದುರ ಮೂಲಕ ಕತೆ ತೊಡಗುತ್ತದೆ. + +byಸುದರ್ಶನ್|Dec 5, 2017|ಸಾಹಿತ್ಯ| 0 Comments + +ನೀವು ಗಡಿಬಿಡಿಯಲ್ಲಿ ಹೋಗುತ್ತಿರುವಾಗ ಬೀದಿಯಲ್ಲಿ ನಿಮಗೊಂದು ಕಾಗದ ಬಿದ್ದಿರುವುದು ಕಣ್ಣಿಗೆ ಬೀಳುತ್ತದೆ. ಅದನ್ನು ಕಡೆಗಣಿಸಿ ಒಂದೆರಡು ಹೆಜ್ಜೆ ಮುಂದೆ ಹೋದೊಡನೆ ಆ ಇನ್ಲಾಂಡ್ ಲೆಟರ್‍ ಮೇಲೆ ಬರೆದಿದ್ದ ಹೆಸರು ನಿಮಗೆ ಪರಿಚಿತ ಎಂದು ಹೊಳೆಯುತ್ತದೆ. + +byಸುದರ್ಶನ್|Dec 5, 2017|ಸಾಹಿತ್ಯ| 0 Comments + +ಪಕ್ಕದ ಹೊಟೇಲಲ್ಲಿ ಬೈಟು ಕಾಫಿಗೆ ಕಾಯುತ್ತಾ ಕನ್ನಡಿಯ ಮುಂದೆ ಕೂತವರಂತೆ ಕೂತರು. ಮೀಸೆಗೆ ತಪ್ಪದೆ ಬಣ್ಣ ಹಚ್ಚಿಕೊಳ್ಳುವ ಇವನು ಅವನನ್ನು ಕುಣಿಯುವ ಕಣ್ಣುಗಳಿಂದ ನೋಡುತ್ತಿದ್ದ. ಅವನಿಗೇನೋ ದುಗುಡವಿದ್ದಂತೆ, ಆಗಾಗ ಗಡಿಯಾರ ನೋಡಿಕೊಳ್ಳುತ್ತಿದ್ದ.. + +byಕೃತಿ ಆರ್ ಪುರಪ್ಪೇಮನೆ|Dec 5, 2017|ಸಾಹಿತ್ಯ| 1 Comment + +ಮಲೆನಾಡಿನ ಹಬ್ಬಗಳ ಆಚರಣೆಗಳ ಬಗ್ಗೆ ಪತ್ರಿಕೆಗಳಿಗೆ ಏನು ವ್ಯಾಮೋಹವೊ ತಿಳಿಯದು. ಅಂತು ಪ್ರತಿ ಹಬ್ಬದಲ್ಲೂ ಒಂದು ಪೇಪರಲ್ಲಾದ್ರೂ ಕೃಷಿ ಕುಟುಂಬದ ಆಚರಣೆಯ ವಿವರಗಳನ್ನು, ಒಂಥರಾ ನಾಸ್ಟಾಲ್ಜಿಯ ದಾಟಿಯಲ್ಲಿ ಬರೆದಿರ್ತಾರೆ. + +byಕೆಂಡಸಂಪಿಗೆ|Dec 5, 2017|ಸಾಹಿತ್ಯ| 0 Comments + +ಕತ್ತಲಲ್ಲಿ ಕಳೆದು ಹೋಗುವ ಸೂಜಿಸಂದಿಯಲ್ಲಿ ಬಿಚ್ಚಿಬೀಳುವ ನೂಲಿನುಂಡೆಪೇಟೆ ತುಂಬ ಅಬ್ಬ ಎಷ್ಟೊಂದು ಗುಂಡಿಗಳುಮೆಲ್ಲಗೆ ಕಾಜು ಮುರಿದು ಸದ್ದಿಲ್ಲದೆ ಹೊರಬೀಳುತ್ತಿದೆ ಮೊಲಕತ್ತು ಚಾಚಿ ಅತ್ತಿತ್ತ ನೋಡಿ ಮನೆ ತುಂಡುಗಳ ಮೂಸುತ್ತಚಂಗನೆ ಟೆಂಪೋದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆಪೋಣಿಸಿದ ತಾಯನ್ನು ಅರಸಿಕೊಂಡು \ No newline at end of file diff --git a/Kenda Sampige/article_54.txt b/Kenda Sampige/article_54.txt new file mode 100644 index 0000000000000000000000000000000000000000..9a81e86afb07bf955db7bac4ab73902f33dd42ed --- /dev/null +++ b/Kenda Sampige/article_54.txt @@ -0,0 +1,45 @@ +ಮಹಿಳೆಯರ ಪ್ರಾತಿನಿಧಿಕ ಕವನಗಳ ಸಂಗ್ರಹಕ್ಕೆ ದೊಡ್ಡ ಇತಿಹಾಸವಿಲ್ಲ. 1943ರಲ್ಲಿ ಮೈಸೂರು ಪ್ರಾಂತ್ಯ ಸಮಿತಿ, ಕರ್ನಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿದ `ಹೂಮಾಲೆ’ ಕೃತಿಯು ಮೊತ್ತಮೊದಲ ಮಹಿಳೆಯರ ಕಾವ್ಯ ಸಂಗ್ರಹವಾಗಿದೆ. ಇದರಲ್ಲಿ ಐವರು ಮಹಿಳೆಯರ ಕವನಗಳಿವೆ. ಅನಂತರ 1984ರವರೆಗೂ ಅಂಥ ಸಂಕಲನಕ್ಕಾಗಿ ಕಾಯಬೇಕಾಯಿತು. ಕರ್ನಾಟಕ ಲೇಖಕಿಯರ ಸಂಘವು ಆ ವರ್ಷ `ಕವನ ಸೌರಭ’ವನ್ನು (ನಲವತ್ತೇಳು ಕವಯಿತ್ರಿಯರ ಒಂದೊಂದು ಕವನಗಳು) ಪ್ರಕಟಿಸಿತು. 1999ರಲ್ಲಿ ಕುಲಶೇಖರಿಯವರು ಸಂಪಾದಿಸಿದ `ಈ ಶತಮಾನದ ಕನ್ನಡ ಕವಯಿತ್ರಿಯರು’ ಕೃತಿಯು 1916ರಿಂದ 1998ರ ಅವಧಿಯಲ್ಲಿ ಕವನ ಸಂಕಲನಗಳನ್ನು ಪ್ರಕಟಿಸಿದ 370ರಷ್ಟು ಕವಯಿತ್ರಿಯರನ್ನು ಮತ್ತು ಅವರ ಒಂದೊಂದು ಕವನಗಳನ್ನು ಪರಿಚಯಿಸಿದ ಗಮನಾರ್ಹ ಪ್ರಯತ್ನವಾಗಿದೆ. ಕರ್ನಾಟಕ ಲೇಖಕಿಯರ ಸಂಘವು ಪ್ರಕಟಿಸಿದ `ಉರಿ ಬದಲಾಗಿದೆಯೆ’ (2002) `ಗರಿಕೆ’ (2008) ಸಂಗ್ರಹಗಳಲ್ಲಿ ಮೊದಲನೆಯದು 1997-2002ರ ಅವಧಿಯ ಮೂವತ್ತು ಕವಯಿತ್ರಿಯರ ಮತ್ತು ಎರಡನೆಯದು ಇಪ್ಪತ್ತೊಂಬತ್ತು ಕವಯಿತ್ರಿಯರ ಪ್ರಾತಿನಿಧಿಕ ಕವನಗಳ ಸಂಗ್ರಹವಾಗಿದೆ. 2011ರಲ್ಲಿ ಬೆಂಗಳೂರಿನ ಚಿಂತನ ಪುಸ್ತಕವು ಮಾಧವಿ ಭಂಡಾರಿ ಕೆರೆಕೋಣ ಸಂಪಾದಿಸಿದ, `ನೀನುಂಟು, ನಿನ್ನ ರೆಕ್ಕೆಗಳುಂಟು’ (ಈ ದಶಕದ ಮಹಿಳಾ ಸಂವೇದನೆಯ ಕವನಗಳು) ಪ್ರಕಟಿಸಿತು. ಅದೇ ವರ್ಷ ಮಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗವು ಐವರು ಕವಯಿತ್ರಿಯರ ಕವಿತೆಗಳಿರುವ `ನಾನು ಮತ್ತು ನನ್ನ ಬರಹ’ ಪ್ರಕಟಿಸಿತು. 2012ರಲ್ಲಿ ಬೆಂಗಳೂರಿನ ಗೀತಾಂಜಲಿ ಪಬ್ಲಿಕೇಷನ್ಸ್ ಎಂಬತ್ತು ಕವಯಿತ್ರಿಯರ ಕವಿತೆಗಳಿರುವ `ಕವನ ಗುಚ್ಛ’ ಪ್ರಕಟಿಸಿತು. ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯವು 2013ರಲ್ಲಿ ಪ್ರಕಟಿಸಿದ `ಮಹಿಳಾ ಕಾವ್ಯ’ ಸಂಕಲನವು 63 ಕವಯಿತ್ರಿಯರ ತಲಾ ನಾಲ್ಕು ಕವನಗಳನ್ನು ಒಳಗೊಂಡಿದೆ. ಅನಂತರದಲ್ಲಿ ಕವಿ ಪ್ರಕಾಶನದ `ಕಾವ್ಯಬೋಧಿ’, (ಕವಿ ಪ್ರಕಾಶನ, 2014) `ಅವಳ ಕವಿತೆ’ (ಕವಿ ಪ್ರಕಾಶನ, 2015-16), ಹರ್ ಪೋಯೆಮ್ಸ್ (ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2016) ಎಂಬ ಅನುವಾದ ಸಂಕಲನ, ಮಹಿಳಾ ಕಾವ್ಯ ಸಂಗ್ರಹ (ಸಿದ್ದಲಿಂಗೇಶ್ವರ ಪ್ರಕಾಶನ, ಗುಲ್ಬರ್ಗಾ, 2017), `ಬೆಂಕಿಯೊಳಗಣ ಬೆಳಕು’ (ಕವಿ ಪ್ರಕಾಶನ, 2018), ಕನ್ನಡ ಬರಹಗಾರ್ತಿಯರ ಪ್ರಾತಿನಿಧಿಕ ಸಂಕಲನ ಸಂಪುಟ 3 ಕಾವ್ಯ (ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, 2019), ಮಹಿಳಾ ಸಾಹಿತ್ಯ ಸಂಪುಟ-ಕಾವ್ಯ (ಕನ್ನಡ ಸಾಹಿತ್ಯ ಪರಿಷತ್ತು, 2020) ಮತ್ತು ಸೋಜುಗದ ಸೂಜಿಮಲ್ಲಿಗೆ (ನಿರಂತರ ಪ್ರಕಾಶನ, ಗದಗ, 2020) ಇವು ನನ್ನ ಗಮನಕ್ಕೆ ಬಂದ ಮುಖ್ಯ ಸಂಗ್ರಹಗಳಾಗಿವೆ. + +ಕನ್ನಡ ಸಾಹಿತ್ಯದ ಇತರ ಪ್ರಾತಿನಿಧಿಕ ಕವನ ಸಂಪುಟಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ತೀರ ಸೊರಗಿರುವುದನ್ನು ಸ್ತ್ರೀವಾದಿಗಳು ಆಧಾರ ಸಹಿತವಾಗಿ ದಾಖಲಿಸಿದ್ದಾರೆ. ಆ ಕಾರಣಕ್ಕಾಗಿ ಮಹಿಳೆಯರ ಬರಹಗಳಿಗೆ ಉತ್ತೇಜನ ನೀಡಲು ಆರಂಭವಾದ ಪ್ರತ್ಯೇಕ ಕಾವ್ಯ ಸಂಪುಟಗಳು ಅನಂತರದಲ್ಲಿ ಅಸ್ಮಿತೆಯ ಕಾರಣದಿಂದ ಪ್ರಕಟಿಸುವ ತುರ್ತನ್ನು ಎದುರುಗೊಂಡವು ಎಂಬುದು ವಾಸ್ತವ. ಆದರೆ ಇದೊಂದೇ ಕಾರಣವಲ್ಲ. ಕಳೆದ ಶತಮಾನದ ಎಪ್ಪತ್ತು-ಎಂಬತ್ತರ ದಶಕಗಳ ವಾರ್ಷಿಕ ಸಾಹಿತ್ಯ ಸಮೀಕ್ಷೆಗಳಲ್ಲಿ `ಈ ವರ್ಷದಲ್ಲಿ ಮಹಿಳೆಯರು ಕೆಲವು ಮುಖ್ಯ ಕಾದಂಬರಿ ಮತ್ತು ಕಥಾ ಸಂಕಲನಗಳನ್ನು ಪ್ರಕಟಿಸಿದ್ದಾರೆ’ ಎಂಬ ಒಂದು ಸಾಲಿನ ಶಿಫಾರಸು ನೀಡುತ್ತಿದ್ದ ಕ್ರಮ ಇಂದಿಗೂ ಹೆಚ್ಚೇನೂ ಬದಲಾಗಿಲ್ಲ. ತಮ್ಮ ಖಚಿತ ಮತ್ತು ನಿಷ್ಠುರ ವಿಮರ್ಶೆಗಾಗಿ ಹೆಸರಾಗಿದ್ದ ಕನ್ನಡದ ಹಿರಿಯ ವಿಮರ್ಶಕರೊಬ್ಬರು ಕೆಲವು ವರ್ಷಗಳ ಹಿಂದೆ, `ಕನ್ನಡದಲ್ಲಿ ಮಹಿಳೆಯರು ಯಾರು ಗಂಭೀರವಾಗಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ? ನಾನು ಯಾರ ಕೃತಿಗಳನ್ನೂ ಓದಿಲ್ಲ. ಬಿಡುವಾದಾಗ ಓದುವೆ. ಓದಬಹುದಾದ ಕೃತಿಗಳ ಒಂದು ಪಟ್ಟಿ ಮಾಡಿಕೊಡಿ’ ಎಂದಿದ್ದರು. ಈ ಮಾತು ಅವರಿಂದ ಕೇಳಿ ನನಗೆ ಗಾಬರಿಯೇ ಆಗಿತ್ತು. ಅನಂತರ ಇವರ ಬಗ್ಗೆ ಕನಿಕರ ತೋರಬೇಕೋ ಹೇವರಿಸಬೇಕೋ ಎಂಬ ಗೊಂದಲಕ್ಕೆ ಒಳಗಾಗಿದ್ದೆ. ಲೇಖಕಿಯರ ಸಾಹಿತ್ಯ ಓದುವ ಅವರ ಆಸಕ್ತಿಯು ನನ್ನನ್ನು ನೋಡಿ ಹುಟ್ಟಿದ್ದೋ ಅಥವಾ ನಿಜವಾದದ್ದೋ ಎಂಬುದನ್ನು ಪರೀಕ್ಷಿಸಲು ಕೆಲ ಕಾಲ ಕಾದೆ. ಅನಂತರ ಭೇಟಿಯಾದರೂ ಅವರಿಂದ ಯಾವ ಬೇಡಿಕೆಯಾಗಲೀ ಉತ್ಸಾಹವಾಗಲೀ ಕಂಡುಬರಲಿಲ್ಲ. + +(ಪ್ರೊ. ಸಬಿಹಾ ಭೂಮಿಗೌಡ) + +ಇಲ್ಲೇ ಇನ್ನೊಂದು ಸಂಗತಿಯನ್ನು ಪ್ರಸ್ತಾಪಿಸುವುದು ಸೂಕ್ತವೆನಿಸುತ್ತದೆ. ಮಹಿಳೆಯರ ಮಹತ್ವದ, ಹೊಸ ನೋಟದ, ಅಸ್ಮಿತೆಯ, ಕೃತಿಗಳನ್ನು ಪುರುಷ ವಿಮರ್ಶಕರು ಗಮನಿಸಿಯೇ ಇಲ್ಲ; ಇನ್ನು ವಿಮರ್ಶೆ ಬರೆಯುವುದು ದೂರದ ಮಾತು. ನಿದರ್ಶನಕ್ಕೆ ಸೀತೆ ರಾಮ ರಾವಣ, ವಿಮುಕ್ತೆ (ಎಚ್. ವಿ. ಸಾವಿತ್ರಮ್ಮ), ಊರ್ಮಿಳೆ (ನಳಿನಾ ಮೂರ್ತಿ), ಮಾಧವಿ, ಮೂಲಮುಖಿ (ಅನುಪಮಾ ನಿರಂಜನ), ನಾಸು (ಸುನಂದಾ ಬೆಳಗಾಂಕರ್), ಗಾಂಧಿ ಬಂದ (ಎಚ್. ನಾಗವೇಣಿ), ಜಯ, ಕಪ್ಪು ಕಿವಿಯ ಬಳಿಯ ಕುದುರೆಗಳು (ಎಂ. ಎಸ್. ವೇದಾ), ದ್ವಿತ್ವ (ಆರ್. ಸುನಂದಮ್ಮ) ಮುಂತಾದ ಹಲವನ್ನು ಇಲ್ಲಿ ಹೆಸರಿಸಬಹುದು. ಮುನ್ನುಡಿ, ಬೆನ್ನುಡಿ ಬರೆದ ಕೆಲವು ವಿಮರ್ಶಕರನ್ನು ಹೊರತುಪಡಿಸಿದರೆ, ಆ ಕೊರತೆಯನ್ನು ತುಂಬಿದ್ದು ವಿಮರ್ಶಕಿಯರೇ ಎಂಬುದನ್ನು ಗಮನಿಸಬೇಕು. + +ಇಂತಹ ಪೂರ್ವಗ್ರಹ, ಜಾಣ ಕುರುಡುತನ ಮತ್ತು ಮರೆವು ಇಂದಿಗೂ ವಿಮರ್ಶಕರಲ್ಲಿ ವ್ಯಾಪಕವಾಗಿರುವ ಹೊತ್ತಲ್ಲಿ ಕವಯಿತ್ರಿಯರ ಪ್ರಾತಿನಿಧಿಕ ಕವನ ಸಂಗ್ರಹಗಳಿಗೆ ಮಹತ್ವವೂ ಇದೆ; ಅವುಗಳ ಪ್ರಕಟಣೆಯ ಅಗತ್ಯವೂ ಇದೆ. ಇಂತಹ ಪ್ರಾತಿನಿಧಿಕ ಸಂಕಲನಗಳು ಮಹಿಳಾ ಸಂವೇದನೆ, ಆದ್ಯತೆ, ಕಾವ್ಯ ಪರಿಶ್ರಮಗಳನ್ನು ಅರಿಯಲು ಸಹಕಾರಿಯಾಗಿವೆ. ಆ ಮೂಲಕ ಮಹಿಳಾ ಕಾವ್ಯ ಚರಿತ್ರೆಯ ಅಧ್ಯಯನಕ್ಕೆ, ಕಾವ್ಯದ ಬೆಳವಣಿಗೆಯ ಹೆಜ್ಜೆ ಗುರುತುಗಳನ್ನು ಅರಿಯುವುದಕ್ಕೆ ಮತ್ತು ಅವರ ಸಾಹಿತ್ಯ ಚರಿತ್ರೆಯನ್ನು ಕಟ್ಟುವುದಕ್ಕೆ ತುಂಬ ಅವಶ್ಯಕವಾಗಿವೆ. ಇಂಥ ಕೆಲಸವನ್ನು ಕವಿ ಪ್ರಕಾಶನವು 2014ರಿಂದ ಮಾಡುತ್ತಿದ್ದು, ಇದುವರೆಗೆ ಮೂರು ಕಾವ್ಯಸಂಗ್ರಹಗಳನ್ನು ಅದು ಹೊರತಂದಿರುವುದು ಗಮನಾರ್ಹ. ಪ್ರಸ್ತುತ ಕೃತಿಯು 2020-2022ರ ನಡುವಿನ ಕವಿತೆಗಳ ಸಂಗ್ರಹವಾಗಿದೆ. ಒಟ್ಟು 60 ಕವಯಿತ್ರಿಯರನ್ನು ಆರಂಭದಲ್ಲಿ ಗುರುತಿಸಲಾಯಿತಾದರೂ ಅಂತಿಮವಾಗಿ 56 ಕವಯಿತ್ರಿಯರ ಕವನಗಳನ್ನು ಇಲ್ಲಿ ಸೇರ್ಪಡೆಗೊಳಿಸಲಾಗಿದೆ. ಇದರಲ್ಲಿ ಸಾಧ್ಯವಾದಷ್ಟು ಸಾಮಾಜಿಕ ನ್ಯಾಯ, ಪ್ರಾದೇಶಿಕ ನ್ಯಾಯವನ್ನು ಒಳಗೊಳಿಸಲಾಗಿದೆ. + +ಹಿರಿಯ ಕವಯಿತ್ರಿಯರಿಂದ ಎಳೆಯ ಕವಯಿತ್ರಿಯರ ಕವನಗಳು ಈ ಸಂಗ್ರಹದಲ್ಲಿವೆ. ಕವಿತೆಗಳ ಸಂಗ್ರಹದ ಸಂದರ್ಭದಲ್ಲಿ ಮಾತನಾಡಿಸಿದಾಗ, ಕೆಲವು ಕವಯಿತ್ರಿಯರು `ಯಾಕೋ ಈಗೀಗ ಕವಿತೆ ಬರೆಯಲೇ ಆಗುತ್ತಿಲ್ಲ’, `ಕವಿತೆ ಬರೆದರೂ ಪ್ರಕಟಣೆಗೆ ಕಳಿಸಬೇಕೆನಿಸಿಲ್ಲ’, `ಬರೆದದ್ದು ನನಗೆ ತೃಪ್ತಿ ನೀಡಿಲ್ಲ’, `ಇತ್ತೀಚೆಗೆ ಕಾವ್ಯ ಪ್ರಕಾರದಿಂದ ದೂರ ಸರಿದಿದ್ದೇನೆ’ ಮುಂತಾದ ಮಾತುಗಳನ್ನಾಡಿದರು. ಇದಕ್ಕೆ ಕೆಲವರು ಕಾವ್ಯ ಪ್ರಕಾರದಿಂದ ಬೇರೆ ಪ್ರಕಾರದತ್ತ ಹೊರಳಿರುವುದು ಕಾರಣವಾಗಿದ್ದರೆ, ಇನ್ನು ಕೆಲವೊಮ್ಮೆ ಬದುಕಿನ ಧಾವಂತದಲ್ಲಿ ಬರೆದ ಎಲ್ಲ ಕವಿತೆಗಳನ್ನೂ ಒಂದೆಡೆ ಜೋಡಿಸಲು ಸೋತಿರುವುದೂ ಕಾರಣವಾಗಿರಬಹುದು. ಆದರೆ ಕಾವ್ಯ ಕ್ಷೇತ್ರದಲ್ಲಿ ದೀರ್ಘಕಾಲ ಪರಿಶ್ರಮ ಹೊಂದಿದವರಿಗೂ ಕವಿತೆಯನ್ನು ಬರೆಯಲಾಗದ ಸ್ಥಿತಿ ಮತ್ತು ಬರೆದರೂ ಎಲ್ಲಿಗೂ ಕಳಿಸಬೇಕೆನಿಸದಿರುವ ಮನಸ್ಥಿತಿಗೆ ಕೊರೋನೋತ್ತರ ಕಾಲದ ಪ್ರಭಾವ ಇರಬಹುದೇ ಎಂಬುದು ನನ್ನ ಶಂಕೆ. + +ಅದೇ ಸಂದರ್ಭದಲ್ಲಿ, ಹಲವು ಕವಯಿತ್ರಿಯರು `ನನಗೆ ಈ ಹಿಂದೆಯೂ ಸಾಕಷ್ಟು ಅವಕಾಶ ಒದಗಿದೆ. ಈ ಬಾರಿ ಹೊಸಬರಿಗೆ ಅವಕಾಶ ಕೊಡಿ’ ಅಂತಲೂ, `ನನ್ನ ಕವನ ದೀರ್ಘವಾಗಿದೆ. ಒಂದನ್ನೇ ಬಳಸಿಕೊಳ್ಳಿ’ ಎಂದೂ, `ಇತ್ತೀಚೆಗೆ ಇಂತಿಂಥವರು ಚೆನ್ನಾಗಿ ಬರೆಯುತ್ತಿದ್ದಾರೆ. ನೀವು ಅವರ ಕವನಗಳನ್ನು ಸೇರಿಸಿದ್ದೀರಾ?’ ಎಂದೂ ಸೋದರಿತ್ವದ, ಉದಾರತೆಯ, ವಿವೇಕದ ಮಾದರಿಯನ್ನು ಮುಂದಿಟ್ಟರು. ಅವಕಾಶಗಳನ್ನು ಬಾಚಿಕೊಳ್ಳುವುದೇ ಜಾಣತನ ಎಂಬ ಕಾಲದಲ್ಲಿ ಕವಯಿತ್ರಿಯರ ಈ ನಡೆ ನನಗೆ ಮಾದರಿ ಎನಿಸಿದೆ. + +ಒಟ್ಟೂ ಕವಿತೆಗಳನ್ನು ಇಡಿಯಾಗಿ ಗ್ರಹಿಸಿದಾಗ ಲೇಖಕಿಯರ ಸಂವೇದನೆಗಳು ವೈವಿಧ್ಯಮಯ ವಸ್ತು-ಸಂಗತಿಗಳಿಗೆ ಸ್ಪಂದಿಸಿವೆ. ಭಾವ ಸಂಬಂಧಗಳಲ್ಲಿ ಮಹಿಳೆಗೆ ಮೊದಲು ನೆನಪಾಗುವುದು ಅಮ್ಮ, ಅವಳ ಬದುಕು. ಅನಂತರದಲ್ಲಿ ಗಂಡ, ಮಕ್ಕಳು, ಸಮಾಜ ತನ್ನ ಮೇಲೆ ಹೊರಿಸಿದ ಮತ್ತು ತಾನೂ ಒಪ್ಪಿಕೊಂಡ ಕರ್ತವ್ಯದ ಹೊರೆ, ಅದನ್ನು ಒಂದು ಹಂತದಲ್ಲಿ ಹುರುಪಿನಿಂದ ಮಾಡಿದ್ದು, ಹಿಂತಿರುಗಿ ನೋಡುವ ಅವಕಾಶ ದೊರೆತಾಗ ತನ್ನ ಬೆಲೆರಹಿತ ಶ್ರಮ, ಸಮಯದ ಅರಿವು, ಅಸ್ಮಿತೆಯ ಕುರಿತ ಹೊಸ ಎಚ್ಚರ, ಆಗ ನಿಧಾನವಾಗಿ ಬಂಧನಗಳನ್ನು ಬಿಡಿಸಿಕೊಳ್ಳಲು ತಹತಹಿಸುವ ಅವಳ ಮನಸ್ಸು, ಎದುರಾಗುವ ಹತ್ತು ಹಲವು ಸಿಕ್ಕುಗಳು ಇಲ್ಲಿನ ಕವನಗಳನ್ನು ರೂಪಿಸಿವೆ. + +ಅಮ್ಮನನ್ನು ಕವಯಿತ್ರಿ ಮತ್ತು ಕವಿಗಳು ಕಂಡ ಬಗೆಯ ತೌಲನಿಕ ಅಧ್ಯಯನವು ಆಸಕ್ತಿದಾಯಕ ಆಗಬಹುದು. ಕವಯಿತ್ರಿಯರ ಸ್ಮೃತಿಯಲ್ಲಿ ಮತ್ತು ಅನುಭವದಲ್ಲಿ ಅಮ್ಮನ ಪಾತ್ರ, ಕಾರ್ಯ, ಲೋಕದೃಷ್ಟಿಗಳು ವಿಶಿಷ್ಟವಾಗಿವೆ. ಅಮ್ಮನನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಮೊದಲು ಅವಳು ಮನೆಯಿಂದ ಹೊರಹಾಕುವ ಕಸವನ್ನು ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಹಿರಿಯ ಕವಯಿತ್ರಿ! ಅಮ್ಮ ತನ್ನ ಮನೆಯ, ಮನದ, ಸಂಬಂಧದ ಯಾವ ವಸ್ತು ವಿಚಾರಗಳನ್ನೂ ಅವುಗಳಿಂದ ಪುನರ್ ಬಳಕೆ ಸಾಧ್ಯವಿಲ್ಲ ಎನಿಸುವವರೆಗೂ ಹೊರಹಾಕುವುದಿಲ್ಲ, ಅನಂತರವೇ ವಿವಿಧ ಲಕೋಟೆಗಳಲ್ಲಿ ಹಾಕಿ ಮನೆ, ಮನದಿಂದ ಹೊರ ಅಟ್ಟುತ್ತಾಳೆ ಎಂಬ ಚಿಂತನೆಯು ಹೊಸ ಒಳನೋಟವನ್ನು ನೀಡುತ್ತದೆ. ಇನ್ನೋರ್ವ ಕವಯಿತ್ರಿಯು ಅಮ್ಮ ಎತ್ತಿಡುವ ಎಲ್ಲವನ್ನೂ ನೆನಪಿಸಿಕೊಂಡು ಪಟ್ಟಿ ಮಾಡುತ್ತ ಬೆರಗಾಗುವುದು ಮಾತ್ರವಲ್ಲ; ಆ ವಸ್ತು-ಸಂಗತಿಗಳ ಮೂಲಕ ಅಮ್ಮ ಕಟ್ಟಿಕೊಂಡ ಸಂಬಂಧಗಳ ಭಾವ ಜಗತ್ತಿನ ಅಗಾಧತೆ ಮತ್ತು ಅನನ್ಯತೆಗಳು ಆಕೆಗೆ ಮೌಲಿಕವೆನಿಸುತ್ತವೆ. ಗಂಡ ಮರೆತದ್ದು, ಮಗ ಮುರಿದದ್ದು, ಮಗಳು ತುಳಿದದ್ದು, ಸೊಸೆ ಎಸೆದದ್ದು ಹೀಗೆ ಎಲ್ಲವನ್ನೂ ಅಮ್ಮ ಮರೆವಿನ ಹಗೇವಿನಲ್ಲಿ ಹುಗಿದಿಟ್ಟು ಕಾಯುವುದರ ಮೂಲಕ ಕಟ್ಟುವ ಸೇತುಬಂಧವು ಕವಯಿತ್ರಿಯ ಕಣ್ಣು ತೆರೆಸುತ್ತದೆ. + +ಅಮ್ಮನ ಕೈಗೆ ಜಾದೂ ಕೋಲಿನ ಶಕ್ತಿ ಇರುವುದನ್ನು ಇನ್ನೊಂದು ಕವನವು ವಿಭಿನ್ನವಾಗಿ ಅರುಹಿದೆ. ಎಲ್ಲವೂ ಸಹಜ, ಸುಲಲಿತ, ಅಯಾಚಿತ, ಅದು ಇರುವಂಥದ್ದೇ ಹೀಗೆ ಎಂಬ ಜಡ್ಡುಗಟ್ಟಿದ ಮನದಿಂದ ನೋಡುವವರಿಗೆ ಅರಿವಾಗದ ಅಮ್ಮನ ಶಕ್ತಿಯು ಮಗಳ ಕಣ್ಣಿಂದ ತಪ್ಪಿಸಿಕೊಳ್ಳುವುದಿಲ್ಲ. ಅಲ್ಲಿ ಅಮ್ಮ ಮುಟ್ಟಿದ್ದೇ ಬಿಡಿ ಮೊಗ್ಗು ಮಾಲೆಯಾಗುವ, ನೀರು ಚಹವಾಗುವ, ಅಕ್ಕಿ ಅನ್ನವಾಗುವ, ಹಾಲು ಮೊಸರಾಗುವ, ಕೂದಲು ಹೆರಳಾಗುವ ಇಂಥ ನೂರಾರು ಸಂಗತಿಗಳನ್ನು ಹೇಳುವ ಮೂಲಕ, ಅದರ ಹಿಂದಿನ ಅಮ್ಮನ ನಿಗಾ, ಪರಿಶ್ರಮ, ಜಾಣ್ಮೆ, ತಾಳ್ಮೆ, ವಿವೇಕ ಮುಂತಾದವುಗಳತ್ತ ಓದುಗರ ಗಮನ ಸೆಳೆಯುತ್ತದೆ. ಅಮ್ಮನ ಜೊತೆ ಅವಳ ಜಗತ್ತಾಗಿದ್ದ ಅಡುಗೆಮನೆ ಕೂಡ ಕವಯಿತ್ರಿಯರ ಭಾವಕೋಶವನ್ನು ಸದಾ ಕಾಡುವ ಸಂಗತಿ. ಯಾವುದನ್ನೋ ಇನ್ಯಾವುದರ ಜೊತೆಗೋ ಸೇರಿಸಿ ರುಚಿಕಟ್ಟಾದ ಅಡುಗೆ ಮಾಡುವಂತೆ, ಯಾವುದು ಯಾವುದರ ಜೊತೆ ಸೂಕ್ತ ಎಂದು ಆಯ್ಕೆ ಮಾಡಿ ಬಡಿಸುವಂತೆ, ಸಂಬಂಧಗಳನ್ನೂ ಆಕೆ ಜೋಡಿಸುತ್ತಾಳೆ. ಹಿಂದಿನ ಕಿಟಕಿಗಳಿಲ್ಲದ ಸ್ಥಿತಿಯಿಂದ ಸಾವಿರಾರು ಕಿಟಿಕಿಗಳ ಅಡುಗೆಮನೆ ತಯಾರಿಸುವ, ಮಾಡಿದ ಅಡುಗೆಯನ್ನು ಎಲ್ಲರಿಗೂ ವಿತರಿಸುವ ಆಶಯ ಹೊಸ ತಲೆಮಾರಿನ ಕವಯಿತ್ರಿಯದು. ಹೀಗೆ ಅಮ್ಮ, ಅಜ್ಜಿಯರ ಬದುಕು ಮತ್ತು ಕಾಣ್ಕೆಗಳು ಕವಯಿತ್ರಿಯರ ದೃಷ್ಟಿಯನ್ನು ವಿಸ್ತಾರಗೊಳಿಸಿವೆ. + +ಬಾಲ್ಯಕಾಲವನ್ನು ಇಂದು ಹಲವು ಕಾರಣಗಳಿಗೆ ಕವಯಿತ್ರಿಯರು ನೆನಪಿಸಿಕೊಂಡಿದ್ದಾರೆ. ಕರೆಂಟು ಹೋದಾಗ, ಕತ್ತಲೆ-ಬೆಳಕಿನ ಲೋಕವು ಹುಟ್ಟಿಸುತ್ತಿದ್ದ ಕಲ್ಪನಾ ಲೋಕಕ್ಕೆ ಮೊದಲ ಹೊಡೆತ ಟಾರ್ಚ್‌ನಿಂದ ಬಿದ್ದು, ಇಂದು ಯುಪಿಎಸ್ ನೆರವಿನಿಂದ ಕತ್ತಲಿಲ್ಲದ ಇರುಳನ್ನು ನಾವು ಪಡೆದರೂ ಕಲ್ಪನೆಗಳಿಲ್ಲದ ಬರಡು ರಾತ್ರಿಗಳನ್ನು ಬದಲಿಯಾಗಿ ಪಡೆದಿರುವ ಬಗ್ಗೆ ಕಳವಳ ಕವಿತೆಯದು. ಬಾಲ್ಯದಲ್ಲಿ ಹುರುಪಿನಿಂದ ಆಡುತ್ತಿದ್ದ ಕುಂಟಾಬಿಲ್ಲೆಯ ಆಟವು ಇಂದು ಆಟದ ನೆಪದಲ್ಲಿ ಹೆಣ್ಣುಮಕ್ಕಳನ್ನು ಸಾಮಾಜೀಕರಿಸುವ ರಾಜಕಾರಣವಾಗಿ ಕಾಣುತ್ತಿದೆ. ಈ ಆಟವನ್ನು ಅಂದಿನಿಂದ ದಮಯಂತಿ, ಸೀತೆ, ಸಾವಿತ್ರಿಯರಾದಿಯಾಗಿ ಎಲ್ಲರೂ ಆಡಿದವರೇ. ಇಂದು ಹೆಸರುಗಳು ಬದಲಾಗಿವೆ; ಅವಳ ಸ್ಥಿತಿ ಮಾತ್ರ ಹಾಗೇ ಉಳಿದಿದೆ ಎಂಬ ನೋಟ ಕವಿತೆಯಲ್ಲಿದೆ. + +ಹೆಣ್ಣು-ಹೆಂಗಸು ಯಾವ ಜಾತಿ-ಧರ್ಮ-ವರ್ಗಕ್ಕೆ ಸೇರಿದ್ದರೂ ಅವರ ನೋವಿನ, ಇಕ್ಕಟ್ಟಿನ ನೆಲೆ ಒಂದೇ ಎಂಬುದನ್ನು `ರಾಜನ ಹೆಂಡತಿಗೂ ಸೆರಗಲ್ಲಿ ಕೆಂಡ ಕಟ್ಟಿದೆ’ ಎಂಬ ನೋಟವನ್ನು ಕವಿತೆಯೊಂದು ಹೇಳುತ್ತದೆ. ಹಾಗೂ ಅಹಂ ತೊರೆದಲ್ಲದೆ, ತಾರತಮ್ಯ ನೀಗಿಕೊಂಡಲ್ಲದೆ ಜಗದ ಉಳಿವು ಅಸಾಧ್ಯ ಎಂಬ ನಿಲುವನ್ನು ಪ್ರತಿಪಾದಿಸುತ್ತದೆ. `ಹೆಂಗಸರಾದ ನಾವು ಪುರಾಣ, ಇತಿಹಾಸಗಳಿಂದ ಏನನ್ನೂ ಕಲಿಯುವುದಿಲ್ಲವಲ್ಲ’ ಎಂದು ವಿಷಾದಿಸುವ ಕವಿತೆಯೊಂದು, ಪುರಾಣ ಪ್ರಸಿದ್ಧರ, ಇತಿಹಾಸ ಪ್ರಸಿದ್ಧರ ಸಾಧನೆಯ ಹಾದಿಯಲ್ಲಿ ಹೆಣ್ಣು ಆನುಷಂಗಿಕ ಪಾತ್ರಕ್ಕೆ ಸೀಮಿತವಾಗಿರುವ ಸತ್ಯವನ್ನು ಗ್ರಹಿಸುವಂತೆ ಒತ್ತಾಯಿಸುತ್ತದೆ. ಒಂದೇ ಸೂರಿನಡಿ ಬಹುಕಾಲವಿದ್ದಾಗ ಪರಮಸ್ನೇಹವೂ ರಣಶತ್ರುತ್ವವಾಗುವ ಸಾಧ್ಯತೆಯನ್ನು ಅರಿತು, ಅದರಿಂದ ಹೊರಬರುವ ಬಗೆಯ ಹುಡುಕಾಟ ಕೆಲವರದು. ಈ ಶತ್ರುತ್ವಕ್ಕೆ ಗಂಡ-ಹೆಂಡತಿಯ ಪಾತ್ರಗಳ ಸಿದ್ಧ ಪಡಿಯಚ್ಚು ಕಾರಣ ಎಂಬುದನ್ನು ಅರಿತುಕೊಂಡಾಗ, ಅವನ ಗಾಯಕ್ಕೆ ಅವಳು ಮತ್ತು ಅವಳ ಗಾಯಕ್ಕೆ ಅವನು ಹಸಿಮದ್ದು ಕಟ್ಟುತ್ತಾ, ಕಟ್ಟಳೆಗಳ ಕಾಯಿಲೆಯಿಂದ ಬಿಡಿಸಿಕೊಳ್ಳುವ ಕೆಲಸ ಆರಂಭವಾಗುತ್ತದೆ ಎಂಬ ತಿಳಿವು ಇನ್ನೋರ್ವ ಕವಯಿತ್ರಿಯದು. ಮಹಿಳೆಗೆ ತನ್ನ ಅಸ್ಮಿತೆಯ ಅರಿವು ಯಾಕೆ ಮತ್ತು ಎಷ್ಟು ಮುಖ್ಯ ಎಂಬ ಚರ್ಚೆ ಕೆಲವು ಕವಿತೆಗಳ ತಿರುಳಾಗಿದೆ. ಬಿಡುಗಡೆಯು ಹೆಣ್ಣಿಗೆ ಅಸಾಧ್ಯದ್ದಲ್ಲ. ಅದಕ್ಕೆ ಮೊದಲು ಆಕೆ ತನ್ನ ತಾನು ಅರಿಯಬೇಕು; ತನಗೆ ಇಷ್ಟವಿಲ್ಲದ್ದನ್ನು ನಿರಾಕರಿಸುವ ಧೈರ್ಯವನ್ನು ತಾಳಬೇಕು. ಹೆಣ್ಣು ತಾನೇ ಎಳೆದುಕೊಂಡ ಗೆರೆಗಳನ್ನೂ ಅಳಿಸಲು ಹಲವು ಸಲ ಹೋರಾಡುತ್ತಿರುತ್ತಾಳೆ. ತನಗೆ ಅನಿಸಿದ್ದು ಮತ್ತು ಹೇಳಬಯಸಿದ್ದು, ಮಾತಾಗಿ ಹೊರಬರದೆ ಗಂಟಲಲ್ಲಿ ಹುದುಗಿಹೋಗುವ ಪರಿಗೆ ಕೆಲವೊಮ್ಮೆ ಅವಳೇ ಬೆದರಿದ್ದಾಳೆ. ಸಜ್ಜನಿಕೆ, ಶಿಷ್ಟಾಚಾರ, ಮರ್ಯಾದೆಯ ಗೆರೆಗಳನ್ನು ದಾಟಿದೊಡನೆ ತಾನು ಬಹಿಷ್ಕೃತಳಾಗುವ ಭಯ ಹೊರಗಿನ ಒತ್ತಡದ್ದೂ ಹೌದು, ಸ್ವನಿಯಂತ್ರಣದ್ದೂ ಹೌದು ಎಂಬುದನ್ನು ಕವಯಿತ್ರಿಯರು ವಿಭಿನ್ನ ದನಿಗಳಲ್ಲಿ ದಾಖಲಿಸಿದ್ದಾರೆ. ಪುರುಷಪ್ರಧಾನ ವ್ಯವಸ್ಥೆಯ ಕಣ್ಣಲ್ಲಿ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡು, ಅದರಲ್ಲೇ ಪರದಾಡುತ್ತ, ನಿರಾಕರಣೆಯ ಭಯದಿಂದ ಕಂಗೆಡುತ್ತಿದ್ದವಳಿಗೆ, ಅದೆಲ್ಲ ವ್ಯವಸ್ಥೆಯ ರಾಜಕಾರಣವೆಂಬುದು ಅರಿವಿಗೆ ಬಂದಾಗ, ಅವಳ ಸಾಕ್ಷಾತ್ಕಾರದ ಗಳಿಗೆ ಆರಂಭವಾಗುತ್ತದೆ. ಆ ಹಂತದಲ್ಲಿ ಯಾವ ಬಿಂಬ, ಪ್ರತಿಬಿಂಬ, ಕನ್ನಡಿ, ಮತ್ತು ಅವು ಕಳವಾಗುವ ಯಾವ ಭಯವೂ ಇರುವುದಿಲ್ಲ. ಬೇಲಿಯೂ ಬಾಗಿಲೂ ಇರದೆ ಮುಕ್ತ ಬಯಲು ಅವಳದಾಗಿರುತ್ತದೆ. ಎಲ್ಲರೂ ತಮ್ಮ ಬದುಕಿನಲ್ಲಿ ಅಂಥ ತಿರುವಿಗೆ ತಿರುಗುವ ಕ್ಷಣ ಮುಖ್ಯದ್ದು ಎಂಬ ಧ್ವನಿ ಒಂದು ಕವಿತೆಯಲ್ಲಿ ಪಡಿಮೂಡಿದೆ. + + + +ಇಂಥ ಬಿಡುಗಡೆಯ ಸ್ತರ ಏಕಾಏಕಿ ಆಗುವುದಿಲ್ಲ: ಅದೊಂದು ಪ್ರಕ್ರಿಯೆ. ಮೀರಬೇಕು ಒಮ್ಮೆಯಾದರೂ ಎಂಬ ತುಡಿತ, ಹಂಬಲ, ಅಭೀಪ್ಸೆ ಒಳಗಿನಿಂದ ಮೊದಲು ಹುಟ್ಟಬೇಕು. ಆರಂಭದಿಂದ ಯಾರ್ಯಾರೋ ಹಾಕಿದ ಗೆರೆಗಳ ಒಳಗೆ ತನ್ನನ್ನು ಇರಿಸಿಕೊಂಡವಳಿಗೆ, ಅದೇ ಶಿಸ್ತು, ಸರಿ, ಚೆಂದ ಎನಿಸಿ, ತನ್ನ ಮುಂದೆ ಗೆರೆಗಳಿಲ್ಲದಾಗಲೂ ಮನದೊಳಗಿನ ನಿಯಂತ್ರಣದಿಂದ ತಾನೇ ಗೆರೆಗಳನ್ನು ಕಲ್ಪಿಸಿಕೊಳ್ಳುವ ಮನಸ್ಥಿತಿಯಿಂದ ತಪ್ಪಿಸಿಕೊಳ್ಳಲಾಗದ ಬಗೆಯನ್ನು ಕವಿತೆಯೊಂದು ಚಿತ್ರಿಸಿದೆ. ಮುಂದೆ ಯಾವುದೋ ಒಂದು ಗಳಿಗೆಯಲ್ಲಿ ಒಮ್ಮೆಯಾದರೂ ಹಾಕಿದ ಗೆರೆ ಮೀರುವ ಉಮೇದು ಅವಳಲ್ಲಿ ಹೊಕ್ಕಾಗ, ಗೆರೆಗಳಿಂದಾಗಿ ರಾಮಾಯಣಗಳೇ ಆಗಿರುವುದು ನೆನಪಾದರೂ ಗೆರೆ ಮೀರುವ ಹಂಬಲ ಅವಳಲ್ಲಿ ಬೆಳೆಯುವುದನ್ನು ಹಂತಹಂತವಾಗಿ ವಿವರಿಸಿದೆ. `ಸ್ವ’ದ ಎಚ್ಚರ ಮೂಡಿದಾಗ, ನೋಟವು ಸ್ಪಷ್ಟವೂ ಖಚಿತವೂ ಸೂಕ್ಷ್ಮವೂ ಅನನ್ಯವೂ ಆಗುತ್ತದೆ. ನಾವೆಂದೂ ದೊಡ್ಡದೊಡ್ಡ ಕೆಲಸ ಮಾಡಿದವರಲ್ಲ; ಸಣ್ಣಸಣ್ಣ ಸಿಕ್ಕಸಿಕ್ಕ ಕೆಲಸಗಳನ್ನು ಮಾಡಿದವರೆಂದು ಆರಂಭವಾದ ಕವಿತೆಯು ಅಂತ್ಯದಲ್ಲಿ ಹೆಣ್ಣುಮಕ್ಕಳು ಮಾಡಿದ್ದೆಲ್ಲ ನೆಲವನ್ನು ಹಸಿರಾಗಿಸಿದ, ಉಸಿರನ್ನು ಸಹಜವಾಗಿಸಿದ, ಜೀವಪರವಾದ ಕೆಲಸಗಳೇ. ಅವಳ ಜಗತ್ತಿನಲ್ಲಿ ಯಾವ ಆಯುಧಗಳಿಗೂ ಕೆಲಸಗಳೇ ಇಲ್ಲವೆಂಬುದನ್ನು ಸ್ಥಾಪಿಸಿದ ಕ್ರಮ ಅನನ್ಯವಾಗಿದೆ. ಕಲೆಗಳು ಮತ್ತು ಗಾಯಗಳ ಕುರಿತ ಕವನಗಳು ಅವನ್ನು ನೋಡುವ ದೃಷ್ಟಿಕೋನದ ಕಾರಣದಿಂದ ಗಮನ ಸೆಳೆಯುತ್ತವೆ. ಕಲೆಗಳು ಬೇಕು ಎನ್ನುವ ಕವಿತೆಯು ವಿವಿಧ ಬಗೆಯ ಕಲೆಗಳು ಬದುಕಿನಲ್ಲಿ ನಮಗೆ ಪಾಠದಂತೆ ದಕ್ಕಿದವುಗಳು. ಕಲೆಗಳು ಇರಲಿ ಹಣೆಬೊಟ್ಟಿನಂತೆ ಎನ್ನುತ್ತದೆ. ಇನ್ನೊಂದು ಕವಿತೆಯು ಗಾಯಗಳನ್ನು ವ್ರಣವಾಗಲು ಬಿಡಬಾರದು, ಅದರೆಡೆಗೆ ಕರುಣೆಯ ಪಾಲಿರಲಿ. ಏಕೆಂದರೆ ಗಾಯಗಳು ನಮ್ಮ ಆತ್ಮದ ರಾಗಗಳು ಎಂದು ತಾಳಿದ ನಿಲುವು ವಿಶಿಷ್ಟವೆನಿಸುತ್ತದೆ. + +ಪ್ರೀತಿ ಪ್ರೇಮಗಳದು ಇನ್ನೊಂದು ಆಯಾಮ. ಪ್ರೀತಿಯ ವಿವಿಧ ಮಗ್ಗುಲುಗಳನ್ನು ಕಿರುಗವನಗಳಲ್ಲಿ ಕಟ್ಟಿದವರದು ಒಂದು ಬಗೆಯಾದರೆ, ತನ್ನ ಸಾಂಗತ್ಯಕ್ಕಾಗಿ ಹಂಬಲಿಸುವ ಗೆಳೆಯ ದಾಂಪತ್ಯದ ಚೌಕಟ್ಟಿನಲ್ಲಿ ಕಳೆದುಹೋಗದಿರಲಿ ಎಂಬ ಹಾರೈಕೆಯದು ಇನ್ನೊಂದು ಬಗೆ. ಅದಕ್ಕಾಗಿ ಆತನ ಪ್ರೀತಿಯ ಅಭಿವ್ಯಕ್ತಿಗಾಗಿ ಸಂದರ್ಭವನ್ನು ನಿರ್ಮಿಸುವ ಅವಳ ತಹತಹಿಕೆಯು ಲವಲವಿಕೆಯಿಂದ ಕೂಡಿದೆ. ಎಲ್ಲವೂ ಇಲ್ಲಿ ಬದಲಾಗುವುದು ನಿಜ. ಆದರೆ ಅರಳಿದ ಹೂ ಮತ್ತು ಪ್ರೀತಿ ಕೂಡಾ ಗುರುತೇ ಇಲ್ಲದಂತೆ ಬದಲಾಗುವ ಪರಿಗೆ ಓರ್ವ ಕವಯಿತ್ರಿ ಕೌತುಕ, ಗಾಬರಿ, ನೋವು ಮತ್ತು ಅಸಹಾಯಕತೆಯಿಂದ ಮುಖಾಮುಖಿಯಾಗುತ್ತಾಳೆ. ಹೇಳಲಾಗದ ಪ್ರೀತಿಯನ್ನು ಕಣ್ಣಲ್ಲಿ ಕುದಿಸಿ ಕುದಿಸಿ ಉಕ್ಕಿಸಿದ ಭಾವನೆಗಳ ಘಮಲಿಗೆ ಬೈಟು ಕಾಫಿ ಕುಡಿಯುವುದನ್ನು ಇನ್ನೊಬ್ಬಾಕೆ ಹೋಲಿಸುವುದು ವಿಶೇಷವೆನಿಸುತ್ತದೆ. + +ದೇಹರಾಜಕಾರಣವನ್ನು ಅರ್ಥ ಮಾಡಿಕೊಂಡು, ಮೊದಲಿನ ಸಂಕೋಚ ಮತ್ತು ಭಯದಿಂದ ಮುಕ್ತರಾಗಿ ಇಂದು ನಿರ್ಭಿಡೆ ಮತ್ತು ವೈಚಾರಿಕ ಎಚ್ಚರದಿಂದ ಬರೆಯುವವರ ಸಂಖ್ಯೆ ಹೆಚ್ಚಾಗಿದೆ. ತನ್ನ ದೇಹವನ್ನು ಇರುವಂತೆ ಪ್ರೀತಿಸುವುದನ್ನು ಅರಿತು, ತನ್ನ ಸೃಷ್ಟಿ ಸಾಮರ್ಥ್ಯದ ಅನನ್ಯತೆಯ ಬಗ್ಗೆ ಅಭಿಮಾನ ತಾಳುವ, ಸ್ವನಿಯಂತ್ರಣವನ್ನು ಇಂದು ಕಲಿಯಬೇಕಾದದ್ದು ಗಂಡಸರು ಎಂಬುದನ್ನು ಸೂಚಿಸುವ, ಪುಟ್ಟ ಲಂಗೋಟಿಯೊಳಗೆ ತಮ್ಮ ಲೈಂಗಿಕತೆಯನ್ನು ಭದ್ರವಾಗಿ ಕಟ್ಟಿಕೊಂಡಿರುತ್ತಿದ್ದ ಹಿಂದಿನವರ ಮಾದರಿಯನ್ನು ನೆನಪಿಸುವ ಬಗೆಗಳು ಅನನ್ಯವಾಗಿವೆ. ಮುಟ್ಟಿನ ಕುರಿತ ಕವನಗಳೂ ಈ ಮಾದರಿಯವು. ಋತುಚಕ್ರದ ಮೈಲಿಗೆ ಮತ್ತು ಸ್ಪರ್ಶದ ಮೈಲಿಗೆ ಕಳೆದುಕೊಂಡಾಗಲೇ ಮನಸ್ಸು, ದೇಹ, ಸಂಬಂಧಗಳ ಬಿಗುತ್ವ ಕಳೆಯುತ್ತದೆ; ಚಿಂತನೆಯ ಕಿಲುಬು ನಾಶವಾಗುತ್ತದೆ, ಜೀವಪರವಾಗುವ ಬಗೆ ಇದು ಎಂದು ಕವನಗಳು ಸೂಚಿಸಿವೆ. ಸಾವನ್ನು ಹತ್ತಿರದಿಂದ ಕಂಡವರಿಗೆ, ಸಾವು-ಬದುಕಿನ ವಿನ್ಯಾಸ ವಿಭಿನ್ನವಾಗಿ ತೋರಬಹುದು. ಸಾವಿಗೆ ಹೆದರುವ ಬದಲು, ಅದು ಸಾಯುವವರ ಸಮಸ್ಯೆಯೇ ಅಲ್ಲ ಎನಿಸಿದರೆ ಅಚ್ಚರಿಯಿಲ್ಲ. ಸಾವಿಗಿಂತ ಬದುಕೇ ಹೆಚ್ಚು ಸಂಕೀರ್ಣ ಎಂಬ ವಾಸ್ತವದತ್ತ ಕವಿತೆಯು ನಮ್ಮನ್ನು ಒಯ್ಯುತ್ತದೆ. + +ದೇವರು-ಧರ್ಮ-ನಂಬಿಕೆಗಳ ಬಗೆಗೆ ಕವಯಿತ್ರಿಯರ ನೋಟವು ಹೊಸತನದಿಂದ ಕೂಡಿದೆ. ಎಲ್ಲ ಧರ್ಮದ ಪುರೋಹಿತಶಾಹಿಯೊಳಗೂ ಇರುವ ಅವೈಚಾರಿಕತೆ, ಧರ್ಮಾಂಧತೆಯನ್ನು ಒಬ್ಬರು ಬಯಲಿಗೆಳೆದರೆ, ಇನ್ನೊಬ್ಬರು ಮೈಲುಗಟ್ಟಲೆ ನಡೆನಡೆದು ಬೊಕ್ಕೆಯೆದ್ದ ರಾಧೆಯರ ಜೊತೆ ನಡೆದ ಕೃಷ್ಣನನ್ನು, ಎಂಜಲು ತಿನಿಸಿದ ಶಬರಿಯ ಕುಟೀರದಲ್ಲಿ ವಿರಮಿಸಿದ ರಾಮನನ್ನು, ಸ್ಥಾವರಗೊಳಿಸಿದ ತನ್ನನ್ನು ಜಂಗಮಗೊಳಿಸಿಕೊಂಡ ಬುದ್ಧನನ್ನು ಆದರ್ಶವಾಗಿ ಕಂಡಿದ್ದಾರೆ. ಮಗದೊಬ್ಬರು ರಾಮ ರಹೀಮರ ಕರುಣೆಯ ಕೂಸು ತಾನು ಎಂದ ಕಬೀರನ ಸಂದೇಶವನ್ನು ಆದರ್ಶವೆಂದು ಸಾರಿದ್ದಾರೆ. ಪ್ರಕೃತಿಯ ಎದುರು ಗುಡಿ, ಚರ್ಚು, ಮಸೀದಿ ಎಲ್ಲವೂ ಇಟ್ಟಿಗೆ ಚೂರುಗಳು ಎಂಬ ವಾಸ್ತವದ ನಿಲುವು ಕವಿತೆಯದು. ಸಮಕಾಲೀನ ಸಮಾಜದ ಬಿಕ್ಕಟ್ಟುಗಳಾದ ಹಿಂಸೆ, ಕ್ರೌರ್ಯ, ಕಿತ್ತಾಟ, ಯುದ್ಧ, ರಕ್ತಪಿಪಾಸುತನ, ಲೈಂಗಿಕ ದೌರ್ಜನ್ಯ ಇವೆಲ್ಲವುಗಳಿಗೆ ಕವಯಿತ್ರಿಯರು ಬುದ್ಧ, ಬಸವ, ಅಂಬೇಡ್ಕರ್, ಗಾಂಧಿಯವರ ಬದುಕು, ಆದರ್ಶ, ಸಾಧನೆಗಳಲ್ಲಿ ಪರಿಹಾರವನ್ನು ಕಂಡಿದ್ದಾರೆ. ಅಂಬೇಡ್ಕರ್ ಅವರನ್ನು ಅಪಮಾನಿಸಿದ, ತಿರಸ್ಕರಿಸಿದ, ಹೊರಗಟ್ಟಿದ ಸಮುದಾಯದ ಕೂಸಾದ ತಾನು ಅಂಬೇಡ್ಕರ್‌ರಿಂದಲೇ ಅಪಾರ ಪ್ರೀತಿ, ವ್ಯಕ್ತಿಘನತೆ, ಸಮಾನತೆ ಮತ್ತು ಸಹಜೀವನದ ಮೌಲ್ಯಗಳನ್ನು ಅರಿತಿದ್ದಾಗಿ ಒಬ್ಬರು ಹೇಳಿದರೆ, ಇನ್ನೊಬ್ಬರು ನಮಗಿಂದು ಕಾಲಕಾಲಕ್ಕೂ ಬದುಕು ಕಾಯ್ವ ಬುದ್ಧರು ಬೇಕು, ಅವರು ರೂಕ್ಷರ ಮೈದಡವಿ, `ಪ್ರೀತಿ ತಂದಿರಾ ಭಿಕ್ಷಕೆ’ ಎಂದು ನಿತ್ಯ ಎಚ್ಚರಿಸುವ ತುರ್ತಿದೆ ಎಂದಿದ್ದಾರೆ. ಗೆಳೆಯನಿಂದ ಬುದ್ಧನಲ್ಲಿ ಹೆಣ್ತನದ ಗುಣವನ್ನು ಗ್ರಹಿಸಿದ ಕವಯಿತ್ರಿ, `ಹೆಣ್ಣು ಬುದ್ಧನಾಗಬಲ್ಲಳೇ? ಅಥವಾ ಬುದ್ಧನಾಗುವುದೆಂದರೆ ಹೆಣ್ಣಾಗುವುದೇ?’ ಎಂಬ ಹೊಸ ಪ್ರಶ್ನೆಯನ್ನು ಎತ್ತಿರುವುದು ವಿಶೇಷವೆನಿಸುತ್ತದೆ. ಯುದ್ಧ ಸಂಸ್ಕೃತಿಯನ್ನು ಬಲವಾಗಿ ವಿರೋಧಿಸುವ ಕವಯಿತ್ರಿಯರು, ನಾವು ಸುಮ್ಮನೆ ಕೃಷಿ ಮಾಡೋಣ, ಕಲ್ಲುಮುಳ್ಳುಗಳ ಆರಿಸಿ ತಿಪ್ಪೆಗೆ ಸುರಿದು, ನೆಲವ ಹಸನು ಮಾಡೋಣ, ಅಲ್ಲಿ ಪ್ರೀತಿಯ ಬೀಜಗಳ ಬಿತ್ತಿ ಬೆಳೆಯೋಣ ಎಂದು ಕರೆ ಕೊಡುತ್ತಾರೆ. ಬಾಂಬು ಸಂಸ್ಕೃತಿಯನ್ನು ಬಲವಾಗಿ ವಿರೋಧಿಸುವ ಕವಿತೆ, ಅವರಿಗೆ ಸಾಧ್ಯವಿದ್ದರೆ ಹೃದಯಗಳನ್ನು ಬೆಸೆವ ಬಾಂಬು ಹಾಕಲಿ ಎಂಬ ಸವಾಲು ಹಾಕುವುದು ಕಂಡುಬರುತ್ತದೆ. + +ಲೈಂಗಿಕ ಅಲ್ಪಸಂಖ್ಯಾತರೂ ಇತ್ತೀಚಿನ ವರ್ಷಗಳಲ್ಲಿ ಕನ್ನಡ ಕಾವ್ಯ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ತಮ್ಮ ಬಗೆಗೆ ಜನರಿಗಿರುವ ಪೂರ್ವಾಗ್ರಹಗಳನ್ನು ಟೀಕಿಸುತ್ತ, ತನ್ನ ಸಮುದಾಯವೂ ಅಸ್ಮಿತೆ ಹಾಗೂ ಸಾಂಸ್ಕೃತಿಕ ಅನನ್ಯತೆ ಹೊಂದಿರುವುದನ್ನು ಒಬ್ಬ ಕವಯಿತ್ರಿ ಪ್ರತಿಪಾದಿಸಿರುವುದು ಕಂಡುಬರುತ್ತದೆ. ವಿಶೇಷವೆಂದರೆ ಲೈಂಗಿಕ ಅಲ್ಪಸಂಖ್ಯಾತರ ಮತ್ತು ಗೃಹಿಣಿಯ ನೋವನ್ನು ಕವಯಿತ್ರಿಯೊಬ್ಬರು ತುಲನಾತ್ಮಕವಾಗಿ ಪರಿಶೀಲಿಸಿದ್ದಾರೆ. ಅಲ್ಲಿ ತಾಳಿ ಕಟ್ಟಿ ನಡೆದರೆ, ಇಲ್ಲಿ ತಾಳಿ ಕಟ್ಟದೆ ನಡೆಯುತ್ತದೆ. ಆಕೆ ಮರ್ಯಾದೆಗೆ ಅಂಜಿ, ಈಕೆ ಹಸಿವಿಗೆ ಸೋತು ಸಮಾಜದ ತುಳಿತಕ್ಕೆ ಒಳಗಾಗಿದ್ದು, ಇಬ್ಬರ ಮೇಲಿನ ದೌರ್ಜನ್ಯಗಳ ಹಿಂದೆ ಪುರುಷಪ್ರಧಾನ ಮನಸ್ಥಿತಿ ಕೆಲಸ ಮಾಡಿದೆ ಎಂಬುದನ್ನು ಕವನವಾಗಿಸಿದ್ದು ಗಮನ ಸೆಳೆಯುತ್ತದೆ. + +2020-22ರ ಈ ಮೂರು ವರ್ಷದ ಅವಧಿಯು ಸಾಮಾಜಿಕ, ಆರ್ಥಿಕ, ಆರೋಗ್ಯ ಮತ್ತು ಸಾಂಸ್ಕೃತಿಕ ವಲಯಗಳಲ್ಲಿ ಹಲವು ಏರಿಳಿತಗಳನ್ನು ಕಂಡ ಕಾಲ. ಕನ್ನಡದ ಕವಯಿತ್ರಿಯರು ತಮ್ಮ ಸುತ್ತಲಿನ ವಿದ್ಯಮಾನಗಳಿಗೆ ಪ್ರತಿಕ್ರಿಯೆಗಳನ್ನು ಮತ್ತು ಪ್ರತಿರೋಧಗಳನ್ನು ತೋರುವಲ್ಲಿ ಔದಾಸೀನ್ಯವನ್ನು ತೋರಿಲ್ಲವೆಂಬುದು ನನಗೆ ಮುಖ್ಯವೆನಿಸಿದೆ. ಕೊರೋನ ಎಂಬ ಜಾಗತಿಕ ಸಾಂಕ್ರಾಮಿಕ ಪಿಡುಗಿನ ದುಷ್ಪರಿಣಾಮಗಳು, ರೈತ ವಿರೋಧೀ ಕಾನೂನುಗಳ ಜಾರಿ, ರಾಷ್ಟ್ರೀಯತೆಯ ಹೆಸರಿನಲ್ಲಿ ವೈಚಾರಿಕ ಮತ್ತು ಎಡಪಂಥೀಯ ಚಿಂತಕರು, ಪತ್ರಕರ್ತರು ಮತ್ತು ಸಾಮಾಜಿಕ ಕಾರ್ಯಕರ್ತರ ಬಂಧನ, ವೈಚಾರಿಕತೆಯ ಬದಲಿಗೆ ಅವೈಚಾರಿಕತೆಯನ್ನು ಬಿತ್ತಿದ್ದು, ಕೋಮುವಾದವನ್ನು ಇನ್ನಿಲ್ಲವೆನ್ನುವಂತೆ ಪ್ರೇರೇಪಿಸಿ, ಉತ್ಪಾದಿಸಿ ಸಾಮಾಜಿಕ ಸ್ವಾಸ್ಥ್ಯವನ್ನು ಕದಡಿದ್ದು, ಎನ್‌ಆರ್‌ಸಿ ಹೆಸರಿನಲ್ಲಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ನಡೆಸಿದ್ದು, ಮೀ ಟೂ ಚಳವಳಿ, ನೋಟು ರದ್ದತಿ ಇವೇ ಮುಂತಾದ ಹತ್ತು ಹಲವು ವಿದ್ಯಮಾನಗಳಿಗೆ ಕವಯಿತ್ರಿಯರ ಪ್ರತಿಕ್ರಿಯೆಗಳು ಅಧ್ಯಯನಯೋಗ್ಯವೆನಿಸಿವೆ. ಇದಕ್ಕೆ ಕಾರಣರಾದ ವ್ಯಕ್ತಿ, ಶಕ್ತಿ, ಸರಕಾರ, ಅದರ ಮುಂಚೂಣಿ ನಾಯಕರು ಎಲ್ಲರೂ ಇಲ್ಲಿ ವಿಮರ್ಶೆಗೆ ಮತ್ತು ಟೀಕೆಗೆ ಒಳಪಟ್ಟಿದ್ದಾರೆ. + +ಈ ಮೂರು ವರ್ಷಗಳಲ್ಲಿ ಬಾಲೆಯರಿಂದ ವೃದ್ಧೆಯವರೆಗೆ ನಡೆದ ಗುಂಪು ಅತ್ಯಾಚಾರ ಮತ್ತು ಕೊಲೆಗಳು, ದಲಿತ ಹೆಣ್ಣುಮಕ್ಕಳು ಮತ್ತು ಲೈಂಗಿಕ ಕಾರ್ಯಕರ್ತೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಗಳಿಗೆ ಸಾಮಾಜಿಕರ ತಣ್ಣಗಿನ ಪ್ರತಿಕ್ರಿಯೆಗಳಿಗೆ ಹಲವು ಕವನಗಳು ಆಕ್ರೋಶದ ದನಿ ನೀಡಿವೆ. ಹೆಣ್ಣು ಜೀವವು ಕೇವಲ ಭೋಗದ ನೆಲೆಯಾಗಿ ಬಳಕೆಯಾಗುವುದರ ಕುರಿತ ಆಕ್ರೋಶ, ಅಸಹಾಯಕ ಮತ್ತು ಮುಗ್ಧ ಎಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಕೊಲೆಗಳು ಕಟುವಿಮರ್ಶೆಗೆ ಒಳಗಾಗಿವೆ. ಸುತ್ತಲಿನ ದುಃಖ, ದೌರ್ಜನ್ಯಗಳಿಗೆ ದನಿಯಾಗಲು ಸೋಲುತ್ತಿದೆ ಕವಿತೆ; ಅಪಮಾನದಲಿ ತಲೆ ತಗ್ಗಿಸಿದೆ. ಎಲ್ಲ ಬಗೆಯ ದೌರ್ಜನ್ಯಕ್ಕೆ ರೋದಿಸಿ, ಕವಿತೆಯು ಕವಿತೆಯಾಗಲು ನಾಚುತ್ತಿದೆ, ಆತ್ಮಹತ್ಯೆಗೆ ತಾವು ಅರಸಿದೆ ಕವಿತೆ ಎಂಬಲ್ಲಿ ಕವಯಿತ್ರಿಯ ಕಳವಳ ಹರಳುಗಟ್ಟಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳ ಅತಿರೇಕ ಎಲ್ಲಿಯವರೆಗೆ ಮುಟ್ಟಿದೆಯೆಂದರೆ, ಗೋರಿಯಲ್ಲಿನ ಮಹಿಳೆಯ ಶವವನ್ನೂ ಮೂರು ದಿನಗಳ ಕಾಲ ಕಾಯಬೇಕಾದ ದುಸ್ಥಿತಿ ಬಂದಿದೆ ಎಂಬ ವಿಷಾದ ಮಡುಗಟ್ಟಿದೆ. ಲೈಂಗಿಕ ಕಾರ್ಯಕರ್ತೆಯರಿಗೂ ಘನತೆಯ ಬದುಕಿದೆ. ಅವರು ಈ ವೃತ್ತಿಗೆ ಬರಲು ಕಾರಣರಾದವರನ್ನು ಬಿಟ್ಟು ಅವರನ್ನೇ ದೂಷಿಸುವ ಆಷಾಢಭೂತಿತನವನ್ನು ಕವಿತೆಗಳು ಪ್ರಶ್ನಿಸಿವೆ. ಆಹಾರ, ವಸ್ತç, ಬಣ್ಣ, ಜಾತಿ, ದೇಹ, ಅಧಿಕಾರ ಹೀಗೆ ಹಲವು ರಾಜಕಾರಣಗಳನ್ನು ಗುರುತಿಸಿ, ಅವುಗಳ ಹಿಂದಿನ ಮರ್ಮವನ್ನು ಪ್ರಶ್ನಿಸುವ ಮನಸ್ಥಿತಿ ಹಲವು ಕವನಗಳಲ್ಲಿ ಕಂಡುಬರುತ್ತದೆ. + + + +ಇಲ್ಲಿನ ಕವನಗಳನ್ನು ಇಡಿಯಾಗಿ ಗಮನಿಸಿದಾಗ ಕವಯಿತ್ರಿಯರ ರಚನೆಗಳ ವೈವಿಧ್ಯ ಗಮನಾರ್ಹವಾಗಿದೆ. ಈ ಸಂಗ್ರಹದಲ್ಲಿ ಗಝಲ್ ರೂಪದ, ಮುಕ್ತಕ ರೂಪದ, ಕಿರುಗವನ ರಚನೆಗಳಿವೆ. ಜನಪದ ಧಾಟಿಯ, ಪ್ರಾಸ ಮತ್ತು ಲಯಬದ್ಧ ಕವಿತೆಗಳಿವೆ. ನೀಳ್ಗವನಗಳು ಗಮನ ಸೆಳೆಯುತ್ತವೆ. ಭಾಷೆಯ ನೆಲೆಯಲ್ಲೂ ಹೊಸತನ ಕಾಣಬಹುದು. ಪ್ರಾದೇಶಿಕ ಭಾಷೆ, ಗ್ರಾಮೀಣ ಭಾಷೆಗಳಿಗೂ ಅವಕಾಶ ದೊರೆತಿದೆ. ಇಪ್ಪತ್ತೊಂದನೆಯ ಶತಮಾನದ ಮೂರನೆಯ ದಶಕಕ್ಕೆ ಕಾಲಿಟ್ಟ ಸಂದರ್ಭದಲ್ಲಿ ಎಲ್ಲರ ವಿಚಾರಗಳು ಏಕರೂಪದಲ್ಲಿ ಇಲ್ಲ, ಅದು ಸಾಧ್ಯವೂ ಇಲ್ಲ. ಯಾವತ್ತೂ ಹಲವು ದಶಕ ಮತ್ತು ಶತಮಾನಗಳ ಹಿಂದಿನ ಆಲೋಚನೆಗಳನ್ನು ಹೊಂದಿದ ಬರಹಗಾರರು ಜೊತೆಜೊತೆಗೆ ಬರೆಯುತ್ತಿರುತ್ತಾರೆ. ಅವರ ಭಾವನೆಗಳು, ಮೌಲ್ಯಗಳು, ದೃಷ್ಟಿಕೋನಗಳು ನಂಬಿಕೆಗಳಲ್ಲಿ ಅಂತರ ಸಹಜ. ಹೀಗಾಗಿ ಕವಿತೆಗಳ ಓದು ಮಹಿಳಾ ಚಿಂತನೆಗಳ ಹಲವು ಪದರಗಳನ್ನು ಅನಾವರಣ ಮಾಡುವುದು ಸಹಜವಾಗಿದೆ. ಅದಕ್ಕೆ ಈ ಸಂಕಲನವೂ ಸಾಕ್ಷಿಯಾಗಿದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_540.txt b/Kenda Sampige/article_540.txt new file mode 100644 index 0000000000000000000000000000000000000000..ed6ee8ebbf6b3d96c24d3cb3964a4b4ed735e8b5 --- /dev/null +++ b/Kenda Sampige/article_540.txt @@ -0,0 +1,47 @@ +ದೀಪೋಲಿ ಪರ್ಬ ಯಾವಾಗ ಬಲಿಯೇಂದ್ರ..? + +ತಲೆಗೆ ಸುತ್ತಿದ ದೊಡ್ಡ ಬಿಳಿ ಮುಂಡಾಸು, ಬಿಳಿ ಶರಟು, ಮುಂಡು ಉಟ್ಟ ಉದ್ದ ಮೀಸೆಯ ಬಲಿಯೆಂದ್ರ ಪಾಡ್ದನ ಹೇಳುತ್ತ ಬರುವ ‘ಬಲಿಯಂದ್ರ’ ನಮ್ಮ ಕೋಟೆ ಗ್ರಾಮಕ್ಕೆ ಪ್ರವೇಶ ಮಾಡಿದನೆಂದರೆ ಇನ್ನು ದೀಪಾವಳಿ, ಬಲಿಪಾಡ್ಯಮಿಗೆ ಎರಡು ಅಥವಾ ಮೂರು ದಿನಗಳಿರುವುದೆಂದು ಅರ್ಥ. ಅವನ ಒಂದು ಬಗಲಲ್ಲಿ ಉದ್ದದ ತಂತಿ ಇರುವ ಗುಮಟೆ. ಇನ್ನೊಂದು ಬಗಲಲ್ಲಿ ಜೋಳಿಗೆ. ಅವನು ಹಾಡುವುದರ ಅರ್ಥ ಕೇಳಬೇಕಿದ್ದರೆ ಅಪ್ಪಿ ಪೂಜಾರ್ತಿಯನ್ನೋ, ಇಲ್ಲ ನನ್ನ ಗೆಳೆಯ ಯಾದು ಯಾನೆ ಯಾದವನ ಅಪ್ಪ ಕಾಡ್ಯ ಪೂಜಾರಿಯನ್ನೋ ಕೇಳಬೇಕು. ಆದರೆ ಅವನ ಗುಮುಟೆಯಲ್ಲಿ ಹೊರಡುವ ಡುಂಯ್… ಗುಂಯ್ ಶಬ್ದ ಒಂದು ರೀತಿಯಲ್ಲಿ ತೆಂಗಿನ ಮರದ ಎಳೇ ಸಿರಿ ಒಲಿಯನ್ನು ತಿನ್ನುವ ಕಪ್ಪು ಕರುಡಿಗೆ(ವಜ್ರ ದುಂಬಿ) ಹಾರುವಾಗ ಮೂಡುವ ಗುಂಯ್… ಸದ್ದಿನಂತೆ ತುಂಬ ಇಂಪಾಗಿತ್ತು. ಅವನು ಮೊದಲು ಕೋಟೆ ಬೀಡಿನ ಮನೆಗೆ ಹೋಗಿ ಅಲ್ಲಿ ಡುಂಯ್‌ಗುಡುತ್ತಾ ಹಾಡುವಾಗ ಬೀಡಿನ ಮಾಡೇರ ದೊಡ್ಡ ಕರಿನಾಯಿ ಅದೇನೋ ದೊಡ್ಡ ಆಪತ್ತು ಬಂತೆಂಬಂತೆ ಇಡೀ ಹಳ್ಳಿ ಎಚ್ಚರಾಗುವಂತೆ ಬೊಗಳತೊಡಗುತ್ತದೆ. ಅಲ್ಲಿ ಕೊಟ್ಟ ಪಡಿ ಅಕ್ಕಿಯನ್ನು ಜೋಳಿಗೆಯಲ್ಲಿ ತುಂಬಿಸಿಕೊಂಡು ಬಯಲು ಗದ್ದೆಯ ಕಟ್ಟ ಪುಣಿಯಲ್ಲಿ ನಡೆದು ಬರುವಾಗ ಗ್ರಾಮದ ಎಲ್ಲ ನಾಯಿಗಳೂ ಒಟ್ಟಾಗಿ ಕರ್ಕಶವಾಗಿ ಕೂಗುತ್ತ, ಬೊಗಳುತ್ತ ಅವನಿಗೆ ಸ್ವಾಗತ ನೀಡುತ್ತವೆ. + +ಬಲಿಯೆಂದ್ರ ತೋಡಿನ ಪಾಪು ದಾಟಿ ದೇಜುಮಾಸ್ಟ್ರ ಮನೆಯ ಎದುರಿನ ನಮ್ಮ ತೆಂಗಿನ ತೋಟದ ಮೆಟ್ಟಿಲು ಹತ್ತಿ ಬರುವಾಗ ಊರ ಚಳ್ಳೆ ಪಿಳ್ಳೆ ಮಕ್ಕಳೆಲ್ಲ ಸಾಲುಗಟ್ಟಿ ಅವನ ಹಿಂದೆ ‘ಓ… ಬಲಿಯಂದ್ರ, ಓ..” ಎಂದು ಕೂಗುತ್ತ ಮೆರವಣಿಗೆ ಬರ ತೊಡಗಿದಾಗ ಅವನಿಗೆ ಮುಜುಗರ, ಕಿರಿಕಿರಿಯಾಗಿ “ಒರ ಪೋಪರಾ ಇಜ್ಜಾ ಜೋಕುಲೆ…” ಎಂದು ಗದರಿಸುವನು. ಅವನ ಗದರಿಕೆಗೆ ಸೊಪ್ಪು ಹಾಕದ ಪಡ್ಡೆ ಹುಡುಗರು ಅವನನ್ನು ರೇಗಿಸುವುದಕ್ಕಾಗಿಯೇ “ದೀಪೋಲಿ ಪರ್ಬ ಯಾವಾಗ ಬಲಿಯೆಂದ್ರ..?” ಎಂದು ಕೇಳುತ್ತಾರೆ. ಅವನೆಲ್ಲಿಯಾದರೂ ಅವರ ಪ್ರಶ್ನೆಗೆ ಉತ್ತರಿಸಿದರೆ ಮತ್ತೊಂದು ಪ್ರಶ್ನೆ ತಯಾರಾಗಿರುತ್ತಿತ್ತು, “ಸೈತಿನಕ್ಲೆ ಪರ್ಬ, ಇತ್ತಿನಕ್ಲೆ ಪರ್ಬ ಯಾವಾಗ? ” ಆದರೆ ಇದೆಲ್ಲ ಮಸಲತ್ತು ತಿಳಿದ ಅವನು ಈ ಮಕ್ಕಳೊಂದಿಗೆ ಮಾತಾಡಿ ಏನೂ ಉಪಯೋಗವಿಲ್ಲವೆಂದು ತೀರ್ಮಾನಿಸಿ ಸುಮ್ಮನೆ ನಡೆಯುತ್ತಿರುತ್ತಾನೆ. ನಾಯಿಗಳು ಬೊಗಳುತ್ತಿದ್ದಂತೆ ಮಕ್ಕಳು ಅವನ ಹಿಂದೆ ಬಾಲದಂತೆ ಸಾಲು ಕಟ್ಟಿ ಓ… ಎಂದು ಕೂಗುತ್ತಿದ್ದಂತೆ ತಾಳ್ಮೆಯ ಸಾಕಾರ ಮೂರ್ತಿಯಂತೆ ಬಲಿಯಂದ್ರ ನಡೆಯುತ್ತಾನೆ. + +ಊರು ಪ್ರವೇಶ ಮಾಡಿದ ಅವನು ಆರಿಸಿದ ಕೆಲವು ಮನೆಗಳಿಗೆ ಮಾತ್ರ ಪ್ರವೇಶಿಸಿ ಬಲಿಯಂದ್ರ ಪಾಡ್ದನದ ಕೆಲವು ಸೊಲ್ಲನ್ನು ಹಾಡುತ್ತಾನೆ. ಅವನು ಮೊದಲು ಹೋಗುವುದು ನಮ್ಮ ತೋಟದ ಗಡಿಗೆ ತಾಗಿಯೇ ಇರುವ ಯಾದುನ ಮನೆಗೆ. ಅವನ ತಂದೆ ಕಾಡ್ಯ ಪೂಜಾರಿ ಊರ ಗುರಿಕಾರ. ತೆಂಗಿನಮರದಿಂದ ಕಳ್ಳು ತೆಗೆದು ಕಾಡ್ಯ ಪೂಜಾರಿ ಕೆಳಗಿಳಿದು ಬಂದವನೇ ಮೊದಲು ಮಕ್ಕಳನ್ನು ಗದರಿಸಿ ಓಡಿಸಿದ. ಒಂದೇ ಸವನೆ ಕೂಗುತ್ತಿದ್ದ ತನ್ನ ನಾಯಿಗೂ ಚೂ… ಹಚಾ… ಎಂದು ಜೋರು ಮಾಡಿ ಕಲ್ಲೆಸೆವಂತೆ ನಟಿಸಿ ದೂರ ಅಟ್ಟಿದ. ಸೊಂಟಕ್ಕೆ ಕಟ್ಟಿದ ಪಟ್ಟಿಯ ಕೊಕ್ಕೆಯಲ್ಲಿ ನೇತಾಡುವ ದೊಡ್ಡ ಸೋರೆಕಾಯಿಯಿಂದ ಮಾಡಿದ ಕಳ್ಳಿನ ಅಂಡೆಯನ್ನು ತೆಗೆದಿಟ್ಟ.. ತೆಂಗಿನ ಎಳೇ ಹೂ ಕೊಂಬನ್ನು ಸವರುವ, ಕಮ್ಯುನಿಸ್ಟ್ ಲಾಂಚನದಲ್ಲಿರುವ ಕತ್ತಿಯಂತಹ ಹರಿತವಾದ ತರ್ಕತ್ತೆ ಎಂಬ ಕತ್ತಿ, ಸವರುವ ಮುಂಚೆ ಸರಿಯಾಗಿ ನೀರಾ ಇಳಿಯವಂತೆ ಕೊಂಬಿಗೆ ನಯವಾಗಿ ಬಡಿಯವ ಎಲುಬಿನಿಂದ ತಯಾರಿಸಿದ ಸುತ್ತಿಗೆ ಎರಡೂ ಸೊಂಟಕ್ಕೆ ಕಟ್ಟಿದ ಪಟ್ಟಿಯಲ್ಲಿ ನೇತಾಡುತ್ತಿದ್ದವು. “ಗುರ್‍ಕಾರ್‍ಲೆಗ್ ನಮಸ್ಕಾರ” ಎನ್ನುತ್ತ ಬಲಿಯೆಂದ್ರ ಅವರ ಮನೆಯ ಜಗಲಿಯಲ್ಲಿ `ಉಸ್ಸಪ್ಪಾ..’ ಎನ್ನುತ್ತಾ ಕೂತ. ಕಾಡ್ಯಣ್ಣ ಗಂಭೀರವಾಗಿ ಅವನತ್ತ ನೋಡಿ `ಹೂಂ… ನಮಸ್ಕಾರ…’ ಎಂದ. ಅಂಡೆಯನ್ನು ಎರಡು ಕಾಲುಗಳ ಮಧ್ಯೆ ಇಟ್ಟುಕೊಂಡು, ಉದ್ದ ಕೋಲಿನ ತುದಿಗೆ ಕಟ್ಟಿದ ಬ್ರಶ್‌ನಂತಹ `ಬುರುಸ್’ ಅನ್ನು ಅಂಡೆಯೊಳಗೆ ಹಾಕಿ ಮೊಸರು ಕಡೆಯವಂತೆ ಎರಡು ಅಂಗೈಯ ಮಧ್ಯೆ ಇಟ್ಟು ಸ್ವಲ್ಪ ಹೊತ್ತು ಗರ ಗರ ತಿರುಗಿಸಿ ನಂತರ ಕಳ್ಳನ್ನು ಮಣ್ಣಿನ ಮಡೆಕೆಗೆ ಸುರಿದ. ಕಳ್ಳು ನೋಡಿ ಮೀಸೆ ತಿರುವುತ್ತ ಬಲಿಯೆಂದ್ರ ನಕ್ಕಾಗ ಕಾಡ್ಯ ಪೂಜಾರಿಗೆ ಅವನ ಇಂಗಿತ ತಿಳಿಯಿತು. ಜಗಲಿಯಲ್ಲಿ ಕೂತಲ್ಲೇ ತನ್ನ ಗುಮಟೆಯ ಸರಿಗೆಯನ್ನು ಮೀಟಿ ಡುಂಯ್.. ಗುಂಯ್ ಮಾಡುತ್ತಾ ಬಲಿಯಂದ್ರ ಪಾಡ್ದನ ಹಾಡತೊಡಗಿದ. ನನಗೆ ಅದರ ಒಂದು ಶಬ್ದವೂ ತಿಳಿಯಲಿಲ್ಲ. ಒಂದೆರಡು ನಿಮಿಷ ಹಾಡಿ ಮತ್ತೆ ನಿಲ್ಲಿಸಿದ. ಕಾಡ್ಯ ಪೂಜಾರಿಯ ಮಗಳು ಮೀನ ಕನ್ನಡಿ ವಾಡರ್‍ಲು ಮಾಡಿದ ಪುಟ್ಟ ಹೂಜಿಯಂತಹ ಕುಪ್ಪಿಯಲ್ಲಿ `ಒಂದು ಕುಪ್ಪಿ’ ಕಳ್ಳು, ಅದನ್ನು ಕುಡಿಯಲು ಮೊಗೆಯುವುದಕ್ಕೆ ಒಂದು ಗ್ಲಾಸು, ಜೊತೆಗೆ ಒಂದಿಷ್ಟು ಉಪ್ಪಿನಕಾಯಿ ತಟ್ಟೆಯಲ್ಲಿ ತಂದು ಅವನ ಮುಂದಿಟ್ಟಳು.. ಅಲ್ಲೆಲ್ಲ ಕಳ್ಳಿನ ವಾಸನೆ ಗವ್ವನೆ ಹಬ್ಬಿತು. ನನಗೆ ಉಸಿರು ಕಟ್ಟುವಂತಾದರೂ ಕಾಡ್ಯ ಪೂಜಾರಿಯಿಂದ ಬಲಿಯಂದ್ರನ ಬಗ್ಗೆ ಕೇಳುವ ಉತ್ಸಾಹದ ಮುಂದೆ ಅದೆಲ್ಲ ಯಾವುದೂ ಗಣನೆಗಿಲ್ಲ. ಬಲಿಯಂದ್ರ ಕುಪ್ಪಿಯ ಕಳ್ಳನ್ನು ಗ್ಲಾಸಿಗೆ ಸುರಿದು ಕುಡಿದ. ತನ್ನ ಉದ್ದದ ಮೀಸೆಯನ್ನು ಬೆರಳಿಂದ ತೀಡಿ, ಅದೇ ಬೆರಳಿಂದ ಉಪ್ಪಿನಕಾಯಿ ಸೀಂಟಿ ತೆಗೆದು ನಾಲಗೆಗೆ ತಗಲಿಸಿ ಚಪ್ಪರಿಸಿದ. ಸೀಟುತ್ತ ಸವಿಯತ್ತ, ನಾಲಗೆ ತಟ್ಟಿ ಚಪ್ಪರಿಸುತ್ತ ಇಷ್ಟಿಷ್ಟೇ ಕುಪ್ಪಿಯ ಕಳ್ಳು ಕುಡಿದು ಖಾಲಿ ಮಾಡಿದ ಬಲಿಯಂದ್ರ ಡರ್ರನೆ ತೇಗು ಬಿಟ್ಟ. ಮತ್ತಷ್ಟು ಹುಳಿವಾಸನೆ ಗಾಳಿಯಲ್ಲಿ ತೇಲಿ ಬಂತು. ಕಾಡ್ಯ ಪೂಜಾರಿಯ ಹೆಂಡತಿ ಗಂಗೆ ಪೂಜಾರತಿ ಗೆರಸೆಯಲ್ಲಿ ಒಂದು ಪಾವಿನಷ್ಟು ಅಕ್ಕಿ ತಂದು ಬಲಿಯಂದ್ರನ ಮುಂದಿಟ್ಟಳು. ಜೋಳಿಗೆಗೆ ಅಕ್ಕಿ ತುಂಬಿಸಿಕೊಂಡು ಗುಮಟೆ ಹಿಡಿದುಕೊಂಡು ಇನ್ನೊಂದು ಮನೆಕಡೆ ಬಲಿಯಂದ್ರ ಹೊರಟು ನಿಂತ. + +ಮತ್ತೆ ನಾಯಿಗಳು, ಪಡ್ಡೆ ಮಕ್ಕಳ ಗದ್ದಲ ಶುರುವಾಯಿತು. ನನ್ನನ್ನು ಕಂಡು ಗಂಗಕ್ಕ ” ಬಲ, ಮಗ ಉಲಾಯಿ ಬಲ್ಲ..” ಎಂದು ನನ್ನನ್ನು `ಎಂಕ್ಲೆ ಗುರ್‍ಕುಲೆ ಮಗೆ..’ ಎಂದು ನನ್ನನ್ನು ಹೊರಟು ನಿಂತ ಬಲಿಯಂದ್ರನಿಗೆ ಪರಿಚಯಿಸುತ್ತ ಮನೆಯ ಒಳಗೆ ಕರೆದಳು. ನನಗೆ ಕಳ್ಳಿನ ವಾಸನೆಯಲ್ಲಿ ನಿಲ್ಲಲಾಗದೆ “ಇನ್ನೊಮ್ಮೆ ಬರ್ತೇನೆ..” ಎಂದು ಅಲ್ಲಿಂದ ಹೊರಟೆ. ಬಲಿಯೆಂದ್ರನ ಬಗ್ಗೆ ಕೇಳಬೇಕೆಂದುಕೊಂಡದ್ದೂ ಮರೆತು ಹೋಗಿತ್ತು. ಗಂಗೆ ಪೂಜಾರತಿ ” ಒಂದು ಓಲೆ ಬೆಲ್ಲವಾದ್ರೂ ತಿಂದು ಹೋಗು ಮಗಾ..” ಎಂದು ಕರೆದಳು. ನಾನಾಗಲೇ ಹೊರಟು ಬಿಟ್ಟಿದ್ದೆ. ಕಳ್ಳಿನ ರೂಪದಲ್ಲಿರುವಾಗ ಕೆಟ್ಟ ವಾಸನೆ ಹರಡುತ್ತದೆ. ಆದರೆ ಈ ತೆಂಗಿನ ಮರದ ನೀರಾವನ್ನು ಬೇಯಿಸಿ ಮಾಡುವ ಓಲೆ ಬೆಲ್ಲದ ಕಂಪು ಅದೆಷ್ಟು ಆಪ್ಯಾಯಮಾನಕರವಾದದ್ದು! ಎಷ್ಟೊಂದು ರುಚಿ! ನಾನು ಹೊರಟು ನಿಂತದ್ದು ಕಂಡ ಗಂಗೆ ಪೂಜಾರತಿ “ದೀಪೋಲಿ ಪರ್ಬಕ್ಕೆ ಬಾ ಮಗೂ..” ಎಂದು ಹೇಳಲು ಮರೆಯಲಿಲ್ಲ. + +`ಊರಿಡೀ ನಡುಗುವಂತಾ ಕದೋನಿ ಕೊಡಿಸುತ್ತೇನೆ` ಎಂದ ಬಾಪಾ + + + +ಎಲ್ಲ ಹಬ್ಬಗಳಿಗಿಂತ ದೀಪಾವಳಿ ಹಬ್ಬಕ್ಕೆ ನಮ್ಮ ಹಳ್ಳಿಯಲ್ಲಿ ಹೆಚ್ಚು ಸಡಗರ. ಹೊಸ ಬಟ್ಟೆಗಳನ್ನು ಖರೀದಿಸುವುದು, ಪಟಾಕಿಗಳನ್ನು ಖರೀದಿಸುವುದು. ಎಲ್ಲಕ್ಕಿಂತ ಮುಖ್ಯವಾದದ್ದೆಂದರೆ ಇವುಗಳನ್ನೆಲ್ಲ ಸಂಜೆ ಆಟದ ಬಯಲಲ್ಲಿ ವಿವರವಾಗಿ ಗೆಳೆಯರೊಂದಿಗೆ ಹೇಳಿಕೊಂಡು ಸಂಭ್ರಮ ಪಡುವುದು. ಗೆಳೆಯರೆಲ್ಲ ತಮ್ಮ ದೀಪಾವಳಿ ಖರೀದಿಯ ಬಗ್ಗೆ ನನಗೆ ವಿವರ ನೀಡುವುದು, ತಮ್ಮ ಮನೆಗೆ ನನ್ನನ್ನೂ ಕರಕೊಂಡು ಹೋಗಿ ಅವುಗಳನ್ನೆಲ್ಲ ತೋರಿಸಿ ಖುಷಿಪಡುವಾಗ ಮುಸ್ಲಿಮರಿಗೂ ದೀಪಾವಳಿ ಹಬ್ಬ ಇರಬೇಕಾಗಿತ್ತು ಎಂದು ನನಗೆ ಅನ್ನಿಸುತ್ತಿತ್ತು. ಮೂರು ದಿನಗಳ ವೈಭವದ ಈ ಹಬ್ಬಕ್ಕೆ ನಡೆಸುವ ತಯಾರಿಯಲ್ಲೇ ಹೆಚ್ಚಿನ ಸಂಭ್ರಮ, ಖುಷಿ ಅಡಗಿರುವುದು. ಆಟದ ಬಯಲಲ್ಲಿ ಹಬ್ಬದ ತಯಾರಿಯ ವಿವರಗಳು ಬರುವಾಗ ಶೀನ ಕೇಳಿದ್ದ“ನೀನು ಏನೆಲ್ಲ ಖರೀದಿ ಮಾಡದ್ದಿಯಾ?”“ನಮಗೆ ದೀಪಾವಳಿ ಹಬ್ಬ ಇಲ್ಲವಲ್ಲಾ? ನಮ್ಮ ಹಬ್ಬಗಳು ಬೇರೆ..” ಎಂದು ನಾನು ಪೆಚ್ಚಾಗಿ ಉತ್ತರಿಸಿದ್ದೆ.“ಅದಕ್ಕೇ ಇರಬೇಕು ನಿಮ್ಮನ್ನು ಬ್ಯಾರಿಗಳು ಅಂತ ಕರೆಯೂದು” ಎಂದಿದ್ದ ಶೀನ ಗಂಭೀರವಾಗಿ!ಗೆಳೆಯರೆಲ್ಲ ಗೊಳ್ಳೆಂದು ನಕ್ಕಿದ್ದರು.ನಾನು ಪೆಚ್ಚಾದದ್ದು ಕಂಡು ನೊಂದ ಯಾದು “ನಿನಗೆ ಹಬ್ಬವಿಲ್ಲದಿದ್ದರೇನಾಯಿತು, ಹಬ್ಬದ ದಿನ ನಾನು ಪಟಾಕಿ ಸುಡುವಾಗ ಕರೆಯುತ್ತೇನೆ. ನೀನು ನಮ್ಮ ಮನೆಗೆ ಬಂದುಬಿಡು. ಈವತ್ತು ನಮ್ಮಪ್ಪ ಗೂಡುದೀಪ ಮಾಡುತ್ತಾರೆ. ನಾಳೆ ನಿನಗೆ ತೋರಿಸುತ್ತೇನೆ” ಎಂದು ಸಮಾಧಾನ ಮಾಡಿ, ನನ್ನ ಗಮನವನ್ನು ಬೇರೆಡೆಗೆ ಸೆಳೆದಿದ್ದ. + +ಮನೆಗೆ ಹೋದವನೇ ಅಮ್ಮನೊಂದಿಗೆ `ಊರಲ್ಲಿ ಎಲ್ಲರೂ ಹಬ್ಬ ಮಾಡುವಾಗ ನಾವು ಕೂಡ ಯಾಕೆ ಮಾಡಬಾರದು?’ ಎಂದು ಕೇಳಿದೆ. ಅಮ್ಮ ನಕ್ಕು “ಹಬ್ಬ ಯಾವುದಾದರೂ ಮಾಡುವುದೇನು? ಹೊಸ ಬಟ್ಟೆ ಹಾಕೂದು, ಬಗೆಬಗೆಯ ತಿಂಡಿ ಮಾಡಿ ತಿನ್ನೋದು ಅಷ್ಟೇ ಅಲ್ಲವಾ? ಅದನ್ನು ನಾವು ಕೂಡ ಮಾಡೋಣಂತೆ.” ಎಂದಿದ್ದಳು. + +ರಾತ್ರಿ ಇಶಾ ನಮಾಜು ಮುಗಿಸಿ ಎಂದಿನಂತೆ ಬಾಪ ಮನೆಗೆ ಬಂದಾಗ ಈ ಬಗ್ಗೆ ಚರ್ಚೆ ನಡೆಯಿತು. `ಊರಲ್ಲಿ ಎಲ್ಲರೂ ಹಬ್ಬದ ಖುಷಿಯಲ್ಲಿ ಮುಳುಗಿರುವಾಗ ನಮ್ಮ ಮಕ್ಕಳಿಗೂ ಆಸೆ ಅಲ್ಲವಾ?’ ಎಂದ ಅಮ್ಮನ ಶಿಫಾರಸು ಬಾಪನಿಗೆ ಒಪ್ಪಿಗೆಯಾಗಿರಬೇಕು. ಸುಮ್ಮನೆ `ಅದೇನು ಮಾಡುತ್ತಿಯಾ ಮಾಡು’ ಎಂದರು. ಊಟ ಮಾಡಿ ಅದೇನೋ ಕಿತಾಬನ್ನು ಹಿಡಿದುಕೊಂಡು ಹಾಸಿಗೆಗೆ ಒರಗಿ ನಿದ್ದೆ ಬರುವ ತನಕ ಸ್ವಲ್ಪ ಹೊತ್ತು ಓದುತ್ತಿರುವುದು ಬಾಪಾನ ಅಭ್ಯಾಸ. ನಾನು ಅಳುಕುತ್ತಲೇ ಬಳಿಗೆ ಹೋಗಿ ನಿಂತೆ. ನಾನು ಪೆಚ್ಚಾಗಿ ನಿಂತಿರುವುದು ಕಂಡ ಬಾಪ, “ನಿನಗೆ ಪಟಾಕಿ ಬಿಡುವ ಆಸೆಯಾಗ್ತಿದೆ ಅಲ್ವ ಮೋನೇ ?” ಎಂದರು. ನಾನು ತಲೆಯಾಡಿಸಿದೆ. “ಅದೆಂತಾದ್ದೋ ಪಟಾಕಿ, ಇಸ್ಸಿ… ಟಸ್ ಪುಸ್ ಅನ್ನುವಂತಾದ್ದು! ನಿನಗೆ ನಮ್ಮ ಊರಿಡೀ ನಡುಗುವಂತಾ ಕದೋನಿ ಕೊಡಿಸುತ್ತೇನೆ, ನೋಡು, ತೆಂಗಿನ ಮರದಷ್ಟೆತ್ತರ ಹೂಮಳೆಗೆರೆವ ದುರುಸು, ಆಕಾಶದಲ್ಲಿ ಬಣ್ಣದ ರಂಗೋಲಿ ಹಾಕುವ ಆಕಾಶ ಬಾಣ ಕೊಡಿಸುತ್ತೇನೆ. ನೀನ್ಯಾಕೆ ಯೋಚಿಸ್ತಿಯೋ?” ಎಂದರು. ನನಗೆ ಸುಂದರ ಸ್ವಪ್ನವೊಂದನ್ನು ಕಂಡಂತಾಯಿತು. “ಆದರೆ ಒಂದು ಷರತ್ತು ಈ ವರ್ಷ ಮಾತ್ರ, ಮುಂದಿನ ವರ್ಷಕೂಡ ಬೇಕು ಅಂದರೆ ತರುವುದು ಸಾಧ್ಯವಾಗ್ಲಿಕ್ಕಿಲ್ಲ ಮಾರಾಯ, ಯಾಕೆಂದರೆ ಅಗ್ರಹಾರ ದೇವಸ್ಥಾನದ ಉತ್ಸವಕ್ಕೆ ಅಂತ ಮಾಡಿದ ಬಿರುಸು ಬಾಣಗಳ ಸ್ಯಾಂಪಲ್ಲು ಬಾರಕೂರಿನಿಂದ ಬರುತ್ತದೆ. ಅದು ಹೇಗಿದೆ ಅಂತ ನೋಡಬೇಕಲ್ಲಾ, ಒಂದು ವೇಳೆ ಟುಸ್..ಪುಸ್ ಆಗಿಬಿಟ್ಟರೆ ಉತ್ಸವಕ್ಕೆ ಸೇರಿದ ಸಾವಿರಾರು ಜನರ ಮಧ್ಯೆ ಮರ್ಯಾದೆ ಹೋಗುವ ಪಂಚಾತ್ಗೆ ನೋಡು. ಸ್ಯಾಂಪಲ್ಲು ನಾಳೆ ಬರುತ್ತೋ ಇಲ್ಲ, ನಾಡಿದ್ದು ಬರುತ್ತದೋ ಗೊತ್ತಿಲ್ಲ.” ಎಂದರು. ಎಲ್ಲ ಶರತ್ತಿಗೂ ನಾನು ಖುಷಿಯಿಂದ ಒಪ್ಪಿದ್ದೆ. + +ನಮ್ಮಜ್ಜಿ ಮನೆ ಬಾರಕೂರಲ್ಲಿ ಉತ್ಸವಗಳಿಗೆ ಬೇಕಾದ ಬಣ್ಣ ಬಣ್ಣದ ಬಾಣ ಬಿರುಸು, ಕದೋನಿ, ಗರ್ನಾಲು ತಯಾರಿಸುವ ಲೈಸನ್ಸು ಮಾವನ ಹೆಸರಲ್ಲಿ ಇತ್ತು.. ನನ್ನ ತಂದೆಯವರಿಗೆ ಇವುಗಳನ್ನು ಕಟಪಾಡಿಯ ಆಸುಪಾಸಿನವರಿಗೆ ಮಾರಾಟ ಮಾಡುವ ಲೈಸನ್ಸು ಇತ್ತು. ಪೇಟೆಯಲ್ಲಿ ಒಂದು ಕೋಣೆಯ ಅಂಗಡಿಯೂ ಬಾಡಿಗೆಗೆ ಇತ್ತು. ಆಗಾಗ ನಮ್ಮೂರ ಆಸುಪಾಸಿನ ದೇವಸ್ಥಾನಗಳ ಉತ್ಸವಗಳಿಗೆ, ಭೂತ ಕೋಲ, ನೇಮಗಳಿಗೆ, ಕಂಬಳ ಮುಂತಾದ ಕಡೆಗಳಲ್ಲಿ ಬಿಡುವ ವೈಭವದ ಬಿರುಸು ಬಾಣಗಳು ಬೇಕಾದಾಗ ಬಾಪನನ್ನು ಸಂಪರ್ಕಿಸುತ್ತಾರೆ. ಅವರ ಕೋರಿಕೆಗಳನ್ನು ಪಡೆದು ಬಾರಕೂರಿನಿಂದ ತರಿಸಿ ಸರಬರಾಜು ಮಾಡುತ್ತಿದ್ದರು. ಕಟಪಾಡಿ ಅಗ್ರಹಾರದ ದೇವಸ್ಥಾನದ ಉತ್ಸವಕ್ಕೆ ಇಂತಹ ಕೋರಿಕೆ ಬಂದಾಗ ಬಾರಕೂರಿನಿಂದ ಸ್ಯಾಂಪಲ್ ಬಿರುಸುಬಾಣಗಳು ತಂದೆಯವರಿಗೆ ಕಳುಹಿಸಿದ್ದರು. ನಾನಂತೂ ಸುದ್ದಿ ಸಿಕ್ಕಿದ ಮರುದಿನವೇ ಊರಿನ ಎಲ್ಲರಿಗೂ ಸುದ್ದಿ ತಲಪಿಸಿ ಆಗಿತ್ತು. + +ದೀಪಾವಳಿಯ ಕಡುಬಿಗೆ ಪರಿಮಳದ ಅರಿಶಿನ ಎಲೆ + +ಅಮ್ಮನ ತಯಾರಿ ಎಂದಿನಂತೆ ಭರ್ಜರಿ ನಡೆದಿತ್ತು. ದೀಪಾವಳಿಯಂದು ಕೊಯ್ಯಲು ತಯಾರಾಗುವಂತೆ ಅವಳು ಪ್ರತೀ ವರ್ಷ ಮೊದಲ ಮಳೆ ಬೀಳುವಾಗ ಅರಸಿನದ ತಾಯಿ ಬೀಜಗಳನ್ನು ಬತ್ತದ ಹುಲ್ಲಿನಲ್ಲಿ ಕಟ್ಟಿಟ್ಟ ಗಂಟನ್ನು ಬಿಚ್ಚಿ ನಮ್ಮ ತೋಟದಲ್ಲಿ ಮಣ್ಣು ಹದಮಾಡಿ, ಹಟ್ಟಿ ಗೊಬ್ಬರ ಹಾಕಿ, ಎರಡು ದರೆ ಮಾಡಿ ನಾನೂ ಅವಳು ಸೇರಿ ನೆಡುವುದು ವಾಡಿಕೆ. ಅದೀಗ ದೀಪಾವಳಿ ಹಬ್ಬಕ್ಕೆ ಉದ್ದುದ್ದ ಎಲೆಗಳು ತಯಾರಾಗಿ ನಿಂತಿವೆ. ದೀಪಾವಳಿ ಹಬ್ಬದಲ್ಲಿ ಅರಸಿನದೆಲೆಯನ್ನು ಸುತ್ತಿದ ಸಿಹಿ ಹೂರಣದ ಕಡುಬು ಎಲ್ಲರೂ ಮಾಡಲೇಬೇಕು. ಅವಳು ಈ ಘಮ ಘಮ ಪರಿಮಳದ ಅರಸಿನದ ಎಲೆಗಳನ್ನು ಕೊಯ್ದು ಹತ್ತು ಹದಿನೈದು ಎಲೆಗಳ ಕಟ್ಟು ಮಾಡಿ ನೆರೆಮನೆಯವರಿಗೆ ಕೊಟ್ಟು ದೀಪಾವಳಿಯ ಸಿಹಿ ಹೂರಣದ ಕಡುಬು ಮಾಡುವುದಕ್ಕೆ ನೆರವಾಗುತ್ತಾಳೆ. ನಮ್ಮ ದನದ ಹಟ್ಟಿಯ ಹತ್ತಿರ ಎತ್ತರೆತ್ತರ ಬೆಳೆದ ಪತ್ರೊಡೆ ಕೆಸುವಿನ ಎಲೆಯನ್ನು ಕೊಂಡುಹೋಗಲು ಬ್ರಾಹ್ಮಣರ ಕೇರಿಯ ಮಕ್ಕಳು ಬಂದರೆ ಅವರಿಗೆ ಕೊಯ್ಯಲು ನೆರವಾಗುತ್ತಾಳೆ. ಅವರಿಗೆ ಬೇಕಾದರೆ ನಮ್ಮ ತೋಟದ ದಕ್ಷಿಣದ ಭಾಗದಲ್ಲಿ ಬೆಳೆಸಿದ ಬಾಳೆಯ ಎಲೆಗಳನ್ನು ಕೊಯ್ದು ಕೊಡುತ್ತಾಳೆ. ನೆರೆಮನೆಯಲ್ಲೆಲ್ಲ ಹಬ್ಬದ ತಿಂಡಿಗಳು ಮಾಡುತ್ತಿರುವಾಗ ನಮಗಾಗಿ ಪಾಯಸ, ಕೊಟ್ಟೆ ಕಡುಬು, ಮುಂಡಗನ ಎಲೆಯ ಕೊಟ್ಟೆಯಿಂದ ಮಾಡುವ `ಮೂಡೆ’ ಮಾಡಿ ಕೋಳಿ ಸಾರಿನ ಜೊತೆಗೆ ತಿನ್ನಿಸುವಳು. + +ದೀಪಾವಳಿ ಹಬ್ಬದ ದಿನ ಪ್ರತೀ ಮನೆಯಲ್ಲೂ ಬಣ್ಣದ ಕಾಗದಗಳನ್ನು ಅಂಟಿಸಿ ಎತ್ತರಕ್ಕೆ ಏರಿಸಿ ಕಟ್ಟಿದ ಗೂಡುದೀಪ ನೋಡಲು ಸುಂದರವಾಗಿರುತ್ತದೆ. ಪಟ್ಟಣದಲ್ಲಿ ಇರುವಂತೆ ಮನೆಯ ಆವರಣದಲ್ಲೆಲ್ಲ ದೀಪಗಳನ್ನು ಸಿಂಗರಿಸುವ ಕ್ರಮ ನಮ್ಮೂರಲ್ಲಿ ಇರಲಿಲ್ಲ. ತುಳಸಿ ಕಟ್ಟೆಯ ಸುತ್ತ ಹತ್ತಾರು ಹಣತೆಯ ದೀಪಗಳನ್ನು ಉರಿಸುವುದು ವಾಡಿಕೆ. ನಂತರ ಮೂಲದ ಮನೆಗಳಲ್ಲಿ ಕುಟುಂಬದವರೆಲ್ಲ ಸೇರಿ ಭೂತಗಳಿಗೆ ಗಣಗಣ ಗಂಟೆ ಬಾರಿಸುತ್ತ ಪೂಜೆ. ರೈತರು ತಮ್ಮ ಗದ್ದೆಗಳಿಗೆ ದೊಂದಿ ದೀಪಗಳನ್ನಿಟ್ಟು ಬಲಿಯಂದ್ರನನ್ನು ಕರೆಯುವುದು ಸಂಜೆ ಹೊತ್ತು ಎಲ್ಲೆಡೆಗಳಿಂದಲೂ ಕೇಳಿಬರುತ್ತದೆ. + +“ಓ ಬಲಿಯಂದ್ರ, ಓ ಬಲಿಯಂದ್ರ ಓ… ಪೊಟ್ಟು ಗಟ್ಟಿ, ಪೊಟ್ಟು ಬಜಿಲ್ ಕೂ….” ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟ ತ್ಯಾಗದ ಮೂರ್ತಿ ಬಲಿ ಚಕ್ರವರ್ತಿ ಮತ್ತೆ ಭೂಮಿಗೆ ಬಂದು ಗದ್ದೆಗಳಲ್ಲಿ ಸಮೃದ್ಧಿಯನ್ನು ತಾರೆಂದು ಮೂರು ಬಾರಿ ಬಲಿಯಂದ್ರನನ್ನು ರೈತರ ಮನೆ ಮುಂದೆ ಮತ್ತು ಗದ್ದೆಗಳಲ್ಲಿ ಕರೆಯುವ ಮುಗಿಲು ಮುಟ್ಟುವ ಕೂಗು ಇಡಿ ಊರು ತುಂಬ ಕೇಳಿಬರುತ್ತದೆ. ಇದು ಮುಗಿದ ಕೂಡಲೇ ಪಟಾಕಿ ಪಟಪಟನೆ ಸಿಡಿಯುತ್ತದೆ, ಸುರುಸುರು ಕಡ್ಡಿ, ಬಿರುಸು ಬಾಣಗಳು, ನೆಲ ಚಕ್ರಗಳು ಹರಿದಾಡುತ್ತವೆ. ಊರಿಡೀ ಗದ್ದಲ ಗೌಜಿ ತುಂಬಿರುತ್ತದೆ. ಉಳಿದ ಸಮಯದಲ್ಲಿ ಸ್ವಲ್ಪವೇ ಸದ್ದಾದರೂ ಬೊಬ್ಬಿಡುವ ನಾಯಿಗಳು ಮನುಷ್ಯರ ಈ ಗಲಾಟೆಗೆ, ಪಟಾಕಿ ಸಿಡಿಮದ್ದಿನ ಆರ್ಭಟಕ್ಕೆ ಹೆದರಿ ದೀಪಾವಳಿಯ ದಿನ ಮೂಲೆ ಸೇರಿ ಗಪ್‌ಚುಪ್ಪಾಗಿ ಕೂತಿರುತ್ತವೆ. ಕಾಗೆಗಳ ಎಂದಿನ ಕೂಗಾಟವೂ ಬಂದಾಗಿರುತ್ತವೆ. ಹಕ್ಕಿಗಳ ಗೂಡು ಸೇರುವ ಚಿಲಿಪಿಲಿ ಹಾಡುಗಳೂ ಕೇಳಿಬರುವುದಿಲ್ಲ. + +ನಮಗೂ ದನಗಳಿಗೂ ಅರಿಶಿನದ ಕಡುಬು + +ಈ ಗೌಜಿ ಗಮ್ಜಾಲಿನಲ್ಲಿ ಪಾಲ್ಗೊಳ್ಳದೆ ಇರುವವರೆಂದರೆ ನಮ್ಮ ಮನೆ ಮತ್ತು ಇನ್ನೊಂದು ವಿನ್ನಿಯ ಮನೆ ಎರಡೇ. ವಿನ್ನಿ ಪ್ರೊಟೆಸ್ಟೆಂಟ್ ಕ್ರಿಶ್ಚಿಯನ್. ಅವನು ಕೂಡ ದೀಪಾವಳಿಯ ಸಂದರ್ಭದಲ್ಲಿ ಅಪ್ಪನೊಂದಿಗೆ ಕಾಡಿ ಬೇಡಿ ಹಣ ವಸೂಲಿ ಮಾಡಿ ಪಟಾಕಿ, ಬಿರುಸು, ಬಾಣ ತಂದು ಇಡುತ್ತಾನೆ. ಎಲ್ಲರೂ ಪಟಾಕಿಗಳನ್ನು ಸುಟ್ಟು ಖಾಲಿಯಾದಾಗ ವಿನ್ನಿ ತನ್ನಲ್ಲಿರುವ ಬಿರುಸುಬಾಣಗಳಿಗೆ ಒಂದೊಂದಾಗಿ ಬೆಂಕಿ ಕೊಟ್ಟು ಎಲ್ಲರ ಗಮನ ಸೆಳೆದು ಖುಷಿಯಾಗುತ್ತಾನೆ.. + +ಹಬ್ಬದ ದಿನ ಬೆಳಗ್ಗೆಯೇ ಶೀನನ ಮನೆಯಿಂದ `ಖಂಡುಗೆ’ ಕಾಣೆ ಮೀನು, ಗಂಗೆ ಪೂಜಾರ್ತಿಯ ವಾಲೆಬೆಲ್ಲದ ಕಟ್ಟು, ಜೊತೆಗೆ ಒಂದಷ್ಟು ಹೊದ್ದಳು (ಬತ್ತದ ಪಾಪ್ ಕಾರ್ನ್), ನರ್ಸಿ ಅಕ್ಕನ ಮನೆಯಿಂದ ಎರಡು ಸೇರು ಅವಲಕ್ಕಿ, ಜೊತೆಗೆ ಉಂಡೆ ಬೆಲ್ಲ. ದೇಜು ಮಾಸ್ಟ್ರ ಹೆಂಡತಿ ತಂದ ಬಾಳೆ ಹಣ್ಣು ಮುಂಡಕ್ಕಿ ಪುರಿ, ಲಡ್ಡು, ಇನ್ನೂ ಅನೇಕ ರೀತಿಯ ತಿಂಡಿ ತಿನಸುಗಳು ಬರುತ್ತಲೇ ಇದ್ದವು. `ಇದೆಲ್ಲ ಯಾಕೆ ಮಾರಾಯ್ರೆ’ ಎನ್ನುತ್ತ ಅಮ್ಮ ಅವುಗಳನ್ನು ತೆಗೆದುಕೊಂಡು ಅವರಿಗೆ ಅರಸಿನದೆಲೆಯ ಕಟ್ಟುಗಳನ್ನು ಹಂಚುತ್ತಾಳೆ. ಅವರು ಕೊಟ್ಟದ್ದನ್ನು ಕೆಡದಂತೆ ಒಳ್ಳೆಯ ಡಬ್ಬಿಯಲ್ಲಿ ತುಂಬಿಸಿಟ್ಟುಕೊಳ್ಳುತ್ತಿದ್ದಳು. ಮುಂದೆ ನಾವು ತಿಂಗಳುಗಟ್ಟಳೆ ಇಟ್ಟು ತಿನ್ನುತ್ತಿದ್ದೆವು.. + +ಆ ವರ್ಷ ದೀಪಾವಳಿಯ ಎರಡನೇ ದಿನ ಬಾಪ ಹೇಳಿದಂತೆ ರಾತ್ರಿ ಮನೆಗೆ ಬರುವಾಗ ಚೀಲತುಂಬ ಗರ್ನಾಲು, ಬಿರುಸು ಬಾಣಗಳನ್ನು ತಂದಿದ್ದರು. ನಾವೆಲ್ಲ ಮನೆಯ ಅಂಗಳದಲ್ಲಿ ಸೇರಿದೆವು. ಬಾಪ ಮೊದಲು ನಾಲ್ಕು ಗರ್ನಾಲಿಗೆ ಬೆಂಕಿ ಕೊಟ್ಟರು. ಅದು ಡಂ… ಡಂ… ಎಂದು ದೊಡ್ಡ ಸದ್ದು ಮಾಡುವಾಗ ಸುದ್ದಿ ತಿಳಿದ ಊರ ಹಲವು ಮಂದಿ ಮಕ್ಕಳೊಂದಿಗೆ ಬಂದು ನಮ್ಮ ಅಂಗಳದಲ್ಲಿ ಸೇರಿದರು. ನಾನು ಜಂಭದಿಂದ ಬೀಗಿ ಆಚೀಚೆ ಓಡುತ್ತ ಬಾಪಾನಿಗೆ ನೆರವಾಗುತ್ತಿದ್ದೆ. ನಮ್ಮ ಎದುರು ಮನೆಯ ಯಾದು ಬಂದು ನನ್ನ ಜೊತೆಗೆ ಸೇರಿಕೊಂಡದ್ದು ನನಗೆ ಇನ್ನಷ್ಟು ಖುಷಿಯಾಗಿತ್ತು. ಯಾಕೆಂದರೆ ನಾಳೆ ಆಟದ ಮೈದಾನದಲ್ಲಿ ನಡೆದ ಸಂಗತಿಗಳನ್ನು ಸ್ನೇಹಿತರೊಂದಿಗೆ ಹೇಳುವಾಗ ಸಾಕ್ಷಿಗೆ ಯಾರಾದರೂ ಬೇಕಲ್ಲಾ! ಬಾಪ ಮಣ್ಣಿನ ಕುಂಡದಲ್ಲಿ ತಯಾರಿಸಲಾದ ಬಿರುಸನ್ನು ಅಂಗಳದಲ್ಲಿಟ್ಟು ಎಲ್ಲರೂ ದೂರದಲ್ಲಿ ನಿಲ್ಲುವಂತೆ ಸೂಚಿಸಿ ಅದಕ್ಕೆ ಬೆಂಕಿ ಕೊಟ್ಟರು. ಸ್ವಲ್ಪ ಹೊತ್ತಿನಲ್ಲೇ ಅದು ಸುಂಯ್… ಸದ್ದು ಮಾಡುತ್ತ ಬೆಳಕಿನ ಹೂಗಳನ್ನು ಕಾರುತ್ತ ಎತ್ತರೆತ್ತರಕ್ಕೆ ತೆಂಗಿನ ಮರದೆತ್ತರಕ್ಕೆ ಏರುತ್ತ ಮಾರುದ್ದ ಬೆಳಕು ಸುತ್ತಲೂ ಹರಡಿ ತಣ್ಣಗಾಯಿತು. ನಂತರದಲ್ಲಿ ಹೊಗೆ ಕಾರಿ ಗಂಧಕ ಸುಟ್ಟ ವಾಸನೆ ಅಲ್ಲೆಲ್ಲ ಹಬ್ಬಿತು. ಇನ್ನೊಂದು `ಬಿಗಿಲು’ ಅನ್ನುವ ಹೆಸರಿನ ಬಿದಿರ ಅಂಡೆಯಲ್ಲಿ ಮಾಡಿದ ಹೂ ಕುಂಡವನ್ನು ನೆಲದಲ್ಲಿ ಹುಗಿದು ನಿಲ್ಲಿಸಿ ಬಾಪ ಬೆಂಕಿಕೊಟ್ಟರು. ಅದು ಕೂ…. ಎಂದು ಕೂಗುತ್ತ ಬಣ್ಣ ಬಣ್ಣದ ಕಿಡಿಗಳನ್ನು ಕಾರುತ್ತ ಬೆಳಕು ಹರಡುತ್ತ ಎತ್ತರಕ್ಕೆ ಜಿಗಿದು ಕೆಳಗಿಳಿದು ಆರಿತು. ಸ್ವಲ್ಪ ಹೊತ್ತಿನಲ್ಲೇ ಮತ್ತೆ ತನ್ನಷ್ಟಕ್ಕೆ ಇನ್ನೊಮ್ಮೆ ಕೂಗುತ್ತ ಬಣ್ಣದ ಕಿಡಿಗಳನ್ನು ಹಾರಿಸುತ್ತ ಮತ್ತೆ ಮೇಲಕ್ಕೇರಿ ಕೆಳಗಿಳಿಯಿತು. ಹೀಗೆ ಮೂರು ಬಾರಿ ಮೇಲಕ್ಕೆ ಏರಿ ಕೆಳಗಿಳಿದು ಎಲ್ಲರ ಮನಸ್ಸನ್ನು ಸೂರೆಗೊಂಡಿತು. + +ವಿಶೇಷವೆಂದರೆ ಪಟಾಕಿ ಸುಡುವುದರ ಬಗ್ಗೆ ಕ್ಲಾಸಿನಲ್ಲಿ ಪಾಠದ ಮಧ್ಯೆ ಸುಮ್ಮನೆ ದಂಡಕ್ಕೆ ಎಂದು ಬೋಧಿಸಿದ್ದ ನಮ್ಮ ನೆರೆಮನೆಯ ದೇಜು ಮಾಸ್ಟ್ರು ತಮ್ಮ ಮಕ್ಕಳು ಕೃಷ್ಣ, ಲಕ್ಷ್ಮಣ, ಪುಟ್ಟ ಮಗು ಮಾರುತಿಯರನ್ನು ಕರೆದುಕೊಂಡು ಬಂದು ನಮ್ಮ ತಂದೆಯವರ ಜೊತೆಗೆ ನಿಂತು ಉತ್ಸವವನ್ನು ನೋಡಿದಂತಾಯಿತೆಂದು ಹೇಳಿಕೊಂಡು, ಖುಷಿ ಪಟ್ಟುಕೊಂಡು, ನಮ್ಮ ಸಂತೋಷದಲ್ಲಿ ಭಾಗಿಯಾಗಿದ್ದರು. ಸುಮಾರು ಅರ್ಧ ಗಂಟೆಗಳ ಕಾಲ ನಮ್ಮ ಸುಡು ಮದ್ದು ಬಿರುಸು ಬಾಣಗಳ ವೈಭವವನ್ನು ಸವಿದ ಊರವರು ಮುಂದೆ ವರ್ಷಗಟ್ಟಲೆ ಈ ದೀಪಾವಳಿಯನ್ನು `ಗುರುಕುಲೆ ಇಲ್ಲದ ದೀಪೋಲಿ’ ಎಂತಲೇ ನೆನಸಿ ಕೊಳ್ಳುತ್ತಿದ್ದರು. + +ದೀಪಾವಳಿಯ ಮೂರನೇ ದಿನ ನಮ್ಮೂರ ಪೇಟೆಯಲ್ಲಿ ಅಯುಧ ಪೂಜೆ, ಅಂಗಡಿ ಪೂಜೆಗಳು ನಡೆಯುತ್ತಿದ್ದರೆ ಹಳ್ಳಿಯಲ್ಲಿ ಗೋಪೂಜೆ ನಡೆಯುತ್ತದೆ. ಗೋ ಪೂಜೆಯ ಮುಂಚಿನ ದಿನ ಅಮ್ಮ ಹಟ್ಟಿಯಲ್ಲಿರುವ ನಮ್ಮ ದನ ಕರುಗಳಿಗೆ ಹುಲ್ಲು ಹಾಕಿ ಬಂದು ನಾಳೆ ಈ `ಮೂಕ ಪ್ರಾಣಿಗಳ ಹಬ್ಬ’ ಎಂದು ಸಡಗರ ಪಡುತ್ತ ಅಕ್ಕಳೊಂದಿಗೆ ಸೇರಿ ದನಗಳಿಗೆ ತಿನ್ನಿಸಲು ಅರಸಿನದೆಲೆಯ ಕಡುಬು ಮಾಡುತ್ತಾಳೆ. ನೆನಸಿಟ್ಟ ಅಕ್ಕಿಯನ್ನು ರಾತ್ರಿ ಅರೆದು ದಪ್ಪದ ಹಿಟ್ಟು ಮಾಡಿ ಅದನ್ನು ಅರಸಿನದೆಲೆಗೆ ಹರಡಿ ಅದರ ಮೇಲೆ ಕಾಯಿತುರಿ, ಬೆಲ್ಲ, ಹುರಿದ ಎಳ್ಳು ಹಾಕಿದ ಹೂರಣವನ್ನು ಹಾಕಿ ಮಡಚಿ ಇಡ್ಲಿ ಮಾಡುವ `ತೊಂದುರ’ಲ್ಲಿಟ್ಟು ನೀರಿನ ಹಬೆಯಲ್ಲಿ ಬೇಯಿಸುತ್ತಾಳೆ. + +ಮರುದಿನ ಬೆಳಗ್ಗೆ ಎದ್ದು ಎಂದಿನಂತೆ ಹಟ್ಟಿಯಲ್ಲಿ ದನಗಳಿಗೆ ಅಕ್ಕ ಅಕ್ಕಚ್ದು ಹುಲ್ಲು ಹಾಕಿದ್ದು ಅವು ತಿನ್ನುತ್ತಿದ್ದಂತೆ ಸೆಗಣಿ ಎತ್ತಿ ಸ್ವಚ್ಚ ಮಾಡುತ್ತಾಳೆ. ಅಮ್ಮ ಬೆಳಗ್ಗಿನ ನಮಾಜು ಮುಗಿಸಿ ಗಂಗೆ ದನದ ಹಾಲು ಕರೆಯತ್ತಾಳೆ. ನಂತರ ದನಗಳನ್ನು ಹಟ್ಟಿಯಿಂದ ಹೊರತಂದು ನಾವು ಉತ್ಸಾಹದಿಂದ ದನಗಳ ಮೈತೊಳೆದು ಅಂಗಳದ ಕೈದೋಟದಲ್ಲಿ ಬೆಳೆದ ದಾಸವಾಳ, ನಂದಿಬಟ್ಟಲ, ಶಂಕಪುಷ್ಪಿ ಹೂಗಳ ಮಾಲೆ ಮಾಡಿ ನಮ್ಮ ಮೂರೂ ದನಗಳ ಕುತ್ತಿಗೆಗೆ ತೊಡಿಸಿದೆವು. ಅಕ್ಕ ಜೇಡಿ ಮಣ್ಣನ್ನು ಕಲಸಿ ಮಾಡಿದ ಬಣ್ಣಕ್ಕೆ ತೆಂಗಿನ ಕಾಯಿಯ ಖಾಲಿ ಗೆರಟೆಯ ಬಾಯನ್ನು ಅದ್ದಿ ದನಗಳ ಮೈ ತುಂಬ ಅಲ್ಲಲ್ಲಿ ಒತ್ತಿ ಉರುಟುರುಟು ಚಿತ್ತಾರ ಮೂಡಿಸಿದೆವು. ಅಮ್ಮ ಬುಟ್ಟಿಯಲ್ಲಿ ರಾತ್ರಿ ಮಾಡಿಟ್ಟ ಅರಸಿನದೆಲೆಯ ಸಿಹಿ ಕಡುಬುಗಳ ಜೊತೆಗೆ ಬಾಳೆಎಲೆಯಲ್ಲಿ ಮಾಡಿದ ಗಟ್ಟಿ ಕಡುಬುಗಳನ್ನು ತಂದಳು. ಅಮ್ಮ, ನಾನು ಅಕ್ಕ ಎಲ್ಲರೂ ಉತ್ಸಾಹದಿಂದ ಕಡುಬುಗಳನ್ನು ದನಗಳಿಗೆ ತಿನ್ನಿಸಿದೆವು. ದನಗಳು ಎಲೆಗಳ ಸಮೇತ ಕಡುಬುಗಳನ್ನು ಗಬಗಬನೆ ತಿಂದು ಎಂದಿಲ್ಲದ ಹೊಸ ರುಚಿ ಸವಿದು ತಲೆಯಲ್ಲಾಡಿಸಿ ಖುಷಿ ಪಟ್ಟವು. + +ನಮ್ಮ ಅಂದಿನ ಬೆಳಗ್ಗಿನ ನಾಷ್ಟಕ್ಕೆ ಕೂಡ ಅದೇ ಅರಸಿನದೆಲೆಯಲ್ಲಿ ಮಾಡಿದ ಸಿಹಿ ಹೂರಣದ ಕಡುಬು. ಅರಸಿನದೆಲೆಯ ಸುವಾಸನೆಯ ಜೊತೆಗೆ ಕಡುಬಿನ ಸವಿ ಬೆರೆತು ತಿನ್ನಲು ರುಚಿಯಾಗಿತ್ತು. ನಮಗೂ ದನಗಳಿಗೂ ಅಂದಿನ ಬೆಳಗ್ಗಿನ ನಾಷ್ಟಾದಲ್ಲಿ ವ್ಯತ್ಯಾಸವೆಂದರೆ ದನಗಳು ಕಡುಬನ್ನು ಅದಕ್ಕೆ ಸುತ್ತಿದ ಎಲೆಗಳ ಜೊತೆಗೇನೆ ತಿಂದು ಸವಿದಿದ್ದರೆ ನಾವು ಎಲೆಯನ್ನು ಬಿಡಿಸಿ ತೆಗೆದು ಕಡುಬು ಮಾತ್ರ ತಿಂದಿದ್ದೆವು. ನಂತರ ಅಮ್ಮ ಹೇಳಿದಂತೆ ದನಗಳನ್ನು ನಾನು ಮತ್ತು ಅಕ್ಕ ಸೇರಿ ಅಟ್ಟಿಕೊಂಡು ಪಳ್ಳಿಗುಡ್ಡೆಯ ಮೈದಾನದ ಗೋಮಾಳಕ್ಕೆ ಹೋಗಿ ಒಂದೆರಡು ಗಂಟೆ ಹುಲ್ಲು ಮೇಯಿಸಿ ಹಿಂದಕ್ಕೆ ಕರತಂದೆವು. + +ಖ್ಯಾತ ಕತೆಗಾರರು,ಸೂಫಿ ಚಿಂತಕರು. ಮೂಲತಃ ಉಡುಪಿಯ ಕಟ್ಪಾಡಿಯರು. ಈಗ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. \ No newline at end of file diff --git a/Kenda Sampige/article_541.txt b/Kenda Sampige/article_541.txt new file mode 100644 index 0000000000000000000000000000000000000000..b1d26ac8ed44242dd765162c257bc52a2f0872bb --- /dev/null +++ b/Kenda Sampige/article_541.txt @@ -0,0 +1,15 @@ +ಭೈರಪ್ಪನವರ ಕವಲು ಕಾದಂಬರಿಯ ಕುರಿತಾಗಿ ಎದ್ದಿರುವ ಚರ್ಚೆಯ ಸಂದರ್ಭದಲ್ಲಿ ಈ ಟಿಪ್ಪಣಿ ಮಾಡಬೇಕೆನಿಸಿತು. + +ಕನ್ನಡದಲ್ಲಿ ಪುಸ್ತಕೋದ್ಯಮ ಅವನತಿಯ ಅಂಚಿನಲ್ಲಿದೆ. ಕನ್ನಡಿಗರು ಪುಸ್ತಕಗಳನ್ನು ಕೊಂಡು ಓದುವುದಿಲ್ಲ. ಮಾರಾಟವಾಗುವ ಪುಸ್ತಕಗಳಲ್ಲಿ ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಅಡುಗೆ, ಸಾಮಾನ್ಯ ಜ್ಞಾನ ಸಂಬಂಧಿ ಪುಸ್ತಕಗಳೇ ಹೆಚ್ಚು. ಸೃಜನಶೀಲ ಸಾಹಿತ್ಯವನ್ನು ಕೊಳ್ಳುವವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ ಎನ್ನುವ ಸಾಮೂಹಿಕ ಅಭಿಪ್ರಾಯ ಗಟ್ಟಿಯಾಗುತ್ತಿರುವ ಸಮಯದಲ್ಲಿ ಕಾದಂಬರಿಯೊಂದು, ಅದರಲ್ಲೂ ಚೇತನ್ ಭಗತ್ ಮಾದರಿಯ ಮಸಾಲಾ ವಸ್ತುವನ್ನು ಆಧರಿಸಿರದ ಗಂಭೀರ ಕಾದಂಬರಿ ಪ್ರಕಟವಾದ ತಿಂಗಳೊಂದರಲ್ಲೇ ಐದು ಮುದ್ರಣಗಳನ್ನು ಕಾಣುತ್ತದೆ, ಪ್ರಕಟಣೆಯ ಮುನ್ನವೇ ಪತ್ರಿಕೆಗಳಲ್ಲಿ ಅದರ ಬಗ್ಗೆ ವರದಿಯಾಗುತ್ತದೆ, ಜನರು ಬಿಡುಗಡೆಗಾಗಿ ಕಾತರಿಸುತ್ತಾರೆ ಎಂದರೆ ಕನ್ನಡಿಗರು ಸಂತೋಷ ಪಡಬೇಕು. + +ಭೈರಪ್ಪನವರ ಹಿಂದಿನ ಕಾದಂಬರಿಗಳು ಅದ್ಯಾವ ರೀತಿ ಜನಪ್ರಿಯತೆಯನ್ನು ಗಳಿಸಿದವೋ ತಿಳಿದಿಲ್ಲ ಆದರೆ ನಾನು ಗಮನಿಸಿದಂತೆ ಆವರಣ ಹಾಗೂ ಕವಲು ಕಾದಂಬರಿಗಳು ಭೈರಪ್ಪನವರ ತಾತ್ವಿಕ ವಿರೋಧಿಗಳಿಂದಲೇ ಹೆಚ್ಚು ಪ್ರಚಾರವನ್ನು ಗಿಟ್ಟಿಸಿಕೊಂಡವು. ಕವಲು ಕಾದಂಬರಿಯನ್ನು ನಾನಿನ್ನೂ ಓದಿಲ್ಲವಾದರೂ ವಿಮರ್ಶೆಗಳ ಕನ್ನಡಿಯಲ್ಲಿ ಕಂಡ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಟಿಪ್ಪಣಿ ಬರೆಯುತ್ತಿರುವೆ. + +ನಿಸ್ಸಂಶಯವಾಗಿ ಭೈರಪ್ಪ ಒಬ್ಬ ಅದ್ಭುತ ಕಾದಂಬರಿಕಾರ. ಕಾದಂಬರಿಯ ವಸ್ತು, ತಂತ್ರ, ಭಾಷಾ ಪ್ರಯೋಗ, ಸಂಭಾಷಣೆಗಳ ನೈಜತೆ, ಪ್ರಾದೇಶಿಕತೆ ಮೊದಲಾದವುಗಳನ್ನು ಅತೀವ ಶ್ರದ್ಧೆಯಿಂದ ರಚಿಸುತ್ತಾರೆ. ಪಾತ್ರಗಳ ಒಳತೋಟಿಯನ್ನು ಅತ್ಯಂತ ಸಮರ್ಥವಾಗಿ ಭಾಷೆಯಲ್ಲಿ ಬಿಂಬಿಸುತ್ತಾರೆ. ಅನ್ವೇಷಣೆಯಲ್ಲಿ ಕಂಠಿ ಜೋಯಿಸರು ಕುದುರೆಯ ಮೇಲೆ ಸವಾರಿ ಮಾಡುತ್ತಾ ಹೋಗುವಾಗ ಅವರ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳ ಚಿತ್ರಣ ಇಂದಿಗೂ ನನ್ನ ಮನಸ್ಸಿನಲ್ಲಿ ಛಾಪು ಒತ್ತಿದ ಹಾಗೆ ನಿಂತಿದೆ. ಎಲ್ಲಿಂದಲೋ ಶುರುವಾಗಿ ಯಾವುದರಲ್ಲೋ ತೊಡಗಿಕೊಂಡು ಇನ್ನೆಲ್ಲಿಗೂ ಹರಿಯುತ್ತಾ ಇದ್ದಕ್ಕಿದ್ದ ಹಾಗೆ ಇನ್ನೇನನ್ನೋ ನೆನಪಿಸಿಕೊಳ್ಳುವ ಒಳಮನಸ್ಸಿನ ವ್ಯಾಪಾರವನ್ನು ಅಕ್ಷರಗಳಲ್ಲಿ ಕಡೆದಿರಿಸುವುದರಲ್ಲಿ ಅವರ ಹೆಚ್ಚುಗಾರಿಕೆಯಿದೆ. ‘ಪರ್ವ’ದಲ್ಲಿನ ಅರ್ಜುನನ ಮನಸ್ಸಿನ ಆಲೋಚನೆಗಳ ವೇಗ, ಕುಂತಿಯ ಮನಸ್ಸಿನ ತುಮುಲಗಳ ಆವೇಗ ಎಲ್ಲವೂ ಅತ್ಯದ್ಭುತ. ಕಾದಂಬರಿಯ structure, ಶೈಲಿಯ ಬಗ್ಗೆ ಭಾರಿ ಕಾಳಜಿ ವಹಿಸುವ ಭೈರಪ್ಪನವರ ಶ್ರದ್ಧೆ, ಕಸುಬುದಾರಿಕೆ, ಪರಿಶ್ರಮವನ್ನು ಅವರ ವಿರೋಧಿಗಳೂ ಮೆಚ್ಚುವರು. + +ನಾನು ಗುರುತಿಸಿದಂತೆ ಭೈರಪ್ಪನವರ ಕಾದಂಬರಿಗಳ ಕೊರತೆಗಳು ಕೆಲವಿವೆ. ಮೊದಲನೆಯದಾಗಿ, ಅವರು ಕಾದಂಬರಿಗಾಗಿ ಆಯ್ದುಕೊಳ್ಳುವ ವಸ್ತು. ಇದು ಅವರ ಕಾದಂಬರಿಗಳ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅತಿ ಕ್ಲಿಷ್ಟಕರವಾದ, ಸಾವಿರಾರು ಆಯಾಮಗಳಿರುವ, ಕಪ್ಪು-ಬಿಳುಪೆಂದು ವರ್ಗೀಕರಿಸಲಾರದಷ್ಟು ಸಂಕೀರ್ಣವಾದ ವಸ್ತುವನ್ನು ಭೈರಪ್ಪ ಆರಿಸಿಕೊಳ್ಳುತ್ತಾರೆ. ಅವರು ಆ ವಸ್ತುವಿನ ಬಗೆಗೆ ಸ್ಪಷ್ಟತೆಯನ್ನು ಪಡೆಯುವುದಕ್ಕೆ ಬಹಳಷ್ಟು ಸಂಶೋಧನೆ, ಅಧ್ಯಯನಗಳನ್ನು ಮಾಡುತ್ತಾರೆ. ಇಡೀ ಕಾದಂಬರಿಯ ತಿರುಳನ್ನು ಒಂದು ಪ್ಯಾರಾದಲ್ಲಿ ಇಲ್ಲವೇ ಒಂದೇ ಸಾಲಿನಲ್ಲಿ ಹೇಳಬಲ್ಲಷ್ಟು ಸ್ಪಷ್ಟವಾಗಿ ಕಾದಂಬರಿಯ ವಸ್ತು ಅವರ ಪ್ರಜ್ಞೆಯಲ್ಲಿ ಬೇರೂರಿರುತ್ತದೆ. ಅದಕ್ಕೆ ಕಾದಂಬರಿಯ ರೂಪ ಕೊಡುವಾಗಲೂ ಅವರು ಆ ವಸ್ತುವಿನ ಆಳಕ್ಕೆ ಇಳಿಯುತ್ತಾರೆ. ಪಾತ್ರಗಳ ವರ್ತನೆ, ಕ್ರಿಯೆಗಳ ಮೂಲಕ ಆ ಸಮಸ್ಯೆಯ ಎಲ್ಲಾ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ. ಇಲ್ಲಿಯವರೆಗೆ ಕಾದಂಬರಿಕಾರ ಭೈರಪ್ಪ ಯಶಸ್ವಿಯಾಗುತ್ತಾರೆ. ಇಲ್ಲಿಂದ ಮುಂದಕ್ಕೆ ಕೆಲವು ಕಾದಂಬರಿಗಳಲ್ಲಿ ಸಮಾಜ ಶಾಸ್ತ್ರಜ್ಞ ಭೈರಪ್ಪ, ತತ್ವಜ್ಞಾನಿ ಭೈರಪ್ಪ, ದಿಗ್ಧರ್ಶಕ ಭೈರಪ್ಪ, ರಾಜಕಾರಣಿ ಭೈರಪ್ಪನವರ ಕೈ ಮೇಲಾಗುತ್ತದೆ. ಕಾದಂಬರಿಯಲ್ಲಿ ವಸ್ತುವೆಂಬ ಬೃಹತ್ ಕಟ್ಟದ ಬಾಗಿಲುಗಳನ್ನೆಲ್ಲಾ ತೆರೆದುಕೊಂಡು ಕಾದಂಬರಿಕಾರ ಒಳನುಗ್ಗಿರುತ್ತಾನೆ. ಅನಂತರ ಬರುವ ಚಿಂತಕ ಆ ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತಾ ಬರುತ್ತಾನೆ. ಇಲ್ಲಿಯೇ ಅನೇಕ ವೇಳೆ ಕಸಿವಿಸಿಯಾಗುವುದು. ಅಲ್ಲಿಯವರೆಗೆ ಸಮರ್ಥವಾಗಿ ಬೆಳೆದು ನಿಂತು ಕಾದಂಬರಿಕಾರನ ತಾತ್ವಿಕತೆಗೆ ಸೆಡ್ಡು ಹೊಡೆದ, ಆತನ ಜೀವನಾದರ್ಶಕ್ಕೆ ಸವಾಲು ಹಾಕಿ ಸಂಕೀರ್ಣತೆಯನ್ನು ಸೃಷ್ಟಿಸಿದ ಪಾತ್ರಗಳು ಸೋಲೊಪ್ಪಿಕೊಂಡು ಬಿಡುತ್ತವೆ. ಇದರಿಂದ ಇಡೀ ಕಾದಂಬರಿಯಲ್ಲಿ ಜರುಗಿದ ಸಂಘರ್ಷ ಕಾದಂಬರಿಯ ಕಡೆಗೆ ಅಂತ್ಯವನ್ನು ತಲುಪಿಬಿಡುತ್ತದೆ. + +ಈ ಬಗೆಯ ಕಥನ ತಂತ್ರವನ್ನು ಮೆಚ್ಚುವವರೇ ಬಹಳ ಮಂದಿ. ಹೀಗಾಗಿ ಭಯೋತ್ಪಾದನೆಯನ್ನೇ ವಸ್ತುವನ್ನಾಗಿಸಿಕೊಂಡ ನಿಶಿಕಾಂತ್ ಕಾಮತ್ ನಿರ್ದೇಶನದ ಮುಂಬೈ ಮೇರಿ ಜಾನ್ ಚಿತ್ರಕ್ಕಿಂತ ನೀರಜ್ ಪಾಂಡೆಯವರ ಎ ವೆಡ್ ನೆಸ್ ಡೇ ಹೆಚ್ಚು ಜನರಿಗೆ ಇಷ್ಟವಾಗುವುದು. ಕೇವಲ ಸಮಸ್ಯೆಯ ಪದರಗಳನ್ನು ಬಿಚ್ಚಿಟ್ಟು ಅದರ ಸಂಕೀರ್ಣತೆಯ ಅರಿವನ್ನು ಓದುಗನಿಗೆ ದಾಟಿಸಿದರೆ ಸಾಲದು ಅವುಗಳಿಗೆ ಪರಿಹಾರವನ್ನೂ ಸಹ ಕಾದಂಬರಿಯಲ್ಲಿಯೇ ಸೂಚಿಸಬೇಕು ಎನ್ನುವುದು ಅನೇಕ ಓದುಗರ ಅಪೇಕ್ಷೆಯಾಗಿರುತ್ತದೆ. ಅಂತಹ ಕಾದಂಬರಿಯನ್ನು ಓದಿದಾಗಲೇ ಅವರಿಗೆ ಓದು ಸಂಪೂರ್ಣವಾದ ತೃಪ್ತಿ ಲಭಿಸುತ್ತದೆ. ನನ್ನಂತ ತಲೆ ಪ್ರತಿಷ್ಠೆಯ ಓದುಗರಿಗೆ ಈ ಸಮಸ್ಯೆಗಳಿಗೆ ಕಾದಂಬರಿಕಾರನೇ ಪರಿಹಾರ ಸೂಚಿಸುವುದು ನಮ್ಮ ಬುದ್ಧಿವಂತಿಕೆಗೆ ಮಾಡಿದ ಅಪಮಾನ ಎಂದು ಭಾಸವಾಗುತ್ತದೆ. ತನ್ನೆಲ್ಲ ಓದುಗರಿಗಿಂತ ತಾನು ಸಮರ್ಥವಾಗಿ ಜಡ್ಜ್ ಮಾಡಬಹುದು ಎಂದು ಕಾದಂಬರಿಕಾರ ಘೋಷಿಸಿದಂತೆ ಅನ್ನಿಸುತ್ತದೆ. + +ಎರಡನೆಯದು, ಇವರ ಕಾದಂಬರಿಗಳ ಪಾತ್ರಗಳು ನೇರವಾಗಿ ಸಮಸ್ಯೆಯ ಕೆಲವು ಮುಖಗಳನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ ಆವರಣದಲ್ಲಿ ನಾಯಕಿ (ಜೋಹರಾ?) ಭ್ರಮನಿರಸನಗೊಂಡ, ಹಿಂದುತ್ವವನ್ನು ಪುನಃ ಅಪ್ಪುವ ಆಧುನಿಕ ಹೆಣ್ಣನ್ನು ಪ್ರತಿನಿಧಿಸುತ್ತಾಳೆ. ಆಕೆಯ ಗಂಡ ಮಾಡರೇಟ್ ಮುಸ್ಲಿಂ ಸಮಾಜವನ್ನು ಪ್ರತಿನಿಧಿಸುತ್ತಾನೆ. ಪ್ರೊಫೆಸರ್ ಎಲ್ಲಾ ಬುದ್ಧಿಜೀವಿಗಳ ರೆಪ್ರೆಸೆಂಟೇಟಿವ್ ಆಗ್ತಾನೆ. ಕಾದಂಬರಿ ಮುಟ್ಟುವ ವಸ್ತುವಿನೊಂದಿಗೆ ನೇರವಾಗಿ ಪಾತ್ರಗಳೆಲ್ಲವನ್ನೂ ಕನೆಕ್ಟ್ ಮಾಡುವ ಅನಿವಾರ್ಯತೆಯಲ್ಲಿ ಭೈರಪ್ಪ ಸಿಲುಕಿಕೊಳ್ಳುತ್ತಾರೆ. ಆದರೆ ನಿತ್ಯ ಬದುಕಿನಲ್ಲಿ ನಾವು ಹಾಗೆ ಬದುಕುವುದಿಲ್ಲ. ಎಲ್ಲಾ ತತ್ವಾದರ್ಶ, ಸಮಸ್ಯೆಗಳಿಗಿಂತಲೂ ಜೀವನ ದೊಡ್ಡದಾಗಿರುತ್ತದೆ, ಮುಖ್ಯವಾಗಿರುತ್ತದೆ. ಬೆಡ್ ರೂಮಿನಲ್ಲಿ ಪವಡಿಸಿರುವಾಗ ಇತಿಹಾಸದ ಬಿಕ್ಕಟ್ಟನ್ನು ಚರ್ಚಿಸುವುದಕ್ಕೆ ಆಸ್ಪದವಿರದಷ್ಟು ಜಂಜಡಗಳಿರುತ್ತವೆ, ಮಾತುಕತೆಯಿರುತ್ತವೆ. ಬಹುಶಃ ದೊಡ್ಡದೊಂದು ಸಮಸ್ಯೆಯನ್ನು ಎತ್ತಿಕೊಂಡಾಗ ಕ್ರಿಸ್ಪ್ ಆಗಿ ನಿರೂಪಿಸುವ ಧಾವಂತದಲ್ಲಿ ಹೀಗಾಗುತ್ತದೆಯೇನೋ. ಅಲ್ಲದೆ ಇಲ್ಲಿ ಭಿನ್ನ ಅಭಿಪ್ರಾಯದ ಪಾತ್ರಗಳು ಮುಖಾಮುಖಿಯಾಗುವಾಗ ನಡೆಯ ಡಿಬೇಟ್ ರೂಪದ ಸಂಭಾಷಣೆಗಳು ಖಂಡಿತವಾಗಿಯೂ ಓದುಗರನ್ನು ರಂಜಿಸುವ ಉದ್ದೇಶ ಹೊಂದಿರುತ್ತವೆ, ಈ ವಾಗ್ವಾದದ ಸಂದರ್ಭದಲ್ಲಿ ಓದುಗರು ಎರಡರಲ್ಲಿ ಒಂದು ಅಭಿಪ್ರಾಯ ಹೊಂದಿರುವವರಾದರಂತೂ ಅವರು ಆಸ್ಥೆಯಿಂದ ಸ್ಪಂದಿಸುವುದು ಸಾಮಾನ್ಯ. ತಮ್ಮ ಅಭಿಪ್ರಾಯದ ಕೈಮೇಲಾದಾಗ ಹಿಗ್ಗುವುದು, ತಮ್ಮ ಪಾರ್ಟಿ ಇಕ್ಕಟ್ಟಿಗೆ ಸಿಲುಕಿದಾಗ, ಸೋತಾಗ ಖಿನ್ನರಾಗುವುದು… ಹೀಗೆ ಒಂದು ರೀತಿಯ ಎಮೋಶನಲ್ ರೋಲರ್ ಕೋಸ್ಟರಿನಲ್ಲಿ ಕರೆದೊಯ್ಯುವ ನಿರೂಪಣೆ ಒಂದು ನೆಲೆಯಲ್ಲಿ ತನ್ನ ಕೆಲಸವನ್ನು ಯಶಸ್ವಿಯಾಗಿಯೇನೋ ಮಾಡುತ್ತದೆ ಆದರೆ ಸಾಹಿತ್ಯಿಕವಾಗಿ ಆ ವಾಗ್ವಾದಕ್ಕೆ ಅಂತಹ ಮಹತ್ವ ಇರದು ಎನ್ನುವುದು ನನ್ನ ಅನಿಸಿಕೆ. + +ಮೂರನೆಯದು, ಇದನ್ನು ಭೈರಪ್ಪನವರ ಬುದ್ಧಿವಂತಿಕೆ ಅನ್ನಬೇಕೋ ಅಥವಾ ಅವರನ್ನು ಓದುವವರ, ಪ್ರತಿಕ್ರಿಯಿಸುವವ ಪೆದ್ದತನವೆನ್ನಬೇಕೋ ತಿಳಿಯದು. ಕೆಲವು ಕಾದಂಬರಿಗಳಲ್ಲಿ ಭೈರಪ್ಪ ಸಾಹಿತ್ಯಿಕ ಅಂಶಗಳಿಗೆ ಮಹತ್ವ ಕೊಟ್ಟಂತೆಯೇ, ಅಧ್ಯಯನ, ಹೋಂ ವರ್ಕಿಗೆ ಗಮನ ಕೊಟ್ಟಂತೆಯೇ ಜೇನು ಗೂಡಿಗೆ ಕಲ್ಲೆಸೆಯುವ ಕೆಲಸವನ್ನೂ ಕೊಂಚ ತುಂಟತನದಿಂದಲೇ ಮಾಡುತ್ತಾರೆ. ಆವರಣದಲ್ಲಿ ಅನಂತಮೂರ್ತಿಯವರನ್ನು ಹೋಲುವ ಪಾತ್ರವನ್ನು ಸೃಷ್ಟಿಸಿದ್ದಾಗಿರಬಹುದು, ಕವಲುವಿನಲ್ಲಿ ಸ್ತ್ರೀ ವಿಮೋಚನೆ ಪ್ರತಿಪಾದಕಿಯನ್ನು ಸಲಿಂಗಕಾಮಿಯಾಗಿಸಿರುವುದಾಗಿರಬಹುದು… ಹೀಗೆ ಜೇನು ಗೂಡಿಗೆ ಕಲ್ಲೆಸೆದು ಭೈರಪ್ಪ ಸುಮ್ಮನೆ ಕೂತು ಬಿಡುತ್ತಾರೆ. ಪಾಪದ ಜೇನು ನೊಣಗಳು ಕಲ್ಲು ಬೀಸಿ ಬಂದ ದಿಕ್ಕಿಗೆ ದಾಳಿಯಿಕ್ಕುತ್ತವೆ. ಕಲ್ಲೆಸೆದವನನ್ನು ಮುಕ್ಕುತ್ತವೆ. ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ, ಜನರ ಗುಂಪಿನಲ್ಲಿ, ಫೋನ್ ಕಾಲುಗಳಲ್ಲಿ ಭಾರಿ ಉದ್ವೇಗದಿಂದ ಕೂಡಿದ ಚರ್ಚೆಗಳಾಗುತ್ತವೆ.ಈ ವಿವಾದದ ಹೊಗೆಯಲ್ಲಿ ಜನಪ್ರಿಯತೆಯ ಸಿಹಿ ಜೇನು ಭೈರಪ್ಪನವರ ಪಾಲಾಗುತ್ತದೆ. ಅಳದಿದ್ದರೆ, ರಚ್ಚೆ ಹಿಡಿಯದಿದ್ದರೆ, ಕೀಟಲೆ ಮಾಡದಿದ್ದರೆ ತಮ್ಮ ಅಸ್ತಿತ್ವ ಗುರುತಿಸಲ್ಪಡುವುದೇ ಇಲ್ಲ ಎನ್ನುವ ಸಂದೇಶವನ್ನು ಸಾಹಿತಿಗಳಿಗೆ ನಮ್ಮ ಮಾಧ್ಯಮಗಳು ಹಾಗೂ ಸಮಾಜ ತಲುಪಿಸಿದಂತಾಗುತ್ತದೆ. ಮುಂದೆ ಇಂತಹ ಹೈ ಡ್ರಾಮಾಗಳು ಹೆಚ್ಚಾಗಿ ಟಿವಿ ಚಾನಲುಗಳ ಟಿ ಆರ್ ಪಿ, ಪತ್ರಿಕೆಗಳ ಪ್ರಸಾರವೂ ಹೆಚ್ಚುತ್ತದೆ, ದಿನನಿತ್ಯದ ಯಾಂತ್ರಿಕ ಜೀವನದಿಂದ ದಣಿದ ವೀಕ್ಷಕ-ಓದುಗರಿಗೆ ಚುಚ್ಚುವ, ಕೆಣಕುವ, ಪ್ರಚೋದಿಸುವ ಮನರಂಜನೆಯೂ ದೊರೆಯುತ್ತದೆ, ಸಾಹಿತಿಯ ಕೃತಿಯೂ ಖರ್ಚಾಗುತ್ತದೆ. ಎಲ್ಲರೂ ಸುಖಿಗಳು! ಭೈ \ No newline at end of file diff --git a/Kenda Sampige/article_542.txt b/Kenda Sampige/article_542.txt new file mode 100644 index 0000000000000000000000000000000000000000..fecba517915a47e945e4c1890bb81fb3fc0b1002 --- /dev/null +++ b/Kenda Sampige/article_542.txt @@ -0,0 +1,29 @@ +ಗಾಂಧಿಯವರ ಪ್ರತಿ ಹೆಜ್ಜೆಯೂ ಚೆಲುವನ್ನು ಸಾಕ್ಷಾತ್ಕರಿಸಿಕೊಳ್ಳುವವನೊಬ್ಬ ಮಾಡುವ ಪ್ರಯತ್ನದಂತೆ ಕಾಣಿಸುತ್ತದೆ. ಅವರು ಮಾಡಿದ ಎಲ್ಲಾ ಕೆಲಸಗಳ ಆಳದ ತುಡಿತವು ತನ್ನ ಬಿಡುಗಡೆಗಾಗೇ, ತನ್ನ ಮೋಕ್ಷಕ್ಕಾಗೆ ಎಂಬಂತೆ ಇವೆ. ಗಾಂಧಿ ತಮ್ಮ ಆತ್ಮಕತೆಯ ಕೊನೆಯಲ್ಲಿ ಒಂದು ಕಡೆ ‘ಸಕಲ ಜೀವಿಗಳಲ್ಲೂ ದೇವರನ್ನು ಕಾಣುವ ನಮ್ರ ಪ್ರಯತ್ನ ತಮ್ಮ ಜೀವನ’ ಎಂಬರ್ಥದಲ್ಲಿ ಹೇಳಿಕೊಂಡಿದ್ದಾರೆ. ಈ ನುಡಿಗೆ ಪ್ರಜ್ಞಾಪೂರ್ವಕವಾಗಿ ನಡೆಯುತ್ತ ಮುಂದಿಡುವ ಪ್ರತಿ ಹೆಜ್ಜೆಗಳನ್ನೂ ಪರೀಕ್ಷಿಸಿಕೊಳ್ಳುತ್ತ ನಡೆವವನಂತೆ ಗಾಂಧಿ ಕಾಣಿಸುತ್ತಾರೆ. + +-ಹೀಗೆ ನಡೆವವನೊಬ್ಬನಿಗೆ ಜಗತ್ತು ಹೇಗೆ ಕಾಣಿಸಬಹುದು? ಐಕ್ಯತೆ ದೈವದಂತೆ, ಭಿನ್ನತೆ ದೆವ್ವದಂತೆ, ಜಗತ್ತು ಒಂದು ಕುಟುಂಬದಂತೆ. ಹೀಗೆ ಭಾವಿಸಿದಾಗ ಮಾತ್ರವೆ ‘ಉಪವಾಸ’ವನ್ನು ‘ಸತ್ಯಾಗ್ರಹ ‘ವನ್ನಾಗಿ ಮಾಡಲು ಆಗುತ್ತದೆ. ಯಾಕೆಂದರೆ ತನ್ನವನೊಡನೆ ಅಥವಾ ತನ್ನವನೆಂಬ ಭಾವನೆ ಇದ್ದಲ್ಲಿ ಮಾತ್ರ ಉಪವಾಸವು ಸತ್ಯಾಗ್ರಹವಾಗಿ ಆಗುವುದು. + +ಇಂಥ ಗ್ರಹಿಕೆಯು ಈ ಸೆಮಿನಾರಿನಲ್ಲಿ ನಡೆಯುತ್ತಿರುವ ಸಂಸ್ಕೃತಿ ಪರಿಕಲ್ಪನೆಯನ್ನೂ ಕೂಡಾ ಹೀಗೆ ನೋಡುತ್ತಿತ್ತು: ಈ ಸಂಸ್ಕೃತಿ ಚರ್ಚೆ ಐಕ್ಯತೆ ಕಡೆಗೆ ಅಂದರೆ ದೈವದತ್ತ ಇಡುತ್ತಿರುವ ಹೆಜ್ಜೆಯೋ ಅಥವಾ ಭಿನ್ನತೆ ತಾರತಮ್ಯದ ಕಡೆಗೆ ಅಂದರೆ ದೆವ್ವದ ಕಡೆಗೆ ಇಡುತ್ತಿರುವ ಹೆಜ್ಜೆಗಳೋ ಎಂದು ನೋಡುತ್ತಿತ್ತು. ಒಂದು ಗುಡಿ, ಚರ್ಚ್, ಮಸೀದಿ, ಮಠಗಳಲ್ಲಿ ಭಿನ್ನತೆ ತಾರತಮ್ಯ, ಅಸ್ಪೃಷ್ಯತೆ ಇದ್ದರೆ ಅವರು ಪೂಜಿಸುತ್ತಿರುವುದು ದೆವ್ವವನ್ನು ಎಂಬುದು ಕಾಣುತ್ತಿತ್ತು. ಬಾಬರಿ ಮಸೀದಿ ಬೀಳಿಸಿದವರು ದೇವರ ನಾಮ ಜಪಿಸುತ್ತಿದ್ದರೂ ಭಿನ್ನತೆಗಾಗಿ ಆ ಕ್ರಿಯೆ ನಡೆದ ದೆಸೆಯಿಂದಾಗಿ ಅವರ ಎದೆಯೊಳಗೆ ದೆವ್ವ ಕುಣಿಯುವುದು ಕಾಣಿಸುತ್ತಿತ್ತು. ತಾರತಮ್ಯ ಅಂತರ ಹೆಚ್ಚಿಸುವ ಒಂದು ಕಾನೂನು ಅಥವಾ ಒಂದು ಕಾರ್ಯಕ್ರಮ ದೈವದಿಂದ ದೂರವಾಗಿತ್ತಿರುವ ಪ್ರಕ್ರಿಯೆಯಾಗಿ ಕಂಡು ಅದಕ್ಕಾಗಿ ಅದನ್ನು ಪ್ರತಿಭಟಿಸಲು ಪ್ರೇರೇಪಿಸುತ್ತಿತ್ತು. + +ಈಗ ದೈವ ಮತ್ತು ದೆವ್ವವನ್ನು ಕೈಬಿಟ್ಟು  ಐಕ್ಯತೆ ಹಿಡಿದುಕೊಂಡು ಇಂದಿನ ಅಗತ್ಯವಾದ ಗಾಂಧಿ, ಅಂಬೇಡ್ಕರ್ ಬಳಿಗೆ ಬರುವೆ. ಇಂದು ಗಾಂಧಿ ಮತ್ತು ಅಂಬೇಡ್ಕರ್ ಅವರ ಕೃತಿ ಮತ್ತು ವ್ಯಕ್ತಿತ್ವಗಳು ಪ್ರಭಾವಿಸುತ್ತಿರುವ ರೀತಿಗಳು ಬೇರೆ ಬೇರೆಯಾಗೇ ಇವೆ. ಇದನ್ನು ಅರ್ಥ ಮಾಡಿಕೊಳ್ಳಲು ಗೆಳೆಯ ಸಿದ್ಧಲಿಂಗಯ್ಯನವರ ಗ್ರಹಿಕೆ ಸಹಕಾರಿಯಾಗುತ್ತದೆ. ಅಜ್ಜ ಮೊಮ್ಮಗನಿಗೆ ಗಾಂಧಿಯ ಬಗ್ಗೆ ಹೇಳುತ್ತಾನೆ -‘ನಮ್ಮ ಕಾಲದಲ್ಲಿ ಮಹಾತ್ಮಾಗಾಂಧಿ ಅಂತ ಇದ್ದರು. ಅವರು ಬ್ರಿಟೀಷರನ್ನು ಓಡಿಸಿ ಸ್ವಾತಂತ್ರ್ಯವನ್ನು ತಂದುಕೊಟ್ಟರು. ನಾವು ಈಗ ಇರುವ ಸ್ಥಿತಿಗತಿಗೆ ಗಾಂಧಿನೇ ಕಾರಣ’. ಅದೇ ಅಂಬೇಡ್ಕರ್ ಬಗ್ಗೆ ಮೊಮ್ಮಗ ಅಜ್ಜನಿಗೆ ಹೇಳುತ್ತಾನೆ -‘ಅಜ್ಜಾ ನೀನು ಚಿಕ್ಕವನಿದ್ದಾಗ ಅಂಬೇಡ್ಕರ್ ಅಂತ ನಮ್ಮವರೊಬ್ಬರು ಇದ್ದರು. ಅವರು ನಮ್ಮ ಜನಾಂಗಕ್ಕಾಗಿ ತುಂಬಾ ಹೋರಾಡಿದರು. ನಾವು ಈಗ ಇರುವ ಸ್ಥಿತಿಗತಿಗೆ ಅಂಬೇಡ್ಕರ್ ಕಾರಣ.’ ಗಾಂಧಿ ಬಗ್ಗೆ ಮಾಗಿದ ಹಣ್ಣು ಈಚಿಗೆ ಹೇಳಿದರೆ, ಅಂಬೇಡ್ಕರ್ ಬಗ್ಗೆ ಈಚು ಮಾಗಿದ ಹಣ್ಣಿಗೆ ಹೇಳುತ್ತದೆ. ಹಾಗಾಗಿ ಮೊದಲದರದಲ್ಲಿ ನಿಧಾನತೆ ಇದ್ದರೆ ಎರಡನೆಯದರಲ್ಲಿ ವೇಗ ಇದೆ. ಈ ನಡಿಗೆಯಿಂದಾಗಿ ಒಂದೇ ಆಶಯವು ಪರಸ್ಪರ ವಿರುದ್ಧವಾಗಿ ಕಾಣಲೂ ಬಹುದು. ದಲಿತರ ಮೊದಲ ವಿದ್ಯಾವಂತ ತಲೆಮಾರು ಗಾಂಧಿ ಅಂಬೇಡ್ಕರರ ಆಶಯಗಳ ನಾಡಿ ಹಿಡಿದು ಈ ಬಿಕ್ಕಟ್ಟಿನಿಂದ ಪಾರಾಗಿತ್ತು ಎಂದು ಕಾಣುತ್ತದೆ. ಯಾಕೆಂದರೆ ದಲಿತರ ನವಪೀಳಿಗೆ ಅಂಬೇಡ್ಕರ್ ಫೋಟೋಗಳನ್ನೂ ಇಟ್ಟುಕೊಂಡಿರುತ್ತಿತ್ತು. + + + +ಹಾಗಾದರೆ ದಲಿತರ ಹಿಂದಿನ ತಲೆಮಾರು ಗಾಂಧಿ, ಅಂಬೇಡ್ಕರ್ ಅವರ ಜಗಳವನ್ನು ಹೇಗೆ ಕಂಡಿತ್ತು? ಮಕ್ಕಳ ಹಿತಕ್ಕಾಗಿ ಎಂದುಕೊಂಡು ಜಗಳಮಾಡುವ ಅಪ್ಪ ಅಮ್ಮನಂತೆ? ಹೀಗಲ್ಲದಿದ್ದರೆ ಇಬ್ಬರ ಫೋಟೋಗಳನ್ನು ಒಟ್ಟಿಗೆ ಹೇಗೆ ಇಟ್ಟುಕೊಳ್ಳಲು ಸಾಧ್ಯ? ಉದಾ: ಮಗುವನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಬೇಕು ಅಂತ ಅಪ್ಪ ವಾದಿಸುತ್ತಾನೆ. ಇಂಗ್ಲೀಷ್ ಮಾಧ್ಯಮಕ್ಕೆ ಸೇರಿಸಬೇಕು ಅಂತ ಅಮ್ಮ ವಾದಿಸುತ್ತಾಳೆ. ಜಗಳವಾಗುತ್ತದೆ. ಆದರೆ ಜಗಳದಲ್ಲಿ ಏನಿದೆ? ಮಗುವಿನ ಹಿತವೇ ಅಲ್ಲವೆ? + +ಪೂನಾ ಒಪ್ಪಂದದಲ್ಲೂ ಏನಿದೆ? ನನ್ನಲ್ಲಿ ತಪ್ಪಿದೆ. ನಿಜ ಹಾಗಂತ ಡೈವೋರ್ಸ್ ಕೊಡಬೇಡ ‘ ಹಿಂದೂ ಧರ್ಮಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ಗಾಂಧಿ ಮತ್ತು ಅಂಬೇಡ್ಕರ್‌ರನ್ನು ಪರಸ್ಪರ ವಿರೋಧಿಗಳನ್ನಾಗಿಸುತ್ತೇವೆ. ಅಂಬೇಡ್ಕರ್ ಅವರದು ತಾರ್ಕಿತ ದೃಷ್ಟಿಕೋನವಾದರೆ ಗಾಂಧಿಯವರು ತರ್ಕಾತೀತ ದೃಷ್ಟಿಕೋನದವರು. ಹಾಗಾಗಿ ಸಮಕಾಲೀನರ ನಡುವೆ ಜಗಳವೂ ನಡೆಯಬಹುದು. ಇದು ನಮಗಲ್ಲ ನಾವು ಪರಿಣಾಮದಲ್ಲಿ ನೋಡಬೇಕು. ಯಾಕೆ ಉಗ್ರಹಿಂದೂ ಗೋಡ್ಸೆ ಗಾಂಧಿ ಕೊಂದ? ಗಾಂಧಿ ಸತ್ತಾಗ ಬ್ರಾಹ್ಮಣ ವಠಾರವು ‘ವರ್ಣಸಂಕರ ಮಾಡುವ ಕಲ್ಕಿಯ ಅವತಾರ ಸಧ್ಯ ಕೊನೆಗೊಂಡಿತು’ ಎಂದು ಯಾಕೆ ಸಮಾಧಾನ ಪಟ್ಟಿತು? ಹೀಗಾದರೆ ಗಾಂಧಿ ಹಿಂದೂ ಧರ್ಮದಲ್ಲಿ ಮಾಡುತ್ತಿದ್ದುದು ಏನು? ಗಾಂಧಿ ಅಸಮಾನತೆಯ ಹಿಂದೂಧರ್ಮ ಎಂಬ ಬಚ್ಚಲ ಕೊಳಕು ನೀರನ್ನು ಭಟ್ಟಿ ಇಳಿಸುತ್ತ ತಿಳಿಗೊಳಿಸುತ್ತಿದ್ದರು. ಚಿಟ್ಟೆಯಾಗಲಾರದ ಬಚ್ಚಲು ಹುಳುಗಳಿಗೆ ಉಸಿರು ಕಟ್ಟಿತ್ತು. ಇದನ್ನು ಹೀಗಲ್ಲದೆ ಬೇರೆ ಯಾವ ರೀತಿ ಅರ್ಥಮಾಡಿಕೊಳ್ಳಲು ಸಾಧ್ಯ? ಕೊನೆ ಕೊನೆಯಲ್ಲಿ ಅಂತರ್ಜಾತೀಯ ಮದುವೆಗಳಿಗೆ ಮಾತ್ರ ಭಾಗವಹಿಸುವೆ ಎಂಬ ನಿಲುವಿಗೆ ಬರುವ ಗಾಂಧಿಯನ್ನು ಮತ್ತೆ ಹೇಗೆ ಅರ್ಥಮಾಡಿಕೊಳ್ಳಬೇಕು? + +ಹೀಗೆ ಕಾಣಿಸುತ್ತದೆ: ಹಿಂದೂ ಧರ್ಮ ಎಂಬ ಮನೆಯೊಳಗೆ ಭಿನ್ನಭಾವ ಜಾತಿ ತಾರತಮ್ಯದ ಕಂಬಗಳನ್ನು ಒಳಗೊಳಗೇ ಕೊಯ್ಯುವಂತೆ ಗಾಂಧಿ ಕಾಣಿಸುತ್ತಾರೆ. ಅದೇ ಅಂಬೇಡ್ಕರ್ ಹೊರಗಿನಿಂದ ಆ ಅಸಮಾತೆಯ ಮನೆಗೆ ಕಲ್ಲೆಸೆಯುವವರಂತೆ ಕಾಣಿಸುತ್ತಾರೆ. ಈ ಪ್ರಕ್ರಿಯೆಯಿಂದಾಗಿ ಅಂಬೇಡ್ಕರ್ ಎಸೆದ ಕಲ್ಲು ಗಾಂಧಿಯವರಿಗೂ ಬಿದ್ದು ರಕ್ತ ಚೆಲ್ಲಿರಬಹುದು. ಇದನ್ನು ಕಂಡು ಲೋಕ ಗಾಂಧಿಗೂ, ಅಂಬೇಡ್ಕರ್‌ಗೂ ಮಾರಾಮಾರಿ ಹೊಡೆದಾಟ ಅನ್ನಬಹುದು. ಆದರೆ ಇಬ್ಬರೂ ಮಾಡುತ್ತಿದ್ದುದು ಒಂದೇ ಕೆಲಸವನ್ನಲ್ಲವೇ? + +ಹೀಗಿದ್ದೂ ಗಾಂಧಿ ಯಾಕೆ ಅಪಾರ್ಥಕ್ಕೆ ಒಳಗಾದರು? ಒಂದು ಊಹೆ ಮಾಡುವೆ. ಗಾಂಧಿ ಅಸ್ಪೃಶ್ಯರನ್ನು ಮಕ್ಕಳು ಎಂಬಂತೆ ಭಾವಿಸಿ ವರ್ತಿಸುತ್ತಿದ್ದರು. ಈ ವರ್ತನೆಯನ್ನು ಉಲ್ಟಾ ಮಾಡಿದರೆ ಅಂದರೆ ಗಾಂಧಿ ಅಸ್ಪೃಶ್ಯರನ್ನು ತಂದೆತಾಯಿಗಳಂತೆ ಭಾವಿಸಿ ವರ್ತಿಸಿದ್ದರೆ ಈ ಅಪಾರ್ಥದಿಂದ ತಪ್ಪಿಸಿಕೊಳ್ಳಬಹುದಿತ್ತು ಎಂದು ನನಗನ್ನಿಸುತ್ತದೆ. ಇದು ಮೇಲ್ನೋಟಕ್ಕೆ ಸರಳವಾಗಿ ಒಂದೇ ಎಂಬಂತೆ ಕಂಡರೂ ಇದು ನಡಾವಳಿಯನ್ನೇ ಬದಲಿಸುತ್ತದೆ. ಉದಾಹರಣೆಗೆ ಅಸ್ಪೃಶ್ಯರಿಗೂ ಸವರ್ಣೀಯರಿಗೂ ಸ್ಪರ್ಧೆ ಸವಾಲು ಬಂದಾಗ – ಮಕ್ಕಳಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ಎಲಾ ನಾನು ಸಾಕಿದವನ ಕೊಬ್ಬೆ ‘ ಎಂದು ಕ್ರೋಧ ಅಸಹನೆ ಉಂಟಾಗುತ್ತದೆ. ಅದೇ ತಂದೆತಾಯಿಯಂತೆ ಭಾವಿಸಿದ ಮನಸ್ಥಿತಿ ಇದ್ದರೆ ‘ನನ್ನನ್ನು  ಸಾಕಿದವನು ಏನೋ ಇರಲಿ’ ಎಂದು ಸಹನೆ ಕಳೆದುಕೊಳ್ಳುವುದಿಲ್ಲ. ದಲಿತರು ಆದಿಮ ಜನಾಂಗವಾದ್ದರಿಂದ ಪಿತೃ ಭಾವನೆಯೇ ಚಾರಿತ್ರಿಕವಾಗೂ ಸರಿ ಅನ್ನಿಸುತ್ತದೆ. + +ಇಂಥ ಗಾಂಧಿಯನ್ನು ದಲಿತರು ಹೇಗೆ ಸ್ವೀಕರಿಸಬೇಕು? ಗಾಂಧಿಗೆ ತಾನು ಹರಿಜನನಾಗಿ ಹುಟ್ಟಬೇಕು ಎಂಬ ಆಶೆ ಇತ್ತಂತೆ. ಹುಟ್ಟಿದರೆ ಒಳ್ಳೆಯದು. ಹುಟ್ತಾರೋ ಇಲ್ವೋ ಗೊತ್ತಿಲ್ಲ. ಆದರೆ ಒಂದು ಮಾಡಬಹುದು.- ಗಾಂಧಿ ಸಾಹಿತ್ಯವನ್ನು ದಲಿತನ ಒಡಲಿಗೆ ಹಿತಾಸಕ್ತಿಗೆ ಎಷ್ಟು ಒಗ್ಗುತ್ತದೋ ಅಷ್ಟನ್ನು ಮಾತ್ರ ಇಟ್ಟುಕೊಂಡರೆ ಅಲ್ಲಿಂದ ಗಾಂಧಿ ಮತ್ತೆ ಹುಟ್ಟುತ್ತಾನೆ. ಇಡೀ ಜಗತ್ತಿನ ಹಿತ ಇದರೊಳಗೆ /ಇರಬಹುದು. + +ಹೀಗೆ ಮಾಡುವಾಗ ಒಂದು ಎಚ್ಚರಬೇಕು. ನಿನ್ನೆಯ ಗಾಂಧಿ ಇಂದಿಗೆ ಬದಲಾಯಿಸಿರುತ್ತಾರೆ. ಇಂದಿನ ಗಾಂಧಿ ನಾಳೆಗೆ ಬದಲಾಯಿಸಿರುತ್ತಾರೆ. ಒಬ್ಬ ಮನುಷ್ಯ ನಡೆಯುತ್ತಿರುವ ಕ್ರಮದಲ್ಲೇ ಗಾಂಧಿ ಆಸೆ ಚಿಂತನೆಗಳಿಗೂ ನಡಿಗೆ ಇದೆ. ಇಡೀ ಸಮುದಾಯವನ್ನು ತನ್ನ ಜತೆಯಲ್ಲೇ ಕರೆದೊಯ್ಯುವವನ ಕಷ್ಟ ಇದಾಗಿರಬಹುದು. ಇದರಿಂದಾಗಿ ಬೇಕಾದವರು, ಬೇಕಾದ್ದನ್ನು ತೆಗೆದುಕೊಂಡು ಇದೇ ಗಾಂಧಿ ಎನ್ನುವ ಸಾಧ್ಯತೆಗಳು, ದುರುಪಯೋಗ ಹೆಚ್ಚಿವೆ. ಆದ್ದರಿಂದ ಗಾಂಧಿಯ ಗುರಿ ಹಾಗೂ ಗಾಂಧಿ ಇಟ್ಟ ಕೊನೆಯ ಹೆಜ್ಜೆಗಳ ಗುರುತು ಹಿಡಿದು ಗಾಂಧಿಯನ್ನು ರೂಪಿಸಬೇಕು. ಇದಕ್ಕೆ ಲೋಹಿಯಾ ವಿವೇಕ ಚಿಂತನೆ ಸಹಾಯಕವಾಗುತ್ತವೆ. ಹೀಗೆ ಗಾಂಧಿಗೆ ಲೋಹಿಯಾ ಕೂಡಿಸಿದ ಮೇಲೆ ಲೋಹಿಯಾಗೆ ಅಂಬೇಡ್ಕರ್ ಕೂಡಿಸಿ ಒಂದು ಸಾಮರಸ್ಯ ಪಡೆಯಬಹುದು. ಆಗ ನಮ್ಮ ಮುಂದೆ – ಅಂಬೇಡ್ಕರ್ ಅಧ್ಯಕ್ಷರಾಗಿ, ಲೋಹಿಯಾ ಕಾರ್ಯದರ್ಶಿಯಾಗಿ ರಾಜಕೀಯ ಪಕ್ಷ ರೂಪಿಸಬೇಕೆಂದು ಆ ಇಬ್ಬರೂ ನಡೆಸಿದ್ದ ಪ್ರಯತ್ನ – ಆ ಪ್ರಯತ್ನ ನಮಗೆ ಮುಂದಿನ ದಾರಿಯಾಗುತ್ತದೆ. + +ಈ ದಾರಿ ಡಿ.ಎಸ್.ಎಸ್, ರೈತಸಂಘದಂಥ ಸಂಘಟನೆಗಳಿಗೆ ಸಹಜ ದಾರಿ ಅನ್ನಿಸುತ್ತದೆ. ಈ ಸಂಘಟನೆಗಳು ಇತ್ತೀಚಿನ ದಿನಗಳಲ್ಲಿ ಚಾಲನೆ ಕೊಟ್ಟು ಒಂದು ಸುತ್ತು ನಡೆದುಬಂದು, ಈಗ ಜಡವಾಗಿ ಸುಸ್ತಾಗಿ ಮುಂಗಾಣದೆ ನಿಂತಿವೆ. ಈಗ ಇವು ಪೊರೆ ಕಳಚಬೇಕಾಗಿದೆ. ಇಲ್ಲಿ ಒಂದು ಮಾತು -ಈಗೀಗ ಬುದ್ಧ, ಬಸವ, ಅಲ್ಲಮ, ಗಾಂಧಿ ಇಂಥ ಮಾತುಗಳು ಹೆಚ್ಚಾಗಿ ಕೇಳಿಬರುತ್ತಿವೆ. ಇಂಥವರ ಹೆಸರು ಹೇಳುವಾಗ ಸದಾ ನೆನಪಿಟ್ಟುಕೊಳ್ಳಬೇಕಾದ್ದು ಏನೆಂದರೆ – ಬುದ್ಧ, ಬಸವ, ಅಲ್ಲಮ, ಗಾಂಧಿಯಂಥವರು ತಮ್ಮ ಶತ್ರು ತಮ್ಮ ಒಳಗೇ ಇದ್ದಾನೆ ಎಂದು ಭಾವಿಸಿ ಹೆಣಗುತ್ತಿದ್ದರು. ಆಸೆ, ದ್ವೇಷ, ಅಸೂಯೆ, ನಾನತ್ವ ಇಂಥ ಹೊಟ್ಟೆ ಒಳಗಿನ ತಮ್ಮನ್ನೇ ಶತ್ರು ಎಂದು ಭಾವಿಸುತ್ತಿದ್ದರು. ಆದರೆ ಡಿ.ಎಸ್.ಎಸ್, ರೈತಸಂಘ, ಕಮ್ಯುನಿಷ್ಟ್ – ಮುಂತಾದವರು ತಮ್ಮ ಶತ್ರು ತಮ್ಮ ಹೊರಗೆ ಇದ್ದಾನೆ ಎಂದು ಹೋರಾಡುತ್ತಿದ್ದಾರೆ. ಡಿ.ಎಸ್.ಎಸ್‌ಗೆ ಸ್ಥೂಲವಾಗಿ ಭೂಮಾಲೀಕರು ಶತ್ರುವಾದರೆ, ರೈತಸಂಘಕ್ಕೆ ಕೈಗಾರಿಕೆ ಶತ್ರು – ಹೀಗೆ. ಇದು ಎಲ್ಲಿಗೆ ತಂದು ನಿಲ್ಲಿಸುತ್ತದೆ? ಇಂದಿನ ಭ್ರಷ್ಟಾಚಾರ ವಿರೋಧಿಯೇ ನಾಳಿನ ಭ್ರಷ್ಟ  ಎಂಬಲ್ಲಿಗೆ ಯಾವುದನ್ನು ನಾವು ಇಂದು ವಿರೋಧಿಸುತ್ತೇವೇಯೋ ನಾಳೆ ನಾವು ಆಗುವುದಾದರೆ ನಾವು ಮಾಡಿದ್ದಾದರೂ ಏನು? + +ಅದಕ್ಕಾಗಿ ನಾವು ಒಂದು ಮಧ್ಯಮ ಮಾರ್ಗಕ್ಕೆ ಬಂದರೆ ಸರಿಯಾಗಬಹುದೆನ್ನಿಸುತ್ತದೆ. ನಮ್ಮ ಶತ್ರು ನಮ್ಮ ಒಳಗೂ ಅರ್ಧ ಇದ್ದಾನೆ, ನಮ್ಮ ಹೊರಗೂ ಅರ್ಧ ಇದ್ದಾನೆ. ಈ ತಿಳಿವು ಈ ಎಚ್ಚರ ನಮಗೆ ಡಿ.ಎಸ್.ಎಸ್, ರೈತಸಂಘಕ್ಕೆ ಹೊಸ ನಡಿಗೆ ನುಡಿ ಕೊಡಬಹುದೆ? ಆಗ ಬಹಿರಂಗದ ಹಾರಾಟಕ್ಕೆ ಕೊಟ್ಟ ಕಾಲದಷ್ಟನ್ನು ತನ್ನ ಅಂತರಂಗದ ಶತ್ರು ನಿರುಕಿಸಿ ಅದನ್ನೂಚಿವುಟಿ ಹಾಕುವುದಕ್ಕೂ ಅಷ್ಟೇ ಕಾಲ ಕೊಡಬೇಕಾಗುತ್ತದೆ. ನಾವು ಯಾವ ವ್ಯಕ್ತಿ, ವಸ್ತು ಗುಣಗಳ ಬಗ್ಗೆ ಈಗ ಅಸಹನೆ ಪ್ರತಿಭಟನೆ ಮಾಡುತ್ತಿರುತ್ತೇವೆಯೋ ಅದೇ ನಮ್ಮೊಳಗೆ ಇರಬಹುದಾದ ಎಚ್ಚರ ನಮ್ಮದಾಗುತ್ತದೆ. ಇದಾಗುತ್ತದೆಯೆ? ಅಥವಾ ಇದು ಬಿಟ್ಟು ಬೇರೆ ದಾರಿ ಇದೆಯೇ? + +(ಮಣಿಪಾಲ್ ಗಾಂಧಿ ಸಂಸ್ಕೃತಿ ವಿಚಾರ ಸಂಕಿರಣದಲ್ಲಿ ಆಡಿದ ಮಾತುಗಳು) + +ಕನ್ನಡದ ಅಪ್ರತಿಮ ಬರಹಗಾರ, ಚಿಂತಕ, ಸಂಘಟಕ, ಹೋರಾಟಗಾರ. ದ್ಯಾವನೂರು (ಕಥಾಸಂಕಲನ), ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ದೇವನೂರರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_543.txt b/Kenda Sampige/article_543.txt new file mode 100644 index 0000000000000000000000000000000000000000..0b807005ea1b61b66beddc460c47f0d91982c44c --- /dev/null +++ b/Kenda Sampige/article_543.txt @@ -0,0 +1,37 @@ +ನಮ್ಮ ಸಂವಿಧಾನಕ್ಕೆ 60 ವರ್ಷಗಳ ಇತಿಹಾಸ. ಆದರೆ ಸಾವಿರಾರು ವರ್ಷಗಳ ಇತಿಹಾಸವಿರುವ ಇಂದೂ ಕೂಡ ಅಗೋಚರವಾಗಿ ಆಳ್ವಿಕೆ ನಡೆಸುತ್ತಿರುವ ಅಲಿಖಿತ ಸಂವಿಧಾನವೂ ಒಂದಿದೆ. ಇದು ಭಾರತದ ಮನೋಭೂಮಿಕೆಯಲ್ಲಿದೆ. ಇದು ಭೂತಕಾಲದ ಸಂವಿಧಾನ. ಇದು ಭಾರತದ ಸುಪ್ತಪ್ರಜ್ಞೆಯ ಆಳದಲ್ಲಿದೆ.  ಈ ಎರಡರ ನಡುವೆ ಯುದ್ಧ ಜರುಗುತ್ತಿದೆ. ಭೂತಕಾಲದ ಸಂವಿಧಾನವೂ ಇಲ್ಲಿ ಬಲವಾಗಿದೆ. ಹಾಗಾಗಿ ನಮ್ಮ ವರ್ತಮಾನ ಸಂವಿಧಾನದ ಆಸೆಗಳು ತೆವಳುತ್ತಿವೆ. + +ಈ ನನ್ನ ಮಾತುಗಳಲ್ಲಿ ಹೊಸತೇನೂ ಇಲ್ಲ. ನಿಮ್ಮ ನಡುವೆ ನಾನೇ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವೆ. ಈ ಚಿಂತೆ ಮತ್ತು ಚಿಂತನೆಗಳನ್ನು ಉದಾಹರಣೆಗಳ ಮೂಲಕ ಸ್ಪಷ್ಟ ಮಾಡಿಕೊಳ್ಳಲು ಪ್ರಯತ್ನಿಸುವೆ. + +ಬಹಳ ಹಿಂದೆ, ಡಾ.ಯು.ಆರ್.ಅನಂತಮೂರ್ತಿಯವರು ಇಂಗ್ಲಿಷ್ ವಿಭಾಗದಲ್ಲಿದ್ದಾಗ, ಅವರನ್ನು ಭೇಟಿ ಮಾಡಲು ಹಿರಿಯರೊಬ್ಬರು ಬಂದಿದ್ದರು. ತುಂಬಾ ಶುಭ್ರವಾಗಿದ್ದರು. ಮೈತುಂಬಾ ಬಿಳಿ ಬಟ್ಟೆ. ಜುಟ್ಟು ನಾಮ ಇತ್ತು. ಅವರು ಮಾತಾಡಿ ಹೋದ ಮೇಲೆ ಅನಂತಮೂರ್ತಿಯವರು “ಈಗ ಬಂದಿದ್ದವರು ವೇದ ಉಪನಿಷತ್ ಪುರಾಣ ಪಾರಂಗತರು” ಎಂದರು. ಜೊತೆಗೆ- “ಇವರು ತಾವೇ ತಮ್ಮ ಅಡಿಗೆ ಮಾಡಿಕೊಂಡು ಊಟ ಮಾಡುವುದು” ಎಂದೂ ಹೇಳಿದರು. ಇದು ಯಾಕೋ ನನ್ನ ಮನಸ್ಸಲ್ಲಿ ಉಳಿಯಿತು. ತನ್ನ ಕೈಯಾರ ಮಾಡಿದ್ದನ್ನು ಮಾತ್ರ ಊಟ ಮಾಡುವ ಇವರಿಗೆ ವೇದ ಉಪನಿಷತ್ಗಳು ಹೇಳಿಕೊಟ್ಟಿದ್ದೇನು ಎಂಬ ಪ್ರಶ್ನೆ ನನ್ನೊಳಗೆ ಉಳಿದುಬಿಟ್ಟಿತು. ಈಗ ಅನ್ನಿಸುತ್ತ್ತಿದೆ- ಇವರ ಕಠೋರ ಮಡಿಯ ಅಸ್ತಿತ್ವದಲ್ಲೆ ಅಸ್ಪೃಶ್ಯತೆಯ ಪ್ರಚಾರ ಕಾರ್ಯವೂ ಅಂತರ್ಗತವಾಗಿದೆ ಅಂತ. ಇವರನ್ನು ಅರ್ಥ ಮಾಡಿಕೊಳ್ಳೋಣ. ಅಂದರೆ ಇವರನ್ನು ಪಳೆಯುಳಿಕೆ ಎಂದು ಭಾವಿಸಿದರೆ ಸಮಸ್ಯೆ ಇಲ್ಲ. ಆದರೆ ಅವರ ಮಡಿಯನ್ನು ಪಾರಂಪರಿಕ ಮೌಲ್ಯ ಎಂದು ಗೌರವಿಸಿದರೆ- ನಾವು ಎಚ್ಚರದಲ್ಲಿ ಇಲ್ಲ ಎಂದೇ ಅರ್ಥ- ಅನ್ನಿಸುತ್ತದೆ. + +ಇನ್ನೊಂದು ಭೀಕರ ಉದಾಹರಣೆ ಕೊಡುತ್ತೇನೆ. ಪುರಿ ಜಗದ್ಗುರು ಅಸೃಶ್ಯತೆಯನ್ನು ಎತ್ತಿ ಹಿಡಿದಾಗ ಭಾರತ ತಲ್ಲಣಿಸಲಿಲ್ಲ. ಭೀಕರ ಉದಾಹರಣೆ ಎಂದು ನನ್ನ ಸಮಾಧಾನಕ್ಕಾಗಿ ಹೇಳಿಕೊಂಡೆ ಅಷ್ಟೆ. ಆದರೆ ಅದು ಭೀಕರವಾಗಿ ಸಮಾಜಕ್ಕೆ ತಟ್ಟಲೇ ಇಲ್ಲ. ಪುರಿ ಜಗದ್ಗುರು ಅಸಹ್ಯವಾಗಿ ನಮಗೆ ಕಾಣಲೇ ಇಲ್ಲ. ಯಾಕೆಂದರೆ ನಮ್ಮ ವರ್ತಮಾನದ ಪ್ರಜ್ಞೆಯ ಸಂವಿಧಾನವು ಸಮಾನತೆಯನ್ನು ಮೌಲ್ಯ ಮಾಡಿದರೆ, ಭೂತಕಾಲದ ಸುಪ್ತಪ್ರಜ್ಞೆಯ ಸಂವಿಧಾನಕ್ಕೆ ಶ್ರೇಣಿಕೃತ ಸಮಾಜದ ಅಸ್ಪೃಶ್ಯತೆ, ಜಾತಿತಾರತಮ್ಯಗಳೇ ಮೌಲ್ಯವಾಗಿದೆ. ಭೂತದ ಕಪ್ಪುಹಣ ಇಂದೂ ಚಲಾವಣೆಯಲ್ಲಿದೆ. ಹೀಗಿರುವಾಗ ಸಮಾಜ ಯಾಕಾಗಿ ತಲ್ಲಣಿಸಬೇಕು? ಹೀಗಿದ್ದಾಗ ವರ್ತಮಾನದ ಸಂವಿಧಾನದ ಆಸೆಗಳು ತೆವಳದೆ ಮತ್ತೇನು ಮಾಡಲು ಸಾಧ್ಯ? + +ಹಾಗೆ ಇಂದು ಚರ್ಚಿತವಾಗುತ್ತಿರುವ ಮತಾಂತರ ನಿಷೇಧದ ಪ್ರಸ್ತಾಪಕ್ಕೆ ಬಂದರೂ ಇಲ್ಲೂ ಕಾಣುವುದು ಇದನ್ನೇ. ಹಾಲಿ ಬಿಜೆಪಿ ಕರ್ನಾಟಕ ಸರ್ಕಾರ ಹಾಗೂ ಪೇಜಾವಾರ ಮಠಾಧೀಶರಾದಿಗಳು ಈ ಮತಾಂತರ ನಿಷೇಧಕ್ಕಾಗಿ ಹಾತೊರೆಯುತ್ತಿದೆ. ಶೂದ್ರನೊಬ್ಬ ನಿಮ್ಮ ಬ್ರಾಹ್ಮಣ ಜಾತಿಗೆ ಸೇರುತ್ತೇನೆಂದರೆ ಆಕಾಶ ನೋಡುವ ಮಠಾಧಿಪತಿಗಳು ಹಾಗೆ ಬ್ರಾಹ್ಮಣ ಜಾತಿಗೆ ನನ್ನನು ವರ್ಗಾವಣೆ ಮಾಡಿ ಎಂದು ಶೂದ್ರ ಕೇಳಿದರೆ ಇದು ತನ್ನ ವ್ಯಾಪ್ತಿಗೆ ಬರುವುದಿಲ್ಲವೆನ್ನುವ ಸರ್ಕಾರ ಮತಾಂತರ ನಿಷೇಧಕ್ಕೆ ಚಿಂತಿಸುತ್ತಿರುವ ಕ್ರೌರ್ಯವು ಗಾಬರಿ ಹುಟ್ಟಿಸುತ್ತದೆ, ಇರಲಿ, ಜಗತ್ತಿನಾದ್ಯಾಂತ ಎರಡೊ ಮೂರೊ ಧರ್ಮಗಳಿದ್ದರೆ ಭಾರತದ ಪರಂಪರೆಯಲ್ಲಿ ನಾಲ್ಕಾರು ಧರ್ಮಗಳಿವೆ. ಮತಾಂತರದ ಚಲನೆಯು ಭಾರತದಲ್ಲಿ ಇದ್ದುದರಿಂದಲೇ ಇದಾಗಿರುವುದು. ಈಗ ಹಾಲಿ ಭಾರತದಲ್ಲಿ ಜೈನ, ಬೌದ್ಧ, ಸಿಖ್ ಹಾಗೂ ಮತಾಂತರದ ಅವಕಾಶವಿರುವ ಕೆಲವಾದರೂ ಲಿಂಗಾಯತ ಪರಂಪರೆಯ ಧರ್ಮಗಳಿವೆ. ಲಿಂಗಾಯತ ತನ್ನ ಜಾತಿ ಬಿಟ್ಟರೆ ಭಾರತದ ದುಡಿಯುವ ವರ್ಗದ ಅಂದರೆ ಶೂದ್ರರ ಅಸ್ಪೃಶ್ಯರ ಧರ್ಮವಾಗಬಹುದಾದ ಸತ್ವವು ಅದರೊಳಗೆ ಇನ್ನೂ ಗುಟುಕುಜೀವದಂತೆ ಹುದುಗಿದೆ. ಇವುಗಳಲ್ಲಿ ನಿಧಾನವಾಗಿಯಾದರೂ ಮತಾಂತರ ಜರಗುತ್ತಲೇ ಇದೆ. + +ಇದರ ನಡುವೆ ಹಿಂದೂ ಎಂಬ ಧರ್ಮದ ಹೆಸರನ್ನು ಪಡೆದುಕೊಂಡು ಸ್ಥಗಿತಗೊಂಡ ಸಾಮಾಜಿಕ ಪದ್ಧತಿಯೇ ಧರ್ಮವಾಗಿ ಇದು ಎಲ್ಲಾ ಧರ್ಮಗಳಿಗಿಂತಲೂ ಪ್ರಬಲವಾಗಿದೆ. ಶ್ರೇಣಿಯ ಸಮಾಜಕ್ಕಾಗಿ ಇರುವ ಕಾನೂನು ಕಟ್ಟಳೆಗಳೇ- ಹಿಂದು ಎಂದಾಗಿದೆ, ಈ ಶ್ರೇಣಿಯ ಕಾನೂನು ಕಟ್ಟಳೆಗಳೇ ಇಲ್ಲಿ ಧರ್ಮವಾಗಿದೆ. ಇದು ಸಾವಿರಾರು ವರ್ಷಗಳಿಂದಲೂ ಧರ್ಮದ ವೇಷ ಹಾಕಿಕೊಂಡು ವಂಚಿಸಿ ವಂಚಿಸಿ ತನ್ನನ್ನು ಧರ್ಮವೆಂದೇ ಭಾವಿಸುವಂತೆ ಮಾಡಿಬಿಟ್ಟಿದೆ. ತನ್ನ ವಂಚನೆಗಳಿಗೆ ಭಾರತದ ಮಹೋನ್ನತ ಜ್ಞಾನಶಾಖೆಗಳಾದ ದರ್ಶನಗಳನ್ನೂ ಬೌದ್ಧ ಜೈನ ಧರ್ಮಗಳನ್ನೂ ಮಾತಾಡುವ ವಸ್ತುವಾಗಿ ಬಳಸಿಕೊಂಡಿದೆ. ದೇವರನ್ನೂ ಅವತಾರ ಎತ್ತಿಸಿದೆ- ಇದೆಲ್ಲಾ ಯಾತಕ್ಕಾಗಿ ಅಂದರೆ- ಶ್ರೇಣೀಕೃತ ಜಾತಿ ವರ್ಣ ಕಟ್ಟುಪಾಡುಗಳನ್ನು ಸುಪ್ತಪ್ರಜ್ಞೆಯಲ್ಲಿ ಸ್ಥಾಪಿಸುವುದಕ್ಕಾಗಿ. ಅದಕ್ಕಾಗೇ ಯಾವ ರಾಜ ಬಂದರೂ ರಾಜಧರ್ಮ ಅಂದರೆ ವರ್ಣವ್ಯವಸ್ಥೆಯನ್ನು ಕಾಪಾಡುವುದೇ ಆಗಿತ್ತು. ಹಿಂದುವಾಗಿ ಇರುವುದು ಅಂದರೆ- ಇದ್ದ ಕಡೆ ಇರುವ ಶ್ರೇಣಿಯಲ್ಲಿ ಬಿದ್ದಿರು- ಎಂದೇ ಅರ್ಥ. ಇಲ್ಲಿರಬೇಕೆ? ಇಲ್ಲಿ ಅಸಮಾನತೆ ಕಟ್ಟಳೆಗಳ ವ್ಯಾಘ್ರನು ಧರ್ಮದ ಗೋಮುಖ ವೇಷದಲ್ಲಿದ್ದಾನೆ. ಹಿಂದೂ ಗೋಮುಖ ವ್ಯಾಘ್ರನಲ್ಲಿ ವ್ಯಾಘ್ರನ ಸಾಯಿಸಿದರೆ- ಅಂದರೆ ಶ್ರೇಣೀಕೃತ ಜಾತಿ ಕಟ್ಟಳೆ, ಅಸ್ಪೃಶ್ಯತೆಗಳ ಸಾಯಿಸಿದರೆ- ಇದೂ ಒಂದು ಧರ್ಮವಾಗಬಹುದು. ಇದು ಸಾಧ್ಯವೆ? ಸಾಧ್ಯವಾಗುವುದಾದರೆ ಮಾತ್ರ ಸಂವಿಧಾನದ ಆಶಯಗಳು ನಡೆಯಬಹುದು. + +ಆದರೆ ಇದು ಸಾಧ್ಯವೇ ಎಂದು ಶ್ರೀ ಪೇಜಾವರರನ್ನು ಪ್ರಾತಿನಿಧಿಕ ಮಾಡಿಕೊಂಡು ಕೇಳುತ್ತಿದ್ದೇನೆ. ಅವತಾರ ಎತ್ತಿಸಿಯಾದರೂ ಜಾತಿಯ ಶ್ರೇಣಿಯು ಇಲ್ಲದಂತೆ ಹಿಂದೂ ಸಮಾಜ ರೂಪಿಸಿ ಅದನ್ನು ಧರ್ಮ ಮಾಡಲು ಸಾಧ್ಯವಿದೆಯೆ? ಇದಾಗದಿದ್ದರೆ, ಹಿಂದೂ ಸಮಾಜದ ದೇವಸ್ಥಾನ, ಮಠ, ಇತ್ಯಾದಿಗಳಲ್ಲಿ ಮಠಾಧೀಶ ಸ್ಥಾನ ಪೂಜೆ ಕಾರ್ಯ ಇತ್ಯಾದಿ ನಿರ್ವಹಣೆಗಳಲ್ಲಿ ಸಕಲೆಂಟು ಜಾತಿಗೂ ಪರ್ಯಾಯ ವ್ಯವಸ್ಥೆ ತರಲಾದರೂ ಸಾಧ್ಯವಿದೆಯೆ? ಉಡುಪಿಯಲ್ಲಿ ಅಷ್ಟಮಠಗಳ ಬದಲು ನವ ಮಠಗಳ ಪರ್ಯಾಯಕ್ಕಾಗಿ, ಡಿಮ್ಯಾಂಡ್ ಇಟ್ಟು ಕಾಯುತ್ತಿರುವವನಂತೆ ಇರುವ ಕನಕ ಇನ್ನೆಷ್ಟು ದಿನ ಕಾಯಬೇಕು? ಅಥವಾ ಅವನು ಹೊರಗಿರುವುದೇ ಧರ್ಮವೆ? ನೀವು ದಲಿತ ಕೇರಿಗೆ ಪಾದವಿಟ್ಟರೆ ಅದನ್ನೆ ಧನ್ಯ ಎಂದುಕೊಳ್ಳುವ ಆ ದಲಿತ ಕೇರಿಯ ಮಗುವೊಂದು ನಿಮ್ಮನ್ನು ಪ್ರೀತಿಸಿ `ನಾನೂ ನಿಮ್ಮೊಡನೆ ಬರುತ್ತೇನೆ, ನನಗೂ ನೀವಾಗುವ ಆಸೆ’ ಎಂದರೆ ನೀವೇನು ಮಾಡುತ್ತೀರಿ? ಇಲ್ಲಿ ನೀವು ಅಂದರೆ ನೀವೇ ಅಲ್ಲ. ನಿಮ್ಮಂತೆ ಇರುವ ಎಲ್ಲರಿಗೂ ಇದು ಎದುರಾಗುತ್ತಿಲ್ಲ ಯಾಕೆ? ನಿಮ್ಮದೂ ಪತನದ ಸ್ಥಿತಿಯಲ್ಲವೇ? ನಿಮ್ಮಂಥವರಿಗೆ ಇಂಥವುಗಳನ್ನು ಊಹಿಸಿಕೊಳ್ಳಲೂ ಸಾಧ್ಯವಿಲ್ಲ. ಯಾಕೆಂದರೆ ಇಂಥವರ ದೇಹದೊಳಗಿನ ಆತ್ಮಸಾಕ್ಷಿ ಅಥವಾ ಸಾಕ್ಷಿ ಪ್ರಜ್ಞೆಯು ನೇಣಿಗೆ ಹಾಕಲ್ಪಟ್ಟಿರುತ್ತದೆ. + +ಏಕೆಂದರೆ ಭಾರತದ ಸಮಾಜದ ಸುಪ್ತ ಮನಸ್ಸು ಅಸ್ಪೃಶ್ಯತೆ, ಶ್ರೇಣಿಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೆ ಮೌಲ್ಯ ಮಾಡಿಬಿಟ್ಟಿದೆ. ಇದನ್ನು ಬಿತ್ತುವವರನ್ನು ಪೂಜ್ಯರು, ಶ್ರೀಶ್ರೀಶ್ರೀ, ಮಾತಾಡಿದರೆ ಆಶೀರ್ವಚನ, ಆಧ್ಯಾತ್ಮಿಕ ಚಿಂತಕರು, ಪರಮ ಪೂಜ್ಯರು ಇತ್ಯಾದಿ ಪಟ್ಟಕಟ್ಟಿದೆ. ಈ ಪ್ರಭಾವಕ್ಕೆ ಒಳಗಾದವರೇ ಭಾರತದ ಸಂವಿಧಾನದ ಆಶಯಗಳನ್ನು ನಿರ್ಧರಿಸುವ ನಿರ್ವಹಿಸುವ ನಿರ್ಣಾಯಕ ಸ್ಥಾನಗಳಲ್ಲಿ ಹೆಚ್ಚಾಗಿ ಇರುವಾಗ, ಕಳೆದ ವರ್ಷದ ರಾಜ್ಯ ಬಜೆಟ್ನಲ್ಲಿ ದಲಿತರಿಗೆ ಮೀಸಲಿಟ್ಟ 4 ಸಾವಿರ ಕೋಟಿಗಳಲ್ಲಿ ಅರ್ಧದಷ್ಟನ್ನು ಕಾಟಾಚಾರಕ್ಕೆ ಖರ್ಚುಮಾಡಿ ಉಳಿಕೆ ಅರ್ಧವನ್ನು ಲ್ಯಾಪ್ಸ್ ಮಾಡಿರುವ ಕ್ರಿಯೆ ಇಲ್ಲಿ ಸಹಜವಲ್ಲವೆ? ದಲಿತರ ಮೀಸಲಾತಿ ಉದ್ಯೋಗದಲ್ಲಿ ದಲಿತೇತರು ನುಸುಳಿ ಪಡಯುತ್ತಿರುವುದು ಇಲ್ಲಿ ಸಹಜ ಕ್ರಿಯೆ ತಾನೆ? ನಮಗೆ ಅನ್ಯಾಯಗಳು, ಅನ್ಯಾಯಗಳಾಗಿ ಬಂದು ಮುಟ್ಟುತ್ತಿಲ್ಲ. + +ಕನ್ನಡದಲ್ಲಿ ಒಂದು ಪದ ಇದೆ- `ಪಾಪ’ ಅಂತ. ಇದನ್ನು ಪಾಪ(Sin)ಕ್ಕೂ ಬಳಸುತ್ತಾರೆ, ಹಾಗೇ ಕರುಣೆ(pity)ಗೂ ಬಳಸುತ್ತಾರೆ. ಪಾಪಕ್ಕೆ ಬಳಸಿದರೆ ಪಾಪಿಷ್ಟ ಆಗುತ್ತಾನೆ. ಕರುಣೆಗೆ ಬಳಸಿದರೆ ಪಾಪದವನು ಆಗುತ್ತಾನೆ. ಪಾಪದವನು ಒಂದು ಪಟ್ಟು ಪತನಗೊಂಡವನಾಗಿದ್ದರೆ ಪಾಪಿಷ್ಟನು ನೂರು ಪಟ್ಟು ಪತನಗೊಂಡವನಾಗಿರುತ್ತಾನೆ. ಅಸ್ಪೃಶ್ಯತೆಗೆ ಅಥವಾ ತಾರತಮ್ಯಕ್ಕೆ ಒಳಗಾದವರು ಪಾಪದವರು ಆಗುತ್ತಾರೆ. ಯಾಕೆಂದರೆ ಇವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯ ಇರುವುದಿಲ್ಲ. ಆದರೆ ಯಾರು ಅಸ್ಪೃಶ್ಯತೆ, ತಾರತಮ್ಯ ಆಚರಿಸುತ್ತಾರೋ ಅವರ ಮನೋಭೂಮಿಕೆಯಲ್ಲಿ ಅಸ್ಪೃಶ್ಯತೆ ತಾರತಮ್ಯಗಳೇ ತುಂಬಿರುತ್ತವೆ. ಈ ನಿಜದ ಎದುರು ಅಸ್ಪೃಶ್ಯತೆ ತಾರತಮ್ಯ ಆಚರಿಸುವವರು ಪಾಪಿಷ್ಟರಾಗುತ್ತಾರೆ. “ಗುಲಾಮನನ್ನು ಪಳಗಿಸಲು ಹೆಣಗುವ ಮಾಲೀಕನ ಮನಸ್ಸಿನ ತುಂಬಾ ಗುಲಾಮತನ ತುಂಬಿರುತ್ತದೆ” -ಎಂಬ ಹೆಗಲ್ ನ ನುಡಿಯ ನಿಜದಂತೆ. ನಾವು ನಮ್ಮ ಸಮಾಜವನ್ನು ನೋಡುವ ನೋಟಕ್ಕೆ ಈ ನಿಜದ ದರ್ಶನವಾದರೆ ಇದು ಸಂವಿಧಾನದ ಆಶಯಗಳತ್ತ ನಾವಿಟ್ಟ ಮೊದಲ ಹೆಜ್ಜೆಯಾಗುತ್ತದೆ. + + + +ಆದರೆ ಈ ಪಾಪದವರೂ ಎಚ್ಚರದ ಸ್ಥಿತಿಯಲ್ಲಿ ಇಲ್ಲ. ಮಧ್ಯಮ ಜಾತಿಗೆ ಸೇರಿದ ನನ್ನ ಗೆಳೆಯನೊಬ್ಬ- “ಒಂದು ಚೋಟುದ್ದ ಬ್ರಾಹ್ಮಣ ಹುಡುಗ ಅವನು. ನಮ್ಮ ವಯಸ್ಸಾದ ಅಪ್ಪನಿಗೇನೆ `ಏನಯ್ಯ ಗೌಡ, ಚೆನ್ನಾಗಿದ್ದೀಯಾ?’ ಅಂತ ಏಕವಚನದಲ್ಲಿ ಕೇಳ್ತಾನಲ್ಲಯ್ಯ!” ಎಂದು ಕುಪಿತನಾಗಿ ಹೇಳಿದ. ನಾನು ಅವನಿಗೆ ಅಂದೆ- “ಸರಿಯಪ್ಪ, ನೀನು ಚಿಕ್ಕವನಾಗಿದ್ದಾಗ ನಮ್ಮ ಜಾತಿಯ ವಯಸ್ಸಾದವರಿಗೆ ಯಾವ ವಚನದಲ್ಲಿ ಕರೆಯುತ್ತಿದ್ದೆ?” ಎಂದು ಕೇಳಿದೆ. ಇಂಥವರಲ್ಲಿ ಸ್ವಾಭಿಮಾನದ ಎಚ್ಚರ ಅಂದರೆ ತನ್ನದು ಮಾತ್ರ ಆಗಿರುತ್ತದೆ, ಇನ್ನೊಂದರ ಪರಿವೆ ಇರುವುದಿಲ್ಲ. ಹಾಗೇ ದಲಿತರ ಮನಸ್ಥಿತಿಗೆ ಬಂದರೂ- ಉದಾಹರಣೆಗೆ ಮರಿಸ್ವಾಮಿಯವರು ಅಂತ, ಇವರು ಹಿಂದಿ ಅಧ್ಯಾಪಕರಾಗಿ ಕೊನೆಗೆ ಬೌದ್ಧಭಿಕ್ಕುವಾಗಿ ಇತ್ತೀಚೆಗೆ ನಿಧನರಾದರು. ಇವರು ಒಂದು ಕಡೆ ಬರೆಯುತ್ತಾರೆ- “ಚಿಕ್ಕವನಿದ್ದಾಗ ನಾನು ಅನುಭವಿಸುತ್ತಿದ್ದ ಅಸ್ಪೃಶ್ಯತೆಯ ಅವಮಾನಕ್ಕೆ ಜಗತ್ತು ಇರುವುದೇ ಹೀಗೆ ಅಂದುಕೊಂಡಿದ್ದೆ. ಯಾವಾಗ ಅಂಬೇಡ್ಕರ್ ಓದಿದೆನೊ ಆವಾಗಲೇ ನನಗೆ ಅಸ್ಪೃಶ್ಯತೆಯು ಅಸ್ಪೃಶ್ಯತೆ ಅನ್ನಿಸಿದ್ದು. ಆಗಲೇ ನನಗೆ ಅಸ್ಪೃಶ್ಯತೆಯ ಗಾಯವು ಗಾಯ ಅನ್ನಿಸಿದ್ದು” -ಎನ್ನುತ್ತಾರೆ. ಭಾರತದ ಬಹುತೇಕ ಸಮುದಾಯಗಳು ಹೀಗೇ ಇವೆ. ರಸಾಯನ ಶಾಸ್ತ್ರದಲ್ಲಿ ಬರುವ ಪರ್ಯಾಪ್ತ ದ್ರಾವಣ (Saturated solution)ದಂತೆ ಎಲ್ಲಾ ಜಾತಿಗಳು ತಂತಮ್ಮ ಕೊನೆ ಸ್ಥಿತಿ ತಲುಪಿ ಅಸ್ಪೃಶ್ಯತೆ ತಾರತಮ್ಯಗಳು ನಡೆದು ಬಂದ ಪದ್ಧತಿಗಳಾಗಿ ಎಚ್ಚರವಿಲ್ಲದೆ ತಮಗೆ ತಾವೇ ನಡೆದುಕೊಂಡು ಬರುತ್ತಿವೆ. ನಾವು ಅದೊರಳಗೇ ಸಂಪೂರ್ಣ ಮುಳುಗಿಹೋಗಿರುವುದರಿಂದ ಅದರ ಐಬನ್ನು ಅರಿವಿಗೆ ತಂದುಕೊಳ್ಳುವುದಕ್ಕೆ ಹರಸಾಹಸ ಪಡಬೇಕಿದೆ. + +ಇಂತಹ ಸ್ಥಿತಿಯಲ್ಲಿರುವ ಭಾರತದಲ್ಲಿ ವರ್ತಮಾನದ ಸಂವಿಧಾನವೇನೊ ಪಾಪದವರನ್ನು ಮೇಲೆತ್ತಲು ಕೈಚಾಚಿದೆ. ಆದರೆ ಭೂತಕಾಲದ ಸಂವಿಧಾನ ಕಾಲೆಳೆಯುತ್ತಿದೆ. ಈ ಪಾಪದವರೂ ಎಚ್ಚರದಲ್ಲಿಲ್ಲ. ಸಂವಿಧಾನದ ಆಶಯಗಳ ಕಾಲೆಳೆಯುವ ಪಾಪಿಷ್ಟರಾದರೋ ಸಮಾಜದಲ್ಲಿ ಗಣ್ಯರೆನ್ನಿಸಿಕೊಂಡಿದ್ದಾರೆ. ಇವರ ವಂಶಸ್ಥರೇ ಇವರ ಪ್ರಭಾವದಲ್ಲಿರುವವರೇ ನಿರ್ಧರಿಸುವವರು ನಿರ್ವಹಿಸುವವರು ಆಗಿದ್ದಾರೆ. ಸಂವಿಧಾನದ ಆಸೆಗಳು ಈಡೇರುವುದಾದರೂ ಹೇಗೆ? ಬಸ್ಸು ರೈಲು ಕಾರಣಕ್ಕಾಗಿ ಅಕ್ಕಪಕ್ಕ ಕೂತಿದ್ದೇವೆ. ಹೊಟೇಲ್ ಕಾರಣಕ್ಕಾಗಿ ಸಹಪಂಕ್ತಿ ಭೋಜನ ಮಾಡಿದ್ದೇವೆ. ನೌಕರಿ ಕಾರಣಕ್ಕಾಗಿ ಒಟ್ಟಾಗಿ ಓಡಾಡಿದ್ದೇವೆ, ಅಲ್ಲಿ ಇಲ್ಲಿ ಮದುವೆಗಳೂ ಆಗಿವೆ. ಇಲ್ಲಿ ಆಗುತ್ತಿರುವ ಬದಲಾವಣೆಗಳು ಹೆಚ್ಚಾಗಿ ಬಹಿರಂಗ ಒತ್ತಡದವು. ಅಂತರಂಗ ಕತ್ತಲಲ್ಲೆ ಇದೆ. + +ಏನೇನು ಮಾಡಬಹುದಿತ್ತು? ಮೊದಲ ಹೆಜ್ಜೆಯಾಗಿ, ವರ್ತಮಾನದ ಸಂವಿಧಾನದ ಆಶಯಗಳಿಗೆ ತಕ್ಕಂತೆ ಪ್ರಜೆಗಳನ್ನು ರೂಪಿಸಲು ಶಿಕ್ಷಣ ಕ್ಷೇತ್ರವನ್ನು ತೆಪ್ಪ ಮಾಡಿಕೊಳ್ಳಬಹುದಿತ್ತು. ಶಿಕ್ಷಣ ಪಡೆಯುವ ಎಳೆಯರು ಆ ವಿದ್ಯೆಯಲ್ಲೆ ನಾಗರಿಕರೂ ಆಗುವಂತೆ ಶಿಕ್ಷಣವನ್ನೂ ರೂಪಿಸಬಹುದಿತ್ತು. ಸಮಾಜದಲ್ಲಿ ಅಸ್ಪೃಶ್ಯತೆ ತಾರತಮ್ಯ ಆಚರಿಸುವವರ ಬಗ್ಗೆ ಆ ಪದ್ಧತಿಗಳ ಬಗ್ಗೆ ಇರುವ ಭಯ ಭಕ್ತಿಗಳಲ್ಲಿ- ಭಯ ಇರಲಿ, ಆದರೆ ಭಕ್ತಿಯನ್ನು ಇಲ್ಲದಂತೆ ಮಾಡಬೇಕಿತ್ತು. ಭಕ್ತಿಯು ಅಪಮೌಲ್ಯವನ್ನೇ ಮೌಲ್ಯವಾಗಿಸಿ ಬಿಡುತ್ತದೆ. ಈ ಅಪಾಯದ ಅರಿವು ನಮಗಿರಬೇಕಿತ್ತು. ಈ ಅರಿವು ನಮಗೆ ಇದ್ದಿದ್ದರೆ… ನಮ್ಮ ಶಿಕ್ಷಣದ ಪಠ್ಯ, ನಾವು ನೋಡುವ ದೃಷ್ಟಿಕೋನ ಎಲ್ಲವೂ ಹೊಸತಾಗಿ ಬಿಡುತ್ತಿತ್ತು. ಆಗ ಕೇವಲ ಮನುಷ್ಯ ಪ್ರಜ್ಞೆ ಕೆಲಸ ಮಾಡುತ್ತದೆ. ಆಗ ತಾರತಮ್ಯ ಮೌಲ್ಯವಾಗಿಸುವವರು ಪಳೆಯುಳಿಕೆಗಳಂತೆ ನಮ್ಮ ಸಮಾಜ ಶಾಸ್ತ್ರಜ್ಞರಿಗೆ ಕಾಣಬಹುದು. ಆಗ ಇಂಥವು ಸಾಮಾಜಿಕ ಸಾಂಸ್ಕೃತಿಕ ಅನಿಷ್ಟ ಪದ್ಧತಿಗಳು ಎಂದೋ ಅಥವಾ ಸಾಮಾಜಿಕ ಸಮಸ್ಯೆಗಳು ಎಂದೋ ಅಧ್ಯಯನದ ವಸ್ತುವಾಗುತ್ತಿತ್ತು. ರಾಜ್ಯಶಾಸ್ತ್ರದಲ್ಲಿ- ಸಂವಿಧಾನ ಅನುಷ್ಠಾನಕ್ಕೆ ಇರುವ ತೊಡಕುಗಳ ಪಟ್ಟಿಯಲ್ಲಿ ಇದೂ ಸೇರ್ಪಡೆಯಾಗುತ್ತಿತ್ತು. ಮನಃಶಾಸ್ತ್ರದ ಸಮ್ಮೋಹಿನಿ ತಜ್ಞರು ಈ ಸುಪ್ತಪ್ರಜ್ಞೆಯ ತಾರತಮ್ಯಗಳನ್ನು ತಮ್ಮ ಅಧ್ಯಯನದ ವಿಷಯ ಎಂದು ಪರಿಗಣಿಸಿ ಭೂತೋಚ್ಛಾಟನೆಯ ವಿಧಿವಿಧಾನಗಳನ್ನು ಕಂಡು ಹಿಡಿಯುವ ಪ್ರಯತ್ನಗಳೂ ಆಗುತ್ತಿದ್ದವು. ಶಿಕ್ಷಣ ತಜ್ಞರಿಂದ ಸಂವಿಧಾನದ ಆಶಯಗಳಿಗೆ ಪಠ್ಯ ರಚನೆಯಾಗುತ್ತಿತ್ತು.  -ಹೀಗೆ. + +ಆದರೆ ಭಾರತದ ಶಿಕ್ಷಣ ಕ್ಷೇತ್ರಕ್ಕೆ ಬಂದರೆ ಇಲ್ಲೂ ಏನಾಗಿದೆ? ಹಿಂದೆ ದ್ವಿಜರಲ್ಲದವರಿಗೆ ವಿದ್ಯೆ ವಂಚಿಸಲ್ಪಟ್ಟಿತ್ತು. ಈಗ ವರ್ತಮಾನದ ಸಂವಿಧಾನದಲ್ಲಿ ವಿದ್ಯೆ ಎಲ್ಲರಿಗೂ ಮುಕ್ತವಾಗಿದೆ. ನಿಜ, ಆದರೆ ಕೊಟ್ಟಂತೆ ಕಾಣಿಸುತ್ತ ಸಹಜವಾಗೇ ಹೊರಗಿಡುವುದೂ ಜೊತೆಗೇ ಜರುಗುತ್ತಿದೆ. ಏಕರೂಪದ ಶಿಕ್ಷಣ ಪದ್ಧತಿ ಇಲ್ಲದೆ, ಮಾತೃಭಾಷೆ ಶಿಕ್ಷಣ ಮಾಧ್ಯಮವಾಗದೆ, ಕಡ್ಡಾಯ ಶಿಕ್ಷಣದಲ್ಲಿ ಕಡ್ಡಾಯ ಇಲ್ಲದೆ- ಮುಖ್ಯವಾಗಿ ಗ್ರಾಮೀಣ ಭಾರತವು ಸಹಜವೊ ಎಂಬಂತೆ ಹೊರ ಹಾಕಲ್ಪಡುತ್ತಿದೆ. ಎಲ್ಲರಿಗೂ ಶಿಕ್ಷಣ ನೀಡಬೇಕೆಂಬ ಆಧುನಿಕ ಪ್ರಜ್ಞೆಯನ್ನು ಶಿಕ್ಷಣ ಕೊಡಬಾರದೆನ್ನುವ ಸನಾತನ ಸುಪ್ತಪ್ರಜ್ಞೆಯೂ ನಿಯಂತ್ರಿಸುತ್ತಿರುವುದರ ಪರಿಣಾಮದಿಂದ ಇದಾಗುತ್ತಿರಬಹುದೇನೊ. ಇಲ್ಲೂ ತಾರತಮ್ಯವೇ. ಇದಕ್ಕೆ ನಾವು ಬೆಚ್ಚುತ್ತಿಲ್ಲ, ಬೆದರುತ್ತಿಲ್ಲ. ಮೊದಲು ಶಿಕ್ಷಣ ಕ್ಷೇತ್ರದಲ್ಲಿ ನಾವು ಎಚ್ಚೆತ್ತುಕೊಂಡು ಮನುಷ್ಯರಾದರೆ ಉಳಿದುದೆಲ್ಲಾ ತಂತಾನೆ ಕಾಣಬಹುದೇನೋ. + +ಭಾರತದ ಇಂದಿನ ಸ್ಥಿತಿಗೆ ಒಂದು ಚಿತ್ರಣ ಕೊಟ್ಟು ಮುಗಿಸುತ್ತೇನೆ. ತುಂಬಾ ಹಿಂದೆ- ಹಳ್ಳಿಯೊಂದರಲ್ಲಿ ದಲಿತರಿಗೆ ಪ್ರವೇಶವಿಲ್ಲದ ಕಾರಣಕ್ಕೆ ಗಲಾಟೆಯಾಗಿ ಅಲ್ಲಿಗೆ ಹೋಗಿದ್ದೆವು. ಹೋಗಿ ನೋಡಿದರೆ- ಆ ಹೊಟೇಲ್ ಅಂದರೆ ಅದು ಜಗಲಿ ಮೇಲೆ ತೆಂಗಿನ ಗರಿ ಕಟ್ಟಿದ ಒಂದು ಕತ್ತಲು ತುಂಬಿದ ನೆರಕೆಯಾಗಿತ್ತು. ಅಲ್ಲಿ ನೊಣಗಳ ಸಾಮ್ರಾಜ್ಯವಿತ್ತು. ಬಚ್ಚಲು ಪಕ್ಕದಲ್ಲೆ ಹರಿಯುತ್ತ ಮೂಗು ಮುಚ್ಚಿಕೊಂಡು ಏನಾರು ತಿನ್ನಬೇಕಿತ್ತು. ಈ ಹೊಟೇಲ್ ಪ್ರವೇಶಕ್ಕೆ ದಲಿತರು ಹಾತೊರೆಯುತ್ತಿದ್ದರು. ಆ ದೃಶ್ಯ ನೋಡಿದ ನನ್ನ ಜೊತೆಗಿದ್ದ ಶ್ರೀಕೃಷ್ಣ ಆಲನಹಳ್ಳಿ “ಅಯ್ಯೋ ಮಾದೇವ, ಇಲ್ಲಿ ದಲಿತರು ಏನನ್ನೂ ತಿನ್ನದಿದ್ದರೇನೇ ಆರೋಗ್ಯವಲ್ಲವೆ?” ಎಂದಿದ್ದರು. ಅದಕ್ಕೆ ನಾನು “ಪ್ರವೇಶ ಕೇಳುತ್ತಿರುವುದು ಮನಸ್ಸಿನ ಒಳಕ್ಕೆ” ಎಂದಿದ್ದೆ. + +ಭಾರತದ ಸ್ಥಿತಿಯೂ ಹೆಚ್ಚುಕಮ್ಮಿ ಆ ಹೊಟೇಲ್ ನ  ಕತೆಯಂತೆಯೇ ಇದೆ. ಇಲ್ಲಿ ಕೊಳಕುತನವಿದೆ, ಅನಾರೋಗ್ಯವಿದೆ, ಬಡತನವಿದೆ, ಅಜ್ಞಾನವು ತುಂಬಿದೆ. ಜೊತೆಗೆ ಸಾಲದೆಂಬಂತೆ, ಭಾರತದ ಮೇಲೆ ದಾಳಿ ಮಾಡಿ ಸಂಪತ್ತು ದೋಚಿಕೊಂಡು ಹೋಗುತ್ತಿದ್ದ ಆ ದಾಳಿಕೋರರು ಆ ಕಾಲಮಾನದಲ್ಲಿ ಏನಾರು ಹೆಚ್ಚೂಕಮ್ಮಿ ಮಾಡಿ ಹುಟ್ಟಿದ ಸಂತಾನವೇನೊ ಎಂಬಂತೆ ಸೆಜ್, ರಿಯಲ್ ಎಸ್ಟೇಟ್ ಹೆಸರಲ್ಲಿ ಭೂಮಿಯ ಹೊರ ಮೈಯನ್ನೂ ಮತ್ತು ಗಣಿಗಾರಿಕೆ ಹೆಸರಲ್ಲಿ ಭೂಮಿಯ ಒಳ ಮೈಯನ್ನೂ ದೋಚುತ್ತಿದ್ದಾರೆ.  ಈ ನವದಾಳಿಕೋರರು ಮತದಾರರನ್ನೂ  ಶಾಸಕರನ್ನೂ ಕೊಂಡುಕೊಳ್ಳ ಬಹುದಾದ ವಸ್ತುವಾಗಿಸಿಬಿಟ್ಟಿದ್ದಾರೆ. ಈಗ ಗಣತಂತ್ರ ವ್ಯವಸ್ಥೆಗೇ ಗಂಡಾಂತರ ಎದುರಾಗಿದೆ. ಇಂಥ ಭೀಕರ ಪರಿಸ್ಥಿತಿಯಲ್ಲಿ ನಾವಿದ್ದೇವೆ. + +ಇಷ್ಟಿದ್ದೂ ಹೀಗಿದ್ದೂ ಭಾರತವು ಸ್ವಾತಂತ್ರ್ಯ ಪಡೆದ ನಂತರ ರಾಜರ ಆಳ್ವಿಕೆ ಕೊನೆಗೊಳಿಸಿದ್ದೂ, ವಯಸ್ಕರ ಮತದಾನ ಪದ್ಧತಿ ತಂದಿದ್ದೂ, ತನ್ನ ಮಿತಿಗಳೊಡನೆ ಶಿಕ್ಷಣವನ್ನು ಸರ್ವರಿಗೂ ಮುಕ್ತಗೊಳಿಸಿದ್ದೂ, ಭೂಸುಧಾರಣೆ, ಮೀಸಲಾತಿ ಇತ್ಯಾದಿ ಈ ನೆಲದಲ್ಲಿ ಸಂಭವಿಸಿರುವುದು  ಸಾಮಾನ್ಯ ಸಂಗತಿಗಳೇನೂ ಅಲ್ಲ. ಅಂದರೆ ಭಾರತದಲ್ಲಿ ಬುದ್ಧ ವಚನಕಾರರಂಥವರ ಮಹೋನ್ನತ ಪರಂಪರೆಯ ಬೆಳಕೂ ಇದೆ. ಅವರು ಉಸಿರಾಡಿದ ಗಾಳಿ ಅವರಿಟ್ಟ ಹೆಜ್ಜೆ ಗುರುತುಗಳೂ ಇಲ್ಲಿವೆ. ಆ ಹೆಜ್ಜೆಗಳನ್ನು ಗುರುತಿಸಿ ನಾವು ಹೆಜ್ಜೆ ಇಟ್ಟರೆ ಆ ಹವಾದಲ್ಲಿ ಆಗ ಸಂವಿಧಾನದ ಆಸೆಗಳು ಕೈಗೂಡಲೂಬಹುದು. + +(ಸಾಮಾಜಿಕ ಪ್ರತ್ಯೇಕತೆ ಮತ್ತು ಒಳಗೊಳ್ಳುವಿಕೆ ನೀತಿಯ ಅಧ್ಯಯನ ಕೇಂದ್ರ. ಭಾರತ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆ, ಬೆಂಗಳೂರು ಇವರು ಆಯೋಜಿಸಿದ್ದ ‘ಭಾರತೀಯ ಸಂವಿಧಾನಕ್ಕೆ 60 ವರ್ಷ-ಕರ್ನಾಟಕದಲ್ಲಿ ಸಾಮಾಜಿಕ ನ್ಯಾಯ ನಡೆದು ಬಂದ ದಾರಿ: ನೆನ್ನೆ, ಇಂದು ಮತ್ತು ನಾಳೆ’ -ವಿಚಾರ ಸಂಕಿರಣದ ‘ಸಾಮಾಜಿಕ ಪ್ರತ್ಯೇಕತೆ’ಗೆ ಸಂಬಂಧಿಸಿದ ಭಾಷಣ) + +ಕನ್ನಡದ ಅಪ್ರತಿಮ ಬರಹಗಾರ, ಚಿಂತಕ, ಸಂಘಟಕ, ಹೋರಾಟಗಾರ. ದ್ಯಾವನೂರು (ಕಥಾಸಂಕಲನ), ಒಡಲಾಳ (1979), ಕುಸುಮಬಾಲೆ (1984), ಸಮಗ್ರ (1992), ಎದೆಗೆ ಬಿದ್ದ ಅಕ್ಷರ (2012) ದೇವನೂರರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_544.txt b/Kenda Sampige/article_544.txt new file mode 100644 index 0000000000000000000000000000000000000000..c0e78ea2714f2fc4550d8ccb68aa555787c69297 --- /dev/null +++ b/Kenda Sampige/article_544.txt @@ -0,0 +1,35 @@ +ಒಬ್ಬರನ್ನೊಬ್ಬರು ನೋಡಿ ಅರೆಗಳಿಗೆ ಹೌದೋ ಅಲ್ಲವೋ, ಮಾತಾಡಬಹುದೋ ಬೇಡವೋ, ಗುರುತಿದೆಯೋ ಇಲ್ಲವೋ ಎಂದು ಗಾಳಿಗಾಡದ ಮರದ ಹಾಗೆ ನಿಂತುಬಿಟ್ಟರು. ಅರೆಗಳಿಗೆ ಅಷ್ಟೆ. ಒಟ್ಟಿಗೇ ಇಬ್ಬರ ಮುಖದಲ್ಲೂ ನಗು ಅರಳಿತು. ಒಬ್ಬರ ಮುಖದಲ್ಲಿ ಆ ನಗು ಮೂಡದೇ ಹೋಗಿದ್ದರೆ ನಕ್ಕವರು ಮುಖ ತಗ್ಗಿಸಿಯೋ ಮುಖ ತಿರುಗಿಸಿಯೋ ಹೋಗಿ ಬಿಡುವ ಸಂಭವವಿತ್ತು. ಆದರೆ ಹಾಗಾಗಲಿಲ್ಲ. ಆ ಗಳಿಗೆಯಲ್ಲಿ ಭವಿಷ್ಯದ ಏನೇನೋ ಹತ್ತು ಹಲವಾರು ಘಟನೆಗಳ ಬೀಜವಿದ್ದುದರಿಂದಲೇ ಇರಬೇಕು. ಇಲ್ಲದಿದ್ದರೆ ಅದೊಂದು ಸಾಮಾನ್ಯ ನೋಟವಾಗಿ ಬಿಡುತ್ತಿತ್ತು. ಕಾಲದ ಅನಂತ ಪ್ರವಾಹದಲ್ಲಿ ಆ ನೋಟ ಲೀನವಾಗಿ ಬಿಡುತ್ತಿತ್ತು. ಹಾಗಾಗದೇ ಇದ್ದುದು ಏನೇನಕ್ಕೆ ಕಾರಣವಾಯಿತು ಎಂಬುದನ್ನು ಸಾವಧಾನವಾಗಿ ಹೇಳ್ತೀನಿ. ಸಮಾಧಾನದಿಂದ ಕೇಳಿ. + +ಅವರಿಬ್ಬರೂ ಒಂದೇ ವಯಸ್ಸಿನವರು. ಇಬ್ಬರ ಮೀಸೆಗಳೂ ಅಲ್ಲಲ್ಲಿ ಬೆಳ್ಳಗಾಗುತ್ತಿದೆ. ಅವರಲ್ಲಿ ಒಬ್ಬ ಅದರ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ. ಮತ್ತೊಬ್ಬ ಸದಾ ಕಪ್ಪು ಬಳಿದುಕೊಂಡೇ ಇರುವಾತ. ಹಾಗಾಗಿಯೂ ಅವನೇನೂ ವಯಸ್ಸಿನಲ್ಲಿ ಸಣ್ಣವನಂತೆ ಕಾಣುತ್ತಿರಲಿಲ್ಲ. ಹಾಗೆ ಕಾಣುವುದು ಈ ಕತೆಗೇನೂ ಮುಖ್ಯವಲ್ಲ ಬಿಡಿ. ಮೀಸೆ ಬೆಳ್ಳಗಿದ್ದರೂ ಅಷ್ಟೆ, ಕಪ್ಪಗಿದ್ದರೂ ಅಷ್ಟೆ. ಮುಂದೆ ನಡೆದ ಘಟನೆಗೆ ಸಂಬಂಧವಿಲ್ಲ. ಆದರೂ ಯಾಕೆ ಹೇಳಿದೆ ಎಂದು ದಯವಿಟ್ಟು ತಕರಾರು ಮಾಡಬೇಡಿ. ಅದೊಂದು ವಿಚಿತ್ರ ಅಂಶ ಅನಿಸಿತು ಅದಕ್ಕೆ ಹೇಳಿದೆ. ಹೋಗಲಿ, ಮೀಸೆಯ ವಿಷಯ ಬಿಡಿ. ಆಮೇಲೆ ಏನಾಯಿತು ಅಂತ ಕೇಳುವ ಕುತೂಹಲವಿದೆ ತಾನೆ? ಕೇಳಿ. + +ಎಷ್ಟೋ ವರ್ಷದ ಮೇಲೆ ಒಬ್ಬರಿಗೊಬ್ಬರು ಸಿಕ್ಕರೂ ನಗುವನ್ನು ಮೀರಿ ಮುಂದೆ ಇಬ್ಬರಿಗೂ ಮಾತು ಹೊರಡಲೇ ಇಲ್ಲ. ಹೇಗೆಂದು ಮಾತಾಡಿಸಬೇಕು. ಏಕವಚನವೋ, ಬಹುವಚನವೋ? ಇಬ್ಬರೂ ನಗುತ್ತಲೇ ಒಬ್ಬರನ್ನೊಬ್ಬರು ತುಲನೆ ಮಾಡುತ್ತಿದ್ದರು. ಇಬ್ಬರ ಬಾಯಲ್ಲೂ ತಮಗೆ ಅರಿವಿಲ್ಲದಂತೇ “ಏನೋ… ಹೇಗಿದ್ದೀಯ?” ಎಂದು ಅರ್ಥ ಬರುವಂತಹ ಧ್ವನಿಯೋ, ಉದ್ಗಾರವೋ ಹೊರಟಿತು. ಸ್ಪಷ್ಟವಾದ ಮಾತುಗಳೇನೂ ಆಗಿರಲಿಲ್ಲ. ಆದರೆ ಒಬ್ಬ ಪ್ಯಾಂಟು ಸರಿ ಮಾಡಿಕೊಂಡರೆ, ಮತ್ತೊಬ್ಬ ತನ್ನ ಪ್ಯಾಂಟನ್ನು ಮೇಲೆಳೆದುಕೊಂಡ. ಒಬ್ಬ ಕಾಲರ್‍ ಸರಿ ಮಾಡಿಕೊಂಡರೆ, ಮತ್ತೊಬ್ಬ ತನಗೇ ಗೊತ್ತಾಗದಂತೆ ತನ್ನ ಕತ್ತಿಗೆ ಕೈ ಹಚ್ಚಿದ. ಎಷ್ಟೋ ಕ್ಷಣಗಳು ತಾವು ಮಾತು ಆಡಿಯೇ ಇರದದ್ದು ಇಬ್ಬರಿಗೂ ಗಮನಕ್ಕೆ ಬಂದಂತೆ “ಆಮೇಲೆ?” ಎಂಬಂತ ಪದಗಳನ್ನು ಹೊರಬಿದ್ದವು. ಇಬ್ಬರೂ ಉತ್ತರ ಕೊಡದೆ ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಾ ನಿಂತರು. + +ಪಕ್ಕದ ಹೊಟೇಲಲ್ಲಿ ಬೈಟು ಕಾಫಿಗೆ ಕಾಯುತ್ತಾ ಕನ್ನಡಿಯ ಮುಂದೆ ಕೂತವರಂತೆ ಕೂತರು. ಮೀಸೆಗೆ ತಪ್ಪದೆ ಬಣ್ಣ ಹಚ್ಚಿಕೊಳ್ಳುವ ಇವನು ಅವನನ್ನು ಕುಣಿಯುವ ಕಣ್ಣುಗಳಿಂದ ನೋಡುತ್ತಿದ್ದ. ಅವನಿಗೇನೋ ದುಗುಡವಿದ್ದಂತೆ, ಆಗಾಗ ಗಡಿಯಾರ ನೋಡಿಕೊಳ್ಳುತ್ತಿದ್ದ.. ಇಷ್ಟು ವರ್ಷದ ಮೇಲೆ ಸಿಕ್ಕ ಖುಷಿಯ ಆಚೆ ಮತ್ತೇನೋ ಹುಡುಕುತ್ತಿರಬಹುದು ಎಂದು ಇವನಿಗೆ ಅನಿಸಿತು. ಸಣ್ಣ ವಯಸ್ಸಿನ ತಮ್ಮ ಹುಚ್ಚುಗಳು ಮಾತಿನಲ್ಲಿ ಬಂದು ಹೋಗುತ್ತಿದ್ದರೂ ತಾವಿಬ್ಬರೂ ದೊಡ್ಡವರಾಗಿ ಬಿಟ್ಟಿರುವುದು ಅರಿವಿಗೆ ಬಂದಂತಿತ್ತು. ಕೃತಕ ಬಣ್ಣದ ಇವನ ಮೀಸೆ ಅವನಿಗೆ ಕಂಬಳಿ ಹುಳುವಿನಂತೆ ಕಂಡಿತು. ಆ ಮೀಸೆಯಡಿ ಮಿಂಚಿ ಮಾಯವಾಗುತ್ತಿದ್ದ ನಗು ಅವನ ಸಣ್ಣ ಹುಡುಗನ ನಗುವನ್ನು ಇವನಿಗೆ ನೆನಪಿಸಿತು. ವಾಚ್ ನೋಡಿಕೊಳ್ಳುತ್ತಿದ್ದ  ಅವನಿಗೆ ಏನೋ ನೆನಪಾದವನಂತೆ  “ಹೊತ್ತಾಯಿತು, ಹೋಗಬೇಕು!” ಎಂದು ಧಡಕ್ಕನೆ ಎದ್ದು ನಿಂತ. ಹೊರ ಬಂದಾಗ ಇದ್ದಕ್ಕಿದ್ದ ಹಾಗೆ ಬಿಸಿಲು ಮಾಯವಾಗಿ ಮೋಡ ಮುಚ್ಚಿಕೊಂಡಿತ್ತು. ಅರೆ ಎಂಬಂತೆ ಇಬ್ಬರೂ ಮೋಡವನ್ನು ದಿಟ್ಟಿಸಿ ಸಿಗೋಣ, ಬೈ ಎಂಬಂತ ಮಾತುಗಳನ್ನು ಪರಸ್ಪರ ಎಸೆದು ಜನ ಜಂಗುಳಿಯಲ್ಲಿ ಮಾಯವಾದರು. ಇಬ್ಬರೂ ತಿರುಗಿ ನೋಡಲಿಲ್ಲ. ದೈನಂದಿಕಗಳು ಮತ್ತೆ ಅವರನ್ನು ಸೆಳೆದು ಬಿಟ್ಟಿತೋ ಎಂಬಂತಿತ್ತು. + +ಇದಾಗಿ ಎಷ್ಟೋ ದಿನಗಳು ಕಳೆದಿದ್ದರೂ, ಕಪ್ಪು ಮೀಸೆಯವನಿಗೆ ಗೆಳೆಯ ಸಿಕ್ಕಿದ್ದು ಒಂದು ಬಗೆಯ ರೋಮಾಂಚನವಾಗಿತ್ತು. ಎಷ್ಟೋ ವರ್ಷಗಳ ಹಿಂದೆ ಒಟ್ಟೊಟ್ಟಿಗೇ ಓಡಾಡಿದ್ದು, ಆಟವಾಡಿದ್ದು, ಕನಸು ಹಂಚಿಕೊಂಡಿದ್ದು ಎಲ್ಲಾ ಮರುಕಳಿಸಿ ಹೇಗೇಗೋ ಆಗಿತ್ತು. ಅರೇ ಅವೆಲ್ಲಾ ಮರೆತೇ ಹೋಗಿರುವಂತಿದ್ದು ಈಗ ಹೇಗೆ ಮತ್ತೆ ನೆನಪಾಗುತ್ತಿದೆ ಎಂದು ಅಚ್ಚರಿಪಟ್ಟ. ಇಷ್ಟು ದಿನ ಅವೆಲ್ಲಾ ಮೆದುಳಿನ ಯಾವ ಪದರದಲ್ಲಿ ಅಲುಗಾಡದೆ, ಅಕ್ಕಪಕ್ಕದಲ್ಲಿ ಸುತ್ತಿಕೊಂಡಿರುವ ನರಕ್ಕೇ ಗೊತ್ತಾಗದಂತೆ ಕೂತಿದ್ದವು ಎಂದು ತನ್ನನ್ನೇ ಕೇಳಿಕೊಂಡ. ಆ ವಿಜ್ಞಾನವೆಲ್ಲಾ ಅವನ ಕೈಗೆಟುಕುವಂತಹುದಲ್ಲ. ಆದರೂ ಅಂತಹ ಯೋಚನೆಗಳಲ್ಲಿ ಖುಷಿಪಡುವಾತ. ಅವರಿಬ್ಬರನ್ನೂ ಚಿಕ್ಕ ವಯಸ್ಸಲ್ಲಿ ಹತ್ತಿರ ಸೆಳೆದದ್ದು ಮಾತ್ರ ಒಂದಿಷ್ಟು ಸಮಾನ ಕನಸು ಮತ್ತು ಸಮಾನ ಆದರ್ಶ. ಅದು ಇವನಿಗೆ ಅರಿವಿಗೆ ಬಂದಿದ್ದು ಈಗಷ್ಟೇ. ಅದರಿಂದ ಮತ್ತಷ್ಟು ಕುಣಿಯುವಂತಾಯಿತು. ದಿನದ ಕೆಲಸಗಳಲ್ಲಿ ಏನೋ ಹೊಸ ಹುರುಪು ಬಂದಂತಾಯಿತು. + +ಅವನ ಅಡ್ರೆಸ್ ಆಗಲಿ, ಫೋನ್ ನಂಬರ್ ಆಗಲಿ ಏನೂ ಕೇಳಿಕೊಳ್ಳಲಿಲ್ಲವಲ್ಲ ಎಂದು ಇವನಿಗೆ ಅರಿವಿಗೆ ಬರುವಷ್ಟರಲ್ಲಿ ಎರಡು ದಿನ ಕಳೆದಿತ್ತು. ಅವನ ಭೇಟಿಯಿಂದ ಅಷ್ಟು ಮತ್ತನಾಗಿ ಹೋಗಿದ್ದ. ಹೀಗೆಲ್ಲಾ ಮತ್ತೇರಿ ತುಂಬಾ ದಿನವೇ ಕಳೆದು ಹೋಗಿದ್ದವು. ಇವನ ಜೀವನದಲ್ಲಿ ಕೆಲಸ, ಹೆಂಡತಿ, ಮಕ್ಕಳು ಎಂಬುದೆಲ್ಲಾ ಗಡಿಯಾರದ ಗಂಟೆಯಂತೆ ನಡೆದು ಹೋಗಿತ್ತು. ಅವುಗಳಲ್ಲಿ ಖುಷಿಗಳೂ ಇದ್ದವು. ಆದರೆ ಇದ್ದಕಿದ್ದಂತೆ ಒದಗಿ ಬಂದಿರುವ ಇದು ಎಂತಹಾ ಮತ್ತು! ಹುಡುಗುತನದಲ್ಲಿ ಹೀಗೆ ಮತ್ತೇರುತ್ತಿತ್ತು ಎಂಬುದೇ ಮರೆತುಹೋಗಿತ್ತು. ಅವೆಲ್ಲಾ ನೆನಪಿಸುವಂತ ಮತ್ತು ಈಗ ಪುನಃ ಆವರಿಸಿತ್ತು. ಮನೆಯ ಮೇಲಿನ ಸಾಲ ತೀರಿಸುವುದಕ್ಕಾಗಿಯೇ ಕೆಲಸ ಮಾಡುತ್ತಿರುವಂತೆ, ಕೆಲಸದಲ್ಲಿ ಮೋಜೆಲ್ಲಾ ಮಾಯವಾಗಿ ಹೋಗಿತ್ತು. ಆದರೆ ಈಗ ಮತ್ತೆ ಅದಕ್ಕೆಲ್ಲಾ ಹೊಸ ಅರ್ಥ, ಹೊಸ ಹುರುಪು ಕಾಣತೊಡಗಿತು. ಅವನ ಸುತ್ತಮುತ್ತಲಿನವರೆಲ್ಲಾ ಹುಬ್ಬೇರಿಸುವಷ್ಟು ಅವನು ಬದಲಾಗಿ ಹೋದ. + +ಇದು ನೋಡಿ ವಿಚಿತ್ರ. ಈ ರೀತಿಯ ಅಮಲು ಹೆಚ್ಚು ದಿನ ಇರಲು ಬಾರದು. ಎಲ್ಲಾ ಒಳ್ಳೆಯವೂ ಕೊನೆಗೊಳ್ಳುತ್ತವೆ ಎನ್ನುತ್ತಾರಲ್ಲ ಹಾಗೆ. ಆದರೆ ಇಲ್ಲಿ ಆದದ್ದೇ ಇನ್ನೊಂದು ಬಗೆ. ಅದು ಕೊನೆಯಾಗುವ ಬದಲು ಇನ್ನೊಂದು ರೀತಿಯಲ್ಲಿ ತಿರುಚಿಕೊಂಡು ಅವನನ್ನೇ ಕಿತ್ತು ತಿನ್ನಲು ತೊಡಗಿತು. ಅದೂ ಕನಸು ಮನಸ್ಸಲ್ಲೂ ಅವನು ಅಂದುಕೊಳ್ಳದ ಹಾಗೆ. + +ಭೇಟಿಯಾಗಿ ಮಾತಾಡಿದ ಒಂದೆರಡು ತಿಂಗಳಷ್ಟೇ ಆಗಿತ್ತು. ಕಪ್ಪು ಮೀಸೆಯವನು ಯಾವುದೋ ಅಂಗಡಿಯಲ್ಲಿ ನಿಂತಿದ್ದ. ಒಂದು ಬಗೆಯ ಶೂನ್ಯ ಅವನನ್ನು ಆವರಿಸಿದಂತಿತ್ತು. ಏಕೆ ಹೇಗೆ ಗೊತ್ತಿಲ್ಲ. ಆದರೆ ಅಂಗಡಿಗೆ ಏನಕ್ಕೆ ಬಂದಿದ್ದೇನೆ ಎಂಬುದೇ ಮರೆತಂತಾಗಿತ್ತು. ಅಂಗಡಿಯವನು ಎರಡೆರಡು ಬಾರಿ ಏನು ಬೇಕೆಂದು ಕೇಳಿದ್ದ. ಇವನು “ಒಂದು ನಿಮಿಷ” ಎಂಬಂತೆ ಏನೋ ಹೇಳಿ ಅಂಗಡಿಯಲ್ಲಿ ಜೋಡಿಸಿಟ್ಟಿದ್ದ, ನೇತಾಕ್ಕಿದ್ದ, ಪೇರಿಸಿಟ್ಟಿದ್ದ ವಸ್ತುಗಳನ್ನೆಲ್ಲಾ ನೋಡುತ್ತಾ ನಿಂತುಬಿಟ್ಟಿದ್ದ. ಒಂದು ಪಕ್ಕದಲ್ಲಿ ಪಾನ್‌ಪುಡಿಯ ಹೊಳೆಹೊಳೆವ ಪೊಟ್ಟಣಗಳ ಜರತಾರಿಯಂತ ಸಾಲು. ಇನ್ನೊಂದು ಕಡೆ, ಯಾವುಯಾವುದೋ ಚಾಕಲೇಟು ಪ್ಯಾಕೆಟ್‌ಗಳ ಸಾಲು. ಮೊತ್ತೊಂದು ಕಡೆ ತರಾವರಿ ಬಣ್ಣಬಣ್ಣದ ಸೋಪು ಪ್ಯಾಕೆಟ್‌ಗಳ ಸಾಲು. ತನಗೆ ಮರೆತದ್ದು ಅವನ್ನೆಲ್ಲಾ ನೋಡಿ ನೆನಪಾಗಬಹುದು ಎಂಬಂತಿತ್ತು ಅವನ ಮುಖಭಾವ. ಆದರೆ ನಿಜದಲ್ಲಿ ಅವನು ನೆನಪಿಸಿಕೊಳ್ಳುವ ಯಾವುದೇ ಪ್ರಯತ್ನ ಮಾಡುತ್ತಿರಲಿಲ್ಲ. ಅದಕ್ಕೇ ಹೇಳಿದ್ದು ಶೂನ್ಯ ಆವರಿಸಿದಂತೆ ಅಂತ. ನೋಡಿಯೇ ನೋಡಿದ ತನ್ನದೇ ಲೋಕದಲ್ಲಿ ಮುಳುಗಿರುವಂತೆ. ಅಷ್ಟರಲ್ಲಿ ಪಕ್ಕದಲ್ಲೇ ಪರಿಚಿತ ದನಿ ಕೇಳಿತು. ಥಟ್ಟನೆ ತಿರುಗಿ ನೋಡಿದರೆ ಮತ್ತೆ ಅದೇ ಗೆಳೆಯ. ಅವನ ಮೀಸೆಯ ಬಿಳಿ ಈಗೇಕೋ ಎದ್ದು ಕಾಣುತ್ತಿತ್ತು. ಆದರೆ ಈ ಬಾರಿ ತನ್ನ ಹೆಂಡತಿಯ ಜತೆ. ಏನೋ ಕೊಳ್ಳಲು ಆಕೆ ಒತ್ತಾಯಿಸುತ್ತಿರುವಂತೆ, ಇವನು ಬೇಡ ಎಂದು ಸಮಜಾಯಿಷಿ ಹೇಳುತ್ತಿರುವಂತಿತ್ತು. + +ಇವನು ತನ್ನ ಕಣ್ಣನ್ನೇ ನಂಬಲಾಗದಂತೆ ನೋಡುತ್ತಾ ನಿಂತು ಬಿಟ್ಟ. ಎಷ್ಟೋ ವರ್ಷಗಳ ನಂತರ ಒಮ್ಮೆ ಸಿಕ್ಕು ಫೋನು ಅಡ್ರೆಸ್ ಕೊಡದೆ ಕಾಣೆಯಾಗಿ ನೆನಪುಗಳನ್ನು ಕೆದಕಿ ಹೋಗಿದ್ದ. ಈಗ ಏನೂ ಆಗದವನಂತೆ ತನ್ನ ಹೆಂಡತಿಯ ಜತೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಇದ್ದಾನೆ ಬಡವ ಎಂದು ತನಗೆ ತಾನೇ ಹೇಳಿಕೊಂಡು ನಕ್ಕ. ಹತ್ತಿರ ಹೋಗಿ ಬೆನ್ನು ತಟ್ಟಿದ. ಇವನನ್ನು ಹೊಸದಾಗಿ ಭೇಟಿಯಾದವನಂತೆ ಕಣ್ಣರಳಿಸಿ ನಾಟಕೀಯವಾಗಿ ನೋಡಿದ. ಇವನು ಎರಡು ತಿಂಗಳ ಹಿಂದಿಗಿಂತ ಈಗ ಅವನ ಮೀಸೆಯ ಬಿಳಿ ಹೆಚ್ಚೇಕೆ ಕಾಣುತ್ತಿದೆ ಅಂದುಕೊಂಡ. ಅಷ್ಟರಲ್ಲಿ ಅವನೇ “ಏನೋ ಬಡವಾ…” ಎಂದು ಅಂಗಡಿಯಲ್ಲಿರುವವರೆಲ್ಲಾ ತಿರುಗಿ ನೋಡುವಂತೆ ಕೂಗಿದ. ಈಗಷ್ಟೇ ತಾನೂ ಬಡವ ಅಂದುಕೊಂಡಿದ್ದು ಇವನ ಅರಿವಿಗೆ ಬಂತು. ಆದರೆ ಸ್ವಲ್ಪ ಕಕ್ಕಾವಿಕ್ಕಿಯೂ ಆಯಿತು. ಎಷ್ಟೋ ವರ್ಷಗಳ ಮೇಲೆ ಕಂಡವನಂತೆ ಯಾಕೆ ಆಡುತ್ತಿದ್ದಾನೆ ಅನಿಸಿತು. ಎರಡು ತಿಂಗಳ ಹಿಂದಷ್ಟೆ ಸಿಕ್ಕಾಗ ಫೋನು ನಂಬರ್ ಅಡ್ರೆಸ್ಸು ಕೇಳಿರಲಿಲ್ಲ. ಕೇಳಿದ್ದರೆ ಇಷ್ಟು ಹೊತ್ತಿಗೆ ಹಳೆಯದು ನೆನಪಾದಗಲೆಲ್ಲಾ ಫೋನ್ ಮಾಡಿಬಿಡುತ್ತಿದ್ದ. ಫೋನಿನಲ್ಲಿ ಸಿಕ್ಕದಿದ್ದರೆ ಮನೆಗೇ ಹೋಗಿ ಬಾಗಿಲು ತಟ್ಟುತ್ತಿದ್ದ. ಈಗ ನೋಡಿದರೆ ಇವನು ಹೀಗಾಡುತ್ತಿದ್ದಾನೆ ಅಂತ ಒಂದು ಸಲ ಪಿಚ್ಚೆನಿಸಿತು. ಅಷ್ಟು ಬೇಗ ಎರಡು ತಿಂಗಳ ಹಿಂದೆ ಸಿಕ್ಕಿದ್ದು ಮರೆತೇ ಬಿಟ್ಟಿದ್ದಾನಾ ಎಂದು ಅನುಮಾನವಾಯಿತು. ಯೋಚಿಸುತ್ತಿರುವಾಗಲೇ ಅವನು ತನ್ನ ಹೆಂಡತಿಯನ್ನು ಪರಿಚಯಿಸಿಬಿಟ್ಟಿದ್ದ. ಆಕೆಗೆ ಇವನ ಬಗ್ಗೆ ಹೆಚ್ಚೇನೂ ಆಸಕ್ತಿ ಇದ್ದಂತಿರಲಿಲ್ಲ. ಅಥವಾ ಅಂಗಡಿಯ ಸಾಮಾನುಗಳ ಗೂಡಿನಲ್ಲಿ ಯಾವುದೋ ಸಾಮಾನು ಆಕೆಯ ಗಮನವನ್ನು ಭದ್ರವಾಗಿ ಹಿಡಿದಿತ್ತು. ಅತ್ತಲೇ ತಿರುತಿರುಗಿ ನೋಡುತ್ತಿದ್ದಳು. ನಂತರ ಇವರನ್ನು ತಮ್ಮ ಪಾಡಿಗೆ ಬಿಟ್ಟು ಸಾಮಾನನ್ನೇ ನೋಡುತ್ತಾ ದೂರ ಸರಿದು ನಿಂತಳು. + +ಅವನು ತೋರಿಸುತ್ತಿದ್ದ ಅರ್ಥವಾಗದ ಈ ಹೊಸ ಭೇಟಿಯ ಉತ್ಸಾಹ ಇವನಿಗೆ ಅರಗಿಸಿಕೊಳ್ಳುವುದು ಹೇಗೆ ಎಂದೇ ತಿಳಿಯಲಿಲ್ಲ. ಆ ದಿನ ಕಾಫಿ ಹೀರುತ್ತಾ ಹೇಳಿದ್ದನ್ನೇ ಮತ್ತೆ ತಿರುಗಿ ಹೇಳ ತೊಡಗಿದ. ಅವನ ತಲೆ ಕೆಟ್ಟಿರಬಹುದೇ ಎಂದು ಅವನ ಮುಖದಲ್ಲಿ ಸೂಚನೆಗಳಿಗಾಗಿ ಹುಡುಕಾಡಿದ. ಅವನೋ ಇವನ ಭುಜ ತಡವಿ “ಏನೋ ಭೂತ ನೋಡಿದವನ ತರಹ ನೋಡ್ತಾ ಇದ್ಯ” ಎಂದು ಜೋರಾಗಿ ನಕ್ಕ. ಅಂದು ಹೇಳಿದ ಜೀವನದ ವಿವರಗಳನ್ನೇ ಮತ್ತೆ ಗೊತ್ತಿಲ್ಲದವನಂತೆ ಕೇಳತೊಡಗಿದ. ಇವನೂ ಚುಟುಕಾಗಿ ಆವತ್ತು ಹೇಳಿದ್ದೇನಲ್ಲಾ ಎಂಬಂತೆ ಉತ್ತರಿಸಿದ. ಅವನ ಮುಖದಲ್ಲಿ ಯಾವುದೇ ಅನಾರೋಗ್ಯದ  ಲಕ್ಷಣವೂ ಕಾಣದೇ ಮತ್ತಷ್ಟು ವಿಚಲಿತನಾದ. ಒಳಗೊಳಗೇ ಭಯವಾಗ ತೊಡಗಿತು. ಕೂಡಲೆ, ತನ್ನ ಹೆಂಡತಿಯಿಂದ ಏನೋ ಮುಚ್ಚಿಡಲು ಹೀಗೆ ಮಾಡುತ್ತಿರಬಹುದು ಎಂದು ಹೊಳೆಯಿತು. ಅದನ್ನು ಪರೀಕ್ಷೆ ಮಾಡಿಯೇ ಬಿಡುವ ಎಂದು ಮೆಲ್ಲಗೆ “ಆವತ್ತು ಸಿಕ್ಕಾಗ ನಿನ್ನ ಅಡ್ರೆಸ್ಸು ಫೋನ್‌ ನಂಬರ್ ಏನೂ ತಗೊಳ್ಳಲಿಲ್ಲ” ಎಂದ. ಅವನು ಯಾವುದೇ ಕೃತ್ರಿಮತೆ ಇಲ್ಲದೆ “ಯಾವಾಗ?” ಎಂದದ್ದು ಕೇಳಿ ಇವನಿಗೆ ಆಳದ ಬಾವಿಗೆ ತಳ್ಳಿದಂತೆ ಆಯಿತು. ಹೇಗೆ ಏನು ಎಲ್ಲಿ ಎಂದು ಹೇಳಿದರೆ ಅವನಿಗೆ ನೆನಪಾಗಬಹುದು ಎಂದು ತಡವರಿಸಿದ. ಇವನಿಗೇನೋ ತಪ್ಪು ಅರಿಕೆಯಾಗಿದೆ ಎಂಬಂತೆ ಅವನು “ಯಾವಾಗಲೋ ಸಿಕ್ಕಿದವಿ? ನಿನಗೆ ಯಾರೋ ಸಿಕ್ಕಿರಬೇಕು – ನಾನೂ ಅಂತಿದ್ದೀಯ… ಮೊದಲಿಂದಲೂ ನೀನು ಸ್ವಲ್ಪ ಹಿಂಗೆ. ಆಬ್ಸಂಟ್ ಮೈಂಡೆಡ್ ಫೂಲ್…” ಎಂದು ಇವನನ್ನು ಗೇಲಿ ಮಾಡತೊಡಗಿದ. ಇವರ ಮಾತುಗಳು ಅವನ ಹೆಂಡತಿಯ ಕಿವಿಗೆ ಬಿದ್ದು ಆಕೆ ಕೊಂಚ ಇವರತ್ತ ಗಮನ ಹರಿಸಿ ಇಬ್ಬರೂ ಮಾತಿನಲ್ಲಿ ಮಗ್ನರಾದಂತಿರುವುದು ನೋಡಿ ಮತ್ತೆ ಬೇರತ್ತ ತಿರುಗಿಬಿಟ್ಟಳು. + +“ಆವತ್ತು ಸುನಂದ ಹೋಟಲ್ ಮುಂದೆ ಸಿಕ್ಕಿದ್ಯಲ್ಲೋ. ಯಾಕೆ ಇಷ್ಟು ಬೇಗ ಮರೆತುಬಿಟ್ಯ? ಇಬ್ಬರೂ ಕಾಫಿ ಕುಡಿದು ಏನೆಲ್ಲಾ ಮಾತಾಡಿದಿವಿ. ಒಂದು ಗಂಟೆ ಹರಟೆ ಹೊಡದಿವಿ. ಆಮೇಲೆ ಮಳೆ ಬರೋ ತರ ಮೋಡ ಮುಚ್ಚಿಕೊಂಡಿತು. ನೀನು ಬೇಗ ಹೋಗಬೇಕು ಅಂತ ಹೊರಟೆ…” ಇವನಿಗೆ ತಲೆ ಸರಿಯಿಲ್ಲವೇ ಎಂಬಂತೆ ಅವನು ಇವನನ್ನು ನೋಡ ತೊಡಗಿದ. “ಅಲ್ಲವೋ – ಎಷ್ಟೋ ವರ್ಷದ ಮೇಲೆ ಸಿಕ್ಕಿದ್ಯ. ಹೋದ ತಿಂಗಳು ಸಿಕ್ಕಿದ್ದೆ ಅಂತ್ಯಲ್ಲ. ಯಾಕೋ ಮನೇಲಿ ಎಲ್ಲ ಸರಿಯಾಗಿದೆಯ? ಏನಾದರೂ ಚಿಂತೆಯಿಂದ ತಲೆಕೆಡಿಸಿಕೊಂಡಿದ್ಯ?” ಅಂತ ತುಂಬಾ ಆತ್ಮೀಯವಾಗಿ ಕೇಳಿದ. ಇವನಿಗೆ ನಿಜವಾಗಿಯೂ ದಿಗಿಲಾಯಿತು. ಅವನ ಮನೆಗೂ ಸಣ್ಣದರಲ್ಲಿ ಹೋಗಿಬಂದಿದ್ದ ಇವನಿಗೆ ಅವನು ಅವಳಿ-ಜವಳಿ ಅಲ್ಲ ಅಂತ ಖಾತ್ರಿಯಿತ್ತು. ಹಾಗಾದರೆ ಇವನು ಹೇಳ್ತಿರೋದು ಏನು? ನನಗೇ ತಿಕ್ಕಲು ಅಂತಿದ್ದಾನಲ್ಲ ಎಂಬ ಸಿಟ್ಟು ಅಸಹನೆಯಿಂದ. “ಯಾಕೋ ಹೀಗ್ಮಾತಾಡ್ತಾ ಇದ್ಯ? ನೀನೂ… ನೀನೂ…” ಪದಗಳು ಸಿಕ್ಕದೆ, ವಾಕ್ಯವಾಗದೇ ಅತೀವ ಗೊಂದಲದಿಂದ ದಡಬಡಿಸಿದ. + +ಅವನ ಹೆಂಡತಿ ಅಷ್ಟು ಹೊತ್ತಿಗೆ ಇವರ ಮಾತುಕತೆ ಕೇಳಿಸಿಕೊಂಡು ಹತ್ತಿರ ಬಂದು “ನಾವು ಆರು ತಿಂಗಳಿಂದ ಈ ಊರಲ್ಲೇ ಇಲ್ಲವಲ್ಲ. ಅದು ಹೇಗೆ ಇವರು ನಿಮಗೆ ಸಿಗೋಕೆ ಸಾಧ್ಯ” ಎಂದೊಡನೆ ಅಲ್ಲಲ್ಲಿ ಬಿಳಿಯಿದ್ದ ಮೀಸೆಯ ಗೆಳೆಯ ಜೋರಾಗಿ ನಕ್ಕ. ಅದೇ ಹಳೆ ನಗು. ಸಣ್ಣ ವಯಸ್ಸಿಗಿಂತ ಸ್ವರ ಕೊಂಚವಷ್ಟೇ ಗಡಸು. ಆದರೆ ಹೋದ ಸಲ ಸಿಕ್ಕಾಗ ಹೀಗೆ ನಕ್ಕಿರಲಿಲ್ಲ. ಯಾವುದೋ ತಹತಹದಲ್ಲಿ ಇದ್ದಂತೆ ಇದ್ದ. ಭೇಟಿಯೇ ಅಗಿಲ್ಲ ಎನ್ನುವಾಗಿನ ಇಂದಿನ ನಿರಾಳ ಅಂದು ಸಿಕ್ಕಾಗ ಇರಲಿಲ್ಲ. + +ಮೀಸೆಗೆ ಕಪ್ಪು ಬಳಿಯುವ ಇವನು ಅವನನ್ನು ತೀಕ್ಷ್ಣವಾಗಿ ನೋಡಿದ. ಆ ನೋಟದಲ್ಲಿ ಗೊಂದಲ, ಅಸಹನೆಯ ಜತೆ ಒಂದಿಷ್ಟು ಸಿಟ್ಟು ಕಸಿವಿಸಿಯೂ ಇತ್ತು. ಅವನ ಮುಖದಲ್ಲಿನ್ನೂ ತೆಳು ನಗು ತೇಲುತ್ತಲೇ ಇತ್ತು. ಆ ದೀರ್ಘ ನೋಟದ ಕಡೆಯಲ್ಲಿ ಏನು ಇದ್ದೀತು ಎಂದು ಹೇಳಲು ಬ್ರಹ್ಮನೇ ಹುಟ್ಟಿಬಂದರೂ ಸಾಧ್ಯವಿರಲಿಲ್ಲ. ಆ ನೋಟದ ಕೊನೆಯಲ್ಲಿ ಇವನು “ಹೋಗಲಿ ಬಿಡು” ಎಂದು ಮುಖ ತಗ್ಗಿಸಿ ಹೊರಟುಬಿಟ್ಟ. ಹೇಳುವುದೂ ಕೇಳುವುದೂ ಏನೂ ಉಳಿದಿರಲಿಲ್ಲ ಎಂಬಂತೆ. ದೂರಕ್ಕೆ ಹೋಗಿ ಇಲ್ಲದ ಕುತೂಹಲದಲ್ಲೂ ಹಿಂದೆ ತಿರುಗಿ ನೋಡಿದ. ಗಂಡ ಹೆಂಡತಿ ಇಬ್ಬರೂ ಇವನತ್ತಲೇ ನೋಡುತ್ತಾ ಏನೋ ಮಾತಾಡಿಕೊಳ್ಳುತ್ತಿದ್ದರು. ನೋಡಬಾರದಿತ್ತು ಎಂಬಂತೆ ತಟ್ಟನೆ ಮುಖ ತಿರುಗಿಸಿದ. ಮತ್ತೆ ತಿರುಗಿ ನೋಡುವ ಸಾಹಸ ಮಾಡಲಿಲ್ಲ. + +ಈ ಬಾರಿಯೂ ಅಡ್ರೆಸ್ ಆಗಲಿ, ಫೋನ್‌ ನಂಬರ್ ಆಗಲೀ ಕೇಳಿಕೊಳ್ಳಲಿಲ್ಲ ಎಂದುಕೊಂಡ. ಆದರೆ ಹಾಗಂದುಕೊಂಡದ್ದು ಎರಡನೇ ಬಾರಿ ಸಿಕ್ಕ ಒಂದು ವಾರದ ನಂತರ. ಆ ಒಂದು ವಾರ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದ. ಹಾಲು ತರಲು ಹೋಗಿ ಮರೆತು ತರಕಾರಿ ಅಂಗಡಿಯಿಂದ ಬೇಡದಷ್ಟು ಹಾಗಲಕಾಯಿಯೋ, ಸೀಮೇ ಬದನೆಕಾಯಿಯೋ ತಂದುಬಿಡುತ್ತಿದ್ದ. ಕೆಲಸ ಮುಗಿಸಿ ಮನೆಗೆ ಬರುವಾಗ ಇದ್ದಕಿದ್ದ ಹಾಗೆ ಸುನಂದ ಹೋಟೆಲ್ ಮುಂದೆ ಕತ್ತಲಾಗುವವರೆಗೂ ನಿಂತುಬಿಡುತ್ತಿದ್ದ. ಮನೆಗೆ ಬಂದು ಸುಸ್ತಾಗಿದೆ ಎಂದು ಸಂಜೆಯೇ ಮಲಗಿಬಿಡುತ್ತಿದ್ದ. ರಾತ್ರಿ ಎರಡು ಗಂಟೆಗೆ ಎದ್ದು ದೀಪ ಹಾಕಿಕೊಳ್ಳದೇ ಬೆಳಗಾಗುವವರೆಗೂ ಕೂತು ಬಿಡುತ್ತಿದ್ದ. ಇಂತವು ಇನ್ನೂ ಏನೇನೋ ಮಾಡುತ್ತಿದ್ದ. ಹೆಂಡತಿಗೆ ಚಿಂತೆ ಹತ್ತಿಕೊಂಡಿತು. ಮಕ್ಕಳು ಇವನ ಬಳಿ ಬರಲು ಹೆದರುತ್ತಿರುವಂತಿತ್ತು. ವಿಧಿವತ್ತಾಗಿ ಮೀಸೆಗೆ ಕಪ್ಪು ಹಚ್ಚುತ್ತಿದ್ದವನು ಈಗೀಗ ಬಿಳಿ ಇಣುಕುತ್ತಿದ್ದರೂ ಹಾಗೇ ಬಿಟ್ಟಿದ್ದ. ಏನೂ ಬೇಡವಾದವನಂತೆ ತೋರತೊಡಗಿದ. + +ಇವೆಲ್ಲಾ ತನಗೆ ಹೀಗೇಕೆ ಆಗುತ್ತಿದೆ ಎಂದು ಅವನಿಗೇ ಅನಿಸತೊಡಗಿದಾಗ ಮತ್ತೆ ಎಲ್ಲ ಸರಿಯಾಗ ತೊಡಗಿತು. ತನ್ನ ಆತ್ಮೀಯನಾಗಿದ್ದ ಗೆಳೆಯ ಅದೇಕೆ ಅಷ್ಟು ಹಸಿ ಸುಳ್ಳು ಹೇಳಿದ ಎಂದು ಅರ್ಥವಾಗಿರಲಿಲ್ಲ. ಅವನು ಹಾಗೆ ಹೇಳಿದಾಗ ನನಗೇಕೆ ನನ್ನ ಮನಸ್ಥಿತಿಯ ಬಗ್ಗೆಯೇ ಅನುಮಾನ ಹತ್ತಿಕೊಂಡಿತು ಎಂದು ಮತ್ತೆ ಮತ್ತೆ ಕೇಳಿಕೊಂಡ. ಹೀಗೆಲ್ಲಾ ಅಂದುಕೊಳ್ಳುವುದೇ ಒಂದು ಬಗೆಯ ಚಿಕಿತ್ಸೆಯಾಗಿ ಪರಿಣಮಿಸತೊಡಗಿತು. ಮತ್ತೆ ಹಾಲು ಸರಿಯಾಗಿಯೇ ತರತೊಡಗಿದ. ತರಕಾರಿ ಕೂಡ. ಮಕ್ಕಳ ಜತೆ ಎಂದಿನಂತೆ ಆಟ ಆಡುವುದು, ಜಗಳ ಆಡುವುದು ಎಲ್ಲವೂ ಹದಕ್ಕೆ ಬರತೊಡಗಿತು. ಅವನ ಚಿಕ್ಕ ಮಗು ಅಪ್ಪನ ಚಿತ್ರ ಬರೆದು, ಅದಕ್ಕೊಂದು ಕಪ್ಪನೆಯ ಮೀಸೆ ಬರೆದು, ಪಕ್ಕದಲ್ಲಿ ಚಿಟ್ಟೆ ಬರೆದು, ಅಕ್ಕಪಕ್ಕದ ಮನೆಯವರಿಗೆಲ್ಲಾ ತೋರಿಸಿದ್ದು ನೋಡಿ ಹೇಗೇಗೋ ಆಗಿ ಗದರಿಬಿಟ್ಟಿದ್ದ. ಕನ್ನಡಿ ನೋಡಿಕೊಂಡು ಮುಂದಿನ ವಾರ ಮೀಸೆಗೆ ಕಪ್ಪು ಬಳಿದಕೊಳ್ಳಬೇಕು ಎಂದು ನಿಗದಿ ಮಾಡಿಕೊಂಡ. ಮುಂದಿನ ವಾರ ಅದು ಮರೆತು ಮುಂದೂಡವಂತಾದರೂ, ಅದರ ಬಗ್ಗೆ ಎಚ್ಚರವಂತೂ ಇದ್ದೇ ಇತ್ತು. ಇಷ್ಟಾಗಿಯೂ ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಒಳಮುಖಿಯಾಗುತ್ತಿದ್ದ. ಕಿಟಕಿಯ ಬಳಿ ಯಾರನ್ನೋ ಕಾಯುತ್ತಿರುವಂತೆ ಬೀದಿಯನ್ನೇ ನೋಡುತ್ತಾ ನಿಂತುಬಿಡುತ್ತಿದ್ದ. ನಂತರ ಸರಕ್ಕನೆ ನಡುಕ ಬಂದಂತೆ ಮೈಝಾಡಿಸಿ ಮತ್ತೆ ಸರಿಯಾಗಿಬಿಡುತ್ತಿದ್ದ. + +ಒಂದು ಸಂಜೆ ಹಳೆಯ ಉತ್ಸಾಹದಲ್ಲಿ ದಡದಡನೆ ಮನೆಗೆ ಬಂದ. ಬಂದವನೇ ನೇರ ಅಡುಗೆಮನೆಗೇ ಹೋದ. ಜಾಡಿಯಿಂದ ತೆಗೆದ ಉಪ್ಪಿನಕಾಯಿ ಮಿಡಿಯನ್ನು ಚಾಕಲ್ಲಿ ಹೆಚ್ಚುತ್ತ ಕೈಯೆಲ್ಲಾ ಕೆಂಪಗೆ ಮಾಡಿಕೊಂಡಿದ್ದ  ಹೆಂಡತಿಗೆ ಅಂದಿನ ಪೇಪರ್ ತೋರಿಸಿದ. “ನನ್ನ ತಲೆ ಕೆಟ್ಟು ಹೋಗಿತ್ತು. ನೋಡು ಇವನು ನನ್ನ ಪ್ರೈಮರಿ ಸ್ಕೂಲ್ ಫ್ರೆಂಡು… ಯಾವುದೋ ಹೆಂಗಸನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನಂತೆ. ತಾನು ಊರಲ್ಲೇ ಇರಲಿಲ್ಲ ಅಂತ ಸುಳ್ಳು ಹೇಳಿದನಂತೆ. ಅವನ ಹೆಂಡತೀನೂ ಶಾಮೀಲಂತೆ… ಎಲ್ಲಾ ಸಿಕ್ಕಿಬಿದ್ದಿದ್ದಾರೆ…” ಎನ್ನುತ್ತಾ ಗೆಳೆಯನ ಫೋಟೋದ ಮೇಲೆ ಬೆರಳಲ್ಲಿ ಪಟಪಟ ಎಂದು ಏನೋ ಸಾಬೀತಾದಂತೆ ಕುಟ್ಟಿದ. ತನ್ನ ಗೆಳೆಯ ಕೊಲೆಗಡುಕ ಅನ್ನುವುದು ಇವನಿಗೆ ಇಷ್ಟೊಂದು ಖುಷಿಯ ಸಮಾಚಾರವಾದದ್ದು  ಹೆಂಡತಿಗೆ ಅರ್ಥವಾಗಲಿಲ್ಲ. + +ಪೇಪರಿನ ಫೋಟೋದಲ್ಲಿ ಗಂಡನ ಗೆಳೆಯನ ಮೀಸೆ ಬಿಳಿಬಿಳಿಯಾಗಿರುವುದನ್ನು ನೋಡಿದಳು. ತನ್ನ ಗಂಡ ಮೀಸೆಗೆ ಕಪ್ಪು ಹಚ್ಚಿಕೊಳ್ಳದಿದ್ದರೆ ಹೀಗೇ ಕಾಣುತ್ತದೆ ಅಂದುಕೊಂಡಳು. ಮಿಡಿ ಕತ್ತರಿಸುತ್ತಾ ಕೆಂಪಗಾಗಿದ್ದ ಕೈಯಲ್ಲಿ ಚಾಕು ಹಿಡಿದೇ ತನ್ನ ಮುಂದಲೆಯನ್ನು ಸರಿಸಿಕೊಂಡು  ಇವನ ಮುಖವನ್ನು ಹೊಸದಾಗಿ ಎಂಬಂತೆ ನೋಡಿದಳು. ಅವಳ ಮುಖದಲ್ಲಿ ಸಣ್ಣಗೆ ನಗು ಹರಡಿಕೊಂಡಿತು. + +ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು. \ No newline at end of file diff --git a/Kenda Sampige/article_545.txt b/Kenda Sampige/article_545.txt new file mode 100644 index 0000000000000000000000000000000000000000..feff1fa11474db45d85443a74d25769cc34ac38a --- /dev/null +++ b/Kenda Sampige/article_545.txt @@ -0,0 +1,15 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು.ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. + +ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈವತ್ತು ಈ ಜಾಗದಲ್ಲಿಜಯಂತ ಕಾಯ್ಕಿಣಿಯವರ ಒಂದು ಕವಿತೆ ಇದೆ. + +ಬಟನ್ ಮೊಲ + +ರಸ್ತೆಯಲ್ಲಿ ಕೆಟ್ಟು ನಿಂತಿದೆ ಕಹಿಮುಖದ ಟೆಂಪೋಬೆನ್ನಲ್ಲಿ ಹೊತ್ತುಕೊಂಡು ಒಂದು ಮನೆತನ.ವಾಲುವಂತೆ ಪೇರಿಸಿಟ್ಟ ಕಬ್ಬಿಣದ ಟ್ರಂಕುಹೊಟ್ಟೆ ಅದುಮಿ ಒದ್ದಾಡುವ ಬಟ್ಟೆ ಮೂಟೆಕೈಕಾಲು ಮಡಿಸಿ ನಿಂತ ಯೋಗಮುದ್ರೆಯ ಮಂಚಸವೆದ ಶಾಯಿ ಗುರುತಿನ ಮೇಜಿನ ಮೇಲಲ್ಲಾಡುವಕಪ್ಪು ದಕ್ಷಿಣ ಗೋಲಾರ್ಧದ ಅನ್ನದ ಪಾತ್ರೆಅದರಲ್ಲಿ ಕಡೇಗಳಿಗೆ ಇಟ್ಟ ಒಗ್ಗರಣೆ ಸವುಟುಚಾ ಪುಡಿ ಇನ್ನೂ ಅಂಟಿರುವ ಸಡಿಲ ಚಿಮ್ಮಟಎಷ್ಟೊ ಸಂವತ್ಸರದ ಸೊಗಡು ಸುತ್ತಿಟ್ಟ ಕ್ಯಾಲೆಂಡರು ಯಶೋಧೆಅವಳ ಉದರಕ್ಕೆ ಚುಚ್ಚಿಟ್ಟ ಟಾಚಣಿ ನೂಲಿನ ಜಡೆಯ ಜಂಗು ಸೂಜಿಮಡಿಸಿಟ್ಟ ಹಾಸಿಗೆ ಮಲಗಿದ ಕಪಾಟುಅಂಗಾತ ಬಿದ್ದ ಕನ್ನಡಿಯಲ್ಲಿ ಹಾರುತ್ತಿರುವ ಕಾಗೆ. + +ಒಲೆ ಇದ್ದಿದ್ದರೆ ಬಾವಿಯ ನೀರಿದ್ದರೆ ಎಲ್ಲದಕೂ ಜೀವಬರಬಹುದಿತ್ತು ಇಲ್ಲಿ. ಯಾರಿಲ್ಲವೆ ಹೋದರೆಲ್ಲಿಎಂದಿನ್ನೇನು ಕೇಳಬೇಕು ಅಷ್ಟರಲ್ಲಿ ಅಗೋಆ ಬೋರಲು ಬಾಲ್ದಿಗೆ ಆತು ನಿಂತು ಕಣ್ಣಿಟ್ಟುಕಾವಲು ಕಾಯುತ್ತಿದೆ ಸ್ತಬ್ಧ ಬೆಳ್ಳನೆ ಬಟನ್ ಮೊಲ.ಅದರ ಕಣ್ಣಿಗೆ ಕೆಂಪು ಮಣಿಕಟ್ಟು ಹಾಕಿಸಿದ ಕಾಜು ಕಪ್ಪು ಬಟ್ಟೆ. ಕೆಳಗೆನೂಲಿನಿಂದ ಬರೆದ-ಕುಸುಮ ಕೌಸಲ್ಯ ಮೃದುಲ-ಇಂಥದೇಮಳೆಯ ಹೂವಿನಂಥ ಹೆಸರು + +ಅವಳಿಗೇನಾಯಿತು ಈಗ ಎಲ್ಲಿರುವಳುಅಪರಾಹ್ನ ಅಳುವ ಮೂಗ ಸೊರಕ್ ಕೈಯುದ್ದ ವರೆಸುತ್ತಒಂದೊಂದೇ ಬಟನ್ ಪೋಣಿಸಿದವಳುಹೊರಗಿನವರು ಬಂದರೆ ಥಟ್ಟನೆದ್ದು ಅದನ್ನಲ್ಲೇ ಬಿಟ್ಟು ಹಿತ್ತಲಿಗೋಡಿದವಳುತಂಗಿಯ ನೋಡಲು ಬಂದಾಗ ಅಡಗಿ ಕೂತವಳುಅಮ್ಮನ ಲಂಗದ ಮೇಲೆ ತಮ್ಮನ ಅಂಗಿ ಹಾಕಿಎಲ್ಲೆಲ್ಲೋ ಹಪ್ಪಳ ಮಾಡಲು ಹೋಗಿ ಅಲ್ಲೇಅಂದಿನ ಊಟ ಉಂಡವಳು. + +ಕತ್ತಲಲ್ಲಿ ಕಳೆದು ಹೋಗುವ ಸೂಜಿಸಂದಿಯಲ್ಲಿ ಬಿಚ್ಚಿಬೀಳುವ ನೂಲಿನುಂಡೆಪೇಟೆ ತುಂಬ ಅಬ್ಬ ಎಷ್ಟೊಂದು ಗುಂಡಿಗಳುಮೆಲ್ಲಗೆ ಕಾಜು ಮುರಿದು ಸದ್ದಿಲ್ಲದೆ ಹೊರಬೀಳುತ್ತಿದೆ ಮೊಲಕತ್ತು ಚಾಚಿ ಅತ್ತಿತ್ತ ನೋಡಿ ಮನೆ ತುಂಡುಗಳ ಮೂಸುತ್ತಚಂಗನೆ ಟೆಂಪೋದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆಪೋಣಿಸಿದ ತಾಯನ್ನು ಅರಸಿಕೊಂಡು + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_546.txt b/Kenda Sampige/article_546.txt new file mode 100644 index 0000000000000000000000000000000000000000..5bb66a3c0f2bb6960dd26ebc3d11930bef4bfcdd --- /dev/null +++ b/Kenda Sampige/article_546.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ನೀವು ಬರೆದ, ಅನುವಾದಿಸಿದ ಕವಿತೆಗಳನ್ನು ನಮಗೆ ಕಳುಹಿಸಿ ಕೊಡಬಹುದು. ದಿನದ ಕವಿತೆ ಬರೆದವರುಜ್ಯೋತಿಗುರುಪ್ರಸಾದ್. + +ದೀಪ ಬೆಳಗುವ ಹೊತ್ತು + + + +ದೀಪ ಬೆಳಗುವ ಹೊತ್ತುಒಡಲೇ ಸೊಡರಾಗಿತುಟಿ ನಗುವೇ ಕುಡಿ ಬತ್ತಿಯಾಗಿಕಣ್ಣ ಕಾಂತಿ ಎಣ್ಣೆಯಾಗಿಉರಿವ ನಂದಾದೀಪ ಒಲವು + +ದೀಪ ಬೆಳಗುವ ಹೊತ್ತುಕತ್ತಲೆಯ ಕುಡಿ ಕುಡಿದುಮತ್ತಾದ ಬೆಳಕಿನಲಿಮುತ್ತಾದ ಮಾತು ಹುಟ್ಟಿಬೆಸೆವ ನಂದಾದೀಪ ಒಲವು + +ದೀಪ ಬೆಳಗುವ ಹೊತ್ತುಅಂಗಳದ ಹಕ್ಕಿ ಗೂಡೇಗೂಡು ದೀಪ ವಿಸ್ಮಯ!ಗುಟುಕು ಕೊಡುವ ತಾಯಿಹಕ್ಕಿಕಲರವ ನಂದಾದೀಪ ಒಲವು + +ದೀಪ ಬೆಳಗುವ ಹೊತ್ತುಕತ್ತಲೆ ಕೋಣೆ ನೆನಪುನಲ್ಲ-ನಲ್ಲೆ ಮುದ್ದುಗರೆದುದೀಪ ಹಚ್ಚದೆಯೇಬೆಳಗಿದ ನಂದಾದೀಪ ಒಲವು + +ದೀಪ ಬೆಳಗುವ ಹೊತ್ತುಹೂ ಅರಳುವ ಹೊತ್ತುಮನಸ ಮಗುವಿನ ಹುಟ್ಟುನಾವೆ ನಂದಾದೀಪನಾವೆ ಒಲವು….. \ No newline at end of file diff --git a/Kenda Sampige/article_547.txt b/Kenda Sampige/article_547.txt new file mode 100644 index 0000000000000000000000000000000000000000..839470a07c6abf78a021f0bf8b9d4476275ddca4 --- /dev/null +++ b/Kenda Sampige/article_547.txt @@ -0,0 +1,35 @@ +byಸಿಂಧುರಾವ್‌ ಟಿ.|Dec 5, 2017|ಸಾಹಿತ್ಯ| 0 Comments + +ಸರೋಜ ಕಣ್ಣು ದೊಡ್ಡಕೆ ಬಿಟ್ಟು ಹೆದರಿಸುತ್ತಿದ್ದರೂ ಸೀತಾರಾಮನ ನಂಜಿನ ನಗೆ ಬಾಡಲಿಲ್ಲ. ಅಮ್ಮನ ಶ್ಲೋಕದ ವಾಲ್ಯೂಮ್ ದೊಡ್ಡದಾಯಿತಾದರೂ, ಸ್ಪಷ್ಟತೆಯನ್ನು ನುಂಗಿಕೊಂಡಿತು. + +byಸಿಂಧುರಾವ್‌ ಟಿ.|Dec 5, 2017|ಸಾಹಿತ್ಯ| 0 Comments + +ಸ್ವಿಚ್ಚೊತ್ತಿದರೆ, ಕೆಲಸದವಳೂ ಬಂದು ನಿಮಿಷಗಳಲ್ಲಿ ಮನೆ ಕ್ಲೀನಾಗುವಾಗ ನಾನು ಹಬ್ಬದ ಹಿಂದಿನ ಸಂಜೆ ಅವಳ ತಿಂಗಳ ಸಂಬಳವನ್ನ ಒಂದಷ್ಟು ಗಂಟೆ ಕಂಪ್ಯೂಟರ್ ಮುಂದೆ ಕೂತು ದುಡಿಯುತ್ತಿರುತ್ತೇನೆ. ಗುಡಿಸಲು ಅಂಗಳವಿಲ್ಲ. + +byಸಿಂಧುರಾವ್‌ ಟಿ.|Dec 5, 2017|ಸಾಹಿತ್ಯ| 0 Comments + +ಮನೆಯ ಕೆಲಸ, ಮಕ್ಕಳ ಪಾಲನೆ, ಅಣ್ಣನ ಲಾಲನೆ, ಅತಿಥಿಗಳ ಸತ್ಕಾರ ಎಲ್ಲವನ್ನು ಅಣ್ಣ ಭಲೇ ಎನ್ನುವಂತೆ, ಮೆಚ್ಚುವಂತೆ ನಡೆಸಿ ಅನುಸರಿಸಿಕೊಂಡು ಹೋದವರು ಅಮ್ಮ. + +byಕೆಂಡಸಂಪಿಗೆ|Dec 5, 2017|ಸಾಹಿತ್ಯ| 0 Comments + +ಬಲ ಹೆಗಲಿನಲ್ಲಿ ಒಂದೇ ಬ್ಯಾಗಿನೊಡನೆ ಇದ್ದ ನಾನು ಅಲ್ಲೇ ಸಿಕ್ಕ ಟೀಸಿಯನ್ನು ಮುಂದಿನ ಪ್ರಯಾಣ ಕುರಿತು ವಿಚಾರಿಸಿದೆ. ಆತ ಹೇಳಿದ್ದೆಂದರೆ, ಮತ್ತೆ ಅಹಮದಾಬಾದಿಗೆ ಹೋಗುವ ಗಾಡಿ ಇರುವುದು ಬೆಳಗಿನ ಐದು ಘಂಟೆಗೆ. + +byಡಾ.ರಾಜೇಂದ್ರ ಚೆನ್ನಿ|Dec 5, 2017|ಸಾಹಿತ್ಯ| 0 Comments + +ಅಮೇರಿಕದ ಶ್ರೇಷ್ಠ ಬರಹಗಾರ ಹಾಗೂ ಬರಹಗಾರರ ಗುರುವಾದ ಹೆನ್ರಿ ಜೇಮ್ಸ್ ಬರಹಗಾರರಿಗೆ ನೀಡಿದ ಉಪದೇಶವೆಂದರೆ cultivate loneliness. ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ. + +byಗುರುಪ್ರಸಾದ್ ಕಾಗಿನೆಲೆ|Dec 4, 2017|ಸಾಹಿತ್ಯ| 0 Comments + +ಮೊದಲ ಮನೆ ‘ವಿಲ್ಲಾ ಪೀಡಿಯಾಟ್ರಿಕಾ’. ಮದುವೆಯಾದ ಹೊಸದರಲ್ಲಿ ನಮ್ಮ ತುರ್ತಿನ ಆಶಯದ ಪ್ರತೀಕವೋ ಎನ್ನುವಂತಿತ್ತು, ಹೆಸರು.  ಎರಡೇ ಅಂತಸ್ತಿನ, ಮೂರು ಬೆಡ್ ರೂಮಿನ ಒಂದು ಗರಾಜಿನ ಮನೆ. ಇಬ್ಬರೂ ರೆಸಿಡೆನ್ಸಿ ಮಾಡುತಿದ್ದೆವು. + +byಗುರುಪ್ರಸಾದ್ ಕಾಗಿನೆಲೆ|Dec 4, 2017|ಸಾಹಿತ್ಯ| 1 Comment + +ಒಂದು ದಿನ ವಾಸು ವೆಂಕಟೇಶ್ವರ ಟಾಕೀಸಿನಲ್ಲಿ ಮಧ್ಯಾಹ್ನ ಮ್ಯಾಟಿನಿ ಸಿನೆಮಾ ನೋಡಲು ಹೋಗಿದ್ದ. ಇವನ ಹಿಂದೆ ಸಾಲಿನಲ್ಲಿ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನದ ಅರ್ಚಕರಾದ ಗರುಡಯ್ಯಂಗಾರರೂ ಬಂದಿದ್ದರು. + +byಮೀರಾ ರಾಜಗೋಪಾಲ್|Dec 4, 2017|ಸಾಹಿತ್ಯ| 0 Comments + +ಇಲ್ಲೆಲ್ಲ ನೀನು ಹಾಗಂದಿದ್ದೇ ಮಾತು! ಅದನ್ನ ನಿನಗೆ ಹೇಳಿಕೊಟ್ಟವಳೇ ನಾನು ಎಂದು ನೀನು ಹೇಳಿರಲೇ ಇಲ್ಲ. + +byಮೀರಾ ರಾಜಗೋಪಾಲ್|Dec 4, 2017|ಸಾಹಿತ್ಯ| 0 Comments + +ಈಗ ಅವನಿಲ್ಲ. ಜೀವಂತವಿದ್ದಾನಾ ಇಲ್ಲವಾ ಯಾವುದೂ ನನಗೆ ತಿಳಿದಿಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ? ಯಾರನ್ನೂ ಏನೂ ವಿಚಾರಿಸದೆ ಉಳಿದಿದ್ದೇನೆ, ವರ್ಷಗಳಿಂದ. \ No newline at end of file diff --git a/Kenda Sampige/article_548.txt b/Kenda Sampige/article_548.txt new file mode 100644 index 0000000000000000000000000000000000000000..33938ad49b7fae7b47a7f8c0f496589ca57fa708 --- /dev/null +++ b/Kenda Sampige/article_548.txt @@ -0,0 +1,35 @@ +ಪ್ರಪಂಚದ ಪ್ರತಿಷ್ಠಿತ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟವರು. ತಮ್ಮನ್ನು ತಾವು ಅರ್ಪಿಸಿಕೊಂಡವರು. ಹಾಗೇ ಅರ್ಪಿಸಿಕೊಂಡು ಪ್ರಶಸ್ತಿಗೆ ಭಾಜನರಾದವರ ದೊಡ್ಡ ಪಟ್ಟಿಯೇ ಇದೆ. ಇತ್ತೀಚಿನ ವರ್ಷಗಳಲ್ಲಿ ಬಾಂಗ್ಲಾ ದೇಶದ ಸಾಮಾನ್ಯರಲ್ಲಿ ಸಾಮಾನ್ಯ ವ್ಯಕ್ತಿಯಾದ ಮಹಮ್ಮದ್ ಯೂನಸ್ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ಮೂಲಕ ಅಂತಹ ಮಹಾನುಭಾವರ ಸಾಲಿಗೆ ಸೇರಿಹೋದರು. + +ಯೂನಸ್ ಯುದ್ಧ ಗೆದ್ದವರಲ್ಲ; ಯುದ್ಧಕ್ಕಿಂತಲೂ ಭೀಕರವಾದ ಬಡತನವನ್ನು ಗೆದ್ದವರು. ಬಡತನದ ವಿರುದ್ಧ ಹೋರಾಡಿದವರು. ಗ್ರಾಮೀಣ ಬ್ಯಾಂಕ್ ಸ್ಥಾಪಿಸಿ ಕ್ರಾಂತಿಗೆ ಕಾರಣರಾದವರು. ಆ ಕಾರಣಕ್ಕಾಗಿ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಗಿದೆ. + +1940ರಲ್ಲಿ ಬಡ ಅಕ್ಕಸಾಲಿಗರ ಮಗನಾಗಿ ಹುಟ್ಟಿದ ಯೂನಸ್, ಬದುಕಿನುದ್ದಕ್ಕೂ ಬಡತನದ ಬವಣೆಯಲ್ಲಿ ನೊಂದು ಬೆಂದವರು. ಆ ಕಾರಣಕ್ಕಾಗಿಯೋ ಏನೋ ಯೂನಸ್ ಚಿತ್ತಗಾಂಗ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರಜ್ಞರಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾಗಲೂ ಬಡವರ ಬದುಕನ್ನು ಮತ್ತೆ ಮತ್ತೆ ಕಣ್ಣಾರೆ ಕಾಣಲು ಪ್ರತೀವಾರ ಹಳ್ಳಿಗಳಿಗೆ ಹೋಗುತ್ತಿದ್ದರು. + +ಹೀಗೆ ಹೋಗಿಬರುವ ಸಮಯ, ಅಂದರೆ 1976ರ ಆಸುಪಾಸಿನಲ್ಲಿ ಬಾಂಗ್ಲಾ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಹಳ್ಳಿಗಳಿಗೆ ಸ್ಮಶಾನಮೌನ ಮುತ್ತಿಕೊಂಡಿತ್ತು. ಹಳ್ಳಿಯ ಬಡವರು ಶ್ರೀಮಂತರಿಂದ ಸಾಲ ಪಡೆದು, ಹೆಚ್ಚಿನ ಬಡ್ಡಿ ತೆತ್ತು ಪಡಬಾರದ ಯಾತನೆ ಪಡುತ್ತಿದ್ದರು. ಯೂನಸ್ ಇದನ್ನು ಸೂಕ್ಷ್ಮವಾಗಿ ಗಮನಿಸಿದರು. ಮನ ಮರುಗಿತು. ಕಲಿತಿದ್ದ ಅರ್ಥಶಾಸ್ತ್ರ ಬ್ಯಾಂಕಿಗೆ ಕರೆದುಕೊಂಡುಹೋಯಿತು. + +ಆದರೆ, ಬ್ಯಾಂಕಿಗೆ ಬೇಕಾಗಿರುವುದು ಅನುಕೂಲಸ್ಥರು, ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರೇ ಹೊರತು ಬಡವರಲ್ಲ. ಬಡವರ ಬಳಿ ಆಸ್ತಿ, ಪಾಸ್ತಿ ಇಲ್ಲ. ಅವರು ಸಾಲ ತೀರಿಸುತ್ತಾರೆಂಬುದಕ್ಕೆ ಗ್ಯಾರಂಟಿಯೂ ಇಲ್ಲ. ಹಾಗಾಗಿ ಅವರು ಬಡವರಿಗೆ ಸಾಲ ಕೊಡಲಿಲ್ಲ. ಯೂನಸ್ ರ ಅರ್ಥಶಾಸ್ತ್ರ ಬಡವರ ಬವಣೆ ನೀಗಲು ನೆರವಾಗಲಿಲ್ಲ. ಆದರೆ, ಯೂನಸ್ ಹಿಂಜರಿಯಲಿಲ್ಲ. ತಾವೇ ಜಾಮೀನು ನೀಡಿ ಹಳ್ಳಿಯ ನಾಲ್ಕು ಹೆಂಗಸರಿಗೆ ಏಳು ಸಾವಿರ ಸಾಲ ಕೊಡಿಸಿದರು. + +ಇಲ್ಲಿ ಅವರು ನಂಬಿದ್ದು ನಂಬಿಕೆಯನ್ನು, ಹಳ್ಳಿಯ ಹೆಂಗಸರ ಆತ್ಮವಿಶ್ವಾಸವನ್ನು. ಯೂನಸ್ ರ ನಂಬಿಕೆಗೆ ದ್ರೋಹ ಬಗೆಯಲು ಇಚ್ಚಿಸದ ಸಾಲ ಪಡೆದ ಹಳ್ಳಿಯ ಹೆಂಗಸರು ಬಿದಿರು ಖರೀದಿಸಿ, ಬುಟ್ಟಿ ತಯಾರಿಸಿ, ಮಾರಿ ಹಣ ಸಂಪಾದಿಸಿದರು. ಸಾಲ ತೀರಿಸಿದರು. ಯೂನಸ್ ಸ್ಫೂರ್ತಿಗೊಂಡು ಇನ್ನಷ್ಟು ಹೆಂಗಸರಿಗೆ ಸಾಲ ಕೊಡಿಸಿದರು. ಇದು ಹೀಗೆಯೇ ಮುಂದುವರೆಯುತ್ತಿದ್ದಾಗ, ಇದು ಇಷ್ಟಕ್ಕೇ ಸೀಮಿತವಾಗಿ ಮಹತ್ತರವಾದದ್ದು ಏನೂ ಸಾಧಿಸಲಾಗದು ಎಂದರಿತಾಗ ಮತ್ತೆ ತಮ್ಮೊಳಗಿನ ಅರ್ಥಶಾಸ್ತ್ರಜ್ಞ ಎಚ್ಚರವಾದ. ಆ ಎಚ್ಚರದ ಫಲವೇ ಗ್ರಾಮೀಣ ಬ್ಯಾಂಕ್ ಸ್ಥಾಪನೆ. 1983ರಲ್ಲಿ ಬಡವರಿಂದ ಜಾಮೀನು ಕೇಳದೆ ಸಾಲ ನೀಡುವುದಕ್ಕಾಗಿಯೇ ಹುಟ್ಟಿಕೊಂಡದ್ದು ಈ ಗ್ರಾಮೀಣ ಬ್ಯಾಂಕ್. ಇಲ್ಲಿ ನಂಬಿಕೆ, ವಿಶ್ವಾಸ, ಜವಾಬ್ದಾರಿಗಳೇ ಅಡಿಪಾಯ. ಅದಕ್ಕಿಂತಲೂ ಹೆಚ್ಚಾಗಿ ಹಳ್ಳಿಯ ಹೆಂಗಸರೆ ಈ ಬ್ಯಾಂಕಿನ ಉಸ್ತುವಾರಿ ಹೊತ್ತ ಒಡೆಯರು. ಯಾಕೆಂದರೆ, ಗಂಡಸರಿಗಿಂತ ಹೆಂಗಸರು ಹೆಚ್ಚು ನಂಬಿಕಸ್ಥರು ಮತ್ತು ಜವಾಬ್ದಾರಿಯುಳ್ಳವರು ಎಂಬುದು ಯೂನಸ್ ರ ಅನುಭವವಾಗಿತ್ತು. ಮತ್ತು ಹೆಂಗಸರ ಕೈಗೆ ಹಣ ಸಿಕ್ಕರೆ ಅವರು ಸಬಲರಾಗಿ, ಸ್ವತಂತ್ರರಾಗಿ, ಸ್ವಾಭಿಮಾನಿಗಳಾಗಿ ಬದುಕುತ್ತಾರೆ. ತಾವು ಬದುಕುವುದಷ್ಟೇ ಅಲ್ಲ, ತಮ್ಮ ಕುಟುಂಬವನ್ನು, ಆ ಮೂಲಕ ತಮ್ಮ ಹಳ್ಳಿಯನ್ನು ಬದುಕಿಸುತ್ತಾರೆ ಎಂಬುದು ಯೂನಸ್ ರ ನಂಬಿಕೆಯಾಗಿತ್ತು. + +ಯೂನಸ್ ರ ಅಂದಿನ ಆ ಯೋಚನೆ ಗ್ರಾಮೀಣ ಬ್ಯಾಂಕ್ ಗಳ ಮೂಲಕ ಇಂದು ಫಲ ನೀಡಿದೆ. ಇಂದು ಬಾಂಗ್ಲಾದ ಮಹಿಳೆಯರು ಸ್ವಾಭಿಮಾನಿಗಳಾಗಿ ಬದುಕುತ್ತಿದ್ದಾರೆ. ಬಡತನದ ಬಿಗಿಮುಷ್ಟಿಯಿಂದ ಹೊರಬಂದು ದೇಶದ ರಾಜಕೀಯದತ್ತ ಗಮನ ಹರಿಸುತ್ತಿದ್ದಾರೆ. ಪ್ರತಿ ಸಾರ್ವತ್ರಿಕ ಚುನಾವಣೆಗಳಲ್ಲಿ ಹೆಂಗಸರ ಮತ ಚಲಾವಣೆ ಗಂಡಸರಿಗಿಂತ ಹೆಚ್ಚಾಗುತ್ತಿದೆ. ಸಾಮಾಜಿಕ ಪರಿವರ್ತನೆಗೆ ಕಾರಣವಾಗಿದೆ. ಸುಖೀ ಕುಟುಂಬ, ಹೆಂಗಸರಿಗೆ ಸ್ಥಾನಮಾನ ತಂದುಕೊಡುತ್ತಿದೆ. + +ನಾಲ್ಕು ಹೆಂಗಸರಿಗೆ ಸಾಲ ಕೊಡಿಸುವ ಮೂಲಕ ಶುರುವಾದ ಸಾಲ ಯೋಜನೆ ಇಂದು ಹೆಮ್ಮರವಾಗಿ ಬೆಳೆದು ನಿಂತಿದೆ. ಯೂನಸ್ ರ ಗ್ರಾಮೀಣ ಬ್ಯಾಂಕ್ ದೇಶದಾದ್ಯಂತ 2,226 ಶಾಖೆಗಳನ್ನು ಹೊಂದಿ, 6 ಮಿಲಿಯನ್ ಸಾಲಗಾರರಿಗೆ 5.7 ಬಿಲಿಯನ್ ಡಾಲರ್ ಸಾಲ ಕೊಟ್ಟು, 71,371 ಹಳ್ಳಿಗಳಲ್ಲಿ ತನ್ನ ಸೇವೆ ಸಲ್ಲಿಸುತ್ತಿದೆ. ಇದು ಇತರ ದೇಶಗಳಿಗೂ ಮಾದರಿಯಾಗುತ್ತಿದೆ. ಇದನ್ನರಿತ ಬಾಂಗ್ಲಾ ಸರ್ಕಾರ ಈ ಗ್ರಾಮೀಣ ಬ್ಯಾಂಕ್ ಗಳಿಗೆ ಸಹಾಯಹಸ್ತ ನೀಡಿದೆ. ಆದರೆ ಬ್ಯಾಂಕಿನ ಒಡೆತನದಲ್ಲಿ ಸಾಲಗಾರರಾದ ಹಳ್ಳಿಯ ಶೇರುದಾರರದೇ ಸಿಂಹಪಾಲು. ಸರ್ಕಾರದ್ದು ಕೇವಲ ಶೇಕಡ 6ರಷ್ಟು ಒಡೆತನ ಮಾತ್ರ. + +ಇದೆಲ್ಲ ಇವತ್ತು ಪವಾಡದಂತೆ ಕಾಣುತ್ತಿರಬಹುದು. ಒಳ್ಳೆಯದನ್ನು ಒಪ್ಪಿಕೊಳ್ಳುವ ಮನಸ್ಸುಗಳಿಗೆ ಕ್ರಾಂತಿಯಂತೆ ಕಾಣುತ್ತಿರಬಹುದು. ಆದರೆ, ಯೂನಸ್ ರ ಹಳ್ಳಿ ಬದುಕು, ಬಡತನ ಚಿತ್ತಗಾಂಗ್ ವಿಶ್ವವಿದ್ಯಾಲಯ ಕಲಿಸಿದ ಅರ್ಥಶಾಸ್ತ್ರಕ್ಕಿಂತ ಹೆಚ್ಚಿನದನ್ನು ಕಲಿಸಿದೆ. ಬರೀ ಪಾಠ, ಪ್ರವಚನ, ಪೇಪರು, ಸೆಮಿನಾರು, ಚಿಂತನೆ ಮತ್ತು ಬುದ್ಧಿಜೀವಿಗಳ ವಲಯಗಳಲ್ಲಷ್ಟೇ ಕಳೆದುಹೋಗಲಿದ್ದ ಯೂನಸ್ ರನ್ನು ಇಂದು ಬಾಂಗ್ಲಾದ ಕ್ರಾಂತಿಪುರುಷನನ್ನಾಗಿಸಿದೆ. ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯನ್ನೂ ತಂದುಕೊಟ್ಟಿದೆ. ಈ ಗಳಿಗೆಯಲ್ಲಿ, ನಮ್ಮ ನಡುವೆ ನಡೆದಾಡುವ ದೇವರು ಎಂದೇ ಖ್ಯಾತರಾದ ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರಸ್ವಾಮಿಗಳು ಇಂಥದ್ದೇ ಕಾರಣಗಳಿಗಾಗಿ ಜೀವ ಸವೆಸುತ್ತಿರುವುದು ನಮ್ಮ ಗಮನವನ್ನೇಕೆ ಸೆಳೆಯುತ್ತಿಲ್ಲ? + +ಯೂನಸ್ ಬಾಂಗ್ಲಾದಲ್ಲಿ ಬಡತನದ ವಿರುದ್ಧ ಯುದ್ಧ ಸಾರಿ ಗೆದ್ದಿದ್ದಾರೆ. ಅದೇ ರೀತಿ ಇಲ್ಲಿ ಸಿದ್ಧಗಂಗಾ ಶ್ರೀಗಳು ತಮಗಾಗಿರುವ ನೂರ ಮೂರು ವರ್ಷ ವಯಸ್ಸನ್ನೂ ಬದಿಗಿಟ್ಟು, ದೇಹ ಹಣ್ಣಾಗಿದ್ದರೂ ಮರೆತು ಇಂದೂ ಕೂಡ ಜನರ ಒಳಿತಿಗಾಗಿ ಜೀವ ಸವೆಸುತ್ತಿದ್ದಾರೆ. + +ಹಳ್ಳಿಯ ಅತಿ ಬಡ ಕುಟುಂಬದಲ್ಲಿ 1907ರ ಏಪ್ರಿಲ್ 1ರಂದು ಹುಟ್ಟಿದ ಶಿವಣ್ಣ, ತನ್ನ 23ನೇ ವಯಸ್ಸಿನಲ್ಲಿ, 1930ರಲ್ಲಿ ಹಿರಿಯ ಶ್ರೀಗಳಿಂದ ದೀಕ್ಷೆ ಪಡೆದು ತುಮಕೂರಿನ ಸಿದ್ಧಗಂಗಾ ಮಠಕ್ಕೆ ಬಂದು ಶಿವಕುಮಾರ ಸ್ವಾಮಿಗಳಾದವರು. ಇವರು ಮಠಕ್ಕೆ ಬಂದ ಕಾಲಕ್ಕೆ, ಬಲ್ಲವರು ಹೇಳುವ ಪ್ರಕಾರ ಬೆಟ್ಟ ಗುಡ್ಡಗಳೇ ಆಸ್ತಿ, ಪೂಜೆ ಪುನಸ್ಕಾರವೇ ಕಾಯಕ. ಆದರೆ ಶ್ರೀಗಳು ಬಸವಣ್ಣನವರ ಕಾಯಕವೇ ಕೈಲಾಸದಲ್ಲಿ ನಂಬಿಕೆಯಿಟ್ಟವರು. ಅದನ್ನು ಕಾರ್ಯರೂಪಕ್ಕೆ ತಂದವರು. ಅವರ ನಿರಂತರ ದುಡಿಮೆಗೆ ದಿನದ 24 ಗಂಟೆಗಳೆ ನಾಚುವಂತೆ ಕಾಯಕದಲ್ಲಿ ಮುಳುಗಿಹೋದ ಮಹಾನುಭಾವರಿವರು. + + + +ಈ ಎಂಬತ್ತು ವರ್ಷಗಳ ನಿರಂತರ ಸ್ವಾರ್ಥರಹಿತ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಫಲವಾಗಿ ಇಂದು ಸಿದ್ಧಗಂಗಾ ಮಠ ಬೃಹತ್ ಮಠವಾಗಿ ಬೆಟ್ಟದಂತೆ ಬೆಳೆದು ನಿಂತಿದೆ. ಅದೊಂದು ಜಾತಿ ಮಠವಾಗದೆ, ಎಲ್ಲರ ಸದ್ಭಾವನಾ ಮಠವಾಗಿ ಮಾರ್ಪಟ್ಟಿದೆ. ಇಂದು ಮಠದ ಒಡೆತನದಲ್ಲಿ ಹಲವಾರು ಶೈಕ್ಷಣಿಕ ಸಂಸ್ಥೆಗಳು, ಪ್ರಕಾಶನ ಸಂಸ್ಥೆಗಳು, 140ಕ್ಕೂ ಹೆಚ್ಚಿನ ವಿದ್ಯಾಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸಾವಿರಾರು ಮಂದಿಗೆ ಕೆಲಸ ಕೊಡುವ ಮೂಲಕ ಮಠ ಆರ್ಥಿಕವಾಗಿ ಸುಭದ್ರವಾಗಿದೆ. ಇನ್ನು ಮಠದ ಗುರುಕುಲ- ಜಾತಿ ಮತ ಭೇದವಿಲ್ಲದ, ಮೇಲು-ಕೀಳುಗಳ ಹಂಗಿಲ್ಲದ ಸುಮಾರು ಎಂಟು ಸಾವಿರ ಬಡ ವಿದ್ಯಾರ್ಥಿಗಳಿಗೆ ಇಲ್ಲಿ ಉಚಿತ ಅನ್ನ ದಾಸೋಹ, ಜ್ಞಾನ ದಾಸೋಹ, ವಸತಿ ನೀಡಲಾಗುತ್ತಿದೆ. ಇಲ್ಲಿಂದ ಕಲಿತ ಸಾವಿರಾರು ಸುಸಂಸ್ಕೃತ ಯುವಕರು ದೇಶಕ್ಕೆ ಮಠ ನೀಡುತ್ತಿರುವ ಕೊಡುಗೆಯಂತೆ ಕಾಣುತ್ತಿದ್ದಾರೆ. + +ಹೆಚ್ಚಿಗೆ ಮಾತನಾಡದ ಮಾತಿಗಿಂತ ಕೃತಿಯಲ್ಲಿ ನಂಬಿಕೆ ಇಟ್ಟಿರುವ, ಇವತ್ತಿಗೂ ಮೂರ್ನಾಲ್ಕು ಗಂಟೆಗಳ ಕಾಲ ಅಧ್ಯಯನದಲ್ಲಿ, ಹದಿನೆಂಟು ಗಂಟೆಗಳ ಕಾಲ ಕೆಲಸ, ಧ್ಯಾನ, ಜಪ-ತಪ, ಪೂಜೆ, ಪ್ರಾರ್ಥನೆಯಲ್ಲಿ ಮುಳುಗುವ ಶ್ರೀಗಳು ವಿಶ್ರಾಂತಿ ಅಂತ ಪಡೆಯುವುದು ಕೇವಲ ಮೂರು ಗಂಟೆಗಳು ಮಾತ್ರ. ಇವರ ಸ್ವಾರ್ಥರಹಿತ ಸೇವೆ, ಬಡವರ ಬಗೆಗಿನ ಪ್ರೀತಿ, ಆದರ್ಶಮಯ ಬದುಕು- ಸ್ವಾಮೀಜಿ ಎನ್ನಿಸಿಕೊಂಡವರಿಗೆ ಮಾದರಿಯಾಗುವಂಥದು. + +ಈ ಸರಳ ಬದುಕೆ ಶ್ರೀಗಳ ಮಹತ್ ಸಾಧನೆ. ಇಂತಹ ಶ್ರೀಗಳನ್ನು ಶ್ರೇಷ್ಠ ಮಾನವತಾವಾದಿಯಾಗಿ ನೋಡುವಲ್ಲಿ; ಅವರ ನಿಸ್ವಾರ್ಥ ಸೇವೆಗೆ ಸಲ್ಲಲೇಬೇಕಾದ ಅತ್ಯುನ್ನತ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸುವಲ್ಲಿ ನಾವು ಹಿಂದೆ ಬಿದ್ದಿದ್ದೇವೆನಿಸುವುದಿಲ್ಲವೇ? + +`ನಾವು ಉತ್ಪಾದಿಸಿದ್ದನ್ನು ನಾವಷ್ಟೇ ಶೇಖರಿಸಿ ಇನ್ನೊಬ್ಬರು ಹಸಿದ ಹೊಟ್ಟೆಯಲ್ಲಿ ಮಲಗಿದ್ದನ್ನು ಕಂಡು ನಮಗೆ ನಾಚಿಕೆ ಏಕೆ ಆಗುತ್ತಿಲ್ಲ’ ಎಂದು ಕೇಳುವ ಶ್ರೀಗಳು ಯಾವ ಕ್ರಾಂತಿಪುರುಷನಿಗಿಂತ ಕಡಿಮೆ? + +ಈ ಹಣ್ಣಾದ ವಯಸ್ಸಿನಲ್ಲೂ ದಿನಕ್ಕೆ 18 ರಿಂದ 20 ಗಂಟೆಗಳ ಕೆಲಸ ಮಾಡುವ, 8 ಸಾವಿರ ಮಕ್ಕಳಿಗೆ ಊಟ, ವಸತಿ, ಶಿಕ್ಷಣ ನೀಡಿ ದೇಶದ ಸತ್ಪ್ರಜೆಗಳನ್ನಾಗಿ ಮಾಡುತ್ತಿರುವ, ಕಾಯಕವೇ ದೇವರು ಎಂದು ನಂಬಿರುವ, ಗಾಂಧಿಯ ಕನಸಿನ ಭಾರತವನ್ನು ನನಸು ಮಾಡಬೇಕೆಂದು ಹಗಲಿರುಳು ಶ್ರಮಿಸುತ್ತಿರುವ ಶ್ರೀಗಳ ಹೆಸರನ್ನು ನಾವೇಕೆ ನೊಬೆಲ್ ಪ್ರಶಸ್ತಿಗೆ ಶಿಫಾರಸ್ಸು ಮಾಡಬಾರದು? + +ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು. \ No newline at end of file diff --git a/Kenda Sampige/article_549.txt b/Kenda Sampige/article_549.txt new file mode 100644 index 0000000000000000000000000000000000000000..550949e7b77e4c7fc8ecad58d9433a7795f2f633 --- /dev/null +++ b/Kenda Sampige/article_549.txt @@ -0,0 +1,13 @@ +ದೀಪಾವಳಿ ಬಂತಂದ್ರೆ ದಿನಪತ್ರಿಕೆಯ ಸಾಪ್ತಾಹಿಕಗಳಲ್ಲಿ ದೀಪಾವಳಿಯ ಸಾಂಕೇತಿಕ ಅರ್ಥ, ಆಚರಣೆಗಳು, ಆಚರಣೆಗೆಳ ಹಿಂದಿರುವ ಕತೆ ಎಲ್ಲವೂ ದೀಪಾವಳಿಮಯವಾಗಿರುತ್ತದೆ. ಪ್ರತಿ ಬಾರಿಯೂ ಬಂದಿದ್ದೇ ಬರುತ್ತಲ್ಲ ಅನ್ನಿಸುವ ಹೊತ್ತಿಗೆ ದೀಪಾವಳಿ ವಿಶೇಷಾಂಕಗಳು ಮಾತ್ರ ಹೊಸ ಕತೆಗಳನ್ನು, ಕವನಗಳನ್ನು, ಲೇಖನಗಳನ್ನು ಹೊತ್ತುತರುತ್ತೆ. ಹಬ್ಬದ ಗಲಾಟೆ ತಪ್ಪಿಸಿಕೊಂಡು ಕಡುಬೊ, ಹೋಳಿಗೆಯೊ ಜೀರ್ಣಿಸಿಕೊಳ್ಳುತ್ತಾ, ಸೋಮಾರಿಯಾಗಿ ಹಾಸಿಗೆಯ ಮೇಲೆ ಬಿದ್ದುಕೊಂಡು ವಿಶೇಷಾಂಕದೊಳಗೆ ಮೈ ಮರೆಯುವುದಕ್ಕಿಂತ ಸುಖ ಇನ್ಯಾವ ಆಚರಣೆಗಳಲ್ಲಿದೆ ಅನ್ನಿಸಿಬಿಡುತ್ತೆ. + +ಸಿಟಿಯಲ್ಲಿ ಜೀವಿಸುವವರಿಗೆ ಸೇಲ್ಸು, ಗಿಫ್ಟು, ಪಟಾಕಿಗಳ ಶಬ್ದ, ಹೊಗೆ, ಇತ್ಯಾದಿ ದೀಪಾವಳಿ ಸುಖವಾದರೆ ನಮಗೆ ಗೋಪೂಜೆ, ಕಾಯಿ ಬೆಲ್ಲ ತಿನ್ನುತ್ತಾ ಮನೆಮನೆಗೆ ಹೋಗುವುದು, ದನಕರುಗಳ ಪ್ರಸಾದದ ಸರ ಹರಿಯುವುದು, ರಾತ್ರಿ ಹಬ್ಬ ಕಳಿಸುವುದು ಕೊನೆಗೆ ಸರಿರಾತ್ರಿಯಲ್ಲಿ ಹಬ್ಬಾಡುವವರು (ಅಂಟಿಗೆ ಪಂಟಿಗೆ) ಬಂದು ನಿದ್ದೆಗಣ್ಣಲ್ಲಿ ಸಮಾ ಏರಿಸಿಕೊಂಡು ಹಾಡುವಲ್ಲಿಗೆ ನಮ್ಮ ಹಬ್ಬ ಮುಕ್ತಾಯವಾಗುತ್ತದೆ. + +ಮಲೆನಾಡಿನ ಹಬ್ಬಗಳ ಆಚರಣೆಗಳ ಬಗ್ಗೆ ಪತ್ರಿಕೆಗಳಿಗೆ ಏನು ವ್ಯಾಮೋಹವೊ ತಿಳಿಯದು. ಅಂತು ಪ್ರತಿ ಹಬ್ಬದಲ್ಲೂ ಒಂದು ಪೇಪರಲ್ಲಾದ್ರೂ ಕೃಷಿ ಕುಟುಂಬದ ಆಚರಣೆಯ ವಿವರಗಳನ್ನು, ಒಂಥರಾ ನಾಸ್ಟಾಲ್ಜಿಯ ದಾಟಿಯಲ್ಲಿ ಬರೆದಿರ್ತಾರೆ. ಈಗ ಯೋಚಿಸಿದ್ರೆ ಕೃಷಿ ಕುಟುಂಬದಲ್ಲಿ ಹಬ್ಬಗಳ ನಿಜವಾದ ಅರ್ಥ `ಜಾಸ್ತಿ ಕೆಲಸ’ನೇನೊ ಅಂತ ಒಂದು ಗುಮಾನಿ ಬರ್ತಿದೆ. ಹುಡುಗ್ರಿಗೆ ಮಾತ್ರ ಹೊಸಬಟ್ಟೆ, ಪಟಾಕಿ, ಶಾಲೆಗೆ ರಜ. `ಕುರಿ ರೇಟು ಜಾಸ್ತಿಯಾಗಿ ಇಡಿ ಊರಿಗೆ ಒಂದು ಕುರಿ ಕಡಿಯೋದಕ್ಕೆ ಬಂದು ನಿಂತಿದೆ. + +ಮನೆಗೊಂದು ಕೋಳಿ ಕೊಯ್ಯೋದು ಕಷ್ಟವಾಗ್ತಿದೆ. ಇಂತದ್ರಲ್ಲಿ ಏನು ಹಬ್ಬ ಮಾಡದ್ರಿ’ ಅಂತ ಕೆಲವರು ಗೊಣಗ್ತಿರ್ತಾರೆ.  ಹೊಸ ಮದುಮಕ್ಕಳು ಮೊದಲಸಲ ತವರುಮನೆಗೆ ಹಬ್ಬಕ್ಕೆ ಬರೋದಕ್ಕೆ `ಹಬ್ಬಗಾಣಿಕೆ` ಅಂತ ಹೇಳ್ತಾರೆ. ಅಳಿಯನಿಗೆ ಮಗಳಿಗೆ ಉಡುಗೊರೆ ಕೊಡ್ಬೇಕು. ಶ್ರೀಮಂತರ ಮನೆಗಳಲ್ಲಿ ಪೇಟೆಯಲ್ಲಿರೊ ಅಳಿಯ ಮಗಳು ಹೊಸತರದ ದೊಡ್ಡ ಕಾರು ತಂದು ಮನೆಮುಂದೆ ನಿಲ್ಲಿಸಿದ್ರಲ್ಲ ಸ್ವಲ್ಪ ಬೀಗೊಣ ಅಂತ ಹೊರಗೆ ಬಂದ್ರೆ – ಎಲ್ಲರ ಮನೆಯ ಮುಂದೂ ಒಂದಕ್ಕಿಂತ ಒಂದು ವಿಶೇಷವಾದ ಕಾರು ನಿತ್ಕೊಂಡಿರುತ್ತೆ. + +`ಏನ್ರಿ ಹಬ್ಬದ್ದಿನ ಬರೀ ಸಿನಿಕ್ರಾಗಿ ಬರಿತೀದಿರಲ್ಲ` ಅಂತ ಬೈಯ್ಕೊಬೇಡಿ. ಒಲೆ ಮುಂದೆ ಬೆವರು ಸುರಿಸುಸ್ತಾ, ಹೊಗೆ ತಿಂತಾ ಹೋಳಿಗೆ ಮಾಡ್ಬೇಕು, ದನಕ್ಕೆ ಅಡಿಕೆ, ಪಚ್ಚೆತೆನೆ, ಚಂಡುಹೂ ಸಿಂಗಾರದ ಸರ ಮಾಡ್ಬೇಕು, ಕೊಟ್ಟಿಗೆ ತೊಳಿಬೇಕು, ಅಂಗಳ ಬಳಿಬೇಕು ಅಂತೆಲ್ಲ ನಾಳಿನ ಕೆಲಸ ನೆನಪು ಮಾಡ್ಕೊಳ್ತಾ ಇದನ್ನು ಬರೀತಾ ಇದ್ರೆ ಇನ್ನೇನಾಗುತ್ತೆ ಹೇಳಿ. ಮಕ್ಕಳ ಜೊತೆ ಮಕ್ಕಳಾಗುವುದು, ಪಟಾಕಿಯ ಸೌಂದರ್ಯ, ಪೂಜೆಯ ಮಧ್ಯೆ ಮುದನೀಡುವ ಗೋಕಂಬದಲಂಕಾರ, ಮನೆ ಮನೆಯಲ್ಲಿ ದೀಪಕ್ಕೆ ಎಣ್ಣೆ ಹಾಕಿಸಿಕೊಳ್ಳುವ ಹಬ್ಬಾಡುವವರ ಹಾಡುಗಳು, ಎಣ್ಣೆಸ್ನಾನ ಇವುಗಳೆಲ್ಲ ಸೊಗಸಾದ ವಿಷಯಗಳೇ. + +ಪೂಜೆ, ಅಡುಗೆ ಕೆಲಸ, ಪಟಾಕಿಯ ಮಧ್ಯೆ ಯಾವುದೋ ಇದಕ್ಕಾಗಿಯೇ ಅಂತ ಹೇಳೋಕೆ ಬರದ ಕ್ಷಣಗಳಲ್ಲಿ ಮನಸ್ಸು ಹಬ್ಬಕ್ಕೆ ಸಂಭ್ರಮಿಸಿ, ಕತ್ತಲು ತೊಳಿಯೋ ದೀಪ, ನರಕಾಸುರನಂತ ನಮ್ಮೊಳಗಿನ ವಿಲನ್‌ನ ವಧೆ ಮಾಡುವುದು ಮುಂತಾದ ಅರ್ಥಗಳಿಗೆ ತಾಗಿಕೊಂಡಿರೊ ಯಾವುದೊ ಒಂದು ಭಾವ ಸುಳಿಯುತ್ತೆ. ಅದೇ ಹಬ್ಬದ ಖುಷಿ. + +ಕೃತಿ ಹೊಸನಗರ ತಾಲ್ಲೂಕಿನ ಪುರಪ್ಪೇಮನೆ ಗ್ರಾಮದವರು. ಕೃಷಿಕರು. ಬಿಡುವಿನಲ್ಲಿ ಮಹಿಳಾ ತಾಳಮದ್ದಲೆ ತಂಡ, ಭಾಗವತಿಕೆ, ಬರವಣಿಗೆ ಹಾಗೂ ಅನುವಾದದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. \ No newline at end of file diff --git a/Kenda Sampige/article_55.txt b/Kenda Sampige/article_55.txt new file mode 100644 index 0000000000000000000000000000000000000000..3e5bc9048769333238d7670380260a84371daf6b --- /dev/null +++ b/Kenda Sampige/article_55.txt @@ -0,0 +1,11 @@ +ತಮ್ಮ ನುರಿತ ಕಥನ ಕುಶಲತೆಯಿಂದ, ತಮ್ಮದೇ ಆದ ಕಥಾವಿಧಾನದಿಂದ ಅನುಪಮಾ ಪ್ರಸಾದ್ ಅವರನ್ನು ಕನ್ನಡ ಓದುಗರು ಈಗಾಗಲೇ ಬಲ್ಲರು. ಕಥೆ, ಕಾದಂಬರಿ ಮತ್ತು ವ್ಯಕ್ತಿಚಿತ್ರ ನಿರೂಪಣೆಗಳಲ್ಲಿ ಅನುಪಮಾ ತೋರಿರುವ ಗದ್ಯ ಪರಿಣತಿ ಅಪರೂಪದ ಬಗೆಯದು.ಇದೀಗ ಪ್ರಕಟಿಸುತ್ತಿರುವ ‘ಚೋದ್ಯ’ ಕಥಾ ಸಂಕಲನವು ಈ ಅಂಶಗಳನ್ನು ಒಳಗೊಂಡು ಪಕ್ವತೆಯನ್ನು ಸಾಧಿಸಿದ ಕೃತಿಯಾಗಿದೆ. ಇಲ್ಲಿನ ಹದಿಮೂರು ಕಥೆಗಳು ತೆರೆದಿಡುವ ಲೋಕಾನುಭವ ವಿಶಿಷ್ಟ ಬಗೆಯದು. ವಿಭಿನ್ನ ವಸ್ತುವಿಷಯಗಳ ಆಯ್ಕೆ, ಭಾಷೆಯ ಮೇಲಿನ ಬಿಗಿಪು, ಕಥನ ಕ್ರಮ, ಕಥೆಯ ಒಳವಿವರಗಳು, ಪಾತ್ರಗಳ ಸಹಜ ಹಾಗೂ ನಿಯಂತ್ರಿತ ವರ್ತನೆ, ಕಟ್ಟೋಣದಲ್ಲಿ ತೋರುವ ಪರಿಣತಿ ಮತ್ತು ಪ್ರತಿ ಕಥೆಯೂ ತೋರುವ ಜೀವನ ಲೀಲಾವಿಲಾಸಗಳು ಅನುಪಮಾ ಅವರ ಕಥೆಗಳಿಗೆ ಈ ವಿಶಿಷ್ಟತೆಯನ್ನು ತಂದುಕೊಟ್ಟಿವೆ. + +(ಅನುಪಮಾ ಪ್ರಸಾದ್‌) + +ಸಂಕಲನದ ಕಥೆಗಳು ವಿಷಯ, ವ್ಯಾಪ್ತಿ ಹಾಗೂ ಹರಹುಗಳ ದೃಷ್ಟಿಯಿಂದಲೂ ಗಮನಾರ್ಹ. ಅನುಭವದಿಂದ ಮಾಗಿದ ಕಥೆಗಾರ್ತಿಯ ಈ ಬಗೆಯ ಸೂಕ್ಷ್ಮ ಆಯ್ಕೆಯಿಂದಾಗಿ ಸಂಕಲನಕ್ಕೊಂದು ಸಹಜ ವೈವಿಧ್ಯತೆ ದೊರಕಿ ಓದುಗರು ಪ್ರತಿ ಕಥೆಯ ವಾಚನದಲ್ಲಿಯೂ ಹೊಸ ಅನುಭವವನ್ನು ಪಡೆಯಬಲ್ಲರು. ಯಾವುದೇ ಸಂವೇದನಾಶೀಲ ಲೇಖಕ ಇಂಥದ್ದನ್ನು ಸಾಧಿಸುವುದು ಗರಿಮೆಯ ಸಂಗತಿಯೇ. ಇಲ್ಲಿನ ಹದಿಮೂರು ಕಥೆಗಳು ಓದುಗರಿಗೆ ನೀಡುವ ಅನುಭವ, ಲೋಕದೃಷ್ಟಿ, ಆರ್ದ್ರತೆಯ ಸ್ಪರ್ಶದಿಂದಾಗಿ ಅವರು ನಮ್ಯವಾಗಬಲ್ಲರು. ಅರೆಚಣ ಚಿಂತಿತರಾಗಬಲ್ಲರು. ಬದುಕಿನ ಸಾರ್ಥಕತೆ-ನಿರರ್ಥಕತೆ, ಅಸಂಗತತೆ, ಅನಿವಾರ್ಯತೆ, ಅಂತಃಕರಣ-ನಿಸ್ಪೃಹತೆಗಳಂಥ ಬುನಾದಿ ಭಾವಗಳ ಕುರಿತು ಬಹುಕಾಲ ಚಿಂತಿಸಬಲ್ಲರು. ಕಥೆಗಳು ಗ್ರಾಮ, ನಗರ, ಚಿಕ್ಕ ಪಟ್ಟಣ ಹೀಗೆ ಎಲ್ಲಿಯೇ ಜರುಗಲಿ ಅವನ್ನು ಬಹುಪಾಲು ನಡೆಸಿಕೊಡುವುದು ಮಾತ್ರ ಹೆಣ್ಣು ಪಾತ್ರಗಳೇ. ಈ ಹೆಂಗಳೆಯರು ಓದುಗರಲ್ಲಿ ಮೇಲಿನ ಎಲ್ಲ ಭಾವಗಳನ್ನು ಹುಟ್ಟಿಸಿ ಮನಸ್ಸು ತೇವಗೊಳ್ಳುವಂತೆ ಮಾಡಬಲ್ಲರು. + + + +ಸಂಕಲನದ ಕಥೆಗಳು ಒಂದಕ್ಕಿಂತ ಒಂದು ಅರ್ಥಪೂರ್ಣವಾಗಿವೆ. ಮೊಲ್ಲೆ ಹೂ ಮಾದೇವಿಯ ಮೀಮಾಂಸೆಗಳು, ಮೋಳಜ್ಜಿಯ ಚೋದ್ಯಗಳು, ಸ್ಯಾನಿಟರಿ ಪ್ಯಾಡ್, ಕಳಚಿದ ಬೇರು, ಕುಂತ್ಯಮ್ಮಳ ಮಾರಾಪು, ಮಥಾಯ್ ಡಾಕ್ಟರನ ಧರ್ಮಸಂಕಟ ಥರದ ಕಥೆಗಳು ಒಡ್ಡುವ ಅನುಭವ ಮತ್ತು ಪರಿಣಾಮ ಮೇಲುಸ್ತರದ್ದವು. ಹೆಚ್ಚಿಗೇನು, ಅನುಪಮಾ ಪ್ರಸಾದ್ ನಮ್ಮ ಕಾಲದ ವಿಶಿಷ್ಟ ಸಂವೇದನೆಯುಳ್ಳ ಲೇಖಕಿಯಾಗಿದ್ದಾರೆ. ಅವರು ಹೆಣ್ಣಾಗಿರುವುದರಿಂದ ಕಥೆಗಳಿಗೆ ಹೊಸಬಗೆಯ ಚೆಲುವು ಮತ್ತು ಜೀವನದೃಷ್ಟಿ ಪ್ರಾಪ್ತವಾಗಿವೆ. ಅವರ ಕಥೆಗಳಿಗೆ ನನ್ನಂಥವರು ಬರೆವ ಮಾತುಗಳು ಕೇವಲ ಔಪಚಾರಿಕ. ಇಂಥವುಗಳ ಅಗತ್ಯವಿಲ್ಲದೆ ಅವು ಸಹಜವಾಗಿ ಘಮಿಸುವಂಥವು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_550.txt b/Kenda Sampige/article_550.txt new file mode 100644 index 0000000000000000000000000000000000000000..d5fb41a757a16e4242ac32731ce88a8af1e466de --- /dev/null +++ b/Kenda Sampige/article_550.txt @@ -0,0 +1,21 @@ +ಈಗ ಹೇಳಲಿರುವುದಕ್ಕೆ ಒಂದು ಮುನ್ನುಡಿಯ ಅಗತ್ಯವೇ ಇಲ್ಲ. ನಿಮಗಿದು ತಟ್ಟನೆ ಗೊತ್ತಾಗಿಬಿಡುತ್ತದೆ ಅನ್ನುವ ದಟ್ಟ ನಂಬಿಕೆ ನನಗಿದೆ. ಏನೇ ಆಗಲಿ ನೇರವಾಗಿ ನಡೆದುದಕ್ಕೆ ಬರ್ತೀನಿ. + +ನೀವು ಗಡಿಬಿಡಿಯಲ್ಲಿ ಹೋಗುತ್ತಿರುವಾಗ ಬೀದಿಯಲ್ಲಿ ನಿಮಗೊಂದು ಕಾಗದ ಬಿದ್ದಿರುವುದು ಕಣ್ಣಿಗೆ ಬೀಳುತ್ತದೆ. ಅದನ್ನು ಕಡೆಗಣಿಸಿ ಒಂದೆರಡು ಹೆಜ್ಜೆ ಮುಂದೆ ಹೋದೊಡನೆ ಆ ಇನ್ಲಾಂಡ್ ಲೆಟರ್‍ ಮೇಲೆ ಬರೆದಿದ್ದ ಹೆಸರು ನಿಮಗೆ ಪರಿಚಿತ ಎಂದು ಹೊಳೆಯುತ್ತದೆ. ಥಟ್ಟನೆ ನಿಲ್ಲುತ್ತೀರ. ನಿಮ್ಮ ಹಳೆಯ ಸಂಗಾತಿಯೊಬ್ಬರ ಹೆಸರು ಪತ್ರದ ಇಂದ ಎಡೆಯಲ್ಲಿ ಗೀಚಿದೆ. ಆದರೆ ಬರೇ ಹೆಸರಿದೆ, ವಿಳಾಸವಿಲ್ಲ. ಒಂದು ಕ್ಷಣ ಕೈಯಲ್ಲಿ ಪತ್ರ ಹಿಡಿದು ಏನು ಮಾಡುವುದೆಂದು ತೋಚದೆ ನಿಲ್ಲುತ್ತೀರ. ಆಗಷ್ಟೇ ಬೀಳಿಸಿಕೊಂಡು ಹೋಗಿರಬಹುದೆಂದು ಅತ್ತಿತ್ತ ನೋಡುತ್ತೀರ. ಯಾರೂ ಕಾಣುವುದಿಲ್ಲ. ಅಷ್ಟರಲ್ಲಿ ಪತ್ರದ ಮೇಲೆ ಚಪ್ಪಲಿ, ಶೂಸಿನ ಗುರುತು ನೋಡಿ ಎಷ್ಟೋ ಹೊತ್ತಿಂದ ಬಿದ್ದಿರಬೇಕು ಎಂದು ನಿಮ್ಮ ಅರಿವಿಗೆ ಬರುತ್ತದೆ. ಗೆ-ವಿಳಾಸ ನೋಡುತ್ತೀರ. ಹೆಸರು ಪರಿಚಯವಿಲ್ಲ. ಆದರೆ ವಿಳಾಸ ಮಾತ್ರ ಹತ್ತಿರದಲ್ಲೆಲ್ಲೂ ಇಲ್ಲವಲ್ಲ ಎಂದು ಆಶ್ಚರ್ಯವಾಗಿ ಏನು ಮಾಡುವುದೆಂದು ತೋಚುವುದಿಲ್ಲ. ನಿಮಗಿದ್ದ ಗಡಿಬಿಡಿ ಮತ್ತೆ ನೆನಪಾಗಿ ಪತ್ರವನ್ನು ಬ್ಯಾಗಲ್ಲಿ ತುರುಕಿಕೊಂಡು ಹೊರಟುಬಿಡುತ್ತೀರ. + +ದಿನವೆಲ್ಲಾ ಬಿಡುವಿಲ್ಲದೆ ಆ ಪತ್ರವನ್ನು ನೋಡಲು ಸಂಜೆಯವರೆಗೂ ನಿಮಗೆ ಸಾಧ್ಯವೇ ಆಗುವುದಿಲ್ಲ. ಕೆಲಸ ಮುಗಿಸಿ ನೇರ ಮನೆಗೆ ಬಸ್ಸು ಹತ್ತುವ ಬದಲು, ಬಸ್ಟಾಂಡಿನ ಪಕ್ಕದ ಹೋಟೆಲಿಗೆ ನುಗ್ಗುತ್ತೀರ. ಮೂಲೆಯಲ್ಲಿ ಒಂದು ಜಾಗ ನೋಡಿ ಕೂರುತ್ತೀರ. ಕಾಫಿ ಆರ್ಡರ್‍ ಮಾಡಿ ಬ್ಯಾಗಿಂದ ಪತ್ರ ತೆಗೆದು ನೋಡುತ್ತೀರ. ಪತ್ರ ಒಡೆದಿದೆ. ಒಂದು ಕ್ಷಣ ನಿಮಗೆ ಪತ್ರ ನೋಡುವುದು ಸರಿಯೇ ತಪ್ಪೇ ಎಂದು ತಾಕಲಾಟವಾಗುತ್ತದೆ. ಒಂದು ಕ್ಷಣವಷ್ಟೇ. ಹೇಗೋ ಅದನ್ನು ಬಗೆಹರಿಸಿಕೊಂಡು ಬಿಡುತ್ತೀರ. ಪತ್ರವನ್ನು ತೆರೆಯುತ್ತೀರ. ಅಷ್ಟರಲ್ಲಿ ಕಾಫಿ ಬರುತ್ತದೆ. ಕಾಫಿ ತಂದಿಟ್ಟವ ಒಂದು ಕ್ಷಣ ನಿಮ್ಮ ಕೈಯಲ್ಲಿರುವ ಪತ್ರದ ಮೇಲೆ ಕಣ್ಣು ಹಾಯಿಸಿದಂತೆ ಭಾಸವಾಗುತ್ತದೆ. ಕಸಿವಿಸಿಯಾದರೂ ತೋರಗೊಳ್ಳದೆ, ಓದಿ ಮುಗಿಸಿದವರಂತೆ ನಟಿಸಿ, ಅನುಮಾನ ಬರದ ಹಾಗೆ, ಸಹಜವಾಗಿ ಪತ್ರವನ್ನು ಮಡಚಿ ಮತ್ತೆ ಬ್ಯಾಗಿಗೆ ಸೇರಿಸಿಬಿಡುತ್ತೀರ. + +ನಿಮಗೆ ಪತ್ರ ಓದಲು ಅಲ್ಲಿಯವರೆಗಿದ್ದ ಧೈರ್ಯ ಯಾಕೋ ಪಕ್ಕನೆ ಆವಿಯಾಗಿ ಹೋಗುತ್ತದೆ. ಅದರಲ್ಲಿ ನಿಮ್ಮ ಬಗ್ಗೆ ಏನೋ ಇರಬಹುದೆಂಬ ಚಿಂತೆ ಕಾಡುತ್ತದೆ. ಆ ಚಿಂತೆ ಎಷ್ಟು ಬುಡವಿಲ್ಲದ್ದು ಎಂದು ಹೊಳೆದು ನಿಮಗೇ ನಗು ಬರುತ್ತದೆ. ಓದಿಯೇ ಬಿಡಬೇಕು ಎಂದು ಮತ್ತೆ ಬ್ಯಾಗಿಗೆ ಕೈ ಹಾಕುವಾಗ ಕಾಫಿ ಕೊಟ್ಟವ ನಿಮ್ಮ ಬಿಲ್ ಹಿಡಿದು ಬರುತ್ತಿರುವುದು ಕಾಣುತ್ತದೆ. ಕೈ ಮತ್ತೆ ಹಿಂಜರಿಯುತ್ತದೆ. ನಿಮಗೆ ಮಾಡುತ್ತಿರುವುದು ತಪ್ಪು ಅನಿಸಿ ಬಿಟ್ಟಿದೆ. ಆ ತಪ್ಪನ್ನು ಇನ್ನೊಬ್ಬರ ಮುಂದೆ ಮಾಡಲು ನಿಮ್ಮಿಂದ ಸಾಧ್ಯವೇ ಇಲ್ಲ. ಹೋಟೆಲಿನವ ನಿಮಗೆ ಪರಿಚಯವೇ ಇಲ್ಲದಿರಬಹುದು. ಆದರೂ ನಿಮಗೆ ಅದೇನೋ ಮುಜುಗರ. + +ಇಲ್ಲಿ ಬೇಡ ಮನೆಗೆ ಹೋಗಿಯೇ ನೋಡೋಣ ಎಂಬ ನಿರ್ಧಾರಕ್ಕೆ ಬಂದು ಬಸ್ಸು ಹತ್ತುತ್ತೀರ. ಮನೆ ಸೇರಿದೊಡನೆ ನಿಮ್ಮ ಒಡನಾಡಿ “ಯಾಕೆ ಇಷ್ಟು ಲೇಟು ಈವತ್ತು? ಯಾರೋ ನಿನ್ನನ್ನ ಕೇಳಿಕೊಂಡು ಬಂದಿದ್ದರು. ಯಾವುದೋ ಕಾಗದ ನಿನ್ನ ಹತ್ತಿರ ಇದೆಯಂತೆ. ಇಸಕೊಂಡು ಹೋಗಬೇಕು ಅಂದರು. ನಾಳೆ ಬೆಳಿಗ್ಗೆ ಬರ್ತೀನಿ ಅಂದರು.”  ನಿಮಗೆ ಸಿಡಿಲು ಹೊಡೆದಂತಾಗಿದ್ದನ್ನು ಗಮನಿಸಿ “ಯಾರದು? ಏನು ಪತ್ರ?” ಎಂದು ನಿಮ್ಮ ಒಡನಾಡಿ ಕೆದಕಿ ಕೇಳುವುದು ನಿಮಗೆ ಇಷ್ಟವಾಗುವುದಿಲ್ಲ. ರಪ್ಪನೆ ಎಲ್ಲಿಲ್ಲದ ಸಿಟ್ಟಿನಿಂದ “ನನಗೇನು ಗೊತ್ತು? ನನ್ನ ಹತ್ತಿರ ಯಾವ ಪತ್ರಾನೂ ಇಲ್ಲ…” ಎಂದು ಸ್ವಲ್ಪ ಅತಿಯಾಗಿಯೇ ಕೂಗುತ್ತೀರ. ಆಮೇಲೆ ಕೊಂಚ ಮೆದುವಾಗಿ ಮತ್ತೆ ಸ್ತಿಮಿತಕ್ಕೆ ಬಂದವರಂತೆ “ಬಂದವರು ಹೇಗಿದ್ದರು? ಹೆಸರು ಹೇಳಿದರ?” ಎಂದು ನೀವು ಕೇಳತೊಡಗುತ್ತೀರ. ನಿಮ್ಮ ಒಡನಾಡಿ “ಹಳೇ ಸ್ಕೂಲು ಮೇಷ್ಟರ ಥರ ಇದ್ದರು. ಹೆಸರು ಹೇಳಲಿಲ್ಲ…” ಎಂದುದು ಕೊಂಚ ಹೊತ್ತಿನ ಮುಂಚಷ್ಟೆ ನಿಮ್ಮ ಸಿಡಿಮಿಡಿಯಿಂದ ಬೇಸತ್ತು ಆಡಿದ ಮಾತಾಗಿ ನಿಮಗೆ ತೋರುತ್ತದೆ. ಸರಾಗವಾಗಿದ್ದ ಬದುಕು ಒಂದು ದಿನದಲ್ಲಿ ಇಷ್ಟೆಲ್ಲಾ ಗೋಜಲಾಗಬಹುದು ಅಂತ ನೀವು ಅಂದುಕೊಂಡೇ ಇರಲಿಲ್ಲ ಅಲ್ಲವೆ? + + + +ನಿಮಗೆ ಆ ಪತ್ರ ಸಿಕ್ಕಿದ್ದು ಬಂದವರಿಗೆ ಹೇಗೆ ಗೊತ್ತಾಯಿತು ಎಂದು ಬಹಳೇ ಯೋಚಿಸುತ್ತೀರ. ನಿಮ್ಮನ್ನು ಯಾರಾದರೂ ಹಿಂಬಾಲಿಸುತ್ತಿದ್ದಿರಬಹುದಾ ಅಥವಾ ನಿಮ್ಮನ್ನು ಪರೀಕ್ಷೆಗೆ ಒಳಪಡಿಸಿರಬಹುದಾ ಅಂತ ಏನೇನೋ ಯೋಚನೆಗಳು ನಿಮಗೆ. ಆ ಯೋಚನೆಯಲ್ಲೇ ಇಡೀ ಇರುಳು ನಿದ್ದೆಯಿಲ್ಲದೆ ಕಳೆಯುತ್ತೀರ. ಪತ್ರದ ಮೇಲೆ ಹೆಸರಿರುವ ನಿಮ್ಮ ಸಹಪಾಠಿಯ ನೆನಪು ಮರುಕಳಿಸುತ್ತದೆ. ನೀವೆಲ್ಲಾ ಟೀಚರಿಗೆ ಹೆದರಿ ಯಾವುದನ್ನು ಮಾಡುತ್ತಿರಲಿಲ್ಲವೋ ಅದೆಲ್ಲವೂ ನಿಮ್ಮ ಸಹಪಾಠಿಗೆ ಮಾಡಬೇಕು. ಬೈಸಿಕೊಂಡು. ಪೆಟ್ಟು ತಿಂದು. ತಂದೆ ತಾಯಂದಿರು ಬಂದು ಹೆಡ್‌ಮಾಸ್ಟರ್‍ ರೂಮಿನಲ್ಲಿ ತಲೆ ತಗ್ಗಿಸಿ ನಿಂತರೂ, ಮರುಕ್ಷಣ ಏನೂ ಆಗದಂತೆ ನಿಮ್ಮೆಲ್ಲರ ಜತೆ ಆಟಕ್ಕೆ ಸೇರಿಕೊಂಡು ಚೀರಾಡುವುದು ನಿಮ್ಮ ಸಹಪಾಠಿಯ ಜಾಯಮಾನ. ನಿಮಗೆ ಅಂದಿನಿಂದ ಇಂದಿಗೂ ಅರ್ಥವಾಗದೇ ಇರುವುದು, ನಿಮ್ಮ ಸಹಪಾಠಿ ಹಾಗಿರುವುದಕ್ಕೆ ಹೇಗೆ ಸಾಧ್ಯ ಎಂದು. ಏನೆಲ್ಲಾ ಅವಮಾನವಾಗಿ ಮರುಕ್ಷಣ ಮರೆಯುವುದು ಯಾರಿಗಾದರೂ ಹೇಗೆ ಸಾಧ್ಯ ಎಂದು. ಎಷ್ಟೋ ಸಲ ತಪ್ಪಿಲ್ಲದೆಯೂ ಶಿಕ್ಷೆಗೆ, ಅವಮಾನಕ್ಕೆ ಒಳಗಾಗಿ ನಿಮಗೆಲ್ಲಾ ಕನಿಕರ ಹುಟ್ಟಿದರೂ, ಆ ಸಹಪಾಠಿ ಮಾತ್ರ ಅದು ಯಾರಿಗೋ ಆಗಿದ್ದು ಎನ್ನುವಂತೆ ನಿಮ್ಮೆಲ್ಲರ ಬಳಿ ನಗುತ್ತಲೇ ಇರುವುದು ಒಂದು ದೊಡ್ಡ ವಿಸ್ಮಯವಾಗಿ ಕಾಣುತ್ತಿತ್ತು. ನಿಮಗಷ್ಟೇ ಅಲ್ಲ, ನಿಮ್ಮ ಕ್ಲಾಸಿನವರಿಗೆಲ್ಲಾ ಹಾಗೇ ಅನಿಸಿದೆ. ನಿಮಗಂತೂ ಈಗಲೂ ಹಾಗೇ ಅನಿಸುತ್ತದೆ. ಅವೆಲ್ಲಾ ಬಗೆಹರಿಯದೇ ಇರುವಾಗ ಈಗ ರಸ್ತೆಯಲ್ಲಿ ಸಿಕ್ಕ ಪತ್ರದ ಮೇಲೆ ಅದೇ ಸಹಪಾಠಿಯ ಹೆಸರು. ಅದನ್ನು ಕೇಳಿಕೊಂಡು ವಯಸ್ಸಾದ ಮೇಷ್ಟರಂತವರು ಬಂದು ಹೋಗಿರುವುದು. ಯಾವುದಕ್ಕೂ ತಲೆಬುಡವಿಲ್ಲ ಎಂದು ನಿಮಗೆ ಅನಿಸುತ್ತದೆ. + +ಬೆಳಿಗ್ಗೆ ಎದ್ದು “ಅವರು ಮತ್ತೆ ಬಂದರೆ ನಿಮ್ಮ ಪತ್ರ ಸಿಗುತ್ತದೆ ಎಂದಷ್ಟೆ ಹೇಳು” ಎಂದು ನಿಮ್ಮ ಒಡನಾಡಿಗೆ ಹೇಳಿ ಹೆಚ್ಚು ವಿವರಿಸದೆ ಹೊರಟು ಬಿಡುತ್ತೀರ. ಪತ್ರವನ್ನು ಮತ್ತೊಂದು ಕವರಿನೊಳಗೆ ಹಾಕಿ, ಅದರ ಮೇಲೆ ಪತ್ರದ ಮೇಲಿರುವ ಹಾಗೆ ವಿಳಾಸ ಬರೆದು ಪೋಸ್ಟ್ ಮಾಡಿಬಿಡುತ್ತೀರ. ನಿಮಗೆ ಭಯವಾಗುವಷ್ಟು ನಿರಾಳ ಆವರಿಸುತ್ತದೆ. ಆ ನಿರಾಳದ ಆಳದಲ್ಲಿ ಆ ಪತ್ರ ಓದಬೇಕಿತ್ತು ಎಂಬ ಒಂದು ಸಣ್ಣ ಚಡಪಡಿಕೆ ನಿಮ್ಮ ಅರಿವಿಗೆ ಬರುತ್ತದೆ. + +ಸಂಜೆ ಮನೆಗೆ ಬಂದಾಗ “ಪತ್ರ ಕೇಳಿಕೊಂಡು ಬಂದಿದ್ದರು. ನೀನು ಕಳಿಸುತ್ತೀಯ, ಸಿಗತ್ತೆ ಹೋಗಿ ಎಂದು ಹೇಳಿದೆ. ಅವರಿಗೆ ತುಂಬಾ ನೆಮ್ಮದಿಯಾಯಿತು.” ಎಂದು ಹಲವು ನಿಮಿಷಗಳೇ ಒಡನಾಡಿ ನಿಮ್ಮನ್ನು ದಿಟ್ಟಿಸುವುದು ನಿಮಗೆ ಅಸಹಜ ಅನಿಸುವುದಿಲ್ಲ. ಕೊನೆಗೆ ನೀವು ಇನ್ನೇನು ಪ್ರಶ್ನೆ ಕೇಳದೇ ಇರಬಹುದು ಎಂದು ಮುಂದುವರಿಸುತ್ತಾ ನಿಮ್ಮ ಒಡನಾಡಿ “ಅವರ ಮಗನ ಕಾಗದ ಅಂತೆ ಅದು. ತನ್ನನ್ನು ಕೊಂದುಕೊಳ್ಳುವ ಮುಂಚೆ ಬರೆದ ಕಡೆಯ ಕಾಗದವಂತೆ. ಏನೂ ತಪ್ಪು ಮಾಡದೆ ಜೈಲಾಗಬಹುದು ಎಂದು ಹೆದರಿಕೊಂಡಿದ್ದನಂತೆ. ಅವಮಾನವಾಗುತ್ತದೆ ಎಂದು ನೇಣು ಹಾಕಿಕೊಂಡನಂತೆ” ಎನ್ನುವುದು ಕೇಳಿ ನಿಮ್ಮ ಇಡೀ ಜೀವ ಗಾಜಿನಂತೆ ಒಡೆದು ಹೋದಂತೆ ಅನಿಸುತ್ತದೆ. ನಿಮ್ಮ ಮುಖದ ಮೇಲೆ ಮೂಡಬಹುದಾದ ಭಾವಕ್ಕಾಗಿ ನಿಮ್ಮ ಒಡನಾಡಿ ಕಾಯುವುದು ನಿಮಗೆ ಕಸಿವಿಸಿಯಾಗುತ್ತದೆ. ನಿಮ್ಮಲ್ಲಿ ಕೊಂಚವೇ ಉಳಿದಿದೆ ಎಂದು ನೀವು ಆಶಿಸುವ ಸಮತೋಲ ಸೋರಿಹೋಗದಂತೆ ಏನೇನೋ ಮಾಡುತ್ತಾ ಮುಖ ತೊಳೆಯಲು ನಡೆದುಬಿಡುತ್ತೀರ. ಕನ್ನಡಿಯಲ್ಲಿ ನೋಡಿಕೊಳ್ಳುತ್ತಾ ಇನ್ನೂ ನಾನು ಮುರಿದಿಲ್ಲ ಎಂದು ಮತ್ತೆ ಮತ್ತೆ ಹೇಳಿಕೊಳ್ಳುತ್ತೀರ. ಎಷ್ಟೇ ತಪ್ಪೆನಿಸಿದರೂ ಒಮ್ಮೆ ಪತ್ರ ತೆಗೆದು ಓದಬೇಕಾಗಿತ್ತು ಎಂದೂ ಒಳಗೊಳಗೇ ಹಲವು ದಿನ ಕರುಬುತ್ತೀರ. + +ಮುಂದೆ ನೀವೇನು ಮಾಡಬಹುದು ಎಂಬುದನ್ನು ನಿಮ್ಮ ಊಹೆಗೇ ಬಿಡುತ್ತೇನೆ. ಏಕೆಂದರೆ ನೀವು ಅಪ್ಪಟ ಮತ್ತು ವಿವೇಕಿ ಅನ್ನುವ ನಂಬಿಕೆ ನನ್ನದು. + +ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು. \ No newline at end of file diff --git a/Kenda Sampige/article_551.txt b/Kenda Sampige/article_551.txt new file mode 100644 index 0000000000000000000000000000000000000000..4b95d45fbf3a660bbf6a9b578ee25f4ac0a09f30 --- /dev/null +++ b/Kenda Sampige/article_551.txt @@ -0,0 +1,45 @@ +ಎರಡು ವರ್ಷ- ಕಳೆದುಹೋಗಿದ್ದೇ ಗೊತ್ತಾಗಲಿಲ್ಲ. ಅವರು ‘ಇಲ್ಲ’ ಎನ್ನುವುದನ್ನು ನಂಬಲಿಕ್ಕೂ ಆಗುತ್ತಿಲ್ಲ. ಅವರಿದ್ದದ್ದೇ ಹಾಗೆ- ಸದ್ದಿಲ್ಲದೆ, ಸುದ್ದಿಯಾಗದೇ. ತಮ್ಮ ಪಾಡಿಗೆ ತಾವು ಗಿಡಗಂಟೆಕುಂಟೆಗಳ ನಡುವೆ. ಎರಡು ವರ್ಷಗಳ ಹಿಂದೆ, ಇದೇ ಏಪ್ರಿಲ್ ಐದರಂದು ದೂರದ ಮಲೆನಾಡಿನ ಮಡಿಲಿನಲ್ಲಿರುವ ಮೂಡಿಗೆರೆಯಿಂದ ಎದ್ದುಬಂದ ‘ತೇಜಸ್ವಿ ಇನ್ನಿಲ್ಲ’ ಎಂಬ ಸುದ್ದಿ ಕನ್ನಡಿಗರನ್ನು ಕ್ಷಣ ಖಿನ್ನತೆಗೆ ದೂಡಿತ್ತು. ಮೂಡಿಗೆರೆಯ ಮೂಲೆಯಲ್ಲಿ, ಮೂಡಿಗೆರೆಯ ಜನಕ್ಕೇ ಗೊತ್ತಿಲ್ಲದಂತೆ ಬದುಕುತ್ತಿದ್ದ ಬಿರಿಯಾನಿ ಕರಿಯಪ್ಪನನ್ನು ಕರ್ನಾಟಕಕ್ಕೇ ಪರಿಚಯಿಸಿದ ತೇಜಸ್ವಿ, ಕಾಕತಾಳೀಯವೆಂಬಂತೆ, ತಮ್ಮ ಕೊನೆಯ ಊಟಕ್ಕೆ ಆಯ್ಕೆ ಮಾಡಿಕೊಂಡದ್ದೂ ಕೂಡ ಬಿರಿಯಾನಿಯನ್ನೇ. ತೇಜಸ್ವಿಯವರ ವಿಶೇಷವಿದ್ದದ್ದೇ ಕರಿಯಪ್ಪನಂತಹ ಕ್ಯಾರೆಕ್ಟರ್‌ಗಳನ್ನು ಕಂಡಿರಿಸುವಲ್ಲಿ. ಕರ್ನಾಟಕಕ್ಕೆ ಪರಿಚಯಿಸುವಲ್ಲಿ. + +ತೇಜಸ್ವಿಯವರ ವ್ಯಕ್ತಿತ್ವವೇ ಅಂಥಾದ್ದು. ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕುತ್ತಲೇ ತಮ್ಮ ಸೃಜನಶೀಲ ಪ್ರತಿಭೆಯನ್ನು ಹತ್ತು ಹಲವು ಕ್ಷೇತ್ರಗಳಲ್ಲಿ ಹರಿಯಬಿಟ್ಟವರು. ಉಡಾಫೆಯ ವ್ಯಕ್ತಿಯಂತೆ ಕಾಣುತ್ತಿದ್ದರೂ ತಮ್ಮ ಗಂಭೀರ ಸಂಸ್ಕೃತಿ ಚಿಂತನೆಗಳಿಂದ ಕನ್ನಡಿಗರ ಮನದಲ್ಲಿ ಛಾಪು ಒತ್ತಿದವರು. ಕೃಷಿ, ಕಾಡು, ಕಣಿವೆಗಳಲ್ಲಿ ಕಂಡುಂಡ ಅನುಭವದ್ರವ್ಯವನ್ನು ಬರಹಕ್ಕೆ ತಂದು ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದವರು. ಸಮಾಜವಾದಿ ಹೋರಾಟ, ರೈತ ಸಂಘಟನೆ, ಪ್ರಗತಿಪರ ನೋಟ, ವೈಜ್ಞಾನಿಕ ವಿಶ್ಲೇಷಣೆಗಳನ್ನು ಸರಳ ಕನ್ನಡಕ್ಕಿಳಿಸಿ ಕನ್ನಡದ ಓದುಗ ವಲಯವನ್ನು ವಿಸ್ತರಿಸಿದವರು. + +ಇಂತಹ ಸಂಸ್ಕೃತಿಕೇಂದ್ರಿತ ಲೇಖಕ ಈ ಕ್ಷಣದಲ್ಲಿ ಯಾಕೆ ನೆನಪಾದರೆಂದರೆ, ನಾನೂ ಕೂಡ ಅವರು ಕಂಡಿರಿಸಿದ ಕರಿಯಪ್ಪನಂತಹ ಕ್ಯಾರೆಕ್ಟರ್‌ಗಳಲ್ಲಿ ಒಬ್ಬನಾದ್ದರಿಂದ. ನಾನು ಅವರ ಬರಹಕ್ಕೆ ವಸ್ತುವಾಗಲಿಲ್ಲ, ವಶವಾದೆ. ಚನ್ನರಾಯಪಟ್ಟಣದಂತಹ ಪುಟ್ಟ ಊರಲ್ಲಿ ತೇಜಸ್ವಿಯವರ ಬರಹಗಳಿದ್ದ ‘ಪತ್ರಿಕೆ’ ಮಾರುತ್ತಾ, ಅವರು ಬರೆದದ್ದನ್ನು ಬೆರಗಿನಿಂದ ಓದುತ್ತಾ, ಕುವೆಂಪುರವರ ಮಗ ತೇಜಸ್ವಿಯನ್ನು ಬೆಟ್ಟದಂತೆ ಭಾವಿಸಿದವನು. ಮುಂದೊಂದು ದಿನ ಆ ಬೆಟ್ಟದೊಂದಿಗೆ ಬೆರೆಯುತ್ತೇನೆ ಎಂದು ಕನಸಿನಲ್ಲಿಯೂ ಕಂಡಿರಲಿಲ್ಲ. ಅದು ಕೈಗೂಡಲು ಕಾರಣ ಲಂಕೇಶರು ಮತ್ತವರ ಪತ್ರಿಕೆ. + +ಲಂಕೇಶ್ ಪತ್ರಿಕೆಯ ಬಳಗದಲ್ಲಿ ತೇಜಸ್ವಿಯವರಿಗೆ, ಅವರ ಸಮಕಾಲೀನರಾದ ಲಂಕೇಶರು, ಶ್ರೀನಿವಾಸಗೌಡ್ರು, ರಾಮದಾಸ್, ಶ್ರೀರಾಮ್, ಎಚ್ಚೆಲ್ಕೆ ಸ್ನೇಹಿತರಾದರೆ, ಪತ್ರಿಕೆಯನ್ನು ರೂಪಿಸುತ್ತಿದ್ದ ಸಂಪಾದಕೀಯ ಬಳಗದಲ್ಲಿ ಸತ್ಯಮೂರ್ತಿ ಆನಂದೂರು ಅವರನ್ನು ಕಂಡರೆ ಹೆಚ್ಚು ಇಷ್ಟ. ಸತ್ಯಮೂರ್ತಿಯವರ ಸಂಕೋಚ ಸ್ವಭಾವ, ವಸ್ತುನಿಷ್ಠ ಬರವಣಿಗೆ, ಪ್ರಾಮಾಣಿಕತೆ, ಪತ್ರಿಕೆಯನ್ನು ಪ್ರಾಣದಂತೆ ಪ್ರೀತಿಸುತ್ತಿದ್ದ ಪರಿ ತೇಜಸ್ವಿಯವರಿಗೆ ಇಷ್ಟವಾಗಿರಬಹುದು. ಮಲೆನಾಡಿನವರು ಎಂಬ ಕಾರಣಕ್ಕೆ ಅದು ಇನ್ನಷ್ಟು ಇಂಟಿಮೆಸಿಗೆ ಕಾರಣವಾಗಿರಲೂಬಹುದು. ಅಂತೂ ಸತ್ಯಮೂರ್ತಿಯವರೊಂದಿಗೆ ತೇಜಸ್ವಿಯವರಿಗೆ ನಿಕಟ ಸಂಪರ್ಕವಿತ್ತು. ಸತ್ಯಮೂರ್ತಿಯೂ ಅಷ್ಟೆ, ತೇಜಸ್ವಿಯವರನ್ನು ಬಹಳವಾಗಿ ಮೆಚ್ಚುತ್ತಿದ್ದರು. + +ಆ ಸಂದರ್ಭವೇ ಅಂತಹ ಒಂದು ಸಹಮನಸ್ಕ ಗುಂಪಿನ ಸೃಷ್ಟಿಗೆ ಕಾರಣವಾಗಿತ್ತು. ಲಂಕೇಶರ ಪ್ರಚಂಡ ಪ್ರತಿಭೆಯ ಅನಾವರಣ, ಅದಕ್ಕೆ ಪತ್ರಿಕೆಯ ಬಳಗದ ಅತ್ಯುತ್ಸಾಹದ ಹುಮ್ಮಸ್ಸು, ಪ್ರಜ್ಞಾವಂತ ಓದುಗ ವಲಯದ ಬೆಂಬಲ, ಪರಾಕಾಷ್ಠೆ ತಲುಪಿದ್ದ ಪತ್ರಿಕೆಯ ಪ್ರಸಾರ… ಒಂದು ರೀತಿಯಲ್ಲಿ ಕೃಷ್ಣದೇವರಾಯನ ಕಾಲದ ಸುವರ್ಣಯುಗ. + +ಸುವರ್ಣಯುಗಕ್ಕೂ ಒಂದು ಕಾಲಘಟ್ಟವಿರುವಂತೆ, ಯಾವುದೋ ಕ್ಷುಲ್ಲಕ ಕಾರಣಕ್ಕೆ ಇದ್ದಕ್ಕಿದ್ದಂತೆ ಸತ್ಯಮೂರ್ತಿ ಪತ್ರಿಕೆ ಬಿಟ್ಟರು. ಗುಬ್ಬಿ, ಪಂಜು, ಕಂಪೋಸಿಟರ್‌ಗಳು ಅವರನ್ನು ಹಿಂಬಾಲಿಸಿದರು. ಪತ್ರಿಕೆ ಎಂದರೆ ಸತ್ಯ-ಗುಬ್ಬಿ ಎಂಬಂತಿದ್ದ, ಜೀವಚೈತನ್ಯದಂತೆ ಕಂಗೊಳಿಸುತ್ತಿದ್ದ ಕಚೇರಿ ಇದ್ದಕ್ಕಿದ್ದಂತೆ ಖಾಲಿ. ಬಿಕೋ ಎನ್ನತೊಡಗಿತು. ಅನುಮಾನಗಳು, ಅಪನಂಬಿಕೆಗಳು ವಿಜೃಂಭಿಸಿದವು. ಮನಸುಗಳು ಮುರಿದುಬಿದ್ದವು. ಇಂತಹ ಕ್ಷಣಕ್ಕಾಗಿಯೇ ಕಾದು ಕುಳಿತಿದ್ದ, ಲಂಕೇಶರನ್ನು ಕಂಡರಾಗದ ಕೆಲವರು ಪರಿಸ್ಥಿತಿಯ ಲಾಭ ಪಡೆದರು. ಸಾರ್ವಜನಿಕ ವಲಯದಲ್ಲಿ ಲಂಕೇಶರು ಸರ್ವಾಧಿಕಾರಿಯಂತೆ ಕಾಣತೊಡಗಿದರು. ಲಂಕೇಶರಿಂದ, ಪತ್ರಿಕೆಯಿಂದ ಮೊದಲೇ ದೂರವಿದ್ದ ತೇಜಸ್ವಿಯವರು, ಕೆಲಸಗಾರರ ನಿರ್ಗಮನದಿಂದಾಗಿ ಇನ್ನಷ್ಟು ದೂರವಾದರು. ದೂರವಾದರು ಎನ್ನುವುದಕ್ಕಿಂತ ಸೈಲೆಂಟಾದರು ಎಂದರೆ ಸೂಕ್ತವೇನೋ. ಆದರೆ, ‘ಪತ್ರಿಕೆಗೆ’ ಬರೆಯುವುದನ್ನು ಮುಂದುವರೆಸಿದರು. ಹಾಗೆಯೇ ಬೆಂಗಳೂರಿಗೆ ಬಂದಾಗ ಪತ್ರಿಕೆಯ ಕಚೇರಿಗೆ ಬಂದು, ಅಪರೂಪಕ್ಕೆ ಒಂದು ಗ್ಲಾಸ್ ಬಿಯರ್ ಕುಡಿದು ಹರಟೆ ಹೊಡೆದು ಹೋಗುತ್ತಿದ್ದುದೂ ಉಂಟು. + +ಲಂಕೇಶ್ ಮತ್ತು ತೇಜಸ್ವಿ- ಇಬ್ಬರೂ ಒಳ್ಳೆಯ ಸ್ನೇಹಿತರು ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಲಂಕೇಶರು ಪತ್ರಿಕೆ ಮಾಡಿದಾಗ ಬರೆದಿದ್ದಾರೆ. ಪ್ರಗತಿರಂಗ ಮಾಡಿದಾಗ ಅವರ ಜೊತೆ ಊರೂರು ಅಲೆದು, ಸಭೆಗಳಿಗೆ ಸೇರುತ್ತಿದ್ದ ಮೂರು ಮತ್ತೊಂದು ಜನಕ್ಕೆ ಭಾಷಣ ಮಾಡಿದ್ದಾರೆ. ಹಾಗೆಯೇ ತೇಜಸ್ವಿಯವರು ಬರೆದದ್ದೆಲ್ಲವನ್ನೂ ಲಂಕೇಶರು ಪ್ರಕಟಿಸಿದ್ದಾರೆ. ಬರೆದದ್ದೆಲ್ಲವನ್ನೂ ಅಂತ ಯಾಕೆ ಇಲ್ಲಿ ಒತ್ತಿ ಹೇಳುತ್ತಿದ್ದೇನೆಂದರೆ, ತೇಜಸ್ವಿಯವರು ಕೆಲವು ಸಲ ಅತಿ ಅನ್ನಿಸುವಷ್ಟು ಕಾಫಿ ಬೆಳೆಯ ಬಗ್ಗೆ, ಬೆಳೆಗಾರರ ತೊಂದರೆಗಳ ಬಗ್ಗೆ ಬರೆಯುತ್ತಿದ್ದರು. ಅದನ್ನು ನೋಡಿ ಲಂಕೇಶರು, ‘ಜಾಸ್ತಿ ಆಯ್ತು, ಇರಲಿ ಹಾಕು…’ ಎನ್ನುತ್ತಿದ್ದರು. + +ಹಾಗೆಯೇ ಪತ್ರಿಕೆಯ ಕಚೇರಿಯೊಳಗಡೆ ನಡೆಯುವ ಕೆಲವು ಬದಲಾವಣೆಗಳಿಗೂ ತೇಜಸ್ವಿ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಯಾಕೆಂದರೆ ಇಬ್ಬರೂ ತಮ್ಮೆಲ್ಲ ವೈಯಕ್ತಿಕ ರಾಗ-ದ್ವೇಷಗಳನ್ನು ಬದಿಗೊತ್ತಿ ಓದುಗರಿಗಾಗಿ ಬರೆಯುತ್ತಿದ್ದರು ಎನ್ನುವುದು ನನ್ನ ಗ್ರಹಿಕೆ. ಈ ಸಮಯದಲ್ಲಿಯೇ ಅವರೊಂದಿಗೆ ಫೋನು, ಪತ್ರಗಳ ಒಡನಾಟ ಗರಿಗೆದರಿತು. ಅದಕ್ಕೆಲ್ಲ ಸೇತುವೆಯಂತೆ ಪತ್ರಿಕೆಯೂ ಇತ್ತು. ಒಂದು ಸಲ ತೇಜಸ್ವಿ ಯಾವುದೋ ಒಂದು ಕುದುರೆಹುಳುವಿನಂತಹ ಕೀಟದ ಬಗ್ಗೆ ಬರೆದಿದ್ದರು. ಬರೆದು ಪೋಸ್ಟ್ ಮಾಡಿದ ಮೇಲೆ ಒಂದು ಫೋನ್, + +‘ಏನಯ್ಯಾ, ಬಂತೇನಯ್ಯಾ… ಆ ಆರ್ಟಿಕಲ್‌ಗೆ ಚಿತ್ರ ಹಾಕ್ಬೇಕ್ ಕಣೋ, ಅದನ್ನ ನಾನು ಟ್ರೇಸಿಂಗ್ ಪೇಪರ್ ಮೇಲೆ ಪ್ರಿಂಟ್ ತೆಗೆದು ಕಳ್ಸಿದೀನಿ, ಮತ್ತೇನೂ ಪಾಸಿಟಿವ್ ಮಾಡ್ಸಕೋಗಬೇಡಿ, ಪೇಜ್ ಲೇಔಟ್‌ನಲ್ಲಿ ಜಾಗ ಬಿಟ್ಟು ಅಲ್ಲಿಗೆ ಅಂಟಿಸಿದ್ರಾಯ್ತು…’ ಹೀಗೆ ಪ್ರತಿಯೊಂದನ್ನೂ ಹೇಳುತ್ತಿದ್ದರು. + +ತೇಜಸ್ವಿ ಟ್ರೇಸಿಂಗ್ ಪೇಪರ್‌ನಲ್ಲಿ ಕಳುಹಿಸಿದ್ದ ಚಿತ್ರ ಹಾರಿಜಾಂಟಲ್-ವರ್ಟಿಕಲ್… ಯಾವ ಕಡೆಯಿಂದ ನೋಡಿದರೂ ತಲೆಬುಡ ಅರ್ಥವಾಗುತ್ತಿರಲಿಲ್ಲ. ಯಾಕೆಂದರೆ ಆ ಕೀಟದ ಇಡೀ ದೇಹ ಕಡ್ಡಿಯಂತಿದ್ದು ತಲೆ ಮತ್ತು ಬುಡ ಮಾತ್ರ ಎರಡು ಗುಂಡುಗಳನ್ನು ಹೊಂದಿತ್ತು. ಒಂದು ಅಂದಾಜಿನ ಮೇಲೆ ಅಂಟಿಸಿದ್ದೆ. + +ಪತ್ರಿಕೆ ಬಂತು, ಹಾಗೆಯೇ ಮೂಡಿಗೆರೆಯಿಂದ ನನಗೊಂದು ಪತ್ರವೂ… ಆ ಪತ್ರ ಹೇಗಿತ್ತೆಂದರೆ… ಲಂಕೇಶರೊಂದಿಗಿನ ಅಸಮಾಧಾನವನ್ನು, ಸತ್ಯಮೂರ್ತಿ ಬಿಟ್ಟ ಸಿಟ್ಟನ್ನು, ನನ್ನಂತಹ ಅಡ್ಡಕಸುಬಿಗಳ ಕೈಯಿಂದಾದ ಅನಾಹುತವನ್ನು, ಅಂತಹ ಪತ್ರಿಕೆಗೆ ಅವರು ಬರೆಯಬೇಕಾಗಿ ಬಂದಿರುವ ದುಸ್ಥಿತಿಯನ್ನು- ಒಟ್ಟಿಗೇ ಹೇಳಿದಂತಿತ್ತು. ಅದು ನನಗೆ ನಿಜಕ್ಕೂ ಪಾಠವಾಗಿತ್ತು. ಸ್ಥಾನದ ಜವಾಬ್ದಾರಿಯ ಬಗ್ಗೆ ತಿಳಿಹೇಳುತ್ತಲೇ ಮರ್ಮಕ್ಕೆ ತಾಕುವಂತಿತ್ತು. ಅರಿವಿನ ವ್ಯಾಪ್ತಿಯನ್ನು ಹಿಗ್ಗಿಸಿತ್ತು. ಆದರೆ ಅದಷ್ಟೆ, ಲಂಕೇಶರಿಗೂ ಆ ಬಗ್ಗೆ ತಿಳಿಸಲಿಲ್ಲ. + +ನಾನೇ ಧೈರ್ಯ ಮಾಡಿ ಫೋನ್ ಮಾಡಿದೆ, ‘ಅಲ್ಲಾ ಕಣೋ… ಒಂದ್ ಚಿತ್ರ ಅಂದಾಜ್ ಮಾಡಕ್ಬರಲ್ಲ ಅಂದ್ರೆ… ಏನೇಳದೋ… ಇನ್ನೊಂದ್ಸಲ ಅಂತ ತಪ್ಪು ಮಾಡಿದ್ಯೋ… ಅಲ್ಲಿಗೇ ಬಂದ್ ಕಾಲ್ ಮುರಿತಿನಿ…’ ಎಂದು ಧಮ್‌ಕಿ ಹಾಕಿದ್ದರು. ಆ ಸಿಟ್ಟೂ ಅಷ್ಟೇ, ಆ ಕ್ಷಣಕ್ಕೆ. ಮತ್ತದೇ ಆತ್ಮೀಯತೆ. + +ತೇಜಸ್ವಿಯವರಿಗೆ ಕಂಪ್ಯೂಟರ್ ಬಳಕೆ ಚೆನ್ನಾಗಿ ತಿಳಿದಿತ್ತು. ಕನ್ನಡಕ್ಕೆ ಕನ್ನಡದ್ದೇ ಆದ ಒಂದು ಫಾಂಟ್ ಪ್ಯಾಕೇಜ್ ಇಲ್ವಲ್ಲ ಎಂಬ ಬಗ್ಗೆ ಭಾರೀ ಕೊರಗಿತ್ತು. ಆ ಬಗ್ಗೆ ತುಂಬುಕಾಳಜಿಯಿಂದ ಮಾತನಾಡುತ್ತಿದ್ದರು. ಅವರ ಕಂಪ್ಯೂಟರ್ ಕೈ ಕೊಟ್ಟಾಗ, ಅವರು ಕಳುಹಿಸಿದ್ದು ನಮಗೆ ಸಿಕ್ಕದೆ ಫೋನ್ ಮಾಡಿ ತೊಂದರೆ ಕೊಡುವಾಗ, ಕಂಪ್ಯೂಟರ್ ಬಗ್ಗೆ ಗಂಟೆಗಟ್ಟಲೆ ಮಾತನಾಡಿದ್ದಿದೆ. + +‘ನೋಡೋ ಬೇರೆ ಭಾಷೆಯ ಜನ ಆಗಲೇ ಅವರ ಭಾಷೆಯ ಯೂನಿಫಾರ್ಮ್ ಫಾಂಟ್ ಕ್ರಿಯೇಟ್ ಮಾಡಿ, ಎಲ್ಲರೂ ಒಂದೇ ಕೀಬೋರ್ಡ್ ಬಳಸುವಂತಹ ಪ್ಯಾಕೇಜ್ ಮಾಡ್ಕೊಂಡಿದ್ದಾರೆ. ಇಲ್ಲಿ ನಿಂದೇ ಬೇರೆ, ನಂದೇ ಬೇರೆ, ಒಂದಕ್ಕೊಂದು ಸಂಬಂಧಾನೆ ಇಲ್ಲ. ನೋಡಿದ್ರೆ, ಇನ್ಫೋಸಿಸ್, ವಿಪ್ರೋಗಳಂತಹ ಘಟಾನುಘಟಿಗಳೇ ಕರ್ನಾಟಕದಲ್ಲವ್ರೆ. ಆದರೆ ಅವರ್‍ಯಾರೂ ಕನ್ನಡ ಭಾಷೆ, ಅದಕ್ಕೊಂದು ಪ್ಯಾಕೇಜ್ ಬೇಕು ಅಂತ ಯೋಚಿಸ್ತಾನೇ ಇಲ್ವಲ್ಲೋ… ಕೇಳೋರು ಯಾರು ಇಲ್ಲ. ಛೇ, ಎಂಥ ದರಿದ್ರ ದೇಶನಯ್ಯ ಇದು, ಆ ಕಂಬಾರ್ರು ಏನ್ ಮಾಡ್ತಿದಾರೋ, ಇಸ್ಮಾಯಿಲ್ ಏನೋ ಹೇಳಿದ್ದ, ಓಡಾಡ್ತಿದೀನಿ ಅಂತ… ಏ ನೀವೂ ಅಷ್ಟೇ, ಕತ್ತೆಗಳು, ಅದೇನ್ ಮೆಟೀರಿಯಲ್ ಸಿಕ್ಕುತ್ತೋ ಅದನ್ನು ತಗೋಂಡೋಗಿ ಕಂಬಾರ್ರಿಗೆ ಕೊಟ್ಟು ಹೌಸಲ್ಲಿ ಚರ್ಚೆಯಾಗುವಂತೆ ಮಾಡ್ರಯ್ಯ…’ ಹೀಗೆ ಸಮಯ ಸಿಕ್ಕಾಗಲೆಲ್ಲ ಹೇಳೋರು. ಇವತ್ತು ಕನ್ನಡ ತಂತ್ರಾಂಶ ನುಡಿ ಏನಾದ್ರು ಈ ಮಟ್ಟಕ್ಕೆ ಎಲ್ಲರಿಗೂ ಉಚಿತವಾಗಿ ಸಿಕ್ತಾಯಿದೆ ಅಂದ್ರೆ, ಅದರ ಹಿಂದೆ ತೇಜಸ್ವಿಯವರ ಶ್ರಮವೂ ಸ್ವಲ್ಪ ಇದೆ ಅಂತಾನೇ ಅರ್ಥ. + +ನಾನು ಅವರಿಗೆ ಯಾವಾಗ ಫೋನ್ ಮಾಡಿದರೂ ಅಥವಾ ಅವರೇ ಮಾಡಿದರೂ, ಮಾತಿನ ಕೊನೆಯಲ್ಲಿ, ‘ಏಯ್, ಆ ಸತ್ಯಮೂರ್ತಿ ಏನ್ಮಾಡ್ತಿದಾನೋ, ನಿನಗೇನಾದ್ರು ಸಿಗ್ತನೇನೋ, ನಿಮ್ದೆಲ್ಲ ಒಂದೇ ಕಡೆಯಂತಲ್ಲೋ ಮನೆ, ಫೋನ್ ಮಾಡಕ್ಕೇಳೋ…’ ಎನ್ನುವ ಒಂದು ಮಾತು ಇದ್ದೇ ಇರುತ್ತಿತ್ತು. ಸತ್ಯಮೂರ್ತಿ ಬಗ್ಗೆ ಅದೇನೋ ಅವ್ಯಕ್ತ ಪ್ರೀತಿ. ಆ ಬೆಂಗಳೂರು ಅವನಂಥವನಿಗಲ್ಲ ಅನ್ನುವ ಆತಂಕ ಅವರ ಪ್ರತಿ ಮಾತಿನಲ್ಲೂ ಧ್ವನಿಸುತ್ತಿತ್ತು. ಅದು ಎಲ್ಲಿಯವರೆಗೆಂದರೆ, ಅವರು ಸಾಯಲಿಕ್ಕೆ ನಾಲ್ಕು ತಿಂಗಳು ಇರುವಾಗ, ಡಿಸೆಂಬರ್ ೨೦೦೬ರಲ್ಲಿ, ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಅವರ ಮಗಳ ಮನೆಯಲ್ಲಿ ಸಿಕ್ಕ ಕೊನೆಯ ಭೇಟಿಯಲ್ಲೂ… + +ಇದನ್ನೆಲ್ಲ ನೋಡಿದ್ದ ನಾನು, ಸತ್ಯಮೂರ್ತಿಗೆ, ‘ಏನ್ ಧಣಿ ನಿಮ್ ಕಂಡ್ರೆ ಅಷ್ಟೊಂದ್ ಪ್ರೀತಿ ತೇಜಸ್ವಿಗೆ…’ ಅಂತಂದ್ರೆ ಸಾಕು… ಸತ್ಯಮೂರ್ತಿಯೂ ಅಷ್ಟೇ… ಮಾಯಾಲೋಕದೊಳಕ್ಕೆ ಮುಳುಗಿಬಿಡುತ್ತಿದ್ದರು, ಮೂಡಿಗೆರೆಗೇ ಹೋಗಿಬಿಡುತ್ತಿದ್ದರು. ಆ ಬಹುಮುಖ ವ್ಯಕ್ತಿತ್ವದೊಂದಿಗಿನ ಒಡನಾಟವನ್ನು ವಿವರಿಸುತ್ತ ಹಗುರಾಗುತ್ತಿದ್ದರು. ಅಂತಹದ್ದೊಂದು ಘಟನೆ ಇಲ್ಲಿದೆ… ಸತ್ಯಮೂರ್ತಿ ಬಾಯಲ್ಲಿಯೇ ಕೇಳಿ… + +‘ಒಂದ್ ಸಲ ಏನಾಯ್ತು ಅಂದ್ರೆ… ಲಂಕೇಶ್ ಪತ್ರಿಕೆ ಬಿಟ್ಟಿದ್ದೆ, ಈ ವಾರ ಮಾಡಿ ಕೈ ಸುಟ್ಟುಕೊಂಡಿದ್ದೆ, ಮೂಡಿಗೆರೆಗೆ ಹೋಗಿ ಅವರ ಮುಂದೆ ನಿಂತೆ.‘ಕೆಲ್ಸಿಲ್ಲ ಕಾರ್ಯಿಲ್ಲ ಅಂದ್ಮೇಲೆ ಆ ಬೆಂಗಳೂರಲ್ಲಿ ಬದುಕಾಯ್ತದೇನೋ, ಊರಲ್ಲೆ ಗೇಯಕ್ಕಾಗದಿಲ್ವ…’ ಅಂದ್ರು. + +ಅದಕ್ಕೆ ನಾನು ‘ಹಂಗೇನಿಲ್ಲ, ಟಿವಿ ಸೀರಿಯಲ್‌ಗೆ ಡೈಲಾಗ್ ಬರೀತಿದೀನಿ’ ಅಂದೆ.ಅದಕ್ಕವರು, ‘ಎಷ್ಟು ಕೊಡ್ತರೆ’ ಅಂದ್ರು.ನಾನು ‘ಒಂದು ಎಪಿಸೋಡ್‌ಗೆ ಏಳುನೂರು ಐವತ್ರುಪಾಯಿ ಕೊಡ್ತರೆ’ ಅಂದೆ… ಥಟ್ ಅಂತ ಏನ್ನೋ ಜ್ಞಾಪಿಸಿಕೊಂಡವರಂತೆ,‘ಹರಿವಾಣ ನೋಡಿದಿಯೇನೋ…’ ಅಂದ್ರು. ನಾನು ಒಂದು ಕ್ಷಣ ತಲೆಬಿಸಿಯಾಗಿ ಯೋಚಿಸುತ್ತಾ ನಿಂತೆ,‘ಹರಿವಾಣ ಕಣೋ, ನಮ್ಮಲ್ಲೆಲ್ಲೋ ಅಟ್ಟದ ಮೇಲೆ ಬಿದ್ದಿರಬೇಕು ತಕ್ಕೊಡ್ತಿನಿರು, ತಗಂಡು ಹುಣಸೇಹಣ್ಣಾಕಿ ಚೆನ್ನಾಗಿ ಉಜ್ಜಬೇಕು, ಹ್ಯಂಗ್ ಉಜ್ಜಬೇಕಂದ್ರೆ ಫಳ ಫಳ ಹೊಳಿಬೇಕು, ಮುಖ ಕಾಣ್ಬೇಕು… ಹಂಗ್ ಉಜ್ಜಬೇಕು… + +ಮತ್ತೂ ತಲೆಕೆಟ್ಟೋಯಿತು. ಒಂದಕ್ಕೊಂದ್ ಸಂಬಂಧಾನೆ ಇಲ್ಲದಂಗ್ ಮಾತಾಡ್ತರಲ್ಲ ಅನ್ನಿಸಿತು. + +‘ಯಾವುದೋ ಒಂದ್ ಬಾರ್ ಮುಂದೆನೊ, ಹೋಟೆಲ್ ಪಕ್ಕದಲ್ಲೊ ಬಣ್ಣದ್ ಛತ್ರಿ ಬಿಚ್ಚಿ ಹರಿವಾಣ ಇಟ್ಕಂಡು ನಿಂತ್ಕಂಡೆ ಅನ್ನು… ದಿನಕ್ಕೆ ಐನೂರು ಬೀಡಾ ಹೋಗ್ಲೇಳೋ… ಒಂದಕ್ಕೆ ಎರಡ್ರೂಪಾಯಿ ಸಿಕ್ಕಿದ್ರು… ಒಂದ್ ಸಾವ್ರಾಯ್ತು… ಮುಠ್ಠಾಳ ಹದ್ನೈದು ಪುಟ ಬರ್‍ದು ಏಳ್ನೂರ್ರುಪಾಯಿ ಈಸ್ಕತನಂತೆ… ಹೋಗ್ ಹೋಗೋ… + +‘ಅಂದ್ರೆ, ಬೀಡಾ ಮಾರು ಅಂತೇಳ್ತಿದೀರಾ…’‘ಯಾಕೆ ಬರ್‍ದೆ ಬದುಕ್ಬೇಕು ಅಂತೇನಾದ್ರು ಹೇಳಿಕೊಂಡು ಹುಟ್ಟಿದ್ದೀಯಾ…’‘……’‘ಈ ಜೀತಕ್ಕಿಂತ ಅದೇ ಎಷ್ಟೋ ವಾಸಿ, ಯೋಚ್ನೆ ಮಾಡೇಳು, ಅಟ್ಟದ ಮೇಲೈತೆ ಹುಡಿಕ್ಕೊಡ್ತಿನಿ…’ + +ಇಂತಹ ಹಲವಾರು ಘಟನೆಗಳು ತೇಜಸ್ವಿಯವರ ಒಡನಾಟದಲ್ಲಿ ಹಲವರ ಅನುಭವಕ್ಕೆ ಬಂದಿರಬಹುದು. ಅಂತಹ ಅನುಭವಗಳನ್ನೇ ತೇಜಸ್ವಿಯವರು ತಮ್ಮ ಸೃಜನಶೀಲ ಕುಲುಮೆಗೆ ಹಾಕಿ ಕುದಿಸಿ, ಅದರಿಂದ ಬಂದ ಅನುಭವದ್ರವ್ಯವನ್ನು ಕನ್ನಡಿಗರಿಗೆ ಕೊಡುತ್ತಿದ್ದರು. ಕೊಡುತ್ತಲೇ ಹೊಸ ದಿಗಂತದ ನೆಲೆಯನ್ನು ವಿಸ್ತರಿಸಿದರು. ಇಂತಹ ತೇಜಸ್ವಿ ಈಗಲೂ ಇದ್ದಾರೆ- ಮಲೆನಾಡಿನ ಕಾಡು ಕಣಿವೆಗಳಲ್ಲಿ, ಬಿರಿಯಾನಿ ಕರಿಯಪ್ಪನಲ್ಲಿ, ಮೂಡಿಗೆರೆಯ ಮಂದಣ್ಣನಲ್ಲಿ, ಬದಲಾವಣೆ ಬಯಸುವ ಮನಸ್ಸುಗಳಲ್ಲಿ, ಕನ್ನಡಿಗರ ಮನದಲ್ಲಿ… ಇಂದಿಗೂ ಎಂದೆಂದಿಗೂ. + +ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು. \ No newline at end of file diff --git a/Kenda Sampige/article_552.txt b/Kenda Sampige/article_552.txt new file mode 100644 index 0000000000000000000000000000000000000000..0e0a0cad38ed394c4b65386d0375ae38423d1908 --- /dev/null +++ b/Kenda Sampige/article_552.txt @@ -0,0 +1,23 @@ +೨೦೦೮ರ ಮ್ಯಾನ್ ಬುಕರ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಅಮಿತಾವ್ ಘೋಷರ ‘ಸೀ ಆಫ್ ಪೊಪಿಸ್’ (Sea of Poppies) ಕಾದಂಬರಿ ಪರಿಚಯ: + +ಈವತ್ತು ನಾವು ಬದುಕುವ ಹಾಗು ಯೋಚಿಸುವ ಪರಿಗೂ ಬ್ರಿಟೀಷರು ಕಲ್ಕತ್ತಾದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಶುರು ಮಾಡಿದ್ದಕ್ಕೂ ತಾಳೆ ಹಾಕಿ ಚಿಂತಿಸುವುದೇ ಹಲವರಿಗೆ ದೇಶಭ್ರಷ್ಟ ಯೋಚನೆಯಂತೆ ಕಾಣುವ ಹೊತ್ತಿದು. ವಸಾಹತು ಕೇಂದ್ರಿತ ವಿವರಣೆಯನ್ನು ಧಿಕ್ಕರಿಸುವ, ತನ್ಮೂಲಕ ಆ ತಾಳೆಯನ್ನು ಮೀರಬೇಕೆನ್ನುವ ವಸಾಹತೋತ್ತರವನ್ನೂ ಮೀರುವ ತುರ್ತು ಒಂದು ಪಕ್ಕೆಗೆ ತಿವಿಯುತ್ತಿದ್ದರೆ, ಆ ಕೊಂಡಿಯ ಹಂಗೇ ಬೇಡ ಎಂಬ ಗದ್ದಲದ ಸಂತೆಯಲ್ಲಿ ಕೂತು‘ಸೀ ಆಫ್ ಪೊಪಿಸ್’ ಓದಬೇಕಾಗಿರುವುದನ್ನು ಮರೆಯುವಂತಿಲ್ಲ. ಹತ್ತೊಂಬತ್ತನೇ ಶತಮಾನದ ಒಂದು ಅರ್ಥಪೂರ್ಣ ಕಾಲಘಟ್ಟದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ನೋಡುವ ಅವಕಾಶ ಕಲ್ಪಿಸುವ ಕೃತಿ ಅದು. ಹಲವಾರು ಮಜಲುಗಳಲ್ಲಿ ನಾವೇನು ‘ಆಗಿದ್ದೇವೋ’ ಅದನ್ನು ಮತ್ತೆ ಮತ್ತೆ ವಿಮರ್ಶಿಸಿಕೊಳ್ಳಲು ಅವಕಾಶ ಕಲ್ಪಿಸುವ ಕೃತಿ ಕೂಡ ಹೌದು. + +ಟ್ರಿಲಜಿಯಾಗಿ ಹೊರಬರಲಿರುವ ಈ ಎಪಿಕ್ ಗಾಥೆಯ ಮೊದಲ ಕಾದಂಬರಿ ‘ಸೀ ಆಫ್ ಪೊಪಿಸ್’ ಮೂರು ಭಾಗಗಳಲ್ಲಿದೆ. ‘ನೆಲ’, ‘ನದಿ’ ಹಾಗು ‘ಕಡಲು’. ನೆಲದಿಂದ ಸಿಡಿದು, ನದಿಯಲಿ ಕೊಚ್ಚಿಹೋಗಿ ಕಡಲು ಸೇರುವ ಕತೆಗಳು ಹಾಗು ಪಾತ್ರಗಳು ನಮ್ಮೊಳಗೂ ಬಿರುಗಾಳಿ ಎಬ್ಬಿಸಿ, ಸಮತೋಲನ ತಪ್ಪಿಸಿ, ತುಯ್ದಾಡಿಸಿ ಬಿಡುತ್ತವೆ. ನೆಲದ ಮೇಲಿನ ಬೆಳಕು, ಕತ್ತಲು; ನದಿಯ ನೀರಿನ ಸುಳಿ ಸೆಳೆತ; ಕಡಲಿನ ಕಪ್ಪು ನೀರು ಹಾಗು ಬಿಡುಗಡೆ ಒಂದು ಅನಿವಾರ್ಯವಾಗಿ, ಒಂದು ಅವ್ಯಾಹತವಾಗಿ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಹಿಂದೆ ಸ್ಲೇವ್-ಶಿಪ್ ಆಗಿದ್ದ ಆದರೆ ಈಗ indentured labourers – ಗಿರ್ಮತೀಯ ಕೂಲಿಗಳನ್ನು ತುಂಬಿಕೊಂಡು ಮಾರೀಷಿಯಸಿಗೆ ಹೊರಟ ಐಬಿಸ್ ಎಂಬ ಹಡಗು ತನ್ನ ಒಡಲಲ್ಲಿ ನಡೆಯುವ ರೋಚಕ ಘಟನೆಗಳಿಂದ, ರೋಮಾಂಚನಕಾರಿ ತಿರುವುಗಳಿಂದ ನಮ್ಮನ್ನು ಸ್ಥಂಭಿತರನ್ನಾಗಿಸಿ ಅಗಾಧ ಕಡಲಿನಲ್ಲಿ ತೇಲಿಹೋಗುತ್ತದೆ. + +ಗಂಗಾನದಿ ಹಾಗು ಅದರ ಸಾವಿರಾರು ಉಪನದಿಗಳ ಎಡೆಗಳಲ್ಲಿದ್ದ ನೂರಾರು ವರ್ಷಗಳ ಬೇಸಾಯ ಪದ್ಧತಿಯನ್ನು ಮುರಿಯುವ ಮೂಲಕ ಬ್ರಿಟೀಷರು ಅಲ್ಲಿನ ಬದುಕಿನ ಬೆನ್ನೆಲುಬನ್ನೇ ನಾಶ ಮಾಡಿದ ಹೊತ್ತದು. ಮುಕ್ತ ಮಾರುಕಟ್ಟೆಯ ಮೂಲಕ ಚೀನಾಕ್ಕೆ ಅಫೀಮು ಮಾರಿ ಸಿರಿವಂತವಾಗುವುದೇ ಪ್ರಗತಿಯ ಹಾಗು ಸ್ವಾತಂತ್ರ್ಯದ ಸಂಕೇತ ಎಂದು ಬಗೆದು ಚೀನಾದ ಎದುರು ಯುದ್ಧಕ್ಕೆ ಸಜ್ಜಾಗಿ ನಿಂತ ಹೊತ್ತದು. ಆಫೀಮಿಗಾಗಿ poppy – ಗಸಗಸೆ ಬೆಳೆಯಲು ಉತ್ತೇಜಿಸಿ, ಒತ್ತಾಯಿಸಿ, ಬಲವಂತ ಮಾಡಿ ಇಂಡಿಯಾದ ರೈತರನ್ನು ಒಂದು ಕಡೆ ಬಗ್ಗು ಬಡಿದು, ಇನ್ನೊಂದು ಕಡೆ ಚೀನಾದ ಜನರಿಗೆ ಅಫೀಮಿನ ಮತ್ತು ಹಿಡಿಸಿ, ಹುಚ್ಚು ಏರಿಸಿ ತಾವು ಸಂಪತ್ತಿಗರಾಗಲು ಹೊರಟ ಬ್ರಿಟೀಷರನ್ನು ದ್ವೇಷಿಸುವುದು ತುಂಬಾ ಸುಲಭ. ಆದರೆ ಸಾವಧಾನದಿಂದ ಬ್ರಿಟೀಷ್ ಪಾತ್ರಗಳನ್ನೂ ಎಲ್ಲರಂತೆ ಪರಿಚಯಿಸಿ, ಚಿತ್ರಿಸಿ ಸಾದರ ಪಡಿಸುವುದು ಅಮಿತಾವ್ ಘೋಷರಂತಹ ಬರಹಗಾರರಿಗೆ ಮಾತ್ರ ಸಾಧ್ಯವೇನೋ ಅನಿಸದೇ ಇರದು. + +ಕಡಲನ್ನೇ ನೋಡಿರದ ದೀತಿಗೆ, ಕಡಲಿಂದ ನೂರಾರು ಮೈಲುಗಳ ತನ್ನ ಊರಲ್ಲೇ – ದೂರದಲ್ಲಿ ಹಕ್ಕಿಯಂತೆ ರೆಕ್ಕೆ ಬಿಚ್ಚಿದ ಹಾಯಿ ಹಡಗೊಂದು ಕಂಡಂತಾಗಿ, ಯಾವುದೋ ಪ್ರಯಾಣಕ್ಕೆ ನಾಂದಿ ಎಂದು ಅನಿಸುವುದುರ ಮೂಲಕ ಕತೆ ತೊಡಗುತ್ತದೆ. ಅಫೀಮು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಅವಳ ಗಂಡ – ಅಫೀಮಿನ ಚಾಳಿಗೆ ಬಿದ್ದು ನಶಿಸುತ್ತಿರುವವ. ಸಂಭೋಗವನ್ನು ಅರಿಯದ ವಯಸ್ಸಿನಲ್ಲಿ ಮದುವೆಯಾಗಿ, ನಂತರದ ಕೆಟ್ಟ ಗಳಿಗೆಯಲ್ಲಿ, ಅತ್ತೆ ಹಾಗು ಮೈದುನನ ದುಷ್ಟತೆಯಲ್ಲಿ, ಯಾರಿಗೆ ಬಸುರಾದೆ ಎಂದೂ ತಿಳಿಯದೆ ಪಡಕೊಂಡ ಅವಳ ಮಗಳು ಕಬೂತರಿ ಅವಳ ಜೀವದ ಜೀವ. ದುಷ್ಟ ಅತ್ತೆಗೆ ಊಟದಲ್ಲಿ ತುಸುತುಸುವೇ ಅಫೀಮು ಬೆರೆಸಿ ಅವಳನ್ನೂ ನಾಶಮಾಡುವ ದಿಟ್ಟೆ ಈ ದೀತಿ. ಆದರೆ ಗಂಡ ಸತ್ತಾಗ ಸೋತು ಸುಣ್ಣಾಗಿ ಸತಿ ಹೋಗುವುದೇ ತನ್ನ ವಿಧಿಯೆಂದು ಒಪ್ಪಿಕೊಳ್ಳುವವಳು. ಆದರೆ ಆ ವಿಧಿ ಆಕೆಯನ್ನು ಕಲುವ ಎಂಬ ಕುಲಹೀನನೊಂದಿಗೆ ಐಬಿಸ್ ಎಂಬ ಹಡಗಿನತ್ತ ಒಯ್ಯುವ ಕತೆ ದಟ್ಟವಾಗಿ ಮನಸ್ಸಿನಲ್ಲಿ ಹಬ್ಬುವಂತಹದು. + +ಇನ್ನೊಂದು ಕಡೆ, ಅಫೀಮು ಮಾರುವ ಇಂಗ್ಲೀಷ್ ಪಾದ್ರಿ ಬೆಂಜಮಿನ್ ಬರ್ನಮ್‌ ಎಂಬವನ ಕಪಟಕ್ಕೆ ಬಲಿಯಾಗಿ ಜಮೀನ್ದಾರಿ ರಾಜ ನೀಲ ರತನ್ ಹವಲ್ದಾರ್ ತನ್ನ ಆಸ್ತಿ-ಪಾಸ್ತಿ, ಗೌರವ, ಮಾನ, ಮರ್ಯಾದೆ, ಕುಟುಂಬ ಎಲ್ಲವನ್ನು ಕಳಕೊಳ್ಳುವುದಲ್ಲದೇ ಐಬಿಸ್‌ನಲ್ಲಿ ಗಡಿಪಾರಾಗುವುದು ನಮ್ಮನ್ನು ವಿಚಿತ್ರ ಸಂದಿಗ್ಧದಲ್ಲಿ ಸಿಕ್ಕಿಸುವ ಎಳೆ. ಅವನೊಡನೆ ಬಂಧಿತನಾಗಿರುವ ಚೀನಾದ ಅಫಾಟ್, ಅರೆಜೀವನಾಗಿ ನೀಲನಿಂದ ಮತ್ತೆ ಜೀವ ಪಡಕೊಂಡು ಉಳಿಯುತ್ತಾನೆ. ಭಾರತ, ಚೀನಾ ಹಾಗು ಬ್ರಿಟೀಷರ ವಿಭಿನ್ನ ಹಾಗು ಒಂದಕ್ಕೊಂದು ಒಗ್ಗದ ನಾರುಗಳನ್ನು ಕಾಲದ ತೀವ್ರತೆಯಲ್ಲಿ ಒಟ್ಟಾಗಿ ಬಿಗಿದು ಹೆಣೆದ ಹಿಂಸೆಯ ಒರಟು ಹಗ್ಗವಾಗಿ ಕಾಣುವ ಅಫಾಟ್‌ ಒಂದು ಅಭೂತಪೂರ್ವ ಪಾತ್ರ. + +ಮತ್ತೊಂದು ಕಡೆ, ಅಂಬಿಗರ ಹುಡುಗ ಜೋದು ತನ್ನ ತಂದೆ, ತಾಯಿ, ಅಜ್ಜಿಯನ್ನು ಕಳಕೊಂಡು ಅನಾಥಭಾವದಲ್ಲಿ ಬಂದು ವಿಭಿನ್ನ ಸದಸ್ಯರ ಐಬಿಸ್ ಕುಟುಂಬಕ್ಕೆ ಸೇರಿಕೊಳ್ಳುತ್ತಾನೆ. ಹಾಗೆ ಸೇರಿಕೊಳ್ಳುವ ಮೊದಲು ತನ್ನ ಬಾಲ್ಯದ ಗೆಳತಿ, ಫ್ರಾನ್ಸಿನ ಬಾಟನಿಸ್ಟ್‌ ಒಬ್ಬನ ಮಗಳಾದ ಪಾಲೆಟ್ ಲಾಂಬೆರ್ಟ್‌ಳನ್ನು ಅರಸುತ್ತಾ ಬಂದಿರುತ್ತಾನೆ. ಪುತಲಿ, ಪಗಲಿ ಎಂದೆಲ್ಲಾ ಕರೆಸಿಕೊಳ್ಳುವ ಪಾಲೆಟ್‌ಳ ಹುಟ್ಟಿನ ಕಾಳರಾತ್ರಿ ಗೋದುವಿನ ತಂದೆ ತಾಯಿಯೇ, ಆಸ್ಪತ್ರೆಗೆಂದು ನದಿ ದಾಟಿಸುವಾಗ ಪಾಲೆಟ್‌ನ ತಾಯಿ ಇವರ ದೋಣಿಯಲ್ಲಿ ಪಾಲೆಟ್‌ಳನ್ನು ಹೆತ್ತು ತಾನು ಅಸುನೀಗಿದ್ದಾಳೆ. ಗೋದು ಕೂಡ ಹಸುಳೆ; ಅವನ ತಾಯಿಯೇ ತಬ್ಬಲಿ ಪಾಲೆಟ್‌ಗೆ ಮೊಲೆಯುಣಿಸಿ ಬದುಕಿಸಿದ್ದಾಳೆ, ಬೆಳೆಸಿದ್ದಾಳೆ. ಅದೇ ದೋಣಿ ದೊಡ್ಡವರಾದ ಮೇಲೆ ಅವರಿಬ್ಬರ ಕಣ್ಣ ಮುಂದೆಯೇ ಐಬಿಸ್‌ಗೆ ಡಿಕ್ಕಿ ಹೊಡೆದು ನುಚ್ಚು ನೂರಾಗುವುದು ಹಲವು ಸ್ಥರದಲ್ಲಿ, ವಿಭಿನ್ನ ಧ್ವನಿಗಳನ್ನು ಹೊರಡಿಸುವ ರೂಪಕವಾಗುತ್ತದೆ. ಪಾಲೆಟ್‌ಳ ಅಜ್ಜಿಯ ಕತೆ ಇನ್ನೊಂದು ಬಗೆಯಲ್ಲಿ ಇವಳಲ್ಲಿ ಪುನರಾವರ್ತನೆಗೊಳ್ಳುವ ವಿಚಿತ್ರದಂತೆಯೇ, ವಿಧಿಯೊಡನೆ ಸೆಣಸುತ್ತಾ ತಮ್ಮತನ್ನವನ್ನು ಸ್ಥಾಪಿಸಿಕೊಳ್ಳುವ ಗುಣ ಎಲ್ಲ ಪಾತ್ರಗಳಲ್ಲೂ ಕಾಣುತ್ತದೆ. ದಬ್ಬಾಳಿಕೆ ಹಾಗು ಶೋಷಣೆಯ ಕರಾಳತೆಯ ಅಡಿಯಲ್ಲಿ ಅದನ್ನು ಮೀರಿಕೊಳ್ಳುವ, ಬಿಡುಗಡೆಯ ದಾರಿ ಕಂಡುಕೊಳ್ಳುವ ಅದಮ್ಯ ಶಕ್ತಿಯಿಂದ ಪಾತ್ರಗಳು ಇಲ್ಲಿ ಚಲಿಸುತ್ತವೆ. + +ಅಲ್ಲದೆ ಕೂಲಿಗಳ ಮೇಲ್ವಿಚಾರಕನಾಗಿ ಹಡಗು ಹತ್ತಿರುವ ಬ್ರಾಹ್ಮಣ ನೊಬ್ ಕಿಸನ್ ಪಾಂಡ ಮಾ ತಾರಾಮಣಿ ತನ್ನೊಳಗೆ ಅಂತರ್ಧಾನವಾಗಿದ್ದಾಳೆಂದು ನಂಬಿದ್ದಾನೆ. ದೂರದ ದ್ವೀಪದಲ್ಲಿ ಆಕೆಗೊಂದು ದೇಗುಲ ಕಟ್ಟುವ ಕನಸ್ಸು ಕಂಡಿದ್ದಾನೆ. ತನ್ನ ಭಾಷೆ, ನಡೆ, ನುಡಿಯಿಂದಾಗಿ ವ್ಯಂಗ್ಯಪೂರ್ಣ ಪಾತ್ರವಾಗಿ ಕಂಡರೂ ಅದೊಂದು ಸಂಕೀರ್ಣವಾದ ಪಾತ್ರವೇ. ತನ್ನ ಹಿನ್ನೆಲೆಯನ್ನು ಮರೆಮಾಚಿಕೊಂಡು ಸಾಹಸದ ಬೆನ್ನು ಹತ್ತಿರುವ ಅಮೇರಿಕಾದ ಝಕಾರಿ ರೀಡ್ ಕೂಡ ಅದೇ ಹಡಗಿಗೆ ಬಂದು ಸೇರಿದ್ದಾನೆ. ಇವರೆಲ್ಲರ ಜತೆ ಸಣ್ಣಪುಟ್ಟ ಕತೆಗಳ ಕಳ್ಳಖದೀಮರನ್ನು, ಪೊಲೀಸರನ್ನು, ನಾವಿಕರನ್ನು, ಸಾಹಸಿಗಳನ್ನು, ಕೂಲಿಗಳನ್ನು ಐಬಿಸ್‌ ಹಡಗಿಗೆ ಘೋಷರು ಹತ್ತಿಸುತ್ತಾರೆ. ಎಲ್ಲರನ್ನೂ ತುಂಬಿಕೊಂಡು ಹೊಸ ದಿಗಂತದತ್ತ ತೇಲುವ ಆ ಐಬಿಸ್ ಹಡಗಿನಲ್ಲಿ ಕೈಗೆ ಮೆಹಂದಿ ಬಳಕೊಂಡು ಕೂಲಿಯಂತೆ ವೇಷಮರೆಸಿಕೊಂಡ ಬಿಳಿಯ ಹೆಣ್ಣೂ, ಬಿಳಿಯನೆಂದು ಹೇಳಿಕೊಂಡು ಕೆಲಸ ಗಿಟ್ಟಿಸುವ ಅರೆಕರಿಯನೂ, ತಪ್ಪು ಮಾಡಿ ಬಚ್ಚಿಟ್ಟುಕೊಂಡವರೂ, ತಪ್ಪು ಮಾಡದೆ ಸಿಕ್ಕಿಕೊಂಡವರೂ ನಮಗೆ ಸಿಗುತ್ತಾರೆ. + +ಐಬಿಸ್‌ನ ವಿವಿಧ ಅಟ್ಟಗಳಲ್ಲಿ ವಿವಿಧ ಆಟಗಳು, ಹೋರಾಟಗಳು, ವಿಜೃಂಭಣೆಗಳು, ಹಿಂಸೆಗಳು ಈ ಕಾದಂಬರಿಯಲ್ಲಿ ಅಸಮಾನ್ಯ ಸಹಜತೆಯಲ್ಲಿ ನಿರೂಪಿತವಾಗಿದೆ. ಮನುಷ್ಯತ್ವದ ಬಗ್ಗೆ ಒಂದು ಕ್ಷಣ ಅನುಮಾನ, ಮತ್ತೊಂದು ಕ್ಷಣ ಉನ್ಮಾದ, ಒಂದು ಕ್ಷಣ ಅಸಹನೆ, ಮತ್ತೊಂದು ಕ್ಷಣ ಪ್ರೀತಿ ಮತ್ತು ಆ ಎಲ್ಲ ಕ್ಷಣಗಳ ನಡುವಿನ ಲೆಕ್ಕವಿಲ್ಲದ ಹಲವಾರು ಭಾವಗಳಲ್ಲಿ ನಮ್ಮನ್ನು ಘೋಷರು ತುಯ್ದಾಡಿಸುತ್ತಾರೆ. ಐಬಿಸ್ ಹಡಗಿನ ಏರಿಳಿತ ಅವಕ್ಕೆಲ್ಲಾ ತಾಳ ಕುಟ್ಟುತ್ತಿದ್ದಂತೆ ಭಾಸವಾಗುತ್ತದೆ. + +ಕಾದಂಬರಿಯುದ್ದಕ್ಕೂ ಘೋಶರು ಬಳಸುವ ಹಲವು ಭಾಷೆಗಳು ಅತ್ಯಂತ ಕುತೂಹಲವನ್ನೂ, ನೈಜತೆಯನ್ನೂ ಕೃತಿಗೆ ತಂದುಕೊಟ್ಟಿದೆ. ಅವರ ಮಾನವಶಾಸ್ತ್ರದ ಹಿನ್ನೆಲೆ, ಭಾಷೆಯ ಬಗೆಗಿನ ಆಸ್ಥೆ ಹಾಗು ಹಲವು ವರ್ಷಗಳ ಆಳದ ಮತ್ತು ವಿಶಾಲವಾದ ಸಂಶೋಧನೆ ಇಲ್ಲಿ ಅವತರಿಸುವಾಗ ತುಸುವೂ ಕಲಾತ್ಮಕತೆ ಕಳಕೊಳ್ಳದೆ ಬೃಹತ್ ರೂಪದಲ್ಲಿ ಹೆಪ್ಪುಗಟ್ಟುತ್ತದೆ. ಕಾದಂಬರಿಯಲ್ಲಿ ಬರುವ ಹಲವು ನುಡಿಗಳ ನುಡಿಗಟ್ಟುಗಳನ್ನು ಅರ್ಥೈಸಲು ಲೇಖಕರೇ ತಮ್ಮ ವೆಬ್‌ಸೈಟಿನಲ್ಲಿ ಕೊಟ್ಟಿರುವ ‘The Ibis Chrestomathy’ ಒಂದು ಅಮೂಲ್ಯವಾದ ಸಂಗ್ರಹ. ಭೋಜಪುರಿ, ಉರ್ದು, ಬೆಂಗಾಲಿ, ಹಿಂದೂಸ್ತಾನಿ, ಹಲವು ಬಗೆಯ ಇಂಗ್ಲಿಷ್ ಅಲ್ಲದೆ ಇವೆಲ್ಲವೂ ಒಂದರಿಂದ ಮತ್ತೊಂದು ಕೊಟ್ಟು ಪಡಕೊಂಡು ರೂಪಿತವಾದ ನಡುಭಾಷೆಗಳು, ನುಡಿಗಟ್ಟುಗಳು ಅತ್ಯಂತ ಮನೋಹರವಾಗಿವೆ. ಬೆಂಗಾಲಿ ಬೆರೆತ ಹಿಂದೂಸ್ತಾನಿ, ಹಿಂದೂಸ್ತಾನಿ ಬೆರೆತ ಇಂಗ್ಲಿಷ್, ಇಂಗ್ಲಿಷ್ ಬೆರೆತ ಹಿಂದೂಸ್ತಾನಿ ಸುಲಲಿತವಾಗಿ ಪಾತ್ರಗಳ ಮಾತಿನಲ್ಲಿ ಹರಿದಾಡುತ್ತವೆ. ಪಕ್ಕಾ, ಬುರಾ, ಶೈತಾನ್, ಡೇಕೋ ಇವೆಲ್ಲಾ ಇಂಗ್ಲೀಷಿನೊಳಗೆ ಎಗ್ಗಿಲ್ಲದೆ ಒಂದಾಗುತ್ತವೆ. ಹೀಗೆ ಇಲ್ಲಿ ಭಾಷೆಯದೇ ಒಂದು ವಿಶಿಷ್ಟ ಪಾತ್ರ ಹಾಗು ಅದರ ಬಗ್ಗೆಯೇ ಒಂದು ಧೀರ್ಘ ಪ್ರಬಂಧ ಬರೆಯಬಹುದಾದಷ್ಟು ಸಂಗತಿಗಳಿವೆ. + +ಚರಿತ್ರೆಯ ಒಂದು ಕಾಲಘಟ್ಟದ ಜನರ ಬದುಕನ್ನು ವಿಧಿ ರೂಪಿಸುತ್ತದೋ, ವಿಧಿಯೊಡನೆ ಸೆಣಸುತ್ತಾ ತಮ್ಮ ಬದುಕನ್ನು ಅವರು ರೂಪಿಸುಕೊಳ್ಳುತ್ತಾರೋ, ಅಥವಾ ಆ ಸೆಣಸಾಟದ ಪ್ರಕ್ರಿಯೆಯಲ್ಲಿ ಚರಿತ್ರೆಯ ಹಲವಾರು ವಿದ್ಯಮಾನಗಳು ಒಂದು ಜನಸಮೂಹದ ಭವಿಷ್ಯವನ್ನು ರೂಪಿಸುತ್ತದೋ ಎಂಬೆಲ್ಲಾ ಪ್ರಶ್ನೆಗಳ ವಿಚಿತ್ರ ವರ್ತುಲದಲ್ಲಿ ನಮ್ಮನ್ನು ಚಿಂತನೆಗೆ ತೊಡಗಿಸುವ ಅಮೂಲ್ಯವಾದ ಕೃತಿ ‘ಸೀ ಆಫ್ ಪೊಪಿಸ್’. + +ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು. \ No newline at end of file diff --git a/Kenda Sampige/article_553.txt b/Kenda Sampige/article_553.txt new file mode 100644 index 0000000000000000000000000000000000000000..ed4ac38b9fa9f020d0e80833dc87e512f7b1d428 --- /dev/null +++ b/Kenda Sampige/article_553.txt @@ -0,0 +1,81 @@ +ಡಾ. ಮೊಗಳ್ಳಿ ಗಣೇಶ್ ಕನ್ನಡದ ಕಥೆಗಾರರಾಗಿ ಹೆಸರಾದವರು. ಅವರ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ. ಮೊಗಳ್ಳಿ ಗಣೇಶ್ ತೊಟ್ಟಿಲು, ಕಿರೀಟ ಇತ್ಯಾದಿ ಕಾದಂಬರಿಗಳನ್ನೂ ಬರೆದಿದ್ದಾರೆ. ಆದರೆ ಅವರು ಮೊದಲು ಬರೆಯಲು ಶುರುಮಾಡಿದ್ದು ಕವಿತೆಗಳನ್ನು. ಈಗಲೂ ಅವರಿಗೆ ಆಸೆ ಇರುವುದು ಒಳ್ಳೆಯ ಕವಿಯಾಗಬೇಕು ಎಂಬುದು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿರುವಾಗಲೇ ಹಠ ಹಿಡಿದು ಸಣ್ಣ ಸಣ್ಣ ಹಾಳೆಗಳಲ್ಲಿ ಕವಿತೆಗಳನ್ನು ಬರೆದು ಗೆಳೆಯರ ಮುಂದೆ ಹಿಂಜರಿಯುತ್ತಾ ಓದುತ್ತಿದ್ದ ಗಣೇಶರನ್ನು ಅವರ ಗೆಳೆಯರು ಈಗಲೂ ನೆನಪಿಸಿಕೊಳ್ಳುತ್ತಾರೆ. + +ಕಥೆಯಲ್ಲಿ ಹೇಳಿಕೊಳ್ಳಲಾಗದ ಸುಖದುಃಖಗಳನ್ನು ಕವಿತೆಯಲ್ಲಿ ಹೇಳುವುದು ಹೆಚ್ಚು ಸಲೀಸು, ಆಪ್ತ ಹಾಗೂ ಸುಖಕರ ಎನ್ನುವುದು ಅವರ ಮಾತು. ತೀರ ಸಂಕಟವೆನಿಸಿದಾಗ ಕವಿತೆಯೇ ತೀರಾ ಹತ್ತಿರದ ಸಂಬಂಧಿಯಂತೆ ಕಾಣಿಸುತ್ತದೆ, ನನ್ನನ್ನು ನಾನೇ ಸಂತೈಸಿಕೊಳ್ಳಲು ಕಾವ್ಯಕ್ಕಿಂತ ಒಳ್ಳೆಯ ಉಪಕರಣ ಬೇರೇನಿದೆ ಎಂದು ಅವರು ಹೇಳುತ್ತಾರೆ. + +ಕೆಂಡಸಂಪಿಗೆಯ ಈ ಬಾರಿಯ ಭಾನುವಾರದ ವಿಶೇಷದಲ್ಲಿ ಮೊಗಳ್ಳಿ ಬರೆದ ನಾಲ್ಕು ಹೊಸ ಕವಿತೆಗಳಿವೆ. ಕವಿತೆ ಓದಿ ನಿಮಗೇನನಿಸಿತು ನಮಗೆ ಬರೆಯಿರಿ. + +ಅನಾದಿ ಮಗು + + + + + + + + + + + + + + + +ಆಡಿಕೊಳ್ಳುತ್ತಿದೆ ಕಾಲಾತೀತ ಮಗುದಿಕ್ಕಿಲ್ಲ ದೆಸೆಯಿಲ್ಲ ದೇವರಂಥ ಹಸುಗೂಸುರುಂಡವಿಲ್ಲದ ಗೊಂಬೆಗೆ ಮರು ಜೀವ ತುಂಬಿಬಿಸಾಡಿದ ಆಟಿಕೆಗಳಲ್ಲೆ ಮಾಟದ ನೋಟ ಕಂಡುಮುರಿದ ರೆಕ್ಕೆಯಲ್ಲೆ ದಿಗಂತಗಳ ದಾಟಿತುಕ್ಕು ಹಿಡಿದ ಬಂಡಿಯಲ್ಲೆ ಭೂಮಿ ಸುತ್ತಿ + +ಕುಣಿಯುತ್ತಿದೆ ಮಗು ದಣಿವಿಲ್ಲಕಾಲಾತೀತ ಹಿಗ್ಗಿಗೆ ಕೊನೆಯಿಲ್ಲಹಾಡಿನ ನಾಡಿ ಬಡಿತಕ್ಕೆ ಬಿಡುವಿಲ್ಲಆಡುತ್ತಿದೆ ಮಗು ಆಕಾಶದ ಮೈದಾನದಲ್ಲಿ + +ಚೂರುಪಾರು ಬಣ್ಣದ ಕಾಗದದಲ್ಲೆ ಕಾಮನ ಬಿಲ್ಲು ಬಿಡಿಸಿಹರಿದ ಗಾಳಿ ಪಟವನೆ ದಿಗಂತದಾಚೆಗೂ ಹಾರಿಸಿನಗುತ್ತಿದೆ ಮಗು ನೋವಿಲ್ಲ ನಂಜಿಲ್ಲ ಅನಾದಿಗೆ ಆಕಾಶವೆ ಆಧಾರವಾಗಿನಲಿಯುತ್ತಿದೆ ಬೀದಿ ಬದಿಯ ಮಗು ಹೆಬ್ಬುಲಿಗಳ ಚೆದುರಿಸಿಹೆಮ್ಮಾರಿ ಮುಡಿ ಹಿಡಿದಾಡಿಸಿ ಕಾಳಿಂಗದೆಡೆ ಮೇಲೆ ನರ್ತಿಸಿವಿಷದ ಕಡಾಯದಲ್ಲೆ ಮಿಂದೆದ್ದು ಬಂದು ಬೊಬ್ಬಿರಿದುನಗುತ್ತಿದೆ ಮಗುವಿಗಾವ ಭಯವೂ ಇಲ್ಲ ಯಾರ ಶಂಕೆಯೂ ಇಲ್ಲಬೆಳೆಯುತ್ತಿದೆ ಆಕಾಶದ ಉದ್ದಗಲಕ್ಕೂ ಅನಾದಿ ಮಗು. + +======================================= + +ಪೋಲಿ ಧ್ಯಾನ + +ಏನಯ್ಯ ಇಂತಹ ಸಮುದ್ರದ ಎದಿರುಕುಂಡಿ ತೋರುತ್ತ ಮರಳ ಮನೆಯ ಕಟ್ಟುತ್ತ + +ಕುಂತವಳ ಅಂಡು ದಿಟ್ಟಿಸುತ್ತಿರುವೆಯಲ್ಲಕಾಣದೇನು ಸೂರ್ಯ ಸಿರಿ ನಿನ್ನೊಳಗಣ್ಣಿಗೆ + +ಪುಣ್ಯವಂತರ ದರ್ಶನವನ್ನೆ ಯಾಕೆ ಕಾಣಬೇಕುಸುಮ್ಮನಿರು ಪಾಪಿಯ ಧ್ಯಾನವೆ ಬೇರೊಂದು ದಾರಿ + +ಕಾಣುತ್ತಿದೆ ತಾಳು ದಿವ್ಯ ದರ್ಶನ ತೊಡೆ ನಡುವೆಜಾರುತ್ತಿದ್ದಾನೆ ಸೂರ್ಯ ಅವಳಲ್ಲೆ ದಿಗಂತದಂಚಿಗೆ.===================================== + +ಸಕ್ಕರೆ ಹೊತ್ತ ಇರುವೆ + +ಹೊತ್ತು ಸಾಗುತ್ತಿತ್ತು ಇರುವೆ ಭೂಮಿಯನ್ನೆಹೊತ್ತಂತೆ ಹೊರಳಾಡಿ ತೂರಾಡಿ ಉರುಳುರುಳಿಹರಿಡಾಡಿ ಎಡೆಬಿಡದೆ ಧೃತಿಗೆಡದೆ + +ಅಡ್ಡದಿಡ್ಡಿ ತಡೆಗೋಡೆಗಳ ದಾಟುತ್ತಕೊನೆಯಿಲ್ಲದ ದಾರಿಯ ಕ್ರಮಿಸುತ್ತಸಾಗುತ್ತಿತ್ತು ಪುಟ್ಟ ಜೀವದ ಇರುವೆ + +ಸವಿ ಸಕ್ಕರೆಯ ಹರಳ ಹೊತ್ತುಕಾಲದಲೆಯ ಹಂಗು ತೊರೆದು + +ನೋಡುತ್ತಲೆ ಇದ್ದೆನಿದ್ದೆ ತುಂಬ ಇರುವೆಯೆ ತುಂಬಿಹರಿಯುತ್ತಲೇ ಇತ್ತು ಕನಸಲ್ಲೂ ಬೆಟ್ಟಗುಡ್ಡಗಿರಿಶಿಖರ ಕಣಿವೆ ದಾಟಿ ಬಯಲು ಆಲಯಗಳ ಮೀರಿ + +ಮರದ ದಿಮ್ಮಿಯ ಏರಿಸಾಗರಗಳ ಸುತ್ತಿ ದಿಗಂತದಾಚೆಗೂ + +ಹೊರಳೊರಳಿ ಉರುಳುರುಳಿ ಸಕ್ಕರೆಯ ಹರಳನೆತ್ತಿ ಮೇಲೊತ್ತುಕೊಂಡೇ ನಡೆದು ಅಡೆಗೋಡೆಗಳಕಡೆಗಣಿಸಿ ಸಾಗುತ್ತಲೇ ಇತ್ತು ಇರುವೆ + +ಪುಟ್ಟ ಜೀವದ ಇರುವೆಏನದರ ಸವಿಯಾಸೆಯೊಯಾವ ದಾರಿಯ ಪರಿಯೊಎಂಥ ದಿವ್ಯ ಸುಖದ ಗುರಿಯೊ + +ಹರಿದಾಡಿ ಪರದಾಡಿಕಾಲ ಪ್ರವಾಹದಲಿ ತೇಲಿಆಸೆಯನ್ನೆ ಆಸರೆಯಾಗಿಡಿದು + +ಆಸೆಯಲ್ಲೆ ಆಕಾಶದ ತಡಿಯಲ್ಲರಿದಾಡಿಚಂದ್ರನನ್ನೆ ಹಿಡಿವಂತೆಸೂರ್ಯನನ್ನೆ ಹೊರುವಂತೆ + +ತಾರೆಗಳನ್ನೆ ಮುಡಿವಂತೆದುಃಖದ ದಿಗಂತಗಳ ಮೀರಿಸಾಗುತ್ತಲೆ ಇತ್ತು ಸವಿ ಸುಖದ ಇರುವೆಭೂಗೋಲದ ಎಲ್ಲೆಗಳನ್ನೆ ಸುತ್ತಿಬ್ರಹ್ಮಾಂಡವನ್ನೆ ಹಗಲಿರುಳು ಬಳಸಿ + +ಹರಿಯುತ್ತಲೆ ಇತ್ತು ಇರುವೆನಮ್ಮೊಳಗೇ ಸಕ್ಕರೆಯ ಹೊತ್ತುಕಾಲಾಂತರದ ಅನಂತ ಇರುವೆ.=============================ನೆನಪಿನಸಿವು + + + + + + + + + +ಬಣ್ಣದೋಕುಳಿಯ ಜಾತ್ರೆಯಲ್ಲಿ ಒದ್ದೆಯಾದ ಅವಳಕಂಡು ಎಷ್ಟು ಕಾಲವಳಿಯಿತೊ ಕುಣಿಯುತ್ತಲೆ ಇದ್ದಾಳೆಈಗಲೂ ನೆನಪಿನಂಗಳದ ತುಂಬ ರಂಗು ಚೆಲ್ಲಿ + +ನೀರವ ರಾತ್ರಿಯಲ್ಲವಳು ದನಿ ಎತ್ತರಿಸಿ ಹಾಡುತ್ತಿದ್ದಳು‘ಕಲ್ಲವ್ವ ತಾಯಿ ಮೆಲ್ಲವ್ವ ರಾಗೀಯ’ ದನಿ ತುಂಬಿ ತೇಲಿಬರುತ್ತಲೆ ಇದೆ ಇವತ್ತಿಗೂ ಋತುಮಾನಗಳೆ ಉರುಳಿದರೂ + +ಪಕ್ಕದೂರಿನ ರಂಗು ಜಾತ್ರೆಯ ಬಂಡಿ ದಾರಿಯಲ್ಲಿ ಸನಿಹವೇ ಬಂದುಮೆತ್ತಗೇ ಕೂತು ಒತ್ತೊತ್ತಿ ನಗಾಡಿ ಇಳಿದು ಹೋದವಳುಇಳಿದೇ ಇಲ್ಲ ಇನ್ನೂ ತಟ್ಟುತ್ತಲೇ ಇದ್ದಾಳೆ ನನ್ನೆದೆಯ ಕದವನ್ನು + +ಕೊನೆಗೊಂದು ಮಾತ ಕೇಳಲೆಂದೇ ಬಂದು ಕಣ್ಣಲ್ಲೆ ತುಳುಕಿಕಡು ದುಃಖವ ನುಂಗಿ ಹೊರಟೇ ಹೋದವಳುಉಳಿದೇ ಬಿಟ್ಟಿದ್ದಾಳೆ ಎಷ್ಟು ಕಾಲವಾದರೂ ಹೋಗದಂತೆ ಎಲ್ಲೂ. + +ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. \ No newline at end of file diff --git a/Kenda Sampige/article_554.txt b/Kenda Sampige/article_554.txt new file mode 100644 index 0000000000000000000000000000000000000000..bbe1fbd30a38be7e3156cb84128a68801630d0bd --- /dev/null +++ b/Kenda Sampige/article_554.txt @@ -0,0 +1,77 @@ +ಗ್ರಹಣದ ದಿನ. ಆಳುಗಳೆಲ್ಲಾ ರಜೆ ಕೋರಿದ್ದರಿಂದ ಒಪ್ಪಿದ ಸೀತಾರಾಮನಿಗೆ ಹೆಚ್ಚಿನ ಕೆಲಸವೇನಿರಲಿಲ್ಲ. ಹೊರಗೆ ಹೋದರೆ ಸೂರ್ಯನ ಕಡೆ ಕಣ್ಣಾಡಿಸದೆ ಇರಲಾಗುವುದಿಲ್ಲ. ಕಣ್ಣು ಹೋದರೆ ಈ ಮಲೆನಾಡಿನಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ ಎಂಬ ಭಯದಿಂದ, ಅಡಿಕೆ ಆಯುತ್ತಾ ಜಗಲಿಯಲ್ಲಿ ಕೂರುವುದೇ ಒಳ್ಳೆಯದು ಎಂದು ತೀರ್ಮಾನಿಸಿದ. ಮಧ್ಯಾಹ್ನ ಗ್ರಹಣ ಬಿಡುವವರೆಗೆ ಊಟವಿಲ್ಲ ಎಂದು ಹೆಂಡತಿಯೂ ಅಮ್ಮನೂ ಹುಕುಂ ಹೊರಡಿಸಿದ್ದರಿಂದ ಹೆಚ್ಚಿನ ವ್ಯಾಜ್ಯ ತೆಗೆಯದೆ ತನ್ನ ಪಾಡಿಗೆ ತಾನು ಆಯುತ್ತ ಕುಳಿತ. ಅಮ್ಮನು ದೇವರ ಕೋಣೆಯ ಬಾಗಿಲ ಬಳಿ ಕೂತು ಒಂದಾದ ಮೇಲೊಂದರಂತೆ ನಾಮಾವಳಿ ಹೇಳುತ್ತಿದ್ದರೆ, ಸರೋಜ ಅಚಾನಕ್ಕಾಗಿ ಸಿಕ್ಕ ಬಿಡುವಿನಲ್ಲಿ ತನ್ನ ಸೈಲವಾದ ರವಿಕೆಗಳಿಗೆಲ್ಲ ಟಕ್ಸ್ ಹಾಕುತ್ತಾ, ಆಚೆ ಕೇರಿಯ ಹೆಣ್ಮಕ್ಕಳು ಕೊಟ್ಟ ರವಿಕೆ ಬಟ್ಟೆಗಳನ್ನು ಅಳತೆಗೆ ತಕ್ಕಂತೆ ಕತ್ತರಿಸುತ್ತ ಕೂತಿದ್ದಳು. ಮಕ್ಕಳು ಸಾಗರದ ಕಾಲೇಜಿನಲ್ಲಿ ಏರ್ಪಡಿಸಿದ ಗ್ರಹಣ ನೋಡುವಿಕೆಗೆ ಹೋಗಿದ್ದರು. + +ಕೈ ತನ್ನ ಪಾಡಿಗೆ ತಾನು ಅಡಿಕೆ ಆಯುತ್ತಾ ಆಪಿ, ಚಾಲಿ, ಬೆಟ್ಟೆ ಅಂತೆಲ್ಲ ವಿಭಜಿಸಿ ರಾಶಿ ಮಾಡುತ್ತಿತ್ತಾದರೂ ಮನಸ್ಸಿನಲ್ಲಿ ಮುಂದಿನ ತಿಂಗಳಿನಲ್ಲಿ ಬರಲಿರುವ ಅಪ್ಪಯ್ಯನ ತಿಥಿಯ ರೂಪುರೇಷೆಗಳು ಮೂಡುತ್ತಿದ್ದವು. ಹಿರೇಮನೆಯ ದತ್ತಭಟ್ಟರೂ ಮತ್ತವರ ಅಸಿಸ್ಟೆಂಟ್ ಇಡುವಾಣಿಯ ನಾಗೇಂದ್ರ ಇಬ್ಬರನ್ನೂ ಈ ವಾರದೊಳಗೇ ಫೋನ್ ಮಾಡಿ ಬುಕ್ ಮಾಡಬೇಕು ಅಂದುಕೊಂಡ. + +ಈ ಸಲ ಅಷ್ಟೇನೂ ಕೊಳೆ ಬಂದಿಲ್ಲ. ಒಳ್ಳೆಯ ಇಳುವರಿಯೇ ಬಂದಿದೆ. ಮಕ್ಕಳ ಜೊತೆಗೆ ಒಂದು ಪುಣ್ಯಕ್ಷೇತ್ರ ಯಾತ್ರೆ ಮಾಡಿಬರಬಹುದು ಎನ್ನಿಸಿತು. ಪುಣ್ಯಕ್ಷೇತ್ರವೆಂದರೆ ಮುಖ ಹಿಂಡುತ್ತಾರೆ. ಅದೆಂತದೋ ಟೀವಿಯಲ್ಲಿ ಬಡಕೊಳ್ಳುವ ವಾಂಡರ್ಲಾ ವಾಂಡರ್ಲ ನೋಡಬೇಕಂತೆ. ಸಮಾ ಸಿಟ್ಟು ಬಂದರೂ ಮಕ್ಕಳಲ್ಲವೇ ಅಂದುಕೊಂಡು ಸುಮ್ಮನಾದ. ಈಗಿನ ಮಕ್ಕಳಿಗೆ ಹೇಳಿ ಪೂರೈಸಲಾಗುವುದಿಲ್ಲ. ಹಿಂದೆ ತಾನೆಂದಾದರೂ ಸಣ್ಣಿದ್ದಾಗ ಅಪ್ಪಯ್ಯನ ಮಾತಿಗೆ ಎದುರು ನುಡಿದಿದ್ದಿದೆಯೇ? ದೊಡ್ಡವನಾಗಿ ಮನೆವಾರ್ತೆ ನೋಡುವಾಗ ಮಾತ್ರ ತನ್ನ ಮಾತೆ ನಡೆಯಿತಾದರೂ, ಆಗ ಅಪ್ಪಯ್ಯ ಶೀರ್ಣಜೀರ್ಣನಾಗಿದ್ದರಿಂದ ಮಾತ್ರ ಅದು ನಡೆದಿದ್ದು ಎಂದು ಗೊತ್ತಿದೆ. + +ಹೀಗೆಲ್ಲ ಮನಸು ತನ್ನ ಜಾಡು ಹಿಡಿದು ಹೋಗುತ್ತಿರಲಾಗಿ, ಬಿಸಿಲು ಬಣ್ಣಗೆಡುತ್ತಿತ್ತು. ಎಂದಿನಂತಿದ್ದರೆ ಇಷ್ಟೊತ್ತಿಗೆ ಬಿಸಿಬಿಸಿ ನೀರು ಸುರಿದು ಸ್ನಾನವಾಗಿ, ಮಡಿಯಲ್ಲಿ ದೇವರ ತಲೆಯ ಮೇಲೆ ನಾಕು ಹೂವು ಬೀಳಿಸಿ, ನೈವೇದ್ಯವಿಟ್ಟು ಊಟದ ಮನೆಯಲ್ಲಿ ಮಣೆ ಕಿರ್ರೆನ್ನುತ್ತಿತ್ತು. ಯಾರು ಏನೇ ಹೇಳಬಹುದು, ಸರೋಜಳ ಕೈಯ ಹದವೇ ಹದ. ರುಚಿಯಾಗೇ ಮಾಡಿದ್ದರೂ ಅಮ್ಮನ ಮೇಲೆ ಕೂಗಾಡುತ್ತಿದ್ದ ಅಪ್ಪನೇ ತಣ್ಣಗೆ ಸರೋಜಳ ಅಡಿಗೆ ಕತ್ತರಿಸುತ್ತಿದ್ದುದೇ ಇದಕ್ಕೆ ಸಾಕ್ಷಿ. ಇವತ್ತೇನಡಿಗೆ ಮಾಡಿದ್ದಳೋ? ಹ್ವಾ ಇವತ್ತು ಗ್ರಾಣ ಬಿಟ್ಟ ಮೇಲೆ ಮುಂದಿನ ಕೆಲಸ ಅಲ್ದೋ. + +ಸರೂ.. ನವುರಾಗಿ ಕರೆದ.ಎಂತೂ? ..ಕಣ್ಣು ಬಟ್ಟೆಯಳತೆಯಲ್ಲೇ ಇತ್ತು. ಮಾತು ಗಂಡನೆಡೆಗೆ ಸಾಗಿತು.“ಇವತ್ತು ಒಂದು ತೊಂಡೇ ಪಲ್ಯ, ಬಸಳೇಸಪ್ಪಿನ ಪಳದ್ಯ ಸಾಕಿತ್ತನಾ ಹೇಳಿ ಕಾಣ್ತು, ಎಂತ ಹೇಳ್ತೆ?”“ಗೊತ್ತಾತಲ ಬಿಡಿ ಮಾರಾಯ್ರ ಖಾಯಿಶು. ಮಾಡದಾತಲ ಮತ್ತೆ. ಅಲ್ಲ ಒಂದ್ ಗ್ರಾಣ ಅಂದ್ರೆ ಮುಗ್ಯಾ ತನಕಾನೂ ಹೊಟ್ಟೆ ಕಾಯದಿಲ್ಯಲ ಹೇಳಿ,” – ಅವಳ ಮಾತು ಕಿರುನಗೆಯ ಕೊಂಕಿನ ಸಂದಲ್ಲಿ ತೂರಿತು.ಮತ್ತೆ ತಿರುಗಿ ಉಚಾಯಿಸಿ ಮಾತಾಡಿ ರುಚಿಕಟ್ಟಾದ ಊಟ ಕಟ್ಟಾದೀತು ಎಂಬ ಹುಶಾರಿಯಲ್ಲಿ ಸೀತಾರಾಮನಿಗೆ ಅಡಿಕೆ ಆಯುವುದಾಯಿತು. + +ಎಷ್ಟೇ ನವುರಾಗಿ ಮಾತುಕತೆ ನಡೆದರೂ ಕಿವಿ ಚುರುಕಾಗಿರುವ ಅಮ್ಮ ಸುಮ್ಮನಿರದೆ “ಅವರಿಗಂತೂ ತೊಂಡೇಕಾಯಿ ಪಲ್ಯ ಅಂದ್ರೆ ಮುಗತ್ತು, ರಾಶಿ ಕಾಯಿ ತುರ್ದು ಹಾಕಿದ್ರಂತೂ ಕೇಳದೇ ಬ್ಯಾಡ, ಸಂಜಿಗೆ ಮತ್ತೆ ಹೊಸದಾಗಿ ಬಾಳೆ ತುದೀಗೆ ಏನಾರ ಮಾಡಾವಾಗಿತ್ತು,” ಅಂದಾಯಿತು. “ಹುಂ ಇಷ್ಟವಾಗದೆ ಏನಾಗ್ತು, ಆರೈಕೆ ಮಾಡವು ಇದ್ರೆ ಎಂತ ಬೇಕಾರೂ ಎಷ್ಟ್ ಬೇಕಾರೂ ತಿನ್ಲಕ್ಕು ತಗಾ” ಮಾತಿನ ಬಾಣ ನಾಲಿಗೆಯ ಹೆದೆ ತೂರಿ ಹೊರಟೇ ಹೋಯಿತು. ಸರೋಜ ಕಣ್ಣು ದೊಡ್ಡಕೆ ಬಿಟ್ಟು ಹೆದರಿಸುತ್ತಿದ್ದರೂ ಸೀತಾರಾಮನ ನಂಜಿನ ನಗೆ ಬಾಡಲಿಲ್ಲ. ಅಮ್ಮನ ಶ್ಲೋಕದ ವಾಲ್ಯೂಮ್ ದೊಡ್ಡದಾಯಿತಾದರೂ, ಸ್ಪಷ್ಟತೆಯನ್ನು ನುಂಗಿಕೊಂಡಿತು. + +ಭಟ್ಟರಿಗೆ ಫೋನ್ ಮಾಡಿ ಮುಂದಿನ ಬಹುಳ ಬಿದಿಗೆಗೆ ಬರುವ ಅಪ್ಪನ ತಿಥಿಗೆ ಬುಕ್ ಮಾಡಿಕೊಂಡಾಯಿತು. + +ಇನ್ನು ಸ್ವಲ್ಪ ಹೊತ್ತಿನಲ್ಲಿ ಗ್ರಹಣ ಬಿಟ್ಟ ಅಂದಾಜಿಗೆ, ದೇವಸ್ಥಾನದ ದೊಡ್ಡ ಗಂಟೆ ಬಾರಿಸಿತು. ಸರೋಜ ತನ್ನ ಸ್ನಾನ ಮುಗಿಸಿ ಸೀತಾರಾಮನಿಗೆ ನೀರು ತೋಡಿಟ್ಟು ಹೊರಟಳು, ಬಿಸಿ ಬಿಸಿ ನೀರೆರೆದುಕೊಂಡ, ಬಚ್ಚಲ ಮೆಟ್ಟಿಲು ಹತ್ತಿ ಒಳಮನೆಗೆ ಬರುವಾಗ ಸ್ವಲ್ಪ ಗಡಿಬಿಡಿಯಾದಂತಾಗಿ ಮೆಟ್ಟಿಲ ಮೇಲಿನ ಒದ್ದೆಗಾಲು ಜಾರಿ, ಧೊಪ್ಪನೆ ಬಿದ್ದ. ಸೊಂಟದಿಂದ ಕುತ್ತಿಗೆಯವರೆಗೆ ಯಮಯಾತನೆಯ ಝರಿ ಚುಳ್ಳನೆ ಹರಿಯಿತು. ಕಣ್ಣು ಕತ್ತಲಿಟ್ಟಿತು. ಮೈ ಬೆವರೊಡೆಯುತ್ತಿದ್ದಂತೆ ಹೆದರಿಕೆಯಿಂದ ‘ಹೋದ್ನಲ್ರೇ ಹೋದಿ” ಎಂದು ಕೂಗು ಹಾಕಿದ. ಇದ್ದ ಎರಡು ಹೆಣ್ಣು ಜೀವಗಳು ಓಡೋಡಿ ಬಂದರು. ಒಬ್ಬಳಿಗೆ ನೈವೇದ್ಯದ ಮಡಿ, ಇನ್ನೊಬ್ಬಳಿಗೆ ಇನ್ನೂ ಗ್ರಹಣದ ಮೈಲಿಗೆ ಕಳೆದಿರಲಿಲ್ಲ. ಯಾರು ಮುಟ್ಟುವುದು ಬಿಡುವುದು ಎಂಬ ನಿರ್ಣಯಕ್ಕೆ ಹಿರಿಯಳಾದ ಭುವನೇಶ್ವರಿಯೇ ಮುಂದಾಗಿ, ಮೈಲಿಗೆ ಕೈಯಲ್ಲೇ ಮಗನ್ನ ಹಿಡಿದು ಅಲ್ಲೇ ಗೋಡೆಗೆ ಒರಗಿಸಿ ಕೂರಿಸಿದಳು. ಈಗ ಸಂಭಾಳಿಸಿಕೊಂಡ ಸರೋಜ ಮಡಿಯನ್ನು ಮೀರಿ ಗಂಡನ ಬೆವೆತ ಹಣೆಯೊರಸಿ, ಕೈಯಲ್ಲಿದ್ದ ತಂಬಿಗೆಯಿಂದ ನೀರು ಸಿಡಿಸಿ, ಬಾಯಿಗೆ ನಾಲ್ಕು ಹನಿ ತೊಟ್ಟು ತೊಟ್ಟಾಗಿ ಬಿಟ್ಟಳು. ಎಲ್ಲವನ್ನೂ ಮಿಕ್ಕು ಮೀರಿ ನೋವು ಹರಡುತ್ತಿತ್ತು. “ನಿಧಾನ ಎದ್ದು ನಿಂತಕಳ್ಳೀ ಹೆಂಗಾರೂ ಒಳಗಡೆ ಕಾಲುಮಂಚದವರಿಗೆ ಹೋಪನ” ಅಂತ ಸರೋಜ ಎಬ್ಬಿಸಲು ನೋಡಿದಳು. “ಎನ್ ಕೈಲಾಗತಿಲ್ಯೆ” ಎಂಬ ಗೊಗ್ಗರು ಮಾತು ಮಾತ್ರ ಹೊರಟಿತು ಸೀತಾರಾಮನಿಂದ. + + + +ಹೆದ್ರಡ ಸುಮ್ನಿರು, ಆನು ಕಾಲ್ಕಡಿಗೆ, ಮೊಣಕಾಲ್ ಕೆಳ್ಗೆ ಎರಡೂ ಕೈ ಹಾಕಿ ಹಿಡ್ಕತ್ತಿ, ನೀ ಭುಜದ ಕೆಳಗಿಂದ ಎತ್ತು, ಇಲ್ಲೇ ಕಂಬಳಿ ಮೇಲೆ ಮಲಗ್ಸನ ಎಂದು ಮತ್ತೆ ಭುವನೇಶ್ವರಿ ಸೊಸೆಗೆ ಆಸರೆಯಾದಳು. ಇಬ್ರೂ ಹೇಗೋ ಆ ದೊಡ್ಡ ಆಳನ್ನು ಎತ್ತಿ ತಂದು ಅಲ್ಲೆ ಯಾವಾಗಲೂ ಕಾಲುಮಣೆಯ ಬಿಡಿಸಿಕೊಂಡೇ ಇರುತ್ತಿದ್ದ ಕಂಬಳಿಯ ಮೇಲೆ ಹೊತ್ತು ಮಲಗಿಸಿದರು. ಹಾಗೇ ಸ್ವಲ್ಪ ನೋವಿನೆಣ್ಣೆ ತಿಕ್ಕಿ, ನಿಂಬೆ ಪಾನಕ ಕುಡಿಸಿ, ಅವನಿಗೆ ಇತ್ತಲ ನೆದರು ಬಂದ ಮೇಲೆ, ಸರೋಜ ಆಚೆಮನೆಗೆ ಹೋದಳು. + +ಆಚೆಮನೆಯ ಸತೀಶನ ಕಾರಿನಲ್ಲಿ ಅವರಿವರ ಸಹಾಯದಿಂದ ಕೂರಿಸಿ ಕರಕೊಂಡು ಸಾಗರದ ಆಸ್ಪತ್ರೆಗೆ ಸಾಗಿಸಿದರು. ದೊಡ್ಡಾಸ್ಪತ್ರೆ ಡಾಕ್ಟರು ಎಕ್ಸ್ ರೇ ತೆಗೆದು ನೋಡಿಸಿ, ಏನೇನೂ ತೊಂದರೆಯಿಲ್ಲ. ಫ್ರಾಕ್ಚರಿನ ಪಂಚಾತಿಕೆ ಇಲ್ಲ್ಲ. ಬರೆ ನರ ಹಿಡಿದಿರುವುದಷ್ಟೇ- ಮಸಲ್ ಸ್ಪ್ರೈನ್ ಅಂತಾರೆ ಇದಕ್ಕೆ. ಇನ್ನೊಂದೆರಡು ವಾರ ಈ ಕ್ರೇಪು ಬ್ಯಾಂಡೇಜು ಸುತ್ತಿಕೊಂಡೇ ಇರಿ, ಭಾರ ಎತ್ತಬೇಡಿ, ಹೆಚ್ಚಿಗೆ ಅಲುಗಾಟದ ಕೆಲಸ ಬೇಡ. ಈಗ ಒಂದೆರಡು ವ್ಯಾಯಾಮ ತೋರಿಸಿಕೊಡುತ್ತೇನೆ. ದಿನವೂ ಮನೆಯವರ ಸಹಾಯದಿಂದ ಅದನ್ನು ಮೂರು ನಾಕು ಸಾರ್ತಿಯಾದರೂ ಮಾಡಬೇಕು ಅಂತೆಲ್ಲ ಹೇಳಿ, ಒಂದಿಷ್ಟು ನೋವಿನ ಮಾತ್ರೆ, ಮುಲಾಮು ಎಲ್ಲ ಬರೆದುಕೊಟ್ಟರು. ಕ್ರೇಪು ಬ್ಯಾಂಡೇಜೂ ಕೂಡ. ಈಗಿನ ನೋವಿಗೆ ಒಂದು ಇಂಜಕ್ಷನ್ ಕೊಟ್ಟು ಶಮನದ ಮಾತಾಡಿದರು. ಮಲಗಿಕೊಂಡು ಕೈಕಾಲು ನುರಿಸಿ ಮಾಡುವ ನಾಲ್ಕಾರು ವ್ಯಾಯಾಮ ತೋರಿಸಿಕೊಟ್ಟರು. + +ಸೀತಾರಾಮನ ಊರು ಬಾಳೆಹಳ್ಳಿ ಸಾಗರದಿಂದ ಆರು ಕಿಮೀ ಅಷ್ಟೇ. ಶರಾವತಿಯ ಹಿನ್ನೀರಿನ ಕಣಿವೆ ಕೊಳ್ಳದ ಮೇಲುಬದಿಯ ಕಾನುಮನೆಗಳಲ್ಲಿ ಅದೊಂದು. ಬಸ್ಸು ಓಡಾಟ- ಟಾರು ಇದ್ದಿದ್ದರಿಂದ ಬಾಳೆಹಳ್ಳಿ ಹೆಸರಿಗೆ ಮಾತ್ರ ಹಳ್ಳಿಯಾಗಿ ಉಳಿದಿತ್ತು. ಮಾಧ್ಯಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಮ ಪಂಚಾಯಿತಿ, ಅಂಗನವಾಡಿ ಮತ್ತು ಒಂದಿಷ್ಟು ಆಪತ್ತಿನ ಅಂಗಡಿ ಮುಂಗಟ್ಟು, ಟೇಲರಂಗಡಿ, ಎಲ್ಲ ಇದ್ದ ಊರು ಅಂದರೇ ಹೆಚ್ಚು ಸರಿ. ಅನಗತ್ಯ ಕುಲುಕಾಟವಿಲ್ಲದೆ ಸತೀಶನ ಹುಶಾರು ಡ್ರೈವಿಂಗಿನಲ್ಲಿ ಮತ್ತೆ ಮನೆ ಸೇರಿಕೊಂಡ.  ದಾರಿಯಲ್ಲಿ ಸರೋಜನ ಸೊರಬರ ಕಡಿಮೆಯಾಗಿ ಸಮಾಧಾನದಿಂದ ಕೂತಿದ್ದಳು. ಈಗ ಹೊಟ್ಟೆ ಚುರುಗುಡುವುದು ಗೊತ್ತಾಗುತ್ತಿತ್ತು. ಮನೆಯಲ್ಲಿ ಭುವನೇಶ್ವರಿ ಅವಲಕ್ಕಿ ಕಲಸಿ ಕಾಯುತ್ತಿದ್ದಳು. + +ಮರುದಿನದಿಂದ ಶೆಟ್ಟಿ ಬಿಡಾರದ ಯಶೋದಕ್ಕನಿಗೆ ಮನೆಯ ಸುತ್ತುಗೆಲಸದ ಜೊತೆಗೆ ಸೀತಾರಾಮನ ಹೊರ ಆರೈಕೆಯೂ ಸೇರಿಕೊಂಡಿತು. ಯಜಮಾನ ಮಲಗಿಬಿಟ್ಟಿದಾನೆ. ಮಕ್ಕಳು ಸ್ಕೂಲು ಕಾಲೇಜಿಗೆ ಹೋಗುವವರು. ಅತ್ತೆಗೆ ಮಡಿಮೈಲಿಗೆಯಿಂದಾಗಿ ಎಲ್ಲ ಕೆಲಸವನ್ನೂ ಪರಾಂಬರಿಸುವಂತಿಲ್ಲ. ಹಾಗಾಗಿ ತೋಟಗದ್ದೆಯ ದೇಖರೇಖೆ ಸರೋಜಳದೇ ಆದವು, ಅಡಿಗೆ ಮನೆ,ಕೊಟ್ಟಿಗೆಯೂ ಬಗಲು ಜಗ್ಗುವ ಕೆಲಸವೇ. ಇದ್ದಿದ್ದರಲ್ಲಿ ಅತ್ತೆ ಭುವನೇಶ್ವರಿ ಸೀತಾರಾಮನ ಔಷಧ ಮಾತ್ರೆಗಳ ಹೊಣೆ ವಹಿಸಿಕೊಂಡಿದ್ದಕ್ಕಾಯಿತು. ದಿನವೂ ಬೆಳಿಗ್ಗೆ ಭುವನೇಶ್ವರಿ ಮತ್ತು ಸರೋಜರ ಸಹಾಯದಿಂದ ಹೊರಗೆ ಅಂಗಳದಲ್ಲಿ ಚಿಕ್ಕದೊಂದು ಸ್ಟೂಲಿನ ಮೇಲೆ ಕೂರುವ ಹೆಗಡೇರ ಬೆನ್ನಿಗೆ ಯಶೋದೆಯು ನೋವಿನೆಣ್ಣೆ ಮತ್ತು ಡಾಕ್ಟರ ಮುಲಾಮು ಎರಡನ್ನೂ ಸವರಿ, ಬಿಸಿಲಲ್ಲಿ ಕೂರಿಸಿ ಅರ್ಧಗಂಟೆ ಬಿಟ್ಟು ಪುಟ್ಟ ಬಾಟಲಿಯಲ್ಲಿ ಬಿಸಿನೀರು ತುಂಬಿ ಕುತ್ತಿಗೆಯಿಂದ ಬೆನ್ನಿನತನಕ ನೀವಿ ನೋವು ಹೊಡೆಯುವ ಕೆಲಸ ಮಾಡಿದಳು. ಅದು ಮುಗಿಯುತ್ತಲೇ ಎರಡು ದೊಡ್ಡ ಚರಿಗೆ ಬಿಸಿನೀರು ಸುರಿಸುರಿದು ಹೆಗಡೇರಿಗೆ ಸ್ನಾನ ಮಾಡಿಸಿಯೂ ಆಯಿತು. ಅಷ್ಟೊತ್ತಿಗೆ ಸರೋಜಕ್ಕ ತರುವ ಹಾಲುಬಿಸಿನೀರು ಕುಡಿಯಲು ಯಶೋದೆ ಹೋಗುವಳು. ಈಗ ಸರೋಜ ಗಂಡನ ಮೈಯೊರಸಿ, ಹೊರಪಂಚೆ ಬದಲಿಸಿ, ಮತ್ತೆ ಅತ್ತೆಯ ಸಂಗಡ ಒಳಗೆ ಕರೆದೊಯ್ಯುವಳು. ಅಲ್ಲಿ ಮತ್ತೊಂದಿಷ್ಟು ಉಪಚಾರ ನಡೆದು, ವಾರದ ಕೊನೆಗೆ ಸೀತಾರಾಮನು ಮೊದಲಿನ ದಿನಚರಿಯ ಹಾದಿ ಕಾಣುವ ಭರವಸೆ ಬಂತು. ಸಂಜೆ ಕಾಲೇಜು ಮುಗಿಸಿ ಬಂದ ಮಗ ಸುಮಂತ ಡಾಕ್ಟರು ಕಲಿಸಿದ ವ್ಯಾಯಾಮಗಳನ್ನ ಮಾಡಿಸುವನು. ಮೊದಲ ದಿನ ಯಶೋದೆ ಬೆನ್ನಿಗೆ ಎಣ್ಣೆ ಸವರಿ, ಬಾಟಲಿಯಲ್ಲಿ ನೀವಿ, ನೀರು ಸುರಿವಾಗ ನಾಚಿಕೆಯಾದರೂ, ಆ ನಂತರದಲ್ಲಿ ಅದರ ಹಿತ ಅವನನ್ನೇ ಸೆಳೆಯತೊಡಗಿತು. + +ಹೀಗೆ ಉಪಚಾರದ ಮೇಲೆ ಉಪಚಾರ ಹೊದ್ದು ಕಳಕ್ಕೆನ್ನುವ ನೋವಿನಿಂದ ಬಿಡುಗಡೆ ಪಡೆವಾಗ ಬರೊಬ್ಬರಿ ಮೂರು ವಾರವೇ ಆಯಿತೇನೋ.ಚೇತರಿಸಿಕೊಂಡು ಮೇಲೆದ್ದ ಸೀತಾರಾಮನ ಮೋರೆ ಸ್ವಲ್ಪ ಬಚ್ಚಿದ್ದರೂ, ಆ ಮೂರು ವಾರದ ನೋವು ಮತ್ತು ಬಿಡುವು ಅವನಿಗೆ ಹೊಸದೇ ನಿಲುವು ನೀಡಿದ್ದು ಸುಳ್ಳಲ್ಲ. + +ಭುವನೇಶ್ವರಿ ಮಗನನ್ನು ಕರೆದು ಅಂದಳು “ಸೀತೂ, ಹೆಚ್ಚೂ ಕಮ್ಮೀ ಹುಶಾರಾದಂಗಾತು, ಅವ್ಳ ಜೊತೀಗೆ ಹೋಗಿ ದೇವಸ್ಥಾನದಾಗೆ ಒಂದು ಹಣ್ಣು ಕಾಯಿ ಮಾಡಿಸ್ಕಂಡು ಬಾ ನೋಡನ. ಅವತ್ತು ನೀ ಬಿದ್ದ ಕೂಡಲೇ ಎತ್ತಕ್ಕಾರೆ ಆನಂತೂ ಎಮ್ಮೂರ ಗಣಪತಿಗೇ ಬೇಡಿದ್ದು. ಎನ್ನ ಮಾತು ತೆಗದು ಹಾಕಲ್ಲೆ ಅಂವ. ಪಾಕ್ಚರು ಮಾಡಿಸದೇ ಹಂಗೇ ಶಣ್ಣ ಪೆಟ್ಟು ಕೊಟ್ಟು ಕಳದ.” + +ಅಲ್ಲೇ ಇದ್ದ ಮಕ್ಕಳು ನಕ್ಕರು. ಅಜ್ಜಿಯ ಇಂಗ್ಲೀಶು ಅವರಿಗೆ ಎಂದಿಗೂ ತಮಾಷೆಯೇ. ಸುಮಂತ ಅಂದ “ಹೌದೇ ಅಮ್ಮಮ್ಮಾ, ಮತ್ತೇ ನೀ ಕೇಳಿದ್ದಕ್ಕೇ ಗಣ್ಪತಿ ಡಾಕ್ಟರ ಎಕ್ಸರೇ ಒಳಗೆ ತೂರಿಕ್ಯಂಡು ‘ಪಾಕ್ಚರು’ ಮಾಡದೆ ಸ್ಪ್ರೈನ್ ಮಾಡಿದ್ದು”, ಹೈಸ್ಕೂಲಿನ ತಂಗಿ ಸ್ವಾತಿ ಕಿಸಕ್ಕೆಂದಳು. ಭುವನೇಶ್ವರಿಗೆ ಸಿಟ್ಟೇ ಬಂತು. “ಹೌದ್ರೋ ನಿಂಗಕ್ಕೆ ತಮಾಶಿ. ಅವತ್ತು ಮನೇಲಿದ್ದು ನೋಡಕ್ಕಾಗಿತ್ತು. ತೇಲುಗಣ್ಣು ಮೇಲುಗಣ್ಣಾಗಿ ಬಿದ್ದಿದ್ದು ಎನ್ ಮಗ. ಬದುಕಿಸಿಕೊಂಡ್ ಬಂದಿದ್ದು ನಿಂಗ್ಳ ಅಮ್ಮ, ಕಾದಿದ್ದು ಗಣಪತೆ. ಪ್ಯಾಟೆ ಮೇಲೆ ಗ್ರಹಣದ ದಿನ ತಿರುಗಕ್ಕೆ ಹೋದ ನಿಂಗಕ್ಕೆಂತ ಗೊತ್ತಿದ್ದು ಮಣ್ಣು. ದೊಡ್ಡವ್ರು ಅಂದ್ರೆ, ದೇವ್ರು ದಿಂಡ್ರು ಅಂದ್ರೆ ವಿನಯ ಇಲ್ದೆ ಇದ್ ಮೇಲೆ ಅದ್ಯಂತಾ ಪಾಠ ಕಲಸ್ತಾ ಆ ಮಾಷ್ಟ.” + +ಮೊಮ್ಮಕ್ಕಳ ನಗು ವಿಶಾಲವಾಯಿತು. ಅಮ್ಮಮ್ಮನಿಗೆ ಸಿಟ್ಟು ಬಂದರೆ ಮಾಷ್ಟರು ಎಂಬ ಕಂಗ್ಲೀಷು ಪದದ ಬಹುವಚನ ಕಳಚಿ ಮಾಷ್ಟ ಎಂಬ ಏಕವಚನಕ್ಕೆ ತಿರುಗಿಕೊಂಡುಬಿಡುತ್ತಿತ್ತು. ಇಬ್ಬರೂ ಒಬ್ಬರಿನ್ನೊಬ್ಬರು ಚೂಟಿಕೊಂಡು ನಗಹತ್ತಿದರು. “ಅಮ್ಮ, ನಿಮ್ಮನೇವರನ್ನ ಕರಕಂಡು ಹೊರಡು ಮತ್ತೆ ಗಪ್ಪತಿಗೆ ಲೈಟಾಗಿ ಹೋಗ್ತು” ಎಂದು ಅಲ್ಲೇ ನಿಂತು ಈಕ್ಷಿಸುತ್ತಿದ್ದ ಅಮ್ಮನಿಗೆ ನಗೆ ದಾಟಿಸಿ ಹೊರಗೆ ಪರಾರಿಯಾದರು.ಪೂಜೆ ಮುಗಿಸಿಕೊಂಡು ದೇವಸ್ಥಾನದ ಮೆಟ್ಟಲಿಳಿಯುವಾಗ “ಅವಳಿಗೊಂದು ಹೊಸ ಸೀರೇನೆ ಕೊಟ್ರೆ ಆತೇನ” ಸರೋಜ ಅಂದಳು. ಯಾರಿಗೇ ಮಾರಾಯ್ತೀ ಅಂದವನಿಗೆ ತಿರುಗಿಸಿ ಅಂದಳು. “ದಿನಾ ಗನಾಗಿ ಎಣ್ಣೆ ಹಚ್ಚಿಸಿಕೊಂಡು ಮೀಯಕ್ಕಾರೆ ಬೇಕಿತ್ತು, ಈಗ ಹುಶಾರಾದ ಮೇಲೆ ಗಣಪತಿಯೊಂದೇ ಕಾರಣ ಆದ್ನಾ? ಹೆಂಗಿದ್ರೂ ಇಂವಗೆ ಒಂದು ಕಾಯಿ ಎರಡು ಬಾಳೆಹಣ್ಣಲ್ಲಿ ಮುಗಿಸಲಕ್ಕಲ್ಲ ಅಲ್ದಾ?” + +“ಅದ್ಯಂತಾ ಮಾತೇ ನಿಂದು. ಕೊಂಕು ಕೂರದೆ ಮಾತಾಡಕ್ಕೆ ಬರದಿಲ್ಯಾ? ಅವಳ ಹೆಸರು ಹೇಳಿಯೇ ಸೀರೆ ಹೇಳಿದ್ರೆ ಆನು ಬ್ಯಾಡ ಅನ್ನವ್ನಾ” ಅಂದರೂ ಅವನಿಗೇ ಮನಸ್ಸಲ್ಲಿ ಚುಳ್ಳೆಂದಿದ್ದು ಮತ್ಯಾತಕ್ಕೂ ಅಲ್ಲ. ಈ ವಿಷಯ ಮೊದಲೇ ತನಗೆ ಹೊಳೆಯದೇ ಹೋಯಿತಲ್ಲಾ ಎಂದು. “ಹೋಗಲಿ ಬಿಡು. ನೀನೆ ಪರಮಾಯಿಶಿ ಮಾಡಿ ಕೊಡು. ಬೇಕಾರೆ ಇಲ್ಲೆ  ವಿಟ್ಠಲ ಮರಾಟೆ ಅಂಗಡಿಯಲ್ಲಿರೋ ಸೀರೆ ಆರಿಸಿ ತಗ”. ಅಂತ ನಿಧಾನಕ್ಕೆ ಅಂದ. ಮತ್ತೆ ಸರೋಜ ಅದೇ ವಿಷಯವನ್ನ ಹಿಂಜಲು ಹೋಗಲಿಲ್ಲ. ಮರುದಿನವೇ ಸೀರೆ ಆರಿಸಿ, ಗಂಡನಿಗೂ ಅತ್ತೆಗೂ ತೋರಿಸಿ, ಅರಶಿನ ಕುಂಕುಮದೊಡನೆ, ಒಂದು ಸೇರಕ್ಕಿ, ಒಂದು ದೊನ್ನೆ ಬೆಲ್ಲವನ್ನೂ ಇಟ್ಟು ಯಶೋದೆಗೆ ಕೊಡುವಾಗ ಕೊಟ್ಟವಳು ಇಸಗೊಂಡವಳು ಇಬ್ಬರ ಕಣ್ಣಲ್ಲೂ ಹನಿಗೂಡಿದ್ದು ಬೇರೆ ಯಾರ ಗಮನಕ್ಕೂ ಬರಲಿಲ್ಲ. ಹೆಗ್ಡೇರ ಮನೆಯ ಹೊರಗೆಲ್ಸವೇ ಒಂದ್ರಾಶಿ ಇದ್ದರೂ ದಿನಾ ನಿಗಾವಹಿಸಿ ಸೇವೆ ಮಾಡಿದ್ದ ಮುದುಕಮ್ಮಗೆ ಇಷ್ಟೂ ಮಾಡದೆ ಹೇಗೆ, ಯಾವ ರಿಣವೋ ಎಂದು ಸರೋಜೆಯ ಕಣ್ಣು ಹನಿದಿತ್ತು. ತನ್ನ ನಿಷ್ಟೆ ಗುರುತಿಸಿದ ಹೆಗ್ಗಡತಿ ಕೊಟ್ಟ ಅಂಚಿನ ಸೀರೆ ಮತ್ತು ಮರ್ಯಾದೆ, ಹೆಗಡೇರು ಹುಶಾರಾದ್ವಲಾ ಎಂಬ ನಿರಾಳ, ಆ ನಿಸ್ಪ್ರಹ ಜೀವಿ ಯಶೋದೆಯ ಕಣ್ಣಲ್ಲಿ ಹನಿ ತರಿಸಿತ್ತು. + +ಅಂದು ಸಂಜೆ ಹುಲ್ಲು-ಕರಡ ಕೊಯ್ಯುವ ಆಳುಗಳ ನಿಗಾ ನೋಡಲು ಬ್ಯಾಣಕ್ಕೆ ಹೋದವನಿಗೆ ಇದ್ದಕ್ಕಿದ್ದಂಗೆ ಒಂದು ವಿಷ್ಯ ನೆನಪಾಗಿ ಮನಸು ಮುದುಡಿತು. ಜೀರ್ಣವಾಗಿ ಹೋಗಿದ್ದ ಅಪ್ಪಯ್ಯನ ಮೈಯ ತುಂಬ ಡಾಕ್ಟರ ಸೂಜಿ ಗುರುತಿತ್ತು. ಮಲಗಿ ಮಲಗಿ ಬೆನ್ನು ನೋವಾದ ಜೀವಕ್ಕೆ, ಬೆಳಗ್ಗೆ ಬಿಸಿನೀರಲ್ಲಿ ಮೀಯಿಸಿಕೊಳ್ಳುವ ಆಸೆ. ಅಮ್ಮ ಹೆಚ್ಚೂ ಕಮ್ಮಿ ಅಪ್ಪನಷ್ಟೇ ಮುದುಕಿಯಾಗಿ ಈ ಬಗೆಯ ಸೇವೆ ಸಾಧ್ಯವಾಗುತ್ತಿರಲಿಲ್ಲ. ಅಪ್ಪ ಅವನ ಬಲಗೈಯಂತಿದ್ದ ಬಂಟ ನರಸನ ಮಗ ಗಣ್ಪನಿಗೆ ಹೇಳಿಸಿಕೊಂಡು ದಿನ ಬಿಟ್ಟು ದಿನ ಎಣ್ಣೆ ಹಚ್ಚಿಸಿಕೊಂಡು ಮೀಯ ಹೊರಡುತ್ತಿದ್ದ. ಆ ಹೊತ್ತಿಗೆ ಸೀತಾರಾಮ ಮನೆಯಲ್ಲಿದ್ದರೆ ಕೊಂಕಾಡದೆ ಬಿಡುತ್ತಿದ್ದಿಲ್ಲ. ಮುದುಕನ ಚಪಲವೆಂಬ ಉಪೇಕ್ಷಿತ ಮನಸ್ಸಿನ ಮಗನಿಗೆ ಹಿಂದೆಲ್ಲ ತನ್ನನ್ನು ಅಂಗೈಯಲ್ಲಿಟ್ಟು ಆಟವಾಡಿಸಿದ ಅಪ್ಪನನ್ನು ಮಾತಿನಲ್ಲೆ ಹದ ಹಾಕುವ ತುಡಿತ. + +“ಅಮ್ಮಾ ನೋಡಿದ್ಯನೇ ಹೆಗಡೇರ ಅವತಾರಾನಾ? ಮಂಚದ ಮೇಲೆ ಕೂತು ಮಾತ್ರೆ ತಗಂಬಲೂ ತ್ರಾಣಿಲ್ಲೆ ಹೇಳಿ ಬಾಯಿಗೆ ಹಾಕಿಸ್ ಕ್ಯತ್ತ ನಿನ್ ಹತ್ರ, ಈಗ ಅಂಗಳದಾಗೆ ಕುಂತು ಮಾತಾಡಿಕ್ಯಂಡು ಎಣ್ಣೆ ಸ್ನಾನ ಮಾಡಕ್ಯಂಬಲೆ ಅಡ್ಡಿಲ್ಲೆ.”“ದಿನಬಿಟ್ಟು ದಿನ ದೊಡ್ಡಹಬ್ಬದ ಅಭ್ಯಂಜನ ನಡೆಸೀರು ಹೆಗಡೇರು”“ಓಹೋ ಹೆಗಡೇರ ಸ್ನಾನ ಜೋರಲೀ, ಯಾವೂರ ಪಟೇಲಿಕೆ ಕಾಯ್ತಾ ಇದ್ದೋ” + +ಅಮ್ಮ ಚಿಟ್ಟೆ ತುದಿಯಲ್ಲಿ ಸುಮ್ಮನಿರು ಸೀತೂ ಎಂದರೆ ಇವನ ನಾಲಿಗೆ ತಣ್ಣಗಾಗುವುದೇ ಇಲ್ಲ. ಅವಳ ಕಣ್ಣಲ್ಲಿ ಹನಿನೀರು. ಅಪ್ಪನ ಮುಖ ಕಪ್ಪಡರಿರುತ್ತಿತ್ತು. ಮತ್ತೆ ನಾಲ್ಕು ದಿನ ಸ್ನಾನದ ಕಾರ್ಯಕ್ರಮವಿರುತ್ತಿರಲಿಲ್ಲ. ಅಥವ ಮಗನು ತೋಟದ ಕೆಲಸ ಮುಗಿಸಿ ಬರುವ ಮೊದಲೆ ಅಪ್ಪನು ಕದ್ದು ಸ್ನಾನ ಮಾಡಿರುತ್ತಿದ್ದ. ಅಪ್ಪನ ಹಿಂಜರಿತ, ಹೆದರಿಕೆ ಎಲ್ಲವೂ ಸೀತಾರಾಮನಿಗೆ ಹೆಚ್ಚಿನ ಮುದವನ್ನೂ ಶಕ್ತಿಯನ್ನೂ ನೀಡಿದಂತೆನಿಸುತ್ತಿತ್ತು. + +ಮಕ್ಕಳಿಗೆ ಅಜ್ಜನಲ್ಲಿ ಪ್ರೀತಿ. ರಜೆಯ ದಿನಗಳಲ್ಲಿ ಅಜ್ಜನಿಗೆ ಎಣ್ಣೆ ಹಚ್ಚಿ ನೀವಲು ಕಾದಿರುತ್ತಿದ್ದವು. ಅವರ ಮುಂದೂ ಸೀತಾರಾಮ ಸುಮ್ಮನಿರುತ್ತಿರಲಿಲ್ಲ. + +ಹಚ್ಚಿ ಹಚ್ಚಿ, ಸಮಾ ಹಚ್ಚಿ ತಿಕ್ಕಿ, ಹೆಗಡೇರು ಗದ್ದೆ ನೆಟ್ಟಿ ಮಾಡಿ, ಕೊನೆಕೊಯ್ಲು ಮಾಡವು. ಅಂತಲೋ, ಸಮಾ ಸೇವೆ ಮಾಡ್ರೋ ಹೆಗಡೇರಿಗೆ, ನಾಳೆ ಊರಹಬ್ಬಕ್ಕೆ ತೇರೆಳಿಯವ್ರೇ ಇವ್ರು ಅಂತಲೋ ಮಾತಲ್ಲೆ ಜಪ್ಪುತ್ತಿದ್ದ. ಮಕ್ಕಳು ಪೆಚ್ಚಾದರೆ, ಅಜ್ಜ ನಿಧಾನಕ್ಕೆ ಹೋಕ್ಯಳ್ಲಿ ಬಿಡಿ ಎಂದು ಮೇಲೇಳುತ್ತಿದ್ದ. + +ಮೊನ್ನೆ ಮೊನ್ನೆಯವರೆಗೂ ಪೆಟ್ಟು ಬಿದ್ದು ಯಶೋದೆಯ ಕೈಯಲ್ಲಿ ಎಣ್ಣೆ ತಿಕ್ಕಿಸಿಕೊಂಡು ಮೀಯಿಸಿಕೊಳ್ಳುವವರೆಗೂ ಸ್ನಾನದ ಮುದವೇ ಗೊತ್ತಿಲ್ಲದೆ ಹೋಗಿತ್ತಲ್ಲ ತನಗೆ. ಏರುವಯಸ್ಸಿನ ತನಗೇ ಅದು ಕೊಟ್ಟ ಹಿತದ ನೂರು ಪಟ್ಟು ಹೆಚ್ಚು ಹಿತವನ್ನ ಆ ಮುದಿಜೀವ ಅನುಭವಿಸಿತ್ತೇನೋ. + +ಆ ನೋವಿನ ಜಾಗದಲ್ಲಿ ಅವಳು ನೀವಿದಲ್ಲಿ ಚುಳ್ಳೆಂದರೂ ಅದರ ಮೇಲೆ ಬಿಸಿಬಿಸಿಯಾದ ನೀರು ಸುರಿಯುವಾಗ ಆದ ಹಿತವನ್ನ ಯಾವ ಮಾತು ತಾನೇ ಕಟ್ಟಿಕೊಟ್ಟೀತು. ಅನುಭವಿಸಿದ್ದೆನೇನೋ ಇದನ್ನ ಶಿಶುವಿದ್ದಾಗ ಅಮ್ಮ ನೀರೆರೆಯುವಾಗ, ಆದರೂ ಅದರ ಮುದ, ಹದ ಅನುಭವಕ್ಕೆ ಬಂದಿದ್ದೇ ಈಗ. + +ಯಾವ ಔಷಧಿಯೂ ಬ್ಯಾಡ, ಡಾಕ್ಟರೂ ಬ್ಯಾಡ ಮಾತ್ರೆ ಬೇಡವೇ ಬೇಡ ಎಂದು ಹಟಹಿಡಿಯುತ್ತಿದ್ದ ಅಪ್ಪಯ್ಯ ಕೊನೆಗಾಲದಲ್ಲಿ ಬಯಸಿದ್ದ ಸುಖ ಸ್ನಾನದ್ದೊಂದೇ ಆಗಿತ್ತು ಎಂದು ಕಾಣುತ್ತದೆ. ಅಂತವನ ಜೀವ ತಿಂದೆನಲ್ಲಾ ತಾನು ಅನ್ನಿಸಿ ಖಿನ್ನನಾದ. ಆಳುಮಕ್ಕಳೆಲ್ಲ ಕರಡ ಹೊತ್ತು, ಹೆಗ್ಡೇರೆ ಕಪ್ಪಾತಲ ಮನಿಗೆ ಹೋತ್ರಿಲ್ಯ ಅಂತ ಕೇಳಿದಾಗಲೆ ಎಚ್ಚರ. + +ಬ್ಯಾಣದಾಚೆ ಆವರಿಸಿದ ಹಿನ್ನೀರ ಶರಾವತಿಯ ಆಳಕ್ಕೆ ಸೂರ್ಯ ಅರ್ಧ ಮುಳುಗುತ್ತಿದ್ದ. ಜಗದ ಕೊಳಕುಗಳಿಗೆ ಕಣ್ಣಾದವನು ಸಂಜೆ ಸ್ನಾನಕ್ಕೆ ಹೊರಟ ಹಾಗೆ ತೋರಿತು. ಅಥವಾ ಜಗದ ಕೊಳೆಯ ತೊಳೆವ ನದಿಯು ಬೆಳಕ ಮಿಂದು ಶುದ್ಧವಾಯಿತೋ? ಮನೆಗೆ ಬಂದು ಸುತ್ತುಗೆಲಸ ಮುಗಿದು ದೇವರ ದೀಪ ಬೆಳಗಿ, ಮಕ್ಕಳ ಜೊತೆಗೆ ಒಂದೆರಡು ಶ್ಲೋಕ ನುಡಿದು ಮುಗಿಸುವಾಗ ಎಂದಿನಂತೆ ಕರೆಂಟು ಕೈ ಕೊಟ್ಟಿತ್ತು. + +ಮಕ್ಕಳು, ಅಮ್ಮ,ಸರೋಜ ಎಲ್ಲ ಜಗಲಿಯಲ್ಲಿ ಅವರವರಿಗೆ ಆರಾಮು ಕಂಡಲ್ಲಿ ಕೂತಿದ್ದರು. ಮಗಳು ಸ್ವಾತಿ ತನ್ನ ಶಾಲೆಯ ಬಳಿ ಇತ್ತೀಚೆಗೆ ಬಂದಿರುವ ಹುಚ್ಚು ಭಿಕ್ಷುಕನ ಬಗ್ಗೆ ಮಾತಾಡುತ್ತಿದ್ದಳು. ಆ ವಯಸ್ಸಾದ ಭಿಕ್ಷುಕನಿಗೆ ಮೈಯೆಲ್ಲ ಕಜ್ಜಿಯಂತೆ. ಆಗಾಗ ಸುತ್ತಲಿನ ಮಣ್ಣು ಸುರಿದುಕೊಂಡು ಸ್ನಾನ ಮಾಡುತ್ತಿರುವೆ ಎಂದು ಹೇಳಿ ಹಲ್ಕಿರಿಯುವನಂತೆ ಹೊರತು ಬೇರ್ಯಾರ ಪಾಡಿಗೂ ಹೋಗದೆ ಯಾರಾದರೂ ಎಸೆದಿದ್ದು ತಿಂದುಕೊಂಡು ಬಿದ್ದಿರುವನಂತೆ. ಸರೋಜ ಭಯದಿಂದ ಹಾಂಗೆಲ್ಲ ಭಿಕ್ಷುಕರು ಹುಚ್ಚರ ಹತ್ತಿರ ಹೋಗಡ ಮಗಳೆ ಎಂದು ನಿಗಾ ಮಾಡಿದಳು. + +ಅಷ್ಟರಲ್ಲಿ ಅಮ್ಮ ನೆನಪಿಸಿದಳು, ಸೀತೂ ತಿಥಿ ಇನ್ನು ವಾರ ಇದ್ದಲೋ ಎಲ್ಲ ತಯಾರಿ ಮಾಡ್ತಾ ಇದ್ಯ ಹೆಂಗೆ.ಈಗ ಸೀತಾರಾಮನ ನಿರ್ಧಾರ ಗಟ್ಟಿಯಾಗಿತ್ತು. ಹೂಂ ಮಾಡಿದ್ನೇ ಅಂದ ಗಂಭೀರನಾಗಿ.ಬಿದಿಗೆಯ ಬೆಳಿಗ್ಗೆಯ ಇಬ್ಬನಿ ಆರುವುದರೊಳಗೆ ದತ್ತಭಟ್ಟರೂ ಮತ್ತವರ ಅಸಿಸ್ಟೆಂಟ ನಾಗೇಂದ್ರ ಇಬ್ಬರೂ ಬಜಾಜ್ ಎಂ ೮೦ಯ ಮೇಲೆ ಡಬ್ಬಲ್ ರೈಡು ಮತ್ತು ಸ್ಪೀಡುಗಳಲ್ಲಿ ಬಂದಿಳಿದಾಯಿತು. ಸೀತಾರಾಮನ್ನ ಹುಡುಕಿದರೆ ಅವನೆಲ್ಲಿ? ಮನೆಮಂದಿ ಆತಂಕಗೊಂಡರು. + +ಅಷ್ಟರಲ್ಲಿ ಮೋಟರಿನ ದನಿ ಕೇಳಿತು. ನೋಡಿದರೆ ಸೀತಾರಾಮ ಆಟೋದಿಂದ ಇಳಿಯುತ್ತಿದ್ದಾನೆ, ಜೊತೆಗೆ ಕಜ್ಜಿಮೈಯ ಭಿಕ್ಷುಕ.“ರಾಮರಾಮ ನಿಂಗಕ್ಕೆ ಏನು ಬಂತು” ಎಂದು ಕೇಳುವ ಸರೋಜಳೆಡೆಗೆ ತೀಕ್ಷ್ಣ ನೋಟದಿಂದಲೇ ಉತ್ತರವಿಟ್ಟ. ಮೂಗಿನ ಮೇಲೆ ಬಂದ ಕನ್ನಡಕವನ್ನ ಹಣೆಗೆ ಎತ್ತರಿಸಿ ಕಣ್ಣು ಬಾಯಿ ಎರಡೂ ಬಿಟ್ಟುಕೊಂಡು ದತ್ತಭಟ್ಟರು “ತಿಥೀ ದಿನ ಇದೆಂತದಾ ತಮಾ ಮಳ್ ವ್ಯಾಷ” ಎಂದರು.“ತಿಥಿಯೆಂದರೆ ಹೋದ ಹಿರಿಯರಿಗೆ ಸಲ್ಲುವ ಗೌರವ, ಅವರ ಪ್ರೀತಿಯದನ್ನ ಸಲ್ಲಿಸುವ ಹೆಳೆ, ಉಳಿದ ಕಿರಿಯರು ನೆನಸಿಕೊಳ್ಳುವ ಹೊತ್ತು ಅಲ್ದನಾ ಭಟ್ರೆ? ಎನ್ನ ಅಪ್ಪಯ್ಯಂಗೆ ಕೊನಿಕೊನಿಗೆ ಸ್ನಾನವೆಂದರೆ ಜೀವ. ಅದಕ್ಕೆ ತಿಳಿಯದೆ ಅಹಂಕಾರದಿಂದ ಕುತ್ತು ತಂದವನೇ ಆನು. ಈಗ ಬರೇ ವಡೆ, ಪಾಯಸ ನೈವೇದ್ಯ ಇಟ್ಟು ಕೈಮುಗದ್ರೆ ಅವನಿಗೆ ಸಲ್ಲುತ್ತದೆಯೇ ಅದು ಎಂಬುದೇ ಕಾಣ್ತಾ ಇದ್ದು ಎನಗೆ. ನಿಂಗ ದೊಡ್ದವರು ಪುರೋಹಿತರು ಇದ್ದಿ- ಶಾಸ್ತ್ರಪ್ರಕಾರ ಅಳಿದ ಹಿರಿಯರಿಗೆ ಮನ್ನಣೆ ತೀರ್ಸಾಕೆ. ನಿಂಗಳ ಡ್ಯೂಟಿ ನೀವು ಮಾಡಿ. ನಿಲ್ಲಿಸಿದರೆ ಅಮ್ಮನ ಕಣ್ಣಲ್ಲಿ ನೀರು ಹಾಕಿಸಿದ ಹಾಂಗಾಗ್ತು. + +ಆನು ಮಾತ್ರ ಎನ್ನ ಮನಸಿಗೊಪ್ಪಿದ ಹಾಂಗೆ ಅಪ್ಪನ ನೆನಸಿಕಂಡು ಈ ಅಜ್ಜಯ್ಯಗೆ ಎಣ್ಣೆ ಸ್ನಾನಾ ಮಾಡಿಸಿ ಎನ್ನ ಋಣ ಸಂದಾಯ ಮಾಡತಿ. + +“ನೀವು ಮಾಡುವ ಕರ್ಮದ ಸಾಮಾನು ಸರಂಜಾಮು ಎಲ್ಲದ್ನೂ ಒಳಗೆ ಮಡೀಲೆ ಅನು ಮಾಡಿಟ್ಟಿದ್ದಿ. ಸರೋಜ ಮಡಿಲಿ ನೈವೇದ್ಯಕ್ಕೆ ಅಣಿಮಾಡ್ತಲೆ ಇದ್ದು. ಆಚೆಮನೆ ತಮ್ಮಯ್ಯ ಕರ್ಮಕ್ಕೆ ಕೂರಲೆ ಒಪಕ್ಯಂಡಿದ್ದ. ಇನ್ನೇನ್ ಬರ್ತ. ನಿಮ್ಮ ಶಾಸ್ತ್ರ ಅಲ್ಲಿ ನಡೀಲಿ” ಎಂದು ಒಳ ಮನೆಯ ಭವಂತಿಯನ್ನು ತೋರಿಸಿದ. + +ಅಂಗಳದಲ್ಲಿ ಅಡಿಕೆ ಚಪ್ಪರದಡಿಗೆ ಬಿಸಿಲು ರಂಗೋಲಿ ಹರಡಿತ್ತು. “ಇದು ಈ ಶಾಸ್ತ್ರ ಇಲ್ಲಿ ನಡೀಲಿ” ಅಂತೊಂದು ಮಾತು ಅಂದ ಹಾಗೆ ಅನ್ನಿಸಿದರೂ ಪೂರ್ತಿ ಹೊರಗೆ ಬರಲಿಲ್ಲ. ಒಳಗೇ ಉಳಿಯಿತು. ಮಾತಾಡುತ್ತ ಆಡುತ್ತಲೇ ಸೀತಾರಾಮ ಭಿಕ್ಷುಕನನ್ನ ಅಂಗಳದಲ್ಲಿ ಯಾವಾಗಲೋ ತಂದಿಟ್ಟಿದ್ದ ಸ್ಟೂಲಿನ ಮೇಲೆ ಕೂರಿಸಿದ. “ಅಮ್ಮ ಒಂದು ಲೋಟ ಕಾಫಿ ಕೊಡ್ತ್ಯಾ ಈ ಅಜ್ಜಯ್ಯಗೆ.” ಅಮ್ಮನ್ನ ಕೇಳಿದ. ಭುವನೇಶ್ವರಿ ಸುಮ್ಮಗೆ ಅಂಗಳದ ಬಿಸಿಲುನೆರಳ ರಂಗೋಲಿಯಲ್ಲಿ ಕಣ್ಣು ನೆಟ್ಟಿದ್ದಳು. ಅಜ್ಜಿಯ ಗೊಂದಲ ನೋಡಿದ ಸ್ವಾತಿ ಒಳಗೋಡಿ ಕಾಫಿ ತಂದಳು. + +ದತ್ತಭಟ್ಟರಂತ ದತ್ತಭಟ್ಟರೇ ಮಾತು ಮರೆತರು. “ಹಾಂ ತಮಾ ಅಡ್ಡಿಲ್ಯೋ ನೀನು” ಎನ್ನುವುದಷ್ಟರ ಹೊರತಾಗಿ ಬೇರೆ ಏನೂ ಹೊಳೆಯಲಿಲ್ಲವರಿಗೆ. ಕೇಳಿದವರು ಏನೆಂದುಕೊಂಡಾರು ಅನ್ನಿಸಿತು ಅವರಿಗೆ, ಆದರೂ ಸೀತಾರಾಮ ಮಾಡಿದ್ದೆ ಸರಿ ಎನ್ನಿಸಿತು ಅವರ ಪಕ್ವ ಜೀವಕ್ಕೆ. ಅವರೂ ಮುಳುಗಡೆಯ ಮೂಲೆ ಊರುಗಳಿಂದ ಹಿಡಿದು ಬೆಂಗಳೂರಿನ ತುದಿಯವರೆಗಿನ ಹವ್ಯಕ ಕುಟುಂಬಗಳಿಗೆ ಕಾರ್ಯ- ಕರ್ಮ ಮಾಡಿಸಿದವರು; ಇದ್ದವರ ನಶೀಬದ ಮೇಲೆ ನಡೆಯುವ ಜಗದ ಪರಿಯ ಕಂಡವರು, ಮತ್ತು ಯಾವ ಕಾಲದಲ್ಲೂ ನಿರ್ಮಲ ಮನಸ್ಸಿನ ಸತ್ಯಕ್ಕೆ ಜಯವೆಂದು ನಂಬಿ ಬೆಳೆದವರು. ಮಡಿಗಿಂತ ಮಾನವತೆ ಒಂದು ಹೆಜ್ಜೆ ಮೇಲು ಎಂದು ಅವರ ಏರಿಳಿತದ ಜೀವನವೇ ಅವರಿಗೆ ಕಲಿಸಿತ್ತು. ಕರ್ಮಕ್ಕೆ ಚ್ಯುತಿ ತರದೆ, ತನ್ನ ಮನಸ್ಸಿಗೂ ಕೊರೆಯಾಗದೆ ಅಣಿಮಾಡಿಕೊಂಡವನ ಬಗ್ಗೆ ತುಸು ಮೆಚ್ಚುಗೆಯೇ ಹುಟ್ಟಿತೆಂದರೂ ಸರಿಯೆ. + + + +ಅಷ್ಟರಲ್ಲಿ ಸೀತಾರಾಮ ಎಣ್ಣೆಯ ಬಟ್ಟಲು ಹಿಡಿದು ಬಂದಾಗಿತ್ತು. ಹಿಂದಿನ ದಿನವೇ ತಂದಿಟ್ಟುಕೊಂಡಿದ್ದ ಹೊಸ ಮಡಿವಸ್ತ್ರಗಳನ್ನ ಅಲ್ಲೆ ಬದಿಯಲ್ಲಿ ನ್ಯಾಲೆಯ ಮೇಲೆ ಇಡಿಸಿದ್ದ. ಯಶೋದೆಗೆ ಎಣ್ಣೆ ಹಚ್ಚಿ ಮುಗಿಯುತ್ತಲೂ ಎರಡು ದೊಡ್ಡ ಚರಿಗೆ ನೀರು ತಂದು ಸುರಿಯಲು ಹೇಳಿಯಾಯಿತು. ಮಗ ಸುಮಂತ ಹೊಸ ಸಂತೂರ್ ಸೋಪಿನ ಕವರು ತೆಗೆಯುತ್ತ ನಗುತ್ತ ಬಂದ. + +ಪಿಂಡಪ್ರದಾನವಾಗಿ ಒಳಗೆ ಸರೋಜ ಬ್ರಾಹ್ಮಣತ್ರಯರಿಗೆ ಬಡಿಸುತ್ತಿದ್ದರೆ, ಇತ್ತ ಸೀತಾರಾಮ ಅಜ್ಜಯ್ಯಗೆ ಮಡಿಯುಡಿಸಿ, ತಾನೂ ಮಿಂದು ಬಂದು ತನ್ನ ಕೈಯಾರೆ ಬಡಿಸುತ್ತಿದ್ದ. ಒಳ್ಳೆಯ ಸ್ನಾನದಿಂದ ಅಜ್ಜಗೆ ನಿದ್ದೆ ಬರುವಂತಾಗಿದ್ದರೂ ರುಚಿಯಾದ ಊಟ ಮೆಲ್ಲುತ್ತಾ ಪ್ರಸನ್ನನಾಗಿ ಕಣ್ಣ ಅಂಚಲ್ಲಿ ನಗು ಹೊಳೆಯುತ್ತಿತ್ತು. + +ಸೀತಾರಾಮನ ಕಣ್ಣಂಚೂ ಹೊಳೆಯಿತು, ಹನಿಗಳ ಪ್ರತಿಫಲನದಲ್ಲಿ. + +ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ \ No newline at end of file diff --git a/Kenda Sampige/article_555.txt b/Kenda Sampige/article_555.txt new file mode 100644 index 0000000000000000000000000000000000000000..ccc32564713f7a95a91a10a0c683740e1c432335 --- /dev/null +++ b/Kenda Sampige/article_555.txt @@ -0,0 +1,81 @@ +ಗಜಾನನ ಪದ್ಮಾರ್ಕ೦ ಗಜಾನನಮಹರ್ನಿಶಮ್ಅನೇಕದ೦ತ೦ ಭಕ್ತಾನಾ೦ ಏಕದ೦ತ೦ ಉಪಾಸ್ಮಹೇ + +ವಾಸು ಎದೆಯುಬ್ಬಿಸಿ, ಉಸಿರುಕಟ್ಟಿ ಸಂಸ್ಕೃತಪಾಠಶಾಲೆಯಲ್ಲಿ ಗಣೇಶಸ್ತುತಿ ಹೇಳುತ್ತಿದ್ದ. ತಕ್ಷಣ ತುಂಡರಿಸಿದ್ದ, ಕೇಶವಶರ್ಮ. + +‘ವಾಸು, ಇದು ವಿಘ್ನೇಶ್ವರನ ಸ್ತುತಿ. ಒಳ್ಳೇ ‘ಏರಲೀ, ಏರಲೀ ಕನ್ನಡದ ಬಾವುಟಾ’ ಅನ್ನುವ ದೇಶಭಕ್ತಿ ಗೀತೆ ಹಾಡುವಹಾಗೆ ಎದೆಯುಬ್ಬಿಸಿ  ಹೇಳೋದಲ್ಲ. ಮತ್ತೆ ಎಷ್ಟು ಸರ್ತಿ ಹೇಳಿದೀ, ನಿನಗೆ, ಪದಗಳನ್ನು ಸರಿಯಾದ ಕಡೆ ಬಿಡಿಸಿದರೆ ಮಾತ್ರ ಸಂಸ್ಕೃತ ಭಾಷೆಗೆ ಅರ್ಥ ಬರೋದು. ಅದು ಅನೇಕದಂತಂ ಅಲ್ಲ, ಅನೇಕದಂ ತಂ. ಈ ಶ್ಲೋಕದಲ್ಲಿನ ವಿರೋಧಾಭಾಸವನ್ನು ನೋಡಿ… …’ ಎಂದು ಆಕ್ಷೇಪಣೆಯ ಧ್ವನಿಯಲ್ಲಿ ಕೊಂಚ ಗದರಿಕೊಂಡಿದ್ದ. ಮುಂದಿನದನ್ನು ಕೇಳಿಸಿಕೊಳ್ಳಲಿಲ್ಲ. + +ಕೂತು ಬರೆದ, ವಾಸು. ಒಂದು ಖಾಲಿ ಕಾಗದದ ಮೇಲೆ, ಬೆಳ್ಳಂಬೆಳಗ್ಗೆ ಗಣೇಶಸ್ತುತಿಯ ವ್ಯಾಖ್ಯಾನದ ನಡುವೆ. + +‘ಓ.. ಸುದೇಷ್ಣಾ.. + +ಎಂಥ ಹೆಸರದು.. ವಿರಾಟನ ಹೆಂಡತಿಯದ್ದಲ್ಲವೇ? ಕೀಚಕನ ಸಹೋದರಿಯದ್ದಲ್ಲವೇ ಇದು. ನಿನಗೆಂತಕ್ಕೇ ಇಂಥ ಹೆಸರು? ಆ ಕ್ರೂರಿಯ ಸಂಬಂಧಿ ಹೇಗೆ ನೀನಾಗುವೆ? ಕೊಡಚಾದ್ರಿಯ ಬುಡದಲ್ಲೆಲ್ಲೋ ಇದ್ದ ನೀನು ಈಗ ಬಂದು ಈ ಬಯಲು ಸೀಮೆಯ ಭಣಭಣ ಎನ್ನುವ ಈ ಊರಿನಲ್ಲಿ, ಇರುವ ಒಂದೇ ಕೋಟೆಬೆಟ್ಟದ ಪಕ್ಕದಲ್ಲಿ, ಈ ಸೂಳೆಕೆರೆಯ ಮಗ್ಗುಲ ಈ ಕೊಂಪೆಗೆ ಏಕೆ ಬಂದೆಯೇ? ನನ್ನ ಹೃದಯಕ್ಕೆ ಹೀಗೆ ಹೇಳದೇ ಕೇಳದೇ ಲಗ್ಗೆ ಹಾಕಿದೆಯಲ್ಲ? ಈ ಪಡವಲಪಟ್ಟಣದ ಕಾಡು, ಈ ಮಾಯಗೊಂಡನ ಹಳ್ಳಿಯ ರಸ್ತೆ, ಕುರಿಮರಿಯ ಸಿಗಿಸಿಕೊಳ್ಳುವ ಬಡಗೊಡಮ್ಮ, ಬೀದಿಯ ಸರ್ಕಲ್ಲಿನಲ್ಲಿ ವ್ಹ್ಹ್ಹ್ಹಿರಭದ್ರನು.. ಭಲಾರೆ.. ಎನ್ನುತ್ತಾ ಪೇಪೇಪೇಪೇ ಎನ್ನುವ ವಾಲಗಕ್ಕೆ ಮುಖಕ್ಕೆ ಬೂದಿ ಬಡಿದುಕೊಂಡು ಕುಣಿಯುವ ಮಾಪಿಳ್ಳೆ, ಇವುಗಳ ಮಧ್ಯೆ ನನ್ನಪಾಡಿಗೆ ನಾನು ಕಳೆದುಹೋಗಿದ್ದೆ, ಚಕ್ರಕೊಳದ ಬಾವಿಯಲ್ಲಿ ತಣಿದಿದ್ದೆ, ಸೌಮ್ಯಕೇಶವನ ದೇವಸ್ಥಾನದ ಗರುಡಗಂಬದ ಕಟ್ಟೆಯ ಮೇಲೆ ವರ್ಷತಡುಕಿನಂದು ಮೇಲೇರುವ ದೀಪದ ಕೆಳಗೆ ಚೆಲ್ಲುವ ಎಳ್ಳೆಣ್ಣೆಯ ರಾಡಿಯನ್ನು ನೋಡುತ್ತಾ  ನಂಪಾಡಿಗೆ ನಾ ಇರಲು ನೀನು ಎಲ್ಲಿಂದ ಬಂದೆ, ನನ್ನನ್ನು ನನ್ನೊಳಗಿಂದಲೇ ಕದಲಿಸಲು, ಈ ಕರಿಯ ಸೌಮ್ಯಕೇಶವನನ್ನು ಅರಳಿಸಲು.’ + +ವಾಸು ಕನಸಂತೆ ಬರೆದಿದ್ದ, ಬರೆದಂತೆ ಕನಸಿದ್ದ. + +ವಾಸುವಿಗೆ ಈ ತರಹದ ಕನಸುಗಳು ಬೀಳಲಿಕ್ಕೆ ಶುರುವಾದದ್ದು ನಾಗಮಂಗಲದಲ್ಲಿ ಸಂಸ್ಕೃತ ಪಾಠಶಾಲೆ ಶುರುವಾದ ನಂತರ. ಸಂಸ್ಕೃತ ಪಾಠಶಾಲೆಗೆ ಹೊಸ ಮಾಸ್ತರಾಗಿ ಪ್ಯಾಂಟು ಶರಟು ಹಾಕುವ ಕೇಶವಶರ್ಮ ಕೊಡಚಾದ್ರಿಯ ತಪ್ಪಲಿನ ನಗರವೋ, ಎಂತದೋ ಕಟ್ಟೆ ಎನ್ನುವ ಊರೋ ಎಂದು ಹೇಳಿಕೊಂಡು ಬಂದಾಗ  ಮತ್ತು ಆತನ  ತಂಗಿ ಸುದೇಷ್ಣಾ ವಾಸುವಿನ ಜತೆಗೇ ಮೊದಲನೇ ಪಿಯುಸಿಗೆ ಭರ್ತಿಯಾದಾಗ. ಕೇಶವಶರ್ಮ ಬಂದಮೇಲೆ ಇದ್ದಕ್ಕಿದ್ದಂತೇ ನಾಗಮಂಗಲದಲ್ಲಿ ಸಂಸ್ಕೃತದ ಸಂಸ್ಕೃತಿಗೇ ಕಳೆಬಂದಿತ್ತು. ಸಂಸ್ಕೃತ ಕಲಿಸುವವರು ಸಂಸ್ಕೃತ ‘ಪಂಡಿತ’ರು ಅನ್ನುವ ಮೂಲಭೂತ ಕಲ್ಪನೆಯನ್ನೇ ಸುಳ್ಳು ಮಾಡಿದ್ದ, ಆತ. ಕೇಶವಶರ್ಮನನ್ನು ನೋಡಿದರೆ ಈತ ಕೊಡಚಾದ್ರಿಯ ಬುಡದಿಂದ ಬಂದವನು ಎಂದು ಹೇಳುವ ಯಾವ ಕುರುಹೂ ಇರಲಿಲ್ಲ. ನೀಟಾಗಿ ಪ್ಯಾಂಟು, ಶರಟು ಹಾಕಿಕೊಂಡು, ಒಪ್ಪವಾಗಿ ಕ್ರಾಪು ಬಾಚಿಕೊಂಡು ಭುಜಕ್ಕೆ ಒಂದು ದೊಗಳೆ ಚೀಲವನ್ನೂ ಮತ್ತು ಅಗಲವಾದ ಕನ್ನಡಕವನ್ನೂ ಹಾಕಿಕೊಂಡು, ಒಂದು ಬಾಟಾ ಚಪ್ಪಲಿಯನ್ನು ಹಾಕಿಕೊಂಡು ಬೀದಿಯಲ್ಲಿ ಠಾಕುಠೀಕಾಗಿ ಓಡಾಡುತ್ತಿದ್ದರೆ ಎಲ್ಲರೂ ಕರ್ಣಾಟಕ ಬ್ಯಾಂಕಿನ ಹೊಸಾ ಮಂಗಳೂರು ಮಂದಿ ಎಂದುಕೊಂಡಿದ್ದರು. + +ಕೇಶವಶರ್ಮ ಊರಿಗೆ ಬರುವವರೆಗೆ ದೇವಸ್ಥಾನದ ಪ್ರಾಂಗಣದಲ್ಲಿ ನಾಲ್ಕು ಹುಡುಗರು ‘ಅಮರಾ, ನಿರ್ಜರಾ ದೇವಾ’ ಎಂತಲೋ, ‘ರಾಮ: ರಾಮೌ, ರಾಮಾಃ’ ಎಂದೋ ರಾಗವಾಗಿ ಬೆಳಿಗ್ಗೆ, ಸಂಜೆ ಉರುಹೊಡೆಯುವುದನ್ನೇ ಸಂಸ್ಕೃತ ಎಂದು ಊರಿನವರು ತಿಳಿದಿದ್ದರು. ಸುಮಾರು ಇಪ್ಪತ್ತು ವರ್ಷದಿಂದ ಅಲ್ಲಿಯವರೆಗೆ ಹಾಗೇ ಕಲಿಸುತ್ತಿದ್ದ ರಂಗಾಭಟ್ಟರ ಹಳೇ ಶೈಲಿ ಕೇಶವಶರ್ಮ ಬಂದಮೇಲೆ ಪೂರಾ ಬದಲಾಗಿತ್ತು. + +ಮೊದಲಿಗೆ, ಸಂಸ್ಕೃತ ಕಲಿಸುವ ಮಾಸ್ತರು ಇನ್ನೂ ಮದುವೆಯಾಗದೇ ಅಷ್ಟು ಚಿಕ್ಕವರಾಗಿರಬಹುದು ಎಂದು ನಾಗಮಂಗಲದವರಿಗೆ ಗೊತ್ತಾದದ್ದೇ ಹೊಸ ವಿಷಯ. ಸಂಸ್ಕೃತವನ್ನು ಬ್ರಾಹ್ಮಣರಲ್ಲದವರೂ ಕಲಿಯಬಹುದೆಂದು ಗೊತ್ತಾದದ್ದೂ ಊರಿಗೆ ಕೇಶವಶರ್ಮ ಬಂದಮೇಲೆಯೇ. ಸ್ವತಃ  ಕೇಶವಶರ್ಮ ತಾನು ಬ್ರಾಹ್ಮಣನೆಂದು ಹೇಳಿಕೊಂಡರೂ ಹತ್ತಿರವೇ ಇದ್ದ ಚುಂಚನಗಿರಿಯ ಕಾಲಭೈರವೇಶ್ವರ ಸಂಸ್ಕೃತ ಪಾಠಶಾಲೆಯ ‘ಇತರೇ’ ಮಾಸ್ತರರುಗಳನ್ನೂ ನಾಗಮಂಗಲಕ್ಕೆ ಆಗಾಗ್ಗೆ ಕರೆಸುತ್ತಿದ್ದ. ಎಲ್ಲರೂ ಮೈಸೂರಿನ ಪಾಠಶಾಲೆಯಲ್ಲಿ ಒಟ್ಟಿಗೆ ಓದಿದವರಂತೆ. ಇವರಲ್ಲಿ ಕೆಲವರು ಹೋತದಗಡ್ಡವನ್ನು ಬಿಟ್ಟಿದ್ದವರಾಗಿದ್ದವರಾದರೆ, ಇನ್ನೂ ಕೆಲವರು ಶರಟನ್ನು ಇನ್‌ಸರ್ಟ್ ಮಾಡಿ ರಾಜಾರೋಷವಾಗಿ ನಾಗಮಂಗಲದ ಬ್ರಾಹ್ಮಣರ ಬೀದಿಗಳಲ್ಲಿ ಸಿಗರೇಟನ್ನು ಸೇದುತ್ತಾ ಕೇಶವಶರ್ಮನ ಮನೆಗೆ ಬಂದುಹೋಗಿ ಮಾಡುತ್ತಿದ್ದರು. ಇವರುಗಳ್ಯಾರೂ ಜನಿವಾರ ಹಾಕುವುದಿಲ್ಲ ಎನ್ನುವುದನ್ನು ವಾಸು ಎದುರುಮನೆಯಿಂದ ಕಣ್ಣಾರೆಕಂಡಿದ್ದ. + +ವಾಸುವಿಗೆ ಇನ್ನೂ ಆಶ್ಚರ್ಯವಾದದ್ದೆಂದರೆ, ನಾಗಮಂಗಲದ ಜವಳೀ ಅಂಗಡಿಯ ದಸ್ತಗೀರ ಸಾಹೇಬರ ಮಗಳು ಪರ್ವೀನ್ ಸಂಸ್ಕೃತ ಕಲಿಯಲು ಪ್ರಥಮಾ ಕ್ಲಾಸಿಗೆ ನೋಂದಾಯಿಸಿದ್ದು. ‘ಜೀಯಾತ್ ಗೀರ್ವಾಣವಾಣೀ’ ಎಂದು ಎಂಥದೋ ದೀಕ್ಷೆ ಕೊಡಿಸುವ ರೀತಿಯಲ್ಲಿ ಪಾಠಶಾಲೆಯ ಮುಂದೆ ಎಲ್ಲರ ಮುಂದೆ ಪರ್ವೀನಳಿಂದ ಹೇಳಿಸಿದ ಮೇಲೆ, ರಂಜಾನಿನ ಉಪವಾಸದ ದಿನಗಳಲ್ಲೂ ಪರ್ವೀನ್ ಬೆಳಿಗ್ಗೆ ತಲೆಯಮೇಲೆ ತನ್ನ ದುಪ್ಪಟ್ಟ ಹೊದ್ದು ಅಲ್ಲಾ ಹೋ ಅಕ್ಬರ್‌ಗೆ ತಲೆಯಾನಿಸಿ ಇಲ್ಲಿಗೆ ಬಂದು ‘ಕೇಯೂರಾಣಿ ನ ಭೂಷಯಂತಿ ಪುರುಷಂ’ ಹೇಳುತ್ತಿದ್ದಳು. ಅವಳ ನಾಲಿಗೆಗೆ ಯಾವ ಸಂಸ್ಕೃತವೂ ತೊಡಕಾಗಲೇ ಇಲ್ಲ. ಸಂಸ್ಕೃತದ ಕ್ಲಾಸುಗಳು ಕೇಶವಸ್ವಾಮಿ ದೇವಸ್ಥಾನದ ಆವರಣದಲ್ಲಿ ಆಗುತ್ತಿದ್ದುದರಿಂದ ಈ ರೀತಿ ಬೇರೆ ಜಾತಿಯವರು ಬರಬಹುದೇ ಎನ್ನುವ ತಾತ್ವಿಕ ಜಿಜ್ಞಾಸೆಗಳು ದೇವಸ್ಥಾನದ ಕಮಿಟಿಯ ಮೀಟಿಂಗುಗಳಲ್ಲಿ ನಡೆದವು. ಆದರೆ, ಈ ಸಂಸ್ಕೃತ ಪಾಠಶಾಲೆ ಸರಕಾರದ ಅನುದಾನಿತ ಪಾಠಶಾಲೆಯಾದ್ದರಿಂದ, ಸರಕಾರದಿಂದ ದೇವಸ್ಥಾನದ ಈ ಖಾಲಿರೂಮುಗಳು ಬಾಡಿಗೆಯನ್ನು ಪಡೆದುಕೊಳ್ಳುತ್ತಿದ್ದರಿಂದ ಇನ್ನೂ ಹೆಚ್ಚಾಗಿ ದಸ್ತಗೀರ ಸಾಹೇಬರು ಮುನಿಸಿಪಾಲಿಟಿಯ ಮೆಂಬರಾದ್ದರಿಂದ ಯಾರೂ ಹೆಚ್ಚಾಗಿ ಇದರಬಗ್ಗೆ ಮಾತಾಡಲೂ ಹೋಗಿರಲಿಲ್ಲ. + +ವಾಸು ಇದ್ದದ್ದು ಸುದೇಷ್ಣಾ ಇದ್ದ ಮನೆಯಿಂದ ಐದುಮನೆ ಆಚೆಗೆ. ಅಲ್ಲಿ ಹಾಗೆಯೇ ಮುಂದೆ ಹೋಗಿ ಕೆರೆಬೀದಿಯ ಕಡೆ ಬಲಕ್ಕೆ ತಿರುಗಿದರೆ ಒಂದು ದೊಡ್ಡ ಸೀತಾಫಲ ಮರ ಕಾಣುತ್ತಿತ್ತು. ಆ ಮರವಿದ್ದುದರಿಂದಲೋ ಏನೋ ಆ ಓಣಿಗೆ ಸೀತಾಫಲ ಓಣಿ ಎಂದೇ ಹೆಸರು. ಆ ಓಣಿಯಲ್ಲಿ ರಾಮಪ್ರಿಯ ಜೋಯಿಸರ ಮನೆಯಲ್ಲಿ ವಾಸುವಿನ ಅಕ್ಕ ಮತ್ತು ವಾಸು ಇಬ್ಬರೇ ಬಾಡಿಗೆಗಿದ್ದರು. ರಾಮಪ್ರಿಯ ಜೋಯಿಸರು ಹೆಂಡತಿ ಸತ್ತ ಮೇಲೆ ತಾವು ಮನೆಯ ಒಂದೆರಡು ರೂಮುಗಳನ್ನು ಬಾಡಿಗೆಗೆ ಕೊಡಬೇಕೆಂದು ನಿರ್ಧರಿಸಿದಾಗ ಈ ಅಕ್ಕ ತಮ್ಮಂದಿರಿಗೆ ನಿರಾತಂಕವಾಗಿ ಬಾಡಿಗೆಗೆ ಮನೆ ಕೊಡಬಹುದೆಂದು ಏನೂ ಯೋಚನೆಮಾಡದೆ ಮನೆ ಬಾಡಿಗೆಗೆ ಕೊಟ್ಟಿದ್ದರು. ಅಮ್ಮ ಅಪ್ಪ ಇಬ್ಬರನ್ನೂ ಊರಲ್ಲಿ ಬಿಟ್ಟು ನಾಗಮಂಗಲದ ಹೆಣ್ಣುಮಕ್ಕಳ ಹೈಸ್ಕೂಲಿನಲ್ಲಿ ವ್ಯಾಯಾಮ ಶಿಕ್ಷಕಿಯಾಗಿದ್ದ ಉಮಾ ವಾಸುವಿನ ಅಕ್ಕ. ಇಪ್ಪತ್ತೆಂಟರ ಸುಮಾರಿನವಳು. ‘ಬರೇ ಹುಡುಗಿಯರಿಗೆ ಲೇಜಿಯಮ್ಸ್, ಡಂಬೆಲ್ಸ್ ಹೇಳಿಕೊಡುತ್ತಾ ಅಥವಾ ಫೋರ್ ಥ್ರೀ ನೆಕ್ಸ್ಟ್ ಚೇಂಜ್ ಹೇಳುತ್ತಲೇ ನಿನ್ನ ಆಯಸ್ಸು ಕಳೆದುಬಿಡುತ್ತೀಯೇ ಹುಡುಗಿ’ ಎಂದು ರಾಮಪ್ರಿಯ ಜೋಯಿಸರು ಹಲುಬಿಕೊಳ್ಳುತ್ತಿದ್ದರು. ಅವಳಿಗೊಂದು ಮದುವೆ ಮಾಡಿಬಿಡಬೇಕೆಂದು ತಮಗೆ ಗುರುತಿದ್ದವರ ಬಳಿಯಲ್ಲೆಲ್ಲಾ ಉಮಾಳ ಬಗ್ಗೆ ಹೇಳಿಕೊಂಡು ಬಂದಿದ್ದರು. ಆದರೆ, ಈಕೆ ಒಂದು ಅಗಲವಾದ ಸ್ಟಿಕರ್ ಕುಂಕುಮವನ್ನಿಟ್ಟು, ತೆಳ್ಳಗಾಗುತ್ತಿದ್ದ ಮುಂದಲೆಯನ್ನು ಮುಚ್ಚಿವಂತೆ ಕೂದಲನ್ನು ಬಾಚಿ ಹಿಂದಿಂದ ತುರುಬುಕಟ್ಟಿ, ಮುಖಕ್ಕೆ ತೆಳ್ಳಗಿನ ಟಾಲ್ಕಮ್ ಪೌಡರ್ರು ಮತ್ತು ಒದ್ದೊದ್ದೆಯಾದ ಕುಬುಸದ ಕಂಕುಳು ಕಾಣಿಸಿಕೊಳ್ಳುತ್ತಾ, ಬಾಯಲ್ಲೊಂದು ಲೋಹದ ಸೀಟಿಯನ್ನು ಸಿಕ್ಕಿಸಿ ಊದುತ್ತಾ ಗಾಂಧಿಭವನದ ಪಕ್ಕದಲ್ಲಿದ್ದ ಆವರಣದಲ್ಲಿ ಹುಡುಗಿಯರಿಗೆ ಖೋ ಖೋ ಆಡಿಸುತ್ತಿದ್ದಳು. ಬೆಳಿಗ್ಗೆ ಒಂಭತ್ತೂವರೆಗೆ ಗಾಂಧಿಭವನದ ಮುಂದೆ ವಾಕಿಂಗ್ ಹೋದರೆ, ಇತ್ತ ಸಂಸ್ಕೃತ ಪಾಠಶಾಲೆಯಿಂದ ಕೇಳುವ ‘ವಜ್ರಾದಪಿ ಕಠೋರಾಣಿ’ಗೆ ಹಿಮ್ಮೇಳವಾಗಿ ಹುಡುಗಿಯರ ಲೇಜಿಮ್ಸ್‌ಗಳ ಝಣಝಣ ಮತ್ತು ಉಮಾ ಟೀಚರಿನ ಸೀಟಿಯ ಸದ್ದು ಒಂದು ಹೊಸ ಲಯವನ್ನು ನಾಗಮಂಗಲದ ಜನಕ್ಕೆ ಕೊಡುತ್ತಿತ್ತು. ಕೇಳಿದವರು, ನೋಡಿದವರು ಹಾಗೆಯೇ ತಮ್ಮ ನಡುಗೆಯ ವೇಗವನ್ನು ನಿಧಾನಿಸುತ್ತಿದ್ದರು.  ಕಾಟನ್ ಸೀರೆ ಉಟ್ಟು, ಒಂದು ಬಿಳೀ ಕ್ಯಾನ್‌ವಾಸ್ ಶೂ ಹಾಕಿಕೊಂಡು ಹುಡುಗಿಯರನ್ನು ಬಯಲಲ್ಲಿ ಡ್ರಿಲ್ ಮಾಡಿಸುವುದು, ಮನೆಗೆ ಬಂದು ಸೌಂದರ್ಯಲಹರಿ ಓದುವುದನ್ನು ಬಿಟ್ಟರೆ ಬೇರೆ ಏನೂ ಮಾಡದೇ ಇರುವ ಅಕ್ಕ, ಶಾಪಗ್ರಸ್ತ ದೇವತೆಯ ಹಾಗೆ ವಾಸುವಿಗೆ ಕಾಣುತ್ತಿದ್ದಳು. + +ವಾಸು ಪಿಯುಸಿಯ ಸಿಲಬಸ್ಸಾದ ಕಂಡೆಂಸರಿನ ಸರ್ಕ್ಯುಟು, ಓಮ್ಸ ಲಾ ಇತ್ಯಾದಿಗಳನ್ನು ಉರುಹೊಡೆದು ಸುದೇಷ್ಣಾಳನ್ನು ಇಂಪ್ರೆಸ್ ಮಾಡಲು ಪ್ರಯತ್ನಿಸುತ್ತಿದ್ದ. ‘ಲಾ ಆಫ್ ಟ್ರಿಯಾಂಗಲ್ ಆಫ್ ಫೋರ್ಸಸ್’ ಅನ್ನು ರಾಮಚಂದ್ರರಾಯರ ಫಿಸಿಕ್ಸ್ ಪುಸ್ತಕದಲ್ಲಿ ಕೊಟ್ಟಂದಿಕ್ಕಿಂತಲೂ ಹೆಚ್ಚಾಗಿ ಊರಿಗೆ ಊರೇ ಕೇಳುವಂತೆ ತನ್ನ ಮನೆಯ ಜಗುಲಿಯ ಮುಂದೆ ಕೂತು ಓದುತ್ತಿದ್ದ. ಕೊಡಚಾದ್ರಿಯ ಶಿಖರಗಳನ್ನು ಎಣಿಸಿಕೊಂಡು ಕನ್ನಡಶಾಲೆಗೆ ಹೋಗಿದ್ದ, ಕಾರಂತರ ಕಾದಂಬರಿಗಳನ್ನು ಮಾತ್ರ ಓದಿದ್ದ ಸುದೇಷ್ಣಾಳಿಗೆ ಅದ್ಯಾವ ಮಾಯದಲ್ಲಿ ಸೈನ್ಸ್ ತೆಗೆದುಕೊಂಡು ಇಂಜಿನಿಯರಿಂಗಿಗೆ ಹೋಗಬೇಕಂತ ಅನಿಸುತ್ತೋ ಅಥವಾ ಕೇಶವ ಶರ್ಮ ಬಲವಂತ ಮಾಡಿದ್ದನೋ, ಸಂಸ್ಕೃತ ಶಾಲೆಯ ನೋಂದಾವಣೆಯ ಜತೆಗೂ ನಾಗಮಂಗಲದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿಯೂ ಸುದೇಷ್ಣಾಳ ನೋಂದಾವಣಿ ಪಿಸಿಎಂಬಿಯಲ್ಲಿ ಆಗೇಹೋಗಿತ್ತು. ವಾಸು ಈ ಬಾರಿ ಬೆಳಗ್ಗಿಂದ ಸಂಜೆಯವರೆಗೆ ಟ್ಯೂಷನ್ನಿದ್ದಾಗ್ಯೂ ಸಂಸ್ಕೃತ ಕ್ಲಾಸಿನ ಕಾವ್ಯ ಪರೀಕ್ಷೆಗೆ ಕಟ್ಟಿದ. ಇಷ್ಟರ ನಡುವೆ ಹೊಸದಾಗಿ ಉಪನಯನವಾಗಿದ್ದರಿಂದ ತನ್ನ ಸೈಕಲ್ ಮೇಲೆ ಒಂದು ಮುಂಡುಪಂಚೆಯನ್ನು ಉಟ್ಟುಕೊಂಡು ಸೀತಾಫಲದ ಮರದಾಟಿ ಮೂಲೆ ನಾಗೇಶಶಾಸ್ತ್ರಿಯ ಮನೆಗೆ ಸಂಧ್ಯಾವಂದನೆಗೆ ಕಲಿಯಲು ಹೋಗುವ ಮುನ್ನ ತನ್ನೆದೆಯ ಮೇಲಿದ್ದ ಮೂರೇ ಮೂರು ಕೂದಲನ್ನು ಮುಚ್ಚಿಕೊಳ್ಳಲು ವ್ಯರ್ಥಪ್ರಯತ್ನ ಮಾಡುತ್ತಿದ್ದ. ಸುದೇಷ್ಣಾಳ ಮನೆಯ ಮುಂದೆ ಹೋದಾಗ ಆಕೆ ಕಿಸಕ್ಕನೆ ನಕ್ಕಾಗ ತನ್ನ ಎದೆಯ ಮೇಲಿನ ಆ ಮೂರು ಕೂದಲಿಗೆ ಥ್ಯಾಂಕ್ಸ್ ಹೇಳುತ್ತಿದ್ದ. + +ಸುದೇಷ್ಣಾಳ  ಯಾವಾಗಲೂ ಒಂದು ರೀತಿ ವಿಚಿತ್ರವಾದ ಉಡುಗೆಯನ್ನು ತೊಟ್ಟಿರುತ್ತಿದ್ದಳು. ಅದರ ಹೆಸರು ಕಟ್‌ಮ್ಯಾಕ್ಸಿಯಂತೆ. ಅವರ ಊರಕಡೆ ಇದು ತುಂಬಾ ಜನಪ್ರಿಯವಾದ ಉಡುಗೆಯಂತೆ. ಆದರೆ, ನಾಗಮಂಗಲದವರಿಗೆ ಇದೊಂದು ಹೊಸಾ ಫ್ಯಾಷನ್. ಕಟ್‌ಮ್ಯಾಕ್ಸಿಯೆಂದರೆ, ಇತ್ತಕಡೆ ಉದ್ದಲಂಗವೂ ಅಲ್ಲ, ಇತ್ತಕಡೆ ಮ್ಯಾಕ್ಸಿಯೂ ಅಲ್ಲ. ಉದ್ದಲಂಗದತರವೇ ಇದ್ದರೂ ನೆರಿಗೆಯಿಲ್ಲದೇ ನೇರವಾಗಿ ಮುಂಡುಪಂಚೆಯ ಸೊಂಟಕ್ಕೆ ಹುಕ್ಸ್ ಹಾಕಿದಹಾಗೆ ಕಾಣುತ್ತಿತ್ತು. ಗಾಢವಾದ ಬಣ್ಣಗಳ, ಚಿರತೆಮೈ, ನವಿಲುಗರಿಯ ಡಿಸೈನುಗಳು ಯಾವ ನೆರಿಗೆ ಮಡಿಕೆಗಳಿಲ್ಲದೆ ಸುದೇಷ್ಣಾ ಓಡಾಡಿದಷ್ಟೂ ತಾವೂ ಹರಿದಾಡುತ್ತಿದ್ದವು. ಅದರ ಮೇಲೆ, ಹಾಕುತ್ತಿದ್ದ ಬ್ಲೌಸು ಹೆಣ್ಣುಮಕ್ಕಳ ಸ್ಕೂಲ್ಲಿನ ಯೂನಿಫಾರ್ಮಿನ ಅಂಗಿಯ ತರವೇ ಇದ್ದು, ಕೊಂಚ ಕೈಮೇಲೆತ್ತಿದಾಗ ಮೇಲೆ ಸರಿದು ಒಂದಿಂಚು ಬತ್ತಲು ಬೆನ್ನು ಕಂಡರೂ, ಈಕೆ ಇತರೇ ಹುಡುಗಿಯರ ತರಹ ಭುಜದಿಂದ ಕಾಲತನಕ ಇಳಿಯುವ ಪೆಟ್ಟಿಕೋಟು  ಹಾಕಿಲ್ಲ. ಹುಕ್ಸ್‌ನಿಂದ ಮೇಲೆ ಒಂದಿಷ್ಟು ಜಾಗ ಖಾಲಿಯಿದೆ ಎಂಬ ಕಲ್ಪನೆಯಿಂದಲೇ ವಾಸು ಪುಳಕಿತನಾಗುತ್ತಿದ್ದ. ಕೊಡಚಾದ್ರಿಯ ಬುಡದ ಯಾವ ಊರಿನಲ್ಲಿಯೂ ಹುಡುಗಿಯರು ಹೀಗೆ ಡ್ರೆಸ್ ಮಾಡುವುದಿಲ್ಲ ಎಂದು ತನ್ನ ಸ್ನೇಹಿತರ ಹತ್ತಿರ ಬೆಟ್ ಕಟ್ಟಿದ್ದ. + +ಒಂದು ದಿನ ವಾಸು ವೆಂಕಟೇಶ್ವರ ಟಾಕೀಸಿನಲ್ಲಿ ಮಧ್ಯಾಹ್ನ ಮ್ಯಾಟಿನಿ ಸಿನೆಮಾ ನೋಡಲು ಹೋಗಿದ್ದ. ಇವನ ಹಿಂದೆ ಸಾಲಿನಲ್ಲಿ ಯೋಗಾನರಸಿಂಹ ಸ್ವಾಮಿಯ ದೇವಸ್ಥಾನದ ಅರ್ಚಕರಾದ ಗರುಡಯ್ಯಂಗಾರರೂ ಬಂದಿದ್ದರು. ಗರುಡಯ್ಯಂಗಾರರಿಗೆ ದೇವರ ಪೂಜೆ ಬಿಟ್ಟರೆ ಇದ್ದದ್ದು ಸಿನೆಮಾ ಹುಚ್ಚು. ದೇವಸ್ಥಾನದ ಪ್ರಾಕಾರದಲ್ಲಿದ್ದ ಒಣಗಿದ ಮರ ಹೇಗೆ ವರ್ಷವರ್ಷ ಬೆಳೆಯುತ್ತಿದೆಯೆಂದೂ ಪುರಾವೆ ಸಹಿತ ಹೇಳುತ್ತಿದ್ದಷ್ಟೇ ಆಸ್ಥೆಯಿಂದ ಎಂಥ ಸಿನೆಮಾ ನೋಡಲಿ ಅದರಿಂದ ಕಲಿಯಬಹುದಾದ ನೀತಿ ಬಹಳ ಇದೆ ಎಂದೂ ದೇವಸ್ಥಾನಕ್ಕೆ ಬಂದವರಿಗೆಲ್ಲಾ ಅವರು ಉದಾಹರಣೆ ಸಮೇತ ಅವರು ವಿವರಿಸುತ್ತಿದ್ದರು. ಪ್ರತಿಯೊಬ್ಬರಿಗೂ ತೀರ್ಥ, ಪ್ರಸಾದ ಕೊಟ್ಟಾದ ಮೇಲೆ ‘ವೆಂಕಟೇಶ್ವರಕ್ಕೆ ಹೋಗಿದ್ದರಾ’ ಎಂತಲೇ ಮಾತಿಗೆಳೆಯುತ್ತಿದ್ದರು. ಅವರ ಈ ಸಿನೆಮಾ ನೀತಿ ಪಾಠಗಳು ಬಹಳ ರಸವತ್ತಾಗಿರುವುದರಿಂದ ಊರವರೆಲ್ಲರೂ ಅವರನ್ನು ಯಾವುದೇ ಹೊಸಾ ಸಿನೆಮಾ ಬಂದರೂ ‘ಗರುಡಯ್ಯಂಗಾರರೇ ಹ್ಯಾಗಿತ್ತು ಸಿನೆಮಾ’ ಎಂದು ಬೇಕಂತಲೇ ಮೇಲೆ ಬಿದ್ದು ಕೇಳುತ್ತಿದ್ದರು. ‘ಅಯ್ಯೋ, ಹೋಗ್ರೋ ಮುಂಡೇವಾ. ನಿಮ್ಗೆ ಅರ್ಥ ಆಗದೇ ಇರೋದು ಏನಿರುತ್ತೆ. ಆದರೂ ನೀವು ಕೇಳ್ತಿದೀರಿ ಅಂತ ಹೇಳ್ತೀನಿ, ನಾನು. ಈಗ ಆ ಬೂತಯ್ಯನ ಸಿನೆಮಾ ತಗೊಳ್ಳಿ ಅಲ್ಲಿ ಏನು ಹೇಳ್ತಾನಪ್ಪಾ ಅಂದ್ರೆ, ದ್ವೇಷಾ ಸಾಧಿಸಿದ್ರೆ, ಉಪ್ಪಿನಕಾಯಿ ಸಮೇತ ಎಲ್ಲಾ ನಾಶವಾಗಿಹೋಗುತ್ತೆ’ ಎಂತಲೋ, ಅಥವಾ ಡೈಮಂಡ್ ರಾಕೆಟ್ ನೋಡಿದ ನಂತರ ‘ನಂ ರಾಜಕುಮಾರ ನೋಡ್ರೋ, ಓದಿದ್ದು ಮೂರನೇ ಕ್ಲಾಸಾದರೂ ಇಂಗ್ಲಿಶ್‌ನಲ್ಲಿ ಹಾಡು ಹೇಳ್ತಾನೆ. ಆ ನಿಜವಾದ ಜೇಮ್ಸ್ ಬಾಂಡಿಗೂ ಹಾಡು ಹೇಳಕ್ಕೆ ಬರುತ್ತಾ’ ಎಂದು ಕೇಳಿ ಸುಮ್ಮನಾಗಿಸುತ್ತಿದ್ದರು. + +ಅವರು ಅಂದು ಆ ಸಿನೆಮಾಕ್ಕಿದ್ದಿದ್ದ ಜನಜಂಗಳಿಯನ್ನು ನೋಡಿ ವಾಸುವಿಗೆ ಮೆಲ್ಲಗೆ ‘ಮಗೂ’ ಎಂದರು. ವಾಸು ಹಿಂದೆ ತಿರುಗಿದಾಗ, ಎರಡು ಮುಷ್ಟಿಯಲ್ಲಿಯೂ ಚಿಲ್ಲರೆಯನ್ನು ಹಿಡಿದು ಅವನಿಗೆ ಕೊಟ್ಟು ‘ನನಗೊಂದು ಟಿಕೀಟು ತಾ’ ಎಂದರು. ಈ ಚಿಲ್ಲರೆ ನಾಣ್ಯಗಳನ್ನು ನೋಡಿದ ತಕ್ಷಣ ಅದು ಎಲ್ಲಿಂದ ಬಂದಿತೆಂದು ಊಹಿಸುವುದಕ್ಕೆ ವಾಸುವಿಗೆ ಬಹಳ ಸಮಯ ಬೇಕಾಗಲಿಲ್ಲ. ವಾಸು ಇವರ ಸಿನೆಮಾ ಹುಚ್ಚು ನೋಡಿ ಮನಸ್ಸಿನೊಳಗೇ ನಗುತ್ತಾ ಚಿಲ್ಲರೆ ಇಸಕೊಳ್ಳಲು ಕೈಯೊಡ್ಡಿದ. ಕೈ ತಪ್ಪಿ ಅಷ್ಟೂ ಚಿಲ್ಲರೆ ನೆಲದ ಮೇಲೆ ಬಿತ್ತು. ಆರಿಸಿಕೊಳ್ಳಲೆಂದು ವಾಸು ಬಗ್ಗಿದಾಗ ಯುಗಾಂತರಗಳಿಂದ ಪರಿಚಯವಿದೆಯೇನೋ ಅನ್ನಿಸುವ ಕಟ್‌ಮ್ಯಾಕ್ಸಿಯ ಕೆಳಗಿನ ಪಾದ ಕಣ್ಣಿಗೆ ಬಿತ್ತು. ಉಂಗುಷ್ಠದ ಉಗುರು ಕಮಾನಿನಂತೆ ಕತ್ತರಿಸಿದ್ದು, ಯಾವ ಬಣ್ಣವೂ ಇಲ್ಲದೆ ಸಪಾಟಾಗಿತ್ತು. ಉಗುರಿನ ಕೆಳಗೆ ಕಾಣುವ ದೃಷ್ಟಿಬೊಟ್ಟಂತಿದ್ದ ಒಂಚೂರು ಕಪ್ಪುಕೊಳೆಯ ಗೀಟು ಬಿಟ್ಟರೆ ಎಲ್ಲ ಕಾಲ್ಬೆರಳುಗಳೂ ಸುಂದರ. ಚಪ್ಪಲಿಯಿಲ್ಲದ ಬರೇ ಪಾದವನ್ನು ಅಂದು ವಾಸು ಮೊದಲ ಬಾರಿಗೆ ತೀರ ಹತ್ತಿರದಿಂದ ಕಂಡ. ಈಗತಾನೆ ಎಂತದೋ ಶುಭಕಾರ್ಯ ಮುಗಿಸಿದ್ದ ಕುರುಹೋ ಎಂಬಂತೆ ಹಿಮ್ಮಡಿಗೆ ಮದರಂಗಿ, ಉಂಗುಷ್ಠಕ್ಕಿಂತ ಕೊಂಚೇಕೊಂಚ ಉದ್ದವಾದ ಮಧ್ಯದ ಬೆರಳು, ಮುಂಗಾಲ ಮೇಲೆ ಮುದುಡಿ ಹಿಡಕೊಂಡಿರೋ ಕಟ್‌ಮ್ಯಾಕ್ಸಿ, ಕಾಲಿನ ಬದಿಯ ಮೂಳೆಯ ಮೇಲೆ ಕೊಂಚ ಉಬ್ಬಿದ್ದ ಕಪ್ಪಾದ ತರಿತರಿಯ ಡುಬ್ಬ, ಒಮ್ಮೆ ಮುಟ್ಟೋಣವೆನ್ನಿಸಿತು. ಇದೇ ವೆಂಕಟೇಶ್ವರ ಟಾಕೀಸಿನಲ್ಲಿ ನೋಡಿದ ಎಷ್ಟೋ ಸಿನೆಮಾದಲ್ಲಿ ನಾಯಕರು ಮಾಡಿದ ತರ, ಆದರೆ ಧೈರ್ಯ ಬರಲಿಲ್ಲ. ಧೈರ್ಯ ತೆಗೆದುಕೊಂಡು ನಡುಗುವ ಕೈಬೆರಳಿನಿಂದ ಪಾದವನ್ನು ಮುಟ್ಟಲು ಹೋದಾಗ… … + +ಪಕ್ಕದಲ್ಲಿದ್ದ ಇನ್ನೊಂದು ಜತೆ ಪಾದಗಳ ಟ್ರಾಟ್ ಚಪ್ಪಲಿ ಪಟಪಟ ಸಪ್ಪಳ ಮಾಡಿತು. ಅಲ್ಲಿ ಇಲ್ಲಿ ನಾಲ್ಕು ಪಾದಗಳು ತಿರುಗಾಡಿದ್ದಷ್ಟೇ, ಸುದೇಷ್ಣಾ ಬಗ್ಗಿದಳು. ತಾನೂ ಹೆಕ್ಕಿದಳು, ನಾಲ್ಕಾಣೆ, ಹತ್ತುಪೈಸ, ಎಂಟಾಣೆ.. ಇಪ್ಪತ್ತು ಪೈಸ.. ಹೌದು, ಇಪ್ಪತ್ತು ಪೈಸ. ಗಾಂಧಿತಾತ ಸ್ವಸ್ಥ ಕೂತು ನಗುತ್ತಿದ್ದ ಹಿತ್ತಾಳೆ ನಾಣ್ಯ.. ಎಲ್ಲವನ್ನೂ ಹೆಕ್ಕಿದಳು. ಕೈಗೆ ಕೊಟ್ಟಾಗ ನಕ್ಕಳಾ.. ಗೊತ್ತಾಗಲಿಲ್ಲ. + +‘ಥ್ಯಾಂಕ್ಸ್ ರೀ..’ + +‘ಮೆನ್ಶನ್ ನಾಟ್..’ + +ಅಂದೇ ವಾಸು ಅದೇ ವೆಂಕಟೇಶ್ವರ ಟಾಕೀಸಿನಲ್ಲಿ ‘ಮಲ್ಲಿಗೆ ಸಂಪಿಗೆ’ ಟಿಕೀಟನ್ನು ಗರುಡಯ್ಯಂಗಾರರಿಗೆ ಬೊಗಸೆಯಲ್ಲಿರಿಸುತ್ತಾ ಎರಡೂ ಕೈ ಹಿಡಿದು ಪ್ರತಿಜ್ಞೆ ಮಾಡಿದ್ದ. ತಾನು ಕಾಲುಂಗುರ ಹಾಕಿದರೆ, ಆ ಉದ್ದದ ಮಧ್ಯದ ಬೆರಳಿಗೇ ಹಾಕುವುದು, ಎಂದು. + +ಗರುಡಯ್ಯಂಗಾರರು ಎಲ್ಲಾ ಅರ್ಥವಾದಹಾಗೆ ನಕ್ಕರು. + +ಸಂಸ್ಕೃತ ಪಾಠಶಾಲೆಯಲ್ಲಿ ಅಂದು ಎಲ್ಲಾ ಬೇರೆ ಶಾಲೆಗಳಲ್ಲಿರುವಂತೆ ವಾರ್ಷಿಕೋತ್ಸವ. ವಾರ್ಷಿಕೋತ್ಸವಕ್ಕೆ ಭಾಸನ ‘ಕರ್ಣಭಾರಮ್’ ನಾಟಕ ಮಾಡಿಸಬೇಕೆಂದು ನಿರ್ಧರಿಸಿಯಾಗಿತ್ತು. ವಾಸುವಿಗೆ, ಶಲ್ಯರಾಜನ ಪಾತ್ರ. ನಾಟಕದಲ್ಲಿ ಶಲ್ಯರಾಜ ಕರ್ಣನನ್ನು ಒಂದೇಸಮನೆ ಹೀಯಾಳಿಸುವುದು, ಯುದ್ಧದಲ್ಲಿ ನೀನು ಖಂಡಿತಾ ಸೋತೇಹೋಗುತ್ತೀಯ, ಸುಮ್ಮನೇ ಯಾಕೆ ಯುದ್ಧ ಮಾಡುತ್ತೀಯ ಎಂದು ಇನ್ನಿಲ್ಲದ ಹಾಗೆ ತೇಜೋವಧೆ ಮಾಡುವ ಪಾತ್ರ. ಕನ್ನಡ ಟೀಚರ್ ಮಗ ಪ್ರಶಾಂತನದು ಕರ್ಣನ ಪಾತ್ರ. ವಾಸುವಿನ ಪಾತ್ರಕ್ಕೆ ಅದೇಕೋ ಗೊತ್ತಿ ಒಂದಿಷ್ಟು ಹಾಸ್ಯರಸವಿರಬೇಕೆಂದು ಕೇಶವಶರ್ಮ ನಿರ್ಧರಿಸಿದ್ದ. ಒಂದು ಹಂತದಲ್ಲಿ ನಾಲ್ಕೈದು ಬಾರಿ ‘ತತಸ್ತತಃ’ ಎಂದು ಸಂಭಾಷಣೆ ಹೇಳುವ ಸಂದರ್ಭದಲ್ಲಿ ಕಣ್ಣು ಕತ್ತನ್ನು ಕೊಕ್ಕರೆಯ ಹಾಗೆ ಮುಂದೆ ಹಿಂದೆ ಉಳುಕಾಡಿಸಬೇಕೆಂದು ಹೇಳಿದ್ದ. ಸಂಭಾಷಣೆಯೆಲ್ಲವೂ ಸಂಸ್ಕೃತದಲ್ಲಿಯೇ ಇರುವುದರಿಂದ ಬಂದ ಜನಕ್ಕೆ ಕೊಂಚವೂ ನಾಟಕ ಅರ್ಥವಾಗುವುದಿಲ್ಲ, ಇಂಥ ಅಂಗಚೇಷ್ಟೆಗಳಿದ್ದರೆ ನಾಟಕಕ್ಕೆ ಕೊಂಚವಾದರೂ ಕಳೆಕಟ್ಟುವುದೆಂದು ಕೇಶವಶರ್ಮನ ವಾದ. ಹೇಗೆ ಯೋಚಿಸಿದರೂ ವಾಸುವಿಗೆ ಕರ್ಣನ ಮತ್ತು ಶಲ್ಯರಾಜನ ನಡುವಿನ ಸಂಭಾಷಣೆಯಲ್ಲಿ ಹಾಸ್ಯ ನುಸುಳಿಬರಬಹುದು ಅದೂ ಯುದ್ಧದ ಮಧ್ಯದಲ್ಲಿ ಎಂದನಿಸಿರಲಿಲ್ಲ. ಆದರೆ, ಈ ನಾಟಕವನ್ನು ಆಡಲೇಬೇಕಾಗಿ ಬಂದಿದ್ದರಿಂದ ಕಣ್ಣು, ಕುತ್ತಿಗೆಯನ್ನು ಹಿಂದೆ ಮುಂದೆ ತಿರುಗಿಸಿ ಸುಸ್ತುಹೊಡೆದಿದ್ದ. + +ಏಕಾಂಕ ನಾಟಕವಾದರೂ ಕೇಶವಶರ್ಮ ನಾಟಕವನ್ನು ಅದ್ದೂರಿಯಾಗಿಯೇ ಮಾಡಬೇಕೆಂದು ಹತ್ತಿರದ ಕಾಳಮುದ್ದನದೊಡ್ಡಿಯಿಂದ ಸ್ಟೇಜು ಮತ್ತು ಹಿಂದಣ ಯುದ್ಧದ ಸೀನಿದ್ದ ಬಣ್ಣಬಣ್ಣದ ಸೀನರಿಯನ್ನು ತರಿಸಿದ್ದ. ಜತೆಗೆ, ದೇವನಾಗರಿ ಲಿಪಿಯಲ್ಲಿ ಮತ್ತು ಕನ್ನಡದಲ್ಲಿ ‘ಜೀಯಾತ್ ಗೀರ್ವಾಣವಾಣೀ’ ಎಂದು ಬರೆಸಿದ್ದ, ಕೂಡ. ಮೇಕಪ್‌ಗೆಂದು ಊರಿನ ಕಲಾರಂಗದ ಮೇಕಪ್‌ಮ್ಯಾನ್ ಪಾಂಡುರಂಗ ಬಂದು ಮೇಕಪ್ ಮಾಡುವುದು ಎಂದು ನಿರ್ಧಾರವಾಗಿತ್ತು. ಕಲಾರಂಗದ ಪಾಂಡುರಂಗನ ಮೇಕಪ್ ಎಂದರೆ, ಮುಂದೆ ಕೂತವರಿಗೆಲ್ಲಾ ಹೆಣ್ಣುಗಂಡೆಂಬ ಬೇಧವಿಲ್ಲದೇ ಎಲ್ಲರಿಗೂ ಒಂದಷ್ಟು ರೋಸ್ ಮತ್ತು ದಟ್ಟವಾದ ಲಿಪ್‌ಸ್ಟಿಕ್ಕನ್ನು ಹಚ್ಚಿ, ಕೆನ್ನೆಯ ಮೇಲೆ ಕೂದಲಿರುವ ಮಚ್ಚೆ, ಕಣ್ಣಿಗೆ ಎದ್ದುಕಾಣುವ ಕಾಡಿಗೆ, ಪೊದೆಮೀಸೆ, ಜಟೆ ಮತ್ತು ದಾರದಿಂದ ಇಳಿದಾಡುವ ನರೆತಗಡ್ಡ ಇವುಗಳ ಮೇಲೆ ಪಾತ್ರಗಳಿಗೆ ರೂಪುಕೊಡುತ್ತಿದ್ದ. ನಾಟಕದ ನಂತರ ಮೇಕಪ್ ತೆಗೆಯಬೇಕೆಂದರೆ ಅದು ದೊಡ್ಡ ರಗಳೆ. ಚೆನ್ನಾಗಿ ಕೊಬ್ಬರಿ ಎಣ್ಣೆ ಹಚ್ಚಿ ಮೂರುಮೂರು ಬಾರಿ ಉಜ್ಜಿದರೂ ಹೋಗದೇ ರಾಡಿಯಾಗಿ ಮೂರ್ಮೂರು ದಿನ ಮೇಕಪ್‌ನಲ್ಲಿಯೇ ಜನಗಳು ಊರಿಡೀ ಓಡಾಡುವುದನ್ನು ಕೇಳಿ ನೋಡಿ ವಾಸು ಹುಷಾರಾಗಿದ್ದ. + +ಸುದೇಷ್ಣಾ ತಾನು ಊರಲ್ಲಿ ಯಕ್ಷಗಾನಕ್ಕೆ ಮೇಕಪ್ ಮಾಡಿ ಗೊತ್ತಿರುವುದರಿಂದ ತಾನೂ ಮೇಕಪ್‌ಗೆ ಸಹಾಯಮಾಡಬಲ್ಲೆ ಎಂದು ಹೇಳಿದ್ದನ್ನು ಕೇಳಿ ವಾಸು ಮತ್ತೊಮ್ಮೆ ಪುಳಕಿತನಾಗಿದ್ದ. ಅಂದು ವಾರ್ಷಿಕೋತ್ಸವಕ್ಕೆ ಅಕ್ಕನೂ ಬಂದಿದ್ದಳು. ಮೊದಲ ಬಾರಿಗೆ ಸುದೇಷ್ಣಾ ಸೀರೆ ಉಟ್ಟಿದ್ದನ್ನು ವಾಸು ನೋಡಿದ್ದ. ಗಾಢವಾದ ನೇರಿಳೆ ಬಣ್ಣದ ಸೀರೆಯ ಮೇಲೆ ನೆಲ್ಲಿಕಾಯಿ ಬಣ್ಣದ ಹೂವುಗಳು. ಅದಕ್ಕೊಪ್ಪುವ ಒಂದು ಲೂಸುಲೂಸಾದ ಬ್ಲೌಸು. ಮಧ್ಯೆ ಅಕ್ಕ ಒಂದೆರಡು ಬಾರಿ ಸುದೇಷ್ಣಾಳನ್ನು ಒಳಗೆ ಕರೆದು ಸೀರೆಯ ನೆರಿಗೆಯನ್ನು ಸರಿಮಾಡಿ ನೆರಿಗೆಗೆ ಮತ್ತು ಸೆರಗಿಗೆ ಒಂದು ಪಿನ್ ಹಾಕಿದ್ದನ್ನು ವಾಸು ಕಳ್ಳಗಣ್ಣಿನಿಂದ ನೋಡಿದ್ದ. ನೆರಿಗೆಗಳನ್ನು ದೊಡ್ದ ಹೆಂಗಸಂತೆ ಸೊಂಟಕ್ಕೆ ಸಿಗಿಸಿ, ಸ್ಟೇಜು ಕಟ್ಟುವುದು, ಪರದೆ ಇಳಿಯುತ್ತದೆಯೋ ಇಲ್ಲವೋ ಎಂದು  ನೋಡುವುದು, ನಾಟಕದ ಸ್ಟೇಜಿನ ಮೇಲೆ ರಂಗೋಲಿ ಹಾಕುವುದು, ಒಂದು ಮೂಲೆಯಲ್ಲಿ ದೊಡ್ಡ ದೀಪದ ಕಂಬವನ್ನು ಸರಿಯಾಗಿ ಇಡುವುದು-ಹೀಗೆ ಹಲವು ಹತ್ತು ಕೆಲಸಗಳಲ್ಲಿ ಸುದೇಷ್ಣಾ ತನ್ನನ್ನು ತೊಡಗಿಸಿಕೊಂಡಿದ್ದಳು. + +ಮೇಕಪ್ ಸಮಯ ಬಂದಾಗ ಒಂದು ರೌಂಡ್ ಮೇಕಪ್ಪನ್ನು ಪಾಂಡುರಂಗ ಹಚ್ಚಿದ್ದ. ಎಲ್ಲರೂ ಪಾಂಡುರಂಗನಿಗೆ ಮುಖಕೊಟ್ಟು ಕೂತಿದ್ದರು. ಆ ಕೆನ್ನೆಗೆ ಹಚ್ಚುವ ರೋಸಿನ ಮಿಶ್ರಣ ಹೆಚ್ಚುಕಮ್ಮಿಯಾಯಿತೋ ಗೊತ್ತಿಲ್ಲ, ವಾಸುವಿನ ಕಣ್ಣ್ಣು ಕೆಂಪಾಯಿತು. ಭಗ ಭಗ ಉರಿತಡೆಯಲಾರದೇ ವಾಸು ಕಣ್ಣು ಮುಚ್ಚಿಕೊಂಡ. ಪಾಂಡುರಂಗ ತನ್ನ ದೊಡ್ಡದನಿಯಿಂದ ‘ಈ ರೋಸನ್ನು ಮುಖಕ್ಕೆ ಹಚ್ಚಬೇಕಾದರೆ, ಕೊನೆಯ ಮೂರುಬೆರಳುಗಳನ್ನು ಬಳಸಬೇಕು. ಕೊಂಚವೇ ಅದ್ದಿ, ಒಂದು ಬೊಟ್ಟನ್ನು ಕೆನ್ನೆಯ ಉಬ್ಬಿದ ಮೂಳೆಯ ಎರಡೂ ಕಡೆ ಇಟ್ಟು ನಿಧಾನವಾಗಿ ಎಲ್ಲಕಡೆ ಅದನ್ನು ಒಂದೇ ಲಯದಲ್ಲಿ ಸವರುತ್ತಾ ಹೋಗಬೇಕು.’ ಎಂದು ಹೇಳುತ್ತಿದ್ದ. ಆತ ಯಾರನ್ನು ಕುರಿತು ಹೇಳುತ್ತಿದ್ದನೋ ವಾಸುವಿಗೆ ಗೊತ್ತಾಗಲಿಲ್ಲ. ವಾಸು, ಕಣ್ಣು ಮುಚ್ಚಿ ಕೂತಿದ್ದ. + +ಇದ್ದಕ್ಕಿದ್ದಂತೇ ಮುಖದ ಮೇಲೆ ಮೃದುವಾದ ಬೆರಳುಗಳು ಓಡಾಡಿದವು. ಪಾಂಡುರಂಗ ಹೇಳಿದ ಹಾಗೆ ಬಲಕೆನ್ನೆಯ ಮೂಳೆಯ ಮೇಲೆ, ಮೊದಲು ಒಂದು ಬೆರಳು ಸ್ಥಾಪಿತವಾಗಿ, ನಂತರ ಅದರ ಆ ಬಣ್ಣದ ಎಸಳುಗಳು ಲಯಬದ್ಧವಾಗಿ ಇಡೀ ಮುಖದ ಮೇಲೆ ಹರಿದಾಡತೊಡಗಿದವು. ಮುಖಕ್ಕೆ ಹಿತವಾಗುವ ಹಾಗೆ ಮೆಲ್ಲಗೆ ಒಂದೇ ಗತಿಯಲ್ಲಿ ಬೆರಳುಗಳು ತುಡಿಯಾಡಿದವು. ವಾಸುವಿಗೆ ಏನು ಮಾಡಿದರೂ ಕಣ್ಣು ಬಿಡಲಾಗಲೇ ಇಲ್ಲ. ಕಣ್ಣುರಿ ಇಲ್ಲ ಎಂದುಕೊಂಡು ಕಣ್ಣು ಬಿಡಲು ಪ್ರಯತ್ನ ಮಾಡಿದರೂ ಏನು ಮಾಡಿದರೂ ಕಣ್ಣು ಬಿಡಲಾಗಲೇ ಇಲ್ಲ. ಬೆರಳಿನ ಮೃದು, ಅದು ತನ್ನ ಮುಖದ ಮೇಲೆ ಓಡಾಡುವ ಗತಿ ಮತ್ತು ಮುಂದೆ ಕೂತಿರುವ ವ್ಯಕ್ತಿಯ ಉಸಿರಿನ ಬಿಸುಪಿನಿಂದ ಅದು ಸುದೇಷ್ಣಾಳೇ ಇರಬಹುದೆಂದು ನಂಬಿದ್ದ. ಆಗ ವಾಸುವಿನ ತುಟಿಗೆ ಒಂದು ಬ್ರಶ್ಶು ತಗುಲಿತು. ಅದೇ ಸಂಜ್ಞೆಯೇನೋ ಎಂಬಂತೆ ವಾಸು ಬಾಯಿ ಬಿಡಬೇಕೋ ಇಲ್ಲವೋ ಗೊತ್ತಿಲ್ಲದೆ ಬಾಯನ್ನು ನಿಧಾನವಾಗಿ ಅಗಲಿಸಿದ. ಬ್ರಶ್ಶು ಕೂಡ ಬೆರಳಷ್ಟೇ ಮೃದುವಾಗಿ ತುಟಿಯಮೇಲೆ ಹರಿದಾಡಿತು. ಬ್ರಶ್ಶು ತುಟಿಯಮೇಲೆ ಹರಿದಾಡಬೇಕಾದರೆ, ತುಟಿಗೆ ಬಣ್ಣ ಹಚ್ಚುವ ಮುಂಗೈಯ ಒಳ ಅಂಚು ವಾಸುವಿನ ಗಲ್ಲಕ್ಕೆ ಆನಿಸಿ ಆಧಾರಕ್ಕೇನೋ ಎಂಬಂತೆ ಒತ್ತಿತ್ತು. + +ವಾಸು ಬೆವೆತಿದ್ದ. ಆ ಬಣ್ಣದ ಬಿಗಿತ, ಸಣ್ಣ ರೂಮು, ಕುತ್ತಿಗೆಗೆ ಕಟ್ಟಿದ್ದ ಕರ್ಚೀಫು ಎಲ್ಲ ಸೇರಿ ವಾಸುವನ್ನು ನೆನೆಸಿದ್ದವು. + +ಇದ್ದಕ್ಕಿದ್ದಹಾಗೆ ಒಂದು ಬೆರಳು ವಾಸುವಿನ ತುಟಿಯನ್ನು ತಗುಲಿತು, ಮೆಲ್ಲಗೆ ತುಟಿಯ ಕೆಳಗಿನ ಗಲ್ಲವನ್ನು ಮೆಲುವಾಗಿ ಒರೆಸಿತು.  ವಾಸುವಿನ ತುಟಿಯ ಬಣ್ಣ ಗಲ್ಲಕ್ಕೆ ಇಳಿದಿತ್ತಾ ಗೊತ್ತಿಲ್ಲ. ತುಟಿ ಒಣಗಿತ್ತಾ ಏನೂ ಗೊತ್ತಾಗಲಿಲ್ಲ. ನಂತರ ತುಟಿಯನ್ನೂ ನಿಧಾನವಾಗಿ ಆ ಬೆರಳು ಒರೆಸಿತು. ನಂತರ ಆದದ್ದು ವಾಸು ಖಂಡಿತಾ ಮರೆಯಲಾರ. ಒಂದು ಒದ್ದೆಬೆರಳು… ತೀರ ಒದ್ದೆಯಾದ ಬೆರಳು ಅವನ ತುಟಿಯನ್ನು ನಿಧಾನವಾಗಿ ಒರೆಸಿತು. + +ವಾಸು ದ್ರವಿಸಿಹೋದ. ತನ್ನ ತುಟಿಗೆ ಹಚ್ಚಿದ ಆ ಬೆರಳ ತೇವ ಏನಿರಬಹುದು? ಕೊಬ್ಬರಿಎಣ್ಣೆ, ಕೊಂಚ ನೀರು ಅಥವಾ ಆ ಹೊಲಸು ಪಾಂಡುರಂಗ ಮಾಡುವ ಹಾಗೆ ಒಂಚೂರು ಎಂಜಲು? ಪಾಂಡುರಂಗನಿಗೆ ಅದೊಂದು ಕೆಟ್ಟ ಅಭ್ಯಾಸವಿತ್ತು. ಮೇಕಪ್‌ನಲ್ಲಿ ನೀರಿನಂಶ ಕಮ್ಮಿಯಗಿದ್ದರೆ ಹತ್ತಿರ ನೀರು ಸಿಕ್ಕಿಲ್ಲದಿದ್ದರೆ. ತನ್ನದೇ ಕಿರುಬೆರಳನ್ನು ನಾಲಿಗೆಗೆ ಹಚ್ಚಿ ಅದನ್ನೇ ನೀರಾಗಿ ಉಪಯೋಗಿಸುತ್ತಿದ್ದ. + +ವಾಸುವಿಗೆ ಈಗ ಕಣ್ಣು ಬಿಡಲೇಬೇಕಾಯಿತು. ಮುಂದೆ ಕೂತದ್ದು ಪಾಂಡುರಂಗನಲ್ಲವೆಂದು ಅವನಿಗೆ ಗೊತ್ತಾಗಬೇಕಾಗಿದ್ದು ಈಗ ಅನಿವಾರ್ಯವಾಗಿತ್ತು.  ಕಷ್ಟಪಟ್ಟು ಕಣ್ಣುಬಿಡುವ ಹೊತ್ತಿಗೆ ವಾಸುವಿನ ಮೇಕಪ್ ಮುಗಿದಿತ್ತು. + +ಎದುರುಗಡೆ, ಕೇಶವಶರ್ಮ ಮತ್ತು ಅಕ್ಕ ಉಮಾ ನಗುತ್ತಾ ಕೈಹಿಡಕೊಂಡು ಸೈಡ್‌ವಿಂಗಿಗೆ ಹೋದದ್ದು ನೋಡಿದ. + +ನೋಡನೋಡತ್ತಿದ್ದಂತೆಯೇ ಕೆಲವೇದಿನಗಳಲ್ಲಿ ಅಕ್ಕ ಮತ್ತು ಕೇಶವಶರ್ಮನ ಮದುವೆಯ ನಿಶ್ಚಿತಾರ್ಥ ಆಗೇಹೋಯಿತು. ಊರಿನಿಂದ ಅಪ್ಪ, ಅಮ್ಮ ಬಂದು ತಾವೇ ಈ ಕಾರ್ಯವನ್ನುನಾಗಮಂಗಲದಲ್ಲಿಯೇ ಮಾಡಿಹೋಗಿದ್ದರು. + +ವಾಸುವಿಗೆ ಅಕ್ಕನ ಇಂಥ ಒಂದು ಸಂಬಂಧದ ಬಗ್ಗೆ ಕಲ್ಪನೆ ಕೂಡ ಇರಲಿಲ್ಲ. ತಾವು ಬಾಡಿಗೆಗಿದ್ದ ರಾಮಪ್ರಿಯ ಜೋಯಿಸರು ಏನೋ ಮಾಡಿದ್ದಾರೆ ಎಂದೂ ಅನ್ನಿಸಿತ್ತು. + +ಅಕ್ಕನೇ ಒಂದು ದಿನ ಹೇಳಿದ್ದಳು.. ಒಂದು ದಿನ ತಾನು ಹುಡುಗಿಯರಿಗೆ ಖೋಖೋ ಕಲಿಸುತ್ತಿರಬೇಕಾದರೆ, ಮೇಷ್ಟರು ಬಂದಿದ್ದು, ಮಾತಾಡಿಸಿದ್ದು.. ಅಮ್ಮ ಅಪ್ಪನ್ನ ಅವರೇ ಒಪ್ಪಿಸಿದ್ದು.. + +ಅಕ್ಕ ಮತ್ತು ಕೇಶವಶರ್ಮ ಇಬ್ಬರೂ ಹಕ್ಕಿಗಳ ತರ ನಾಗಮಂಗಲದ ಬೀದಿಗಳಲ್ಲಿ ಓಡಾಡತೊಡಗಿದರು. ಕೇಶವಶರ್ಮ ಯಾವ ಮುಲಾಜೂ ಇಲ್ಲದೇ ಎಲ್ಲರ ಮುಂದೆ ಸಂಜೆ ಉಮಾಳನ್ನು ವಾಕಿಂಗ್ ಕರಕೊಂಡು ಹೋಗುತ್ತಿದ್ದ. ಒಂದೆರಡು ಬಾರಿ ವೆಂಕಟೇಶ್ವರಕ್ಕೆ ಸಿನೆಮಾಕ್ಕೂ ಕರಕೊಂಡು ಹೋಗಿದ್ದ. + +ಕೇಶವಶರ್ಮ ಯಾವರೀತಿಯೂ ಕೆಟ್ಟಮನುಷ್ಯನಾಗಿರಲಿಲ್ಲ. ಮೂವತ್ತೆರಡರ ಕೇಶವಶರ್ಮನಿಗೆ ಇಪ್ಪತ್ತೆಂಟರ ಉಮ ಹೇಳಿಮಾಡಿಸಿದ ಹೆಣ್ಣು. ವರಸಾಮ್ಯವೂ ಸರಿಯಾಗಿಯೇ ಇದೆ ಎಂದು ಊರವರೆಲ್ಲಾ ಹೇಳುತ್ತಿದ್ದಾರೆ. ಗಾಂಧಿಭವನದ ಮುಂದೆ ದೇವನಾಗರೀ ಲಿಪಿಯನ್ನೂ, ಖೊಖೋ ಆಟವನ್ನೂ ಕಲಿಯುವ ಹುಡುಗಹುಡುಗಿಯರಿಗೆ ಆದರ್ಶವಾಗುವಂತೆ ಈ  ಮಾಸ್ತರುಗಳು ಒಬ್ಬರನ್ನೊಬ್ಬರು ಬೇರೆ ಯಾರಿಗೂ ಗೊತ್ತಾಗದೇ ಇಷ್ಟಪಟ್ಟು ಮದುವೆಯನ್ನೂ ಆಗುತ್ತಿದ್ದರು. + +ಎಷ್ಟೇ ಯೋಚಿಸಿದರೂ ಇದು ಸರಿ ಎಂದು ವಾಸುವಿಗೆ ಅನಿಸಲಿಲ್ಲ. ತಪ್ಪೂ ಎಂದೂ ಅನಿಸಲಿಲ್ಲ. ಸುದೇಷ್ಣಾಳನ್ನು ಮಾತಾಡಿಸಲು ಪ್ರಯತ್ನವನ್ನು ಮಾಡಿದ. ಆದರೆ, ಆಕೆ ಕೈಗೇ ಸಿಗಲಿಲ್ಲ. + +ವಾಸು ಸೀದಾ ಯೋಗಾನರಸಿಂಹಸ್ವಾಮಿಯ ದೇವಸ್ಥಾನಕ್ಕೆ ಹೋದ. ಅಲ್ಲಿನ ಗರುಡಯ್ಯಂಗಾರ್ರಿಗೆ ‘ಒಂದು ಅರ್ಚನೆ ಮಾಡಿ’ ಅಂದ. ಗರುಡಯ್ಯಂಗಾರ್ರು ನಗುತ್ತಾ ಅರ್ಚನೆ ಮಾಡಿದರು. ದೇವರ ಬಲಗಡೆಯಿಂದ ಹೂವನ್ನು ಬೀಳಿಸಿ ಅದನ್ನು ವಾಸುವಿಗೆ ಕೊಟ್ಟರು. + +ದೇವಸ್ಥಾನದ ಕಲ್ಲ ಹೊಸ್ತಿಲಿನ ಮೇಲೆ ವಾಸು ಕೂರುವ ಶಾಸ್ತ್ರ ಮಾಡುತ್ತಿದ್ದಾಗ ಅಯ್ಯಂಗಾರರು ಬಂದು ತಲೆಮೇಲೆ ಕೈಯಾಡಿಸಿ ‘ಮಗೂ, ನಾನೂ ಬೇಕಾದಷ್ಟು ಕನಸಿದ್ದೇನೆ. ಎಲ್ಲ ಕನಸುಗಳೂ ನಿಜವಾಗುವುದಿಲ್ಲ. ಆದರೆ, ಆ ಕನಸುಗಳು ನನಗೆ ಬಿದ್ದವಲ್ಲಾ ಅನ್ನುವುದೇ ನನಗೆ ಖುಷಿಕೊಡುವ ಕೆಲಸ. ಯಾಕೆಂದರೆ, ಎಲ್ಲರಿಗೂ ಕನಸುಗಳು ಬೀಳುವುದಿಲ್ಲ’ ಎಂದರು. + +ಗರುಡಯ್ಯಂಗಾರರು ಆಗಾಗ್ಗೆ ಇಂಗ್ಲೀಷ್ ಸಿನೆಮಾವನ್ನೂ ನೋಡುತ್ತಾರೆ ಅನಿಸಿತು ವಾಸುವಿಗೆ. + +ಗುರುಪ್ರಸಾದ್‌ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ.  ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) “ಬಿಳಿಯ ಚಾದರ”, ‘ಹಿಜಾಬ್” (ಕಾದಂಬರಿಗಳು) ಅವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_556.txt b/Kenda Sampige/article_556.txt new file mode 100644 index 0000000000000000000000000000000000000000..8899a1f7b9c7a6052a3410601932b783317efb83 --- /dev/null +++ b/Kenda Sampige/article_556.txt @@ -0,0 +1,9 @@ +ವಾರಾಂತ್ಯದಲ್ಲಿ ಬೀಚ್‍ಗೆ ಹೋಗಬೇಕು. ಮಗುವಿಗೆ ಆಡಲಿಕ್ಕೊಂದು ಗಾಳಿ ತುಂಬುವ ಚೆಂಡು, ಮರಳ ಮನೆ ಕಟ್ಟಲು ಪ್ಲಾಸ್ಟಿಕ್ ಗುದ್ದಲಿ, ಬಕೆಟ್ಟು.. ಮರೆಯದೆ ಹಚ್ಚಬೇಕಾದ ಸನ್‍ಸ್ಕ್ರೀನ್ ಲೋಷನ್ನು…. ಅಂಗಡಿಗೆ ಒಯ್ಯಲು ಮನಸ್ಸಲ್ಲೇ ಪಟ್ಟಿ ಮಾಡುತ್ತಾ, ಕೈಕಾಲು ವ್ಯಾಕ್ಸ್ ಮಾಡಿಸುತ್ತಾ ಕುಳಿತವಳಿಗೆ, ‘ಬ್ರಜಿಲಿಯನ್ ವ್ಯಾಕ್ಸ್ ಕರ್‌ಲೂ?’ ಎಂದು ಪಾರ್ಲರಿನ ಆಂಟಿ ಪಲುಕಿದ್ದೇ ತಡ ಮೈ ಪೂರಾ ಒಮ್ಮೆ ‘ಝುಂ’ ಎಂದು ನಡುಗಿ……. + +…….ನಿನ್ನ ನೆನಪಾಯ್ತು.‘ನೈನಂ ಛಿದ್ರಂತಿ ಶಸ್ತ್ರಾಣಿನೈನಂ ದಹತಿ ಪಾವಕಃ’… ಅಂದೆಯಂತೆ ನೀನು? + +ಇಲ್ಲೆಲ್ಲ ನೀನು ಹಾಗಂದಿದ್ದೇ ಮಾತು! ಅದನ್ನ ನಿನಗೆ ಹೇಳಿಕೊಟ್ಟವಳೇ ನಾನು ಎಂದು ನೀನು ಹೇಳಿರಲೇ ಇಲ್ಲ. ಪ್ರೀತಿಯಲ್ಲಿ, ವಿರಹದಲ್ಲಿ ನಾವಿಬ್ಬರೇ ಕಂಡುಕೊಂಡ ಸತ್ಯ ಅದು ಎಂದು ಇಲ್ಲಿಯವರೆಗೂ ನಾನಂದುಕೊಂಡಿದ್ದೆ. ಹೋಗಲಿ ಬಿಡು, ಮಾತು ಕದ್ದಿದ್ದಕ್ಕೆ ನನಗೇನೂ ಬೇಸರವಿಲ್ಲ. ಕದಿಯುವುದು ನಿನ್ನ ಚಾಳಿ, ಯಾವತ್ತೂ. ಬಿಟ್ಟು ಹೋಗಿದ್ದಕ್ಕೂ ನಿನ್ನ ಮೇಲೆ ಸಿಟ್ಟಿಲ್ಲ. ಸಿಟ್ಟು ಬಂದಿದ್ದು, ಕೊಳಲನ್ನು ಪೂರ್ತಿ ಮರೆತು ನೀನು ಬರೀ ಶಂಖವನ್ನು ಹಿಡಿದು ನಿಂತಾಗಲೇ. ಹಾಗೆ ನಿಂತಾಗಲೇ ಇಂಥದ್ದೆಲ್ಲ ಉಪದೇಶ ನೀಡಲು ಸಾಧ್ಯ…. ‘ಯುದ್ಧ ಬೇಡ’ ಎಂದು ಕಂಗಾಲಾಗಿ ಕುಳಿತವನಿಗೆ, ನಿನ್ನನ್ನೇ ಗಂಧ ಮಾಡಿ ಪೂಸಿಕೊಂಡು ಕುಳಿತ ನನಗೂ ಒಮ್ಮೊಮ್ಮೆ ಅನುಮಾನ! ನೀನು ಮಾತ್ರ ಇದೇ ಪರಮ ಸತ್ಯವೆಂಬಂತೆ ಹೇಳಿದೆಯಂತೆ! + +‘ನೈನಂ ಛಿದ್ರಂತಿ ಶಸ್ತ್ರಾಣಿ’….?ಹೌದಾ…?ಹೋಗಲಿ ಬಿಡು, ಯುದ್ಧ ಮುಗಿಯಿತಲ್ಲ, ಇನ್ನಾದರೂ ಒಮ್ಮೆ ಕೊಳಲನೆತ್ತಿಕೊ. ಮರೆತ ರಾಗಗಳ ನೆನಪಿಸಲು ಅಲ್ಲೇ ಸಿಗಬಹುದು ನಿನಗೆ ಯಾರಾದರೂ.…………..ಬೆಚ್ಚನೆ ವ್ಯಾಕ್ಸ್ ಬಟ್ಟಲನ್ನು ಕೈಯಲ್ಲಿ ಹಿಡಿದು ಆಂಟಿ ಆಗ್ರಹಿಸುತ್ತಿದ್ದಾಳೆ, ‘ಏಕ್ ಬಾರ್ ಕರ್‌ದೋನಾ ಬೇಟಾ, ಇಟ್ ವೋಂಟ್ ಹರ್ಟ್ ಮಚ್’. + +ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ. \ No newline at end of file diff --git a/Kenda Sampige/article_557.txt b/Kenda Sampige/article_557.txt new file mode 100644 index 0000000000000000000000000000000000000000..4dec5e20a60762449ec4ca1bb57b38bfdaa3c8d8 --- /dev/null +++ b/Kenda Sampige/article_557.txt @@ -0,0 +1,163 @@ +ಮೊಬೈಲು ಕಿಣಿಕಿಣಿಗುಟ್ಟಿತ್ತು. + +ಭುಜದಲ್ಲಿ ಲ್ಯಾಪ್ ಟಾಪು, ಸೂಟಿನ ಲೆದರ್ ಚೀಲ ನೇತುಹಾಕಿ, ಕೈಯಿಂದ ಸ್ಯಾಮ್ಸೊನೈಟು ತಳ್ಳುತ್ತಾ, ಕಿವಿ ಮತ್ತು ಭುಜದ ಮಧ್ಯೆ ಮೊಬೈಲನ್ನು ಹಿಡಿದು, ಬಲಪೃಷ್ಠವನ್ನು ಒತ್ತುತ್ತಿದ್ದ ವಾಲೆಟ್ಟಿನಿಂದ ಕೈಗೆ ಸಿಕ್ಕಿದ್ದಷ್ಟನ್ನು ಟ್ಯಾಕ್ಸಿಯ ಡ್ರೈವರಿಗೆ ಕೊಟ್ಟು ಮೊಬೈಲಿಗೆ ‘ಹಲೋ’ ಎಂದೆ. + +ಸುಜನಾ ಹಿಸ್ಟಿರಿಕಲ್ ಆಗಿದ್ದಳು. + +‘ಗರಾಜ್ ನ ಬಾಗಿಲನ್ನು ತೆಗೆಯಬೇಡ ಎಂದು ಸಾವಿರ ಸಲ ಹೇಳಿದರೂ ನಿನಗೆ ಅರ್ಥ ಆಗೊಲ್ಲ. ಒಳಗೆ ಎಂತದೋ ಪಕ್ಷಿ ಬಂದು ಕೂತಿದೆ. ಗುಬ್ಬಿಯ ಹಾಗೆ ಕಾಣುತ್ತೆ. ಮೈನಾ ಹಕ್ಕಿ ಇದ್ದರೂ ಇರಬಹುದು. ತಕ್ಷಣ ವಾಪಸ್ಸು ಬಾ’ ..ಬಡಬಡಿಸುತ್ತಿದ್ದಳು. + +ಇನ್ನರ್ಧ ಗಂಟೆಯಲ್ಲಿ ವಿಮಾನ ಹತ್ತಬೇಕಾದ ನಾನು, ಯಾವುದೇ ಲಗೇಜನ್ನು ಚೆಕ್-ಇನ್ ಮಾಡದಿದ್ದರೂ, ಸೆಕ್ಯುರಿಟಿಯವರ ಕಡೆಯಿಂದ ಮೈಕೈ ತಡವಿಸಿಕೊಳ್ಳುವುದಕ್ಕೇ ಅರ್ಧ ಗಂಟೆ ಹೇಗೆ ಬೇಕಾಗುತ್ತದೆಂದೂ, ನಾನು ಈಗ ಮನೆಗೆ ವಾಪಸ್ಸು ಬಂದು ಆ ಮೈನಾ ಹಕ್ಕಿಯನ್ನೋ, ಗುಬ್ಬಿಯನ್ನೋ ಮನೆಯ ಗರಾಜಿನಿಂದ ಓಡಿಸುವುದು ಹೇಗೆ ಅಸಾಧ್ಯವೆಂದು ಇಪ್ಪತ್ತೈದು ಸೆಕೆಂಡುಗಳಲ್ಲಿ ವಿವರಿಸಿ ಹೇಳಿದೆ. ಆಗ ಗುಬ್ಬಿ ಅನ್ನೋ ಜೀವಿ ಮನೆಯೊಳಗೆ ಎಲ್ಲಿಂದ ಬಂದಿರಬಹುದು ಅನ್ನುವ ಅನುಮಾನ ನನಗೆ ಲವಲೇಶವೂ ಸುಳಿಯಲಿಲ್ಲ. + +‘ಗುಬ್ಬಿ ಗರಾಜಿನಲ್ಲಿಲ್ಲ. ಮನೆಯ ಶ್ಯಾಂಡಲಿಯರ‍್ನ ಮೇಲೆ ಕೂತಿದೆ. ಈ ಎತ್ತರದ ಸೀಲಿಂಗು ಬೇಡ ಅಂತ ಬಡಕೊಂಡೆ, ಮನೆ ಕಟ್ಟಿಸುವಾಗ, ನನ್ನ ಮಾತು ಕೇಳಲಿಲ್ಲ.’ ಮನೆಯೊಳಗೆ ಬಂದ ಗುಬ್ಬಿ/ಮೈನಾ ನನ್ನ ವಾಸ್ತುಶಾಸ್ತ್ರದ ಲೂಪ್ ಹೋಲನ್ನು ಕಂಡುಹಿಡಿದುಕೊಂಡಿತ್ತು. + +‘ನೀನು ಕೆಲಸಕ್ಕೆ ಹೋಗು. ನಾನು ಈಗ ಮನೆಗೆ ಬರುವ ಹಾಗಿಲ್ಲ. ಇನ್ನು ಹತ್ತು ನಿಮಿಷದಲ್ಲಿ ವಿಮಾನ ಹತ್ತಬೇಕು.’ ಸೆಕ್ಯುರಿಟಿಯವನು ಎರಡನೆಯ ಬಾರಿ ಶೂ ಬಿಚ್ಚಿಸುತ್ತಿದ್ದ. ‘ನಂತರ ಏನು ಮಾಡಬೇಕೆಂದು ಯೋಚಿಸೋಣ’ ಎಂದು ಫ಼ೋನು ಆರಿಸಿದೆ. + +*** + +ನನಗಿಂತ ಹತ್ತು ವರ್ಷ ಚಿಕ್ಕವಳ್ಯಾರೋ ಪವರ‍್ಪಾಯಿಂಟಿನಲ್ಲಿ ತೀರ ಸತ್ತವನನ್ನೂ ಬಡಿದೆಬ್ಬಿಸುವ ಹೊಸಾ ಮಶೀನಿನ ಬಗ್ಗೆ ಲೆಕ್ಚರ್ ಕೊಡುತ್ತಿದ್ದಳು. ಆಸ್ಪತ್ರೆಗೆ ಈ ಮೃತ ಸಂಜೀವಿನಿಯನ್ನು ಕೊಂಡುಕೊಳ್ಳಬಹುದೇ ಇಲ್ಲವೇ ಅನ್ನುವುದನ್ನು ನಿರ್ಧರಿಸುವುದಕ್ಕೆ ಈ ಸೆಮಿನಾರು. ನಾನು ಬಂದಿದ್ದೆ. ಇದೊಂತರಾ ಪ್ರಾಯೋಜಿತ ಪ್ರವಾಸ. ಬೆಳಗ್ಗಿಂದ ಸಂಜೆಯ ತನಕ ಈ ಹುಡುಗಿ, ತನ್ನ ಕಂಪನಿಯವರು ಹೇಳಿಕೊಟ್ಟಿರುವುದನ್ನು ನನ್ನಂತಹ ಡಾಕ್ಟರುಗಳಿಗೆ ಹೇಳೋದನ್ನು ಕೇಳುತ್ತಾ ಸಂಜೆ ಕಂಪನಿಯವರು ಕೊಡೋ ಪುಕ್ಕಟೆ ಬಿಯರನ್ನೂ, ಆಲೂಗೆಡ್ಡೆಯ ತುಂಡುಗಳನ್ನೂ ತಿಂದು ಏನೋ ಕಲಿತೆವು ಅಂದುಕೊಂಡು ವಾಪಸ್ಸು ಹೋಗುವುದು. ‘ಥತ್ತೇರಿ ಸ್ವಲ್ಪವಾದರೂ ಅಕೆಡಿಮಿಕ್ ಆಗಿರಬೇಕಿತ್ತು, ಇವಳಿಗೆ ಈ ವಿಷಯದ ಬಗ್ಗೆ ಗೊತ್ತಿರುವುದಕ್ಕಿಂತಾ ಗೊತ್ತಿಲ್ಲದಿರುವುದೇ ಜಾಸ್ತಿ, ಆದರೆ ಹೇಳೋದನ್ನು ಬೇಕಾದಕ್ಕಿಂತಾ ಜಾಸ್ತಿ ಹೇಳ್ತಾಳೆ, ಶುದ್ಧ ವ್ಯಾಪಾರ.’ ಪಕ್ಕದಲ್ಲಿದ್ದವನು ಗೊಣಗುತ್ತಿದ್ದ. ನಾನು ಗೋಣಾಡಿಸಿದೆ. + +ಮತ್ತೆ ಮೊಬೈಲು ಕಿಣಿಕಿಣಿ. + +ಸುಜನಾ ‘ಮನೆಯೆಲ್ಲಾ ಗುಬ್ಬಿ ಕಕ್ಕ ಮಾಡಿದೆ. ನನ್ನ ಇಬ್ಬರು ಪೇಷೆಂಟುಗಳು ಹೆರುವುದಕ್ಕೆ ಸಿದ್ಧವಾಗಿದ್ದಾರೆ. ಮನೆಯಿಂದ ಬೆಳಿಗ್ಗೇನೆ ಆಸ್ಪತ್ರೆಗೆ ಬಂದೆ. ಇಲ್ಲಿ ಕಾಯುತ್ತಿದ್ದೇನೆ. ಮಧ್ಯಾಹ್ನ ಲಂಚಿನ ಬ್ರೇಕಿನಲ್ಲಿ ಮನೆಗೆ ಹೋಗಿದ್ದೆ. ಮನೆಯ ಒಳಗೂ ಹೋಗಲಿಕ್ಕಾಗಲಿಲ್ಲ. ನೀನು ತಕ್ಷಣಾ ಏನಾದರೂ ಮಾಡಲೇಬೇಕು. ನನಗಿನ್ನು ತಡಕೊಳ್ಳೋಕೆ ಆಗೋದಿಲ್ಲ’ ಅಂದಳು. + +ಮೊಬೈಲನ್ನು ಕಾನ್ಫರೆನ್ಸಿನ ಹಾಲಿನಿಂದ ಹೊರಗೆ ತೆಗೆದುಕೊಂಡು ಹೋಗಿ ‘ಸುಜನಾ, ನಾನು ಮನೆಯಿಂದ ಒಂದು ಸಾವಿರ ಮೈಲಿ ದೂರ ಕೂತುಕೊಂಡು ಇಲ್ಲಿ ಯಾವಳದೋ ಪಾಠ ಕೇಳ್ತಾ ಇದೀನಿ. ನನಗೆ ಅಲ್ಲಿಗೆ ಬರೋಕ್ಕಾಗಲ್ಲ, ನೀನೇನು ಸಣ್ಣ ಹುಡುಗೀನಾ? ಒಂದು ಹಕ್ಕೀನ ಓಡಿಸೋಕಾಗಲ್ವ’ ಸ್ವಲ್ಪ ಖಾರವಾಗಿಯೇ ಹೇಳಿ ಫ಼ೋನಿಟ್ಟೆ. + +ಮತ್ತೆ ಮೊಬೈಲು ಕೂಗಿತು. + +‘ನಾವು ಹಿಂದಿನ ಮನೆಯವರ ಹಕ್ಕಿಮನೆಯನ್ನು ಬೀಳಿಸಬಾರದಾಗಿತ್ತು. ನಾನು ಹೇಳಿದೆ. ನೀನು ಕೇಳಲಿಲ್ಲ. ಈಗ ನೋಡು. ಎಲ್ಲಿಂದ ಬಂತೋ ಈ ಗುಬ್ಬಿ. ಇರೋದಕ್ಕೆ ಗೂಡಿದೆಯೋ ಇಲ್ಲವೋ ಗೊತ್ತಿಲ್ಲ. ಮನೆಯೊಳಗೆ ಗಲೀಜು. ನೀನು ಒಂದಿನ ಕಾನ್ಫರೆನ್ಸನ್ನು ತುಂಡರಿಸಿ ಬರೋಕ್ಕಾಗಲ್ವಾ, ಪ್ಲೀಸ್?’ ಗೋಗರೆಯುವ ದನಿಯಲ್ಲಿ ಕೇಳಿದಳು. + +ನನಗೆ ಏನು ಮಾತಾಡಬೇಕೆಂದು ತೋಚದೇ ‘ಸುಜನಾ, ಸುಜ್ಜಿ. ಬರ್ತೀನಿ. ನಾಡಿದ್ದು ಬೆಳಿಗ್ಗೆ. ಒಂದು ಕೆಲಸ ಮಾಡು. ನೀನು ನಮ್ಮ ಬೀದಿಯ ತುದಿಯಲ್ಲಿ ಒಂದು ಸಣ್ಣ ಫ಼್ಲಯರ್ ಹಾಕು, ನೋಟೀಸಿನ ತರ. ಸಾಧ್ಯವಾದರೆ, ಆ ಹಕ್ಕೀದು ಒಂದು ಫ಼ೋಟೋ ತೆಗೆದು, ಅದನ್ನೂ ಹಾಕು. ಅಕ್ಕ ಪಕ್ಕದವರಲ್ಲಿ ಯಾರಾದರೂ ಕಳಕೊಂಡಿದ್ದರೆ ಬಂದು ಕೇಳಿದರೂ ಕೇಳಬಹುದು. ಏನೂ ಆಗದಿದ್ದರೆ, ನಾನು ಬಂದ ಮೇಲೆ ನೋಡ್ಕೋತೀನಿ.’ ಎಂದು ಹೇಳಿ ಮತ್ತೆ ಫ಼ೋನಿಟ್ಟೆ. + +*** + +‘ವಿಲ್ಲಾ ವೈದ್ಯಾ’ ನನ್ನ, ಸುಜನಾಳ ಕನಸಿನ ಕೂಸು. ಎರಡೆಕೆರೆ ಜಾಗದಲ್ಲಿ, ಆರು ಬೈ ಆರು ಮರದ ಪಟ್ಟಿಗಳ ಅಸ್ಥಿಗೆ ಮಿಸಿಸಿಪಿ ಮ್ಯಾನುಫ಼್ಯಾಕ್ಚರ್ಡ್ ಕಲ್ಲುಗಳ ಕವಚವನ್ನೂ ಕರಿಯ ಪಿರಮಿಡ್ಡಿನಂತಹ ಛಾವಣಿಯನ್ನೂ ಹೊಂದಿ, ಸಿಟಡೆಲ್ ಮಾದರಿಯಲ್ಲಿ ಚೂಪಾಗಿ ಕಾಣುವ ವೆರಾಂಡವೆನ್ನೋ ಫ಼ೋಯರ‍್ನ ಹತ್ತುಸಾವಿರ ಡಾಲರ‍್ಗಳ ಶ್ಯಾಂಡಲಿಯರ‍್ನ ಮೇಲೆ ಈಗ ಒಂದು ಮೈನಾ ಹಕ್ಕಿಯೋ, ಗುಬ್ಬಿಯೋ ಕೂತಿದೆ ಅಂದರೆ. + +ಆದದ್ದು ಸಣ್ಣ ತಪ್ಪು. ಸೈಟಿನ ಹಿಂಭಾಗದಲ್ಲಿ ‘ವಿಲ್ಲಾ ವೈದ್ಯ’ದ ಸೈಟಿನ ಆವರಣದೊಳಗೇ ಒಂದು ಹಕ್ಕಿಮನೆಯಿತ್ತು. ಇಪ್ಪತ್ತೈದಡಿ ಮರದ ಕಂಬದ ಮೇಲೆ ಒಂದು ಸಣ್ಣ ಮನೆಯಾಕಾರದ ಗೂಡು. ‘ವಿಲ್ಲಾ ವೈದ್ಯ’ದ ವೈಭವ ಹಿಂದಿನ ಬೀದಿಗೆ ಕಾಣದಂತೆ ಅಡ್ಡ ಬರುತ್ತಿತ್ತು. ಮನೆಯ ಬಿಲ್ಡರ‍್ಗೆ ಫ಼ೋನು ಮಾಡಿ ‘ಈ ಹಕ್ಕಿಮನೆ ಪ್ರಾಯಶಃ ಹಿಂದಿನ ಮನೆಯವರದ್ದಿರಬಹುದು,  ಯಾರದೆಂದು ತಿಳಕೊಂಡು ಅವರಿಗೆ ಅದನ್ನು ಅವರ ಸೈಟಿನೊಳಗೆ ಹಾಕಿಕೊಳ್ಳುವುದಕ್ಕೆ ಹೇಳು’ ಎಂದು ಎರಡು ಬಾರಿ ಫ಼ೋನು ಮಾಡಿ ಹೇಳಿದ್ದೆ. ಆತ, ಯಾವ ಉತ್ತರವೂ ಕೊಡಲಿಲ್ಲ. ನಾನು, ಸುಜನಾ, ‘ವಿಲ್ಲಾ ವೈದ್ಯ’ಕ್ಕೆ ಬಂದು ಮೂರು ತಿಂಗಳಾದರೂ ಮನೆ ಕಟ್ಟಿದಾತನ ತಣ್ಣಗಿನ ಉತ್ತರ ಕಂಡು, ನಾನೇ ಹಿಂದಿನ ಮನೆಯ ಬಳಿ ಎರಡು ಬಾರಿ ಹೋಗಿ ಬಂದಿದ್ದೆ. ಆದರೆ, ಆ ಮನೆಯಲ್ಲಿ ಯಾರೂ ಇರುವ ಸೂಚನೆಯೇ ಕಾಣಿಸಿರಲಿಲ್ಲ. ಮನೆಯ ಮುಂದೆ ಎರಡು ಸಣ್ಣ ಚೀಟಿಯನ್ನೂ ಬರೆದಿಟ್ಟಿದ್ದೆ. ಆದರೂ, ಉತ್ತರವಿಲ್ಲ. ಕೊನೆಗೆ, ಮನೆಯ ಬಿಲ್ಡರ್ ಗೆ ‘ನೀನೇ ಏನಾದರೂ ಮಾಡಬೇಕು’ ಎಂದು ಹೇಳಿದ್ದೆ. + +ಅಷ್ಟೇ, ಒಂದು ದಿನ ನಾನೂ, ಸುಜನಾಳೂ ಒಂದಿಷ್ಟು ಜೀವಗಳನ್ನು ಉಳಿಸಿ, ತೆಗೆದು ಮನೆಗೆ ಬಂದಾಗ ಆ ಹಕ್ಕಿಮನೆ ಬುಡಸಮೇತ ಮಾಯವಾಗಿತ್ತು! ಯಾವ ಕುರುಹೂ ಇಲ್ಲದೇ. + +*** + +ಅಂದು ರಾತ್ರಿ ಹೊಸಮನೆಯ ಸ್ಲೀಪ್ ನಂಬರ್ ಪಾಸ್ತುರೋಪೆಡಿಕ್ ಹಾಸಿಗೆಯ ಮೆತ್ತೆಗಳೂ, ತಂಪಾದ ಎಲ್ಟನ್ ಜಾನು, ಇನ್ನೂರಿಪ್ಪತ್ತು ಡಾಲರ‍್ನ ಶಾಂಪೇನು, ಚಿಲಿಪಿಲಿಯಿಲ್ಲದ ನಿಶ್ಯಬ್ದ ರಾತ್ರಿ, ನೂರಾರವತ್ತು ಡಾಲರನ ಲಾಂಜರೇ, ಆಫ಼್ಟರ್ ಶೇವ್, ಅಪರೂಪಕ್ಕೆ ಹುಟ್ಟು ಸಾವಿಲ್ಲದ ನಮ್ಮಿಬ್ಬರ ಡೇ ಶಿಫ಼್ಟು, ಓವುಲೇಶನ್ ಗೆ ದೂರವಿರುವ ಸುಜನಾಳ ಚಕ್ರ ಮತ್ತು ಸುರಕ್ಷೆಗೆಂದು ದಿಂಬಿನ ಕೆಳಗಿರುವ ಟ್ರೋಜಾನು, ಯಾವುದೂ ಉಪಯೋಗಕ್ಕೆ ಬರಲಿಲ್ಲ. + +ನನ್ನ ಎದೆಯಲ್ಲಿ ಕೈಯಾಡಿಸುತ್ತಾ ಎದೆಯ ಮೇಲೆಯೇ ನಿದ್ದೆ ಹೋಗಿದ್ದಳು, ಸುಜನಾ. ಹಕ್ಕಿಮನೆ ಅಲ್ಲಿಂದ ಹೋಗಬೇಕು ಅನ್ನುವುದು ಬಹುಶಃ ನನ್ನ ಒಬ್ಬನ ಇರಾದೆ ಮಾತ್ರ ಆಗಿತ್ತೋ ಎಂದು ಮೊದಲ ಬಾರಿ ಕೊಂಚ ಅನುಮಾನವಾಗಿತ್ತು. + +*** + +‘ನೀವು ಒಂದೇ ಒಂದು ಮಾತು ಹೇಳಿದ್ದರೆ, ನಾನು ಬಂದು ಹಕ್ಕಿಮನೆಯನ್ನು ನಮ್ಮ ಸೈಟಿನೊಳಗೆ ಎಳಕೊಳ್ಳುತ್ತಿದ್ದೆ. ಕೆಲಸದ ಮೇಲೆ ಯುರೋಪಿಗೆ ಮೂರು ತಿಂಗಳು ಹೋಗಿದ್ದೆ. ನಿಮ್ಮ ಎರಡೂ ‘ನೋಟೀಸು’ ಸಿಕ್ಕವು. ನಮ್ಮ ತಾತ ಕಟ್ಟಿದ ಹಕ್ಕಿಮನೆ ಅದು. ನಮ್ಮಪ್ಪ ಸಾಯುವ ತನಕ ದಿನಾ ಹಕ್ಕಿಗಳಿಗೆ ಉಣಿಸುತ್ತಿದ್ದ. ಅಂತದ್ದನ್ನು ನೀವು ಮುರಿಸಿದ್ದೀರ. ಪಾಪ ಎಷ್ಟು ಹಕ್ಕಿಗಳಿದ್ದವೋ ಆ ಪುಟ್ಟಗೂಡಿನಲ್ಲಿ. ಈಗ ಆದದ್ದು ಆಗಿಹೋಯಿತು. ಆ ಹಕ್ಕಿ ಮನೆ ಎಲ್ಲಿದೆ ಅಂತ ಹೇಳಿ. ಬೇಕಾದರೆ, ನಿಮಗೆ ದುಡ್ಡುಕೊಟ್ಟು ಅದನ್ನು ಬಿಡಿಸಿಕೊಳ್ಳುತ್ತೇನೆ. ನನಗೆ ಆ ಹಕ್ಕಿಮನೆ ಬೇಕು’ ಒಂದು ಸಣ್ಣ ಚೀಟಿಯಲ್ಲಿನ ನೋಟೀಸು, ಮನೆಯ ಮುಂದೆ. + +ಮತ್ತೆ ಮನೆಗೆ ಹೋಗಿದ್ದೆ. ಮನೆಯಲ್ಲಿ ಯಾರೂ ಇರಲಿಲ. + +ನಗು ಬಂತು. ನಾನೂ ಸುಜ್ಜಿ, ಇಬ್ಬರೂ ಒಂದೇ ಮನೆಯಲ್ಲಿದ್ದುಗೊಂಡೇ ಪರಸ್ಪರ ಇ-ಮೈಲ್ ಕಳಿಸಿಕೊಳ್ಳುವಾಗ ನನ್ನ ಈ ನೆರೆಯಾತ ಕಡೆಯ ಪಕ್ಷ ಮನೆಯತನಕ ಬಂದು ಚೀಟಿಯನ್ನಾದರೂ ಇಡುತ್ತಿದ್ದಾನಲ್ಲ ಅನ್ನಿಸಿತ್ತು. + +ಬಿಲ್ಡರ‍್ಗೆ ಮತ್ತೆ ಫ಼ೋನು ಮಾಡಿದ್ದೆ. ಹಕ್ಕಿಮನೆಯನ್ನು ಅವರು ಜಂಕ್ ಯಾರ್ಡಿನಲ್ಲಿ ತುಂಡುತುಂಡು ಮಾಡಿದ್ದಾರೆಂದು ಹೇಳಿದ್ದ. ಅವನ ಧ್ವನಿಯಲ್ಲಿ ಸ್ವಲ್ಪ ಆಶ್ಚರ್ಯವಿತ್ತು. ನಾನೇ ಆ ಹಕ್ಕಿಮನೆಗೆ ಒಂದು ಗತಿ ಕಾಣಿಸಬೇಕೆಂದು ಬಹಳ ಬಾರಿ ಅವರನ್ನು ಬಲವಂತ ಮಾಡಿದ್ದು ನನ್ನ ನೆನಪಲ್ಲಿ ಇಲ್ಲವಾ ಎಂದು ಕೇಳಿದ್ದ. ನಂತರ, ಅವನು ಸೈಟಿನ ಬ್ಲೂಪ್ರಿಂಟನ್ನು ಬಹಳ ಬಾರಿ ಪರೀಕ್ಷಿಸಿದ್ದಾನೆಂದೂ, ಆ ಹಕ್ಕಿಮನೆ ಅನಧಿಕೃತವಾಗಿ ನಮ್ಮ ಸೈಟಿನಲ್ಲಿಯೇ ಇದ್ದುದ್ದರಿಂದ ಕಾನೂನುಬದ್ಧವಾಗಿ ಯಾರೂ ಏನೂ ಮಾಡಲಾಗದೆಂದೂ ಹೇಳಿದ್ದ. ನಾನೀಗ ಯಾವ ನೋಟಿಸಿಗೂ ಉತ್ತರ ಕೊಡಬಾರದೆಂದೂ ಹೇಳಿದ್ದ. + +ಅಲ್ಲಿಗೆ ವಿಷಯ ಮುಗಿದಿತ್ತು. + +*** + +ರಾತ್ರಿ ಕಾನ್ಫರೆನ್ಸ್ ಮುಗಿಸಿದ ಮೇಲೆ, ಮತ್ತೆ ಸುಜ್ಜೀಗೆ ಫ಼ೋನು ಮಾಡಿದೆ. ಮನೆಯಲ್ಲಿರಲಿಲ್ಲ. ಅವಳ ಮೊಬೈಲು ಆರಿಸಿತ್ತು. ಪೇಜ್ ಮಾಡಿದಾಗ ಅವಳ ಜತೆಗಿನ ಕೆಲಸಗಾರ್ತಿಗೆ ಒಂದು ರಾತ್ರಿ ರಜಾ ಬೇಕಿತ್ತೆಂದು ಅದಕ್ಕಾಗಿ ಸುಜ್ಜಿ ಇವತ್ತು ರಾತ್ರಿ ಕೆಲಸ ಮಾಡುತ್ತಿದ್ದಾಳೆಂದೂ, ಹೇಳಿದಳು. ಮನೆಯ ಗುಬ್ಬಿಯ ಕಥೆ ಕೇಳುವುದು ಬೇಡ ಎನ್ನಿಸಿತು. ಮಲಗಿದೆ. + +*** + +‘ವಿಲ್ಲಾ ವೈದ್ಯ’ ನಮ್ಮ ಮೂರನೆಯ ಮನೆ. ನಮ್ಮ ಮದುವೆಯ ಇಪ್ಪತ್ತನೇ ವಾರ್ಷಿಕೋತ್ಸವಕ್ಕೆ ನಾವಿಬ್ಬರೂ ನಮಗಿಬ್ಬರಿಗೂ ಕೊಟ್ಟುಕೊಂಡ ಊಡುಗೊರೆ. + +ಮೊದಲ ಮನೆ ‘ವಿಲ್ಲಾ ಪೀಡಿಯಾಟ್ರಿಕಾ’. ಮದುವೆಯಾದ ಹೊಸದರಲ್ಲಿ ನಮ್ಮ ತುರ್ತಿನ ಆಶಯದ ಪ್ರತೀಕವೋ ಎನ್ನುವಂತಿತ್ತು, ಹೆಸರು.  ಎರಡೇ ಅಂತಸ್ತಿನ, ಮೂರು ಬೆಡ್ ರೂಮಿನ ಒಂದು ಗರಾಜಿನ ಮನೆ. ಇಬ್ಬರೂ ರೆಸಿಡೆನ್ಸಿ ಮಾಡುತಿದ್ದೆವು. ಸಿಗುವ ವಾರಕ್ಕೆ ಅರ್ಧ ದಿನ ರಜೆಯಲ್ಲಿ ಸುಜನಾ ಎಲ್ಲ ಅಂಗಡಿಗಳಲ್ಲೂ ಹುಡುಕಿನೋಡಿ ಸಾಮಾನುಗಳನ್ನು ಒಪ್ಪವಾಗಿ ಓರಣವಾಗಿ ಹುಡುಕಿ ತಂದಿದ್ದಳು. ನಡುವೆ ಫ಼್ಯಾಮಿಲಿ ರೂಮಿನಲ್ಲಿದ್ದ ಓಕ್ ಮರದ ಅಗ್ಗಿಷ್ಟಿಕೆಯೆ ಮೇಲೆ ಪುಟಾಣಿ ಪ್ಲಾಸ್ಟರ್ ಆಫ಼್ ಪ್ಯಾರಿಸ್ ನ ‘ಸಿಕ್ಸ್ ಲಿಟಲ್ ಪಿಗ್ಗೀಸ್’ ನಮ್ಮ ಅತಿ ದುಬಾರಿ ಅಲಂಕಾರಿಕ ಐಟಮಾಗಿತ್ತು. ‘ವಿಲ್ಲಾ ಪೀಡಿಯಾಟ್ರಿಕಾ’ದಲ್ಲಿ ನಾವಿದ್ದ ಒಟ್ಟು ಮೂರು ವರ್ಷದಲ್ಲಿ ನಾವಿಬ್ಬರೂ ಒಟ್ಟಿಗೆ ಇದ್ದದ್ದು ಕೆಲವೇ ಕೆಲವು ದಿವಸಗಳು ಮಾತ್ರ. ನಾನು ಜಗತ್ತಿನ ಅತಿ ಕ್ರೂರ ಖಾಯಿಲೆಗಳಿಂದ ಮಾನವ ಜನಾಂಗವನ್ನು ಉಳಿಸುವ, ದೇವರಿಗೆ ಸ್ವಲ್ಪ ಮಾತ್ರ ಸಡ್ಡುಹೊಡೆಯಬೇಕೆನ್ನುವ ಆಸೆಯಿಂದ ‘ಇಂಟೆನ್ಸಿವಿಸ್ಟ್’ ಆಗಲು ಹೊರಟಿದ್ದೆ. ಸುಜ್ಜಿ ಈ ಜಗತ್ತಿಗೆ ಜೀವಗಳನ್ನು ಬರಮಾಡಿಕೊಳ್ಳೋ ‘ಗೈನಕಾಲಜಿಸ್ಟ್’ ಆಗಲು.  ಆಗ ನಾವಿಬ್ಬರೂ ಮಾತಾಡುತ್ತಿದ್ದುದು ಪೇಜರ‍್ಗಳ ಮೂಲಕ. ಮನೆಯ, ಕಾರಿನ ಮಾರ್ಟ್ ಗೇಜು, ಎಲಕ್ಟ್ರಿಕ್ ಬಿಲ್ಲು, ನಲ್ಲಿ, ಕೇಬಲ್ಲು, ದಿನಸಿ, ಎಲ್ಲ ಲೆಕ್ಕವೂ ಒಂದು ಹಳೆಯ ಕಂಪ್ಯೂಟರಿನಲ್ಲಿದ್ದ ಯಾವುದೋ ಈಗ ನೆನಪಿಗೆ ಬಾರದ ಸಿಸ್ಟಮಿನಲ್ಲಿದ್ದು, ತಿಂಗಳುತಿಂಗಳೂ ತೆರಕೊಂಡು, ತೋರಿಸಿಕೊಂಡು ನಂತರ ತಂತಾನೇ ಕಳಕೊಳ್ಳುತ್ತಿದ್ದವು. ಒಟ್ಟು ಎಲ್ಲ ಲೆಕ್ಕವೂ ಸಮಯಕ್ಕೆ ಸರಿಯಾಗಿ ಚುಕ್ತವಾಗುತ್ತಿದ್ದವು. + +*** + +‘ವಿಲ್ಲಾ ಮೆಡಿಕಾ’ಕ್ಕೆ ಮನೆ ಬದಲಾಯಿಸುವ ಹೊತ್ತಿಗೆ ನಾನು, ಸುಜ್ಜಿ ನಿಜವಾದ ಡಾಕ್ಟರುಗಳಾಗಿದ್ದರೂ ಐಸಿಯುನಲ್ಲಿ ಸಾಯುವ ರೋಗಿಗಳ ಮತ್ತೆ ಹುಟ್ಟುವ ಮಕ್ಕಳ ಅಂಕಿಅಂಶಗಳನ್ನು ಮಾತ್ರ ಬದಲಿಸಲಾಗಿರಲಿಲ್ಲ. ವಿಲ್ಲಾ ಮೆಡಿಕಾ ಎರಡು ಗರಾಜಿನ, ಬೇಸ್ ಮೆಂಟಿನಲ್ಲಿ ಟೇಬಲ್ ಟೆನಿಸ್ ಟೇಬಲ್ಲಿದ್ದ, ನನಗೂ ಸುಜ್ಜಿಗೂ ಇಬ್ಬರಿಗೂ ಪ್ರತ್ಯೇಕವಾದ ಜಿಮ್ ಇದ್ದ ಮನೆ. ಅದಲ್ಲದೆ ಈಗ ಕಂಪ್ಯೂಟರುಗಳಿಗೆ ಹೆಚ್ಚು ಬುದ್ಧಿ ಬಂದಿತ್ತು. ನಮ್ಮ ತಿಂಗಳ ಖರ್ಚು ವೆಚ್ಚವೆಲ್ಲಾ ಈಗ ಒಂದು ಸ್ಪ್ರೆಡ್ ಶೀಟಿನಲ್ಲಿದ್ದು ನಮ್ಮಿಬ್ಬರ ನಡುವೆ ಇ-ಮೈಲುಗಳಲ್ಲಿ ವಿವಿಧ ಐಟಮ್ಮುಗಳಿಗೆ ಚೆಕ್ ಮಾರ್ಕನ್ನು ಹಾಕಿಸಿಕೊಂಡು ಓಡಾಡುತ್ತಿತ್ತು. + +ನನಗಿನ್ನೂ ನೆನೆಪಿದೆ. ಒಂದುದಿನ ‘ಐಸಿಯುನಲ್ಲಿ ನಾನೆಷ್ಟೇ ಹೊಡೆದಾಡಿದರೂ ಮೂವತ್ತು ಪ್ರತಿಶತ ಮರಣ ಖಚಿತ. So lets just suck the stats and have fun. ಮನೆಯಲ್ಲಿ ಇಂದು ರೆಮಿ ಮಾರ್ಟಿನ್ ಹೊಸ ಬಾಟಲಿದೆ’ ಟೆಕ್ಸ್ಟ್ ಮೆಸೇಜ್ ಕಳಿಸಿದ್ದೆ. + +‘ಹಾಗಲ್ಲ, ನನ್ನ ಸ್ಪೆಶಾಲಿಟಿ ಯಾವತ್ತೂ ಹ್ಯಾಪಿ ಎಂಡಿಂಗ್. ಒಂಭತ್ತು ತಿಂಗಳು ಕಾದದ್ದು, ಹೆರಿಗೆಯ ನೋವು, ಆತಂಕ, ಭಯ, ಸಿಟ್ಟು ಎಲ್ಲವೂ ಪುಟ್ಟ ಮಗುವನ್ನು ನೋಡಿದ ತಕ್ಷಣ ಮಾಯವಾಗುತ್ತದೆ. ಮಗುವನ್ನು ಎದೆಗವಚಿಕೊಂಡು ಹಾಲುಕುಡಿಸುವ ಪುಟ್ಟ ದೊಡ್ಡ ಅಮ್ಮಂದಿರುಗಳು, ಪಿಳಿಪಿಳಿ ಕಣ್ಣುಬಿಡುವ ಮಗು, ಜಂಭದ ಅಪ್ಪ- ಆಸ್ಪತ್ರೆಯಿಂದ ಹೋಗುವ ಮೊದಲು ನಮ್ಮಗಳ ಜತೆ ಒಂದು ಗ್ರೂಪ್ ಫ಼ೋಟೋ, ಯಾವ ಬಾರ್ಜಾತ್ಯನ ಸಿನೆಮಾದಲ್ಲಿರುತ್ತದೆ ಇಂತಹ ಮಧುರವಾದ ಕೊನೆ. ಆದ್ದರಿಂದ ನಾನು ನನ್ನ ಕೆಲಸಾನ ಖುಷಿಯಿಂದ ಮಾಡ್ತೀನಿ. ನೋ ಆಲ್ಕೋಹಾಲ್ ಟುಡೇ’ ವಾಪಸ್ಸು ಉತ್ತರ ಬಂದಿತ್ತು. + +`Wait till you get sued once’ ಒಂದೆರಡು ಅಳುವ ಮುಖದ ಎಮೋಟಿಕಾನ್ಸ್ ಹಾಕಿ ಕಳಿಸಿದ್ದೆ. + +‘ನಿನ್ನಂತ ಸಿನಿಕನಿಗೆ ನಾನು ಏನು ಹೇಳುವುದೂ ಸಾಧ್ಯವಿಲ್ಲ.’‘ಸಾರಿ’ಸುಮ್ಮನಾಗಿದ್ದೆ. + +ಇವೆಲ್ಲದರ ನಡುವೆಯೂ ಸುಜ್ಜಿ ಎರಡು ಬಾರಿ ಬಸಿರಾಗಿದ್ದಳು. ಗರ್ಭಪಾತವೂ ಎರಡು ಬಾರಿಯೇ. + +ಇದ್ದ ಐದು ರೂಮಿನಲ್ಲಿ ಒಂದನ್ನು ನರ್ಸರಿಗೆಂದು ಎರಡೂ ಬಾರಿ ಸುಜ್ಜಿಯೇ ತನ್ನ ಕೈಯಾರೆ ಬಣ್ಣ ಹೊಡೆದಿದ್ದಳು. ಯಾವಾಗೆಂದು ಮರೆತುಹೋಗಿದೆ. ಆಕಾಶನೀಲಿ ಬಣ್ಣ. ಮೊದಲನೇ ಬಸುರಿನಲ್ಲಿ ‘ಇನ್ನೂ ಎರಡೇ ತಿಂಗಳಿನ ಬಸುರಿಗೇ ಮಗುವಿನ ರೂಮನ್ನು ಅಣಿಮಾಡುವುದು ಕೊಂಚ ಅವಸರದ ಸುಬ್ಬಿಯ ಕೆಲಸವಲ್ಲವೇ’ ಅಂದಿದ್ದೆ. ಅಷ್ಟೇ, ಮಾರನೆಯ ದಿನವೇ ಸುಜ್ಜಿ ಖಾಲಿಯಾಗಿದ್ದಳು. ಸಣ್ಣಗಿನ ಸ್ರಾವ, ಮೂರು ದಿನಕೊಂದು ಅಲ್ಟ್ರಾ ಸೌಂಡ್, ಎರಡೆರಡು ದಿನಕ್ಕೂ ರಕ್ತ ಪರೀಕ್ಷೆ, ಕೊನೆಗೆ ಡಿ ಅಂಡ್ ಸಿ. + +ನಲುಗಿದ ಹೂವಾಂತಾಗಿದ್ದಳು, ಸುಜ್ಜಿ.ಸುಮ್ಮನೇ ತಬ್ಬಿಕೊಂಡು ಅಳುವುದನ್ನು ಬಿಟ್ಟು ನನಗೇನೂ ಮಾಡಲಾಗಿರಲಿಲ್ಲ. + +ನರ್ಸರಿ ಬಾಗಿಲು ಹಾಕಿತ್ತು. ಅದನ್ನು ಸುಜ್ಜಿಯ ಪೇಯಿಂಟಿಂಗ್ ಗಳನ್ನು ಹಾಕಿ ‘ಆರ್ಟ್ ರೂಮ್’ ಮಾಡುವಾ ಅಥವಾ ನನ್ನ ಪುಸ್ತಕಗಳನ್ನಿಡಲು ಒಂದು ಸಣ್ಣ ಲೈಬ್ರರಿ ಮಾಡುವಾ ಅಂದೆ. + +‘ನಾನಿನ್ನೂ ಬರಿದಾಗಿಲ್ಲ’ ಅಂದಿದ್ದಳು, ಸುಜ್ಜಿ. ಎಲ್ಲಿ ತಪ್ಪಿದ್ದೆ ಗೊತ್ತಾಗಿರಲಿಲ್ಲ. ಸುಜ್ಜಿ ಬರಿದಾಗಿಲ್ಲ ಎಂದು ತೋರಿಸಲು ನಾನು ಸುಜ್ಜಿ ಇಬ್ಬರೂ ಪಣತೊಟ್ಟಂತೆ, ಪೈಪೋಟಿಗೆ ಬಿದ್ದಂತೆ ಒಬ್ಬರ ಹಿಂದೆ, ಮುಂದೆ, ಮೇಲೆ ಕೆಳಗೆ ಕೆನೆದಾಡಿದೆವು. ಸುಜ್ಜಿಯ ಕ್ರಾಂಪ್ಸ್, ಚಕ್ರ, ಓವುಲೇಷನ್, ಮೈಯ ಹದಿನಾಲ್ಕನೆಯ ದಿನದ ಬದಲಾಗುವ ಬಿಸಿ, ಸ್ಯಾನಿಟರಿ ಪ್ಯಾಡಿನ ಬ್ರಾಂಡು ನನಗೆ ಬಾಯಿಪಾಠವಾಯಿತು. ಟ್ರೋಜಾನು, ಜೆಲ್ಲಿ ಮತ್ತು ಸ್ಪಾಂಜುಗಳು ಅಟ್ಟ ಸೇರಿದವು. ಸುಜ್ಜಿ ಸೇಫ಼್ಟಿ ಪಿರಿಯಡ್ಡಿನಲ್ಲಿ ಮಾತ್ರ ವೈನು ಕುಡಿಯುತ್ತಿದ್ದಳು. + +‘ವಿಲ್ಲಾ ಮೆಡಿಕಾ’ದಲ್ಲಿ ಮತ್ತೆ ಮುಟ್ಟು ನಿಂತಿತ್ತು. ತಾನೇ ಗೈನಕಾಲಜಿಸ್ಟ್. ಸುಜ್ಜಿ ಆಸ್ಪತ್ರೆಯಲ್ಲಿ ಹರಾಜಿಗೆ ಎಂದು ಹಾಕಿದ್ದ ಒಂದು ಅಲ್ಟ್ರಾಸೌಂಡ್ ಮಶೀನನ್ನೇ ಖರೀದಿಸಿದ್ದಳು. ಕೆಲಸಕ್ಕೆ ರಜಾ ಹಾಕಿ, ದಿನಾ ತನಗೆ ತಾನೇ ಹೊಟ್ಟೆಯ ಮೇಲೆ ಒಂದಿಷ್ಟು ಜೆಲ್ಲಿ ಹಾಕಿ ನೋಡಿಕೊಳ್ಳುತ್ತಿದ್ದಳು. ನನಗೂ ಕರೆದು ತೋರಿಸುತ್ತಿದ್ದಳು. + +ನನಗೆ ಅಲ್ಟ್ರಾಸೌಂಡಿನಲ್ಲಿ ಮಕ್ಕಳ ಹೃದಯದ ಬಡಿತ, ಕೈಕಾಲುಬಡಿತವನ್ನು ನೋಡಲು ಬರುತ್ತಿರಲಿಲ್ಲ. ಕೀವುತುಂಬಿದ ಗಾಲ್ ಬ್ಲಾಡರ್, ಒಡೆದ ಸ್ಪ್ಲೀನು, ಪೆರಿಟೋನಿಯಲ್ ಕ್ಯಾವಿಟಿಯಲ್ಲಿನ ರಕ್ತ ಇವನ್ನಾದರೆ ಸುಲಭವಾಗಿ ಗುರುತಿಸುತ್ತೇನೆ. + +ನನ್ನಂತ ನನಗೂ ಸುಜ್ಜಿಯ ಹೊಟ್ಟೆಯಲ್ಲಿ ಹೃದಯದ ಬಡಿತ ಕಾಣಿಸಿತು. ಸುಜ್ಜಿ ಯಾವುದೋ ಒಂದು ಕೋನದಲ್ಲಿ ಅಲ್ಟ್ರಾಸೌಂಡಿನ ಮಶೀನಿನ ಪ್ರೋಬ್ ಹಿಡಿದಾಗ ಮಾತ್ರ. ಈ ಬಾರಿ ಸುಜ್ಜಿಯನ್ನು ಅಲುಗಾಡದಿರೆಂದು ಹೇಳಿ, ನಾನೇ ನರ್ಸರಿಯ ಬಾಗಿಲು ತೆಗೆದು ಬಣ್ಣ ಹೊಡೆದಿದ್ದೆ. ಸುಜ್ಜಿಯ ಪ್ರಕಾರ ಅವಳಿಗಿನ್ನೂ ಏಳುವಾರ. + +ನಮ್ಮ ಐಸಿಯುನ ಪಕ್ಕದಲ್ಲಿರುವ ಕೌಂಸೆಲಿಂಗ್, ಅಥವಾ ಕುಟುಂಬದವರೊಡನೆ ಮಾತಾಡಲಿಕ್ಕೆಂದು ಇರುವ ರೂಮಿನ ಬಾಗಿಲಲ್ಲೇ ಒಂದು ಚಿನ್ನದಂತಾ ಫಳಫಳ ಅಕ್ಷರಗಳಲ್ಲಿ ಬರೆದಿರುವ ಒಂದು ವಾಕ್ಯವನ್ನು ಹಾಕಿದ್ದೇವೆ. ನಾನೇ ಹಾಕಿಸಿದ್ದು. ಎಲ್ಲಿ ಕೇಳಿದ್ದೆ ಎಂದು ಗೊತ್ತಿಲ್ಲ. `When God puts his hands on, you take yours out’ ಅದೇ ವಾಕ್ಯವನ್ನು ಸ್ವಲ್ಪ ತಿರುಗಿಸಿ ಬದಲಿಸಿ ಐಸಿಯುನ ಬಾಗಿಲಲ್ಲಿ `When God tries to put his hands down, we do not’ ಅಂತ, ಬರೆಸಿದ್ದೆವು. ಪ್ರಾಸಂಗಿಕವಾಗಿ ಸುಜ್ಜೀಗೆ ಒಂದಿನ ನಾನೇ ಹೀಗೆ ಬರೆಸಿದ್ದು ಎಂದು ಹೇಳಿದ್ದೆ. + +ಒಂದೇ ವಾರದಲ್ಲಿ ಮೂರನೆಯ ತಿಂಗಳ ಬಸುರಿ ಸುಜ್ಜೀಗೆ ಇದ್ದಕ್ಕಿದ್ದಂತೆ ನ್ಯಾಪ್ ಕಿನ್ ಗಳು ಬೇಕಾಗತೊಡಗಿದವು. ಈ ಬಾರಿ ಸುಜ್ಜಿ ಯಾವ ತಂಟೆಗೂ ಹೋಗಲಿಲ್ಲ. ಮನೆಯಲ್ಲಿದ್ದ ಅಲ್ತ್ರ್ಟಾಸೌಂಡಿನ ಮಶೀನನ್ನೂ ಕೆಳಗೆ ಬೇಸ್ ಮೆಂಟಿಗೆ ಇಟ್ಟುಬಿಟ್ಟಳು. ಯಾವ ತಂಟೆಯೂ ಇಲ್ಲದೆ. ಏನೂ ಆಗಿಯೇ ಇಲ್ಲವಂತೆ. ಯಾವ ರಕ್ತ ಪರೀಕ್ಷೆಯೂ ಬೇಕಾಗಲಿಲ್ಲ. ನಾನು ಡಿ ಅಂಡ್ ಸಿ ಬೇಕಾ ಅಂದು ಕೇಳಿದಾಗ, ನಕ್ಕುಬಿಟ್ಟಿದ್ದಳು. + +ಮತ್ತೆ ಆರುತಿಂಗಳು ತನ್ನ ಪಾಡಿಗೆ ತಾನಿರುತ್ತಿದ್ದಳು. ಸಿಕ್ಕಾಪಟ್ಟೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ ಅಂದೆ. + +‘ನಿನಗೂ ನನಗೂ ಇಬ್ಬರಿಗೂ ಗೊತ್ತು. ಬೇಕಾದರೆ ನಾವು ಮತ್ತೆ ಪ್ರಯತ್ನ ಮಾಡಬಹುದು.’ಒಂದು ಕ್ಷಣ ನನ್ನ ನೋಡಿದಳು. ‘ನಾನು ನಿರ್ಧರಿಸಿಯಾಗಿದೆ. ನನಗೆ ಮಗು ಬೇಡ. I do not want to bring work home. ದಿನ ಬೆಳಗಾದರೆ ಮಕ್ಕಳನ್ನು ಟೂಡಿಯಲ್ಲಿ, ಥ್ರೀಡಿಯಲ್ಲಿ ಮತ್ತು ನಿಜವಾಗಿ ನೋಡಿ ಸಾಕಾಗಿದೆ. ನನಗೆ ನನ್ನ ಮುಂದಿರೋ ಆಯ್ಕೆಗಳು ಗೊತ್ತು.  ಇಂಡಕ್ಷನ್, ಇನ್ ವಿಟ್ರೊ, ಎಂಬ್ರಿಯೊ ಟ್ರಾನ್ಸ್ ಫ಼ರ್, ಕೊನೆಗೆ ದತ್ತಕ. ಈ ಮಗು ಅನ್ನೋ ಒಂದು ಅಂಶವನ್ನು ನಮ್ಮ ಸಮೀಕರಣದಿಂದ ತೆಗೆದುಹಾಕೋಣವೇ. ಸುಖವಾಗಿರೋಕೆ ನಾವಿಬ್ಬರೂ ಒಬ್ಬರಿಗೊಬ್ಬರು ಸಾಲದಾ?’ + +ಅಷ್ಟೇ ಮಾತುಕತೆ ನಡೆದದ್ದು. ಮಗು ಬೇಕು ಅಂತ ನನಗನಿಸಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ದಿನ ಬೆಳಗಾದರೆ ಮಕ್ಕಳೊಂದಿಗೆ ಕೆಲಸ ಮಾಡುವ ಸುಜ್ಜಿಗೆ ಮಕ್ಕಳು ಬೇಕು ಅಂತಲೇ ಅನ್ನಿಸ್ಸಿರಲಿಲ್ಲ. + +ನಾಲ್ಕು ಬಾರಿ ಬೇರೆ ಬೇರೆ ನಾಯಿಮರಿಗಳನ್ನೂ, ಬಣ್ಣದ ಮೀನುಗಳನ್ನೂ, ಒಂದೆರಡು ಮೊಲಗಳನ್ನೂ, ಒಮ್ಮೆ ಒಂದು ಸಣ್ಣ ಉಡದಂತ ಹೆಸರು ಗೊತ್ತಿಲ್ಲದ ಪ್ರಾಣಿಯನ್ನೂ ಮನೆಗೆ ತಂದು ಸಾಕಲು ಪ್ರಯತ್ನಿಸಿದ್ದೆ. + +ಮನೆಯ ಮುಂದೆ ಗುಲಾಬಿ, ಸ್ಫಟಿಕ, ಕಣಗಲೆ, ಕುಂಡದೊಳಗೆ ಬಾಳೆ, ಹಿಂದೆ ಕರಿಬೇವು, ತುಳಸಿ, ಸಣ್ಣ ಇಪ್ಪತ್ತು ಚದರದ ತೋಟದಲ್ಲಿ ಬದನೆ, ಸೌತೆ, ಕೋಸನ್ನೂ ಬೆಳೆದಿದ್ದೆ. ಬರೇ ಗಡಸು ಕೈಗಳ ಆರೈಕೆಯಲ್ಲಿ ಅವು ಸೊರಗಿದ್ದವು. + +*** + +ನಾನು ಐಸಿಯುನ ಡೈರೆಕ್ಟರಾಗಿದ್ದೇನೆ. ಜೀವ ಉಳಿಸುವ ಜತೆಗೆ ಆಸ್ಪತ್ರೆಯ ಇನ್ನಿತರ ಪೇಪರುಗಳನ್ನೂ ಸಹಿ ಮಾಡುವ ಜವಾಬ್ದಾರಿ ನನ್ನದಾಗಿದೆ. ಸುಜ್ಜಿ ಮೊನ್ನೆ ತಾನೆ ಆರುಸಾವಿರ ಹೆರಿಗೆ ಮಾಡಿ ಮುಗಿಸಿದ್ದಾಳೆ. ಅಂಟಾರ್ಟಿಕವೊಂದು ಬಿಟ್ಟು ಇಡೀ ಭೂಮಿಯನ್ನು ನೋಡಿದ್ದೇವೆ. ರಾತ್ರಿ ಒಂದು ಹೊತ್ತು ಇಬ್ಬರೂ ಒಟ್ಟಿಗೆ ಕೂತು ಊಟ ಮಾಡುತ್ತೇವೆ. ಈ ಇಪ್ಪತ್ತು ವರ್ಷ ಕೆಲಸ ಮಾಡಿದ್ದರ ಅನುಕೂಲವೆಂದರೆ ಇಬ್ಬರೂ ರಾತ್ರಿ ಪಾಳಿಯಲ್ಲಿ ಕೆಲಸವನ್ನು ಮಾಡುವುದಿಲ್ಲ. ಆದಷ್ಟು ರಾತ್ರಿ ಒಟ್ಟಿಗೇ ಇರುತ್ತೇವೆ. ವೈನಿರದ ರಾತ್ರಿಗಳಲ್ಲಿ ಸೆಕ್ಸು, ಸೆಕ್ಸಿರದ ರಾತ್ರಿಗಳಲ್ಲಿ ವೈನು, ಎರಡೂ ಇಲ್ಲದಲ್ಲಿ ನಾನು ನಿದ್ದೆಯಲ್ಲಿ ಮತ್ತು ಸುಜ್ಜಿ ತನ್ನ ಪುಸ್ತಕಗಳಲ್ಲಿ ನಮ್ಮನಮ್ಮ ಖಾಸಗೀತನವನ್ನು ಕಂಡುಕೊಳ್ಳುತ್ತೇವೆ. + +ಇಬ್ಬರೂ ಕೆಲಸವನ್ನು ಮನೆಗೆ ತಂದಿರಲಿಲ್ಲ. + +*** + +ಸುಜ್ಜಿ ಮಾರನೆಯೆ ದಿನ ಏರ್ ಪೋರ್ಟಿಗೆ ಬಂದಿದ್ದಳು. ಒಂದು ತೋಳಿಲ್ಲದ ತಿಳಿಹಳದಿ ಬ್ಲೌಸು ಮತ್ತು ಜೀನ್ಸ್. ಮುಖಕ್ಕೆ ಯಾವ ಮೇಕಪ್ಪಿಲ್ಲ. ಕೂದಲಿಗೆ  ಮಾತ್ರ ಮೂರ್ನಾಲ್ಕು ಬಣ್ಣಗಳು. + +ನನ್ನನ್ನು ನೋಡಿದ ತಕ್ಷಣ ‘ಮೊನ್ನೆ ರಾತ್ರಿ ಮನೆಯಲ್ಲಿ ಮಲಗಲಿಲ್ಲ. ನಿನ್ನೆ ರಾತ್ರಿ ಮಲಗಿದ್ದೆ. ರಾತಿಯೆಲ್ಲಾ ಒಂದೇ ಸಮನೆ ಕೂಗುತ್ತಾ ಇತ್ತು ಆ ಗುಬ್ಬಿ. ಪಾಪ ಹಸಿವೆಯೋ ಏನೋ ಅಂತ ಒಂದಿಷ್ಟು ಜೋಳದ ಕಾಳನ್ನು ಮುಂದೆ ಬಾಗಿಲ ಬಳಿ ಇಟ್ಟಿದ್ದೆ. ಒಂದು ಕಾಳನ್ನೂ ಮುಟ್ಟಿಲ್ಲ. ಎದುರಿನ ಮನೆಯವನು ಬಂದಿದ್ದ. ಇಷ್ಟು ಸಣ್ಣ ಪಕ್ಷೀಗೆ ಹೆದರುತ್ತೀರ ನೀವು ಅಂತ ತನ್ನ ಬೀಬೀ ಗನ್ನಲ್ಲಿ ಹೊಡೆದು ಉರುಳಿಸುತ್ತೀನಿ ಅಂದ. ನಾನು ಬಯ್ದು ಓಡಿಸಿದೆ. ನೀನು ಹೇಳಿದ ಹಾಗೆ ಇಡೀ ಬೀದಿಯಲ್ಲಿ ಎಲ್ಲರನ್ನೂ ಕೇಳಿಕೊಂಡು ಬಂದಿದ್ದೇನೆ. ಯಾರದೂ ಅಲ್ಲವಂತೆ. ಫ಼ೋಟೋ ತೆಗೆಯಲಾಗಲಿಲ್ಲ. ಫ಼ೋಟೋ ತೆಗೆದು ಹಾಕಿದ್ರೆ ಯಾರಾದ್ರೂ ಗುರುತು ಹಿಡೀತಿದ್ದರೋ ಏನೋ. ಇವತ್ತು ಕೌಂಟಿಯ ಆಫ಼ೀಸಿಗೆ ಫ಼ೋನು ಮಾಡಿದ್ದೆ. ಅವರು, ಅವರ ಅನಿಮಲ್ ಕನ್ಸರ್ವೇಟರ್ ನನ್ನು ಕಳಿಸುತ್ತಾರಂತೆ. ಆತ ಫ಼ೋನು ಮಾಡಿದ್ದ, ಕೈಗೆ ಸಿಗಲಿಲ್ಲ ಅಂದರೆ ಅವರೂ ಬೀಬೀ ಗನ್ನಲ್ಲಿ ನಿಧಾನಕ್ಕೆ ಹೊಡೀತಾರಂತೆ.’ ಒಮ್ಮೆಲೇ ಬಡಬಡಿಸಹತ್ತಿದಳು.ನಾನೇನೂ ಮಾತಾಡಲಿಲ್ಲ. + +`Please, for heaven’s sake, talk something. Do not pretend that I am the only one bothered by it’ ಎಂದಳು. + +ನಾನು ‘ಸುಜ್ಜಿ ಅದೊಂದು ಯಾವುದೇ ತೊಂದರೆ ಕೊಡದ ಸಣ್ಣ ಹಕ್ಕಿ.’ ಅಂದೆ. + +‘ನಾನು ಇನ್ನೊಂದು ಕ್ಷಣವೂ ಆ ಮನೆಯಲ್ಲಿರೋಕ್ಕಾಗೊಲ್ಲ. ನೀನೇನಾದರೂ ಮಾಡಲೇಬೇಕು’ಏರ‍್ಪೋರ್ಟ್ನಿಂದ ‘ವಿಲ್ಲಾ ವೈದ್ಯ’ಕ್ಕೆ ಮುಕ್ಕಾಲುವಾಸಿಯೆಲ್ಲಾ ಹೈವೇಯೇ ಆದರೂ ಕೊನೆಯ ಐದು ಮೈಲಿ ಸಣ್ಣ ಸಣ್ಣ ರಸ್ತೆಯಲ್ಲಿ ಬರಬೇಕಿತ್ತು. ಒಂದಿಷ್ಟು ಜನ ಕರಿಯ ಹುಡುಗರು ಬ್ಯಾಸ್ಕೆಟ್ ಬಾಲ್ ಅಡುತ್ತಿದ್ದರು. ದೂರದಿಂದಲೇ ಇದನ್ನು ಗಮನಿಸಿದ ಸುಜನಾ ಕಾರನ್ನು ಮತ್ತೆ ಹೈವೇಗೆ ತೆಗೆದುಕೊಂಡು ಹೋಗಿ ಬಳಸುದಾರಿಯಲ್ಲಿ ಮನೆ ತಲುಪಿದಳು. + +‘ಒಂದು ವಿಷಯ ಗಮನಿಸಿದ್ದೀಯಾ? ಮದುವೆಯಾಗಿರುವ ಇಷ್ಟು ವರ್ಷದಲ್ಲಿ ನಾನು ಮನೆಯಲ್ಲಿ ನಿನ್ನನ್ನು ಬಿಟ್ಟರೆ, ಅತಿ ಹೆಚ್ಚು ಸಮಯ ಕಳೆದಿರುವ ಜೀವವಿರುವ ವಸ್ತುವೆಂದರೆ ಈ ಗುಬ್ಬಿ’ ಅಂದಳು, ಕಣ್ಣು ತುಂಬಿ ಬಂದಂತಿತ್ತು. + +ಸುಮ್ಮನೇ ತೋಳನ್ನು ಅದುಮಿದೆ. + +ಮನೆಯ ಸುತ್ತಲಿದ್ದ ಒಂದು ಮೈಲಿಯಲ್ಲಿದ್ದ ಮರಗಳ ಮೇಲೆಲ್ಲ ‘ವಿಲ್ಲಾ ವೈದ್ಯ’ದ ಪಕ್ಷಿಯ ಜಾಹೀರಾತಿತ್ತು. ಪ್ರತಿಯೊಬ್ಬರ ಮನೆಯ ಅಂಚೆ ಡಬ್ಬಗಳ ಮೇಲೆ, ರಸ್ತೆಯ ತಿರುವಿನಲ್ಲಿ ಎಲ್ಲೆಡೆ `Bird Missing???’ ಅನ್ನುವ ದೊಡ್ದ ದೊಡ್ಡ ಅಕ್ಷರಗಳೇ ಕಾಣಿಸುತ್ತಿದ್ದವು. + +ಮನೆಗೆ ಬರುವಷ್ಟರಲ್ಲಿ ಮನೆಯ ಮುಂದೆ ಕೌಂಟಿಯ ಒಂದು ಟ್ರಕ್ಕು ನಿಂತಿತ್ತು.‘ಹಲೋ’ ಎಂದು ಸ್ವಾಗತಿಸಿದ, ಅನಿಮಲ್ ಕನ್ಸರ್ವೇಟರ್. + +ಸುಜ್ಜಿ ಈಗಾಗಲೇ ಪಕ್ಷಿಯ ಬಗ್ಗೆ ವಿವರಗಳನ್ನು ಕೊಟ್ಟಿದ್ದಳು. ಮನೆಯಲ್ಲಿ ಇರುವ ಪಕ್ಷಿ ಬದುಕಿಯೇ ಇದೆಯೆಂದು ಇನ್ನೊಮ್ಮೆ ಖಚಿತ ಪಡಿಸಿಕೊಂಡ. ಸುಜ್ಜೀಗೆ ಯಾವ ರೀತಿಯೂ ಕೆಮ್ಮು, ಜ್ವರ ಇಲ್ಲವೇ ಎದೂ ಗ್ಯಾರಂಟಿ ಮಾಡಿಕೊಂಡು ಒಂದೆರಡು ಕಾಗದದ ಮೇಲೆ ಸಹಿ ಮಾಡಿಸಿಕೊಂಡು ನನ್ನತ್ತ ನೋಡಿ ‘ಬರ್ಡ್ ಫ಼್ಲು’ ಅಂದು ನಕ್ಕ. ಸುಜ್ಜಿಯ ಕಡೆ ನೋಡುತ್ತಾ ‘ಆದಷ್ಟು  ಆ ಪಕ್ಷಿಯನ್ನು ಕಾಪಾಡಲಿಕ್ಕೇ ಪ್ರಯತ್ನ ಮಾಡುತ್ತಾರೆಂದೂ, ಅಕಸ್ಮಾತ್ ಅದು ‘ಮಿಸ್‌ಬಿಹೇವ್’ ಮಾಡಿದರೆ, ತಾವು ಅದನ್ನು ಶೂಟ್ ಮಾಡಬೇಕಾಗುವುದೆಂದೂ’ ಹೇಳಿದರು. ಅವರ ಶಾರ್ಪ್ ಶೂಟರ‍್ಗಳು ತಮ್ಮ ಕಣ್ಣಿಗೊಂದು ದೊಡ್ಡ ರಕ್ಷಣಾಕವಚವಂತಿದ್ದ ದೊಡ್ಡ ಕನ್ನಡಕವನ್ನೂ ಮತ್ತು ಬಾಹ್ಯಾಕಾಶಯಾತ್ರಿಗಳಂತೆ ಕಾಣುತ್ತಿದ್ದ ಹೊರವಸ್ತ್ರಗಳನ್ನು ಹಾಕಿಕೊಂಡಿದ್ದರು. ಮನೆಯ ಬೀಗ ತೆಗೆಯಲು ಹೇಳಿ ನನ್ನನ್ನು ಹೊರಗೇ ನಿಲ್ಲಲು ಹೇಳಿ, ಒಳಗೆ ಹೋದರು. + +ನಾನು ಸುಜ್ಜಿ ಕಾರಲ್ಲೇ ಕೂತಿದ್ದೆವು.ಅದರ ಹಿಂದೆಯೇ `Paws and Claws Humane society’ಯವರ ಒಂದು ವ್ಯಾನು ಬಂದು ನಿಂತಿತು. ನಾನು ಸುಜ್ಜಿಯ ಮುಖ ನೋಡಿದೆ. ‘ನನ್ನ ಕೊಲೀಗ್ ಹೇಳಿದ್ದಳು. ಇಂತಹದೊಂದು ಖಾಸಗೀ ಕಂಪೆನಿಯಿದೆ, ಊರಿನಲ್ಲಿ. ಅವರು ಗುಬ್ಬಿಗೆ ಯಾವುದೇ ಹಾನಿಯಿಲ್ಲದಂತೆ ಕಾಪಾಡುತ್ತಾರೆ, ಅಂತ’ ಅಂದಳು. + +ಯಾವುದೋ ಫ಼ಾರ್ಚ್ಯೂನ್ ಕಂಪೆನಿಯವರ ಸೆಕ್ರೆಟರಿಯ ಹಾಗೆ ಡ್ರೆಸ್ ಸೂಟು ಮತ್ತು ತಂಪು ಕನ್ನಡಕ ಧರಿಸಿದ್ದ, ಬೆಳ್ಳಗೆ ಮತ್ತು ಕೆಂಪಗಿದ್ದ ಒಬ್ಬಳು ನಗುತ್ತಾ ಕೆಳಗಿಳಿದು ಬಂದು ಕೈಕುಲುಕಿದಳು. ಊರಿನ ಸರಕಾರಿ ವ್ಯಾನು ಕೂಡ ಮನೆಯ ಮುಂದೆ ಇದ್ದದ್ದು ನೋಡಿ ಅವಳಿಗೆ ಕೊಂಚ ಗೊಂದಲವಾದಂತನಿಸಿತು. ನನ್ನ ಮುಖ ನೋಡಿದಳು. ನಾನು ಸುಜ್ಜಿಯ ಮುಖ ನೋಡಿದೆ. + +‘ಅವರು ಬರುತ್ತಾರೆ ಅಂತ ನನಗ್ಗೊತ್ತಿರಲಿಲ್ಲ’ ಅಂದಳು, ಸುಜ್ಜಿ, ಆ ಸೂಟಿನವಳನ್ನು ನೋಡಿ. ‘ನಿಮಗೆ ನಮ್ಮ ಸೇವೆ ಬೇಕಿಲ್ಲದಿದ್ದರೆ, ನಮಗೆ ಬೇಜಾರೇನಿಲ್ಲ. ಇಲ್ಲಿ ಒಂದು ಸಹಿ ಮಾಡಿ. ಕೌಂಟಿಯವರಿಗೆ ಇದು ಕೆಲಸ. ನಮಗೆ ಇದು ಪ್ರೀತಿ. ಅವರು ಹಕ್ಕಿಯನ್ನು ಕೊಲ್ಲೋದಿಲ್ಲ ಅಂತ ಹೇಳಿದಾರಲ್ಲ. ನನಗೂ ಗೊತ್ತು. ಆದರೆ ಬೀಬೀ ಗನ್ನಿನಲ್ಲಿ ಯಾವಾಗಲಾದರೂ ಹೊಡೆತ ತಿಂದಿದ್ದೀರಾ’ ಅಂದು ಕೇಳಿದಳು. + +ಸುಜ್ಜಿ ಸುಮ್ಮನೇ ತಲೆಯಾಡಿಸುತ್ತಾ ಸಹಿ ಹಾಕುತ್ತಿದ್ದಳು. ‘ಎರಡು ವಾರದಲ್ಲಿ ಬಿಲ್ ಕಳಿಸುತ್ತೇವೆ’ ಎಂದು ಆ ಸೂಟಿನವಳು ತಮ್ಮ ಪಾಸ್ ಮತ್ತು ಕ್ಲಾಸ್ ನ ವ್ಯಾನು ಹತ್ತಿದಳು. + +ಒಳಗೆ ಹೋಗಿದ್ದ ಸರಕಾರೀ ಕನ್ಸರ್ವೇಟರಿನ ಶಾರ್ಪ್ ಶೂಟರುಗಳು ಹೊರಗೆ ಬಂದು ‘ನೆಗಟೀವ್’ ಇಡೀ ಮನೆಯನ್ನೆಲ್ಲಾ ಹುಡುಕಿದ್ದೀವಿ. ಎಲ್ಲೂ ಯಾವ ಪಕ್ಷಿಯೂ ಇಲ್ಲ. ಫ಼ಾಲ್ಸ್ ಅಲಾರ್ಮ್. ಮತ್ತೆ ಹುಡುಕುವ ಅವಶ್ಯಕತೆಯಿಲ್ಲ. ಹೊರಗೆ ಬರಬಹುದು’ ಎಂದು ತನ್ನ ವಾಕಿಟಾಕಿಯಲ್ಲಿ ಹೇಳಿದ. + +ಆಕಡೆಯಿಂದ ‘ರಾಜರ್ ದಟ್’ ಅನ್ನುವ ಧ್ವನಿ ಕೇಳಿಸಿತು. + +ಅನಿಮಲ್ ಕನ್ಸರ್ವೇಟರ್ ‘ಇಡೀ ಮನೆಯನ್ನೆಲ್ಲಾ ಹುಡುಕಿದ್ದೀವಿ. ಬೇಸ್‌ಮೆಂಟು, ಕ್ಲಾಸೆಟ್ಟು, ನಿಮ್ಮ ಅಡಿಗೆಮನೆಯ ಕ್ಯಾಬಿನೆಟ್ಟು, ಎಲ್ಲ ಬೆಡ್ ರೂಮುಗಳು, ಟಾಯ್ ಲೆಟ್ಟು ಎಲ್ಲೂ ಯಾವ ಹಕ್ಕಿಯಿದ್ದ ಗುರುತು ಕೂಡ ಇಲ್ಲ. ಹಕ್ಕಿ ನಿಮ್ಮ ಟಾಯ್ ಲೆಟ್ಟಿನ ಬೌಲಿನೊಳಗೆ ಕೂತಿದ್ದಾಗ ಏನಾದರೂ ಫ಼್ಲಶ್ ಮಾಡಿಬಿಟ್ಟರೋ ಏನು’ ಅಂದ, ತನ್ನ ಹಾಸ್ಯಪ್ರಜ್ಞೆಯನ್ನು ತೋರಿಸುತ್ತಾ.‘ಮನೆಯೊಳಗೇ ಇತ್ತು. ನಮ್ಮ ಹಾಸಿಗೆಯ ಮಧ್ಯೆ ನೋಡಿದ್ದೀರಾ. ನಮ್ಮ ಗಡಿಯಾರ ತುಂಬಾ ದೊಡ್ಡದ್ದು. ಅದರಲ್ಲೇನಾದರೂ ಸಿಕ್ಕಿಹಾಕಿಕೊಂಡರೆ? ನಲ್ಲಿಯ ಗಾರ್ಬೇಜ್ ಡಿಸ್ ಪೋಸರ‍್ನಲ್ಲಿ ಸಿಕ್ಕಿಹಾಕಿಕೊಂಡರೆ, ನಿಜವಾಗಿಯೂ ಎಲ್ಲ ಕಡೆ ನೋಡಿದಿರಾ. ಬೇಕಾದರೆ, ಇನ್ನೊಮ್ಮೆ ನೋಡಿ. ಪ್ಲೀಸ್?’ + +‘ಮೇಡಮ್.. ಯಾವುದೋ ಪುಸ್ತಕದಲ್ಲಿ ಓದಿದ್ದೆ. ನಮ್ಮ ನಗರಾನ ತಲೆಕೆಳಗು ಮಾಡಿ ಅಲ್ಲಾಡಿಸಿದರೆ, ಪ್ರತಿಯೊಬ್ಬರ ಮನೆಯಿಂದ ಎಂತೆಂತ ಪ್ರಾಣಿಗಳು ಹೊರಬೀಳಬಹುದಂತೆ ಗೊತ್ತಾ, ಹಾವುಗಳು, ಮಂಗೂಸ್, ಕಪಿ, ಉಡ, ಒರಂಗೆಟಾನ್, ಸಣ್ಣ ಹುಲಿ- ನಮ್ಮ ಜನಗಳ ಮಾನಸಿಕ ಆರೋಗ್ಯ ಸ್ತಿಮಿತದಲ್ಲಿ..’ ಮಾತು ಪೂರಾ ಮುಗಿಸಲಿಲ್ಲ.ಬಾಯಿ ಬಿಟ್ಟುಕೊಂಡು ನೋಡುತ್ತಲೇ ಇದ್ದ. + +ಒಂದು ಸಣ್ಣ ಕಂದು ಗುಬ್ಬಿ, ಹೌದು ಗುಬ್ಬಿ, ‘ಚಿಂವ್ ಚಿಂವ್’ ಎನ್ನುತ್ತಾ ವಿಲ್ಲಾ ವೈದ್ಯದ ತೆಗೆದಿದ್ದ ಬಾಗಿಲಿನಿಂದ ಕುಪ್ಪಳಿಸುತ್ತಾ ಹಾರಿ ಹೊರಬಂತು. ನಾನು ನೋಡುತ್ತಲೇ ಇದ್ದೆ. ಶಾರ್ಪ್ ಶೂಟರ‍್ಗಳು ತಮ್ಮ ಬೀಬೀ ಗನ್ನುಗಳನ್ನು ತೆಗೆದಿಟ್ಟು ಸಣ್ಣ ಬಲೆಯಂತದ್ದನ್ನು ತೆಗೆದರು. ಅತ್ತಲಿಂದ ಇತ್ತಲಿಗೆ, ಇತ್ತಲಿಂದ ಅತ್ತಲಿಗೆ ಹಾರುತ್ತಾ, ಒಂದು ದೊಡ್ಡ ಕುಪ್ಪಳಿಕೆಯಿಂದ ಹಾರಿದ್ದೇ ಸುಜ್ಜಿಯ ತಲೆಯನ್ನು ಸವರಿಕೊಂಡಂತೆಯೇ ಎಲ್ಲರಿಗೂ ಮೋಸ ಮಾಡಿದಂತೆ ಯಾರಿಗೂ ಸಿಗದೇ ಹಾರಿಹೋಯಿತು. + +ಜೋರಾಗಿ ಕಿರುಚಿದ ಸುಜ್ಜಿ ನನ್ನನ್ನು ತಬ್ಬಿಕೊಂಡು ಇಡೀ ಬೀದಿಯೇ ಹಾರಿಹೋಗುವ ಹಾಗೆ ಅಳತೊಡಗಿದಳು. ನಾನು ಅವಳನ್ನು ಒಳಕರೆದುಕೊಂಡುಬಂದೆ. ಸರಕಾರದವರು ಏನೂ ಮಾತಿಲ್ಲದೇ ವಾಪಸ್ಸು ಹೋಗಿದ್ದರು. + +*** + +ಮನೆಯ ಒಳಗೆ ಎರಡು ಮೆಕ್ಕೆಯ ಜೋಳಗಳು ನನ್ನನ್ನೂ ಸುಜನಳನ್ನೂ ಸ್ವಾಗತಿಸುತ್ತಿದ್ದವು. ಒಂದು ಗಾಜಿನ ಲೋಟದಲ್ಲಿ ನೀರನ್ನೂ, ಒಂದು ದಿಂಬನ್ನೂ ಮನೆಯ ಬಾಗಿಲ ಹಿಂದಿದ್ದ ಶ್ಯಾಂಡಲಿಯರ‍್ನ ಕೆಳಗಿಟ್ಟಿದ್ದಳು, ಸುಜ್ಜಿ. ಒಳಗೆ ಅಳುತ್ತಲೇ  ಬಂದಿದ್ದರಿಂದ ನಾನು ಏನೂ ಮಾತಾಡಲಿಲ್ಲ. + +ಅಳು ಮುಗಿದಿತ್ತು. ಸುಜ್ಜಿ ನನ್ನ ಬಿಡದಹಾಗೆ ತಬ್ಬಿಕೊಂಡು ಮಲಗಿದ್ದಳು. ಮನೆಯನ್ನು ಇಬ್ಬರೂ ಸೇರಿ ಪೂರಾ ಸ್ವಚ್ಛ ಮಾಡಿದ್ದೆವು.ಅಂದು ರಾತ್ರಿ ವೈನು ಬೇಡವೆಂದಿದ್ದಳು.ಮಲಗಿದ್ದ ಹಾಸಿಗೆ ಕಿರ್ರೆಂದಿತು.`Arent you ovulating.. like,, right now?’ ಅಂದೆ, ಸುಜ್ಜಿಯ ಈ ವಿಷಯಗಳ ಬಗೆಗಿನ ನನ್ನ ಅರಿವು ನನಗೇ ಕೆಲವೊಮ್ಮೆ ಆಶ್ಚರ್ಯವನ್ನುಂಟುಮಾಡುತ್ತಿತ್ತು.`Shut up’ ಅಂದಳು.ನಲವತ್ತನಾಕಕ್ಕೆ ಫಸಲಾದರೆ, ಕುಡಿಯ ಕಾಳು ಗಟ್ಟಿಯೋ ಜೊಳ್ಳೋ ಅನ್ನುವ ವಿಷಯ ನನಗಿಂತ ಸುಜ್ಜಿಗೇ ಚೆನ್ನ್ನಾಗಿ ಗೊತ್ತಿದೆ ಅನ್ನಿಸಿತು. + +ಗುರುಪ್ರಸಾದ್‌ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ವಾಸಿಸುತ್ತಿದ್ದಾರೆ.  ಸದ್ಯಕ್ಕೆ ಅಮೇರಿಕಾದ ರಾಚೆಸ್ಟರ್ನಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. ನಿರ್ಗುಣ, ಶಕುಂತಳಾ (ಕಥಾ ಸಂಗ್ರಹಗಳು), ಆಚೀಚೆಯ ಕಥೆಗಳು (ಸಂಪಾದಿತ ಕಥಾ ಸಂಕಲನ), ವೈದ್ಯ ಮತ್ತೊಬ್ಬ (ಲೇಖನ ಸಂಗ್ರಹ) “ಬಿಳಿಯ ಚಾದರ”, ‘ಹಿಜಾಬ್” (ಕಾದಂಬರಿಗಳು) ಅವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_558.txt b/Kenda Sampige/article_558.txt new file mode 100644 index 0000000000000000000000000000000000000000..45b5b50b7e9f8845552f72eac93d947536c6cb84 --- /dev/null +++ b/Kenda Sampige/article_558.txt @@ -0,0 +1,35 @@ +byಮೀರಾ ರಾಜಗೋಪಾಲ್|Dec 4, 2017|ಸಾಹಿತ್ಯ| 0 Comments + +‘ಅಯ್ಯೋ ಅದಾಗಿದ್ದಿದ್ರೆ ಎಷ್ಟೋ ಒಳ್ಳೇದಿತ್ತು. ಈಗಾಗಿರೋ ಕಥೇನೇ ಬೇರೆ…ಸೋನು ಮದುವೆಯಾಗ್ತಿರೋದು ಇಂಡಿಯನ್, ಹಿಂದು, ವೆಜೆಟೇರಿಯನ್ ಕೂಡ…’ಮಿಸೆಸ್ ಜೋಷಿ ನನ್ನ ಬಳಿ ಸರಿದು ಪಿಸುಗುಟ್ಟಿದರು. + +byಮೀರಾ ರಾಜಗೋಪಾಲ್|Dec 4, 2017|ಸಾಹಿತ್ಯ| 0 Comments + +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. + +byಡಾ. ಎಚ್ ಎಸ್ ಅನುಪಮಾ|Dec 4, 2017|ಸಾಹಿತ್ಯ| 0 Comments + +ಮಹಾಸಂಪ್ರದಾಯಸ್ಥೆಯಾಗಿದ್ದ ಅಜ್ಜಿ ಹಿಂದಿನ ದಿನದ ತನಕ – ಅವಳ ತವರು ಮನೆಯವರು ಕೊಟ್ಟ ಗೌರೀ ಪೆಟ್ಟಿಗೆಯನ್ನು ಹುಣಿಸೆಹಣ್ಣು ಹಚ್ಚಿ ತಿಕ್ಕಲು ತೆಗೆಯುವ ತನಕ – ಚೆನ್ನಾಗಿರುತ್ತಿದ್ದವಳು ಆ ಮೇಲೆ ಮಡಿಮಡಿ ಎಂದು ಅದು ಯಾಕೆ ಹಾಗೆ ಬದಲಾಗುತ್ತಿದ್ದಳೋ? + +byಕೆಂಡಸಂಪಿಗೆ|Dec 2, 2017|ಸಾಹಿತ್ಯ| 0 Comments + +ಎರಡನೆಯದು ಸಾಹಿತ್ಯದಲ್ಲಿ ತುಂಬಿಕೊಂಡಿರುವ ಉಪಾಧ್ಯಾಯ ಸಮುದಾಯ. ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದು + +byಕೆಂಡಸಂಪಿಗೆ|Dec 2, 2017|ಸಾಹಿತ್ಯ| 0 Comments + +ಅಂದು ಆ ಜನರೆಲ್ಲ ಎದೆಮಟ್ಟ ಒಂದೊಂದು ಹೂಗುಚ್ಚ ಹಿಡಿದು ಓಡಾಡುತ್ತಿದ್ದಂತೆ ಕಾಣುತ್ತಿತ್ತು. ಹೂಗುಚ್ಚವೆಂದರೆ ಪೇಟೆ ಬೀದಿಯಲ್ಲಿ ಸಿಗುವ ಗುಲಾಬಿ ಇತ್ಯಾದಿ ಅಪರೂಪದ ಹೂವುಗಳಿಂದ ಮಾರಾಟಕ್ಕಾಗಿ ಮಾಡಿದ್ದಲ್ಲ, ರಸ್ತೆ ಬದಿ ಪೊದೆಯಲ್ಲಿ ಬಿಟ್ಟ ಗಂಟೆ ಹೂವಿನಂಥ ಒಂದು ಗೊಂಚಲು. + +byಕೆ ಟಿ ಗಟ್ಟಿ|Dec 2, 2017|ಸಾಹಿತ್ಯ| 0 Comments + +ತನಗೆ ಇಂಗ್ಲಿಷ್ ಕಲಿಯಲಾಗಲಿಲ್ಲ, ಆದರೆ ಮಗ ಇಂಗ್ಲಿಷಿನಿಂದ ವಂಚಿತನಾಗುವುದು ಬೇಡ ಎಂದು ಮಗನನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ. ಆದರೆ ಎರಡನೆಯ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಸಿದ. + +byಕೆ ಟಿ ಗಟ್ಟಿ|Dec 2, 2017|ಸಾಹಿತ್ಯ| 0 Comments + +ತನ್ಮಧ್ಯೆ ಹಳೆಯ ಚಕ್ರವರ್ತಿ ಮೃತನಾಗಿ ಕೊಕಿಡೆನಳ ಮಗ ಪಟ್ಟಕ್ಕೆ ಬರುತ್ತಾನೆ. ಗೆಂಜಿಯ ಪ್ರೇಮ-ಪ್ರಣಯ ಅರಮನೆಯಲ್ಲಿ ಹಗರಣ ಉಂಟುಮಾಡುತ್ತದೆ. ಅವನು ರಾಜಧಾನಿಯನ್ನು ತೊರೆಯಬೇಕಾಗುತ್ತದೆ. ಕಥೆಯ ಕೊನೆಯ ಭಾಗದಲ್ಲಿ ಗೆಂಜಿ ರಾಜಧಾನಿಗೆ ಮರಳುತ್ತಾನೆ. + +byನಕ್ಷತ್ರ|Nov 28, 2017|ದಿನದ ಅಗ್ರ ಬರಹ,ಸಾಹಿತ್ಯ| 0 Comments + +ಒಮ್ಮೊಮ್ಮೆ ಮೆಲ್ಲನೆ ಚಲಿಸುವ ಮತ್ತೊಮ್ಮೆ ಕಿಂಚಿತ್ತೂ ಅಲುಗದ ಚಿತ್ರಪಟದಂತೆ ಕಾಣುವ ಕವಿತೆಯಂತಹ ಈ ಲೋಕದಲ್ಲಿ ಕವಿತೆಗಳು ಯಾವಾಗ ಆದವು ಎಲ್ಲಿಂದ ಉದುರಿದವು ಎಲ್ಲಿಗೆ ಹೋದವು ಎನ್ನುವುದಕ್ಕಿಂತ ಋತದಂತೆ ಅವು ಎಂದೆಂದಿಗೂ ಇರುವವು ಮತ್ತು ಹಾಗೆ ಕಾಣುವ ನಿಜ ಮಾತ್ರವೆಂದು ಅನ್ನಿಸುತ್ತದೆ. + +byನಕ್ಷತ್ರ|Nov 24, 2017|ಸಾಹಿತ್ಯ| 0 Comments + +ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. \ No newline at end of file diff --git a/Kenda Sampige/article_559.txt b/Kenda Sampige/article_559.txt new file mode 100644 index 0000000000000000000000000000000000000000..ec8c756b2a13233c3e3a6f635b09f8cd1890f1a3 --- /dev/null +++ b/Kenda Sampige/article_559.txt @@ -0,0 +1,65 @@ +ಛತ್ರಪತಿ ಶಿವಾಜಿ ರೈಲ್ವೇಸ್ಟೇಷನ್ನಿನಲ್ಲಿ ಇಡೀ ಮುಂಬೈ ನಗರಿಯೇ ತನ್ನ ಹ್ರಸ್ವ ಸ್ವರೂಪದಲ್ಲಿ ಕವುಚಿಕೊಂಡಂತಿತ್ತು. ಎಡಕ್ಕೆ ದೂರದ ರಾಜ್ಯಗಳಿಂದ ಬಂದ ರೈಲುಗಳು. ಬಲಕ್ಕೆ ಲೋಕಲ್‌ನವು. ಅವುಗಳಿಂದ ಇಳಿಯುತ್ತಿದ್ದ ಸಾವಿರ ಸಾವಿರ ಸಂಖ್ಯೆಯ ಜನಸಮೂಹದ ರಣಕೋಲಾಹಲ ಸ್ಟೇಷನ್ನಿನ ಎತ್ತರದ ಛಾವಣಿಗೆ ತಾಕಿ ಸೆಲೆಯೊಡೆದು ಮತ್ತೆ ನೆಲಕ್ಕೆ ಬಡಿಯುವಂತಿತ್ತು. ಈ ಬಡಿತದಿಂದ ಅಲ್ಲಿದ್ದ ಜನಸಮೂಹವೆಲ್ಲ ತತ್ತರಿಸಿ ಎತ್ತೆತ್ತಲೋ ದಾರಿಕಾಣದೆ ಪರದಾಡುವಂತಿತ್ತು. ಬೆಂಗಳೂರಿನ ಉದ್ಯಾನ್ ಎಕ್ಸ್‌ಪ್ರೆಸ್ ರಾತ್ರಿ ಎಂಟು ಘಂಟೆಗೆ ಮುಂಬೈ ತಲುಪಬೇಕಿದ್ದುದು, ಹತ್ತುವರೆಗೆ ಶಿವಾಜಿ ನಿಲ್ದಾಣ ಮುಟ್ಟಿತ್ತು. ಅಲ್ಲೇ ಹತ್ತುವರೆಗೆ ಅಹಮದಾಬಾದ್ ಎಕ್ಸ್‌ಪ್ರೆಸ್ ಹಿಡಿಯಬೇಕಿದ್ದ ನನಗೆ ದಾದರಿನಲ್ಲಿಯೇ ಅದು ಎದುರಾದದ್ದನ್ನು ಕಂಡು ಬೇಸರವಾಯಿತೊ, ನಗುಬಂದಿತೊ ಅರ್ಥವಾಗಲಿಲ್ಲ. ನನ್ನ ಇಷ್ಟು ವರ್ಷಗಳ ಬದುಕಿನ ಪ್ರಯಾಣದಲ್ಲಿ ಆಗಿಹೋಗಿದ್ದ ಇಂಥ ನೂರಾರು ಅನುಭವಗಳಲ್ಲಿ ಇದೂ ಒಂದಾಗಿದ್ದುದರಿಂದ ನಿರುದ್ವಿಗ್ನ ಮನಸ್ಸಿನಿಂದಲೇ, ನಾನು ಹತ್ತಬೇಕಿದ್ದ ರೈಲುಗಾಡಿ ಎದುರಿಗೇ ತಪ್ಪಿಹೋದದ್ದನ್ನು ನೋಡಿದೆ. ಹನ್ನೊಂದು ಘಂಟೆಗೆ ಛತ್ರಪತಿ ಶಿವಾಜಿ ನಿಲ್ದಾಣದಲ್ಲಿ ಇಳಿದು ಅಲ್ಲಿ ಸೃಷ್ಟಿಯಾಗಿದ್ದ ಅಸಾಧ್ಯ ಗದ್ದಲದಿಂದ ಪಾರಾಗುವುದು ಹೇಗೆ ಎಂಬುದೇ ಹೊಳೆಯಲಿಲ್ಲ. ಅಷ್ಟುದೂರ ಸಾವಿರಾರು ಜನಸಮೂಹವನ್ನು ಹೊತ್ತುತಂದ ಉದ್ಯಾನ್ ನಿಶ್ಚಲವಾಗಿತ್ತು. ರೈಲೊಳಗೆ ಸುಸ್ತುಹೊಡೆದು ಕೂತಿದ್ದವರು, ಇದ್ದಕ್ಕಿದಂತೆಯೇ ಕೂಲಿಯವರೊಂದಿಗೆ ಗಂಟಲು ಹರಿದುಕೊಳ್ಳುತ್ತ ತಂತಮ್ಮ ಸಾಮಾನು ಸರಂಜಾಮು, ಬಂಧುಬಳಗದವರನ್ನು ಕಲೆಹಾಕುತ್ತಿದ್ದರು. + +ಬಲ ಹೆಗಲಿನಲ್ಲಿ ಒಂದೇ ಬ್ಯಾಗಿನೊಡನೆ ಇದ್ದ ನಾನು ಅಲ್ಲೇ ಸಿಕ್ಕ ಟೀಸಿಯನ್ನು ಮುಂದಿನ ಪ್ರಯಾಣ ಕುರಿತು ವಿಚಾರಿಸಿದೆ. ಆತ ಹೇಳಿದ್ದೆಂದರೆ, ಮತ್ತೆ ಅಹಮದಾಬಾದಿಗೆ ಹೋಗುವ ಗಾಡಿ ಇರುವುದು ಬೆಳಗಿನ ಐದು ಘಂಟೆಗೆ. ಬೆಂಗಳೂರಿಂದ ಮಾಡಿಸಿಕೊಂಡು ಬಂದಿರುವ ಟಿಕೇಟ್‌ಗೆ ರಿಸರ್ವೇಷನ್ ಸೀಟು ಸಿಗುವುದಿಲ್ಲ. ಆದರೆ ಜನರಲ್ ಕಂಪಾರ್ಟ್‌ಮೆಂಟಿನಲ್ಲಿ ಸೀಟು ಹಿಡಿದು ಹೋಗಬಹುದು. ಟಿಕೇಟು ತೆಗೆದುಕೊಳ್ಳಬೇಕಾಗಿಲ್ಲ ಎಂದ. ದೂರದ ದೊಡ್ಡ ಗಡಿಯಾರವೊಂದರಲ್ಲಿ ಗಂಟೆ ಹನ್ನೊಂದಾಗಿತ್ತು. ಇನ್ನೂ ಆರು ಘಂಟೆ ಕಳೆಯುವುದೆಲ್ಲಿ ಎಂದು ಸ್ಟೇಷನ್ನಿನಿಂದ ಈಚೆಬಂದೆ. ಹೆಬ್ಬಾಗಿಲಿನಿಂದಲೇ ಎರಡೂ ಬದಿಯಲ್ಲಿ ಸಾಲು ಸಾಲು ವ್ಯಾಪಾರದವರು. ಕಿತ್ತ ಸೂಟ್‌ಕೇಸ್‌ಗಳ ರಿಪೇರಿಯವರು. ಚಪ್ಪಲಿ ಅಂಗಡಿಗಳು. ಕಪ್ಪುಕನ್ನಡಕ, ವಾಚ್‌ಗಳನ್ನು ಮೈಮೇಲೆಲ್ಲಾ ತಗುಲಿಸಿಕೊಂಡು ಹೋಗಿಬರುವವರ ಕಿವಿಗೆ ಗುಟ್ಟಾಗಿ ವಿದೇಶಿಮಾಲು ಎನ್ನುತ್ತಿದ್ದರು. ಎಲ್ಲಿಗಾದರೂ ಸರಿ, ಸಾಮಾನು ಸಹಿತ ಎತ್ತಿಹಾಕಿಕೊಂಡು ಹೋಗಿಬಿಡುತ್ತೇವೆ ಎಂಬಂತಿದ್ದ ಟ್ಯಾಕ್ಸಿ, ರಿಕ್ಷಾಡ್ರೈವರ್‌ಗಳ ಗದ್ದಲ, ಅರಚಾಟ. ಕಣ್ಣಾಡಿಸಿದ ಕಡೆಯೆಲ್ಲ ಗನ್ ಹಿಡಿದ ಕೈಗಳ ರಕ್ತ ಮೆತ್ತಿದ ಮುಖಗಳ, ಕೆಳಗೆಬಿದ್ದು ಅಳುತ್ತಿದ್ದ ಅರೆಬೆತ್ತಲೆ ಸುಂದರಿಯರ, ಬೆಂಕಿಹೊಗೆ ಉಗುಳುವ ಕಟ್ಟಡಗಳ ಹಿನ್ನೆಲೆಯ ಬಣ್ಣಬಣ್ಣದ ಸಿನಿಮಾ ವಾಲ್ ಪೋಸ್ಟರುಗಳು. ಅಲ್ಲಿಂದಾಚೆಗೆ ಸ್ಟೇಷನ್ನಿನ ಎತ್ತರಕ್ಕೆ ಸೆಡ್ಡು ಹೊಡೆದುನಿಂತ ಪುರಾತನ ಕಟ್ಟಡಗಳು. ಅದರ ಸಂದುಗೊಂದುಗಳಲ್ಲಿ ಗುರುಗುರು ಗಟುರು ಹಾಕುತ್ತ ಕೂರಲು, ಹಾರಲು ನೆಲೆಯಿಲ್ಲದಂತೆ ಪರದಾಡುತ್ತಿದ್ದ ಅಸಂಖ್ಯಾತ ಪಾರಿವಾಳಗಳ ಸಮೂಹ. ಆ ಕಟ್ಟಡಗಳ ಒಳಗೆ ಜೀವ ಸವೆಸುವ ಜನ ಸಮೂಹ ಎಂಥದ್ದು ಎನಿಸಿ ಇಲ್ಲೆಲ್ಲಿಯೂ, ಯಾವ ಕಿರುಸಂದಿಯಲ್ಲಿಯೂ ರಾತ್ರಿ ಕಳೆಯಲು ಒಂದಿಂಚು ಜಾಗವೂ ಸಿಗುವುದಿಲ್ಲವೆನಿಸಿತು. ಮತ್ತೆ ಸ್ಟೇಷನ್ನಿನ ಒಳಕ್ಕೆ ಬಂದೆ. + +ಮುಂಬೈ ನಗರಿಯಲ್ಲಿ ಹಗಲು ರಾತ್ರಿಯೆಲ್ಲ ಒಂದೇ ಎಂಬಂತಿದ್ದರೂ, ಹನ್ನೆರಡು ಘಂಟೆ ದಾಟುತ್ತಿದ್ದಂತೆ ಅಲ್ಪಸ್ವಲ್ಪ ಜನಸಂದಣಿ, ಅದೂ ಸ್ಟೇಷನ್ನಿನ ಒಳಗೆ ಕಡಿಮೆಯಾಗುತ್ತಿರಲಾಗಿ, ಪೋರ್ಟರುಗಳು ಅಲ್ಲೆಲ್ಲ ಪ್ರಯಾಣಿಕರು ಕೂರುವ ಬೆಂಚುಗಳ ಮೇಲೆ ಟವೆಲ್ ಹಾಸಿ, ತಲೆಗೆ ಬಲಗೈ ಇಟ್ಟು ನಿದ್ದೆಗೆ ಸಲ್ಲುತ್ತಿದ್ದರು. ಅಷ್ಟುಹೊತ್ತು ರಾತ್ರಿ ಕಳೆಯುವುದು ಎಲ್ಲಿ ಎಂದುಕೊಳ್ಳುತ್ತಿದ್ದ ನಾನೂ ಒಂದು ಬೆಂಚು ಹುಡುಕುವುದು ಸೂಕ್ತವೆನಿಸಿತು. ಪ್ಲಾಟ್‌ಫಾರ್ಮಿನ ಮೇಲೆ ಎಷ್ಟುದೂರ ನಡೆದರೂ ಎಲ್ಲವೂ ಭರ್ತಿಯಾಗಿದ್ದವು. ಬೆಂಚು ಸಿಗದ ಪೋರ್ಟರುಗಳು ನೆಲದ ಮೇಲೆಯೇ ಮೈಹಾಸಿಕೊಂಡಿದ್ದರು. ಒಬ್ಬ ಪೋರ್ಟರು ನನ್ನ ಹತ್ತಿರಬಂದು, ನಾನು ನಿದ್ದೆಗಾಗಿ ಜಾಗ ಹುಡುಕುತ್ತಿರುವವನೆಂದು ಖಾತ್ರಿಮಾಡಿಕೊಂಡ. ನನ್ನ ಪೂರ್ವಾಪರಗಳನ್ನೇನೂ ಕೇಳದೆ ಒಂದು ರಾತ್ರಿಗೆ ಮಲಗಲು ಬೇಕಾದರೆ ಜಾಗಸಿಗುತ್ತದೆ, ಕೊಡಿಸುತ್ತೇನೆ ಬನ್ನಿ ಎಂದ. ಬಹುಶಃ ಸ್ಟೇಷನ್ನಿನ ಯಾವುದಾದರೂ ಬೆಂಚು ಖಾಲಿಯಿದ್ದರೆ, ಇನ್ನು ಮೂರ್‍ನಾಲ್ಕು ಘಂಟೆಗೆ ಯಾಕೆ ಮಲಗಲು ಜಾಗ ಎಂದುಬಿಡುತ್ತಿದ್ದೆನೋ ಏನೋ. ಎಲ್ಲ ಬೆಂಚುಗಳಲ್ಲೂ ಕೂಲಿಯವರೇ ಮೈಚೆಲ್ಲಿಕೊಂಡಿದ್ದರಿಂದ, ಆತನನ್ನು ನಂಬಿ ಆಯ್ತು ಸ್ವಲ್ಪ ಸುಲಭದರದಲ್ಲಿ ಆದರೆ ಅನುಕೂಲ ಎಂದು ಅವನ ಹಿಂದೆ ನಡೆದೆ. ಹಿಂದಿ, ಮರಾಠಿ, ಉರ್ದು ಜೊತೆಗೆ ಕನ್ನಡವೂ ಬರುತ್ತದೆಂದು ಆತ ಅರೆಬರೆ ಕನ್ನಡದಲ್ಲಿ ಮಾತಾಡಿಸಿದ. + +ನೋಡಿ ಹೇಗೂ ನಿಮ್ಮಂಥವರು ಒಂದು ರಾತ್ರಿ ಕಳೆಯುವ ತುರ್ತಿನಲ್ಲಿರುತ್ತಾರೆ ಅಂತ ಇಲ್ಲಿ ಸ್ಟೇಷನ್‌ಬಳಿಯ ಹೋಟೆಲ್‌ನವರು ಒಂದು ರಾತ್ರಿಗೆ ಮೂರು ನಾಲ್ಕುನೂರು ಕೀಳುತ್ತಾರೆ. ಹೇಗೆ ಸುಲಿಗೆ ಮಾಡುತ್ತಾರೆ ನೋಡಿ. ಬಡವರು ಬದುಕುವುದೇ ಕಷ್ಟ. ನಾವು ದಾರಿ ತಪ್ಪಿ ಈ ಮುಂಬೈ ಮಾಯಾಂಗನೆಯ ಸೆರಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಹಳ್ಳಿಬಿಟ್ಟು ಬಂದ ನಮ್ಮಂಥಾ ಅವಿದ್ಯಾವಂತರು ಈ ರಾಕ್ಷಸ ಸಿಟಿಯ ಹೊಟ್ಟೆ ಸೇರಿಕೊಂಡು ಕಾಲಹಾಕುವುದು ಹೇಗೆ ಎಂದು ಆತ ಮುಂಬೈನ ವಿದ್ಯಮಾನಗಳನ್ನು ಮಾತನಾಡುವ ಹೊತ್ತಿಗೆ ಮತ್ತೆ ನಾನು ಸ್ಟೇಷನ್ನಿನ ಹೊರಗೆ ಒಂದು ರಿಕ್ಷಾದ ಬಳಿ ಬಂದಿದ್ದೆ. ಪೋರ್ಟರು ರಿಕ್ಷಾದವನೊಂದಿಗೆ ಮರಾಠಿಯಲ್ಲಿ ಮಾತಾಡಿದ. ಅವನು ನನ್ನನ್ನು ಪ್ರೀತಿಯಿಂದ ನೋಡಿ, ಒಂದು ಜಾಗ ತೋರಿಸುತ್ತೇನೆ. ಬೆಳಿಗ್ಗೆ ರೈಲು ಬರುವ ಹೊತ್ತಿಗೆ ನೀವು ಅಲ್ಲಿಂದ ಇಲ್ಲಿಗೆ ನಡೆದುಕೊಂಡಾದರೂ ಬಂದುಬಿಡಬಹುದು. ಬಾಡಿಗೆಯೂ ಕಡಿಮೆಯೆ. ನೀವು ಒಂದಿಷ್ಟು ನಿದ್ದೆಮಾಡಿದಂತಾಗುತ್ತದೆ ಎಂದು ನನ್ನ ಹಿತಚಿಂತನೆ ಮಾಡುವವನಂತೆ ಮಾತಾಡಿದ. ಪೋರ್ಟರ್, ನೀವು ಅಷ್ಟು ಮಾಡುವುದು ಒಳ್ಳೆಯದು. ಬೇಕಾದರೆ ಈಗಲೇ ಹೇಳಿದ್ದರೆ, ಈ ರಿಕ್ಷಾಭಯ್ಯ ಬೆಳಿಗ್ಗೆ ನೀವಿರುವಲ್ಲಿಗೇ ಬಂದು ವಾಪಸು ಪಿಕಪ್ ಮಾಡುತ್ತಾನೆ ಎಂತಲೂ ಹೇಳಿದ. ನನಗೆ ಅವರ ಮಾತುಕತೆ ಸ್ವಲ್ಪ ಸಮಾಧಾನ ತಂದಿತು. ದಿಕ್ಕೆಟ್ಟ ಪ್ರದೇಶದಲ್ಲಿ ಒಂದೆರಡು ಒಳ್ಳೆಯ ಮಾತಾಡುವವರು, ದಾರಿತೋರಿಸುವವರು ಸಿಕ್ಕಿದರಲ್ಲಾ ಎಂದು! ಈ ಸಮಾಧಾನದಲ್ಲಿ ಪೋರ್ಟರಿಗೆ ಹತ್ತು ರೂ ಕೊಟ್ಟೆ. ತಲೆಯ ಮೇಲೆ ಸಾಮಾನು ಹೊರದೆಯೇ ಹತ್ತು ರೂ ಸಿಕ್ಕಿದ್ದಕ್ಕೆ ಪೋರ್ಟರ್ ಒಂದು ಸಂತೋಷದ ನಮಸ್ಕಾರ ಹೇಳಿ ಮುಖದ ತುಂಬನಕ್ಕು ತಕ್ಷಣವೇ ಜಾಗ ಖಾಲಿಮಾಡಿದ. + +ರಿಕ್ಷಾದವನು ಮೀಟರು ಹಾಕದೇ ಇಲ್ಲೇ ಹತ್ತಿರ,  ಮಿನಿಮಮ್‌ಕೊಟ್ಟರೆ ಸಾಕು ಎಂದು ಗಾಡಿ ಸ್ಟಾರ್ಟ್ ಮಾಡಿದ. ಸುಮಾರು ಮೂರು ಕಿಲೋಮೀಟರು ಬಂದಿರಬೇಕು. ಅಲ್ಲೊಂದು ಕಟ್ಟುತ್ತಿದ್ದ ಕಟ್ಟಡ. ಆದರೆ ಅದರ ಕಾಮಾಗಾರಿ ನಿಂತು ಎಷ್ಟೋ ವರ್ಷಗಳಾದಂತೆ ಕಾಣುತ್ತಿತ್ತು. ಕೆಳಗೆ ಅಲೆಮಾರಿ ಸಮೂಹಗಳೋ ಅಥವಾ ಮುಂಬಯಿಯಲ್ಲಿ ಕೂಲಿಗೆಂದು ಬಂದು ನಿಲ್ಲಲು ನೆಲೆ ಇಲ್ಲದವರೋ ವಾಸಮಾಡಿಕೊಂಡಿದ್ದರು. ದಿನನಿತ್ಯ ಕಲ್ಲು ಗುಂಡಿನ ಬೆಂಕಿ ಒಲೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಕಟ್ಟಡದ ಬಹುಭಾಗ ಮಸಿಯಿಂದ ಆವೃತ್ತವಾಗಿತ್ತು. ಬರಿ ಇಟ್ಟಿಗೆಯಲ್ಲಿದ್ದ ಕಟ್ಟಡದ ಸಿಮೆಂಟಿನ ಪ್ಲಾಸ್ಟರೆಲ್ಲ ಕಿತ್ತುಬಿದ್ದಿತ್ತು. ಅಲ್ಲಿದ್ದವರು ತಂತಮ್ಮ ಸಂಸಾರವನ್ನು ಬೇರ್ಪಡಿಸಿಕೊಳ್ಳಲು ಅಂಚು ಸೇರಿಸಿ ಹೊಲೆದ ಪ್ಲಾಸ್ಟಿಕ್ ಷೀಟುಗಳನ್ನು ಕಟ್ಟಿಕೊಂಡಿದ್ದರು. ನಾನು ಈ ಪೂರ್ಣವಾಗದ ಪುರಾತನ ಕಟ್ಟಡ ಸೇರುವ ಹೊತ್ತಿಗೆ ಹನ್ನೆರಡು ಘಂಟೆ ಸಮೀಪಿಸುತ್ತಿತ್ತು. ರಿಕ್ಷಾದವನು ನೀವು ಬೆಳಗಿನವರೆಗೆ ಇಲ್ಲಿ ಇರಬಹುದು ಎಂದ. ನಾನು ದಿಗ್ಭ್ರಮೆಗೊಂಡೆ. ಬೆಳಗಿನವರೆಗಲ್ಲ, ಇನ್ನೊಂದೆರಡು ಘಳಿಗೆಯಾದರೂ ಉಳಿಯುವುದು ಸಾಧ್ಯವೆ ಎನಿಸಿತು. ಹಾಗೆನೋಡಿಕೊಂಡರೆ ನನ್ನ ಬಳಿ ಹೆಗಲ ಬ್ಯಾಗೊಂದು ಬಿಟ್ಟರೆ ಏನೂ ಇರಲಿಲ್ಲ. ಆದರೆ ತಂತಮ್ಮ ಪ್ಲಾಸ್ಟಿಕ್ ಗೂಡಿನಲ್ಲಿ ಮಕ್ಕಳೊಡನೆ ಹೇಗೋ ಜಾಗಮಾಡಿಕೊಂಡು ರಾತ್ರಿಕಳೆಯುತ್ತಿರುವ ಇವರ ಮಧ್ಯೆ ನಾನೆಲ್ಲಿ ಮಲಗುವುದು ಎಂಬ ಆತಂಕದಲ್ಲಿ ರಿಕ್ಷಾದವನನ್ನು ಕೇಳಿದೆ. ಅರೆ ಭಾಯ್‌ಸಾಬ್ ನೀವು ಇರಬೇಕಾದುದು ಕೆಳಗಲ್ಲ, ನೋಡಿ ಅಲ್ಲಿ ಮೇಲೆ ಒಂದು ಚಿಕ್ಕ ಕ್ಯಾಂಡಲ್ ಉರಿಯುತ್ತಿದೆಯಲ್ಲ ಅಲ್ಲಿ ಮೇಟಿ ಮಲಗಿರುತ್ತಾನೆ. ಅವನನ್ನು ಎಬ್ಬಿಸಿ, ನಿಮಗೆ ಮಲಗಲು ಮೇಲೆ ಫಸ್ಟ್‌ಕ್ಲಾಸ್ ಜಾಗಮಾಡಿಕೊಡುತ್ತಾನೆ. ಹೇಗೂ ಸೆಖೆ. ಮೇಲೆ ನೀವೊಂದಷ್ಟು ಹೊತ್ತು ಆರಾಮ ಮಲಗಿ.  ಬೇಗ ಎದ್ದರೆ ಇಲ್ಲಿಂದಲೇ ನೇರ ಶಿವಾಜಿಸ್ಟೇಷನ್‌ಗೆ ನಡೆದುಕೊಂಡು ಬರಬಹುದು. ಇಲ್ಲಾ ಒಂದಿಷ್ಟು ನಿದ್ದೆಹೆಚ್ಚಾಗಿ ಮಾಡಿ ತಡವಾಗಿ ಎದ್ದಿರೆಂದರೆ ಒಂದು ರಿಕ್ಷಾ ಮಾಡಿ ರೈಲು ಹಿಡಿಯಬಹುದು ಎಂದು ತುಂಬ ಆತ್ಮೀಯವಾಗಿ ಮಾತಾಡಿದ. + +ಅನಾನುಕೂಲವಿದ್ದರೆ ಇದೇ ರಿಕ್ಷಾದಲ್ಲಿ ಸ್ಟೇಷನ್ ತಲುಪಿಬಿಡೋಣವೆಂದು ಮಹಡಿಯ ದಾರಿಯ ಕಡೆ ಒಂದೆರಡು ಹೆಜ್ಜೆ ಹಾಕಿದೆ. ರಿಕ್ಷಾದವನು ಸಾಬ್ ನನಗೂ ಹೆಂಡಿರುಮಕ್ಕಳಿದ್ದಾರೆ. ಈಗಾಗಲೇ ಹನ್ನೆರಡು ಹೊಡೆಯುತ್ತಿದೆ. ಮನೆ ಸೇರಬೇಕು. ಹೊಟ್ಟೆಪಾಡು ದೊಡ್ಡದಾಗಿ ನಮಗೆ ಹಗಲು ರಾತ್ರಿ ಒಂದೇ ಆಗಿಬಿಟ್ಟಿದೆ. ನನ್ನ ರಿಕ್ಷಾ ಚಾರ್ಜು ಕೊಟ್ಟುಬಿಡಿ. ನೀವು ನಿಮ್ಮ ಮೊಕ್ಕಾಮು ನೋಡಿಕೊಂಡು ವಾಪಸು ಬರುವವರೆಗೆ ನನಗೆ ನಿಲ್ಲಲು ಪುರುಸೊತ್ತಿಲ್ಲ. ಕಾಸುಬಿಸಾಡಿದರೆ ಹೆಂಡಿರ ಮಕ್ಕಳ ಮುಖ ನೋಡಲು ಸಹಾಯವಾಗುತ್ತದೆ ಎಂದ. ರಿಕ್ಷಾದವನು ಈ ಮಾತುಗಳನ್ನಾಡುವಾಗ ಪ್ರಯೋಗಿಸುತ್ತಿದ್ದ ಪದಗಳಲ್ಲಿದ್ದ ವಿನಯ ಆತನ ಧ್ವನಿಯಲ್ಲಿ ಇರಲಿಲ್ಲವೆಂದು ನನಗೆ ಸ್ಪಷ್ಟವಾಗಿ ಗೋಚರವಾಯಿತು. ಆದರೂ ಅವನು ದಿನರಾತ್ರಿಯೆಲ್ಲ ರಸ್ತೆಯಲ್ಲಿ ಹೊತ್ತುಕಳೆದೋ, ಮನೆಸೇರದೆಯೋ, ಇಲ್ಲಾ ಹಸಿದೋ ಧ್ವನಿ ಕೊಂಚ ರೂಕ್ಷ ಸ್ವರೂಪಕ್ಕೆ ತಿರುಗುತ್ತಿರಬಹುದೆಂದು ಭಾವಿಸಿ ಇಪ್ಪತ್ತರ ನೋಟು ತೆಗೆದು ಆತನ ಕೈಯ್ಯಲ್ಲಿರಿಸಲು ಹೋದೆ. ಅಷ್ಟು ಹೊತ್ತಿಗಾಗಲೇ ನಾನು ಅಂಥ ಸ್ಥಿತಿವಂತನಲ್ಲವೆಂಬುದನ್ನು ನನ್ನ ಜೇಬುಗಳ ತಪಾಸಣೆಯಲ್ಲೇ ಗ್ರಹಿಸಿದ. ಇಷ್ಟು ಹೊತ್ತಿನಲ್ಲಿ ಇಂಥವರನ್ನು ಕಟ್ಟಿಕೊಂಡು ತಿರುಗಿದರೆ ಈ ಮುಂಬೈಯಲ್ಲಿ ಬಾಯಿಗೆ ಬಚ್ಚಲು ನೀರೇ ಗತಿ ಎಂದು ನನ್ನ ಕೈಯ್ಯ ನೋಟಿಗೆ ದೃಷ್ಟಿಯನ್ನೇ ಕೊಡದೆ ಇನ್ನೆತ್ತಲೋ ತಿರುಗಿ ‘ನೀವೇ ಇಟ್ಕಳಿ. ಬೆಳಗಿನ ಎರಡು ಪೀಸು ಬ್ರೆಡ್ಡಿಗೆ ಬರುತ್ತದೆ’ ಎಂದ. ನಾನು ಮಾತಿಲ್ಲದೆ ಇನ್ನೆಷ್ಟು ಕೊಡಬೇಕು ಎನ್ನುವಂತೆ ನೋಡಿದೆ. ಇಷ್ಟುಹೊತ್ತಿನಲ್ಲಿ ಕರೆದುಕೊಂಡು ಬಂದದ್ದಕ್ಕೆ ಡಬಲ್‌ಚಾರ್ಜು. + +ಚಾರ್ಜು ಇಪ್ಪತೈದು. ಎರಡರಷ್ಟು ಅಂದರೆ ಐವತ್ತು. ಮಲಗುವ ಜಾಗತೋರಿಸಿದ್ದಕ್ಕೆ ಭಕ್ಷೀಸು ಇಪ್ಪತ್ತೈದು. ಹತ್ತುರೂಪಾಯಿ ಬೇಡ. ಅರುವತ್ತೈದಾದರೂ ಕೊಡಿ. ಸ್ವಲ್ಪ ಬೇಗ ಕೊಟ್ಟರೆ ದೊಡ್ಡ ಸಹಾಯವಾಗುತ್ತದೆ. ನಾನು ಅಷ್ಟುಹೊತ್ತಿನಿಂದ ನಿಮಗೆ ಹೇಳಿದ್ದನ್ನೇ ಹೇಳುತ್ತಿದ್ದೇನೆ. ಕೊಟ್ಟುಬಿಟ್ಟು ಮಹಡಿಗೆ ಹೋಗಿ ನಿದ್ದೆಮಾಡಿ, ನಿಮಗೂ ಟೈಮಿಲ್ಲ ಎಂದ ರಿಕ್ಷಾದವನು ವಾಕ್ಯದಿಂದ ವಾಕ್ಯಕ್ಕೆ ಧ್ವನಿಯಲ್ಲಿ ಗಡಸಾಗುತ್ತಿದ್ದ. ಐವತ್ತು ಕೊಟ್ಟರೆ ಆಗಬಹುದೇ ಎಂದೆ. ಅವನು ವ್ಯಂಗ್ಯವಾಗಿ ನಕ್ಕು ಮುಂಬೈಗೆ ಬಂದದ್ದು ಯಾಕೆ? ರಸ್ತೆ ಬದಿ ವ್ಯಾಪಾರ ಮಾಡುವುದಕ್ಕಾ ಎಂದು ಏಕವಚನಕ್ಕೆ ತಿರುಗಿ, ನಿನ್ನ ಪುರಾಣ ನನಗೆ ಬೇಡ. ಮುಂಬೈಗೆ ದಿನ ಬೆಳಗಾದರೆ ರಸ್ತೆಬದಿ ವ್ಯಾಪಾರ, ಬೂಟ್‌ಪಾಲೀಷು, ಹಜಾಮತಿ ಅಂತ ಸಾವಿರಾರು ಜನ ಬರುತ್ತಾರೆ. ನನಗೆ ಗೊತ್ತು, ಅದರಲ್ಲಿ ನೀನು ಒಬ್ಬ. ಸದ್ಯ ನನ್ನ ಕಾಸು ತೆಗೆ ಎಂದ ಖಡಾಖಂಡಿತವಾಗಿ. ನಾನು ಐವತ್ತರ ಮೇಲೆ ಇನ್ನು ಹತ್ತರ ನೋಟು ಸೇರಿಸಿದೆ. ಐದು ರೂ ಕಡಿಮೆ ಮಾಡಿದ್ದಕ್ಕೋ ಆತುರಕ್ಕೋ ನನ್ನ ಕೈಯ್ಯ ದುಡ್ಡುಕಸಿದು ವಾಪಸಾದ. ರಿಕ್ಷಾ ಸ್ಟಾರ್ಟ್ ಮಾಡಿಕೊಂಡು ಒಂದೇಸಮ ರಸ್ತೆಯಲ್ಲಿ ಬಿರುಸಾಗಿ ಓಡಿಸಿ ಮಾಯವಾದ. + +ನಾನು ಮಹಡಿ ಹತ್ತುವುದೋ, ಬಂದ ದಾರಿಯಲ್ಲಿ ವಾಪಸು ನಡೆದು ಸ್ಟೇಷನ್ ಸೇರುವುದೋ ಎಂದುಕೊಳ್ಳುವಲ್ಲಿ, ಒಂದು ಘಂಟೆಯಾದರೂ ಈ ಹಂತದ ಕೆಳಗಿನ ಸಂದಿಯಲ್ಲಿ ಮಲಗಬಹುದೇ ಎನಿಸಿತ್ತು. ನಿದ್ದೆಯ ಭಾರ ನನ್ನ ದೇಹವನ್ನು ಅಷ್ಟು ಅವುಕುತ್ತಿತ್ತು. ಇಷ್ಟರಲ್ಲಿ ಮಹಡಿಯ ಮೇಲಿಂದ ಒಬ್ಬ ವ್ಯಕ್ತಿ ನನ್ನ ಕಡೆ ಇಣುಕಿ ನೋಡಿ ಮೇಲಕ್ಕೆ ಕರೆದ. ಹೋಗಬೇಕೋ ಬೇಡವೋ ಎಂದುಕೊಳ್ಳುತ್ತಿರುವಲ್ಲಿ ಆತನೇ ಕೆಳಗೆ ಬಂದು ಮೇಲೆ ಬರುವಂತೆ ಒತ್ತಾಯಿಸಿದ. ಮೇಲೇರಿಹೋದೆ. ಅಲ್ಲಿ ಇನ್ನಿಬ್ಬರು ಸಣ್ಣ ಕ್ಯಾಂಡಲು ಹಚ್ಚಿಕೊಂಡು ಇಸ್ಪೀಟಿನಲ್ಲಿ ತೊಡಗಿದ್ದರು. ರಿಕ್ಷಾದವನು ನಿಮಗೆ ಇಲ್ಲಿ ಮಲಗಲು ಜಾಗ ತೋರಿಸುತ್ತೇನೆಂದು ಕರೆದುಕೊಂಡು ಬಂದನಲ್ಲವೆ? ಆ ಬದ್ಮಾಷ್‌ಗಳನ್ನೆಲ್ಲ ನೀವು ನಂಬಿ ಬರಬಾರದಿತ್ತು. ಸ್ಟೇಷನ್ನಿನಿಂದ ಅಡ್ಡದಾರಿಯಲ್ಲಿ ಬಂದರೆ ಇದು ಬರಿ ನಡಿಗೆಯ ದಾರಿ. ರಿಕ್ಷಾ ಹತ್ತಿದರೆ ಮೂರ್‍ನಾಲ್ಕು ಕಿಲೋಮೀಟರು. ಯಾರಾದರೂ ಸರಿಯಾದ ಪೋರ್ಟರಾಗಿದ್ದರೆ ನಿಮಗೆ ನಡಿಗೆಯ ದಾರಿ ತೋರಿಸುತ್ತಿದ್ದ. ಅವನ್ಯಾವನೋ ಅಡಕಸಬಿ ಪೋರ್ಟರು ನಿಮ್ಮ ದಾರಿತಪ್ಪಿಸಿ ರಿಕ್ಷಾ ಹತ್ತಿಸಿರಬೇಕು. ಆವೋ ಸಾಬ್, ಕೊಂಚ ನಿಧಾನಕ್ಕೆ ಮೇಲೆ ಬನ್ನಿ, ಆತುರಬೇಡ. ನಿಮಗೆ ಇದು ಹೊಸಜಾಗ. ಬೇಕಾದರೆ ನಿಲ್ಲಿ, ಕ್ಯಾಂಡಲು ತರುತ್ತೇನೆ ಎಂದೆಲ್ಲ ಹೇಳಿದ. ಆದರೆ ಬೀದಿಯ ಲೈಟಿನ ಬೆಳಕು ಹಂತಗಳಮೇಲೆ ಎರಡನೆಯ ಮಹಡಿಯಲ್ಲಿ ನಿಚ್ಚಳವಾಗಿ ಬಿದ್ದಿತ್ತು. ಏಕೆಂದರೆ ಇಡಿ ಕಟ್ಟಡದಲ್ಲಿ ಗೋಡೆಗಳಿಲ್ಲದೆ ಕಂಭಗಳು ಮತ್ತು ತಾರಸಿಮಾತ್ರವಿತ್ತು. ಇಸ್ಪೀಟಿನಲ್ಲಿ ತಲ್ಲೀನರಾದವರು ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಕೈಯ್ಯಲ್ಲಿ ಕ್ಯಾಂಡಲ್ ಹಿಡಿದುಕೊಂಡವನು, ಬನ್ನಿ ನೀವು ಮಲಗುವ ಜಾಗ ತೋರಿಸುತ್ತೇನೆ ಎಂದ. ನಾನು ಚಾಪೆಯಾದರೂ ಸರಿ ಒಂದು ಘಳಿಗೆ ತಲೆಕೊಟ್ಟರೆ ಸಾಕು ಎಂದು ಅವನನ್ನು ಹಿಂಬಾಲಿಸಿದೆ. ಅಲ್ಲಿಯೂ ಪ್ಲಾಸ್ಟಿಕ್ ಹಾಳೆಗಳಲ್ಲಿ ಮಾಡಿದ ಕಂಪಾರ್ಟ್‌ಮೆಂಟ್ ಜಾಗಗಳು. ಒಂದೊಂದರಲ್ಲಿ ಕಿತ್ತುಹೋದ, ಕಮಟು ಹಿಡಿದ ಹಾಸಿಗೆ. ಅಂಥದ್ದೇ ದಿಂಬು. ಅದರ ಪಕ್ಕ ಒಂದು ಕ್ಯಾಂಡಲು, ಬೆಂಕಿಪೆಟ್ಟಿಗೆ. ನಿದ್ರೆಯ ಅನುಕೂಲ ತೋರಿಸಿದನಂತರ ನಿಮ್ಮ ಬೆಳಗಿನ ಬಹಿರ್ದೆಸೆಗೆ ಒಂದು ಬಕೀಟು ನೀರು ಕೊಡುವ ವ್ಯವಸ್ಥೆ ಇದೆ. ಈಗಲೇ ನೀವು ಬಹುದೂರ ಪ್ರಯಾಣದವರಾಗಿದ್ದರೆ ಮುಖಮಾರ್ಜನ, ಬಹಿರ್ದೆಸೆ ಮುಗಿಸಿ ಮಲಗಬಹುದು. ಬೆಳಗ್ಗೆ ಎಂಟು ಘಂಟೆಯವರೆಗೆ ಇಲ್ಲಿರಲು ಅವಕಾಶ. ಆಮೇಲೆ ಖಾಲಿಮಾಡಬೇಕು. ಮತ್ತೆ ರಾತ್ರಿಪಾಳಿ ಕೆಲಸ ಮಾಡಿದವರು ಇಲ್ಲಿ ರೆಸ್ಟಿಗೆ ಬರುತ್ತಾರೆ ಎಂದ. + +ನಾನು ಕೆಳಗೆ ಇಳಿಯುವ ಉದ್ದೇಶದಲ್ಲಿದ್ದೆ. ಅವನು ಬನ್ನಿ, ಬನ್ನಿ ನಿಮ್ಮ ಮುಖಮಾರ್ಜನಕ್ಕೆ ನೀರಿನ ವ್ಯವಸ್ಥೆ ಮಾಡುವೆ. ನೋಡಿದರೆ ಬಹಳದೂರದಿಂದ ಪ್ರಯಾಣ ಮಾಡಿ ಬಳಲಿದವರಂತೆ ಕಾಣುತ್ತೀರಿ ಎಂದ. ಅವನ ಕರುಣೆಗೆ ಪಾತ್ರನಾಗುವ ಅಗತ್ಯವೇ ಇಲ್ಲ ಎಂದುಕೊಂಡು ಅವನೊಂದಿಗೆ ಹಂತ ಇಳಿದೆ. ಚರಂಡಿಯ ಮೇಲೆ ಹಾಸಿದ್ದ ಚಪ್ಪಡಿಗಳ ಮೇಲೆ ಕರೆತಂದ. ಅಲ್ಲೂ ಸುತ್ತ ತೆಂಗಿನ ಮಟ್ಟಾಳೆಮರೆ ಇತ್ತು. ಎರಡು ಚಪ್ಪಡಿಗಳ ಮಧ್ಯೆಬಿಟ್ಟಿದ್ದ ಸಂದಿ ತೋರಿಸಿ ನೋಡಿ ಅದೇ ಮಲಮೂತ್ರದ ಜಾಗ. ಅಲ್ಲೇ ಒಂದು ಬಕೀಟು ನೀರಿದೆ. ಎಲ್ಲ ಅದರಲ್ಲೇ ಮುಗಿಸಬೇಕು. ಎಕ್ಸ್‌ಟ್ರಾ ಬಕೇಟ್ ನೀರು ಇಲ್ಲಾಂತಲ್ಲ. ಅದಕ್ಕೂ ಚಾರ್ಜು. ನಿಮ್ಮ ಜೇಬಿನ ಅನುಕೂಲ ಹೇಗೆ ನೋಡಿಕೊಳ್ಳಿ. ಹನ್ನೆರಡು ಹೊಡೆಯುತ್ತಿದೆ. ಇನ್ನು ನೀವು ಮಲಗುವುದು ವಾಸಿ ಎಂತಲೂ ನನ್ನನ್ನು ಪುಸಲಾಯಿಸಿದ. ಅಹಮದಾಬಾದ್ ಎಕ್ಸ್‌ಪ್ರೆಸ್‌ಗೆ ಹೋಗಬೇಕು ಎಂದೆ. ಅವನು ಓಹ್ ಅದು ಮುಂಬಯಿಯಿಂದ ಬರೋಡಾಮಾರ್ಗ ಹೋಗುವ ಗಾಡಿ. ಐದು ಘಂಟೆಗೆ ಇದೆ. ಹಾಗಾದರೆ ನೀವು ರೆಸ್ಟ್ ತೆಗೆದುಕೊಳ್ಳುವುದೇ ಸೈ, ನಡೆಯಿರಿ ಎಂದ. ನಾನು ಬಹಿರ್ದೆಸೆಯ ಜಾಗದಿಂದ ಮತ್ತೆ ಮೇಲೆ ಹತ್ತುವ ಬದಲು ಒಂದು ಘಳಿಗೆ ಅಲ್ಲೇ ನಿಂತೆ. ಅವನ ಮನಸ್ಸಿಗೆ ಏನು ಬಂತೋ. ಅತ್ತಿತ್ತ ನೋಡಿ ಮೆಲುದನಿಯಲ್ಲಿ ನೋಡಿ ನಿಮಗೆ ಹೆಂಗಸರು ಬೇಕಾದರೂ ಸಿಕ್ಕುತ್ತಾರೆ. ಸಿನಿಮಾ ನಟಿಯರಲ್ಲ ಎಂದು ನಕ್ಕು, ಇಲ್ಲೇ ಇರುವ ಕೂಲಿ ಹೆಂಗಸರು. ಬಿಡಿ, ಸಿನಿಮಾ ನಟಿಯರೇನು ಮಹಾ, ಒಣಚಕ್ಕುಲಿಗಳು. ಹಲ್ಲು ಕಿರಿಯುವುದು, ಕೈಕಾಲು ಕುಣಿಸುವುದೊಂದು ಬಿಟ್ಟರೆ ಅವರ ಮೈಯ್ಯಲ್ಲಿ ಇನ್ನೇನು ಸಿಗುತ್ತದೆ ಹೇಳಿ. ಕೂಲಿ ಹೆಂಗಸರೆಂದರೆ ಹೇಗನ್ನುತ್ತೀರಿ. ನಾನು ಹೇಳಬೇಕಾದದ್ದಿಲ್ಲ. ನೀವೇ ನೋಡಿ ಹೇಳಿ, ರೆಡಿ ಇದ್ದಾರೆ. ನಿಮ್ಮ ಕಾಸು ನೋಡಿಕೊಳ್ಳಿ ಎಂದ. ನಾನು ಹಾಸಿಗೆ ಬಾಡಿಗೆ ಎಷ್ಟು ಎಂದೆ. ಅವನು ಖಾಲಿಹಾಸಿಗೆಗೆ ನೂರು. ಹಾಸಿಗೆ ಭರ್ತಿಇರಬೇಕು ಎಂದರೆ ನಾಲ್ಕುನೂರು. ಅದು ಹೆಂಗಸಿನ ರೇಟು ಮಾತ್ರ. ಹಾಸಿಗೆ ಫ್ರೀ ಎಂದ. + +ರಾತ್ರಿ ಹತ್ತರವರೆಗೆ ಮುಂಬಯಿಯ ಸೆಖೆಗೆ ಬೆವರು ಸುರಿಯುತ್ತಲೇ ಇತ್ತು. ಹನ್ನೆರಡರ ಮೇಲೆ ಸಮುದ್ರದ ತಂಗಾಳಿ ಬೀಸಿಬರುತ್ತಿತ್ತು. ಮೈ ತಣ್ಣಗಾಗಬೇಕಾದ ಸಂದರ್ಭದಲ್ಲಿಯೂ ಬೆವರಿದೆ. ಬೆವರಿದ ಮೇಲೆ ಮೈಯ್ಯಲ್ಲಿ ಕೊಂಚ ನಡುಕವೂ ಉಂಟಾಯಿತು. ಭಯದಿಂದಲೊ, ಹಸಿವಿನಿಂದಲೊ, ಆಯಾಸದಿಂದಲೋ, ಆಗಲೇ ಹುಟ್ಟಿದ ಹೆಣ್ಣಿನ ವಿಚಾರದಿಂದಲೊ ಗೊತ್ತಾಗಲಿಲ್ಲ. ಮಹಡಿ ಹತ್ತುವ ಯಾವ ಉತ್ಸಾಹವು ಇರಲಿಲ್ಲ. ನನ್ನ ಪಾಡಿಗೆ ನಾನು ರಸ್ತೆಗೆ ಇಳಿದೆ. ಬಾಡಿಗೆದಾರನಿಗೆ ನಾನು ಅಲ್ಲಿ ರಾತ್ರಿ ಕಳೆಯುವ ನಿರುತ್ಸಾಹ ಅರ್ಥವಾಗಿ ಹೋಯಿತು. ‘ಗರೀಬೋಂಕಾ ಕುತ್ತೆ… ಸುಮ್ಮನೆ ನನ್ನ ಟೈಮ್ ವೇಸ್ಟ್‌ಮಾಡಿಸಿದ…’ ಎಂದು ನನ್ನ ಕಡೆಗೆ ಜೋರಾಗಿ ಅರಚಿದ. ನಾನು ದೇಹದಲ್ಲಿ ಇದ್ದಬದ್ದ ಶಕ್ತಿಯನ್ನೆಲ್ಲ ಕೂಡಿಸಿಕೊಂಡು ಸ್ಟೇಷನ್ನಿನವರೆಗೆ ನಡೆದೆ. ರಸ್ತೆಯಲ್ಲಿ ವಿರಳ ಜನಸಂಚಾರವಿತ್ತು. ಕೇಳಿಕೊಂಡು ಮೂರು ಕಿಲೋಮೀಟರು ಕ್ರಮಿಸಿದೆ. ಮತ್ತೆ ಸ್ಟೇಷನ್ ಒಳಭಾಗದಲ್ಲಿ ನಡೆದಾಗ ಅಲ್ಲಿದ್ದ ದೊಡ್ಡಗಡಿಯಾರದಲ್ಲಿ ಸಮಯ ರಾತ್ರಿ ಎರಡು ದಾಟುತ್ತಿತ್ತು. ಎಷ್ಟೋಜನ ಬೆಂಚು ಸಿಕ್ಕದವರು ಫ್ಲಾಟ್‌ಫಾರಂ ಮೇಲೆ ಮಲಗಿದ್ದರು. ಹೆಗಲಬ್ಯಾಗಿನಿಂದ ಪಂಚೆತೆಗೆದು ಹಾಸಿ, ತಲೆಗೆ ಅದೇ ಬ್ಯಾಗು ಕೊಟ್ಟೆ. ಮಲಗುವಲ್ಲಿ ಕೊಂಚ ಆತಂಕವಿತ್ತು. ನನಗಾಗಿದ್ದ ಆಯಾಸದಿಂದ ಬೆಳಗಿನ ಐದುಘಂಟೆಗೆ ಮುನ್ನ ಎಚ್ಚರವಾಗದೇ ರಾತ್ರಿಯ ರೈಲಿನಂತೆ ಬೆಳಗಿನದೂ ತಪ್ಪಿದರೆ ಹೇಗೆ ಎನಿಸಿತು. ಒಮ್ಮೆ ಎಚ್ಚರವಾದರೂ ಸರಿ, ಎದ್ದು ಕೂತು ರೈಲಿಗೆ ಕಾಯುವುದೇ ಸೈ ಎಂದುಕೊಂಡೇ ಮಲಗಿದೆ. ಕ್ಷಣಮಾತ್ರದಲ್ಲಿ ಗಾಢನಿದ್ರೆಗೆ ಬಿದ್ದೆನಾದರೂ ಎಚ್ಚರವಾದದ್ದು ಬೆಳಗಿನ ನಾಲ್ಕುಘಂಟೆಗೆ! + +ಮುಂಬೈನ ಲೋಕಲ್ ಟ್ರೈನ್ ನಾನು ಮಲಗಿದ್ದ ಫ್ಲಾಟ್‌‌ಫಾರ್ಮ‌ಗೆ ಬಂದು ನಿಂತುಬಿಟ್ಟಿತು. ಇಳಿದ ಜನಸಮೂಹವೆಲ್ಲ ಇವನ್ಯಾವನೋ ಗತಿಗೆಟ್ಟ ತಿರುಪೆಯವ ಪವಡಿಸಿಬಿಟ್ಟಿದ್ದಾನಲ್ಲ ಎಂದುಕೊಂಡು ನನ್ನ ಅಡ್ಡವಾದ ದೇಹವನ್ನು ಹೊಸ್ತಿಲಂತೆ ದಾಟುವಲ್ಲಿ, ಒಬ್ಬನ ಬೂಟು ನನ್ನ ತಲೆಗೆ ತಾಗಿತ್ತು. ಆಗಲೇ ಎಚ್ಚರವಾದದ್ದು. ಅಸಂಖ್ಯಾತ ಕಾಲುಗಳು ನನ್ನ ದೇಹದ ಮೇಲೆ ಸಮುದ್ರದ ಅಲೆಯಂತೆ ಹಾಯುತ್ತಿವೆ. ಎದ್ದರೆ ಕಷ್ಟ ಎಂದು ಹಾಗೆಯೇ ಜನಸಮೂಹ ಹಾಯುವವರೆಗೆ ಮೈಯ್ಯನ್ನೆಲ್ಲ ಮುದುರಿಕೊಂಡೆ. ನನ್ನ ಹಾಯುತ್ತಿದ್ದವರಲ್ಲಿ ಕೆಲವರು ಆತುರಾತುರದಲ್ಲಿ ಇನ್ನೊಂದು ರೈಲು, ಇಲ್ಲಾ ಸ್ಟೇಷನ್ನಿನಾಚೆಯ ಬಸ್ಸು ಹಿಡಿಯಲು ಓಡುತ್ತಿದ್ದರು. ಮತ್ತೆ ಕೆಲವರ ಗುಂಪು ಯಾವ್ಯಾವುದೋ ಮರಾಠಿ, ಸಂಸ್ಕೃತ ಭಜನೆ ಹೇಳಿಕೊಂಡು ನಿಧಾನಗತಿಯಲ್ಲಿ ನನ್ನನ್ನು ದಾಟುತ್ತಿದ್ದರು. ಅವರಲ್ಲಿ ಹೆಂಗಸರು, ಪ್ರಾಯಸ್ಥರು ಹುಡುಗರೂ ಇದ್ದರು. ಹಾಗೆ ಜನವೆಲ್ಲ ಖಾಲಿಯಾದ ಮೇಲೆ ಒಂದು ನಿಟ್ಟುಸಿರಿನೊಡನೆ ಎದ್ದು ದೂರದ ಗಡಿಯಾರ ನೋಡಿದೆ. ರೈಲು ಬರುವುದಕ್ಕೆ ಇನ್ನೂ ಅರ್ಧಘಂಟೆಯಾದರೂ ಇತ್ತು. ಆತುರವೆನ್ನಿಸಲಿಲ್ಲ. ಅಲ್ಲೇ ನಿಂತರೈಲಿಗೆ ನುಗ್ಗಿ ಮುಖಮಾರ್ಜನ ಮುಗಿಸಿ, ಅಹಮದಾಬಾದ್ ಎಕ್ಸಪ್ರೆಸ್ ಯಾವ ಕಡೆ ಬಂದು ನಿಲ್ಲುವುದೆಂದು ಹುಡುಕಿದೆ. ಯಾರನ್ನಾದರೂ ಕೇಳುವುದೆನಿಸಿತು. ತಲೆ ಕೆದರಿದ, ಅಸ್ತವ್ಯಸ್ತ ವಸ್ತ್ರದ ಒಬ್ಬ ಹುಡುಗ ಕಂಡ. ಆತ ನನ್ನ ಹಣೆಬರೆಹವನ್ನೆಲ್ಲ ಓದಿಬಿಟ್ಟವನಂತೆ ಬಯ್ಯಾ ಹತ್ತು ರೂಪಾಯ್ ಕೊಡಿ. ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಸೀಟು ಹಿಡಿದುಕೊಡುತ್ತೇನೆ ಎಂದು ಕೊಳೆ ಹಿಡಿದ ಷರ್ಟು ಎತ್ತಿ ಹೊಟ್ಟೆಬಡಿದು ಕೈ ಒಡ್ಡಿದ. + +ಇವತ್ತು ಸೋಮವಾರ ಖಂಡಿತಾ ಸೀಟು ಸಿಕ್ಕುವುದಿಲ್ಲ… ಎಂದು ಅಲ್ಲಿದ್ದವರಿಗೆಲ್ಲ ಆತಂಕ ಹುಟ್ಟಿಸಿದ. ಆ ಹುಡುಗ ಹಾಗೆಯೇ ಹೇಳಿದ್ದರೆ ಅಲ್ಲಿದ್ದವರು ನಾವೇ ಸೀಟು ಮಾಡಿಕೊಳ್ಳುತ್ತೇವೆ ಎಂದುಬಿಡುತ್ತಿದ್ದರೋ ಏನೋ? ಆದರೆ ಷರ್ಟು ತೆಗೆದು ಹೊಟ್ಟೆ ಬಡಿದು, ನಿಮಗೂ ಪ್ರಯಾಣಕ್ಕೆ ಆರಾಮ, ನನಗೂ ಒಂದೊತ್ತು ಊಟ, ಎಂದದ್ದಕ್ಕೆ ಎಲ್ಲರೂ ಹತ್ತತ್ತು ರೂಪಾಯಿ ಕೊಟ್ಟರು. ನಾನು ಒಂದು ನೋಟು ಕೈಗಿಟ್ಟೆ. ನಿಮ್ಮ ನಿಮ್ಮ ಕರ್ಚಿಗೆ ಕೊಡಿ ಎಂದ. ಅಷ್ಟುಹೊತ್ತಿಗೆ ಹಿಂದು ಮುಂದಾಗಿ ಸದ್ದಿಲ್ಲದೆ ಫ್ಲಾಟ್‌ಫಾರ್ಮ್‌ಗೆ ಗಾಡಿಬರುವಲ್ಲಿ ಹುಡುಗ ಇಂಥ ಕಡೆಯೇ ಜನರಲ್ ಬೋಗಿ ಬರುತ್ತದೆ ಬನ್ನಿ, ಬನ್ನಿ. ನಾನು ನಿಮ್ಮ ಕರ್ಚಿಯ ಇಟ್ಟಕಡೆ ಬೇಗ ಜಾಗ ಹಿಡಿದುಕೊಳ್ಳಿ ಎಂದ. ಎಲ್ಲ ಪ್ರಯಾಣಿಕರು ಹುಡುಗ ಬಾರಿ ಚಾಲಾಕಿ ಇರುವನೆಂದು ಹೊಗಳಿದರು. ರೈಲು ನಿಲ್ಲಲು ಮೂರ್‍ನಾಲ್ಕು ನಿಮಿಷವಿದೆಯೆನ್ನುವಲ್ಲಿಯೇ ಚಲನೆಯಲ್ಲಿದ್ದ ಒಂದು ಬೋಗಿಹತ್ತಿ ಅತ್ತ ಕಡೆಯ ಬಾಗಿಲಿಳಿದು ಹುಡುಗ ಪರಾರಿಯಾದ. ಕಾಸುಕೊಟ್ಟವರೆಲ್ಲ ಎಲಾ ಹರಾಮ್‌ಖೋರ, ಇಷ್ಟುಬೇಗ ಎಂಥ ಮೋಡಿ ಹಾಕಿಬಿಟ್ಟ ಆತನನ್ನು ಹಿಡಿಯಿರಿ, ಹಿಡಿಯಿರಿ ಎಂದು ಕೂಗಿಕೊಂಡರು. ಆದರೆ ಅವನನ್ನು ಹಿಂಬಾಲಿಸಿ ಹಿಡಿಯಲು ಯಾರೂ ಸಿದ್ಧರಿರಲಿಲ್ಲ. ಯಾವುದಕ್ಕೂ ಯಾರಿಗೂ ಟೈಮೂ ಇರಲಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ ಇದ್ದಬದ್ದ ಪ್ರಯಾಣಿಕರಿಗೆಲ್ಲ ಎಲ್ಲೆಂದರಲ್ಲಿ ಸೀಟು ಸಿಕ್ಕಿದ್ದರಿಂದ ಹುಡುಗನ ಕೈಚಳಕವನ್ನು ಎಲ್ಲರೂ ಅಷ್ಟೇ ಬೇಗ ಮರೆತುಬಿಟ್ಟರು. + +ಬೋಗಿ ಖಾಲಿ ಇದ್ದರೂ ಪ್ರಯಾಣಿಕರ ಆತಂಕ, ಸೀಟು ಹಿಡಿಯುವುದರಲ್ಲಿ ಆತುರ ಇದ್ಯಾವುದೂ ಕಡಿಮೆಯಿರಲಿಲ್ಲ. ನಾನು ಒಂದು ಕಿಟಕಿಯ ಮೂಲೆಗೆ ಕೂತೆ. ನಾನಾ ಭಾಷೆಯ ಜನ ತಂತಮ್ಮ ಸರಂಜಾಮಿನೊಡನೆ ರೈಲು ಹೊರಡುವವರೆಗೂ ಒಳಗೆ ನುಗ್ಗುವ ಪರದಾಟ ನಡೆಯುತ್ತಲೇ ಇತ್ತು. ನನ್ನ ಎದುರು ಸೀಟಿನಲ್ಲಿ ಗಂಡ ಹೆಂಡತಿ ಸುಮಾರು ಹತ್ತನ್ನೆರಡು ವರ್ಷದ ಮಗ, ಐದು ವರ್ಷ ದಾಟಿರಬಹುದಾದ ಹೆಣ್ಣುಮಗು ನೆಲೆಯಾಗಿದ್ದರು. ಈ ಸಂಸಾರವನ್ನು ಕಳುಹಿಸಲು ಬಂದ ಸ್ನೇಹಿತರು ‘ಬರುತ್ತೇವೆಕಣೋ ಮಿತ್ರಾ. ರೈಲು ನಿಂತ ಕಡೆಯಲ್ಲೆಲ್ಲ ಇಳಿದು ಸ್ಟೇಷನ್ ನೋಡಲು ಹೋಗಿಬಿಡಬೇಡವೋ! ಅಮ್ಮಾ ಬರಲಾ. ಅಹಮದಾಬಾದ್ ತಲುಪಿದ್ದಕ್ಕೆ ಒಂದು ಕಾಲ್ ಮಾಡಿ. ಸದ್ಯ ಕೂರಲು ಜಾಗ ಸಿಕ್ಕಿತಲ್ಲ’ ಎಂದು ಮಕ್ಕಳ, ಸ್ನೇಹಿತನ ಕೈಕುಲುಕಿ, ಹೆಂಗಸಿಗೆ ನಮಸ್ಕರಿಸಿ ಕೈಯ್ಯಾಡಿಸುತ್ತ ಹೊರಟರು. ರೈಲು ಹೊರಡುವುದು ಇನ್ನು ಒಂದೆರಡು ನಿಮಿಷವಿತ್ತು. ಪತಿಯು ಹೆಂಡತಿಯ ಕಡೆಗೆ ಎಲ್ಲ ಸಾಮಾನು ಇದೆಯಲ್ಲ. ಒಂದು ಸರ್ತಿ ಎಲ್ಲ ನೋಡಿಕೊಂಡುಬಿಡು. ಈಗ ನಾನು ಇಳಿದುಹೋಗಿ ಮಕ್ಕಳಿಗೆ ಏನಾದರೂ ತರುತ್ತೇನೆ ಎಂದು ಎದ್ದರು. ಅವರನ್ನು ತಡೆದು ಆಕೆ, ತಿಂಡಿಗೆ ಇನ್ನೂ ಹೊತ್ತಿದೆ. ಮುಂದಿನ ಯಾವುದಾದರೂ ಸ್ಟೇಷನ್ನಿನಲ್ಲಿ ನೋಡಿದರಾಯ್ತು. ರೈಲು ಹೊರಡುವ ಟೈಮಾಗಿದೆ. ನೀವು ಸುಮ್ಮನೆ ಕೂರಿ ಎಂದರು. ಅಯ್ಯೋ ಈ ರೈಲು ಬರೋಡಾ ಮುಟ್ಟುವುದು ಮಧ್ಯಾಹ್ನ ಒಂದು ಘಂಟೆಗೆ. ಮಧ್ಯ ಬರಿ ಹಳ್ಳಿಪಳ್ಳಿಗಳು. ಸರಿಯಾಗಿ ತಿಂಡಿಗಿಂಡಿ ಸಿಕ್ಕುವುದಿಲ್ಲ. ಇಡ್ಲಿ ಸಾಕು, ತಂದುಬಿಡ್ತೇನೆ… ಎಂದು ಅವರು ಏಳುವ ಹೊತ್ತಿಗೆ ರೈಲು ಹೊರಡುವ ಸೂಚನೆಯಾಯಿತು. ಹೆಂಡತಿ ಒಂದ್ನಿಮಿಷ ಕೂರಿ. ಸುಧಾರಿಸಿಕೊಳ್ಳಿ ಎಂತಲೇ ಹೇಳಿದರು. ಹೆಂಡತಿ ಹೀಗೆಂದ ಮಾತಿನಲ್ಲಿ ಗಂಡನ ಪ್ರಕೃತಿ ನೋಡಿದರೆ ಕೂತಲ್ಲಿಕೂರದ, ನಿಂತಲ್ಲಿನಿಲ್ಲದ, ಚಡಪಡಿಕೆಯ ವ್ಯಕ್ತಿಯಂತೆ, ಮಾತಿನಲ್ಲಿ ಹೆಚ್ಚು ಆಸಕ್ತಿ ಇರುವವರಂತೆ ಕಂಡರು. ಹೆಂಡತಿ ಮಾತ್ರ ಗಂಡನಿಗೆ ವಿರುದ್ಧ ದಿಕ್ಕಿನ, ನಿರಾಳ ಮನಸ್ಸಿನವರಾಗಿದ್ದರು. + +ಯೌವನದ ಚಂಚಲ ಭಾವಗಳೆಲ್ಲ ಕಳೆದು ತಾಯ್ತನದ ದಿವ್ಯನಿರ್ಲಿಪ್ತತೆ ಆಕೆಯ ಮುಖದಲ್ಲಿ ನೆಲೆಸಿತ್ತು. ಪ್ರಯಾಣಕ್ಕೆ ಸಿದ್ಧಗೊಂಡು ಬಂದಿಲ್ಲದಂತಿದ್ದ ಆ ಹೆಣ್ಣುಮಗಳು ಚಂದ್ರಗಾವಿ ಬಣ್ಣದ ಸೀರೆ, ಬಿಳಿಯ ರವಿಕೆಯಲ್ಲಿದ್ದರು. ಶಿಸ್ತಾಗಿ ತಲೆಬಾಚಿ ಜಡೆಹಾಕಿಕೊಂಡಿರಲಿಲ್ಲ. ಕೂದಲು ವಿರಳವಾಗಿ ಚದುರಿ ಅದೇ ಅವರ ಮುಖಕ್ಕೆ ಒಂದು ಬಗೆಯ ಶೋಭೆಯನ್ನು ಒದಗಿಸಿತ್ತು. ಈ ತಾಯಿಯನ್ನು ಅಪ್ಪಿಕೊಂಡಿದ್ದ ಹೆಣ್ಣುಮಗು ಅರೆನಿದ್ದೆ, ಅರೆ ಎಚ್ಚರದಲ್ಲಿತ್ತು. ಹುಡುಗ ಅಪ್ಪಅಮ್ಮನ ಮಧ್ಯದಲ್ಲಿದ್ದು ಬೆಳಗಿನ ಗದ್ದಲವನ್ನು ಕುತೂಹಲಕಣ್ಣುಗಳಿಂದ ವೀಕ್ಷಿಸುತ್ತಿದ್ದ. ಅವರಾಡುತ್ತಿದ್ದ ಮಾತುಗಳಿಂದ ಅವರು ಕೆಲಸ ಮಾಡುತ್ತಿದ್ದ ಮುಂಬಯಿಯ ಶಾಖೆಯಿಂದ ಅಹಮದಾಬಾದ್ ಬ್ಯಾಂಕ್‌ಶಾಖೆಗೆ ವರ್ಗಾವಣೆಗೊಂಡಿದ್ದದ್ದು ತಿಳಿಯಿತು. ಎದ್ದು ಹೋಗಲು ಅವಕಾಶವಾಗದೆ, ಗಂಡಹೆಂಡತಿಯರ ಮಾತುಕತೆ ಒಂದು ಹಂತಕ್ಕೆ ಬಂದು ಅದೂ ಮುಗಿದು, ಪತಿ ನನ್ನಕಡೆ ನೋಡಿ ಹಾಗೆಯೇ ನನ್ನ ಬ್ಯಾಗಿನ ಮೇಲಿದ್ದ ಕನ್ನಡ ಅಕ್ಷರಗಳನ್ನು ಗುರುತಿಸಿ, ಓಹೋ ನೀವು ಕನ್ನಡದವರಾ ಎಂದು ಸಂತೋಷ ವ್ಯಕ್ತಪಡಿಸಿದರು. ಯಾವ್ಯಾವುದೋ ಸಂದರ್ಭಗಳಲ್ಲಿ ಊರು, ಕೇರಿ, ಭಾಷೆ ಎಂಬುದು ಮನಸ್ಸಿಗೆ ಸಂತೋಷವನ್ನು ತರುತ್ತದೆಂದರು. ಅದಾಗಲೇ ಸ್ನೇಹಿತರಾಗಿಬಿಟ್ಟ ಅವರು, ನಾನೇನೋ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರು, ಇವಳು ಮೈಸೂರಿನವಳು. ಮದುವೆಯಾದ ಮೇಲೆ ಬೆಂಗಳೂರಲ್ಲಿಯೇ ಏಳೆಂಟು ವರ್ಷಕಾಲ ಇದ್ದೆ. ಆಮೇಲೆ ಮುಂಬಯಿ. ಈಗ ಇಲ್ಲಿಂದಲೂ ಬಿಡುಗಡೆಯಾಗಿದೆ. ಅಹಮದಾಬಾದ್ ಕಡೆ ಹೊರಟಿದ್ದೇವೆ. ಅಲ್ಲಿಯ ನೀರಿನ ಋಣ ಎಷ್ಟುದಿನವೋ ಗೊತ್ತಿಲ್ಲ. ಪ್ರಯಾಣ ಎಂಬುದು, ಇದ್ದದ್ದೇತಾನೇ ಎಂದರು. ಹಾಗೆಯೇ ನೀವು ಯಾವ ಕಡೆಯವರೋ ಎಂದರು. ನಾನು ಮೈಸೂರು ಸುತ್ತಿನವನೇ, ಆದರೆ ಪಟ್ಟಣದಲ್ಲಿ ಹುಟ್ಟಿ ಬೆಳೆದವನಲ್ಲ. ದಕ್ಷಿಣ ಕರ್ನಾಟಕದ ಕಡೆ ಮಾದೇಶ್ವರನಬೆಟ್ಟ, ಬಿಳಿಗಿರಿರಂಗನಬೆಟ್ಟ ಸಾಲು ಇದೆಯಲ್ಲ ಆ ಅರಣ್ಯಸುತ್ತಿನವನು. ಒಂದಿಷ್ಟು ಓದಲೆಂದು ಮೈಸೂರು ಸೇರಿದ್ದೆ ಎಂದೆ. ಹಾಗಾದರೆ ನೀವು ಕಾಡಿನ ಪ್ರಕೃತಿಯ ಮಧ್ಯೆ ಬೆಳೆದವರು ಎನ್ನಿ ಎಂದು ನಕ್ಕ ಸ್ನೇಹಿತರು ನನ್ನ ಕಡೆಗೆ ಹೆಚ್ಚು ಸ್ನೇಹ ತೋರಿಸುವ ಭಾವನೆ ತಳೆದರು. ಇನ್ನೂ ಪ್ರಯಾಣ ಬಹುದೂರವೇ ಇದ್ದಿತು. ಅವರು ಮಾತುಕತೆಯಲ್ಲಿ ಆಸಕ್ತಿಯಿದ್ದವರಾದ್ದರಿಂದ, ಅದಲ್ಲದೆ ನಾವು ಒಂದೇ ಪ್ರದೇಶದವರೆನಿಸಿಬಿಟ್ಟಿದ್ದರಿಂದ ಅವರಲ್ಲಿ ಉತ್ಸಾಹವೂ, ಸಂತೋಷವೂ ಹೆಚ್ಚಿದಂತಿತ್ತು. ಈ ಬಗೆಯ ಸಂತೋಷದ ನಂತರ ಸ್ನೇಹಿತರು ‘ನಿಮ್ಮ ಉದ್ಯೋಗ’ ಎಂದರು. ಒಂದು ತಾಲ್ಲೋಕು ಮಟ್ಟದ ಕಾಲೇಜಿನಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಅಧ್ಯಾಪಕನಾಗಿದ್ದೇನೆ ಎಂದೆ. ಅದಕ್ಕೆ ಅವರು ನೀವು ಏನೇ ಹೇಳಿ ಕರ್ನಾಟಕದ ಮುಂದೆ ಇನ್ಯಾವ ನಾಡು ಎಂದು ಪ್ರಾದೇಶಿಕ ಅಭಿಮಾನವನ್ನು ಪ್ರಕಟಿಸಿದರು. ಹಾಗೆಯೇ ಊರುಕೇರಿಯ ಕಡೆ ನಿಮ್ಮ ತಂದೆ ತಾಯಿ ಅಣ್ಣತಮ್ಮಂದಿರು ಎಲ್ಲ ಇದ್ದಾರೆಯೆ, ಹೋಗಿ ಬರುವುದುಂಟೆ ಎಂದು ಕೇಳಿದರು. ಇಷ್ಟು ಹೊತ್ತಿಗೆ ರೈಲು ಒಂದು ಪುಟ್ಟನಿಲ್ದಾಣ ತಲುಪಿ ನಿಂತು, ಮುಂದೆ ಹಾಯುತ್ತಿತ್ತು. + +ನಾನು, ಊರುಕೇರಿ, ತಂದೆತಾಯಿ ಮಾತ್ರ ಬರಿಯ ನೆನಪು ಎನ್ನಿ. ಅದರಿಂದಲೇ ನೋಡಿ ದೇವರಿಗೆ ಬಿಟ್ಟ ಬಸವಣ್ಣನಂತೆ ನೆನಪಿಗೆ ಬಂದ ಕಡೆ ತಿರುಗುತ್ತಿರುತ್ತೇನೆ ಎಂದು ಸಣ್ಣದಾಗಿ ನಕ್ಕೆ. ಸ್ನೇಹಿತರು ಹಾಗಾದರೆ ನೀವು ಪುಣ್ಯವಂತರಪ್ಪಾ ಎಂದು ಮೆಲ್ಲಗೆ ನನ್ನ ತೊಡೆಬಡಿದು ನಕ್ಕು ಪತ್ನಿಯ ಕಡೆ ನೋಡಿದರು. ನಂತರ ನಿಮ್ಮ ತಂದೆತಾಯಿಗಳ ವಿಚಾರ ಬರಿಯ ನೆನಪು ಅನ್ನುವುದಾದರೆ ನಿಮ್ಮ ವಿದ್ಯಾಭ್ಯಾಸ ಸ್ವಲ್ಪ ಕಷ್ಟದ್ದೇ ಆಗಿರಬೇಕು. ನಾನಂದುಕೊಂಡ ಹಾಗೆ ಸುಂದರ ಪ್ರಕೃತಿಯ ನಡುವೆ ನೀವು ಆಟವಾಡಿಕೊಂಡು ಬೆಳೆದುಬಂದವರಲ್ಲ ಎಂದರು. ನಾನು ಕೊಂಚ ತಡೆದು, ನಿಮ್ಮ ಅಭಿಪ್ರಾಯ ಸರಿ. ನಾನು ಅಕಸ್ಮಾತ್ತಾಗಿ ಓದಿದವನು. ಯಾವ ಘಳಿಗೆಯಲ್ಲಿ ಬೇಕಾದರೂ ನನ್ನ ಓದಿಗೆ ಬೇರಾರು ಅಲ್ಲ, ನಾನೇ ಕಲ್ಲು ಹಾಕಿಕೊಳ್ಳಬಹುದಾಗಿತ್ತು ಎಂದೆ. ಅಷ್ಟುಹೊತ್ತಿಗೆ ಅವರ ಮಗ ನಮ್ಮ ಮಾತುಕತೆಯಲ್ಲಿ ಆಸಕ್ತಿಯಿಲ್ಲದವನಾಗಿ ಎದ್ದು ಬೋಗಿಯಲ್ಲಿ ತಿರುಗಾಡುವ ಹವಣಿಕೆ ಮಾಡಿದ. ತಾಯಿ ಆತಂಕದ ಮುಖಮಾಡಿ ಎದ್ದುಹೋಗಿ ಅವನ ಕೈಹಿಡಿದು ವಾಪಸು ಕರೆತರಲಾಗದೆ ತೊಡೆಯ ಆಶ್ರಯ ಪಡೆದಿದ್ದ ಮಗಳನ್ನು ಭದ್ರವಾಗಿ ಅವುಚಿಕೊಂಡರು. ಇದನ್ನು ಗ್ರಹಿಸಿದ ಸ್ನೇಹಿತರು ಎದ್ದು ಹೋಗಿ ಅಲ್ಲೆಲ್ಲೋ ಬಾಗಿಲಹತ್ತಿರ ಹೋಗಲು ಸಿದ್ಧನಿದ್ದ ಮಗನನ್ನು ಒಂದು ಸಣ್ಣಪೆಟ್ಟು ಕೊಟ್ಟು ಎಳೆದುಕೊಂಡು ಬಂದರು. ಈ ಹಲಾಲ್‌ಖೋರ ಹೇಳಿದ ಮಾತನ್ನೇ ಕೇಳುವುದಿಲ್ಲ ನೋಡಿ. ನಾವು ಏನು ಹೇಳಿದರೂ, ಅದಕ್ಕೆ ವಿರುದ್ಧ ಮಾಡುವುದರಲ್ಲೇ ಇವನಿಗೆ ಸಂತೋಷ. ಓಡುವ ರೈಲಿನ ಬಾಗಿಲಲ್ಲಿ ಹೋಗಿ ಎಲ್ಲಿಯಾದರೂ ನಿಲ್ಲುವುದುಂಟೆ, ಎಂದು ಮಗನ ಬಗ್ಗೆ ದೂರಿದರು. + +ಸ್ನೇಹಿತರು ಹಾಗೆ ಹೇಳುತ್ತಿದ್ದಂತೆಯೇ ನನಗೆ ಅನ್ನಿಸಿದ್ದೆಂದರೆ ನಾನು ಓದುವ ಕಾಲಕ್ಕೆ ಯಾವ ಘಟ್ಟದಲ್ಲಿಯಾದರೂ ನನ್ನ ವಿದ್ಯಾಭ್ಯಾಸದ ಮೇಲೆ ಏಕೆ ನನ್ನ ತಲೆಯ ಮೇಲೂ ಕಲ್ಲು ಹಾಕಿಕೊಳ್ಳಬಹುದಿತ್ತು. ಎಲ್ಲ ಹುಡುಗರಂತೆ ನಾನೂ ನನ್ನ ತಂದೆತಾಯಿಗಳ ಮಾತನ್ನು ಕೇಳುವವನಾಗಿರಲಿಲ್ಲ. ನನ್ನ ಯೌವನದ್ದೇನು ಬಾಲ್ಯಕಾಲದ ಆಸೆಗಳನ್ನು ಪೂರೈಸುವಷ್ಟು ಶಕ್ತಿ ತಂದೆ ತಾಯಿಗಳಿಗಿರಲಿಲ್ಲ. ತಾಯಿ ಹೂವುಕಟ್ಟಿ ಮಾರುತ್ತಿದ್ದರು. ತಂದೆಯದು ಯಾವ ಸಂಪಾದನೆ ಎಂದು ನಿಖರವಾಗಿ ಹೇಳುವಂತಿರಲಿಲ್ಲ. ಯಾಕೆಂದರೆ ತಂದೆ ಊರ ಹೊಲಗದ್ದೆಗಳನ್ನೆಲ್ಲ ಸುತ್ತಿ ಹೂವುಸೊಪ್ಪು ಕೊಯ್ದುತಂದು ತಾಯಿಯ ಮುಂದೆ ಒಂದಷ್ಟು ಹಾಕುವುದು. ಮಿಕ್ಕದ್ದನ್ನು ಊರೊಳಗಿನ ಎರಡು ಮೂರು ಗುಡಿಯ ಪೂಜಾರಿಗಳು ಪೂಜಿಸುತ್ತಿದ್ದ ದೇವರಿಗೆಂದು ಒಯ್ದುಕೊಡುತ್ತಿದ್ದರು. ಹಬ್ಬಹರಿದಿನಗಳಲ್ಲಿ ದೇವರ ಮೆರವಣಿಗೆ ಹೊತ್ತು ಗೋವಿಂದನನ್ನಿಕ್ಕುವುದು. ಪಕ್ಷ ವಾರಗಳಲ್ಲಿ ಗುಡಿಯ ಮುಂದೆ ಭಜನೆಯ ಮೇಳ ಸೇರಿಕೊಂಡು ದಮಡಿ ಬಡಿದು ಹಾಡುವುದು. ಆಮೇಲೆ ಪೂಜಾರಿಗಳು ಕೊಟ್ಟ ಪಾತ್ರೆಯ ಚರುಪನ್ನು ಭಕ್ತರಿಗೆ ಹಂಚುವುದು. ಇದಲ್ಲದೆ ಊರಲ್ಲಿ ಹೆಣಬಿದ್ದರೆ ಅವರ ಮನೆಯ ಮುಂದೆ ಕೂತು ಎಲ್ಲರಿಗೂ ಸಮಾಧಾನ ಹೇಳುವುದು, ಹೆಣವನ್ನೂ ಹೊರುವುದು ಇಂಥ ಸಾಮಾಜಿಕ ಕೈಂಕರ್‍ಯಗಳಲ್ಲಿ ತೊಡಗಿರುತ್ತಿದ್ದರು. ಈ ಯಾವ ಕಸುಬೂ ತಂದೆಯವರಿಗೆ ಮೂರು ಕಾಸಿನ ಸಂಪಾದನೆಯನ್ನು ತರುತ್ತಿರಲಿಲ್ಲ. ತಾಯಿಯವರಿದ್ದು ನಿಮಗೆ ಯಾಕೆ ಇಂಥ ಬೀದಿಯ ಮೇಲಿನ ಬದುಕು. + +ನಾನು ಕಟ್ಟಿಕೊಟ್ಟ ಹೂವನ್ನಾದರೂ ಮಾರಿದರೆ ಆಗದೇ ಎನ್ನುತ್ತಿದ್ದರು. ಅದಕ್ಕೆ ತಂದೆಯವರು, ಎಲೆ ಮೂರು ಕಾಸಿನ ಹೆಂಗಸೇ ನಾನು ಹೋಗದಿದ್ದರೆ ಊರೊಳಗೆ ಯಾವ ಕೆಲಸ ತಾನೇ ಸುಸೂತ್ರವಾಗಿ ನಡೆಯುತ್ತದೆ. ಜನ ನನ್ನನ್ನು ಬಿಡುವುದುಂಟೆ ಎಂದು ತನ್ನ ಪುರುಷತ್ವದ ದೊಡ್ಡಸ್ತಿಕೆಯನ್ನು ತೋರುತ್ತಿದ್ದರು.ಆದರೆ ಬಡವನೆಂಬ ಕಾರಣಕ್ಕಾಗಿ ಊರಜನ ತಂದೆಯನ್ನು ದೇವರ ಭಕ್ತನೆಂದೂ, ಬೀದಿಯ ಭಂಟನೆಂದೂ ಕರೆದು ತಾತ್ಸಾರವನ್ನೇ ತೋರುತ್ತಿದ್ದರು. ಕೇರಿಯ ಜನರ ಈ ತಾತ್ಸಾರ ಗೊತ್ತಿದ್ದ ತಂದೆಯವರು ಆಗಾಗ ಮನೆಯಲ್ಲಿ ಅದನ್ನು ಸಿಟ್ಟಾಗಿ ಪರಿವರ್ತಿಸುತ್ತಿದ್ದರು. ನನಗೆ ಕೊಂಚ ಬುದ್ಧಿಬರುತ್ತಿದ್ದಂತೆಯೇ ತಂದೆತಾಯಿಗಳು ನಿಷ್ಪ್ರಯೋಜಕರು. ನನ್ನ ವಾರಿಗೆಯ ಗೆಣೆಕಾರರೇ ಒಳ್ಳೆಯವರು ಎಂದುಕೊಂಡು ಊರುಕೇರಿ, ಹಳ್ಳಕೊಳ್ಳ, ಗುಡ್ಡಗವಾರದೆಡೆಯೆಲ್ಲ ತಿರುಗತೊಡಗಿದೆ. ಎಷ್ಟು ತಿರುಗಿದರೂ ದಣಿವೆಂಬುದೇ ಇರುತ್ತಿರಲಿಲ್ಲ. ಆದರೆ ಯಾವಾಗಲೋ ಒಮ್ಮೆ ಮನೆ ಸೇರುವಲ್ಲಿ ತಾಯಿ ತಾನು ಕಟ್ಟಿರುವ ಹೂವನ್ನು ಬೀದಿಯ ಮೇಲೆ ಮಾರಿಕೊಂಡು ಬಾ ಕಂದ ನಿನಗೂ ಒಂದು ಕಾಸು ಕೊಡುತ್ತೇನೆ ಎಂದು ಅಂಗಲಾಚುತ್ತಿದ್ದರು. ನಾನು ಬೀದಿ ತಿರುಗುವವನಾದರೂ ಹೂ ಮಾರುವ ಕೆಲಸ ಬಹಳ ಶ್ರಮದಾಯಕವಾದುದು ಎಂದು ತಿಳಿಯುತ್ತಿದ್ದೆ. ಯಾಕೆಂದರೆ ಒಮ್ಮೆ ಅವ್ವಕೊಟ್ಟ ಹೂವು ಮಾರಿ, ಬಂದ ಕಾಸನ್ನೆಲ್ಲ ಜೇಬಿಗೆ ಹಾಕಿ, ಎರಡು ಮೂರು ದಿನ ಮನೆಯನ್ನೇ ಸೇರದೆ ಅಂಗಡಿಯಲ್ಲೇ ತಿಂದು ಕೇರಿಯ ಜಗಲಿಗಳಲ್ಲೇ ಕಾಲಹಾಕಿದೆ. ವಿಚಿತ್ರವೆಂದರೆ ಎಲ್ಲ ಕಾಲಕ್ಕೂ ಒಂದು ಸಂಗತಿ ಪ್ರಿಯವಾಗುವುದು ಸ್ವಲ್ಪ ಕಾಲಮಾತ್ರ. + +ಹಾಗಾಗಿ ಮನೆಯ ಕಡೆ ಮುಖಹಾಕುವ ಇಷ್ಟವಾಯಿತು. ಅಷ್ಟು ಹೊತ್ತಿಗೆ ಅವ್ವ ಅಪ್ಪನಿಗೆ ನನ್ನ ಮೇಲೆ ದೂರು ಹೇಳಿದ್ದರು ಎಂದು ಕಾಣಿಸುತ್ತದೆ. ನಾನು ಅವ್ವನ ಒಂದು ದಿನದ ಸಂಪಾದನೆಯನ್ನು, ಎರಡುಹೊತ್ತಿನ ಅನ್ನವನ್ನೂ ತಪ್ಪಿಸಿದ್ದೆ. ಯಾವ ಸಂಪಾದನೆಯೂ ಅಷ್ಟಾಗಿ ಇಲ್ಲದೆ ತಿರುಗುತ್ತಿದ್ದ ಅಪ್ಪನಿಗೆ ಇಷ್ಟೇ ಸಾಕಾಗಿತ್ತು. ತುಂಬ ಅಸಹಾಯಕತೆಯಿಂದ ಯಾವಾಗಲೂ ಬಳಲುತ್ತಿದ್ದ ಅಪ್ಪನಿಗೆ ತನ್ನ ಪುರುಷತ್ವ ತೋರಿಸಲು ಇದೊಂದು ಸದವಕಾಶ ಸಿಕ್ಕಿದಂತಾಯಿತು. ಮೂರನೆಯ ದಿನ ನಾನು ಮೆಲ್ಲಗೆ ಮನೆಯ ಒಳಗೆ ನುಸುಳಿ ಅಲ್ಲಿ ನನ್ನ ಅಸ್ತಿತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದೆ. ನನ್ನ ಕಂಡದ್ದೇ ಎದ್ದು ಬಂದ ಅಪ್ಪ ಹೆಕ್ಕತ್ತು, ಬೆನ್ನಿನ ಕಡೆ ಎರಡೆರಡೇಟು ಬಲವಾಗಿಯೇ ಬಾರಿಸಿದ. ನಾನು ಆಯತಪ್ಪಿ ಬಿದ್ದೆ. ಏಟುಬಿದ್ದಾಗ ಹೊಸ್ತಿಲು ದಾಟಿ ಮನೆಯ ಒಳಗಿದ್ದೆ. ಆಯತಪ್ಪಿ ಬಿದ್ದಾಗ ಹೊಸ್ತಿಲ ಈಚೆಗಾದೆ. ಹೊಸ್ತಿಲಿಂದ ಕೆಳಕ್ಕೆ ನಾಲ್ಕೈದು ಹಂತಗಳಿದ್ದವು. ಮೂರ್‍ನಾಲ್ಕು ಉರುಳು ಉರುಳಿ ಬೀದಿ ಪಾಲಾಗಿದ್ದೆ. ಆ ಹೊತ್ತಿನಿಂದ ತಂದೆಯೇ ನನಗೆ ಪ್ರಥಮ ಶತ್ರುವಾದರು. ಪ್ರಪಂಚದಲ್ಲಿ ಎಲ್ಲ ತಂದೆತಾಯಿಗಳೂ ಒಳ್ಳೆಯವರೆಂದೂ ನನ್ನ ತಂದೆತಾಯಿಗಳು ಮಾತ್ರ ಕೆಟ್ಟವರೆಂದೂ ತಿಳಿದೆ. ಆದರೆ ತಾಯಿಗೆ ನನಗೆ ಬಿದ್ದ ಏಟಿನಿಂದ ಬಹಳ ದುಃಖವಾಗಿ ಬೀದಿಯಲ್ಲಿ ಬಿದ್ದ ನನ್ನನ್ನು ಎತ್ತಿಕೊಳ್ಳಲು ಬಂದರು. ರಕ್ಷಿಸಲು ಬಂದ ತಾಯಿಯನ್ನು ಎರಡನೆಯ ಶತ್ರುವಾಗಿಯೂ, ಅದರಲ್ಲೂ ಇಷ್ಟೆಲ್ಲ ದುರಂತಕ್ಕೆ ಈ ಹೆಂಗಸೇ ಮೂಲಕಾರಣವೆಂದು ದೃಢಪಡಿಸಿಕೊಂಡೆ. ಹೀಗೆ ಹೂವು ಮಾರಿದ ಕಾಸು ತಿಂದು ಹಾಕಿದ ಮೇಲೆಯೂ ತಾಯಿ ನನಗೆ ಬೀದಿಯ ಮೇಲೆ ಹೂ ಮಾರಿಕೊಂಡು ಬರಲು ಹೇಳುತ್ತಿದ್ದರು. + +ನೀನು ಕೊಡುವ ಜುಜುಬಿ ಮೂರುಕಾಸಿಗೆ ನಿನ್ನ ಕೆಲಸವನ್ನ ಯಾವ ಭಿಕಾರಿ ಮಾಡುತ್ತಾನೆ ಹೋಗು, ನಿನ್ನ ಗಂಡನ ಕೈಲೇ ಮಾಡಿಸಿಕೋ ಎನ್ನುತ್ತಿದ್ದೆ. ಅದಕ್ಕೆ ತಾಯಿ ನೋಡು ನಿನಗೆ ಮೂರು ಕಾಸಿಗಿಂತ ಜಾಸ್ತಿ ಕೊಡುತ್ತೇನೆ. ಮಾರಿದ್ದನ್ನೆಲ್ಲ ತಿಂದುಹಾಕದೆ ತಂದುಕೊಡು ಎನ್ನುತ್ತಿದರ. ಅವರಿಗೆ ಸಂಸಾರ ನಿರ್ವಹಣೆ ಬಹುದೊಡ್ಡ ಜವಾಬ್ದಾರಿಯಾಗಿತ್ತು. ತಾಯಿಗೆ ನಾನು ಕೈಕೊಟ್ಟು ಆಕೆಗೆ ತೊಂದರೆಯಾದರೆ ಸಂತೋಷಪಡುವುದೇ ನನ್ನ ಗುರಿಯಾಗಿತ್ತು. ತಂದೆಗೋ ದೊಡ್ಡಸ್ತಿಕೆಯ ಮಾತೇ ಮುಖ್ಯವಾಗಿತ್ತು. ಯಾವಾಗಲೂ ಮಾನ ಮರ್‍ಯಾದೆ ಗೌರವಗಳ ಬಗ್ಗೆ ಮಾತನಾಡುತ್ತಿದ್ದರು. ಅದು ನನ್ನಿಂದಲೇ ಬಹುತೇಕ ಹಾಳಾಗುತ್ತಿದೆಯೆಂದು ಎಲ್ಲದಕ್ಕೂ ಮೂಲವಾದ ಅವ್ವನನ್ನು ಕಟ್ಟಿಕೊಂಡು ತನ್ನ ಕತ್ತಿಗೆ ಉರುಲಾಗದಿದ್ದರೆ, ಇಷ್ಟರಲ್ಲಿ ಈ ಊರೆಂಬ ಸ್ಮಶಾನದಲ್ಲಿ ಇರುತ್ತಲೇ ಇರಲಿಲ್ಲವೆಂದು ಯಾವಾಗಲೂ ಹೇಳುತ್ತಿದ್ದರು. ತಾಯಿಗೆ ಮಾತ್ರ ತನ್ನ ಮನೆ, ತನ್ನ ಕಾಯಕ, ಗಂಡನೂ ನಾನು ಹೊತ್ತಿಗೊತ್ತಿಗೆ ಮನೆ ಸೇರುವುದು ಬಹಳ ಇಷ್ಟವಿದ್ದ ಸಂಗತಿಯಾಗಿತ್ತು. + +ನಾನು ಇನ್ನಷ್ಟು ಬೆಳೆದ ನಂತರ ತಂದೆಯಂತೆಯೇ ನನಗೂ ಊರುಕೇರಿ ಸುತರಾಂ ಇಷ್ಟವಾಗದೇಹೋಯಿತು. ಊರುಬಿಟ್ಟು ನಡೆದುಬಿಟ್ಟರೆ ತಾಯಿಯನ್ನು ನಿರಂತರ ದುಃಖದಲ್ಲಿ ಕೆಡವಿಬಿಡಬಹುದೆಂತಲೂ ನನಗೆ ಅನ್ನಿಸುತ್ತಿತ್ತು. ಹಾಗೆ ಒಂದು ದಿನ ಊರ ತುದಿಯ ಹಳ್ಳದಲ್ಲಿ ಆಟವಾಡುತ್ತಿದ್ದೆ. ಹತ್ತುಹನ್ನೆರಡು ವಯಸ್ಸು ಇರಬಹುದು. ಮಹದೇಶ್ವರನ ಬೆಟ್ಟಕ್ಕೆ ಹೋಗುತ್ತಿದ್ದ ಪರಿಸೆಯ ನಡುವೆ ಇದ್ದ ಒಬ್ಬ ಕಟ್ಟುಮಸ್ತಾದ ಕಪ್ಪು ಆಳು ತನ್ನ ತಲೆಯ ಮೇಲೆ ನಾಲ್ಕು ಮೂಟೆಗಳನ್ನು ಹೊತ್ತುಕೊಂಡಿದ್ದ. ಅವನು ನೀರಿನಲ್ಲಿ ನಿಂತು ಆಟವಾಡುತ್ತಿದ್ದ ನನ್ನ ಕರೆದು, ಲೇ ತಮ್ಮಾ ಈ ಅಂಗಡಿ ಸಾಮಾನು ಹೊತ್ತುಕೊಂಡು ಬೆಟ್ಟದವರೆಗೆ ಬರುವುದಾದರೆ, ನಿನಗೆ ಮಿಠಾಯಿ, ಕಜ್ಜಾಯ ಕೊಡುತ್ತೇನೆಂದ. ತಾಯಿ ಎಂದೂ ಮಾಡಿಕೊಡದ ಆ ಪದಾರ್ಥಗಳ ಹೆಸರು ಕೇಳಿ ಅತ್ಯಂತ ಸಂತೋಷಚಿತ್ತನಾಗಿ ಜೊತೆಗೆ ಅದು ನನಗೆ ಅಷ್ಟು ಸುಲಭವಾಗಿ ದಕ್ಕುತ್ತದೆಂದು ತಿಳಿದು ಆತನ ಸಹಾಯಕ್ಕೆ ಸಿದ್ಧನಾದೆ. ಆತ ನನ್ನ ತಲೆಗೆ ರವಾನಿಸಿದ ಸಾಮಾನು ಸರಂಜಾಮು ಸ್ವಲ್ಪ ಭಾರವಾಗಿದ್ದಿತು. ಅದು ವಿಠಾಯಿ ಅಂಗಡಿ ಇಡುವಲ್ಲಿ ಹಾಸುವಚಾಪೆ, ನೆಡುವ ಮೂರ್‍ನಾಲ್ಕು ಕಂಭ, ಮೇಲಿನ ಗುಡಾರ, ಹಗ್ಗ ಇದರ ಕಂತೆಯಾಗಿತ್ತು. ಅಂಗಡಿ ಹಾಸಿನ ಕಂತೆ ನಾನು ಹೊತ್ತು, ಸಿಹಿಯಮೂಟೆಗಳನ್ನು ಅವನು ಹೊತ್ತಿದ್ದ. ಬಲವಾಗಿದ್ದ ನನ್ನ ಕೈಕಾಲುಗಳಿಗೆ ಅವುಗಳನ್ನು ಹೊತ್ತುಕೊಂಡು ಮೂವತ್ತು ಮೈಲುದೂರದ ಜಾತ್ರೆಗೆ ಮಿಠಾಯಿ, ಕಜ್ಜಾಯದ ವಾಸನೆಯ ಹಿಂದೆ ನಡೆಯುವುದು ನನಗೇನೂ ಕಷ್ಟವಾಗಲಿಲ್ಲ. ಕಷ್ಟಬಂದದ್ದು ಎಲ್ಲಿ ಎಂದರೆ ಬೆಟ್ಟದಲ್ಲಿ. ನಾನು ಮೂಟೆ ಇಳಿಸಿದವನೇ ಸಿಹಿ ತಿನ್ನುವ ತೀವ್ರ ಬಯಕೆಯಿಂದ ‘ತತ್ತಣ್ಣ ಕಜ್ಜಾಯನ’ ಎಂದೆ. ಅವನು ‘ಲೇಯ್ ಅಡಕಸಬಿ ನನಮಗನೇ ರವಸ್ಟು ತಾಳು ಚಾಪೆ ಹಾಸಿ ಅಂಗ್ಡಿ ಮಡಗ್ತೀನಿ. ಮದ್ಲು ಗಿರಾಕಿ ಬರ್‍ಬೇಕು. ಬೋಣಿ ಆಗಬೇಕು ಆಮೇಲೇನಿದ್ರು ನಿಂಗೆ ಕಜ್ಜಾಯ’ ಎಂದ. ನಾನು ಕೇಳಲಿಲ್ಲ. ಅವನು ಜಾತ್ರೆಯಿಂದ ಜಾತ್ರೆಗೆ ಮೂಟೆಹೊತ್ತು ತಿರುಗಿ ಬೆಳೆದ ಬಲಿಷ್ಠ ದೇಹದವನಾಗಿದ್ದ. ಅವನ ಮುಂದೆ ನನ್ನ ಆಟವೇನೂ ನಡೆಯುವುದಿಲ್ಲವೆಂದು ಗೊತ್ತಿದ್ದರೂ ಜಗಳಹೂಡಿದೆ.ನಾಲ್ಕೈದು ಏಟು, ಬಲವಾದ ಒದೆ ಕೊಟ್ಟು ನನ್ನನ್ನು ಅವನ ಕಣ್ಣಳತೆಯಿಂದಲೇ ಓಡಿಸಿಬಿಟ್ಟ. ವಾಪಸು ಊರಿಗೆ ಬರುವುದಕ್ಕೆ ನಾನು ಕ್ರಮಿಸಿದ ದಾರಿ ಅರಣ್ಯಮಾರ್ಗವಾಗಿತ್ತು. ಬೆಟ್ಟಕ್ಕೆ ಬಂದ ಭಕ್ತರು ಮೂರುದಿನವಿಲ್ಲದೆ ವಾಪಸು ಹೊರಡುವುದಿಲ್ಲವೆನಿಸಿತು. ಹಾಗೆ ಮೂರ್‍ನಾಲ್ಕು ದಿನ ಬೆಟ್ಟದಲ್ಲಿ ಒಬ್ಬನೇ ತಿರುಗಿ ಪರಿಸೆಯೊಂದಿಗೆ ವಾಪಸು ಊರು ಸೇರುವಲ್ಲಿ ತಾಯಿ ನನ್ನನ್ನು ಸೀರೆಯ ಸೆರಗಿನಲ್ಲಿ ಅವುಚಿಕೊಂಡು ‘ಇನ್ನು ಯಾವತ್ತು ನನ್ನ ಕಣ್ಣಳತೆ ಬುಟ್ಟು ಹೋಗಬ್ಯಾಡ ಕಂದ’ ಎಂದಳು. ನನಗೆ ಆಗ ಆ ಮಾತು ಅಷ್ಟೇನು ಪ್ರಿಯವಾಗಿ ಕೇಳಿಸಲಿಲ್ಲ. ಆದರೆ ಆ ಮಧ್ಯೆ ಶಾಲೆಯ ಜವಾನ ನಾನು ಸಿಕ್ಕಿದಾಗಲೆಲ್ಲ ಜುಟ್ಟು ಹಿಡಿದು ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದ. ಅಲ್ಲಿಯ ಉಪಾಧ್ಯಾಯರಾದರೋ ಇನ್ನೂ ಭಯದ ಸಂಗತಿಯಾಗಿದ್ದರು. ತಂದೆತಾಯಿಗಳ ಎದುರಿನ ಭಯವೇ ಬೇರೆ. ಮೇಷ್ಟ್ರ ಭಯದ ಸ್ವರೂಪವೇ ಬೇರೆಯಾಗಿದ್ದುದರಿಂದ ನಾನು ಅರೆಬರೆ ವಿದ್ಯಾಭ್ಯಾಸ ಮಾಡುವವನಾದೆ. + +ಈ ಮಧ್ಯೆ ವಯಸ್ಸಾಗಿದ್ದ ತಂದೆ ತೀರಿಕೊಂಡರು. ತೀರಿಕೊಳ್ಳುವ ಮುನ್ನ ಅವರಿಗೆ ತಿರುಪತಿಗೆ ಹೋಗಬೇಕೆಂಬ ಆಸೆಯಿತ್ತು. ಸಾಧ್ಯವಾದರೆ ಅಲ್ಲೇ ತಮ್ಮ ಪ್ರಾಣಹೋಗಬೇಕೆಂದುಕೊಂಡಿದ್ದರು. ಅದಕ್ಕಾಗಿ ಕೈಯ್ಯಲ್ಲಿ ಅಕ್ಕಿ ತುಂಬಿದ ತಟ್ಟೆ, ಅದರ ಮೇಲೆ ನಾಮ ಬಳಿದ ಹುಂಡಿಗೆ ಬಟ್ಟಲು ಮಡಗಿ, ನನ್ನ ಕೈಯ್ಯಲ್ಲಿ ಜಾಗಟೆ ಹೊಡೆಸಿ, ಗೋವಿಂದನನ್ನು ಇಕ್ಕಿಸುತ್ತ ಊರೆಲ್ಲ ತಿರುಗಿದರು. ಆದರೆ ತಿರುಪತಿಗೆ ಹೋಗುವಷ್ಟು ದಾನದ ಕಾಸು ಸಂಗ್ರಹವಾಗಲಿಲ್ಲ. ಊರೆಲ್ಲ ತಿರುಗಿ ಸಿಕ್ಕಿದ ಏಳೆಂಟು ರೂಪಾಯಿಗೆ ಅಲ್ಲೇ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿ ನಾಲ್ಕೈದು ದಿನವಿದ್ದು ಬಂದು ತಿರುಪತಿಗೆ ಹೋಗಿ ಬಂದುದಾಗಿ ಹೇಳಿದರು. ಆದರೆ ಕುಲದೈವಕ್ಕೆ ಹೋಗಲಾಗದೆ ತನಗೆ ಮೋಕ್ಷವಿಲ್ಲ. ಸ್ವರ್ಗದ ಬಾಗಿಲು ತೆರೆಯುವುದಿಲ್ಲ. ಕೊಂಚ ಮೊದಲೇ ಆಗಿದ್ದರೆ ಡೆದೇಹೋಗಿಬರುತ್ತಿದ್ದೆ. ಆದರೆ ದಾರಿಯಲ್ಲಿ ಹೊಟ್ಟೆಯ ಖರ್ಚಿಗಾದರೂ ಕಾಸುಬೇಕಲ್ಲ… ಎಂಬ ಚಿಂತೆಯಲ್ಲೇ ತೀರಿಕೊಂಡರು. ತಂದೆಯವರು ತೀರಿಕೊಂಡನಂತರ ತಾಯಿಯವರೂ ಬದುಕಿನ ಆಸೆಕಳೆದುಕೊಂಡು ನನ್ನ ಮೇಲಿನ ಯಾವ ಭರವಸೆಯೂ ಇಲ್ಲದೆ, ಒಂಟಿತನ ತಡೆಯಲಾರದೆ ಒಂದುದಿನ ಜೀವ ತೊರೆದರು. ಊರವರೆಲ್ಲ ಅದನ್ನು ಸುಖದ ಸಾವು ಎಂದರು. ಬಹುಶಃ ಸಾವಿನಲ್ಲಿಯೇ ತಾಯಿಯವರಿಗೆ ನೆಮ್ಮದಿ ಸಿಕ್ಕಿರಬೇಕು. ನೆನಪಿಗೆಬಂದ ಇಷ್ಟೆಲ್ಲ ಸಂಗತಿಗಳನ್ನು ಎದುರು ಕುಳಿತ ಸ್ನೇಹಿತರಿಗೆ ಹೇಳಲಾರದವನಾಗಿದ್ದೆ. + +ಬೆಳಗಿನ ಒಂಭತ್ತು ಘಂಟೆಯಾಗಿ ರೈಲು ಯಾವುದೋ ಒಂದು ಸ್ಟೇಷನ್ನಿನಲ್ಲಿ ಬೆಳಗಿನ ಉಪಹಾರಕ್ಕೆ ನಿಲ್ಲಿಸಿದ್ದು ಮುಂದೆ ಹೊರಟಿತ್ತು. ಸ್ನೇಹಿತರಾದರೋ ಸ್ವಲ್ಪಹೊತ್ತಿನ ಹಿಂದೆ ಪ್ರಸ್ತಾಪಿಸಿದ್ದ ವಿದ್ಯಾಭ್ಯಾಸದ ವಿಚಾರವನ್ನೇ ನೆನಪಿಸಿಕೊಂಡು, ನಮ್ಮ ನಿಮ್ಮ ಕಾಲದ ವಿದ್ಯಾಭ್ಯಾಸದ ಕಥೆಯೇ ಬೇರೆ ಅನ್ನಿ. ನಮಗೆ ನಮ್ಮ ತಂದೆತಾಯಿಗಳು ಎಂದರೆ ಎಷ್ಟು ಭಯಗೌರವ ಇತ್ತು. ಅದೆಷ್ಟು ಕಷ್ಟಪಟ್ಟು ಮನೆಯಲ್ಲಿ ಕೂತು ವಿದ್ಯಾಭ್ಯಾಸ ಮಾಡುತ್ತಿದ್ದೆವು ಎಂದರು. ನಾನು ಮತ್ತೆ ಸಣ್ಣದಾಗಿ ನಕ್ಕು ನನ್ನ ವಿದ್ಯಾಭ್ಯಾಸದ ಸಂಗತಿಗಳ ಹೇಳಲಾಗದ ವಿವರಗಳೇ ಎನ್ನಿ.  ಸತ್ಯ ಹೇಳುವುದು ಯಾವಾಗಲೂ ಕಡುಕಷ್ಟ. ಮರ್‍ಯಾದೆಯ ಎದುರು ಸತ್ಯ ಲೆಕ್ಕಕ್ಕೆ ಬರದ ಸಂಗತಿ ಎಂದೆ. ಸ್ನೇಹಿತರು ನೀವು ಒಗಟಿನಂತೆ ಮಾತನಾಡುತ್ತಿದ್ದೀರಿ ಎಂದರು. ಮತ್ತೆ ನಾನೇನೋ ನನ್ನ ಪೂರ್ಣವಿದ್ಯಾಭ್ಯಾಸ ಬೆಂಗಳೂರು ಸಿಟಿಯಲ್ಲೇ ಮಾಡಿದೆ. ನೀವು ಓದಿದ್ದು ಮೈಸೂರಲ್ಲಾ ಎಂದು ಕೇಳಿದರು.ನಾನು, ನೀವು ಬೆಂಗಳೂರಲ್ಲೇ ಓದಿದವರಾದ್ದರಿಂದ ನಿಮಗೆ ನಮ್ಮಷ್ಟು ಸಮಸ್ಯೆ ಹುಟ್ಟಿಕೊಳ್ಳಲಿಲ್ಲ ಎಂದೆ. ಸ್ನೇಹಿತರು ಹೌದು ನೀವು ಹೇಳುವುದು ಸರಿ. ಹಳ್ಳಿಯಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೇಂತ ಬರುವವರು ಆರಂಭಕ್ಕೆ ಬಹಳ ಧೈರ್‍ಯವಹಿಸಬೇಕಾಗುತ್ತೆ. ಸಮಸ್ಯೆಗಳೂ ಕೂಡ ನಾನಾ ಥರದವಿರುತ್ತವಲ್ಲ. ಅವುಗಳನ್ನು ಹಳ್ಳಿಯ ಹುಡುಗರು ನಿಭಾಯಿಸಿಬಿಟ್ಟರೆ, ಪಟ್ಟಣದವರ ಮನಸ್ಸಿಗಿಂತ ತಿಳಿವಳಿಕೆಗಿಂತ ಅವರದು ವ್ಯಾಪಕವಾಗಿ ಬಿಡುತ್ತದೆ ಎಂದರು. ನಾನು ನೀವು ಹೇಳುವ ಮಾತು ಹಳ್ಳಿಯಿಂದ ಬಂದು ಓದಿನ ಸಾಹಸ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಚೆನ್ನಾಗಿಯೇ ಅನ್ವಯಿಸುತ್ತದೆ. ಆದರೆ ನನ್ನಂಥವರಿಗಲ್ಲ. ನನ್ನ ವಿದ್ಯಾಭ್ಯಾಸ ನನಗೆ ಅಂಥ ಲಾಭವನ್ನೇನು ತರಲಿಲ್ಲವೆನ್ನಿ. ಉದ್ಯೋಗವೊಂದನ್ನು ಬಿಟ್ಟು ಎಂದೆ. ಸ್ನೇಹಿತರು ಓ ನಮ್ಮಂಥವರ ವಿದ್ಯಾಭ್ಯಾಸದ ಪರಮ ಗಂತವ್ಯವೇ ಉದ್ಯೋಗದ ಬೇಟೆಯಲ್ಲವೆ ಎಂದು ಜೋರಾಗಿ ನಕ್ಕರು. ಹಾಗಾದರೆ ನಿಮ್ಮ ಪಟ್ಟಣದ ವಿದ್ಯಾಭ್ಯಾಸ ಅಷ್ಟು ಆರಾಮದಾಯಕವಾಗಿರಲಿಲ್ಲವೆನ್ನಿ ಎಂದು ಕೇಳಿ ನನ್ನ ವಿದ್ಯಾಭ್ಯಾಸ ಕ್ರಮ ಕುರಿತು ಏನಾದರೂ ಹೇಳಬಹುದೇ ಎಂದು ನಿರೀಕ್ಷಿಸಿದರು. ನಾನೂ ಸಹ ನನ್ನ ಉನ್ನತ ವಿದ್ಯಾಭ್ಯಾಸ ಆರಾಮದಾಯಕವಾಗಿದ್ದುದರಿಂದಲೇ ಆ ಸಂದರ್ಭಕ್ಕೆ ಏನೂ ಕಲಿಯಲಾಗಲಿಲ್ಲ ಎಂದೆ. ಅವರು ಮತ್ತೆ ನೀವು ಒಗಟಿನ ಮಾತಿಗೇ ಹೊರಟಿರಿ ಎಂದರು. ನನ್ನ ತೀರ ವೈಯ್ಯಕ್ತಿಕ ಸಂಗತಿಗಳನ್ನು ಕೆಣಕುವುದು ಬೇಡವೆಂದೋ ಏನೋ ಒಂದಷ್ಟು ಹೊತ್ತು ಸುಮ್ಮನಾದರು. ಆ ಸಮಯದಲ್ಲಿ ಅವರು ಯಾವುದೋ ಕಾರಣಕ್ಕೆ ಅಸಮಾಧಾನಗೊಂಡ ಮಗನನ್ನು ಸುಮ್ಮನಿರಿಸುವುದರ ಕಡೆಗೆ ಹೊರಳಿದರು. ನಂತರ ನಿಮಗೆ ಮಕ್ಕಳ ಜವಾಬ್ದಾರಿಯ ಅನುಭವ ಇರಲಾರದು ನೋಡಿ. ಅದಕ್ಕೆ ನಿಮ್ಮನ್ನ ನಾನು ಪುಣ್ಯವಂತರು ಎಂದದ್ದು ಎಂದು ತಿರುಗಿ ನಕ್ಕರು. ಅವರ ನಗುವಿನಲ್ಲಿ ನನಗೂ ಆ ಅನುಭವ ಇದ್ದರೆ ಒಳ್ಳೆಯದಿತ್ತು. ಹಾಗಾಗದಿರುವುದು ಒಂದು ರೀತಿ ನಷ್ಟವೇಸರಿ ಎನ್ನುವ ಭಾವನೆಯೂ ಇದ್ದಂತಿತ್ತು. + +…ವಿದ್ಯಾಭ್ಯಾಸಕ್ಕೆಂದು ಹಳ್ಳಿಬಿಡುವಾಗ ನಾನು ತುಂಬ ಸಂತೋಷದಲ್ಲೇ ಇದ್ದೆ. ನನ್ನ ತಾಯಿ ತುಂಬ ದುಃಖದಲ್ಲಿದ್ದರು. ನಾನು ಮಗನಿಗೆ ಅನ್ನಮಾಡಿಹಾಕುವುದಿಲ್ಲವಲ್ಲ, ಪಟ್ಟಣದಲ್ಲಿ ಊಟದ ವ್ಯಾಪ್ತಿ ಹೇಗೋ ಏನೋ ಎಂಬ ಘನಚಿಂತೆಯಲ್ಲಿ ಆಕೆ ಅತ್ತಿದ್ದರು. ನಾನು ಸಂತೋಷದಲ್ಲೇ ಊರುಬಿಟ್ಟೆ. ಮೈಸೂರು ಸೇರುವಲ್ಲಿ ನನಗೆ ಅನ್ನಿಸಿದ್ದೆಂದರೆ ನಮ್ಮ ಊರಿನ ಬೀದಿಗಳಿಗಿಂತಲೂ ಇಲ್ಲಿಯ ಬೀದಿಗಳು ಸುಂದವಾಗಿಯೂ, ಜನನಿಬಿಡವಾಗಿಯೂ ಎಲ್ಲಕ್ಕಿಂತ ಹೆಚ್ಚಾಗಿ ಜನ ನನ್ನ ಹಳ್ಳಿಯವರಂತಿರದೆ ಎಲ್ಲ ರೀತಿಯಲ್ಲಿ ಸುಸಂಸ್ಕೃತರೂ ನಾಗರೀಕರೂ ಆಗಿರುತ್ತಾರೆಂದು ಭಾವಿಸಿದೆ. ಹಾಗಾಗಿ ನನ್ನ ತಂದೆತಾಯಂದಿರಿಗೆ ಎಂದೂ ತೋರಿಸದ ಒಂದು ಬಗೆಯ ಗೌರವವನ್ನು ಇಲ್ಲಿ ಕಂಡಕಂಡವರಿಗೆಲ್ಲ ತೋರಿಸಲು ಆರಂಭಿಸಿದೆ. ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸ ಅಷ್ಟಕಷ್ಟೆ. ವಿದ್ಯಾಭ್ಯಾಸ ಎಂದರೆ ಒಂದೆಡೆ ಕೂರಬೇಕು. ಕೂರುವುದಕ್ಕಿಂತ ಮನಸ್ಸನ್ನು ನಿಗ್ರಹಿಸಬೇಕು. ಇವೆರಡೂ ಯೌವನಕ್ಕೆ ಕಷ್ಟದ ಮಾತು. ಯೌವನದಲ್ಲಿ ಹೆಣ್ಣುಮಕ್ಕಳ ಸ್ನೇಹ ಸಂಪಾದನೆ, ಗೃಹಸ್ಥರಾಗುವಲ್ಲಿ ಹಣಸಂಪಾದನೆಯಾದರೆ ತಾನೆ ಸುತ್ತಮುತ್ತಲಿದ್ದವರಿಂದ ಗೌರವ ಸಿಕ್ಕುವುದು. ಹಾಗಾಗಿ ಯೌವನಕ್ಕೆ ಕಾಲಿಟ್ಟವರು ನಿರಂತರವಾಗಿ ಹೆಣ್ಣುಮಕ್ಕಳ ಬಗೆಗೂ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು ಹೇಗೆಲ್ಲ ಹಣ ಸಂಪಾದಿಸುತ್ತಾರೆಂಬ ಸಂಗತಿ ಕುರಿತು ಮಾತನಾಡುವುದು ಸಹಜ. ಹೀಗಾಗಿ ನಾನು ನನ್ನ ವಿದ್ಯಾಭ್ಯಾಸ ಕಾಲದಲ್ಲಿ ಓದುತ್ತೇನೆ ಎನ್ನುವುದಕ್ಕಿಂತ ಹೆಚ್ಚು ಸುಂದರನಾಗಲು ಪ್ರಯತ್ನಿಸಿದೆ. ಹಾಗೆ ನನ್ನ ದೈಹಿಕ ಅಲಂಕಾರಕ್ಕೆ ಬೇಕಾದ ಸಾಧನಸಲಕರಣೆಗಳಿಗೆ ಹಣ ದೊರೆಯುವಂತಿರಲಿಲ್ಲ. ಪುಸ್ತಕ, ಪೆನ್ನು ಸಂಪಾದಿಸುವುದಕ್ಕಿಂತ ಅಲಂಕಾರ ಸಾಧನಗಳನ್ನು ಸಂಪಾದಿಸಲು ಓದಿನ ನಂತರ ನಾನು ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿದೆ. ಆದರೆ ಈ ಕಳಪೆ ದುಡಿಮೆ ಸಂಗತಿ ಯಾರಿಗೂ ಗೊತ್ತಾಗಬಾರದೆಂದು ಸಂಪಾದನೆಯ ಮೂಲವನ್ನು ಗುಟ್ಟಾಗಿರಿಸಿದೆ. + +ಜೇಬಿನಿಂದ ದುಡ್ಡು ತೆಗೆಯುವಾಗ, ಇದು ನನ್ನ ಅಪ್ಪಅಮ್ಮ ಊರಿಂದ ಕಳುಹಿಸಿದ್ದು ಎಂತಲೇ ಸುಳ್ಳುಸುಳ್ಳು ಬೀಗುತ್ತಿದ್ದೆ. ಸ್ನೇಹಿತರೊಡನೆ ನಿರಂತರವಾಗಿ ಹೆಣ್ಣುಮಕ್ಕಳನ್ನು ಕುರಿತಾದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೆ. ಸಹಪಾಠಿಗಳು ತಾವು ಎಲ್ಲ ಹೆಣ್ಣುಮಕ್ಕಳಿಗೂ ಹೇಗೆಲ್ಲ ಪ್ರಿಯ ಎಂಬುದರ ಪರಾಕುಗಳಲ್ಲಿ ತೊಡಗಿರುತ್ತಿದ್ದರು. ವಾಸ್ತವವಾಗಿ ಒಬ್ಬ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿನಿಗೆ ಪ್ರಿಯನಾದನೆಂದರೆ ಮಿಕ್ಕಂತೆ ಎಲ್ಲರೂ ಅವರಿಂದ ದೂರವಾಗಿ, ಅವರಿಬ್ಬರೇ ಪ್ರತ್ಯೇಕವಾಗಿಬಿಡುತ್ತಿದ್ದರು. ನನಗೂ ಆ ಬಗೆಯ ಒಂದು ಅವಕಾಶ ನನ್ನ ಓದಿನ ಕೊನೆಕೊನೆಯಲ್ಲಿ ದೊರಕಿತು. ನಾನೂ ಎಲ್ಲ ಹೆಣ್ಣುಮಕ್ಕಳ ಮುಂದೆ ಬುದ್ಧಿವಂತನೆಂದೂ, ಸಾಹಸಿಯೆಂದೂ ಎಲ್ಲಕ್ಕಿಂತ ಮಿಗಿಲಾಗಿ ಸಜ್ಜನನೆಂದೂ, ಬಡವನಲ್ಲವೆಂದೂ ತೋರಿಸಿಕೊಳ್ಳುತ್ತಿದ್ದೆ. ನನಗೆ ಪರಿಚಯವಾದ ಹೆಣ್ಣುಮಗಳಿಗೇನೂ ಈ ಬಗೆಯ ಭ್ರಮೆ ಹುಚ್ಚಾಟಗಳಿರಲಿಲ್ಲ. ಹೆಚ್ಚು ವಾಸ್ತವವಾದಿಯಾಗಿದ್ದಳು. ಸಾಮಾನ್ಯವಾಗಿ ಪ್ರವಾಸಕಾಲದಲ್ಲಿ ಹೆಣ್ಣು, ಗಂಡುಮಕ್ಕಳು ಹತ್ತಿರಹತ್ತಿರ ಬರುವುದುಂಟು. ಹಳೆಯಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ನಾನು ತಲೆಯೆತ್ತಿ ಗುಡಿಯ ಮೇಲುಭಾಗದ ಮದನಿಕಾ ವಿಗ್ರಹವನ್ನು ನೋಡುತ್ತಿದ್ದೆ. ಹಿಂದಕ್ಕೆ ಕಟ್ಟಿಕೊಂಡಿದ್ದ ಕೈಗಳಲ್ಲಿ ಒಂದು ಕಿತ್ತಲೆ ಹಣ್ಣು ಹಿಡಿದಿದ್ದೆ. ಅದನ್ನು ಯಾರೋ ಕಸಿದುಕೊಂಡಂತಾಯಿತು. ತಿರುಗಿನೋಡಿದೆ. ನನ್ನ ಸಹಪಾಠಿ ವಿದ್ಯಾರ್ಥಿನಿ. ನನಗಾದ ಸಂತೋಷ ಅವರ್ಣನೀಯ. ಎಷ್ಟೋ ಹೊತ್ತಿನ ಮೇಲೆ ಆಕೆ ಅದನ್ನು ಗೆಳತಿಯರೊಡನೆ ತಿಂದು ಮುಗಿಸಿರಬಹುದೆಂದು ತಿಳಿದಿದ್ದೆ. ಮರುದಿನ ಬೆಳಿಗ್ಗೆ ಉಡುಪಿ ಬಳಿ ಮಲ್ಪೆಯ ಸಮುದ್ರತೀರದಲ್ಲಿ ಅದೇ ಹಣ್ಣಿನ ಅರ್ಧಭಾಗವನ್ನು ನನಗೆ ತಂದುಕೊಟ್ಟು ಉಳಿದರ್ಧವನ್ನು ತಾನಿಟ್ಟುಕೊಂಡು ಮೊದಲು ನೀನು ತಿನ್ನು ಎಂದಳು. + +ಪ್ರವಾಸದಿಂದ ಬಂದನಂತರ ಪರೀಕ್ಷೆಗಳು ಮುಕ್ತಾಯವಾದರೂ ನಮ್ಮ ಮಾತುಕತೆಗಳು ಮುಗಿದಂತೆ ಕಾಣಲಿಲ್ಲ. ಹಾಗೆ ನಾನು ಅವಳೊಡನೆ ಮಾತುಕತೆಯಾಡುವಾಗಲೆಲ್ಲ ಅವಳ ಸಾನ್ನಿಧ್ಯದ ಸಂತೋಷವನ್ನು ಕಾಣುತ್ತಿದ್ದೆ. ಆ ಸಂದರ್ಭಗಳಲ್ಲಂತೂ ನಾನು ಹುಟ್ಟಿದ್ದು ಒಬ್ಬ ತಂದೆಗೆ, ನನ್ನ ಹೊಟ್ಟೆಗೆ ಅನ್ನ ಹುಟ್ಟಿಸಲು ನಿರಂತರ ಹೋರಾಡಿದ ಒಬ್ಬ ತಾಯಿಗೆ ಎಂಬುದು ನೆನಪಿಗೇ ಬರುತ್ತಿರಲಿಲ್ಲ. ಅಷ್ಟು ಹೊತ್ತಿಗಾಗಲೇ ನನ್ನ ತಂದೆತಾಯಿಗಳೂ ತೀರಿಕೊಂಡು ಏಳೆಂಟು ವರ್ಷ ಆಗಿಯೇಹೋಗಿತ್ತು. ನಾನೂ ನನ್ನ ಸಹಪಾಠಿ ಹೆಣ್ಣುಮಗಳೂ ಭೇಟಿಯಾಗುವುದಕ್ಕೆ ತುಂಬ ಸಹಾಯವಾಗುತ್ತಿದ್ದದು ನಮ್ಮ ಒಂಟಿತನಗಳಷ್ಟೆ. ಆಕೆಗೂ ಮನೆಯಲ್ಲಿದ್ದ ಕಟ್ಟುಪಾಡುಗಳಿಂದ ಒಂದಿಷ್ಟು ಹೊತ್ತು ಹೊರಬರಬೇಕಿತ್ತು. ನನಗೂ ನನ್ನ ಅರೆಬರೆವಿದ್ಯೆ ಮುಗಿದು ಉದ್ಯೋಗದ ಬೇಟೆ ಆರಂಭಮಾಡಿದ್ದೆ. ನನ್ನಂಥವರಿಗೆ ಉದ್ಯೋಗ ಸಿಗುವುದೂ ಕೂಡ ಸುಲಭದ ಮಾತಾಗಿರಲಿಲ್ಲ. ಹೀಗಾಗಿ ನನ್ನ ಸ್ನೇಹಿತೆ ಮದುವೆಯ ಸುದ್ದಿ ತೆಗೆದುಬಿಟ್ಟರೆ ಏನು ಮಾಡುವುದು ಎಂಬ ಅಳುಕೂ ಆರಂಭವಾಯಿತು. ಅವಳ ಸಾನ್ನಿಧ್ಯ ಮತ್ತು ನನ್ನ ದೈಹಿಕ ಬಯಕೆಗಳು ತೀವ್ರವಾಗಿದ್ದವೇ ಹೊರತು ಆಕೆಯನ್ನು ವಿವಾಹವಾಗುವ ತುರ್ತೇನೂ ನನಗೆ ಇರಲಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಲಗ್ನದ ಪ್ರಸ್ತಾಪ ತೆಗೆದುಬಿಟ್ಟರೆ ಇವಳನ್ನು ಕಟ್ಟಿಕೊಂಡು ಬದುಕುವ ಮಾರ್ಗವೇನು ಎಂಬ ಚಿಂತೆ ನನಗೆ ಹತ್ತಿಕೊಂಡಿತ್ತಾದರೂ ಅವಳ ನನ್ನ ಭೇಟಿಗಳಿಗೇನೂ ಭಂಗವಿರಲಿಲ್ಲ. ಆದರೆ ಹೆಣ್ಣುಮಕ್ಕಳ ಲೆಕ್ಕಾಚಾರಗಳು ವಿವಾಹಪೂರ್ವಕ್ಕಿಂತಲೂ ಆನಂತರದ್ದೇ ಆಗಿರುತ್ತವೆ. ಅವರು ವಿವಾಹಪೂರ್ವದ ದೈಹಿಕ ಆಕರ್ಷಣೆಗಿಂತ ವಿವಾಹನಂತರದ ಮಕ್ಕಳ ಬಗ್ಗೆ ಯೋಚಿಸುತ್ತಾರೆ. ನನ್ನ ಸಹಪಾಠಿಯ ಮುಂದೆ ನಾನು ಬಡವನಲ್ಲ ಎಂದು ಎಷ್ಟೇ ಬಡಿವಾರ ಹೊಡೆದರೂ, ನನ್ನನ್ನು ಕಟ್ಟಿಕೊಂಡು ನೀನು ಬದುಕುವ ಮಾರ್ಗ ಹೇಗೆ ಎಂದೇ ನಿರ್ಲಿಪ್ತಳಾಗಿ ನುಡಿದು ಪ್ರೇಮಸಂಬಂಧದ ಸಂಗತಿಗಳನ್ನು ಬಿಟ್ಟು ಲೋಕಾಭಿರಾಮದ ಮಾತುಕತೆಗಳನ್ನೇ ಆಡುತ್ತಿದ್ದಳು. ನನಗಾದರೋ, ಅವಳನ್ನು ಲಗ್ನವಾಗಿ ಬದುಕಿಸುವ ಭರವಸೆಯೇ ಇಲ್ಲದಿದ್ದರೂ, ಪ್ರೇಮ ಸಂಬಂಧದ ವಿಚಾರಗಳೇ ನಮ್ಮ ನಡುವೆ ವಿನಿಮಯವಾಗಬೇಕೆಂಬ ಬಯಕೆಯುಂಟಾಗುತ್ತಿತ್ತು. + +ಇಂಥ ತಾಕಲಾಟದ ಭೇಟಿಗಳ ನಡುವೆ ಅವಳ ಮದುವೆ ನಿಶ್ಚಯವಾಗಿಯೇಬಿಟ್ಟಿತು. ಹಾಗೆ ನನ್ನ ಬಳಿ ಅವಳು ಮದುವೆ ವಿಷಯ ಮಾತನಾಡುವಾಗ, ನಮ್ಮ ಸ್ನೇಹ ಇನ್ನು ಸಾಕು. ನೀನು ಎಲ್ಲಾದರೂ ಒಂದು ಉದ್ಯೋಗ ಹುಡುಕಿಕೋ. ಸುಮ್ಮನೆ ದಿನ ಕಳೆಯಬೇಡ. ಪ್ರೀತಿ ಮತ್ತು ವಿವಾಹ ಎನ್ನುವುದು ಭ್ರಮೆ. ಅದು ಜೀವನದಲ್ಲಿ ದೊಡ್ಡಸಂಗತಿಯಲ್ಲ. ಮದುವೆ ಮಕ್ಕಳನ್ನು ಪಡೆಯಲು ಪರವಾನಗಿಯಷ್ಟೆ. ಮಕ್ಕಳನ್ನು ಪಡೆದ ಮೇಲೆ ಮಾಡಿದ ತಪ್ಪಿಗಾಗಿ ಇನ್ನಿಲ್ಲದ ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತು ತೊಳಲಾಡಿ ಬದುಕಿನ ದಾರಿ ಸವೆಸುವುದಷ್ಟೆ. ಒಂದಷ್ಟುದಿನ ಬೇಜಾರಾಗುತ್ತದೆ. ಮನಸ್ಸು ಗಟ್ಟಿಮಾಡಿಕೊ. ಮದುವೆಗೆ ಸಾಧ್ಯವಾದರೆ ಬಾ. ಬದುಕಿನ ದಾರಿಗಳು ಕೂಡಿ ಒಮ್ಮೊಮ್ಮೆ ಗೆಳೆಯರ ದರ್ಶನ ಮಾಡಿಸುತ್ತವೆ. ಭೇಟಿಮಾಡುವಾ, ಎಂದಳು. ನನ್ನ ಸಹಪಾಠಿಯೊಡನೆ ಮಾತನಾಡುವಾಗೆಲ್ಲ ಆಕೆ ಪ್ರಬುದ್ಧಳು ಎನ್ನಿಸುತ್ತಲೇ ಇತ್ತು. ಪ್ರಬುದ್ಧತೆಗೆ ತಕ್ಕ ತಾಯ್ತನವೂ ಇದ್ದಿತು. ನನ್ನ ಊಟ, ವಸತಿ, ಕ್ಷೇಮಸಮಾಚಾರಗಳು ಆಕೆಯ ದಿನನಿತ್ಯ ಮಾತುಕತೆಯ ಮುಖ್ಯ ಸಂಗತಿಯಾಗಿತ್ತೇ ಹೊರತು ನನ್ನ ಯೌವನ ಸಂಬಂಧಿಯಾದ ತೆವಲುಗಳ ಬಗ್ಗೆ ಸ್ಪಂದಿಸುವ ಕುತೂಹಲ ಆಕೆಗೆ ಎಂದೂ ಇರಲಿಲ್ಲ. ಇದರಿಂದ ನಾನು ಅವಳ ಹೆಜ್ಜೆಯನ್ನೇ ಅನುಸರಿಸಿದಂತಾಗಿ ನನ್ನ ಆ ಸಂದರ್ಭದ ತಾತ್ಕಾಲಿಕ ಮೋಹದ ಈಡೇರಿಕೆಗಳನ್ನು ಕಳೆದುಕೊಳ್ಳುವಂತಾದೆ. ಅವಳ ಮದುವೆಯ ಹೊತ್ತಿಗೆ, ಅವಳಿಂದ ನಾನಾಗಲಿ, ನನ್ನಿಂದ ಅವಳಾಗಲಿ ದೂರವಾಗುವುದು ಸುಲಭವಾಯಿತು. ಅವಳ ಹಾರೈಕೆಯಿಂದಲೋ ಏನೋ ಗ್ರಾಮಾಂತರ ಪ್ರದೇಶಗಳೂ ಬುಡಕಟ್ಟು ಸಮೂಹಗಳೂ ಇದ್ದ ಒಂದು ತಾಲ್ಲೂಕುಭಾಗದ ವಿದ್ಯಾಲಯದಲ್ಲಿ ನನಗೊಂದು ಅಧ್ಯಾಪಕ ವೃತ್ತಿ ದಕ್ಕಿತು. ನಾನು ನಿಜವಾಗಿ ವಿದ್ಯಾರ್ಥಿಯಾದದ್ದು ಆಗಲೇ. ಓದಿದ್ದು ಮನಸ್ಸಿಗೂ, ಹೃದಯಕ್ಕೂ ಮುಟ್ಟಿದ್ದೂ ಆಗಲೆ! ಆಗ ತೀರಿಕೊಂಡ ನನ್ನ ತಂದೆತಾಯಿ ಮತ್ತು ಬಾಲ್ಯಕಾಲದ ನೆನಪು ಆರಂಭವಾಗತೊಡಗಿತು. ಆ ನೆನಪುಗಳನ್ನು ತಗ್ಗಿಸಿಕೊಳ್ಳಲಿಕ್ಕಾಗಿ, ಒಂದು ಬಗೆಯ ಅಪರಾಧಿ ಭಾವವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಅರಣ್ಯಸರಹದ್ದಿನ ನಡುವೆ ಕುತೂಹಲದ ಬದುಕು ನಿರ್ಹಿಸುವ ಹಾಡಿಗೆ ಹೋಗುವುದು, ಗ್ರಾಮಸಂಚಾರ, ದೇಶಸಂಚಾರ ಆರಂಭಿಸಿದೆ. ಇವಿಷ್ಟನ್ನೂ ನನ್ನೆದುರಿನ ಸ್ನೇಹಿತರಿಗೆ ಹೇಳಬೇಕೆಂದುಕೊಂಡೆನಾದರೂ ಹೇಳಲಾಗದೆ ಸುಮ್ಮನಾದೆ. + +ಬೆಳಗಿನ ಐದು ಘಂಟೆಗೆ ತೊಡಗಿದ ನಮ್ಮ ಪ್ರಯಾಣ ಇದೀಗ ಯಾವುದೋ ನಿಲ್ದಾಣದಲ್ಲಿ ನಿಲ್ಲುವಾಗ್ಗೆ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿತ್ತು. ಸ್ನೇಹಿತರು ಹಾಗಾದರೆ ನೀವು ಈಗ ನಿಮ್ಮ ಸಮಯ ಕಳೆಯುವುದು ಸಂಚಾರದಲ್ಲೇ ಎನ್ನಿ ಎಂದರು. ತದನಂತರ ನನ್ನ ಉತ್ತರದಲ್ಲಿ ಆಸಕ್ತಿ ಇಲ್ಲದವರಂತೆ ಹೊರಗೆನೋಡಿ ಇದೇನೂ ಸಿಟಿಗಿಟಿ ಅಲ್ಲ. ಬರಿಯ ಕ್ರಾಸಿಂಗ್‌ಗಾಗಿ ಮಾಡಿದ ಸ್ಟೇಷನ್ ಇರಬೇಕು. ಇನ್ನೊಂದೆರಡು ಘಂಟೆಯಲ್ಲಿ ಅಹಮದಾಬಾದ್ ತಲುಪಬಹುದು ಎಂದು ನನ್ನತ್ತ, ಹೊಸದಾಗಿ ಬಾಡಿಗೆ ಮನೆಯೊಂದನ್ನು ನೋಡಿ ಮುಂಬಯಿ ಮನೆಯ ಸಾಮಾನು ಸರಂಜಾಮನ್ನೆಲ್ಲ ಜೋಡಿಸಿ, ಪಕ್ಕದ ಮನೆಯವರಿಗೆ ಬೀಗದ ಕೈ ಕೊಟ್ಟುಬಂದಿದ್ದೇನೆ. ಈಗ ಹೋಗಿ ಎಲ್ಲಿಯಾದರೂ ಹೋಟೆಲ್‌ನಲ್ಲಿ ಊಟ ಮಾಡೋಣ. ನೀವು ನಮ್ಮಲ್ಲೇ ಒಂದು ರಾತ್ರಿ ತಂಗಿದ್ದು ನಿಮ್ಮ ಮುಂದಿನ ಪ್ರಯಾಣ ಕೈಗೊಳ್ಳಬಹುದು ಎಂದರು. ಅವರ ಸ್ನೇಹದ ಮಾತುಗಳಿಗಾಗಿ ನಾನು ಕೃತಜ್ಞತೆ ಸೂಚಿಸಿದೆ. ಬೋಗಿ ಇಳಿದು ಈಚೆ ಬಂದೆ. ಪಶ್ಚಿಮದಲ್ಲಿ ಸೂರ್‍ಯಮುಳುಗುತ್ತಿದ್ದ. ರೈಲು ನಿಂತಿದ್ದ ಪ್ರದೇಶವೆಲ್ಲ ತಕ್ಕಮಟ್ಟಿಗೆ ಅರೆ ಅರಣ್ಯ ಭಾಗವಾಗಿತ್ತು. ಕೇವಲ ಹಕ್ಕಿಪಕ್ಷಿಗಳ ಕಲರವವೇ ಹೊರತು ರೈಲುನಿಲ್ದಾಣದಲ್ಲಿರಬಹುದಾದ ಯಾವ ಗದ್ದಲವೂ ಕೇಳಲಿಲ್ಲ. ಪ್ರಯಾಣಿಕರು ಇಳಿದು ಹತ್ತುವ ತಾಣವೂ ಅದಾಗಿರಲಿಲ್ಲ. ಸ್ನೇಹಿತರು ಹೇಳಿದಂತೆ ಅದು ಕೇವಲ ಎರಡು ರೈಲುಗಳ ಕ್ರಾಸಿಂಗ್ ನಿಲ್ದಾಣವಾಗಿತ್ತಷ್ಟೆ. ಒಟ್ಟು ವಾತಾವರಣ ಅರಳಿದ ಹೂವಿನಷ್ಟು ಸುಂದರವಾಗಿ ಕಾಣುತ್ತಿತ್ತು. ನಾನು ಕುಡಿಯುವ ನೀರಿನ ಕಡೆ ಹೊರಟು ನಲ್ಲಿಯ ಮೂತಿಗೆ ಬಾಯಿಕೊಟ್ಟೆ. ನೀರು ಕುಡಿದಾಗುವ ಹೊತ್ತಿಗೆ ನನ್ನ ಹೆಸರು ಹಿಡಿದು ಕರೆದ ಮಹಿಳೆಯ ಕಡೆ ನೋಡಿದೆ. ನನಗೇನೂ ಆಶ್ಚರ್ಯವಾಗಲಿಲ್ಲ. + +ಸ್ನೇಹಿತರ ಪತ್ನಿ. ಅಪೂರ್ವ ಮಂದಹಾಸವನ್ನು ಬೀರುತ್ತ ‘ನಿನ್ನನ್ನು ನೋಡಿ ಅದೆಷ್ಟು ದಿನಗಳಾಗಿ ಹೋದವು’ ಎಂದರು. ನಾನು ‘ನಿಮ್ಮ ಮನೆಯವರು ಅಷ್ಟೊಂದು ಮಾತನಾಡಿದರು, ನೀವು ಮಾತ್ರ…’ ಎಂದೆ. ‘ಮಾತನಾಡುವುದಕ್ಕೇನಿದೆ’ ಎಂದರು. ಮೈಸೂರಿನಲ್ಲಿ ಭೇಟಿಯಾಗುತ್ತಿದ್ದ ದಿನಗಳಲ್ಲೆಲ್ಲ ನನ್ನ ಊಟ ತಿಂಡಿಯ ಬಗ್ಗೆ ವಿಚಾರಿಸುತ್ತಿದ್ದಂತೆ ಈ ಹೊತ್ತು ಕೂಡ ‘ನೋಡು ನೀನು ಬೆಳಿಗ್ಗೆಯಿಂದ ಏನು ತಿನ್ನಲಿಲ್ಲ’ ಎಂದರು. ನಾನು ನಿನ್ನೆಯೇ ಕೊಂಡಿದ್ದ ಬ್ರೆಡ್‌ಪ್ಯಾಕನ್ನು ಬ್ಯಾಗಿನಿಂದ ತೆಗೆದು ತೋರಿಸಿ ‘ತಿನ್ನಬೇಕು’ ಎಂದೆ. ‘ನೀನು ಹಸಿವನ್ನು ಗೆದ್ದುಬಿಟ್ಟಿರುವೆಯೊ ಹೇಗೆ’ ಎಂದು ಮುಖದ ಮಂದಹಾಸವನ್ನು ಮುಂದುವರೆಸಲು ಪ್ರಯತ್ನಿಸಿದರು. ಆದರೂ ಅವರ ಕಣ್ಣಲ್ಲಿ ಒಂದೆರಡು ಹನಿ ಉಕ್ಕಿಯೇಬಿಟ್ಟಿತು. ಅಷ್ಟರಲ್ಲಿ ನಲ್ಲಿಗೆ ಹಿಡಿದಿದ್ದ ನೀರಿನ ಬಾಟಲಿ ತುಂಬಿಬಂದು ಚೆಲ್ಲುತ್ತಿತ್ತು. ಹೊರತೆಗೆದು ಮೂತಿಗೆ ಮುಚ್ಚಳ ಭದ್ರಪಡಿಸಿ ‘ಬಾ, ಅಹಮದಾಬಾದಿಗೆ ಹೋಗೋಣ. ನಿನಗೆ ನಾನೇ ಅಡುಗೆ ಮಾಡಿಹಾಕುತ್ತೀನಿ’ ಎಂದರು. ‘ನೀವು ನಡೆಯಿರಿ’ ಎಂದೆ. ಆಕೆ ನಲ್ಲಿಯ ನೀರಿನಲ್ಲಿ ಮುಖತೊಳೆದುಕೊಂಡು ಮುಂದೆ ನಡೆದು ಬೋಗಿ ಸೇರುವಲ್ಲಿ ರೈಲು ಮುಂದೆಹಾಯಿತು. ದೂರದಲ್ಲಿ ಮುದುಕರೊಬ್ಬರು ಹಸಿರು ಬಾವುಟ ತೋರಿಸುತ್ತಿದ್ದವರು ಅದನ್ನು ಮಡಚಿ ಕೋಲಿಗೆ ಮುದುರಿಕೊಂಡು ಇತ್ತ ಬಂದರು. ನಲ್ಲಿಯ ಬಳಿ ನಿಂತು ಹೋಗುತ್ತಿದ್ದ ರೈಲನ್ನೇ ನೋಡುತ್ತಿದ್ದ ನನ್ನ ಕಂಡು ಆಶ್ಚರ್ಯಗೊಂಡರು. ಬಾಯ್ ಇದ್ಯಾಕೆ ಇಲ್ಲೇ ನಿಂತಿರಿ. ರೈಲು ಹತ್ತುವುದಿಲ್ಲವೇ? ಇಷ್ಟು ವರ್ಷಕ್ಕೆ ನೀವು ಮಾತ್ರ ಇಲ್ಲಿ ಇಳಿದು ಗಾಡಿಹತ್ತದೇ ನಿಂತು ಬಿಟ್ಟಿವರು, ಪರಮಾಶ್ಚರ್ಯ ಎಂದರು.ಅಜ್ಜನ ಪ್ರಶ್ನೆಗೆ ನನ್ನಲ್ಲಿ ಉತ್ತರವೇ ಇರಲಿಲ್ಲ. ಸುಮ್ಮನೇ ನಿಂತೆ. ತಿರುಗಿ ಅಜ್ಜನೇ ನೀವು ಎಲ್ಲಿಗೆ ಹೊರಟವರು. ನಾನು ಹಾಗೆ ಕೇಳಬಾರದು ಆದರೂ ಕೇಳುತ್ತಿದ್ದೇನೆ, ಕ್ಷಮಿಸಿ ಎಂದರು. ಸಬರ್ಮತಿ ಆಶ್ರಮಕ್ಕೆ ಹೋಗಬೇಕಾಗಿತ್ತು ಎಂದೆ. ಅಜ್ಜ ಹಾಗೆ ಹೇಳಿ ಮತ್ತೆ ಎಂದು, ಸಾಮಾನ್ಯವಾಗಿ ಎಲ್ಲರೂ ಅಹಮದಾಬಾದ್ ತಲುಪಿ ಅಲ್ಲಿಂದ ಗಾಂಧಿ ಆಶ್ರಮದ ಕಡೆ ಯಾವುದಾದರೂ ಗಾಡಿ ಹಿಡಿಯವುದುಂಟು. ಅಲ್ಲಿಂದೇನೂ ದೊಡ್ಡಪ್ರಯಾಣವಲ್ಲ ಎನ್ನಿ. ಇಲ್ಲಿಂದಲೂ ಒಂದು ಮೋಟರು ರಸ್ತೆ ಇದೆ. ಆದರೆ ಯಾರೂ ಇಲ್ಲಿ ಇಳಿದು ಹೋಗುವುದಿಲ್ಲ. ಅಷ್ಟಾಗಿ ವಾಹನ ಸೌಕರ್‍ಯವೂ ಇಲ್ಲ ಎಂದರು. ಆ ನಿಲ್ದಾಣದಲ್ಲಿದ್ದ ಸ್ಟೇಷನ್ ಕಟ್ಟಡ ಬಹಳ ಹಳೆಯದಾಗಿದ್ದು ಚಿಕ್ಕದಾಗಿತ್ತು. ಆದರೆ ಆ ಕಟ್ಟಡ ಮತ್ತು ರೈಲ್ವೆ ಹಳಿಯೇ ಅಲ್ಲದೆ ಸುತ್ತಣ ಪ್ರದೇಶವನ್ನೆಲ್ಲ ಚಾಚಿಕೊಂಡಂತೆ ಒಂದು ಭಾರಿ ಅರಳಿಮರ ಬೆಳೆದು ಬೀಸುವ ಗಾಳಿಗೆ ನಿರಂತರ ಸಂತಸ ಸೂಸುವಂತಿತ್ತು. ಹಸಿರು ಬಾವುಟದ ಅಜ್ಜ ಹಾಗಾದರೆ ಬನ್ನಿ, ನನ್ನ ಜಾಗದಲ್ಲಿ ಸ್ವಲ್ಪಹೊತ್ತು ವಿರಾಮದಿಂದ ಇದ್ದುಹೋಗಿ. ಇಲ್ಲಿಂದ ನೀವು ಈ ರಾತ್ರಿ ಆಶ್ರಮದ ದಾರಿ ಹಿಡಿಯಲಾಗದು ಎಂದರು. ಪುಟ್ಟ ಸ್ಟೇಷನ್ನಿನ ಹಿಂಭಾಗದಲ್ಲಿ ಸಮೃದ್ಧವಾಗಿ ಬೆಳೆದ ರಾಗಿ, ಜೋಳ, ಅದರ ಸುತ್ತ ತೆಂಗು ಬಾಳೆ. ಅಲ್ಲೊಂದುಕಡೆ ನಾಲ್ಕು ಕಂಭನೆಟ್ಟು ಮೇಲೆ ಇಡಲಾಗಿದ್ದ ತೆಂಗಿನ ಮಟ್ಟಾಳೆಯ ಅಟ್ಟಣೆ. ತೋಟದ ಹಿಂಭಾಗದಲ್ಲಿ ಚೆನ್ನಾಗಿ ಗುಡಿಸಿ ಸಾರಿಸಿದ ಅಂಗಳ. ಅದರ ಮಧ್ಯೆ ನಡುವಿನೆತ್ತರದ ಮಣ್ಣಿನ ಗೋಡೆಯ ಮೇಲೆ ಏರಿಸಿದ ಅದೇ ತೆಂಗಿನಮಟ್ಟಾಳೆ ಗುಡಿಸಿಲು. ಮಟ್ಟಾಳೆಯ ಮೇಲೆ ಅಂಚಿಹುಲ್ಲು ಹೊದಿಸಲಾಗಿತ್ತು. ಬೇಸಿಗೆಯಲ್ಲಿ ತಂಪೂ, ಚಳಿಗಾಲದಲ್ಲಿ ಬೆಚ್ಚಗೂ ಇರುವಂತೆ ಆ ಗುಡಿಸಲು ಇತ್ತು. ಗುಡಿಸಿಲ ಮುಂದೆ ರಂಗೋಲಿ. ಆಶ್ಚರ್‍ಯದ ಸಂಗತಿಯೆಂದರೆ ಗುಡಿಸಿಲಿಗೆ ಬಾಗಿಲು ಇರಲಿಲ್ಲ. ಆ ಗುಡಿಸಿಲ ನಿರ್ಮಾಣದಲ್ಲಿ ಅಜ್ಜ ಒಂದು ಸಂಗತಿ ಹೇಳಿದರು.ಕುದುರೆಯ ಮೇಲೆ ಬಂದವರು ಪುಟ್ಟ ಸ್ಟೇಷನ್ ಕಟ್ಟಿದ ನಂತರ ಅಜ್ಜನ ವಾಸಕ್ಕೆ ಒಂದು ತಾರಸಿ ಮನೆ ಕಟ್ಟಿಕೊಡುತ್ತೇವೆಂದರಂತೆ. ಆದರೆ ಅಜ್ಜನಿಗೆ ಆ ರಾತ್ರಿಯೇ ತಾನು ಒಂದು ತಾರಸಿ ಮನೆಯಲ್ಲಿ ಮಲಗಿದ್ದು, ಮುಖಕ್ಕೆ ಕಪ್ಪುಮುಸುಕು ಹಾಕಿಕೊಂಡವರಾರೋ ಬಂದು ಮನೆಯ ಬುಡಕ್ಕೆ ಬೆಂಕಿ ಇಟ್ಟು ಆಮೇಲೆ ನಿಧಾನವಾಗಿ ತಾರಸಿಯೂ ಕುಸಿದುಬಿದ್ದಂತೆ ಕನಸಾಯಿತೆಂದು ಮನೆಕಟ್ಟಲು ಒಪ್ಪದೆ ತಾವೇ ಈ ಗುಡಿಸಲು ಕಟ್ಟಿಕೊಂಡದ್ದನ್ನು ಹೇಳಿದರು. ಗುಡಿಸಿಲ ಪಕ್ಕದ ಪಾರಿಜಾತ ಮರದ ನೆರಳಿನಲ್ಲಿ ಹಸುವೊಂದು ತನ್ನಕರುವನ್ನು ಪ್ರೀತಿತುಂಬಿ ನೆಕ್ಕುತ್ತಿತ್ತು.ಅಜ್ಜ ನನ್ನನ್ನು ಗುಡಿಸಿಲ ಒಳಕ್ಕೆ ಕರೆದುಕೊಂಡುಹೋಗುವ ಮುನ್ನ ತಾವು ಅಲ್ಲಿ ರಾಗಿ, ಜೋಳ ಮತ್ತಿತರ ಹಸಿರಿನ ಸಮೃದ್ಧಿಯ ಹಿನ್ನೆಲೆಯನ್ನು ವಿವರಿಸಿದರು. ಈ ಜನವಸತಿ ಇಲ್ಲದ ಸ್ಟೇಷನ್ನಿಗೆ ಯಾರು ಬರುತ್ತಾರೆ ಹೇಳಿ. ಸ್ಟೇಷನ್ ಮಾಸ್ಟರ್ ಕೆಲಸಕ್ಕೆಂದು ಬಂದವರು ಯಾರೂ ಉಳಿಯುತ್ತಿರಲಿಲ್ಲ. ಇಲ್ಲಿಯ ಕೆಲಸವೆಂದರೆ ಹಗಲು ರಾತ್ರಿ ಹೋಗಿ ಬರುವ ರೈಲಿಗೆ ಬಾವುಟ ತೋರಿಸುವುದು ಅಷ್ಟೆ. ಅಗೋ ನೋಡಿ ಇಲ್ಲಿಂದ ಮೂರ್‍ನಾಲ್ಕು ಕೂಗಳತೆ ದೂರದಲ್ಲಿ ಹತ್ತಾರು ಗುಡಿಸಲು ಸಮೂಹ ಇದೆ ನೋಡಿ. ಅದು ನಾನು ಹುಟ್ಟಿ ಬೆಳೆದ ಸ್ಥಳ. ನಾವು ದನ ಕುರಿ ಮೇಕೆ ಸಾಕಿ ಅರಣ್ಯದಿಂದ ಅರಣ್ಯಕ್ಕೆ ಅಲೆದವರು. ನನ್ನ ತಂದೆ ಹೇಳುತ್ತಿದ್ದ, ನಾವು ಇದೇ ಗೂರ್ಜರ ನಾಡಿನಿಂದಾಚೆಯ ವಿಂದ್ಯಾಚಲದ ಅರಣ್ಯದಲ್ಲಿ ಇದ್ದವರಂತೆ. ಮೇವು ನೀರಿಗಾಗಿ ದಾರಿಮಾಡಿಕೊಂಡು ಬಂದು ಇಲ್ಲಿ ನೆಲೆಸಿದ್ದಂತೆ. ನಾವು ವಾಸಮಾಡಿಕೊಂಡಿರುವ ಹಟ್ಟಿಯ ಬಳಿ ಒಂದು ತೊರೆ ಹರಿಯುತ್ತಿದೆ. ಭೂಮಿ ನಮಗೆ ತಾಯಿ. ನೀರು ತೀರ್ಥ. ಸೂರ್‍ಯಚಂದ್ರರು ಕುಲದೇವತೆಗಳು ಎನ್ನಿ. ಎಷ್ಟೋ ವರ್ಷಗಳ ಹಿಂದೆ ಒಮ್ಮೆ ಈ ಸ್ಟೇಷನ್ ಕಡೆಯಿಂದ ಯಾರೋ ಒಬ್ಬರು ಕುದುರೆಯ ಮೇಲೆ ಬಂದವರು ನನ್ನ ಕರೆದು ಈ ಕೆಲಸ ಮಾಡು, ತಿಂಗಳಕೂಲಿ ಎಂದರು. ನಾನು ಒಪ್ಪಿಕೊಂಡೆ. ಇಲ್ಲಿ ಒಬ್ಬನೇ ಏನು ಮಾಡಲಿ ಹೇಳಿ? ರಾಗಿ, ಜೋಳದ ಪೈರು ನೆಡುತ್ತೇನೆ. ಬಾಳೆ ಹಾಕುತ್ತೇನೆ. ರಾತ್ರಿ ಆ ಎತ್ತರದ ಅಟ್ಟಣೆಯಲ್ಲಿ ನಿದ್ದೆ. ಹಗಲು ಈ ಗುಡಿಸಲಲ್ಲಿ ನನ್ನ ಆಡುಗೆ ಬೇಯಿಸುತ್ತೇನೆ. ಹೆಂಡತಿ ಹಟ್ಟಿಯಲ್ಲಿದೆ. ಬೆಳಗೋ, ಸಾಯಂಕಾಲವೋ ಬರುವುದುಂಟು. ಈ ಅಂಗಳ ಗುಡಿಸಲ ಸ್ವಚ್ಛತೆ, ರಂಗೋಲೆ ಎಲ್ಲ ಅವಳದೇ. ಇಷ್ಟೆಲ್ಲ ಹೇಳುವಾಗ್ಗೆ ಅಜ್ಜ ನನ್ನ ಊರು ಕೇರಿ ಹೆಸರು ಏನೊಂದನ್ನೂ ವಿಚಾರಿಸಲಿಲ್ಲ. + +ಗುಡಿಸಲ ಒಳಗೆ ಬಂದಾಗ ನನಗೊಂದು ಆಶ್ಚರ್‍ಯ ಕಾದಿತ್ತು. ಒಂದು ಮೂಲೆಯಲ್ಲಿ ಬಿದಿರಬುಟ್ಟಿಯಿದ್ದು ಅದರ ಸಂದಿಯಿಂದ ಹತ್ತು ರೂನ ಒಂದು ನೋಟು ಕಾಣಿಸುತ್ತಿತ್ತು. ಅಜ್ಜ ಆ ನೋಟನ್ನು ಈಚೆಗೆಳೆದು ಮತ್ತೆ ಬುಟ್ಟಿಯೊಳಕ್ಕೆ ಹಾಕಿ ಅದರ ಬಾಯಿಗೆ ಬಿದಿರ ತಟ್ಟೆ ಮುಚ್ಚಿದರು. ನಾನು ಅವರ ಮುಖ ನೋಡಿದೆ. ಅವರು ಅಷ್ಟೇ ನಿರ್ಲಿಪ್ತರಾಗಿ, ಕುದುರೆ ಮೇಲೆ ಬಂದವರು ಅದೇನೋ ತಿಂಗಳ ಕೂಲಿ ಎಂದರಲ್ಲ. ಅದನ್ನು ಅವರು ಎಷ್ಟೋ ವರ್ಷಗಳಿಂದ ತಪ್ಪದೇ ಕೊಡುತ್ತಿದ್ದಾರೆ. ಅದೆಷ್ಟು ಕಾಸು ಎಂದು ನನಗೆ ಗೊತ್ತಾಗದು. ಕೊಟ್ಟದ್ದನ್ನೆಲ್ಲ ಈ ಗುಡಿಸಲ ಮೂಲೆಯ ಬುಟ್ಟಿಗೆ ಹಾಕಿದ್ದೇನೆ. ಈ ಕಾಡಿನಲ್ಲಿ ಅದನ್ನು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಆದರೆ ಅವರು ಹೇಳಿದ ಉದ್ಯೋಗವನ್ನು ಮಾತ್ರ ಸೂರ್‍ಯಚಂದ್ರರು ಹುಟ್ಟುವಂತೆ, ಕೋಳಿಕೂಗುವಂತೆ, ಪಕ್ಷಿಗಳು ಗೂಡಿಂದ ಏಳುವಂತೆ ತಪ್ಪದೇ ಮಾಡಿಕೊಂಡು ಬಂದಿದ್ದೇನೆಂದರು. ಮತ್ತೆ ವರ್ಷಕ್ಕೆರಡು ಜೊತೆ ಈ ಬಿಳಿಯ ಬಟ್ಟೆ ಕೊಟ್ಟು ಇದನ್ನು ಹಾಕಿಕೊಂಡೆ ಬಾವುಟ ತೋರಿಸಬೇಕೆಂದು ರೈಲಿನವರು ಹೇಳುತ್ತಾರೆ. ನಮ್ಮ ಹಟ್ಟಿಯವರಾದರೋ ನನ್ನ ವೇಷನೋಡಿ ನಗುತ್ತಾರೆ ಎಂದರು. + +ಅಜ್ಜ, ಮಾತಿನ ನಂತರ ನಿಮಗೆ ನಡಿಗೆಯ ಅಭ್ಯಾಸವುಂಟೆ ಎಂದರು. ನಾನು ಇದೆ ಎಂದೆ. ಮಾತಿಲ್ಲದೆ ಅಜ್ಜ ಒಂದು ಕಾಲು ಹಾದಿ ಹಿಡಿದರು. ನಾನು ಅವರನ್ನು ಅನುಸರಿಸಿದೆ. ದಾರಿಯಲ್ಲಿ ಹೆಚ್ಚು ಮಾತನಾಡಲಿಲ್ಲ. ಕೈಯ್ಯ ಬ್ಯಾಟರಿ ತೋರಿಸಿ, ಇದು ನೋಡಿ ಸರ್ಕಾರದವರೇ ಕೊಟ್ಟದ್ದು. ನನ್ನ ಕೂಲಿ ಕೊಡಲು ಬರುವವರು ಪ್ರತಿ ತಿಂಗಳೂ  ಇದರ ಸೆಲ್ಲು ತಂದುಕೊಡುತ್ತಾರೆ. ನನ್ನ ರಾತ್ರಿ ಓಡಾಟಕ್ಕೆ ಇದು ಅನುಕೂಲ ಎಂದರು. ತೊರೆ ದಾಟಿ ಒಂದು ಕೂಗಳತೆದೂರ ನಡೆಯುವ ಹೊತ್ತಿಗೆ ಅವರ ಹಟ್ಟಿ ಸಿಕ್ಕಿತು. ಅದು ಐವತ್ತು ಗುಡಿಸಲು ಸಮೂಹವಾಗಿತ್ತು. ಬೆಳದಿಂಗಳ ದಿನಗಳು ಹತ್ತಿರವಾಗಿದ್ದರಿಂದ ಹೆಣ್ಣುಮಕ್ಕಳೆಲ್ಲ ಹಟ್ಟಿಯ ಮೂಲೆಯನ್ನು ಸಾರಿಸಿಗುಡಿಸಿ, ರಂಗೋಲೆಯಿಟ್ಟು, ದೀವಿಗೆ ಹಚ್ಚಿ ಚಂದಮಾಮನನ್ನು ತಮ್ಮೆಡೆಗೆ ಆಹ್ವಾನಿಸುತ್ತಿದ್ದರು. ಹಟ್ಟಿಯ ಪುಟ್ಟಮಕ್ಕಳೆಲ್ಲ ಅಪರಿಮಿತ ಆನಂದದಲ್ಲಿ ಸಾರಿಸಿದ ಅಂಗಳದಲ್ಲಿ ಚೆಲ್ಲಾಡಿಕೊಂಡು ಕುಣಿಯುತ್ತಿದ್ದವು. ವಯಸ್ಸಾದ ಗಂಡಸರ ಒಂದು ಗುಂಪು ಹೆಗಲ ಮೇಲಿನ ಕಂಬಳಿಯಲ್ಲಿ ಮುದುರಿಕೂತು ಎಂದೋ ಆಗಿಹೋಗಿದ್ದ ತಮ್ಮ ಹಟ್ಟಿಯ ವೀರನ ಕಥೆಯನ್ನು ತದೇಕಚಿತ್ತದಿಂದ ಆಲಿಸುತ್ತಿದ್ದರು. ಆಕಾಶದಿಂದ ಹಾಲಿನಂತೆ ಹರಿಯುತ್ತಿದ್ದ ಬೆಳದಿಂಗಳಿಗೂ, ಅರಣ್ಯದ ಮೌನಕ್ಕೂ ಮಧುರ ಧ್ವನಿ ಕೊಡುವಂತೆ ಒಬ್ಬ ಹಿರಿಯ ಮಾರುದ್ದದ ಬಿದಿರ ಕೊಳಲನ್ನು ಊದುತ್ತಿದ್ದ. ಅವನೆದುರು ಕೂತವನು ಹಟ್ಟಿಯ ವೀರನ ಕತೆ ಹಾಡುತ್ತಿದ್ದ. ನನಗೆ ಅಲ್ಪಸ್ವಲ್ಪ ತಿಳಿದುಬಂದಂತೆ ಎಷ್ಟೋ ವರ್ಷಗಳ ಹಿಂದೆ ಕತ್ತಿಹಿಡಿದು ರಥವೇರಿ, ಕುದುರೆ, ಆನೆ, ಕಾಲಾಳುಸೈನ್ಯ ಈ ಅರಣ್ಯಮಾರ್ಗ ಹೋಗುವಲ್ಲಿ ಲೂಟಿ ಮತ್ತು ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡುವುದಾಗಿ ಇತ್ತ ಸಿಪಾಯಿಗಳು ಬಂದರಂತೆ. ಇದ್ದಬದ್ದ ಹುಡುಗರನ್ನು ಕಟ್ಟಿಕೊಂಡು ಕಿರೀಟ ತೊಟ್ಟವರೆದರು ಹೋರಾಡಿ ಹಟ್ಟಿ ಉಳಿಸಿದವನ ಕಥೆಯನ್ನು ಕಣ್ಣಮುಂದೆ ಆ ಘಟನೆ ನಡೆಯುತ್ತಿದೆಯೇನೋ ಎಂಬಂತೆ ಕೇಳುತ್ತಿದ್ದರು. ಆ ವೀರನ ಹೆಸರನ್ನೇ ಇಂದಿಗೂ ತಮ್ಮ ಮಕ್ಕಳಿಗೆ ಇಟ್ಟು ಕರೆಯುವುದಾಗಿ ಅಜ್ಜ ಹೇಳಿದರು. + +ಅಜ್ಜ ತಮ್ಮ ಗುಡಿಸಲ ಪುಟ್ಟ ಜಗಲಿಯ ಮೇಲೆ ಅಂಚಿಕಡ್ಡಿಯ ಚಾಪೆ ಹಾಕಿ ನನ್ನ ಕೂರಲು ಹೇಳಿದರು. ಸುಮಾರು ಎಪ್ಪತ್ತು ಮುಟ್ಟಿದ್ದ ಹೆಂಡತಿಯನ್ನು ಕರೆದು ಹೆಣ್ಣೆ ಇಲ್ಲಿ ನೋಡು, ನಮ್ಮ ಕುಲಸ್ಥರು ಬಂದಿದ್ದಾರೆ. ನನ್ನ ಅಡಿಗೆಯ ರುಚಿ ತೋರಬಾರದು ಎಂದು ನಿನ್ನಲ್ಲಿಗೆ ಕರೆದುಕೊಂಡು ಬಂದೆ ಎಂದರು. ಅಜ್ಜಿ ಗಂಡನನ್ನು ಕೇಳಿದ್ದೆಂದರೆ ದಣಿದ ಕುಲಸ್ಥರನ್ನು ಇಷ್ಟು ತಡಮಾಡಿ ಕರೆದುಕೊಂಡು ಬರುವುದೇ ಎಂದು ಆಕ್ಷೇಪಿಸಿದರು. ಅದಕ್ಕೆ ಅಜ್ಜ ಎಲೆಹೆಂಗಸೆ ಅವರು ರೈಲು ಇಳಿದದ್ದು ಹೊತ್ತು ಮುಳುಗುವಾಗ. ಬರುತ್ತಲೇ ಇತ್ತ ಕರೆದುಕೊಂಡು ಬಂದೆ, ತಡಮಾಡಲಿಲ್ಲ. ನೀನೇನೂ ನನಗೆ ಬುದ್ಧಿ ಹೇಳಿ ಕುಲಸ್ಥರನ್ನು ಕಾಯಿಸಿಬಿಟ್ಟೆ, ಹಸಿವಾಗುವಂತೆ ಮಾಡಿದೆ ಎಂದು ದೂರಬೇಡ ಎಂದರು. ಆದರೂ ಸಮಾಧಾನಗೊಳ್ಳದ ಅಜ್ಜಿ ಪಾಪ ಕುಲಸ್ಥರು ಎಲ್ಲಿಂದ ಬಂದರೋ. ರೈಲು ಗಾಡಿ ಜೋರಂತೆ, ಎಲ್ಲಿಯೂ ನಿಲ್ಲುವುದಿಲ್ಲವಂತೆ, ಪ್ರಯಾಣ ಭಯವಂತೆ. ನಾವು ಕಾಡೊಳಗೆ ಪಯಣದಲ್ಲಿರುವಾಗ್ಗೆ ಆರಾಮದಲ್ಲಿ ನಡೆದು ಮರದ ಕೆಳಗೆ ಬುತ್ತಿ ಉಂಡು ನಿದ್ದೆ ಮಾಡಿ ತಿರುಗಿ ಮುಂದಿನ ಹಾದಿ ನಡೆಯುತ್ತೇವಲ್ಲ, ಹಾಗಲ್ಲವಂತೆ! ರೈಲಿನ ಜೋರಿಗೆ ಮೈಯೆಲ್ಲ ನಡುಗಿ ಸಾಕಾಗುವುದಂತೆ ಎಂದು ಗಂಡ ರೈಲನ್ನು ಕುರಿತು ಹೇಳಿರುವುದನ್ನೆಲ್ಲ ತಮ್ಮದೇ ಪರಿಭಾಷೆಯಲ್ಲಿ ಹೇಳುತ್ತ ಇಕೋ ಮಗ ಇನ್ನಷ್ಟು ಆಮ್ರ, ಇನ್ನಷ್ಟು ಅನ್ನ ಹಾಕಿಸಿಕೊ  ಎನ್ನುತ್ತಿದ್ದರು. ಆಡಿನಹಾಲು, ಹಸುವಿನಹಾಲು ಎಲ್ಲವೂ ಉಂಟು ಎಂದು ಹೆಚ್ಚೆಚ್ಚು ಪದಾರ್ಥ ಬಡಿಸಿದರು. ಆ ರಾತ್ರಿ ಹೆಂಗಸರು ಬೆಳದಿಂಗಳು ಚೆಲ್ಲಿದ ಅಂಗಳದಲ್ಲಿ ನೀಡಿದ ಪದಾರ್ಥವು ನನಗೆ ದಿವ್ಯವೆನಿಸಿತು. ನಾವು ಸ್ಟೇಷನ್ನಿಗೆ ವಾಪಸು ಬಂದಾಗ ಅಲ್ಲಿದ್ದ ಹಳೆಯ ಗಡಿಯಾರ ಹತ್ತು ಘಂಟೆ ತೋರಿಸುತ್ತಿತ್ತು. ಅಜ್ಜ ನಾನು ಕೆಲಸವಿಲ್ಲದವನು. ಹಾಗಾಗಿ ಆಯಾಸವಿಲ್ಲ. ನೀವು ದಣಿದು ಬಂದವರು. ಈ ಜಾಗ ನಿಮಗೆ ಕೊಂಚ ಒಂಟಿತನದ್ದು ಅನ್ನಿಸಬಹುದು.  ಮೇಲು ಅಟ್ಟಣಿಯಲ್ಲಿ ನಾನು ಮಲಗುತ್ತೇನೆ. ರಾತ್ರಿ ಬರುವ ರೈಲಿಗೆ ಬಾವುಟ ಹಿಡಿಯಬೇಕಲ್ಲ, ನೀವು ಗುಡಿಸಲೊಳಗೆ ಆರಾಮವಾಗಿ ಮಲಗಿ ಎಂದರು. + +ಬೆಳಗ್ಗೆ ನಾನು ಏಳುವ ಮೊದಲೇ ಅಜ್ಜ ಎದ್ದಿದ್ದರು. ಒಲೆಹಚ್ಚಿ ಏನೋ ಮಾಡುತ್ತಿದ್ದರು. ಅವರಿಗಾಗಿ ಬೆಳಗಿನ ಉಪಾಹಾರವಿರಬೇಕೆಂದುಕೊಂಡೆ. ನಾನು ತೊರೆಯವರೆಗೆ ನಡೆದು ಎರಡು ಮೂರುದಿನದ ಮೈಯ್ಯಕೊಳೆಯನ್ನೆಲ್ಲ ತೊಳೆದುಕೊಂಡು ಬಂದೆ. ಮೈತೊಳೆದುಕೊಂಡ ಜಾಗ ತೊರೆಯೆಂದರೆ ತೊರೆಯೇನಾಗಿರಲಿಲ್ಲ. ಅಲ್ಲಿದ್ದ ಕಲ್ಲುಬಂಡೆಗಳಸಮೂಹದಿಂದ ಎಲ್ಲಿಂದಲೋ ಎಂಬಂತೆ ನೀರು ಚಿಮ್ಮಿ ಮುಂದೆ ಹರಿಯುತ್ತಿತ್ತು. ನಾನು ಬರುವ ಹೊತ್ತಿಗೆ, ಕಟ್ಟಿದ ಆಲದೆಲೆಯಲ್ಲಿ ರೊಟ್ಟಿ ಹುಣಿಸೆಚಟ್ನಿ ಇಟ್ಟುಕೊಟ್ಟರು. ಮೇಲೆ ಮೊಸರನ್ನೂ ಬಿಟ್ಟರು. ಮೂಡಲಲ್ಲಿ ಹೊತ್ತು ಒಂದೆರಡು ಮಾರು ಏರಿತ್ತಷ್ಟೆ. ಹಕ್ಕಿಪಕ್ಷಿಗಳು ಇನ್ನೂ ಬೆಳಗಿನ ಪ್ರಯಾಣದಲ್ಲಿದ್ದವು. ನಾನು ಅಜ್ಜನಿಗೆ ಹೊರಡುತ್ತೇನೆ ಎಂದೆ. ಅಜ್ಜ ಸ್ಟೇಷನ್ ಮತ್ತು ರೈಲು ಹಳಿಯನ್ನು ದಾಟಿಸಿ ಅಲ್ಲಿಂದಾಚೆಯಿದ್ದ ರಸ್ತೆಗೆ ಕರೆತಂದರು. ಇದೇ ನೋಡಿ ಮಹಾತ್ಮರ ಆಶ್ರಮಕ್ಕೆ ದಾರಿ. ನಾನು ರಾತ್ರಿಯೇ ಗಮನಿಸಿದೆ. ನಿಮಗೆ ನಡೆಯುವುದೆಂದರೆ ಬಲು ಇಷ್ಟವೆಂದು ಕಾಣುತ್ತದೆ. ಅದು ಕೊಡುವ ಸಂತೋಷವೇ ಬೇರೆ. ಇಕೊಳ್ಳಿ ಇದು ನಿಮ್ಮ ದಾರಿಗಿರಲಿ ಎಂದು ಅದೇ ಆಲದೆಲೆಯಲ್ಲಿ ಕಟ್ಟಿದ್ದ ರೊಟ್ಟಿಯ ಪೊಟ್ಟಣ ಕೊಟ್ಟರು. ನಾನು ಮಾತಿಲ್ಲದೆ ಅದನ್ನು ತೆಗೆದು ಬ್ಯಾಗಿನಲ್ಲಿರಿಸಿದೆ. ಅದು ಆಗತಾನೇ ಮಾಡಿದ್ದರಿಂದ ಇನ್ನೂ ಬೆಚ್ಚಗಿತ್ತು. ಹಿರಿಯರ ಮುಖಭಾವವಂತೂ ಇನ್ನೂ ಆಪ್ಯಾಯಮಾನವಾಗಿತ್ತು. ನಾನು ಸ್ವಲ್ಪದೂರ ನಡೆದೆ. ತಿರುಗಿ ನೋಡಿದೆ. ಅಜ್ಜ ಕೈಯೆತ್ತಿ ನನ್ನ ಕಡೆ ಬೀಸಿದರು. ನನ್ನ ತಂದೆತಾಯಿ ಮತ್ತು ಸಹಪಾಠಿಯ ಏಕರೂಪದಂತೆ ಕಂಡರು. ಅವರು ಬೀಸುತ್ತಿದ್ದ ಕೈ, ಜಗತ್ತಿನ ಸಕಲ ಚರಾಚರಗಳನ್ನು ರಕ್ಷಿಸುವ ಯಾವುದೋ ಕಾಣದ ಚೈತನ್ಯದ ಕೈಯ್ಯಂತೆ ಗೋಚರವಾಯಿತು. ಎರಡೂ ಕೈಯೆತ್ತಿ ಅವರತ್ತ ಮುಗಿದೆ. ಅವರು ಕೈ ಇಳಿಸಿದರು. ತಿರುಗಿ ನಡೆದೆ. ಅರಣ್ಯದ ನಡುವೆ ಬೆಳೆದುಕೊಂಡಿದ್ದ ದಾರಿ ದಿಗಂತವ್ಯಾಪಿಯಾಗಿ ಅನಂತವಾಗಿದ್ದು, ನಾನು ಇಡುವ ಹೆಜ್ಜೆ ಮಾತ್ರ ಲೆಕ್ಕಹಾಕಬಹುದಾದುದು ಎಂಬಂತೆ ಕಣ್ಣು ಹಾಯುವವರಗೆ ಚಾಚಿಕೊಂಡಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_56.txt b/Kenda Sampige/article_56.txt new file mode 100644 index 0000000000000000000000000000000000000000..4f46286b711cef9d2e56bca831e668bdf1868906 --- /dev/null +++ b/Kenda Sampige/article_56.txt @@ -0,0 +1,41 @@ +ಒಂದು ಪುಸ್ತಕವನ್ನು ಓದುವಾಗ ಅದನ್ನು ಬರೆದ ಬರಹಗಾರರ ಜೊತೆಗೆ ಅಷ್ಟೂ ಹೊತ್ತು ಇರುವ ಅನುಭವವಾಗುವುದು ಖಂಡಿತಾ ಸುಳ್ಳಲ್ಲ.ಮುನ್ನೂರು ಪುಟಗಳಲ್ಲಿ ತಮ್ಮ ಬದುಕಿನ ಹಾಡು, ಕಲ್ಲು ಮುಳ್ಳು ಬೆಟ್ಟ ಗುಡ್ಡ ಕಣಿವೆ ಕಾಲುವೆ ಕೋಡುಬಂಡೆ ಮಲೆಘಟ್ಟಗಳಲ್ಲಿ ತೊರೆಯಾಗಿ ಝರಿಯಾಗಿ ಚಿಲುಮೆಯಾಗಿ ನದಿಯಾಗಿ ಹರಿದು ಜಲಪಾತದ ಭೋರಗರೆತದ ವೈಭವವನ್ನೂ ದಾಟಿ… ಸ್ವರ ಶೃತಿ ರಾಗ ಲಯಬದ್ಧತೆಯ ಮಹಾ ಸಂಗೀತ ಸಾಗರವಾಗಿರುವ ನನಗಿನ್ನೂ ವಯಸ್ಸು ಇಪ್ಪತ್ತೈದು ಎನ್ನುವ ತೊಂಬತ್ತರ ಹರೆಯದ ಜೀವನ್ಮುಖಿ ಚೈತನ್ಯ ಸಂಗೀತ ಶಾರದೆ ಎಚ್. ಆರ್. ಲೀಲಾವತಿ ಅವರು ಉಪ್ಪಾಗದ ಮುಪ್ಪಿಲ್ಲದ ಸಿಹಿಸಾಗರ. ಅವರೊಂದಿಗಿನ ಸ್ನೇಹ ಒಡನಾಟ ಇರುವ ಎಲ್ಲರದ್ದೂ ಇದೇ ಅನುಭವ. + +(ಎಚ್. ಆರ್. ಲೀಲಾವತಿ) + +ಹುಟ್ಟೂರು ಮೈಸೂರಾದರೂ ತಂದೆಯವರ ವೃತ್ತಿಯ ಕಾರಣದಿಂದ ಹಲವಾರು ಊರುಗಳಲ್ಲಿದ್ದು ಬಂದ ಲೀಲಾವತಿ ಅವರಿಗೆ ಮೈಸೂರು ಅದರಲ್ಲೂ ಚಾಮುಂಡಿ ಬೆಟ್ಟ ಬಹಳ ಪ್ರಿಯ. ಈಗಲೂ ಅವರ ವಾಸ ಮೈಸೂರು. + +ಚಾಮುಂಡಿ ಬೆಟ್ಟದ ಬಳಿಯಿರುವ ಒಂದು ರಸ್ತೆಗೆ “ವೆಂಕಟ ಸುಬ್ಬರಾವ್ ರೋಡ್” ಎಂಬ ಹೆಸರಿದೆ. ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ರಾಜ್ಯಕ್ಕೆ ಸಾಕಷ್ಟು ಸೇವೆ ಸಲ್ಲಿಸಿದ ವೆಂಕಟ ಸುಬ್ಬರಾವ್ ಲೀಲಾವತಿ ಅವರ ತಾತ. ಇವರ ತಂದೆ ಬಾಪು ರಾಮಣ್ಣ ಸಂಗೀತ ಸಾಹಿತ್ಯದಲ್ಲಿ ಆಸಕ್ತರು ಆರಾಧಕರು. ತಾಯಿ ಜಯಲಕ್ಷ್ಮಿ ಸಂಗೀತಗಾರ್ತಿ. ನಾಲ್ಕು ಗಂಡುಮಕ್ಕಳೊಂದಿಗೆ ಏಕೈಕ ಪುತ್ರಿ ಲೀಲಾವತಿ ಅವರು ಪ್ರೀತಿಯಿಂದ ಮುದ್ದಿನಿಂದ ಬೆಳೆದದ್ದು ಸಾಹಿತ್ಯ ಸಂಗೀತ ಸಂಸ್ಕಾರಗಳ ಕುಟುಂಬದಲ್ಲಿ. + +ಬಾಲ್ಯದಿಂದಲೂ ಸಂಗೀತದೆಡೆಗೇ ತುಡಿಯುತ್ತಿದ್ದ ಬಾಲಕಿ ಲೀಲಾವತಿ ಶಾಲೆಗಳಲ್ಲಿ ಅನೇಕ ಬಹುಮಾನಗಳನ್ನು ಪಡೆದು ಸ್ಟಾರ್ ಸಿಂಗರ್ ಆಕರ್ಷಣೆಗಳಿಸಿಕೊಂಡವರು. ಏಳನೇ ವಯಸ್ಸಿನಲ್ಲಿ ಮೊದಲಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತದ ಓಂಕಾರ ಪ್ರಾರಂಭಿಸಿದ್ದು ರಾಮಸ್ವಾಮಿಗಳಲ್ಲಾದರೂ ನಂತರ ಶಾಸ್ತ್ರೀಯ ಸಂಗೀತದ ಮುಖ್ಯ ಗುರುಗಳಾಗಿ ಅವರಿಗೆ ದೊರಕಿದ್ದು ಶ್ರೀಯುತ ಚನ್ನಕೇಶವಯ್ಯನವರು. ಅವರಲ್ಲಿ 12ವರ್ಷಗಳ ಕಾಲ ಶಾಸ್ತ್ರೀಯ ಸಂಗೀತ ಕಲಿತರು. ಮುಂದೆ ಗುರುಗಳಾಗಿ ದೊರಕಿದ್ದು ‘ಪದ್ಮ ಚರಣ್’ ಎಂದೇ ಪ್ರಖ್ಯಾತರಾಗಿದ್ದ ಎ.ವಿ.ಕೃಷ್ಣಮಾಚಾರ್ಯರು. + +ಬಾಲ್ಯದಿಂದಲೇ ಅನೇಕ ರೋಗರುಜಿನಗಳನ್ನು ಅನುಭವಿಸುತ್ತಲೇ ಎಡಬಿಡದೆ ಸಂಗೀತಾಭ್ಯಾಸವನ್ನೂ ಮಾಡಿದವರು. ಸುಮಾರು ದಶಕಗಳಿಗಿಂತಲೂ ಹೆಚ್ಚಿಗೆ ಹಾಡಿದವರು ತುಂಬಾ ಬೇಗನೇ ತಮ್ಮ ಗಾಯನ ನಿಲ್ಲಿಸಿದ್ದು ಅನಾರೋಗ್ಯದ ಕಾರಣದಿಂದಲಾದರೂ ತೊಂಬತ್ತರ ಲೀಲಾವತಿ ಅಮ್ಮನ ಆರೋಗ್ಯಕರ ಕಣ್ಣುಗಳು ಹೊಳೆಯುತ್ತವೆ…ಮೃದು ಮಧುರ ಮಾತುಗಳು ಉಲಿಯುತ್ತವೆ. ಅವರನ್ನೀಗ ಯಾರೇ ಭೇಟಿ ಮಾಡಿದರೂ ಅವರ ವಾತ್ಸಲ್ಯ ಸ್ನೇಹ ಪ್ರೀತಿ ಆತ್ಮೀಯತೆಗಳ ಸಾಗರದಲ್ಲಿ ತೇಲುವುದಂತೂ ನಿಜ. ಇಂತಹ ವ್ಯಕ್ತಿಯ ಸಾಧನೆಯ ಹಿಂದೆ ಅದೆಷ್ಟು ನೋವು ನಲಿವು ಸಂಕಷ್ಟಗಳು ಅವಮಾನಗಳು ಕಿರುಕುಳಗಳು ಬಾಧಿಸಿವೆ ಎಂಬುದು ಅವರ ಈ ಕೃತಿಯ ಓದಿನ ಮೂಲಕ ಮಾತ್ರವೇ ತಿಳಿಯುವಂಥದ್ದು. ಬಹುಶಃ ಪ್ರತಿಯೊಬ್ಬ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಒಂದು ಉನ್ನತ ಸಾಧನೆ ಮಾಡಬೇಕೆಂದಾಗ ಇಷ್ಟೆಲ್ಲಾ ಅನುಭವಿಸಿಯೇ ಬಂದಿರುತ್ತಾರೆ. ಇತ್ತೀಚೆಗೆ ಕೆಲವರು ಧೈರ್ಯದಿಂದ ಆತ್ಮಕಥೆಯಲ್ಲಿ ಬರೆದುಕೊಂಡರೂ ಬರೆದುಕೊಳ್ಳದೆ ಎಲ್ಲವನ್ನೂ ನುಂಗಿಕೊಂಡ ಅನೇಕ ಮಹಿಳಾ ಸಾಧಕಿಯರ ಪ್ರತಿರೂಪವಾಗಿ ಲೀಲಾವತಿ ಈ ಕೃತಿ ರಚಿಸಿದ್ದಾರೆ. ಇದು ಮತ್ತಷ್ಟು ಹೆಣ್ಮಕ್ಕಳಿಗೆ ಪ್ರೇರಣೆಯೂ ಹೌದು. + +(ಕೃಷ್ಣಮಾಚಾರ್ಯರು) + +ಗುರುಗಳಾಗಿ ಲೀಲಾವತಿ ಅವರಿಗೆ ಸಿಕ್ಕ ಕೃಷ್ಣಮಾಚಾರ್ಯರು ಎಂದೂ ಶಿಷ್ಯೆಯಿಂದ ಫೀಸನ್ನು ತೆಗೆದುಕೊಳ್ಳದಿದ್ದರೂ ಲೀಲಾವತಿ ಅವರ ಬದುಕಿನ ಇಪ್ಪತ್ತೆರಡು ವರ್ಷಗಳ ಶಿಷ್ಯವೃತ್ತಿಯನ್ನೇ ಫೀಸಾಗಿ ಪಡೆದುಕೊಳ್ಳುವುದು ಪುರುಷ ದೌರ್ಜನ್ಯವಾಗಿ ನಮ್ಮನ್ನು ಬೆಚ್ಚಿಬೀಳಿಸುತ್ತದೆ. ಅವರ ಅತಿಯಾದ ಶಿಸ್ತು ಕಟುವಾದ ನಿಂದನೆಗಳು ದೈಹಿಕ ಕಿರುಕುಳವನ್ನು ಅನುಭವಿಸುತ್ತಲೇ ಗುರುಗಳ ಸಂಯೋಜನೆಯಲ್ಲೇ ಹಾಡಬೇಕೇ ಹೊರತು ಇತರ ಸಂಗೀತ ಸಂಯೋಜಕರ ಗೀತೆ ಹಾಡವಂತಿಲ್ಲ ಎಂಬ ಕಟ್ಟುಕಟ್ಟಳೆಗಾಗಿ ಸಿನಿಮಾದ ಪ್ರಸಿದ್ಧ ಗಾಯಕಿಯೂ ಆಗಬಹುದಾದ ಅವಕಾಶವನ್ನು ಕಾಂಟ್ರಾಕ್ಟ್ ಕ್ಯಾನ್ಸಲ್ ಮಾಡುವ ಮೂಲಕ ಗುರುಗಳ ಮಾತಿಗೆ ಬದ್ಧರಾಗುವುದು ಅವರಲ್ಲಿದ್ದ ಸಂಗೀತ ಜ್ಞಾನವನ್ನು ಪಡೆಯಲಿಕ್ಕಾಗಿಯೇ. ಇದು ಲೀಲಾವತಿ ಅವರ ಸಂಗೀತ ಪ್ರೇಮಕ್ಕೆ ಸಾಕ್ಷಿ. ಲೀಲಾವತಿ ಅವರ ಬಹಳಷ್ಟು ಜೀವನ ಆವರಿಸುವ ಪದ್ಮ ಚರಣ್ ಅವರ ನಡೆಗಾಗಿ ಪ್ರತಿಭಟಿಸಲು ಲೀಲಾವತಿ ಅವರಿಗೆ ಚಿಕ್ಕ ವಯಸ್ಸಿನಲ್ಲಿದ್ದ ಮುಗ್ಧತೆ ಹೆದರಿಕೆ ಆ ಕಾಲದಲ್ಲಿ ಹೆಣ್ಮಕ್ಕಳಿಗಿದ್ದ ನಿರ್ಬಂಧಗಳು ಸಂಗೀತ ಕಲಿಕೆಯನ್ನು ನಿಲ್ಲಿಸುವ ಭಯದಿಂದಲೇ ಅವರು ಎಲ್ಲವನ್ನೂ ಸಹಿಸಿಕೊಂಡರೇನೋ . + +ಕೊನೆಗೂ ಗುರುಗಳ ಹಿಡಿತದಿಂದ ಹೊರಬಂದ ಮೇಲೆಯೇ ಅವರು ಸ್ವತಂತ್ರ ಸಂಗೀತ ಸಂಯೋಜನೆಯಲ್ಲಿ ಅನೇಕ ಗೀತೆಗಳನ್ನು ಹಾಡಿದ್ದಾರೆ ಹಾಡಿಸಿದ್ದಾರೆ. ಅಷ್ಟರಲ್ಲಿ ಗುರುಗಳ ಬಳಿಯಿದ್ದ ಸಂಗೀತ ನಿಧಿಯ ಬಹುಪಾಲು ಇವರಿಗೆ ಒಲಿದಿತ್ತು. ಒಂದನ್ನು ಪಡೆಯಲು ಮತ್ತೊಂದನ್ನು ತ್ಯಾಗ ಮಾಡಬೇಕೆನೋ ಏನನ್ನಾದರೂ ಸಾಧಿಸಬೇಕೆಂದರೆ ಎನಿಸಿದ್ದಂತೂ ನಿಜ…ಹೌದಲ್ಲವೇ? + +ತಮ್ಮ ಕೊನೆ ದಿನಗಳಲ್ಲಿ ಆಲ್ಜೈಮಜರ್ ಕಾಯಿಲೆಯಿಂದ ಬಳಲುತ್ತಿದ್ದ ಗುರುಗಳನ್ನು ನೋಡಲುವ ಹೋದಾಗ ಯಾರನ್ನೂ ಗುರುತಿಸದಿದ್ದ ಗುರುಗಳು ಲೀಲಾವತಿ ಅವರನ್ನು ಮಾತ್ರ ಗುರುತಿಸುತ್ತಾರೆ “She is my Music ” ಅದೊಂದು ಸಾಲನ್ನು ನುಡಿದು ಅವರ ಕಣ್ಣುಗಳು ಹೊಳೆದ ದೃಶ್ಯ ಓದುಗರನ್ನು ಸೆಳೆಯುತ್ತದೆ. + +ಕರ್ನಾಟಕ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತು ಆಕಾಶವಾಣಿ ಗಾಯಕಿಯಾಗಿ ಭಾವಗೀತೆಯನ್ನು ಪಿ. ಕಾಳಿಂಗರಾವ್ ಅವರ ಜೊತೆಯಲ್ಲಿ ಹಾಡಿ ಪ್ರಚಾರ ನೀಡಿದ್ದು ಮೊದಲಿಗೆ ಲೀಲಾವತಿಯವರೇ. ಭಾವಗೀತೆ ಭಕ್ತಿಗೀತೆ ಕೀರ್ತನೆಗಳು ವಚನಗಳು ಗಜಲ್ ಗಳು ಜನಪದಗೀತೆಗಳು, ರವೀಂದ್ರ ಸಂಗೀತ ಹೀಗೆ ಬೇರೆ ಭಾಷೆಯ ಇತರ ಪ್ರಾಕಾರಗಳನ್ನೂ ಕಲಿತು ಹಾಡಿರುವುದಲ್ಲದೇ ಮಕ್ಕಳ ಕತೆಗಳು ರಂಗರೂಪಕಗಳು ಎಲ್ಲವನ್ನೂ ಸಮರ್ಥ ರೀತಿಯಲ್ಲಿ ನಿರ್ವಹಿಸುತ್ತಲೇ ಮುಂದೆ ಆಕಾಶವಾಣಿಯಲ್ಲಿ ಸಂಗೀತ ಸಂಯೋಜಕರೂ ಆಗುತ್ತಾರೆ. ಆ ಸಮಯದಲ್ಲಿ ಕುವೆಂಪು ಬೇಂದ್ರೆ ಅಡಿಗರು ಕೆ.ಎಸ್.ನ ಜಿ.ಎಸ್ ಎಸ್ ನಿಸಾರ್ ಅಹಮದ್ ಮೊದಲಾದವರ ಕವಿತೆಗಳನ್ನು ಹಾಡಿ ಅವರಿಂದ ಮೆಚ್ಚುಗೆ ಗಳಿಸಿ ಕವಿತೆಗಳನ್ನು ಭಾವಗೀತೆಯ ರೂಪದಲ್ಲಿ‌ ಕನ್ನಡದ ಜನರಿಗೆ ತಲುಪಿಸಿದ ಕೀರ್ತಿ ಲೀಲಾವತಿ ಅವರದ್ದು. ಕವಿಗಳ ಸ್ನೇಹದೊಡನಾಟ ಅವರ ಸಾಹಿತ್ಯದ ಪ್ರಭಾವದಿಂದಾಗಿ ಲೀಲಾವತಿ ಅವರು ಇದುವರೆಗೂ 20 ಕೃತಿಗಳನ್ನು ರಚಿಸಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ತಮ್ಮದಾಗಿಸಿಕೊಂಡವರು ಸಂಗೀತ ಮತ್ತು ಸಾಹಿತ್ಯದಲ್ಲಿ ಸಮಾನ ಆಸಕ್ತಿ ಹೊಂದಿದ್ದರೂ ಬಹುಪಾಲು ಸಮಯ ಸಂಗೀತದೊಂದಿಗೆ ಕಳೆದುಹೋಗಿದ್ದರಿಂದ ಸಾಹಿತ್ಯದೆಡೆಗೆ ಹೆಚ್ಚು ಗಮನ ಕೊಡಲಾಗಲಿಲ್ಲವೆಂದ ಲೀಲಾವತಿ ಅಮ್ಮ “ನನ್ನ ಸಂಸಾರ ಮತ್ತು ಸಾಧನೆ ಎರಡೂ ಸಂಗೀತಮಯವೇ , ವೈಯಕ್ತಿಕ ಜೀವನ ಮತ್ತು ಸಾರ್ವಜನಿಕ ಜೀವನ ಹೀಗೆ ಒಂದೇ ಆಗಿರುವುದು ನನ್ನ ಭಾಗ್ಯ” ಎನ್ನುತ್ತಾರೆ ವಿನೀತರಾಗಿ. + + + +ಆಕಾಶವಾಣಿಯ ಸಹೋದ್ಯೋಗಿಗಳು ನಿರ್ದೇಶಕರ ಜೊತೆಗಿನ ಒಡನಾಟಗಳು ಅಲ್ಲಿ ತಮ್ಮ ಪ್ರಗತಿಯನ್ನು ಸಹಿಸದವರಿಂದ ತಮಗಾದ ಅವಮಾನ ಕಿರುಕುಳವನ್ನು ಅವರ ಹೆಸರುಗಳ ಸಹಿತ ಉಲ್ಲೇಖಿಸಿರುವ ಲೀಲಾವತಿ ಅವರ ಧೈರ್ಯ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಹೆಣ್ಮಕ್ಕಳಿಗೂ ಬರಲಿ. ಮುಂದೆ ಅವರು ಸಂಗೀತ ನೃತ್ಯ ಅಕಾಡೆಮಿ ಅಧ್ಯಕ್ಷರಾಗಿ ಕನ್ನಡಕ್ಕಾಗಿ, ಸಂಗೀತಕ್ಕಾಗಿ ಅವರು ಸಲ್ಲಿಸಿದ ಸೇವೆಗೆ , ನಿರ್ವಹಿಸಿದ ಹುದ್ದೆಗಳಿಂದ ಸಾಧನೆಗಳಿಂದ ಪ್ರತಿಷ್ಠಿತ ಪ್ರಶಸ್ತಿಗಳಿಂದ ಪುರಸ್ಕೃತಗೊಂಡಿದ್ದಾರೆ. ದೇಶದ ಎಲ್ಲೆಡೆ ಹಾಡಿರುವುದಷ್ಟೇ ಅಲ್ಲ ವಿದೇಶಗಳಲ್ಲೂ ಕಾರ್ಯಕ್ರಮ ನೀಡಿ ಬಂದ ಸರಳ ಮನಸ್ಸಿನ ದೊಡ್ಡ ಸಾಧಕಿ ಅವರು. + +ಹೆಣ್ಣು ಏನೇ ಸಾಧನೆ ಮಾಡಿದರೂ ಹಿಡಿ ಪ್ರೀತಿಗಾಗಿ ಹಂಬಲಿಸುವುದು ಸಹಜವೇ. ಅವರ ಜೀವನದ ಒಂದೆರಡು ಮಧುರವಾದ ಪ್ರೇಮಪ್ರಕರಣಗಳನ್ನು ಪ್ರಾಮಾಣಿಕವಾಗಿ ಬರೆದುಕೊಂಡ ಅವರು ಮೊದಲ ಮದುವೆ ಮುರಿದುಬಿದ್ದಾಗ ಆತ್ಮಹತ್ಯೆಗೆ ಮುಂದಾಗಿದ್ದು ಅದರಿಂದ ಹೊರಬಂದು ಒಂದು ಮಗುವಿನ ತಾಯಾಗಿ ಒಂಟಿಯಾಗಿ ಜೀವನವನ್ನೆದುರಿಸಿದ್ದು….ಎಲ್ಲದರ ಹಿಂದೆ ಮನೆಯ ಸದಸ್ಯರ ಮತ್ತು ಸ್ನೇಹಿತರ ಪ್ರೀತಿ ಅಭಿಮಾನ ಸಹಕಾರ ಭರವಸೆ ರಕ್ಷಣೆಯಾಗಿ ನಿಲ್ಲುತ್ತದೆ. ಎಷ್ಟು ಹೆಣ್ಮಕ್ಕಳಿಗೆ ಇಂತಹ ಸಮಯದಲ್ಲಿ ಇದೆಲ್ಲವೂ ಸಿಗಲು ಸಾಧ್ಯ? ಹೆಣ್ಮಕ್ಕಳು ದೌರ್ಜನ್ಯಕ್ಕೊಳಗಾದಾಗ ಹೆಣ್ಮಕ್ಕಳೇ ಒಟ್ಟಾಗಿ ಪ್ರತಿಭಟಿಸುವುದನ್ನು ಕಲಿಯಬೇಕು ಎನ್ನುವ ಲೀಲಾವತಿ ಅವರ ಬದುಕಿನ ಬೆಂಗಾಡಿನಲ್ಲಿ ಮಂದಮಾರತ ಹಾದುಹೋಗಿದ್ದು ಮೋಡಿ ಮಾಡುವ ವಿಶಿಷ್ಟ ಕಂಠಸಿರಿಯ ಆಕಾಶವಾಣಿ ಕಲಾವಿದರಾದ ರಘುರಾಂ ಬಂದ ಮೇಲೆಯೇ. ಲೀಲಾವತಿ ಅವರಿಗಿಂತಲೂ ವಯಸ್ಸಿನಲ್ಲಿ ಕೆಲವರ್ಷ ಚಿಕ್ಕವರಾದ ರಘುರಾಂಗೂ ಇದು ಎರಡನೆ ಮದುವೆ. ರಘುರಾಂ ಲೀಲಾವತಿ ಅವರ ಸಮಾನ ಆಸಕ್ತಿ ಸಹೃದಯತೆ ಒಂದು ಅಪರೂಪದ ದಾಂಪತ್ಯಕ್ಕೆ ಸಾಕ್ಷಿಯಾಯಿತು. + +ಪತ್ನಿಯ ಪ್ರತಿಭೆಗೆ ಪತಿ ಪ್ರೋತ್ಸಾಹದ ಕಡಲಾದರು. ತಮ್ಮ ಪ್ರತಿಭೆಯನ್ನು ಪಕ್ಕಕ್ಕಿಟ್ಟು ಮಡದಿಗೆ ಸಾಥ್ ಕೊಟ್ಟ ಅನನ್ಯ ವ್ಯಕ್ತಿ ರಘುರಾಂ. ಅನೇಕ ಕಷ್ಟಗಳನ್ನುಂಡಿದ್ದ ಲೀಲಾವತಿ ಅವರು ಪತಿಯ ಜೊತೆಗೂಡಿ ಜೀವನ ಸುಂದರ ಹೋದೋಟವಾಗಿ “ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್” ಪ್ರಾರಂಭವಾಗಿ ಕರ್ನಾಟಕದ ಬಹುಪಾಲು ಕಲಾವಿದರು ಕವಿಗಳು ವಿದ್ವನ್ಮಣಿಗಳಿಂದ ಅನೇಕ ಕಾರ್ಯಕ್ರಮಗಳನ್ನು ನಿರಂತರ ನಡೆಸಿಕೊಂಡು ಬಂದ ಸಂಸ್ಥೆ ನೂರಾರು ಗಾಯಕರನ್ನು ತಯಾರು ಮಾಡಿದ್ದು ಸಾಹಸಗಾಥೆ. + +ಚಿಕ್ಕವಯಸ್ಸಿಗೆ ಮಠಗಳಿಗೆ ಪೀಠಾಧಿಪತಿ ಮಾಡುವುದನ್ನು ವಿರೋಧಿಸುವ ಲೀಲಾವತಿ ಅವರ ಬಳಿಯೇ ಸಂಗೀತ ಕಲಿಯಲು ಶಿಷ್ಯವೃತ್ತಿ ಆರಂಭಿಸಿದ ವ್ಯಕ್ತಿಯೊಬ್ಬರು ಚಿಕ್ಕ ವಯಸ್ಸಿನಲ್ಲಿ ಪೀಠಾಧಿಪತಿಯಾಗಿ ಅದರ ಕಟ್ಟು ಕಟ್ಟಳೆಗಳಿಗೆ ಹೊಂದಿಕೊಳ್ಳಲಾಗದೇ ಹೊರಬಂದು ಪ್ರೇಮಿಸಿದ ಹೆಣ್ಣನ್ನು ಮದುವೆಯಾಗಿ ಸಂಸಾರ ಹೂಡಿದ್ದು…. ಅದರ ಬಗ್ಗೆ ಆತ ಕೃತಿ ರಚಿಸಿದ ಪ್ರಸ್ತಾಪಗಳು ಬರುತ್ತವೆ. ನಿಜ, ಅಪ್ರಾಪ್ತ ವಯಸ್ಸಿಗೆ ಸನ್ಯಾಸಿಯಾಗಿಸಿ ವಯಸ್ಸಿಗೆ ಬಂದ ನಂತರ ಅವರಿಂದಾಗುವ ಅನಾಹುತಗಳಿಂದ ಸಮಾಜ ನಲುಗುತ್ತದೆ. + +ಮನೆಯ ಮುಂದಿರುವ ತೋಟದಲ್ಲಿ ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ನಡೆಯಲು ಬಯಸುವ ಲೀಲಾವತಿ ಅವರ ವಿಂತನೆಗಳಿವು. ಭೂಮಿಯ ಸ್ಪರ್ಶ ಈ ದೇಹಕ್ಕೆ ಬೇಕು. ಪ್ರಕೃತಿಯ ಸಾಂಗತ್ಯದಲ್ಲಿ ಇರುವುದು ಕಡಿಮೆಯಾಗಿರುವುದರಿಂದಲೇ ಗಿಡಮರಗಳನ್ನು ಕಡಿಯುವ ಕ್ರೌರ್ಯಕ್ಕೆ ಮನುಷ್ಯ ಮುಂದಾಗಿದ್ದಾನೆ. ಇದರಿಂದ ಮಳೆ ಬೆಳೆ ವ್ಯತ್ಯಾಸವಾಗಿ ಆಮ್ಲಜನಕದ ಕೊರತೆಯಾಗಿದೆ ಎಂಬ ಕಟುಸತ್ಯವನ್ನು ಮುಂದಿಡುವ ಸಾಮಾಜಿಕ ಕಳಕಳಿಯ ಪ್ರಕೃತಿಪ್ರೇಮಿ ಲೀಲಾವತಿ ಅವರ ದೃಷ್ಟಿಕೋನಗಳು ಚಿಂತನಾರ್ಹ. + +ವರದಕ್ಷಿಣೆಗಾಗಿ ನಿಂತು ಹೋಗುತ್ತಿದ್ದ ಮದುವೆಯನ್ನು ದಾರಹೋಕನಾಗಿ ನೋಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಕೈಲಿದ್ದ ಉಂಗುರ ಮತ್ತು ಜೇಬಿನಲ್ಲಿದ್ದ ನೋಟುಗಳನ್ನು ಕೊಟ್ಟು ಮದುವೆ ಸಾಂಗವಾಗಿಸಿದ ವ್ಯಕ್ತಿ , ಇಡೀ ಪಂಜರವನ್ನೇ ಕೊಂಡು ಅದರಲ್ಲಿದ್ದ ಹಕ್ಕಿಗಳಿಗೆ ಹಾರುವ ಸ್ವತಂತ್ರ ನೀಡಿದ ವ್ಯಕ್ತಿ , ಅನಾಥ ಮಗುವಿನ ಚಿಕಿತ್ಸೆಯ ಸಲುವಾಗಿ ತಾನು ಅದರ ತಂದೆಯೆಂದು ಅಪ್ಲಿಕೇಷನ್ನಿನಲ್ಲಿ ಬರೆಸಿದ ವ್ಯಕ್ತಿ ( ಆದರೂ ಮಗು ಅಸು ನೀಗಿದ್ದು ದುರ್ದೈವದ ಸಂಗತಿ) ….. ಹೀಗೆ ರಘುರಾಂ ವ್ಯಕ್ತಿತ್ವ ಹೀಗೆ ತೆರೆದಿಡುವ ಲೀಲಾವತಿ ಅಮ್ಮ ಭಾರತ ಚೀನಾ ಯುದ್ಧ ಸಂದರ್ಭದಲ್ಲಿ ಸೈನಿಕರ ಸಹಾಯ ನಿಧಿಗಾಗಿ ತಮ್ಮ ಓಲೆಗಳನ್ನು ಬಿಚ್ಚಿಕೊಟ್ಟು , ಬೀದಿಬೀದಿಗಳಲ್ಲಿ ತಿರುಗಿ ಹಣ ಸಂಗ್ರಹಿಸಿ ಕಳಿಸಿದ ಮಾನವೀಯ ಗುಣಗಳ ಹೆಣ್ಣು. + + + +ಇಂತಹ ಅಪರೂಪದ ದಂಪತಿಗಳ ಪುತ್ರ “ಸುಕುಮಾರ್” ಸೋಮಿ ಎಂಬ ಹೆಸರಲ್ಲೇ ಚಿರಪರಿಚಿತ ತರುಣ ವಿದೇಶದಲ್ಲಿ ದುಡಿಯಲಾರಂಭಿಸಿದರೂ ರಘುರಾಂ ಸಾವಿನ‌ ನಂತರ ಬೆಂಗಳೂರಿನಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ನೆಲೆ ನಿಂತು ತಮ್ಮ ಉದ್ಯೋಗದ ಜೊತೆ ತಾಯಿಯ ಆರೋಗ್ಯವನ್ನೂ ವಿಚಾರಿಸಿಕೊಳ್ಳುತ್ತಲೇ ಈಗಾಗಲೇ ಮರೆತುಹೋಗಿಬಿಡಬಹುದಾಗಿದ್ದ ಲೀಲಾವತಿ ಅವರು ಹಾಡಿರುವ ನೂರಾರು ಗೀತೆಗಳನ್ನು ಸೋಷಿಯಲ್ ಮಿಡಿಯಾಗಳ ಮೂಲಕ ಜೀವಂತವಾಗಿರಿಸಿ ಅವರ ಅಪರೂಪದ ಹಾಡುಗಳನ್ನು ಯೂಟ್ಯೂಬ್ ಫೇಸ್‌ಬುಕ್‌ ಮೂಲಕ ಕನ್ನಡದ ಜನರಿಗೆ ತಲುಪಿಸುತ್ತಿರುವ ಸಹೃದಯಿ ವ್ಯಕ್ತಿ. ಲೀಲಾವತಿ ಅವರ ಹಾಡು ಹೀಗೆ ಎಂದೆಂದಿಗೂ ನಿತ್ಯನೂತನಾಗಿ ಹರಿಯುತ್ತಲೇ ಇರಲಿ….ಎಂದು ಆಶಿಸುತ್ತಾ ಈ ಬರಹ ಮುಗಿಸುವ ಮೊದಲು ಲೀಲಾವತಿ ರಘುರಾಂ ಅವರ ಒಡನಾಟವನ್ನು ಕಣ್ಣಾರೆ ಕಂಡವಳು ನಾನು. ಯಾಕೆಂದರೆ ಹತ್ತಾರು ವರ್ಷಗಳ ಹಿಂದೆ ಮೂರ್ನಾಲ್ಕು ವರ್ಷ ನಾನೂ ಅವರ ಬಳಿ ಸುಗಮ ಸಂಗೀತ ಕಲಿಯಲು ಹೋಗುತ್ತಿದ್ದು ಆ ನಂತರ ಸಾಹಿತ್ಯದ ಅಧ್ಯಯನದ ಕಾರಣದಿಂದ ಸಂಗೀತ ನಿಲ್ಲಿಸಬೇಕಾಯಿತು. ಆದರೆ ಅವರ ಬಾಂಧವ್ಯದ ಒಡನಾಟ ಜೇನಿಗಿಂತಲೂ ಬಲು ಮಧುರ. ಮಹಾನ್ ಸಾಧಕಿಯೊಬ್ಬರು ಸಣ್ಣಪುಟ್ಟ ಸಾಧನೆ ಮಾಡಿದವರೊಂದಿಗೂ ತೋರುವ ಆತ್ಮೀಯತೆ ಪ್ರೀತಿ ಸಲುಗೆಯಷ್ಟೇ ಅಲ್ಲ ಮಕ್ಕಳಂತೆ ಸದಾ ಉತ್ಸಾಹ ತುಂಟತನದ ಜೊತೆಗೆ ಜೀವಸಖಿಯಾಗಿ ಅವರು ನಮ್ಮನ್ನು ಪ್ರೀತಿಯ ಬೆಸುಗೆಯಲ್ಲಿ ಬೆಸೆದುಕೊಂಡುಬಿಡುವ ಅನುಭವ ನನ್ನದಷ್ಟೇ ಅಲ್ಲ ಅವರನ್ನು ಭೇಟಿಯಾಗುವ ಎಲ್ಲರದ್ದೂ ಸಹಾ.ಅಮೂಲ್ಯವಾದ ಕೃತಿ ಈ ಆತ್ಮಕಥೆ…. ಕನ್ನಡಿಗರಿಗೆ ದೊರೆತ ಅಪೂರ್ವವಾದ ಸುರಗಿ ಹೊನ್ನೆಯ ಹಾಡು. + +ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್.  ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ.  “ಹುಟ್ಟಲಿರುವ ನಾಳೆಗಾಗಿ”, “ಗೋಡೆಗಿಡ”, “ನದಿ ಧ್ಯಾನದಲ್ಲಿದೆ” (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು “ಸ್ಪರ್ಶ ಶಿಲೆ” ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ‌ ಹವ್ಯಾಸಗಳು. \ No newline at end of file diff --git a/Kenda Sampige/article_560.txt b/Kenda Sampige/article_560.txt new file mode 100644 index 0000000000000000000000000000000000000000..617f2bf1191f2bd985b20a5c1e1be9e6c57ab117 --- /dev/null +++ b/Kenda Sampige/article_560.txt @@ -0,0 +1,21 @@ +ಈಗ ಅವನಿಲ್ಲ. ಜೀವಂತವಿದ್ದಾನಾ ಇಲ್ಲವಾ ಯಾವುದೂ ನನಗೆ ತಿಳಿದಿಲ್ಲ. ಎಲ್ಲಿದ್ದಾನೆ? ಹೇಗಿದ್ದಾನೆ? ಯಾರನ್ನೂ ಏನೂ ವಿಚಾರಿಸದೆ ಉಳಿದಿದ್ದೇನೆ, ವರ್ಷಗಳಿಂದ. ಹೃದಯದ ತುಂಬಾ ಮುಚ್ಚಿದ, ತೆಗೆದಿಟ್ಟ ನೂರು ಬಾಗಿಲುಗಳು. ಇದೊಂದು ಕೋಣೆಗೆ ಮಾತ್ರ ಬಾಗಿಲೇ ಇಲ್ಲ. ನಾನು ಮಾತ್ರ ಹೀಗೆ ಆ ಹೊಸಿಲ ಬಳಿಗೂ ಸುಳಿಯದೆ ಉಳಿದಿದ್ದೇನೆ. ಒಳಗೆ ಉಸಿರಾಟದ ಸದ್ದಾದರೂ ಇದೆಯಾ, ಕೇಳುವ ಗೋಜಿಗೇ ಹೋಗಿಲ್ಲ. + +ಜಿಂಕೆ ಮರಿಯ ಹಾಗೆ ಕುಣಿಯುತ್ತಾ, ಮುಖದ ತುಂಬಾ ಮೆತ್ತಿಕೊಂಡ ಹಿಗ್ಗು ಒರೆಸಲಾರದೆ ಸದಾ ನಗುವ, ನನ್ನ ಎದೆಯುದ್ದ ಬೆಳೆದ ಮಗಳನ್ನ ಕಂಡು ಖುಷಿಯ ಜೊತೆಗೇ ಯಾಕೋ ಆತಂಕ. ಪ್ರೀತಿಯಲ್ಲಿ ಅರಳಿ, ವಿರಹದಲ್ಲಿ ಸುಟ್ಟುಕೊಂಡು ನರಳಿ….. ಈಗ ಹೀಗಾಗಿ ಮೂರು ದಿನದಿಂದ ಹಾಸಿಗೆ ಹಿಡಿದಿದ್ದಾಳೆ. ದೇವರೆ ಇದು ಹೀಗಾಗಲೇ ಬೇಕಾ? + +‘ಅಮ್ಮಾ, ಇಲ್ಲಿ ನೋವಾಗ್ತಿದೆ…’ ಎರಡೂ ಕೈಯಿಂದ ಎದೆ ಒತ್ತಿ ಹಿಡಿದು ಚೀರಾಡುತ್ತಿದ್ದಾಳೆ. ನೆನ್ನೆಯವರೆಗೂ ಮಾತೇ ಆಡದೆ ಉಳಿದಿದ್ದ ಮಗು ಹೀಗೆ ಅಳಲು ಶುರು ಮಾಡಿದ್ದಕ್ಕೇ ನನಗೊಂದಿಷ್ಟು ನಿರಾಳವೆನಿಸಿದೆ. ಗಂಡನಿಗೆ ಸಿಟ್ಟು. ‘ಇಲ್ಲದ್ದನ್ನೆಲ್ಲ ನೀನ್ಯಾಕೆ ಇವಳ ತಲೆಯಲ್ಲಿ ತುಂಬಬೇಕಿತ್ತು? ಪ್ರೀತಿಯಲ್ಲಿರುವಷ್ಟು ಹೊತ್ತು ಮಾತ್ರಾ ನಾವು ಉಸಿರಾಡುವುದಾ? ಈಗ ನೋಡು, ಮಗುವಿನ ಸ್ಥಿತಿ ಏನಾಗಿದೆ’. ಸಂಕಟ ತಾಳಲಾರದೆ ಚಪ್ಪಲಿ ಮೆಟ್ಟಿ ಹೊರಗೆ ಹೋಗಿದ್ದಾನೆ. + +‘ನೀನ್ಯಾಕೆ ಇದಕ್ಕೆ ಅಮೃತಾಂಜನ ಹಚ್ಚೋದು. ಅದಕ್ಕೆಲ್ಲ ಸರಿ ಹೋಗತ್ತೆ ಅಂದ್ಕೊಂಡು ಬಿಟ್ಯಾ ಈ ನೋವು?’ ಮಗಳು ಸಿಟ್ಟಿನಲ್ಲಿ ನನ್ನ ಕೈ ನೂಕುತ್ತಾ ಕಿರಿಚಿಕೊಂಡಷ್ಟೂ ಅವಳನ್ನ ತಬ್ಬಿ ನನಗೊರಗಿಸಿಕೊಂಡು ಎದೆ ನೀವುತ್ತಿದ್ದೇನೆ. + + + +ಇವತ್ತು ರೂಮಿನಿಂದ ಎದ್ದು ಈಚೆ ಬಂದಿದ್ದಾಳೆ. ನೆನ್ನೆ ರಾತ್ರಿ ಸ್ವಲ್ಪ ಊಟ ಸೇರಿಸಿಕೊಂಡು, ಸೆಡಟೀವ್ ಇಲ್ಲದೆ ನಿದ್ದೆ ಮಾಡಿದ್ದಳು. ಈಗ ಬಚ್ಚಲಿಗೆ ಹೋಗಿ ಹಲ್ಲುಜ್ಜಿ ಬಂದು ‘ಕಾಫಿ ಕೊಡ್ಲಾ?’ ಅಂದಿದ್ದಕ್ಕೆ ಅಡ್ಡಡ್ಡ ತಲೆಯಾಡಿಸುತ್ತಿದ್ದಾಳೆ. ಕಿತ್ತಲೆ ಎಂದರೆ ಮಗುವಿಗೆ ಇಷ್ಟ. ಬಿಡಿಸಿಕೊಟ್ಟರೆ ತಿನ್ನಬಹುದು. ಇನ್ನೂ ಎಷ್ಟು ದಿನ, ಯಾವ್ಯಾವ ಅವಸ್ಥೆಗಳಲ್ಲಿ ಹಾದು ಸರಿಹೋಗಬೇಕೋ ಈ ಸ್ಥಿತಿ. ನನಗಂತೂ ಎಲ್ಲ ಮರೆತೇ ಹೋಗಿದೆ! ಬರೆದಾದರೂ ಇಟ್ಟಿದ್ದರೆ ಒಳ್ಳೆಯದಿತ್ತೇನೋ. + +ಸಿಪ್ಪೆ ಸುಲಿದು ತೊಳೆ ಬಿಡಿಸಿ ಕೊಟ್ಟರೆ, ಬಾಯಿಗೆ ಇಡುವುದನ್ನೇ ಮರೆತ ಹಾಗೆ ಮಗಳು ತೊಳೆಯನ್ನ ದಿಟ್ಟಿಸಿ ನೋಡುತ್ತಿದ್ದಾಳೆ. ಬಾಯಿಗಿಡಬಹುದು, ನಾನು ಏನೂ ಹೇಳದೆ ಸುಮ್ಮನೆ ಉಳಿಯಬೇಕು. + +‘ಅಮ್ಮಾ, ಪ್ರೀತಿಯಲ್ಲ್ಯಾಕೆ ಇಷ್ಟೊಂದು ನೋವು?… ಇದು ಇರುವುದೇ ಹೀಗ?…. ಮುಂದೆ ಎಂದಾದರೂ ನನಗೆ ಇದನ್ನೆಲ್ಲ ಮರೆತು ಬಿಡಲು ಸಾಧ್ಯವಾಗಬಹುದಾ?’ ಮಗಳು ಕೇಳಿದಾಗ, ಕದವಿರದ ಕೋಣೆಯ ಹೊಸ್ತಿಲ ಬಳಿ ಯಾರದೋ ನೆರಳು ಕಾಣಿಸಿದಂತಾಗಿ ಥಟ್ಟಂತ ನಾನು ನಡುಗಿದ್ದು ಯಾಕೆ? ಕಿಟಕಿಯ ಪಕ್ಕ ಕುಳಿತಿದ್ದಕ್ಕೇ ಇರಬೇಕು. ಹೊರಗೆ ತಣ್ಣಗೆ ಗಾಳಿ ಬೀಸುತ್ತಿದೆ. ಸ್ವಲ್ಪ ಹೊತ್ತು ಕಿಟಕಿ ಮುಚ್ಚಬೇಕು. ಬೇಗ ಏಳುವುದೇ ಕಷ್ಟವಾಗುತ್ತಿದೆ ಇತ್ತೀಚೆಗೆ, ಮಂಡಿ ನೋವು. + +ಕಿತ್ತಳೆ ತೊಳೆ ಈಗ ಬಾಯಿ ಸೇರಿದೆ. ಒಳ್ಳೆಯ ಬಣ್ಣ, ಗಾತ್ರದ್ದು. ಮಗಳು ಇದನ್ನಾದರೂ ತಿನ್ನಲಿ ಎಂದು ಅಪ್ಪ ಆರಿಸಿ ತಂದಿದ್ದು. ಹುಳಿ ಇರಲಾರದು. + +‘ಹಣ್ಣು ಸಿಹಿಯಾಗಿದೆಯಾ ಚಿನ್ನ?’ ಕೇಳುತ್ತಿದ್ದೇನೆ. + +ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ. \ No newline at end of file diff --git a/Kenda Sampige/article_561.txt b/Kenda Sampige/article_561.txt new file mode 100644 index 0000000000000000000000000000000000000000..7343765f838b19e25736c6f21eacba36276e8be6 --- /dev/null +++ b/Kenda Sampige/article_561.txt @@ -0,0 +1,27 @@ +ದೀಪಾವಳಿ ದೀಪಗಳ ಹಬ್ಬ, ಬೆಳಕಿನ ಹಬ್ಬ, ಕತ್ತಲ ಹಬ್ಬ, ಹೆಣ್ಮಕ್ಕಳ ಹಬ್ಬ, ಮಕ್ಕಳ ಹಬ್ಬ, ಆಕಾಶಬುಟ್ಟಿಯ ಹಬ್ಬ, ಪಟಾಕಿಯ ಹಬ್ಬ, ಸುಗ್ಗಿಯ ಹಬ್ಬ, ರೈತಮಕ್ಕಳ ಹಬ್ಬ, ಮಲೆನಾಡಿನ ಹಬ್ಬ, ಮಾರವಾಡಿಗಳ ಹಬ್ಬ, ದುಡ್ಡಿನ ಹಬ್ಬ, ಇನ್ನೂ ಮತ್ತೆ ಏನೇನೋ ಹಬ್ಬ ಅಂತೆಲ್ಲ ಬರೆದರು. ಟೀವಿ ಮಾಧ್ಯಮಗಳಂತೂ ಎಲ್ಲದಕ್ಕೂ ಬೆಳಕಿನ ನಕ್ಕಿ ಪುಡಿ ಹಚ್ಚಿವೆ. ಹಬ್ಬದ ರಿಡಕ್ಷನ್ ಸೇಲುಗಳು ಭಾರೀ ಕಡಿತದ ಮಾರಾಟದವರ ಜಾಹೀರಾತುಗಳ ಬೆಳಕು ಕಣ್ಣು ಕೋರೈಸುತ್ತಿದೆ. ನಿಯಾನ್ ದೀಪಗಳು, ಹೈ ಮಾಸ್ಕ್ ದೀಪಗಳು, ಆಕಾಶಚುಂಬಿತ ಮಾಲ್ ಗಳ ಗಾಜುಗನ್ನಡಿ ಗೋಡೆಗಳಿಂದ ಪ್ರತಿಫಲಿತವಾಗುವ ಝಗಮಗ ಬೆಳಕು ಹೊರಗಿನ ಕತ್ತಲನ್ನ ಇನ್ನಷ್ಟು ಬೆತ್ತಲಾಗಿಸುತ್ತಿದೆ. ಈ ಎಲ್ಲದರ ಮಧ್ಯೆ ಒಳಗೊಳಗೇ ಕತ್ತಲ ಕಣಿವೆಯಲ್ಲಿ ಹುತ್ತಗಟ್ಟುತ್ತ ಹೋಗುತ್ತಿರುವ ಅಂತಃಕರಣಕ್ಕೆ ಬೆಳಕಿನ ಮಿಂಚು ಹಾಯಿಸುವುದು ಯಾರು? ಬೇಕು ಬೇಕೆನ್ನುವ ಒರಲೆಗಳು ಲಕ್ಷಗಟ್ಟಲೆ ಆವರಿಸಿ ದಿನದಿಂದ ದಿನಕ್ಕೆ ಅಂತಃಕರಣದ ಪಕಳೆಗಳು ಉದುರಿ ಪುಡಿಯಾಗಿ ಕೊನೆಗುಳಿಯುವುದೇನು? ಯಾವ ಹಾವು ಬಂದು ಸೇರಬಹುದು? ಹೆದರಿಕೆಯಾಗಿ ಕೂಡಲೆ ನಾನು ಚಿಕ್ಕವಳಿದ್ದಾಗ ಅಮ್ಮ ಮಣ್ಣುಗೋಡೆಯ ಬಾವಿಯ ಒಡಕಿಗೆ ಹೊಸಮಣ್ಣು ತುಂಬಿ, ಕೆಮ್ಮಣ್ಣು ಬಳಿದು, ಮೇಲೆ ಚಿತ್ತಾರವಾಗಿ ಬರೆದ ರಂಗೋಲಿಯ ಗೆರೆಗಳ ಮೊರೆಹೋಗುತ್ತೇನೆ. ಲಕ್ಷ್ಮಣ್ ರೇಖೆಯ ಸಮೀಪಬಂದು ಓಡಿಹೋಗುವ ಜಿರಳೆಗಳ ಹಾಗೆ ಕತ್ತಲು ಹತ್ತಿರ ಹಾಯ್ದು ಹಿಂದಿರುಗುತ್ತದೆ. ಈಗಿನ ಗ್ಲೋಬಲ್ ಲಿಬರಲ್ ಯುಗದಲ್ಲಿ ಒಂದು ರಂಗೋಲಿಯ ಗೆರೆ ಸಾಕೇ ಅಂತ ಯೋಚನೆ ಮಾಡುವಾಗ, ಆ ದಿನಗಳಲ್ಲಿ ಅಪ್ಪ ಹುಡುಕಿ ಕೊಯ್ದು ತಂದು ದೊಡ್ಡ ಬಚ್ಚಲುಮನೆಯ ಹಂಡೆಗೆ ಕಟ್ಟಿದ ಕಹಿ ಹಿಂಡಲ ಕಾಯಿಯ ಬಳ್ಳಿ ನೆರವಾಗುತ್ತದೆ. ತಿನ್ನಬರುವ ಕತ್ತಲೆ ಕಹಿಮುಖ ಮಾಡಿಕೊಂಡು ಇನ್ಯಾವುದೋ ಜಾಡು ಹಿಡಿದು ಓಡುತ್ತದೆ. ಒರಲೆಗಳು ಬಂದು ಬಿಟ್ಟರೆ ಅಂತ ಮೈ ನಡುಗುವಾಗ, ಬೇಲಿಯ ಸಾಲಿನ ಹೂಗಿಡಗಳ ಫ್ರೇಮಿನಲ್ಲಿ ವಿಶಾಲವಾಗಿ ಹರಡಿಕೊಂಡ ಮಣ್ಣಿನಂಗಳವು ಸಂಜೆಯಷ್ಟೇ ಸಿಕ್ಕ ಫ್ರೆಶ್ ಸಗಣಿಯನ್ನ ಅಮ್ಮನೂ ನಾನೂ ಬಕೀಟಿನಲ್ಲಿ ಕದಡಿ ಬಳಿದ ಹಸಿರುಗಪ್ಪಿನ ಮೇಲುದ ಹೊದ್ದು ಘಮ್ಮೆನ್ನುತ್ತಿದೆ. ನಡುಕ ನಿಲ್ಲುತ್ತದೆ. ಒರಲೆಗಳು ಮಣ್ಣು ಸಿಗದೆ ಬಂದ ದಾರಿಯಲ್ಲಿ ಬಂದ ಹಾಗೆ ಹೋಗುತ್ತವೆ. + +ಹೀಗೇ ಸುಮ್ಮನೆ ಯೋಚನೆ ಮಾಡುತ್ತ ಕೂರುವಾಗ ಅಚ್ಚರಿಯೆನಿಸುತ್ತದೆ – ಹೇಗೆ ಈ ಯಾವುದೋ ಕಾಲದ ನೆನಪುಗಳು ಇವತ್ತಿನ ಸಂಕಟಗಳಿಗೆ ಸಾಂತ್ವನ ಕೊಡುತ್ತವೆ ಅಂತ! ಇವತ್ತು ನಮ್ಮ ನಡುವೆ ತುಂಬಿ ತುಳುಕುತ್ತಿರುವ ಎಲ್ಲ ಬೌದ್ಧಿಕತೆ ಮತ್ತು ಮೌಢ್ಯತೆಗಳ ನಡುವೆ ಅವುಗಳ್ಯಾವುದರ ಗೊಡವೆಯೂ ಇಲ್ಲದೆ ತನ್ನಷ್ಟಕ್ಕೆ ತಾನು ಸಹಜವಾಗಿ ಅರಳಿಕೊಂಡಿದ್ದ ಈ ಆಚರಣೆಗಳು, ಅವುಗಳ ನೆರವೇರಿಕೆಯ ಸಂಭ್ರಮಗಳು ಹೇಗೆ ಒಂದು ಅಪ್ಪಟ ಖುಶಿಯನ್ನ ಕಟ್ಟಿಕೊಡುತ್ತಿದ್ದವು ಅಂತ ನೆನೆದರೆ ಮನಸ್ಸು ತುಂತುರು ಮಳೆಯಲ್ಲಿ ನೆನೆಯುವ ಸುಖವನ್ನ ಅನುಭವಿಸುತ್ತದೆ. + +ಎಲ್ಲವನ್ನೂ ತುಂಬ ಸರಳೀಕರಿಸುವ, ಎಲ್ಲ ವಿಷಯಗಳ ಸಂಕೇತಗಳನ್ನೂ ಪೂರಾ ಡೀಕೋಡ್ ಮಾಡಿ ಓ ಇದಿಷ್ಟೆ ಎರಡು ಸೊನ್ನೆ, ಒಂದು ಗೆರೆಯ ಪುನರಾವೃತ್ತಿಗಳು ಎಂದುಕೊಳ್ಳುತ್ತಾ, ಎಲ್ಲ ಅನುಕೂಲಗಳನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಸಾಧಿಸಿಕೊಂಡು, ಇರುವ ಸಮಯವನ್ನೆಲ್ಲ ಒತ್ತೆಯಿಟ್ಟು ಇನ್ನಷ್ಟು ಮತ್ತಷ್ಟು ಪೇರಿಸುತ್ತಾ ಚೆಲ್ಲುವುದೆ ಬದುಕಾಗಿ ಹೋಗಿದೆ. ಸ್ವಿಚ್ಚೊತ್ತಿದರೆ, ಕೆಲಸದವಳೂ ಬಂದು ನಿಮಿಷಗಳಲ್ಲಿ ಮನೆ ಕ್ಲೀನಾಗುವಾಗ ನಾನು ಹಬ್ಬದ ಹಿಂದಿನ ಸಂಜೆ ಅವಳ ತಿಂಗಳ ಸಂಬಳವನ್ನ ಒಂದಷ್ಟು ಗಂಟೆ ಕಂಪ್ಯೂಟರ್ ಮುಂದೆ ಕೂತು ದುಡಿಯುತ್ತಿರುತ್ತೇನೆ. ಗುಡಿಸಲು ಅಂಗಳವಿಲ್ಲ. ಅದೆಲ್ಲ ಯಾರಿಗೆ ಬೇಕು. ಹಬ್ಬದ ಹೋಳಿಗೆ ಇನ್ನೆರಡು ಕೊಡಿ ಅಕ್ಕಯ್ಯ ಅಂತ ಅಚ್ಚೆ ಮಾಡಿ ತೆಗೆದುಕೊಳ್ಳುತ್ತಿದ್ದ ಗಂಗೆಯ ಹಾಗೆ ಇವಳೂ ಅಂದುಕೊಂಡು ಹಬ್ಬದ ತಿಂಡಿಯೇನಾದರೂ ಕೊಡಹೋದರೆ ನಮ್ಮವಳಿಗೆ ಅದೆಲ್ಲ ಬೇಕಿಲ್ಲ. ಇದೆಲ್ಲ ಬಿಡಿ ನಂಗೆ ಬೇಳೆತಿಂಡಿ ಆಗಾಕಿಲ್ಲ, ಒಂದು ಹೊಸಸೀರೆಗೆ ದುಡ್ಡುಕೊಡಿ ಎನ್ನುತ್ತಾಳೆ. ಹಗಲಲ್ಲೂ ಕಳವು ದರೋಡೆಯ ಭೀತಿಯಲ್ಲೆ ಬದುಕುಸಾಗಿಸುವ ನಮಗೆ ಭೂರೆಗಳವಿನ ಎಚ್ಚರದ ರಾತ್ರಿಯ ಮಜ ಇಲ್ಲಿ ಬರುವುದೇ ಇಲ್ಲ. ಪಾಟುಗಳಲ್ಲಿರುವುದೆಲ್ಲ ಹಸಿರೆಲೆಯ ಕ್ರೋಟನ್ ಅಲಂಕಾರಿಕ ಗಿಡಗಳು. ಪೇಟೆಯಿಂದ ಕೊಂಡು ತಂದ ಹಣ್ಣುಗಳು ಝಿಪ್ ಲಾಕ್ ಕವರುಗಳಲ್ಲಿ ಫ್ರಿಜ್ಜಿನಲ್ಲಿದೆ – ಕದಿಯುವುದೇನನ್ನು. ಫ್ರಿಜ್ಜನ್ನೇ ಕದೀಬೇಕಷ್ಟೆ. + +ಅಲ್ಲ ಬರೀ ಹಿಂಗೆ ನಾಸ್ಟಾಲ್ಜಿಕ್ ಆಗಿ ಹಳೆಯ ಚಂದಕ್ಕೆ ಇವತ್ತಿನ ಕ್ಷಣಗಳನ್ನ ಹೋಲಿಸುತ್ತಾ ಕುಂತರೆ ಎಂಗೆ ಅಂತ ಬಹಳ ಜನ ನನ್ನ ಕೇಳಿದ್ದಾರೆ. ಏನುಪಯೋಗ ಅನ್ನುವುದು, ಹಳತನ್ನೆ ಮತ್ತೆ ಮತ್ತೆ ಹೊಸ ಅಕ್ಷರಗಳಲ್ಲಿ ಕುಟ್ಟುವುದು ಯಾಕೆ ಅನ್ನುವುದು ಅವರ ಪ್ರಶ್ನೆ. ಆದರೆ ಈ ಹಳತರಲ್ಲಿ ಇರುವ ಯಾವುದೋ ಒಂದು ಜೀವಂತಿಕೆ ನನ್ನ ಇವತ್ತಿನ ಬರಡು ಕ್ಷಣಗಳಿಗೆ ನೀರು ಹನಿಸುತ್ತಿರುವುದು ನನಗೆ ಮಾತ್ರ ಗೊತ್ತಿರುವ ಸತ್ಯ. ಎಲ್ಲರೂ ಅವರವರ ದಾರಿಗೆ ನೆರಳಾಗಲು, ಜೀವಜಲ ತುಂಬಲು ಅವರದ್ದೇ ಆದ ವಿಧಾನಗಳನ್ನ ಅಳವಡಿಸಿಕೊಂಡಿರುತ್ತಾರೆ. ನನ್ನದು ಮೂಲಮುಖೀ ಧೋರಣೆಯಿರಬಹುದು..:) + +ನಮ್ಮೆಲ್ಲ ನಡವಳಿಕೆ, ಮಾತುಕತೆ, ಓದು, ಸಭ್ಯತೆ, ಮುನ್ನಡೆಯುವಿಕೆ ಎಲ್ಲವೂ ಅವತ್ತು ಬಹಳ ಹಿಂದೆ ಮೊಳಕೆಯೊಡೆದ ಎರಡು ಚಿಗುರು ಎಲೆಗಳ ಮಧ್ಯದಲ್ಲಿ ಬೆಳೆಯುತ್ತ ಬಂದ ಟಿಸಿಲುಗಳೇ ಅಲ್ಲವೇ ಅನಿಸುತ್ತದೆ ನನಗೆ. + +ಇಲ್ಲಿ ಸಿಗ್ನಲ್ಲಿನಲ್ಲಿ ಸಿಗುವ ಬೇಡುವ ಕೈಗಳು, ಚಪ್ಪಾಳೆ ತಟ್ಟುತ್ತ ಜೋಬಿಗೆ ಕೈ ಹಾಕುವ ಧಾರ್ಷ್ಟ್ಯದ ಕೈಗಳು, ಯುನಿಫಾರ್ಮಿನಲ್ಲಿ ನಿಂತು ಅಡ್ಡಹಾಕಿ ರಸೀತಿ ಹರಿದು ಕಸಿದುಕೊಳ್ಳುವ ಕೈಗಳು, ಎಲ್ಲದರ ಮಧ್ಯೆ ನನ್ನನ್ನ ತುಂಬ ಕಾಡುವ, ಮತ್ತೆ ಹೇಗಾದರೂ ಮಾಡಿ ನೋಡಬೇಕೆನ್ನುವ ಎರಡು ಜೊತೆ ಪುಟ್ಟ ಕೈಗಳು ಆ ಕಳೆದು ಹೋದ ಕಾಲದಲ್ಲಿವೆ. ಅವುಗಳ ನೆನಪಲ್ಲೆ ಒದ್ದೆಯಾದ ಮನಸ್ಸು ಹೊರಗಿನ ಮೈಯಲ್ಲು ಮುಳ್ಳುಹೂಗಳನ್ನರಳಿಸುತ್ತವೆ. ದೀಪಾವಳಿಯ ಸಂಜೆ ಅಜ್ಜನ ಬಿಳಿಅಂಗಿಯ ಜೇಬಿನಿಂದ ನಾಲ್ಕು ನಾಲ್ಕಾಣೆಗಳು ನನ್ನ ಪುಟ್ಟ ಕೈ ಸೇರುತ್ತಿದ್ದವು. ಕಿಟಕಿಯ ತಳಿಹಿಡಿದು ನೋಡುತ್ತ ನಿಂತವಳಿಗೆ ಆಚೆಮನೆಯ ಮೆಟ್ಟಿಲಿಳಿಯುವ ಆ ಜೋಡಿಹುಡುಗಿಯರು, ಅವರ ಹಳೇ ಉದ್ದಲಂಗ ಮತ್ತು ಇಬ್ಬರೂ ಸೇರಿ ಹಿಡಿದಿರುವ ಪುಟ್ಟ ಬಟ್ಟಲಿನಲ್ಲಿ ಇನ್ನೂ ಪುಟ್ಟಗೆ ಬೆಳಗುತ್ತಿರುವ ಮಣ್ಣಿನ ಹಣತೆಯ ದೀಪ ಮತ್ತು ಆರದಂತೆ ಹಿಡಿದ ಅವರಿಬ್ಬರ ಕೈ ಕಾಣುತ್ತಿತ್ತು. ಅವರು ಮೆಟ್ಟಿಲೇರಿ ನಮ್ಮನೆಯೊಳಗೆ ಬರುವಾಗ ಕೇಳುವ ರಾಗವಾದ ದೀಈಈಈಈಪಾಆಆಅವಳೀಈಈಈಈಈ ಮುಗಿಯುವುದಕ್ಕೆ ಮುನ್ನವೇ ಅವರ ತಟ್ಟೆಯೊಳಗೆ ಎರಡು ನಾಲ್ಕಾಣೆ ಹಾಕುತ್ತಿದ್ದೆ. ಒಂದು ಮೆದುವಾದ ನಗು ನಗುತ್ತ ಅವರು ಹೊರಡುತ್ತಿದ್ದರು. ಕತ್ತಲೆಯ ದಾರಿ ಸೀಳುತ್ತಾ ಮುಂದಿನ ಮನೆಗೆ. ಇನ್ನೊಂದು ಸ್ವಲ್ಪ ಹೊತ್ತಿಗೆ ಇನ್ನೆರಡು ಪುಟ್ಟ ಜೋಡಿಗಳ ಪುಟ್ಟ ಹಣತೆಯ ಪುಟ್ಟ ದೀಪ ಮತ್ತದೇ ಕತ್ತಲ ದಾರಿಯನ್ನು ಬೇಧಿಸುತ್ತ ಸಾಗುತ್ತಿತ್ತು. + +ಯಾರು ಯಾರಿಗೆ ಬೆಳಕು ಕೊಟ್ಟವರು? ಕಾಯುತ್ತ ಕೂತ ಪುಟ್ಟ ಹುಡುಗಿಯ ಮನದಲ್ಲಿ ಕೊಟ್ಟ ಸಂತೋಷದ ಬೆಳಕು ಹತ್ತಿಸಿದರೋ, ಗಾಳಿಗಡ್ಡವಾಗಿ ಆರದಂತೆ ಕೈ ಹಿಡಿದು ದೀಪ ತಂದ ಪುಟ್ಟ ಕೈಗಳಿಗೆ ಎಂಟಾಣೆಯ ಆಸರೆಯ ದೀಪ ಹತ್ತಿಸಿದರೋ, ಪುಟ್ಟ ಕೈಯೊಂದು ಇನ್ನೊಂದು ಪುಟ್ಟಕೈಯನ್ನು ಗಟ್ಟಿಗೊಳಿಸುವ ಹಾಗೆ ನಾಲ್ಕಾಣೆಗಳನ್ನು ಕೊಟ್ಟು, ಆ ಕೊಡು-ಕೊಳ್ಳುವಿಕೆಯ ಬೆಳಕನ್ನು ಹೀರುತ್ತ ಕುಳಿತ ಅಜ್ಜನಿಗೆ ಬೆಳಕು ಕೊಟ್ಟರೋ, ಅವನಿಂದ ಇವರಿಗೆ ಬೆಳಕೋ, ಇವಳಿಂದ ಅವರಿಗೆ ಬೆಳಕೋ, ಅವರಿಂದ ಇವರೆಲ್ಲರ ಬೆಳಕೋ – ಇದೇ ಅಂತ ಹೇಳಲು ಗೊತ್ತಾಗುತ್ತಿಲ್ಲ. ಈ ಬಗೆಯ ನೆನಪುಗಳು ಇಂದಿನ ಬದುಕಿನ ಗಾಳಿಗೊಡ್ದಿದ ಹಣತೆಯಂತ ದಿನದಲ್ಲಿ ತನ್ನ ಪುಟ್ಟ ಪುಟ್ಟ ಕೈಗಳನ್ನು ಅಡ್ಡ ಹಿಡಿದು ಕತ್ತಲೆಯಲ್ಲಿ ಮಿನುಗು ಹುಟ್ಟಿಸುತ್ತವೆ. ಒಂದೊಂದು ಮಿನುಗೂ ಒಳಗಿನ ಕತ್ತಲೆಯನ್ನ ಬೆಳಗುವ ಪ್ರಜ್ವಲ ದೀಪ. + +ಪುಟ್ಟ ಊರಿನ ಆ ಪುಟ್ಟ ಹುಡುಗಿಯ ದೀಪಾವಳಿಯೆಂದರೆ: + +*ಒಂದು ವಾರ ಮೊದಲು ರೇಷಿಮೆ ಲಂಗದ ಹೊಲಿಗೆ ಬಿಚ್ಚುವುದು;*ನಾಲ್ಕು ದಿನ ಮೊದಲು ಹೋದವರ್ಷ ಉಳಿದ ಪಟಾಕಿಗಳನ್ನ ಒಲೆಯ ಮೇಲಿನ ನಾಗಂದಿಗೆಯಲ್ಲಿಡುವುದು; ಮತ್ತು ದಿನಾ ಬಿಸಿಲಿಗೆ  ಹಾಕುವುದು*ಹಿಂದಿನ ದಿನವಿಡೀ ಸುತ್ತುಕೆಲಸದಲ್ಲಿ ಮೈಕೈ ಕೊಳೆಮಾಡಿಕೊಳ್ಳುವುದು;*ಬೆಳಿಗ್ಗೆ ಬೇಗ ಎದ್ದು ತಲೆಸ್ನಾನ ಮಾಡಿಸಿಕೊಂಡು ಬಚ್ಚಲೊಲೆಯ ಬಿಸಿಯಲ್ಲಿ ಕೂದಲು ಒಣಗಿಸಿಕೊಳ್ಳುವುದು;*ತಿಂಡಿತಿನ್ನುವುದಕ್ಕೂ ಮೊದಲೇ ರೇಷಿಮೆ ಲಂಗ ತೊಟ್ಟು, ನೀರು ಜಡೆ ಹಾಕಿಸಿಕೊಂಡು, ಹೊಸ ಸ್ಪ್ರಿಂಗು ಬಳೆಯನ್ನ ಹಾಕಿ, ಕೆನ್ನೆ ಸರಪಳಿ   ತೂಗಿಸಿಕೊಂಡು ರೆಡಿಯಾಗುವುದು ಮತ್ತು ಅಮ್ಮಮ್ಮ ಕಿರೀ ಹಿಡಿದು ನೋಡಿ ಗಲ್ಲಕ್ಕೊಂದು ಮಸಿಬೊಟ್ಟು ಇಡುವುದು;*ವಿಶೇಷಾಂಕಗಳನ್ನ ಬರೀ ತಿರುವಿ ನೋಡಿ ಯಾವ ಯಾವ ಕತೆ ಯಾವ ಸರದಿಯಲ್ಲಿ ಓದಬೇಕೂಂತ ಗುರುತಿಸಿಕೊಂಡು ಇಡುವುದು;*ರುಚಿಯಾದ ತಿಂಡಿ, ಊಟ, ಸಿಹಿ ಮತ್ತು ಕೊಬ್ಬರಿ ಕವಳ;*ಕಣ್ಣು ಎಳೆದುಕೊಂಡು ಹೋಗುತ್ತಿದ್ದರೂ ಮೊದಲ ಬಹುಮಾನ ಬಂದ ಕತೆಯನ್ನೊಂದು ಹೇಗಾದರೂ ಓದಿಬಿಡುವುದು..;*ಸಂಜೆಗೆ ಮತ್ತೊಂದು ರೌಂಡು ರೆಡಿಯಾಗಿ ಕಿಟಕಿಯುದ್ದಕ್ಕೂ ಮೆಟ್ಟಿಲುಗಳ ಮೇಲೆ, ಮನೆ ಬಾಗಿಲುಗಳ ಹೊಸ್ತಿಲಲ್ಲಿ ದೀಪ ಹಚ್ಚಿಡುತ್ತಾ  ಹೋಗುವುದು ಮತ್ತು ದೀಪಾವಳಿಯ ಹುಡುಗಿಯರಿಗೆ ಕಾಯುತ್ತಾ ನಿಲ್ಲುವುದು;*ಅವರು ಬಂದು ಹೋದ ಮೇಲೆ ಅಜ್ಜನ ಜೊತೆಗೆ ವಿಷ್ಣುಚಕ್ರ ಮತ್ತು ಸುರ್ ಸುರ್ ಬತ್ತಿ ಹಚ್ಚುವುದು;*ಯಾವ ಕೆಲಸವೂ ಇಲ್ಲದಿದ್ದರೂ ಸುಮ್ಮನೆ ಸುಳಿವ ಹಮಾಲರೆಲ್ಲರಿಗೂ ಅವತ್ತಿನ ವಿಶೇಷ ತಿಂಡಿ ಕೊಡುವುದು,;*ಢಂ ಎನ್ನುವ ಪಟಾಕಿ ಹಚ್ಚಲು ಹೆದರಿ ರಫೀಕನ ಕೈಯಲ್ಲಿ ಅದನ್ನು ಹಚ್ಚಿಸುವುದು;*ರಾತ್ರಿ ಊಟ ಮುಗಿದ ಮೇಲೆ, ರಸ್ತೆಯುದ್ದಕ್ಕೆ ಶೆಟ್ಟರ ಮನೆಯವರು ಹಚ್ಚುವ ಪಟಾಕಿ ಸರವನ್ನ ಕಿವಿಯಲ್ಲಿ ಬೆರಳಿಟ್ಟುಕೊಂಡು ನೋಡುವುದು;ಆಚೆಯ ಬೀದಿಯವರ ರಾಕೆಟ್ ಹೂಬಾಣಗಳನ್ನ ಎಣಿಸುತ್ತ ನಿಲ್ಲುವುದು.;*ಶಬ್ಧಗಳೆಲ್ಲ ಕರಗುವಾಗ ಮೂಲೆ ಮೂಲೆಯಲ್ಲಿ ಹಚ್ಚಿಟ್ಟ ದೀಪದ ಬೆಳಕಿನಲ್ಲಿ ನಿದ್ದೆಗಿಳಿಯುವುದು..; + +ದಿನದಿನವೂ ಝಗಮಗಿಸುವ ಬೆಳಕಿನ ಹಬ್ಬದ ದೊಡ್ಡ ಊರಿನ ಈ ದೊಡ್ಡವಳಾಗಿಯೂ ಪುಟ್ಟಗೇ ಉಳಿದುಬಿಟ್ಟ ಇವಳ ದೀಪಾವಳಿಯೆಂದರೆ: + +ಬೆಳಕಿನ ಮಧ್ಯೆ ಮುತ್ತುವ ಕತ್ತಲೆಗೆ ಹೆದರುತ್ತಹಳೆಯ ದಿನಗಳನ್ನ ಕತ್ತಲು ಕವಿಯುವ ಮನಸ್ಸಿನ ತೆರೆಯ ಮೇಲೆಹಾಯಿಸುತ್ತಾನೆನಪುಗಳ ಮೆರವಣಿಗೆ ಹೊರಡಿಸುವುದು.ಅದೋ ಅಲ್ಲಿ ದೂರದ ತಿರುವಿನಲ್ಲಿ ಅವತ್ತು ಕಣ್ಮರೆಯಾದಪುಟ್ಟ ಕೈಗಳ ಆಸರೆಯಲ್ಲಿ ಗಾಳಿಗಾರದೆ ನಿಂತ ದೀಪದುರಿಯನ್ನಮತ್ತೆ ಮತ್ತೆ ನೋಡುವುದು. + +ಗದ್ದಲ, ಪಟಾಕಿ, ಹೊಗೆ, ಝಗಮಗ ಎಲ್ಲ ನೇಪಥ್ಯಕ್ಕೆ ಸರಿದುಅಂತರಂಗಸ್ಥಳದಲ್ಲಿನೆಮ್ಮದಿಯ ಮೌನದ ಬೆಳಕಿನೆಳೆ ಮಿನುಗುತ್ತಿದೆ.. + +ಈ ಎಲ್ಲ ಅಚ್ಚರಿಯ ಸಂಭ್ರಮ ಕಳೆದುಹೋಗಿದೆಯೇ? ಖಂಡಿತಕ್ಕೂ ಇಲ್ಲ. ಅವೆಲ್ಲ ತುಂಬಿರುವ ಜಾಗಕ್ಕೆ ಹೋಗುವ ಬಾಗಿಲಿನ ಬೀಗದ ಕೈಯನ್ನ ಗಡಿಬಿಡಿಯ ಬದುಕಿನ ಕೊನೇ ಖಾನೆಯ ಒಳಗೆ ಇಟ್ಟು ಬಿಟ್ಟಿದ್ದೇವೆ. ಬಗ್ಗಿ ನೋಡಲು ಪುರುಸೊತ್ತಿಲ್ಲ. ಒಳಗೆ ಇಣುಕಿ ಹುಡುಕಲು ಪುಟ್ಟ ದೀಪದ ಬೆಳಕಿಲ್ಲ. ಎಲ್ಲ ನಮ್ಮ ಕೈಯಲ್ಲಿದೆ. ನಮ್ಮದೇ ಕೈ ತಾನೇ ಎಂಬ ಉಪೇಕ್ಷೆಯ ಹಿಡಿತದಲ್ಲಿದೆ. + +ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ \ No newline at end of file diff --git a/Kenda Sampige/article_562.txt b/Kenda Sampige/article_562.txt new file mode 100644 index 0000000000000000000000000000000000000000..d3459e5377a36c57806dbc2f7418b5395fadd57e --- /dev/null +++ b/Kenda Sampige/article_562.txt @@ -0,0 +1,29 @@ +ಸಂಜೆ ಬಿಸಿಲು ಇನ್ನೂ ಚುರುಗುಟ್ಟುತ್ತಿರುವಾಗಲೇ ಸಣ್ಣಗೆ ಹನಿಯತೊಡಗಿದ ಮಳೆಯಿತ್ತು. ಟ್ರಾನ್ಸ್ ಫಾರ್ಮರ್ ಸುಟ್ಟು ಹೋಗಿ, ಲೈಟುಗಳಿಲ್ಲದೆ ಮನೆಯೊಳಗೆ ಮಬ್ಬು ಬೆಳಕು. ಹೊರಗಿನ ಬೆಳಕು ಬರಲಿ ಅಂತ ತೆಗೆದಿಟ್ಟ ಕಿಟಕಿಗಳಿಂದ ಮಳೆಯಲ್ಲಿ ನೆಂದು ತಂಪಾಗಿ ಸೂಸುತ್ತಿದ್ದ ಗಾಳಿ. ಅಲ್ಲಿ ಬೆತ್ತದ ಕುರ್ಚಿಯಲ್ಲಿ ಅಮ್ಮನಂತಹ ಮಗಳು ಕೂತುಕೊಂಡು ಗತಿಸಿದ ಅಪ್ಪನ ನೆನಪುಗಳನ್ನ ಒಂದೊಂದಾಗಿ ಬಿಚ್ಚಿಡುತ್ತಿದ್ದರೆ ಮಳೆ ಒಂದೆರಡು ಕ್ಷಣ ಸುಮ್ಮನೆ ನಿಂತು, ಮತ್ತೆ ಜೋರಾಗಿ ಸುರಿಯತೊಡಗಿತು. + +ಪುರೋಹಿತ ತಿರುನಾರಾಯಣ ನರಸಿಂಹಾಚಾರ್ ಅವರು ಹುಟ್ಟಿ ಇಂದಿಗೆ ಸರಿಯಾಗಿ ೧೦೩ ವರ್ಷಗಳು. ಅವರೊಡನೆ ತಾವು ಕಳೆದ ಬಾಲ್ಯದ ದಿನಗಳನ್ನ, ಕವಿ ಹೃದಯದ ವಿಶೇಷ ಒಲವು ನಲಿವುಗಳನ್ನ, ಮನೆಯೆಲ್ಲ ತುಂಬಿ ಕರುನಾಡಿನೆಲ್ಲೆಡೆ ಹಾಡಾಗಿ ಹರಿದ ಗೀತಸರಿತದ ಉಗಮವನ್ನ, ಹಂಚಿಕೊಳ್ಳಲು ಕುಳಿತ ಅಮ್ಮನಂತಹ ಪ್ರೀತಿ ಸುರಿವ ಪು.ತಿ.ನ ಅವರ ಮಗಳು ಶಾಂತಾ ರಂಗಾಚಾರ್ ಅವರ ನೆನಪಿನ ಹನಿಗಳಿವೆ ಈ ಪುಟ್ಟ ಬೊಗಸೆಯಲ್ಲಿ. + +ನಾವು ಸಪ್ತಕನ್ನಿಕೆಯರು ಮತ್ತು ಒಬ್ಬ ಮಗ ಅಪ್ಪ ಅಮ್ಮನಿಗೆ. ತುಂಬಿದ ಮನೆ ಯಾವಾಗಲೂ ತುಂಬಿಕೊಂಡೇ ಇದ್ದಿದ್ದು ಅಪ್ಪನಿಂದಾಗಿ, ಅವರ ಸಹೃದಯ ಗೆಳೆಯರ ಗುಂಪಿನಿಂದಾಗಿ,ನಾವು ಮಕ್ಕಳ ಚಿಲಿಪಿಲಿಯಿಂದಾಗಿ, ಮನೆ ಮಕ್ಕಳನ್ನು ನಿಭಾಯಿಸಿಕೊಂಡು ಹೋದ ಅಮ್ಮನಿಂದಾಗಿ,  ಅಣ್ಣನ ಕಾವ್ಯದ ಅಕ್ಷರ ಅಕ್ಷರದಲ್ಲೂ ಹನಿದು ಸುತ್ತೆಲ್ಲವೂ ಸುಳಿಯುತ್ತಿದ್ದ ಅಪಾರ ಜೀವನಪ್ರೀತಿಯಿಂದಾಗಿ. ಮೊದಲಿಗೆ ಮಿಲಿಟರಿಯಲ್ಲಿ ಸ್ಟೋರ್ಸ್ ನಿರ್ವಹಣೆ ಮಾಡಿಕೊಂಡಿದ್ದ ಅಣ್ಣ, ಸಂಜೆ ಮನೆಗೆ ಬಂದವರು ಹೊರಟುಬಿಡುತ್ತಿದ್ದರು ಚಾಮರಾಜಪೇಟೆಗೆ ಗೆಳೆಯರ ಒಡನಾಟಕ್ಕೆ. ಅಲ್ಲಿ ಜೊತೆಗೂಡುತ್ತಿದ್ದವರು ತೀನಂಶ್ರೀ, ಮಾಸ್ತಿ, ಮತ್ತಿತರರು. ಎಲ್ಲ ಮಾತುಕತೆ ಮುಗಿದು ಅವರು ಹೊರಡುವಾಗ ರಾತ್ರಿ ಸಾಕಷ್ಟಾಗಿರುತ್ತಿತ್ತು. ಬಸ್ಸಿರುತ್ತಿರಲಿಲ್ಲ. ನಡುರಾತ್ರಿಯ ನಡಿಗೆಯಲ್ಲಿ ಕೃಷ್ಣನ ನೆನೆಯುತ್ತ ಮನೆಗೆ ಬರುವ ಅಣ್ಣನ ಕೈಯಲ್ಲಿ ನಾವು ಮಕ್ಕಳಿಗೆಂದು ಯಾವಾಗಲೂ ಕರ್ಚೀಫಿನಲ್ಲಿ ಕಟ್ಟಿ ತಂದ ಪೆಪ್ಪರ್ ಮಿಂಟು, ಬರ್ಫಿಗಳಿರುತ್ತಿದ್ದವು. ಮನೆಯಲ್ಲಿ ಯಾರು ಬಾಗಿಲು ತೆಗೆಯುತ್ತಾರೋ ಅವರಿಗೊಂದು ಬೋನಸ್ ಬರ್ಫಿ, ಅಥವಾ ಪೆಪ್ಪರ್ ಮಿಂಟ್. ಹಾಗಾಗಿ ನಿದ್ದೆಗಣ್ಣಲ್ಲೂ ನಮಗೆ ಪೈಪೋಟಿ ಬಾಗಿಲು ತೆರೆಯಲು. ನಿದ್ದೆಯಲ್ಲಿದ್ದವರಿಗೆ ಬೆಳಿಗ್ಗೆ ಎದ್ದ ಮೇಲೆ ಸಿಗುತ್ತಿತ್ತು. + +ಸಂಗೀತವನ್ನ ಶಾಸ್ತ್ರೀಯವಾಗೇನೂ ಕಲಿತಿರದ ಅಣ್ಣ ರಾಗಪ್ರಿಯ. ಅವರು ಬರೆದ ಬಹುಪಾಲು ಹಾಡುಗಳಿಗೆ ಮೊದಲು ರಾಗವನ್ನು ಆರಿಸಿ, ಸಂಯೋಜಿಸಿ, ಆಮೇಲೆ ಗೀತೆಯನ್ನು ಬರೆದಿದ್ದಾರೆ. ಮತ್ತು ಅವರಿಗೆ ಆಯಾ ಹಾಡುಗಳನ್ನು ಅವರು ಆರಿಸಿ ಬರೆದ ರಾಗದಲ್ಲೆ ಹಾಡಿಸುವುದೆಂದರೆ ಅಚ್ಚು ಮೆಚ್ಚು. ಸಾಮಾನ್ಯವಾಗಿ ಅವರು ಬರೆಯುತ್ತಿದ್ದಾಗ ಅಮ್ಮ ನಮ್ಮನ್ನು ಅವರ ರೂಮಿನ ಬಳಿ ಹೋಗಗೊಡುತ್ತಿರಲಿಲ್ಲ. ಅಣ್ಣನಿಗೆ ತೊಂದರೆ ಕೊಡಬಾರದು, ಹೊರಗೆ ದೂರದಲ್ಲಿ ಆಡಿಕೊಳ್ಳಿ, ಗಲಾಟೆ ಮಾಡಬೇಡಿ ಎಂದು ಅವರ ಬರವಣಿಗೆಗೆ ಸದಾ ಅನುಕೂಲಕರ ವಾತಾವರಣ ಕಲ್ಪಿಸುತ್ತಿದ್ದರು ಅಮ್ಮ ಶೇಷಮ್ಮ. ಮನೆಯ ಕೆಲಸ, ಮಕ್ಕಳ ಪಾಲನೆ, ಅಣ್ಣನ ಲಾಲನೆ, ಅತಿಥಿಗಳ ಸತ್ಕಾರ ಎಲ್ಲವನ್ನು ಅಣ್ಣ ಭಲೇ ಎನ್ನುವಂತೆ, ಮೆಚ್ಚುವಂತೆ ನಡೆಸಿ ಅನುಸರಿಸಿಕೊಂಡು ಹೋದವರು ಅಮ್ಮ.  ಈ ಸಹಕಾರಕ್ಕೆ ಕೃತಜ್ಞತೆಯಾಗಿ “ಹಂಸದಮನಿಕೆ” ಕೃತಿಯನ್ನ ಅಮ್ಮನಿಗೆ ಅರ್ಪಿಸಿದ್ದು ಹೀಗೆ – ಹಾಡೆಲ್ಲ ನಿನಗಿರಲಿ, ಪಾಡೆಲ್ಲ ನನಗಿರಲಿ, ಎಂದ ನನ್ನ ಬೀಡಿನೊಡತಿಗೆ.. – ಇಷ್ಟು ಸಾಕು ಅವರಿಬ್ಬರ ಅನ್ಯೋನ್ಯ ದಾಂಪತ್ಯದ ಚೆಲುವನ್ನ ವಿವರಿಸಲಿಕ್ಕೆ. ಚಿಕ್ಕಮಗಳೂರಿನ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಹೋದಾಗ ತಾವು ಸಭೆಯನ್ನಲಂಕರಿಸುವ ಸಮಯಕ್ಕೆ ಅಮ್ಮನನ್ನೂ ಕೈಹಿಡಿದು ಸಭೆಯಲ್ಲಿ ಕರೆದುಕೊಂಡು ಹೋಗಿ ಜೊತೆಗೆ ಕೂರಿಸಿಕೊಂಡು ಹೊಸಸಂಪ್ರದಾಯಕ್ಕೆ ನಾಂದಿ ಹಾಡಿದವರು ಅವರು. ಕವಿಚೇತನವೊಂದು ಪಲ್ಲವಿಸಿ ಹೂಬಿಡಲು ಅದಕ್ಕೆ ಇಂಬಾಗಿ ನಿಂತ ಬಳ್ಳಿಯಂತ ಮನೆಯೊಡತಿ ಕಾರಣ ಎನ್ನುವುದು ಅವರ ನಿಲುವು. + +ನನಗೆ ಎಂಟೋ ಒಂಬತ್ತೋ ವರ್ಷವಿರಬೇಕು. ಆಗ ಅಣ್ಣ ಗೋಕುಲ ನಿರ್ಗಮನ ಬರೆಯುತ್ತಾ ಇದ್ದರು. ಸ್ನೇಹಿತರ ಗುಂಪು ಆಗಾಗ ಮನೆಗೆ ಬರುತ್ತಿದ್ದರು. ಆಗೆಲ್ಲ ಅಣ್ಣ ಮತ್ತು ಅವರ ಗೆಳೆಯರು ಅಲ್ಲಿದ್ದ ದೊಡ್ಡ ರೂಮೊಂದರೊಳಕ್ಕೆ ಹೋಗಿ ಬಾಗಿಲು ಹಾಕಿಕೊಂಡುಬಿಡುತ್ತಿದ್ದರು. ಅವರಿಗೆಲ್ಲ ತಿಂಡಿ ಕಾಫಿ ಕೊಡುತ್ತಿದ್ದರು ಅಮ್ಮ. ನಾವು ಮಕ್ಕಳು ಈ ಸಹೃದಯ ಕವಿಗೋಷ್ಟಿಯನ್ನ ಪೊಂಗಲ್ ಪುಳಿಯೋಗರೆ ಗೋಷ್ಟಿ ಎಂದು ಕರೆಯುತ್ತಿದ್ದ ನೆನಪು. ಆದರೂ ನಮಗೆಲ್ಲ ಆ ಮುಚ್ಚಿದ ಬಾಗಿಲಿನ ಹಿಂದೆ ಏನು ನಡೆಯುತ್ತಿದೆ ಎಂದು ನೋಡುವ ಕುತೂಹಲ. ಬಾಗಿಲಿಗೆ ಕಿವಿಯಾನಿಸಿ ಕೇಳಿದರೆ ಒಳಗೆ ಸದ್ದೇ ಇರುತ್ತಿರಲಿಲ್ಲ. ಒಮ್ಮೆ ನಾನು ಕುತೂಹಲ ತಡೆಯಲಾರದೆ ಬಾಗಿಲು ದೂಡಿ ಒಳಹೋಗಿಬಿಟ್ಟೆ. ಹತ್ತಿರದಲ್ಲೇ ಕೂತಿದ್ದ ತೀನಂಶ್ರೀಯವರು ನನ್ನ ಕರೆದು ತೊಡೆಯ ಮೇಲೆ ಕೂರಿಸಿಕೊಂಡರು. ನೋಡಿದರೆ ಅಣ್ಣ ಮೆತ್ತಗಿನ ದನಿಯಲ್ಲಿ ಹಾಡುತ್ತಿದ್ದಾರೆ. ಉಳಿದೆಲ್ಲರೂ ಉಸಿರು ಕೂಡ ಕೇಳಿಸದ ಹಾಗೆ ಸುಮ್ಮನೆ ಕುಳಿತು ಆಲಿಸುತ್ತಿದ್ದಾರೆ. ನಾನೂ ಕಿವಿಗೊಟ್ಟೆ. ಕಣ್ಣ ಮುಂದೆ ಗೋಕುಲ,ಗೋವು, ಯಮುನೆ, ನಕ್ಕು ನಲಿವ ಗೋಪಿಯರು, ಚುರುಕಾಗಿ ತಿರುಗುವ ಗೊಲ್ಲರು, ನವಿಲುಗರಿಯ ಸಿಕ್ಕಿಸಿ ಬಿದಿರತುಂಡನೂದುತ  ಜಗ ಮರೆಸುವ ಗೋಪಾಲ, ಮಮತೆಯ ಯಶೋದೆ, ಪ್ರೀತಿಯ ರಾಧೆ, ತುಂಟ ಗೊಲ್ಲನ ಕೊಳಲ ಕೇಳುತ ತಲೆಬಾಗುವ ಮರಗಿಡ, ಕಂಪು ಸೂಸುವ ಗಾಳಿ, ಬೆಳದಿಂಗಳು, ನದೀತೀರ, ಎಲ್ಲ ಕಣ್ಮುಂದೆ ಮೂಡಿದವು. ಇವತ್ತಿಗೂ ಹಾಗೇ ಇದೆ ಆ ಮೆತ್ತನೆ ದನಿ ಕಣ್ ಮುಂದೆ ಸೃಷ್ಟಿಸಿದ ಮಾಯಾಲೋಕ. ಅಂದಿನಿಂದ ನಾನು ಕೃಷ್ಣಭಕ್ತೆ. + +ಕೃಷ್ಣ ಕುಚೇಲ ಬರೆದ ಮೇಲೆ ಅದನ್ನ ರಂಗದ ಮೇಲೆ ಪ್ರಸ್ತುತಿಪಡಿಸಿದ್ದರು. ಅದರ ರೆಕಾರ್ಡ್ ಇಟ್ಟುಕೊಂಡು ನಾವು ಮಕ್ಕಳು ಬರುವುದನ್ನು ಕಾಯುತ್ತಾ ಇರುತ್ತಿದ್ದರು ಅಣ್ಣ. ಆಗೆಲ್ಲ ನಾವೆಲ್ಲ ಮದುವೆಯಾಗಿ ಬೇರೆ ಬೇರೆ ದೂರದೂರಿನಲ್ಲಿ ಇದ್ದೆವು. ನಾನು ಮನೆಗೆ ಬಂದರೆ ಮುಂದೆಲ್ಲೂ ಹೋಗಲು ಬಿಡದೆ ಇದನ್ನು ಕೇಳಿಕೊಂಡೇ ಹೋಗಬೇಕೆಂದು ಮುಚ್ಚಟೆ ಮಾಡಿ ಕೇಳಿಸಿದ್ದರು. ಅದರ ಹಾಡು ಇಂಪು ಉಲಿಗಳಾಗಿ ಬರುತ್ತಿದ್ದರೆ ಭಲೇ ಭಲೇ, ಭೇಷ್, ತುಂಬ ಚೆನ್ನಾಗಿ ಬಂದಿದೆ ಅನ್ನುತ್ತಾ ಅದರ ಸಾಲು ಸಾಲನ್ನೂ ಅವರು ಸವಿಯುವುದನ್ನ ನೋಡುವುದೇ ಒಂದು ಚಂದ. ಅಷ್ಟಲ್ಲದೆ ಬರೆದರೆ ಅವರು – ಮಾಡುವವನದಲ್ಲ ಹಾಡು, ಹಾಡುವವನದು – ಅಂತ! ಪ್ರತಿಯೊಂದನ್ನೂ ಸವಿದು ನೋಡುವ ಸಹೃದಯತೆ ಮತ್ತು ರಸಪ್ರಜ್ಞೆ ಅಣ್ಣನ ಗುಣವಿಶೇಷ. ಅಚ್ಚುಕಟ್ಟಾದ ಊಟವಿರಲಿ, ಒಂದು ಗರಿಗರಿಯಾದ ಶುಚಿಯಾದ ವಸ್ತ್ರವಿರಲಿ, ವ್ಯಾಕರಣವಿರಲಿ, ಕಾವ್ಯದ ಸಾಲುಗಳಿರಲಿ, ಹಾಡಿರಲಿ ಯಾವುದೇ ಇರಲಿ, ಅದರ ಅಂತರಾಳಕ್ಕೆ ಇಳಿದು ಇಡಿಯಾಗಿ ತಮ್ಮನ್ನು ತೊಡಗಿಸಿಕೊಂಡು, ತಾವುಂಡ ಸವಿಯನ್ನ ಸುತ್ತ ನಾಕು ಜನಕ್ಕೆ ಹಂಚುವ ಅಂತಃಕರಣ ಅವರದ್ದು. + +ನಾವು ಎಂಟು ಮಕ್ಕಳಿಗೂ ಅಣ್ಣನೆಂದರೆ ತುಂಬ ಪ್ರೀತಿ. ಮತ್ತೆ ನಮಗೆಲ್ಲರಿಗೂ ಅಣ್ಣ ತನ್ನನ್ನೇ ಜಾಸ್ತಿ ಪ್ರೀತಿಸುವುದು ಎಂಬ ನಂಬಿಕೆ. ಯಾರಿಗೂ ಯಾವತ್ತಿಗೂ ಅಣ್ಣನಿಗೆ ತಾನೆಂದರೆ ಕಡಿಮೆ ಇಷ್ಟ ಅನ್ನಿಸಿದ್ದೇ ಇಲ್ಲ. ಎಲ್ಲರಲ್ಲೂ ಅವರದ್ದು ನಿರ್ವ್ಯಾಜ್ಯ ಪ್ರೀತಿ. ಯಾರೋ ಹೂವು ಮಾರುವ ಹುಡುಗಿಯೋ, ತರಕಾರಿಯ ಹೆಂಗುಸೋ, ಅಥವಾ ಇನ್ಯಾರೋ ಮೊಸರಿನವನೋ ಬಂದರೆ ಅಣ್ಣ ಅಮ್ಮನನ್ನು ಕರೆದು ಪಾಪ ಬಿಸಿಲಿನಲ್ಲಿ ತಿರುಗುತ್ತಾರೆ, ಏನು ಕಷ್ಟವೋ ಏನೋ ಏನಾದರೂ ಕುಡಿಯಲು ಕೊಡು ಎನ್ನುತ್ತಿದ್ದರು. ಇರುವವರಿಗೆ ಕೊಡುವುದೇನೂ ದೊಡ್ಡದಲ್ಲ. ಇಲ್ಲದಿರೋರಿಗೆ ಕೊಡಬೇಕು ಅನ್ನುತ್ತಿದ್ದರು. ಹಿಂಸೆ, ಅನುಮಾನ, ಬೇರೆಯವರೊಡನೆ ಕಿತ್ತಾಟವೆಂದರೆ ಅಣ್ಣನಿಗೆ ಆಗದು. ಎಲ್ಲರಲ್ಲೂ ಪ್ರೀತಿ ಅವರ ಒಲವು. ಓರಿಗೆಯ ಸಾಹಿತಿಗಳೆಲ್ಲರೊಡನೆ ಅವರ ನವಿರು ಸ್ನೇಹದ ಸಂಬಂಧವಿತ್ತು. ತೀನಂಶ್ರೀಯವರನ್ನು ನನ್ನ ಕವಿತೆಗಳ ಸಾಕುತಾಯಿ ಎಂದು ಕರೆದಿದ್ದಾರೆ.ಅಣ್ಣ ತನ್ನ ಬರಹದ ಬಗ್ಗೆ ತಾನೇ ಹೇಳಿಕೊಳ್ಳಲು ಸಂಕೋಚಪಡುತ್ತಿದ್ದರು. ತೀನಂಶ್ರೀಯವರು ಮುಂದೆ ನಿಂತು ಅಣ್ಣನ ಬರಹಗಳನ್ನ ಬೆಳಕಿಗೆ ತಂದವರು. ಬೆನ್ನು ತಟ್ಟಿ ಪ್ರೋತ್ಸಾಹಿಸಿದವರು. + +ಅಣ್ಣನಿಗೆ ಮೈಸೂರೆಂದರೆ ಇಷ್ಟ. ಅಲ್ಲಿ ವಿಶ್ವವಿದ್ಯಾನಿಲಯದಲ್ಲಿ ಕೆಲಕಾಲ ವಿಶ್ವಕೋಶ ಮತ್ತು ಕನ್ನಡ ನಿಘಂಟಿಗೆ ಸಂಬಂಧ ಪಟ್ಟ ಕೆಲಸ ಮಾಡಿದ್ದರು. ಅಲ್ಲಿನ ಮಾನಸಗಂಗೋತ್ರಿಯಲ್ಲಿರುವ ದೊಡ್ಡದೊಂದು ಆಲದ ಮರವೆಂದರೆ ಅವರಿಗೆ ವಿಶೇಷ ಪ್ರೀತಿ. ನಾವೆಲ್ಲ ಮೈಸೂರಿಗೆ ಅವರನ್ನು ನೋಡಲು ಹೋದರೆ ಸಂಜೆ ಜಯಲಕ್ಷ್ಮೀಪುರದ ಮನೆಯಿಂದ ಅಲ್ಲಿಯವರೆಗೆ ವಾಕಿಂಗ್ ಕರೆದುಕೊಂಡು ಹೋಗಿ, ಮರದ ಕೆಳಗೆ ಕೂರಿಸಿ, ಸುಮ್ಮನೆ ಕೂತು ಕೇಳಿ ಅನ್ನುತ್ತಿದ್ದರು. ಅವರಿಗೆ ಅಲ್ಲಿ ಹರಿದ್ವಾರದಲ್ಲಿ ಗಂಗೆ ಹರಿಯುವ ಜುಳುಜುಳು ನಾದ ಕೇಳುತ್ತಿತ್ತಂತೆ ಆ ಮರದ ಕೆಳಗೆ! + +ಅಣ್ಣನೊಡನೆ ವಾಕಿಂಗ್ ಹೋಗುವುದೇ ಒಂದು ಆಪ್ತ ಅನುಭವ. ಕತೆ, ಸುದ್ದಿ, ವಿಜ್ಞಾನ ವಿಶೇಷ, ರಾಗ ವಿಸ್ತಾರ, ಎಲ್ಲ ಕೂಡಿದ ಒಟ್ಟಂದ ಅವರ ಜತೆಗೆ ಹೋಗುವುದು. ಅವರು ಬೆಂಗಳೂರಿನ ಜಯನಗರದಲ್ಲಿ ಮನೆ ಮಾಡಿದ ಮೇಲೆ, ಸಂಜೆ ಸಾಕಷ್ಟು ದೂರ ವಾಕಿಂಗ್ ಹೋಗುತ್ತಿದ್ದರು. ಅಲ್ಲೊಂದು ಕಡೆ ನಿಂತರೆ ಕೋದಂಡರಾಮನ ದೇವಸ್ಥಾನದ ಗೋಪುರ ಕಾಣುತ್ತಿತ್ತು. ಗೋಕುಲನಿರ್ಗಮನದ ಕವಿ ಅಲ್ಲಿಂದಲೇ ಗೋಪುರನಮನ ಮಾಡುತ್ತಿದ್ದರು. ತೀರಾ ಕೊನೆಗೆ ಕಣ್ಣು ಅಷ್ಟು ಸರಿಯಾಗಿ ಕಾಣಿಸದಿದ್ದರೂ ಅವರಿಗೆ ಆ ಜಾಗಕ್ಕೆ ಬಂದೊಡನೆಯೇ ಗೋಪುರ ಕಾಣಿಸುತ್ತಿದೆ ಅಂತ ಗೊತ್ತಾಗಿಬಿಡುತ್ತಿತ್ತು. ಜತೆಯಲ್ಲಿದ್ದ ನಾವು ಯಾರನ್ನಾದರೂ ಕೇಳಿಕೊಂಡು ನಮಸ್ಕಾರ ಮಾಡುವುದನ್ನು ತಪ್ಪಿಸುತ್ತಿರಲಿಲ್ಲ. + +ಇವರ ಈ ದೈವಪ್ರೀತಿ, ಸಾಂಪ್ರದಾಯಿಕ ನಡವಳಿಕೆ, ವಸ್ತ್ರಾಲಂಕಾರಗಳು, ಹಳೆಯ ಕಥಾ ಸಾಗರದೆಡೆಗಿನ ಒಲವು ಇದನ್ನೆಲ್ಲ ನೋಡಿ, ಇವರು ಬರೀ ಸಾಂಪ್ರದಾಯಿಕ ಮನೋಭಾವದವರು ಎಂದು ಮಾತ್ರ ಭಾವಿಸಬಾರದು. ವೈಜ್ಞಾನಿಕ ಮನೋಭಾವನೆ, ಹೊಸ ಸಂಶೋಧನೆಗಳಲ್ಲಿ ಆಸಕ್ತಿ, ಕಾಲಕ್ಕೆ ತಕ್ಕಂತೆ ನಡೆಯಬೇಕಿರುವ ಸಾಮಾಜಿಕ ಬದಲಾವಣೆ ಎಲ್ಲದರ ಬಗೆಗೆ ತುಂಬ ಸಹಜ ಒಲವು ಇವರದು. ಒಮ್ಮೆ ಪೂನಾದಲ್ಲಿದ್ದ ನಮ್ಮನೆಗೆ ಬಂದಿದ್ದರು. ನಮ್ಮನೆಯವರಿಗೆ ಆಗ ತುಂಬ ಕೆಲಸವಿತ್ತು. ಮನೆಯಲ್ಲಿ ಪೂಜೆಗೆ ಇದ್ದಿದ್ದು ಸಾಲಿಗ್ರಾಮ. ನಾನು, ಹೆಣ್ಣುಮಕ್ಕಳು ಸಾಲಿಗ್ರಾಮ ಮುಟ್ಟಬಾರದು ಎಂದು ಸುಮ್ಮನಿದ್ದುಬಿಡುತ್ತಿದ್ದೆ. ಅವರಿಗೆ ಸಮಯವಿರುತ್ತಿರಲಿಲ್ಲ, ನಿತ್ಯ ಪೂಜೆ ನಡೆಯುತ್ತಿರಲಿಲ್ಲ. ಅಣ್ಣ ಬಂದವರು ಪೂಜೆಗೆ ಕೂತಾಗ ಧೂಳಾದ ಸಾಲಿಗ್ರಾಮ ನೋಡಿ ವಿಚಾರಿಸಿದರು. ನಾನು ವಿವರಿಸಿದಾಗ ನೊಂದುಕೊಂಡರು. ಎಂತಹ ಯೋಚನೆ ಇದು. ಎಲ್ಲ ಮೈಲಿಗೆಯನ್ನೂ ಕಳೆವ ದೇವರಿಗೆಂತಹ ಮೈಲಿಗೆ, ಎಲ್ಲವನ್ನು ಪುನೀತಗೊಳಿಸುವ ದೇವರನ್ನು ಅಪವಿತ್ರಗೊಳಿಸುವುದು ಯಾರು? ಮನೆಯನ್ನೂ ಮನವನ್ನೂ ಸದಾ ಶುಚಿಯಾಗಿಟ್ಟುಕೊಳ್ಳುವುದೇ ಪೂಜೆ. ಹೆಣ್ಣು ಎಂದು ಹಿಂದೆಗೆಯಬಾರದು ಎಂದು ಹೇಳಿದ್ದರು. + +ವಾಕಿಂಗಿನಲ್ಲಿ ಇಂದುಮತೀ ಪರಿಣಯದಂತಹ ರಮ್ಯ ಪುರಾಣ ಕತೆಗಳನ್ನು ಇನ್ನಷ್ಟು ರಮ್ಯ ವಿವರಣೆಗಳೊಂದಿಗೆ ಹೇಳಿ ಮನತಣಿಸುವ ಅಣ್ಣ, ಆಗಷ್ಟೇ ನಡೆದಿದ್ದ ಚಂದ್ರಯಾನವನ್ನೂ ವರ್ಣಿಸುತ್ತಿದ್ದರು. ಸಂಸ್ಕೃತಿ ಮತ್ತು ವಿಜ್ಞಾನ ಅವರ ಭಾವದ ಹೊಳೆಯಲ್ಲಿ ಮಿಂದು ಚೆಲುವಾಗಿ ಹೊಳೆಯುತ್ತಿದ್ದವು. ಇಂತಹ ಭಾವಸರಸ್ಸಿನಿಂದಲೇ ಮೂಡಿಬಂದಿದ್ದು – ಪಯಣಿಗರ ಹಾಡು  – ಹೋಗೋಣ ಗುಡಿಯಾಚೆ ಗಡಿಯಾಚೆ.. ಎಲ್ಲ ದಾಟಿದ ಹಾದಿಯಲ್ಲಿ ಎಂಬಂತಹ ಕವಿತೆ. + +ನಾನು ಚಿಕ್ಕವಳಿರುವಾಗ ಅಣ್ಣ ನನ್ನ ಹತ್ತಿರ ಸಚಿತ್ರ ಭಾಗವತದ ಕುಚೇಲೋಪಾಖ್ಯಾನವನ್ನ ಮತ್ತೆ ಮತ್ತೆ ಓದಿಸಿ ಕೇಳಿ ಖುಷಿ ಪಡುತ್ತಿದ್ದರು. ಆ ಭಾಗದಲ್ಲಿ ಮನೆಗೆ ಬಂದ ಕುಚೇಲನಿಗೆ ಕೃಷ್ಣ ಬಡಿಸುವ ಊಟದ ರುಚಿಯಾದ ವಿವರಗಳಿವೆ. ಎಲ್ಲ ಬಗೆಯ ಅಡುಗೆ, ವಿಶೇಷ ಖಾದ್ಯಗಳನ್ನು ಅಲ್ಲಿ ಪಟ್ಟಿ ಮಾಡಿದ್ದಾರೆ. ನಾನು ಓದುತ್ತಿದ್ದರೆ ಅಣ್ಣ ತಾವೇ ತಿನ್ನುತ್ತಿದ್ದಾರೋ ಎಂಬಂತೆ ಆಹಾಹ.. ಓಹೋಹೋ, ಭಲೆ ರುಚಿ ಎಂದೆಲ್ಲ ಉದ್ಗರಿಸುತ್ತಾ ಮತ್ತೆ ಮತ್ತೆ ಓದಿಸುತ್ತಿದ್ದರು. ಮುಂದೆ ಅಣ್ಣ ಬರೆದ ಕೃಷ್ಣ ಕುಚೇಲ ನೃತ್ಯರೂಪಕವನ್ನು ಇತ್ತೀಚೆಗೆ ನೋಡಿದಾಗ ಈ ನೆನಪು ತೀವ್ರವಾಗಿ ಬಂತು. ಅವರ ಮನಸ್ಸಿನಲ್ಲಿ ಅಂದು ಏಳುತ್ತಿದ್ದ ರಸಭಾವಗಳೇ ಮುಂದೆ ಹೀಗೆ ಅವರ ಕೃತಿಯಲ್ಲಿ ಮೂಡಿಬಂದ ಪರಿ ನನ್ನನ್ನು ಅಚ್ಚರಿಯ ಮೆಚ್ಚುಗೆಯಲ್ಲಿ ತೇಲಿಸಿತು. + +ಅಣ್ಣನ ಚೈತನ್ಯದ ಬಗ್ಗೆ ಎಷ್ಟು ಹೇಳಿದರೂ ಸಾಲದೆನ್ನಿಸುತ್ತದೆ. ನಾವು ಎಲ್ಲ ಮಕ್ಕಳಿಗೂ ಅಣ್ಣನೆಂದರೆ ತುಂಬ ಅಭಿಮಾನ. ಇಂತಹವರ ಹೊಟ್ಟೆಯಲ್ಲಿ ಹುಟ್ಟಿ ಪಾವನರಾದೆವೆಂಬ ನಮ್ರ ಅಭಿಮಾನ. ಅವರ ಮಧುರ ಒಡನಾಟ ಮೆದ್ದ ವಿನೀತ ಸಂಭ್ರಮ. ನಿಲ್ಲಿಸದಿರು ವನಮಾಲೀ ಮಧುರ ಗಾನವಾ, ನಿಲ್ಲಿಸೆ ನೀ ಮರೆವುದೆಂತು ಭವಭೀತಿಯ ಕ್ಲೇಶವಾ! ಎಂದು ಬರೆದ ಅಣ್ಣನ  ನೆನಪು ಮನದಲ್ಲಿ ಸದಾ ಅನುರಣಿಸುತ್ತಿರುತ್ತದೆ. ಇಂದು ಅವರ ಪ್ರೀತಿಯ ವೈರಮುಡಿ ಉತ್ಸವ ಮೇಲುಕೋಟೆಯಲ್ಲಿ. ಅವರ ಜನ್ಮದಿನಾಂಕ ಮತ್ತು ಜನ್ಮನಕ್ಷತ್ರ ಕೂಡಾ. ಈ ಬರಹ ಅವರ ದಿವ್ಯ ಚೇತನಕ್ಕೆ ನಾವು ಎಲ್ಲ ಮಕ್ಕಳ ಶ್ರದ್ಧಾಂಜಲಿ. ಕಣ್ಣ ಕೊನೆಗೆ ಹೊಳೆಯುತ್ತಿರುವ ಹನಿಯ ಬಾಷ್ಪಾಂಜಲಿ. + +-ಮಳೆಯ ಸಂಜೆಯಲ್ಲಿ, ಬೆಚ್ಚಗೆ ಕರೆದು ಕೂರಿಸಿ, ಪುಟ್ಟ ದೀಪದ ಮಿನುಗಿನಲ್ಲಿ ತನ್ನ ಪ್ರೀತಿಯ ತಂದೆಯವರ ನೆನಪನ್ನು ಹಂಚಿಕೊಂಡ ಶಾಂತಾ ಮತ್ತು ಕುಟುಂಬದವರಿಗೆ ಕೆಂಡಸಂಪಿಗೆಯ ಕೃತಜ್ಞತೆ. ಶಾಂತಾ ಅವರು ಷಿಲಾಂಗ್ ನಲ್ಲಿ ೨೮ ವರ್ಷಗಳಿಂದ ಕನ್ನಡ ಸಂಘವನ್ನು ನಡೆಸಿಕೊಂಡು ಬಂದ ಅಪರೂಪದ ಕನ್ನಡತಿ. ಅಲ್ಲಿ ಕೆಲಸಕ್ಕೆಂದು ಹೋಗುತ್ತಿದ್ದ ಎಲ್ಲ ಕನ್ನಡಿಗರ ಪ್ರೀತಿಯ ಅಮ್ಮ, ಸುತ್ತಲ ಸಮುದಾಯಕ್ಕೆ ಸಹಾಯ ಹಸ್ತ. ಇತ್ತೀಚೆಗೆ ಷಿಲಾಂಗ್ ಬಿಟ್ಟು ಕೆಲತಿಂಗಳಿನಿಂದ ಬೆಂಗಳೂರಿನಲ್ಲಿ ತನ್ನ ಮಕ್ಕಳು ಮತ್ತು ಮೊಮ್ಮಕ್ಕಳ ಒಡನಾಟದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಚಟುವಟಿಕೆಯ ಆಪ್ತ ಜೀವವನ್ನು ನೋಡಿದರೆ ಪು.ತಿ.ನ. ಅವರೇ ಬರೆದ ಸ್ಥವಿರ ಗಿರಿಯ ಚಲನದಾಸೆ, ಮೂಕವನದ ಗೀತದಾಸೆಯಾದ ಹೊನಲರಾಣಿಯ ನೆನಪಾಗುತ್ತದೆ. + +ಹುಟ್ಟಿದ್ದು ಶಿವಮೊಗ್ಗದ ಸಾಗರದಲ್ಲಿ. ವೆಬ್ ಡಿಸೈನಿಂಗ್ ಡಿಪ್ಲೊಮಾ ಮತ್ತು ಇಂಗ್ಲಿಷ್ ಎಂ.ಎ ಮಾಡಿ, ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ, ತರಬೇತಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ \ No newline at end of file diff --git a/Kenda Sampige/article_563.txt b/Kenda Sampige/article_563.txt new file mode 100644 index 0000000000000000000000000000000000000000..2f248215280688be8eac063d657f260290a4562f --- /dev/null +++ b/Kenda Sampige/article_563.txt @@ -0,0 +1,13 @@ +ಸ್ಯಾಲಿಂಜರ್ ಬರೆದ ಕಾದಂಬರಿ ‘ಕ್ಯಾಚರ್ ಇನ್ ದ ರೈ’ಯ 64 ಮಿಲಿಯನ್ ಪ್ರತಿಗಳು ಮಾರಾಟವಾಗಿವೆ. ಪ್ರತಿವರ್ಷ 2,50,000 ಜನ ಈ ಕಾದಂಬರಿಯನ್ನು ಕೊಳ್ಳುತ್ತಾರೆ. ಅತ್ಯಂತ ಹೆಚ್ಚ ಜನ ಓದಬಯಸುವ ಮತ್ತು ಅತ್ಯಂತ ಹೆಚ್ಚು ಜನ ನಿಷೇಧಿಸಬಯಸುವ ಅಮೇರಿಕನ್ ಕಾದಂಬರಿ ಇದಾಗಿದೆ. ಹಲವಾರು ಸಮೀಕ್ಷೆಗಳ ಪ್ರಕಾರ ಇದು ಇಂಗ್ಲಿಷ್ ಭಾಷೆಯ ಶ್ರೇಷ್ಠ ಕಾದಂಬರಿಗಳಲ್ಲಿ ಒಂದಾಗಿದೆ. + +ಈ ಎಲ್ಲಾ ಮಾಹಿತಿಯನ್ನು ಓದುತ್ತಾ ಹೋದ ಹಾಗೆ ಸ್ಯಾಲಿಂಜರ್ ನಮ್ಮ ಕಾಲದ ಅತ್ಯಂತ ಯಶಸ್ವಿ ಬರಹಗಾರ ಹಾಗೂ ಸಂತೃಪ್ತ ವ್ಯಕ್ತಿಯಾಗಿದ್ದಿರಬಹುದು ಎನ್ನಿಸಬಹುದು. ಆದರೆ, ವಾಸ್ತವವಾಗಿ ಅತ್ಯಂತ ವಿಕ್ಷಿಪ್ತ, ಅತೃಪ್ತ ವ್ಯಕ್ತಿಯಾಗಿದ್ದ. ಅಮೇರಿಕಾದಲ್ಲಿ ಪ್ರಭಾವೀ ಕೃತಿಯೊಂದು ತರಬಹುದಾದ ಜನಪ್ರಿಯತೆ ಹಾಗೂ ಕುತೂಹಲದಿಂದ ಪಾರಾಗಲು ತನ್ನ ಇಡೀ ಜೀವಮಾನವನ್ನೇ ಅವನಂತೆ ಕಳೆದ ಇನ್ನೊಂದು ಉದಾಹರಣೆ ಇರಲಿಕ್ಕಿಲ್ಲ. ‘ಅನಾಮಧೇಯತೆ ಏಕಾಂಗಿತನ’ ಇವೆರಡನ್ನೂ ಬರಹಗಾರನಿಗೆ ಕೊನೇಪಕ್ಷವಾಗಿ ಸಾಲವಾಗಿ ಕೊಡಬೇಕೆಂದು ನಂಬಿದ್ದ. + +ಅವನಿಗೆ ಅವುಗಳನ್ನು ಪಡೆಯುವುದಕ್ಕಾಗಿ ಬಹುದೊಡ್ಡ ವೆಚ್ಚವನ್ನು ತೆರಬೇಕಾಯಿತು. ಮೊನ್ನೆ ಜನವರಿ 27ರಂದು ತೊಂಭತ್ತೆಂಟನೆಯ ವಯಸ್ಸಿನಲ್ಲಿ ತೀರಿಹೋದ ಸ್ಯಾಲಿಂಜರ್ ಹೆಚ್ಚುಕಡಿಮೆ 30 ವರ್ಷಗಳನ್ನು ಜನರ ಕಣ್ಣಿಂದ ದೂರವಿರುವ ಪ್ರಯತ್ನದಲ್ಲಿಯೇ ಕಳೆದ. ದುರ್ದೈವವೆಂದರೆ ಇಷ್ಟು ಕಠೋರವಾದ ಪ್ರಯತ್ನದಿಂದ ಏಕಾಂಗಿಯಾಗಿದ್ದ ಸ್ಯಾಲಿಂಜರ್ ಮಹತ್ವಪೂರ್ಣವಾದದ್ದನ್ನು ಈ ವರ್ಷಗಳಲ್ಲಿ ಬರೆದ ಹಾಗೆ ಕಾಣುವುದಿಲ್ಲ. ಈಗ ಅವನ ಸಾವಿನ ನಂತರ ಅವನು ಬರೆದಿರಬಹುದಾದ ಕೃತಿಗಳ ಹಸ್ತಪ್ರತಿಗಳು ಸಿಕ್ಕರೆ ಅವನ ಬದುಕು, ಉಗ್ರ ವ್ರತವೊಂದರ ಪಾಲನೆಯಾಗಿ ಕಾಣುತ್ತದೆ. ಇಲ್ಲದಿದ್ದರೆ ವಿಕ್ಷಿಪ್ತ ವ್ಯಕ್ತಿಯೊಬ್ಬ ತನ್ನ ಪ್ರತಿಭೆ ಹಾಗೂ ಕ್ರಿಯಾಶೀಲತೆಗಳನ್ನು ಕಳೆದುಕೊಂಡು ಅವನ ಜೊತೆ ಸಂಬಂಧವಿಟ್ಟುಕೊಂಡ ಹೆಚ್ಚುಕಡಿಮೆ ಎಲ್ಲರಿಗೂ ನೋವು ಕೊಟ್ಟು ಏನನ್ನು ಸಾಧಿಸದೇ ಹೋದದ್ದರ ಕತೆಯಾಗಬಹುದು. + + + +ಅತ್ಯಂತ ಪ್ರಸಿದ್ಧ ಬರಹಗಾರರು ತಮ್ಮ ಖಾಸಗಿ ಬದುಕನ್ನು ಬದುಕುವುದು ಸಾಧ್ಯವಿರುವ ಭಾರತಕ್ಕೆ ಹೋಲಿಸಿದರೆ ಅಮೇರಿಕಾ ಎನ್ನುವ ಮಾರುಕಟ್ಟೆ ಮಾಧ್ಯಮಗಳ ಆಕರ್ಷಕ ಆದರೆ, ಅಮಾನವೀಯ ಜಗತ್ತಿನಲ್ಲಿ ಬದುಕುವ ಯಶಸ್ವಿ ಬರಹಗಾರರ ಬದುಕು ಸಾಕ್ಷಾತ್ ನರಕವೆ. ತಮ್ಮ ಸಭ್ಯಸ್ತ ‘ನಾರ್ಮಲ್’ ಮುಖವಾಡವನ್ನು ಯಾವ ಕಾರಣಕ್ಕೂ ಬಿಟ್ಟುಕೊಡದ ನಮ್ಮ ಬರಹಗಾರರು ಅಪ್ರಮಾಣಿಕ ಅದೃಷ್ಟಶಾಲಿಗಳು. ಅತ್ಯಂತ ಖಾಸಗಿಯಾಗಿ ಇರಲು ಏನೆಲ್ಲಾ ಮಾಡಿದ ಸ್ಯಾಲಿಂಜರ್ ನ ಬಗ್ಗೆ ಗೊತ್ತಿರಬೇಡವಾಗಿದ್ದೆಲ್ಲವೂ ನಮಗೆ ಗೊತ್ತಿರುವುದು ಅಮೇರಿಕಾದಲ್ಲಿ ಮಾತ್ರ ಆಗಬಹುದಾದ ದುರಂತವನ್ನು ಅವನ ಅಸಫಲ ಮದುವೆಗಳು, ತನ್ನ ಹೆಂಡತಿಯನ್ನು ತನ್ನಂತೆ ಏಕಾಂಗಿಯಾಗಿಸಿ ಅವನು ಹಿಂಸಿಸಿದ್ದು, ಹದಿನೆಂಟು ವರ್ಷದ ಯುವ ಬರಹಗಾರ್ತಿಯ ಜೊತೆಗೆ ಅವನ ಒಂದು ವರ್ಷದ ಸಂಬಂಧ ಇವುಗಳು ಈಗ ಎಲ್ಲರಿಗೂ ಗೊತ್ತು. ಆ ಬರಹಗಾರ್ತಿ ವರ್ಷಗಳ ನಂತರ ಸ್ಯಾಲಿಂಜರ್ ಬರೆದಿದ್ದ ಪತ್ರಗಳನ್ನು ದುಡ್ಡಿಗಾಗಿ ಹರಾಜು ಮಾಡಿದಳು. ಅವನ ಜೊತೆಗಿನ ತನ್ನ ನೆನಪುಗಳನ್ನು ಬರೆದು ಪ್ರಕಟಿಸಿದಳು. ಅವನ ಮಗಳು ತನ್ನ ನೆನಪುಗಳಲ್ಲಿ ತನ್ನ ತಾಯಿ ಮಗುವಾಗಿದ್ದ ತನ್ನನ್ನು ಕೊಲ್ಲಬೇಕೆಂದು ಉದ್ದೇಶಿಸಿದ್ದಳು ಎಂದು ಬರೆದಳು. ಬಹುಶಃ ಸ್ಯಾಲಿಂಜರ್ ತನ್ನ ಇಡೀ ಜೀವನವನ್ನು ಟಿವಿ ಕ್ಯಾಮರಾದ ಎದುರಿಗೆ ಸಾರ್ಷಜನಿಕವಾಗಿ ಕಳೆದಿದ್ದರೂ ಅವನ ಖಾಸಗಿ ಜೀವನದ ಇಂಥ ಕರಾಳ ಸತ್ಯಗಳು ಗೊತ್ತಾಗುತ್ತಿರಲಿಲ್ಲವೇನೋ? ಕೊನೆಗೂ ಸ್ಯಾಲಿಂಜರ್ನ ಜೀವನ ಒಬ್ಬ ‘ಸೆಲೆಬ್ರಿಟಿ’ಯ ಜೀವನದಂತೆ ಮಾರುಕಟ್ಟೆಯ ವಸ್ತುವಾಗಿಬಿಟ್ಟಿತು. + +ಅಮೇರಿಕದ ಶ್ರೇಷ್ಠ ಬರಹಗಾರ ಹಾಗೂ ಬರಹಗಾರರ ಗುರುವಾದ ಹೆನ್ರಿ ಜೇಮ್ಸ್ ಬರಹಗಾರರಿಗೆ ನೀಡಿದ ಉಪದೇಶವೆಂದರೆ cultivate loneliness. ಲಂಕೇಶ್ ಹೇಳುತ್ತಿದ್ದಂತೆ ಸಾರ್ವಜನಿಕನಾಗುತ್ತ ಹೋದಂತೆ ಬರಹಗಾರ ಪೊಳ್ಳಾಗುವುದು ಜಾಸ್ತಿ. ಆದರೆ, ಖಾಸಗಿತನವನ್ನು ಇಷ್ಟು ಉಗ್ರವಾಗಿ ಹುಡುಕಿಕೊಂಡು ಹೋದ ಸ್ಯಾಲಿಂಜರ್ ಬದುಕು ಏಕಾಂಗಿಯಾಗಿದ್ದರೂ ಖಾಸಗಿಯಾಗಿ ಉಳಿಯಲಿಲ್ಲ. 1951ರಲ್ಲಿ ಪ್ರಕಟವಾದ ‘ಕ್ಯಾಚರ್ ಇನ್ ದ ರೈ’ ಮತ್ತು ಹಲವು ಅಪರೂಪದ ಕೃತಿಗಳನ್ನು ಬಿಟ್ಟರೆ ಸ್ಯಾಲಿಂಜರ್ ಮಹತ್ವದ್ದನ್ನು ಏನೂ ಬರೆದಂತೆ ತೋರುವುದಿಲ್ಲ. ಅವನು ಬಿಟ್ಟು ಹೋಗಿರಬಹುದಾದ ಹಸ್ತಪ್ರತಿಗಳಲ್ಲಿ ಅದ್ಭುತವಾದ ಕೃತಿಯೊಂದಿರಬಹುದೆ? ಅಥವಾ ಕಾಮೂ ಬರೆದ ಕತೆಯೊಂದರಲ್ಲಿ ಆಗುವ ಹಾಗೆ ಅದ್ಭುತ ಚಿತ್ರ ರಚಿಸುತ್ತಿದ್ದೇನೆಂದು ಅಟ್ಟದ ಮೇಲೆ ಹೋಗಿ ಒಬ್ಬಂಟಿಯಾಗಿರುತ್ತಿದ್ದ ಕಲೆಗಾರ ಕೊನೆಗೆ ಖಾಲಿ ಕ್ಯಾನ್ವಾಸ್ ಅನ್ನು ಬಿಟ್ಟುಹೋದ ಹಾಗೆ ಆಗಬಹುದೆ? ಯಾವುದೂ ಖಾಸಗಿಯಾಗಿರಬಾರದು ಎಂದು ಪಟತೊಟ್ಟ ಟಾಲ್ಸ್ಟಾಯ್ ಅವನು ಹೇಳಿದ್ದ ಎಲ್ಲವನ್ನೂ ಬರೆದುಕೊಳ್ಳುತ್ತಿದ್ದ ಶಿಷ್ಯರಿಂದ ಪಟ್ಟ ಪಾಡು ಯಾರಿಗೂ ಬೇಡ. ಖಾಸಗೀತನ, ಸಾರ್ವಜನಿಕತೆ ಯಾವುದರಿಂದಲೂ ಬರಹಕ್ಕೆ ಪ್ರಯೋಜನವಿಲ್ಲವೆಂದು ತೋರುತ್ತದೆ. ಬರಹಗಾರನ ಸ್ವಂತ ಜೀವನದ ಖಾಸಗಿ ನರಕಗಳನ್ನು ಹಾಗೇ ಬಿಡುವುದು ಒಳ್ಳೆಯದು ಎನ್ನುವುದಕ್ಕೆ ಸ್ಯಾಲಿಂಜರ್ ಒಂದು ಉದಾಹರಣೆ. + +ಕನ್ನಡದ ಪ್ರಮುಖ ವಿಮರ್ಶಕರು ಮತ್ತು ಕಥೆಗಾರರು. ‘ನಡುಹಗಲಿನಲ್ಲಿ ಕಂದೀಲುಗಳು’ ಇವರ ವಿಮರ್ಶೆಗಳ ಸಂಕಲನ. ‘ಮಡ್ ಟೌನ್’ ಇಂಗ್ಲಿಷ್ ಕಾದಂಬರಿ. ಧಾರವಾಡ ಹುಟ್ಟೂರು. ಇರುವುದು ಶಿವಮೊಗ್ಗ. ನಿವೃತ್ತ ಇಂಗ್ಲಿಷ್ ಪ್ರಾದ್ಯಾಪಕರು. \ No newline at end of file diff --git a/Kenda Sampige/article_564.txt b/Kenda Sampige/article_564.txt new file mode 100644 index 0000000000000000000000000000000000000000..6062cc62cccf7fd1d4f92507577ab0258eec8efc --- /dev/null +++ b/Kenda Sampige/article_564.txt @@ -0,0 +1,41 @@ +ಗೌರಿಯ ಎದುರು ಒಂದೂವರೆ ಕಾಲಿನಲ್ಲಿ ಕುಳಿತು, ಮುದುಕ ಜೋಯಿಸರು ಕಟ್ಟುತ್ತಿದ್ದ ಒಂಭತ್ತು ಗಂಟಿನ ಗೌರಿ ದಾರವನ್ನು ಕೈಗೆ ಕಟ್ಟಿಸಿಕೊಳ್ಳುತ್ತಾ ಇರುವಾಗ, ಪ್ರತಿಸಾರಿಯೂ ಹಿಂದಿನಿಂದ ಅಜ್ಜಿ ತಪ್ಪದೇ ಹೇಳುತ್ತಿದ್ದ ಮಾತು: ‘ಒಳ್ಳೇ ಗಂಡನ್ನ ಕೊಡು ಅಂತ ಗೌರಿ ದೇವ್ರ ಹತ್ರ ಕೇಳ್ಕಳ್ರೇ..’. ಊದುಬತ್ತಿ, ನಾನಾ ತೆರದ ಹೂವುಗಳು, ಗಂಧ – ಪಂಚಾಮೃತದ ಪರಿಮಳ, ಮಂದ ಬೆಳಕಿನ ಕಾಲುದೀಪ. ಬಳೆಬಿಚ್ಚೋಲೆಗಳೊಂದಿಗೆ, ಸೂಕ್ಷ್ಮ ಕುಸುರಿಯಂತಿರುತ್ತಿದ್ದ ಹತ್ತಿಯ ಹಾರದೊಂದಿಗೆ ಕಂಗೊಳಿಸುತ್ತಿದ್ದ ಮಣ್ಣಿನ ಮುಖದ ಗೌರಿಯ ಎದುರಲ್ಲಿ ಕೈಗೆ ದಾರ ಕಟ್ಟಿಕೊಂಡು ನಮಸ್ಕಾರ ಮಾಡುವಾಗ ಒಳ್ಳೇ ಗಂಡನ್ನ ಕೊಡು ಅಂತ ಕೇಳುವುದು ಮರೆತೇ ಹೋಗಿರುತ್ತಿತ್ತು. ಬದಲು ‘ನನ್ನ ಗಂಡ ಎಂಬವವ ಹೇಗಿರಬಹುದು? ಅವನು ಈಗ ಎಲ್ಲಿರಬಹುದು? ಎಷ್ಟನೇ ಕ್ಲಾಸು ಕಲಿಯುತ್ತಿರಬಹುದು?’ ಎಂದೆಲ್ಲ ರೋಮಾಂಚನಗೊಳಿಸುವ ಅಲೆಮಾರಿ ಚಿಂತೆಗಳೇ ಮನದಲ್ಲಿ ಸುಳಿಯುತ್ತಿರುವಾಗ… ನಾವು ಹುಡುಗಿಯರೆಲ್ಲ ಕಿಸಪಿಸ ನಗುತ್ತ, ನಮ್ಮ ಕೈಗೆ ಯಾವ ಬಣ್ಣದ ದಾರ ಬಂದೀತೆಂದು ಯೋಚಿಸುತ್ತ, ದಬಕ್ಕನೆ ಜೋಯಿಸರ ಕಾಲಿಗೆ ಬಿದ್ದು, ದಾರ ಕಟ್ಟಿದ್ದೇ ಹೊರಗೆ ಓಟ… + +ಗೌರಿ ಹಬ್ಬವೆಂದರೆ ಅಜ್ಜಿಯ ಮನೆಯಲ್ಲಿ ಮಕ್ಕಳ ಸಂತೆ ನೆರೆಯಿತು ಎಂದೇ ಅರ್ಥ. ಅಜ್ಜಿಯ ಆರು ಹೆಣ್ಣು ಮಕ್ಕಳೂ, ಅವರ ಇಪ್ಪತ್ತು ಮೊಮ್ಮಕ್ಕಳೂ ಒಟ್ಟು ಕೂಡಿ ಅಲ್ಲೊಂದು ಉಪಾಧ್ಯಾಯರಿಲ್ಲದ ಶಾಲೆ ನಿರ್ಮಾಣವಾಗಿ ಮಕ್ಕಳನ್ನೆಲ್ಲ ನಿಯಂತ್ರಿಸಲು ಹಿರಿಯರು ಹರಸಾಹಸ ಪಡುತ್ತಿದ್ದ ಸಮಯ. ಬೇರೆಬೇರೆ ಊರಿನಲ್ಲಿದ್ದ ಎಲ್ಲರೂ ಒಟ್ಟು ಸೇರಲು ಅದೊಂದು ಸದವಕಾಶ. ಯಾರ‍್ಯಾರು ಎಂತೆಂಥ ಲಂಗ ಹೊಲಿಸಿಕೊಂಡುಬಂದಿದ್ದಾರೆ, ಈ ಸಲ ಯಾರ ಜಡೆ ಎಷ್ಟುದ್ದ ಆಗಿದೆ, ಯಾರು ದೊಡ್ಡವರಾದರು, ಯಾರಿಗೆ ಮೀಸೆ ಬಂದಿದೆ.. ಇತ್ಯಾದಿ ಖಾಸಾ ವಿಚಾರಗಳು ಮಕ್ಕಳಲ್ಲೇ ವಿನಿಮಯಗೊಳ್ಳುವ ಸಮಯವೂ ಹೌದು. + +ಮಹಾಸಂಪ್ರದಾಯಸ್ಥೆಯಾಗಿದ್ದ ಅಜ್ಜಿ ಹಿಂದಿನ ದಿನದ ತನಕ – ಅವಳ ತವರು ಮನೆಯವರು ಕೊಟ್ಟ ಗೌರೀ ಪೆಟ್ಟಿಗೆಯನ್ನು ಹುಣಿಸೆಹಣ್ಣು ಹಚ್ಚಿ ತಿಕ್ಕಲು ತೆಗೆಯುವ ತನಕ – ಚೆನ್ನಾಗಿರುತ್ತಿದ್ದವಳು ಆ ಮೇಲೆ ಮಡಿಮಡಿ ಎಂದು ಅದು ಯಾಕೆ ಹಾಗೆ ಬದಲಾಗುತ್ತಿದ್ದಳೋ? ನಾವೆಲ್ಲ ಹಬ್ಬದ ದಿನ ಬೆಳಿಗ್ಗೆ ಎದ್ದು ಕಣ್ಣುತಿಕ್ಕುವುದರೊಳಗೆ ಅವಳಾಗಲೇ ಎದ್ದು ಅಡಿಗೆ ಮನೆಯ ಬಾಗಿಲು ಹಾಕಿಕೊಂಡಿರುತ್ತಿದ್ದಳು. ಮತ್ತೆ ಅಜ್ಜಿ ಬಾಗಿಲು ತೆರೆದು ಹೊರಬರುತ್ತಿದ್ದಿದ್ದು ಪೂಜೆಯ ಕರೆ ಬಂದಾಗಲೇ. ಜೊತೆಗೆ ಅವಳ ಒಂದಿಬ್ಬರು ಹೆಣ್ಣುಮಕ್ಕಳೂ ಸೇರಿ, ಒದ್ದೆ ಕೂದಲ ನೀರಿಳಿಸುತ್ತ, ಮಡಿಸೀರೆಯುಟ್ಟು, ಮುಚ್ಚಿದ ಬಾಗಿಲ ಹಿಂದೆ ದಡಬಡ ಮಾಡುತ್ತ, ಅಂದಿನ ಅಡಿಗೆ ತಯಾರಿ ಮುಗಿಸಿಯೇ ಹೊರಬರುತ್ತಿದ್ದಿದ್ದು. ಒಳಗಿನಿಂದ ವಿಧವಿಧ ಭಕ್ಷ್ಯಗಳ ಸಿಹಿ ಪರಿಮಳ ಘಂ ಎಂದು ಮೂಗಿಗೆ ಬಡಿಯುತ್ತಿರುವಾಗ ತಿನ್ನಲು ಬರೀ ಒಂದು ಮುಷ್ಟಿ ಅವಲಕ್ಕಿ ಹೊರಗಿಟ್ಟರೆ ಎಷ್ಟು ನಿರಾಶೆಯಾಗಲಿಕ್ಕಿಲ್ಲ? ಚೆನ್ನಾಗಿ ಹೊಟ್ಟೆ ಹಸಿದರೆ ಆಮೇಲೆ ಹೋಳಿಗೆ ಊಟ ಚೆನ್ನಾಗಿ ಸೇರುತ್ತದೆ ಅನ್ನುವುದು ಅಜ್ಜಿಯ ನೀತಿ. ಅಥವಾ ಆ ದೊಡ್ಡ ಪಟಾಲಂಗೆ ತಿಂಡಿ ಮಾಡಿ ಹಂಚುತ್ತಾ ಕೂತರೆ ಉಳಿದ ಕೆಲಸ ಸಾಗುವುದಿಲ್ಲ ಎಂಬ ಉಪಾಯವೂ ಇರಬಹುದು. ಅಂತೂ ಮತ್ಯಾವಾಗ ಹೋಳಿಗೆ ಮಾಡಿದರೂ ಗೌರಿಹಬ್ಬದ ದಿನದ ರುಚಿ ಇರದೇ ಇದ್ದುದಕ್ಕೆ ಹೊಟ್ಟೆಖಾಲಿಇಡುವ ಉಪಾಯವೂ ಒಂದು ಕಾರಣವಿರಬಹುದು. + +‘ಪೂಜಿಸಿದಳು ಗೌರಿಯ, ಧರಣಿಜ ಸೀತೆ.. + +ಪಂಕಜ ವದನೆಯು ಶಂಕರ ರಾಣಿಗೆಕುಂಕುಮ ಅರಿಶಿನ ಕುಸುಮಗಳಿಂದಲಿ.. + +ಮಿಥಿಲಾ ನಗರದ ಜನಕನ ಮನೆಯೊಳುದಶರಥರಾಮನ ವಶ ಮಾಡೆನ್ನುತ…’ + +ಆರತಿ ಮಾಡುತ್ತಾ ಅಜ್ಜಿಯ ಈ ಹಾಡು ಕೇಳಿತೆಂದರೆ ವ್ರತದಪೂಜೆ ಮುಗಿಯಿತೆಂದು ಲೆಕ್ಕ. ಓಹೋ, ಹಾಗಾದರೆ ಸೀತಾಮಾತೆ ಕೂಡ ರಾಮನಂತಹ ಗಂಡ ಸಿಗಲೆಂದು ಗೌರಿಪೂಜೆ ಮಾಡಿದ್ದಳೆ? + +ಆ ಗೌರಮ್ಮನಾದರೂ ಎಷ್ಟು ಒಳ್ಳೆಯವಳು! ವ್ರತದ ಕತೆ ಕೇಳಿ ನಮಗೆ ಆಗೆಲ್ಲ ಅಚ್ಚರಿ. ಬೇಡಿಕೊಂಡವರಿಗೆಲ್ಲ ಒಳ್ಳೆಯ ಗಂಡ ಸಿಗುವ ಹಾಗೆ ಮಾಡುತ್ತಾಳೆ. ಮದುವೆಯಾದವರು ಬೇಡಿಕೊಂಡರೆ ಅವರ ಗಂಡನ ಆಯಸ್ಸು ಹೆಚ್ಚಿಸುತ್ತಾಳೆ ಈ ಪುಣ್ಯದೇವತೆ! ಹಾಗಾದರೆ ನನ್ನ ಗೆಳತಿ ಮುಮ್ತಾಜ್ ಗೌರಿಪೂಜೆ ಮಾಡುವುದಿಲ್ಲ, ಅವಳಿಗೆ ಕೆಟ್ಟ ಗಂಡನೇ ಗತಿಯೆ? ಮನೆ ಕೆಲಸದ ಕೆಂಚಮ್ಮನೂ ಅಷ್ಟೇ, ಪೂಜೆ ಮಾಡುವುದಿಲ್ಲವಂತೆ. ಅದಕ್ಕೇ ಅವಳ ಗಂಡನಿಗೆ ಆಕ್ಸಿಡೆಂಟಾಗಿ ತೀರಿಕೊಂಡನೆ? ಅಜ್ಜಿ ಮನೆಯಲ್ಲಿರುತ್ತಿದ್ದ ಕೆಂಪುಸೀರೆಯ ಶ್ಯಾಮತ್ತೆ ಮೇಲೆ ಗೌರಿಗೆ ಸಿಟ್ಟು ಬಂದಿದ್ದು ಏಕೆ? ಅವರ ಮದುವೆಯಾಗಿ ಒಂದೇ ವರ್ಷಕ್ಕೆ ಗಂಡ ಸತ್ತುಹೋದನಂತಲ್ಲ? ಅಜ್ಜಿ ಗೌರಿಪೂಜೆ ಮಾಡಿದಂತೆ ಗಣಪತಿ ಪೂಜೆ ಏಕೆ ಮಾಡುವುದಿಲ್ಲ? ನಮ್ಮ ಇಂತಹ ತಲೆಹರಟೆ ಅಡ್ಡಾದಿಡ್ಡಿ ಪ್ರಶ್ನೆಗಳಿಗೆ ಪೂಜೆಗೆ ಮೊದಲು ಅಜ್ಜನ ಕಾಲಿಗೆ ನಮಸ್ಕಾರ ಮಾಡುತ್ತಿದ್ದ ಅಜ್ಜಿಯ ಬಳಿಯಾಗಲೀ, ಎಷ್ಟು ಓದಿದರೂ ಗಳಿಸಿದರೂ ಮಕ್ಕಳುಮರಿ ಮನೆಕೆಲಸ ಎಲ್ಲ ಹೆಂಗಸರಿಗೇ ಗಂಟುಬಿದ್ದ ಕರ್ಮಗಳೆಂದು ಆಗಾಗ ಗೊಣಗುಡುತ್ತಿದ್ದ ಅಮ್ಮನ ಬಳಿಯಾಗಲೀ ಉತ್ತರವಿರುತ್ತಿರಲಿಲ್ಲ. + +ಸರಬರಗುಡುತ್ತಿದ್ದ ಹೊಸಲಂಗಕ್ಕೆ ಆಗಷ್ಟೇ ಕಟ್ಟಿಕೊಂಡ ಗೌರಿದಾರದ ರಂಗುಬಣ್ಣ ತಾಗದಂತೆ ಎಚ್ಚರಿಕೆ ವಹಿಸುತ್ತ ಮೇಲೆದ್ದ ನಂತರ ನಮ್ಮ ಮುಂದಿನ ನಿರೀಕ್ಷೆ ಹೋಳಿಗೆಯದ್ದು. ಆದರೆ ಅಷ್ಟು ಬೇಗ ಅಲ್ಲಿಯ ಕಾರ್ಯಕ್ರಮ ಮುಗಿಯಬೇಕಲ್ಲ? ‘ಬನ್ರೇ’ ಎಂದು ತಮ್ಮ ಕೈಯಲ್ಲಿ ಮೊರದ ಮೇಲೆ ಮೊರದ ಬಾಗಿನ ಹಿಡಿದು, ನಮ್ಮ ಕೈಲಿ ಅರಿಶಿನ ಕುಂಕುಮದ ಬಟ್ಟಲೋ, ವೀಳ್ಯದೆಲೆ ಕೋಸಂಬರಿಯನ್ನೋ, ಮಳೆ ಬಂದರೆ ಇರಲೆಂದು ಛತ್ರಿಯನ್ನೋ ಕೊಟ್ಟು ಹೊರಡಿಸುತ್ತಿದ್ದ ಅಮ್ಮ ದೊಡ್ಡಮ್ಮಂದಿರು ಕೇರಿಯಲ್ಲಿ ಮೆರವಣಿಗೆ ತರಹ ಸಾಗಿ ಒಬ್ಬೊಬ್ಬರಿಗೆ ಬಾಗಿನ ಕೊಟ್ಟು ಬರುತ್ತಿದ್ದರು. ನಮ್ಮಮ್ಮ ಮಾತ್ರ ಒಂದೆರೆಡು ಮೊರದ ಬಾಗಿನ ಅವಳ ನೆಚ್ಚಿನವರಿಗೇ ಕೊಡಲೆಂದು ಕಾದಿಡುತ್ತಿದ್ದಳು. ಅವರು ಮರುದಿನ ಗಣಪತಿ ನೋಡಲು ಬಂದಾಗ ಕೊಟ್ಟರೂ ಸರಿಯೆ, ಅದು ಅವರಿಗೇ ತಲುಪಬೇಕು. ಹೋದಲ್ಲೆಲ್ಲ ಕೊಟ್ಟ ಕೋಸಂಬರಿ ಬಾಳೆಹಣ್ಣು ತಿಂದು, ತಿರುಗಾಡಿ ದಣಿದು ಮನೆಗೆ ಬಂದ ಮೇಲೆ ಊಟ. ಇಷ್ಟೊತ್ತೂ ಉಪವಾಸ ಮಾಡಿದ್ದು ಸಾರ್ಥಕವೆಂಬ ಹಾಗೆ ತಯಾರಿರುತ್ತಿದ್ದ ಅಂಬೊಡೆ, ಪಾಯಸ, ಹೋಳಿಗೆ, ಚಿತ್ರಾನ್ನದ ಊಟ… + +ಊಟವೆಲ್ಲ ಆದಮೇಲೆ ಎಲೆಅಡಿಕೆ ಹಾಕಿಕೊಳ್ಳುತ್ತ, ಮಲಗಿದ್ದ ಗಂಡಸರಿಗೆ ಎಚ್ಚರವಾಗದ ಹಾಗೆ ಗುಸುಗುಸು ಮಾಡುತ್ತ ಕೂತಿರುತ್ತಿದ್ದ ಹೆಂಗಸರು ಅವರ ಮಾತಿನೊಳಗೆ ನಮ್ಮನ್ನು ಸೇರಿಸುತ್ತಲೇ ಇರಲಿಲ್ಲ, ‘ಆಟ ಆಡ್ಕೊಳ್ರಿ’ ಎಂದು ಹೊರಕಳಿಸುತ್ತಿದ್ದರು. ಕಂಡೂಕಾಣದಂತೆ ಅಜ್ಜಿ ಮುಸುಮುಸು ಅಳುತ್ತಿದ್ದದ್ದು ಒಗಟಾಗಿತ್ತು. ಗೌರಿಹಬ್ಬದಂದೇ ಲಿವರಿನ ಕಾಯಿಲೆಯಾಗಿ ಸತ್ತುಹೋಗಿದ್ದ ಹತ್ತು ವರ್ಷದ ಕಿರಿಮಗಳನ್ನು ನೆನಪಿಸಿಕೊಂಡು ಬೇಸರಿಸುತ್ತಿದ್ದದ್ದು ಅಂತ ಅಮ್ಮ ಆಮೇಲ್ಯಾವಾಗಲೋ ಹೇಳಿದ್ದಳು. + +ಹಬ್ಬದ ಊಟವೆಂದರೆ ನೆನಪಾಗುವ ಮುಮ್ತಾಜ್… ಬಾಲ್ಯದ ನನ್ನ ಆಪ್ತ ಗೆಳತಿ. ಎಂತಹ ಮುಗ್ಧ ದಿನಗಳವು. ಹಬ್ಬದ ದಿನಗಳಲ್ಲಿ ನಮ್ಮನೆಯಲ್ಲೇ ಊಟ ಮಾಡುತ್ತಿದ್ದ ಅವಳಿಗೆ ಗಣಪತಿ ಹಬ್ಬವೆಂದರೆ ತುಂಬ ಇಷ್ಟ. ತನ್ನಮ್ಮನ ಬಳಿಯೂ ಹೇಳಿ ಹಠ ಮಾಡಿ ಪ್ರತಿಸಾರಿ ಚಕ್ಕುಲಿ ಕರಿಗಡುಬು ಮಾಡಿಸುತ್ತಿದ್ದಳು. ಅಜ್ಜಿಮನೆಗೆ ಹೋಗಿರುತ್ತಿದ್ದ ನಾವು ಊರಿಗೆ ವಾಪಸಾದ ಮೇಲೆ ಅಮ್ಮ ನಮ್ಮನೆಯ ಚಕ್ಕುಲಿ ಕೊಟ್ಟು ಕಳಿಸುತ್ತಿದ್ದರು. ‘ಏನಂದ್ರೂ ನಂಗೆ ನಿಮ್ತರ ಮಾಡ್ಲಿಕ್ಕೆ ಬರೂದಿಲ್ಲ’ ಎನ್ನುತ್ತ ಅವಳಮ್ಮ ನಮ್ಮ ಚಕ್ಕುಲಿಗೆ ಪ್ರಶಸ್ತಿಪತ್ರ ಕೊಡುತ್ತಿದ್ದರು. ನಾವೆಲ್ಲ ಚೌತಿಹಬ್ಬದ ಮರುದಿನ ಹೊಸಲಂಗ ಹಾಕಿಕೊಂಡು ಶಾಲೆಗೆ ಹೋಗುವಾಗ, ತನಗೂ ಹಾಕಿಕೊಳ್ಳಲು ಬೇಕೇಬೇಕೆಂದು ಹಠ ಮಾಡಿ, ಪ್ರತಿ ಗಣಪತಿ ಹಬ್ಬಕ್ಕೊಂದು ಹೊಸಲಂಗ ಹೊಲಿಸಿಕೊಳ್ಳುತ್ತಿದ್ದಳು. ನಾನೆಲ್ಲಾದರೂ ಕದ್ದು ಕೊಡುತ್ತಿದ್ದ ಪಂಚಾಮೃತ ಎಂದರೆ ಅಷ್ಟು ಇಷ್ಟ ಅವಳಿಗೆ… ನಮ್ಮಮ್ಮನ ತಿಳಿಸಾರೆಂದರೆ ಅವಳಿಗೆ, ಅವಳಮ್ಮನ ಬೆಳ್ಳುಳ್ಳಿ ಒಗ್ಗರಣೆಯ ದಾಲ್ ನನಗೆ ಇಷ್ಟವಾಗಿ ನಾವಿಬ್ಬರೂ ಶಾಲೆಯಲ್ಲಿ ಊಟದ ಡಬ್ಬಿ ಹಂಚಿಕೊಳ್ಳದ ದಿನಗಳು ಕಡಿಮೆ. ಚಪ್ಪಲಿ ಅಂಗಡಿ ಇಟ್ಟಿದ್ದ ಅವಳ ಅಪ್ಪ ತಮಾಷೆ ಮಾಡುತ್ತಿದ್ದರು: ಯಾವದಾದರೂ ಒಳ್ಳೇ ಅಡಿಗೆ ಗೊತ್ತಿರೋ ಹುಡುಗನ್ನ ನೀವೇ ನೋಡ್ಬಿಡಿ, ಅಂವಂಗೇ ಮದುವೆ ಮಾಡಿಬಿಡ್ತೇನೆ ಎಂದು… + +****** + +ಎಷ್ಟೆಲ್ಲ ಈಗ ಕಾಲನ ವಶ? + +ಅಕಾಲಮರಣಕ್ಕೀಡಾದ ಮುಮ್ತಾಜ್ ಈಗ ನೆನಪು… ಅವಳ ಮನೆಗೂ ನಮ್ಮಮ್ಮನ ಮನೆಗೂ ನಡುವೆ ದೊಡ್ಡ ಗಟಾರವೊಂದು ಹರಿಯುತ್ತಾ ಆಚೆ ದಾಟುವುದೇ ಕಷ್ಟವಾಗಿದೆ. + +ಅಜ್ಜಿ ಅದೆಷ್ಟು ವರ್ಷ ಗೌರಿಪೂಜೆ ಮಾಡಿದ್ದರೇನು? ಮುತ್ತೈದೆಯಾಗಿ ಸಾಯಬೇಕೆನ್ನುವ ಅವಳ ಪ್ರಾರ್ಥನೆಯನ್ನು ಮನ್ನಿಸದ ದೇವರು ಇಪ್ಪತ್ತು ವರ್ಷದ ಕೆಳಗೇ ಅಜ್ಜನನ್ನು ಕರೆದುಕೊಂಡು ಹೋಗಿಬಿಟ್ಟಿದ್ದಾನೆ. ಇವಳನ್ನು ಅರುಳುಮರುಳಿನ ಶತಾಯುಷಿಯನ್ನಾಗಿ ಮಾಡಲು ಹೊರಟಿದ್ದಾನೆ… + +‘ಎಷ್ಟ್ ಪೂಜೆ ಮಾಡಿದ್ರೂ ಅಷ್ಟೇಯ ಕಣೆ. ಒಳ್ಳೇ ಗಂಡ ಸಿಗೋದಾದ್ರೆ ಸಿಗ್ತಾನೆ, ಇಲ್ದಿದ್ರೆ ಇಲ್ಲ. ನಾನಂತೂ ಇನ್ಮೇಲೆ ವ್ರತ, ಕತೆ ಏನೂ ಮಾಡಲ್ಲ’ ಎಂದು ಏಕಾಏಕಿ ಘೋಷಿಸಿ, ಗೌರಿಹಬ್ಬದ ಬಾಬ್ತೆಂದು ತರಕಾರಿಯ ರಂಗಮ್ಮನಿಗೆ ಹಣ ಕೊಟ್ಟು ಬಾಗಿನ ಕೊಟ್ಟ ತೃಪ್ತಿ ಕಾಣುವ ಅಮ್ಮ.. + +ಬಿಟ್ಟರೆ ಪರಂಪರೆ ಅಳಿಯುವುದೋ, ಹಿಡಿದರೆ ಕಂದಾಚಾರ ಪೋಷಿಸಿಕೊಂಡುಬಂದಂತಾಗುವುದೋ ಎಂಬ ಗೋಜಲಿನಲ್ಲಿ ಹೊಸ್ತಿಲ ಮೇಲೆ ನಿಂತ ನಾನು… + +‘ಅಮ್ಮ, ಸ್ವರ್ಣಗೌರೀವ್ರತ ಅಂದ್ರೇನು? ಅದರ ಬಗ್ಗೆ ಜನರಲ್‌ನಾಲೆಜ್ ಪೀರಿಯಡ್ಡಿನಲ್ಲಿ ಮಿಸ್ ಕೇಳಿದರೆ ನಂಗೆ ಗೊತ್ತೇ ಇರಲಿಲ್ಲ..’ ಎಂದು ವಿಷಣ್ಣಳಾಗುವ ಮಗಳು.. + +ಗಂಡಸಿಗೆ ತಿಳಿಯಬಹುದೇ ಗೌರಿಯರ ದುಃಖಗಳು?! + +[ಚಿತ್ರ-ರಾಥೋಡ್] + +ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಬಳಿಯ ಕವಲಕ್ಕಿಯಲ್ಲಿ ವೈದ್ಯರಾಗಿದ್ಡಾರೆ. ಕವಿತೆ. ವೈಚಾರಿಕ ಚಿಂತನೆ ಮತ್ತು ವೈದ್ಯಕೀಯ ಬರಹಗಳು ಇವರ ವಿಶೇಷ. \ No newline at end of file diff --git a/Kenda Sampige/article_565.txt b/Kenda Sampige/article_565.txt new file mode 100644 index 0000000000000000000000000000000000000000..6b4fdde77781994dceb5e6e4ce99e08f360f66d6 --- /dev/null +++ b/Kenda Sampige/article_565.txt @@ -0,0 +1,31 @@ +ಅಂದು ಆ ಜನರೆಲ್ಲ ಎದೆಮಟ್ಟ ಒಂದೊಂದು ಹೂಗುಚ್ಚ ಹಿಡಿದು ಓಡಾಡುತ್ತಿದ್ದಂತೆ ಕಾಣುತ್ತಿತ್ತು. ಹೂಗುಚ್ಚವೆಂದರೆ ಪೇಟೆ ಬೀದಿಯಲ್ಲಿ ಸಿಗುವ ಗುಲಾಬಿ ಇತ್ಯಾದಿ ಅಪರೂಪದ ಹೂವುಗಳಿಂದ ಮಾರಾಟಕ್ಕಾಗಿ ಮಾಡಿದ್ದಲ್ಲ, ರಸ್ತೆ ಬದಿ ಪೊದೆಯಲ್ಲಿ ಬಿಟ್ಟ ಗಂಟೆ ಹೂವಿನಂಥ ಒಂದು ಗೊಂಚಲು. ಅಂಥದು ಯಾವಾಗಲೂ ತುಂಬ ಸುಂದರ ಎಂದೇ ನನಗನ್ನಿಸಿದೆ. ಯಾಕೆ ತಮ್ಮನ್ನು ತಾವೇ ಅಭಿನಂದಿಸಿಕೊಂಡು ಅವರು ಓಡಾಡುತ್ತಿದ್ದಾರೆ? ಈ ಅಭಿನಂದನೆ ಸುಮ್ಮನೆ ತಮ್ಮೊಳಗಿರುವ ಒಳ್ಳೆಯತನಕ್ಕಾಗಿ. ಬುದ್ಧಿವಂತಿಕೆ, ಪ್ರತಿಭೆಗಾಗಿ ಅಲ್ಲ. ತಾವು ಎಂಥವರೋ-ಲಾಭ ನಷ್ಠದ ಲೆಕ್ಕಾಚಾರದಲ್ಲಿ ಬಿದ್ದವರೋ, ತಮ್ಮ ಪರರೆಂಬ ಗುಂಪುಗಾರಿಕೆಯಲ್ಲಿ ಸಿಕ್ಕವರೋ, ಸದಾ ಹೊರಗೊಂದು ಒಳಗೊಂದಾದ ಚೂರು ಕಪಟಿಗಳೋ-ಆದರೂ ಮನದ ಮೂಲೆಯಲ್ಲೊಂದು ಸಹಜ ಒಳ್ಳೆಯತನ ಹಸಿರಾಗಿರುವಂತಿದೆ. ಅದೊಂದು ಮುಗ್ಧತೆ ಮತ್ತು ಸರಳ ಸಂತೋಷದ ಗುಣ. ಇತರರಿಗಿಂತ ಮೇಲೆನಿಸಬೇಕೆಂದಿಲ್ಲ. ಅವರೊಂದಿಗೆ ಒಂದಾಗಿರಬೇಕೆಂಬ ಸಾಧಾರಣತೆ. ಅದು ಎಂದಿಗೂ ತಮ್ಮೊಳಗೆ ಉಳಿದಿದೆ-ಮಾಯವಾಗದ ಮಗುವಿನಂತೆ, ಬಾಲಕನಂತೆ. + +ಅದಕ್ಕಾಗಿ ಇರಬಹುದು ಈ ಸಂಭ್ರಮ, ಸಮಾರಂಭ. ನೆಪ-ರಾಜಣ್ಣನವರ ನಿವೃತ್ತಿ. ರೈಲ್ವೆ ಇಲಾಖೆಯಲ್ಲಿದ್ದು ಈಗ ನಿವೃತ್ತರಾಗುತ್ತಿದ್ದ ತಮ್ಮ ಸಹೋದ್ಯೋಗಿ ರಾಜಣ್ಣ. ಅದಕ್ಕಾಗಿ ನಡೆದಿದ್ದ ಆಹ್ವಾನ ಪತ್ರ, ಪೋಸ್ಟರ್ ಇತ್ಯಾದಿ ಸಿದ್ದತೆ ನೋಡಿದ ಮೇಲೆ ಅವರ ಬಾಮೈದನಾದ ನಾನೂ ಸಭೆಗೆ ಬರುತ್ತೇನೆ, ಅಷ್ಟೇ ಅಲ್ಲ, ಒಂದು ಕವಿತೆಯನ್ನೂ ಬರೆದು ಓದುತ್ತೇನೆ ಎಂದು ಸ್ವಯಂ ಸ್ಫೂರ್ತಿಯಿಂದ ಘೋಷಿಸಿಬಿಟ್ಟೆ. + +ನನ್ನ ಮನಸ್ಸಲ್ಲಿದ್ದುದೊಂದು ತಮಾಷೆ. ಕವಿತೆಯನ್ನು ಹಾಗೆಲ್ಲ ಬಳಸುವವನಲ್ಲ ನಾನು. ಆದರೂ ಸಭೆಗೆ ಹೋಗುವ ಹಿಂದಿನ ರಾತ್ರಿ ರಾಜಣ್ಣನವರ ಮನೆಯ ಪಡಸಾಲೆಯಲ್ಲಿ ಮಲಗಿ ಪ್ರಯತ್ನಪೂರ್ವಕವಾಗಿ ಬರೆಯಬಹುದಾದ ಕವಿತೆಯೊಂದನ್ನು ಬರೆದೇ ಬಿಟ್ಟು-ಅಕ್ಕಯ್ಯ, ರಾಜಣ್ಣ, ನನ್ನ ಪತ್ನಿ, ಮಗಳು ಚುಕ್ಕಿಯ ಮುಂದೆ ಓದಿದೆ, ಚಪ್ಪಾಳೆ ಬಂತು. ಮರುದಿನ ಬೆಳಗ್ಗೆ ರೈಲಲ್ಲಿ ಹೋಗುವಾಗ ನೋಡುತ್ತೇನೆ, ಕವಿತೆಯನ್ನೇ ಬಿಟ್ಟು ಬಂದಿದ್ದೆ. ನಂತರ ಅಲ್ಲೇ ಅದನ್ನು ನೆನಪಿಂದ ಬರೆದಾಗ ಅದು ಇನ್ನೂ ಉತ್ತಮವೆನಿಸಿತು. ನಾನು ನೋಡಿದ್ದೀನಿ, ಕವಿತೆಯನ್ನು ಹಾಗೆ ನೆನಪಿನಿಂದ ಬರೆದಾಗ ಮಾತು ಹೆಚ್ಚು ಸರಿಯಾಗಿರುತ್ತದೆ. + +ಮುಂದೆ ಬೀರೂರು ನಿಲ್ದಾಣದಲ್ಲೇ ರಾಜಣ್ಣನವರಿಗೆ ಸಣ್ಣ ಸನ್ಮಾನವಾಯಿತು. ನಂತರ ಅರಸೀಕೆರೆಯಲ್ಲಿ ಇಳಿಯುವಾಗ ನೋಡಿದರೆ ಪ್ಲಾಟ್‌ಫಾರಂನಲ್ಲೇ ಯಾವುದೋ ಶಾಲೆಯ ಮಕ್ಕಳ ಬಾಜಭಜಂತ್ರಿ ಸಹ ಮೊಳಗುತ್ತಿತ್ತು. ಒಬ್ಬೊಬ್ಬರ ಕೈಗೂ ಗುಲಾಬಿ ಕೊಟ್ಟು ನಮ್ಮನ್ನೆಲ್ಲ ಇಳಿಸಿಕೊಳ್ಳಲು ತುಸು ಹೊತ್ತು ಹಿಡಿಯಿತು. ಆಗ ರೈಲಲ್ಲಿ ಕೂತವರೆಲ್ಲ ಇದೇನು ಎಂದು ಕೊಕ್ಕರೆ ಕತ್ತಾಗಿ ನೋಡುತ್ತಿದ್ದರು. ದಿಬ್ಬಣದ ಕೈಲಿದ್ದ ಲಗೇಜನ್ನೆಲ್ಲ ಎದುರುಗೊಂಡವರು ಕೇಳಿ ಪಡೆದರು. ಬ್ಯಾಂಡ್ ಮೆರವಣಿಗೆಯಲ್ಲಿ ಪ್ಲಾಟ್‌ಫಾರಂನಲ್ಲಿ ಹಾಕಿದ್ದ ಶಾಮಿಯಾನಕ್ಕೆ ನಡೆದೆವು. + +ದಿಬ್ಬಣಕ್ಕೆ ತಿಂಡಿಯಾದ ಮೇಲೆ ಸಭೆ, ಎಂದರೆ ಅದೇನೋ. ವೇದಿಕೆಯಲ್ಲಿ ರಾಜಣ್ಣನೊಂದಿಗೆ ಕೂತವರು ಅದು ಯಾರ್ಯಾರೋ. ಪೈಪೋಟಿಯಿಂದ ಗುಂಪಾಗಿ ಜನ ಬಂತು. ರಾಜಣ್ಣನಿಗೆ ಮಾಲೆ ಹಾಕಿ ತಬ್ಬಿಕೊಂಡು ಫೋಟೋ ತೆಗೆಸಿಕೊಳ್ಳುವುದಷ್ಟೇ, ಶಾಲು ಹೊದಿಸುವುದು, ಪೇಟಾ ತೊಡಿಸುವುದು, ಕಾಣಿಕೆ ನೀಡುವುದು ಅಚ್ಚರಿಯೆನಿಸುವಷ್ಟು ದಾರಾಳವಾಗಿತ್ತು. ಹೆಚ್ಚಾಗಿ ಎಲ್ಲರೂ ರಾಜಣ್ಣನವರಂತೆ ರೈಲ್ವೇ ಟಿಕೇಟು ತಪಾಸಕರೇ. ಅಂದರೆ ಜನರ ಕಣ್ಣಲ್ಲಿ ಒಂದು ರೀತಿಯ ಪೋಲೀಸು. ಆದರೆ ಅಂದು ಅವರೆಲ್ಲರೂ ಬೇರೆಯೇ ಸಡಗರದಲ್ಲಿದ್ದರು. + +ನಾನು ಆಮೇಲೆ ತಿಳಿದುಕೊಂಡೆ. ಒಟ್ಟು ೮೦ ಹಾರ, ೮ ಪೇಟ, ೧೬ ಶಾಲು, ಜೊತೆಗೆ ಅಸಂಖ್ಯಾತ ಕಾಣಿಕೆ ಬಂದಿದ್ದವಂತೆ. ಅಲ್ಲಿ ಆಡಿದ ಮಾತುಗಳೂ ಅತಿ ಸರಳವಾಗಿ ಒಳ್ಳೆಯದಿತ್ತು. ರಾಜಣ್ಣ ಎಂದರೆ ವಿಶೇಷ ಬುದ್ಧಿವಂತಿಕೆಯಾಗಲೀ ಪ್ರತಿಭೆಯಾಗಲೀ ಇರುವ ವ್ಯಕ್ತಿ ಅಲ್ಲ. ವೈಯಕ್ತಿಕವಾಗಿ ವರ್ಚಸ್ಸಿಯೂ ಅಲ್ಲ. ಆದರೆ ತಮ್ಮಷ್ಟಕ್ಕೆ ತಾವಿದ್ದು, ಒಳ್ಳೆಯವರು ಎಂಬುದಷ್ಟೇ ಸಾಕಿತ್ತು. ಅದನ್ನೊಂದು ಮಹತ್ವದ ಗುಣ ಎಂದು ಅವರೆಲ್ಲ ಎತ್ತಿ ಮೆರೆಸಿದ್ದರು. ಒಟ್ಟಿನಲ್ಲಿ ಎಲ್ಲರೂ ಸಣ್ಣ ಕಾರಣ ಹುಡುಕಿ ಅಥವಾ ಕಾರಣವೇ ಬೇಕಿಲ್ಲದೆ ರಾಜಣ್ಣನನ್ನು ಹಾಡಿ ಹೊಗಳಿದರು. ನಾನೂ ಉಮೇದಿನಲ್ಲಿ `ರೈಲ್ವೇ ರಾಜಣ್ಣನವರ ನಿವೃತ್ತಿ’ ಎಂಬ ಪದ್ಯವನ್ನು ಪೀಠಿಕೆಯೊಂದಿಗೆ ವಿವರಿಸಿ ಓದಿದೆ. ಊಹಿಸಿ-ರೈಲ್ವೇ ಪ್ಲಾಟ್‌ಫಾರಂನಲ್ಲಿ ತೀರ ಅಸಾಹಿತ್ಯಕ ಜನರಿಗೆ ಪದ್ಯ ಓದಿದ್ದು! ಕವಿತೆ ಹಾಗೆ ಎಲ್ಲೆಡೆ ಹರಿದಾಡಬೇಕು ಎಂಬ `ಜನಕವಿ`ಯ ಅಪೇಕ್ಷೆಗೆ ತಕ್ಕುದಾಗಿತ್ತು ಅದು. ಅಲ್ಲಿ ಸೇರಿದ್ದ ಬಿಹಾರಿ, ತಮಿಳ, ಕನ್ನಡಿಗರೆಲ್ಲರೂ ಬಂದು ನನ್ನ ಕೈಕುಲುಕಿ- `we really enjoyed it` ಎಂದರು! ನನಗೂ ಬಹುಮಾನವಾಗಿ ಒಂದು ಹಾರ ಮತ್ತು ಮುಂದೆ ಅವರ ಕಾರ್ಯಕ್ರಮಗಳಲ್ಲಿ ಕವಿತೆ ಓದಲು ಖಾಯಂ ಆಹ್ವಾನ ಸಿಕ್ಕಿತು! + +ಅಂದು ಅವರ ಎಲ್ಲ ಸಂಭ್ರಮದಲ್ಲಿ ಕವಿತೆಯೂ ಸೇರಿ ಹೋಯಿತು. ಅಲ್ಲಿ ಯಾವುದೇ ಆಗಲೀ ಎದ್ದು ಕಾಣುತ್ತಿರಲಿಲ್ಲ ಅಥವಾ ತಿರಸ್ಕೃತವಾಗುತ್ತಿರಲಿಲ್ಲ. ಅತ್ಯಂತ ಮಹಿಮಾನ್ವಿತವಾದುದೂ ಅಲ್ಲಿ ಎಲ್ಲರೊಳಗೊಂದಾಗುವಂತಿತ್ತು. ರಾಜಣ್ಣನವರು ಭಾಷಣ ಮಾಡಲು ಎದ್ದಾಗ ನನಗೆ ಆತಂಕವಾಯಿತು. ಅವರ ತಡವರಿಸುವ ಮಾತುಗಾರಿಕೆಯಿಂದ ಎಲ್ಲರಿಗೂ ನಿರಾಸೆಯಾಗಬಹುದೆಂದು. ಬರೆದು ತಂದ ನಾಲ್ಕು ಇಂಗ್ಲೀಷು ಮಾತನ್ನ ಅವರು ಪ್ರಪಂಚದ ಅಧ್ಯಕ್ಷನ ಅಳುಕಿನ ಗಾಂಭೀರ್ಯದಲ್ಲಿ ಓದಿದರು. ಯಾರೂ ತಪ್ಪು ತಿಳಿಯದೆ ಅದೇ ಹೆಚ್ಚಿನ ಅಚ್ಚುಕಟ್ಟು ಎಂದು ಭಾವಿಸಿದರು. ಅಲ್ಲಿ ಯಾವುದೂ ಮುಖ್ಯವೊ ಆ ಮುಖ್ಯವೂ ಆಗಿರಲಿಲ್ಲ. + +ಆಮೇಲೆ ಪ್ರಶಸ್ತವಾದ ಜಾಗವೊಂದರಲ್ಲಿ ಬಾವಣಿಕೆಯೊಂದಿಗಿನ ಅದ್ಭುತವಾದ ಊಟವಿತ್ತು. ಎಷ್ಟು ಹೊತ್ತು ಅಂತಹ ಆನಂದದ ನೆರೆಯನ್ನು ಸೃಷ್ಟಿಮಾಡಿದ್ದರು ಆ ಸರಳ ಜನರು!ಅದು ನಾನು ಕಂಡ ಅತ್ಯುತ್ತಮ ಸಮಾರಂಭವೊಂದಾಗಿತ್ತು ಮತ್ತು ಮನುಷ್ಯ ತನ್ನ ಅತ್ಯುತ್ತಮ ಮುಖದಲ್ಲಿ ಕಾಣಿಸಿಕೊಂಡುದಾಗಿತ್ತು. ಗೆಳೆಯ ಹೇಳುವಂತೆ ಸ್ವಲ್ಪ ಪೆದ್ದುತನ ಮತ್ತು ಸರಳ ಸಂತೋಷದ ಗುಣ-ಬೇರೇನು ಬೇಕು ಜೀವನದಲ್ಲಿ ಎನ್ನುವಂತಿತ್ತು. ಮತ್ತು ಅಂಥಲ್ಲಿ ನನ್ನ ಕವಿತೆ ಸಲ್ಲುವಂತಾಗಿದ್ದು ಅದಕ್ಕೆ ವಿಶೇಷ ಮರ್ಯಾದೆಯೆನಿಸಿತು. + +ಹಾಗೆ ಮೈತಳೆದ ಆ ಕವಿತೆಯನ್ನು ನಿಮ್ಮ ಮುಂದಿಡುತ್ತಿದ್ದೇನೆ. + +ರೈಲ್ವೇ ರಾಜಣ್ಣನವರ ನಿವೃತ್ತಿ + +ಮತ್ತೂ ಒಮ್ಮೆ ಕೂಗಿತು ರೈಲುರಾಜಣ್ಣ ಯಾಕೆ ಬರುವುದಿಲ್ಲವೇ ಇಂದುಮೀರಲಾರದೆ ಅದು ತನ್ನ ನಿಯತಿಯನುಹೊರಟಿತು ಇನ್ನೂ ಭಾರಗೊಂಡುಎಳೆದು ಹಾಕುತ ತನ್ನ ಚಕ್ರಗಳನು + +ನಿಂತರು ರಾಜಣ್ಣ ನಿಲ್ದಾಣದಲ್ಲೇಬಿಟ್ಟು ಹೊರಟಿದೆ ರೈಲು ತನ್ನನಲ್ಲೇಕಪ್ಪು ಕೋಟಿಲ್ಲ ತಿಕೀಟು ಬುಕ್ಕಿಲ್ಲಕೈಯ ಜಗ್ಗುತ್ತಿರುವ ಹಾರಗಳ ಹೊರೆಭ್ರಮಿಸುತ್ತಿರುವ ಗಂಧ ಭ್ರಮೆಗೊಳಿಸುತ್ತಿದೆ + +ತೆರೆದು ತೋರಿತು ರೈಲು ಏನೆಲ್ಲವನ್ನುನಾಕು ಗಳಿಗೆಯ ಪಯಣಿಗರೆ ಎಲ್ಲರೂಗುರಿ ದಾರಿ ನಿಶ್ಚಯಿಸಿ ಸ್ವಸ್ಥ ಕೂತವರುರಹದಾರಿಯೇ ಇರದೆ ಅಸ್ವಸ್ಥರಾದವರುಆಗಂತುಕನಿಗೂ ನಕ್ಕು ತಾವು ಕೊಟ್ಟವರುಅಂಗೈಯಗಲ ಜಾಗಕ್ಕಾಗಿ ಮುಷ್ಟಿ ಬಿಗಿದವರುಬೋಗಿಯಲಿ ಜಾತ್ರೆಯನು ತುಂಬಿಸಿದ ಚಿಣ್ಣರುಅಡಗಿಸಿದ ದುಗುಡದಲಿ ಕಣ್ಣೊರೆಸಿಕೊಂಡವರುಗಾಳಿ ಬೆಳಕಿನ ನೋಟದಲಿ ತೇಲಿ ಹೋದವರುಅವರ ಗಂಟು ಹಾರಿಸಲು ಸಮಯ ಕಾದ ಕಳ್ಳರುಎಳೆಗೂಸಿಗೆ ಅಲ್ಲೆ ಜೋಲಿ ಕಟ್ಟಿದ ಬಾಣಂತಿಎಲ್ಲರನು ಒಳಗೊಂಡು ತೂಗಿದ ಮಹಾತಾಯಿಕಾಣಿಸಿತು ತನಗೆ ಎಲ್ಲವನ್ನೂಹೊಟ್ಟೆಪಾಡಿಗೆಂದೇ ಈ ಬಂಡಿ ಏರಿದವ ತಾನು + +ಹೊಟ್ಟೆ ತುಂಬುವ ಕಾಳನ್ನಷ್ಟೇ ಅಲ್ಲಧರೆ ನೀಡುವುದು ಬೆಳಕಿನ ಬೆಳಸನ್ನೂತೆನೆದೂಗಿದ ಹೊಲದ ನಡುವೆಸಂಜೆ ಸೂರ್ಯನತ್ತ ಪಯಣಿಸಿದ ರೈಲುಕಲಿಸಿತ್ತುಹಕ್ಕಿ ಸಾಲಿನ ಹಾಗೆ ಬಿಟ್ಟುಕೊಳುವುದನ್ನು + +ನಿಂತರು ರಾಜಣ್ಣ ಈ ಅರಿವು ಒಡಗೂಡಿಕೊಂಚ ದೂರದಿ ನೆರೆದಿರುವ ತನ್ನವರಹರಕೆಗಳ ಆಚೆ ದಡದಲ್ಲಿತೆರಳುತ್ತಿರುವ ಗಾಡಿಯ ಮೈನೇವರಿಸಿ ಮನದಲ್ಲಿಬರಮಾಡಿ ಅದನಿನ್ನು ತನ್ನ ಕನಸುಗಳಲ್ಲಿ + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_566.txt b/Kenda Sampige/article_566.txt new file mode 100644 index 0000000000000000000000000000000000000000..60fa8218bf759ccf6613c6858268b84b29d18430 --- /dev/null +++ b/Kenda Sampige/article_566.txt @@ -0,0 +1,65 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ಕವಿತೆ ಬರೆದವರು ಮೀರಾ ಪಿ.ಆರ್. + +ಪ್ರಶ್ನೆ + +ಆದಿ, ಅಂತ್ಯವೇ ಇಲ್ಲದನಿನ್ನನ್ನ,ಹೀಗೆ ನನಗಿರುವ ಇಷ್ಟೇಅವಧಿಯಲ್ಲಿಎಲ್ಲಿ ಅಂತ ಹುಡುಕಲಿ? + +ಆಕಾರವೇ ಇಲ್ಲ ನಿನಗೆಎಂದಾದರೆ,ನಿನ್ನ ಮುಟ್ಟುವ ಬಯಕೆಯಹೇಗೆ ಹತ್ತಿಕ್ಕಲಿ? + +ಎಲ್ಲೆಡೆಯೂ ನೀನಿರುವುದೇಆದರೆ,ನನ್ನೊಳಗಿನ ನೋವಿಗೆಕಾರಣಹ್ಯಾಗೆ ಹುಡುಕಲಿ? + +ಎಲ್ಲವೂ ನಿನ್ನಿಚ್ಛೆಯಂತೇನಡೆವುದಾದರೆ,ಸುಮ್ಮನೆ ಹೀಗೊಂದು ಹೆಸರುತಗುಲಿಸಿಕೊಂಡುನಾನ್ಯಾಕೆ ಇಲ್ಲಿರಲಿ? + +ನೀನಿರುವುದೇಸುಳ್ಳಾದರೆಈ ಪ್ರಶ್ನೆಗಳನೆಲ್ಲಯಾರಲ್ಲಿ ಕೇಳಲಿ? + + + +ನಿನ್ನ ನೆನೆಯುತ್ತಾ ಎರಡು ಕವಿತೆಗಳು + +೧ + +ಬರುವ ಹಾಗಿದ್ದರೆ ಬಂದುಬಿಡು ಈಗಲೇತೆರೆದ ನನ್ನ ತೋಳುಸೋಲುವಮುನ್ನವೇ ಅಂತ ಹೇಳುವಆಸೆ.ಆದರೂ ನಾಳೆಗೂಈ ಪಾಡು ಹೀಗೇಉಳಿಯುವುದು ಗೊತ್ತಿದೆನನಗೆ.ಸರಿ, ನಿನಗಿಷ್ಟಬಂದಾಗಬಾಎನ್ನಲಾರೆ, ಏನೋಸಂಕಟ.ಬೂದು ಬಣ್ಣದಆಕಾಶದಕೆಳಗೂಕಡಲು ಯಾಕೋನೀಲಿಯಾಗೇಉಳಿದಿದೆ.ನಿನ್ನ ಉಸಿರಿನ ಗಂಧಎಷ್ಟು ದಿನವಾದರೂ ಇಲ್ಲೇಸುಳಿಯುತ್ತಾಹಗಲು, ರಾತ್ರಿಎಲ್ಲಕ್ಕೂಇಲ್ಲೀಗಬರೀ ಬೇಸರ. + +***೨ + +ಯಾಕೋನಡುಗುತ್ತಿತ್ತು ಧ್ವನಿನಿನ್ನ ಕುರಿತುಹಾಡುವಾಗ.ಮಾತಾಡಬೇಕೆಂದರೆಸಾಧ್ಯವೇಇಲ್ಲ,ಪದಗಳಿಗೆ ಅರ್ಧನಾಚಿಕೆ,ಅರ್ಧ ಭಯತುಟಿ ತನಕಬರಲಿಕ್ಕೆ.ಈ ಇರುಳಲ್ಲಿಹೀಗೆ ನಿನ್ನಮುತ್ತಿನನೆನಪಾಗುತ್ತಿರಲು,ನನ್ನ ಹಾಸಿಗೆಯಲ್ಲಿಯಾರ ತೋಳಲ್ಲಿಯಾರುಹೊರಳಿದ್ದು? + + + +ಗೆಳತಿ + +ಹಂಚಿಕೊಂಡ ಕಾಗೆ ಎಂಜಲಿನ ಸೀಬೇಕಾಯಿ,ಬೀದಿಯ ಕೊನೆಮನೆಯ ಮರ ಹತ್ತಿಕದ್ದು ತಂದುಉಪ್ಪು ಅದ್ದಿ ತಿಂದ ನೆಲ್ಲಿಕಾಯಿ,ಜೀರಿಗೆ, ಬೆಲ್ಲ, ಮೆಣಸು ಹಾಕಿಕಡ್ಡಿಗೆ ಸಿಕ್ಕಿಸಿ ತಿಂದು, ನಾಲಿಗೆ ಸೀಳಿದ್ದಕುಟ್ಟುಹುಣಸೇಹಣ್ಣಿನ ನೆನಪಿಗೆಯಾವತ್ತೂ ಜೊತೆಯಾದವಳು. + +ಕನ್ನಡ ಮೀಡಿಯಮ್ಮಿನಿಂದ ಬಂದು,ಇಂಗ್ಲೀಷಿನಲ್ಲಿ ನನ್ನ ಹಾಗೇಮಾತಾಡಲು ಬಾರದ್ದಕ್ಕೆ,ಬೆಂಚಿನಲ್ಲಿ ನನ್ನ ಪಕ್ಕವೇಕುಳಿತು, ಆಟಕ್ಕೆ ಬಿಟ್ಟಾಗಲೂನನ್ನನ್ನೇ ಅಂಟಿಕೊಂಡು ಉಳಿದವಳು. + +‘ಇಂಗ್ಲೀಷಿನಲ್ಲೇ ಮಾತಾಡಬೇಕು,ಏನು ಬರೆಯುವುದಿದ್ದರೂಇಂಗ್ಲೀಷಿನಲ್ಲೇ ಬರೆಯಬೇಕು…’ಹೆಡ್ಮಿಸ್ಸಿನ ಇಂಗ್ಲೀಷ್ ಮಾತಿನನಡುವೆಯೇ‘ಆಯ್ತು ಇನ್ಮುಂದೆಈಯಮ್ಮನ ಕ್ಲಾಸಿನಲ್ಲಿನಾನು ಹೂಸು ಬಿಡುವುದೂಇಂಗ್ಲೀಷಿನಲ್ಲೇ’ ಅಂತಪಕ್ಕದಲ್ಲಿ ಕೂತನನಗಷ್ಟೇ ಕೇಳುವಂತೆ ಹೇಳಿ,ನಾನು ಕಿಸಕ್ಕನೆ ನಕ್ಕು,‘ಗೆಟ್ ಔಟ್ ಆಫ್ ದ ಕ್ಲಾಸ್’ಆಗಲು ಎದ್ದು ಹೊರಟಾಗ,ಕಣ್ಣು ತುಂಬಿಕೊಂಡು‘ಸಾರಿ ಕಣೇ’ ಅಂತ ಪಿಸುಗುಟ್ಟಿದವಳು. + +‘ಕ್ಯೂ.ಎಸ್.ಕ್ಯೂ.ಟಿ. ಅಮೀರ್ ಖಾನ್‌ಗೆಮದುವೆ ಆಗ್ಬಿಟ್ಟಿದೆಯಂತೆ ಕಣೆ’ಇವಳು ಮೋರೆ ಸಣ್ಣಗಾಗಿಸಿ ಹೇಳಿದ್ದಕ್ಕೆ,‘ಆಗದಿದ್ದಿದ್ರೆ ಏನಂತೆ?ನೀನೇನು ಕಟ್ಟಿಕೊಳ್ಳಬೇಕಿತ್ತಅವನನ್ನ?’ ಅಂತ ನಾನಂದಿದ್ದಕ್ಕೆಸಿಟ್ಟಾಗಿಮೂರು ದಿನ ಮಾತು ಬಿಟ್ಟವಳು. + +‘ಸೇದಿ ನೋಡೇ ಬಿಡಬೇಕುಇದು ಹೇಗಿರತ್ತೆ ಅಂತ’ ಎಂದುತನ್ನಪ್ಪನ ಜೇಬಿಂದ ಕದ್ದ ಎರಡು ಸಿಗರೇಟಿನಲ್ಲಿಒಂದು ನನಗೆ ಕೊಟ್ಟುಪ್ರತಿ ದಮ್ಮಿಗೂ ಕೆಮ್ಮಿ,ಕೆಮ್ಮದೇ ಸೇದಿ ಮುಗಿಸಿದ ನಾನುಹಿಂದೆ ಒಮ್ಮೆಯಾದರು ಅದನ್ನಸೇದಿರಲೇಬೇಕೆಂದುವಾದಿಸಿ,ನನ್ನ ಯಾವ ಆಣೆ ಭಾಷೆಯನ್ನೂ ನಂಬದೆರೇಜಿಗೆ ಹುಟ್ಟಿಸಿಸಿಟ್ಟು ಬರಿಸಿದ್ದವಳು. + +ನನ್ನ ಮೊದಲ ಪ್ರೀತಿ, ಮೊದಲ ಮುತ್ತು,ಕತ್ತಿನ ಸುತ್ತ ಮೂಡಿದ್ದ ಮೊದಲ ಕೆಂಪು ಗುರುತುಎಲ್ಲಕ್ಕೂ ಸಾಕ್ಷಿಯಾಗಿತನ್ನ ಗುಟ್ಟೂ ಹಂಚಿಕೊಂಡವಳು. + +ಮೊದಲ ಸಲ ಇವಳಹೃದಯ ಚೂರಾಗಿಕಣ್ಣೀರು ಕೋಡಿಯಾದಾಗತಬ್ಬಿ ಸಂತೈಸಿದ ಹೊತ್ತು‘ನಂಗೆ ನೀನು ಅಮ್ಮನ ಹಾಗೆ ಕಣೇ..ಅವನೂಇಷ್ಟು ದಿನ ಹಾಗೇ ಇದ್ದ’ಎಂದು ಹೆಗಲಲ್ಲಿ ಮುಖವಿಟ್ಟು ಬಿಕ್ಕಿ ಬಿಕ್ಕಿಅತ್ತವಳು. + +ಕಾಂಜೀವರಂನ ಸರಬರದಲ್ಲಿ,ನನಗಾಗದ ಕಡುಕಂಪಿನಮಲ್ಲಿಗೆ ರೇಜಿಗೆಯಲ್ಲಿ‘ಥೂ ಸಾಕು ತೆಗೆಯೇ, ಒಳ್ಳೆ ನಾಟಕ ಮಾಡಲುರೆಡಿಯಾದ ಹಾಗನ್ನಿಸುತ್ತಿದೆ’ ಎಂದಿದ್ದಕ್ಕೆನನ್ನ ಬೆನ್ನಿಗೊಂದು ಗುದ್ದಿ,‘ನನಗೇನಂತೆ, ಅಲಂಕಾರ ಮಾಡಿಕೊಳ್ಳದೆ ಹೋದ್ರೆನಾಳೆ ಫೋಟೋದಲ್ಲಿ ನಿನ್ನ ಪಕ್ಕ ಕುಳಿತಪೇಟ ಕಟ್ಟಿದ ಮಂಗವೇ ಚೆನ್ನಾಗಿ ಕಾಣತ್ತೆ, ನಿನಗಿಂತ’ಎಂದು, ಅಮ್ಮನ ಕೆಂಗಣ್ಣಿಗೆ ಗುರಿಯಾಗಿ,ನಕ್ಕುನನ್ನ ಗಲ್ಲದ ಮೇಲೆ ಕಪ್ಪುಬೊಟ್ಟಿಟ್ಟವಳು. + +ಎಲ್ಲೆಲ್ಲೋ ಹಾರಿ, ಹರಿದು, ಕೊನೆಗೆನಾಲ್ಕು ಕಾಲಮಾನದಷ್ಟು ದೊಡ್ಡದಾದಈ ದೇಶದ ಎರಡು ತೀರಕ್ಕೆ ನಾವಿಬ್ಬರೂಬಂದು, ವಾರಕ್ಕೆ ನಾಲ್ಕು ಬಾರಿಟೆಲಿಫೋನಿನ ಮೇಲೆಹೊತ್ತಿನ ಪರಿವೆಯೇ ಇಲ್ಲದೆ ಹರಟುತ್ತಾಹತ್ತು ವರ್ಷಕ್ಕೂ ಮಿಕ್ಕಿಬರೀ ದ್ವನಿಯಾಗೇ ಕಂಡವಳು. + +‘ಈ ಡೈಪರ್ ಗಿಯ್‍ಪರ್ ಇಲ್ಲದೆನಮ್ಮನ್ನೆಲ್ಲ ಅದು ಹ್ಯಾಗೆ ಸಂಭಾಳಿಸಿದರೋನಮ್ಮೊಮ್ಮಂದಿರು ಅಲ್ವೇನೇ?’ಅನ್ನುತ್ತಲೇ ಒಂದು, ಎರಡು ಮಕ್ಕಳಾಗಿಅವರ ಹುಟ್ಟುಹಬ್ಬದ ಫೋಟೋಗಳನೆಲ್ಲಮರೆಯದೆ ಕಳಿಸಿದವಳು. + +ಮೊನ್ನೆ ಇದ್ದಕ್ಕಿದ್ದಂತೆ ಫೋನಿನಲ್ಲಿ‘ಗೆಸ್ ವ್ಹಾಟ್! ನೀನಿರುವ ಊರಲ್ಲೇನನ್ನ ಕಂಪನೀದು ಅದ್ಯಾವುದೋ ಸುಡುಗಾಡು ಕಾನ್ಫರೆನ್ಸು ಕಣೇ..ಮೂರು ದಿನ ಮನೇಲಿಟ್ಟುಕೊಂಡು ಊಟ ಹಾಕ್ತೀಯ ತಾನೆ?’ಎಂದು ತಟ್ಟನೆ ಸಂಭ್ರಮ ಕೊಟ್ಟವಳು. + +ಈಗ ಏರ್‌ಪೋರ್ಟಿನಲ್ಲಿ ಕುಳಿತುಇವಳಿಗೆ ಕಾಯುತ್ತಾ, ಏನು ಮಾಡಿದರೂನೆನಪಿಗೆ ಬರಲೊಲ್ಲದಹತ್ತು ವರ್ಷದ ಹಿಂದೆ ಕಂಡಅವಳ ಮುಖವನ್ನು ನೆನಪಿಸಿಕೊಳ್ಳುತ್ತಿರುವಾಗ,ನೆನಪಾಗಿದ್ದು ಅವಳ ಬಳ್ಳಿ ನಡು,ಉದ್ದ ಜಡೆ, ಮಿಂಚು ಕಣ್ಣು. + +ಇಲ್ಲಿ ನನಗೆದುರಾಗಿ ಬರುತ್ತಿರೋದಧೂತಿ ದೇಹದ, ಕನ್ನಡಕದ ಕಣ್ಣಿನ,ಸ್ವಚ್ಚಂದ ಹಾರಲು ಬಿಟ್ಟ,ಮೆಹಂದಿ ಬಣ್ಣದ ಗಿಡ್ಡ ಕೂದಲಿನ,ಯಾವತ್ತಿಗಿಂತಲೂ ನಿರಾಳವಾಗಿ ಕಂಡಜೀನ್ಸ್‌ಧಾರಿ ಹೆಂಗಸಲ್ಲಿ ಇವಳನ್ನು ಹುಡುಕುತ್ತಾಮಾತೇ ಹೊರಡದೆ ನಿಂತ ನನ್ನ ಬಳಿ ಬಂದು,ಗಟ್ಟಿಯಾಗಿ ತಬ್ಬಿ,‘ಏನೇ ಇಷ್ಟು ದಪ್ಪಗಾಗಿಬಿಟ್ಟಿದ್ದೀಯ?’ಎಂದವಳಿಗೆ ಏನಾದರೂ ಬದಲು ಕೊಡಬೇಕೆಂದುಕಣ್ಣೊರೆಸಿಕೊಳ್ಳುತ್ತಾ ನಾನು ಬಾಯಿ ಬಿಡುವ ಮೊದಲೇ,ಒಂದು ಕೈ ತಲೆ ಮೇಲೆ ಹೊತ್ತು,ಇನ್ನೊಂದು ಕೈಯಿಂದ ನನ್ನ ಬಳಸಿ ಹಿಡಿದು,‘ಕ್ಯಾನ್ ಯು ಬಿಲೀವ್ ಮಿ?ಟೂತ್‌ಬ್ರಶ್ಶೇ ಮರ್ತು ಬಂದಿದೀನಿ ಕಣೇ’ಎಂದುಹಲ್ಲು ಕಿರಿದಳು. + + + +ಕವಿತೆ + +ಹೀಗೇ ಹಾದಿಯಲ್ಲಿಸಿಕ್ಕಶಬ್ದವೊಂದು ಹಲ್ಲುಕಿರಿದು, ಗಿಂಜುತ್ತಾ‘ನನ್ನನ್ನು ಕವಿತೆಮಾಡು’ ಎಂದಿತು.ಈ ಬೆಪ್ಪು ತಕ್ಕಡಿಯಂತಾಶಬ್ದವಿದ್ದರೆ, ನನ್ನ ಕವಿತೆಯನ್ನಯಾರುಮೂಸುತ್ತಾರೆ ಅನ್ನಿಸಿ‘ಸುಮ್ಮನಿರು’ ಅಂದು,ಹಾಗೇ ಹೊರಟವಳಿಗೆಯಾಕೊಪಾಪ ಅನಿಸಿ,‘ಸರಿ ಬಾ ನನ್ನ ಜೊತೆಗೆ’ಅಂತ ಕರೆದರೆಬರಲಿಲ್ಲ.ಈ ಅಗ್ಗದಶಬ್ದಕ್ಕೆಬರೀ ಬಿಗುಮಾನ.ಕವಿತೆಯಲ್ಲೀಗ ಏನಾದರೂಕಳೆದಿದ್ದರೆದೇವರಾಣೆಗೂ ತಪ್ಪುನನ್ನದಲ್ಲ. + +ಅಂಗಳದಲ್ಲಿ ಮಳೆಬಿದ್ದು,ಮಣ್ಣಿನ ಗಂಧಮೂಗು ತುಂಬಿದ್ದುಎರಡೇ ಕ್ಷಣ.ಹಾಕಿದ್ದ ರಂಗೋಲಿಯೆಲ್ಲಕಲಸಿಹರಿದು,ಶಬ್ದದ ಬಡಿವಾರಕ್ಕೂಮುದ್ದುಬಂದಂತೆನಿಸಿ,ಏನೋನಿರಾಳ.ಕವಿತೆ ಎಷ್ಟುಸರಳ! + +ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ. \ No newline at end of file diff --git a/Kenda Sampige/article_567.txt b/Kenda Sampige/article_567.txt new file mode 100644 index 0000000000000000000000000000000000000000..0ba4983f2c127f5725435098447ee8d7cf8bc239 --- /dev/null +++ b/Kenda Sampige/article_567.txt @@ -0,0 +1,27 @@ +ತನ್ನ ಮಗನಲ್ಲಿ ತಾನು ಮುಂದರಿಯಲು ಬೇಕಾದ್ದು ತನ್ನ ಮತ್ತು ಮಗನ ಮನಸ್ಸಿನ ಆತ್ಮಗಳು ಒಂದೇ ಟ್ಯೂನಿನಲ್ಲಿ ಇರಬೇಕಾದ್ದು ಎಂಬುದನ್ನು ಅರ್ಥ ಮಾಡಿಕೊಂಡ ಶಿವರಾಮ ಅದನ್ನು ಬಹುತೇಕ ಸಾಧಿಸಿಬಿಟ್ಟಿದ್ದ. ಅದಕ್ಕಾಗಿ ಮಗ ಕೂಡ ಸಂಸ್ಕೃತ ವಿದ್ವಾಂಸನಾಗಬೇಕೆಂದೇನೂ ಇಲ್ಲ. ಆದರೆ ಮಗನ ಮನಸ್ಸಿನಲ್ಲಿ ತಾನುಂಟುಮಾಡಿರುವ ಟ್ಯೂನನ್ನು ಭಂಗಗೊಳಿಸುವ ಹೆಣ್ಣನ್ನು ಅವನು ಹೆಂಡತಿಯಾಗಿ ಪಡೆಯಬಾರದು ಎಂಬುದು ಬಹಳ ಮುಖ್ಯವಾಗಿತ್ತು. ಯಾಕೆಂದರೆ, ಮಗನ ಆತ್ಮವನ್ನು ಎಷ್ಟು ಚೆನ್ನಾಗಿ ಟ್ಯೂನ್ ಮಾಡಿಟ್ಟರೂ ಹೆಂಡತಿಯಾಗಿ ಬಂದವಳು ಆ ಟ್ಯೂನನ್ನು ಸಂಪೂರ್ಣವಾಗಿ ಕೆಡಿಸಿದ್ದನ್ನು ಶಿವರಾಮ ಬಹಳ ಕಡೆ ಕಂಡಿದ್ದ. ಆದ್ದರಿಂದ ತಮ್ಮ ಸಂಬಂಧಿಕರ ಪೈಕಿ ಒಂದು ಹುಡುಗಿಯನ್ನು ಆಯ್ಕೆ ಮಾಡಿ ಚಿಕ್ಕಂದಿನಿಂದಲೇ ಅವಳ ಮೇಲೆ ಕಣ್ಣಿರಿಸಿದ. ಐದಾರು ವರ್ಷಗಳ ಬಳಿಕ ಒಂದು ದಿನ ಅವಳ ತಾಯಿ ತಂದೆಯರೊಡನೆ ಮಾತಾಡಿ, ಅವರು ಸಂಬಂಧಕ್ಕೆ ಒಪ್ಪಿಕೊಂಡಾಗ, ‘ಅವನ ಓದು ಮುಗಿಯಲಿ. ಅಲ್ಲಿಯ ತನಕ ಈ ವಿಷಯ ಗುಟ್ಟಾಗಿಯೇ ಇರಲಿ’ ಎಂದ. ಗುಟ್ಟಾಗಿಯೇ ಇಡುತ್ತೇವೆ ಎನ್ನುವ ವಾಗ್ದಾನವನ್ನು ಕೂಡ ಪಡೆದುಕೊಂಡ. + +ತನಗೆ ಇಂಗ್ಲಿಷ್ ಕಲಿಯಲಾಗಲಿಲ್ಲ, ಆದರೆ ಮಗ ಇಂಗ್ಲಿಷಿನಿಂದ ವಂಚಿತನಾಗುವುದು ಬೇಡ ಎಂದು ಮಗನನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸಿದ. ಆದರೆ ಎರಡನೆಯ ಭಾಷೆಯಾಗಿ ಕನ್ನಡದ ಬದಲು ಸಂಸ್ಕೃತವನ್ನು ಆಯ್ಕೆ ಮಾಡಿಸಿದ. ಮಗನಿಗೆ ಸಂಸ್ಕೃತ ಕರಾತಲಮಲಕವಾಗಬೇಕೆಂದು ಸತತವಾಗಿ ಸಂಸ್ಕೃತಾಭ್ಯಾಸ ಮಾಡಿಸಿದ. ಹೀಗಾಗಿ ಹನ್ನೆರಡನೇ ತರಗತಿ ಕೊನೆಯ ಪರೀಕ್ಷೆಯಲ್ಲಿ ಎಂಬತ್ತೈದು ಪರ್ಸೆಂಟ್ ಅಂಕ ಪಡೆದ ಶಿವರಾಮ ಇಂಗ್ಲಿಷ್‌ನಲ್ಲಿ ಮಾಸ್ಟರ್ ಆಗುವುದರ ಜೊತೆಗೆ ಸಂಸ್ಕೃತದಲ್ಲಿಯೂ ಪಂಡಿತ ಆಗಿದ್ದ. ಮುಂದಕ್ಕೆ ಸಾಫ್ಟ್‌ವೇರ್ ಇಂಜಿನಿಯರಿಂಗ್ ಡಿಗ್ರಿ, ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ, ಸಂಸ್ಕೃತದಲ್ಲಿ ಎಂ.ಎ. ಎಂಬ ಮೂರು ದಾರಿಗಳು ಅವನ ಮುಂದೆ ಇದ್ದುವು. “ನೀನು ಸಂಸ್ಕೃತ ಎಂ. ಎ. ಮಾಡು. ಮನೆಯಲ್ಲಿ ಇಂಗ್ಲಿಷ್ ಓದು” ಎಂದ ಶಿವರಾಮ. ಶಿವರಾಮ ಮತ್ತು ಅವನ ಮಗ ಇಬ್ಬರನ್ನೂ ಹುಚ್ಚರು ಎನ್ನದವರೇ ಇರಲಿಲ್ಲ. + +ಪಕ್ಕದ ಮನೆಯವನ ಮಗ ಇಂಜಿನಿಯರಾಗಲಿ ಎನ್ನುವ ಬಯಕೆ ನೂರರಲ್ಲಿ ಒಬ್ಬರಿಗೂ ಇಲ್ಲ. ಆದರೆ ಕೆಲವರು ತನ್ನ ಮಗ ಇಂಜಿನಿಯರಾಗುತ್ತಿರುವುದಕ್ಕೆ ಪಡುವ ಖುಷಿಯಷ್ಟೇ ಪಕ್ಕದ ಮನೆಯವನ ಮಗ ಇಂಜಿನಿಯರಾಗದಿರುವುದನ್ನು ಕಂಡು ಉಂಟಾಗುವ ಖುಷಿಯನ್ನು ಬಾಯಿ ಮುಚ್ಚಿ ಅನುಭವಿಸಿದರೆ, ಇನ್ನು ಕೆಲವರು ‘ಛೆ’ ಎಂದು ಹೇಳಿಯೋ ‘ಹುಚ್ಚ’ ಎಂದು ಕರೆದೋ ಖುಷಿಪಟ್ಟುಕೊಳ್ಳುತ್ತಾರೆ. ಅಂಥವರು ಶಿವರಾಮನನ್ನು ಕಂಡು ‘ಅಪ್ಪನೂ ಹುಚ್ಚ ಮಗನೂ ಹುಚ್ಚ’ ಎನ್ನದಿರುವರೆ? + +“ನೀನು ಅವರಿವರು ಹೇಳುವುದಕ್ಕೆ ಕಿವಿ ಕೊಡಬೇಡ. ಬಡತನದ ಕಾರಣದಿಂದ ಅಥವಾ ಬೇರೆ ಕಾರಣದಿಂದ ಬುದ್ಧಿವಂತ ಹುಡುಗ ಡಾಕ್ಟರೋ ಇಂಜಿನಿಯರೋ ಆಗುವ ಕೋರ್ಸಿಗೆ ಸೇರಲು ಆಗದಿದ್ದರೆ ‘ಹುಚ್ಚ’ ಎಂದು ಹೇಳಿ ನಗಲು ಜನಗಳಿಗೆ ಒಂದು ಅವಕಾಶ. ಸತ್ಯ ಏನೆಂದು ಜನಕ್ಕೆ ತಿಳಿದರೂ ಒಂದೇ ತಿಳಿಯದಿದ್ದರೂ ಒಂದೇ’ ಎಂದ ಶಿವರಾಮ. ಮಗ ಸಾಫ್ಟ್‌ವೇರ್ ಇಂಜಿನಿಯರನಾಗಬಾರದು ಎಂಬುದೇನೂ ಅವನ ಇರಾದೆಯಾಗಿರಲಿಲ್ಲ. ಮಗ ಇನ್ನಷ್ಟು ಕಾಲ ತನ್ನ ಜತೆಯಲ್ಲೇ ಇರಬೇಕೆನ್ನುವುದು ಅವನ ಇರಾದೆ. ಯಾಕೆಂದರೆ, ಅವನ ಭವಿಷ್ಯದಲ್ಲಿಯೇ ತನ್ನ ಪುನರ್ಜನ್ಮವಿರುವುದರಿಂದ ಅದಕ್ಕಾಗಿ ಅವನನ್ನು ಇನ್ನೂ ‘ಟ್ಯೂನ್’ ಮಾಡಲಿಕ್ಕೆ ಇತ್ತು. + +ಮಗ ಶಿವರಾಮ ಸಂಸ್ಕೃತದಲ್ಲಿ ಯೂನಿವರ್ಸಿಟಿಗೆ ಫಸ್ಟ್ ರಾಂಕ್ ಪಡೆದು ಎಂ.ಎ. ಮುಗಿಸಿದ. ಕಾಲೇಜು ಮತ್ತು ವಿಶ್ವವಿದ್ಯಾಲಯದಲ್ಲಿರುವಾಗ ಸಂಸ್ಕೃತ ಮತ್ತು ಇಂಗ್ಲಿಷ್ ಎರಡು ಭಾಷೆಯಲ್ಲಿಯೂ ಭಾಷಣ ಸ್ಪರ್ಧೆಗಳಲ್ಲಿ, ಪ್ರಬಂಧ ಸ್ಪರ್ಧೆಗಳಲ್ಲಿ ಹಲವು ಸಲ ವಿಶ್ವವಿದ್ಯಾನಿಲಯ ಮಟ್ಟದ ಪ್ರಥಮ ಬಹುಮಾನ ಪಡೆದ ಶಿವರಾಮನಿಗೆ ಅವನು ಅರ್ಜಿ ಹಾಕದೇನೇ ಒಂದು ಮಲ್ಟಿ ನ್ಯಾಷನಲ್ ಕಂಪೆನಿಯಿಂದ ನೇಮಕಾತಿ ಪತ್ರ ಬಂತು. ಅವನನ್ನು ‘ಲಿಂಗ್ವಿಸ್ಟಿಕ್ ಸಾಫ್ಟ್‌ವೇರ್ ಇಂಜಿನಿಯರ್’ ಎಂದು ಕಂಪೆನಿ ಕರೆದಿತ್ತು. ತಿಂಗಳಿಗೆ ಐವತ್ತು ಸಾವಿರ ಸಂಬಳ. ತನ್ನ ಮಗನಲ್ಲಿ ಮುಂದರಿಯುವುದಕ್ಕೆ ವ್ಯತಿರಿಕ್ತವಾದುದೇನು ಶಿವರಾಮನಿಗೆ ಆ ತನಕ ಎದುರಾಗಲಿಲ್ಲ. ಬಡತನದಿಂದಾಗಿ ಬೇಗನೆ ಮದುವೆಯಾಗಲು ಅವನಿಂದ ಆಗಿರಲಿಲ್ಲ. ಮದುವೆಯಾಗುವಾಗ ಮೂವತ್ತೆರಡಾಗಿತ್ತು. ಆದರೆ ಮಗ ಅಷ್ಟು ವರ್ಷ ಕಾಯುವ ಅಗತ್ಯ ಕಾಣಿಸಲಿಲ್ಲ. ತಾನು ಮಗನಲ್ಲಿ ಮುಂದುವರಿಯಲು ಮಗ ವಿವಾಹಿತನಾಗುವುದು ಅಡ್ಡಿಯಾಗಲಾರದೆನಿಸಿತು. ಆದುದರಿಂದ ಅವನ ಮದುವೆ ಇಪ್ಪತ್ತರಡರಲ್ಲೇ ನಡೆಯಲಿ ಎಂದು ತೀರ್ಮಾನಿಸಿದ. ಮಗನೊಡನೆ ಈ ವಿಚಾರ ಎತ್ತಿದ ಕೂಡಲೇ ಅವನು ಒಪ್ಪಿಕೊಂಡ. ತಾನು ಆಯ್ಕೆ ಮಾಡಿದ ಹುಡುಗಿಯನ್ನು ತೋರಿಸಿದಾಗ ಅದಕ್ಕೂ ಕೂಡಲೇ ಒಪ್ಪಿಕೊಂಡ. ತಾನೂ ಹೀಗೇ ನಡೆದುಕೊಂಡದ್ದು ಎಂಬುದು ನೆನಪಿಗೆ ಬಂದು, ತನ್ನ ಮಗನಲ್ಲಿ ತಾನೀಗಲೇ ಮುಂದರಿಯುತ್ತಿದ್ದೇನೆ ಎಂದು ಶಿವರಾಮನಿಗೆ ಖಾತ್ರಿಯಾಯಿತು. + +ಆದರೆ ಈಗ ಮಗ ತನ್ನಿಂದ ದೂರವಾಗುವುದು ತನ್ನ ಉದ್ದೇಶ ಸಾಧನೆಗೆ ಅಡ್ಡಿಯಾಗುತ್ತದೆ ಎಂದು ಶಿವರಾಮನಿಗನಿಸಿತು. “ದೊಡ್ಡ ಸಂಬಳದ ಕೆಲಸವೇನೋ ನಿಜ. ಆದರೆ ನೀನು ನಮ್ಮಿಂದ ದೂರ ಇರುವ ಬಗ್ಗೆ ನಮ್ಗೆ ಚಿಂತೆಯಾಗಿದೆ. ಇನ್ನು ಒಂದು ವರ್ಷದಲ್ಲಿ ನಂಗೆ ರಿಟೈರಾಗುತ್ತೆ. ಅನಂತರ ಇಲ್ಲಿ ನಾವಿಬ್ಬರೇ ಆಗುತ್ತೇವೆ” ಎಂದು ಹೇಳಿದಾಗ ಮಗ ಶಿವರಾಮ “ಇಲ್ಲೇ ಇದ್ದುಕೊಂಡು ಏನಾಗಬೇಕಾಗಿದೆ?’ ಈ ಮನೆಯನ್ನ ಮಾರಿ ನಮ್ಮ ಜೊತೆ ಇರಿ” ಎಂದು ಹೇಳಿದ. ಅದೇ ಸರಿ ಎಂದು ತೀರ್ಮಾನಿಸಿ ಆರು ತಿಂಗಳ ರಜೆ ಹಾಕಿ ಹೆಂಡತಿಯನ್ನೂ ಕರೆದುಕೊಂಡು ಮಗ ಹೋಗುವಾಗಲೇ ಮಗನೊಡನೆ ದೆಹಲಿಗೆ ಹೋದ. ಆರು ತಿಂಗಳ ನಂತರ ಮರಳಿ ಬಂದು, ಕೆಲಸದಿಂದ ನಿವೃತ್ತಿಯಾದ ಮೇಲೆ, ಮನೆ ಮಾರಿ ಗಂಡ ಹೆಂಡತಿ ದೆಹಲಿಗೆ ಹೋದರು.ಆದರೆ ದೆಹಲಿಗೆ ಹೋದ ಮರುದಿನವೇ ಶಿವರಾಮನಿಗೆ ತಟ್ಟನೆ ತೀವ್ರವಾದ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ಕೊಂಡೊಯ್ದ ಶಿವರಾಮ. ಐಸೀಯೂವಿನಲ್ಲಿ ಇರಿಸಲಾಯಿತು. ಕೂಡಲೇ ಬೈಪಾಸು ಸರ್ಜರಿಯಾಗಬೇಕು ಎಂದರು ಡಾಕ್ಟರ್. ಮರುದಿನವೇ ಸರ್ಜರಿ ಕೂಡ ನಡೆಯಿತು. ಶಿವರಾಮ ಕೆಲಸಕ್ಕೆ ರಜೆ ಹಾಕಿ, ರಾತ್ರಿ ಹಗಲು ತಂದೆಯ ಬಳಿಯೇ ಉಳಿದ. + +ಶಸ್ತ್ರಕ್ರಿಯೆ ನಡೆಸಲು ತನ್ನ ಪ್ರಜ್ಞೆ ತಪ್ಪಿಸಿದ ನಂತರ ಪುನಃ ಪ್ರಜ್ಞೆ ಬರುವ ವರೆಗೆ ತಾನು ಎಲ್ಲಿದ್ದೆ ಎಂದು ಶಿವರಾಮ ಯೋಚಿಸಿದ. ಅಪ್ರಜ್ಞಾವಸ್ಥೆಯಿಂದ ಅರೆಪ್ರಜ್ಞಾವಸ್ಥೆಗೆ, ಅರೆಪ್ರಜ್ಞಾವಸ್ಥೆಯಿಂದ ಪ್ರಜ್ಞಾವಸ್ಥೆಗೆ ಮರಳಿದ ಪ್ರಜ್ಞಾಪ್ರಯಾಣವನ್ನು ನೆನಪಿಸಿಕೊಂಡ. ಬಹಳ ಹೊತ್ತು ತಾನು ಪೂರ್ಣವಾಗಿ ತನ್ನೊಳಗಿರಲಿಲ್ಲ. ಈಗಲೂ ಇಲ್ಲ ಎಂದನಿಸಿತು. ಒಂದು ವಾರದ ಬಳಿಕ ಡಾಕ್ಟರು ‘ಇನ್ನು ಮನೆಗೆ ಕರೆದುಕೊಂಡು ಹೋಗಬಹುದು’ ಎಂದರು. ಶಿವರಾಮ ತಂದೆಯನ್ನು ಮನೆಗೆ ಕರೆದುಕೊಂಡು ಬಂದ. ಮನೆಗೆ ಮರಳಿದ ಶಿವರಾಮನಿಗೆ ಕೆಲವೊಮ್ಮೆ ತಾನಿನ್ನೂ ಅರೆಪ್ರಜ್ಞಾವಸ್ಥೆಯಲ್ಲೇ ಇದ್ದೇನೆ ಎಂದನಿಸುತ್ತಿತ್ತು. ಬಹುಶಃ ಔಷಧಿಗಳ ಪ್ರಭಾವದಿಂದ ಹಾಗನಿಸುತ್ತಿರಬಹುದೆ ಎನ್ನುವ ಅನುಮಾನ ಕೂಡ ಕಾಡಿತು. + +ಶಿವರಾಮನ ಹೆಂಡತಿ ಗಂಡ ಆಸ್ಪತ್ರೆಯಿಂದ ಬಂದ ಮೊದಲ ದಿನವೇ ಅವನಿಗೆ ಇಷ್ಟವಾದ ಹಾಗಲ ಕಾಯಿ ಪಲ್ಯ ಮಾಡುವ ನಿರ್ಧಾರ ಮಾಡಿದಳು. ಆದರೆ ಅವಳ ಬಲಗೈ ಬೆರಳಿಗೆ ಈರುಳ್ಳಿ ಹೆಚ್ಚುವಾಗ ಚಾಕು ತಾಗಿ ಗಾಯವಾಗಿದ್ದುದರಿಂದ ಅವಳ ನಿರ್ದೇಶನದಲ್ಲಿ ಅಡಿಗೆ ಕೆಲಸವನ್ನು ಸೊಸೆ ಸುಮನ ನಿಭಾಯಿಸುತ್ತಿದ್ದಳು. ಅತ್ತೆ ಪ್ರತಿ ಸಲ ಹಾಗಲಕಾಯಿ ಪಲ್ಯ ಮಾಡುವಾಗಲೂ ಅತ್ತೆಯ ಬಳಿಯೇ ನಿಂತು ನೋಡುತ್ತಿದ್ದಳು. ಕಹಿ ಹಾಗಲಕಾಯಿ ಪಲ್ಯಕ್ಕೆ ಅಪೂರ್ವವಾದ ರುಚಿ ಅಂಟಿಸುವ ಟೆಕ್ನಿಕಲ್ ಜ್ಞಾನ ಅವಳಿಗೆ ಕಾಣಿಸಲೇ ಇಲ್ಲ. ಇವತ್ತು ತಯಾರಾಗಬೇಕಾಗಿದ್ದ ಹಾಗಲಕಾಯಿ ಪಲ್ಯ ಸಾಧಾರಣವಾದುದಾಗಿರಲಿಲ್ಲ. ಯಾಕೆಂದರೆ, ‘ಉಪ್ಪು ಮತ್ತು ಸಕ್ಕರೆಯನ್ನು ಸಂಪೂರ್ಣವಾಗಿ ವರ್ಜಿಸಬೇಕು’ ಎಂದು ಡಾಕ್ಟರ್ ಹೇಳಿದ್ದರು. ಉಪ್ಪು ಮತ್ತು ಬೆಲ್ಲ ಹಾಕದೆ ಹಾಗಲಕಾಯಿಗೆ ರುಚಿ ಬರುವುದು ಹೇಗೆ? + +ಶಿವರಾಮ ಬದುಕು ಎಂಬ ಹಾಗಲಕಾಯಿಯಲ್ಲಿ ಸುಖ ಎಂಬ ರುಚಿಯನ್ನು ‘ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ’ ಎಂಬಂತೆ ಹಿಂದು ಮುಂದು ನೋಡದೆ ಕಹಿಯೇ ಸಿಹಿಯೆಂಬಂತೆ ಪಲ್ಯ, ಸಾಂಬಾರು, ಗೊಜ್ಜು, ಚಟ್ಣಿ, ಬಜಿ, ತಂಬ್ಳಿ ಮುಂತಾದ ವೈವಿಧ್ಯಗಳಲ್ಲಿ ಎಲ್ಲವನ್ನೂ ಮೆಲ್ಲುವವನಾಗಿದ್ದರೂ ಹಲವು ಇಂಜಕ್ಷನ್ ಚುಚ್ಚಿಸಿಕೊಂಡು, ನೂರಾರು ಕಹಿಗುಳಿಗೆಗಳನ್ನು ನುಂಗಿ ಆಸ್ಪತ್ರೆಯಿಂದ ಮನೆಗೆ ಮರಳಿದ ಗಂಡನಿಗೆ ಉಪ್ಪು ಬೆಲ್ಲವಿಲ್ಲದ ಹಾಗಲಕಾಯಿ ಪಲ್ಯವನ್ನು ಸೊಸೆಯ ಕೈಯಲ್ಲಿ ಮಾಡಿಸಲು ಸುಶೀಲೆಗೆ ಭರ್ತಿ ಅರ್ಧಗಂಟೆ ಬೇಕಾಯಿತು. ಇದೇನು ಅಮ್ಮ ಮತ್ತು ಸುಮನ ಮಾಡುತ್ತಿದ್ದ ಹೊಸ ಅಡುಗೆ ಎಂದು ಶಿವರಾಮ ಆಫೀಸಿಗೆ ಹೊರಡುವ ನಡುವೆ ಹಲವು ಸಲ ಬಂದು ಇಣುಕಿ ಹೋಗಿದ್ದ. + +ಶಿವರಾಮ ಊಟಕ್ಕೆ ಕುಳಿತಾಗ ಅವನೆದುರೇ ಊಟಕ್ಕೆ ಕುಳಿತ ಮಗ ಶಿವರಾಮ ಕೂಡ ಉಪ್ಪು ಬೆಲ್ಲದ ಸ್ಪರ್ಶವಿಲ್ಲದ ಹಾಗಲಕಾಯಿ ಪಲ್ಯ ಹಾಕಿಸಿಕೊಂಡು ಮೆಲ್ಲುತ್ತಿರುವುದನ್ನು ಕಂಡು ಅದು ತಾನೇ ಎಂದನಿಸಿತು. ಊಟಕ್ಕೆ ಕುರ್ಚಿಯಲ್ಲಿ ಅವನು ಕುಳಿತ ಭಂಗಿಯೂ ತನ್ನದೇ ಎಂದನಿಸಿತು. ತಾಯಿ ‘ಸ್ವಲ್ಪ ಅನ್ನ ಹಾಕಲೆ?’ ಎಂದು ಬಡಿಸಲು ಅನ್ನ ತಂದಾಗ, ‘ಎರಡ್ನೇ ಸಲ ಅನ್ನ ತರ್‌ಬೇಡ ಅಂತ ಎಷ್ಟು ಸಲ ಅಮ್ಮ ನಿಂಗೆ ಹೇಳೋದು?’ ಎಂದು ಅವನು ಸಿಡುಕಿದ ರೀತಿಯೂ ಶಿವರಾಮ ಚಿಕ್ಕಂದಿನಲ್ಲಿ ತನ್ನ ತಾಯಿಯ ಜೊತೆ ಸಿಡುಕುತ್ತಿದ್ದಂತೆಯೇ ಇತ್ತು.ಅನಂತರ ಶಿವರಾಮ ಮಲಗಿದಲ್ಲಿಂದಲೇ ತನ್ನ ಮಗನ ಚಲನವಲನಗಳನ್ನು ಅವಲೋಕಿಸಿದ. ಅವನಲ್ಲಿ ಬಹಳ ಬದಲಾವಣೆ ಕಾಣಿಸಿತು. ತನ್ನಂತೆಯೇ ಬಿಳಿಷರ್ಟು ಹಾಕಿಕೊಳ್ಳುತ್ತಿರುವುದನ್ನು ಕಂಡ. ತನ್ನಂತೆಯೇ ಹೆಂಡತಿಯ ಮುಖವನ್ನು ನೇರವಾಗಿ ನೋಡದೆ ತಲೆ ಓರೆಯಾಗಿರಿಸಿ ಮಾತಾಡುವುದನ್ನು ಕಂಡ. ತನ್ನಂತೆಯೇ ಹೆಂಡತಿಯನ್ನು ಕರೆಯುತ್ತಾ, “ಎಲ್ಲಿ ಹೋಯಿತು ನನ್ನ ಷರ್ಟು? ಎಲ್ಲಿ ಹೋಯಿತು ನನ್ನ ಚಡ್ಡಿ? ಎಲ್ಲಿ ಹೋಯಿತು ನನ್ನ ಪ್ಯಾಂಟು?” ಎಂದು ಕೇಳುತ್ತಿದ್ದುದನ್ನು ಕಂಡ. + +ಅಪ್ಪ ಶಿವರಾಮನಿಗೆ ಬೆಳ್ಳುಳ್ಳಿ ವಗ್ಗರಣೆ ವಾಸನೆ ಮೂಗಿಗೆ ಬಡಿದ ಕ್ಷಣವೇ ಮೂರು ಸೀನು ಬರುತ್ತಿತ್ತು. ಮಗ ಶಿವರಾಮನಿಗೆ ಏನೂ ಆಗುತ್ತಿರಲಿಲ್ಲ. ಈಗ ಅವನಿಗೂ ಮೂರು ಸೀನು ಬರತೊಡಗಿತು. ಅಪ್ಪ ಶಿವರಾಮ ದಿನಾಲು ನುಣ್ಣಗೆ ಗಡ್ಡ ಬೋಳಿಸಿಕೊಳ್ಳುತ್ತಿದ್ದ. ಮಗ ಶಿವರಾಮ ವಾರಕ್ಕೆರಡು ಬಾರಿ ಕ್ಷೌರದಂಗಡಿಗೆ ಹೋಗಿ ಗಿಡ್ಡಗೆ ಗಡ್ಡ ಕತ್ತರಿಸಿಕೊಂಡು ಬರುತ್ತಿದ್ದ. ಈಗ ಅವನೂ ಅಪ್ಪನಂತೆ ದಿನವೂ ಮುಖಕ್ಷೌರ ಮಾಡಿಕೊಳ್ಳತೊಡಗಿದ. ಅಪ್ಪ ಶಿವರಾಮ ಮನೆ ಬಾಗಿಲಿಗೆ ಬಂದು ‘ಅಮ್ಮಾ ಭಿಕ್ಷ’ ಎಂದು ಕೂಗುವ ಭಿಕ್ಷುಕರಿಗೆ, ‘ಮುಂದಕ್ಕೆ ಹೋಗಪ್ಪಾ’ ಎನ್ನುತ್ತಿದ್ದ. ಮಗ ಶಿವರಾಮ, ‘ಏನೂ ಇಲ್ಲ ಹೋಗು’ ಎನ್ನುತ್ತಿದ್ದ. ಈಗ ಅವನು ಕೂಡ ‘ಮುಂದಕ್ಕೆ ಹೋಗು’ ಎನ್ನತೊಡಗಿದ. ತಾನೀಗಲೇ ಮಗನಲ್ಲಿ ಮುಕ್ಕಾಲು ಪಾಲು ಮುಂದರಿದಾಗಿದೆ, ಇದು ಬಹುತೇಕ ಪುನರ್ಜನ್ಮವೇ ಎಂದು ಅವನಿಗನಿಸಿತು. + +ದಿನದಿಂದ ದಿನಕ್ಕೆ ವೇಗವಾಗಿ ತಾನು ತನ್ನ ಮಗನೇ ಆಗಿ ಬದಲಾಗುತ್ತಿರುವುದನ್ನು ಶಿವರಾಮ ಸುಮಾರು ಮೂರು ವರ್ಷಗಳ ಕಾಲ ವೀಕ್ಷಿಸಿ ಇನ್ನೇನು ತಾನೇ ಅವನಾಗಲು ಉಳಿದಿರುವುದು ಒಂದು ಪರ್ಸೆಂಟ್ ಮಾತ್ರ ಎಂದನಿಸಿತು. ಮರುದಿನ ಅವನು ನಿದ್ರೆಯಲ್ಲಿದ್ದಾಗ ಕೊನೆಯುಸಿರೆಳೆದ. + +ಮಗನಾಗಿ ಪರಿವರ್ತನೆಗೊಳ್ಳಲಿಕ್ಕೋಸ್ಕರ ತನ್ನಿಂದ ಮಗನಿಗೆ ದಾಟಿಸಲು ಉಳಿದಿದ್ದುದು ಪೂರ್ವ ಜನ್ಮದ ಸ್ಮರಣೆ ಮಾತ್ರವಾಗಿತ್ತು. ಪ್ರಸಕ್ತ ಜನ್ಮವಿರುವಾಗಲೇ ಅದು ಪೂರ್ವ ಜನ್ಮದ ಸ್ಮರಣೆಯಾಗದು, ಪ್ರಸಕ್ತ ಜನ್ಮ ಅಂತ್ಯಗೊಳ್ಳದೆ ಪೂರ್ವ ಜನ್ಮದ ಸ್ಮರಣೆಯನ್ನು ಉತ್ತರ ಜನ್ಮಕ್ಕೆ ದಾಟಿಸಲಾಗದು ಎನ್ನುವ ಟೆಕ್ನಿಕಲ್ ಜ್ಞಾನ ಅಪ್ಪ ಶಿವರಾಮನಿಗೆ ಇರಲಿಲ. ಹಾಗಾಗಿ ಅಪ್ಪನ ಸಕಲ ಗುಣಗಳನ್ನೂ ಪಡೆದ ಮಗ ಶಿವರಾಮ ಮಗ ಶಿವರಾಮನಾಗಿಯೇ ಮುಂದುವರಿದ. + +ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ \ No newline at end of file diff --git a/Kenda Sampige/article_568.txt b/Kenda Sampige/article_568.txt new file mode 100644 index 0000000000000000000000000000000000000000..de4ea631901801f4ae9ca4a613522a791c871b1e --- /dev/null +++ b/Kenda Sampige/article_568.txt @@ -0,0 +1,15 @@ +ನನಗೆ ಮೀಯುವ ಹುಚ್ಚು + +ಅದೊಂದು ಮಧ್ಯಾಹ್ನ. ಹಾಗೆಂದುಕೊಂಡರೆ ರಣ ಬಿಸಿಲಲ್ಲನಿನ್ನ ಕಪ್ಪನೆಯ ಗಡ್ಡ, ಆಹಾ ಮಧ್ಯಾಹ್ನದ ಬೆಳ್ಳಗಿನ ಬೆಳಕುಮಣ್ಣಾದ ಎಲೆ ಕಿತ್ತುಕೊಂಡು ನಾನು ನಿನ್ನೊಡನೆ ನಡೆಯುತ್ತಿದ್ದೆ. + +ನನಗೆ ಮೀಯುವ ಹುಚ್ಚು.ಮಿಂದು ಬಂದು ಒದ್ದೆ ತಲೆಯ ನೀರು ಹನಿಯುತ್ತಾಅಲ್ಲಿ ಕುಳಿತುಕೊಳ್ಳ ಬೇಕು. ಅದೇಅಲ್ಲಿ ನನ್ನೊದೊಂದು ಹೊಳೆಯ ತೀರವಿದೆಹಾಗೇ ಗಾಳಿಗೆ ಮೈಯ್ಯೊಡ್ಡಿಕೊಂಡುಆ ತಂಪಿನಲ್ಲಿ ಕುಳಿತುಕೊಳ್ಳುವೆನೀನು ಅಲ್ಲಿ ಇರದಿದ್ದರೂ ಹಾಗೇ ಇರುವೆ + +ಒಂದು ರಾತ್ರಿಯ ಹೊತ್ತುಬೆಳದಿಂಗಳು, ಚಂದ್ರ,ಇವೆಲ್ಲವೂ ಇರಲಿ ಒಂದು ಮೂಲೆಯಲ್ಲಿಅಳುತ್ತೇನೆ ನಗುತ್ತೇನೆ, ಏನೋ ಒಂದು ಅನುಭವಿಸುತ್ತೇನೆ.ನಂತರ ಹೊರಗಿನ ಸದ್ದಿಗೆ ಯಾರೋ ಬಂದರೆಂದುನೀನು ಹೆದರಿ ಒಳಗೆ ಬಚ್ಚಿಡುತ್ತೀಯ.ಎಷ್ಟು ಚಂದ. ಚಂದವೆಂದರೆ ಹೀಗೇ.. ಕಳ್ಳತನ.ಇಷ್ಟಕ್ಕೂ ನಿನ್ನನ್ನು ಗಂಡೆಂದು ನಾನು ಬಯಸಲಿಲ್ಲನಿನ್ನ ಹಾಗೆ….ನೀನು ಹಾಗೇ..ಹಣೆಗೆ ಮುತ್ತಿಕ್ಕಿದ ಹಾಗೆ + +ಚಿಕ್ಕವನಿದ್ದಿರಬೇಕು ಅಂದುನಾನು ಕಣ್ಣು ಮುಚ್ಚಿದರೆ ಸಾಕು ಎಲ್ಲಾ ಕಾಣುವೆಮರುಕ್ಷಣ ಕಣ್ಣು ಬಿಡುವೆ ದೊಡ್ಡವನಾಗುತ್ತೀಯ + +ಈ ಬೆಳಗು..ನೋಡುತಡರಾತ್ರಿಗೆ ಬೇಡವೆಂದರೂ ಕಣ್ಣು ಮುಚ್ಚಿನಿನ್ನ ಮೈಯ್ಯ ಯಾವುದೋ ಮೂಲೆಯಲ್ಲಿಮುದುಡಿ ಮಲಗಿದ್ದೆ; ಮಲಗಿ ಮರುಳಿದ್ದೆಈ ಝಾವಕ್ಕೆ ನಿನ್ನ ತಟ್ಟಿ ಎಬ್ಬಿಸಿ ಬೆಸೆದದ್ದುಹೊರಡುವ ಮುಂಚಿನ ಸನ್ನಾಹಕ್ಕೆಹೊತ್ತು ಸಾಗುವಾಗ ನೀನಿತ್ತ ಬೆನ್ನಿನತಾಪವೊಂದು ಸಾಕು ಸಾವಿನ ತನಕ + +ನನಗೆ ಮರುಳಲ್ಲನಾನೇ ಹೇಳುವ ನಿನ್ನದೇ ಮಾತುಗಳುನನಗೆ ಕೇಳುತ್ತದೆ,ನಾನು ಹೇಳುವುದು ನೀನು ಕೇಳುವುದುಈ ಇಬ್ಬರ ಮುಂದೆ ಕುಳಿತು ಸುಖಿಸುತ್ತೇನೆಹೇಳುವುದನ್ನು ಹೇಳಬೇಕಲ್ಲ ನನಗಾದರೂಕಣ್ಣು ಮುಚ್ಚಿ ನೀನು ಏನೋ ಬೆಚ್ಚಗೆ ಕಾಣುವುದುಮಾತುಗಳು ನಗು ಬಿನ್ನಾಣ ಬೈಗುಳ ಎಲ್ಲವೂ ಹಾಗೇಮರೆತೇ ಬಿಡುವೆ ನೀನು ಎದುರಿಗಿರುವುದನ್ನು + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_569.txt b/Kenda Sampige/article_569.txt new file mode 100644 index 0000000000000000000000000000000000000000..197ada384b73ccd4a3a19f175f0747848da37608 --- /dev/null +++ b/Kenda Sampige/article_569.txt @@ -0,0 +1,35 @@ +byನಕ್ಷತ್ರ|Nov 24, 2017|ದಿನದ ಕವಿತೆ,ಸಾಹಿತ್ಯ| 0 Comments + +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byನಕ್ಷತ್ರ|Nov 24, 2017|ದಿನದ ಕವಿತೆ,ಸಾಹಿತ್ಯ| 0 Comments + +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. + +byನಕ್ಷತ್ರ|Nov 24, 2017|ದಿನದ ಅಗ್ರ ಬರಹ,ದಿನದ ಕವಿತೆ,ಸಾಹಿತ್ಯ| 0 Comments + +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. + +byನಕ್ಷತ್ರ|Nov 24, 2017|ದಿನದ ಅಗ್ರ ಬರಹ,ದಿನದ ಕವಿತೆ,ಸಾಹಿತ್ಯ| 0 Comments + +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. + +byನಕ್ಷತ್ರ|Nov 24, 2017|ದಿನದ ಕವಿತೆ,ಸಾಹಿತ್ಯ| 0 Comments + +ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. + +byನಾಗರಾಜ ವಸ್ತಾರೆ|Nov 22, 2017|ಸಾಹಿತ್ಯ| 0 Comments + +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. + +byನಾಗರಾಜ ವಸ್ತಾರೆ|Nov 22, 2017|ಸಾಹಿತ್ಯ| 0 Comments + +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. + +byನಾಗರಾಜ ವಸ್ತಾರೆ|Nov 22, 2017|ದಿನದ ಕವಿತೆ,ಸಾಹಿತ್ಯ| 1 Comment + +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. + +byನಾಗರಾಜ ವಸ್ತಾರೆ|Nov 22, 2017|ದಿನದ ಕವಿತೆ,ಸಾಹಿತ್ಯ| 0 Comments + +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. \ No newline at end of file diff --git a/Kenda Sampige/article_57.txt b/Kenda Sampige/article_57.txt new file mode 100644 index 0000000000000000000000000000000000000000..f2ad5c95b0cc9cfa2d2446ce1f0da0d73417da43 --- /dev/null +++ b/Kenda Sampige/article_57.txt @@ -0,0 +1,35 @@ +byಕೆಂಡಸಂಪಿಗೆ|Dec 2, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು.ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಅಧ್ಯಾಯ ನಿಮ್ಮ ಓದಿಗೆ + +byಕೆಂಡಸಂಪಿಗೆ|Dec 1, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ ಅಖಾಡ. ಭೂತ-ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್‌ಪೇಟೆಯಲ್ಲಿಯೇ. ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚೆಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ನೆಲದಲ್ಲಿ ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.ವೀರೇಂದ್ರ ರಾವಿಹಾಳ್‌ ಕಥಾ ಸಂಕಲನ “ಡಂಕಲ್‌ಪೇಟೆ”ಗೆ ಜಿ.ಪಿ. ಬಸವರಾಜು ಬರೆದ ಮುನ್ನುಡಿ + +byಸುಧಾ ಆಡುಕಳ|Nov 30, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು.ಸುಧಾ ಆಡುಕಳ ಅನುವಾದಿಸಿದ ಒರಿಯಾನ ಫಲಾಚಿ ಕಾದಂಬರಿ “ಎಂದೂ ಹುಟ್ಟದ ಮಗುವಿಗೆ ಪತ್ರ”ಕ್ಕೆ ಬರೆದ ಅವರ ಮಾತುಗಳು ಇಲ್ಲಿವೆ + +byಸಂಗೀತ ರವಿರಾಜ್‌ ಚೆಂಬು|Nov 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ.ಮಲ್ಲಿಕಾರ್ಜುನ ತೂಲಹಳ್ಳಿ ಕಥಾ ಸಂಕಲನ “ಅಗಸ್ತ್ಯ ನಕ್ಷತ್ರ” ಕುರಿತು ಸಂಗೀತಾ ರವಿರಾಜ್‌ ಚೆಂಬು ಬರಹ + +byಕೆಂಡಸಂಪಿಗೆ|Nov 27, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅವತ್ತು ಎಗ್ಸಿಬಿಶನ್ ಇತ್ತು. ನಾವೆಲ್ಲ ಕ್ಲಾಸ್ ರೂಮಲ್ಲಿ ಮಾಡೆಲ್ ಜೋಡಿಸ್ಕೊಂಡು ನಿಂತಿದ್ವಿ. ನನ್ ಪಕ್ಕ ಹಾಸನದೋನು ಇದ್ದ. ಯೂಕಲಿಪ್ಟಸ್ ಆಯಿಲ್‌ನಿಂದ ಸೊಳ್ಳೆ ಓಡಿಸ್ತೀನಿ ಅನ್ನೊ ಪ್ರಾಜೆಕ್ಟ್ ಮಾಡ್ಕಂಡ್ ಬಂದಿದ್ದ. ಹೆದರಬೇಡಿ ಅಂಗಂದ್ರೆ ನೀಲಗಿರಿ ಎಣ್ಣೆ ಆಟೆಯಾ. ನಾನು ಇಂಗ್ಲೀಷಲ್ಲಿ ಏನೇನು ಒದರಬೇಕು ಅಂತ ಮನ್ಸಲ್ಲೆ ಮಗ್ ಹೊಡಿತಿದ್ದೆ. ಬರಂಗಿಲ್ವಲ್ಲ. ಆ ಕ್ಷಣಕ್ಕೆ ಒಳ್ಳೆ ಸಿನಿಮಾ ಸೀನ್ ತರಹ ಈ ಹುಡುಗಿ ಬಂದ್ ಬಿಡ್ತು. ಎಗ್ಸಿಬಿಶನ್ ಇದ್ದಾಗ ಸ್ಪೋರ್ಟ್ಸ್ ಇರಲ್ಲ. ಹಂಗಾಗಿ ನಾನು ಯುನಿಫಾರ್ಮಲ್ಲಿದ್ರೆ ಅದು ಟ್ರ್ಯಾಕ್ ಸೂಟಲ್ಲಿ ಮಿಂಚ್ತಾ ಇತ್ತು.ಮಧು ವೈ.ಎನ್.‌ ಬರೆದ ಹೊಸ ಕಾದಂಬರಿ “ಕನಸೇ ಕಾಡುಮಲ್ಲಿಗೆ”ಯ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Nov 25, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು.ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ + +byಸಂಗೀತ ರವಿರಾಜ್‌ ಚೆಂಬು|Nov 21, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ಕಾವ್ಯ ಸೃಷ್ಠಿಯಲ್ಲಿ ಮಾಗುತ್ತ ಸಾಗುವುದೇ ಕವಿತೆ ಉತ್ತಮವಾಗುತ್ತ ಹೋಗುವುದರ ಲಕ್ಷಣ. ಅದು ಸಿದ್ಧಿಸಿದ್ದು ಇಲ್ಲಿಯೇ ನಮಗೆ ಸಂಕಲನದುದ್ದಕ್ಕೂ ತೋಚಿದಂತಾಗುತ್ತದೆ. ಬರೆದ ಕಾವ್ಯವೆಂಬ ಹೊರೆಯನ್ನು ಮೆಲ್ಲನೆ ಇಳಿಬಿಟ್ಟು ಹಗುರಾಗಿ, ಮತ್ತೆ ಹೊಚ್ಚ ಹೊಸ ಬಹುದೊಡ್ಡ ಹೊರೆ ಹೊತ್ತು ಮತ್ತೆ ಹಗುರಾಗುತ್ತಾರೆ ಎಂಬಂತೆ ನಮಗಿಲ್ಲಿ ಭಾಸವಾಗುತ್ತದೆ. ಪ್ರೇಮವೆನುದರ ಕುರಿತು ಹಲವು ರೀತಿಯ ಭಿನ್ನ ಭಿನ್ನ ವ್ಯಾಖ್ಯಾನಗಳು ನಮ್ಮನ್ನು ದಂಗುಬಡಿಸುತ್ತವೆ.ನಂದಿನಿ ಹೆದ್ದುರ್ಗ ಕವನ ಸಂಕಲನ “ಒಂದು ಆದಿಮ ಪ್ರೇಮ” ಕುರಿತು ಸಂಗೀತ ರವಿರಾಜ್‌ ಚೆಂಬು ಬರಹ + +byಕೆಂಡಸಂಪಿಗೆ|Nov 18, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿ ನಮಗರಿವಿಲ್ಲದಂತೆ ರಂಗ ಕ್ರಿಯೆಯೊಂದು ಜರಗುತ್ತಿರುವುದನ್ನು ನಾನು ಗಮನಿಸಿದೆ. ಪ್ರತಿಯೊಂದು ತಂಡ ಅವರ ಕ್ರಿಯಾವಿಧಿ ಆಚರಣೆಗಳನ್ನು ತೋರುವಾಗ, ಕಥನಗಳನ್ನು ಹೇಳುವಾಗ, ನೃತ್ಯ ಪ್ರದರ್ಶಿಸುವಾಗ ಉಳಿದ ತಂಡದವರು ಪ್ರೇಕ್ಷಕರಾಗಿರುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ನನಗೆ ಒಂದು ರೀತಿಯ ಕಳವಳ ಶುರುವಾಯಿತು. ಕಾಡಿನೊಳಗಿನ ಇವರ ಆಚರಣೆಯ, ಸಂಪ್ರದಾಯ, ಕ್ರಿಯಾವಿಧಿ, ನೃತ್ಯ ಸಂಭ್ರಮಗಳೆಲ್ಲವೂ ಹೊರಗೆ ನೋಡಲು ಕುತೂಹಲವೆನಿಸಿದರೂ ಶುಷ್ಕವೆನಿಸುತ್ತಿತ್ತು. ಸಂದರ್ಭಗಳಿಲ್ಲದೆ ವಾತಾವರಣವಿಲ್ಲದೆ ಭಾವನೆಗಳು ಅರಳುವುದಿಲ್ಲ. ಅನುಕರಿಸಿದರೂ ಅಣಕವೆಂಬಂತೆ ಕಾಣುತ್ತಿತ್ತು.ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ + +byಕೆಂಡಸಂಪಿಗೆ|Nov 11, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ನಾಟಕದ ಪ್ರಕ್ರಿಯೆಯಲ್ಲಿ ನಾಟಕಕಾರ, ನಿರ್ದೇಶಕ ಮುಂತಾದವರು ನಾಟಕವನ್ನು ಅವರವರ ದೃಷ್ಠಿಕೋನಗಳಲ್ಲಿ ಮಕ್ಕಳ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರೆ, ಒಮ್ಮೊಮ್ಮೆ ಮಕ್ಕಳು ಅದನ್ನು ಮತ್ತೊಂದು ನೆಲೆಯಲ್ಲಿ ಕಾಣಿಸಿಬಿಡುತ್ತಾರೆ. ನಾಟಕವು ಮಕ್ಕಳನ್ನು ಒಳಗೊಳ್ಳುವ ಪ್ರಕ್ರಿಯೆಯು ಅವರ ಮನಸುಗಳಲ್ಲಿ ಕತೆಗಳ ಬೀಜಗಳನ್ನು ಬಿತ್ತಿ ಅವರ ಕಲ್ಪನೆಗಳ ಕಾವಿನಲ್ಲಿ ಮೊಳೆಸಿ, ಬೆಳೆಸುತ್ತಾ ನಾಟಕವು ಅವರ ದೇಹ – ಧ್ವನಿಗಳನ್ನು ವ್ಯಾಪಿಸಿ ಆಕಾರ ಪಡೆದು ಅರಳಿಕೊಂಡತೆ ಆಗಬೇಕು.ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ \ No newline at end of file diff --git a/Kenda Sampige/article_570.txt b/Kenda Sampige/article_570.txt new file mode 100644 index 0000000000000000000000000000000000000000..381136d4e41ed527471739b70d4d40d175d880d7 --- /dev/null +++ b/Kenda Sampige/article_570.txt @@ -0,0 +1,33 @@ +ಯಾವತ್ತಿನ ಹಾಗೆ ಆ ದಿನ ಕೂಡ, ವಾಕಿಂಗ್ ರಿಂಕ್‍ನಲ್ಲಿ ನನ್ನ ಜೊತೆ ಹೆಜ್ಜೆ ಹಾಕುತ್ತಾ ಆಶಾಬೆನ್ ತಮ್ಮ ಮಗಳ ಗುಣಗಾನ ಮಾಡಲು ಶುರುವಿಟ್ಟರು. + +‘ನಿಜ್ವಾಗ್ಲೂ ಹೇಳ್ತಿದೀನಿ, ನನ್ನ ಮಗಳು ಅಂತಲ್ಲ. ಎಷ್ಟು ಒಳ್ಳೇ ಹುಡುಗಿ ಗೊತ್ತಾ? ಐಯಾಮ್ ರಿಯಲಿ ಸೋ ಪ್ರೌಡ್ ಆಫ್ ಹರ್’. + +ಒಮ್ಮೊಮ್ಮೆ ಅವರ ಮಾತು ಸ್ವಲ್ಪ ಅತಿ ಎನ್ನಿಸಿದರೂ ಅವರ ಮಗಳ ಕಥೆ ಕೇಳುವಲ್ಲಿ ನನಗೂ ಸಾಕಷ್ಟು ಆಸಕ್ತಿ ಇತ್ತು. ಇಂಡಿಯಾದಿಂದ ಬಂದು ಇಲ್ಲಿ ಮಕ್ಕಳನ್ನ ಹುಟ್ಟಿಸಿ, ಬೆಳೆಸಿ ದೊಡ್ಡವರನ್ನಾಗಿ ಮಾಡ್ತಿರೋ ಉಳಿದ ಬಹುತೇಕ ಅಮ್ಮ, ಅಪ್ಪಂದಿರೆಲ್ಲ ಈ ದೇಶದಲ್ಲಿ ಮಕ್ಕಳನ್ನು ಬೆಳೆಸೋದು(ಅದರಲ್ಲೂ ಹೆಣ್ಣು ಮಕ್ಕಳನ್ನು ಬೆಳೆಸೋದು), ಅವರಿಗೆ ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಕಲಿಸೋದು….. ಒಟ್ಟಿನಲ್ಲಿ ಅವರನ್ನು ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳೋದು ಎಷ್ಟು ಕಷ್ಟ ಅಂತ ರಾಗಮಾಲಿಕೆಯಲ್ಲಿ ಗೋಳು ಹೇಳಿಕೊಳ್ಳುವಾಗ ಈ ಆಶಾಬೆನ್ ಮಾತ್ರ ತಮ್ಮ ಲಾಡ್ಲಿ ಬೇಟಿ ಸೋನುವಿನ ಗುಣಗಾನ ಮಾಡುವುದು, ಕೇಳಲಿಕ್ಕೆ ಚೆಂದ ಅನ್ನಿಸುತ್ತಿತ್ತು. + +‘ಈಗ ವಾರದ ಹಿಂದೆ ಏನಾಯ್ತು ಗೊತ್ತಾ ವಿಜಿ?’‘ಹೇಳಿ, ಹೇಳಿ..’ ನಾನಂದೆ.‘ವೀಕೆಂಡಿನಲ್ಲಿ ಸೋನು ಮನೆಗೆ ಬಂದಿದ್ದಾಗ, ಸಮಯ ನೋಡಿ ನಾನೇ ಅವಳನ್ನ ಕೇಳ್ದೆ, ಇನ್ನೇನು ಒಂದು ವರ್ಷಕ್ಕೆ ನಿನ್ನ ಪಿ.ಜಿ ಮುಗಿದುಹೋಗತ್ತೆ. ಆಮೇಲಿಂದು ಅಂದರೆ ನಿನ್ನ ಮದುವೇದು ಏನು ಯೋಚನೆ ಮಾಡಿದೀಯ? ಅಂತ’‘ಹೌದಾ? ಅದಕ್ಕೆ ಏನು ಹೇಳಿದಳು ಮಗಳು?’‘ನಾನು ನಮ್ಮಮ್ಮನಿಗೆ ಹೇಳಿದ ಹಾಗೇ ಹೇಳಿದಳು. ನಂದು ಓದು ಮುಗಿದು, ಒಂದೆರಡು ವರ್ಷವಾದರೂ ನಾನು ಕೆಲ್ಸ ಮಾಡ್ಬೇಕು ಮಮ್ಮಿ. ಆಮೇಲೆ ಯೋಚನೆ ಮಾಡಿದ್ರಾಯ್ತು, ಮದ್ವೆ ವಿಷ್ಯ.. ಅಂತ.’‘ಅದೂ ಸರಿ ಬಿಡಿ…’ ನಾನು ಮಾತು ಮುಗಿಸುವಷ್ಟರಲ್ಲಿ ಆಶಾ ಹೇಳಿದರು,‘ಅಯ್ಯೋ ನಿನ್ಗೆ ಗೊತ್ತಾಗಲ್ಲಮ್ಮ. ನಿನ್ನ ಮಕ್ಕಳಿನ್ನೂ ಚಿಕ್ಕವರು. ಇಲ್ಲಿ ಇಂಡಿಯನ್ ಹುಡ್ಗೀರಿಗೆ ಮದುವೆಯಾಗೋದು ಎಷ್ಟು ಕಷ್ಟ ಗೊತ್ತಾ?’‘ಹೌದಾ?’‘ಹೌದು ಮತ್ತೆ, ಹುಡುಗರಿಗಾದರೆ ಅಂಥಾ ಕಷ್ಟ ಆಗೋದಿಲ್ಲ ನೋಡು. ಇಂಡಿಯಾಗೆ ಹೋಗ್ತಾರೆ, ಒಂದಷ್ಟು ಜನ ಹುಡುಗೀರನ್ನ ನೋಡ್ತಾರೆ, ಜಾತಕ-ಗೀತಕ ಸರಿ ಹೋಗಿ, ಹುಡುಗಿ ಜೊತೆಗೂ ಮಾತಾಡಿ… ಅಂತೂ ಮೂರೋ, ನಾಲ್ಕೋ ವಾರದೊಳಗೇ ಮದುವೇನೂ ಮುಗಿಸಿಕೊಂಡು ಬಂದೇ ಬಿಡ್ತಾರೆ. ಆ ಹುಡುಗೀರೂ ಅಷ್ಟೆ, ಚೆನ್ನಾಗಿ ಓದಿರ್ತಾರೆ, ಕೆಲ್ಸದಲ್ಲೂ ಇರ್ತಾರೆ, ಇಲ್ಲಿ ಬಂದ್ಮೇಲೂ ಅವರಿಗೆ ಇಷ್ಟ ಬಂದ ಹಾಗೆ ಇರ್ಬೋದು. ಏನೂ ತೊಂದರೆ ಆಗೋದಿಲ್ಲ. ಇಂಡಿಯಾದಲ್ಲೇ ಬೆಳೆದಿರೋದರಿಂದ ಗಂಡ, ಮನೆ ಅಂತ ಹೊಂದಿಕೊಳ್ಳೋದನ್ನೂ ಕಲಿತಿರ್ತಾರೆ. ಏನೂ ತೊಂದರೇನೇ ಬರೋದಿಲ್ಲ.’‘ಅರೆ, ಅಲ್ಲಿಂದ ಎಲ್ರನ್ನೂ ಬಿಟ್ಟು ಇಷ್ಟು ದೂರ ಬಂದು ಇರೋದೇ ಕಷ್ಟ ಆಗ್ಬೋದಲ್ವ? ಹೊಸದಾಗಿ ಆಗಿರೋ ಮದುವೆ, ಹುಡುಗ, ಹೊಸಾ ದೇಶ, ಪರಿಸರ…. ಎಷ್ಟಕ್ಕೆಲ್ಲ ಅಡ್ಜಸ್ಟ್ ಆಗ್ಬೇಕು…’ + +ನನ್ನ ಮಾತಿನ್ನೂ ಮುಗಿದಿರಲೇ ಇಲ್ಲ, ಆಶಾಬೆನ್ ನನ್ನ ಸಂದೇಹಗಳನ್ನೆಲ್ಲ ಅವು ಸಂದೇಹಗಳೇ ಅಲ್ಲ ಎಂಬಂತೆ ಒಮ್ಮೆ ಭುಜ ಕೊಡವಿ ಹೇಳಿದರು,‘ಅಯ್ಯೋ ಅವೆಲ್ಲ ಏನ್ಮಹಾ ಸುಮ್ನಿರು. ನಾವೆಲ್ಲ ಅದಕ್ಕೆ ಅಡ್ಜಸ್ಟ್ ಆಗ್ಲಿಲ್ವ? ಮುಖ್ಯ ಹುಡ್ಗ ಹುಡ್ಗಿ ಒಬ್ಬರಿಗೊಬ್ಬರು ಸರಿಹೋದ್ರೆ ಆಯ್ತು. ಇಲ್ಲೇ ಬೆಳೆದ ಹುಡುಗರಿಗೂ ಇಂಡಿಯಾದಲ್ಲಿ ಬೆಳೆದ ಹುಡ್ಗೀರಿಗೂ ಹೊಂದಿಕೊಳ್ಳೋ ವಿಷಯದಲ್ಲಿ ಅಂಥಾ ಕಷ್ಟವೇನೂ ಆಗೋದಿಲ್ಲ. ನಿಜವಾದ ಕಷ್ಟ ಇರೋದು ಇಲ್ಲೇ ಹುಟ್ಟಿ ಬೆಳೆಯೋ ಇಂಡಿಯನ್ ಹುಡ್ಗೀರಿಗೆ.’‘ಅದು ಹ್ಯಾಗೆ?’‘ನೋಡೂ, ಇಲ್ಲಿರುವ ಇಂಡಿಯನ್ ಹುಡುಗರಿಗೂ, ಅವರ ಅಪ್ಪ-ಅಮ್ಮಂದಿರಿಗೂ ಇಂಡಿಯಾದಲ್ಲೇ ಬೆಳೆದ ಹುಡುಗೀರೇ ಬೇಕು ಮದುವೆ ಆಗೋಕೆ. ಇಲ್ಲಿ ಬೆಳೆದ ಹುಡುಗೀರನ್ನ ಯಾರೂ ಪ್ರಿಫರ್ ಮಾಡಲ್ಲ’.‘ಅದ್ಯಾಕೆ ಆ ಥರಾ?’‘ಇಲ್ಲಿ ಬೆಳೆದ ಹುಡುಗೀರು ತುಂಬಾ ಇಂಡಿಪೆಂಡೆಂಟ್ ಆಗಿರ್ತಾರಲ್ಲ, ಅದು ಅವ್ರಿಗೆ ಸರಿಹೋಗಲ್ಲ. ನಾಳೆ ಗಂಡ ಹೆಂಡ್ತಿ ಮಧ್ಯ ನಾಲ್ಕು ಮಾತು ಬಂತು ಅಂದ ತಕ್ಷಣ ಈ ಹುಡ್ಗೀರು ಡೈವೋರ್ಸಿಗೆ ಹಾಕಿಬಿಟ್ರೆ ಏನು ಗತಿ? ಇಂಡಿಯಾದ ಹುಡ್ಗೀರಾದ್ರೆ ಪಾಪ, ಆದಷ್ಟೂ ಅನುಸರಿಸಿಕೊಂಡು ಹೋಗ್ತಾರೆ ನೋಡು…. ನಮ್ ಹಾಗೆ.’ + +ನನಗೆ ಉಕ್ಕಿ ಬರ್ತಿರೋ ಕೋಪ, ಆಗುತ್ತಿದ್ದ ಕಿರಿಕಿರಿ ಎಲ್ಲವನ್ನೂ ತಡೆದುಕೊಳ್ಳುತ್ತಾ ಇವರ ಮುಂದಿನ ಮಾತಿಗೆ ಕಾದೆ. + +‘ಹೋಗಲಿ ಇಂಡಿಯಾದಿಂದಾನೇ ಗಂಡು ತರೋಣ ಅಂದ್ರೆ ಅದೂ ಸರಿ ಹೋಗಲ್ಲ. ಮತ್ತೆ ಅದೇ ಪ್ರಾಬ್ಲಂ. ಅಲ್ಲಿನ ಹುಡುಗರು ಇಲ್ಲಿನ ಹುಡ್ಗೀರ್ನ ಪ್ರಿಫರ್ ಮಾಡಲ್ಲ. ಈ ಹುಡ್ಗೀರ್ಗೂ ಅವ್ರು ಸರಿ ಹೋಗೋದಿಲ್ಲ… ಮತ್ತದೇ ಪ್ರಾಬ್ಲಂ ಗೊತ್ತಲ್ಲ?’ + +ನಾನೀಗ ಏನೂ ಮಾತಾಡಲಿಲ್ಲ. ಆಶಾ ಬೆನ್ ಮುಂದುವರೆಸಿದರು. ‘ಅದಕ್ಕೇ ನನ್ಗೀಗ ಯೋಚ್ನೆ ಆಗಿರೋದು. ಮೊನ್ನೆ ಮದುವೆ ವಿಷಯ ಮಾತಾಡುವಾಗ, ನಾನೇ ಸೋನೂಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಇಷ್ಟೆಲ್ಲ ಕಷ್ಟ ಇರುವುದರಿಂದ, ನಿನ್ನ ಓದಿನ ಜೊತೆ ಜೊತೆಗೇ ನಿನಗ್ಯಾರಾದರೂ ಇಷ್ಟ ಆಗ್ತಾರಾ ಅಂತಾನೂ ನೋಡ್ತಾ ಇರು. ಎಲ್ಲ ಸರಿ ಹೋದ್ರೆ, ನಿನಗಿಷ್ಟ ಬಂದವರನ್ನ ನೀನು ಮದುವೆ ಆಗಬಹುದು ಅಂತಾನೂ ಹೇಳ್ದೆ.’ + +ಈಗ ನನಗೆ ಒಂದಿಷ್ಟು ಸಮಾಧಾನ ಅನ್ನಿಸಿತು. ‘ಪರ್ವಾಗಿಲ್ಲ ನೀವು, ಒಳ್ಳೇ ಸಲಹೇನೇ ಕೊಟ್ಟಿದೀರ ಮಗಳಿಗೆ. ಅವಳ ಜೀವನ, ಅವಳ ಸಂಗಾತಿ, ಅವಳೇ ನಿರ್ಧರಿಸೋದೇ ಒಳ್ಳೇದು ಬಿಡಿ’‘ಹೌದಪ್ಪಾ, ನಾವ್ಯಾಕೆ ಎಲ್ಲದರಲ್ಲೂ ಮೂಗು ತ್ತೊರಿಸ್ಬೇಕು ಹೇಳು? ಮಕ್ಕಳು ಅಂತ ಇಂಥಾ ವಿಷಯದಲ್ಲೆಲ್ಲ ಅಧಿಕಾರ ಚಲಾಯಿಸೋದಕ್ಕಾಗತ್ತ?’ + + + +ಇವರು ಇಂಡಿಯಾದಲ್ಲೇ ಇದ್ದಿದ್ದರೆ ಅಥವಾ ಮಗಳ ಬದಲು ಮಗನಿಗೆ ಮದುವೆ ಮಾಡಬೇಕಿದ್ದರೆ, ಇಷ್ಟೇ ಧಾರಾಳವಾಗಿರುತ್ತಿದ್ದರಾ ಅಂತ ನಾನು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹೇಳಿದರು,‘ನಮ್ಮ ಸೋನು ಅವಳಿಗೆ ಇಷ್ಟ ಬಂದ ಯಾರನ್ನು ಬೇಕಾದರೂ ಮದುವೆಯಾಗಬಹುದು. ಅವರು ಬಿ.ಎಂ.ಡಬ್ಲ್ಯೂ. ಆಗಿರಬಾರದು ಅಷ್ಟೆ. ನಾವು ಅದೊಂದೇ ಕಂಡಿಷನ್ ಹಾಕಿರೋದು ಅವಳಿಗೆ.’ + +ಇದ್ದಕ್ಕಿದ್ದಂತೆ ಈ ವಾಕಿಂಗ್ ರಿಂಕಿನಲ್ಲಿ ಬಿ.ಎಂ.ಡಬ್ಲ್ಯೂ ಎಲ್ಲಿಂದ ಪ್ರತ್ಯಕ್ಷವಾಯಿತು ತಿಳಿಯದೆ ಅವರನ್ನೇ ಕೇಳಿದರೆ, ಅವರಿಗೆ ಆಶ್ಚರ್ಯ. ‘ಯು.ಎಸ್.ನಲ್ಲಿ ೧೦ ವರ್ಷದಿಂದ ಇದ್ದೂ ಹಾಗಂದ್ರೇನು ಗೊತ್ತಿಲ್ವಾ?’ ನನ್ನ ಅಜ್ಞಾನಕ್ಕೆ ಮರುಗುತ್ತಾ ಪಕ್ಕದಲ್ಲಿ ನಡೆಯುತ್ತಿದ್ದ ನನಗೆ ಇನ್ನೂ ಹತ್ತಿರ ಬಂದು ಪಿಸುಗುಟ್ಟಿದರು,‘ಅದೇ ಬಿ.ಎಮ್.ಡಬ್ಲ್ಯೂ. ಅಂದ್ರೆ ಬ್ಲ್ಯಾಕ್, ಮುಸ್ಲಿಂ, ವೈಟ್… ಈ ಮೂರು ಬಿಟ್ಟು ಇನ್ನೆಂತವರಾದ್ರೂ ಆಗ್ಬೋದು ಅಂತ.’ ಇವರ ಮಾತು ಕೇಳಿ ಸಾವರಿಸಿಕೊಳ್ಳುವಾಗ ಯಾಕೋ ಕಾಲು ತೊಡರುವಂತಾಯಿತು. + +‘ಹಾಗೇ ನಮ್ ಹಾಗೇ ವೆಜಿಟೇರಿಯನ್ ಆಗಿರ್ಬೇಕು ಅಂತಾನೂ ಹೇಳಿದೀವಿ, ಇಲ್ಲದೆ ಹೋದ್ರೆ ನಾಳೆ ಇವಳಿಗೇ ಕಷ್ಟ ಆಗುತ್ತಲ್ವ? ಜೊತೆಗೆ ಇಷ್ಟೆಲ್ಲ ಕಂಡಿಷನ್‍ಗಳ ಒಳಗೆ ಸಿಕ್ಕುವ ಹುಡುಗ ಇಂಡಿಯನ್ನೇ ಆಗಿರ್ತಾನಲ್ವ? ಹಾಗಂತ ಹಿಂದೂನೇ ಆಗಿರ್ಬೇಕು ಅಂತೇನಿಲ್ಲ. ಜೈನ್ ಆದ್ರೂ ನಡೆಯತ್ತೆ. ನಮ್ಮದೂ ಅವ್ರದ್ದೂ ದೇವ್ರು ಬೇರೆಯಾದ್ರೂ, ಬಾಕಿ ಎಲ್ಲ ಅಂಥಾ ಏನೂ ವ್ಯತ್ಯಾಸವಿರಲ್ಲ ನೋಡು. ಇಂಡಿಯಾದಲ್ಲಿ ಯಾವ ಸ್ಟೇಟ್‍ನಿಂದ ಬಂದವರಾದ್ರೂ ಪರ್ವಾಗಿಲ್ಲ ಅಂತಾನೂ ಹೇಳ್ಬಿಟ್ಟಿದೀನಿ. ಈವನ್, ಸೌತ್ ಇಂಡಿಯನ್ ಆದ್ರೂ ಪರ್ವಾಗಿಲ್ಲ. ನಮ್ಮ ಮಕ್ಕಳಿಗೆ ಗುಜರಾತೀನೇ ಬೇಕಂತ ಕೂತ್ರೆ ಆಗತ್ತ? ಒಟ್ಟಲ್ಲಿ ಅವಳಿಷ್ಟ ಅಷ್ಟೆ’. ಇಷ್ಟೆಲ್ಲ ಹೇಳಿದ ಮೇಲೂ ‘ಅವಳಿಷ್ಟ’ ಅನ್ನುತ್ತಿರುವ ಇವರ ಜೊತೆ ಮತ್ತೆ ಮಾತಾಡುವಂಥದ್ದೇನೂ ಇಲ್ಲ ಎನಿಸಿ ಸುಮ್ಮನಾದೆ. + +ಈ ಮಾತು ಕಥೆ ಎಲ್ಲ ನಡೆದು ಆರು ತಿಂಗಳಾಗಿವೆ. ಜಿಮ್‍ನಲ್ಲಿ ಯಾಕೋ ಒಂದು ವಾರದಿಂದ ಆಶಾಬೆನ್ ಕಾಣಿಸದೆ, ನಾನು ಮಾಡಿದ ಫೋನ್‍ಕಾಲಿಗೂ ಸಿಕ್ಕದೆ, ಅವರ ಆರೋಗ್ಯಕ್ಕೆ ಏನಾದರೂ ತೊಂದರೆಯಾಗಿರಬಹುದಾ ಎಂದುಕೊಳ್ಳುತ್ತಿರುವಾಗ ಅವರ ನೆರೆಯವರಾದ ಸುಗುಣಾ ಜೋಷಿಯಿಂದ ಮೊನ್ನೆ ವಿಷಯ ತಿಳಿಯಿತು. ಸೋನು ತನ್ನ ಅಮ್ಮ, ಅಪ್ಪನಿಗೆ ತಿಳಿಸದೆ ಎಂಗೇಜ್‍ಮೆಂಟ್ ಮಾಡಿಕೊಂಡವಳು, ಈಗ ಮದುವೆಗೂ ಅಣಿಯಾಗುತ್ತಿದ್ದಾಳಂತೆ. ಇದರಿಂದಾಗಿ ಆಶಾ ಮತ್ತವರ ಗಂಡ ಇಬ್ಬರೂ ಎಲ್ಲರಿಂದಲೂ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರಂತೆ. + +‘ಯಾಕೆ ಏನಾಯ್ತು? ಸೋನು ಏನಾದ್ರೂ ಬಿ.ಎಂ.ಡಬ್ಲ್ಯೂ….’ ನನ್ನ ಪ್ರಶ್ನೆ ಮುಗಿಯುವಷ್ಟರಲ್ಲೇ ಸುಗುಣ ಹೇಳತೊಡಗಿದರು, ‘ಅಯ್ಯೋ ಅದಾಗಿದ್ದಿದ್ರೆ ಎಷ್ಟೋ ಒಳ್ಳೇದಿತ್ತು. ಈಗಾಗಿರೋ ಕಥೇನೇ ಬೇರೆ… ಸೋನು ಮದುವೆಯಾಗ್ತಿರೋದು ಇಂಡಿಯನ್, ಹಿಂದು, ವೆಜೆಟೇರಿಯನ್ ಕೂಡ…’ ಮಿಸೆಸ್ ಜೋಷಿ ನನ್ನ ಬಳಿ ಸರಿದು ಪಿಸುಗುಟ್ಟಿದರು, ‘ಆದ್ರೆ ಅದೂ ಒಂದು ಹುಡುಗಿ. ಅವಳ ಹೆಸರು ಮಾಯಾ ದವೆ ಅಂತೆ, ಇವಳ ಹಾಗೇ ಗುಜರಾಥೀ ಹುಡ್ಗಿ. ಸೋನು ಹೀಗೆ ಅಂತ ನಮ್ಗೆ ಯಾರ್ಗೂ ಗೊತ್ತೇ ಇರ್ಲಿಲ್ಲ ನೋಡು. ಬಾಯ್ ಫ್ರೆಂಡ್ಸು, ಡೇಟಿಂಗು ಅಂತೆಲ್ಲ ಬೇರೆ ಹುಡ್ಗೀರ ಥರಾ ಇಲ್ಲಪ್ಪ ನಮ್ ಸೋನು ಅಂತ ಆಶಾ ಬೆನ್ ಎಷ್ಟು ಜಂಭ ಕೊಚ್ಚಿಕೊಳ್ತಿದ್ರು! ಇದು ಹೀಗಿರಬಹುದು ಅಂತ ಪಾಪ ಅವ್ರಿಗಾದ್ರೂ ಹೇಗೆ ತಾನೆ ಅನ್ನಿಸಿರತ್ತೆ. ಇಂಡಿಯನ್ ಮಕ್ಕಳೂ ಹೀಗೆಲ್ಲ ಗೇ, ಲೆಸ್ಬಿಯನ್‍ಗಳಾಗೋದ?’… ಅವರ ಮಾತು ತಡೆಯುತ್ತಾ ನಾನು ಹೇಳಹೊರಟೆ, ‘ಹೋಗ್ಲಿ ಬಿಡಿ, ಏನೋ ಅದೆಲ್ಲ ಅವರವರ ಇಷ್ಟ…’ + +ಜೋರಾಗಿ ಅಡ್ಡಡ್ಡ ತಲೆಯಾಡಿಸುತ್ತಾ ಅವರು ಇನ್ನಷ್ಟು ಅವೇಶದಿಂದ ಹೇಳತೊಡಗಿದರು,‘ಸುಮ್ನಿರಮ್ಮ ನೀನು. ನಿನ್ನ ಮಕ್ಕಳಿನ್ನೂ ಚಿಕ್ಕವರು, ಇದೆಲ್ಲ ಏನೂ ಗೊತ್ತಾಗಲ್ಲ ನಿನಗೆ… ನನಗಂತೂ ಸುದ್ದಿ ಕೇಳಿದಾಗಿಂದಾ ಎಷ್ಟು ಹೆದ್ರಿಕೆ ಆಗ್ಬಿಟ್ಟಿದೆ ಗೊತ್ತಾ? ನಮ್ಮ ಮಕ್ಕಳಿಗೆ ಇನ್ಮೇಲೆ ಬಿ.ಎಂ.ಡಬ್ಲ್ಯೂ ಅಷ್ಟೇ ಅಲ್ಲ, ಎಲ್.ಜಿ. ಕೂಡಾ ಬೇಡ ಅಂತ ಮೊದ್ಲೇ ಹೇಳಿಬಿಡ್ಬೇಕು…’ ಮಿಸೆಸ್ ಜೋಷಿ ಇನ್ನೂ ಮುಂದುವರಿಸುತ್ತಿದ್ದರು. ನನಗೆ ಮಾತ್ರ ಅವರು ಮುಂದೆ ಹೇಳಿದ್ದೇನೂ ಕೇಳಿಸಲಿಲ್ಲ. + +ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ. \ No newline at end of file diff --git a/Kenda Sampige/article_571.txt b/Kenda Sampige/article_571.txt new file mode 100644 index 0000000000000000000000000000000000000000..a71c385a3d162ffda8e9eb74bc02e5bfe4f5a063 --- /dev/null +++ b/Kenda Sampige/article_571.txt @@ -0,0 +1,655 @@ +ಒಮ್ಮೊಮ್ಮೆ ಮೆಲ್ಲನೆ ಚಲಿಸುವ ಮತ್ತೊಮ್ಮೆ ಕಿಂಚಿತ್ತೂ ಅಲುಗದ ಚಿತ್ರಪಟದಂತೆ ಕಾಣುವ ಕವಿತೆಯಂತಹ ಈ ಲೋಕದಲ್ಲಿ ಕವಿತೆಗಳು ಯಾವಾಗ ಆದವು ಎಲ್ಲಿಂದ ಉದುರಿದವು ಎಲ್ಲಿಗೆ ಹೋದವು ಎನ್ನುವುದಕ್ಕಿಂತ ಋತದಂತೆ ಅವು ಎಂದೆಂದಿಗೂ ಇರುವವು ಮತ್ತು ಹಾಗೆ ಕಾಣುವ ನಿಜ ಮಾತ್ರವೆಂದು ಅನ್ನಿಸುತ್ತದೆ. ಇನ್ನೂ‌ ನಿಲ್ಲದ‌ ನನ್ನ ಎದೆಬಡಿತದಂತೆ ನಿರಂತರವಾಗಿ ಅನಿಶ್ಚಿತವಾಗಿ, ಅವಿಚ್ಛಿನ್ನವಾಗಿ ಅವೂ ಇವೆಯಷ್ಟೆ. ಹಾಗೆ ಇರುವುವ ಕೆಲವೇ ಕೆಲವನ್ನು ನಾನು ಯಾವುದೋ ಮಂಪರಿನಲ್ಲಿ ಹೇಳಿಬಿಟ್ಟಿರುವೆನಷ್ಟೇ. ಇರುವುದನ್ನೇ ಮತ್ತೆ ಹೇಳಿಕೊಳ್ಳುವಾಗ ಸುಮ್ಮಗೆ ಕಣ್ಮುಚ್ಚಿ ಒಂದೇ ಧೀರ್ಘ ಉಸಿರಿನಲ್ಲಿ ಹೇಳಿರುವ, ಒಂದು ಹಾಡು ಮುಗಿಯುವುದರೊಳಗೆ ಹೇಳಿರುವ, ಒಂದು ಅನ್ಯಮನಸ್ಕತೆಯಲ್ಲೇ ಮುಗಿದಿರುವ ಈ ಕವಿತೆಗಳೆಲ್ಲಾ ಈಗ ಬರೆಯ ನನ್ನದು ಎಂದು ಹೇಗೆ ಹೇಳಲಿ ಎಂದು ಕೇಳುತ್ತಿದ್ದಾಳೆನಕ್ಷತ್ರ + +1 + +ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡುನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾನಾನು ನಿಂತಿಬಿಡುವೆ + +ಮರಳಿಸು ನನಗೆ ಮತ್ತೆ ನಿನ್ನ ಕಲ್ಲು ದೇಹವನ್ನುನಿನ್ನ ಗಡಸು ಕೈಯ್ಯ ಗೆರೆಗಳು, ಅಡ್ಡಾದಿಡ್ಡಿ ಕತ್ತರಿಸಿದಸಣ್ಣ ಉಗುರುಗಳಿಗೆ ನಾನು ಹಾತೊರೆದುಮುತ್ತುಗಳು ತುಂಬಿದ ನಿನ್ನ ತುಟಿಗಳು, ಎಂದೋನಕ್ಕ ನಗು ನಿನಗೆ ಮಾತ್ರ ಕೇಳುವ ನನ್ನ ದನಿನಿನ್ನ ಆತ್ಮದ ಒಸರುವಿಕೆಯಿಂದಪಡೆದ ಜೀವ ನನ್ನದು + +ಹೋಗದಿರು ಒಂದಿರುಳೂಅಲುಗಾಡದ ಮೌನದ ಹಾಗೆ ನಿಂತುಬಿಡು + +ನೀನು ಅಲ್ಲಿ ಇರುವುದಿಲ್ಲ ನಿನ್ನ ದನಿ ನನಗೆ ಕೇಳುವುದಿಲ್ಲಇದೆಲ್ಲಾ ಇಲ್ಲದಿದ್ದರೂಮಹಾಪ್ರಸಾದದ ಹಾಗೆ ನಿನ್ನ ಕಣ್ಣಿಗೆ ಒತ್ತಿಕೊಳ್ಳುವುದುಇಷ್ಟೇ ಸಾಕು ನನಗೆ + +ನಾನು ಪ್ರೇಮಿಸುವುದನ್ನು ಮರೆತಿರುವೆ + +ಪ್ರೇಮಿಸಲು ದಿನಗಳು ಬರುವುದಿಲ್ಲನಾವು ಇರುವೆವು ಎಂದರೆ ಚಿಟ್ಟೆಗಳ ಕನಸುಒಂದಿರುಳೂ ಬಿಡದೆ ಜೊತೆಗಿರುವುದು ಇತ್ಯಾದಿನಾನು ಕೂಗಿ ಕರೆಯಲು ನಿನಗೊಂದು ಹೆಸರೇ ಇಲ್ಲಾನಾನು ಕರೆದಾಗ ನಿನಗೆ ಬರಲುದಾರಿಯೂ ಇಲ್ಲಇನ್ನೂ ಬೇಕಾದಷ್ಟು ಇದೆ ಹೇಳಲುಬರುತ್ತಿಲ್ಲ ನನಗೆ + + + +2 + +ನೀನು ಒಳಗೆ ಸೀಳಿಕೊಂಡುನನ್ನ ಗಂಟಲಿನವರೆಗೂಬಂದಿರಬೇಕುನನ್ನ ಹಣೆಯ ಮೇಲೆನಿನಗೆ ಕಾಣಿಸುವ ನನ್ನಒಂದೇ ಕಣ್ಣು, ಮತ್ತುನೀನು ಯಾರಿರಬಹುದೆಂದುನನಗೆ ಹೊಸದಾಗಿ ಅನಿಸುವುದುಅದೇ ಹೊತ್ತಲ್ಲಿ + +ಈಗ ನಿನ್ನ ಮೆದು ಮೈಯ್ಯ ಏಕಾಂತನಿನ್ನ ಅಂದರೆ ನನ್ನ…ಏನೋ ಒಂದುಮುಗಿಸಿದ ಹಾಗಿದೆ, ಮುಗಿಸಿಯೂಇಲ್ಲೇ ಇರುವೆ ನೀನುನನ್ನೆದೆಯಲ್ಲಿ, ತೊಟ್ಟಿಕ್ಕುತ್ತಿರುವ ನೋವಿನಲ್ಲಿಹಾಗೂ ನನ್ನ ಕೇಳದೆಯೇದೂಡಿ ಬರುವ ನಿಟ್ಟುಸಿರಿನಲ್ಲಿ + +ಏನಾದರೂ ಮಾತಾಡು..ಕಾಲ ಉಗುರಿಂದ ನೆತ್ತಿಯತನಕ ನಾನು ನಿನ್ನ ಹಾಗೆಯೇನೀನು ಏನೋ ಒಳಗಿಟ್ಟುಕೊಂಡು ಚೂಪಾಗಿನಗುವುದು ನನ್ನ ಹಾಗೆಯೇ + +ಮಾತಾಡು ಏನಾದರೂಬಂದಿಲ್ಲಿ ಮಡಿಲಲ್ಲಿ ಮಲಗುನಿನ್ನ ಕೂದಲು ಸವರಿಕೊಂಡುಬೇಕೆಂದಾಗ ಚುಂಬಿಸಿಕೊಂಡುನೀನು ಏನೇನೋ ನೆನೆಸಿಕೊಂಡುಹೇಳುವುದನ್ನು ಅಷ್ಟೊಂದುಸುಖವಿಲ್ಲದೆಯೇ ಕೇಳುವೆ + +ಅಷ್ಟು ಹೊತ್ತಿನಿಂದ ಹೀಗೆಯೇ ಇರುವೆವುಇನ್ನು ತಬ್ಬಿಕೊಳ್ಳದೆ ಇರುವುದಾದರೂ ಹೇಗೆಮಾತಾಡು ನೀನು,ಆಗಾಗ ನಿನ್ನ ಮುಖ ನೋಡಿಕೊಂಡುನಿನ್ನ ಎದೆಯಲ್ಲಿ ಮೂಗು ಉಜ್ಜಿಕೊಂಡುಸುಖವಾಗಿಯೇ ಕೇಳುವೆ + +ನಾವು ಮತ್ತೆ ಮಾತಾಡುವುದೇ ಹಾಗೆಉದ್ದದ ಮೆರವಣಿಗೆಯ ಹಾಗೆಎಲ್ಲಾ ಮರೆತು ಮಾತಾಡುವುದುಏನೋ ಸಿಗುವುದು ಇನ್ನೇನೋಕಳೆದುಹೋಗುವುದುನಡುವೆ ನಿನ್ನ ಕಚಕುಳಿಗಳಿಗೆಮರಳಿನ ರಾಶಿಯ ಮೇಲೆನಿನ್ನನ್ನು ದರದರ ಎಳೆದುಕೊಂಡುನಿನ್ನ ಹೊಟ್ಟೆಯ ಮೇಲೆ ಕೂತು ಮರಳು ಸುರಿದುಹೊರಳಾಡಿಸುವೆಇಷ್ಟಾದ ಮೇಲೆ ಉಳಿಯುವುದಾದರೂ ಏನುಕಳೆಯುವ ಒಂದು ರಾತ್ರಿಯಷ್ಟೇ + + + +3 + +ನನ್ನ ಮುದ್ದು ಮತಿಭ್ರಮಣೆಗೆನೀನೇ ಏನಾದರೂ ಕೊಡಬೇಕಷ್ಟೇಏನಿಲ್ಲದಿದ್ದರೂ ಯಾರೋಚುಂಬಿಸಿದ ತುಟಿಯನ್ನಾದರೂ!ಗೊತ್ತು ನನಗೆಎಲ್ಲಾ ಮುಗಿಸಿದ ಹೊತ್ತುಆ ದ್ವೀಪದಲ್ಲಿ ಬೇಕಂತಲೇಬೆನ್ನು ಮಾತ್ರ ಒದ್ದೆಯಾಗುವಂತೆಮಲಗಿ ಮೇಲೆ ನೋಡುವುದುಮತ್ತು ಈ ತಡರಾತ್ರಿಯಲ್ಲಿನಿನ್ನ ನೋಡಿ ತಡೆಯಲಾರದೆನಿನ್ನ ಕಣ್ಣಲ್ಲೇ ನನಗೆ ಮುಕ್ತಿದೊರೆಯುವುದುಹೊಸ ಬೆಳಕಿಗೆ ನೀನುಕಾಲುದಾರಿ ಅಡ್ಡಹಾದಿಯಲ್ಲಿಹೇಳದೆ ನಡೆವಾಗ, ನಿನ್ನ ಬಗಲಲ್ಲಿಜೋಳಿಗೆಯಂತೆ ಸುಸ್ತಾಗಿಜೋಲಾಡಿಕೊಳ್ಳುತ್ತೇನೆತುಂಬಿಸಿಕೊಂಡಷ್ಟುಹೆಗಲು ಭಾರವಾದರೆನಾನು ಹಗುರಾಗುವುದುನೀನು ತಬ್ಬಿಬ್ಬುಗೊಳಿಸುವ ರೀತಿಗೆ + + + +4 + +ಯಾರೂ ಏಳಬಾರದ ಸಮಯಓಣಿಗಳಲ್ಲಿ ಯಾರೂ ಬರದಂತೆಗಿಡದ ನೆರಳು ಅಡಗಿಸಿದೆತಿರುವುಗಳು ದಾರಿ ಮಾಡುತ್ತಿದೆಮೇಲೆ ತುದಿಯ ಬಾಗಿಲಿಲ್ಲದ ಕೋಣೆಗೆಈಗಷ್ಟೇ ತಿಳಿಗಾಳಿ ಪರಿಮಳದಸುಳಿವು ಹತ್ತಿದೆ + +ನಾವು ಕೂಡುವುದನ್ನು ಹೇಗೆಎಲ್ಲಿಂದ ಎಂದರೆ ಏನನ್ನುವುದು?ಒಂದಷ್ಟು ಆಕಾಶವಾದರೆ ಸಾಕುನಾನು ಹೂವಾಗುವೆಹರಿದು ಹೋಗುವ ಹಾಲುನಮ್ಮ ನೆರಳಿನ ಓಣಿಯಲ್ಲಿಹೊರಳಿ ಹೊರಳಿ ಬಾ ನನ್ನಪಕಳೆಯೊಳಗೆ ಮತ್ತೆ ಮೊಗ್ಗಾಗುವೆತಿಂದು ತೇಗಿ ಕುಡಿದುಭಾರದ ಒಂಟಿತನಹೇಗೆ ಬಂದಿತ್ತು ನಿನಗೆ? + +ಇಲ್ಲಿ ಹೀಗೆ ಗಲಿಬಿಲಿಯಾಗಿಎಲ್ಲಾ ಎಸೆದು ದಬ್ಬಿ ಹೊರ ಹಾಕಿರುವೆನೀನು ಎಂದರೆ ಏನು ನನಗೆ?ಒಂದು ಚಂದದ ಮಳೆ, ದೂರದ ಮೋಡದೀರ್ಘ ಅಲೆದಾಟ, ಅರ್ಧ ಮರೆತ ಕನಸು?ಅಥವಾ ನಿನ್ನ ಪಕ್ಕದಲ್ಲಿ ಕವಿತೆಯಾಗಿಕುಳಿತಿರುವುದೇ? + + + +5 + +ಓ ನನ್ನ ಜೀವವೇಬರೆಯುವುದೇನೆಂದುತಿಳಿದಿಲ್ಲ ನನಗೆಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಅದೇನೋ ತಿಳಿಯುತ್ತಿಲ್ಲಹಾಯಾಗಿ ಮಲಗಿದ್ದೇನೆನೀನು ಬಿಟ್ಟು ಹೊರಟಕಂಪನದ ಮಂಪರಿನಲ್ಲಿನಿನ್ನ ದೇಹದ ಕೂದಲಿನಕಚಗುಳಿಗೆ ನನ್ನ ಮೈಯ್ಯೆಲ್ಲಾನುಂಗಿಕೊಳ್ಳುತ್ತಿದೆ + +ನಿನ್ನ ಮೈಯ್ಯ ಹೊಳಪಿಗೆನಿನ್ನ ಮೈಯ್ಯ ಸದ್ದಿಗೆಬೆವರಿ ಸವೆದು, ಒಣಗಿಕಣ್ಣಿನಿಂದ ಕಾಲಿನವರೆಗೆಒದ್ದೆಯಾಗಿದ್ದೇನೆ + +ಈ ಕ್ಷಣದ ಅಕ್ಷರಗಳು,ಈ ಪದಗಳು. ಹಾಡು + +ಏನೂ ಹೇಳಲಾರವು ಸುಮ್ಮನೆನಾನೀಗ ಸತ್ತಂತೆ, ಮತ್ತೆ ಹುಟ್ಟಿದಂತೆಕಂಗಾಲಾಗಿದ್ದೇನೆನನ್ನನ್ನು ನಾನೇ ನೋಡಲಾಗದಷ್ಟುಕರುಣೆ ನನಗೆಒಂದು ಸಲ ಹೊಕ್ಕಿ ಬಿಡುತ್ತೇನೆಹೇಗಾದರೂಮತ್ತೆ ಇತ್ತ ಈ ಕನಸಿಗೆಬರಲಾರೆ + +ಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಮೈದೊಗಲು ಮುಚ್ಚುವುದೂ ಬೇಡನಿನ್ನ ರಕ್ತ ಮಾಂಸ, ಹೆಂಗರುಳುಆ ಮುಖದ ಇಷ್ಟು ಹತ್ತಿರಒತ್ತಿ ಬಿಡುವ ಉಸಿರು, ಹಸಿವುವಾಕರಿಕೆ, ಆಕಳಿಕೆನಾನಿನ್ನೂ ನೋಡದ ಕಾಲಬೆರಳಿನ ನೆಟಿಕೆಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + + + +6 + +ಹಂಬಲದ ಹೊತ್ತು ಕಾಣುವ ಸುಖನೀನಿರಬಹುದುಈ ಮಿಂದ ಕೂದಲುಗಳುಎಷ್ಟು ಹಾಯಾಗಿ ಹಾರಾಡುತ್ತಿದೆಅಲ್ಲೇ ಇರುವೆ ನೀನುಒದ್ದೆ ಮಣ್ಣಿನ ಮುದ್ದೆಯಲ್ಲಲ್ಲಒಂದು ರಾಶಿ ಬಿಳಿ ಮರಳಿನಏಕಾಂತದಲ್ಲಿ + +ಈಗ ನೋಡು ನನ್ನೊಳಗೆ ಹೊರಗೆನೀನಿಲ್ಲ; ಒಡನೆ ಬೀಸುವ ಗಾಳಿಗೂ ಹದವಿಲ್ಲಕೈಹಿಡಿದು ನಿನ್ನೊಡನೆ ನಡೆವನಮ್ಮ ನೆರಳಿನಷ್ಟುಇಲ್ಲಿರುವ ಬಣ್ಣಗಳು ಚಂದವಿಲ್ಲಹಾಡಿಗೆ ಮೂಡುವ ಜೀವವೇವಿಸ್ಮಯಕ್ಕೆ ಕುದಿಯುವ ಮೌನವೇಅತೀ ದೂರದವರೆಗಿನ ಸಂಕಟವೇಸೊಬಗೆಂದರೆ ನೀನೇ ಇರಬೇಕು + +ನಾನಿರುವ ತೀರವೇಹೇಗೆ ಪ್ರೀತಿಸಲಿ ನಿನ್ನನನ್ನ ನೀನುಗಳೆಲ್ಲಾ ನೀನಾಗುಕತ್ತು ಕೊಂಕಿಸಿ ಕಾಲು ಚಾಚಿ ಕೈ ನೀಡಿಒಂದಿಷ್ಟೂ ಕಾರಣವಿರದೆ ನಕ್ಕುನನ್ನನ್ನು ಸುಮ್ಮನೆ ಹಾಗೆ ಒಡ್ಡಿಕೊಳ್ಳಲು ಬಿಡು + +7 + +ಅದೊಂದು ಮಧ್ಯಾಹ್ನ. ಹಾಗೆಂದುಕೊಂಡರೆ ರಣ ಬಿಸಿಲಲ್ಲನಿನ್ನ ಕಪ್ಪನೆಯ ಗಡ್ಡ, ಆಹಾ ಮಧ್ಯಾಹ್ನದ ಬೆಳ್ಳಗಿನ ಬೆಳಕುಮಣ್ಣಾದ ಎಲೆ ಕಿತ್ತುಕೊಂಡು ನಾನು ನಿನ್ನೊಡನೆ ನಡೆಯುತ್ತಿದ್ದೆ. + +ನನಗೆ ಮೀಯುವ ಹುಚ್ಚು.ಮಿಂದು ಬಂದು ಒದ್ದೆ ತಲೆಯ ನೀರು ಹನಿಯುತ್ತಾಅಲ್ಲಿ ಕುಳಿತುಕೊಳ್ಳ ಬೇಕು. ಅದೇಅಲ್ಲಿ ನನ್ನೊದೊಂದು ಹೊಳೆಯ ತೀರವಿದೆಹಾಗೇ ಗಾಳಿಗೆ ಮೈಯ್ಯೊಡ್ಡಿಕೊಂಡುಆ ತಂಪಿನಲ್ಲಿ ಕುಳಿತುಕೊಳ್ಳುವೆನೀನು ಅಲ್ಲಿ ಇರದಿದ್ದರೂ ಹಾಗೇ ಇರುವೆ + +ಒಂದು ರಾತ್ರಿಯ ಹೊತ್ತುಬೆಳದಿಂಗಳು, ಚಂದ್ರ,ಇವೆಲ್ಲವೂ ಇರಲಿ ಒಂದು ಮೂಲೆಯಲ್ಲಿಅಳುತ್ತೇನೆ ನಗುತ್ತೇನೆ, ಏನೋ ಒಂದು ಅನುಭವಿಸುತ್ತೇನೆ.ನಂತರ ಹೊರಗಿನ ಸದ್ದಿಗೆ ಯಾರೋ ಬಂದರೆಂದುನೀನು ಹೆದರಿ ಒಳಗೆ ಬಚ್ಚಿಡುತ್ತೀಯ.ಎಷ್ಟು ಚಂದ. ಚಂದವೆಂದರೆ ಹೀಗೇ.. ಕಳ್ಳತನ.ಇಷ್ಟಕ್ಕೂ ನಿನ್ನನ್ನು ಗಂಡೆಂದು ನಾನು ಬಯಸಲಿಲ್ಲನಿನ್ನ ಹಾಗೆ….ನೀನು ಹಾಗೇ..ಹಣೆಗೆ ಮುತ್ತಿಕ್ಕಿದ ಹಾಗೆ + +ಚಿಕ್ಕವನಿದ್ದಿರಬೇಕು ಅಂದುನಾನು ಕಣ್ಣು ಮುಚ್ಚಿದರೆ ಸಾಕು ಎಲ್ಲಾ ಕಾಣುವೆಮರುಕ್ಷಣ ಕಣ್ಣು ಬಿಡುವೆ ದೊಡ್ಡವನಾಗುತ್ತೀಯ + +ಈ ಬೆಳಗು..ನೋಡುತಡರಾತ್ರಿಗೆ ಬೇಡವೆಂದರೂ ಕಣ್ಣು ಮುಚ್ಚಿನಿನ್ನ ಮೈಯ್ಯ ಯಾವುದೋ ಮೂಲೆಯಲ್ಲಿಮುದುಡಿ ಮಲಗಿದ್ದೆ; ಮಲಗಿ ಮರುಳಿದ್ದೆಈ ಝಾವಕ್ಕೆ ನಿನ್ನ ತಟ್ಟಿ ಎಬ್ಬಿಸಿ ಬೆಸೆದದ್ದುಹೊರಡುವ ಮುಂಚಿನ ಸನ್ನಹಕ್ಕೆಹೊತ್ತು ಸಾಗುವಾಗ ನೀನಿತ್ತ ಬೆನ್ನಿನತಾಪವೊಂದು ಸಾಕು ಸಾವಿನ ತನಕ + +ನನಗೆ ಮರುಳಲ್ಲನಾನೇ ಹೇಳುವ ನಿನ್ನದೇ ಮಾತುಗಳುನನಗೆ ಕೇಳುತ್ತದೆ,ನಾನು ಹೇಳುವುದು ನೀನು ಕೇಳುವುದುಈ ಇಬ್ಬರ ಮುಂದೆ ಕುಳಿತು ಸುಖಿಸುತ್ತೇನೆಹೇಳುವುದನ್ನು ಹೇಳಬೇಕಲ್ಲ ನನಗಾದರೂಕಣ್ಣು ಮುಚ್ಚಿ ನೀನು ಏನೋ ಬೆಚ್ಚಗೆ ಕಾಣುವುದುಮಾತುಗಳು ನಗು ಬಿನ್ನಾಣ ಬೈಗುಳ ಎಲ್ಲವೂ ಹಾಗೇಮರೆತೇ ಬಿಡುವೆ ನೀನು ಎದುರಿಗಿರುವುದನ್ನು + + + +8 + +ನಿನ್ನೆಯದೇ ಪರಿಮಳದ ಬಟ್ಟೆಬಾಚಿಕೊಳ್ಳದ ಮುಂಗುರುಳುಹೊಟ್ಟೆಯೊಳಗೆ ಅವುಚಿಟ್ಟುಕೊಂಡಒಂದಿಷ್ಟು ಅದೇ ಉಸಿರುಗಳು…ನೀನು ಅವಸರದಲ್ಲಿ ತುಳುಕಿಸಿಚೆಲ್ಲಿಹೋಗಿದ್ದನ್ನು ಹೆಕ್ಕಿ ಪೋಣಿಸಿಅದೇ ಅಂದಿನಂತೆ ಕುಳಿತಿರುವೆಎಷ್ಟೆಂದು ಬಾರಿಸಲಿಮೌನದ ಕೊರಳ ಘಂಟೆಆಹಾ ಎಂತಹ ಇರುಳುಆ ಹೆಗಲ ಮಚ್ಚೆಮತ್ತು ನಿನ್ನ ತುಟಿಗಳುಏನು ಮಾಡುತ್ತಿರಬಹುದುಈ ಹೊತ್ತಲ್ಲಿ?ನಾನು ಮತ್ತು ನನ್ನ ನೆರಳುಒಬ್ಬರಿಗೊಬ್ಬರುಸುಖಿಸುತ್ತಿದ್ದೇವೆ + + + + + +9 + +ನಡು ರಾತ್ರಿ ಎಷ್ಟು ಹೊತ್ತಿಗೋಚಾದರದ ಒಳಗೆ ನುಸುಳಿತಬ್ಬಿಕೊಂಡಾಗ ನಿನ್ನೊಡನೆಹಾದರ ಮಾಡಬೇಕೆನಿಸುತ್ತದೆಆದರೆ ನೀನು ನನ್ನಕೈ ಹಿಡಿದ ಗಂಡ + +ನಿನ್ನ ಬೆಣ್ಣೆ ಬೆಣ್ಣೆ ಮುಖದಲ್ಲಿಉರಿವ ಕೆಂಡದ ನೀರು ಬರಿಸಿನಾನು ಆವಿಯಾದೆಕರಗಿದ ಹೆಜ್ಜೆಯನ್ನು ಮೂಡಿಸಿನೀನು ಮುದ್ದೆಯಾಗುವುದನ್ನುನೋಡಲಾಗದೆಕದ್ದು ಹಾಲೂಡಿಸುತ್ತೇನೆ + +ನಿನ್ನ ಜೊತೆ ಕಣ್ಣಮುಚ್ಚಾಲೆಗೆಕಣ್ಣಿಗೆ ಕಾಣುವ ಗಂಡಸರೆಲ್ಲಾನನ್ನ ಗಂಡಂದಿರುನಾನು ತುಂಬಿಸಿಕೊಳ್ಳಲುಹಂಬಲಿಸುವುದು ನಿನ್ನನ್ನು ಮಾತ್ರ + +ಕಣ್ಣು ತಪ್ಪಿಸಿ ಉಗುಳು ನುಂಗಿಓಡಿ ಹೋಗುವ ದಿನನನ್ನದೊಂದು ಬಿನ್ನಹನೀನು ಗಂಡನಾಗ ಬೇಡನಾನು ಜಾರೆಯಾಗುತ್ತೇನೆ + +ನೀರವತೆಯ ಜೀರುಂಡೆ ಸದ್ದಿಗೆನೀನು ಹೂಂ ಗುಡುತಿದ್ದೀಯ.ಅಸಲಿಗೆ ನಾನೇನೂಮಾತಾಡುತ್ತಿಲ್ಲಹಾದರ ಮಾಡ ಬೇಕೆನಿಸುತ್ತದೆಆದರೆ ನೀನು ನನ್ನಕೈ ಹಿಡಿದ ಗಂಡ. + + + +10 + +ಹೇ ನಡೆದು ಹೋಗುತ್ತಿರುವವನೇ ಎಂದರೆತಿರುಗಿ ನೋಡಿರುವೆಅವಸರದಲ್ಲಿ ಹಾಗೇ ಓಡಿ ಬಂದವನೇಇರು ಕಾಲಿಗೆ ಕಲ್ಲು ಚುಚ್ಚುತ್ತಿದೆ ಎಂದುಚಪ್ಪಲಿ ಸಿಕ್ಕಿಸಿ ಬರುವಷ್ಟರಲ್ಲಿಏನೋ ಅರ್ಥ ಬರುವಂತೆ ನಕ್ಕುಒಂದು ಹಳ್ಳ ದಾಟಿ ಹೋದೆ + +ಗುಟ್ಟುಗಳೇ ಇಲ್ಲದಷ್ಟು ಖಾಲಿಯಾಗುವದಡ್ಡಿ ಹುಡುಗಿ ನಾನುಮೂರು ಹೊತ್ತು ಧ್ಯಾನಿಸದಿದ್ದರೂಮುಸ್ಸಂಜೆಗೆ ತಲ್ಲಣಿಸುವವ ನೀನು + +ನೆನಪಾಗಿದ್ದರೆ ತಾನೆ ಈ ಜಂಜಡಗಳುಠಕ್ಕು ವಂಚನೆ ಪ್ರಾರ್ಥನೆ ನಿವೇದನೆಹೀಗೆಂದರೇನು? + +ಮೈತುಂಬಾ ನಿನ್ನ ಹೊದ್ದು ಮಲಗಿಬೆಳಕು ಹರಿಯುವಾಗನಿರ್ಮಲ ಮೌನದ ಹೊಸಮದುವಣಿಗ ನೀನುಅಷ್ಟೇ…………….ಇನ್ನೆಷ್ಟೇ ಅಂದರೂ ಅಷ್ಟೇ + +ಹೊರಗೆ ಕಾಲಿಡುವ ಮುನ್ನಒಂದು ಸಲ ಕೇಳಲೇ?ಮತ್ತೆ ಸಿಗದಿರು ಎಂದು!ಚೂಪು ಹುಣಿಗಳಲ್ಲಿ ನಡೆದು ಹೋಗುವಾಗಬೇಕೆಂದರೂ ಕಣ್ತುಂಬದೆದೊಡ್ಡ ಹೆಂಗಸಾಗುತ್ತಿರುವೆ + + + +11 + +ಬಣ್ಣಗಳ ಮೇಲೆ ಕುಳಿತವನೇಹಾರಿ ನಡುವೇರಿ ಮೈಯ್ಯರಂಗು ಕೊಡವಿದವನೇಕವಿತೆಯಲ್ಲಿ ಹರಿದವನು ನೀನುಮಡಚಿದ್ದ ಮೆಟ್ಟಲೇರಿ ಎಲ್ಲಿಂದ ಬಂದೆಬಂದರೂ ನಗಬಾರದಿತ್ತುಸುಡುಗಾಡಲ್ಲಿ ನಾನು ನಕ್ಕರೆಅರ್ಥವೇನಿರಬಹುದು? + +ಏನಾನಂದ! ಹೀಗೇ ಇರಲಿಮುಸ್ಸಂಜೆಯ ಸುಡುಗಾಡುಬೇಡುವ ಬೊಗಸೆಯೂ ಕರಕಲಾಗಿದೆಏನೆಂದರೆ ಏನೂ ಇಲ್ಲವಾಗಿ,ಈ ಹೊಗೆಯೊಂದು ಕಣ್ತಪ್ಪಿಸಿಮೇಲೇರಿ ಏನನ್ನೋಹುಡುಕುತ್ತಿದೆಕರೆಸಿಕೋ ನಿನ್ನ ಚಂದದಆಕಾಶಕ್ಕೆ + +ಇನ್ನೊಮ್ಮೆ ನದೀ ತೀರಕ್ಕೆ ಬರುವೆನಿನ್ನ ಒದ್ದೆ ಕಂಗಳ ಹರವಿಗೆಉದ್ದನೆ ಕಾಲು ನೀಡಿಕೊಂಡುಸದಾ ಅಲ್ಲಿರುವ ನಿನ್ನನ್ನೂಹರಿದು ಹೋಗುವ ನಿನ್ನಆಳದ ಸುಖವನ್ನೂಬೇನೆಯಲ್ಲೇ ನೋಡುವೆಈ ನನ್ನ ಸುಡುವ ತೀರದ ನೆರಳೂಸುಳಿಯದಿರಲಿ + +ಕಣ್ಣು ಹೃದಯ ಪರಿಮಳಯಾವುದೂ ಅಂಟಿಸಿಕೊಳ್ಳಬೇಡಮಗುವೇ, ಈ ಇರುಳಗಂಬಕೆಒರಗಿ ಕಾಣುವ ಬಯಕೆಗಳು ಇಲ್ಲಿವೆನನ್ನ ಈ ಕರುಳೊಳಗೆ ನಿನ್ನದೂಸುತ್ತಿಕೊಂಡಿದೆಆದರೂ….ಕಳೆದ ದಿನಗಳುಯಾಕೆ ಬರಬೇಕಿತ್ತು?? + + + + + +12 + +ದೇವರೇ,ಇಷ್ಟು ಹೇಳದಿರಲು, ನಾನು ನಿನ್ನ ಹಾಗಲ್ಲರಾತ್ರಿಯಾದರೂ ಇಲ್ಲಿಕಿಟಕಿಯಲ್ಲಿ ಬೆಳಕು ಮಾತಾಡುತ್ತಿದೆಕವುಚಿ ಕಣ್ಣುಮುಚ್ಚಿ ಮಲಗಿ.ಈ ಹೊತ್ತಿಗೆ ಬರಬೇಕಿದ್ದ ನಿದ್ದೆಯೂಬರುತ್ತಿಲ್ಲದೇವರೇ, ಯಾರಿರುವರು ಇಲ್ಲಿನೀನೊಬ್ಬ ಇರುವೆಬೇಕು ಬೇಕೆಂದಾಗ ಬರಲು ಮಾತನಾಡಲು + +ಮೂರು ಸುತ್ತು ಮಡಚಿ ಹೋಗಿದ್ದೆಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆಹೊರಳಾಡಿಕೊಂಡುಕೈಕಾಲುಗಳು ಈಗ ತುಸುನೆಟ್ಟಗಾಗುತ್ತಿದೆ, ಏನು ಹೇಳಲಿ!ದೇವರೇ ಯಾರಿರುವರು ಇಲ್ಲಿ? ಈ ಹೊತ್ತಲ್ಲಿಬಾ ಹೊತ್ತು ಮೂಡುವವರೆಗೆಇದ್ದು ಹೋಗು + +ಅವನು ಇಲ್ಲಿಂದ ಹೋಗಿಯಾಗಿತ್ತುಅದೂ ಎಷ್ಟು ಹೊತ್ತಾಗಿತ್ತು?ನೀನು ಪೂರ್ವದಿಂದ ಹೊರಟವನುಪಶ್ಚಿಮದ ತುದಿಗೂ ಕಾಲಿಡಲಿಲ್ಲ + +ಹೋದವನಿಗೆ ಸೆಖೆಯಾಗುತ್ತಿದೆಯಂತೆಏನೂ ಅನಿಸುತ್ತಿಲ್ಲವಂತೆ ಪಾಪ ಒಳ್ಳೆಯವನು,ಆದರೂ ಬುದ್ಧಿ ಕಲಿಸದೆ ಇರಬೇಡಇಷ್ಟೂ ಹೇಳದೆ ಸುಮ್ಮನಿರಲುನಾನು ನಿನ್ನ ಹಾಗೆ ದೇವರೇನಲ್ಲ + +ಹೋಗಿರುವನು, ಹೀಗೆ ಹೋಗುತ್ತಿರಲಿಕೈಕಾಲು ಚಾಚಿ ನಿರಾಳವಾಗಿಮಲಗಿರುವೆ, ತುಂಬಾ ಹತ್ತಿರಇಲ್ಲೇ ತೊಡೆಯ ಮೇಲೆ ಕುಳಿತಂತಿದೆಬೇಕು ಬೇಕೆಂದಾಗ ನಗುವನುಬೇಡವೆಂದರೂ ತಿರುಗಿ ಬರುವನುಹೀಗೆ ಇದ್ದಿದ್ದರೆ ಜೊತೆಗಿರುವುದೇಬೇಡವಿತ್ತುಆಗಾಗಾ ಬೇಡುವ ಈ ಸುಖಮತ್ತೆ ಮತ್ತೆ ಕೊಡದೇ ಇರಬೇಡ + +ದೇವರೇ,ಇಷ್ಟು ಹೇಳದಿರಲು, ನಾನು ನಿನ್ನ ಹಾಗಲ್ಲ + +13 + +ಏನೋ ಆಗುತ್ತಿದೆ ಅಲ್ಲಿ ನಿನಗೆಹಾಗೆಂದೇ ಆಕಾಶ ಬಣ್ಣಗಳುಬದಲಾಗಿ ನನಗೆ ತೋರಿಸುತ್ತಿದೆನಿನ್ನ ಕಣ್ಣಿನ ಬೊಂಬೆ ಚಲಿಸಿದಂತೆಇಲ್ಲಿ ಚಿತ್ರಗಳು ಕದಲುತ್ತಿವೆಮುರುಟಿಕೊಂಡ ಈ ಸಂಜೆಗೆಅಂಗಾತ ಮಲಗಿ ಕಣ್ಣ ಎರಡುತುದಿಗಳಲ್ಲಿ ನೀರು ಹರಿದುಕಿವಿಯ ಆಳಕ್ಕೆ ಇಳಿಯುತಿದೆ + +ಮತ್ತೆ ನೀನು ಮೈತುಂಬಿಕೊಳ್ಳ ಬೇಕಾದರೆದಿನವಿಡೀ ನಿನ್ನ ಕರುಳ ಸಂಕಟದಲ್ಲಿಇರಬೇಕು ನಾನುನೀ ಬಂದೆಯೆಂದು, ಇಲ್ಲಿರುವೆಯೆಂದುಸ್ವಲ್ಪ ಹೊರಗೆ ಅಡ್ಡಾಡಿ ಬಂದರೆಬಣ್ಣ ಇರದ ಖಾಲಿ ಕಣ್ಣಿರೊಂದುಹುಡುಕಿ ಬಿಗಿಯಾಗಿ ಎದೆಗಪ್ಪುವುದು + +ಈ ಹೊತ್ತಲ್ಲದ ಹೊತ್ತಲ್ಲಿಮೂರು ಹಾದಿ ಕೂಡುವಲ್ಲಿನೀ ಯಾಕೆ ಬರಬಾರದು?ನಮ್ಮದೊಂದು ಕಲ್ಲು ಬೆಂಚುಇನ್ನೂ ಹಾಗೇ ಇರುವುದುಯಾರಿಟ್ಟರೋ! ಯಾರಿಗೆ ಕೇಳಲಿನನಗೆ ಉಸಿರು ತುಂಬಿಸಿದವನುಇದ್ದರೆ ಅವನೇ ಇಟ್ಟಿರಬಹುದು + +ತಪ್ಪಿಸಲಾರದ ನಡೆದಾಡುವಗಡಿಯಾರಗಳು ನಾವುಗಂಟೆ ಹೊಡೆದರೆಹಕ್ಕಿಗಳೂ ಮನೆಗೆ ನಡೆಯಬೇಕುಈ ಕಲ್ಲ ಬೆಂಚಿಗೂಕತ್ತಲಾವರಿಸುತ್ತದೆ, ಅದಿರಲಿ, + +ಈ ಕೇಳದ ಮನಸ್ಸಿಗೂ ಹೇಳದೆಗಾಳಿಯ ಬುಡಕ್ಕೆ ಸಿಕ್ಕಿಸಿ ಅದನ್ನುಅಲ್ಲಿಗೆ ಕಳಿಸಿರುವೆತೇಲಿಕೊಂಡು ಬಿಸಿಲಿನ ಮೈಮುಟ್ಟಿಎದ್ದ ಧೂಳಿಗೆ ಇದ್ದಲ್ಲೇ ತಿರುಗಿಕೊಂಡಿಹಾರುವ ತರಗೆಲೆಗಳನ್ನು ಸಿಕ್ಕಿಸಿಕೊಂಡುಹಾರುತ್ತಿದೆ + +ಎಲ್ಲಾ ಸಾಕೆಂದು,ಕಡಲ ಎದುರಿಗೆ ಕುಳಿತುಬಿಟ್ಟೆಹುಟ್ಟಿಸಿ ನಡೆದು ಹೋಗಿರುವನಿನ್ನ ಸಾವಿರ ಹೆಜ್ಜೆಯಲ್ಲಿಒಂದೆರಡನ್ನಾದರೂ ಹುಡುಕುತ್ತಾಏನು ಸುಖಒಂದಿಲ್ಲಿದೆ. ಎರಡು ದಿನನಡೆದ ಮೇಲೆ ಇನ್ನೊಂದು ಸಿಗುವುದುಅಲ್ಲಿಯತನಕ ಅಪ್ಪಿ ನಿನ್ನಲ್ಲಿಗೆಮರಳುವ ಅಲೆಗಳು ಕನ್ನಡಿಯಲ್ಲಿನಿನ್ನನ್ನು ಕಾಣಿಸುತ್ತಿದೆ. + + + +14 + +ಈಗ ಕೇಳುವ ಮಂಕು ಮಂಕು ಹಾಡಿಗೆಆ ದಿನಗಳೆಲ್ಲಾ ಮೆಲ್ಲಗೆ ನಡೆದು ಬರುತ್ತಿವೆ + +ಏನೆಲ್ಲಾ ಕಿವಿಗೆ ಕೇಳಿಸುವುದು,ನೀಲಿ ಬಣ್ಣದ ಬಟ್ಟೆಯ ಗುಂಡಿಬೆನ್ನು ಹಾಕಿ ನಿಂತು, ಎಡ ಕೆನ್ನೆ, ತುಟಿಕಾಣುವಷ್ಟು ಮಾತ್ರ ತಿರುಗಿ ನಕ್ಕಿದ್ದು,ನೋಡಿದಾಗಲೆಲ್ಲಾಬೇರೆಯದೇ ಕಾಣುವ ಕಣ್ಣಿನ ಬಣ್ಣ…ಕೆನ್ನೆಗೆ ಕೈಇಟ್ಟುಕೊಂಡು ಬೇಕಂತಲೇಏನೋ ನೋಡುತ್ತಿಲ್ಲ. + +ನಾನು ಜೊತೆಗಿಲ್ಲದ ಹೊತ್ತಲ್ಲಿಮೈಗೆಲ್ಲಾ ತಬ್ಬಿ ಹಿಡಿದ ಚಳಿಯನ್ನುರಾತ್ರಿಯ ಆಕಾಶವನ್ನುನೀನು ಹೇಗೆ ನೋಡುತ್ತಿರಬಹುದು, + +ಅಯ್ಯೋ ಬೇಡವೆಂದರೂ ಈ ಹೊತ್ತಿನ ಸಂಗೀತ,ಅದನ್ನು ಇನ್ನೂ ಚಂದವಾಗಿಸುತ್ತಿದೆ.ನಿನ್ನ ಹೆಗಲುಗಳೂ ಕುಣಿಯುತ್ತಿವೆಇದನ್ನು ದುಃಖವೆಂದರೆ ನನ್ನ ಕಣ್ಣೀರುಬತ್ತಿಹೋಗಲಿ + +ಹಾಡು ಮುಗಿಯುವುದರೊಳಗೆಈ ಬಿಕ್ಕುಗಳು ಏನನ್ನೂ ಆಲಿಸದುಮೈಯೆಲ್ಲಾ ಹಿಂಡುವ ಹಾಗೆ ಕುಣಿಯುವವುಇನ್ನೇನು, ಈ ನೆತ್ತಿಗೇರಿದ ಹೊತ್ತಲ್ಲಿಇಲ್ಲಿಗೇ ಇದ್ದ ಹಾಗೇ ಕಾಣುವನಿನ್ನ ಬಿಟ್ಟಕಣ್ಣುಗಳಿಂದ ನಾಲ್ಕು ಸಾಲುಗಳನ್ನುಕಿತ್ತು ಹಚ್ಚುವೆ. + +ಹೋಗುವುದೆಲ್ಲಾ ಹೋಗಲಿ ಇರುವವೆಲ್ಲಾ ಇರಲಿಹಿಂದೆ ಉರುಳುವುದೆಲ್ಲಾ ಉರುಳಲಿ…ಹಾಡು ಮುಗಿಯುವ ಹೊತ್ತಿಗೆಬಂಧಿಸಿದರೂ ಹಾರುವುದನ್ನು ಕಲಿತನಿನ್ನ ತೋಳ ಹಕ್ಕಿಗಳು ಹಾರಿ ಹೋಗುವವು. + +15 + +ನನಗೂ ಅರ್ಥವಾಗಬಾರದೆಂದುಬರೆಯುತ್ತೇನೆಗಡಿಯಾರದ ಮುಳ್ಳಿನ ಲಯಬದ್ದ ಚಲನೆಗೆಎದೆ ಬಡಿತವನ್ನು ಹೊಂದಿಸಲು ಹವಣಿಸಿಗದ್ದಲವೆನಿಸಿ, ಕಣ್ಣು ಬಿಟ್ಟುಧ್ಯಾನಸ್ಥ ಸ್ಥಿತಿಯಲ್ಲಿ ಬಂಡೆಯಲ್ಲಕೆತ್ತನೆಯಾಗುತ್ತೇನೆದಿನ ಉದುರುವ ತಲೆಗೂದಲುಕಳಚಿ ತುಂಬಿಕೊಂಡು,ಕಿವಿ ಹಿಂಡಿದರೆನೋವು ದೂರದಿಂದ ತಲೆದೂಗಿತ್ತುಕರೆದರೆ ಓ ಗೊಡದೆಧ್ವನಿ ನನಗೆ ಮಾತ್ರ ಕೇಳಿಸಿತುಆಚೆ ಕೇಳಲಿಲ್ಲವೆಂಬ ಸುಖದಗ್ನಿಯೇಒಂದು ಸುಖನನಗೂ ತುಂಬಿ ತುಂಬಿ ಬರುತ್ತಿದೆಎದೆ ಹೊಟ್ಟೆಯೊಳಗೆ ಚೇಳು ಕಚ್ಚಿಹೆಪ್ಪುಗಟ್ಟಿದ ಕೆಂಪು ಬಂಡೆಯಲ್ಲ ಕೆತ್ತನೆಗೆನೀಲಿ ಚರ್ಮದ ಕವಚ…ಇನ್ನೂ ಬಡಿತವಿದೆಮುಗಿದ ಗಳಿಗೆಯ ಕಣ್ಣ ಕೆಂಪು ಹನಿಯಲ್ಲಿಯಾರನ್ನ ನೋಡಲಿ?ಪಾರದರ್ಶಕಲ್ಲವದುಬಣ್ಣದ ಬದುಕಿನ ಕೊಂಕು ಹನಿಯಲ್ಲಿಯಾರ ಬಿಂಬವೂ ಕಾಣುವುದಿಲ್ಲಮತ್ತೊಮ್ಮೆ ಬದುಕಿಬಿಟ್ಟೆ + + + +16 + +ನನ್ನ ಖಾಲಿ ಕುರ್ಚಿಗಳುಈ ನಡುವೆಎಷ್ಟು ಮಾತಾಡಲು ಕಲಿತುಬಿಟ್ಟಿವೆನನ್ನ ಪ್ರಯಾಣದ ಎಲ್ಲಾ ಹೆಜ್ಜೆಯಆತ್ಮಗಳು ಇಲ್ಲೇ ಸುಧಾರಿಸಿಕೊಳ್ಳುತ್ತಿವೆಹಳೆಯ ಆಟದ ಮನೆಗಳು ಮೌನದಲ್ಲಿನನಗೆ ಕಾಗದ ಬರೆದಿವೆತುಂಬಾ ವರುಷದ ನಂತರಅದೇ ಅದೇನೆನಪುಗಳು ಸಾಕೆಂದುಈ ಮಳೆಹೊಸ ನೆನಪುಗಳನ್ನುಕೊಡುವಂತೆ ಹೇಳಿದೆಕಿಟಕಿಯ ಕಂಬಿಯಲ್ಲೇನನ್ನ ಕರೆಯುತ್ತಿದ್ದ ಗಾಳಿಗೆಒಳ ಬರುವಂತೆ ಹೇಳಿರುವೆ + + + +17 + +ಅದೆಷ್ಟು ಹರಿದು ಹೋಗಿರುವೆತುದಿ ಮೊದಲಿಲ್ಲದೆಅದೆಷ್ಟು ಕೆದರಿಕೊಂಡಿರುವೆ…ಎಲ್ಲವೂ ದೊಡ್ಡ ನೂಲಿನುಂಡೆಹೊಲಿದುಕೋ ಕತ್ತರಿಸಿಕೋಇಲ್ಲವಾದರೆ ಸುತ್ತಿ ಮಲಗಿಕೋ..ಮನ್ನಿಸು ತಾಯಿನೀನು ಹಾಲೂಡಿದ ಶಿಶುವೆಂದು + +ಒಂದು ಮರುಳಷ್ಟೇ ಇದುಗಾಂಚಾಲಿಯಾದರೂ ಏಕೆ ಸುಮ್ಮನೆಹೃದಯವಿರುವುದುಎಲ್ಲೋ ನಡುವಲ್ಲಿ + +ಒಂದು ನೆರಳಷ್ಟೇ ಇದುನಾಳೆಗೆ ದೊಡ್ಡ ಪ್ರೇಮದ ಗಂಟುನಾನಾದರೂ ಏನು ಮಾಡಲಿಉಸಿರಿನಷ್ಟೇ ನಿಜ ನನಗೆ + +ನಿನಗೆ ಎಂದೋ ಚುಚ್ಚಿರುವಸಾವಿರ ಸೂಜಿಗಳುತುಕ್ಕುಹಿಡಿದಿರ ಬೇಕುಮನ್ನಿಸು ತಾಯಿನಿನ್ನ ಕಂಕುಳದ ಕೂಸೆಂದುನನ್ನ ಪಾಪದ ಮುಖಕ್ಕೆನಿನ್ನ ಸಂಕಟಕ್ಕೆನನಗೆ ಕುರುಡು ಹತ್ತಬಾರದಿತ್ತು + + + +18 + +ತನ್ನ ಪಾಡಿಗೆ ತಾನಿತ್ತು ಅರೆ ತಲೆನೋವುಅತ್ತು ಕರೆದರೂ ಈ ಬದಿಗೆ ಬಾರದೆಸುಮ್ಮನೆ ಕುಳಿತುಕೊಂಡು ಏನೂ ತೋಚದೆಆಲಸ್ಯವೂ ಬಾರದೆ ಹಾಗೆ ತೆಳ್ಳನೆಬೆಳೆದ ತಿಳಿ ಬೆಳ್ಳನೆಯ ಪಾಚಿಯಂತೆನೆಲದ ಧೂಳಿನಲ್ಲಿ ನಾಲ್ಕು ಬೆರಳಾಡಿಸಿನಾಲ್ಕು ಹೆದ್ದಾರಿಗಳು ಮಧ್ಯದಲ್ಲಿ ಕತ್ತರಿಸಿ ಹೋಗಿಒಣ ಸೀನಿಗೆ ಮೂಗು ಕಟ್ಟಿತು + +ತಿಂದದ್ದನ್ನೇ ತಿಂದು, ಕುಡಿದು ಜೀರ್ಣಿಸಿಕೊಂಡುಕಂಡರಿಯದ ಹಸಿವು ಒಂದೊಮ್ಮೆಹೋದ ವರ್ಷ, ಮೊನ್ನೆ, ನಿನ್ನೆ ಇಂದು ಮುಂಜಾನೆಸಿಕ್ಕಾಗ ಅವೇ ‘ಹೇಗಿರುವೆ’ ಮಾತುಗಳುವಠಾರ ಹೆಂಗಸರ ಅವವೇ ಹರಟೆಗಳುಕೊಳಕು ಹಲ್ಲಿನ ಕಸ ತೆಗೆಯುವ ಮುದುಕನಅಪರೂಪಕ್ಕೆ ನಾಲ್ಕು ಹೊಲಿಗೆ ಕಾಣುವ ಚಪ್ಪಲಿ + +ಸುಮ್ಮನೆ ಕೂಗಿಕೊಳ್ಳುವುದು ಪ್ರೀತಿ ನೀತಿಯೆಂದುನಡೆಯಲಾಗದಿದ್ದರೆ ಕೂರುವುದು,ಅದಾಗದಿದ್ದರೆ ಮಲಗುವುದುಹೊತ್ತು ಮೀರಿದ ನಿದ್ದೆಯ ವೈರಾಗ್ಯ ಶುದ್ಧ ಬೊಗಳೆಅವನು ಹಾಳಾಗಿ, ಇವನು ಮೂರ್ಛೆ ಹೋಗಿಮತ್ತೊಬ್ಬ ಸತ್ತು ಎಲ್ಲರೂ ಬುದ್ಧರಾದರುಸಾಸಿವೆ ಸುಖದ ಹುಡುಕಾಟದಲ್ಲಿ + +ಹೊಳೆ ಬದಿ ಬಿಂಬ ನೋಡಿಕೊಂಡು ಬಿಕ್ಕುವುದುಇಲ್ಲೇ ಪಬ್ಬು ಮಾಲ್ ಗಳಲ್ಲಿ ಸೊಕ್ಕಿ ನೆಕ್ಕುವುದುಉಗುರು ಕಚ್ಚುವುದು, ಕಡಲು, ಮಳೆಕಾಡು ಬೆಟ್ಟವೆಂದು ನೆಚ್ಚುವುದುಮೆತ್ತಗೆ ಮಂಕುಬಡಿದಂತೆ ಮುಗುಳ್ನಗು ಚೆಲ್ಲುತ್ತಾಒಳಗೆ ನೃತ್ಯ ಮಾಡುತ್ತಾ ಹುಡುಕಿದ್ದು ಅದನ್ನೇಈ ಹೊತ್ತಿಗೆ ಅವಳು, ಮರು ಹೊತ್ತಿಗೆ ಇವನುಆ ಕ್ಷಣ ಅಲ್ಲಿ, ಈ ಕ್ಷಣ ಇಲ್ಲಿಮಿಸುಕಾಡದ ಎಷ್ಟು ಸ್ತಬ್ಧ ಗಳಿಗೆಗಳುಅವವೇ ಜಗತ್ತು, ಅವವೇ ಮನುಷ್ಯರುಎಲ್ಲರೂ ವೇದಾಂತಿಗಳುಸುಮ್ಮಗಿರುವುದೇ ಲೇಸು + + + +19 + +ಈಗ ಮೂಗು ತುರಿಸುವಾಗಯಾವುದೋ ಒಂದು ಗುಂಗಿನಲ್ಲಿನನ್ನದಿರಬಹುದು ಅನ್ನಿಸುತ್ತದೆ + +ನನಗೆ ಕೇಳಿಸುವ ಉಸಿರುಪುರಾತನ ಕಾಲದಗುಹೆಯ ಬೂದಿಯಲ್ಲಿಇನ್ನೂ ಅವರೆಲ್ಲರೂ ನಗುತ್ತಿದ್ದಾರೆನನ್ನ ಅಕ್ಕಪಕ ಗೊಂಬೆಗಳೂಕೀಲು ಕೊಟ್ಟರೆ ಚಪ್ಪಾಳೆ ತಟ್ಟಿನಗುವಂತಾಗಿದೆ + +ಆಚೆ ಊರಿನಲ್ಲಿ ಚಪ್ಪಲಿ ಸಂದಿಗೆಸಿಲುಕಿದ ಒಂದು ಕಲ್ಲುಇಷ್ಟು ದಿನ ಮಾತಾಡದೆಈಚೆ ಊರಿನ ದೊಡ್ಡ ಬಂಡೆಯಕೆಳಗೆ ಕೆಸರಿನಲ್ಲಿ ಉದುರಿತುಒಂದೂ ಅರ್ಥವಾಗದೆ ಹೋದರೆಋಣವೋ ಮತ್ತೊಂದೋ ಎಂದುಮಣಮಣ ಎನ್ನುತ್ತೇನೆಅದೇನೋ ನೆನಪು ಇಬ್ಬರದುಹಳೆಯ ಗೆಳೆಯರಂತೆ + +ನಾನೀಗ ಮೂಗು ತುರಿಸುವುದುಬೂದಿ, ಬಂಡೆಯ ತಪಸ್ಸಿನ ಫಲವಿರಬೇಕುನನ್ನ ಮತ್ತು ಅವರೆಲ್ಲರನಗು ಉಸಿರಾಟಗಳು ಮತ್ತುಗೊಂಬೆ, ಕೀಲು ಚಪ್ಪಾಳೆಗಳುಮರೆಸುತ್ತಿದೆ ಎಲ್ಲದನ್ನೂಬಹುಷಃ ನಾನಿರುವುದನ್ನೂ + + + +20 + +ಇದೇ ಹೊತ್ತಿಗೆ ಅಲ್ಲಿಇಲ್ಲಿ ಏನೇನೋ ನಡೆಯುತ್ತಿದೆ + +ಮರೆತೇ ಹೋದ ಗೆಳೆಯನ ಹಳೆಯ ಬ್ಯಾಗುಮನೆಯ ಜಂತಿಯ ಗುಬ್ಬಿಗೂಡುಎಲ್ಲೋ ನಡೆಯುವ ಮೈಥುನಗಳುಕುಡಿದವರವೇದಾಂತಗಳು,ನನಗೇ ಸಂಬಂಧಿಯೇ ಅಲ್ಲದಪಾಪದ ನಾಯಿ,ಇಬ್ಬರಿಗೂ ಕಾಣಿಸುವ ಒಂದೇ ಚಂದ್ರಮತ್ತು ನಾವಿಬ್ಬರೂ ಕುಳಿತುಬೆರಳುಲೆಕ್ಕವಿಟ್ಟು ಎಣಿಸಿದ ಹಳೆಜೀವಗಳು + +ಈ ಹೊತ್ತು ಏನು ಮಾಡುತ್ತಿರಬಹುದೋಈ ಹಗುರ ಲೋಕವನ್ನೇ ತಬ್ಬಿಎಲ್ಲರನ್ನೂಏನೋ ಸಂತೈಸಬೇಕುಇವರೆಲ್ಲಾ ಯಾರೋನನ್ನ ಪದ್ಮಾಸನದಲ್ಲಿ ನೆನಪಾಗುವವರುಈ ಕಾರುಣ್ಯವೂ ಸುಮ್ಮನೆ + +ಯಾವ ಮೋರೆಯೂ ಕಾಣದ ಹಾಗೆಗಂಟಲೊಳಗೆ ಬೇನೆಯ ಹಾಗಿನದ್ದೊಂದುಹರಿಯುತಿದೆನನ್ನನ್ನು ಅಡ್ಡಾದಿಡ್ಡಿ ಬಗೆದರೂನನ್ನ ಹಂಗಿಲ್ಲದೆ ದುಃಖಿಸುವಸುಖದ ಸುಳಿವೂ ಸಿಗದ ಹಾಗೆಬೆಚ್ಚಗೆ ದುಃಖಗಳು ಹಾರುತ್ತಿವೆ + + + +21 + +ಈಗ ತಾನೆ ಮಳೆ ನಿಂತ ಹಾಗಿದೆಹನಿಯೊಂದುಭಾರ ಭಾರ ದುಂಡು ದುಂಡಗೆಜಾರಿ, ಇನ್ನೇನು ಒಡೆಯುವಕಡೆ ಗಳಿಗೆಯ ಹನಿತುಂಬಿದ ಲತೆಗಳು ಉಂಡುಮುಗಿಸಿ ನೂಕುತ್ತಿದೆ + +ಅಲ್ಲೇ ತರಗೆಲೆಗಳ ನಡುವೆಆವಿಯಾಗಿ, ಅಂಟಂಟುಕದಪುಗಳು ದಾರಿಯಾಗಿಒಂದಷ್ಟು ಕೆಂಪು ನೆಲ ಇಣುಕುತಿತ್ತು + +ಮುಖಗಳಿಲ್ಲದ ದೇಹಗಳುಜಾರುತ್ತಿದೆಮುಖವಾದರೂ ಏಕೆ ಬೇಕುನೆನೆದು ಜಾರುವುದಕ್ಕೆ!! + +ಅದೇ, ಕಳೆದ ಸಲ ಕಡಲಲ್ಲಿಹನಿ ಮಣಿಯಾಗಿ,ಬಿಸಿ ಮುತ್ತಾಗಿದ್ದು, ತುತ್ತಾಗಿದ್ದುಮುಪ್ಪಾಗಿದ್ದು …..ಏನಿದ್ದರೂ ಮುಖದ ಕೆಳಗೆ + +ಹನಿ ಜಪಿಸುತ್ತಿದೆಹೇ ದಿನಮಣಿಯೇ?ಬೇಡ ಮುತ್ತು ಮಣಿಗಳ ಸಂಗಅರೆ ಬರೆ ಧರೆಗಿಂತ ಲೇಸುತುಣುಕು ಮೋಡ + +ಹನಿ ಜಾರಲಿನೆಲ ಕಚ್ಚುವ ಮುನ್ನಕಾಲದ ಬಡಿತ ಒಂದುಕ್ಷಣ ನಿಲ್ಲಲಿಮದ್ಯ ನಿಂತ ಸ್ತಬ್ದ ಹನಿಗೆಮುಖವಿಲ್ಲ + + + +22 + +ಇಲ್ಲಿ ಯಾವುದೂ ಸರಿ ಇಲ್ಲನೀನು ರಾತ್ರಿ ಒಂದಷ್ಟು ಹೊತ್ತುನಿದ್ದೆ ಮಾಡುವುದು,ನಾನು ನನ್ನ ತೋಳಲ್ಲೇಗಲ್ಲವಿಟ್ಟು ಏನನ್ನೋ ದಿಟ್ಟಿಸಿಕಣ್ಮುಚ್ಚುವುದು ಮತ್ತುಈ ಬೇಗೆಯಲ್ಲಿ ಎರಡೇ ಹನಿಗಳುಕಚ್ಚಿ ಮರೆಯಾಗುವುದು + +ಈ ಹುಚ್ಚು ಹಿಡಿಸುವ ರಾಗನೀನು ಸೆಣೆಸಿದ ರಾತ್ರಿಗಳನ್ನುಕನವರಿಸಿ ಇಲ್ಲವಾಗುತ್ತಿದೆಹೇ ಇವನೇ ಬಿಟ್ಟುಬಿಡು,ಇನ್ನೇನಿದೆ ನಿನ್ನೊಳಗೆಈಸಿಕೊಂಡಿರುವೆ + +ಹೇ ಪ್ರಳಯಾಂತಕನೇನಿನ್ನ ಕಟು ನುಡಿಗಳಿಗೆಬೆಣ್ಣೆ ಸವರಿ ಗರ್ಭದೊಳಗೆಕರಗಿಸಿರುವೆಈ ಮರದ ಬಿಳಲುಗಳಡಿಮಲಗು ಬಾ, ತಣ್ಣಗಿರುಮಗುವೇ,ನಿನ್ನ ಮೈಯ್ಯಲ್ಲಿರುವ ರೋಮದಷ್ಟುಸುರತಿಯರು ನಿನಗಿರಲಿನಿನ್ನ ಮುಕುಟದಬೆಗಡೆಗಳ ಮಿಣುಕೊಂದುನನಗಿರಲಿಹೇ ಸುಡುವವನೇ ಎಲ್ಲಾ ನಿನಗಾಗಿನನಗೆಂದು ಏನೂ ಇರದುಮಗುವೇದಣಿದಿರುವೆ, ತಣಿಯದ ತೋಳುಗಳಿವೆಮಲಗು ಬಾ + +23 + +ನಾನು ಹಬೆಯಾಡುವುದನ್ನುನೋಡದೆ ತಿರುಗದೆ ನಡೆದು ಹೋಗು + +ಅಲ್ಲೇ ನನ್ನ ಕೈಕಾಲುಗಳುಊರಿಕೊಂಡಿದೆ + +ಪಾಪದ ಮುಂಗುರುಳೊಂದುಏನೂ ಅರಿಯದೆ ಅಡ್ಡತಿಡ್ಡಹಾರಿಕೊಂಡು ನಿನ್ನ ಬೆನ್ನಟ್ಟುತ್ತಿದೆ + +ನಾನು ಕುಸಿದಿರುವುದಾದರೂ ಎಲ್ಲಿನಿನ್ನ ಪಾದದ ಅಡಿಯಲ್ಲಿನೀನಿಡುವ ಒಂದೊಂದುಹೆಜ್ಜೆಗಳಡಿ ನಿನ್ನನ್ನುಭರಿಸಿಕೊಂಡು ಲಾಸ್ಯವಾಡಿಗತಿಸಿಬಿಡುವೆ + +ಹೋಗಿಬಿಡು ಎಲ್ಲವನ್ನೂ ಮುರಿದುಗೆಲುವೆಂದರೆ ಇದೇ ನನಗೆ + + + +24 + +ಮಲಗಿಕೊಂಡಿರುವೆ ನಾನುಎಲ್ಲ ಅವಷ್ಟಕ್ಕೆ ಅವು ಸುಖವಾಗಿರುವಾಗನನ್ನಷ್ಟಕ್ಕೆ ನಾನು + +ಹೀಗೆಲ್ಲ ಯಾಕಾಗಬೇಕುಎಲ್ಲಾ ಕೊಟ್ಟು ಏನೂ ಉಳಿಸದೆ ಬಿಟ್ಟುಹೇಗೆ ಬಂದೆನೋ ಹಾಗೇ ಹೋಗುವೆಇವೆಲ್ಲ ಇರುವುದೇ ಹೀಗೆಸೌಖ್ಯವಿರಲಿ ಎಲ್ಲವಕ್ಕೂ + +ಮುಂದೆ ಏನೋ ಇರಬಹುದುಕನಸಲ್ಲಿ ಬಂದ ದ್ವೀಪಕೋಮಲ ಕವಿತೆಗಳು, ಹೋಲಿಕೆಗಳುಹೀಗೆ ಮತ್ತೆ ಬೇಕಿರಲಿಲ್ಲಈ ಒರಟು ಪದಗಳುತಲೆನೇವರಿಸುವುದು + +ಒಂದು ದೊಡ್ಡ ಹಾಳೆಯಲ್ಲಿಚಿತ್ರಗಳು ಕುಳಿತಿವೆ ಅಲುಗಾಡದೆಗಂಡು ಹೆಣ್ಣು ಅದು ಇದು ಎಲ್ಲವೂಗಾಳಿಬೀಸಿದರೂ ಯಾರೂಕದಲುತ್ತಿಲ್ಲ ಹಾಗೆಯೇ ಇದ್ದ ಹಾಗೆಯೇಅಲ್ಲಿಂದ ಎದ್ದು ಬಂದಿರುವೆ ನಾನುಜೀವಂತವಾಗಿ + +25 + +ನಮ್ಮ ಮಾತನ್ನು ಆಚೆಗೆ ಕೇಳಿಸದಂತಹಬಿರುಗಾಳಿಮತ್ತು ದಾರಿಯೇ ಇಲ್ಲದಅಥವಾ ನೂರುದಾರಿಯ ಹಾಗಿರುವನನ್ನ ಕುತ್ತಿಗೆಯಂತಹ ಬಟಾಬಯಲಲ್ಲಿ,ನಿನ್ನ ಪಕ್ಕದಲ್ಲಿ ಕುಳಿತಿರುವೆ + +ಸುಖವೆಂದರೆ ಹೀಗೆ,ಎತ್ತರದ ದಂಡೆಯ ಮೇಲೆಕಾಲು ಅಲ್ಲಾಡಿಸಿಕೊಂಡುಇಡೀ ನಿನ್ನ ಜೀವ ಕಡೆದುನೀನು ಬಿಡುವ ಉಸಿರನ್ನುನಾನು ಒಳಗೆಳೆದುಕೊಳ್ಳುವುದು + +ಹೆಸರು ತಿಳಿಯದ ಹಕ್ಕಿಯೊಂದುನಿನ್ನ ಪರಿಮಳವನ್ನು ರಪರಪನೆ ಹಾರಿಸಿಇಷ್ಟು ಅಗಲಕೆ ಚದುರಿಸಿದೆಅಷ್ಟು ದಿನದಿಂದ ಹಿಡಿದಿಟ್ಟಚೆಂಡಿನಂತಹ ನೋವೊಂದುಈಗಷ್ಟೇ ಉರುಳಿ ಹೋದ ಹಾಗಿದೆ + +ನಾನು ಮೈಯ್ಯ ಮೇಲೆ ಒಂದು ದೊಡ್ಡಗರಿ ಹೊದ್ದುಕೊಂಡಿರುವೆಬಯಲಿನ ಮೇಲೆ ನೀನು ಮಲಗುನಿನ್ನ ಮೇಲೆ ನಾನು ಮಲಗಿಆಕಾಶ ನೋಡುವೆನಿನ್ನ ಮುಖದ ಮೇಲೆ ಕಚಕುಳಿ ಇಡುವನನ್ನ ಕೂದಲಿಗೆ, ನೀನು ಗರಿ ಸರಿಸಿಈ ಕೊನೆಯಿರದ ನೆಲದ ತುಂಬಾ ಉರುಳಿಬಿಡು + +ಒಂದು ಸಲ ನೀನು ಒಂದು ಸಲ ನಾನುಕನ್ನಡಿಯ ಹಾಗಿರುವ ಆಕಾಶಕ್ಕೆಬೆನ್ನು ತೋರಿಸಿಮಳೆ ಸುರಿದರೆ ನಾವೂ ಮಳೆಬಿಸಿಲಿ ಬಂದರೆ ನಾವೂ ಬಿಸಿಲು + +ಆದರೆಬಯಲಿನ ತುಂಬಾ ದಾರಿಮಾಡಿಕೊಂಡುನಡೆದು ಹೋಗುವವನು ನೀನುಅಲ್ಲೇ ನಿಂತು ನೋಡುವವಳು ನಾನು + + + +26 + +ಕಾಡು ಕಾಡು ನನ್ನ ಕಾಡುಕಣ್ಣು ಮುಚ್ಚಿದರೆಕಾಣುವ ಸುಖವೇ…. + +ತಬ್ಬಿ ಹಬ್ಬಿದ ಪೊದೆಗಳುಸೀಳು ದಾರಿಗಳುಕೈ ಎಳೆಯುತಿದೆಈ ಹರಿವ ತೊರೆಯ ತಂಪುನನಗೇನಾಗಬೇಕು?ಮೈಚೆಲ್ಲಿ ಮಲಗಿದ ಕಾಡು ಹೂವಿಗೆಹೆಸರಿಡಲೇ?ಮುದ್ದೆ ಮಿಂಚುಳ್ಳಿ ಇರುಳ ಇಬ್ಬನಿಯೇಮುಗಿಲ ಸನ್ನಿಧಿಗೆಚುಂಬಿಸುವ ಮಲೆಯೇನಾ ಯಾರು ನಿನಗೆ?ಹೇಳ ಹೆಸರಿಲ್ಲದಕಾಡ ಬಾಲೆಗೆಕಾಡು ಕಾಡುನೀ ನನ್ನ ಕಾಡು + +27 + +ಕತ್ತಲಾಗಿದೆ ಆಗಲೇನನಗೇನೋ ಮಂಕು ಬಡಿದಿದೆ + +ಮುದ್ದೇ ಮುದ್ದು ಮೇಲೇರಿಬರುತಿದೆ ನನ್ನ ಹೊಸಿಲಿಗೆಇರು ಸ್ವಲ್ಪ ಈ ಮರವ ಹತ್ತಿನೆತ್ತಿಯ ಮೇಲೆ ಕುಳಿತುಮತ್ತೆಗೆ ನಗುವನ್ನುಇಟ್ಟು ಬರುವೆನೀನು ಮನೆಯ ಮಗುವಿನ ಹಾಗೆಜೋಕಾಲಿ ಜೀಕಿದ್ದುನಿನ್ನ ತೂಗಿ ಏರಿಸಿದ್ದುಇಲ್ಲೇ ಕಾಣಿಸುತಿದೆ + +ಎಲ್ಲವೂ ನಿಜಅದುರಿ ಅಣಕಿಸುತಿದೆಅದೇ ದಾರಿಯ ಒಳತರಗೆಲೆಗಳು ಚರ ಚರಸದ್ದುಮಾಡುವುದುಆಮೇಲೆಗೆ ಬಚ್ಚಿಟ್ಟ ನಗುವೂ…ಎಲ್ಲವೂ ನಿಜ + +ನಿನ್ನನ್ನು ನೀನು ಇಲ್ಲೇ ಬಿಟ್ಟಿರುವೆಅಲೆದಾಟ ಮುಗಿದರೆ ಬಾಈ ಗೂಗೆಗಳಾದರೂ ನಿನ್ನನ್ನೇಕರೆಯುತ್ತಿದೆನನ್ನ ಬೆಳದಿಂಗಳ ನೋವು ನೀನುನಿನ್ನ ಹೇಗೆ ಬಿಟ್ಟುಕೊಡಲಿಕತ್ತಲಾಗಿದೆ ಆಗಲೇಮನೆಯ ಮಗುವಿನ ಹಾಗೆಜೋಕಾಲಿ ಜೀಕಿ ಬಾ + + + + + +28 + +ನನ್ನದೆಲ್ಲಾ ನಿನ್ನದೆಂದುನೀ ಬರುವ ಮೊದಲೇ ಅನಿಸಿತ್ತುನಿನಗೊಬ್ಬನಿಗೆಂದೇ ಚಿಪ್ಪಿನಲ್ಲಿಒಡೆಯದ ಮುತ್ತುಗಳಿವೆಕುತ್ತಿಗೆಗೆ ಆರದ ಪರಿಮಳವಿದೆನಿನ್ನ ಮರುಳು ಕರಗಿಸುವ ಕರುಳಿದೆನನ್ನ ಸುಖದ ಮಾಳಿಗೆಯಮೇಲೆ ಇರುವವನೆ, ನಿನ್ನದೇ ಇದುಎಲ್ಲಾ ಕೊಟ್ಟು, ಕಳುಹಿಸುವೆ + +ಈ ಕತ್ತಲು, ಮೋಡ, ಸುರಿಯುವಮಳೆಗೆ ನಾವಿನ್ನೆಷ್ಟೋನಿಗೂಢವಾಗುವುದಿದೆಬೆಳಗಿನ ಇಬ್ಬನಿಗೆಬರೀ ಮೈಗೆ ಏನೋಸೋಕಿದಂತೆನಿಸಿಮತ್ತೆಷ್ಟು ಗಾಢವಾಗುವುದಿದೆಇನ್ನೂ ಅದೆಲ್ಲಾ ಆಗುವುದಿದೆ. + +ನೋಡು, ನಮ್ಮ ಹಾಗೆಯೇ,ಆ ಮೋಡಗಳು ತಬ್ಬಿಕೊಂಡಿರುವುದುನಮ್ಮ ಉಸಿರಿನ ಹಬೆಯಾಗಿರುವುದುಒಂದೇ ಲಯದಲ್ಲಿ ಹರಿಯಲುನನ್ನ ಸುಖದ ಮಾಳಿಗೆಯಮೇಲೆ ಇರುವವನೇನಾಳೆ ಬರುವೆನೆಂದವನೇನಿನ್ನ ಕಣ್ಣ ಹೊಳಪು ಕಂಡುನಾನು ಸುಖಿಸುವೆ + + + +29 + +ನೀನೊಬ್ಬ ಋಷಿಕುರುಚಲು ಗಡ್ಡದಲ್ಲಿ ಇಣುಕುವ ತಾರುಣ್ಯದಲ್ಲಿಶೂನ್ಯ ನೋಟದ ಆಂತರ್ಯದ ಸೌಖ್ಯದಲ್ಲಿಸಮಾಧಿಯೊಳಗಿನ ಧಾವಂತದ ಹರಿವಿನಲ್ಲಿತುಕ್ಕು ಹಿಡಿದ ದರ್ಶನ ಅನುಭಾವಗಳಲ್ಲಿ + +ನೀ ಅನಿಕೇತನ.. ಯಾರದೋ ಪಾದಗಳಲಿಗೂಡುಕಟ್ಟಿಲ್ಲನೀ ಪರಮಾತ್ಮ… ನನ್ನಕಣ್ಣ ಸೊಡರಿನಲ್ಲಿಯಾರಿಗೆ ನೀನು?ನಿನ್ನ ತೇವದಲ್ಲಿ ಒಣಗಿ ಪುಡಿಯಾಗಲಾರದನೀ ಅನಂತ.. ಮೀರಿದ ಸಂತ + + + +30 + +ಇಷ್ಟು ದಿನ ಕಾಣಿಸದೇ ಇರುವುದಕ್ಕೆಇಲ್ಲೇ ಇದ್ದೆಕೈ ಕಾಲು, ಕಣ್ಣು ಕಿವಿ…..ಮತ್ತೆ ಒಂದೊಂದೇ ಹುಟ್ಟುತ್ತಿದೆಕಳೆದು ಹೋಗು ಒಮ್ಮೆ ನನ್ನ ತಿಕ್ಕಲುತನವೇನರಳದ ಸಾವ ನೆರಳನ್ನು ನೋಡಿಬಿಡುವೆ + +ಅದರೆ ಕೇಳುಆ ತುತ್ತ ತುದಿಯ ನಿರಾಕಾರ ಸಾಕ್ಷಾತ್ಕಾರಕೇವಲ ನನ್ನದು.. ನನ್ನೊಬ್ಬಳದೇನೀ ಬೇಡವೆಂದರೂ ನನ್ನದೇ + +ಪ್ರಖರ ಬೆಳಕಲ್ಲೇ ನಿನ್ನ ಮಿಂಚುತುಂಬಿಕೊಂಡು ಇನ್ನು ಬಿಡಲಾರೆ ಕಣ್ಣುನನ್ನ ಗೋರಿಯ ಮೇಲೆ ನೆಟ್ಟ ಗಿಡದ ಆಹ್ಲಾದಕ್ಕೆನಿನ್ನ ತಣ್ಣಗಿನ ನೋಟಕ್ಕೆ, ನನ್ನೊಡನೆ ಮಗುವಾಗಿದ್ದಕೆನಿನ್ನ ಮರುಳು ಧೈರ್ಯ, ತೊದಲಿ ಇಲ್ಲವಾಗುವುದಕ್ಕೆ + +ಯಾವುದೂ ಬೇಡ ಇದೆಲ್ಲಾಬರಬಾರದಿತ್ತು ನೀನು ಇರುವಾಗಲೇ ನೆನಪಾಗಲು + +31 + +ಇನ್ನು ಉಳಿದಿರುವುದುನನಗಿರುವ ಬೆರಳಿನಷ್ಟೇ ದಿನಗಳುನಿನ್ನ ನೋಡಲು + +ಮತ್ತೆ ಕೂಡಿಟ್ಟಿರುವೆ, ತುಂಬಿಕೊಂಡಿರುವೆಎಂದಿನಂತೆ ಇಂದೂ ಮರೆತಿರುವೆ ಕೂಡಾಇಲ್ಲೊಂದು ಎಲೆ ಗಾಳಿಯಲ್ಲಿ ಬಳುಕಿಕೊಂಡು,ಏನೋ ಬೇಕೆಂಬಂತೆ ನಾಚುತ್ತಿದೆಒಂದೇ ಒಂದು ಧೀರ್ಘ ಉಸಿರುಈ ಚಲಿಸುವ ರಸ್ತೆ, ಮರ, ಬೆಳಗಿನಮುದ್ದು ಆಕಾಶ, ಓಡಿ ಓಡಿನನ್ನನ್ನು ಅಲ್ಲಿಗೆ ತಲುಪಿಸುತ್ತದೆಮುಂದೆ.. ಏನೆಂದು ಗೊತ್ತಿಲ್ಲದಂತೆನೀನು ಬೀಗಿಕೊಂಡು ತಣ್ಣಗೆ ನಗುತ್ತಿರುವೆಇರು, ಈಗಷ್ಟೇ ಬಂದಿರುವೆನೆಂದೇ?ಮೊದಲು ಎಲ್ಲಿ ಮುತ್ತಿಡಲಿ ಮೆತ್ತಗೆ? + +ಹೇ ಪರಮಾತ್ಮ! ಎಲ್ಲಿಂದ ಹೇಗೆ ನುಸುಳಿದೆಮೈಯ್ಯಲ್ಲಿ ಬಚ್ಚಿಟ್ಟ ಚಿಟ್ಟೆಗಳನ್ನು ಹಾರಿಸಿಕಣ್ಣು ಹೇಗೆ ತೆರೆಯಲಿ, ಕಿವಿಯ ಆಳದಲ್ಲಿಮೂಗು, ಕುತ್ತಿಗೆ ಕಚ್ಚಿ ನಿನ್ನ ನಾಲಗೆ, ಎಂಜಲುಸಣ್ಣಗೆ ಬೆವರಿ, ಬೆಚ್ಚಗಾಗಿ ಏದುಸಿರು ಬಿಡುತ್ತಿರುವ ನನ್ನ ಎದೆಅಷ್ಟೇ ಗೊತ್ತು ನನಗೆಎಣಿಸಿದ ಬೆರಳುಗಳನ್ನು ಅಮುಕಿ ಮುರಿದು ಬಿಡುಕಾಣುವ ಹೂಗಳೇ ಮುಷ್ಟಿ ಹಿಡಿದುಹಾಗೇ ನಗುತ್ತಿರಿ,ಹರಿಯುವ ಹಾವಾಗಿರುವೆ, ಹಾ.. ಸುಖಿಸುತ್ತಿರುವೆಹೇ ಪರಮಾತ್ಮ! ಇನ್ನು ತಡೆಯಬೇಡ + +ಕಿಬ್ಬೊಟ್ಟೆಗೆ ಸರಿಯಾಗಿ ತಲೆಯಿಡುಕೈತುಂಬಾ ಹಿಡಿದು ಒತ್ತಿಕೋತೊಟ್ಟಿಗೆ ತೊಟ್ಟು ತಾಗಿಸಿಮೆತ್ತಗೆ ಆಡುವಷ್ಟು ಕಾಲವಿದೆ ನಮಗೆನನ್ನ ಸಂಧಿ ಸಂಧಿಗಳಲ್ಲಿ ನಿನ್ನನ್ನು ಹಡೆದೇ ತೀರುವೆತೊಡಿಸಿ ಬಿಡು ನಿನ್ನ ಆಭರಣಒಳಗೆ ಏನಾದರು ಪರಿಮಳದ ಮಾತಾಡುನನಗೆ ಅವಸರಿಲ್ಲ.. ನಿನಗೂ?ನಮ್ಮ ಉಸಿರು ಇನ್ನಷ್ಟು ದೂರ ಓಡುವುದಿದೆಮತ್ತೆ ನಾ ಅಳುವುದೇಕೆ?ಬಿಡಿಸಿಕೊಳ್ಳಲು ಹೆಣಗಾಡುವುದೇಕೆ? + +ಮುಂದೆ,ಒಂದು ಊರು, ಒಂದೇ ಮನೆಮತ್ತು ಅಲ್ಲಿ ನಿಗೂಢವಾಗಿಕಳೆದುಹೋಗಿರುವ ನಾನುಅದೊಂದು ಮಗುವೋ, ನೀನೋಗಾಢ ನಿದ್ದೆಯಲ್ಲಿ ಮುಖ ಹುದುಗಿಸಿಸವರುತ್ತಿದೆಇನ್ನು ಉಳಿದಿರುವುದುನನಗಿರುವ ಬೆರಳಿನಷ್ಟೇ ದಿನಗಳುನಿನ್ನ ನೋಡಲು + + + +32 + +ಮರೆತು ನಡೆವೆನೆಂದರೆ ಇನ್ನೇನು ಮಾಡಲಿಇಷ್ಟು ಹಾಲನ್ನಾದರೂ ಕುಡಿದು ಹೋಗುಒಂದು ದಳ ಶ್ರೀ ತುಳಸಿ ನಿನ್ನ ಸಮರ್ಪಣೆಗೆಪಾರಿಜಾತದ ಗಂಧ ಇಷ್ಟೇ ಸಾಕು + +ಒತ್ತಿ ಹಿಡಿದಿರುವ ನಿತ್ಯ ಬೆಳಗಿನ ದನಿಗೆಗಿಳಿ ಗುಬ್ಬಚ್ಚಿ, ಕೋಗಿಲೆ ಕಣಗಿಲೆಮಂಜು ಮಳೆಯ ಹನಿಗೆ,ಬೆಚ್ಚನೆಯ ಮಾತು ಮಂದ ಮಾರುತಗಳುಸಂದ ಕವಿತೆಗಳು ಬೆರಳೆಣಿಕೆಯಷ್ಟೆಯೇ?ಕಿತ್ತ ನೆನಪುಗಳ ಜಡೆಕಟ್ಟಿ ತುರುಬಿಟ್ಟುಬಿಚ್ಚಲಾರೆನು ಕಡೆಗೆ ಬಚ್ಚಿಡಲೂ ಬಾರೆನು + +ಅದೆಂತಹ ಕಂಬನಿ, ಮನದಣಿಯೇ ನೋಡಿಮಣಿ ಮಣಿದು, ಕುಣಿ ಕುಣಿದುನೂಪುರದ ಕಿಣಿಕಿಣಿಗೆ ಮತ್ತೆ ತರಂಗಿಣಿಹಬ್ಬುವುದು, ಉಬ್ಬುವುದುಅಡಗುವುದು ಗುನುಗುವುದುಮೌನ ಸಮ್ಮಾನ ಬಿಗುಮಾನಯಾವ ಹೊಸ ಗಳಿಗೆಯೂ ಬರದೆಕಡಲು ಬಿರಿದು ಹೋಗುವುದು + +ಯಾವ ಪರಿಷೆಯೊಳಿರುವೆ, ಪಲ್ಲಕಿಯಲಿ?ನನ್ನ ಗರ್ಭ ಗುಡಿಯಲ್ಲಿ?ಸಾಲು ಹಕ್ಕಿಗಳಲಿ? ಮೈಲುದ್ದ ಮೋಡದಲಿಕಟ್ಟಡವಿಯೇ ಕಂಡಿರದ ಸ್ಪಟಿಕ ಜಲರಾಶಿಯಲಿ?ಸಂಜೆ ಐದರ ಬಾನಿಗೆಚಂದಿರ ತೀರಿದ ನೆರಳುತುಂಟ ಹುಡುಗನೇ ಒಮ್ಮೆ ಅಳಿಸಿಹೋಗುನಿನ್ನ ಒದ್ದೆ ರೋಮಗಳು, ಕಿವಿ ಸಂದಿಯ ಹನಿಗಳುನಿನ್ನ ಮರುಳು ನನ್ನೊಳಗಿದೆ ಕಳೆದು ಹೋಗು + + + +33 + +ಅನಿಸುತಿದೆ ಹೀಗೆಲ್ಲಾ ಒಂದು ಆಲಸ್ಯದ ಹಗಲು + +ಮುಖವಿಲ್ಲದ ಮಾತು, ದನಿಯಿಲ್ಲದ ಹಾಡುಎಂದಾದರೂ ಸಿಗುವ ಸಿರಿಮುತ್ತುಒಳಗೆ ಪರಮಾತ್ಮನಂತೆ ಏನೋ ಸುಳಿದಂತೆಕಡಲು ಕಾಣುವುದು ಒಡಲು ಹೆಜ್ಜೆಇಕ್ಕುವುದುಹೊಳೆಯದಿದ್ದರೂ ಹೊಳೆದಂತೆನಡೆದಿರುವುದು ಕಂಡಂತೆ + +ಕಳೆದ ಮಳೆಯ ಆಕಾಶ ಇಂದು ಧೋ ಸುರಿವುದುದೂರದೂರದ ಮೋಡದ ಮೇಲೆ ಹಾರಿ ನಡೆವುದುಬೆನ್ನು ತಾಕಿಸಿ ಕಳೆದ ತಂಪು ಸಂಜೆಯ ಹೊತ್ತುಮರದ ಮರೆಯಲ್ಲಿ ಹಕ್ಕಿಗಳ ಜೋರು ಮಾತುಸಾಯುವ ಇರುಳು ದೇವರಂತಹ ನಾವುಹೊಳೆಯದಿದ್ದರೂ ಹೊಳೆದಂತೆನಡೆದಿರುವುದು ಕಂಡಂತೆ, ಮೌನದಿಬ್ಬಗಳು ಹರಸಿದಂತೆ + +ಅನಿಸುತಿದೆ ಹೀಗೆಲ್ಲಾ ಒಂದು ತುಂಬು ನಕ್ಷತ್ರದ ಇರುಳು + + + + + + + +34 + +ಬರುವುದಿಲ್ಲ ಎನುತಿರುವನುಶಿಶುವಿನ ಹಸಿ ನಶೆಯಂತವನು + +ಇಲ್ಲಿ ನನ್ನ ವಿರಾಮದ ಹೊತ್ತುಆತ್ಮಕ್ಕೆ ಇಳಿಯುವವ್ಯಂತರ ದೇವತೆಯಂತಹ ವೈನೊಂದುದೂರದಲ್ಲಿ ಕೇಳಿಸುವ ಇರುಳ ಸಂಗೀತನಿನ್ನ ಒಂಟಿ ಗುಟುರು + +ನಮ್ಮ ಪ್ರಿಯ ಹುಚ್ಚಿನ ಆಳದ ಅರಿವುಇನ್ನೂ ಬಾರದು ನಿನಗೆಪ್ರಿಯ ಸೈತಾನರ ಕಾರುಣ್ಯಕ್ಕೆನಾವು ಹೊಸದಾಗಿ ಪ್ರೇಮಿಸುವುದುನಿನ್ನಿಂದ.. ಮಗುಎಲ್ಲಿಯೋ ಕಳೆದು ಹೋಗಿರುವೆ ನೀನುಎಳೆಯ ಹಸಿ ನಶೆಯಂತವನು + +ದಿನವಿಡೀ ನಾನು ನಿನ್ನ ಕುಡಿದತೇಲುಗಣ್ಣಿನ ನಿಜಗಳುಕಾಣುವುದು ಬೇಕಿಲ್ಲ ನನಗೆನಾನು ಕಿರುಚಿದ. ಗಂಟಲಲ್ಲಿಅಳುವ ಬುಗ್ಗೆಯಲ್ಲಿ ನಿಮಿಷಗಳನ್ನು ಕೊಂದುಎಲ್ಲಿಯೋ ಕುಳಿತ ಒಂದು ಓರೆಯಲ್ಲಿನಿನ್ನ ಬಲಗೆನ್ನೆಯ ಗುಳಿ ಕಾಣಿಸಿನೆಗೆದು ಬರುವ ಕಪಿಣಿಯಂತವಳು + +ನನ್ನ ನಿಜ ಗೊತ್ತು ನಿನಗೆನನ್ನ ಸುಖದ ಬಾಗಿಲ ಒಳಗೆ ನೀ ಬರುವಾಗನನ್ನ ಏಕಾಂತ ಅಡಿ ಇಡುವದೂರದ ನಾನು ಚಂದ ಕಾಣುವಎಲ್ಲವೂ ಗೊತ್ತು ನಿನಗೆ + +ನಿನ್ನ ತಂಪು ಊರಲ್ಲಿನನ್ನ ಹೊಸ ರಾಜಿ ಮಾತುಒದ್ದೆ ಕನಸು ಮತ್ತೆ ಬರುವಹೊಸ ಮಳೆಗೆ ಆಲಸಿ ಪ್ರಿಯಕರ ನೀನು + +ಕಾವ್ಯ ನಮ್ಮನ್ನು ಕುಡಿವುದೋನಾವು ಕಾವ್ಯವನ್ನು ಕುಡಿವೆವೋಯಾರು ಯಾರೆಂದು ತಿಳಿಯದ ಹೊತ್ತುಸುಳ್ಳು ಸುಳ್ಳೇ ಎಂದು ತಿಳಿದ ನಿಜದ ಹೊತ್ತುನಮ್ಮ ಒಂಟಿ ತೇರನೆಳೆವುದು ನಮಗೆ ಗೊತ್ತು. + +35 + +ಏನೋ ಒಂದು ಸಿಗಬಾರದುಮೌನ ಕಲ್ಲೊಳಗೆಚಲಿಸುವ ಕತ್ತಲಲ್ಲಿಸುಖದ ಎಳೆಗಳುತಣ್ಣಗೆ ಕುಳಿತಿದೆ + +ಸುತ್ತ ಓಡುವಮೋಹದ ಸುಗಂಧಗಳುಎದೆಯ ಸಂಕಟವೊಂದಕ್ಕೆಸಂತೈಸುತಿದೆಬೇಡ ಹೋಗಿರೆ ಎಂದರೆಯಾರಿಗೋ ಕುಣಿಯುತಿರುವಸಮ್ಮೋಹಿನಿಯರುಹಾ.. ಸುಖದ ಎಳೆಗಳುತಣ್ಣಗೆ ಕುಳಿತಿದೆ + +ನಾನು ಯಾರೋ ನೀನು ಯಾರೋಯಾವುದೋ ಕೋಶದಹಕ್ಕಿಯ ಹಾಡುಗಾರರುಈಗಷ್ಟೆ ಎಲ್ಲಿಂದಲೋ ಬಂದ ಗಾಳಿಗೆಅಲ್ಲಲಿ ಕುಳಿತು ಕಾಯುವ ಮೋಡಗಳುಮತ್ತೆ ಪ್ರೇಮಿಸುತಿದೆ + +ಇನ್ನೂ ಯಾವುದೂ ಮರೆತಿಲ್ಲಬರುವಾಗ ಬರುವ ಅಳು, ಬೇಕೆಂದರೆಒಂದೊಂದೇ ಮೆತ್ತಗೆ ಇಳಿಸಿ ಹೊರಡುವುದುಭಾಗ್ಯವಿದ್ದರೆ ಇನ್ನೊಮ್ಮೆ ಹುಟ್ಟುವುದುಯಾರೋ ಗೊತ್ತಿಲ್ಲದವನ ಸೆರೆಯಲ್ಲಿನಿದ್ದೆ ಹೋಗುವುದುಎಲ್ಲಾ ದುಃಖಗಳು ಮುಗಿದಿದೆಎದೆಯ ಸಂಕಟವೊಂದು ಹಾ ಮೇಲೇಳುತಿದೆ + + + +36 + +ಈಗ ಖಾಲಿಯಾಗಿದ್ದೇನೆನೆತ್ತಿಯಾಚೆಗೆ ದೇವರಂತಹ ಆಕಾಶಕಾಲ ಬೆರಳ ಕೆಳಗೆ ದೈವದಂತಹ ಪಾತಾಳಹಾರಿ ನುಸುಳುವ ಪ್ರೇಮದ ಹಿಕ್ಕೆಗಳಿಂದಖಾಲಿಯಾಗಿದ್ದೇನೆಒಮ್ಮೊಮ್ಮೆ ಉದ್ದ ಮಲಗುವ ನನ್ನ ಮೈಯ್ಯ ನದಿಅದರ ಹರಿವುನನ್ನ ದೇವರು..ಬೇಕಂತಲೇ ಜಡವಾಗುತ್ತೇನೆಹಾಗೆಯೇ ತಪ್ಪಿಸಿಕೊಳ್ಳುತ್ತೇನೆಒಂದೊಮ್ಮೆ ನನ್ನ ಕಣ್ಣುಗಳುತೆರೆಯಲಾರವುಎಲ್ಲಿಯೊ ಕವುಚಿರುವ ದೇಹ ಉರುಳಲಾರದುಏನೂ ಅರಿವಾದಂತೆ ತುಟಿಗಳು ಮಾತ್ರ ನಗುತ್ತಿರುವವುಒಂದು ಪ್ರಬಲ ಗಾಳಿಯಂತೆನಾನು ಆಗೊಮ್ಮೆ ತುಂಬಿಕೊಳ್ಳುತ್ತೇನೆ + +37 + +ನಮ್ಮ ಸಲುವಾಗಿ ಏನೋ ಒಂದು ನಡೆಯುತ್ತಿರಬೇಕುನಿರಂತರವಾಗಿನಮ್ಮ ಪೊರೆಯುವ ಬೆಟ್ಟಗಳೇ ಕರೆಸಿಕೊಳ್ಳಿ ಅಲ್ಲಿಗೆಇನ್ನೂ ಅಲ್ಲಿಯೇ ಉಳಿದು ಹೋಗಿರುವ ನಮ್ಮನ್ನುಒಂದು ಬಾರಿ ಕರೆದು ತೋರಿಸಿ…ಮತ್ತೆ ತೊರೆದು ಹೋಗುವ ಪರಿತಾಪವನ್ನು ಮನ್ನಿಸಿ ಒಂದು ಬಾರಿಎಲ್ಲಿಯ ದೇಹ ಎಲ್ಲಿಯ ಕಾವು ಎಲ್ಲಿಯ ಉಸಿರು?ಇಲ್ಲಿ ಯಾವುದೂ ಇಲ್ಲವೋ ಮಾಯೆ ಈ ಬೆಟ್ಟದ ತುದಿಯಲ್ಲಿಸುಮ್ಮನೆ ಏನೂ ಅರಿಯದ ಮಳೆ ಎಲ್ಲೋ ಹತ್ತಿದ ಚಳಿನನ್ನ ಬರಲಿರುವ ದುಃಖದ ಹಾಗಿನ ಮೋಡದ ಎಲೆಗಳು ಮದಿರೆ ಮಾರುತಹೇಗಿರಬಹುದು ಎಲ್ಲಾ? + +ಗುಟ್ಟು ಬಿಚ್ಚುತ್ತಾ ವೇಗವಾಗಿ ಕಳೆಯುವ ಹಾದಿಗಳುನಾವು ನಮಿಸಿ ನಮಗೆ ಉಪಕರಿಸುವ ತಿರುವುಗಳುನೆನಪು, ಹಸಿರು, ನಗು, ಮಾವಿನ ಮರಬೇಗ ಹಾದು ಹೋಗುವ ಮನೆಯ ಹೆಂಚಿನ ಅವಸರಸುಳಿವ ಗಾಳಿಗಳೇ ತೋರಿಸಿ ಒಂದು ಸಲ… + +ಹೋಗಲಿ ಬೇರೇನು ಬೇಡನಿನ್ನ ಕೈಮುಗಿದು ಬೇಡುವೆ ಬಾಲಕನಿನ್ನ ಬೆಚ್ಚಗಿನ ಮೆತ್ತನೆ ಕೊರಳ ಮೂಸುವ ಸುಖವ ನೀಡುಒಮ್ಮೆ ನಮ್ಮನ್ನು ಕರೆಸಿಕೊಳ್ಳಲು ಹೇಳುಇಲ್ಲಿ ಮಳೆ ಬಂದು ನನಗೆ ಅಳುಬರಿಸುತಿದೆಚಳಿಗಾಳಿ ನನ್ನ ಮೈಕೊಡವಿ ಎಬ್ಬಿಸುತಿದೆಬರಿಯ ಪದ್ಯ ಬರೆಯುವುದೂ ಸಾಕಾಗಿದೆಒಮ್ಮೆ ಬರಿದೆ ಬಂದು ಹೊಗುವೆ ಹೇಳುನಾಲ್ಕು ದಿನ ನಿನಗಾಗಿ ಬದುಕಲುನನ್ನ ಉಸಿರಿನ ಪೊಟ್ಟಣವನ್ನು ಪುನಃ ತುಂಬಿಸಿಕೊಳ್ಳಲುಒಮ್ಮೆ ಬರಿದೆ ಬಂದು ಹೋಗುವೆ ಹೇಳು + +38 + +ನೀನೊಂದು ಪ್ರಭೆನನ್ನ ತೂತುಗಳಿಗೆ ತೇಪೆ ಹಚ್ಚುವ ಬಣ್ಣದ ಬೆಳಕುಯಾವುದು ಸರಿ ಇರದಾಗ ಕಾಣಿಸುವ ಮಾಂತ್ರಿಕ + +ನೀನು ನಿಜನಿಜವಲ್ಲವೆಂದರೂ ನಿಜಹೆಕ್ಕಿಕೊಳ್ಳಲಾಗದು ನಿನ್ನ ಅವು ಇವುಸರಿ ತಪ್ಪು ಒಳಗು ಹೊರಗುಎಲ್ಲಾ ಇರುವ ಹಾಗೆಯೇ ಇರಬೇಕುನಾವು ಕುಡಿದ ಮಧ್ಯವೂನದಿ ಕಲ್ಲ ಹಾವಸೆಯಲ್ಲಿಸಣ್ಣಗೆ ಪಾದ ಜಾರಿದ ಪದ್ಯವೂನನ್ನ ಹಿಡಿದಿರುವ ನಿನ್ನ ಬಿಗುಈ ಹೊತ್ತಲ್ಲಿ ನನ್ನ ಮಾತ್ರ ಪ್ರೀತಿಸುವೆಎಂದು ನಂಬಿರುವ ನೀನುಎಲ್ಲವೂ ಹಾಯಾಗಿ ಇರಬೇಕು ಹೀಗೆ + +ಪರವಶ ನಾವೀಗಎಣಿಸದ ಹಾಗೆ ಬಂದ ಪ್ರಳಯದಂತ ಅಳುವಿಗೆಒರೆಸಲು ಇರುವುದು ನನ್ನ ಎರಡು ಕೈಗಳುಈ ಜಗದ ಒಲವನ್ನು,ದೇವತೆಯ ಮೂಗುತಿಯ ಹೊಳಪಂತ ಚಂದವನ್ನುವಿಶಾಲ ಹಸಿರ ಮೇಲಿನ ಕನಸನ್ನುನನ್ನ ಬೊಗಸೆಗೆ ತರಿಸಿ ಕಣ್ಣು ಮುಚ್ಚಿ ಕುಡಿಸುವೆಹೇ ಇವನೇಮತ್ತಿನಂತಹ ಮತ್ತನ್ನು ಹೊತ್ತುನಿನ್ನ ಕಣ್ಣಲ್ಲಿ ಹೊರಿಸುವೆ + +ಅಳಬೇಡ ನಾನಿರುವಾಗನೀನು ನನ್ನ ಕತ್ತಲಿನ ಮಿಂಚುಹುಳಒಂದಿಷ್ಟು ಹೊತ್ತು ನನ್ನ ಒಂಟಿಯಾಗಿಸಿ ಹೋಗುವಾಗನಿನ್ನ ಅಳುವೊಂದಿರರುವುದು ನನ್ನ ಬಳಿನನಗೂ ಅರಿವಾಗದ ಹಾಗೆಮೆತ್ತಗೆ ಯಾವಾಗಲೋ ನುಸುಳಿದ ನೋವುತಿಳಿಯುವ ಮೊದಲೇ ಬಂದು ಬಿಡುವ ನೀನುಏನೋ ಒಂದು ಬೇಸರ, ದಿವ್ಯತೆಯಾವ ಪರಿವಿರದ ಏನೆಂದು ತಿಳಿಯದ ಮುಗ್ಧ ಹೊತ್ತುಇಳಿವುದಾದರೂ ಹೇಗೆ ಇವು ಈ ಜಗದ ಭಾರದ ಹೃದಯಕ್ಕೆಒಂದು ರಾಗಕ್ಕೆ ಮುಗಿಯದೆ ಚುಂಬಿಸಿರುವುದನ್ನುಹೇಳುವುದಾದರೂ ಯಾರಿಗೆ + +ಅಳಬೇಡ ನಾನಿರುವಾಗನೀನು ಬೇಡುವ ನದಿಯೊಳಗೆ ನಿನ್ನ ಬಿಟ್ಟು ಬರುವೆನೀನು ಈಜುವುದನ್ನು ಶುಭ್ರ ಮುಗುಳು ನಗುವನ್ನು ಕಾಣುವೆಬಿಸಿಲು ಮಳೆಗೆ ಇರುಳ ಕೆಳಗೆ ಕಾಣುವೆಗೋಧೂಳಿಗೂ ಕಂಡರೆ ಕಾಣುವೆದೈವ ನೀಡಿದರೆ, ಕಣ್ಣುಗಳಿಗೆ ಕಂಡರೆಒಂದು ಇಡಿಯ ಹಗಲು ನಿನ್ನ ಮಡಿಲಲ್ಲಿ ಮಲಗಿ ಹೋಗುವೆನನ್ನ ಮನ್ನಿಸು ಕರುಣಿಸು ಮರಣಿಸುಅಳುವೊಂದು ಬೇಡ ನಾನಿರುವಾಗ + + + +39 + +ನಾನು ನಿದ್ರಿಸುತಿರುವೆಹೇಳಲಾರದೆ ಬರೆಯಲಾರದೆ ಕೊನೆಗೆ ಮೈಯನ್ನು ಹೊರಳಿಸಲಾರದೆಮತ್ತೆ ಮತ್ತೆಆಗುತಿರುವ ಅತೀವ ಸುಖ ತಡೆಯಲಾಗದೆಸಣ್ಣ ಜಗದ ಮೇಲೆ ನನ್ನ ದೊಡ್ಡ ಹೆಜ್ಜೆಗಳಲ್ಲಿನಿನಗೂ ನಾನು ಕಾಣದಾಗಿರುವೆ + +ನನ್ನ ಕಾಲಿನ ಥಂಡಿ, ಮಳೆ, ಮೌನಈಗ ಹೊರಗೆ ಎಲ್ಲವೂಚಂದವಿದ್ದಿರಬೇಕು ನನ್ನಂತೆ ಮಂಕು ಮರುಳು ಆಕಳಿಕೆ ಎದೆಯುಬ್ಬಿ ಒಂದು ಉಸಿರುಬೇಡ ಯಾವುದೂ ಈ ಜಗತ್ತು, ಪರಿವೆ ಸೌಂದರ್ಯ..ಕೇಳಿಸಿಕೊಳ್ಳಲು ನೀನೂ.. ನನ್ನ ಅತೀವ ಸುಖಕ್ಕೆ + +ನೀ ನನ್ನೊಳಗೆ ಇದ್ದಾಗಲೂ ಜಗತ್ತು ಹೀಗೆ ಚಂದವಿದ್ದಿರಬೇಕುಅದೆಲ್ಲಾ ನಮ್ಮ ಸಲುವಾಗಿಯೇ ಎಂದು ನಿನ್ನ ಮೇಲೆ ನಾನು ಗುನುಗುನಿಸಿರಬೇಕು + +ನೀನು ಸುಮ್ಮನಿದ್ದರೂ ಒಂದು ಕಾರಣವಿದೆನಿನ್ನ ಕಿರುಬೆರಳ ತುದಿ ಸೋಕಿದರೂ ಹಾಡು ಕೇಳಿಸುತಿದೆಒಳಗೆ ಇರಬೇಡ ಹೊರಗೆ ಬರಬೇಡಹೋಗಿ ಬರುವ ನಿನ್ನ ಸುಖದ ಸುಡುವಿಗೆ ಪುನಃ ಪುನಃಜೊಲ್ಲು ಒದ್ದೆ ಜಾರಿ ಸಿಗದೆ ಸಿಗುವ ನಮ್ಮ ಕೇಳದೆ ಬೆಸೆಯುವ ತುಟಿಗಳಿಗೆಹರಿಯುತಿದೆ ಹಾಲು ನಿನ್ನ ಎದೆಯ ಮೇಲೆ ತುಳುಕುತಿದೆನನ್ನ ಪರಿಮಳದ ಹಾಲು ನಮಗರಿವಿಲ್ಲದೆಯಾರೋ ಇಟ್ಟ ಕನ್ನಡಿಯಲ್ಲಿ ನಾನು ಕಂಡಿರುವೆಇವೆಲ್ಲಾ ಏನೆಂದು ತಿಳಿಯದೆ ಅತ್ತು ಮತ್ತೆ ಹಾಲು ನೀಡಿರುವೆ + +ಜಗವೂ ಸುಖಿಸಿದೆ ನಾವು ಸಿಕ್ಕಿರುವುದಕ್ಕೆನನ್ನ ನೆತ್ತಿಯ ಮೇಲೆ ನೀನು ಹರಸಿ ಹೋಗಿರುವುದಕ್ಕೆನಾನು ನನ್ನನ್ನು ಈ ಕ್ಷಣವೂ ಬಿಟ್ಟಿರಲಾರೆನನ್ನ ಅತೀವ ಸುಖ ತಡೆಯಲಾರೆ + + + +40 + +ಒಂದು ನಡು ಹಗಲ ಹೊತ್ತುತಂಪು ಆರದ ನಾವು ಮತ್ತು ಅನ್ಯಮನಸ್ಕ ಆಕಾಶಹಕ್ಕಿ ಹೇಳುತಿದೆ ಇಲ್ಲಿ ಮೋಡ ಕವಿದಿದೆಏನೂ ತಿಳಿಯುತ್ತಿಲ್ಲಏನೂ ಕೊಡಲಿಲ್ಲ ಮಗೂ ನಿನಗೆ ಬರಿಯ ಕರುಳ ಹಾಲುಎಣಿಸಿ ಕೂಡಿಟ್ಟ ಮಾತಿಗೆ ಮುತ್ತಿಟ್ಟು ಮರೆಸಿಬಿಟ್ಟೆಹುಸಿ ಕಳ್ಳ ನಿನ್ನ ತುಟಿಯ ಸೆರೆಯಲ್ಲಿ ನನ್ನ ಹಸಿಯ ಹಾಲುನಿನ್ನ ಒಡಲ ತುಂಬಾ ನನ್ನದೇ ಪರಿಮಳದ ಹಸಿ ಹಾಲುನಾನೀಗ ತಾಯಿ ಪ್ರೇಯಸಿ ದೇವತೆ ಹಾತೆ ತುಂಬು ಹಾಲ ಕನ್ಯೆಇದೆಲ್ಲಾ ಸೇರಿದ ಏನೋ ಒಂದುಆಗಾಗ ನಿನ್ನ ಬೇಡಿ ಮುಖ ನೋಡುವೆ + +ಅಯ್ಯೋ ಬೇಡವಿತ್ತುಬೇಡ, ನೋಡದಿರುನಿನ್ನ ತೆರೆದ ಬಾಯಿ ಮುಚ್ಚಿದ ಮುದ್ದು ಕಣ್ಣು ಮುಗಿಯದ ಉಸಿರುತೊಟ್ಟು ತುಂಬಾ ಬೆಳ್ಳಿ ಕೆನೆಯ ಹಾಲು, ನೋಡಬೇಡಹಿಂಡಿ ಕುಡಿ ಒಸರಿದ ಹಸಿ ಹಾಲು ಮೂಗು ಕಣ್ಣು ತುಂಬಾಏನೂ ತಿಳಿಯುತ್ತಿಲ್ಲಕ್ಷಮಿಸಿಬಿಡು ಮಗೂನಿನಗೆ ನೀಡಿರುವುದು ಬರಿಯ ಪರಿಮಳದ ಹಾಲು + + + +41 + +ನಿನ್ನ ಹೊರಡಿಸಿದ ಆಣೆಗಳಿಗೆಯಾಚಿಸುತಿರುವೆ ನಾನುಎಂದು ಬರುವೆ ಮತ್ತೆ?ಹೇ ಕರುಣಾಮಯಿ, ನೀ ಕರುಣಿಸುವ ಮತ್ತಿನ ಘಳಿಗೆಗೆಎಂದೋ ಬರಿದಾಗಿದೆಬಟಾಬಯಲಿಗೆ ನೀ ಕೊಟ್ಟಮಾತು ಮುತ್ತುಗಿತ್ತು + +ನಡೆದಿಲ್ಲ ಅಂತಹದ್ದೇನುನಮ್ಮ ಕಾಯಿಸಿದ ಕ್ಷಣಗಳೂ ಕಾಯುತಿವೆ ನಮಗೆದಿನವೂ ಕೊನೆಯ ಬಾರಿ ಅಯ್ಯೋ ಎಂಬ ದಿಗಿಲುಮುಗಿದ ಪುಷ್ಕಳ ಹೊತ್ತುಗಳೂ ಮುಗಿದಿಲ್ಲ ಇನ್ನು + +ಕೊನೆಯಾದರೂ ಹೇಗೆಒಂದು ಕತೆ ಮುಗಿವ ರಾತ್ರಿ ಹತ್ತುವ ಕೇದಗೆಯ ಹುಚ್ಚಿಗೆಮುಗಿಸುವ ಪರಿಯ ಕಾಣಿಸದ ಭಗವತಿಗೆಹತ್ತಿ ಹರಿವ ನಮ್ಮ ಭಕ್ತಿಗೆಬಾ ಬಾಗಿ ಕಣ್ಮುಚ್ಚಿ ಭಗವತಿಯ ಬೆಳಗಿಹರಿಯೆ ತಪ್ಪೊಪ್ಪಿಕೋಸಾಲದು ಸಣ್ಣ ಬಾಯೊಳಗೆನಿನ್ನ ಉದ್ದ ಆಳುದ್ದದ ಜಗತ್ತುತಡರಾತ್ರಿ ಯಾವಗಲೋ ಒಸರುವ ಹಾಲುಏನೂ ತಿಳಿಯದ ಬಾಲೆ ಸುಲಿದ ಬಾಳೆ ನಾನುಕಳ್ಳ ಕವಿತೆಯ ಸಾಲು + +ಇರಲಿ,ಹೆಣೆದ ಬೆರಳುಗಳ ಅಲ್ಲೇ ಬಿಡುವ ನಾವುಏರುತೇರುತ ಏರುವ ಆಕಾಶ ನನಗೆತಳಸಿಗದ ಬಿರುಕಿರದ ಭೂಮಿ ನಿನಗೆಎಲ್ಲಿಯ ಕೊನೆ? ಇರುವುದು ಇದೆಲ್ಲಾ ಹೀಗೆನನ್ನೊದೊಂದು ಪುರಾತನ ದುಃಖ ಮತ್ತುನನ್ನ ಬೆತ್ತಲಿನಷ್ಟೇ ನನ್ನ ಒಂಟಿತನ + + + +42 + +ನಾನು ಇರುವುದು ಸುಳ್ಳು ಎನಿಸುತ್ತಿದೆನಿನ್ನ ಹಾಡುವ ಧ್ವನಿಗಳುನನ್ನನ್ನು ಇಲ್ಲವಾಗಿಸಿದೆ + +ಯಾವುದೋ ನೀರ ಆಳದಿಂದ,ಆಕಾಶದ ಹೊಕ್ಕುಳಿಂದ ಮಿಂಚೊಂದುಸುಮ್ಮನೆ ಸುತ್ತ ಹರಡಿಕೊಂಡಿದೆ + +ನಿನ್ನ ತರಾನಗಳುನನ್ನ ಸುಖದ ಕಣ್ಣೀರಲ್ಲಿಹರಿಯುತಿದೆ + +ಹಾಡಬೇಡ ಸಂತನೇಏನೂ ಕೇಳಿಸುತಿಲ್ಲಮಲಗಿರುವೆ ನಿನ್ನ ಮಾಯದ ಮಡಿಲಲ್ಲಿ + +ಸಾಯುವ ಕಡೆಯ ಘಳಿಗೆಯಸುಖದ ಕೊನೆಯಲ್ಲಾದರೂನಿಲ್ಲಿಸಿಬಿಡು + +ಹಾಡಬೇಡ ಗಂಧರ್ವನೇಬೆಟ್ಟದ ಕೆಳಗೆಯಾವುದೋ ನದಿಯ ಸುಳಿಯ ಒಳಹೊಕ್ಕಿರುವೆ + +ನಿಲ್ಲಿಸು ಒಮ್ಮೆದುಃಖದ ಕೊನೆಯ ತುಂಡೊಂದುಉಳಿದು ಹೋಗಿದೆ + +ಮತ್ತೆ ಬೇಡಬೇಡ ಈ ಲೋಕದ ಪ್ರೇಮದೆಳೆಗಳುಇಲ್ಲೇ ಮುಗಿದು ಬಿಡಲಿ ಎಲ್ಲವೂ + +ಕರಗಿ ಹೋಗಿರುವೆನಟ್ಟ ನಡುವೆ ಒಂದು ಕಡೆಸಣ್ಣ ಬೆಳಕಾಗಿಸುನಾನು ಇರುವ ಭ್ರಮೆಯನ್ನೇಕಳಚಿಬಿಡು + + + +43 + +ನನಗೆ ಹೀಗೇ ನಿನ್ನನ್ನು ಕುಡಿದುಸಾಯಬೇಕೆನಿಸುತ್ತಿದೆನನ್ನ ಮಧ್ಯದ ನಶೆಯಲ್ಲಿಇದೊಂದು ಹಳೆಯ ಸಂತನ ಕಾಲದನೆಲದ ಸೊಗಡುನಾನು ಕುಡಿದಗಂಧಗಳನ್ನು ನಿನ್ನ ಸಂಗೀತದ ಸಣ್ಣಗಾಂಧಾರದಲ್ಲಿ ಸೇರಿಸಿಕೋ + +ನಾನು ಸೋಲುತ್ತಿಲ್ಲ, ನಿನ್ನ ಜೀವದ ಒಳಗಿನತೆಳ್ಳಗಿನ ಏನೂ ಕಾಣದ ಮೆದುವಲ್ಲಿಜೀವವಿರಿಸಿಕೊಂಡಿರುವೆ + +ನನ್ನನು ಪೊರೆ ಹೊತ್ತುಕೋನಿನ್ನ ಭಾರದ ಧ್ವನಿಯನಡುವೆ ಹುದುಗಿಸುಏನೂ ಬೇಡದ ನಿನಗೆ ನನ್ನ ಭಿಕ್ಷುಕಿಯಹಳೆಯ ಕಟು ಚೊಗರೊಂದಿದೆ + +ನಿನಗೇ ನೀನು ಯಾರೆಂದು ತಿಳಿಯದಾಗನಾನೇ ನಿನ್ನನ್ನು ತಡವಿ ಈಚೆ ಕರೆಸಿಕೊಳ್ಳುವೆಆ ಹೊತ್ತು ನನಗೆ ಹುಚ್ಚುಕೆಡವುವ ಹುಚ್ಚುಇನ್ನೊಮ್ಮೆ ನಿನ್ನನ್ನು ಮುಟ್ಟುವನೀನು ನನ್ನ ಮರೆಯುವ ದಿಗಿಲು + +ನಾನು ಹೀಗೇ ಇಲ್ಲಿ ಸತ್ತರೆ ಇನ್ನೆಲ್ಲಿಯ ನೀನು?ಗಾಳಿಗಂಧ ಉಸಿರು ನೋವು ಮಾಟ ಹಸಿವುಮರೆವು ಏನೂ ಆಗದ ಈ ಹೊತ್ತುತಿಳಿಯುವುದಾದರೂ ಹೇಗೆ ನಿನಗೆ + +ನೀನಾಗಲೇ ಗತಿಸಿರುವೆಯಾಕೆಂದರೆ ನಾನು ಇನ್ನೂ ಇರುವೆ + +ನಿಲ್ಲಿಸಬೇಡ ಈಗಈ ರಾಗವನ್ನುಇನ್ನಷ್ಟು ಹೊತ್ತು ಬದುಕಿಸಿಎಲ್ಲವನ್ನು ಮನ್ನಿಸಿಬಿಡು + + + +44 + +ಹೇ ಕೋಲ್ಮಿಂಚೇನಿನ್ನ ತೇಜಸ್ಸನ್ನು ತಡೆಯಲಾರದೆನನ್ನ ಕಣ್ಣುಗಳು ತುಂಬಿಕೊಳುತಿದೆನನ್ನ ನಿಷ್ಕಾರುಣ ಹೆಜ್ಜೆಗಳು ತೊದಲುತಿದೆ ಯಾಕೋನನ್ನ ಆತ್ಮ ನಿನ್ನ ಬೆಳಕನ್ನು ಕುಡಿದಿದೆಹೊಳೆವ ನದಿಯಂತಹ ಮುಗಿಯದಸುಳ್ಳು ದಿವ್ಯ ಘಳಿಗೆಗಳು ಘಟಿಸುತಿದೆ, ಕೇಳುಓ ನನ್ನ ಹುಂಬ ಪ್ರಾಣವೇ,ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ + +ಮುಗಿದಿಲ್ಲ ನನ್ನ ಹುಚ್ಚಿನ ದಿನಗಳು ಇನ್ನೂಸೆಟೆದು ಗಹಗಹಿಸುವಾಗಬೆನ್ನಲ್ಲಿ ಈಗಲೂ ಮೆಲ್ಲಗೆ ಇಣುಕುವ ಹುಚ್ಚುಗಳುನನ್ನ ಕೊಂಕು ನಗೆಯ ತುಟಿಗಳಲ್ಲಿ ಮೇಲೇಳುವವುಮಾತಾಡುವವು; ಕುಣಿಯುವವುಜೀವದ ಹಾಗಿನಪ್ರೇಮಮಯಿ ಹುಳವೊಂದುಕೆಲವೊಮ್ಮೆ ಹಾಡುತ್ತಾ ಬರಿಯ ಚಲಿಸುತ್ತಾಏನೆಲ್ಲಾ ಕತೆಗಳ ತೋರುತ್ತಾನನ್ನ ಪಾದ ಸವರುತ್ತಾ ಮುರುಟಿಕೊಳುವಾಗನಾನು ಗಹಗಹಿಸಿ ಮೆತ್ತಗೆ ಉಸುರುವೆ..ನೋಡು, ನನ್ನ ಚೈತನ್ಯವೇ,ನನ್ನ ಹುಚ್ಚಿನ ದಿನಗಳು ಮುಗಿದಿಲ್ಲ ಇನ್ನೂ + +ಒಂದು ಘನ ದಿವ್ಯ ಘಳಿಗೆಯಷ್ಟೇ ಇಷ್ಟೆಲ್ಲಾಕಣ್ಮುಚ್ಚಿದರೆ ಕತ್ತಲು ಮಂದ ಬೆಳಕುಕ್ಷೀಣಗಾಳಿ ಎಲ್ಲಿಂದಲೋ ಬರುವ ಯಾರದೋ ಉಸಿರುಸುಮ್ಮನೆ ಬರುವವರು ತೆರಳುವವರುಮಾತು ಮಂಥನ ಕನಸು ಮರೆವುಉರಿವ ನನ್ನ ಕಣ್ಣುಗಳನ್ನು ಮತ್ತೆ ತೆರೆವೆನನ್ನದೇ ಭಯ, ಪ್ರೇಮ ಕಾರುಣ್ಯಕ್ಕೆ ಬೆಚ್ಚಿತೆರೆದುಕೊಳ್ಳುವವು ಅವುಮತ್ತೆ ಬೆಳಗುವವು; ಸುಮ್ಮನೆ ನೇರ ದಿಟ್ಟಿಸುವವು ಏನನ್ನೋಒಂದು ಘನ ದಿವ್ಯ ಘಳಿಗೆಯಷ್ಟೇ ಇಷ್ಟೆಲ್ಲಾ + +ಇಷ್ಟೆಲ್ಲಾ ಬಿಡಿಸಿ ಹೇಳಬೇಕಾದಯಾರದೋ ಹುಸಿ ತವಕಗಳುನನ್ನ ಅನಾಥ ದೇವರಾಗಿಸಿದ ಎಲ್ಲ ಮಹಾತ್ಮರ ಸಂಕಟಗಳುಇಲ್ಲಿ ಕತ್ತಲಲ್ಲಿ ನನಗೆಂದೇ ನಡೆಯುತಿರುವಬೆಳಗು ಬಿಸಿಲು ಸಂಜೆಯ ನೆರಳು, ಇರುಳು ಮತ್ತುಎಲ್ಲವನ್ನೂ ಎಡಗಾಲಲ್ಲಿ ಬಿಸುಟಿನನ್ನೊಳಗೇ ನಾನು ಕುಣಿದು ಹಾಡುವೆ, ನನ್ನ ಬೆರಗೇ ,ಯಾಕೋ ನನ್ನ ಕಣ್ಣುಗಳು ತುಂಬಿಕೊಳುತಿದೆಇಲ್ಲ ಸೆಟೆದು ಗಹಗಹಿಸುತಿದೆ + +ಮತ್ತೆ ಮತ್ತೆ ಘನ ದಿವ್ಯ ಘಳಿಗೆನಾನು ಬರಿಯ ಉಸಿರಾಡುತ್ತಿದ್ದ ಸುದೀರ್ಘ ಕ್ಷಣಗಳುಕೈ ಮುಗಿದು ತೋರಿಸುತಿದೆ ಎಲ್ಲವನ್ನುನನ್ನ ಚಲಿಸದ ಕಾಲುಗಳನ್ನು ಹೊತ್ತ ಈ ಭೂಮಿಗೆನನ್ನೊಳಗೆ ನನಗರಿಯದೆ ಸಂಚು ನಡೆಸುತಿರುವನನ್ನ ಮುದ್ದಿನ ಮರಿಕೋಶಗಳಿಗೆಮುಗಿಯದ ನನ್ನ ಹುಚ್ಚಿನ ದಿನಗಳಿಗೆಬೆಂಕಿಯಿಂದ ಬಂದವಳನ್ನು ನೀನುಆವರಿಸಿದ ಒಂದು ದಿವ್ಯ ಘಳಿಗೆಗೆಕೇಳು, + +ಓ ನನ್ನ ಹುಂಬ ಪ್ರಾಣವೇ,ನಾನಿನ್ನೂ ನಿನ್ನನ್ನು ಚಕಿತಗೊಳಿಸುವುದಿದೆ + +45 + +ನಾನು ಧ್ಯಾನದಲ್ಲಿ ಕಾಣುವುದುನಿನ್ನದೇ ಕಣ್ಣುಗಳನ್ನುಸುಮ್ಮನೆ ಉಮ್ಮಳಿಸ ಬೇಡಅತ್ತುಬಿಡು ಅಳುವಷ್ಟು, ಕುಸಿದುಇನ್ನೂ ಆಳಕ್ಕೆ ಚಲಿಸುಏನೋ ಕೇಳಿಸುವುದು ನಿನಗೆಮೌನ-ಮೌನದೊಳಗಿನ ಮೌನಮತ್ತೂ ಮೌನತೆವಳು-ಕಡು ಕತ್ತಲ ಕಪ್ಪು ಕಾವಳದೊಳಗೆಕಾಣು-ನಿಗಿನಿಗಿ ಸುಡುವ ನಿನ್ನಧೂಪವನ್ನುಕರಗಲಾರೆಇನ್ನು ಯಾರಿಗೂ ಸಿಗಲಾರೆಕೆಂಡ ಪರಿಮಳ ಧೂಪ; ಪ್ರೇಮದೊಳಗಿನ ಪ್ರೇಮನನ್ನ ಧ್ಯಾನದ ಹುಣ್ಣಿಮೆನೀನು ಈ ಜಗದ ಪ್ರಾಣ + + + + + +46 + +ಪ್ರಿಯ ನೀಲಿ ಹಕ್ಕಿಯೇನಿನ್ನ ರೆಕ್ಕೆಗಳಿಗೆ ಆತುಕೊಂಡಿರುವೆಎಲ್ಲಾದರೂ ಹಾರಿ ಹೋಗುಈ ಜಗದ ಅರಿವನ್ನು ಸಣ್ಣ ಬೆಳಕಾಗಿಸು + +ನನಗಾದರೂ ಯಾರುನೀನು ತೋರಿಸುವ ಆಕಾಶಕಂಡರೆ ಬಿಸಿಲು ಎಲ್ಲಿಯದೋ ಕಾಮನಬಿಲ್ಲುಸುಮ್ಮನೆ ಹಾರುವ ಗಾಳಿಗೆ ಅವನುಮತ್ತೆ ನೀನು ಇವೆಲ್ಲದರ ನಿಜ ಕಾಣಿಸು + +ಮಳೆಗೆ ಕುಣಿವ ಹಕ್ಕಿಯೇನಿನ್ನೊಳಗೆ ಎಲ್ಲವೂ ಅಡಗಿದೆನಿನಗೆ ಎಲ್ಲವೂ ತಿಳಿದಿದೆನನ್ನ ಒಳಗಿನ ಅಳು, ಹರಿವುಸೆಳೆತ, ಅವನ ಸಂಚುನನಗೆ ಕಾಣುವ ಸುಳಿಮಿಂಚು + +ಕೇಳು ಹಕ್ಕಿಯೇ ಕೇಳುಒಂದು ಶುಭ್ರ ಮುಂಜಾವುಬರಿಯ ಹಾಡು ಕೇಳಿಸುವಮೆಲ್ಲಗೆ ಗುನುಗುವ ಬೆಳಗಿಗೆನಾನು ಮಲಗಿದ್ದೆ;ಮತ್ತೆ ಮಲಗಿದರೆಇನ್ನೂ ಮುಗಿಯದನಿನ್ನೆಯ ಇರುಳುಮರಳಿ ಬರಬಹುದುಎಂದು ಕೊಡವಿ ಹೊರಟಿದ್ದೆ + +ಹಕ್ಕಿಯೇ, ಎಂತಹಾ ಇರುಳದು!ಗುಡಿಯ ಒಳ ಕತ್ತಲಿಗೆಮಲಗಿದ ದೇವರು ಕಣ್ತೆರೆದಿರಬಹುದುದೇವರ ಬೀದಿಯಕನಸಿನ ದೇವತೆಯರುಎದ್ದು ಸಂಚರಿಸುತಿರಬಹುದು + +ಪ್ರಿಯ ಹಕ್ಕಿಯೇ,ಅವನು ಮಲೆಯ ಎತ್ತರಕ್ಕೆನನ್ನ ಎತ್ತಿ ಮುಟ್ಟಿಸಿದ ನಕ್ಷತ್ರನನ್ನ ಕಣ್ಣಾಳಕ್ಕೆ ಸಿಗುವುದುಸಾಕೆಂದು ತಬ್ಬಿ ಕುಳಿತ ಕಲ್ಲುಬಂಡೆನಮ್ಮ ಜೊತೆ ನಡೆವುದುಯಾರೂ ಇಲ್ಲದಎಳೆಯ ರಾತ್ರಿಯ ರಾಣಿಗೆನಾವು ಬೆಳ್ಳಗಿನ ಮಿಂಚಂತೆ ನಡೆವುದುದುರುಳ ಕಡು ಕತ್ತಲೆಗೆಬೆಳಕು ಕೋರೈಸುವುದು + +ಯಾತರದೋ ಘಮಘಮ ಧೂಪದಸುರುಳಿ ಮತ್ತೆ ಮಲೆ ಹತ್ತುತಿದೆಮತ್ತೆ ಜಗದ ಭಾಗ್ಯದಬಾಗಿಲು ತೆರೆಯುತಿದೆಕೃಷ್ಣಯ್ಯನ ರಥ ಬೀದಿಯತೆರೆದ ಬಾಗಿಲುಗಳಲ್ಲಿಬಾಲಿಕೆಯರ ನಡು ದುಂಡಗೆಕುಣಿಯುತಿದೆ + +ಮತ್ತೆ ಬೆಳಗಾಗಿದೆನನ್ನ ಬೆಳಗೇ!! ನಿನ್ನ ಪದತಲದಲ್ಲಿನನ್ನ ನವಿರು ಭಕುತಿಗೆಇರುವೆ ನಾನು ಹಾಗೆಯೇಬೇಕಾದರೆ ಈ ರಾತ್ರಿಯ ಆಣೆಆ ಕೃಷ್ಣಯ್ಯನ ಆಣೆಅವನು ಹಾರಿಸಿದ ಸಖಿಯರ ಆಣೆನನ್ನ ಭೂಮಂಡಲದ ಸಂದುಗಳುತಿಳಿದಿರುವ ನಿನ್ನ ಕೊಳಲಿನ ಮೇಲಾಣೆನಿನ್ನ ರಥದ ತುದಿಯಲ್ಲಿನಾನು ನೋಡುವ ನನ್ನ ಒಳ ಬೆಳಕುನಿನ್ನ ಹೊಳೆಯುವ ದೊಂದಿಗೆನಿನಗೇ ಹೆಣೆದ ನನ್ನ ಕರುಳಿದೆಎಂದು ನಾನು ರಮಿಸಿ ಬೇಡಿರುವೆ + +ನನಗೆ ಯಾರೂ ಅಲ್ಲದ ನನ್ನ ಹಕ್ಕಿಯೇಈ ಸುಖದಲ್ಲಿ ನಾನು ಕರಗಿ ಮಾಯವಾಗುವೆಎಲ್ಲವೂ ನನಗಾಗಿ, ನಿನಗಾಗಿನನ್ನ ಪ್ರಿಯ ದುಷ್ಟನಿಗಾಗಿ,ಹೇಗೋ ಇಳಿಸಿಬಿಡು ಎಲ್ಲೋಜಗದ ಕಡೆಯ ತುದಿಯಲ್ಲಿತಳವಿರದ ನಡು ಹಾದಿಯಲ್ಲಿಯಾವುದೂ ಉಳಿಯದ ಹಾಗೆನಿನ್ನಂತವೇ ರೆಕ್ಕೆಗಳ ಹಚ್ಚಿಕೊಡು + + + +47 + +ಈಗ  ನನ್ನ ಚಿದಾಕಾಶದಲ್ಲಿ ಮನುಷ್ಯರ ವಾಸನೆಗಳು  ತೇಲಿಹೋಗುತ್ತಿವೆಅದು ಬರಿಯ ಕಪ್ಪೆಂದು,  ಬರಿಯ ಬೆಳಗೆಂದು ನನಗೆ ಎಂದೂ ಅನ್ನಿಸಿಯೇ ಇರಲಿಲ್ಲ + +ಎಲ್ಲಿಂದಲೋ ಕೆನೆದು ಬರುಬ ಜಂತು ಜೀವಗಳುನಾಳೆಯೂ ಇರುವವು, ಆದರೆನಿನ್ನೆ ಹುಟ್ಟದೆ ಮಾಯಕದಲ್ಲಿದ್ದವು + +ದಿನಾಲೂ ನನ್ನೊಳಗೆ ನಡೆಯುವನಿರ್ಮಲ ಹರಟೆಯಲ್ಲಿಮತ್ತೆ ಮತ್ತೆ ಏನೋ ಒಂದು ಆನಂದ ಹುಟ್ಟಿಸುವವುತುಮುಲವನ್ನು ನೆನಪಿಸಿಯೇ ಮರಳುವವು + +ಇಲ್ಲಿನ ಸದ್ದುಗಳಿಗೆ ರಾಗಗಳು ಒಗ್ಗುತ್ತಿಲ್ಲ; ಅಥವಾ ಅಂತಹದ್ದೊಂದು ಇರಲೇ ಇಲ್ಲ.ಯಾಕೆಂದರೆ ಇಲ್ಲಿನ ಋತಗಳು ಎಂದಿಗೂ ನಾಶವಾಗವೆಂದುಅವು ಹೇಳುವುದೇ ಇಲ್ಲ + +ಕಮಲದ ಮೇಲೆ ನೀರ ಹನಿಯು ಅಂಟಿಕೊಂಡಿಲ್ಲಆದರೆ ಅದು ಎಲ್ಲೂ ಹೋಗದೆ ತುಯ್ದಾಡುವುದನ್ನುನಿಲ್ಲಸಲೂ ಆಗುತ್ತಿಲ್ಲ + +ಇಲ್ಲಿ ಎಲ್ಲವೂ ಹೀಗೇಕೆಂದು  ಕೇಳುವಪುಟ್ಟ ಮಗುವೊಂದು ಉತ್ಸಾಹದಲ್ಲಿದೆಆದರೆ ಅದು ತಂತಾನೇ ಎಲ್ಲಾ ತಿಳಿದುಕೊಳ್ಳಬೇಕಿದೆ + +ಉತ್ತರ ಹೇಳಲು ತೊನೆದು ನಿಲ್ಲುವವರಸೋಲು ಅವರಿಗೂ ಅರಿವಾಗುತ್ತಿಲ್ಲ.ಯಾಕೆಂದರೆ ಇಲ್ಲಿನ ಋತಗಳು ಎಂದಿಗೂ ನಾಶವಾಗವೆಂದುಅವು ಹೇಳುವುದೇ ಇಲ್ಲ + +48 + +ಯಾವುದೋ ಕಾಲದ ಕರಂಡಿಕೆಯ ವಿಸ್ಮಯದಲ್ಲಿಅಡಗಿದ್ದೆನನ್ನ ಉಷೆಯೇ, ಎಂತಹ ಅನುರಾಗ ನಿನ್ನದು!ಒಂದು ಪ್ರಾತಃಕಾಲ,ಅನಂತ ಅಭೂತಪೂರ್ವ ಸದ್ದಿಲ್ಲದ ಸಣ್ಣ ಎಚ್ಚರವಷ್ಟೇ,ನನಗೆ ದೇಹವಿಲ್ಲ, ಕಾಲವಿಲ್ಲದವಳೇ,ನನ್ನ ಧಾತುವೆಂಬುದು ಇರುವ ಅನುದಿನದಲ್ಲಿಈಗ ಎಲ್ಲಿರುವೆ ನಾನು? ಯಾವ ದಿಕ್ಕಿನ ಯಾವ ಹೊತ್ತಲ್ಲಿಚಲಿಸುತಿರುವೆ?ನಿನ್ನ ಸೂರ್ಯನೆಂಬವನು ಇನ್ನು ಇರುವನಾದರೆಇಲ್ಲಿ ನಡೆಯುವುದೆಲ್ಲವೂ ಸುಳ್ಳಲ್ಲ!ಕೋರೈಸುವವಳೇ,ಈ ಜಡ್ಡು ಕಾಲವೆಂಬುದಕ್ಕೆ ನಾನು ತಲೆಯೊಡ್ಡುತ್ತಿಲ್ಲಇಲ್ಲಿ ದೀನ ದನಿಗಳು ಸ್ಪೋಟಿಸುವವುನೀರ ಹನಿಯಂತೆ ಟಪಟಪಿಸುವವುಬಿಸಿಲೊಳಗಿನ ಅಭೇದ್ಯ ಕಸ್ತಲೆಯಂತೆಎಲ್ಲಕಣ್ಣುಗಳು ಅವರ ಒಡಲೊಳಗಿರುವವುಪುಟಿದು ಹಾರಿದ ಹೃದಯದಂತೆ ವಿಮಾನಗಳು ಚಲಿಸುತಿವೆ ನೋಡು, ವಜ್ರದಂತವಳು ನೀನುಇದ್ದರೆ ಇಲ್ಲಿ ನೆರಳಿಗೆ ಹೃದಯವಿರಬಹುದು!ಹುಟ್ಟುವ ಮಾಗಿಯ ಚಳಿ ಯಾರನ್ನು ಕೇಳಿ ಬರುವುದಿಲ್ಲಜೋಂಪು ಹತ್ತಿಸುವ ಹಾಡಿಗೆ ಇಲ್ಲಿಹಾಡುಗಾರ ಕಾಣುವುದಿಲ್ಲರಾತ್ರಿಯ ಅಂತಿಮ ಪ್ರಹರದಲ್ಲಿ ಬೆಳಗುವವಳೇಇದೆಲ್ಲಾ ಎಂತಹ ಚೆಲುವು ಹೇಳು!?ಸೆಟೆದ ಬೆನ್ನಲ್ಲಿ ಹುತ್ತಗಟ್ಟಿಸಿಕೊಂಡ ಶ್ರಾವಕಿಗೆಇದು ಯಾವ ಬಂಡೆಯ ನೆಳಲು ಹೇಳು? + + + + + +49 + +ಮನುಷ್ಯರ ಪ್ರಲಾಪಗಳೆಲ್ಲಾ ಮುಗಿದುಆಕಾಶ ನಿರಾಳವಾಗುತಿದೆ,ಮನ್ನಿಸುತಿದೆ ಎಲ್ಲವನ್ನು, ಮಲಗಿರುವವರನ್ನು,ಬೆಳಗಿಗೆ ಪುಟ್ಟ ಮಗುವಂತೆ ಏಳುವವರನ್ನುನಭದಿಂದ ನದಿಯವರೆಗೆ ನದಿಯಿಂದ ನೆಲದವರೆಗೆ…ಇಲ್ಲೆಲ್ಲೋ ಸೂಜಿಮೊನೆಯಂತಿರುವನಿನ್ನ ಕ್ರೋಧವಲ್ಲದ ಕ್ರೋಧವನ್ನುಪ್ರೇಮಿಸುತಿದೆ ಈ ಇರುಳುಶಹರಿಗಿರುವ ಒಂದೇ ಕಿಟಕಿಯಲ್ಲಿಬೇಕಾದರೆ ನೋಡಬೇಕು ಇರುಳನ್ನುಮೆಲ್ಲಗೆ ಉಸಿರಾಡುವ ಈ ಮಸಣದಲ್ಲಿತಾರೆಗಳು ತುಂಬಿಸುವ ಮಮತೆಯನ್ನು ನೋಡಬೇಕುಅಲ್ಲೆಲ್ಲೋ ನಿನ್ನ ಆಲಸ್ಯವು ಇನ್ನೂ ಚುರುಕುಗೊಂಡುಇರಿಯುವಂತೆ ಉಸಿರಾಡುವುದನ್ನು ಕೇಳಬೇಕುಮಲಗಿರುವ ತಪಿತ ಅಸುಖಿಗಳುದುಃಖವೆಂಬ ಸುರೆಯನ್ನು ಅರಿಯದವರುಬಾಣ ಚುಚ್ಚಿದ ಹಕ್ಕಿಯಂತಿರುವವರುನಾಳೆ ಹೊಸಕೋಶದಿಂದ ತಡಬಡಿಸುವವರುನಿನ್ನ ಹಾಗೆ ಕನ್ನಡಿಯೊಳಗೆ ಹೆಬ್ಬಂಡೆ ಕಾಣದವರುಆದರೆ ಆಗೊಮ್ಮೆ ಕಡಲು ಮೊರೆಯುತಿದೆಬೆಳಕು ಕ್ಷೀಣಿಸುತಿದೆಕತ್ತಲು ಬೆಳಗುತಿದೆತಾರೆಗಳು ಪೊರೆಯುತಿದೆಶಬ್ಧಗಳು ಮಾತಾಗುತಿದೆನೀನು ರಾತ್ರಿಯ ಕೊಳದ ಹಾಗಿರುವೆಇನ್ನೂ ಬೆಳಗಾಗಲಿಲ್ಲಬೆಳಗೇ ಇಲ್ಲದ ಈ ಇರುಳುಮುಗಿಯುವುದೂ ಇಲ್ಲ + + + +50 + +ನಾನು, ಅವನು ಮತ್ತು ಕಡಲುಎಂದೂ ಗತಿಸುವಈ ಇಳಿಸಂಜೆಯ ಮಿನುಗಿನಂತವನನ್ನುಮರಳಿ ಒಪ್ಪಿಸಿಕೋ ಕಡಲೇಬಂದು ತೆರಳುವ ನಿನ್ನ ಬೆಳ್ನೊರೆಗಳುತನ್ನ ಮೂಲಮನೆಗೆ ಹಾತೊರೆವಂತೆನಿನ್ನ ಹುರಿಯಲ್ಲಿ ಹೆಣೆದುಕೋಅವನು, ಬರಿಯ ಬೆಳಕಲ್ಲದ ಕೊರೆವ ಬೆಳಕು‌ಏಕಾಂತದ ಕಡೆಯ ಸುಖದಂತವನುನಿನ್ನ ಮೊರೆಯುವ ಅಲೆಗಳು ಕಬಳಿಸಲಾರವು ಕಡಲೇಎಲ್ಲಿಗೂ ಹೋಗಲಾರವುನಿನ್ನ ಒದ್ದೆ ಮರಳು ತಟವುಅವನ ಹೆಜ್ಜೆಗಳನ್ನು ಮೂಡಿಸಲಾರವುನೀನಿರುವುದಾದರೆ ನಿಜವಿರಬಹುದು ಅವನು‌‌ಈ ಬಂಡೆಯ ಧಾತುವಿನಲ್ಲಿ ಧ್ಯಾನಿಸುತಿರಬಹುದುನಡುಗಡಲ ಮೇಲೆ ಹೊಳೆದರೆಅವನ ಕಣ್ಣುಗಳಿರಬಹುದುನನ್ನ ಕಿವಿಯೊಳಗೆ ಉಸುರುವ ಮಾತುಗಳುನಿಜವಿರಬಹುದುನೀನೇ ಕರುಣಿಸಿರುವೆ ಈ ನಿಜವನ್ನುಈ ಎಲ್ಲವನ್ನೂ, ಅವನನ್ನೂಈಗ ಮುಗಿಯುವ ಇಳಿಸಂಜೆಯನ್ನೂಅವನ ಎದೆಯ ಮಚ್ಚೆಯಂತಹ ಆಕಾಶವನ್ನುಒಂದೊಂದು ಹಕ್ಕಿಯಂತೆ ಹಾರುವ ಕೂದಲುಗಳುಎಲ್ಲಿಗೋ ಹಾತೊರೆಯುವುದನ್ನುನನ್ನೊಳಗೆ ಚಿಟ್ಟೆಗಳು ನರಳಿ ಈ ಮರಳೊಳಗೆಪ್ರಜ್ವಲಿಸುವಾಗ ಅವನನ್ನುನೀನೇ ಕರುಣಿಸಿರುವೆ ಕಡಲೇಎಲ್ಲವನ್ನೂ ಈ ಅನುಭೂತಿಯನ್ನುಈಗ ಈ ಸಂಜೆನಾನು ಹೊರಟ ಮೇಲೆನಿನಗೆಂದೇ ಇಂದು ಬರಬಹುದಾದ ನಿಶಿಯನ್ನುನೀನು ಅಳಿಸಲಾರೆ ಮತ್ತು ಕೊಡಲಾರೆ ಎಂದೂಈ ಅಗಾಧ ಕಡಲ ಗಾಳಿಯ ಮೇಲೆ ನಡೆಯುವವನಂತವನನ್ನುಹಿಡಿಯಲಾರೆ ಎಂದೂ + +51 + +ನಾ ಯಾರು ನೀ ಯಾರುಎಂದು ಕೇಳದಿರು ಇನ್ನುದೇವರೆಂಬ ವಿವೇಕಿಅಲ್ಲೆಲ್ಲೋ ನಗುತಿರಬಹುದುಅಲ್ಲಿ ಕಡಲೊಳಗೆಮುತ್ತುಗಳಾಗುತಿದೆಇಲ್ಲಿ ತಟದಲ್ಲಿ ಮರಳುಜ್ವಲಿಸುತಿದೆಅಲ್ಲಿ ಯಾರೋ ಕಟುಕನೊಬ್ಬಕೈ ಎತ್ತಿ ಆರ್ತನಾಗುತ್ತಿದ್ದಾನೆಇಲ್ಲಿ ಆಕಾಶವು ಜಗ್ಗನೆ ಮಿನುಗುತ್ತಿದೆಅಲ್ಲಿ ನಿನಗೇನೂ ಆಗುತ್ತಿಲ್ಲನಗುವಿಲ್ಲ ಅಳುವಿಲ್ಲ ಮಾತಿಲ್ಲಮತ್ತೆ ನೀನೇ ಇರಲಿಲ್ಲಯಾಕೆಂದರೆ ನಾನು ಅಲ್ಲೇ ಬಂದಿರುವೆ + + + +52 + +ನೀನು ನನ್ನ ಯೋಚಿಸದ ನಿಮಿಷಗಳಲ್ಲಿನಾನು ಎಲ್ಲಿ ಹೋಗಿರ ಬಹುದು?ನನಗೆ ಏನಾಗುತ್ತಿರಬಹುದು?ಹೋಗುವವರು ಹೋಗುವುದಾದರೂ ಯಾತಕ್ಕೆ?ಮತ್ತೆ ಮತ್ತೆ ಬರುವುದಕ್ಕೆ?ನಾಳೆಯ ಇಬ್ಬನಿಗೆಇನ್ನೊಂದು ಹೂವು ಅರಳುವುದಕ್ಕೆ?ಈವರೆಗೆ ಕೇಳದಹಾಡಿಗೆ ನರ್ತಿಸುವುದಕ್ಕೆ?ನೀನು ಸೆಳೆಯುವುದಿಲ್ಲನಾನು ಬರುವುದಿಲ್ಲಏನೂ ಆಗದೆಯೂಘಟಿಸುವ ಲಾಸ್ಯಗಳನ್ನುಕೇಳುವುದಕ್ಕೆಂದೇಇಲ್ಲಿ ಯಾವುದೂ ಮುಗಿಯುವುದಿಲ್ಲಏನೆಂದರೆ ಏನೂ ಅರಿಯದೆನೀನು ಮಗುವಂತೆಮರೆತು ಮಲಗಿದ ಹೊತ್ತುನನ್ನ ಪ್ರೇಮದ ನೊರೆಗಳು ಇನ್ನಿಲ್ಲದ ಹಾಗೆಜಿನುಗುವವುನೀನು ಯೋಚಿಸದ ಈ ಹೊತ್ತುನಾನು ಎಲ್ಲಿರಬಹುದುಮತ್ತೆ ಏನು ಮಾಡುತ್ತಿರಬಹುದುಕಾಲ ಕೊಡುವ ಒಂದೊಂದುಗುಟುಕುಗಳನ್ನು ನಿರಂತರವಾಗಿಕುಡಿಯುತ್ತಿರಬಹುದುಇನ್ನೂ ಆರಂಭವೇ ಇಲ್ಲದಅಂತ್ಯವೊಂದರ ಬಿಳಿ ಮೊನಚಿನಂತಿರಬಹುದು + +53 + +ಕಳಚುತಿರಬೇಕು ಏನಾದರೊಂದುಎಷ್ಟೋ ನಿನ್ನೆಗಳ ಎಳೆ ಆಕಾಶದೊಳಗಿನತೆಳ್ಳಗಿನ ತೆಳುವಂತದ್ದು ಮಾತ್ರನಿಜವೆಂದು ತಿಳಿವ ತನಕಸುಲಿಯ ಬೇಕು ಪ್ರೇಮವನ್ನುತಿಳಿಯದಿದ್ದರೆಮತ್ತೆ ಮತ್ತೆ ಸುಲಿದುನಿರ್ಮಲವಾದದ್ದು ತುಂಬುವ ತನಕಪ್ರತಿ ಘಳಿಗೆ ಗುಂಯ್ ಗುಡುವ ಅಚ್ಚರಿಯೊಂದುಕೆರಳಬೇಕು ಕಿವಿಯೊಳಗೆಎಲೆಯ ಪರಿಮಳದಲ್ಲಿ ನಗುವನೆಲದ ಬೇರಂತೆ ಸುಮ್ಮನಿರಬೇಕು + + + + + +54 + +ತುಂಬಾ ಹಳೆಯ ಮಾವಿನ ಮರದಹೊಸ ಹಣ್ಣುಗಳು ಹೊಸತಲ್ಲವೆಂದುಹೇಳುತಿವೆನನ್ನದಲ್ಲದ ಬೀದಿಯ ರಸ್ತೆಗಳುಹೊಸದಾಗಿ ಕಾದು ಕುಳಿತಿವೆಒಂದು ಸುಡು ಧಗೆಯ ದಿನಮೆಲ್ಲಗೆ ಅದುರುವ ಕಪ್ಪು ಮೋಡ,ನಡೆಯುವವರ ಕಾಲ ಧೂಳು,ರಸ್ತೆಯ ಮೇಲೆ ಎದ್ದಂತಹ ಸಣ್ಣಗಿನ ದುಗುಡ…ಆದರೆಇವು ಯಾವುದೂ ನನ್ನವಲ್ಲದಮಂದ ಬೆಳಕಿನ ಮುಂದೆನಾನು ಏನನ್ನೂ ಬೇಡುತ್ತಿಲ್ಲಬೇಡವೆನ್ನುತ್ತಲೂ ಇಲ್ಲಯಾರದೂ ಅಲ್ಲದ ಕತ್ತಲೊಂದುತುಂಬಾ ಹಳೆಯದರಂತೆಹಾದುಹೋಗುತಿದೆ + + + +55 + +ಸಣ್ಣ ಜಗತ್ತುಭೂಮಿ ಆಕಾಶದ ನಡುವೆ ನಿಂತಎಳಸು ಹುಡುಗಿಏನೂ ಅರಿಯದವಳುಇಲ್ಲಿ ಹರಡಿ ಚೆಲ್ಲಾಪಿಲ್ಲಿಗೊಂಡಿರುವವಳುಆದರೇನು!ಕಲ್ಲುಗಳು ನೀರಿನೊಳಗೆ ಸಾಂತ್ವನಗೊಳುತಿದೆಕಾರಣವಿದೆ ಎಲ್ಲವಕ್ಕೂನಾನು ಇರುವೆ ಎಂದರೆ ಇಲ್ಲವಾಗುವೆಇಲ್ಲದಿರುವಿಕೆ ಎಂಬುದು ನಿಜದ ಕೊನೆಯ ಆಸರುಎಂದು ತಿಳಿದಿರುವೆಕಾಲ ಕೆಡುವಾಗನಿಜಕ್ಕೂ ಇಲ್ಲದಿರುವ ಮಡಿಲಲ್ಲಿ ಮಲಗಿಬಿಡುವೆನನ್ನ ಬೆಳಗಿನ ಆರಂಭವೆನ್ನುವುದುಶೂನ್ಯದ ಆಳದಲ್ಲಿ ಎಂದುಆಕಳಿಸಿರುವೆನನ್ನ ಉತ್ಕಟತೆಯಲ್ಲಿ ಕೋಟಿಜೀವಗಳು ಪ್ರಾಣ ಒಂದುಪ್ರಾಣವೆಂದರೆ ಏನುಕರಗುವುದುಕರಗಿ ಲಯಗೊಳ್ಳುವುದುಏನೂ ಇಲ್ಲದ ಮೇಲೆಏನೂ ಉಳಿಯದ ಮೇಲೆಈ ಶಬ್ದಗಳ ಭಾರ ಯಾತಕ್ಕೆಇದೆಲ್ಲವನ್ನೂ ಅರಿಯುವಸಣ್ಣ ಮೋಹ ಪ್ರವಹಿಸುವುದು ಯಾತಕ್ಕೆಮೌನವಾಗು ಅನುಭಾವಿಸುಮ್ಮನಿರುಇಲ್ಲಿ ಹೇಳುವುದಕ್ಕೇನೂಉಳಿದಿಲ್ಲಎಳಸು ಹುಡುಗಿಏನೂ ಅರಿಯದವಳು + + + +56 + +ಇಷ್ಟಿಷ್ಟೇ ಕುಸಿದಂತೆನಿರಾಳವಾಗುತಿರುವೆನನ್ನ ಹತ್ತಿರದ ನಿಟ್ಟುಸಿರು,ತೇಲುವ ನಿಶ್ಯಬ್ಧ ಬಿಂಕಎಲ್ಲವೂ ಭ್ರಮೆ ಎನ್ನುತ್ತಾಅಡರುವ ನನ್ನ ಕಳೆಗೆನಾನೇ ಬೆಚ್ಚಿಬೀಳುತಿರುವೆನಾನು ಈಗಲೇ ಸಾಯದಿರಬಹುದುಇನ್ನು ಬರಲಿರುವ ಕೋಟಿ ಗಂಟೆಗಳುಚಲಿಸದ ಮೀನಂತಹ ಹೊತ್ತುಗಳುಸೃಷ್ಟಿ ಸಂಕಲ್ಪ ಬೆರಗು ತಾಪಭ್ರಮೆಯ ಹುಡಿ ಹಾರಿಸುವ ಬಣ್ಣಗಳುಒಮ್ಮೊಮ್ಮೆ ಬೂದಿಯಾಗುವವುಒಡಲು ಸೃಜಿಸುವ ಬಿಗಿ ಸಡಿಲ ಉಸಿರುಹದಗೊಂಡುನನಗೆ ಕಳೆ ತುಂಬುವವುಮತ್ತೆ ಇದನ್ನೆಲ್ಲಾ ಹೇಳುವುದುಹೇಳದಿರುವುದುಏನನ್ನೂ ಮಾಡದೆ ನನ್ನಕಾಯದ ಕಿವಿಗಳಲ್ಲಿ ಕೇಳಿಸಿಕೊಳ್ಳುವುದೂಒಂದು ಭ್ರಮೆನಗು ಸುಮ್ಮಗೆ ಒಂದು ನಗುಅರಿಯಬೇಕು ನೀನು ನಾನು ಏನನ್ನೂ ಹೇಳದಿರುವಾಗಅಲೆಗಳು ಓಡಿ ಬಂದು ನಿನ್ನ ಕಾಲು ತಾಕುವಾಗನಾನು ಇರುವಾಗ ಇರದಿದ್ದಾಗನನ್ನ ಸಮಯವೆಲ್ಲಾ ನನ್ನ ಮೌನದಲ್ಲಿಲೀನಗೊಳ್ಳುವಾಗನಾ ನಿನ್ನ ಭಕ್ತೆ ನನ್ನ ಭ್ರಮೆಯೇಆಗಾಗ ಹುಟ್ಟಿಸಿ ತೆರಳುವನನ್ನ ಮುಕ್ತಿ ನೀನುನನ್ನ ದಾಪುಗಾಲಿನ ಆನಂದಎಚ್ಚರವಿರುವ ಸುಧೀರ್ಘ ನಿದ್ರೆ + + + + + + + +57 + +ನಿಮ್ಮ ಮೋಹಕ್ಕೆ ನಾನು ಋಣಿಯಾಗಿರುವೆ ಸೈತಾನರೇ,ಆದರೆ ನಾನು ಎಂದೋ ಹೊರಟಾಗಿತ್ತುನಿಮಗೆ ನಿಲುಕದಷ್ಟು ಹಿಂದೆನನ್ನ ಪುಣ್ಯವೆಂಬ ಹೊಳಹು ನನ್ನ ಕೈಹಿಡಿದಾಗಿತ್ತುಈಗ ಇದೆಲ್ಲಾ ಸುಮ್ಮನೆಯೆಂದುನಾನೇನು ನಿಮ್ಮನ್ನು ಹತಾಶಿಸುವುದಿಲ್ಲನೀವಿದ್ದರೂ ಇಲ್ಲವಾದರೂನಾನು ಅಳಿಸಿ ಹೋಗುವುದಿಲ್ಲಮತ್ತೆ ಕಾಣ ಸಿಗುವುದೂ ಇಲ್ಲನೋಡಿ ಇಲ್ಲಿ ನೀರಿನೊಳಗೆನುಣುಪು ಕಲ್ಲಿನ ಹಾಗೆಪವಡಿಸಿರುವೆಮಹಾಬೆಟ್ಟದ ಮಡಿಲಿಗೊರಗಿಮರಣಿಸಿದವರ ನೆನೆದುಆಕಾಶ ನಗುವಷ್ಟುಹುಯಿಲೆಬ್ಬಿಸಿರುವೆಜಗದ ಪಾಪಗಳೆಲ್ಲಾಇಲ್ಲಿ ಮಣ್ಣ ಮೆದುವಲ್ಲಿ ಕರಗುವುದನ್ನುನೋಡುತಿರುವೆನನ್ನ ಮೌನದೊಳಗೆ ನಡೆವಮಹಾಕಥೆಯ ಸಾಲುಗಳು ಸಿಕ್ಕರೆಹೆಕ್ಕಿಕೊಳ್ಳಿಘೋರ ದಳ್ಳುರಿಯೊಳಗೆ ನಾನು ಸುಮ್ಮನಿದ್ದರೆಸಹಿಸಿಕೊಳ್ಳಿನಗುವವರು ನಗುವರು, ಆಕಳಿಸಿ ತೆರಳುವರುಮರೆತೂ ಬಿಡುವರುಕಷ್ಟವಾದರೆ ಮೌನವಾಗಿರಿಅಲ್ಲೇ ಏನಾದರೂ ಸಿಕ್ಕರೆ ತಿಂದುಕೊಳ್ಳಿನಾನೀಗ ಇಲ್ಲೇ ಒಂದುಕ್ಷುದ್ರ ಕಲ್ಲ ಕಣದೊಳಗಿರುವೆಕಾಣುವವರು ಸುಳ್ಳೆಂಬರುಆದರೆ ನನ್ನ ಪುಣ್ಯವೆಂಬ ನಶೆಇಳಿಯಲಾರದೆಂದುನೀವಾದರೂ ತಿಳಿದುಕೊಳ್ಳಿ + + + +(ರೇಖಾಚಿತ್ರಗಳು: ರೂಪಶ್ರೀ ಕಲ್ಲಿಗನೂರು) + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_572.txt b/Kenda Sampige/article_572.txt new file mode 100644 index 0000000000000000000000000000000000000000..113d057ae601f330c6e267052d53fbe357226317 --- /dev/null +++ b/Kenda Sampige/article_572.txt @@ -0,0 +1,31 @@ +ಭಾರತದ ಒಂದು ತಲೆಮಾರಿಗೆ ಗುಂಗು ಹಿಡಿಸಿದ ತತ್ವಜ್ಞಾನಿ, ರಾಜಕೀಯ ಗುರು ರಾಮಮನೋಹರ ಲೋಹಿಯಾ ಅವರಿಗೆ ನಾಳೆಗೆ ನೂರು ವರ್ಷ. ಅವರು ಹೇಳಿದ ಸಮಾಜವಾದ ಪಾಚಿಗಟ್ಟಿರುವ ಈ ಹೊತ್ತಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಅಪರೂಪದ ಬರಹವೊಂದು ಇಲ್ಲಿದೆ. ತಮ್ಮ ‘ಅಬಚೂರಿನ ಪೋಸ್ಟಾಫೀಸು’ಕಥಾಸಂಕಲನ ಮತ್ತು ಸಮಗ್ರ ಕಥಾಸಂಕಲನ ಎರಡಕ್ಕೂ ಮುನ್ನುಡಿಯನ್ನಾಗಿ ತೇಜಸ್ವಿಯವರು ಈ ಬರಹವನ್ನು ಬಳಸಿಕೊಂಡಿದ್ದಾರೆ. ಲೋಹಿಯಾ ಯೋಚನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಲು ಕೆಂಡಸಂಪಿಗೆಯ ಯುವ ಓದುಗರಿಗೆ ಈ ಬರಹ ನೆಪವಾಗಬಲ್ಲದು ಎಂಬುದು ನಮ್ಮ ಸಣ್ಣದೊಂದು ಆಸೆ. + +ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ -ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ. + +ನನ್ನ ಜೀವನ ವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ. ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯಾ ಒಬ್ಬರೇ `ಒರಿಜನಲ್’ ಎಂದು ಹೇಳಬಹುದಾದ ತತ್ವ ಮೀಮಾಂಸಕರು. ರಾಧಾಕೃಷ್ಣನ್, ಹಿರಿಯಣ್ಣಯ್ಯ ಇವರೆಲ್ಲಾ ವ್ಯಾಖ್ಯಾನಕಾರರೇ ಹೊರತು ತತ್ವ ಮೀಮಾಂಸಕರೆಂದು ಕರೆಯುವುದು ಕಷ್ಟ. ಲೋಹಿಯಾರವರ ಆಲೋಚನೆಗಳನ್ನು ವಿಶ್ವವಿದ್ಯಾಲಯದೊಳಕ್ಕೆ ಅವರ ಜೀವಿತ ಕಾಲದಲ್ಲಿ ಬರದಹಾಗೆ ನೋಡಿಕೊಂಡ ನಮ್ಮ ಬುದ್ಧಿಜೀವಿಗಳ ಸಮೂಹ ಒಂದು ದುಷ್ಟಕೂಟ. ನಮ್ಮ ಭಾರತದಲ್ಲಿ ಬೇರೂರಿರುವ ಗುಲಾಮಶಾಹಿ ಮತ್ತು ಜಾತೀಯತೆಯ ಸ್ವರೂಪವನ್ನಷ್ಟೆ ಇದು ಶ್ರುತ ಪಡಿಸುತ್ತದೆ. ಲೋಹಿಯಾರವರ ಆಲೋಚನೆಗಳಿಗೆ ಪ್ರತಿಸ್ಪಂದಿಸದ ಚೇತನ ಭಾರತದ ಯಾವುದಕ್ಕೂ ಸ್ಪಂದಿಸಲಾರದು. ಅಂತೆಯೇ ಹೊಸ ಸಾಹಿತ್ಯಕ್ಕೂ ಕೂಡ. + +ಸುಮಾರು ಹತ್ತು ವರುಷಗಳ ತರುವಾಯ ನನ್ನ ಎರಡನೆ ಕಥಾಸಂಕಲನ ಹೊರಬರುತ್ತಿದೆ. ಕನ್ನಡ ಸಾಹಿತ್ಯದ ನವ್ಯ ಸಂಪ್ರದಾಯವನ್ನು ಸಂಪೂರ್ಣ ತೊರೆದು ಹೊಸ ದಿಕ್ಕಿನಲ್ಲೀಗ ನಾವು ಅನ್ವೇಷಿಸಬೇಕಾಗಿದೆ. ಇದಕ್ಕೆ ಕಾರಣ ಹೊಸ ಸಾಹಿತ್ಯ ಸೃಷ್ಟಿಸಬೇಕೆಂಬ ಹಂಬಲವಲ್ಲ ಅಥವಾ ಹೊಸ ಪಂಥ ಒಂದರ ಸೃಷ್ಟಿಕರ್ತನಾಗಬೇಕೆಂಬ ಆಕಾಂಕ್ಷೆಯೂ ಅಲ್ಲ. ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ನವ್ಯ ಸಾಹಿತಿಗಳು ಪ್ರಾಮಾಣಿಕತೆಯ ಹೆಸರಿನಲ್ಲಿ ಅಭ್ಯಸಿಸಿದ ಅಪ್ರಮಾಣಿಕತೆ, ವಿಮರ್ಶೆಯ ಹೆಸರಿನಲ್ಲಿ ನಡೆಸಿದ ಪುಢಾರಿ ರಾಜಕಾರಣ, ಅನುಭವ ಕ್ಷೇತ್ರವನ್ನೂ ಅಭಿವ್ಯಕ್ತಿ ಸಾಮರ್ಥ್ಯವನ್ನೂ ವಿಸ್ತರಿಸುವ ಹೆಸರಿನಲ್ಲಿ ಕುಗ್ಗಿಸಿದುದು ಇವೆಲ್ಲಾ ಈ ಮಾರ್ಗದ ಬರಹಗಾರರಿಗೆ ಹಿಡಿದ ಶನಿಗಳಾಗಿವೆ. + +ನನ್ನ ಎಂಎ ವಿದ್ಯಾಭ್ಯಾಸದ ಅನಂತರ ನಾನು ಅನಿರೀಕ್ಷಿತವಾಗಿ ವ್ಯವಸಾಯಗಾರನಾಗಿ ಹಳ್ಳಿಗೆ ಹಿಂದಿರುಗಬೇಕಾಯ್ತು. ಹೊಸ ದಿಕ್ಕಿನಲ್ಲಿ ಅನ್ವೇಷಿಸಬೇಕಾಗಿದೆ ಎನ್ನಲು ಇವೂ ಹಲವಾರು ಕಾರಣಗಳಲ್ಲಿ ಒಂದೆಂದೇ ಹೇಳಬಹುದು. ವಿಶ್ವವಿದ್ಯಾಲಯದ ಪದವೀಧರನಾದ, ಬರಹಗಾರನಾದ ನಾನು ಹಳ್ಳಿಯಲ್ಲಿ ಒಂದು ಅತಿ ವಿಚಿತ್ರ ಸಂದರ್ಭದಲ್ಲಿ ಸಿಲುಕಿಕೊಂಡೆನು. + +ನಮ್ಮ ವಿದ್ಯಾಭ್ಯಾಸದ ತಿರುಳು, ವಿದ್ಯಾಭ್ಯಾಸ ಕ್ರಮ, ಶಿಕ್ಷಣ ಮಾಧ್ಯಮ ಇವು ಭಾರತೀಯ ಪರಿಸ್ಥಿತಿಯಲ್ಲಿ ಎಂಥ ಅಸಂಬದ್ಧತೆಯ ಪರಮಾವಧಿಯಾಗಿದೆ ಎಂಬುದು ನನಗೆ ಅರಿವಾಯ್ತು. ಈ ನಿಗೂಢ, ಅಪರಿಚಿತ ಭಾರತದ ಬಗ್ಗೆ ನನ್ನ ಕಣ್ಣು ತೆರೆಸಿದ್ದು ಲೋಹಿಯಾ. ನಮ್ಮ ನವ್ಯ ಸಾಹಿತ್ಯ ಸಂಪ್ರದಾಯದ ಸಾಂಕೇತಿಕ ಮಾರ್ಗ, ಠಕ್ಕಿನ ಪ್ರೌಢ ವಿಮರ್ಶೆ ಇವೆಲ್ಲಾ ಈ ಅವ್ಯಕ್ತ ಭಾರತದ ಎದುರು ಅಸಂಬದ್ಧವಾಗಿಹೋದುವು. ಆದರೆ ಇದರೊಡನೆಯೇ ಲೋಹಿಯಾರವರ ಕಾಣ್ಕೆ, ತತ್ವ ಚಿಂತನೆಗಳು ಮತ್ತು ಹಳ್ಳಿಯ ಜೀವನದ ಹೊಸ ಪರಿಸ್ಥಿತಿಗಳು ನನಗೆ ಇನ್ನೊಂದು ಬಗೆಯ ಶ್ರದ್ಧೆಯನ್ನು ತಂದಿತ್ತವು. ಇಟ್ಯಾಲಿಯನ್ ಫ್ರೆಂಚ್ ಸಾಹಿತ್ಯಗಳಷ್ಟೇ ಒರಿಜನಲ್ಲಾದ ಜೀವನಾನುಭವ ಮತ್ತು ತಿಳುವಳಿಕೆಗಳಿಂದ ಅಚ್ಚ ಭಾರತೀಯ ಸಾಹಿತ್ಯ ಸೃಷ್ಟಿ ಸಾಧ್ಯ ಎಂದು. ನನ್ನ ಜೀವನ ಮತ್ತು ಅದರ ಅಂಗವಾದ ಸಾಹಿತ್ಯ ಸೃಷ್ಟಿ ಇವು ಇಂದಿನ ಭಾರತೀಯ ಸಂದರ್ಭದ ನಮ್ಮ ವ್ಯಕ್ತಿತ್ವದ ಅಸಂಬದ್ಧತೆಯ ವಿರುದ್ಧ ಹೋರಾಡುವ ಮತ್ತು ಹೊಸ ನಾಗರಿಕತೆಯೊಂದನ್ನು ನಿರ್ಮಿಸುವ ಆಂದೋಲನವೆಂದರೆ ಮಾತ್ರ ನಾವು ನವ್ಯರಿಂದ ಭಿನ್ನವೆಂದು ಭಾವಿಸಬೇಕು. + +ಸರಳವಾಗಿ ನೇರವಾಗಿ ನೋಡುವ, ಕೇವಲ ದೃಷ್ಟಿಕೋನವಾಗಿ ಮಾತ್ರ ಸಾಹಿತಿ ಕಥೆಗಳಲ್ಲಿ ವ್ಯಕ್ತವಾಗುವ ಹೊಸದೊಂದು ಶಿಸ್ತನ್ನು ಬರವಣಿಗೆಯಲ್ಲಿ ನಾನು ಅಭ್ಯಾಸ ಮಾಡಬೇಕಾಯ್ತು. ಇದಕ್ಕೆ ನಮ್ಮ ಗ್ರಾಮಗಳಲ್ಲಿ ಕೇವಲ ವೀಕ್ಷಕನಾಗಿ ಮಾತ್ರವೆ ಇರಬೇಕಾಗಿ ಬಂದ ನನ್ನ ಜೀವನ ಸಂದರ್ಭವೂ ಒಂದು ಕಾರಣ. ಆದ್ದರಿಂದ ಕಲಾವಿದನ ಪ್ರಜ್ಞೆಯೊಳಗೇ ವಿಕಾಸವಾಗುವ ಅಥವಾ ಕಲಾವಿದ ಪ್ರಜ್ಞೆಯೇ ಕೇಂದ್ರವಾಗಿರುವ ಅಥವಾ ಸಾಹಿತಿಯೇ ನಾಯಕನಾದ, ಒಂದು ರೀತಿಯ ಆತ್ಮನಿಷ್ಠ ಬರಹಗಾರರಾದ ಯು.ಆರ್.ಅನಂತಮೂರ್ತಿ ಮತ್ತು `ಗತಿಸ್ಥಿತಿ’ಯ ಗಿರಿ ಒಂದು ಕೊನೆಯಾದರೆ ಈ ಕಥಾಸಂಕಲನದ ನಾನು ಇನ್ನೊಂದು ತುದಿ. + +ನವ್ಯ ಸಾಹಿತ್ಯ ಸಂಪೂರ್ಣ ನಿಸ್ತೇಜಗೊಂಡಿದೆ. ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ. ಏಕೆಂದರೆ ಮೊದಲನೆಯದಾಗಿ ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು. ಎರಡನೆಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತಿ ವರ್ಗ. ಮೂರನೆಯದಾಗಿ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡಿರುವ ಅದರ ಕ್ರಾಂತಿಕಾರಕತನ. + +ಈ ಮೂರು ಕಾರಣಗಳ ಬಗ್ಗೆ ನನ್ನ ಅನ್ನಿಸಿಕೆಗಳನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸಬಯಸುತ್ತೇನೆ. ನವ್ಯಮಾರ್ಗದ ಸಾಂಕೇತಿಕ ಶೈಲಿ ಮತ್ತು ತಂತ್ರಗಳು ಸಾಹಿತ್ಯದ ಅನೇಕ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಸಾಹಿತಿಗಿರುವ ಅಜ್ಞಾನ ಇಲ್ಲವೇ ತಿರಸ್ಕಾರಗಳನ್ನು ತೋರಿಸುತ್ತವೆ. ನಮ್ಮ ರಾಷ್ಟ್ರೀಯ ಉತ್ಪಾದನೆಯ ಬಹುಪಾಲನ್ನು ಉಚ್ಚ ವರ್ಗ ಮತ್ತು ಜಾತಿಗಳೂ, ಮಿಕ್ಕಿದ್ದನ್ನು ಮಧ್ಯಂತರ ವರ್ಗ ಮತ್ತು ಜಾತಿಗಳೂ ತಿಂದುಹಾಕುತ್ತಿರುವುದರಿಂದ ಸಾಕ್ಷರತೆ ನಿರೀಕ್ಷಿತ ಗತಿಯಲ್ಲಿ ವೃದ್ಧಿಸಿಯೇ ಇಲ್ಲ. ಈ ಕಾರಣದಿಂದಲೇ ಭಾರತದ ಗ್ರಾಮಗಳಲ್ಲಿ ಕೇವಲ ಹೆಬ್ಬೆಟ್ಟೊತ್ತುವ ನಿರಕ್ಷರ ಕುಕ್ಷಿಗಳ ಸಮುದಾಯ ಒಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ಸಾಹಿತ್ಯ ಸಂಸ್ಕೃತಿಗಳು ಕೇವಲ ಮೇಲು ಜಾತಿಯವರ ಸೊತ್ತಾಗಿಯೇ ಉಳಿಸುವ ಯತ್ನ ನಮ್ಮ ವಿದ್ಯಾಭ್ಯಾಸ ಯೋಜನೆಗಳು ಮತ್ತು ವಿದ್ಯಾಭ್ಯಾಸ ಕ್ರಮ ಇವೆಲ್ಲ. ಭಾಷೆ ಮತ್ತು ಸಾಹಿತ್ಯ ಇಂದು ಹೇಗೆ ಉಳ್ಳವರ ಸ್ವತ್ತಾಗತೊಡಗಿದೆಯೆಂದರೆ ಇನ್ನು ಭಾಷೆಯಲ್ಲಿ ಆಲೋಚನೆ ಮತ್ತು ಅಭಿವ್ಯಕ್ತಿ ಬಯಸುವುದೇ ಮೋಸಗಾರಿಕೆ ಎನ್ನುವಂತೆ ಭಾಸವಾಗತೊಡಗಿದೆ. ಅಂಥದರಲ್ಲಿ ಸಾಹಿತ್ಯದಲ್ಲೂ ಯಾಂತ್ರಿಕ ಸಾಂಕೇತಿಕತೆಯೊಂದನ್ನು ಸಂಪ್ರದಾಯ ಮಾಡಿಕೊಂಡು ಸಹೃದಯ ಸ್ತೋಮವನ್ನು ಆದಷ್ಟು ಸೀಮಿತಗೊಳಿಸುವುದೇ ಸಾಹಿತ್ಯ ರಚನೆಯ ಉದ್ದೇಶಗಳಲ್ಲಿ ಒಂದನ್ನಾಗಿ ಮಾಡಿಕೊಂಡರೆ ಅದು ರೋಗಗ್ರಸ್ತ ಸಮಾಜವೆಂದಷ್ಟೇ ಹೇಳಬಹುದು. + +ಎರಡನೆಯದು ಸಾಹಿತ್ಯದಲ್ಲಿ ತುಂಬಿಕೊಂಡಿರುವ ಉಪಾಧ್ಯಾಯ ಸಮುದಾಯ. ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದು. ಇದು ಉಪಾಧ್ಯಾಯರ ಮೇಲಿನ ತಿರಸ್ಕಾರವೇ ಆಗಲಿ ಅವಹೇಳನವೇ ಆಗಲಿ ಅಲ್ಲ. ನನಗೆ ಅಕ್ಷರ ವಿದ್ಯೆ ಕಲಿಸಿದ್ದು ಉಪಾಧ್ಯಾಯರೆಂಬುದನ್ನು ನಾನು ಮರೆಯಲಾರೆ. ಭಾರತೀಯ ಸಂದರ್ಭದಲ್ಲಿ ಒಬ್ಬನ ವೃತ್ತಿಯು ಕನ್ನಡ ಜಾನಪದದ ಒಟ್ಟು ಅನುಭವದ ವಿಸ್ತೀರ್ಣದಲ್ಲಿ ಎಷ್ಟನ್ನು ಒಳಗೊಳ್ಳಬಹುದೆಂಬ ಪ್ರಶ್ನೆ. ಭಾಷೆಯ ಉಪಯೋಗದಲ್ಲಿನ ಏಕತಾನ, ಅನುಭವ, ಶೈಲಿ ಮೊದಲಾದವುಗಳ ಪುನರಾವರ್ತನೆ, ಪಾಶ್ಚಿಮಾತ್ಯ ಸಾಹಿತ್ಯದಿಂದ ಕಳ್ಳಸಾಗಾಣಿಕೆ, ಪ್ರಕಾಶಕ, ವಿಮರ್ಶಕ, ಬರಹಗಾರರೊಡಗೂಡಿದ ವಂಚಕರ ಜಾಲಗಳು, ಇದಕ್ಕೆಲ್ಲಾ ಈ ಮೂರೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವ್ಯಾಪ್ತಿಯೊಳಗಿರುವ, ವರ್ಗ, ಬಡ್ತಿ, ನೇಮಕ, ಪಠ್ಯಪುಸ್ತಕ ಇತ್ಯಾದಿಗಳ ಕೆಟ್ಟ ರಾಜಕಾರಣದಲ್ಲಿ ಮುಳುಗಿರುವ ಕೆಟ್ಟ ಉಪಾಧ್ಯಾಯಸಾಹಿತಿ ಸಮುದಾಯವೇ ಕಾರಣ. + +ನಿಜವಾಗಿಯೂ ಗೌರವ ಭಾಜನರಾದ ಉಪಾಧ್ಯಾಯರನ್ನು ಟೀಕಿಸುವುದು ನನಗೆ ಇಷ್ಟವಿಲ್ಲ. ಆದರೆ ಈ ಜನ ವಿದ್ವತ್ ಗೋಷ್ಠಿಗಳಲ್ಲಿ, ವಿಮರ್ಶೆಯಲ್ಲಿ, ಚರ್ಚೆ ಸಮಾವೇಶಗಳಲ್ಲಿ ಅತಿ ನಾಜೂಕಿನ ವಾತಾವರಣ ಒಂದನ್ನು ಸೃಷ್ಟಿ ಮಾಡಿ ಕೇವಲ ಆತ್ಮಗೋಚರ ಮಾತ್ರವಾದ ಪಾರಿಭಾಷಿಕ ಪದಸಮುಚ್ಚಯಗಳನ್ನು ಸೃಷ್ಟಿಸಿ, ನೇರವಾದ ಸರಳವಾದ ಅನ್ಯ ಕ್ಷೇತ್ರದ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದ ಹತ್ತಿರ ಸುಳಿಯದೆ ಸಂಕೋಚದಿಂದ ಓಡಿಬಿಡುವಂತೆ ಅತಿ ಸಂಸ್ಕೃತಿಯ ಮೆಣಸಿನ ಹೊಗೆ ಹಾಕಿದ್ದಾರೆ. + +ಮೂರನೆಯದು ಕೇವಲ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡ ಕ್ರಾಂತಿಕಾರಕತನ. ನವ್ಯ ಕಾವ್ಯದ ಸ್ಫೂರ್ತಿ ಮೂಲಗಳು ಆಂಗ್ಲ ಕಾವ್ಯದಿಂದ ಎರವಲು ತಂದ ಸಿದ್ಧಾಂತಗಳಿಂದ ಮಾತ್ರವೆಂದು ಹೇಳಬೇಕು. ಏಕೆಂದರೆ ಈ ವಿಚಾರ ಸರಣಿಗೆ ವಿಸ್ತೃತ ವ್ಯಾಪ್ತಿಯೇ ಕಾಣುತ್ತಿಲ್ಲ. ಕನ್ನಡದ ಹಲವು ಕ್ರಾಂತಿಗಳು ಇದೇರೀತಿ ಮುಗ್ಗರಿಸಿದುದಕ್ಕೆ ಮೂಲ ಕಾರಣ ಅವುಗಳ ಮುಂಚೂಣಿಯಲ್ಲಿ ಚುಕ್ಕಾಣಿ ಹಿಡಿದಿದ್ದವರು ಬ್ರಾಹ್ಮಣರು. ಆದ್ದರಿಂದಲೇ ಹಳೆ ಸಾಹಿತ್ಯಕ್ಕೂ ಹೊಸ ಸಾಹಿತ್ಯಕ್ಕೂ ಸಂಭವಿಸಿದ ಘರ್ಷಣೆ, ಹಳೆ ಸಂಪ್ರದಾಯ, ಆಚಾರ, ಪದ್ಧತಿ ಮುಂತಾದವುಗಳೆಲ್ಲದರ ವಿರುದ್ಧದ ಆಂದೋಲನವಾಗಲಿಲ್ಲ. ನವ್ಯ ಚಳವಳಿ ತಮಿಳುನಾಡಿನಲ್ಲಾದಂತೆ ಭಾಷೆ, ಜಾತಿಪದ್ಧತಿ, ತತ್ವಚಿಂತನೆ, ರಾಜಕೀಯ ಆಂದೋಲನ ಮೊದಲಾದ ಜೀವನದ ವಿಶಾಲ ವ್ಯಾಪ್ತಿಗೆ, ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲೇ ಇಲ್ಲ. ನವ್ಯ ಮಾರ್ಗದ ಹಿರಿಯರೂ ಅಗ್ರಗಣ್ಯರೂ ಆದ ಕೆಲವರು ಸಾಹಿತ್ಯದಲ್ಲಿ ಕ್ರಾಂತಿಕಾರಿಗಳಾದರೂ ಜಾತಿಪದ್ಧತಿ, ವರ್ಣಾಶ್ರಮ ಧರ್ಮ ಮುಂತಾದವುಗಳನ್ನು ಪ್ರತಿಪಾದಿಸಿದರು. ಜನ ಬಳಕೆ ಆಡುಮಾತಿನಲ್ಲಿ ಕಾವ್ಯ ಬರೆಯಬೇಕೆಂದವರು ಶಿಕ್ಷಣ ಮಾಧ್ಯಮವನ್ನು ಮಾತ್ರ ಇಂಗ್ಲಿಷಿನಲ್ಲೇ ಉಳಿಸಬೇಕೆಂದು ಪ್ರತಿಪಾದಿಸಿದರು. + +ನವ್ಯ ಕಾವ್ಯದ ಈಚಿನ ಉತ್ತಮ ಕವನಗಳೆಲ್ಲಾ ಧಾರ್ಮಿಕ ಅಥವಾ ರಿಲಿಜಿಯಸ್ ಆಗಿರುವುದೇ ಹೆಚ್ಚು. ಹಿಂದೂ ಧರ್ಮದ ಜಾತಿಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪರ್ಶತೆ, ಸತಿಪದ್ಧತಿ ಇತ್ಯಾದಿಗಳ ಸನ್ನಿಧಿಯಲ್ಲಿ ಜನತಾ ದ್ರೋಹಿಯಾದವನೊಬ್ಬ ಮಾತ್ರ ರಿಲಿಜಿಯಸ್ ಆಗಲು ಸಾಧ್ಯ. ಕೊನೇ ಪಕ್ಷ ಆಂತರಿಕವಾಗಿ ಸಮಾನತೆಯನ್ನು ಬೋಧಿಸುವ ಧರ್ಮಗಳಲ್ಲಾದರು ಕವಿಯೊಬ್ಬ ಧಾರ್ಮಿಕ ಮತ್ತು ಸೆಕ್ಯೂಲರ್ ಎರಡೂ ಆಗಬಹುದೇನೋ! ಕನ್ನಡ ಸಾಹಿತ್ಯದ ಸದ್ಯದ ಪರಿಸ್ಥಿತಿಯಲ್ಲಿ ಅಂಥ ಸಾಧ್ಯತೆಗಳ ಸುಳಿವೇ ಕಾಣುತ್ತಿಲ್ಲ. + +ಈ ಮೂರು ಕಾರಣಗಳಿಂದ ಈ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ. ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೆ ಅಲ್ಲದೆ ಇದರ ಸ್ಫೂರ್ತಿ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಇದರ ಮೌಲ್ಯಗಳು ಎಲ್ಲವನ್ನೂ ತ್ಯಜಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ವಿಕವಾಗಿ ಸಮಗ್ರವಾಗಿ ಬದಲಾವಣೆಯಾಗುವುದರಿಂದ ಮಾತ್ರವೇ ಹೊಸ ಸಾಹಿತ್ಯ ಬಂದೀತು. ಹೊಸ ಉಪಮಾನಗಳು, ಹೊಸ ಪದಪುಂಜಗಳು, ಹೊಸ ಅಚ್ಚು ಮಾಡುವ ಕ್ರಮ ಇವುಗಳಿಂದಲ್ಲ. + +[ಲೇಖನಕೃಪೆ: ರಾಜೇಶ್ವರಿ ತೇಜಸ್ವಿ] + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_573.txt b/Kenda Sampige/article_573.txt new file mode 100644 index 0000000000000000000000000000000000000000..ed3d7108dd8fd486303d8bfdc64ac540c82bdff8 --- /dev/null +++ b/Kenda Sampige/article_573.txt @@ -0,0 +1,39 @@ +ಕನ್ನಡದ ಮೊದಲ ಕಾದಂಬರಿ ಗುಲ್ವಾಡಿ ವೆಂಕಟರಾಯರ ‘ಇಂದಿರಾ ಬಾಯಿ’ (೧೮೯೯) ಎಂಬುದು ಪ್ರತೀತವಾಗಿದ್ದರೂ ಆಧುನಿಕ ಕನ್ನಡ ಕಾದಂಬರಿಗಳೆಂದರೆ, ಅನಂತರದ ನೂರು ವರ್ಷಗಳಲ್ಲಿ ಬಂದಿರುವ ಗಳಗನಾಥ, ತಿರುಮಲಾಂಬ, ಕೆ.ವಿ. ಅಯ್ಯರ್, ಕೆ.ವಿ ಪುಟ್ಟಪ್ಪ, ಶಿವರಾಮ ಕಾರಂತ, ಮ.ನ. ಮೂರ್ತಿ ಮತ್ತು ‘ಅನಕೃ’ ಮುಂತಾದವರ ಕೃತಿಗಳು ಎಂದು ತಿಳಿಯಬೇಕಾಗುತ್ತದೆ. ‘ಕಾದಂಬರಿ’ ಎನ್ನುವ ಶಬ್ದದ ಬಳಕೆಯಿರುವುದು ಕನ್ನಡದಲ್ಲಿ ಮಾತ್ರ; ಭಾರತದ ಉಳಿದ ಭಾಷೆಗಳಲ್ಲಿ ಬೇರೆ ಬೇರೆ ಶಬ್ದಗಳ ಬಳಕೆ ಇದೆ. ಹಿಂದಿಯಲ್ಲಿ ‘ಉಪನ್ಯಾಸ್’, (ಉಪನ್ಯಾಸಕಾರ ಎಂದರೆ ಕಾದಂಬರಿಕಾರ).  ಮಲೆಯಾಳ, ತಮಿಳು, ತೆಲುಗುಗಳಲ್ಲಿ ‘ನೋವೆಲ್’ ಎಂದೇ ಹೇಳಲಾಗುತ್ತದೆ. ೭ನೇ ಶತಮಾನದಲ್ಲಿ ಸಂಸ್ಕೃತದಲ್ಲಿ (ಹರ್ಷಚರಿತದ ರಚಯಿತನೂ ಆದ) ಬಾಣ ಭಟ್ಟನಿಂದ ರಚಿತವಾದ ಗದ್ಯಬರಹವಾದ ‘ಕಾದಂಬರಿ’ ಎನ್ನುವ ಹೆಸರಿನಿಂದಲೇ ಕನ್ನಡಕ್ಕೆ ಕಾದಂಬರಿ ಎನ್ನುವ ಹೆಸರು ಸಿಕ್ಕಿತು. ಬಾಣಭಟ್ಟನ ಕಾದಂಬರಿಯ ಕನ್ನಡಾನುವಾದ ಕನ್ನಡ ಸಾಹಿತ್ಯದ ಮೇಲೆ ಬೀರಿದ ಪ್ರಭಾವ ಕೂಡ ಗಮನಾರ್ಹ. ಆದರೆ ಆಧುನಿಕ ಕನ್ನಡ ಕಾದಂಬರಿಯ ತಾಯಿ ಇಂಗ್ಲಿಷ್ ಕಾದಂಬರಿ ಪ್ರಕಾರವೇ ಹೊರತು ಬಾಣಭಟ್ಟನ ಕಾದಂಬರಿ ಅಲ್ಲ ಎನ್ನುವುದರಲ್ಲಿ ಸಂಶಯವಿಲ್ಲ. + +‘ನಾವೆಲ್’ (ಕಾದಂಬರಿ) ಎನ್ನುವ ಸಾಹಿತ್ಯ ಪ್ರಕಾರ ಹುಟ್ಟಿದ್ದೇ ಇಂಗ್ಲಿಷಿನಲ್ಲಿ ಎನ್ನುವುದು ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಪ್ರಚಲಿತವಿರುವ ನಂಬಿಕೆ. ೧೫೭೮ರಲ್ಲಿ ಪ್ರಕಟವಾದ ಜಾನ್ ಲಿಲಿಯ ‘ಯೂಫುಇಸ್’ ಇಂಗ್ಲಿಷ್ ಭಾಷೆಯ ಮೊಟ್ಟ ಮೊದಲ ಕಾದಂಬರಿ ಎಂದು ಪರಿಗಣಿಸಲ್ಪಡುವುದಾದರೂ ಮೊದಲ ನಿಜವಾದ ಆಧುನಿಕ ಇಂಗ್ಲಿಷ್ ಕಾದಂಬರಿಯೆಂದರೆ, ೧೭೪೧ರಲ್ಲಿ ಹೊರಬಂದ ಹೆನ್ರಿ ರಿಚರ್ಡ್‌ಸನನ ‘ಪಮೀಲಾ’ ಎನ್ನುವ ಬೃಹತ್ ಕಾದಂಬರಿ. + +ಆದರೆ ಇಂದಿಗೆ ಒಂದು ಸಾವಿರ ವರ್ಷಗಳ  ಹಿಂದೆಯೇ ಜಪಾನಿನಲ್ಲಿ ರಾಜಪರಿವಾರದವಳಾದ ಮುರಸಾಕಿ  ಶಾಕಿಬು (ಹುಟ್ಟು: ಕ್ರಿ.ಶ. ೯೭೬; ಮರಣ: ೧೦೩೧) ಎಂಬಾಕೆ ಬರೆದ ಗೆಂಜಿಯ ಕಥೆ (The Tale of Genji) ಎಲ್ಲ ಕಾದಂಬರಿಗಳ ತಾಯಿಯಾಗಿದೆ. ಮೊನ್ನೆ ಏಪ್ರಿಲ್ ೧೮ ಅದರ ೧೦೦೦ನೆಯ ಹುಟ್ಟುಹಬ್ಬವಾಗಿತ್ತು! ಗೆಂಜಿಯ ಕಥೆ ಕಾಲದ ಮಿತಿಯನ್ನು ಮೀರಿ ಇಲ್ಲಿಯವರೆಗೂ ಜನಮಾನಸದಲ್ಲಿ ಉಳಿದಿರುವುದು ಅದರ ಅನನ್ಯತೆಯನ್ನು ಸಾರುತ್ತದೆ ಎನ್ನಬಹುದು. ಜಗತ್ತಿನ ವಿವಿಧ ಭಾಗದಲ್ಲಿ ಗೆಂಜಿಯ ಕಥೆಯ ಬಗ್ಗೆ ಚರ್ಚೆಗಳು, ಸೆಮಿನಾರುಗಳು  ನಡೆಯುತ್ತಿವೆ. ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಗಳು ಜರಗುತ್ತಿವೆ. ಗೆಂಜಿಯ ಕಥೆಯ ಮೇಲೆ ಪ್ರಬಂಧಗಳನ್ನು ಮಂಡಿಸಲಾಗುತ್ತಿದೆ. + +‘ಕಾದಂಬರಿ ಎಂದರೆ ಏನು?’ ಎನ್ನುವ ಪ್ರಶ್ನೆಗೆ ‘ಮತ್ತೇನು? ಪ್ರೀತಿ-ಮದುವೆ’ ಎನ್ನುವುದು ಐದಕ್ಷರದ ಜಗದ್ವಿಖ್ಯಾತವಾದ ಪ್ರತಿಕ್ರಿಯೆ. ನಿಜ. ಕಾದಂಬರಿ ಎಂದರೆ ನಿಜದ ಬದುಕಿನ ವೃತ್ತಾಂತ. ನಿಜದ ಬದುಕಿನಲ್ಲಿ ಕಾಮ-ಪ್ರೇಮ, ಪ್ರೀತಿ-ಮದುವೆ ಇತ್ಯಾದಿ ಅನಿವಾರ್ಯ. ಅದರ ಕೊರತೆ ಇದ್ದ ಕಾದಂಬರಿ ಓದುಗರಿಗೆ ಇಷ್ಟವಾಗದಿರುವುದರಲ್ಲಿ ಆಶ್ಚರ್ಯವಿಲ್ಲ. ‘ಪ್ರೀತಿ-ಮದುವೆ’ ಇಲ್ಲದ ಕಾದಂಬರಿ ಪ್ರಭಾಷಣ ಎನಿಸಿಕೊಂಡದ್ದು ಕೂಡ ಇದೆ. ಹಾಗಾದರೆ ಒಂದು ಸಾವಿರ  ವರ್ಷಗಳ ಹಿಂದಿನ ಕಾದಂಬರಿಯೊಂದರ ಹೂರಣ ಏನಾಗಿರಬಹುದು ಎನ್ನುವ ಕುತೂಹಲ ಸಹಜ. ಆದರೆ ಬೇರೇನು? ಗೆಂಜಿಯ ಕಥೆಯ ಹೂರಣ ಕೂಡ ಅದೇ. ಒಬ್ಬ ಚಕ್ರವರ್ತಿಯ ಮಗನ ಪ್ರೇಮದ ಹುಡುಕಾಟ ಮತ್ತು ಆ ಹುಡುಕಾಟದಲ್ಲಿ ಅವನಿಗೆ ಎದುರಾಗುವ ಮತ್ತು ಎದುರಾಗಿ ನೇಪಥ್ಯಕ್ಕೆ ಸರಿಯುವ ಹಲವು ಯುವತಿಯರ ವಿವರ-ವೃತ್ತಾಂತ. + +ಹಲವು ರೊಮ್ಯಾಂಟಿಕ್ ಹಾಡುಗಳಿಂದ ಕೂಡಿದ ಗೆಂಜಿಯ ಕಥೆ ಚಿಕ್ಕ ಕಾದಂಬರಿಯೇನಲ್ಲ. ಅದು ೭೩೫ ಪುಟಗಳ ಸುಮಾರು ಎಪ್ಪತ್ತೈದು ವರ್ಷಗಳ ಕಾಲಾವಧಿಯ, ೩೫೦ ಪಾತ್ರಗಳಿರುವ ಒಂದು ಸುದೀರ್ಘ ಕಥೆ. + +ಗೆಂಜಿಯ ಕಥೆ ಜಗತ್ತಿನ ಮೊಟ್ಟ ಮೊದಲಿನ ಅಥವಾ ಅತ್ಯಂತ ಹಳೆಯ ಕಾದಂಬರಿ ಎನ್ನುವುದು ಎಷ್ಟು ಮುಖ್ಯವೋ ಅದನ್ನು ಬರೆದಿರುವುದು ಮಹಿಳೆ ಎನ್ನುವುದು ಇನ್ನೂ ಮುಖ್ಯವಾಗುತ್ತದೆ. ಜಗತ್ತಿನ ೩೦ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿರಬೇಕಾದರೆ ಖಂಡಿತವಾಗಿಯೂ ಸಾಮಾನ್ಯ ಜನಮನವನ್ನು ಮಾತ್ರವಲ್ಲ, ಸಾಹಿತ್ಯಾಸಕ್ತರನ್ನು ಆಕರ್ಷಿಸುವಂಥದು ಅದರಲ್ಲಿ ಏನೋ ಇರಬೇಕಲ್ಲ? ಪ್ರೀತಿ-ಪ್ರೇಮ, ಕಾಮ-ಪ್ರಣಯ ಇತ್ಯಾದಿಯಂತೂ ಖಂಡಿತ ಇರಲೇ ಬೇಕು!  ಗೆಂಜಿಯ ಕಥೆ ಜಪಾನೀ ಸಾಹಿತ್ಯದಲ್ಲಿ ಅಸದೃಶವಾದ ಸಾಧನೆ ಎಂದು ಸಾಹಿತ್ಯ ವಿಮರ್ಶಕರು ಅಭಿಪ್ರಾಯಪಡುತ್ತಾರೆ. ಇದನ್ನು ಪೂರ್ತಿಯಾಗಿ ಓದಿ ಮುಗಿಸುವುದು ಕೂಡ ಒಂದು ಸಾಧನೆಯೇ ಎಂಬ ಮಾತು ಕೂಡ ಇದೆ! + +ಕಥಾಸಾರಾಂಶ: + +ಗೆಂಜಿ ಚಕ್ರವರ್ತಿಯ ಮಗ. ಅವನ ಪ್ರೀತಿಯ ಪ್ರೇಯಸಿ (ಇಡುಹೆಣ್ಣು) ಕಿರಿತ್ಸುಬೊ. ಓರ್ವ ಕೊರಿಯನ್ ಭವಿಷ್ಯವಾದಿ ಗೆಂಜಿಯ ಭವಿಷ್ಯ ಬಹಳ ಉಜ್ವಲವಾಗಿದೆ ಎಂದು ಹೇಳುತ್ತಾನೆ. ಆದರೆ ಅರಮನೆಯ ಇತರ ಹೆಣ್ಣುಗಳ ಈರ್ಷ್ಯೆಗೆ ಗುರಿಯಾದ ಗೆಂಜಿಯ ತಾಯಿ ಅಸೌಖ್ಯಕ್ಕೀಡಾಗಿ ಸಾಯುತ್ತಾಳೆ. ಚಕ್ರವರ್ತಿ ತನ್ನ ವಿವಾಹಪೂರ್ವ ಪ್ರೇಯಸಿಯನ್ನು ಹೋಲುವ ಫ್ಯೂಜಿತ್ಸುಬೊ ಎನ್ನುವವಳನ್ನು ಉಪಪತ್ನಿಯನ್ನಾಗಿಟ್ಟುಕೊಳ್ಳುತ್ತಾನೆ. ಚಿಕ್ಕ ಹುಡುಗ ಗೆಂಜಿಗೆ ರಾಜಪರಿವಾರದಲ್ಲಿ ಓಲೈಸುವವರಿಲ್ಲದಾಗಿ ಅವನ ತಂದೆ (ಚಕ್ರವರ್ತಿ) ಅವನನ್ನು ರಾಜಮನೆತನದ ಹೊರಗಿನ ವಂಶಸ್ಥರ ವಶಕ್ಕೆ ನೀಡುತ್ತಾನೆ. ಚಕ್ರವರ್ತಿ ತನ್ನ ಮತ್ತು ತನ್ನ ಪ್ರೇಯಸಿ ಕೊಕಿಡೆನಳ ಮಗನನ್ನು ಯುವರಾಜನನ್ನಾಗಿ ಮಾಡುತ್ತಾನೆ. ಗೆಂಜಿ ಬಹಳ ಸುಂದರ ಮತ್ತು ಚುರುಕು ಬುದ್ಧಿಯ ತರುಣನಾಗಿ ಬೆಳೆಯುತ್ತಾನೆ. ಎಲ್ಲರೂ ಅವನನ್ನು ಬಹಳ ಮೆಚ್ಚಿಕೊಂಡರೂ ಕೊಕಿಡೆನ್ ಮತ್ತು ಅವನ ಕುಟುಂಬ ಅವನನ್ನು ದ್ವೇಷಿಸುತ್ತದೆ. + +ಕಥೆಯ ಮೊದಲ ಭಾಗದಲ್ಲಿ ಗೆಂಜಿ ಮತ್ತು ಅವನ ಹಲವು ಪ್ರೇಯಸಿಯರ ಜೊತೆಗಿನ ಸ್ನೇಹ ಸಂಬಂಧ, ಅವೋಯಿ ಎನ್ನುವ ಹುಡುಗಿಯ ಜೊತೆ ಅರೇಂಜ್‌ಡ್ ಮದುವೆ, ಒಂದು ಗಂಡು ಮಗುವಿನ ಜನನ, ಮತ್ತು ಮುರಸಾಕಿ ಎಂಬ ಚೆಲುವೆಯ ಜೊತೆ ಪ್ರೇಮ ಮೊಳೆಯುವ ವಿವರವಿದೆ. + +ತನ್ಮಧ್ಯೆ ಹಳೆಯ ಚಕ್ರವರ್ತಿ ಮೃತನಾಗಿ ಕೊಕಿಡೆನಳ ಮಗ ಪಟ್ಟಕ್ಕೆ ಬರುತ್ತಾನೆ. ಗೆಂಜಿಯ ಪ್ರೇಮ-ಪ್ರಣಯ ಅರಮನೆಯಲ್ಲಿ ಹಗರಣ ಉಂಟುಮಾಡುತ್ತದೆ. ಅವನು ರಾಜಧಾನಿಯನ್ನು ತೊರೆಯಬೇಕಾಗುತ್ತದೆ. ಕಥೆಯ ಕೊನೆಯ ಭಾಗದಲ್ಲಿ ಗೆಂಜಿ ರಾಜಧಾನಿಗೆ ಮರಳುತ್ತಾನೆ. ಮುರಸಾಕಿ ಮತ್ತು ಇತರ ಹಲವು ಹಣ್ಣುಗಳ ಜೊತೆ ರೊಕುಜೊ ಅರಮನೆಯಲ್ಲಿ ನೆಲೆನಿಲ್ಲುತ್ತಾನೆ. ಕಥೆಯ ಈ ಸುದೀರ್ಘವಾದ ಭಾಗದಲ್ಲಿ ಗೆಂಜಿ ತನ್ನ ಮಕ್ಕಳ ಮತ್ತು ಮೊಮ್ಮಕ್ಕಳ ಅಭ್ಯುದಯವನ್ನು ಸಾಧಿಸುವ ವಿವರವಿದೆ. ಇತರರ ಬಲವಂತಕ್ಕೊಳಗಾಗಿ ಇಳಿವಯಸ್ಸಿನಲ್ಲಿ ಗೆಂಜಿ ಮತ್ತೆ ಮದುವೆಯಾಗುತ್ತಾನೆ, ಅವನ ಪತ್ನಿ ಒಂದು ಮಗುವಿನ ತಾಯಿಯಾದ ನಂತರ ಬೌದ್ಧ ಸನ್ಯಾಸಿನಿಯಾಗುತ್ತಾಳೆ. + +ಗೆಂಜಿಯ ಕಥೆಯ ಗದ್ಯ, ಸಂವಾದ ಮತ್ತು ಕಾವ್ಯಕ್ಕೆ ಮಾದರಿಯಾಗಿ ಕೆಲವು ಸಾಲುಗಳನ್ನು ನೋಡಿ: + +ಪ್ರಶಾಂತ ತ್ರಿಸಂಧ್ಯೆ. ಮೋಹಕವಾದ ಬಾನಾಗಿ ಕರಗುತ್ತಿರುವಾಗ ಹೂದೋಟದಲ್ಲಿ ಮಿಡತೆಯೊಂದು ತಡೆತಡೆದು ಹಾಡುತ್ತಿತ್ತು. ಅಲ್ಲಿ ಇಲ್ಲಿ ಶರತ್ಕಾಲದ ವರ್ಣಗಳು ಮಿಂಚುತ್ತಿದ್ದವು. ಶರತ್ಕಾಲದ ವರ್ಣಚಿತ್ರದಂತೆ ಕಾಣುವ ಈ ದೃಶ್ಯವನ್ನು ವೀಕ್ಷಿಸುತ್ತಾ ಆ ಸುಂದರ ಪರಿಸರದಲ್ಲಿ ಯೂಕೊನ್‌ಳ ಮನದಲ್ಲಿ ಮುಸ್ಸಂಜೆಯ ಸುಂದರಿಯರ ನೆನಪು ಮೂಡಿ ಅವಳ ಮುಖವನ್ನು ನಾಚಿಕೆ ಮುತ್ತಿಕೊಂಡಿತು. + +ಒಂದು ಪಾರಿವಾಳದ ಕೊರಳದನಿ ಬಿದಿರ ಮೆಳೆಗಳೆಡೆಯಿಂದ ತೇಲಿ ಬಂದು ಗೆಂಜಿಯ ಮನಸ್ಸನ್ನು ಮೃದುವಾಗಿ ತಟ್ಟಿತು. ಹಿಂದಿನ ಸಂಜೆ ಹಳೆಯ ಮಹಲಿನಲ್ಲಿ ಯೂಕೋನಳ ಒಡತಿಯನ್ನು ಯಾರೋ ಕಾಣಲು ಬಂದಾಗ ಯೂಕೋನಳ ಮುಖದಲ್ಲಿ ಕಾಣಿಸಿದ ಆತಂಕದ ಛಾಯೆಯ ನೆನಪು ಬಂದು, ‘ಏನಾಗಿತ್ತು ಅವಳ ಪ್ರಾಯ? ಅವಳ ದುರ್ಬಲ ದೇಹವನ್ನು ಕಾಣುವಾಗ ಅವಳು ಹೆಚ್ಚು ಕಾಲ ಬದುಕುವವಳಲ್ಲ ಎಂದು ನನಗನಿಸುತ್ತಿತ್ತು’ + +“ನನ್ನ ಒಡತಿಗೆ ಹೆಚ್ಚು ಕಡಿಮೆ ಹತ್ತೊಂಬತ್ತು ವರ್ಷವಾಗಿರಬಹುದು. ಆಕೆಯ ಮರಣದ ಬಳಿಕ ಆಕೆಯ ದಾದಿ ತೀರಿಹೋದಾಗ ನಾನು ಅನಾಥಳಾದೆ. ಆಕೆಯ ತಂದೆ ಎಂಥ ಕರುಣಾಮಯಿ! ಅವನು ತನ್ನ ಮಗಳ ಜೊತೆ ತನ್ನ ಮಗಳಂತೆ ನನ್ನನ್ನು ಸಾಕಿ ಬೆಳೆಸಿದ. ಇನ್ನು ನಾನು ಹೇಗೆ ಜೀವಿಸಲಿ? ನಾನು ಆಕೆಗೆ ಅಷ್ಟು ಆತ್ಮೀಯಳಾಗಿರಬಾರದಾಗಿತ್ತು ಅನಿಸುತ್ತದೆ. ನಾನು ಅಷ್ಟು ದೀರ್ಘ ಕಾಲ ಅಷ್ಟು ಕೃಶ ದೇಹದ ನನ್ನ ಯಜಮಾನಿತಿಯನ್ನು ಅವಲಂಬಿಸಿಕೊಂಡಿರಬಾರದಾಗಿತ್ತು.” + +“ಒಂದು ಹೆಣ್ಣನ್ನು ಅಕರ್ಷಕಳಾಗಿಸುವುದು ಅವಳ ಕೃಶತೆಯೇ. ತನ್ನ ಸಾಮರ್ಥ್ಯದ ಬಗ್ಗೆ ಬಹಳ ವಿಶ್ವಾಸವಿರುವ ಹೆಣ್ಣು ನನಗೆ ಇಷ್ಟವಾಗುವುದಿಲ್ಲ. ನನಗಿಷ್ಟ ಮೃದು ವ್ಯಕ್ತಿತ್ವವೇ. ಸುಮಾರಾಗಿ ನಾನು ಕೂಡ ಮೃದು ವ್ಯಕ್ತಿಯೇ ಆಗಿರುವುದರಿಂದಾಗಿರಬಹುದು. ನನಗೆ ಇಷ್ಟವಾಗುವ ಹೆಣ್ಣು ಅಂದರೆ, ಗಂಡನನ್ನು ಅನುಸರಿಸಿಕೊಂಡು ಇರಬಲ್ಲವಳು ಎಂದು ಅರ್ಥ” + +“ನನ್ನ ಒಡತಿ ನಿಮಗೆ ಎಷ್ಟೊಂದು ಅನುರೂಪಳಾದ ಜೊತೆಗಾತಿಯಾಗಿರಬಹುದಾಗಿತ್ತು ಎಂದು ನೆನಪಿಸಿಕೊಂಡಾಗ ನನಗೆ ಬಹಳ ಬಹಳ ದುಃಖವಾಗುತ್ತದೆ ನನ್ನ ಒಡೆಯ” + +ಅಕಾಶದಲ್ಲಿ ಮೋಡ ದಟ್ಟವಾಯಿತು. ತಂಗಾಳಿ ಇನ್ನಷ್ಟು ತಂಪಾಯಿತು. ಗಂಜಿ ವಿಷಾದದಿಂದ ಗುನುಗುನಿಸಿದ,ಮೇಘ ನನಗೆಂದೂ ಕಾಣಿಸುವುದವಳಚಿತೆಯಿಂದೇಳುವ ಹೊಗೆಯಂತೆವಿಶ್ರಮಿಸುವುದು ನನ್ನ ದೃಷ್ಟಿ ಸಂಜೆಯ ಬಾನಿನಲ್ಲಿ (ಪುಟ ೭೬) + +ಕಾದಂಬರಿಯ ತುಂಬಾ ಹೆಚ್ಚು ಕಡಿಮೆ ಪ್ರತಿ ಪುಟದಲ್ಲಿಯೂಕಾಣಿಸುವ ಪುಟ್ಟ ಕವಿತೆಗಳು ಬಹಳ ಮೋಹಕವಾಗಿವೆ.*ಯಾಕಿನಿತು ಕಾಲ ನಿನ್ನೊಡನೆ ನಾನೇಕೆ ನಿನ್ನ ಬಗ್ಗೆ ಏನೂ ಕೇಳಲಿಲ್ಲಎಂದು ನೀನು ಕೇಳದಾದೆ?ಬಹುಶಃ ನನ್ನ ಮನದ ಆತಂಕಗಳನ್ನು ನೀನು ಅರ್ಥಮಾಡಿಕೊಂಡಿರಬಹುದು (ಪುಟ ೭೭) + +*ಕಳೆದ ಸಂಬಂಧಗಳ ಕುರಿತು ಗಾಳಿಯಾಡುವ ಪಿಸುಮಾತುಬಡ ಹುಲ್ಲಿನ ಎಲೆಗಳನ್ನು ವಿಷಾದದಿಂದ ಸುತ್ತುವುದುಮಂಜುಗಡ್ಡೆಯಲಿ ಬಂದಿಯಾಗಿರಿಸಿ (ಪುಟ ೭೭) + +ಉಜಿರೆಯಲ್ಲಿ ನೆಲೆಸಿರುವ ಕನ್ನಡದ ಖ್ಯಾತ ಕಾದಂಬರಿಗಾರ. ಇಂಗ್ಲಿಷ್ ಭಾಷಾ ಬೋಧನೆಯ ವಿಶೇಷಜ್ಞ \ No newline at end of file diff --git a/Kenda Sampige/article_574.txt b/Kenda Sampige/article_574.txt new file mode 100644 index 0000000000000000000000000000000000000000..9564036ca0e0a58a510ebbb73139755ce03530d6 --- /dev/null +++ b/Kenda Sampige/article_574.txt @@ -0,0 +1,11 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ಈ ಮಿಂದ ಕೂದಲುಗಳು + +ಹಂಬಲದ ಹೊತ್ತು ಕಾಣುವ ಸುಖನೀನಿರಬಹುದುಈ ಮಿಂದ ಕೂದಲುಗಳುಎಷ್ಟು ಹಾಯಾಗಿ ಹಾರಾಡುತ್ತಿದೆಅಲ್ಲೇ ಇರುವೆ ನೀನುಒದ್ದೆ ಮಣ್ಣಿನ ಮುದ್ದೆಯಲ್ಲಲ್ಲಒಂದು ರಾಶಿ ಬಿಳಿ ಮರಳಿನಏಕಾಂತದಲ್ಲಿ + +ಈಗ ನೋಡು ನನ್ನೊಳಗೆ ಹೊರಗೆನೀನಿಲ್ಲ; ಒಡನೆ ಬೀಸುವ ಗಾಳಿಗೂ ಹದವಿಲ್ಲಕೈಹಿಡಿದು ನಿನ್ನೊಡನೆ ನಡೆವನಮ್ಮ ನೆರಳಿನಷ್ಟುಇಲ್ಲಿರುವ ಬಣ್ಣಗಳು ಚಂದವಿಲ್ಲಹಾಡಿಗೆ ಮೂಡುವ ಜೀವವೇವಿಸ್ಮಯಕ್ಕೆ ಕುದಿಯುವ ಮೌನವೇಅತೀ ದೂರದವರೆಗಿನ ಸಂಕಟವೇಸೊಬಗೆಂದರೆ ನೀನೇ ಇರಬೇಕು + +ನಾನಿರುವ ತೀರವೇಹೇಗೆ ಪ್ರೀತಿಸಲಿ ನಿನ್ನನನ್ನ ನೀನುಗಳೆಲ್ಲಾ ನೀನಾಗುಕತ್ತು ಕೊಂಕಿಸಿ ಕಾಲು ಚಾಚಿ ಕೈ ನೀಡಿಒಂದಿಷ್ಟೂ ಕಾರಣವಿರದೆ ನಕ್ಕುನನ್ನನ್ನು ಸುಮ್ಮನೆ ಹಾಗೆ ಒಡ್ಡಿಕೊಳ್ಳಲು ಬಿಡು + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_575.txt b/Kenda Sampige/article_575.txt new file mode 100644 index 0000000000000000000000000000000000000000..38da834c73519e3df4fd9c485cf6af5404009c53 --- /dev/null +++ b/Kenda Sampige/article_575.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ಓ ನನ್ನ ಜೀವವೇಬರೆಯುವುದೇನೆಂದುತಿಳಿದಿಲ್ಲ ನನಗೆಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಅದೇನೋ ತಿಳಿಯುತ್ತಿಲ್ಲಹಾಯಾಗಿ ಮಲಗಿದ್ದೇನೆನೀನು ಬಿಟ್ಟು ಹೊರಟಕಂಪನದ ಮಂಪರಿನಲ್ಲಿನಿನ್ನ ದೇಹದ ಕೂದಲಿನಕಚಗುಳಿಗೆ ನನ್ನ ಮೈಯ್ಯೆಲ್ಲಾನುಂಗಿಕೊಳ್ಳುತ್ತಿದೆ + +ನಿನ್ನ ಮೈಯ್ಯ ಹೊಳಪಿಗೆನಿನ್ನ ಮೈಯ್ಯ ಸದ್ದಿಗೆಬೆವರಿ ಸವೆದು, ಒಣಗಿಕಣ್ಣಿನಿಂದ ಕಾಲಿನವರೆಗೆಒದ್ದೆಯಾಗಿದ್ದೇನೆ + +ಈ ಕ್ಷಣದ ಅಕ್ಷರಗಳು,ಈ ಪದಗಳು. ಹಾಡುಏನೂ ಹೇಳಲಾರವು ಸುಮ್ಮನೆನಾನೀಗ ಸತ್ತಂತೆ, ಮತ್ತೆ ಹುಟ್ಟಿದಂತೆಕಂಗಾಲಾಗಿದ್ದೇನೆನನ್ನನ್ನು ನಾನೇ ನೋಡಲಾಗದಷ್ಟುಕರುಣೆ ನನಗೆಒಂದು ಸಲ ಹೊಕ್ಕಿ ಬಿಡುತ್ತೇನೆಹೇಗಾದರೂಮತ್ತೆ ಇತ್ತ ಈ ಕನಸಿಗೆಬರಲಾರೆ + +ಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಮೈದೊಗಲು ಮುಚ್ಚುವುದೂ ಬೇಡನಿನ್ನ ರಕ್ತ ಮಾಂಸ, ಹೆಂಗರುಳುಆ ಮುಖದ ಇಷ್ಟು ಹತ್ತಿರಒತ್ತಿ ಬಿಡುವ ಉಸಿರು, ಹಸಿವುವಾಕರಿಕೆ, ಆಕಳಿಕೆನಾನಿನ್ನೂ ನೋಡದ ಕಾಲಬೆರಳಿನ ನೆಟಿಕೆಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_576.txt b/Kenda Sampige/article_576.txt new file mode 100644 index 0000000000000000000000000000000000000000..ff01266b56947e7af9a09d69e672bfdef57987f8 --- /dev/null +++ b/Kenda Sampige/article_576.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನೀನು ಒಳಗೆ ಸೀಳಿಕೊಂಡುನನ್ನ ಗಂಟಲಿನವರೆಗೂಬಂದಿರಬೇಕುನನ್ನ ಹಣೆಯ ಮೇಲೆನಿನಗೆ ಕಾಣಿಸುವ ನನ್ನಒಂದೇ ಕಣ್ಣು, ಮತ್ತುನೀನು ಯಾರಿರಬಹುದೆಂದುನನಗೆ ಹೊಸದಾಗಿ ಅನಿಸುವುದುಅದೇ ಹೊತ್ತಲ್ಲಿ + +ಈಗ ನಿನ್ನ ಮೆದು ಮೈಯ್ಯ ಏಕಾಂತನಿನ್ನ ಅಂದರೆ ನನ್ನ…ಏನೋ ಒಂದುಮುಗಿಸಿದ ಹಾಗಿದೆ, ಮುಗಿಸಿಯೂಇಲ್ಲೇ ಇರುವೆ ನೀನುನನ್ನೆದೆಯಲ್ಲಿ, ತೊಟ್ಟಿಕ್ಕುತ್ತಿರುವ ನೋವಿನಲ್ಲಿಹಾಗೂ ನನ್ನ ಕೇಳದೆಯೇದೂಡಿ ಬರುವ ನಿಟ್ಟುಸಿರಿನಲ್ಲಿ + +ಏನಾದರೂ ಮಾತಾಡು..ಕಾಲ ಉಗುರಿಂದ ನೆತ್ತಿಯತನಕ ನಾನು ನಿನ್ನ ಹಾಗೆಯೇನೀನು ಏನೋ ಒಳಗಿಟ್ಟುಕೊಂಡು ಚೂಪಾಗಿನಗುವುದು ನನ್ನ ಹಾಗೆಯೇ + +ಮಾತಾಡು ಏನಾದರೂಬಂದಿಲ್ಲಿ ಮಡಿಲಲ್ಲಿ ಮಲಗುನಿನ್ನ ಕೂದಲು ಸವರಿಕೊಂಡುಬೇಕೆಂದಾಗ ಚುಂಬಿಸಿಕೊಂಡುನೀನು ಏನೇನೋ ನೆನೆಸಿಕೊಂಡುಹೇಳುವುದನ್ನು ಅಷ್ಟೊಂದುಸುಖವಿಲ್ಲದೆಯೇ ಕೇಳುವೆ + +ಅಷ್ಟು ಹೊತ್ತಿನಿಂದ ಹೀಗೆಯೇ ಇರುವೆವುಇನ್ನು ತಬ್ಬಿಕೊಳ್ಳದೆ ಇರುವುದಾದರೂ ಹೇಗೆಮಾತಾಡು ನೀನು,ಆಗಾಗ ನಿನ್ನ ಮುಖ ನೋಡಿಕೊಂಡುನಿನ್ನ ಎದೆಯಲ್ಲಿ ಮೂಗು ಉಜ್ಜಿಕೊಂಡುಸುಖವಾಗಿಯೇ ಕೇಳುವೆ + +ನಾವು ಮತ್ತೆ ಮಾತಾಡುವುದೇ ಹಾಗೆಉದ್ದದ ಮೆರವಣಿಗೆಯ ಹಾಗೆಎಲ್ಲಾ ಮರೆತು ಮಾತಾಡುವುದುಏನೋ ಸಿಗುವುದು ಇನ್ನೇನೋಕಳೆದುಹೋಗುವುದುನಡುವೆ ನಿನ್ನ ಕಚಕುಳಿಗಳಿಗೆಮರಳಿನ ರಾಶಿಯ ಮೇಲೆನಿನ್ನನ್ನು ದರದರ ಎಳೆದುಕೊಂಡುನಿನ್ನ ಹೊಟ್ಟೆಯ ಮೇಲೆ ಕೂತು ಮರಳು ಸುರಿದುಹೊರಳಾಡಿಸುವೆಇಷ್ಟಾದ ಮೇಲೆ ಉಳಿಯುವುದಾದರೂ ಏನುಕಳೆಯುವ ಒಂದು ರಾತ್ರಿಯಷ್ಟೇ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_577.txt b/Kenda Sampige/article_577.txt new file mode 100644 index 0000000000000000000000000000000000000000..c9495a3b7173c7c0675451fdca4f91989da38016 --- /dev/null +++ b/Kenda Sampige/article_577.txt @@ -0,0 +1,13 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ ನಾಗರಾಜ ವಸ್ತಾರೆ ಬರೆದ ಕವಿತೆ ಇದೆ. + +ಅನಂಗಸೂತ್ರ + +ನೆಲ ಮೆಟ್ಟಿಯೂ ಆಕಾಶದಲ್ಲಿಚಾಚಿ ಆಡೇ ಆಡುವಈ ಮೈ ಮೈಥುನಕ್ಕೂ ನನ್ನದಲ್ಲ.ಆಕಳಿಸಿದ್ದನ್ನು ಆಗಾಗ್ಗೆ ತೂಕಡಿಸುವುದನ್ನುಎದ್ದಿರುವಾಗಲೆಲ್ಲ ಅದೂ ಇದೂ ಮಾಡುತ್ತಿರುವುದನ್ನುನೋಡಿ- ಇದೇ ನಾನೆಂದುಕೊಂಡುಬಿಟ್ಟೀರಿ!ಅರವತ್ತೊಂಬತ್ತು ಅಂಗುಲದ ಎತ್ತರಸರಾಸರಿ ಮೂವ್ವತ್ತಾರು ಸುತ್ತಳತೆಯನ್ನುಬೆಳೆದು ತೊಳೆದು ತೀಡಿ ಆರೈಸಿಮುಚ್ಚಿ ಬೆಚ್ಚಗೆ ಹೊಚ್ಚಿ ಸಾವರಿಸುವ ರೇಜಿಗೆಅಸಾಧ್ಯ ಅಸಹನೆ ಹುಟ್ಟಿಸುತ್ತದೆ.ಮುಚ್ಚಿದೆವೆಗಳ ಸಮಾ ಬಂಡೇಳುವ ಬಣ್ಣಗಳುತುಪಾಕಿ ಸಿಡಿಸಿ ವೃಥಾ ಕಾಡುವಾಗಹಗಲಿನ ಗುಟ್ಟೆಲ್ಲ ಕತ್ತಲಿಗೆ ಚೆಲ್ಲಿ ಬರಿದಾಗಿಮೈ- ತುಂಬ ಹೇಡಿ ಅನಿಸುತ್ತದೆ.ಒಮ್ಮೆ ಎಲ್ಲೆಲ್ಲೂ ಪುಳಕಿಸಿ ಚಿಗಿತದ್ದುಗುಂಡಗೆ ನೆತ್ತಿಯನ್ನೇ ನುಣ್ಣಗೆ ಕೆತ್ತಿ ಸದ್ಯ-ಕಿವಿಯಲ್ಲಿ ಗರಿಗೆದರಿ ಹೇಸಿಗೆ ತರುತ್ತದೆ. + +ಇಲ್ಲಿ- ಊರಿಕೊಂಡಿರುವ ಊರಿನಲ್ಲಿಈ ಬಗ್ಗೆ, ಆರೈಸುವ ಬಗ್ಗೆಸುಕ್ಕು ಮುಕ್ಕು ಸೊಕ್ಕು ತೀರಿಕೊಳ್ಳುವ ಬಗ್ಗೆಬರೆಯುತ್ತಾರೆ ದುಬಾರಿ ಶಿಬಿರ ನಡೆಸುತ್ತಾರೆಪುರವಣಿಗಳ ನಡುವೆ ಮಡಿಕೆ ತೂರುತ್ತಾರೆ + +ಇವರನ್ನು ಕರೆದು ಕೇಳಿದ್ದೇನೆ- ಇದೆಯೋ ನಿಮ್ಮಲ್ಲಿಈ ಮೈಯ ಗೊಡವೆ ತೀರಿಸುವ ಸರಳ ಸೂತ್ರ?ನಾನು ನಾನಾಗಲಿಕ್ಕೊಂದು ಪರಿಹಾರಮೈಯಲ್ಲದ ನನಗೆ ಅಶರೀರದ ಹಾದಿಒಂದು ಅನಂತ್ಯಸಂಸ್ಕಾರ!! + +(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು) + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_578.txt b/Kenda Sampige/article_578.txt new file mode 100644 index 0000000000000000000000000000000000000000..2d63e3255f37811ace74a3ffc756007c9b230491 --- /dev/null +++ b/Kenda Sampige/article_578.txt @@ -0,0 +1,17 @@ +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕeditor@kendasampige.com360degree.comಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. + +…..ಒಬ್ಬಳು + +ಅವನಿಲ್ಲೇ ಇದ್ದಾನೆಎದುರಿಗೇಕೋವಿಯ ಕುದುರೆಯಲ್ಲಿಸಾವಿನ ಬೆರಳು ಮೀಟುತ್ತ + +ಸೆಟೆದು ನಿಂತವರೆಲ್ಲಬಿದ್ದು ಮಲಗಿದರು ಚೆಲ್ಲಾಪಿಲ್ಲಿಕಣ್ಣೆದುರೆ + +ಹೆಗಲಿಗಿನ್ನೂ ವಯಸು ಜಗ್ಗಿದಂತಿಲ್ಲಮೊದಲ ಸಲ ಗಡ್ಡ ಮಾಡಿಕೊಂಡಾದಗಾಯ ಸಹಿತ ಮಾಸಿಲ್ಲತಿದ್ದಿದ ಕದಪು, ಗದ್ದ ಚೂಪುಕಸುವು ಖಂಡದ ಮೀನ-ಚಂದವೆನ್ನಲು ಯಾವ ಅಡ್ಡಿಯಿಲ್ಲ + +ಸಾವಿಗೂ ಹೀಗೆಸುಂದರಾಂಗ ಹರೆಯವಿದೆಯೆಂದುಗೊತ್ತಿದ್ದರೆ ಮುತುವರ್ಜಿಯಿಂದಅಣಿಗೊಂಡೇ ಬರಬಹುದಿತ್ತು + +ಅಂತ ಕೊನೆಗೂ ಪೇಚಾಡಿಕೊಂಡೇಮೈ ಚೆಲ್ಲಿದಳು + +(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು) + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_579.txt b/Kenda Sampige/article_579.txt new file mode 100644 index 0000000000000000000000000000000000000000..b77f1c8aec07977925edea7ef3bd0134887f05a6 --- /dev/null +++ b/Kenda Sampige/article_579.txt @@ -0,0 +1,3 @@ +byನಕ್ಷತ್ರ|Nov 14, 2017|ದಿನದ ಅಗ್ರ ಬರಹ,ದಿನದ ಕವಿತೆ,ಸಾಹಿತ್ಯ| 0 Comments + +ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡುನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾನಾನು ನಿಂತುಬಿಡುವೆ \ No newline at end of file diff --git a/Kenda Sampige/article_58.txt b/Kenda Sampige/article_58.txt new file mode 100644 index 0000000000000000000000000000000000000000..a56e17de758a22c8392315d48cc7ff176fa58cc7 --- /dev/null +++ b/Kenda Sampige/article_58.txt @@ -0,0 +1,17 @@ +ಆ ನಾಟಕ ಪ್ರದರ್ಶನಕ್ಕೆ ಎಲ್ಲರಿಂದ ದುಡ್ಡು ಸಂಗ್ರಹಿಸಿ ಅವರಿಗೆ ಟಿಕೆಟ್‌ ಕೊಡುವ ಐಡಿಯಾ ಕೊಟ್ಟಿದ್ದು ನಾಟಕಕಾರ, ನಿರ್ದೇಶಕ ಪ್ರಸನ್ನ. ಬಹಳ ಬುದ್ಧಿವಂತ. ಬಿ.ಎಸ್ಸಿ.ಯಲ್ಲಿದ್ದಾಗ ನಮ್ಮ ಜೊತೆಯೇ ಇದ್ದ. ಆಮೇಲೆ ಕೆಮಿಸಿ ವಿಷಯದಲ್ಲಿ ಎಂಎಸ್ಸಿ ಕಲಿಯುವುದಕ್ಕೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್ ಕಾನ್‌ಪುರ್‌ಗೆ ಹೋದ. ಎಷ್ಟು ದೂರ ಹೋದರೂ ನಾಟಕದ ಸಹವಾಸ ಬಿಡುವುದಕ್ಕೆ ಅವನಿಂದ ಆಗಲಿಲ್ಲ. ಆಗಾಗ ಇಲ್ಲಿಗೆ ಬರುತ್ತದ್ದಿ. ನಾವು ನಾಟಕ ಪ್ರದರ್ಶನ ನೀಡುವುದನ್ನು ನೋಡಿ ಹೊಟ್ಟೆ ಉರಿದುಕೊಳ್ಳುತ್ತದ್ದಿ. + +ನಾನು ಆಗ ದೊಡ್ಡಬಳ್ಳಾಪುರದಲ್ಲಿ ಕೃಷಿ ಮಾಡುತ್ತಿದ್ದೆ. ಯಾವುದೋ ಒಂದು ಶನಿವಾರ ನನ್ನನ್ನು ಹುಡುಕಿಕೊಂಡು ಊರಿಗೆ ಬಂದ. ನಮ್ಮ ಜೊತೆ ಕುಳಿತು ಊಟ ಮಾಡಿದ. ಆಮೇಲೆ ಮಾತನಾಡುವಾಗ ಒಂದು ಆಘಾತಕರ ಸುದ್ದಿಯನ್ನು ಹೇಳಿದ. + +`ನಾನೊಂದು ಬಹಳ ಮುಖ್ಯವಾದ ನಿರ್ಧಾರ ತೆಗೆದುಕೊಂಡಿದ್ದೇನೆ. ಐಐಟಿ ಬಿಟ್ಟುಬಿಡೋಣ ಎಂದುಕೊಂಡಿದ್ದೇನೆ. ನಾನು ಮುಂದುವರಿಸುವುದಿಲ್ಲ ಎಂದು ಪತ್ರ ಕೂಡ ಬರೆದುಕೊಟ್ಟು ಬಂದಿದ್ದೇನೆ’ ಎಂದು ಹೇಳಿದ. ನನಗೆ ಆಶ್ಚರ್ಯವಾಯಿತು. ಅವನ ಕುಟುಂಬ ಎಲ್ಲಾ ನನಗೆ ತಿಳಿದಿತ್ತು. ತಂದೆ, ತಾಯಿ ಎಲ್ಲರೂ ಅವನು ಕಾನ್‌ಪುರದಲ್ಲಿ ಕೆಮಿಸಿ ಎಂ.ಎಸ್ಸಿ. ಮಾಡಬೇಕು ಎಂಬ ಆಸೆಯಲ್ಲಿ ಇದ್ದರು. ಇದನ್ನೆಲ್ಲಾ ಯೋಚಿಸಿ ನಾನು `ಯಾಕಯ್ಯಾ, ಮುಂದೇನು ಮಾಡುತ್ತೀಯಾ’ ಎಂದು ಕೇಳಿದೆ. + +`ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ ಸೇರಬೇಕು. ನೀವು ಶ್ರೀರಂಗರಿಗೆ ಹೇಳಬೇಕು’ ಎಂದ. ಶ್ರೀರಂಗರು ಆಗ ಎನ್‌ಎಸ್‌ಡಿಯ ಮ್ಯಾನೇಜಿಂಗ್‌ ಕಮಿಟಿಯಲ್ಲಿ ಇದ್ದರು. ನನ್ನ ಬಗ್ಗೆ ಅವರಿಗೆ ತುಂಬಾ ಅಭಿಮಾನ. ನಾನು ಒಂದು ಮಾತು ಹೇಳಿದರೆ ಅದನ್ನು ತೆಗೆದುಹಾಕಲಾರರು ಅನ್ನುವುದು ಪ್ರಸನ್ನನ ಆಲೋಚನೆ. ಸರಿ ಎಂದು ಮರುದಿನ ಬೆಳಿಗ್ಗೆ ಪ್ರಸನ್ನನನ್ನು ಕರೆದುಕೊಂಡು ಶ್ರೀರಂಗರ ಮನೆಗೆ ಹೋದೆ. ಅವರ ಮನೆ ಮಲ್ಲೇಶ್ವರದಲ್ಲಿತ್ತು. + +ನಮ್ಮನ್ನು ನೋಡಿದವರೇ, `ಬರ್ರೀ ಬರ್ರೀ’ ಎಂದರು. ಪತ್ನಿಯನ್ನು ಕರೆದು ಮೂವರಿಗೂ ಅರ್ಧರ್ಧ ಚಾ ಕೊಡು ಎಂದರು. `ಯಾರಿವರು, ಏನು ಬಂದಿದ್ದು’ ಎಂದು ಕೇಳಿದರು. ನಾನು ಅವರ ಬಳಿ, `ನೋಡಿ ಸರ್‌, ನೀವೇ ಅವನಿಗೆ ಬುದ್ಧಿ ಹೇಳಬೇಕು. ಕಾನ್‌ಪುರದಲ್ಲಿ ಎಂ.ಎಸ್ಸಿ. ಕೆಮಿಸಿ ಓದುವುದು ಬಿಟ್ಟು ನಾಟಕ ಮಾಡಬೇಕು ಎಂದು ಬಂದಿದ್ದಾನೆ. ಎನ್‌ಎಸ್‌ಡಿ ಸೇರಬೇಕು ಎಂದು ಆಸೆ ಪಡುತ್ತಿದ್ದಾನೆ’ ಎಂದೆ. + +ಶ್ರೀರಂಗರು ಅವನನ್ನೊಮ್ಮೆ ನೋಡಿ, `ಬುದ್ಧಿ ಯಾಕ್ರೀ ಹೇಳೋದು. ಅವನು ಕರೆಕ್ಟಾಗಿ ಮಾಡ್ಯಾನ. ಆ ಕೆಮಿಸಿಗಿಂತ ನಾಟಕ ಛಲೋ ಅಲ್ಲೇನು’ ಎಂದರು. ಮತ್ತೆ `ನಾನು ಒಂದು ಕಾಗದ ಬರ್ಕೊಡ್ತೀನಿ, ಅದನ್ನು ಎನ್‌ಎಸ್‌ಡಿಯಲ್ಲಿ ಕೊಟ್ಟುಬಿಡಿ’ ಎಂದು ಬರೆದುಕೊಟ್ಟರು. ಆಗ ಎನ್‌ಎಸ್‌ಡಿಯಲ್ಲಿ ಅಲ್ಕಾಜೀ ಎನ್ನುವವರು ಮುಖ್ಯಸ್ಥರಾಗದ್ದಿರು. ಶ್ರೀರಂಗರ ಕಾಗದದಿಂದಾಗಿ ಪ್ರಸನ್ನನಿಗೆ ಎನ್‌ಎಸ್‌ಡಿಯಲ್ಲಿ ಪ್ರವೇಶ ಸಿಕ್ಕಿತು.ಎನ್‌ಎಸ್‌ಡಿ ಎಂದರೆ ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮ. ದೆಹಲಿಯಲ್ಲಿರುವ ಅತಿ ಪ್ರತಿಷ್ಠಿತ ನಾಟಕ ಕಲಿಸುವ ಶಾಲೆ. ಅದಕ್ಕೆ ಸೀಟುಗಳು ಬಹಳ ಕಡಿಮೆ ಇರುತ್ತದ್ದಿವು. ಇಡಿಯ ಭಾರತಕ್ಕೆ 8-10 ಸೀಟುಗಳು ಮಾತ್ರ ಇರುತ್ತದ್ದಿವು. ನಮ್ಮ ಈಗಿನ ಕಾಲದ ಅನೇಕ ಹೊಸ ಬಗೆಯ ಚಿತ್ರಗಳನ್ನು ಮಾಡುವ ನಿರ್ದೇಶಕರು ಮತ್ತು ನಟರು ಅಲ್ಲಿಂದಲೇ ಬಂದವರು. ಈಗ ಎನ್‌ಎಸ್‌ಡಿಯ ಬ್ರಾಂಚ್‌ಗಳು ದೇಶದ ನಾನಾ ಕಡೆ ಇವೆ. ಬೆಂಗಳೂರಿನಲ್ಲೂ ಒಂದಿದೆ. + + + +ಮುಂದೆ ವಾರ್ಷಿಕ ರಜೆ ಇದ್ದಾಗ, ಪ್ರಸನ್ನ ಒಮ್ಮೆ ಬೆಂಗಳೂರಿಗೆ ಬಂದು ಜಡಭರತರ `ಕದಡಿದ ನೀರು’ ನಾಟಕ ಮಾಡಿಸಿದ. ಅದೊಂದು ಅದ್ಭುತ ಪ್ರದರ್ಶನವಾಯಿತು. ಹರಿಕೃಷ್ಣ, ವಿ. ರಾಮಮೂರ್ತಿ, ಸೋಮಶೇಖರ್‌ ರಾವ್‌ ಇವರೆಲ್ಲ ಮುಖ್ಯ ಪಾತ್ರಗಳಲ್ಲದ್ದಿರು. ಅದು ಹೃದಯವನ್ನು ಕರಗಿಸುವಂತಹ ನಾಟಕ. ನಾನು ಅದನ್ನು ಮೂರು ಬಾರಿ ನಾಡಿದ್ದೆ. ಆ ದೃಶ್ಯಗಳು ಈಗಲೂ ನನ್ನ ಮನಸ್ಸಿನಲ್ಲಿ ನಿಂತಿವೆ. ಪ್ರಸನ್ನ ವಯಸ್ಸಿನಲ್ಲಿ ನನಗಿಂತ ಚಿಕ್ಕವನಾಗದ್ದಿರೂ ಅವನ ಪ್ರತಿಭೆಯನ್ನು ನಾನು ತುಂಬಾ ಗೌರವದಿಂದ, ವಿಶ್ವಾಸದಿಂದ ನೋಡಿ ಒಮ್ಮೆ ಅವನಿಗೆ ನಮಸ್ಕರಿಸಿದ್ದೆ.ನಂತರದ ದಿನಗಳಲ್ಲಿ ಪ್ರಸನ್ನ ಭಾರತದ ರಂಗಭೂಮಿಯ ಹೀರೋ ರೀತಿ ಆದ. ಅವನು ಮುಟ್ಟಿದ ನಾಟಕದ ಪ್ರದರ್ಶನಗಳೆಲ್ಲವೂ ಚಿನ್ನ. ಎಂದಿಗೂ ಸೋಲಾಗುತ್ತಿರಲಿಲ್ಲ. `ಗೆಲಿಲಿಯೋ’, `ಹುತ್ತವ ಬಡಿದರೆ’, ಗಾರ್ಕಿಯ `ತಾಯಿ’ ಮುಂತಾದ ಪ್ರದರ್ಶನಗಳು ಎಂದೆಂದಿಗೂ ನೆನಪಿಟ್ಟುಕೊಳ್ಳುವಂತಹದು. ಅವನು ಮತ್ತು ಸಿ.ಜಿ.ಕೆ. ಕಟ್ಟಿದ ಸಮುದಾಯ ತಂಡ ಮತ್ತು ಸಮುದಾಯ ಜಾಥಾ ಒಂದು ರೀತಿಯ ವಿಶೇಷ ಸಂಚಲನವನ್ನು ಕರ್ನಾಟಕದಲ್ಲಿ ಸೃಷ್ಟಿಸಿದವು. ನಂತರ `ದೇಸೀ’ ಎಂಬ ಸಂಸ್ಥೆಯನ್ನು ಹೆಗ್ಗೋಡಿನಲ್ಲಿ ಕಟ್ಟಿಕೊಂಡ. ಅಲ್ಲಿ ವಾಸ ಮಾಡ ತೊಡಗಿದ. ಹೆಗ್ಗೋಡಿನಲ್ಲಿಯೇ ಕೆ.ವಿ. ಸುಬ್ಬಣ್ಣನವರು ಕೂಡ ಇದ್ದದ್ದು. ಖ್ಯಾತ ವಿಮರ್ಶಕ ಡಿ.ಆರ್‌. ನಾಗರಾಜ್‌ ಆಗ ತಮಾಷೆಯಾಗಿ ಹೇಳುತ್ತಿದ್ದ:`ಹೆಗ್ಗೋಡಿಗೆ ಹೋದರೆ, ಪ್ರಾಣೇಶಾಚಾರ್ಯರನ್ನು ನೋಡಿದ ಮೇಲೆ ನಾರಣಪ್ಪನನ್ನೂ ನೋಡಬೇಕು’ ಎಂದು. ಪ್ರಾಣೇಶಾಚಾರ್ಯರು ಎಂದರೆ ಕೆ.ವಿ. ಸುಬ್ಬಣ್ಣ, ನಾರಣಪ್ಪ ಎಂದರೆ ಪ್ರಸನ್ನ. ಅವೆರಡೂ ಅನಂತಮೂರ್ತಿಯವರ `ಸಂಸ್ಕಾರ’ ಕಾದಂಬರಿಯ ಪಾತ್ರಗಳು. ಒಂದು ಉತ್ತರ ಧ್ರುವವಾದರೆ ಮತ್ತೊಂದು ದಕ್ಷಿಣ ಧ್ರುವ. ಕಡೆಗೆ ಎರಡು ಪಾತ್ರಗಳೂ ಒಂದೇ ರೀತಿ ವರ್ತಿಸುವುದು ಆ ಕಾದಂಬರಿಯ ಮುಖ್ಯ ಘಟ್ಟ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_580.txt b/Kenda Sampige/article_580.txt new file mode 100644 index 0000000000000000000000000000000000000000..a12711bfa32161e80b2114b9b1a4538d16890792 --- /dev/null +++ b/Kenda Sampige/article_580.txt @@ -0,0 +1,11 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನೀನು ಎಂದರೆ ಏನು ನನಗೆ? + +ಯಾರೂ ಏಳಬಾರದ ಸಮಯಓಣಿಗಳಲ್ಲಿ ಯಾರೂ ಬರದಂತೆಗಿಡದ ನೆರಳು ಅಡಗಿಸಿದೆತಿರುವುಗಳು ದಾರಿ ಮಾಡುತ್ತಿದೆಮೇಲೆ ತುದಿಯ ಬಾಗಿಲಿಲ್ಲದ ಕೋಣೆಗೆಈಗಷ್ಟೇ ತಿಳಿಗಾಳಿ ಪರಿಮಳದಸುಳಿವು ಹತ್ತಿದೆ + +ನಾವು ಕೂಡುವುದನ್ನು ಹೇಗೆಎಲ್ಲಿಂದ ಎಂದರೆ ಏನನ್ನುವುದು?ಒಂದಷ್ಟು ಆಕಾಶವಾದರೆ ಸಾಕುನಾನು ಹೂವಾಗುವೆಹರಿದು ಹೋಗುವ ಹಾಲುನಮ್ಮ ನೆರಳಿನ ಓಣಿಯಲ್ಲಿಹೊರಳಿ ಹೊರಳಿ ಬಾ ನನ್ನಪಕಳೆಯೊಳಗೆ ಮತ್ತೆ ಮೊಗ್ಗಾಗುವೆತಿಂದು ತೇಗಿ ಕುಡಿದುಭಾರದ ಒಂಟಿತನಹೇಗೆ ಬಂದಿತ್ತು ನಿನಗೆ? + +ಇಲ್ಲಿ ಹೀಗೆ ಗಲಿಬಿಲಿಯಾಗಿಎಲ್ಲಾ ಎಸೆದು ದಬ್ಬಿ ಹೊರ ಹಾಕಿರುವೆನೀನು ಎಂದರೆ ಏನು ನನಗೆ?ಒಂದು ಚಂದದ ಮಳೆ, ದೂರದ ಮೋಡದೀರ್ಘ ಅಲೆದಾಟ, ಅರ್ಧ ಮರೆತ ಕನಸು?ಅಥವಾ ನಿನ್ನ ಪಕ್ಕದಲ್ಲಿ ಕವಿತೆಯಾಗಿಕುಳಿತಿರುವುದೇ? + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_581.txt b/Kenda Sampige/article_581.txt new file mode 100644 index 0000000000000000000000000000000000000000..dd8f32d4b2c15d0d7f85eef9ac199e3e60d83b79 --- /dev/null +++ b/Kenda Sampige/article_581.txt @@ -0,0 +1,29 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. + +ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನನಾಗರಾಜ ವಸ್ತಾರೆಬರೆದ ದಿನದ ಕವಿತೆ ಇದೆ. + +ಸಾರ್ವಕಾಲಿಕ + +ಸೂರ್ಯ ನಕ್ಷತ್ರ ಕಪ್ಪುರಂಧ್ರಗಳಬಿಗ್‍ಬ್ಯಾಂಗ್ ಗೊತ್ತಿದ್ದರೆಸಾರ್ವಕಾಲಿಕ ಎಂಬುದು ಎಷ್ಟರ ಮಟ್ಟಿಗಿನ ಸತ್ಯ?ಅದರ ತುಣುಕು ನಿಯತಿಯೊಳಗಿನ ಮಿತಿನಾವು, ನಮ್ಮ ತಿಳಿವು, ಸ್ಥಿತಿಗತಿ ಎಲ್ಲ + +ಕಾಗದ ಕೆತ್ತುವ ಊಹೆಯ ಮೊನೆಗೆಮುಟ್ಟಿದರೆ ಚುಕ್ಕಿ ಕಟ್ಟಿದರೆ ಅಸೀಮ ಸಿದ್ಧಿಅಣುವಲ್ಲಿ ನೆಟ್ಟು ಅನೂಹ್ಯ ನಿಲುಕುಗಳಲ್ಲಿಬೆರಳು ಹೊರಳಿಸುವ ವಾಂಛೆ + +ಗುಟುಕು ಬಿಯರು ಗೀತೆ ಗುಟುರುಬ್ರಹ್ಮದ ಹೊಸ ವ್ಯಾಖ್ಯಾನ.Ever expanding universe ಅಂತೆಆದಿಯಿಲ್ಲ ಅಂತ್ಯವಿಲ್ಲವಂತೆ-ಅಂತಾದರೆ ಸೃಷ್ಟಿಕರ್ತ ದೇವರು ಮಾಡಿದ್ದಾದರೂಏನು ಬರೇ ಮಣ್ಣಂಗಟ್ಟಿ! -ಅಂತಹಿಂದಿನ ಸಾಲಲ್ಲೊಂದು ಗಟ್ಟಿ ಸ್ವಗತ. + +ಓರಗೆಯವನೊಬ್ಬ ಎದೆಯೊಡೆದು ಸತ್ತರೆವಧುವಾಗಿ ಬಂದವಳು ಕದ್ದು ಕೈಕೊಟ್ಟರೆಒಲುಮೆ ಮತ್ತೊಮ್ಮೆ ನಲುಗಿ ಹಲುಬಿದರೆಬುಡ ಅಲುಗಿದ ಮರದಂತೆಇರವು ಘಾಸಿಧೊಪ್ಪನೆ ಉರುಳಿದರೆವಿಧಿವತ್ತು ಸೊನ್ನೆ-ಬದುಕು. + +ವಿಚಿತ್ರ ನೋಡಿಅಸೀಮದ ಪರಿವೆಯಲ್ಲೂಲೋಕವೆಂದರೆ ಕೈಗೆಟುಕುವ ಸೀಮೆನಾ ಒಂದರ ಸುತ್ತಲನಾನಾರೀತಿ-ಪ್ರೀತಿ ಅನುರಕ್ತಿ ಕೆಲವು ಪ್ರಣಯಭಂಗವಿರಸ ವಿಷಾದಕ್ಕೋ ನಾನಾ ಭಂಗಿ + +ಲೋಕವೆಂದರೆ ಅಸೀಮದಲ್ಲಿಎಟುಕಿದ್ದು, ಎಟುಕಿಯೂ ತಪ್ಪಿದ್ದು + +ತಪ್ಪದ್ದುಯಾರೋ ಇಟ್ಟ ಹೆಸರ ವಾಂಛೆನಮ್ಮ ಕಾಲದಲ್ಲೇಎಷ್ಟನ್ನೋ ನಾವೇ ಮರೆತರೂall time great ಎಂಬ ಲಗತ್ತುಒಮ್ಮೆ ಇರುವಾಗಲೇಹತ್ತು ಜೀವಿತದ ಮೊತ್ತತೆಗೆದ ಕೆಲವಕ್ಕೆ ಮಾತ್ರ. + +ಅರವತ್ತರ ಪಡಿಯಲ್ಲೂಮತ್ತೆ ಉತ್ತುಂಗ ಸಾಧಿಸಿದಬಚ್ಚನ್‍ಗೆ ಪೈಪೋಟಿಅಂಗಿ ಕಳಚುವ ಬಾಲಿವುಡ್ ಗಂಡುಗಳದಿನದಿನದ ಹೆಸರು… + +ಇಲ್ಲಿಮಹಾತ್ಮಾಗಾಂಧಿರಸ್ತೆಅಶೋಕ ಚಾಲುಕ್ಯಹೋಟೆಲುಗಳುಅನಿಲ್ ಕುಂಬ್ಳೆಯೊಂದುವೃತ್ತ + +ಸಾಧ್ಯವಾದಲ್ಲಿ ಉಳಿದುಕೊಳ್ಳಲಿಹೆಸರು, ನನಗಿಂತಸೋತ ಎಲ್ಲ ಪ್ರೀತಿಗಳದ್ದು + +(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು) + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_582.txt b/Kenda Sampige/article_582.txt new file mode 100644 index 0000000000000000000000000000000000000000..ee77eee5d50110073fc306114b08297d46f8e05f --- /dev/null +++ b/Kenda Sampige/article_582.txt @@ -0,0 +1,9 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನನ್ನ ಮುದ್ದು ಮತಿಭ್ರಮಣೆಗೆನೀನೇ ಏನಾದರೂ ಕೊಡಬೇಕಷ್ಟೇಏನಿಲ್ಲದಿದ್ದರೂ ಯಾರೋಚುಂಬಿಸಿದ ತುಟಿಯನ್ನಾದರೂ! + +ಗೊತ್ತು ನನಗೆಎಲ್ಲಾ ಮುಗಿಸಿದ ಹೊತ್ತುಆ ದ್ವೀಪದಲ್ಲಿ ಬೇಕಂತಲೇಬೆನ್ನು ಮಾತ್ರ ಒದ್ದೆಯಾಗುವಂತೆಮಲಗಿ ಮೇಲೆ ನೋಡುವುದುಮತ್ತು ಈ ತಡರಾತ್ರಿಯಲ್ಲಿನಿನ್ನ ನೋಡಿ ತಡೆಯಲಾರದೆನಿನ್ನ ಕಣ್ಣಲ್ಲೇ ನನಗೆ ಮುಕ್ತಿದೊರೆಯುವುದು + +ಹೊಸ ಬೆಳಕಿಗೆ ನೀನುಕಾಲುದಾರಿ ಅಡ್ಡಹಾದಿಯಲ್ಲಿಹೇಳದೆ ನಡೆವಾಗ, ನಿನ್ನ ಬಗಲಲ್ಲಿಜೋಳಿಗೆಯಂತೆ ಸುಸ್ತಾಗಿಜೋಲಾಡಿಕೊಳ್ಳುತ್ತೇನೆತುಂಬಿಸಿಕೊಂಡಷ್ಟುಹೆಗಲು ಭಾರವಾದರೆನಾನು ಹಗುರಾಗುವುದುನೀನು ತಬ್ಬಿಬ್ಬುಗೊಳಿಸುವ ರೀತಿಗೆ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_583.txt b/Kenda Sampige/article_583.txt new file mode 100644 index 0000000000000000000000000000000000000000..294b87c5a3dd817953f6142192e319fcd7d3743b --- /dev/null +++ b/Kenda Sampige/article_583.txt @@ -0,0 +1,21 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ನಿಮಗೆ ಗೊತ್ತಿರಬಹುದು, ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಈ ದಿನದ ಕವಿತೆ ಬರೆದವರು ನಾಗರಾಜ ವಸ್ತಾರೆ. + +ಕ್ರಮಣ + +ಮಾಡಲೇನೂ ಇಲ್ಲದಿರುವಾಗ ಇಲ್ಲಾಏನೂ ಮಾಡದಿರುವಾಗ, ಸಾಮಾನ್ಯ,ಹಾವಾಗಬೇಕೆಂದೆನಿಸುತ್ತದೆ. ಕಾಳಿಂಗದ ಹಾಗೆ.ಕಪ್ಪಗೆ. ಮತ್ತು ಹಳದಿಯಾಗಿ ಕೆಳಗೆ, ಒಳಗೆ. + +ಅನಿಸಿದ್ದೇ ಹರಿಯುತ್ತೇನೆ ಆಚೀಚೆನುಲಿಯುತ್ತ- ಒಮ್ಮೆಯೂ ನೇರವಿರದೆಯೋಚನೆ ಹರಿದಲ್ಲೆಲ್ಲ ಹಾಗೇ.ಬಳುಕಿ ಸರಿಯುತ್ತೇನೆ. ಸರಿದು ಕ್ರಮಿಸುತ್ತೇನೆನನ್ನ ಮೈಯನ್ನು ನಾನೇ, ಒಮ್ಮೊಮ್ಮೆ ಪೊರೆ ಕಳಚಿಕಾಯದ ಜಂಜಡ ನೀಗುವಂತೆ. + +ನುಂಗುತ್ತೇನೆ ಉದ್ದುದ್ದನನ್ನಂಥದೇ ಮತ್ತೊಂದು. ಹಾವೊಳಗೆಹಾವಾಗಿ ಅಂತ- ನೀವು ಹೇಳುವ ಹಾಗೆ. + +ಅಡಗುತ್ತೇನೆ ಹಾಗೇಪೊದೆಯನ್ನೋ ಮೆಳೆಯನ್ನೋ ಹೊಕ್ಕುಒಂದು ನಿಶ್ಚೇಷ್ಟ ಸುಪ್ತಿಯೊಳಗೆ. ನನ್ನೊಳಗೆನಾನಾಗಿ ನಾನೇ… + +*** + +ಸುರುಟಿ ವಂಕಿಯಿಟ್ಟು ಸುಮ್ಮಗಿದ್ದುದನ್ನು ತಾಳದೆತಿವಿದೆಬ್ಬಿಸಿದ್ದು ನೀವೆಯೋ… ನಿಮ್ಮೆತ್ತರಕ್ಕುಹೆಡೆ ಬಿಚ್ಚಿ ಭುಸ್ಸೆಂದಿದ್ದೇ ನನ್ನತನ ಅಂತಕಿಂಚಿತ್ತು ತಿಳಿಯಬಾರದೆ ನಿಮಗೆ.ನೀವು ನಿಮ್ಮತನವನ್ನು ಮೆರೆದಿರಿಈ ಹಾವುತನಕ್ಕೆ ಎಡೆಗೊಡದೆ.ಬಡಿದಿರಿ. ಜಜ್ಜಿದಿರಿ. ಕೊಳ್ಳಿಯೂ ಇಟ್ಟಿರಿ.ಎಲ್ಲ ನಿಮ್ಮ ನೇರ. ಧರ್ಮಾನುಸಾರ. + +ಹಾಗಂತ ಬೇಸರವೇನಿಲ್ಲ ಬಿಡಿ ನನಗೆ.ಮಾಡಲೇನೂ ಇರದೆ, ಇಲ್ಲಾ ಏನೂ ಮಾಡದೆಹಾವಾದವನು ನಾನು. ಕೊನೇ ಪಕ್ಷನಿಮ್ಮ ಜಾತಕದೋಷವೇ ನೆಪವಾಗಿನನ್ನ ಸಂಸ್ಕಾರವಾಯಿತಲ್ಲ ಬಿಡಿ…ಇಷ್ಟು ಸಾಕು. + + + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_584.txt b/Kenda Sampige/article_584.txt new file mode 100644 index 0000000000000000000000000000000000000000..2475fdeec6cae94706af601d73ac1e73be8fa233 --- /dev/null +++ b/Kenda Sampige/article_584.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡುನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾನಾನು ನಿಂತುಬಿಡುವೆ + +ಮರಳಿಸು ನನಗೆ ಮತ್ತೆ ನಿನ್ನ ಕಲ್ಲು ದೇಹವನ್ನುನಿನ್ನ ಗಡಸು ಕೈಯ್ಯ ಗೆರೆಗಳು, ಅಡ್ಡಾದಿಡ್ಡಿ ಕತ್ತರಿಸಿದಸಣ್ಣ ಉಗುರುಗಳಿಗೆ ನಾನು ಹಾತೊರೆದುಮುತ್ತುಗಳು ತುಂಬಿದ ನಿನ್ನ ತುಟಿಗಳು, ಎಂದೋನಕ್ಕ ನಗು ನಿನಗೆ ಮಾತ್ರ ಕೇಳುವ ನನ್ನ ದನಿನಿನ್ನ ಆತ್ಮದ ಒಸರುವಿಕೆಯಿಂದಪಡೆದ ಜೀವ ನನ್ನದು + +ಹೋಗದಿರು ಒಂದಿರುಳೂಅಲುಗಾಡದ ಮೌನದ ಹಾಗೆ ನಿಂತುಬಿಡು + +ನೀನು ಅಲ್ಲಿ ಇರುವುದಿಲ್ಲ ನಿನ್ನ ದನಿ ನನಗೆ ಕೇಳುವುದಿಲ್ಲಇದೆಲ್ಲಾ ಇಲ್ಲದಿದ್ದರೂಮಹಾಪ್ರಸಾದದ ಹಾಗೆ ನಿನ್ನ ಕಣ್ಣಿಗೆ ಒತ್ತಿಕೊಳ್ಳುವುದುಇಷ್ಟೇ ಸಾಕು ನನಗೆ + +ನಾನು ಪ್ರೇಮಿಸುವುದನ್ನು ಮರೆತಿರುವೆ + +ಪ್ರೇಮಿಸಲು ದಿನಗಳು ಬರುವುದಿಲ್ಲನಾವು ಇರುವೆವು ಎಂದರೆ ಚಿಟ್ಟೆಗಳ ಕನಸುಒಂದಿರುಳೂ ಬಿಡದೆ ಜೊತೆಗಿರುವುದು ಇತ್ಯಾದಿನಾನು ಕೂಗಿ ಕರೆಯಲು ನಿನಗೊಂದು ಹೆಸರೇ ಇಲ್ಲಾನಾನು ಕರೆದಾಗ ನಿನಗೆ ಬರಲುದಾರಿಯೂ ಇಲ್ಲಇನ್ನೂ ಬೇಕಾದಷ್ಟು ಇದೆ ಹೇಳಲುಬರುತ್ತಿಲ್ಲ ನನಗೆ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_585.txt b/Kenda Sampige/article_585.txt new file mode 100644 index 0000000000000000000000000000000000000000..2d63e3255f37811ace74a3ffc756007c9b230491 --- /dev/null +++ b/Kenda Sampige/article_585.txt @@ -0,0 +1,17 @@ +ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕeditor@kendasampige.com360degree.comಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. + +…..ಒಬ್ಬಳು + +ಅವನಿಲ್ಲೇ ಇದ್ದಾನೆಎದುರಿಗೇಕೋವಿಯ ಕುದುರೆಯಲ್ಲಿಸಾವಿನ ಬೆರಳು ಮೀಟುತ್ತ + +ಸೆಟೆದು ನಿಂತವರೆಲ್ಲಬಿದ್ದು ಮಲಗಿದರು ಚೆಲ್ಲಾಪಿಲ್ಲಿಕಣ್ಣೆದುರೆ + +ಹೆಗಲಿಗಿನ್ನೂ ವಯಸು ಜಗ್ಗಿದಂತಿಲ್ಲಮೊದಲ ಸಲ ಗಡ್ಡ ಮಾಡಿಕೊಂಡಾದಗಾಯ ಸಹಿತ ಮಾಸಿಲ್ಲತಿದ್ದಿದ ಕದಪು, ಗದ್ದ ಚೂಪುಕಸುವು ಖಂಡದ ಮೀನ-ಚಂದವೆನ್ನಲು ಯಾವ ಅಡ್ಡಿಯಿಲ್ಲ + +ಸಾವಿಗೂ ಹೀಗೆಸುಂದರಾಂಗ ಹರೆಯವಿದೆಯೆಂದುಗೊತ್ತಿದ್ದರೆ ಮುತುವರ್ಜಿಯಿಂದಅಣಿಗೊಂಡೇ ಬರಬಹುದಿತ್ತು + +ಅಂತ ಕೊನೆಗೂ ಪೇಚಾಡಿಕೊಂಡೇಮೈ ಚೆಲ್ಲಿದಳು + +(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು) + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_586.txt b/Kenda Sampige/article_586.txt new file mode 100644 index 0000000000000000000000000000000000000000..a12711bfa32161e80b2114b9b1a4538d16890792 --- /dev/null +++ b/Kenda Sampige/article_586.txt @@ -0,0 +1,11 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನೀನು ಎಂದರೆ ಏನು ನನಗೆ? + +ಯಾರೂ ಏಳಬಾರದ ಸಮಯಓಣಿಗಳಲ್ಲಿ ಯಾರೂ ಬರದಂತೆಗಿಡದ ನೆರಳು ಅಡಗಿಸಿದೆತಿರುವುಗಳು ದಾರಿ ಮಾಡುತ್ತಿದೆಮೇಲೆ ತುದಿಯ ಬಾಗಿಲಿಲ್ಲದ ಕೋಣೆಗೆಈಗಷ್ಟೇ ತಿಳಿಗಾಳಿ ಪರಿಮಳದಸುಳಿವು ಹತ್ತಿದೆ + +ನಾವು ಕೂಡುವುದನ್ನು ಹೇಗೆಎಲ್ಲಿಂದ ಎಂದರೆ ಏನನ್ನುವುದು?ಒಂದಷ್ಟು ಆಕಾಶವಾದರೆ ಸಾಕುನಾನು ಹೂವಾಗುವೆಹರಿದು ಹೋಗುವ ಹಾಲುನಮ್ಮ ನೆರಳಿನ ಓಣಿಯಲ್ಲಿಹೊರಳಿ ಹೊರಳಿ ಬಾ ನನ್ನಪಕಳೆಯೊಳಗೆ ಮತ್ತೆ ಮೊಗ್ಗಾಗುವೆತಿಂದು ತೇಗಿ ಕುಡಿದುಭಾರದ ಒಂಟಿತನಹೇಗೆ ಬಂದಿತ್ತು ನಿನಗೆ? + +ಇಲ್ಲಿ ಹೀಗೆ ಗಲಿಬಿಲಿಯಾಗಿಎಲ್ಲಾ ಎಸೆದು ದಬ್ಬಿ ಹೊರ ಹಾಕಿರುವೆನೀನು ಎಂದರೆ ಏನು ನನಗೆ?ಒಂದು ಚಂದದ ಮಳೆ, ದೂರದ ಮೋಡದೀರ್ಘ ಅಲೆದಾಟ, ಅರ್ಧ ಮರೆತ ಕನಸು?ಅಥವಾ ನಿನ್ನ ಪಕ್ಕದಲ್ಲಿ ಕವಿತೆಯಾಗಿಕುಳಿತಿರುವುದೇ? + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_587.txt b/Kenda Sampige/article_587.txt new file mode 100644 index 0000000000000000000000000000000000000000..b77f1c8aec07977925edea7ef3bd0134887f05a6 --- /dev/null +++ b/Kenda Sampige/article_587.txt @@ -0,0 +1,3 @@ +byನಕ್ಷತ್ರ|Nov 14, 2017|ದಿನದ ಅಗ್ರ ಬರಹ,ದಿನದ ಕವಿತೆ,ಸಾಹಿತ್ಯ| 0 Comments + +ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡುನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾನಾನು ನಿಂತುಬಿಡುವೆ \ No newline at end of file diff --git a/Kenda Sampige/article_588.txt b/Kenda Sampige/article_588.txt new file mode 100644 index 0000000000000000000000000000000000000000..ff01266b56947e7af9a09d69e672bfdef57987f8 --- /dev/null +++ b/Kenda Sampige/article_588.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನೀನು ಒಳಗೆ ಸೀಳಿಕೊಂಡುನನ್ನ ಗಂಟಲಿನವರೆಗೂಬಂದಿರಬೇಕುನನ್ನ ಹಣೆಯ ಮೇಲೆನಿನಗೆ ಕಾಣಿಸುವ ನನ್ನಒಂದೇ ಕಣ್ಣು, ಮತ್ತುನೀನು ಯಾರಿರಬಹುದೆಂದುನನಗೆ ಹೊಸದಾಗಿ ಅನಿಸುವುದುಅದೇ ಹೊತ್ತಲ್ಲಿ + +ಈಗ ನಿನ್ನ ಮೆದು ಮೈಯ್ಯ ಏಕಾಂತನಿನ್ನ ಅಂದರೆ ನನ್ನ…ಏನೋ ಒಂದುಮುಗಿಸಿದ ಹಾಗಿದೆ, ಮುಗಿಸಿಯೂಇಲ್ಲೇ ಇರುವೆ ನೀನುನನ್ನೆದೆಯಲ್ಲಿ, ತೊಟ್ಟಿಕ್ಕುತ್ತಿರುವ ನೋವಿನಲ್ಲಿಹಾಗೂ ನನ್ನ ಕೇಳದೆಯೇದೂಡಿ ಬರುವ ನಿಟ್ಟುಸಿರಿನಲ್ಲಿ + +ಏನಾದರೂ ಮಾತಾಡು..ಕಾಲ ಉಗುರಿಂದ ನೆತ್ತಿಯತನಕ ನಾನು ನಿನ್ನ ಹಾಗೆಯೇನೀನು ಏನೋ ಒಳಗಿಟ್ಟುಕೊಂಡು ಚೂಪಾಗಿನಗುವುದು ನನ್ನ ಹಾಗೆಯೇ + +ಮಾತಾಡು ಏನಾದರೂಬಂದಿಲ್ಲಿ ಮಡಿಲಲ್ಲಿ ಮಲಗುನಿನ್ನ ಕೂದಲು ಸವರಿಕೊಂಡುಬೇಕೆಂದಾಗ ಚುಂಬಿಸಿಕೊಂಡುನೀನು ಏನೇನೋ ನೆನೆಸಿಕೊಂಡುಹೇಳುವುದನ್ನು ಅಷ್ಟೊಂದುಸುಖವಿಲ್ಲದೆಯೇ ಕೇಳುವೆ + +ಅಷ್ಟು ಹೊತ್ತಿನಿಂದ ಹೀಗೆಯೇ ಇರುವೆವುಇನ್ನು ತಬ್ಬಿಕೊಳ್ಳದೆ ಇರುವುದಾದರೂ ಹೇಗೆಮಾತಾಡು ನೀನು,ಆಗಾಗ ನಿನ್ನ ಮುಖ ನೋಡಿಕೊಂಡುನಿನ್ನ ಎದೆಯಲ್ಲಿ ಮೂಗು ಉಜ್ಜಿಕೊಂಡುಸುಖವಾಗಿಯೇ ಕೇಳುವೆ + +ನಾವು ಮತ್ತೆ ಮಾತಾಡುವುದೇ ಹಾಗೆಉದ್ದದ ಮೆರವಣಿಗೆಯ ಹಾಗೆಎಲ್ಲಾ ಮರೆತು ಮಾತಾಡುವುದುಏನೋ ಸಿಗುವುದು ಇನ್ನೇನೋಕಳೆದುಹೋಗುವುದುನಡುವೆ ನಿನ್ನ ಕಚಕುಳಿಗಳಿಗೆಮರಳಿನ ರಾಶಿಯ ಮೇಲೆನಿನ್ನನ್ನು ದರದರ ಎಳೆದುಕೊಂಡುನಿನ್ನ ಹೊಟ್ಟೆಯ ಮೇಲೆ ಕೂತು ಮರಳು ಸುರಿದುಹೊರಳಾಡಿಸುವೆಇಷ್ಟಾದ ಮೇಲೆ ಉಳಿಯುವುದಾದರೂ ಏನುಕಳೆಯುವ ಒಂದು ರಾತ್ರಿಯಷ್ಟೇ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_589.txt b/Kenda Sampige/article_589.txt new file mode 100644 index 0000000000000000000000000000000000000000..c9495a3b7173c7c0675451fdca4f91989da38016 --- /dev/null +++ b/Kenda Sampige/article_589.txt @@ -0,0 +1,13 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು.ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನ ನಾಗರಾಜ ವಸ್ತಾರೆ ಬರೆದ ಕವಿತೆ ಇದೆ. + +ಅನಂಗಸೂತ್ರ + +ನೆಲ ಮೆಟ್ಟಿಯೂ ಆಕಾಶದಲ್ಲಿಚಾಚಿ ಆಡೇ ಆಡುವಈ ಮೈ ಮೈಥುನಕ್ಕೂ ನನ್ನದಲ್ಲ.ಆಕಳಿಸಿದ್ದನ್ನು ಆಗಾಗ್ಗೆ ತೂಕಡಿಸುವುದನ್ನುಎದ್ದಿರುವಾಗಲೆಲ್ಲ ಅದೂ ಇದೂ ಮಾಡುತ್ತಿರುವುದನ್ನುನೋಡಿ- ಇದೇ ನಾನೆಂದುಕೊಂಡುಬಿಟ್ಟೀರಿ!ಅರವತ್ತೊಂಬತ್ತು ಅಂಗುಲದ ಎತ್ತರಸರಾಸರಿ ಮೂವ್ವತ್ತಾರು ಸುತ್ತಳತೆಯನ್ನುಬೆಳೆದು ತೊಳೆದು ತೀಡಿ ಆರೈಸಿಮುಚ್ಚಿ ಬೆಚ್ಚಗೆ ಹೊಚ್ಚಿ ಸಾವರಿಸುವ ರೇಜಿಗೆಅಸಾಧ್ಯ ಅಸಹನೆ ಹುಟ್ಟಿಸುತ್ತದೆ.ಮುಚ್ಚಿದೆವೆಗಳ ಸಮಾ ಬಂಡೇಳುವ ಬಣ್ಣಗಳುತುಪಾಕಿ ಸಿಡಿಸಿ ವೃಥಾ ಕಾಡುವಾಗಹಗಲಿನ ಗುಟ್ಟೆಲ್ಲ ಕತ್ತಲಿಗೆ ಚೆಲ್ಲಿ ಬರಿದಾಗಿಮೈ- ತುಂಬ ಹೇಡಿ ಅನಿಸುತ್ತದೆ.ಒಮ್ಮೆ ಎಲ್ಲೆಲ್ಲೂ ಪುಳಕಿಸಿ ಚಿಗಿತದ್ದುಗುಂಡಗೆ ನೆತ್ತಿಯನ್ನೇ ನುಣ್ಣಗೆ ಕೆತ್ತಿ ಸದ್ಯ-ಕಿವಿಯಲ್ಲಿ ಗರಿಗೆದರಿ ಹೇಸಿಗೆ ತರುತ್ತದೆ. + +ಇಲ್ಲಿ- ಊರಿಕೊಂಡಿರುವ ಊರಿನಲ್ಲಿಈ ಬಗ್ಗೆ, ಆರೈಸುವ ಬಗ್ಗೆಸುಕ್ಕು ಮುಕ್ಕು ಸೊಕ್ಕು ತೀರಿಕೊಳ್ಳುವ ಬಗ್ಗೆಬರೆಯುತ್ತಾರೆ ದುಬಾರಿ ಶಿಬಿರ ನಡೆಸುತ್ತಾರೆಪುರವಣಿಗಳ ನಡುವೆ ಮಡಿಕೆ ತೂರುತ್ತಾರೆ + +ಇವರನ್ನು ಕರೆದು ಕೇಳಿದ್ದೇನೆ- ಇದೆಯೋ ನಿಮ್ಮಲ್ಲಿಈ ಮೈಯ ಗೊಡವೆ ತೀರಿಸುವ ಸರಳ ಸೂತ್ರ?ನಾನು ನಾನಾಗಲಿಕ್ಕೊಂದು ಪರಿಹಾರಮೈಯಲ್ಲದ ನನಗೆ ಅಶರೀರದ ಹಾದಿಒಂದು ಅನಂತ್ಯಸಂಸ್ಕಾರ!! + +(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು) + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_59.txt b/Kenda Sampige/article_59.txt new file mode 100644 index 0000000000000000000000000000000000000000..53af210c767105c822f9400aa716b3a96ef0555b --- /dev/null +++ b/Kenda Sampige/article_59.txt @@ -0,0 +1,35 @@ +ಪ್ರಿಯ ಸ್ವಾಮಿ ಪೊನ್ನಾಚಿ, + +ನಿಮ್ಮ ಮೊದಲ ಕಥಾ ಸಂಕಲನ ‘ಧೂಪದ ಮಕ್ಕಳುʼ ಸಕಾರಣವಾಗಿಯೇ ಓದುಗರನ್ನು ಸೆಳೆಯಿತು. ಈ ಎರಡನೆಯ ಸಂಕಲನದ ಕಥೆಗಳನ್ನು ಓದುತ್ತ ಕಥೆಗಾರಿಕೆಯ ಕಸುಬಿನ ಕೌಶಲಗಳನ್ನು ನೀವು ರೂಢಿಸಿಕೊಳ್ಳುತ್ತಿರುವ ರೀತಿಯ ಬಗ್ಗೆ ನನಗೆ ಕುತೂಹಲ ಹುಟ್ಟಿತು. ಇಂದು ಬರೆಯುತ್ತಿರುವ ಕನ್ನಡದ ಕಥೆಗಾರರು ಕನ್ನಡದ ಕವಿತೆ ಬರೆಯುವವರಿಗಿಂತ ಹೆಚ್ಚು ಪ್ರಯೋಗಶೀಲರಾಗಿ, ಒಬ್ಬೊಬ್ಬರೂ ತಮ್ಮದೇ ದಾರಿಗಳನ್ನು ನಿರ್ಮಿಸಿಕೊಳ್ಳುವುದರಲ್ಲಿ ಮಗ್ನರಾದವರ ಹಾಗೆ ಕಾಣುತ್ತಾರೆ. ನಮ್ಮ ಬಹಳಷ್ಟು ಕವಿಗಳು ದೇಶಕಾಲಗಳಿಗೆ ಅತೀತವಾದ ಭಾವ, ಅನುಭಾವಗಳ ಲೋಕದಲ್ಲಿ ಮೈ ಮರೆತು ಸಂಚರಿಸುತ್ತಿರುವಾಗ ಕಥೆಗಾರರು ಕರ್ನಾಟಕದ ಬೇರೆಬೇರೆ ಪ್ರದೇಶಗಳ ಬದುಕಿನ ನುಡಿ-ಭಾವ-ಚಿತ್ರಗಳನ್ನು ರಚಿಸುತ್ತಿದ್ದಾರೆ. ಈಗಿನ ಚಾಮರಾಜನಗರ ಜಿಲ್ಲೆ ಹಲವು ಜನಸಮುದಾಯಗಳ ಬದುಕಿನ ರೀತಿ, ನುಡಿ ವೈವಿಧ್ಯ, ಆಚಾರ, ನಂಬಿಕೆಗಳ ಲೋಕ, ಆಧುನಿಕತೆಯನ್ನು ಒಳಗುಮಾಡಿಕೊಳ್ಳುತ್ತ ಮನಸಿನಲ್ಲಿ ಬೇರೂರಿರುವ ಬದುಕಿನ ರೀತಿಯನ್ನು ಬಿಡಲಾಗದ ತೊಳಲಾಟ ಇಂಥವೆಲ್ಲ ಇನ್ನೂ ಹೆಚ್ಚು ದಟ್ಟವಾಗಿ ಭಾಷೆಯಲ್ಲಿ ಮೈ ಪಡೆಯಬೇಕಾಗಿದೆ. ಅಂಥ ಒಂದು ಕೆಲಸವನ್ನು ನಿಮ್ಮ ಕಥೆಗಳು ನಿರ್ವಹಿಸುತ್ತಿವೆ ಅನ್ನಿಸಿತು. + +(ಸ್ವಾಮಿ ಪೊನ್ನಾಚಿ) + +ಸ್ವಾಮಿ, ಗಾಡ ಕತ್ತಲಿನಲ್ಲಿ ಒಂದಿಷ್ಟು ಬೆಳಕು ಬಿದ್ದು ಕಣ್ಣು ಹಿಡಿದಿಟ್ಟುಕೊಳ್ಳುವ ದೃಶ್ಯ, ಕತ್ತಲಲ್ಲೂ ಕಿವಿ ಚುರುಕಾಗಿ ಆಲಿಸುವ ಬಗೆಬಗೆಯ ಸದ್ದು ಇವು ಮುಖ್ಯವಾಗಿ, ಅರಿವಿಗೆ ಬರುವ ವಾಸನೆ, ರುಚಿ ಮತ್ತು ಸ್ಪರ್ಶಗಳನ್ನು ಗಮನಕ್ಕೆ ಬರುವಷ್ಟು ಮಟ್ಟಿಗೆ ನೀವು ಭಾಷೆಯಲ್ಲಿ ತಲುಪಿಸುವ ರೀತಿ. ಇದು ನನಗೆ ಬಹಳ ಇಷ್ಟವಾಯಿತು. ‘ಗೋಣಿ ಮರದ ಕೊಂಬೆʼಯಲ್ಲಿ ನಡುರಾತ್ರಿಯ ವೇಳೆ ಬಸ್ಸು ಇಳಿದು ಸುತ್ತಲ ವಿವರಗಳನ್ನು ನಿರೂಪಕ ಅರಿವಿಗೆ ತಂದುಕೊಳ್ಳುವ ಭಾಗ, ಇಡೀ ಕಥೆಯಲ್ಲಿ ಕತ್ತಲಿನ ಅನುಭವ ಇದಕ್ಕೆ ಉದಾಹರಣೆ. ಹಾಗೆಯೇ ‘ದಾರಿ ತಪ್ಪಿಸುವ ಗಿಡʼ ಕಥೆಯಲ್ಲೂ ರಾತ್ರಿಯ ಹೊತ್ತಿನಲ್ಲಿ ಹೊಲದ ಕಾವಲು ಕಾಯುತ್ತ ಕೂತಾಗ ಶಿವನಪ್ಪ ಅರಿವಿಗೆ ತಂದುಕೊಳ್ಳುವ ವಿವರಗಳೂ ಇವೆ. ಇಂದ್ರಿಯಗಳ ಅನುಭವದ ವಿವರಗಳನ್ನು ಈ ಎರಡು ಕಥೆಗಳಲ್ಲಿ ನೀವು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದೀರಿ. ಇಂಥ ಖಚಿತ ವಿವರಗಳು ಕಥೆಯ ವಾತಾವರಣ ಸೃಷ್ಟಿಗೆ, ಕಥನದ ಸಾಂದ್ರತೆಗೆ ಬಹಳ ಮುಖ್ಯವಾಗುತ್ತವೆ. ಬರಹಗಾರರು ನುಡಿಲೋಕವನ್ನು ಸೃಷ್ಟಿಸಲು ಇಂಥ ಖಚಿತ ವಿವರಗಳು ಬಹಳ ಸಹಾಯ ಮಾಡುತ್ತವೆ. ಈ ಎರಡೂ ಕಥೆಗಳು ಕಾಡಿನ ಅಂಚಿನಲ್ಲಿ, ಊರಿನಿಂದ ಬಹಳ ದೂರವೂ ಅಲ್ಲದ ಹತ್ತಿರವೂ ಅಲ್ಲದ ಸ್ಥಳಗಳಲ್ಲಿ ನಡೆಯುವ ಕಥೆಗಳು. ಆ ಕಥೆಗಳಲ್ಲಿ ಬರುವ ವಿವರಗಳಿಂದಲೇ ಚಾಮರಾಜ ನಗರದ ಪ್ರದೇಶದ ಬದುಕಿನ ಕಥನ ಇದು ಎಂಬ ವಿವರವೂ ತಿಳಿಯುತ್ತದೆ. + +ಹೀಗೆಯೇ ‘ಇಟ್ಟರೆ ಸಗಣಿಯಾದೆ,ʼ ‘ಸಿದ್ದವ್ವ ಮತ್ತು ತಂಬೂರಿ ಮಾದʼ ಇಂಥ ಕಥೆಗಳಲ್ಲಿ ನೀವು ತಳವರ್ಗಕ್ಕೆ ಸೇರಿದ ಪಾತ್ರಗಳ ಮಾತನ್ನು ಬಳಸುವಾಗ ಆ ಪ್ರದೇಶದ ಮಾತಿನ ಜನರ ಕನ್ನಡದ ದನಿಯ ಬಾಗು, ಏರು, ಇಳಿತ, ಬಳುಕುಗಳೆಲ್ಲ ಮನಸಿನ ಕಿವಿಗೆ ಕೇಳುತ್ತವೆ. ಆದರೂ ನೀವು ನಿರೂಪಣೆಯನ್ನು ಹೆಚ್ಚಾಗಿ ಬಯಸುವ, ಸಂಭಾಷಣೆ ಅಷ್ಟು ಮುಖ್ಯವೆಂದು ಭಾವಿಸದ ಕಥೆಗಾರರು ಅನ್ನಿಸಿತು. ಶಿಷ್ಟವೆನಿಸುವ ಭಾಷೆಯ ನಿರೂಪಣೆ ಮತ್ತು ಪಾತ್ರದ ವಾಸ್ತವಕ್ಕೆ ನಿಷ್ಠವಾದ ಆಡು ಮಾತಿನ ಬಳಕೆ ಇವನ್ನು ಸಮತೋಲನದಲ್ಲಿ ಲಯ ತಪ್ಪದೆ ನಿರ್ವಹಿಸುವುದು ಬಹಳ ಕಷ್ಟದ ಕೆಲಸ. ಹೀಗೇ ಎಂದು ಯಾರೂ ದಾರಿ ತೋರಲಾರರು, ನೀವೇ, ನೀವು ಮಾತ್ರವಲ್ಲ ಒಬ್ಬೊಬ್ಬ ಕಥೆಗಾರರೂ ತಮಗೆ ತಕ್ಕ ಸಮತೋಲನ ಕಂಡುಕೊಳ್ಳಬೇಕು. ಕುವೆಂಪು ಅವರ ಕಾದಂಬರಿಗಳು ನುಡಿ ಬಳಕೆಯ ವೈವಿಧ್ಯವನ್ನು ಒಳಗೊಂಡಿರುವ ರೀತಿ ಇದೆಯಲ್ಲ, ಅದು ಕನ್ನಡದ ಬಹಳ ದೊಡ್ಡ ಸಾಧನೆ. + +ಚಾಮರಾಜನಗರದಂಥ ವೈವಿಧ್ಯ ತುಂಬಿದ ಪ್ರದೇಶದಲ್ಲಿ ಬದುಕುವ ನಿಮಗೆ ಕಥೆಗಾರಿಕೆಯಲ್ಲಿ ನುಡಿ ಬಳಕೆಯ ಹದ ಬಹಳ ಮುಖ್ಯವಾಗಬೇಕು.ನಿಮ್ಮ ಈ ಸಂಕಲನದ ಕಥೆಗಳನ್ನು ಓದಿದ ಮೇಲೆ ಯೋಚನೆ ಮಾಡಿದರೆ- ತಾವು ಬದುಕುವ ಪರಿಸರ ಮತ್ತು ಹೊರಗಿನ ಆಧುನಿಕ ಅನ್ನಬಹುದಾದ ವ್ಯವಸ್ಥೆಗಳ ಲೋಕದ ಪ್ರಭಾವದಿಂದ ತಬ್ಬಿಬ್ಬಾಗುವ ಪಾತ್ರಗಳು ದುರ್ಬಲವಾಗಿ ಶರಣಾಗುವ, ಅಥವಾ ವಾಸ್ತವದೊಡನೆ ರಾಜಿಮಾಡಿಕೊಂಡು ಸಮಾಧಾನ ತಂದುಕೊಳ್ಳುವ, ಆಗೀಗ ವಿರೋಧಿಸುವ ಚಿತ್ರಣಗಳ ಸಂಕಲನ ಇದು ಅನ್ನಿಸಿತು. ವ್ಯಕ್ತಿಯ ಸಾಮರ್ಥ್ಯಕ್ಕಿಂತ ವ್ಯವಸ್ಥೆ ಮತ್ತು ಪರಿಸರಗಳದೇ ಮೇಲುಗೈಯಾಗಿದೆ ಅಂತಲೂ ಅನ್ನಿಸಿತು. ಮುಖ್ಯವಾದ ಮಾತೆಂದರೆ, ಸ್ವಾಮೀ, ಕಥೆಗಾರರಾಗಿ ನೀವು ಸರಿ ತಪ್ಪುಗಳ ನಿರ್ಣಯವನ್ನು ಹೇಳಲು ಹೋಗದೆ ‘ಈ ಪಾತ್ರದ ಬದುಕು ಹೀಗಿದೆ ನೋಡಿʼ ಎಂದು ಹೇಳುವ ಕೆಲಸವನ್ನು ಮಾಡಿದ್ದೀರಿ. + +‘ಗೌರಿʼ ಹಾಗೂ ‘ನಿಂಬೆ ಮತ್ತು ದೂಳತದ ಪಾಕಿಟ್ಟುʼ ಎರಡೂ ಕಥೆಗಳು ಒಂದೇ ವಿಷಯದ ಎರಡು ಮಗ್ಗುಲುಗಳನ್ನು ತೋರುತ್ತವೆ. ‘ಗೌರಿʼ ಕಥೆಯಲ್ಲಿ ಹಸುವನ್ನು ಕಳೆದುಕೊಂಡ ಮಾದೇವ, ಅನಾದಿಕಾಲದಿಂದಲೂ ನಂಬಿಕೊಂಡಿದ್ದ ಪೂಜಾರಿಯ ಮೈಮೇಲೆ ಬರುವ ದೈವದ ಶಕ್ತಿಯ ಬಗ್ಗೆ ಇದ್ದ ನಂಬಿಕೆಯನ್ನು ಅನುಭವದ ವಾಸ್ತವದ ಕಾರಣದಿಂದ ನೀಗಿಕೊಳ್ಳುವ ಕಥೆಯಾದರೆ ‘ಧೂಳತʼ ಕಥೆಯ ಮಂತ್ರವಾದಿ ಕೂಡ ಇಂಥ ನಂಬಿಕೆಗಳ ವ್ಯವಸ್ಥೆಗೆ ಬಲಿಯಾಗಿ ಮೌಢ್ಯವನ್ನು ರಕ್ಷಿಸುವವನೇ ಆಗಿದ್ದಾನೆ. ‘ಧೂಳತʼ ಕಥೆಯಲ್ಲಿ ಮಂತ್ರವಾದಿ ಮತ್ತು ಕಥೆಯ ನಿರೂಪಕನಾದ ಅವನ ಗೆಳೆಯ ಇಬ್ಬರೂ ಮಠದಲ್ಲಿ ಓದಿದವರು, ಮಠದ ಸ್ವಾಮಿಯ ಕಪಟಕ್ಕೆ ಬಲಿಯಾದವರು. ಈ ಎರಡೂ ಕಥೆ ವ್ಯವಸ್ಥೆಯೊಂದು ನಂಬಿಕೆಯೆಂಬ ಉಪಕರಣದ ಮೂಲಕ ಬಲಿ ಪಡೆಯುವವರನ್ನೂ ಬಲಿಯಾಗುವವರನ್ನೂ ನಿಯಂತ್ರಿಸುವುದನ್ನೇ ತೋರುತ್ತದೆ. ಅಂದರೆ ಪಾತ್ರಗಳಿಗಿಂತ ಅವರ ನಂಬಿಕೆಗಳನ್ನು ರೂಢಿಸಿದ ಪರಿಸರ ಶಕ್ತಿವಂತ ಅನ್ನಿಸುತ್ತದೆ. + +ಇದಕ್ಕೆ ವಿರುದ್ಧವಾದ ಚಲನೆ ‘ಇಟ್ಟರೆ ಸಗಣಿಯಾದೆʼ ಕಥೆಯಲ್ಲಿದೆ. ಕ್ಯಾತನೆಂಬ ಹುಡುಗ ಗೌಡರ ಮನೆಯಲ್ಲಿ ಸತ್ತ ಹಸುವಿನ ಮಾಂಸದ ಪಾಲು ಸಿಕ್ಕೀತೆಂದು ಹಾತೊರೆದು ಆಸೆಪಡುತ್ತ ಶಾಲೆಯಲ್ಲಿ ಕೂತಿರುವಾಗ, ಮಕ್ಕಳೆಲ್ಲ ಮೆಚ್ಚುವ ರಮೇಶ್ ಮಾಸ್ತರು ‘ಇಟ್ಟರೆ ಸಗಣಿಯಾದೆʼ ಪದ್ಯದ ಪಾಠ ಮಾಡುತ್ತಾ ಮಾಂಸಾಹಾರ ಅಸಹ್ಯ ಎಂದು ಹೇಳುವುದು ಕೇಳಿ ತಬ್ಬಿಬ್ಬಾಗಿ, ಆಹಾರ ಮುಖ್ಯವೋ ಮೇಷ್ಟರ ಬೋಧನೆ ಮುಖ್ಯವೋ ಎಂದು ನಿರ್ಣಯಿಸಲಾಗದೆ ಊಟದ ಮುಂದೆ ಚಡಪಡಿಸುವುದಿದೆ. ಶಿಕ್ಷಣ ಕೂಡ ಎಳೆಯ ಮನಸುಗಳಲ್ಲಿ ಆಹಾರದ ಬಗ್ಗೆ ಸಂಶಯ, ಕೀಳರಿಮೆಗಳನ್ನು ಹುಟ್ಟಿಸುತ್ತದೆ. ಬೋಧನೆಯ ವ್ಯವಸ್ಥೆಯ ಎದುರಿಗೆ ಎಳೆಯ ಮನಸ್ಸು ದುರ್ಬಲವಾಗಿ ದಿಗ್ಭ್ರಮೆ ಅನುಭವಿಸುತ್ತದೆ. ಈ ಮೇಲಿನ ಮೂರೂ ಕಥೆಗಳಲ್ಲಿ ನೀವು ಮೂಢ ನಂಬಿಕೆ ಎಂಬ ನುಡಿಯನ್ನಾಗಲೀ ಆಹಾರ ರಾಜಕೀಯ ಅನ್ನುವ ನುಡಿಗಟ್ಟನ್ನಾಗಲೀ ಬಳಸದೆ ಕಥೆಯ ಮೂಲಕ ನಿಮ್ಮ ಆಶಯ ವ್ಯಕ್ತಪಡಿಸಿರುವ ರೀತಿ ಇಷ್ಟವಾಯಿತು. + +ಕ್ಯಾತ ಪುಟ್ಟ ಹುಡುಗನಾಗಿ ದಿಕ್ಕುತಪ್ಪಿದವನಂತೆ ಚಡಪಡಿಸಿದರೆ ಸಿಟಿಂಗ್ ಎಂಎಲ್‌ಎ ಕರಿಯಪ್ಪ ಅನೇಕ ವರ್ಷಗಳ ನಂತರ ಗಂಗಾಡಿಯ ಗೌಡರ ಮನೆಗೆ ಊಟಕ್ಕೆ ಹೊರಟಾಗ ಅನುಭವಿಸುವ ದುಗುಡ, ಕಾತರ, ಉತ್ಸಾಹ, ಆತಂಕಗಳು ವ್ಯಕ್ತಿಯನ್ನೂ ಮೀರಿ ಪರಿಸರದಲ್ಲೆಲ್ಲ ವ್ಯಾಪಿಸಿರುವ ಜಾತಿವ್ಯವಸ್ಥೆ ಎಷ್ಟು ಪ್ರಬಲ, ಅಧಿಕಾರವನ್ನು ಪಡೆದರೂ ಮನಸಿನೊಳಗೆ ಇರುವ, ಜಾತಿಯ ಕಾರಣಕ್ಕೆ ಹುಟ್ಟುವ ದೈನ್ಯವನ್ನು, ಒಬ್ಬಂಟಿತನವನ್ನು ಮೀರುವುದು ಎಷ್ಟು ಕಷ್ಟ ಎಂಬುದನ್ನು ‘ಹದಿನಾರು ಕಂಬದ ಮನೆʼ ಸೂಚಿಸುತ್ತದೆ. ವ್ಯಕ್ತಿಗಿಂತ ಪರಿಸರವೇ ಪ್ರಬಲವಾಗುವ ಇನ್ನೊಂದು ಉದಾಹರಣೆ ಇದು. ಅಧಿಕಾರ ಸ್ಥಾನ ದೊರೆತರೆ ತಳವರ್ಗದವರಿಗೆ ಆತ್ಮಾಭಿಮಾನ ಮೂಡುತ್ತದೆ ಅನ್ನುವುದು ನಿಜ, ಹಾಗೆಯೇ ಮನಸ್ಸು ಕೂಡ ಜಾತಿಯ ಕೀಳ್ತನವನ್ನು ನೀಗಿಕೊಳ್ಳದಿದ್ದರೆ ದೊರೆತಂತೆ ಕಾಣುವ ಸಮಾನತೆ ಕೂಡ ತೋರಿಕೆಯದೇ ಇದ್ದೀತು ಅನ್ನುವ ಸೂಚನೆ ಈ ಕಥೆಯಲ್ಲಿ ಕಂಡಿತು. ಎರಡನೆಯ ಭಾಗದಿಂದ ಮೊದಲಾಗಿ, ಮೊದಲ ಭಾಗಕ್ಕೆ ಹೋಗಿ ಆಮೇಲೆ ಮೂರನೆಯ ಭಾಗವೆಂದು ಕಥೆಯನ್ನು ವಿಗಡಿಸಿರುವುದು ವರ್ತಮಾನ, ಭೂತಕಾಲ, ಮತ್ತು ನಾಳೆಯ ದಿನವು ಇಂದಿನ ದಿನವಾದಾಗ ನಡೆದ ಕಥೆ ಎಂದು ಮನದಟ್ಟು ಮಾಡಿ ಮನಸಿನಲ್ಲಿರುವ ಅಸಮಾನತೆಯ ಬೇರು ಎಷ್ಟು ಗಟ್ಟಿ ಅನ್ನುವುದನ್ನು ಸೂಚಿಸಲು ಸಹಾಯಮಾಡಿದೆ. + +‘ಕರೀಕಲ್ಲು ಕ್ವಾರಿʼ ನಿರೂಪಣೆಯೇ ಪ್ರಧಾನವಾದ ಕಥೆಯಾಗಿದ್ದರೂ ಹದಿನಾರು ಕಂಬದ ಮನೆಯ ಇನ್ನೊಂದು ಮಗ್ಗುಲು ಅನ್ನಿಸಿತು. ಯಾಕೆಂದರೆ ಇಲ್ಲಿ ಆಧುನಿಕ ಕಛೇರಿ, ಆಡಳಿತ ವ್ಯವಸ್ಥೆಗಳ ಪರಿಚಯವಿರದ, ಆದರೂ ಆಧುನಿಕ ಬದುಕಿನ ಸುಖ ಸೌಲಭ್ಯಗಳನ್ನು ಅನುಭವಿಸುವ ಆಸೆಯುಳ್ಳ ಜನ ನಗರಗಳ ಸುಂದರ ಮಹಲುಗಳ ಆಹಾರವಾಗಿ ಬಳಕೆಯಾಗುವ ಕರೀಕಲ್ಲು ಇರುವ ಜಮೀನನ್ನು ಮಾರುವ ಆಮಿಷಕ್ಕೆ ಗುರಿಯಾಗಿ ಗತಿ ಕೆಡುವ ನಿರೂಪಣೆ ಇಲ್ಲಿದೆ. ವೀರಪ್ಪಜ್ಜನ ಕಾಲದ ನೆಲದ ಸಂಬಂಧ, ವೀರಪ್ಪಜ್ಜನಂಥ ಮನೆಯ ಜನರ ಸಂಬಂಧ, ಊರಿನ ನೆಲಕ್ಕೂ ಭಾಷೆಗೂ ಇರುವ ಸಂಬಂಧ ಇವೆಲ್ಲವನ್ನೂ ನಿರ್ದಯೆಯಿಂದ ಒರೆಸಿ ಹಾಕಿ, ದುಡ್ಡಿನ ಲಾಭದ ಮೇಲೇ ಕಣ್ಣಿಟ್ಟಿರುವ ಪರ ಸೀಮೆಯ ಕರುಣಾಕರನ್‌ನಂಥ ಬಂಡವಾಳಗಾರ, ಅವನ ನೆರವಿಗೆ ಒದಗುವ ಅಥವ ಅಡ್ಡಿಪಡಿಸುವ ಅಡಳಿತ, ಜನರ ಮನಸಿನಲ್ಲಿ ಆಧುನಿಕತೆ ಬಿತ್ತಿರುವ ದುಡಿಯದೆ ಸುಖಪಡಬೇಕೆಂಬ ಅಪೇಕ್ಷೆ ಇವೆಲ್ಲವುಗಳ ಮಿನಿಯೇಚರ್ ಚಿತ್ರವಾಗಿದೆ ಕಥೆ. ಹಿಂದೆ ಬ್ರಿಟಿಷರು ಆಳಿದ್ದು ಕೂಡ ಸುಮಾರಾಗಿ ಹೀಗೇ ಅಲ್ಲವೇ? ಆಮಿಷಕ್ಕೋ ಭಯಕ್ಕೋ ವ್ಯವಸ್ಥೆಯ ಕಟ್ಟುಪಾಡಿಗೋ, ನೆಮ್ಮದಿ ಉಳಿಸಿಕೊಳ್ಳಬೇಕೆಂಬ ಆಸೆಗೋ ತಮ್ಮತನ ನೀಗಿಕೊಳ್ಳುತ್ತ ಇದೆಯಲ್ಲ ಸಮಾಜ ಅದರ ಚಿತ್ರಣ ಇಲ್ಲಿದೆ. ಆದರೂ ಸನ್ನಿವೇಶಗಳ ಸೃಷ್ಟಿಗಿಂತ ನಿರೂಪಣೆಯೇ ಮೇಲುಗೈಯಾಗಿರುವ ಕಥೆ ಇನ್ನಷ್ಟು ಸಮರ್ಥವಾದ ರೂಪ ಪಡೆಯಬಹುದಿತ್ತು ಅನ್ನಿಸಿತು. ಇಲ್ಲೂ ಬಂಡವಾಳ ಮತ್ತು ಆಡಳಿತ ವ್ಯವಸ್ಥೆಯ ಮನೋಧರ್ಮದ ಶಕ್ತಿಯ ಎದುರು ದುರ್ಬಲವಾದ ಪಾತ್ರಗಳೇ ಕಾಣುತ್ತವೆ. + +ಗೌರಿ ಕಥೆಯಲ್ಲಿರುವಂಥ ಪಾತ್ರಗಳ ಬದುಕಿನ ಕಥೆ ‘ನಾಮ್ದರೆ ಜೇನುʼವಿನಲ್ಲಿ ನನಗೆ ಎದುರಾಯಿತು. ವ್ಯತ್ಯಾಸವೆಂದರೆ ಎದ್ದು ಕಾಣುವ ದುರಂತ ಮತ್ತು ಸ್ಪಷ್ಟವಾದ ನೈತಿಕ ಪ್ರಶ್ನೆ ಈ ಕಥೆಯಲ್ಲಿದೆ. ಕಾನೂನಿಗೆ ಅಂಜುವ, ಊರಿನ ಬದುಕು ಕಟ್ಟಿ ಕೊಟ್ಟಿರುವ ಭಯ ಭೀತಿಯ ನಂಬಿಕೆಗಳೇ ಸತ್ಯವೆಂದು ನಂಬಿರುವ ಮಧ್ಯಮ ಜಾತಿಯ ಮತ್ತು ಬುಡಕಟ್ಟಿನ ಸಮುದಾಯಗಳ ಪಾತ್ರಗಳಿವೆ ಇಲ್ಲಿ. ಕಾಡಿನಲ್ಲಿ ಫಾರೆಸ್ಟಿನವರ, ಟೆಂಡರ್‌ದಾರರ ಕಣ್ಣು ತಪ್ಪಿಸಿ ಜೇನು ಕೀಳಲು ಹೋಗುವ ತಂಡ, ಕಾಡನ್ನು, ಜೇನನ್ನು ಬಲ್ಲ ಮಲ್ಲೇಶ ಇಲ್ಲಿ ಮುಖ್ಯ ಪಾತ್ರ. ತನ್ನಕ್ಕನ ಸಾವಿಗೆ ಕಾರಣನಾದ ಶಂಕರಯ್ಯನನ್ನು ಕೊಲ್ಲುವ ಹುನ್ನಾರ ಮಾಡಿಯೂ ಸರಿ ತಪ್ಪುಗಳ ನೈತಿಕ ಪ್ರಶ್ನೆಯನ್ನು ಎದುರಿಸಲಾರದೆ, ತಪ್ಪು ಮಾಡಲು ಒಲ್ಲದೆ ಆಕಸ್ಮಿಕಕ್ಕೆ ತಾನೇ ಬಲಿಯಾಗುವ ಪಾತ್ರ ಮಲ್ಲೇಶನದು. ನಿಸರ್ಗದ ನಿಷ್ಕರುಣೆ, ಮನುಷ್ಯರು ಆಸೆ, ಎಲ್ಲೋ ಇರುವ ವ್ಯವಸ್ಥೆ ರೂಪಿಸಿರುವ ಕಟ್ಟುಪಾಡು, ಲೈಂಗಿಕತೆ, ಸೇಡಿನ ಆಸೆ, ಆತಂಕ, ಆಕಸ್ಮಿಕ ಎಲ್ಲವೂ ಬೆರೆತ ಈ ಕಥೆ ಬಹಳ ಮಟ್ಟಿಗೆ ನಿರೂಪಣೆಯಾಗಿಯೇ ಸಾಗುತ್ತದೆ. ಇನ್ನಷ್ಟು ವಿವರವಾಗಿ, ಸಾವಕಾಶವಾಗಿ ಪಾತ್ರಗಳ ಮನೋಧರ್ಮ ಮತ್ತು ನಿಸರ್ಗ, ಸಮಾಜಗಳ ಸಂಬಂಧದ ಅನ್ವೇಷಣೆಗೆ ಅವಕಾಶವಿತ್ತು ಅನ್ನಿಸುತ್ತದೆ. + +‘ದೇವರ ಕನಸುʼ ಕಥೆ ಸದ್ಯದ ಗ್ರಾಮೀಣ ಭಾರತದ ಮೀನಿಯೇಚರ್ ಚಿತ್ರಣವಾಗಿ ಕಾಣುತ್ತದೆ. ದೇವನೂರು ಮಹದೇವ ಅವರ ‘ಒಡಲಾಳʼದ ಕಥೆಗಳ ನೆರಳು ಈ ಕಥೆಯ ಮೇಲೆ ದಟ್ಟವಾಗಿದೆ ಅನಿಸಿದರೂ ತಳ ಸಮುದಾಯದ ವ್ಯಕ್ತಿಗೆ ಮೂರು ದಿನ ಒಂದೇ ಕನಸು ಬಿದ್ದು, ಗುಡಿ ಕಟ್ಟಿಸಲು ಗೌಡನ ಕೇಳಿ, ಕೀಳು ಜಾತಿಯವನಿಗೆ ಕನಸು ಬೀಳುವುದುಂಟೇ ಎಂದು ಮೇಲುಜಾತಿಯವರು ಹೇಳಿ, ಪಕ್ಕದೂರಿನ ಗೌಡ ಜಾಗಕೊಟ್ಟು, ದೇವಸ್ಥಾನ ಕಟ್ಟಿದ ಮೇಲೆ ಮೂರು ಊರುಗಳ ಜಗಳವಾಗಿ ಬೆಳೆದು, ದೇವಸ್ಥಾನಕ್ಕೆ ಬೀಗಮುದ್ರೆ ಬೀಳುತ್ತದೆ ಎಂಬ ನಿರೂಪಣೆ ಕೇವಲ ಜಾತಿಯ, ಶೋಷಣೆಯ ಚಿತ್ರಣವಾಗಿ ಉಳಿಯದೆ ಊರು/ದೇಶದ ಸ್ಥಿತಿಯನ್ನೇ ಪ್ರಭಾವಿಸುವ ಸಂಗತಿ ಎಂಬುದನ್ನು ಸೂಚಿಸುವಂತೆ ಬೆಳೆಯುತ್ತದೆ. + +(ಓ ಎಲ್‌ ನಾಗಭೂಷಣ ಸ್ವಾಮಿ) + +‘ಸಿದ್ದವ್ವ ಮತ್ತು ತಂಬೂರಿ ಮಾದʼ ಕಥೆಯ ಸಿದ್ದವ್ವನ ಪಾತ್ರ ಮತ್ತು ಅವಳ ಪ್ರತಿಪಾದಿಸುವ ನಿಲುವು ಬಹಳ ಗಮನ ಸೆಳೆಯಿತು. ಅವಳ ಪಾತ್ರ ನಿಮ್ಮ ಈ ಸಂಕಲನದ ಎಲ್ಲ ಪಾತ್ರಗಳ ತಾಕಲಾಟದ ಒಂದು ತುದಿಯನ್ನು ತೋರುತ್ತದೆ ಅನ್ನಿಸಿತು. ಗಟ್ಟಿ ಮಾತಿನ ತಾಯಿ ಮರುಕದ ಸಿದ್ದವ್ವನಿಗೆ ಇಬ್ಬರು ಮಕ್ಕಳು, ದೊಡ್ಡ ಮಗ ಶಿವನು ಅಪ್ಪನ ಹಾಗೇ ಮಡ್ಡ, ಲೋಕದ ಬಗ್ಗೆ ನದರು ಇಲ್ಲದವನು. ಮನೆಯ ಜವಾಬ್ದಾರಿ ಹೊತ್ತಿದ್ದವಳು ಸಿದ್ದವ್ವನೇ. ಕೈಲಾಗದ ಗಂಡ. ಸಿದ್ದವ್ವನ ದೊಡ್ಡ ಸೊಸೆ ಕೈಲಾಗದ ಗಂಡನ ಜೊತೆ ಬಾಳಲಾರದೆ ಗಂಡನ ಜೊತೆಗಾರನ ಜೊತೆ ಸಂಬಂಧ ಬೆಳೆಸಿ ಮಗುವನ್ನು ಬಿಟ್ಟು ಅವನೊಡನೆ ಓಡಿ ಹೋದವಳು. ಸಿದ್ದವ್ವ ಅದನ್ನು ನೆನೆಯುತ್ತ ತಾನೂ ಓಡಿ ಹೋಗಿದ್ದರೆ ಸಂಸಾರ ಉಳೀತಿತ್ತಾ, ಗಂಡನ ಕೈಯಲ್ಲಾಗದು ಅಂತ ಬೇರೆಯವರಿಂದ ಎರಡು ಮಕ್ಕಳ ಪಡೀಲಿಲ್ವೇ, ಸಂಸಾರದ ಗುಟ್ಟು, ಕುಟುಂಬದ ಅಚ್ಚುಕಟ್ಟು, ಮರ್ಯಾದೆ ಕಾಪಾಡಲಿಲ್ಲವೇ, ಸೊಸೆ ಯಾಕೆ ಓಡಿ ಹೋದಳು, ದೊಡ್ಡ ಮಗ ಯಾಕೆ ದೇಶಾಂತರ ಹೋದ ಎಂದು ಪೇಚಾಡುತ್ತಾಳೆ. ತೋರಿಕೆಯ ಮರ್ಯಾದೆ, ಕುಟುಂಬ ಎಂಬ ವ್ಯವಸ್ಥೆಯನ್ನು ಕಾಪಾಡುವ ಹೊಣೆ, ಅದಕ್ಕಾಗಿ ರಾಜಿ ಮಾಡಿಕೊಂಡರೂ ತಪ್ಪಿಲ್ಲ ಅನ್ನುವ ನಿಲುವು ಈ ಸಂಕಲನದ ಬಹಳಷ್ಟು ಪಾತ್ರಗಳ ಒಳತೋಟಿಗೂ ದೌರ್ಬಲ್ಯಕ್ಕೂ ಕಾರಣವಾಗಿದೆ ಅನ್ನಿಸುತ್ತದೆ. + +ಆಚಾರ ಕೆಟ್ಟರೂ ಆಕಾರ ಕೆಡಬಾರದು ಅನ್ನುವ ಗಾದೆಯನ್ನು ನಾನು ಚಿಕ್ಕಂದಿನಲ್ಲಿ ಕೇಳುತ್ತಿದ್ದೆ. ಸಂಸ್ಕೃತಿ ಅನ್ನುತ್ತೇವಲ್ಲ ಅದರ ಆಕಾರ, ವ್ಯವಸ್ಥೆಗೆ ಇರುವ ಆಕಾರ ಇವು ಕೆಡದೆ ಮುಂದುವರೆಯಬೇಕು, ವರ್ತನೆ ಕೆಟ್ಟರೂ ಗೊತ್ತಾಗದ ಹಾಗೆ ಗುಟ್ಟು ಕಾಪಾಡಬೇಕು ಅನ್ನುವ ಮನೋಧರ್ಮವೇ ನಮ್ಮನ್ನು ‘ದಾರಿ ತಪ್ಪಿಸುವ ಗಿಡʼ ಆಗಿರಬಹುದು. ಈ ಆಕಾರವನ್ನು ಕಾಪಾಡಿಕೊಳ್ಳುವ ಒತ್ತಡವೇ ವ್ಯಕ್ತಿಗಳನ್ನು ದುರ್ಬಲರನ್ನಾಗಿಸಿ ರಾಜಿಗೆ ಒಲಿಯುವಂತೆ ಮಾಡುತ್ತದೆ ಅನಿಸುತ್ತದೆ. ಹಾಗೆ ನೋಡಿದರೆ ಆಳು ಕೂಗಿನ ಹಕ್ಕಿಗಿಂತ ದಾರಿ ತಪ್ಪಿಸುವ ಗಿಡ ಹೆಚ್ಚು ಅರ್ಥವ್ಯಾಪ್ತಿ ಇರುವ ರೂಪಕ. ಪ್ರತಿಯೊಬ್ಬರೂ, ಎಂಎಲ್‌ಎ ಇರಬಹುದು, ಸ್ಕೂಲಿನ ಪಾಠ ಹೇಳುವ ರಮೇಶ ಇರಬಹುದು, ಮೈಮೇಲೆ ಬರುವ ಶನಿದೇವರೋ, ಮಠದ ಮಕ್ಕಳ ದಾರಿ ತಪ್ಪಿಸುವ ಸ್ವಾಮಿಯೋ, ಗುಡಿಯ ತಮ್ಮಡಿಗಳೋ, ಕ್ವಾರಿಯ ಸಾಹುಕಾರನೋ, ಅವನ ದಳ್ಳಾಳಿಯೋ ಎಲ್ಲರೂ ದಾರಿ ತಪ್ಪಿಸುವ ಗಿಡಗಳೇ. ದಾರಿ ತಪ್ಪಬಾರದೆಂಬ ಒತ್ತಡ ಬಹಳಷ್ಟು ಜನರನ್ನು ರಾಜಿಗೆ ಒಪ್ಪುವಂತೆ ಅಥವಾ ಬಲಿಯಾಗುವಂತೆ ಅಥವಾ ದಿಕ್ಕು ತಿಳಿಯದ ತೀರ್ಮಾನ ಮಾಡಲಾಗದ ಸ್ಥಿತಿಗೆ ಸಿಕ್ಕಿ ಬೀಳುವಂತೆ ಮಾಡುತ್ತದೆ. ಒಬ್ಬರು ಇನ್ನೊಬ್ಬರ ದಾರಿ ತಪ್ಪಿಸುವ ಗಿಡಗಳಾಗದೆ, ಧರೆ ಹೊತ್ತಿ ಉರಿಯಲಾಗದಂತೆ ಬದುಕುವುದು ಬೆಳೆಯುವುದು ಸಾಧ್ಯವಿಲ್ಲವೇ ಅನ್ನುವ ಪ್ರಶ್ನೆ ಮೂಡಿತು. + + + +ಪ್ರಿಯ ಸ್ವಾಮೀ, ನೀವು ನಿರ್ಲಿಪ್ತವಾಗಿ ನಿರೂಪಣೆ ಮಾಡುವ ಶಕ್ತಿ ಇರುವ ಲೇಖಕರು. ಕಾಡಂಚಿನ ಊರು, ಜನಗಳ ಆಪ್ತ ಒಡನಾಟ ಇರುವವರು, ದೆವ್ವದ ಕಥೆಯಿಂದ ಹಿಡಿದು ಕಾಡಿನಲ್ಲಿ ಜೇನು ಕೀಳುವ ಕಸುಬು, ಕ್ವಾರಿ ವ್ಯವಹಾರ, ಸ್ಕೂಲು, ವಿವಿಧ ಸಮುದಾಯಗಳ ಜನರ ಬದುಕನ್ನು ಪ್ರೀತಿಯಿಂದ ಗಮನಿಸಿ ಕಾಣುತ್ತಿರುವವರು. ಹಾಗೆಯೇ ಇಂದ್ರಿಯಗಳ ಅನುಭವವನ್ನು ಸೂಕ್ಷ್ಮವಾಗಿ ಭಾಷೆಯಲ್ಲಿ ಹಿಡಿದಿಡುವ ಸಾಮರ್ಥ್ಯವೂ ನಿಮಗಿದೆ. ನಿಮ್ಮ ಬರವಣಿಗೆಗೆ ಸಮರ್ಪಕ ಅವಕಾಶ ಸಿಗಬೇಕೆಂದರೆ ಸಣ್ಣ ಕಥೆಯ ಸೀಮಿತ ವ್ಯಾಪ್ತಿಯನ್ನು ಮೀರಿ ಕಾದಂಬರಿಯ ಕಟ್ಟೋಣಕ್ಕೆ ಗಮನ ಕೊಡುವುದು ಒಳ್ಳೆಯದು. ಜನರ ಸಹಜ ಆಡುಮಾತು ಮತ್ತು ನಿರೂಪಣೆಯ ಶಿಷ್ಟ ಭಾಷೆಯ ಮಿಶ್ರಣದ ಹದ ಸಂಪಾದಿಸಿಕೊಂಡು, ಸನ್ನಿವೇಶ ಮತ್ತು ಕ್ರಿಯೆಗಳ ನಿರ್ಮಾಣದ ಮೂಲಕ ಪಾತ್ರಗಳು ಗಟ್ಟಿಗೊಳ್ಳುವಂತೆ ಮಾಡಿ ಮಹತ್ವದ ಕಾದಂಬರಿಯೊಂದನ್ನು ಬರೆಯುತ್ತೀರಿ ಎಂಬ ನಿರೀಕ್ಷೆ ಇದೆ, ಅದನ್ನು ನಿಜಗೊಳಿಸಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_590.txt b/Kenda Sampige/article_590.txt new file mode 100644 index 0000000000000000000000000000000000000000..38da834c73519e3df4fd9c485cf6af5404009c53 --- /dev/null +++ b/Kenda Sampige/article_590.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ಓ ನನ್ನ ಜೀವವೇಬರೆಯುವುದೇನೆಂದುತಿಳಿದಿಲ್ಲ ನನಗೆಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಅದೇನೋ ತಿಳಿಯುತ್ತಿಲ್ಲಹಾಯಾಗಿ ಮಲಗಿದ್ದೇನೆನೀನು ಬಿಟ್ಟು ಹೊರಟಕಂಪನದ ಮಂಪರಿನಲ್ಲಿನಿನ್ನ ದೇಹದ ಕೂದಲಿನಕಚಗುಳಿಗೆ ನನ್ನ ಮೈಯ್ಯೆಲ್ಲಾನುಂಗಿಕೊಳ್ಳುತ್ತಿದೆ + +ನಿನ್ನ ಮೈಯ್ಯ ಹೊಳಪಿಗೆನಿನ್ನ ಮೈಯ್ಯ ಸದ್ದಿಗೆಬೆವರಿ ಸವೆದು, ಒಣಗಿಕಣ್ಣಿನಿಂದ ಕಾಲಿನವರೆಗೆಒದ್ದೆಯಾಗಿದ್ದೇನೆ + +ಈ ಕ್ಷಣದ ಅಕ್ಷರಗಳು,ಈ ಪದಗಳು. ಹಾಡುಏನೂ ಹೇಳಲಾರವು ಸುಮ್ಮನೆನಾನೀಗ ಸತ್ತಂತೆ, ಮತ್ತೆ ಹುಟ್ಟಿದಂತೆಕಂಗಾಲಾಗಿದ್ದೇನೆನನ್ನನ್ನು ನಾನೇ ನೋಡಲಾಗದಷ್ಟುಕರುಣೆ ನನಗೆಒಂದು ಸಲ ಹೊಕ್ಕಿ ಬಿಡುತ್ತೇನೆಹೇಗಾದರೂಮತ್ತೆ ಇತ್ತ ಈ ಕನಸಿಗೆಬರಲಾರೆ + +ಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಮೈದೊಗಲು ಮುಚ್ಚುವುದೂ ಬೇಡನಿನ್ನ ರಕ್ತ ಮಾಂಸ, ಹೆಂಗರುಳುಆ ಮುಖದ ಇಷ್ಟು ಹತ್ತಿರಒತ್ತಿ ಬಿಡುವ ಉಸಿರು, ಹಸಿವುವಾಕರಿಕೆ, ಆಕಳಿಕೆನಾನಿನ್ನೂ ನೋಡದ ಕಾಲಬೆರಳಿನ ನೆಟಿಕೆಒಂದು ಸಲ ಹುದುಗಿ ಬಿಡುತ್ತೇನೆಎಲ್ಲಾದರೂನಿನ್ನ ದೇಹದ ಒಳಗೆ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_591.txt b/Kenda Sampige/article_591.txt new file mode 100644 index 0000000000000000000000000000000000000000..dd8f32d4b2c15d0d7f85eef9ac199e3e60d83b79 --- /dev/null +++ b/Kenda Sampige/article_591.txt @@ -0,0 +1,29 @@ +ಇದು ಕನ್ನಡದ ಹೊಸ ಕವಿತೆಗಳ ತಾಣ. ಬಿರಿದ ಕುಸುಮಗಳಿಂದ ಕಿಕ್ಕಿರಿದುಹೋಗಿರುವ ಖುಷಿಯ ಟೊಂಗೆಗಳಲ್ಲಿ ಸುಮ್ಮನೇ ಕುಳಿತಿರುವ ಒಂಟಿಹಕ್ಕಿಗಳು ಇಲ್ಲಿರುವ ಈ ಕವಿತೆಗಳು. ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. + +ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ. ಕೆಲವೊಮ್ಮೆ ಜೋರು ಬಾಯಿಯ ಗಟ್ಟಿ ತೋಳಿನ ಕವಿತೆಗಳೂ ಇಲ್ಲಿರುತ್ತವೆ.ಆದರೆ ಇವೆಲ್ಲವೂ ಕನ್ನಡದ ಕವಿತೆಗಳು.ಒಂದಕ್ಕೊಂದು ಸವತಿಯರಂತೆ ಒಂದೇಕಡೆ ಹೇಗಾದರೂ ಏಗಿಕೊಂಡಿರುತ್ತವೆ.ಒಮ್ಮೊಮ್ಮೆ ಇದೇ ತರಹದ ಜಾಯಮಾನಗಳ ಪರಭಾಷಾ ಕವಿತೆಗಳೂ ಇಲ್ಲಿ ಕನ್ನಡಕ್ಕೆ ಬಂದಿರುತ್ತವೆ. ಈ ದಿನನಾಗರಾಜ ವಸ್ತಾರೆಬರೆದ ದಿನದ ಕವಿತೆ ಇದೆ. + +ಸಾರ್ವಕಾಲಿಕ + +ಸೂರ್ಯ ನಕ್ಷತ್ರ ಕಪ್ಪುರಂಧ್ರಗಳಬಿಗ್‍ಬ್ಯಾಂಗ್ ಗೊತ್ತಿದ್ದರೆಸಾರ್ವಕಾಲಿಕ ಎಂಬುದು ಎಷ್ಟರ ಮಟ್ಟಿಗಿನ ಸತ್ಯ?ಅದರ ತುಣುಕು ನಿಯತಿಯೊಳಗಿನ ಮಿತಿನಾವು, ನಮ್ಮ ತಿಳಿವು, ಸ್ಥಿತಿಗತಿ ಎಲ್ಲ + +ಕಾಗದ ಕೆತ್ತುವ ಊಹೆಯ ಮೊನೆಗೆಮುಟ್ಟಿದರೆ ಚುಕ್ಕಿ ಕಟ್ಟಿದರೆ ಅಸೀಮ ಸಿದ್ಧಿಅಣುವಲ್ಲಿ ನೆಟ್ಟು ಅನೂಹ್ಯ ನಿಲುಕುಗಳಲ್ಲಿಬೆರಳು ಹೊರಳಿಸುವ ವಾಂಛೆ + +ಗುಟುಕು ಬಿಯರು ಗೀತೆ ಗುಟುರುಬ್ರಹ್ಮದ ಹೊಸ ವ್ಯಾಖ್ಯಾನ.Ever expanding universe ಅಂತೆಆದಿಯಿಲ್ಲ ಅಂತ್ಯವಿಲ್ಲವಂತೆ-ಅಂತಾದರೆ ಸೃಷ್ಟಿಕರ್ತ ದೇವರು ಮಾಡಿದ್ದಾದರೂಏನು ಬರೇ ಮಣ್ಣಂಗಟ್ಟಿ! -ಅಂತಹಿಂದಿನ ಸಾಲಲ್ಲೊಂದು ಗಟ್ಟಿ ಸ್ವಗತ. + +ಓರಗೆಯವನೊಬ್ಬ ಎದೆಯೊಡೆದು ಸತ್ತರೆವಧುವಾಗಿ ಬಂದವಳು ಕದ್ದು ಕೈಕೊಟ್ಟರೆಒಲುಮೆ ಮತ್ತೊಮ್ಮೆ ನಲುಗಿ ಹಲುಬಿದರೆಬುಡ ಅಲುಗಿದ ಮರದಂತೆಇರವು ಘಾಸಿಧೊಪ್ಪನೆ ಉರುಳಿದರೆವಿಧಿವತ್ತು ಸೊನ್ನೆ-ಬದುಕು. + +ವಿಚಿತ್ರ ನೋಡಿಅಸೀಮದ ಪರಿವೆಯಲ್ಲೂಲೋಕವೆಂದರೆ ಕೈಗೆಟುಕುವ ಸೀಮೆನಾ ಒಂದರ ಸುತ್ತಲನಾನಾರೀತಿ-ಪ್ರೀತಿ ಅನುರಕ್ತಿ ಕೆಲವು ಪ್ರಣಯಭಂಗವಿರಸ ವಿಷಾದಕ್ಕೋ ನಾನಾ ಭಂಗಿ + +ಲೋಕವೆಂದರೆ ಅಸೀಮದಲ್ಲಿಎಟುಕಿದ್ದು, ಎಟುಕಿಯೂ ತಪ್ಪಿದ್ದು + +ತಪ್ಪದ್ದುಯಾರೋ ಇಟ್ಟ ಹೆಸರ ವಾಂಛೆನಮ್ಮ ಕಾಲದಲ್ಲೇಎಷ್ಟನ್ನೋ ನಾವೇ ಮರೆತರೂall time great ಎಂಬ ಲಗತ್ತುಒಮ್ಮೆ ಇರುವಾಗಲೇಹತ್ತು ಜೀವಿತದ ಮೊತ್ತತೆಗೆದ ಕೆಲವಕ್ಕೆ ಮಾತ್ರ. + +ಅರವತ್ತರ ಪಡಿಯಲ್ಲೂಮತ್ತೆ ಉತ್ತುಂಗ ಸಾಧಿಸಿದಬಚ್ಚನ್‍ಗೆ ಪೈಪೋಟಿಅಂಗಿ ಕಳಚುವ ಬಾಲಿವುಡ್ ಗಂಡುಗಳದಿನದಿನದ ಹೆಸರು… + +ಇಲ್ಲಿಮಹಾತ್ಮಾಗಾಂಧಿರಸ್ತೆಅಶೋಕ ಚಾಲುಕ್ಯಹೋಟೆಲುಗಳುಅನಿಲ್ ಕುಂಬ್ಳೆಯೊಂದುವೃತ್ತ + +ಸಾಧ್ಯವಾದಲ್ಲಿ ಉಳಿದುಕೊಳ್ಳಲಿಹೆಸರು, ನನಗಿಂತಸೋತ ಎಲ್ಲ ಪ್ರೀತಿಗಳದ್ದು + +(ರೇಖಾಚಿತ್ರ: ರೂಪಶ್ರೀ ಕಲ್ಲಿಗನೂರು) + +ಕವಿ, ಆರ್ಕಿಟೆಕ್ಟ್ ಮತ್ತು ಕಥೆಗಾರ. ೨೦೦೨ರಲ್ಲಿ ದೇಶದ ಹತ್ತು ಪ್ರತಿಭಾನ್ವಿತ ಯುವ ವಿನ್ಯಾಸಕಾರರಾಗಿ ಆಯ್ಕೆಗೊಂಡವರಲ್ಲಿ ಇವರೂ ಒಬ್ಬರು. \ No newline at end of file diff --git a/Kenda Sampige/article_592.txt b/Kenda Sampige/article_592.txt new file mode 100644 index 0000000000000000000000000000000000000000..9564036ca0e0a58a510ebbb73139755ce03530d6 --- /dev/null +++ b/Kenda Sampige/article_592.txt @@ -0,0 +1,11 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ಈ ಮಿಂದ ಕೂದಲುಗಳು + +ಹಂಬಲದ ಹೊತ್ತು ಕಾಣುವ ಸುಖನೀನಿರಬಹುದುಈ ಮಿಂದ ಕೂದಲುಗಳುಎಷ್ಟು ಹಾಯಾಗಿ ಹಾರಾಡುತ್ತಿದೆಅಲ್ಲೇ ಇರುವೆ ನೀನುಒದ್ದೆ ಮಣ್ಣಿನ ಮುದ್ದೆಯಲ್ಲಲ್ಲಒಂದು ರಾಶಿ ಬಿಳಿ ಮರಳಿನಏಕಾಂತದಲ್ಲಿ + +ಈಗ ನೋಡು ನನ್ನೊಳಗೆ ಹೊರಗೆನೀನಿಲ್ಲ; ಒಡನೆ ಬೀಸುವ ಗಾಳಿಗೂ ಹದವಿಲ್ಲಕೈಹಿಡಿದು ನಿನ್ನೊಡನೆ ನಡೆವನಮ್ಮ ನೆರಳಿನಷ್ಟುಇಲ್ಲಿರುವ ಬಣ್ಣಗಳು ಚಂದವಿಲ್ಲಹಾಡಿಗೆ ಮೂಡುವ ಜೀವವೇವಿಸ್ಮಯಕ್ಕೆ ಕುದಿಯುವ ಮೌನವೇಅತೀ ದೂರದವರೆಗಿನ ಸಂಕಟವೇಸೊಬಗೆಂದರೆ ನೀನೇ ಇರಬೇಕು + +ನಾನಿರುವ ತೀರವೇಹೇಗೆ ಪ್ರೀತಿಸಲಿ ನಿನ್ನನನ್ನ ನೀನುಗಳೆಲ್ಲಾ ನೀನಾಗುಕತ್ತು ಕೊಂಕಿಸಿ ಕಾಲು ಚಾಚಿ ಕೈ ನೀಡಿಒಂದಿಷ್ಟೂ ಕಾರಣವಿರದೆ ನಕ್ಕುನನ್ನನ್ನು ಸುಮ್ಮನೆ ಹಾಗೆ ಒಡ್ಡಿಕೊಳ್ಳಲು ಬಿಡು + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_593.txt b/Kenda Sampige/article_593.txt new file mode 100644 index 0000000000000000000000000000000000000000..2475fdeec6cae94706af601d73ac1e73be8fa233 --- /dev/null +++ b/Kenda Sampige/article_593.txt @@ -0,0 +1,15 @@ +ಈಗ ಕೆಂಡಸಂಪಿಗೆಯಲ್ಲಿ ದಿನಕ್ಕೊಂದು ಕವಿತೆ ಕಂಗೊಳಿಸುತ್ತಿದೆ. ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರುತ್ತಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ.  ಕವಿಗಳು, ಕವಿತೆಗಳನ್ನು ಇಷ್ಟಪಟ್ಟು ಅನುವಾದಿಸಿದವರು ತಮ್ಮ ಬರಹಗಳನ್ನು ಇ-ಮೇಲ್ ಮೂಲಕ ನಮಗೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ಇಂದುನಕ್ಷತ್ರಬರೆದ ದಿನದ ಕವಿತೆ. + +ನೀನೊಂದು ಅಲುಗಾಡದ ಗೊಂಬೆಯ ಹಾಗೆ ನಿಂತು ಬಿಡುನಿನ್ನ ಕಣ್ಣಿಂದ ನನ್ನ ಕಣ್ಣನ್ನು ಹೆಕ್ಕಿ ನಿನ್ನ ನೋಡುತಾನಾನು ನಿಂತುಬಿಡುವೆ + +ಮರಳಿಸು ನನಗೆ ಮತ್ತೆ ನಿನ್ನ ಕಲ್ಲು ದೇಹವನ್ನುನಿನ್ನ ಗಡಸು ಕೈಯ್ಯ ಗೆರೆಗಳು, ಅಡ್ಡಾದಿಡ್ಡಿ ಕತ್ತರಿಸಿದಸಣ್ಣ ಉಗುರುಗಳಿಗೆ ನಾನು ಹಾತೊರೆದುಮುತ್ತುಗಳು ತುಂಬಿದ ನಿನ್ನ ತುಟಿಗಳು, ಎಂದೋನಕ್ಕ ನಗು ನಿನಗೆ ಮಾತ್ರ ಕೇಳುವ ನನ್ನ ದನಿನಿನ್ನ ಆತ್ಮದ ಒಸರುವಿಕೆಯಿಂದಪಡೆದ ಜೀವ ನನ್ನದು + +ಹೋಗದಿರು ಒಂದಿರುಳೂಅಲುಗಾಡದ ಮೌನದ ಹಾಗೆ ನಿಂತುಬಿಡು + +ನೀನು ಅಲ್ಲಿ ಇರುವುದಿಲ್ಲ ನಿನ್ನ ದನಿ ನನಗೆ ಕೇಳುವುದಿಲ್ಲಇದೆಲ್ಲಾ ಇಲ್ಲದಿದ್ದರೂಮಹಾಪ್ರಸಾದದ ಹಾಗೆ ನಿನ್ನ ಕಣ್ಣಿಗೆ ಒತ್ತಿಕೊಳ್ಳುವುದುಇಷ್ಟೇ ಸಾಕು ನನಗೆ + +ನಾನು ಪ್ರೇಮಿಸುವುದನ್ನು ಮರೆತಿರುವೆ + +ಪ್ರೇಮಿಸಲು ದಿನಗಳು ಬರುವುದಿಲ್ಲನಾವು ಇರುವೆವು ಎಂದರೆ ಚಿಟ್ಟೆಗಳ ಕನಸುಒಂದಿರುಳೂ ಬಿಡದೆ ಜೊತೆಗಿರುವುದು ಇತ್ಯಾದಿನಾನು ಕೂಗಿ ಕರೆಯಲು ನಿನಗೊಂದು ಹೆಸರೇ ಇಲ್ಲಾನಾನು ಕರೆದಾಗ ನಿನಗೆ ಬರಲುದಾರಿಯೂ ಇಲ್ಲಇನ್ನೂ ಬೇಕಾದಷ್ಟು ಇದೆ ಹೇಳಲುಬರುತ್ತಿಲ್ಲ ನನಗೆ + +ಬೆಳದಿಂಗಳಲ್ಲಿ ಕಂಡು ಬರುವ ಕಾಡು ಹೂ.ಕಂಡೂ ಕಾಣಿಸದಂತಿರುವ ಕನ್ನಡದ ಕವಯಿತ್ರಿ.ಒಮ್ಮೊಮ್ಮೆ ವಿರಾಗಿಣಿ. ಕೆಲವೊಮ್ಮೆ ಲಾವಾಗ್ನಿ! \ No newline at end of file diff --git a/Kenda Sampige/article_6.txt b/Kenda Sampige/article_6.txt new file mode 100644 index 0000000000000000000000000000000000000000..519264eb2c832b3c77d2cae553f69a4a95dcaf93 --- /dev/null +++ b/Kenda Sampige/article_6.txt @@ -0,0 +1,23 @@ +ಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು ದಿನಗಳು ಕೂಡ ತುಂಬಾ ಅಚ್ಚಳಿಯದೆ ನೆನಪಿನಲ್ಲಿ ಇವೆ. ನನ್ನ ಅಪ್ಪ ಅಮ್ಮ ಅಜ್ಜ ಅಜ್ಜಿಯಂದಿರು ಎಲ್ಲರೂ ಅಲ್ಲಿಯೇ ಹುಟ್ಟಿ ಬೆಳೆದವರು. ಅಲ್ಲಿ ನಮ್ಮ ಹಳೆಯದಾದ ದೊಡ್ಡದೊಂದು ಮನೆ ಇತ್ತು. ಅದೊಂದು ಬಂಗಲೆ ಇದ್ದ ಹಾಗೆ ಇತ್ತು. ಅಲ್ಲಿ ನಮ್ಮ ಕೂಡು ಕುಟುಂಬದ ಸದಸ್ಯರೆಲ್ಲ ಬಹಳ ವರ್ಷದವರೆಗೆ ವಾಸವಾಗಿದ್ದರು. ಆಮೇಲಾಮೇಲೆ ಸ್ವತಂತ್ರ ನಂತರದ ಕಾಲಘಟ್ಟದಲ್ಲಿ ಸ್ವಂತದ ಕೃಷಿ ಭೂಮಿಯಿದ್ದರೂ ಕೂಡ ಅದನ್ನು ಮಾಡಲಾಗದೆ ಕಲಿಕೆಗೆ ಒತ್ತು ಕೊಟ್ಟು ಆಗ ಹೊಸದಾಗಿ ಸೃಷ್ಟಿಯಾಗಿದ್ದ ಕೆಲವು ಅವಕಾಶಗಳನ್ನು ಹುಡುಕಿಕೊಂಡು ಬೇರೆ ಬೇರೆ ಕಡೆಗೆ ಕೆಲಸ ಮಾಡಿಕೊಂಡು ವಾಸವಾದರು. ಕೃಷಿ ಭೂಮಿಗಳು ಕೂಡ ಕ್ರಮೇಣ ಕೈ ಜಾರಿ ಹೋದವು. ಹಾಗಾಗಿದ್ದಕ್ಕೆ ಯಾರೂ ಅಷ್ಟೆಲ್ಲ ತಲೆ ಕೆಡಿಸಿಕೊಳ್ಳಲೂ ಇಲ್ಲ. ಹಾಗೆ ಎಲ್ಲರೂ ದೇಶದ ಒಂದೊಂದು ಕಡೆ ಸೇರಿಕೊಂಡರು. ತಮ್ಮ ತಮ್ಮ ಜೀವನವನ್ನು ರೂಪಿಸುತ್ತ ಹೋದರು. ಅವರಲ್ಲಿ ನನ್ನ ದೊಡ್ಡಪ್ಪನ ಮಗ ಆಗಿನ ಕಾಲದಲ್ಲಿ ಐಐಟಿ ಮಾಡಿ ಒಂದಿಷ್ಟು ವರ್ಷಗಳು ಬೆಂಗಳೂರಿನಲ್ಲಿ ಕೆಲಸ ಮಾಡಿ ಮುಂದೊಮ್ಮೆ ಅಮೆರಿಕೆಗೆ ಹೋಗಿ ಅಲ್ಲಿಯೇ ತನ್ನ ಜೀವನವನ್ನು ರೂಪಿಸಿಕೊಂಡ. + +ಗದಗಿನ ಮನೆ ಹಾಗೆಯೇ ಉಳಿಯಿತು. ಆ ಮನೆ ನನ್ನ ಅಪ್ಪ ಹಾಗೂ ಅವನ ಅಣ್ಣಂದಿರಿಗೆ ಸೇರಿದ ಆಸ್ತಿಯಾಗಿತ್ತು. ಒಂದು ಸಮಯದಲ್ಲಿ ಅದನ್ನು ಬೇರೆಯವರಿಗೆ ಮಾರಿಬಿಡೋಣ ಅಂತ ನಿರ್ಧಾರ ಮಾಡಿದರಾದರೂ, ನನ್ನ ಅಮ್ಮನಿಗೆ ಆ ಮನೆಯ ಮೇಲೆ ಇದ್ದ ವ್ಯಾಮೋಹದಿಂದ ನನ್ನ ಅಪ್ಪ ಅದನ್ನು ತಾನೇ ಖರೀದಿಸಿದರು. ಆದರೆ ಕಾರಣಾಂತರಗಳಿಂದ ಆ ಮನೆಯಲ್ಲಿ ವಾಸಮಾಡಬೇಕು ಎಂಬ ನನ್ನ ಅಮ್ಮನ ಕನಸು ಕನಸಾಗಿಯೇ ಉಳಿಯಿತು. ನಮ್ಮ ಹಳೆಯ ಮನೆ ಇನ್ನೂ ಹಳೆಯದಾಗಿತ್ತು! ಹಿರಿಯರಲ್ಲಿ ಹಲವರು ಕ್ರಮೇಣ ಕಾಲವಶವಾದರು. ಅಲ್ಲಿದ್ದ ಬಾಡಿಗೆದಾರರು ಮಾಡಿದ ಮೋಸದಿಂದ ಆ ಮನೆಯನ್ನೂ ಕೂಡ ತುಂಬಾ ಕಡಿಮೆ ಬೆಲೆಗೆ ಮಾರಬೇಕಾಯ್ತು. + +ಹಾಗೆ ನಲವತ್ತು ವರ್ಷಗಳ ಹಿಂದೆಯೇ ಅಮೇರಿಕೆ ಸೇರಿಕೊಂಡ ನನ್ನ ಅಣ್ಣ ನನಗಿಂತ ತುಂಬಾ ದೊಡ್ಡವನು. ಅವನಿಗೂ ನಮಗೂ ಸಂಪರ್ಕ ತಪ್ಪಿ ಹೋಗಿತ್ತು. ಈಗ ಅವನನ್ನು ಭೇಟಿ ಮಾಡುವ ಒಂದು ಅವಕಾಶ ಇತ್ತು. ಯಾಕೆಂದರೆ ನಾನೂ ಅಮೇರಿಕೆಯಲ್ಲೇ ಇದ್ದೆನಲ್ಲ! ಅವನೊಬ್ಬ ವಿಶಿಷ್ಟ ವ್ಯಕ್ತಿ. ತುಂಬಾ ಜಾಣ. ಎಷ್ಟೆಂದರೂ ನನ್ನ ಅಣ್ಣನಲ್ಲವೇ ಅಂತ ಹೆಂಡತಿ ಎದುರು ಜಂಭ ಕೊಚ್ಚಿಕೊಂಡು ತಮಾಷೆ ಮಾಡುತ್ತಿದ್ದೆ! ಆದರೆ ಅವನು ಒಂದು ಮೊಬೈಲ್ ಕೂಡ ಇಟ್ಟುಕೊಂಡಿರಲಿಲ್ಲ. ಅದು ತನಗೆ ಅವಶ್ಯಕ ಅಲ್ಲ ಅಂತಲೇ ಅವನು ಹೇಳುತ್ತಿದ್ದ ಅಂತ ಅವನ ತಂಗಿ ವಿದ್ಯಾಳಿಂದ ತಿಳಿಯಿತು. ಹೀಗಾಗಿ ಅವನ ಜೊತೆಗೆ ಮಾತಾಡಬೇಕು ಅಂತ ಕ್ಯಾಲಿಫೋರ್ನಿಯದಲ್ಲಿ ಇದ್ದ ಅವನ ತಂಗಿ ವಿದ್ಯಾ ಹತ್ತಿರ ಹೇಳಿಸುವುದರ ಜೊತೆಗೆ, ನಾನು ನಿನ್ನ ಭೇಟಿಗೆ ಬರಬೇಕು ಅಂತಿದ್ದೇನೆ ಅಂತ ಅವನಿಗೊಂದು ಇಮೇಲ್ ಬರೆದೆ. ಅದನ್ನು ನೋಡಿ ಅವನು ಉತ್ತರಿಸುವವರೆಗೆ ಕಾಯಬೇಕು. ಹೀಗಿತ್ತು ಪರಿಸ್ಥಿತಿ! ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು. ಬೆಂಗಳೂರಿನಲ್ಲಿದ್ದ ಅಪ್ಪನಿಗೂ ಕೂಡ ಕರೆ ಮಾಡಿ ಅವನ ಭೇಟಿಗೆ ಹೋಗುತ್ತಿದ್ದೇನೆ ಅಂತ ಹೇಳಿದೆ. ಅಪ್ಪನೂ ಕೇಳಿ ಬಹಳ ಸಂತೋಷ ಪಟ್ಟ. + + + +ಅಣ್ಣ ಇದ್ದಿದ್ದು ಅಮೆರಿಕೆಯ ಓಹಾಯೋ ರಾಜ್ಯದಲ್ಲಿ. ಅದೇ ಹೆಸರಿನ ನದಿಯಿಂದ ಆ ರಾಜ್ಯಕ್ಕೆ ಆ ಹೆಸರು ಬಂತಂತೆ. ಅವನು ಹೇಳಿದ್ದ ಅವನ ಮನೆಗೆ ಹತ್ತಿರದ ಕ್ಲೀವ್ ಲ್ಯಾಂಡ್ ವಿಮಾನ ನಿಲ್ದಾಣಕ್ಕೆ ಟಿಕೆಟ್ ಮಾಡಿಸಿದ್ದೆ. ನಾವು ವಿಮಾನದಿಂದ ಇಳಿದು ಹೊರಗೆ ಬರುವಷ್ಟರಲ್ಲಿ ತಾನೇ ಖುದ್ದಾಗಿ ನಮ್ಮನ್ನು ಕರೆತರಲು ತನ್ನ ಕಾರಿನಲ್ಲಿ ಅಣ್ಣ ಬಂದಿದ್ದ. ಅವನನ್ನು ಫೋಟೋದಲ್ಲಿ ನೋಡಿದ್ದೆನಾದರೂ ಪ್ರತ್ಯಕ್ಷ ಕಂಡಾಗ ಆದ ಖುಷಿಯೇ ಬೇರೆ. ನೋಡಲು ನನ್ನ ಅಪ್ಪನ ಹಾಗೆಯೇ ಕಾಣುತ್ತಿದ್ದ. ಅವನ ಮನೆಗೆ ಹೋದಾಗ ನನಗೆ ರೋಮಾಂಚನ ಆಯಿತು. ದಟ್ಟ ಕಾಡಿನ ಮಧ್ಯದಲ್ಲಿ ಇದ್ದ ಆ ಮನೆ ನೋಡಿದಾಗ ಗದಗಿನ ನಮ್ಮ ಪುರಾತನ ಮನೆ ನೆನಪಾಗಿತ್ತು. ಅಲ್ಲಿಯೂ ಕೂಡ ಚಳಿಗಾಲದಲ್ಲಿ ಹೆಚ್ಚು ಹಿಮ ಬೀಳುವ ಕಾರಣ ಕಟ್ಟಿಗೆಯನ್ನೇ ಬಳಸಿ ಕಟ್ಟಿದ ಬೆಚ್ಚಗಿನ ಮನೆ ಅದು. ಅವನ ಪೂರ್ತಿ ಸೈಟ್ ಅರ್ಧ ಎಕರೆ ಅಷ್ಟಿತ್ತು! ಅಲ್ಲಿನ ನಿಯಮದ ಪ್ರಕಾರ ಮನೆ ಕಟ್ಟಲು ಜಾಗ ಕೊಳ್ಳಬೇಕು ಅಂದರೆ ಕನಿಷ್ಠ ಅರ್ಧ ಎಕರೆ ಕೊಳ್ಳಲೇಬೇಕಂತೆ! ಜನಸಂಖ್ಯೆ ಕಡಿಮೆ ಹಾಗೂ ಸಿಕ್ಕಾಪಟ್ಟೆ ಜಾಗ ಇದ್ದಾಗ ಇಂತಹ ನಿಯಮಗಳನ್ನು ಮಾಡಬಹುದೇನೊ! + +ಅವರ ಮನೆಯಲ್ಲಿ ತುಂಬಾ ಪ್ರೀತಿಯಿಂದ ನೋಡಿಕೊಂಡರು. ಅತ್ತಿಗೆಯನ್ನು ಕೂಡ ಮೊದಲ ಬಾರಿಗೆ ನಾವೆಲ್ಲ ಭೇಟಿಯಾಗಿದ್ದರೂ ಅವರು ಎಷ್ಟೋ ವರ್ಷಗಳಿಂದ ನಮ್ಮ ಪರಿಚಯ ಇದೆ ಅನ್ನುವಂತೆಯೇ ಆತ್ಮೀಯವಾಗಿ ಮಾತಾಡಿಸಿ ಹಲವು ಬಗೆಯ ಭಕ್ಷ್ಯಗಳನ್ನು ಮಾಡಿ ಉಣಬಡಿಸಿದರು. ಅಮೆರಿಕೆಗೆ ಹೋದವರು ಎಲ್ಲವನ್ನೂ ಮರೆತುಬಿಡುತ್ತಾರೆ ಎಂಬ ಕೆಲವು ತಪ್ಪು ಕಲ್ಪನೆಗಳನ್ನು ತೊಡೆದುಕಾಕಲು ಈ ಭೇಟಿ ನನಗೆ ಮತ್ತೆ ಸಹಾಯ ಮಾಡಿತು. ಅಣ್ಣ ಅದೇ ವರ್ಷ ಕೆಲಸದಿಂದ ನಿವೃತ್ತನಾಗಿದ್ದ. ಹೀಗಾಗಿ ನಮ್ಮ ಜೊತೆಗೆ ಸಮಯ ಕಳೆಯಲು ಅವನಿಗೂ ಪುರುಸೊತ್ತು ಇತ್ತು. ಆದರೆ ನಿವೃತ್ತನಾದೆ ಎಂಬ ಹುರುಪಿನಲ್ಲಿ ಮೊಮ್ಮಕ್ಕಳ ಜೊತೆಗೆ ಸೇರಿ ವಾಲಿಬಾಲ್ ಅಂತದೇನೋ ಆಡಲು ಹೋಗಿ ಆಗ ತಾನೇ ತನ್ನ ಮೊಳಕಾಲಿಗೆ ಪೆಟ್ಟು ಮಾಡಿಕೊಂಡಿದ್ದ. ಆದರೂ ನಮ್ಮ ಜೊತೆಗೆ ತನ್ನದೇ ಕಾರಿನಲ್ಲಿ ಅಲ್ಲಿಲ್ಲಿ ಅಡ್ಡಾಡಿಸುತ್ತಿದ್ದ. ನಾನು ಕಾರ್ ಓಡಿಸುವೆ ಕೊಡು ಅಂದರೆ ಬೇಡಾ ಅಂತಿದ್ದ. ನಾನೀಗಾಗಲೇ ಒಂದು ವರ್ಷದಿಂದ ಅಮೆರಿಕೆಯಲ್ಲಿ ಇದ್ದೇನಾದ್ದರಿಂದ ಅಲ್ಲಿ ಕಾರ್ ಓಡಿಸುವ ಸಾಮರ್ಥ್ಯ ನನಗೆ ಇತ್ತಾದರೂ ಅವನಿಗೆ ಏನೋ ಹಿಂಜರಿಕೆ. + +ಅವನ ಮನೆಯಿಂದ ಹೆಚ್ಚು ಕಡಿಮೆ ಮೂರುವರೆ ಗಂಟೆಗಳ ಅಂತರದಲ್ಲಿ ನಯಾಗರ ಜಲಪಾತ ಇತ್ತಾದ್ದರಿಂದ ಅಲ್ಲಿಗೇ ಮೊದಲು ಹೋಗಿ ಬರೋಣ ಅಂತ ಅಣ್ಣನಿಗೆ ಹೇಳಿದ್ದೆ. ಆದರೆ ಅಲ್ಲಿಗೆ ಹೋಗಲು ನಾನೇ ಕಾರ್ ಬಾಡಿಗೆಗೆ ತೆಗೆದುಕೊಳ್ಳುವೆ, ಅದರಲ್ಲಿಯೇ ಹೋಗೋಣ ಅಂತ ಅಂದೆ. ಆಗಲಾದರೂ ನಾನು ಡ್ರೈವ್ ಮಾಡಬಹುದು, ಅವನು ಡ್ರೈವ್ ಮಾಡೋದನ್ನ ತಪ್ಪಿಸಬಹುದು ಎಂಬುದು ನನ್ನ ಯೋಜನೆ ಆಗಿತ್ತು. ಮೂರು ಗಂಟೆಗಳಷ್ಟು ಕಾರ್ ಓಡಿಸಿದರೆ ಅವನ ಕಾಲಿಗೆ ಇನ್ನೂ ಕಷ್ಟ ಆಗೋದು ಬೇಡ ಅನ್ನುವುದು ನನ್ನ ಯೋಚನೆಯ ಹಿಂದಿರುವ ಉದ್ದೇಶ ಆಗಿತ್ತು. ಆದರೆ ಅಣ್ಣ ಕೇಳಬೇಕಲ್ಲ. ಉಹೂಂ ತಾನೇ ಓಡಿಸುವೆ ಅಂತ ಅಂದ. ಅಣ್ಣಂದಿರು ಅಪ್ಪಂದಿರಿಗೆ ಹೆಚ್ಚು ವ್ಯತ್ಯಾಸ ಇರೋದಿಲ್ಲ. ಎಷ್ಟೇ ದೊಡ್ಡವರಾದರು, ಚಿಕ್ಕವರಿಗೆ ಏನೂ ಬರೋದಿಲ್ಲ, ಅವರಿಗೆ ಜವಾಬ್ದಾರಿ ಕೊಟ್ಟರೆ ಏನು ಮಾಡಿಬಿಡುತ್ತಾರೋ, ಎಲ್ಲಿ ಎಡುವುತ್ತಾರೋ ಏನೋ ಎಂಬಂತಹ ಕಾಳಜಿಯ ಹಾಗೆ ತೋರುವ ಭಯಗಳು ಅವರಿಗೆ ಯಾವಾಗಲೂ ಇದ್ದೆ ಇರುತ್ತವೆ. ನಾನೂ ನನಗಿಂತ ಕಿರಿಯರ ಜೊತೆಗೆ ಹಾಗೆಯೇ ಮಾಡುತ್ತಿದ್ದೆನಲ್ಲ! + +ಆದರೂ ಅವನ ಗಟ್ಟಿತನ ಮೆಚ್ಚಿದೆ. ತನ್ನ ಮೊಳಕಾಲಿನ ನೋವನ್ನು ಸಹಿಸಿ ಮೂರು ಗಂಟೆ ಕಾರ್ ಓಡಿಸಿದ್ದು ನೋಡಿ ನಮಗೆ ಅಚ್ಚರಿ. ಮಧ್ಯದಲ್ಲಿ ಒಂದು ಹೋಟೆಲ್ ಬಳಿ ನಿಂತೆವು. ಅಲ್ಲಿ ಏನಾದರೂ ತಿಂದುಕೊಂಡು ಹೋಗೋಣ ಅನ್ನುವುದರ ಜೊತೆಗೆ ಟಾಯ್ಲೆಟ್ ಗೆ ಹೋದರಾಯ್ತು ಅಂತಲೇ ಹೋದೆವು. ಬಹುಷಃ ಹತ್ತಿರದಲ್ಲಿ ಇನ್ಯಾವುದೇ ಹೋಟೆಲ್ ಇರಲಿಲ್ಲ ಅಂತಲೋ ಏನೋ ಸಿಕ್ಕಾಪಟ್ಟೆ ಗದ್ದಲ ಅಲ್ಲಿತ್ತು. ಹೆಚ್ಚುಕಡಿಮೆ ನಮ್ಮ ಬಸ್ ನಿಲ್ದಾಣಗಳಲ್ಲಿ ಇರುವ ಹೋಟೆಲ್ ಗಳಷ್ಟೇ ಗದ್ದಲ. ಅಲ್ಲಿನ ರೆಸ್ಟ್ ರೂಮ್ ಗೆ ಕೂಡ ತುಂಬಾ ಜನರು ಕಾಯುತ್ತಿದ್ದರು. ಅದ್ಯಾಕೆ ಟಾಯ್ಲೆಟ್ ಗೆ ರೆಸ್ಟ್ ರೂಮ್ ಅಂತಾರೋ ನಾ ಕಾಣೆ. ನಾವು ಕೂಡ ಅಲ್ಲಿದ್ದಾಗ ಹಾಗೆಯೇ ಹೇಳುತ್ತಿದ್ದೆವು. ಅಮೆರಿಕನ್ನರಿಗೆ ಅವರಿಗೆ ರೂಢಿಗತ ಆಗಿರುವ ಶಬ್ದಗಳನ್ನು ಬಿಟ್ಟು ಬೇರೆ ಏನಾದರೂ ಹೇಳಿದರೆ ಅರ್ಥವೇ ಆಗೊಲ್ಲ. ಅಷ್ಟು ದಡ್ಡರು ಅವರು! ನಾವು ಎಲ್ಲಿ ಹೋದರೂ ನಮ್ಮದನ್ನು ಬಿಟ್ಟು ಅಲ್ಲಿಯದನ್ನು ರೂಢಿಸಿಕೊಳ್ಳುವ ಜಾಣರು! + +ಕೊನೆಗೂ ಮೂತ್ರ ವಿಸರ್ಜನೆಗೆ ಅವಕಾಶ ಸಿಕ್ಕಿತು. ಅದೂ ಕೂಡ ನಮ್ಮ ಬಸ್ ನಿಲ್ದಾಣದ ಟಾಯ್ಲೆಟ್ ಹಾಗೆಯೇ ಸಹಿಸಲಸಾಧ್ಯವಾದ ದುರ್ವಾಸನೆಯಿಂದ ಕೂಡಿತ್ತು. ಅದಕ್ಕೆ ಆ ಹೊಟೇಲಿನಲ್ಲಿದ್ದ ಜನಸಂಖೆಯೇ ಕಾರಣ ಅನಿಸ್ತು. ತುಂಬಾ ಜನದಟ್ಟಣೆ ಇರುವಾಗ ಎಲ್ಲೆಡೆಯೂ ಇದೆ ಕತೆ, ನಮ್ಮ ದೇಶದಲ್ಲೂ ಹಾಗೆಯೇ ಆಗಿದೆ ಎಂಬ ವಿಕೃತ ಆನಂದವನ್ನು ಅನುಭವಿಸಿದೆನಾದರೂ, ಸ್ವಚ್ಛತೆಯ ವಿಷಯದಲ್ಲಿ ನಾವು ಭಾರತೀಯರು ತುಂಬಾ ಸುಧಾರಿಸಬೇಕು ಎಂಬುದೂ ಅಷ್ಟೇ ದಿಟ ಅನ್ನಿ. + + + +ನಯಾಗರ ಜಲಪಾತ ನೋಡಿದಾಗ ಅಷ್ಟೇನೂ ರೋಮಾಂಚನ ಅನಿಸಲೇ ಇಲ್ಲ. ಅದು ತುಂಬಾ ಕೃತ್ರಿಮ ಜಲಪಾತ ಅನಿಸಿತು. ಬಹುಶಃ ಕೆನಡಾ ಬಳಿಯ ಜಲಪಾತ ಇನ್ನೂ ರುದ್ರ ರಮಣೀಯ ಇರಬಹುದೇನೋ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಅಷ್ಟೇ. ಆದರೆ ನನ್ನ ಅಣ್ಣ ಹಲವು ಬಾರಿ ನಯಾಗರದ ಆ ಕಡೆಯ ಜಲಪಾತ ನೋಡಿದ್ದೇನೆ, ಅದು ಇದಕ್ಕಿಂತ ಸುಂದರವಾಗಿದೆ ಅಂತ ಹೇಳಿದ. ಆದರೆ ಅಮೇರಿಕನ್ನರ ಮಾರ್ಕೆಟಿಂಗ್ ಕೌಶಲ್ಯಕ್ಕೆ ಮತ್ತೆ ಬೆರಗಾದೆ. ಜಲಪಾತದ ಹತ್ತಿರದ ಮಂಜಿನ ಸಿಂಪಡಣೆಯನ್ನು ಅನುಭವಿಸಲು ದೊಡ್ಡ ಹಡಗಿನಲ್ಲಿ ಕರೆದೊಯ್ಯುತ್ತಾರೆ. ಹಾಗೆ ಹೋಗುವುದಕ್ಕೆ ಎಷ್ಟೋ ಮೊತ್ತದ ಶುಲ್ಕ ಇದೆ. ಅದನ್ನು ಕಟ್ಟಿಸಿಕೊಂಡ ಮೇಲೆ ನಮಗೆ ನೀರಿನಿಂದ ತೊಯ್ಯದಂತಹ ಜಾಕೆಟ್ ಹಾಗೂ ಚಪ್ಪಲಿ ಕೊಡುತ್ತಾರೆ. ಅದರ ಮೇಲೆಲ್ಲಾ ನಯಾಗರ ಜಲಪಾತ ಅಂತ ಬರೆಸಿರುತ್ತಾರೆ. ಅಂತೂ ಇವೆಲ್ಲ ಧರಿಸಿ ನಯಾಗರ ಜಲಪಾತದ ಹತ್ತಿರಕ್ಕೆ ಹೋಗಿ ಅದರ ನೀರನ್ನು ಸಿಂಪಡಿಸಿಕೊಂಡು ಆನಂದ ಪಟ್ಟೆವು. ಒಟ್ಟಾರೆ ಅನುಭವ ಅಷ್ಟೇನೂ ಅದ್ಭುತ ಅಂತ ಇನ್ನೂ ಅನಿಸಿರಲೇ ಇಲ್ಲ. ಅಥವಾ ನಾನು ತುಂಬಾ ದೊಡ್ಡ ನಿರೀಕ್ಷೆ ಇಟ್ಟುಕೊಂಡು, ಅದ್ಹೇಗೆ ನಮ್ಮ ಜೋಗ ಜಲಪಾತಕ್ಕಿಂತ ಸುಂದರ ಇದ್ದೀತು ಎಂಬ ಪೂರ್ವಗ್ರಹದೊಂದಿಗೆ ನೋಡಿದ್ದಕ್ಕೆ ಹಾಗೆ ಅನಿಸಿತಾ? ಗೊತ್ತಿಲ್ಲ. ಅಲ್ಲಿನ ಗಾರ್ಡನ್‌ನಲ್ಲಿ ಅಡ್ಡಾಡಿಕೊಂಡು ಇನ್ನೇನು ಹೊರಗೆ ಹೋಗಬೇಕು ಅಷ್ಟರಲ್ಲೇ ಎದುರಿಗೆ ಕಂಡದ್ದನ್ನು ನೋಡಿ ಮಾತೇ ಹೊರಡದಂತೆ ಬೆರಗಾಗಿ ನಿಂತೆ…! + +ಗುರುಪ್ರಸಾದ್‌ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್‌ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. “ಬೆಳೆಸಿರಿ” ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ.  “ಕೇಶಕ್ಷಾಮ” (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_60.txt b/Kenda Sampige/article_60.txt new file mode 100644 index 0000000000000000000000000000000000000000..d402eefd8f9a792cb69fdc56078633cccbd012c3 --- /dev/null +++ b/Kenda Sampige/article_60.txt @@ -0,0 +1,27 @@ +ವೇಶ್ಯೆಯ ಬದುಕಿನ ಪುಟಗಳನ್ನು ಹಸಿಹಸಿಯಾಗಿಯೇ ಬರೆದಿರುವ ಆತ್ಮಕಥೆಗಳು ಇಂದು ಭಾರತೀಯ ಭಾಷೆಗಳಲ್ಲಿ ಸಾಕಷ್ಟು ಲಭ್ಯವಿದೆ. ಮಲೆಯಾಳಿ ಲೇಖಕಿ ನಳಿನಿ ಜಮೀಲಾ ಮಲೆಯಾಳಿ ಭಾಷೆಯಲ್ಲಿ ಬರೆದಿರುವ ನಂತರ ಇಂಗ್ಲೀಷಿಗೆ ಭಾಷಾಂತರವಾಗಿರುವ Autobiography of a Sex Worker ಮತ್ತು Romantic Encounters of a Sex Worker ಸಾಹಿತ್ಯಿಕ ವಲಯದಲ್ಲಿ ಸಂಚಲವನ್ನು ಮೂಡಿಸಿದ ಕೃತಿಗಳು. ಜಮೀಲಾ ತನ್ನ ಅನುಭವಗಳನ್ನು ಹೇಳುವ ಹೊತ್ತಿನಲ್ಲಿ ಸಮಾಜದ ಗಣ್ಯವ್ಯಕ್ತಿಗಳೆನಿಸಿಕೊಂಡವರ ಮುಖವಾಡವನ್ನು ಬಯಲಾಗಿಸಿದ್ದಾರೆ. ಅಭಿದ್ ಸುರ್ತಿ ಅವರು ಗುಜರಾತಿ ಭಾಷೆಯಲ್ಲಿ ಬರೆದ A tale of an Indian sex worker ಕುಮುದಾ ಎನ್ನುವ ಪುಸ್ತಕದಲ್ಲಿ ಲೈಂಗಿಕ ಕಾರ್ಯಕರ್ತೆಯ ಬದುಕಿನ ಗಾಯಗಳು ಮನಸ್ಸನ್ನು ಚುಚ್ಚುತ್ತವೆ. ಪೇಶ್ವೆಗಳ ಕಾಲದಿಂದಲೂ ವೇಶ್ಯೆಯರಾಗಿದ್ದ ಅವಳ ಹಿಂದಿನ ತಲೆಮಾರು, ಮುಂಬೈ ಕಾಮಾಟಿಪುರದಲ್ಲಿ ಕೇವಲ ಎರಡು ರೂಪಾಯಿಗಳಿಗೆ ತನ್ನ ಮೈ ಮಾರಿಕೊಳ್ಳುವ ಸಂಗತಿಗಳು, ವಿಟರನ್ನು ಪ್ರಲೋಭನೆಗೊಳಿಸುವ ತಂತ್ರಗಳು ಇವುಗಳೆಲ್ಲವೂ ಓದುವಾಗ ಇಂಥ ಸಮಾಜವನ್ನು ನಾವು ಪ್ರತಿನಿಧಿಸುತ್ತಿದ್ದೇವಾ, ಈ ಕೆಂಪು ದೀಪದ ಲೋಕದಲ್ಲಿ ಎಷ್ಟು ಇಂತಹ ಕುಮುದಾ, ಜಮೀಲಾಗಳ ಧ್ವನಿ ಅಡಗಿಹೋಗಿದೆಯೇನೋ ಎನಿಸುತ್ತದೆ. + +ಶಿವರಾಮ ಕಾರಂತರ “ಮೈಮನಗಳ ಸುಳಿಯಲ್ಲಿ” ದೇವದಾಸಿಯರ ಸಾಮಾಜಿಕ ಮನ್ನಣೆ ಮತ್ತು ಅವನತಿ ಎರಡನ್ನೂ ಹೇಳುವ ಕಾದಂಬರಿ. ಇಲ್ಲಿ ಬರುವ ಮಂಜುಳಾರಂತಹ ಅನೇಕ ದೇವದಾಸಿಗಳ ಬದುಕಿನಲ್ಲಿ ರಸಿಕರು ಬಂದು ಹೋದ ರೋಮಾಂಚಕಾರಿ ಕಥೆಗಳು ಕರಾವಳಿ ಭಾಗದಲ್ಲಿ ಹಳೆಯ ತಲೆಮಾರಿನವರ ಹತ್ತಿರ ಇಂದಿಗೂ ಕೇಳಬಹುದಾಗಿದೆ. ದೇವಸ್ಥಾನಗಳಲ್ಲಿ ಚಾಮರ ಸೇವೆ, ಮದುವೆ ಮನೆಯಲ್ಲಿ ನಿತ್ಯಸುಮಂಗಲಿಯರಿಂದ ಮಾಂಗಲ್ಯವನ್ನು ಪೋಣಿಸಿ ಮುತ್ತೈದೆತನ ಉಳಿಯಲಿ ಎಂದು ಹಾರೈಸುವ ರಿವಾಜುಗಳು ಈ ಭಾಗದಲಿ ಇತ್ತು. ಸಂಗೀತ ನೃತ್ಯಗಳಿಂದ ರಸಿಕರನ್ನು ಓಲೈಸುವ ವಾರಾಂಗನೆಯರನ್ನು ಇರಿಸಿಕೊಳ್ಳುವುದು ಒಂದು ಗೌರವಯುತ ವೃತ್ತಿಯಾಗಿತ್ತು. ಬ್ರಿಟಿಷರು ಬಂದಮೇಲೆ ಇವುಗಳೆಲ್ಲವೂ ಮೈಮಾರುವ ದಂಧೆಯಾಗಿ, ಪಿಂಪ್‌ಗಳ ಹಿಡಿತದಲ್ಲಿ ಸಿಕ್ಕು ದುರಂತಮಯ ಅಧ್ಯಾಯಕ್ಕೆ ನಾಂದಿಯಾಯಿತು ಎಂದು ಕಾರಂತರ ಕಾದಂಬರಿ ಓದಿದಾಗ ಅನಿಸುತ್ತದೆ. + +(ನಾಗ ಎಚ್ ಹುಬ್ಳಿ) + +ಈ ಎಲ್ಲ ಕೃತಿಗಳೂ 1970ರ ನಂತರ ಬಂದಿರುವಂತಹದ್ದು. ಆದರೆ ಒಂದು ವೇಶ್ಯೆ ತನ್ನ ಆತ್ಮಕತೆಯನ್ನು ಯಾವ ಅಶ್ಲೀಲದ ಸೋಂಕಿಲ್ಲದೇ, ಆದರೆ ಹೇಳುವ ಯಾವ ಅವಕಾಶವನ್ನು ಬಿಡದೇ ಹೇಳಿರುವ ಆತ್ಮಕಥೆ 1929ರಲ್ಲಿಯೇ ಬಂಗಾಳಿ ಭಾಷೆಯಲ್ಲಿ ಕುಮಾರಿ/ಶ್ರೀಮರಿ ಮಾನದಾ ದೇವಿ ಅವರು ಬರೆದ “ವಿದ್ಯಾವಂತ ವೇಶ್ಯೆಯ ಆತ್ಮಕಥೆ” (ಶಿಕ್ಷಿತಾ ಪತಿತಾರ್ ಆತ್ಮಚರಿತ) ಪ್ರಕಟವಾಗಿದೆ. ಮುದ್ರಿತವಾದ ಒಂದೇ ತಿಂಗಳಲ್ಲಿಯೇ ಇದರ ಹದಿನಾರು ಸಾವಿರ ಪ್ರತಿಗಳು ಖರ್ಚಾಗಿವೆ. ಭಾರತದ ಹಲವಾರು ಭಾಷೆಗಳಿಗೆ ಅನುವಾದಗೊಂಡಿರುವ ಈ ಕೃತಿಯನ್ನು ಇತ್ತೀಚೆಗೆ ‘ಛಂದ’ ಪ್ರಕಾಶನಕ್ಕಾಗಿ ಕನ್ನಡದ ಪ್ರಮುಖ ಅನುವಾದಕಾರ ಮತ್ತು ಸಾಹಿತಿ, ನಾಗ ಎಚ್ ಹುಬ್ಳಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಅವರು ತಮ್ಮ ಮಾತುಗಳಲ್ಲಿ ಹೇಳಿಕೊಂಡಂತೆ ವೇಶ್ಯಾವೃತ್ತಿಯನ್ನು ವೈಭವೀಕರಿಸುವುದಕ್ಕಾಗಲೀ ಅಥವಾ ಅಶ್ಲೀಲ ಸಾಹಿತ್ಯದ ಮೂಲಕ ಓದುವಗರನ್ನು ಸೆಳೆಯುವುದಕ್ಕಾಗಲೀ ಈ ಕೃತಿಯನ್ನು ಅನುವಾದ ಮಾಡಿಲ್ಲ. ಮಾನದಾ ದೇವಿ ಸಹ ಬಂಗಾಳಿಯಲ್ಲಿ ಬರೆಯುವಾಗ ಅಂತಹ ಯಾವ ಸಂಗತಿಯನ್ನೂ ವೈಭವೀಕರಿಸಿಲ್ಲ. ಶ್ರೀಮಂತ ಮನೆತನದ ಓರ್ವಳೇ ಮಗಳು ಆಕೆ. ಕಲಕತ್ತಾದ ಪ್ರಸಿದ್ಧ ಬ್ರಾಹ್ಮಣ ವಂಶಸ್ಥಳು. ಅವಳನ್ನು ನೋಡಿಕೊಳ್ಳಲು ಆಳುಕಾಳಿಗೇನೂ ಕೊರತೆ ಇರಲಿಲ್ಲ. ಆದರೆ ಆಕೆಯ ತಾಯಿ ಅವಳ ಚಿಕ್ಕ ವಯಸ್ಸಿನಲ್ಲಿಯೇ ತೀರಿಕೊಂಡಾಗ ಕೆಲವು ವರ್ಷ ಅವಳ ತಂದೆ ಮಗಳ ಸಲುವಾಗಿ ಒಂಟಿಯಾಗಿ ಇದ್ದರೂ ಮರಣಿಸಿದ ತಾಯಿಯ ಸ್ಥಾನವನ್ನು ತುಂಬಲಿಲ್ಲ. ಬಾಹ್ಯ ಸೌಲಭ್ಯವನ್ನು ಕೊಟ್ಟರೆ ಮಗಳಿಗೆ ಸಾಕು ಎನ್ನುವ ರೀತಿಯಲ್ಲಿ ಅವಳನ್ನು ಬೆಳೆಸಿದರು. + +ಮಾನದಾ ದೇವಿಯ ಮಾತುಗಳಲ್ಲಿ ಹೇಳುವುದಾದರೆ “ನಾನು ಓದುವ ಕೋಣೆ ಹಾಗೂ ಶಯನ ಗೃಹಗಳು ಅತ್ಯಂತ ಅಚ್ಚುಕಟ್ಟಾಗಿದ್ದವು. ನಾನು ಬಯಸಿದ ವಸ್ತುಗಳೆಲ್ಲವೂ ನನಗೆ ದೊರೆಯುತ್ತಿದ್ದವು. ಹಾಗಿದ್ದಾಗ್ಯೂ ನನ್ನ ಮನಸ್ಸಿಗೆ ಮಾತ್ರ ನೆಮ್ಮದಿ ಇರಲಿಲ್ಲ. ತಂದೆಯವರ ಅನಾದರ, ನಿರ್ಲಕ್ಷ್ಯ ಮನೋಭಾವ ನನ್ನನ್ನು ಸದಾ ಬೇಸರಕ್ಕೆ ದೂಡುತ್ತಿತ್ತು….” ಆಕೆಯ ಬದುಕಿನ ಹಳಿ ತಪ್ಪುವುದಕ್ಕೆ ಈ ಸಾಲುಗಳು ಮುಂದಿನ ಎಲ್ಲವನ್ನೂ ಹೇಳುತ್ತದೆ. ಈಕೆಗಿಂತ ಎರಡು ವರ್ಷ ಹಿರಿಯಳನ್ನು ತಂದೆ ಎರಡನೇ ಮದುವೆಯದಾಗ ಅದೇತಾನೆ ಮೊಗ್ಗು ಬಿರಿಯುತ್ತಿರುವ ಹರೆಯದ ಬಾಲೆಗೆ ಆದ Stepmom outsider syndrome ಸಮಸ್ಯೆಯನ್ನು ಅಲ್ಲಿ ಯಾರೂ ಅರ್ಥಮಾಡಿಕೊಳ್ಳಲಿಲ್ಲ. ಆಕೆಯನ್ನು ನೋಡಿಕೊಳ್ಳಲು ಬಂದ ಆಕೆಯ ತಂದೆಯ ಸಹೋದರಿ ಮಾನದಾಳ ತಂದೆ ತನ್ನ ಎರಡನೆ ಹೆಂಡತಿಯೊಂದಿಗೆ ಐದಾರು ತಿಂಗಳುಗಳ ಕಾಲ ವಿಹಾರಕ್ಕೆ ಹೋದಾಗ ವಾತ್ಸಲ್ಯದಿಂದಲೇ ನೋಡಿಕೊಂಡಿದ್ದಾಳೆ. ತನ್ನ ಓರಿಗೆಯ ಪ್ರಾಯದವಳೇ ತನ್ನ ಅಮ್ಮನಾಗುವುದನ್ನು ಹದಿಹರೆಯಕ್ಕೆ ಕಾಲಿಡುವ ಈಕೆಯ ಮನಸ್ಸು ಒಪ್ಪಿಲ್ಲ. ಯಾವಾಗ ತನ್ನ ತಾಯಿಯ ಫೋಟೋ ತಂದೆಯ ಮಲಗುವ ಕೋಣೆಯಿಂದ ಹೊರಗೆ ಬಂತೋ ಅಗಲೇ ಅವಳಲ್ಲಿ ತಾನು ಹೊರಗಿನವಳು ಎನ್ನುವ ಭಾವ ಮೂಡಿತೆನ್ನಬೇಕು. ಸ್ವಾತಂತ್ರ್ಯ ಹೊರಾಟದ ಸಭೆಯಲ್ಲಿ ಆತ್ಮ ಬಲಿದಾನದ ಹಾಡನ್ನು ತನ್ಮಯವಾಗಿ ಹಾಡುವ, ಬ್ರಹ್ಮ ಸಮಾಜದ ಸಭೆಗೆ ಆಗಾಗ ಹೋಗಿ ಅಲ್ಲಿನ ವಾತಾವರಣವನ್ನು ಗಮನಿಸುವ ಅವಳ ಬದುಕು ಹಾದಿತಪ್ಪುವಂತಾದುದರ ಕುರಿತು ಅವಳೇ ವಿವಿಧ ಭಾವನೆಯ ಹೊಯ್ಗಳಲ್ಲಿ ನಿಂತು ಹೇಳಿಕೊಳ್ಳುತ್ತಾ ಹೋಗುತ್ತಾಳೆ. + +ಹಾಗಂತ ಈ ಕೃತಿ ಮಾನದಾ ದೇವಿಯ Confession ಆಗಲೀ ತಪ್ಪೊಪ್ಪಿಗೆಯಾಗಲೀ ಅಲ್ಲ. ತನ್ನ ವೃತ್ತಿಯ ಕುರಿತು ಅವಳು ಸದಾ ತನ್ನೊಳಗೆ ಮಂಥನವನ್ನು ನಡೆಸುತ್ತಾಳೆ. ಮಲ ತಾಯಿಯ ನೆರವಿಗೆ ಎಂದು ಬಂದ ಹರಿಮತಿ ಎನ್ನುವವಳ ನಿಷ್ಟುರವೂ ಅವಳಲ್ಲಿ ತನಗೆ ಯಾರಾದರೂ ಓರ್ವ ಆತ್ಮೀಯತೆಯನ್ನು ಹಂಚಿಕೊಳ್ಳುವ ಸಂಗಾತಿ ಬೇಕೆನಿಸಿರಬೇಕು. ವಾವೆಯಲ್ಲಿ ಅಣ್ಣನಾಗಬೇಕಾದ ನಂದ ಮತ್ತು ರಮೇಶಣ್ಣ ಅವಳ ಜೀವನದಲ್ಲಿ ಎರಡು ಆಕರ್ಷಣೆಯ ಕೇಂದ್ರವಾಗುತ್ತಾರೆ. ನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ ಪ್ರಭಾವವನ್ನು ಬೀರಿತ್ತು ಎನ್ನುವುದಕ್ಕೆ ಆಕೆ ತಾನು ವೇಶ್ಯೆಯಾಗಿ ಇರುವಾಗಲೂ ಸಂದರ್ಭ ಬಂದಾಗ ಸ್ವಾತಂತ್ರ್ಯ ಹೋರಾಟ, ಸಮಾಜ ಸೇವೆ, ದೀನದಲಿತರಿಗೆ ನೆರವು ಹೀಗೆ ಹಲವಾರು ಸಂಗತಿಗಳನ್ನು ಮಾಡುತ್ತಲೇ ಇರುತ್ತಾಳೆ. ಆದರೆ ಸ್ವಾತಂತ್ರ್ಯ ಹೊರಾಟಗಾರರಲ್ಲಿ ಎಲ್ಲವರೂ ನಂದಣ್ಣನಂತಹ ವ್ಯಕ್ತಿಗಳಲ್ಲ. ಹೆಚ್ಚಿನವರು ರಮೇಶನಂತಹ ಗೋಮುಖರೇ. ಅಂಥವರನ್ನು ದಾಳಗಳನ್ನಾಗಿ ಬಳಸಿಕೊಳ್ಳುವುದನ್ನು ನಿರ್ಭೀತಿಯಿಂದ ಹೇಳಿಕೊಳ್ಳುತ್ತಾಳೆ. + + + +ಅವಳ ಜೀವನದಲ್ಲಿ ಬಂದು ಹಾದುಹೋದ ಸಮಾಜದ ಮಹನೀಯರೆನಿಸಿಕೊಂಡವರು, ಸಂನ್ಯಾಸಿಗಳು, ಬ್ಯಾರಿಸ್ಟರ್ ಮತ್ತು ವಕೀಲರು ಅವಳ ಪಿಂಪ್‌ಗಳಾಗಿ ಇವಳನ್ನು ಬಳಸಿ ತಾವೂ ಹಣಮಾಡಿಕೊಳ್ಳುವುದರಲ್ಲಿ ತೊಡಗುವುದು ಇವೆಲ್ಲವೂ ಮನಃಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನ ಮಾಡಬಹುದಾದ ಸಂಗತಿಗಳು. ವೇಶ್ಯೆಯೋರ್ವಳು ಬರೆದ ಆತ್ಮಕತೆಯ ಕುರಿತು “ತಾಯಿಯ ಸ್ತನದಿಂದ ಮಗುವು ಹಾಲನ್ನು ಕುಡಿಯಬಹುದು; ಆದರೆ ಜಿಗಣೆಯಂತಹ ಸ್ವಭಾವದ ಬೂಟಾಟಿಕೆಯ ಮನುಷ್ಯರು ಅದೇ ಸ್ತನದಿಂದ ರಕ್ತವನ್ನು ಹೊರತು ಪಡಿಸಿ ಬೇರೆ ಏನೆನ್ನನ್ನೂ ಹೊರತೆಗೆಯಲು ಸಾಧ್ಯವಿಲ್ಲ” ಎಂದು ಟೀಕಿಸಿದ ಪ್ರಭುಪಾದಾತುಲಕೃಷ್ಣ ಗೋಸ್ವಾಮಿಯವರಿಗೆ “ರುಚಿ ಎನ್ನುವುದು ತಿನ್ನುವವರ ನಾಲಿಗೆಯ ಸ್ವಾದಶಕ್ತಿಯನ್ನು ಅವಲಂಬಿಸಿರುತ್ತದೆ…” ಎಂದು ನೇರವಾಗಿ ಉತ್ತರಿಸಿದ್ದಾಳೆ. ಈ ಕೃತಿಯ ಮೂಲಕ ಸಮಾಜದ ಲಂಪಟರನ್ನೆಲ್ಲಾ ಬದಲಾಯಿಸಬಲ್ಲೆ ಎನ್ನುವ “ಹುಚ್ಚು ನಂಬಿಕೆ” ಆಕೆಗಿಲ್ಲ. “ಈರುಳ್ಳಿಯನ್ನು ತುಂಬಾ ವಾಸನೆ ಎನ್ನುವ ವ್ಯಕ್ತಿ ದನ-ಹಂದಿಮಾಂಸವನ್ನು ಸೇವಿಸುತ್ತಾರೆ. ಮೈಮೇಲೆ ಹಾಲು ಚೆಲ್ಲಿದರೆ ಅಸಹ್ಯ ಪಡುತ್ತಾರೆ” ಎನ್ನುವ ಅವಳ ಮಾತುಗಳು ಆಕೆಯ ಪ್ರಾಮಾಣಿಕತೆಯನ್ನು ವಿಷದೀಕರಿಸುತ್ತದೆ. ಸತ್ಯವು ಅನೇಕ ಸಂದರ್ಭಗಳಲ್ಲಿ ಅಪ್ರಿಯವೇ ಆಗಿರುತ್ತದೆ. ಇಂತಹ ಹಲವಾರು ಅಪ್ರಿಯ ಸತ್ಯವನ್ನು ಹೊರತರಲು ಅವಳು ಈ ಕೃತಿಯನ್ನು ರಚಿಸಿದ್ದಾಳೆ. + +ಮಾನದಾ ದೇವಿ ತನ್ನ ಅಸ್ಮಿತೆಯಾದ ಸಾಹಿತ್ಯವನ್ನು ಪ್ರೀತಿಸುವುದನ್ನು ಮಾತ್ರ ಯಾವತ್ತೂ ಬಿಡುವುದಿಲ್ಲ. ತನ್ನ ವಿಟ ‘ಬ್ಯಾಂಕ್ ಬಾಬುವಿಗೆ’ ಹೇಳಿ ಪುಸ್ತಕಗಳನ್ನು ತರಿಸಿಕೊಳ್ಳುತ್ತಾಳೆ. ಬಂಗಾಳದಲ್ಲಿ ಸಾಹಿತ್ಯ ಕೃತಿಗಳು ವಿಜಂಭಿಸುತ್ತಿದ್ದ ಕಾಲ. ಬಂಕಿಮಚಂದ್ರ ಚಟರ್ಜಿಯವರ ಆನಂದ ಮಠ, ರವೀಂದ್ರನಾಥ ಟ್ಯಾಗೋರರ ಬರಹಗಳು, ಆರ್ಯ ಸಮಾಜ, ಬ್ರಹ್ಮ ಸಮಾಜ, ರಾಮಕೃಷ್ಣಾಶ್ರಮ ಇವುಗಳೆಲ್ಲ ಜನರಮೇಲೆ ಅಪಾರ ಪ್ರಭಾವವನ್ನು ಬೀರುತ್ತಿದ್ದವು. ಸಾಹಿತ್ಯದ ಹೊಸಾ ಅಲೆಯಲ್ಲಿ ವೇಶ್ಯೆಯರ ಬದುಕನ್ನು ತೆರೆದಿಡುವ ಕೃತಿಗಳನ್ನು ಬಂಕಿಮಚಂದ್ರ ಚಟ್ಟೋಪಧ್ಯಾಯರು ಮತ್ತು ಅವರ ಸಮಕಾಲೀನ ಸಾಹಿತಿಗಳು ಬರೆಯುತ್ತಿದ್ದರು. ಇದರೆಲ್ಲಲ್ಲಾ ವೇಶ್ಯಾವೃತ್ತಿಯಲ್ಲಿರುವ ಬಗ್ಗೆ ಓದುಗರಲ್ಲಿ ಅಸಹ್ಯಭಾವನೆಯನ್ನು ಮೂಡಿಸುತ್ತಿದ್ದವು. ಕೃಷ್ಣಕಾಂತರ ‘ಉಯಿಲ್’ ‘ಚಂದ್ರಶೇಖರ’ ಮುಂತಾದ ಕೃತಿಗಳು ಸಮಾಜ ವೇಶ್ಯಾವೃತ್ತಿಯನ್ನು ಪಿಡುಗಾಗಿ ನೋಡುವಂತೆ ಬಿಂಬಿಸುತಿದ್ದವು. ಅಮೃತಲಾಲ್ ಬಸ್ತರ್ ತಮ್ಮ ‘ತರುಣವಾಲ’ ನಾಟಕದಲ್ಲಿ ಕುಲೆಟೆಯರು ತಮ್ಮ ಸಮೀಪ ಬಂದರೆ ಅಸಹ್ಯ ಪಡುವಂತೆ ಪ್ರದರ್ಶಿಸುತ್ತಿದ್ದರು. + +ರವೀಂದ್ರನಾಥ ಟ್ಯಾಗೋರ್ ಮಾತ್ರ ವೇಶ್ಯೆಯರ ಚಾರಿತ್ರ್ಯದ ಬಗ್ಗೆ ಹೊಸ ನೋಟಗಳನ್ನು ಬೀರಿದರು; ಆ ಮೂಲಕ ವೇಶ್ಯೆಯರಿಗೂ ಒಂದು ಬದುಕಿದೆ, ಅಂತರಂಗವಿದೆ, ಅವರೂ ಸಹ ನಮ್ಮ ನಿಮ್ಮಂತವರು ಎನ್ನುವುದನ್ನು ಬಿಂಬಿಸಿದರು. ಮಾನದಾ ದೇವಿ ಈ ಎಲ್ಲವನ್ನೂ ಓದಿ ಅರಗಿಸಿಕೊಂಡಳು. ಆ ಕಾಲದ ಪ್ರಸಿದ್ಧ ಸಾಹಿತಿಗಳಾದ ಶರತ್ ಚಟ್ಟೋಪಾಧ್ಯಾಯ, ನರೇಶ ಸೇನಗುಪ್ತ ಇವರೆಲ್ಲ ರವೀಂದ್ರನಾಥರ ಅಭಿಪ್ರಾಯವನ್ನು ಇನ್ನಷ್ಟು ವಿಸ್ತರಿಸಿ ಜನಸಾಮಾನ್ಯರಿಗೆ ವೇಶ್ಯೆಯರ ಕುರಿತು ಸಹಾನುಭೂತಿ ಮೂಡುವಂತೆ ಮಾಡಿದರು ಎನ್ನುತ್ತಾಳೆ. ಅವಳ ಓದಿನ ಈ ಹರಿವನ್ನು ಮತ್ತು ವಿಶ್ಲೇಷಣಾತ್ಮಕ ವಿಮರ್ಶೆಯನ್ನು ನೋಡಿದಾಗ ಈಕೆ ನಿಜವಾಗಿಯೂ ವಿದ್ಯಾವಂತ ವೇಶ್ಯೆ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ವೇಶ್ಯೆಯರ ಅನುಭವವನ್ನು ಬೇರೆಯಾರೋ ಬರೆದರೆ ಅದು ಲೈಂಗಿಕ ಕಾರ್ಯಕರ್ತೆಯರ ಮೇಲಿನ Sympathy ಅಥವಾ Empathy ಯಾಗುತ್ತದೆ. ಹೊರಗಿನಿಂದ ನೋಡುವುದಕ್ಕೂ, ಅದರಲ್ಲಿ ಸಕ್ರಿಯನಾದ ವ್ಯಕ್ತಿಯೇ ಅನುಭವವನ್ನು ತೋಡಿಕೊಳ್ಳುವುದಕ್ಕೂ ವ್ಯತ್ಯಾಸವಿದೆ. + +ಎರಡು ವಿಭಿನ್ನ ಕೋನಗಳಿಂದ ಸಮಾಜದಲ್ಲಿ ವೇಶ್ಯೆಯರ ಕುರಿತು ಸಾಹಿತ್ಯ ಬಂದಾಗ ಓರ್ವ ವೇಶ್ಯೆಯಾಗಿ ತನ್ನ ಅನುಭವವನ್ನು ಹೇಳಿಕೊಳ್ಳಬೇಕು ಎನಿಸಿ ಈ ಕೃತಿಯನ್ನು ಬರೆದಿದ್ದಾಳೆ. ಆಕೆ ತನ್ನ ಆತ್ಮಕಥೆಯನ್ನು ಸತ್ಯದೊಂದಿಗಿನ ಮುಖಾಮುಖಿಯಾಗಿ ಅಭಿವ್ಯಕ್ತಿಸಿಲ್ಲ. ಅನುಭವವದೊಂದಿಗೆ ಸಾಗಿದ್ದಾಳೆ. ಗಿರಾಕಿಗಳನ್ನು ಶೋಷಿಸುವ ಹೊತ್ತಿನಲ್ಲಿ ತಾನು ಅವರ ಕುಟುಂಬಕ್ಕಾಗಲೀ, ಅವರ ಹೆಂಡತಿಗಾಗಲೀ ಮೋಸ ಮಾಡುತ್ತಿಲ್ಲ. ತನ್ನ ಹೆಂಡತಿಯನ್ನು ಯಾರು ಅತಿಯಾಗಿ ಪ್ರೀತಿಸುತ್ತಾರೋ ಅವರೇ ತನ್ನೊಂದಿಗೆ ಮಲಗಲು ಬರುತ್ತಿದ್ದರು ಎನ್ನುತ್ತಾಳೆ. ಸಮಾಜದಲ್ಲಿ ಗಣ್ಯವ್ಯಕ್ತಿಯಾಗಿ ಮುಖವಾಡ ಹಾಕಿಕೊಂಡು ಮಿಸ್ ಮುಖರ್ಜಿಯಾಗಿ ಬದುಕುತ್ತಿರುವುದನ್ನೂ ಮುಚ್ಚುಮರೆಯಿಲ್ಲದೇ ಹೇಳಿದ್ದಾಳೆ. ಇವಳ ಸ್ನೇಹಿತೆ ಕಾಳಿದಾಸಿ ಈ ವೃತ್ತಿಯಿಂದ ಸಿರಿವಂತಳಾದರೂ ಅವನ್ನೆಲ್ಲವನ್ನೂ ಕಳೆದುಕೊಳ್ಳಬೇಕಾಗಿರುವುದಕ್ಕೆ ಕಾರಣ ಅವಳು ವಿದ್ಯಾವಂತೆಯಾಗಿಲ್ಲದಿರುವುದು. ಮಾನದಾ ವಿದ್ಯಾವಂತಳಾದುದರಿಂದ ಹಾಗಾಗಿಲ್ಲ. ಗಳಿಸಿದ್ದನ್ನು ವೇಶ್ಯೆಯರ ಉದ್ಧಾರಕ್ಕಾಗಿ ಬಳಸಿಕೊಳ್ಳಬೇಕೆನ್ನುವ ಸಾಮಾಜಿಕ ಕಳಕಳಿ ಅವಳ ಈ ಆತ್ಮಕಥೆಯಲ್ಲಿದೆ. ಪೂರ್ವಾಗ್ರಹವಿಲ್ಲದೇ ತನ್ನ ಬದುಕಿನ ಬಟ್ಟೆಯನ್ನು ತಾನೇ ಅವಲೋಕನ ಮಾಡಿಕೊಂಡ ಹೆಣ್ಣೊಬ್ಬಳ ಆತ್ಮಕಥೆ ಇದು. + + + +ನಾಗ. ಎಚ್. ಹುಬ್ಳಿಯವರು ಇಲ್ಲಿ ಭಾಷೆಯನ್ನು ದುಡಿಸಿಕೊಂಡಿರುವ ಕುರಿತು ಅಚ್ಚರಿಯೆನಿಸುತ್ತದೆ. ಇಲ್ಲಿನ ಬಂಗಾಳಿ ಭಾಷೆ 1930ರ ದಶಕದ್ದು. ಜಗತ್ತಿನ ಎಲ್ಲಾ ಭಾಷೆಗಳಲ್ಲಿಯೂ ಒಂದು ಶತಮಾನದ ನಂತರದ ಆಡುವ ಮತ್ತು ಓದುವ ಭಾಷೆಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ರಾಂಚಿ ಮತ್ತು ಬಂಗಾಲದ ಆದಿವಾಸಿಗಳೊಂದಿಗೆ ಸದಾ ಒಡನಾಡುವ ನಾಗ ಹುಬ್ಳಿ ಅವರ ಬಂಗಾಳಿ ಭಾಷಾ ಕೌಶಲ್ಯ ಇಲ್ಲಿ ಎದ್ದು ಕಾಣುತ್ತದೆ. ಜೊತೆಗೆ ಅನುವಾದದಲ್ಲಿ ಅವರು ಬಳಸಿರುವುದು ಮೂವತ್ತರ ದಶಕದ ಕನ್ನಡವನ್ನು. ಆ ಕಾಲದಲ್ಲಿ ಗಳಗನಾಥರು ಬಳಸುತ್ತಿದ್ದ ಕನ್ನಡಸ ಓಘ ಇಲ್ಲಿದೆ. ಹಾಗಾಗಿ ಇದು ಅನುವಾದ ಎನ್ನುವುದಕ್ಕಿಂತ ಕನ್ನಡದ ಸ್ವತಂತ್ರಕೃತಿಯಾಗಿ ರೂಪುಗೊಂಡಿದೆ. ಗಟ್ಟಿ ಅನುವಾದಕರಾದ ನಾಗ. ಎಚ್. ಹುಬ್ಳಿ ಅವರಿಗೆ ಮೆಚ್ಚುಗೆ ಕೊಡಲೇಬೇಕು. ಹೊಸ ಹೊಸ ಆಯಾಮದಲ್ಲಿ ಕೃತಿಗಳನ್ನು ಹೊರತರುತ್ತಿರುವ ವಸುಧೇಂದ್ರ ಅವರಿಗೂ ಛಂದದ ಪುಸ್ತಕಕಕ್ಕಾಗಿ ಅಭಿನಂದನೆಗಳು. + +ನಾರಾಯಣ ಯಾಜಿಯವರು ಮೂಲತ ಉತ್ತರ ಕನ್ನಡದ ಯಕ್ಷಗಾನದ ಊರಾದ ಕೆರೆಮನೆ ಗುಣವಂತೆಯ ಸಮೀಪದ ಸಾಲೇಬೈಲಿನವರು. ಯಕ್ಷಗಾನ ತಾಳಮದ್ದಲೆಯಲ್ಲಿ ಹೆಸರು ಮಾಡುತ್ತಿರುವ ಅವರ ಆಸಕ್ತಿ ಯಕ್ಷಗಾನ, ಅರ್ಥಶಾಸ್ತ್ರ ಮತ್ತು ಮೈಕ್ರೊ ಫೈನಾನ್ಸಿಂಗ್. ಯಕ್ಷಗಾನ, ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ಅನೇಕ ಲೇಖನಗಳು ಕನ್ನಡದ ಮುಖ್ಯ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.ಸದ್ಯ ವಿಜಯಪುರದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ (ಪ್ರಾದೇಶಿಕ ಕಛೇರಿ) ಸಹಾಯಕ ಮಹಾ ಪ್ರಬಂಧಕ. \ No newline at end of file diff --git a/Kenda Sampige/article_61.txt b/Kenda Sampige/article_61.txt new file mode 100644 index 0000000000000000000000000000000000000000..20ec686bd787f46c2b167fbc84ec93102937209a --- /dev/null +++ b/Kenda Sampige/article_61.txt @@ -0,0 +1,37 @@ +ಪ್ರಿಯ ಭೂಮಿ + +ಕಳೆದ ಮೂರು ವರ್ಷಗಳ ಹಿಂದೆ ನಡೆದ ಕೆಲವು ವಿದ್ಯಮಾನಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಬೇಕು ಅನ್ನಿಸುತ್ತಿದೆ. ಆ ದಿನಗಳಲ್ಲಿ ಒಂದು ರಾತ್ರಿ ಮೈಸೂರಿನ ನನ್ನ ಗೆಳೆಯರೊಬ್ಬರು ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡುತ್ತಾ… ‘ಇವತ್ತು ಒಂದು ನಾಟಕ ನೋಡಿದೆ. ಬೆಂಗಳೂರಿನ ಟೀಮ್ ಅಭಿನಯಿಸಿದ್ದು; ಈ ನಾಟಕದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವವರು ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ’ ಎಂದು ಹೇಳಿ; ‘ಆ ಹುಡುಗಿ ನಿಮ್ಮ ಊರಿನವರಂತೆ; ಮತ್ತೆ ನಿನ್ನ ಸ್ಟೂಡೆಂಟ್ ಅಂತ ಹೇಳಿದರು’ ಅಂದರು. ನಾನು ಒಂದು ಕ್ಷಣ ನಮ್ಮ ಭೂಮಿ ರಂಗ ಶಾಲೆಯ ವಿದ್ಯಾರ್ಥಿಗಳನ್ನೆಲ್ಲಾ ನೆನಪು ಮಾಡಿಕೊಂಡೆ. ಸದ್ಯ ನನಗೆ ಗೊತ್ತಿರುವಂತೆ ಯಾರೂ ನಾಟಕದಲ್ಲಿ ಪಾತ್ರ ವಹಿಸುತ್ತಿರಲಿಲ್ಲ. ಕುತೂಹಲದಿಂದ ‘ಆ ಹುಡುಗಿಯ ಹೆಸರೇನು?’ ಎಂದು ಕೇಳಿದೆ. ಅದಕ್ಕೆ ಅವರು ‘ಅಣ್ಣನಿಗೆ ಹೇಳಬೇಡಿ; ನಾನೇ ಅವರೊಂದಿಗೆ ಮಾತಾಡ್ತೇನೆ, ಅಂತ ಹೇಳಿದ್ದಾರೆ’ ಅಂದರು. ನಾನು ಸರಿ ಆಗಲಿ ಎಂದು ಫೋನ್ ಇಟ್ಟೆ. + +ಇದಾಗಿ ಮೂರ‍್ನಾಲ್ಕು ದಿನಗಳ ನಂತರ ಆ ಹುಡುಗಿ ದೂರವಾಣಿಯಲ್ಲಿ ನನ್ನೊಂದಿಗೆ ಮಾತನಾಡಿದಳು…‘ಅಣ್ಣ; ಹೇಗಿದ್ದೀರಾ?’.‘ನಾನು ಚನ್ನಾಗಿದ್ದೇನೆ; ಯಾರು ಗೊತ್ತಾಗಲಿಲ್ಲ’ ಎಂದೆ. + +(ಸತೀಶ್‌ ತಿಪಟೂರು) + +ಅವಳು ‘ನಾನು ಅನಾಮಿಕಾ; ಅಣ್ಣ ಈ ದಿನಕ್ಕೊಸ್ಕರ ಎಷ್ಟು ವರ್ಷಗಳಿಂದ ಕಾಯ್ತಿದ್ದೆ ಗೊತ್ತಾ?’ ಎಂದು ಪ್ರಾರಂಭ ಮಾಡಿ ‘ಈಗ ಒಂದು ಥಿಯೇಟರ್ ಗ್ರೂಪ್ ಜೊತೆಗೆ ವರ್ಕ್ ಮಾಡ್ತಾ ಇದ್ದೇನೆ; ಸಾಫ್ಟ್ವೇರ್ ಇಂಜಿನಿಯರ್ ಆಗಿ ಬಾಷ್ ಕಂಪನಿಯಲ್ಲಿ ಕೆಲಸ ಮಾಡ್ತಾ ಇದ್ದೆ. ಯಾಕೋ ಇದು ನನ್ನದಲ್ಲ ಅನ್ನಿಸಿ ಬಿಟ್ಟು ಬಿಟ್ಟೆ. ಅಲ್ಲಿ ನನಗೆ ಎಪ್ಪತ್ತು ಸಾವಿರ ಸಂಬಳ ಬರ್ತಾ ಇತ್ತು. ಮೂರು ವರ್ಷ ಕೆಲಸ ಮಾಡಿ ಮನೆಯವರು ನನ್ನ ಓದಿಗೆ ಮಾಡಿದ ಸಾಲವನ್ನೆಲ್ಲಾ ತೀರಿಸಿ ಬಿಟ್ಟೆ. ಈಗ ನಾನು ಸಂಬಳಕ್ಕೆ ಕೆಲಸ ಮಾಡ್ತಾ ಇಲ್ಲ. ಮನಸ್ಸಿನ ಸಂತೋಷಕ್ಕೆ ಕೆಲಸ ಮಾಡ್ತಾ ಇದ್ದೀನಿ’ ಅಂದಳು. ಹೀಗೆ ಅವಳು ಮಾತನಾಡುತ್ತಿರುವಂತೆ ನನ್ನ ಮನಸ್ಸು ಈ ಅನಾಮಿಕಾಳ ಜಾಡು ಹಿಡಿದು ಹೊರಟಿತ್ತು. ಇವಳು ಚಿಕ್ಕಂದಿನಲ್ಲೇ ನನ್ನ ಅಕ್ಕನ ಬಳಿ ಭರತನಾಟ್ಯ ಶಿಕ್ಷಣಕ್ಕೆಂದು ಬರುತ್ತಿದ್ದಳು. ಬಹಳ ಆಸಕ್ತಿಯಿಂದ ಕಲಿಯುತ್ತಿದ್ದಳು. ನೃತ್ಯ ಶಾಲೆಯ ಯಕ್ಷಗಾನ ಪ್ರಯೋಗಗಳಲ್ಲಿ ಅಭಿನಯಿಸಿದ್ದಳು; ವಾರ್ಷಿಕೋತ್ಸವ ಮುಂತಾದ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದಳು. ಚಿಕ್ಕಂದಿನಲ್ಲಿ ಮನೆಯ ಪ್ರೋತ್ಸಾಹ ಇತ್ತಾದರೂ ಬೆಳೆಯುತ್ತಾ ಹೋದಂತೆ ಇವಳ ಈ ಅಭ್ಯಾಸಗಳಿಗೆ ಪ್ರೋತ್ಸಾಹ ಕಡಿಮೆಯಾಗಿ, ಪ್ರತಿರೋಧವೂ ಹೆಚ್ಚಾಗಿತ್ತು. ಕೆಲವೊಮ್ಮ ಕಾರ್ಯಕ್ರಮಗಳಿಂದ ತಡವಾಗಿ ಮನೆಗೆ ಹೋದಾಗ ಹೊರಗೆ ನಿಲ್ಲಿಸಿದ್ದೂ ಉಂಟು. ಆಗಾಗ ಕಠಿಣ ಶಿಕ್ಷೆಗೂ ಗುರಿಯಾಗುತ್ತಿದ್ದಳು. ಹೀಗೆ ಬೆಳೆದು ಇಂಜಿನಿಯರಿಂಗ್ ಶಿಕ್ಷಣಕ್ಕೆ ಸೇರಿದ ನಂತರ ಕ್ರಮೇಣ ನೃತ್ಯ ಶಾಲೆಯ ಸಂಪರ್ಕ ಕಡಿದುಕೊಂಡಳು. ಮನೆಯವರೇ ಬಿಡಿಸಿದ್ದರು. ಆದರೂ ಪ್ರತೀ ವರ್ಷ ನಮ್ಮ ಭೂಮಿ ಸಂಸ್ಥೆ ನಡೆಸುತ್ತಿದ್ದ ನಾಟಕೋತ್ಸವದ ಪ್ರದರ್ಶನಗಳನ್ನು ನೋಡಲು ಬರುತ್ತಿದ್ದಳು. ನಂತರದ ವರ್ಷಗಳಲ್ಲಿ ನಾನು ಅವಳನ್ನು ನೋಡಲಿಲ್ಲ. + +ಅವಳು ದೂರವಾಣಿಯಲ್ಲಿ ಮಾತನ್ನು ಮುಂದುವರೆಸುತ್ತಾ ‘ರಂಗಭೂಮಿಯಲ್ಲೇ ಮುಂದುವರೆಯಬೇಕು ಅಂದುಕೊಂಡಿದ್ದೇನೆ ಅಣ್ಣ. ನಾನು ಇದ್ದ ಕೆಲಸವನ್ನು ಬಿಟ್ಟು ಈ ರೀತಿ ನಾಟಕ, ಅಭಿನಯ ಅಂತ ತೊಡಗಿಕೊಂಡಿರುವುದು ನನ್ನ ಮನೆಯವರಿಗೆ ಸ್ವಲ್ಪವೂ ಇಷ್ಟವಿಲ್ಲ. ಅವರು ನನ್ನ ಮದುವೆ ಮಾಡಿ ಈ ಸಮಾಜ ಬಯಸುವ ಸಿದ್ಧ ಮಾದರಿಯೊಳಗೆ ನನ್ನ ಬದುಕನ್ನು ಅಳವಡಿಸಬೇಕು ಎಂದುಕೊಂಡಿದ್ದಾರೆ. ಬಹಳ ಒತ್ತಾಯ ಮಾಡಿದರು. ನಾನು ಒಪ್ಪಲಿಲ್ಲ. ನಮ್ಮ ನಡುವಿನ ಸಂಘರ್ಷ ತಾರಕಕ್ಕೇರಿದೆ. ನಾನೂ ಕೂಡ ಹೆಚ್ಚಾಗಿ ಊರಿಗೆ ಬರುತ್ತಿಲ್ಲಾ’. ಎಂದು ಹೇಳಿ ಅವಳು ಮಾಡಿದ ನಾಟಕದ ಪಾತ್ರದ ಕುರಿತು ಮಾತನಾಡಿದಳು. ರಂಗಭೂಮಿಯಲ್ಲಿ ತೊಡಗಿಕೊಳ್ಳುವ ಅವಳ ಉತ್ಕಟ ಬಯಕೆಯ ಬಗೆಗೆ ಹೇಳುತ್ತಾ ‘ಬೇರೆ ದೇಶಕ್ಕೆ ಹೋಗಿ ಏನಾದರು ಕೆಲಸ ಮಾಡುತ್ತಾ ವಾರಾಂತ್ಯದಲ್ಲಿ ರಂಗಭೂಮಿಯ ಅಭ್ಯಾಸದ ಬಗೆಗೆ ಯೋಚಿಸುತ್ತಿದ್ದೇನೆ. ಅದಕ್ಕಾಗಿ ಜರ್ಮನ್ ಭಾಷೆ ಕಲಿಯುತ್ತಿದ್ದೇನೆ’ ಎಂದೆಲ್ಲಾ ಹೇಳಿದಳು. + +ನಾನು ಅವಳಿಗೆ ‘ಅದು ಸರಿ; ನಾನು ನಿನಗೆಂದೂ ಪಾಠ ಮಾಡಿದವನಲ್ಲ; ನೀನು ನಮ್ಮ ಭೂಮಿ ರಂಗ ಶಾಲೆಯ ವಿದ್ಯಾರ್ಥಿಯೂ ಅಲ್ಲ. ಆದರೂ ನೀನು ನನ್ನ ಸ್ಟೂಡೆಂಟ್ ಅಂತ ಹೇಳಿದ್ದೀಯಲ್ಲ?’ ಎಂದು ಕೇಳಿದೆ. ಅದಕ್ಕೆ ಅವಳು “ಹೌದು ಅಣ್ಣ ; ನಾನು ಚಿಕ್ಕವಳಿದ್ದಾಗಿನಿಂದ ನಿಮ್ಮ ಮನೆಯ ನೃತ್ಯ ಶಾಲೆಯ ವಿದ್ಯಾರ್ಥಿಯಾಗಿ ಬೆಳೆದವಳು. ಆಗೆಲ್ಲಾ ನೀವು ಮತ್ತು ವಾಣಿ ಅಕ್ಕ ಮಾಡುತ್ತಿದ್ದ ರಂಗಭೂಮಿಯ ಚಟುವಟಿಕೆಗಳನ್ನು ಗಮನಿಸುತ್ತಿದ್ದೆ. ನೀವು ಮಾಡಿದ ಮಕ್ಕಳ ಶಿಬಿರದಲ್ಲೂ ಪಾಲ್ಗೊಂಡಿದ್ದೆ. ನೀವು ಮಾಡಿಸುತ್ತಿದ್ದ ಎಲ್ಲ ನಾಟಕಗಳನ್ನೂ ನೃತ್ಯ ಶಾಲೆಯ ವಿದ್ಯಾರ್ಥಿಗಳಾಗಿ ನಾವು ನೋಡುತ್ತಿದ್ದೆವು. ಒಮ್ಮೆ ಒಂದು ನಾಟಕ ಪ್ರದರ್ಶನಕ್ಕೆ 3 ನೇ ಬೆಲ್ ಹೊಡೆದ ನಂತರ ಬಂದೆ. ಹೊರಗೆ ನಿಂತಿದ್ದ ನೀವು ‘ಅನಾಮಿಕಾ; ತಡವಾಗಿ ಬಂದರೆ ನಾಳೆ ಒಳಗೆ ಸೇರಿಸುವುದಿಲ್ಲಾ’ ಎಂದು ಖಂಡಿತವಾಗಿ ಹೇಳಿದಿರಿ. ಆಗಲೇ ನನಗೆ ಗೊತ್ತಾದದ್ದು ನಾಟಕದ ಗಂಭೀರತೆ. ನೀವು ಮತ್ತು ಅಕ್ಕ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳುವ ಬದ್ಧತೆ ನನಗೆ ತುಂಬಾ ಇಷ್ಟವಾಗಿತ್ತು. ಆಗೆಲ್ಲಾ ನಾಟಕದಲ್ಲಿ ತೊಡಗಿಕೊಳ್ಳಬೇಕೆಂಬ ಆಸೆಯಿದ್ದರೂ ನಿಮಗೆ ಹೇಳಿಕೊಳ್ಳಲಾಗಲಿಲ್ಲ. ಮನೆಯಲ್ಲಿ ಅವಕಾಶವೂ ಇರಲಿಲ್ಲ. ಏನೇ ಇರಲಿ ಇಂದು ರಂಗದ ಮೇಲೆ ನಾನು ನಟಿಯಾಗಿ ನಿಂತಿದ್ದೀನಿ ಎಂದರೆ ಅದು ನಿಮ್ಮ ಪ್ರಭಾವದಿಂದ” ಎಂದಳು. ನಾನು ಮರು ಮಾತನಾಡದೆ ಸುಮ್ಮನಾದೆ. + +ಕೆಲಕಾಲ ಒಂದು ರೀತಿಯ ಮೌನ ನನ್ನನ್ನು ಆವರಿಸಿಬಿಟ್ಟಿತ್ತು. ನನ್ನ ಊಹೆಯ ಪರಿಧಿಯಲ್ಲೇ ಇಲ್ಲದ ಹುಡುಗಿಯೊಬ್ಬಳು ತಟ್ಟನೆ ಪ್ರತ್ಯಕ್ಷವಾಗಿ ನನ್ನೆಡೆಗೆ ಬೆಟ್ಟು ಮಾಡಿ ತೋರಿಸಿ ಮಾಯವಾದಂತಿತ್ತು. ಅನಿರೀಕ್ಷಿತವಾದ ರಂಗಭೂಮಿಯೆಡೆಗಿನ ಅವಳ ನಡೆಯಿಂದ ನನಗೆ ಸಂತೋಷವಾಗಿದ್ದರೂ ಒಳಗೆ ಏನೋ ಒಂದು ರೀತಿಯ ಆತಂಕ ಮನೆಮಾಡಿತ್ತು. ಎರಡುವರೆ ದಶಕಗಳ ಹಿಂದಿನ ನನ್ನ ಅವಸ್ಥೆಯನ್ನೇ ಅನಾಮಿಕಳಲ್ಲಿ ಕಂಡಂತಾಗಿತ್ತು. + +ನಾನು ಮಾತನ್ನು ಮುಂದುವರೆಸುತ್ತಾ “ಅನಾಮಿಕಾ; ಇಪ್ಪತೈದು ವರ್ಷಗಳ ಹಿಂದೆ ಈಗ ನೀನಿರುವ ಪರಿಸ್ಥಿತಿಯ ಒತ್ತಡಗಳಲ್ಲೇ ನಾನೂ ಇದ್ದೆ. ನಮ್ಮ ಬಗೆಗೆ ನಮ್ಮ ಮನೆಯವರು ಕಾಣುವ ಕನಸುಗಳು, ನಮ್ಮ ಬಗೆಗಿನ ಅವರ ನಿರೀಕ್ಷೆಗಳು, ನಮ್ಮ ಭವಿಷ್ಯದ ಬಗೆಗಿನ ಅವರ ಕಾಳಜಿಗಳು, ಬದುಕಿನ ಮುಂದಿನ ದಾರಿಗಳಲ್ಲಿ ನಾವು ಎಲ್ಲಾದರು ಎಡವಿಕೊಂಡು ಸೋತುಬಿಟ್ಟರೇ? ಎಂಬ ಅವರ ಆತಂಕಗಳು, ನಮ್ಮ ಕುಟುಂಬ ಬಾಳಿಕೊಂಡಿರುವ ಸಮುದಾಯ ಮತ್ತು ’ಪ್ರತಿಷ್ಠಿತ ಸಮಾಜ’ದ ಕಣ್ಣುಗಳಲ್ಲಿ ಅವರು ಎದುರಿಸಬೇಕಾದ ನಿಂದನೆಗಳು, ತಾವು ಹೆತ್ತು ಸಾಕಿ ಬೆಳೆಸಿದೆವೆಂಬ ಅವರ ಅಧಿಕಾರ ಅಥವಾ ಅಹಂ.. ಮುಂತಾದವುಗಳೆಲ್ಲಾ ಅವರ ಈ ವರ್ತನೆಗೆ ಕಾರಣವಿರಬಹುದು. ಇದು ಸಹಜವೇ; ಆದರೆ ಹೀಗೆ ವರ್ತಿಸುತ್ತಿರುವ ಪರಿಸರದ ಭಾವವು ನಮ್ಮ ಪ್ರಕೃತಿಯ ಅಭೀಪ್ಸೆ, ಇಚ್ಚೆಗೆ ವಿರುದ್ಧವಾಗಿದೆಯಲ್ಲ? ವ್ಯಕ್ತಿ ಪ್ರಕೃತಿ ಏನನ್ನು ಉತ್ಕಟವಾಗಿ ತನ್ನಲ್ಲಿ ಸೃಜಿಸಿಕೊಂಡು ಪ್ರಕಟವಾಗಲು ಬಯಸುತ್ತದೆಯೋ ಅದಕ್ಕೆ ವಿರುದ್ಧವಾದ ಇರುವಿಕೆಯನ್ನು ಅದು ಪ್ರತಿಭಟಿಸುತ್ತದೆ. ಅದೂ ಸಹಜವೇ. + +ಈ ಪರಿಸರ ಮತ್ತು ಪ್ರಕೃತಿಯ ಸಹಜತೆಯಲ್ಲಿ ಸಂಘರ್ಷ-ಸಹಬಾಳ್ವೆಗಳು ಸಾವಯವವಾಗಿ ಬೆಸೆದುಕೊಂಡಿರುತ್ತದೆ ಎನಿಸುತ್ತದೆ. ಈ ಹೊತ್ತಿನ ನಮ್ಮ ಸುತ್ತಲಿನ ಸಾಮುದಾಯಿಕ ಪರಿಸರದ ಸಮಷ್ಠಿ ಭಾವವು ಒಂದು ಕಾಲಾಂತರದ ಸಮುದಾಯ ಪ್ರಕೃತಿಯ ಭಾವನೆಗಳ ಕೃಷಿಯ ಉತ್ಪನ್ನವೇ ಆಗಿದೆ. ಈ ಪ್ರಕೃತಿ-ಪರಿಸರದ ಭಾವ ಸಂಘರ್ಷದಲ್ಲಿ ನೀನು ಕಂಡುಕೊಂಡ ‘ಅರಿವೇ’ ಇಂದಿನ ನಿನ್ನ ನಡೆಗಳಿಗೆ ಕಾರಣವಿರಬಹುದು.” ಎಂದು ಅವಳಿಗೆ ಹೇಳಿದೆ…. ಮತ್ತೆ ಮಾತು ಮುಂದುವರೆಸುತ್ತಾ; ರಂಗಭೂಮಿಯ ಅನಿಶ್ಚಿತತೆಯ ಬಗ್ಗೆ, ಬದುಕು ಎದುರಿಸಬೇಕಾದ ಸವಾಲುಗಳ ಬಗ್ಗೆ, ದೀರ್ಘಕಾಲ ಪರಸ್ಪರ ಅರಿತು ಗೌರವ ಪ್ರೀತಿಗಳಿಂದ ಬಾಳಬಲ್ಲ ಸಂಗಾತಿಯ ಆಯ್ಕೆಯ ಬಗ್ಗೆ ಕೇಳಿದೆ. ಈ ಪ್ರಶ್ನೆಗಳಿಗೆಲ್ಲಾ ಎಂದೋ ಸಿದ್ಧವಾದಂತಿದ್ದ ಆತ್ಮವಿಶ್ವಾಸದಲ್ಲಿ ‘ಅರ್ಧ ದಾರಿ ಬಂದು ಆಗಿದೆ ಅಣ್ಣ; ನಾನು ಹಿಂತಿರುಗಿ ನೋಡುವ ಪಶ್ನೆಯೇ ಇಲ್ಲ. ಇಲ್ಲಿ ನನ್ನನ್ನು ನಾನು ಕಂಡುಕೊಳ್ಳಬಹುದೆಂಬ ನಂಬಿಕೆ ಬಂದಿದೆ. ನನ್ನ ಪ್ರಕೃತಿಯನ್ನು ಅರಿತು ಬಾಳಬಲ್ಲ ಸಂಗಾತಿ ಸಿಕ್ಕರೂ ಸಿಗಬಹುದು. ಇಲ್ಲದಿದ್ದರೆ ರಂಗಭೂಮಿಯೇ ನನ್ನ ಸಂಗಾತಿ.’ ಎಂದುಬಿಟ್ಟಳು. + + + +ರಂಗಭೂಮಿಯೇ ಇವಳನ್ನು ಸೆಳೆದುಕೊಳ್ಳುತ್ತಿದೆಯೋ ಅಥವಾ ಇವಳೇ ರಂಗಭೂಮಿಯನ್ನು ಆವಾಹಿಸಿಕೊಳ್ಳುತ್ತಿದ್ದಾಳೋ… ಒಂದು ಕ್ಷಣ ತಲ್ಲಣಿಸಿಹೋದೆ. ನಂತರ ಸಾವರಿಸಿಕೊಂಡು ‘ನಿನ್ನ ಇಚ್ಚೆ ಬಲವಾಗಿದ್ದರೆ಼, ಇದೇ ನಿನ್ನ ಧ್ಯಾನವಾಗಿದ್ದರೆ; ಈ ಜಗತ್ತಿನ ಬೃಹತ್ ಜೀವಜಾಲದಲ್ಲಿ ನೀನು ಬಯಸುವ ಸಂಗಾತಿಯನ್ನು ಒದಗಿಸಿಕೊಡುವುದೂ ಈ ಪ್ರಕೃತಿಯ ನಿಯಮವೇ ಆಗಿರಬಹುದು. ನಿನಗೆ ಶುಭವಾಗಲಿ; ನಿನ್ನ ನಾಟಕ ಪ್ರದರ್ಶನ ನೋಡಲು ಬರುತ್ತೇನೆ’ ಎಂದು ಹೇಳಿ ಅವಳನ್ನು ಬೀಳ್ಕೊಟ್ಟೆ. + +ಪ್ರಿಯ ಭೂಮಿ; ಹೀಗೆ ವ್ಯಕ್ತಿ ಪ್ರಕೃತಿಯು ತನ್ನ ಪರಿಸರದ ಪ್ರಭಾವದ ವಿರುದ್ಧ ಪ್ರತಿಭಟಿಸಿ, ಸೆಣೆಸಿ ತನ್ನದೇ ನಡೆಗಳ ದಾರಿಯಲ್ಲಿ ಚಲಿಸಲು ಯಾವುದೋ ಒಂದು ಆಂತರಿಕ ಸೆಳೆತವಿರಬೇಕು. ಈ ಸೆಳೆತ ಇಂದು ನೆನ್ನೆಯದಲ್ಲ; ಇನ್ನೂ ಹಿಂದಿನದು, ಬಹುದೂರ ಕಾಲ ಹಿಂದಿನದು. ಎಂದೋ ಯಾವ ಕಾಲದಲ್ಲೋ ಯರ‍್ಯಾರ ಕಾಲ-ದೇಶ-ಪ್ರಭಾವ-ಪ್ರವಾಹಗಳ ಹರಿವಿನಲ್ಲೋ ಮೊಳೆತಿದ್ದಿರಬೇಕು. ಹೀಗೆ ಕಾಲಾಂತರ ಕಾದು ಕಾದು ತನ್ನನ್ನು ತಾನು ಅರಿವಿನಲ್ಲಿ ಕಂಡುಕೊಂಡುದುದು. ಇದು ಮೊಳೆತು ಬೆಳೆದು ವಿಕಾಸವಾಗಬಹುದಾದ ಬೀಜರೂಪ ಮಾತ್ರ. ಇದು ಬೆಳೆದು ಬೃಹತ್ ವೃಕ್ಷವಾಗಲು ಏನೆಲ್ಲಾ ಒದಗಿ ಬರಬೇಕೋ? + +ಹೀಗೆ ಒಂದಕ್ಕೊಂದು ಒಂದೊಂದು ಕಾಲದಲ್ಲಿ ಪೂರಕವಾಗಿ ಒದಗಿಬರುವ, ಕೂಡಿಕೊಳ್ಳುವ, ಹೆಣೆದುಕೊಳ್ಳುವ ಈ ಜೀವಜಾಲದ ಪ್ರೋಗ್ರಾಮಿಂಗ್ ಇದೆಯಲ್ಲಾ ಅದೇ ಒಂದು ವಿಸ್ಮಯ. ಅರಿಯಲು ಪ್ರಯತ್ನಿಸಿದಂತೆಲ್ಲಾ ತೆರೆದುಕೊಳ್ಳುತ್ತಲೇ ಇರುವ, ಪಡೆದುಕೊಳ್ಳುತ್ತಲೇ ಇರುವ ಈ ವಿಸ್ಮಯವೇ ಆಗುತ್ತಿರುವುದು. + +ನಾವು ಆಗಾಗ ಈ ಸೆಳೆತಕ್ಕೆ ಆಕರ್ಷಿತರಾಗುತ್ತೇವೆ. ಈ ಆಕರ್ಷಣೆ ಸೆಳೆತದ ಕುರುಹು ಮಾತ್ರ. ಈ ಸೆಳೆತ ಗಾಢವಾಗಿದ್ದರೆ, ತೀವ್ರವಾಗಿದ್ದರೆ ಕಾಲದ ಹರಿವಿನಲ್ಲಿ ಈ ರೀತಿಯ ಕುರುಹುಗಳನ್ನು ಕೊಟ್ಟು ಎಂದೋ ಒಂದು ದಿನ ಒಂದು ಕ್ಷಣ ತನ್ನಲ್ಲಿ ಸೆಳೆದುಕೊಂಡು ಬಿಡುತ್ತದೆಯೇನೋ ಅನಿಸುತ್ತದೆ. ನನ್ನಂತೆ ಅವಳಂತೆ ಎಲ್ಲೆಲ್ಲೊ, ಯಾರ‍್ಯಾರೋ, ಯಾವ್ಯಾವ ಕಾಲದಲ್ಲೋ ಈ ಸೆಳೆತಕ್ಕೆ ಒಳಗಾಗಿದ್ದಾರೆ; ಒಳಗಾಗುತ್ತಲೇ ಇದ್ದಾರೆ, ತಮ್ಮನ್ನು ಕಂಡುಕೊಳ್ಳುತ್ತಲೇ ಇದ್ದಾರೆ. ಈ ಎಲ್ಲವೂ ಪ್ರಕೃತಿಯ ನಿಯಮವೇ ಇರಬಹುದು. ಅಥವಾ ಅದು ವಿಕಾಸವಾಗುವ ಪರಿ ಹೀಗೆ ಇರಬಹುದು. ಎಲ್ಲಕ್ಕೂ ಒಂದು ರೀತಿಯ ಆಂತರಿಕ ಒತ್ತಡ ನಿರ್ಮಾಣವಾಗಬೇಕು. ಸನ್ನಿವೇಶಗಳ ಸಂಘರ್ಷದಲ್ಲಿ ಮೊಳೆಯಬೇಕು, ಇಚ್ಛೆಯ ಬಲದಲ್ಲಿ ಬೆಳೆಯಬೇಕು. ತನ್ನ ತನದ ಸಹಜ ಆಕಾರ, ಗುಣ, ಸ್ವಭಾವವನ್ನು ಪಡೆಯಬೇಕು. ಇದು ‘ನಾನು’. ಇದು ‘ನನ್ನ ಪ್ರಕೃತಿ’; ಹೀಗೆ ಅವರವರ ಪ್ರಕೃತಿಗನುಗುಣವಾಗಿ ವಿಕಸಿಸುವಂತೆ ಅನುವು ಮಾಡಿಕೊಡುವುದೇ ಈ ಜೀವಜಾಲದ ಪ್ರೋಗ್ರಾಮಿಂಗ್ (ನಿಯಮ) ಅನ್ನಿಸುತ್ತದೆ. + +ಅವಳ ಈ ನಡೆಗೆ ಅವಳ ಅರಿವಿಗೆ ಬಾರದ ಎಷ್ಟೋ ಕಾರಣಗಳಿರಬಹುದು. ಬದುಕಿನ ಕಾಲದಲ್ಲಿ ಏನೆಲ್ಲಾ ಘಟನೆಗಳು ಅವಳನ್ನು ಪ್ರಭಾವಿಸಿರಬಹುದು; ಅಥವಾ ದೇಹ ಮನಸ್ಸು ಚೈತನ್ಯಗಳನ್ನು ಘಾಸಿಗೊಳಿಸಿರಲೂಬಹುದು. ಕಾಲನ ಚಲನೆಯಲ್ಲಿ ವಿಸ್ಮೃತಿಗೆ ಸರಿದಂತಿದ್ದ ಈ ಎಲ್ಲವೂ ಎಂದೋ ಒಂದು ದಿನ ಅರಿವಿನ ಕಾವಿನಲ್ಲಿ ಬೆಳಕಾಗಿದ್ದಿರಬೇಕು. ಇಲ್ಲಿ ತನ್ನನ್ನು ತಾನು ಕಂಡುಕೊಳ್ಳುತ್ತಿದ್ದಿರಬೇಕು. ಈಗ ತಾನು ಕಂಡುಕೊಂಡೆ ಎಂದೆನ್ನುತ್ತಿರುವುದೂ ಕೂಡ ಈ ಹೊತ್ತಿನ ‘ಸದ್ಯ ಸತ್ಯ’ವೋ ಅಥವಾ ಸತ್ಯದಂತೆ ಭಾಸವಾಗುತ್ತಿರುವ ಮತ್ತಿನ್ನೇನೋ ಆಗಿರಬಹುದು. ಈ ರೀತಿಯ ನಿರಂತರ ಸತ್ಯದ ಹುಡುಕಾಟದಲ್ಲಿ ತೊಡಗಿಕೊಂಡವರೆಲ್ಲಾ ಕಲೆಯನ್ನು ಆಶ್ರಯಿಸಿದ್ದಾರೆ. ಮತ್ತೆ ಕೆಲವರು ಆಧ್ಯಾತ್ಮಿಕ ಪಥದಲ್ಲಿ ಮುನ್ನಡೆದಿದ್ದಾರೆ. ನನ್ನಂತೆ ಈ ಹುಡುಗಿ ಕೂಡ ರಂಗಭೂಮಿಯನ್ನು ಆಶ್ರಯಿಸಿದ್ದಾಳೆ. ಅವಳೇ ಹೇಳುವಂತೆ ಅವಳ ‘ದೇಹ ಭಾವ ಸತ್ಯ’ವನ್ನು ಕಂಡುಕೊಳ್ಳಲು ರಂಗದಮೇಲೆ ನಟಿಯಾಗಿ ನಿಂತಿದ್ದಾಳೆ. ತನ್ನನ್ನು ತಾನು ಕಂಡುಕೊಳ್ಳುವುದು ಆತ್ಮಶೋಧದ ನಿರಂತರ ಪ್ರಕ್ರಿಯೆ. ದೀರ್ಘ ಕಾಲದ ಈ ಶೋಧ ಪ್ರಕ್ರಿಯೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಸೆಳೆತ ತೀವ್ರವಾಗಿರಬೇಕು. ಹಾಗೆಯೇ ಕಂಡುಕೊಳ್ಳುವ ಅಭೀಪ್ಸೆ ಕೂಡ. ಹಾಗಿದ್ದಲ್ಲಿ ಮಾತ್ರವೇ ಕಾಲನ ಹೊಡೆತಗಳನ್ನು ಧಾಟಿಕೊಳ್ಳುತ್ತಾ ಧ್ಯಾನಸ್ಥರಾಗಲು ಸಾಧ್ಯ ಎನಿಸುತ್ತಿದೆ. + + + +ಈಗ ನಾನೂ ಕೂಡ ಅವರ ಮನೆಯವರ ಕಾಳಜಿಯಂತೆಯೇ; “ಅನಾಮಿಕಾ ತನ್ನ ಹುಡುಕಾಟದ ದಾರಿಯಲ್ಲಿ ಎಂದೂ ಎಡವಿ ಬೀಳದಿರಲಿ. ಬದುಕು ಘಾಸಿಯಾಗದಿರಲಿ. ಈ ನಿಟ್ಟಿನಲ್ಲಿ ಅವಳಿಗೆ ಬೇಕಾದುದೆಲ್ಲವೂ ಒದಗಿ ಬರಲಿ. ಅವಳ ತನದ ಚೇತನ ಅರಳಿಕೊಳ್ಳಲಿ.” ಎಂದು ಹಾರೈಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_62.txt b/Kenda Sampige/article_62.txt new file mode 100644 index 0000000000000000000000000000000000000000..61dd3a4cfa818df0bb5a48d01f48b70fbc77b216 --- /dev/null +++ b/Kenda Sampige/article_62.txt @@ -0,0 +1,41 @@ +ಕೇಳಿದ್ದು-ಕಾಣಿಸಿದ್ದು + +ನನ್ನ ತಾತ ಪ್ರಾಯಕ್ಕೆ ಬಂದ ಮೂವರು ಮಕ್ಕಳನ್ನು ಕಟ್ಟಿಕೊಂಡು ಬೆಂಗಳೂರಿನ ನಾಗಸಂದ್ರಕ್ಕೆ ಬಂದದ್ದು ಈಗ್ಗೆ ನೂರುವರ್ಷಗಳ ಹಿಂದೆ! ನಾನು ಮೊದಲೇ ತಿಳಿಸಿದ್ದಂತೆ ಕಲಾಸಿಪಾಳ್ಯದ ಬಳಿ ಇರುವ `ಪಾರ್ವತಿಪುರ’ದಲ್ಲಿ ನಮ್ಮ ಜನ ವಾಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಚಿಕ್ಕಬಳ್ಳಾಪುರದ ನಮ್ಮ ಜಾತಿಯ ಕುಟುಂಬದವರ ಜೊತೆ ಕೌಟುಂಬಿಕ ಸಂಪರ್ಕವೂ ಇತ್ತು. ತಾತನ ಒಬ್ಬಳೇ ಮಗಳನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದುಂಟಷ್ಟೆ. ಆ ಸಂಬಂಧಿಕರ ನೆರವಿನಿಂದ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ತಾತ ಹೆಣಗಾಡಿದ. ನನ್ನ ತಾತ ಕೆಂದಗಂಗಯ್ಯ ತನ್ನೂರಿನಲ್ಲಿ `ಹಿರಿಯತನ’ದಿಂದ ನಡೆದುಕೊಂಡವನು. ಒಳ್ಳೆಯ ಹೆಸರನ್ನು ಸಂಪಾದಿಸಿಕೊಂಡಿದ್ದವನು. ಇಂಥ ಮನುಷ್ಯ ಪಟ್ಟಣದಲ್ಲಿ ವಾಸಮಾಡುವುದು, ಬದುಕು ಕಟ್ಟಿಕೊಳ್ಳುವುದು ಸುಲಭ ಸಾಧ್ಯವಾದುದಲ್ಲ. ಆದರೆ, ಬಂದದ್ದಾಗಿದೆ; ಜೀವನ ಕಟ್ಟಿಕೊಳ್ಳಲು ಹೆಣಗಿದ. ತಾತ ಕೆಂದಗಂಗಯ್ಯ ತನ್ನೂರಿನಿಂದ ಬೆಂಗಳೂರಿಗೆ ಬರುವಾಗ್ಗೆ ಅವನ ಕೈ ಬರಿದಾಗಿತ್ತು! ಚಿಕ್ಕತಾತನ ವಂಚನೆ, ನನ್ನ ತಾತನ ಮನಸ್ಸನ್ನು ತುಂಬಾ ಘಾಸಿಗೊಳಿಸಿತ್ತು. ಆಗ್ಗೆ ನನ್ನ ಅಪ್ಪ ಪ್ರಾಯಕ್ಕೆ ಬಂದಿದ್ದ. ಜೊತೆಗೆ ಫರ‍್ತ್ಫಾರಂ ವರೆಗೂ ಓದಿದ್ದ. ಸರ್ಕಾರಿ ಕೆಲಸಕ್ಕಾಗಿ ಅಲೆದಾಡಿದ. ಆಗ ತಾನೆ ಸರ್ಕಾರಿ ಬಸ್ಸುಗಳು ಓಡಾಡುತ್ತಿದ್ದವು. ಯಾರೋ ಹಿರಿಯ ಅಧಿಕಾರಿಗಳೊಬ್ಬರನ್ನು ಹಿಡಿದು ಬಸ್‌ಕಂಡಕ್ಟರ್ ಕೆಲಸ ಹಿಡಿದುಕೊಂಡ! ನಮ್ಮಪ್ಪ ಕಂಡಕ್ಟರ್ ಕೂಡಾ ಆದ. ಇದು ನಮ್ಮ ತಾತನಿಗೆ ಸಂತೋಷ ಮತ್ತು ನೆಮ್ಮದಿಯನ್ನು ನೀಡಿತೆಂದು ತೋರುತ್ತದೆ. ಆದರೆ, ಈ ಸಂತೋಷ ಬಹಳ ಕಾಲ ಉಳಿಯಲಿಲ್ಲ. ಏನೋ ಕಾರಣದಿಂದಾಗಿ ನಮ್ಮಪ್ಪ ಕೆಲಸವನ್ನು ಕಳೆದುಕೊಳ್ಳಬೇಕಾಯಿತು.! + +ಈ ನಡುವೆ ನನ್ನಪ್ಪನಿಗೆ ಸಂಗೀತದ ಹುಚ್ಚು ಹಿಡಿಯಿತು. ನಮ್ಮ ಜನಸಮುದಾಯದವರ `ಸನಾದಿ’ ನುಡಿಸುತ್ತಿದ್ದುದೇ ಹೆಚ್ಚು! ಆದರೆ, ಅಪ್ಪ ಹರ‍್ಮೋನಿಯಂ ನುಡಿಸಿಕೊಂಡು ಹಾಡುವುದನ್ನು ಅತಿಶೀಘ್ರದಲ್ಲಿಯೇ ಕಲಿತುಕೊಂಡ. ಆಗ್ಗೆ ಸಿನಿಮಾಗಳ ದಂಧೆ ಇರಲಿಲ್ಲ. ಜನರು ಕಂಪನಿ ನಾಟಕಗಳಿಗೊ ಹರಿಕಥೆಗಳಿಗೊ ಸಂಜೆಯ ಭಜನಾ ಸಂಗೀತಕ್ಕೊ ಅಥವ ಸಂಗೀತ ಕಚೇರಿಗಳಿಗೊ ಹೋಗುತ್ತಿದ್ದದ್ದುಂಟು. ನನ್ನಪ್ಪ ಆಗಾಗ್ಗೆ ಗುಬ್ಬಿವೀರಣ್ಣನವರ ನಾಟಕಗಳಿಗೆ ಹೋಗುತ್ತಿದ್ದರಂತೆ. ಅಲ್ಲಿ ಸಾಮಾಜಿಕ ನಾಟಕಗಳೇ ಹೆಚ್ಚು. ಇನ್ನು ಹವ್ಯಾಸಿ ಕಂಪನಿಗಳು ಸತ್ಯಹರಿಶ್ಚಂದ್ರ, ನಳದಮಯಂತಿ, ಶನಿಮಹಾತ್ಮೆ ಮುಂತಾದ ನಾಟಕಗಳನ್ನು ಆಡಿಸುತ್ತಿದ್ದರು. ಅಪ್ಪ ಅದರ ಗುಂಗಿಗೆ ಬಿದ್ದ. ಅಲ್ಲಿ ಇಲ್ಲಿ ದುಡಿಯುತ್ತ ಸಮಯ ಸಿಕ್ಕಾಗೆಲ್ಲಾ ಶಾಸ್ತ್ರೀಯ ಸಂಗೀತದ ಒಲುಮೆಯನ್ನು ಬೆಳಸಿಕೊಂಡ. ಇತ್ತ ನಮ್ಮ ದೊಡ್ಡಪ್ಪ ಬಾಡಿಗೆಗೆ ಎತ್ತಿನಗಾಡಿ ಹಿಡಿದು ಕಲ್ಲು, ಮರಳು, ಜಲ್ಲಿ ಹೀಗೆ ದುಡಿಮೆಗೆ ಇಳಿದು ಆರುಕಾಸು, ಮೂರುಕಾಸು, ಒಂದೆರಡಾಣೆ ಸಂಪಾದಿಸತೊಡಗಿದ. ನಮ್ಮ ಚಿಕ್ಕಪ್ಪ ಸೈಕಲ್‌ಶಾಪ್ ಇಟ್ಟುಕೊಂಡ. ನಮ್ಮ ಚಿಕ್ಕಪ್ಪ ಕನಕನಪಾಳ್ಯ, ತ್ಯಾಗರಾಜನಗರದ ಜನರ ವಿಶ್ವಾಸವನ್ನು ಗಳಿಸಿಕೊಂಡ. ತ್ಯಾಗರಾಜನಗರದ ಗರಡಿಮನೆಯಲ್ಲಿ ಸಾಮು ಮಾಡಿ ಆಗಿನ ಕಾಲಕ್ಕೆ ಒಳ್ಳೆ ಪೈಲ್ವಾನ್ ಎನಿಸಿಕೊಂಡಿದ್ದ ನಮ್ಮ ಚಿಕ್ಕಪ್ಪನನ್ನು ಅಲ್ಲಿಯ ಜನರು `ಪೈಲ್ವಾನ್ ಗಂಗಪ್ಪ’ ಎಂದೇ ಕರೆಯುತ್ತಿದ್ದರು. ಸೈಕಲ್‌ಶಾಪ್‌ನಿಂದ ಒಳ್ಳೆ ವರಮಾನ ಕೂಡಾ ಬರತೊಡಗಿತು. + +ನನ್ನ ತಾತ ಬೆಂಗಳೂರಿಗೆ ಬಂದು ನಾಗಸಂದ್ರದಲ್ಲಿ ನೆಲೆಯೂರತೊಡಗಿದಾಗ ಅವನಿಗೆ ಸುಮಾರು ನಾಲ್ವತ್ತು ವರ್ಷ ಮೇಲಾಗಿತ್ತು. ನಮ್ಮ ಅಜ್ಜಿ ಗಂಗಮ್ಮನೂ ಜತೆಗಿದ್ದಳು. ದೊಡ್ಡಪ್ಪ ಹಾಗೂ ನಮ್ಮಪ್ಪ ಸಣ್ಣಪುಟ್ಟ ದುಡಿಮೆಯಲ್ಲಿದ್ದರು. ಸರ್ಕಾರಿ ನೌಕರಿ ಇನ್ನೂ ಸಿಕ್ಕಿರಲಿಲ್ಲ. ಆಗ್ಗೆ ಸರ್ಕಾರಿ ನೌಕರಿ ಸಿಗುವುದು ಅಷ್ಟು ಸುಲಭವಿರಲಿಲ್ಲ. ಈ ನಡುವೆ ನನ್ನ ಮುತ್ತಾತ ಲಕ್ಕೇನಹಳ್ಳಿಗೆ ಹೋಗಿ ರಾಗಿ, ಹುರುಳಿ ತರುತ್ತಿದ್ದ. ಕೈಯಲ್ಲಿ ಕಾಸಿಗೆ ತತ್ವಾರ. ಆಗ್ಗೆ ಬಸ್ಸಿನ ಓಡಾಟವೂ ಕಡಿಮೆ. ನನ್ನ ತಾತ ಊರಿಗೆ ಹೋಗಬೇಕಾದರೆ ಬೆಂಗಳೂರಿನ ಕಲಾಸಿಪಾಳ್ಯದಿಂದ ನೆಲಮಂಗಲಕ್ಕೆ ಹೊರಡುವ ಬಸ್ಸಿನಲ್ಲಿ ಹೋಗುತ್ತಿದ್ದ. ಅವನು ನೆಲಮಂಗಲದ ಬಳಿ ಇಳಿದು ಎಂಟು ಮೈಲಿ ನಡೆದುಕೊಂಡು ಲಕ್ಕೇನಹಳ್ಳಿ ಗ್ರಾಮಕ್ಕೆ ಬರುತ್ತಿದ್ದ. ಒಂದು ವಾರ ಊರಲ್ಲಿದ್ದು, ಬೆಂಗಳೂರಿನ ಕಡೆ ಹೊರಡುವ ಎತ್ತಿನ ಬಂಡಿಯಲ್ಲಿ ಸಾಮಾನುಗಳನ್ನು ಹೇರಿಕೊಂಡು ಬರುತ್ತಿದ್ದ. ಆಗ್ಗೆ ಎಲ್ಲಾ ಕಡೆಯಿಂದ ಬರುತ್ತಿದ್ದ ಎತ್ತಿನಗಾಡಿಗಳು ಕಲಾಸಿಪಾಳ್ಯಕ್ಕೇ ಬರುತ್ತಿದ್ದುವು. + +ನಮ್ಮ ದೊಡ್ಡಪ್ಪನಿಗೆ ಮದುವೆ ಆಗಿತ್ತು. ನಮ್ಮಪ್ಪನೂ ಪ್ರಾಯಕ್ಕೆ ಬಂದಿದ್ದ. ನನ್ನ ತಾತ ಕಲಾಸಿಪಾಳ್ಯದಲ್ಲಿ ನೆಲೆಸಿದ್ದ ಕುದೂರು ಗಂಗಣ್ಣನ ಮಗಳು ಹನುಮಕ್ಕಳ ಜೊತೆ ನಮ್ಮಪ್ಪನ ಮದುವೆ ನೆರವೇರಿಸಿದ. `ದಾಂಪತ್ಯ ಜೀವನ’ ಅಷ್ಟು ಹೊಂದಾಣಿಕೆಯಿಲ್ಲದೆ ನಡೆಯುತ್ತಿತ್ತು. ಆಗ ನಮ್ಮ ಅಪ್ಪ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮಪ್ಪನೊ ಉಗ್ರಕೋಪಿಷ್ಟ. ನಮ್ಮಪ್ಪನಿಗೆ ಹನುಮಕ್ಕಳಿಂದ ಏಳುಜನ ಮಕ್ಕಳು ಹುಟ್ಟಿದರು. ಹಿರಿಯ ಮಗಳು ಜಿ.ಜಯಲಕ್ಷ್ಮಮ್ಮ. ಈಕೆ ಬಲು ಸಾಧು. ನಮ್ಮಪ್ಪ ಬೆಂಗಳೂರು ಉತ್ತರ ತಾಲೂಕು ಬ್ಯಾಡರಹಳ್ಳಿಯಲ್ಲಿ ವಾಸವಾಗಿದ್ದಾಗ, ಈಕೆ ಬಟ್ಟೆ ಒಗೆಯುತ್ತಿರುವ ವೇಳೆ ನೀರಿನ ಸೆಳವಿಗೆ ಸಿಕ್ಕಿ ನೀಗಿಕೊಂಡಳಂತೆ. ಈ ಸುದ್ದಿ ನಮ್ಮಪ್ಪನಿಗೆ ತಿಳಿದಾಗ ಮಮ್ಮಲ ಮರುಗಿದ್ದುಂಟು. ಆಗಾಗ್ಗೆ ದೊಡ್ಡ ಮಗಳನ್ನು ನೆನೆದು ನಮ್ಮಪ್ಪ ದುಃಖಿಸುತ್ತಿದ್ದರು. ಎರಡನೆಯ ಮಗಳು ಜಿ.ಪಾರ್ವತಮ್ಮ, ಆನಂತರ ಜಿ.ನಾರಾಯಣಸ್ವಾಮಿ, ಜಿ.ಲಕ್ಕಪತಿ, ಜಿ.ಗಂಗಾಧರಯ್ಯ ಹುಟ್ಟಿದರು. ಕೊನೆಯ ಆರು ಮತ್ತು ಏಳನೆಯ ಗಂಡುಮಕ್ಕಳು ಹುಟ್ಟಿದ ಕೂಡಲೇ ತೀರಿಕೊಂಡವಂತೆ. + +ನನ್ನ ದೊಡ್ಡಮ್ಮ ಹನುಮಕ್ಕ 1980ರ ವರೆಗೂ ಬದುಕಿದ್ದಳು. ನನ್ನ ದೊಡ್ಡಮ್ಮ ಬಲು ವಿಲಕ್ಷಣವಂತ ಹೆಣ್ಣುಮಗಳು. ಈಕೆ ಯಾವಯಾವುದೋ ಕಾರಣವೊಡ್ಡಿ ಆಗಾಗ್ಗೆ ಮಕ್ಕಳನ್ನು ಬಿಟ್ಟು ತವರು ಮನೆ ಸೇರಿಕೊಳ್ಳುತ್ತಿದ್ದಳು. ಮನೆಯಲ್ಲಿ ತುಂಬಿದ ಮಕ್ಕಳು. ಅವರಿಗೆ ಸ್ನಾನ-ಆರೈಕೆ-ಊಟ ಮಾಡಿಸಲು ತೊಂದರೆಯಾಗುತ್ತಿತ್ತು. ನಮ್ಮಪ್ಪನಿಗೆ ಕೆಲಸಕ್ಕೆ ಹೋಗುವ ಧಾವಂತ. ಮನೆ ಮಕ್ಕಳನ್ನು ನೋಡಿಕೊಳ್ಳಬೇಕಿತ್ತು. ನಮ್ಮ ಅಜ್ಜಿ ಒಂದೆಡೆ ನಿಲ್ಲುತ್ತಿರಲಿಲ್ಲ. ನಮ್ಮ ತಾತ 2.12.1937ರಲ್ಲಿ ಅಮಾವಾಸ್ಯೆ ನರಕಚತುರ್ದಶಿ ದಿವಸ ನಾಗಸಂದ್ರದ ಅಂದಾನಪ್ಪ ಅವರ ಮನೆಯಲ್ಲಿ ತೀರಿಕೊಂಡರು. ಅವರನ್ನು ಚೆನ್ನಮ್ಮನ ಕೆರೆ ಪಕ್ಕದ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ನನ್ನ ತಾತ ತೀರಿಕೊಂಡಾಗ ಅವನ ವಯಸ್ಸು ಐವತ್ತೈದಾಗಿತ್ತೆಂದು ನಮ್ಮಪ್ಪ ದಿನಚರಿಯಲ್ಲಿ ಬರೆದುಕೊಂಡಿದ್ದಾರೆ. ಇದು ಸಾಯುವ ವಯಸ್ಸಲ್ಲ. ಆದರೆ, ಲಕ್ಕೇನಹಳ್ಳಿ ಬಿಟ್ಟ ಮೇಲೆ ನಮ್ಮ ತಾತನಿಗೆ ಮನೋವ್ಯಾಧಿ ಶುರುವಾಯಿತು. ಕಟ್ಟಿಕೊಂಡ ಹೆಂಡತಿಯ ಜಬರದಸ್ತುಗಾರಿಕೆ, ಬೆಳೆಯುತ್ತಿರುವ ಮಕ್ಕಳ ಪಾಲನೆ-ಪೋಷಣೆಗೆ ಹಣದ ಅಡಚಣೆ, ಎಲ್ಲೂ ಸೂರಿಲ್ಲದ ಸ್ಥಿತಿ. ನಮ್ಮ ತಾತ ದಿನೇದಿನೇ ಇದೆ ಕೊರಗಿನಲ್ಲಿ ಅಳಿದರೆಂದು ತೋರುತ್ತದೆ. + +ನನ್ನ ತಾತ ತೀರಿಕೊಳ್ಳುವಾಗ ನಮ್ಮ ಅಪ್ಪ `ಕ್ಲೋಸ್‌ಪೇಟೆ’ ಎಂದು ಕರೆಯುತ್ತಿದ್ದ ರಾಮನಗರದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಮ್ಮ ದೊಡ್ಡಪ್ಪ ಮರಳು-ಇಟ್ಟಿಗೆಗೆ ಬಾಡಿಗೆ ಗಾಡಿ ಮಾಡಿಕೊಂಡು ಬದುಕಿದ್ದ. ನನ್ನ ತಾತ ಸಾಯುವ ಮುನ್ನ ಆಗಾಗ್ಗೆ ತಮ್ಮ ಮಕ್ಕಳ ಜೊತೆ ಇರುತ್ತಿದ್ದರು. ಊರಿಗೆ ಹೋಗಿ ಬರುತ್ತಿದ್ದುದುಂಟು. ನಮ್ಮ ಚಿಕ್ಕಪ್ಪ ನಾಗಸಂದ್ರದಲ್ಲಿ ಸೈಕಲ್‌ಷಾಪ್ ಇಟ್ಟುಕೊಂಡಿದ್ದವನು ಅದನ್ನು ಅಭಿವೃದ್ಧಿಗೊಳಿಸಿ ತ್ಯಾಗರಾಜನಗರಕ್ಕೆ ಬಂದು ನೆಲೆಸಿದ್ದ. ನನ್ನ ತಾತ ಸ್ವಾಭಿಮಾನಿ. ಹಾಗಾಗಿ, ಮಕ್ಕಳ ಜೊತೆಗೆ ಕೆಲವು ದಿನ ಇದ್ದು ಬರುತ್ತಿದ್ದ. ಅಜ್ಜಿ ಗಂಗಮ್ಮನ ಜೊತೆಗೂ ಸಂಸಾರಸುಖ ಇರಲಿಲ್ಲ. ಇವೆಲ್ಲವೂ ಸೇರಿಕೊಂಡು ತಾತ ಕೆಂದಗಂಗಯ್ಯ ಇಳಿಪ್ರಾಯದಲ್ಲಿಯೇ ತೀರಿಕೊಂಡ. + +ನನ್ನ ಅಪ್ಪ ನೆಲಮಂಗಲದ ಪೊಲೀಸ್ ಸ್ಟೇಷನ್ನಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ನಮ್ಮ ದೊಡ್ಡಮ್ಮ ಮನೆಯನ್ನು ಬಿಟ್ಟು ಬೆಂಗಳೂರಿನ ಜಯನಗರದಲ್ಲಿದ್ದ ಸಿದ್ಧಾರೂಢ ಆಶ್ರಮಕ್ಕೆ ಸೇರಿಕೊಂಡಿದ್ದಳು. ಆಶ್ರಮದಲ್ಲಿದ್ದವರ ಜತೆ ಸತ್ಸಂಗ, ಭಜನೆ ಮಾಡಿಕೊಂಡು ಹುಬ್ಬಳ್ಳಿ ಸಿದ್ಧಾರೂಢ ಆಶ್ರಮಕ್ಕೆ ಹೋಗಿ ಬರುತ್ತಿದ್ದಳು. ನಮ್ಮ ದೊಡ್ಡಮ್ಮ ಹನುಮಕ್ಕ ಸಿದ್ಧಾರೂಢ ಆಶ್ರಮಕ್ಕೆ ಸೇರಿಕೊಂಡ ಮೇಲೆ, ನಮ್ಮಪ್ಪನಿಗೆ ಮಕ್ಕಳೆಲ್ಲರ ಆರೈಕೆ ಮಾಡುವುದು ಕಷ್ಟವಾಯಿತು. ನಮ್ಮಪ್ಪನ ಎರಡನೆಯ ಹೆಣ್ಣುಮಗಳು ಜಿ. ಪಾರ್ವತಮ್ಮ ಇನ್ನೂ ಹನ್ನೆರಡು ವರ್ಷದವಳು. ಆಕೆಯೇ ಮನೆಯ ಉಸಾಬರಿಯನ್ನು ನೋಡಿಕೊಳ್ಳುತ್ತಿದ್ದಳು. ನಮ್ಮಪ್ಪನ ಜೊತೆ ನಮ್ಮಜ್ಜಿಯೂ ಇದ್ದಳು. ಅವರಿಬ್ಬರೂ ಸೇರಿಕೊಂಡು ಮಕ್ಕಳ ಆರೈಕೆಯನ್ನು ಮಾಡತೊಡಗಿದರು. ನಮ್ಮ ಅಜ್ಜಿ ಒಂದೆಡೆ ನಿಲ್ಲುತ್ತಿರಲಿಲ್ಲ. ಅವಳು ತಿರುಗಾಟದವಳು. ನಮ್ಮ ಚಿಕ್ಕಪ್ಪನ ಮನೆಗೆ ಹೋಗಿ ವಾರಗಟ್ಟಲೆ ಉಳಿಯುತ್ತಿದ್ದಳು. ಒಮ್ಮೊಮ್ಮೆ ತಾನು ಹುಟ್ಟಿದ ಊರು ಲಕ್ಕೇನಹಳ್ಳಿಗೂ ಹೋಗುತ್ತಿದ್ದಳು. ನಮ್ಮ ಅಜ್ಜಿ, ತಾತ ತೀರಿಕೊಂಡ ಮೇಲೆ ಸರ್ವತಂತ್ರ ಸ್ವತಂತ್ರೆಯಾಗಿಬಿಟ್ಟಳು. ನಮ್ಮ ದೊಡ್ಡಪ್ಪ ಹಾಗೂ ನಮ್ಮ ಚಿಕ್ಕಪ್ಪನ ಜತೆ ಈಕೆಗೆ ಇದ್ದ ಹೊಂದಾಣಿಕೆ ನನ್ನಪ್ಪನ ಜೊತೆ ಇರಲಿಲ್ಲ. ನಮ್ಮ ಅತ್ತೆಯನ್ನು ಚಿಕ್ಕಬಳ್ಳಾಪುರಕ್ಕೆ ಕೊಟ್ಟಿದ್ದರು. ಆಗಾಗ್ಗೆ ಅಲ್ಲಿ ಹೋಗಿ ಅಜ್ಜಿ ಇರುತ್ತಿದ್ದಳು. ನಮ್ಮ ಅಜ್ಜಿಯೊಂದಿಗೆ ಸರಿಯಾಗಿ ಸಂಸಾರ ಮಾಡಿಕೊಳ್ಳದೆ ಆರೈಕೆ-ಪ್ರೀತಿಗಳಿಲ್ಲದೆ ಸಾಯದ ಪ್ರಾಯದಲ್ಲಿ ನನ್ನ ತಾತ ತೀರಿಕೊಂಡ. ಅವನು ‘ಸತ್ಯವ್ರತ’ನೆಂದು ನಮ್ಮಪ್ಪ ಆಗಾಗ್ಗೆ ಕೊಂಡಾಡುತ್ತಿದ್ದರು! + +ನನ್ನಪ್ಪ ನೆಲಮಂಗಲದಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿರುವಾಗ ನಮ್ಮಜ್ಜಿ ತನ್ನೂರು ಲಕ್ಕೇನಹಳ್ಳಿಗೆ ಆಗಾಗ್ಗೆ ಹೋಗಿಬರುತ್ತಿದ್ದಳಷ್ಟೆ. ಅಪ್ಪ ಹೆಂಡತಿಯಿಂದ ದೂರವಾಗಿದ್ದ. ಇನ್ನೊಂದು ಮದುವೆಯೊ ಕೂಡಿಕೆಯೊ ಮಾಡಿಕೊಳ್ಳಬೇಕೆಂಬ ಇಚ್ಛೆ ಇತ್ತು. ಹಿರಿಯ ಹೆಂಡತಿಯ ಮಕ್ಕಳನ್ನು ತನ್ನ ಮಕ್ಕಳೆಂದು ಪರಿಭಾವಿಸಿಕೊಂಡು, ಸಂಸಾರ ನಿಭಾಯಿಸುವ ಹೆಣ್ಣನ್ನು ನಮ್ಮಜ್ಜಿ ಹುಡುಕುತ್ತಿದ್ದಳು. ಆಗ ನಮ್ಮಜ್ಜಿಯ ಕಣ್ಣಿಗೆ ಬಿದ್ದವಳೇ ನಮ್ಮಮ್ಮ! ಹನ್ನೊಂದು ವರ್ಷ ಪ್ರಾಯದ, ಚೂಟಿ ಹುಡುಗಿ. ಯಾರದೋ ಹೊಲದಲ್ಲಿ ಇದ್ದಾಗ ನಮ್ಮಜ್ಜಿ ಮಾತಾಡಿಸಿದ್ದಳು. ನಮ್ಮಜ್ಜಿಯ ಮಾತುಗಳಿಗೆ ಖಡಕ್ಕಾಗಿ ನಮ್ಮಮ್ಮ ಉತ್ತರ ಕೊಟ್ಟಳಂತೆ. ಈ ವಿಷಯವನ್ನು ಅಪ್ಪನಿಗೆ ನಮ್ಮ ಅಜ್ಜಿ ಹೇಳಿದಳಂತೆ! ಆಗ ಅಪ್ಪನ ಪ್ರಾಯ ನಾಲ್ವತ್ತೆರಡು. ಏಳು ಜನ ಮಕ್ಕಳ ತಂದೆ. ನನ್ನಪ್ಪ ನಮ್ಮ ಅಮ್ಮನನ್ನು ನೋಡಿದ. ಇಬ್ಬರ ಪ್ರಾಯದ ಅಂತರ ಮೂವತ್ತಕ್ಕಿಂತ ಹೆಚ್ಚಿತ್ತು. ಅಮ್ಮನ ತಾಯಿ-ತಂದೆಯರು ಕಡುಬಡತನದಲ್ಲಿ ಬೆಂದಿದ್ದರು. ಅಮ್ಮನ ತಂದೆಯ ಹೆಸರು ಗಂಗಯ್ಯ ಬಿನ್ ಕುಲ್ಲಯ್ಯ ತಾಯಿಯ ಹೆಸರು ಹನುಮಕ್ಕ. ಇವರು ಲಕ್ಕೇನಹಳ್ಳಿಯಲ್ಲಿದ್ದವರು. ನಮ್ಮಮ್ಮನ ಅಪ್ಪನ ಜನ್ಮನಾಮ ಗಂಗಯ್ಯ. ಆದರೆ, ಜನರು ‘ಕುಲ್ಲಯ್ಯ’ ಎಂದು ಅಡ್ಡಹೆಸರಿನಿಂದ ಕರೆಯುತ್ತಿದ್ದರು. ಅವರ ಪೂರ್ವಿಕರ ವಿವರಗಳು ನನಗೆ ತಿಳಿಯದು. ಅವರಿಗೆ ಯಾವುದೇ ಭೂಮಿಕಾಣಿ ಇರಲಿಲ್ಲ. ಪ್ರತಿನಿತ್ಯ ಕೂಲಿ ಮಾಡಿ ಜೀವಿಸಬೇಕಾಗಿತ್ತು. ಅವರಿಗೆ ಮೂವರು ಮಕ್ಕಳಿದ್ದರು. ಮೊದಲನೆಯವಳು ಮುನಿಯಮ್ಮ, ಎರಡನೆಯವಳು ನಮ್ಮ ತಾಯಿ ವೆಂಕಟಮ್ಮ, ಮೂರನೆಯವಳು ಮುತ್ತಮ್ಮ! + +ನಮ್ಮಮ್ಮ ಕೆಂಪಗೆ ಇದ್ದಳು. ಆ ಕಾಲಕ್ಕೆ ಹತ್ತುವರ್ಷ ತುಂಬಿದ ತಕ್ಷಣ ಮೂಗು ಚುಚ್ಚಿ ಸೀರೆ ಉಡಿಸುತ್ತಿದ್ದ ಪದ್ಧತಿ ಇತ್ತು. ನಮ್ಮಜ್ಜಿ ಹನುಮಕ್ಕಳಿಗೆ ತನ್ನ ಮಗಳು ವೆಂಕಟಮ್ಮನಿಗೆ ಮೂಗುಬೊಟ್ಟು-ಸೀರೆ ಕೊಡಿಸಬೇಕೆಂಬ ಆಸೆ ಇದ್ದರೂ ಅದನ್ನು ತೆಗೆಸಿಕೊಡಲಾರದಷ್ಟು ಘನಘೋರವಾದ ಬಡತನವಿತ್ತು. ಲಕ್ಕೇನಹಳ್ಳಿ ಜೋಡಿಗ್ರಾಮದ ಶ್ಯಾನುಭೋಗರ ಮನೆಯಲ್ಲಿ ನಮ್ಮಮ್ಮ ಕೆಲಸ ಮಾಡಿಕೊಡುತ್ತಿದ್ದಳು. ಅಮ್ಮನ ದುಡಿಮೆ, ನಿಷ್ಠೆ, ಪ್ರಾಮಾಣಿಕತೆಗೆ ಶ್ಯಾನುಭೋಗರ ಹೆಂಡತಿ ಸೀತಮ್ಮ ಮಾರುಹೋಗಿದ್ದಳು. ನಮ್ಮ ತಾಯಿಗೆ ಮೂಗುಬೊಟ್ಟು, ಬಳೆ, ಸೀರೆ ತೆಗೆಸಿಕೊಟ್ಟ ಪುಣ್ಯಾತ್ಗಿತ್ತಿ ಆಕೆಯೇ. ನನ್ನ ಅಮ್ಮ ಆಕೆಯನ್ನು ಹಲವಾರು ಸಲ ನೆನೆದುಕೊಂಡದ್ದನ್ನು ನಾನು ಗಮನಿಸಿದ್ದೇನೆ. ಆ ಗ್ರಾಮದಲ್ಲಿ ಶ್ಯಾನುಭೋಗರ ಮನೆಯ ಜೊತೆ ಹತ್ತಾರು ಒಕ್ಕಲಿಗರ ಮನೆತನಗಳು ಇದ್ದವು. ಉಳಿದವರಲ್ಲಿ ಬೇರೆಬೇರೆ ಸಮುದಾಯಕ್ಕೆ ಸೇರಿದ್ದ ಜನರಿದ್ದರು. ನಮ್ಮ ಸಮುದಾಯಕ್ಕೆ ಸೇರಿದ ಕುಟುಂಬದವರೇ ಹೆಚ್ಚಿದ್ದರು! ನೀರಾವರಿ ಸೌಕರ್ಯ ಇರಲಿಲ್ಲ. ಕೇವಲ ಒಣಬೇಸಾಯ ಮಾತ್ರ. ಮಳೆಗಾಲ ಮಾತ್ರ ಸಮೃದ್ಧವಾಗಿರುತ್ತಿತ್ತು. ಎಲ್ಲಾ ಕಡೆ ಹಸಿರೋ ಹಸುರು. ಹಸುಗಳು ಧಂಡಿಯಾಗಿ ಹಾಲು ಕೊಡುತ್ತಿದ್ದವು. ಕುರಿ-ಮೇಕೆಗಳಿಗೆ ಬರವಿರಲಿಲ್ಲ! ಪ್ರತಿವಾರ ತ್ಯಾಮಗೊಂಡ್ಲುವಿನಲ್ಲಿ ನಡೆಯುತ್ತಿದ್ದ ವಾರದ ಸಂತೆಗೆ ತುಪ್ಪವನ್ನೊ ಬೆಣ್ಣೆಯನ್ನೊ ಕೋಳಿಯನ್ನೊ ತೆಗೆದುಕೊಂಡು ಹೋಗಿ ಮಾರಿ ಮನೆಗೆ ಬೇಕಾದ ದಿನಸಿ ಪದಾರ್ಥಗಳನ್ನು ಮನೆಗೆ ತರುತ್ತಿದ್ದರು. ಉಪ್ಪು, ಎಣ್ಣೆ, ಸೋಪು ಮುಂತಾದವುಗಳನ್ನೂ ಸಾಂಬಾರ ಪದಾರ್ಥಗಳನ್ನೂ ಸಂತೆಯಿಂದ ತಂದರೆ ಒಂದುವಾರ ಅದನ್ನೇ ಬಳಸುತ್ತಿದ್ದರು. + + + +ನನ್ನ ಅಮ್ಮ ತನ್ನ ತಾಯಿ ಹನುಮಕ್ಕನ ಜೊತೆಗೆ ಸಂತೆಗೆ ಹೋಗುತ್ತಿದ್ದಳು. ಅಲ್ಲಿ ತುಪ್ಪ ಮಾರಿ ಸಣ್ಣ-ಪುಟ್ಟ ದಿನಸಿ ಸಾಮಾನುಗಳನ್ನು ನಮ್ಮಜ್ಜಿ ತರುತ್ತಿದ್ದಳು. ನಮ್ಮ ತಾತ ಕುಲ್ಲಯ್ಯನನ್ನು ನಾನು ಚಿಕ್ಕಂದಿನಲ್ಲೆ ನೋಡಿದ್ದೆ. ಅವನ ಹೆಸರು ನನಗೆ ವಿಲಕ್ಷಣವಾಗಿ ಕಂಡಿತ್ತು. ಮಟ್ಟಸವಾದ ತೆಳುದೇಹದ ಆಕೃತಿ. ಆದರೆ, ಬಡತನ ಮುಖದ ಮೇಲೆ ವಿರಾಜಮಾನವಾಗಿತ್ತು. ಬಡತನವೇ ಹೊದ್ದು ಮೆರೆಯುತ್ತಿತ್ತು. ಇಂಥ ಮನೆಯಲ್ಲಿ ನನ್ನಮ್ಮ ಬೆಳೆಯುತ್ತಿದ್ದಳು. ನನ್ನ ತಂದೆಯ ತಾಯಿ ಕರಿಯಜ್ಜಿಗೆ ನನ್ನ ಅಮ್ಮನನ್ನು ನೋಡಿದ ತಕ್ಷಣವೇ “ಈಕೆ ನಮ್ಮ ಮನೆಯನ್ನು ಸಂಭಾಳಿಸಿಕೊಂಡು ಹೋಗಬಲ್ಲಳು” ಎಂದು ಮನವರಿಕೆ ಆಯಿತಂತೆ. ಇನ್ನೊಮ್ಮೆ ನಮ್ಮ ಅಜ್ಜಿ ಲಕ್ಕೇನಹಳ್ಳಿಗೆ ಹೋದಾಗ ಕೋಸುಗಿಡಕ್ಕೆ ನೀರನ್ನು ಕಟ್ಟುತ್ತಿದ್ದಳಂತೆ. ಆಗ ನಮ್ಮ ಅಜ್ಜಿ “ನೀನು ಯಾರ ಮಗಳೇ?” ಎಂದಾಗ “ನಾನು ಕುಲ್ಲಯ್ಯನ ಮಗಳು” ಎಂದು ದಿಟ್ಟವಾಗಿ ಉತ್ತರ ಕೊಟ್ಟಳಂತೆ. ಆಮೇಲೆ ನಮ್ಮಮ್ಮನ ತಾಯಿ ಹನುಮಕ್ಕನನ್ನು ಕಂಡು ಮಾತಾಡಿದಾಗ ಈಗ್ಗೆ ಎರಡು ವರ್ಷಗಳ ಹಿಂದೆ ಮದುವೆ ಆಗಿತ್ತೆಂದೂ ಇನ್ನು ಸಣ್ಣವಳಾಗಿರುವುದರಿಂದ ಋತುಮತಿ ಆದೊಡನೆ ಗಂಡನ ಮನೆಗೆ ಕಳುಹಿಸಿಕೊಡುತ್ತೇವೆಂದೂ ನಮ್ಮಜ್ಜಿಗೆ ತಿಳಿಸಿದರಂತೆ! + +ನಮ್ಮ ಅಜ್ಜಿಯ ಮನಸ್ಸಿಗೆ ಈಕೆ ನಮ್ಮ ಅಪ್ಪನಿಗೆ ತಕ್ಕ ಹೆಂಡತಿ ಆಗುವಳೆಂದು ಅನ್ನಿಸಿದ್ದರಿಂದ ಈ ಪ್ರಸಂಗವನ್ನು ಹೇಗೆ ನಿವಾರಿಸಿಕೊಳ್ಳುವುದೆಂಬ ಯೋಚನೆಗೆ ಬಿದ್ದಳು. ನಮ್ಮ ಅಪ್ಪ ಎರಡನೆಯ ಮದುವೆಗೆ ಸಿದ್ಧನಾಗಿರುವ ವರ, ನನ್ನ ಅಮ್ಮನಿಗೆ ಈಗಾಗಲೇ ಮದುವೆ ಆಗಿದೆ. ಈ ಹಿನ್ನೆಲೆಯಲ್ಲಿ ನನ್ನ ಅಮ್ಮನ ಮದುವೆ ಆಗಿರುವ ಸಂಬಂಧದ ಜೊತೆ ಮಾತಾಡಿ – ಅವರ ಜೊತೆ ‘ದಾಂಪತ್ಯ ವಿಚ್ಛೇದನ’ ಮಾಡಿ, ಅವರು ಕೊಟ್ಟಿರುವ ಒಡವೆ-ವಸ್ತçಗಳನ್ನು ಹಿಂದಿರುಗಿಸುವುದೆಂದು; ಈ ವಿಷಯವಾಗಿ ‘ಒಪ್ಪಂದ ಪತ್ರ’ ಸಿದ್ಧಪಡಿಸಲು ಊರಿನ ಮುಖಂಡರು ಕುಲದ ಮುಖ್ಯಸ್ಥರು ನಿಶ್ಚಯಿಸಿದರಂತೆ. ಆಗ ನಮ್ಮ ಅಪ್ಪ ಈ ಸಂಬಂಧವಾಗಿ ಮದುವೆ ತೆರ ಕಟ್ಟಿ ನನ್ನಮ್ಮನ ಜತೆ ಕೂಡಿಕೆ ಮಾಡಿಕೊಂಡರು, ಈ ವಿಷಯವನ್ನು ನನ್ನ ಅಪ್ಪನ ತಾಯಿ ಗಂಗಮ್ಮಜ್ಜಿ ಸಮಯ ಸಿಕ್ಕಾಗೊಮ್ಮೆ ಹೇಳಿದ್ದಳು. + +ನನ್ನ ತಾಯಿಯ ದಾಂಪತ್ಯ ವಿಚ್ಛೇದನ ನಡೆದದ್ದು 1947ನೆಯ ಇಸವಿ ಸೆಪ್ಟೆಂಬರ್ 28ರಂದು. ಆ ಕಾಲಕ್ಕೆ ಊರಿನ ಮುಖ್ಯಸ್ಥರು ಮತ್ತು ಕುಲಸ್ಥರೂ ಸೇರಿ ಪಂಚಾಯಿತಿ ಮಾಡಿದರು: ದಾಂಪತ್ಯ ವಿಚ್ಛೇದನದ ಯಥಾವತ್ ಪತ್ರ ಹೀಗಿದೆ: + +“ಸನ್ 1947ನೇ ಇಸವಿ ಸೆಪ್ಟಂಬರು ಮಾಹೆ 29ರಲ್ಲೂ ನೆಲಮಂಗಲ ತಾಲ್ಕೂ ತ್ಯಾಮಗೊಂಡ್ಲು ಹೋಬಳಿ ಜೋಡಿಲಕ್ಕೇನಹಳ್ಳಿ ವಾಸಿ ಕೊರಮಸೆಟ್ಟಿ ಗಂಗಯ್ಯನ ಮಗ ಗಂಗಯ್ಯ ವುರೂಪ್ ಕುಲ್ಲಯ್ಯನಿಗೆ ಕೊರಟಗೆರೆ ತಾಲ್ಕೂ ಕೋಲಾಳ ಹೋಬಳಿ ಲಕ್ಕಮುತ್ತನಹಳ್ಳಿ ವಾಸಿಗಳಾದ ಕೊರಮಸೆಟ್ಟಿ ಮತದ ಈ ಕೆಳಗೆ ರುಜು ಮಾಡಿರುವ ಮರಿಯಪ್ಪನ ಮಗ ನಂಜಯ್ಯನಾದ ನಾನು ನನ್ನ ತಾಯಿ ರಾಮಕ್ಕನ ಅಣ್ಣ ಗಂಗಯ್ಯನಾದ ನಾವುಗಳು ಖುದ್ದು ಮನೋರಾಜಿಯಿಂದ ಈ ಕೆಳಗೆ ಕಂಡ ಪಂಚಾಯಿತೆದಾರರ ಮತ್ತು ಕಟ್ಟಿಮನೆ ಯಜಮಾನ ಗುಂಡೇನಹಳ್ಳಿ ಮಸಿಯಪ್ಪನವರ ಯಿನ್ನು ಹಾಜರಿರುವ ಕುಲಸ್ತರ ರೂಬು ರೂಬು ಒಪ್ಪಿ ಬರಸಿಕೊಟ್ಟ ಬಿಡುಗಡೆ ಅಥವ ದಾಂಮ್‌ಪತ್ಯ ವಿಚ್ಛೇದನ ಕರಾರು ಏನಂದರೆ : ಮೇಲ್ಕಂಡ ಗಂಗಯ್ಯ ವುರೂಪ್ ಕುಲ್ಲಯ್ಯನ ಮಗಳು ವೆಂಕಟಮ್ಮ ಎಂಬ ಹುಡುಗಿಯನ್ನು ನಂಜಯ್ಯನಾದ ನಾನು ಲಗ್ನವಾಗಿದ್ದು ಸರಿಯಷ್ಟೆ. ಈಗ ನಮಗೂ ನಿಮಗೂ ನಂಟಸ್ತನ ಸರಿಬೀಳದ ಪ್ರಯುಕ್ತವೂ ಮತ್ತು ಹುಡುಗಿಯು ಪ್ರೌಢೆಯಾಗುವುದಕ್ಕೆ ಯಿನ್ನು ತುಂಬಾ ಕಾಲವು ಬೇಕಾಗಿರುವುದರಿಂದಲೂ ನಮ್ಮ ಕೆಲಸದ ಸಬೂಬು ಬೇರೆ ಲಗ್ನಮಾಡಿಕೊಳ್ಳುವವುದ್ದಿಸ್ಯ ನಿನ್ನ ಮಗಳು ಅಂದರೆ ನನ್ನ ಹೆಂಡತಿ ವೆಂಕಟಮ್ಮ ಎಂಬುವಳನ್ನು ಬಿಡುಗಡೆ ಮಾಡಿಕೊಡಬೇಕಂತ ಪಂಚಾಯಸ್ತರ ರೂಬು ರೂಬು ಈಗ್ಗೆ 15 ದಿನಗಳ ಹಿಂದೆ ನಾವು ನಿಮ್ಮನ್ನು ಕೇಳಿಕೊಂಡದ್ದು ಸರಿಯಷ್ಟೆ. ಇದಕ್ಕೆ ನೀವು ಸಹ ಸಮ್ಮತಪಟ್ಟಿದ್ದರಿಂದ ಲಗ್ನ ಕಾಲದಲ್ಲಿ ನಾವು ಹೆಣ್ಣಿಗೆ ಕೊಟ್ಟಿದ್ದ ವಿಶಿಷ್ಟ ಆಭರಣಗಳನ್ನು ಮಾಂಗಲ್ಯಸಹಿತ ಹಾಲಿ ಇರುವ ಪಂಚಾಯಸ್ತರ ಮತ್ತು ಕುಲಸ್ತರ ರೂಬುರೂಬು ಲೇಶ್ಯಾಂಶವು ಬಿಡದೆ ನಮ್ಮ ವಶಕ್ಕೆ ಅಂದರೆ ನಂಜಯ್ಯನಾದ ನಾನು ತೆಗೆದುಕೊಂಡಿರುತ್ತೇನೆ. ಕುಲಪದ್ಧತಿ ಪ್ರಕಾರ ಹೆಣ್ಣಿಗೋಸ್ಕರ ಲಗ್ನಕಾಲದಲ್ಲಿ ಕೊಟ್ಟಿದ್ದ ವರಹಗಳು (30) ರೂಪಾಯಿಗಳನ್ನು ಮತ್ತು ಸೀರೆಯ ಬಾಬ್ತು (15) ರೂಪಾಯಿಗಳನ್ನು ನನ್ನ ವಶಕ್ಕೆ ತೆಗೆದುಕೊಂಡಿರುವುದಲ್ಲದೆ ಮಾಮೂಲ್ ರೀತಿಯ ಅಂದರೆ ಕುಲಪದ್ಧತಿ ಪ್ರಕಾರ ಬರಬೇಕಾದ ರಿವಾಜು ಮಂಶುಕಳ್ಳು ಸಹ ಬಂದಿರುತ್ತೆ. ನಮಗೂ ನಿಮಗೂ ಮತ್ತು ನಿಮ್ಮ ಹೆಣ್ಣಿಗೂ ಯಾವ ವಿಧವಾದ ಸಮ್ಮಂದವೂ ಇರುವುದಿಲ್ಲ. ಸದರಿ ಬಿಡುಗಡೆಯಾದ ನನ್ನ ಹೆಂಡತಿಯನ್ನು ನಿಮ್ಮ ಇಷ್ಟಬಂದವರಿಗೆ ಪುನರ್‌ವಿವಾಹ ಮಾಡಿಕೊಡುವುದರಲ್ಲಿ ನಮ್ಮ ಅಭ್ಯಂತರವೇನು ಇರುವುದಿಲ್ಲ ಎಂಬುದಾಗಿ ನಮ್ಮ ಖುದ್ದು ಮನೋರಾಜಿಯಿಂದ ಒಪ್ಪಿ ಬರೆಸಿಕೊಟ್ಟ ಬಿಡುಗಡೆ ಅಥವ ದಾಮ್‌ಪತ್ಯ ವಿಚ್ಛೇದನ ಕರಾರು ಪತ್ರ.” + +ನನ್ನ ಅಮ್ಮ ಜೋಡಿ ಲಕ್ಕೇನಹಳ್ಳಿ ಶ್ಯಾನುಭೋಗರ ಮನೆಯ ಸೀತಮ್ಮನ ಜೊತೆ ತುಂಬಾ ಹೊಂದಿಕೊಂಡಿದ್ದಳು. ಅವರ ಮನೆಯ ಹಿತ್ತಲಲ್ಲಿ ಕುಳಿತು ಭತ್ತಕುಟ್ಟಿ ಅಕ್ಕಿ ಕೇರುವುದು, ಖಾರದಪುಡಿ ಮಾಡಿಕೊಡುವುದನ್ನು ಮಾಡುತ್ತಿದ್ದಳು. ಹೀಗಾಗಿ, ಮನೆಯಲ್ಲಿ ಅಡುಗೆ ಮಾಡಿದಾಗ ಬೇಳೆತೊವ್ವೆ ಮಾಡಿಕೊಂಡು ಊಟ ಮಾಡುತ್ತಿದ್ದಳು. ಶ್ಯಾನುಭೋಗರ ಹೆಂಡತಿ ಸೀತಮ್ಮ ಕೊಡುವ ಹುಳಿ, ಸಾರು, ಪಲ್ಯಗಳನ್ನು ಮನೆಗೆ ತಂದು ಊಟ ಮಾಡುತ್ತಿದ್ದಳು. ನನ್ನ ಅಮ್ಮನ ಪ್ರಾಯದ ಊರಿನ ಹುಡುಗಿಯರಿಗಿಂತ ಹೆಚ್ಚು ಚಟುವಟಿಕೆ, ಸೂಕ್ಷ್ಮಬುದ್ಧಿ, ಇನ್ನೊಬ್ಬರ ಜತೆ ನಡೆದುಕೊಳ್ಳುವ ರೀತಿ ಅನೇಕರಿಗೆ ವಿಸ್ಮಯವನ್ನು ಉಂಟುಮಾಡುತ್ತಿತ್ತು. ಪ್ರತಿಯೊಂದು ಕೆಲಸದಲ್ಲೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಅಮ್ಮನನ್ನು ನನ್ನ ಅಪ್ಪ ಕೂಡಿಕೆ ಮಾಡಿಕೊಂಡಾಗ ಮೂವತ್ತು ವರ್ಷಗಳ ಅಂತರವಿತ್ತು. ನನ್ನ ಅಪ್ಪ ಆರಡಿ ಎತ್ತರದ ಬೃಹದ್ದೇಹಿ! ಆದರೆ, ಅಮ್ಮ ಐದಡಿ ಎತ್ತರದ ಪೀಚಲು ಹೆಂಗಸು! ದೈಹಿಕವಾಗಿ ಇಬ್ಬರದೂ ಅಜ-ಗಜಾಂತರ. ಆದರೆ, ಆ ಕಾಲಕ್ಕೆ ಈ ಬಗೆಯ ಕೂಡಿಕೆಯೊ ವಿವಾಹವೊ ನಡೆಯುತ್ತಿದ್ದುದು ಸರ್ವೇ ಸಾಮಾನ್ಯವಾಗಿತ್ತು! + +ನಮ್ಮ ಅಜ್ಜಿ ಇನ್ನೂ ದೊಡ್ಡವಳಾಗದ ಅಮ್ಮನನ್ನು ಮನೆಗೆ ಕರೆತಂದರು. ಆಗ ಅಮ್ಮನ ಪ್ರಾಯದ ದೊಡ್ಡ ಹೆಂಡತಿಯ ಮಗಳು ಪಾರ್ವತಮ್ಮ ಮತ್ತು ಉಳಿದ ಮೂವರು ಗಂಡುಮಕ್ಕಳಿಗೆ ನನ್ನಮ್ಮ ಮಲತಾಯಿ ಎನಿಸಿಕೊಂಡಳು. ಅಪ್ಪ ನನ್ನಮ್ಮನನ್ನು ಕೂಡಿಕೆ ಮಾಡಿಕೊಂಡಾಗ ನನ್ನಪ್ಪನಿಗೆ ಮದುವೆ ಆಗಿ ಮಕ್ಕಳಿದ್ದುದು ಅಮ್ಮನಿಗೆ ಗೊತ್ತಿತ್ತು. ಅಮ್ಮ ಮನೆಗೆಲಸ ಮಾಡುತ್ತ, ಹಿರಿಹೆಂಡತಿ ಮಕ್ಕಳನ್ನು ತನ್ನ ಮಕ್ಕಳಂತೆಯೇ ನೋಡಿಕೊಳ್ಳುತ್ತಿದ್ದಳು. ನನ್ನ ಹಿರಿಯಣ್ಣಂದಿರಾದ ಜಿ.ನಾರಾಯಣಸ್ವಾಮಿ, ಜಿ. ಲಕ್ಕಪತಿ ಮತ್ತು ಜಿ. ಗಂಗಾಧರಯ್ಯ ಈ ಮೂವರನ್ನು ಬಲು ಅಕ್ಕರೆಯಿಂದ ಅಮ್ಮ ನೋಡಿಕೊಳ್ಳುತ್ತ ಅವರಿಗೆಲ್ಲಾ ಕಾಲಕಾಲಕ್ಕೆ ಬೇಕಾದ ಅಗತ್ಯತೆಗಳನ್ನು ಪೂರೈಸುತ್ತಿದ್ದಳು. ಅವರು ನನ್ನ ಅಮ್ಮನನ್ನು ಹೆಸರು ಹಿಡಿದು ಕರೆಯುತ್ತಿದ್ದರು. ನಮ್ಮ ದೊಡ್ಡಕ್ಕ ಪಾರ್ವತಮ್ಮ, ನನ್ನ ಅಮ್ಮನಿಗಿಂತ ಒಂದೆರಡು ವರ್ಷ ದೊಡ್ಡವಳೇ. ನನ್ನ ದೊಡ್ಡಕ್ಕ ಪಾರ್ವತಕ್ಕ ಕೂಡ ‘ವೆಂಕಟಮ್ಮ’ ಎಂದು ಹೆಸರನ್ನು ಹಿಡಿದೇ ನನ್ನಮ್ಮನನ್ನು ಕರೆಯುತ್ತಿದ್ದಳು. ಅಮ್ಮ ಋತುಮತಿಯಾದಾಗ ಗೂಡ್ಲುಶಾಸ್ತ್ರ ಮಾಡಿ ಅಧಿಕೃತವಾಗಿ ಮನೆತುಂಬಿಸಿಕೊಂಡರಂತೆ. ಆಗ ಊರಿಂದ ತಾಯಿ ಹನುಮಕ್ಕ ಮತ್ತು ತಂದೆ ಕುಲ್ಲಯ್ಯ ಬಂದು ಒಂದು ವಾರ ಇದ್ದು ಹೋದರು. + +ನನ್ನ ಅಮ್ಮ ಸಾಧುಪ್ರಾಣಿ. ಅವಳಿಗೆ ಕಪಟ-ವಂಚನೆಗಳು ಗೊತ್ತಿರಲಿಲ್ಲ. ಅತ್ಯಂತ ಮುಗ್ಧ ಹೆಂಗಸು. ಭಿಕ್ಷೆ ಬೇಡುವವರೊ ನಿರ್ಗತಿಕರೊ ಮನೆಬಾಗಿಲಿಗೆ ಬಂದರೆ, ಮನೆಯಲ್ಲಿ ಏನಿರುತ್ತದೊ ಅದನ್ನು ಧಾರಾಳವಾಗಿ ಕೊಡುತ್ತಿದ್ದ ಮಹಾತಾಯಿ. ನನ್ನಪ್ಪ ನನ್ನಮ್ಮ ಇಬ್ಬರ ವ್ಯಕ್ತಿತ್ವ ಭಿನ್ನಭಿನ್ನವೇ. ನಮ್ಮಪ್ಪ ರಾವಣ ಪ್ರಕೃತಿ. ಅವರು ಪೊಲೀಸ್ ಹೆಡ್‌ಕಾನ್‌ಸ್ಟೇಬಲ್ ಆಗಿ ನೆಲಮಂಗಲ ಪೊಲೀಸ್ ಸ್ಟೇಷನ್ನಿನಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗಲೇ ಮೆಳ್ಳೆಪುರದಲ್ಲಿ ನಾಲ್ಕುಗುಂಟೆಯ ಜಮೀನನ್ನು ಖರೀದಿಸಿದ್ದರು. ನೆಲಮಂಗಲ ತಾಲ್ಲೂಕು ಬಸವನಹಳ್ಳಿಯ ಶ್ಯಾನುಭೋಗ್ ಕಿಟ್ಟಪ್ಪನವರ ಸಮಕ್ಷಮದಲ್ಲಿ ಖರೀದಿ ಪ್ರಕ್ರಿಯೆ ಜರುಗಿತು. ನಮ್ಮ ಅಕ್ಕ ಜಯಲಕ್ಷ್ಮಮ್ಮ 08.07.1948ರಲ್ಲಿ ಹುಟ್ಟಿದಳು. ಆಗ ನಮ್ಮ ಅಮ್ಮನಿಗೆ ಹದಿನಾಲ್ಕೊ ಹದಿನೈದೊ ವರ್ಷ. ನನ್ನ ಅಕ್ಕ ಹುಟ್ಟಿದಾಗ ನನ್ನಪ್ಪನಿಗೆ ಆನಂದವೋ ಆನಂದ. ಏಕೆಂದರೆ, ನಮ್ಮಪ್ಪನ ದೊಡ್ಡ ಹೆಂಡತಿಯ ಹಿರಿಯ ಮಗಳ ರೀತಿಯಲ್ಲೆ ಈಕೆ ಇರುವಳೆಂದೂ ಆಕೆಯೇ ಈಗ ನಮ್ಮ ಮನೆಯಲ್ಲಿ ಜನಿಸಿರುವಳೆಂದೂ ಗಾಢವಾಗಿ ನಂಬಿದ್ದರು. ಆಕೆಯ ಹೆಸರು ಜಯಲಕ್ಷ್ಮಮ್ಮ. ಅದೇ ಹೆಸರನ್ನು ನನ್ನ ಅಕ್ಕನಿಗೂ ಇಟ್ಟರು. + + + +ನನ್ನ ಅಕ್ಕ ಹುಟ್ಟಿದ ಗಳಿಗೆ ಚೆನ್ನಾಗಿದೆಯೆಂದು ಅಮ್ಮ ಪದೇ ಪದೇ ಹೇಳುತ್ತಿದ್ದಳು. ನನ್ನ ಅಕ್ಕ ಹುಟ್ಟಿದ ಮೇಲೆ ಮನೆಕಟ್ಟುವ ಕೆಲಸ ಶುರು ಮಾಡಿದರು. ನನ್ನ ತಾತ ಸಾಯುವಾಗ ಸ್ವಂತ ಮನೆಯಿಲ್ಲದೆ, ಬೇರೆಯೊಬ್ಬರ ಮನೆಯಲ್ಲಿ ಮರಣ ಹೊಂದಿದ್ದ. ಅದೊಂದು ವ್ಯಥೆ ನನ್ನಪ್ಪನನ್ನು ಸದಾ ಬಾಧಿಸುತ್ತಿತ್ತು. ನಮ್ಮ ವಂಶದಲ್ಲಿ ಸ್ವಂತ ಮನೆ ಕಟ್ಟಿದವರು ಯಾರೂ ಇರಲಿಲ್ಲ. ನನ್ನಪ್ಪ ಸ್ಥಳದಲ್ಲೇ ದೊರಕುವ ಇಟ್ಟಿಗೆ, ಮರಳು, ಸುಣ್ಣ ಬಳಸಿ ಸಾಕಷ್ಟು ವಿಸ್ತಾರವಾದ ಮನೆಯನ್ನೇ ಕಟ್ಟಿದರು. ಅವರು ಮನೆಯನ್ನು ಕಟ್ಟುವಾಗ ಆ ಊರಿಗಿದ್ದ ಹೆಸರು ಮೆಳ್ಳೆಪುರ. ಸರ್ಕಾರಿ ದಾಖಲೆಯಲ್ಲೂ ಅದೇ ಹೆಸರಿತ್ತು. ಆ ಮನೆಗೆ ವಾಸಕ್ಕೆ ಬಂದದ್ದು 1950ರ ಸುಮಾರಿಗೆ. ಆಗ ನಾನಿನ್ನೂ ಹುಟ್ಟಿರಲಿಲ್ಲ. ನನ್ನಪ್ಪ ನೆಲಮಂಗಲ ಸ್ಟೇಷನ್ನಿನಿಂದ ಆನೇಕಲ್ ಸ್ಟೇಷನ್ನಿಗೆ ದಫೇದಾರ್ ಆಗಿ ವರ್ಗಾವಣೆ ಆಗಿದ್ದರು. ಆನಂತರ ಹೆಬ್ಬಗೋಡಿಗೆ ವರ್ಗಾವಣೆ ಆಯಿತು. ಅಲ್ಲಿ ನನ್ನಪ್ಪ ಇಲಾಖೆಯಲ್ಲಿ ಒಳ್ಳೆ ಹೆಸರನ್ನು ಪಡೆದರು. ಅಪ್ಪನ ಹೆಸರು ಹೇಳಿದರೆ ಊರಿನ ಜನರು ಎರಡು ಕೈಗಳನ್ನು ಎತ್ತಿ ಕೈಮುಗಿಯುತ್ತಿದ್ದರು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_63.txt b/Kenda Sampige/article_63.txt new file mode 100644 index 0000000000000000000000000000000000000000..169201ee4b48d3b123cfcd39418355ef8db96194 --- /dev/null +++ b/Kenda Sampige/article_63.txt @@ -0,0 +1,23 @@ +ಪ್ರಿಯ ಭೂಮಿ + +ಫುಕುವೋಕಾನ ಸಹಜ ಕೃಷಿಯ ತೋಟದ ಬಗೆಗೆ ಮತ್ತು ರಂಗಭೂಮಿಯಲ್ಲಿ ನಾನು ಕಂಡುಕೊಳ್ಳ ಬಯಸಿದ ಸಹಜ ಕೃಷಿ ಪ್ರಕ್ರಿಯೆಯ ಬಗೆಗೆ ನಿನಗೆ ಇಲ್ಲಿ ಬರೆಯಬೇಕು ಅನ್ನಿಸುತ್ತಿದೆ. + +ತೋಟ ಎಂದೊಡನೆ ಮೊದಲು ನಮಗರಿವಿಲ್ಲದಂತೆಯೇ ಒಂದು ನಿರ್ದಿಷ್ಟ ಆವರಣ ಗೋಚರಿಸುತ್ತದೆ. ಈ ನಿರ್ದಿಷ್ಟ ಆವರಣದಲ್ಲಿ ಕೆಲವು ಪ್ರಕ್ರಿಯೆಗಳಿಂದ ಉಂಟಾದ ಅಭಿವ್ಯಕ್ತಿ ಈ ತೋಟ. ಇಲ್ಲಿ ಬಿತ್ತುಕೊಂಡ ಬೀಜ, ಸಸಿ, ಗಿಡ ಮರ ಬಳ್ಳಿಗಳು, ಮರ ಹೆಮ್ಮರಗಳು, ಹುಳು ಹುಪ್ಪಟೆ ಕ್ರಿಮಿಕೀಟಗಳು, ಜೀವ ಜಂತುಗಳು ಇವುಗಳೊಳಗೆ ತಾನು ಬೆರೆತು, ಪ್ರಕೃತಿ ವಿಸ್ಮಯದ ಬೆಡಗುಗಳನ್ನು ಅರಿಯುತ್ತಾ ಸಹಜ ಕೃಷಿಯ ವಿಧಾನಗಳನ್ನು ಕಂಡುಕೊಳ್ಳುತ್ತಾ ಕೃಷಿಯ ಮೂಲಕವೇ ಜೀವನ ದರ್ಶನ ಮಾಡಿಸಿದವರು ಫುಕುವೋಕಾ. ನಿರ್ದಿಷ್ಟ ಆವರಣದೊಳಗೂ ಪ್ರಕೃತಿ ಸಹಜ ಪೂರ್ಣ ವಿಕಾಸದ ಸತ್ಯದರ್ಶನ ಮಾಡಿಸಲೆತ್ನಿಸಿದವರು. + +ಮನುಕುಲವೆಂಬ ಆಗಾಧವಾದ ಈ ಸಮುದಾಯಗಳ ಪ್ರಕೃತಿಯಲ್ಲಿ ರಂಗಭೂಮಿಯೆಂಬುದೊಂದು ನಿರ್ದಿಷ್ಟ ಆವರಣದ ತೋಟವಾಗಿ ಗೋಚರಿಸುತ್ತದೆ. ಇಲ್ಲಿ ನಡೆವ ಸತ್ಯದ ಹುಟುಕಾಟದಲ್ಲಿ ಜಗತ್ತಿನಾದ್ಯಂತ ಅವರವರ ತೋಟಗಳಲ್ಲಿ ಸಮುದಾಯಗಳ ಪ್ರಕೃತಿಯು ತಮ್ಮ (ದೇಹ, ಧ್ವನಿ, ಭಾಷೆ, ಭಾವ, ಸ್ಮೃತಿ ಮುಂತಾಗಿ) ಎಲ್ಲಾ ಸಾಧ್ಯತೆಗಳನ್ನು ಶೋಧಿಸಿಕೊಳ್ಳುತ್ತಾ ನಡೆದಿವೆ. ಈ ಪ್ರಯೋಗ ಪ್ರಕ್ರಿಯೆಯಲ್ಲಿ ಹಲವಾರು ಅಭಿವ್ಯಕ್ತಿ ಮಾದರಿಗಳನ್ನು ನಾವು ಕಾಣುತ್ತಲೇ ಇದ್ದೇವೆ. ಆದ್ದರಿಂದಲೇ ಜಗತ್ತಿನಾದ್ಯಂತ ಅಸಂಖ್ಯ ರಂಗ ಕಲಾಪ್ರಕಾರಗಳು ಸೃಜಿಸಿಕೊಳ್ಳುತ್ತಲೇ ಇವೆ. ದೇಶ, ಕಾಲ, ನೆಲೆ ಹಿನ್ನೆಲೆಗಳಿಂದ ಉಂಟಾದ ಕಲಾ ಮಾರ್ಗಗಳು ಬೇರೆ ಬೇರೆಯಾದರೂ ಗಮ್ಯ ಒಂದೇ – ಸತ್ಯದರ್ಶನ. + +ಈ ಹಂತದಲ್ಲಿ ಸಹಜಕೃಷಿ ಪ್ರಯೋಗಗಳಲ್ಲಿ ತೊಡಗಿಕೊಳ್ಳುವ ನನ್ನ ಮನಸ್ಥಿತಿಯ ಕೆಲವು ಉದಾಹರಣೆಗಳು ನೆನಪಾಗುತ್ತಿವೆ. + +ಮಡಿಕೇರಿ ಬಳಿಯ ಕುಶಾಲನಗರದಲ್ಲಿ ಕಾಡಿನ ಅಂಚಿನಲ್ಲಿರುವ ಆದಿವಾಸಿ, ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ ಮಾಡುವ, ಅವಕಾಶ ವಂಚಿತ ಸಮುದಾಯಗಳಿಗೆ ಅವಕಾಶ ಕಲ್ಪಿಸುವ ಸ್ವಯಂ ಸೇವಾ ಸಂಸ್ಥೆಯೊಂದಿದೆ. ಈ ಸಂಸ್ಥೆಯ ಮುಖ್ಯಸ್ಥರು ರಾಯ್ ಡೇವಿಡ್ ಅಂತ. ಇವರು ಬೇರೆ ಬೇರೆ ದೇಶಗಳಲ್ಲಿ ಈ ನಿಟ್ಟಿನಲ್ಲಿ ಕೆಲಸ ಮಾಡುವ ಹಲವಾರು ಸಂಘ ಸಂಸ್ಥೆಗಳ ಸಂಪರ್ಕ ಹೊಂದಿದವರು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ದಿಸೆಯಲ್ಲಿ ಕೆಲಸ ಮಾಡುತ್ತಿರುವವರು. ಸುಮಾರು ಹದಿನಾರು ವರ್ಷಗಳ ಹಿಂದೆ ಇವರು ಆದಿವಾಸಿ ಸಮುದಾಯಗಳ ಸಾಂಸ್ಕೃತಿಕ ಅಭಿವ್ಯಕ್ತಿಯಲ್ಲಿ ಸುಧಾರಣೆ ತರಲು ಬಯಸಿದ್ದರು. ಅವರಿಗೆಲ್ಲ ನಾಲ್ಕೈದು ದಿನದ ಕಾರ್ಯಾಗಾರವನ್ನು ನಡೆಸಿ ಅದಕ್ಕೊಂದು ಸರಿಯಾದ ಆಯಾಮ ಒದಗಿಸಿಕೊಡಬೇಕೆಂದು ನನ್ನನ್ನು ಕೋರಿದ್ದರು. ಹೀಗಾಗಿ ನಾಲ್ಕೈದು ದಿನ ಈ ಆದಿವಾಸಿ ಸಮುದಾಯಗಳೊಂದಿಗೆ ಬೆರೆಯುವ ಯೋಗ ನನ್ನದಾಯಿತು. + +ಕಾಡು ಕುರುಬರು, ಜೇನು ಕುರುಬರು, ಮಲೆ ಕುಡಿಯರು, ಕುಣುಬಿಗಳು… ಹೀಗೆ ಇನ್ನೂ ಕೆಲವು ನಾನು ಹೆಸರೇ ಕೇಳಿರದ ಸಮುದಾಯಗಳು. ಆನೆ ಪಳಗಿಸುವ ಮಾವುತರು ಸೇರಿದಂತೆ ಕಾಡಿನ ಅಂಚಿನಲ್ಲಿರುವ ಎಲ್ಲ ಆದಿವಾಸಿ ಸಮುದಾಯದ ಪ್ರಮುಖರು ಯಡವನಾಡು ಎಂಬಲ್ಲಿನ ಒಂದು ಸಮುದಾಯ ಭವನದಲ್ಲಿ ನಡೆದ ಈ ಕಾರ್ಯಗಾರಕ್ಕೆ ಬಂದರು. ಇವರೊಂದಿಗೆ ಇವರ ಹಲವಾರು ರೀತಿಯ ವಾದ್ಯಗಳು, ವೇಷ ಪರಿಕರಗಳು ಇದ್ದವು. ಇವರಲ್ಲಿ ಕೆಲವರಂತೂ ತುಂಬಾ ಸಂಕೋಚ ಸ್ವಭಾವದವರು. ಕಾಡಿನ ಒಳಗೇ ಇದ್ದವರು. ಅಂಚಿನಲ್ಲಿದ್ದ ಕೆಲವರು ನಗರವಾಸಿಗಳ ಬಳಕೆಯಲ್ಲಿದ್ದವರು. ಇವರೊಂದಿಗೆ ಒಡನಾಡುವುದೇ ಒಂದು ವಿಸ್ಮಯ. ಈ ದಿನಗಳಲ್ಲಿ ಪ್ರತಿಯೊಂದು ಸಮುದಾಯದ ಹಿನ್ನೆಲೆ, ಅವರ ಆಚರಣೆಗಳು, ಕ್ರಿಯಾವಿಧಿಗಳು, ನೃತ್ಯ ಪ್ರಕಾರಗಳು, ಅವರ ಹಾಡಿಗಳು, ಅದರ ಆಕಾರಗಳು, ಹುಟ್ಟು-ಸಾವು, ನೋವು-ಸಂಭ್ರಮ, ಹಬ್ಬ-ಹರಿದಿನಗಳಲ್ಲಿ ಸಮುದಾಯದ ಸ್ಪಂದನೆಗಳು, ಜನಾಂಗಗಳ ಕಥನಗಳು, ಅವರ ಬಗೆಗಿನ ಐತಿಹ್ಯಗಳು, ಅವರು ವೈನ್ ಮಾಡುವ ವಿಧಾನ, ಆನೆ ಪಳಗಿಸುವ ಪರಿ, ಭೇಟೆಯ ವಿಧಾನಗಳು, ಹಕ್ಕುಗಳಿಗಾಗಿ ಅವರ ಹೋರಾಟಗಳು, ಅವರವರ ಸಾಂಸ್ಕೃತಿಕ ನಾಯಕರ ಕಥನಗಳು, ಎಲ್ಲವನ್ನು ವಿವರ ವಿವರವಾಗಿ ತಿಳಿಯುತ್ತಾ ಹೋದೆ. + +(ಸತೀಶ್‌ ತಿಪಟೂರು) + +ಇಲ್ಲಿ ನಮಗರಿವಿಲ್ಲದಂತೆ ರಂಗ ಕ್ರಿಯೆಯೊಂದು ಜರಗುತ್ತಿರುವುದನ್ನು ನಾನು ಗಮನಿಸಿದೆ. ಪ್ರತಿಯೊಂದು ತಂಡ ಅವರ ಕ್ರಿಯಾವಿಧಿ ಆಚರಣೆಗಳನ್ನು ತೋರುವಾಗ, ಕಥನಗಳನ್ನು ಹೇಳುವಾಗ, ನೃತ್ಯ ಪ್ರದರ್ಶಿಸುವಾಗ ಉಳಿದ ತಂಡದವರು ಪ್ರೇಕ್ಷಕರಾಗಿರುತ್ತಿದ್ದರು. ಇದನ್ನೆಲ್ಲ ಗಮನಿಸುತ್ತಿದ್ದ ನನಗೆ ಒಂದು ರೀತಿಯ ಕಳವಳ ಶುರುವಾಯಿತು. ಕಾಡಿನೊಳಗಿನ ಇವರ ಆಚರಣೆಯ, ಸಂಪ್ರದಾಯ, ಕ್ರಿಯಾವಿಧಿ, ನೃತ್ಯ ಸಂಭ್ರಮಗಳೆಲ್ಲವೂ ಹೊರಗೆ ನೋಡಲು ಕುತೂಹಲವೆನಿಸಿದರೂ ಶುಷ್ಕವೆನಿಸುತ್ತಿತ್ತು. ಸಂದರ್ಭಗಳಿಲ್ಲದೆ ವಾತಾವರಣವಿಲ್ಲದೆ ಭಾವನೆಗಳು ಅರಳುವುದಿಲ್ಲ. ಅನುಕರಿಸಿದರೂ ಅಣಕವೆಂಬಂತೆ ಕಾಣುತ್ತಿತ್ತು. ಗಿಡದಲ್ಲಿ ಬಿಟ್ಟ ಹೂಗಳನ್ನು ಕಾಣಬಹುದು, ಆದರೆ ಕಾಣಲೆಂದು ಹೂಗಳನ್ನು ಅರಳಿಸಲಾಗದು. ಆದಿವಾಸಿಗಳ ಈ ಸಾಂಸ್ಕೃತಿಕ ಅಭಿವ್ಯಕ್ತಿಗಳೆಲ್ಲವೂ ಕಾಡಿನೊಳಗೆ ಹೆಣೆದುಕೊಂಡ ಬದುಕಿನೊಳಗೆ ವಿಕಾಸವಾದಂತದ್ದು. ಹಲವು ತಲೆಮಾರುಗಳ ಸ್ಮೃತಿಯ ಚಲನೆ ಸಾವಯವವಾಗಿ ಆಕಾರ ಪಡೆದಂತದ್ದು. ಕಾಡಿನೊಳಗಣ ಗಿಡಮರಬಳ್ಳಿ, ಪಶುಪಕ್ಷಿ, ಕ್ರಿಮಿಕೀಟ, ಪ್ರಾಣಿಗಳೊಂದಿಗಿನ ಜೈವಿಕ ಸಹಜ ಸಂಬಂಧದಿಂದ ಉಂಟಾದುದೇನೋ ಎನ್ನುವಷ್ಟು ಗಾಢವಾದುದು. + +ಕೆಲವು ಆಚರಣೆಗಳಂತೂ ಈ ಸಮುದಾಯಗಳಿಗೆ ತುಂಬಾ ಖಾಸಗಿಯಾದುದು. ಇದು ಕಲಾಭಿವ್ಯಕ್ತಿ ಎನ್ನುವುದಕ್ಕಿಂತಲೂ ಕಾಡಿನ ಸಹಜ ವಿಕಾಸದಲ್ಲಿನ ಜೀವನ ಕ್ರಮ. ಹೀಗೆ ವಿಕಾಸವಾದ ಅಭಿವ್ಯಕ್ತಿಯಲ್ಲಿ ಕಲೆಯ ಅಂಶಗಳಿದ್ದರೂ ಅದು ಮನರಂಜನೆಯಾಗಲಿ, ರಂಗಾಭಿವ್ಯಕ್ತಿಯಾಗಲಿ ಆಗಲಾರದು. ಇವರ ಕಲಾಭಿವ್ಯಕ್ತಿಯ ನಿಸರ್ಗ ಸಹಜ ಸೌಂದರ್ಯವನ್ನು ಸಂದರ್ಭಾನುಸಾರ ಅವರವರ ಆವರಣದಲ್ಲಿ ಅವರೊಂದಿಗೆ ಬೆರೆತು ಕಂಡುಕೊಳ್ಳಬೇಕು ಎಂದೆನಿಸಿ ನನ್ನ ಅನಿಸಿಕೆಗಳನ್ನು ರಾಯ್ ಡೇವಿಡ್‌ರವರಲ್ಲಿ ಹಂಚಿಕೊಂಡೆ. ಅವರಿಗೆ ಕಲಿಸಲು ನನ್ನಲ್ಲಿ ಏನೂ ಇಲ್ಲ ಆದರೆ ಅವರಿಂದ ಕಲಿಯುವಂತದ್ದು ಬಹಳಷ್ಟಿದೆ ಎಂದೆ. ಇಂಥಹ ಕಾರ್ಯಾಗಾರಗಳಿಂದ ದೂರವಿದ್ದಷ್ಟೂ ಅವರ ಸಾಂಸ್ಕೃತಿಕ ಅಭಿವ್ಯಕ್ತಿಗಳೆಲ್ಲವೂ ಆರೋಗ್ಯಕರವಾಗಿಯೂ, ಆನಂದದಾಯಕವಾಗಿಯೂ ಇರುತ್ತದೆ ಎಂದು ಹೇಳಿ ಊರಿಗೆ ಮರಳಿದೆ. + +ಇವರೊಂದಿಗೆ ಕಳೆದ ನಾಲ್ಕೈದು ದಿನಗಳಲ್ಲಿ ಸಾಧ್ಯವಾದಷ್ಟೂ ಅವರೊಂದಿಗೆ ಬೆರೆಯಲು ಪ್ರಯತ್ನಿಸಿದ್ದೆ. ಕಾಡಿನ ನಡುವಿನ ಅವರ ಹಾಡಿಗಳನ್ನೂ, ಆನೆ ಪಳಗಿಸುವ ಅವರ ಶಿಬಿರಗಳನ್ನೂ ನೋಡಿಬಂದೆ. ಆ ದಿನಗಳಲ್ಲಿ ನನ್ನೊಂದಿಗೆ ಓಡಾಡಿಕೊಂಡು ಇದನ್ನೆಲ್ಲ ತೋರಿಸುತ್ತಾ ಸುತ್ತಿದವರ ಹೆಸರು ‘ದೋಬಿ’ ಎಂದು. ಈ ನೆನಪುಗಳೆಲ್ಲವೂ ನನ್ನ ತೋಟದಲ್ಲಿ ಈಗಲೂ ಹಸಿರಾಗಿವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_64.txt b/Kenda Sampige/article_64.txt new file mode 100644 index 0000000000000000000000000000000000000000..2c954e63d57ddab47aa8341b666f663caa50baf5 --- /dev/null +++ b/Kenda Sampige/article_64.txt @@ -0,0 +1,35 @@ +byಸುಧಾಕರ ದೇವಾಡಿಗ ಬಿ|Nov 8, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್‌ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ.ಚೀಮನಹಳ್ಳಿ ರಮೇಶ್‌ಬಾಬು ಕಾದಂಬರಿ “ಮಂಪರು” ಕುರಿತು ಸುಧಾಕರ ದೇವಾಡಿಗ ಬಿ ಬರಹ + +byಕೆಂಡಸಂಪಿಗೆ|Nov 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು.ರಂಗಕರ್ಮಿ ಸತೀಶ್‌ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಕೆಲವು ಅಧ್ಯಾಯಗಳು ಪ್ರತಿ ಶನಿವಾರ ನಿಮ್ಮ ಕೆಂಡಸಂಪಿಗೆಯಲ್ಲಿ ಪ್ರಕಟಗೊಳ್ಳಲಿವೆ + +byಡಾ. ಎಚ್. ಎಸ್. ಸತ್ಯನಾರಾಯಣ|Nov 2, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ.ಸುಧಾ ಆಡುಕಳ ಅವರ “ನೀಲಿ ಮತ್ತು ಸೇಬು” ಕಥಾ ಸಂಕಲನಕ್ಕೆ ಡಾ. ಎಚ್. ಎಸ್. ಸತ್ಯನಾರಾಯಣ ಬರೆದ ಮುನ್ನುಡಿ + +byಬಿ.ವಿ. ರಾಮಪ್ರಸಾದ್|Oct 31, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +“ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ”ಕನ್ನಡದ ಕಥೆಗಾರ ಅಬ್ದುಲ್ ರಶೀದ್ ದಶಕಗಳ ಹಿಂದೆ ಬರೆದಿದ್ದ, ಕೆಂಡಸಂಪಿಗೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿದ್ದ ‘ಹೂವಿನಕೊಲ್ಲಿ’ ಕಾದಂಬರಿ ಈಗ ಪರಿಷ್ಕೃತಗೊಂಡು ಮರುಮುದ್ರಣಗೊಳ್ಳುತ್ತಿದೆ. ಪರಿಷ್ಕೃತ ಕಾದಂಬರಿಯಲ್ಲಿ ಪ್ರಕಟವಾಗಿರುವ ಡಾ. ಬಿ.ವಿ.ರಾಮಪ್ರಸಾದ್ ಅವರ ಪ್ರಸ್ತಾವನೆ ಇಲ್ಲಿದೆ. + +byಕೆಂಡಸಂಪಿಗೆ|Oct 30, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಸಮಯ ಸರಿಯಾಗಿತ್ತು ಹಾಗಾಗಲಿಲ್ಲ. ಒಂದು ವೇಳೆ ನಾನು ಶಸ್ತ್ರಪ್ರಹಾರಕ್ಕೆ ಅಣಿಯಾದೆನೆಂದಿಟ್ಟುಕೊಳ್ಳಿ. ಅದುವರೆಗೂ ಕದಲದೇ ನಿಂತಿದ್ದ ನನ್ನ ಅನಿರೀಕ್ಷಿತ ದೇಹಚಲನೆ ಕಂಡು ಹುಲಿಗೆ ವಿಚಲಿತವಾದಂತೆನ್ನಿಸಿ ಅದು ಅಕ್ಷರಶಃ ಕೆರಳುತ್ತಿತ್ತು. ನಾನು ಗನ್ನು ಮೇಲಕ್ಕೆತ್ತಿ ಹೊಡೆಯಬೇಕೆಂದು ಹಂಚಿಕೆ ಹಾಕುವಾಗಲೇ ಅದು ಠಣ್ ಎಂದು ಒಂದೇ ನೆಗೆತಕ್ಕೆ ನಮ್ಮ ಮೇಲೆರಗಿ ಸಿಕ್ಕವರ ಕತ್ತು ಹಿಸುಕಿ ಕರುಳು ಬಗೆದಿರುತ್ತಿತ್ತು. ಕ್ಷಣಮಾತ್ರದಲ್ಲೇ ಈ ಅಚಾತುರ್ಯ ಸಂಭವಿಸುವ ಸಾಧ್ಯತೆಯಿತ್ತು. ನಾನು ಗನ್ನು ಚಲಾಯಿಸುವ ಗೋಜಿಗೆ ಹೋಗದಿದ್ದುದೆ ಸರಿಯಾಯ್ತು.ಶ್ರೀಧರ ಪತ್ತಾರ ಅನುಭವ ಕಥನ “ಕಾಟಿಹಳ್ಳದ ತಿರುವು” ಕೃತಿಯ ಒಂದು ಬರಹ ನಿಮ್ಮ ಓದಿಗೆ + +byಮೊಗಳ್ಳಿ ಗಣೇಶ್|Oct 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಚಂದನ್ ಮತೊಂದು ಭಾರತವನ್ನು ಅವಲೋಕಿಸುತ್ತಿರುವುದೇ ದಮನಿತರ ದೃಷ್ಟಿಕೋನದಿಂದ. ಅಂಚಿನ ಸಂಗತಿಗಳನ್ನು ಮುಖ್ಯ ವಾಹಿನಿಗೆ ತಂದಿರಿಸಿ ನಿರೂಪಿಸುವುದೇ ಸಾಂಸ್ಕೃತವಾಗಿ ಮಹತ್ವದ್ದು. ದಲಿತ ಕವಿ ಸಿದ್ದಲಿಂಗಯ್ಯನವರ ಆತ್ಮಕಥನವ ಕಂಡಂತೆಯೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗೆಗೂ, ನಾಲ್ವಡಿ ಕೃಷ್ಣ ರಾಜೇಂದ್ರ ಅವರ ಬಗೆಗೂ ಟಿಪ್ಪು ಸುಲ್ತಾನ್ ಬಗೆಗೂ ಸಮಾನವಾಗಿ ನೋಡುವ ಪರಿಯು ಗಮನಾರ್ಹವಾಗಿದೆ. ಯು.ಆರ್. ಅನಂತಮೂರ್ತಿ ಅವರು ಆತ್ಯಂತಿಕ ಪ್ರಭೆಯ ಲೇಖಕರು. ಅವರ ಮೂಲಕ ಭಾರತವನ್ನು ಚಂದನ್ ಭಾವಿಸುತ್ತಾರೆ.ಚಂದನ್‌ ಗೌಡ ಹೊಸ ಕೃತಿ “ಅನದರ್‌ ಇಂಡಿಯಾ” ಕೃತಿಯ ಕುರಿತು ಮೊಗಳ್ಳಿ ಗಣೇಶ್‌ ಬರಹ + +byಡಾ. ವಿನತೆ ಶರ್ಮ|Oct 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 6 Comments + +ಮೊದಲನೇ ಪ್ರಾಪಂಚಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯನ್ ಸೈನಿಕರಲ್ಲಿ ಮೂಲನಿವಾಸಿಗಳೂ ಇದ್ದರು. ಆದರೆ ಯುದ್ಧದ ನಂತರ ದೇಶದ ಸರಕಾರಗಳು ಅವರ ಹೆಸರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆಸ್ಟ್ರೇಲಿಯನ್ ಬಿಳಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಬಿರುದುಗಳು ಮತ್ತು ಸೌಲಭ್ಯ, ಸೌಕರ್ಯಗಳು ಲಭಿಸಿದವು. ಎರಡನೇ ಮಹಾಯುದ್ಧದ ನಂತರವೂ ಇದೇ ಕತೆಯಾಗಿದ್ದು ಈ ಬಾರಿ ಯುದ್ಧದಲ್ಲಿ ಭಾಗವಹಿಸಿದ್ದ ಮೂಲನಿವಾಸಿಗಳ ಹೆಸರುಗಳನ್ನೂ ಮಾತ್ರ ದಾಖಲಿಸಲಾಗಿತ್ತು.ಡಾ. ವಿನತೆ ಶರ್ಮ ಹೊಸ ಕೃತಿ “ಅಬೊರಿಜಿನಲ್‌ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್‌”ಯಿಂದ ಒಂದು ಬರಹ ನಿಮ್ಮ ಓದಿಗೆ + +byಕೆಂಡಸಂಪಿಗೆ|Oct 14, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +“ಹಿಂಗ್ ಬಂದು ಸಮುದ್ರದಾಗೆ ತೇಲ್ತಾ ಇರುವಾಗ ಒಂದು ಕುಲ್ಡುಗೊಕ್ಕರೆ ಮೇಲ್ಗಡೆ ಹರ‍್ತಾ ನೀರ್ ಮೇಲಿರೋ ಕುಂಬಳ್‌ಕಾಯೀನಾ ನೋಡ್ತು. ಯಲಾ ಯಲಾ! ಒಂದ್ ವಾರಕ್ಕೆ ಆಗೋವಷ್ಟು ತಿನ್ನಕೆ ಸಿಕ್ತು ಕಣಲೆ ಅಂದ್ಕೊಂಡು ಕೊಕ್ನಾಗೆ ಕಚ್ಕೊಂಡ್ ಬಂದು ಒಂದು ದೊಡ್ಡ ಆಲದಮರದ ಮ್ಯಾಲೆ ಬಂದು ಕುತ್ಕೊಂಡ್ತು. ಕುತ್ಕಂಡು ಎಲ್ಡ್ ಕಾಲಾಗೆ ಕಾಯಿನ ಅಮುಕ್ಕೊಂಡು ಚಂದರ್ಕಿಗೆ ಬಾಯಿಹಾಕಿ ಮುಚ್ಚಳ ತಗೀತು. ಆಗ ಒಳಗಿದ್ದೋರೆಲ್ಲ ಅಲೆಲೆಲೆ, ಏಳ್ರಲಾ ಬೆಳಕ್ ಹರೀತು.”ರಹಮತ್‌ ತರೀಕೆರೆ ಕಥಾ ಸಂಕಲನ “ಗೇರಮರಡಿ ಕತೆಗಳು”ದಿಂದ ಒಂದು ಕತೆ ನಿಮ್ಮ ಓದಿಗೆ + +byಕೆಂಡಸಂಪಿಗೆ|Oct 7, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಹಿಂಗೆ ಪ್ರಾಣಿಗಳ ಕಾಟದ ಜೊತೆಗೆ ಎರೆನೆತ್ತಿಯ ಕಾಡಿನೊಳಕ್ಕೆ ಆಗಾಗ ದೂರದ ಊರುಗಳಿಂದ ದರೋಡೆಕೋರರು ಬಂದು ಸೇರಿಕೊಂಡುಬಿಡುತ್ತಿದ್ದರಂತೆ. ಆಗ ಅಪ್ಪಿತಪ್ಪಿಯೂ ಸುತ್ತಲ ಹಳ್ಳಿಗಳ ಜನರು ಅತ್ತ ಸುಳಿಯುತ್ತಿರಲಿಲ್ಲವಂತೆ. ಪೊಲೀಸರಿಗೆ ದೂರು ಕೊಟ್ಟರೂ ಅತ್ತ ಹೋಗಲು ಅವರೂ ಹಿಂಜರಿಯುತ್ತಿದ್ದರಂತೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಕಳ್ಳತನ ಮಾಡಿದ ಮೇಲೆ ಆ ದರೋಡೆಕೋರರು ಅವರಾಗಿಯೇ ಜಾಗ ಖಾಲಿ ಮಾಡುತ್ತಿದ್ದರಂತೆ. ಎರೆನೆತ್ತಿಯ ಬಗ್ಗೆ ಇಂಥ ಪುಕಾರುಗಳನ್ನು ನನ್ನ ಅಜ್ಜನಷ್ಟೇ ಅಲ್ಲ ಊರಿನ ಹಲವು ಹಿರಿಯ ತಲೆಗಳು ಹೇಳುತ್ತಿದ್ದುದರಿಂದ ಅದು ನನ್ನಂಥವರೊಳಗೆ ಒಂದು ನಿಗೂಢ ಲೋಕವಾಗಿ ಉಳಿದುಬಿಟ್ಟಿತ್ತು.ಕಥೆಗಾರ ಎಸ್.‌ ಗಂಗಾಧರಯ್ಯ ಅವರ ಈತನಕದ ಕತೆಗಳ ಸಂಕಲನ “ಎರೆನೆತ್ತಿ”ಗೆ ಅವರೇ ಬರೆದ ಮಾತುಗಳು ಇಲ್ಲಿವೆ \ No newline at end of file diff --git a/Kenda Sampige/article_65.txt b/Kenda Sampige/article_65.txt new file mode 100644 index 0000000000000000000000000000000000000000..84cd5be944752942f769d7ccdeac2fdf29e4a861 --- /dev/null +++ b/Kenda Sampige/article_65.txt @@ -0,0 +1,43 @@ +ನಾನು ಸಣ್ಣೋನಿದ್ದಾಗ್ಲೆ ಲವ್ ಮಾಡಿದ್ದೆ ಅಂದ್ರೆ ನಿಮಗೆಲ್ಲ ಆಶ್ಚರ್ಯವಾಗಬಹುದು. ನಂಗೆ ಆ ಇಮೇಜೇ ಸೂಟ್ ಆಗ್ತಿರಲಿಲ್ಲ. ಈಗ್ಲು ಇಲ್ಲ ಬಿಡಿ.ಅದೇನಾಯ್ತಂದ್ರೆ- + +ನಾನು ಓದ್ತಿದ್ದು ಒಂದು ರೆಸಿಡೆನ್ಶಿಯಲ್ ಸ್ಕೂಲಿನಲ್ಲಿ. ಆ ಸ್ಕೂಲು ಜಿಲ್ಲೆಗೊಂದರಂಗೆ ದೇಶಾದ್ಯಂತ ಹರಡಿಕೊಂಡಿತ್ತು. ಒಂದ್ ಸಲ ಹಾಸ್ನದ ಸ್ಕೂಲಲ್ಲಿ ಕ್ಲಸ್ಟರ್ ಮೀಟ್ ಅಂತ ಆಗಿತ್ತು. ಅಂತರಶಾಲಾ ಸ್ಪರ್ಧೆ. ಅದರಲ್ಲಿ ಸ್ಪೋರ್ಟ್ಸು, ಎಗ್ಸಿಬಿಶನ್ನು ಎಲ್ಲ ಇರ್ತಿತ್ತು. ನಾನು ನಮ್ ಸ್ಕೂಲಿಂದ ಬಯಾಲಜಿ ಮಾಡೆಲ್ ತಗಂಡೋಗೋಕೆ ಸೆಲೆಕ್ಟ್ ಆಗಿದ್ದೆ. ‘Effluent treatment’ ಅನ್ನೊ ಕಾನ್ಸೆಪ್ಟಲ್ಲಿ ಮಾಡೆಲ್ ಮಾಡಿದ್ದೆ. ಅಂಗಂದ್ರೆ ಇನ್ನೇನಲ್ಲ, ಕೊಚ್ಚೆಗುಂಡಿ ನೀರನ್ನ ಹೇಗೆ ಶುದ್ಧೀಕರಿಸಬಹುದು ಅಂತಷ್ಟೆ.ಆ ಹುಡುಗಿ ಸಹ ಸ್ಪೋರ್ಟ್ಸ್ ಆಡೊಕೆ ಅಲ್ಲಿಗೆ ಬಂದಿತ್ತು. + +(ಮಧು ವೈ.ಎನ್.‌) + +ಸೋ, ಹುಡುಗ ಅಕಡೆಮಿಕ್ ವಿಭಾಗ. ಹುಡುಗಿ ಸ್ಪೋರ್ಟ್ಸ್ ವಿಭಾಗ. + +ಹಾಸ್ನದ ಸ್ಕೂಲಲ್ಲು ಒಂದು ಟಾಪಾದ ಹುಡುಗಿ ಇತ್ತು. ಆ ಹುಡುಗಿ ಹೈಜಂಪ್ ಪ್ರವೀಣೆ. ಬಂದಿದ್ದ ಹತ್ತಾರು ಸ್ಕೂಲಿನ ಹುಡುಗರು ಆ ಹುಡುಗಿಗೇ ಲೈನ್ ಹೊಡಿತಿದ್ರು ಅಂದ್ರೆ ಲೆಕ್ಕ ಹಾಕ್ಕಳಿ ಅದಿನ್ನೆಂತ ಟಾಪ್ ಇದ್ದಿರಬೋದು ಅಂತ. + +ಬಂದಿದ್ ಹುಡುಗ್ರೆಲ್ಲ ಆ ಟಾಪಾದ ಹುಡ್ಗಿ ಹಿಂದೆ ಬಿದ್ದಿದ್ರೆ ನಂಗೆ ಮಾತ್ರ ನಮ್ ಹುಡುಗಿ ಮೇಲೆನೇ ಕಣ್ಣು. ಅಂದ್ರೆ ಒನ್ ಸೈಡೆಡ್ಡು. ಅದು ಆಟ ಆಡ್ವಾಗೆಲ್ಲ ನಾನೋಗಿ ಪ್ರೇಕ್ಷಕರ ಗ್ಯಾಲರಿಯಲ್ಲಿ ನಿಂತ್ಗಂಡು ಚಪ್ಪಾಳೆ ತಟ್ತಿದ್ದೆ. ಪ್ರಾಬ್ಲಂ ಏನಾಗಿತ್ತಂದ್ರೆ ನನ್ ಸೀನಿಯರ್‌ಸೂ ನಮ್‌ ಹುಡುಗಿಗೇ ಲೈನ್ ಹೊಡಿತಿದ್ರು. ನನ್ ಮಕ್ಳು ನಾ ಚಪ್ಪಾಳೆ ಹೊಡೆಯೊಕೂ ಬಿಡದೆ ಹೆದರಿಸ್ತಿದ್ರು‌. + +“ಕಳಚ್ಕೊಳಮ ಕಳಚ್ಕೋ, ಬುಕ್ಕು ಗಿಕ್ಕು ಮಾಡೆಲ್ಲು ಗೀಡೆಲ್ಲು ನೊಡ್ಕೊ ಓಗು. ನಿನ್ನ ಏರಿಯಾದಲ್ಲಿ ನೀನಿರು” ಅಂತೆಲ್ಲ ಅವಾಜು ಹಾಕೋರು. ನಂಗೆ ಯಷ್ಟು ಸಂಕಟ ಆಗೋದು ಅಂದ್ರೆ ಎಡೆಮಟ್ಟೆ ತಗೊಂಡು ಬೀಸಿಬಿಡೋಣ ಅನಿಸೋದು. ಆದ್ರೆ ಅನ್ಸದಷ್ಟೆ. + +ಉಗುಳು ನುಂಕೊಂಡು ಚಪ್ಪಾಳೆನೂ ತಟ್‌ದೆ ಸುಮ್ನೇ ನೋಡ್ತಾ ನಿಂತಿರ್ತಿದ್ದೆ. ನಿಲ್ಲೋಕೆನು ಟ್ಯಾಕ್ಸ್ ಕಟ್ಟಬೇಕಿಲ್ವಲ್ಲ. ಸುಮ್ನೆ ನಿಂತು ನೋಡೊದ್ರಲ್ಲು ಒಂಥರ ಸುಖ ಇದೆ. + +ಅಷ್ಟೇ ಆಗಿದಿದ್ರೆ ಚನ್ನಾಗಿರ್ತಿತ್ತು. + +ಏನಾಯ್ತಂದ್ರೆ- + +ಅವತ್ತು ಎಗ್ಸಿಬಿಶನ್ ಇತ್ತು. ನಾವೆಲ್ಲ ಕ್ಲಾಸ್ ರೂಮಲ್ಲಿ ಮಾಡೆಲ್ ಜೋಡಿಸ್ಕೊಂಡು ನಿಂತಿದ್ವಿ. ನನ್ ಪಕ್ಕ ಹಾಸನದೋನು ಇದ್ದ. ಯೂಕಲಿಪ್ಟಸ್ ಆಯಿಲ್‌ನಿಂದ ಸೊಳ್ಳೆ ಓಡಿಸ್ತೀನಿ ಅನ್ನೊ ಪ್ರಾಜೆಕ್ಟ್ ಮಾಡ್ಕಂಡ್ ಬಂದಿದ್ದ. ಹೆದರಬೇಡಿ ಅಂಗಂದ್ರೆ ನೀಲಗಿರಿ ಎಣ್ಣೆ ಆಟೆಯಾ. ನಾನು ಇಂಗ್ಲೀಷಲ್ಲಿ ಏನೇನು ಒದರಬೇಕು ಅಂತ ಮನ್ಸಲ್ಲೆ ಮಗ್ ಹೊಡಿತಿದ್ದೆ. ಬರಂಗಿಲ್ವಲ್ಲ. ಆ ಕ್ಷಣಕ್ಕೆ ಒಳ್ಳೆ ಸಿನಿಮಾ ಸೀನ್ ತರಹ ಈ ಹುಡುಗಿ ಬಂದ್ ಬಿಡ್ತು. ಎಗ್ಸಿಬಿಶನ್ ಇದ್ದಾಗ ಸ್ಪೋರ್ಟ್ಸ್ ಇರಲ್ಲ. ಹಂಗಾಗಿ ನಾನು ಯುನಿಫಾರ್ಮಲ್ಲಿದ್ರೆ ಅದು ಟ್ರ್ಯಾಕ್ ಸೂಟಲ್ಲಿ ಮಿಂಚ್ತಾ ಇತ್ತು. + + + +ಬಂದಿದ್ದೇ ಸೀದಾ ನನ್ ಕಡೆಗೆ ನುಗ್ಗಿ ಬಿಡೋದೇ! + +ಥೋ ಇದೊಳ್ಳೆ ಸಾವಾಸ ಆಯ್ತಲ್ಲಪ್ಪ ಅಂತ ನಂಗೆ. ಪಕ್ಕದಲ್ಲಿ ಯಾರೊಬ್ಬ ಪರಿಚಯಸ್ಥನೂ ಇಲ್ಲ ಸಹಾಯಕ್ಕೆ. ಹುಡುಗಿ ಬಂದು ಮೊದಲು “ಆಲ್ ದ ಬೆಸ್ಟ್” ಹೇಳ್ತು. ಅದು ಸ್ವೀಟಾಗಿತ್ತು. ಆಮೇಲೆ “ಎಲ್ಲಿ ಇನ್ವಿಜಲೇಟರಿಗೆ ಏನೇನ್ ಹೇಳ್ಬೇಕು ಅಂದ್ಕೊಂಡಿದೀರ ಹೇಳಿ” ಅಂತು. ನಂಗೆ ತಲೆ ಸುತ್ ಬಂತು. “ಹೇ ಅಂಗೆಲ್ಲ ಹೇಳಕಾಗಲ್ಲ” ಅಂದ್ಬಿಟ್ಟೆ. “ಅರೆ ಹೇಳ್ರಿ ಪ್ರಾಕ್ಟೀಸಾಗತ್ತೆ” ಅಂತ ಅದು. “ಹೇಳಕಾಗಲ್ಲ” ಅಂತ ನಾನು. + +ಈ ಜಗ್ಗಾಟದಾಗೆ ಇನ್ವಿಜಿಲೇಟರು ಬಂದೇ ಬಿಟ್ರು. “ಸರಿ ಸರಿ ಆಲ್ ದ ಬೆಸ್ಟ್” ಅಂತಂತ ಇನ್ನೊಮ್ಮೆ ವಿಶ್ ಮಾಡಿ ಓಡೊಯ್ತು. ಪ್ರೈಜು ನೀಲಗಿರಿ ಎಣ್ಣೆಯವನಿಗೆ ಬಂತು. ನಮ್ದು ಹೈಜಂಪ್ ನಲ್ಲಿ ಟಾಪಲ್ಲಿ ಟಾಪಾದ ಹುಡುಗೀನ ಹಿಂದಿಕ್ಕಿ ಮುಂದಿನ ಹಂತಕ್ಕೆ ಸೆಲೆಕ್ಟ್ ಆಗಿತ್ತು. ನಮ್ಮನ್ನೆಲ್ಲ ವಾಪಸ್ ಕಳಿಸೋಕಂತ ಕೆಂಪು ಬಸ್ಸಿಗೆ ಹತ್ಸಿದ್ರು. ಅವಾಗೆಲ್ಲ ಪ್ರೈವೇಟ್ ಬಸ್ಸಂದ್ರೆ ನರಕದ ರೂಟು ಅಂತ ಪ್ರಚಲಿತ. ಗೌರ್ಮೆಂಟ್ ಬಸ್ಸಂದ್ರೆ ಸರೀ ಕಬ್ಣ ಸುರಿದಿರ್ತಾರೆ, ಗುದ್ಕಂಡ್ರೂ ಏನಾಗಲ್ಲ ಅಂತ ಲೆಕ್ಕಾಚಾರ. + +ನಾನು ಕಡೇ ಸೀಟಲ್ಲಿ ಕೂತಿದ್ದೆ. ಅಂದ್ರೆ ಬಸ್ ತುಂಬ ಇದ್ವಿ. ಎಲ್ಲ ಸೋತವರೇ, ಬೆರಳೆಣಿಕೆಯಷ್ಟು ಗೆದ್ದೋರು ನಮಗೆ ಟಾಟಾ ಮಾಡಲು ಬಂದಿದ್ದರು. + +ಯಪ್ಪಾ ಅವಾಗ ನನ್ ಗೋಳು ಹೇಳತೀರದು. ಪೆಯಿನ್ ಅಂದ್ರೇನು ಅಂತ ನಿಜ ಗೊತ್ತಾಗಿದ್ದೆ ಆವಾಗ. ದಾರುಣ ಅಂದ್ರೆ ಭೀಕರ ದಾರುಣ. ಒಂದು ನೂರು ಕೇಜಿ ತೂಕದ ಕಲ್ಲನ್ನ ಎದೆಗೆ ಮೊಳೆ ಹೊಡ್ದಂಗೆ. + + + +ಅಲ್ಲಿಗೆ ಮುಗಿದಿದ್ರೂ ಏನೂ ಆಗ್ತಿರ್ಲಿಲ್ವೇನೋ. ನಾ ಇಲ್ಲಿ ಕೂತ್ಗಂಡು ಇಷ್ಟೂದ್ದ ಕತೆ ಹೊಡಿಬೇಕರ್ಲಿಲ್ವೇನೊ. ಏನಾಯ್ತಂದ್ರೆ- + +ಬಸ್ಸಲ್ಲಿ ದಾರಿ ಉದ್ಕೂ ಸೋತ ಹುಡುಗೀರೆಲ್ಲ ಹರಟೆ ಹೊಡಿತಿದ್ರ, ನಾ ಅದನ್ನ ಕೇಳಿಸ್ಕೊತಿದ್ನ, ನಿಮ್ಮುಡುಗಿ ಬಗ್ಗೆ ಯಾರಾದ್ರು ಚೂರು ಮಾತಾಡಿದ್ರು ಅದೇ ದೇವರ ಪ್ರಸಾದ ಅನ್ನಂಗಿರ್ತದೆ ಅಲ್ವ. ಅವರೆಲ್ಲ ಏನಂತಿದ್ರು ಅಂದ್ರೆ ಅವತ್ತು ಎಗ್ಸಿಬಿಶನ್ ದಿವಸ ಅವರೆಲ್ಲ ಗೊರೂರ್ ಹೇಮಾವತಿ ಡ್ಯಾಮ್ ನ ನೋಡಕ್ಕೆ ಹೋಗಿದ್ರಂತೆ. ಇದು ಮಾತ್ರ ನಂಗೆ ಹುಷಾರಿಲ್ಲ ನಾ ಬರಲ್ಲ ನೀವ್ ಓಗ್ ಬನ್ನಿ ಅಂತೇಳಿ ಡಾರ್ಮಿಟರಿನಲ್ಲೇ ಉಳಕಂಡಿತ್ತಂತೆ. + +ಇಷ್ಟು ಸಾಕಲ್ಲವೇ ಮನ್ಷ ಬರಬಾದ್ ಆಗೋಕೆ! + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_66.txt b/Kenda Sampige/article_66.txt new file mode 100644 index 0000000000000000000000000000000000000000..e487bb7bd0760b7156a1d624ead26bde1599477e --- /dev/null +++ b/Kenda Sampige/article_66.txt @@ -0,0 +1,29 @@ +ಅದೊಂದು ಬೇಸಿಗೆಯ ನಡುಮಧ್ಯಾಹ್ನ. ಸುಡುಬಿಸಿಲಿನಲ್ಲಿ ನಿಂತ ಉಬ್ಬಿದ ಹೊಟ್ಟೆಯ ಎಳೆವಯಸ್ಸಿನ ಹೆಂಗಳೆಯರಿಬ್ಬರು ಬಸ್ಸಿಗಾಗಿ ಕಾಯುತ್ತಿದ್ದರು. ಮೊದಲೆಲ್ಲೋ ಒಬ್ಬರನ್ನೊಬ್ಬರು ನೋಡಿದ ಗುರುತಿತ್ತಾದರೂ ಮಾತನಾಡುವಷ್ಟು ಸಲಿಗೆಯೇನೂ ಇರಲಿಲ್ಲ. ಬರಬೇಕಾದ ಸಮಯಕ್ಕೆ ಬಾರದ ಬಸ್ಸು ಮತ್ತು ಒಡಲಲ್ಲಿರುವ ಕೂಸಿನಂತೆಯೇ ಬೆಳೆಯುತ್ತಿರುವ ಅಭದ್ರತೆಯ ಭಾವಗಳು ಅವರಿಬ್ಬರನ್ನೂ ಆ ಕ್ಷಣದಲ್ಲಿ ಆತ್ಮೀಯರನ್ನಾಗಿಸಿಬಿಟ್ಟವು. ಬಸ್ಸಿಗೆ ಕಾಯುತ್ತಿರುವ ಬಿರುಬಿಸಿಲಿನ ಮಧ್ಯಾಹ್ನದಲ್ಲಿ ಅವರು ತಮ್ಮ ಮನಸ್ಸಿನ ಬೇಗುದಿಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡರು. + +(ಒರಿಯಾನ ಫಲಾಚಿ) + +ಮೊದಲನೆಯವಳು ಮಾತನ್ನು ಶುರುವಿಟ್ಟುಕೊಂಡಳು, “ಮರಿಯಿಡುವ ಕಾಲಕ್ಕೆ ಮನೆಯಿಂದ ಮನೆಗೆ ಅಲೆಯುವ ಬೆಕ್ಕಿನಂತಾಗಿದೆ ನನ್ನ ಸ್ಥಿತಿ. ಉಬ್ಬಿದ ಹೊಟ್ಟೆಯನ್ನು ನೋಡಿಯೇ ಹೊರಗೋಡಿಸುವವರಂತೆ ಎಲ್ಲರೂ ನನ್ನನ್ನು ದೂರತಳ್ಳುತ್ತಿದ್ದಾರೆ ಅನಿಸುತ್ತಿದೆ. ಮನೆಯೊಳಗೆ ಬೇಕಷ್ಟು ಸ್ಥಳವಿದ್ದರೂ ಸುಮ್ಮನೆ ಈ ಬೆಕ್ಕಿಗೆ ಹೆರಲು ಜಾಗ ಕೊಟ್ಟು ಹೊಲಸು ಮಾಡಿಕೊಳ್ಳಲು ಅವರ‍್ಯಾರೂ ತಯಾರಿದ್ದಂತಿಲ್ಲ. ಸೆರಗು ಹಾಸುವಷ್ಟೇ ಜಾಗವಿದ್ದರೂ ಅದರಲ್ಲಿಯೇ ತನ್ನ ಮಕ್ಕಳನ್ನು ಜೋಪಾನ ಮಾಡುವ ತಾಯಿಯ ಆಸರೆಯೂ ಇಲ್ಲ. ಬೆಕ್ಕಿಗಾದರೆ ಯಾರು ಏನೆಂದಾರೆಂಬ ಜಗದ ಗೊಡವೆಯಿರುವುದಿಲ್ಲ. ಆದರೆ ಮನುಷ್ಯ ಲೋಕದ ಕಟ್ಟುಪಾಡುಗಳ ಬಿಗಿ ನನ್ನನ್ನು ಉಸಿರುಗಟ್ಟಿಸುತ್ತಿದೆ. ಮಗುವನ್ನು ಹೆರುವ ಭಯವೇನೂ ನನ್ನನ್ನು ಕಾಡುತ್ತಿಲ್ಲ. ಮೊದಲ ಹೆರಿಗೆ ಇಲ್ಲೇ ಆಗಬೇಕು, ಅಲ್ಲೇ ಆಗಬೇಕು ಎಂಬ ಕಟ್ಟುಪಾಡುಗಳಿಗೆ ಉತ್ತರಗಳನ್ನು ಹೇಗೆ ಕಂಡುಕೊಳ್ಳುವುದು? ಈ ಮಗು, ಈ ಜೀವನ, ಈ ನರಕ ಎಲ್ಲವೂ ಈ ಕ್ಷಣಕ್ಕೇ ಮುಗಿದುಹೋಗಬಾರದೆ ಎಂದೆನಿಸುತ್ತದೆ.” + +ಕಣ್ಣೀರಾದವಳ ಅಂಗೈಯ್ಯನ್ನು ಮೆಲ್ಲನೆ ಒತ್ತುತ್ತಾ ಎರಡನೆಯವಳು ತನ್ನ ಮಾತನ್ನು ಪ್ರಾರಂಭಿಸಿದಳು, “ಹೆರಿಗೆಗೇನೋ ಒಂದು ನೆಲೆಯನ್ನು ಕಂಡುಕೊಂಡಾಗಿದೆ. ಅದಕ್ಕೆಂದೇ ದೂರದ ನಗರದಿಂದ ಇಲ್ಲಿಗೆ ಬಂದಿರುವೆ. ಈಗ ಇನ್ನೊಂದು ಕಟ್ಟುಪಾಡಿನ ಚಿಂತೆ. ಚೊಚ್ಚಲ ಬಸುರಿಗೆ ಸೀಮಂತವಿಲ್ಲದೇ ಇರಬಾರದೆಂದು ಗಂಡನ ಮನೆಯವರು ಪಟ್ಟು ಹಿಡಿದಿದ್ದಾರೆ. ಕಷ್ಟದಲ್ಲಿ ಬಾಣಂತನ ಮಾಡಲು ಒಪ್ಪಿದವರೆದುರು ಇನ್ನೊಂದು ಅಹವಾಲನ್ನು ಹೇಗೆ ಮಂಡಿಸುವುದು? ವ್ಯಸ್ತಗೊಂಡ ಕುಟುಂಬದಲ್ಲಿ ಮಗುವೆಂಬುದೊಂದು ಯಾಕಾದರೂ ಹುಟ್ಟುತ್ತದೆಯೋ? ಅನಿಸುತ್ತದೆ. ಯೋಚಿಸಿದಷ್ಟು ತಲೆ ಚಿಟ್ಟು ಹಿಡಿದು ಹೋಗುತ್ತಿದೆ. ನಿನ್ನೆ ಇಲ್ಲಿಗೆ ಬರುವಾಗ ನಾನು ಹತ್ತಿದ ವಾಹನ ಅಪಘಾತಕ್ಕೀಡಾಯಿತು. ನನಗಂತೂ ಆ ಕ್ಷಣದಲ್ಲಿ ಅದೆಷ್ಟು ಸಂತೋಷವಾಯಿತೆಂದರೆ ಖಂಡಿತವಾಗಿಯೂ ನಾನು ಸತ್ತುಬಿಡುತ್ತೇನೆಂದು ನೆಮ್ಮದಿಯಿಂದ ಕಣ್ಮುಚ್ಚಿ ಕುಳಿತೆ. ಮೂರು ಪಲ್ಟಿ ಹೊಡೆದು ಗಾಡಿ ಬಿದ್ದರೂ ತರಚು ಗಾಯವೂ ಆಗದೇ ಪಾರಾಗಿ ಉಳಿದೆ. ನನಗೆ ಸಾವೇ ಇಲ್ಲವೇನೋ ಅನಿಸುತ್ತಿದೆ.” + +ಅನೇಕ ದಶಕಗಳ ಹಿಂದೆ ಹೀಗೆ ಬಿಸಿಲಲ್ಲಿ ಕುಳಿತು ಮಾತನಾಡಿದ ಬಸುರಿಯರ ಮಕ್ಕಳೀಗ ಸಮಾಜವೆಂಬ ಇರುವೆ ಸಾಲಿನ ಭಾಗವಾಗಿಯೂ, ತಮ್ಮದೇ ಸ್ವಾತಂತ್ರ್ಯದ ಹಾದಿಯನ್ನು ಹುಡುಕಿಕೊಂಡು, ತಾವಿರುವೆಡೆಯಲ್ಲೆಲ್ಲಾ ಪ್ರೀತಿಯ ಧಾರೆಯನ್ನೇ ಹಂಚುತ್ತಾ ಸಾಗಿದ್ದಾರೆ. ಒಡಲೊಳಗೆ ಮಗುವನ್ನು ಹೊತ್ತ ತಾಯಂದಿರ ಬೇಗೆ ಮಾತ್ರ ಎಷ್ಟೇ ಕಾಲ ಸರಿದರೂ ಹೀಗೆಯೇ ಮುಂದುವರೆಯುವುದೇನೋ ಎಂದು ಅನಿಸುತ್ತಲೇ ಇರುತ್ತದೆ. ಈ ಕಾದಂಬರಿಯಲ್ಲಿ ಬರುವ ತಾಯಿ ತನ್ನ ಹೊಟ್ಟೆಯೊಳಗಿರುವ ಮಗುವಿಗೆ ಅನೇಕ ಕಿನ್ನರ ಕಥೆಗಳನ್ನು ಹೇಳುತ್ತಾಳೆ. ಹಾಗೆ ನನ್ನ ಮಗುವಿಗೆ ನಾನೇನಾದರೂ ಕಥೆಯನ್ನು ಹೇಳುವಂತಿದ್ದರೆ ಮೇಲೆ ಬರೆದ ಕಥೆಯನ್ನು ಹೇಳುತ್ತಿದ್ದೆ ಮತ್ತು ಕೊನೆಯಲ್ಲಿ ಅವಳಂತೆಯೇ ಒಂದು ವಾಕ್ಯವನ್ನು ಸೇರಿಸುತ್ತಿದ್ದೆ, ಆ ಇಬ್ಬರಲ್ಲಿ ನಾನೂ ಒಬ್ಬಳಾಗಿದ್ದೆ ಎಂದು. + +(ಸುಧಾ ಆಡುಕಳ) + +‘ಎಂದೂ ಹುಟ್ಟದ ಮಗುವಿಗೆ ಪತ್ರ’ ಇದು ಇಟಾಲಿಯನ್ ಕಾದಂಬರಿಗಾರ್ತಿ ಮತ್ತು ಪತ್ರಕರ್ತೆ ಒರಿಯಾನ ಫಲಾಚಿಯವರ ಅದ್ಭುತವಾಧ ಮತ್ತು ಅಷ್ಟೇ ಪ್ರಚೋದನಾಕಾರಿಯಾದ ಕಾದಂಬರಿಯಾಗಿದೆ. ಜೀವವೊಂದನ್ನು ಭೂಮಿಗೆ ತರಬೇಕೆ ಅಥವಾ ಬೇಡವೇ ಎಂಬ ಪ್ರಪಂಚದಷ್ಟೇ ಹಳೆಯದಾದ ಪ್ರಶ್ನೆಯ ಕುರಿತು ಈ ಕಾದಂಬರಿಯು ಚರ್ಚಿಸುತ್ತದೆ. ಕಾದಂಬರಿಯಲ್ಲಿ ಹೆಣ್ಣೊಬ್ಬಳು ತಾನು ಗರ್ಭಿಣಿಯೆಂದು ತಿಳಿದ ಕ್ಷಣದಿಂದ ತನ್ನ ಸ್ವಗತವನ್ನು ಪ್ರಾರಂಭಿಸುತ್ತಾಳೆ. ಅದನ್ನವಳು ತನ್ನೊಡಲಿನಲ್ಲಿ ಬೆಳೆಯುತ್ತಿರುವ ಮಗುವಿಗೆ ಹೇಳುತ್ತಿರುವಂತೆ ನಿರೂಪಿಸುತ್ತಾಳೆ. ಮಗುವನ್ನು ಪಡೆಯಬೇಕೆಂಬ ತಾಯಿಯ ಬಯಕೆಯು ಮಗುವೊಂದನ್ನು ಹುಟ್ಟಿಸುವುದಕ್ಕೆ ಬೇಕಾದ ಸಮರ್ಥನೆಯಾಗುತ್ತದೆಯೇ? ಎಂಬ ನೋವಿನ ಪ್ರಶ್ನೆಯನ್ನು ಅವಳು ತನಗೆ ತಾನೇ ಕೇಳಿಕೊಳ್ಳುತ್ತಾಳೆ. ಉತ್ತರವನ್ನು ಕಂಡುಕೊಳ್ಳುವ ವಿರೋಧಾಭಾಸದ ನಡುವೆಯೇ ಅವಳು ಮಗುವಿಗೆ ಈ ಲೋಕದ ವಾಸ್ತವಗಳನ್ನು ಅರ್ಥಮಾಡಿಸಲು ಪ್ರಯತ್ನಿಸುತ್ತಾಳೆ. ಇಲ್ಲಿ ಬದುಕಬೇಕೆಂದರೆ ಹಿಂಸೆ, ಸ್ವಾತಂತ್ರ್ಯವೆಂದರೆ ಕನಸು, ನ್ಯಾಯವೆಂಬುದು ವಂಚನೆ, ನಾಳೆಯೆಂಬುದು ನಿನ್ನೆ ಮತ್ತು ಪ್ರೀತಿಯೆಂದರೆ ಅಸ್ಪಷ್ಟ ಹುಡುಕಾಟ ಹೀಗೆ ವಿವರಿಸುತ್ತಲೇ ಅವಳೊಂದು ಮುಖ್ಯವಾದ ಸವಾಲಿಗೆ ಮುಖಾಮುಖಿಯಾಗುತ್ತಾಳೆ. ಇನ್ನೂ ಅಸ್ತಿತ್ವದಲ್ಲಿಲ್ಲದ ಜೀವವೊಂದಕ್ಕಾಗಿ ಒಬ್ಬ ವ್ಯಕ್ತಿ ತನ್ನ ಜೀವವನ್ನೇ ತ್ಯಾಗ ಮಾಡಬೇಕೆ? + +ಇಲ್ಲಿ ತಾಯಿಯ ಸ್ವಗತವು ಅವಳಿಗೆ ಅವಳೇ ಮಾಡಿಕೊಳ್ಳುವ ನಿವೇದನೆಯಂತಿದೆ. ಕಾದಂಬರಿಯ ಬಹಳ ಮುಖ್ಯ ಭಾಗವೆಂದರೆ ತಾಯಿಯ ವಿಚಾರಣೆ. ಅವಳ ಜೀವನದಲ್ಲಿ ಬರುವ ಏಳು ಜನರು ಒಟ್ಟಾಗಿ ಇಲ್ಲಿ ತಾಯಿಯಾಗಬೇಕಿದ್ದ ಮಹಿಳೆಯನ್ನು ಕಟಕಟೆಯಲ್ಲಿ ನಿಲ್ಲಿಸಿ ವಿಚಾರಣೆ ನಡೆಸುತ್ತಾರೆ. ಅರಿವಿಗೆ ಬರದ ಅಸಾಧ್ಯ ಸಂಬಂಧಗಳ ನಡುವಿನ ಪ್ರೀತಿ-ದ್ವೇಷ, ಮೃದುತ್ವ-ಕಾಠಿಣ್ಯಗಳ ನಡುವೆ ಹೊಯ್ದಾಡುತ್ತ ಮಹತ್ವದ ತೀರ್ಮಾನವೊಂದಕ್ಕೆ ಬರುತ್ತಾರೆ. ತಾಯ್ತನದ ಅನನ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಅದರಿಂದ ತಾಯಿಯೊಬ್ಬಳು ವಂಚಿತವಾಗುವ ತಿರುವೊಂದನ್ನು ಕಾದಂಬರಿ ಪಡೆದುಕೊಳ್ಳುತ್ತದೆ. + +ಈ ಹಂತದಲ್ಲಿ ತಾಯಿಯು ತನ್ನ ಅಂತಿಮ ಸವಾಲನ್ನು ಮಗುವಿನ ಮುಂದಿಡುತ್ತಾಳೆ. ಮಗುವಿನ ಷರತ್ತಿಗೆ ಒಪ್ಪದೇ ಇರುವ ಹಕ್ಕು ತಾಯಿಗಿದೆಯೆ? ಮತ್ತು ತಾನು ಅಸ್ತಿತ್ವದಲ್ಲಿರಬೇಕೆ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಹಕ್ಕು ಮಗುವಿಗಿದೆಯೆ? ಎಂದು. ಅಂತಿಮವಾಗಿ ಮಗುವೇ ತೀರ್ಮಾನವನ್ನು ತೆಗೆದುಕೊಳ್ಳುತ್ತದೆ ಮತ್ತು ಆ ತೀರ್ಮಾನವು ಅದು ತನಗಾಗಿ ಮಾತ್ರ ತೆಗೆದುಕೊಂಡ ತೀರ್ಮಾನವಾಗಿರುವುದಿಲ್ಲ. ತನ್ನ ಪ್ರತಿ ಕೃತಿಯಲ್ಲಿಯೂ ಓದುಗರನ್ನು ಚಿಂತನೆಗೆ ಉದ್ದೀಪಿಸುವ ಫಲಾಚಿಯವರು ಈ ಜಗತ್ತು ಹುಟ್ಟಿದಾಗಿನಿಂದಲೂ ಪರಂಪರೆಯ ನೆಪದಲ್ಲಿ ಬೆಳೆದು ಬಂದಿರುವ ಅನೇಕ ನಂಬಿಕೆಗಳನ್ನು ಈ ಕಾದಂಬರಿಯಲ್ಲಿ ದಿಟ್ಟವಾಗಿ ಪ್ರಶ್ನಿಸುತ್ತಾರೆ. ತಾಯಿಯೊಬ್ಬಳ ಒಡಲಾಳದ ಸಂದಿಗ್ಧಗಳನ್ನು ಪರಿಣಾಮಕಾರಿಯಾಗಿ ಓದುಗರ ಎದೆಗೆ ದಾಟಿಸುತ್ತಾರೆ. ಈ ಕಾದಂಬರಿಯು ತಾಯ್ತನವನ್ನು ಧಾರ್ಮಿಕ, ತಾತ್ವಿಕ, ಭಾವಪ್ರಧಾನ, ರಾಜಕೀಯ, ವೈಯಕ್ತಿಕ ಮತ್ತು ಪಾವಿತ್ರ್ಯದ ನೆಲೆಯಲ್ಲಿ ಚರ್ಚಿಸುತ್ತದೆ. ವಿಚಾರಪ್ರಚೋದಕವಾದ ಇನ್ನೂ ಅನೇಕ ಆಯಾಮಗಳು ಈ ಕಾದಂಬರಿಗಿವೆ. + +ನಿಜವಾಗಿ ನೋಡಿದರೆ ನಾಗರಿಕತೆಯ ಓಟ ನಮ್ಮ ನಾಳೆಗಳನ್ನು ಇನ್ನಷ್ಟು ಭರವಸೆಯ ಕಡೆಗೆ ಕೊಂಡೊಯ್ಯಬೇಕಿತ್ತು. ಆದರೆ ಅದರ ಚಕ್ರವು ಹಿಂಸೆ, ಮೌಢ್ಯ, ಮೂಲಭೂತವಾದದ ಕೆಸರಿನಲ್ಲಿ ಸಿಕ್ಕಿ ಹಿಮ್ಮರಳುವಂತಿದೆ. ಈ ಎಲ್ಲ ಹಿಮ್ಮರಳುವಿಕೆಯ ಮೊದಲ ಬಲಿಪಶುಗಳು ಹೆಣ್ಣುಗಳು ಮತ್ತು ಇತ್ತೀಚೆಗೆ ಇವೆಲ್ಲವುಗಳ ವಿರುದ್ಧ ಮುಂಚೂಣಿಯಲ್ಲಿ ನಿಂತು ಸೆಣಸುತ್ತಿರುವವರು ಕೂಡ ಅವರೆ. ಹಿಂಸೆ ಮತ್ತು ಕ್ರೌರ್ಯದ ವಿರುದ್ಧ ಹೋರಾಡಿ ಗೆಲ್ಲುವುದು ತಾಯ್ತನದ ಮೃದುತ್ವಕ್ಕೆ ಮಾತ್ರವೇ ಸಾಧ್ಯ ಎಂಬುದು ಅನುಗಾಲದ ನಂಬಿಕೆ. ಇಂದು ಇಡಿಯ ಜಗತ್ತು ಹೆಣ್ತನದ ಮೃದುತ್ವಕ್ಕಾಗಿ ಮತ್ತು ತಾಯ್ತನದ ಮಮತೆಗಾಗಿ ಕಾಯುತ್ತಿದೆ ಎಂಬುದು ಸುಳ್ಳಲ್ಲ. ಕಳೆದ ಐದು ವರ್ಷಗಳಿಂದ ವ್ರತಕ್ಕೆ ಬಿದ್ದವರಂತೆ ಹೆಣ್ಣಿನ ಗಾಥೆಯನ್ನು ಒಂದರ ಮೇಲೊಂದರಂತೆ ರಂಗದ ಮೇಲೆ ಹಾಡುತ್ತಿರುವ ಡಾ|ಶ್ರೀಪಾದ ಭಟ್ಟರ ಹುಡುಕಾಟದಲ್ಲಿ ಆಕಸ್ಮಿಕವಾಗಿ ಕೈಗೆಟುಕಿದ ಪುಸ್ತಕವಿದು. ಓದುತ್ತ ಹೋದಂತೆ ಪ್ರತಿಮೆಗಳ ರಾಶಿಯನ್ನೇ ತನ್ನೊಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಇದರೊಳಗಿನ ಉಪಕತೆಗಳೆಲ್ಲವೂ ರಂಗನಾಟಕವೊಂದಕ್ಕೆ ಹೇಳಿಮಾಡಿಸಿದಂತಿವೆಯೆಂದು ಸರಸರನೆ ಕನ್ನಡದಲ್ಲಿ ಬರೆದಾಯಿತು. ಮನಸೆಳೆದ ಕೆಲವು ವಾಕ್ಯಗಳನ್ನು ಮುಖಹೊತ್ತಿಗೆಯಲ್ಲಿ ತೇಲಿಬಿಟ್ಟಾಗ ಇದನ್ನು ಪ್ರಕಟಿಸುವ ಭರವಸೆಯನ್ನು ವ್ಯಕ್ತಪಡಿಸಿದವರು ಲಡಾಯಿ ಪ್ರಕಾಶನದ ಬಸೂ ಅವರು. ಅವರ ಈ ಒತ್ತಾಸೆಯಿಂದ ಇಡಿಯ ಪುಸ್ತಕವನ್ನು ಕನ್ನಡಕ್ಕೆ ತರಲು ಸಾಧ್ಯವಾಯಿತು. ಇಲ್ಲವಾದಲ್ಲಿ ರಂಗಪ್ರಯೋಗಕ್ಕೆ ಬೇಕಾದ್ದನ್ನಷ್ಟೇ ಸಂಗ್ರಹಿಸಿ, ಪುಸ್ತಕದ ಪುಟಗಳನ್ನು ಮುಚ್ಚಿಬಿಡುತ್ತಿದ್ದೆನೇನೋ? ಅದಕ್ಕಾಗಿ ಲಡಾಯಿ ಪ್ರಕಾಶನ ಮತ್ತು ಅವರ ಎಲ್ಲ ಬಳಗಕ್ಕೆ ಮೊದಲ ಶರಣು. + +ಈ ಕಾದಂಬರಿಯಲ್ಲಿ ಬರುವ ವೈಜ್ಞಾನಿಕ ವಿವರಣೆಗಳು, ದುಡಿಯುವ ಮಹಿಳೆಯ ಕಷ್ಟಗಳು, ಬಾಡಿಗೆ ತಾಯ್ತನದ ಪ್ರಸ್ತಾಪಗಳು ಎಲ್ಲವೂ ಇದು ಇತ್ತೀಚೆಗಷ್ಟೇ ರಚನೆಯಾದ ಕಾದಂಬರಿಯಿರಬಹುದೆಂಬ ಭಾವನೆಯನ್ನು ಹುಟ್ಟಿಸಿದ್ದವು. ಭಾಷಾಂತರಕ್ಕೆಂದು ಕಾದಂಬರಿಕಾರ್ತಿಯ ಪರಿಚಯವನ್ನು ಓದುವಾಗ ಇದನ್ನು ಅವರು 1974ರಲ್ಲಿ ಬರೆದದ್ದು ಎಂಬ ವಿಷಯ ನನ್ನನ್ನು ಅಚ್ಚರಿಯ ಕಡಲಿನಲ್ಲಿ ಮುಳುಗಿಸಿತು. ಈಗ್ಗೆ ಅರ್ಧಶತಮಾನದಷ್ಟು ಹಿಂದೆಯೇ ಇಷ್ಟೊಂದು ಆಧುನಿಕವಾಗಿ ಯೋಚಿಸಲು ಸಾಧ್ಯವೆ? ಎಂಬ ಬೆರಗು ನನ್ನನ್ನು ಆವರಿಸಿತು ಅಥವಾ ನಾವಿನ್ನೂ ಅರ್ಧ ಶತಮಾನದಷ್ಟು ಹಿಂದಿದ್ದೇವೆಯೆ? ಭಾರತ ಮತ್ತು ಫಲಾಚಿಯವರಿಗೆ ಒಂದು ವಿಶೇಷವಾದ ನಂಟು ಇದೆ. ಇಂಡೋ-ಪಾಕಿಸ್ತಾನ ಯುದ್ಧದ ವರದಿಗಾಗಿ ಭಾರತಕ್ಕೆ ಅನೇಕ ಸಲ ಭೇಟಿಯಿತ್ತ ಫಲಾಚಿಯವರು ಬಾಂಗ್ಲಾ ವಿಮೋಚನೆಯ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರೊಂದಿಗೆ ಸುದೀರ್ಘವಾದ ಸಂದರ್ಶನವನ್ನೂ ನಡೆಸಿದ್ದರು. ಮುರಾರ್ಜಿ ದೇಸಾಯಿಯವರನ್ನೂ ಅವರು ಸಂದರ್ಶಿಸಿದ್ದರು ಎಂಬುದನ್ನಿಲ್ಲಿ ಸ್ಮರಿಸಬಹುದಾಗಿದೆ. ಅವರ ಭಾರತ ಭೇಟಿಯ ಕುರುಹೋ ಎಂಬಂತೆ ಈ ಕಾದಂಬರಿಯಲ್ಲಿ ತಾಯಿಯು ತನ್ನ ಮಗುವಿಗೆ ಭಾರತೀಯ ಶೈಲಿಯ ತೊಟ್ಟಿಲನ್ನು ಕೊಳ್ಳುವ ಪ್ರಸ್ತಾಪವು ಬರುತ್ತದೆ. + +ಮಗುವನ್ನು ಹುಟ್ಟಿಸಬೇಕೊ, ಬೇಡವೋ? ಮಗುವನ್ನು ಬೆಳೆಸುವ ಜವಾಬ್ದಾರಿಯಲ್ಲಿ ಅಪ್ಪನ ಪಾಲೆಷ್ಟು, ಅಮ್ಮನ ಪಾಲೆಷ್ಟು? ಮದುವೆಯಾಗುವುದು ಮಗುವನ್ನು ಪಡೆಯಲೋ ಅಥವಾ ಸಾಂಗತ್ಯಕ್ಕೋ? ಮಗು ಹೆಣ್ಣಾದರೆ ಒಳಿತೋ ಅಥವಾ ಗಂಡಾಗಬೇಕೋ? ದುಡಿಯುವ ಮಹಿಳೆಯ ಮೊದಲ ಪ್ರಾಶಸ್ತ್ಯ ಅವಳ ಕುಟುಂಬವೋ ಅಥವಾ ಕೆಲಸವೋ? ಹೀಗೆ ಪ್ರಪಂಚ ಹುಟ್ಟಿದಾಗಿನಿಂದಲೇ ನಮ್ಮನ್ನು ಹಿಂಬಾಲಿಸಿಕೊಂಡು ಬಂದಿರುವ ಅನೇಕ ಪ್ರಶ್ನೆಗಳು ಇಂದಿಗೂ ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ. ಅವುಗಳಿಗೆಲ್ಲ ಉತ್ತರವನ್ನು ಕಂಡುಕೊಳ್ಳುವ ಜಿಜ್ಞಾಸೆಯು ಕಾದಂಬರಿಯುದ್ದಕ್ಕೂ ಕಥೆಯಾಗಿ ಹರಿದಿದೆ. ಪ್ರತಿವಾಕ್ಯವನ್ನು ಓದುವಾಗಲೂ ಹಳೆಯ ನೋವೊಂದು ಮತ್ತೆ ಮರುಕಳಿಸಿದಂತಹ ತಲ್ಲಣವನ್ನು ನಾನಂತೂ ಅನುಭವಿಸಿರುವೆ, ಏಕೆಂದರೆ ಈ ಜಗತ್ತಿನಲ್ಲಿ ಕೆಲವರಿಗೆ ಬಸುರಿತನವೆಂದರೆ ಒಂದು ಬೆರಗು ಮತ್ತು ಮೆರಗು, ಆದರೆ ಅನೇಕರಿಗೆ ಅದೊಂದು ಭರಿಸಲಾರದ ಕೊರಗು. ಒಡಲಿನಲ್ಲಿ ಮಗುವೊಂದನ್ನು ಹೊತ್ತು, ಕಂಕುಳಲ್ಲಿ ಕೂಸೊಂದನ್ನು ಎತ್ತಿಕೊಂಡು, ಕೈಯ್ಯಲ್ಲಿ ಬುತ್ತಿಯ ಗಂಟನ್ನು ಇಟ್ಟು ಕೂಲಿಗಾಗಿ ಕಾಯುತ್ತಿರುವ ಅಮ್ಮಂದಿರ ದೃಶ್ಯ ಪ್ರತಿದಿನವೂ ಕಣ್ಮುಂದೆ ಗೋಚರಿಸುತ್ತಲೇ ಇರುತ್ತದೆ. ಮತ್ತದು ಇನ್ನೂ ಎಷ್ಟೋ ವರ್ಷಗಳ ಕಾಲ ಮುಂದುವರೆಯುತ್ತದೆ. ‘ಹ್ಯಾಪಿ ಕಪಲ್ ವಿತ್ ನೋ ಚೈಲ್ಡ್’ ಎಂಬ ಹೊಸ ಮಾದರಿಯ ದಾಂಪತ್ಯವೂ ಜಾರಿಗೆ ಬರುತ್ತಿದ್ದು ಮುಂದೆ ಯಾವ ತಿರುವನ್ನು ಪಡೆಯುವುದೋ ಕಾದು ನೋಡಬೇಕಿದೆ. ತಾಯ್ತನವೆಂದರೆ ಹೆಣ್ಣೊಬ್ಬಳು ನಿರ್ವಹಿಸಬೇಕಾದ ಕರ್ತವ್ಯವಲ್ಲ, ಜೈವಿಕ ಜವಾಬ್ದಾರಿಯೂ ಅಲ್ಲ, ಅದು ಹೆಣ್ಣೊಬ್ಬಳ ವೈಯಕ್ತಿಕವಾದ ಮತ್ತು ಪ್ರಜ್ಞಾಪೂರ್ವಕವಾದ ಆಯ್ಕೆ ಎಂಬ ದೃಢವಾದ ನಿಲುವೊಂದನ್ನು ಈ ಕಾದಂಬರಿ ಪ್ರತಿಪಾದಿಸುತ್ತದೆ. + + + +ನಾಟಕ ಕಟ್ಟುವ ನೆವದಲ್ಲಿ ಹೊಸ ಓದಿಗೆ ನನ್ನನ್ನು ಸದಾ ಪ್ರೇರೇಪಿಸುವ ಗೆಳೆಯ, ಗುರು ಡಾ|ಶ್ರೀಪಾದ ಭಟ್ ನನ್ನೆಲ್ಲ ಬರವಣಿಗೆಯ ಹಿಂದಿರುವ ಪ್ರೇರಕ ಶಕ್ತಿ. ಬರವಣಿಗೆಯಲ್ಲಿ ಮುಳುಗಿದ್ದಾಗ ಲೌಕಿಕದ ಹತ್ತಾರು ವಿಷಯಗಳನ್ನು ನನ್ನೆದುರು ಹರಡಿ ವಾಸ್ತವಲೋಕಕ್ಕೆ ನನ್ನನ್ನು ಎಳೆಯುತ್ತಾ, ಬರೆಯದೇ ಕುಳಿತಾಗಲೆಲ್ಲ ಏನೋ ಕಳೆದುಹೋಗುತ್ತಿದೆಯೆಂಬಂತೆ ಕಳವಳಿಸುತ್ತಾ ಸದಾ ನನ್ನೊಳಗೊಂದು ತಲ್ಲಣವನ್ನು ಜೀವಂತವಿಡುವ ಸಂಗಾತಿ ಗಣಪತಿ, ನನ್ನ ಅರಿವಿನ ಲೋಕವನ್ನು ತಮ್ಮೊಂದಿಗಿನ ಪ್ರತಿ ಮಾತುಕತೆಯಲ್ಲಿಯೂ ವಿಸ್ತರಿಸುತ್ತ ಸಾಗುವ ನನ್ನೆರಡು ಕಣ್ಣಗೊಂಬೆಗಳಂತಿರುವ ತುಷಾರ್-ಪ್ರೀತಂ, ಪುಸ್ತಕ ಪ್ರಕಟಿಸುವ ಮೂಲಕ ಬರೆಯುವ ಆಸೆಯನ್ನು ಜೀವಂತವಾಗಿಡುವ ಲಡಾಯಿ ಪ್ರಕಾಶನದ ಬಸೂ, ಮತ್ತವರ ಬಳಗ ಎಲ್ಲರಿಗೂ ಋಣಿಯಾಗಿರುವೆ ಎಂದಷ್ಟೇ ಹೇಳಲು ಸಾಧ್ಯ. ಕನ್ನಡ ಪುಸ್ತಕಗಳನ್ನು ಓದುವವರಿಲ್ಲ ಎಂಬ ಕೊರಗಿನ ನಡುವೆಯೂ ಪುಸ್ತಕವನ್ನು ಕೊಂಡು ಓದಿ, ಆಗಾಗ ಪ್ರತಿಕ್ರಿಯಿಸುವುದರ ಮೂಲಕ ಬರಹಕ್ಕೆ ಪ್ರೇರಣೆಯನ್ನು ತುಂಬುವ ಓದುಗ ಬಳಗಕ್ಕೆ ಶರಣು. ಅಕ್ಷರಗಳ ಮೂಲಕ ಪರಿಚಿತರಾದ ಸಾಹಿತ್ಯ ಲೋಕದ ಸ್ನೇಹವಲಯಕ್ಕೂ, ನನ್ನೊಳಗಿನ ಯೌವ್ವನವನ್ನು ಸದಾ ಕಾಪಿಡುವ ನನ್ನೆಲ್ಲ ವಿದ್ಯಾರ್ಥಿ ಸಮೂಹಕ್ಕೂ, ನನ್ನ ದಿನದ ದಂದುಗದಲ್ಲಿ ಜತೆಯಾಗುವ ಸುತ್ತಮುತ್ತಲ ಎಲ್ಲ ಜೀವರಾಶಿಗಳಿಗೂ ನನ್ನ ನಮನಗಳು. + +ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. \ No newline at end of file diff --git a/Kenda Sampige/article_67.txt b/Kenda Sampige/article_67.txt new file mode 100644 index 0000000000000000000000000000000000000000..a4a2134b94fe1af173121cbfb9318575f09385ab --- /dev/null +++ b/Kenda Sampige/article_67.txt @@ -0,0 +1,21 @@ +ಮಲ್ಲಿಕಾರ್ಜುನ ಗೌಡ, ತೂಲಹಳ್ಳಿಯವರ ಹಳ್ಳಿ ಅನುಭವಗಳ “ಅಗಸ್ತ್ಯ ನಕ್ಷತ್ರ” ಎಂಬ ನಾಲ್ಕು ನೀಳ್ಗತೆಗಳ ಸಂಕಲನ ಸಾರಸ್ವತ ಲೋಕದಲ್ಲಿ ಒಂದು ಶಾಶ್ವತ ಧ್ರುವ ತಾರೆಯಾಗುವಂತಹ ಕೃತಿ. ಒಂದು ಹಳ್ಳಿಯೆಂದರೆ ಅದೊಂದು ಪ್ರಾಪಂಚಿಕ ಲೋಕಕ್ಕೆ ಸಮ. ಆ ಲೋಕದ ಬದುಕು ಸಮಾಜಕ್ಕೆ ಮಾದರಿಯು ಆಗಬಹುದು ಅಥವಾ ಮಾರಕವು ಆಗಬಹುದು. ಅದನ್ನು ಹೇಗೆಂದು ಸ್ವೀಕರಿಸುವ ಗುಣ ಮಾತ್ರ ಲೇಖಕರ ಮನೋಧರ್ಮಕ್ಕೆ ಸೇರುತ್ತದೆ. + +(ಮಲ್ಲಿಕಾರ್ಜುನ ತೂಲಹಳ್ಳಿ) + +ಇಲ್ಲಿ ಅಗಸ್ತ್ಯ ನಕ್ಷತ್ರದಲ್ಲಿನ ನಾಲ್ಕು ನೀಳ್ಗತೆಗಳು ಸಾಮಾಜಿಕ ಕಥೆಗಳಾಗಿದ್ದು ಹಳ್ಳಿ ಜೀವನದ ಪದರುಗಳೆಲ್ಲವನ್ನು ಪ್ರತಿ ಕಥೆಯಲ್ಲಿ ಹರವಿ ಬಿಟ್ಟು ಸಾರವನ್ನೆಲ್ಲ ಹೊರಗೆಳಿದ್ದಿದ್ದಾರೆ. ಇಲ್ಲಿ ನೀರಿಲ್ಲದ ಸಂಕಟ ಇದೆ, ಗಣಿಗಾರಿಕೆ ನುಂಗಿದ ಹೊಲವಿದೆ, ನೋವ ನುಂಗುವ ರೈತರಿದ್ದಾರೆ, ಮಾಗಿದ ವಯೋವೃದ್ಧರಿದ್ದಾರೆ, ಅಪರಾಧ, ತೇರನ್ನೆಳೆಯುವ ಜಾತ್ರೆ, ಪ್ರಣಯವು ಒಂದು ಕಡೆ, ಹಳ್ಳಿಯ ಗೂಡಂಗಡಿ ಇತ್ಯಾದಿ ಸೇರಿದ ಬದುಕಿನ ಸತ್ಯಗಳಿವೆ. ಈಗಿನ ಧಾವಂತದ ಬದುಕಿನ ಸದ್ಯದಲ್ಲಿ ಮರಿಚೀಕೆಯಾದ ಇಂತಹ ಕಥೆಗಳು ನಮ್ಮನ್ನೊಮ್ಮೆ ಸುಖದ ಹಾದಿಯಲ್ಲಿ ಕೊಂಡೊಯ್ಯುತ್ತದೆ. + +ಈ ಕೃತಿಯ ನಾಲ್ಕು ಕಥೆಗಳಲ್ಲಿ ಅಗಸ್ತ್ಯ ನಕ್ಷತ್ರ ಸುಂದರವಾದ ಕಥಾ ಹಂದರ. ಇದರಲ್ಲಿ ಕಥೆಗಾರರು ಗ್ರಾಮವೊಂದರ ಅನೇಕ ಮಗ್ಗುಲುಗಳ ವಿಚಾರಗಳನ್ನು ಕೈಗೆತ್ತಿಕೊಂಡರು, ಕೊನೆಗೊಂದು ಏಕರೂಪದ ನಿರ್ಧಾರ ತಳೆದಿರುವುದು ಮುಖ್ಯವಾಗಿ ಈ ಕಥೆಯ ಹೆಚ್ಚುಗಾರಿಕೆ. ಜಾತಿ ಪಂಕ್ತಿಗಳನ್ನು ಸೂಚ್ಯವಾಗಿ ಬಳಸಿದರೂ ಸಮಾನತೆಯ ಭಾವನೆಯೇ ಕಥೆಯಲ್ಲಿ ಎದ್ದು ಕಾಣುತ್ತದೆ. ಕಥೆಯ ನಾಯಕ ಭೋಜನ ಗೌಡರೆಂಬ ಭೋಜ ಗೌಡ ಕುತಂತ್ರಗಳಿಗೆ ಸಿಲುಕಿದರು ಆತನ ಒಳ್ಳೆಯತನ ಆತನನ್ನು ಕಾಪಾಡುವ ತಿರುಳು ಕಥೆಯಲ್ಲಿದೆ. ಬಾಲ್ಯದಿಂದಲೇ ಹಳ್ಳಿಯಿಂದ ಪ್ರಬಾವಿತರಾದ ಲೇಖಕರು ತಮ್ಮ ಗ್ರಾಮ್ಯ ಭಾಷೆಯ ಪದಗಳೊಂದಿಗೆ ಜೊತೆಗೆ ಹಳ್ಳಿಯ ತಲ್ಲಣಗಳೊಂದಿಗೆ ನಮಗಿಲ್ಲಿ ಕಾಣಸಿಗುತ್ತಾರೆ. ಹಳ್ಳಿಯ ಸರ್ವ ಕಷ್ಟ ಸುಖಗಳಿಗೆ, ಎಲ್ಲಾ ರೀತಿಯ ಪರಿಸ್ಥಿತಿಗಳಿಗೆ ಲೇಖಕರು ಒಗ್ಗಿಕೊಂಡಿರುವುದರಿಂದಲೆ ಏನೋ ತೀರಾ ಹಿಂದಿನ ಗ್ರಾಮವೊಂದರ ಎಲ್ಲಾ ಸೂಕ್ಷ್ಮಗಳನ್ನು ಹಿಂದೇಟು ಹಾಕದೆ ನಿರ್ಭಿಡೆಯಿಂದ ಉಲ್ಲೇಖಿಸಿಕೊಂಡಿದ್ದಾರೆ. ಅಂದರೆ ಪ್ರಾಮಾಣಿಕವಾದ ಬರವಣಿಗೆ ಮತ್ತು ಭಾಷೆ ಇಲ್ಲಿನ ಕಥೆಗಳಲ್ಲಿ ಕಂಡು ಬರುತ್ತದೆ. + + + +“ಹಾಸಿದ್ದ ಕಂಬಳಿ ಅಲ್ಲೇ ಬಿಟ್ಟು ಕಡ್ಡಿ ಭರಮನೊಂದಿಗೆ ತಮ್ಮನ ಗೌಡ ಹೊಲ ಬೀಳುವವರೆಗೆ ಪಂಚೆ ತುದಿಯನ್ನು ಎಡಗೈಲಿ ಹಿಡಿದು ರಭಸದಿಂದ ನಡೆದ ಭೋಜನ ಗೌಡ. ಹೊಲದ ದೊಡ್ಡ ಏರಿಯ ಮೇಲೆ ಗುಂಪು ಗುಂಪು ಜನ”. ಅಗಸ್ತ್ಯ ನಕ್ಷತ್ರ ಕಥೆಯ ಈ ಸಾಲಿನಲ್ಲಿ ಕಂಡುಬರುವ ಶಿಸ್ತು ಬರವಣಿಗೆಯುದ್ದಕ್ಕೂ ಇದೆ. ಕನ್ನಡದಲ್ಲಿ ಸುಲಭವಾಗಿ ಕೇಳಿಬಾರದ ಹಲವಾರು ಪದಗಳು ಕನ್ನಡದ ಉಪಭಾಷೆಯಾದ ಇಲ್ಲಿನ ಗ್ರಾಮ್ಯ ಭಾಷೆಯ ಸೊಗಡಿನಲ್ಲಿದೆ. ಬಹುಷಃ ತಮ್ಮ ಬಾಲ್ಯದಲ್ಲಿ ಕಂಡಿದ್ದ ಕೇಳಿದ್ದ ನೆನಪುಗಳಿಗೆ ಲೇಖಕರು ಈಗ ಜೀವ ತುಂಬಿದ್ದಾರೆ ಎಂದೆನಿಸುತ್ತದೆ. ಅಗಸ್ತ್ಯ ನಕ್ಷತ್ರ ಕಥೆಯಲ್ಲಿ ಅಮಾಯಕ ಹೆಣ್ಣು ಸರೋಜ ಯಾವುದರ ಪರಿವೆಯೇ ಇಲ್ಲದೆ ಕೊಲೆಯಾದದ್ದು ಪ್ರತಿ ಹೆಣ್ಣಿನ ನೋವನ್ನು ಇಲ್ಲಿ ಪ್ರತಿನಿಧಿಸುತ್ತದೆ. ಇಂತಹ ವಿಚಾರವೆಲ್ಲ ಲೇಖಕ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಬೆಸೆದುಕೊಂಡಿರುವುದನ್ನು ಲೇಖಕರು ಓದುಗರಿಗೆ ಸಮರ್ಪಕವಾಗಿ ನೀಡಿದ್ದಾರೆ. + +ಇಲ್ಲಿರುವ ನಾಲ್ಕು ಕಥೆಗಳು ಕಟ್ಟುಕಥೆಗಳೆಂದು ನಮಗನಿಸುವುದೇ ಇಲ್ಲ. ಗ್ರಾಮ ಜೀವನವೇ ಹೀಗೆ…. ನೀರಿಗೆಂದು ಮೈಲುದೂರ ಕೊಡಪಾನ ಹಿಡಿದು ಸಾಗಿ ಮನೆಗೆ ನೀರು ತುಂಬಬೇಕು. ಮತ್ತೆ ಮನೆಯಿಂದ ಚೆಂಬು ಹಿಡಿದುಕೊಂಡು ಇನ್ನೆಲ್ಲಿಗೋ ನಡೆದು ಹೋಗುವಂತಹ ವಿಪರ್ಯಾಸಗಳು ಹಳ್ಳಿಯಲ್ಲಿ ಮಾತ್ರವೇ ನಡೆಯುತ್ತಿತ್ತು. ಇದು ಹಳ್ಳಿ ಬದುಕಿನ ನೋವಿನ ಚಿತ್ರಣ. ಕಥೆಗಾರರ ಬಾಲ್ಯವೇ ಇಲ್ಲಿನ ಕಥೆಗಳಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿರಲೂಬಹುದು. ಏಕೆಂದರೆ ಹಳ್ಳಿಯ ಬಾಲ್ಯವೆಂಬುದು ಅನುಭವಗಳನ್ನು ಮೊಗೆ ಮೊಗೆದು ಕೊಡುವ ತಾಣ. ಕರೆಂಟಿಲ್ಲ, ಬಸ್ಸಿಲ್ಲ, ಶೌಚಾಲಯವಿಲ್ಲ, ಇಂಗ್ಲೀಷ್ ಇಲ್ಲ ಯಾವ ಸೌಕರ್ಯವೂ ಇಲ್ಲ ಎನ್ನುವ ಇವೆಲ್ಲ ಇಲ್ಲಗಳು ನಮ್ಮನ್ನು ಒಳಗಿನಿಂದಲೇ ಗಟ್ಟಿಗೊಳಿಸುತ್ತವೆಯೆ ಹೊರತು ನಮ್ಮನೆಂದಿಗು ಬಿಟ್ಟು ಕೊಡುವುದಿಲ್ಲ. ಹಾಗಾಗಿ ಇಂತಹ ಗಟ್ಟಿತನದ, ಗುಣಮಟ್ಟದ ಹಳ್ಳಿ ಹಿನ್ನಲೆಯ ಕಥೆಗಳು ಹುಟ್ಟಿಕೊಳ್ಳಲು ಕಾರಣವಾಗುತ್ತದೆ. + +“ನಲ್ಲಿ ಬಂತು” ಕಥೆ ಮನುಷ್ಯರಿಗೆಲ್ಲ ಏನೋ ಸ್ಪಂದನೆ ನೀಡುವಂತೆ ವಿನೂತನವಾಗಿ ಮೂಡಿ ಬಂದಿದೆ. ನಲ್ಲಿ ಬಂತು ಕಥೆಯಲ್ಲಿ ಎಡಗಡೆಗೆ ಮಲಗಿಸಿಕೊಂಡಿದ್ದ ಹೆಣ್ಣುಗೂಸನ್ನು ಒಂದು ಕೈಲಿ ಎಚ್ಚರವಾಗದಂತೆ ಮೆಲ್ಲಗೆ ತಟ್ಟಿ, ಬಲ ಮಗ್ಗುಲಿಗೆ ಹತ್ತು ವರ್ಷದ ಮುದಿಗೂಸಾದರು ಈಗಲೂ ಬಾಯಲ್ಲಿ ಆಕೆಯ ಮೊಲೆಯಿಟ್ಟು ಮಲಗಿದ್ದ ಮಗ ದುರುಗನನ್ನು ಮನಸ್ಸಿಲ್ಲದ ಮನಸ್ಸಿನಿಂದ ಎಬ್ಬಿಸಿದಳು. ಇದರಲ್ಲಿ ಬಂದ ಹತ್ತು ವರ್ಷದ ಮುದಿಗೂಸು ಎಂಬಂತಹ ಪದ ಪ್ರಯೋಗಗಳು ಈ ಕೃತಿಯಲ್ಲಿ ಹಲವಾರು ಬಂದಿದೆ. ಇಂತಹ ಪ್ರಯೋಗಶೀಲತೆ, ಸೃಜನಶೀಲತೆ ಕಥೆಯ ಪರಂಪರೆಯನ್ನೇ ಬೆಳೆಸುತ್ತಾ ಹೋಗುತ್ತದೆ. ಈ ಕೃತಿಯ ಘಾಟು, ಕಣಿವೆ ಕಥೆಗಳು ತನ್ನ ವಸ್ತುನಿಷ್ಠ ಹೇಳಿಕೆಗಳೊಂದಿಗೆ ಓದುಗರನ್ನು ಆಕರ್ಷಿಸುತ್ತವೆ. ಒಟ್ಟಿನಲ್ಲಿ ನಾಲ್ಕು ಕಥೆಗಳು, ಸಾಮಾಜಿಕ ವ್ಯವಸ್ಥೆ ಶಿಥಿಲಗೊಳ್ಳುತಿರುವ ಈಗಿನ ಕಾಲಕ್ಕೆ ಹೊಸ ನೋಟವೊಂದನ್ನು ನೀಡಿ ಓದುಗರಲ್ಲಿ ಕಾಳಜಿಯನ್ನುಂಟು ಮಾಡುತ್ತದೆ. + + + +ಆಯಾ ಕಥೆಗಳಲ್ಲಿ ಅದರದೇ ಆದ ಸತ್ವ ಇದೆ. ಕಥೆಯ ಒಳದನಿಗಳು ನಿಚ್ಚಳವಾಗಿ ಓದುಗರನ್ನು ಎಚ್ಚರಗೊಳಿಸಿ ಜಾಗೃತಗೊಳಿಸುತ್ತದೆ ಎಂಬ ಆಶಾವಾದದೊಂದಿಗೆ ಲೇಖಕರು ಅಗಸ್ತ್ಯ ನಕ್ಷತ್ರವನ್ನು ಓದುಗರಿಗೆ ನೀಡಿದ್ದಾರೆ. ಪಲ್ಲವ ಪ್ರಕಾಶನದಿಂದ ಪ್ರಕಟಗೊಂಡ “ಅಗಸ್ತ್ಯ ನಕ್ಷತ್ರ” ಸಂಕಲನ, ನಕ್ಷತ್ರದಂತೆ ಮಿನುಗಲಿ ಎಂಬುದಾಗಿ ಆಶಿಸೋಣ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_68.txt b/Kenda Sampige/article_68.txt new file mode 100644 index 0000000000000000000000000000000000000000..062d12405e5c3558defefe1f7783afd6724ee8e4 --- /dev/null +++ b/Kenda Sampige/article_68.txt @@ -0,0 +1,39 @@ +ಪ್ರಿಯ ಭೂಮಿ + +‘ನಾಟಕ’ ನಮ್ಮ ಇರುವಿಕೆಯ ಅಭಿವ್ಯಕ್ತಿ. ನಾಟಕವನ್ನು ನಾವು ಪಡೆದುಕೊಳ್ಳುವುದು ನಮ್ಮ ಬದುಕಿನಿಂದಲೇ. ನಾಟಕ ಮಾಡುವುದು, ಮಾಡಿಸುವುದು ನನ್ನ ಕೆಲಸವೇ ಆಗಿದ್ದರೂ ಇದಕ್ಕೆ ಬೇಕಾದ ಸಾರ, ದ್ರವ್ಯ, ಒದಗಿ ಬರುವುದು ನಮ್ಮ ಬದುಕಿನಿಂದ, ಅಲ್ಲಿನ ಅನುಭವಗಳಿಂದ, ನೆನಪುಗಳಿಂದ, ಬದುಕಿನ ಬಗೆಗಿನ ಒಳನೋಟಗಳಿಂದ ಮತ್ತು ಕಾಳಜಿಗಳಿಂದ. ಇವೆಲ್ಲವುಗಳಿಂದ ನಾವು ಕಾಣುತ್ತೇವೆ; ಕಂಡದ್ದನ್ನು ಕಾಣಿಸಲು ಪ್ರಯತ್ನಿಸುತ್ತೇವೆ. ಬದುಕಿನ ನಮ್ಮ ಹಲವು ಇರುವಿಕೆಗಳಲ್ಲಿ ರಾಜಕೀಯ ಇರುವಿಕೆಯೂ ಒಂದು. ಅದು ನಮ್ಮ ಅಸ್ಥಿತ್ವದ ಭಾಗವಾಗಿಯೇ ಇರುತ್ತದೆ. + +‘ಆರ್ಯಕ’ ನಮ್ಮ ನಾಟಕದಲ್ಲಿನ ಒಂದು ಪಾತ್ರ. ಆರ್ಯಕ ಎನ್ನುವ ಗೊಲ್ಲರ ಹುಡುಗ ಉಜ್ಜಯಿನಿಯಲ್ಲಿ ಆಗುವ ರಾಜಕೀಯ ಕ್ರಾಂತಿಯ ಬಂಡುಕೋರ ನಾಯಕ. ಇವನು ತನ್ನ ಸಮಾನ ಮನಸ್ಕರೊಡಗೂಡಿ ಸಂಚು ರೂಪಿಸುತ್ತಾನೆ. ಅಲ್ಲಿನ ರಾಜ ‘ಪಾಲಕ’ ಮತ್ತು ಅವನ ಭಾವ ಮೈದುನ ‘ಶಕಾರ’ನ ದುರಾಡಳಿತ, ಮೂರ್ಖತನ, ಲೋಲುಪತೆಗಳಿಂದ ಅರಾಜಕವಾಗಿದ್ದ ರಾಜ್ಯವನ್ನು ರಕ್ಷಿಸಲು ರಾಜ ಪಾಲಕನನ್ನು ಕೊಂದು ತಾನು ರಾಜನಾಗುತ್ತಾನೆ. ತಳ ಸಮುದಾಯಗಳ ದಂಗೆಯೆಂಬಂತೆ ನಡೆದ ಈ ರಾಜಕೀಯ ಕ್ರಾಂತಿಯಲ್ಲಿ ಆರ್ಯಕನೊಂದಿಗೆ ಸೇರಿದ ಎಲ್ಲರೊಳಗೂ ಜಾಗೃತವಾದ ಪ್ರಜ್ಞೆಯಲ್ಲಿ ಪ್ರಭುತ್ವದ ಬಗೆಗಿನ ಇಡೀ ಉಜ್ಜಯಿನಿಯ ಅಸಹನೆ ಸ್ಪೋಟವಾಗುತ್ತದೆ. ಪ್ರಭುತ್ವದ ಆದರ್ಶವೆಂಬಂತೆ ಆರ್ಯಕ ರಾಜನಾಗುತ್ತಾನೆ. ಇದು ಈ ನಾಟಕದಲ್ಲಿ ಬರುವ ರಾಜಕಾರಣದ ಕಥೆ. + +ನಮ್ಮ ಗ್ರಾಮ ಪಂಚಾಯಿತಿಯಿಂದ ಪ್ರಧಾನಿಯವರೆಗೂ, ವಿಕೇಂದ್ರೀಕೃತ ಕಿರು ಘಟಕಗಳಿಂದ ದೇಶದ ಲೋಕಸಭೆಯವರೆಗೂ ಪ್ರಭುತ್ವವನ್ನು ಪ್ರತಿನಿಧಿಸುವ ನಾಯಕರ ಬಗೆಗೆ ಸಮುದಾಯಗಳು ಕೆಲವು ಆದರ್ಶ ಕಲ್ಪನೆಗಳನ್ನು ಇರಿಸಿಕೊಂಡಿರುತ್ತವೆ. ಅವರವರ ಭಾವ ಭಕುತಿಗೆ, ತಿಳುವಳಿಕೆಗಳಿಗೆ ಅನುಗುಣವಾಗಿ ಇರುವ ತಾತ್ವಿಕ ಗುಂಪುಗಳೊಂದಿಗೆ ಅಥವಾ ಪಕ್ಷಗಳೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುತ್ತವೆ. ವ್ಯಕ್ತಿಗೆ ತನ್ನ ಇರುವಿಕೆಯ ಗುರುತುಗಳಲ್ಲಿ ತಾನು ಪಾಲಿಸುವ ರಾಜಕೀಯ ನಡೆಯೂ ಒಂದು. ಪ್ರಜಾಪ್ರಭುತ್ವದಲ್ಲಿನ ಎಲ್ಲರಂತೆ ನಾವೂ ನಮ್ಮ ತಾತ್ವಿಕತೆಯನ್ನು ಸಮರ್ಥವಾಗಿ ಪ್ರತಿನಿಧಿಸಬಲ್ಲ ಒಬ್ಬ ನಾಯಕನನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತೇವೆ. + +ನಾಟಕದ ಉಜ್ಜಯಿನಿಯಲ್ಲಿದ್ದಂತೆಯೇ ನಮ್ಮೂರಿನಲ್ಲೂ ನಮ್ಮ ರಾಜಕೀಯ ನಡೆಗಳನ್ನು ಕಂಡುಕೊಳ್ಳಲು ತವಕಿಸುವ ಸಮಾನಾಸಕ್ತರ ಗುಂಪೊಂದು ಆಗಾಗ ಚರ್ಚೆ, ಕೂಟ, ಸಂವಾದಗಳನ್ನು ಮಾಡುತ್ತಿರುತ್ತದೆ. ನಮ್ಮೊಳಗೂ ಒಬ್ಬ ‘ಆರ್ಯಕ’ನಿದ್ದಾನೆ. ನಮ್ಮ ಮನೆಯ ಮೇಲಿನ ಕಛೇರಿಯಲ್ಲಿ ನಾಟಕದ ‘ರೇಭಿಲ’ನ ಮನೆಯಲ್ಲಿ ಸೇರುವಂತೆ ಇವರೆಲ್ಲರೂ ಅಲ್ಲಿ ಆಗಾಗ ಕಲೆಯುವುದುಂಟು. ಇವರಲ್ಲಿ ರೈತಸಂಘದವರು, ಡಿ.ಎಸ್.ಎಸ್‌ನವರು, ಕಾರ್ಮಿಕ ಸಂಘಟನೆಯವರು, ಅಲೆಮಾರಿ ಸಂಘಟನೆಯವರು, ಲೇಖಕರು, ಪತ್ರಕರ್ತರು, ಕವಿಗಳು, ನಾಟಕದವರೂ ಸೇರಿದಂತೆ ಪ್ರಗತಿಪರರೆಂದು ಕರೆಸಿಕೊಳ್ಳುವ ಎಲ್ಲರೂ ಅಲ್ಲಿ ಸೇರುವುದುಂಟು. ಈಗ ಆರೇಳು ವರ್ಷಗಳ ಹಿಂದೆ ಓದುವ ಹವ್ಯಾಸ, ನಾಟಕ ನೋಡುವ ಅಭಿರುಚಿಯಿಂದ ಈ ಗುಂಪಿನೊಂದಿಗೆ ಸೇರಿದ ‘ಆರ್ಯಕ’ ಈಗ ಎರಡನೇ ಸಾಲಿನ ರಾಜಕೀಯ ನಾಯಕನಾಗಿ ಬೆಳೆದಿದ್ದಾನೆ. + +ಬಿಡುವಿನ ಸಂಜೆಗಳಲ್ಲಿ ನಮ್ಮ ಕಛೇರಿಯ ಮುಂದೆ ವಾಕಿಂಗ್ ಮಾಡುವ ಅಭ್ಯಾಸವುಂಟು ನಮಗೆ. ಒಂದು ದಿನ ನಾನು ಮತ್ತು ಆರ್ಯಕ ವಾಕ್ ಮಾಡುತ್ತಿದ್ದೆವು. ಹೀಗೆ ಮಾತನಾಡುತ್ತಾ ನಮ್ಮ ದೇಶದಲ್ಲಿ ಮಕ್ಕಳು, ಯುವಜನರು ಸರ್ವಾಂಗೀಣವಾಗಿ ವಿಕಾಸವಾಗುತ್ತಿರುವ ಹಂತಗಳಲ್ಲಿ ನಾವು ಅವರ ನಿಜವಾದ ಅಭಿವ್ಯಕ್ತಿ ಸಾಧ್ಯತೆಗಳನ್ನು ಗುರುತಿಸಿ ಆ ಆಯ್ಕೆಗಳಿಗೆ ದಾರಿಮಾಡಿಕೊಡುವುದರಲ್ಲಿ ಸೋತಿದ್ದೇವೆ; ಅದರಲ್ಲೂ ಮುಖ್ಯವಾಗಿ ಕುಗ್ರಾಮಗಳ ಕೇರಿಗಳಲ್ಲಿ ವಾಸಿಸುತ್ತಿರುವ ಕೌಶಲ್ಯಾಧಾರಿತ ತಳ ಸಮುದಾಯಗಳ ಪ್ರತಿಭಾವಂತ ಮಕ್ಕಳು ಅವಕಾಶ ವಂಚಿತರಾಗಿ ಮುಖ್ಯವಾಹಿನಿಯಿಂದ ದೂರವುಳಿಯುತ್ತಿದ್ದಾರೆ ಎಂದು ಹೇಳುತ್ತಿದ್ದೆ. + +ಇದಕ್ಕೆ ಪೂರಕವಾಗಿ ಕಳೆದ ಹದಿನಾಲ್ಕು ವರ್ಷಗಳ ಹಿಂದೆ ನೀನಾಸಮ್ ಹಾಗು ನಮ್ಮ ಭೂಮಿ ಸಂಸ್ಥೆಯ ಸಹಯೋಗದಲ್ಲಿ ನಡೆದ ರಂಗ ತರಬೇತಿ ಶಿಬಿರಕ್ಕೆ ಆಕಸ್ಮಿಕವಾಗಿ ಅವಕಾಶ ಪಡೆದು ಬಂದ ದಲಿತ ಕೇರಿಯ ಚಂದ್ರಶೇಖರ, ಲಕ್ಷ್ಮಣ ಹಾಗು ಚಿಕ್ಕಂದಿನಲ್ಲೆ ನಮ್ಮ ಮನೆಗೆ ಬಂದ ಜಾ಼ಹಿದಾ, ಮತ್ತು ನಮ್ಮ ಭೂಮಿ ರಂಗಶಾಲೆಯ ವಿದ್ಯಾರ್ಥಿಗಳಾದ ಶೃತಿ, ನವೀನ್ ಇವರುಗಳ ಬದುಕಿನಲ್ಲಾದ ಬಹು ದೊಡ್ಡ ಪಲ್ಲಟವನ್ನು ಕುರಿತು ಹೇಳುತ್ತಿದ್ದೆ… + +ಚಂದ್ರು ರಂಗಭೂಮಿಯಲ್ಲಿ ಉನ್ನತ ಶಿಕ್ಷಣ ಪಡೆದು ಜಪಾನ್, ಜರ್ಮನಿ, ಇಂಡೋನೇಷ್ಯ ಮುಂತಾದ ದೇಶಗಳಲ್ಲಿ ಪ್ರದರ್ಶನ ನೀಡುತ್ತಾ ಅಂತರಾಷ್ಟ್ರೀಯ ರಂಗಭೂಮಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಲಕ್ಷ್ಮಣ್ ಸಿಂಗಪೂರ್‌ನ ಅಂತರಾಷ್ಟ್ರೀಯ ವಿದ್ಯಾಲಯದಲ್ಲಿ ರಂಗಭೂಮಿಯ ಉನ್ನತ ಶಿಕ್ಷಣ ಪಡೆದು ಬೇರೆ ಬೇರೆ ದೇಶಗಳ ನಟನಟಿಯರ, ನಿರ್ದೇಶಕರ ತಂಡದೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಜಾ಼ಹಿದಾ ರಂಗಭೂಮಿ ಹಾಗು ಸಮಾಜಕಾರ್ಯಗಳಲ್ಲಿ ಉನ್ನತ ಶಿಕ್ಷಣ ಪಡೆದು ‘ಜೈಲಿನಲ್ಲಿರುವ ಖೈದಿಗಳ ಮನ ಪರಿವರ್ತನೆಯಲ್ಲಿ ರಂಗಭೂಮಿಯ ಪಾತ್ರ’ ಈ ಕುರಿತು ‘ಪಿಹೆಚ್‌ಇಡಿ’ ಅಧ್ಯಯನ ಮುಗಿಸಿದ್ದಾರೆ. ಮಾವಿನತೋಪಿನ ಜವಾರಿ ಹುಡುಗಿ ಶೃತಿ ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ’ ದಲ್ಲಿ ತನ್ನ ಅಧ್ಯಯನ ಮುಂದುವರೆಸಿದ್ದಾರೆ. ಇಂಗ್ಲೀಷ್ ಭಾಷೆಯನ್ನು ದಕ್ಕಿಸಿಕೊಳ್ಳಲಾರದೆ ಕಾಲೇಜು ಓದನ್ನು ಅರ್ಧಕ್ಕೆ ನಿಲ್ಲಿಸಿ ನೇಕಾರಿಕೆ ಮಾಡಿಕೊಂಡು ಮನೆಮನೆಗೆ ದಿನಪತ್ರಿಕೆ ಹಾಕುತ್ತಿದ್ದ ನವೀನ್ ಈಗ ತುಮಕೂರು ವಿಶ್ವ ವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕೌಶಲ್ಯಾಧಾರಿತ ತಳ ಸಮುದಾಯಗಳಿಂದ ಬಂದ ಈ ಎಲ್ಲರಿಗೂ ರಂಗಭೂಮಿಯ ಸಂಪರ್ಕದಿಂದಾದ ಅವರ ಬದುಕಿನ ‘ಟರ್ನಿಂಗ್ ಪಾಯಿಂಟ್’ ಬಗೆಗೆ ಹೆಮ್ಮೆ ಇದೆ ಎಂದು ಹೇಳುತ್ತಿದ್ದೆ. + + + +ಈ ಎಲ್ಲರ ಹಿನ್ನೆಲೆ ಮತ್ತು ಬೆಳವಣಿಗೆಗಳನ್ನು ಕೇಳಿದ ಆರ್ಯಕನಿಗೆ ಸಂತೋಷ ಮತ್ತು ಆಶ್ಚರ್ಯಗಳೆರಡೂ ಒಟ್ಟಿಗೆ ಆದವು. ಆರ್ಥಿಕವಾಗಿ ಬೆಳೆಯುತ್ತಾ ದೇಶ, ವಿದೇಶಗಳಲ್ಲಿ ಪ್ರದರ್ಶನ ನೀಡುತ್ತಾ ಅಧ್ಯಯನದಲ್ಲಿ ಇರುವ ಇವರುಗಳು ನಿಮ್ಮೊಂದಿಗೆ ಮೊದಲಿದ್ದ ಬಾಂಧವ್ಯದಲ್ಲಿಯೇ ಇದ್ದಾರೆಯೇ? ಎಂದು ಪ್ರಶ್ನಿಸಿದರು. + +ರಂಗಭೂಮಿಯಲ್ಲಿ ತೊಡಗಿಕೊಂಡವರ ಬದುಕು ಅನಿಶ್ಚಿತತೆಯಿಂದ ಕೂಡಿರುತ್ತದೆ. ಸೃಜನಶೀಲವಾಗಿರಲು ನಾವು ಆಯ್ಕೆ ಮಾಡಿಕೊಂಡ ಬದುಕು ಇದು. ನಮ್ಮ ಸ್ಥಿತಿಗಳೆಲ್ಲವೂ ನಾಟಕದಲ್ಲಿನ ಸನ್ನಿವೇಶಗಳಂತೆ ಬದಲಾಗಬಹುದು. ಈ ಅರಿವೂ ಕೂಡ ನಮಗೆ ಇರುತ್ತದೆ. ಗಾಢವಾದ ಸ್ಮೃತಿಗಳಲ್ಲಿ ಬೇರುಬಿಟ್ಟಿರುವವರೆಗೂ ನಮಗೆ ಹಣ, ಅಂತಸ್ತು, ಪ್ರಭಾವಳಿಗಳಾವುವೂ ವಿಚಲಿತರನ್ನಾಗಿ ಮಾಡದು. ಅದರಲ್ಲೂ ಈ ಇಬ್ಬರು ಹುಡುಗರು ದಲಿತ ಕುಟುಂಬಗಳಲ್ಲಿನ ಬಡತನ, ಶೋಷಣೆ, ತಾರತಮ್ಯ, ಅವಮಾನಗಳ ನೋವುಂಡು ಬೆಳೆದವರು. ಇವರ ಈ ಗಾಢವಾದ ಸ್ಮೃತಿಗಳೇ ಇವರನ್ನು ಅಹಂನಿಂದ ರಕ್ಷಿಸಬಲ್ಲದು ಎಂಬ ಭರವಸೆ ಇದೆ ನನಗೆ ಎಂದು ಹೇಳಿದೆ. ಅಷ್ಟಲ್ಲದೆ ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು. ಹೀಗೆ ಜೀರ್ಣಿಸಿಕೊಳ್ಳಲು ವಿಫಲವಾಗಿ ಭ್ರಷ್ಟರಾದ ಹಲವು ಅಧಿಕಾರಿಗಳನ್ನು, ರಾಜಕಾರಣಿಗಳನ್ನೂ, ಹೋರಾಟಗಾರರನ್ನೂ ನಾವು ಚರಿತ್ರೆಯಲ್ಲಿ ಕಂಡಿದ್ದೇವೆ ಮತ್ತು ಈಗಲೂ ಕಾಣುತ್ತಿದ್ದೇವೆ ಎಂದು ಹೇಳಿದೆ. + +ಹಾಗಾದರೆ; ನನ್ನ ಬಗೆಗೆ ನಿಮ್ಮ ಅಭಿಪ್ರಾಯವೇನು? ಎಂದು ಕೇಳಿದರು. ಈ ಪ್ರಶ್ನೆಯ ಸಂಭವನೀಯತೆಯನ್ನು ಊಹಿಸಿದ್ದ ನಾನು ‘ಇತ್ತೀಚಿನ ಏಳೆಂಟು ವರ್ಷಗಳಲ್ಲಿ ನೀವು ಆರ್ಥಿಕವಾಗಿಯೂ, ಸಾಮಾಜಿಕವಾಗಿಯೂ ಮತ್ತು ರಾಜಕೀಯ ಅಧಿಕಾರದಲ್ಲಿಯೂ ಸಾಕಷ್ಟು ಬೆಳೆದಿದ್ದೀರಿ. ಆದರೆ ನನಗೆಲ್ಲೂ ನಿಮ್ಮೊಳಗೆ ಆ ಭಾವ ಕಂಡಿಲ್ಲ; ಆದರೆ ಮುಂದೆ ಒದಗಿ ಬರಬಹುದಾದ ಹಣ, ಪ್ರತಿಷ್ಠೆ, ಅಧಿಕಾರದ ವಿಷಯದಲ್ಲಿ ಗೊತ್ತಿಲ್ಲ’ ಎಂದು ಹೇಳಿದೆ. + +ಪ್ರಿಯ ಭೂಮಿ; ನಮ್ಮ ನಾಟಕದ ಆದರ್ಶ ನಾಯಕ ‘ಆರ್ಯಕ’ ರಾಜನಾದ ಮೇಲೆ ಮುಂದೇನು ಆಗುತ್ತಾನೆ ಎಂದು ನಾಟಕದಲ್ಲಿ ಇಲ್ಲ. ಆದರೂ ಅಂದು ನಾನು ಆರ್ಯಕನಿಗೆ ಹೇಳಬಹುದಾಗಿದ್ದ ಕೆಲವು ವಿಷಯಗಳನ್ನು ನಿನ್ನೊಂದಿಗೆ ಹಂಚಿಕೊಳ್ಳಲು ಪ್ರಯತ್ನಿಸುತ್ತೇನೆ. + +ಅಧಿಕಾರದ ಬಯಕೆಯ ಭಾಗವಾಗಿ ರೂಪುಗೊಂಡ ಮಾನವೀಯ ಕಾಳಜಿಗಳು ದುರ್ಬಲವಾಗಿರುತ್ತವೆ. ಅವು ಮೇಲ್ಪದರದಲ್ಲಿ ತೆಳುವಾಗಿದ್ದು ದೀರ್ಘಕಾಲ ಬಾಳುವುದಿಲ್ಲ. ಆತ್ಮಶೋಧದ, ಆತ್ಮವಿಕಾಸದ ಹುಡುಕಾಟದಲ್ಲಿ ಕಂಡುಕೊಂಡ ಮಾನವೀಯ ಕಾಳಜಿಗಳು ನಾವು ಕಂಡುಕೊಂಡಷ್ಟೂ ವಿಸ್ತರಿಸುತ್ತಲೇ ಇರುತ್ತದೆ. ಮಾನವೀಯ ಕಾಳಜಿಗಳ ತೀವ್ರತೆಯು ಕ್ರಿಯೆಯಾಗುವ ಅವಕಾಶವಾಗುವಲ್ಲಿ ಮಾತ್ರ ಅಧಿಕಾರದ ಹಂಬಲ ಇರಬೇಕು. ಈ ಕಾಳಜಿಗಳು ನಮ್ಮ ನಡೆ ನುಡಿಗಳಲ್ಲಿ ವ್ಯಕ್ತವಾಗುತ್ತಿರುವವರೆಗೂ ಅಧಿಕಾರ, ಹಣ, ಪ್ರಭಾವಳಿಗಳು ನಮಗೆ ಸಮುದಾಯದ ಶಕ್ತಿಯಾಗಿ ಒದಗಿಬರುತ್ತದೆ. ಹೀಗೆ ಬಂದದ್ದನ್ನು ಸಮುದಾಯಕ್ಕೆ ಮರಳಿಸುವ ಮಾರ್ಗವನ್ನು ಕಂಡುಕೊಳ್ಳಬೇಕು. ಇದೊಂದು ನೈಸರ್ಗಿಕ ಪ್ರಕ್ರಿಯೆಯಂತಾಗಬೇಕು. ಮಣ್ಣಿನಿಂದ ಪಡೆದ ಎಲ್ಲವನ್ನೂ ಗಿಡಮರಗಳು ಮಣ್ಣಿಗೆ ಮರಳಿಸುವಂತೆ. + +ನನಗೆ ಇಲ್ಲಿ ನಮ್ಮ ನಾಟಕದಲ್ಲಿನ ಶರ್ವಿಲಕ ನೆನಪಾಗುತ್ತಿದ್ದಾನೆ. ಬ್ರಾಹ್ಮಣ ಕುಲದಲ್ಲಿ ಹುಟ್ಟಿದ ಇವನು ವೇಶ್ಯಾಗೃಹದಲ್ಲಿ ದಾಸೀವೃತ್ತಿಯಲ್ಲಿದ್ದ ಮದನಿಕೆಯಲ್ಲಿ ಅನುರಕ್ತನಾಗುತ್ತಾನೆ. ಅವಳನ್ನು ಆ ವೃತ್ತಿಯಿಂದ ಬಿಡಿಸಿಕೊಂಡು ಪತ್ನಿಯಾಗಿ ಸ್ವೀಕರಿಸುವ ಹಂಬಲದಲ್ಲಿ ಕಳ್ಳತನದಂತಹ ಕೃತ್ಯದಲ್ಲಿ ತೊಡಗುತ್ತಾನೆ. ಅವನ ಪ್ರಿಯ ಗೆಳೆಯ ಗೊಲ್ಲ ಆರ್ಯಕನು ಸೆರೆಯಲ್ಲಿರುವ ವಿಷಯ ತಿಳಿದು ಮದನಿಕೆಯನ್ನು ವರಿಸಿದ ದಿನವೇ ಅವಳನ್ನು ತನ್ನ ಸ್ನೇಹಿತ ರೇಭಿಲನ ಮನೆಯಲ್ಲಿ ಬಿಟ್ಟು, ಗೆಳೆಯ ಆರ್ಯಕನನ್ನು ಸೆರೆಯಿಂದ ಬಿಡಿಸಿ ಪಾಲಕನ ದುರಾಡಳಿತವನ್ನು ಕೊನೆಗಾಣಿಸಲು ಜನರನ್ನು ಸಂಘಟಿಸಲು ಭೂಗತನಾಗುತ್ತಾನೆ. ಪಾಲಕನನ್ನು ಕೊಂದು ಆರ್ಯಕನೆಂಬ ಗೊಲ್ಲನೊಬ್ಬನನ್ನು ಉಜ್ಜಯಿನಿಯ ರಾಜನನ್ನಾಗಿಸುವ ಕ್ಷಿಪ್ರ ರಾಜಕೀಯ ಕ್ರಾಂತಿಯಲ್ಲಿ ಪ್ರಮುಖ ಪಾತ್ರವಹಿಸುತ್ತಾನೆ. + +(ಸತೀಶ್‌ ತಿಪಟೂರು) + +ನಾಟಕದ ಆರ್ಯಕನಂತೆಯೇ ಸಮಾಜದ ಪರಿಗಣನೆಯಲ್ಲಿ ಮೇಲ್ಜಾತಿ, ಮೇಲ್ವರ್ಗಗಳ ಪರಿಸರದಲ್ಲಿ ಹುಟ್ಟಿ ತಳ ಸಮುದಾಯಗಳ ನೋವು, ಶೋಷಣೆ, ಅಸಮಾನತೆಗಳನ್ನು ತಮ್ಮದೇ ಎಂದು ತೀವ್ರವಾಗಿ ಭಾವಿಸಿದವರು ನಮ್ಮ ನಡುವೆ ಇದ್ದಾರೆ. ಇವರು ಹಲವು ಶತಮಾನಗಳಿಂದ ಮೇಲ್ವರ್ಗಗಳು ಪ್ರಭುತ್ವದಲ್ಲಿನ ತಮ್ಮ ಅಸ್ಥಿತ್ವವನ್ನು ಕಾಪಾಡಿಕೊಳ್ಳಲು ರೂಪಿಸಿರುವ ಸಾಮಾಜಿಕ ರಚನೆಗಳನ್ನು, ಮತ್ತು ಅವು ಕಾಲಕಾಲಕ್ಕೆ ರೂಪಾಂತರಿಸಿಕೊಳ್ಳುವ ಶೋಷಣೆಯ ಮಾದರಿಗಳನ್ನು ಅರಿತು ಶೋಷಿತ ಸಮುದಾಯಗಳ ಪರವಾಗಿ ನಿಂತು ಹೋರಾಟಗಳನ್ನು ಮಾಡಿದವರು. ಇವರೆಲ್ಲರೂ ಸಮುದಾಯಗಳ ನೋವು-ನಲಿವುಗಳಲ್ಲಿ ಬೆರೆತು ಮಾನವೀಯ ಕಾಳಜಿಗಳನ್ನು ವಿಸ್ತರಿಸುತ್ತಲೇ ತಮ್ಮ ಗುರುತುಗಳನ್ನು ಕಳಚಿಕೊಂಡು ಅಂತಃಸತ್ವವನ್ನು ಪಡೆದವರು. + +ಅಂತಃಸತ್ವವನ್ನು ಪಡೆದುಕೊಳ್ಳುವುದು ಬದುಕಿನುದ್ದಕ್ಕೂ ಇರುವ ಪ್ರಕ್ರಿಯೆ. ಹೀಗೆ ಸಮುದಾಯ ಕಾಳಜಿಗಳ ಚಳುವಳಿ, ಹೋರಾಟ, ತಾತ್ವಿಕ ಜಿಜ್ಞಾಸೆ, ಸಂಘಟನೆ, ಕಲೆ, ರಾಜಕೀಯ ಮುಂತಾಗಿ ಸಮಾಜ ಸುಧಾರಣೆಯ ಕನಸುಗಳನ್ನು ಹೊತ್ತ ಅನೇಕರು ಕಾಲಕಾಲಕ್ಕೆ ಬರುತ್ತಲೇ ಇರುತ್ತಾರೆ. ಇವರಲ್ಲಿ ಕೆಲವರು ಬದುಕು ಒಡ್ಡುವ ಪ್ರಲೋಭನೆಗಳಿಗೆ ತಮ್ಮ ಅಂತಸತ್ವವನ್ನು ಬಿಟ್ಟುಕೊಟ್ಟವರು. ಇನ್ನೂ ಕೆಲವರು ತಮ್ಮ ಹೋರಾಟಗಳಿಂದ ಪಡೆದ ಅಧಿಕಾರ, ಪ್ರತಿಷ್ಠೆ, ಪ್ರಭಾವಳಿಗಳಲ್ಲಿ ಮತ್ತು ಅನಾಯಾಸವಾಗಿ ಹರಿದು ಬರುವ ಹಣಕ್ಕೆ ತಮ್ಮ ಕಾಳಜಿಗಳನ್ನು ಮಾರಿಕೊಂಡವರು. ಮತ್ತೆ ಕೆಲವರು ತಮ್ಮ ಚಳುವಳಿ ಹೋರಾಟಗಳು ಕಾಲದಿಂದ ಕಾಲಕ್ಕೆ ಪಡೆದುಕೊಳ್ಳಬೇಕಾದ ದೂರ ದೃಷ್ಠಿ, ಆಯಾಮಗಳ ಕೊರತೆಯಲ್ಲಿ ಹಿಂದುಳಿದು ತಮ್ಮ ನಡೆನುಡಿಗಳಲ್ಲಿ ಏಕತಾನತೆ ಅನುಭವಿಸುತ್ತಿರುವವರು. ಈ ಎಲ್ಲವನ್ನೂ ದಾಟಿಕೊಳ್ಳಬಲ್ಲ ಅಂತಃಸತ್ವವುಳ್ಳ ನಾಯಕರು ಮಾತ್ರ ಅಧಿಕಾರದ ಸಂಭವನೀಯತೆಯು ಹತ್ತಿರಾದಂತೆಲ್ಲಾ ತಮ್ಮ ನಡೆನುಡಿಗಳಲ್ಲಿ (ಧ್ವನಿ, ದೇಹ, ಚಹರೆಗಳ ಭಾಷೆಗಳಲ್ಲಿ) ಆಗಬಹುದಾದ ಅಸಹಜ ಬದಲಾವಣೆಗಳ ಬಗೆಗೆ ಎಚ್ಚರವಹಿಸಬಲ್ಲರು ಮತ್ತು ಆಯಾ ಕಾಲದ ಮಾನವೀಯ ಕಾಳಜಿಗಳನ್ನು ಧಾರಣೆ ಮಾಡಿಕೊಳ್ಳುತ್ತಾ ತಮಗೆ ಒದಗಿ ಬಂದ ಅಧಿಕಾರದ ಫಲವನ್ನು ಸಮುದಾಯಕ್ಕೆ ಮರಳಿಸಬಲ್ಲರು. + +ಇಂತಹ ಸನ್ನಿವೇಶಗಳಲೆಲ್ಲಾ ನಾಟಕದಲ್ಲಿನ ಪಾತ್ರಗಳು ನಮ್ಮ ಬದುಕಿನ ಭಾಗವಾಗಿ ಅರಳಿಕೊಳ್ಳುವ ಬಗೆ ಮತ್ತು ಬದುಕಿನಲ್ಲಿ ಕಂಡುಕೊಂಡ ಸತ್ಯಗಳು ನಾಟಕದಲ್ಲಿನ ಪಾತ್ರ ಪ್ರಜ್ಞೆಯನ್ನು ಅರಿಯುವಲ್ಲಿ ಸಹಕರಿಸುವ ಬಗೆ; ಈ ಬದುಕು ನಾಟಕಗಳೆರಡು ಒಂದಕ್ಕೊಂದು ಕನ್ನಡಿಯಾಗುವ ಈ ಪ್ರಕ್ರಿಯೆಯ ಬಗೆಯೇ ಸೋಜಿಗವೆನಿಸುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_69.txt b/Kenda Sampige/article_69.txt new file mode 100644 index 0000000000000000000000000000000000000000..b843a3eb536eae75484f2a5caeaf136a5574fca1 --- /dev/null +++ b/Kenda Sampige/article_69.txt @@ -0,0 +1,17 @@ +ನಮ್ಮ ನಾಡಿನ ಮುಂಚೂಣಿಯಲ್ಲಿರುವ ಲೇಖಕಿಯರಲ್ಲಿ ಒಬ್ಬರಾದ ‘ನಂದಿನಿ ಹೆದ್ದುರ್ಗ’ ರ ಎಲ್ಲರೂ ಮೆಚ್ಚುವಂತಿರುವ ಕವನ ಸಂಕಲನ ‘ಒಂದು ಆದಿಮ ಪ್ರೇಮ’. ಪುಸ್ತಕದ ಹೆಸರೇ ಇಷ್ಟು ಚಂದಿರುವಾಗ ಇನ್ನು ಕವಿತೆಗಳ ಅಂದ ಹೇಗಿರಬೇಡ? ಒಂದಕ್ಕಿಂತ ಒಂದು ಗುಣಮಟ್ಟಕ್ಕೆ ಪೈಪೋಟಿ ಕೊಡುವಂತಹ ಪ್ರೇಮ, ವಿರಹ, ನೋವು, ನಲಿವು, ಕುಟುಂಬ ಎಲ್ಲವೂ ಮಿಳಿತಗೊಂಡ ಕವಿತೆಗಳ ಗುಚ್ಛ ಇಲ್ಲಿದೆ. ‘ಅಮ್ಮನಾಗುವುದೆಂದರೆ ಕೆಲವು ನೋವುಗಳನ್ನು ಆಕಾಶಕ್ಕೆ ಹಾರಿ ಬಿಡಬೇಕು; ಕೆಲವು ಮಾತುಗಳನ್ನು ಬರಡು ನೆಲದೊಳಗೆ ಆಳ ಗುಳಿ ತೆಗೆದು ಮೊಳೆಯದಂತೆ ಹೂಳಿ ಬಿಡಬೇಕು”. + +(ನಂದಿನಿ ಹೆದ್ದುರ್ಗ) + +ಎಷ್ಟು ಜವಾಬ್ದಾರಿಯುತ, ಅನುಭವಯುಕ್ತ ಸಾಲುಗಳಿವು. ಪ್ರತಿ ಅಮ್ಮಂದಿರ ಎದೆಯೊಳಗೆ ಇಳಿಯುತ್ತ ಮಾಗಿದ ಈ ಅಕ್ಷರಗಳ ಶಕ್ತತೆಯಿಂದ, ನಮ್ಮ ಭಾವನೆಗಳಲ್ಲಿಯು ಏರಿಳಿತ ಉಂಟಾಗುವುದು ಈ ಕವಿತೆಯ ಸಾರ್ಥಕತೆ. ಮೊದಲು ಅಮ್ಮ ಆಮೇಲೆ ಮಗಳೋ, ಗೆಳತಿಯೋ, ಹೆಂಡತಿಯೋ ಏನೋ ಒಂದು. ನಮ್ಮೊಳಗೆ, ಮನೆಯೊಳಗೆ,ಮನದೊಳಗೆ, ಮತ್ತು ಸಮಾಜದೊಳಗೆ ಏನೆಲ್ಲಾ ಘಟನಾವಳಿಗಳು ನಡೆಯುತ್ತ ಹೋಗುತ್ತದೋ ಅದರ ಲೋಕ ಗ್ರಹಿಕೆಗಳನ್ನು ಎಷ್ಟು ಕರಾರುವಕ್ಕಾಗಿ ಅಂದಾಜಿಸುವ ಕಲೆ ಕವಯತ್ರಿಯ ಮನೋಬಲಕ್ಕೆ ಇದೆ ಎಂಬುದು ಇಲ್ಲಿನ ಕವಿತೆಗಳನ್ನು ಓದುವಾಗ ನಮಗೆ ಅಚ್ಚರಿಯಾಗುತ್ತದೆ. ಕವಿಯಾದವನು ಅಥವಾ ಅವಳು ತುಂಬಾ ಸೂಕ್ಷ್ಮ ಎಂಬುದು ಬಲ್ಲವರು ಹೇಳುವಂಥ ಮಾತು. ಆದರಿಲ್ಲಿ ಅತಿ ಸೂಕ್ಷಾತಿ ಸೂಕ್ಷ್ಮ, ಇದಕ್ಕಿಂತ ಸೂಕ್ಷ್ಮ ಗ್ರಹಿಕೆ ಇನ್ನಿಲ್ಲ ಎನ್ನಬಹುದೇನೋ ಎನ್ನುವಷ್ಟು ಸಂವೇದನೆ ಇಲ್ಲಿನ ಕವಿತೆಗಳಿಗಿದೆ. “ನಮ್ಮ ನಡುವಿನ ಉದ್ದಾನುದ್ದ ಕದನ ಮುಗಿದ ಮೇಲೆ/ ಇಬ್ಬರ ಹೃದಯಗಳ ಬಳಸಿ ಒಂದು ಬಳ್ಳಿ ಬೆಳೆಯುತ್ತದೆ / ಘಳಿಗೆಯಲ್ಲಿ ಮೊಳ ಮುಂದಕ್ಕೆ ಬೆಳೆಯುವ ರಾಕ್ಷಸ ಬಳ್ಳಿ. ಇಬ್ಬರು ಕೂಡಿಯೇ ಬೆಳೆದದ್ದು, ತುಸು ಹೊತ್ತಿಗೆ ಮುಂಚೆ ಗೊಬ್ಬರ ಹಾಕಿದ್ದು / ಹಬ್ಬಿ ಬೆಳೆಯುತ್ತಿರುವ ವೇಗಕ್ಕೆ ಉಬ್ಬಸ ನಮಗೆ”. ನಮ್ಮೊಳಗಿನ ಸಿಟ್ಟನ್ನು ರಾಕ್ಷಸತನಕ್ಕೆ ಹೋಲಿಸಿ ಆ ಸಿಟ್ಟಿನ ಬಳ್ಳಿಯಲ್ಲಿ ನಾವೇ ಸಿಲುಕಿ ವಿಲವಿಲನೆ ಒದ್ದಾಡುವ ವಿಲಕ್ಷಣ ಸ್ಥಿತಿಯನ್ನು ವರ್ಣಿಸಿದ ರೀತಿ ಮನಮುಟ್ಟುವಂತಿದೆ ಇಲ್ಲಿ. + +ಕಾವ್ಯ ಸೃಷ್ಠಿಯಲ್ಲಿ ಮಾಗುತ್ತ ಸಾಗುವುದೇ ಕವಿತೆ ಉತ್ತಮವಾಗುತ್ತ ಹೋಗುವುದರ ಲಕ್ಷಣ. ಅದು ಸಿದ್ಧಿಸಿದ್ದು ಇಲ್ಲಿಯೇ ನಮಗೆ ಸಂಕಲನದುದ್ದಕ್ಕೂ ತೋಚಿದಂತಾಗುತ್ತದೆ. ಬರೆದ ಕಾವ್ಯವೆಂಬ ಹೊರೆಯನ್ನು ಮೆಲ್ಲನೆ ಇಳಿಬಿಟ್ಟು ಹಗುರಾಗಿ, ಮತ್ತೆ ಹೊಚ್ಚ ಹೊಸ ಬಹುದೊಡ್ಡ ಹೊರೆ ಹೊತ್ತು ಮತ್ತೆ ಹಗುರಾಗುತ್ತಾರೆ ಎಂಬಂತೆ ನಮಗಿಲ್ಲಿ ಭಾಸವಾಗುತ್ತದೆ. ಪ್ರೇಮವೆನುದರ ಕುರಿತು ಹಲವು ರೀತಿಯ ಭಿನ್ನ ಭಿನ್ನ ವ್ಯಾಖ್ಯಾನಗಳು ನಮ್ಮನ್ನು ದಂಗುಬಡಿಸುತ್ತವೆ. ಚಹಾ ಮಾಡುವುದೆಂದರೆ, ಲವಂಗದ ಗಿಡ, ಉತ್ಪಾತ ಕವಿತೆಗಳ ವ್ಯಾಖ್ಯಾನಗಳು, ಕವಿತೆ ಹೀಗೂ ಬರಿಯಬಹುದೆ ಎನ್ನುವಷ್ಟು ಆಕರ್ಷಿಸುತ್ತವೆ. ಪ್ರತಿಯೊಂದು ಸಾಲುಗಳು ಮೌಲ್ಯಯುತವಾಗಿದೆ. “ಧಿಕ್ಕರಿಸಿದಾಗಲೆಲ್ಲ ಸತ್ಕರಿಸಬೇಕೆನ್ನುವುದನ್ನು ಬೋಧಿಸಲಾಗಿದೆ ನಮಗೆ / ಬಡ ಪ್ರೇಯಸಿಯರ ಎದೆ ಕನಸುಗಳ ಒಯ್ದು ಆತ್ಮದ ಅವಸರಿಸುವಿಕೆ ಎಂದೆಲ್ಲ ಪದವಾಡಿ / ಕವಿತೆ ಶೋಷಿಸುವುದನ್ನು ನಾನೊಳ್ಳೆ / ಕ್ಷಮಿಸಿ”. ದೃಷ್ಠಿಯಂತೆ ಸೃಷ್ಠಿ ಎಂಬುದು ಇವರ ಕಾವ್ಯ ಧರ್ಮಕ್ಕೆ ಒಪ್ಪುವಂತಹ ಮಾತು. + +‌ಜಗತ್ತನ್ನು ಮತ್ತು ತನ್ನೊಳಗನ್ನು ತುಂಬಾ ಪ್ರೀತಿಸುವ ಕವಯತ್ರಿ ಇವರು ಎಂಬರಿವು ಕವಿತೆಗಳನ್ನು ಓದಿದಾಗ ನಮಗನಿಸುತ್ತದೆ. ಧಾವಂತದ ಬದುಕಿನ ಸದ್ಯದಲ್ಲಿ ಇದು ಎಲ್ಲರಿಗೂ ಬೇಕಾಗಿರುವಂತಹ ವಿಚಾರವು ಹೌದು. ಕವಯತ್ರಿ ನಂದಿನಿಯವರ ಮಾತಿನಂತೆ ‘ತಲೆಗೆ ಮಿಂದು ಒಣಗಿಸಿಕೊಳ್ಳುವ ಖುಷಿಗೆ ಕಟ್ಟೆಯ ಮೇಲೆ ಕಾಲು ನೀಡಿ ಕೂತರೆ ಹಳದಿ ಬಣ್ಣದ ಪುಟ್ಟ ಚಿಟ್ಟೆ ಸಲೀಸು ಬಂದು ಬೆರಳ ಮೇಲೆ ಕೂತಿದೆ. ಅದರ ಕೂದಲಿನಂತಹ ಪಾದಗಳು ಆಚೀಚೆ ಹರಿದರೆ ಮುಳು ಮುಳು ಪುಳಕ ನನಗೆ” ಹೀಗೆ ಸಾಗುವ ಅವರ ಕವಿತೆಯಂತಹ ಲಹರಿ ನಮಗೆಲ್ಲ ಅಚ್ಚರಿ. ಹೀಗೆ ಬದುಕಿನ ಸದ್ಯಕ್ಕೆ ಬೇಕೆನಿಸುವ ಕಾವ್ಯ ಜರೂರತ್ತು ಇಲ್ಲಿನ ಪದ್ಯಗಳಲ್ಲಿ ಇದೆ. ತುಂಬು ಆತ್ಮ ವಿಶ್ವಾಸದಿಂದ, ನಿರ್ಭಿಡೆಯಿಂದ ಬರೆದ ಸಾಲುಗಳು ಅಕ್ಷರಶಃ ಬದುಕಿನ ಹಲವಾರು ಬಣ್ಣಗಳನ್ನು ತಿರುವುಗಳನ್ನು ನಮಗೆ ಕಾಣಿಸುತ್ತದೆ. ಒಲವೆನ್ನುವುದನ್ನು ಮಾಸಲು ಬಿಡಬಾರದು ಎಂಬಂತರಂಗದ ಸತ್ಯ, ಪ್ರತಿಯೊಬ್ಬರ ಜೀವನೋತ್ಸಾಹಕೆ ಹಿಡಿದ ಕನ್ನಡಿಯಂತಿದೆ. ಇಲ್ಲಿರುವ ಪ್ರತಿಮೆಗಳು ಓದುಗನ ಮೇಲೆ ಗಾಢ ಪರಿಣಾಮ ಬೀರುವಂತಹವು. ಇಲ್ಲಿನ ಕವಿತೆಗಳು ಅನುಭವಗಳೋ, ಕಲ್ಪನೆಗಳೋ… ಏನೇ ಆದರೂ ಅದು ಸಾಮಾನ್ಯ ಮನುಷ್ಯನಲ್ಲಿ ಘಟಿಸಬಹುದಾದ ವಿಚಾರವೇ ಆಗಿದೆ. ಆದರೆ ಅದನ್ನು ಗಹನವಾಗಿ ಕವಿತೆಯಲ್ಲಿ ಹಿಡಿದಿಟ್ಟ ಗಟ್ಟಿತನದ ಹಿರಿಮೆ ಮಾತ್ರ ಕವಯತ್ರಿಗೆ ಸಲ್ಲಬೇಕು. “ಗಾಜಿನ ಮನೆಯಲ್ಲಿ ಗೋಡೆ ಮಾತ್ರ ಒಡೆಯುವುದಿಲ್ಲ ಗೆಳತಿ/ ಲೋಕಕ್ಕೆ ಒಳಗಿನ ತೂತು ಕಾಣಿಸುತ್ತದೆ. ಕಟ್ಟಳೆಗಳ ಒಟ್ಟಿಲಿಂದ ಒಂದೊಂದೇ ಕಟ್ಟಿಗೆ ತೆಗೆದು ಚಪ್ಪರ ಮಾಡಬಹುದು / ಒಂದು ತೊಂಡೆ ಬಳ್ಳಿಯನೂರಿದರೆ ಪದಾರ್ಥ ಮಾಡಬಹುದು.” + +ಹೀಗೆ ಅಸಂಗತ ಸಂಗತಿಗಳ ಹೂರಣದೊಳಗೆ ಹುದುಗಿದ ಇಲ್ಲಿನ ಕಾವ್ಯ ಲೋಕ ಸಮಾಜಮುಖಿಯು ಆಗಿದೆ. ಹೆಣ್ಣಿನ ಜೀವನದ ಸ್ವರೂಪಗಳು ಗಂಡಿಗಿಂತ ಎಷ್ಟೋ ಭಿನ್ನ. ಈ ಭಿನ್ನತೆಯ ಚುಂಗನ್ನು ಹಿಡಿದು ಅಲ್ಲಾಡಿಸಿದ ಕವಿತೆಗಳು ಮಾರ್ಮಿಕವಾಗಿ ನಮ್ಮನ್ನೆಲ್ಲ ಕಾಡುತ್ತವೆ. ಕಳಚಿಕೊಳ್ಳುತ್ತಲೆ ಹೋಗುತ್ತದೆ ಹೀಗೆ / ಒಂದೊಂದೇ ಒಂದೊಂದೇ ಬಂಧ/ ಬಿಡಿಸಲಾಗದ್ದು ಎನ್ನುವಾಗಲೇ ಬಿಟ್ಟು ಹೊರಡುತ್ತದೆ. + + + +ಬದುಕಿನ ಕವಲುಗಳ ಪರಿಚಯಾತ್ಮಕ ಸಾಲುಗಳೊಂದಿಗೆ ಹದವಾದ ಭಾವ ಭಾಷೆಯ ಇಲ್ಲಿನ ವಿನೂತನ ಕವಿತೆಗಳು ಪ್ರತಿಯೊಬ್ಬರನ್ನೂ ಸೆಳೆಯುವುದರಲ್ಲು ಸಂಶಯವೇ ಇಲ್ಲ. ಜೀವನದ ಒಳನೋಟಗಳಿಗೆ ಅರ್ಥ ನೀಡುವಂತಹ ಇಲ್ಲಿನ ಸಾಲುಗಳೆಲ್ಲವು ಸಾಹಿತ್ಯದ ಪಾರದರ್ಶಕತೆಯನ್ನು ನಮಗೆ ತೋರಿಸುತ್ತದೆ. ಇದು ಬರಹಗಾರ್ತಿಯ ಸಾರ್ಥಕತೆ. ‘ಒಂದು ಆದಿಮ ಪ್ರೇಮ’ ಕವನ ಸಂಕಲನ ಓದಿದ ಮೇಲೆ ಯಾಕೋ ‘ಕೊನೆಗೆ ಉಳಿಯುವುದು ಕಾವ್ಯವೇ’ ಎಂಬ ಎಲ್ಲೋ ಓದಿದ ಹೇಳಿಕೆಯೊಂದು ತುಂಬಾ ನೆನಪಾಗಿ ಕಾಡುತಿದೆ. + +ಸಂಗೀತಾ ರವಿರಾಜ್ ಅವರು ಮೂಲತಃ ಕೊಡಗಿನವರು. ಎಂ.ಎ ಅರ್ಥಶಾಸ್ತ್ರ ಬಿ.ಇಡಿ ಪದವೀಧರರಾಗಿದ್ದು, ಹಲವು ಪತ್ರಿಕೆಗಳಲ್ಲಿ ಇವರ ಕವಿತೆಗಳು, ಪ್ರಬಂಧಗಳು ಮತ್ತು ವಿಮರ್ಶಾ ಲೇಖನಗಳು ಪ್ರಕಟಗೊಂಡಿವೆ. ರಾಜ್ಯ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಸೇವೆ ಸಲ್ಲಿಸಿರುವ ಸಂಗೀತಾ ಅವರು ‘ಚೆಂಬು ಸಾಹಿತ್ಯ ವೇದಿಕೆ’ ಯನ್ನು ಹುಟ್ಟುಹಾಕಿದ್ದಾರೆ. ಕಪ್ಪು ಹುಡುಗಿ(ಕವನ ಸಂಕಲನ), ಕಲ್ಯಾಣ ಸ್ವಾಮಿ(ಕಾದಂಬರಿ), ನಿರುತ್ತರ(ಕವನ ಸಂಕಲನ) ಇವರ ಪ್ರಕಟಿತ ಕೃತಿಗಳು. \ No newline at end of file diff --git a/Kenda Sampige/article_7.txt b/Kenda Sampige/article_7.txt new file mode 100644 index 0000000000000000000000000000000000000000..11a56de63646fc5b1de16535f2cef4232c302e56 --- /dev/null +++ b/Kenda Sampige/article_7.txt @@ -0,0 +1,18 @@ +ಮಾನವ ಮೂಳೆ ಮಾಂಸದ ತಡಿಕೆತುಂಬಿದೆ ಒಳಗೆ ಕಾಮಾದಿ ಬಯಕೆ + +ಮನುಷ್ಯನ ದೇಹವನ್ನು ಮೂಳೆ ಮಾಂಸಗಳು ಕಟ್ಟಿದರೆ, ಆಕಾರವನ್ನು ನೀಡುವುದು ಮನಸ್ಸೆಂಬ ಮಾಯೆ. ಸುತ್ತಲೂ ಬಣ್ಣ ಹಚ್ಚಿಕೊಂಡು ಮಿನುಗುತ್ತಿದ್ದರೂ, ಒಳಗೆ ತುಕ್ಕು ಆವರಿಸಿದ್ದರೆ, ಕುಸಿತ ನಿಶ್ಚಿತ. ದೂರದರ್ಶನ ಮಾತು ಕೇಳುವುದು, ಕಿರು ಇಂಚುಗಳ ರಿಮೋಟ್‌ನದ್ದು. ಅದು ಕೆಟ್ಟಾಗ, ದೂರದರ್ಶನವು ಯಾರ ಹಿಡಿತಕ್ಕೂ ಲಭಿಸದೆ ಅರಚುತ್ತಲೇ ಇರುತ್ತದೆ. ದೇಹವೂ ಅಷ್ಟೇ; ಮನಸ್ಸು ಮರ್ಕಟವಾದಾಗ ಅದು ದಾರಿ ತಪ್ಪುತ್ತದೆ. ಕ್ರೌರ್ಯ, ದುರಹಂಕಾರ, ಕೆಟ್ಟತನ ಇತ್ಯಾದಿ ಅವಗುಣಗಳು ಮುತ್ತಿಕೊಳ್ಳುತ್ತಾ ಸಾಗುತ್ತದೆ. ಹಳೆಯ ಬಸ್ಸು ಎತ್ತರವ ಏರಲು ಏದುಸಿರು ಬಿಡುವಂತೆ, ಹಣ್ಣೊಂದು ಕೊಳೆಯುತ್ತಿದ್ದಂತೆಯೇ ಸುವಾಸನೆಯಿಂದ ದುರ್ವಾಸನೆಯತ್ತ ಪರಿವರ್ತನೆಯಾಗುವಂತೆ, ಗಂಟೆಗಳು ರದ್ದಿಯಾಗುತ್ತಿದ್ದಂತೆಯೇ ರುಚಿಕರ ತಿನಿಸುಗಳು ಕಳೆಗುಂದುವಂತೆಯೇ ಮನಸ್ಸು ಕೊಳೆಯ ಬಳಿದುಕೊಂಡು ಕಳೆದು ಹೋಗುತ್ತದೆ. ಇಂತಹ ಮನಸೊಂದರ ಭೀಕರ ಕ್ರೌರ್ಯಭರಿತ ಸಂಗತಿಗಳ ಅನಾವರಣವೇ ‘ಸೆಕ್ಟರ್ 36’. + +ಆತ ಪ್ರೇಮ್ ಸಿಂಗ್. ಸಿರಿವಂತ, ಸ್ಥಿತಿವಂತ ಬಸ್ಸಿಯ ಮನೆಯಲ್ಲಿ ಕೆಲಸದ ಆಳು. ‘ಕೌನ್ ಬನೇಗಾ ಕರೋಡ್ ಪತಿ’ ಅವನ ಮೆಚ್ಚಿನ ಕಾರ್ಯಕ್ರಮ. ಅಲ್ಲಿಗೆ ಬರುವ ಸ್ಪರ್ಧಿಗಳೆಲ್ಲ ಉತ್ತರಗಳನ್ನು ತಪ್ಪಾಗಿ ನೀಡುತ್ತಿರುವಾಗ ತಾನು ಮಾತ್ರ ಸರಿಯಾದ ಉತ್ತರವನ್ನು ನೀಡುತ್ತಾ, ಅಲ್ಲಿಗೆ ಸ್ಪರ್ಧಿಯಾಗಿ ಹೋಗುವ ಕನಸನ್ನು ಕಾಣುತ್ತಿದ್ದ. ಅನಂತರ ಊರಲ್ಲಿದ್ದ ತನ್ನ ಪತ್ನಿಯೊಂದಿಗೆ ಮಾತು ಹರಿಸಿ ನಿದ್ದೆಗೆ ಜಾರುತ್ತಿದ್ದ. ಇತ್ತ ಅವನಿದ್ದ ಪ್ರದೇಶ ಸೆಕ್ಟರ್ 36 ರ ಇನ್ಸ್ಪೆಕ್ಟರ್ ರಾಮ್ ಚರಣ್ ಪಾಂಡೆ, ಪರಮ ಅಪ್ರಾಮಾಣಿಕ. ಕಠಿಣ ವಾಸ್ತವದ ಮಾತಲ್ಲಿ ಮುಳುಗುವ ಮನುಷ್ಯ. ಸಿಹಿತಿನಿಸಿನ ಪೆಟ್ಟಿಗೆಯಲ್ಲಿ ಲಂಚದ ಹಣವನ್ನು ತರಿಸಿಕೊಳ್ಳುತ್ತಿದ್ದವನಾತ. ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇ? ಅಂತೆಯೇ ಅಲ್ಲಿನ ಜನರು. ಇತ್ತ ಸೆಕ್ಟರ್ 36 ರಲ್ಲಿ ಕೊಳಚೆ ನೀರು ಹರಿದು ಬರುವ ನಾಲೆಯಲ್ಲಿ ಮಾನವನ ದೇಹದ ಭಾಗಗಳು ದೊರಕಲು ಆರಂಭವಾಗುತ್ತದೆ. ಮಕ್ಕಳ ನಾಪತ್ತೆ ಪ್ರಕರಣ ಹೆಚ್ಚಾಗುತ್ತಲೇ ಸಾಗುತ್ತದೆ. ಆದರೆ ಪಾಂಡೆಯ ಅಮಾನುಷ ಉಪೇಕ್ಷೆ ಕಳೆದುಕೊಂಡವರ ನೋವು, ಆಕ್ರೋಶ ದ್ವಿಗುಣಗೊಳ್ಳಲು ಕಾರಣವಾಗುತಿತ್ತು. ಇತ್ತ ರಾಮ ನವಮಿಯಂದು ರಾವಣನ ದಹನ ಕಾರ್ಯಕ್ರಮ ಆಯೋಜನೆಯಾಗಿತ್ತು. ಅದರ ಅಂಗವಾಗಿ ನಡೆಯುವ ನಾಟಕದಲ್ಲಿ ಇನ್ಸ್‌ಪೆಕ್ಟರ್ ಪಾಂಡೆ ಹಾಗೂ ಆತನ ಕಾನ್‌ಸ್ಟೇಬಲ್‌ಗಳ ಪಾತ್ರವಿತ್ತು. ಇತ್ತ ಕಾರ್ಯಕ್ರಮ ನೋಡಲು ಆಗಮಿಸಿದ ಪಾಂಡೆಯ ಸಣ್ಣ ಮಗಳ ಅಪಹರಣ ಯತ್ನವಾಗುತ್ತದೆ. ಇದನ್ನು ಗಮನಿಸಿ, ಆ ಅಪಹರಣಕಾರನ ಹಿಂದೆ ಓಡುವ ಪಾಂಡೆಗೆ ಅವನನ್ನು ಹಿಡಿಯಲಾಗುವುದಿಲ್ಲ. ಆದರೆ ಮಗಳನ್ನು ಕಾಪಾಡುತ್ತಾನೆ. ಈ ಘಟನೆಯಿಂದ ನೊಂದ ಪತ್ನಿ ಪಾಂಡೆಗೆ ‘ನಮ್ಮ ಮಗಳನ್ನೇ ಕಾಪಾಡಲು ಸಾಧ್ಯವಾಗಲಿಲ್ಲ ಇನ್ನು ಊರನ್ನೇನು ಕಾಯುವುದು ನೀವು’ ಎಂದು ಚುಚ್ಚು ಮಾತುಗಳನ್ನಾಡುತ್ತಾಳೆ. ಈ ಮಾತುಗಳು ಪಾಂಡೆಗೆ ನಾಟುತ್ತವೆ. ನೇರವಾಗಿ ಸ್ಟೇಷನ್ನಿಗೆ ಬಂದು, ಕಾಣೆಯಾದ ಚುಂಕಿ ಎಂಬುವವಳ ಪತ್ತೆಗೆಂದು ಹೊರಡುತ್ತಾನೆ. ಹೀಗೆ ಆರಂಭವಾದ ಹೋರಾಟದಲ್ಲಿ ಲಭಿಸಿದ್ದು ಪ್ರೇಮ್ ಎಂಬ ಕ್ರೌರ್ಯವೇ ಮೈವೆತ್ತ ಮೃಗ, ಬಸ್ಸಿ ಎಂಬ ದೇಹದಾಹಿ ರಕ್ಕಸನ ಬಾಯಾರಿಕೆಗೆ ಸುಟ್ಟ ಅನಾಥ ಕನಸುಗಳು. ಹಾಗಾದರೆ ಆ ಕಾಣೆಯಾಗುವಿಕೆ, ಕೊಲೆಗಳಿಗೆ ಕಾರಣವೇನು? ಅಂತಹ ಭೀಕರತೆಯ ಅನಿವಾರ್ಯತೆಯೇನು? ಇವೆಲ್ಲವುಗಳ ಕಾರ್ಮೋಡಭರಿತ ಸಾದೃಶ್ಯವೇ ‘ಸೆಕ್ಟರ್ 36’. + + + +ಭಾರತೀಯ ಚಿತ್ರ ಇತಿಹಾಸದಲ್ಲಿ ಸೈಕೋ ಆಧಾರಿತ ಕ್ರೈಮ್ ಥ್ರಿಲ್ಲರ್‌ಗಳು ಬಹು ಸಂಖ್ಯೆಯಲ್ಲಿ ಬಂದಿವೆ. ಅವುಗಳಲ್ಲಿ ಅಗ್ರಗಣ್ಯವಾಗಿ ನಿಲ್ಲುವುದು ‘ರಾಚಸನ್’. ಇಲ್ಲಿ ತನ್ನ ಸಣ್ಣ ವಯಸ್ಸಿನಲ್ಲಿ ಹುಡುಗಿಯೊಬ್ಬಳಿಂದ ಅದ ದೈಹಿಕಾಧಾರಿತ ಅವಮಾನ, ಆತನನ್ನು ಮಾನಸಿಕ ರೋಗಿಯನ್ನಾಗಿಸಿ ಆತ ಸೈಕೋ ಆಗಿ ಬದಲಾಗಲು ಕಾರಣಕರ್ತವಾಗುತ್ತದೆ. ಮುಂದೆ ಆತ ಹಲವು ಹುಡುಗಿಯರ ಅಪಹರಣ ಮತ್ತು ಕೊಲೆಗಯ್ಯುತ್ತಾನೆ. ಇದರ ತನಿಖೆಯ ಕಥೆಯೇ ‘ರಾಚಸನ್’. ಅಷ್ಟು, ಕುತೂಹಲ ಭರಿತ ಕಥೆಯಿಲ್ಲದಿದ್ದರೂ ಪರಮ ಭೀಬತ್ಸ್ಯ ಮತ್ತು ಭಯಾನಕ ಚಿತ್ರಕಥೆ ಮತ್ತು ದೃಶ್ಯಗಳ ಸಂಕಲನ ಸೆಕ್ಟರ್ 36 ರಲ್ಲಿದೆ. ಶೌಚಾಲಯದ ನೆಲದ ಮೇಲೆ ಹರಿವ ನೆತ್ತರು, ಅಲ್ಲಲ್ಲಿ ನಿಂತು ನಡೆವ ಕರಿ ನೀರಿನೊಳಗೆ ಅದ್ದಿದ ದೇಹದ ಭಾಗಗಳು, ಕತ್ತಿಯ ತಿವಿತಕ್ಕೆ ಸಿಲುಕಿ ಉಸಿರು ಚೆಲ್ಲಿದ ಮಾಂಸದ ಚೂರುಗಳು ಎಲ್ಲವೂ ಎದೆ ನಡುಗಿಸುವಂಥದ್ದು. ಆದರೆ, ಇಲ್ಲಿ ಈ ಭೀಕರತೆಯನ್ನು ಮೀರಿದ ಸಮಾಜದ ಕಟು ವಾಸ್ತವಗಳನ್ನು ಯಾವ ಮುಲಾಜು ಇಲ್ಲದೇ ಬೆತ್ತಲುಗೊಳಿಸಲಾಗಿದೆ. ‘ದುಡ್ಡಿದ್ದರೆ ದುನಿಯಾ’ ಎಂಬ ಮಾತು ಅದೆಷ್ಟು ವಾಸ್ತವ ಎಂಬುದು ಇಲ್ಲಿ ಢಾಳಾಗಿ ಗೋಚರವಾಗುತ್ತದೆ. ವಿಶೇಷತಃ ಪಾಂಡೆಯ ಮಾತುಗಳಲ್ಲಿ. ಮಕ್ಕಳು ಕಾಣೆಯಾದ ಬಗ್ಗೆ ದೂರು ನೀಡಲು ಬಂದಾಗ ‘ಸ್ಲಮ್ಮಿನ ಮಕ್ಕಳವರು. ಹಣವಿಲ್ಲ, ಕನಸುಗಳಿಲ್ಲ, ಭವಿಷ್ಯವೇ ಇಲ್ಲ. ಇಂತಹ ಮಕ್ಕಳು ಕಾಣೆಯಾದರೆ ಹುಡುಕುವುದೊಂದು ಕಸುಬಷ್ಟೇ. ಯಾರಿಗೂ ಬೇಡ ಈ ಮಕ್ಕಳ ಜೀವ ‘ ಎನ್ನುವ ಸಮಯಕ್ಕೆ, ಸಿರಿವಂತ ಮನೆತನದ ಬಾಲಕನೊಬ್ಬನ ಅಪಹರಣವನ್ನು ಕೆಲ ಸಮಯದಲ್ಲೇ ಪೊಲೀಸರು ಭೇದಿಸಿದ ಸುದ್ದಿ ದೂರದರ್ಶನದಲ್ಲಿ ಬರುತ್ತದೆ… ಮತ್ತದೇ ವಾಸ್ತವಿಕತೆಯನ್ನು ಸಾರುತ್ತಾ. ಹಣ, ಅಧಿಕಾರಕ್ಕಷ್ಟೇ ಇಲ್ಲಿ ಬೆಲೆ. ಉಳಿದೆಲ್ಲವೂ ಯಾರಿಗೂ ಬೇಡದ ವಸ್ತುಗಳಷ್ಟೇ ಎಂಬ ಸಮಾಜದ ನಡುವಿನ ಘೋರ ಸತ್ಯಗಳನ್ನು ಪ್ರೇಮ್, ಬಸ್ಸಿ, ಪಾಂಡೆ ಎಂಬ ಮೂರು ಪಾತ್ರಗಳನ್ನು ಇಟ್ಟುಕೊಂಡು ಸುಂದರವಾಗಿ ಕಟ್ಟಿಕೊಡಲಾಗಿದೆ. ಒಂದೆಡೆ ಸೈಕೋ ಮನೋಭಾವನೆಯ ಭೀಬತ್ಸ್ಯ ಅನಾವರಣ, ಇನ್ನೊಂದೆಡೆ ಬೆಲೆಯೇ ಇಲ್ಲದ ಬದುಕುಗಳ ಚಿತ್ರಣ. ಇದುವೇ ಈ ಚಿತ್ರದ ಒಟ್ಟು ಹೂರಣ. + + + +ಪ್ರೇಮ್ ಆಗಿ ವಿಕ್ರಾಂತ್ ಮಸಿ ಅಮೋಘ ಅಭಿನಯ. ’12ತ್ ಫೇಲ್’ ನಲ್ಲಿ ಪ್ರೇರಣಾದಾಯಿಯಾಗಿ ನಟನೆ ಮಾಡಿದ್ದ ಅವರು ಇಲ್ಲಿ ಪರಮ ವಿಕ್ಷಿಪ್ತ ವ್ಯಕ್ತಿಯಾಗಿ ಕಾಡುತ್ತಾರೆ. ವಿಶೇಷತಃ, ವಿಚಾರಣೆಯಲ್ಲಿ ತನ್ನ ಅಪರಾಧಗಳನ್ನು ಒಪ್ಪಿಕೊಳ್ಳುವಾಗ, ತೋರುವ ಹಾವ ಭಾವಗಳು, ಏನೂ ಆಗಿಯೇ ಇಲ್ಲವೇನೋ ಎಂಬಂತೆ ಬಲು ಆರಾಮದಾಯಕವಾಗಿ ಉತ್ತರಿಸುವ ಶೈಲಿ ಎಲ್ಲವೂ ಅತ್ಯದ್ಭುತ. ಇವರಿಗೆ ಸಮರ್ಥ ಪೈಪೋಟಿ ನೀಡಿದ್ದು ಇನ್ಸ್ಪೆಕ್ಟರ್ ಆಗಿ ದೀಪಕ್ ದೋಬ್ರಿಯಾಲ್. ಪರಿವರ್ತನಾ ಹಂತ, ತನಿಖಾ ಶೈಲಿ, ಕೆಲವೊಮ್ಮೆ ಭಾವ ರಹಿತ ಮತ್ತು ಕೆಲವೊಮ್ಮೆ ಕ್ಷಣ ಮಾತ್ರದ ಭಾವ ಉದ್ದೀಪನ ಹೀಗೆ ಅದ್ಭುತ ಅಭಿನಯ ಅವರದ್ದು.’ ಜಗತ್ತು ನಡೆಯುವುದು ನ್ಯೂಟನ್ನಿನ 3 ನೇ ತತ್ವದ ಮೇಲೆ. ಪ್ರತಿಯೊಂದು ಕ್ರಿಯೆಗೂ ಸಮಾನ ಮತ್ತು ವಿರುದ್ಧವಾದ ಪ್ರತಿಕ್ರಿಯೆ ಇದ್ದೇ ಇರುತ್ತದೆ. ರಾವಣ ಸೀತೆಯ ಅಪಹರಣ ಮಾಡಿದ, ಪರಿಣಾಮ ಸ್ವರ್ಣ ಲಂಕೆ ಶಿಥಿಲವಾಯಿತು’ ಎಂದು ಇನ್ಸ್ಪೆಕ್ಟರ್ ಪಾಂಡೆ ನೀಡುವ ವಿವರಣೆಯು ಚಿತ್ರದ ಪೀಕ್ ಪಾಯಿಂಟ್. ಉಳಿದೆಲ್ಲರದ್ದು ಪಾತ್ರದೊಳಗಿನ ಜೀವಿಸುವಿಕೆ. ಚಿತ್ರದ ಮಹತ್ವದ ವ್ಯಕ್ತಿಯೆಂದರೆ ಸೌರಭ್ ಗೋಸ್ವಾಮಿ. ಕ್ರೌರ್ಯ, ಮುಗ್ಧತೆ, ಭೀಬತ್ಸ್ಯ, ಹುಚ್ಚುತನ ಇವೆಲ್ಲವೂ ತರಹೇವಾರಿ ಬಣ್ಣಗಳನ್ನು ಬಳಿದುಕೊಂಡು ಕಾಡುವಂತೆ ಸೌರಭ್ ಕಣ್ಣುಗಳಲ್ಲಿ ಸೆರೆಯಾಗಿದೆ. ಇನ್ನು 2006 ರಲ್ಲಿ ನೋಯಿಡಾದಲ್ಲಿ ನಡೆದ ಸತ್ಯ ಘಟನೆ ಆಧಾರಿತ ಕಥೆಯನ್ನು, ನಿರ್ದೇಶಕ ಆದಿತ್ಯ ನಿಂಬಾಳ್ಕರ್ ಪರಿಣಾಮಕಾರಿ ಚಿತ್ರ ಕಥೆಯಾಗಿ ನಿರೂಪಿಸಿದ್ದಾರೆ. ಒಟ್ಟಾರೆಯಾಗಿ, ರಸ್ತೆಯೊಂದು ದುರಸ್ತಿ ಸ್ಥಿತಿಯಲ್ಲಿದ್ದಾಗ, ಸಾಗುವ ವಾಹನಗಳಿಗೆ ಹೇಗೆ ಗಂಭೀರ ಹಾನಿಯನ್ನು ಮಾಡುತ್ತದೆಯೋ, ಹಾಗೆಯೇ ಮನುಷ್ಯನ ಮನಸ್ಥಿತಿ ಹದೆಗೆಟ್ಟಾಗ, ದೇಹವೆಂಬುದು ತನ್ನ ಮಿತಿಯನ್ನು ಮೀರಿದ ವಿಕೃತಿಯನ್ನು ಯಾವ ಭಾವನೆಗಳ ಎಲ್ಲೆಯೂ ಇಲ್ಲದೆ ಹೊರಹಾಕುತ್ತದೆ ಎಂದು ತೋರಿಸುವ ಮನ ಕಲಕುವ ಚಿತ್ರವೇ ‘ಸೆಕ್ಟರ್ 36’. + + + +ರಾಮ್ ಪ್ರಕಾಶ್ ರೈ ದಕ್ಷಿಣ ಕನ್ನಡ ಜಿಲ್ಲೆ, ಕಡಬ ತಾಲೂಕು, ಕಲ್ಲುಗುಡ್ಡೆ ನಿವಾಸಿ. ಪ್ರಸ್ತುತ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಪ್ರಾಡಕ್ಟ್ ಡಿಸೈನ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಣೆ ಹವ್ಯಾಸಿ ಬರಹಗಾರ. ಕಥೆ, ಲೇಖನಗಳೆಂದರೆ ಅಚ್ಚುಮೆಚ್ಚು. ಯಕ್ಷಗಾನ ಭಾಗವತಿಕೆ, ಮದ್ದಳೆ ವಾದನ, ಒರಿಗಾಮಿ ಇತರ ಹವ್ಯಾಸಗಳು…. + diff --git a/Kenda Sampige/article_70.txt b/Kenda Sampige/article_70.txt new file mode 100644 index 0000000000000000000000000000000000000000..4e46b5ffbf509504a73e1b55916cd25ee273187f --- /dev/null +++ b/Kenda Sampige/article_70.txt @@ -0,0 +1,27 @@ +ಪ್ರಿಯ ಭೂಮಿ, + +ಈ ಮಣ್ಣಿನ ಬಂಡಿಯಲ್ಲಿ ಕುಳಿತು ನನ್ನ ಗುರು ಫುಕುವೋಕಾನ ಅರಸುತ್ತಾ ನನ್ನ ನಾಟಕದ ನಾಯಕಿ ವಸಂತಸೇನೆಯ ಬಳಿ ಬಂದಿದ್ದೇನೆ. ಈ ನಾಟಕ ತಾಲೀಮಿನ ಪ್ರಕ್ರಿಯೆಯ ಕಡೆಯ ದಿನಗಳಲ್ಲಿ ಒಂದು ದಿನ ರಾತ್ರಿ ಇದ್ದಕಿದ್ದಂತೆ ನಾವೆಲ್ಲರೂ ಕೂಡಿ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವ ಈ ನಾಟಕವೂ ಒಂದು ರೀತಿ ‘ವಸಂತಸೇನೆ ಎಂಬ ನನ್ನ ಮುತ್ತಜ್ಜಿಯ ಕಥೆ’ ಎಂದೆನಿಸಿ ಕಥೆಯೊಂದು ನನಪಾಯಿತು. + +ಮರುದಿನ ಬೆಳಗ್ಗೆ ನಾನು ವಸಂತಸೇನೆ, ಮದನಿಕೆ, ಮೈತ್ರೇಯ, ಸಂವಹಕ, ವರ್ಧಮಾನಕ, ಎಲ್ಲರೂ ರಂಗಮಂದಿರದ ಆವರಣದ ಕಲ್ಲು ಬೆಂಚಿನ ಮೇಲೆ ಕುಳಿತಿದ್ದೆವು. ಆಗ ನಾನು ಅವರಿಗೆ ಈ ಕಥೆಯನ್ನು ಹೇಳಿದೆ. + +(ಸತೀಶ್‌ ತಿಪಟೂರು) + +‘ಸುಮಾರು ಹದಿನೇಳು ಹದಿನೆಂಟು ವರ್ಷಗಳ ಹಿಂದೆ ನಾನು ಮತ್ತು ವಾಣಿ ಮನೆಯಲ್ಲಿ ಇರುವಾಗ ಬೆಳಗ್ಗೆ ಒಂಬತ್ತು ಗಂಟೆಯ ಆಸುಪಾಸಿನ ಸಮಯದಲ್ಲಿ ಮುದುಕಿಯೊಬ್ಬರು ನಮ್ಮ ಮನೆಯ ಮುಂದಿನ ಗೇಟಿನ ಬಳಿ ನಿಂತಿದ್ದರು. ಅವರನ್ನು ನೋಡಿದರೆ ಭಿಕ್ಷೆ ಬೇಡಲು ಬಂದವರೆಂದು ಅನ್ನಿಸುತ್ತಿರಲಿಲ್ಲ. ಆದರೆ ಹಸಿದು ಆಯಾಸವಾಗಿ ಏನನ್ನೊ ಅರಸುವಂತೆ ನಿಂತಿದ್ದರು. ಸುಮಾರು ಎಂಬತ್ತರ ಅಂಚಿನಲ್ಲಿದ್ದ ಅವರನ್ನು ನಾನು ಒಳಕ್ಕೆ ಕರೆದು ಕುಳ್ಳಿರಿಸಿದೆ. ವಾಣಿ ತಿಂಡಿ, ನೀರು ಕೊಟ್ಟು ಉಪಚರಿಸಿದಳು. ಸ್ವಲ್ಪ ಸಮಯದ ಬಳಿಕ ನಾನು ಕುತೂಹಲದಿಂದ ಯಾವ ಊರಜ್ಜಿ ನಿನ್ನದು ಎಂದು ಕೇಳಿದೆ. ಸುಮಾರು ನಾಲ್ಕಾರು ಮೈಲಿ ದೂರದ ಹಳ್ಳಿಯೊಂದರ ಹೆಸರನ್ನು ಹೇಳಿದರು. ಆ ಊರು ನನ್ನ ತಾಯಿಯ ತವರೂರು ಎಂದು ಹೇಳಿದೆ. ಅಲ್ಲಿ ಯಾರ ಮನೆ, ನಿಮ್ಮ ಪೂರ್ವಿಕರು ಯಾರು ಎಂದು ಅಜ್ಜಿ ಬೆರಗಿನಿಂದ ಕೇಳಿದರು. ನಾನು ವಿವರವಾಗಿ ಎಲ್ಲವನ್ನೂ, ನಮ್ಮ ಗುರುತುಗಳನ್ನು ಹೇಳಿದೆ. ತಕ್ಷಣವೇ ತುಂಬಾ ಪರಿಚಿತರಂತೆ ನೀವು ಸುಶೀಲನ ಮಕ್ಕಳ ಎಂದು ಕೇಳಿದರು. ನಾನು ಹೌದು ಎಂದು ಹೇಳಿದೆ. ಅಜ್ಜಿ ತನ್ನ ಬಾಲ್ಯದ ನೆನಪುಗಳಿಗೆ ಮರಳಿ ನನ್ನ ತಾಯಿಯ ಅಜ್ಜಿ ನಮ್ಮ ಮುತ್ತಜ್ಜಿ ವಸಂತಸೇನೆಯ ಕಥೆಯನ್ನು ನಮಗೆ ಹೇಳಿದರು. + +ಈ ಅಜ್ಜಿ ಚಿಕ್ಕ ಹುಡುಗಿಯಾಗಿದ್ದಾಗ ದೂರದಿಂದಲೇ ನಮ್ಮ ಮುತ್ತಜ್ಜಿ ವಸಂತಸೇನೆಯನ್ನು ನೋಡುತ್ತಿದ್ದರಂತೆ. ಉದ್ದಕೂದಲಿನ ಸುಂದರಿಯೊಬ್ಬಳು ಎರಡಂತಸ್ತಿನ ಮನೆಯ ತಾರಸಿಯಲ್ಲಿ ನಿಂತು ತನ್ನ ತಲೆಗೂದಲನ್ನು ಬಿಸಿಲಿಗೆ ಒಡ್ಡಿ, ಒಪ್ಪ ಮಾಡಿ ಬಾಚಿಕೊಳ್ಳುತ್ತಿದ್ದ, ಜಡೆ ಹೆಣೆದುಕೊಳ್ಳುತ್ತಿದ್ದ ದೃಶ್ಯವನ್ನು ಸಚಿತ್ರವಾಗಿ ನಮಗೆ ಕಾಣಿಸಿದ್ದರು. ಅಂದಿನ ಆ ಮನೆಯ ವೈಭವವನ್ನು ಕುದುರೆಗಳ ಮೇಲೆ ಬರುತ್ತಿದ್ದ ಅವರ ಶ್ರೀಮಂತ ಸ್ನೇಹಿತರನ್ನು, ಅವರ ಒಡವೆಗಳನ್ನು, ಆಸ್ತಿಯನ್ನು ಮುಂತಾಗಿ ಚಿಕ್ಕಂದಿನಲ್ಲಿ ತಾನು ಕಂಡಂತೆ, ಕೇಳಿದಂತೆ, ಎಲ್ಲವನ್ನೂ ನಮಗೆ ಹೇಳಿದರು. ಅಜ್ಜಿ ಹೇಳಿದಂತೆ ಅವರ ಮೈ ಮುಖಗಳಲ್ಲಿದ್ದ ಬಣ್ಣದ ಕಾಂತಿ ಮತ್ತು ಅಗಲವಾಗಿ ಹಣೆಗಿಡುತ್ತಿದ್ದ ಅವರ ರೂಪ ನಮ್ಮ ಕಲ್ಪನೆಯಲ್ಲಿ ಅಸ್ಪಷ್ಟವಾಗಿರುವುದರ ಹೊರತು ಅವರ ಯಾವ ಭಾವಚಿತ್ರಗಳೂ ನಮ್ಮ ಮನೆಯಲ್ಲಿ ಇಲ್ಲ. ನಾನು ಚಿಕ್ಕಂದಿನಲ್ಲಿರುವಾಗಲೇ ನನ್ನ ತಾಯಿ ತೀರಿಕೊಂಡದ್ದರಿಂದ ಅವರೊಂದಿಗಿನ ಒಡನಾಟದ ಕೆಲವು ನೆನಪುಗಳನ್ನು ಬಿಟ್ಟರೆ ನನ್ನ ಅಜ್ಜಿ, ಮುತ್ತಜ್ಜಿ, ಯಾರನ್ನೂ ನಾನು ನೋಡಿಲ್ಲ. ಸುಮಾರು ನೂರು ವರ್ಷಗಳ ಹಿಂದಿನ ಈ ಕಥೆಯ ಪಳಯುಳಿಕೆ ಎಂಬಂತೆ ಆಸ್ತಿಯ ಪಾಲಿನಲ್ಲಿ ಏಳೆಂಟು ಎಕರೆ ಜಮೀನು, ನಿವೇಶನಗಳು ಮತ್ತು ಒಡವೆಗಳೆಲ್ಲಾ ಅಜ್ಜಿಯಿಂದ ನನ್ನ ತಾಯಿಗೆ ಬಂದಿದ್ದವು. ನಾನು ಚಿಕ್ಕಂದಿನಲ್ಲಿ ಅಟ್ಟದ ಮೇಲಿನ ದೊಡ್ಡ ಜಾಕಾಯಿ ಪೆಟ್ಟಿಗೆಯಲ್ಲಿನ ಒಡವೆಗಳ ಬಗ್ಗೆ ಕಥೆಗಳನ್ನು ಕೇಳಿದ್ದೆ. ಮತ್ತು ನನ್ನ ತಾಯಿಯ ಬಳಿ ಇದ್ದ ಬಂಗಾರದ ನೆಕ್ಲೆಸು, ಜಡೆ ಬಿಲ್ಲೆಗಳನ್ನು ನಾನು ಮುಟ್ಟಿ ನೋಡಿದ ಸ್ಪರ್ಶದ ನೆನಪುಗಳು ನನಗಿನ್ನೂ ದಟ್ಟವಾಗಿದೆ. ಕಾಲದ ಹರಿವಿನಲ್ಲಿ ಈ ಎಲ್ಲಾ ಆಸ್ತಿ ಒಡವೆಗಳು ಕರಗಿಹೋದರೂ ಮತ್ತೊಂದು ಒಡವೆಯ ಗಂಟು ನಮಗೆ ಬಳುವಳಿಯಾಗಿ ಬಂತು. + +ನನ್ನ ಮುತ್ತಜ್ಜಿ ವಸಂತಸೇನೆ ತನ್ನ ಒಬ್ಬಳೇ ಮಗಳಾದ ನನ್ನ ಅಜ್ಜಿಗೆ ‘ವಾಯಲಿನ್’ ಕಲಿಸುತ್ತಿದ್ದರಂತೆ. ಪಿಟೀಲು ರಾಮಣ್ಣ ಎಂಬುವರೊಬ್ಬರು ನನ್ನ ಅಜ್ಜಿಗೆ ಪಾಠ ಹೇಳಲು ಬರುತ್ತಿದ್ದರಂತೆ. ಮುಂದೆ ನನ್ನ ಅಜ್ಜಿ ಕಛೇರಿ ನೀಡುತ್ತಿದ್ದರೆಂದು ಕೇಳಿದ ನೆನಪು. ಈ ಅಜ್ಜಿ ಕಾಲ ಮೇಲೆ ಕಾಲು ಹಾಕಿ ಸಿಗರೇಟು ಸೇದುತ್ತಾ ಚರ್ಚಿಸುತ್ತಿದ್ದುದ್ದರ ಬಗ್ಗೆ ನಾನು ಕೇಳಿದ್ದೆ. ಅವರ ಒಬ್ಬಳೇ ಮಗಳಾದ ನನ್ನ ತಾಯಿ ಕೂಡ ದೈವ ಭಕ್ತೆಯಾಗಿದ್ದರು. ಹಲವು ಕುಸುರಿ ಕೌಶಲ್ಯಗಳಲ್ಲಿ ಪರಿಣಿತಿ ಇದ್ದವರು. ಅವರ ಆಸಕ್ತಿಯಿಂದ ಮನೆಯ ಮಕ್ಕಳಿಗೆ ಕಥಕ್ಕಳಿ, ಭರತನಾಟ್ಯ, ಮೃದಂಗ ತರಗತಿಗಳು ಚಿಕ್ಕಂದಿನಿಂದಲೇ ಸಿಕ್ಕಿತ್ತು. + + + +ನನ್ನ ಮುತ್ತಜ್ಜಿ ವಸಂತಸೇನೆಯ ಸೋದರ ಸಂಬಂಧಿಗಳು, ಮಕ್ಕಳು, ಮರಿಮಕ್ಕಳೆಲ್ಲ ಬೆಂಗಳೂರು, ಅಮೇರಿಕಗಳಲ್ಲಿ ನೆಲೆಸಿದ್ದಾರೆ. ನನ್ನ ತಾಯಿ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳಮೂಮರ‍್ನಾಲ್ಕು ತಲೆಮಾರಿನ ವಂಶವೃಕ್ಷ ಮುಂದೆ ಚಲಿಸಿದೆ. + +ನನ್ನ ಮುತ್ತಜ್ಜಿಯಿಂದ ಆರೇಳು ತಲೆಮಾರುಗಳ ವಂಶವೃಕ್ಷದ ಕಥೆಯನ್ನು ನಾನು ನಿನಗೆ ಹೇಳಬೇಕು. ‘ವಸಂತಸೇನೆ ಎಂಬ ರೂಪಕದ ವಂಶವೃಕ್ಷ ಹಲವು ಕವಲಾಯಿತೋ ಅಥವಾ ಈ ಭೂಮಿಯ ತೋಟದಲ್ಲಿ ಹಲವು ಜಾತಿಯ ಗಿಡ, ಮರ, ಬಳ್ಳಿಗಳು ಒಂದಕ್ಕೊಂದು ಭಾವನಾತ್ಮಕ ಸಂಬಂಧಗಳಲ್ಲಿ ಬೆಸೆದುಕೊಂಡವೋ ಅಂತು ಈ ಕುಟುಂಬ ಹಲವು ಜಾತಿ, ಧರ್ಮ, ಸಂಸ್ಕೃತಿಗಳಲ್ಲಿ ತನ್ನ ಇರುವನ್ನು ಕಂಡುಕೊಂಡಿತ್ತು. ನಮ್ಮ ಮನೆಯಲ್ಲಿ ಓದಿಕೊಂಡು ಬೆಳೆದು ಬಾಳು ಕಂಡುಕೊಂಡ ಮನೆಯ ಮಾನಸ ಪುತ್ರಿ ಜಾಹಿಧಾ ಮತ್ತು ಅವಳ ಮಗ ಶಿವಕಬೀರನೂ ಸೇರಿದಂತೆ ಐವತ್ತರವತ್ತು ಮಂದಿ ಇರುವ ಈ ಕುಟುಂಬದ ಸರಪಳಿಯಲ್ಲಿ ಬಲಿಜ, ವಿಶ್ವಕರ್ಮ, ಸಾದರ, ಬ್ರಾಹ್ಮಣ, ಲಿಂಗಾಯಿತ, ಒಕ್ಕಲಿಗ, ಕುರುಬ, ಮಡಿವಾಳ, ಮೊದಲಿಯಾರ್, ಐಯ್ಯರ್ ಮುಂತಾಗಿ ಹತ್ತು ಹಲವು ಜಾತಿ ಧರ್ಮಗಳ ಕನ್ನಡ, ತಮಿಳು, ತೆಲುಗು, ಉರ್ದು, ಮಲೆಯಾಳಿ, ತುಳು ಭಾಷೆಗಳನ್ನಾಡುವ ವಿವಿಧ ಬಗೆಯ ಮಾಂಸಹಾರ, ಸಸ್ಯಹಾರಗಳನ್ನು ಸೇವಿಸುವ ಏಕ ರೂಪದ ಧಾರ್ಮಿಕ ಕಟ್ಟುಪಾಡುಗಳನ್ನು ಕಳಚಿಕೊಂಡ ವಿವಿಧ ಆಚಾರ ವಿಚಾರ ಸಂಸ್ಕೃತಿಗಳ ರಾಜಕೀಯ ಪಕ್ಷಪಾತಿಗಳ ಕುಟುಂಬ ಈ ಅಜ್ಜಿಯ ಮನೆ. ಈ ಅಜ್ಜಿಯರೆಲ್ಲಾ ಬಹಳ ಹಿಂದೆಯೇ ತೀರಿಕೊಂಡಿದ್ದರಿಂದ ಮತ್ತು ಸ್ವಾತಂತ್ರ್ಯ ಹೋರಾಟಗಾರರು, ಶಾಲಾ ಮಾಸ್ತರರು ಆಗಿದ್ದ ನನ್ನ ತಂದೆಯವರೇ ಈ ಕುಟುಂಬದ ಹಿರಿಯರಾಗಿ ಮನೆಯನ್ನು ಮುನ್ನಡೆಸಿದ್ದರಿಂದ ಈಗ ಅದು ಮುಂದಿನ ತಲೆಮಾರಿಗೆ ತಾತನ ಮನೆಯಾಗಿದೆ. + +ನಮ್ಮ ಅಜ್ಜಿಯರಿಂದ ಬಳುವಳಿಯಾಗಿ ಬಂದ ನಿವೇಶನದಲ್ಲಿ ಅರವತ್ತು ವರ್ಷಗಳ ಹಿಂದೆ ನಮ್ಮ ತಂದೆಯವರು ಕಟ್ಟಿದ್ದ ಈ ಮನೆಯಲ್ಲಿ ಇವರೆಲ್ಲರ ವೈವಿಧ್ಯಮಯ ಸ್ಮೃತಿ ಕಥನಗಳು ನೆಲೆಗೊಂಡಿವೆ. ಇಷ್ಟಲ್ಲದೇ ಈ ಮನೆಯೇ ಕೇಂದ್ರವಾಗಿ ಇಷ್ಟು ವರ್ಷಗಳಲ್ಲಿ ನಡೆಯುತ್ತಿರುವ ನೃತ್ಯಶಾಲೆ, ಸಂಗೀತ ಶಾಲೆ, ನಾಟಕ ಶಾಲೆಯ ನೂರಾರು ಹುಡುಗ ಹುಡುಗಿಯರು ಈ ಮನೆಯ ಒಡನಾಟದಲ್ಲಿ ಬೆಳೆದಿದ್ದಾರೆ. ಮತ್ತು ಹೋರಾಟ, ಚಳುವಳಿ, ಕ್ರಾಂತಿ ಎನ್ನುವ ಕಾಮ್ರೇಡ್‌ಗಳು, ಕವಿಗಳೂ, ಲೇಖಕರು, ಪತ್ರಕರ್ತರು, ಪ್ರಗತಿಪರ ರಾಜಕೀಯ ನೇತಾರರೂ ಅಟ್ಟದ ಮೇಲಿನ ಸಭೆಗಳಿಂದಾಗಿ ಈ ಮನೆಯ ಭಾಗವಾಗಿದ್ದಾರೆ. ಅಂದಿನ ದಿನಗಳ ಈ ಮನೆಯನ್ನು ಕೆಲವು ಸ್ನೇಹಿತರು ಜಾತ್ಯಾತೀತ ಮಠವೆಂದೂ; ಅಲ್ಲಿ ನಿತ್ಯ ದಾಸೋಹವೆಂದು ನೆನಪಿಸಿಕೊಂಡು ಮಾತನಾಡುತ್ತಿದ್ದುದುಂಟು. ಇದುವರೆಗೂ ಆ ಮನೆಯಲ್ಲೇ ಉಳಿದು ಈ ಎಲ್ಲದರ ಭಾಗವಾಗಿದ್ದ ನನ್ನ ಕುಟುಂಬ ಇನ್ನಷ್ಟು ಕ್ರಿಯಾಶೀಲವಾಗಲು ಏಕಾಂತ ಬಯಸಿ ದೂರದಲ್ಲಿ ಬೇರೆ ಮನೆಯಲ್ಲಿ ವಾಸಿಸುತ್ತಿದ್ದೇವೆ. ಈ ಎಲ್ಲ ನೆನಪುಗಳನ್ನು ಹೊತ್ತು ಸದ್ಯ ಖಾಲಿಯಾಗಿರುವ ಮನೆ ಪರಿಪೂರ್ಣವಾಗಿ ಒಂದು ಸಾಂಸ್ಕೃತಿಕ ಕೇಂದ್ರವಾಗಲು, ಕೋಣೆಗಳ ಗೋಡೆಗಳನ್ನು ಕಳಚಿ ಬಯಲಾಗಲು ಕಾಲಕ್ಕೆ ತಕ್ಕಂತೆ ರೂಪ ಬದಲಿಸಿಕೊಳ್ಳಲು ಅಣಿಯಾಗುತ್ತಿದೆ. + + + +ನಾನು ಹೇಳುತ್ತಿರುವ ವಸಂತಸೇನೆ ಎಂಬ ನನ್ನ ಮುತ್ತಜ್ಜಿಗೂ ಒಂದು ಕಾಲವಿತ್ತು. ಆ ಕಾಲದಲ್ಲಿ ಅವಳಿಗೆ ಯೌವನವಿತ್ತು, ಬಯಕೆಗಳಿತ್ತು, ಒಬ್ಬ ಚಾರುದತ್ತನೂ ಇದ್ದಿರಬಹುದು, ಅವಳಿಗೂ ಆಸ್ತಿ ಇತ್ತು, ಅಂತಸ್ತಿತ್ತು, ‘ಒಡವೆಯ ಗಂಟು’ ಇತ್ತು. ಸಂಪತ್ತನ್ನು ದೇವಸ್ಥಾನಗಳಿಗೆ ದಾನ ಮಾಡಿದ ಹಿರಿಮೆ ಇತ್ತು. ಸಂಗೀತದ ಒಲವು ಇತ್ತು. ತನ್ನ ವಶವಾಗಲಿಲ್ಲ ಎಂಬ ಕಾರಣಕ್ಕೋ, ಅಥವಾ ಸಂಪತ್ತಿನ ಆಸೆಯಿಂದಲೋ ಮದ್ದು ಮಾಟ ಮಾಡಿಸಿ ಕೊಂದರೆಂಬ ಕಥೆಯಲ್ಲಿ ಶಕಾರನೂ ಇರಬಹುದು. ಅವಳ ಮರಿಮೊಮ್ಮಗನಾದ ನಾನು ‘ವಸಂತಸೇನೆ’ಯ ನಾಟಕ ಮಾಡುವ ಹೊತ್ತಲ್ಲಿ ಪಾಪ ಹೀಗೇಕೆ ನನ್ನ ಸ್ಮೃತಿ ತೋಟದಿಂದ ಒದಗಿಬಂದಳೋ ಗೊತ್ತಿಲ್ಲ. ಬಂದವಳು ಇಷ್ಟೆಲ್ಲಾ ಕಥೆಗಳನ್ನು ನಿಮ್ಮೆದುರು ಬಿಚ್ಚಿಟ್ಟು ಮರೆಯಾದಳು. ಅವಳ ಈ ಕಥೆಯಲ್ಲಿ ಸತ್ಯವೆಷ್ಟೋ; ನಮ್ಮ ಕಲ್ಪನೆಗಳು ವಿಸ್ತರಿಸಿಕೊಂಡಿದ್ದೆಷ್ಟೋ ಗೊತ್ತಿಲ್ಲ. ಆದರೂ ಕಥೆಯ ಮೂಲಕ ಆ ‘ವಸಂತಸೇನೆ’ ನಮ್ಮ ನಾಟಕದ ‘ವಸಂತಸೇನೆ’ಗೆ ಕಿಂಚಿತ್ತಾದರೂ ನೆರವಿಗೆ ಬಂದಿದ್ದರಲ್ಲಿ ನನಗೆ ಸಂಶಯವಿಲ್ಲ. ಅದಕ್ಕಾಗಿ ಮುತ್ತಜ್ಜಿಗೆ ನನ್ನ ನಮಸ್ಕಾರಗಳು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_71.txt b/Kenda Sampige/article_71.txt new file mode 100644 index 0000000000000000000000000000000000000000..7879652f99a0203a5a88b929f4be50dfb3b6252f --- /dev/null +++ b/Kenda Sampige/article_71.txt @@ -0,0 +1,15 @@ +ಡಂಕಲ್‌ಪೇಟೆ- ಒಂದು ಕಲ್ಪನಾ ವಿಲಾಸದಲ್ಲಿ ಕಟ್ಟಿದ ಪೇಟೆಯಲ್ಲ. ಅದು ಈ ನೆಲದ ಗಾಳಿ ಮಳೆ ದೂಳು ಕೆಸರು ಉಸಿರು ಬೆವರು ಜನ ಭಾಷೆ ಸಂಸ್ಕೃತಿ ನಂಬಿಕೆ ನಿತ್ಯದ ಗೋಳು ನಗುವಿನ ಅಬ್ಬರ-ಎಲ್ಲವನ್ನೂ ಕಟ್ಟಿಕೊಂಡಿರುವ ನಿಜ ಪೇಟೆ. ದೇಶದ ವಿದ್ಯಮಾನಗಳೆಲ್ಲ ಈ ಪೇಟೆಯ ಕನ್ನಡಿಯಲ್ಲಿ ಬಿಂಬಿತವಾಗುತ್ತವೆ. ಜನರ ಸಿಟ್ಟು ಸೆಡವುಗಳು ಇಲ್ಲಿ ಸಿಡಿಯುತ್ತವೆ. ಕಾಲಾಂತರದ ಇತಿಹಾಸ, ವರ್ತಮಾನದ ಆವಾಂತರಗಳು, ಏಳು-ಬೀಳುಗಳ ನಡುವೆ ಈ ಬದುಕಿನ ಬಂಡಿಯನ್ನು ಎಳೆಯುತ್ತ ಸಾಗಿದ ಮಂದಿ. ಹೀಗಾಗಿಯೇ ಇಲ್ಲಿ ಮಸೀದಿ-ಮಂದಿರಗಳ ಬಡಿದಾಟವಿದೆ; ಕೊರೋನಾದ ಭೀಕರ ನೆರಳಿದೆ; ನೋಟು ಅಮಾನ್ಯೀಕರಣದ ಬೆಂಕಿ ಸಾಮಾನ್ಯ ಜನತೆಯ ಬದುಕನ್ನು ಸುಟ್ಟು ಕರುಕುಮಾಡಿದ ಕಟು ಸತ್ಯವೂ ಇದೆ. ಡಂಕಲ್‌ಪೇಟೆಯ ರೊಕ್ಕದ ವಹಿವಾಟೂ ಇದೆ. ಹಾಗೆಯೇ ಆಳದಲ್ಲಿ ಮನುಷ್ಯ ಮನುಷ್ಯನನ್ನು ನಂಬಿಕೆಯಿಂದ, ಪ್ರೀತಿಯಿಂದ ನೋಡುವ ಹೃದಯವಂತಿಕೆಯೂ ಇದೆ. + +(ವೀರೇಂದ್ರ ರಾವಿಹಾಳ್‌) + +ಇಂಥ ನೆಲೆಗಟ್ಟಿನಲ್ಲಿ ನಿಂತು ಎಲ್ಲವನ್ನೂ ಸೂಕ್ಷ್ಮವಾಗಿ ನೋಡುತ್ತ, ಮಿಡಿಯುತ್ತ, ತಮ್ಮ ಲೇಖನಿಯನ್ನು ಚುರುಕಾಗಿ, ಕ್ರಿಯಾತ್ಮಕವಾಗಿ ಇಟ್ಟುಕೊಂಡಿರುವ ತರುಣ ಮಿತ್ರ ವೀರೇಂದ್ರ ರಾವಿಹಾಳ್‌ ಸಹಜ ಕತೆಗಾರ. ಅನುಭವ ಸಮೃದ್ಧಿ, ಸ್ಥಳೀಯ ಭಾಷೆಯ ಕಸುವು, ಕಥನ ತಂತ್ರ, ನಿರೂಪಣೆಯ ಸೊಗಸು-ಇವುಗಳಿಂದಾಗಿ ವೀರೇಂದ್ರರ ಕತೆಗಳು ಗಮನ ಸೆಳೆಯುತ್ತವೆ. ‘ಕಾಡಿʼ ಎನ್ನುವ ಕತೆಯ ಸಾಮಾನ್ಯ ನಾಯಿಯೊಂದು ಬೆಳೆಯುತ್ತ ಬೆಳೆಯುತ್ತ ಇಡೀ ವಿದ್ಯಮಾನಗಳನ್ನು ಆವರಿಸುವುದು, ಬದುಕಿನ ಸಂಕೀರ್ಣ ಸಂಗತಿಗಳನ್ನು ಕಟ್ಟಿಕೊಡುತ್ತಾ ಹೋಗುವುದು; ತಿಳಿಹಾಸ್ಯವನ್ನು ಹೊದ್ದುಕೊಂಡೇ ಬದುಕಿನ ಗಂಭೀರ ಸಮಸ್ಯೆಗಳಿಗೆ ಎದುರಾಗಿ ನಿಲ್ಲುವುದು-ವೀರೇಂದ್ರರ ಕಥನ ಪ್ರತಿಭೆಗೆ ಕನ್ನಡಿ ಹಿಡಿಯುತ್ತವೆ. + +ವೀರೇಂದ್ರ ವರ್ತಮಾನಕ್ಕೆ ಬೆನ್ನುಹಾಕುವ ಕಥೆಗಾರರಲ್ಲ; ಹಾಗೆಯೇ ಭೂತದ ವೈಭವದಲ್ಲಿ ಮೈಮರೆಯುವವರೂ ಅಲ್ಲ. ಭವಿಷ್ಯದ ಕನಸುಗಳಲ್ಲಿ, ಕಲ್ಪನೆಗಳಲ್ಲಿ ತೇಲುವ ಭಾವಜೀವಿಯೂ ಅಲ್ಲ. ಸುಡು ಸುಡು ವರ್ತಮಾನವೇ ಅವರ ಪ್ರಧಾನ ಅಖಾಡ. ಭೂತ-ಭವಿಷ್ಯತ್ತುಗಳಿಗೆ ಹೋಗಿ ಬಂದರೂ, ಅವರು ಸೆಣಸುವುದು, ಪಟ್ಟಿಗೆ ಪಟ್ಟು ಹಾಕುವುದು ಈ ಡಂಕಲ್‌ಪೇಟೆಯಲ್ಲಿಯೇ. + +(ಜಿ.ಪಿ. ಬಸವರಾಜು) + +ಕುಂವೀ ಅವರಂಥ ಸೃಜನಶೀಲರಲ್ಲಿ ಬಳ್ಳಾರಿ ಉಸಿರಾಡುವುದು ಒಂದು ಚೆಲುವಾದರೆ, ಇಲ್ಲಿ ಬಳ್ಳಾರಿ ಕೊಸರಾಡುವುದು ಇನ್ನೊಂದು ಸೊಗಸು. ನೆಲದಲ್ಲಿ ಬೇರಿಳಿಸಿದ ಮರವೇ ಆಕಾಶಕ್ಕೆ ರೆಂಬೆಕೊಂಬೆ ಚಾಚುವುದು ಸಾಧ್ಯ. ವೀರೇಂದ್ರರ ಕತೆಗಳಲ್ಲಿ ಈ ಸತ್ಯ ಗೋಚರವಾಗುತ್ತದೆ.ಕಾಡಸಿದ್ಧೇಶ್ವರ, ಹಳೆಕೋಟೆ ವೀರಭದ್ರ, ಚಾಮುಂಡವ್ವ, ಸುಂಕ್ಲಮ್ಮ, ಜಂಡಾಕಟ್ಟೆ ಎಲ್ಲವೂ ಜೀವತಳೆದು ಡಂಕಲ್‌ಪೇಟೆಯ ಜೀವಂತ ಪಾತ್ರಗಳಾಗಿ ಜನರ ಬದುಕನ್ನು ಸಂಕೀರ್ಣವೂ, ಸೂಕ್ಷ್ಮವೂ, ಸಹನೀಯವೂ, ಮಾನವೀಯವೂ ಮಾಡುತ್ತ ಬೆಳೆಯುವ ಪರಿ ವೀರೇಂದ್ರರ ಕತೆಗಳಿಗೆ ವಿಭಿನ್ನ ಆಯಾಮಗಳನು ಕೂಡಿಸುತ್ತವೆ.ತನ್ನ ನೆಲದಲ್ಲಿ ನಿಂತು ಬರೆಯುವ ಕತೆಗಾರ ಎಂದೂ ಹುಸಿಯಾಗಲಾರ. + +ಈ ಸಂಕಲನದಲ್ಲಿರುವ ಎಲ್ಲ ಕತೆಗಳೂ ಕೊರತೆಯನ್ನು ಮೀರಿದ ಕತೆಗಳೆಂದು ನಾನು ಹೇಳುತ್ತಿಲ್ಲ. ಒಂದೆರಡು ಕತೆಗಳನ್ನು ಮತ್ತೆ ಬರೆಯಬೇಕಾದ, ತಿದ್ದಿ ತೀಡಬೇಕಾದ ಅಗತ್ಯವೂ ಇದೆ. ವಿಮರ್ಶೆಯ ಹತಾರವನ್ನು ಹಿಡಿದು ಹೊರಟವರಿಗೆ ಕತೆಗಾರನ ಹೆಜ್ಜೆಗಳಲ್ಲಿ ಇನ್ನೂ ಕೆಲವು ಕೊರತೆಗಳು ಕಾಣಬಹುದು. ಅದು ಸಹಜ ಕೂಡಾ. ಆದರೆ ವೀರೇಂದ್ರ ಅವರು ಪಯಣವನ್ನು ಇದೀಗ ಆರಂಭಿಸಿರುವ ಉತ್ಸಾಹಿ. ಅವರು ಇಂಥ ಎಲ್ಲ ತೊಡಕುಗಳನ್ನೂ ದಾಟುತ್ತಾರೆ ಎಂಬ ವಿಶ್ವಾಸ ನನ್ನದು. ಇಲ್ಲಿನ ಕೆಲವು ಕತೆಗಳಾದರೂ ನನ್ನ ಮಾತಿಗೆ ಸಾಕ್ಷಿ ಹೇಳುತ್ತವೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_72.txt b/Kenda Sampige/article_72.txt new file mode 100644 index 0000000000000000000000000000000000000000..5fecee6644d381d98955aca6dc630e20a9a24044 --- /dev/null +++ b/Kenda Sampige/article_72.txt @@ -0,0 +1,41 @@ +ಪ್ರಿಯ ಭೂಮಿ, + +ಇಂದು ನಿನಗೆ ನನ್ನ ಮತ್ತೊಂದು ಅನುಭವ ಕಥನವನ್ನು ಹೇಳಿಬಿಡುತ್ತೇನೆ. + +ಕೋಲಾರದ ಬಳಿಯಲ್ಲಿ ಅಂತರಗಂಗೆ ಎಂಬ ದೊಡ್ಡ ಬೆಟ್ಟವೊಂದಿದೆ. ಬಂಡೆಗಲ್ಲುಗಳ ದೊಡ್ಡ ಪರ್ವತಗಳ ಸಾಲು. ಈ ಪರ್ವತವನ್ನು ಏರಿ ಹೋದಂತೆ ಸುಮಾರು ಏಳೆಂಟು ಹಳ್ಳಿಗಳು ಮೇಲೆ ನೆಲೆಸಿರುವುದನ್ನು ನಾವು ಕಾಣಬಹುದು. ಈ ಹಳ್ಳಿಗಳಲ್ಲಿ ಒಂದು ತೇರಹಳ್ಳಿ. ಬೆಟ್ಟದ ಮೇಲಿನ ಈ ಹಳ್ಳಿಯಲ್ಲಿ ‘ಆದಿಮ’ ಎನ್ನುವ ಸಾಂಸ್ಕೃತಿಕ ಸಂಸ್ಥೆಯಿದೆ. ಅವಕಾಶ ವಂಚಿತ ತಳ ಸಮುದಾಯಗಳ ಮಕ್ಕಳ ವಿಕಾಸದ ಹಾದಿಯನ್ನು ಕಂಡುಕೊಳ್ಳುವಲ್ಲಿ ‘ಮಕ್ಕಳ ರಂಗಭೂಮಿ’ಯನ್ನು ತನ್ನ ಮುಖ್ಯ ಭೂಮಿಕೆಯನ್ನಾಗಿರಿಸಿಕೊಂಡು ಈ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. + +(ಕೋಟಿಗಾನಹಳ್ಳಿ ರಾಮಯ್ಯ) + +ಈ ಸಂಸ್ಥೆಯ ರುವಾರಿ ಕೋಟಿಗಾನಹಳ್ಳಿ ರಾಮಯ್ಯನವರು. ಬ್ಯಾಂಕ್ ಉದ್ಯೋಗವನ್ನು ತ್ಯಜಿಸಿ ದಮನಿತ ಸಮುದಾಯಗಳ ದನಿಯಾಗಿ ಹಾಡುಗಳನ್ನು ಬರೆಯುತ್ತಾ, ನಾಟಕಗಳನ್ನು ಆಡಿಸುತ್ತಾ, ಚಳುವಳಿ ಹೋರಾಟಗಳಲ್ಲಿ ತಮ್ಮನ್ನು ತಾವು ಪರಿಪೂರ್ಣವಾಗಿ ತೊಡಗಿಸಿಕೊಂಡವರು. ತನ್ನ ಎದೆಗೂಡಲ್ಲಿ ಸಾವಿರಾರು ಕಥೆಗಳ ಕಣಜಗಳನ್ನು ಹೊತ್ತು ಯುವ ಸಮುದಾಯಗಳಲ್ಲಿ ಸ್ವಾಭಿಮಾನದ ಕಿಚ್ಚು ಹಚ್ಚಿ ಕನಸ ಬೀಜಗಳ ಬಿತ್ತುತ್ತಾ ಊರೂರು ಅಲೆದವರು. ನನ್ನನ್ನು ರೂಪಿಸುತ್ತಿರುವ ಹಲವು ಗುರುಗಳಲ್ಲಿ ರಾಮಣ್ಣ ಕೂಡ ಒಬ್ಬರು. ಮಧ್ಯಮ ವರ್ಗದ ಸೂಕ್ಷ್ಮತೆಗಳಿಗಷ್ಟೆ ಮಿತಿಯಾಗಿದ್ದ ನನ್ನನ್ನು ದಲಿತರ, ದಮನಿತರ, ಶೋಷಿತರ ನೆಲೆಗಳಿಗೆ ಕೊಂಡೊಯ್ದು ದಾರುಣ ಸ್ಥಿತಿಗಳ ದರ್ಶನ ಮಾಡಿಸಿದವರು. ಮಾನವೀಯ ಅಂತಃಕರಣ, ತಾಯ್ತನಗಳ ಅರಿವು ಕೊಟ್ಟವರು. ಕಥೆಗಾರ, ನಾಟಕಕಾರ, ಚಿಂತಕ, ಶಿಕ್ಷಣತಜ್ಞ, ಲೇಖಕ, ಹುಟ್ಟು ಹೋರಾಟಗಾರ, ಎಲ್ಲವೂ ಆಗಿರುವ ರಾಮಣ್ಣ ಸಂತನಂತೆ ಬೆಟ್ಟದ ಮೇಲೆ ಮಕ್ಕಳೊಂದಿಗೆ ಇದ್ದು ಬಿಟ್ಟವರು. ಬೆಟ್ಟದ ಮೇಲಿನ ಮರದ, ಇವರ ನೆರಳಲ್ಲಿ ತಂಗುದಾಣವೆಂಬಂತೆ ಹಲವು ಸೃಜನಶೀಲ ಮಕ್ಕಳು, ಹುಡುಗರು, ಹುಡುಗಿಯರು, ಗೂಡು ಕಟ್ಟಿಕೊಳ್ಳಲು ಅನುವು ಮಾಡಿದವರು. ರೆಕ್ಕೆ ಬಲಿತು ಹಾರಿದಾಗಲೂ ತಾಯಿಯಂತೆ ಚಡಪಡಿಸುತ್ತಲೇ ಹರಸಿ ಕಳಿಸಿದವರು. ಹೀಗೆ ಮುಟ್ಟಿದರೆ ಮಿಡಿಯುತ್ತಾ ಬಿಚ್ಚಿಕೊಳ್ಳುವ ಚಿತ್ರ ನಮ್ಮ ರಾಮಣ್ಣನದು. + +2005-06ರ ಈ ಸಮಯದಲ್ಲಿ ಆದಿಮ ತನ್ನ ನೆರಿಕೆ ಗರಿಕೆ ಗೂಡುಗಳಿಂದ ವಿಸ್ತರಿಸಿಕೊಳ್ಳುತ್ತಾ ಒಂದು ದೊಡ್ಡ ಆವರಣವಾಗಿ ಬೆಳೆದಿತ್ತು. ಗುಡ್ಡದ ಏರು ತಗ್ಗುಗಳನ್ನು ಆಶ್ರಯಿಸಿದ ಬಯಲು ವೇದಿಕೆ, ಪ್ರೇಕ್ಷಾಂಗಣ, ತಾಲೀಮಿನ ಒಳಾಂಗಣ, ಪುಸ್ತಕಾಲಯ, ಹುಲ್ಲಿನ ಮಾಡಿನ ವಸತಿ ಕುಟೀರಗಳು ಎಲ್ಲವೂ ನೆರೆತು ಆದಿಮ ಬೆಟ್ಟದ ಮೇಲಿನ ಸಾಂಸ್ಕೃತಿಕ ಹಾಡಿಯಂತೆ ಕಾಣಿಸುತ್ತಿತ್ತು. ಹಾಡುಗಾರರ ತಂಡಗಳು, ನಾಟಕ ತಂಡಗಳು, ಸಿನೆಮಾ, ಡಾಕ್ಯೂಮೆಂಟರಿಗೆ ಸಂಬಂಧಿಸಿದ ಕೆಲಸಗಳು, ಅಲ್ಲಿಗೆ ಬರುವ ಬರಹಗಾರರು, ಚಿಂತಕರೊಂದಿಗಿನ ಮಾತುಕತೆ, ಮುಂತಾಗಿ ರಾಮಣ್ಣನ ಕನಸುಗಳೆಲ್ಲ ಕ್ರಿಯೆಯಾಗುವ ಚಡಪಡಿಕೆಯಲ್ಲಿ ಆದಿಮದ ಚಟುವಟಿಕೆಗಳೆಲ್ಲಾ ಉತ್ತುಂಗದಲ್ಲಿತ್ತು. ಪ್ರತಿ ತಿಂಗಳ ‘ಹುಣ್ಣಿಮೆ ಹಾಡು’ ಕಾರ್ಯಕ್ರಮ ಸಮಾನ ಮನಸ್ಕರೆಲ್ಲರೂ ಕಲೆತು ನಾಟಕ, ಸಂಗೀತ, ವಿಚಾರಗೋಷ್ಟಿ, ಮಾತುಕತೆ, ಸಹಭೋಜನ, ಎಲ್ಲವೂ ತಿಂಗಳ ಬೆಳಕಲ್ಲಿ ಬೆಟ್ಟದ ಮೇಲೆ ನಡೆಯುವ ಒಂದು ದೊಡ್ಡ ಆಚರಣೆಯಾಗಿ ರಾಜ್ಯದ ಹಾಗೂ ದೇಶದ ಮುಖ್ಯ ಚಿಂತಕರ ಗಮನ ಸೆಳೆದಿತ್ತು. ಒಟ್ಟಾರೆಯಾಗಿ ಆದಿಮ ಶೋಷಿತ ಸಮುದಾಯಗಳ ಆತ್ಮವಿಶ್ವಾಸದ ರೂಪಕದಂತೆ ಬೆಳೆಯುತ್ತಿತ್ತು. + +ಈ ಹಂತದಲ್ಲಿ ಮಕ್ಕಳಿಗಾಗಿ ಬೇಸಿಗೆ ಶಿಬಿರ. ಸುತ್ತ ಮುತ್ತಲಿನ ಗ್ರಾಮಗಳ, ದೂರದಿಂದಲೂ ಬಂದ ಊರು-ಕೇರಿಯ ಗಂಡು ಹೆಣ್ಣು ಮಕ್ಕಳೆಲ್ಲಾ ಅಲ್ಲಿ ಸೇರಿದ್ದರು. ಸುಮಾರು ನೂರೈವತ್ತು ಮಕ್ಕಳಿದ್ದಿರಬಹುದು. ಅವರಿಗೆಲ್ಲಾ ಅಲ್ಲೇ ಊಟ ವಸತಿ. ರಾಮಣ್ಣನ ಕಾಳಜಿಯಿಂದ ಮಕ್ಕಳಿಗೆ ಸೊಳ್ಳೆ ಕಚ್ಚಬಾರದೆಂದು ನಲವತ್ತು ಐವತ್ತು ಮಕ್ಕಳಿಗಾಗುವಂತೆ ದೊಡ್ಡ ದೊಡ್ಡ ಸೊಳ್ಳೆ ಪರದೆಗಳನ್ನು ಹೊಲೆಸಿದ್ದರು. ಒಂದೇ ಸೊಳ್ಳೆ ಪರದೆಯಡಿಯಲ್ಲಿ ಅಷ್ಟು ಮಕ್ಕಳು ಮಲಗಿದ ಚಿತ್ರ ನನ್ನ ಕಣ್ಣಿನಲ್ಲಿನ್ನು ಹಾಗೆಯೇ ಇದೆ. ಇದೆಲ್ಲವೂ ತಾನಾಗೇ ಬರೆಸಿಕೊಳ್ಳುತ್ತಿದೆ. ನಾನು ಬರೆಯುತ್ತಿದ್ದೇನೆ. + +ಈ ಬೇಸಿಗೆ ಶಿಬಿರದಲ್ಲಿ ನಾನು ಮಕ್ಕಳಿಗೆ ಒಂದು ನಾಟಕ ಮಾಡಿಸಬೇಕಿತ್ತು. ನಾನು ರಾಮಣ್ಣನೇ ಬರೆದ ‘ಹಕ್ಕಿ ಹಾಡು’ ನಾಟಕವನ್ನು ಆಯ್ದುಕೊಂಡಿದ್ದೆ. ಇದು ಕನ್ನಯ್ಯಲಾಲ್‌ರವರ ಪ್ರಸಿದ್ಧ ನಾಟಕ ‘ಫೆಬೆತ್’ ಕಥೆಯಾಧರಿಸಿದ್ದು. ಪ್ರತಿ ತಂಡದಲ್ಲೂ ನಾಲ್ಕರಿಂದ ಒಂಬತ್ತನೇ ತರಗತಿಯವರೆಗಿನ ಸುಮಾರು ನಲವತ್ತಕ್ಕೂ ಹೆಚ್ಚು ಮಕ್ಕಳಿದ್ದರು. ಪ್ರತಿಯೊಂದು ತಂಡಕ್ಕೂ ಒಂದೊಂದು ಸೋಗೆ ಗರಿಗಳಿಂದ ಮಾಡಿದ ವಿಸ್ತಾರವಾದ ತಾಲೀಮು ಸ್ಥಳ. ರಾಮಕೃಷ್ಣ ಬೆಳ್ತೂರು ‘ರತ್ನಪಕ್ಷಿ’, ಮತ್ತು ಶಂಕರಯ್ಯ ಘಂಟಿ ಮತ್ತೊಂದು ನಾಟಕ ಆರಿಸಿಕೊಂಡಿದ್ದರು. ಬೆಟ್ಟದ ತುಂಬೆಲ್ಲ ಹಕ್ಕಿಗಳಂತೆ ಮಕ್ಕಳ ಕಲರವ. + +ಶಿಬಿರ ಶುರುವಾಗಿ ನಾಲ್ಕೈದು ದಿನಗಳಾಗಿವೆ ಮಿಕ್ಕೆಲ್ಲಾ ತಂಡಗಳು ಬಹಳ ಶಿಸ್ತಿನಿಂದ ನಾಟಕ ತಯಾರಿ ನಡೆಸುತ್ತಿದ್ದಾರೆ. ಆದರೆ ನನ್ನ ಕುಟೀರದಲ್ಲಿ ಮಾತ್ರ ಮಕ್ಕಳ ಗದ್ದಲ, ಹಾರಾಟ, ಕೂಗಾಟ, ಚೀರಾಟ, ಆಟ, ಆಟ.. ನಾನು ಬೆರಗಿನಿಂದ ಅವರ ಆಟವನ್ನು ನೋಡುತ್ತಾ ಕುಳಿತುಬಿಡುತ್ತಿದ್ದೆ. ನನ್ನ ಮನಸ್ಸನ್ನು ಮಕ್ಕಳೊಂದಿಗೆ ಶೃತಿಗೊಳಿಸಿಕೊಳ್ಳಲಾರದೆ ಚಡಪಡಿಸುತ್ತಿದ್ದೆ. ಬೇಸಿಗೆ ದಿನಗಳಾದ್ದರಿಂದ ಬರ‍್ಮುಡಾ ಚಡ್ಡಿಯ ಮೇಲೊಂದು ಕಸೆ ಅಂಗಿ ಹಾಕಿಕೊಂಡು ನಾಟಕದ ಬಗ್ಗೆ ಯೋಚಿಸುತ್ತಾ ಬಂಡೆ ಕಲ್ಲುಗಳ ಮೇಲೆ ಕುಳಿತೋ, ನಾಟಕವಾಡುವ ಮರದ ಬಳಿ ಅಡ್ಡಾಡುತ್ತಲೋ ಇದ್ದ ನನ್ನನ್ನು ಮಕ್ಕಳೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಅಷ್ಟರೊಳಗೆ ಎಲ್ಲರೂ ಕೂಡಿ ‘ಸತೀಶ್’ಗೆ ಮಕ್ಕಳಿಗೆ ನಾಟಕ ಮಾಡಿಸಲು ಬರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಾಗಿತ್ತು. ಮಕ್ಕಳನ್ನು ಹದ್ದುಬಸ್ತಿಗೆ ತರಲು ಕೆಲವರು ಕೈಯಲ್ಲಿ ಕೋಲು ಹಿಡಿದು ನನ್ನ ಸಹಾಯಕ್ಕೆ ಬಂದರು. ನನಗೆ ತುಂಬಾ ಕಷ್ಟವಾಯಿತು. ನನ್ನ ತಂಡವನ್ನು ನಾನೇ ಸರಿಪಡಿಸಿಕೊಳ್ಳುವುದಾಗಿ ಹೇಳಿ ಕೈ ಮುಗಿದು ಅವರನ್ನು ಕಳಿಸಿಬಿಟ್ಟೆ. ಹಲವು ಮಕ್ಕಳ ನಾಟಕಗಳಲ್ಲಿ ಅಭಿನಯಿಸಿ ಅಭ್ಯಾಸವಿದ್ದ ರಾಮಣ್ಣನ ಮಗಳು ‘ದಿಶಾ’ಳನ್ನು ನನ್ನ ಸಹಾಯಕ್ಕೆ ಕರೆದುಕೊಂಡೆ.. + +ಮೂರ‍್ನಾಲ್ಕು ದಿನಗಳಿಂದ ಆಡಿ ಕುಣಿದು ಕುಪ್ಪಳಿಸುತ್ತಿದ್ದ ಮಕ್ಕಳ ಶಕ್ತಿಯೆಲ್ಲಾ ಒಂದು ಹದಕ್ಕೆ ಬಂದಿತ್ತು. ನನ್ನ ಮತ್ತು ಮಕ್ಕಳ ವಯಸ್ಸುಗಳ ನಡುವೆ ದಿಶಾ ಇದ್ದುದ್ದರಿಂದ ನನ್ನ ತಾಲೀಮು ಆವರಣದಲ್ಲಿ ಒಂದು ರೀತಿಯ ಸಾಮರಸ್ಯ ಬರಲು ಶುರುವಾಗಿತ್ತು. ಅಷ್ಟರಲ್ಲಿ ನನಗೆ ಆ ಬೆಟ್ಟ ಗುಡ್ಡಗಳು, ರಾಮಣ್ಣನ ಕಾಳಜಿಗಳು, ನಾಟಕದ ಕಥೆ, ಪಾತ್ರಗಳು, ಮತ್ತು ಮಕ್ಕಳು ಆ ಪರಿಸರದಲ್ಲಿ ಹುಟ್ಟಿಸುತ್ತಿದ್ದ ಬೆರಗು ಎಲ್ಲವೂ ಒಂದರೊಳಗೊಂದು ಬೆರೆತು, ನನ್ನ ಮನಸ್ಸು ಮಕ್ಕಳೆಡೆಗೆ ಶೃತಿಗೊಳಿಸಿಕೊಳ್ಳಲು ಸಹಕರಿಸತೊಡಗಿತ್ತು. ಈ ಹಂತದಲ್ಲಿ ಎಲ್ಲ ಮಕ್ಕಳನ್ನು ಕರೆದು ವೃತ್ತದಲ್ಲಿ ಕೂರಿಸಿಕೊಂಡೆ. ಕಣ್ಣು ಮುಚ್ಚಲು ಹೇಳಿದೆ. ಬೆನ್ನು ನೆಟ್ಟಗೆ ಮಾಡಿ ನಿಧಾನವಾಗಿ ಮತ್ತು ಧೀರ್ಘವಾಗಿ ಉಸಿರಾಡಲು ಹೇಳಿದೆ. ಉಸಿರಾಟದ ಮೇಲೆ ಗಮನ ಕೇಂದ್ರೀಕರಿಸಲು ಹೇಳಿದೆ. ಸ್ವಲ್ಪ ಹೊತ್ತು ಸುಮ್ಮನಾದೆ. ಅವರೆಲ್ಲರೂ ಕಣ್ಣುಮುಚ್ಚಿದ ಕೆಲ ಕ್ಷಣಗಳಲ್ಲಿ ಈವರೆಗೆ ಅವರ ಎದುರಿಗಿದ್ದ ಜಗತ್ತು ಕತ್ತಲಲ್ಲಿ ಕರಗಿತು. ಹಲವರು ಇದ್ದ ಭಾವ ಕಳೆದು ಪ್ರತಿಯೊಬ್ಬರೂ ಏಕಾಂಗಿ ಏನಿಸಿತ್ತು. ಒಬ್ಬೊಬ್ಬರ ಮೌನವು ಉಳಿದವರಿಗೆ ಎಚ್ಚರವಾಗಿ ಕೆಲ ನಿಮಿಷಗಳಲ್ಲಿ ಇಡೀ ಆವರಣ ನಿಶಬ್ಧದಿಂದ ಕೂಡಿತ್ತು. ನಿಧಾನವಾಗಿ ಕಣ್ತೆರೆದು ಎಲ್ಲರಿಗೂ ನನ್ನನ್ನೇ ನೋಡುವಂತೆ ಹೇಳಿದೆ. ಮತ್ತೆ ಗುಜುಗುಜು ಪ್ರಾರಂಭವಾಗುವಷ್ಟರಲ್ಲಿ ಮಕ್ಕಳಿಗೆ ನಾಟಕದ ಕಥೆ ಹೇಳಲು ಶುರುಮಾಡಿದೆ… + + + +ಒಂದು ದೊಡ್ಡ ಕಾಡಿತ್ತು. ಆ ಕಾಡಲ್ಲಿ ಒಂದು ಹಕ್ಕಿ ಗೂಡು ಕಟ್ಟುವುದಕ್ಕೆ ಮರವನ್ನು ಕೇಳಿತು. ಮರ ಜಾಗ ಕೊಡ್ತು. ಹಕ್ಕಿ ಗೂಡು ಕಟ್ಟೊದಕ್ಕೆ ಕಾಡಿನ ಹಕ್ಕಿಗಳೆಲ್ಲಾ ಸಹಾಯ ಮಾಡಿದವು. ಹಕ್ಕಿ ಗೂಡಲ್ಲಿ ಮೊಟ್ಟೆ ಇಟ್ಟು ಕಾವಿಗೆ ಕೂತಿತ್ತು. ಇದನ್ನೆಲ್ಲಾ ಗಮನಿಸುತ್ತಿದ್ದ ಬೆಕ್ಕೊಂದು ಸನ್ಯಾಸಿ ವೇಷದಲ್ಲಿ ತನ್ನ ಸೈನ್ಯವನ್ನೆಲ್ಲಾ ಕರೆದುಕೊಂಡು ಹಕ್ಕಿ ಗೂಡಿನ ಬಳಿ ಬಂತು. ಹಕ್ಕೆವ್ವ ನಾನು ಈಗಷ್ಟೆ ಉಪವಾಸ ವ್ರತ ಮುಗಿಸಿದ್ದೇನೆ. ಹಸಿವಾಗ್ತಿದೆ. ನಿನ್ನ ಮೊಟ್ಟೆ ಕೊಡು ಅಂತ ಕೇಳ್ತು. ಆಗ ತಾಯಿ ಹಕ್ಕಿ ಉಪಾಯ ಮಾಡಿ ಮೊಟ್ಟೆ ಮರಿ ಆದ ಮೇಲೆ ಕೊಡ್ತಿನಿ ಅಂತು. ಸ್ವಲ್ಪ ದಿನ ಬಿಟ್ಟು ಬೆಕ್ಕು, ಮರಿ ಕೇಳ್ತು. ಆಗ ತಾಯಿ ಹಕ್ಕಿ ಮರಿ ಬೆಳೆದು ದೊಡ್ಡದಾದಾಗ ಕೊಡ್ತಿನಿ, ನಿನಗೂ ಹೊಟ್ಟೆ ತುಂಬತ್ತೆ ಅಂತು. ಸ್ವಲ್ಪ ದಿನ ಕಳೆದು ಮತ್ತೆ ಬೆಕ್ಕುಗಳು ಬಂದಾಗ ತಾಯಿ ಹಕ್ಕಿ ಮರಿಗಳಿಗೆ ಆಹಾರ ತರೊದಕ್ಕೆ ಅಂತ ಹೋಗಿತ್ತು. ಅಲ್ಲೆ ಆಡುತ್ತಿದ್ದ ಮರಿಹಕ್ಕಿಯೊಂದನ್ನು ಬೆಕ್ಕುಗಳು ಹಿಡಿದುಕೊಂಡು ಹೋದವು. ಉಳಿದವು ತಪ್ಪಿಸಿಕೊಂಡವು. ಈ ಬೆಕ್ಕುಗಳು ತನ್ನ ರಾಜ್ಯಕ್ಕೆ ಮರಿಹಕ್ಕಿಯನ್ನು ತಂದು ಚಹರೆಗಳನ್ನೆಲ್ಲಾ ಬದಲಿಸಿ, ಹೆಸರು ಬದಲಿಸಿ, ಆಧುನಿಕ ಸವಲತ್ತುಗಳನ್ನೆಲ್ಲಾ ನೀಡಿ ಆಮಿಷ ತೋರಿ ಬೇಟೆಯಾಡಲು ಕಲಿಸಿತು. ಕೈ ತುಂಬಾ ಉಡುಗೊರೆಗಳನ್ನು ಕೊಟ್ಟು ಉಳಿದ ನಿನ್ನ ಅಕ್ಕ, ತಂಗಿ, ಅಣ್ಣ, ತಮ್ಮಂದಿರನ್ನು ಈ ಉಡುಗೊರೆಗಳ ಆಮಿಷ ತೋರಿಸಿ ಕರೆದುಕೊಂಡು ಬಾ ಎಂದು ಹೇಳಿ ಕಳುಹಿಸಿದವು. ತಾಯಿಹಕ್ಕಿ ಇಲ್ಲದ ಸಮಯ ನೋಡಿ ಮರಿಹಕ್ಕಿ ಹೊಸ ವೇಷದಲ್ಲಿ ಗೂಡಿನ ಬಳಿ ಬಂದು ಎಲ್ಲರಿಗೂ ನೀವು ನನ್ನಂತೆ ಆಗಬಹುದು, ಬನ್ನಿ ನನ್ನ ಜೊತೆಗೆ; ಇದನ್ನೆಲ್ಲ ತೆಗೆದುಕೊಳ್ಳಿ ಎಂದು ಉಡುಗೊರೆಯ ಆಸೆ ತೋರಿಸಿತು. ಆಗ ಉಳಿದ ಹಕ್ಕಿಗಳು ಹೊಸ ವೇಷ, ಉಡುಗೊರೆಗಳ ಆಸೆಯಿಂದ ಗೂಡನ್ನು ತೊರೆದು ಮರಿಹಕ್ಕಿಯ ಜೊತೆಗೆ ಬೆಕ್ಕಿನ ರಾಜ್ಯದೆಡೆಗೆ ಹಾರುತ್ತಿದ್ದವು. ಆಗ ತಾಯಿಹಕ್ಕಿ ಎದುರಾಯಿತು. ತನ್ನ ಸಂಚಿಗೆ ತಾಯಿಹಕ್ಕಿ ಅಡ್ಡಿಪಡಿಸುವಳೆಂದು ತಿಳಿದು ಮರಿಹಕ್ಕಿ ಎಲ್ಲಾ ಹಕ್ಕಿಗಳೊಂದಿಗೆ ಸೇರಿ ತಾಯಿಹಕ್ಕಿಗೆ ಕಲ್ಲಿನಿಂದ ಹೊಡೆದವು. ಗಾಯಗೊಂಡ ತಾಯಿಹಕ್ಕಿ ಅಳುತ್ತಾ ಮರಿಗಳನ್ನು ನೆನೆದು ಜೋಗುಳ ಹಾಡಲು ಶುರುಮಾಡಿತು. ಜೋಗುಳ ಕೇಳಿದ ಎಲ್ಲಾ ಮರಿಗಳು ಏನೋ ಕಳೆದುಕೊಂಡಂತಾಗಿ ತಾಯಿಯ ಬಳಿಗೆ ಮರಳಿದವು. ಮರಿಹಕ್ಕಿ ಮಾತ್ರ ಎಲ್ಲಿ ಹೋಗುವುದೆಂದು ತಿಳಿಯದೆ ಚಡಪಡಿಸುತ್ತಿತ್ತು… + +ಹೀಗೆ ಸಾಗಿದ ಕಥೆ ಮಕ್ಕಳಿಗೆ ತುಂಬಾ ಇಷ್ಟವಾಯಿತು. ಕಥೆಯ ಆವರಣದೊಳಗೆ ಇಳಿದ ಮಕ್ಕಳು ಪಾತ್ರಗಳಲ್ಲಿ ತಮ್ಮನ್ನು ಗುರುತಿಸಿಕೊಳ್ಳಲು ಶುರುಮಾಡಿದರು. ಗಂಡು ಮಕ್ಕಳೆಲ್ಲಾ ಬೆಕ್ಕಾದರು. ಹೆಣ್ಣುಮಕ್ಕಳೆಲ್ಲಾ ಗಿಳಿಗಳಾದರು. ಈ ನಾಟಕದ ತುಂಬಾ ಹಾಡುಗಳು. ‘ಇಸ್ಮಾಯಿಲ್ ಗೋನಾಳ್’ ಸಂಯೋಜಿಸಿದ ಸಂಗೀತವನ್ನು ರತ್ನ ಸಕಲೇಶಪುರ, ರಾಜಪ್ಪ ಹಾಡುತ್ತಿದ್ದರು. ಕೆಲವೇ ದಿನಗಳಲ್ಲಿ ಮಕ್ಕಳು ಹಾಡುಗಳನ್ನು ಕಲಿತರು. ಬೆಕ್ಕು ಹಕ್ಕಿಗಳ ಚಲನ ವಲನಗಳನ್ನು, ಹಾರಾಟ ಚೀರಾಟವನ್ನು, ಅನುಕರಿಸಲು ನಾಟಕಕ್ಕೊಂದು ರೂಪ ತಾನಾಗಿಯೇ ಬರತೊಡಗಿತು. ಇಷ್ಟರಲ್ಲಿ ಬೆಟ್ಟದ ಮೇಲಿದ್ದ ಆಲದಮರದ ಮೇಲೆ ಬಿದಿರಿನಿಂದ ಮಾಡಿದ ದೊಡ್ಡ ಗೂಡು, ಮರದ ಮೇಲಿಂದ ಅಂಗಳಕ್ಕೊಂದು ಇಳಿಜಾರು ಇವೆಲ್ಲಾ ಹಕ್ಕಿಗಳ ಆಡುಂಬೊಲವಾದರೆ, ಅಲ್ಲೆ ಪಕ್ಕದಲ್ಲಿದ್ದ ದೊಡ್ಡ ದೊಡ್ಡ ಬಂಡೆಗಳ ನಡುವಿನಿಂದ ಬೆಕ್ಕುಗಳ ಪ್ರವೇಶ. ಹೀಗೆ ಆಡುತ್ತಾಡುತ್ತಾ ಬೆಕ್ಕುಗಳಿಗೆ ಬಾಲ ಮೂಡಿ ಹಕ್ಕಿಗಳಿಗೆ ಕೊಕ್ಕು ರೆಕ್ಕೆ ಬಂದು ಬುದ್ದ ಪೂರ್ಣಿಮೆ ರಾತ್ರಿ ಹುಣ್ಣಿಮೆಯ ಬೆಳಕಲ್ಲಿ ಹಾಡು, ಸಂಗೀತದಲ್ಲಿ ನಲಿದ ಮಕ್ಕಳು ನಾಟಕವಾಡಿದರು. ನಾಟಕ ‘ಆಯಿತು’. + +ಮಕ್ಕಳೊಂದಿಗೆ ಬೆರೆತು ನಾಟಕ ಆಗಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಂಡಾಗ ಕೆಲವೊಮ್ಮೆ ನನಗೆ ಹೀಗೆ ಅನ್ನಿಸುವುದುಂಟು; + +ಜಗತ್ತಿನಲ್ಲಿರುವ ಎಲ್ಲಾ ಮಕ್ಕಳ ಮನಸ್ಸು ಆಯಾ ಕಾಲ, ದೇಶ, ಭಾಷೆ ಮುಂತಾದ ಪರಿಸ್ಥಿತಿಗಳಲ್ಲಿ ವ್ಯಕ್ತವಾಗುತ್ತಿರುತ್ತದೆ. ಇಲ್ಲಿ ಎಲ್ಲಾ ಮಕ್ಕಳ ಮನಸ್ಸುಗಳೂ ಕೂಡ ಹಲವು ಚಿಂತನೆ, ಆಲೋಚನೆ, ಪರಿಕಲ್ಪನೆ, ಐಡಿಯಾಲಜಿ, ಇಸಂ ಮುಂತಾದ ಪೂರ್ವಾಗ್ರಹಗಳಿಂದ ಸೃಷ್ಠಿಯಾಗುತ್ತಿರುವ ಜಾಗತಿಕ ಒತ್ತಡಗಳಿಂದ ಬಿಡುಗಡೆಯನ್ನು ಬಯಸುತ್ತಿರುತ್ತದೆ. ಇದು ಒಂದು ರೀತಿಯಲ್ಲ ಸತ್ಯವನ್ನು ಆಗ್ರಹಿಸಿದಂತೆ; ಅಂದರೆ ಸತ್ಯಾಗ್ರಹ. ದೊಡ್ಡವರು ಮುಗ್ಧತೆ ಎಂದು ಕರೆಯುವ ಮನಸುಗಳಲ್ಲಿ ಅಂತರ್ಗತವಾಗಿರುವ ಚಳುವಳಿ. ಇದು ನಾಟಕವಾಗುವ ಪ್ರಕ್ರಿಯೆಯಲ್ಲಿ ಮಕ್ಕಳು ಸ್ಪಂದಿಸುವ, ಪ್ರತಿಭಟಿಸುವ, ಒತ್ತಾಯಿಸುವ ರೀತಿಯಲ್ಲಿ ವ್ಯಕ್ತವಾಗುತ್ತಿರುತ್ತದೆ. ಇವುಗಳನ್ನು ಗ್ರಹಿಸಿ ಅರ್ಥಮಾಡಿಕೊಳ್ಳುವ ಸೂಕ್ಷ್ಮತೆ ನಮಗಿರಬೇಕಷ್ಟೆ. + +(ಸತೀಶ್‌ ತಿಪಟೂರು) + +ನಾಟಕದ ಪ್ರಕ್ರಿಯೆಯಲ್ಲಿ ನಾಟಕಕಾರ, ನಿರ್ದೇಶಕ ಮುಂತಾದವರು ನಾಟಕವನ್ನು ಅವರವರ ದೃಷ್ಠಿಕೋನಗಳಲ್ಲಿ ಮಕ್ಕಳ ಮೂಲಕ ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದರೆ, ಒಮ್ಮೊಮ್ಮೆ ಮಕ್ಕಳು ಅದನ್ನು ಮತ್ತೊಂದು ನೆಲೆಯಲ್ಲಿ ಕಾಣಿಸಿಬಿಡುತ್ತಾರೆ. ನಾಟಕವು ಮಕ್ಕಳನ್ನು ಒಳಗೊಳ್ಳುವ ಪ್ರಕ್ರಿಯೆಯು ಅವರ ಮನಸುಗಳಲ್ಲಿ ಕತೆಗಳ ಬೀಜಗಳನ್ನು ಬಿತ್ತಿ ಅವರ ಕಲ್ಪನೆಗಳ ಕಾವಿನಲ್ಲಿ ಮೊಳೆಸಿ, ಬೆಳೆಸುತ್ತಾ ನಾಟಕವು ಅವರ ದೇಹ – ಧ್ವನಿಗಳನ್ನು ವ್ಯಾಪಿಸಿ ಆಕಾರ ಪಡೆದು ಅರಳಿಕೊಂಡತೆ ಆಗಬೇಕು. ಇಂತಲ್ಲಿ ಒಂದು ರೀತಿಯ ಮಕ್ಕಳ ಸಮಷ್ಠಿ ಪ್ರಜ್ಞೆಯ ಪ್ರತಿಕ್ರಿಯೆಯು ಅಗೋಚರವಾಗಿ ಇರುವುದರಿಂದ ನಾಟಕದ ಆಯಾಮವೇ ಬದಲಾಗಿರುತ್ತದೆ ಮತ್ತು ಸತ್ಯದಲ್ಲಿ ಸಾರ್ಥಕವಾಗಿರುತ್ತದೆ. ಇದು ಮಕ್ಕಳಿಂದ ‘ಆದ’ ನಾಟಕವಾಗಿರುತ್ತದೆ. + +ರಾಮಣ್ಣನ ‘ಹಕ್ಕಿ ಹಾಡು’ ನಾಟಕದಲ್ಲಿ ಕಥೆಯಿಂದ ಮೊದಲಾಗಿ ಒದಗಿಬಂದ ಎಲ್ಲದರಲ್ಲೂ ನಾನೂ ಒಬ್ಬನಾಗಿ ಸಹಕರಿಸಿದ್ದು ಬಿಟ್ಟರೆ ಹೆಚ್ಚಿನದೇನನ್ನೂ ನಾನು ಮಾಡಲಿಲ್ಲ. ನಾಟಕ ಚೆನ್ನಾಗಿಯೇ ಆಯಿತು. + + + +…ಹೀಗೆ ರಾಮಣ್ಣನ ಆಂತರ್ಯದ ಆದರ್ಶ ಕಾಳಜಿಗಳೆಲ್ಲವೂ ಹರಳುಗಟ್ಟಿ ಅವರ ವ್ಯಕ್ತಿತ್ವದ ಒಂದು ಕಾಲಘಟ್ಟದ ಅಭಿವ್ಯಕ್ತಿ ಎಂಬಂತೆ ‘ಆದಿಮ’ ಅರಳಿಕೊಂಡು ಪ್ರಕಾಶಿಸುತ್ತಿದ್ದ ಸಮಯದಲ್ಲಿ ನಾನು ಅವರೊಂದಿಗೆ ಇದ್ದದ್ದು ನನ್ನ ಭಾಗ್ಯವೆಂದೇ ಹೇಳಬೇಕು. ತಳ ಸಮುದಾಯಗಳ ಆತ್ಮವಿಶ್ವಾಸದ ಅಸ್ಮಿತೆ ಎಂಬಂತೆ ಕಾಣುತ್ತಿದ್ದ ಅಂತರ ಗಂಗೆ ಬೆಟ್ಟದ ಮೇಲಿನ ತೇರ ಹಳ್ಳಿಯ ಆದಿಮದ ಆ ನೆಲ ಹಲವು ವರ್ಷಗಳ ಹಿಂದೆ ಅಲ್ಲಿ ನೆಲೆಸಿದ್ದ ‘ಜಿಂಕೆ ರಾಮಯ್ಯ’ ಎಂಬ ಸಂತರೊಬ್ಬರು ಜೀವಂತ ಸಮಾಧಿಯಾದ ಜಾಗ. ಈ ಕುರಿತು ರಾಮಣ್ಣನ ಗುರುಗಳಾದ ಶ್ರೀರಾಮಯ್ಯ ಮೇಷ್ಟ್ರು ಆ ಬಂಡೆಗಲ್ಲುಗಳ ನಡುವೆ ನಳನಳಿಸುತ್ತಿದ್ದ ಗಿಡಮರ ಕುಟೀರಗಳ ನಡುವೆ ನಿಂತು ಬೀಜಗಳನ್ನು ಚೆಲ್ಲುತ್ತಾ “ಕೆಲವು ಸ್ಥಳಗಳು ಕೆಲವರಿಗಾಗಿ ಕಾಯುತ್ತಾ ಇರುತ್ತವೆ. ಹಾಗೆಯೇ ಜಿಂಕೆ ರಾಮಯ್ಯನ ಈ ನೆಲ ಕೋಟಿಗಾನಹಳ್ಳಿ ರಾಮಯ್ಯನ ಬರುವಿಕೆಗೆ, ಇರುವಿಕೆಗೆ, ಇಷ್ಟು ವರ್ಷಗಳು ಕಾಯುತ್ತಿತ್ತು”. ಎಂದು ಹೇಳಿದ ಮಾತು ನನ್ನೊಳಗೆ ಈಗಲೂ ಕಾಡುತ್ತಲೇ ಇರುತ್ತದೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_73.txt b/Kenda Sampige/article_73.txt new file mode 100644 index 0000000000000000000000000000000000000000..ca62d30022470e63af1c78b56af609a0ba874f21 --- /dev/null +++ b/Kenda Sampige/article_73.txt @@ -0,0 +1,31 @@ +ಪ್ರಿಯ ಭೂಮಿ + +ಕೆಲವು ವರ್ಷಗಳ ಹಿಂದೆ ಶೂದ್ರಕ ಕವಿಯ ಸಂಸ್ಕೃತ ನಾಟಕ ಮೃಚ್ಛಕಟಿಕಾ ಆದರಿಸಿದ ‘ವಸಂತಸೇನೆ’ ನಾಟಕದ ಪ್ರಕ್ರಿಯೆಯಲ್ಲಿ ನಿರ್ದೇಶಕನಾಗಿ ಪಾಲ್ಗೊಂಡಿದ್ದೆ. ಪ್ರದರ್ಶನವಾದ ಮರುದಿನ ಎಲ್ಲರನ್ನು ಬೀಳ್ಕೊಟ್ಟು ನಾನು ನನ್ನ ಕುಟುಂಬದೊಂದಿಗೆ ಹೆಗ್ಗೋಡಿನಿಂದ ತೀರ್ಥಹಳ್ಳಿಗೆ ಹೋಗಿದ್ದೆ. ಇಲ್ಲಿ ಸ್ನೇಹಿತರಾದ ಶ್ರೀಧರ್ ಅವರನ್ನು ಭೇಟಿಮಾಡಿ ಅವರ ತೋಟವನ್ನು ನೋಡುವುದು ನಮ್ಮ ಉದ್ದೇಶವಾಗಿತ್ತು. ನೀನಾಸಮ್ ಸೇರಿದಂತೆ ಕರ್ನಾಟಕದ ಹಲವು ರಂಗಮಂದಿರಗಳನ್ನು ವಿನ್ಯಾಸ ಮಾಡಿದ ಶ್ರೀಧರ್ ವಿನ್ಯಾಸಕಾರರಾಗಿ, ಆಧುನಿಕತೆಯ ಎಲ್ಲಾ ಆಯಾಮಗಳಿಗೂ ವಿಸ್ತರಿಸಿಕೊಂಡು ಪರಿಸರವಾದಿಯಾಗಿ ಧ್ಯಾನಸ್ಥರಂತೆ ತೋಟದಲ್ಲಿ ಇರುವವರು. + +(ಸತೀಶ್‌ ತಿಪಟೂರು) + +ತೀರ್ಥಹಳ್ಳಿಯಿಂದ ಶಿವಮೊಗ್ಗದ ದಾರಿಯಲ್ಲಿ ನಾಲ್ಕು ಕಿಲೋಮೀಟರ್ ಸಾಗಿದರೆ ಎಡಕ್ಕೆ ಸಿಗುವ ಕಣಿವೆಯ ಒಳದಾರಿಯಲ್ಲಿ ಇವರ ಊರು ಕಲ್ಲಹಳ್ಳ ಇದೆ. ಇಲ್ಲೇ ಇವರ ತೋಟದ ಮನೆ ಇರುವುದು. ಕಲ್ಲಹಳ್ಳ ಎಂದರೆ ಇವರದೊಂದೆ ಮನೆ. ತೋಟದೊಳಗೆ ಇವರ ಹಿರಿಯರು ವಾಸಿಸುತ್ತಿದ್ದ ದೊಡ್ಡ ಮನೆ. ಸುತ್ತಲೂ ದೊಡ್ಡ ತೋಟ. ಈ ಮನೆತನದ ಈ ಪ್ರದೇಶಕ್ಕೆ ಸುಮಾರು ನಾಲ್ಕು ನೂರು ವರ್ಷಗಳ ಇತಿಹಾಸವಿದೆ ಎಂದು ಅವರು ಹೇಳಿದ ನೆನಪು. ಶ್ರೀಧರ್ ಅವರ ತಂದೆ ಗಂಗಾಧರ್ ಅವರು ಯು.ಆರ್ ಅನಂತಮೂರ್ತಿ ಮತ್ತು ಕೆ.ವಿ ಸುಬ್ಬಣ್ಣನವರ ಸಮಕಾಲೀನರು. ಈ ಮೂವರು ಒಟ್ಟಿಗೆ ಇರುತ್ತಿದ್ದುದನ್ನು ನಾನು ನೀನಾಸಮ್ ವಿದ್ಯಾರ್ಥಿಯಾಗಿದ್ದಾಗ ಹಲವು ಬಾರಿ ನೋಡಿದ್ದೆ. + +ಶ್ರೀಧರ್ ಸ್ವತಃ ಹಿಂದೂಸ್ತಾನಿ ಸಂಗೀತ ಅಭ್ಯಾಸದಲ್ಲಿರುವವರು ಮತ್ತು ಅವರ ತಾಯಿ ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪಡೆದವರು. ಇದನ್ನೆಲ್ಲ ಹೇಳಲು ಕಾರಣ ಇದೆ. ಅವರ ತೋಟದ ನೈಜತೆಯಲ್ಲಿ ಈ ಮನೆತನದ ಹಿನ್ನೆಲೆಯ ಶೃತಿಯಿರುವಂತೆ ಭಾಸವಾಗುತ್ತದೆ. ಅದು ನಿಜವಾಗಿ ತೋಟವಲ್ಲ ಕಾಡು; ಕಾಡೇ.. ಈ ತೋಟ ಆಳ ಕಣಿವೆಯಲ್ಲಿದ್ದರೆ; ಮತ್ತೊಂದು ಅಲ್ಲೇ ಹತ್ತಿರದ ತುಂಗಾ ನದಿಯ ದಂಡೆಯಲ್ಲಿ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ ಇವರ ತೋಟವನ್ನು ಆವರಿಸುವುದುಂಟಂತೆ. ಈ ಎರಡೂ ತೋಟಗಳು ಇರುವುದು ಅನಂತಮೂರ್ತಿಯವರ ಕಾದಂಬರಿ ‘ಭಾರತೀಪುರ’ ಅಂತ ಇದೆಯಲ್ಲ ಆ ಭಾರತೀಪುರದ ಬಳಿ. ಶ್ರೀಧರ್ ಹೇಳಿದಂತೆ ಹೆಸರೊಂದನ್ನು ಹೊರತುಪಡಿಸಿದರೆ ಕಾದಂಬರಿಯ ಸನ್ನಿವೇಶಗಳಿಗೂ ಈ ಭಾರತೀಪುರಕ್ಕೂ ಏನೂ ಸಂಬಂಧವಿಲ್ಲವಂತೆ. + +ಹೆಗ್ಗೋಡಿನಿಂದ ತೀರ್ಥಹಳ್ಳಿಗೆ ಕಾರಿನಲ್ಲಿ ಹೋಗುವಾಗ ಮನಸ್ಸು ತುಂಬಾ ಭಾರವಾಗಿತ್ತು. ನಾಟಕ ಇನ್ನೂ ಬೆಳೆಯುತ್ತಿರುವ ಹಂತದಲ್ಲೇ ಪ್ರದರ್ಶನವಾಗಿತ್ತು. ನಾಟಕ ತನ್ನ ಎಮೋಷನಲ್ ಮೆಚ್ಯೂರಿಟಿಯನ್ನು (ಒಂದು ಹಂತದ ಭಾವಸ್ಥರಗಳ ಪ್ರಬುದ್ಧ ಸ್ಥಿತಿ) ತಲುಪಲು ಇನ್ನೂ ದೂರ ಸಾಗಬೇಕಿತ್ತು. ಆದರೆ ನನಗಿದ್ದ ಕಾಲ ಮಿತಿಯಲ್ಲಿ ಅಸಹಾಯಕನಾಗಿದ್ದೆ. ನಾಟಕದ ಪಾತ್ರಗಳ ಉಳಿದೆಲ್ಲಾ ಭಾವನೆಗಳು ನನ್ನೊಳಗೆ ಬೆಳೆಯತೊಡಗಿದ್ದವು. ನಟ ನಟಿಯರಿಲ್ಲದೇ ಯಾರೊಂದಿಗೂ ಹಂಚಿಕೊಳ್ಳಲಾಗದ ವಿಕಲಾಂಗ ಪರಿಸ್ಥಿತಿ ನನ್ನದಾಗಿತ್ತು. ಆದರೂ ಒಂದು ರೀತಿಯ ಸಮಾಧಾನವಿತ್ತು. ನಾಟಕ ಆಗುವಲ್ಲಿ ನಾನು ಕಂಡುಕೊಂಡ ಪ್ರಕ್ರಿಯೆಗಳಲ್ಲಿ ನನಗೆ ವಿಶ್ವಾಸ ಮೂಡಿತ್ತು. ಬಹಳ ವರ್ಷಗಳಿಂದ ನಾನು ನಮ್ಮ ರಂಗಪ್ರಯೋಗ ಶಾಲೆಯಲ್ಲಿ ನಡೆಸಿದ ಸಹಜ ಕೃಷಿಯ ಪ್ರಯೋಗಗಳು ಫಲಕೊಡುವ ಲಕ್ಷಣಗಳು ನನಗೆ ಇಲ್ಲಿ ಕಾಣಿಸಿತ್ತು. ಈ ತಂಡದೊಂದಿಗಿನ ನಾಟಕ ಪ್ರಕ್ರಿಯೆಯಲ್ಲಿ ನಾನೇನೂ ಕಲಿಸಲು ಪ್ರಯತ್ನಿಸಿರಲಿಲ್ಲ, ಅವರು ಏನೂ ಕಲಿತಂತೆನಿಸಲಿಲ್ಲ ಆದರೂ ನಾಟಕ ಆಯಿತು. ಇಲ್ಲಿ ನಾನು ಮತ್ತು ಅವರು ಬೇರೆ ಬೇರೆಯಾಗಿರಲಿಲ್ಲ. ಈ ಇಡೀ ಪ್ರಕ್ರಿಯೆಯಲ್ಲಿ ‘ನಾನು’ ಎನ್ನುವ ಕೇಂದ್ರವೇ ಇಲ್ಲವಾಗಿ ಅವರೊಳಗೆ ಬೆರೆತು ಹೋಗುವ ಪ್ರಯತ್ನ ಮಾಡಿದ್ದೆ. ಅದಕ್ಕೆ ಏನೋ ಈ ಎಲ್ಲ ಪಾತ್ರಗಳನ್ನೂ ನನ್ನೊಳಗಿಂದ ವಿಸರ್ಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾದಾಗ ಸಂಕಟವಾಗಿದ್ದು. ಇದು ನನ್ನ ಪ್ರೋಸಸ್‌ನ ಸಮಸ್ಯೆ ಇರಬಹುದೇ; ಗೊತ್ತಿಲ್ಲ. ನಾನು ಕಂಡುಕೊಳ್ಳಬೇಕಿತ್ತು. ಈ ಎಲ್ಲ ಪ್ರಶ್ನೆಗಳೂ ತೀರ್ಥಹಳ್ಳಿಗೆ ಹೋಗುವ ದಾರಿಯುದ್ದಕ್ಕೂ ಕಾಡುತ್ತಿದ್ದವು. + +ಕಾರು ಭಾರತೀಪುರ ಮುಟ್ಟಿ ಕಣಿವೆಯಲ್ಲಿ ಇಳಿಯುತ್ತಿರುವಂತೆಯೇ ದೂರದಲ್ಲಿ ಕಲ್ಲಹಳ್ಳದ ತೋಟ ಗೋಚರವಾಗಿ ವಿಸ್ಮಯ ಲೋಕವೊಂದು ನಮ್ಮೊಳಗೆ ತೆರೆದುಕೊಳ್ಳುತ್ತಿರುವಂತೆ ಭಾಸವಾಯಿತು. ಶ್ರೀಧರ್ ಅವರು ಹಿಂದೆ ಅವರ ಪೂರ್ವಿಕರು ಬಳಸುತ್ತಿದ್ದ ಕೊಟ್ಟಿಗೆಯನ್ನೇ ‘ಕಛೇರಿ-ಮನೆ’ಯಂತೆ ರೂಪಿಸಿಕೊಂಡಿದ್ದರು. ಅವರ ಸಹಾಯಕರೊಬ್ಬರು ಕಂಪ್ಯೂಟರ್‌ನಲ್ಲಿ ಯಾವುದೊ ಮನೆಯ ವಿನ್ಯಾಸ ಮಾಡುತ್ತಿದ್ದರು. ಅಲ್ಲೆ ಪಕ್ಕದಲ್ಲೆ ಶ್ರೀಧರ್ ಅಯ್ಯನವರು (ಹೆದ್ದಾರಿಯ ತಿರುವಿನಲ್ಲಿ ಇವರ ತೋಟದ ಮನೆಯ ವಿಳಾಸ ಕೇಳಿದಾಗ ಗೂಡಂಗಡಿಯ ಆ ಹೆಣ್ಣು ಮಗಳು ಇವರನ್ನು ಸಂಬೋಧಿಸಿದ್ದು ‘ಶ್ರೀಧರ್ ಅಯ್ಯ’ನವರು ಎಂದು) ಜೀನ್ಸ್ ಪ್ಯಾಂಟ್, ವೇಸ್ಟ್ ಕೋಟ್, ತಲೆಗೊಂದು ರೌಂಡ್ ಹ್ಯಾಟ್, ಶೂ ಹಾಕಿಕೊಂಡು ಆಧುನಿಕ ಕೃಷಿಕನಂತೆ ಮೆಣಸನ್ನು ಅಳತೆ ಮಾಡಿಸುತ್ತಿದ್ದರು. + + + +ಬೆಲ್ಲ ಹಾಕಿದ ಹಾಲು ಹಾಗು ಮಾವಿನ ಹಣ್ಣುಗಳನ್ನು ತಿಂದು ಸ್ವಲ್ಪ ಹರಟಿ ಅವರೊಂದಿಗೆ ನಾವು ತೋಟ ನೋಡಲು ಹೊರಟೆವು. ಅದೊಂದು ವಿಸ್ಮಯ ಸಂಚಾರ. ಅದು ಸಮತಟ್ಟಾದ ತೋಟವಲ್ಲ, ಏಕ ರೂಪದ ಗಿಡಮರಗಳಿಲ್ಲ. ಹಲವು ಹಸಿರುಗಳ ವೈವಿಧ್ಯ. ಏರು, ತಗ್ಗು, ಇಳಿಜಾರು, ಸಣ್ಣದಾಗಿ ಹರಿಯುವ ತೊರೆಯ ಕೊರಕು, ಮಳೆಯ ಅಬ್ಬರದ ದಿನಗಳಲ್ಲಿ ತುಂಬಿ ಹರಿಯುವ ಕಾಲುವೆ, ದಾಟಲು ಕಟ್ಟಿದ ದಣಪೆಗಳು… ನೆಡೆದಷ್ಟೂ ಕಗ್ಗಾಡು, ತಟ್ಟನೆ ಎದುರಾಗಿ ದಿಕ್ಕು ಬದಲಿಸಲು ಹೇಳುವ ಗುಡ್ಡ ಹೀಗೆ ಸುಮಾರು ನಲವತ್ತು ಎಕರೆ ವಿಸ್ತಾರವಾದ ‘ಕಾಡು ತೋಟ’. ಆಕಳ ಗಂಜಳ, ಸಗಣಿ, ಮಣ್ಣ ವಾಸನೆ ಬಿಟ್ಟರೆ ಯಾವ ರಸಾಯನಿಕಗಳ ಹಂಗಿಲ್ಲದ ತೋಟ. ಶ್ರೀಧರ್ ಅಡಿಕೆ, ತೆಂಗು, ಕೋಕ್, ಮೆಣಸು, ಏಲಕ್ಕಿ, ಸೇರಿದಂತೆ ಅವರ ತೋಟದಲ್ಲಿದ್ದ ಹಲವಾರು ರೀತಿಯ ಹಣ್ಣಿನ ಮತ್ತು ಕಾಡು ಮರಗಳ ಕುರಿತು ವಿವರಿಸುತ್ತಾ ಸಾಗುತ್ತಿದ್ದರು. ಕಣ್ಣಿಗೆ ಅಡ್ಡಲಾಗುವ ಮರಗಿಡಗಳ ರೆಕ್ಕೆಗಳಿಂದ ದಾರಿ ಬಿಡಿಸಿಕೊಳ್ಳುತ್ತಾ ನಾವು ನಡೆಯುತ್ತಿದ್ದೆವು. ದಾರಿಯಲ್ಲಿ ನಡುವೆ ನೀಲಿ ಬಣ್ಣದ ಡ್ರಂ ಒಂದರಲ್ಲಿ ‘ಜೀವಾಮೃತ’ವನ್ನು ಬೆರೆಸಿ ಇಟ್ಟಿದ್ದರು. ಇದು ಸಗಣಿ, ಗಂಜಲ, ಬೆಲ್ಲ ಇತರ ನೈಸರ್ಗಿಕವನ್ನು ಬಳಸಿ ಮಾಡಲಾದ ಭೂಮಿಯ ಫಲವತ್ತತೆ ಹೆಚ್ಚಿಸುವ, ಮರಗಿಡಗಳಿಗೆ ಚೈತನ್ಯವನ್ನು ನೀಡುವ ಅಮೃತ. ಈ ತೋಟದಲ್ಲಿ ಹೀಗೆ ಸುತ್ತಾಡುತ್ತಿರುವ ಹೊತ್ತಿಗೆ ಮಧ್ಯಾಹ್ನ ಸಂಜೆಗೆ ತಿರುಗಿಕೊಳ್ಳುವ ಸಮಯವಾಗುತ್ತಿದ್ದುದರಿಂದ ಅಲ್ಲೇ ಸ್ವಲ್ಪ ದೂರದಲ್ಲಿ ರಸ್ತೆಯ ಬಲ ಬದಿಗೆ ಇದ್ದ ಇನ್ನೊಂದು ತೋಟದಿಂದ ಆಕಳಿಗೆ ಮೇವು ತರಲು ಹೊರಟ ಶ್ರೀಧರ್‌ರವರೊಂದಿಗೆ ನಾವು ಮುಂದುವರೆದೆವು. + +ಈ ತೋಟವಿರುವುದು ಭಾರತೀಪುರ ಹೆದ್ದಾರಿಯಿಂದ ಬಲಗಡೆಯ ತಿರುವಿನಲ್ಲಿ. ಸ್ವಲ್ಪ ದೂರ ಕಿರಿದಾದ ದಾರಿಯಲ್ಲಿ ಹೋಗಬೇಕು. ನಾವು ಹೋಗುವಷ್ಟರಲ್ಲಿ ಕೆಲ ಹೆಂಗಸರು ದೊಡ್ಡ ದೊಡ್ಡ ಹಸಿರಾದ ಹುಲ್ಲಿನ ಪೆಂಡಿಗಳನ್ನು ಕಟ್ಟಿ, ಗೇಟಿನ ಬಳಿ ಜೋಡಿಸುತ್ತಿದ್ದರು. ನಮ್ಮ ಕಡೆ ಅಷ್ಟು ಹಸಿರಾದ ಆ ಜಾತಿಯ ಹುಲ್ಲಿನ ಪೆಂಡಿಗಳನ್ನು ನೋಡಿರಲಿಲ್ಲ. ಸಮಯ ಕಡಿಮೆ ಇದ್ದುದರಿಂದ ನಾನು ಶ್ರೀಧರ್ ಅವರ ಹಿಂದೆ ಓಡಿದೆ. ನಾವು ತೋಟದ ಒಂದು ಅಂಚಿನಿಂದ ಇನ್ನೊಂದು ಅಂಚಿಗೆ ಬಿರಬಿರನೆ ಹೆಜ್ಜೆ ಹಾಕುತ್ತಿದ್ದೆವು. ಮರಗಿಡಗಳ ನಡುವಿನ ಕಾಲು ಹಾದಿಯಲ್ಲಿ ಸ್ವಲ್ಪ ದೂರ ನಡೆದು ಪಂಪ್ ಹೌಸ್ ಬಳಿ ಅವರು ನಿಂತರು. ಮರಗಿಡಗಳ ನಡುವೆ ಏನೋ ಕಂಡಂತಾಗಿ ನಾನು ನಿಂತೆ. ನಿಧಾನವಾಗಿ ಹೆಜ್ಜೆಯಿಟ್ಟು ಮುಂದೆ ಸರಿದು ನೋಡಿದರೆ ಪ್ರಪಾತದಂತೆ ಆಳ, ಅಗಲ, ವಿಸ್ತಾರವಾದ ತುಂಗಾ ನದಿ. ಅಬ್ಬಾ! ರೋಮಾಂಚನವಾಯಿತು. ನಾವು ನದಿಯ ತಟದಲ್ಲಿ ನಿಂತಿದ್ದೆವು. ಅವರ ತೋಟ ಉದ್ದಕ್ಕೂ ನದಿಯನ್ನು ಮುಟ್ಟಿಕೊಂಡೇ ಇದೆ. ಮಳೆಗಾಲದಲ್ಲಿ ನದಿ ತುಂಬಿ ಹರಿದರೆ, ತೋಟದ ಯಾವೆಲ್ಲಾ ಭಾಗ ಜಲಾವೃತವಾಗುತ್ತದೆಂದು ಅವರು ತೋರಿಸಿದರು. ಆ ಚಿತ್ರಣವನ್ನು ನೆನಸಿಕೊಂಡೇ ಮೈ ಮನಸ್ಸೆಲ್ಲಾ ಪುಳಕಗೊಂಡಿತ್ತು. ‘ತುಂಗಾ ತೀರದ ಬಲಗಡೆಯಲ್ಲಿ ಅಲ್ಲೊಂದಿತ್ತು ಬೊಮ್ಮನಹಳ್ಳಿ’ ಅಂತ ಕುವೆಂಪು ಅವರ ಕಿಂದರ ಜೋಗಿ ನಾಟಕದ ಮೊದಲ ಸಾಲು ನೆನಪಾಯಿತು. ಆಳುಗಳು ನಮಗಾಗಿ ಕಾಯುತಿದ್ದುದರಿಂದ ಮತ್ತೆ ಬಂದ ದಾರಿಯಲ್ಲಿ ಹೆಜ್ಜೆ ಹಾಕಿದೆವು. + +ಶ್ರೀಧರ್ ನಡಿಗೆಯಲ್ಲಿದ್ದ ವಿಶ್ವಾಸ, ಮುಖದಲ್ಲಿನ ಮಂದಹಾಸ, ಮಾತಿನಲ್ಲಿನ ಸಮಚಿತ್ತ, ಅವರು ಕಟ್ಟಿಕೊಂಡ ಜೀವನ ಕ್ರಮದ ಬಗೆಗಿನ ಸಾರ್ಥಕತೆಯನ್ನು ಸೂಸುತ್ತಿತ್ತು. ಅಪರೂಪಕ್ಕೆ ನೋಡುವವರಿಗೆ ಚಂದವೆನಿಸಿದರೂ ಆ ಕಾಡಿನ ಕಣಿವೆಯ ನಡುವಿರುವ ತೋಟಗಳಲ್ಲಿನ ನೀರವತೆ, ಲಯ ಸ್ತಬ್ಧತೆ, ಒಂದೇ ಸಮನೆ ಸುರಿವ ಮಳೆ ಇವೆಲ್ಲ ಕೂಡಿ ಸದಾ ಅಲ್ಲೆ ಇರುವವರಿಗೆ ಒಂದು ರೀತಿಯ ಏಕತಾನತೆ ಬಂದು ಬಿಡಬಹುದು. ಶ್ರೀಧರ್ ಅವರಲ್ಲಿ ಆ ರೀತಿಯ ಯಾವ ಚಹರೆಯೂ ಕಾಣಲು ಸಾಧ್ಯವಿರಲಿಲ್ಲ. ಪ್ರತಿದಿನವೂ ತಾನು ಬಾಳುವ ಪ್ರಕೃತಿ ಪರಿಸರವನ್ನು ಹೊಸದಾಗಿ ಕಾಣುವ, ನವೀಕರಿಸಿಕೊಳ್ಳುವ ಸೌಂದರ್ಯ ಪ್ರಜ್ಞೆ ಮತ್ತು ಒಬ್ಬ ಕಲಾವಿದನಿಗೆ ಇರಬಹುದಾದ ಜೀವನ ರಸಿಕತೆ, ಜೊತೆಗೊಂದಿಷ್ಟು ಎಲೆಅಡಿಕೆ, ತಂಬಾಕು, ಸಂಗೀತ ಎಲ್ಲವೂ ಕೂಡಿ ಕಾಡಿನಲ್ಲಿ ಕ್ರಿಯಾಶೀಲವಾಗಿ ಚಿಂತಿಸುತ್ತಾ ಅಲೆವ ಧ್ಯಾನಸ್ಥನಂತೆ ಶ್ರೀಧರ್ ಅಂದು ನನಗೆ ಕಾಣಿಸುತ್ತಿದ್ದರು. ನನಗೂ ಹಾಗೆ ಇದ್ದು ಬಿಡುವ ಆಸೆ. ಆದರೆ ನನ್ನ ತೋಟವೇ ಬೇರೆ. ಆ ಬಗ್ಗೆ ಮುಂದೆ ಬರೆಯುತ್ತೇನೆ… + +ನಾವು ಹೋಗುವಷ್ಟರಲ್ಲಿ ಹುಲ್ಲಿನ ಪೆಂಡಿಗಳನ್ನು ರಸ್ತೆಗಿಟ್ಟು ಕಾಯುತ್ತಿದ್ದ ಹೆಂಗಸರು ಎಲ್ಲವನ್ನು ಮಾರುತಿ ವ್ಯಾನ್‌ನ ಮೇಲೆ ಒಳಗೆ ಎಲ್ಲಾ ತುಂಬಿ ತಮ್ಮ ತಮ್ಮ ಅತಾರಗಳ ಸಮೇತ ಗಾಡಿಯ ಒಳಗೆ ತೂರಿಕೊಂಡು ಬಾಗಿಲು ಮುಚ್ಚಿದರು. ಶ್ರೀಧರ್ ಅಯ್ಯನವರ ಸಹೃದಯತೆಯ ಸಲಿಗೆಯಲ್ಲಿ ಬಹಳ ಕಾಲದಿಂದ ಅವರ ತೋಟದಲ್ಲಿ ಕೆಲಸ ಮಾಡುತ್ತಿರುವಂತೆ ಕಂಡ ಆ ಹೆಂಗಸರು ತಮ್ಮ ಸಮುದಾಯದ ಕಥೆಯನ್ನೇನೋ ಮಾತನಾಡುತ್ತ ದಾರಿ ಸವೆಸಿ ಕಲ್ಲಹಳ್ಳದ ತೋಟಕ್ಕೆ ತಲುಪಿಸಿದರು. + +ಶ್ರೀಧರ್‌ರವರ ಕೊಟ್ಟಿಗೆಯ ಕಛೇರಿಯ ಪಕ್ಕದಲ್ಲಿ ಅವರ ಪೂರ್ವಿಕರು ಕಟ್ಟಿದ್ದ ದೊಡ್ಡ ತೊಟ್ಟಿ ಮನೆಯೊಂದು ಇದೆ. ಅವರ ತಾತ ಅಜ್ಜಿ, ತಂದೆ, ತಾಯಿ, ಚಿಕ್ಕಪ್ಪಂದಿರು ಎಲ್ಲರೂ ಬಾಳಿದ ಕೂಡು ಕುಟುಂಬದ ಮನೆ. ಮನೆಯೆಂದರೆ ಈಗಿನಂತೆ ಎರಡು ಕೋಣೆಗಳ ಮನೆಯಲ್ಲ. ಹಲವಾರು ಕೋಣೆಗಳು, ಅಟ್ಟಗಳು, ಉಪ್ಪರಿಗೆಗಳು, ದೊಡ್ಡ ಹಜಾರ, ಜಗಲಿ, ಜೋಕಾಲಿ, ಆಳು-ಕಾಳು, ಅಡಕೆಯ ದೊಡ್ಡ ಮನೆ. ಈ ಮನೆಯಲ್ಲೇ ಶ್ರೀಧರ್ ಬಾಲ್ಯ ಯೌವ್ವನವ ಕಳೆದದ್ದು. ಈಗ ದೊಡ್ಡ ಮನೆಯಲ್ಲಿ ಉಳಿದಿದ್ದವರು ಇಬ್ಬರೆ ಅವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ. ನಾವು ಆ ಮನೆಯೊಳಗೆಲ್ಲಾ ಸುತ್ತು ಹಾಕಿದೆವು. ಮನೆಯ ಪ್ರತಿಯೊಂದು ಜಾಗ, ವಸ್ತುಗಳು ಕಾಲದ ವೈಭವದ ಕಥೆಗಳನ್ನೆಲ್ಲಾ ತನ್ನೊಳಗೆ ಹುದುಗಿಸಿಕೊಂಡು ಒಂಟಿತನದಲ್ಲಿ ಕೊರಗುತ್ತಾ ಮುಟ್ಟಿದರೆ ಸಾಕು ಗತಕಾಲದ ಚಿತ್ರಗಳನ್ನು ಬಿಚ್ಚಿಡುವ ತವಕದಲ್ಲಿದ್ದವು. + + + +ಈ ಎಲ್ಲದರ ನಡುವೆಯೂ ನಾಟಕದ ಗುಂಗಿನಿಂದ ಹೊರಬರಲು ಇಚ್ಚಿಸದ ಮನಸ್ಸು ಊರಿಗೆ ಹೊರಡಬೇಕಾದ ಅನಿವಾರ್ಯತೆಯ ತಾಕಲಾಟದಲ್ಲಿ ಚಡಪಡಿಸುತ್ತಾ ಇತ್ತು. ಹೀಗೆ ಇಳಿಸಂಜೆಯ ಇಡೀ ಕಾಡು, ಕಣಿವೆ, ಕತ್ತಲೆಯಲ್ಲಿ ಕರಗಿ ಹೋಗುವ ಮುನ್ನ ಒಲ್ಲದ ಮನಸ್ಸಿನಿಂದಲೇ ವಿದಾಯ ಹೇಳಿ ಹೆಗ್ಗೋಡಿನ ಹಾದಿ ಹಿಡಿದೆವು. ಇಂಥ ಕಾಡು ಕಣಿವೆಯ ತೋಟಗಳನ್ನೆಲ್ಲಾ ವಿವರವಾಗಿ ನೋಡಲು ಆಸ್ವಾದಿಸಲು ಕೆಲವು ದಿನಗಳಾದರೂ ಬೇಕು. ಆದರೂ ಈ ಚಿತ್ರಗಳು ನಮ್ಮ ಸ್ಮೃತಿ ಸಂಚಯದಲ್ಲಿದ್ದ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಪರಿಸರದ ಕಥೆಗಳು, ತೇಜಸ್ವಿಯವರ ಕಥೆಗಳ ಕಾಡಿನೊಳಗೆಲ್ಲಾ ಸೇರಿಕೊಂಡು ಒಂದರೊಳಗೊಂದು ಬೆರೆತು ಈ ಚಿಕ್ಕ ಭೇಟಿಯಲ್ಲೂ ಗಾಢ ಅನುಭವವಾದಂತಾಯಿತು. ನಿಜವಾಗಿಯೂ ನನ್ನನ್ನು ಪ್ರಭಾವಿಸಿದ ಗುರು ಫುಕುವೋಕಾನ ತೋಟವನ್ನೇ ಕಂಡಂತಾಗಿ ರಂಗಭೂಮಿಯಲ್ಲಿನ ನನ್ನ ಪ್ರಯೋಗ ಪ್ರಕ್ರಿಯೆಯ ‘ರೂಪಕ’ವೊಂದರ ದರ್ಶನವಾಗಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_74.txt b/Kenda Sampige/article_74.txt new file mode 100644 index 0000000000000000000000000000000000000000..26429fc9b932b005000cbad73f673ddc09da70b8 --- /dev/null +++ b/Kenda Sampige/article_74.txt @@ -0,0 +1,27 @@ +ನಮ್ಮ ನಡುವಿನ ಕ್ರಿಯಾಶೀಲ ಲೇಖಕಿಯರಲ್ಲಿ ಸುಧಾ ಆಡುಕಳ ಅತ್ಯಂತ ಪ್ರಮುಖರು. ನಾಟಕ, ಕವಿತೆ, ಅನುವಾದ, ವೈಚಾರಿಕ ಬರಹ ಮುಂತಾದವು ಇವರು ಕೃಷಿ ಮಾಡಿರುವ ಆಸಕ್ತಿಯ ಪ್ರಕಾರಗಳು. ಸೊಗಸಾದ ಪ್ರಬಂಧ, ಅಂಕಣ, ಸಣ್ಣಕಥೆ ಮುಂತಾದ ಪ್ರಕಾರಗಳಲ್ಲಿ ಇವರ ಗದ್ಯಶೈಲಿ ತನ್ನದೇ ಆದ ವಿಶಿಷ್ಟ ಶೈಲಿಯಿಂದ ಓದುಗರ ಮನ ಗೆದ್ದಿದೆ. ಇವೆಲ್ಲದರ ಮುಂದುವರಿಕೆಯೆಂಬಂತೆ ಪ್ರಸ್ತುತ ಸಂಕಲನದ ಹನ್ನೆರಡು ಕಥೆಗಳು ನಮ್ಮ ಮುಂದಿವೆ. ವರ್ತಮಾನವನ್ನು ಅದರೆಲ್ಲ ಆಯಾಮಗಳಲ್ಲಿ ಕಾಣಿಸುವ ಸಶಕ್ತವಾದ ಕಥೆಗಳನ್ನು ಕೊಡುವ ಮೂಲಕ ಸಾಮಾಜಿಕ ಸ್ಥಿತ್ಯಂತರದ ಚಹರೆಗಳನ್ನು ದಾಖಲಿಸುವ ಕ್ರಮವೊಂದನ್ನು ಇಲ್ಲಿಯ ಕಥೆಗಳಲ್ಲಿ ಕಾಣಬಹುದು. + +(ಸುಧಾ ಆಡುಕಳ) + +‘ಅಪ್ಪತ್ತೆ’ ಕಥೆ ಈ ಸಂಕಲನದ ಗಟ್ಟಿ ಕಥೆಗಳಲ್ಲೊಂದು. ನಿರ್ಬಿಢೆ ವ್ಯಕ್ತಿತ್ವದ ಅಪ್ಪತ್ತೆಯ ಸ್ಮೃತಿ ಚಿತ್ರಗಳು ಕಥಾನಿರೂಪಕಿಯ ಮಗಳ ಮೂಲಕ ಅನಾವರಣಗೊಳ್ಳುವ ತಂತ್ರಗಾರಿಕೆ ಕನ್ನಡದ ಮಟ್ಟಿಗೆ ತೀರ ಹೊಸತು. ಕೇವಲ ಫೋಟೋ ಮೂಲಕ ಅಪ್ಪತ್ತೆಯನ್ನು ಪರಿಚಯಿಸಿಕೊಳ್ಳುವ ವಿದೇಶದಲ್ಲಿರುವ ಮಗಳಲ್ಲಿ ಅಪ್ಪತ್ತೆಯ ವ್ಯಕ್ತಿತ್ವದ ಹಲವು ಕೋನಗಳು ಬಯಲಾಗುವ ಪರಿಗೆ ಕಥಾ ನಿರೂಪಕಿಗೆ ಸೋಜಿಗ. ಇಲ್ಲಿ ಅಪ್ಪತ್ತೆಯಾಗಲೀ, ಮೇಲ್ ಮೂಲಕ ತನ್ನ ಲಿವಿಂಗ್ ಟುಗೆದರ್ ಬದುಕಿನ ನಿರ್ಧಾರ ಸೂಚಿಸುವ ಮಗಳಾಗಲೀ ಪ್ರತ್ಯಕ್ಷವಾಗಿ ಕಥೆಯ ಚೌಕಟ್ಟಿನೊಳಗೆ ಕಾಣಿಸಿಕೊಳ್ಳುವುದೇ ಇಲ್ಲ. ಈಗ ಬದುಕಿಲ್ಲದ ಅಪ್ಪತ್ತೆ ಮತ್ತು ಕಣ್ಣಿಗೆ ಕಾಣದ ನೆಲದಲ್ಲಿ ಬದುಕುತ್ತಿರುವ ಮಗಳು ನಿರೂಪಕಿಯ ಮನೋಲೋಕವನ್ನು ಗಾಢವಾಗಿ ಮತ್ತು ವಿಚಿತ್ರವಾಗಿ ಬೆಸೆದುಕೊಂಡಿರುವುದು ಗಮನಾರ್ಹ. ಆಲ್ಬಂನಲ್ಲಿ ನೋಡಿದ್ದ ಅಪ್ಪತ್ತೆ ತಾಯಿ ನೀಡುವ ವಿವರಗಳ ಮೂಲಕ ಮಗಳ ಮೆಚ್ಚುಗೆಯಲ್ಲಿ ಬೆಳೆಯುತ್ತಾಳೆ. ತಾನೆಂದೂ ನೋಡಿರದ ಅಪ್ಪತ್ತೆಯ ವ್ಯಕ್ತಿತ್ವದ ಬಗೆಗಿನ ಅಭಿಮಾನ ಮುಂದೆ ತನ್ನ ಬದುಕಿನ ಗಟ್ಟಿನೆಲೆಗೆ ನೀಡುವ ಪ್ರೇರಣೆಗಳೆಲ್ಲವೂ ಏಕಕಾಲಕ್ಕೆ ಅಪ್ಪತ್ತೆ, ತಾಯಿ ಮತ್ತು ಮಗಳೆಂಬ ಮೂರು ತಲೆಮಾರನ್ನು ಬೆಸೆಯುವ ತಂತುವಾಗುವುದು ವಂಶವಾಹಿನಿಯ ವೈಜ್ಞಾನಿಕ ಬೆರಗುಗಳ ಬಗ್ಗೆ ಬೆಳಕು ಚೆಲ್ಲುವಂತಿದೆ. ತನ್ನ ಬದುಕಿನ ಬಗ್ಗೆ ಮಗಳು ತಾಳುವ ದೃಢ ನಿಲುವು ಸಹಜವಾಗಿ ತೋರಲು ಆಕೆಯು ಅಕ್ಷರದ ಸಂಪರ್ಕದಿಂದ ಸಾಧಿಸಿಕೊಂಡ ದಿಟ್ಟತನ ಮತ್ತು ಧೀಮಂತಿಕೆಯ ಘನತೆಗಳು ಕಾರಣವೆನಿಸುವುದಾದರೂ ವಿಲಕ್ಷಣದ ಬದುಕನ್ನು ಸಾದಾಸೀದಾ ಎದುರಿಸುವ ಅನಕ್ಷರಸ್ಥಳಾದ, ಎಮ್ಮೆ ದನಗಳ ಹಿಂದೆ ಬೆಟ್ಟಗುಡ್ಡ ತಿರುಗುತ್ತ ಅವುಗಳಂತೆಯೇ ನಿಸರ್ಗದ ಮಡಿಲಿನಲ್ಲಿ ಸಹಜವಾಗಿ ಬದುಕುವ ಅಪ್ಪತ್ತೆಯ ಚಿತ್ರ ಮಾತ್ರ ಆಕೆಯನ್ನೆಂದೂ ನೋಡದೆಯೇ ಸ್ಪೂರ್ತಗೊಂಡ ಮಗಳಂತೆಯೇ ಓದುಗರೆದೆಯಲ್ಲೂ ಉಳಿದುಬಿಡುವಷ್ಟು ಸಶಕ್ತವಾಗಿ ಲೇಖಕಿ ಚಿತ್ರಿಸಿರುವುದು ನಮ್ಮ ಮೆಚ್ಚುಗೆಗೆ ಪಾತ್ರವಾಗುವ ಮೂಲಾಂಶವಾಗಿದೆ. + +ಅಸ್ತಿತ್ವ ಕಥೆಯ ನಾಯಕಿ ಅಲಕಾ ಗಣಿತಶಾಸ್ತ್ರ ಬೋಧಿಸುವ ಉಪನ್ಯಾಸಕಿಯಾದರೂ ಅವಳಿಗೊಂದು ಸಮಾಜಶಾಸ್ತ್ರೀಯ ಕುತೂಹಲದ ಸಂವೇದನಾಶೀಲವಾದ ಆಸಕ್ತಿಯಿದೆ. ಈ ಆಸಕ್ತಿಯ ಪರಿಣಾಮವಾಗಿಯೇ ತನ್ನ ತರಗತಿಯಲ್ಲಿರುವ ವಿದ್ಯಾರ್ಥಿಗಳ ಮುಖಭಾವಗಳು ಕಾಣಿಸುವ ದುಗುಡ, ಕೀಟಲೆ, ಮುಗ್ಧತೆ, ಹತಾಶೆ, ನೋವುಗಳೆಲ್ಲವೂ ಹುಡುಗಾಟಿಕೆಯ ಮುಖವಾಡಗಳಲ್ಲಿ ಹುಗಿದುಹೋಗಿರುವುದನ್ನು ಆಕೆ ಚಿಕಿತ್ಸಕ ದೃಷ್ಟಿಕೋನದಲ್ಲಿ ಕಾಣಬಲ್ಲಳು. ಹಾಗೇ ಅವಳನ್ನು ಹಿಡಿದು ನಿಲ್ಲಿಸಿದ ಶಿಲ್ಪಾಳ ಬದುಕಿನ ಉಪದ್ಯಾಪಗಳನ್ನು ಸಹಾನುಭೂತಿಯಿಂದ ಪರಿಹರಿಸುವ ಅಲಕಾಳನ್ನು ಹಾಸ್ಟೆಲನ್ನು ಸ್ವಚ್ಛಗೊಳಿಸಲೆಂದು ಬರುವ ತಾಯಿಯೊಬ್ಬಳ ಚಡಪಡಿಕೆಯ ವ್ಯಕ್ತಿತ್ವ ಬಹುವಾಗಿ ಕಾಡುತ್ತದೆ. ಗಂಡನ ಕುಡಿತದ ಚಟಕ್ಕೆ ಹೆತ್ತ ಮಗುವನ್ನು ಕಳೆದುಕೊಂಡ ಆಕೆಯ ಸಂಕಟವನ್ನು ಆರ್ದ್ರ ಮನದಿಂದ ಪರಿಭಾವಿಸುವ, ಬದುಕಿರುವಾಗಲೇ ದಿನಪತ್ರಿಕೆಯಲ್ಲಿ ಫೋಟೋ ಹಾಕಿಸಿಕೊಂಡರೆ ಆಗಲಾದರೂ ಮಗ ಬಂದಾನೆಂದು ಯೋಚಿಸುವ ಆ ತಾಯಿಯ ಮನದ ಶೋಕತಪ್ತ ಮಡುವಿನಾಳದ ತೀವ್ರತೆಯನ್ನು ಆಕೆ ಅರ್ಥ ಮಾಡಿಕೊಳ್ಳುವ ಬಗೆ ಎಲ್ಲವೂ ಈ ಕಥೆಯ ವಿನ್ಯಾಸಕ್ಕೆ ಪುಷ್ಟಿಕೊಡುವಂತೆ ಜೊತೆಗೂಡುವುದರ ಜೊತೆಗೆ “ಮಗುವೇ, ನೀನು ನನ್ನ ಒಡಲಿನಲ್ಲಿ ಮೊಳಕೆಯೊಡೆದ ದಿನ, ಜಗದ ಯಾವ ಮಗುವೂ ಅನಾಥವಾಗದಿರಲಿ” ಎಂಬ ಅನಾಮಿಕ ಕವಯಿತ್ರಿಯ ಮಾತಿನೊಂದಿಗೆ ಕೊನೆಗಾಣುವುದು ಕೂಡ ಕತೆಯ ಅಂತ್ಯಕ್ಕೊಂದು ತಾರ್ಕಿಕತೆಯನ್ನು ದಯಪಾಲಿಸಿದೆ. + +‘ರಾಮಾಯಣದ ಕಥಾ ಪ್ರಸಂಗದಲ್ಲಿ’ ಬರುವ ಹೆಗಡೆಯವರ ಆಣತಿಯಂತೆ ಭಟ್ಟಿ ಸಾರಾಯಿ ಇಳಿಸುವ ಕಾಯಕಯೋಗಿಯಂತೆ ಕಾಣುವ ರಾಮನ ಪಾತ್ರವೂ ಮನದಲ್ಲುಳಿಯುತ್ತದೆ. ಊರೆಲ್ಲ ರಾಮಾಯಣದ ಕಥೆ ಕೇಳಿ ಪಾವನರಾದರೆ, ತಾನು ಮಾತ್ರ ತನ್ನಪಾಡಿಗೆ ತನ್ನ ಕಾಯಕದಲ್ಲಿ ನಿರತನಾದ ಈತ ಕುವೆಂಪು ಚಿತ್ರಿಸಿರುವ ಜಲಗಾರನನ್ನು ನೆನಪಿಸುತ್ತಾನಾದರೂ ಜಲಗಾರನಂತೆ ತಾತ್ವಿಕ ಸಿದ್ಧಾಂತಮಂಡನೆಯ ಮಾಧ್ಯಮವಾಗಿ ಲೇಖಕಿಗೆ ಕಂಡಿಲ್ಲ. ತಾನು ಭಟ್ಟಿ ಇಳಿಸಲು ಉರಿಸುವ ಒಲೆಯನ್ನೇ ದಶರಥನ ಪುತ್ರಕಾಮೇಷ್ಟಿ ಯಾಗದ ಅಗ್ನಿಕುಂಡವಾಗಿ ದರ್ಶಿಸಬಲ್ಲ ರಾಮನನ್ನು ಹೆಂಡತಿ ಮಂಜಿಯ ಬಗೆಗೆ ಹೊಕ್ಕ ಶಂಕೆಯೊಂದು ತಾನುರಿಸುತ್ತಿದ್ದ ಬೆಂಕಿಯಂತೆಯೇ ದಹಿಸುತ್ತಿದೆ. ಈ ಶಂಕೆಯೆಂಬ ಬೆಂಕಿಗೆ ಹಲವರು ಕಟ್ಟಿಗೆ ಸುರಿದಿದ್ದಾರೆ. ಬಡತನದ ಸಂಸಾರಕ್ಕೆ ಅಂಟಿಕೊಂಡ ಈ ಬೆಂಕಿಯಲ್ಲಿ ರಾಮನ ಹೆಂಡತಿ ಮಂಜಿ ತನ್ನ ಪಾತಿವ್ರತ್ಯವನ್ನು ಸಾಬೀತು ಮಾಡಬೇಕಾಗಿರುವುದು ಸೀತೆ ರಾಮನ ಮತ್ತು ಲೋಕದ ಶಂಕೆಯ ಅಗ್ನಿದಿವ್ಯವನ್ನು ಹಾಯ್ದಂತೆಯೇ ತೋರುವುದು ಯಾವ ಕಾಲಕ್ಕೂ ಬದಲಾಗದ ಪುರುಷ ರಾಜಕಾರಣದ ಕ್ರೌರ್ಯದಂತೆಯೇ ಲೇಖಕಿಗೆ ಕಾಣಿಸಿರುವುದು ಮಹತ್ವದ ಸಂಗತಿಯೆನಿಸಿ, ಹೊಸ ಬಗೆಯ ಚರ್ಚೆಗೆ ಆಹ್ವಾನಿಸುವಂತಿರುವುದನ್ನು ಇಲ್ಲಿ ಗಮನಿಸಲೇ ಬೇಕು. + + + +‘ರೇಶನ್ ಸೀರೆ’ ಮತ್ತು ‘ನಾನೋಗ್ತೆ ಬಾಂಬೆಗೆ’ ಕಥೆಗಳಲ್ಲಿ ಬರುವ ದಿವ್ಯಾ ಮತ್ತು ಅಲಕಾರ ಸಮಸ್ಯೆಗಳು ಭಿನ್ನಸ್ಥರದವು. ತವರು ಮನೆಯ ಹೊಸಸೀರೆಯ ಕನಸನ್ನು ಕಮರಿಸಿಕೊಂಡು ಮರುಗುವ ತಾಯಿಯ ಕಣ್ಣೀರಿಗೆ ಓದಿ ದೊಡ್ಡವಳಾದ ಮೇಲೆ ಆಕೆಗೆ ಹೊಸ ಸೀರೆ ತರುವ ಕನಸುಗಣ್ಣಿನ ಭರವಸೆಯ ಹುಡುಗಿಯಾದ ದಿವ್ಯಾ ಹೆಣ್ಣುಮಕ್ಕಳೇ ತಾಯಿಗೆ ಆಸರೆಯಾಗುವ ಋತವನ್ನು ಒಡೆದು ಕಾಣಿಸುವ ಪಾತ್ರವಾದರೆ, ಅಲಕಾಳ ಸಮಸ್ಯೆ ಅದಕ್ಕಿಂತಲೂ ತೀವ್ರವಾದುದು. ಗಂಡನ ಹಾದರದ ನಡೆಗೆ ರೋಸಿ ಬದುಕನ್ನು ನೀಗಿಕೊಂಡ ಅಮ್ಮನ ನೆನಪುಗಳ ಛಾಯೆ ಅವಳ ವರ್ತಮಾನವನ್ನು ಕಸಿದುಕೊಂಡಿದೆ. ಅಗೋಚರವಾಗಿ ನಮ್ಮ ಬದುಕನ್ನು ಹಿಂಬಾಲಿಸುತ್ತಲೇ ನೆಮ್ಮದಿ ಕಸಿಯುವ ಕಹಿ ಸಂಗತಿಗಳಿಂದ ಅವಳ ಮನಕ್ಕಾದ ಆಘಾತದಿಂದ ತತ್ತರಿಸಿದ ಅಲಕಾ ಕೊನೆಗೆ ಮನಶಾಸ್ತ್ರಜ್ಞೆಯ ನೆರವಿನಿಂದ ಚೇತರಿಸಿಕೊಳ್ಳುವುದು ಮಾತ್ರವಲ್ಲ, ಸ್ವತಃ ತಾನೇ ಒಬ್ಬ ಕೌನ್ಸೆಲರ್ ಆಗಿ ಇಂತಹ ಸಮಸ್ಯೆಗಳಿಂದ ನರಳುವವರ ಪಾಲಿನ ಬೆಳಕಾಗುವುದು ಕತೆಗಾರ್ತಿಯ ಪಾಸಿಟಿವ್ ಆಲೋಚನೆಗಳಿಗೆ ಪುರಾವೆಯೊದಗಿಸುತ್ತವೆ. ಕಥೆಯೊಂದನ್ನು ಓದಿದ ಮೇಲೆ ನಮ್ಮ ಮನಸ್ಸಿನ ಮೇಲಾಗುವ ಈ ಬಗೆಯ ಪರಿಣಾಮ ನಮ್ಮ ಓದಿನ ಲಾಭವನ್ನು ವಿಸ್ತರಿಸಿದರೆ ಅದಕ್ಕಿಂತ ಸಂತೋಷದ ಸಂಗತಿ ಬೇರಾವುದಿದೆ? + +‘ಸಂಪಿಗೆ ಮರದ ಕೆಂಪಮ್ಮ’ ಕಥೆಯ ವಸ್ತು ಗ್ರಾಮ್ಯ ಬದುಕಿನ ಬೇರೊಂದು ಬಗೆಯ ಸಂಕಟವನ್ನು ಓದುಗರೆದುರು ತೆರೆದಿಡುತ್ತದೆ. ಬಾಳಿ ಬದುಕಬೇಕಾಗಿದ್ದ ಯುವಕರಿಬ್ಬರ ದುರ್ಮರಣದಿಂದ ಊರು ತತ್ತರಿಸಿಹೋಗುವ ಸಂದರ್ಭದಿಂದ ಕಥೆ ಮೊದಲ್ಗೊಂಡರೂ ಸಂಪಿಗೆ ಮರದ ಕೆಂಪಮ್ಮನೆಂಬ ಮುದುಕಿ ಕಮಲಮ್ಮನ ಬಂಜೆತನ ನಿವಾರಿಸಿಲು ತೋರಿದ ದಾರಿಯ ಬೇರುಗಳ ಮೂಲವೇ ಆ ಯುವಕರ ಕೊಲೆಗೆ ಕಾರಣವಾದ ಸಂಕೀರ್ಣ ಸಂಗತಿಯನ್ನು ಕುತೂಹಲವನ್ನು ಕಾಯ್ದಿಟ್ಟುಕೊಂಡು ನಿರೂಪಿಸುತ್ತದೆ. ಮೇಲ್ನೋಟಕ್ಕೆ ವಿಕ್ಷಿಪ್ತ ಮನಸ್ಸಿನವಳಂತೆ ಕಾಣುವ ಕೆಂಪಮ್ಮ ಕಮಲಮ್ಮನವರಂತಹ ಅಸಹಾಯಕ ಜೀವಗಳಿಗೆ ಅವಧೂತೆಯಂತೆ ಕಾಣುವುದು ವಿಶೇಷ. ಹಳ್ಳಿಗಾಡಿನ ಅಗೋಚರ ರಾಜಕಾರಣದ ನೆಲೆಗಳನ್ನು ಅನನ್ಯವಾಗಿ ಬೆದಕುವ ಅವಕಾಶವನ್ನು ಲೇಖಕಿ ಇಲ್ಲಿ ಸಮರ್ಥವಾಗಿ ದುಡಿಸಿಕೊಂಡಿದ್ದಾರೆ ಎನಿಸುತ್ತದೆ. + +‘ಎಲವೋ ಸಂಜಯ ಕೇಳು’ ಕಥೆಯಲ್ಲಿ ರಂಗಸಂಪರ್ಕದಿಂದ ಸಾಧಿತವಾದ ಸಂಸ್ಕಾರದಿಂದ ತನ್ನ ಮನದೊಳಗೆ ಜಿಡ್ಡುಗಟ್ಟಿದ ದ್ವೇಷಾಸೂಯೆಯ ಕೊಳೆಯನ್ನು ತೊಡೆದುಕೊಳ್ಳಲಾಗದ ಗುರು ಸದಾನಂದ ಹೆಗಡೆಯವರಿಗೆ ಅವರ ಪುಟ್ಟ ಮಗಳು ಸಂಜಯನ ಪಾತ್ರದ ಮುಖೇನ ಹೇಳುವ ವಿವೇಕವು ಅವರ ಕಣ್ತೆರೆಸುವುದು ಹೆಣ್ಣಿಗಿರುವ ಶಕ್ತಿಯನ್ನೇ ಪ್ರತಿಫಲಿಸುವಂತಿದೆ. ‘ಸನ್ಮಾನ’ ಕಥೆ ಮನುಷ್ಯ ಸಂಬಂಧಗಳಲ್ಲಿ ಶಂಕೆಯ ಬಿರುಕನ್ನು ಬಲವಾಗಿ ತಂದೊಡ್ಡಿದ ಕೊರೋನಾ ಸೋಂಕು ಎಲ್ಲ ಬಗೆಯ ಸಂಬಂಧದಲ್ಲೂ ಕಾಯ್ದುಕೊಳ್ಳಬೇಕಾದ ಅಂತರವನ್ನು ವ್ಯವಸ್ಥೆಯ ತೋರುಗಾರಿಕೆ ಕರ್ತವ್ಯಪ್ರಜ್ಞೆಯ ಲೇವಡಿಯೊಂದಿಗೆ ಸೊಗಸಾಗಿ ಚಿತ್ರಿಸುವ ಪ್ರಯತ್ನ ಮಾಡಿದೆ. ಕುಟುಂಬದವರೊಂದಿಗೆ ಅಂತರ ಕಾಪಾಡಿಕೊಂಡು ಅವರಾರಿಗೂ ಸೋಂಕು ದಾಟಿಸದಿದ್ದ ಕಾರಣಕ್ಕಾಗಿ ನರಹರಿಗೆ ‘ಸನ್ಮಾನ’ ಮಾಡುವ ವ್ಯಂಗ್ಯವನ್ನು ಕಥೆಗಾರ್ತಿ ವಿಷಾದಭಾವದಿಂದ ಕಾಣಿಸುವುದು, ಸಂದರ್ಭಕ್ಕೆ ತಕ್ಕ ಮುಖವಾಡ ಧರಿಸುವ ಮನುಷ್ಯ ಸಂಬಂಧಾಂತರಗಳ ಬಗೆಗಿನ ಆತಂಕವೂ ಆಗಿರುವುದು ಆಕಸ್ಮಿಕವೇನಲ್ಲ. ತಾನೇ ಸೃಷ್ಟಿಸಿದ ಪಾತ್ರಗಳಿಗೊಂದು ನೆಲೆಮುಟ್ಟಿಸಲು ಹೆಣಗುವ ‘ಕೊನೆಯ ಕಂತು’ ಕಥೆಯ ಮಹಿಮಾ ಏಕಕಾಲಕ್ಕೆ ನಿಜ ಬದುಕು ಮತ್ತು ಬರವಣಿಗೆಯ ಮನೋಧರ್ಮದ ಮುಖಾಮುಖಿ ಸೃಷ್ಟಿಸುವ ಬಿಕ್ಕಟುಗಳಿಗೆ ಉದಾಹರಣೆಯಂತಿದ್ದಾಳೆ. + +ಕಾದಂಬರಿ ರಚನೆಯ ಸವಾಲು ಅಸಾಮಾನ್ಯವೇ ಎಂಬುದನ್ನು ಹೇಳುತ್ತಲೇ ಕೆಲಸ, ಗಂಡ, ಸಂಸಾರ, ಬರಹ, ಚರ್ಚೆ, ನಾಟಕ ನೋಡುವ ಸದಭಿರುಚಿಯಲ್ಲಿ ತೊಡಗಿಕೊಂಡ ‘ಬೀಗ’ ಕಥೆಯ ನಿಹಾರಿಕಾ ಎದುರಿಸುವ ಸವಾಲುಗಳನ್ನೂ ಕಲಾತ್ಮಕವಾಗಿ ಹೇಳುವ ಪ್ರಯತ್ನದಲ್ಲಿ ಓದಿ-ಬೇಕಾದ ಬದುಕನ್ನು ಕಟ್ಟಿಕೊಳ್ಳುವಲ್ಲಿಯೂ ಹೆಣ್ಣು ಎದುರಿಸುವ ಸವಾಲುಗಳು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿರುವುದಿಲ್ಲವೆಂಬುದನ್ನು ಮನದಟ್ಟು ಮಾಡುತ್ತದೆ. ಅಚಿಂತ್ಯನ ಅಡುಗೆಕೋಣೆಯ ಕಾರುಬಾರುಗಳು ನಿಹಾರಿಕಾಳಿಗೆ ಅಡುಗೆಮನೆಯಿಂದ ಬಿಡುಗಡೆ ದೊರೆತ ಭಾವ ತುಂಬುವುದರ ಬದಲು, ತನ್ನನ್ನು ದೂರವಿಡುವ ಪ್ರಯತ್ನವಾಗಿ ತೋರುವುದು ಒಂದು ರೂಪಕವಾಗಿ ಕಾಣಿಸುತ್ತದೆ. ನೆರವು ಬೇಡಿ ಬಂದ ಅಸಹಾಯಕ ಹೆಣ್ಣಿನ ಕಷ್ಟಕ್ಕೆ ಮುಕ್ತವಾಗಿ ಸ್ಪಂದಿಸಲು ಬಿಡದೆ ಗೇಟಿಗೆ ಬೀಗ ಹಾಕುವ ಅಚಿಂತ್ಯನ ನಡೆ ಗಂಡು ಪ್ರಾಣಿಯ ಆಕ್ರಮಣಶೀಲ ಪ್ರವೃತ್ತಿ ಎಂದಿಗೂ ಬದಲಾಗದೆಂಬುದನ್ನು ಬಿಂಬಿಸಿದರೂ ಅದನ್ನು ದಾಟುವ ಪ್ರಕ್ರಿಯೆಯನ್ನು ನಿಹಾರಿಕಾ ತೋರುವುದರ ಕಡೆ ಲೇಖಕಿಯ ಗಮನಹರಿದಿರುವುದು ಮುಖ್ಯವಾದ ಸಂಗತಿ. ಆದರೆ ಬಾಳಸಂಗಾತಿಯ ಶೌಚಾಲಯ ಸಮಸ್ಯೆಯನ್ನು ಸಹಾನುಭೂತಿಯಿಂದ ಕಾಣುವ, ಅದಕ್ಕೊಂದು ಪರಿಹಾರ ಹೆಣಗಲು ಮನಸಾರೆ ಪ್ರಾಮಾಣಿಕ ಪ್ರಯತ್ನ ಮಾಡುವ ರಘುವಿನಂತಹ ವ್ಯಕ್ತಿತ್ವವನ್ನು ಲೇಖಕಿ ಓದುಗರೆದುರು ತೆರೆದಿಡುತ್ತಾರೆಂಬುದನ್ನು ನಾವು ಮರೆಯಬಾರದು. ತುಂಬಾ ಸೂಕ್ಷ್ಮವಾದ ನಮ್ಮ ಮನೋವ್ಯಾಪಾರಗಳನ್ನು ಯಾವೆಲ್ಲಾ ಸಂಗತಿಗಳು ನಿಯಂತ್ರಿಸುತ್ತಿರುತ್ತವೆಂಬುದನ್ನು ಹೇಳುವ ವಿಶಿಷ್ಟ ಕಥಾವಸ್ತುವನ್ನೊಳಗೊಂಡ ಕಥೆಯಾಗಿ ‘ಒಂದು ಶೌಚಾಲಯದ ಕಥೆ’ ನಮ್ಮ ನೆನಪಿನಲ್ಲಿ ಪಾಲು ಬೇಡುತ್ತದೆ. + +ಈ ಸಂಕಲನದ ಶೀರ್ಷಿಕೆಯಾಗಿರುವ ‘ನೀಲಿ ಮತ್ತು ಸೇಬು’ ನೀಲಿಯೆಂಬ ಜೀವದ ಪುಟ್ಟ ಆಸೆಯೂ ಕೆಲವೊಮ್ಮೆ ದುಬಾರಿಯೆನಿಸಿಬಿಡುವ, ಮತ್ತು ಅದು ಕೈಗೂಡುವ ಸಂದರ್ಭದಲ್ಲಿ ಆಸೆಗಿಂತ ಹಸಿದವರ ಸಂಕಟ ದೊಡ್ಡದೆಂಬ ಮನುಷ್ಯತ್ವ ಮುನ್ನೆಲೆಗೆ ಬರುವ ವಿಸ್ಮಯವನ್ನು ಸೇಬುಹಣ್ಣನ್ನು ಇಡಿಯಾಗಿ ತಿನ್ನಬೇಕೆಂಬ ಸಣ್ಣ ಕನಸ್ಸನ್ನು ಮನದ ಕಣ್ಣಲ್ಲಿ ಹುದುಗಿಸಿ ಪರಿತಪಿಸುವ ನೀಲಿ ಎಂಬ ಹುಡುಗಿಯ ಮೂಲಕ ಹೇಳುತ್ತದೆ. ಇಡೀ ಹಣ್ಣು ತಿನ್ನುವ ಸಂದರ್ಭ ಕೈಗೆಟಕಿದಾಗ ಹಸಿದ ಅನಾಥ ಅಜ್ಜಿಯ ಸಂಕಟ ಅವಳನ್ನು ಬಾಧಿಸುತ್ತದೆ. ಎಷ್ಟೋ ದಿನದ ಕನಸನ್ನು ಪರರ ಹಸಿವಿಗಾಗಿ ಬಿಟ್ಟುಕೊಡುವ ನೀಲಿ ತುಂಬ ಇಷ್ಟವಾಗಿಬಿಡುವುದರ ಜೊತೆಗೆ ಮನುಷ್ಯರು ಇರಬೇಕಾದ್ದೇ ಹೀಗಲ್ಲವೇ ಎಂಬ ಆಲೋಚನೆಯನ್ನೂ ನಮ್ಮೊಳಗೆ ಹುಟ್ಟು ಹಾಕುತ್ತಾಳೆ. + + + +ಹೀಗೆ ಸುಧಾ ಆಡುಕಳ ಅವರ ಕಥೆಗಳು ಬಹುಬಗೆಯಲ್ಲಿ ನಮ್ಮನ್ನು ಪ್ರಭಾವಿಸುತ್ತಾ ಹೋಗುತ್ತವೆ. ‘ಹೆಣ್ಣು’ ಇವರ ಕಥೆಗಳ ಕೇಂದ್ರವಾದರೂ ಆಕೆಯ ಸುತ್ತಲಿರುವ ಗಂಡಿನ ಮನೋಧರ್ಮವನ್ನೂ ಇವರು ಅಲಕ್ಷಿಸಿಲ್ಲ. ಅದು ಸಾಧುವೂ ಅಲ್ಲ! ಮನುಷ್ಯಪ್ರಜ್ಞೆ ಕಾಲದಿಂದ ಕಾಲಕ್ಕೆ ಜಿಗಿಯುವಲ್ಲಿ, ವಿಕಸಿಸುವಲ್ಲಿ, ಅರ್ಥಪೂರ್ಣತೆಯತ್ತ ತುಡಿಯುವಲ್ಲಿ ಎದುರಿಸಿ ನಿಲ್ಲಬೇಕಾದ ಬಿಕ್ಕಟ್ಟುಗಳನ್ನು ತಮ್ಮ ಕಥೆಗಳ ಮೂಲಕ ಶೋಧಿಸುವ ಸುಧಾ ಅವರ ಲೇಖನಿ ಬದುಕಿನ ಸಕಾರಾತ್ಮಕ ಗುಣಗಳತ್ತಲೇ ಹೆಚ್ಚಾಗಿ ವಾಲುವುದರಿಂದ ಇವರ ಪಾತ್ರಗಳು ಸಂಕಟಗಳ ನಡುವೆಯೂ ಜೀವನೋತ್ಸಾಹವನ್ನು ಉಳಿಸಿಕೊಂಡು ಪುಟಿಯುತ್ತವೆ. ತುಂಬ ಶಕ್ತಿಶಾಲಿಯಾದ ಬರವಣಿಗೆ, ವಸ್ತು ವೈವಿಧ್ಯತೆ, ತಮ್ಮದೇ ಆದ ಸ್ವೋಪಜ್ಞ ತಂತ್ರಗಾರಿಕೆ, ಕಥೆಯ ಬಿಗಿಯಾದ ಬಂಧ, ಸರಳ ನಿರೂಪಣೆಯ ಕೌಶಲ, ಅಲ್ಲಲ್ಲಿ ಮಿಂಚಿರುವ ಉತ್ತರಕನ್ನಡ ಜಿಲ್ಲೆಯ ಪ್ರಾದೇಶಿಕತೆ ಸೊಗಡು ಎಲ್ಲವೂ ಇಲ್ಲಿನ ಕಥೆಗಳನ್ನು ಓದಿದ ನಂತರ ನಮ್ಮಲ್ಲಿ ಉಳಿಯಬಲ್ಲ ಹೆಚ್ಚುಗಾರಿಕೆಯ ಸಂಗತಿಗಳು. ಕಥನಕಾರರಾಗಿ ಎತ್ತರಕ್ಕೆ ಬೆಳೆಯಬಲ್ಲ ಹುರುಪನ್ನು ಈ ಬರಹಗಳ ಮೂಲಕ ಸುಧಾ ಆಡುಕಳ ಅವರು ಸಮರ್ಥವಾಗಿ ತೋರಿದ್ದಾರೆ. ಕನ್ನಡದ ಕಥನಕ್ಕೆ ಇಂಥ ಬೆಟ್ಟತೊರೆಗಳು ಸದಾ ಚಲನಶೀಲ ಶಕ್ತಿಯನ್ನು ತುಂಬುತ್ತಿರಲೆಂದು ಆಶಿಸುತ್ತಾ ಈ ಕಥೆಗಳನ್ನು ಓದುಗರು ಪ್ರೀತಿಯಿಂದ ಬರಮಾಡಿಕೊಂಡು ಅನುಸಂಧಾನ ಮಾಡಲೆಂದು ಹಾರೈಸುವೆ. + +ಕನ್ನಡ ಪ್ರಾಧ್ಯಾಪಕರು ಮತ್ತು ಹೊಸ ತಲೆಮಾರಿನ ವಿಮರ್ಶಕರು \ No newline at end of file diff --git a/Kenda Sampige/article_75.txt b/Kenda Sampige/article_75.txt new file mode 100644 index 0000000000000000000000000000000000000000..ac37eda9c94e395278f52c110369aff4c2fde414 --- /dev/null +++ b/Kenda Sampige/article_75.txt @@ -0,0 +1,21 @@ +ಎರೆನೆತ್ತಿ ಎಂಬ ಬಾಲ್ಯಕಾಲದ ನಿಗೂಢ, ಗಂಧದ ಬುಡ, ಕೆಮ್ಮಣ್ಣು ಜೀರಿಂಬೆ ಹಾಗೂ ಅಲೆಮಾರಿ ಗುಡಾರಗಳು + +ಬಾಲ್ಯಕಾಲದಲ್ಲಿ ನಡೆದ ಕೆಲವು ಸಂಗತಿಗಳು, ನಡೆದಾಡಿದ ಜಾಗಗಳು, ಕೇಳಿದ ಕಥೆಗಳು, ಅನುಭವಿಸಿದ ರೋಮಾಂಚನಗಳು-ಭಯಗಳು, ಉಂಡ ನೋವುಗಳು-ಕಂಡ ಕನಸುಗಳು, ತಿಂದ ತಿನಿಸುಗಳು-ಅವುಗಳ ಘಮಲುಗಳು, ಆಡಿದ ಆಟಗಳು-ಹುಡುಗಾಟಗಳು ಕಾಲದ ಹೊಡೆತಕ್ಕೆ ಸೆಡ್ಡು ಹೊಡೆದು ಸ್ಮೃತಿಯ ಕೋಶದೊಳಗೆ ಹಾಗೆಯೇ ಉಳಿದು ಆಗಾಗ ನೆನಪಿನ ಕಣ್ಣಿನಲ್ಲಿ ಪೊರೆ ಬಿಡುತ್ತಿರುತ್ತವೆ. ಬಾಲ್ಯಕಾಲದ ಕಾಡಿನಲ್ಲಿ ಅಲೆವ ಹೊತ್ತಲ್ಲಿ ಇವು ತೊಡರು ಬಳ್ಳಿಗಳಂತೆ ಮತ್ಮತ್ತೆ ಕಾಲಿಗೆ ತೊಡರಿಕೊಳ್ಳುತ್ತಿರುತ್ತವೆ. ಕಣ್ಮುಂದೆ ಬಂದು ಮಾತಿಗಿಳಿಯುತ್ತಿರುತ್ತವೆ. ಈ ಪೈಕಿ ಈ ಎರೆನೆತ್ತಿಯೂ ಒಂದು. + +(ಎಸ್.‌ ಗಂಗಾಧರಯ್ಯ) + +ಇದೊಂದು ಕೊಂಚ ಕಡಿದಾದ ಇಳುಕಲಿನ ದಿಬ್ಬ. ಮಲ್ಟಿ ಅಂದರೂ ನಡೆಯುತ್ತೆ. ಇದರ ನೆತ್ತಿ ಪೂರಾ ಫಲವತ್ತಾದ ಎರೆ ಮಣ್ಣಿನಿಂದ ಕೂಡಿರುವ ಕಾರಣಕ್ಕೋ ಕೊಂಚ ದೂರದಿಂದ ನಿಂತು ನೋಡಿದರೆ ಹುಲ್ಲೆಯ ಕೊಂಬೊಂದರಂತೆ ಚೂಪಾಗಿ ಕಾಣುವ ಕಾರಣಕ್ಕೋ ಇದಕ್ಕೆ `ಎರೆನೆತ್ತಿ’ ಅನ್ನುವ ಹೆಸರು ಬಂದಿರಬಹುದು. ಇದರ ಒಂದು ಬದಿಯಲ್ಲಿ ಚಿಕ್ಕೆರೆ ಹಳ್ಳ ಅಂತ ಕರೆಯಲ್ಪಡುವ ಹಳ್ಳ ಹರಿಯುತ್ತೆ. ಈಗ ಚಿಕ್ಕೆರೆ ಅನ್ನೋದು ಪೂರಾ ಮಂಗಮಾಯವಾಗಿದೆ. ಅದರ ಅಂಗಳ ಪೂರಾ ಗದ್ದೆ ಬಯಲಾಗಿದೆ. ಮಳೆಗಾಲದಲ್ಲಿ ಹರಿವ ಹಳ್ಳದ ನೀರು ಕೆರೆಯ ಅಂಗಳವನ್ನು ಸವರಿಕೊಂಡು ಅರೆ ಒಡೆದ ಕೆರೆಯ ಏರಿಯ ಮುಖೇನಾ ಹಿಂಬದಿಯ ಹೊಲಮಾಳ ಸೇರುತ್ತದೆ. ಮತ್ತೊಂದು ಬದಿಯಲ್ಲಿ ಒಂದು ಕಾಲದಲ್ಲಿ ಸುವರ್ಣಮುಖಿ ನದಿ ಹುಟ್ಟಿ ಹರಿಯುತ್ತಿದ್ದ ಬಯಲು. ಆ ಬಯಲಿನಲ್ಲಿ ಈಗ ತುಂಬಾನೇ ಅಪರೂಪವಾಗಿರುವ ಕಮರದ ವನವಿತ್ತಂತೆ. ಅದರಾಚೆಗೆ ವಚನಕಾರ ಸಿದ್ಧರಾಮ ಒಂದಷ್ಟು ದಿನ ತಂಗಿದ್ದ, ಅಂತೆಯೇ ಆಗ ಅವನೊಂದು ಕೆರೆಯನ್ನು ಕಟ್ಟಿದ್ದ ಅನ್ನುವ ಪ್ರತೀತಿ ಇರುವ ಪಟ್ಟದದೇವರ ಕೆರೆ. ಮತ್ತದರ ತಡಿಯಲ್ಲಿ ಸಿದ್ದಪ್ಪ ದೇವರ ಗುಡಿ. ಕೆರೆಯ ಆಚೆ ಬದಿಗೆ `ಆಚೆಬಾರೆ’ ಅಂತ ಕರೆಯಲ್ಪಡುವ ಈಗಲೂ ಕೊಂಚ ದಟ್ಟವಾಗಿರುವ ಬಯಲುಸೀಮೆಯ ಕಾಡು. + +ಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ನೂರಾರು ಕುರಿಗಳನ್ನು ಸಾಕಿದ್ದರು. ಊರಾಚೆಯ `ಬಳ್ಸಾ ಕಟ್ಟೆ’ಯ ಬದಿಯ ದಿಬ್ಬದಲ್ಲಿ ಕುರಿ ಗೂಡಿತ್ತು. ಅದರ ಸುತ್ತಲೂ ಕಾರೆ, ಜಾಲಿ, ತರಾದ, ತೊಡರುಮುಳ್ಳು ಮುಂತಾದವುಗಳಿಂದ ಕೂಡಿದ್ದ ದಪ್ಪನೆಯ ಬೇಲಿಯಿತ್ತು. ಮಳೆಗಾಲದಲ್ಲಿ ಅಲ್ಲದೆ ಸತೊಂಭತ್ತು ಕಾಲವೂ ಈ ಕಟ್ಟೆಯಲ್ಲಿ ನೀರಿರುತ್ತಿತ್ತು. ಈ ಎರೆನೆತ್ತಿಗೂ ನಮ್ಮ ಕುರಿಗೂಡಿಗೂ ಒಂದೆರಡು ಫರ್ಲಾಂಗುಗಳ ದೂರವಿತ್ತು. ಸಂಜೆಗೇ ಊಟ ಮುಗಿಸಿಕೊಂಡು ಅಜ್ಜ ಕುರಿಗೂಡಿನ ಕಾವಲಿಗಾಗಿ ಹೋಗುತ್ತಿದ್ದ. ಕುರಿಗೂಡಿನ ಮಂಚಿಗೆಯಲ್ಲಿ ಮಲಗುವುದು, ಆ ಗೂಡಿನ ಕಮ್ಮನೆಯ ವಾಸನೆ, ಎಳೆಮರಿಗಳ ಚಿಣ್ಣಾಟ, ಮಂಚಿಗೆಯ ಮೇಲಿಂದ ಕಾಣುತ್ತಿದ್ದ ಇರುಳ ಮುಗಿಲು-ಹಿಂಗೆ ನನಗೆ ಅದೊಂದು ಬಲು ಇಷ್ಟದ ತಾಣವಾಗಿತ್ತು. ಹಂಗಾಗಿ ಕೆಲವೊಮ್ಮೆ ಅತ್ತೂಕರೆದು ಅಜ್ಜನೊಂದಿಗೆ ಅಲ್ಲಿಗೆ ನಾನೂ ಹೋಗುತ್ತಿದ್ದೆ. ಅಂಥ ಹೊತ್ತಲ್ಲಿ ಕೆಲವು ರೋಚಕ ಸಂಗತಿಗಳನ್ನು ಅಜ್ಜನ ಬಾಯಿಂದ ಕೇಳಿದ್ದೆ. ಅಂಥ ಸಂಗತಿಗಳಲ್ಲಿ ಈ ಎರೆನೆತ್ತಿಯೂ ಒಂದು. + +ಅಜ್ಜ ಚಿಕ್ಕವನಿದ್ದಾಗ ಜನ ಎರೆನೆತ್ತಿಯವರೆಗೆ ಹೋಗಲು ಹೆದರುತ್ತಿದ್ದರಂತೆ. ಎರೆನೆತ್ತಿಯಿಂದಲೇ ಕಾಡು ಶುರುವಾಗುತ್ತಿತ್ತಂತೆ. ಆಗೆಲ್ಲಾ ಹುಲಿ ಚಿರತೆಗಳ ಕಾಟವಿತ್ತಂತೆ. ರಾತ್ರಿ ಹೊತ್ತು ಚಿರತೆಗಳು ನಾಯಿಗಳ ಬೇಟೆಗಾಗಿ ಕೆಲವೊಮ್ಮೆ ಊರೊಳಕ್ಕೇ ನುಗ್ಗುತ್ತಿದ್ದವಂತೆ. ಹಂಗಾಗಿ ಸಂಜೆಗೇ ಊರಿಗೂರೇ ಗಪ್ಪಾಗಿಬಿಡುತ್ತಿತ್ತಂತೆ. ತಿನ್ನಲು ಏನೂ ಸಿಗದಿದ್ದಾಗ ಚಿರತೆಗಳು ಏಕಾಏಕಿ ಕುರಿಗೂಡುಗಳಿಗೆ ನುಗ್ಗಿ ಬಿಡುತ್ತಿದ್ದವಂತೆ. ಆ ಕಾರಣಕ್ಕೇ ಕುರಿಗೂಡುಗಳ ಸುತ್ತಲೂ ಒಂದೆರಡು ಮಾರು ಅಗಲದ ಥರಾವರಿ ಕಾಡು ಮುಳ್ಳುಗಳಿಂದ ಕೂಡಿರುತ್ತಿದ್ದ ದಪ್ಪನೆಯ ಬೇಲಿ ಹಾಕುತ್ತಿದ್ದರಂತೆ. ಎಷ್ಟೋ ಸಾರ್ತಿ ಎರೆ ನೆತ್ತಿ ಈಚೆ ಬದಿಯಲ್ಲಿ ದನ ಕುರಿ ಮೇಸಲು ಹೋಗುತ್ತಿದ್ದವರ ಮೇಲೂ ಎರಗಿಬಿಡುತ್ತಿದ್ದವಂತೆ. ಇಷ್ಟೆಲ್ಲದರ ನಡುವೆಯೂ ಪಟ್ಟದ ದೇವರ ಕೆರೆಯ ತಡಿಯ ಸಿದ್ದಪ್ಪನ ಗುಡಿಗೆ ವರ್ಷದಲ್ಲಿ ಒಂದೆರಡು ಹಬ್ಬಗಳಲ್ಲಿ ಕಡ್ಡಾಯವಾಗಿ `ಎಡೆ’ತೆಗೆದುಕೊಂಡು ಹೋಗಬೇಕಿತ್ತಂತೆ. ಅಂಥ ಹೊತ್ತಲ್ಲಿ ಅಲ್ಲಿಗೆ ಹೋಗುವವರೆಲ್ಲಾ ಗುಂಪಾಗಿ ಹೋಗಿ ಗುಂಪಾಗೇ ಬರುತ್ತಿದ್ದರಂತೆ. ಹಿಂಗೆ ಪ್ರಾಣಿಗಳ ಕಾಟದ ಜೊತೆಗೆ ಎರೆನೆತ್ತಿಯ ಕಾಡಿನೊಳಕ್ಕೆ ಆಗಾಗ ದೂರದ ಊರುಗಳಿಂದ ದರೋಡೆಕೋರರು ಬಂದು ಸೇರಿಕೊಂಡುಬಿಡುತ್ತಿದ್ದರಂತೆ. ಆಗ ಅಪ್ಪಿತಪ್ಪಿಯೂ ಸುತ್ತಲ ಹಳ್ಳಿಗಳ ಜನರು ಅತ್ತ ಸುಳಿಯುತ್ತಿರಲಿಲ್ಲವಂತೆ. ಪೊಲೀಸರಿಗೆ ದೂರು ಕೊಟ್ಟರೂ ಅತ್ತ ಹೋಗಲು ಅವರೂ ಹಿಂಜರಿಯುತ್ತಿದ್ದರಂತೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಸಾಕಷ್ಟು ಕಳ್ಳತನ ಮಾಡಿದ ಮೇಲೆ ಆ ದರೋಡೆಕೋರರು ಅವರಾಗಿಯೇ ಜಾಗ ಖಾಲಿ ಮಾಡುತ್ತಿದ್ದರಂತೆ. ಎರೆನೆತ್ತಿಯ ಬಗ್ಗೆ ಇಂಥ ಪುಕಾರುಗಳನ್ನು ನನ್ನ ಅಜ್ಜನಷ್ಟೇ ಅಲ್ಲ ಊರಿನ ಹಲವು ಹಿರಿಯ ತಲೆಗಳು ಹೇಳುತ್ತಿದ್ದುದರಿಂದ ಅದು ನನ್ನಂಥವರೊಳಗೆ ಒಂದು ನಿಗೂಢ ಲೋಕವಾಗಿ ಉಳಿದುಬಿಟ್ಟಿತ್ತು. + +ನಾನು ಬೆಳೆದು ದೊಡ್ಡವನಾಗುವ ಹೊತ್ತಿಗೆ ಎರೆನೆತ್ತಿಯ ಕಾಡಿನ ಮರಗಳೆಲ್ಲಾ ಮಂಗಮಾಯವಾಗಿ ತರಾದ ಮುಳ್ಳಿನ ಗಿಡಗಳು ಬ್ಯಾಟೆ ಗಿಡದ ಗುತ್ತಿಗಳು ಬಂದ್ರೆ ಸೊಪ್ಪಿನ ಪೊದೆಗಳು ಆಳೆತ್ತರದ ಬ್ಯಾಟೆಗುತ್ತಿಗಳು ಮಾತ್ರ ಉಳುಕಂಡಿದ್ದವು. ಸೌದೆಗಾಗಿ ತಡಕಾಡುವಾಗ ಕೆಲವೊಮ್ಮೆ ನಮಗೆ ನೆಲಕತ್ನವಾಗಿರುತ್ತಿದ್ದ ಶ್ರೀಗಂಧದ ಬುಡಗಳು ಸಿಕ್ಕುತ್ತಿದ್ದವು. ಹೆಂಗೋ ಮಾಡಿ ಅವುಗಳ ಚಕ್ಕೆಗಳನ್ನು ಎಬ್ಬಿಕೊಂಡು ಸೌದೆಯ ಹೊರೆಯೊಳಕ್ಕೆ ಸೇರಿಸಿಕೊಂಡು ತಂದರೂ ಮನೆಗಳಲ್ಲಿ ಅರಣ್ಯ ಇಲಾಖೆಯವರಿಗೆ ಹೆದರಿ ಅವುಗಳನ್ನು ಒಲೆಗಳಿಗೆ ಇಡುತ್ತಿರಲಿಲ್ಲ. ಬದಲಿಗೆ ಕಲ್ಲಿನ ಮೇಲೆ ತೇದು ವಾರದ ದಿನ, ಹಬ್ಬ ಹರಿದಿನಗಳಲ್ಲಿ ಹಣೆಗೆ ಇಟ್ಟುಕೊಳ್ಳಲು ಬಳಸುತ್ತಿದ್ದರು. ಆ ಚೆಕ್ಕೆಗಳ ಘಮಲಿಗೆ ಮಾರುಹೋಗುತ್ತಿದ್ದ ನಾವುಗಳು ಅವರೆ ಅಥವಾ ಜೋಳದ ಹೊಲಗಳನ್ನು ಕಾಯುವ ಹೊತ್ತಲ್ಲಿ ದೊಡ್ಡವರಿಗೆ ಕಾಣದಂತೆ ಕದ್ದೊಯ್ದು ಅವುಗಳಿಗೆ ಬೆಂಕಿಕೊಟ್ಟು ಉರಿಸಿ ಘಮಲನ್ನು ಅನುಭವಿಸುತ್ತಿದ್ದೆವು. ಎರೆನೆತ್ತಿಯಲ್ಲಿ ಸಮೃದ್ಧವಾಗಿ ಬ್ಯಾಟೆ ಗಿಡಗಳಿದ್ದವು. ಅವುಗಳಲ್ಲಿ ಯಥೇಚ್ಛವಾಗಿ ಕೆಮ್ಮಣ್ಣು ಜೀರಿಂಬೆಗಳಿರುತ್ತಿದ್ದವು. ನನ್ನ ವಾರಿಗೆಯವರಿಗೆ ಎರೆನೆತ್ತಿ ಇಷ್ಟವಾಗಲು ಇದೂ ಒಂದು ಕಾರಣವಾಗಿತ್ತು. ಇದರ ಜೊತೆಗೆ ಮತ್ತೊಂದು ಕಾರಣವಿತ್ತು. ಅದೆಂದರೆ ಅಲ್ಲಿ ವರ್ಷದಲ್ಲಿ ಕೆಲವು ತಿಂಗಳುಗಳನ್ನು ಬಿಟ್ಟರೆ ಉಳಿದಂತೆ ಖಾಯಮ್ಮಾಗಿರುತ್ತಿದ್ದ ಅಲೆಮಾರಿ ಜನಾಂಗದವರ ಗುಡಾರಗಳು. ರಜೆ ದಿನಗಳಲ್ಲಿ ಕೆಮ್ಮಣ್ಣು ಜೀರಿಂಬೆಗಳಿಗಾಗಿ ಮನೆಯವರಿಗೆ ಗೊತ್ತಿಲ್ಲದಂತೆ ಎರೆನೆತ್ತಿಗೆ ಹೋಗುತ್ತಿದ್ದ ನಮಗೆ ಗುಡಾರಗಳಲ್ಲಿರುತ್ತಿದ್ದ ಸುಡುಗಾಡು ಸಿದ್ಧರು, ದೊಂಬಿದಾಸರು, ಹಕ್ಕಿಪಿಕ್ಕಿಗಳು ಮುಂತಾದವರ ವೇಷಭೂಷಣಗಳು, ಯಾವ ಸ್ಕೂಲುಗೀಲಿನ ಹಂಗಿಲ್ಲದೆ ಅದೂ ಇದೂ ಆಟವಾಡಿಕೊಂಡಿರುತಿದ್ದ ಮಕ್ಕಳು, ಅವರಾಡುತ್ತಿದ್ದ ನಮಗರಿಯದಿದ್ದ ಭಾಷೆ, ಗಿಡ ಮರಗಳ ಜೊತೆ ಒಂದಾಗಿ ಬದುಕುತ್ತಿದ್ದ ಅವರ ಜೀವನ ಕ್ರಮ, ಆ ವಯಸ್ಸಿನಲ್ಲಿ ನಮಗೆ ಏನು ಅಂತ ಅರ್ಥವಾಗದಿದ್ದರೂ ಅವರುಗಳ ಬಗ್ಗೆ ನಮ್ಮೊಳಗೆ ವಿಶೇಷ ಕುತೂಹಲವನ್ನು ಹುಟ್ಟಾಕುತ್ತಿದ್ದವು. ಹಂಗಾಗಿ ಒಂದೆರಡು ಜೀರಿಂಬೆಗಳು ಸಿಕ್ಕರೆ ಸಾಕು ಅವುಗಳನ್ನು ಹಿಡಿದು ಖಾಲಿ ಬೆಂಕಿಪೊಟ್ಟಣದೊಳಕ್ಕೆ ಕೂಡಾಕಿಕೊಂಡವರೇ ನಾವೆಲ್ಲಾ ಸೀದಾ ಹೋಗಿ ಅಲೆಮಾರಿ ಗುಡಾರಗಳ ಬಳಿ ಜಮಾಯಿಸುತ್ತಿದ್ದೆವು. + +ಹಿಂಗೆ ಎಂಥದೋ ರೊಮಾಂಚನ ಹುಟ್ಟಿಸುತ್ತಿದ್ದ ಅವರ ಒಟ್ಟು ಬದುಕಿಗೆ ಅದೊಂದು ದಿನ ಸುತ್ತಲ ಹಳ್ಳಿಗರು ಸೇರಿಕೊಂಡು ಅಲೆಮಾರಿಗಳ ಮೇಲೆ ಕಳ್ಳತನಗಳ ಆರೋಪ ಹೊರಿಸಿ, ಮಕ್ಕಳು ಹೆಂಗಸರು ಅನ್ನದೆ ಸಿಕ್ಕ ಸಿಕ್ಕವರಿಗೆಲ್ಲಾ ಹೊಡೆಯುತ್ತಾ ಗುಡಾರಗಳಿಗೆಲ್ಲಾ ಬೆಂಕಿಯಿಟ್ಟು ಬೇಯಿಸುತ್ತಾ ವಿಕೃತಿ ಮೆರೆಯುವಂಥ ಹೊತ್ತಲ್ಲಿ ಮುಗಿಲು ಮಟ್ಟಿದ್ದ ಅವರುಗಳ ಆ ಅನಾಥ ಆಕ್ರಂದನ ನಮ್ಮನ್ನು ದಿಕ್ಕೆಡಿಸಿತ್ತು. ಆ ಆಕ್ರಂದನ, ಆ ನರಳಾಟ, ಆ ಬೆಂಕಿ ನನ್ನೊಳಗೆ ಇನ್ನೂ ಆರದಿರುವ ಕಾರಣಕ್ಕೆ ಒಂದೆರಡು ಕಥೆಗಳಲ್ಲಿ ಅದು ಮುಖ್ಯ ಧಾತುವಾಗಿ ಕಾಣಿಸಿಕೊಂಡಿದೆ. + + + +ಅದಾದ ಮೇಲೆ ಮತ್ತೆ ಯಾವತ್ತೂ ಯಾವ ಅಲೆಮಾರಿಗಳ ಗುಂಪೂ ಅತ್ತ ಬರಲಿಲ್ಲ. ನಾನು ಹೈಸ್ಕೂಲು ಮುಗಿಸುವ ಹೊತ್ತಿಗೆಲ್ಲಾ ಈಟೀಟೇ ಬೋಳಾಗತೊಡಗಿದ್ದ ಎರೆನೆತ್ತಿ ಈಗ ಪೂರಾ ಹೊಲಮಾಳವಾಗಿಬಿಟ್ಟಿದೆ. ಅಲ್ಲಲ್ಲಿ ಬಗರ್‌ಹುಕುಂ ಸಾಗುವಳಿದಾರರ ಮನೆಗಳಾಗಿವೆ. ಯಾವ ಕಾರಣಕ್ಕೋ ಏನೋ ಅಲ್ಲಲ್ಲಿ ಬ್ಯಾಟೆ ಗಿಡಗಳಿದ್ದರೂ ಕೆಮ್ಮಣ್ಣು ಜೀರಿಂಬೆಗಳಿರಲಿ ಮಾಮೂಲಿ ಪುಟಾಣಿ ಜೀರಿಂಬೆಗಳ ಸಂತತಿಯೂ ಕಣ್ಮರೆಯಾಗುತ್ತಿದೆ. ಆದರೆ ನನ್ನೊಳಗೆ ಈ ಎರೆನೆತ್ತಿ, ಈ ಗಂಧದ ಮರದ ಬುಡಗಳು, ಈ ಕೆಮ್ಮಣ್ಣು ಜೀರಿಂಬೆ ಹಾಗೂ ಅಲೆಮಾರಿಗಳು, ಅವರ ಗುಡಾರಗಳು ಆಗಾಗ ನನ್ನೊಳಗೆ ಆಗಿನ ಅದೇ ಸ್ಥಿತಿಯಲ್ಲಿ ಪ್ರತ್ಯಕ್ಷವಾಗುತ್ತಾ ರೋಮಾಂಚನವನ್ನೂ ಸಂಕಟವನ್ನೂ ದೂಡುತ್ತಿರುತ್ತವೆ. ಎರೆನೆತ್ತಿ ನೆನಪಾದರೆ ಮಿಕ್ಕವುಗಳು ತಂತಾನೇ ಎದುರು ನಿಲ್ಲುತ್ತವೆ. ಹಂಗಾಗಿ ಈ ಇವುಗಳೆಲ್ಲಾ ಒಟೈಸಿರುವ, ನನ್ನ ಸ್ಮೃತಿಯ ಒಂದು ಮುಖ್ಯ ಭಾಗವೇ ಆಗಿರುವ ಕಾರಣಕ್ಕೇ ಈ ತನಕದ ಕಥನಕ್ಕೆ `ಎರೆನೆತ್ತಿ’ಅಂತ ಕರೆದಿದ್ದೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_76.txt b/Kenda Sampige/article_76.txt new file mode 100644 index 0000000000000000000000000000000000000000..cac706e486bed06ee14cdcfdcba96b7d3e6ada3d --- /dev/null +++ b/Kenda Sampige/article_76.txt @@ -0,0 +1,25 @@ +ಅಬ್ದುಲ್ ರಶೀದ್‌ರವರ ಈ ಕಾದಂಬರಿಯಲ್ಲಿನ ಮುಖ್ಯ ಪಾತ್ರವೇ ಅನ್ನಬಹುದಾದ ಹೂವಿನ ಕೊಲ್ಲಿ ಸಿದ್ದಾಪುರ ಅನ್ನುವ ಊರಿನ ಹತ್ತಿರವಿರುವ ಒಂದು ಕಾಫೀ ಎಸ್ಟೇಟ್ ಆಗಿದ್ದರೂ, ಸುತ್ತಮುತ್ತಲಿನ ಪ್ರತಿಯೊಂದರಿಂದ ಬೇಕಂತಲೇ ದೂರವನ್ನು ಕಾಪಾಡಿಕೊಂಡು, ರಶೀದರು ಪ್ರೀತಿಯಿಂದ ಕಾಲ ಕಳೆದು ಬಂದಿರುವ ಲಕ್ಷದ್ವೀಪದ ತರ ಒಂದು ದ್ವೀಪದಂತೆ ವರ್ತಿಸುತ್ತದೆ. “ಇಂದು ಯಾಕೆ ಎಲ್ಲ ಹೀಗೆ ಇಷ್ಟು ಚಂದವಾಗಿದೆʼʼ ಎಂದು ಹೂವಿನ ಕೊಲ್ಲಿಯ ಬಾಯಿಬಾರದ ಹಸುಕರುಗಳು ಬೆರಗುಗೊಳ್ಳುತ್ತವೆ. ಕಾದಂಬರಿ ಓದಿದಾಗ ಎಷ್ಟೆಲ್ಲಾ ಗೋಳುಗಳಿಂದ ಕೂಡಿರುವ ಜನರಿಂದ ತುಂಬಿರುವ ಈ ಹೂವಿನ ಕೊಲ್ಲಿ, ಇಷ್ಟು ಚಂದವಿರುವುದು ಹೇಗೆ ಅನ್ನುವ ಬೆರಗು ಮೂಡುತ್ತದೆ. + +(ಅಬ್ದುಲ್ ರಶೀದ್) + +ರಮಣೀಯತೆಯನ್ನೇ ಹಾಸಿಕೊಂಡು ಹೊದ್ದುಕೊಂಡು ಅಷ್ಟೇ ಸಾಕೆಂದು ತನ್ನಲ್ಲಿ ತಾನೇ ಮುಳುಗಿಹೋಗಿರುವಂತ ಈ ಹೂವಿನ ಕೊಲ್ಲಿಗೆ ಹೊರಗಿಂದ ಬಂದಂತವು ಸಾಕಷ್ಟಿವೆ. ‘ರೈಟರ್‌ʼ ಉಸ್ಮಾನ್‌ ಎಂದೋ ತಂದಿದ್ದ ಕ್ಯಾಲೆಂಡರ್‌ನಲ್ಲಿ ಕುಳಿತಿರುವ ಪರ್ಷಿಯನ್‌ ಬೆಕ್ಕು ತನ್ನ ಎದುರಿನ ಪಂಜರದಲ್ಲಿರುವ ‘ಜುಲೈಕಾʼ ಅನ್ನುವ ಗಿಳಿಯನ್ನೂ, ಆ ಜಾಗದಲ್ಲಿ ನಡೆಯುವ ಮನುಷ್ಯ ಪ್ರಪಂಚದ ಎಲ್ಲಾ ರಗಳೆ-ಸಂಭ್ರಮಗಳನ್ನೂ, ಕೀಟಳೆ ಮಾಡಿಕೊಂಡು ಏಳು-ಎಂಟು ವರ್ಷಗಳಿಂದ ನೋಡುತ್ತಲೇ ಇದೆ. ಈ ಎಸ್ಟೇಟಿಗೆ ಅಚಾನಕ್ಕಾಗಿಯೋ, ಬಯಸಿಯೋ ಬಂದು ಸೇರಿ ಬದುಕುತ್ತಿರುವ ಅನೇಕ ನರಮನುಷ್ಯರಂತೆಯೇ ಆ ಕ್ಯಾಲೆಂಡರ್ ಕೂಡಾ ತಾನು ಯಾಕೆ, ಯಾವ ಉದ್ದೇಶಕ್ಕೆ, ಯಾವ ಸಾಧನೆಗೆ ಇಲ್ಲಿಗೆ ಬಂದಿದ್ದೆ ಅನ್ನುವುದರ ಪರಿಗಣನೆಯೇ ಇಲ್ಲದಂತೆ ತನ್ನ ಪಾಡಿಗೆ ತಾನು ಗೋಡೆಯ ಮೇಲೆ ನೇತಾಡಿಕೊಂಡು ಇದೆ. ಕಾಲಗಣನೆಗೆಂದೇ ಇರುವ ಕ್ಯಾಲೆಂಡರ್‌ ಕೂಡ ಹೂವಿನ ಕೊಲ್ಲಿಯಲ್ಲಿ ಕಾಲಾತೀತವಾಗುತ್ತದೆ. ಹೀಗೆ ಹೂವಿನ ಕೊಲ್ಲಿಗೆ ಬಂದು ಇಲ್ಲೇ ಕಳೆದು ಹೋಗಿರುವ ಮನುಷ್ಯರಿಂದಲೇ ಈ ಎಸ್ಟೇಟ್‌ ತುಂಬಿ ತುಳುಕುತ್ತಿದೆ. ಘಟ್ಟದ ಕೆಳಗಿನಿಂದ ಬಂದಿರುವ ಐತಣ್ಣ, ಕೇರಳದ ಮಲ್ಲಪುರಮ್‌ ಜಿಲ್ಲೆಯಿಂದ ಬಂದಿರುವ ಮೂಸಕಾಕ, ಸಿಲೋನಿನಿಂದ ಬಂದಿರುವ ಸಿಲೋನ್‌ ಅಣ್ಣಾಚಿ, ಹೇಗೆ ಯಾವಾಗ ಎಲ್ಲಿಂದ ಬಂದ ಅನ್ನುವುದೇ ಯಾರಿಗೂ ಗೊತ್ತಿಲ್ಲದಿರುವ ಕುಟ್ಟಿಕಣ್ಣ, ಪಠಾಣರ ಕುಲಕ್ಕೆ ಸೇರಿದವಳು ಅನ್ನಲಾದ ಅಡುಗೆ ಕೆಲಸದ ಕಾದಿಮಾ ಅಜ್ಜಿ, ಅಸ್ಸಾಮಿನಿಂದ ಬಂದಿರುವ ದಾಸ, …….. ಎಲ್ಲಿಂದಲೋ ಬಂದು ಇಲ್ಲಿ ವಾಸ ಹೂಡಿ ತಮ್ಮ ಮೂಲಸ್ಥಾನಗಳ ನೆನಪಲ್ಲಿ ಕೊರಗಿಕೊಂಡು ಇಲ್ಲಿಯೇ ಮಣ್ಣಾಗುತ್ತಾರೆ. + +ಈ ‘ಇಲ್ಲಿʼ ಅನ್ನುವುದು ಕರಾರುವಕ್ಕಾಗಿ ಎಲ್ಲಿದೆ, ಯಾವ ಕಾಲಮಾನದಲ್ಲಿದೆ ಅನ್ನುವುದನ್ನು ಬಿಡಿಸಿ ಹೇಳುವ ಆಸಕ್ತಿ ಈ ಕಾದಂಬರಿಗಿಲ್ಲ. ಈ ಕತೆ ಎಲ್ಲಿ, ಯಾವಾಗ ನಡೆಯುತ್ತದೆ ಅನ್ನುವುದನ್ನು ಕತೆಯಲ್ಲಿ ಬರುವ ಪ್ರಾಸಂಗಿಕ ವಿವರಗಳಿಂದಲೇ ಅಂದಾಜಿಸಬೇಕು. ಬಾಂಗ್ಲಾ ವಿಮೋಚನಾ ಯುದ್ಧ, ಇಂದಿರಾ ಗಾಂಧಿ, ಸಂಸ್ಥಾ ಕಾಂಗ್ರೆಸ್‌, ಕಮ್ಯುನಿಸ್ಟ್‌ ಹೋರಾಟಗಳ ಪ್ರಸ್ತಾಪ ಇದೆಯಾದರೂ ಹೂವಿನ ಕೊಲ್ಲಿಯ ಹೊರಗಿರುವ ವಿಶಾಲವಾದ ವಿಶ್ವದ, ದೇಶಗಳ, ರಾಜ್ಯಗಳ, ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿರುವ ಈ ಘಟನೆಗಳಿಗೆ ಹೂವಿನ ಕೊಲ್ಲಿಯ ಜನರು ಅನಾಸಕ್ತಿಯಿಂದಲೇ ಪ್ರತಿಕ್ರಿಯಿಸುತ್ತಾರೆ. ಉಸ್ಮಾನ್‌ ರೈಟರ್‌ ಪಾಪ ಹಾರೂನನಿಗೆ ನಕ್ಷೆ ಬರೆದು ‘ಯಾವುದೆಲ್ಲಾ ಭಾರತವೆಂದು, ಯಾವುದು ಪಾಕಿಸ್ತಾನವೆಂದು, ಬಾಂಗ್ಲಾದೇಶ ಎಲ್ಲಿ ಉದಯಿಸುವುದೆಂದುʼ ಹೇಳಿಕೊಡುತ್ತಾರೆ. ಆದರೆ ಅವರು ಆ ನಕ್ಷೆ ಬರೆಯುವುದೇ ನೀರಿನಲ್ಲಿ! ಮಗು ಹಾರೂನನಿಗೆ ಪಕ್ಕದ ಹಾರಂಗಿ ಅಣೆಕಟ್ಟಿಗೆ ಮಕ್ಕಳನ್ನು ಬಲಿಕೊಡುತ್ತಾರೆ ಅನ್ನುವ ಹೆದರಿಕೆಯೇ ತಲೆಯಲ್ಲಿ! ಸಿದ್ದಾಪುರದಲ್ಲಿ ಜಾಥಾ ತೆಗೆದು ಯಾಹ್ಯಾಖಾನನ ಹುಲ್ಲಿನ ಗೊಂಬೆಗೆ ಬೆಂಕಿ ಇಡಲು ತಯಾರಿ ನಡೆಯುವಾಗ ಅಲ್ಲಿಗೆ ಬರುವ ಹೂವಿನ ಕೊಲ್ಲಿಯ ಖಾನ್‌ ಸಾಹುಕಾರರು ಸುಮ್ಮನೇ ಆ ಗೊಂಬೆಯನ್ನು ನೋಡುತ್ತಾರೆ, ಹಾರೂನನ ಕಡೆ ಒಂದು ಮುಗುಳ್ನಗೆ ಬೀರಿ. ಮಕ್ಕಳೆಲ್ಲರೂ ಆ ಹುಲ್ಲಿನ ಬೊಂಬೆಯನ್ನು ಮುಗುಳ್ನಗುತ್ತಾ ನೋಡುತ್ತಿರುತ್ತಾರೆ. ಕಾದಂಬರಿ ‘ಆ ಎಳೆ ಬಿಸಿಲಿಗೆʼ ಹೊಳೆಯುತ್ತಿದ್ದ ‘ಎಣ್ಣೆ ಹಚ್ಚಿದ್ದ ಅವರ ತಲೆಗಳʼನ್ನು ನಮ್ಮ ಗಮನಕ್ಕೆ ತರುತ್ತದೆ! + +ತಮ್ಮ ಮಗ ಕಮ್ಯುನಿಸ್ಟ್ ಅನ್ನುವ ಕಾರಣಕ್ಕೆ ಕೊಲೆಯಾಗಿದ್ದಾನೆ ಅಂದುಕೊಂಡಿರುವ ನಂಬಿಯಾರರೇ ಮೇ ದಿನದ ಕರಪತ್ರವನ್ನು ಇಸಿದುಕೊಂಡ ನಂತರ “ನಮಗೆಲ್ಲಾ ವಯಸ್ಸಾಯಿತು… ಇನ್ನು ನಾವೂ ಜಾಥಾ ಹೊರಡಬೇಕು. ಒಂದು ದೊಡ್ಡ ಜಾಥಾ, ಇಲ್ಲಿಂದ ಅಲ್ಲಿಯವರೆಗೆʼʼ ಎಂದು ವೇದಾಂತ ಹೇಳುತ್ತಾರೆ. ಕಾಂಗ್ರೆಸ್‌ ವಿರೋಧಿಯಾಗಿ ಸಂಸ್ಥಾಕಾಂಗ್ರೆಸ್‌ ಸೇರಿರುವ ಮೊಯಿದು ತನ್ನ ರಾಜಕೀಯ ನಿಷ್ಟೆ ಬದಲಿಸಿದ್ದು ಇಂದಿರಾ ಗಾಂಧಿಯವರ ಕಾರಿಗೆ ಹೋಗಲು ಅಡ್ಡಿಯಾಗಿ ನಿಂತಿದ್ದ ತನ್ನ ಕಾರನ್ನು ಪೋಲಿಸರು ಚರಂಡಿಗೆ ನೂಕಿದ್ದರು ಅನ್ನುವ ಸಿಟ್ಟಿನಿಂದ ಅಷ್ಟೇ. ಹೂವಿನ ಕೊಲ್ಲಿಯಲ್ಲಿರುವ ಜನರಿಗೆ “ಅನ್ನದ ಪಾತ್ರೆಯಲ್ಲಿ ಅಕ್ಕಿ ಅಗುಳಾಗಿದೆಯಾ, ಸಾರಿನ ಮಡಿಕೆಯಲ್ಲಿ ಮಾಂಸ ಕುದಿಯುತ್ತಿದೆಯಾ” ಅನ್ನುವುದರಲ್ಲಿರುವ ಆಸಕ್ತಿ ಯಾಹ್ಯಾಖಾನನಲ್ಲಿಯಾಗಲೀ, ಹೊಸ ದೇಶವೇ ಹುಟ್ಟುತ್ತಿರುವುದರಲ್ಲಾಗಲೀ ಇಲ್ಲ. ಕುಟ್ಟಿಕಣ್ಣ ಮೇ ದಿನದ ಕರಪತ್ರವನ್ನು ಮೆರವಣಿಗೆಕಾರರಿಂದ ಇಸಿದುಕೊಂಡು “ನೀವು ತೋಟದ ಒಳಗೆ ಕಾಲು ಹಾಕಲು ಸಾಹುಕಾರರ ಆರ್ಡರ್‌ ಇಲ್ಲ” ಎಂದು ಗೇಟಿಗೆ ಬೀಗ ಹಾಕುತ್ತಾನೆ; ತಮ್ಮದೇ ಸಾಕಷ್ಟು ನರಳಾಟಗಳಿರುವಾಗ ಈ ಯಾಹ್ಯಾಖಾನನದೇನು ಮಹಾ ಅನ್ನುವ ಹಾಗೆ. ಬಹುಷಃ ಈ ಕಾದಂಬರಿಯೂ ಕೂಡ ತನ್ನ ಪಾತ್ರಗಳ ಅಗಣಿತ ನರಳಾಟಗಳು ಮತ್ತು ದಿನನಿತ್ಯದ ಬದುಕಿನ ಸುಖ-ದುಃಖಗಳನ್ನು ಬಿಟ್ಟು ಉಳಿದಿದ್ದೆಲ್ಲವನ್ನೂ ತನ್ನ ಕಾದಂಬರಿ ಜಗತ್ತಿನ ಗೇಟಿನ ಹೊರಗೆ ಉಳಿಸಿಬಿಟ್ಟು ಬೀಗ ಹಾಕಲು ಬಯಸುತ್ತದೆ. + +ಈ ಸುಂದರ ಪ್ರಕೃತಿಯ ಮಡಿಲಲ್ಲಿ ಬದುಕಿರುವವರ ಜೀವನದಲ್ಲಿ ನರಳಾಟಗಳಿಗೇನೂ ಕೊರತೆ ಇಲ್ಲ. ಉಸ್ಮಾನ್‌ ರೈಟರ್‌ಗೆ ವಾಸಿಯಾಗದ ‘ಮೂಲವ್ಯಾಧಿʼಯ ಕಾಯಿಲೆ. ಅವರ ಮೊದಲ ಹೆಂಡತಿ ಜುಲೈಕಾ ಮೂರು ಮಕ್ಕಳನ್ನು ಹಡೆದು ಕೊಟ್ಟು ತನ್ನ ಹುಚ್ಚಿನಲ್ಲಿ ಅಲ್ಲಿ ಇಲ್ಲಿ ಓಡಾಡಲು ಶುರು ಮಾಡಿ ನಂತರ ಹಾಗೇ ಕಾಣೆಯಾಗಿದ್ದಾಳೆ. ಮರಿಯಮ್ಮನ ಗಂಡ ಡ್ರೈವರ್‌ ಹಂಸಾಕ ಕಾರಿನಲ್ಲಿ ಬರುವಾಗ ಅಪಘಾತವಾಗಿ ಅವರ ದೊಡ್ಡ ಸಾಹುಕಾರರು ತೀರಿ ಹೋಗಿ ಹನ್ನೆರೆಡು ದಿನವಾದ ಮೇಲೆ ಸ್ವರ್ಗದಲ್ಲಿ ಅವರ ಕಾರು ನಡೆಸಲೇನೋ ಎಂಬಂತೆ ತೀರಿಹೋಗಿದ್ದಾನೆ. ಮೂಸಕಾಕನ ಹೆಂಡತಿ ಕುಂಞಿಪಾತಮ್ಮ ಪ್ರತಿ ಉಸಿರಿನಲ್ಲೂ ಇದೇ ತನ್ನ ಕೊನೆ ಉಸಿರಿರಬಹುದೆಂದು ಮರಣವನ್ನು ಎದುರು ನೋಡುತ್ತಾ ವರ್ಷಗಳಿಂದ ಮಲಗಿದ್ದಾಳೆ. “ಪುತ್ರಶೋಕವೆಂಬುದು ಎಲ್ಲಾ ಶೋಕಗಳಿಗಿಂತ ಅತಿದೊಡ್ಡ ಶೋಕʼʼ ಅನ್ನುವುದನ್ನ ಅನುಭವಿಸುತ್ತಾ ಸಾವಿಗೆ ಕಾಯುತ್ತಿದ್ದಾರೆ ನಂಬಿಯಾರರು. ಸಾವುಗಳು, ರೋಗಗಳು, ದುಃಖಗಳು, ಒಂಟಿತನಗಳು, ಈ ಹೂವಿನ ಕೊಲ್ಲಿಯ ಲೋಕದಲ್ಲಿ ದಂಡಿಯಾಗಿವೆ. ಕೆಲವೊಮ್ಮೆ “ಯಾರ ಮುಖದಲ್ಲೂ ಖುಷಿಯಿರುವ ಹಾಗೆ ಕಾಣಿಸುತ್ತಿಲ್ಲವಲ್ಲ” ಅನ್ನಿಸುತ್ತದೆ. + + + +ಬಾಂಗ್ಲಾದೇಶದ ಯುದ್ಧದ ಬಗ್ಗೆ, ಕಮ್ಯುನಿಸ್ಮ್‌ನ ಬಗ್ಗೆ ಎಂದೂ ಮಾತಾಡಿಕೊಳ್ಳದ ಈ ಕಾದಂಬರಿಯ ಪಾತ್ರಗಳು ಈ ತಮ್ಮ ಜೀವನದ ನರಳುವಿಕೆಯ, ಒಂಟಿತನದ ಹಿಂದೆ ಯಾವ ವ್ಯವಸ್ಥೆ ಕೆಲಸ ಮಾಡುತ್ತಿರಬಹುದು ಎಂದು ಕೇಳಿಕೊಳ್ಳುತ್ತಾರೆ. “ಇನ್ನೆಷ್ಟು ದಿನ ಈ ಸಂಕಟ” ಎಂದು ಭಗವತಿಗೋ, ಗುರುವಾಯೂರಪ್ಪನಿಗೋ, ಪಡೆದವನಿಗೋ, ಮೊಹಿಯುದ್ದೀನ್‌ ಶೇಖರಿಗೋ ಪ್ರಶ್ನೆ ಮಾಡುತ್ತಾರೆ. “ಈ ಭೂಲೋಕದಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಜನರು ಎಲ್ಲಿಂದ ಎಲ್ಲಿಯವರೆಗೆ ಹೋಗಬೇಕಾಗುತ್ತಲ್ಲಾ ನಿನ್ನನ್ನು ನಂಬಿ” ಎಂದು ಅಚ್ಚರಿ ಪಡುತ್ತಾರೆ. “ಅಸತ್ಯವಿಶ್ವಾಸಿಗಳನ್ನು ತನ್ನ ನರಕದಲ್ಲಿ ಸುಡುವ ಆ ಪಡೆದವನು ಸತ್ಯವಿಶ್ವಾಸಿಗಳನ್ನು ಬದುಕಿರುವಾಗಲೇ ಯಾಕೆ ಹೀಗೆ ಶಿಕ್ಷೆಗೆ ಗುರಿಪಡಿಸುತ್ತಾನೆ” ಅನ್ನುವ ಪ್ರಶ್ನೆ ಉಸ್ಮಾನ್ ರೈಟರ್ ಅವರದ್ದು. ಆದರೆ ಅವರೇ ಒಮ್ಮೆ “ಇಲ್ಲಿ ಯಾವುದಕ್ಕೂ ಏನಕ್ಕೂ ಯಾವುದೇ ಕಾರಣಗಳಿರುವುದಿಲ್ಲ. ಜೀವಗಳು ಹೋಗುತ್ತವೆ ಬರುತ್ತವೆ. ಅದಕ್ಕೆಲ್ಲಾ ಕಾರಣಗಳನ್ನು ಹುಡುಕಲು ಹೋದರೆ ಹುಚ್ಚು ಹಿಡಿಯುತ್ತದೆ” ಅಂತಲೂ ಅಂದಿದ್ದಾರೆ. ಅದರ ಮಧ್ಯ ಫಾತುಮಾ “ಕಾಫಿಯಲ್ಲಿ ಇನ್ನೂ ಬೆಲ್ಲ ಕರಗಿಯೇ ಇಲ್ಲವಲ್ಲ ಪಡೆದವನೇ” ಎಂದು ರೋದಿಸುತ್ತಿದ್ದಾಳೆ. + +ಜೀವನದ ಅರ್ಥ ಹೂವಿನ ಕೊಲ್ಲಿಯ ಪಾತ್ರಗಳಿಗೆ ಸಿಗುತ್ತದೋ ಇಲ್ಲವೋ, ಆದರೆ ಸಹಜೀವಿಗಳ ನೋವನ್ನು ಅವರು ಅರ್ಥ ಮಾಡಿಕೊಳ್ಳಬಲ್ಲರು. ಹಾಜಮ್ಮ ಮಾತು ಬಾರದ ಹುಂಜದ ಮನಸ್ಸಿನ ಅಕ್ಕಿ ತವುಡು ಬೇಕೆಂಬ ಆಸೆಯನ್ನೂ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇರುವವಳು. ಮುದಾರನಿಗೆ ನಂಬಿಯಾರರಿಗೆ ಅಡಿಕೆ ಸಿಗದೆ ದುಃಖವಾಗುತ್ತಿದೆ ಅನ್ನುವುದು ಅರ್ಥವಾಗುತ್ತದೆ. ಹೂವಿನ ಕೊಲ್ಲಿಯ ಎಲ್ಲರೂ ಬೆಳೆದ ಮಗನನ್ನು ಕಳೆದುಕೊಂಡಿರುವ ನಂಬಿಯಾರರ “ನೋವನ್ನು ಅರ್ಥ ಮಾಡಿಕೊಂಡು ಒಳಗೊಳಗೇ” ಸಂಕಟಪಡುತ್ತಿರುತ್ತಾರೆ. ಇದು ವೈಚಾರಿಕವಾಗಿಯೋ, ಸೈದ್ಧಾಂತಿಕವಾಗಿಯೋ, ಧಾರ‍್ಮಿಕ ಹಿನ್ನಲೆಯಿಂದಲೋ ಮಾಡಿಕೊಂಡಿರುವ ‘ಅರ್ಥʼ ಅಲ್ಲ; ಜೊತೆಗೆ ಬದುಕುತ್ತಿರುವ ಜೀವಿಯೊಂದರ ಬಗ್ಗೆ ಸಹಜವಾಗಿ ಮೂಡಿರುವ ‘ಸಹ ಅನುಭೂತಿʼ. + +ಜೀವ ಇರುವ ಮಾನವರಿಗಾದರೆ ಅನುಭೂತಿ ಇರುತ್ತದೆ. ಆದರೆ ಪ್ರಕೃತಿಗೆ ಇರಬೇಕಲ್ಲಾ? ಇಷ್ಟೆಲ್ಲಾ ನೋವುಗಳಿಂದ ತುಂಬಿರುವ ಹುಲು ಮನುಷ್ಯರ ಜೀವನಕ್ಕೂ ತನಗೂ ಸಂಬಂಧವೇ ಇಲ್ಲ ಅಂದು ತನ್ನ ಪಾಡಿಗೆ ತಾನು ಮಾತ್ರ ರಮಣೀಯವಾಗಿ ಬೇರೆ ಬೇರೆ ತರದ ಬಿಸಿಲಿನಲ್ಲಿ, ಮಳೆಯಲ್ಲಿ, ಚಳಿಯಲ್ಲಿ, ಪ್ರಕೃತಿ ‘ನಗುತ್ತʼ ಮಲಗಿರುತ್ತದೆ. ‘ಮಲ್ಲಿಗೆಯ ಬಳ್ಳಿ, ಚೆಂಡು ಹೂವಿನ ಗಿಡ, ಬಸಳೆಯ ಚಪ್ಪರ, ಸಿಹಿಗೆಣಸಿನ ಪೊದೆ… ಬೆಳದಿಂಗಳಿನಲ್ಲಿ ಮಿಂದು ಗಾಳಿಗೆʼ ಅಲ್ಲಾಡುತ್ತಿರುತ್ತವೆ. ಕಳೆದು ಹೋಗಿರುವ ಮಗ ಹಾರೂನನನ್ನು ಗಾಬರಿಯಿಂದ ಹುಡುಕುತ್ತಿರುವವರ ಮೇಲೆ ‘ಇಳಿ ಮಧ್ಯಾಹ್ನದ ಸೂರ್ಯʼ ಬೆಳಕು ಚೆಲ್ಲುತ್ತಿರುತ್ತಾನೆ. ಯಾರ ಬದುಕೂ ಸರಿಯಾಗಿಲ್ಲ ಎಂದು ಉಸ್ಮಾನ್‌ ರೈಟರ್‌ ಬಾಗಿಲು ತೆಗೆದರೆ, ಹಜಾರದಲ್ಲಿ ಸಣ್ಣಗೆ ಬೆಳಕು ತುಂಬಿಕೊಳ್ಳುತ್ತಿರುತ್ತದೆ. + +ಪ್ರಕೃತಿಯೇನೋ ಮಾನವರ ನರಳಾಟದ ಜೀವನಕ್ಕೆ ಮಿಡಿಯದ ಒಂದು ‘ತಟಸ್ಥʼ ಹಿನ್ನೆಲೆ. ಆದರೆ ಈ ಕಾದಂಬರಿಯ ನಿರೂಪಕನೂ ಹೀಗೆ ತನ್ನ ಪಾತ್ರಗಳಿಂದ ದೂರವಿದ್ದಾನೆಯೇ? ಈ ಕಾದಂಬರಿಯ ನಿರೂಪಣಾ ನೋಟ ಎಲ್ಲವನ್ನೂ ಕ್ಯಾಲೆಂಡರನಲ್ಲಿ ಕೂತು ನೋಡುವ ಪರ್ಷಿಯನ್‌ ಬೆಕ್ಕಿನದ್ದೋ, ನಡುನಡುವೆ ಬಾಯಿ ಹಾಕಿ ತುಂಟತನ ಮಾಡುವ ಜುಲೈಕಾ ಗಿಳಿಯದ್ದೋ, ಅಥವಾ ಪೇರಲೆಯ ಗೆಲ್ಲಲ್ಲಿ ಆಡುತ್ತಾ ಕೂತು ಅಲ್ಲಿಂದಲೇ ಎಲ್ಲವನ್ನೂ ನೋಡುವ ಮಗು ಹಾಜಿರಾಳದ್ದೋ? ಇದ್ಯಾವುದೇ ಇದ್ದರೂ ಈ ಕಾದಂಬರಿಯ ನಿರೂಪಣೆಯ ವೈಶಿಷ್ಠ್ಯ ಇರುವುದು ಎಲ್ಲಿಯೂ ಪಾತ್ರಗಳ ಮೇಲೆ, ಅವುಗಳ ನಡೆಗಳ ಮೇಲೆ, ನಂಬಿಕೆಗಳ ಮೇಲೆ ‘ನೈತಿಕʼ ಅಥವಾ ‘ವೈಚಾರಿಕʼ ಟಿಪ್ಪಣಿಯನ್ನು ಮಾಡದೇ ಇರುವುದು. ‘ಇವರೆಲ್ಲಾ ಎಂತಾ ಮೂಢನಂಬಿಕೆ ಜನಾರಿʼ ಎಂದೆಲ್ಲಾ ಹೇಳದೇ ಇರುವುದು. ಇಲ್ಲಿ ನಿರೂಪಕ ಇದ್ದು ಕೂಡ ಇಲ್ಲ ಅನ್ನುವ ಹಾಗೆ ಪಾತ್ರಗಳು ತಮ್ಮ ಪಾಡಿಗೆ ತಾವಿದ್ದಾವೆ ಅನಿಸುತ್ತದೆ. + + + +ಹೂವಿನಕೊಲ್ಲಿ ಕಾದಂಬರಿಯ ಸಂಕೀರ್ಣ ಸೌಂದರ್ಯವನ್ನು ಈ ಕೆಲವು ಪುಟಗಳ ಅವಲೋಕನದಲ್ಲಿ ಹಿಡಿದಿಡುವುದು ಅಸಾಧ್ಯ ಅನ್ನುವ ಅರಿವು ನನಗಿದೆ. ಹಾಗೆ ಮಾಡುವುದು ಸಾಧ್ಯವಿದ್ದಲ್ಲಿ ಯಾರಾದರೂ ಕತೆ, ಕಾದಂಬರಿಗಳನ್ನಾದರೂ ಯಾಕೆ ಬರೆಯಬೇಕು? ಜೀವನದ ‘ಕೊನೆಮಾಡಲಾಗದಿರುವಿಕೆʼಯನ್ನು ಕೊನೆಯೊಂದು ಇರಲೇ ಬೇಕಾದ ಕಾದಂಬರಿ ರೂಪದಲ್ಲಿ ಕಾಣಿಸುವುದು ಕತೆಗಾರನ ಮುಂದಿರುವ ಸವಾಲಾದರೆ, ಒಂದು ಇಷ್ಟವಾದ ಕಾದಂಬರಿಯು ನೀಡುವ ಅನುಭವವನ್ನು ಸರಳೀಕರಿಸದೆ ಮತ್ತು ಅತೀ ಬೌದ್ಧಿಕಗೊಳಿಸದೆ ಇತರರೊಡನೆ ಹಂಚಿಕೊಳ್ಳುವುದು ನನ್ನಂತಹ ಕತೆಪ್ರೇಮಿಗಳಿಗೆ ಇರುವ ಸವಾಲು. ಆದರೂ ನನ್ನ ಈ ಲೇಖನವನ್ನು ಅಂಜಿಕೆಯಿಂದಲೇ ಒಂದು ಪ್ರಶ್ನೆಯಿಂದ ಕೊನೆಮಾಡುತ್ತೇನೆ. ಯಾವ ಮನುಷ್ಯನೂ ಒಂದು ದ್ವೀಪವಲ್ಲವೆಂದಾದರೆ, ಯಾವ ಕಾದಂಬರಿಯಾದರೂ ಒಂದು ದ್ವೀಪವಾದೀತೆ? ಈ ಕಾದಂಬರಿ ಖಂಡಿತವಾಗಿಯೂ ಕುವೆಂಪು, ತೇಜಸ್ವಿ, ದೇವನೂರು ಮಹದೇವರನ್ನು ನೆನಪಿಸುತ್ತದೆ. ಆದರೆ ಈ ಪ್ರಭಾವಗಳು ದ್ವೀಪವೊಂದಕ್ಕೆ ಅಪ್ಪಿತಪ್ಪಿ ದಾರಿತಪ್ಪಿ, ಅಚಾನಕ್ಕಾಗಿ, ಇಷ್ಟವಿಲ್ಲದೇ ಬಂದಿರುವ ಹಡಗುಗಳಂತೆಯೋ, ಅಥವಾ ಅಪರೂಪಕ್ಕಾದರೂ ನಿಯಮಿತವಾಗಿ ಬರುವ ವ್ಯಾಪಾರಿ ಹಡಗುಗಳಂತೆಯೋ? \ No newline at end of file diff --git a/Kenda Sampige/article_77.txt b/Kenda Sampige/article_77.txt new file mode 100644 index 0000000000000000000000000000000000000000..598b480359b9501fee98b0acd236ab304a4109a6 --- /dev/null +++ b/Kenda Sampige/article_77.txt @@ -0,0 +1,35 @@ +byಕೆಂಡಸಂಪಿಗೆ|Oct 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ.ಡಾ. ಲತಾ ಗುತ್ತಿ ಹೊಸ ಕಾದಂಬರಿ “ಚದುರಂಗ”ದ ಕೆಲವು ಪುಟಗಳು ನಿಮ್ಮ ಓದಿಗೆ + +byಕೆಂಡಸಂಪಿಗೆ|Oct 3, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ.ಡಾ. ರಹಮತ್‌ ತರೀಕೆರೆಯವರ ಆತ್ಮಕಥನ “ಕುಲುಮೆ”ಯ ಒಂದು ಅಧ್ಯಾಯ ನಿಮ್ಮ ಓದಿಗೆ + +byದೀಪಾ ಗೋನಾಳ|Oct 2, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕವಿಯಾದವನಿಗೆ ತನ್ನ ಪದಗಳ ಗೊಡವೆ ಬೇಡ, ಅದು ಯಾರದ್ದೊ ನೋವು, ಆರ್ತನಾದ ಮಾತ್ರ ನನ್ನದು ಎನ್ನುವ ದೈನ್ಯತೆ ಎಂದಿಗೂ ಬೇಕು. ಅದು ನನ್ನ ಮಿತ್ರನ ಕವಿತೆಗಳಲಿ ತುಂಬಿ ಹೋಗಿದೆ. ಹೀಗಾಗಿಯೇ ಈ ಸಂಕಲನ ‘ಗಾಯಗೊಂಡ ಸಾಲುಗಳು‌’ ಎಂಬ ಹಣೆಪಟ್ಟಿ ಹೊತ್ತು ಹೊರಬಂದಿವೆ. ಗಾಯಗೊಂಡ ಪದಗಳನೇ ಹೆಣೆದು ಬ್ಯಾಂಡೇಜು ಕಟ್ಟಿದ ಪದಗಳಿವು. ಯಾರೂ ಮೂಸದ ಸರ್ಕಾರಿ ಆಸ್ಪತ್ರೆಯ ಕಟ್ಟೆಯ ಮೇಲೆ ಕೂತ ಅನಾಥ ವೃದ್ಧನಂತೆ ಇಲ್ಲಿನ ಕವಿತೆಗಳು ಕಾಣಿಸತೊಡಗುತ್ತವೆ.ಸದಾಶಿವ ಸೊರಟೂರು ಕವನ ಸಂಕಲನ “ಗಾಯಗೊಂಡ ಸಾಲುಗಳು” ಕುರಿತು ದೀಪಾ ಗೋನಾಳ ಬರಹ + +byಕೆಂಡಸಂಪಿಗೆ|Sep 28, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ ಮತ್ತು ಆತನ ಮಕ್ಕಳು ಆ ಐದು ಜನರನ್ನೂ ಹಿಡಿದು, ಅವರೆಲ್ಲರ ಹೆಬ್ಬೆಟ್ಟುಗಳನ್ನೂ ಕತ್ತರಿಸಿ, ‘ಈಗ ಡಿಸಿ ಸಾಹೇಬರಿಗೆ ಹೇಗೆ ಅರ್ಜಿ ಕೊಡುತ್ತೀರೋ ನೋಡೋಣ!’ ಎಂದು ಕೂಗಾಡಿದ್ದಾರೆ. ಆ ಐದೂ ದಲಿತರೂ ಬ್ಯಾಂಡೇಜ್ ತೆಗೆದು, ನನ್ನ ಮುಂದೆ ತಮ್ಮ ಎಡಗೈ ಚಾಚಿದರು.ಎನ್.‌ ಸಂಧ್ಯಾರಾಣಿ ಅನುವಾದಿಸಿರುವ ರೆಬೆಲ್‌ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್‌ ಅವರ ಆತ್ಮಕಥನ “ಕಲ್ಯಾಣ ಕೆಡುವ ಹಾದಿ”ಯ ಕೆಲವು ಪುಟಗಳು + +byಕೆ. ಎನ್. ಲಾವಣ್ಯ ಪ್ರಭಾ|Sep 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 4 Comments + +ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ ಸಿಂಗಪುರದ ವಿದ್ಯಾರ್ಥಿನಿಯಿಂದಾದ ವರ್ಣಭೇದದ ಅನುಭವದಿಂದ ಲೇಖಕಿಯ ಮನಸ್ಸು ಮುದುಡುವುದು, ಹದಿನಾಲ್ಕು ಅಂತಸ್ತಿನ ತಮ್ಮ ಮಗನ ಮನೆಯಲ್ಲಿ ಲೇಖಕಿ ಒಬ್ಬರೇ ಇರುವಾಗ ಅದೇ ಕಟ್ಟಡದ ಒಂದು ಮಹಡಿಯ ಮನೆಗೆ ಬೆಂಕಿ ಬಿದ್ದು ಫೈರ್ ಇಂಜಿನ್ ಬಂದು ಬೆಂಕಿ ಆರಿಸುವಾಗಲೂ ಸುತ್ತಮುತ್ತಲಿನ ಜನ ಕಿಂಚಿತ್ತೂ ಗಮನ ಹರಿಸದೆ ಕಣ್ಣೆತ್ತಿಯೂ ನೋಡದೆ ಹೋಗುವುದು…. ಇದೆಂಥಾ ಮುಂದುವರಿದ ದೇಶ ಮಾರ್ರೆ?ಶಾಂತಾ ನಾಗರಾಜ್‌ ಪ್ರವಾಸ ಕಥನ “ಯಾನ ಸಂಸ್ಕೃತಿ” ಕೃತಿಯ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ + +byತೇಜಾವತಿ ಎಚ್ ಡಿ|Aug 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ.ಶ್ರೀರಾಮ ಇಟ್ಟಣ್ಣವರ ಬರೆದ “ಭರಮದೇವರು” ಕೃತಿಯ ಕುರಿತು ತೇಜಾವತಿ ಡಿ.ಎಸ್.‌ ಬರಹ + +byಚಂದ್ರಶೇಖರ ಯ ಪೂಜಾರ|Aug 8, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು.ಶಿವಕುಮಾರ ಮೋ. ಕರನಂದಿ ಗಜ಼ಲ್‌ ಸಂಕಲನ “ನೆರಳಿಗಂಟಿದ ನೆನಪು” ಕುರಿತು ಚಂದ್ರಶೇಖರ ಯ. ಪೂಜಾರ ಬರಹ + +byಎಚ್ ಆರ್ ರಮೇಶ್|Aug 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ.ಸತೀಶ್‌ ಚಪ್ಪರಿಕೆ ಅವರ “ಘಾಂದ್ರುಕ್”‌ ಕಾದಂಬರಿ ಕುರಿತು ಎಚ್.ಆರ್.‌ ರಮೇಶ್‌ ಬರಹ ನಿಮ್ಮ ಓದಿಗೆ + +byಕೆ. ಎನ್. ಲಾವಣ್ಯ ಪ್ರಭಾ|Jul 29, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 3 Comments + +ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು.ನೂತನ ದೋಶೆಟ್ಟಿ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ”ದ ಕುರಿತು ಕೆ.ಎನ್.‌ ಲಾವಣ್ಯ ಪ್ರಭಾ ಬರಹ \ No newline at end of file diff --git a/Kenda Sampige/article_78.txt b/Kenda Sampige/article_78.txt new file mode 100644 index 0000000000000000000000000000000000000000..c2b8a098a4c3c57f908cdf731a3b135830378b02 --- /dev/null +++ b/Kenda Sampige/article_78.txt @@ -0,0 +1,25 @@ +ಅದು ನನ್ನಿಂದ ಸರಿಯಾಗಿ ಹತ್ತು ಮೀಟರ್‌ದಷ್ಟೇ ದೂರ. ನನಗೂ ಸಾವಿಗೂ ತಡೆಗೋಡೆಯಾಗಿ ಆ ಮಣ್ಣು ದಿಬ್ಬ ಮಧ್ಯೆ ಇಲ್ಲದೇ ಹೋಗಿದ್ದರೇ? ಆ ಪ್ರಾಣಿ ಹತ್ತೆಂಟು ಅಡಿ ದೂರ ಹೋಗಿ ಹೊರಳಿ ನೋಡಿದಾಗ ನಾನು ಅಲ್ಲೇ ನಿಲ್ಲದೇ ಓಟಕ್ಕಿತ್ತಿದ್ದರೇ..? ಅಬ್ಪಾ…! ನೇರವಾಗಿ ಅದರ ಬಾಯಿಗೆ ಆಹಾರವಾಗುತ್ತಿದ್ದೆ. ಹಾಗೆ ಕೆಟ್ಟದ್ದನ್ನು ಯೋಚಿಸಬಾರದೆಂದರೂ ರಾತ್ರಿಯಿಡೀ ಈ ವಿಚಾರ ಹಿಂಡಿಹಿಪ್ಪೆ ಮಾಡುತ್ತಿತ್ತು. ಎರಡ್ಮೂರು ಬಾರಿ ನೀರು ಗುಟುಕರಿಸಿ ಮಗ್ಗಲು ಬದಲಿಸಿದರೂ ಅದೇ ಬೆಚ್ಚಿಬೀಳಿಸುವ ಕ್ಷಣಗಳ ಚಿತ್ರಣ ಕಣ್ಮುಂದೆ ಬರುತ್ತಿತ್ತು. + +(ಶ್ರೀಧರ ಪತ್ತಾರ) + +ಅಂದು ಸುಮಾ ನಾಷ್ಟಾದ ತಟ್ಟೆಯನ್ನು ಕೈಲ್ಹಿಡಿದು ನನ್ನನ್ನು ಕೂಗಿ ಕರೆದಳು. ಪಡಸಾಲೆಯಲ್ಲಿದ್ದವನು ಒಳಗೆ ಬಂದವ್ನೆ ತಟ್ಟೆ ಖಾಲಿಮಾಡಲು ಆತುರ ತೋರಿದೆ. ಈ ಮಧ್ಯೆ ‘ನಿಧಾನರೀ… ಅಷ್ಟೇಕೆ ಗಡಿಬಿಡಿ ತುತ್ತು ಗಂಟಲಿಗೆ ಸಿಕ್ಹಾಕ್ಕೊಂಡೀತು. ಕಕ್ಕುಲಾತಿಯಿಂದ ನುಡಿದಳವಳು. ನಾನಾದರೋ ಅಂದು ಮಹತ್ವದ ಕ್ಷಣವೊಂದಕ್ಕೆ ಸಾಕ್ಷಿಯಾಗಬೇಕಿತ್ತು. ಅಂತೆಯೇ ಹಾಗೆ ಅವಸರಿಸಿದೆನೇನೋ? ಹೀಗಾಗುವುದೆಂದು ನಾನಂತೂ ಊಹಿಸಿರಲಿಲ್ಲ. ಇನ್ನೂ ನನ್ನವಳಾದರೂ ಆ ಬಗ್ಗೆ ಹೇಗೆ ಯೋಚಿಸಿಯಾಳು? ನನ್ನೊಡನಿದ್ದ ಸಿದ್ದ ಮತ್ತು ಹಸನ್ ಅವರೂ ನನ್ನಂತೆಯೇ ಯತಾರ್ಥ. + +ನಾವಿಂದು ಕಾಟಿಹಳ್ಳದ ಮೂಲೆಯ ಕಂಪಾರ್ಟಮೆಂಟ್‌ಗಳ ಗಸ್ತು ಮಾಡಬೇಕಿದ್ದಿತು. ಅಂತೆಯೇ ಸಿದ್ದ ಮತ್ತು ಹಸನ್‌ರನ್ನು ಜೊತೆಯಾಗಿಸಿಕೊಂಡು ಹೊರಡಲನುವಾದೆ. ‘ಹುಷಾರು ರೀ’ ಎಂದು ಹೊಸ್ತಿಲಲ್ಲಿ ನಿಂತ ಹೆಂಡತಿಯ ಎಂದಿನ ಪ್ರೀತಿ ಮತ್ತು ಕಾಳಜಿ ಬೆರೆತ ಮಾತು. ಅವಳ ಈ ಮಾತುಗಳೇ ನನಗೆ ಎಂದೆಂದೂ ಶ್ರೀರಕ್ಷೆಯಾಗಿರುತ್ತವೆಂಬ ನಂಬಿಕೆ ನನ್ನದಾಗಿತ್ತು. + +ಆ ಕೊಳಚಿ ನಮ್ಮಿಂದ ನಲವತೈವತ್ತು ಹೆಜ್ಜೆಯಷ್ಟೇ ದೂರ. ಅಭ್ಯಾಸಬಲದಿಂದೆಂಬಂತೆ ನಮ್ಮ ಕಾಲುಗಳು ನಿಧಾನಗೊಂಡವು. ಕಣ್ಣು ಢಾಳಾಗಿಸಿ ಎಡಕ್ಕೆ ಬಲಕ್ಕೆ ಮುಂದೆ ಕಣ್ಣಳತೆಗೆ ಸಿಗುವಷ್ಟು ದೂರ ದೃಷ್ಟಿ ಹರಿಸಿದೆವು. ಮರಗಿಡಗಳ ಮಧ್ಯದಲ್ಲಿ ಲಂಟಾನಾ ಯುಪಟೋರಿಯಮ್‌ನಂತಹ ತರಹೇವಾರಿ ಮುಳ್ಳು ಕಂಟಿಗಳ ಪೊದೆ. ಅಲ್ಲಿ ಯಾವ ಸಪ್ಪಳವೂ ಇರಲಿಲ್ಲ. ಯಾವ ಪ್ರಾಣಿಯಾದರೂ ಅಲ್ಲಿದ್ದು ಅದು ಚಿಕ್ಕದಾಗಿ ಕದಲಿದರೂ ನಮಗೆ ಗೊತ್ತಾಗುತ್ತಿತ್ತು. ಏಕೆಂದರೆ ಕಸಕಡ್ಡಿ ತರಗೆಲೆಗಳ ರಾಶಿಯೇ ಮರಗಳಡಿಯಲ್ಲಿತ್ತು.. + +ಕೊಳಚಿಗೆ ಹತ್ತಿರವಾದಂತೆ ಕೆಟ್ಟವಾಸನೆ ಮೂಗಿಗಡರಿತು. ‘ಥೂ.. ದುರ್ಗಂಧ! ಇಲ್ಲೇ ಪಕ್ಕದಲ್ಲೆಲ್ಲೋ ಪ್ರಾಣಿ ಸತ್ತಿದೆ’ ಸಿದ್ದ ಸರಿಯಾಗಿ ಅಂದಾಜಿಸಿ ಹೇಳಿದ. ನಾನು ಹೌದೆಂಬಂತೆ ತಲೆಯಾಡಿಸಿದೆ. ಪ್ರಾಣಿ ಸತ್ತಿದೆಯೆಂದಾದರೆ ಅದರ ಹತ್ತಿರ ಹುಲಿ ಚಿರತೆಯಂತಹ ಮಾಂಸಾಹಾರಿ ಪ್ರಾಣಿಗಳು ಇದ್ದಿರಬಹುದಾದ ಸಾಧ್ಯತೆ ಇಲ್ಲದಿಲ್ಲ. ಯಾವುದಕ್ಕೂ ನಾವು ಜಾಗರೂಕತೆಯಿಂದ ನಡೆಯಬೇಕು. ನಮ್ಮ ಹೆಜ್ಜೆಗಳನ್ನು ಮತ್ತಷ್ಟು ಹಗುರವಾಗಿಡಬೇಕು. ಅಪಾಯದ ಮುನ್ಸೂಚನೆ ಅರಿತು ಕಣ್ಣಿಂದಲೇ ವಿಷಯ ವಿನಿಮಯಿಸಿಕೊಂಡೆವು. ಕೊಳಚಿ ಸಮೀಪಿಸಿದಂತೆ ನಮ್ಮ ಹೆಜ್ಜೆಗಳು ಮತ್ತಷ್ಟು ನಿಧಾನವಾದವು. ಕೊಳಚಿ ಇನ್ನೇನು ನಮ್ಮಿಂದ ಹತ್ಹೆಜ್ಜೆಯಷ್ಟೇ. ಮಧ್ಯದ ಮಣ್ಣುದಿಬ್ಬದಿಂದಾಚೆಗೆ ಕಣ್ಣು ಹಾಯಿಸಿದರೆ ಅಬ್ಬಾ…! ನಿಜಕ್ಕೂ ಘೋರದೃಶ್ಯ! ಹಿಂದೆಂದೂ ಕಂಡರಿಯದ್ದು. ಸಾವು ಕಣ್ಣೆದುರಿಗೆ ನಿಂತು ನರ್ತಿಸಿದಂತೆ. ಕ್ಷಣ ಕೈಕಾಲುಗಳು ತಣ್ಣಗಾದವು. ಅದಾಗಲೇ ‘ಹುಲಿ… ಹುಲಿ’ ಎಂದು ಸಿದ್ದ ದೊಡ್ಡದಾಗಿ ಉದ್ಗಾರವೆಳೆದಿದ್ದ. ಅವನ ಧ್ವನಿಯೀಗ ನಡುಗುತ್ತಿತ್ತು. ನೀರಿನಲ್ಲಿ ಮಲಗಿ ಒದ್ದಾಡಿ ಮೈಗೆಲ್ಲ ಕೆಸರು ಮೆತ್ತಿಸಿಕೊಂಡು ಸತ್ತ ಕಾಡೆಮ್ಮೆಯ ಶವಕ್ಕೆ ಬಾಯಿಹಾಕಿ ಮಾಂಸ ಭಕ್ಷಿಸುತ್ತಿದ್ದ ದೊಡ್ಡ ಗಾತ್ರದ ಹುಲಿ ಅವನ ಉದ್ಗಾರದ ಸದ್ದಿಗೆ ಬೆಚ್ಚಿ ಬಿದ್ದಿತೆನೋ… ಮಾಂಸ ತಿನ್ನುವುದನ್ನು ಬಿಟ್ಟು ಚಕ್ಕನೇ ಮೇಲೆದ್ದು ಗಾಂಭೀರ್ಯದಿಂದ ಐದಾರು ಮಾರು ದೂರ ನಡೆದು ಒಂದು ಕ್ಷಣ ನಿಂತಂತೆ ಮಾಡಿ ನಮ್ಮೆಡೆಗೆ ಕತ್ತು ತಿರುಗಿಸಿ ಬಾಯಗಲಿಸಿ ಗರ್ಜಿಸಿ ಅಲ್ಲಿಂದ ಓಡಿಹೋಯ್ತು. ಸುತ್ತಲಿರುವ ಎತ್ತರೆತ್ತರದ ಮರಗಳ ಅಭೇದ್ಯ ಕೋಟೆ ಅಕ್ಷರಶಃ ಪ್ರತಿಧ್ವನಿಸಿತು. + +ಈ ಹಿಂದೆ ಮೂರ್ನಾಲ್ಕು ಬಾರಿ ಬೆನ್ನು ಬಾಲ ಮುಖವಷ್ಟೇ ತೋರಿಸಿ ಕ್ಷಣಮಾತ್ರದಲ್ಲಿ ಮರೆಯಾಗಿದ್ದ ಹುಲಿಗಳನ್ನು ಕಂಡಾಗ ಭಯಮಿಶ್ರಿತ ಖುಶಿಯೇನೋ ಮೂಡಿತ್ತು. ಆದರೆ ಈ ಅನುಭವ ಮಾತ್ರ ರೋಚಕ ಮತ್ತು ಅಷ್ಟೇ ಭಯಾನಕ. ಈ ಬಾರಿ ಹುಲಿಯನ್ನು ನೋಡಿದ್ದು ತೀರಾ ಹತ್ತಿರದಿಂದ. ಅದನ್ನು ಕಂಡೊಡನೆ ನನ್ನ ಪ್ರಾಣ ಉಳಿದರೆ ಸಾಕೆಂಬಂತಾಗಿತ್ತು. ನಿಂತಲ್ಲಿಯೇ ಬೆವರಿಳಿದ್ಹಾಗಾಯ್ತು. ಸಿದ್ದನೂ ನನ್ನಂತೆ ವಿಹ್ವಲಗೊಂಡಿದ್ದ. ಹೆದರಿ ನಡುಗುತ್ತಿದ್ದ ನನಗೆ ಓಡಿಹೋಗಬೇಕೆಂದರೂ ಕಾಲೆತ್ತಲಾಗುತ್ತಿಲ್ಲ, ನೆಲ ಕಾಲ್ಹಿಡಿದು ಎಳೆದಂತೆ. ಅದೂ ಒಳ್ಳೆಯದೇ ಆಯ್ತು. ಹುಲಿಯನ್ನು ಕಂಡೊಡನೆ ನಾನು ಹಾಗೆ ಓಡಿದ್ದರೆ ಪರಿಣಾಮ ಮಾತ್ರ ಕ್ರೂರವಾಗಿರುತ್ತಿತ್ತು. ಕೆಲವೊಮ್ಮೆ ತತ್‌ಕ್ಷಣದ ನಮ್ಮ ಒಳ್ಳೆಯ ನಿರ್ಧಾರಗಳು ನಮ್ಮನ್ನು ಅಪಾಯದಿಂದ ಪಾರಾಗಿಸುತ್ತವೆ; ಬದುಕಿಸುತ್ತವೆ; ಬಾಳಿಸುತ್ತವೆ. ಇಲ್ಲೂ ಆದದ್ದು ಅದೇ. + + + +ಹುಲಿ ನಮ್ಮನ್ನು ನೋಡಿದಾಕ್ಷಣ ಗಲಿಬಿಲಿಗೊಂಡಂತಾಗಿ ನಮಗೆ ವಿಮುಖವಾಗಿ ಓಡದೇ ನಿಂತಲ್ಲಿಂದಲೇ ದಾಳಿ ಮಾಡುವ ಚೂರು ಸೂಚನೆಯನ್ನೇನಾದರೂ ತೋರಿಸಿದ್ದರೆ ನಾನೂ ಕೈಲಿದ್ದ ಬಂದೂಕನ್ನು ಬಗಲಿಗೇರಿಸಿಕೊಳ್ಳುತ್ತಿದ್ದೆ. ಹಾಗೆ ಯೋಚಿಸಿ ಬಂದೂಕಿನ ಕುದುರೆಯನ್ನು ಹಿಂದಕ್ಕೆ ಎಳೆದು ಬಿಟ್ಟಿದ್ದರೆ ಆಗಲೇ ಲೋಡಾಗಿದ್ದ ಬಂದೂಕಿನ ನಳಿಗೆಯಿಂದ ಬುಲೆಟ್ ಮುಂದಕ್ಕೆ ಸಿಡಿದು ಹೆಬ್ಬುಲಿಯ ದೇಹ ಸೀಳುತ್ತಿತ್ತು. ನನ್ನೀ ತತ್‌ಕ್ಷಣದ ನಡೆಯಿಂದ ನಿರೀಕ್ಷಿಸದ ಘಟನೆಯೊಂದು ಇದ್ದಕ್ಕಿದ್ದಂತೆ ಸಂಭವಿಸುತ್ತಿತ್ತು. ಆತ್ಮರಕ್ಷಣೆಗೋಸ್ಕರವಾದರೂ ಹಾಗೆ ಮಾಡಿದ್ದರೆ ಆ ಘಳಿಗೆಗಷ್ಟೇ ನಾನು ಹುಲಿಯನ್ನು ಕೊಂದ ಪರಾಕ್ರಮಿ. ಆದರೆ ಆ ಮೂಕಪ್ರಾಣಿಯನ್ನು ಹೊಡೆದು ನಾನದನ್ನು ಜೀರ್ಣಿಸಿಕೊಳ್ಳುತ್ತಿದ್ದೆನೇ..? ಖಂಡಿತವಾಗಿಯೂ ಇಲ್ಲ. ನನ್ನ ಮಟ್ಟಿಗೆ ಅದೊಂದು ಕೊಲೆಯೇ. ಆ ಸಂದರ್ಭದಲ್ಲಿ ನಿರುಪದ್ರವಿಯಾಗಿ ವರ್ತಿಸಿದ ಪ್ರಾಣಿಯನ್ನು ಕೊಂದ ಪಾಪ ನನ್ನನ್ನು ಖಂಡಿತ ಸುತ್ತಿಕೊಳ್ಳುತ್ತಿತ್ತು. ಏನೇ ಕಾರಣಗಳೊಡ್ಡಿ ಕಾನೂನಿನಿಂದ ತಪ್ಪಿಸಿಕೊಂಡರೂ ಜೀವನಪರ್ಯಂತ ನಾನು ಪಶ್ಚಾತಾಪದ ಬೆಂಕಿಯಲ್ಲಿ ಬೇಯುವಂತಾಗುತ್ತಿತ್ತು. + +ಸಮಯ ಸರಿಯಾಗಿತ್ತು ಹಾಗಾಗಲಿಲ್ಲ. ಒಂದು ವೇಳೆ ನಾನು ಶಸ್ತ್ರಪ್ರಹಾರಕ್ಕೆ ಅಣಿಯಾದೆನೆಂದಿಟ್ಟುಕೊಳ್ಳಿ. ಅದುವರೆಗೂ ಕದಲದೇ ನಿಂತಿದ್ದ ನನ್ನ ಅನಿರೀಕ್ಷಿತ ದೇಹಚಲನೆ ಕಂಡು ಹುಲಿಗೆ ವಿಚಲಿತವಾದಂತೆನ್ನಿಸಿ ಅದು ಅಕ್ಷರಶಃ ಕೆರಳುತ್ತಿತ್ತು. ನಾನು ಗನ್ನು ಮೇಲಕ್ಕೆತ್ತಿ ಹೊಡೆಯಬೇಕೆಂದು ಹಂಚಿಕೆ ಹಾಕುವಾಗಲೇ ಅದು ಠಣ್ ಎಂದು ಒಂದೇ ನೆಗೆತಕ್ಕೆ ನಮ್ಮ ಮೇಲೆರಗಿ ಸಿಕ್ಕವರ ಕತ್ತು ಹಿಸುಕಿ ಕರುಳು ಬಗೆದಿರುತ್ತಿತ್ತು. ಕ್ಷಣಮಾತ್ರದಲ್ಲೇ ಈ ಅಚಾತುರ್ಯ ಸಂಭವಿಸುವ ಸಾಧ್ಯತೆಯಿತ್ತು. ನಾನು ಗನ್ನು ಚಲಾಯಿಸುವ ಗೋಜಿಗೆ ಹೋಗದಿದ್ದುದೆ ಸರಿಯಾಯ್ತು. + +ಎದುರಿಗೆ ನಿಂತ ನಮ್ಮನ್ನು ಕಂಡು ಹುಲಿಯ ಮನಸ್ಸಿನಲ್ಲಿ ಏನೋಡಿತೋ..! ವ್ಯಾಘ್ರ ಕೋಪಗೊಂಡು ಗರ್ಜಿಸಿತಾದರೂ ನಮ್ಮ ಮೇಲೆರಗುವ ಮನಸ್ಸು ಮಾಡಲಿಲ್ಲ. ‘ಅದಾವ ಕ್ಷುದ್ರ ಜೀವಿಗಳಿವು ತನ್ನೆದುರಿಗೆ ಬಂದಿವೆ ಎಂತಲೋ.. ತನಗಿಂತ ಕ್ರೂರಪ್ರಾಣಿಗಳು ತನ್ನೆದುರಿಗೇ ನಿಂತಿವೆಯಲ್ಲ; ತನಗೆ ಅಪಾಯ ಕಟ್ಟಿಟ್ಟ ಬುತ್ತಿ’ ಎಂದು ಹೆದರಿತೋ… ತಿಳಿಯದು. ಆ ಕ್ಷಣ ಹುಲಿಯ ಎದುರಲ್ಲಿ ‘ಖಂಡವಿದೆಕೋ.. ಮಾಂಸವಿದೆಕೋ.. ಗುಂಡಿಗೆಯ ಬಿಸಿ ರಕ್ತವಿದೆಕೋ..! ಎಂದು ಚಂಡವ್ಯಾಘ್ರನ ಹಸಿವು ಹಿಂಗಿಸಿ ಅದರ ಮನಸ್ಸನ್ನು ಸಂತುಷ್ಟಗೊಳಿಸಬೇಕೆನ್ನುವ ಪುಣ್ಯಕೋಟಿ ಕತೆಯ ಸತ್ಯಪರಿಪಾಲಕ ಗೋವು ನಾವಾಗಿರದಿದ್ದರೂ ಕೊಟ್ಟಿಗೆಯೊಳಗಿರುವ ತನ್ನ ಎಳೆ ಕರುವನ್ನು ಸೇರಬೇಕು; ಸಂತೈಸಬೇಕು; ಮಮತೆಯಿಂದ ಹಾಲುಣಿಸಬೇಕು ಎಂಬ ತಾಯ್ಗರಳ ಗೋವುಗಳಾಗಿದ್ದೆವು ನಾವು. ಖೂಳವ್ಯಾಘ್ರನ ಬಾಯಿಂದ ತಪ್ಪಿಸಿಕೊಂಡು ಓಡಿಹೋಗಬೇಕು ಜೀವ ಉಳಿಸಿಕೊಳ್ಳಬೇಕು ಎಂಬುದೇ ನನ್ನ ಆ ಕ್ಷಣದ ತುಡಿತ. ಈ ಹುಲಿಯೂ ಆ ಪುಣ್ಯಕೋಟಿ ಕತೆಯ ವ್ಯಾಘ್ರನ ದಾರಿಯೇ ತುಳಿಯಿತು. ‘ಬಡಜೀವಗಳು ಬದುಕಿಕೊಳ್ಳಲಿ’ ಎಂದು ಮಾನವೀಯತೆಯಿಂದ ನಮಗೆ ಜೀವದಾನ ನೀಡಿ ಅಲ್ಲಿಂದ ಕಾಲ್ಕೀಳುವ ದೊಡ್ಡ ಮನಸ್ಸು ಮಾಡಿತು; ಮಹದುಪಕಾರ ಮಾಡಿ ಪುಣ್ಯ ಕಟ್ಟಿಕೊಂಡಿತು. ಹೇಗೋ ಬದುಕಿದೆವು. ದೇವರ ಕೃಪಕಟಾಕ್ಷ ನಮ್ಮ ತಲೆಯ ಮೇಲಿತ್ತೋ ಇಲ್ಲವೋ… ಆದರೆ ಹುಲಿಯ ಕೃಪೆಯಂತೂ ಇದ್ದೇಯಿತ್ತು ಜೀವರಕ್ಷಕವಾಗಿ. + +ಆ ಘಳಿಗೆಯಲ್ಲಿ ಹಸನ್ ಅದೆಂತಹ ಧೈರ್ಯ ಮಾಡಿದ! ನಾನು ಮತ್ತು ಸಿದ್ದ ಹುಲಿಗೆದುರಾಗಿ ನಡುಗುತ್ತಾ ನಿಂತಿದ್ದರೆ, ನನ್ನ ಹಿಂದಿದ್ದ ಆ ಹುಂಬ ಮೊಬೈಲ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದ. ಹುಲಿಯ ಚಿತ್ರ ನೋಡುತ್ತ ಸಂತಸದ ನಗೆಬೀರುತ್ತಿದ್ದ. ಸಾವಿನ ದವಡೆಯಿಂದ ಪಾರಾಗಿ ಬಂದ ಹರ್ಷದಲ್ಲಿ ನಾನಿದ್ದೆ. ಮೂವರು ಘಟನೆಯನ್ನು ಮೆಲುಕುಹಾಕುತ್ತಲೇ ಮನೆಯೆಡೆಗೆ ಅವಸರವಸರವಾಗಿ ಹೆಜ್ಜೆ ಹಾಕಿದೆವು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_79.txt b/Kenda Sampige/article_79.txt new file mode 100644 index 0000000000000000000000000000000000000000..adfe635646dad7521f1d4ee90f63bb9fa73a23c8 --- /dev/null +++ b/Kenda Sampige/article_79.txt @@ -0,0 +1,31 @@ +ಚಂದನ್ ಗೌಡ ಇಂಗ್ಲಿಷ್‌ ಭಾಷೆಯಲ್ಲಿ ಬರೆವ ಪ್ರತಿಭಾವಂತ ಲೇಖಕ. ನನಗೆ ತಿಳಿದಂತೆ ಯು.ಆರ್. ಅನಂತಮೂರ್ತಿ, ಲಂಕೇಶ್, ತೇಜಸ್ವಿ, ಕೆ.ವಿ. ಸುಬ್ಬಣ್ಣ, ಡಿ.ಆರ್. ನಾಗರಾಜ್, ಎ.ಕೆ. ರಾಮಾನುಜನ್, ಸಿದ್ದಲಿಂಗಯ್ಯ ತರದ ದೊಡ್ಡ ಲೇಖಕರ ಬಳಗದಲ್ಲಿ ಬೆಳೆದವರು. ಕನ್ನಡ ಪ್ರಜ್ಞೆಯನ್ನು ಜಾಗತೀಕರಣದ ನಡೆಯಲ್ಲಿ ತಡಕಾಡುವ ಒಂದು ವಿನೂತನ ದೃಷ್ಟಿಯನ್ನು ಬರಹದ ಧ್ಯಾನಕ್ಕೆ ಅಳವಡಿಸಿಕೊಂಡವರು. ಇದು ಒಂದು ರೀತಿಯಲ್ಲಿ ಸದ್ಯದ ಭಾರತದ ಆದುನಿಕೋತ್ತರ ಇಂಗ್ಲೀಷ್ ಬರಹಗಾರರು, ಅದರಲ್ಲು ಎಡಪಂಥೀಯತೆಯನ್ನೂ ಮೀರಿ ಆಲೋಚಿಸುವವರ ಧಾಟಿ ಆಗಿದೆ. ಹೀಗಾಗಿ ಚಂದನ್ ಗೌಡ ಅವರ “ಅನದರ್ ಇಂಡಿಯ” (Another India) ಕೃತಿಯಲ್ಲಿ ಸ್ಥಳೀಯತೆ ಮತ್ತು ರಾಷ್ಟ್ರೀಯತೆಯ ಸಂಗಮ ಚಹರೆಗಳು ಪುಟಪುಟಗಳಲ್ಲು ಸುಳಿದು ಹೋಗುತ್ತವೆ. + +(ಚಂದನ್ ಗೌಡ) + +“ಅನದರ್ ಇಂಡಿಯ” ಎಂಬ ನೋಟವೇ ಭಾರತದ ಬೇರೆ ಬೇರೆ ಮೂಲೆಗಳ ಹುಡುಕುವ ಪರಿಚಯಿಸುವ ಸಮರ್ಥಿಸುವ ಕಥನವಾಗಿದೆ. ಚಂದನ್ ಗೌಡ ಅವರು ವೈಚಾರಿಕತೆಯ ಅಬ್ಬರದವರಲ್ಲ. ಬಲಪಂಥೀಯತೆಯ ಯಾವ ಗಾಯಗಳೂ ಅವರ ಬರಹಗಳಿಗಿಲ್ಲ. ಲೇಖಕ ಲೋಕದ ಎಲ್ಲೋ ಒಂದೆಡೆ ತನ್ನ ಪಾಡಿಗೆ ತಾನು ಇದ್ದು ಅವಲೋಕಿಸಿದರೆ ನಿರ್ಲಿಪ್ತ ಸ್ತಿತಿ ಒಂದು ನಿರ್ವ್ಯಾಜ್ಯವಾಗಿ ಬರಹದಲ್ಲಿ ಬಂದು ಬೆಸುಗೆ ಆಗುತ್ತದೆ. ಈ ಬಗೆಯ ಗುಣ ಈ ಪುಸ್ತಕದ ವಿಶೇಷ. ಸಮಾಜ ವಿಜ್ಞಾನಿಗಳು ಹಿಂದೆ ತಮ್ಮ ವಿಷಯ ನಿಷ್ಟತೆಗೆ ಗಂಟು ಬೀಳುತ್ತಿದ್ದರು. ಚಂದನ್ ನಿರ್ದಿಷ್ಟ ವಿಷಯದ ಒಣ ಲೇಖಕ ಅಲ್ಲ. ಕ್ರಿಯೇಟಿವ್ ಹಾಗು ಇನ್ಕ್ಲೂಸಿವ್ ಆದ ಎರಡು ಸ್ವಭಾಗಳಲ್ಲಿ ಇಲ್ಲಿನ ಲೇಖನಗಳು ಮೈದಾಳಿವೆ. ಸಮಾಜದ ಚಲನೆ ಕ್ರಿಯೇಟಿವ್ ಆಗದೆ ಜಡವಾದಾಗ ಲೇಖಕ‌ ತನ್ನ ಒಳನೋಟಗಳ ಮೂಲಕ ಕಾರಣಗಳನ್ನು ಹುಡುಕುತ್ತಾನೆ. ಹಾಗಾಗಿಯೆ ಅನದರ್ ಇಂಡಿಯಾದ ನೋಟ ಕ್ರಮ ಭಿನ್ನವಾದುದು. + +ಇಲ್ಲಿನ ಬಹು ಪಾಲಿನ ಬರಹಗಳೆಲ್ಲ ವರ್ತಮಾನಕ್ಕೆ ಸಮಾಜ ವಿಜ್ಞಾನಿ ಒಬ್ಬ ಮಾಡುವ ಪ್ರತಿಕ್ರಿಯೆಯಂತಿವೆ. ಗತ ಸಮಾಜಗಳ ಕೊಂಡಾಡಿ ಪ್ರಯೋಜನವಿಲ್ಲ. ಅವನ್ನು ತೆಗಳುತ್ತ ಕಾಲಹರಣ ಮಾಡುವುದು ನಷ್ಟಕಾರಿ. ನಮ್ಮ ಸಮಾಜಗಳ ಸಂಯುಕ್ತ ನಡೆಯೇ ಅಸಾಮಾನ್ಯವಾದುದು. ಅದರಲ್ಲೂ ಬೇಕಾದ ಸಂಗತಿಗಳಿರುತ್ತವೆ. ಈ ಪುಸ್ತಕ ನಮ್ಮ ಕಣ್ಣೆದುರಿನ ಗತದಿಂದಾದ ವರ್ತಮಾನವನ್ನು ನಿಚ್ಚಳವಾಗಿ ಮಂಡಿಸುತ್ತದೆ. + +ಚಂದನ್‌ ಗೌಡ ಮೂಲತಃ ಸಮಾಜ ವಿಜ್ಞಾನದಲ್ಲಿ ಎಂ.ಎ. ಮುಗಿಸಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಪದವಿ ಪಡೆದು ಈಗ ಪ್ರಾಧ್ಯಾಪಕರಾಗಿ ಬೆಂಗಳೂರಿನ “ಐಸ್ಯಾಕ್” ನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರ ಕಾಲಂ ಬರಹಗಳನ್ನು ದಿ ಮಿರರ್, ಡೆಕನ್ ಹೆರಾಲ್ಡ್‌, ದಿ ಹಿಂದೂ ಪತ್ರಿಕೆಗಳಲ್ಲಿ ಗಮನಿಸಿರಬಹುದು. ಇಂತಹ ಒಬ್ಬ ಅಂಕಣ ಬರಹಗಾರನ ಶೈಲಿಗೆ ಹಲವು ಮಾದರಿಗಳಿವೆ. ಆಶಿಷ್ ನಂದಿ ಅವರಿಂದ ಹಿಡಿದು ತೇಲ್ ತುಂಬ್ಡೆ ತನಕ ಬಹು ರೂಪಿ ಬರಹಗಾರರ ದೊಡ್ಡ ದಂಡೇ ಇದೆ. ಚಂದನ್ ಬರಹದಲ್ಲಿ ಪುಟ್ಟ ಅಧೀರತೆ ಇದೆ. ಓದುಗನನ್ನು ನೋಯಿಸಬಾರದು ಎಂಬ ಎಚ್ಚರವಿದೆ. ಜನಪ್ರಿಯ ಸತ್ಯಗಳನ್ನು ಪ್ರಶ್ನಿಸುವುದು ಬಹಳ ಕಷ್ಟ. ಸಾರ್ವಜನಿಕ ಸಂಯಮ ಕಳೆದು ಹೋಗಿ ಮಾಧ್ಯಮಗಳು ಬರಹಗಾರನನ್ನೆ ನಿಯಂತ್ರಿಸುವ ಮಟ್ಟ ತಲುಪಿರುವಲ್ಲಿ ಲೇಖಕ ಪುಟ್ಟ ಚಿತ್ರಗಳಲ್ಲಿ ರೂಪಕಗಳನ್ನು ಬೆಂಬತ್ತಿ ಬರೆಯಬೇಕಾಗುತ್ತದೆ. ಚಂದನ್ ಬರಹ ಹೀಗಾಗಿಯೇ ಕಥನ ಗುಣವನ್ನು ಆವಾಹಿಸಿಕೊಳ್ಳುವುದು. + +ಇಲ್ಲಿನ ಬರಹಗಳು ಬಹುರೂಪಿಯಾಗಿವೆ. ಆದರೆ ಅವು ತಣ್ಣಗೆ ಒಂದು ಕಲ್ಚರಲ್ ಪಾಲಿಟಿಕ್ಸ್‌ನ ನೆರೇಟಿವಿಟಿಯನ್ನು ನೇಟೀವ್ ಆಗಿ ಮಾಡುತ್ತವೆ. ಭಾರತೀಯ ಸಮಾಜಗಳ ಮುಖ ಪರಿಚಯ ಮಾಡುವುದು ಬೇರೆ. ಅದರ ಬೆನ್ನನ್ನು ವಿಶ್ಲೇಷಣೆ ಮಾಡುವುದು ಕಷ್ಟ. ಚಂದನ್ ಅವರ ಈ ಪುಸ್ತಕದ ಸಂದರ್ಭದಲ್ಲಿ ಗಾಂಧೀಜಿ ಹಾಗು ಅಂಬೇಡ್ಕರ್ ಅವರ ಬರಹಗಳನ್ನು ನೆನಪು ಮಾಡಿಕೊಳ್ಳಬೇಕು. ಗಾಂಧೀಜಿ ಅವರು ಬೃಹತ್‌ ಭಾರತದ ಅಖಂಡತೆಯನ್ನು ಎತ್ತಿ ಹಿಡಿದರು. ಅಂಬೇಡ್ಕರ್ ಅವರು ಭಗ್ನ ಭಾರತದ ಜಾತಿಗಳ ಬೆನ್ನುಗಳ ವಿರೂಪವನ್ನು ಬಹಿರಂಗ ಪಡಿಸಿದರು. ಮುಖವನ್ನು ಬೆನ್ನು ನೋಡದು; ಮುಖ ಬೆನ್ನಿನತ್ತ ತಿರುಗಿ ನೋಡದು! ಎಂತಹ ವಿಚಿತ್ರ, ಎರಡೂ ಸ್ಥಿತಿಗಳು ಒಂದೇ ದೇಹದಲ್ಲಿ ಬೆರೆತಿರುವುದು! + +ಈ ಸ್ಥಿತಿಯನ್ನು ಅಂಬೇಡ್ಕರ್ ಥರ ಚಂದನ್ ಪ್ರಶ್ನಿಸಲಾಗದು. ಚಾರಿತ್ರಿಕ ಪ್ರಜ್ಞೆಗಿಂತಲೂ ವರ್ತಮಾನದ ಅನಿವಾರ್ಯತೆಯಲ್ಲಿ ಈ ಬರಹಗಳು ಮಾತನಾಡುತ್ತವೆ. ಭಾರತದ ಬೆನ್ನು ಕಣ್ಣಿಗೆ ಕಾಣದು. ಮುಖ ಧಾರಳವಾಗಿ ಅಚ್ಚಾದಂತೆ ಗೋಚರಿಸುತ್ತದೆ. ಚಂದನ್‌ಗೆ ಮುಖವೂ ಗೊತ್ತೂ, ಬೆನ್ನೂ ಗೊತ್ತು. ಆದರೆ ಮುಖಬೆಲೆಗೇ ಅವರು ಹೆಚ್ಚು ವಾಲುತ್ತಾರೆ. ಹಾಗಾಗಿಯೆ ಬೆನ್ನ ಮೇಲಿನ ಹೊದಿಕೆಯನ್ನು ತೆರೆಯಲು ಅವರು ಜೋಪಾನವಹಿಸುತ್ತಾರೆ. ಭಾರತೀಯ ಇಂಗ್ಲೀಷ್ ಬುದ್ಧಿಜೀವಿ ಬರಹಗಾರರ ಸಂಕೀರ್ಣ ಸಮಸ್ಯೆ ಇದು. ಇದಕ್ಕೆ ಕಾರಣ ಇಂಡಿಯಾದ ಪತ್ರಿಕಾ ಮಾಧ್ಯಮ. ಚಂದ್ರಬಾನ್ ಪ್ರಸಾದ್ ಎಂಬ ದಲಿತ ಚಿಂತಕರನ್ನು ಮಾಧ್ಯಮ ಹೇಗೆ ಸಹಿಸಿಕೊಂಡಿತ್ತೋ ಏನೋ… ಈ ಪರಿಯ ಇಂಗ್ಲಿಷ್ ದಲಿತ ಬರಹಗಾರರು ಬೆರಳೆಣಿಕೆಯ ಸಂಖ್ಯೆಯಲ್ಲಿ ಇದ್ದಾರೆ. ಅಂತಹ ಲೇಖಕಿ ಅರುಂಧತಿ ರಾಯ್ ಕೂಡ ನಿಯಂತ್ರಿತ ಭಾಷೆಯಲ್ಲಿ ಬರೆಯಬೇಕಾದ್ದಿದೆ. + +ಚಂದನ್ ಮತೊಂದು ಭಾರತವನ್ನು ಅವಲೋಕಿಸುತ್ತಿರುವುದೇ ದಮನಿತರ ದೃಷ್ಟಿಕೋನದಿಂದ. ಅಂಚಿನ ಸಂಗತಿಗಳನ್ನು ಮುಖ್ಯ ವಾಹಿನಿಗೆ ತಂದಿರಿಸಿ ನಿರೂಪಿಸುವುದೇ ಸಾಂಸ್ಕೃತವಾಗಿ ಮಹತ್ವದ್ದು. ದಲಿತ ಕವಿ ಸಿದ್ದಲಿಂಗಯ್ಯನವರ ಆತ್ಮಕಥನವ ಕಂಡಂತೆಯೆ, ಸರ್.ಎಂ.ವಿಶ್ವೇಶ್ವರಯ್ಯ ಅವರ ಬಗೆಗೂ, ನಾಲ್ವಡಿ ಕೃಷ್ಣ ರಾಜೇಂದ್ರ ಅವರ ಬಗೆಗೂ ಟಿಪ್ಪು ಸುಲ್ತಾನ್ ಬಗೆಗೂ ಸಮಾನವಾಗಿ ನೋಡುವ ಪರಿಯು ಗಮನಾರ್ಹವಾಗಿದೆ. ಯು.ಆರ್. ಅನಂತಮೂರ್ತಿ ಅವರು ಆತ್ಯಂತಿಕ ಪ್ರಭೆಯ ಲೇಖಕರು. ಅವರ ಮೂಲಕ ಭಾರತವನ್ನು ಚಂದನ್ ಭಾವಿಸುತ್ತಾರೆ. ಅದರಲ್ಲೂ ಸಾಹಿತ್ಯದ ಮೂಲಕ ಭಾರತೀಯ ಸಮಾಜಗಳ ಚಲನಶೀಲತೆಯನ್ನು ಗ್ರಹಿಸುವ ಬಗೆಯು ಕುತೂಹಲಕಾರಿಯಾಗಿದೆ. ಬಹುರೂಪಿಯಾಗಿ, ಆನ್ವಯಿಕವಾಗಿ ಬಹಿಶಿಸ್ತೀಯ ಅಧ್ಯಯನಗಳ ಸಂಯೋಗ ಸಂವೇದನೆಯಾಗಿ ಬರೆವ ಚಂದನ್ ಗೌಡ ಈ ಕೃತಿಯ ಉದ್ದಕ್ಕೂ ಸಂಯಮಿ ಬರಹಗಾರರಾಗಿಯೇ ಕಾಣುವರು. + + + +ಚಂದನ್ ಗೌಡ ಅವರ ಹೊಸ ಪುಸ್ತಕ “ಅನದರ್ ಇಂಡಿಯಾ” ಇತ್ತೀಚೆಗೆ ಬಿಡುಗಡೆಯಾಗಿ ವಾರದಲ್ಲೇ ಮಾರಾಟವಾಗಿ, ಮರು ಮುದ್ರಣಕ್ಕೆ ಹೋಗಿದೆ. ಈ ಪುಸ್ತಕ ಮೂಲತಃ ಬಹುಶಿಸ್ತೀಯ ಅಧ್ಯಯನ ಕೇಂದ್ರಿತ ಬರಹಗಳ ಗುಚ್ಛವಾಗಿದೆ. ಬದಲಾದ ಭಾರತೀಯ ಸಮಾಜಗಳ ಚಹರೆಗಳನ್ನು ನಮ್ಮ ನಿತ್ಯದ ಆಗು ಹೋಗುಗಳ ಮೂಲಕವೆ ಚರ್ಚಿಸುವುದು ವಿನೂತನವಾಗಿದೆ. ನಿತ್ಯ ವರ್ತಮಾನದ ಸಂಕೀರ್ಣ ಜಾತಿ ನಿಷ್ಟ, ಮತೀಯ ಸಮಾಜಗಳ ರಾಜಕೀಯ ಮನಸ್ಥಿತಿಯನ್ನು ಗ್ರಹಿಸಿ ಯಾರಿಗೂ ಹರ್ಟ್‌ ಆಗದಂತೆ ಬರೆಯುವುದು ಬಹಳ ಕಷ್ಟ. ಇದನ್ನು ಚಂದನ್ ಒಂದು ಫುಟ್ ಬಾಲ್ ಕ್ರೀಡೆಯ ಬಲಾಬಲ ಆಟದ ಸಮರ್ಥ ವಿವರಣೆಕಾರನಂತೆ, ಸೋಲು ಗೆಲುವಿನ ವಿಶ್ಲೇಷಕನಂತೆ ತಾರತಮ್ಯ ಮಾಡದೇ ಬರೆಯುತ್ತಾರೆ. + +ಚಂದನ್ ಸಮಾಜ ವಿಜ್ಞಾನವನ್ನು ಒಂದು ಕ್ರಿಯೆಟಿವ್ ಡಿಸ್ಕೋರ್ಸಿನಂತೆ ಬರೆಯುತ್ತಾರೆ. ಈ ಮಾತನ್ನು ಮತ್ತೆ ಹೇಳಬೇಕಾಗಿದೆ. ನಾವು ಕಂಡ ಸಮಾಜ ನಮ್ಮ ಅನುಭವ ಕಥನವಾಗಬೇಕು. ಅಂತೆಯೆ ಅದು ಹಲವರ ಭಾವನೆಯ ಮೊತ್ತವೂ ಆಗಬೇಕು. ಪ್ರಖ್ಯಾತ ಎಂ.ಎನ್. ಶ್ರೀನಿವಾಸ್ ಅವರ ರಿಮೆಂಬರ್ಡ್‌ ವಿಲೇಜ್ ಕೃತಿ ಕೇವಲ ನೆನಪಿನ ಕಥನವಲ್ಲ; ಅದು ಜೀವಂತ ಕಾಲದ ಕಥನವೂ ವ್ಯಾಖ್ಯಾನವೂ ಆಗುವುದು. ಆದ್ದರಿಂದಲೇ ಅನದರ್ ಇಂಡಿಯಾ ನಮ್ಮ ಕಾಲದ ಬಗ್ಗೆ ನಾವೇ ಬರೆದುಕೊಂಡಂತಹ ಸೆಲ್ಪ್ ನೆರೇಟೀವ್ ಆಗುವುದು. ಎಂ.ಎನ್.ಶ್ರೀ ಅವರ ನೆನಪಿನ ಕಥನದ ಕಾಲ ಮಾನ ಬೇರೆಯೇ ಆಗಿತ್ತು. ಸಾಹಿತ್ಯ ಪರಿಭಾಷೆಯ ಕಥನ ಅಥವ ಕಥೆ ಹೇಳುವ ಬಗೆಯು ನೆರೇಟಿವ್ ಗುಣವನ್ನು ಅನುಸರಿಸಿದೆ. ಚಂದನ್ ಸರಳವಾಗಿಯೇ ಡಿ.ಆರ್. ನಾಗರಾಜರಂತೆ ರೂಪಕಗಳಲ್ಲಿ ಹೊಳೆದ ವಿಚಾರಗಳ ಮಂಡಿಸುತ್ತಾರೆ. ಪುಟ್ಟ ಪುಟ್ಟ ಟಿಪ್ಪಣಿಗಳಲ್ಲಿ ವಿಚಾರ ನಿರೂಪಿಸುವ ಕ್ರಮವು ಲಂಕೇಶರ “ಮರೆವ ಮುನ್ನ” ಟಿಪ್ಪಣಿಗಳನ್ನು ನೆನಪಿಸುತ್ತವೆ. ಮೇಲೆ ಉಲ್ಲೇಖಿಸಿದ ಹಿರಿಯ ಬರಹಗಾರರ ಗಾಢವಾದ ಪರಿಣಾಮ ಚಂದನ್ ಮೇಲೆ ಆದಂತಿದೆ. ಚಂದನ್ ಬಳಸುವ ಇಂಗ್ಲಿಷ್ ಭಾಷೆ ಕನ್ನಡದ ಆಲೋಚನಾ ಕ್ರಮವನ್ನು ಮೈಗೂಡಿಸಿಕೊಂಡಿದೆ. ಆದ್ದರಿಂದಲೆ ಅವರ ಈ ಇಂಗ್ಲಿಷ್ ನಿರೂಪಣೆಯ ಶೈಲಿಯು ಕನ್ನಡದ ಮೂಲಕವೇ ಭಾರತವನ್ನು ಭಾವಿಸುವ ಮಟ್ಟಕ್ಕೆ ಎತ್ತರವಾಗಿದೆ. + +ಚಂದನ್ ಬರಹದ ಹರವು ವ್ಯಾಪಕವಾದುದು. ಬಹು ಆಯಾಮಗಳ ಸಂಗಮಿಸಿ ಬರೆವ ಗುಣ ಇಲ್ಲಿನ ಎಲ್ಲ ಲೇಖನಗಳಲ್ಲು ಇದೆ. ಕನ್ನಡದ ಅಸ್ಮಿತೆಯ ಚರ್ಚೆಯಿಂದ ಆರಂಭಿಸಿ, ಕರ್ನಾಟಕ ಗ್ರಾಮ ದೈವಗಳ ಅನನ್ಯತೆಯನ್ನೂ ಬಿಡದೆ ಡಾ. ರಾಜಕುಮಾರ್ ಅವರ ಬಗ್ಗೆಯೂ ಬರೆಯತ್ತ ಕನ್ನಡದ ಅನೇಕ ಸಂಗತಿಗಳ ಬೆರೆಸಿ, ಕುವೆಂಪು ಅವರ ವಿಶ್ವ ಮಾನವತೆಯನ್ನೂ ಎಟುಕಿಸಿಕೊಂಡು ಬರೆಯುವುದು ಸಲೀಸಲ್ಲ. ಇಲ್ಲೆಲ್ಲ ಕನ್ನಡ ಸಂವೇದನೆಯನ್ನು ಇಡೀಯಾದ ನೋಟದಲ್ಲಿ ಭಾರತೀಕರಿಸಿಬಿಡುತ್ತಾರೆ. + +ಆಧುನಿಕತೆ ಮತ್ತು ಪರಂಪರೆಗಳ ಗೊಣಗಾಟ ಯಾವತ್ತಿನಿಂದಲೂ ಇದ್ದಿದ್ದೇ. ಆದರೆ ಚಲನಶೀಲ ಸಮಾಜದ ಎಡರು ತೊಡರುಗಳನ್ನು ಚಂದನ್ ಸಂಯಮದಿಂದ ಪರಿಭಾವಿಸುತ್ತಾರೆ. ಸಿರಿ ಧಾನ್ಯಗಳ ಬಗ್ಗೆ ವಿವೇಚಿಸುತ್ತಲೇ ಪ್ರೊ.ನಂಜುಂಡಸ್ವಾಮಿ, ರೈತ ಸಂಘ, ದಲಿತ ಸಂವೇದನೆಯ ಎಲ್ಲೆಗಳ ಸುತ್ತಿ ಬರೆವ ಪರಿ ಅನನ್ಯವಾದುದು. ಅನೇಕ ಸಮಾಜ ವಿಜ್ಞಾನಿಗಳು ಗತ ಪಡಸಾಲೆಗಳಲ್ಲೆ ಕೂತು ಹರಟೆ ಹೊಡೆಯುತ್ತಿರುತ್ತಾರೆ. ಸಮಾಜಗಳ ಗುಡಿ ಗೋಪುರಗಳಲ್ಲೆ ಭಜನೆ ಮಾಡುತ್ತಿರುತ್ತಾರೆ. ನಮ್ಮ ಸುತ್ತಣ ಸಮಾಜಗಳು ಉರಿಯುತ್ತಿದ್ದರೂ ಅದರ ಕಿಚ್ಚೇ ಅವರಿಗೆ ತಾಕಿರುವುದಿಲ್ಲ. ನಮ್ಮ ನಿತ್ಯ ವರ್ತಮಾನವೇ ನಮ್ಮ ಸಮಾಜ. ಅದು ಯಾರಿಂದಲೋ ಉದ್ಧಾರ ಆಗುವಂಥದಲ್ಲ. ವ್ಯಕ್ತಿ ಮತ್ತು ಸಮೂಹಗಳು ಒಟ್ಟಿಗೇ ಪಯಣ ಮಾಡಿದರೆ ಅದೇ ಒಳ್ಳೆಯ ಸಮಾಜ. ಚಂದನ್ ಅವರ ಈ ಬರಹಗಳ ಮೇಲೆ ಕಂಡೂ ಕಾಣದಂತೆ ಅಂಬೇಡ್ಕರ್ ನೆರಳು ಬಿದ್ದಿದೆ. ಅದು ಒಂದು ಉನ್ನತ ಗತಿ ಎನಿಸುತ್ತದೆ. + + + +ಈ ಚಂದನ್‌ಗೂ ಜಾನಪದಕ್ಕೂ ಏನು ಸಂಭಂದ ಎಂದು ನೋಡಿದರೆ, ಕರ್ನಾಟಕ ಜಾನಪದದ ಲೆಜೆಂಡ್ ಆದ ಜೀ.ಶಂ.ಪರಮಶಿವಯ್ಯ ಅವರು ಸಂಗ್ರಹಿಸಿರುವ ಅಮೂಲ್ಯ ಕಾವ್ಯಗಳನ್ನು ಅಭ್ಯಾಸ ಮಾಡಿ ಜುಂಜಪ್ಪನ ಕಾವ್ಯದ ಬಗ್ಗೆ ಬರೆದಿರುವುದು ಅಚ್ಚರಿ ಮೂಡಿಸಿತು. ಭಾರತೀಯ ಸಂಸ್ಕೃತಿಗಳ ವ್ಯಾಪಕತೆ, ಸಾಹಿತ್ಯ, ಜಾನಪದ, ಭಾಷೆ ಹಾಗು ಅಂಚಿನ ಸಮಾಜಗಳ ಕುರಿತಂತೆ ಸೂಕ್ಷ್ಮ ಒಳನೋಟಗಳ ಆನ್ವಯಿಕ ಚಿಂತಕನಂತೆ ಬರೆದಿರುವುದು ಚಂದನ್ ಗೌಡ ಆವರ ವಿಶೇಷವಾಗಿದೆ. ಈ ಪ್ರತಿಭಾವಂತ ಲೇಖಕ ಅಂಕಣದ ಅಳತೆಗೆ ಸಿಲುಕಿದಂತಿದೆ. ವ್ಯಾಪಕವಾಗಿ, ದೀರ್ಘವಾಗಿ ಸಿದಗದಾಂತಿಯಂತೆ ಗಾಢವಾಗಿ ಚಿಂತಿಸಿ ಬರೆಯಬೇಕಾದ ಅನಿವಾರ್ಯತೆ ಇದೆ. ಅದು ಚಂದನ್ ಗೌಡ ಅವರಿಗೆ ಕಷ್ಟದ ಕೆಲಸ ಅಲ್ಲ. ಈ ಪುಸ್ತಕವನ್ನು ಪ್ರತಿಷ್ಟಿತ SIMON & SCHUSTER LODON ಪ್ರಕಾಶನದವರು ಪ್ರಕಟಿಸಿದ್ದಾರೆ. ಗೂಗಲ್ ಸರ್ಚ್ ಮಾಡಿದರೆ ಆನ್ ಲೈನ್ ಮೂಲಕ ಖರೀದಿಸಿ ಓದಬಹುದು.ಚಂದನ್ ಗೌಡ ಅವರ ನಂ:_9480180545. + +ಕಥೆಗಾರ, ಕವಿ ಮತ್ತು ಕಾದಂಬರಿಕಾರ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. \ No newline at end of file diff --git a/Kenda Sampige/article_8.txt b/Kenda Sampige/article_8.txt new file mode 100644 index 0000000000000000000000000000000000000000..32443525370fade1334c82985b714c9c2568060e --- /dev/null +++ b/Kenda Sampige/article_8.txt @@ -0,0 +1,35 @@ +ಸಹಿಸಲಾಗದಷ್ಟು ಉತ್ಕಟವಾಗಿಬಿಟ್ಟಿತು.ದೇಹದೊಳಗಡೆಯೆಲ್ಲಾ ವಿಪರೀತ ಹಿಂಸೆ.ಯಾವ ಕ್ಷಣದಲ್ಲಾದರೂ ವಾಂತಿ ಮಾಡಿಬಿಡುವೆ ಎಂಬ ಭಯ.ತಲೆಸುತ್ತು ಬಂತು.ಆಯ ತಪ್ಪಿ ಬೀಳುವೆ ಎನಿಸಿತು.ನಾನು ಉರಿಯತ್ತಿದ್ದೇನೆ,ಕೆಂಡಾ ಮಂಡಲವಾಗಿ ಉರಿಯುತ್ತಿದ್ದೇನೆ.ಯಾರಾದರೂ ಎದುರಿಗೆ ಬಂದರೆ ದಹದಹಿಸಿ ಉರಿದುಹೋಗಿಬಿಡಬಹುದು. + +ಆಮ್‌ಸ್ಟರ್‌ಡ್ಯಾಂನ ಕಬಾಲ್ ಬೀದಿ. ಪ್ರವಾಸಿಗರು, ಪಟ್ಟಣದ ನಾಗರಿಕರು ಇಬ್ಬರೂ ವಾರಾಂತ್ಯದಲ್ಲಿ ಮೋಜಿಗೆಂದು ಬಂದು ಮುಗಿಬಿದ್ದಿದ್ದಾರೆ. ಮುಂಬೈ, ಪ್ಯಾರಿಸ್, ನ್ಯೂಯಾರ್ಕ್ ನಗರಗಳ ರೀತಿಯ ಜನಸಂದಣಿ. ಸಂಜೆ ಸುಮಾರು ಆರೂವರೆಯ ಸಮಯ. ಬೇಸಿಗೆಯಾದ್ದರಿಂದ ಬೆಳಕು ಇನ್ನೂ ಪ್ರಖರವಾಗಿದೆ. + +ನನ್ನ ದ್ವೇಷ, ಅಸಹನೆ ಮುಗಿಲು ಮುಟ್ಟಿತು. ಆದರೆ ಅದು ಅವತ್ತು ಆ ಕ್ಷಣದಲ್ಲಿ ಹುಟ್ಟಿದ್ದಲ್ಲ. + +ನೆದರ್‌ಲ್ಯಾಂಡ್ಸ್‌ನ ಮೂರನೇ ಪ್ರವಾಸಕ್ಕೆ ಬಂದು ಇಪ್ಪತ್ತು ದಿನಗಳಾಗಿದ್ದವು. ನನ್ನಲ್ಲಿ ಒಂದು ವಿಚಿತ್ರ ಬದಲಾವಣೆಯನ್ನು ಗಮನಿಸಿದೆ. + +ಯಾರೇ ಬಿಳಿಯರನ್ನು, ಕೆಂಪಗಿರುವವರನ್ನು ಕಂಡರೆ ಸಾಕು, ಒಂದು ರೀತಿಯ ದ್ವೇಷ, ಅಸಹನೆ ಮನಸ್ಸಿನಲ್ಲಿ ತಕ್ಷಣ ಮೂಡಿಬಿಡುತ್ತಿತ್ತು. ಮೊದಲನೇ ದಿನ ಇದು ಮನಸ್ಸಿನಲ್ಲಿ ಹಾದುಹೋಗುವ ಲಹರಿ ಅನಿಸಿತು. ಆದರೆ ಪ್ರತಿ ದಿನವೂ ಯಾರೇ ಬಿಳಿಯರನ್ನು, ಕೆಂಪು ಬಣ್ಣದವರನ್ನು ನೋಡಿದರೂ ಈ ಭಾವನೆ ಮತ್ತಷ್ಟು ಖಚಿತವಾಗುತ್ತಿತ್ತು. ಮನಸ್ಸು ರೊಚ್ಚಿಗೇಳುತ್ತಿತ್ತು. + +ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ? ಇದೇನೂ ಆಕಸ್ಮಿಕವಲ್ಲ, ತಾತ್ಕಾಲಿಕವೂ ಅಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನನಗೂ ಹಿಂಸೆ. ಇವರೆಲ್ಲ ಇಷ್ಟೊಂದು ಸುಖಕ್ಕೆ, ನೆಮ್ಮದಿಗೆ, ಸಂತೋಷಕ್ಕೆ ಅನರ್ಹರೆಂದೇ? ನಾನು ಮಾತ್ರ ಅರ್ಹನೆಂದೇ? + +ಏಕೋ ಈ ಭಾವನೆ ನನ್ನಲ್ಲಿ ಶಾಶ್ವತವಾಗಿ ಉಳಿದುಬಿಡಬಹುದು. ಇವರೆಲ್ಲರೂ ಅವರವರ ಜಗತ್ತಿನಲ್ಲಿ ಮಗ್ನರಾಗಿದ್ದಾರೆ, ನನ್ನಂಥವರ ಅಭಿಪ್ರಾಯ, ನಿಲುವುಗಳಿಗೆ ಕಾಯದೇ ಎಂಬುದು ಕೂಡ ಈ ದ್ವೇಷಕ್ಕೆ ಒಂದು ಕಾರಣವಿರಬಹುದೇ? + + + +ನನಗೆ ಎಪ್ಪತ್ತು ವರ್ಷ ಇನ್ನೇನು ತುಂಬುತ್ತದೆ. ಇದುವರೆಗಿನ ಅನುಭವ, ಓದು, ಚಿಂತನೆ, ಪ್ರವಾಸ, ಬರವಣಿಗೆ – ಇದಕ್ಕೆಲ್ಲ ಏನಾಯಿತು? ಇವರು ಇಲ್ಲಿ ಹೀಗೆ ಹುಟ್ಟಿರುವುದು, ಇಷ್ಟೊಂದು ಸುಖವಾಗಿರುವುದು, ಯಾವುದೂ ಅವರ ಆಯ್ಕೆಯಲ್ಲ, ಉದ್ದೇಶಪೂರ್ವಕವೂ ಅಲ್ಲ. ಒಂದು ಕಾಲಕ್ಕೆ ಇವರೆಲ್ಲ ವಸಾಹತುಶಾಹಿ ದೇಶಕ್ಕೆ ಸೇರಿದವರು. ನಮ್ಮ ದೇಶದ, ನಮ್ಮಂಥ ದೇಶದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದವರು. ಅದರಿಂದಾಗಿ ಅಭಿವೃದ್ಧಿ ಪಥದಲ್ಲಿ ನಮಗಿಂತ ನೂರಾರು ವರ್ಷ, ನಾಲ್ಕಾರು ತಲೆಮಾರು ಮುಂದೆ ಹೋದರು. ಈಗ ಎಲ್ಲವೂ ಅವರಿಗೆ ಸುಲಭ, ಸಲೀಸು, ಸುಂದರ. ಆದರೆ ಇದಕ್ಕೆಲ್ಲ ಇವರು, ಈಗಿನವರು ಹೇಗೆ ಹೊಣೆ? ಇತಿಹಾಸದ ತಪ್ಪುಗಳಿಗೆಲ್ಲ ಒಂದು ದೇಶ, ಒಂದು ಸಮಾಜ ಹೊಣೆಯಾಗಬಹುದೇ ಹೊರತು, ಮನುಷ್ಯರಲ್ಲ, ವ್ಯಕ್ತಿಗಳಲ್ಲ. ನಾನೇ ಅವರ ಸ್ಥಾನದಲ್ಲಿದ್ದಿದ್ದರೆ, ಅವರು ನನ್ನ ಸ್ಥಾನದಲ್ಲಿದ್ದಿದ್ದರೆ, ಅವರು ನನ್ನನ್ನು ಹೀಗೇ ಕಂಡಿದ್ದಿದ್ದರೆ, ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೆನೇ? ಖಂಡಿತ ಇಲ್ಲ. + +ಇಲ್ಲಿನ ಸರ್ಕಾರ, ಸಮಾಜ, ಚರಿತ್ರೆಯ ಈ ಹೊಣೆಯನ್ನು, ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದರೆ, ಒಪ್ಪಿಕೊಂಡಿದ್ದೇವೆಂದು ನನ್ನ ಬಳಿ ಬಂದು ನಿವೇದಿಸಿಕೊಂಡಿದ್ದರೆ, ನನ್ನಲ್ಲಿ ದ್ವೇಷ ಕಡಿಮೆ ಆಗುತ್ತಿತ್ತೇ? + +ಅಲ್ಲದೆ, ಈಗ ನನ್ನ ಮಕ್ಕಳೇ ಇಲ್ಲಿಗೆ ಬಂದಿದ್ದಾರೆ, ಇಲ್ಲಿಯ ಜೀವನಶೈಲಿ, ಶ್ರೀಮಂತಿಕೆ, ವೈಭೋಗ, ಎಲ್ಲವನ್ನೂ ಅನುಭವಿಸುತ್ತಿದ್ದಾರೆ, ಸಂತೋಷವಾಗಿದ್ದಾರೆ. ಈ ಕಾರಣಕ್ಕಾಗಿಯಾದರೂ ನನ್ನ ಇಷ್ಟೊಂದು ಉತ್ಕಟ, ನಿರಂತರ ದ್ವೇಷ ಇರಬಾರದಿತ್ತು. + +***** + +ಈ ಭಾವನೆ, ತೊಳಲಾಟಗಳಿಂದ ಹೊರಬರಲು ತುಂಬಾ ದಿನ ಒದ್ದಾಡಿದೆ. ಇಲ್ಲಿ ಇದು ಹೇಳುವಷ್ಟು ಸುಲಭವಲ್ಲ. ನಕಾರಾತ್ಮಕ ಭಾವನೆಗಳು ಕ್ರಮೇಣ ಕಡಿಮೆಯಾದವು ಎಂಬುದು ನಿಜ. + +ನಮ್ಮ ಓದು, ಅನುಭವ, ವಿಚಾರಗಳೆಲ್ಲ ಏನೇ ಇದ್ದರೂ, ಭಾವನೆ, ಸಂವೇದನೆಗಳ ಮಟ್ಟದಲ್ಲಿ ನಾವುಗಳು ಪ್ರಬುದ್ಧರಾಗಿರುವುದಿಲ್ಲ. ಹಾಗಾಗಿ, ವಿದೇಶ ಪ್ರವಾಸ, ಅನುಭವಗಳ ಬಗ್ಗೆ ಬರೆಯುವಾಗ ಎಚ್ಚರದಿಂದಿರಬೇಕು. + + + +ನನ್ನ ಪ್ರವಾಸ-ವಾಸದ ಉಳಿದ ದಿನಗಳ ಮಟ್ಟಿಗೆ ಇಂತಹ ನಕಾರಾತ್ಮಕ ಭಾವನೆ ಮತ್ತ ಮತ್ತೆ ಮೂಡದಿರಲಿ ಎಂದು ಪ್ರಾರ್ಥಿಸುವೆ. ಪ್ರವಾಸವು ನಮಗೆ ಕಥನವನ್ನು ಮಾತ್ರ ಹೇಳುವುದಿಲ್ಲ, ನಮ್ಮನ್ನು ನಾವು ತಿದ್ದಿಕೊಳ್ಳಲು ಕೂಡ ದಾರಿಯನ್ನು ತೆರೆಯುತ್ತದೆ. + +(ಹಿಂದಿನ ಕಂತು:ವಿದೇಶಿ ಪ್ರವಾಸಾನುಭವ ಅಂದರೇನು?) + +ಕೆ. ಸತ್ಯನಾರಾಯಣ ಹುಟ್ಟಿದ್ದು ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕೊಪ್ಪ ಗ್ರಾಮದಲ್ಲಿ. 1978ರಲ್ಲಿ ಭಾರತ ಸರ್ಕಾರದ ಇಂಡಿಯನ್ ರೆವಿನ್ಯೂ ಸರ್ವೀಸ್ ಗೆ ಸೇರಿ ಆದಾಯ ತೆರಿಗೆ ಇಲಾಖೆಯಲ್ಲಿ ದೇಶದ ನಾನಾ ಭಾಗಗಳಲ್ಲಿ ಕೆಲಸ ಮಾಡಿ ನಿವೃತ್ತಿಯಾಗಿದ್ದಾರೆ. ಸಣ್ಣಕಥೆ, ಕಿರುಕಥೆ, ಕಾದಂಬರಿ, ಪ್ರಬಂಧ, ವ್ಯಕ್ತಿಚಿತ್ರ, ಆತ್ಮಚರಿತ್ರೆ, ಅಂಕಣಬರಹ, ವಿಮರ್ಶೆ, ಪ್ರವಾಸಕಥನ- ಹೀಗೆ ಬೇರೆ ಬೇರೆ ಪ್ರಕಾರಗಳಲ್ಲಿ ಇವರ ಕೃತಿಗಳು ಪ್ರಕಟವಾಗಿವೆ. ಮಾಸ್ತಿ ಕಥಾ ಪುರಸ್ಕಾರ(ನಕ್ಸಲ್ ವರಸೆ-2010) ಮತ್ತು ಕಥಾ ಸಾಹಿತ್ಯ ಸಾಧನೆಗೆ ಮಾಸ್ತಿ ಪ್ರಶಸ್ತಿ, ಬಿ.ಎಂ.ಶ್ರೀ.ಪ್ರತಿಷ್ಠಾನದ ಎಂ.ವಿ.ಸೀ.ಪ್ರಶಸ್ತಿ, ಬೆಂಗಳೂರು ವಿವಿಯ ಗೌರವ ಡಾಕ್ಟರೇಟ್(2013), ರಾ.ಗೌ.ಪ್ರಶಸ್ತಿ, ಬಿ.ಎಚ್.ಶ್ರೀಧರ ಪ್ರಶಸ್ತಿ, ವಿಶ್ವಚೇತನ ಪ್ರಶಸ್ತಿ, ಸೂರ್ಯನಾರಾಯಣ ಚಡಗ ಪ್ರಶಸ್ತಿ (ಸಾವಿನ ದಶಾವತಾರ ಕಾದಂಬರಿ), ವಿ.ಎಂ.ಇನಾಮದಾರ್‌ ಪ್ರಶಸ್ತಿ (ಚಿನ್ನಮ್ಮನ ಲಗ್ನ ಕೃತಿ) ಸೂವೆಂ ಅರಗ ವಿಮರ್ಶಾ ಪ್ರಶಸ್ತಿ (ಅವರವರ ಭವಕ್ಕೆ ಓದುಗರ ಭಕುತಿಗೆ ವಿಮರ್ಶಾ ಕೃತಿ) ಲಭಿಸಿದೆ. \ No newline at end of file diff --git a/Kenda Sampige/article_80.txt b/Kenda Sampige/article_80.txt new file mode 100644 index 0000000000000000000000000000000000000000..ef5475dfcda9e299509cee611642d9e854737085 --- /dev/null +++ b/Kenda Sampige/article_80.txt @@ -0,0 +1,31 @@ +“ನಿಮ್ಮ ಭಾರತದಲ್ಲಿ ಒಬ್ಬ ಗಾಂಧಿಯ ಶಾಂತಿ ಮಂತ್ರದಿಂದ ಸ್ವಾತಂತ್ರ್ಯ ಕೈಗೂಡಿತು. ಅಮೆರಿಕೆಯಲ್ಲಿ ಒಬ್ಬ ಮಾರ್ಟಿನ್ ಲೂಥರ್ ಕಿಂಗ್ ಹುಟ್ಟಿದ. ಈಜಿಪ್ಟಿನಲ್ಲಿ ಸಾಮಾನ್ಯ ಜನರ ಚಳವಳಿಯ ದೆಸೆಯಿಂದ ಸ್ವಾತಂತ್ರ್ಯಕ್ಕೆ ಹೊಸರೂಪ ಬಂತು. ಈ ನಮ್ಮ ದೇಶದಲ್ಲಿ ಅಂತಹ ಒಂದು ಚಳವಳಿಯಾಗಬೇಕು. ಕ್ರಾಂತಿಯಾಗಬೇಕು. ಶಾಂತಿಮಂತ್ರದ ಸತ್ಯಾಗ್ರಹವಾಗಬೇಕು. ನಮ್ಮ ನಾಡಿನಲ್ಲಿ ನಮ್ಮವರಿಗೆ ಸ್ವಾತಂತ್ರ್ಯ ಸಿಕ್ಕಬೇಕು. ನಾನು ಸಾಯುವ ಮುನ್ನ ಅದನ್ನು ನೋಡಬೇಕು.” + +ಅವರು ಆಗಾಗ ನನ್ನ ಮುಖವನ್ನು ದೃಷ್ಟಿಸುತ್ತಾ ಮಾತನಾಡುತ್ತಿದ್ದರು. ಅವರ ಮಾತು ನನ್ನನ್ನು ಮಾತ್ರ ಉದ್ದೇಶಿಸಿದ್ದಲ್ಲ, ಎನ್ನುವುದು ನನಗೆ ನಿಧಾನವಾಗಿ ಅರಿವಾಗುತ್ತಿತ್ತು. ಅದೊಂದು ಸ್ವಗತವಾಗಿತ್ತು. ಅವರು ಭಾವುಕರಾಗಿದ್ದರು ಅನ್ನಿಸಿತ್ತು. ವಿಶ್ವವಿದ್ಯಾಲಯದ ಸ್ಥಗಿತ, ಸಂಕುಚಿತ, ಜಾಗರೂಕತೆ ತುಂಬಿದ ಜಾಣ್ಮೆಯ ವಾತಾವರಣದಲ್ಲಿ ಚಳವಳಿ, ಕ್ರಾಂತಿ, ಸ್ವಾತಂತ್ರ್ಯದ ಮಾತು ಆಡುವುದು, ಕೇಳುವುದು ಬಹಳ ಅಪರೂಪ. ಅವರ ಮಾತನ್ನು ಕೇಳಿಸಿಕೊಳ್ಳುತ್ತಿದ್ದ ನನಗೆ ರೋಮಾಂಚನವಾಗಿತ್ತು. ‘ಇನ್ನಷ್ಟು ಹೇಳಿ, ಮಾತನಾಡಿ, ನಿಲ್ಲಿಸಬೇಡಿ’ ಎಂದು ಬೇಡಿಕೊಳ್ಳುವ ಮನಸ್ಸಾಗಿತ್ತು. ಸದಾ ಕಾಲ ಸತ್ತಂತೆ ಇರುವ ಈ ಸಮಾಜದಲ್ಲಿ ನರನಾಡಿಯನ್ನು ಬಡಿದೆಬ್ಬಿಸುವ ನುಡಿ ಹುಟ್ಟಬೇಕು. ಆಂದೋಲನವಾಗಬೇಕು. ‘ಹೇಳಿ ಜಾನ್, ನಿಮ್ಮ ಜನ ಅಂತಹದೊಂದು ಆಂದೋಲನವನ್ನು ಬರಮಾಡಿಕೊಳ್ಳಲು ಸಿದ್ಧರಾಗುತ್ತಿದ್ದಾರೆಯೇ?’ ನನ್ನ ಪ್ರಶ್ನೆ ಗಂಟಲಿನಲ್ಲಿಯೇ ಸಿಕ್ಕಿಕೊಂಡಿತ್ತು. ನನ್ನ ಜೀವ ತಟಪಟಾಯಿಸಿತ್ತು. + +ಕೇವಲ ನಮ್ಮ ಮೂವರ ಸಭೆಗೆ ಬಂದು ಪಕ್ಕದಲ್ಲಿ ಕೂತಿದ್ದವರು ನನ್ನ ಮೇಲಿನ ಅಧಿಕಾರಿ. ಅವರಿಗೆ ತಮ್ಮ ಸ್ಥಾನದ ಅರಿವು ಇತ್ತೇ ವಿನಃ ಆ ಕ್ರಾಂತಿ, ಶಾಂತಿ ಪದಗಳ ಬಗ್ಗೆ ಎಳ್ಳಷ್ಟೂ ಆಸಕ್ತಿಯಿರಲಿಲ್ಲ. ನಮ್ಮ ಮೀಟಿಂಗ್ ಮುಗಿದು ಅಲ್ಲಿಂದ ಮರಳುವಾಗ ಮ್ಯಾನೇಜರ್ “ನಿನಗೆ ಜಾನ್ ಮಾತಾಡಿದ್ದೆಲ್ಲಾ ಅರ್ಥವಾಯಿತೇ? ಅವರು ಉಲ್ಲೇಖಿಸಿದ ಕ್ಯಾಪಿಟಲಿಸ್ಟ್, ನವ ಉದಾರವಾದಿ ಪದಗಳೆಲ್ಲ ನಮಗ್ಯಾಕೆ ಬೇಕಿತ್ತು? ಸುಮ್ಮನೆ ಅವರ ರಾಜಕೀಯದಲ್ಲಿ ನಮ್ಮನ್ನು ಸಿಕ್ಕಿಸುವುದು ಅವರ ಉದ್ದೇಶವಾಗಿತ್ತೇ ಎಂದು ನನ್ನ ಅನುಮಾನ. ನೀನು ಜಾಗರೂಕತೆಯಿಂದಿರು” ಎಂದು ಎಚ್ಚರಿಸಿದರು. ಅವರ ಮುಂದೆಯೇ ತಲೆ ಚಚ್ಚಿಕೊಳ್ಳಲಾಗದೆ ನಾನು ಪೇಲವ ನಗೆ ಬೀರಿ ಬುಡ ಭದ್ರ ಮಾಡಿಕೊಳ್ಳುವ ಸ್ಥಿತಿಯ ಬಗ್ಗೆ ಸ್ವಮರುಕ ಹುಟ್ಟಿತ್ತು. + +ಜಾನ್ ಹೇಳುತ್ತಿದ್ದದ್ದು ಅವರ ಅಬೊರಿಜಿನಲ್-ಆಸ್ಟ್ರೇಲಿಯಾದ ಮೂಲ ನಿವಾಸಿಗಳ ಬಗ್ಗೆ. ಹತ್ತೊಂಬತ್ತು ಮತ್ತು ಇಪ್ಪತ್ತನೇ ಶತಮಾನಗಳು ಆಸ್ಟ್ರೇಲಿಯಾ ದೇಶದ ಅತ್ಯಂತ ಕರಾಳ ಚರಿತ್ರೆಯನ್ನು ಕಂಡಿವೆ. ಬ್ರಿಟಿಷರು ತಮ್ಮ ವಸಾಹತುಶಾಹಿ ಬೇರುಗಳನ್ನು ಆಳವಾಗಿ ಬೆಳೆದುಕೊಳ್ಳುತ್ತಾ ಇಪ್ಪತ್ತನೇ ಶತಮಾನದಲ್ಲಿ ಅಬೊರಿಜಿನಲ್ ಜನರ ಜೊತೆ ದ್ವೀಪವಾಸಿಗಳನ್ನು ಕೂಡ ಸೇರಿಸಿಕೊಂಡು ನಿರ್ದಯೆಯ ಶೋಷಣೆ ಮಾಡಲಾಗಿತ್ತು. ಅವರನ್ನು ಗುಲಾಮರಾಗಿಸಿಕೊಂಡು ದೇಶದ ಕಾರ್ಖಾನೆಗಳನ್ನು, ಕೈಗಾರಿಕೆಯನ್ನು, ಕೃಷಿಯನ್ನು, ಒಟ್ಟಾರೆ ದೇಶದ ಆರ್ಥಿಕತೆಯನ್ನು ವೃದ್ಧಿಸಲಾಗಿತ್ತು. ಇಪ್ಪತ್ತನೇ ಶತಮಾನದ ಬಹುಭಾಗ ‘ಬಿಳಿ ಆಸ್ಟ್ರೇಲಿಯಾ ಪಾಲಿಸಿ’ ಕಂಡಿತ್ತು. ಅಂದರೆ ದೇಶಪೂರ್ತಿ ಬಿಳಿಜನರೇ ಇರಬೇಕು, ಆಸ್ಟ್ರೇಲಿಯವೆಂದರೆ ಅದೊಂದು ಮುಂದುವರೆದ, ಪಾಶ್ಚಾತ್ಯ, ಬಿಳಿಯರ ಸಮಾಜ ಎಂದಾಗಬೇಕು ಎನ್ನುವ ಸರಕಾರ-ಪ್ರೇರಿತ, ಸರಕಾರವೇ ಜಾರಿಗೆ ತಂದಿದ್ದ ಕ್ರಮ. ಬಿಳಿಯರಲ್ಲದ ಇತರರ ಸ್ಥಾನಮಾನ ಯಾವಾಗಲೂ ಕೀಳು. ಇಪ್ಪತ್ತನೇ ಶತಮಾನದ ಆದಿಯಲ್ಲಿ ಕೆಲ ರಾಜ್ಯಗಳಲ್ಲಿ ಮಾತ್ರ ಅವರು ಮತ ಚಲಾಯಿಸುವ ಹಕ್ಕು ಹೊಂದಿದ್ದರು. ದೇಶದ ಕ್ವೀನ್ಸ್ಲ್ಯಾಂಡ್ ಮತ್ತು ಪಶ್ಚಿಮ ಆಸ್ಟ್ರೇಲಿಯಾ ರಾಜ್ಯಗಳಂತೂ ಮೂಲನಿವಾಸಿಗಳನ್ನು ಲೆಕ್ಕಕ್ಕೇ ತೆಗೆದುಕೊಂಡಿರಲಿಲ್ಲ. ಇಡೀ ದೇಶದ ಜನಸಂಖ್ಯೆಯಲ್ಲಿ ಕೇವಲ ಒಂದು ಶತಭಾಗವಷ್ಟೇ ಇದ್ದ ಅವರು ಬದುಕಿರುವುದೇ ತಪ್ಪು ಎಂಬ ಮನೋಭಾವನೆಯಿತ್ತು ಎಂದು ಅನೇಕ ದಾಖಲೆಗಳು ಹೇಳುತ್ತವೆ. + +ಮೊದಲನೇ ಪ್ರಾಪಂಚಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯನ್ ಸೈನಿಕರಲ್ಲಿ ಮೂಲನಿವಾಸಿಗಳೂ ಇದ್ದರು. ಆದರೆ ಯುದ್ಧದ ನಂತರ ದೇಶದ ಸರಕಾರಗಳು ಅವರ ಹೆಸರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆಸ್ಟ್ರೇಲಿಯನ್ ಬಿಳಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಬಿರುದುಗಳು ಮತ್ತು ಸೌಲಭ್ಯ, ಸೌಕರ್ಯಗಳು ಲಭಿಸಿದವು. ಎರಡನೇ ಮಹಾಯುದ್ಧದ ನಂತರವೂ ಇದೇ ಕತೆಯಾಗಿದ್ದು ಈ ಬಾರಿ ಯುದ್ಧದಲ್ಲಿ ಭಾಗವಹಿಸಿದ್ದ ಮೂಲನಿವಾಸಿಗಳ ಹೆಸರುಗಳನ್ನೂ ಮಾತ್ರ ದಾಖಲಿಸಲಾಗಿತ್ತು. ಅವರಿಗೆ ಯಾವುದೇ ಬಿರುದು, ಸೌಲಭ್ಯ, ಸೌಕರ್ಯಗಳನ್ನು (ಆರ್ಥಿಕ, ಸಾಮಾಜಿಕ, ರಾಜಕೀಯ) ಕೊಡಲಿಲ್ಲವೆಂದು ದಾಖಲಾಗಿದೆ. ಆದರೆ ಇವೆಲ್ಲವೂ ಸೈನ್ಯದಲ್ಲಿದ್ದ ಬಿಳಿ ಆಸ್ಟ್ರೇಲಿಯನ್ನರಿಗೆ ಲಭ್ಯವಾಗಿವೆ ಎನ್ನುವುದು ಬಹಳ ದುರದೃಷ್ಟಕರ. + +ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಯಾವುದೇ ನಿರ್ಬಂಧನೆಯಿಲ್ಲದೆ, ಸಂಪೂರ್ಣವಾಗಿ ತಮ್ಮಗಳ ಹೆಸರನ್ನು ದಾಖಲಿಸಿಕೊಂಡು ರಾಷ್ಟ್ರೀಯ ಚುನಾವಣೆಗಳಲ್ಲಿ ಮತಚಲಾಯಿಸುವ ಹಕ್ಕು ಲಭಿಸಿದ್ದು ೧೯೮೪ರಲ್ಲಿ. ಇದನ್ನು ಮೊದಲ ಬಾರಿ ಓದಿದಾಗ ನನಗೆ ನಂಬಲಾಗಲಿಲ್ಲ. ವಿಶ್ವವಿದ್ಯಾಲಯದ ಪಂಡಿತರನ್ನು, ಸ್ನೇಹಿತರನ್ನು ಕೇಳಿ ಅದು ನಿಜವೆಂದು ತಿಳಿದಾಗ ನಾನು ಹುಟ್ಟಿ ಬೆಳೆದ ಸ್ವತಂತ್ರ ಭಾರತದ ಬಗ್ಗೆ ಬಹಳ ಹೆಮ್ಮೆಯಾಯ್ತು. ಅದೇ ಹೆಮ್ಮೆಯಿಂದ ನಾನು ಈಗಲೂ ಹೇಳುವುದು- ‘ನಾನು ಬಂದಿರುವುದು ಒಂದು ಪೋಸ್ಟ್-ಕೊಲೊನಿಯಲ್ ದೇಶದಿಂದ. ನಾನು ವಾಸಿಸುತ್ತಿರುವುದು ಕೊಲೊನಿಯಲ್ ಸಮಾಜ.’ + +ಆ ಮಾತನ್ನು ಹೇಳುವಾಗ ಮಹಾತ್ಮ ಗಾಂಧಿ ಮತ್ತೆ ಪ್ರಸ್ತುತರಾಗುತ್ತಾರೆ. ನೆನಪಿನ ಪರದೆಗಳನ್ನು ಸರಿಸುತ್ತ ಜಾನ್ ಮುಂದೆ ಬಂದು ನಿಲ್ಲುತ್ತಾರೆ. ಬ್ರಿಸ್ಬೇನ್ ನಗರದಲ್ಲಿ, ರಾಣಿರಾಜ್ಯದಲ್ಲಿ ನಿತ್ಯಜೀವನದಲ್ಲಿ ನಾನು ಪದೇಪದೇ ಅನುಭವಿಸುವ ರೇಸಿಸಮ್ ಪ್ರಸಂಗಗಳು, ಸಮಾಜದ ಮನೋಭಾವನೆಯ ಬಗ್ಗೆ ಇನ್ನಷ್ಟು ಜಿಗುಪ್ಸೆ ಮೂಡುತ್ತದೆ. ನನ್ನ ಅನುಭವಗಳನ್ನು ಸ್ನೇಹಿತರೊಡನೆ, ಸಹೋದ್ಯೋಗಿಗಳೊಡನೆ ಹಂಚಿಕೊಂಡಾಗ ಅವರು ಹೌಹಾರುತ್ತಾರೆ. ಕೆಲವರು ನಂಬುವುದೇ ಇಲ್ಲ. ಹೌಹಾರುವ ಕೆಲಮಂದಿ ‘ನೀನು ಸುಮ್ಮನಿರಬಾರದು. ಅದರ ಕುರಿತು ಮಾತನಾಡು, ಪತ್ರಿಕೆಗಳಿಗೆ ಬರೆದು ಹಾಕು, ಪೊಲೀಸರನ್ನು ಸಂಪರ್ಕಿಸು, ಸರಕಾರದ ಪ್ರತಿನಿಧಿಗಳನ್ನು ಸಂಪರ್ಕಿಸು, ನಿನ್ನದೇ ಸಾಂಸ್ಕೃತಿಕ ಜನಗುಂಪಿನ ಸಹಾಯವನ್ನು ಪಡಿ, ಸುಮ್ಮನಿರಬೇಡ,’ ಎಂದೆಲ್ಲ ಹೇಳುತ್ತಾರೆ. ಅವರ ಸಲಹೆಗಳಲ್ಲಿ ಹಲವನ್ನು ನಾನು ಈಗಾಗಲೇ ಜಾರಿಗೆ ತಂದಿದ್ದೀನಿ, ಏನೂ ಪ್ರಯೋಜನವಾಗಿಲ್ಲ. + + + +ಪ್ರಯೋಜನವಾಗಲಿಲ್ಲವೆಂಬ ಕೊರಗಿನ ಕ್ಷಣಗಳಲ್ಲಿ ಜಾನ್ ಮತ್ತು ಗಾಂಧಿ ನೆನಪಾಗುತ್ತಾರೆ. ಆಗ ಗಾಂಧಿ ಉಪಯೋಗಿಸಿದ ಸತ್ಯಾಗ್ರಹ ಮತ್ತು ಅವರ ಉಪವಾಸಗಳು ನೆನಪಾಗುತ್ತವೆ. ಅವು ಈ ದೇಶಕ್ಕೆ, ಈ ಸಮಾಜಕ್ಕೆ ಸಲ್ಲುತ್ತವೆಯೇ ಎನ್ನುವ ಪ್ರಶ್ನೆಯೇಳುತ್ತದೆ. + +ಇಪ್ಪತ್ತೊಂದನೇ ಶತಮಾನದ ಈ ೨೦೨೧ ವರ್ಷದಲ್ಲೂ ಅಬೊರಿಜಿನಲ್ ಮತ್ತು ದ್ವೀಪವಾಸಿಗಳಿಗೆ ಹೇಳಿಕೊಳ್ಳುವಂತಹ ಸಾಮಾಜಿಕ ನ್ಯಾಯವಿನ್ನೂ ಸಿಕ್ಕಿಲ್ಲ. ಅದಕ್ಕೆ ನಿದರ್ಶನವೆಂದರೆ ‘ಬ್ಲಾಕ್ ಲೈವ್ಸ್ ಮ್ಯಾಟರ್’ ಚಳವಳಿಯ ಕಾವು ಇರುವಾಗಲೇ ಆಸ್ಟ್ರೇಲಿಯಾದಲ್ಲಿ ಅಬೊರಿಜಿನಲ್ ಮತ್ತು ದ್ವೀಪವಾಸಿಗಳ ರಕ್ಷಣೆಗಾಗಿ ಹಲವಾರು ಚಳವಳಿ ಪ್ರದರ್ಶನಗಳು ನಡೆದವು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ಮೂರು ಶತಭಾಗ ಮಾತ್ರ ಅಬೊರಿಜಿನಲ್ ಮತ್ತು ದ್ವೀಪವಾಸಿಗಳು. ಆದರೆ ಕಾರಾಗೃಹಗಳಲ್ಲಿ ಅವರ ಸಂಖ್ಯೆ ಅತ್ಯಂತ ಹೆಚ್ಚಿನದು- ಸುಮಾರು ೨೯ ಶತಭಾಗ. ಬಂಧಿತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಅವರಲ್ಲಿ ಅನೇಕರು ಮಾಡಿದ ಅಪರಾಧವೆಂದರೆ ಆಂಗ್ಲೋ-ಯೂರೋಪಿಯನ್ ಸಂಸ್ಕೃತಿಗೆ ಒಗ್ಗಿಕೊಳ್ಳದೆ ತಮ್ಮ ಸಂಸ್ಕೃತಿ ಅನುಸಾರ ಇರುವ ನಡೆನುಡಿ ತೋರುವುದು. ದೇಶದಲ್ಲಿರುವುದು ಆಂಗ್ಲೋ-ಆಸ್ಟ್ರೇಲಿಯನ್ನರ ರಾಜಕೀಯ ಮತ್ತು ಸರಕಾರ. ಬ್ರಿಟನ್ನಿಂದ ಬಂದ ಎರವಲು ಕಾನೂನು ವ್ಯವಸ್ಥೆ. ಆ ವ್ಯವಸ್ಥೆಯ ಅಡಿಯಲ್ಲಿ ಬರುವ ಅನೇಕಾನೇಕ ಕಾನೂನುಗಳು ಅಬೊರಿಜಿನಲ್-ವಿರೋಧಿಯಾಗಿಯೇ ಇವೆಯೇನೋ. + +ಹಾಗೆಂದುಕೊಂಡಾಗ ನನಗೆ ಶಾಲೆಯಲ್ಲಿ ಓದಿದ ಚರಿತ್ರೆ ನೆನಪಾಗುತ್ತದೆ. ನಾವು ಓದಿದ ಬ್ರಿಟಿಷರ ಆಳ್ವಿಕೆ, ದಬ್ಬಾಳಿಕೆ, ಒಡೆದು ಆಳುವ ರಾಜಕೀಯ, ಕುತಂತ್ರಗಳು, ಮತ್ತು ಭಾರತೀಯರನ್ನು ಗುಲಾಮೀ ಮನೋಭಾವದಿಂದ ನಡೆಸಿಕೊಂಡ ಪಠ್ಯವಸ್ತು ನೆನಪಾಗುತ್ತದೆ. ಅವರ ಕಾನೂನು ವ್ಯವಸ್ಥೆಯಲ್ಲಿ ಎಲ್ಲಾ ಭಾರತೀಯರೂ ಅಪರಾಧಿಗಳೇ ಆಗಿದ್ದರೇನೋ. ಹೆಚ್ಚುಕಡಿಮೆ ಅದೇ ವ್ಯವಸ್ಥೆ ಮತ್ತು ಮನೋಭಾವ ಆಸ್ಟ್ರೇಲಿಯಾದಲ್ಲಿ ಈಗಲೂ ಮನೆಮಾಡಿಕೊಂಡಿದೆ ಅನ್ನಿಸುವುದು ಅಸಹಜವಲ್ಲ. + +ಅಬೊರಿಜಿನಲ್ ಮಕ್ಕಳನ್ನು ಅವರ ಕುಟುಂಬಗಳಿಂದ ಬಲವಂತವಾಗಿ ಬೇರ್ಪಡಿಸುವುದು ಇನ್ನೂ ಅವ್ಯಾಹತವಾಗಿ ನಡೆದಿದೆ. ದೂರದ ಗ್ರಾಮೀಣ ಪ್ರದೇಶದಲ್ಲಿರುವ ಒಂದು ಅಬೊರಿಜಿನಲ್ ನೆಲೆಗೆ ತನಿಖೆಗೆಂದು ಹೋಗುವ ಸರಕಾರದ ಅಧಿಕಾರಿ ಅಲ್ಲಿ ವಾಸಿಸುತ್ತಿರುವ ಒಂದು ಕುಟುಂಬ ತನ್ನ ಪಟ್ಟಿಯ ಪ್ರಕಾರ ಶುಚಿ-ಶಿಸ್ತು ಇಲ್ಲವೆಂದು, ‘ನಮ್ಮಂತೆ’ ಇಲ್ಲ, ಬದುಕುತ್ತಿಲ್ಲವೆಂದು ದೂರು ಸಲ್ಲಿಸಿದರೆ, ಕುಟುಂಬದಲ್ಲಿರುವ ಮಕ್ಕಳನ್ನು ಬೇರ್ಪಡಿಸಿ ಸರಕಾರೀ ವ್ಯವಸ್ಥೆಗೆ ತಳ್ಳುವ ಸಾಧ್ಯತೆಯಿದೆ. ದುಃಖಿತರಾದ ಅಥವಾ ಕೋಪಗೊಂಡ ಕುಟುಂಬದ ತಂದೆತಾಯಿಗಳು, ಇತರೆ ಸದಸ್ಯರು ಕೋಪವನ್ನು ಪ್ರದರ್ಶಿಸಿದರೆ ಅವರಿಗೆ ಕಾರಾಗೃಹವಾಸ ತಪ್ಪಿದ್ದಲ್ಲ. ಕಾರಾಗೃಹದಲ್ಲಿರುವ ಅಬೊರಿಜಿನಲ್ ಯುವಜನತೆಯ ಸಾವು ಹೆಚ್ಚುತ್ತಿದೆ. ಹಲವಾರು ಸಾವುಗಳಿಗೆ ಅಧಿಕಾರಿಗಳೇ ಕಾರಣವೆಂದು ಅನೇಕ ದೂರುಗಳಿದ್ದರೂ ಅವಕ್ಕೆ ಪರಿಹಾರ ಸಿಕ್ಕಿಲ್ಲ. + +ಜನಸಂಖ್ಯೆಯ ಕೇವಲ ಮೂರು ಶತಭಾಗವಿರುವ ಮೂಲನಿವಾಸಿಗಳು ರಾಷ್ಟ್ರೀಯ ಮಟ್ಟದಲ್ಲಿ ಕ್ರಾಂತಿ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಕಾಡುತ್ತದೆ. ಅಬೊರಿಜಿನಲ್ ನಾಯಕತ್ವ ಬಲವಾಗಲಿ, ಅವರು ಸತ್ಯಾಗ್ರಹವನ್ನು ಕೈಗೊಳ್ಳಲಿ ಎಂದು ನನ್ನ ಅಂತರ್ಗತ ಆಸೆ. ಅದೇನೇ ಇರಲಿ, ಇಂತಹ ‘ ಅಬೊರಿಜಿನಲ್ ಲೈವ್ಸ್ ಮ್ಯಾಟರ್’ ಚಳವಳಿಗಳು ಮತ್ತಷ್ಟು ಹೆಚ್ಚಲಿ. + + + +ಮಹಾತ್ಮ ಗಾಂಧಿಯೇಕೋ ಈ ದೇಶದಲ್ಲಿ ಅಷ್ಟೊಂದು ಪ್ರಚಲಿತರಾಗಿಲ್ಲ. ದೇಶದ ಬಹುಪಾಲು ಜನತೆ ಶಿಕ್ಷಣಕ್ಕೆ ಮಹತ್ವ ಕೊಡುವುದಿಲ್ಲ ಎಂಬ ಕಾರಣವೇ? ಶಾಲಾಶಿಕ್ಷಣ ಮುಗಿಸಿ ಟ್ರೆಡೀಗಳಾಗುವ (ಪ್ಲಮ್ಬರ್, ಎಲೆಕ್ಟ್ರಿಷಿಯನ್, ಕಾರ್ಪೆಂಟರ್, ಬಿಲ್ದರ್, ಟೈಲರ್, ಮುಂತಾದವು) ಜನರಲ್ಲಿ ಉದ್ಯೋಗಕ್ಕೆ ಮಹತ್ವ ಕೊಡುವ ರಾಜಕಾರಣಿಗಳ ಬಗ್ಗೆ ಒಲವಿದೆ. ಉನ್ನತ ಶಿಕ್ಷಣಕ್ಕೆ, ಬೌದ್ಧಿಕ ಬೆಳವಣಿಗೆಗೆ ಅಷ್ಟೊಂದು ಉತ್ತೇಜನವಿಲ್ಲ. ಇವೆಲ್ಲ ಈ ಸಮಾಜವನ್ನು ಸತ್ತ ಹಾವಿನಂತೆ ಮಾಡಿವೆಯೇ? ಅಥವಾ, ಅಮೆರಿಕೆಯಲ್ಲಿ ಕಪ್ಪು ಜನರು ಎತ್ತಿದ ದನಿಯಷ್ಟು ಇಲ್ಲಿನ ಅಬೊರಿಜಿನಲ್ ಜನರ ದನಿ ಜೋರಾಗಿಲ್ಲವೇ? ಈ ನೆಲದ ನೋವು, ತಲ್ಲಣಗಳಿಗೆ ದನಿ ಕೊಡುವವರು ಯಾರು? ಎಲ್ಲರ ಸಾಮಾಜಿಕ ನ್ಯಾಯಕ್ಕಾಗಿ ಇಲ್ಲಿನ ಜನತೆಯನ್ನು, ಸಮಾಜವನ್ನು ಬಡಿದೆಬ್ಬಿಸುವ ಒಂದು ಹೊಸ ಆಂದೋಲನದ ಹಾಡು ಹುಟ್ಟಲಿ. ಜಾನ್ ಆಶಿಸಿದಂತೆ ಈ ನಾಡಿನಲ್ಲಿ ಒಬ್ಬ ಎಂ.ಕೆ.ಗಾಂಧಿ ಹುಟ್ಟಲಿ. ಸ್ವಗ್ರಾಮ ಕಲ್ಪನೆಯ ಕನಸು ಕೈಗೂಡಲಿ. + +ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ. \ No newline at end of file diff --git a/Kenda Sampige/article_81.txt b/Kenda Sampige/article_81.txt new file mode 100644 index 0000000000000000000000000000000000000000..ebc689a3bf19453e77365e1816da84dcf646cb3e --- /dev/null +++ b/Kenda Sampige/article_81.txt @@ -0,0 +1,31 @@ +ನಮ್ಮ ಬೆಟ್ಟದಹಳ್ಳಿಯಂಥಾ ಒಂದ್ ಪಟ್ಟಣ. ಅಲ್ಲೊಬ್ಬ ಸೌಕಾರ. ಒಂದ್ ಹೊತ್ತಿನ ಸಾರಿಗೆ ಖಂಡುಗ ಮೆಣಸು ಅರೆಸೋನು. ಅಷ್ಟು ದೊಡ್ಡ ಕಾರುಬಾರು ಅವಂದು. ಒಂದ್ ಸಾರಿ ಅವನು ತನ್ನ ಮಗಳಿಗೆ ಮದುವೆ ಮಾಡ್‌ಬೇಕಾಗಿ ಬಂತು. ಒಂದುವಾರ ಮುಂಚೇನೇ ಇನ್ನೂರು ಗಾಡಿ ಕಟ್ಸಿ, ನಾನೂರು ಜನ ಆಳುಗುಳ್ಗೆ ಜತೆ ಮಾಡಿ, ಸೌದೆ ತರಾಕೆ ಅಂತ ಗುಡ್ಡುಕ್ ಕಳುಸ್ದ. ಆ ನಾನೂರು ಜನ ಬುತ್ತಿ-ಗಿತ್ತಿ ಕಟ್ಟುಸ್ಕೊಂಡ್ರು. ಕಂದಲಿ-ಕೊಡಲಿ ಹಗ್ಗ ತಗೊಂಡ್ರು. ಗುಡ್ಡಕ್ ಹೊಲ್ಟ್ರು. ಬಂದರೂ… ಬಂದರೂ… ಭಾಳ ದಾರಿ ಬಂದ್ರು, ಮದ್ಯಾನ ಆಗಿತ್ತು. ರಣರಣ ಬಿಸಲು ಹೊಡೀತಿತ್ತು. ಆಗ ಹಳೂರಂಥ ಒಂದೂರ್ ಸಿಕ್ತು. + +(ರಹಮತ್‌ ತರೀಕೆರೆ) + +ಆಗ ಆ ಆಳ್ಗುಳು, ಲೇ ಇಲ್ಲೇ ಒಂಚಾವತ್ತು ಗಾಡಿ ಬಿಟ್ಟು ಸುದಾರಿಸ್ಕಳನರ‍್ರೋ ಅಂತ ಹೇಳಿ ಊರೊಳಿಕ್ ಹೋದರು. ಆ ಊರಾಗೊಂದ್ ಬಾವಿ. ಆ ಬಾವಿ ಮುಂದಿನ ಮನೆ ಊರ ಗೌಡುಂದು. ಆ ಗೌಡ ಇವರನೆಲ್ಲಾ ನೋಡಿ `ಏನ್ರಪ್ಪಾ, ಯಾವ್ ಕಡೇರು? ಎಲ್ಲಿಗ್ ಬಂದಿದೀರಿ?’ ಅಂತ ವಿಚಾರಿಸ್ದ. ಆಗ ಆಳ್ಗುಳು `ಸ್ವಾಮಿ, ನಾವು ಹಿಂಗೇ ಒಂದೊತ್ತಿಗೆ ಖಂಡುಗ ಮೆಣಸು ಅರಿಯೋ ಸಾವಕಾರನ ಮನೆ ಕೂಲಿ ಆಳ್ಗುಳು. ಅವನ ಮಗಳ್ ಮದ್ವಿಗೆ ಇನ್ನೂರ್ ಗಾಡಿ ಸೌದೆ ತರಾಕೆ ಬಂದಿದೀವಿ’ ಅಂದರು. ಆಗ ಅವನು ನಗ್ತಾ `ಅಯ್ಯೋ ದಡ್ಡಪ್ಪಗಳಿರಾ, ಇನ್ನೂರ್ ಗಾಡಿ ಸೌದಿ ತರಾಕೆ ಗುಡ್ಡುಕ್ ಯಾಕ್ ಹೋಗ್ತೀರಾ? ಮದ್ಯಾನದ್ ಬ್ಯಾಸಾಯದಾಗೆ ನನ್ಮನೆ ಆಳ್ಗುಳು ಮುರಕಂಬರೋ ಮೇಣಿ, ಈಚು, ನೇಗಲು ತುಂಬ್ಕಂಡ್ ಹೋಗ್ರಿ’ ಅಂತ ಹೇಳದ. ಆಮೇಲೆ ಅರ‍್ನೆಲ್ಲಾ ಒಳೀಕ್ ಕರಸಿ `ಅಮ್ಮಯ್ಯಾ ಇವ್ರಿಗೆ ನೀರ್‌ಕೊಟ್ಟು ಉಣ್ಣಕ್ ಇಕ್ರೆ’ ಅಂತಂದ. + +ಅಯ್ಯೋ ಇವನ್ಮನೆ ಜ್ವಾಳ ಬೆಳಿಯಾ. ಒಂದೊತ್ತಿನ್ ಬ್ಯಾಸಾಯದಾಗೆ ಇನ್ನೂರು ಗಾಡಿ ಹತ್ಯಾರ ಮುರೀಬೇಕಾದ್ರೆ ಅದ್ಯಾವ್‌ನಾಡಿ ಬ್ಯಾಸಾಯ ಇದ್ದಾವು? ಅದ್ಯಾವ್ ನಾಡಿ ಜಮೀನಿದ್ದಾತು? ಅಂತ ಆಳ್ಗುಳು ಚೋಜ್ಗ ಪಟ್ಕೊಂಡು ಉಂಡು ಹೊರೀಕ್ ಬಂದ್ರು. ಅವರೆಲ್ಲಾ ಉಣ್ಣೋ ಹೊತ್‌ಗೆ ಗೌಡ, ಮದ್ಯಾನ್ ಬ್ಯಾಸಾಯದಾಗೆ ಮುರದ ನೇಗಲು, ಈಚು, ಮೇಣಿ ಇನ್ನೂರ್ ಗಾಡಿಗೆ ತುಂಬಿಸಿ ಕಳುಸ್ದ. + +ಇನ್ನೂರ್ ಗಾಡಿ ಹೊಡ್ಕಂಡು ಆಳ್ಗುಳು ತಮ್ ಪಟ್ಟಣದ ಕಡೀಕೆ ಹೊಲ್ಟ್ರು. ಹಿಂಗೇ ಬರಬೇಕಾದ್ರೆ ಚಾಕೇನಳ್ಳಿಯಂತ ಮತ್ತೊಂದೂರು ಕಾಣುಸ್ತು. ಎತ್ತೂ ಸೋತಿದ್ವು. ಲೇ ಇಲ್ಲೇ ಒಂಚಾವೊತ್ತು ಬಿಟ್ಟು ಎತ್ತಿಗೆ ನೀರ್ ಕುಡ್ಸನಾ ರ‍್ರಲಾ ಅಂದ್ಕೊಂಡು ಕೊಳ್‌ಬಿಚ್ಚಿ, ನೀರ್ ಕುಡಿಸಿ ಮೇವು ಹಾಕಿದ್ರು. ಅಷ್ಟೊತ್ತಿಗೆ ಒಂದಜ್ಜಿ ಬಂದು, `ಯಾವೂರಿನವರಪ್ಪ? ಎಲ್ಲಿಗೆ ಹೊಂಟ್ರಿ, ಯಾರ ಮನೇರು?’ ಅಂತ ಕೇಳ್ತು. + +ಅದಕ್ಕೆ ಅವರಿದ್ದವರು, `ಹಿಂಗೇ ಖಂಡುಗ ಮೆಣಸು ಅರಿಯೋ ಸಾವ್ಕಾರನ ಮನೆ ಜನ ನಾವು. ಅವನ ಮಗಳ್ ಮದ್ವಿಗೆ ಇನ್ನೂರ್ ಗಾಡಿ ಸೌದೆ ತರಾಕೆ ಬಂದಿದೀವಿ’ ಅಂತ ಜಂಬದಿಂದ ಹೇಳ್ಕೊಂಡರು. ಆಗ ಅವಜ್ಜಿಗೆ ಸಿಟ್ ಬಂದು, `ನಾನ್ ಮೇಲೋ, ನಿಮ್ ಸೌಕಾರ ಮೇಲೋ ನೋಡನಾ’ ಅಂತ ತನ್ನ ಸೊಸೆಯಂದಿರಿಗೆ ಕರದು, `ಲೇ ಅಮ್ಮಯ್ಯಾ, ಹೊತ್ತಾರೆಕಡೆದ ಬೆಣ್ಯಾಗೆ ಏರಿಕಗಟ್ರೆ’ ಅಂದ್ಲು. + +ಅಂದಿದ್ದೆ ತಡ, ತಗೋ ನಮಪ್ಪ ಹಣ್ಣೇಗುಡ್ಡಕ್ಕೂ ಕಲ್ಲತ್ತಿಗಿರೀಗೂ ಏರಿ ಕಟ್ಟೇಬಿಟ್ರು. + +ಶಿವಶಿವಾ ಈನಾಡಿ ಬೆಣ್ಣೆ ಇರಬೇಕಾದ್ರೆ ಅದೆಷ್ಟು ದನ-ಕರ ಇದ್ದಾವು. ಅದ್ಯಾವ್ ನಾಡಿ ಕರೇವು ಆಗ್ತಿದ್ದಾತು ಅಂತ ಆಳ್ಗುಳು ಬಾಯ್ ಮೇಲೆ ಕೈ ಇಟ್ಕೊಂಡ್ರು. ಆಮೇಲೆ ಇನ್ನೆಂಗಪ್ಪಾ ಹೋಗದು? ಅಂತ ಚಿಂತೆ ಮಾಡ್ತಾ ಕುಂತ್ಕಂಬಿಟ್ರು. ಅಷ್ಟೊತ್ತಿಗೆ ಇನ್ನೊಂದಜ್ಜಿ ಬರತಾಯಿತ್ತು. `ಯಾಕಪ್ಪಾ ನಿತ್ಕಂಬಿಟ್ರಿ ಏನ್ಕತೆ?’ ಅಂತ ಇಚಾರಿಸ್ತು. ಅದಕ್ಕೆ ಅವರು, ಅಜ್ಜೀ ಹಿಂಗಿಂಗೆ, ಹಿಂಗಿಂಗೆ ಅಂತಾ ಎಲ್ಲಾ ಹೇಳ್ಕೊಂಡ್ರು. ಆಗ ಅವಜ್ಜಿ, `ಅಯ್ಯೋ ಇಷ್ಟೇನಾ? ಇದಕ್ಕೆಲ್ಲಾ ಯಾಕಳ್ತೀರಾ ನನ್ ಮಕ್ಕಳ್ರ’ ಅಂತ ತನ್ ಮನ್ಯಾಗಿರೋ ಸೊಸೆಗಳಿಗೆ ಕರದು, `ಲೇ ಇವತ್ತು ಬೆಳಿಗ್ಗೆ ಹುಟ್ಟಿದ್ ಬೆಕ್ಕಿನ ಪಿಳ್ಳೆಗಳು ಇದಾವಲ್ಲ ತಂದು ಬಿಡ್ರಮ್ಮಿ’ ಅಂತು. ಅದೆಕೊಡ್ಲೆ ಅದೋಟ್ ಬೆಣ್ಣೇನೂ ಬೆಕ್ಕಿನ ಪಿಳ್ಳೆಗಳು ತಿಂದ್ಹಾಕ್ ಬಿಟ್ಟವು. ಆಗ ಆಳ್ಗುಳು ಅಜ್ಜಿಗೆ ಅಡ್ಡಬಿದ್ದು ‘ಹೋಗ್ ಬರ‍್ತೀವ್ ಕಣಜ್ಜಿ’ ಅಂತ ಗಾಡಿ ಹೊಡ್ಕಂಡು ಹೊಲ್ಟ್ರು. + +ಅರ್ದಾ ದಾರಿ ಬಂದಿದ್ರು. ಅಷ್ಟೊತ್ತಿಗೆ ಕತ್ಲಾಗ್‌ಬಿಡ್ತು. ಮುಂಗಾರ್ ಗಾಳಿಮಳೆ ಸುರುವಾತು. ಅಲಲಲೆ! ಸೌದೆ ನೆಂದ್ ಬಿಡ್ತಾವ್ ಕಂಡ್ರೋ, ನಾವೂ ನೆಂದ್‌ಬಿಡ್ತೀವಿ ಕಂಡ್ರೋ ಅಂತ ಗಾಡಿಗುಳ್ನ ಹಾರಿಗ್ಗಲೆ ಓಡಿಸ್ಕೊಂಡ್ ಬಂದ್ರು. ಇಲ್ಲೇ ಎಲ್ಲಾರ ನೋಡಿ ರಾತ್ರಿ ಕಳಿಯನ ಅಂತ ತೀರ್ಮಾನಿಸಿದ್ರು. ಅಲ್ಲೊಂದ್ ಮನೆ ಕಾಣುಸ್ತು. + +ಆ ಮನೀಗೆ ಬಂದು ಬಾಕಲು ತಟ್ಟಿದ್ರು. ಆ ಮನ್ಯಾಗೆ ಒಂದಜ್ಜಿ ತನ್ನ ಮೊಮ್ಮಗಳ ಕುಟೆ ವಾಸ ಮಾಡ್ತಿತ್ತು. ಅಜ್ಜಿ ಬಂದು ಬಾಕಲು ತಗದು, ‘ಯಾರಪ್ಪಾ ನೀವು ಏನ್ ಬೇಕಾಗಿತ್ತು?’ ಅಂತ ಕೇಳ್ತು. + +`ಅಜ್ಜೀ ಅಜ್ಜೀ, ನಾವು ಹಿಂಗೆ ಖಂಡುಗ ಮೆಣಸು ಅರಿಯೋ ಸಾವ್‌ಕಾರನ ಮನೇರು. ಮದುವೆ ಸೌದಿ ತರಾಕೆ ಬಂದಿದ್ವಿ. ಮಳೀಗೆ ಸಿಗಾ ಹಾಕ್ಕೊಂಡ್ ಬಿಟ್ಟಿದೀವಿ’ ಅಂದ್ರು. `ಅಯ್ಯೋ ನನ್ ಮಕ್ಕಳ್ರಾ ರ‍್ರಪ್ಪಾ ಒಳೀಕೆ. ಜಾಗ ಕೊಡ್ತೀನಿ’ ಅಂತ ಹೇಳಿ ಹಿತ್ತಲಕಡೆಯಿಂದ ಒಂದು ಕುಂಬಳಕಾಯಿ ತಂದು, ಅದಕ್ಕೆ ಚಂದ್ರಿಕೆ ಹಾಕಿ ಅದರಾಗೆ ಇನ್ನೂರು ಗಾಡಿಗಳನ್ನ ಇನ್ನೂರು ಜತೆ ಎತ್ತುಗಳನ್ನ, ನಾನೂರು ಜನ ಆಳ್‌ಗಳನ್ನ ತುಂಬಿ ಚಂದ್ರಿಕೆ ಮುಚ್ಚಿ ನಡುಮನ್ಯಾಗೆ ತಂದಿಟ್ಲು. ತಾನ್ ಮಾತ್ರ ಮೊಮ್ಮಗಳ್ ಜತೆ ಅಟ್ಟದ ಮ್ಯಾಲೆ ಮಲಕ್ಕೊಂಡ್ಲು. ನಡೂರಾತ್ರಿಯಾಗಿತ್ತು. ಆಗ ಮೊಮ್ಮಗಳು ‘ಅಜ್ಜೀಅಜ್ಜೀ, ಹುಚ್ಚೆ ಹೊಯ್ತೀನಿ’ ಅಂದ್ಲು. ಅದುಕ್ಕೆ ಅಜ್ಜಿ ‘ಇಲ್ಲೇ ಹೊಯ್ಯಡಗಿ’ ಅಂತಂದ್ಲು. ಆಕೆ ಹೊಯ್ಯಾಕೆ ಸುರು ಮಾಡಿದ್ಲು. ಹುಯ್‌ದ್ಲು ಹುಯ್‌ದ್ಲು, ತಗೋ ನಮಣ್ಣ, ಅದೇ ಒಂದು ದೊಡ್ ಹಳ್ಳ ಆಗ್‌ಬಿಡ್ತು! ಅದ್ರಾಗೆ ಜನ ಗಾಡಿ ತುಂಬಿದ ಕುಂಬಳಕಾಯಿ ತೇಲ್ಕೊಂಡ್ ತೇಲ್ಕೊಂಡ್ ಸಮುದ್ರ ಬಂದು ಸರ‍್ತು. + +ಹಿಂಗ್ ಬಂದು ಸಮುದ್ರದಾಗೆ ತೇಲ್ತಾ ಇರುವಾಗ ಒಂದು ಕುಲ್ಡುಗೊಕ್ಕರೆ ಮೇಲ್ಗಡೆ ಹರ‍್ತಾ ನೀರ್ ಮೇಲಿರೋ ಕುಂಬಳ್‌ಕಾಯೀನಾ ನೋಡ್ತು. ಯಲಾ ಯಲಾ! ಒಂದ್ ವಾರಕ್ಕೆ ಆಗೋವಷ್ಟು ತಿನ್ನಕೆ ಸಿಕ್ತು ಕಣಲೆ ಅಂದ್ಕೊಂಡು ಕೊಕ್ನಾಗೆ ಕಚ್ಕೊಂಡ್ ಬಂದು ಒಂದು ದೊಡ್ಡ ಆಲದಮರದ ಮ್ಯಾಲೆ ಬಂದು ಕುತ್ಕೊಂಡ್ತು. ಕುತ್ಕಂಡು ಎಲ್ಡ್ ಕಾಲಾಗೆ ಕಾಯಿನ ಅಮುಕ್ಕೊಂಡು ಚಂದರ್ಕಿಗೆ ಬಾಯಿಹಾಕಿ ಮುಚ್ಚಳ ತಗೀತು. ಆಗ ಒಳಗಿದ್ದೋರೆಲ್ಲ ಅಲೆಲೆಲೆ, ಏಳ್ರಲಾ ಬೆಳಕ್ ಹರೀತು. + +ಗಾಡಿ ಹೂಡನಾ ಏಳ್ರೋ ಅಂತ ಮಾತಾಡಿದ್ರು. ಕೊಕ್ಕರೆ ಹೆದರ್‌ಕೊಂಡು ಮತ್ತೆ ಮುಚ್ಚಳ ಮುಚ್ಚಿ ಹಾರ್‌ಬಿಡ್ತು. ಅಯ್ ಇನ್ನೂ ಕತ್ಲೈತೆ ಮಲಿಕ್ಯಳ್ರೋ ಅಂತ ಆಳ್ಗುಳು ಮತ್ತೆ ಮಲಕ್ಕೊಂಡ್ರು. ಆಗ ಒಬ್ಬ ಮೀನ್ ಶಿಕಾರಿ ಮಾಡೋನು ಬಂದು ಆಲದಮರದ ಕೆಳೀಕೆ ಮಲಕ್ಕೊಂಡ. ಮರದ್ ಮೇಲಿರೋ ಕುಂಬಳಕಾಯಿ ಕಣ್ಣಿಗೆ ಬಿತ್ತು. ಎಲ್ಲಾರ ಗಾಳಿಗೀಳಿಗೆ ಮೈಮೇಲೆ ಬಿದ್ದಾತು ಅಂತ ನೆಲಕ್ಕೂ ಅದಕ್ಕೂ ಒಂದು ಮೀಸೆಕೂದಲು ಕಿತ್ತು ಅಕ್ಕಳಿಗೆ ಕೊಟ್ಟ. ಆಗ ಅಲ್ಲಿಗೆ ಬಂದೋರು, ಇದ್ಯಾವನೋ ಬಂಡೀ ಜಾಡ್ನಾಗೆ ಗೂಟ ನೆಟ್ಟಿದಾನೆ ಅಂತ ಹಗ್ಗ ಹಾಕಿ ಎಳಸಿದ್ರು. ಹಂಗಾದರೂ ಆ ಕೂದಲನ್ನ ಅರಗು ಮಾಡಾಕೆ ಆಗಲಿಲ್ಲ. ಇದೆಂತಾ ಗೂಟವೋ? ಅಂತ ತಲೇಮೇಲೆ ಕೈ ಹೊತ್ಕಂಡ್ ಕುಂತ್‌ಬಿಟ್ರು. ಆಗ ಅಲ್ಲೇ ಪುಳೆ ಆರ‍್ಸಾಕೆ ಅಂತ ಬಂದಿದ್ದ ಅಜ್ಜಿ ಬಂದು ಇದೇನ್ಮಹಾ ಅಂತ ಹೆಬ್ಬೆಟ್ಟಿನಾಗೆ ನೂಕಿ ಬೀಳುಸ್ತು. + + + +ಕತೆ ಕೇಳಿದೆಲಾ, ಈಗೇಳು ನೋಡನಾ. ಒಂದ್ ಹೊತ್ತಿನ ಸಾರಿಗೆ ಖಂಡಗ ಮೆಣಸು ಅರಿಯೋನು ದೊಡ್ಡೋನೊ? ಒಂದ್ ಹೊತ್ತಿನ ಬ್ಯಾಸಾಯದಾಗೆ ಇನ್ನೂರು ಗಾಡಿ ಮೇಣಿ, ಈಚು ಮುರಿಯೋನು ದೊಡ್ಡೋನೊ? ಒಂದ್ ಹೊತ್ ಕಡೆದ ಬೆಣ್ಯಾಗೆ ಏರಿಗಟ್ಟಿಸಿದೊಳ್ ದೊಡ್ಡವಳೋ? ಬೆಕ್ಕಿನ ಪಿಳ್ಳೆಯವಳು ದೊಡ್ಡೋಳೊ? ಇನ್ನೂರು ಗಾಡಿ ನಾನೂರು ಜನಾನೆ ಒಂದ್ ಕುಂಬಳಕಾಯಲ್ಲಿ ತುಂಬಿದೋಳು ದೊಡ್ಡೋಳೊ? ಅಂಥಾ ಕಾಯೀನೇ ತೇಲ್ಕೊಂಡ್ ಹೋಗೋ ಹಂಗೆ ಹುಚ್ಚೆ ಹೊಯ್ದೋಳು ದೊಡ್ಡೋಳೋ? ಅಂಥಾ ಭಾರಾನ ಕೊಕ್ನಾಗೆ ಕಚ್ಕೊಂಡ್ ಬಂದ ಕೊಕ್ಕರೆ ಮೇಲೋ? ಮೀಸೆಕೂದಲು ಕಿತ್ತಿ ಗೂಟ ಕೊಟ್ಟೋನು ದೊಡ್ಡೋನೋ? ಅದನ್ನ ಹೆಬ್ಬೆಟ್ಟಿನಾಗೆ ಬೀಳಿಸಿದವಳು ದೊಡ್ಡೋಳೋ? ಯಾರು ದೊಡ್ಡೋರು? + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_82.txt b/Kenda Sampige/article_82.txt new file mode 100644 index 0000000000000000000000000000000000000000..9c1f78c3cc4010d199c0bdde4f31ed0e73961541 --- /dev/null +++ b/Kenda Sampige/article_82.txt @@ -0,0 +1,41 @@ +ಚಿಮನಹಳ್ಳಿ ರಮೇಶಬಾಬು ಅವರ ‘ಮಂಪರುʼ ಕಾದಂಬರಿಯು ವಸ್ತು ಹಾಗು ಕಥನವನ್ನು ನಿರ್ವಹಿಸಿದ ರೀತಿಯಿಂದ ಗಮನಸೆಳೆಯುತ್ತದೆ. ನಗರದ ಕಾರ್ಪೊರೇಟ್‌ ಜಗತ್ತಿನ ವಸ್ತುವನ್ನು ಹೊಂದಿದ ಹಲವು ಕಥನಗಳು ಕನ್ನಡದಲ್ಲಿವೆ. ‘ಮಂಪರುʼ ಕಾದಂಬರಿಯು ಕಾರ್ಪೊರೇಟ್‌ ಜಗತ್ತಿನ ವಸ್ತುವನ್ನು ಆಯ್ದುಕೊಂಡಿದೆ. ಆದರೆ ಕಥನವು ಇದಕ್ಕೆ ಸೀಮಿತವಾಗದೆ ಕಾರ್ಪೊರೇಟ್‌ ಜಗತ್ತಿನ ಆಚೆಗಿನ ಹಲವು ಆಯಾಮಗಳನ್ನು ಒಳಗೊಳ್ಳುವ ಮೂಲಕ ಭಿನ್ನವಾಗುತ್ತದೆ. ನಗರ ಬದುಕಿನ ತಲ್ಲಣ, ಗ್ರಾಮ್ಯ ಬದುಕಿನ ಸ್ವರೂಪ, ಸ್ತ್ರೀ ಸಂವೇದನೆ, ಮಾನವ ಕಲ್ಯಾಣದ ಹೊಣೆಹೊತ್ತ ಸಂಶೋಧನೆಗಳ ಒಳಗಿನ ಕ್ರೌರ್ಯ, ಅನೈತಿಕ ನಡೆ, ನಗರದ ರಿಯಲ್‌ ಎಸ್ಟೇಟ್‌ ಬೆಳವಣಿಗೆಯಿಂದ ಆಟೋ ಚಾಲಕರಲ್ಲಿ ಮೂಡಿದ ಕನಸುಗಳು ಹೀಗೆ ಹಲವು ಆಯಾಮಗಳ ಶೋಧನೆಯನ್ನು ಕಥನವು ತನ್ನ ಒಡಲಲ್ಲಿರಿಸಿಕೊಂಡಿದೆ. + +ಟ್ರಾನ್ಸ್‌ಜೆನಿಕ್‌ ಇಲಿಗಳ ಅಧ್ಯಯನ, ಪ್ರಯೋಗದ ಮೂಲಕ ಮಾನವನನ್ನು ಕಾಡುವ ರೋಗಗಳಿಗೆ ಔಷಧಿಯನ್ನು ಆವಿಷ್ಕರಿಸುವ ಕಾರ್ಪೊರೇಟ್‌ ಕಂಪೆನಿಯಲ್ಲಿ ಸುಮನ ಉದ್ಯೋಗಿಯಾಗಿದ್ದಾಳೆ. ಸುಮನಳ ಕಣ್ನೋಟದ ಮೂಲಕ ಕಥನ ತೆರೆದುಕೊಳ್ಳುತ್ತದೆ. ಕೋಲಾರದ ಬಳಿಯ ಕೊಡದವಾಡಿ ಎಂಬ ಸಣ್ಣಹಳ್ಳಿಯಿಂದ ಬಂದ ಇವಳು ಎದುರಿಸುವ ಸಮಸ್ಯೆಗಳಿಗೆ ಎರಡು ಮುಖಗಳಿವೆ. ಒಂದು ಬಾಹ್ಯಕ್ಕೆ ಸಂಬಂಧಿಸಿದ ಬಿಕ್ಕಟ್ಟು. ಇದು ತನ್ನ ಕಂಪೆನಿಯ ಕೆಲಸದ ಒತ್ತಡದಿಂದ ಸೃಷ್ಟಿಯಾಗಿದೆ. ಇನ್ನೊಂದು ತನ್ನ ಅಂತರಂಗ ಸೃಷ್ಟಿಸಿದ ಬಿಕ್ಕಟ್ಟು. ಈ ಅಂತರಂಗ ಮತ್ತು ಬಾಹ್ಯದ ಬಿಕ್ಕಟ್ಟು ಎರಡೂ ಬೇರೆಯಾದರು ಇವು ಪರಸ್ಪರ ಭಿನ್ನವಲ್ಲ. ಕೆಲವೊಮ್ಮೆ ಈ ಎರಡು ಬಿಕ್ಕಟ್ಟು ಮೇಳೈಸಿ ಸುಮನಳನ್ನು ಹಿಂಡುತ್ತವೆ. ಇವೆರೆಡು ಬಿಕ್ಕಟ್ಟುಗಳಿಗೆ ಕಥನ ಎದುರಾದ ಬಗೆಯನ್ನು ಪರಿಶೀಲಿಸಲಾಗಿದೆ. + +(ಚೀಮನಹಳ್ಳಿ ರಮೇಶಬಾಬು) + +ಸುಮನ ಟ್ರಾನ್ಸ್‌ಜೆನಿಕ್‌ ಇಲಿಗಳ ಅಧ್ಯಯನ ನಿರತ ತಂಡವೊಂದರ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಾಳೆ. ಈ ಅಧ್ಯಯನದಲ್ಲಿ ಸುಮನಳ ತಂಡವನ್ನು ಮುನ್ನಡೆಸುವ ಟೀಮಿನ ಲೀಡರಾಗಿ ಅರವಿಂದನಿದ್ದಾನೆ. ಇವನ ಲೈಂಗಿಕ ಕಿರುಕುಳಕ್ಕೆ ಸುಮನ ತುತ್ತಾಗುತ್ತಾಳೆ. ಇದನ್ನು ದಿಟ್ಟವಾಗಿ ಎದುರಿಸುವ ದೈರ್ಯವನ್ನು ಅಲ್ಲಿನ ವ್ಯವಸ್ಥೆ ಇವಳಿಗೆ ನೀಡುವುದಿಲ್ಲ. ಈ ಅಧಿಕಾರ ವ್ಯವಸ್ಥೆಯಲ್ಲಿ ಇದೆಲ್ಲ ಸಹಜವೆಂಬಂತಿದೆ. ಇವಳೊಟ್ಟಿಗೆ ಕಾರ್ಯನಿರ್ವಹಿಸುವ ನಮಿತ ಇದನ್ನು ಒಪ್ಪಿಕೊಂಡಿದ್ದಾಳೆ. ಸುಮನಳ ಮೌನವು ಅರವಿಂದನು ಮೈ ಮುಟ್ಟಿ ಮಾತನಾಡಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಇದರ ವಿರುದ್ಧ ಸುಮನ ಸಣ್ಣ ಮಟ್ಟಿಗಾದರು ತನ್ನ ಅಸಹನೆಯನ್ನು ದಾಖಲಿಸುತ್ತಾಳೆ. ಅರವಿಂದನ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಬೇಕಿರುವುದರಿಂದ ಈ ಹಿಂಸೆಯನ್ನು ಸಹಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. + +ಕಂಪೆನಿಯ ಮುಖ್ಯಸ್ಥರಾದ ತಾರನಾಥರೊಂದಿಗಿನ ಮಹತ್ವದ ಸಭೆಯಲ್ಲಿ ಪ್ರಾಮಾಣಿಕನು, ನಿಷ್ಟೂರ ಗುಣವನ್ನು ಹೊಂದಿದ ರಾಜೀವನ ಎದರು ಅರವಿಂದನಿಗೆ ಮುಖಭಂಗವಾಗುತ್ತದೆ. ಇದನ್ನು ಕಂಡು ಸುಮನ ಹರ್ಷಿಸುತ್ತಾಳೆ. ಸಮಾಜದ ನೈತಿಕ ಕಟ್ಟಳೆಗಳ ನೆಲೆಯಲ್ಲಿ ನೋಡಿದರೆ ಅರವಿಂದನಿಗಾದ ಅಪಮಾನವನ್ನು ಕಂಡು ಹರ್ಷಿಸುವ ಸುಮನಳ ಗುಣ ಅಮಾನವೀಯವಾಗಿ ಕಾಣುತ್ತದೆ. ಇದು ಸುಮನಳ ಸಣ್ಣತನವಾಗಿ ಕಥನದಲ್ಲಿ ಅಭಿವ್ಯಕ್ತವಾಗುವುದಿಲ್ಲ. ಇನ್ನೊಬ್ಬರನ್ನು ಅಪಮಾನವಿಸುವಾಗ ಅಪಮಾನಿತರಿಗೆ ಆಗುವ ನೋವಿನ ಸ್ವರೂಪ ಎಂಥದ್ದೆಂಬ ಪಾಠ ಅರವಿಂದನಿಗೆ ತಿಳಿಯಬೇಕು ಎಂಬ ದೃಷ್ಟಿ ಕಥನದಲ್ಲಿದೆ. ಅರವಿಂದ ತನ್ನ ಟೀಮಿನ ಸ್ತ್ರೀಯರನ್ನು ಕಾಮುಕ ದೃಷ್ಟಿಯಿಂದ ಕೀಳಾಗಿ ಕಾಣುತ್ತಾನೆ. ಸಭೆಯಲ್ಲಾದ ಅಪಮಾನ, ಸುಮನಳ ಮಾತಿಗೆ ಸಿಕ್ಕ ಮನ್ನಣೆ ಇವನನ್ನು ಕಂಗೆಡಿಸುತ್ತವೆ. ಅದೇ ಸಿಟ್ಟಿನಲ್ಲಿ ಸಮನಳನ್ನು ಲೈಂಗಿಕ ಬೈಗುಳದ ಮೂಲಕ ನಿಂದಿಸುವನು. ಸುಮನ ಕಂಪೆನಿ ಬಾಸ್‌ ಆದ ತಾರನಾಥನಿಗೆ ಅರವಿಂದನ ವರ್ತನೆಯ ಕುರಿತು ದೂರು ನೀಡುತ್ತಾಳೆ. ಈ ಘಟನೆಯನ್ನು ಸಾಬೀತು ಪಡಿಸುವಲ್ಲಿ ವಿಫಲಳಾದರೆ ಉದ್ಯೋಗ ಕಳೆದುಕೊಳ್ಳುವ ಇಕ್ಕಟ್ಟನ್ನು ಎದುರಿಸುತ್ತಾಳೆ. ಈ ಘಟನೆಯನ್ನು ಸಾಬೀತು ಪಡಿಸುವ ಸಾಕ್ಷ್ಯವು ಅವಳಿಗಿಲ್ಲ. ಅರವಿಂದ ನಮಿತ ಮಾತ್ರ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ನಮಿತ ತನ್ನ ಬೆಂಬಲಕ್ಕಿದ್ದಾಳೆ. ನಿನ್ನಿಂದ ಏನು ಮಾಡಲು ಸಾಧ್ಯವೆಂಬ ವ್ಯಂಗ್ಯದಲ್ಲಿ ಅರವಿಂದ ವಿಚಾರಣೆಗೆ ಬರುತ್ತಾನೆ. ಅರವಿಂದನ ಆಪ್ತಳಾದ ನಮಿತ ಸತ್ಯದ ಪರನಿಂತು ಸುಮನಳ ದೂರಿಗೆ ಸಾಕ್ಷಿಯಾಗುತ್ತಾಳೆ. ಅರವಿಂದ ಕೆಲಸವನ್ನು ಕಳೆದುಕೊಳ್ಳುತ್ತಾನೆ. ಒಬ್ಬ ಸ್ತ್ರೀ ಅಸಹಾಯಕಳಾದಾಗ ಮತ್ತೊಬ್ಬ ಸ್ತ್ರೀ ಅವಳ ಬೆಂಬಲಕ್ಕೆ ನಿಲ್ಲುವ ಕಥನದ ದೃಷ್ಟಿಕೋನ ವಿಶೇಷವಾದುದು. ‘ಹೆಣ್ಣಿಗೆ ಹೆಣ್ಣೆ ಶತ್ರುʼವೆಂಬ ಗಂಡಾಳ್ವಿಕೆಯ ಜನಪ್ರಿಯ ನಿಲುವನ್ನು ಕಥನ ಪಲ್ಲಟಿಸುತ್ತದೆ. + +ಸುಮನ ತನ್ನ ಉದ್ಯೋಗದಲ್ಲಿ ಎದುರಿಸುವ ಮತ್ತೊಂದು ಸೂಕ್ಷ್ಮ ಇಕ್ಕಟ್ಟೆಂದರೆ, ತಾಯಿಯ ಮೊಲೆಯನ್ನು ಕಚ್ಚಿಕೊಂಡಿರುವ ಮರಿಗಳನ್ನು ತಾಯಿ ಇಲಿಯಿಂದ ಬೇರ್ಪಡಿಸುವ ಕ್ರಿಯೆ. ಇದು ಅವಳಿಗೆ ಹಿಂಸೆಯನ್ನುಂಟು ಮಾಡುತ್ತದೆ. ಆ ಟ್ರಾನ್ಸ್‌ಜೆನಿಕ್‌ ಇಲಿಗಳ ಸ್ಥಿತಿಯು ತನ್ನ ಸ್ಥಿತಿಗಿಂತ ಭಿನ್ನವೇನಲ್ಲ ಎಂದು ಭಾಸವಾಗುತ್ತದೆ. ಆ ಇಲಿಗಳಿಗೆ ಅನಸ್ತೇಶಿಯಾ ನೀಡಿ ಪ್ರಜ್ಞೆಯನ್ನು ತಪ್ಪಿಸುವುದು. ನಂತರ ಅದರ ದೇಹದ ಒಂದೊಂದು ಭಾಗವನ್ನು ಬೇರ್ಪಡಿಸುವ ಕ್ರಿಯೆ ಇದು ತನ್ನಿಂದ ಸಾಧ್ಯವಿಲ್ಲ ಎಂದು ಕೈ ಚೆಲ್ಲುತ್ತಾಳೆ. ಸುಮನಳಿಗೆ ಮೂಡಿದ ಈ ನೈತಿಕ ಇಕ್ಕಟ್ಟಿನ ಪ್ರಶ್ನೆ ಕ್ಷಣಿಕವಾದುದು. ಮಾರನೆ ದಿನ ಇದನ್ನೆಲ್ಲ ಮರೆತು ಎಂದಿನಂತೆ ಕಾರ್ಯಪ್ರವೃತ್ತಳಾಗುತ್ತಾಳೆ. ಟ್ರಾನ್ಸ್‌ಜೆನಿಕ್‌ ಇಲಿಗಳ ಜೀವನ ವಿವರ ಈ ಕಥನದಲ್ಲಿ ಸಂಕೇತವಾಗಿ ಬರುತ್ತದೆ. ಸಮನಳಿಗೆ ತನ್ನತಾಯಿ ರೇಣುಕಳು ‘ಪ್ರಯೋಗಕ್ಕೆ ಒಳಪಟ್ಟ ಟ್ರಾನ್ಸ್‌ಜೆನಿಕ್‌ ಇಲಿಯಂತೆ ಕಾಣತೊಡಗಿದಳುʼ(ಪು.೧೫೮) ಎಂಬ ವಿವರವಿದೆ. + +ತನ್ನೊಡಲಲ್ಲಿ ಬೆಳೆಯುತ್ತಿರುವ ಮಗುವಿನ ವಿಚಾರವನ್ನು ಸಮನ ರಾಜೀವನಿಗೆʼ ನನ್ನ ಹೊಟ್ಟೆಯೊಳಗೆ ನೀನು ಡೋಸಿಂಗ್‌ ಮಾಡಿರುವ ಇಲಿ ಬೆಳೀತಾ ಇದೆʼ ಎಂದು ಹೇಳುತ್ತಾಳೆ. ಇದನ್ನು ಕೇಳಿದ ರಾಜೀವ ‘ಅಸ್ತೇಶಿಯಾದ ಘಾಟಿಗೆ ನಿಶ್ಚಲಗೊಂಡ ಇಲಿಯಂತೆ ನಿಂತುಬಿಟ್ಟʼ (ಪು.೨೦೦) ಹೀಗೆ ಕಥನದಲ್ಲಿ ಟ್ರಾನ್ಸ್‌ಜೆನಿಕ್‌ ಇಲಿಗಳು ಹಲವು ಅರ್ಥ ಸಾಧ್ಯತೆಗಳನ್ನು ಧ್ವನಿಸುತ್ತವೆ. ಹೀಗೆ ಬಾಹ್ಯವು ಸೃಷ್ಟಿಸಿದ ಬಿಕ್ಕಟ್ಟುಗಳ ಶೋಧ ಕಥನದಲ್ಲಿದೆ. + +ಮೈಮನದ ಕಾಮನೆಗಳು ಸೃಜಿಸಿದ ಹಿಂಸೆಯು ಅಂತರಂಗದ ಬಿಕ್ಕಟ್ಟಾಗಿ ಶೋಧಿತವಾಗಿದೆ. ಸುಮನ ತನ್ನ ಊರಿನಲ್ಲಿ ರತ್ನಾಕರನಿಂದ ಪಡೆದ ದೇಹಸುಖದ ನೆನಪು ಅವಳನ್ನು ಪರಿಪರಿಯಾಗಿ ಕಾಡುತ್ತದೆ. ರತ್ನಾಕರನ ನೆನಪಿನಲ್ಲಿ ಮೂಡುವ ಕಾಮನೆಗಳು ಅವಳ ಮನಸ್ಸನ್ನು ಅಸ್ವಸ್ಥವಾಗಿಸಿದೆ. ಇದು ಮಾನಸಿಕ ಗೀಳಾಗಿ ಅವಳ ಬದುಕನ್ನು ನಿಯಂತ್ರಿಸಿದೆ. ಮೈಮನದ ಕಾಮನೆಗಳು ಸುಮನಳ ನಿದ್ರೆಯನ್ನು ಕಬಳಿಸಿ ನಿದ್ರಾಮಾತ್ರೆಯ ವ್ಯಸನಕ್ಕೆ ದೂಡಿವೆ. ಹಾಗಾಗಿ ರತ್ನಾಕರನ ಜೊತೆಗಿನ ಸುಖದ ಮಂಪರಿನಲ್ಲಿಯೆ ಅವಳು ಕಾಲ ಕಳೆಯುವಳು. ಈ ಅಂತರಂಗದ ವ್ಯಸನದಿಂದ ಪಾರಾಗಲು ಆಗದೆ ತೊಳಲಾಡುತ್ತಾಳೆ. ವೈನು, ನಿದ್ರಾಮಾತ್ರೆಗಳು ಈ ವ್ಯಸನದಿಂದ ತಾತ್ಕಾಲಿಕವಾಗಿ ಹೊರತರಬಲ್ಲವೆ ಹೊರತು ಶಾಶ್ವತವಾಗಿಯಲ್ಲ. ಸಮನಳ ಮನದಲ್ಲಿ ಮೂಡುವ ಕಾಮನೆಗಳಿಗೆ ಹೊತ್ತುಗೊತ್ತಿನ ಹಂಗಿಲ್ಲ. ಅವಳ ಮೈಮನ ಸುಡು ಕೆಂಡದಂತಹ ಕಾಮನೆಗಳಿಂದ ತುಂಬಿದೆ. ಈ ‘ಕಾಮʼ ಜೀವನಶೋಧನೆಯ ಪ್ರಶ್ನೆಯಾಗಿ ಕಥನದಲ್ಲಿ ಮೈದೆಳದಿದೆ. ಹಾಗಾಗಿ ನವ್ಯಕಥನಗಳು ಶೋಧಿಸಿದ ಕಾಮದ ಸ್ವರೂಪಕ್ಕಿಂತ ಭಿನ್ನವು, ವಿಶಾಲವು ಆಗಿದೆ. ಈ ಮೂಲಕ ಹಲವು ನೈತಿಕ ಮೌಲ್ಯಗಳ ಇಕ್ಕಟ್ಟಿನ ಪ್ರಶ್ನೆಗಳಿಗು ಕಥನ ಮುಖಾಮುಖಿಯಾಗಿದೆ. + +ಮೈಮನಗಳ ಸಂಬಂಧದ ಪ್ರಶ್ನೆ ಕಥನದುದ್ದಕ್ಕು ಬರುತ್ತದೆ. ಈ ಬಯಕೆಯ ತಾಪದಿಂದ ಹೊರಬರುವ ದಾರಿ ಅರಿಯದೆ ಸುಮನ ತಲ್ಲಣಿಸುತ್ತಾಳೆ. ಪಾರ್ಕಿನಲ್ಲಿರುವ ಹುಚ್ಚ, ಅವನ ಪದಗಳಲ್ಲಿನ ಅರ್ಥ ಅವಳನ್ನು ತಟ್ಟುತ್ತವೆ. ಹುಚ್ಚನಲ್ಲಿ ರತ್ನಾಕರನನ್ನು ಹುಡುಕುತ್ತಾಳೆ. ಅವನನ್ನು ಸೇರಿ ತನ್ನ ಮನದ ಕಾಮನೆಗಳಿಗೆ ಹೊರದಾರಿ ತೋರಲು ಪ್ರಯತ್ನಿಸುತ್ತಾಳೆ. ಅವನನ್ನು ಕೂಡಲು ಹತ್ತಿರವಾದಾಗ ಹುಚ್ಚನಲ್ಲಿ ತಂದೆಯನ್ನು ಕಂಡು ತಲ್ಲಣಿಸುತ್ತಾಳೆ. ಆದರೆ ಹುಚ್ಚನೆಡೆಗಿನ ಆಕರ್ಷಣೆ ಕುಂದುವುದಿಲ್ಲ. ನಂತರ ರತ್ನಾಕರನನ್ನು ತನ್ನ ಕಂಪೆನಿಯ ಹೆಡ್‌ ರಾಜೀವನಲ್ಲಿ ಕಾಣುತ್ತಾಳೆ. ರತ್ನಾಕರ ನೆನಪು, ಮೈಮನಗಳ ಕಾಮನೆಯನ್ನು ತಣಿಸಿಕೊಳ್ಳಲು ರಾಜೀವನೊಂದಿಗೆ ಕೂಡುತ್ತಾಳೆ. ಅವನೊಟ್ಟಿಗೆ ಸುಖಿಸುತ್ತಾಳೆ. ಆದರೆ ಇದು ಸುಮನಳನ್ನು ಅಂತರಂಗದ ಕ್ಷೋಬೆಯಿಂದ ಪಾರುಮಾಡುವುದಿಲ್ಲ. ರಾಜೀವನ ಜೊತೆಗಿನ ಸಂಬಂಧ ಮತ್ತೊಂದು ಸಮಸ್ಯೆಯನ್ನು ಸೃಷ್ಟಿಸುತ್ತದೆ. + +ಇಡೀ ಕಥನ ಸುಮನಳ ಬಾಹ್ಯ ಜಗತ್ತಿನ ನಿರೂಪಣೆಗಿಂತ ಹೆಚ್ಚಾಗಿ ಅವಳ ಅಂತರಂಗದ ಮನೋವ್ಯಾಪಾರವನ್ನು ಹಿಡಿದಿಡಲು ಪ್ರಯತ್ನಿಸಿದೆ. ಇವಳು ಬಾಹ್ಯದಲ್ಲಿ ಎಷ್ಟೇ ಗಟ್ಟಿಯಾಗಿ ಗೋಚರಿಸಿದರು ಅಂತರಂಗದ ಕ್ಷೋಭೆಯಲ್ಲಿ ಇಂಚಿಂಚೆ ದಹಿಸುತ್ತ ಹೋಗುತ್ತಾಳೆ. ಅವಳ ಎಷ್ಟೊ ವಿಚಾರಗಳು ಬಾಹ್ಯವಾಗಿ ಪ್ರಕಟವಾಗುವುದಿಲ್ಲ. ಅವು ಅಂತರಂಗದಲ್ಲಿ ಬೇರೊಂದು ಸ್ವರೂಪದಲ್ಲಿ ನರ್ತಿಸುತ್ತವೆ. ಸುಮನ ತನ್ನೊಳಗೆ ಬೆಳೆಯುತ್ತಿರುವ ರಾಜೀವನ ಮಗುವಿನ ವಿಚಾರವನ್ನು ತಾಯಿಗಾಗಲಿ, ಮನೆಯವರಿಗಾಗಲಿ ಹೇಳದೆ ಮನದೊಳಗಿರಿಸಿಕೊಳ್ಳುತ್ತಾಳೆ. ಇವಳ ಅಂತರಂಗದ ವಿಚಾರಗಳು ರತ್ನಾಕರ ರಾಜೀವ ಬಿಟ್ಟರೆ ಬೇರೆಯವರೊಂದಿಗೆ ಪ್ರಕಟಗೊಳ್ಳುವುದಿಲ್ಲ. + + + +ಈ ತರಹದ ಭ್ರಮೆಯಲ್ಲಿ ವಿಹರಿಸುವ ಸಮಸ್ಯೆ ಸುಮನಳಲ್ಲಿ ಮಾತ್ರ ಕಾಣಿಸುತ್ತದೆ ಎಂದು ಕಥನ ಸರಳೀಕರಿಸುವುದಿಲ್ಲ. ಇದು ರಾಜೀವನು ಎದುರಿಸುತ್ತಿರುವ ಸಮಸ್ಯೆಯು ಹೌದು. ಸುಮನಳಷ್ಟು ತೀವ್ರವಾಗಿ ರಾಜೀವನ ಮನೋವ್ಯಾಪರ ಪ್ರಕಟವಾಗುವುದಿಲ್ಲ. ಅವನೂ ಸುಮನಳ ಹಾಗೆ ಭ್ರಮಾತ್ಮಕ ಜಗತ್ತಿನಲ್ಲಿ ಸುಖಿಸುವವನು. ಇವನು ತನ್ನ ಬಾಲ್ಯದ ಸಹಪಾಠಿ ರೇಣುಕಳ ನೆನಪಿನ ಮಂಪರಿನಲ್ಲಿ ಮುಳುಗಿದ್ದಾನೆ. ಇದೇ ಕಾರಣಕ್ಕೆ ಪತ್ನಿಯಿಂದ ವಿಚ್ಛೇದನ ಪಡೆದವನು. ಈ ಸಮಸ್ಯೆಯಿಂದ ಪಾರಾಗಲು ಆಗದೆ ನಿದ್ರೆಮಾತ್ರೆಗೆ ಶರಣಾದವನು. ಇವರಿಬ್ಬರ ನಡುವೆ ವಯೋಮಾನದ ಅಂತರವನ್ನು ಬಿಟ್ಟರೆ ಎದುರಿಸುತ್ತಿರುವ ಸಮಸ್ಯೆಯ ಸ್ವರೂಪ ಒಂದೇ ಆಗಿದೆ. ಸಮನ ರತ್ನಾಕರನಿಂದ ದೇಹಸುಖವನ್ನು ಪಡೆದವಳು. ಜಾತಿ ಸಮಸ್ಯೆಯ ಕಾರಣಕ್ಕೆ ಅವನಿಂದ ತಿರಸ್ಕೃತಳಾದವಳು. ಆದರೆ ರಾಜೀವನದು ರೇಣುಕಳ ಜೊತೆಗಿನದು ಏಕಮುಖಿ ಪ್ರೀತಿಯ ಸಂಬಂಧ. ಆದರು ಅವಳ ಹಾಡು, ನೆನಪಿನಿಂದ ಮುಕ್ತನಾಗಲು ರಾಜೀವನಿಗೆ ಸಾಧ್ಯವಾಗುವುದಿಲ್ಲ. ಜೀವನ ಪೂರ್ತಿ ಈ ಕಾಡುವ ನೆನಪಿನ ಮೂಟೆಯನ್ನು ಹೊತ್ತು ನರಳಿದ್ದಾನೆ. ರಾಜೀವ ಈ ನೆನಪನ್ನು ಯಾರೆದುರೂ ಬಿಚ್ಚಿಟ್ಟು ಹಗುರಾದವನಲ್ಲ. ತನಗೆ ಸಂಗಾತಿಯಾಗಿ ಬಂದ ಸುಮನಳು ತನ್ನಂತೆ ಎಂದು ತಿಳಿದು ಈ ವಿಚಾರವನ್ನು ಹಂಚಿಕೊಂಡಿದ್ದಾನೆ. ಹೆಣ್ಣು ಅಲ್ಲದ ಗಂಡು ಅಲ್ಲದ ಸ್ಥಿತಿಯಲ್ಲಿ ನರಳುವ ತಾರನಾಥ ಈ ಸಂಗತಿಯನ್ನು ಅಂತಸ್ಥವಾಗಿಟ್ಟುಕೊಂಡವನು. ಸಾಂದರ್ಭಿಕವಾಗಿ ಇದು ರಾಜೀವ ಸುಮನರ ಎದುರು ಪ್ರಕಟವಾಗುವವರೆಗು ಯಾರಿಗು ತಿಳಿದಿರಲಿಲ್ಲ. ಈ ತರಹದ ಹಲವು ಒಳಸುಳಿಗಳನ್ನು ಕಥನ ಅಂತರಂಗದಲ್ಲಿ ಇರಿಸಿಕೊಂಡಿದೆ. + +ಕಾರ್ಪೊರೇಟ್‌ ಕಂಪೆನಿಯ ಉದ್ಯೋಗದಲ್ಲಿರುವ ಇವರಿಗೆ ಈ ಗೀಳು ಏಕೆ ಅಂಟಿಕೊಂಡಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ಇದು ರಾಜೀವ, ಸುಮನಳ ಮನವು ಸೃಷ್ಟಿಸಿಕೊಂಡ ಹಳವಂಡವೆ, ತನ್ನ ಜೀವನ, ಉದ್ಯೋಗ ಸೃಷ್ಟಿಸಿದ ಒತ್ತಡದಿಂದ ಪಾರಾಗುವ ಹೊರರೂಪವೆ, ಅಥವ ಸಮಾಜದ ಕಟ್ಟುಗಳನ್ನು ಮೀರಲು ಸಾಧ್ಯವಾಗದೆ ಅದರಿಂದ ಹೊರಬರಲು ಕಟ್ಟಿಕೊಂಡ ಉಪಾಯವೆ ಎಂಬ ಪ್ರಶ್ನೆ ಮೂಡುತ್ತದೆ. ಆದರೆ ಕಥನದ ಆಂತರ್ಯವನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ಇದು ಕೆಲಸದ ಒತ್ತಡದಿಂದ ಪಾರಾಗುವ ಹೊರದಾರಿಯಾಗಿಯೆ ಗೋಚರಿಸುತ್ತದೆ. ರೇಣುಕಳಿಗೆ ರಾಜೀವನ ನೆನಪುಗಳಿದ್ದರು ಅದು ಬಾಹ್ಯವಾಗಿ ಪ್ರಕಟವಾಗುವುದಿಲ್ಲ. ಅದೊಂದು ಗೀಳು ಎಂಬಂತೆ ಕಥನ ಅಭಿವ್ಯಕ್ತಿಸುವುದಿಲ್ಲ. ಸುಮನಳ ಮನೆಯ ಮಾಲಿಕ ಗಿಡ, ಮರಗಳೊಂದಿಗೆ ಮಾತನಾಡುವ ಚಿತ್ರಣವಿದೆ. ಮನೆಯಲ್ಲಿ ಮಗ ಸೊಸೆಯಿಲ್ಲದ ಮಾತಿನ ಕೊರತೆಯನ್ನು ಹೀಗೆ ನೀಗಿಸಿಕೊಳ್ಳುತ್ತಾನೆ. ಇದನ್ನು ಗ್ರಹಿಸುವಾಗ ಇದು ನಗರದ ಒತ್ತಡದ ಬದುಕು ಸೃಷ್ಟಿಸಿದ ಸಮಸ್ಯೆಯೆಂಬ ಸೂಚನೆ ದೊರೆಯುತ್ತದೆ. + +ತೆಲುಗು ಮಿಶ್ರಿತ ತತ್ವಪದಗಳನ್ನು ಹಾಡುವ ಹುಚ್ಚನ ಪಾತ್ರ ಚಿತ್ರಣ ಕಥನದಲ್ಲಿದೆ. ಇವನ ಪದಗಳು ಸುಮನಳನ್ನು ಕ್ಷಣಿಕವಾಗಿಯಾದರು ಮಂಪರಿನಿಂದ ಪಾರುಮಾಡಿ ಸಂತೈಸಬಲ್ಲವು. ಯಾವ ಒತ್ತಡಗಳಿಗು ಸಿಲುಕದ, ಲೋಕದ ದೃಷ್ಟಿಯಲ್ಲಿ ಮರುಳನಾದ ಹುಚ್ಚನ ಗೀತೆಗಳಲ್ಲಿ ಆಧ್ಯಾತ್ಮಿಕ ಶಾಂತಿ ಸುಮನಳಿಗೆ ದೊರೆಯುತ್ತದೆ. ಈ ಆದ್ಯಾತ್ಮಿಕ ಆಯಾಮದಿಂದಲೆ ಹುಚ್ಚನು ನಿರ್ಮಿಸಿಕೊಂಡ ಜೋಪಡಿಯು ಕಥನಕ್ಕೆ ಕಲಾತ್ಮಕವಾಗಿ ಕಾಣುತ್ತದೆ. ಇವನು ಕಣ್ಮರೆಯಾದಾಗ, ಸಾಂತ್ವನ ಗುಣವುಳ್ಳ ಅವನ ಪದ ಕೇಳದೆ ಸುಮನ ತಲ್ಲಣಿಸುತ್ತಾಳೆ. ಹುಚ್ಚನೆಡೆಗಿನ ಹಂಬಲವು ರತ್ನಾಕರನ ಹಂಬಲದಷ್ಟೆ ತೀವ್ರವಾಗಿ ಸುಮನಳನ್ನು ಕಾಡುತ್ತದೆ. + +***** + +ಸೇರುವಿಕೆ ಮತ್ತು ಆಗಲಿಕೆ ಎರಡು ಮುಖ್ಯ ಕ್ರಿಯೆಯಾಗಿ ಕಥನದುದ್ದಕ್ಕು ಕ್ರಿಯಾಶೀಲವಾಗಿದೆ. ಇದು ಸುಮನ ರತ್ನಾಕರ, ರಾಜೀವ ಸುಮನ, ಅಂಜನಪ್ಪ ರೇಣುಕ, ರಾಜೀವ ರೇಣುಕ, ಅಲ್ಲಭಕ್ಷ ತನ್ನೂರಿನ ಹಿಂದು ಧರ್ಮೀಯರು ಹೀಗೆ ಹಲವು ಆಯಾಮಗಳಲ್ಲಿ ಶೋಧಿತವಾಗಿದೆ. ಗ್ರಾಮ್ಯ ಬದುಕು, ನಗರ ಜೀವನ ಎರಡೂ ಸಹ ತೊರೆಗಳಾಗಿ ಈ ಕಥನದುದ್ದಕ್ಕು ಒಟ್ಟಿಗೆ ಸಾಗುತ್ತವೆ. ಗ್ರಾಮ್ಯ ಬದುಕನ್ನು ಜಾತೀಯತೆ, ಬಚ್ಚರೆಡ್ಡಿಯ ಜಮೀನ್ದಾರಿಕೆಯ ದರ್ಪ, ಲೈಂಗಿಕ ಶೋಷಣೆ ಹೀಗೆ ಹಲವು ಆಯಾಮಗಳಲ್ಲಿ ಕಥನ ಶೋಧಿಸಿದೆ. ಬಚ್ಚರೆಡ್ಡಿಯ ಲೈಂಗಿಕತೆಗೆ ಅನೇಕ ಅಸಹಾಯಕ ಹೆಣ್ಣುಮಕ್ಕಳು ಬಲಿಯಾಗಿದ್ದಾರೆ. ಇವನ ಕಾಮ ತೃಷೆಗೆ ಬಲಿಯಾದವರಲ್ಲಿ ರೇಣುಕಳು ಒಬ್ಬಳು. ವಿಷಯ ತಿಳಿದ ಅಂಜನಪ್ಪ ರೆಡ್ಡಿಯನ್ನು ಎದುರಿಸಲಾರದೆ ಪತ್ನಿ ರೇಣುಕಳನ್ನು ಹೊಡೆದು ಹೈರಾಣಾಗಿಸುತ್ತಾನೆ. ಕೊನೆಗೊಂದು ದಿನ ಇದನ್ನು ನೋಡಲಾಗದೆ ಪತ್ನಿಯನ್ನು ತೊರೆದು ಹೋಗುತ್ತಾನೆ. ರೇಣುಕ ಕ್ಯಾನ್ಸರ್‌ ವ್ಯಾದಿಗೆ ತುತ್ತಾದ ವಿಷಯ ತಿಳಿದು ಮರಳಿಬಂದು ಅವಳ ಆರೈಕೆಗೆ ನಿಲ್ಲುತ್ತಾನೆ. ಬಚ್ಚರೆಡ್ಡಿಯ ಜಾತಿಪ್ರಜ್ಞೆ ರತ್ನಾಕರ, ಸುಮನಳ ಪ್ರೀತಿಗೆ, ವಿವಾಹಕ್ಕೆ ತಡೆಯೊಡ್ಡುತ್ತದೆ. ಇವೆಲ್ಲವನ್ನು ಗ್ರಾಮ್ಯ ಜೀವನದ ಭಿನ್ನ ರೂಪಗಳಾಗಿ ಕಥನ ಅಭಿವ್ಯಕ್ತಿಸಿದೆ. + +ಗ್ರಾಮೀಣ ಪ್ರದೇಶದಲ್ಲಿ ಜಾತೀಯತೆಯ ಜೊತೆಗೆ ಮತೀಯತೆಯ ಕ್ರೌರ್ಯವು ತಲೆಯೆತ್ತಿದೆ. ಇದು ಅಲ್ಲಭಕ್ಷಿಯನ್ನು ಮಾನವನಾಗಿ ಕಾಣದೆ ತಿರಸ್ಕರಿಸಿದೆ. ಅವನ ಮಾಂಸದ ವ್ಯಾಪಾರಕ್ಕು ಮತೀಯತೆಯ ನಂಜು ತಟ್ಟಿದೆ. ಅಂಜನಪ್ಪ, ರೇಣುಕ, ರತ್ನಾಕರರನ್ನು ಬಿಟ್ಟರೆ ಇಡೀ ಊರು ಅವನನ್ನು ಹೊರಗಿಟ್ಟಿದೆ. ಜಮೀನ್ದಾರಿ ಕುಟುಂಬದ ಬಚ್ಚರೆಡ್ಡಿಯ ಪುತ್ರ ರತ್ನಾಕರ ತಂದೆಯ ಕೌರ್ಯ, ಜಾತೀಯತೆಯ ಹಾದಿ ತೊರೆದು ಮಾನವೀಯತೆಯತ್ತ ಸಾಗಿದ್ದಾನೆ. ಮಾನವೀಯತೆಯ ಪ್ರತಿರೂಪವಾಗಿದ್ದ ಅಲ್ಲಭಕ್ಷನ ಮಗನು ಧರ್ಮದ ಅಮಲೇರಿಸಿಕೊಂಡು ಭಯೋತ್ಪಾದಕನಾಗಿದ್ದಾನೆ. ಇದು ಇಂದಿನ ಗ್ರಾಮ್ಯ ಬದುಕು ಸಾಗುತ್ತಿರುವ ಎರಡು ತುದಿಗಳಾಗಿ ಕಥನ ಕಾಣಿಸಿದೆ. ಮತ್ತೊಂದೆಡೆ ಕಾರ್ಪೊರೇಟ್‌ ಕೇಂದ್ರಿತ ನಗರದ ಕಂಪೆನಿಯು ಪ್ರಮಾಣೀಕತೆ, ನೈತಿಕ ಮೌಲ್ಯಗಳ ಪ್ರತೀಕವಾಗಿದ್ದ ರಾಜೀವನನ್ನು ಉದ್ಯೋಗದಿಂದ ತೆಗೆದುಹಾಕಿದೆ. ತಾರನಾಥನು ತನ್ನ ಪದವಿಗೆ ರಾಜೀನಾಮೆ ನೀಡುವ ತಿರುವಿಗೆ ತಂದು ನಿಲ್ಲಿಸಿದೆ. ಅನೈತಿಕತೆ, ವಂಚನೆ, ಸ್ತ್ರೀ ಲೋಲನಾದ ಅರವಿಂದನಿಗೆ ಕಂಪೆನಿ ಮಣೆಹಾಕಿದೆ. ಈ ಎರಡು ಪಲ್ಲಟಗಳನ್ನು ಕಥನ ಸೂಕ್ಷ್ಮವಾಗಿ ಅಭಿವ್ಯಕ್ತಿಸಿದೆ. + +ಒಂದು ಬಿಂದುವಿನಿಂದ ಆರಂಭವಾದ ಕಥನ ವೃತ್ತದ ರೀತಿ ಅದೇ ಬಿಂದುವಿಗೆ ಬಂದು ತಲುಪಿ ಮುಕ್ತಾಯವಾಗುತ್ತದೆ. ಇದರರ್ಥ ಕಥನ ಏಕಮುಖಿಯಾಗಿ, ಸರಳ ರೇಖಾತ್ಮಕವಾಗಿ ಚಲಿಸುತ್ತದೆಂದಲ್ಲ. ಇದು ಹಲವು ಸಂಕೀರ್ಣ ಆಯಾಮಗಳನ್ನು ಒಳಗೊಳಸಿಕೊಂಡಿದೆ. ರಾಜೀವನು ಬಯಸಿದ ರೇಣುಕ ಸುಮನಳ ತಾಯಿ ಎಂಬ ಸತ್ಯದ ಬಿಂದುವಿಗೆ ತಂದು ನಿಲ್ಲಿಸುತ್ತದೆ. ರತ್ನಾಕರ ಸುಖದ ಬಯಕೆಯ ಮಂಪರು ಸುಮನಳನ್ನು ರಾಜೀವನಿಂದ ದೇಹ ಸುಖವನ್ನು ಪಡೆಯುವಂತೆ ಮಾಡಿದೆ. ಇದರ ಪರಿಣಾಮವಾಗಿ ಅವಳ ಒಡಲಲ್ಲಿ ರಾಜೀವನ ಕುಡಿ ಅರಳಿದೆ. ಇದು ಹೊಸ ಸವಾಲುಗಳಿಗೆ ಎದುರಾಗಬೇಕಾದ ತಿರುವಿಗೆ ತಂದು ನಿಲ್ಲಿಸಿದೆ. ನಗರ ಜೀವನಕ್ಕೆ ಶರಣಾದ ಇವರನ್ನು ಕೊಡದವಾಡಿಗೆ ತಂದು ನಿಲ್ಲಿಸಿ ಮುಖಾಮುಖಿಯಾಗಿಸಿದೆ. ಇಲ್ಲಿಂದ ಮುಂದಕ್ಕೆ ರಾಜೀವ, ಸುಮನರ ಬದುಕು ಹೊಸ ಜಿಗಿತವನ್ನು ಕಾಣಬೇಕೆಂಬ ಅಂತಸ್ಥ ಸೂಚನೆಯೊಂದಿಗೆ ‘ಮಂಪರುʼ ಕಾದಂಬರಿ ಮುಗಿಯುತ್ತದೆ. + + + +ವರ್ತಮಾನದಿಂದ ಗತಕ್ಕೆ ಅಂದರೆ ವಾಸ್ತವದಿಂದ ನೆನಪಿನ ಮಂಪರಿಗೆ ಚಲಿಸುವ ಕಥನ ತಂತ್ರ, ನಿರೂಪಣ ವಿಧಾನ ಕಥನದಲ್ಲಿ ಪರಿಣಾಮಕಾರಿಯಾಗಿ ಮೂಡಿಬಂದಿದೆ. ಗತ ಮತ್ತು ವರ್ತಮಾನದ ನಡುವಲ್ಲಿ ಕಥನ ತೆರೆದುಕೊಳ್ಳುತ್ತದೆ. ಕೋಲಾರ ಸೀಮೆಯ ತೆಲುಗು ಮಿಶ್ರಿತ ಕನ್ನಡ ಭಾಷೆಯ ಬಳಕೆ ಕಥನಕ್ಕೆ ಭಿನ್ನ ಆಯಾಮವನ್ನು ನೀಡಿದೆ. ಹುಚ್ಚನು ಹಾಡುವ ತತ್ವಪದಗಳು, ತೆಲುಗು ಮಿಶ್ರಿತ ನುಡಿಯಲ್ಲಿನ ಕಾವ್ಯತ್ಮಕ ಲಯವು ಗಮನ ಸೆಳೆಯುತ್ತದೆ. ಚಿಮನಹಳ್ಳಿ ರಮೇಶಬಾಬು ಅವರ ʼಮಂಪರುʼ ಕಾದಂಬರಿಯು ತನ್ನ ವಸ್ತು ಮತ್ತು ಪ್ರಯೋಗಶೀಲತೆಯಿಂದ ಕನ್ನಡ ಕಥನ ಲೋಕದಲ್ಲಿ ವಿಭಿನ್ನವಾಗಿ ನಿಲ್ಲುತ್ತದೆ. + +ಸುಧಾಕರ ದೇವಾಡಿಗ ಬಿ ಇವರು ಕುಂದಾಪುರ ಸಮೀಪದ ಕೋಟೇಶ್ವರದವರು. ಪ್ರಸ್ತುತ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಲಲಿತ ಪ್ರಬಂಧಗಳನ್ನು ಕುರಿತ ಅಧ್ಯಯನಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದಿದ್ದಾರೆ.  ‘ಉಳಿದ ಆಕಾಶʼ ಎಂಬುದು ಪ್ರಕಟಿತ ಕೃತಿಯಾಗಿದೆ. \ No newline at end of file diff --git a/Kenda Sampige/article_83.txt b/Kenda Sampige/article_83.txt new file mode 100644 index 0000000000000000000000000000000000000000..77d3155302d18219fb370a9fae728d3312ef9f59 --- /dev/null +++ b/Kenda Sampige/article_83.txt @@ -0,0 +1,57 @@ +ಬಿಳಿ ಬಟ್ಟೆ ಹೊಲಿಯುವ ಸಿಂಪಿಗ ನಾನುಭಾವನೆ ಬಿರುಕಿಗೆ ಸೂಜಿ ಹೊಲಿಯಲಾಯಿತೆ + +ಘಾಸಿ ಮಾಡದೆ ಧ್ಯಾನಕೆ ಕರೆಯುವ ಮಿತ್ರಜ್ಞಾನ ಸಖಿಯಂತೆ ಮಾಡುವುದು ಹೊತ್ತಿಗೆ– ಶಿವಕುಮಾರ ಕರನಂದಿ + +ಗಜ಼ಲ್ ಅರಬ್ಬೀ ಶಬ್ದ. ಇದು ಆ ಭಾಷೆಯಲ್ಲಿ ಕಾವ್ಯ ಪ್ರಕಾರವಾಗಿ ಬೆಳೆಯಲಿಲ್ಲ; ಈ ಶಬ್ಧ ಇರಾನ್ ದೇಶದಲ್ಲಿ ಪಸರಿಸಿ ಪಾರ್ಸಿ ಭಾಷೆಯಲ್ಲಿ ಒಂದು ಕಾವ್ಯ ಪ್ರಕಾರವಾಗಿ ಬೆಳೆದು ಬೆಳಗಿತು. ಪಾರ್ಸಿ ಭಾಷೆಯಿಂದ ಉರ್ದು ಸಾಹಿತ್ಯಕ್ಕೆ ಬಂದು ತನ್ನ ಹರವನ್ನು ಹೆಚ್ಚಿಸಿಕೊಂಡು ಉರ್ದು ಸಾಹಿತ್ಯದ ರಾಣಿಯಾಗಿ ಸಹೃದಯನ ಎದೆಯ ಸಿಂಹಾಸವನ್ನು ಏರಿತು. ಉರ್ದುವಿನಲ್ಲಿ 25ಕ್ಕೂ ಅಧಿಕ ಕಾವ್ಯ ಪ್ರಕಾರಗಳುಂಟು; ಪರ್ದ, ಕತಾ, ರುಬಾಯಿ, ಖಸೀದಾ, ಮಸನವಿ, ಗಜ಼ಲ್, ಮರ್ಸಿಯಾ, ಶಹರ್, ಅಶೋಬ, ನಾತೆ, ಸೆಹರ, ರೀಖ್ತಿ, ಸಾಕಿನಾಮ ಈ ಎಲ್ಲ ಪ್ರಕಾರಗಳಿದ್ದರು ಗಜ಼ಲ್ ಉರ್ದು ಸಾಹಿತ್ಯದ ಉಸಿರಾಗಿ ಕಂಡಿತು. + +(ಶಿವಕುಮಾರ ಮೋ. ಕರನಂದಿ) + +ಗಜ಼ಲ್ ಎಂದರೆ ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ ಮೋಹ ಅನುರಾಗ ವ್ಯಕ್ತಪಡಿಸುವುದು. “ಹೃದಯದ ವೃತ್ತಾಂತ ಮತ್ತು ಪ್ರೇಮ ಮೋಹಗಳ ವಿದ್ಯಮಾನದ ಹೇಳಿಕೆ”. ಒಂದು ಕೋಣೆಗೆ ನಾಲ್ಕು ಗೋಡೆಗಳಿರುವಂತೆ ಮತ್ಲಾ, ಕಾಫಿಯಾ, ರದೀಪ, ಮಕ್ತಾಗಳೆಂಬ 4 ಅಂಗಗಳನ್ನು ಸಾಮಾನ್ಯವಾಗಿ ಕಾಣುತ್ತೇವೆ. ಇವೆಲ್ಲವುಗಳ ನಡುವೆ ಪ್ರತಿಮೆ. ಉಪಮೆ, ರೂಪಕಗಳ ಮೂಲಕ ಬೆಳಗುತ್ತದೆ. + +ಪ್ರೇಮ ಮೋಹ ವ್ಯಾಮೋಹಗಳ ನಡುವೆ ಇದ್ದ ಗಜ಼ಲ್ ಕಾಲ ಹೊರಳಿದಂತೆ ಜೀವನದ ಎಲ್ಲ ಆಯಾಮಗಳನ್ನು ಹೊಂದಿ ಬದುಕಿನ ಸಮಗ್ರ ಕಾವ್ಯವಾಯಿತು. ಗಜ಼ಲ್ ಬರಿ ಶಬ್ಧಾಲಂಕಾರಗಳ ಸರಪಳಿಯಲ್ಲ, ಅಲ್ಲೊಂದು ಕಾವ್ಯದ ಗುಣವಿರಬೇಕು. ಪ್ರತಿಮೆ, ರೂಪಕಗಳ ಮೂಲಕ ಮಾತನಾಡಬೇಕು. ಬೇಟೆಗೆ ಸಿಲುಕಿದ ಜಿಂಕೆಯ ಆಕ್ರಂದನದಂತೆ ಕಾಣುವ ಗಜ಼ಲ್ ಹೃದಯದ ಬಡಿತವಾಗಬೇಕು. ಓದಿದ ಕೂಡಲೇ ಹೃದಯವನ್ನು ಚಕಿತಗೊಳಿಸುವ ಗುಣ, ಓದುಗನೊಬ್ಬನಿಗೆ ನಿಲುಕದ ಅನುಭವಗಳನ್ನು ಒಂದುಗೂಡಿಸುವ ಶಕ್ತಿ ಪಡೆದಿರಬೇಕು. ವ್ಯಕ್ತಿಯೊಬ್ಬನ ಯೋಚನಾ ಲಹರಿಯನ್ನೇ ಬದಲಿಸುವ ಗುಣವನ್ನು ಅದು ಒಳಗೊಂಡಿರಬೇಕು. ಗಜ಼ಲ್ ಕೇವಲ ಪ್ರೀತಿ, ಪ್ರಣಯ, ಮೈಖಾನಾ, ವಸಂತ, ಬುಲ್ಬುಲ್, ಆಷಿಕ್, ಮಾಷೂಕ, ಇಷ್ಕ್‌ಗಳಿಗೆ ಸೀಮಿತವಾಗಿ ಇಂದು ಉಳಿದಿಲ್ಲ. ಜೀವನಕ್ಕೆ ಸಂಬಂಧಪಟ್ಟ ಸಮಾಜಕ್ಕೆ ಸಂಬಂಧಪಟ್ಟ ವಿಷಯಗಳನ್ನು ತನ್ನ ಗರ್ಭದಲ್ಲಿ ಹುದುಗಿಸಿಕೊಂಡು ಸಂದರ್ಭಕ್ಕೆ ತಕ್ಕಂತೆ ಉಲಿಯುತ್ತಾ ಅದು ಸಮಗ್ರ ಜೀವನದ ಕಾವ್ಯವಾಗಿ ಕಂಗೊಳ್ಳಿಸುತ್ತಿದೆ. + +“ಗಜ಼ಲ್‌ನ ಮಹತ್ವದ ವಿಷಯ ಇಷ್ಕ್.. ಅಂದರೆ ಮೋಹ, ಅನುರಾಗ, ಪ್ರೇಮದ (ಮೊಹಬ್ಬತ್) ಬದಲಾಗಿ ಇಷ್ಕ್‌ ಶಬ್ದವನ್ನು ಉದ್ದೇಶಪೂರ್ವಕವಾಗಿ ಬಳಸಲಾಗಿದೆ. ಗಜಲಿನ ವಿಶಿಷ್ಟ ಗುಣದ ಪ್ರತೀಕ ಈ ಶಬ್ದ. ಪ್ರೇಮ ಒಂದು ಸೀಮೆವುಳ್ಳದ್ದು. ಒಬ್ಬ ಖಾಸಾ ವ್ಯಕ್ತಿ ಇನ್ನೊಬ್ಬ ಖಾಸಾ ವ್ಯಕ್ತಿಯನ್ನು ಪ್ರೀತಿಸಿದಂತೆ. ಆದರೆ ಇಷ್ಕ್ ಬಹು ವಿಶಾಲವಾದದ್ದು ಇದರಲ್ಲಿ ಪ್ರೇಯಸಿ (ಮಾಸೂಕ್) ಒಬ್ಬ ವ್ಯಕ್ತಿಯಾಗದೆ ಸಾರ್ವತ್ರಿಕತೆಯಾಗಿ ಮೈದಳೆಯುತ್ತಾಳೆ. ಪ್ರೇಯಸಿಯನ್ನು ಗಜ಼ಲ್ ಒಂದು ರಕ್ತಮಾಂಸದ ವ್ಯಕ್ತಿಯಾಗಿ ವರ್ಣಿಸುವುದಿಲ್ಲ. ಪ್ರೇಯಸಿ ಶಬ್ದವನ್ನು ಒಂದು “ಕುರುಹ”ನ್ನಾಗಿ ಗಜ಼ಲ್ ಉಪಯೋಗಿಸುತ್ತದೆ. + +ಇಷ್ಕ್ ಎರಡು ತೆರನಾಗಿದೆ ಒಂದು ‘ಇಷ್ಕ್ ಮಜಾಜಿ’ (ಲೌಕಿಕ ಪ್ರೇಮ) ಇನ್ನೊಂದು “ಇಷ್ಕ್ ಹಕೀಕಿ” (ಆಧ್ಯಾತ್ಮಿಕ ಪ್ರೇಮ) ಈ ಎರಡು ಬಗೆಯ ಪ್ರೇಮ ಉರ್ದು ಗಜ಼ಲ್ ಕಾವ್ಯದಲ್ಲಿ ಅತ್ಯಂತ ಮಾರ್ಮಿಕವಾಗಿ ಅರ್ಥಪೂರ್ಣವಾಗಿ ವರ್ಣಿತವಾಗಿದೆ. ಸೂಫಿ ಕವಿಗಳು “ಇಷ್ಕ್ ಹಕೀಕಿ”ಯನ್ನು ಗಜ಼ಲಿನಲ್ಲಿ ವ್ಯಾಪಕವಾಗಿ ಬಳಸಿದ್ದಾರೆ. ಆತ್ಯಂತಿಕ ಪ್ರೇಮವನ್ನೆ ಅವರು ಎಲ್ಲ ಕಡೆ ಪ್ರಾಪಂಚಿಕ ಪ್ರೇಮದ ಜೊತೆಗೆ ಹೇಳುತ್ತಾ ಓದುಗರನ್ನು ಶಾಶ್ವತ ಪ್ರೇಮದತ್ತ ಕರೆದೊಯ್ಯುವ ಅವರ ಕಾವ್ಯದ ಕಸುಬತನ ಮೆಚ್ಚುವಂತಹದ್ದು. ನಮ್ಮಲ್ಲಿ ಸತಿಪತಿ ಭಾವದಲ್ಲಿ, ಮಧುರ ಭಕ್ತಿಯಲ್ಲಿ ದೇವರೇ ಗಂಡ, ಭಕ್ತನೇ ಹೆಂಡತಿ ಆದರೆ ಸೂಫಿ ತತ್ವದಲ್ಲಿ ದೇವರೇ ಪ್ರೇಯಸಿ ಮತ್ತು ಭಕ್ತನೇ ಪ್ರಿಯ, ಪ್ರೇಯಸಿಯನ್ನು ವರ್ಣಿಸುವಾಗ ಅದರ ಹಿಂದಿರುವ ದೈವಿಕ ಕಲ್ಪನೆಯನ್ನು ಕವಿ ಮರೆಯುವುದಿಲ್ಲ. ನಮ್ಮ ನಿತ್ಯ ಜೀವನದ ಪ್ರೇಮವನ್ನೇ ಹೇಳುತ್ತಾ ನಿತ್ಯಜೀವನದ ವಿಚಾರ ಕ್ರಿಯೆಗಳನ್ನೇ ವರ್ಣಿಸುತ್ತ ಕವಿ ನಮ್ಮನ್ನು ದೈವತ್ವದ ಕಡೆಗೆ ಸೆಳೆದೊಯ್ಯುತ್ತಾನೆ. ಪ್ರಿಯೆಯನ್ನು ಗಜ಼ಲ್‌ನಲ್ಲಿ ಪುಲ್ಲಿಂಗದಂತೆ ಬಳಸುತ್ತಾರೆ. ಆಷಿಕ್ ಎಂದರೆ ಪ್ರಿಯಕರ; ಮಾಷೂಕ್ ಎಂದರೂ ಪ್ರಿಯಕರನೆಂದೇ ಅರ್ಥ. + +ಬಾಗಲಕೋಟ ಜಿಲ್ಲೆಯ ಈಗಿನ ಗುಳೇದಗುಡ್ಡ ತಾಲೂಕಿನ ರಂಗಮಂದಿರದಲ್ಲಿ ನೂರಾರು ನಾಟಕಗಳನ್ನು ಕಂಡು ಬೆಳೆದ ಪ್ರತಿಭೆ, ಮೌನ ಮಾತಾದಾಗ ಕವನ ಸಂಕಲನದ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಕಾಲಿಟ್ಟು, ಇಂದು ‘ನೆರಳಿಗಂಟಿದ ನೆನಪು’ ಎಂಬ ಚೊಚ್ಚಲ ಗಜ಼ಲ್ ಸಂಕಲನದ ಮೂಲಕ ಗಜ಼ಲ್ ಲೋಕಕ್ಕೆ ಅಡಿ ಇಟ್ಟು ಹೊರಟಿರುವುದು ಒಂದು ಸಂತೋಷದ ವಿಚಾರವೆ ಆಗಿದೆ. ನೆರಳಿಗಂಟಿದ ನೆನಪು ಗುಳೇದಗುಡ್ಡದ ಕರನಂದಿ ಪ್ರಕಾಶನ ಹೊರತಂದಿದ್ದು ಖ್ಯಾತ ಚಿತ್ರಕಲಾವಿಧರಾದ ಟಿ ಎಫ್ ಹಾದಿಮನಿ ಅವರ ಮುಖಮುಟವು ಗಜ಼ಲ್ ಸಂಕಲನಕ್ಕೆ ಹೊಸಕಳೆಯನ್ನು ಉಂಟು ಮಾಡಿದೆ, ಅಲ್ಲದೆ ನಾಡಿದ ಮನಸುಗಳನ್ನು ಕಟ್ಟಿದ ಹಿರಿಯ ಸಾಹಿತಿಗಳಾದ ಸತೀಶ ಕುಲಕರ್ಣಿ ಅವರ ಮುನ್ನುಡಿ, ಹಿರಿಯ ಕಾದಂಬರಿಕಾರರಾದ ಡಾ. ಬಾಳಾಸಾಹೇಬ ಲೋಕಾಪುರ ಅವರ ಬೆನ್ನುಡಿ, ಬಳ್ಳಾರಿಯ ಸಾಹಿತಿಗಳು ನಾಡಿನ ಚಿಂತಕರಾದ ಅಬ್ದುಲ್ ಹೈ ತೋರಣಗಲ್ಲು, ಹಿರಿಯ ಸಾಹಿತಿಗಳಾದ ವೈ ಎಮ್ ಯಾಕೊಳ್ಳಿ, ಹಿರಿಯ ಗಜ಼ಲ್ ಕಾರರಾದ ಯು ಸಿರಾಜ್‌ ಅಹ್ಮದ್‌, ನಾಡಿನ ಶ್ರೇಷ್ಠ ಗಜ಼ಲ್ ಕಾರರಾದ ಪ್ರಭಾವತಿ ದೇಸಾಯಿ ಹಾಗೂ ಲಕ್ಷ್ಮಣ ಬಾದಾಮಿ ಅವರ ಬೆನ್ನು ತಟ್ಟುವ ಹಾರೈಕೆಗಳ ನುಡಿಗಳು ಇಡೀ ಗಜ಼ಲ್ ಸಂಕಲನ ಮಿಸ್ರಾಗಳನ್ನು ಓದುಗನು ಧುತ್ತನೆ ಓದುವಂತೆ ಮಾಡುತ್ತಿವೆ. + +ಇಲ್ಲಿ ಒಟ್ಟು 51 ಗಜ಼ಲ್‌ಗಳಿವೆ. ಕವಿಯ ಮಾತಿನಲ್ಲೆ ಹೇಳುವುದಾದರೆ ನನ್ನೊಳಗೆ ನಾ ಕೇಳಿಸಿಕೊಂಡ ಆಪ್ತಧ್ವನಿ ನೆನಪ ಗವಿಯೊಳಗೆ ದಾಟಿಬಂದ ಶಾಂತ ತಂಗಾಳಿ ಎನ್ನುತ್ತಲೆ ಹಸಿಪ್ರೇಮ ಹುಸಿಪ್ರೇಮದ ನಡುವೆ ತೂರಿಬರುವ ವಿರಹ, ಅಪ್ಪನ ಅವ್ವನ ನಡುವೆ ಬದುಕನ್ನು ಹರವಿಕೊಂಡು ತುಡಿಯುವ ತುಡಿತ, ಸಂಬಂಧಗಳನ್ನು ಬೆಸೆಯುವಲ್ಲಿ ತೋರಿಸುವ ಅಂತಕರಣ, ದುಡಿಯುವ ವರ್ಗದವರ ಬೆವರ ಹನಿಗಳ ಕಾಳಜಿ ಇವೆಲ್ಲ ಎದೆಯ ತುಡಿತ ಮಿಡಿತಗಳ ಸಮಸ್ಟಿರೂಪವೇ ನೆರಳಿಗಂಟಿದ ನೆನಪು ಗಜ಼ಲ್ ಸಂಕಲನ. + + + +ಈ ಗಜ಼ಲ್ ಸಂಕಲನ ಮೊದಲ ಸಂಕಲನ ಎಂದು ಅನ್ನಿಸುವುದೇ ಇಲ್ಲ. ಕಾರಣ ಕವಿಗೆ ಪ್ರತಿಮೆಗಳನ್ನು ದುಡಿಸಿಕೊಂಡ ಪರಿಗೆ, ಸಮಸಾಲುಗಳನ್ನು ಕಟ್ಟುವ ಭರದಲ್ಲಿ ಭಾವಕ್ಕೆ ದಕ್ಕೆಯಾಗದಂತೆ ಎಚ್ಚರ ವಹಿಸಿರುವುದು ಕವಿಯ ಓದು ಅನುಭವ ಜಾಣ್ಮೆಗೆ ಹಿಡಿದ ಕನ್ನಡಿಯಾಗಿದೆ. ಮೊದಲ ಗಜ಼ಲ್‌ನಲ್ಲೆ ವಿಷವಿಕ್ಕುವರಿಗೆ, ಕುಹಕದ ನಗೆ ಚೆಲ್ಲುವವರಿಗೆ, ಟೀಕೆಗಳನ್ನು ಮಾಡುವವರಿಗೆ ಶಿವನಾಗಿ ಸುಮ್ಮನಿದ್ದು ಬಿಡುವೆ ಎನ್ನುವ ಮಾತು ಆತ್ಮಧ್ಯಾನದ ಸಂಕೇತವಾಗಿ ಸಿಗುತ್ತದೆ. ಇಂತಹ ಒಳನೋಟದಿಂದಲೇ ಕವಿ ಈ ಕೆಳಗಿನ ಜೋಗಿಯ ಮಾತನ್ನು ಹೇಳಿಬಿಡುವುದು; + +ಕೊರಗುವುದು ಬಿಟ್ಟು ಬಿಡಿ ಬದುಕು ದೊಡ್ಡದಿದೆಕೀಳರಿಮೆಯನ್ನು ಬಿಟ್ಟುಬಿಡಿ ಬದುಕು ದೊಡ್ಡದಿದೆ + +ಇಲ್ಲಿ ಕವಿಗೆ ಬದುಕು ದೊಡ್ಡದಿದೆ ಅದರ ನಡುವೆ ಶೋಷಣೆಗೆ ಒಳಗಾದವರ ಬಗ್ಗೆ ಮರಗುವ ಕೊರಗುವ ಹೃದಯ ಇದೆ. ಇದನ್ನು ಅವನು ಅನುಭವಿಸಿದ್ದಾನೆ ಇದಕ್ಕೆ ಸಾಕ್ಷಿ…. + +ಕಿತ್ತು ಹೋದ ಚಪ್ಪಲಿ ಉಂಗುಟಗಳೆ ಹೇಳುತ್ತಿವೆ ನನ್ನ ಕಥೆಯಾಕೆಂಡ ಸುಡುವ ಬಿಸಲಿನ ಪಾದಗಳೆ ಹೇಳುತ್ತಿವೆ ನನ್ನ ಕಥೆಯಾ + +ಕವಿಗೆ ತನ್ನ ವೃತ್ತಿಯಲ್ಲಿ ಕಂಡುಂಡ ನೋವುಗಳನ್ನು ತನ್ನೊಳಗೆ ಹಾಡಿಕೊಳ್ಳುತ್ತಾನೆ. ಜಗವೆಲ್ಲ ನಗುತಿರಲಿ ಜಗದ ಅಳುವು ನನಗಿರಲಿ ಎಂದು ಹೇಳುವುದು ಉಂಟು… + +ಹಗಲಿರುಳು ಜೀವಗಳಿಗೆ ಜೀವದುಸಿರು ನೀಡುತಿಹರು ಜೀವ ತೊರೆದುಬೆನ್ನಿಗೆ ಬಿದ್ದವರ ಬಿಟ್ಟು ರೋಗಿಗೆ ಹೊಸಕಲ್ಪ ನೀಡಬೇಕಿದೆ ನಾನೇನು ಮಾಡಲಿ + +ಎಂಬ ಮಾತು ಕರೋನಾ ಸಮಯದಲ್ಲಿ ಜಗತ್ತನ್ನೆ ತಲ್ಲಣಗೊಳಿಸಿದ ಮನುಷ್ಯನ ಬದುಕನ್ನೆ ಎಚ್ಚರಿಸಿದ ಪರಿಸ್ಥಿತಿಯ ಜೊತೆಗೆ ಹೋರಾಡುತ್ತಲೆ ಈ ಮನಮಿಡಿಯುವ ಮಾತನ್ನಾಡುತ್ತಾನೆ. ಕವಿಗೆ ಬದುಕು ಒಂದೊಂದು ಬಾರಿ ಶೂನ್ಯವಾಗಿ ಕಾಣುವುದು ಉಂಟು. ಅದಕ್ಕಾಗಿಯೆ ‘ಯಾವ ಊರಿಗೆ ಪಯಣ ಮಾಡಬೇಕಿದೆ’ ಎಂದು ಹೇಳುತ್ತಾನೆ. ಇಷ್ಟು ಚಿಂತನೆ ಮಾಡುತ್ತಲೆ ಜೀವನಕೆ ನೆಮ್ಮದಿಯ ತರುವುದು ಹೊತ್ತಿಗೆ ಸ್ಮರಣೆ ಮಾಡುತ್ತಾನೆ. ಅಂದರೆ ಕವಿಯ ಅನುಭವದ ಜೊತೆಗೆ ಓದುವ ಗೀಳು ಇಂದು ಇಲ್ಲಿಗೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದು. ಕವಿಗೆ ಆಧುನಿಕ ಧಾವಂತದ ಬಗ್ಗೆ ಆತಂಕವಿದೆ. ಆದರೆ ಬೆಳಗಲಿ ಭಾರತ ಎನ್ನುವಲ್ಲಿ ಈ ನೆಲದ ಬಗ್ಗೆ ಅಭಿಮಾನವೂ ಇದೆ, ಇರಲೇಬೇಕು. ಬೆವರ ಸಂಸ್ಕೃತಿಗೆ ಬೆಲೆ ಸಿಗಬೇಕೆಂಬ ಮಾತಿನಲ್ಲಿ ಕವಿಗೆ ದುಡಿಯುವ ವರ್ಗದ ಜೀವನದ ಬಗ್ಗೆ ಕಾಳಜಿ ಮರುಕ ಇದೆ. ಇದಕ್ಕಾಗಿ ಕವಿ ಹೇಳುವುದು ಇಷ್ಟೇ… + +ಹಣತೆ ಹಚ್ಚುತ್ತೇನೆ ಬಯಲಲಿ ನರಳುವ ಕತ್ತಲೆ ತೊಲಗಿಸಲುದೀಪ ಬೆಳಗಿಸುತ್ತೇನೆ ಮನೆಗಳಲಿ ತೂಗುವ ಭೂತ ಓಡಿಸಲು + +ಇದು ಒಂದು ರೀತಿಯ ಮೊಗ್ಗಲಾದರೆ, ಉಳಿದ ಮೊಗ್ಗಲು ಪ್ರೀತಿ ಪ್ರೇಮ ವಿರಹ ಹಸಿಕನಸುಗಳ ಕಡೆಗೆ ಹೊರಳಿಬಿಡುತ್ತದೆ. ಇದು ಓದುಗನಿಗೆ ಆಪ್ತವಾಗುತ್ತಾ ಸಾಗುತ್ತದೆ. ಕವಿ ಪ್ರೇಮ ವಿರಹದ ದಾರಕ್ಕೆ ಕನಸುಗಳೆಂಬ ಮೊಗ್ಗುಗಳನ್ನು ಜೋಡಿಸುತ್ತಾ ಸಾಗುತ್ತಾನೆ. ಕೊನೆಯದಾಗಿ ಧುತ್ತನೆ ಓದಿ ಮುಗಿಸಿದಾಗ ಸಿಗುವ ಭಾವ ಒಂದೆ ನೆರಳಿಗಂಟಿದ ನೆನಪು ಇಷ್ಕ್ ಮಜಾಜಿ’ (ಲೌಕಿಕ ಪ್ರೇಮ) ಇನ್ನೊಂದು “ಇಷ್ಕ್ ಹಕೀಕಿ” (ಆಧ್ಯಾತ್ಮಿಕ ಪ್ರೇಮ) ಈ ಎರಡು ಬಗೆಯ ಪ್ರೇಮವು ಇಲ್ಲಿ ಇದೆ. ಅದನ್ನು ತಿಳಿಯಬೇಕಾದರೆ ಈ ಕೆಳಗಿನ ಶೇರ್‌ಗಳನ್ನು ಗಮನಿಸಬೇಕು. + +ಕ್ಷಣದಂತೆ ಒಲವಿನ ಮಾತು ತುಟಿಯಲ್ಲಿ ಸೆಳೆದವಳುಕಾಲುಗಳು ನೆಲಬಿಟ್ಟು ಕೀಳದಂತೆ ಕಾಡಿದವಳು + +ಇದು ವೈಯಕ್ತಿಕ ನೆಲೆಯಾಚೆ ನಿಲ್ಲುವಂತಿದೆ. ಈಕೆ ಮನದನ್ನೆ ಅಲ್ಲಾ, ಕಾವ್ಯಕನ್ನಿಕೆ ಕಾಣಸಿಗುತ್ತಾಳೆ. ಇದು ಕಾವ್ಯಕ್ಕೆ ಇರಬೇಕಾದ ಗುಣ. ಭಾವದ ಸಾಲು ವೈಯಕ್ತಿಕ ನೆಲೆಯ ಪರದೆಯನ್ನು ಹರಿದುಕೊಂಡು ಸಾರ್ವತ್ರಿಕ ನೆಲೆಯಲ್ಲಿ ಹಾರಬೇಕು. ಇಲ್ಲಿ ಆಗಿರುವುದು ಇದೇ. ಕವಿಯ ಮಿಸ್ರಾಗಳು ಸಾರ್ವತ್ರಿಕರಣದ ಗುಣವನ್ನು ಪಡೆದಿವೆ. ಆ ಕಾರಣಕ್ಕೆ ಇವು ಮನಸ್ಸಿನಾಳದಲ್ಲಿ ಸದಾ ಅಚ್ಚಳಿಯದಂತೆ ಉಳಿಯುತ್ತಿವೆ. ಈ ದೃಷ್ಟಿಯಿಂದ ಗಜ಼ಲ್ ಸಂಕಲನ ಗೆಲುವಿನ ದಡ ಸೇರುವುದತ್ತ ದಾಪುಗಾಲಿಡುತ್ತಿದೆ ಎಂದು ಹೇಳಲೇಬೇಕು. + +ಪ್ರೀತಿಯ ತುಂಬಿದ ಕೊಳದಂತೆ ಚೆಲುವೆಮೊಗೆದಷ್ಟು ಹುಟ್ಟುವ ಒರತೆಯಂತೆ ಚೆಲುವೆ(ಗಜ಼ಲ್ 5) + +*** + +ನಾನು ಕೊಡುವ ಪ್ರೀತಿ ನಿನಗೆ ಸಾಲದಾಯಿತೆಹೃದಯಕ್ಕೆ ಒಲವ ಸುರಿಸಿದ್ದು ಬೇಡವಾಯಿತೆ (ಗಜ಼ಲ್ 11) + +*** + +ನಿನಗಾಗಿಯೇ ಮುಸ್ಸಂಜೆಯ ತುಸು ಬೆಳಕಿನಲ್ಲಿ ಕಾದಿರುವೆಮಂದವಾಗಿ ಉರಿಯುವ ಕಂದೀಲಿನ ಬೆಳಕಿನಲ್ಲಿ ಕುಳಿತಿರುವೆ(ಗಜ಼ಲ್ 16) + + + +ಇಂತಹ ಬಹುತೇಕ ಶೇರ್‌ಗಳು ಆಪ್ತವಾಗಿ ಮಾತನಾಡುತ್ತವೆ, ಮಾತನಾಡಿಸಿಕೊಳ್ಳುತ್ತವೆ. ಇಲ್ಲಿ ಸಮಸಾಲುಗಳು ಓದುಗನನ್ನು ಹಿಡಿದಿಡುತ್ತಿವೆ. ಕೆನೆಪದರು ಕಂಡರೆ ಅದು ಲೌಖಿಕ ಪ್ರೇಮವಾಗಿ ಕಾಣುತ್ತದೆ. ಆಳದ ಬೇರಿಗೆ ಹೋದರೆ ಅದು ಲೌಖಿಕ ಪ್ರೇಮದ ಕಡೆ ಕರೆದೊಯ್ಯುತ್ತದೆ. ಇಂತಹ ಆಪ್ತ ಗಜ಼ಲ್ ಸಂಕಲನ ಹೊರತಂದ ಕವಿ ಮಿತ್ರ ಶಿವಕುಮಾರ ಕರನಂದಿ ಅವರಿಂದ ಇನ್ನಷ್ಟು ಕೃತಿಗಳು ಹೊರಬರಲಿ. ಭಾವಯಾನ ಮುಂದುವರೆಯಲಿ ಎಂದು ಹಾರೈಸುವೆ. \ No newline at end of file diff --git a/Kenda Sampige/article_84.txt b/Kenda Sampige/article_84.txt new file mode 100644 index 0000000000000000000000000000000000000000..b49d9a863bcde63291387c998415b6cc219a554a --- /dev/null +++ b/Kenda Sampige/article_84.txt @@ -0,0 +1,23 @@ +ಕರ್ನಾಟಕದ ಪ್ರಾಚೀನ ದೇವರುಗಳಲ್ಲಿ ಭರಮದೇವರೂ ಒಬ್ಬನಾಗಿದ್ದು ಈತ ಹಾಲುಮತ ಸಮುದಾಯದ ಪ್ರಸಿದ್ಧ ದೈವಗಳಲ್ಲಿ ಒಬ್ಬನಾದ ಬೀರದೇವರ ತಂದೆ. ಈವರೆಗೂ ಭರಮದೇವರ ಕುರಿತು ಪೂರ್ಣ ಚೌಕಟ್ಟು ದೊರೆಯದ ಕಾರಣ ಉಪೇಕ್ಷೆಗೊಳಪಟ್ಟ ಭರಮದೇವರ ಕುರಿತು ಚಾರಿತ್ರಿಕ, ಪೌರಾಣಿಕ, ಸಾಂಸ್ಕೃತಿಕ ವಿಶ್ಲೇಷಣೆಗೊಳಪಡಿಸಿ ಸಂಶೋಧನೆ ಕೈಗೊಂಡವರು ಶ್ರೀರಾಮ ಇಟ್ಟಣ್ಣವರ ಅವರು. ಜಾನಪದೀಯ ಬುನಾದಿಯಿರುವ ಭರಮದೇವರನ್ನು ಕುರಿತು ಲಿಖಿತ, ಮೌಖಿಕ ಆಕರಗಳು, ಕ್ಷೇತ್ರ ಕಾರ್ಯಗಳ ಮೂಲಕ ವಿಸ್ತೃತ ಮತ್ತು ಆಳ ಅಧ್ಯಯನಕ್ಕೆ ಸಹಕಾರಿಯಾಗಬಲ್ಲ ಈ ಗ್ರಂಥವನ್ನು ರಚಿಸಿದ್ದಾರೆ. ಮೂಲತಃ ಕುರುಬರು ಬ್ರಹ್ಮನ ಆರಾಧಕರೆಂಬ ಅಂಶವನ್ನು ಮುಂದಿಟ್ಟು ತತ್ವಗಳ ಜಿಜ್ಞಾಸೆಯಲ್ಲಿ ಪುರಾಣಗಳಲ್ಲಿ ಅಗಾಧವಾಗಿ ಚಾಚಿಕೊಂಡಿದ್ದ ಬ್ರಹ್ಮನನ್ನು ಕುರುಬರು ಭರಮನೆಂದು ಪೂಜಿಸುತ್ತಾರೆಂಬ ನಿಲುವು ಇಲ್ಲಿ ವ್ಯಕ್ತವಾಗಿದೆ. + +(ಶ್ರೀರಾಮ ಇಟ್ಟಣ್ಣವರ) + +“ಹಾಲುಮತವೋ ಹರವು ಸಾಗರ” ಎನ್ನುವಂತೆ ಹಾಲುಮತವು ಸುಮಾರು ನೂರು ವರ್ಷಗಳ ಇತಿಹಾಸ ಹೊಂದಿದೆ. ಬೆಟ್ಟಗುಡ್ಡ ಕಾಡು-ಮೇಡುಗಳಲ್ಲಿ ಕುರಿಕಾಯ್ದುಕೊಂಡಿದ್ದ ಕುರುಬ ಜನಾಂಗ ವಿಸ್ತಾರವಾದದ್ದು. ಸಾಂಸ್ಕೃತಿಕವಾಗಿ ವಿವಿಧ ಅವಸ್ಥೆಗಳನ್ನು ದಾಟಿ ಬಂದಿರುವ ಈ ಜನಾಂಗದ ಅಧ್ಯಯನಗಳಲ್ಲಿ ಉಳಿದುಹೋದ ಒಂದು ದೈವ ಭರಮದೇವ. ಉತ್ತರ ಕರ್ನಾಟಕದಲ್ಲಿ ಅವನ ಗುಡಿಗಳು ಹೇರಳವಾಗಿವೆ. ಪೌರಾಣಿಕ, ಚಾರಿತ್ರಿಕ ಮತ್ತು ಜನಪದೀಯ ಹರಹುಗಳಲ್ಲಿ ಜನಸಾಮಾನ್ಯರೊಡನೆ ಬೆರೆತಿರುವ ಭರಮಪ್ಪನ ಸಾಮಾಜಿಕ ಸಾಮರಸ್ಯವನ್ನು ಎತ್ತಿ ಹಿಡಿಯುವುದು ಈ ಪುಸ್ತಕದ ಮುಖ್ಯ ಉದ್ದೇಶವಾಗಿದೆ. ಜಾನಪದ ಸೊಗಡಿನಿಂದ ಕೂಡಿರುವ ಭರಮದೇವನನ್ನು ಮೂರು ಹಂತಗಳಲ್ಲಿ ವಿಸ್ತರಿಸಲಾಗಿದೆ. ಮೊದಲನೆಯದು ಈತ ಸೃಷ್ಟಿಕರ್ತನಾದ ಬ್ರಹ್ಮನೇ ಎಂಬುದು. ಎರಡನೆಯದು ಇವನು ಕುರುಬ ಮತದ ದೇವರೆನ್ನುವುದು. ಮೂರನೆಯದು ಭರಮದೇವ ಎಲ್ಲ ಸಮುದಾಯಗಳ ದೇವರೆನ್ನುವುದು. ಈ ಅಧ್ಯಯನವು ಜನಪದೀಯವಾಗಿ ನಿರೂಪಿತವಾಗಿದ್ದು ಭರಮದೇವನ ಭಕ್ತರ ಸ್ವೀಕಾರದ ಅಂತರ್ಶಿಸ್ತೀಯ ಅಧ್ಯಯನವನ್ನು ಒಳಗೊಂಡಿದೆ. + +ಮೌಖಿಕ ಪರಂಪರೆಯ ವಾಹಕಗಳಾಗಿರುವ ಡೊಳ್ಳಿನ ಹಾಡುಗಳು ಸಾಕಷ್ಟು ಮಾಹಿತಿಯನ್ನು ಕಲೆಹಾಕಿವೆ. ಅಲ್ಲದೆ ಎಲ್ಲ ಕಾಲಮಾನದ ಲೇಖಕರ ಬರಹಗಳಿಂದಲೂ ಪೂರಕ ಅಂಶಗಳನ್ನು ಒದಗಿಸಿಕೊಳ್ಳಲಾಗಿದೆ. + +ಪ್ರಸ್ತುತ ಪುಸ್ತಕದಲ್ಲಿ ಒಟ್ಟು ಎಂಟು ಪ್ರಕರಣಗಳಿದ್ದು ಮೊದಲನೆಯ ಪ್ರಕರಣವು ಪುಸ್ತಕ ರಚನೆಗೆ ಹಿನ್ನೆಲೆಯಾದ ಪ್ರೇರಣಾಂಶ ಮತ್ತು ಉದ್ದೇಶಗಳನ್ನು ಹೇಳಿದರೆ ಎರಡನೆಯದು ಅಧ್ಯಯನದ ಸ್ವರೂಪವನ್ನು ತಿಳಿಸುತ್ತದೆ. ಇಲ್ಲಿ ಭರಮದೇವನ ಜೀವನದ ಸ್ಥಿತ್ಯಂತರಗಳನ್ನು ಹಂತ ಹಂತವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿದೆ. ಮೂರನೆಯದು ಪೌರಾಣಿಕ ಹಿನ್ನೆಲೆಯನ್ನು ತಿಳಿಸಿದರೆ ನಾಲ್ಕನೆಯದು ಮೌಕಿಕ ಪರಂಪರೆ ಹುಟ್ಟು ಹಾಕಿದ ಕಾವ್ಯಗಳ ವಿವರಣೆಯನ್ನು (ಡೊಳ್ಳಿನ ಹಾಡುಗಳು) ತಿಳಿಸುತ್ತದೆ. ಐದನೆಯದು ಮೌಖಿಕ ಹಾಡುಗಳ ಪ್ರೇರಣೆಯಿಂದ ಸೃಷ್ಟಿಗೊಂಡ ಹಾಲುಮತ ಪುರಾಣಗಳನ್ನು ವಿವರಿಸಿದರೆ ಆರನೆಯದು ಚಾರಿತ್ರಿಕ ಅನುಸಂಧಾನದಿಂದ ಪೌರಾಣಿಕ ಆವರಣದಲ್ಲಿ ತೋರುವ ಭರಮದೇವನನ್ನು ಕುರಿತು ಚರ್ಚಿಸುತ್ತದೆ. ಏಳನೆಯದು ಭರಮದೇವನ ಭಕ್ತ ಸಮುದಾಯ ಗುಡಿಗುಂಡಾರ ಪೂಜಾ ವಿಧಾನಗಳನ್ನು ಹೇಳುತ್ತದೆ (ಸಾಂಸ್ಕೃತಿಕ ಪರಿಚಲನೆ). ಕೊನೆಯ ಪ್ರಕರಣವು ಸಮಾರೋಪ. + +ಪುರಾಣ ಕಥೆಗಳು ನಮ್ಮ ಪೂರ್ವಜರ ಕಥೆಗಳೆಂದು ನಂಬಿರುವ ಜನಪದರು ಅವುಗಳನ್ನು ತಮ್ಮ ಜ್ಞಾನ ಮಾರ್ಗಗಳೆಂದು ಒಪ್ಪಿಕೊಂಡಿದ್ದಾರೆ. ಬಹುತೇಕ ಇವು ಮತ ಧರ್ಮಗಳನ್ನಾಧರಿಸಿ ಬೆಳೆಯುತ್ತವೆ. ಬಹು ಸಂಸ್ಕೃತಿಯ ದೇಶವಾಗಿರುವ ನಮ್ಮಲ್ಲಿ ಸೃಷ್ಟಿ ಸ್ಥಿತಿ ಲಯದ ರೂಪಗಳಾದ ತ್ರಿಮೂರ್ತಿಗಳ ಕುರಿತು ಅನೇಕ ಪುರಾಣ ಕಥೆಗಳಿವೆ. ಅದರಲ್ಲಿ ಬ್ರಹ್ಮನನ್ನು ಕುರಿತು ಅವನ ಹುಟ್ಟು, ಶಿರಶ್ಚೇದನ, ಸ್ತ್ರೀ ಸಂಬಂಧ ಆಪಾದನೆಗಳು ಬಹಳಷ್ಟು ಇದ್ದು ಬ್ರಹ್ಮನಿಗೆ ಪೂಜೆ ಸಲ್ಲದಿರಲಿ ಎಂಬ ಶಾಪವಿದೆ. ಇವೆಲ್ಲವೂ ಆಯಾ ಕಾಲಮಾನಕ್ಕೆ ತಕ್ಕಂತೆ ಬ್ರಹ್ಮನ ಪ್ರಸಿದ್ಧಿಯನ್ನು ಕಡಿಮೆ ಮಾಡುವ ಹುನ್ನಾರದಿಂದ ಹುಟ್ಟಿಕೊಂಡ ಕಥೆಗಳಾಗಿ ನಮಗೆ ತೋರುತ್ತವೆ. ಶಿವ ಮತ್ತು ವಿಷ್ಣುವಿಗೆ ದೊರೆತ ಪ್ರಾಶಸ್ತ್ಯ ಬ್ರಹ್ಮನಿಗೆ ಇಲ್ಲದಿದ್ದಾಗ ಕುರುಬರು ಬ್ರಹ್ಮದೇವನನ್ನು ಅಪ್ಪಿಕೊಂಡು ಮುಂದುವರೆದಿರುವುದು ಇಲ್ಲಿ ಕಂಡು ಬರುತ್ತದೆ. ಸೃಷ್ಟಿಕರ್ತನಾದ ಬ್ರಹ್ಮನು ಹಾಲುಮತದ ಭರಮದೇವನೆನ್ನುವುದಕ್ಕೆ ಪುರಾವೆಗಳನ್ನು ಸಾಬೀತುಪಡಿಸುವಲ್ಲಿ ಪರಂಪರಾಗತ ನಂಬಿಕೆ, ಭಾಷಿಕ ಸಮರ್ಥನೆ, ಹಾಲುಮತದ ಕಾವ್ಯಪುರಾಣಗಳಲ್ಲಿ ಬ್ರಹ್ಮ-ಭರಮರ ಸಮನ್ವಯದ ಬಳಕೆ, ಶಂಬಾ ಜೋಶಿ ಬೆಟಗೇರಿ ಕೃಷ್ಣಶರ್ಮರ ವಿವರಗಳು, ಮೇಷ ಬ್ರಹ್ಮನ ವಾಹನ, ಪಂಜಾಬಿನ ಕುರುಬರಲ್ಲಿನ ಮಾಹಿತಿಗಳು ಪ್ರಮುಖವಾಗುತ್ತವೆ. ಲೇಖಕರು ಅವುಗಳನ್ನು ಸೂಕ್ತ ನಿದರ್ಶನಗಳ ಮೂಲಕ ಪುಷ್ಟೀಕರಿಸುತ್ತಾರೆ. + +ಮೌಖಿಕ ಪರಂಪರೆಯಲ್ಲಿ ಮಾರಗದ ಹಾಡುಗಳ ಮೂಲಕ ಹಲವು ಸಂದುಗಳಲ್ಲಿ ರಚನೆಯಾಗುತ್ತವೆ. ಅದರಲ್ಲಿ ಹಾಲು ಮತದ ಮೂರು ಪ್ರಧಾನ ಮಾರಗಗಳಾದ ಬೀರದೇವರ ಮಾರಗ, ಮಾಳಿಂಗರಾಯನ ಮಾರಗ, ಅಮೋಘಸಿದ್ಧನ ಮಾರಗಗಳು ಹಾಲುಮತದ ಬಹುದೊಡ್ಡ ಆಸ್ತಿಯಾಗಿದ್ದು ಭರಮದೇವನನ್ನು ಕುರಿತಾದ ಶೋಧನೆಗೆ ಡಾ. ವೀರಣ್ಣ ದಂಡೆಯವರು ಸಂಪಾದಿಸಿರುವ ‘ಜನಪದ ಹಾಲುಮತ ಮಹಾ ಕಾವ್ಯ’ ಮುಖ್ಯ ಮಾಹಿತಿಯನ್ನು ಒದಗಿಸುತ್ತದೆ. ಭರಮದೇವನ ಮುಗ್ಧ ಮನಸ್ಸಿನ ಸ್ವಾಭಿಮಾನಿ ಸ್ವಭಾವ ಗುಣಗಳನ್ನು ಇಲ್ಲಿ ಅರಿಯಬಹುದು. ಮುಂದುವರೆದು ಕಥನರೂಪದ ಹಾಡು ಹಾಗೂ ಸ್ತೋತ್ರ ರೂಪದ ಹಾಡುಗಳಲ್ಲಿಯೂ ಭರಮದೇವನನ್ನು ಕುರಿತು ಹಲವು ಸೂಕ್ಷ್ಮಗಳು ದೊರೆಯುತ್ತವೆ. ಅವನ ಗುಡಿಗಳು ಬೇವಿನ ಮರ ಮತ್ತು ಅರಳಿಮರದ ನೆರಳಲ್ಲಿ ಕಂಡುಬರುತ್ತದೆ ಎಂದು ಹೇಳುತ್ತಲೇ ಇನ್ನಷ್ಟು ಸಂಶೋಧನೆಗೂ ಅವಕಾಶಗಳಿರುವುದನ್ನು ಈ ಕೃತಿ ಮನವರಿಕೆ ಮಾಡಿಕೊಡುತ್ತದೆ. + +ಸದ್ಯ ಲಭ್ಯವಿರುವ ಐದು ಹಾಲುಮತ ಪುರಾಣಗಳನ್ನು ಆಧರಿಸಿ ಭರಮದೇವನ ವೃತ್ತಾಂತವನ್ನು ಅವಲೋಕಿಸಲಾಗಿದೆ. ಅವುಗಳೆಂದರೆ ಮೊದಲನೆಯದು ಭೀಮಕವಿಯ ‘ಹಾಲ್ಮತೋತ್ತೇಜಕ ಪುರಾಣ’. ಎರಡನೆಯದು ಶ್ರೀಕರಿಸಿದ್ದೇಶ್ವರ ಪುರಾಣ, ಮೂರನೆಯದು ಬೀರೇಶ್ವರ ಚರಿತ್ರೆ, ನಾಲ್ಕನೆಯದು ಹಾಲುಮತ ಪುರಾಣ, ಐದನೆಯದು ಶ್ರೀ ಬೀರಲಿಂಗೇಶ್ವರರ ಮಹಾಪುರಾಣ. ಭರಮದೇವ ಹಾಗೂ ಸುರಾವತಿಯ ಮಗನಾಗಿ ಬೀರಪ್ಪ ಜನಿಸುವುದನ್ನು ವಿವಿಧ ಕಾವ್ಯಗಳಲ್ಲಿ ಅಲ್ಪ ವ್ಯತ್ಯಾಸಗಳೊಂದಿಗೆ ವಿಭಿನ್ನ ರೀತಿಯಲ್ಲಿ ಹೇಳಲಾಗಿದೆ. ಶಿವನಿಂದ ಅನುಗ್ರಹಿತನಾಗಿ ಬೀರಪ್ಪ ಜನಿಸುತ್ತಾನೆ. ಭರಮದೇವನು ಕಮಲದೇವಿಯ ಪುತ್ರನೆಂಬುದಕ್ಕೆ ಹಲವು ಕಥೆಗಳಿವೆ. ಎಲ್ಲೆಡೆಯೂ ಭರಮದೇವ ಹಾಗೂ ಅವನ ಕುಟುಂಬವನ್ನು ಆಲಕ್ಷಿಸಿರುವ ಘಟನೆಗಳು ಮೌಖಿಕ ಹಾಗೂ ಪುರಾಣ ಕಾವ್ಯಗಳಲ್ಲಿ ಒಂದಕ್ಕೊಂದು ತಳುಕು ಹಾಕುತ್ತವೆ. + +ಭರಮದೇವನ ಜನನದ ವಿಷಯದಲ್ಲಿ ಎರಡು ಭಿನ್ನ ಹೇಳಿಕೆಗಳಿವೆ. ಒಂದನೆಯದು ಭರಮದೇವನು ಶಿವನ ತೇಜಾಂಶದಿಂದ ಕಮಲದೇವಿಯಲ್ಲಿ ಹುಟ್ಟಿದವನು. ಇದು ಪೌರಾಣಿಕ ಹಿನ್ನೆಲೆಯಲ್ಲಿದ್ದರೆ ಎರಡನೆಯದು ಭರಮದೇವನು ನಿಲಂಕಾರ ಮಹಾರಾಜನ ಮಗ ಇದು ಚಾರಿತ್ರಿಕ ಹಿನ್ನೆಲೆಯನ್ನು ಹೇಳುತ್ತದೆ. ಹಾಲುಮತೋತ್ತೇಜಕ ಪುರಾಣದಲ್ಲಿ ಹರಿ ಮತ್ತು ಭರಮದೇವರ ನಡುವೆ ಪರಿಚಯ ಮಾಡಿಕೊಳ್ಳುವ ಮಾರ್ಗ ಇದಕ್ಕೆ ಪೂರಕವಾಗಿದೆ. (ವರ ಚಂದ್ರಗಿರಿ ಪುರಕ್ಕರಸು….) ಪುರಾಣ ಶಿಷ್ಟರಿಂದ ತೇಜೋವಧೆಗೊಳಗಾದ ಬ್ರಹ್ಮದೇವನನ್ನು ಯಾವುದೇ ಪುರಾಣಗಳಲ್ಲಿಯೂ ವಿವರಿಸಿಲ್ಲ. ಬೋನ ಅವರು ಉಪೇಕ್ಷಗೊಳಗಾದ ಭರಮ ಭೂಪಾಲನ ವ್ಯಕ್ತಿತ್ವವನ್ನು ಸಾಮಾಜಿಕರಣಗೊಳಿಸುತ್ತಾರೆ. ದೇವತೆಗಳಿಂದ ಕಾಡಿಸಿಕೊಂಡ ಬ್ರಹ್ಮ ಹಾಲುಮತ ಕಾವ್ಯ ಪುರಾಣಗಳಲ್ಲಿ ಸ್ಥಾನ ಪಡೆಯುತ್ತಾನೆ. ಮತ್ಸರದ ಭಾವಗಳು ದೇವತೆಗಳಲ್ಲೂ ತಪ್ಪಿಲ್ಲ. ಈ ಕಾರಣದಿಂದಲೇ ಬ್ರಹ್ಮನನ್ನು ಮೂಲೆಗುಂಪಾಗಿಸಿದ್ದು. ಅವನನ್ನು ಪೂಜಿಸುವ ಭಕ್ತರಿಗೂ ಶಾಪ ನೀಡಿ ಬ್ರಹ್ಮನು ಕಾಡುವ ದೇವರೆಂದು ಕಥೆ ಕಟ್ಟಿದ್ದು. ಅದೇನೇ ಇದ್ದರೂ ಕುರುಬರ ಕೈಯಲ್ಲಿ ತಮ್ಮ ಕುಲದೇವ ಬೀರಪ್ಪನ ತಂದೆಯಾಗಿ ಸ್ಥಾನ ಪಡೆಯುತ್ತಾನೆ. + +ಪ್ರಾಥಮಿಕ ಹಂತದಲ್ಲಿ ಭರಮದೇವ ಮನೆ ಬಾಗಿಲು, ಊರ ರಸ್ತೆಯ ತಿರುಗುಗಳು, ಕೋಟೆ ಕೊತ್ತಲಗಳಲ್ಲಿ, ಬಯಲು ಪ್ರದೇಶಗಳಲ್ಲಿ ಪೂಜಿಸಿದರೂ ತರುವಾಯದ ಹಂತದಲ್ಲಿ ಎಲ್ಲ ಸಮುದಾಯದವರ ಸಹಬಾಳ್ವೆಯೊಂದಿಗೆ ಅಚ್ಚದೇಶಿ ಮನಸ್ಸುಗಳ ಒಳಗೆ ನೆಲೆ ನಿಂತಿದ್ದಾನೆ. ಇತ್ತೀಚೆಗೆ ಭರಮದೇವನಿಗೆ ಸಣ್ಣ ಸಣ್ಣ ಗುಡಿಗಳು ಹಾಗೂ ಕೆಲವೆಡೆ ದೊಡ್ಡಗುಡಿಗಳು ನಿರ್ಮಾಣವಾಗಿವೆ. ದೀಪಾವಳಿಯಲ್ಲಿ ನಿರಾಕಾರ ಪೂಜೆಗೆ ಸಲ್ಲುತ್ತಿದ್ದ ಭರಮದೇವ ನಂತರದಲ್ಲಿ ಸಾಕಾರ ಪೂಜೆಗೂ ದಕ್ಕಿದ್ದಾನೆ. “ಊರ ಕಾವಲಿಗೆ ಸೀಮಿಯ ಭರಮ| ಪಾರೆ ಮಾಡ್ತಾನ ಶ್ರೀ ಬಲಭೀಮ” ಎನ್ನುವ ಆನಂದ ಕಂದರ ಮಾತಿನಂತೆ ಭರಮದೇವ ರಕ್ಷಕನಾಗಿ ಪೂಜೆಗೊಳುತ್ತಾನೆ. ಕುರುಬರು ಮೂಲ ಪಶುಪಾಲಕರಾಗಿದ್ದ ಕಾರಣದಿಂದ ಅಡವಿಯಲ್ಲಿ ಕುರಿ ಮೇಯಿಸಿಕೊಂಡು ಹೋದಲ್ಲೆಲ್ಲ ದುಂಡನೆಯ ಕಲ್ಲನ್ನಿಟ್ಟು ತಮ್ಮ ರಕ್ಷಕನಾಗಿ ಬಯಲಿನಲ್ಲಿ ಭರಮದೇವನನ್ನು ಪೂಜಿಸುತ್ತಿದ್ದರು. ಇಲ್ಲಿ ಭರಮದೇವ ಕಾಡುವ ದೇವರಾಗಿಯೂ ಹಾಗೂ ಕಾಯುವ ದೇವರಾಗಿಯೂ ಕಾಣುತ್ತಾನೆ. ಭರಮದೇವನನ್ನು ಶಿಷ್ಟರೆಲ್ಲ ಕೂಡಿ ನಿಘಂಟು ಜನಪದ ವಿಶ್ವಕೋಶಗಳಲ್ಲಿ ಭೂತ ಕ್ಷುದ್ರದೇವತೆ ದೆವ್ವವೆಂದು ಕರೆದಿದ್ದಾರೆ. ಡೊಳ್ಳಿನ ಹಾಡುಗಳಲ್ಲಿ ಭರಮಪ್ಪ ಚಿಕ್ಕ ಮಕ್ಕಳನ್ನು ಸೊಸೆಯಂದಿರನ್ನು ತವರಿನ ಹೆಣ್ಣು ಮಕ್ಕಳನ್ನು ಕಾಡಿ ಅವರಿಂದ ಕಾಣಿಕೆ ಪಡೆಯುವುದು ಕಂಡುಬರುತ್ತದೆ. + +ಜನಪದ ಸಂಸ್ಕೃತಿಯ ಮೂಲಗುಣ ಕೂಡಿ ಬಾಳುವುದು. ಭರಮದೇವನು ಎಲ್ಲ ವರ್ಗದ ಎಲ್ಲ ಸಮುದಾಯಗಳ ಜನರ ನಡುವಿನ ತಾರತಮ್ಯ ನಿರಾಕರಿಸಿ ಸಾಮಾಜಿಕ ಸಾಮರಸ್ಯ ಕಾಯುವ ದೇವರಾಗಿದ್ದಾನೆ. ಸಂಸ್ಕೃತೀಕರಣದ ಹಿನ್ನೆಲೆಯಲ್ಲಿ ಬೀರದೇವರು ಮಾಳಿಂಗರಾಯರ ಗುಡಿಗಳಂತೆ ಬ್ರಹ್ಮದೇವನ ಗುಡಿಗಳನ್ನು ಕಟ್ಟಿ ಬೆಳೆಸುವುದು ಭರಮದೇವನ ಭಕ್ತರ ಅಭಿಲಾಷೆಯಾಗಿದ್ದು ಈ ಕಾರ್ಯಗಳು ಪ್ರಗತಿಯಲ್ಲಿವೆ. ಶಿವಾನಂದ ಜಮಾದಾರರ ಮುಳುಗಡೆಯಾಗುವ ಗುಡಿಗಳ ಸರ್ವೇಕ್ಷಣ ಕಾರ್ಯದಿಂದ ಭರಮದೇವನ ಗುಡಿಗಳ ಬಗ್ಗೆ ಒಂದಷ್ಟು ನಿಖರ ಮಾಹಿತಿ ದೊರಕುತ್ತದೆ. ಬೀರದೇವರು ಮಾಳಿಂಗರಾಯ ಅಮೋಘಸಿದ್ಧರ ಕಾವ್ಯಗಳಂತೆ ಭರಮದೇವನನ್ನು ಕುರಿತ ಕಾವ್ಯ ರಚಿಸುವ ಅಗತ್ಯವಿದೆ. ಈ ಕಾರ್ಯಕ್ಕಾಗಿ ಇನ್ನು ಹಲವಾರು ಸಂಶೋಧನೆಗಳು ನಡೆಯಬೇಕಿವೆ. ಈ ನಿಟ್ಟಿನಲ್ಲಿ ನಿಜಕ್ಕೂ ಈ ಕೃತಿ ಮುಂದಿನ ಹೆಜ್ಜೆಗಳಿಗೆ ಒಂದು ದಾರಿದೀಪವಾಗಬಲ್ಲದು. + +ತೇಜಾವತಿ ಎಚ್ ಡಿ ತುಮಕೂರು ಜಿಲ್ಲೆಯ ಹುಳಿಯಾರಿನವರು. ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲಚಕ್ರ (2019), ಮಿನುಗುವ ತಾರೆ (2019), ಬಾ ಭವಿಷ್ಯದ ನಕ್ಷತ್ರಗಳಾಗೋಣ (2021) ಇವರ ಪ್ರಕಟಿತ ಕೃತಿಗಳು. ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ, ದೆಹಲಿಯ ಪ್ರಜಾಪತಿ ಪತ್ರಿಕೆ ಕೊಡಮಾಡುವ ಕಾವ್ಯ ಸಮ್ಮಾನ್ ಹಾಗೂ ಸಿರಿ ಕಾವ್ಯ ಪ್ರಶಸ್ತಿ ಲಭಿಸಿವೆ. \ No newline at end of file diff --git a/Kenda Sampige/article_85.txt b/Kenda Sampige/article_85.txt new file mode 100644 index 0000000000000000000000000000000000000000..ab28c9c652f007df9c910f9b36e028b394e8f246 --- /dev/null +++ b/Kenda Sampige/article_85.txt @@ -0,0 +1,129 @@ +ನಸುಕಿನ ಸಮಯ ಬೇಗನೆ ಎದ್ದು ಹೊರಡುವುದೆಂದು ಹಿಂದಿನ ರಾತ್ರಿಯೇ ಮಾತಾಡಿಕೊಂಡಂತೆ ಗಂಡಸರು ಬೇಗನೆ ಎದ್ದು ಚಕ್ಕಡಿಯೊಳಗೆ ಸಾಮಾನುಗಳನ್ನು ಹಾಕುವ ವ್ಯವಸ್ಥೆ ಮಾಡುತ್ತಿದ್ದರೆ, ಬೆಳಗಿನ ಉಪಾಹಾರವೆಂದು ಮಧ್ಯಾಹ್ನದ ಊಟಕ್ಕೂ ಬೇಕೆಂದು ಜೋಳದ ರೊಟ್ಟಿ-ಕಾಳು ಪಲ್ಲೆಗಳು ಮಾಡಿ ಬುಟ್ಟಿ ತುಂಬಿ ಚಕ್ಕಡಿಯಲ್ಲಿಟ್ಟು ಹೆಂಗಸರು ಮಕ್ಕಳು ಹೊರಡಲನುವಾದರು. + +ಸುತ್ತೆಲ್ಲ ದಟ್ಟ ಹಸಿರೋ ಹಸಿರು ಕಾಡು. ಬೆಳಗಿನ ಸೂರ್ಯಕಿರಣಗಳು ಕಾಡು ಹೊಕ್ಕಿವೆ. ಪಕ್ಷಿಗಳ ಕಲರವ ಮನಸ್ಸು ಮುದಗೊಳಿಸುತ್ತಿದೆ. ದಟ್ಟಣೆಯ ಬಿದಿರು ಮೆಳೆಗಳು. ತೇಗು, ಮತ್ತಿ, ಹೊನ್ನೆಗಿಡಗಳು ಒಂದಕ್ಕೊಂದು ಸ್ಪರ್ಧಿಸುವಂತೆ ಎತ್ತರೆತ್ತರವಾಗಿ ಬೆಳೆದು ನಿಂತಿವೆ. + +ಚಕ್ಕಡಿಗಳು ಸಾಲಿನಲ್ಲಿ ಮುಂದೆ ಹೋಗುತ್ತಿವೆ. ಗೆಳೆಯರು ಕಾಡಿನ ಸೊಬಗು ನೋಡುತ್ತ ಶರಣರನ್ನು ನೆನಪಿಸಿಕೊಳ್ಳುತ್ತ ಚಕ್ಕಡಿಗಳ ಹಿಂದೆ ಹಿಂದೆ ಹೊರಟಿದ್ದಾರೆ. + +೧೨ನೆಯ ಶತಮಾನದ ಶರಣರು ಅಡ್ಡಾಡಿದ ನೆಲ ಇದು. ಈಗಲೇ ಇಂಥಾ ದಟ್ಟಕಾಡು ಇರಬೇಕಾದರೆ ೮೦೦ ವರ್ಷಗಳ ಹಿಂದೆ ಶರಣರ ಕಾಲದಲ್ಲಿ ಇನ್ನೆಷ್ಟು ಕಾಡು ದಟ್ಟವಾಗಿತ್ತೋ ಏನೋ! ಊಹಿಸಿಕೊಳ್ಳುತ್ತಿದ್ದರು. + +(ಡಾ. ಲತಾ ಗುತ್ತಿ) + +ಶರಣರಿಗೆ ಸಾಮ್ರಾಜ್ಯ ಕಟ್ಟಬೇಕು. ಆಸ್ತಿಮಾಡಬೇಕು. ವಾರಸುದಾರರು ಬೇಕೆಂದು ಅವರಿಗೆ ಮಹಾಕನಸುಗಳೇನೂ ಇರಲಿಲ್ಲ. ಅವರಿಗೆ ಮನುಷ್ಯರು ಮನುಷ್ಯರಂತೆ ಹೊಂದಿಕೊಂಡು ಬಾಳುವ ಸಮಾನತೆ ನಿರೀಕ್ಷಿಸಿದ್ದರು. ಆದರೆ ಸಮಾಜದಲ್ಲಿ ಜಾತಿ-ಧರ್ಮದ ಬಗೆಗೆ ಅಜಗಜಾಂತರ ವ್ಯತ್ಯಾಸವಿತ್ತು. ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿದ್ದ ಬಸವಣ್ಣನವರಿಗೆ ಈ ನೀತಿ ನಿಯಮಗಳು ಬಹಳಷ್ಟು ನೋವನ್ನು ಕೊಟ್ಟವು. ತನ್ನ ಮಂತ್ರಿಪದವಿ ತ್ಯಜಿಸಿ ಹೊರಬಂದು ಎಲ್ಲ ವರ್ಗದವರೊಡನೆ ಸಾಮರಸ್ಯ ಕಟ್ಟಲು ಪ್ರಯತ್ನಿಸಿದರು. + +ಕೆಳವರ್ಗದ ಸಮಗಾರ ಹರಳಯ್ಯನ ಮಗ ಶೀಲವಂತನಿಗೆ ಮೇಲ್ವರ್ಗದ ಮಧುವರಸನ ಮಗಳು ಲಾವಣ್ಯವತಿಯೊಂದಿಗೆ ಮದುವೆ ಮಾಡಿಸಿದರು. ಇದು ಅಂತರ್ಜಾತಿ ವಿವಾಹವೆಂದು ಮೇಲು-ಕೀಳೆಂಬ ಭಾವನೆ ಹೊತ್ತು ಜನರಲ್ಲಿ ಬೆಂಕಿ ಹೊತ್ತಿ ಉರಿಯತೊಡಗಿತು. ಕ್ರಾಂತಿ ತಾರಕಕ್ಕೇರಿ ಬಿಜ್ಜಳನ ಜನ ಹರಳಯ್ಯ ಮಧುವರಸರ ಕಾಲಿಗೆ ಹಗ್ಗಕಟ್ಟಿ ಆನೆಯ ಕಾಲಿಗೆ ಬಿಗಿದು ನಡುಬೀದಿಯಲ್ಲಿ ಎಳೆದೊಯ್ದುವಂತೆ ಮಾಡಿದರು. ಇದರಿಂದ ತೀವ್ರತರ ಹೊಡೆದಾಟಗಳಾಗಿ ಕ್ರಾಂತಿಯಾದಾಗ ಶರಣರು ಚದುರತೊಡಗಿದರು. ಕಲ್ಯಾಣದಿಂದ ಬಸವಣ್ಣನವರ ಒಂದು ಗುಂಪು ಕೂಡಲ ಸಂಗಮದ ಕಡೆಗೆ ಹೋಗುತ್ತಾರೆ. ಬಸವಣ್ಣನವರ ಅಳಿಯ ಚೆನ್ನಬಸವಣ್ಣ, ಅಕ್ಕ ನಾಗಮ್ಮ, ಮಡಿವಾಳ ಮಾಚಿದೇವ, ಗಂಗಾಂಬಿಕಾ ಮುಂತಾದ ಶರಣರು ಉಳುವಿಯ ಬೆಟ್ಟ ಗುಡ್ಡಗಳ ಪ್ರದೇಶದೊಳಗೆ ಹೊಕ್ಕು ಬಿಜ್ಜಳನ ಸೈನಿಕರಿಂದ ತಪ್ಪಿಸಿಕೊಳ್ಳುತ್ತಾರೆ. ಶರಣರು ರಚಿಸಿದ ವಚನಗಳ ಕಟ್ಟುಗಳನ್ನು ಕೆಲವರು ಕುದುರೆಗಳ ಮೇಲೆ ಕೆಲವರು ತಲೆಯ ಮೇಲೆ ಹೊತ್ತು ತಪ್ಪಿಸಿಕೊಳ್ಳುತ್ತಾ ಇಲ್ಲಿಗೆ ಬಂದಿದ್ದಾರೆ’ ಎಂದು ಚರ್ಚಿಸುತ್ತ ನಡೆಯುತ್ತಿದ್ದಾರೆ. + +`ಶರಣರಿಗೆ ಮಕ್ಕಳು ಮರಿ ಇದ್ದರೋ ಇಲ್ಲವೋ!’ + +ಇದ್ದಿರಬೇಕು. ಬಸವಣ್ಣನವರಿಗೂ ಒಬ್ಬ ಮಗ ಇದ್ದಂತ. ಆದ್ರ ಏನೋ ರೋಗ ಬಂದು ೫-೬ನೆಯ ವಯಸ್ಸಿನಲ್ಲಿಯೇ ತೀರಿಕೊಂಡನಂತ.`ವಾರಸುದಾರರಿಗೆ ಅವರ ಹತ್ರ ಇತ್ತಾದ್ರೂ ಏನು?’`ಬಿಜ್ಜಳನ ಆಡಳಿತದಲ್ಲಿ ಬಸವಣ್ಣ ಮಂತ್ರಿಯಾಗಿದ್ದ ಅಂದ ಮೇಲೆ ಸ್ವಲ್ಪಾದರೂ ಆಸ್ತಿಪಾಸ್ತಿ ಇರಬೇಕಾಗಿತ್ತಲ್ಲ!.’ + +`ಅದ್ಯಾವುದನ್ನೂ ಅವರು ಮಾಡಲೇ ಇಲ್ಲ. ಬಸವಣ್ಣನಿಗೆ ಇನ್ನೂ ವಯಸ್ಸಿತ್ತು. ಹೆಂಡತಿಯರಾದ ಗಂಗಾಂಬಿಕೆ ನೀಲಾಂಬಿಕೆಯರಿಗೂ ಮಕ್ಕಳ ಆಸೆಯೂ ಇತ್ತು. ಆದ್ರೆ ಬಸವಣ್ಣ ಆಸ್ತಿ, ವಂಶೋದ್ಧಾರಕ ಅಂತ ತಲೆಕೆಡಿಸಿಕೊಳ್ಳದೇ ಸಮಾಜದಲ್ಲಿ ನಡೆಯುತ್ತಿದ್ದ ಮೇಲು-ಕೀಳು ಎನ್ನುವ ತಾರತಮ್ಯದ ಬಗ್ಗೆ ಅದನ್ನು ಹೇಗೆ ಬಗೆಹರಿಸಬೇಕೆನ್ನುವುದರ ಬಗೆಗೆ ಯೋಚಿಸುತ್ತಿದ್ರು. ಈಗ ನೊಡ್ರೆಪಾ ಇಂದಿರಾ ಸರಕಾರ ಅವರ ಸರ್ವಾಧಿಕಾರದ ಆಸೆ, ಪುತ್ರ ವ್ಯಾಮೋಹ, ಜನಸಾಮಾನ್ಯರನ್ನು ರಾಜಕೀಯ ಪಕ್ಷಪಂಗಡ, ಜಾತಿ ಎಂದು ಬಗ್ಗಬಡೆಯುವಿಕೆ, ಒಂದೇ ಎರಡೇ ಇವರವು. ಗುರುಪಾದ ವ್ಯಂಗ್ಯವಾಗಿ ಹೇಳುತ್ತ ನಕ್ಕ. + +ಚಂದ್ರುವಿಗೆ ಯಾಕೋ ಎದೆಯಲ್ಲಿ ಕುಟುಕಿದಂತಾಯ್ತು. `ತನಗೆ ಮೂರು ಹೆಣ್ಣು ಮಕ್ಕಳಿದ್ದರೂ ವಂಶೋದ್ಧಾರಕ ಬೇಕೆಂದು ಆಸೆ ಮಾಡುತ್ತಿದ್ದೇವಲ್ಲ. ಛೇ! ಅಷ್ಟೇ ಅಲ್ಲ ಅದಕ್ಕಾಗಿ ಕುಟುಂಬ ಯೋಜನೆಗೆ ಊರೊಳಗೆ ಬಂದ ಡಾಕ್ಟರುಗಳಿಂದ ತಪ್ಪಿಸಿಕೊಂಡು ಈ ಗುಡ್ಡದಾಗ ತಲೆಮರೆಸಿಕೊಂಡು ಸುತ್ತಾಡುತ್ತಿದ್ದೇನಲ್ಲ.’ ಶರಣರು ಅಡ್ಡಾಡಿದಂಥ ಈ ನೆಲದಲ್ಲಿ ನಮ್ಮ ದುರಾಸೆಗಳ ಬಗೆಗೆ ನಾಚಿಕೆಯಾಗಬೇಕು ಎಂದುಕೊಳ್ಳುತ್ತ ಚಂದ್ರು ಮೌನವಾದ. + +ಶರಣರು ಕೂಡಲ ಸಂಗಮ, ಉಳುವಿ ಕಡೆಗೆ ಹೋದರು ಅಂತಾದ್ರೆ ಅವರ ಮಕ್ಕಳು ಹಿರಿಯರು ಎಲ್ಲಿ ಹೋದರು? + +ದೂರ ದೂರ ನಡೆದು ಹೋಗಲಾಗದವರು ಅಲ್ಲಲ್ಲೆ ಹಳ್ಳಿ-ಪಳ್ಳಿ ಸಂಬಂಧಿಕರ ಮನೆಗಳಲ್ಲಿಯೇ ಉಳಿದುಕೊಂಡರು. ಮಕ್ಕಳು ಶರಣರ ತತ್ವಗಳನ್ನು ಅನುಸರಿಸುತ್ತ ಅವರೂ ತಮ್ಮ ತಮ್ಮ ಕಾಯಕ ವೃತ್ತಿ ಮಾಡುತ್ತ ತಮ್ಮ ಹೆಂಡತಿ-ಮಕ್ಕಳೊಂದಿಗೆ ದೂರ ದೂರದವರೆಗೆ ಹೋಗಿ ಉಳಿದುಕೊಂಡರು. ವಿಜಾಪುರ, ಕಲಬುರ್ಗಿ ಬೀದರ ಬಳ್ಳಾರಿ ಕಡೆಗೆಲ್ಲ ಬಸವ ಅನುಯಾಯಿಗಳು ಸಾಕಷ್ಟು ಅದಾರು. + +ಬಸವಣ್ಣನಿಗೆ ಬಿಜ್ಜಳನ ಸೈನಿಕರು ತೊಂದರೆ ಕೊಟ್ಟಾಗ ಶರಣರೊಂದಿಗೆ ಬಸವಣ್ಣ ಕೂಡಲಸಂಗಮದ ಕಡೆಗೆ ಹೊರಡಲನುವಾಗುತ್ತಾರೆ. ಹೋಗುವಾಗ ಗಂಗಾಂಬಿಕಾ ನೀಲಾಂಬಿಕೆಯರನ್ನು ಚೆನ್ನಬಸವಣ್ಣ ಮತ್ತು ಅಕ್ಕ ನಾಗಮ್ಮರೊಂದಿಗೆ ಬಿಟ್ಟು ಹೊರಡುತ್ತಾನೆ. ಇವರ ಜೊತೆ ಅನೇಕ ಶರಣರು ಇದೇ ಮಾರ್ಗದಲ್ಲಿ ಸಾಗುತ್ತ ಉಳುವಿ ತಲುಪಿದ್ದಾರೆ. ಈ ನಡುವೆ ಇವರು ಕಿತ್ತೂರಿನ ಮಲಪ್ರಭಾ ನದಿ ತಟದಲ್ಲಿ ಸ್ಪಲ್ಪ ಹೊತ್ತು ವಿಶ್ರಮಿಸಿಕೊಂಡು ಸಾಗುವಾಗ ನೀಲಾಂಬಿಕೆ ತೀರಿಕೊಂಡಿದ್ದಾಳೆ. ಅವಳ ಸಮಾಧಿ ನದಿಯ ದಡದಲ್ಲಿ ಈಗಲೂ ಕಾಣುತ್ತದೆ. ನೋಡುತ್ತೇವಲ್ಲ.’ + +`ಯಾರಿಗಾದರು ಶರಣರ ಹೆಸರುಗಳು ನೆನಪು ಅದಾವೇನು?’ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು.’ + +ಕಲ್ಲೇಶ ಕಾಕಾ ಇವರೊಂದಿಗೆ ಸ್ವಲ್ಪ ಹೊತ್ತು ಸೇರಿಕೊಂಡು ಮಾತುಗಳು ಕೇಳಿಸಿಕೊಳ್ಳುತ್ತ ನಡೆಯುತ್ತಿದ್ದವನು `ಗುರುಪಾದ ನನಗೊಂದೆರಡು ಹೆಸರು ನೆನಪಿಗೆ ಬಂದವು ನೋಡು, ಅವರು ಅಲ್ಲಮಪ್ರಭುದೇವರು, ಸಿದ್ಧರಾಮೇಶ್ವರರು, ಅಕ್ಕಮಹಾದೇವಿ ಹೌದಲ್ಲೋ’ ಎಂದ. + +ಹೌದು ಮತ್ತ ಎಲ್ಲರೂ ಇನ್ನಷ್ಟು ಶರಣರ ಹೆಸರು ನೆನಪು ಮಾಡಿಕೊಳ್ರಿ. ಅವರು ದಿನನಿತ್ಯ ತಮ್ಮ ತಮ್ಮ ಕಾಯಕದ ಕೆಲಸದ ಮುಖಾಂತರ ಹೆಸರು ಪಡೆದವರು ಇದ್ರು. + +`ಹಾಂ! ಹೌದಲ್ಲ!’ + +`ನಮ್ಮೂರಿನ ಮಠದ ಶಿವಮೂರ್ತಿ ಸ್ವಾಮಿಗಳು ಇದ್ರಲ್ಲ, ಅವರು ತಮ್ಮ ಪ್ರವಚನದೊಳಗ ಶರಣರ ಹೆಸರು ಅವರು ಮಾಡ್ತಿದ್ದ ಕೆಲಸಗಳನ್ನೆಲ್ಲಾ ಹೇಳ್ತಿದ್ದರಲ್ಲ. ನಾವು ಸಾಲಿಗೆ ಹೋಗುವಾಗ ಆವಾಗವಾಗ ಹೋಗಿ ಸ್ವಾಮಿಗೋಳ ಕಾಲಿಗೆ ಬಿದ್ದು ಒಂದಷ್ಟು ಹೊತ್ತು ಅಲ್ಲಿದ್ದು ಕೇಳಿಸಿಕೊಂಡು ರ‍್ತಿದ್ದೀವಲ್ಲ ಗುರುಪಾದ ನೆನಪೈತೇನು’ ಎಂದ ಚಂದ್ರು. + +`ನೆನಪಿರದ ಏನು ಆದ್ರ ನಾನು ಅಲ್ಲಿ ಸಿಗೋ ಪ್ರಸಾದದ ಆಸೇಕ್ಕ ಬರ‍್ತಿದ್ದೆ ನೋಡು,’ ಆದ್ರೂ ಶರಣರ ಹೆಸರು ನೆನಪಿಸಿಕೊಳ್ಳೋಣ ಎಂದು ಗುರುಪಾದ ಹೇಳಿದ. + +`ನಮ್ಮ ಅಪ್ಪ ಆಗಾಗ ಕೆಲವೊಂದು ವಚನಗಳನ್ನು ಹೇಳ್ತಿದ್ರು. ನಾನು ನೆನಪಿಸಿಕೊಳ್ತೇನು’ ಎಂದು ಅರವಿಂದನೂ ಹೇಳಿದಾಗ ಉಳಿದೆಲ್ಲ ಜಾತ್ರಾರ್ಥಿಗಳಿಗೂ ಒಂದು ತರಹದ ಖೋಖೋ ಆಟದ ಹಾಗಾಯ್ತು. + +ಹಾದಿಗುಂಟ ಅವರವರ ಹೆಸರು ಅವರವರ ಕೆಲಸಗಳ ಬಗೆಗೆ ಚರ್ಚಿಸುತ್ತಾ ನಡೆದರು. ಮಡಿವಾಳ ಮಾಚಿದೇವ, ಡೋಹರ ಕಕ್ಕಯ್ಯ, ಆಯ್ದಕ್ಕಿ ಮಾರಯ್ಯ – ಲಕ್ಕಮ್ಮ ದಂಪತಿಗಳು, ಮಾದಾರ ಚೆನ್ನಯ್ಯ, ಗೋರಕ್ಷಕ ಸಿದ್ಧಸೋಮನಾಥ, ಗಾಣದ ಕಣ್ಣಪ್ಪ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ನಗೆಯ ಮಾರಿತಂದೆ, ಎಲೆಗಾರ ಭೀಮಣ್ಣ, ಕಿನ್ನರಿಬೊಮ್ಮಣ್ಣ, ಮೇದಾರಕೇತಯ್ಯ, ಕನ್ನಡಿ ಕಾಯಕದ ರೇವಮ್ಮ, ಕುರಿಗಾಲು ರಾಮಣ್ಣ, ಲದ್ದಿಯ ಸೋಮಯ್ಯ, ನುಲಿಯ ಚಂದಯ್ಯ, ಕುಂಬಾರ ಗುಂಡಯ್ಯ ಕೇತಲಾದೇವಿ, ಹಾಗೆಯೇ ಮುಕ್ತಾಯಕ್ಕ, ಕಾಳವ್ವೆ, ರೇಚವ್ವೆ-ಗುಡ್ಡವ್ವೆ. ಇವರೆಲ್ಲಾ ತಮ್ಮ ತಮ್ಮ ಕಾಯಕದಲ್ಲಿ ಅತೀ ನಿಷ್ಠಾವಂತರಾಗಿದ್ದರು. ಆಯ್ದಕ್ಕಿ ಮಾರಯ್ಯ ಲಕ್ಕಮ್ಮ ದಂಪತಿಗಳದ್ದೇ ಒಂದು ಉದಾಹರಣೆ ನೋಡ್ರಿ. ಚೀಲದಿಂದ ಬಿದ್ದ ಅಕ್ಕಿಗಳನ್ನು ಗೂಡಿಸಿಕೊಳ್ಳುತ್ತ ಆಯ್ದುಕೊಳ್ಳುತ್ತ ತಂದು ಅನ್ನ ಮಾಡಿಕೊಳ್ಳುತ್ತಿದ್ದರಂತ. ಅಂದಂದಿಗೆ ತಮಗೆಷ್ಟು ಬೇಕೋ ಅಷ್ಟ ಅಕ್ಕಿ ಇಟ್ಟುಕೊಂಡು ಉಳಿದದ್ದನ್ನು ಮತ್ತ ಗೋದಾಮಿಗೆ ಹೋಗಿ ಇಟ್ಟು ಬರುತ್ತಿದ್ದರಂತ. ನಾಳೆಗೆ ಇನ್ನೊಂದು ಮುಷ್ಠಿ ಅಕ್ಕಿ ಇಟ್ಟುಕೊಳ್ಳೋಣಂತ ಲಕ್ಕಮ್ಮ ಹೇಳಿದರೂ ಕೇಳದೇ ನಾಳೆಯದು ನಾಳೆಗೆ ತರೋಣ, ಸಂಗ್ರಹ ಬ್ಯಾಡಾ ಎಂದು ಮಾರಯ್ಯ ಹೇಳಿಬಿಡುತ್ತಿದ್ದನಂತ. ಶರಣೆ ಲಕ್ಕಮ್ಮ ಪತಿಗೆ ತಕ್ಕ ಸತಿಯಾಗಿ ಬಾಳಿದಳು. ಇಂತಹ ಮಹತ್ವದ ಕಾಯಕದ ಕೆಲಸ ಸ್ವಾರ್ಥವಿಲ್ಲದೆ ಮಾಡಿ ಶರಣರು ಇಂದು ನಮಗೆ ಮಾದರಿಯಾದ್ರು ನೋಡ್ರಿ. + +ಆದರೆ ಇಂದಿನ ರಾಜಕೀಯದವರಿಗೆ, ಶ್ರೀಮಂತರಿಗೆ ಅರಮನೆಗಳಿದ್ದರೂ ಇನ್ನೂ ದಾಹ, ಸ್ವಾರ್ಥ ಹೇಳತೀರದಷ್ಟಾಗಿದೆಯಲ್ಲ. ಕೂಡಿಡುವುದು ಅಷ್ಟಽ ಅಲ್ಲ ದೇಶ ವಿದೇಶ ಗಳಲ್ಲಿ ಆಸ್ತಿ ಅಂತಸ್ತುಗಳಲ್ಲಿ, ಹೂಡಿಕೆಗಳಲ್ಲಿ ತೊಡಗಿರುವುದು ನೋಡಿದ್ರ ಇವರು ಯಾವ ರೀತಿಯ ಮಾದರಿಯನ್ನು ಮುಂದಿನ ಜನಾಂಗದವರಿಗೆ ಬಿಟ್ಟು ಹೋಗಬಹುದು? ಸಮಾಜದಲ್ಲಿ ಸಮಾನತೆ ಎನ್ನುವುದು ಹೇಗೆ ಬಂದೀತು? + +ಹೀಗೆ ಗೆಳೆಯರು ಒಂದರಿಂದ ಮತ್ತೊಂದು ವಿಷಯಗಳತ್ತ ಗಂಭೀರವಾಗಿ ಚರ್ಚೆ ಮಾಡುತ್ತ ನಡದೇ ನಡೆಯುತ್ತಿದ್ದರು. + +ಅದಕ್ಕ ಅಲ್ಲೇನು ಕಾರ್ಲ್ಮಾರ್ಕ್ಸ್, ಲೆನಿನ್ ಅಂತಹವರು ಕ್ರಾಂತಿ ಎದ್ದದ್ದು. + +`ಇವರಕ್ಕಿಂತ ಮೊದಲಽ ಬಸವಣ್ಣನವರು ಅಂದಽ ಕ್ರಾಂತಿ ಮಾಡಿದ್ರು.’ + +`ಬುದ್ಧ-ಬಸವ-ಅಂಬೇಡ್ಕರ ಇವರದ್ದೆಲ್ಲಾ ಇದೇ ತತ್ವ. ಆದರಽ ಈವರೆಗೂ ಧಾರ್ಮಿಕ-ರಾಜಕೀಯ ಜನರಿಗೆ ಈ ತತ್ವ ಅರ್ಥಮಾಡಿಕೊಳ್ಳಲಿಕ್ಕೆ ಆಗವಲ್ಲದೊ ಏನೋ!’ + +`ಈ ಸರ್‌ಗಳದ್ದು-ವಕೀಲರದ್ದು ಏನೇನೋ ಚರ್ಚೆಗಳಿರ‍್ತಾವ ಎಂದುಕೊಳ್ಳುತ್ತ ಉಳಿದವರು ಇವರ ಬಗೆಗೆ ತಲೆಕೆಡಿಸಿಕೊಳ್ಳದೆ, ಏನಾದರೂ ಅಷ್ಟಷ್ಟು ಕೇಳಿ ಅವರಿಗೆ ಊಟ-ನೀರು-ಚೂಡಾ ಚುರುಮುರಿ ಕೊಡುತ್ತ ಸಾಗುತ್ತಿದ್ದರು. ಮೂರ್ನಾಲ್ಕು ದಿನಗಳು ದಟ್ಟ ಕಾಡಿನಲ್ಲಿ ನಡೆಯುತ್ತಿದ್ದರೂ ಯಾರೊಬ್ಬರಿಗೂ ದಣಿವು ಆಯಾಸ ಅನಿಸುತ್ತಲೇ ಇರಲಿಲ್ಲ. ಎತ್ತುಗಳೂ ಶಾಂತವಾಗಿ ಹೆಜ್ಜೆ ಹಾಕುತ್ತಿದ್ದವು. ಸಂಜೆ-ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ವನಸಿರಿಯ ಚೆಂದಗಾರಿಕೆ ಕತ್ತಲಲ್ಲಿ ಈಗ ಕರಗತೊಡಗಿದಂತೆ ಚಕ್ಕಡಿಗಳು ಉಳುವಿ ಕ್ಷೇತ್ರ ಪ್ರವೇಶಪಡೆದವು. + +ಎಲ್ಲೆಲ್ಲೂ ಜಾತ್ರೆಯ ಗದ್ದಲವೋ ಗದ್ದಲ. ಜನರಲ್ಲಿ ಸಂಭ್ರಮದ ವಾತಾವರಣ. ಲೈಟುಗಳು ಝಗಝಗಿಸತೊಡಗಿದ್ದವು. + +ಚಕ್ಕಡಿಗಳಿಗೆ ನಿಗದಿಪಡಿಸಿದ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಒಂದೇ ಸಮನೆ ನಡೆದು ನಡೆದು ಸುಸ್ತಾದ ಎತ್ತುಗಳ ಕೊರಳು ಹಗ್ಗವನ್ನು ಚಕ್ಕಡಿಗಳಿಂದ ಬಿಡಿಸಿದರು. ಮಹಿಳೆಯರು ಮಕ್ಕಳು ಗಂಡಸರು ಕಂಬಳಿ-ಜಮಖಾನೆಗಳನ್ನು ಹಾಸಿಕೊಳ್ಳುತ್ತ ಬಿಡಾರ ಹೂಡಿದರು. ಮತ್ತೊಂದೆಡೆ ಮಹಿಳೆಯರು ಅಡುಗೆಗೆಂದು ಕಲ್ಲುಹೊಂದಿಸಿ ಒಲೆ ಹೊತ್ತಿಸಿದರು. ನಾಳೆ ದೇವರ ನೈವೇದ್ಯಗೆ ಬೇಕಾದ ಅಡುಗೆ ಸಾಮಾನುಗಳನ್ನು ಹೊಂದಿಸಿಕೊಳ್ಳತೊಡಗಿದರು. + +ಸ್ವಲ್ಪ ದೂರದಲ್ಲಿ ನಾಟಕದವರು ಕ್ಯಾಂಪ್ ಹಾಕಿದ್ದರು. ಲೌಡ್ ಸ್ಪೀಕರದಲ್ಲಿ `ಕಲ್ಯಾಣಕ್ರಾಂತಿ’ ನಾಟಕದ ಬಗ್ಗೆ ತಿಳಿಸಿಹೇಳುತ್ತ ಕರೆಯುತ್ತಿದ್ದರು. ಟೆಂಟ್ ಮೇಲೆ ಬಣ್ಣ ಬಣ್ಣದ ಲೈಟುಗಳು, ಕಲ್ಯಾಣ ಕ್ರಾಂತಿಕಾರರ ಚಿತ್ರಗಳಿರುವ ದೊಡ್ಡ ಬೋರ್ಡುಗಳು ಜಾತ್ರೆಗೆ ಬಂದವರನ್ನು ಸೆಳೆಯುತ್ತಿದ್ದವು.ಚಂದ್ರು-ಅರವಿಂದ-ಗುರುಪಾದ ನಾಟಕ ನೋಡಲು ಆ ಕಡೆಗೆ ಹೆಜ್ಜೆ ಹಾಕಿದರು. + +ನಾಟಕ ನೋಡಿ ಬಂದ ಗೆಳೆಯರದ್ದು ತಡರಾತ್ರಿಯವರೆಗೂ ಚರ್ಚೆ ಚರ್ಚೆ ಚರ್ಚೆ. ನಡು ನಡುವೆ ನಾಲವತ್ತೇಳರ ಸ್ವಾತಂತ್ರ್ಯ ಚಳುವಳಿ ಕ್ರಾಂತಿಕಾರರ ಹೋರಾಟದ ಚಿತ್ರಣಗಳು ನೆನಪಿಸಿಕೊಳ್ಳುತ್ತ ಇಂದಿನ ತುರ್ತು ಪರಿಸ್ಥಿತಿಯ ಕ್ರಾಂತಿಕಾರಿ ಜಯಪ್ರಕಾಶ್ ನಾರಾಯಣವರೆಗೂ ಚರ್ಚೆ ಚರ್ಚೆ. + + + +ಬೆಳಗಿನ ಜಾವ ಕಣ್ಣುಬಿಟ್ಟಾಗ ಎಲ್ಲೆಲ್ಲೂ ಜಾತ್ರೆಯದೇ ಆದ ಒಂದು ಬೆಡಗಿನ ಸೊಬಗು. ತಣ್ಣನೆಯ ಗಾಳಿ-ಪಕ್ಷಿಗಳ ಕಲರವ. ಸೂರ್ಯೋದಯ. ದೇವಸ್ಥಾನದ ಆವರಣದಿಂದ ಕೇಳಿಬರುವ ಶರಣರ ವಚನಗಳ ಹಾಡುಗಳು. ಸುತ್ತೆಲ್ಲ ಹಸಿರು ಗಿಡಮರಗಳಿಂದ ತುಂಬಿದ ತಂಪಾದ ಸ್ಥಳದಲ್ಲಿ ಚೆನ್ನಬಸವಣ್ಣನ ದೇವಸ್ಥಾನ ದೂರ ದಿಂದಲೇ ಕಂಗೊಳಿಸುತ್ತದೆ. ಎತ್ತರದ ಗೋಪುರದಲ್ಲಿ ಶಿವಶರಣರ ಶಿಲ್ಪ ಕೃತಿಗಳು. ಅವರವರ ವೃತ್ತಿಗೆ ತಕ್ಕಂತೆ ಕೆತ್ತನೆಗಳಿವೆ. ೧೨ನೆಯ ಶತಮಾನದ ಶರಣರೆಲ್ಲ ಕಣ್ಣಿಗೆ ಕಟ್ಟುವಂತೆ ಕಾಣುತ್ತಾರೆ. ದೇವಸ್ಥಾನ ತಳಿರು ತೋರಣಗಳಿಂದ ಶೋಭಿತಗೊಂಡಿದೆ. + +ಭಕ್ತರು ನಸುಕಿನಲ್ಲಿ ಎದ್ದು ಶುಚಿಯಾಗಿ ಜಾತ್ರೆಯ ಸಡಗರದಲ್ಲಿ ತೊಡಗಿಕೊಳ್ಳಲು ಸಜ್ಜಾಗುತ್ತಿದ್ದಾರೆ. ಜಾತ್ರೆ ಅಂದರೆ ಜಾತ್ರೆ. ಗ್ರಾಮೀಣ ಜನರಿಗೆ ಇದಕ್ಕಿಂತ ದೊಡ್ಡ ಸಂತೋಷ ಬೇರೆ ಯಾವುದರಲ್ಲಿಯೂ ಸಿಗುವುದಿಲ್ಲ. ಜಾತ್ರೆಗೆ ಹೋಗುವದೆಂದು ಆರೆಂಟು ತಿಂಗಳಿನಿಂದ ತಯಾರಿಯಲ್ಲಿಯೇ ತೊಡಗಿಕೊಂಡಿರುತ್ತಾರೆ. ಇಂಥವರದ್ದೆಲ್ಲ ಮೊದಲಿನಿಂದಲೂ ತಯಾರಿಯಾಗಿದ್ದರೆ ಈ ಗೆಳೆಯರಲ್ಲಿ ತಕ್ಷಣದ ನಿರ್ಣಯವಾಗಿತ್ತು. + +ಚಿಕ್ಕಂದಿನಿಂದಲೂ ಸೊಗಲ ಸೋಮೇಶ್ವರ ಜಾತ್ರೆ. ಎಲ್ಲಮ್ಮ ಗುಡ್ಡದ ಎಲ್ಲಮ್ಮನ ಜಾತ್ರೆ. ಉಳುವಿ ಚೆನ್ನಬಸವೇಶ್ವರ ಜಾತ್ರೆ ಎಂದು ಅದೆಷ್ಟೋ ಸಲ ಹೋಗಿ ಬಂದವರೇ ಈ ಮೂವರು. ಆದರೆ ಮ್ಯಾಟ್ರಿಕ್ ಆದ ತಕ್ಷಣ ಕಾಲೇಜು ಓದು ಎಂದು ಬೆಳಗಾವಿ ಪಟ್ಟಣ ಸೇರಿದ ಮೇಲೆ ಪ್ಯಾಂಟು-ಶರ್ಟು-ವಾಚು-ಬೂಟು ಕೈಯಲ್ಲಿ ಒಂದೆರಡೇ ಪುಸ್ತಕಗಳು ಎಂದು ಒಂದೊಂದೇ ಬದಲಾವಣೆ ಆಗ ತೊಡಗಿದ್ದವು. ತಮ್ಮ ಊರಿನ ಬಸವಣ್ಣನ ಜಾತ್ರೆಯೋ ಹೋಳಿ ಹುಣ್ಣಿಮೆಯೋ ಸೀಗಿ ಹುಣ್ಣಿಮೆಯೋ ಎಂದಾದಾಗೆಲ್ಲ ಗೆಳೆಯರೆಲ್ಲ ಗುಂಪು ಕಟ್ಟಿಕೊಂಡು ನಾಟಕ ಮಾಡುತ್ತಿದ್ದವರು ನೋಡುತ್ತಿದ್ದವರು ನಂತರ ಬೆಳಗಾವಿಯ ಕ್ಯಾಂಪಿನಲ್ಲಿ ಅಡ್ಡಾಡುವುದು, ಇಂಗ್ಲೀಷ್ ಸಿನಿಮಾ ನೋಡುವುದು ಮಾಡುತ್ತ ಕ್ರಮೇಣ ಗ್ರಾಮೀಣ ಬದುಕಿನಿಂದ ದೂರವಾಗ ತೊಡಗಿದ್ದರು. + +ಈಗ ಈ ಜಾತ್ರೆಯ ಸಂದರ್ಭ. ಬಾಹ್ಯ ಜಗತ್ತಿನ ಪರಿವೆ ಇಲ್ಲದೆ ಎಷ್ಟೊಂದು ಸುಖಿಗಳಾಗಿದ್ದಾರಲ್ಲ ನಮ್ಮ ಜನ. ಭಾವನಾತ್ಮಕವಾಗಿ ದೇವರನ್ನು ನಂಬಿಕೊಂಡು ಸಂತೋಷಪಡುವ ಈ ಜನರೆಲ್ಲಿ. ಸ್ವಾರ್ಥ ರಾಜಕಾರಣಿಗಳು ಅಧಿಕಾರದಾಸೆಗೆ ಏನನ್ನೂ ಮಾಡಲು ಹಿಂಜರಿಯದ ಅವರೆಲ್ಲಿ. ಸ್ವತಂತ್ರ ಭಾರತಕ್ಕೆ ನಡುರಾತ್ರಿಯಲ್ಲಿ ಹೇರಿದ ಇಂದಿನ ತುರ್ತುಪರಿಸ್ಥಿತಿ ಒಂದರ್ಥದಲ್ಲಿ ಆಂತರಿಕ ಪಾರತಂತ್ರ್ಯವಲ್ಲದೆ ಮತ್ತಿನ್ನೇನು’ ಎನ್ನುತ್ತ ರಾಜಕೀಯ-ಸಾಮಾಜಿಕ-ವಿಷಯಗಳ ಬಗೆಗೆ ಈಗ ಮಾತನಾಡುವ ಪ್ರಬುದ್ಧತೆ ಹೊಂದಿದ ವ್ಯಕ್ತಿಗಳಾಗಿದ್ದಾರೆ. + +ಎಲ್ಲೆಲ್ಲೂ ಜನದಟ್ಟಣೆ. ಭಕ್ತರ ಸಂಭ್ರಮ ಹೇಳತೀರದಷ್ಟು. ಹೂವಿನ ಅಲಂಕಾರ ದಿಂದ ತೇರು ಸಿದ್ಧತೆಗೊಂಡಿದೆ. ತೇರು ಎಳೆಯುವ ಬೀದಿಗೆ ಬೆಳಗಿನಿಂದಲೇ ಕಸ ಗುಡಿಸಿ ನೀರು ಹೊಡೆದು ರಂಗವಲ್ಲಿಯೂ ಹಾಕಿದ್ದಾರೆ. ತೇರಿನೊಳಗೆ ದೇವರ ಮೂರ್ತಿ ಸರ್ವಾಲಂಕೃತ ಭೂಷಿತವಾಗಿ ಕಂಗೊಳಿಸುತ್ತಿದೆ. + +ಬಹಳ ವರ್ಷಗಳ ಮೇಲೆ ಬಂದಿದ್ದ ಚಂದ್ರು ಅರವಿಂದ ಗುರುಪಾದ ದೂರ ದಲ್ಲಿಯೇ ನಿಂತುಕೊಂಡು ಎಲ್ಲವನ್ನೂ ವೀಕ್ಷಿಸುತ್ತಿದ್ದಾರೆ. ದೇವರು ಇದ್ದಾನೋ ಇಲ್ಲೋ! ಇವರಲ್ಲಿ ವಿಶ್ಲೇಷಣೆ ನಡದೇ ಇದೆ. ನಂಬಿದವರ ಪಾಲಿಗೆ ಇದ್ದಾನೆ. ಇಲ್ಲೆಂದವರಿಗೆ ಇಲ್ಲ. ನಾವು ಇವೆರಡೂ ತಿಳಿದುಕೊಳ್ಳಲು ವಿಜ್ಞಾನಿಗಳೂ ಅಲ್ಲ ತತ್ವಜ್ಞಾನಿಗಳೂ ಅಲ್ಲ. ನಾವು ನಮ್ಮ ರಾಜಕೀಯ ಸ್ಥಿತಿ ನೋಡಿ ಹತಾಶರಾಗಿ ಬಂದವರಷ್ಟೇ, ದೇವರಿಗೆಂದೇ ಬಂದವರಲ್ಲ. ಎಲ್ಲವೂ ನಾವು ಅಂದಂತೆ ಸರಿಹೋಗಲೆಂದು ಬೇಡಿಕೊಳ್ಳಲು ಬಂದವರಲ್ಲ ಎಲ್ಲ ಸರಿಹೋದ ಮೇಲೆ ಹರಕೆ ತೀರಿಸುವೆವೆಂದು ಕೇಳಿಕೊಳ್ಳುವುದೂ ಇಲ್ಲ’ ಎಂದು ಚರ್ಚೆಗಳು ನಡೆದೇ ಇದ್ದವು. + +ಸಂಪ್ರದಾಯದಂತೆ ದೇವಸ್ಥಾನದ ಆಡಳಿತ ಮಂಡಳಿಯವರು, ಗೌರವಾನ್ವಿತರು, ಉತ್ಸವಮೂರ್ತಿಗೆ ಪೂಜೆಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ರಥಬೀದಿಯಿಂದ ಅಲಂಕರಿಸಿದ ರಥ ಗಂಟೆ-ಜಾಗಟೆಗಳೊಂದಿಗೆ, ದೇವರ ಉದ್ಘೋಷಗಳೊಂದಿಗೆ ಭಕ್ತರು ನಿಧಾನವಾಗಿ ರಥ ಎಳೆಯತೊಡಗಿದರು. ಜನರ ನೂಕು ನುಗ್ಗಲು ತುಂಬಿಕೊಳ್ಳ ತೊಡಗಿತು. ಭಕ್ತರು ಬೇಡಿಕೊಂಡಂತೆ ಅವರ ಇಷ್ಟಾರ್ಥಗಳು ಪೂರ್ಣಗೊಂಡಂತೆ ಸಂತೋಷದಿಂದ ಹೂವು ಹಣ್ಣು ತೂರುತ್ತ ರಥದೆಡೆಗೆ ಹಾರಿಸುತ್ತಿದ್ದರು. ತಮ್ಮ ತಮ್ಮ ಹೊಲಗಳಲ್ಲಿ ಬೆಳೆದ ದವಸ-ಧಾನ್ಯಗಳನ್ನು ಹಾರಿಸುತ್ತ ದೇವರಿಗೆ ಸಮರ್ಪಿಸುತ್ತಿದ್ದರು. ಧನ್ಯತಾಭಾವ ಹೊಂದಿ ಸಂತೋಷಿಸುತ್ತಿದ್ದರು. + +ಇವರೂ ಇದನ್ನೆಲ್ಲಾ ನೋಡುತ್ತ ಅಂದಿನ ಶರಣರ ಅನುಭಾವಕ್ಕೂ, ಈಗಿನ ಭಕ್ತ ಸಮುದಾಯದ ಶರಣರಿಗೂ ಕೈಮುಗಿದರು. ರಥ ಮುಂದೆ ಮುಂದೆ ಹೊರಟಿತು. + +`ಇಂದಿನ ಯಾವ ವ್ಯವಸ್ಥೆಯೂ ಇಲ್ಲದಿದ್ದಾಗ ಶರಣರು ಇಂತಹ ಕಾಡಿನಲ್ಲಿ ಅದ್ಹೇಗೆ ಬಂದು ಇಲ್ಲಿ ಉಳಿದುಕೊಂಡಿರಬೇಕು. ಕಾಡಿನಲ್ಲಿ ನಾವೂ ಸ್ವಲ್ಪ ಸುತ್ತಾಡಿಕೊಂಡು ಬರೋಣ’ ಎನ್ನುತ್ತ ಅಲ್ಲಿಂದ ಹೊರಟರು. ಗುರುಪಾದನಿಗೆ ಕಾಲುನೋವು ಮರತೇ ಹೋದಂತಾಗಿದೆ. + +ಪಶ್ಚಿಮಘಟ್ಟದ ಸುಂದರವಾದ ಸ್ಥಳ ಇದು. ಸುತ್ತೆಲ್ಲ ದಟ್ಟ ಅರಣ್ಯ. ಪಕ್ಷಿ ಪ್ರಾಣಿಗಳ ಸಂಕುಲ. ಗುಹೆಗಳು ಎಲ್ಲೆಲ್ಲೂ ಕಾಣುತ್ತವೆ. ಪಂಚಲಿಂಗೇಶ್ವರ ಗುಹೆ, ಆಕಳ ಗವಿ, ಅಕ್ಕನಾಗಮ್ಮ ತಪಸ್ಸು ಮಾಡಿದ ಗುಹೆ, ರುದ್ರಾಕ್ಷಿ ಮಂಟಪ, ಬಸವಣ್ಣನವರ ದೇವಾಲಯ, ವೀರಭದ್ರ ದೇವಸ್ಥಾನ. ಹರಳಯ್ಯನವರ ಹೊಂಡ, ವಿಭೂತಿ ಕಣಜದ ಗುಹೆ, ಹೀಗೆ ಪ್ರಕೃತಿ ವಿಸ್ಮಯದ ಗುಹೆಗಳನ್ನು ಒಳಹೊಕ್ಕು ನೋಡುತ್ತ ತೇಗ, ಮತ್ತಿ ಗಿಡಗಳ ನೆರಳಿನಲ್ಲಿ ಸುತ್ತಾಡುತ್ತ ಬಾಹ್ಯಜಗತ್ತಿನ ಪ್ರಜ್ಞೆಯನ್ನೇ ಮರೆತು ನಿಸರ್ಗದಲ್ಲಿ ಮೈಮರೆತಿದ್ದರು. ಜಾತ್ರೆಯಿದೆಯೆಂದು ಜನ ಓಡಾಡುತ್ತಿದ್ದಾರೆ. ಇಲ್ಲದೆ ಹೋದರೆ ಇಲ್ಲಿ ಹಾದಿ ತಪ್ಪಿಸಿಕೊಂಡು ಬಿಡುತ್ತೇವೆಯೇನೋ, ಹೀಗೆ ಆಗಾಗ ಕಾಡಿನಲ್ಲಿ ಬಂದು ತಪ್ಪಿಸಿಕೊಂಡುಬಿಡುವುದು ಒಮ್ಮೊಮ್ಮೆ ಚೆಂದವೇನೋ! ಈ ಭಯ ಈ ಕುತೂಹಲ, ನಿಶ್ಶಬ್ದ ರಾತ್ರಿಯಾದರೆ ಹೆದರಿಕೆ, ಊಟ-ನೀರಿಲ್ಲ, ಪ್ರಾಣಿಗಳ ಕಿರಿಚಾಟ ಎಲ್ಲ ಹೇಗಿರಬಹುದಲ್ಲವೆ! + +`ಸ್ಟಾರ್ ಹೋಟೆಲ್‌ಗಳಲ್ಲಿ ವಸತಿ ಮಾಡುವುದೇ ಒಂದು ಸಾಧನೆ ಎನ್ನುವಂತಹ ಅಧಿಕಾರ ದಾಹಿಗಳು ಇಂಥ ಕಡೆಗೆಲ್ಲ ಬಂದು ನೋಡಬೇಕು. ಶರಣರ ಪ್ರಸನ್ನತೆಯ ನೆಲದಲ್ಲಿ ಸುತ್ತಾಡಬೇಕು.’ ಎಂದುಕೊಳ್ಳುತ್ತ ಈ ಗೆಳೆಯರು ಸೂರ್ಯಾಸ್ತವಾಗುತ್ತಿದ್ದಂತೆ ಮರಳಿ ಜಾತ್ರೆಯ ಗುಂಪಿನಲ್ಲಿ ಸೇರಿಕೊಂಡರು. + +ರಥ ಬೀದಿಗುಂಟ ಎರಡೂ ಕಡೆಗೂ ಜಾತ್ರೆ ಸಾಮಾನಿನ ಅಂಗಡಿಗಳು. ಚಿಕ್ಕ ಮಕ್ಕಳ ಪೀಪಿ ತುತ್ತೂರಿಯಿಂದ ಹಿಡಿದು ಮಹಿಳೆಯರ ಪಿನ್ನು ರಿಬ್ಬನ್ ಬಳೆವರೆಗೆ… ಬೆಂಡು ಬೆತ್ತಾಸದಿಂದ ಹಿಡಿದು ಊರಿಗೆ ಕೊಂಡೊಯ್ಯುವ ವಿಭೂತಿ-ರುದ್ರಾಕ್ಷಿ-ದೇವರ ಪಟಗಳವರೆಗೆ, ಹಾಗೆಯೇ ಅಡುಗೆಮನೆಯ ಕಡಗೋಲಿನಿಂದ ಹಿಡಿದು ದನಕರುಗಳ ಕೊರಳುಗಂಟೆ, ರೈತರ ಹೊಲದ ಸಾಮಾನುಗಳವರೆಗೆ ತುಂಬಿಕೊಂಡಿದ್ದವು. ದೊಡ್ಡವರು ಚಿಕ್ಕವರೆನ್ನದೆ ಬಣ್ಣ ಬಣ್ಣದ ನೀರಿನ ಭರ್ಪ ತಿನ್ನುವುದು. ಕರಿದ ಖಾರದಾನೆ ಚುರುಮುರಿ ಭಜಿ ತಿನ್ನುವುದು…. + +ಗರ್ದಿಗಮ್ಮತ್ತಿನ ಪೆಟ್ಟಿಗೆಯೊಳಗೆ ಬಾಂಬೆ ಬಜಾರ್, ದಿಲ್ಲಿ ಕುತುಬ್ ಮಿನಾರ್ ರಾಜಕಪೂರ್ ಚಿತ್ರಪಟಗಳು ನೊಡೋ ಹುಡುಗರ ಖುಷಿ.ಮತ್ತೊಂದು ಕಡೆ ಭವಿಷ್ಯ ಹೇಳುವವ ಎರಡು ಗಿಳಿ ಪಂಜರದೊಳಗಿಟ್ಟುಕೊಂಡು ಮುಂದೆ ಇಸ್ಪಿಟ್‌ದಂತಹ ಕಾರ್ಡ್ಗಳನ್ನು ಇಟ್ಟುಕೊಂಡು ದೇವರ ಸಾನಿಧ್ಯದಲ್ಲಿಯೇ ಭವಿಷ್ಯ ಹೇಳುತ್ತಿದ್ದಾನೆ. ಮುಂದಿನ ವರ್ಷ ಮತ್ತೆ ಉಳಿವಿಗೆ ಬರ‍್ತೀರಿ. ನಿಮ್ಮ ಆಸೆ ಕೈಗೂಡತಾವ. ನಮ್ಮ ಗಿಣಿರಾಮ ನಿಮ್ಮನ್ನು ಕರಿತಿದ್ದಾನ ಬರ‍್ರಿಬರ‍್ರಿ ಎಂದು ಕೂಗುತ್ತಿದ್ದಾನೆ. + +ಮೂರು ಹೆಣ್ಣುಮಕ್ಕಳ ತಂದೆ ಚಂದ್ರು ಆ ಕ್ಷಣ ಗಿಳಿಗಳನ್ನು ನೋಡುತ್ತಾನೆ. ಇವು ಏನು ಭವಿಷ್ಯ ಹೇಳಬಹುದು? ಕೇಳಲೇ ಎನ್ನುವ ಕುತೂಹಲ ಹುಟ್ಟುತ್ತದೆಯೇನೋ ನಿಜ. ಹೊಟ್ಟೆಪಾಡಿನ ಭವಿಷ್ಯಗಾರನ ಕಡೆಗೊಮ್ಮೆ ನೋಡಿ ಮುಂದೆ ನಡೆಯುತ್ತಾನೆ. + +ಮಕ್ಕಳಿಗೆಂದು ಒಂದಿಷ್ಟು ಆಟಿಕೆಗಳು ಬೆಂಡು ಬೆತ್ತಾಸಕೊಂಡು ಕೈಚೀಲಿಗೆ ಹಾಕುತ್ತಿದ್ದಾನೆ. + +ಗುರುಪಾದ ಇಂದು `ಶರಣೆ ಅಕ್ಕಮಹಾದೇವಿ’ ನಾಟಕ ನೋಡಲು ಹೋಗಿದ್ದಾನೆ. ಅರವಿಂದ ತನ್ನ ಹೆಂಡತಿಗೆ ಇಲ್ಲಿ ಏನು ಸಿಗಬಹುದೆಂದು ಹುಡುಕುತ್ತಾ ಸುತ್ತಾಡುತ್ತಿದ್ದಾನೋ ಏನೊ! + +ಬಹಳ ಹೊತ್ತಿನ ನಂತರ ಅನ್ನದಾಸೋಹದ ಸಾಲಿನಲ್ಲಿ ಕುಳಿತು ಊಟಮಾಡಿ ಚಂದ್ರು ಚಕ್ಕಡಿಗಳು ಬೀಡು ಬಿಟ್ಟ ಸ್ಥಳಕ್ಕೆ ಬಂದು ತನ್ನದೊಂದು ಜಮಖಾನೆ ಹಾಸಿಕೊಂಡು ಉರುಳಿದ. + +ಮೇಲೆ ಪೂರ್ಣಚಂದ್ರ-ಶುಭ್ರ ಬೆಳದಿಂಗಳು. ಯಾಕೋ ಚಂದ್ರುವಿಗೆ ನಿದ್ದೆಯಿಲ್ಲ. + +ಭಕ್ತರು ತಮ್ಮ ತಮ್ಮ ಹರಕೆಗಳನ್ನು ತೀರಿಸಿಕೊಂಡು ನಿರುಮ್ಮಳವಾಗಿ ಹೋಗುತ್ತಿರುವವರನ್ನು ನೋಡಿದ್ದ. ಹೆಂಡತಿ ಶಕುಂತಲಾ ಕೂಡಾ ದೇವರಿಗೆ ಬೇಡಿಕೊಂಡು ಹರಕೆ ಹೊತ್ತುಕೊಂಡು ಬರಬೇಕಂತ ಹೇಳಿ ಕಳಿಸಿದ್ದಾಳೆ. + +ಇವನಿಗೆ ಭಕ್ತಿ-ಭರವಸೆ ಹರಕೆಗಳೇನೂ ಇಲ್ಲ. ಅಪ್ಪ-ಹೆಂಡತಿಯ ಮನದಾಸೆಗೆ ಮನೆಗೊಬ್ಬ ವಾರಸುದಾರ ಬೇಕೆನ್ನುವ ಅನಿಸಿಕೆಯಷ್ಟೆ.ಶಕು ನೆನಪಾಗುತ್ತಾಳೆ. ಮೂರು ಮುದ್ದಾದ ಹೆಣ್ಣುಮಕ್ಕಳೂ ಕಣ್ಮುಂದೆ ಬಂದವು. ನಿಜವಾಗಿಯೂ ಹೆಣ್ಣುಮಕ್ಕಳು ಜೀವದಾಯಿನಿಗಳು. ಗಂಡು ಮಕ್ಕಳು ಬೇಕೆನ್ನುವ ಜಿದ್ದು ಈ ಹೆಂಗಸರಿಗೇಕೆ? ಶಕುಂತಲಾ ಈಗ ತುಂಬು ಬಸುರಿ. ಅವಳಿಗೆ ಗಂಡುಮಗುವೊಂದು ಬೇಕು ಅಷ್ಟೆ. ಹಾಗಾದರೆ ಶಿಕ್ಷಕನಾಗಿ ಜನರಿಗೆ ಮಾರ್ಗದರ್ಶನ ಮಾಡಬೇಕಾದ ನಾನೂ ವಾರಸಾ ಬೇಕೆನ್ನುವ ಆಸೆಗೆ ಇಳಿದುಬಿಟ್ಟು ತಪ್ಪಿಸಿಕೊಂಡು ಇಲ್ಲಿ ಸುತ್ತಾಡುತ್ತಿದ್ದೇನೆಯೇ, ದೇಶದ ಜನ ಸಂಖ್ಯೆಯ ದೃಷ್ಟಿಯಿಂದಲೂ ನಾನು ಯೋಚಿಸಬೇಕು! ಒಂದರ ಹಿಂದೆ ಒಂದು ಯೋಚನೆಗಳೆಲ್ಲ ಬರತೊಡಗಿದವು. ಲಿಂಗಭೇದ ಮಾಡದೆ ಅಂದೇ ಬಸವಣ್ಣನವರು ಸಮಾನತೆಯ ಭಾವನೆಯನ್ನು ಬಿತ್ತಿ ಬೆಳೆಸಿದ್ದರು. ನಾವು ಈವರೆಗೂ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಲಿಲ್ಲವೇನೋ! ಅಕ್ಕಮಹಾದೇವಿ ಹಾಗೂ ಅನೇಕ ಶರಣೆಯರು ಬಸವಮಾರ್ಗದರ್ಶನದಲ್ಲಿ ಸಮಾನವಾಗಿ ಬೆರೆಯುತ್ತ ಮುಕ್ತವಾಗಿ ಚರ್ಚಿಸುತ್ತ ಬಂದದ್ದು ಸಾಮಾನ್ಯವಾದುದಲ್ಲ. ಹಾಗಾದರೆ ನಾವೇಕೆ ಇನ್ನೂ ಮಾನಸಿಕವಾಗಿ ಹಿಂದುಳಿದಿದ್ದೇವೆ. ಯಾವ ವ್ಯಾಮೋಹಕ್ಕೆ ಒಳಪಟ್ಟಿದ್ದೇವೆ. ಈ ಶತಮಾನದಲ್ಲೂ ಅನೇಕ ಮಹಿಳೆಯರು ಗಂಡಸರನ್ನು ಹಿಂದಿಕ್ಕಿ ಮಾಡಿದ ಸಾಧನೆಗಳು ಸಾಕಷ್ಟು ಸಾಕಷ್ಟು. ಚಂದ್ರುವಿನ ಮನಸ್ಸು ತನ್ನ ಹೆಣ್ಣುಮಕ್ಕಳ ಬಗೆಗೆ ಮೃದುಭಾವನೆ ಬರತೊಡಗಿದಂತೆ ಮನಸ್ಸು ಏನೋ ಒಂದು ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಚಡಪಡಿಸತೊಡಗಿತು. + +ಅಂದು ಶರಣೆಯರ ನಿಷ್ಠಾವಂತ ಕಾಯಕ ಇಂದು ಮಹಿಳೆಯರ ಶ್ರಮ ಸಾಧನೆಯ ಕಾಯಕ ಎಲ್ಲವೂ ಒಂದೊಂದು ಅರ್ಥದಲ್ಲಿ ಶ್ರೇಷ್ಠ ಎಂದುಕೊಳ್ಳುತ್ತ ತಾನು ಶಕುಂತಲಾ ತೆಗೆದುಕೊಂಡಿರುವ ನಿರ್ಧಾರದ ಬಗೆಗೆ ಪಾಪಪ್ರಜ್ಞೆ ಕಾಡಲಾರಂಭಿಸಿತು. + +ತಮಗೆ ಹುಟ್ಟುವ ನಾಲ್ಕನೆಯ ಮಗು ಏನಾದರಾಗಲಿ ಊರಿಗೆ ಮರಳಿದ ತಕ್ಷಣ ತಾನು ಆಪರೇಷನ್ ಮಾಡಿಸಿಕೊಂಡರಾಯ್ತೆಂದು ದೃಢ ನಿರ್ಧಾರ ತೆಗೆದುಕೊಂಡ. + +ಮನಸ್ಸು ಹಗುರವಾದಂತೆನಿಸತೊಡಗಿತು. ಎದ್ದು ಕೂತ. + +ಗೆಳೆಯರು ಸುತ್ತಾಡಿಕೊಂಡು ಬಂದರು. + +ದಿಟ್ಟ ನಿರ್ಧಾರ ತೆಗೆದುಕೊಂಡು ಮನೆತೊರೆದು ಹೊರಬಂದ ಅಕ್ಕಮಹಾದೇವಿಯ ಬಗೆಗೆ, ಅನುಭವ ಮಂಟಪದಲ್ಲಿ ಅಲ್ಲಮಪ್ರಭುವಿನೊಂದಿಗೆ ಆದ ಅವಳ ಗಂಭೀರ ಚರ್ಚೆಯ ಬಗೆಗೆ ಗುರುಪಾದ ನಾಟಕನೋಡಿ ಬಂದು ಚರ್ಚೆಗಿಳಿದ. + +ಜಾತ್ರೆಯಲ್ಲಿ ತಾನು ಕೊಂಡು ತಂದ ಶರಣರ ಚಿಕ್ಕ ಚಿಕ್ಕ ಶಿಲ್ಪ ಪ್ರತಿಮೆಗಳನ್ನು ಚೀಲದಿಂದ ತೆಗೆದು `ಇವು ಕುಸುಮಳಿಗೆ, ಶರಣರನ್ನು ಅವರ ಕಾಯಕವನ್ನು ಪರಿಚಯಿಸಲು ತಂದೆ’ ಎಂದು ತೋರಿಸಿದ ಅರವಿಂದ. + +`ನೀನೇನು ತೆಗೆದುಕೊಂಡೆಯೋ ಗುರುಪಾದ ನಿನ್ನ ಊರಿನ ಮನೆಗೆ’ ಎಂದು ಗೆಳೆಯರು ಕೇಳಿದಾಗ… + +`ಕಳೆದು ಹೋದ ನಮ್ಮಪ್ಪ ಜಾತ್ರೆಯಲ್ಲಿ ಎಲ್ಲಾದರೂ ಕಾಣಿಸುತ್ತಾನಾ ಎಂದು ಕಣ್ಣುಗಳು ಹುಡುಕಾಡುತ್ತಿದ್ದುವು. ಬೇರೆ ಏನು ಕೊಂಡುಕೊಳ್ಳಬೇಕೆಂದು ಅನಿಸಲೇ ಇಲ್ಲ ನೋಡ್ರೆಪ್ಪಾ’ ನನ್ನದೆಲ್ಲಾ ದುರಂತಬಾಲ್ಯವಾಗಿತ್ತು’ ಎನ್ನುತ್ತ ಉಸಿರೆಳೆದ. + + + +ಆಕಾಶ ತುಂಬೆಲ್ಲ ಚಂದ್ರನ ಶುಭ್ರ ಬೆಳಕು. ಚಂದ್ರ ಮೇಲೆ ನಿಂತು ಇವರನ್ನೇ ಗಮನಿಸುತ್ತಿದ್ದಾನೇನೋ ಎನ್ನುವಂತೆ ಇವರಿಗೆ ಭಾಸ. + +ಊರು ನೆನಪಾಯಿತು – ತಾವು ಪರಿಚಿತರಾದ ಸ್ನೇಹಿತರಾದ ಅನೇಕ ಸಂದರ್ಭಗಳು ಮೆಲುಕು ಹಾಕುತ್ತ ಜಮಖಾನೆ ಹಾಸುತ್ತ ಉರುಳಿಕೊಂಡರು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_86.txt b/Kenda Sampige/article_86.txt new file mode 100644 index 0000000000000000000000000000000000000000..d4ceb8659d5d8bbf3ccfdec49e45e15a2772c403 --- /dev/null +++ b/Kenda Sampige/article_86.txt @@ -0,0 +1,35 @@ +byಕಮಲಾಕರ ಕಡವೆ|Jul 22, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಪ್ರೇಮಕವನಗಳನ್ನು ಬರೆಯುವ ಕವಿ ಎದುರಿಸುವ ಮುಖ್ಯ ಸವಾಲು ಅಂದರೆ ಅಭಿವ್ಯಕ್ತಿಯ ಸವಕಲು ಗುಣ. ಅತಿಬಳಕೆಯಿಂದಾಗಿ ಪ್ರೇಮದ ಕುರಿತಾಗಿ ಹೇಳಬಹುದಾದ ಅನೇಕ ಮಾತುಗಳು ತೀರಾ ಸವಕಲಾಗಿ, ಈಗ ಕೃತ್ರಿಮ ಅನಿಸಿಬಿಡುವುದು ಸಹಜ. ಈ ನಿಟ್ಟಿನಲ್ಲಿ ನನಗೆ ಜಬಿವುಲ್ಲಾ ಅವರ ಸೃಜನಶೀಲ ಮರುರೂಪಿಸುವಿಕೆ ಇಷ್ಟವಾಯಿತು. ವ್ಯಾಪಕವಾಗಿ ಬಳಕೆಯಾದ ಭಾವನೆಯೊಂದನ್ನು ಬಳಸುವಾಗ ಅವರು ಅದಕ್ಕೊಂದು ಟ್ವಿಸ್ಟ್ ಕೊಡುತ್ತಾರೆ. ಅವರು ಕೊಡುವ ಈ ತಿರುವು ಆ ಭಾವನೆ ಮತ್ತು ಅಭಿವ್ಯಕ್ತಿಗೆ ಹೊಸ ಚಾಲ್ತಿ ಸಾಧ್ಯವಾಗಿಸುತ್ತದೆ:ಜಬಿವುಲ್ಲಾ ಅಸದ್ ಕವನ ಸಂಕಲನ “ಪ್ರೇಮಾಯತನ”ಕ್ಕೆ ಕಮಲಾಕರ ಕಡವೆ ಮುನ್ನುಡಿ + +byಪ್ರಶಾಂತ್ ಬೆಳತೂರು|Jul 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಕತ್ತಲ ಸಾಮ್ರಾಜ್ಯದಲ್ಲಿ ಹುಟ್ಟಿನ ಜಾಡು ಹಿಡಿದು ಕತೆ ಹೇಳುವ ಮೆಟ್ಟಿನ ಕತೆ ಬರೀ ಕತೆಯಾಗದೆ ಕಾವ್ಯವಾಗುವ ಪರಿಯೇ ಒಂದು ವೈಶಿಷ್ಟ್ಯಪೂರ್ಣ. ತನ್ನ ಕತ್ತಲ ಸಾಮ್ರಾಜ್ಯದ ಕತೆಯನ್ನು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಭೂಮಂಡಲಕ್ಕೆ ವಿಸ್ತರಿಸಿ ಹೇಳುತ್ತೇನೆನ್ನುವ ಅದರ ತುಡಿತ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿದೆ. ಈ ನಿಟ್ಟಿನಲ್ಲಿ ಕವಿಗೆ ತನ್ನ ಕಾವ್ಯದ ಉದ್ದೇಶಗಳ ಕುರಿತು ಸ್ಪಷ್ಟತೆ ಇದೆ. ಈ ದಿಶೆಯಲ್ಲಿ ಇದೊಂದು ಅಪಾರವಾದ ಮಾನವೀಯ ಮೌಲ್ಯಗಳ ತಾಯ್ತನ ತುಡಿತದ ಪ್ರಯೋಗಶೀಲ ಕಾವ್ಯ ಅನ್ನಬಹುದು. ಈ ಅಂಶ ಕಾವ್ಯದ ಉದ್ದಕ್ಕೂ ಓದುಗನನ್ನು ಮನಮುಟ್ಟುತ್ತದೆ.ಎಂ. ಜವರಾಜ್‌ ಕಥನ ಕಾವ್ಯ “ಮೆಟ್ಟು ಹೇಳಿದ ಕಥಾ ಪ್ರಸಂಗ”ದ ಕುರಿತು ಪ್ರಶಾಂತ್‌ ಬೆಳತೂರು ಬರಹ + +byಕೆಂಡಸಂಪಿಗೆ|Jul 19, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇನ್ನೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಚಿತ್ರೀಕರಣಕ್ಕೆಂದು ನಾನು ಆಯ್ಕೆ ಮಾಡಿಕೊಂಡ ಸ್ಥಳಗಳು ಸಾಂಪ್ರದಾಯಿಕ ರಮಣೀಯ ಸ್ಥಳಗಳಲ್ಲ. ಅಂದರೆ ಹಸಿರು, ನದಿ ತೀರ ಇತ್ಯಾದಿಗಳಿಂದ ಕೂಡಿದ ಸ್ಥಳಗಳಲ್ಲ. ಬಯಲು ಸೀಮೆಯ ಬೆಟ್ಟ, ಗುಡ್ಡ, ಹಸಿರಿಲ್ಲದೆ ಒಣಗಿದ ಪರಿಸರಗಳನ್ನು ಆಯ್ಕೆ ಮಾಡಿಕೊಂಡೆ. ಪ್ರಕೃತಿಯಲ್ಲಿರುವ ಸಮಸ್ತವೂ ಮುಖ್ಯವೆಂಬ ತಾತ್ವಿಕತೆ ನನ್ನದು. ನನ್ನ ಸಿನಿಮಾ ಕತೆಗಳು ಬಹುಪಾಲು ನಮ್ಮ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ದೇವರಾಯನ ದುರ್ಗ, ಚಿತ್ರದುರ್ಗ – ಇವೇ ಮುಂತಾದ ವಲಯಗಳಿಗೆ ಹೊಂದುತ್ತಿದ್ದ ವಸ್ತುವನ್ನು ಒಳಗೊಂಡಿದ್ದವು.ಬರಗೂರು ರಾಮಚಂದ್ರಪ್ಪ ಅವರ “ಕಾಗೆ ಕಾರುಣ್ಯದ ಕಣ್ಣು” ಆಯ್ದ ಅನುಭವಗಳ ಕಥನದ ಒಂದು ಬರಹ ನಿಮ್ಮ ಓದಿಗೆ + +byಬಿ.ಕೆ. ಸುಮತಿ|Jul 10, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ?ಡಾ. ಎಂ.ಎಸ್.‌ ಮೂರ್ತಿಯವರ “ಬೌಲ್‌” ಕಾದಂಬರಿಯ ಕುರಿತು ಬಿ.ಕೆ. ಸುಮತಿ ಬರಹ + +byಕೆಂಡಸಂಪಿಗೆ|Jul 1, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 2 Comments + +ಈ ಹೋರಾಟಗಳಲ್ಲೆಲ್ಲಿಯೂ ನನಗೆ ಪಶ್ಚಾತ್ತಾಪವಿರಲಿಲ್ಲ. ಹಾಗೆ ನೋಡಿದರೆ ಇದು ನಾನೇ ಆಯ್ದುಕೊಂಡ ಬದುಕು. ನನ್ನ ಬದುಕನ್ನು ಅಪ್ಪ ಅಮ್ಮನ ಮಡಿಲಿಗೆ ಹಾಕಲಿಲ್ಲ. ಪ್ರೇಮಿಸಿ ಮದುವೆಯಾಗಿ ನನ್ನ ಹಾದಿಯನ್ನು ನಾನೇ ಕಂಡುಕೊಂಡೆ. ಮನೋಹರ್ ಅವರನ್ನು ಮದುವೆಯಾದ ಮೇಲೂ ಸಂಪೂರ್ಣವಾಗಿ ಅವರನ್ನು ಅವಲಂಬಿಸಕೂಡದು ಎಂಬ ತತ್ವ ನನ್ನದಿತ್ತು. ಅದಕ್ಕೆ ನೀರೆರೆದವರು ಮನೋಹರ್. ಅದೀಗ ಫಲ ಕೊಟ್ಟಿದೆ. ಯಾಕೆಂದರೆ ನಮ್ಮನ್ನು ನಾವು ನಂಬಿ ಮುನ್ನಡೆದಾಗ ಮಾತ್ರ ನಮಗೆ ಯಶಸ್ಸು ಸಿದ್ಧ ಎಂಬ ತತ್ವದಡಿ ಬದುಕಿದವಳು ನಾನು.ಭಾರತಿ ಹೆಗಡೆ ನಿರೂಪಣೆಯ ವೇದಾ ಮನೋಹರ ಜೀವನ ಪಯಣದ ಕೃತಿ “ಪಂಚಮವೇದ”ದ ಒಂದು ಅಧ್ಯಾಯ ನಿಮ್ಮ ಓದಿಗೆ + +byಕೆಂಡಸಂಪಿಗೆ|Jun 27, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ.ಮುನವ್ವರ್‌ ಜೋಗಿಬೆಟ್ಟು ಕಥಾಸಂಕಲನ”ಜಿನ್ನ್‌ ಮತ್ತು ಪರ್ಷಿಯನ್‌ ಕ್ಯಾಟ್‌”ಗೆ ಕೇಶವ ಮಳಗಿ ಬರೆದ ಪ್ರವೇಶಿಕೆ + +byಕೆಂಡಸಂಪಿಗೆ|Jun 20, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ!ಎ.ಎನ್. ಪ್ರಸನ್ನ ಕಥಾ ಸಂಕಲನ “ದಾಸವಾಳ” ಕುರಿತು ಡಾ. ವಿಜಯಾ ಬರಹ + +byಕೆಂಡಸಂಪಿಗೆ|Jun 17, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +“ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ/ಪ್ರತಿಯೊಬ್ಬರೂ ಒಂಟಿ!’ ಎನ್ನುವ ಅಖೈರು ಸತ್ಯ ಇಷ್ಟು ಬೇಗನೆ ಕೈಗೆ ಬಂತೆ ಅಚ್ಚರಿಯನ್ನುಂಟು ಮಾಡುತ್ತದೆ. ಬಹಳಷ್ಟು ಸಲ ಇಲ್ಲಿನ ಕವಿತೆ ಆಂತರ್ಯಕ್ಕೆ ಲಗ್ಗೆ ಇಟ್ಟುದೇ ಆಗಿದೆ ಅನ್ನಿಸಿತು. ಹಾಗಿರುವಾಗ ಅದು ಗುಂಗಾಗಿ ಕಾಡುತ್ತಿದೆಯಾ ಎಂತಲೂ ಗುಮಾನಿಯಾಗಿ ಕಾಡುವಂತೆ ಇಲ್ಲಿನ ಸಾಲುಗಳು ಕಾಣುತ್ತವೆ.ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಆನಂದ ವಿ. ಪಾಟೀಲ ಬರಹ + +byತೇಜಸ್ವಿನಿ ಹೆಗಡೆ|Jun 15, 2023|ಪುಸ್ತಕ ಸಂಪಿಗೆ| 0 Comments + +ಆಗಿಹೋದ ದುರಂತಗಳು, ದೌರ್ಜನ್ಯಗಳು ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಮಾನವೀಯತೆಯ ಮಹತ್ವವನ್ನು, ವಿಶಾಲ ಮನೋಭಾವದ ಸೌಂದರ್ಯವನ್ನು, ಮಹತ್ವವನ್ನು, ಜೀವನಧರ್ಮವನ್ನು ವರ್ತಮಾನಕ್ಕೆ ಮಾತ್ರವಲ್ಲ ಭವಿಷ್ಯಕ್ಕೂ ಒಂದು ಪಾಠವನ್ನು ಕೊಡುವಂತಿರಬೇಕು. ಇತಿಹಾಸದ ಅಧ್ಯಯನವು ನಮ್ಮ ಅರಿವಿನ ಹೆಚ್ಚಳಿಕೆ ಮತ್ತು ಪಾಠಕ್ಕೆ ಮಾಪನವಾಗಬೇಕೇ ಹೊರತು ನಾವಿಲ್ಲದಿದ್ದ ಕಾಲಘಟ್ಟದಲ್ಲಿ ಯಾರೋ ದಾಖಲಿಸಿರುವ ವಿಷಯಗಳಿಂದ ಉದ್ರಿಕ್ತರಾಗಿ, ಭಾವೋದ್ವೇಗವನ್ನು ಹೊಂದಿ ಶೋಕ ಸಾಗರದಲ್ಲಿ ಮುಳುಗಿಯೋ, ದ್ವೇಷದ ಉರಿಯಲ್ಲಿ ಬೆಂದೋ ಅಂಧತ್ವವನ್ನು ಹೊಂದಿದರೆ ಮತ್ತೆ ಅದೇ ಇತಿಹಾಸ ಮರುಕಳಿಸುವ ಸಾಧ್ಯತೆಯೇ ಹೆಚ್ಚು!ನವೀನ್‌ ಗಂಗೋತ್ರಿ ಕಥಾಸಂಕಲನ “ಕಥಾಗತ”ದ ಕುರಿತು ತೇಜಸ್ವಿನಿ ಹೆಗಡೆ ಬರಹ \ No newline at end of file diff --git a/Kenda Sampige/article_87.txt b/Kenda Sampige/article_87.txt new file mode 100644 index 0000000000000000000000000000000000000000..e39df4a02270572a8e2f4b821b009f65698f1f94 --- /dev/null +++ b/Kenda Sampige/article_87.txt @@ -0,0 +1,27 @@ +ಘಾಂದ್ರೂಕ್‌ನ ಕಥಾನಾಯಕ ಸಿದ್ಧಾರ್ಥ ಅಂತರರಾಷ್ಟ್ರೀಯ ಮಟ್ಟದಲ್ಲಿ ಒಂದು ಸಾಫ್ಟ್‌ವೇರ್‌ ಕಂಪನಿಯನ್ನು ಸ್ಥಾಪಿಸಿ ಹೆಸರು ಹಣವನ್ನು ಗಳಿಸಿದರೂ, ತನ್ನದೇ ಕಾರ್ಪೋರೆಟ್ ಕಂಪನಿಯು ತನ್ನ ಕೈ ಮೀರಿ ಹೋದಾಗ ಜರ್ಜರಿತಗೊಳ್ಳುತ್ತಾನೆ. ಇದಲ್ಲದೆ ಅವನ ಖಾಸಗೀ ಜೀವನದಲ್ಲಿ ಆದಂತಹ ಕೆಲವು ಘಟನೆಗಳು ಅವನನ್ನು ಮತ್ತಷ್ಟು ಕುಗ್ಗಿಸುತ್ತವೆ. ಅಮ್ಮನಂತಹ ಅಪ್ಪನನ್ನು ಕಳೆದುಕೊಳ್ಳುತ್ತಾನೆ. ಮದುವೆ ಮುರಿದು ಬೀಳುತ್ತದೆ. ಇದು ಅವನನ್ನು ತುಂಬ ತೀವ್ರವಾದ ಭ್ರಮನಿರಸನನ್ನಾಗಿ ಮಾಡುತ್ತದೆ. ಇದರಿಂದಾಗಿ ಕ್ರಮೇಣ ಖಿನ್ನತೆಯು ಆವರಿಸಿಕೊಳ್ಳುತ್ತದೆ. ಕಂಪನಿಯನ್ನು ಕಟ್ಟಲು ಸಾಥ್ ಕೊಟ್ಟ ತನ್ನ ಖಾಸಗೀ ಸ್ನೇಹಿತರಿಗೂ ಹೇಳದೆ ಹಿಮಾಲಯದ ಕಡೆ ಮುಖ ಮಾಡುತ್ತಾನೆ. ಈ ಪ್ರಯಾಣದಲ್ಲಿ ಅಂದರೆ ಹಿಮಾಲಯದ ಸನ್ನಿಧಿಯಲ್ಲಿ ಅವನಿಗೆ ಸೋಫಿಯಾ ಎನ್ನುವ ಸೂಜಿಮಲ್ಲಿಗೆಯಂತಹ ಹೆಣ್ಣಿನ ಸ್ನೇಹ ಅವನ ಬದುಕಿನಲ್ಲಿ ಹೊಸ ಅಲೆಗಳನ್ನು ಏಳಿಸುತ್ತದೆ. + +(ಸತೀಶ್‌ ಚಪ್ಪರಿಕೆ) + +ಸಿದ್ದಾರ್ಥನಿಗೆ ಬದುಕಿನ ತೀವ್ರತೆ ಮತ್ತು ಸೌಂದರ್ಯ ಅರ್ಥ ಆಗಿದ್ದು ಸೋಫಿಯಾಳ ಸ್ನೇಹದಲ್ಲಿ ಮತ್ತು ಸಾನಿಧ್ಯದಲ್ಲಿ. ಕೊರೆವ ಹಿಮಾಲಯದ ಸನ್ನಿಧಿಯಲ್ಲಿ ಅವಳ ಬೆಚ್ಚನೆಯ ಸ್ಪರ್ಶದಲ್ಲಿ. ಅದು, ಅವಳಿಗೆ ಕಾಮವಲ್ಲ, ಪ್ರೇಮವಲ್ಲ, ಕಾಮವೂ ಹೌದು, ಪ್ರೇಮವೂ ಹೌದು. ಮತ್ತು ಅದರಾಚೆಯ ಅವ್ಯಕ್ತ ಅನುಭೂತಿಯೂ ಹೌದು. ಸೋಫಿಯಾಳಿಗೆ ಕಾಮ ಎನ್ನುವುದು ಆತ್ಮವಂಚಕ ಕರ್ಮಠರ ದೃಷ್ಟಿಯಲ್ಲಿನ ಅನೈತಿಕ ಕ್ರಿಯೆಯಲ್ಲ. ಅದು ಬದುಕಿನ ಆದಿಮವಾದದ್ದು. ಅಂದರೆ ಮೊದಲಲ್ಲ, ಮೂಲ. ಸೃಷ್ಟಿಯ ಸೌಂದರ್ಯದ ಸೆಲೆ. ಜೀವದ ನೆರಳು. ಅಂದರೆ ವೇರ್ ಲೈಫ್ ಈಸ್, ದೇರ್ ಇಟ್ ಈಸ್. ಕಾಮಕ್ಕೂ ಸೌಂದರ್ಯಕ್ಕೂ ಅಲೌಕಿಕವಾದ ಸಂಬಂಧ. ಸಮಾಜದ ಗ್ರಹೀತಗಳು, ಅದನ್ನೊಂದು ಮೈಲಿಗೆ ಎನ್ನುವ ಮಟ್ಟಕ್ಕೆ ಕೊಂಡೊಯ್ದು ಅರ್ಥೈಸುವಂತಹದ್ದಲ್ಲ. ಬಹುಷಃ ಕಾಮದ ಅರಿವಿನಲ್ಲಿಯೇ ಮನುಷ್ಯನ ಮುಕ್ತತೆ, ಸ್ವಚ್ಛಂದತೆ ಇವೆ ಅನ್ನಿಸುತ್ತೆ. ಯಾಕೆಂದರೆ ಅದೊಂದು ಅನುಭೂತಿಯ ಅನುಭವವನ್ನು ನೀಡುವಂತಹ ಸೌಂದರ್ಯ. ಅವಳದು ಅಷ್ಟರಮಟ್ಟಿಗೆ ಮುಕ್ತವಾದ ಮನಸ್ಸು. Very open-minded she is. ಅದಕ್ಕಾಗಿಯೇ ಅವಳು ತೀವ್ರವಾಗಿ ಅನುಭವಿಸುತ್ತಾಳೆ. ಅದು ಹೇಗೆ, ಲಿಂಗತಾರತಮ್ಯವಿಲ್ಲದೆ! ತರುಣಿ ಅರಬ್ ಕಾದಂಬರಿಕಾರ್ತಿಯ ಜೊತೆ ಅವಳು ಸಿರಿಯಾದಲ್ಲಿ ದೈಹಿಕವಾಗಿ ಸಮಾಗಮವಾಗುವುದರಲ್ಲಿ ಕಾಣಬಹುದು. ಅವರ ಕೂಡುವಿಕೆ ಕೇವಲ ಕಾಮವಾಗಿ ಕಾಣದು. ಮತ್ತೂ ಅವಳದು ಪಾಪಪ್ರಜ್ಞೆಯಿಲ್ಲದ ಕಾಮ. ಅಲ್ಲಿ ಮಡಿವಂತಿಕೆ, ವರ್ಜಿನಿಟಿಗಳಿಗೆ ಜಾಗವೇ ಇಲ್ಲ. ಆ ಕಾರಣದಿಂದಾಗಿಯೇ ಅವಳು ಸಮಾಜದ ಮತ್ತು ನಾಗರೀಕತೆಯ ಸೋಗಲಾಡಿತನಗಳನ್ನು ಮತ್ತು ಹಿಪಕ್ರಸಿಯನ್ನು ತೀವ್ರತೆರನಾಗಿ ಟೀಕಿಸುವುದು. ಅದನ್ನು ಅವಳು ಸಿದ್ಧಾರ್ಥನ ಜೊತೆ ಧರ್ಮದ ಬಗ್ಗೆ, ರಾಜಕೀಯದ ಬಗ್ಗೆ, ಕೌಟುಂಬಿಕ ಮೌಲ್ಯಗಳ ಬಗ್ಗೆ, ದೇವರ ಬಗ್ಗೆ ಚರ್ಚಿಸುವಂತಹ ಸಂದರ್ಭದಲ್ಲಿ ಕಾಣಬಹುದು. ಸೌಂದರ್ಯವೆನ್ನುವುದು ಡಿ.ಎಚ್. ಲಾರೆನ್ಸ್ ತನ್ನ ಒಂದು ಬರಹದಲ್ಲಿ ಹೇಳುವಂತೆ ತುಂಬ ನಿಗೂಢವಾದಂತಹದ್ದು. ಅದು ಅಷ್ಟು ಸುಲಭಕ್ಕೆ ಕಾಣುವುದಿಲ್ಲ, ಕಾಣಿಸಿಕೊಳ್ಳುವುದಿಲ್ಲ. ಅದಕ್ಕೆ ಎಲ್ಲ ಬಂಧಗಳನ್ನು ಮೀರಿದ ಸ್ವಚ್ಛಂದವಾದ ಮನಸ್ಸು ಬೇಕಾಗುತ್ತದೆ. ಬದುಕಿಗೆ ಅಷ್ಟರಮಟ್ಟಿಗೆ ತೆರೆದುಕೊಂಡಿದ್ದರೂ ಅವಳು ನಿಜವಾದ ಸೌಂದರ್ಯವನ್ನು ಕಾಣುವುದು ಸಿದ್ಧಾರ್ಥನಲ್ಲಿ. ಜಾನ್ ಡನ್ ಒಂದು ಕವಿತೆಯಲ್ಲಿ ಹೇಳುತ್ತಾನಲ್ಲ; ‘ನಾನು ಪ್ರತಿ ಹೆಣ್ಣಿನ ಸೌಂದರ್ಯದಲ್ಲಿ ಹಂಬಲಿಸಿದ್ದು ನಿನ್ನಲ್ಲಿರುವಂತಹ ಸೌಂದರ್ಯಕ್ಕಾಗಿ’ ಆ ಥರ ಅವಳು ಸಹ ಸಿದ್ಧಾರ್ಥನಂತಹ ಒಂದು ಸಾಂಗತ್ಯಕ್ಕಾಗಿ ಹಪಹಪಿಸಿರುವಳು. ಬದುಕಿನ ಸೌಂದರ್ಯ, ಆ ನಿಗೂಢವಾದ ಸೌಂದರ್ಯ, ಅದು ಪ್ರಕಟಗೊಂಡಾಗ ಹೊಮ್ಮುವ ಪ್ರಭೆಯಲ್ಲಿ ಬೆಳಗಬೇಕು, ಉರಿದು, ಬೂದಿಯಾಗದೆ. ಅವಳದು ಬದುಕಿನ ಸೌಂದರ್ಯದ ಬೆಳಗಿನಲ್ಲಿ ಮೀಯುವ ಬಯಕೆ. ಅವಳಿಕೆ ಕಾಮ ಮತ್ತು ಸೌಂದರ್ಯಗಳ ನಡುವೆ ಅಂತಹ ವ್ಯತ್ಯಾಸವಿಲ್ಲ. ಅದು ಹೇಗೆ ಅಂದರೆ ಬದುಕು ಮತ್ತು ಪ್ರಜ್ಞೆ ಒಂದರೊಳಗೊಂದು ಮಿಳಿತಗೊಂಡಿರುತ್ತಾವಲ್ಲ ಹಾಗೆ. ಮತ್ತು ಸೌಂದರ್ಯವೆಂದರೆ ಅದೇನು ಧುತ್ತನೆ ಸಿಗುವಂತಹದ್ದೂ ಅಲ್ಲ, ಅದೊಂದು ಕೊನೆಯಿರದ ಹುಡುಕಾಟ ಮತ್ತು ಅನುಭವ. ಅದನ್ನು ಒಂದು ಚೌಕಟ್ಟಿನಲ್ಲಿ ಇಟ್ಟು ಅದನ್ನೆ ಹೊರಗಡೆಯಿಂದ ನೋಡುತ್ತ ಇರಲು ಆಗುವುದಿಲ್ಲ. ಬದಲಿಗೆ ಅದರೊಟ್ಟಿಗೆ ಬೆರೆಯಬೇಕಾಗಿರುವಂತಹದ್ದು. ಸೋಫಿಯಾ ಬದುಕಿದ್ದೂ ಹಾಗೇ, ಅವಳಿಗೆ ಈಗ ಸಿದ್ಧಾರ್ಥನಲ್ಲಿ ಲೀನವಾಗಿ ಬದುಕಿನಲ್ಲಿ ಬೆಳಕನ್ನು, ಬೆಳಗನ್ನು ಕಾಣುವ ಪ್ರೀತಿಯ ಹಂಬಲ. ಅವಳು ಅವನನ್ನು ಬಯಸುವುದು ತುಂಬಾ ಭಾವುಕಳಾಗಿ ಅಲ್ಲ, ಮತ್ತು ಪಕ್ಕಾ ಪ್ರಾಕ್ಟಿಕಲ್ ಆಗಿಯೂ ಅಲ್ಲ. ಬದುಕಿನ ಸೆಳೆತ ಅವನಲ್ಲಿ ಕಾಣುವಂತೆ ಮಾಡಿದೆ. ಅವಳದು ತನ್ನ ಸ್ವಚ್ಚಂದ ಮನದ ಮಾತು. ಅವಳೇ ಹೇಳುವಂತೆ, (ಇದನ್ನು ಪತ್ರದಲ್ಲಿ ಬರೆದು ಇಟ್ಟು ಹೋಗಿರುತ್ತಾಳೆ, ಅದನ್ನು ಸಿದ್ಧಾರ್ಥ ನಂತರ ಓದುತ್ತಾನೆ) ನಿನ್ನೊಂದಿನಗಿನ ನನ್ನ ಸಂಬಂಧ ಪ್ರೇಮ-ಕಾಮ ಎಲ್ಲವನ್ನೂ ಮೀರಿದ್ದು ಸಿಧ್! ಅವಳದು ದಿವ್ಯ ಪ್ರೇಮದ ಯಾಚನೆ. ಆದರೆ ಅವನಿಗೆ ಇನ್ನೂ ಸ್ಪಷ್ಟತೆ ಇಲ್ಲ. ಯಾಕೆಂದರೆ ಅವನ ಮುಂದೆ ನಾಲಕ್ಕೂ ಆಯ್ಕೆಗಳಿದ್ದಾವೆ: (೧) ನಮೋ ಬುದ್ಧಕ್ಕೆ ಹೋಗಿ ಸೋಫಿಯಾಳ ಜೊತೆ ಬದುಕನ್ನು ಕಟ್ಟಿಕೊಳ್ಳುವುದು (೨) ತನ್ನ ಹುಟ್ಟೂರು ಹೊಸ್ಮನೆಗೆ ಹೋಗಿ ತನ್ನ ಸಂಬಂಧಿಕರ ಜೊತೆ, ಮತ್ತು ಇತ್ತೀಚಿಗೆ ಗೊತ್ತಾಗಿರುವ ತನ್ನ ಮಲ ತಾಯಿ, ತಂಗಿ ಜೊತೆ ಬಾಳುತ್ತ ಬದುಕಿನ ಸಾರ್ಥಕ ಕ್ಷಣಗಳನ್ನು ಕಳೆಯುವುದು, (೩) ತನ್ನ ಸ್ನೇಹಿತರ ಜೊತೆಯಲ್ಲಿ ಮತ್ತೆ ಹೊಸದಾದ ಕಂಪನಿಯನ್ನು ಸ್ಥಾಪಿಸಿ ಮತ್ತೆ ಹೊಸ ಬಗೆಯ ಸಾಹಸಕ್ಕೆ ಕೈ ಹಾಕುವುದು ಮತ್ತು (೪) ಅಂತರರಾಷ್ಟ್ರೀಯ ಕಂಪನಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಅವಕಾಶವನ್ನು ಒಪ್ಪಿಕೊಳ್ಳುವುದು. + +ಕಾದಂಬರಿಕಾರರು ಇದಕ್ಕೆ ಯಾವ ಸ್ಪಷ್ಟನೆಯನ್ನೂ ಕೊಡುವುದಿಲ್ಲ. ಇದು ಕಾದಂಬರಿಕಾರನ ಸೋಲು ಇರಬಹುದು. ಅಥವಾ ಸಿದ್ಧಾರ್ಥನ ಮನೋಸ್ಥಿತಿಯನ್ನು ತೋರಿಸುತ್ತಿರಬಹುದು. ಕಾದಂಬರಿಯು ಸಿದ್ಧಾರ್ಥನು ಧವಳಗಿರಿಯನ್ನು ನೋಡುವುದರ ಮೂಲಕ ಕೊನೆಯಾದರೂ ಓದುಗರಲ್ಲಿ ಮುಂದುವರೆಯುತ್ತದೆ. ಟಿ. ಎಸ್. ಎಲಿಯಟ್‌ನ ಒಂದು ಮಾತಿದೆ ನಾವು ಎಲ್ಲಿಂದ ಆರಂಭಮಾಡುತ್ತೇವೆಯೋ ಮತ್ತೆ ಅಲ್ಲಿಗೆ ಬಂದು ತಲುಪುತ್ತೇವೆ ಎನ್ನುವ ಅರ್ಥಬರುವಂತಹದ್ದು. ಸಿದ್ಧಾರ್ಥನ ಬದುಕೂ ಸಹ ಹಾಗೆ ಕಾಣುತ್ತದೆ. ಮತ್ತೂ ಅವನು ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳಲಿ, ಆದರೆ ಅವನ ಮುಂದಿನ ಜೀವನ ಸೋಫಿಯಾಳಿಲ್ಲದೆ ಇರುವುದಿಲ್ಲ. ಯಾಕೆಂದರೆ ಅವರಿಬ್ಬರ ನಡುವೆ ನಿಜ ಪ್ರೀತಿ ಅಂಕುರಿಸಿದೆ. ಮತ್ತು ಇಬ್ಬರೂ ಸಹ ಅದನ್ನು ಜತನದಿಂದ ತಮ್ಮ ಹೃದಯದಲ್ಲಿ ಕಾಯ್ದಿಟ್ಟುಕೊಂಡು ಸಾಗುವರು. ಅವರ ನಡುವೆ ಅಂಕುರಿಸಿರುವ ಪ್ರೀತಿ ಸೆಟ್ಲ್ ಆಗುವಂತಹದ್ದಲ್ಲ, ಅದೊಂದು ನಿಲ್ಲದ ಪಯಣ. ಇಬ್ಬರೂ ತಮ್ಮ ಒಳಗನ್ನೂ ಬಿಚ್ಚಿಕೊಳ್ಳುತ್ತ ಮತ್ತಷ್ಟು ಹತ್ತಿರವಾಗುತ್ತ ಸಾಗುವುದು. ಪ್ರೀತಿಯ ಬೆಳಕಲ್ಲಿ ಅವರಿಬ್ಬರ ನಡುವೆ ಇನ್ನೂ ಕಾಣದ ಕಂದಕಗಳು, ಕಪ್ಪು ಕುಳಿಗಳು ಕಾಣಬೇಕಿದೆ. ಮತ್ತೂ ಇಬ್ಬರೂ ಪರಸ್ಪರ ತಮ್ಮ ನಡುವೆ ಇರುವ ಭಿನ್ನತೆಗಳನ್ನು ಇನ್ನೂ ಕಾಣುವುದು ಬೇಕಾದಷ್ಟಿದೆ. ಅದಕ್ಕೆ ಅವರು ರೆಡಿಯಾಗಿದ್ದಾರೆ ಕೂಡ. ಅವನು ಯಾವ ನಿರ್ಧಾರವನ್ನು ತೆಗೆದುಕೊಂಡರೂ ಸೋಫಿಯಾಳನ್ನು ಬಿಟ್ಟು ಇಮ್ಯಾಜಿನ್ ಮಾಡಲಾರ. ಅಥವಾ ತೀವ್ರತೆರನಾಗಿ ಘಟಿಸುತ್ತಿರುವ ಈ ಬದುಕಿನಲ್ಲಿ ಮತ್ತೆ ಯಾವ ಸುಳಿಗಳೂ ಅವರನ್ನು ಎಳೆದುಕೊಳ್ಳಬಹುದೋ. ಅದು ಊಹೆ. ಹೌದು. ಅವರು ಜೊತೆಗೆ ಹೋಗುವುರು ಎನ್ನುವುದೂ ಸಹ ಊಹೆಯೇ. ಕಾದಂಬರಿಗೆ ಸೋಫಿಯಾಳೇ ನ್ಯೂಕ್ಲಿಯಸ್ ಇದ್ದಂತೆ. ಆದರೆ ಅವಳ ಕುಟುಂಬದ ಹಿನ್ನಲೆಯನ್ನು ಕಾದಂಬರಿಕಾರರು ಯಾವ ಹಾಲಿವುಡ್ ಅಥವಾ ಬಾಲಿವುಡ್‌ಗಿಂತಲೂ ಮಿಗಿಲಾಗಿ ಸ್ವಲ್ಪ ಸೆನ್ಸೇಷನಲ್ ಅನ್ನುವ ರೀತಿಯಲ್ಲಿ ಚಿತ್ರಿಸಿದ್ದಾರೆ. ಈ ಭಾಗಗಳು ಜನಪ್ರಿಯ ಕಾದಂಬರಿಗಳ ಶೈಲಿಯಂತೆ ಕಾಣುತ್ತವೆ. ಈ ಕಾದಂಬರಿಯ ಚೌಕಟ್ಟಿನಲ್ಲಿಯೇ ಯೋಚಿಸಿ, ಅದು ಅವಳ ನಿಜ ಬದುಕಿನ ನೈಜ ಚಿತ್ರಣ ಅಂತ ಅಂದುಕೊಂಡರೂ ನಿರೂಪಣೆಯಲ್ಲಿ ಅದು ನಾಟಕೀಯ ಮತ್ತು ಅಸಹಜವಾಗಿಯೇ ಕಾಣುತ್ತದೆ. ಹಾಗೆ ನೋಡಿದರೆ ಇಡೀ ಕತೆಗೆ ಸಿಕ್ಕಿರುವ ನಿರೂಪಣೆಯ ರಚನೆ ಈ ಕಡೆ ಪ್ರವಾಸಕಥನವೂ ಅಲ್ಲದ, ದಿನಚರಿಯ ಥರವೂ ಅಲ್ಲದ, ಸಂವಾದವೂ ಅಲ್ಲದ ಮತ್ತೂ ಎಲ್ಲವನ್ನು ಒಳಗೊಂಡು ಹೊಸ ಬಗೆಯ ನಿರೂಪಣೆಯಾಗಿ ಕಾದಂಬರಿಕಾರರು ಕಟ್ಟಲು ಹೊರಟಿದ್ದರೂ ಅದು ತನ್ನ ಸಾಫಲ್ಯತೆಯನ್ನು ಕಾಣದೇ ಇರುವುದನ್ನು ನಿಚ್ಚಳವಾಗಿ ಕಾಣಬಹುದು. + +ಕಾದಂಬರಿಗೆ ಅನುಭವವೇ ಅಂದರೆ ವಸ್ತುವೇ ಅಂದರೆ ಕತೆಯೇ ಮುಖ್ಯವಾದರೂ ರಚನೆಯನ್ನು ನಿರ್ಲಕ್ಷಿಸುವುದಕ್ಕೆ ಆಗುವುದಿಲ್ಲ. ಕಾದಂಬರಿ ಪ್ರಕಾರದ ರಚನೆಯ ಬಗ್ಗೆಯೇ ಚರ್ಚೆಗಳಾಗಿರುವುದನ್ನು ಗಮನಿಸಬಹುದು. ಫಾಸ್ಟರ್‌ನಿಂದ ಹಿಡಿದು ಕುಂದೇರ ಮತ್ತು ಇತ್ತೀಚಿನ ಹರುಕಿ ಮುರಕಮಿ ತನಕ. ಲಂಕೇಶರು ಹೇಳುವಂತೆ ರಚನೆ ಎನ್ನುವುದು ಬಾಹ್ಯ ಹೊದಿಕೆ ಆಗಬಾರದು, ಅದು ಕತೆಯ ಜೊತೆಗೆಯೇ ಹೊಮ್ಮಬೇಕು. ಇದು ನಿಜ. ಯಾಕೆಂದರೆ ಕುಸುಮಬಾಲೆಯ ವಸ್ತುವನ್ನು ಮತ್ತು ಅದರ ರಚನೆಯನ್ನು ಬೇರ್ಪಡಿಸಲು ಸಾಧ್ಯವಾಗದು. ಡಬ್ಲ್ಯೂ.ಬಿ.ಯೇಟ್ಸ್ ಹೇಳುವಂತೆ ‘ನೃತ್ಯಗಾರ್ತಿಯನ್ನು ನೃತ್ಯದಿಂದ ಹೇಗೆ ಬೇರ್ಪಡಿಸಲು ಸಾಧ್ಯ?’ ಅದೇ ರೀತಿ. ಮಾರ‍್ಕ್ವೇಜ್‌ನ ಸಾಲಿಟ್ಯೂಡ್‌ಗು ಅನ್ವಯಿಸುತ್ತದೆ. ಈ ಕಾದಂಬರಿಯಲ್ಲೂ ಕತೆಯೂ ಹಿಂದಕ್ಕೆ ಸರಿಯುತ್ತ ಮುಂದಕ್ಕೆ ಜಿಗಿಯುತ್ತದೆ. ಆದರೆ ಅದು ಸಾವಯವ ಬಂಧವಾಗಿ ಕಾಣದೆ ನಿರೂಪಣೆ ತುಂಬ ಕಾನ್ಸಿಯಷ್ ಆಗುತ್ತೆ. ಮತ್ತೂ ಹಿಮಾಲಯದ ತಪ್ಪಲಿನಲ್ಲಿ ನಡೆಯುವ ಈ ಕಾದಂಬರಿಗೆ ಲೇಯರ್ಡ್ ಎನ್ನಬಹುದಾದ ಚಿತ್ರಣಗಳ ಒಳಗೆ ಪಾತ್ರಗಳನ್ನು ಇಟ್ಟು ತನ್ನಿಂದ ತಾನೇ ಸೈಕಾಲಜಿಕಲ್ಲಾಗಿ ಪಾತ್ರಗಳ ವ್ಯಕ್ತಿತ್ವಗಳು ಬಿಚ್ಚಿಕೊಳ್ಳುವಂತಹ ಸಾಧ್ಯತೆ ಇತ್ತು. ಆದರೆ ಕಾದಂಬರಿಕಾರರು ವಿವರಣೆಗಿಂತಲೂ ಹೆಚ್ಚಿನದಾಗಿ ವಿಶ್ಲೇಷಣಾತ್ಮಕವಾದ ಕಥನವನ್ನು ನಂಬಿಕೊಂಡಿರುವುದು ಇಡೀ ಕಾದಂಬರಿಯ ಉದ್ದಕ್ಕೂ ಕಾಣುತ್ತದೆ. ನಿಜ. ಪಾತ್ರಗಳ ಮುಖಾಮುಖಿಯಲ್ಲಿ ಆಸ್ಫೋಟಗೊಳ್ಳುವ ಸತ್ಯವನ್ನು ಕಾಣುವುದೇ ಒಂದು ಟ್ರಾನ್ಸೆಂಡೆಂಟಲ್ ಆದಂತಹ ಅನುಭವ. + +ಮಾತು ಮತ್ತು ಕತೆಗಳೇ ಕಾದಂಬರಿಯ ಶಕ್ತಿ ಆಗಿ ಪರಿಣಮಿಸಿರುವುದನ್ನು ಗಮನಿಸದೇ ಇರಲು ಆಗದು. ಕತೆಗಳು ಹಿಂದಕ್ಕು ಮುಂದಕ್ಕು ಹೋಗುವ ಶೈಲಿ ಹಿಂದುಸ್ತಾನಿ ಸಂಗೀತದ ಯಾವುದೋ ಹೊಸ ರಾಗವೊಂದು ಹೊಮ್ಮಿದಂತೆ ಸಾಗುತ್ತದೆ. ಅದು ಕಾಲದ ಚಲನೆಯಾಗಿ ಓದುಗರನ್ನು ತನ್ನ ಜೊತೆ ಎಳೆದುಕೊಳ್ಳುತ್ತದೆ. ಕ್ಯಾಂಟರ್ ಬರಿ ಟೇಲ್ಸ್‌ನಲ್ಲಿ ಥಾಮಸ್ ಬಕೆಟ್‌ನ ಪುಣ್ಯಕ್ಷೇತ್ರಕ್ಕೆ ಯಾತ್ರೆ ಕೈಗೊಂಡ ಯಾತ್ರಿಕರು ಒಬ್ಬೊಬ್ಬರು ಒಂದೊಂದು ಬದುಕಿನ ಅನನ್ಯ ಅನುಭವದ ಕತೆಯನ್ನು ಹೇಳುವಂತೆ ಇಲ್ಲಿ ಸಿದ್ಧಾರ್ಥ ಮತ್ತು ಸೋಫಿಯಾ ತಮ್ಮ ಬದುಕಿನ ಜೊತೆ ತಮ್ಮ ಬದುಕನ್ನು ಮತ್ತು ಅದನ್ನು ಆವರಿಸಿರುವ ವ್ಯಕ್ತಿಗಳ ಕತೆಯನ್ನು ಹೇಳುತ್ತ ಹೋಗಿರುವ ಪರಿ ಚುಂಬಕ ಶಕ್ತಿಯಂತೆ ಸೆಳೆಯುತ್ತದೆ. ಅದಕ್ಕೆ ಬಳಕೆಯಾಗಿರುವ ಭಾಷೆಯೂ ಸಹ ಕಾರಣ. + + + +ಡಿ.ಆರ್. ನಾಗರಾಜ್ ಅವರು ಅನಂತಮೂರ್ತಿಯವರು ಭವ ಕಾದಂಬರಿಯ ಕುರಿತು ಆಡಿದ್ದಂತಹ ಮಾತುಗಳನ್ನು ಈ ಕಾದಂಬರಿಗೆ ಅನ್ವಯಿಸಿ ಮುಖ್ಯವಾಗಿ ಸೋಫಿಯಾಳಿಗೆ ಅನ್ವಯಿಸಿ ಹೇಳುವುದಾದರೆ ಸೋಫಿಯಾ ಇಲ್ಲಿ ಜೀವನದಲ್ಲಿನ ಪೊಳ್ಳು ನೈತಿಕ ಮೌಲ್ಯಗಳನ್ನುತೀವ್ರವಾಗಿ ಟೀಕಿಸುತ್ತ ಬದುಕನ್ನು ಪ್ರೀತಿ ಮತ್ತು ವಿನಮ್ರತೆಗಳಿಂದ ತುಂಬಿಕೊಂಡಿರುವಂತೆ ಕಾಣಲು ಪ್ರಯತ್ನಪಡುತ್ತಾಳೆ. ಅವಳು ಧರ್ಮದ ಬಗ್ಗೆ ಮತ್ತು ಪ್ರಸ್ತುತ ಜಾಗತಿಕ ರಾಜಕೀಯ ಸಂದರ್ಭಗಳನ್ನು ಅರ್ಥೈಸುವ ಪರಿ ಓದುಗರಲ್ಲಿ ಬೆರಗನ್ನು ಹುಟ್ಟಿಸುತ್ತದೆ. ಮಧ್ಯ ಪ್ರಾಚ್ಯದ ಅಂತರ್ ಕಲಹದ ಪರಿಣಾಮವಾಗಿ ನಿರಾಶ್ರಿತರಾದವರಿಗೆ ಬದುಕನ್ನು ಕಟ್ಟಿಕೊಳ್ಳಲು ಸಹಾಯಮಾಡಲು ಶ್ರಮಿಸುತ್ತಿರುವ ವಿಶ್ವಸಂಸ್ಥೆಯ ಒಂದು ವಿಭಾಗದಲ್ಲಿ ಕೆಲಸಮಾಡುವ ಅವಳ ಬದುಕಿನ ಚಿತ್ರಣ ಒಂದು ಅದ್ಭುತ ಮಾನವೀಯ ಪತ್ರಿಕಾ ವರದಿಯಂತೆ ಕಾಣುತ್ತದೆಯೇ ಹೊರತು ಕಾದಂಬರಿಯ ಭಾಗವಾಗಿ ಉಳಿಯುವುದಿಲ್ಲ. ಅದು ಹೇಗೆ ಅಂದರೆ ಬಿ.ಬಿ.ಸಿ ಅಥವಾ ಅಲ್ಝಾಝೀರ ವಾಹಿನಿಗಳು ಬಿತ್ತರಿಸುವ ಮಧ್ಯಪ್ರಾಚ್ಯ ಯುದ್ಧದ ವರದಿಗಳಂತೆ ಕಾಣುತ್ತದೆ. + +ಪಾತ್ರಗಳ ವ್ಯಕ್ತಿಗತ ಚಿತ್ರಣಗಳ ಕುರಿತು ಈ ಕಾದಂಬರಿ ಆಸ್ಥೆಯನ್ನು ತೋರಿಸಿದರೂ ನವ್ಯ ಕಾದಂಬರಿಗಳಲ್ಲಿ ಕಂಡುಬರುವಂತಹ ಅಸ್ತಿತ್ವವಾದದ ಹುಡುಕಾಟವೇನು ಇಲ್ಲ. ಮತ್ತೂ ಕಾಮದ ಚಿತ್ರಣಗಳಿದ್ದರೂ ಇದು ನವ್ಯಕಾದಂಬರಿ ಅಲ್ಲ. ಮತ್ತೂ ಪೋಸ್ಟ್ ಮಾರ್ಡನ್ ಕಾದಂಬರಿ ಎಂದು ಅನ್ನಿಸಿಕೊಳ್ಳುವುದಕ್ಕೆ ಇದರ ನಿರೂಪಣೆ ಬಹುಸ್ತರೀಯ ನೆಲೆಯಲ್ಲಿ ಸಾಗುವುದಿಲ್ಲ. ಮತ್ತು ಪೋಸ್ಟ್ ಟ್ರೂಥ್ ಕಾಲ ಘಟ್ಟದ ವಿಕ್ಷಿಪ್ತ ರಾಜಕೀಯ ಸನ್ನಿವೇಶವನ್ನು -ಆ ಥರದ ಒಂದು ಸಾಧ್ಯತೆ ಇತ್ತು, ಆದರೆ ಆಶ್ಚರ್ಯಕರ ರೀತಿಯಲ್ಲಿ ಅದು ಇಲ್ಲಿ ಮಾಯವಾಗಿದೆ-ಚಿತ್ರಿಸುವ ಸತ್ಯೋತ್ತರ ಕಾದಂಬರಿಯೂ ಅಲ್ಲ. ಆದರೂ ಇದು ಈ ಕಾಲದ ಕಾರ್ಪೊರೇಟ್ ಜಗತ್ತಿನ ಒಳ ರಾಜಕೀಯ ಮತ್ತು ಆ ಲೋಕದ ವಿಲಕ್ಷಣ ಎಕನಾಮಿಕ್ಸನ್ನು ಬಿಚ್ಚಿಡುವ ಕಾದಂಬರಿ ಆಗುವ ಸಾಧ್ಯತೆಯಿಂದ ವಂಚಿತವಾಗಿರುವುದನ್ನು ಗಮನಿಸಿದಾಗ ನಿರಾಸೆ ಆಗುತ್ತದೆ. ಈಗಲೂ ವಿವೇಕ ಶಾನಭಾಗರ ಹುಲಿ ಸವಾರಿ ಕಾರ್ಪೊರೇಟ್ ಒಳಸುಳಿಗಳನ್ನು ನಿರುದ್ವಿಗ್ನವಾಗಿ ಚಿತ್ರಿಸಿರುವ ಅತ್ಯುತ್ತಮ ಕಾದಂಬರಿಯಾಗಿದೆ. ಆದರೆ ಘಾಂದ್ರೂಕ್‌ಗೆ ಅದರದೇ ಆದಂತಹ ಸೆಳೆತ ಇದೆ. ಅದು ಸೋಫಿಯ ಪಾತ್ರದ ಸಲುವಾಗಿ. ಆದರೂ ಆ ಮೋಹಕ ಪಾತ್ರ ಕನ್ನಡ ಕಾದಂಬರಿಯಲ್ಲಿ ಚಿತ್ರಿತವಾಗಿರುವ ದಿಟ್ಟ ಹೆಣ್ಣುಗಳ ಪಾತ್ರಗಳ ಜೊತೆ ನಿಲ್ಲದೆ ಇರುವುದು ವಾಸ್ತವ. ಮತ್ತು, ಇದರ ನಿರೂಪಣಾ ಶೈಲಿಯನ್ನು ಗಂಭೀರವಾದ ಅಧ್ಯಯನಕ್ಕೆ ಒಳಪಡಿಸುವ ಅವಶ್ಯಕತೆ ಇದೆ. ಯಾಕೆಂದರೆ ಈ ಕಾದಂಬರಿಯನ್ನು ಕೇವಲ ‘ವಿಷಯಾ’ಧಾವಂತದ ದೃಷ್ಟಿಯಿಂದ ನೋಡಿದರೆ ಸಾಲದು, ಅದರ ರಚನೆ, ವಿನ್ಯಾಸಗಳನ್ನು ಗಂಭೀರವಾಗಿ ಸಂಕಥನ ಮಾಡಿದರೆ ಒಂದು ಉತ್ಕೃಷ್ಟ ಕಾದಂಬರಿಗೆ ಇರಬೇಕಾದಂತಹ ಸ್ಪ್ರಕ್ಚರಲ್ ಕಾಂಪ್ಲೆಕ್ಸಿಟಿಯ ಕೊರತೆ ಕಾಣುತ್ತದೆ. ಯಾಕೆಂದರೆ, ರಚನೆ ಮತ್ತು ವಸ್ತುವನ್ನು ನಿಭಾಯಿಸಿರುವ ನಿಟ್ಟಿನಲ್ಲಿ ಔನ್ನತ್ಯವನ್ನು ಪಡೆಯುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾದಂತೆ ಕಾಣುವುದಿಲ್ಲ. + +ಘಾಂದ್ರುಕ್‌ ಎನ್ನುವ ಶೀರ್ಷಿಕೆ ಒಟ್ಟೂ ಕಾದಂಬರಿಯ ಸಂದರ್ಭದಲ್ಲಿ ರೂಪಕವಾಗಿ ಬರುವುದಿಲ್ಲ ಮತ್ತು ಅದು ತೀವ್ರವಾಗಿ ಕಾಡುವುದಿಲ್ಲ. ಸೋಫಿಯಾ ಮತ್ತವಳ ಹೈಕಿಂಗ್ ಮಾರ್ಗದರ್ಶಿ ಸೋನಮ್ ಅನ್ನಪೂರ್ಣ ಬೇಸ್ ಕಡೆ ತಮ್ಮ ಹೈಕಿಂಗ್ ಪಯಣವನ್ನು ಮುಂದುವರೆಸುತ್ತಾರೆ. ಸಿದ್ದಾರ್ಥ ಘಾಂದ್ರುಕ್‌ ಹಳ್ಳಿಯಲ್ಲಿಯೇ ಉಳಿಯುತ್ತಾನೆ. ಅವನಿಗೆ ಆ ನಾಲ್ಕರಲ್ಲಿ ಯಾವ ನಿರ್ಧಾರವನ್ನು ತೆಗೆದುಕೊಳ್ಳಲಾರದ ಗೊಂದಲಕ್ಕೆ ಸ್ಥಿತಿ. ಅದಕ್ಕೆ ಸೋಫಿಯ ‘ನಿನ್ನ ಮನಸ್ಸು ಈಗ ಗೊಂದಲದ ಗೂಡಾಗಿದೆಯೋ, ಹಾಗೆ ನನ್ನ ಮನಸ್ಸು ಕೊಡ ಕನಲಿದೆ, ನಾವಿಬ್ಬರೂ ನಮ್ಮದೇ ಹಾದಿಯಲ್ಲಿ ಒಂಟಿಯಾಗಿ ನಡೆದರೆ, ಸ್ವಯಂ ವಿಮರ್ಶೆ ಮಾಡಿಕೊಂಡರೆ ಮುಂದೆ ಯಾವ ದಾರಿಯಲ್ಲಿ ಹೆಜ್ಜೆ ಇಡಬಹುದು ಅನ್ನೋದು ಸ್ಪಷ್ಟವಾಗುತ್ತೆ. ನಾನು ತಾತ್ಕಾಲಿಕವಾಗಿ ಅನ್ನಪೂರ್ಣ ಬೇಸ್ ಕ್ಯಾಂಪ್‌ಗೆ ಹೋಗಿ ಬರುವೆ’ ಎಂದು ಹೇಳಿ ಹೊರಡುತ್ತಾಳೆ. ಸಿದ್ದಾರ್ಥ ಘಾಂದ್ರೂಕ್‌ನಲ್ಲಿ ಒಬ್ಬನೇ ಉಳಿದುಕೊಳ್ಳುತ್ತಾನೆ. + +ತನ್ನೊಳಗಿನ ಬದುಕಿನ ನಿರ್ಧಾರಗಳ ಯುದ್ಧವನ್ನು, ತೊಯ್ದಾಟವನ್ನು ಇಟ್ಟುಕೊಂಡೇ ಘಾಂದ್ರುಕ್‌ ಹಳ್ಳಿಯಲ್ಲಿನ ಬೆಟ್ಟವೊಂದನ್ನು ಏರಿ ಏರಿ ಹೋಗುತ್ತಾನೆ. ಅನ್ನಪೂರ್ಣ, ಹಿಮ್ಚುಲಿ, ಗಂಗಾಪೂರ್ಣ, ಮಚಾಪುಚಾರ ಶಿವರಾಗ್ರ, ಅವುಗಳನ್ನೆಲ್ಲ ಮೀರಿಸಿ ಸ್ಪಷ್ಟವಾಗಿ, ಸ್ಥಿರವಾಗಿ ನಿಂತಿದ್ದ ಧವಳಗಿರಿ ಅವನನ್ನು ಹೆಚ್ಚು ಆವರಿಸಿಕೊಳ್ಳುತ್ತದೆ. + + + +ಅಂದರೆ ಹಿಮಾಲಯ ಪರ್ವತ ಶ್ರೇಣಿಗಳ ತಪ್ಪಲಿನಲ್ಲಿನ ಪುಟ್ಟ ಗ್ರಾಮ ಘಾಂದ್ರುಕ್‌ನಲ್ಲಿ ಕಥಾನಾಯಕ ಸಿದ್ದಾರ್ಥನ ಬದುಕಿಗೆ ಯಾವ ಹೊಸ ಅರ್ಥವನ್ನು ಮತ್ತು ಸ್ಪಷ್ಟತೆಯನ್ನು ಕೊಟ್ಟಿತು ಎನ್ನುವುದನ್ನು ಕಾದಂಬರಿಯು ಸ್ಪಷ್ಟವಾಗಿ ಹೇಳದೆ ಅದನ್ನು ಓದುಗರ ಊಹೆಗೆ ಬಿಡುತ್ತಾರೆ. ನಿಜ ಧವಳಗಿರಿಯ ದರ್ಶನ ಅವನಿಗೆ ಒಂದು ಬಗೆಯ ಅವ್ಯಕ್ತ ನೆಮ್ಮದಿಯನ್ನು ಕೊಟ್ಟಿತೆಂದು ಭಾವಿಸಿದರೂ, ಅವನ ಮುಂದಿನ ಬದುಕಿನ ಹೆಜ್ಜೆಗಳು ಯಾವ ಕಡೆ ಎನ್ನುವುದನ್ನು ತೋರಿಸಲು ಕಾದಂಬರಿಯ ಶೀರ್ಷಿಕೆ ಘಾಂದ್ರುಕ್‌ ಒಂದು ಮಹತ್ವದ ರೂಪಕವಾಗಿ ಮೂಡಿಬಂದಿದೆಯಾ ಎನ್ನುವುದು ಪ್ರಶ್ನೆ. ಮತ್ತು ಕೊನೆಯದಾಗಿ ತುಸು ರೊಮ್ಯಾಂಟಿಕ್ಕಾಗಿ ಹೇಳುವುದಾದರೆ: ಸೋಫಿಯಾಳಂತಹ ಸೂಜಿಮಲ್ಲಿಗೆ ಕಾದಂಬರಿಯಿಂದಾಚೆ ಜಿಗಿದು, ವಾಸ್ತವದಲ್ಲಿ, ಕಾಣುವಂತಿದ್ದರೆ… + +ಹೊಸ ತಲೆಮಾರಿನ ಪ್ರತಿಭಾವಂತ ಕವಿ. ಊರು ಚಿತ್ರದುರ್ಗದ ಬಳಿಯ ಹರಿಯಬ್ಬೆ. ಈಗ ಮಡಿಕೇರಿಯಲ್ಲಿ ಇಂಗ್ಲಿಷ್ ಪ್ರಾದ್ಯಾಪಕ. ಝೆನ್ನದಿ ಇವರ ಪ್ರಮುಖ ಕವಿತಾ ಸಂಕಲನ. \ No newline at end of file diff --git a/Kenda Sampige/article_88.txt b/Kenda Sampige/article_88.txt new file mode 100644 index 0000000000000000000000000000000000000000..d527790d967d93fb7b884c5fe8a1b603077c3be3 --- /dev/null +++ b/Kenda Sampige/article_88.txt @@ -0,0 +1,49 @@ +“8 – 10 ಅಡಿ ಅಗಲದ ಕಾಲು ಹಾದಿಯಲ್ಲಿ ಸಹಸ್ರಾರು ಕುದುರೆಗಳು, ಕಾಲ್ನಡಿಗೆಯವರು, ಡೋಲಿಗಳು, ಬುಟ್ಟಿಗಳು, ಸಾಲುಗಟ್ಟಿರುತ್ತವೆ. ಬೆಟ್ಟದ ಮೇಲಿಂದ ಜಿನುಗಿಸುವ ನೀರಸ್ರೋತಗಳು, ಝರಿ, ಜಲಪಾತ, ಸಸ್ಯ ಸಂಪತ್ತು, ಪಕ್ಕದ ಕಣಿವೆಯಲ್ಲಿ ಹರಿಯುವ ಮಂದಾಕಿನಿ ನದಿ…. ನಡೆದು ಹೋಗುವವರು ಅಲ್ಲಿರುವ ಚೆಲುವನ್ನು ಆ ಬೆಟ್ಟದ ಒಲವನ್ನು ಅದರ ಪಿಸುಮಾತನ್ನು, ಕಿವಿಗೊಟ್ಟು ಮನದಣಿಯೆ ಆಲಿಸಬಹುದು ಆನಂದಿಸಬಹುದು…. + +ಗಾಳಿಯಲ್ಲಿ ಅದೆಂಥ ಸ್ವಚ್ಛತೆ, ನಿರ್ಮಲತೆ ಮೈಮನಸ್ಸನ್ನು ಹಗುರಾಗಿಸಿ ತನ್ನಂತೆ ತೇಲಿಸುವ ತನ್ಮಯತೆ ದೇಹ ಮನಸ್ಸುಗಳು ತಾದಾತ್ಮ್ಯ ಸಾಧಿಸಲು ನೆರವಾಗುವ ವಾತಾವರಣ ಸ್ವರ್ಗದಂತೆ. ಸತ್ಯಕ್ಕೇನಾದರೂ ರೂಪ ಕೊಡುವಂತಿದ್ದರೆ ಅದು ಹೀಗೇ ಇದ್ದೀತೇನೋ… ಅಷ್ಟು ನಿರ್ಮಲ ಸುಂದರ ರಮಣೀಯ…” (ಪು: 51) + +(ನೂತನ ದೋಶೆಟ್ಟಿ) + +“ಏನೂ ಇಲ್ಲವಾಗುವ ನಿರ್ವಾತ ಸ್ಥಿತಿಯ ಸಾಧನೆಗಾಗಿಯೇ ಅನೇಕ ಸಾಧುಸಂತರು ಸಾಧನೆಯ ಹಾದಿಯ ಪಯಣಿಗರು ಇಲ್ಲಿಗೆ ಬರುತ್ತಾರೆ…. ಸ್ವಾಮಿ ಯೋಗಾನಂದರ “ಅನ್ ಆಟೋಬಯೋಗ್ರಫಿ ಆಫ್ ಎ ಯೋಗಿ” ಪುಸ್ತಕ ಇಂತಹ ಅನೂಹ್ಯ ಅನೇಕ ಅನುಭವ ತೆರೆದಿಡುತ್ತದೆ. ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಂದು ತನ್ನವರಿಂದಲೇ ಮೋಸ ಹೋದ ದುಃಖವನ್ನು ಸಹಿಸಲಾಗದೇ, ತಾನೇ ಕಟ್ಟಿದ ಕಂಪನಿಯಿಂದ ಹೊರಬಂದು ಆಪಲ್ ಕಂಪನಿ ಸ್ಥಾಪಿಸಿದ ಸ್ಟೀವ್ ಜಾಬ್ ತನಗಾದ ಅವಮಾನಗಳನ್ನು ಮೀರಿ ಬೆಳೆಯಲು ಆಶ್ರಯಿಸಿದ್ದು ಇದೇ ಹಿಮಾಲಯವನ್ನು. ನಟ ರಜನೀಕಾಂತ್ ಪ್ರತಿ ವರ್ಷ ಕೆಲತಿಂಗಳು ಹಿಮಾಲಯದ ಮಡಿಲ ಧ್ಯಾನದಲ್ಲಿ ಕಳೆಯುತ್ತಾರೆ. ಹಿಮಾಲಯದ ಹುಚ್ಚು ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ.(ಪು: 51) + +ಆಕಾಶವಾಣಿಯಲ್ಲಿ ಕಾರ್ಯ ನಿರ್ವಹಿಸುವ ಅಧಿಕಾರಿ, ಕವಯತ್ರಿ, ಲೇಖಕಿ ಶ್ರೀಮತಿ ನೂತನ ದೋಶೆಟ್ಟಿ ಅವರ ಚಾರ್ ಧಾಮ್ ಪ್ರವಾಸ ಕಥನ “ಸ್ವರ್ಗದೊಂದಿಗೆ ಅನುಸಂಧಾನ” ಓದಿ ಮುಗಿಸುವಷ್ಟರಲ್ಲಿ ಇದು “ಸ್ವರ್ಗದೊಂದಿಗೆ ದಿವ್ಯಾನುಸಂಧಾನ” ಎನಿಸಿದ್ದಂತೂ ನಿಜ. + +ಒಟ್ಟು ಹನ್ನೆರಡು ದಿನದ ಈ ಚಾರ್ ಧಾಮ್ ಪ್ರವಾಸಕ್ಕೆ ಹೊರಡುವ ಮುಂಚೆ ಮಳೆ ಹಿಮಪಾತ ಮೊದಲಾದವುಗಳ ಬಗ್ಗೆ ಹವಾಮಾನ ಪರಿಶೀಲನೆ ಕೈಗೊಂಡು ಯೂಟ್ಯೂಬ್‌ಗಳಲ್ಲಿ ಅಲ್ಲಿನ ಸ್ಥಳಗಳ ಬಗ್ಗೆ ಸೂಕ್ತ ಮಾಹಿತಿ, ಧರಿಸುವ ಉಡುಪುಗಳು ತೆಗೆದುಕೊಳ್ಳಬೇಕಾದ ಮುನ್ಸೂಚನೆಗಳನ್ನು ತೆಗೆದುಕೊಂಡು ಲೇಖಕಿ ನೂತನ ಹೊರಟಿದ್ದು ಕುಟುಂಬದ ಅಥವಾ ಸ್ನೇಹಿತರ ಜೊತೆಗಲ್ಲ… ಬದಲಿಗೆ solo trip. ಮಾರ್ಗಮಧ್ಯದಲ್ಲಿ ಯೋಗಗುರು ಮತ್ತವರ ಪತ್ನಿ ಜೊತೆಯಾದರೂ ಸಹಾ ಅವರ ಈ ಪರಿಯ ಧೈರ್ಯಕ್ಕೆ ಸಾಹಸಕ್ಕೆ ಆತ್ಮವಿಶ್ವಾಸಕ್ಕೆ ಅಚ್ಚರಿಯಾಗದಿರಲು ಸಾಧ್ಯವೇ? ಏಕೆಂದರೆ ಎಲ್ಲಾ ಸೌಲಭ್ಯಗಳಿರುವ ಅನುಕೂಲಗಳಿರುವ ದೇಶ ವಿದೇಶಗಳಿಗೆ ಹೋಗಿಬರಲಿಕ್ಕೆ ದುಡ್ಡಿದ್ದು ಒಂದಷ್ಟು ಬುದ್ಧಿವಂತರಾಗಿದ್ದರೆ ಸಾಕು. ಆದರೆ ಹಿಮಪಾತ, ಬೆಟ್ಟಗುಡ್ಡ ಕುಸಿತ, ಅತಿಕಡಿಮೆ ಉಷ್ಣಾಂಶದ ವಾತಾವರಣ, ಗಾಳಿಯಲ್ಲಿ ಆಮ್ಲಜನಕದ ಕೊರತೆ…. ಇಂತಹ ಸವಾಲುಗಳ ನಡುವೆ ಸೌಲಭ್ಯಗಳ ಕೊರತೆಯನ್ನು ಕೆಲವೊಮ್ಮೆ ಅವಘಡಗಳನ್ನು ಎದುರಿಸುತ್ತಾ ಧೈರ್ಯ ಕಳೆದುಕೊಳ್ಳದೇ ಒಬ್ಬರೇ ಹೊರಟ ನೂತನ ಅವರ “ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ” ಈ ನಾಲ್ಕು ಕ್ಷೇತ್ರಗಳ ಪ್ರವಾಸಕ್ಕೆ ಧೈರ್ಯ ಮತ್ತು ಹಣದ ಜೊತೆ ಭಕ್ತಿ, ಶ್ರದ್ಧೆ ಮತ್ತು ನಂಬಿಕೆ ಜೊತೆಯಾಗಿವೆ ಎನಿಸುತ್ತದೆ. + +ಇಡೀ ಪ್ರವಾಸ ಕಥನದುದ್ದಕ್ಕೂ ಲೇಖಕಿಯ ಜೊತೆ ಅವರಿಗಾದ ಸುಂದರ ರೋಮಾಂಚನಕಾರಿ ಅನುಭವಗಳನ್ನು ಓದುಗಳಾಗಿ ನಾನೂ ಅನುಭವಿಸಿದ್ದೇನೆ. ಜ್ವರ ಬಂದು ಮಲಗಿದ್ದ ನಾನು ಓದುತ್ತಾ ಓದುತ್ತಾ ನಿದ್ರೆಯ ಕನಸಿನಲ್ಲೂ ಚಾರ್ ಧಾಮ್ ಪ್ರವಾಸದ ಬೆಟ್ಟ ಗುಡ್ಡ ಕಣಿವೆ ಪ್ರಪಾತಗಳ ಸೌಂದರ್ಯದ ಜೊತೆಗಿನ ರಮಣೀಯತೆ ಜೊತೆ ರೌದ್ರತೆ, ದೇಗುಲಗಳ ವಾತಾವರಣದ ದಿವ್ಯತೆ ಅನುಭವಿಸಿದ್ದೇನೆ. + +ಶಿವನ ಆರಾಧಕಿಯಾದ ಲೇಖಕಿ ಬಾಲ್ಯದಿಂದಲೇ ವಚನಗಳನ್ನು ಶ್ಲೋಕಗಳನ್ನು ಮನೆಯಲ್ಲಿ ಹೇಳಿಕೊಂಡು ಮೌಲ್ಯಯುತ ಸಂಸ್ಕಾರ ಬೆಳೆಸಿಕೊಂಡವರು. ಬೇಡರ ಕಣ್ಣಪ್ಪಗೊಲಿದ ಶಿವ ಮಾರ್ಕಂಡೇಯನನ್ನು ಯಮನಿಂದ ಕಾಪಾಡಿದ ಶಿವ ರಾಕ್ಷಸನಾದರೂ ರಾವಣನ ಭಕ್ತಿಗೊಲಿದ ಜೋಗಿಜಂಗಮ ಶಿವನೊಂದಿಗೆ ಗಂಗೆ ಪೂಜೆ, ಗೌರಿಪೂಜೆಯ ಬಾಲ್ಯದ ನೆನಪುಗಳ ಜೊತೆ ಬೆಸೆದುಕೊಂಡು ಬರಹವನ್ನು ಮತ್ತಷ್ಟು ಆಪ್ತವಾಗಿಸುತ್ತಾರೆ. ಆಮ್ಲಜನಕದ ಕೊರತೆಯೋ ವಿಪರೀತ ಚಳಿಯಿಂದಲೋ ಒಂದೆರಡು ಬಾರಿ ತೀವ್ರ ಅಸೌಖ್ಯತೆ ಅನುಭವಿಸುತ್ತಲೇ ಸಂಭವಿಸಿದ ಅವಘಡಗಳ ನಡುವೆ ಮೊದಲೇ ಶಸ್ತ್ರ ಚಿಕಿತ್ಸೆಯಾಗಿದ್ದ ಕಾಲಿನಲ್ಲಿ ನಡೆಯಲಾಗದೆ ಕುದುರೆಯನ್ನೇ ಆಶ್ರಯಿಸಿಕೊಂಡರೂ ಸಹಾ ಅದರಿಂದಲೇ ಬಿದ್ದು ಪಕ್ಕದ ಪ್ರಪಾತದಿಂದ ಕೂದಲೆಳೆಯಲ್ಲಿ ಪಾರಾಗಿ ಪ್ರವಾಸ ಪ್ರಯಾಸವಾದರೂ ಪ್ರೇಮಪೂರ್ವಕವಾಗಿಸಿದ ಸಹಪ್ರಯಾಣಿಕರ “ಹರ ಹರ ಶಂಭೋ” “ಹರ ಹರ ಮಹಾದೇವ್” ” ಜೈ ಬೋಲೆನಾಥ್” ಘೋಷಗಳಿಗೆ ಎಲ್ಲರ ಸಾಥ್ ಸೇರಿ ತಾರಕಕ್ಕೇರಿ ಒಂದು ಧನಾತ್ಮಕ ಶಕ್ತಿ ಇಡೀ ವಾತಾವರಣದಲ್ಲಿ ಉಂಟಾಗಿ ವಿಸ್ಮಯ ವಿಶ್ವವೇ ಚಲಿಸಿಕೊಂಡು ಹೋಗುವಂತೆ ಭಾಸವಾಗುವ ದೃಶ್ಯಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಾ ಲೆಖಕಿ ನೂತನ ಅವರು ಕೇದಾರನಾಥ ದೇವಾಲಯದ ಒಳಗೆ ಮೊದಲ ಹೆಜ್ಜೆಯಿಡುವಾಗ ಆ ಧನಾತ್ಮಕ ಶಕ್ತಿ ಸಂಚಯನದ ಕಂಪನಗಳಲ್ಲಿ ಭಕ್ತಿ ಶ್ರದ್ಧೆಯ ಭಾವನೆಯ ಔನ್ನತ್ಯಕ್ಕೇರುವಾಗ ಅವರ ಇಡೀ ದೇಹ ಸಣ್ಣಗೆ ನಡುಗಿ ಕಣ್ಣುಗಳು ಒದ್ದೆಯಾಗುವ ಸಂದರ್ಭ ಕಣ್ಣಿಗೆ ಕಟ್ಟುವಂತಿದೆ…. ಈ ವಿವರಗಳನ್ನೆಲ್ಲ ಓದುತ್ತಾ ನಾನೂ ರೋಮಾಂಚನಗೊಂಡಿದ್ದೇನೆ. + +ಚಾರ್ ಧಾಮ್ ಪ್ರವಾಸ ಶುರುವಾಗುವುದು ಹೃಷಿಕೇಶದಿಂದ. ಅವರಿಗೆ ದೊರೆತ ವಾಹನದ ಡ್ರೈವರ್ ಸುರೇಶ್ ಎಂಬ ಸಮರ್ಥ ವ್ಯಕ್ತಿಯನ್ನು ಡೆಹ್ರಾಡೂನ್ ಆಕಾಶವಾಣಿ ಸಹಾಯಕ ನಿರ್ದೇಶಕರೇ ಕಳಿಸಿದ್ದರಿಂದ ಪ್ರವಾಸಕ್ಕೆ ಮತ್ತಷ್ಟು ಬಲ ಒದಗಿತೆನ್ನಬಹುದು. ಪ್ರವಾಸದ ಸಮಯದಲ್ಲಿ ಆತನ ಒಬ್ಬನೇ ತಂಗಿಯ ಗಂಡ ಸಾವಿಗೀಡಾದಾಗಲೂ ಪ್ರವಾಸ ಮುಗಿಸುವವರೆಗೂ ತನ್ನ ಕೆಲಸ ಮುಗಿಸಿಯೇ ಹೊರಟ ಅವನ ಬದ್ಧತೆ ಕಾರ್ಯತತ್ಪರತೆಗೆ ನನ್ನಲ್ಲಿ ಮಾತಿಲ್ಲ. ಅಲ್ಲಿಯವರು ಹೇಳುವಂತೆ “ಯೇ ಪಹಾಡಿ ಲೋಗ್ ದಿಲ್ ಸೆ ಬಹುತ್ ಅಚ್ಛೆ ಹೈ” ಎಂಬ ಒಂದೇ ಮಾತು ಸಾಕಲ್ಲವೇ? + +ದೇವನಗರಿ ಹೃಷಿಕೇಶದ ಪ್ರಕೃತಿ ಸೌಂದರ್ಯದ ಜೊತೆ ಅದರ ಅಗಾಧತೆ, ಬಾರ್ಕೋಟ್‌ನ ಘೋರ ಚಳಿಗೆ ಉಸಿರುಕಟ್ಟಿ ಮೈಕೈ ಮರಗಟ್ಟಿ ಲೇಖಕಿ ನೂತನ ತೀವ್ರ ಕಷ್ಟವನನ್ನುಭವಿಸಿದ ಆತಂಕದ ಸ್ಥಿತಿ, ಪ್ರವಾಸಿಗರನ್ನು ಹೊತ್ತೊಯ್ಯುವ ಕತ್ತೆ ಮತ್ತು ಕುದುರೆಗಳ ಮಿಶ್ರತಳಿ “ಕಚ್ಛರ್” ಮೇಲೆ ಕೂತರೂ ಅತ್ತಿತ್ತ ನೋಡುತ್ತಾ ಮೈಮರೆಯದೆ ತಮ್ಮ ದೇಹದ ಸಮತೋಲನ ಕಾಯ್ದುಕೊಂಡು ಅವುಗಳಿಗೆ ಸಹಕರಿಸಬೇಕಾದ ಅನಿವಾರ್ಯತೆಯನ್ನೂ ತಿಳಿಸುವ ನೂತನ, ಯಮುನೋತ್ರಿಯ ದೇಗುಲದ ಆವರಣದ ಹಿಂದಿನ ಸೂರ್ಯಕುಂಡದ ಬಿಸಿನೀರಿನ ಬುಗ್ಗೆಯಲ್ಲಿ ಅಕ್ಕಿ ಬೇಯಿಸಿಕೊಂಡು ಪ್ರಸಾದ ರೂಪದಲ್ಲಿ ಸ್ವೀಕರಿಸುವ ಭಕ್ತರೊಂದಿಗೆ ತಾವೂ ಒಂದು ಬಟ್ಟೆಯಲ್ಲಿ ಅಕ್ಕಿಯನ್ನು ಮೊದಲೇ ಕಟ್ಟಿಕೊಂಡು ಬಂದು ಅದರಲ್ಲಿ ಇಳಿಬಿಟ್ಟು ಅದನ್ನು ಮೇಲಕ್ಕೆ ತೆಗೆದುಕೊಂಡು ಅಲ್ಲಿದ್ದವರೊಂದಿಗೆ ಪ್ರಸಾದವನ್ನು ಸ್ವೀಕರಿಸುವ ಲೇಖಕಿಯಲ್ಲಿ ಪುಟ್ಟ ಮಗುವೊಂದು ಜೀವನದ ಅನೇಕ ಅನುಭವಗಳಿಗೆ ತೆರೆದುಕೊಳ್ಳುವ ಉತ್ಸಾಹ ಲವಲವಿಕೆಯ ಬೆರಗು ಕಾಣುತ್ತದೆ. + +ಸಮುದ್ರದಿಂದ 10000 ಅಡಿ ಎತ್ತರದ ಪ್ರದೇಶದ ಯಮುನೋತ್ರಿ ಯಮುನಾ ನದಿಯ ಜನ್ಮಸ್ಥಳ. ಯಮುನಾ ನದಿಗೆ ಕಾಳಿಂದಿ ನದಿ ಎಂಬ ಹೆಸರಿದೆ. ದ್ವಾಪರಯುಗದ ಯಮುನಾನದಿಯ ತಟದಲ್ಲಿ ಕೃಷ್ಣನ ರಾಸಲೀಲೆಯ ಸೊಗಸು ಕಣ್ಮುಂದೆ ಹಾದುಹೋಗಿ ಅದೇ ನದಿಯಲ್ಲಿ ಕಂಡ ಕಾಳಿಂಗ ಸರ್ಪದ ಮರ್ದನ ಮಾಡಿ ಆ ನದಿಗೆ ಕಾಳಿಂದಿ ಎಂಬ ಹೆಸರೂ ಬಂದಿರಬಹುದು. + +ಗಂಗೋತ್ರಿ ಸಮುದ್ರಮಟ್ಟದಿಂದ 10200 ಅಡಿ ಎತ್ತರವಿದ್ದು ಗಂಗಾಮಾತೆಯ ದೇಗುಲವಿದೆ. ಉತ್ತರ ಕಾಶಿಯಲ್ಲಿ ದೇವನದಿ ಗಂಗೆಯ ಹೆಸರು ಮಂದಾಕಿನಿ. ದೇವ ಪ್ರಯಾಗದಲ್ಲಿ ಮಂದಾಕಿನಿ ನದಿ ಭಾಗೀರಥಿ ನದಿಯ ಜೊತೆ ಕೂಡಿ ಮುಂದೆ ಗಂಗೆಯಾಗಿ ಹರಿಯುತ್ತಾಳೆ. ಇಲ್ಲಿಯೇ “ನೆಹರೂ ಇನ್ಸ್ಟಿಟ್ಯೂಟ್ ಆಫ್ ಮೌಂಟನೇರಿಂಗ್” ಪರ್ವತಾರೋಹಣ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಇದೆ. ಮೌಂಟ್‌ ಎವರೆಸ್ಟ್‌ ಏರಿದ ಭಾರತದ ಪ್ರಥಮ ಮಹಿಳೆ ಬಚೇಂದ್ರಿಪಾಲ್ ಇಲ್ಲಿಯ ವಿದ್ಯಾರ್ಥಿನಿ ಎಂಬ ಅಮೂಲ್ಯ ಮಾಹಿತಿಯನ್ನು ನೂತನ ಹಂಚಿಕೊಂಡಿದ್ದಾರೆ. + +“ಶಿವ ನನ್ನನ್ನು ಬೆರಗುಗೊಳಿಸುವಷ್ಟು ಬೇರಾವುದೂ ಬೆರಗುಗೊಳಿಸಿಲ್ಲ. ಹಿಮಾಲಯವನ್ನೇ ತನ್ನ ವಾಸಸ್ಥಾನವಾಗಿಸಿಕೊಂಡ ಆದಿಯೋಗಿ ಅವನು. ಅಂಥವನನ್ನು ಪಾರ್ವತಿ ಮೋಹಿಸಿದ್ದು ನನಗೆ ಅತ್ಯಂತ ಸಹಜ ಹಾಗೂ ಪ್ರಿಯ ವಿಷಯ. ಪುರಾಣಗಳ ಪ್ರಕಾರ ಶಿವಪಾರ್ವತಿಯರ ಮೊದಲ ಭೇಟಿಯಾದದ್ದು ಇದೇ ಕೇದಾರದಲ್ಲಿ” ಲೇಖಕಿಯ ಈ ಅಪರಿಮಿತ ಭಕ್ತಿ ಶ್ರದ್ಧೆಗಳು ಬಾಲ್ಯದಿಂದಲೇ ಬಂದ ಸಂಸ್ಕಾರದ ಫಲ. ಇದರೊಂದಿಗೆ ಕವಿಹೃದಯಿಯೂ ಆದ ನೂತನ ಅವರ ಭಾವ ಸಂವೇದನೆಗಳು ಇತರ ಲೇಖಕರಿಗಿಂತ ವಿಭಿನ್ನ ಎನ್ನುವುದು ಖಂಡಿತಾ ನಿಜ. + +ಕೇದಾರನಾಥದ ಗೌರಿಕುಂಡ ಗೌರಿ ತಾನು ಸ್ನಾನ ಮಾಡುವಾಗ ಗಣಪತಿಯನ್ನು ನಿಲ್ಲಿಸಿದ್ದ ಸ್ಥಳ ಮತ್ತು ಮುಂಡಕಟಿಯಾದ ರುಂಡವಿಲ್ಲದ ಗಣೇಶನನ್ನು ಪೂಜಿಸುವ ದೇಗುಲ ನಮ್ಮ ಪುರಾಣದ ಕತೆಗಳನ್ನು ಹೇಳುತ್ತವೆ. ಕೇದಾರನಾಥ ದೇವಾಲಯದ ಶಿವಲಿಂಗ ಆದಿಶಂಕರರಿಂದ ಸ್ಥಾಪಿತವಾದ ಭಾರತದ ಹನ್ನೆರಡು ಜ್ಯೋತಿರ್ಲಿಂಗಗಳಲ್ಲೊಂದು ಶಂಕರರು ದೇಹತ್ಯಾಗ ಮಾಡಿದ್ದೂ ಸಹಾ ಇಲ್ಲೇ. ಈ ದೇಗುಲ ಕಟ್ಟಲು ಬಳಸಿರುವ ಕಲ್ಲು ಆ ಪರಿಸರದಲ್ಲಿ ಸಿಗಲಾರದು ಮತ್ತು ಕಲ್ಲುಗಳ ಜೋಡಣೆಯನ್ನು ಯಾವುದೇ ಗಾರೆ ಬಳಸದೇ ಇಂಟರ್ ಲಾಕಿಂಗ್ ವ್ಯವಸ್ಥೆಯ ಮೂಲಕ ಮಾಡಲಾಗಿದೆಯಂತೆ. ಹಿಮಚ್ಛಾದಿತ ಗಿರಿಶಿಖರದಲ್ಲಿರುವ ಅತ್ಯಂತ ಎತ್ತರದ ದೇಗುಲ ನಿರ್ಮಾಣಕ್ಕೆ ಕಲ್ಲುಗಳನ್ನು ಯಾವ ಸೌಲಭ್ಯವೂ ಇರದ ಆ ಕಾಲದಲ್ಲಿ ಹೇಗೆ ಸಾಗಿಸಲಾಯಿತು? ಇವತ್ತಿನ ಕಟ್ಟಡ ವಿನ್ಯಾಸ ತಂತ್ರಜ್ಞರು ಅಚ್ಚರಿ ಪಡುತ್ತಾರಂತೆ…. ನಿಜಕ್ಕೂ ಸೋಜಿಗವೇ…! + +ಕೇದಾರನಾಥ ದರ್ಶನದ ನಂತರ ರಾತ್ರಿ ಕನಸಿನಲ್ಲಿ ಎತ್ತರದ ಕಣಿವೆಯೊಂದರಿಂದ ಲೇಖಕಿಯನ್ನು ಕೆಳಕ್ಕೆ ದೂಡಿದ ಕನಸು ಮುಂದೆ ಲೇಖಕಿ ದೊಡ್ಡದೊಂದು ಅಪಘಾತಕ್ಕೆ ಸಿಲುಕುವ ಮುನ್ಸೂಚನೆ ಕೊಡುವುದು ಸುಪ್ತ ಮನಸ್ಸಿನಲ್ಲಿ ಕಾಣುವ ಕೆಲವು ಕನಸುಗಳಿಗೂ ನಡೆಯುವ ಘಟನೆಗಳಿಗೂ ಒಮ್ಮೊಮ್ಮೆ ಸಂಬಂಧವಿರುವುದೂ ಮನುಷ್ಯನ ಬುದ್ಧಿಮತ್ತೆಗೂ ಪ್ರಜ್ಞೆಗೂ ಮೀರಿದ ಯಾವುದೋ ಶಕ್ತಿಯ ಸಂಚಲನ ಇಡೀ ಭೂಮಂಡಲವನ್ನಾಡಿಸುತ್ತಿರುವ ಸತ್ಯವೊಂದನ್ನು ತೆರೆದಿಡುತ್ತದೆ. + +ಕೇದಾರನಾಥದಿಂದ ಬದರೀನಾಥಕ್ಕೆ ಹೋಗುವಾಗ ಸಿಗುವ ಊರು “ಚೋಪ್ತಾ” ಇದನ್ನು ಭಾರತದ ಸ್ವಿಟ್ಜರ್ಲೆಂಡ್‌ ಎನ್ನುತ್ತಾರೆ. ಬದರಿನಾಥ ದೇಗುಲ ಸಹಾ ಆದಿಶಂಕರರಿಂದ ಪ್ರಮುಖ ಯಾತ್ರಾಸ್ಥಳವಾಗಿದ್ದನ್ನು ಉಲ್ಲೇಖಿಸುವ ಲೇಖಕಿ ಮಹಾಭಾರತದಲ್ಲಿ ಈ ಸ್ಥಳದ ಪ್ರಸ್ತಾಪವಿದ್ದು ಇಲ್ಲಿಗೆ 4 ಕಿ.ಮೀ. ದೂರದಲ್ಲಿರುವ “ಮಾನಾ” ಭಾರತದ ಕೊನೆಯ ಹಳ್ಳಿ. ಈ ಊರಿನಲ್ಲಿ ವ್ಯಾಸರು ಮಹಾಭಾರತ ರಚಿಸಿದರು ಎಂದು ಹೇಳಲಾಗುವ ಗುಹೆ ಇದೆ. ಇಲ್ಲಿಂದಲೇ ಪಾಂಡವರು ಯುದ್ಧಾನಂತರ ಸ್ವರ್ಗಾರೋಹಣ ಮಾಡಿದರು ಎಂಬ ಐತಿಹ್ಯ ತಿಳಿಸುತ್ತಾರೆ. + + + +ಕೇದಾರನಾಥ ಗಿರಿಶೃಂಗದ ವರ್ಣನೆ ನಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತವೆ. “ಬೆಳಗಿನ ಸೂರ್ಯಕಿರಣಗಳಲ್ಲಿ ಈ ಬೆಳ್ಳಿ ಬೆಟ್ಟಗಳು ಹೊನ್ನ ಕಲಶಗಳಾಗಿ ಹೊಳೆಯುತ್ತವೆ. ದೇಹ ಮನಸ್ಸು ಒಂದುಗೂಡಿಸುವ ಏಕತ್ರವಾಗಿಸುವ ಪವಿತ್ರ ಸ್ಥಳ ಮೋಹ ವಾಂಛೆಗಳುದಿಸದ ನಿರ್ಮಮ ಸ್ಥಳ….. ಕವೆಂಪು ಅವರ ಆನಂದಮಯ ಈ ಜಗಹೃದಯ ಎಂಬಂತೆ ಪಂಜೆ ಮಂಗೇಶರ ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ ಎಂಬಂತೆ ಈ ನಿಸರ್ಗವೇ ದೈವ. ಹಿಮಶಿಖರಗಳೇ ಶೃಂಗಾರ- ಸೂರ್ಯರಶ್ಮಿಯೇ ಅಭಿಷೇಕ, ಸಾನಿಧ್ಯವೇ ಪ್ರಸಾದ, ಇದುವೇ ಸ್ವರ್ಗ. ಇಲ್ಲಿಯ ತಂಗಾಳಿ ಅದನ್ನು ಕಿವಿಯಲ್ಲಿ ಪಿಸುಗುಡುತ್ತವೆ ಅದನ್ನು ಕೇಳಿ ಬೆಟ್ಟಗಳು ನಗುತ್ತವೆ, ಇಲ್ಲಿಯ ಪವಿತ್ರ ಗಾಳಿಯನ್ನು ಕೆಲಹೊತ್ತು ಉಸಿರಾಡಿದ ಜೀವನ ಪಾವನ ಎಂದರೆ ಉತ್ಪ್ರೇಕ್ಷೆ ಖಂಡಿತಾ ಅಲ್ಲ.” + +ಕೇದಾರನಾಥ ದೇಗುಲದ ದಿವ್ಯತೆಯನ್ನು ಹೀಗೆ ವರ್ಣಿಸುತ್ತಾರೆ-”“ಒಂದು ಒಳ್ಳೆಯ ಮಾತು, ಒಳ್ಳೆಯ ಸ್ನೇಹ (ಕೆಟ್ಟ ಸ್ನೇಹ ಇರುವುದಿಲ್ಲ) ಒಳ್ಳೆಯ ಕೆಲಸ ಮೊದಲಾದವು ನೀಡುವ ಆತ್ಮಸಂತೃಪ್ತಿಯನ್ನು ಹೇಗೆ ವರ್ಣಿಸಲಾಗುವುದಿಲ್ಲವೋ ಹಾಗೆಯೇ ಇಲ್ಲಿನ ಅನುಭೂತಿ. ಅದು ಪ್ರವಾಸಿಗರಿಗೆ ಭಕ್ತರಿಗೆ ಆಧ್ಯಾತ್ಮ ಚಿಂತಕರಿಗೆ ಸಂತರಿಗೆ ಸನ್ಯಾಸಿಗಳಿಗೆ ಪ್ರಕೃತಿಪ್ರಿಯರಿಗೆ ಕಲಾವಿದರಿಗೆ ಛಾಯಾಗ್ರಾಹಕರಿಗೆ…. ಹೀಗೆ ಪಟ್ಟಿ ಮಾಡುತ್ತಾ ಹೋದರೆ ಎಲ್ಲರಿಗೂ ತುಂಬಿ ತುಂಬಿ ನೀಡಲು ಏನಾದರೊಂದು ವಿಶೇಷ ಇದ್ದೇ ಇದೆ. ಯಾರನ್ನೂ ಇದು ಬರಿಗೈಲಿ ಕಳಿಸುವುದಿಲ್ಲ. ಪಡೆಯುವವರು ಏನು ಬಯಸುತ್ತಾರೋ ಅಷ್ಟೇ ಅವರ ಪ್ರಾಪ್ತಿ” + +ಲೇಖಕಿ ನೂತನ ಅವರ ಸುಂದರ ರೋಮಾಂಚನದ ಅನುಭವಗಳ ನಡುವೆಯೇ ಚಾರ್ ಧಾಮ್ ಪ್ರವಾಸದ ಗಿರಿಶಿಖರ ಆಳ ಕಣಿವೆಗಳ ಪ್ರಪಾತದ ರೌದ್ರತೆಯನ್ನೂ ಕಾಣಿಸುತ್ತಾರೆ. ಅವರ ಕನಸುಗಳೊಂದಿಗೆ ಮುಂದೆ ಸಂಭವಿಸಬಹುದಾದ ಘೋರ ಅನುಭವಗಳು ಬೆಸೆದುಕೊಳ್ಳುತ್ತವೆ. ಲಕ್ಷಾಂತರ ಪ್ರವಾಸಿಗರ ಕಾರಣದಿಂದ ಸ್ಥಳದ ನೈರ್ಮಲ್ಯ ಕಾಪಾಡುವ ಜರೂರತ್ತನ್ನು ಮನಗಾಣಿಸುತ್ತಾರೆ. ಅಲ್ಲಿನವರ ಬದುಕು ಅತ್ಯಂತ ದುರ್ಭರವಾದರೂ ಬಹು ಸರಳ. ಆದರೆ ಪ್ರವಾಸಿಗರ ದಟ್ಟಣೆಯಿಂದಾಗಿ ಉಂಟಾಗುವ ಮಾಲಿನ್ಯತೆ ಸ್ಥಳೀಯ ಪರಿಸರದ ಹಾನಿಗೆ ಮಾರಕವಾಗಬಹುದು. ನೀರ್ಗಲ್ಲುಗಳ ಕೊರೆತದಿಂದ ಸ್ಥಳಗಳ ಮುಳುಗಡೆ, ಬಂಡೆಗಳ ಉರುಳುವಿಕೆ ಮತ್ತು ಮಳೆಯ ಕಾರಣದಿಂದ ರಸ್ತೆ ಮುಚ್ಚಿಹೋಗಿ ದುರಸ್ಥಿಯಾಗುವ ತನಕ ವಾಹನ ಮತ್ತು ಜನಸಂಚಾರ ಸಾಧ್ಯವಾಗದ ದುಸ್ಥಿತಿ, ಪ್ರವಾಹಗಳಿಗೆ ಸಿಕ್ಕಿ ಮುಳುಗುವ ದೇಗುಲಗಳು ಊರುಗಳು….. ಇವೆಲ್ಲವುಗಳ ನಡುವೆಯೂ ಪ್ರವಾಸೋದ್ಯಮಕ್ಕೆ ಅನುಕೂಲವಾಗಲೆಂದು ರಸ್ತೆ ಅಗಲೀಕರಣ ಕಾರ್ಯ ಅಭಿವೃದ್ಧಿ ಕಾರ್ಯಗಳಿಗಾಗಿ ಬಂಡೆ ಕೊರೆತಗಳಿಂದ ನೀರ್ಗಲ್ಲುಗಳಿಂದಾಗಬಹುದಾದ ಅಪಾಯವನ್ನು ಪರಿಸರ ತಜ್ಞರು ಹೇಳುವುದನ್ನು ಲೆಕ್ಕಿಸದೇ ಕಟ್ಟಡಾಭಿವೃದ್ಧಿ ಕೆಲಸಗಳು ಪವಿತ್ರ ಸುಂದರ ಈ ಸ್ಥಳಗಳಿಗೆ ಒದಗಬಹುದಾದ ಅಪಾಯದ ಮುನ್ಸೂಚನೆಯ ಬಗ್ಗೆ ಲೇಖಕಿ ತೀವ್ರ ಕಾಳಜಿ ವ್ಯಕ್ತಪಡಿಸುತ್ತಾರೆ. + +ಸಂಚರಿಸುವ ಮಾರ್ಗದಲ್ಲಿ ಕಣ್ಣೆದುರೆ ಬಂಡೆಗಳು ಬಿದ್ದು ರಸ್ತೆ ಮುಚ್ಚಿಹೋಗಿ ಸಂಚಾರ ಅಸ್ತವ್ಯಸ್ತವಾದಾಗ ರಸ್ತೆ ತೆರವು ಮಾಡಿಸಲು ಮತ್ತು ಬಂಡೆಯ ಕೆಳಗೆ ವಾಹನಗಳು ಸಿಲುಕಿದ್ದಲ್ಲಿ ಅಲ್ಲಿ ಸಿಕ್ಕಿಕೊಂಡ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರದ “ಬಾರ್ಡರ್ ರೋಡ್ಸ್ ಆರ್ಗನೈಸೇಶನ್” ಸುಮಾರು 62 ಸೂಕ್ಷ್ಮ ಜಾಗಗಳನ್ನು ಗುರುತಿಸಿ ಜೆಸಿಬಿಯನ್ನು ನಿಲ್ಲಿಸಿಕೊಂಡು ಹಗಲು ರಾತ್ರಿ ಸಿಬ್ಬಂದಿಗಳು ತಮ್ಮ ಜೀವವನ್ನು ಪಣಕ್ಕಿಟ್ಟು ಪ್ರವಾಸಿಗರಿಗಾಗಿ ಕೆಲಸ ಮಾಡುವ ಸಾಹಸಿಗ ಸಿಬ್ಬಂದಿಗಳು, ಡೋಲಿ ಹೊತ್ತು ನಡೆಯುವ ಕಷ್ಟಸಹಿಷ್ಣು ನೇಪಾಳಿಗಳು, ಪ್ರವಾಸಿಗರನ್ನು ಒಯ್ಯುವ ಕುದುರೆ ಸವಾರರು, ಸಂಚಾರದ ಸವಾಲನ್ನು ಸ್ವೀಕರಿಸಿ ತಮ್ಮ ಕರ್ತವ್ಯಪರತೆ ಮೆರೆಯುವ ವಾಹನದ ಡ್ರೈವರ್‌ಗಳು….. ಎಲ್ಲರೂ ಜೀವನ ನಿರ್ವಹಣೆಗಾಗಿ ದುಡಿದರೂ ತಮ್ಮ ಜೀವವನ್ನು ಪಣಕ್ಕಿಟ್ಟು ದುಡಿದು ತಮ್ಮ ಸಂಸಾರ ನಿರ್ವಹಿಸುವ ಇವರ ಶ್ರದ್ಧೆ ಹಾಗೂ ಧೀರತೆಗೆ ಮತ್ತು…. + +ಕೇದಾರನಾಥ ತಲುಪಲು ವಯಸ್ಸಿನಲ್ಲಿ ಹಿರಿಯರಾದರೂ ನಡೆದು 22 ಕಿ.ಮೀ ದೂರದ ಸುಮಾರು 12000 ಅಡಿ ಎತ್ತರದ ಈ ದುರ್ಗಮ ಬೆಟ್ಟವನ್ನು ಏರುವವರು, 5-6 ತಿಂಗಳ ಮಗುವನ್ನೆತ್ತಿಕೊಂಡು ಬರುವ ಬಾಣಂತಿಯರು, ಹೀಗೆ ಹರಿದು ಬರುವ ಜನಸಾಗರಕ್ಕೆ ಇಂಥಹ ಸೆಳೆತಕ್ಕೆ ಯಾವ ಪರಿಭಾಷೆಯಿದೆ ಎನ್ನುವ ಲೇಖಕಿ ತಮ್ಮೊಂದಿಗೆ ಚಾರ್ ಧಾಮ್ ರುದ್ರ ರಮಣೀಯ ಪ್ರವಾಸದ ಅನುಭವದ ರಸದೌತಣವನ್ನು ಓದುಗರಿಗೂ ಉಣಿಸುವ ಸರಳ ಸಹಜ ಶೈಲಿ, ಅನುಭವಗಳನ್ನು ಹಂಚಿಕೊಳ್ಳುವ ಆಪ್ತತೆಯಿಂದ ಈ ಕೃತಿ ಇಡೀ ಭಾರತದ ಮಹೋನ್ನತೆಯ ಚೆಲುವನ್ನೂ ಅಧ್ಯಾತ್ಮಿಕತೆಯ ಉತ್ತುಂಗವನ್ನೂ ಕಾವ್ಯದೈಸಿರಿಯನ್ನೂ ಪ್ರಕೃತಿಯ ಅಂತಃಸತ್ವದ ಚೈತನ್ಯವನ್ನು ರುದ್ರ ರಮಣೀಯತೆಯನ್ನು ಚೆಲುವು ಒಲವುಗಳನ್ನೂ ಪ್ರತಿಬಿಂಬಿಸುತ್ತದೆ. + + + +“ಹೇಳುವುದು ಬಹಳಷ್ಟಿದ್ದರೂ ಅನುಭವಿಸಿದಷ್ಟು ಹೇಳಲಾಗುವುದಿಲ್ಲ…. ನಿಜ ಹೇಳಲೇ? ನನ್ನ ಒಂದು ಅಂಶವನ್ನು ಹಿಮಾಲಯದ ಆ ಬೆಟ್ಟಗಳಲ್ಲಿ ಬಿಟ್ಟು ಬಂದಿದ್ದೇನೆ. ಹಾಗಾಗಿ ನಾನೀಗ ಅಪೂರ್ಣಳಾದರೂ ಒಂದರ್ಥದಲ್ಲಿ ಪೂರ್ಣ”I LOVE SHIVA , PARVATI, THEIR CHILDREN AND OF COURSE THE VETERAN THE HIMALAYA ಎನ್ನುವ ಅವರ ಮಾತುಗಳಲ್ಲಿ ಬದುಕಿನ ನಿಜ ಸಾರ್ಥಕತೆ ಕಂಡುಕೊಂಡಿರುವ ಗೆಳತಿ ನೂತನ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು. + +ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್.  ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ.  “ಹುಟ್ಟಲಿರುವ ನಾಳೆಗಾಗಿ”, “ಗೋಡೆಗಿಡ”, “ನದಿ ಧ್ಯಾನದಲ್ಲಿದೆ” (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು “ಸ್ಪರ್ಶ ಶಿಲೆ” ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ‌ ಹವ್ಯಾಸಗಳು. \ No newline at end of file diff --git a/Kenda Sampige/article_89.txt b/Kenda Sampige/article_89.txt new file mode 100644 index 0000000000000000000000000000000000000000..6a2bb67c92777cc249fb23efb1f0ba4a33fb1782 --- /dev/null +++ b/Kenda Sampige/article_89.txt @@ -0,0 +1,29 @@ +ಸರಿ, ನಾನು ನನ್ನ ಕಿರುಗುಡುತ್ತಿದ್ದ ಹಳೆಯ ಜೀಪಿನಲ್ಲಿ ರಾಜರ ಕಲ್ಲು-ಮರದ ಅರಮನೆಗೆ ಹೋದೆ. ಮನೆಯಲ್ಲಿ ಅವರೊಬ್ಬರೇ ಇದ್ದರು. ರಾಣಿಯವರು ಬೆಂಗಳೂರಿನಲ್ಲಿ ರಾಜ್ಯದ ಕಾರುಬಾರನ್ನು ನಿರ್ವಹಿಸುವ ಕರ್ತವ್ಯದಲ್ಲಿದ್ದರು. ಅವರ ಚಹಾದ ಆಹ್ವಾನವನ್ನು ನಯವಾಗಿ ನಿರಾಕರಿಸಿದ ನಾನು, ಬಂದ ಉದ್ದೇಶವನ್ನೂ, ಸಾಲ ಮರುಪಾವತಿ ಮಾಡದಿದ್ದರೆ ನಾನು ತೆಗೆದುಕೊಳ್ಳುವ ಕ್ರಮವನ್ನೂ ವಿವರಿಸಿದೆ. ನಾನು ಮಾಡುತ್ತಿರುವುದು ತಮಾಷೆಯಲ್ಲ ಎಂದು ಅರಿವಾದಾಗ ಅವರು ಇನ್ನೇನು ಪಕ್ಷವಾತ ಆಗುತ್ತದೇನೋ ಎನ್ನುವಷ್ಟು ಅಧೀರರಾದರು. ಆ ಕಾಲದಲ್ಲಿ ಮೊಬೈಲ್ ಫೋನ್‌ಗಳಂತೂ ಇರಲಿಲ್ಲ, ಇದ್ದ ಲ್ಯಾಂಡ್ ಲೈನ್ ಸಹ ಕೆಲಸ ಮಾಡುತ್ತಿರಲಿಲ್ಲ. ರಾಣಿಸಾಹೇಬ ಬೆಂಗಳೂರಿನಲ್ಲಿದ್ದಾರೆ, ನೀವು ದಯಮಾಡಿ ಅವರನ್ನೇ ಸಂಪರ್ಕಿಸುವಿರಾ ಎಂದು ಕೇಳಿದರು. ನಾನು ಅದನ್ನು ನಿರಾಕರಿಸಿದೆ. ನನ್ನ ತಂಡ ಜಪ್ತು ಮಾಡಬೇಕಿರುವ ಸಾಮಾನುಗಳ ಹುಡುಕಾಟಕ್ಕೆ ಕಾರ್ಯಪ್ರವೃತ್ತವಾಯಿತು. ಸುಮಾರು ಒಂದು ಗಂಟೆಯ ನಂತರ, ಅವೆಲ್ಲದರೊಡನೆ ನನ್ನ ಮೆರವಣಿಗೆ ಲಿಂಗಸುಗೂರಿನ ಕಡೆಗೆ ತೆರಳಿತು, ರಾಜಾ ಸಾಹೇಬ್ ದಿಗ್ಮೂಢರಾಗಿ, ಕುಸಿದು ಕುಳಿತಿದ್ದರು. ನಾನು ಹೊರಡುವುದಕ್ಕೂ ಮೊದಲು, ಕಂದಾಯ ಅಧಿಕಾರಿ ಪಂಚನಾಮೆ ಮಾಡಿ, ಕಾನೂನಿನ ಪ್ರಕಾರ ಅಸಿಸ್ಟೆಂಟ್ ಕಮಿಷನರ್ ಅವರು, ಟ್ರ್ಯಾಕ್ಟರ್ ಇತ್ಯಾದಿಗಳನ್ನು ಜಪ್ತು ಮಾಡಿದ್ದಾರೆ ಎಂದು ಬರೆದು, ಹಿಂಜರಿಯುತ್ತಿದ್ದ ಪಂಚರಿಂದ ಅದಕ್ಕೆ ಸಾಕ್ಷಿ ಹಾಕಿಸಿದ್ದರು. ಹಳ್ಳಿಯಲ್ಲಿನ ಅನೇಕ ಹಳ್ಳಿಗರು ಅವರ ಮಟ್ಟಿಗೆ ಅತ್ಯಪರೂಪದ ಈ ದೃಶ್ಯವನ್ನು ಕಿಕ್ಕಿರಿದು ನೋಡುತ್ತಿದ್ದರು. ನಾನು ಆಫೀಸ್ ತಲುಪುವಷ್ಟರಲ್ಲಿ ಮಧ್ಯಾಹ್ನವೇ ಆಗಿತ್ತು. ಏಕೆಂದರ ಜಾಫರ್‌ಗಾಗಲಿ, ಬರ್ಹಾನ್‌ಗಾಗಲಿ ಟ್ರಾಕ್ಟರ್ ಚಾಲನೆ ಸಲೀಸಾಗಿರಲಿಲ್ಲ. ಇನ್ನು ನಾನು, ಬಿಡಿಓ ರವರ, ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದ, ಮನಸುಖರಾಯನಂತಹ ಜೀಪನ್ನು ಹುಷಾರಾಗಿ ಓಡಿಸಬೇಕಿತ್ತು. 1965ರಲ್ಲಿ ಮಸ್ಸೂರಿಯಲ್ಲಿ ನಡೆದ ನಮ್ಮ ತರಬೇತಿಯ ಸಮಯದಲ್ಲಿ ನಮಗೆ ಮೊಂಡು ಕುದುರೆಗಳನ್ನು ಓಡಿಸುವುದನ್ನು ಕಲಿಸುತ್ತಿದ್ದರೇ ಹೊರತು, ಕಾರು ಚಾಲನೆಯನ್ನಲ್ಲ. ಅಂತೂ ಇಂತೂ ನನ್ನ ಆಫೀಸಿನ ಮುಂದೆ, ಅವಸರವಸರವಾಗಿ ‘ಸರಕಾರಿ ಸಾಲವನ್ನು ಹಿಂದಿರುಗಿಸದೆ ಇದ್ದ ಕಾರಣ ಜಪ್ತು ಮಾಡಲಾಗಿದೆ’ ಎಂದು ಬರೆದಿದ್ದ ಬೋರ್ಡಿನ ಕೆಳಗೆ ಆ ಟ್ರ್ಯಾಕ್ಟರ್‌ಗಳನ್ನು ನಿಲ್ಲಿಸಲಾಯಿತು. ಅಂದು ವಾರದ ಸಂತೆ ಬೇರೆ. ಸುತ್ತಮುತ್ತಲ ಹಳ್ಳಿಗಳಿಂದ ಬಂದ ಅನೇಕರು ಟ್ರ್ಯಾಕ್ಟರ್ ನೋಡಲು ಬರುತ್ತಿದ್ದರು. + +(ಎನ್.‌ ಸಂಧ್ಯಾರಾಣಿ) + +1857ರ ನಂತರ ಲಿಂಗಸುಗೂರು ಕೆಲವು ದಶಕಗಳ ಕಾಲ ಜಿಲ್ಲಾಕೇಂದ್ರವೂ ಆಗಿದ್ದರಿಂದ ಅಲ್ಲಿ ಭವ್ಯವಾದ ಸರಕಾರಿ ಕಟ್ಟಡ ಇದ್ದು, ನನ್ನ ಆಫೀಸು, ತಹಸಿಲ್ದಾರ್ ಕಛೇರಿ, ಟ್ರೆಷರಿ ಮತ್ತು ಮ್ಯಾಜಿಸ್ಟ್ರೇಟ್ ಕೋರ್ಟ್ ಎಲ್ಲವೂ ಅದೇ ಕಟ್ಟಡದಲ್ಲಿತ್ತು. ಅಂತಹ ಭವ್ಯ ಕಟ್ಟಡದ ಮುಂದೆ ನಿಲ್ಲಿಸಿದ್ದ ಈ ಟ್ರ್ಯಾಕ್ಟರ್‌ಗಳು ಹಲವು ದಿನಗಳವರೆಗೂ ಊರಿನ ಪ್ರವಾಸಿ ಕೇಂದ್ರದಂತೆ ಆಗಿಹೋಗಿದ್ದವು! + +ಎದುರು ನೋಡಿದಂತೆಯೇ ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ನನಗೆ ಕಂದಾಯ ಸಚಿವರಿಂದ ಕರೆ ಬಂತು. ಅದೊಂದು ಅಪರೂಪದ ಕರೆ, ಏಕೆಂದರೆ ಸಾಧಾರಣವಾಗಿ ಕಂದಾಯ ಸಚಿವರು ಜಿಲ್ಲಾಧಿಕಾರಿಗಳಿಗಿಂತ ಕೆಳಗಿನ ಮಟ್ಟದ ಅಧಿಕಾರಿಗಳಿಗೆ ಹಾಗೆ ಕರೆ ಮಾಡುತ್ತಿರಲಿಲ್ಲ. ಕಂದಾಯ ಸಚಿವರಾಗಿದ್ದ ಬಿ ರಾಚಯ್ಯನವರು ಸಂಭಾವಿತರು, ಮೈಸೂರು ಜಿಲ್ಲೆಯ ದಲಿತ ಕುಟುಂಬದಿಂದ ಬಂದವರು. ಜಮೀನ್ದಾರಿ ಮನೆತನದ ಈ ಲಿಂಗಾಯತ ಸಾಹುಕಾರರ ಮೇಲೆ, ಅದೂ ದೂರದ ಹೈದರಾಬಾದ್ ಕರ್ನಾಟಕಕ್ಕೆ ಸೇರಿದವರ ಮೇಲೆ ಅವರಿಗ್ಯಾವುದೇ ವಿಶೇಷ ಪ್ರೀತಿ ಇರಲಿಲ್ಲ. ಏನಾಯಿತೆಂದು ನನ್ನಿಂದ ತಿಳಿದುಕೊಂಡ ನಂತರ ಅವರು, ‘ರಾಜಾಸಾಹೇಬರಿಂದ ಸಾಲ ವಾಪಸ್ ಮಾಡುತ್ತೇವೆʼ ಎಂದು ಮುಚ್ಚಳಿಕೆ ಬರೆಸಿಕೊಂಡು ನೀವ್ಯಾಕೆ ಟ್ರ್ಯಾಕ್ಟರ್‌ಗಳನ್ನು ಹಿಂದಿರುಗಿಸಬಾರದು? ಮಂತ್ರಿಗಳಿಗೆ ಇದು ಪ್ರತಿಷ್ಟೆಯ ವಿಷಯವಾದಂತೆ ಕಾಣಿಸುತ್ತಿದೆ’ ಎಂದರು. ನಾನು ಸ್ವಲ್ಪ ದಾರ್ಷ್ಟ್ಯದಿಂದಲೇ, ‘ಸಾರ್ ಇದೊಂದು ಹಳೆಯ ಬಾಕಿ. ಈಗಲೂ ಖಚಿತವಾದ ನೆಲಕಂದಾಯ ಕಾಯ್ದೆಗೆ ಅನುಸಾರವಾಗಿಯೇ ಇದನ್ನು ಜಪ್ತು ಮಾಡಲಾಗಿದೆ. ಹಾಗೂ ಟ್ರ್ಯಾಕ್ಟರುಗಳನ್ನು ಬಿಟ್ಟುಕೊಡಬೇಕು ಎಂದರೆ ಮಾನ್ಯ ಕಂದಾಯ ಸೆಕ್ರೆಟರಿಗಳು ಒಂದು ಸರಕಾರಿ ಆದೇಶ ಕೊಡಬಹುದೆ?’ ಎಂದು ಕೇಳಿದೆ. ಕಂದಾಯ ಕಾಯ್ದೆಗಳ ಬಗ್ಗೆ ನನಗೆ ಖಚಿತವಾದ ತಿಳುವಳಿಕೆ ಇತ್ತು, ಒಮ್ಮೆ ಆದೇಶದ ಮೂಲಕ ಕಂದಾಯ ಅಧಿಕಾರಿ ಯಾವುದೇ ಅಡಮಾನದ ಆಸ್ತಿಯನ್ನು ಜಪ್ತು ಮಾಡಿದರೆ, ಅದಕ್ಕೆ ಸಂಬಂಧಿಸಿದ ಅಪೀಲನ್ನು ಕೇವಲ Mysore Revenue Appellate Tribunal ಗೆ ಮಾತ್ರ ಸಲ್ಲಿಸಬಹುದಾಗಿದ್ದು, ಸಾಲ ವಾಪಸಾತಿ ಆಗದೆ ಇದ್ದಲ್ಲಿ ಸರಕಾರ ಅದರ ಬಗ್ಗೆ ಯಾವುದೇ ಹಸ್ತಕ್ಷೇಪ ಮಾಡುವಂತಿರಲಿಲ್ಲ. ಜೊತೆಗೆ ನಾನು ಟೆಲಿಫೋನ್ ಸಂಪರ್ಕ ಸರಿ ಇಲ್ಲದಂತೆ ನಟಿಸಿ, ರಿಸೀವರ್ ಕೆಳಗಿಟ್ಟಿದ್ದೆ. + +ಇದಾದ ಮೇಲೆ ಕಂದಾಯ ಸಚಿವರು ನನ್ನ ಜಿಲ್ಲಾಧಿಕಾರಿಗಳ ಜೊತೆಗೆ ಕೂಡ ಮಾತನಾಡಿ, ಹೊಸ ಅಸಿಸ್ಟೆಂಟ್ ಕಮಿಷನರ್ ಸರಕಾರಿ ಆದೇಶಹೊರಡಿಸಲು ಕೇಳುತ್ತಿದ್ದಾರೆ, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆಯೇ, ದೊಡ್ಡಮೊತ್ತದ ಸಾಲ ಬಾಕಿ ಇರುವ ಸುಸ್ತಿದಾರರಿಂದ ಪ್ರಾರಂಭಿಸಿ, ಈ ಸಾಲ ವಸೂಲಾತಿಯನ್ನು ಪ್ರಾರಂಭಿಸಲಾಗಿದೆಯೇ ಎಂದೆಲ್ಲಾ ವಿಚಾರಿಸಿದರಂತೆ. ನನ್ನ ಮಾರ್ಗದರ್ಶಕರಾಗಿದ್ದ ಜಿಲ್ಲಾಧಿಕಾರಿಗಳು ನನ್ನನ್ನು ಸಮರ್ಥಿಸಿಕೊಂಡು, ಅಸಿಸ್ಟೆಂಟ್ ಕಮಿಷನರ್ ತಮ್ಮ ಆದೇಶದ ಕಾರಣದಿಂದಲೇ, ಕಾನೂನಿಗೆ ಅನುಸಾರವಾಗಿಯೇ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರಂತೆ. ಅಂತೂ ಟ್ರ್ಯಾಕ್ಟರ್‌ಗಳಿಗೆ ಸುಮಾರು ಹದಿನೈದು ದಿನಗಳು ಬಿಡುಗಡೆಯ ಭಾಗ್ಯ ಸಿಗಲಿಲ್ಲ! ಇದರ ನಡುವೆ ಇನ್ನೊಂದು ಕುತೂಹಲಕಾರಿ ಬೆಳವಣಿಗೆಯೂ ನಡೆಯಿತು. ರಾಣಿಸಾಹಿಬಾರವರು ತಾವು ಪ್ರಬಲ ಸಮರ್ಥಕರಾಗಿದ್ದ ಮುಖ್ಯಮಂತ್ರಿ ವೀರೇಂದ್ರ ಪಾಟೀಲರಿಗೆ ದೂರನ್ನು ಒಯ್ದು, ಟ್ರ್ಯಾಕ್ಟರ್‌ಗಳನ್ನು ಕೂಡಲೇ ಬಿಡುಗಡೆ ಮಾಡಿ, ಆ ಅಸಿಸ್ಟೆಂಟ್ ಕಮಿಷನರ್‌ರನ್ನು ಅಲ್ಲಿಂದ ವರ್ಗಾವಣೆ ಮಾಡದಿದ್ದರೆ, ತಾವು ಲಿಂಗಸುಗೂರಿನಲ್ಲಿ ಮುಖ ತೋರಿಸುವಂತಿಲ್ಲ ಎಂದು ಅಲವತ್ತುಕೊಂಡರಂತೆ. ಆದರೆ ವಿಷಯವನ್ನು ಪರಾಮರ್ಶಿಸಿದ ಮುಖ್ಯಮಂತ್ರಿಗಳು, ಕಾನೂನಿನ ಪ್ರಕಾರವೇ ನಡೆದುಕೊಂಡ ನನ್ನನ್ನು ವರ್ಗಾವಣೆ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯ ಪಟ್ಟರಂತೆ. ಕಡೆಗೆ ಈ ತೊಡಕಿನ ಸನ್ನಿವೇಶವನ್ನು ಸರಿದೂಗಿಸಲು ಚೀಪ್ ಸೆಕ್ರೆಟರಿ ಒಂದು ಪರಿಹಾರವನ್ನು ಸೂಚಿಸಿದರು. ಹೈದರಾಬಾದಿನಲ್ಲಿದ್ದ National Institute of Community Development ಗೆ ನನ್ನನ್ನು ಒಂದು ತಿಂಗಳ ತರಬೇತಿಗಾಗಿ ಕಳಿಸುವುದು, ರಾಯಚೂರಿನ ಅಸಿಸ್ಟೆಂಟ್ ಕಮಿಷನರ್ ಅವರನ್ನು ನನ್ನ ಅನುಪಸ್ಥಿತಿಯಲ್ಲಿ ಲಿಂಗಸುಗೂರಿಗೂ ಹೆಚ್ಚುವರಿ ಕಮಿಷನರ್ ಆಗಿ ಮಾಡುವುದು ಒಂದು ಕಡೆ. ಇನ್ನೊಂದು ಕಡೆ ಸಾಲದ ಮೊತ್ತ 72,000 ರೂಗಳನ್ನು ಮಂತ್ರಿಗಳು ಮೂರು ಕಂತಿನಲ್ಲಿ ತೀರಿಸುವುದು ಮತ್ತು ಮೊದಲ ಕಂತನ್ನು ತತ್‌ಕ್ಷಣವೇ ಕಟ್ಟಿದ ನಂತರ ಜಪ್ತು ಮಾಡಿದ ಟ್ರ್ಯಾಕ್ಟರ್‌ಗಳನ್ನು ಬಿಟ್ಟುಕೊಡುವದು. ಮುಖ್ಯಮಂತ್ರಿಗಳಿಗೆ ಸಹ ಇದು ಸಮಂಜಸವಾಗಿ ಕಂಡಿದೆ. ಅದರ ಪ್ರಕಾರವೇ ನಡೆದು, ನಾನು ತರಬೇತಿಗೆ ಹೋದ ಸಮಯದಲ್ಲಿ ಸಾಲದ ಕಂತನ್ನು ಕಟ್ಟಿ, ವಾಹನಗಳ ಬಿಡುಗಡೆ ಆಯಿತು. ಆದರೆ ನನ್ನನ್ನು ಅಲ್ಲಿಂದ ವರ್ಗ ಮಾಡಲಿಲ್ಲ. ಇದರ ಪರಿಣಾಮ ಏನಾಯಿತೆಂದರೆ ಗುಲ್ಬರ್ಗಾ ವಿಭಾಗದ ಅಧಿಕಾರಿಗಳ ವಲಯದಲ್ಲಿ ನಾನೊಬ್ಬ ಸೂಪರ್ ಹೀರೋ ಆಗಿಹೋಗಿದ್ದೆ. ವಿಐಪಿ ಟ್ರ್ಯಾಕ್ಟರ್ ಜಪ್ತು ಮಾಡಿದವರು ಎನ್ನುವ ವಿಷಯ ಎಲ್ಲಾ ಕಡೆ ಹರಡಿತ್ತು. + +‘ಆ ಅರ್ಜಿಯ ಮೇಲೆ ಒತ್ತಿದ ಹೆಬ್ಬೆಟ್ಟು ಇದೇ ತಾನೆ?’ –ಜಮೀನ್ದಾರನೊಬ್ಬನ ಕಡುಕೋಪ + +1970ರ ದಶಕದ ಮಧ್ಯಭಾಗದಲ್ಲಿ ಬೆಂಗಳೂರು ಇನ್ನೂ ಭಾರತದ ಸಿಲಿಕಾನ್ ವ್ಯಾಲಿ ಆಗಿರಲಿಲ್ಲ. ಆದರೆ ಅದಾಗಲೇ ಅದು ಮುಂಬೈ, ದೆಹಲಿ, ಕಲ್ಕತ್ತಾ ಮತ್ತು ಮದ್ರಾಸ್ ನಂತರ ಭಾರತದ ಅತಿದೊಡ್ಡ ಮೆಟ್ರೋಪಾಲಿಟನ್ ನಗರ ಆಗಿತ್ತು. ಅಷ್ಟರಲ್ಲಾಗಲೇ ಅಲ್ಲಿ ಅನೇಕ ಕೇಂದ್ರ ಸರಕಾರದ ಸಾರ್ವಜನಿಕ ಉದ್ದಿಮೆಗಳಾದ ಭಾರತ್ ಎಲೆಕ್ಟ್ರಾನಿಕ್ಸ್, ಭಾರತ್ ಅರ್ಥ್ ಮೂವರ್ಸ್, ಹಿಂದೂಸ್ಥಾನ್ ಮೆಶಿನ್ ಟೂಲ್ಸ್, ಜರ್ಮನ್ ಸಹಯೋಗದ ಮೈಕೋ-ಬೋಶ್ ಇದ್ದುವಲ್ಲದೆ, ಅನೇಕ ದೊಡ್ಡ ಬ್ಯಾಂಕ್ ಗಳು ಮತ್ತು ಬಹುರಾಷ್ಟ್ರೀಯ ಕಂಪನಿಗಳ ಸ್ಥಳೀಯ ಕಛೇರಿಗಳೂ ಕಾರ್ಯನಿರ್ವಹಿಸುತ್ತಿದ್ದವು. ಜೊತೆಗೆ ವೈದ್ಯಕೀಯ, ತಾಂತ್ರಿಕ ಮತ್ತು ಇನ್ನಿತರ ವೃತ್ತಿಪರ ಕೋರ್ಸ್ ಗಳ ‘ಡೊನೇಶನ್ ಕಾಲೇಜ್’ಗಳನ್ನು ಪ್ರಾರಂಭಿಸಿದ ಕೀರ್ತಿ ಸಹ ಕರ್ನಾಟಕಕ್ಕೇ ದಕ್ಕುತ್ತದೆ. + +1960ರವರೆಗೂ ಭಾರತದಲ್ಲಿ ಸರ್ಕಾರಿ ವೃತ್ತಿಪರ ಕಾಲೇಜುಗಳು ಮಾತ್ರ ಇದ್ದವು. ಈ ಬಗ್ಗೆ ಸರಕಾರದ ಬದಲಾದ ನೀತಿಯ ಕಾರಣದಿಂದ ರಾಜ್ಯದಲ್ಲಿ ಮೆಡಿಕಲ್ ಮತ್ತು ಎಂಜನಿಯರಿಂಗ್ ಕಾಲೇಜುಗಳ ಮಹಾಸ್ಪೋಟವೇ ಆಯಿತು. ಅವುಗಳ ಪರವಾನಗಿ ಪಡೆಯಲು ದೊಡ್ಡ ಮೊತ್ತದ ಲಂಚ ಕೊಡಬೇಕಾಗುತ್ತಿತ್ತು ಎನ್ನುವ ಮಾತು ಬೇರೆ. ಹಾಗಾಗಿ ಬೇರೆ ರಾಜ್ಯದ ವಿದ್ಯಾರ್ಥಿಗಳು, ದೊಡ್ಡ ಮೊತ್ತದ ಡೊನೇಶನ್ ಸಲ್ಲಿಸಿ, ಕರ್ನಾಟಕದ ಈ ಕಾಲೇಜುಗಳಲ್ಲಿ ಮ್ಯಾನೇಜ್ಮೆಂಟ್ ಸೀಟು ಪಡೆಯುವುದು ಸಾಮಾನ್ಯವಾಗಿತ್ತು. ಬೆಂಗಳೂರಿನಲ್ಲಿ ಅನೇಕ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ಧಿಗೆ, ಕೌಶಲ್ಯದೊಂದಿಗೆ ಸಿದ್ಧವಾಗಿದ್ದ ಈ ಮಾನವ ಸಂಪನ್ಮೂಲವೂ ಒಂದು ಕಾರಣ. + +1960 ರ ಮಧ್ಯದ ನಂತರ ನಡೆದ ಈ ಕ್ಷಿಪ್ರ ಬೆಳವಣಿಗೆಗಳ ಕಾರಣದಿಂದ 1971 ರಲ್ಲಿ 17 ಲಕ್ಷ ಇದ್ದ ಇಲ್ಲಿನ ಜನಸಂಖ್ಯೆ, 1981 ರ ವೇಳೆಗೆ 30 ಲಕ್ಷ ಆಗಿತ್ತು. ಒಂದು ದಶಕದಲ್ಲಿ 76% ಹೆಚ್ಚು. ಇದರಿಂದ ಇಲ್ಲಿನ ಜಮೀನಿನ ಮೇಲೆ ಅನಿವಾರ್ಯ ಪರಿಣಾಮಗಳಾದವು. ಬೆಂಗಳೂರಿನ ಸುತ್ತಮುತ್ತ ಇದ್ದ ಗ್ರಾಮೀಣ ಪ್ರದೇಶಗಳಲ್ಲಿ ನೆಲದ ಮೌಲ್ಯ ಗಗನಕ್ಕೇರಿತು. ಇದರಿಂದ ಯಾರ ರೆಟ್ಟೆಗಳಲ್ಲಿ ಬಲವಿತ್ತೋ ಅವರು ನೆಲದ ಆಕ್ರಮಣ ಮತ್ತು ಅತಿಕ್ರಮಣ ಎರಡನ್ನೂ ಮಾಡತೊಡಗಿದರು. ತುರ್ತುಪರಿಸ್ಥಿತಿ ಘೋಷಣೆಯಾದ ಮೂರು ತಿಂಗಳಲ್ಲಿ ಇಂತಹ ಒಂದು ಅತಿರೇಕದ ಜಮೀನ್ದಾರಿ ನೆಲಗಳ್ಳತನ ನನ್ನ ಗಮನಕ್ಕೆ ಬಂದಿತು. ಒಂದು ದಿನ ಸುಮಾರು 10 ಜನ ದಲಿತರು ತಮ್ಮ ಹೃದಯ ವಿದ್ರಾವಕ ಕಥೆಯೊಂದಿಗೆ ನನ್ನ ಕಛೇರಿಗೆ ಬಂದರು. ಅವರಲ್ಲಿ ಐದು ಜನರ ಕೈಗಳಿಗೆ ಬ್ಯಾಂಡೇಜ್ ಹಾಕಲಾಗಿತ್ತು. ಅವರು ದೇವನಹಳ್ಳಿ ತಾಲೂಕಿನ ಚಿಕ್ಕಜಾಲ ಗ್ರಾಮಕ್ಕೆ ಸೇರಿದವರು. ಮುನಿಪಾಪಣ್ಣ ಗೌಡ ಎನ್ನುವ ಜಮೀನುದಾರನೊಬ್ಬನ ಬಳಿ ಹೊಲದ ಕೆಲಸ ಮಾಡುತ್ತಿದ್ದರು. ಐದು ವರ್ಷಗಳ ಕೆಳಗೆ ಗೌಡ, ಸರಕಾರಕ್ಕೆ ಸೇರಿದ ಗೋಮಾಳ ಜಮೀನಿಗಾಗಿ ಒಬ್ಬೊಬ್ಬರಿಂದ ಐದು ಎಕರೆಗಳಿಗೆ ಅರ್ಜಿ ಹಾಕಿಸಿದ್ದ. ಭೂ ಕಾಯಿದೆಗನುಸಾರವಾಗಿ ಭೂರಹಿತ ಕೂಲಿಯಾಳುಗಳಿಗೆ ಕುಟುಂಬಕ್ಕೆ ಐದೆಕೆರೆಯಂತೆ ಒಣಜಮೀನು ಮಂಜೂರು ಮಾಡಬಹುದಾಗಿತ್ತು. ಮೊದಲ ಆದ್ಯತೆ ಆ ಹಳ್ಳಿಯ ಪರಿಶಿಷ್ಟ ಜಾತಿಯವರಿಗೆ ಸಿಗುತ್ತಿತ್ತು. ಹಾಗಾಗಿ ಮುನಿಪಾಪಣ್ಣ ಗೌಡ ಅವರ ಅರ್ಜಿಯನ್ನು ಕಂದಾಯ ಇಲಾಖೆಯ ಮುಂದೆ ತಳ್ಳಿ ಪ್ರತಿಯೊಬ್ಬರಿಗೂ ಐದೆಕೆರೆ ಗೋಮಾಳ ಜಮೀನು ಮಂಜೂರಾಗುವಂತೆ ನೋಡಿಕೊಂಡಿದ್ದ. (ಹಿಂದಿನ ಕಾಲದಿಂದಲೂ, ಪ್ರತಿ ಹಳ್ಳಿಯಲ್ಲಿಯೂ ಗೋಮಾಳಕ್ಕೆಂದು 100 ಹಸುಗಳಿಗೆ 30 ಎಕರೆಯಂತೆ ನೆಲವನ್ನು ಕಾಯ್ದಿರಿಸಲಾಗುತ್ತಿತ್ತು. ಆರು ಮೇಕೆಗಳು ಒಂದು ಹಸುವಿನ ಲೆಕ್ಕಕ್ಕೆ ಸಮ. ನಗರಗಳು ಬೆಳೆದಂತೆ ಬೆಂಗಳೂರಿನ ಹಳ್ಳಿಗಳಲ್ಲಿ ಪಶುಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿ ಗೋಮಾಳದ ಜಮೀನು ಹೆಚ್ಚುವರಿಯಾಗಿದ್ದು, ಅದರಿಂದ ಭೂವಿಹೀನರಿಗೆ ಭೂಮಿ ಮಂಜೂರು ಮಾಡಲಾಗುತ್ತಿತ್ತು) ಮಂಜೂರಾತಿ ಆದಮೇಲೆ, ಹತ್ತುಜನ ದಲಿತರ 50 ಎಕರೆ ಜಮೀನನ್ನು ಒಗ್ಗೂಡಿಸಿ ಗೌಡ ಒಂದು ಸಹಕಾರಿ ಸಂಘದ ಸ್ಥಾಪನೆ ಮಾಡಿ, ತಾನು ಅದರ ಅಧ್ಯಕ್ಷನಾದ. ಆಮೇಲೆ ದೇವನಹಳ್ಳಿಯಲ್ಲಿದ್ದ ಭೂ ಅಭಿವೃದ್ಧಿ ಸಹಕಾರ ಬ್ಯಾಂಕ್ ನಿಂದ ಎಕರೆಗೆ 5000 ದಂತೆ ಜಮೀನಿನ ಅಭಿವೃದ್ಧಿಗೆ ಸಾಲ ಪಡೆದ. 50 ಎಕರೆಗಳಿಗೆ ಒಟ್ಟು 2.5 ಲಕ್ಷಗಳನ್ನು ಪಡೆದ ಮೇಲೆ, ಅದನ್ನು ಉಪಯೋಗಿಸಿಕೊಂಡು ಬೇಗ ಇಳುವರಿ ಕೊಡುವ ನೀಲಗಿರಿ ಮತ್ತು ಸರ್ವೆಗಿಡಗಳನ್ನು ಅಷ್ಟೂ ಜಮೀನಿಗೆ ಹಾಕಿಸುತ್ತಾನೆ. ಅದು ಉರುವಲಿಗಷ್ಟೇ ಅಲ್ಲದೆ ಕಾಗದದ ಕಾರ್ಖಾನೆಗಳಲ್ಲೂ ಸಿದ್ಧ ಮಾರುಕಟ್ಟೆಯನ್ನು ಹೊಂದಿತ್ತು. ಎರಡೂ ಬೆಳೆಗಳಿಂದ ಪ್ರತಿ ಮೂರು ವರ್ಷಗಳಿಗೆ ಎಕರೆಗೆ 30 ಟನ್ ಇಳುವರಿ ಬಂದಿರುತ್ತದೆ. ಎರಡು ತಿಂಗಳ ಕೆಳಗೆ ಮೊದಲ ಬೆಳೆ ತೆಗೆದಿದ್ದ ಮುನಿಪಾಪಣ್ಣ ಗೌಡ ಹರಿಹರ ಪಾಲಿಫೈಬರ್ಸ್ ಕಾಗದ ಕಾರ್ಖಾನೆಗೆ ಅದನ್ನು 15 ಲಕ್ಷಗಳಿಗೆ (ಇಂದಿನ 135 ಲಕ್ಷಗಳಿಗೆ ಸಮ) ಮಾರಿದ್ದ. + +ಆ 50 ಎಕರೆ ಜಮೀನಿನ ನಾಮ್ ಕೆ ವಾಸ್ತೆ ಮಾಲಿಕರಾಗಿದ್ದ ಆ ಹತ್ತು ಜನ ದಲಿತರು ಅದೇ ಜಮೀನಿನಲ್ಲಿ ಗೌಡನ ಕೂಲಿಯಾಳುಗಳಾಗಿ, ಗಂಡಾಳುಗಳಿಗೆ ವಾರಕ್ಕೆ 30ರೂ ಮತ್ತು ಹೆಣ್ಣಾಳುಗಳಿಗೆ ವಾರಕ್ಕೆ 20ರೂ ಕೂಲಿಗೆ ಕೆಲಸ ಮಾಡುತ್ತಿರುತ್ತಾರೆ. ಆ ಮಣ್ಣಿನಿಂದ ಇವರಿಗೆ ಒಂದು ರೂ ಆದಾಯ ಸಹ ಬಂದಿರುವುದಿಲ್ಲ. ಒಂದು ತಿಂಗಳ ಹಿಂದೆ ಸಹಕಾರಿ ಬ್ಯಾಂಕಿನ ರೆಜಿಸ್ಟ್ರಾರ್ ಅವರೆಲ್ಲರಿಗೂ ನೋಟೀಸು ಕಳಿಸಿ ರೂ 1500 ಸಾಲದ ಕಂತು ಮತ್ತು 8% ಲೆಕ್ಕದಲ್ಲಿ ಬಡ್ಡಿ ಪಾವತಿಸಲು ಹೇಳಿದ್ದಾರೆ. ಅವರು ಕಂಗಾಲಾಗಿದ್ದಾರೆ. ಅವರ್ಯಾರ ಕೈಗೂ ಸಾಲದ ರೂಪದಲ್ಲಾಗಲೀ, ಜಮೀನಿನ ಆದಾಯದ ರೂಪದಲ್ಲಾಗಲೀ ಒಂದು ರೂ ಸಹ ಬಂದಿಲ್ಲದ ಕಾರಣ ಅವರೊಬ್ಬ ದಲಿತ ನಾಯಕರನ್ನು ಸಂಪರ್ಕಿಸಿ, ಆತ ಅವರಿಗೆ ಜಿಲ್ಲಾಧಿಕಾರಿಗಳನ್ನು ನೋಡಲು ಹೇಳಿದ್ದಾರೆ. ಆತನಿಂದಲೇ ಒಂದು ಅರ್ಜಿ ಬರೆಸಿಕೊಂಡು, ಐದು ಜನ ದಲಿತರು(ಒಟ್ಟು ಹತ್ತರಲ್ಲಿ ಐದು) ಅದರ ಮೇಲೆ ತಮ್ಮ ಹೆಬ್ಬೆಟ್ಟು ಒತ್ತಿ, ಎರಡು ವಾರಗಳ ಹಿಂದೆ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದು ನೆಲಮಹಡಿಯಲ್ಲಿದ್ದ ಕಾರಕೂನನಿಗೆ ಅರ್ಜಿ ಕೊಟ್ಟು, ಒಂದು ಕೆಂಪು ಬಣ್ಣದ ರಸೀತಿ ಪಡೆದುಕೊಂಡಿದ್ದಾರೆ. ಗಂಭೀರ ವಿಷಯಗಳಿಗಾಗಿ ನಾನು ನಿಗದಿಪಡಿಸಿದ್ದ ಬಣ್ಣದ ರಸೀತಿ ವ್ಯವಸ್ಥೆ ಅದು. ತಡಮಾಡದೆ ಆ ಅರ್ಜಿಯನ್ನು ದೇವನಹಳ್ಳಿಯಲ್ಲಿದ್ದ ತಹಸಿಲ್ದಾರರ ಕಛೇರಿಗೆ ಕಳಿಸಲಾಗಿತ್ತು. ಮೂರು ದಿನಗಳ ಕೆಳಗೆ ಚಿಕ್ಕಜಾಲಕ್ಕೆ ಸ್ಥಳಪರೀಕ್ಷೆಗೆಂದು ಹೋದ ಅವರು ಮೊದಲು ದಲಿತರನ್ನು, ನಂತರ ಗೌಡನನ್ನು ವಿಚಾರಣೆ ಮಾಡಿದ್ದಾರೆ. + +ತಹಸಿಲ್ದಾರರು ಹೊರಟ ನಂತರ ದಲಿತರ ಮೇಲೆ ಹಲ್ಲೆ ಮಾಡಿದ ಮುನಿಪಾಪಣ್ಣನ ಕಡೆಯವರು, ಅವನಿಗೆದುರಾಗಿ ಯಾರ್ಯಾರು ಅರ್ಜಿಯಲ್ಲಿ ಎಡ ಹೆಬ್ಬೆಟ್ಟು ಒತ್ತಿದ್ದಾರೆ ಎಂದು ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆತ ಮತ್ತು ಆತನ ಮಕ್ಕಳು ಆ ಐದು ಜನರನ್ನೂ ಹಿಡಿದು, ಅವರೆಲ್ಲರ ಹೆಬ್ಬೆಟ್ಟುಗಳನ್ನೂ ಕತ್ತರಿಸಿ, ‘ಈಗ ಡಿಸಿ ಸಾಹೇಬರಿಗೆ ಹೇಗೆ ಅರ್ಜಿ ಕೊಡುತ್ತೀರೋ ನೋಡೋಣ!’ ಎಂದು ಕೂಗಾಡಿದ್ದಾರೆ. ಆ ಐದೂ ದಲಿತರೂ ಬ್ಯಾಂಡೇಜ್ ತೆಗೆದು, ನನ್ನ ಮುಂದೆ ತಮ್ಮ ಎಡಗೈ ಚಾಚಿದರು. ಮೊಂಡು ಬೆರಳಿನ ಮೇಲೆ ಇನ್ನೂ ರಕ್ತದ ಕಲೆ ಸಹ ಹಾಗೆಯೇ ಇತ್ತು. ನಾನು ಕೇಳಿದ ಕಥೆ ಮತ್ತು ಕಂಡ ದೃಶ್ಯದಿಂದ ಸುಧಾರಿಸಿಕೊಳ್ಳಲು ನನಗೆ ಸ್ವಲ್ಪ ಸಮಯ ಬೇಕಾಗಿತ್ತು, ಅಷ್ಟರಲ್ಲಾಗಲೇ ನನ್ನ ಸಿಟ್ಟು ನೆತ್ತಿಗೇರುತ್ತಿತ್ತು. ಐಪಿಸಿ ಅಡಿಯಲ್ಲಿ ಅದು ಶಿಕ್ಷಾರ್ಹ ಅಪರಾಧವಾಗಿದ್ದು, ಏಳರಿಂದ ಹತ್ತು ವರ್ಷಗಳ ಶಿಕ್ಷೆ ಆಗುತ್ತಿತ್ತು. ಅಲ್ಲದೆ ಬಲಿಪಶುಗಳು ದಲಿತರಾಗಿದ್ದ ಕಾರಣ, ಅದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಮೇಲಿನ ಅಟ್ರಾಸಿಟಿ ಕಾಯಿದೆಯಡಿಗೆ ಬರುತ್ತಿತ್ತು. ನಾನು ನನ್ನ ಹೆಡ್ ಕ್ವಾರ್ಟರ್ಸ್ ಅಸಿಸ್ಟೆಂಟ್ ಜೊತೆಯಲ್ಲಿ ಕೂಡಲೇ ಅವರನ್ನು ಸರಕಾರಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದೆ. ಆಸ್ಪತ್ರೆಯ ಸೂಪರಿಡೆಂಟರಿಗೆ ಕರೆ ಮಾಡಿ, ಆ ದಲಿತರನ್ನು ಪರೀಕ್ಷೆ ಮಾಡಿ, ಅವರ ಗಾಯದ ಕಾರಣವನ್ನು ಅವರ ವರದಿಯಲ್ಲಿ ನಮೂದಿಸಲು ಕೇಳಿದೆ. ಮಧ್ಯಾಹ್ನದ ವೇಳೆಗೆ ನನ್ನ ಹೆಡ್ ಕ್ವಾರ್ಟರ್ಸ್ ಅಸಿಸ್ಟೆಂಟ್ ಅವರೊಂದಿಗೆ, ಸರ್ಟಿಫಿಕೇಟುಗಳನ್ನು ಹಿಡಿದುಕೊಂಡು ಹಿಂದಿರುಗಿದರು. + +ಐಪಿಸಿ ಅಡಿಯಲ್ಲಿನ ವಿಚಾರಣೆಗಿಂತ ಹೆಚ್ಚಿನದೇನಾದರೂ ಮಾಡಬೇಕು ಎಂದು ಅಷ್ಟರಲ್ಲಾಗಲೇ ನಾನು ನಿರ್ಧರಿಸಿಯಾಗಿತ್ತು. ಅಲ್ಲದೆ ಅಂತಹ ಪ್ರಭಾವಶಾಲಿ ಸಮೂಹದ ಜಮೀನು ಒಡೆಯ ಗೌಡನನ್ನು ನಮ್ಮ ನ್ಯಾಯಾಲಯಗಳು ಶಿಕ್ಷೆಗೆ ಒಳಪಡಿಸುವುದನ್ನು ಕುರಿತು ನನಗೆ ಅನುಮಾನಗಳಿದ್ದವು. ಮೊದಲನೆಯದಾಗಿ ಅವನಿಗೆ ತಕ್ಷಣವೇ ಬೇಲ್ ಸಿಗುತ್ತದೆ, ಪೊಲೀಸರ ಮೇಲೆ ಒತ್ತಡ ಹಾಕಲಾಗುತ್ತದೆ, ಕೇಸು ವರ್ಷಾನುಗಟ್ಟಲೆ ನಡೆಯುತ್ತದೆ, ಆ ದಲಿತರನ್ನು ಗೋಳಾಡಿಸಲಾಗುತ್ತದೆ, ಪ್ರಾಸೆಕ್ಯೂಶನ್ ಪರ ಸಾಕ್ಷಿಗಳು ಉಲ್ಟಾ ಹೊಡೆಯುತಾರೆ, ಸರಕಾರಿ ವಕೀಲರಿಗೆ ‘ಮಾಮೂಲು’ ಸಹ ಸಂದಾಯವಾಗಬಹುದು ಮತ್ತು ಕಡೆಗೆ ಸರಿಯಾದ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಮುನಿಪಾಪಣ್ಣ ಗೌಡ ಖುಲಾಸೆಯಾಗಿ, ಆ ಪಾಪದ ದಲಿತರು ಮತ್ತೂ ಹೀನಾಯದ ಅಧೋಗತಿಯ ಸ್ಥಿತಿಗೆ ನೂಕಲ್ಪಡಬಹುದು. ಹಾಗಾಗಿ ಪದ್ಧತಿಯ ಪ್ರಕಾರ ತನ್ನದೇ ಆಮೆ ವೇಗದಲ್ಲಿ ನಡೆಯುವ ನಿಷ್ಫಲ ಪೊಲೀಸ್ ವಿಚಾರಣೆಯ ಜೊತೆಯಲ್ಲಿ, ನಾನು ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಅಧಿಕಾರದಲ್ಲಿ, ಗುಲ್ಬರ್ಗಾದಲ್ಲಿ ಒಂದುಇರಾನಿ ಜಿಪ್ಸಿ ಗ್ಯಾಂಗ್ ಗೆ ವಿಧಿಸಿದ ಗಡಿಪಾರು ಆದೇಶವನ್ನು ಇಲ್ಲಿಯೂ ಪ್ರಯೋಗಿಸಲು ನಿರ್ಧರಿಸಿದೆ. + + + +ಪೊಲೀಸ್ ಕಾಯಿದೆಯ ಪ್ರಕಾರ, ‘ಸಮುದಾಯಕ್ಕೆ ಅಪಾಯ ಅಥವಾ ಆತಂಕ ತಂದೊಡ್ಡಬಲ್ಲ’ ಯಾವುದೇ ವ್ಯಕ್ತಿಯನ್ನು ಆತನ ಜಿಲ್ಲೆಯಾಚೆಗೆ ಗಡಿಪಾರು ಮಾಡುವ ಅಧಿಕಾರ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಗೆ ಇರುತ್ತದೆ. ಬಹಳಷ್ಟು ಜನ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟ್ ಗಳಿಗೆ ಇದರ ಅರಿವು ಕೂಡಾ ಇರುವುದಿಲ್ಲ. ಡಿಎಂ ನೀಡಿದ ಗಡಿಪಾರು ಆದೇಶವನ್ನು ಹೈಕೋಟಿನಲ್ಲಿ ಚಾಲೆಂಜ್ ಮಾಡಬಹುದು. ಆದ್ದರಿಂದ ನಾನು ಚಾಚೂತಪ್ಪದೆ ಇತರ ಕಾನೂನುಬದ್ಧ ಪ್ರಕ್ರಿಯೆಗಳನ್ನು ಅನುಸರಿಸುವುದರ ಮೂಲಕ ಪ್ರಭಾವಶಾಲಿ ಗೌಡ ನಾಳೆ ಹೈಕೋರ್ಟಿನಲ್ಲಿ ಅದನ್ನು ಪ್ರಶ್ನಿಸಿದರೂ ತೊಂದರೆಯಾಗದಂತೆ ನೋಡಿಕೊಳ್ಳಬೇಕಿತ್ತು. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_9.txt b/Kenda Sampige/article_9.txt new file mode 100644 index 0000000000000000000000000000000000000000..09623b114e063087ed58752f22184df6afc977f1 --- /dev/null +++ b/Kenda Sampige/article_9.txt @@ -0,0 +1,35 @@ +byಸಂಜೋತಾ ಪುರೋಹಿತ|Sep 18, 2024|ಸರಣಿ| 0 Comments + +ನಾಯಿಗಳ ಸಲೂನಿನಲ್ಲಿ ಉಗುರುಗಳನ್ನು ಕತ್ತರಿಸುತ್ತಾರೆಂದು ಗೊತ್ತಾಗಿ ಅಲ್ಲಿಗೆ ಕರೆದುಕೊಂಡು ಹೋದೆವು. ಅಲ್ಲಿ ಅವನ ಯಾವ ತಂತ್ರಗಳು ನಡೆಯದೇ, ಆಕೆಗಿರುವ ಅನುಭವದಿಂದ ಉಗುರುಗಳನ್ನು ಕತ್ತರಿಸಿಯೇ ತೀರುತ್ತಾಳೆ ಎಂದು ನಾವು ಮನಸ್ಸಿನಲ್ಲಿ ಮಂಡಿಗೆ ಮೆಲ್ಲುತ್ತ ಹೊರಗೆ ಕಾಯುತ್ತಿದ್ದೆವು. ಸ್ವಲ್ಪ ಹೊತ್ತಿನ ನಂತರ ಹೊರಗೆ ಬಂದ ಆಕೆಯನ್ನು ನೋಡಿ ಬೆಟ್ಟದ ಚಾಮುಂಡಿದೇವಿಯೇ ದರ್ಶನ ಕೊಟ್ಟಂತಾಯಿತು. ಆದರೆ.. ಅವಳು ಸಹ ತನಗೆ ಆಗಲಿಲ್ಲ ಎಂದು ಕೂರಾನನ್ನು ಕರೆತಂದು ಕೊಟ್ಟು ಬಿಟ್ಟಳು!ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಆರನೆಯ ಕಂತು + +byಪೂರ್ಣೇಶ್ ಮತ್ತಾವರ|Sep 18, 2024|ಸರಣಿ| 0 Comments + +ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ!ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎರಡನೆಯ ಬರಹ + +byಸುಮಾ ಸತೀಶ್|Sep 18, 2024|ಸರಣಿ| 0 Comments + +ಅವರ ಮನ್ಯಾಗೆ ಲೆಟ್ರಿನ್ ಇತ್ತು. ಇಲ್ಲಿ ಬಯಲಿಗೆ ಹೋಗೋಕೆ ಸುತ್ರಾಂ ಒಪ್ತಿಲ್ಲ. ಚೊಂಬು ಹಿಡಿಯಾಕಿಲ್ಲ ಅಂದ್ಲು. ಕೊನೀಗೆ ಸಣ್ಣ ಹುಡ್ಗಿ ಅಂತ ನನ್ನ ಅವಳ ಹಿಂದೆ ಚೊಂಬು ಹಿಡ್ಕೊಂಡು ಮೆರವಣಿಗೆ ಕಳಿಸಿದ್ರು. ಥೋ, ನಂಗೋ ಕೋಪ. ಅವಳ ಹಿಂದೆ ಹೋಗಿ, ಚೊಂಬು ಕೊಟ್ಟೆ. ಆ ನೀರು ಸಾಲಲಿಲ್ಲ ಅಂತ ಅಲ್ಲೇ ಕುಂತ್ಲು. ಇನ್ನೊಂದು ಚೊಂಬು ತರಾಣಿ ಅಂತ ಹೊಂಟ್ರೇ, ಚೊಂಬು ಸಾಲಾಕಿಲ್ಲ, ಬಿಂದಿಗೇಲಿ ತತ್ತಾ ಅಂತ‌ ಹಠ.ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ತಮ್ಮೂರಿನ ಕುರಿತ ಬರಹ + +byಡಾ. ವಿಶ್ವನಾಥ ಎನ್ ನೇರಳಕಟ್ಟೆ|Sep 17, 2024|ಸರಣಿ| 3 Comments + +ಫ್ರಾನ್ಸ್ ಕಲಾವಲಯದ ಕುರಿತ ವಿವರಣೆಯು ಪ್ಯಾಬ್ಲೋ ಪಿಕಾಸೊ ಅವರ ಪ್ರಸ್ತಾಪವಿಲ್ಲದೆ ಪೂರ್ಣವಾಗಲಾರದು. ಶಿಲ್ಪಕಲೆಯನ್ನು ಪ್ರಧಾನವಾಗಿಸಿಕೊಂಡು ಇತರ ಕಲೆಗಳಲ್ಲಿಯೂ ತೊಡಗಿಸಿಕೊಂಡ ಇವರು ಸ್ಪೇನ್ ಮೂಲದವರು. ಇಪ್ಪತ್ತನೇ ಶತಮಾನದ ಫ್ರಾನ್ಸ್ ಶಿಲ್ಪಕಲೆಯ ಮೊದಲ ಅರ್ಧಭಾಗ ಪಿಕಾಸೊ ಅವರಿಗೆ ಮೀಸಲಾಗಿದೆ. ‘ಮ್ಯಾನ್ ವಿದ್ ಅ ಲ್ಯಾಂಬ್’ ಎನ್ನುವ ಅವರ ಶಿಲ್ಪಕಲಾ ಕೆತ್ತನೆಯಲ್ಲಿ ಮಾನವೀಯತೆ ಅಭಿವ್ಯಕ್ತಗೊಂಡಿದ್ದರೆ, ‘ಡೆತ್ಸ್ ಹೆಡ್’ ಎನ್ನುವ ಕೆತ್ತನೆಯು ಯುದ್ಧದ ಭೀಕರತೆಯನ್ನು ಮನದಟ್ಟು ಮಾಡಿಕೊಡುವಂತಿದೆ.ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ + +byಅನುಸೂಯ ಯತೀಶ್|Sep 17, 2024|ಸರಣಿ| 0 Comments + +ಇನ್ನು ಪರೀಕ್ಷೆ ಮುಗಿಯುವವರೆಗೂ ಪುಸ್ತಕ ಕೆಳಗೆ ಇಡುವಂತಿಲ್ಲ. ಸದಾ ಕಾಲ ಪುಸ್ತಕವನ್ನು ಕೈಯಲ್ಲೇ ಹಿಡಿದಿರಬೇಕು” ಎಂದಿದ್ದೆ. ನನ್ನ ಮಾತಿನ ಸೂಕ್ಷ್ಮಾರ್ಥವನ್ನು ಗ್ರಹಿಸದ ಆ ಮಗು ಕೇವಲ ಪುಸ್ತಕವನ್ನು ಕೈಯಲ್ಲಿ ಹಿಡಿದು ನನ್ನ ಮಾತಿನ ಪರಿಪಾಲನೆ ಮಾಡಿದ್ದನು. ನನಗಾಗ ಅರ್ಥವಾಯಿತು. ಯಾವುದೇ ವಿಷಯವನ್ನು ಮಕ್ಕಳಿಗೆ ಮಾರ್ಮಿಕವಾಗಿ, ಗೂಡಾರ್ಥದಲ್ಲಿ ಅಸ್ವಷ್ಟವಾಗಿ ಹೇಳಬಾರದು ಎಂದು.ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ + +byಸುಮಾವೀಣಾ|Sep 16, 2024|ಸರಣಿ| 0 Comments + +‘ಧಂ’ ಅಂದರೆ ಧೈರ್ಯ ಉಸಿರು ಎನ್ನುವ ಅರ್ಥವೂ ಇದೆ. ಹೊಸ ಮನೆ ಕಟ್ಟುವಾಗ ಮನೆ ಕಟ್ಟುವವರಿಗೆ, ಪಕ್ಕದ ಸೈಟವರಿಗೆ ಕಾಂಪೌಂಡ್‌ಗೆ ಜಾಗ ಬಿಡುವ ವಿಚಾರದಲ್ಲಿ ತಕರಾರು ಇದ್ದೇ ಇರುತ್ತದೆ. ಆಗ ಪರಸ್ಪರೂ ‘ಧಮ್’ ಇದ್ದರೆ ಕಟ್ಟು ನೋಡೋಣ ಅಂದರೆ ಪ್ರತಿಯಾಗಿ ಇನ್ನೊಬ್ಬ ‘ಧಮ್’ ಇದ್ದರೆ ನಿಲ್ಲಿಸು ನೋಡೋಣ ಎನ್ನುವ ಸವಾಲುಗಳು ಪ್ರತಿ ಸವಾಲುಗಳನ್ನು ಹಾಕಿಯೇ ಇರುತ್ತಾರೆ.ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಎರಡನೆಯ ಬರಹ + +byಎಸ್. ಜಯಶ್ರೀನಿವಾಸ ರಾವ್|Sep 16, 2024|ಸರಣಿ| 0 Comments + +ಅವರ ಕೆಲವು ಕವಿತೆಗಳು ಕೇವಲ ಆರು ಪದಗಳಷ್ಟೇ ಉದ್ದವಿರುತ್ತವೆ – ಇದು ಅವಶ್ಯಕತೆ ಮತ್ತು ಸಾಧ್ಯತೆಯತ್ತ ಗಮನ ಸೆಳೆಯುವ ದಿಟ್ಟವಾದ ನಡೆ. ಅತಿ ತೆಳ್ಳನೆಯ ವಸ್ತುಗಳಿಂದ ಇಂತಹ ವಿಸ್ತೃತವಾದ ಕವಿತೆಗಳನ್ನು ರಚಿಸುವ ಅವರ ಸಾಮರ್ಥ್ಯವು ಭಾಗಶಃ, ಐಸ್‌ಲ್ಯಾಂಡಿಕ್‌ ಇತಿಹಾಸದ ಅವರ ಜ್ಞಾನದಿಂದ ಮತ್ತು ಪದಸೃಷ್ಟಿ ಬಗ್ಗೆ ಅವರಿಗಿರುವ ಒಲವಿನಿಂದ ಬರುತ್ತದೆ.ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಐಸ್‌ಲ್ಯಾಂಡ್‌ ದೇಶದ ಖ್ಯಾತ ಕವಿ ಮಾಗ್ನುಸ್ ಸಿಗುರ್ದ್ಸನ್-ರವರ(Magnus Sigurðsson) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ + +byಕಾರ್ತಿಕ್ ಕೃಷ್ಣ|Sep 14, 2024|ಸರಣಿ| 1 Comment + +ಅಂಕಗಳು ಸೋರಿಹೋಗುತ್ತಿದ್ದರೂ ಎದೆಗುಂದದೆ ಆಡುತ್ತಿದ್ದ ಮೆರಿನ್ ಕೆಲವೇ ಘಳಿಗೆಯಲ್ಲಿ ನೋವನ್ನು ತಾಳಲಾರದೆ ಮತ್ತೆ ಕುಸಿದಳು. ಈ ಬಾರಿ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಅವಳ ನೋವಿಗೆ ಇಡೀ ಕ್ರೀಡಾಂಗಣ ಮರುಗುತ್ತಿತ್ತು. ಕುಸಿದಲ್ಲೇ ಅಳುತ್ತಿದ್ದ ಮೆರಿನ್‌ಳನ್ನು ತಬ್ಬಿ ಸಮಾಧಾನ ಮಾಡುತ್ತಿದ್ದ ಅವಳ ಕೋಚ್‌ಗೂ ಕೂಡ ತನ್ನ ಕಣ್ಣೀರನ್ನು ತಡೆಹಿಡಿಯಲಾಗಿರಲಿಲ್ಲ. ಎದುರಾಳಿ ಹೇ ಗೆ ತಾನು ಫೈನಲ್ ತಲುಪಿದ್ದಕ್ಕೆ ಖುಷಿಪಡುವುದೋ, ಅಥವಾ ಮೆರಿನ್‌ಳ ಸ್ಥಿತಿಯನ್ನು ನೋಡಿ ಮರುಗುವುದೋ, ಒಂದೂ ತಿಳಿಯದೆ ಮೆರೀನಳ ಬಳಿ ಬಂದು ವಿಷಾದದ ನೋಟ ಬೀರುತ್ತಾ ನಿಂತಿದ್ದಳು.ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ + +byರಾಮ್ ಪ್ರಕಾಶ್ ರೈ ಕೆ.|Sep 13, 2024|ಸರಣಿ| 0 Comments + +ಮೈನಾ ಸತ್ಯನಿಗೆ ಚಪ್ಪಲಿಯನ್ನು ಉಡುಗೊರೆಯಾಗಿ ನೀಡುತ್ತಾಳೆ. ಅದನ್ನು ಕಂಡು ಬೇಸರದಿಂದ ಇದೆಂಥಾ ಉಡುಗೊರೆ ಎಂದು ಸತ್ಯ ಎಸೆಯುತ್ತಾನೆ. ಅನಂತರ ಕಾಲಿಲ್ಲದೇ ನೆಲಕ್ಕೆ ಕೈಯ್ಯಿಟ್ಟು ನಡೆಯುವಾಗ ನೋವನುಭವಿಸಬಾರದು ಎಂದು ಇದನ್ನು ನೀಡಿದ್ದಾಳೆ ಎಂದು ತಿಳಿದು ಖೇದಗೊಳ್ಳುತ್ತಾನೆ ಆತ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕಥೆಯು ಸೆರೆ ಹಿಡಿದ ಸೂಕ್ಷ್ಮತೆ. ಈ ದೃಶ್ಯವೇನೂ ಕಥೆಯ ಮುಖ್ಯ ಭಾಗವಲ್ಲದಿದ್ದರೂ, ಅದೆಷ್ಟು ಅಧ್ಯಯನದ ದೃಷ್ಟಿಕೋನ ಈ ದೃಶ್ಯದಲ್ಲಿ ಅಡಗಿದೆ ಎಂಬುದು ಅಚ್ಚರಿಯ ಸಂಗತಿ.ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ \ No newline at end of file diff --git a/Kenda Sampige/article_90.txt b/Kenda Sampige/article_90.txt new file mode 100644 index 0000000000000000000000000000000000000000..293ef3cab48821f6188e2d87dfd896f744c17469 --- /dev/null +++ b/Kenda Sampige/article_90.txt @@ -0,0 +1,45 @@ +ಸಿಂಗಪುರದ ಇತಿಹಾಸ ಕ್ರಿ.ಶ. 14 ನೇ ಶತಮಾನದವರೆಗೆ ಲಿಖಿತ ರೂಪದಲ್ಲಿ ಏನೂ ಸಿಗುವುದಿಲ್ಲ. ಸುಮಾತ್ರಾದ ರಾಜಮನೆತನದ ವ್ಯಕ್ತಿ ಪರಮೇಶ್ವರ ಹೊಸ ರಾಜ್ಯ ಕಟ್ಟುವ ಸಲುವಾಗಿ ಮಲೇಷಿಯಾ ಕಡೆಗೆ ಬರುವಾಗ ಸಿಕ್ಕ ಭೂಮಿ ತಮಾಸೆಕ್ ಎಂಬ ಪ್ರದೇಶ‌ ಅವನ ಹಡಗು ಅಲ್ಲಿ ಬಂದಾಗ ನೀರಿನ ಮೇಲೆ ಅರ್ಧ ಶರೀರ ಬಿಳಿಯ ಸಿಂಹದಂತೆಯೂ ನೀರಿನಲ್ಲಿ ಮುಳುಗಿದ್ದ ಉಳಿದರ್ಧ ಶರೀರ ಭಾರೀ ಮೀನಿನಂತೆಯೂ ತೋರಿದ ಅಚ್ಚರಿಗೆ ಬೆರಗಾಗಿ ಅಲ್ಲೇ ನಲೆನಿಂತ ಚಿಕ್ಕರಾಜ್ಯವೊಂದನ್ನು ಕಟ್ಟಿದ ಅದಕ್ಕೆ ಸಿಂಗಪುರ (ಸಿಂಹಪುರದ ತದ್ಭವ ರೂಪ) ಎಂದು ಹೆಸರಿಸಿದ. ಮಣ್ಣು ಅಥವಾ ಕಲ್ಲಿನಲಿ ಕೆತ್ತಿಸಿರುವ ಅರ್ಧಸಿಂಹ ಮತ್ತು ಅರ್ಧಮೀನಿನ ಆಕೃತಿಯೇ ಇಂದಿಗೂ ಸಿಂಗಪುರದ ಚಿಹ್ನೆ. ಇದನ್ನು ‘”ಮರ್ ಲಯನ್ ” ಎನ್ನುತ್ತಾರಂತೆ. ಶಾಂತಕ್ಕ ಹೀಗೆ ಸಿಂಗಪುರದ ಉದಯವನ್ನು ಕಣ್ಮುಂದೆ ತೆರೆದಿಡುತ್ತಾರೆ. ಸಿಂಗಪುರದಲ್ಲಿ ಉದ್ಯೋಗವಿರುವ ಶಾಂತಕ್ಕನ ಮಗನ ಮನೆಗೆ ಲೇಖಕಿ ಪ್ರತಿವರ್ಷ ಮೂರು ತಿಂಗಳು ಹೋಗಿಬಂದ ಸಂದರ್ಭದಲ್ಲಿ ಆದ ಅನುಭವಗಳ ಮೊತ್ತವೇ ಈ ಕೃತಿ. + +ಸಾವಿರಾರು ವರ್ಷಗಳ ಇತಿಹಾಸವಿರುವ, ಕೋಟ್ಯಂತರ ಜನಸಂಖ್ಯೆ, ಹಲವಾರು ಜಾತಿಧರ್ಮಗಳನ್ನು ಹೊಂದಿರುವ ನಮ್ಮ ಭಾರತದಲ್ಲಿರುವ ನಮ್ಮೀ ಕನ್ನಡನಾಡಿನ ಪುಟ್ಟ ಬೆಂಗಳೂರಿನಷ್ಟು ವಿಸ್ತೀರ್ಣದ ಸಿಂಗಪುರದ ಇತಿಹಾಸ ಬಹುಶಃ ಐನೂರು ವರ್ಷಗಳಷ್ಟಿರಬಹುದು. + +(ಶಾಂತಾ ನಾಗರಾಜ್‌) + +ಅಲ್ಲಿರುವುದೂ ಪ್ರಜಾಪ್ರಭುತ್ವ ಸರ್ಕಾರವೇ. ಆದರೆ ಅಲ್ಲಿ ಚಲಾವಣೆಯಾಗುತ್ತಿರುವುದು ಮಾತ್ರ ಸರ್ವಾಧಿಕಾರವೇ. ಅದರಲ್ಲೂ ಪುರುಷಪ್ರಧಾನ ಸರ್ಕಾರ. ರಸ್ತೆಗಳು, ವಾಹನಸಂಚಾರಗಳು, ಮದುವೆಗಳು, ಮನೆಗಳು, ಶಾಲೆಗಳು, ಉದ್ಯೋಗ ಎಲ್ಲದರಲ್ಲೂ ಜನರು ಕಟ್ಟುನಿಟ್ಟಾದ ರೂಲ್ಸ್‌ಗಳನ್ನು ಪಾಲಿಸಲೇಬೇಕಿರುವ ಭಯವಿರುವುದರಿಂದ ಅಸಾಧಾರಣ ಅಚ್ಚುಕಟ್ಟು ಶಿಸ್ತು ಸ್ವಚ್ಛತೆಯಿಂದ ಇಡೀ ಸಿಂಗಪುರ ಜಗತ್ತನ್ನೇ ಆಕರ್ಷಿಸುವಲ್ಲಿ ಮುಂಚೂಣಿಯಲ್ಲಿರುವುದಂತೂ ಸತ್ಯ. ಸರ್ಕಾರ ಮಾಡುವ ನಿಯಮಗಳನ್ನು ಪಾಲಿಸುವ ಜನರ ಬದ್ಧತೆ ಶಿಸ್ತು ಶ್ಲಾಘನೀಯ. ಹಾಗಾಗಿ ಎಲ್ಲಿಯೂ ಅವ್ಯವಸ್ಥೆಯಿಲ್ಲ. ನಿಯಮ ಪರಿಪಾಲಿಸದಿದ್ದರೆ ಫೈನ್ ಭಯವಿರುವುದರಿಂದ ಜನ ವಿಧೇಯರು. ಸಿಂಗಪುರ “ಫೈನ್ ಸಿಟಿ “. ಸರ್ಕಾರದ ಈ ವ್ಯವಸ್ಥೆ ಜನರ ವೈಯಕ್ತಿಕ ಬದುಕಿನಲ್ಲಿ ಮತ್ತು ಸಮಾಜದಲ್ಲಿ ಧನಾತ್ಮಕ ಮತ್ತು ಋಣಾತ್ಮಕವಾಗಿಯೂ ಪ್ರಭಾವ ಬೀರಿದೆ. + +ಬಹುತೇಕ ಕಡೆಗಳಲ್ಲಿ ಲೇಖಕಿಯ ಅನುಭವಗಳ ಮೂಲಕ ಅತಿಯಾದ ಶಿಸ್ತಿನ ಭಯದ ಕಾರಣಕ್ಕಾಗಿ ಅಲ್ಲಿನ ಜನ ಮನುಷ್ಯ ಸಂವೇದನೆಯನ್ನೇ ಕಳೆದುಕೊಂಡಿದ್ದಾರೆ ಅನಿಸುವುದು ಅಕ್ಷರಶಃ ನಿಜ. ಒಮ್ಮೆ ಎಸ್ಕಲೇಟರಿನಲ್ಲಿ ಲೇಖಕಿ ಹೋಗುವಾಗ ಅಕಸ್ಮಾತ್ತಾಗಿ ಅವರ ಸೀರೆ ಸಿಕ್ಕಿಕೊಂಡು ಮೊಣಕಾಲಿನವರೆಗೂ ಹರಿದುಹೋಗುತ್ತಿದ್ದರೂ ಅಕ್ಕಪಕ್ಕದ ಜನ ತಮಗೆ ಸಂಬಂಧವೇ ಇಲ್ಲದವರಂತೆ ತಮ್ಮ ಪಾಡಿಗೆ ಹೋಗುವುದು, ಬಸ್‌ನಲ್ಲಿ ಕೂತಾಗ ಸಿಂಗಪುರದ ವಿದ್ಯಾರ್ಥಿನಿಯಿಂದಾದ ವರ್ಣಭೇದದ ಅನುಭವದಿಂದ ಲೇಖಕಿಯ ಮನಸ್ಸು ಮುದುಡುವುದು, ಹದಿನಾಲ್ಕು ಅಂತಸ್ತಿನ ತಮ್ಮ ಮಗನ ಮನೆಯಲ್ಲಿ ಲೇಖಕಿ ಒಬ್ಬರೇ ಇರುವಾಗ ಅದೇ ಕಟ್ಟಡದ ಒಂದು ಮಹಡಿಯ ಮನೆಗೆ ಬೆಂಕಿ ಬಿದ್ದು ಫೈರ್ ಇಂಜಿನ್ ಬಂದು ಬೆಂಕಿ ಆರಿಸುವಾಗಲೂ ಸುತ್ತಮುತ್ತಲಿನ ಜನ ಕಿಂಚಿತ್ತೂ ಗಮನ ಹರಿಸದೆ ಕಣ್ಣೆತ್ತಿಯೂ ನೋಡದೆ ಹೋಗುವುದು…. ಇದೆಂಥಾ ಮುಂದುವರಿದ ದೇಶ ಮಾರ್ರೆ? ಮುಂದೆ ಕೇಳಿ… ನೀರನ್ನೂ ಆಮದುಗೊಳಿಸಿಕೊಳ್ಳುವ ಈ ನಾಡಿಗೆ ಮಳೆ ಸಮೃದ್ಧವಾಗಿದ್ದರೂ ಇಲ್ಲಿರುವುದು ಅರಣ್ಯ ನಿರ್ಮಿತ ಕಾಡು. ಇಲ್ಲಿ ವಿಹರಿಸುವ ಜನರಾಗಲಿ‌ ಮಕ್ಕಳಾಗಲಿ ಮರದ ಒಂದೇ ಒಂದು ಎಲೆಯನ್ನಾಗಲಿ ಹಣ್ಣನ್ನಾಗಲಿ ಮುಟ್ಟುವುದಿಲ್ಲ. ಶಾಲೆಯ ಮಕ್ಕಳು ಜೋರಾಗಿ ಗಲಾಟೆ ಮಾಡುವುದಿರಲಿ ಮಾತಾಡುವಾಗಲೂ ತಮ್ಮ ಪಕ್ಕದಲ್ಲಿದ್ದವನಿಗೆ ಮಾತ್ರ ಕೇಳಿಸುವ ಸಣ್ಣ ದನಿಯಲ್ಲೇ ಮಾತಾಡಬೇಕು. ಅಷ್ಟೇ ಅಲ್ಲ ಯಾರೂ ಯಾರೊಬ್ಬರ ಮಕ್ಕಳನ್ನು ಟಚ್ ಮಾಡುವಂತಿಲ್ಲ. ಇತ್ತೀಚೆಗೆ ಹೆಚ್ಚಾಗುತ್ತಿರುವ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಈ ರೂಲ್ ಒಂದು ರೀತಿಯಲ್ಲಿ ಸಮಂಜಸವಾದರೂ…. ಮಮತೆ ವಾತ್ಸಲ್ಯಕ್ಕೆ ಇಲ್ಲಿ ಶಿಸ್ತಿನ ಫ್ರೇಮ್ ಹಾಕಿ ತೂಗುಹಾಕಿಲ್ಲವೆನಿಸುವುದಿಲ್ಲವೇ? + +ಆದರೂ ಸರ್ಕಾರದ ನಿಯಮಗಳನ್ನು ಅಚ್ಚುಕಟ್ಟಾಗಿ ಪಾಲಿಸುವ ವಿಧೇಯ ನಾಗರಿಕರು ತಮ್ಮ ಔದಾರ್ಯವನ್ನೂ ಒಮ್ಮೊಮ್ಮೆ ಮೆರೆಯುತ್ತಾರೆ. ಆಫೀಸಿನ ಉದ್ಯೋಗಿಯೊಬ್ಬನ ಪತ್ನಿಗೆ ಮೊದಲ ಮಗುವಾಗಿರುತ್ತದೆ ಆಕೆ ಭಾರತದಲ್ಲಿದ್ದಾಳೆ. ಅವನಿಗೆ ಬರಲು ಆರ್ಥಿಕ ಸಂಕಷ್ಟ. ಇದನ್ನು ಮನಗೊಂಡ ಮೇಲಾಧಿಕಾರಿಣಿ ತಮ್ಮ ಸಹೋದ್ಯೋಗಿಗಳ ಜೊತೆಗೂಡಿ ಒಂದಷ್ಟು ಹಣ ಒಟ್ಟುಗೂಡಿಸಿ ಅವನಿಗೆ ಕೊಟ್ಟು “ಮೊದಲ ಮಗುವಿಗೆ ಅಪ್ಪನಾಗಿದ್ದೀಯೆ. ಇದು ಜೀವನದ ವಿಶೇಷ ಸಂಭ್ರಮ. ಮೊದಲು ಹೋಗಿ ಮಗುವನ್ನು ನೋಡು” ಎಂಥಾ ಔದಾರ್ಯ! + +ಮತ್ತೊಂದು ಪ್ರಸಂಗ ಲೇಖಕಿ ಒಮ್ಮೆ ಶಾಪಿಂಗ್ ಮಾಲ್‌ನಲ್ಲಿ ಏನೋ ಕೊಳ್ಳುವಾಗ ಕೊನೆಯಲ್ಲಿ ಅದರ ಮಾಲೀಕಳು “ಪಕ್ಕದಲ್ಲಿ ನಿಂತ ನನ್ನಮ್ಮ ಹೇಳುತ್ತಿದ್ದಾಳೆ ನೀನು ತುಂಬಾ ಸುಂದರಿ ಎಂದು” ಎಂದಾಗ ವರ್ಣಭೇದದ ಅನುಭವದಿಂದ ನೊಂದಿದ್ದ ಆಕೆ ಮಾಲೀಕಳಿಗೆ ವಿವರಿಸಿ ಹೇಳಿ ಇದಕ್ಕೆ ಹೇಗೆ ಖುಷಿ ಪಡಲಿ ಎನ್ನುತ್ತಾರೆ. ಆಗ ಆ ಶಾಪಿನ ಮಾಲೀಕಳು “ನನ್ನ‌ ಅಮ್ಮ ಹೇಳುತ್ತಿರುವುದು ನಿನ್ನ ಆತ್ಮಸೌಂದರ್ಯವನ್ನು. ಪ್ರಶಾಂತವಾದ ಮುಖಭಾವ ಹೊಳೆಯುವ ಕರುಣೆ ತುಂಬಿದ ಕಣ್ಣುಗಳಿರುವ ಈಕೆ ಕರುಣಾಮಯಿಯೇ ಆಗಿರುತ್ತಾಳೆ” ಎಂದು. ಈ ಎರಡೂ ಪ್ರಸಂಗಗಳನ್ನು ಓದಿಯೇ ಕಣ್ಣಂಚು ಒದ್ದೆಯಾದವು. + +ಸರ್ಕಾರದ ನಿಯಮಗಳು ಶಿಸ್ತಿನ ಪರಿಣಾಮ ಯಂತ್ರಗಳಂತೆ ಬದುಕುವ ಜನರು ಯಂತ್ರಗಳಲ್ಲ. ಮನುಷ್ಯ ಸಂವೇದನೆಗಳನ್ನು ತಮ್ಮೊಳಗೆ ಕಷ್ಟ ಪಟ್ಟು ಒತ್ತಿಟ್ಟಕೊಂಡಿರುವ ನಮ್ಮಂತಹ ಮನುಷ್ಯರೇ. ಅವರ ಬಗ್ಗೆ ಅಯ್ಯೋ ಎನಿಸುತ್ತದೆ. + +ಅನೇಕ ವಿಶಿಷ್ಟ ಸಂಗತಿಗಳು ವಿಚಿತ್ರವೂ ಹೌದು. ಜಗತ್ತಿನಲ್ಲಿರುವ ಯಾವುದೇ ಪ್ರಾಣಿಗಳನ್ನೂ ಬಿಡದೆ ತಿನ್ನುವ ಈ ಜನ ಮನೆಯಲ್ಲಿ ಅಡುಗೆ ಮಾಡುವುದಿಲ್ಲ. ಹತ್ತು ಹೆಜ್ಜೆಗೊಂದರಂತೆ ಹ್ಯಾಕರ್ ಸೆಂಟರ್‌ಗಳಿರುತ್ತವೆ. ಮಹಿಳೆಯರೇ ನಡೆಸುವ ದರ್ಶಿನಿಯಂತಹ ಇಲ್ಲಿ ಎಲ್ಲಾ ರೀತಿಯ ಅಡುಗೆ ತಿನಿಸುಗಳು ಸಿಗುತ್ತವೆ. ಉದ್ಯೋಗಸ್ಥ ಮಹಿಳೆಯರೂ ಗೃಹಿಣಿಯರೂ ಯಾರೂ ಅಡುಗೆ ಮಾಡುವುದಿಲ್ಲವಂತೆ! ಹುರ್ರೇ… ನಮ್ಮ ಹೆಣ್ಮಕ್ಕಳಿಗೆ ವಾರದಲ್ಲೊಂದೆರಡು ದಿನ ಹೀಗೆ ಕಳೆಯುವುದಾದರೆ ಎಷ್ಟು ಚಂದ ಎನಿಸಿದರೂ ಈಗ ಸುಮಾರು‌ ಮನೆಗಳ ಒಲೆ ಹತ್ತದೇ ಹೊರಗಿನ ದರ್ಶಿನಿಗಳು ಹೆಚ್ಚು ಜನಪ್ರಿಯವಾಗುತ್ತಿರುವುದು ಸುಳ್ಳಲ್ಲ. ಆದರೂ ಅನೇಕ ಕಡೆ ಹೆಣ್ಮಕ್ಕಳು ಉದ್ಯೋಗಿಯಾದರೂ ಗೃಹಿಣಿಯಾದರೂ ಅಡುಗೆಮನೆಯಲ್ಲಿ ಬೇಯುವ ಶೋಚನೀಯ ಸ್ಥಿತಿ ಕಣ್ಮುಂದೆ ಬಂತು. + +ಇಲ್ಲಿನ ಸಿಂಗ್ಲಿಷ್ ಭಾಷೆ ಭಾರಿ‌ ಮಜಾ ಕೊಡ್ತು. ಈ ದೇಶದ ಬಹುಪಾಲು ಜನರು ಚೀನೀಯರೇ. ಟ ರ ಡ ಕಾರ ಇವರಿಗೆ ಉಚ್ಚರಿಸಲು ಬರುವುದಿಲ್ಲ ಮತ್ತು ಎಲ್ಲಾ ಪದಗಳಿಗೂ ‘ಲಾ’ ಸೇರಿಸ್ತಾರಂತೆ. ‘ಡೋಂಟ್ ನೋ’ ಎನ್ನಲಿಕ್ಕೆ ‘ದೋಂತ್ ನೋಲಾ’ ಹಾಗೆಯೇ.. ವಾತ್ ಲಾ, ಕಮಿಂಗ್ ಲಾ…. ಹಹ್ಹಹ್ಹಾ… ನಂಗಿಷ್ಟವಾಯ್ತು ಮಸ್ತ್ ಅಲ್ವಾ? ಒಮ್ಮೆ ಲೇಖಕಿ‌ ಬಸ್‌ನಲ್ಲಿ ಹೋಗುವಾಗ ಇದ್ದಕ್ಕಿದ್ದಂತೆ ಬಸ್ ನಿಲ್ಲುತ್ತದೆ. ಯಾಕೆ ಎಂದು ವಿಚಾರಿಸುವಾಗ ಡ್ರೈವರ್ ‘ತೀಫೆಲ್ ದೋನ್’ ಅಂದಿದ್ದು ಕೇಳಿ ಯಾರೋ ಮೂವರು ಬಿದ್ದುಬಿಟ್ಟಿದ್ದಾರೆ ಅಂದ್ಕೊಂಡ್ರಂತೆ. ಕೊನೆಗೆ ತಿಳೀತಂತೆ.. ಟ್ರೀ ಫೆಲ್ ಡೌನ್ ಅಂತ! + +ತಮಾಷೆಯೆಂದರೆ ಮದುವೆಗೆ ಉಡುಗೊರೆ ಕಡ್ಡಾಯ ಈ ಪದ್ಧತಿ ಹೆಸರು ‘ಹಂಗ್ ಭಾವ್’, ಹಂಗಿನೂಟ ಯಾಕೆ ಅಂತ…. ಅಲ್ವಾ? + +ಅಡುಗೆಮನೆಯೊಳಗೆ ಟಾಯ್ಲೆಟ್ ಇರೋದು ನೋಡಿ ಹೊಟ್ಟೆ ತೊಳಸಿದ್ದು ಶಾಂತಕ್ಕಂಗಷ್ಟೇ ಅಲ್ಲ ನಂಗೂ ಸಹಾ. ಕಾರಣ ಏನ್ಮಾಡಿದ್ರೂ ಹೊಳೆಯಲಿಲ್ಲವಂತೆ. ಅಲ್ಲಿ ಹೋಗಿ ಇರುವ ನಮ್ಮ ಭಾರತೀಯ ಹುಡುಗರು, ಈ ಜನ ಸಿಕ್ಕ ಪ್ರಾಣಿಗಳನ್ನೆಲ್ಲಾ ತಿಂದು ಅರಗಿಸಿಕೊಳ್ಳದಿದ್ದಾಗ ವಾಂತಿ ಮಾಡ್ಕೊಳೋಕೋ ಟಾಯ್ಲೆಟ್ಟಿಗೆ ಹೋಗೋಕೆ ತಕ್ಷಣ ಬೇಕಲ್ಲಾ ಅದಕ್ಕೆ ಹೀಗೆ ಮಾಡ್ಕೊಂಡಿದ್ದಾರೆ ಅಂತಾ ಜೋಕ್ ಮಾಡ್ತಾರಂತೆ. + +“ಅವೇರ್” ಎಂಬ ಮಹಿಳಾ ಸಂಸ್ಥೆ ಎಲ್ಲಾ ಮಧ್ಯಮ ಮತ್ತು ಉನ್ನತ ವರ್ಗದ ಗಂಡಸರಿಂದಲೂ ದೌರ್ಜನ್ಯಕ್ಕೊಳಪಡುವ ಹೆಣ್ಮಕ್ಕಳಿಗೆ ಕೌನ್ಸೆಲಿಂಗ್ ಮಾಡಿ ಆತ್ಮವಿಶ್ವಾಸ ತುಂಬುವುದಷ್ಟೇ ಕೆಲಸ. ಆದರೆ ಪ್ರತಿಭಟನೆ ಇಲ್ಲಿಲ್ಲ. ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಾತಾಡುವ ಹಾಗಿಲ್ಲ. ಸರ್ಕಾರದ ಬಗೆಗಾಗಲಿ ವ್ಯವಸ್ಥೆ ನಿಯಮಗಳ ಬಗೆಯಾಗಲಿ ಅಪಾರ ವಾಕ್ ಸ್ವಾತಂತ್ರ್ಯ ಪಡೆದಿರುವ ನಮ್ಮ ಜನರನ್ನೊಮ್ಮೆ ನೆನಪಿಸಿಕೊಂಡೆ. + + + +ಹದಿಹರೆಯದವರಿಗೆ ಮುಕ್ತ ಲೈಂಗಿಕ ಸ್ವಾತಂತ್ರ್ಯ ಕೊಟ್ಟ ಪರುಷಪ್ರಧಾನ ಸರ್ಕಾರ ಗರ್ಭಧರಿಸುವ ಅಬಾರ್ಷನ್ ಮಾಡಿಸಿಕೊಳ್ಳುವ ಹಕ್ಕನ್ನು ಮಾತ್ರ ಕಿತ್ತುಕೊಂಡಿದೆ. ಹಾಗಾಗಿ ಹೈಸ್ಕೂಲ್ ಓದುವ ಹೆಣ್ಮಕ್ಕಳಿಗೆ ಪ್ರತಿನಿತ್ಯ ಗರ್ಭನಿರೋಧಕ ಮಾತ್ರೆ ಸೇವನೆ ಮಾಡಿಸುವರಂತೆ ಅವರ ತಾಯಂದಿರು! ಉಸ್ಸಪ್ಪಾ… ಎದೆ ಧಸಕ್ಕೆಂದಿತು. + +ಸರ್ಕಾರ ಪ್ರವಾಸೋದ್ಯಮಕ್ಕಾಗಿ ವೇಶ್ಯಾವಾಟಿಕೆಯನ್ನು ಸಹಾ ಪ್ರೋತ್ಸಾಹಿಸುವುದರಿಂದ ಬಹಳಷ್ಟು ಹೆಣ್ಮಕ್ಕಳು ತಮ್ಮ ದುಡಿತಕ್ಕಾಗಿ ವೇಶ್ಯಾವಾಟಿಕೆಯನ್ನು ವೃತ್ತಿಯಾಗಿಸಿಕೊಂಡು ಅದನ್ನು ವಿರೋಧಿಸುವವರನ್ನೇ ವಿರೋಧಿಸುವುದು…. ಇದು ಪ್ರಗತಿಯೋ ವಿನಾಶವೋ? + +ರಂಜಾನ್ ಹಬ್ಬವನ್ನು ‘ರಮಾದೀನ್’ ಹಬ್ಬವೆನ್ನುವ ಅದರ ಮುಕ್ತಾಯದ ದಿನವನ್ನು ‘ಹರಿರಾಯ’ ಎನ್ನುವ ಮಾನಿಸ ಆಸ್ಥಾನ ರಾಜ ರಾಣಿ ಪಂಚೇಂದ್ರಿಯ ಮೊದಲಾದ ಹೆಸರುಗಳನ್ನು ಬಳಸುವ ದೇಶ, ‘ಬ್ಯಾಂಕ್ ಭೂಮಿಪುತ್ರ’ ಎಂಬ ಬ್ಯಾಂಕು, ‘ವನಿತಾ’ ಎಂಬ ಮಹಿಳಾ ದಿನಪತ್ರಿಕೆ ಹೀಗೆ ಸಂಸ್ಕೃತ ಮತ್ತು ಕನ್ನಡ ಭಾಷೆಯ ಬಳಕೆಯಿರುವ ಹಿಂದೆ ಮಲಯಾ ಆಗಿದ್ದು ಈಗ ಮಲೇಷಿಯಾ ಆಗಿರುವ ಈ ದೇಶ ಅತ್ಯಂತ ಸುಂದರ ದೇಶ. ಪ್ರಕೃತಿಯ ಮಡಿಲಲ್ಲಿರುವ ಮಲೇಷಿಯಾ ಸಿಂಗಪುರದ ಚೀನಿಯರಂತೆ ಹುಬ್ಬುಗಂಟಿಕ್ಕದ ಸ್ನೇಹಮಯಿಗಳು. ಮೊದಲು ಹಿಂದೂ ಧರ್ಮದ ಇತಿಹಾಸವಿದ್ದ ದೇಶ ಈಗ ಮುಸ್ಲಿಂ ದೇಶವಾದರೂ ತಮ್ಮ ಮೂಲ ಸಂಸ್ಕೃತಿಯನ್ನು ಮಹಮದೀಯ ನಂಬಿಕೆಯೊಂದಿಗೆ ಬೆಸೆದು ತಮ್ಮದೇ ಆದ ಸಂಸ್ಕೃತಿಯನ್ನು ರೂಢಿಸಿಕೊಂಡಿದ್ದಾರೆ. ಮಲೇಷಿಯಾ ಹೆಣ್ಮಕ್ಕಳು ವಿದ್ಯೆ ಮತ್ತು ಸ್ವಲ್ಪಮಟ್ಟಿಗೆ ಸ್ವಾತಂತ್ರ್ಯ ಎರಡನ್ನೂ ಪಡೆದಿರುವುದು ಒಳ್ಳೆಯ ಸಂಗತಿ. + +ಇನ್ನು ಥೈಲ್ಯಾಂಡ್ ವೈಭವ….. ಅಬ್ಬಾ! ಓದಿಯೇ ನೀವು ಅನುಭವಿಸಬೇಕು. ಬುದ್ಧನಷ್ಟೇ ಇಲ್ಲಿ ರಾಮನೂ ಜನಪ್ರಿಯ. ರಾಮಾಯಣ ಇವರ ಪವಿತ್ರ ಗ್ರಂಥ ಮತ್ತು ರಾಮ ಇಲ್ಲಿ ಸದಾ ಜೀವಂತ. ಈ ಜನ ತಮ್ಮ ರಾಜನನ್ನು ಕರೆಯುವುದೇ ‘ರಾಮ’ ಎಂದು. ರಾಜರಾಡಳಿತ ಇಲ್ಲವಾದರೂ ಸರ್ಕಾರ ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಮೊದಲು ಆಯಾ ಕಾಲದ ರಾಜರ ಸಲಹೆ ತೆಗೆದುಕೊಳ್ಳುವುದಂತೆ. ಅಲ್ಲಿನ ಬ್ಯಾಂಕಾಕ್‌ನಲ್ಲಿ ಜಗತ್ಪ್ರಸಿದ್ಧ ರತ್ನಗಳು ವಜ್ರಗಳೂ ಸಿಗುವ ಕಾರಣ ಜಗತ್ತಿನ ಅತ್ಯಂತ ದೊಡ್ಡ ಹರಳು ವಜ್ರ ಮತ್ತು ಚಿನ್ನದಾಭರಣಗಳ ಮಳಿಗೆಗಳಿಲ್ಲಿವೆ.ಆಸೆಯೇ ದುಃಖಕ್ಕೆ ಮೂಲ ಎಂದು ವಿರಾಗಿಯಾದ ಬುದ್ಧ ಇಲ್ಲಿ ವೈಭವೋಪೇತವಾಗಿ ಪೂಜಿಸಲ್ಪಡುವುದು ಅತ್ಯಂತ ವಿಷಾದದ ಸಂಗತಿ. ಸರ್ಕಾರ ಪ್ರವಾಸೋದ್ಯಮಕ್ಕನುಕೂಲವಾಗಲು ಪ್ರೋತ್ಸಾಹಿಸುವ ವೇಶ್ಯಾವಾಟಿಕೆ ಹದಿಹರೆಯದ ಹೆಣ್ಮಕ್ಕಳನ್ನು ಬಲಿತೆಗೆದುಕೊಂಡಿದೆ. ಸ್ವಇಚ್ಛೆಯಿಂದ ಇದನ್ನು ಸ್ವೀಕರಿಸುವ ಸ್ತ್ರೀಯರು ವೇಶ್ಯಾವಾಟಿಕೆ ಹದ್ದುಬಸ್ತಿನಲ್ಲಿಡಲು ಸರ್ಕಾರ ತರುವ ನಿಯಮಗಳನ್ನು ಪ್ರತಿಭಟಿಸಿ ‘ನನ್ನ ದೇಹ ನನ್ನ ಹಕ್ಕು’ ಎಂಬಲ್ಲಿಗೆ ಬಂದು ನಿಂತಿರುವ ಸ್ತ್ರೀಯರ ಈ ಸ್ವಾತಂತ್ರ್ಯವನ್ನು ಪ್ರಗತಿಯೆನ್ನುವಿರಾ? + +ಅತ್ಯಂತ ಮನಸೆಳೆದದ್ದು ಇಡೀ ಕುಟುಂಬ ನೋಡಬಹುದಾದ ‘ಟಿಫಾನಿಸ್ ಕ್ಯಾಬರೆ ಶೋ’ ಗಂಡು ಹೆಣ್ಣುಗಳಾಗಿ ನರ್ತಿಸುವ ಪ್ರದರ್ಶನವೆಲ್ಲೂ ಅಶ್ಲೀಲವೆನಿಸುವುದಿಲ್ಲ. ಕ್ಲಾಸಿಕ್ ಎನಿಸುವ ರಾಮಾಯಣ ಪ್ರಸಂಗ ಚೈನಾದ ಕೊನೆಯ ಚಕ್ರವರ್ತಿ ಕಥೆ ಬುದ್ಧನ ತ್ರಿಪಿಟಕದ ಒಂದು ಭಾಗ ಹೀಗೆ ಒಳಗೊಂಡಿರುವುದೆ ಈ ಶೋ. ಆದರೆ ಜಗತ್ಪ್ರಸಿದ್ಧ ಈ ಶೋನಲ್ಲಿ ನರ್ತಿಸಲು ಪ್ರಕೃತಿಗೆ ವಿರುದ್ಧವಾಗಿ ಹಾರ್ಮೋನು ಇಂಜಕ್ಷನ್ ಸರ್ಜರಿಗಳಿಂದ ಗಂಡು ಹೆಣ್ಣಾಗುವ ಪರಿ ಪ್ರವಾಸೋದ್ಯಮದ ಬಹುಮುಖ್ಯ ಆಕರ್ಷಣೆಯಾದರೂ ವಿವಾಹ ಮತ್ತು ಸೆಕ್ಸ್ ವ್ಯವಸ್ಥೆ ಹೇಗೆ? ಹೆಣ್ಣಾಗಬಹುದು ತಾಯಿಯಾಗಲು ಸಾಧ್ಯವಿಲ್ಲ. ತಾರುಣ್ಯ ಕಳೆದ ಮೇಲೆ ಬದುಕು ದುರ್ಭರ. ಪ್ರವಾಸೋದ್ಯಮದಾಕರ್ಷಣೆಗಾಗಿ ಹೆಣ್ಮಕ್ಕಳನ್ನು ಸೆಕ್ಸ್ ವರ್ಕರ್ ಮಾಡಿದ್ದಾಯ್ತು. ಹಣವಂತರನ್ನು ಸೆಳೆಯಲು ಮತ್ತೊಂದು ಆಮಿಷ ‘ಟ್ರಾನ್ಸ್ ವೆಸ್ ಟೈಟ್’! ಎಲ್ಲಿದ್ದೇವೆ ನಾವು? ಇದೂ ಜೀವನವೇ? ನನ್ನ ದೇಶ ನನ್ನೂರು ನನ್ನ ಭಾಷೆ ನನ್ನೀ ಮಣ್ಣು ಈ ಗಾಳಿ ಈ ಪ್ರಿಯಜನರೂ ಇಲ್ಲಿನ ವ್ಯವಸ್ಥೆ ಅವ್ಯವಸ್ಥೆಗಳ ನಡುವೆ ಸಹ್ಯವಾಗುತ್ತಾರೆ. ದೀರ್ಘವಾದ ಉಸಿರೆಳೆದುಕೊಂಡೆ ಒಮ್ಮೆ. + +ಮೌನಕಲೆಯ ವಿಶ್ವ ಸಾಮ್ರಾಟ ಮಾರ್ಪಲ್ ಮಾರ್ಸ್ಯೂ ಮೂಕಾಭಿನಯದ ರಂಗ ಪ್ರದರ್ಶನದಲ್ಲಿ “ಆತ ಮರವಾದ ಮಗುವಾದ ಹೆಣ್ಣಾದ ಗಂಡಾದ ರಸಿಕನಾದ ವೇದಾಂತಿಯಾದ ಜನತುಂಬಿದ ಸಂತೆಯಾದ ಸಂತೆಯೊಳಗೆ ಏಕಾಂಗಿಯಾದ, ನಕ್ಕ, ಅತ್ತ, ನಿಂತ ಕುಳಿತ ಮಲಗಿ ವಿಲವಿಲ ಒದ್ದಾಡಿ ನಗುವ ಮುಖವಾಡವನ್ನು ಕಷ್ಟ ಪಟ್ಟು ಕಿತ್ತೆಸೆದು ಕೊನೆಗೆ ಸೋತುಸುಣ್ಣವಾದ ಅವನ “ನಿಜಮುಖ” ಗೋಚರಿಸುವಾಗ ನಮ್ಮೊಳಗೆ ನಾವು ಆರ್ದ್ರವಾಗುವ ಹೊತ್ತು….. ಹ್ಯಾಟ್ಸಾಫ್ ಮಾರ್ಸ್ಯೂ… + + + +ಹಾಟ್ಸಾಫ್ ಶಾಂತಕ್ಕ! ಬರಹದಲ್ಲಿ ಏನೆಲ್ಲಾ ತುಂಬಿ ಎದೆಯಲ್ಲಿಟ್ಟಿರಿ. ನಿಮ್ಮ ಎಲ್ಲಾ ಸಂವೇದನೆಗಳನ್ನು ಸಾಮಾಜಿಕ ಕಾಳಜಿಯನ್ನು ಖುದ್ದು ನಾನೂ ಅನುಭವಿಸಿದೆ. ಕನ್ನಡಿಗರೆಲ್ಲರೂ ಓದಲೇಬೇಕಾದ ಸೊಗಸಾದ ಪ್ರವಾಸ ಕಥನ. ಓದಿ. + +ಮೂಲತಃ ಕನಕಪುರದವರಾಧ ಕೆ.ಎನ್.ಲಾವಣ್ಯ ಪ್ರಭಾ ಕವಯತ್ರಿ ಮತ್ತು ಯೂಟ್ಯೂಬರ್.  ಮೈಸೂರಿನ ವಿ.ವಿ.ಯಿಂದ ಕನ್ನಡ ಸಾಹಿತ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪದವಿ ಪಡೆದು ಗೃಹಿಣಿಯಾಗಿ ಪತಿ ಹಾಗೂ ಮಕ್ಕಳೊಂದಿಗೆ ಮೈಸೂರಿನಲ್ಲಿ ವಾಸ.  “ಹುಟ್ಟಲಿರುವ ನಾಳೆಗಾಗಿ”, “ಗೋಡೆಗಿಡ”, “ನದಿ ಧ್ಯಾನದಲ್ಲಿದೆ” (ಉತ್ತರ ಕರ್ನಾಟಕ ಲೇಖಕಿಯರ ಸಂಘದ ಡಾ.ಲತಾರಾಜಶೇಖರ್ ದತ್ತಿನಿಧಿ ಪ್ರಶಸ್ತಿ ಪುರಸ್ಕೃತ) ಮತ್ತು “ಸ್ಪರ್ಶ ಶಿಲೆ” ಇವರ ಪ್ರಕಟಿತ ಕವನ ಸಂಕಲನಗಳು. ಇವರ ಹಲವಾರು ಕವಿತೆಗಳು, ಪ್ರಬಂಧಗಳು ಪ್ರಮುಖ ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸಾಹಿತ್ಯದ ಜೊತೆ ಸಂಗೀತ ಸಿನಿಮಾ ಅಡುಗೆ ಅಧ್ಯಾತ್ಮ ಇವರ ಮೆಚ್ಚಿನ‌ ಹವ್ಯಾಸಗಳು. \ No newline at end of file diff --git a/Kenda Sampige/article_91.txt b/Kenda Sampige/article_91.txt new file mode 100644 index 0000000000000000000000000000000000000000..2c48927a271ef1e4d970c70e455b3034e6eb3a6c --- /dev/null +++ b/Kenda Sampige/article_91.txt @@ -0,0 +1,39 @@ +‘ಭೂಮಿಗೆ ದೊಡ್ಡ ದೊಡ್ಡಬೆಳಕು ಬರುವುದು ಹೀಗೆಯೆಕತ್ತಲಲ್ಲೆ…’ + +ಬೆಳಕನ್ನೂ ಅಕ್ಷರಗಳಲ್ಲಿ ತೋರಿಸಬಲ್ಲ, ಪರಿಮಳವನ್ನೂ ಸಾಲುಗಳಲ್ಲಿ ಹೊಮ್ಮಿಸಬಲ್ಲ ಮಿತ್ರನಿಗೆ ಏನು ಹೇಳಬೇಕನ್ನುವುದು ಒಮ್ಮೆಮ್ಮೆ ಹೊಳಿಯುವುದೇ ಇಲ್ಲ. ಅವನ ಕತೆಗಳದ್ದು ಒಂದು ಕತೆಯಾದರೆ ಕವಿತೆಗಳದ್ದು ಬೇರೆಯದೆ ಸಂತೆ.. ರೊಟ್ಟಿ ಹಿಟ್ಟು ಮುಗಿದ ದಿನ ಬಡತನದ ಬಾಲ್ಯ ನೆನೆದು ಅವ್ವನ ಒದ್ದೆ ಸೆರಗಂಚಂತ ಕವಿತೆ ಹಾಳೆಗಿಳಿಸುತ್ತಾನೆ. ಅಲ್ಲೆಲ್ಲೊ ಯುದ್ಧದ ಹೆಡ್ಲೈನಿಗೆ ಇಲ್ಲಿರುವವರ ಕಣ್ಣು ತೇವವಾಗುವಂತ ಹಾಡಕಟ್ಟುತ್ತಾನೆ. ಆ ಹಾಡಿನ ಕಿಸೆಯಲ್ಲೊಂದು ರಕ್ತವರ್ಣದ ಗುಲಾಬಿ ಇಟ್ಟು ನಮ್ಮ ಪಾಡು ನೋಡುತ್ತಾನೆ. ಇವನ ಇಂತ ಭಾವಾಟಗಳನ್ನ ಸೌಮ್ಯ ಅದು ಹೇಗೆ ತಾಳಿಕೊಂಡಿದ್ದಾಳೊ ಎಂದು ದಿಗಿಲಾಗುತ್ತದೆ. + +ಅವನು ಹೀಗೆ ಯೋಚಿಸುವಾಗಲೇ ಮತ್ತೊಂದು ಕವಿತೆ ಕಳಿಸಿ ಇದನ್ನು ನೋಡಿ ಹೇಳು ಎನ್ನುವಾಗಅದೆಷ್ಟು ಸ್ಪೀಡಪ್ಪಾ ಈ ಕನ್ನಡ ಮೇಷ್ಟ್ರು ಅನಿಸುತ್ತದೆ. + +‘ತುಟಿ ಕುರಿತಾಗಿ ಅವಳು ಬರೆದ ಸಾಲುನೆನಪಾಗಿ ತಿವಿಯಿತು ಬಟ್ಟಲಿನ ಅಂಚು..’ + +ಇಂಥ ಸಾಲೊಂದು ಕವಿತೆಯ ಒಳಕಂಡಾಗ ಅವಳ ಕವಿತೆ ನಾನು ಓದಬೇಕು ಅನ್ನಿಸಿದ್ದಿದೆ ನನಗೆ. + +ನೀವು ನಮ್ಮ ಅತಿಥಿಉಂಡ ಮೇಲೂ ಗುಂಡು ನುಗ್ಗಿಸಬಹುದುನನ್ನ ಎದೆ ಸಿದ್ಧವಿದೆ… + +ಎನ್ನುವಾಗ ಬಂದೂಕಿನ ನಳಿಕೆಯಲಿ ಗುಬ್ಬಿ ಗೂಡು ಕಟ್ಟುವ ಕವಿ ಆಶಯ ನೆನಪಾಗದೆ ಇದ್ದೀತೆ ಕನ್ನಡದ ಓದುಗನಿಗೆ. ಹೀಗೆ ಅತಿಥಿಯನ್ನು/ಶತ್ರುವನ್ನು ಸಮಾನವಾಗಿ ಪ್ರೀತಿಸುವುದು ಕಲಿಸಿದ್ದು ಮಾತ್ರ ಕನ್ನಡದ ಪುಣ್ಯಕೋಟಿ ಕತೆ ಅಂತಲೂ ಅನ್ನಿಸದೇ ಇದ್ದೀತೆ..!? + +ಇಲ್ಲಿ ಅಕ್ಷರಗಳ ಅಲೆಮಾರಿತನವಿದೆ ಅನಿಸುವಾಗ ಥಟ್ಟನೇ ಎದೆಗೆ ಚುಚ್ಚುವ ಸಾಲುಗಳು ಎದುರಾಗುತ್ತವೆ. ಅಲ್ಲಲ್ಲಿ ಗುಂಡುಗಳ ಸುರಿಮಳೆ, ಅನ್ನ, ಟ್ರಿಗರ್, ಶತ್ರು, ಮಗು, ಅಪ್ಪ ಹೀಗೆ ಒಂದೇ ವೇಗದಲ್ಲಿ ಇಳಿಯುವ ಇರಿಯುವ ಪದಗಳ ಧೋ… ಮಳೆ, ಒಂದು ಕಾಡುವ ಸಾಲಿನಲ್ಲಿ ಇನ್ನೊಂದು ಅಡ್ಡಗಟ್ಟಿ ನಿಂತು ಮತ್ತೇನನ್ನೊ ಪ್ರಶ್ನಿಸುವ ಪದ ಎದುರಾಗುತ್ತದೆ. + +ಅವ್ವ ಹಾಕಿದ ಕಸೂತಿ ತಂದು ಎದೆಯಲ್ಲಿ ನೇತುಹಾಕುವ ಕವಿಮಿತ್ರನ ಕವಿತೆಗಳು ಅಡ್ಡಾಡದ ಜಾಗಗಳೇ ಇಲ್ಲ. ಎಲ್ಲೆಂದರಲ್ಲಿ ಎಗ್ಗಿಲ್ಲದೆ ಸುತ್ತುವ ಅಲೆಮಾರಿತನ, ದಾರಿ ತಪ್ಪಿಸಿಕೊಂಡ ಕರುವಿನ ಮುಗ್ಧತನ, ತಲೆ ನೇವರಿಸುವ ಮಮತಾಮನ ಹೀಗೆ ಯಾವ ಕವಿತೆಯ ಮೇಲೆ ಕೈಯ್ಯಾಡಿಸಿದರು ಸಂತೈಸುವ ಗುಣ ಹೊತ್ತ ಪದ್ಯಗಳೇ ಎಲ್ಲವು. + + + +ಸಾಕಿನ್ನು ಎತ್ತಿಡೋಣ ಈ ಕವಿತೆಗಳ ಪಾಡು ನಮಗೇಕೆ ಎನ್ನುವಾಗಲೇ ಗಾಳಿಗೆ ಹಾರಿ ಪುಟವೊಂದು ತನ್ನ ಮುಖ ತೋರಿಸುವಾಗ-ನನ್ನ ಸಾಲುಗಳಿಗೆ ಕಂಬನಿ ಕಲೆ ಕಂಡರೆದಯವಿಟ್ಟು ಕ್ಷಮಿಸಿಆಸ್ಪತ್ರೆಯಲಿ ಯಾರೊ ಬಿಟ್ಟುಹೋದಪದಗಳನು ಸಮಾಧಾನಿಸಿಕೂಡಿಸಿ ಹೊಸದಿದ್ದೇನೆಎಂಬುವ ಪದ್ಯ ಎದುರಿಗೆ ನಿಂತು ಪಿಳಿಪಿಳಿ ಕಣ್ಣುಬಿಡುತ್ತದೆ. ಈ ಪದ್ಯಗಳಿಗೆ ಜೀವವಿದ್ದಿದ್ದರೆ ಇವೆಲ್ಲ ನನ್ನ ಕ್ಲೋಸು ಫ್ರೆಂಡುಗಳಾಗಿರುತ್ತಿದ್ದವೇನೊ. + +ಕವಿಯಾದವನಿಗೆ ತನ್ನ ಪದಗಳ ಗೊಡವೆ ಬೇಡ, ಅದು ಯಾರದ್ದೊ ನೋವು, ಆರ್ತನಾದ ಮಾತ್ರ ನನ್ನದು ಎನ್ನುವ ದೈನ್ಯತೆ ಎಂದಿಗೂ ಬೇಕು. ಅದು ನನ್ನ ಮಿತ್ರನ ಕವಿತೆಗಳಲಿ ತುಂಬಿ ಹೋಗಿದೆ. ಹೀಗಾಗಿಯೇ ಈ ಸಂಕಲನ ‘ಗಾಯಗೊಂಡ ಸಾಲುಗಳು‌’ ಎಂಬ ಹಣೆಪಟ್ಟಿ ಹೊತ್ತು ಹೊರಬಂದಿವೆ. ಗಾಯಗೊಂಡ ಪದಗಳನೇ ಹೆಣೆದು ಬ್ಯಾಂಡೇಜು ಕಟ್ಟಿದ ಪದಗಳಿವು. ಯಾರೂ ಮೂಸದ ಸರ್ಕಾರಿ ಆಸ್ಪತ್ರೆಯ ಕಟ್ಟೆಯ ಮೇಲೆ ಕೂತ ಅನಾಥ ವೃದ್ಧನಂತೆ ಇಲ್ಲಿನ ಕವಿತೆಗಳು ಕಾಣಿಸತೊಡಗುತ್ತವೆ. ಆದರೆ ಎಲ್ಲರ ಪ್ರಾರ್ಥನೆಯು ಆ ವೃದ್ಧನಿಗಾಗಿಯೇ ಇರುವಂತೆ, ಸಂಜೆಗೆ ಅವನಿಗೊಂದು ಸೂರು ನೀಡದೆ ದೇವರಾದರೂ ನೆಮ್ಮದಿಯಾಗಿ ಹೇಗೆ ಮಲಗಿಯಾನು ಹೇಳಿ. + +ಈ ಕವಿಗಳ ಪಾಡು ಅದೇ. ಅವರಿಗೆ ಊರಿನ ಎಲ್ಲ ಗೊಡವೆಗಳು ಬೇಕು. ಸಂಜೆಗೆ ಎಲ್ಲರು ನೆಮ್ಮದಿಯ ಮಾಡಿನ ಕೆಳಗೆ ಪಾಚಿಕೊಳ್ಳಬೇಕು. ಅವರೆಲ್ಲ ಮಲಗಿ ಸುಖದಿಂದಿದ್ದಾರೆಂಬ ಭ್ರಮೆಯ ನಶೆಯಲಿ ಅವನು ಮತ್ತೊಂದು ಬೆಳಗಿಗೆ ಸಜ್ಜುಗೊಳ್ಳುತ್ತಾನೆ. ಮತ್ತೊಂದು ಕವಿತೆಗೆ ಎದೆಯಲಿ ಜಾಗ ಮಾಡಿಕೊಡುತ್ತಾನೆ. + +ದಯವಿಟ್ಟು ಕ್ಷಮಿಸಿನಿಮ್ಮ ಕಾವ್ಯಲೋಕದ ಗೆರೆಗಳನುನನ್ನ ಈ ಕವಿತೆ ಮುರಿದಿದ್ದಿದ್ದರೆ + +ಕಾವ್ಯಲೋಕದ ಗೆರೆಗಳು ಎಲ್ಲೆಲ್ಲಿಯವರೆಗೆ ಚಾಚಿಕೊಂಡಿವೆಯೋ ಸ್ವತಃ ಕವಿಗೂ ತಿಳಿದಿಲ್ಲ. ಆದರೆ ನೀವು ಎಳೆಯುವ ಗೆರೆಯನ್ನ ಮಾತ್ರ ಕವಿತೆ ಮೀರುತ್ತದೆ. ಅದು ಕವಿತೆಯ ಮೂಲ ಗುಣ ಅದನ್ನು ತುಂಬು ಪ್ರೀತಿಯಿಂದ ಒಪ್ಪಿಕೊಂಡಿರುವ ಕವಿ ಸದಾಶಿವ ಸೊರಟೂರು ತನ್ನ ಗಾಯಗೊಂಡ ಸಾಲುಗಳ ತುಂಬ ಸಾಲಾಗಿ ಜೋಡಿಸಿದ್ದಾರೆ. + +ಪೆನ್ನು ಹಿಡಿಯಲಾಗದ ಕೈಗಳಿಗೆ ಕೋಳವಾದರೂಶೋಭಿಸಲಿಎಂದು ಶಪಿಸಿಕೊಂಡಿದ್ದಾರೆ. + +ಇಂದು ಈ ಕವಿತೆಗಳಿಗೆ ಬಿಡುಗಡೆ. ಮಿತ್ರನ ಕವಿತೆ ಕತೆ ಲೇಖನಗಳಿಗೆ ಸದಾ ಕಿವಿಯಾಗುವ ನನಗೆ ಈ ಗಾಯಗೊಂಡ ಸಾಲುಗಳಿಗೆ ಕವಿತಾಪ್ರಿಯರು ಮುಲಾಮು ಹಚ್ಚುವರೊ ಉಪ್ಪುಹಚ್ಚುವರೊ ನೋಡಬೇಕಿದೆ. + + + +ಈ ಸಾಲುಗಳು, ಈ ಗಾಯಗಳು, ಈ ನೋವುಗಳು, ಕವಿಯೊಬ್ಬನವಲ್ಲ. ಅವು ಎಲ್ಲರವು ಹೌದಾದ್ದರಿಂದ ಈ ಗಾಯಗಳನು ಎದೆಗವಚಿಕೊಂಡು ಶೂಶ್ರುಷೆ ಮಾಡುವರೆಂಬ ನಂಬುಗೆಯೊಂದಿಗೆ… + +ದೀಪಾ ಗೋನಾಳ ಪೋಸ್ಟ್‌ ಆಫೀಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಓದು, ತಿರುಗಾಟ, ಇಷ್ಟ. ಕವಿತೆ ಅಂದ್ರೆ ಹುಚ್ಚು, ಕತೆ ಅಂದ್ರೆ ಪ್ರಾಣ. “ತಂತಿ ತಂತಿಗೆ ತಾಗಿ” ಪ್ರಕಟಿತ ಕವನ ಸಂಕಲನ \ No newline at end of file diff --git a/Kenda Sampige/article_92.txt b/Kenda Sampige/article_92.txt new file mode 100644 index 0000000000000000000000000000000000000000..bcce001fd75c5d5d91cdcb2056644dcd076e37fc --- /dev/null +++ b/Kenda Sampige/article_92.txt @@ -0,0 +1,27 @@ +ನನ್ನ ತಾರುಣ್ಯ ಯೌವನಗಳ ಹೊತ್ತಗೆಯು ಏಕಮುಖೀ ಅಥವಾ ವಿಫಲಪ್ರೇಮದ ಅಧ್ಯಾಯಗಳಿಂದ ತುಂಬಿ ಹೋಗಿದೆ. + +ಮೊದಲನೆಯ ಅಧ್ಯಾಯವು ಪಿಯುಸಿ ಕಲಿಯುವಾಗ ಆಯಿತು. ಆಗೊಬ್ಬ ಸಹಪಾಠಿ ಆಕರ್ಷಣೆ ಹುಟ್ಟಿಸಿದ್ದಳು. ನಕ್ಕರೆ ಚಂದ. ನೀಟಾಗಿ ನೋಟ್ಸ್ ಬರೆಯುತ್ತಿದ್ದಳು. ಅವಳ ನಂತರ ನೀಟಾಗಿ ಬರೆಯುವವರ ಪಟ್ಟಿಯಲ್ಲಿ ನನ್ನದೇ ಹೆಸರಿತ್ತು. ಆಕೆ ರಜೆ ಮಾಡಿದಾಗ ನನ್ನ ನೋಟ್ಸನ್ನು ಕಡವಾಗಿ ಪಡೆಯುತ್ತಿದ್ದಳು. ನಾನೊಂದು ವಾರ ಕಾಯಿಲೆ ಬಿದ್ದು ಕಾಲೇಜಿಗೆ ಹೋಗಿರಲಿಲ್ಲ. ಭಾನುವಾರ. ಜ್ವರ ತುಸು ಬಿಟ್ಟಿತ್ತು. ಸಂಜೆ ಆಕೆಯ ಮನೆಗೆ ಹೋದೆ. ಕಾಂಪೌಂಡಿದ್ದ ಅಂಗಳದಲ್ಲಿ ಮನೆಯವರೆಲ್ಲ ಕುಳಿತು ಚಹ ಕುಡಿಯುತ್ತ ಹರಟುತ್ತಿದ್ದರು. ಆಕೆಯ ಅಪ್ಪನ ಮುಖದ ಮೇಲೆ ಮುಳುಗುವ ಸೂರ್ಯನ ಬೆಳಕು ಬಿದ್ದು ಹೊಳೆಯುತ್ತಿತ್ತು. ಗೇಟಿನ ಬಳಿ ಹೋಗಿ ನಿಂತೆ. ಸಹಪಾಠಿಣಿಯ ಗಲಿಬಿಲಿ ಹೇಳತೀರದು. ಅಪ್ಪನು ತಟ್ಟನೆದ್ದು ರಭಸದಲ್ಲಿ ಬಂದವನೇ, ಮುಖದಿಂದ ಕಿತ್ತು ಹೊರ ಬರುತ್ತವೆಯೊ ಎಂಬಂತೆ ಕೆಕ್ಕರು ಕಂಗಳಿಂದ `ಯಾರೊ ನೀನು?’ ಎಂದು ಗರ್ಜಿಸಿದ- ಕನ್ಯಾಪಹರಣಕ್ಕೆ ಕುದುರೆ ಮೇಲೆ ಬಂದಿರುವೆನೊ ಎಂಬಂತೆ. ಜ್ವರದಿಂದ ಹೈರಾಣಾಗಿದ್ದ ದೇಹ ಬಿರುಗಾಳಿಗೆ ಸಿಕ್ಕ ಒಣಮರದಂತೆ ತತ್ತರಿಸಿತು. ತೊದಲುತ್ತ `ನೋಟ್ಸ್ ಬೇಕಿತ್ತು’ ಎಂದೆ. ಮಗಳತ್ತ ತಿರುಗಿ-“ಇವನ ಪುಸ್ತಕ ನೀನ್ಯಾಕೆ ತಗೊಂಡೆ?”“ನಾ ತಗೊಂಡಿಲ್ಲ ಪಪ್ಪಾ”“ಮತ್ಯಾಕೆ ಬಂದಿದಾನೆ ಇವನು ಮನೆ ಹತ್ರ?”ಸಹಪಾಠಿಯ ತಾಯಿ ಬಿಪಿಯೇರಿದ ಪತಿದೇವರನ್ನು ಹಿಂದಕ್ಕೆಳೆದು, ಗೇಟಿನ ಮೇಲೆ ಕೈಯಿಟ್ಟು ನಿಂತಿದ್ದ ನನ್ನ ಬಳಿ ಬಂದು, ಶಾಂತಸ್ವರದಿಂದ `ಏನಪ್ಪ ಸಮಾಚಾರ?’ ಎಂದು ವಿಚಾರಿಸಿದರು. ವಿವರಿಸಿದೆ. ಅವರು (ಇನ್ನೂ ಭುಸುಗುಡುತ್ತಿದ್ದ ಗಂಡನಿಗೆ) `ನೀವು ಸ್ವಲ್ಪ ಸುಮ್ಮನಿರಿ. (ಮಗಳಿಗೆ) ಹೋಗೆ ಅದೇನು ತಂದುಕೊಡು’ ಎಂದರು. ಇತಿಹಾಸದ ನೋಟ್ಸ್ ಬೇಕಿತ್ತು. ಸಮಾಜಶಾಸ್ತ್ರದ ನೋಟ್ಸ್ ಸಿಕ್ಕಿತು. ನೋಟ್ಸನ್ನು ಕಾಲೇಜಲ್ಲಿ ಹಿಂತಿರುಗಿಸುವಾಗ `ತಪ್ಪಾಯ್ತಾ?’ ಎಂದು ಕೇಳಿದೆ. ಆಕೆ `ಇನ್ನೊಂದ್ಸಲ ಮನೆಹತ್ರ ಬರಬ್ಯಾಡ’ ಎಂದಳು. ಅದು ಎಚ್ಚರಿಕೆಯೊ ವಿನಂತಿಯೊ ಅರಿಯದಾದೆ. ಅಲ್ಲಿಗೆ ಎಳೆಯನೊಬ್ಬನ ದುಸ್ಸಾಹಸವೆಂಬ ಪ್ರಥಮ ಅಧ್ಯಾಯವು ಮೊದಲ ಮುತ್ತಿಗೆ ಹಲ್ಲು ಮುರಿಯಿತೆಂಬಂತೆ ಪರಿಸಮಾಪ್ತಿಯಾಯಿತು. + +ಎರಡನೆಯ ಅಧ್ಯಾಯವು ಪದವಿಯಲ್ಲಿದ್ದಾಗ ಬರೆಯಲ್ಪಟ್ಟಿತು. ಉಕ್ಕುಪ್ರಾಯದ ಮೊದಲ ದಿನಗಳು. ಹುಡುಗಿಯರ ಬಗ್ಗೆ ಸೆಳೆತ-ಹಿಂಜರಿಕೆಗಳಿಂದ ಕೂಡಿದ್ದವು. ಮಾತಾಡಿಸುವ ತವಕ. ಪರಿಣಾಮ ಏನಾಗುವುದೊ ಭಯ. ಚೆಲುವೆಯಾದ ಒಬ್ಬ ಸಹಪಾಠಿಣಿ ಸಖಿಯರ ಹಿಂಡಿನಲ್ಲಿ ಬರುವಾಗ, ಕಿಟಕಿ ಕಟ್ಟೆಯಲ್ಲಿ ಕಾಲು ಇಳಿಬಿಟ್ಟು ಕೂರುತ್ತಿದ್ದ ನಾನು, ತಟ್ಟನೆ ಇಳಿದು ನಿಲ್ಲುತ್ತಿದ್ದೆ- ನನ್ನತ್ತ ಒಮ್ಮೆ ನೋಡಲಿ ಎಂದು. ಆಕೆ ನನ್ನ ಗೌರವ ವಂದನೆಗಾಗಲಿ ಕಾತರದ ಪ್ರತೀಕ್ಷೆಗಾಗಲಿ ಸೊಪ್ಪುಹಾಕದೆ ಮುನ್ನಡೆಯುತ್ತಿದ್ದಳು. ಆಕೆಗೆ ಎಷ್ಟೊ ಮಂದಿ ನನ್ನಂತೆಯೇ ಗುಪ್ತಪ್ರೇಮಿಗಳು ಇದ್ದಿರಬಹುದು. ಒಂದು ದಿನ ಆಕೆ ಹಾಡಿನ ಸ್ಪರ್ಧೆಯಲ್ಲಿ ಬಹುಮಾನ ಪಡೆಯುತ್ತಿದ್ದ ಭದ್ರಾವತಿ ಹುಡುಗನ ಜತೆ ತಿರುಗಾಡುವುದನ್ನು ಕಂಡೆ. ಕೀಳರಿಮೆ ಅಸೂಯೆಗಳಿಂದ ಬೆಂದ ಆತ್ಮ ತಳಮಳಿಸಿತು: `ದೇವರೇ, ನನಗೇಕೆ ಮಧುರವಾದ ದನಿಯನ್ನು ಕೊಡದೆ ಹೋದೆ?’ + +ಕಾಲೇಜಿನ ಡಿಬೇಟು ಸ್ಪರ್ಧೆಗಳಲ್ಲಿ ನನಗೆ ಎರಡು-ಮೂರನೇ ಬಹುಮಾನ ಬರುತ್ತಿದ್ದವು. ಮೊದಲನೇ ಬಹುಮಾನವನ್ನು ಕಡ್ಡಾಯವೆಂಬಂತೆ ಒಬ್ಬಾಕೆ ಪಡೆಯುತ್ತಿದ್ದಳು. ಆದರೆ ಪ್ರಬಂಧ ಸ್ವರ್ಧೆಯಲ್ಲಿ ನಾನವಳನ್ನು ಹಿಂದಿಕ್ಕುತ್ತಿದ್ದೆ. ನಾವಿಬ್ಬರೂ ಹಲವಾರು ಕಾಲೇಜುಗಳಲ್ಲಿ ಭೇಟಿಯಾಗುತ್ತಿದ್ದೆವು. ನಮಗರಿಯದೇ ಗೆಳೆಯರಾಗುತ್ತಿದ್ದೆವು. ಒಮ್ಮೆ ಸ್ಪರ್ಧೆಯೊಂದಕ್ಕೆ ಒಟ್ಟಿಗೆ ಪಯಣಿಸಬೇಕಾಯಿತು. ಸಂಘಟಕರು ಕಾರ್ಯಕ್ರಮದ ಬಳಿಕ ಬಹುಮಾನಿತರನ್ನು ಸಮೀಪವಿದ್ದ ಜೋಗಕ್ಕೆ ಕಳಿಸಿಕೊಟ್ಟರು. ನೀರು ರಭಸವಾಗಿ ಧುಮ್ಮಿಕ್ಕುತ್ತಿತ್ತು. ನಾವಿಬ್ಬರೂ ಜಲಪಾತದ ತಳಭಾಗಕ್ಕೆಂದು ಕಣಿವೆಯ ಕಿಬ್ಬದಿಯ ಹಾದಿಯಲ್ಲಿ ಇಳಿದೆವು. ಕಿರುದಾರಿ. ಆಗಷ್ಟೆ ಬಿದ್ದ ಮಳೆಯಿಂದ ಪಾಚಿಗಟ್ಟಿದ ನೆಲ ಜಾರುತ್ತಿತ್ತು. ಆಕೆ ಎಡವಿದಾಗ ನಾನೂ ನಾನುರುಳಿದಾಗ ಆಕೆಯೂ ಕೈಹಿಡಿದೆಬ್ಬಿಸುತ್ತ ಕೆಳಗಿಳಿದೆವು. ಕಾಲಿಗೆ ಇಂಬಳ ಅಡರಿದ ಖಬರೂ ಇರಲಿಲ್ಲ. ಹುಡುಗಿಯೊಂದಿಗೆ ಕಣಿವೆ ಇಳಿವ ರೋಮಾಂಚನ. ಆದರೆ ಯಾರಾದರೂ ಹಿಂಬಾಲಿಸಿ ಗಮನಿಸುತ್ತಿದ್ದಾರೆಯೆ ಎಂಬ ಅಳುಕು. ಹತ್ತುವಾಗ ಸುಸ್ತಾಗಿ ಒಂದೆಡೆ ನಿಂತೆವು. ಆಕೆಯ ಮುಖದ ಮೇಲೆ ಬೆವರ ಹನಿಗಳು. ಒರೆಸಲೇ ಅನಿಸಿತು. ಆಕೆ ನನ್ನನ್ನೇ ಓರೆಗಣ್ಣಲ್ಲಿ ಚೂಪಾಗಿ ನೋಡಿದಳು. ಅರ್ಥವನ್ನು ಅಸ್ಪಷ್ಟ ಊಹಿಸಿದೆ. ಚುಂಬಿಸಲು ಸಾಧ್ಯವಾಗಲಿಲ್ಲ. ನನ್ನ ಅಧೈರ್ಯ ನನಗೇ ಕೆಟ್ಟದೆನಿಸಿತು. + +ಕಣಿವೆಯೇರಿ ಮೇಲೆ ಬಂದ ಬಳಿಕ ಈಜಾಡಬೇಕೆನಿಸಿತು. ಆಕೆ ಈಜುಕೊಳದ ದಡದಲ್ಲಿ ಕೂತಳು. ನಮ್ಮೂರ ಕೆರೆಗಳಲ್ಲಿ ಕಲಿತ ಈಜಿನ ಹತ್ತಾರು ಪಟ್ಟುಗಳನ್ನು ತೋರಿಸಿದೆ. ಆಕೆ ಜೀವನ ಸಂಗಾತಿಯಾಗುವ ಉದ್ದೇಶ ತಿಳಿಸಿ ಪತ್ರ ಬರೆದಳು. ಮನೆಗೂ ಬಂದಳು. ನಮ್ಮ ಹೆಣ್ಣಜ್ಜಿಗೆ ಮೊಮ್ಮಗನ ಹುಡುಕಿ ಹುಡುಗಿಯೊಬ್ಬಳು ಬಂದಿದ್ದು ಸಾಂಸ್ಕೃತಿಕ ಆಘಾತ. ನಾನೆಲ್ಲೊ ಹೋದವನು ಮರಳಿ ಬರುವ ತನಕ ಕೂರಿಸಿ ಕುಡಿಯಲು ಹಾಲು ಕಾಸಿಕೊಟ್ಟಿದ್ದಳು. `ಯಾವ ಮತದವರಮ್ಮ ನೀವು?’ ಎಂದು ಸಿಬಿಐ ತನಿಖೆ ಮಾಡಿ ಮುಗಿಸಿದ್ದಳು. ನನ್ನನ್ನು ಸ್ಪರ್ಧೆಗಳಲ್ಲಿ ಸೋಲಿಸುತ್ತಿದ್ದ ಆಕೆ ನನಗೆ ಮನಸೋತಿದ್ದಳು. ಅವಳ ಮನಸ್ಸನ್ನು ಓದಲು ಶಕ್ತನಾಗಿದ್ದೆ. ಜಾತಿಧರ್ಮ-ಕುಟುಂಬದ ಸಂಬಂಧಗಳನ್ನು ಹರಿದು ಬರುವ ಆಕೆಯ ದಿಟ್ಟತನ ಗೌರವ ಹುಟ್ಟಿಸಿತು. ಆದರೆ ನನ್ನೊಳಗೆ ಒಲವು ಯಾಕೊ ಸಹಜವಾಗಿ ಅಂಕುರಿಸಲಿಲ್ಲ. ಭದ್ರವಾದ ನೆಲೆಯಿಲ್ಲದೆ ಜೀವನ ಸಂಗಾತಿ ಬಗ್ಗೆ ತಲೆಕೆಡಿಸಿಕೊಳ್ಳಲು ತಯಾರಾಗಲಿಲ್ಲ. `ನಾನಿನ್ನೂ ಎಂಎ ಓದಬೇಕು’ ಎಂದೆ. ಎಳೆಯಲಾಗದ ಎತ್ತೆಂದು ಆಕೆಗೆ ತಿಳಿಯಿತು. ಹಸಿಬಿಸಿ ಯೌವನದ ಸಂಬಂಧ, ಲಡ್ಡಾದ ಎಳೆಗಳಿಂದ ಮಾಡಿದ ಹಗ್ಗದಂತೆ ತುಂಡಾಯಿತು. + +ಮೂರನೇ ಅಧ್ಯಾಯವು ಮೈಸೂರಿನ ಮಾನಸ ಗಂಗೋತ್ರಿಯಲ್ಲಿ ಬಿಚ್ಚಿಕೊಂಡಿತು. ಹೊಸ ಜೀವನ ಸಂಗಾತಿಯನ್ನು ಕಂಡುಕೊಳ್ಳಲು ದೃಢವಾಗಿ ನಿರ್ಧರಿಸಿದೆ. ರಿಸಲ್ಟ್ ಬಂದ ಬಳಿಕ ಲೆಕ್ಚರರ್ ಕೆಲಸ ಸಿಕ್ಕುತ್ತದೆ. ಸಂಸಾರ ನಡೆಸಬಲ್ಲೆವು ಎನ್ನುವ ಧೈರ್ಯವಿತ್ತು. ಗೆಳೆಯರೂ ಸಹಪಾಠಿಗಳೂ ಪ್ರೇಮಪಥದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರು. ಆಗ ಅಂತರ್ಜಾತೀಯ ಮದುವೆ ಆದರ್ಶವಾಗಿತ್ತು. ಕೆಲವರಿಗೆ ಪುಟ್ಟ ವಿಧವೆಯ ಕೈಹಿಡಿದು ಲೋಕದೆದುರು ಧೀರೋದಾತ್ತ ನಾಯಕನಾಗಿ ಮೆರೆವ ಉಮೇದು, ಯಾರೂ ತರುಣಿಯರು ವಿಧವೆಯರೇ ಆಗುತ್ತಿಲ್ಲವಲ್ಲ ಎಂದು ಹಂಬಲಿಸುವಷ್ಟು ಅತಿರೇಕದಲ್ಲಿತ್ತು. ಪರಸ್ಪರ ಪ್ರೇಮ ಅಂಕುರಿಸಿದೆಯೇ, ಜೀವನದೃಷ್ಟಿಯಲ್ಲಿ ಸಮಸ್ಯೆಯಿಲ್ಲವೇ-ಈ ಯಾವ ಪ್ರಶ್ನೆಯೂ ಮುಖ್ಯವಾಗಿರಲಿಲ್ಲ. ಲೋಕವಿರೋಧಿ ಆಗಬೇಕು. ಸಂಪ್ರದಾಯವಾದಿಗಳ ಹೊಟ್ಟೆ ಉರಿಸಬೇಕು. ಚಳುವಳಿಗಾರರ ಮೆಚ್ಚುಗೆಗೆ ಪಾತ್ರರಾಗಬೇಕು, ಕ್ರಾಂತಿಯಾಗಬೇಕು-ಥೇಟು `ಚಿದಂಬರ ರಹಸ್ಯ’ದ ಹುಡುಗರ ತುರಿಸು. ನೀಟಾಗಿ ಡ್ರೆಸ್ ಮಾಡಿಕೊಂಡು ಮಿರುಗುವ ಶೂ ಧರಿಸಿ ಬರುತ್ತಿದ್ದ ಚೆನ್ನಾಗಿ ಉಂಡುತಿಂದು ಸೊಕ್ಕಿದ ಸಹಪಾಠಿಗಳ ಮುಂದೆ, ನನ್ನ ಬಡಕಲು ಮೈಕಟ್ಟು, ತಿರುಗಾಮುರುಗ ಉಡುತ್ತಿದ್ದ ಎರಡು ಜತೆ ಬಟ್ಟೆ, ಕೀಳರಿಮೆ ಹುಟ್ಟಿಸಿದ್ದವು. ಇಂತಹ ಆತ್ಮವಿಶ್ವಾಸವಿಲ್ಲದ ಹೊತ್ತಲ್ಲಿ ಒಬ್ಬಳು ನನ್ನನ್ನು ಸೆಳೆದಳು. ಅವಳ ಮಂದವಾದ ಹಾಸವು ನೂರು ಸ್ವಪ್ನಗಳನ್ನು ಹುಟ್ಟಿಸುತ್ತಿತ್ತು. ಅವಳು ಸಂಗಾತಿಯಾದರೆ ಬದುಕು ಚಂದವಾದೀತೆಂದು ಹಂಬಲಿಸಿದೆ. ಅಪ್ಪ-ಅಕ್ಕಂದಿರನ್ನು ಒಪ್ಪಿಸುವುದು ಕಷ್ಟವಾಗಿರಲಿಲ್ಲ. + + + +ಗೆಳೆಯರೆಲ್ಲ ಪ್ರವಾಸ ಹೋದೆವು. ಅಲ್ಲಿನ ಸರೋವರದಲ್ಲಿ ದೋಣಿವಿಹಾರ ಕಾರ್ಯಕ್ರಮವಿತ್ತು. ಭಾವೀ ಸಂಗಾತಿಯನ್ನು ನನ್ನ ನಾವೆಗೆ ಆಹ್ವಾನಿಸಿದೆ. ಆಕೆ ಹಿಂಜರಿಯುತ್ತ ನಾವೆಯನ್ನೇರಿದಳು. ಹುಟ್ಟುಹಾಕುತ್ತ `ದೋಣಿಸಾಗಲಿ ಮುಂದೆ ಹೋಗಲಿ’ ಹಾಡಿದೆ. ದೋಣಿ ವಾಲಾಡಿತು. ಸಿನಿಮಾದಲ್ಲಿ ನಾಯಕ ಹುಟ್ಟು ಹಾಕುವಾಗ ಆಗುವಂತೆ, ಆಕೆ ಲಜ್ಜಾಭರಿತ ಪ್ರೇಮದ ನೋಟದಿಂದ ನೋಡಲಿಲ್ಲ. ಮುಳುಗಿಸುತ್ತಾನೆ ಎಂದು ಗಾಬರಿಯಾಗಿ ದಡಕ್ಕೆ ತಿರುಗಿಸು ಎಂದು ಗೋಗರೆದಳು. ನಾನು ಮುಳುಗುವಾಗ ಆಕೆ ಭರವಸೆ ನೀಡುವ ದಡವಾಗಬೇಕೆಂದು ಬಯಸಿದ್ದೆ. ಆದರೆ ದೋಣಿ ಇಬ್ಬರನ್ನು ಕೆಡವಿ ತಾನೊಂದೆ ದಡಕ್ಕೆ ಹೋಗುವ ದುಷ್ಟತನ ತೋರಿತು. ನನ್ನ ಹಾಡಿನ ಅಪಸ್ವರವೂ ದಿಗಿಲು ಹುಟ್ಟಿಸಿರಬಹುದು. ಪ್ರವಾಸದಿಂದ ಮರಳಿದೆವು. ಆಕೆ ಸುಡು ಮಧ್ಯಾಹ್ನ ಕುಕ್ಕರಹಳ್ಳಿ ಕೆರೆಯ ಏರಿಯ ಮೇಲೆ ಭೇಟಿಯಾಗಲು ತಿಳಿಸಿದಳು. ಹೋದೆ. ನಿರ್ಭಾವುಕ ಭಂಗಿಯಲ್ಲಿ ನಿಂತು, ಎಚ್ಚರಿಕೆ ನಿವೇದನೆ ಬೆರೆತ ದನಿಯಲ್ಲಿ ನುಡಿದಳು: `ಪ್ರೀತಿಗೀತಿ ಅಂತ ತಲೆಗೆ ಹಚ್ಚಕೋಬ್ಯಾಡ. ಸ್ನೇಹಿತರಾಗಿ ಉಳಿಯೋಣ. ನಮ್ಮ ಮದುವೆ ಸಾಧ್ಯವಿಲ್ಲ. ನನಗೆ ಚಿಕ್ಕಂದಿನಲ್ಲೇ ನಿಶ್ಚಯವಾಗಿದೆ. ಮುರಿದರೆ ಅಮ್ಮ ಆತ್ಮಹತ್ಯೆ ಮಾಡಿಕೊಳ್ತಾಳೆ’. ದಿಗ್ಮೂಢನಂತೆ ಕೇಳಿಸಿಕೊಂಡೆ. ಕೆರೆಯೊಡೆದು ಇಬ್ಬರನ್ನೂ ಕೊಚ್ಚಿ ಹೋಗಬಾರದೇ? ಹುಚ್ಚು ಹಿಡಿವಷ್ಟು ಪ್ರೇಮ ಬೇರು ತಳೆದಿರಲಿಲ್ಲ. ಹೀಗಾಗಿ ದೇವದಾಸನಾಗಲಿಲ್ಲ. ಆದರೆ ಪ್ರೇಮವಿವಾಹವಾಗಿ ಸಾಮಾಜಿಕ ಕ್ರಾಂತಿಯೆಸಗುವ ಅವಕಾಶ ಕಳೆದುಕೊಂಡ ದುಗುಡ ಬಹುಕಾಲ ಉಳಿದಿತ್ತು. ನಾನು ಅಧೀರನಾಗಿಯೇ ಉಳಿದೆ. + +ನಾಲ್ಕನೇ ಅಧ್ಯಾಯವು ಶಿವಮೊಗ್ಗದಲ್ಲಿ ಬರೆಯಲ್ಪಟ್ಟಿತು. ನನಗಾಗ 23. ಅಧ್ಯಾಪಕ ನೆಂಬ ಗೌರವ, ಪಾಠಕ್ಕಾಗಿ ಮೆಚ್ಚುಗೆ, ಹದಿಹರೆಯದ ವಯಸ್ಸಿನ ದುಡುಕು, ಸಂಚಾರಿ ಭಾವವಾಗಿ ಹಾದುಹೋಗುವ ಗಂಡಿನಾಕರ್ಷಣೆಗಳ ನಡುವಿನ ಗೆರೆ ಕಿರಿದು. ಪ್ರೇಮ ಪತ್ರಗಳು ಬರುತ್ತಿದ್ದವು. ಕೆಲವರು ಕಾಲೇಜ್ ಡೇ ದಿನ ಸಮಯ ಸಾಧಿಸಿ, ಒಲವನ್ನು (ವಿದಾಯದ ಹೊತ್ತಿನ ಭಾವುಕತೆಯನ್ನು ತಪ್ಪಾಗಿ ಅರ್ಥೈಸಿಕೊಂಡೆನೇ?) ತೋಡಿಕೊಳ್ಳುತ್ತಿದ್ದರು. ನನ್ನನ್ನು ಹಚ್ಚಿಕೊಂಡಿದ್ದವರ ಕತೆಗಳನ್ನು ಹಳೇ ವಿದ್ಯಾರ್ಥಿಗಳು ಈಗ ತಮಾಶೆಯಾಗಿ ನಿರೂಪಿಸುವುದುಂಟು. + +ವಿದ್ಯಾರ್ಥಿನಿಯರಲ್ಲಿ ಒಬ್ಬಾಕೆ ಕವಿತೆ ಬರೆಯುತ್ತಿದ್ದಳು. ನಾಟಕದಲ್ಲಿ ನಟಿಸುತ್ತಿದ್ದಳು. ಸರಳವಾದ ಪದದ ಅರ್ಥ-ಅದನ್ನು ತರಗತಿಯಲ್ಲೂ ಕೇಳಬಹುದಿತ್ತು- ಕೇಳಿಕೊಂಡು ಸ್ಟಾಫ್‌ರೂಮಿಗೆ ಬರುತ್ತಿದ್ದಳು. ಸಹೋದ್ಯೋಗಿಗಳು `ನೀನೇ ಹುಡುಗಿ ತರಹ ನಾಚ್ಕೊತೀ ಯಲ್ಲೋ’ ಎಂದು ಛೇಡಿಸುತ್ತಿದ್ದರು. ಬದುಕಿನ ಬಗ್ಗೆ ಭವಿಷ್ಯದ ಬಗ್ಗೆ ಚಿಂತನೆ ಹೊಣೆಗಾರಿಕೆ ಇಲ್ಲದೆ ಹುಟ್ಟಿದ ಎಳಸು ಆಕರ್ಷಣೆಗಳವು. ಆದರೂ ಒಬ್ಬಾಕೆಯ ದೊಡ್ಡ ಕಣ್ಣುಗಳ ಮುಖ ಚಿತ್ತದಲ್ಲಿ ಉಳಿದುಬಿಟ್ಟಿದೆ. ಅದು ಪ್ರೇಮವೊ ಚೆಲುವಿನ ಆರಾಧನೆಯೊ ಕಾಣೆ. ಚೆಲ್ಲು ವರ್ತನೆಯ ಆಕೆ, ಕನ್ನಡದಲ್ಲಿ ಭಯಂಕರ ಕಾಗುಣಿತ ತಪ್ಪು ಮಾಡುತ್ತಿದ್ದಳು. ಚೆಲುವನ್ನು ಕೊಟ್ಟು ಬುದ್ಧಿಯನ್ನು ಕೊಡದ ವಿಧಿಯನ್ನು ಬೈದುಕೊಂಡು, ಭಾಷಾ ದೋಷಗಳನ್ನು ಉದಾರವಾಗಿ ತಿದ್ದುತ್ತಿದ್ದೆ. ಹೀಗಿರುವಲ್ಲಿ ಆಕೆ ಒಂದು ದಿನ ಲಗ್ನಪತ್ರಿಕೆ ಕೊಟ್ಟು, ಎದೆಗೆ ಬೆಂಕಿಯಿಟ್ಟು ಹೋದಳು. + +ಕೊನೆಯ ಅಧ್ಯಾಯವು ಶಿವಮೊಗ್ಗದಲ್ಲಿ ಬಾಡಿಗೆಗಿದ್ದ ಮನೆಯಲ್ಲಿ ಬರೆಯಲ್ಪಟ್ಟಿತು. ವಿಧವೆಯನ್ನು ವರಿಸಬೇಕೆಂಬ ನನ್ನ ಪುರಾತನ ಆದರ್ಶವನ್ನು ಅಗ್ನಿಪರೀಕ್ಷೆಗೆ ಒಡ್ಡಲೆಂದೇ ವಿಧಿ ಹೂಡಿದ ಹೂಟದಂತಿತ್ತು. ಆಕೆ ಸುಂದರಿ. ವಿಚ್ಛೇದನವಾಗಿತ್ತು. ಒಂದು ಕೂಸಿತ್ತು. ವಯಸ್ಸಿನಲ್ಲಿ ತುಸು ಹಿರಿಯಳು. ವಿಶೇಷ ಅಡುಗೆ ಮಾಡಿದಾಗೆಲ್ಲ ಆಕೆಯೂ ಆಕೆಯ ಪುಟ್ಟಮಗನೂ ಕೋಣೆಗೆ ಹೊತ್ತು ತರುತ್ತಿದ್ದರು. ನಾನುಣ್ಣುವ ತನಕವೂ ಇರುತಿದ್ದರು. ಅವರು ತೆರಳಿದ ಅರ್ಧಗಂಟೆಯ ತನಕವೂ ಕಟುವಾದ ಸುಗಂಧ ರೂಮಿನಲ್ಲಿ ಇರುತ್ತಿತ್ತು. ಆಕೆ ನನ್ನನ್ನು ವರಿಸುವ ಪ್ರಸ್ತಾಪವನ್ನು ಅಕ್ಕಂದಿರ ಮೂಲಕ ಮುಂದಿಟ್ಟಳು. ಬದುಕಿನಲ್ಲಿ ಬೆಂದು ಹೋಗಿದ್ದ ಆಕೆಯೊಳಗೆ ಮೂಡಿದ್ದ ಮುಗ್ಧತೆ ಕಳೆದುಕೊಂಡ ಅತಿಯೆಚ್ಚರ, ಪ್ರಬುದ್ಧತೆ, ಕೂಸನ್ನು ಬೆಳೆಸುವ ಚಿಂತೆ, ಕುಟುಂಬದ ರಗಳೆ ಸುತ್ತಿಕೊಂಡು ಹೈರಾಣಾದ ಮ್ಲಾನವದನ-ನನ್ನ ಕಲ್ಪನೆಯ ಜೀವನ ಸಂಗಾತಿಗೆ ಹೊಂದಿಕೊಳ್ಳಲಿಲ್ಲ. ಕೂಸಿರದಿದ್ದರೆ ಮದುವೆ ಆಗುತ್ತಿದ್ದೇನೊ ಏನೊ? ಆದರೆ ತಾರುಣ್ಯದ ಭಾವುಕತೆ ಮತ್ತು ಉದಾತ್ತ ಆದರ್ಶಗಳನ್ನು ಬಿಟ್ಟುಕೊಟ್ಟು ಈಗ ಲೆಕ್ಕಾಚಾರದ ಸಂಸಾರಿಯಾಗಲು ಸಿದ್ಧನಾಗಿದ್ದೆ. + + + +ಒಮ್ಮೆ ಪಾನಗೋಷ್ಠಿಯಲ್ಲಿದ್ದಾಗ ಹಿರಿಯ ಲೇಖಕರೊಬ್ಬರು ಸಿಬಿಐ ಅಧಿಕಾರಿಯಂತೆ `ನೀವು ಒಬ್ಬ ಹೆಣ್ಣನ್ನು ಪ್ರೀತಿಸಿ ಕೈಕೊಟ್ಟಿರಂತೆ. ಬಲ್ಲ ಮೂಲಗಳಿಂದ ನನ್ನಲ್ಲಿ ಖಚಿತ ಮಾಹಿತಿ ಇದೆ’ ಎಂದರು. ನಶೆಯಲ್ಲಿದ್ದ ನಾನು ದುಃಖದಿಂದ ನನ್ನ ಪ್ರೇಮ ಪ್ರಕರಣಗಳನ್ನು ನಿರೂಪಿಸಿ, `ಪ್ರೀತಿ ಮಾಡಿದ್ದು ನಿಜ. ಯಾರಿಗೂ ಕೈಕೊಡಲಿಲ್ಲ’ ಎಂದೆ. ಅವರು `ತಮಾಶೆಗೆ ಕೇಳಿದೆ ಕಂಡ್ರಿ. ಎಲ್ಲರ ಜೀವನದಲ್ಲೂ ಮದುವೆಗೆ ಮುನ್ನ ಹಲವರು ಪ್ರವೇಶಿಸಿರುತ್ತಾರೆ. ಖಚಿತಪಡಿಸಿಕೊಳ್ಳೋಕೆ ಕೇಳಿದೆ ಅಷ್ಟೆ. ನೀವು ದೋಣಿವಿಹಾರ ಮಾಡಿಸಿದ ಹುಡುಗಿಯನ್ನು ಹಠ ಹಿಡಿದು ಮದುವೆ ಆಗಬೇಕಿತ್ತು. ಆಕೆಯ ತಾಯಿ ಕೆರೆಬಾವಿ ಪಾಲಾಗುತ್ತಿರಲಿಲ್ಲ. ಸಂಪ್ರದಾಯವಾದಿಗಳು ಹೀಗೇ ಹೆದರಿಸುವುದು. ಮುಂದಿನ ಜನ್ಮದಲ್ಲಿ ಪ್ರಯತ್ನ ಯಶಸ್ವಿಯಾಗಲಿ’ ಎಂದು ಹಾರೈಸಿದರು. ಮೆಲುದನಿಯಲ್ಲಿ `ಆಮೆನ್’ ಎಂದೆ-ದೂರದಲ್ಲಿದ್ದ ಬಾನುಗೆ ಕೇಳಿಸೀತೆಂಬ ಅಂಜಿಕೆಯಲ್ಲಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_93.txt b/Kenda Sampige/article_93.txt new file mode 100644 index 0000000000000000000000000000000000000000..8091a82d029b89d770d4f3028abd5becebc583b7 --- /dev/null +++ b/Kenda Sampige/article_93.txt @@ -0,0 +1,27 @@ +ಇದುವರೆಗೆ ಯಾವುದೇ ಪ್ರಚಾರ, ಪ್ರಶಸ್ತಿ, ವೇದಿಕೆಗಳ ಗೊಡವೆಗೆ ಹೋಗದೆ ತಮ್ಮ ಪಾಡಿಗೆ ತಾವು ಎಲೆಮರೆಕಾಯಿಯಂತೆ ಸಾಹಿತ್ಯದ ಗಂಭೀರ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಬರೆಯುತ್ತಿರುವ ಎಂ.ಜವರಾಜ್ ಕವಿ ಕತೆಗಾರ ಕಾದಂಬರಿಕಾರ ವಿಮರ್ಶಕ. + +(ಎಂ. ಜವರಾಜ್‌) + +ಧಾರ್ಮಿಕ, ಐತಿಹಾಸಿಕ, ಸಾಂಸ್ಕೃತಿಕ ತಾಣ ಹಾಗು ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದ ಕೂಡಲ ಸಂಗಮ ತಿರುಮಕೂಡಲು. ನರಸೀಪುರ ಪಟ್ಟಣಕ್ಕೆ ಹೊಂದಿಕೊಂಡಿರುವ ಭೈರಾಪುರ ಗ್ರಾಮದ ಇವರು ಈಗಾಗಲೇ “ಕಿಡಿ” ಎಂಬ ಕಾದಂಬರಿ, “ನವೂಲರಮ್ಮನ ಕಥೆ” ಎಂಬ ಕಥಾ ಸಂಕಲನ “ಅವ್ವ ನನ್ಹ್ನೆತ್ತು ಮುದ್ದಾಡುವಾಗ” ಎಂಬ ಕವಿತಾ ಸಂಕಲನ ಹಾಗೂ “ನೆಲದ ಚಿತ್ರಗಳು” ಎಂಬ ವಿಮರ್ಶಾ ಬರಹಗಳನ್ನು ಪ್ರಕಟಿಸಿದ್ದಾರೆ. ಸದ್ಯ ಇವರ “ಮೆಟ್ಟು ಹೇಳಿದ ಕಥಾ ಪ್ರಸಂಗ” ಇತ್ತೀಚೆಗೆ ಬಿಡುಗಡೆಗೊಂಡ, ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಯಾದ ಒಂದು ವಿಶಿಷ್ಟ ಕೃತಿಯೆನಿಸಿದೆ. + +“ಮೆಟ್ಟು ಹೇಳಿದ ಕಥಾ ಪ್ರಸಂಗ” ಕೃತಿಯಲ್ಲಿ ಸಾಮಾನ್ಯ ಮೆಟ್ಟುಗಳನ್ನು ರೂಪಕವಾಗಿ ಬಳಸಿಕೊಂಡಿರುವ ವಿಶಿಷ್ಟತೆ ಕವಿಯ ಕಥನ ತಂತ್ರಗಾರಿಕೆಗಳಲ್ಲೊಂದು. ಇದು ಈ ಕಾವ್ಯದುದ್ದಕ್ಕು ಎದ್ದು ಕಾಣುತ್ತದೆ! ವ್ಯಕ್ತಿಗಳಿಗಿಂತಲೂ ಇಲ್ಲಿ ವಸ್ತುಗಳು ಜೀವ ಪಡೆದು ನಿರೂಪಗೊಂಡಿರುವುದು ಕಥನದ ಜೀವಂತಿಕೆಯಾಗಿದೆ. ದೇವನೂರ ಮಹಾದೇವ ಅವರ ಕುಸುಮಬಾಲೆಯಲ್ಲಿ ಮಂಚವೊಂದು ತಾನು ಕಂಡ ಅನುಭವಗಳನ್ನು ವಿವರಿಸುವ ಸನ್ನಿವೇಶದಂತೆ ಇಲ್ಲಿ ಮೆಟ್ಟು ತನ್ನ ಅನುಭವಗಳನ್ನು ಹೇಳುವಂತೆ, ಇಲ್ಲಿ ಒಂದಿಡೀ ಕಾವ್ಯ ಮೆಟ್ಟೇ ಜೀವ ಪಡೆದು ಕಾವ್ಯದ ಆತ್ಮದಂತೆ ಕಲಾತ್ಮಕತೆಯನ್ನೇ ಮೈದುಂಬಿಕೊಂಡು ತನ್ನ ವಿಭಿನ್ನ ನಿರೂಪಣೆಯೊಂದಿಗೆ ಮಾನವೀಯ ಮೌಲ್ಯದ ಹುಡುಕಾಟ ನಡೆಸುತ್ತದೆ. ಈ ಮೂಲಕ ಮೆಟ್ಟು ಜೀವನ ಪರ್ಯಂತದಲ್ಲಿ ಶೋಷಿತ ಬದುಕುಗಳು ಸವೆಯುವ ಕ್ರಿಯೆಯಿಲ್ಲಿ ವ್ಯಕ್ತವಾಗುತ್ತದೆ. + +ಕವಿ ಜವರಾಜ್ ಅವರ ಈ ಕಾವ್ಯದಲ್ಲಿ ಮೆಟ್ಟನ್ನು ಮೆಟ್ಟುವ ಅಯ್ನೋರು ಎಂಬ ಪಾತ್ರವಿದೆ. ಈ ಪಾತ್ರದ ಜಾತಿಯ ಕುರಿತು ಎಲ್ಲೂ ಹೇಳದಿದ್ದರೂ ಆ ಪದವೇ ಮೇಲ್ವರ್ಗಕ್ಕೆ ಸೇರಿದ ವ್ಯಕ್ತಿಯ ಕುರಿತದ್ದು ಎಂಬುದನ್ನು ಸೂಚ್ಯವಾಗಿ ತಿಳಿಸುತ್ತದೆ. ಕಚ್ಚೆಹರಕುತನದ ಈ ಅಯ್ನೋರ ವ್ಯಕ್ತಿತ್ವಗಳನ್ನು ಕುರಿತು ಮೆಟ್ಟಿನ ಜೊತೆ ಅವರ ಪಂಚೆಯ ಅಂಚೂ ಜೀವ ತಳೆದು ಮಾತಾಡುವುದು ಕಾವ್ಯಕ್ಕೆ ಮೆರುಗು ತಂದಿದೆಯಲ್ಲದೆ ಬೆರಗು ಹುಟ್ಟಿಸುತ್ತದೆ. ಅಲ್ಲದೇ ಮೆಟ್ಟು ಮತ್ತು ಪಂಚೆಯ ನಡುವಿನ ಮಾತುಕತೆ ಅವು ಅನುಭವಿಸುವ ಒಳ ಹೊರಗಿನ ತಾರತಮ್ಯಗಳನ್ನು, ಕವಿ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಹಾಗೆ ಅಯ್ನೋರೊಂದಿಗೆ ಹೊಸಿಲು ದಾಟಿ ಮನೆ ಒಳ ಪ್ರವೇಶಿಸುವ ಪಂಚೆ ಅಂಚು, ಅಯ್ನೋರ ಪಾದದಿಂದ ಕಳಚಿ ಹೊಸಿಲ ಹೊರಗೇ ಉಳಿವ ಮೆಟ್ಟನ್ನು ವ್ಯಂಗ್ಯದ ದನಿಯಲ್ಲಿ ಅಣಕಿಸುವ ಸನ್ನಿವೇಶ ವ್ಯವಸ್ಥೆಯೊಳಗಿನ ದಲಿತ ಬದುಕಿನ ಜೀವಂತ ಸ್ಥಿತಿಯನ್ನು ಹೇಳುತ್ತದೆ. + +ಕಾವ್ಯದಲ್ಲಿ ಬರುವ ಕಾಲಯ್ಯನ ಪಾತ್ರವೊಂದಿದೆ. ಇಲ್ಲಿ ಈ ಕಾಲಯ್ಯ ಶೋಷಿತ ವರ್ಗದ ಪ್ರತಿನಿಧಿ. ಚರ್ಮವೃತ್ತಿಯ ಆತನೇ ಈ ಮೆಟ್ಟುಗಳನ್ನು ಸೃಷ್ಟಿಸುತ್ತಾನೆ. ಶೋಷಿತರ ಒಡಲಾಳದ ವೇದನೆಗಳನ್ನು, ಬೆಳಕಿಗೆ ಬರದೆ ಕತ್ತಲಲ್ಲೇ ಕರಗಿ ಹೋಗುವ ಅವರ ದಾರುಣ ಬದುಕಿನ ಕಟುವಾಸ್ತವಗಳನ್ನು ಸೃಜನಶೀಲವಾಗಿ ಕಟ್ಟಿಕೊಡುವಲ್ಲಿ ಈ ಕಾವ್ಯ ಮಹತ್ವಪೂರ್ಣವಾಗಿದೆ ಎನಿಸುತ್ತದೆ. + +ಕಾಲಯ್ಯ ಎಂಬುದರಲ್ಲಿರುವ ‘ಕಾಲ’ – ಕಾಲದ ಘಟನಾವಳಿಗಳನ್ನು ಮೆಲುಕು ಹಾಕುವ, ಕಾಲವನ್ನು ಮೀರುವ, ಕಾಲವನ್ನು ನಿರ್ಲಕ್ಷಿಸಿದರೆ ಆಗುವ ಅನಾಹುತಗಳನ್ನು ಮತ್ತು ‘ಕಾಲ’ದ ನಾಶ ಬಯಸುವ ಅಹಂಕಾರ ಮನಸ್ಥಿತಿಯಿದೆ. ಕಡೆಗೆ ಆ ಅಹಂಕಾರದ ಮನಸ್ಥಿತಿ ದಕ್ಕಿಸಿಕೊಳ್ಳುವುದಾದರು ಏನು ಎಂಬ ಪ್ರಶ್ನೆಯೂ ಕಾಡುತ್ತದೆ. + + + +ಕಾವ್ಯದ ಕೇಂದ್ರ ಬಿಂದುವಾಗಿರುವ ಸವ್ವಿ ದನಿಯಿರದ ಹೆಣ್ಣು ಮಗಳು. ಅಪ್ಪನಿಂದಲೇ ಸಂಭೋಗಕ್ಕೆ ಒಳಗಾಗುವ ಸವ್ವಿಯ ದಾರುಣ ಬದುಕಿನ ಅಸಹಾಯಕತೆ ನಮ್ಮ ಸಾಮಾಜಿಕ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. + +ಕತ್ತಲ ಸಾಮ್ರಾಜ್ಯದಲ್ಲಿ ಹುಟ್ಟಿನ ಜಾಡು ಹಿಡಿದು ಕತೆ ಹೇಳುವ ಮೆಟ್ಟಿನ ಕತೆ ಬರೀ ಕತೆಯಾಗದೆ ಕಾವ್ಯವಾಗುವ ಪರಿಯೇ ಒಂದು ವೈಶಿಷ್ಟ್ಯಪೂರ್ಣ. ತನ್ನ ಕತ್ತಲ ಸಾಮ್ರಾಜ್ಯದ ಕತೆಯನ್ನು ದೇಶಕ್ಕೆ, ಪ್ರಪಂಚಕ್ಕೆ, ಇಡೀ ಭೂಮಂಡಲಕ್ಕೆ ವಿಸ್ತರಿಸಿ ಹೇಳುತ್ತೇನೆನ್ನುವ ಅದರ ತುಡಿತ ಎಲ್ಲರನ್ನೂ ಒಳಗೊಳ್ಳುವ ಸಾಂಸ್ಕೃತಿಕ ಪ್ರಕ್ರಿಯೆಯೂ ಆಗಿದೆ. ಈ ನಿಟ್ಟಿನಲ್ಲಿ ಕವಿಗೆ ತನ್ನ ಕಾವ್ಯದ ಉದ್ದೇಶಗಳ ಕುರಿತು ಸ್ಪಷ್ಟತೆ ಇದೆ. ಈ ದಿಶೆಯಲ್ಲಿ ಇದೊಂದು ಅಪಾರವಾದ ಮಾನವೀಯ ಮೌಲ್ಯಗಳ ತಾಯ್ತನ ತುಡಿತದ ಪ್ರಯೋಗಶೀಲ ಕಾವ್ಯ ಅನ್ನಬಹುದು. ಈ ಅಂಶ ಕಾವ್ಯದ ಉದ್ದಕ್ಕೂ ಓದುಗನನ್ನು ಮನಮುಟ್ಟುತ್ತದೆ. + +ಅಯ್ನೋರ ಪಾದದಡಿ ಅಲೆದು ಸಾಕಾಗಿ ಬಂದ ಮೆಟ್ಟು ಬೆವರು ಮಣ್ಣಿನ ಜಿಡ್ಡಿನಲ್ಲಿ ಭಂಗಪಟ್ಟು ಸರೊತ್ತಲ್ಲಿ ಜಗುಲಿ ಮೂಲೆ ಸೇರಿದ ಹೊತ್ತಲ್ಲಿ ಮೆಟ್ಟಿನ ಅಂಗಾಂಗವನ್ನು ಕಟ್ಟಿರುವೆಗಳು ಆವರಿಸಿ ಇಂಚಿಂಚು ಕಚ್ಚಿಕಚ್ಚಿ ತಿನ್ನುತ್ತವೆ. ಇಲ್ಲಿ ಇರುವೆಗಳ ಹಸಿವು ನೀಗುವ ಪರಿ ಮತ್ತು ಮೆಟ್ಟಿಗೂ ಇರುವೆಗಳಿಗೂ ನಡೆವ ಸಂಭಾಷಣೆ ಮಂಟೇಸ್ವಾಮಿ ಕಥಾನಕದ ಧರೆಗೆ ದೊಡ್ಡೋರ ಪ್ರಸಾದ ಸ್ವೀಕಾರದ ಇರುವೆ ಸಾಲುಗಳ ಸನ್ನಿವೇಶದ ಚಿತ್ರಣವನ್ನು ನೆನಪಿಸುತ್ತದೆ. ಹಾಗೆ ಮಾರನ ತಡಕ ಮನೆ ಜಗುಲಿ ಮೂಲೆಯಲ್ಲಿ ಮಾತಾಡುವ ಗುಂಡುಕಲ್ಲಿನ ಪ್ರಸಂಗ. ಹಾಗಾಗಿ ಜವರಾಜ್ ಅವರ ಈ ಮೆಟ್ಟಿನ ಕಾವ್ಯವನ್ನು ಜಾನಪದದ ವಿಸ್ತೃತ ನೆಲೆಯಲ್ಲಿಯೂ ನೋಡಬಹುದಾಗಿದೆ. + +ಈಗಾಗಲೆ ಈ ಕಾವ್ಯದ ಕುರಿತು ಮುನ್ನುಡಿ ಬರೆದಿರುವ ಬರಗೂರು ರಾಮಚಂದ್ರಪ್ಪ, ಕೃತಿ ಬಿಡುಗಡೆ ಹೊತ್ತಲ್ಲಿ ಓ.ಎಲ್.ನಾಗಭೂಷಣಸ್ವಾಮಿ, ಸಿ.ಬಸವಲಿಂಗಯ್ಯ, ಕಾಳೇಗೌಡ ನಾಗವಾರ, ಜ್ಯೋತಿ ಗುರುಪ್ರಸಾದ್, ನಾ.ದಿವಾಕರ, ಈ ಕಾವ್ಯದ ಹಿನ್ನೋಟದಲ್ಲಿ ಆರ್.ವಿಜಯರಾಘವನ್, ಹೆಚ್.ಗೋವಿಂದಯ್ಯ, ತರಹದ ಲೇಖಕರು ಒಟ್ಟು ಸಂಕ್ಷಿಪ್ತದಲ್ಲಿ “ಭಿನ್ನ ಆಯಾಮವುಳ್ಳ ಮಾನವೀಯ ಮೌಲ್ಯಗಳ ಹುಡುಕಾಟದ ಸೃಜನಶೀಲ ಹಾಗು ರಚನಾತ್ಮಕ ಭಾಷಾಶೈಲಿಯ ಮಹತ್ವದ ಪ್ರಯೋಗಶೀಲ ಕೃತಿ” ಎಂದಿರುವುದು “ಮೆಟ್ಟು ಹೇಳಿದ ಕಥಾ ಪ್ರಸಂಗ” ದ ಗಟ್ಟಿತನವನ್ನು, ಈ ಕಾವ್ಯದ ಮೌಲ್ಯವನ್ನು ಹೇಳುತ್ತದೆ. + + + +ಹಾಗೆ ಕೊನೆಯದಾಗಿ, ರಂಗಕರ್ಮಿಗಳ ಮೂಲಕ ಕೆ.ಬಿ ಸಿದ್ದಯ್ಯ ಅವರ ದಕ್ಲಾಕಥಾ ದೇವಿಕಾವ್ಯ, ದೇವನೂರರ ಒಡಲಾಳ, ಕುಸುಮಬಾಲೆ, ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು ಇನ್ನೂ ಕೆಲ ಲೇಖಕರ ಕೃತಿಗಳು ರಂಗ ರೂಪದಲ್ಲಿ ಪ್ರಯೋಗಶೀಲತೆಯನ್ನು ತೋರಿದಂತೆ ಈ ಕಥನ ಕಾವ್ಯವನ್ನು ಈತರದ ವಿವಿಧ ರೂಪದ ಪ್ರಯೋಗಗಳ ಸಾಧ್ಯತೆ ಬಗ್ಗೆ ಯೋಚಿಸುವಂತಾದರೆ ‘ಮೆಟ್ಟು ಹೇಳಿದ ಕಥಾ ಪ್ರಸಂಗ’ದ ಕಥಾ ವಿಸ್ತೃತತೆ ಹಲವು ಮಗ್ಗುಲುಗಳಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಪರಿಪೂರ್ಣವಾಗಿ ದಕ್ಕಬಹುದೇನೊ. \ No newline at end of file diff --git a/Kenda Sampige/article_94.txt b/Kenda Sampige/article_94.txt new file mode 100644 index 0000000000000000000000000000000000000000..c3b0e91576a41f53a997b84fdacbb7ec9cb5080e --- /dev/null +++ b/Kenda Sampige/article_94.txt @@ -0,0 +1,83 @@ +ಡಾ. ಎಂ.ಎಸ್.ಮೂರ್ತಿ ಅವರು ಬರೆದಿರುವ “ಬೌಲ್” ಒಂದು ವಿಶಿಷ್ಟ ಕೃತಿ. ಅವರು ಅನುಭಾವದ ಒಂದು ಲೋಕವನ್ನು ಸೃಷ್ಟಿ ಮಾಡುತ್ತಾರೆ, ಅರಿವಿಗೆ ಬಂದಿರದ ಒಂದು ವಿಶೇಷ ಚೈತನ್ಯವನ್ನು ದಕ್ಕಿಸಿಕೊಡುತ್ತಾರೆ. ಬೌಲ್ ಕೃತಿಯ ಚಿಂತನಾ ಕ್ರಮವೇ ಬೇರೆ ಇದೆ ಎಂದು ಪ್ರೊಫೆಸರ್ ಮನು ಚಕ್ರವರ್ತಿ ಅವರು ತಮ್ಮ ಮುನ್ನುಡಿಯಲ್ಲಿ ಹೇಳಿದ್ದಾರೆ. + +(ಡಾ. ಎಂ.ಎಸ್. ಮೂರ್ತಿ) + +ಮೂರ್ತಿ ಅವರು ಮೂಲತಃ ದೃಶ್ಯ ಮಾಧ್ಯಮದ ವಕ್ತಾರ. ಹಾಗಾಗಿ ಇದನ್ನು ಕಾಲದಲ್ಲಿ ನಿಲ್ಲುವ, ಸಲ್ಲುವ, ಗಟ್ಟಿಯಾದ “ಕಲಾ “ಕೃತಿ” ಎಂದೇ ಹೇಳಿದರೆ ತಪ್ಪಾಗದು.1.ಮೂರ್ತಿ ಅವರ ಕಥನ ಕ್ರಮ, ನಿರೂಪಣೆ, ಶೈಲಿ,2. ಕಥಾವಸ್ತು ಮತ್ತು ಪ್ರಸ್ತುತತೆ, ಪರಿಣಾಮ ಕಲಿಕೆ, ಮತ್ತು ಅಗತ್ಯ3. ಧಾರ್ಮಿಕ ಚೌಕಟ್ಟು ಮತ್ತು ಆಧ್ಯಾತ್ಮ + +ಹೀಗೆ ಎಷ್ಟೊಂದು ಆಯಾಮಗಲ್ಲಿ ಕೃತಿಯನ್ನು ನಾವು ಅನುಭವಿಸಬಹುದು. + +ಕಥನ ಕ್ರಮ, ನಿರೂಪಣೆ: + +ಮೂರ್ತಿ ಚಿತ್ರಕಲಾವಿದರು. ಆದ್ದರಿಂದಲೇ ನಾವು ಕಾದಂಬರಿಯನ್ನು ಕೇವಲ ಓದುವುದಿಲ್ಲ, ನೋಡುತ್ತೇವೆ. ಇರುವುದು ಐದು ಮುಖ್ಯ ಪಾತ್ರಗಳು. ಸಹಜತೆ ಮೈವೆತ್ತ ಸಾಮಾನ್ಯ ಮಹಿಳೆ ಸುಮಲತಾ, ಪರಂಪರೆಯ ಪ್ರತಿನಿಧಿ ಅಜ್ಜ, ಸಮಾಜದ ಮತ್ತೊಂದು ಮಗ್ಗಲಿನ ಪ್ರತೀಕ ಮಾಲಿಂಗ, ಜೀವಧರ್ಮಧಾರಣ ಸಂಕೇತ ಬಿಕು ಮತ್ತು ಹರಿಯುವಿಕೆಯ ಹಂದರ ಬೆಸೆಯುವ ಆನಂದ. + +ಸಂಜೆಯ ಕೆಂಪು, ನದಿಯ ಹರಿಯುವಿಕೆ, ಈಜು, ನೀರು ಕುಡಿಯುವುದು, ಕಾಡಿನಲ್ಲಿ ಸಂಚಾರ, ಹಸಿವೆ, ಕಣ್ಣೀರು ಸಂತೆ, ನಡಿಗೆ, ಬೆಂಕಿ, ನಾಯಿ, ಊರಿನ ಜನರು, ಗಿಡ ಮರಗಳು, ಪ್ರತಿಯೊಂದನ್ನೂ ನಮ್ಮ ಮನಸ್ಸಿನ canvas ನಲ್ಲಿ ಚಿತ್ರವಾಗಿ ಬಿಡಿಸುತ್ತಾರೆ ಮೂರ್ತಿ. ಬಣ್ಣ ಕೊಡುತ್ತಾರೆ. ದೃಷ್ಟಿ ಕೊಡುತ್ತಾರೆ. + +“ಭಿಕ್ಷಾ ಪಾತ್ರೆಯ ತುದಿ ಮುರಿದಿತ್ತು. ಆದರೆ ಕೂಡಿಸಿದರೆ ಅದು ಕೂಡುತ್ತಿತ್ತು. ಮುರಿದೇ ಇಲ್ಲ ಎನ್ನುವ ಹಾಗೆ ಅದು ಕೂಡುತ್ತಿತ್ತು. ಕೂಡಿಸಿದವನಿಗೆ ಮಾತ್ರ ಮುರಿದ ಜಾಗ ಕಾಣುತ್ತಿತ್ತು.” ಇಂತಹ ಮಾತುಗಳು ಚಿತ್ರಕಾರನೇ ಬರೆಯಲು ಸಾಧ್ಯ. + +“ಬೆಂಕಿ ಅಗತ್ಯಕ್ಕಿಂತ ಹೆಚ್ಚಾಗಿ ಉರಿಯುತ್ತಿತ್ತು. ತಳ ಎಲ್ಲ ಆವರಿಸಿ, ಒಳಗಿನದೆಲ್ಲವನ್ನು ಒಂದೇ ಸಲ ಬೆಂದು ನೀರಾಗಿಸುವಂತೆ ಎಸರು ಉಕ್ಕಿ ಬೆಂಕಿಗೆ ಆಹುತಿಯಾಗುತ್ತಿತ್ತು.” ಆರಂಭದಲ್ಲಿ ಸುಮಲತೆಯ ಮನಸ್ಥಿತಿಯನ್ನು ವರ್ಣಿಸುವ ಸಾಲುಗಳು. + +ಬಿಕು ಮತ್ತು ಮಾಲಿಂಗನ ನಡುವೆ ನಡೆದ ಘರ್ಷಣೆಯಲ್ಲಿ ಒಂದೊಂದು ಹೆಜ್ಜೆಯನ್ನೂ, ಎರಡು ಮನಸಿನ ಭಾವಗಳನ್ನೂ ಚಲನಚಿತ್ರದ ಹಾಗೇ ಕಾಣಿಸುತ್ತಾರೆ. ಮನಸ್ಸಿನ ಲೆಕ್ಕಾಚಾರ ಮತ್ತು ದೈಹಿಕ ಕ್ರಿಯೆ ಎರಡನ್ನೂ ವಿವರಿಸಿರುವ ಪರಿ ಅನನ್ಯ. ಎಲ್ಲ ಪಾತ್ರಗಳೂ ನಮ್ಮ ಜೊತೆ ಮಾತಾಡುತ್ತವೆ. + +ಈ ಕಾದಂಬರಿ ಪ್ರಥಮ ಪುರುಷ ಸಂಭಾಷಣೆಯ ಧಾಟಿಯಲ್ಲಿದೆ. first person ನಿರೂಪಣೆ. ಹಾಗಾಗಿ ನಾವು ಪ್ರತಿ ಸಾಲನ್ನೂ ಓದುತ್ತಿದ್ದೇವೆ ಎನ್ನುವುದಕ್ಕಿಂತ ಮಾತಾಡುತ್ತಿದ್ದೇವೆ, ಅನಿಸುತ್ತದೆ. ಕತೆಯ ಉದ್ದಕ್ಕೂ ನಮ್ಮೊಂದಿಗೆ ಪಾತ್ರಗಳು ಚಲಿಸುತ್ತವೆ. ಪಾತ್ರಗಳ ಚಲನೆ, ಬದುಕಿನ ಚಲನೆ, ಕಾಲದ ಚಲನೆ. + +“ಬೌಲ್” (ಪಾತ್ರೆ) ಇಡೀ ಕಾದಂಬರಿಯಲ್ಲಿ ಪಾತ್ರಗಳ ಪ್ರಾಣವಾಯು. ಕೊಡುವ, ಕೊಳ್ಳುವ, ತುಂಬುವ, ಖಾಲಿಯಾಗುವ, ಹರಿಯುವ, ನಿಲ್ಲುವ, ಒಡೆದ, ಹಿಡಿದ, ಕೊಡದ, ಕೊಟ್ಟ…. ಹೀಗೆ ಯಾವ ಪದದ ಜೊತೆ ಬೇಕಾದರೂ “ಬೌಲ್” ಸೇರಿಸಬಹುದು. ಸೇರುತ್ತದೆ. ಹಾಗಾಗಿ ಬೌಲ್ ಒಂದು ರೂಪಕವಾಗಿ ಓದುಗರನ್ನು ಆವರಿಸಿಕೊಳ್ಳುತ್ತದೆ. “ಬೌಲ್” ಅನ್ನು ಆಕಾರಕ್ಕೆ, ಪದಕ್ಕೆ ತಂದುಕೊಳ್ಳುವಷ್ಟರಲ್ಲಿ ಅದು ನಿರಾಕಾರವಾಗಿ ತಪ್ಪಿಸಿಕೊಳ್ಳುತ್ತದೆ. ಅದು ಶೂನ್ಯ. ಅದು ಖಾಲಿ. ನಿರಾಕಾರ. ತುಂಬುವುದು ನಮಗೇ ಬಿಟ್ಟದ್ದು. ಹಾಗೆಂದು ತುಂಬಿಸಲು, ಖಾಲಿ ಮಾಡಲು ಎಲ್ಲರಿಗೂ ಆಗದು. ನಮಗೆ ದಕ್ಕುವಷ್ಟನ್ನೇ ನಾವು ಪಡೆದದ್ದನ್ನೇ, ನಮ್ಮೊಳಗೆ ಇರುವುದನ್ನೇ ತುಂಬುತ್ತೇವೆ. + +ಹಾಗೆ ಅದನ್ನು ಖಾಲಿ ಮಾಡುವುದು ಹೇಗೆ? ತೊಳೆದಿಡುವುದು ಹೇಗೆ? ಶುದ್ಧವಾಗಿಟ್ಟುಕೊಳ್ಳುವುದು ಹೇಗೆ? ಈ ಪ್ರಶ್ನೆಗಳನ್ನು ಮೂಡಿಸುತ್ತಾ ಒಂದು ಆಲೋಚನಾ ಕ್ರಮಕ್ಕೆ ನಮ್ಮನ್ನು ಸಿದ್ಧ ಮಾಡುತ್ತದೆ ಬೌಲ್. + +ಕಥಾವಸ್ತು, ಮತ್ತು ಪ್ರಸ್ತುತತೆ, ಕಲಿಕೆ ಮತ್ತು ಪರಿಣಾಮ: + +ಗುರುವಿಹಾರದಿಂದ ಲೋಕಸಂಚಾರಕ್ಕೆ ಹೊರಟ ಬಿಕು, ಅನಿರೀಕ್ಷಿತ ಘಟನೆಗಳನ್ನು ಎದುರಿಸುತ್ತಾನೆ. ಪ್ರಜ್ಞಾಪೂರ್ವಕವಾಗಿ ಒಂದು ಕುಟುಂಬದ ಜವಾಬ್ದಾರಿ ಹೊತ್ತು ಒಳಿತಿಗೆ ನಿಲ್ಲುತ್ತಾನೆ. ಸುಮಲತೆಯ ಮಗುವನ್ನು ಸಾಕಿ ಸಲಹುತ್ತಾನೆ. + +ಗುರುಕುಲದಲ್ಲಿ ಕಲಿತದ್ದನ್ನು ಬದುಕಿಗೆ ಅನ್ವಯಿಸುತ್ತಾನೆ. ಆನಂದನನ್ನು ರೂಪಿಸುತ್ತಾನೆ. ಅಜ್ಜನ ಜ್ಞಾನ, ಜೀವನ ನಿರ್ವಹಣೆ, ಸಹಜ ಬದುಕು ಸಾಗುವ ಚಿತ್ರಗಳನ್ನು ನಾವು ನೋಡುತ್ತೇವೆ. ಸಂಯಮ, ಸಮನ್ವಯದ ಜೀವನ ಕ್ರಮದ ಹಾದಿ ತೋರುತ್ತದೆ. + +ಅಲ್ಲಲ್ಲಿ ಕಥೆ ಊಹಿಸದ ತಿರುವು ಪಡೆಯುತ್ತದೆ. ನಮ್ಮನ್ನು ಪ್ರಶ್ನಿಸುತ್ತಾ, ನಗುತ್ತಾ, ದ್ವಂದ್ವಗಳಿಗೂ ದೂಡುತ್ತಾ, ಕುತೂಹಲ ಕಾಪಿಟ್ಟುಕೊಳ್ಳುತ್ತದೆ.ಇಂದಿಗೆ ಇದು ಎಷ್ಟು ಪ್ರಸ್ತುತ? ಎಂದು ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು. ಅದಕ್ಕೆ ಉತ್ತರವಾಗಿ ಲೇಖಕರು ಒಳನೋಟಗಳನ್ನು ತೋರುತ್ತಾರೆ. ಪ್ರಸ್ತುತ ಬದುಕಿನ ಆತಂಕಗಳು, ತಲ್ಲಣಗಳು, ಧಾವಂತಗಳು, ನಮ್ಮನ್ನು ಸಂಘರ್ಷದ ಸುಳಿಯಲ್ಲಿ ಸಿಲುಕಿಸಿವೆ. ಬೌಲ್‌ನ ಪಾತ್ರಗಳು ನಮ್ಮ ಅಂತರಂಗದ ಜೊತೆ ಸಂಭಾಷಿಸುತ್ತ ಅವಿರತ ಶಾಂತಿಯೆಡೆ ಚಲಿಸಲು ಸಾಧ್ಯವಿದೆ ಎಂದು ಮನದಟ್ಟು ಮಾಡುತ್ತವೆ. + +“ಗಿಡ ಒಂದು ಎಲ್ಲರಿಗೂ ಒಂದೇ ರೀತಿಯ ಫಲವನ್ನು ಕೊಡುತ್ತದೆ. ಕಡಿಯುವವನಿಗೂ ನೀರೆರೆಯುವವನಿಗೂ. ಯಜಮಾನನಿಗೂ ಕಳ್ಳನಿಗೂ. ಗಿಡ ಒಂದೇ ಫಲವನ್ನು ನೀಡುತ್ತದೆ.” ನಾವೂ ಇಂಥ ಪ್ರಕೃತಿಯ ಭಾಗವಲ್ಲವೇ? ಎಂದು ಪ್ರಶ್ನಿಸುವ ಕಾದಂಬರಿ, ಬಟ್ಟೆ ತುಂಡು ಹೇಗೆ ಸವೆದು ಸವೆದು ಬತ್ತಿಯಾಗಬಲ್ಲುದು, ಸವೆದು ಹೋಗುವುದರ ಪ್ರಕ್ರಿಯೆ ಮತ್ತು ಒಂದು ವಸ್ತುವಿನ ಪೂರ್ಣ ಬಳಕೆಯನ್ನು ತಿಳಿಸುತ್ತದೆ. ಕರ್ಮ ಸಿದ್ಧಾಂತವನ್ನು ತೆರೆದಿಡುತ್ತದೆ. + +ಅನಕ್ಷರಸ್ಥ ಜಾನಪದ ಪ್ರಜ್ಞೆ ಬುದ್ಧನಿಗಿಂತ ಮುಂಚೆಯೂ ಇತ್ತು. ಬುದ್ಧಿವಂತಿಕೆ, ವಿದ್ವತ್ತು, ಈ ಪಜ್ಞೆಯನ್ನು ಅಳಿಸಿಹಾಕಿದೆ. ವಿದ್ವತ್ತು ಮತ್ತು ಪುಸ್ತಕ ಜ್ಞಾನ ನಮ್ಮನ್ನು ಗುಲಾಮಗಿರಿಗೆ ದೂಡಿದೆ ಎಂದು ತಿಳಿಸುತ್ತಲೇ ಜಾನಪದರ ಜೀವನ ಕ್ರಮ, ಜೀವಂತಿಕೆ, ಮುಗ್ಧ ಸರಳ ಬದುಕು. ಮರುಸೃಷ್ಟಿಯಾಗುವುದು ಸಾಧ್ಯವಿದೆ ಎಂಬ ನಂಬಿಕೆ ಹುಟ್ಟಿಸುತ್ತದೆ. + +ಹಾಲು ತುಪ್ಪ ಆಗುವಾಗ, ಹಾಲು, ಮೊಸರು, ಬೆಣ್ಣೆ, ಹಂತಗಳನ್ನು ದಾಟಬೇಕು. ಹಾಲು ಕುಡಿದವನಿಗೆ ತುಪ್ಪದ ಅನುಭವ ಸಾಧ್ಯವಿಲ್ಲ. “ಸ್ಥಿತಿಯೇ ಬೇರೆ. ಅನುಭವವೇ ಬೇರೆ.” ಎಂದು ಮಾರ್ಮಿಕವಾಗಿ ಅರ್ಥ ಮಾಡಿಸುತ್ತದೆ. + +ಸದ್ದು ಸದಾ ನಮ್ಮ ಜೊತೆ ಸಡ್ಡು ಹೊಡೆದು ಯುದ್ಧಕ್ಕೆ ಕರೆಯುತ್ತದೆ, ನಮ್ಮ ಮನದ ವಿವೇಕದ ಶಾಂತಿ ಭಂಗ ಮಾಡಿದರೇ ಶಬ್ದಕ್ಕೆ ತೃಪ್ತಿ. ನಾವು ಸೋಲದೆ ನಿಶ್ಯಬ್ದವನ್ನು ಆಲಿಸಲು ಕಲಿತರೆ ಎಂಥ ಚೆನ್ನ! ಇಂಥದೊಂದು ಅದ್ಭುತ ಭಾವ ಸ್ಫುರಣ ಮಾಡಿಸುತ್ತದೆ. + +“ಅವನು ಆಯುಧ ನಂಬಿದ್ದಾನೆ, ನಾನು ಪ್ರಜ್ಞೆ ನಂಬಿದ್ದೇನೆ” + +“ಸದ್ದು ನಿಂತ ಮರುಕ್ಷಣ, ಬೇಕು ಎನಿಸಿದಾಗ ಗುರುಪ್ರಜ್ಞೆ ದಕ್ಕುತ್ತದೆ” + +“ಧ್ಯಾನ ಅಂದರೆ ಏನು” ಎಂಬ ಪ್ರಶ್ನೆ, ಉತ್ತರ..ಇವೆಲ್ಲ ಮಾತುಗಳೂ ಮತ್ತೆ ಮತ್ತೆ ನಮ್ಮನ್ನು ಆಲೋಚನೆಗೆ ದೂಡುತ್ತದೆ. ಎಷ್ಟು ಸೂಕ್ಷ್ಮ ವಿಚಾರಗಳು! + +ಬೀಳ್ಕೊಡುವುದಕ್ಕೂ ದೂರವಾಗುವುದಕ್ಕೂ ಇರುವ ಅಂತರದ ಬಗ್ಗೆ ಒಂದು ಕಡೆ ಬಂದಿದೆ. ಹಾಗೇ ಮಾಲಿಂಗ ತಂದೆಯ ಹಾಗೆ ಇರಲಿಲ್ಲ. ಎಂದಾಗ ಅವನ ಒಳಗು ಏಕೆ ಹಾಗಾಗಿರಬಹುದು ಎಂಬ ಚಿಂತನೆಯಲ್ಲಿ ಇಂದಿನ “ಮನೋವಿಜ್ಞಾನದ” ಆಯಾಮಗಳು ಗೋಚರಿಸುತ್ತವೆ. + +ಸುಮಲತೆ ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾಳೆ. ತಾಯಿಯ ಸೂಕ್ಷ್ಮತೆ ನನಗೆ ಯಾಕೆ ಬರಲಿಲ್ಲ ಎಂದು. ಅಜ್ಜ ಸುಮಲತೆಯನ್ನು ಕೇಳುವ ಪ್ರಶ್ನೆಗಳನ್ನು ಕೂಡ ಇಂದಿನ ಸಮಾಜಕ್ಕೆ ಅನ್ವಯ ಮಾಡಿ ಅಲೋಚಿಸಿದರೆ, ಇಲ್ಲಿರುವ ಸತ್ವ ಅರ್ಥವಾದೀತು. + +ಗುರುಗಳು ವಿಹಾರಕ್ಕೆ ಬರುವವರಿಗೆ ಮತ್ತು ಭಿಕ್ಷೆ ಕೊಟ್ಟವರಿಗೆ ತಾವೇ ತಯಾರು ಮಾಡಿದ ಮಣ್ಣಿನ ಪಾತ್ರೆಗಳನ್ನು ಕೊಡುತ್ತಾರೆ. ಸ್ವಲ್ಪ ದಿನ ಕಳೆದ ಮೇಲೆ ಮಣ್ಣಿನ ಪಾತ್ರೆಗಳು ವಾಪಸ್ ಗುರುಕುಲಕ್ಕೆ ಬರುತ್ತವೆ. ನಮ್ಮ ಬಳಿ ಸಾಕಷ್ಟು ಪಾತ್ರೆಗಳು ಇವೆ, ಎಂದು ಪಡೆದುಕೊಳ್ಳಲು ನಿರಾಕರಿಸುತ್ತಾರೆ. ಶಿಷ್ಯರು ಗೊಂದಲಕ್ಕೀಡಾದಾಗ ಗುರುಗಳು ಊರು ಸುಸಂಸ್ಕೃತ ವಾಗಿದೆ ಎಂದು ವಿವರಿಸುತ್ತಾರೆ. + +ಈ ಮಣ್ಣಿನ ಪಾತ್ರೆಗಳು, ಜನರಿಗೆ ಪ್ರಾಮಾಣಿಕತೆ, ನಡವಳಿಕೆ ಮತ್ತು ಧರ್ಮ ಕಲಿಸಿವೆ ಎಂದು ವಿವರಿಸುತ್ತಾರೆ. ವಸ್ತುಗಳ ಎಚ್ಚರಿಕೆಯ ಬಳಕೆ, ಸದ್ಬಳಕೆ, ಮರುಬಳಕೆ ಬಗ್ಗೆ ಬಂದಿರುವ ಕಥೆಯೊಳಗಿನ ಕಥೆಗಳ ಸಾರ ಸುಂದರ, ಮತ್ತು ಅತ್ಯಂತ ಪ್ರಸ್ತುತ. + +ಗುರುಕುಲಗಳು, ಪೀಠಗಳು ಸಮಾಜದ ಜೊತೆ ಜೊತೆಗೇ ಇರುತ್ತ ಅಥವಾ ಸಮಾಜದಿಂದ ದೂರ ಇದ್ದರೂ ಸತ್ಯ ನೇಮಗಳ “ಬೀಜ ಪ್ರಸರಣ” ಕಾರ್ಯದಲ್ಲಿ ಹೇಗೆ ತೊಡಗಬಹುದು ಎಂಬ ವಿಚಾರವೂ ಇಂದಿನ ಅಗತ್ಯವನ್ನೇ ತಿಳಿಸುತ್ತದೆ. ಕೃಷಿ, ಪರಿಸರ ಪ್ರಜ್ಞೆ, ಮತ್ತು ಅಂತಃಪ್ರಜ್ಞೆ ಜಾಗೃತಗೊಳ್ಳುವ ಅನೇಕ ಅಂಶಗಳನ್ನು ಕೃತಿ ಒಳಗೊಂಡಿದೆ. + + + +ಧಾರ್ಮಿಕ ಚೌಕಟ್ಟು ಮತ್ತು ಆಧ್ಯಾತ್ಮ: + +ಸಮಕಾಲೀನ ವಿಚಾರ ಅಥವಾ ರಾಜಕಾರಣದ ನಿಯಂತ್ರಣಗಳು ಇಲ್ಲಿಲ್ಲ. ಇತಿಹಾಸದ ವಿಶ್ಲೇಷಣೆಯ ಅನಂತ ಸಾಧ್ಯತೆಗಳ ಅನಾವರಣ ಇಲ್ಲಿದೆ. ಎನ್ನುತ್ತಾರೆ ಪ್ರೊ.ಮನು ಚಕ್ರವರ್ತಿ. ಶ್ರೇಣೀಕೃತ ರಚನೆಗಳ ಕಲ್ಪನೆಗಳನ್ನು ಸಾರಾ ಸಗಟಾಗಿ ನಿರಾಕರಿಸಿ, ಪ್ರಪಂಚದ ಸಂವೇದನಾ ಶೂನ್ಯ ಮಾರ್ಗಗಳ ಮೇಲೆ ಮಾತ್ರ ಸಮರ್ಥವಾಗಿ ದಾಳಿ ಮಾಡುತ್ತದೆ ಈ ಕೃತಿ. + +ಆಧುನಿಕತೆಯ ಸೋಗಿನಲ್ಲಿ ಮನುಷ್ಯ ಸ್ವಾರ್ಥ ಮೆರೆಯುತ್ತಿದ್ದಾನೆ. ಅಂತಿಮವಾಗಿ ಮನುಕುಲದ ಸರ್ವನಾಶಕ್ಕೆ ತಾನೇ ಕಾರಣನಾಗುತ್ತಿದ್ದಾನೆ. ಇದನ್ನು ಹೆಜ್ಜೆ ಹೆಜ್ಜೆಗೂ ಈ ಕೃತಿ ಬಿಂಬಿಸಿದೆ. + +ಬದುಕಿನ ವೈಪರೀತ್ಯಗಳು ನಮಗೆ ಸಂಪೂರ್ಣ ಅಪರಿಚಿತ, ಇದು ಅದ್ಭುತ ಆಶ್ಚರ್ಯ ತರುತ್ತದೆ. ಮಾನವನ ಪವಿತ್ರ ಅಸ್ತಿತ್ವದ ನೋಟ ಮಾತ್ರ ಇಲ್ಲಿದೆ ಎನ್ನುತ್ತಾರೆ ಪ್ರೊ ಮನು ಚಕ್ರವರ್ತಿ. + +ಬುದ್ಧನ ನಿರ್ವಾಣದ ನಂತರ ನಾನ್ನೂರಕ್ಕೂ ಹೆಚ್ಚು ವರ್ಷಗಳ ಕಾಲ ಒಂದು ನಿಶ್ಯಬ್ದವಿತ್ತು. ಜನ ಪ್ರಜ್ಞಾವಂತರಾಗಿ ಬಾಳುತ್ತಿದ್ದರು.ಅಶ್ವಘೋಷ ಅಕ್ಷರದಲ್ಲಿ ಕಟ್ಟಿಕೊಟ್ಟದ್ದು ಮಾತ್ರ ನಮಗೆ ಗೋಚರಿಸಿದೆ, ಹಾಗಾದರೆ ಆ ನಿಶ್ಯಬ್ದ ಹೇಗಿತ್ತು? ಈ ಕುತೂಹಲ ಹುಟ್ಟಿಸುತ್ತಾರೆ ಲೇಖಕರು. ಸತ್ಯವನ್ನು ಅರ್ಥ ಮಾಡಿಸುವ ಕ್ರಮಗಳು ಇದ್ದವು. ಈ ನೆಲದ ಜನಗಳ ಸಂಸ್ಕಾರಗಳಲ್ಲಿ ಮನುಷ್ಯ ಬದುಕಿನ ರುಚಿಗಳು ಇವೆ. + +ಅದನ್ನು ಅರಿಯಲು ತರ್ಕ ಮೀಮಾಂಸೆ ವಿದ್ವತ್ತು ಪುರಾಣ ಗ್ರಂಥಗಳ ಜ್ಞಾನ ಬೇಕಾಗಿಲ್ಲ, ಆ ನಾನ್ನೂರು ವರ್ಷದ ನಿಶ್ಯಬ್ದಕ್ಕೆ ಕಿವಿ ಕೊಟ್ಟು ಕೇಳಿಸಿಕೊಳ್ಳಬೇಕು. ನಾನು ಬುದ್ಧನಾದರೆ ನನಗೂ ಬುದ್ಧ ಕಾಣುತ್ತಾನೆ. ಸಾತ್ವಿಕತೆ ಪ್ರಚೋದನೆ ಆಗಬೇಕು. ಬುದ್ಧ ಎನ್ನುವುದು ಒಂದು ಪ್ರಜ್ಞೆ, ಅದು ಒಂದು ನದಿಯಂತೆ ಪ್ರವಹಿಸಬೇಕು, ಎಂಬ ಸಂಗತಿಗಳು ಮನ ತುಂಬಿಸುತ್ತದೆ. + +ತರ್ಕದ ವ್ಯಾಖ್ಯಾನಗಳ ಅಗತ್ಯವಿಲ್ಲ. ಅಕ್ಷರವೇ ಪ್ರಧಾನವಲ್ಲ. “ನೋಟದ” ಗ್ರಹಿಕೆ, ಅರಿವು ಒಳಗೆ ಇಳಿಯಬೇಕು. ನನ್ನ ಧರ್ಮವನ್ನು ನಾನೇ ಕಟ್ಟಬೇಕು. ಪ್ರಾಚೀನತೆ ಮತ್ತು ಸಂವೇದನೆ ಮರುಸೃಷ್ಠಿ ಆದರೆ ಅಧ್ಯಾತ್ಮ ಮತ್ತು ಸಮನ್ವಯ ಸಾಧಿಸಬಹುದು. ಇವೆಲ್ಲ ಚಿಂತನೆಗಳನ್ನು ಉದ್ದೀಪಿಸುತ್ತದೆ, “ಬೌಲ್” ಕೃತಿ. + +ಮನುಷ್ಯ ಬದುಕಿನ ಎಲ್ಲ ಹೋರಾಟಗಳನ್ನೂ ಆರಂಭದ ಬಿಕು ಮತ್ತು ಮಾಲಿಂಗನ ಯುದ್ಧದಲ್ಲಿಯೇ ಕಾಣಬಹುದು. ಆ ಯುದ್ಧ ಒಂದು ಚಿತ್ರಮಾಲಿಕೆಯ ಹಾಗಿದೆ. ವಸ್ತುವನ್ನು ಅಪ್ಪಿಕೊಳ್ಳುವುದು, ಬಿಟ್ಟು ಕೊಡಲು ಹೆಣಗಾಡುವುದು, ಕಿತ್ತುಕೊಳ್ಳುವುದು, ಇದೇ ಅಲ್ಲವೇ ನಮ್ಮ ಹೋರಾಟ? ಶಬ್ದ ನಿಶ್ಶಬ್ದದ ಹೋರಾಟ. ಕೊಟ್ಟು ಬಿಟ್ಟಿದ್ದರೆ ಏನಾಗುತ್ತಿತ್ತು? ಮಾಲಿಂಗನಿಗೆ ಅದನ್ನು ಪಡೆಯುವ ಅರ್ಹತೆ ಇತ್ತೇ? ಬಿಕು ಆನಂದನ ಅಗಲಿಕೆಯಿಂದ ವಿಚಲಿತನಾಗಿ ಬಳಲಿ ನಿತ್ರಾಣನಾಗುವುದು ಏಕೆ? ಬಿಕುವಿನ ಆರೈಕೆಯಲ್ಲಿ ಅರಳಿದ ಸುಮಲತೆ ಆತನನ್ನು ಬಿಟ್ಟು ಹೊರಡಲು ಮನಸ್ಸು ಮಾಡಿದ್ದಾದರೂ ಹೇಗೆ? ಗುರುಸ್ಥಾನದಲ್ಲಿ ಕುಳಿತಿದ್ದ ಆನಂದನನ್ನು ಕದಲಿಸಿದ ಆ ಮಹಾಸಂಗತಿ ಯಾವುದು? ಅಜ್ಜ ಬದುಕಿದ್ದು ಹೇಗೆ? ಗಳಿಸಿದ್ದೇನು? ಹಂಚಿದ್ದೇನು? ಮಾಲಿಂಗ ಲೋಕ ಬಿಟ್ಟಾಗ ಅವನ ಕಣ್ಣುಗಳು ಸಾರಿದ ಸತ್ಯವೇನು? + +ನಾವೂ ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ “ಬೌಲ್” ನ ಅಂಚಿನಲ್ಲಿ ನಡೆಯುತ್ತಿದ್ದೇವೆ. ಪಾತ್ರೆಯ ಒಳಗೆ ಕತ್ತಲಿದೆ. ಪಾತ್ರೆಯ ಹೊರಗೆ ಏನೂ ಇಲ್ಲ. ಆದಿಯೂ ಇಲ್ಲ. ಅಂತ್ಯವೂ ಇಲ್ಲ. + + + +“ಬೌಲ್” ಕಾಲದ ಪಾತ್ರೆ. “ಬೌಲ್” ಸಂಗ್ರಹದ ಕೇಂದ್ರ ಅಲ್ಲ. ವಸ್ತುವನ್ನು ಹಿಡಿದಿಟ್ಟುಕೊಳ್ಳುವ ಆವರಣ ಮಾತ್ರ. ಮತ್ತೆ ಮತ್ತೆ ಖಾಲಿಯಾಗಬೇಕು. ಮತ್ತೆ ಮತ್ತೆ ತುಂಬಿಕೊಳ್ಳಬೇಕು. “ಬೌಲ್” ಶುದ್ಧವಾಗಿರಬೇಕು. ನಮ್ಮೊಳಗೆ ” ಬೌಲ್” ಇದೆಯೇ? ಹೇಗಿದೆ? “ಬೌಲ್” ಓದುವುದಲ್ಲ. ನೋಡುವುದು. ಮತ್ತೆ ಮತ್ತೆ ನೋಡಿಕೊಳ್ಳುವುದು. + +ಬಿ.ಕೆ. ಸುಮತಿ ಆಕಾಶವಾಣಿಯಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿರೂಪಣೆ, ಭಾಷೆ, ಸಾಹಿತ್ಯ ಕುರಿತ ಹಲವು ಲೇಖನಗಳನ್ನು ಬರೆದಿದ್ದಾರೆ.. ‘ನಿರೂಪಣೆ, ಮಾತಲ್ಲ ಗೀತೆ’ ಇವರ ಪ್ರಕಟಿತ ಪುಸ್ತಕ. \ No newline at end of file diff --git a/Kenda Sampige/article_95.txt b/Kenda Sampige/article_95.txt new file mode 100644 index 0000000000000000000000000000000000000000..0d2c5d781b1f03e387ca007827b9b9d73f25ed28 --- /dev/null +++ b/Kenda Sampige/article_95.txt @@ -0,0 +1,13 @@ +ತಮ್ಮ ‘ಇಶ್ಖಿನ ಒರತೆಗಳು’ ಕವನ ಸಂಕಲನದಿಂದ ಕೆಲವು ಓದುಗರಿಗಾದರೂ ಪರಿಚಿತರಾದ ಮುನವ್ವರ್ ಜೋಗಿಬೆಟ್ಟು ಇದೀಗ ಹೊಸ ಕಥಾ ಸಂಕಲನದ ಮೂಲಕ ಓದುಗರನ್ನು ಮತ್ತೊಮ್ಮೆ ಮುಖಾಮುಖಿಯಾಗುತ್ತಿದ್ದಾರೆ. ಕಥಾ ಓದುಗರಿಗೂ ಅವರೇನು ಅಪರಿಚಿತರಲ್ಲ. ಈ ಸಂಕಲನದ ಎಂಟೂ ಕಥೆಗಳು ಬೇರೆ ಬೇರೆಡೆ ಪ್ರಕಟವಾಗಿವೆ. ಸಂಕಲನದ ಉತ್ತಮ ಕಥೆಗಳಲ್ಲಿ ಒಂದಾದ ‘ಜಿನ್ನ್’ ಪ್ರಜಾವಾಣಿ ದೀಪಾವಳಿ ಕಥಾ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದಿದೆ. + +(ಮುನವ್ವರ್‌ ಜೋಗಿಬೆಟ್ಟು) + +ಕರಾವಳಿಯವರಾಗಿ, ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿ ಮುನವ್ವರ್ ಈ ಹಿಂದಿನ ಲೇಖಕರಂತೆ ತಮ್ಮ ಸಮುದಾಯಕ್ಕೆ ಸಂದ ಕಥೆಗಳನ್ನು ಮಾತ್ರ ಬರೆಯದೇ ಸಮಾಜದ ಬೇರೆ ಮಗ್ಗಲುಗಳನ್ನು ನೋಡುತ್ತಿರುವುದು ‘ಜಿನ್ನ್’ ಮತ್ತು ಇತರ ಕಥೆಗಳು ಸಂಕಲನದ ವಿಶಿಷ್ಟತೆಯಾಗಿದೆ. ಸಮುದಾಯದ ಸೂಕ್ಷ್ಮತೆಯನ್ನು ಸಂವೇದನಾಶೀಲರಾಗಿ ಹೇಳಬೇಕಾದ ಅಂತಹ ವಸ್ತುವನ್ನೂ ಜೋಗಿಬೆಟ್ಟು ಆಯ್ದುಕೊಂಡಿದ್ದಾರೆ. + +ಈ ಕಥೆಗಳ ಗಮನ ಸೆಳೆಯುವ ಇನ್ನೂ ಕೆಲವು ಅಂಶಗಳೆಂದರೆ, ನಾಟಕೀಯತೆ, ಕಥಾವರಣದಲ್ಲಿ ಬಿಚ್ಚಿಕೊಳ್ಳುವ ಒಂದು ಬಗೆಯ ನಿಗೂಢತೆ ಮತ್ತು ಜನಪ್ರಿಯ ಕಥನ ಪರಂಪರೆಯಿಂದ ಪಡೆದ ಪ್ರಭಾವ. ಬೆಳೆಯುತ್ತಿರುವ ಲೇಖಕನೊಬ್ಬನಿಗೆ ಯಾವ ಅಂಶವೂ ವರ್ಜ್ಯವಲ್ಲ. ಮಾತ್ರವಲ್ಲ, ತನ್ನ ಕಥನ ಸಾಮರ್ಥ್ಯವನ್ನು ಕಂಡುಕೊಳ್ಳಲು ನಡೆಸುವ ಪ್ರಯೋಗ ಕೂಡ ಮುಖ್ಯ. ಮುನವ್ವರ್ ಅಂತಹ ಕಂಡುಕೊಳ್ಳುವಿಕೆಯ ಪ್ರಯತ್ನದಲ್ಲಿದ್ದಾರೆ. + +(ಕೇಶವ ಮಳಗಿ) + +ಪ್ರತಿ ಕಥೆಯಲ್ಲಿಯೂ ಪ್ರಾದೇಶಿಕ ವಿವರ, ಅಲ್ಲಿನ ಬದುಕಿಗೆ ಅಂಟಿಕೊಂಡ ವೃತ್ತಿ, ಮನುಷ್ಯ ಸ್ವಭಾವ, ಬಾಹ್ಯ ಪರಿಸರ ಎಲ್ಲವೂ ಕಥನ ಕಟ್ಟುವಿಕೆಗೆ ಸಹಕಾರಿಯಾಗಿವೆ. ಕಥಾ ವಿನ್ಯಾಸ ಹಾಗೂ ಶೈಲಿಗಳು ಕೂಡ ಮುನವ್ವರ್ ಅವರಿಗೆ ಜತೆಯಾಗಿವೆ. ಪ್ರತಿ ಕಥೆಯಲ್ಲಿ ತಾವು ಅಂದುಕೊಂಡಿದ್ದನ್ನು ನಾಟಕೀಯ ಅಂಶ ಮತ್ತು ಜನಪ್ರಿಯ ಕಥಾಹಂದರದ ಕ್ಲೈಮಾಕ್ಸ್ ತಂತ್ರಗಳಿಂದ ಅವರು ಸಾಧಿಸಲು ಪ್ರಯತ್ನಿಸಿದ್ದಾರೆ. ಆ ನಿಟ್ಟಿನಲ್ಲಿ ‘ಜಿನ್ನ್’ ಮತ್ತು ‘ಸೇತುವೆ’ ಕಥೆಗಳು ತಮ್ಮ ಪ್ರಯತ್ನದಲ್ಲಿ ಹೆಚ್ಚು ಯಶಸ್ಸನ್ನು ಸಾಧಿಸಿವೆ. ಉಳಿದ ಕಥೆಗಳು ನಿರೂಪಣೆ, ವಿವರ, ಶೈಲಿ ಇತ್ಯಾದಿಗಳಿಂದ ಗಮನಾರ್ಹವಾಗಿವೆ. ಇದ್ದರೂ, ಅಸಲಿ ಕಸುಬಿನ ಕಥೆಗಾರ ಮಂತ್ರ-ತಂತ್ರಕ್ಕಿಂತ ಕಲ್ಪನೆ, ಕನಸು, ಅನುಭವ, ಬದುಕು ಮತ್ತು ಮನುಷ್ಯರನ್ನು ನೋಡುವ ದೃಷ್ಟಿಕೋನದ ಮೇಲೆಯೇ ತನ್ನ ಭಾರವನ್ನು ಹಾಕಿ ಕಥೆಯನ್ನು ಮುನ್ನಡೆಸಬಲ್ಲ. ಇನ್ನೂ ತರುಣರಾಗಿರುವ ಮುನವ್ವರ್ ಅಂಥದ್ದರಲ್ಲಿ ಪಳಗುತ್ತಾರೆ. ಅದಕ್ಕೆ ಪುರಾವೆ ಈ ಸಂಕಲನದಲ್ಲೇ ಇದೆ. ಸಂಕಲನ ರೂಪದಲ್ಲಿ ಮತ್ತೊಮ್ಮೆ ಓದುಗರೆದುರು ಬರುತ್ತಿರುವ ಈ ಕಥೆಗಳನ್ನು ಓದುಗರು ಉತ್ಸಾಹದಿಂದ ಎದುರುಗೊಳ್ಳಲಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_96.txt b/Kenda Sampige/article_96.txt new file mode 100644 index 0000000000000000000000000000000000000000..cb375874f361ce108a232248d24bf50ae550fc59 --- /dev/null +++ b/Kenda Sampige/article_96.txt @@ -0,0 +1,35 @@ +byಕೆಂಡಸಂಪಿಗೆ|May 30, 2023|ಪುಸ್ತಕ ಸಂಪಿಗೆ| 0 Comments + +ಅಪ್ಪ, ಧೋಂಡಿ ಮಾಮಾ ಮತ್ತು ಲಮಾಣಿಗಳು ಪೋಲೀಸರ ಕಾಲಿಗೆ ಬಿದ್ದರು. ‘‘ಸರಕಾರ„„ ಧಣ್ಯಾರ, ನಾವು ಕಳ್ಳತನ ಮಾಡಿಲ್ಲರಿ. ಬೇಕಾದರ ಯಾವ ದ್ಯಾವರ ಮುಂದೂ ಕರ್ಕೊಂಡ ಹೋಗರಿ. ನಮ್ಗ ಏನೂ ಗೊತ್ತಿಲ್ಲರಿ.’’ ಸಾಯೇಬ ಸೊಂಟದ ಬೆಲ್ಟ ಬಿಚ್ಚಿದ. ಧೋಂಡು ಮಾಮಾನ ಮುಕಳಿಗೆ ಎರಡು ಜಡಿದ. ಲಮಾಣ್ಯಾರ ಮುಕುಳಿ ಮ್ಯಾಲೂ ಒದ್ದರು. ಅವರು ಜೋರ-ಜೋರಾಗಿ ಬೊಬ್ಬಿ ಹೊಡೀತ ಕಾಲಿಗೆ ಬಿದ್ದರು. ಮುಂದ ಅಪ್ಪನ ಬೆನ್ನಿಗೂ ಜೋರಾಗಿ ಗುದ್ದಿದರು. ಅಪ್ಪ ತಲಿಗೆ ಚಕ್ಕರ ಬಂದ ಬಿದ್ದ.ಚಂದ್ರಕಾಂತ ಪೋಕಳೆ ಅನುವಾದಿಸಿದ ಮರಾಠಿ ಲೇಖಕ ಅಶೋಕ ಪವಾರರ ಆತ್ಮಕತೆ “ಬಿಡಾರ” + +byಕೆಂಡಸಂಪಿಗೆ|May 23, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ಕಂಟಲಗೆರೆ ಬಹುತೇಕ ಇದು ದುಡಿದು ದುಡಿದು ಬಡವಾಗಿಯೇ ಉಳಿದ ಕುಟುಂಬಗಳಿಂದ ತುಂಬಿದ ಊರಾಗಿದ್ದುದು ನನಗೆ ಗೊತ್ತು. ಇಂಥ ಒಂದು ಊರಿನ ಉರಿಯಿಂದ ಸಿಡಿದ ಬೀಜ ನೀನು. ಅಲ್ಲಿಂದ ಬಚಾವಾಗಿ ಪ್ರೈಮರಿ ಕೊಂಡವನ್ನು ಹಾದು, ಮಿಡ್ಲಿಸ್ಕೂಲ್ ಎಂಬ ಉನ್ನತ ಶಿಕ್ಷಣಕ್ಕೆ ತಿಪಟೂರಿಗೆ ಹೋದದ್ದು, ಊರಿನ ಪುರಾತನ ಬೇರುಗಳನ್ನು ಕಿತ್ತುಕೊಂಡು ಹಾಸ್ಟೆಲ್‌ನಲ್ಲಿ ನೆಲೆಗೊಂಡದ್ದು, ಚಿಕ್ಕಪ್ಪನ ಮತ್ತು ಕುಂದೂರು ತಿಮ್ಮಯ್ಯನವರ ಒತ್ತಾಸೆ ನಿನಗೆ ಸಿಕ್ಕಿದ್ದು ನಿನ್ನಂತ ದಲಿತ ಹುಡುಗರ ಜೀವನದಲ್ಲಿಯ ಬಹುದೊಡ್ಡ ತಿರುವು ಎಂದು ನನಗೆ ಅನಿಸುತ್ತದೆ.ಗುರುಪ್ರಸಾದ್‌ ಕಂಟಲಗೆರೆ ಅವರ “ಟ್ರಂಕು ತಟ್ಟೆ” ಹಾಸ್ಟೆಲ್‌ ಅನುಭವ ಕಥನದ ಕುರಿತು ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಬರಹ + +byತೇಜ ಎಸ್. ಬಿ.|May 16, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಅಕ್ಕ, ಜೋಗತಿ ಮಂಜಮ್ಮ, ಪದವಿ, ಅವ್ವ, ಮಗು, ಸಮಾನಳು ಮುಂತಾದ ಕವಿತೆಗಳು ಜೀವ-ಭಾವ ತುಂಬಿ ಮಹಿಳೆಯರ ಜೀವನದ ಬಗ್ಗೆ ಚಿತ್ರಿಸಿವೆ. ಮುಂತಾಗಿ ನನಗಾರು ಸಾಟಿ, ತಮಟೆ, ಕಣ್ಣಾಮುಚ್ಚೆ ಕಾಡೆ ‘ಗೋಡೆ’ ಬೆಂಗಳೂರಿನ ಮಗ ಸಂಭಾಷಣೆಯೇ ಇಲ್ಲದಂತೆ ಕಾಡುವುದಂತೂ ಸಹಜ. ಪುಸ್ತಕ ಓದಲು ಹೆಚ್ಚೇನು ಸಮಯ ತೆಗೆದುಕೊಳ್ಳಲಿಲ್ಲ, ಆದರೆ ಅವು ನಮ್ಮಲ್ಲಿ ಹುಟ್ಟುಹಾಕಿದ ಪ್ರಶ್ನೆಗಳನ್ನು, ಭಾವಗಳನ್ನು ಜೀರ್ಣಿಸಿಕೊಳ್ಳಲು ಬಹಳ ಸಮಯ ಬೇಕಾಯಿತು…ವಿಕ್ರಮ್‌ ಬಿ.ಕೆ. ಕವನ ಸಂಕಲನ “ನಾವಿಬ್ಬರೇ ಗುಬ್ಬಿ” ಕುರಿತು ತೇಜ ಎಸ್. ಬಿ. ಬರಹ + +byಡಾ. ಸುಧಾ|May 15, 2023|ಪುಸ್ತಕ ಸಂಪಿಗೆ| 1 Comment + +ಎಲ್ಲಿಂದಲೋ ಬಂದ ಅಪರಿಚಿತನೊಬ್ಬ ಲಾಡ್ಜ್‌ ಒಂದರಲ್ಲಿ ಆತ್ಮಹತ್ಯೆ ಮಾಡಿಕೊಂಡದ್ದು.. ತಾವು ಬೇರೆ ಬೇರೆ ಜಾತಿಗೆ ಸೇರಿದ್ದರಿಂದ ಕುಟುಂಬದವರಿಂದ ವಿವಾಹಕ್ಕೆ ಬಂದ ತೀವ್ರ ಪ್ರತಿರೋಧಕ್ಕೆ ನೊಂದು ಜೀವನಕ್ಕೇ ಅಂತ್ಯ ಹಾಡಿದ ಪ್ರೇಮಿಗಳು-ಇನ್ನೇನು ವಿವಾಹಕ್ಕೆ ತಯಾರಾದವರಂತೆ ಸಾಲಂಕೃತರಾಗಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡ ಭಂಗಿಯಲ್ಲಿದ್ದ ಅವರ ಮೃತ ದೇಹಗಳು-ದೂರದಲ್ಲಿದ್ದು ವೀಕ್ಷಕರಂತೆ ನೋಡಲೂ ಕಷ್ಟವಾದ ಈ ಸಾವುಗಳಿಗೆ ಅಂತ್ಯ ಸಂಸ್ಕಾರದ ಸಿದ್ಧತೆ ಮಾಡುವುದು ಹತಾಶೆಯ ಪರಮಾವಧಿಯಲ್ಲದೆ ಇನ್ನೇನು ಎಂದು ಅಲವತ್ತುಕೊಳ್ಳುತ್ತಾನೆ ನಮ್ಮ ನಿರೂಪಕ.ಕೆ. ಸತ್ಯನಾರಾಯಣ ಬರೆದ `ಸಾವಿನ ದಶಾವತಾರ’ ಕಾದಂಬರಿಯ ಕುರಿತು ಡಾ. ಸುಧಾ ಬರಹ + +byಕೆಂಡಸಂಪಿಗೆ|May 12, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಇಲ್ಲಿಯೂ ಅವನ ಮತ್ತು ಅವಳ ನಡುವಿನ ಪ್ರೀತಿ, ಪ್ರೇಮ, ವಿರಹ ಇವೆ. ಪ್ರೀತಿಯ ಆಳ-ಅಗಲ, ವಿರಹದ ಸುಡುವ ಯಾತನೆ ಮತ್ತೆ ಮತ್ತೆ ಚಿತ್ರಿತವಾಗಿದೆ. ಹಾಗೆಯೇ ಇವರಿಬ್ಬರ ಸುತ್ತ ಇರುವ ಲೋಕವೂ ಇದೆ; ಭೂತ, ವರ್ತಮಾನಗಳೂ ಇವೆ. ಸುಮಿತ್‌ ಇವುಗಳನ್ನು ಈಗಾಗಲೇ ಬಳಕೆಯಾಗಿರುವ ಮಾತುಗಳಲ್ಲಿ, ಪ್ರತಿಮೆ ರೂಪಕಗಳಲ್ಲಿ ಚಿತ್ರಿಸುತ್ತ ಕಾವ್ಯವನ್ನು ಸವೆದ ದಾರಿಯಲ್ಲಿ ನಡೆಸುವುದಿಲ್ಲ. ಪ್ರತಿ ಹೆಜ್ಜೆಯನ್ನು ಇಡುವಾಗಲೂ ಹೊಸ ರೀತಿಯಲ್ಲಿ, ಹೊಸ ದಾರಿಯಲ್ಲಿ ನಡೆಯಲು ಸಾಧ್ಯವೇ ಎಂದು ನೋಡುತ್ತಾರೆ.ಸುಮಿತ್‌ ಮೇತ್ರಿ ಕವನ ಸಂಕಲನ “ಈ ಕಣ್ಣುಗಳಿಗೆ ಸದಾ ನೀರಡಿಕೆ” ಕುರಿತು ಜಿ.ಪಿ. ಬಸವರಾಜು ಬರಹ + +byಕೆಂಡಸಂಪಿಗೆ|May 5, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಗಾಂಧೀಜಿಯವರು ದೂರದಲ್ಲಿದ್ದುಕೊಂಡು ಎಲ್ಲರನ್ನೂ ಹುರಿದುಂಬಿಸುತ್ತಿದ್ದರು, ಅವರಲ್ಲಿ ಪ್ರೀತಿಯನ್ನು ಉಕ್ಕಿಸಿಬಿಡುತ್ತಿದ್ದರು ಎನ್ನುವುದಕ್ಕೆ ಉದಾಹರಣೆಯಾಗಿ ನನ್ನ ತಾಯಿಯ ಮೇಲೆ ಅವರು ಪ್ರಭಾವ ಬೀರಿದ್ದು ಹೀಗೆ. ಗಾಂಧೀಜಿ ಮೈಸೂರಿಗೆ ನಾನು 2 ಅಥವಾ 3 ವರ್ಷದವನಾಗಿದ್ದಾಗ ಬಂದಿದ್ದರಂತೆ. ನಾವೆಲ್ಲ ಅವರನ್ನು ನೋಡುವುದಕ್ಕೆ ಹೋಗಿದ್ದೆವಂತೆ. ಗಾಂಧೀಜಿಯವರು ಎಲ್ಲರಿಂದಲೂ ಹಣ ಸಹಾಯ ಕೋರಿದರಂತೆ. ಏನೂ ಓದಿಲ್ಲದ ಮುಗ್ಧ ಜಯಮ್ಮ ಅವರಿಗೆ ತಕ್ಷಣ ತನ್ನ ಕೈಯಲ್ಲಿದ್ದ ಚಿನ್ನದ ಬಳೆಗಳನ್ನು ತೆಗೆದು ಕೊಟ್ಟಳಂತೆ.ಡಾ. ಎ.ಎನ್. ನಾಗರಾಜ್ ಅನುಭವ ಕಥನ “ಆನಂದದ ಹುಡುಕಾಟದಲ್ಲಿ” ಕೃತಿಯ ಕೆಲವು ಪುಟಗಳು ನಿಮ್ಮ ಓದಿಗೆ + +byಪ.ನಾ.ಹಳ್ಳಿ ಹರೀಶ್ ಕುಮಾರ್|May 4, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಶಾರ್ಟ್‌ ಹ್ಯಾಂಡ್ ಬರಹದಲ್ಲಿ ವಿಸ್ತಾರ ಸ್ವರೂಪವನ್ನು ಹೇಗೆ ಸಂಕೇತರೂಪದಲ್ಲಿ ಚಿಕ್ಕದಾಗಿ ದಾಖಲಿಸಿಕೊಳ್ಳುತ್ತಾರೋ ಹಾಗೆಯೇ ಇಲ್ಲಿ ವೀರೇಶರು ನಿಜ ಸಾಧಕರ ವ್ಯಕ್ತಿತ್ವ ಮತ್ತು ಸಾಧನೆಯನ್ನು ಕೆಲವೇ ಸಾಲುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿ ಗೆದ್ದಿದ್ದಾರೆ. ಓದುಗರಿಗೆ ಬೇಸರವಾಗದಿರಲೆಂದು ಪ್ರಾಸ ಬಳಕೆಗೆ ಒತ್ತು ನೀಡಿರುವ ವೀರೇಶರು ತಮ್ಮ ಕವನಗಳನ್ನು ಶಾಲಾ ಮಕ್ಕಳೂ ಸಂತಸದಿಂದ ಕಲಿತು ಹಾಡಲು ಅನುಕೂಲವಾಗುವಂತಾಗಿಸಿರುವುದು ಅವರ ಹೆಗ್ಗಳಿಕೆ.ವೀರೇಶ ಬ. ಕುರಿ ಸೋಂಪೂರ ಬರೆದ ‘ಧರೆಗೆ ಮೆರುಗು ತಂದವರು’ ಕವನ ಸಂಕಲನದ ಕುರಿತು ಪ.ನಾ. ಹಳ್ಳಿ ಹರೀಶ್‌ ಕುಮಾರ್‌ ಬರಹ + +byಸ್ಮಿತಾ ಅಮೃತರಾಜ್ ಸಂಪಾಜೆ|May 2, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 1 Comment + +ನನಗಿಲ್ಲಿ ಲೇಖಕಿಯ ಬರೆಹಗಳು ಇಷ್ಟವಾಗುವುದಕ್ಕೆ ಅನೇಕ ಕಾರಣಗಳಿವೆ. ಮೊದಲನೆಯದಾಗಿ ಬಾಲ್ಯದಲ್ಲಿ ನಮಗೆ ನೋವು, ಕೀಳರಿಮೆ, ಅಪಮಾನ, ತಾರತಮ್ಯ ಎಲ್ಲದರ ಅನುಭವಗಳಿಗೆ ಒಡ್ಡಿಕೊಂಡು ಒಂದಲ್ಲ ಒಂದು ಹಂತದಲ್ಲಿ ಮನಸ್ಸನ್ನು ಹಿಡಿಮಾಡಿಕೊಂಡಿರುತ್ತೇವೆ. ಒಂದು ಕ್ಷಣ ಅದು ಮನಸ್ಸನ್ನು ಘಾಸಿಗೊಳಿಸಿದರೂ ಮರುಕ್ಷಣಕ್ಕೆ ಮರೆತು ಮೆಟ್ಟಿನಿಲ್ಲುವ ಛಾತಿಯೂ ಜೊತೆಜೊತೆಗೆ ಹುಟ್ಟಿಕೊಳ್ಳುತ್ತಿತ್ತು.ನಾಗರೇಖಾ ಗಾಂವಕರ ಬರೆದ ಬಾಲ್ಯದ ಅನುಭವಗಳ ಕುರಿತ ಬರಹಗಳ “ಬಣ್ಣದ ಕೊಡೆ” ಕೃತಿಯ ಕುರಿತು ಸ್ಮಿತಾ ಅಮೃತರಾಜ್ ಸಂಪಾಜೆ ಬರಹ + +byವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ|Apr 26, 2023|ದಿನದ ಪುಸ್ತಕ,ಪುಸ್ತಕ ಸಂಪಿಗೆ| 0 Comments + +ಯಾವ ಆಸೆಯಿಂದ ಅವರು ನನ್ ಆಗಿದ್ದರೋ ಅದು ಈಡೇರುವ ಯಾವ ಸೂಚನೆಯೂ ಅವರಿಗೆ ಕಾಣುವುದಿಲ್ಲ. ಒಂದು ಸಾರಿ ಕೀಳು ಜಾತಿಯಲ್ಲಿ ಹುಟ್ಟಿದ್ರೆ ಅವರು ಸಾಯೋವರೆಗೂ ಅಲ್ಲೇ ಇರಬೇಕು. ಅದರ ನೋವು ಅವಮಾನ ಅನುಭವಿಸಲೇಬೇಕು. ನಮ್ಮವರು ನಿದ್ದೆಯಿಂದ ಎದ್ದು ಬರಬೇಕಾಗಿದೆ. ಈ ಗುಲಾಮಗಿರಿಯನ್ನು ಸಹಿಸಿಕೊಳ್ಳಬಾರದು, ಬದಲಾವಣೆಗಾಗಿ ನಾವೇ ಎದ್ದು ನಿಲ್ಲಬೇಕಾಗಿದೆ, ಜಾತಿ ಹೆಸರಿನಿಂದ ತಲೆಮಾರಿನಿಂದ ನಮ್ಮನ್ನು ತುಳಿಯುತ್ತಲೇ ಬಂದವರ ವಿರುದ್ಧ ಧ್ವನಿ ಎತ್ತುವ ಕೆಲಸ ಭಾಮಾ ಅವರು ಮಾಡುತ್ತಾರೆ.ಡಾ. ಎಚ್‌.ಎಸ್.‌ ಅನುಪಮಾ ಅನುವಾದಿಸಿದ ತಮಿಳಿನ ಬಾಮಾ ಅವರ ಆತ್ಮಕತೆ “ಬಾಮಾ ತಾಳೆಗರಿ”ಯ ಕುರಿತು ವಿಜಯಲಕ್ಷ್ಮಿ ದತ್ತಾತ್ರೇಯ ದೊಡ್ಡಮನಿ ಬರಹ \ No newline at end of file diff --git a/Kenda Sampige/article_97.txt b/Kenda Sampige/article_97.txt new file mode 100644 index 0000000000000000000000000000000000000000..a434543621ac26fce50bb295b03763de2a92b627 --- /dev/null +++ b/Kenda Sampige/article_97.txt @@ -0,0 +1,31 @@ +ಸ್ಮೃತಿ ಎಂದರೆ ಕೇವಲ ನೆನಪು ಎಂದರ್ಥ ಮಾತ್ರವಲ್ಲ; ಅರಿವು, ಜಾಗೃತಿ, ಭೂತಗಾಲದ ಹೊಳಹು ಎಂದೂ ಆಗುತ್ತದೆ. ಪಯಣ ಸಾಗುತ್ತಿರುವಾಗ, “ರಸ್ತೆ ತಿರುವು ಇದೆ ನಿಧಾನ ಸಾಗಿರಿ” ಎಂಬ ಎಚ್ಚರಿಕೆಯ ಫಲಕವಿದ್ದರೆ ಒಂದು ಜಾಗೃತಿ ಮೂಡಿ ಡ್ರೈವ್ ಮಾಡುತ್ತೇವೆ… ಇದರಿಂದ ಉಂಟಾಗಬಲ್ಲ ಅಪಘಾತ ತಡೆಯಲ್ಪಡುತ್ತದೆ… ಆ ರೀತಿಯ ಬೋರ್ಡ್ ಹಾಕಿಸುವುದರ ಹಿಂದೆಯೂ ಅಷ್ಟೆ.. ಈ ಹಿಂದೆ ನಡೆದ ಅನೇಕ ಅಪಘಾತಗಳ ಅರಿವಿದ್ದಿರುತ್ತದೆ. ಇದನ್ನು ಪರಿಗಣನೆಗೆ ತೆಗೆದುಕೊಳ್ಳದೇ ಮುನ್ನಡೆದರೆ, ಉಡಾಫೆ ತೋರಿದರೆ ಆಗುವ ಅನಾಹುತಕ್ಕೆ ನಮ್ಮ ವಿಸ್ಮೃತಿ ಕಾರಣವಾಗುತ್ತದೆ. ಅದೇ ರೀತಿ ಪಯಣದ ಸಂದರ್ಭದಲ್ಲಿ ನಮಗೆದುರಾಗುವ ಅಥವಾ ನಮ್ಮ ಮೊದಲು ಈ ದಾರಿಯಲ್ಲಿ ಸಾಗಿರುವವರ ಒಳ್ಳೆಯ ಅನುಭವ, ನೆನಪುಗಳನ್ನು ಅರಿಯದೇ ಹೋದರೆ ಆ ತಾಣಗಳ ಸೌಂದರ್ಯವನ್ನು ನಾವು ಆಸ್ವಾದಿಸಲಾಗದು, ಆ ಸ್ಥಳಗಳಿಗೆ ಭೇಟಿಕೊಡಲಾಗದು. + +(ನವೀನ ಗಂಗೋತ್ರಿ) + +ಒಳಿತು-ಕೆಡಕು ಎರಡನ್ನೂ ಅರಿತಿದ್ದರೆ ನಮ್ಮ ತಿಳಿವಿನ ವಿಸ್ತಾರ ಹೆಚ್ಚುವುದು. ಹೀಗಾಗಿ “Ignorance is bliss” ಎನ್ನುವುದು ಸಾರ್ವಕಾಲಿಕ ಮಾನ್ಯವಲ್ಲ, ಇದೊಂಥರ ಎಸ್ಕೇಪಿಸ್ಮ್ ಕೋಟ್ ಅನ್ನಬಹುದೇನೋ. ಈ ನಿಟ್ಟಿನಲ್ಲಿ ನಮ್ಮ ಹಿನ್ನಲೆ, ಗತಕಾಲದ ದುರಂತಗಳು, ಅವುಗಳ ಹಿಂದಿನ ಕಾರಣ, ಗತವೈಭವಗಳ ರಮ್ಯ ನೋಟ, ಅದಕ್ಕೆ ಮಾನವನ ಯಾವೆಲ್ಲ ಉದಾತ್ತ ಚಿಂತನೆಗಳು, ಬದುಕುವ ರೀತಿ-ನೀತಿಗಳು ಕೊಡುಗೆ ನೀಡಿದ್ದವು – ಇವೆಲ್ಲವುಗಳ ಅಧ್ಯಯನ, ಅಧ್ಯಾಪನ, ಚಿಂತನ, ವಿಮರ್ಶೆ, ಮರು ಮೆಲುಕುಗಳು ಆಗುತ್ತಲೇ ಇರಬೇಕಾಗುತ್ತದೆ. ಆಗಷ್ಟೇ ಕಳೆದು ಹೋದ ವೈಭವಗಳನ್ನು ಮತ್ತೆ ಸ್ಥಾಪಿಸುವ ಕನಸಿನ ಬೀಜವನ್ನು ಯಾರಾದರೂ ಬಿತ್ತಬಹುದು, ನಡೆದು ಹೋದ ಘೋರ ದುರಂತಗಳ ಎಚ್ಚರಿಕೆಯನ್ನು ನೀಡುತ್ತಾ ಸಾಗಿ, ಮತ್ತೆ ಅಂತಹ ಇತಿಹಾಸ ಮರುಕಳಿಸದಂತೇ ತುಸುವಾದರೂ ತಡೆಯಬಹುದು. ಈ ನಿಟ್ಟಿನಲ್ಲಿ ಲೇಖಕ, ಸಂಶೋಧಕ, ನವೀನ ಗಂಗೋತ್ರಿ ಅವರ “ಕಥಾಗತ” ಪುಸ್ತಕವನ್ನು ಕೇವಲ ಸಾಹಿತ್ಯಾಸಕ್ತರು ಮಾತ್ರವಲ್ಲ, ಇತಿಹಾಸದ ಕುರಿತು ಆಸಕ್ತಿ ಉಳ್ಳವರೂ ಓದಬೇಕು. + +ಈ ಪುಸ್ತಕದ ಕಥಾನಕವೊಂದರಲ್ಲಿ ಬರುವ ಸಾಲೊಂದು ಹೀಗಿದೆ: “ಇತಿಹಾಸದ ಕಥೆಗಳು ನಮಗೆ ಉಪಯೋಗಿಯಾಗುವುದು ಹೇಗೆ? ಹಗೆಗಲ್ಲ, ಅದು ಬಗೆಯನ್ನು ಬೆಳಗಬೇಕು” ಎಂದು. ಇದು ಅಕ್ಷರಶಃ ನಿಜ. ಆಗಿಹೋದ ದುರಂತಗಳು, ದೌರ್ಜನ್ಯಗಳು ಒಂದು ಎಚ್ಚರಿಕೆಯ ಗಂಟೆಯಾಗಬೇಕು. ಮಾನವೀಯತೆಯ ಮಹತ್ವವನ್ನು, ವಿಶಾಲ ಮನೋಭಾವದ ಸೌಂದರ್ಯವನ್ನು, ಮಹತ್ವವನ್ನು, ಜೀವನಧರ್ಮವನ್ನು ವರ್ತಮಾನಕ್ಕೆ ಮಾತ್ರವಲ್ಲ ಭವಿಷ್ಯಕ್ಕೂ ಒಂದು ಪಾಠವನ್ನು ಕೊಡುವಂತಿರಬೇಕು. ಇತಿಹಾಸದ ಅಧ್ಯಯನವು ನಮ್ಮ ಅರಿವಿನ ಹೆಚ್ಚಳಿಕೆ ಮತ್ತು ಪಾಠಕ್ಕೆ ಮಾಪನವಾಗಬೇಕೇ ಹೊರತು ನಾವಿಲ್ಲದಿದ್ದ ಕಾಲಘಟ್ಟದಲ್ಲಿ ಯಾರೋ ದಾಖಲಿಸಿರುವ ವಿಷಯಗಳಿಂದ ಉದ್ರಿಕ್ತರಾಗಿ, ಭಾವೋದ್ವೇಗವನ್ನು ಹೊಂದಿ ಶೋಕ ಸಾಗರದಲ್ಲಿ ಮುಳುಗಿಯೋ, ದ್ವೇಷದ ಉರಿಯಲ್ಲಿ ಬೆಂದೋ ಅಂಧತ್ವವನ್ನು ಹೊಂದಿದರೆ ಮತ್ತೆ ಅದೇ ಇತಿಹಾಸ ಮರುಕಳಿಸುವ ಸಾಧ್ಯತೆಯೇ ಹೆಚ್ಚು! + +ಆಗಿರುವಂಥದ್ದು ಆಗದಂತಿದ್ದರೆ ಸಂಶೋಧನೆಗೆ ಮಹತ್ವ. ‘ಗತಂ ನ ಶೋಚಯೇತ್ ಪ್ರಾಜ್ಞಃ’ (ಪ್ರಾಜ್ಞನಾದವನು ಗತಿಸಿ ಹೋಗಿದ್ದರ ಬಗ್ಗೆ ದುಃಖಿಸುವುದಿಲ್ಲ) ಎಂದು ಸುಭಾಷಿತವೊಂದು ಹೇಳಿದೆ. ಈ ಒಂದು ಅರಿವಿನ ದೀವಿಗೆಯಡಿಯಲ್ಲಿಯೇ ಓರ್ವ ಇತಿಹಾಸದ ವಿದ್ಯಾರ್ಥಿಯ ಅಧ್ಯಯನ ಸಾಗಿದರೆ ಭವಿಷ್ಯತ್ತಿಗೆ ಆತ ಕೊಡಬಲ್ಲ ಕೊಡುಗೆ ಅಪಾರ. ಇದರರ್ಥ ಆಗಿ ಹೋಗಿದ್ದನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿಯೋ, ಮುಚ್ಚಿಟ್ಟೋ… ಆಗದೇ ಇದ್ದಂಥದ್ದನ್ನು ವಿಜೃಂಭಿಸಿ ಹೇಳುವುದೋ- ಎರಡೂ ಅಷ್ಟೇ ಅಪಾಯಕಾರಿ ಹಾಗೂ ಅಪರಾಧವೂ ಹೌದು! ಈ ಒಂದು ಹಿನ್ನಲೆಯಲ್ಲಿ ವಾಸ್ತವಿಕತೆಯ ಚಿತ್ರಣವಿತ್ತ ಇತಿಹಾಸಕಾರರ ಗ್ರಂಥಗಳನ್ನೆಲ್ಲ ಅಭ್ಯಸಿಸಿ, ಅಲ್ಲಿದ್ದದ್ದನ್ನೇ ನಮ್ಮ ಮುಂದೆ ಆಕರ್ಷಕ ಕಥಾನಕ ಶೈಲಿಯಲ್ಲಿ ಹರವಿಡುವ ಒಂದು ಮಹತ್ತರ ಹೆಜ್ಜೆಯನ್ನು ‘ಕಥಾಗತ’ ಪುಸ್ತಕವು ಮಾಡಿದೆ ಎನ್ನಬಹುದು. + +ಕಥಾಗತ : ಇದೊಂದು ಸಾಮಾಜಿಕ ಅಥವಾ ಕಾಲ್ಪನಿಗೆ ಕಥೆಗಳ ಗುಚ್ಛವಲ್ಲ. ಸಾಕ್ಷ್ಯಚಿತ್ರಗಳು ಯಾವ ರೀತಿ ಹಿನ್ನಲೆಯ ನೋಟವನ್ನು ಕಟ್ಟಿಕೊಡುತ್ತವೋ ಅದೇ ರೀತಿ ಇಲ್ಲಿರುವವೆಲ್ಲ ಸಾಕ್ಷ್ಯಕಥನಗಳು ಎನ್ನಬಹುದು. ಒಟ್ಟೂ 8 ನೀಳ್ಗತೆಗಳನ್ನೊಳಗೊಂಡಿರುವ ಈ ಪುಸ್ತಕವು ನಮ್ಮ ನಾಡಿನ ಪ್ರಸಿದ್ಧ ರಾಜ ಮನೆತನಗಳ ಆಳ್ವಿಕೆಯ ಕುರಿತು ಮಾತ್ರವಲ್ಲ, ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಆಳ್ವಿಕೆಯ ಚಿತ್ರಣ, ಆ ಕಾಲದ ಜನಜೀವನ, ಸಾಹಿತ್ಯಿಕ, ಶಿಲ್ಪ ಕಲೆ, ರಾಜಕೀಯ ಒಳನೋಟಗಳು, ಪೋರ್ಚುಗೀಸರ, ಬ್ರಿಟೀಶರ, ಮೊಘಲರ ದಾಳಿಗಳಿಂದ ನಲುಗಿದ ಮಾನವೀಯತೆ, ಜೀವಸಂಕುಲ, ಇದರ ಪರಿಣಾಮ ಹೇಗೆ ವರ್ತಮಾನವನ್ನೂ ಪ್ರಭಾವಿಸುತ್ತಿದೆ… ವಿಜಯನಗರ, ಕದಂಬ ಸಾಮ್ರಾಜ್ಯ, ಪಲ್ಲವರು, ಚೋಳರು, ಹರ್ಷವರ್ಧನ, ಆದಿಲ್ ಶಾಹ್… ಹೀಗೆ ಎಲ್ಲ ಪ್ರಮುಖ ರಾಜಾಳ್ವಿಕೆಯ ಕಿರುನೋಟವನ್ನು ಸಶಕ್ತವಾಗಿ ನೀಡುತ್ತಾ ಸಾಗುತ್ತದೆ. + + + +ಹಂಪೆಯ ವಿರೂಪಾಕ್ಷ ದೇವಾಲಯ ನಿರ್ಮಾಣಗೊಂಡ ಹಿನ್ನಲೆ, ವಿಜಯನಗರ ಸಾಮ್ರಾಜ್ಯದ ವೈಭೋಗ, ಪತನ… ಹಾಗೆಯೇ, ಬೇಲೂರಿನ ಚೆನ್ನಕೇಶವ ದೇವಸ್ಥಾನವನ್ನು ನಿರ್ಮಿಸಿದ ಸಂದರ್ಭ, ಆ ಕಾಲದ ಪ್ರಸಿದ್ಧ ಶಿಲ್ಪಿಗಳ ಕಿರುಪರಿಚಯ, ಯಾವ ರೀತಿ ಅಂದಿನ ಪ್ರಸಿದ್ಧ ಶಿಲ್ಪಿಗಳು ಅಪರೂಪದ ಕೆತ್ತನೆಗೆ ಚಾಲನೆ ನೀಡಿದರು, ನಿರ್ವಹಿಸಿದರು… ಓರ್ವ ರಾಜತ್ವದ ಜೊತೆಗೆ ಸತ್ವಗುಣ ಸಮೀಕರಣಗೊಂಡಾಗ ಅದು ಹೇಗೆ ಪ್ರಜಾರಂಜಕ ಆಳ್ವಿಕೆಯಾಗುತ್ತದೆ ಮತ್ತು ಅದೇ ರಾಜನು ತಮೋಗುಣವನ್ನು ವಿಜೃಂಭಿಸಿಕೊಂಡರೆ ಯಾವೆಲ್ಲ ರೀತಿಯಲ್ಲಿ ಪ್ರಜಾಭಜಂಕ ಆಗಬಲ್ಲ… ರಾಣಿ ಶಾಂತಲೆಯ ಅಪರೂಪದ ಪರಿಕಲ್ಪನೆಯಲ್ಲಿ ಯಾವ ರೀತಿ ಸಿಂಗಾರ ಕನ್ನಿಕೆಯರು ಬೇಲೂರಿನ ದೇವಳದ ಗೋಡೆಯ ಕೆತ್ತನೆಯನ್ನೇರಿ ಜಗತ್ಪ್ರಸಿದ್ಧರಾದರು…. ಪಲ್ಲವರ ಕಾಲದಲ್ಲಿ ಮಹಾಬಲಿಪುರದಲ್ಲಿ ಅರಳಲ್ಪಟ್ಟ ಶಿಲಾಪಲ್ಲವಗಳು, ಆ ವಾಸ್ತುಶಿಲ್ಪದೊಳಗಿರುವ ಅಮೂರ್ತ/ಅಪೂರ್ಣ ಕೆತ್ತನೆಗಳಿಗೆ ಕಾರಣಗಳೇನು – ಹೀಗೆ ಇವೆಲ್ಲ ಮತ್ತು ಇನ್ನೂ ಹಲವು ವಿಷಯಗಳು, ಐತಿಹಾಸಿಕ ಸಂಗತಿಗಳೆಲ್ಲ ಹದವಾದ ಕಥಾನಕದ ಪಾಕದಲ್ಲಿ (ಅಂದರೆ, ಅತ್ತ ಪೂರ್ತಿ ಕಥನ ಶೈಲಿಯ ಜಾಡು ಹಿಡಿಯದೇ ಇತ್ತ ಒಣ ವಿಶ್ಲೇಷಣೆಯ ಪ್ರಬಂಧವಾಗದೇ) ಗತದ ಕಥೆ ಹೇಳುವ ಸಾಕ್ಷ್ಯಗಳಾಗಿವೆ. + +‘ಚಿನ್ನದ ಅಂಚಿನ ರೇಶಿಮೆ ದಾರಿ’, ‘ಮಾಗಧಿಯ ಕಂಗಳಲ್ಲಿ’ – ಈ ಕಥೆಗಳು ಆ ಕಾಲದ ಭಾರತೀಯ ತತ್ತ್ವಶಾಸ್ತ್ರ, ಅರ್ಥಶಾಸ್ತ್ರ, ವ್ಯಾಪಾರ, ಶೈಕ್ಷಣಿಕ ನಿಲುವು – ಇವೆಲ್ಲವುದರ ಹಿರಿಮೆಯನ್ನು, ಸಾಧನೆಯನ್ನು, ಜಗತ್ತಿಗೆ ಭಾರತೀಯರು ನೀಡಿದ ಮಹತ್ತರ ಕೊಡುಗೆಗಳನ್ನು ಸಾರುವ ಕಥೆಗಳು. ಗಣಿತಶಾಸ್ತ್ರಕ್ಕೆ ಬಹುಮುಖ್ಯ ಕೊಡುಗೆ ನೀಡಿದ ಆರ್ಯಭಟ, ಶೀಲಭದ್ರಾಚಾರ್ಯರಂತಹ ಅಪರೂಪದ ಅಧ್ಯಾಪಕರನ್ನು ಹೊಂದಿದ್ದ ನಲಂದಾ ವಿಶ್ವವಿದ್ಯಾಲಯ ಯಾವ ರೀತಿ ಪಾಲಿ, ಸಂಸ್ಕೃತ, ಜೈನ ಮುಂತಾದ ಸಾಹಿತ್ಯ ಗ್ರಂಥಗಳ ಸಾಗರವಾಗಿತ್ತು, ಅದರ ಗತವೈಭವ ಹೇಗೆಲ್ಲ ಇದ್ದಿತ್ತು, ಅಲ್ಲಿ ಯಾವೆಲ್ಲ ರೀತಿಯ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತಿದ್ದವು ಮತ್ತು ಜಗತ್ತಿನ ವ್ಯಾಪಾರಕ್ಕೆ ಇವು ಕೊಟ್ಟ ಅಮೂಲ್ಯ ಕೊಡುಗೆಗಳೇನು ಎನ್ನುವುದನ್ನು ಈ ಎರಡು ಕಥೆಗಳು ಮನಮುಟ್ಟುವಂತೆ ನಿರೂಪಿಸುತ್ತವೆ. + +“ಅಭಿಪ್ರಾಯಭೇದಗಳೆಲ್ಲ ಕೊಲೆಯಲ್ಲಿಯೇ ಉತ್ತರ ಕಂಡುಕೊಳ್ಳುವುದಾದರೆ ನಾಗರಿಕತೆಗೇನು ಬೆಲೆ?” ಎಂದು ಪ್ರಶ್ನಿಸುವ ಮೂಲಕ ಲೇಖಕರು ಓದುಗರಲ್ಲೊಂದು ಜವಾಬ್ದಾರಿಯನ್ನು, ನಾಗರೀಕ ಪ್ರಜ್ಞೆಯನ್ನು ಉದ್ದೀಪನಗೊಳಿಸುತ್ತಾರೆ. + +ಇತಿಹಾಸವನ್ನು ತಿಳಿಯಬೇಕು ಯಾವ ಸಿದ್ಧಾಂತ ತನಗೆ ಒಳಿತು ಎನ್ನುವುದನ್ನು ಮನಗಾಣಲು. “ತಾನುಳಿಯಬೇಕು”, “Survival of the fittest” ಎನ್ನುವುದೇ ಪ್ರಕೃತಿಯ ಮೂಲ ಸಿದ್ಧಾಂತ ನಿಜ. ಇದರ ಸುತ್ತ ಮಾನವ `ತಾನು ಉಳಿಯ ಬೇಕು, ತನ್ನ ಜೊತೆ ಉಳಿದವರೂ ಉಳಿದು ಬಾಳಬೇಕು’, `ತಾನು ಮಾತ್ರ ಉಳಿಯಬೇಕು, ಬಾಕಿದ್ದೆಲ್ಲ ಅಳಿಯಬೇಕು’, `ತಾನುಳಿಯಬೇಕು, ಇದಕ್ಕಾಗಿ ಬಾಕಿದೆಲ್ಲ ತನ್ನ ಅಡಿಯಾಳಾಗಬೇಕು’ ಎನ್ನುವ ವಿವಿಧ ಸೈದ್ಧಾಂತಿರ ಸ್ವರೂಪ ಹುಟ್ಟಿಸಿಕೊಂಡ ಎನ್ನುವುದನ್ನೇ ಹಲವು ವಿಧದದಲ್ಲಿ ನಮಗೆ ಕಾಣಿಸಲು ಹೊರಡುತ್ತಾರೆ ನವೀನ್ ಗಂಗೋತ್ರಿ. ಯಾವುದು ಮನುಕುಲಕ್ಕೆ ಹಿತ ಈ ಮೂರರಲ್ಲಿ ಎನ್ನುವುದು ಪ್ರಾಜ್ಞ ಇತಿಹಾಸಕಾರ, ಅಧ್ಯಯನಕಾರ, ಓದುಗ ಮಾತ್ರ ಅರಿಯಬಹುದು. + +ಚೀನಾದ ಅನೇಕ ಯಾತ್ರಿಗಳು, ಬೌದ್ಧ ತತ್ವವನ್ನು ಒಪ್ಪಿಕೊಂಡು, ಅಪ್ಪಿಕೊಂಡು ಬುದ್ಧದ ತವರಾದ ಭಾರತಕ್ಕೆ ಬಂದು, ಇಲ್ಲಿಯ ಸಾಂಸ್ಕೃತಿಕ ಜೀವನದೊಳು ಬೆರೆತು, ಪಾಲಿ, ಸಂಸ್ಕೃತ, ಹಿಂದಿ ಎಲ್ಲವನ್ನೂ ಕಲಿತು ಆ ಕಾಲದ ಭಾರತವನ್ನು ತಮ್ಮ ಅನುಭವದಲ್ಲಿ ನೇಯ್ದು ಭವಿಷ್ಯತ್ತಿಗೆ ನೀಡಿದ ‘ಹು ಎನ್ ತ್ಸಾಂಗ್’ ಅಂತಹ ಚೀನಾ ಯಾತ್ರಿಕರ ಕುರಿತು ಸಮಗ್ರ ಚಿತ್ರಣ ದೊರಕುತ್ತದೆ. ಅಲ್ಲದೇ, ಚೀನಾಕ್ಕೂ ನಮಗೂ ಈ ಹಿಂದೆ ಎಂತಹ ನಂಟಿತ್ತು, ಅಲ್ಲಿಯ ಪ್ರಜೆಗಳು ಪ್ರಭುತ್ವದ ದಬ್ಬಾಳಿಕೆಯನ್ನು ಮೀರಿ ಯಾವರೀತಿಯ ಸೌಹಾರ್ದ ಬಂಧವನ್ನು ಬೆಸೆದಿದ್ದರು ಮತ್ತು ಇದಕ್ಕೆ ಬೌದ್ಧ ತತ್ವದ ಪ್ರಭಾವದ ಕೊಡುಗೆ ಏನು ಎಂಬುದನ್ನು ನಾವು ಮನಗಾಣುತ್ತೇವೆ. + +“ಒಬ್ಬ ಸಂಶೋಧಕನಿಗೆ ಅಭಿಪ್ರಾಯಕ್ಕಿಂತ ಫ್ಯಾಕ್ಟ್‌ಗಳು ಮುಖ್ಯವಾಗಬೇಕು. ಅಭಿಮಾನಕ್ಕಿಂತ ವಾಸ್ತವ ಮುಖ್ಯವಾಗಬೇಕು. ಐಡಿಯಾಲಜಿಕಲ್ ಓರಿಯಂಟೇಶನ್ನುಗಳಿಗೆ ಬದಲಾಗಿ ಸತ್ಯವನ್ನು ಕಾಣುವ ಸಂತುಲಿತ ದೃಷ್ಟಿಯಿರಬೇಕು. ಅದಿಲ್ಲವಾದರೆ ನೀವು ರಾಜಕಾರಣಿಯೋ, ರಾಜಕೀಯ ನಾಯಕರ ಬಾಲವೋ, ಅಥವಾ ಧ್ರುವೀಕರಣ ಹೋರಾಟದ ಮುನ್ನೆಲೆಯ ನಾಯಕನೋ ಆಗಬಹುದಾಗಿದೆ – ಸಂಶೋಧನೆಗೆ ಅನರ್ಹರಾಗುತ್ತೀರಷ್ಟೇ.” ಎಂದು ಕಥೆಯೊಂದರ ಪಾತ್ರವಾದ ಪ್ರೊ. ತಮಿಳರಸನ್ ಮಾತುಗಳು ಸದಾ ಸ್ಮರಣೀಯ. + + + +ಲೇಖಕರು ಪ್ರತಿ ಕಥೆಯ ಕೊನೆಗೆ ತಾವು ಮಾಹಿತಿಗಳನ್ನು ಸಂಗ್ರಹಿಸಿದ ಆಕರಗಳನ್ನು ನಮೂದಿಸಿದ್ದು, ಅವರ ಅಪಾರ ಸಂಶೋಧನೆಯ, ಸಮಗ್ರ ಅಧಯನದ ಫಲ ಈ ಎಂಟು ಕಥೆಗಳು ಎಂಬುದಕ್ಕೆ ಇವು ಸಾಕ್ಷಿಗಳಾಗಿವೆ. ಈ ಅಧ್ಯಯನದ ಪ್ರೌಢಿಮೆಯು ಕಥಾಗತದುದ್ದಕ್ಕೂ ಎದ್ದು ಕಾಣುತ್ತಾ ಸಾಗಿದೆ, ನಿರೂಪಣೆಯೊಳಗಿನ ಸಂಯಮ, ಭಾಷಾ ಪಾಂಡಿತ್ಯ ನಮ್ಮ ದೇಶದ ಈ ಐತಿಹಾಸಿಕ ಕಥೆಗಳಿಗೆ ಕಲಶವನ್ನಿಟ್ಟಿದೆ. + +ತೇಜಸ್ವಿನಿ ಹೆಗಡೆ ಮೂಲತಃ ಉತ್ತರ ಕನ್ನಡದ ಶಿರಸಿಯವರು. ಪ್ರಸ್ತುತ ಬೆಂಗಳೂರು ನಿವಾಸಿ. ಮಂಗಳೂರಿನ ಕೆನರಾ ಡಿಗ್ರಿ ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾಭ್ಯಾಸ ಪೂರೈಸಿರುವ ತೇಜಸ್ವಿನಿ, ಮೈಸೂರು ಮುಕ್ತ ವಿಶ್ವವಿದ್ಯಾನಿಲಯದಲ್ಲಿ (ಕನ್ನಡ) ಎಂ.ಎ ಪದವೀಧರರು. ಚಿಗುರು (ಕವಿತೆಗಳು), ಜೋತಯ್ಯನ ಬಿದಿರು ಬುಟ್ಟಿ (ಕಥಾಸಂಕಲನ), ಸಂಹಿತಾ (ಕವಿತೆಗಳು), ಹಂಸಯಾನ (ಕಾದಂಬರಿ) ಇವರ ಪ್ರಕಟಿತ ಕೃತಿಗಳು \ No newline at end of file diff --git a/Kenda Sampige/article_98.txt b/Kenda Sampige/article_98.txt new file mode 100644 index 0000000000000000000000000000000000000000..c4bcf0916b4195cbba28b769ca6a04e62cbb242b --- /dev/null +++ b/Kenda Sampige/article_98.txt @@ -0,0 +1,181 @@ +ನಾನು ಮೊದಲೇ ತಿಳಿಸಿದಂತೆ ನನ್ನ ಮೊದಲ ಕೃತಿ ‘‘ಮುಳ್ಳುಹಾದಿ’’ (ನಾಟಕ). ನನ್ನ ಪದವಿ ವ್ಯಾಸಂಗ ಮುಗಿಸಿದ ನಂತರ ಒಂದು ಚಿಕ್ಕ ಕವನ ಸಂಕಲನವನ್ನು ಪ್ರಕಟಿಸಿದೆ. ಅದರ ಹೆಸರು ‘ಕನಸಿನ ಕನ್ನಿಕೆ’. ಕವಿತೆಯೇ ನನ್ನ ಕನಸಿನ ಕನ್ನಿಕೆಯಾಗಿದ್ದರೂ ನಿಜ ಕನ್ನಿಕೆಯನ್ನು ಕುರಿತದ್ದೆಂದು ಓದುಗರು ಭಾವಿಸಿರುವ ಸಾಧ್ಯತೆಯಿದೆ. ಅದು ತಪ್ಪೇನೂ ಅಲ್ಲ. ಅವಿವಾಹಿತ ಯುವ ಮನಸ್ಸಿನಲ್ಲಿ ಕನ್ನಿಕೆಯು ನಿಜವೂ ಆಗಿರಬಹುದು; ಕವಿತೆಯ ಸಂಕೇತವೂ ಆಗಿರಬಹುದು. ಆಗಿನ್ನೂ ನಾನು ನವ್ಯಕಾವ್ಯವನ್ನು ಅಷ್ಟಾಗಿ ಅಭ್ಯಾಸ ಮಾಡಿರಲಿಲ್ಲ. ನವೋದಯ ಕಾವ್ಯವನ್ನು ಅಷ್ಟಿಷ್ಟು ಓದಿಕೊಂಡಿದ್ದೆ. ಕುವೆಂಪು ಅವರ ಕವಿತೆಗಳನ್ನೂ, ವೈಚಾರಿಕ ಬರಹಗಳನ್ನೂ ಹೆಚ್ಚು ಓದಿದ್ದೆ. ಕುವೆಂಪು ಅವರ ಕನ್ನಡ ಪ್ರೇಮ ಮತ್ತು ವೈಚಾರಿಕ ಚಿಂತನೆಗಳಿಂದ ಪ್ರಭಾವಿತನಾಗಿದ್ದೆ. ಕುವೆಂಪು ಅವರ ತಲ್ಲೀನತೆಯ ಬಗ್ಗೆ ಅಧ್ಯಾಪಕರಿಂದ ತಿಳಿದಿದ್ದ ನಾನು ತಲ್ಲೀನ ಭಾವಕ್ಕೆ ಪ್ರಜ್ಞಾಪೂರ್ವಕವಾಗಿ ತೆರಳಿ, ತಂಗಿ, ‘ಓ ನಾನೂ ಕವಿ’ ಎಂದುಕೊಂಡು ಸಂಭ್ರಮಿಸಿದ್ದುಂಟು. ಕುವೆಂಪು ಅವರ ‘ಗೊಬ್ಬರ’ ಕವನವನ್ನು ಓದಿದಾಗ ನಾನೂ ಹೀಗೆ ‘ನಿರ್ಲಕ್ಷಿತ’ ವಸ್ತುಗಳ ಮೇಲೆ ಬರೆಯಬೇಕು ಎನ್ನಿಸಿತು. ಆಗ ಮನೆ ಗುಡಿಸುವ ಪೊರಕೆಯ ಮೇಲೆ ಒಂದು ಪದ್ಯವನ್ನು ಬರೆದು ‘ಪೊರಕೆ ವೀರ’ ಎಂದು ಹೆಸರು ಕೊಟ್ಟಿದ್ದೆ. ಈ ಪದ್ಯವೂ ‘ಕನಸಿನ ಕನ್ನಿಕೆ’ಯಲ್ಲಿ ಇತ್ತು. ಇದು ನನ್ನ ಮೊದಲ ಕವನ ಸಂಕಲನ. ಮುನ್ನುಡಿ ಬರೆಸಬೇಕೆಂದು ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯನವರ ಬಳಿಗೆ ಹೋಗಿ ವಿನಂತಿ ಮಾಡಿದೆ. ಸಣ್ಣಗುಡ್ಡಯ್ಯನವರು ಮುಖಸ್ತುತಿಗಾಗಿ ಮಾತನಾಡುವವರಲ್ಲ. ತಮಗೆ ಅನ್ನಿಸಿದ್ದನ್ನು ನೇರವಾಗಿ ಹೇಳುವ ವಿಮರ್ಶಕರು. ಆದರೆ ವಿಮರ್ಶೆಯ ಲೇಖನಗಳನ್ನು ಬರೆದದ್ದು ಕಡಿಮೆ. ಲಲಿತ ಪ್ರಬಂಧ ಮತ್ತು ಕಾವ್ಯ ಅವರ ಪ್ರಮುಖ ಪ್ರಕಾರವಾಗಿದ್ದವು. ಅವರಲ್ಲಿ ಮುನ್ನುಡಿಗಾಗಿ ಅಳುಕಿನಿಂದಲೇ ಕೇಳಿಕೊಂಡಾಗ ‘ಆಗಲಿ’ ಎಂದರು. ಕೂಡಲೇ ಒಪ್ಪಿದ್ದು ಅನೇಕರಿಗೆ ಅಚ್ಚರಿಯ ವಿಷಯವಾಗಿತ್ತು. ‘ಇಬ್ಬರೂ ಒಂದೇ ತಾಲ್ಲೂಕಿನವರು. ಅದಕ್ಕೇ ಪ್ರೀತಿಯಿಂದ ಒಪ್ಪಿದ್ದಾರೆ’ ಎಂದು ಸ್ನೇಹಿತರು ನಸುನಕ್ಕಿದ್ದರು. ಅದೇನೇ ಇರಲಿ, ಅವರು ಮುನ್ನುಡಿ ಬರೆಯುವುದು ನನಗೆ ಮುಖ್ಯವಾಗಿತ್ತು. + +ಪ್ರೊ. ಸಣ್ಣಗುಡ್ಡಯ್ಯನವರು ‘ಮುನ್ನುಡಿ’ ಬರೆದುಕೊಟ್ಟರು. ಅದರಲ್ಲಿ ಸ್ಪಷ್ಟವಾಗಿ ಒಂದು ಮಾತು ಹೇಳಿದ್ದರು : ‘ಪಳಗದ ಹಸುವನ್ನು ಬೀದಿಗೆ ಬಿಡಬಾರದು’ – ಈ ಸಾಲು ನನ್ನ ಪದ್ಯಗಳ ವಿಮರ್ಶೆಯಾಗಿತ್ತು. ನನ್ನ ಸಂಕಲನದ ಎರಡು ಪದ್ಯಗಳನ್ನು ಮಾತ್ರ ಅವರು ಮೆಚ್ಚಿ, ಉಲ್ಲೇಖಿಸಿ ‘ಹೃದ್ಯವಾಗಿವೆ’ ಎಂದಿದ್ದರು. ಆ ಎರಡು ಪದ್ಯಗಳಲ್ಲಿ ನನ್ನ ಮೆಚ್ಚಿನ ‘ಪೊರಕೆ ವೀರ’ನೂ ಸೇರಿದ್ದ. ಅದೊಂದು ಸಂತೋಷ! ಉಳಿದಂತೆ ಅಷ್ಟೇನೂ ಸಂತೋಷದಾಯಕವಾಗಿರಲಿಲ್ಲ. ಹಾಗಾದರೆ ಸಂತೋಷ ಎಂದರೇನು? ನನಗೆ ಇಷ್ಟವಾಗುವಂತೆ ಬರೆದರೆ ಮಾತ್ರ ಸಂತೋಷವೆ? ಕೊರತೆಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಿದ್ದೂ ಸಂತೋಷದ ವಿಷಯವಲ್ಲವೆ? ಈ ಪ್ರಶ್ನೆಗಳ ಮೂಲಕ ನಾನಾಗ ‘ಸಾಹಿತ್ಯ ಸಂತೋಷ’ದ ವ್ಯಾಖ್ಯಾನ ಬದಲಿಸಿಕೊಂಡೆ. ನಾನೇ ಬದಲಾಗ ಬೇಕೆಂದುಕೊಂಡೆ. ಸಣ್ಣಗುಡ್ಡಯ್ಯನವರ ಮುನ್ನುಡಿಯನ್ನು ಯಥಾವತ್ತಾಗಿ ಅಚ್ಚು ಮಾಡಿಸಿದೆ. + +‘ಕನಸಿನ ಕನ್ನಿಕೆ’ ಕೃತಿಯನ್ನು ಅಚ್ಚು ಮಾಡಿಸಲು ನನ್ನ ಹಿರಿಯಣ್ಣ, ಶ್ರೀ ಬಿ.ಆರ್. ಚಿಕ್ಕರಂಗಪ್ಪನವರು ಆಸಕ್ತಿ ವಹಿಸಿದರು. ತುಮಕೂರಲ್ಲಿದ್ದ ಜನತಾ ಮುದ್ರಣಾಲಯಕ್ಕೆ ಕರೆದುಕೊಂಡು ಹೋದರು. ಈ ಮುದ್ರಣಾಲಯವು ತುಮಕೂರು ಕೆರೆ ಬಳಿಯ ಪ್ರಧಾನ ಅಂಚೆ ಕಚೇರಿಗೆ ಸಮೀಪದ ಒಂದು ಅಡ್ಡರಸ್ತೆಯಲ್ಲಿತ್ತು. ಅದರ ಮಾಲೀಕರು ಪ್ರಗತಿಪರ ವಿಚಾರಧಾರೆಯವರೆಂದು ಅವರೊಂದಿಗಿನ ಮಾತುಕತೆಯಲ್ಲಿ ಅರಿವಾಯಿತು. ಅಣ್ಣ, ಹಣ ಹಾಕಿ ‘ಕನಸಿನ ಕನ್ನಿಕೆ’ಯನ್ನು ಮುದ್ರಣ ಮಾಡಿಸಿಕೊಟ್ಟರು. ಬಹುಪಾಲು ಪ್ರತಿಗಳನ್ನು ಸಾಹಿತ್ಯಾಸಕ್ತರಿಗೆ ಹಂಚಿಬಿಟ್ಟೆ. ಸ್ವಲ್ಪ ಕಾಲ ಮುನ್ನುಡಿಯನ್ನು ಮರೆತು ‘ಕವಿ’ ಎಂದುಕೊಂಡು ಸಂಭ್ರಮಿಸಿದೆ! + +ನಾನು ಪಾವಗಡ ತಾಲ್ಲೂಕಿನ ಕೊಂಡೆತಿಮ್ಮನಹಳ್ಳಿಯಲ್ಲಿ ಪ್ರೌಢಶಾಲೆ ಅಧ್ಯಾಪಕ ನಾಗಿದ್ದಾಗ ಹೊರತಂದ ‘ಕನಸಿನ ಕನ್ನಿಕೆ’ಯ ಕೆಲವು ಪದ್ಯಗಳನ್ನು ಬಿಡುವಿನ ವೇಳೆಯಲ್ಲಿ ವಿದ್ಯಾರ್ಥಿಗಳಿಗೆ ಓದಿ ಹೇಳುತ್ತಿದ್ದೆ. ‘ನೀವೂ ಬರೆಯಬೇಕು; ಬರೆಯಲು ಸಾಧ್ಯ’ ಎಂದು ಪ್ರೋತ್ಸಾಹಿಸಿದೆ. ಅನೇಕರು ಬರೆದರು. ಅವುಗಳನ್ನು ಓದಿ, ಕೆಲವೊಮ್ಮೆ ತಿದ್ದಿ ವಿದ್ಯಾರ್ಥಿಗಳ ಒಂದು ಕೃತಿಯನ್ನು ಹೊರತಂದೆ. ಅದರ ಹೆಸರು ‘ಸುಧಾಸಿಂಧು’. ಶಾಲೆಯ ಸ್ಮರಣ ಸಂಚಿಕೆಯಾಗಿ ‘ಸುಧಾಸಿಂಧು’ ಎರಡು ಪ್ರತ್ಯೇಕ ಕೃತಿಗಳಾಗಿ ಪ್ರಕಟ ವಾಗಿ ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಮುಂದೆ ಹೆಸರು ಮಾಡಿದ ರಂಗಾರೆಡ್ಡಿ ಕೋಡಿರಾಂಪುರ ಮತ್ತು ಜಿ.ಆರ್. ತಿಪ್ಪೇಸ್ವಾಮಿಯವರ ಮೊದಲ ರಚನೆ ಗಳನ್ನು ಪ್ರಕಟಿಸಿದ ಹೆಮ್ಮೆ ಈ ‘ಸುಧಾಸಿಂಧು’ವಿಗಿದೆ. ಅಲ್ಲಿಂದ ಆರಂಭವಾದ ಅವರ ಸಾಹಿತ್ಯ ಪಯಣ ಮುಂದೆ ದೊಡ್ಡ ದಾರಿ ಹಿಡಿಯಿತು. ಅವರಿಬ್ಬರೂ ನನ್ನ ಹೆಮ್ಮೆಯ ವಿದ್ಯಾರ್ಥಿಗಳೆಂದು ಹೇಳಲು ನನಗೂ ಹೆಮ್ಮೆ. + +ಕೊಂಡೆತಿಮ್ಮನಹಳ್ಳಿಯಲ್ಲಿ ನಾನೊಂದು ಚಿಕ್ಕ ಬಾಡಿಗೆ ಮನೆ ಮಾಡಿಕೊಂಡಿದ್ದೆ. ಬೇರೆ ಊರಿನಿಂದ ಶಾಲೆಗೆ ಬರುತ್ತಿದ್ದ ರಂಗಾರೆಡ್ಡಿಯಾದಿಯಾಗಿ ಕೆಲ ವಿದ್ಯಾರ್ಥಿಗಳು ಒಮ್ಮೊಮ್ಮೆ ನನ್ನ ಮನೆಯಲ್ಲೇ ಮಲಗುತ್ತಿದ್ದರು. ಬೆಳಗ್ಗೆ ಎದ್ದಕೂಡಲೇ ಕಾಣುವ ಜಾಗದಲ್ಲಿರುವಂತೆ ನಾನು ಪೊರಕೆಯನ್ನು ಇಟ್ಟಿರುತ್ತಿದ್ದೆ. ಆರಂಭದ ದಿನಗಳಲ್ಲಿ ರಾತ್ರಿ ಮಲಗುವ ಮುಂಚೆ ಪೊರಕೆಯ ಮಹತ್ವ ಹೇಳುತ್ತಿದ್ದೆ. ಪೊರಕೆಯನ್ನು ಸಾಮಾನ್ಯವಾಗಿ ಅಪಶಕುನವೆಂದು ಭಾವಿಸಿ, ಬೆಳಗ್ಗೆ ಎದ್ದಕೂಡಲೇ ನೋಡಬಾರದೆಂಬ ನಂಬಿಕೆ ಪ್ರಚಲಿತ ವಾಗಿತ್ತು. ನಾನು ‘‘ಈ ಪೊರಕೆ ಮನೆಯನ್ನು ಸ್ವಚ್ಛ ಮಾಡುತ್ತೆ. ನಾವು ಮನವನ್ನೂ ಸ್ವಚ್ಛ ಮಾಡಿಕೊಂಡು ಬೆಳಗ್ಗೆ ಎದ್ದಕೂಡಲೇ ಮನೆ, ಮನೆ ಹೊರಗೆಲ್ಲವನ್ನೂ ಸ್ವಚ್ಛ ಮಾಡುವ ಪೊರಕೆಯ ‘ದರ್ಶನ’ ಮಾಡಿ ಕೈಮುಗಿಯಬೇಕು. ಇದು ಅಂತರಂಗ ಮತ್ತು ಬಹಿರಂಗ ಸ್ವಚ್ಛತೆಗೆ ಕೊಡುವ ಗೌರವ’’ ಎಂದು ವಿವರಿಸಿ ಮನವರಿಕೆ ಮಾಡಿಕೊಟ್ಟಿದ್ದೆ. ನಾನೇ ಮೊದಲು ಪೊರಕೆಗೆ ಕೈಮುಗಿಯುತ್ತಿದ್ದೆ. ಮೇಷ್ಟುç ಕೈಮುಗಿದಾಗ ವಿದ್ಯಾರ್ಥಿಗಳು ಕೂಡ ಮುಗಿಯಲೇಬೇಕಲ್ಲ! ಮುಗಿದರು! ಬರಬರುತ್ತ ಮೂಢನಂಬಿಕೆ ಹೋಗಿ, ನನ್ನ ಮೇಲಿನ ನಂಬಿಕೆ ಬಲವಾಗಿ ಪೊರಕೆಗೆ ಕೈಮುಗಿಯುವುದನ್ನು ಸಹಜ ವೆಂಬಂತೆ ಪಾಲಿಸತೊಡಗಿದರು. + +ಹೀಗೆ ಆರಂಭವಾದ ನನ್ನ ಪರ್ಯಾಯ ಚಿಂತನೆ ಮುಂದೆ ಬೆಳೆಯುತ್ತ ಹೋದಂತೆ ಅದಕ್ಕೊಂದು ತಾತ್ವಿಕ ರೂಪ ಲಭ್ಯವಾಗತೊಡಗಿತು. ಒಬ್ಬೊಬ್ಬ ಸಾಹಿತಿಯೂ ತನ್ನ ಪರಿಸರದಿಂದ ಪ್ರೇರಣೆ ಪಡೆಯುವುದು ಸಹಜ. ಹಸಿರು ನಿಸರ್ಗ, ಹರಿವ ನದಿ, ತುಂಬಿದ ಕಡಲು, ಶ್ರೀಗಂಧ, ಪಕ್ಷಿಗಳ ಕಲರವ – ಮುಂತಾದ ಪರಿಸರದ ಮಧ್ಯೆ ಬೆಳೆದವರು ಅವುಗಳನ್ನು ಒಳಗೊಳ್ಳುತ್ತ, ಹೊಗಳುತ್ತ, ರೂಪಕವಾಗಿಸುತ್ತ ಬರೆಯುವುದು ಸ್ವಾಭಾವಿಕ ಕ್ರಿಯೆ. ಅಂಥ ಅಭಿವ್ಯಕ್ತಿ ರೂಪಗಳನ್ನು ಓದಿದ ನನಗೆ ನಮ್ಮೂರಲ್ಲಿ ಅಂಥ ಪರಿಸರ ಇಲ್ಲವಲ್ಲವೆಂಬ ಕೊರಗು ಇತ್ತು. ನಮ್ಮೂರಲ್ಲಿ ಶ್ರೀಗಂಧದ ಮರಗಳಿಲ್ಲ. ಅವುಗಳ ಗಂಧಗಾಳಿಯೂ ಗೊತ್ತಿಲ್ಲ. ಹೆಚ್ಚು ಇರುವುದು ಜಾಲಿಯ ಮರ. ಜೊತೆಗೆ ಒಂದಿಷ್ಟು ಹೊಂಗೆಮರ. ಕೋಗಿಲೆಯನ್ನಂತೂ ನೋಡಿಲ್ಲ; ಅದರ ಕಂಠ ಕೇಳಿಲ್ಲ. ಇಲ್ಲಿರುವುದು ಕಾಗೆಗಳ ಗುಂಪು. ಒಂದಷ್ಟು ಗುಬ್ಬಚ್ಚಿ. ನದಿಯಂತೂ ಇಲ್ಲವೇ ಇಲ್ಲ; ಇರುವ ಹಳ್ಳದಲ್ಲಿ ನೀರು ಹರಿದು ಎಷ್ಟೋ ಕಾಲವಾಗಿದೆ. ಕಡಲಂತೂ ದೂರ; ಇರುವ ಕೆರೆ ತುಂಬುವುದೇ ಕಡಿಮೆ. ಬಿರುಕು ಬಿಟ್ಟ ಕೆರೆ ನೆಲವೇ ಹೆಚ್ಚು. ‘ಇಲ್ಲ’ ಎಂದು ಕೊರಗುವ ಬದಲು ‘ಇದೆ’ ಎನ್ನುವುದೇ ಸಾಹಿತ್ಯದ ವಸ್ತು ಯಾಕಾಗಬಾರದು? ನಿಸರ್ಗ ರಮ್ಯ ಕವಿತೆಗಳ ಜೊತೆಗೇ ಕುವೆಂಪು ಅವರು ‘ಗೊಬ್ಬರ’ ಕುರಿತು ಬರೆಯಲಿಲ್ಲವೆ? ‘ಸೃಷ್ಟಿಯಲ್ಲಿ ಯಾವುದೂ ವಿಫಲವಲ್ಲ’ ಎಂದು ಬೇಂದ್ರೆಯವರು ಹೇಳಿಲ್ಲವೆ? ಹೌದು. ನನಗೆ ನಮ್ಮಲ್ಲಿ ‘ಇಲ್ಲದ್ದು’ ಮುಖ್ಯವಾಗದೆ ‘ಇದ್ದದ್ದು’ ಮುಖ್ಯವಾಗಬೇಕು. ‘ನಮ್ಮಲ್ಲಿ ಇರುವ ಜಾಲಿಯಮರ, ಕಾಗೆ, ಕೆರೆ, ಹಳ್ಳಗಳೂ ಮಹತ್ವಪೂರ್ಣವೆಂದು ನಾನು ಭಾವಿಸಬೇಕು. ಈ ಭಾವನೆಯನ್ನು ಬಿತ್ತಿ ಬೆಳೆಯಬೇಕು’ – ಎಂದು ನಿರ್ಧರಿಸಿದೆ. + +ನನ್ನ ದೃಢ ನಿರ್ಧಾರಕ್ಕೆ ತಾತ್ವಿಕ ನೆಲೆಯ ನುಡಿಗಟ್ಟು ಕೊಡತೊಡಗಿದೆ. ಇದು ಮೇಲರಿಮೆ – ಕೀಳರಿಮೆಗಳನ್ನು ಮೀರಿದ ಸೃಷ್ಟಿ ಸಮತೆಯ ಸಿದ್ಧಾಂತವೂ ಹೌದು. ಸಮ ಸಮಾಜದ ರೂಪಕ ಧ್ವನಿಯೂ ಹೌದು. ಸಂದರ್ಭಾನುಸಾರ ಉಚಿತ ಸಮಯ ಸಿಕ್ಕಾಗಲೆಲ್ಲ ದೃಢವಾಗಿ ಹೀಗೆ ಹೇಳತೊಡಗಿದೆ : ‘‘ನಮ್ಮದು ಶ್ರೀಗಂಧದ ಕರ್ನಾಟಕ ಮಾತ್ರವಲ್ಲ; ಜಾಲೀಮರಗಳ ಕರ್ನಾಟಕವೂ ಹೌದು, ಕೋಗಿಲೆಗಳ ಕರ್ನಾಟಕ ಮಾತ್ರವಲ್ಲ, ಕಾಗೆಗಳ ಕರ್ನಾಟಕವೂ ಹೌದು; ಕಾವೇರಿ ಕೃಷ್ಣೆಯರ ಕರ್ನಾಟಕ ಮಾತ್ರವಲ್ಲ, ನೀರು ಹರಿಯದ ಹಳ್ಳ ಕೊಳ್ಳಗಳ ಕರ್ನಾಟಕವೂ ಹೌದು; ಕಡಲಿನ ಕರ್ನಾಟಕ ಮಾತ್ರವಲ್ಲ; ಬಿರುಕು ಬಿಟ್ಟ ಬತ್ತಿದ ಕೆರೆಗಳ ಕರ್ನಾಟಕವೂ ಹೌದು’’. + +ನನ್ನ ಈ ಮಾತುಗಳು ಕರ್ನಾಟಕವಷ್ಟೇ ಅಲ್ಲ ಒಟ್ಟು ಸಮಾಜದ ಸಾಮಾಜಿಕ- ಆರ್ಥಿಕ ಸನ್ನಿವೇಶದ ರೂಪಕವಾಗುತ್ತ, ನಿರ್ಲಕ್ಷಿತ ವಲಯಕ್ಕೆ ಸಮತೆ, ಘನತೆಗಳನ್ನು ಒದಗಿಸುವ ತಾತ್ವಿಕರೂಪವಾಗಿದ್ದವು. ವಾಚ್ಯಾರ್ಥವನ್ನು ಮೀರಿ ಬೆಳೆಯತೊಡಗಿದವು. ಮುಂದೆ ಕನ್ನಡದಲ್ಲಿ ಕಾಗೆಗಳನ್ನು ಕುರಿತ ಅನೇಕ ಕವಿತೆಗಳು ರಚನೆಯಾದವು. + +ಶ್ರೀಗಂಧ, ಕೋಗಿಲೆ, ಕಾವೇರಿ, ಕೃಷ್ಣೆ, ಕಡಲುಗಳನ್ನು ನಾನು ಗೌಣಗೊಳಿಸುತ್ತಿಲ್ಲ. ಇವೆಲ್ಲವೂ ನಮ್ಮ ನಾಡಿನ ಹೆಮ್ಮೆಯ ರೂಪಗಳು. ಇವುಗಳ ಜೊತೆಗೆ ಬೇರೆ ರೂಪಿಕೆ ಗಳೂ ಇವೆಯೆಂಬುದನ್ನು ಮರೆಯಬಾರದು; ಅವುಗಳನ್ನು ನಿರ್ಲಕ್ಷಿಸಬಾರದು. + +ಮುಂದುವರೆದು ನಾನು ‘ಕಾಗೆಯ ಕಾರುಣ್ಯ’ದ ಬಗ್ಗೆ ಮಾತಾಡತೊಡಗಿದೆ. ನಮ್ಮ ಸಾಮಾಜಿಕ ಸೌಹಾರ್ದಕ್ಕೆ ‘ಕಾಗೆಯ ಕಾರುಣ್ಯ’ ಎಷ್ಟು ಮುಖ್ಯ ಎಂದು ಪ್ರತಿಪಾದಿಸ ತೊಡಗಿದೆ. ಯಾವುದೀ ಕಾಗೆಯ ಕಾರುಣ್ಯ? ನೋಡಿ; ಕೋಗಿಲೆಯು ಮೊಟ್ಟೆ ಇಡುತ್ತದೆಯೇ ಹೊರತು, ತಾನೇ ಕಾವಿಗೆ ಕೂತು ಮರಿ ಮಾಡುವುದಿಲ್ಲ. ಕೋಗಿಲೆ ಇಟ್ಟ ಮೊಟ್ಟೆಯ ಮೇಲೆ ಕಾವಿಗೆ ಕೂತು ಮರಿ ಮಾಡುವುದು ಕಾಗೆ. ಕಾಗೆಯು ಮೊಟ್ಟೆ ಮೇಲೆ ಕಾವಿಗೆ ಕೂರದಿದ್ದರೆ ಮರಿ ಹೊರಬರುವುದಿಲ್ಲ. ಆದ್ದರಿಂದ ಕಾಗೆಯೇ ಕೋಗಿಲೆಯ ಸಂತತಿಯನ್ನು ಬೆಳೆಸುವ ಚಾಲಕ ಶಕ್ತಿ. ಅಲ್ಲದೆ ಹಂಚಿಕೊಂಡು ತಿನ್ನುವ ಕಾಗೆಯದು ಬಳಗ ಬಂಧುತ್ವ. ಇದು ಕಾಗೆಯ ಕಾರುಣ್ಯ. ನಮ್ಮ ಸಮಾಜಕ್ಕೆ ಕಾಗೆಯ ಕಾರುಣ್ಯವು ಒಂದು ಆದರ್ಶ ಮಾದರಿಯಾದರೆ, ಅದು ಸಮತೆ ಮಮತೆಗಳ ಮನಸ್ಸನ್ನು ರೂಪಿಸುತ್ತದೆ. ಜಾತಿ ಭೇದ ಮತ್ತು ಧರ್ಮದ್ವೇಷದ ವಾತಾವರಣವನ್ನು ತಿಳಿಗೊಳಿಸಲು ಮನುಷ್ಯರ ಮನಸ್ಸಿನಲ್ಲಿ ಕಾಗೆಯ ಕಾರುಣ್ಯ ಬೆಳಗಬೇಕು. ಆಗ ಮೇಲು-ಕೀಳುಗಳನ್ನು ಮೀರಿದ ಸೌಹಾರ್ದ ಸಮಾಜ ರೂಪುಗೊಳ್ಳುತ್ತದೆ. + +ಮುಂದೆ, ನಾನು ಬೆಂಗಳೂರಲ್ಲಿ ಉಪನ್ಯಾಸಕನಾಗಿ ಕೆಲಸಕ್ಕೆ ಸೇರಿದಾಗ ನನ್ನ ಎರಡನೇ ಕವನ ಸಂಕಲನ ‘ಮರಕುಟಿಗ’ ಪ್ರಕಟವಾಯಿತು. ‘ಕನಸಿನ ಕನ್ನಿಕೆ’ಯ ಒಂದು ಪ್ರತಿಯೂ ನನ್ನಲ್ಲಿ ಇಲ್ಲವಾದ್ದರಿಂದ ‘ಮರಕುಟಿಗ’ ಸಂಕಲನವೇ ಮೊದಲನೆಯ ದೆಂಬಂತೆ ಪ್ರಚಾರಗೊಂಡಿದೆ. ‘ಕನಸಿನ ಕನ್ನಿಕೆ’ಗೂ ‘ಮರಕುಟಿಗ’ಕ್ಕೂ ಸಾಕಷ್ಟು ವ್ಯತ್ಯಾಸ ವಿದೆ. ನವ್ಯಕಾವ್ಯ ಪ್ರಖರವಾಗಿದ್ದು ಅದರ ಪ್ರಭಾವಕ್ಕೊಳಗಾಗಿದ್ದಾಗ ಬರೆದ ಕವಿತೆಗಳು ‘ಮರಕುಟಿಗ’ದಲ್ಲಿವೆ. ನವ್ಯಕಾವ್ಯದ ಪ್ರಭಾವವು ಕಾವ್ಯಶಿಲ್ಪಕ್ಕೆ ಸೀಮಿತವಾಗಿತ್ತೇ ಹೊರತು ವಸ್ತುವಿಗಲ್ಲ. ನಾನು ನನ್ನದೇ ಗ್ರಹಿಕೆಯ ಬಹುಪಾಲು ಸಾಮಾಜಿಕ ಕಾಳಜಿಯ ವಸ್ತುಗಳಿಗೆ ನವ್ಯಕಾವ್ಯದ ಶಿಲ್ಪ ರೂಪವನ್ನು ನೀಡಿದ್ದೆ. ‘ವೈಯಕ್ತಿಕ’ ಮಾತ್ರವಾಗದೆ ‘ಸಾಮಾಜಿಕ’ವಾದ ರಚನೆಗಳೇ ಈ ಸಂಕಲನದಲ್ಲಿ ಹೆಚ್ಚು ಇದ್ದವು. ಈ ಸಂಕಲನವನ್ನು ಪ್ರಕಟಿಸಿದವರು – ನನ್ನ ಎಂ.ಎ. ಸಹಪಾಠಿ ಗಳೆಯ ಶ್ರೀ ಕೈ.ರಾ. ಗಣೇಶ್. ನಾನು ಮತ್ತು ಅವರು ಎಂ.ಎ. ಓದುವಾಗ ಶಾಸನ ಶಾಸ್ತçವನ್ನು ವಿಶೇಷ ವಿಷಯವಾಗಿ ತೆಗೆದುಕೊಂಡಿದ್ದೆವು. ಪರೀಕ್ಷೆ ಸಂದರ್ಭದಲ್ಲಿ ಒಟ್ಟಿಗೇ ಶಾಸನ ಶಾಸ್ತçದ ಬಗ್ಗೆ ವಿಚಾರ ವಿನಿಮಯ ಮಾಡಿಕೊಳ್ಳುತ್ತ ಹತ್ತಿರವಾಗಿದ್ದೆವು. ನಾನು ಸ್ವಲ್ಪ ಕಾಲ ಬೆಂಗಳೂರಿನ ಆಚಾರ್ಯ ಪಾಠಶಾಲಾ + +ಕಾಲೇಜಿನಲ್ಲಿ ಅವರ ಸಹೋದ್ಯೋಗಿ ಕೂಡ ಆಗಿದ್ದೆ. ಅವರು ಸ್ನೇಹದಿಂದ ‘ಮರಕುಟಿಗ’ ಸಂಕಲನಕ್ಕೆ ಹಣ ತೊಡಗಿಸಿದರು. ಗಣೇಶ್ ಅವರ ಇನಿಷಿಯಲ್‌ಗಳನ್ನು (ಕೈ.ರಾ.) ಸೇರಿಸಿ ‘ಕೈರಾಗ’ ಪ್ರಕಾಶನ ಎಂದು ಹೆಸರಿಟ್ಟೆವು. ಆ ವೇಳೆಗೆ ಕವಿ ಎಚ್.ಎಸ್. ವೆಂಕಟೇಶಮೂರ್ತಿ ಮತ್ತು ಕತೆಗಾರ ಈಶ್ವರ ಚಂದ್ರ ಅವರು ನನ್ನ ಸ್ನೇಹಿತರಾಗಿದ್ದರು. (ಈಗಲೂ ಸ್ನೇಹಿತರೇ). ವೆಂಕಟೇಶಮೂರ್ತಿಯವರು ತಾವೇ ‘ಮರಕುಟಿಗ’ಕ್ಕೆ ಮುಖಚಿತ್ರ ಬರೆದುಕೊಟ್ಟರು. + +‘ಮರಕುಟಿಗ’ ಸಂಕಲನವು ಒಂದಿಷ್ಟು ಮೆಚ್ಚುಗೆಗೂ ಪಾತ್ರವಾಯಿತು. ಬೆಳೆಯುವ ಭರವಸೆಯ ಮಾತುಗಳು ಬಂದವು. ತುಮಕೂರಿನ ‘ವೀಚಿ’ಯವರು ನಾನು ಸಿಕ್ಕಿದಾಗ ಒಂದೆರಡು ಕವಿತೆಗಳ ಸಾಲುಗಳನ್ನು ಹೇಳಿ ನಾನು ಸಂಭ್ರಮಿಸುವಂತೆ ಮಾಡಿದ್ದರು. ಅವರ ಸಹೃದಯತೆ ನನ್ನಲ್ಲಿ ಉತ್ಸಾಹ ತುಂಬಿತ್ತು. ಇದೇ ಉತ್ಸಾಹದಿಂದ ನಾನು ‘ಮರಕುಟಿಗ’ ಸಂಕಲನವನ್ನು ಸಿಮ್ಲಾದ ಆಂಗ್ಲಭಾಷಾ ಅಧ್ಯಯನ ಸಂಸ್ಥೆಯಲ್ಲಿದ್ದ ಖ್ಯಾತ ಕವಿ ಗೋಪಾಲಕೃಷ್ಣ ಅಡಿಗರಿಗೆ ಕಳಿಸಿದೆ. ಅಡಿಗರು ಕರ್ನಾಟಕದಲ್ಲಿದ್ದ ತಮ್ಮ ಹುದ್ದೆಗೆ ರಾಜೀನಾಮೆ ಕೊಟ್ಟು ‘ಜನಸಂಘ’ ಪಕ್ಷದಿಂದ ಲೋಕಸಭಾ ಚುನಾವಣೆಗೆ ಶ್ರೀ ಕೆಂಗಲ್ ಹನುಮಂತಯ್ಯನವರ ಎದುರಾಳಿಯಾಗಿ ನಿಂತು, ಸೋತು, ಆನಂತರ ಸಿಮ್ಲಾಕ್ಕೆ ಉದ್ಯೋಗಾರ್ಥ ಹೋಗಿ ನೆಲೆಸಿದ್ದರು. ಅಡಿಗರು ನನ್ನ ಸಂಕಲನವನ್ನು ಓದಿ ಒಂದು ಪತ್ರ ಬರೆದರು. ಆ ಪತ್ರದಲ್ಲಿ (ಕಾರ್ಡಿನಲ್ಲಿ) ‘‘ನಾನು ಇಷ್ಟು ಕಾಲ ಬೆಂಗಳೂರಿ ನಲ್ಲಿದ್ದೂ ನಿಮ್ಮಂಥ ಒಳ್ಳೆಯ ಕವಿಯನ್ನು ಪರಿಚಯ ಮಾಡಿಕೊಳ್ಳಲಿಲ್ಲವಲ್ಲ ಎಂದು ಬೇಸರವಾಗುತ್ತಿದೆ’’ ಎಂಬ ಒಂದು ಸಾಲು ಇತ್ತು. ನಿಜಕ್ಕೂ ಸಂಭ್ರಮಕ್ಕೆ ಕಾರಣವಾಗುವ ಸಾಲು! ಆತ್ಮೀಯರಿಗೆ ತೋರಿಸಿದೆ. ಅದೇ ಉತ್ಸಾಹದಲ್ಲಿ ಪ್ರೊ. ಸಣ್ಣಗುಡ್ಡಯ್ಯನವರಿಗೂ ತೋರಿಸಿದೆ. ಅವರು ಓದಿ ‘‘ಪ್ರೋತ್ಸಾಹ ಕೊಡೋಕೆ ಅಂತ ಹೀಗೆಲ್ಲ ಬರೆಯೋದುಂಟು’’ ಎಂದು ಕಾರ್ಡನ್ನು ವಾಪಸ್ ನನ್ನ ಕೈಗಿತ್ತರು. ನನ್ನ ಉತ್ಸಾಹ ಸ್ವಲ್ಪ ಕುಗ್ಗಿತು! ಕೆಲವು ಸ್ನೇಹಿತರು ಅಡಿಗರ ಅಭಿಪ್ರಾಯವನ್ನು ಮುಂದಿನ ಪುಸ್ತಕದಲ್ಲಿ ಮುದ್ರಿಸಿ ಎಂದು ಸಲಹೆ ನೀಡಿದ್ದರೂ ನಾನು ಹಾಗೆ ಮಾಡಲಿಲ್ಲ, ವೈಯಕ್ತಿಕವಾಗಿ ಬರೆದ ಪತ್ರದಲ್ಲಿನ ಅಭಿಪ್ರಾಯಗಳನ್ನು ಅಚ್ಚು ಮಾಡಿ ಪ್ರಕಟಿಸುವುದು ಸರಿಯಲ್ಲ ಎನ್ನುವುದು ನನ್ನ ನಿಲುವಾಗಿತ್ತು. ಹೀಗಾಗಿ ನನ್ನ ಕೆಲವು ಕೃತಿಗಳನ್ನು ಪ್ರಶಂಸಿಸಿ ಶ್ರೀ ಚನ್ನವೀರ ಕಣವಿ, ಶ್ರೀ ನಿರಂಜನ, ಶ್ರೀ ಬಸವರಾಜ ಕಟ್ಟೀಮನಿ ಮುಂತಾದವರು ಬರೆದ ಪತ್ರಗಳಲ್ಲಿನ ಅಭಿಪ್ರಾಯಗಳನ್ನು ನಾನು ಯಾವ ಪುಸ್ತಕದಲ್ಲೂ ಪ್ರಕಟಿಸಲಿಲ್ಲ. + +ಅಡಿಗರು ನನ್ನ ಬಗ್ಗೆ ಬರೆದದ್ದು ಪ್ರೋತ್ಸಾಹಕ್ಕಾಗಿ ಎಂದುಕೊಂಡರೂ ಅವರು ತೋರಿಕೆಗಾಗಿ ಹಾಗೆ ಹೇಳಿಲ್ಲ ಎನ್ನುವುದು ನಿಜ. ಕೆಲ ವರ್ಷಗಳ ಹಿಂದೆ ಡಾ. ಯು.ಆರ್. ಅನಂತಮೂರ್ತಿಯವರು ಒಂದು ಪತ್ರಿಕಾ ಸಂದರ್ಶನದಲ್ಲಿ ‘ಅಡಿಗರು ಆ ಬರಗೂರು ರಾಮಚಂದ್ರಪ್ಪ ಬರೆಯೋದನ್ನು ಗಂಭೀರವಾಗಿ ಗಮನಿಸಬೇಕು. ಒಳ್ಳೆ ಲೇಖಕ’’ ಎಂಬರ್ಥದ ಮಾತುಗಳನ್ನು ಹೇಳಿದ್ದಾಗಿಯೂ ತಾವು ಬರಗೂರರನ್ನು ಆಗ ಸರಿಯಾಗಿ ಓದಲಿಲ್ಲವೆಂದೂ ಹೇಳಿದ್ದರು. ಅಂದರೆ ಅಡಿಗರು ನನ್ನ ಬರವಣಿಗೆಯನ್ನು ಗಂಭೀರವಾಗಿ ಗಮನಿಸಿದ್ದರು. ಅನಂತಮೂರ್ತಿಯವರು ನನ್ನದೇ ಒಂದು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತಾಡುತ್ತ ‘‘ನಾವು ಬರಗೂರ್‌ಗೆ ಅನ್ಯಾಯ ಮಾಡಿದ್ವಿ. ನಾವೇ ಬಂಡಾಯ ಇವರದೇನು ಅಂದ್ಕೊಂಡ್ವಿ’’ ಎಂದು ಕಳಕಳಿಯಿಂದ ಮಾತಾಡಿದ್ದರು. ನಾನು ಮಾತಾಡುತ್ತ ತಮಾಷೆ ಧಾಟಿಯಲ್ಲಿ ‘‘ನನಗೆ ಅನ್ಯಾಯವಾಯ್ತು ಅಂತ + +ಗೊತ್ತಾಗೋಕೆ ಅನಂತಮೂರ್ತಿಯವರಿಗೆ 80 ವರ್ಷ ಮೀರಬೇಕಾಯ್ತು. ನನಗೆ ಅರತ್ತೈ ಮೀರಬೇಕಾಯ್ತು’’ ಎಂದೆ. ಅನಂತಮೂರ್ತಿಯವರು ನಸುನಕ್ಕರು. ನನ್ನ ಮಾತಿಗೆ ಬೇಸರ ಮಾಡಿಕೊಳ್ಳಲಿಲ್ಲ. ‘‘ನಿಜ ಕಣಯ್ಯ’’ ಎಂದರು. + +ಇಲ್ಲಿಯೇ ಇನ್ನೊಂದು ಪ್ರಸಂಗ ನೆನಪಾಗುತ್ತದೆ. ರಾಷ್ಟçಕವಿ ಕುವೆಂಪು ಅವರಿಗೆ ಬೆಂಗಳೂರಿನ ಟೌನ್‌ಹಾಲ್‌ನಲ್ಲಿ ಅಭಿನಂದನಾ ಸಮಾರಂಭವೊಂದು ಏರ್ಪಾಟಾಗಿತ್ತು. ಆ ಸಂದರ್ಭಕ್ಕೆ ‘ಸುಧಾ’ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟಿಸಲು ಇಚ್ಚಿಸಿದ ಸಂಪಾದಕ ಶ್ರೀ ಎಂ.ಬಿ. ಸಿಂಗ್ ಅವರು ನನ್ನನ್ನು ಕೇಳಿದರು. ನಾನು ಬರೆದುಕೊಟ್ಟೆ. ಆ ಲೇಖನದಲ್ಲಿ ನನ್ನಲ್ಲಿ ಕುವೆಂಪು ಅವರ ಬಗ್ಗೆ ಕೆಲವರು ಮೂಡಿಸಿದ್ದ ಪೂರ್ವಗ್ರಹದ ಸಂಗತಿಗಳನ್ನು ಹೇಳಿ, ಅದರಿಂದ ಹೊರಬಂದ ನಾನು ಕುವೆಂಪು ಅವರನ್ನು ಅರ್ಥೈಸಿಕೊಂಡ ರೀತಿ ಯನ್ನು ವಿವರಿಸಿದ್ದೆ. ಅದನ್ನು ಓದಿದ ಕುವೆಂಪು ಅವರು, ಅಭಿನಂದನಾ ಸಮಾರಂಭದ ಸಂಘಟಕರಲ್ಲಿ ಒಬ್ಬರಾಗಿದ್ದ, ನನಗೂ ಆತ್ಮೀಯರಾಗಿದ್ದ ಶ್ರೀ ಎಚ್.ಆರ್. ದಾಸೇಗೌಡರನ್ನು ಕರೆದು ‘‘ಈ ಸುಧಾ ಪತ್ರಿಕೆಯ ಮೂರ‍್ನಾಲ್ಕು ಪ್ರತಿ ತರಿಸಿಕೊಡಿ’’ ಎಂದರಂತೆ. ದಾಸೇಗೌಡರು ಈ ವಿಷಯವನ್ನು ಹೇಳಿದ್ದಲ್ಲದೆ ಕುವೆಂಪು ಅವರು ‘ಈ ರಾಮಚಂದ್ರಪ್ಪ ಪ್ರಾಮಾಣಿಕವಾಗಿ ಬರೆದಿರೋದು ಇಷ್ಟ ಆಯ್ತು’’ ಎಂದದ್ದನ್ನು ತಿಳಿಸಿದರು. ನಿಜಕ್ಕೂ ನನಗೆ ಸಂತೋಷವಾಯಿತು. ಅತ್ತ ನವ್ಯಕಾವ್ಯದ ನಾಯಕ ಅಡಿಗರು, ಇತ್ತ ನವೋದಯ ಕಾವ್ಯದ ಮಹಾಕವಿ ಕುವೆಂಪು ಇಬ್ಬರಿಂದಲೂ ಬಂದ ಮೆಚ್ಚುಗೆಯ ನುಡಿಗಳು ಸಂತೋಷ ವುಂಟುಮಾಡಿದ್ದನ್ನು ನಾನು ಇಲ್ಲೀವರೆಗೆ ಎಲ್ಲೂ ದಾಖಲಿಸಿಲ್ಲ. ಈಗ ಅಂದಿನ ಸಂತೋಷವನ್ನು ಹೊರಹಾಕುತ್ತಿದ್ದೇನೆ. + +ಇನ್ನು, ನನ್ನ ಮೊದಲನೇ ಕಥಾಸಂಕಲನವಾದ ‘ಸುಂಟರಗಾಳಿ’ಯ ವಿಷಯಕ್ಕೆ ಬರುತ್ತೇನೆ. ‘ಸುಂಟರಗಾಳಿ’ ಎಂಬ ಒಂದು ಕತೆಯು ಈ ಸಂಕಲನದಲ್ಲಿದ್ದು ಅದೇ ಹೆಸರನ್ನು ಸಂಕಲನಕ್ಕೆ ಇಟ್ಟಿದ್ದೆ. ಈ ಕತೆಯ ಮೂಲ ಹೆಸರು ‘ಜಾಲಿಯ ಮರ’ ಅಂತ. ಇದು ‘ಪ್ರಜಾವಾಣಿ’ ಪತ್ರಿಕೆಯ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ನನ್ನ ಮೊದಲ ಕತೆ. ಈ ಕತೆಯಲ್ಲಿರುವ ತವಕ ತಲ್ಲಣಗಳಿಗೆ ‘ಸುಂಟರಗಾಳಿ’ ಎಂಬ ಹೆಸರು ಸೂಕ್ತವೆಂದು ಒಂದಿಬ್ಬರು ಸ್ನೇಹಿತರು ಹೇಳಿದ್ದರಿಂದ ಸಂಕಲನ ತರುವಾಗ ‘ಜಾಲಿಯ ಮರ’ದ ಬದಲು ‘ಸುಂಟರಗಾಳಿ’ ಎಂದು ಕರೆದೆ. ಆದರೆ ಕತೆಯ ಒಳಗೆ ಜಾಲಿಯ ಮರ ಆವರಿಸಿಕೊಂಡಿದ್ದು, ಏನೂ ಬದಲಾಯಿಸಲಿಲ್ಲ. ಒಮ್ಮೊಮ್ಮೆ ಹೆಸರು ಬದಲಾಯಿಸ ಬಾರದಿತ್ತು ಎನ್ನಿಸಿದ್ದು ಉಂಟು. ಹೀಗೆ ಅನ್ನಿಸುವ ವೇಳೆಗೆ ಸಂಕಲನ ಹೊರಬಂದು ಉತ್ತಮ ವಿಮರ್ಶೆಯೂ ಪ್ರಕಟವಾಗಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ಬಂದಿತ್ತು. ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಿಗೂ ತಲಾ ಒಂದೊಂದರಂತೆ ‘ಬಹುಮಾನ’ ನೀಡುತ್ತದೆ. ಇಲ್ಲಿ ಎಲ್ಲಾ ಪ್ರಕಾರಗಳೂ ಇರುವುದರಿಂದ ‘ಪ್ರಶಸ್ತಿ’ ಎಂದು ಕರೆಯುವುದಿಲ್ಲ. ಜೀವಮಾನ ಸಾಧಕರಿಗೆ ಮಾತ್ರ ಗೌರವ ಪ್ರಶಸ್ತಿ ನೀಡುತ್ತದೆ. ಕೇಂದ್ರ ಸಾಹಿತ್ಯ ಅಕಾಡೆಮಿಯು ಇಡೀ ಕನ್ನಡ ಸಾಹಿತ್ಯದ ಒಂದೇ ಪುಸ್ತಕವನ್ನು ಆಯ್ಕೆ ಮಾಡುವುದರಿಂದ ‘ಪ್ರಶಸ್ತಿ’ ಎಂದು ಕರೆಯುತ್ತದೆ. ಈ ವ್ಯತ್ಯಾಸವನ್ನು ಗಮನಿಸಬೇಕು. ನನಗೆ ಬಂದದ್ದು ಪುಸ್ತಕ ಪ್ರಶಸ್ತಿ ಅಲ್ಲ. ಪುಸ್ತಕ ಬಹುಮಾನ… ಈ ಪುಸ್ತಕಕ್ಕೆ ಹಣತೊಡಗಿಸಿ ಪ್ರಕಟಿಸಿದ್ದು ನನ್ನ ಪದವಿ ತರಗತಿಯ ಗುರುಗಳಾದ ಪ್ರೊ. ಎಂ.ಎಸ್. ರಾಮಲಿಂಗಪ್ಪನವರು. ಇವರೇ ನನ್ನ ನಾಟಕ ‘ಮುಳ್ಳಹಾದಿ’ಯ ಮುದ್ರಣ ಕಾರ್ಯದ ಉಸ್ತುವಾರಿ ವಹಿಸಿಕೊಂಡು ಪ್ರೋತ್ಸಾಹಿಸಿದ್ದರು. + +ನನ್ನ ಪ್ರಕಟಿತ ಮೊದಲ ಕಾದಂಬರಿ – ‘ಸೂತ್ರ’. ಇದನ್ನು ಪ್ರಕಟಿಸಿದ್ದು ಕತೆಗಾರ ಶ್ರೀ ಬಿ.ಜಿ. ಸತ್ಯಮೂರ್ತಿ ಮತ್ತು ಲೇಖಕ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯ. ಅಂದು ಉತ್ತೇಜನ ನೀಡಿದ ಇಬ್ಬರನ್ನೂ ವಿಶ್ವಾಸದಿಂದ ನೆನೆಯುತ್ತೇನೆ. ಈ ಕಾದಂಬರಿಯು ಅವರಿಂದಲೇ ಮರುಮುದ್ರಣವನ್ನೂ ಕಂಡಿತು. ಆನಂತರ ‘ಒಂದು ಊರಿನ ಕತೆ’ ಕಿರು ಕಾದಂಬರಿಯನ್ನು ಪ್ರಕಟಿಸಿದರು. ಆಗ ನನ್ನ ವಿದ್ಯಾರ್ಥಿಯಾಗಿದ್ದ ಬೈರಮಂಗಲ ರಾಮೇಗೌಡರು ಈ ಕಿರು ಕಾದಂಬರಿಯ ಅಚ್ಚುಕಟ್ಟಾದ ಪ್ರತಿಯನ್ನು ಬರೆದುಕೊಟ್ಟಿದ್ದರು. (ಕೆಲ ವರ್ಷಗಳ ಹಿಂದೆ ಶ್ರೀ ನಿಡಸಾಲೆ ಪುಟ್ಟಸ್ವಾಮಯ್ಯನವರು ನನ್ನ ಕತೆಗಳು, ನೀಳ್ಗತೆಗಳು ಮತ್ತು ಕಾದಂಬರಿಗಳನ್ನು ಸೇರಿಸಿದ ಎರಡು ಸಂಪುಟಗಳನ್ನು ಪ್ರಕಟಿಸಿದ್ದನ್ನೂ ಇಲ್ಲಿ ನೆನೆಯುತ್ತೇನೆ). + +‘ಸೂತ್ರ’ ಕಾದಂಬರಿಯ ಮುದ್ರಣದ ಸಂದರ್ಭದಲ್ಲಾದ ಒಂದು ಪ್ರಸಂಗವನ್ನು ಇಲ್ಲಿ ಹೇಳಬೇಕು. ಬೆಂಗಳೂರಿನ ಮಲ್ಲೇಶ್ವರಂನಲ್ಲಿದ್ದ ‘ದವಲತ್ ಪ್ರಿಂಟರ್ಸ್‌’ನಲ್ಲಿ ಕಾದಂಬರಿಯ ಕೆಲಸ ನಡೆಯುತ್ತಿತ್ತು. ನಾನು ಕರಡು ತಿದ್ದಲು ಅಲ್ಲಿಗೇ ಹೋಗುತ್ತಿದ್ದೆ. ಒಂದು ದಿನ ಒಬ್ಬ ಕಂಪೋಸಿಟರ್ (ಅಚ್ಚಿನ ಮೊಳೆ ಜೋಡಿಸುವವರು) ನನ್ನ ಬಳಿಗೆ ಬಂದರು. ‘‘ಸಾರ್, ನಿಮ್ಮ ಕಾದಂಬರಿ ನಾನೇ ಕಂಪೋಸ್ ಮಾಡಿದ್ದು. ತುಂಬಾ ಚನ್ನಾಗಿದೆ ಸಾರ್’’ ಎಂದರು. ನಾನು ಸಂತೋಷದಿಂದ ಕೈಕುಲುಕಿ ವಂದನೆಗಳನ್ನು ಹೇಳಿದೆ. ಆ ವ್ಯಕ್ತಿ ಬೇರಾರೂ ಅಲ್ಲ, ವಾರ ಪತ್ರಿಕೆಯೊಂದರ ಸಂಪಾದಕರಾಗಿ, ಕನ್ನಡ ಹೋರಾಟಗಾರರಾಗಿ, ಕಾದಂಬರಿಕಾರರಾಗಿ ಬೆಳೆದ ಶ್ರೀ ಜಾಣಗೆರೆ ವೆಂಕಟ ರಾಮಯ್ಯನವರು. + +ಹೀಗೆ ಸಂಕಷ್ಟದಿಂದ ಸಾಧಕರಾಗಿ ಬೆಳೆದ ಇನ್ನೊಬ್ಬ ಪ್ರತಿಭಾವಂತರು – ಹಂಸಲೇಖ ಅವರು. ಅವರು ಕೂಡ ಪ್ರೆಸ್ಸಿನಲ್ಲಿ ಮೊಳೆ ಜೋಡಿಸುವ ಕೆಲಸ ಮಾಡುತ್ತಿದ್ದರು. ಮೊಳೆ ಜೋಡಿಸುತ್ತಿದ್ದವರು ಸಾಹಿತ್ಯ-ಸಂಗೀತಗಳನ್ನು ಜೋಡಿಸುವ ದೊಡ್ಡ ಸಾಧಕರಾಗಿ ಬೆಳೆದಿದ್ದಾರೆ. ಸಿನಿಮಾ ಸಂಗೀತ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ. + + + +ನನ್ನ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದವರು ‘ಅಂಕಿತ ಪುಸ್ತಕ’ ಪ್ರಕಾಶನ ಸಂಸ್ಥೆಯ ಶ್ರೀ ಪ್ರಕಾಶ್ ಕಂಬತ್ತಳ್ಳಿ ಮತ್ತು ಶ್ರೀಮತಿ ಪ್ರಭಾ ಅವರು. ಇಬ್ಬರೂ ನನ್ನ ವಿದ್ಯಾರ್ಥಿ ಗಳಾಗಿದ್ದರು. ಪ್ರಕಾಶ್ ಕಂಬತ್ತಳ್ಳಿ ಎನ್.ಜಿ.ಇ.ಎಫ್.ನಲ್ಲಿ ಕೆಲಸ ಮಾಡುತ್ತಿದ್ದರು. ಈ ಹುದ್ದೆಗೆ ರಾಜೀನಾಮೆ ಕೊಡಿಸಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಉಪನಿರ್ದೇಶಕ ಹುದ್ದೆಗಾಗಿ ಕರೆಸಿಕೊಂಡು ‘ತಾತ್ಕಾಲಿಕ’ವಾಗಿ ನೇಮಿಸಿದವರೇ ಮುಂದೊಂದು ದಿನ ಕೈಬಿಟ್ಟರು (ಆಗ ಚಂದ್ರಶೇಖರ ಕಂಬಾರ ಅವರು ಕುಲಪತಿಯಾಗಿದ್ದರು). ಆದರೆ ಪ್ರಕಾಶ್ ಕಂಬತ್ತಳ್ಳಿ ಎದೆಗುಂದಲಿಲ್ಲ. ‘ಅಂಕಿತ ಪುಸ್ತಕ’ ಎಂಬ ಹೆಸರಲ್ಲಿ ಪುಸ್ತಕದಂಗಡಿ ತೆರೆದರು. ಪತಿ-ಪತ್ನಿ ಇಬ್ಬರೂ ಸೇರಿ ಪ್ರಕಾಶನವನ್ನೂ ಆರಂಭಿಸಿದರು. ಸಂಕಷ್ಟದಿಂದ ಮೇಲೆದ್ದು ಪುಸ್ತಕ ಸಾಧಕರಾದರು. ಈಗ ‘ಅಂಕಿತ ಪುಸ್ತಕ’ವೆಂದರೆ ಬಹುಪಾಲು ಉತ್ತಮ ಕೃತಿಗಳ ಪ್ರಕಟಣಾ ಸಂಸ್ಥೆ ಎಂಬ ಹೆಸರು ಪ್ರಚಲಿತವಾಗಿದೆ. ಕನ್ನಡದ ಅನೇಕ ಪ್ರಸಿದ್ಧ ಬರಹಗಾರರ ಜೊತೆಗೆ ಹೊಸಬರ ಪುಸ್ತಕಗಳನ್ನು ಪ್ರಕಟಿಸುವ ಉಮೇದು ಪ್ರಕಾಶ್ ಮತ್ತು ಪ್ರಭಾ ಅವರದು. ನಾನು ಆಗಾಗ್ಗೆ ಇವರ ‘ಅಂಕಿತ ಪುಸ್ತಕ’ಕ್ಕೆ ಹೋಗಿ, ಕೂತು, ಕಾಫಿ ಕುಡಿದು ಹೊಸ ಪುಸ್ತಕಗಳನ್ನು ಕೊಂಡು ತರುತ್ತೇನೆ. ಹೀಗೆ ನಾನು ಹೋಗಿ ಬರುವ ಇನ್ನೊಂದು ಸ್ಥಳವೆಂದರೆ ಚಾಮರಾಜಪೇಟೆಯಲ್ಲಿರುವ ‘ಸ್ವ್ಯಾನ್‌ ಪ್ರಿಂಟರ್ಸ್‌’. ಇದರ ಮಾಲೀಕರಾದ ಶ್ರೀ ಕೃಷ್ಣಮೂರ್ತಿ ಸದಭಿರುಚಿಯ ಮುದ್ರಕರು. ಇಂದಿಗೆ ಅಪರೂಪವಾಗಿರುವ ಅನೇಕ ಹಳೆಯ ವಸ್ತುಗಳನ್ನು ಸಂಗ್ರಹಿಸುವುದರಲ್ಲಿ ಆಸಕ್ತರು. ಇವರ ಮುದ್ರಣಾಲಯದಲ್ಲಿ ಇಂಥ ಅಪರೂಪದ ಹಳೆಯ ವಾಚು, ರೇಡಿಯೊ, ಗ್ರಾಮಫೋನ್ ಮುಂತಾದವನ್ನು ಕಾಣಬಹುದು. + +ನನ್ನ ಸಾಹಿತ್ಯ ಯಾನದಲ್ಲಿ ಮೈಸೂರಿನ ‘ಅಭಿರುಚಿ ಪ್ರಕಾಶನ’ದ ಗಣೇಶ್ ಅವರನ್ನು ನೆನೆಯಲೇಬೇಕು. ಅವರು ‘ಅಭಿರುಚಿ ಗಣೇಶ್’ ಎಂದೇ ಪರಿಚಿತರು. ಅಭಿರುಚಿ ಮತ್ತು ಪ್ರಗತಿಪರ ವಿಚಾರಗಳೊಂದಾದ ಪುಸ್ತಕಗಳನ್ನು ಪ್ರಕಟಿಸುವ ಸಾಹಸಿಗರು. ಇವರು ನನ್ನ ಸಾಹಿತ್ಯ ಸಿನಿಮಾಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಟಿತ ಲೇಖನಗಳ ಸಂಪಾದಿತ ಗ್ರಂಥ ‘ಬಂಡಾಯದ ಬರಗೂರು’ ಪ್ರಕಟಿಸಿದರು. (ಸಂಪಾದಕರು: ಡಾ. ಜಿ.ಆರ್. ತಿಪ್ಪೇಸ್ವಾಮಿ) ಆನಂತರ ‘ಕಸ್ತೂರ್ ಬಾ vs ಗಾಂಧಿ’ ಎಂಬ ನನ್ನ ಕಾದಂಬರಿ ಯನ್ನು ಪ್ರಕಟಿಸಿದರು. ಆನಂತರ ನನ್ನ ಸಮಗ್ರ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸುವ ಸಾಹಸ ಮಾಡಿದರು. ನನ್ನ ಇಲ್ಲೀವರೆಗಿನ ಸಮಗ್ರ ಸಾಹಿತ್ಯದ ಹದಿನಾಲ್ಕು ಸಂಪುಟಗಳನ್ನು ಹೊರತಂದಿದ್ದಾರೆ. ಈ ಸಂಪುಟಗಳ ಒಟ್ಟು ಪುಟಗಳು – 5300. + +ಒಂದು ಸಿನಿಮಾ ಹಾಡಿನ ಲಯಕ್ಕೆ ಪದ್ಯವೆಂಬ ರಚನೆ ಮಾಡಿ ಸಾಹಿತ್ಯ ಕ್ರಿಯೆ ಆರಂಭಿಸಿದ ನಾನು ಬೆಳೆಯುತ್ತ ಬಂದು ಅನೇಕ ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನನಾಗಿದ್ದೇನೆ. 2016ರ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷನಾಗಿ ಆಯ್ಕೆ ಯಾಗಿದ್ದೇನೆ. ಆಯ್ಕೆ ಮಾಡಿದ ಅಂದಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ಶ್ರೀ ಮನುಬಳಿಗಾರ್ ಮತ್ತು ಕಾರ್ಯಕಾರಿ ಸಮಿತಿಯವರನ್ನು ನೆನೆಯುತ್ತೇನೆ. + +ಅಂತೂ ಹೀಗೆ ಅನೇಕ ಪ್ರಕಾಶಕರು, ಪತ್ರಿಕೆಯವರು ನನ್ನ ಸಾಹಿತ್ಯ ಯಾನಕ್ಕೆ ಸಹಕಾರಿಯಾಗಿದ್ದಾರೆ. ಜನಪ್ರಗತಿ, ಪ್ರಜಾವಾಣಿ, ವಿಜಯ ಕರ್ನಾಟಕ, ಈ ವಾರ- ಪತ್ರಿಕೆಯವರು ನನ್ನಿಂದ ಅಂಕಣಗಳನ್ನು ಬರೆಸಿದ್ದಾರೆ. ಸುಧಾ ಮತ್ತು ತರಂಗ ಪತ್ರಿಕೆಯವರು ನನ್ನ ಕಾದಂಬರಿಗಳನ್ನು ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ. ಕನ್ನಡಪ್ರಭ, ಸಂಯುಕ್ತ ಕರ್ನಾಟಕ, ವಿಜಯವಾಣಿ ಮುಂತಾದ ಪತ್ರಿಕೆಯವರು ಮೊದಲಿಂದ ನನ್ನ ಬರಹಗಳನ್ನು ಪ್ರಕಟಿಸಿದ್ದಾರೆ. ಹೆಚ್ಚೂಕಡಿಮೆ ಮಯೂರ, ತುಷಾರ, ಉದಯವಾಣಿ ಒಳಗೊಂಡಂತೆ ಎಲ್ಲಾ ಕನ್ನಡ ಪತ್ರಿಕೆಯವರೂ ಒಂದಲ್ಲ ಒಂದು ಬರಹವನ್ನು ಪ್ರಕಟಿಸಿ ಜನರಿಗೆ ತಲುಪಿಸಿದ್ದಾರೆ. ಸಂಕ್ರಮಣ, ಶೂದ್ರ, ಸಂವಾದ, ಅನ್ವೇಷಣೆ, ಹೊಸತು – ಮುಂತಾದ ನಿಯತಕಾಲಿಕಗಳೂ ನನ್ನ ಬರಹಗಳನ್ನು ಒಳಗೊಂಡು ಚಿಂತನೆಗೆ ಹಚ್ಚಿವೆ. ನನ್ನ ಸಾಹಿತ್ಯ ಪಯಣದಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಯಾಕೆಂದರೆ ನನ್ನ ವೈಚಾರಿಕತೆ ಮತ್ತು ಸೃಜನಶೀಲತೆಗಳು ಜನರೊಂದಿಗೆ ಸಂಬಂಧ ಸ್ಥಾಪಿಸಬೇಕೆಂಬ ಹಂಬಲ ಮೊದಲಿಂದಲೂ ನನಗಿತ್ತು. ಈ ಹಂಬಲದ ಮುಂದಿನ ಹೆಜ್ಜೆಯೇ ಸಿನಿಮಾ. + +ಹಳ್ಳಿ ಮನಸ್ಸುಗಳಿಗೆ ಸಿನಿಮಾ ಎಂಬುದೊಂದು ವಿಸ್ಮಯ. ಪರದೆಯ ಮೇಲೆ ಮನುಷ್ಯಾಕೃತಿಗಳು ಬಂದು ಮಾತಾಡುವುದಾದರೂ ಹೇಗೆಂದು ಅಚ್ಚರಿಪಡುತ್ತ ಅದೊಂದು ‘ಪವಾಡ ಸದೃಶ ಪರದೆ’ಯೆಂಬಂತೆ ನೋಡುವ ಮನಸ್ಸು. ಈ ಮನಸ್ಸಿಗೆ ಬಾಲ್ಯದ ವಯಸ್ಸು ಸೇರಿ ಮತ್ತಷ್ಟು ರೋಮಾಂಚನ. ನಾನು ಟೂರಿಂಗ್ ಟಾಕೀಸುಗಳಲ್ಲಿ ಸಿನಿಮಾ ನೋಡಿ, ಮಾರನೇ ದಿನ ಟಾಕೀಸ್ ಬಳಿ ಹೋಗಿ ಯಾರಾದರೂ ಪರದೆ ಹಿಂದೆ ನಿಂತು ಮಾತಾಡುತ್ತಿದ್ದರೆ ಎಂದು ಮುಗ್ಧವಾಗಿ ನೋಡಿದ್ದುಂಟು. ಇಂಥ ಮನಸ್ಥಿತಿಯಿಂದ ಮೇಲೆದ್ದು ಸಿನಿಮಾ ನಿರ್ದೇಶಕನಾದದ್ದು ನನ್ನ ಸೃಜನಶೀಲತೆಯ ಪಯಣವಷ್ಟೇ ಅಲ್ಲ, ಅದೊಂದು ಸಾಹಸದ ಪಯಣ. + +ನಮ್ಮೂರು-ಬರಗೂರು-ದೊಡ್ಡ ಊರು. ಸುತ್ತಮುತ್ತಲ ಹಳ್ಳಿಗಳಿಗೆಲ್ಲ ಕೇಂದ್ರ ಸ್ಥಾನ. ಆದರೆ ಟೂರಿಂಗ್ ಟಾಕೀಸಿಗೆ ನಮ್ಮ ಊರಿನ ಪಟೇಲರು ಅನುಮತಿ ನೀಡಲಿಲ್ಲ. ನಮ್ಮೂರಿನ ಪಟೇಲರ ಮನೆತನದಲ್ಲಿ ಶ್ರೀ ಬಿ.ಎನ್. ರಾಮೇಗೌಡರು ನೇತಾರರಾಗಿ ಬೆಳೆದಿದ್ದರು. ಒಂದು ಸಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಇವರ ಪ್ರಯತ್ನದ ಫಲವಾಗಿ ನಮ್ಮೂರಿಗೆ ಅನೇಕ ಸೌಲಭ್ಯಗಳು ಬಂದವು. ಇವರನ್ನು ಕಂಡರೆ ಸಾಮಾನ್ಯವಾಗಿ ಭಯಮಿಶ್ರಿತ ಗೌರವ ತೋರುತ್ತಿದ್ದವರೇ ಹೆಚ್ಚು. ತುಂಬಾ ಕಟ್ಟುನಿಟ್ಟಿನ ಮನುಷ್ಯರೆಂದೇ ಪ್ರಸಿದ್ಧಿ. ಟೂರಿಂಗ್ ಟಾಕೀಸ್ ಆರಂಭಿಸಲು ಗ್ರಾಮಪಂಚಾಯಿತಿಯ ನಿರಾಕ್ಷೇಪಣ ಪತ್ರ (ಓ.ಔ.ಅ.) ಬೇಕಾಗಿತ್ತು. ಸಿನಿಮಾ ನೋಡಿ ಹುಡುಗರು ಅಡ್ಡ ಹಾದಿ ಹಿಡಿಯುತ್ತಾ ರೆಂಬ ಭಾವನೆಯಿಂದಲೊ ಏನೊ ಓ.ಔ.ಅ. ಕೊಡಲಿಲ್ಲ. ಇಂಥ ಕಟ್ಟುನಿಟ್ಟಿನ ಬಗ್ಗೆ ನಾವು – ಒಂದಷ್ಟು ಹೊಸ ಹುಡುಗರು – ಬೇಸರ ಮಾಡಿಕೊಂಡದ್ದು ಉಂಟು. ಆದರೆ ಬೇಸರಕ್ಕೆ ಬಾಯಿರಲಿಲ್ಲ! + +ಓ.ಔ.ಅ. ಸಿಗದ ಕಾರಣಕ್ಕೆ ನಮ್ಮೂರಿಗೆ ಐದಾರು ಕಿಲೋಮೀಟರ್ ದೂರದಲ್ಲಿದ್ದ ಗಡಿಗ್ರಾಮವಾದ ಹಾರೋಗೆರೆಯಲ್ಲಿ ಟೂರಿಂಗ್ ಟಾಕೀಸ್ ಆರಂಭವಾಯಿತು. ನಾವು ಸ್ನೇಹಿತರು – ರಾತ್ರಿ ಹೊತ್ತು ನಡೆದುಕೊಂಡು ಹೋಗಿ ಸಿನಿಮಾ ನೋಡಿ ಬರುತ್ತಿದ್ದೆವು. ಅಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳ ಸಿನಿಮಾ ತೋರಿಸುತ್ತಿದ್ದರು. ಇಲ್ಲಿಯೇ ನಾನು ರಾಜಕುಮಾರ್ ಮತ್ತು ಎ. ನಾಗೇಶ್ವರರಾವ್ (ತೆಲುಗು) ಚಿತ್ರಗಳನ್ನು ನೋಡಿ ಇಷ್ಟಪಡಲು ಆರಂಭಿಸಿದ್ದು; ನಟನಾಗಬೇಕೆಂಬ ಆಸೆ ಚಿಗುರಿದ್ದು. ನಾನು ಮತ್ತು ನನ್ನ ಎರಡನೇ ಅಣ್ಣ ಜಯರಾಮಯ್ಯ ಮರದ ಟಿಸಿಲುಗಳಿಂದ ಕತ್ತಿ ಮಾಡಿಕೊಂಡು, ಸಿನಿಮಾದಲ್ಲಿರು ವಂತೆ ‘ಕತ್ತಿವರಸೆ’ ಮಾಡುತ್ತಿದ್ದೆವು. ಸಿನಿಮಾದ ಸಂಭಾಷಣೆಗಳನ್ನು ಹೇಳಿಕೊಂಡು ಖುಷಿಪಡುತ್ತಿದ್ದೆವು. ಮುಂದೆ ನನ್ನ ಈ ಅಣ್ಣ ನಮ್ಮೂರಿನ ಅನೇಕ ನಾಟಕಗಳ ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿದರು. + +ನನ್ನ ದೊಡ್ಡ ಅಣ್ಣ, ಚಿಕ್ಕರಂಗಪ್ಪನವರಿಗೂ ನಾಟಕದ ಆಸಕ್ತಿ ಇತ್ತು. ಮೂವರಿಗೂ ಸಮಾನವಾದ ಒಂದು ಕ್ರೀಡಾಸಕ್ತಿಯೂ ಇತ್ತು. ಮೂವರೂ ವಾಲಿಬಾಲ್ ಆಟಗಾರ ರಾಗಿದ್ದೆವು. ನಾನು ವಾಲಿಬಾಲ್ ಜೊತೆಗೆ ಬ್ಯಾಡ್‌ಮಿಂಟನ್ ಆಟ ಆಡುತ್ತಿದ್ದೆ. ಸ್ವಲ್ಪ ಕಾಲ ಕ್ರಿಕೆಟ್ ಕೂಡ ಆಡಿದ್ದೆ. + +ನನಗೆ ಕ್ರಿಕೆಟ್ ಆಟಗಾರರಲ್ಲಿ ಕಪಿಲ್‌ದೇವ್ ತುಂಬಾ ಇಷ್ಟ. ಈ ಇಷ್ಟಕ್ಕೆ ಅವರ ಆಟದ ಪರಿಣತಿಯ ಜೊತೆಗೆ ಸಾಮಾಜಿಕ ಆಯಾಮವೂ ಇತ್ತು. ಸೌದೆ ಅಂಗಡಿ ಇಟ್ಟಿದ್ದ ತಂದೆಯ ಮಗನಾಗಿ, ತರಬೇತಿಗೆ ಹೋಗಲೂ ಹಣವಿಲ್ಲದ ಸಂಕಟ ಅನುಭವಿಸಿ, ಜಗತ್ತಿನ ಒಬ್ಬ ಪ್ರಸಿದ್ಧ ಆಲ್‌ರೌಂಡರ್ ಆಗಿ ಬೆಳೆದ ಕಪಿಲ್ ಸಾಧನೆಯು ಒಂದು ಸಾಮಾಜಿಕ ಸಾಧನೆಯೂ ಆಗಿತ್ತು. ಕಪಿಲ್‌ಗೆ ಇಂಗ್ಲಿಷ್ ಸರಿಯಾಗಿ ಬಾರದ ಕಾರಣಕ್ಕೆ ಅವಮಾನಕ್ಕೆ ಒಳಗಾದದ್ದೂ ಉಂಟು. ಸಾಮಾಜಿಕ, ಆರ್ಥಿಕ, ಭಾಷಿಕ ನೆಲೆಯಲ್ಲಿ ‘ನಿರ್ಲಕ್ಷಿತ’ ವಲಯದಿಂದ ಬಂದು ದೊಡ್ಡ ಸಾಧನೆ ಮಾಡಿದ್ದು ಸಾಮಾನ್ಯವಲ್ಲ. ಇದೇ ಕಪಿಲ್ ನಾಯಕತ್ವದಲ್ಲಿ 1983ರಲ್ಲಿ ಮೊಟ್ಟಮೊದಲ ಕ್ರಿಕೆಟ್ ವಿಶ್ವಕಪ್ ಗೆದ್ದದ್ದು ಭಾರತದ ಕ್ರಿಕೆಟ್ ಕ್ಷೇತ್ರದ ಅದ್ಭುತ ಚಾರಿತ್ರಿಕ ಘಟನೆ. ಸಾಮಾನ್ಯ ಹಿನ್ನೆಲೆಯಿಂದ ಬಂದು ಅಸಾಮಾನ್ಯ ಸಾಧನೆ ಮಾಡಿದವರ ಬಗ್ಗೆ ನನಗೆ ಯಾವಾಗಲೂ ವಿಶೇಷ ಮೆಚ್ಚುಗೆ. ಈ ಹಿನ್ನೆಲೆಯಲ್ಲೇ ಡಾ. ರಾಜಕುಮಾರ್ ಅವರ ಸಾಧನೆಯ ಬಗ್ಗೆ ನನಗೆ ಅಪಾರ ಗೌರವ. ಹೀಗಾಗಿ ನಾನು ಕಪಿಲ್‌ದೇವ್ ಅವರ ಬಗ್ಗೆ ಎರಡು ಲೇಖನಗಳನ್ನೂ ಡಾ. ರಾಜಕುಮಾರ್ ಅವರ ಬಗ್ಗೆ ‘ಜನಪದ ನಾಯಕ ಡಾ. ರಾಜಕುಮಾರ್’ ಎಂಬ ಪುಸ್ತಕವನ್ನೂ ಬರೆದಿದ್ದೇನೆ. + +ನಾನು ಎಂ.ಎ. ಓದಲು ಬೆಂಗಳೂರಿಗೆ ಬಂದಾಗ ನಟನಾಗಬೇಕೆಂದಿದ್ದ ಆಸೆಯ ಬದಲು ನಿರ್ದೇಶಕನಾಗಬೇಕೆಂಬ ಹಂಬಲ ಹುಟ್ಟಿತು. ಆಗ ನಿರ್ದೇಶಕರಾದ ಶ್ರೀ ಎನ್. ಲಕ್ಷ್ಮೀನಾರಾಯಣ್, ಶ್ರೀ ಸಿದ್ಧಲಿಂಗಯ್ಯ, ಶ್ರೀ ಕೆ.ಎಂ. ಶಂಕರಪ್ಪನವರ ಪರಿಚಯವಾಗಿ ನಿರ್ದೇಶನ ಕುರಿತ ಕೆಲವು ವಿಷಯಗಳನ್ನು ತಿಳಿದುಕೊಂಡೆ. ಕೆ.ಎಂ. ಶಂಕರಪ್ಪನವರು ನಮ್ಮ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನವರು. ಪೂನಾ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ನಿರ್ದೇಶನ ಡಿಪ್ಲೊಮಾ ಮಾಡಿದ ಮೊದಲ ಕನ್ನಡಿಗರು. ಅವರಿಂದ ಅನೇಕ ಅಕಡೆಮಿಕ್ ವಿಷಯಗಳನ್ನು ತಿಳಿದುಕೊಂಡೆ. ಸಿದ್ಧಲಿಂಗಯ್ಯನವರು ನನ್ನದೇ ಸಿರಾ ತಾಲ್ಲೂಕಿನವರು. ನಮ್ಮೂರಲ್ಲೂ ಅವರ ನೆಂಟರಿದ್ದರು. ನಾನು ಎಂ.ಎ. ಓದುವ ವೇಳೆಗೆ ಪ್ರಸಿದ್ಧ ನಿರ್ದೇಶಕರಾಗಿದ್ದರು. ಅವರೊಂದಿಗಿನ ಒಡನಾಟದಿಂದ ಜನಪ್ರಿಯ ಸಿನಿಮಾ ಶೈಲಿಯ ಕೆಲವು ವಿಷಯಗಳು ತಿಳಿದವು. ಎನ್. ಲಕ್ಷ್ಮೀನಾರಾಯಣ್ ಅವರು ‘ನಾಂದಿ’, ‘ಉಯ್ಯಾಲೆ’ ಚಿತ್ರಗಳ ನಿರ್ದೇಶನದಿಂದ ಹೆಸರಾಗಿದ್ದರು. ನಾನು ಹುಡುಕಿಕೊಂಡು ಹೋಗಿ ಪರಿಚಯ ಮಾಡಿಕೊಂಡೆ. ಅವರು ನಿರ್ದೇಶನದ ಬಗ್ಗೆ ತಿಳಿದುಕೊಳ್ಳಲು ಕೆಲವು ಪುಸ್ತಕಗಳ ಅಧ್ಯಯನಕ್ಕೆ ಸಲಹೆ ನೀಡಿದರು. ಅಲ್ಲಿಂದ ಪ್ರಾರಂಭ ವಾದ ನನ್ನ ಮತ್ತು ಎನ್. ಲಕ್ಷ್ಮೀನಾರಾಯಣ್ ಪರಿಚಯ, ಮುಂದೆ ಆತ್ಮೀಯ ಸಂಬಂಧವಾಗಿ ರೂಪುಗೊಂಡಿತು. ಅವರು ಬೆಂಗಳೂರು ದಕ್ಷಿಣ ಭಾಗಕ್ಕೆ ಬಂದಾಗಲೆಲ್ಲ ಸ್ವಲ್ಪ ಬಿಡುವಿದ್ದರೂ ನೆಟ್ಟಕಲ್ಲಪ್ಪ ವೃತ್ತದ ಬಳಿಯಲ್ಲಿದ್ದ ನನ್ನ (ಬಾಡಿಗೆ) ಮನೆಗೆ ಬರುತ್ತಿದ್ದರು. ನಾನು ರಾಜಮಹಲ್ ವಿಲಾಸ ಗುಟ್ಟಹಳ್ಳಿಯ ಕಡೆ ಹೋದಾಗಲೆಲ್ಲ ಅವರ ಮನೆಗೆ ಹೋಗುತ್ತಿದ್ದೆ. ಮುಂದಿನ ಕೆಲ ವರ್ಷಗಳಲ್ಲಿ ನಾನು ಮೂರು ಸಿನಿಮಾ ನಿರ್ದೇಶನ ಮಾಡಿದ್ದಾದ ಮೇಲೆ ಅವರು ಡಾ. ರಾಜಕುಮಾರ್ ಅವರಿಗಾಗಿ ಒಂದು ಸಿನಿಮಾ ನಿರ್ದೇಶನ ಮಾಡುವ ತಯಾರಿಯಲ್ಲಿದ್ದರು. ಕತೆಯ ಎಳೆಯೊಂದನ್ನು ನನಗೆ ಹೇಳಿ ನಾನು ಚಿತ್ರಕತೆ, ಸಂಭಾಷಣೆ ಬರೆಯಬೇಕೆಂದು ಬಯಸಿದರು. ರಾಜಕುಮಾರ್ ಅವರು ಅಭಿನಯಿಸುವ ಚಿತ್ರ, ಎನ್. ಲಕ್ಷ್ಮೀನಾರಾಯಣ್ ನಿರ್ದೇಶನ! ನನ್ನ ಸಂತೋಷ ಅರಳಿಕೊಂಡಿತು. + +ಲಕ್ಷ್ಮೀನಾರಾಯಣ್ ಅವರು ಹೇಳಿದ ಒಂದೆಳೆಯ ಕತೆಗೆ ಗಾಂಧೀಜಿಯವರ ‘Man and Machine should go together’ ಎಂಬ ಹೇಳಿಕೆ ಆಧಾರವಾಗಿತ್ತು. ಈ ಹೇಳಿಕೆಯಿದ್ದ ಗಾಂಧೀಜಿಯವರ ಲೇಖನವನ್ನು ಅವರು ನನಗೆ ಓದಲು ಕೊಟ್ಟಿದ್ದರು. ನಾನು ಚಿತ್ರಕತೆ, ಸಂಭಾಷಣೆ ಬರೆದು ಮುಗಿಸಿದೆ. ಆನಂದರಾವ್ ವೃತ್ತದ ಬಳಿಯಲ್ಲಿದ್ದ ಸಂಗೀತ್ ಹೋಟೆಲ್‌ನ ಒಂದು ರೂಮಿನಲ್ಲಿ‌ ಲಕ್ಷ್ಮೀನಾರಾಯಣ್ ಮತ್ತು ಅವರ ಆತ್ಮೀಯರಿಗೆ ಓದಿ ಹೇಳಿದ್ದೂ ಆಯಿತು. ಆದರೆ ಈ ಸಿನಿಮಾ ಕಾರ್ಯಗತವಾಗುವ ಮುಂಚೆಯೇ ಶ್ರೀ ಎನ್. ಲಕ್ಷ್ಮೀನಾರಾಯಣ್ ಅವರು ದಿವಂಗತರಾದರು. ನಾನಾಗ ನಮ್ಮ ಊರಿಗೆ ಹೋಗಿದ್ದೆ. ವಿಷಯ ತಿಳಿದು ಕೂಡಲೇ ಬಸ್ ಹತ್ತಿ ಬೆಂಗಳೂರಿಗೆ ಬಂದೆ; ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದೆ. ಒಬ್ಬ ಹಿರಿಯ ಹಿತೈಷಿಯನ್ನು ಕಳೆದುಕೊಂಡ ನೋವು ನೆನಪಿನ ಭಾಗವಾಗಿಬಿಟ್ಟಿದೆ.‌ + +ನಾನು ಸಿನಿಮಾ ನಿರ್ದೇಶಕನಾಗುವುದಕ್ಕೆ ಮುಂಚೆಯೇ ಸಿದ್ಧಲಿಂಗಯ್ಯನವರು ನನ್ನ ‘ಸೂತ್ರ’ ಕಾದಂಬರಿಯನ್ನು ತೆರೆಯ ಮೇಲೆ ತರಲು ಇಚ್ಚಿಸಿದ್ದರು. ಈ ಚಿತ್ರದಲ್ಲಿ ತಮ್ಮ ಪುತ್ರ ಮುರಳಿಯವರನ್ನು ಮೊದಲಿಗೆ ಪರಿಚಯಿಸುವ ಅಪೇಕ್ಷೆ ಅವರದಾಗಿತ್ತು. ಅಂದರೆ ಮುರಳಿ ಈ ಚಿತ್ರದ ನಾಯಕ ನಟ. ಸಿದ್ಧಲಿಂಗಯ್ಯನವರು ಕಾದಂಬರಿಯ ಬಗ್ಗೆ ನನ್ನೊಂದಿಗೆ ಚರ್ಚಿಸಿದರು; ತಮ್ಮ ದೃಷ್ಟಿಕೋನಕ್ಕೆ ಹೊಂದುವಂತೆ ಹೆಚ್ಚು ಬದಲಾವಣೆಗಳ ಅಗತ್ಯ ಅವರಿಗೆ ಕಂಡಿತೇನೊ, ಒಂದು ದಿನ ‘‘ಇದು ತುಂಬಾ ಬೋಲ್ಡ್ ಸಬ್ಜಕ್ಟ್ ರಾಮಚಂದ್ರಪ್ಪನೋರೆ. ಕತೆ ತುಂಬಾ ಸ್ಟ್ರಾಂಗ್‌ ಆಗಿದೆ. ಅನುಮಾನವೇ ಇಲ್ಲ. ಆದ್ರೆ ಇಂಥ ಸಬ್ಜೆಕ್ಟನ್ನು ಡೈರೆಕ್ಟ್ ಮಾಡೋಕೆ ತಮಿಳಿನ ಕೆ. ಬಾಲಚಂದರ್ ಅಂಥವರೇ ಸರಿ. ಅವರಿಗೆ ಈ ಕಾದಂಬರಿ ಸಾರವನ್ನು ಇಂಗ್ಲೀಷಲ್ಲಿ ಬರೆಸಿ ಕಳಿಸ್ತೇನೆ. ನೋಡೋಣ’’ ಎಂದರು. ನಾನು ‘‘ನನಗೇನೂ ಬೇಜಾರಿಲ್ಲ ಸಾರ್’’ ಎಂದೆ. ಆನಂತರ ತಮ್ಮ ಮಗನಿಗಾಗಿ ‘ಪ್ರೇಮಪರ್ವ’ ಅಂತ ಸಿನಿಮಾ ಮಾಡಿದರು. ಅವರಿರುವವರೆಗೂ ನನ್ನ – ಅವರ ಸ್ನೇಹ ಸಂಬಂಧ ಗಾಢವಾಗಿತ್ತು. ಆಗಾಗ್ಗೆ ನಾನೇ ಅವರ ಮನೆಗೆ ಹೋಗಿ ಮಾತಾಡಿಸಿಕೊಂಡು ಬರುತ್ತಿದ್ದೆ. ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿದಾಗಲೂ ಒಂದೆರಡು ಸಾರಿ ಹೋಗಿ ಬಂದಿದ್ದೆ. ಒಂದು ದಿನ ಅವರು ನಮ್ಮನ್ನು ಅಗಲಿ ಹೋಗಿಯೇಬಿಟ್ಟರು. ನಾನು ಮತ್ತು ದೊಡ್ಡ ಹುಲ್ಲೂರು ರುಕ್ಕೋಜಿ ಅಂತ್ಯಕ್ರಿಯೆ ಯಲ್ಲಿ ಭಾಗವಹಿಸಿ ಅಂತಿಮ ದರ್ಶನ ಪಡೆದೆವು. + +ಶ್ರೀ ಕೆ.ಎಂ. ಶಂಕರಪ್ಪನವರು ಬಸವರಾಜ ಕಟ್ಟೀಮನಿಯವರ ‘ಮಾಡಿ ಮಡಿದವರು’ ಕಾದಂಬರಿಯನ್ನು ಸಿನಿಮಾ ರೂಪಕ್ಕೆ ತಂದರು. ಈ ಸಿನಿಮಾದ ಸುತ್ತ ಸಾಕಷ್ಟು ಗಂಭೀರ ಚರ್ಚೆಗಳು ನಡೆದವು. ಆನಂತರದ ದಿನಗಳಲ್ಲಿ ಇವರು ಕೆಲವು ಸಾಕ್ಷ್ಯಚಿತ್ರ ನಿರ್ದೇಶನ ಮತ್ತು ಬುದ್ಧಚಿಂತನದಲ್ಲಿ ತೊಡಗಿಕೊಂಡರು. + + + +ಈ ಮೂವರನ್ನು ನೆನೆಯುತ್ತಲೇ ನನ್ನ ಮೊದಲ ನಿರ್ದೇಶನದ ಸಿನಿಮಾ ವಿಷಯಕ್ಕೆ ಬರುತ್ತೇನೆ. ನನ್ನ ನಿರ್ದೇಶನದ ಮೊದಲ ಸಿನಿಮಾ, ನನ್ನದೇ ಕಿರು ಕಾದಂಬರಿ ಆಧಾರಿತ ‘ಒಂದು ಊರಿನ ಕತೆ’. ಈ ಸಿನಿಮಾ ನಿರ್ಮಾಣದ್ದೇ ದೊಡ್ಡ ಕತೆ. + +ನನ್ನ ಸ್ನೇಹಿತರಾದ ಶ್ರೀ ಲಕ್ಷ್ಮೀನಾರಾಯಣ ಸೆಟ್ಟರಿಗೆ ನನ್ನನ್ನು ಕಂಡರೆ ಅತೀವ ಅಭಿಮಾನ. ನಾನು ಕೊಂಡೇತಿಮ್ಮನಹಳ್ಳಿಯಲ್ಲಿ ಪ್ರೌಢಶಾಲೆ ಅಧ್ಯಾಪಕನಾಗಿದ್ದಾಗ ಇವರು ಆ ಹಳ್ಳಿಗೆ ಹತ್ತಿರದ ಮಂಗಳವಾಡದಲ್ಲಿ ಅಧ್ಯಾಪಕರಾಗಿದ್ದರು. ಅಲ್ಲಿ ನನಗೂ ಅವರಿಗೂ ಪರಿಚಯ, ಅವರು ಅದೇ ಪಾವಗಡ ತಾಲ್ಲೂಕಿನವರು. ಇದೇ ಮಂಗಳವಾಡದಲ್ಲಿ ವೈದ್ಯರಾಗಿದ್ದ ಪಶುಪತಿ ಅವರು ಕೂಡ ಇವರಿಂದ ಪರಿಚಿತರಾದರು. ಇವರು ಕಲಾಸಕ್ತರು. ಮುಂದೊಮ್ಮೆ ಬೆಂಗಳೂರಿನ ಶ್ರೀರಾಮಪುರದ ಪ್ರೌಢಶಾಲೆಯೊಂದಕ್ಕೆ ಲಕ್ಷ್ಮೀನಾರಾಯಣ ಸೆಟ್ಟರು ಅಧ್ಯಾಪಕರಾಗಿ ಬಂದರು. ನಾನೂ, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಅಧ್ಯಾಪಕನಾಗಿದ್ದೆ. ಇಬ್ಬರೂ ಆಗಾಗ್ಗೆ ಭೇಟಿಯಾಗುತ್ತಿದ್ದೆವು. ನಾನು ನಿರ್ದೇಶಕನಾಗಬೇಕೆಂದು ಬಯಸಿದ್ದ ವಿಷಯ ಅವರಿಗೆ ಗೊತ್ತಿತ್ತು. ಒಂದು ದಿನ ಅವರ ಸ್ನೇಹಿತರೊಬ್ಬರನ್ನು ನನ್ನ ಬಳಿ ಕರೆದುಕೊಂಡು ಬಂದು ಪರಿಚಯಿಸಿ, ‘ಇವರು, ನಿಮ್ಮ ಸಿನಿಮಾಕ್ಕೆ ನಿರ್ಮಾಪಕರಾಗಲು ಒಪ್ಪಿದ್ದಾರೆ’ ಎಂದು ಹೇಳಿದಾಗ ನನಗೆ ರೆಕ್ಕೆ ಬಿಚ್ಚಿದ ಹಕ್ಕಿಯ ಆನಂದ. ಅವರು ‘‘ಸಾರ್, ಚಾಮರಾಜ ಪೇಟೆಯ ರಾಯನ್ ಸರ್ಕಲ್ ಬಳಿ ಇರುವ ಶಂಕರ್ ಲಂಚ್ ಹೋಂನ ಮಾಲೀಕರು ನನ್ನ ಪರಿಚಯಸ್ಥರು. ಆ ಹೋಟೆಲ್‌ನಲ್ಲಿ ರೂಮುಗಳಿವೆ. ನೀವು ಹೇಳಿದಾಗ ರೂಮ್ ನಿಗದಿ ಮಾಡುವೆ. ಸ್ಕಿçಪ್ಟ್ ಇತ್ಯಾದಿ ಕೆಲಸ ಮಾಡಿ’’ ಎಂದರು. ಸಿನಿಮಾ ಕೆಲಸದಲ್ಲಿ ಹೀಗೆ ರೂಮ್ ಮಾಡುವುದು ಒಂದು ಪದ್ಧತಿ. ಹೀಗೆ ನಿರ್ಮಾಪಕರು ಮಾಡಿದ ರೂಮ್‌ನಲ್ಲೇ ಕತೆಯ ಚರ್ಚೆ, ಚಿತ್ರಕತೆ, ಸಂಭಾಷಣೆ ರಚನೆ, ಆನಂತರ ಚಿತ್ರೀಕರಣ ಆರಂಭವಾಗುವವರೆಗಿನ ಎಲ್ಲ ಕೆಲಸಗಳೂ ನಡೆಯುತ್ತವೆ. ನಾನು ‘‘ರೂಮ್ ಮಾಡಿ ಖರ್ಚು ಮಾಡೋದು ಬೇಡ. ನಾನು ನಮ್ಮ ಮನೆಯಲ್ಲೇ ಎಲ್ಲಾ ಕೆಲಸ ಮಾಡುವೆ’’ ಎಂದು ಹೇಳಿದೆ. ಅವರಿಗೆ ಆಶ್ಚರ್ಯ! ‘‘ಆಗಲಿ ನಿಮ್ಮಿಷ್ಟ’’ ಎಂದರು. + +ಆ ವೇಳೆಗೆ ನನಗೆ ಪರಿಚಿತರಾಗಿದ್ದ ಛಾಯಾಗ್ರಾಹಕ ಸುಂದರನಾಥ ಸುವರ್ಣ ಅವರೊಂದಿಗೆ ಚರ್ಚಿಸಿದೆ. ನನ್ನ ನಿರ್ದೇಶನದ ಮೊದಲ ಸಿನಿಮಾದ ಚಿತ್ರೀಕರಣವು ನಮ್ಮೂರಲ್ಲೇ ಆಗಬೇಕೆಂಬ ಹಂಬಲ ನನ್ನದು. ನನ್ನ ಈ ಹಂಬಲಕ್ಕೆ ಒತ್ತಾಸೆಯಾಗಿ ನಿಂತವರು ನನ್ನ ಹಿರಿಯಣ್ಣ ಬಿ.ಆರ್. ಚಿಕ್ಕರಂಗಪ್ಪನವರು. ನಾನು ನನ್ನದೇ ಕಾದಂಬರಿ ‘ಒಂದು ಊರಿನ ಕತೆ’ಯನ್ನು ಸಿನಿಮಾ ಮಾಡಲು ನಿರ್ಧರಿಸಿ ಚಿತ್ರಕತೆ ಸಿದ್ಧ ಮಾಡಿದೆ. ಸುಂದರನಾಥ ಸುವರ್ಣ ಜೊತೆ ನಮ್ಮೂರಿಗೆ ಹೋಗಿ ಚಿತ್ರೀಕರಣದ ಸ್ಥಳಗಳನ್ನು ನೋಡಿ ಸಾಕಷ್ಟು ಫೋಟೋ ತೆಗೆಸಿದೆ. ಆದರೆ ಇಷ್ಟೆಲ್ಲ ನಡೆಯುತ್ತಿರುವಾಗ ನಿರ್ಮಾಪಕರು ಹಿಂದೆ ಸರಿದರು! ಕಾರಣ ಹೇಳದೆ ದೂರ ಸರಿದರು! ಆದರೆ ನಾನು ದೂರ ಸರಿಯುವಂತೆ ಇರಲಿಲ್ಲ. ಯಾಕೆಂದರೆ ನಮ್ಮೂರಲ್ಲಿ ಸುದ್ದಿ ಹಬ್ಬಿ ಇಡೀ ತಾಲ್ಲೂಕಿಗೇ ವ್ಯಾಪಿಸಿತ್ತು. ಪತ್ರಿಕೆಯಲ್ಲಿ ಸುದ್ದಿಯೂ ಬಂದಿತ್ತು. ನಾನು ಚಿತ್ರೀಕರಣ ಮಾಡದಿದ್ದರೆ ಆಡಿಕೊಳ್ಳುವವರ ಬಾಯಿಗೆ ಸಿಕ್ಕ ಅಡಿಕೆಯಾಗುತ್ತಿದ್ದೆ; ಅವಮಾನದ ಆತಂಕ ಕಾಡಿಸತೊಡಗಿತು. + +ಏನಾದರೂ ಮಾಡಲೇಬೇಕಿತ್ತು. ನಾನು ಸಾಲ ಮಾಡಿ ಸ್ವಂತ ನಿರ್ಮಾಣದಲ್ಲಾದರೂ ಸಿನಿಮಾ ಮಾಡಬೇಕೆಂದು ನಿರ್ಧರಿಸಿದೆ. ಸುಂದರನಾಥ ಸುವರ್ಣ ಅವರ ಗೆಳೆಯ ಗುಣಪಾಲ್ ಎಂಬುವರು ಮುಂಬೈನಲ್ಲಿದ್ದರು. ಇವರ ಹುಟ್ಟೂರು ಉಡುಪಿ. ಇವರ ಅಣ್ಣ ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ಮೇಲೆ ಪ್ರಭಾವ ಬೀರುವಷ್ಟು ಪರಿಚಿತರು. ಸುಂದರನಾಥ ಸುವರ್ಣ, ಗುಣಪಾಲ್ ಜೊತೆ ಮಾತಾಡಿದರು. ಗುಣಪಾಲ್ ಉಡುಪಿಗೆ ಬಂದರು. ನಾನೂ ಉಡುಪಿಗೆ ಹೋದೆ. ಅವರ ಅಣ್ಣ ನನ್ನನ್ನು ಸಿಂಡಿಕೇಟ್ ಬ್ಯಾಂಕಿಗೆ ಕರೆದೊಯ್ದು ಸಾಲ ಕೊಡಲು ಒಪ್ಪಿಸಿದರು. ಆದರೆ ಬೆಂಗಳೂರಿನ ಬ್ರಾಂಚ್ ನಿಂದಲೇ ಅರ್ಜಿ ಹಾಕಬೇಕಿತ್ತು. ನನ್ನ ಈ ಮೊದಲ ಚಿತ್ರಕ್ಕೆ ಮೇನೇಜರ್ ಆಗಿದ್ದ (ಮುಂದೊಮ್ಮೆ ನಿರ್ದೇಶಕರಾದ) ರಾಮದಾಸ ನಾಯ್ಡು ಜೊತೆ ಬೆಂಗಳೂರಿನ ಹಲಸೂರು ಸಿಂಡಿಕೇಟ್ ಬ್ಯಾಂಕ್ ಬ್ರಾಂಚ್‌ಗೆ ಹೋದೆ. ಪ್ರಧಾನ ಕಚೇರಿಯಿಂದ ಈ ಬ್ರಾಂಚ್ ಮೇನೇಜರ್ ಶ್ರೀ ಮಯ್ಯ ಅವರಿಗೆ ಅದಾಗಲೇ ಸುದ್ದಿ ಬಂದಿತ್ತು. ಅರ್ಜಿ ಹಾಕಲು ಅಗತ್ಯವಾದ ವಿಧಿ ವಿಧಾನಗಳನ್ನು ಅವರು ವಿವರಿಸಿದರು. ನಾನು ವಿಶ್ವವಿದ್ಯಾಲಯದ ಉದ್ಯೋಗಿ. ಸಿನಿಮಾ ನಿರ್ಮಾಣ ಮಾಡುವಂತಿಲ್ಲ. ನಿಯಮದಲ್ಲಿ ನಿರ್ಮಾಪಕನಾಗಲು ಅವಕಾಶವಿಲ್ಲ. ಆದರೆ ಸೃಜನಶೀಲ ಕೆಲಸವಾದ್ದರಿಂದ ನಿರ್ದೇಶಕನಾಗಬಹುದು. ನಾನು ನನ್ನ ಪತ್ನಿಯನ್ನು ನಿರ್ಮಾಪಕಿಯಾಗಿಸಿ ‘ಮೈತ್ರಿ ಆರ್ಟ್ಸ್’ ಎಂಬ ನಿರ್ಮಾಣ ಸಂಸ್ಥೆಯನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿದೆ. ಆಗ ನನ್ನ ಮೊದಲನೇ ಮಗ ಹುಟ್ಟಿ ಒಂದು ವರ್ಷವಷ್ಟೇ ತುಂಬಿತ್ತು. ಆತನ ಹೆಸರು ಮೈತ್ರಿ. ಮಗನ ಹೆಸರನ್ನೇ ನಿರ್ಮಾಣ ಸಂಸ್ಥೆಗೆ ಇಟ್ಟಿದ್ದೆವು. ಸಾಲದ ಗ್ಯಾರಂಟಿಗಾಗಿ ನನ್ನ ಸಂಬಳದ ಖಾತರಿ ಕೊಡಬೇಕಾಯಿತು. ಜೊತೆಗೆ ಸರ್ಕಾರವು ಸಿನಿಮಾಕ್ಕೆ ನೀಡುವ ಸಹಾಯಧನ ಖಾತರಿಯನ್ನು ನೀಡಲಾಯಿತು. ಅಂತೂ ಸಾಲ ಮಂಜೂರಾಯಿತು. 1978ರಲ್ಲಿ ‘ಒಂದು ಊರಿನ ಕತೆ’ ಸಿನಿಮಾ ನಿರ್ಮಾಣವಾಯಿತು. + +ಈ ಸಿನಿಮಾದಲ್ಲಿ ‘ಚೋಮನದುಡಿ’ಗಾಗಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಶ್ರೀ ವಾಸುದೇವ ರಾವ್ ಅವರು ಒಂದು ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದು ಒಂದು ವಿಶೇಷ. ಸುರೇಶ್ ಅರಸು ಮತ್ತು ಪರಮೇಶ್ ಕಾರ್ತಿಕ್ ನನಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು. ಗೆಳೆಯ, ಪತ್ರಕರ್ತ ಜೆ.ಸು.ನಾ. ಅವರು ಬೆಂಬಲವಾಗಿದ್ದಲ್ಲದೆ ಒಂದು ಪಾತ್ರದಲ್ಲಿ ಅಭಿನಯಿಸಿದರು. ಸಾಲ ಸಿಗಲು ಕಾರಣವಾದ ಗುಣಪಾಲ್ ಒಂದು ಪಾತ್ರದಲ್ಲಿದ್ದರು. ಸುಂದರನಾಥ ಸುವರ್ಣರ ಕೆಲವು ಸ್ನೇಹಿತರೂ ಪಾತ್ರಧಾರಿಗಳಾದರು. ಮುಂದೆ ಖ್ಯಾತ ನಾಮರಾದ ಗೆಳೆಯ ಶ್ರೀ ಟಿ.ಎಸ್. ಲೋಹಿತಾಶ್ವ ಅವರ ಅಭಿನಯದ ಮೊದಲ ಚಿತ್ರ ನನ್ನ ‘ಒಂದು ಊರಿನ ಕತೆ’. ನನ್ನ ಸಿನಿಮಾಕ್ಕೆ ಪ್ರಸಿದ್ಧ ರಂಗನಿರ್ದೇಶಕರಾದ ಶ್ರೀ ಬಿ.ವಿ. ಕಾರಂತರು ಸಂಗೀತ ನಿರ್ದೇಶನ ಮಾಡಿದರು. ಇವರನ್ನು ಒಪ್ಪಿಸಿದ್ದು ಆಗ ‘ಪ್ರಜಾವಾಣಿ’ಯ ‘ಸಾಪ್ತಾಹಿಕ ಪುರವಣಿ’ಯ ಮುಖ್ಯಸ್ಥರಾಗಿದ್ದ ನನ್ನ ಹಿತೈಷಿ ಶ್ರೀ ಬಿ.ವಿ. ವೈಕುಂಠ ರಾಜು ಅವರು. ಬಿ.ವಿ. ಕಾರಂತರು ಆಗ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯ ಮುಖ್ಯಸ್ಥರಾಗಿದ್ದರು. ಅಲ್ಲಿಂದ ಮದ್ರಾಸಿಗೆ ಬಂದು ಸಂಗೀತ ಸಂಯೋಜಿಸಿ ಕೆಲಸ ಮಾಡಿಕೊಟ್ಟರು. ಗೌರವಧನ ಕೊಡಲು ಹೋದಾಗ ‘ಇಂಥ ಸಿನಿಮಾಗಳನ್ನು ಮಾಡೋರೆ ಕಡಿಮೆ. ನನಗೆ ಸಂಭಾವನೆ ಬೇಡ. ಪ್ರಯಾಣ ವೆಚ್ಚ ಮಾತ್ರ ಕೊಡಿ ಸಾಕು’ ಎಂದರು. ಒತ್ತಾಯಿಸಿದರೂ ಗೌರವ ಸಂಭಾವನೆಯನ್ನು ಸ್ವೀಕರಿಸಲಿಲ್ಲ. + +ಸಿನಿಮಾ 1978 ಆಗಸ್ಟ್ 18 ರಂದು ಬಿಡುಗಡೆಯಾಯಿತು. ಆರ್ಥಿಕ ಗಳಿಕೆಯಲ್ಲಿ ಮುಗ್ಗರಿಸಿತು. ಎರಡು ಪ್ರಶಸ್ತಿಗಳು ಬಂದವು. ಆಗ ‘ಸಮುದಾಯ’ ರಂಗ ತಂಡದ ರೂವಾರಿಯಾಗಿದ್ದ ಶ್ರೀ ಪ್ರಸನ್ನ ನನ್ನ ‘ಒಂದು ಊರಿನ ಕತೆ’ ಸಿನಿಮಾ ಬಗ್ಗೆ ಅರ್ಥ ಪೂರ್ಣ ವಿಚಾರಸಂಕಿರಣವನ್ನು ಏರ್ಪಡಿಸಿದರು. ಡಾ. ಯು.ಆರ್. ಅನಂತಮೂರ್ತಿ, ಕೆ.ಎನ್. ಹರಿಕುಮಾರ್, ಬಿ.ಕೆ. ಚಂದ್ರಶೇಖರ್ ಮುಂತಾದವರೆಲ್ಲ ನನ್ನ ಸಿನಿಮಾ ಬಗ್ಗೆ ಮಾತಾಡಿದರು. ಈ ವಿಚಾರಸಂಕಿರಣದ ವಿವರಗಳು ‘ಸ್ಕ್ರೀನ್‌’ ಎಂಬ ಆಂಗ್ಲ ಪತ್ರಿಕೆಯಲ್ಲಿ ಪ್ರಕಟಗೊಂಡಿದ್ದು ಒಂದು ವಿಶೇಷ. ಇದೇ ಸಂದರ್ಭದಲ್ಲಿ ‘ಕನ್ನಡ ಪ್ರಭ’ದ ಸಿನಿಮಾ ಸುದ್ದಿ ಮುಖ್ಯಸ್ಥರಾಗಿದ್ದ ಶ್ರೀ ನಾರಾಯಣಸ್ವಾಮಿಯವರು (ಪ್ರಸಿದ್ಧ ನಿರೂಪಕಿ ಶ್ರೀಮತಿ ಅಪರ್ಣ ಅವರ ತಂದೆ) ತಮ್ಮ ನೇತೃತ್ವದ ಚಲನಚಿತ್ರ ಪತ್ರಕರ್ತರ ಪರಿಷತ್ತಿನ ವತಿಯಿಂದ ನನ್ನೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು. ಇದಕ್ಕೂ ಮುಂಚೆ ಶ್ರೀಮತಿ ವಿಜಯಾ ಅವರು ‘ರೂಪತಾರ’ ಚಲನಚಿತ್ರ ಮಾಸಿಕದಲ್ಲಿ ನನ್ನ ಮತ್ತು ‘ಒಂದು ಊರಿನ ಕತೆ’ ಕುರಿತು ಬಿಡುಗಡೆಗೆ ಮುಂಚೆ ಲೇಖನವನ್ನು ಬರೆದು ಪ್ರಕಟಿಸಿದ್ದರು. ಪ್ರಜಾವಾಣಿಯ ಸಾಪ್ತಾಹಿಕ ಪುರವಣಿಗೆ ಶ್ರೀ ಲಕ್ಷ್ಮಣ ಕೊಡಸೆ ಅವರು ಸಂದರ್ಶನ ಮಾಡಿದ್ದರು. ಹೀಗೆ ನಾನು ‘ನಿರ್ದೇಶಕ’ ಎಂಬ ವಿಷಯಕ್ಕೆ ಪ್ರಚಾರ ಸಿಕ್ಕಿತ್ತು. ಆದರೆ, ಆಮೇಲೆ ನನ್ನ ಸಿನಿಮಾ, ಗಳಿಕೆಯಲ್ಲಿ ಸೋತು ಸಾಲದ ಹೊರೆ ಹೆಚ್ಚತೊಡಗಿತು. ಆರ್ಥಿಕವಾಗಿ ಸೋತರೂ ಮನ್ನಣೆಯ ದೃಷ್ಟಿಯಿಂದ ಒಂದಿಷ್ಟು ಹೆಸರು ಬಂದಿತ್ತು. ಹಾಗೆಂದು, ಸಾಲ ಕೊಟ್ಟವರು ಸುಮ್ಮನಿರುತ್ತಾರೆಯೆ? ವಸೂಲಿ ಮಾಡಬೇಕಾದ್ದು ಅವರ ಜವಾಬ್ದಾರಿ. ಸಿನಿಮಾಕ್ಕೆ ಬರಬೇಕಾಗಿದ್ದ ಸಹಾಯಧನವೂ ಬಂದಿರಲಿಲ್ಲ. ಅದಕ್ಕೆ ಸರ್ಕಾರ ಕಾರಣವಲ್ಲ. ಮೇನೇಜರ್ ಬಳಿಯಿದ್ದ ಅನೇಕ ಅಗತ್ಯ ದಾಖಲೆಗಳು ಬೇಗ ಸಿಗಲಿಲ್ಲವಾದ್ದರಿಂದ ಸಹಾಯ ಧನಕ್ಕೆ ಅರ್ಜಿ ಹಾಕಲು ತಡವಾಗಿತ್ತು. ಅರ್ಜಿ ಹಾಕಿದಾಗ ನಮ್ಮ ಕಡೆಯ ಒಂದು ತಪ್ಪು ಬೆಳಕಿಗೆ ಬಂತು. ಸಿನಿಮಾ ಚಿತ್ರೀಕರಣಕ್ಕೆ ಮುಂಚೆ ಅಗತ್ಯ ಶುಲ್ಕ ಕಟ್ಟಿ ವಾರ್ತಾ ಇಲಾಖೆಯಿಂದ ಅನುಮತಿ ಪಡೆಯಬೇಕಿದ್ದು ನಮ್ಮ ಸಿನಿಮಾಕ್ಕೆ ಅನುಮತಿಯನ್ನೇ ಪಡೆದಿರಲಿಲ್ಲ. ಹೀಗಾಗಿ ಸರ್ಕಾರದ ಸಹಾಯ ಧನ ಸಿಗುವಂತಿರಲಿಲ್ಲ. ಮೊದಲೇ ಅರ್ಜಿ ಹಾಕಲು ವರ್ಷ ಉರುಳಿದೆ. ಈಗ ಈ ಸಂಕಷ್ಟ ಬೇರೆ ಹೆಡೆಯೆತ್ತಿ ನಿಂತಿದೆ. ಆಗ ಸಹಾಯಕ್ಕೆ ಬಂದವರು ವಾರ್ತಾ ಇಲಾಖೆಯ ನಿರ್ದೇಶಕರಾಗಿ ಪ್ರತಿ ನಿಯೋಜನೆಯ ಮೇಲೆ ಬಂದಿದ್ದ ಶ್ರೀ ವಿಜಯ ಸಾಸನೂರ ಅವರು. ವಿಜಯ ಸಾಸನೂರರು ಲೇಖಕರಾಗಿ ನನಗೆ ಪರಿಚತರು. ನನ್ನ ಸಾಮಾಜಿಕ ಕಾಳಜಿ ಬಗ್ಗೆ ವಿಶೇಷ ಅಭಿಮಾನವುಳ್ಳವರು. ಅವರಲ್ಲಿ ನಮ್ಮ ಕಡೆಯಿಂದ ಆಗಿರುವ ತಪ್ಪನ್ನು ತಿಳಿಸಿ ‘ಏನಾದರೂ ಮಾಡಿ’ ಎಂದು ಕೇಳಿಕೊಂಡೆ. ಅವರು ಅಧೀನ ಅಧಿಕಾರಿಗಳ ಜೊತೆ ಚರ್ಚಿಸಿದರು. ಅಧೀನ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ಈ ವೇಳೆಗೆ ಬ್ಯಾಂಕಿನಿಂದ ನೋಟಿಸ್ ಮೇಲೆ ನೋಟಿಸ್ ಬರತೊಡಗಿದ್ದವು. ನೋಟಿಸ್ ಕೊಟ್ಟು ಸಾಕಾಗಿ ಕೋರ್ಟ್ ಮೆಟ್ಟಿಲು ಹತ್ತಿದರು. ಆಗ ವಕೀಲರಾಗಿದ್ದ (ಈಗ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿವೃತ್ತರಾಗಿರುವ) ಶ್ರೀ ಎಚ್.ಎನ್. ನಾಗಮೋಹನ ದಾಸ್ ಅವರು ನನ್ನ ಪರವಾಗಿ ಕೋರ್ಟಿಗೆ ಹಾಜರಾದರು. ಎಂದಿದ್ದರೂ ಸಾಲ ಕಟ್ಟಲೇಬೇಕಿತ್ತಾದರೂ ಸ್ವಲ್ಪ ವಿಳಂಬ ಮಾಡಲು ಶ್ರೀ ನಾಗಮೋಹನದಾಸ್ ಸಾಕಷ್ಟು ಶ್ರಮಿಸಿದರು. ವಾದ ಮಂಡಿಸುತ್ತ, ಮುಂದೂಡಿಸುತ್ತ ಬಂದರು. ಸಂಭಾವನೆ ಸ್ವೀಕರಿಸದೆ ಸ್ನೇಹದಿಂದ ನಡೆದುಕೊಂಡರು. + +ವಿಜಯ ಸಾಸನೂರ ಅವರು ಒಂದು ಮಾರ್ಗ ಹುಡುಕಿದರು ‘ನಿಮ್ಮ ಪತ್ನಿ ನಿರ್ಮಾಪಕರು. ಮೊದಲನೇ ಸಿನಿಮಾ ನಿರ್ಮಾಣವಾದ್ದರಿಂದ ನಿಯಮಗಳ ಅರಿವಿರಲಿಲ್ಲ ಅಂತ ತಿಳಿಸಿ, ತಪ್ಪನ್ನು ಮನ್ನಿಸಿ ಸಹಾಯ ಧನ ಮಂಜೂರು ಮಾಡಲು ಮನವಿ ಮಾಡಿದ ಒಂದು ಪತ್ರ ಕೊಡಿಸಿ. ನಾನು ಸಚಿವರು ಮತ್ತು ಕಾರ್ಯದರ್ಶಿಗಳಿಗೆ ತಲುಪಿಸಿ ಖುದ್ದು ಮವನರಿಕೆ ಮಾಡಿ, ವಿಶೇಷ ಅನುಮತಿಯ ಆದೇಶ ಕೊಡಿಸಲು ಪ್ರಯತ್ನಿಸುವೆ’ ಎಂದರು. ನಾನು ಪತ್ನಿ ರಾಜಕ್ಷ್ಮಿಯಿಂದ ಮನವಿ ಪತ್ರವನ್ನು ಕೊಡಿಸಿದೆ. ಈ ವೇಳೆಗೆ ಕೋರ್ಟಿನಲ್ಲಿ ತೀರ್ಪು ಹೊರಟಿದ್ದು ಸಾಲಕ್ಕೆ ಖಾತರಿ ನೀಡಿದ್ದ ನನ್ನ ಸಂಬಳವನ್ನು ಮುಟ್ಟುಗೋಲು ಹಾಕಿಸಿ, ಅದರಿಂದ ಸಾಲ ವಸೂಲಿಗೆ ಆದೇಶ ನೀಡಲಾಯಿತು. ಆಗ ಆಘಾತಗೊಂಡಿತು ಮನಸ್ಸು. ಆದರೆ ಎದುರಿಸಲೇಬೇಕಾಗಿತ್ತು. ರಾಜಲಕ್ಷ್ಮಿಗೆ ‘ತಿಳಿಸಿದರೆ ಆಕೆಗೆ ಈ ಆಘಾತವನ್ನು ತಡೆದುಕೊಳ್ಳುವುದು ತುಂಬಾ ಕಷ್ಟ ವೆಂದು ಭಾವಿಸಿ ತಿಳಿಸಲೇ ಇಲ್ಲ! ವಿಶ್ವವಿದ್ಯಾಲಯದ ಅಧಿಕಾರಿಗಳಲ್ಲಿ ಮಾರ್ಗೋಪಾಯದ ಬಗೆ ಮನವಿ ಮಾಡಿದೆ. ಅವರು ಪೂರ್ಣ ಸಂಬಳವನ್ನು ಬ್ಯಾಂಕಿಗೆ ಕಟ್ಟಲು ಆಗದೆಂದೂ ಇಂತಿಷ್ಟು ಸಂಬಳವನ್ನು ನೇರವಾಗಿ ಬ್ಯಾಂಕಿಗೆ ಕಳಿಸುವುದಾಗಿಯೂ ಬರೆದರು. ಸದ್ಯ, ಬ್ಯಾಂಕಿನ ಮೇನೇಜರ್ ಮಲ್ಯ ಅವರು ತಮ್ಮ ಅಭ್ಯಂತರವಿಲ್ಲವೆಂದು ತಿಳಿಸಿದರು. ಏನಿಲ್ಲವೆಂದರೂ ಒಂದು ದಶಕಕ್ಕೂ ಹೆಚ್ಚು ಕಾಲ ಈ ವ್ಯವಸ್ಥೆ (ಅವಸ್ಥೆ) ಮುಂದು ವರೆಯಿತು. + +ಈ ನಡುವೆ, ಶ್ರೀ ವಿಜಯ ಸಾಸನೂರ ಅವರ ಪ್ರಯತ್ನ ಫಲ ನೀಡಿತು. ಸರ್ಕಾರದಿಂದ ನಮ್ಮ ಚಿತ್ರಕ್ಕೆ ಸಹಾಯಧನ ನೀಡಲು ಅನುಮತಿ ಸಿಕ್ಕಿತು. ತಪ್ಪಿಗಾಗಿ ಇಂತಿಷ್ಟು ಹಣ ಹಿಡಿದುಕೊಂಡು ಸಹಾಯಧನ ಕೊಡಬೇಕೆಂದು ಸೂಚಿಸಲಾಗಿತ್ತು. ಸಹಾಯಧನ ಸಿಗುವ ವೇಳೆಗೆ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ ಸೇರಿಸಿ ಸಾಕಷ್ಟು ಬಾಕಿ ಉಳಿಯುವಂತಾಗಿತ್ತು. ಬಾಕಿ ತೀರಿಸಲು ಸಂಬಳ ಕಡಿತವಾಗುತ್ತಲೇ ಇತ್ತು. + +ಇಷ್ಟೆಲ್ಲ ಆಗುತ್ತಿರುವಾಗಲೇ ಒಂದು ಅಹಿತಕರ ಘಟನೆಯು ನನ್ನ ಪತ್ನಿಯನ್ನು ಘಾಸಿಗೊಳಿಸಿತ್ತು. ಇದಕ್ಕೊಂದು ಹಿನ್ನೆಲೆಯೂ ಇತ್ತು. ನಾನು ಬ್ಯಾಂಕಿನಿಂದ ಸಾಲ ಪಡೆಯುವಾಗ ಮೊದಲಿಗೆ ಬ್ಯಾಂಕ್ ಖಾತೆಯಲ್ಲಿ ಒಂದಿಷ್ಟು ಹಣ ಇರಬೇಕೆಂದು ಮೇನೇಜರ್ ಹೇಳಿದ್ದರು. ಆಗ ಮಾತ್ರ ನಾನು ಕೇಂದ್ರ ಕಚೇರಿಗೆ ಸಾಲ ನೀಡಲು ಶಿಫಾರಸು ಮಾಡಲು ಸಾಧ್ಯ ಎಂದಿದ್ದರು. ಅದಕ್ಕಾಗಿ ಕೆಲವರನ್ನು ಕೇಳಿಯಾಯಿತು. ಆಗ ನೆರವಿನ ದಾರಿ ತೋರಿಸಿದವರು ನನ್ನ ಮಾಜಿ ವಿದ್ಯಾರ್ಥಿ ಗೋವಿಂದಯ್ಯ. ಇವರಿಗೆ ಸಮೀಪದವರಾದ ಶ್ರೀ ಶೇಷಾದ್ರಿ ಎನ್ನುವವರು 20 ಸಾವಿರ ರೂಪಾಯಿ ಹಣ ಕೊಡಲು ಸಿದ್ಧವಾಗಿರುವುದಾಗಿಯೂ ಅವರನ್ನು ಪಾಲುದಾರರಾಗಿ ಮಾಡಿಕೊಂಡರೆ ಮಾತ್ರ ಕೊಡುತ್ತಾರೆಂದೂ ಹೇಳಿದರು. ಶೇಷಾದ್ರಿಯವರು ಮೆಜೆಸ್ಟಿಕ್ ವೃತ್ತದಲ್ಲಿ ಒಂದು ಅಂಗಡಿ ನಡೆಸುತ್ತಿದ್ದರು. ಅವರನ್ನು ಭೇಟಿಯಾದೆ. ಮಾತುಕತೆ ನಡೆದು ಅವರನ್ನು ‘ಸಹ ನಿರ್ಮಾಪಕ’ರೆಂದು ಮಾಡುವ ಒಪ್ಪಂದವಾಯಿತು. ಅಸಲು ಹಣವನ್ನು ಸೂಕ್ತ ಬಡ್ಡಿ ಸಮೇತ ತೀರಿಸಬೇಕು. ಮೈತ್ರಿ ಆರ್ಟ್ಸ್ಗೆ ಅವರು ಪಾಲುದಾರರಲ್ಲ. ‘ಒಂದು ಊರಿನ ಕತೆ’ ಸಿನಿಮಾಕ್ಕೆ ಸಹ ನಿರ್ಮಾಪಕರು ಮಾತ್ರ. ಇದಿಷ್ಟು ಒಪ್ಪಂದದ ಸಾರ. ಸಿನಿಮಾ ಸೋತ ಮೇಲೆ ಸಹಜವಾಗಿ ಅವರು ಹಣವನ್ನು ವಾಪಸ್ ಮಾಡಲು ಒತ್ತಡ ಮಾಡತೊಡಗಿದರು. ಅವರು ಕೊಟ್ಟ ಹಣವನ್ನು ವಾಪಸ್ ಮಾಡಲು ನನ್ನಲ್ಲಿ ಹಣವಿಲ್ಲ. ಯಾರನ್ನಾದರೂ ಕೇಳಬೇಕು. ಸಂಸಾರ ನಡೆಸುವುದೇ ಕಷ್ಟವಾಗಿರುವಾಗ ಮತ್ತಷ್ಟು ಸಾಲ ಎಲ್ಲಿ ಮಾಡುವುದು? ಆಗ ಒಬ್ಬ ‘ಹಿತೈಷಿ’ 25 ಸಾವಿರ ರೂಪಾಯಿಗಳ ಸಾಲ ಕೊಟ್ಟರು. ಶೇಷಾದ್ರಿಯವರಿಗೆ ಈ ಹಣವನ್ನು ಕೊಟ್ಟೆ. ತುಂಬಾ ಸ್ನೇಹದಿಂದಲೇ ಹಣ ನೀಡಿದ ಆ ‘ಹಿತೈಷಿ’ ಕೆಲ ಕಾಲಾನಂತರ ಕಟು ಮಾತುಗಳಿಂದ ವಾಪಸ್ ಕೇಳ ತೊಡಗಿದರು. ಒಂದು ದಿನ ನಾನು, ನನ್ನ ಪತ್ನಿ ಮತ್ತು ಇಬ್ಬರು ಪುತ್ರರು (ಮೈತ್ರಿ ಬರಗೂರ್ ಮತ್ತು ಸ್ಫೂರ್ತಿ ಬರಗೂರ್) ಸ್ನೇಹಿತರೊಬ್ಬರ ಮನೆಗೆ ಹೋಗಲು, ನಮ್ಮ ಬಾಡಿಗೆ ಮನೆಯಿಂದ ಹೊರಬಂದು ರಸ್ತೆಯಲ್ಲಿ ಹತ್ತಾರು ಹೆಜ್ಜೆ ಹಾಕುವಾಗ ಎದುರಿಗೆ ಅದೇ ಆಸಾಮಿ ಬಂದು ಹಣ ಕೇಳಿದರು. ಕೆಟ್ಟದಾಗಿ ಮಾತಾಡಿದರು. ನಾನು ಬೀದಿಯಲ್ಲಿ ಹೀಗೆಲ್ಲ ಮಾತಾಡಬೇಡಿ ಎಂದರೂ ಸುಮ್ಮನಾಗದೆ ನನ್ನನ್ನು ಅವಮಾನಿಸ ತೊಡಗಿದಾಗ ನಾನು ರೇಗಿ ಎಚ್ಚರಿಕೆ ನೀಡಿದೆ. ಆಗ ಸ್ವಲ್ಪ ತಣ್ಣಗಾದ ವ್ಯಕ್ತಿ, ಒಂದು ವಾರ ಗಡುವು ನೀಡಿ ನಿರ್ಗಮಿಸಿದ. ಪತ್ನಿ ರಾಜಲಕ್ಷ್ಮಿಯ ಕಣ್ಣುಗಳು ಸಿಟ್ಟು ಮತ್ತು ಸಂಕಟದಲ್ಲಿ ಕುದಿಯುತ್ತಿದ್ದವು. ಮಕ್ಕಳು ದಿಗ್ಭ್ರಾಂತರಾಗಿದ್ದರು. ನನ್ನ ಮನಸ್ಸು ಕುಸಿದು ಹೋಗಿತ್ತು. ‘ಮನೆಗೆ ವಾಪಸ್ ಹೋಗೋಣ’ ಎಂಬ ಪತ್ನಿಯ ಒತ್ತಾಯವನ್ನು ನಯವಾಗಿ ನಿರಾಕರಿಸಿ ಸ್ನೇಹಿತರ ಮನೆಗೆ ಹೋಗಲು ಒಪ್ಪಿಸಿದೆ. ಸ್ನೇಹಿತ ಶಾಮಸುಂದರರಾವ್ ಅವರು ಸಾಯಂಕಾಲದ ತಿಂಡಿಗೆ ಕರೆದಿದ್ದರು. ಅವರು ಮದುವೆಯಾದಾಗ ಅವರ ಪತ್ನಿ ಕೆಲ ಕಾಲ ನಮ್ಮ ಮನೆಯಲ್ಲೇ ಇದ್ದರು. ನನ್ನ ಪತ್ನಿಯ ಆರೈಕೆ, ಸ್ನೇಹ ಅವರಿಗೆ ಲಭಿಸಿ ಎರಡೂ ಕುಟುಂಬದ ನಡುವೆ ಸ್ನೇಹ ವಿಸ್ತಾರವಾಗಿತ್ತು. ಅವರ ಮನೆಗೆ ಹೋಗಿ ಸ್ವಲ್ಪ ಕಾಲ ಇದ್ದರೆ ನನ್ನ ಪತ್ನಿ ಮತ್ತು ಮಕ್ಕಳ ಮನಸ್ಸಿಗೆ ಸ್ವಲ್ಪವಾದರೂ ತಾತ್ಕಾಲಿಕ ಸಾಂತ್ವನ ಆದೀತೆಂದು ಭಾವಿಸಿ ನಾನು ಕರೆದೊಯ್ದೆ. + +ಮತ್ತೆ ಮನೆಗೆ ವಾಪಸ್ ಆದಾಗ ಸಹಿಸಲಾಗದ ಮೌನ. ಸಾಯಂಕಾಲ ತಿಂದ ತಿಂಡಿಯೇ ಸಾಕೆಂದು ರಾತ್ರಿ ಊಟ ಬೇಡವೆಂದುಕೊಂಡು ಸುಮ್ಮನಾದೆವು.ಮುಂದೆ ಬರೆಯಲು ಕೈ ಓಡುತ್ತಿಲ್ಲ….. ನಿಲ್ಲಿಸಿದೆ. ನೆನಪಿನಲ್ಲಿ ತೋಯ್ದು ತಳಮಳಿಸಿದೆ. ಸ್ವಲ್ಪ ಹೊತ್ತಿನ ನಂತರ ಚೇತರಿಸಿಕೊಂಡೆ. ಮುಂದೇನಾಯಿತೆಂದು ನೋವಿನಲ್ಲೇ ಬರೆಯಬೇಕಾಗಿದೆ. ಮಡದಿ, ಮಕ್ಕಳ ಕ್ಷಮೆ ಕೋರಿ ಬರೆಯುತ್ತೇನೆ. + +‘ನನಗೆ ಎಂಥಾದಾದ್ರು ಒಂದು ಕೆಲ್ಸ ಕೊಡ್ಸಿ’ ಎಂದು ರಾಜಲಕ್ಷಿ÷್ಮ ಕೇಳಿದಾಗ ಮುಖ ನೋಡಿದೆ. ಅಲ್ಲಿ ದುಗುಡವೂ ಇತ್ತು; ದೃಢ ನಿರ್ಧಾರವೂ ಇತ್ತು. ಹಿಂದೆ ಅಲ್ಪ ಸಂಬಳದ ಒಂದು ಖಾಸಗಿ ಉದ್ಯೋಗದಲ್ಲಿದ್ದು ಅದನ್ನು ಮಕ್ಕಳ ಆರೈಕೆಗಾಗಿ ಬಿಟ್ಟಿದ್ದ ರಾಜಲಲಕ್ಷ್ಮಿ ಈಗ ನನ್ನ ಕಷ್ಟಕ್ಕಾಗಲು ಮತ್ತೆ ಕೆಲಸಕ್ಕೆ ಸೇರಲು ಸಿದ್ಧವಾಗಿದ್ದನ್ನು ಕಂಡೆ. ‘ಅಗಲಿ ಹುಡುಕ್ತೇನೆ’ ಎಂದೆ. ಮಾರನೇ ದಿನದಿಂದಲೇ ಅವರಿವರನ್ನು ಕೇಳಿದೆ. ಕೆಲಸ ಸಿಗಲಿಲ್ಲ. ಆಗ ರಾಜಲಕ್ಷ್ಮಿ ‘ನಾನು ಸ್ವೆಟರ್ ಹಾಕೋದನ್ನು ಬಲ್ಲೆ. ಸ್ವೆಟರ್ ಹಾಕಿ ಯಾವುದಾದರೂ ಸ್ಕೂಲಿಗೆ ಕೊಡೋಣ. ಸ್ಕೂಲಿನವರ ಯೂನಿಫಾರಂಗೆ ಬೇಕಾಗುತ್ತಲ್ಲ’ ಎಂದು ಹೇಳಿದ್ದಲ್ಲದೆ ಸ್ವೆಟರ್ ನೇಯ್ಗೆಗೆ ಪೂರಕವಾದ ಒಂದು ಸಣ್ಣ ಯಂತ್ರ ಕೊಡಿಸಲು ಕೇಳಿದಳು. ಮತ್ತೆ ಸಾಲ ಮಾಡಿದೆ; ಕೊಡಿಸಿದೆ. ಮನೆಯಲ್ಲಿ ಸ್ವೆಟರ್ ಹೆಣಿಗೆ ಆರಂಭ ವಾಯಿತು. ರಾಜಲಲಕ್ಷ್ಮಿ ಶ್ರಮವನ್ನು ಧಾರೆಯೆರೆದು ಹೆಣೆಯುತ್ತಿದ್ದ ಸ್ವೆಟರ್‌ಗಳಲ್ಲಿ ನಮ್ಮ ಕುಟುಂಬದ ಕಷ್ಟದ ಎಳೆಗಳಿದ್ದವು. ಆರೋಗ್ಯಕ್ಕೆ ಸ್ವಲ್ಪ ಧಕ್ಕೆಯಾಗುತ್ತಿದೆಯೆಂದು ಗೊತ್ತಾದಾಗ ಈ ಕೆಲಸವನ್ನು ನಿಲ್ಲಿಸಲು ಹೇಳಿದೆ. ನನ್ನ ಮಕ್ಕಳಾದರೂ ಅಷ್ಟೆ; ಯಾವತ್ತೂ ಇಂಥದೇ ಬೇಕೆಂದು ಕೇಳಿದವರಲ್ಲ. ಹೊಂದಿಕೊಂಡು ಬೆಳೆದರು. ಅವರ ಬೆಳವಣಿಗೆ ನಮ್ಮ ಸುಖದ ನೆಲೆಯಾಗಿತ್ತು. + +ಬೀದಿಯಲ್ಲಿ ಸಾಲ ವಸೂಲಾತಿಗೆ ನಿಂತ ‘ಹಿತೈಷಿ’ಯ ವಿಷಯಕ್ಕೆ ಮತ್ತೆ ಬರುತ್ತೇನೆ. ಮತ್ತೆ ಮನೆಗೆಲ್ಲಿ ಬರುತ್ತಾನೊ ಎಂಬ ಅಳುಕು. ಯಾಕೆಂದರೆ ಆತನಿಗೆ ಹಣ ಕೊಡಲು ಸಾಧ್ಯವಾಗಿರಲಿಲ್ಲ. ಆಗ ಇನ್ನಷ್ಟು ಕಾಲಾವಕಾಶ ಕೇಳಬೇಕಾಗಿತ್ತು. ಎದುರು ಹೋಗಿ ಕೇಳಿದರೆ ಮತ್ತೆ ಜಗಳವಾದೀತೆಂದು ಭಾವಿಸಿ ಒಂದು ಪತ್ರ ಬರೆದು ಅದನ್ನು ಆತನಿಗೆ ತಲುಪಿಸಲು ನಿರ್ಧರಿಸಿದೆ. ಪತ್ರವನ್ನು ತಲುಪಿಸಿ ತಿಳಿ ಹೇಳಲು ಹೋದವರು ಅಂದಿನ ನನ್ನ ವಿದ್ಯಾರ್ಥಿ ದೊಡ್ಡಹುಲ್ಲೂರು ರುಕ್ಕೋಜಿ ಮತ್ತು ಇನ್ನೊಬ್ಬ ವಿದ್ಯಾರ್ಥಿ ಪದ್ಮರಾಜ್. ಇವರು ಹೋಗಿ ಪತ್ರ ಕೊಟ್ಟು ಸಂಯಮದಿಂದಿರಲು ಹೇಳಿ ಬಂದದ್ದನ್ನು ನಾನು ಮರೆಯಲಾರೆ. ಪದ್ಮರಾಜ್ ನಮ್ಮನ್ನು ಬೇಗ ಅಗಲಿ ಹೋದರು. ರುಕ್ಕೋಜಿ ಗಣನೀಯ ಸಾಧನೆ ಮಾಡತೊಡಗಿದರು. ಚಲನಚಿತ್ರ ಪತ್ರಕರ್ತರಾಗಿ ಬೆಳೆದರು. ಡಾ. ರಾಜಕುಮಾರ್ ಅವರ ಬದುಕು ಮತ್ತು ಸಿನಿಮಾ ಸಾಧನೆ ಬಗ್ಗೆ ಒಂದು ದಶಕ ಮೀರಿ ಸಂಶೋಧನಾತ್ಮಕ ಕೆಲಸ ಮಾಡಿ, ಎರಡು ಬೃಹತ್ ಸಂಪುಟಗಳನ್ನು ಬರೆದು, ಪ್ರಕಟಿಸಿ ದಾಖಲೆ ಮಾಡಿದರು. ಇಂದಿಗೂ ನನ್ನ ಸ್ನೇಹಿತರು. ಇವರ ಪತ್ನಿ ಮಧುಮತಿಯವರು ಆಂಗ್ಲ ಸಾಹಿತ್ಯದ ಎಂ.ಎ. ಪದವೀಧರೆ, ಕನ್ನಡ ಕವಿಯತ್ರಿ. + +ನನ್ನ ಕಷ್ಟಕ್ಕೆ ಆಗಿಬಂದ ಸ್ನೇಹಿತರು, ಮುಖಾಮುಖಿಯಲ್ಲೇ ಮೆಚ್ಚಿದವರು, ಕಷ್ಟ ಕೊಟ್ಟವರು, ಗೊತ್ತಾಗದೆಂದು ಭಾವಿಸಿ ಬೆನ್ನ ಹಿಂದಿನ ಬಾಯಾದವರು, ಮನಸಾರೆ ಹಿತೈಷಿಗಳಾಗಿ ಸಂತೈಸಿದವರು, ಮನಸ್ಸು ಮುದುಡಿಕೊಳ್ಳದೆ, ದುಡುಕದೆ, ದಾರಿಯುದ್ದಕ್ಕೂ ಧೈರ್ಯದ ಸಹಪಯಣ ಮಾಡಿದ ಮಡದಿ ಮಕ್ಕಳು ನನ್ನನ್ನು ಬೆಳೆಸಿದ್ದಾರೆ. ಅಂತೂ ಒಂದು ದಶಕಕ್ಕೂ ಹೆಚ್ಚು ಕಾಲ ಅನುಭವಿಸಿದ ಸಿನಿಮಾ ಸಾಲದ ಸಂಕಟವನ್ನು ಮುಂದೊಮ್ಮೆ ದಾಟಿದೆ. ಪೂರ್ಣ ಸಂಬಳವನ್ನು ಪಡೆಯುವಂತಾದೆ. ಅಬ್ಬಾ! ಹೀಗೆ ದಡ ಸೇರಲು ಸುಮಾರು ಹತ್ತು-ಹನ್ನೆರಡು ವರ್ಷಗಳಾದವು!ಛೆ! ನಾನೆಂಥವನು? ನಾನು ಸಿನಿಮಾ ನಿರ್ದೇಶಕನಾಗಬೇಕೆಂಬ ಆಕಾಂಕ್ಷೆಗೆ ಮಡದಿ ಮಕ್ಕಳ ಸುಖದ ಬಹುಪಾಲು ಕಸಿದುಕೊಳ್ಳಬೇಕಿತ್ತೆ? ಅವರನ್ನು ಉಪವಾಸಕ್ಕೀಡು ಮಾಡಲಿಲ್ಲವೆಂಬುದು ನಿಜ. ಆದರೆ ಅಪಮಾನದ ಅನುಭವ ಉಪವಾಸಕ್ಕಿಂತ ಕಡು ಕಷ್ಟ. ಇಷ್ಟಾಗಿಯೂ ಎಷ್ಟೋ ಕಷ್ಟದ (ಅಪಮಾನದ) ಸಂಗತಿಗಳನ್ನು ಮನೆಯಿಂದ ಮುಚ್ಚಿಟ್ಟು ನಾನೇ ಅನುಭವಿಸಿದ್ದುಂಟು. ಆದರೂ ಪಾಪಪ್ರಜ್ಞೆ ಕಾಡುತ್ತದೆ. ನಾನು ಮಾಡಿದ್ದು ಸರಿಯೆ ಎಂಬ ಪ್ರಶ್ನೆ ಮೂಡುತ್ತದೆ. ನಾನು ಕಷ್ಟದ ದಿನಗಳಲ್ಲಿ ಎಂಥ ಸ್ಥಿತಿ ತಲುಪಿದ್ದೆನೆಂದರೆ ವಿಶ್ವವಿದ್ಯಾಲಯದ ಅಧ್ಯಾಪಕನಾಗಿ ಕೆಲಸಕ್ಕೆ ಹೋಗುವಾಗ ತಳದಲ್ಲಿ ತೂತು ಬಿದ್ದಿದ್ದ ಶೂಗಳನ್ನು ಹಾಕಿಕೊಳ್ಳುವ ಅನಿವಾರ್ಯ ಎದುರಿಸಿದ್ದೆ. ತಳದಲ್ಲಿ ತೂತು ಇದ್ದದ್ದರಿಂದ ಯಾರಿಗೂ ಗೊತ್ತಾಗುತ್ತಿರಲಿಲ್ಲ. ಇದು ಅಂದಿನ ನನ್ನ ಬದುಕಿನ ಸಂಕೇತವೂ ಹೌದು. ಸಿನಿಮಾ ಮಾಡುವುದಕ್ಕೆ ಮುಂಚೆ ತುಮಕೂರು ಮತ್ತು ಬೆಂಗಳೂರಿನ ಸರ್ಕಾರಿ ಕಾಲೇಜಿನ ಅಧ್ಯಾಪಕನಾಗಿದ್ದಾಗ ಫುಲ್ ಸೂಟ್ ಮತ್ತು ಶೂಗಳನ್ನು ಧರಿಸಿ ಠಾಕುಠೀಕಾಗಿ ಹೋಗುತ್ತಿದ್ದವನು ಈಗ ಹೀಗಾದೆನಲ್ಲ ಎಂದು ಒಂದು ಕ್ಷಣ ಅನ್ನಿಸಿದರೂ ಅದು ಕ್ಷಣಿಕ. ನನ್ನ ಚಿಂತೆ ಏನಿದ್ದರೂ ಮಡದಿ ಮಕ್ಕಳ ಮನಸ್ಸಿನಲ್ಲಿ ಮೂಡಿದ ಸಂಕಟ ಗಳ ಬಗ್ಗೆ ಮಾತ್ರ. + +ಇಷ್ಟು ವಿವರಗಳನ್ನು ಹೇಳಲು ಒಂದು ಕಾರಣವಿದೆ. ಸಿನಿಮಾ ಕ್ಷೇತ್ರಕ್ಕೆ ಸೇರಲು ಅಪೇಕ್ಷಿಸಿ ಅನೇಕರು ನನ್ನನ್ನು ಸಂಪರ್ಕಿಸುತ್ತಾರೆ. ಇಲ್ಲಿ ದಿಢೀರ್ ಪ್ರಸಿದ್ಧಿಯಾಗಬಹು ದೆಂದು ಭಾವಿಸಿದವರು (ಭ್ರಮಿಸಿದವರು) ಇವರಲ್ಲಿ ಹೆಚ್ಚು. ಆದರೆ ಒಂದು ನೀತಿ ನಮ್ಮದಾಗಬೇಕು: ಕಷ್ಟಪಡದೆ ಇಷ್ಟವಾದದ್ದು ದಕ್ಕುವುದಿಲ್ಲ. ಕಳೆದುಕೊಳ್ಳದೆ ಗಳಿಕೆಗೆ ಬೆಲೆಯಿಲ್ಲ. ಸಂಕಟವಿಲ್ಲದೆ ಸಾಧನೆ ಸಾಧ್ಯವಿಲ್ಲ. ಇದು ವಿಶೇಷವಾಗಿ ಸಿನಿಮಾಕರ್ಷಿತರಿಗೆ ಅರ್ಥವಾಗಬೇಕು. ಈ ಹಿನ್ನೆಲೆಯಲ್ಲೇ ನಾನೊಂದು ಮಾತು ಹೇಳುತ್ತಿರುತ್ತೇನೆ – ಮೂರನೇ ತರಗತಿ ಮಾತ್ರ ಓದಿದವರೆಲ್ಲರೂ ಡಾ. ರಾಜಕುಮಾರ್ ಆಗಲು ಸಾಧ್ಯವಿಲ್ಲ. ಬಸ್ ಕಂಡಕ್ಟರ್ ಆಗಿದ್ದವರೆಲ್ಲರೂ ರಜನೀಕಾಂತ್ ಆಗಲು ಸಾಧ್ಯವಿಲ್ಲ. ಹಾಗೆಂದು ಸುಮ್ಮನಿರಬೇಕೆಂಬುದು ನನ್ನ ಮಾತಿನ ಅರ್ಥವಲ್ಲ. ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ಕೊಳ್ಳುವ ಶ್ರಮ, ಸಂಕಲ್ಪ, ಬದ್ಧತೆಗಳು ಬೇಕು, ಛಲ ಬೇಕು. + +ನಿಜ, ನಾನು ನಿರ್ದೇಶಕನಾಗಬೇಕೆಂದು ಪತ್ನಿಯ ಹೆಸರಲ್ಲಿ ಸಾಲ ಮಾಡಿ ಸಿನಿಮಾ ನಿರ್ಮಿಸಿದ್ದಾಯಿತು. ಕಷ್ಟ ನಷ್ಟ ಅನುಭವಿಸಿದ್ದಾಯಿತು. ಹಾಗೆಂದು ಅಲ್ಲಿಗೇ ಸುಮ್ಮನಿರಬೇಕೆ? ‘ಒಂದು ಊರಿನ ಕತೆ’ಗೇ ನನ್ನ ಸಿನಿಮಾ ಕತೆ ಮುಗಿಯಬೇಕೆ? ಇಲ್ಲ, ಸೋತಲ್ಲಿಯೇ ಗೆಲ್ಲಬೇಕು; ಗಟ್ಟಿಯಾಗಬೇಕು – ಇದು ನನ್ನ ನಿರ್ಧಾರವಾಗಿತ್ತು. + +ಆಗ ನನ್ನ ನೆರವಿಗೆ ಬಂದವರು ಶ್ರೀ ವೈ.ಎಸ್.ವಿ. ದತ್ತ ಅವರು. ವೈ.ಎಸ್.ವಿ. ದತ್ತ ಅವರು ಬೆಂಗಳೂರಿನ ರಾಜಾಜಿನಗರ ವಾಸಿಯಾಗಿದ್ದು ಅದೇ ಬಡಾವಣೆಯಲ್ಲಿ ಟ್ಯುಟೋರಿಯಲ್ ನಡೆಸುತ್ತಿದ್ದರು. ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿ ಸುತ್ತಿದ್ದರು. ಇವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾಳಜಿಯಿಂದ ನಾನು ಹತ್ತಿರವಾಗಿದ್ದೆ. ನನ್ನ ಪರಿಚಯದ ನಂತರ ಅವರು ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ನನ್ನೊಂದಿಗೆ ಸಮಾಲೋಚಿಸುತ್ತಿದ್ದರು. ಶ್ರೀ ಎಚ್.ಡಿ. ದೇವೇಗೌಡರ ಸಮೀಪವರ್ತಿಯಾಗಿದ್ದ ಇವರು ನನ್ನನ್ನೂ ಒಳಗೊಂಡಂತೆ ಆಯ್ದ ಸಾಹಿತಿ-ಚಿಂತಕರನ್ನು ಶ್ರೀ ದೇವೇಗೌಡರ ಬಳಿಗೆ ಕರೆದೊಯ್ದು ಚರ್ಚೆಗೆ ಅನುವು ಮಾಡಿಕೊಡುತ್ತಿದ್ದರು. ನನ್ನ ಮತ್ತು ಇವರ ಸ್ನೇಹದ ಫಲವೆಂಬಂತೆ ಒಂದು ಸಿನಿಮಾವನ್ನು ನಿರ್ಮಿಸಲು ಆಸಕ್ತಿ ತೋರಿಸಿದರು. ಆಗ ನನ್ನ ಪತ್ನಿ ರಾಜಲಕ್ಷ್ಮಿ ಮತ್ತು ದತ್ತ – ಇಬ್ಬರೂ ಪಾಲುದಾರರಾಗಿ ಸಿನಿಮಾ ನಿರ್ಮಾಣ ಮಾಡುವುದೆಂದು ನಿರ್ಧರಿಸಿದೆವು. ದತ್ತ ಮತ್ತು ನನ್ನ ಮೊದಲ ಮಗನ ಹೆಸರನ್ನು ಜೋಡಿಸಿ ‘ಮೈತ್ರಿದತ್ತ ಮೂವೀಸ್’ ಎಂಬ ಸಂಸ್ಥೆಯನ್ನು ನೋಂದಣಿ ಮಾಡಿಸಿದೆವು. ಈ ಸಂಸ್ಥೆಯಿಂದ ನಿರ್ಮಾಣವಾದ ಚಿತ್ರವೇ ನನ್ನ ಅದೇ ಹೆಸರಿನ ಕಾದಂಬರಿಯಾಧಾರಿತ ‘ಬೆಂಕಿ’. ಈ ಚಿತ್ರ ನಿರ್ಮಾಣಕ್ಕೆ ನಾನು ಕಲಾಜ್ಯೋತಿ ವೆಂಕಟೇಶ್ ಎಂಬುವರಿಂದ ಸಾಲ ಮಾಡಿ ಅರ್ಧ ಹಣ ಹಾಕಿದೆ. ಉಳಿದ ಹಣವನ್ನು ದತ್ತ ತೊಡಗಿಸಿದರು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಮೀಳಾ ಜೋಷಾಯ್, ಮಾನು, ಎಂ.ಎಸ್. ಉಮೇಶ್, ಮುಖ್ಯಮಂತ್ರಿ ಚಂದ್ರು, ಮೈಲಾರಿ ರಾವ್ ಮುಂತಾದವರು ಅಭಿನಯಿಸಿದರು. + +ಎಸ್. ರಾಮಚಂದ್ರ ಅವರ ಛಾಯಾಗ್ರಹಣ ಮತ್ತು ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಿಂದ ಕೂಡಿದ ಈ ಸಿನಿಮಾವನ್ನು ನಮ್ಮ ತಾಲ್ಲೂಕಿನ ಮಾಗೋಡು ಎಂಬ ಗ್ರಾಮ ಮತ್ತು ಸಿರಾ ಹಾಗೂ ಮಧುಗಿರಿ ತಾಲ್ಲೂಕುಗಳ ಗಡಿಯಲ್ಲಿರುವ ಬಸ್ಮಂಗಿ ಬೆಟ್ಟದಲ್ಲಿ ಚಿತ್ರೀಕರಿಸಿದೆ. ಚಿತ್ರ ನಿರ್ಮಾಣದ ಉಸ್ತುವಾರಿಗಳಾಗಿ ನನ್ನ ಮಿತ್ರ ಶ್ರೀ ಜೆ.ಸು.ನಾ ಮತ್ತು ದತ್ತ ಅವರ ಬಳಗದ ಶ್ರೀ ಕೆ.ವಿ. ನಾಗರಾಜಮೂರ್ತಿ ವಹಿಸಿ ಕೊಂಡಿದ್ದರು. ಚಿತ್ರೀಕರಣಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡುತ್ತಿದ್ದರು. ‘ಒಂದು ಊರಿನ ಕತೆ’ ಚಿತ್ರಕ್ಕೆ ಸಹ ನಿರ್ದೇಶಕರೂ ಸಹ ಸಂಕಲನಕಾರರೂ ಆಗಿದ್ದ ಸುರೇಶ್ ಅರಸು ‘ಬೆಂಕಿ’ಗೆ ಮುಖ್ಯ ಸಂಕಲನಕಾರರಾದರು. ಅಲ್ಲಿಂದ ನನ್ನ ಎಲ್ಲ ಚಿತ್ರಗಳಿಗೂ ಅವರೇ ಸಂಕಲನಕಾರರು. ಮಣಿರತ್ನಂ ನಿರ್ದೇಶನದ ‘ಬಾಂಬೆ’ ಚಿತ್ರದ ಸಂಕಲನಕ್ಕಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಸಾಧಕರು. ಸುರೇಶ್ ಅರಸು ಅವರು ಇಲ್ಲೀವರೆಗೆ ಕನ್ನಡ, ತಮಿಳು, ತೆಲುಗು, ಹಿಂದಿ, ಒರಿಯಾ ಮುಂತಾದ ಸುಮಾರು 700 ಚಿತ್ರಗಳಿಗೆ ಸಂಕಲನ ಮಾಡಿದ ನಮ್ಮ ಹೆಮ್ಮೆಯ ಗೆಳೆಯ. ನನ್ನ ಕುಟುಂಬದ ಆತ್ಮೀಯ. ‘ಬೆಂಕಿ’ ಚಿತ್ರದಲ್ಲಿ ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ವಾಣಿ ಜಯರಾಂ ಅವರು ಹಾಡಿದ್ದು ಒಂದು ವಿಶೇಷ. ಕಲಾತ್ಮಕ ಅಥವಾ ಹೊಸ ಅಲೆಯ ಚಿತ್ರವೆಂಬ ಹೆಸರಿನಿಂದ ಪ್ರಚುರಗೊಂಡ ಸಿನಿಮಾಗಳು, ಹಾಡುಗಳನ್ನು ಮತ್ತು ಮುಖ್ಯವಾಹಿನಿ ಚಿತ್ರಗಳ ಜನಪ್ರಿಯ ನಟ-ನಟಿಯರನ್ನು ಒಳಗೊಳ್ಳದೆ ಇದ್ದ ಕಾಲವದು. ನಾನು ನನ್ನ ನಿರ್ದೇಶನದ ಸಿನಿಮಾಗಳಲ್ಲಿ ಹಾಡುಗಳನ್ನು ಅಳವಡಿಸಿದೆ. ಜನಪ್ರಿಯ ಕಲಾವಿದರನ್ನೂ ಹಾಕಿಕೊಳ್ಳತೊಡಗಿದೆ. ಒಂದು ವಿಶೇಷವೆಂದರೆ ‘ಬೆಂಕಿ’ ಚಿತ್ರ ನಿರ್ದೇಶನದ ಜೊತೆಗೆ ನನ್ನನ್ನು ‘ಬೆಂಕಿ ಬರಗೂರ್’ ಎಂದು ಕರೆಯತೊಡಗಿದ್ದು ಉಂಟು. ಇದಕ್ಕೆ ನನ್ನ ನೇರ ನಡೆ-ನುಡಿ ಕಾರಣವೆಂದು ಕಾಣುತ್ತೆ. + +ಇನ್ನೊಂದು ವಿಷಯವನ್ನೂ ಇಲ್ಲಿ ಹೇಳಬೇಕು. ಚಿತ್ರೀಕರಣಕ್ಕೆಂದು ನಾನು ಆಯ್ಕೆ ಮಾಡಿಕೊಂಡ ಸ್ಥಳಗಳು ಸಾಂಪ್ರದಾಯಿಕ ರಮಣೀಯ ಸ್ಥಳಗಳಲ್ಲ. ಅಂದರೆ ಹಸಿರು, ನದಿ ತೀರ ಇತ್ಯಾದಿಗಳಿಂದ ಕೂಡಿದ ಸ್ಥಳಗಳಲ್ಲ. ಬಯಲು ಸೀಮೆಯ ಬೆಟ್ಟ, ಗುಡ್ಡ, ಹಸಿರಿಲ್ಲದೆ ಒಣಗಿದ ಪರಿಸರಗಳನ್ನು ಆಯ್ಕೆ ಮಾಡಿಕೊಂಡೆ. ಪ್ರಕೃತಿಯಲ್ಲಿರುವ ಸಮಸ್ತವೂ ಮುಖ್ಯವೆಂಬ ತಾತ್ವಿಕತೆ ನನ್ನದು. ನನ್ನ ಸಿನಿಮಾ ಕತೆಗಳು ಬಹುಪಾಲು ನಮ್ಮ ತುಮಕೂರು ಜಿಲ್ಲೆಯ ಸಿರಾ, ಮಧುಗಿರಿ, ಪಾವಗಡ, ದೇವರಾಯನ ದುರ್ಗ, ಚಿತ್ರದುರ್ಗ – ಇವೇ ಮುಂತಾದ ವಲಯಗಳಿಗೆ ಹೊಂದುತ್ತಿದ್ದ ವಸ್ತುವನ್ನು ಒಳ ಗೊಂಡಿದ್ದವು. ‘ಶಾಂತಿ’ ಸಿನಿಮಾವನ್ನು ಮಾತ್ರ ಮಡಿಕೇರಿಯ ವಾತಾವರಣದಲ್ಲಿ ಚಿತ್ರಿಸಿದೆ. + +ಇರಲಿ; ಈಗ ‘ಬೆಂಕಿ’ ಚಿತ್ರದ ವಿಷಯಕ್ಕೆ ಮತ್ತೆ ಬರುತ್ತೇನೆ. ಈ ಚಿತ್ರ ಎರಡನೇ ಅತ್ಯುತ್ತಮ ನಿರ್ದೇಶಕ ಮತ್ತು ಅತ್ಯುತ್ತಮ ಕತೆಗಾಗಿ ರಾಜ್ಯ ಸರ್ಕಾರದ ಮೂರು ಪ್ರಶಸ್ತಿ ಗಳನ್ನು ಪಡೆಯಿತು. ವಿಶೇಷ ಏನು ಗೊತ್ತ? ಎರಡನೇ ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿ ಯನ್ನು ನಮ್ಮ ‘ಬೆಂಕಿ’ ಚಿತ್ರಕ್ಕೆ ಕೊಡಲಾಗಿತ್ತಾದರೂ ಮೊದಲನೇ ಅತ್ಯುತ್ತಮ ಚಿತ್ರವೆಂದು ಯಾವುದೇ ಚಿತ್ರಕ್ಕೆ ಪ್ರಶಸ್ತಿ ನೀಡದಿರಲು ಆಯ್ಕೆ ಸಮಿತಿ ತೀರ್ಮಾನಿಸಿತ್ತು. ಇದು ಚರ್ಚೆಗೂ ಗ್ರಾಸವಾಗಿತ್ತು. ಅತ್ಯುತ್ತಮ ಚಿತ್ರವೆಂದು ಆಯ್ಕೆ ಮಾಡುವುದು ಆಯಾ ವರ್ಷದಲ್ಲಿ ನಿರ್ಮಾಣಗೊಂಡವುಗಳಲ್ಲಿ ಅತ್ಯುತ್ತಮ ಎಂದೇ ಹೊರತು ಸಾರ್ವಕಾಲಿಕ ಅತ್ಯುತ್ತಮ ಎಂದಲ್ಲ. ಆದ್ದರಿಂದ ಮೊದಲನೇ ಅತ್ಯುತ್ತಮ ಚಿತ್ರವೆಂದು ಯಾವುದೇ ಚಿತ್ರಕ್ಕೆ ಪ್ರಶಸ್ತಿ ಕೊಡದೆ ಇರುವ ಬದಲು ಎರಡನೇ ಅತ್ಯುತ್ತಮ ಚಿತ್ರವನ್ನೇ ಮೊದಲನೇ ಸ್ಥಾನಕ್ಕೆ ಆಯ್ಕೆ ಮಾಡಬಹುದಿತ್ತು. ಆದರೆ ಆಯ್ಕೆ ಸಮಿತಿಗೆ ಹಾಗೆ ಅನ್ನಿಸಿರಲಿಲ್ಲ. ಅವರ ಕಣ್ಣಲ್ಲಿ ನನ್ನ ಚಿತ್ರ ‘ಶ್ರೇಷ್ಠ’ವಲ್ಲ! + +‘ಬೆಂಕಿ’ಗೆ ಆದಂತೆಯೇ ನನ್ನ ನಿರ್ದೇಶನದ ಮೂರನೇ ಚಿತ್ರ ‘ಸೂರ್ಯ’ಕ್ಕೆ ‘ಭಾರತೀಯ ಪನೋರಮ’ ಆಯ್ಕೆಯಲ್ಲಿ ಆಯಿತು. ಕ್ಷಮಿಸಿ; ಈ ಪನೋರಮ ಪ್ರಸಂಗವನ್ನು ನನ್ನ ‘ಸೂರ್ಯ’ ಚಿತ್ರಕ್ಕೆ ಮಾತ್ರ ಅನ್ಯಾಯವೆಂದು ಹೇಳಿದರೆ ತಪ್ಪಾದೀತು. ಇಡೀ ಕನ್ನಡ ಚಿತ್ರರಂಗಕ್ಕೇ ಆದ ಅನ್ಯಾಯ ಎನ್ನಬಹುದು. ಅನ್ಯಾಯ ಎಂಬ ಪದ ಅತಿ ಎನ್ನಿಸಿದರೆ ‘ನಿರ್ಲಕ್ಷ್ಯ’, ‘ಉಪೇಕ್ಷೆ’ ಎಂದೂ ಕರೆಯಬಹುದು. ಈ ‘ಪನೋರಮ’ ಪ್ರಸಂಗಕ್ಕೆ ಬರುವ ಮುಂಚೆ ‘ಸೂರ್ಯ’ ನಿರ್ಮಾಣದ ಕುರಿತು ಕೆಲವು ವಿವರಗಳನ್ನು ಹೇಳಬಯಸುತ್ತೇನೆ. + +‘ಸೂರ್ಯ’ ನನ್ನದೇ ಕಿರು ಕಾದಂಬರಿಯಾಧಾರಿತ ಸಿನಿಮಾ. ಇದರ ನಿರ್ಮಾಣ ಮಾಡಿದವರು ಬಳ್ಳಾರಿಯಲ್ಲಿ ವಕೀಲರಾಗಿದ್ದ ಶ್ರೀ ನಟರಾಜ್ ಅವರು. ನಟರಾಜ್ ಅವರನ್ನು ಪರಿಚಯಿಸಿದವರು ಬಳ್ಳಾರಿಯ ಗೆಳೆಯ, ಶ್ರೀ ದಯಾನಂದ್ ಅವರು. ಇವರು ಕೂಡ ವಕೀಲರಾಗಿದ್ದರು. ಈ ವಕೀಲರಿಬ್ಬರೂ ಕಲಾಸಕ್ತರು. ನಟರಾಜ್ ಅವರು ಗಾಯಕರೂ ಹೌದು. ‘ಸೂರ್ಯ’ ಸಿನಿಮಾದಲ್ಲಿ ಶ್ರೀ ವಿಜಯಭಾಸ್ಕರ್ ಅವರ ಸಂಗೀತ ನಿರ್ದೇಶನದಲ್ಲಿ ಡಾ. ಜಿ.ಎಸ್. ಶಿವರುದ್ರಪ್ಪನವರ ಕವನವೊಂದನ್ನು ಹಾಡಿದ್ದರು. ಈ ಸಿನಿಮಾದ ಚಿತ್ರೀಕರಣವನ್ನು ಮಧುಗಿರಿ ತಾಲ್ಲೂಕಿನ ಇಟಕದಿಬ್ಬನಹಳ್ಳಿಯಲ್ಲಿ ಮಾಡಿದೆ. ಇಟಕದಿಬ್ಬನಹಳ್ಳಿಯನ್ನು ಚುಟುಕಾಗಿ ಐ.ಡಿ.ಹಳ್ಳಿ ಎಂದು ಕರೆಯುತ್ತಾರೆ. ‘ಶ್ರೀ ರಘು ಐ.ಡಿ.ಹಳ್ಳಿ’ ಎಂಬ ಹೆಸರಿನ ನನ್ನ ಹಳೆಯ ವಿದ್ಯಾರ್ಥಿ, ದೂರದರ್ಶನದ ಉದ್ಯೋಗಿ; ನನ್ನ ಕುಟುಂಬದ ಸದಸ್ಯರೆಂಬಷ್ಟು ಆತ್ಮೀಯರು. ಇವರು ತಮ್ಮ ಊರಿನಲ್ಲಿದ್ದ ತಮ್ಮ ಪೂರ್ವಿಕರ ಮನೆಯೊಂದನ್ನು ತೋರಿಸಿದರು. ಆ ದೊಡ್ಡ ಮನೆಯು ನನ್ನ ಸಿನಿಮಾ ವಸ್ತುವಿಗೆ ಹೊಂದುತ್ತಿತ್ತು. ಹೀಗಾಗಿ ಐ.ಡಿ.ಹಳ್ಳಿಯಲ್ಲೇ ಚಿತ್ರೀಕರಿಸಲು ನಿರ್ಧರಿಸಿದೆ. ರಘು ಅವರ ಪೂರ್ಣ ಸಹಕಾರ ಮತ್ತೆ ಗೆಳೆಯ ಜೆ.ಸು.ನಾ. ಅವರ ಉಸ್ತುವಾರಿಯಲ್ಲಿ ‘ಸೂರ್ಯ’ ಚಿತ್ರ ನಿರ್ಮಾಣ ನಡೆಯಿತು. + +‘ಸೂರ್ಯ’ ಸಿನಿಮಾದ ನಾಯಕಿ ಪಾತ್ರದಲ್ಲಿ ಹಿಂದಿ ಸಿನಿಮಾರಂಗದಲ್ಲಿ ಹೆಸರು ಮಾಡಿದ ರೋಹಿಣಿ ಹಟ್ಟಂಗಡಿಯವರು ಅಭಿನಯಿಸಿದ್ದು ಹೆಸರಿಸಬೇಕಾದ ವಿಶೇಷ ವಿಷಯ. ಅದೇ ತಾನೆ ಅವರು ಕಸ್ತೂರ್‌ಬಾ ಪಾತ್ರದಲ್ಲಿ ಅಭಿನಯಿಸಿದ ‘ಗಾಂಧಿ’ ಚಿತ್ರಕ್ಕೆ ಆಸ್ಕರ್ ಅವಾರ್ಡ್ ಬಂದಿತ್ತು. ನಾನು ರೋಹಿಣಿ ಹಟ್ಟಂಗಡಿಯವರನ್ನು ಸಂಪರ್ಕಿಸಿದಾಗ, ನಾನು ಮೂಲತಃ ಸಾಹಿತಿ ಮತ್ತು ಕನ್ನಡ ಪ್ರಾಧ್ಯಾಪಕ ಎಂದು ತಿಳಿದು ಸಂತೋಷದಿಂದ ಒಪ್ಪಿಕೊಂಡರು. ಅವರ ಪತಿ ಕರ್ನಾಟಕದ ‘ಹಟ್ಟಂಗಡಿ’ಯವರು. ಆದರೆ ಕನ್ನಡದ ಸಂಪರ್ಕ ಕಡಿಮೆ. ಹೀಗಾಗಿ ಅವರಿಗೆ ಕನ್ನಡ ಸಂಭಾಷಣೆಗಳನ್ನು ಹಿಂದಿ ಲಿಪಿಯಲ್ಲಿ ಬರೆದು ಚಿತ್ರೀಕರಣಕ್ಕೆ ಮೊದಲೇ ಕಳಿಸಲು ನಿರ್ಧರಿಸಿದೆ. ಹಿಂದಿ ಲಿಪಿಯಲ್ಲಿ ಕನ್ನಡ ಸಂಭಾಷಣೆಯನ್ನು ಬರೆದುಕೊಟ್ಟಿದ್ದು ನನ್ನ ಪತ್ನಿ ರಾಜಲಕ್ಷ್ಮಿ. ರಾಜಲಕ್ಷ್ಮಿಗೆ ಹಿಂದಿ ಓದಲು, ಬರೆಯಲು ಚೆನ್ನಾಗಿ ಬರುತ್ತಿತ್ತು. ಇಡೀ ಚಿತ್ರದ ರೋಹಿಣಿಯವರ ಸಂಭಾಷಣೆ ಗಳನ್ನು ರಾಜಲಕ್ಷ್ಮಿ ಹಿಂದಿಯಲ್ಲಿ ಬರೆದುಕೊಟ್ಟ ಮೇಲೆ ಅವರಿಗೆ ಕಳಿಸಿದೆ. ರಾಜಲಕ್ಷ್ಮಿ ಬಗ್ಗೆ ಇನ್ನೊಂದು ವಿಷಯ ಹೇಳಲೇಬೇಕು. ನನ್ನ ನಿರ್ದೇಶನದ ಅನೇಕ ಚಿತ್ರಗಳಿಗೆ ವಸ್ತç ವಿನ್ಯಾಸ ಮಾಡಿದ್ದು ರಾಜಲಕ್ಷ್ಮಿ. + +‘ಸೂರ್ಯ’ ಚಿತ್ರದಲ್ಲಿ ಪ್ರಸಿದ್ಧ ಕಲಾವಿದರಾದ ಲೋಕೇಶ್, ಮಾನು, ಪ್ರಮೀಳಾ ಜೋಷಾಯ್ ಮುಂತಾದವರು ಅಭಿನಯಿಸಿದ್ದರು. ಈ ವೇಳೆಗೆ ಆತ್ಮೀಯರಾಗಿದ್ದ ಮೈಲಾರಿರಾವ್ ಎಂಬ ರಂಗಾಸಕ್ತರು ‘ಒಂದು ಊರಿನ ಕತೆ’ಯಿಂದ ಆರಂಭಿಸಿ ಅವರು ಇರುವವರೆಗೂ ನನ್ನ ಚಿತ್ರಗಳಲ್ಲಿ ಒಂದಲ್ಲ ಒಂದು ಪಾತ್ರವನ್ನು ಮಾಡಿದ್ದರು. ಇವರ ಪರಿಚಯ ಪ್ರಸಂಗವೂ ಒಂದು ಆಸಕ್ತಿದಾಯಕ ಸಂಗತಿ. ಇವರು ಪಾತ್ರ ಮಾಡಿದ್ದ ಕೆಲವು ಸ್ಥಿರ ಚಿತ್ರಗಳನ್ನು ನಾನು ನೋಡಿದ್ದೆ. 1978ರಲ್ಲಿ ನಿರ್ದೇಶಿಸಿದ ‘ಒಂದು ಊರಿನ ಕತೆ’ಯ ಜೋಯಿಸರ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬೇಕೆಂದಿದ್ದೆ. ಈ ಮುಂಚೆಯೇ ಸುಂದರನಾಥ ಸುವರ್ಣ ಅವರಿಗೆ ಇವರು ಪರಿಚಯವಿದ್ದರು. ಅವರ ಮೂಲಕ ನನ್ನನ್ನು ಭೇಟಿಯಾಗಲು ತಿಳಿಸಿದೆ. ಶ್ರೀ ಮೈಲಾರಿರಾವ್ ಮನೆಗೆ ಬಂದರು. ಬೆಲ್ ಮಾಡಿದರು. ನಾನು ಬಾಗಿಲು ತೆಗೆದೆ. ನೆಟ್ ಬನೀನು ಧರಿಸಿದ್ದ ನನ್ನನ್ನು ನೋಡಿ ‘ಬರಗೂರು ರಾಮಚಂದ್ರಪ್ಪ ಅವರನ್ನು ನೋಡಬೇಕಿತ್ತು’ ಎಂದರು. ‘ಬನ್ನಿ ಕೂತ್ಕೊಳ್ಳಿ’ ಎಂದು ಒಳಗೆ ಕರೆದು ಕೂಡಿಸಿ, ನಾನು ಒಳಗೆ ಹೋದೆ; ಷರಟು ಹಾಕಿ ಕೊಂಡು ಬಂದು ಕೂತು ‘ಹೇಳಿ’ ಎಂದೆ. ಅವರು ‘ಅದೇ ಬರಗೂರು ರಾಮಚಂದ್ರಪ್ಪ ನವರನ್ನು ಕಾಣಬೇಕಿತ್ತು. ಅವರಿಲ್ಲವಾ?’ ಎಂದು ಮತ್ತೆ ಕೇಳಿದರು. ನನ್ನನ್ನು ಅವರು ಮುಂಚೆ ನೋಡಿರಲಿಲ್ಲ. ಆಗ ಪತ್ರಿಕೆಗಳಲ್ಲಿ – ಈಗಿನಂತೆ – ನನ್ನ ಫೋಟೋ ಕೂಡ ಬಂದಿರಲಿಲ್ಲ. ನಾನು ನಸುನಗುತ್ತಾ ‘ಅವರನ್ನ ಕಾಣಬೇಕೆ? ಅದೇನು ಹೇಳಿ’ ಎಂದೆ. ‘ಅದೇ ಅವರು…’ ಎನ್ನುತ್ತಿದ್ದ ಅವರ ಮಾತನ್ನ ತಡೆದು ‘ಅವರು, ನಾನೇ. ನಾನೇ ಬರಗೂರು ರಾಮಚಂದ್ರಪ್ಪ’ ಎಂದೆ. ಅವರು ತಬ್ಬಿಬ್ಬು. ಆಮೇಲೆ ಮಾತು ಮುಂದು ವರೆಯಿತು. ನನ್ನ ಮೊದಲ ಸಿನಿಮಾದ ಜೋಯಿಸರಾದರು! ‘ಬೆಂಕಿ’ ಮತ್ತು ‘ಸೂರ್ಯ’ ದಲ್ಲೂ ಪಾತ್ರ ಮಾಡಿದರು. + +‘ಸೂರ್ಯ’ ಚಿತ್ರೀಕರಣದಲ್ಲಿ ರೋಹಿಣಿ ಹಟ್ಟಂಗಡಿಯವರನ್ನು ಒಳಗೊಂಡಂತೆ ಪ್ರಸಿದ್ಧ ಕಲಾವಿದರಾದ ಲೋಕೇಶ್, ಮಾನು, ಪ್ರಮೀಳಾ ಜೋಷಾಯ್, ಛಾಯಾಗ್ರಾಹಕ ಎಸ್.ಆರ್. ಭಟ್, ಸಹ ನಿರ್ದೇಶಕರಾಗಿದ್ದ ಪರಮೇಶ ಕಾರ್ತಿಕ್ ಮತ್ತು ಲಿಂಗರಾಜ ಕಗ್ಗಲ್ ತಮ್ಮದೇ ಸ್ವಂತ ಸಿನಿಮಾ ಎಂಬಂತೆ ಸಹಕರಿಸಿದರು. ಈಗ ಪರಮೇಶ್ ಕಾರ್ತಿಕ್ ಮತ್ತು ಲಿಂಗರಾಜ ಕಗ್ಗಲ್ ಇಬ್ಬರೂ ಇಲ್ಲ. ಲೋಕೇಶ್, ಮಾನು ಕೂಡ ಅಗಲಿ ಹೋದರು. ಮಾನು ಮೂಲತಃ ಕನ್ನಡ ಅಧ್ಯಾಪಕರಾಗಿ ನನಗೆ ಪರಿಚಿತರು. ಆತ್ಮೀಯರು. ಲೋಕೇಶ್ ಅವರು ನಮ್ಮ ತಂಡಕ್ಕೆ ಹೊಸಬರು. ಆದರೆ ಒಮ್ಮೊಮ್ಮೆ ಅವರೇ ವಿಶೇಷ ಅಡುಗೆ ಮಾಡಿ ತಂಡಕ್ಕೆ ಬಡಿಸುವಷ್ಟು ಸಹಕಾರಿಯಾದರು. ಅವರೊಬ್ಬ ಅಪರೂಪದ ಕಲಾವಿದರು. + +ಈಗ ‘ಭಾರತೀಯ ಪನೋರಮ’ ಪ್ರಸಂಗಕ್ಕೆ ಬರುತ್ತೇನೆ. ಭಾರತ ಸರ್ಕಾರವು ಪ್ರತಿ ವರ್ಷ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವನ್ನು ವ್ಯವಸ್ಥೆ ಮಾಡುತ್ತದೆ. ಮೊದಲು ಪ್ರತಿ ವರ್ಷವೂ ಒಂದೊಂದು ರಾಜ್ಯದ ಆತಿಥ್ಯದಲ್ಲಿ ವ್ಯವಸ್ಥೆ ಮಾಡಲಾಗುತ್ತಿತ್ತು. ಕೆಲ ವರ್ಷಗಳಿಂದ ಗೋವಾ, ಭಾರತ ಸರ್ಕಾರ ನಡೆಸುವ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವದ ಖಾಯಂ ಸ್ಥಳವಾಗಿದೆ. ದೇಶ-ವಿದೇಶದ ಆಯ್ದ ಚಲನಚಿತ್ರಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ; ಅಂತೆಯೇ ಭಾರತೀಯ ಚಿತ್ರಗಳಿಗಾಗಿಯೇ ‘ಭಾರತೀಯ ಪನೋರಮ’ ಎಂಬ ಪ್ರತ್ಯೇಕ ವಿಭಾಗವೂ ಇರುತ್ತದೆ. ಈ ವಿಭಾಗಕ್ಕೆ ಭಾರತೀಯ ಭಾಷೆಗಳ ಚಿತ್ರಗಳು ಪ್ರದರ್ಶನಕ್ಕಾಗಿ ಸ್ಪರ್ಧಿಸಬಹುದು. ಆಯ್ಕೆ ಸಮಿತಿಯು ನಿರ್ದಿಷ್ಟ ಸಂಖ್ಯೆಯ ಚಿತ್ರಗಳನ್ನು ಆಯ್ಕೆ ಮಾಡುತ್ತದೆ. ಆಯ್ಕೆ ಸಮಿತಿಯಲ್ಲಿ ಕನ್ನಡವನ್ನೂ ಒಳಗೊಂಡಂತೆ ವಿವಿಧ ಭಾಷೆಗಳ – ವಿಶೇಷವಾಗಿ ಹೆಚ್ಚು ಸಿನಿಮಾ ನಿರ್ಮಾಣದ ರಾಜ್ಯಗಳ – ಪ್ರತಿನಿಧಿಗಳು ಇರುತ್ತಾರೆ. + +ನಮ್ಮ ‘ಸೂರ್ಯ’ ಸಿನಿಮಾ ‘ಭಾರತೀಯ ಪನೋರಮ’ಕ್ಕಾಗಿ ಸ್ಪರ್ಧಿಸಿತ್ತು. ಇದು ಪ್ರಶಸ್ತಿಯ ಸ್ಪರ್ಧೆ ಅಲ್ಲ; ಪ್ರದರ್ಶನಕ್ಕಾಗಿ ಸ್ಪರ್ಧೆ, ಅಷ್ಟೆ. ಒಂದು ದಿನ ನಾನು, ಸಂಕಲನಕಾರ ಸುರೇಶ್ ಅರಸು, ಛಾಯಾಗ್ರಾಹಕ ಎಸ್.ಆರ್. ಭಟ್ ಮಾತಾಡುತ್ತಾ ಕೂತಿದ್ದೆವು. ಸುರೇಶ್ ಅರಸು ಅವರು ಸಂಕಲನ ಕಚೇರಿಯಲ್ಲಿ ನಮ್ಮ ಮಾತುಕತೆ. ಸುರೇಶ್ ಅರಸು ಅವರಿಗೆ ಅವರ ಆತ್ಮೀಯರೊಬ್ಬರಿಂದ ಫೋನ್ ಬಂತು. ಫೋನ್‌ನಲ್ಲಿ ಮಾತಾಡಿದ ಸುರೇಶ್, ಖುಷಿಯಾಗಿ ನನ್ನ ಕೈಕುಲುಕಿದರು. ನಾನು ಕುತೂಹಲದಿಂದ ನೋಡಿದೆ. ‘ಬಾಂಬೆಯ ನನ್ನ ಆತ್ಮೀಯರೊಬ್ಬರ ಫೋನ್ ಸಾರ್ ಇದು. ಇನ್ನೇನು ಪನೋರಮ ಚಿತ್ರಗಳ ಪಟ್ಟಿ ಪ್ರಕಟಿಸ್ತಾರಂತೆ. ನಮ್ಮ ‘ಸೂರ್ಯ’ ಸೆಲೆಕ್ಟ್ ಆಗಿದೆಯಂತೆ’ ಎಂದರು. ನನಗೆ, ಎಸ್.ಆರ್. ಭಟ್ಟರಿಗೆ ಖುಷಿಯೋ ಖುಷಿ. ನಾನು ಸುರೇಶ್ ಮತ್ತು ಎಸ್.ಆರ್. ಭಟ್ ಅವರನ್ನು ಹತ್ತಿರದ ಹೋಟೆಲ್‌ಗೆ ಕರೆದುಕೊಂಡು ಹೋಗಿ ಸಿಹಿ ತಿಂಡಿ ಕೊಡಿಸಿದೆ. ಮಾರನೇ ದಿನ ಪತ್ರಿಕೆಗಳನ್ನು ನೋಡಿದಾಗ ‘ಸೂರ್ಯ’ ಸಿನಿಮಾದ ಹೆಸರೇ ಇರಲಿಲ್ಲ. ಯಾಕೆಂದರೆ ಆಯ್ಕೆಯಾಗಿರಲಿಲ್ಲ. ಸುರೇಶ್ ತನ್ನ ಆತ್ಮೀಯರಿಗೆ ಫೋನಾಯಿಸಿದಾಗ ‘ನನಗೂ ಗೊತ್ತಾಗ್ತಿಲ್ಲ. ಕೊನೇ ಗಳಿಗೆ ರಾಜಕೀಯ ಇರಬಹುದು. ಇಷ್ಟೇ ಸಿನಿಮಾ ಸೆಲೆಕ್ಟ್ ಮಾಡ್ಬೇಕು ಅಂತಿರೋದ್ರಿಂದ ಬೇರೆ ಯಾವುದನ್ನೋ ಸೇರಿಸಲು ನಿಮ್ಮ ಸಿನಿಮಾ ಬಿಟ್ಟಿರಬಹುದು’ ಎಂದರಂತೆ. ಯಾವುದು ನಿಜವೋ ಗೊತ್ತಿಲ್ಲ. ಸುರೇಶ್ ಅವರ ಆತ್ಮೀಯರ ಮಾಹಿತಿಯೇ ತಪ್ಪಾಗಿರಬಹುದು ಅಥವಾ ಕೊನೇ ಗಳಿಗೆಯ ಚಮತ್ಕಾರವೂ ಇರಬಹುದು. ಏಕಪಕ್ಷೀಯ ನಿರ್ಧಾರ ಮಾಡಲಾರೆ. ನಿರಾಸೆಯಾದದ್ದು ನಿಜವಾದರೂ ಸ್ಪರ್ಧೆಯ ಫಲಿತಾಂಶಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕು. ನಿಯಮಗಳನ್ನು ಉಲ್ಲಂಘಿಸಿ ತಪ್ಪು ಮಾಡಿದ್ದರೆ ಪ್ರಶ್ನಿಸಬೇಕು. ಇದು ನನ್ನ ನಿಲುವು. ಈ ಪ್ರಕರಣದಲ್ಲಿ ನಿಯಮಗಳ ಉಲ್ಲಂಘನೆ ಆಗಿರುವುದಕ್ಕೆ ಆಧಾರವಿರಲಿಲ್ಲ. ಆದರೆ ಆಯ್ಕೆಯ ಅಧಿಕಾರ ಬಳಸಿ ಕನ್ನಡ ಸಿನಿಮಾಗಳಿಗೆ ಅನ್ಯಾಯ ಮಾಡಲಾಗಿತ್ತು. ನಮ್ಮ ‘ಸೂರ್ಯ’ ಸಿನಿಮಾ ಆಯ್ಕೆ ಆಗದಿದ್ದರೆ ಹೋಗಲಿ ‘ಕನ್ನಡದ ಯಾವ ಸಿನಿಮಾನೂ ಪನೋರಮ ಆಯ್ಕೆಗೆ ಅರ್ಹವಲ್ಲ’ ಎಂದು ಷರಾ ಬರೆಯಲಾಗಿತ್ತು! ಅರ್ಥಾತ್ ಕನ್ನಡದ ಯಾವೊಂದು ಸಿನಿಮಾವನ್ನೂ ಆಯ್ಕೆ ಮಾಡಿರಲಿಲ್ಲ. ಹಾಗಾದರೆ ಕನ್ನಡ ಸಿನಿಮಾರಂಗದಲ್ಲಿ ಆ ವರ್ಷ ಪನೋರಮ ಪ್ರದರ್ಶನಕ್ಕೆ ಅರ್ಹವಾದ ಒಂದೇ ಒಂದು ಸಿನಿಮಾನೂ ಇರಲಿಲ್ಲವೆ? ಕನ್ನಡದ ಪ್ರಸಿದ್ಧ ನಿರ್ದೇಶಕರೊಬ್ಬರು ಆಯ್ಕೆ ಸಮಿತಿಯಲ್ಲಿ ಇದ್ದರು. ಒಟ್ಟಿನಲ್ಲಿ ಬೇರೆ ಭಾಷೆಗಳ ತಲಾ ಎರಡು, ಮೂರು, ನಾಲ್ಕು ಸಿನಿಮಾಗಳು ಆಯ್ಕೆಯಾದರೂ ಕನ್ನಡಕ್ಕೆ ಮಾತ್ರ ಜಾಗವಿಲ್ಲ! ಶ್ರೇಷ್ಠತೆಯ ಮಾನದಂಡವೆಂದರೆ ‘ಅನ್ಯಾಯ’ವೆ? + +ನಮ್ಮ ‘ಸೂರ್ಯ’ ಸಿನಿಮಾ ‘ಭಾರತೀಯ ಪನೋರಮ’ಕ್ಕೆ ಆಯ್ಕೆ ಆಗಲಿಲ್ಲ ಎನ್ನುವುದು ಒಂದು ಸತ್ಯವಾದರೆ, ನಾನು ಅರ್ಜಿ ಹಾಕದೆಯೂ, ಸೋವಿಯತ್ ರಷ್ಯಾದ ಪ್ರತಿಷ್ಠಿತ ‘ಮಾಸ್ಕೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾದದ್ದು ಇನ್ನೊಂದು ಸತ್ಯ! ಅದು ಆದದ್ದು ಹೀಗೆ : ಒಂದು ದಿನ ನನಗೆ ಭಾರತ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆಯಿಂದ ಟೆಲಿಗ್ರಾಂ ಬಂತು. (ಆಗ ಇ-ಮೇಲ್ ಇರಲಿಲ್ಲ). ಅದರಲ್ಲಿ ನಮ್ಮ ‘ಸೂರ್ಯ’ ಚಿತ್ರವನ್ನು ‘ಮಾಸ್ಕೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸೋವಿಯತ್ ರಷ್ಯಾ ನಿಯೋಗ ಆಯ್ಕೆ ಮಾಡಿಕೊಂಡಿದೆಯೆಂದು ತಿಳಿಸಿ ಶುಭ ಕೋರಲಾಗಿತ್ತು. ನನ್ನ ಆನಂದ ಉಕ್ಕಿತಾದರೂ ಇದರ ಸತ್ಯಾಸತ್ಯತೆ ತಿಳಿಯಲು ಭಾರತ ಸರ್ಕಾರದ ವಾರ್ತಾ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದೆ. ಒಂದು ವೇಳೆ ಇದೂ ಸುಳ್ಳಾಗಬಾರದಲ್ಲ? ಅವರು ಆಯ್ಕೆಯನ್ನು ಖಚಿತಪಡಿಸಿದರು. ಮಾಸ್ಕೊ ಚಿತ್ರೋತ್ಸವಕ್ಕೆ ಅರ್ಜಿಯನ್ನೇ ಹಾಕಿಲ್ಲ; ಆಯ್ಕೆ ಹೇಗೆ ಸಾಧ್ಯ ಎಂದು ಕೇಳಿದೆ. ಅವರು ವಿವರಿಸಿದ್ದು ಹೀಗೆ : ಸೋವಿಯತ್ ರಷ್ಯಾದಿಂದ ಒಂದು ಚಲನಚಿತ್ರ ನಿಯೋಗ ದೆಹಲಿಗೆ ಬಂದಿತ್ತು. ಭಾರತದ ಒಂದಷ್ಟು ಸಿನಿಮಾಗಳನ್ನು ತೋರಿಸಿ ಎಂದು ಕೇಳಿದರು. ಆಗ ದೆಹಲಿಯಲ್ಲಿ ಭಾರತೀಯ ಪನೋರಮ ಸ್ಪರ್ಧೆಗೆ ಹೋಗಿದ್ದ ಸಿನಿಮಾಗಳ ಪ್ರಿಂಟ್‌ಗಳಿದ್ದವು. ಅವುಗಳಲ್ಲಿ ಕೆಲವನ್ನು ನಿಯೋಗಕ್ಕೆ ತೋರಿಸಿದರು. ಆ ನಿಯೋಗದವರು ನಮ್ಮ ‘ಸೂರ್ಯ’ ಸಿನಿಮಾವನ್ನು ಆಯ್ಕೆ ಮಾಡಿಕೊಂಡರು. ‘ಸೂರ್ಯ’ ಸಿನಿಮಾ ನಮ್ಮ ದೇಶದಿಂದ ಮಾಸ್ಕೊ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ ಮಾಡಿಕೊಂಡ ಏಕೈಕ ಚಿತ್ರವಾಗಿತ್ತು! ಅರ್ಥಾತ್ ನಮ್ಮ ದೇಶವನ್ನು ಪ್ರತಿನಿಧಿಸಿತ್ತು – ಇದಿಷ್ಟು ಅಧಿಕಾರಿ ನೀಡಿದ ವಿವರ. ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ನಾವು ಮೊದಲು ಅರ್ಜಿ ಸಲ್ಲಿಸಬೇಕು. ಆನಂತರ ಆಯಾ ದೇಶದ ಆಯ್ಕೆ ಸಮಿತಿಯವರು ಸಿನಿಮಾಗಳನ್ನು ವೀಕ್ಷಿಸಿ ಅವರಿಗೆ ಅತ್ಯುತ್ತಮ ಅನ್ನಿಸಿದವುಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ‘ಸೂರ್ಯ’ ವಿಷಯದಲ್ಲಿ ಹೀಗಾಗಲಿಲ್ಲ. ‘ಸೂರ್ಯ’ ಚಿತ್ರ ಆಯ್ಕೆಯಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗ ನಾನು ನಿರ್ದೇಶಕ ಎನ್. ಲಕ್ಷ್ಮಿನಾರಾಯಣ ಅವರಿಗೆ ವಿವರಗಳನ್ನು ತಿಳಿಸಿದೆ. ಅವರು ‘ಬಹುಶಃ ನಿಯೋಗಕ್ಕೆ ಅಯ್ಕೆಯ ಅಧಿಕಾರ ನೀಡಿರಬಹುದು. ಇಲ್ಲದಿದ್ದರೆ ಅವರು ಹಾಗೆಲ್ಲ ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವರ ದೇಶದ ನಿಯಮದಲ್ಲೇ ಇಂಥದೊಂದು ಅವಕಾಶ ಕಲ್ಪಿಸಿರುತ್ತಾರೆ’ ಎಂದರು. ನನಗೆ ಆಗ ಸಮಾಧಾನವಾಯಿತು. + +ಈಗ ಅರ್ಥ ಮಾಡಿಕೊಳ್ಳಬಹುದು; ಸೋವಿಯತ್ ರಷ್ಯಾ ನಿಯೋಗ ಆಯ್ಕೆ ಮಾಡುತ್ತೆ. ಪನೋರಮ ಆಯ್ಕೆ ಸಮಿತಿ ನಿರಾಕರಿಸುತ್ತೆ! ಇಂಥ ವಿಪರ್ಯಾಸಗಳ ನಡುವೆಯೇ ಸಾಧನೆಯ ಹಾದಿಯಲ್ಲಿ ಸಾಗಬೇಕಾಗುತ್ತೆ! + +ಮುಂದೆ ಕರ್ನಾಟಕ ರಾಜ್ಯ ಸರ್ಕಾರದ ಆಯ್ಕೆ ಸಮಿತಿಯು ಎರಡನೇ ಅತ್ಯುತ್ತಮ ಚಿತ್ರವೆಂದು ‘ಸೂರ್ಯ’ ಚಿತ್ರವನ್ನು ಆಯ್ಕೆ ಮಾಡಿತು. ಜೊತೆಗೆ ಎರಡನೇ ಅತ್ಯುತ್ತಮ ನಿರ್ದೇಶನಕ್ಕಾಗಿ ನನಗೆ, ಅತ್ಯುತ್ತಮ ಛಾಯಾಗ್ರಾಹಕರಾಗಿ ಎಸ್.ಆರ್. ಭಟ್ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿತು. + +‘ಸೂರ್ಯ’ದ ನಂತರ ಮಾಡಿದ ‘ಕೋಟೆ’ ಚಿತ್ರ ಪ್ರಶಸ್ತಿ ವಿಷಯದಲ್ಲೂ ಇಂಥ ದೊಂದು ಸುದ್ದಿ ಹಬ್ಬಿ ಮಾರನೇ ದಿನ ಸುಳ್ಳಾಗಿತ್ತು. ‘ಕೋಟೆ’ ಚಿತ್ರದ ನಿರ್ಮಾಪಕರು ಬೆಂಗಳೂರು ಸಮೀಪದ ಸಿಂಗನಾಯಕನಹಳ್ಳಿಯ ಶ್ರೀ ನಾಗರಾಜರೆಡ್ಡಿ. ಇವರನ್ನು ವಿಶೇಷವಾಗಿ ಹೆಸರಿಸಲು ಕಾರಣವಿದೆ. ‘ಕೋಟೆ’ ಸಂಭಾಷಣೆಯಿಲ್ಲದ, ಹಿನ್ನೆಲೆಯ ಹಾಡುಗಳ ಮೂಲಕವೇ ರೂಪಿತವಾದ ಸಿನಿಮಾ. ಪಾತ್ರಗಳು ಮಾತಾಡುವುದಿಲ್ಲ; ಹಾಡುಗಳನ್ನೂ ಹೇಳುವುದಿಲ್ಲ. ನಿರೂಪಣೆಯ ಮಾಧ್ಯಮವಾಗಿ ಹಿನ್ನೆಲೆಯಲ್ಲಿ ಹಾಡು ಗಳನ್ನು ಬಳಸಲಾಗಿದೆ. ಇಂಥದೊಂದು ಹೊಸ ಪ್ರಯೋಗಕ್ಕೆ ಹಣ ತೊಡಗಿಸಿದ್ದರಿಂದ ನಿರ್ಮಾಪಕರ ಅಭಿರುಚಿಯನ್ನು ಮೆಚ್ಚಬೇಕು. ಈ ಚಿತ್ರ ರಾಜ್ಯ ಪ್ರಶಸ್ತಿಗೆ ಸ್ಪರ್ಧಿಸಿದಾಗ, ಫಲಿತಾಂಶಕ್ಕೆ ಹಿಂದಿನ ದಿನ ಆಯ್ಕೆ ಸಮಿತಿ ಅಧ್ಯಕ್ಷರ ಆಪ್ತರೊಬ್ಬರು ನನ್ನ ಆಪ್ತರಿಗೆ ಸಿನಿಮಾಕ್ಕೊಂದು ಪ್ರಶಸ್ತಿ ಮತ್ತು ಚಿತ್ರದ ನಾಯಕಿ ತಾರಾ ಅವರಿಗೆ ಅತ್ಯುತ್ತಮ ಪ್ರಶಸ್ತಿ ಗ್ಯಾರಂಟಿಯಾಗಿದೆ ಎಂದು ಹೇಳಿದ್ದರು. ಪ್ರಶಸ್ತಿ ಪಟ್ಟಿ ಪ್ರಕಟವಾದಾಗ ಎರಡೂ ಪ್ರಶಸ್ತಿ ಇರಲಿಲ್ಲ. ನನಗೆ ಅತ್ಯುತ್ತಮ ಗೀತರಚನಕಾರ ಪ್ರಶಸ್ತಿ ಬಂದಿತ್ತು. ಸಿನಿಮಾವೊಂದರ ಹೊಸ ನಿರೂಪಣಾ ಶೈಲಿಗೆ ಮನ್ನಣೆ ಸಿಕ್ಕಿರಲಿಲ್ಲ. ಅದು ಇರಲಿ; ವದಂತಿಗಳನ್ನು ನೈಜ ಸುದ್ದಿಗಳೆಂದು ನಂಬಬಾರದೆಂಬ ಪಾಠವನ್ನು ಮತ್ತೊಮ್ಮೆ ನಾನು ಕಲಿತೆ. ಆದರೂ ‘ಕೋಟೆ’ ಚಿತ್ರದಲ್ಲಿನ ಪಾತ್ರಕ್ಕಾಗಿ ತಾರಾ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ ಅರ್ಹರಾಗಿದ್ದ ರೆಂದೇ ನನ್ನ ಅಭಿಪ್ರಾಯ. ‘ಬೆಂಕಿ’ ಚಿತ್ರದ ನಾಯಕಿ ಪಾತ್ರಕ್ಕೂ ಅತ್ಯುತ್ತಮ ನಟಿ ಪ್ರಶಸ್ತಿ ಬರಬೇಕಿತ್ತೆಂಬುದು ಕೂಡ ನನ್ನ ಅಭಿಪ್ರಾಯ. ಆದರೆ ನನ್ನ ಅಭಿಪ್ರಾಯವೇ ಆಯ್ಕೆ ಸಮಿತಿಯವರ ಅಭಿಪ್ರಾಯ ಆಗಿರಬೇಕಿಲ್ಲವಲ್ಲ? ನಾನೂ ಅನೇಕ ಆಯ್ಕೆ ಸಮಿತಿಗಳಲ್ಲಿ ಇದ್ದದ್ದರಿಂದ ಈ ಅರಿವು ನನಗಿದೆ. ಇಷ್ಟಾಗಿಯೂ ‘ಕೋಟೆ’ ಚಿತ್ರವು ಒಂದು ‘ವಿಶೇಷ ಮೆಚ್ಚುಗೆ’ಗಾದರೂ ಅರ್ಹವಾಗಿತ್ತೆಂಬ ನಂಬಿಕೆಯೂ ನನಗಿದೆ. ಇರಲಿ ಬಿಡಿ, ಹೊಸ ಪ್ರಯೋಗ ಮಾಡಿದ್ದಷ್ಟೇ ಸಂತೋಷವೆಂದುಕೊಂಡು ಸುಮ್ಮನಾದೆ. + +‘ಕೋಟೆ’ ಚಿತ್ರದ ಮೂಲಕ ಸುಂದರರಾಜ್ ಅವರು ನಮ್ಮ ತಂಡವನ್ನು ಪ್ರವೇಶಿಸಿದ್ದರು. ಎಂದಿನಂತೆ ಮಾನು, ಮೈಲಾರಿರಾವ್, ಪ್ರಮೀಳಾ ಜೋಷಾಯ್ ಮುಂತಾದವರು ಈ ಚಿತ್ರದಲ್ಲಿದ್ದರು. ಮಧುಗಿರಿಯ ಆಸುಪಾಸಿನ ಹಳ್ಳಿ, ಬೆಟ್ಟಗುಡ್ಡಗಳಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರೀಕರಣದ ಸ್ಥಳಗಳೆಲ್ಲ ನನ್ನ ಪತ್ನಿಯ ಊರು ಸಿದ್ದನಹಳ್ಳಿಗೆ ಸಮೀಪದಲ್ಲಿದ್ದವು. ಈ ಚಿತ್ರಕ್ಕೆ ರಘು ಐ.ಡಿ.ಹಳ್ಳಿ, ಕಲಾ ನಿರ್ದೇಶಕರಾಗಿ ಕೆಲಸ ಮಾಡಿದರು. ‘ಕೋಟೆ’ ಚಿತ್ರವು ತಾರಾ ಅವರು ಅಭಿನಯಿಸಿದ ಮೊದಲ ‘ಕಲಾತ್ಮಕ’ ಚಿತ್ರ. ಈ ವಿಷಯವನ್ನು ತಾರಾ ಅವರೇ ಅನೇಕ ಸಂದರ್ಶನಗಳಲ್ಲಿ ಹೇಳಿದ್ದಾರೆ. ಡಾ. ಚಂದ್ರಶೇಖರ ಕಂಬಾರರು ಸಂಗೀತ ನಿರ್ದೇಶನ ನೀಡಿದ್ದು ಒಂದು ವಿಶೇಷವಾಗಿತ್ತು. + +‘ಕೋಟೆ’ಯ ನಂತರ ನಾನು ನಿರ್ದೇಶಿಸಿದ ‘ಕರಡಿಪುರ’ದ ಕಷ್ಟ ಹೇಳಲೇಬೇಕು. ಈ ಚಿತ್ರಕ್ಕೆ ನನ್ನ ಪತ್ನಿಯು ಅನಿವಾರ್ಯವಾಗಿ ನಿರ್ಮಾಪಕಿಯಾಗಬೇಕಾಯಿತು. ಆರಂಭಿಕ ಹಣ ಕೊಟ್ಟವರು ಈಗ ರಾಜಕೀಯ ನಾಯಕರಾಗಿರುವ ಶ್ರೀ ಬಾಲಚಂದರ್ ಜಾರಕಿಹೊಳಿಯವರು. ಇವರ ಪರಿಚಯ ನನಗಿರಲಿಲ್ಲ. ಬೆಂಗಳೂರಿನ ಗಾಂಧಿನಗರದಲ್ಲಿ ಅವರು ಸಿನಿಮಾ ಫೈನಾನ್ಸ್ಗೆ ಸಂಬಂಧಿಸಿದ ಕಚೇರಿಯನ್ನು ಆರಂಭಿಸಿ ಅನೇಕ ಸಿನಿಮಾಗಳ ಹಿಂದಿನ ಆರ್ಥಿಕ ಶಕ್ತಿಯಾಗಿದ್ದರು. ಒಂದು ದಿನ ನನ್ನ ಸಾಹಿತಿ ಮಿತ್ರ ಸರಜುಕಾಟಕರ ಅವರು ಬೆಳಗಾವಿಯಿಂದ ಫೋನ್ ಮಾಡಿ ‘ಬಾಲಚಂದರ್ ಜಾರಕಿ ಹೊಳಿಯವರಿಗೆ ಒಂದು ಸಿನಿಮಾ ಮಾಡುವ ಅಪೇಕ್ಷೆಯಿದೆ. ನಿಮ್ಮಿಂದಲೇ ನಿರ್ದೇಶನ ಮಾಡಿಸುವ ಇಚ್ಚೆ ಅವರದು. ಭೇಟಿಯಾಗಬೇಕಂತೆ’ ಎಂದು ಹೇಳಿದರು. ಸರಜುಕಾಟಕರ ಅವರ ಒತ್ತಾಸೆಯಂತೆ ಬಾಲಚಂದರ್ ಜಾರಕಿಹೊಳಿ ಮತ್ತು ನನ್ನ ಭೇಟಿಯಾಯಿತು. ಅವರು ನನ್ನ ಬಗ್ಗೆ ಅಪಾರ ಗೌರವ ತೋರಿಸಿದರು. ಸರಿ, ‘ಕರಡಿಪುರ’ ಎಂಬ ಸಿನಿಮಾ ನಿರ್ಮಾಣ ಮಾಡುವ ಬಗ್ಗೆ ಮಾತುಕತೆಯಾಯಿತು. ನನ್ನದೇ ಕತೆ, ಚಿತ್ರಕತೆ, ಸಂಭಾಷಣೆ ಇತ್ಯಾದಿ. ಸ್ವಲ್ಪ ದಿನಗಳ ನಂತರ ‘ನಾನು ಹಣ ಹಾಕುತ್ತೇನೆ. ನೀವೇ ನಿರ್ಮಾಪಕರಾಗಿ’ ಎಂದರು. ಅದು ಎಲ್ಲಾ ಸಿದ್ಧತೆಗಳು ಮುಗಿದ ಸಂದರ್ಭ. ಹೀಗಾಗಿ ಒಪ್ಪಿ ನನ್ನ ಪತ್ನಿ ರಾಜಕ್ಷ್ಮಿ ಹೆಸರಿನಲ್ಲಿ ‘ಜನ ಚಿತ್ರಾಲಯ’ ಎಂಬ ನಿರ್ಮಾಣ ಸಂಸ್ಥೆಯನ್ನು ನೋಂದಾಯಿಸಿದೆ. + +ಚಿತ್ರೀಕರಣ ಆರಂಭವಾಯಿತು. ಮಿತ್ರ ರಂಗಾರೆಡ್ಡಿ ಕೋಡಿರಾಂಪುರ ಅವರ ಊರು ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣ. ಮಧುಗಿರಿಯಲ್ಲಿ ಒಂದು ದಿನ ಶೂಟಿಂಗ್ ಮಾಡಿ, ಜನರ ನೂಕು ನುಗ್ಗಲು ನಿಯಂತ್ರಿಸಲು ಕಷ್ಟವಾಗಿ ಸ್ಥಳಾಂತರ ಮಾಡಿದ್ದೂ ಉಂಟು. ಬಸ್ಮಂಗಿ ಬೆಟ್ಟದಲ್ಲಿ ಬುಡಕಟ್ಟು ಜನಾಂಗದ ಗುಡಿಸಲುಗಳ ಸೆಟ್ ಹಾಕಿದ್ದೆವು. ರಾಜಪ್ಪ ದಳವಾಯಿ ಕಲಾನಿರ್ದೇಶನದ ಕೆಲಸ ಮಾಡಿದರು. ತಾರಾ ಮತ್ತು ಕುಮಾರ್ ಗೋವಿಂದ್ ಮುಖ್ಯ ಪಾತ್ರಧಾರಿಗಳು. ಗೆಳೆಯ ಸುಂದರರಾಜ ಅರಸು ಅವರು ಈ ಚಿತ್ರದ ಮೂಲಕ ಸಿನಿಮಾ ಪ್ರವೇಶ ಮಾಡಿದರು. ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರು ಅಭಿನಯಿಸಿದ್ದರು. ಮಿತ್ರ ಮಾನು ಅವರದೂ ಒಂದು ಮುಖ್ಯ ಪಾತ್ರ. ಬಾಲಚಂದರ್ ಅವರ ಕಚೇರಿಗೆ ಹೋಗಿ ಆಗಾಗ್ಗೆ ಹಣ ತರಬೇಕಾಗುತ್ತಿತ್ತು. ಅಲ್ಲಿ ದೇಸಾಯಿ ಅಂತ ಮೇನೇಜರ್ ಇದ್ದು, ಆತನಿಂದ ಹಣ ಪಡೆಯಲು ಕೆಲವು ಸಾರಿ ಪತ್ನಿ ರಾಜಲಕ್ಷಿ ್ಮ ಮತ್ತು ನನ್ನ ಎರಡನೇ ಮಗ ಸ್ಫೂರ್ತಿ ಬರಗೂರ್ ಹೋಗುತ್ತಿದ್ದರು. ಚಿತ್ರೀಕರಣ ಸ್ಥಳಕ್ಕೆ ಹಣ ತಂದುಕೊಡುತ್ತಿದ್ದರು. ಈ ಚಿತ್ರಕ್ಕೂ ರಾಜಲಕ್ಷ್ಮಿಯದೇ ವಸ್ತ್ರ ವಿನ್ಯಾಸ. + +ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯ್ ಅವರ ಮಗಳು ಮೇಘನಾ ಇನ್ನೂ ಚಿಕ್ಕ ಬಾಲಕಿಯಾಗಿದ್ದ ಕಾಲವದು. ಆಕೆಗೊಂದು ಪಾತ್ರವಿತ್ತು. ಆಕೆ ಹುಡುಗನ ವೇಷ ತೊಟ್ಟು ಮೊದಲು ಪಾತ್ರ ಮಾಡಿದ್ದು ನಮ್ಮ ‘ಕರಡಿಪುರ’ ಚಿತ್ರದಲ್ಲಿ. + +ಮಾನು ಅವರು ನಮ್ಮ ಚಿತ್ರೀಕರಣ ನಡೆಯುತ್ತಿರುವಾಗಲೇ ಬೆಂಗಳೂರಿಗೆ ಹೊರಟರು. ಶ್ರೀ ರಾಮಕೃಷ್ಣ ಹೆಗಡೆಯವರ ‘ನವನಿರ್ಮಾಣ ವೇದಿಕೆ’ಯ ಮೂಲಕ ರಾಜಕೀಯ ಪ್ರವೇಶಕ್ಕೆ ನಿರ್ಧರಿಸಿದ್ದರು. ನಾನು ‘ಆತುರ ಬೀಳಬೇಡಿ’ ಎಂದು ಮಾತು ಪ್ರಾರಂಭಿಸಿ ಸೈದ್ಧಾಂತಿಕ ರಾಜಕಾರಣದ ಬಗ್ಗೆ ವಿವರಿಸಿ ‘‘ಆನಂತರ ನಿರ್ಧಾರ ಮಾಡಿ, ಯಾರ ಜೊತೆ, ಯಾವ ಪಕ್ಷದ ಜೊತೆ ಹೋಗಬೇಕು ಅಂತ’’ ಎಂದು ಒತ್ತಾಯಿಸಿದೆ. ‘‘ಇದೊಂದು ಕಾರ್ಯಕ್ರಮ ಒಪ್ಪಿಕೊಂಡಿದ್ದೇನೆ ಮೇಷ್ಟೆç, ಮುಗಿಸಿ ರ‍್ತೇನೆ. ಆನಂತರ ನಿಮ್ಮ ಜೊತೆ ಚರ್ಚಿಸಿ ತೀರ್ಮಾನಿಸ್ತೇನೆ’ ಎಂದು ಹೇಳಿ ಹೊರಟರು. ಶಿವಮೊಗ್ಗದಲ್ಲಿ ನಡೆಯಬೇಕಿದ್ದ ನವ ನಿರ್ಮಾಣ ವೇದಿಕೆಯ ಕಾರ್ಯಕ್ರಮದ ವ್ಯವಸ್ಥೆಗಾಗಿ ರಾತ್ರಿ ಹೊತ್ತು ಕಾರಿನಲ್ಲಿ ಸಮಾಜವಾದಿ ಗೆಳೆಯ ರಮೇಶ್ ಬಂದಗದ್ದೆ ಜೊತೆ ಹೊರಟರು. ದುರಂತ! ಕಾರಿನ ಅಪಘಾತದಲ್ಲಿ ಮೃತಪಟ್ಟರು! ನಮ್ಮನ್ನು ಅಗಲಿದರು. ಸ್ವಲ್ಪ ಸಮಯ ಬದುಕಿದ್ದ ರಮೇಶ್ ಬಂದಗದ್ದೆಯವರೂ ಮಾನು ಅವರನ್ನು ಹಿಂಬಾಲಿಸಿದರು. ‘ಕರಡಿಪುರ’ದಲ್ಲಿ ಅವರು ಅಭಿನಯಿಸಿದ ಕೊನೆಯ ದೃಶ್ಯದಲ್ಲಿ (ಚಿತ್ರದ ಕೊನೆಯ ದೃಶ್ಯ ಅಲ್ಲ) ‘ಹೋಗ್ತೇನೆ ದೂರ ಹೋಗ್ತೇನೆ’ ಎಂಬ ಒಂದು ಸಂಭಾಷಣೆಯಿತ್ತು. ನಮ್ಮ ತಂಡದವರೆಲ್ಲ ಮಾನು ಸಾವಿನ ನಂತರ ಕಾಕತಾಳೀಯವಾಗಿ ಅದೇ ಸಂಭಾಷಣೆ ಯನ್ನು ನೆನಪಿಸಿಕೊಳ್ಳುತ್ತಿದ್ದರು. ಅಂತೂ ಮಾನು ಇಲ್ಲವಾದದ್ದು ಇಂದಿಗೂ ನನ್ನಲ್ಲಿ ನೋವು ಹುಟ್ಟಿಸುತ್ತದೆ. + +‘ಕರಡಿಪುರ’ದ ಕಷ್ಟದ ಕತೆ ಮುಂದಿದೆ; ಓದಿ. ಸಿನಿಮಾ ಚಿತ್ರೀಕರಣ ಮುಗಿಯಿತು. ಸುರೇಶ್ ಅರಸ್ ಜೊತೆ ಕೂತು ಸಂಕಲನ ಮಾಡಿದ್ದೂ ಆಯಿತು. ಆ ವೇಳೆಗೆ ಬಾಲಚಂದರ್ ಅವರ ಮೇನೇಜರ್ ಹಣ ಕೊಡುವುದನ್ನು ನಿಲ್ಲಿಸಿದರು. ಅಲ್ಲೀವರೆಗೆ ಹತ್ತು ಲಕ್ಷ ಕೊಟ್ಟಿದ್ದರು. ಅದನ್ನು ಸಾಲ ಎಂದು ಪರಿಗಣಿಸಿದರು. ಸರಿ, ಮುಂದೆ ಸಾಗಲೇಬೇಕಿತ್ತು. ಕಂಠೀರವ ಸ್ಟುಡಿಯೊ ಆವರಣದಲ್ಲಿದ್ದ ಪ್ರಸಾದ್ ಸ್ಟುಡಿಯೋದಲ್ಲಿ ರೀ ರೆಕಾರ್ಡಿಂಗ್‌ಗೆ ದಿನಾಂಕ ನಿಗದಿ ಮಾಡಿದ್ದೆ. ಹಣ ಇಲ್ಲ. ಅಂಥ ಸಂದರ್ಭದಲ್ಲೇ ಶ್ರೀ ಹಂಸಲೇಖ ಅವರನ್ನು ಸಂಗೀತ ನಿರ್ದೇಶಕರಾಗಲು ಕೇಳಿಕೊಂಡಿದ್ದೆ. ಅವರ ಸಹಕಾರವನ್ನು ವಿಶೇಷವಾಗಿ ನಾನು ನೆನೆಯಲೇಬೇಕು. ‘ನಿಮ್ಮ ಸಂಭಾವನೆ ಎಷ್ಟು ಕೊಡಲಿ?’ ಎಂದು ಹಂಸಲೇಖ ಅವರನ್ನು ಕೇಳಿದೆ. ಅವರು ‘ಸಾರ್ ನಿಮ್ಮಿಂದ ನಾನು ಸಂಭಾವನೆ ಪಡೆಯೊಲ್ಲ. ಸಾಂಕೇತಿಕವಾಗಿ ಒಂದು ರೂಪಾಯಿ ಕೊಡಿ ಸಾಕು’ ಎಂದರು. ಕೊಟ್ಟ ಮಾತಿನಂತೆ ಸಂಭಾವನೆ ಪಡೆಯದೆ ಕೆಲಸ ಮುಗಿಸಿಕೊಟ್ಟರು. ಅವರಿಗೆ ಸಂಭಾವನೆ ಕೊಡದಿದ್ದರೂ ವಾದ್ಯದವರಿಗೆ ಕೊಡಲೇಬೇಕಲ್ಲ? ಸ್ಟುಡಿಯೋದಲ್ಲಿ ರಾಜಪ್ಪ ದಳವಾಯಿ ಯನ್ನು ಬಿಟ್ಟು ಹಣ ಹೊಂದಿಸಲು ಓಡಾಡಿದೆ. ರೀ ರೆಕಾರ್ಡಿಂಗ್ ಮುಗಿದ ಮೇಲೆ ಮಿಕ್ಸಿಂಗ್ ಮಾಡಬೇಕಲ್ಲ? ಸುರೇಶ್ ಅರಸು ಅವರು ಸ್ಟುಡಿಯೋದಲ್ಲಿ ರಾತ್ರಿಯೆಲ್ಲ ಇದ್ದು ಬೆಳಗಿನವರೆಗೆ ಉಸ್ತುವಾರಿ ನೋಡಿಕೊಂಡು ಕೆಲಸ ಮಾಡಿಕೊಟ್ಟರು. + +‘ಕರಡಿಪುರ’ಕ್ಕೆ ಸಹಕರಿಸಿದ ಕಲಾವಿದರನ್ನೂ ಇಲ್ಲಿ ನೆನೆಯಬೇಕು. ಆಗ ಕುಮಾರ್ ಗೋವಿಂದ್ ತುಂಬಾ ಬಿಜಿಯಾಗಿದ್ದ ನಟರು. ಅವರು ಬೇರೊಂದು ಚಿತ್ರದ ಕೆಲಸಕ್ಕೆ ಹೋಗಬೇಕಿತ್ತು. ನಾವು ಚಿತ್ರೀಕರಣ ಮುಗಿಸಬೇಕಿತ್ತು. ಬೆಳಗ್ಗೆ 9 ಗಂಟೆಗೆ ಆರಂಭಿಸಿ ಮಾರನೇ ದಿನ ಮಧ್ಯಾಹ್ನದವರೆಗೆ ಬಸ್ಮಂಗಿ ಬೆಟ್ಟದಲ್ಲಿ ಚಿತ್ರೀಕರಣ ಮಾಡಿದೆವು. ನನಗೆ ಮತ್ತು ಛಾಯಾಗ್ರಾಹಕ ಮಂಜುನಾಥ್ ಅವರಿಗೆ ನಿದ್ದೆಯೇ ಇಲ್ಲ. ಕುಮಾರ್ ಗೋವಿಂದ್, ತಾರಾ ಅವರ ದೃಶ್ಯಗಳೇ ಮುಖ್ಯವಾಗಿದ್ದವು. ಅಂತೂ ಸತತ ಮೂವತ್ತು ಗಂಟೆಗಳ ಕಾಲ ಚಿತ್ರೀಕರಣ ಮಾಡಿದ್ದೆವು. + +ಇಷ್ಟೆಲ್ಲ ಕಷ್ಟಪಟ್ಟು ಸಿದ್ಧ ಮಾಡಿದ ಸಿನಿಮಾಕ್ಕೆ ಕರ್ನಾಟಕ ಸರ್ಕಾರದ ಚಲನಚಿತ್ರ ಸಹಾಯಧನ ಸಿಗಲಿಲ್ಲ. ಸಹಾಯಧನ ಆಯ್ಕೆ ಸಮಿತಿಯು ನಮ್ಮ ‘ಕರಡಿಪುರ’ಕ್ಕೆ ಕೈ ಕೊಟ್ಟಿತ್ತು. ಹೌದು; ನಿಜಕ್ಕೂ ಕೈ ಕೊಟ್ಟಿತ್ತು! ಸಹಾಯಧನಕ್ಕಾಗಿ (ಸಬ್ಸಿಡಿಗಾಗಿ) ಅರ್ಜಿ ಸಲ್ಲಿಸುವ ವೇಳೆಗೆ ಈ ಚಿತ್ರವು ಬ್ರಿಟನ್ ಸರ್ಕಾರ ನಡೆಸುವ ಪ್ರತಿಷ್ಠಿತ ‘ಲೀಡ್ಸ್ ಅಂತರರಾಷ್ಟ್ರೀಯ ಚಿತ್ರೋತ್ಸವ’ಕ್ಕೆ ಆಯ್ಕೆಯಾಗಿತ್ತು. ನಿರ್ಮಾಪಕಿ ನನ್ನ ಪತ್ನಿ ರಾಜಲಕ್ಷ್ಮಿ ಮತ್ತು ನಿರ್ದೇಶಕನಾದ ನನ್ನನ್ನು ಬ್ರಿಟನ್ನಿಗೆ ಅತಿಥಿಗಳಾಗಿ ಆಹ್ವಾನಿಸಿದ್ದರು. ಹೋಗಿ ಬಂದಿದ್ದೆವು. ಅದೇ ವೇಳೆಗೆ ‘ಕರಡಿಪುರ’ಕ್ಕೆ ಕರ್ನಾಟಕ ಸರ್ಕಾರ ನೀಡುವ ‘ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರ’ವೆಂಬ ಪ್ರಶಸ್ತಿಯೂ ಬಂದಿತ್ತು. ಈ ಪ್ರಶಸ್ತಿ ಆಯ್ಕೆ ಸಮಿತಿಗೆ ಪ್ರಸಿದ್ಧ ನಿರ್ದೇಶಕರಾದ ಶ್ರೀ ಜಿ.ವಿ. ಅಯ್ಯರ್ ಅವರು ಅಧ್ಯಕ್ಷರಾಗಿದ್ದರು. ಇಷ್ಟೆಲ್ಲ ಮನ್ನಣೆಗಳು ಲಭ್ಯವಾಗಿದ್ದರೂ ಸಹಾಯಧನ ಸಮಿತಿಯು ಸಹಾಯಧನಕ್ಕೆ ಆಯ್ಕೆ ಮಾಡಲಿಲ್ಲ! ಈಗಾಗಲೇ ಸಾಲದ ಹೊರೆ ಭಾರವಾಗಿತ್ತು. ಸಬ್ಸಿಡಿ ಹಣ (10 ಲಕ್ಷ) ಬಂದಿದ್ದರೆ ಸಾಲದ ಹಣವನ್ನಾದರೂ ಹಿಂತಿರುಗಿಸಬಹುದಿತ್ತು. ದಿಕ್ಕೇ ತೋಚದ ಸ್ಥಿತಿ. ಸರ್ಕಾರದ ಒಂದು ಸಮಿತಿ, ಅತ್ಯುತ್ತಮ ಸಾಮಾಜಿಕ ಕಾಳಜಿಯ ಚಿತ್ರವೆಂದರೆ, ಇದೇ ಸರ್ಕಾರದ ಇನ್ನೊಂದು ಸಮಿತಿ ಸಹಾಯ ಧನವನ್ನು ನಿರಾಕರಿಸುತ್ತದೆ! ಒಂದೇ ಸರ್ಕಾರದ ಸಮಿತಿಗಳು ಬೇರೆ ಬೇರೆಯಾದ ಕೂಡಲೇ ಮಾನದಂಡವೂ ಬದಲಾಗ ಬೇಕೆ? ಇನ್ನೊಂದು ಪ್ರಶ್ನೆಯೂ ಇದೆ. ಪ್ರಶಸ್ತಿಯಾದರೆ ಅನೇಕ ಚಿತ್ರಗಳ ನಡುವೆ ಒಂದೇ ಚಿತ್ರವನ್ನು ಆಯ್ಕೆ ಮಾಡಬೇಕು. ಆದರೆ ಸಬ್ಸಿಡಿಗೆ ಹಾಗಲ್ಲ. ಆಗ ಬಹುಶಃ ಮೂವತ್ತೊ ನಲವತ್ತೊ ಚಿತ್ರಗಳನ್ನು ಆಯ್ಕೆ ಮಾಡಬಹುದಿತ್ತು. ಸಂಖ್ಯೆ ಸರಿಯಾಗಿ ನೆನಪಿಲ್ಲದಿದ್ದರೂ ಒಂದೇ ಚಿತ್ರವನ್ನಂತೂ ಆಯ್ಕೆ ಮಾಡಬೇಕಾಗಿರಲಿಲ್ಲ ಎಂಬುದು ಸತ್ಯ. ಹಾಗಾದರೆ ಹತ್ತಾರು ಚಿತ್ರಗಳ ಆಯ್ಕೆಯಲ್ಲಿ ಒಂದು ಸ್ಥಾನವನ್ನು ಪಡೆಯದಷ್ಟು ‘ಕರಡಿಪುರ’ ಕಳಪೆಯಾಗಿತ್ತೆ? ಇಲ್ಲೇನೊ ನಡೆದಿದೆ ಎಂಬ ಅನುಮಾನ ಕಾಡಿಸಿತು. ಈ ಸಬ್ಸಿಡಿ ಆಯ್ಕೆ ಸಮಿತಿಯಲ್ಲಿ ಕನ್ನಡ ಅಧ್ಯಯನ ಕೇಂದ್ರದ ಸಹೋದ್ಯೋಗಿ ಸಾಹಿತಿಯೊಬ್ಬ ರಲ್ಲದೆ, ಸನ್ಮಿತ್ರ ಸಾಹಿತಿ ರಂಜಾನ ದರ್ಗಾ ಕೂಡ ಇದ್ದರು. + +ರಂಜಾಗ ದರ್ಗಾ ಅವರ ಪ್ರಾಮಾಣಿಕತೆಯ ಬಗ್ಗೆ ನನಗೆ ಪೂರ್ಣ ನಂಬಿಕೆಯಿದೆ ಯಾರು ಪಟ್ಟು ಹಿಡಿದವರೆಂದು ತಿಳಿಯಲು ತಡವಾಗಲಿಲ್ಲ. ಆಯ್ಕೆ ಸಮಿತಿಗಳ ಒಳ ಚರ್ಚೆಗಳು ಎಲ್ಲ ಕಾಲದಲ್ಲೂ ರಹಸ್ಯವಾಗಿಯೇ ಇರುವುದಿಲ್ಲ. ಆನಂತರ ನನಗೆ ಲಭ್ಯವಾದ ಅಧಿಕೃತ ಮೂಲದ ಮಾಹಿತಿಯೆಂದರೆ – ರಂಜಾನ ದರ್ಗಾ ಅವರು ‘ಕರಡಿಪುರ’ಕ್ಕೆ ಸಬ್ಸಿಡಿ ಕೊಡಬೇಕೆಂದು ಪ್ರತಿಪಾದಿಸಿದ್ದರು. ಒಟ್ಟಾರೆ ಅಭಿಪ್ರಾಯ ಮೂಡುತ್ತಿರುವಾಗ ನನ್ನ ಸಹೋದ್ಯೋಗಿ ‘ಕರಡಿಪುರ’ಕ್ಕೆ ಸಬ್ಸಿಡಿ ಕೊಡಕೂಡದೆಂದು ತಮ್ಮದೇ ರೀತಿ ವಾದಿಸಿದ್ದಲ್ಲದೆ ಪಟ್ಟು ಹಿಡಿದರು. ವಿವಾದವಾದೀತೆಂದೊ ಏನೋ ಇತರರೂ ಸುಮ್ಮನಾದರು. ಹಾಗೆಂದು ನಾನು ಯಾರ ಬಗ್ಗೆಯೂ ದ್ವೇಷ ಸಾಧಿಸಲಿಲ್ಲ. ಕಾಗೆ ಬಳಗದ ಭಾವ ಬಂಧುತ್ವ ನನ್ನದು! + +ಆದರೂ ನಾನು ದಿಗ್ಭಾçಂತನಾಗಿದ್ದೆ. ಹಾಗೆಂದು ಸುಮ್ಮನಾಗಲಿಲ್ಲ. ಆಗ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದೆ. ಡಾ. ಬಿ.ಕೆ. ಚಂದ್ರಶೇಖರ್ ಅವರು ವಾರ್ತಾ ಖಾತೆಯ ಸಚಿವರಾಗಿದ್ದರು. ಸಿನಿಮಾ ವಿಷಯವು ಅವರ ವ್ಯಾಪ್ತಿಗೆ ಬರುತ್ತಿತ್ತು. ಅವರ ಬಳಿಯೂ ಇದೇ ಮಾಹಿತಿಯಿತ್ತು. ನಾನು ಅವರ ಬಳಿ ಹೋದೆ. ‘‘ಒಂದೇ ಸರ್ಕಾರವು ಉತ್ತಮ ಚಿತ್ರ ಮತ್ತು ಕಳಪೆ ಚಿತ್ರ ಎಂದು ತೀರ್ಮಾನ ಮಾಡುವುದು ಸರಿಯೆ?’’ ಎಂದು ಪ್ರಶ್ನಿಸಿದೆ. ಸಾಲ ಸರ್ಪದ ಹೆಡೆಯ ಅಡಿಯಲ್ಲಿ ನಾನು ರೋಸಿಹೋಗಿದ್ದೆ. ಹೀಗಾಗಿ ‘‘ನೋಡಿ ಸಾರ್, ಇದು ಅನ್ಯಾಯ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿ ವಿಧಾನ ಸೌಧದ ಮೂರನೇ ಮಹಡಿಯ ಕುರ್ಚಿ ಬಿಟ್ಟು ಮುಂದುಗಡೆ ಚಾಪೆ ಹಾಕಿ ಕೂತ್ಕೊಳ್ತೇನೆ’’ ಎಂದೆ. ಡಾ. ಬಿ.ಕೆ. ಚಂದ್ರಶೇಖರ್ ಸಚಿವರಂತೆ ವರ್ತಿಸಲಿಲ್ಲ. ಸ್ನೇಹಿತನಾಗಿ ಸಾಂತ್ವನ ಹೇಳಿದರು. ಸಮಾಧಾನ ಚಿತ್ತದಿಂದ ಪರಿಹಾರ ಹುಡುಕುವ ಬಗ್ಗೆ ಮಾತಾಡಿದರು. ನಾನು ‘‘ಸರ್ಕಾರದ ಸಮಿತಿಯೊಂದು ಯಾವುದೇ ಸಿನಿಮಾಕ್ಕೆ ಉತ್ತಮ ಚಿತ್ತವೆಂಬ ಪ್ರಶಸ್ತಿ ನೀಡಿದ್ದರೆ, ಅದನ್ನೇ ಮಾನದಂಡವೆಂದು ಪರಿಗಣಿಸಿ ಸಬ್ಸಿಡಿ ಸಮಿತಿಯು ನೇರವಾಗಿ ಆಯ್ಕೆ ಪಟ್ಟಿಗೆ ಸೇರಿಸಬೇಕು’’ ಎಂದು ವಾದಿಸಿದೆ. ಅವರಿಗೂ ಈ ತರ್ಕ ಸರಿ ಎನ್ನಿಸಿತು. ‘‘ಈ ಸಾರಿ ನನ್ನ ಚಿತ್ರಕ್ಕಾದ ಗತಿ ಮುಂದಿನ ವರ್ಷದಿಂದ ಬೇರೆ ಚಿತ್ರಗಳಿಗೆ ಆಗಬಾರದು ಸಾರ್’’ ಎಂದು ಹೇಳಿದೆ. ಅವರು ‘‘ಒಂದ್ ಕೆಲ್ಸ ಮಾಡಿ, ಮುಖ್ಯಮಂತ್ರಿಯವರಿಗೆ ಈ ಎಲ್ಲಾ ವಿಷಯ ಮನವರಿಕೆ ಮಾಡಿ’’ ಎಂದು ಸಲಹೆ ನೀಡಿದರು. + +ಆಗ ಶ್ರೀ ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದರು. ನಾನು ಒಂದು ಮನವಿ ಪತ್ರ ಸಿದ್ಧ ಮಾಡಿದೆ. ಸರ್ಕಾರದ ಒಂದು ಆಯ್ಕೆ ಸಮಿತಿಯು ಯಾವುದೇ ವಿಭಾಗದಲ್ಲಿ – ಅಂದರೆ ಒಟ್ಟಾರೆ ಉತ್ತಮವಾದ ಮೂರು ಚಿತ್ರಗಳು, ಸಾಮಾಜಿಕ ಕಾಳಜಿ ಚಿತ್ರ, ಮಕ್ಕಳ ಚಿತ್ರ – ಹೀಗೆ ಯಾವುದೇ ವಿಭಾಗದಿಂದ ಉತ್ತಮ ಚಿತ್ರವೆಂದು ಆಯ್ಕೆ ಮಾಡಿ ಪ್ರಶಸ್ತಿ ಕೊಟ್ಟಿದ್ದರೆ, ಅದೇ ಸರ್ಕಾರದ ಸಬ್ಸಿಡಿ ಸಮಿತಿಯು ಗುಣಾತ್ಮಕ ಚಿತ್ರವೆಂದು ಪರಿಗಣಿಸಿ ನೇರವಾಗಿ – ಅಂದರೆ – ವೀಕ್ಷಿಸದೆ, ಆಯ್ಕೆ ಪಟ್ಟಿಗೆ ಸೇರಿಸಬೇಕು. ಇದರಿಂದ ಒಂದೇ ಸರ್ಕಾರವು ಎರಡು ರೀತಿ ಆಯ್ಕೆ ಮಾಡುವ ದ್ವಂದ್ವ ತಪ್ಪುತ್ತದೆ. ಈ ನಿಟ್ಟಿನಲ್ಲಿ ಆದೇಶ ಹೊರಡಿಸಬೇಕು – ಈ ರೀತಿಯ ವಿವರಗಳನ್ನು ಮಂಡಿಸಿ ಮನವಿ ಮಾಡಿದ್ದೆ. ಲಿಖಿತ ಮನವಿ ಪತ್ರದ ಜೊತೆಗೆ ನನ್ನ ಮನವಿಪತ್ರಕ್ಕೆ ಸಮರ್ಥನೆಯಾಗಿ ‘ಕರಡಿಪುರ’ದ ಸಬ್ಸಿಡಿ ಪ್ರಸಂಗವನ್ನು ನೇರವಾಗಿ ವಿವರಿಸಿದೆ. ಮಾನ್ಯ ಮುಖ್ಯಮಂತ್ರಿಗಳಿಗೆ ನನ್ನ ಅಭಿಪ್ರಾಯ ಸರಿ ಎನ್ನಿಸಿದಂತೆ ಕಂಡಿತು. ನೇರವಾಗಿ ಹೇಳದೆ ‘ಖಂಡಿತ ಗಂಭೀರ ವಾಗಿ ಪರಿಗಣಿಸ್ತೀನಿ’ ಎಂದರು. ಒಂದೇ ವಾರದಲ್ಲಿ ನನ್ನ ಅಭಿಪ್ರಾಯಕ್ಕೆ ಮನ್ನಣೆ ನೀಡಿದ ಆದೇಶ ಹೊರಟಿತು. ವಿಶೇಷವೆಂದರೆ ಅದೇ ವರ್ಷಕ್ಕೆ ಆದೇಶವನ್ನು ಅನ್ವಯಿಸಿದರು. ಹೀಗಾಗಿ ನನ್ನ ‘ಕರಡಿಪುರ’ಕ್ಕೆ ಹತ್ತು ಲಕ್ಷ ರೂಪಾಯಿ ಸಬ್ಸಿಡಿ ಸಿಕ್ಕಿತು.ಹೀಗೆ ‘ಕರಡಿಪುರ’ಕ್ಕೆ ಸಬ್ಸಿಡಿ ಮಂಜೂರಾದಾಗ ಇನ್ನೊಂದು ಆಕ್ಷೇಪ ಬಂತು. ಆಗ ಪ್ರತಿ ಇಲಾಖೆಗೂ ‘ಸದನ ಸಮಿತಿ’ ರಚಿಸುವ ಪರಿಪಾಠವಿತ್ತು. ಈ ಸಮಿತಿಗಳಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸದಸ್ಯರು ಇರುತ್ತಿದ್ದರು. ಆಯಾ ಇಲಾಖೆಗಳ ಕಾರ್ಯಗಳನ್ನು ಪರಿಶೀಲಿಸಿ ವರದಿ ಕೊಡುತ್ತಿದ್ದರು. ವಾರ್ತಾ ಇಲಾಖೆಯ ಸದನ ಸಮಿತಿಗೆ ‘ಮುಖ್ಯಮಂತ್ರಿ’ ಚಂದ್ರು ಅಧ್ಯಕ್ಷರಾಗಿದ್ದರು. ಅವರ ಸಮಿತಿಯ ವರದಿಯಲ್ಲಿ ‘ಕರಡಿಪುರ’ಕ್ಕೆ ಸಬ್ಸಿಡಿ ಕೊಡುವುದಕ್ಕೆ ಆಕ್ಷೇಪ ಮಾಡಲಾಗಿತ್ತು. ಚಂದ್ರು ಅವರು ‘ನಿಮ್ಮ ಸಹೋದ್ಯೋಗಿಯ ಒತ್ತಾಯದಿಂದ ಆಕ್ಷೇಪ ಮಾಡಬೇಕಾಯ್ತು’ ಎಂದು ನನಗೆ ಸಮಾಧಾನ ಮಾಡಿದರು. ಆದೇಶ ಆಗಿದ್ದನ್ನು ಸರ್ಕಾರ ರದ್ದು ಮಾಡಲಿಲ್ಲ. ಆಕ್ಷೇಪವಷ್ಟೇ ದಾಖಲಾಯಿತು. ಮೊದಲು ಮೂಡಿದ್ದ ಅನುಮಾನ ನಿಜ ಎನ್ನಿಸಿತು. ಪ್ರಶಸ್ತಿ ಪುರಸ್ಕೃತ ಚಿತ್ರಗಳಿಗೆ ನೇರವಾಗಿ ಸಬ್ಸಿಡಿ ಕೊಡುವ ಆದೇಶ ಮಾಡಿಸಿದ್ದರ ಜೊತೆಗೆ ವಿನಮ್ರ ಭಾವದಿಂದ ಇನ್ನೊಂದು ವಿಷಯವನ್ನು ತಿಳಿಸಿದರೆ ತಪ್ಪಾಗದೆಂದು ಭಾವಿಸುತ್ತೇನೆ. ಪ್ರತಿ ವರ್ಷ ಸಾಹಿತ್ಯ ಕೃತಿಯಾಧಾರಿತ ಸಿನಿಮಾಗಳಿಗೆ (ವರ್ಷಕ್ಕೆ ಐದು ಸಿನಿಮಾಗಳಿಗೆ) ತಲಾ ಐದು ಲಕ್ಷ ಹೆಚ್ಚು ಸಬ್ಸಿಡಿ ಅಂದರೆ ಒಟ್ಟು ಹದಿನೈದು ಲಕ್ಷ ಕೊಡಬೇಕೆಂದು ವಾದಿಸಿ ಆದೇಶ ಹೊರಡಲು ನಾನು ಕಾರಣವಾಗಿದ್ದೆ. ಜೊತೆಗೆ ಭಾರತೀಯ ಪನೋರಮ ಮತ್ತು ಅಧಿಕೃತ ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಅಯ್ಕೆಯಾದ ಚಿತ್ರಗಳಿಗೆ ಹೆಚ್ಚುವರಿ ಸಬ್ಸಿಡಿ ನೀಡಬೇಕೆಂಬ ಮೊದಲ ಒತ್ತಾಯ ನನ್ನದಾಗಿತ್ತು. ಅದೂ ಆದೇಶವಾಗಿ ಜಾರಿಯಲ್ಲಿದೆ. + +‘ಕರಡಿಪುರ’ದ ಕಷ್ಟದ ಕತೆ ಹೇಳಲು ಕಾರಣವಿದೆ. ನನ್ನ ಸಿನಿಮಾ ಹಾದಿಯೇನೂ ಸುಗಮವಾಗಿರಲಿಲ್ಲ ಎಂಬುದು ಒಂದು ಕಾರಣ. ಎದೆಗುಂದದೆ ಮುಂದಡಿ ಇಟ್ಟರೆ ಕಷ್ಟದ ಹಾದಿಯ ಕಲ್ಲುಮುಳ್ಳುಗಳು ಕರಗಬಹುದು ಎಂಬ ಆತ್ಮವಿಶ್ವಾಸ ಎಲ್ಲರಲ್ಲೂ ಮೂಡಲಿ ಎಂಬ ಆಶಯ ಇನ್ನೊಂದು ಕಾರಣ. ಹಾಗೆಂದು ನಾನು ಮಾತ್ರ ಕಷ್ಟಪಟ್ಟೆ ಎಂದು ಭಾವಿಸಿಕೊಂಡರೆ ಅದು ನನ್ನ ಅಹಂಕಾರವಾದೀತು. ಅಸಂಖ್ಯಾತರಲ್ಲಿ ನಾನೂ ಒಬ್ಬ ಅಷ್ಟೆ. ಎಲ್ಲ ಕ್ಷೇತ್ರಗಳಲ್ಲೂ ಕಷ್ಟದ ಕತೆಯಾದವರು ಇದ್ದಾರೆ. ಸಿನಿಮಾ ಕ್ಷೇತ್ರಕ್ಕೆ ಬಂದರೆ ಡಾ. ರಾಜಕುಮಾರ್ ಅವರ ಸಾಧನೆಯ ಹಾದಿಯೇನು ಸುಲಭವಾಗಿತ್ತೆ? ಇಲ್ಲ. ಶ್ರಮ, ಶ್ರದ್ಧೆ, ಸಂಕಲ್ಪದಿಂದ ಅವರು ಅಸಾಧ್ಯವಾದದ್ದನ್ನು ಸಾಧ್ಯವಾಗಿಸಿ ‘ಜನಪದ ನಾಯಕ’ರಾದರು. + +ನಾನು ನನ್ನ ನಿರ್ದೇಶನದ ಎಲ್ಲಾ ಸಿನಿಮಾಗಳ ಬಗ್ಗೆಯೂ ಇಷ್ಟು ವಿವರ ಬರೆಯುವುದಿಲ್ಲ. ನಾನು ಎದುರಿಸಿದ ಸಂಕಟ-ಸಂಭ್ರಮಗಳಿಗೆ ಸಾಕ್ಷಿಯಾದ ಕೆಲವನ್ನು ಮಾತ್ರ ಅಗತ್ಯವಾದಷ್ಟು ಪ್ರಸ್ತಾಪಿಸುತ್ತೇನೆ. + +ಈ ನಿಟ್ಟಿನಲ್ಲಿ ಡಾ. ಶಿವರಾಜಕುಮಾರ್ ಅಭಿನಯದ ‘ಹಗಲು ವೇಷ’ವನ್ನು ಉಲ್ಲೇಖಿಸಬಯಸುತ್ತೇನೆ. ಶಿವರಾಜಕುಮಾರ್ ಅವರು ಇಷ್ಟಪಟ್ಟು ಈ ಚಿತ್ರದಲ್ಲಿ ಅಭಿನಯಿಸಲು ಮುಂದಾದದ್ದೇ ಒಂದು ಸಂಭ್ರಮ. ಇದಕ್ಕೆ ಮುಂಚೆ ನಾನು ‘ಜನುಮದ ಜೋಡಿ’ ಚಿತ್ರಕ್ಕೆ ಕೆಲಸ ಮಾಡಿದ್ದೆ. ಮೂರು ಹಾಡು ಮತ್ತು ಸಂಭಾಷಣೆ ಬರೆದಿದ್ದೆ. ಡಾ. ರಾಜಕುಮಾರ್, ಅವರ ಸೋದರ ವರದರಾಜು, ನಿರ್ದೇಶಕ ನಾಗಾಭರಣ ಸೇರಿ ಚರ್ಚಿಸಿದ ಆಧಾರದಲ್ಲಿ ರೂಪುಗೊಂಡ ದೃಶ್ಯಗಳನ್ನು ವಿವರವಾಗಿ ಸಂಭಾಷಣೆ ಸಮೇತ ಬರೆದುಕೊಟ್ಟಿದ್ದೆ. ಇಲ್ಲಿಂದಲೇ ನನ್ನ ಮತ್ತು ಡಾ. ರಾಜಕುಮಾರ್ ಅವರ ಸಂಬಂಧ ಗಾಢವಾದದ್ದು. ಒಂದು ಸಂದರ್ಭದಲ್ಲಿ ಶಿವರಾಜಕುಮಾರ್ ಅವರಿಗೆ ‘ಹಗಲು ವೇಷ’ವೆಂಬ ಚಿತ್ರ ಮಾಡಬೇಕೆಂದಿದ್ದೇನೆಂದು ಪ್ರಸ್ತಾಪಿಸಿ, ‘ಅದು ಬುಡಕಟ್ಟು ಕಲಾವಿದನೊಬ್ಬ ಬ್ರಿಟಿಷರ ವಿರುದ್ಧ ತಿರುಗಿಬೀಳುವ ಕತೆಯನ್ನು ಒಳಗೊಂಡಿದೆ’ ಎಂದಿದ್ದೆ. ಅವರು ಕೂಡಲೇ ತಾವು ಆ ಪಾತ್ರ ಮಾಡುವುದಾಗಿ ಹೇಳಿದ್ದಲ್ಲದೆ ನಿರ್ಮಾಪಕರನ್ನೂ ಒದಗಿಸಿದರು. ಅವರ ಕಾಲ್‌ಶೀಟ್ ಕೇಳಿದವರಿಗೆ ‘ಬರಗೂರ್ ಸರ್ ಅವರದೊಂದು ಸಬ್ಜೆಕ್ಟ್ ಇದೆ. ಅದನ್ನು ಮಾಡಿ. ನನ್ನ ಡೇಟ್ಸ್ ಕೊಡ್ತೇನೆ’ ಎಂದು ಹೇಳುತ್ತಿದ್ದರು. ಇದೇ ಮಾತನ್ನು ನಿರ್ಮಾಪಕರಾದ ಶ್ರೀ ಜಗನ್ನಾಥ್ ಮತ್ತು ಶ್ರೀ ಮಂಜುನಾಥ್ ಅವರಿಗೆ ಹೇಳಿದರು. ಅಷ್ಟೇ ಅಲ್ಲ, ಚಿತ್ರೀಕರಣದ ಸಂದರ್ಭದಲ್ಲಿ ತುಂಬಾ ಸಹಕಾರ ನೀಡಿದರು; ಸರಳವಾಗಿ ನಡೆದುಕೊಂಡರು. ತುಮಕೂರು ಬಳಿಯ ದೇವರಾಯನ ದುರ್ಗದಲ್ಲಿ ಚಿತ್ರೀಕರಣ ನಡೆಯುತ್ತಿತ್ತು. ಒಂದು ದಿನ ಮಧ್ಯಾಹ್ನ ಊಟದ ಬಿಡುವಿನಲ್ಲಿ ಅವರು ಕಾಣದಿದ್ದಾಗ ‘ಶಿವರಾಜಕುಮಾರ್ ಎಲ್ಲಿದ್ದಾರೆ?’ ಎಂದು ತಂಡದ ಒಬ್ಬರನ್ನು ಕೇಳಿದೆ. ಅವರು ‘ರೆಸ್ಟ್ ಮಾಡ್ತಿದಾರೆ’ ಎಂದರು. ಊಟ ಮುಗಿಸಿ ನಾನು ಎದ್ದು ಬಂದು ಶಿವರಾಜಕುಮಾರ್ ರೆಸ್ಟ್ ಮಾಡುತ್ತಿದ್ದದ್ದನ್ನು ನೋಡಿ ಚಕಿತಗೊಂಡೆ. ಅವರು ಹೊಲದ ಬದುವಿನ ಮೇಲೆ ಟವಲ್ ಹಾಸಿಕೊಂಡು ಮಲಗಿದ್ದರು! ಸರಳತೆಗೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೆ? + +ಇನ್ನೇನಾದರೂ ಹೊಸ ಪ್ರಯೋಗ ಮಾಡಬೇಕೆಂಬ ಹಂಬಲದಿಂದ ಒಬ್ಬರೇ ಕಲಾವಿದರಿರುವ ‘ಶಾಂತಿ’ ಚಿತ್ರವನ್ನು ನಿರ್ದೇಶಿಸಿದೆ. ಪರಿಕಲ್ಪನೆ, ರಚನೆ, ನಿರ್ದೇಶನದ ಜವಾಬ್ದಾರಿ ಹೊತ್ತ ನನಗೆ ನಿರ್ಮಾಪಕರಾಗಿ ಶ್ರೀ ರಮೇಶ್ ಯಾದವ್ ಮುಂದೆ ಬಂದರು. ಇದಕ್ಕೆ ಮೊದಲು ಇವರು ನನ್ನ ನಿರ್ದೇಶನದಲ್ಲಿ ‘ಕ್ಷಾಮ’ ಚಿತ್ರವನ್ನು ನಿರ್ಮಿಸಿದ್ದರು. ಅದಕ್ಕೆ ರಾಜ್ಯ ಸರ್ಕಾರದ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಬಂದಿತ್ತು. ಭಾವನ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ನನಗೆ ನಿರ್ದೇಶನ ಪ್ರಶಸ್ತಿ, ನಾಗರಾಜ ಆದವಾನಿ ಅವರಿಗೆ ಅತ್ಯುತ್ತಮ ಛಾಯಾಗ್ರಾಹಕ ಪ್ರಶಸ್ತಿ ಸಂದಿತ್ತು. ಇದು ನಾಗರಾಜ ಆದವಾನಿಯವರ ಮೊದಲ ಸಿನಿಮಾವಾಗಿತ್ತು. ರಮೇಶ್ ಯಾದವ್ ಉತ್ಸಾಹದಿಂದ ‘ಶಾಂತಿ’ ಚಿತ್ರಕ್ಕೆ ಹಣ ತೊಡಗಿಸಿದರು. ನನಗೆ ಸಹ ನಿರ್ದೇಶಕರಾಗಿದ್ದ ರವಿ ಅವರ ಜೊತೆಗೆ ರಮೇಶ್ ಯಾದವ್ ಕಡೆಯಿಂದ ನಟ್ರಾಜ್ ಶಿವು ಸೇರಿದರು. ಈಗ ನನಗೆ ಸಹ ನಿರ್ದೇಶಕರಾಗಿ ನಟ್ರಾಜ್ ಜೊತೆ ಪ್ರವೀಣ್ ಮತ್ತು ಸಹಾಯಕ ನಿರ್ದೇಶಕರಾಗಿ ಎಚ್.ಎನ್. ಗೋಪಾಲಕೃಷ್ಣ ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ವಿಶೇಷ ಅಂಶವೆಂದರೆ ಇವರು ಇಲ್ಲೀವರೆಗೆ ನನ್ನ ಸಿನಿಮಾಕ್ಕೆ ಮಾತ್ರ ಕೆಲಸ ಮಾಡುತ್ತಾರೆ. ಉಳಿದಂತೆ ತಮ್ಮದೇ ಬೇರೆ ಕೆಲಸ ಮಾಡಿಕೊಳ್ಳುತ್ತಾರೆ. + +‘ಶಾಂತಿ’ ಸಿನಿಮಾವನ್ನು ಮಡಿಕೇರಿ ಪರಿಸರದಲ್ಲಿ ಚಿತ್ರೀಕರಿಸಿದೆವು. ಏಕಪಾತ್ರದ ಈ ಸಿನಿಮಾಕ್ಕೆ ಎರಡನೇ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭ್ಯವಾಯಿತು. ಇಲ್ಲೀವರೆಗೆ ನನ್ನ ನಿರ್ದೇಶನದ ಯಾವ ಚಿತ್ರಕ್ಕೂ ರಾಜ್ಯದ ಪ್ರಥಮ ಅತ್ಯುತ್ತಮ ಚಿತ್ರ ಪ್ರಶಸ್ತಿ ಸಿಕ್ಕಿಲ್ಲ. ಸಿಕ್ಕಿದ್ದೆಲ್ಲ ದ್ವಿತೀಯ ಅಥವಾ ಸಾಮಾಜಿಕ ಕಾಳಜಿ ಚಿತ್ರ ಪ್ರಶಸ್ತಿ. ನನ್ನ ಚಿತ್ರದ ಕೆಲವು ಕಲಾವಿದರು, ತಂತ್ರಜ್ಞರಿಗೆ ಪ್ರಶಸ್ತಿ ಬಂದಿವೆ. ಅದೇ ಸಂತೋಷ. ಇರಲಿ; ಈಗ ‘ಶಾಂತಿ’ ಸಿನಿಮಾ ವಿಷಯ. ಬಹು ಮುಖ್ಯವಾಗಿ ‘ಶಾಂತಿ’ ಸಿನಿಮಾವು ಗಿನ್ನಿಸ್ ದಾಖಲೆಗೆ ಪಾತ್ರವಾಯಿತು. ಜಗತ್ತಿನಲ್ಲಿ ಏಕಪಾತ್ರದ ಮೂರನೇ ಚಿತ್ರವೆಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿ ನಿರ್ದೇಶಕನಾದ ನನ್ನ ಮತ್ತು ಕಲಾವಿದೆ ಭಾವನಾರ ಹೆಸರನ್ನು ನಮೂದಿಸ ಲಾಯಿತು. ಏಕಪಾತ್ರ ಚಿತ್ರ ನಿರ್ದೇಶನ ಮಾಡಿದ ಜಗತ್ತಿನ ಮೂರನೇ ನಿರ್ದೇಶಕನೆಂಬ ದಾಖಲೆ ನನ್ನ ಪಾಲಿನದಾಗಿತ್ತು. ಹೀಗೆ ದಾಖಲೆ ಮಾಡಿದ್ದಕ್ಕಾಗಿ ಅಂದಿನ ಮುಖ್ಯಮಂತ್ರಿ ಯವರಾಗಿದ್ದ ಶ್ರೀ ಧರ್ಮಸಿಂಗ್ ಅವರು ಸರ್ಕಾರದಿಂದ ಸಮಾರಂಭವೊಂದನ್ನು ಆಯೋಜಿಸಲು ತಿಳಿಸಿ, ಸ್ವತಃ ತಾವು ಭಾಗವಹಿಸಿ ನನ್ನನ್ನೂ, ಭಾವನ ಅವರನ್ನೂ, ನಿರ್ಮಾಪಕ ರಮೇಶ್ ಯಾದವ್ ಅವರನ್ನೂ ಸನ್ಮಾನಿಸಿದರು. ಇನ್ನೊಂದು ವಿಶಿಷ್ಟ ವಿಷಯವೆಂದರೆ ಸಂಗೀತ ನಿರ್ದೇಶಕರಾದ ಶ್ರೀ ಹಂಸಲೇಖ ಅವರು ಏಕಪಾತ್ರ ಚಿತ್ರಕ್ಕೆ ಏಕವಾದ್ಯದ ಸಂಗೀತ ನೀಡುತ್ತೇನೆಂದು ಇಡೀ ಸಿನಿಮಾದ ಹಿನ್ನೆಲೆ ಸಂಗೀತಕ್ಕೆ ಫ್ಲೂಟ್ ಮಾತ್ರ ಬಳಸಿ ಹೊಸ ಪ್ರಯೋಗ ಮಾಡಿದರು. ಶಾಂತಿ ಚಿತ್ರ ನಿರ್ಮಾಣದ ನಂತರ ರಮೇಶ್ ಯಾದವ್ ನನ್ನ ನಿರ್ದೇಶನದಲ್ಲಿ ‘ಶಬರಿ’ ಚಿತ್ರವನ್ನು ನಿರ್ಮಿಸಿದರು. ಇದು ‘ಭಾರತೀಯ ಪನೋರಮ’ ವಿಭಾಗಕ್ಕೆ ಆಯ್ಕೆಯಾಗಿ ಗೋವಾದಲ್ಲಿ ನಡೆದ ಅಂತರ ರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು. + +ಮುಂದೆ ಹೊಸ ರೀತಿಯ ವಸ್ತುಗಳ ಮೂಲಕ ಅನೇಕ ಸಿನಿಮಾಗಳನ್ನು ನಿರ್ದೇಶಿಸಿದೆ. ಜನಪದ, ಉಗ್ರಗಾಮಿ, ಭೂಮಿತಾಯಿ, ಭಾಗೀರತಿ, ಅಂಗೂಲಿಮಾಲ, ತಾಯಿ, ಬೆಕ್ಕು, ಮೂಕನಾಯಕ, ಅಮೃತಮತಿ, ತಾಯಿ ಕಸ್ತೂರ್‌ಗಾಂಧಿ, ಮೊಮ್ಮಗ ಆಕಾಂಕ್ಷ್ ಬರಗೂರ್ ನಾಯಕನಾದ ಮಕ್ಕಳ ಚಿತ್ರ ‘ಚಿಣ್ಣರ ಚಂದ್ರ’ – ಹೀಗೆ ಅನೇಕ ಚಿತ್ರಗಳು. ‘ಭಾಗೀರತಿ’ಯ ಅಭಿನಯಕ್ಕಾಗಿ ಭಾವನ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಬಂತು. ಬೆಂ.ಕೊ. ಶ್ರೀನಿವಾಸ್ ಅವರು ನಿರ್ಮಿಸಿದ ಈ ಚಿತ್ರವು ಬೆಂಗಳೂರಿನ ಮಿನಿ ಚಿತ್ರಮಂದಿರದಲ್ಲಿ ನೂರು ದಿನ ಪ್ರದರ್ಶನ ಕಂಡಿತು. ಬೆಂ.ಕೊ. ಶ್ರೀನಿವಾಸ್ ಅವರೇ ಸಾಯಿಕುಮಾರ್ ನಾಯಕ ನಟರಾಗಿದ್ದ ‘ಅಂಗೂಲಿಮಾಲ’ ಚಿತ್ರವನ್ನು ನಿರ್ಮಿಸಿದರು. ಸುಧಾರಾಣಿ, ಕಿಶೋರ್ ಅಭಿನಯದ ‘ಭೂಮಿತಾಯಿ’ ಚಿತ್ರವನ್ನು ಶ್ರೀ ಶರಣಗೌಡ ಪಾಟೀಲ್, ಶ್ರೀ ಮಲ್ಲಿಕಾರ್ಜುನ್ ಸಹಕರಿಸಿ ನಿರ್ಮಿಸಿದರು. ‘ಜನಪದ’ ಚಿತ್ರವನ್ನು ಶ್ರೀ ಪಂಜು ಪೂಜಾರಿಯವರು ನಿರ್ಮಿಸಿದ್ದು ಅವರ ಪುತ್ರ ರಾಘವ್ ನಾಯಕ ನಟರಾಗಿ ಅಭಿನಯಿಸಿದರು. ಈ ಚಿತ್ರದ ನಾಯಕಿ ಪಾತ್ರದಲ್ಲಿ ಪ್ರಸಿದ್ಧ ಕಲಾವಿದೆ ರಾಧಿಕ ನಟಿಸಿದರು. ಹುಳಿಮಾವು ರಾಮಚಂದ್ರ ನಿರ್ಮಿಸಿದ ‘ಉಗ್ರಗಾಮಿ’ ಕಿಶೋರ್ ನಾಯಕರಾಗಿ ನಟಿಸಿದ ಮೊದಲ ಕನ್ನಡ ಚಿತ್ರ. ಶ್ರೀ ಬಾಲರಾಜ್ ನಿರ್ಮಾಣದ ‘ಮೂಕ ನಾಯಕ’ ಚಿತ್ರದ ಪೋಷಕ ಪಾತ್ರಕ್ಕೆ ರೇಖಾ ಅವರಿಗೆ ರಾಜ್ಯ ಪ್ರಶಸ್ತಿ ಬಂತು. ಕುಮಾರ್ ಗೋವಿಂದ್ ಅವರ ಅಭಿನಯಕ್ಕೆ ಅಮೆರಿಕದ ಅಂತರರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಹಿತೈಷಿಗಳೂ ಮಿತ್ರರೂ ಆದ ಮುರಳೀಧರ ಹಾಲಪ್ಪ ನಿರ್ಮಾಣದ ‘ಮರಣದಂಡನೆ’ ಚಿತ್ರವು ರಾಜಸ್ಥಾನದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ನನಗೆ ಪ್ರಶಸ್ತಿ ತಂದುಕೊಟ್ಟಿತು. + +ರಷ್ಯಾ ಲೇಖಕ ಮಾಕ್ಸಿಂಗಾರ್ಕಿಯವರ ತಾಯಿ ಕಾದಂಬರಿ ಆಧಾರಿತ ‘ತಾಯಿ’ ಚಿತ್ರವನ್ನು ಪ್ರಮೀಳಾ ಜೋಷಾಯ್ ಮತ್ತು ಸುಂದರರಾಜ್ ನಿರ್ಮಿಸಿದರು. ಈ ಚಿತ್ರಕ್ಕೆ ರಾಷ್ಟç ಪ್ರಶಸ್ತಿ ಬಂತು. ರಾಜ್ಯ ಪ್ರಶಸ್ತಿಯೂ ಬಂತು. ಚಲನಚಿತ್ರಕ್ಕಾಗಿ ಬರೆದ ಗೀತೆಯೊಂದಕ್ಕೆ ರಾಷ್ಟç ಪ್ರಶಸ್ತಿ ಪಡೆದ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ ಕೂಡ ನನ್ನದಾಯಿತು. ಮಾಕ್ಸಿಂಗಾರ್ಕಿಯವರ ‘ತಾಯಿ’ ಕಾದಂಬರಿಯು ಪ್ರಕಟವಾಗಿ ನೂರು ವರ್ಷವಾದ ಸಂದರ್ಭದಲ್ಲಿ ಈ ಚಿತ್ರವನ್ನು ನಿರ್ದೇಶಿಸಿದ್ದು ನನಗೆ ಸಂತೋಷದ ಸಂಗತಿ. + +ಜನ್ನ ಕವಿ ರಚಿತ ‘ಯಶೋಧರ ಚರಿತೆ’ಯನ್ನು ಆಧರಿಸಿದ ಮಿತ್ರ ಶ್ರೀ ಪುಟ್ಟಣ್ಣ ಅವರು ನಿರ್ಮಿಸಿದ ‘ಅಮೃತಮತಿ’ ಸಿನಿಮಾವು ಹತ್ತಕ್ಕೂ ಹೆಚ್ಚು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಯಿತು. ನಾಯಕಿಯಾಗಿ ಅಭಿನಯಿಸಿದ ಹರಿಪ್ರಿಯ ಅವರಿಗೆ ಮೂರು ಅಂತರರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಗಳು, ಎರಡು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ, – ಹೀಗೆ ಅನೇಕ ಮನ್ನಣೆಗಳು ಲಭ್ಯವಾದದ್ದು ವಿಶೇಷವಾಗಿ ಉಲ್ಲೇಖನೀಯ. + +ಇಲ್ಲಿಯೇ ಶಮಿತಾ ಮಲ್ನಾಡ್ ಅವರ ಬಗ್ಗೆ ಹೇಳಬೇಕು. ನನ್ನ ನಿರ್ದೇಶನದ, ಕುಮಾರ್ ಗೋವಿಂದ್ ನಿರ್ಮಾಣದ ‘ಬೆಕ್ಕು’ ಚಿತ್ರವೇ ಇವರ ಮೊದಲ ಸಂಗೀತ ನಿರ್ದೇಶನದ ಚಿತ್ರ. ಈ ಚಿತ್ರದ ಗಾಯನಕ್ಕಾಗಿ ಇವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ‘ಬೆಕ್ಕು’ವಿನಿಂದ ಆರಂಭಿಸಿ ಇಲ್ಲೀವರೆಗೆ ನನ್ನ ಎಲ್ಲ ಚಿತ್ರಗಳಿಗೂ ಇವರು ಸಂಗೀತ ನಿರ್ದೇಶನ ನೀಡಿ ಸಹಕರಿಸಿದ್ದಾರೆ. ಶ್ರೀಮತಿ ಗೀತಾ ಅವರು ನಿರ್ಮಿಸಿದ ‘ತಾಯಿ ಕಸ್ತೂರ್ ಗಾಂಧಿ’ ಕೂಡ ಕೆಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಆಯ್ಕೆಯಾಯಿತು. ಪ್ಯಾರಿಸ್ ಚಿತ್ರೋತ್ಸವದಲ್ಲಿ ಉತ್ತಮ ಚಿತ್ರ ಪ್ರಶಸ್ತಿ ಬಂದದ್ದಲ್ಲದೆ ಗಾಂಧೀಜಿ ಪಾತ್ರದ ಅಭಿನಯಕ್ಕಾಗಿ ಇದೇ ಚಿತ್ರೋತ್ಸವದಲ್ಲಿ ಕಿಶೋರ್ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ಸಂದಿತು. ನೋಯ್ಡಾ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲೂ ಗಾಂಧಿ ಪಾತ್ರಕ್ಕಾಗಿ ಕಿಶೋರ್ ಅವರು ಪ್ರಶಸ್ತಿಗೆ ಭಾಜನರಾದರು. ಸುರೇಶ್ ಅರಸು ಅವರಿಗೆ ಅತ್ಯುತ್ತಮ ಸಂಕಲನಕಾರ ಎಂದು ಅಂತರರಾಷ್ಟ್ರೀಯ ಚಿತ್ರೋತ್ಸವದ ಪ್ರಶಸ್ತಿ ಲಭಿಸಿತು. ಕಸ್ತೂರ್ ಬಾ ಪಾತ್ರದಲ್ಲಿ ಹರಿಪ್ರಿಯ, ಗಾಂಧಿ ಪಾತ್ರದಲ್ಲಿ ಕಿಶೋರ್ ಅವರು ಯೌವ್ವನ, ಮಧ್ಯ ವಯಸ್ಸು ಮತ್ತು ವೃದ್ಧಾಪ್ಯ – ಮೂರೂ ಹಂತದಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಈ ಚಿತ್ರದಲ್ಲಿ ನನ್ನ ಮೊಮ್ಮಗ ಆಕಾಂಕ್ಷ್ ಬರಗೂರ್, ಬಾಲಕ ಗಾಂಧಿಯ ಪಾತ್ರ ಮಾಡಿದ್ದಾನೆ. ಈತನೇ ನಾಯಕನಾದ ಒಂದು ಮಕ್ಕಳ ಚಿತ್ರ ಮಾಡಬೇಕೆಂಬುದು ನನ್ನ ಪತ್ನಿ ರಾಜಲಕ್ಷ್ಮಿಯ ಬಯಕೆಯಾಗಿತ್ತು. ನನ್ನ ಬಯಕೆಯೂ ತೀವ್ರವಾಗಿತ್ತು. ನಮ್ಮಿಬ್ಬರ ಬಯಕೆಯನ್ನು ಈಡೇರಿಸಲೆಂಬಂತೆ ಶ್ರೀ ಗೋವಿಂದರಾಜ್ (ರಾಜಶೇಖರ್) ನಿರ್ಮಾಪಕರಾಗಿ ಬಂದರು. ‘ಚಿಣ್ಣರ ಚಂದ್ರ’ ಎಂಬ ಚಿತ್ರವನ್ನು ರೂಪಿಸಿದೆ. ಆದರೆ ಮೊಮ್ಮಗನು ಮುಖ್ಯ ಪಾತ್ರದಲ್ಲಿರುವ ಸಿನಿಮಾ ನೋಡಲು ರಾಜಲಕ್ಷ್ಮಿಯೇ ಇಲ್ಲ! + +‘ಸಮುದಾಯದತ್ತ ಸಿನಿಮಾ’ ಎಂಬ ಶೀರ್ಷಿಕೆಯ ಮೂಲಕ ನಾನು ನನ್ನ ನಿರ್ದೇಶನದ ಕೆಲವು ಚಿತ್ರಗಳನ್ನು ನೇರವಾಗಿ ಜನರ ಬಳಿ ಕೊಂಡೊಯ್ದ ‘ಪರ್ಯಾಯ ಬಿಡುಗಡೆ ಪ್ರಯೋಗ’ ಕುರಿತು ಹೇಳಲೇಬೇಕು. ವಿವಿಧ ಕಾರಣಗಳಿಗಾಗಿ ಥಿಯೇಟರ್ ಗಳಲ್ಲಿ ಚಿತ್ರ ಬಿಡುಗಡೆಯ ‘ಸಂಪ್ರದಾಯ’ ಸಾಧ್ಯವಾಗದೆ ಇದ್ದಾಗ ವಿವಿಧ ಊರುಗಳ ನನ್ನ ಮಿತ್ರರನ್ನು ಕೇಳಿಕೊಂಡು ಆಯಾ ಊರುಗಳಲ್ಲಿ ಚಿತ್ರ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಆಸಕ್ತರಿಂದ ಮೊದಲೇ ಹಣ ಸಂಗ್ರಹಿಸುವುದು, ಥಿಯೇಟರ್ ಲಭ್ಯ ವಾದರೆ ಥಿಯೇಟರ್‌ನಲ್ಲಿ ಅಥವಾ ಯಾವುದಾದರೂ ಸುಸಜ್ಜಿತ ಸಭಾಂಗಣದಲ್ಲಿ ಚಿತ್ರವನ್ನು ಪ್ರದರ್ಶಿಸುವುದು. ಇದಕ್ಕಾಗಿ ಒಂದು ವೇಳಾಪಟ್ಟಿ ಸಿದ್ಧಮಾಡಿ ಅದರಂತೆ ಚಿತ್ರದ ಪಯಣ ಆರಂಭಿಸುವುದು. ಇದು ‘ಚಿತ್ರಯಾತ್ರೆ’. ಈ ಯಾತ್ರೆಯ ಮೂಲಕ ಜನರಿಗೆ ತಲಪುವುದು ಮತ್ತು ನಿರ್ಮಾಪಕರಿಗೆ ಒಂದಿಷ್ಟು ಹಣ ಬರುವುದು ಮುಖ್ಯ ಉದ್ದೇಶವಾಗಿತ್ತು. ಕೆಲವು ಕಡೆ ವಿಚಾರಗೋಷ್ಠಿಗಳನ್ನೂ ಏರ್ಪಡಿಸಲಾಗಿತ್ತು. ಹೀಗೆ ಕೆಲವು ಚಿತ್ರಗಳನ್ನು ನೂರಾರು ಊರುಗಳಲ್ಲಿ ಪ್ರದರ್ಶಿಸಲಾಗಿದೆ. ಇದೊಂದು ಹೊಸ ಪ್ರಯೋಗ. ಸಮುದಾಯದತ್ತ ಸಿನಿಮಾವನ್ನು ಕೊಂಡೊಯ್ದ ಪ್ರಯೋಗ. ಇದಕ್ಕೆ ಸಹಕರಿಸಿದ ಸ್ನೇಹ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ. ‘ಗೋಪಿ’ಯ ಸಹಕಾರವನ್ನೂ ನೆನೆಯುತ್ತೇನೆ. ಅಗತ್ಯವಾದಾಗ ಈ ಪ್ರಯೋಗವನ್ನು ಮುಂದುವರಿಸುತ್ತೇನೆ. + +ಸರ್ಕಾರವು ಕಡೇ ಪಕ್ಷ ಜಿಲ್ಲಾ ಕೇಂದ್ರಗಳಲ್ಲಾದರೂ ಸರಳವಾದ ಮಿನಿ ಚಿತ್ರ ಮಂದಿರಗಳನ್ನು ನಿರ್ಮಿಸಬೇಕು. ಸದಭಿರುಚಿಯ ಹಾಗೂ ಹೊಸ ವಿನ್ಯಾಸದ ಚಿತ್ರಗಳ ಪ್ರದರ್ಶನಕ್ಕೆ ಅವಕಾಶವಾಗಬೇಕು. ಹಾಗೆಂದು ಒಂದೇ ಮಾದರಿಯ ಚಿತ್ರಗಳನ್ನು ಪ್ರದರ್ಶಿಸಬೇಕು ಎಂದೇನೂ ಇಲ್ಲ. ‘ಸಿನಿಮಾ ಸಂಸ್ಕೃತಿ’ಯನ್ನು ವಿಸ್ತರಿಸಲು ಪೂರಕವಾದ ಕೆಲಸವನ್ನು ಈ ಮಿನಿ ಚಿತ್ರಮಂದಿರಗಳ ಮೂಲಕ ಮಾಡಬೇಕು. ಸರ್ಕಾರವಲ್ಲದೆ ಸಿನಿಮಾ ಸಂಸ್ಕ Èತಿಯಲ್ಲಿ ಆಸಕ್ತರಾದವರಿಂದಲೂ ‘ಸಮುದಾಯದತ್ತ ಸಿನಿಮಾ’ ತಲುಪುವ ಕೆಲಸವಾಗುವುದು ಅಗತ್ಯ. ಈ ಕೆಲಸಕ್ಕೆ ಪೂರಕವಾಗಿ ಸಾಧ್ಯವಾದ ಕಡೆಯಲ್ಲೆಲ್ಲ ‘ಸಿನಿಮಾ ಸೊಸೈಟಿ’ಗಳನ್ನು ಸ್ಥಾಪಿಸಿಕೊಳ್ಳುವುದು ಅಪೇಕ್ಷಣೀಯ. ಈ ನಿಟ್ಟಿನಲ್ಲಿ ಚಲನಚಿತ್ರ ಅಕಾಡೆಮಿಯ ಪಾತ್ರ ಮುಖ್ಯವಾದುದು. ಬೆಂಗಳೂರಲ್ಲಿ ಅಂತರರಾಷ್ಟ್ರೀಯ ಚಿತ್ರೋತ್ಸವ ನಡೆಸುವುದು ಮಾತ್ರವೇ ಮುಖ್ಯವಾಗಬಾರದು. ಅದರ ಜೊತೆಗೆ ಸಮುದಾಯದಲ್ಲಿ ಸಿನಿಮಾ ಸಂಸ್ಕೃ ಬೆಳೆಸುವುದು ಆದ್ಯತೆಯಾಗಬೇಕು. + +ನನ್ನ ಸಿನಿಮಾಯಾನದ ಕೆಲವು ಪ್ರಸಂಗಗಳನ್ನು ಇಲ್ಲಿ ಪ್ರಸ್ತಾಪಿಸಿದ್ದೇನೆ. ಎಲ್ಲವನ್ನೂ ಎಲ್ಲರನ್ನೂ ಇಲ್ಲಿ ಪ್ರಸ್ತಾಪಿಸಲು ಸಾಧ್ಯವಾಗದಿರಬಹುದು. ಅದಕ್ಕಾಗಿ ಮನ್ನಿಸಿ ಎನ್ನುತ್ತೇನೆ. ಎಲ್ಲಾ ಸಿನಿಮಾಗಳ ನಿರ್ಮಾಪಕರು, ತಂತ್ರಜ್ಞರು, ಕಲಾವಿದರು, ಲೈಟ್ ಬಾಯ್‌ಗಳನ್ನು ಒಳಗೊಂಡಂತೆ ಸಮಸ್ತ ಸಿನಿಮಾ ಶ್ರಮಿಕರನ್ನೂ ನೆನೆಯುತ್ತೇನೆ. ಅಂತೆಯೇ ಚಿತ್ರೀಕರಣದ ಉಸ್ತುವಾರಿ ಮಾಡುತ್ತ ಬಂದ ವಿ. ಚಂದ್ರಶೇಖರ್ ಅವರನ್ನೂ ನೆನೆಯುತ್ತೇನೆ. ‘ಸೂರ್ಯ’ ಸಿನಿಮಾ ಬಿಡುಗಡೆಯಾದಾಗ ಡಾ. ಎಲ್. ಹನುಮಂತಯ್ಯನವರು ನನ್ನನ್ನು ವಿವಿಧ ಹಾಸ್ಟೆಲ್‌ಗಳಿಗೆ ಕರೆದುಕೊಂಡು ಹೋಗಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿ ಸಿನಿಮಾ ನೋಡಲು ಪ್ರೇರಣೆ ನೀಡಿದ್ದನ್ನು ಮರೆಯಲಾರೆ, ನನ್ನ ಸಾಹಿತ್ಯ ಮತ್ತು ಸಿನಿಮಾಗಳ ಬಗ್ಗೆ ವಿಮರ್ಶಾತ್ಮಕ ಲೇಖನಗಳನ್ನು ಬರೆದ ಎಲ್ಲರನ್ನೂ ಮರೆಯುವಂತೆಯೇ ಇಲ್ಲ. ಅಂತೆಯೇ ನನ್ನ ಪುಸ್ತಕಗಳ ಪ್ರಕಾಶಕರು ಮತ್ತು ಪತ್ರಿಕೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಸಾಹಿತ್ಯ ಮತ್ತು ಸಿನಿಮಾ ಕುರಿತಂತೆ ಅಧ್ಯಯನ ಮಾಡಿ ಹತ್ತಕ್ಕೂ ಹೆಚ್ಚು ಮಂದಿ ಪಿಎಚ್.ಡಿ ಪಡೆದಿದ್ದಾರೆ. ಲೇಖಕ-ಪತ್ರಕರ್ತ, ಮಿತ್ರ ಶ್ರೀ ಗಂಗಾಧರ ಮೊದಲಿಯಾರ್ ಅವರು ಆರಂಭದಿಂದಲೂ ನನ್ನ ನಿರ್ದೇಶನದ ಎಲ್ಲಾ ಸಿನಿಮಾಗಳ ಬಗ್ಗೆ ಆಸಕ್ತಿ ವಹಿಸಿ ಅಧ್ಯಯನ ಮಾಡಿ ಬರೆದಿದ್ದಾರೆ. ಇವರನ್ನೂ ಒಳಗೊಂಡಂತೆ ನನ್ನ ಸಿನಿಮಾ ಮತ್ತು ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡಿದ ಎಲ್ಲರನ್ನೂ ಕೃತಜ್ಞತೆಯಿಂದ ನೆನೆಯುತ್ತೇನೆ. + + + +ಹೀಗೆ ನೆನೆಯಬೇಕಾದ ಅದೆಷ್ಟೋ ಆತ್ಮೀಯರಿದ್ದಾರೆ. ಎಲ್ಲರ ಹೆಸರು ಉಲ್ಲೇಖಿಸಲಾಗದಿದ್ದರೂ ಕೆಲವರ ಸಹಕಾರವನ್ನು ಸಾಂಕೇತಿಕವಾಗಿ ಸ್ಮರಿಸುತ್ತೇನೆ. ನಾನು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದ್ದಾಗ, ನನಗೆ ಆಗ ನೇರ ಪರಿಚಯವಿಲ್ಲದಿದ್ದರೂ ಅಕಾಡೆಮಿಗೆ ಬಂದು ಮೆಚ್ಚುಗೆಯ ಮಾತು ಹೇಳಿದ ಡಾ. ಸಿ.ಎನ್. ರಾಮಚಂದ್ರನ್, ಡಾ. ಗುರುಲಿಂಗಕಾಪ್ಸೆ ಮತ್ತು ನನ್ನ ಸಹೋದ್ಯೋಗಿಗಳೇ ಟೀಕಾತ್ಮಕ ಬರಹಗಳನ್ನು ಬರೆದಾಗ ಅಕಾಡೆಮಿಗೆ ಬಂದು ನನಗೆ ಬೆಂಬಲದ ನುಡಿಗಳಾಡಿದ ಡಾ. ಹಾ.ಮಾ. ನಾಯಕ ಅವರನ್ನು ಮರೆಯಲಾರೆ. ನಾನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತರಾಗಿದ್ದ ಶ್ರೀ ಕೆ.ಸಿ. ರಾಮಮೂರ್ತಿಯವರ ಸಹಕಾರ ದೊಡ್ಡದು. ಸಿರಾದ ‘ಬರಗೂರು ಮೇಷ್ಟ್ರು ಬಳಗ’ದ ಗೆಳೆಯರು, ಸಿರಿ ಸ್ನೇಹದ ಬೂವನಹಳ್ಳಿ ನಾಗರಾಜ್ ಮತ್ತು ತುಮಕೂರಿನ ಜಿ.ಎಂ. ಶ್ರೀನಿವಾಸಯ್ಯ, ದೊರೆರಾಜ್, ಬಾ.ಹ. ರಮಾಕುಮಾರಿ, ರಮೇಶ್, ಶೈಲಾನಾಗಾರಾಜ್ ಮುಂತಾದವರ ವಿಶ್ವಾಸ ಹಿರಿದು. ಈಗ ಸಹಕಾರ ಸಚಿವರಾಗಿರುವ ನನ್ನ ಹಿತೈಷಿ ಕೆ.ಎನ್. ರಾಜಣ್ಣ ಅವರ ಸಹಕಾರ ಸದಾ ಹಚ್ಚಹಸಿರು. ನನ್ನ ಕೆಲವು ಕಾರ್ಯಕ್ರಮಗಳಿಗೆ ಸಹಯೋಗನೀಡುತ್ತ ಬಂದಿರುವ ಸಿ.ಕೆ. ರಾಮೇಗೌಡ ಮತ್ತು ಸಮೀವುಲ್ಲಾಖಾನ್ ಅವರ ಕ್ರಿಯಾಶೀಲತೆ ಉಲ್ಲೇಖನೀಯ; ‘ಭರತನಗರಿ’ ಕಾದಂಬರಿಯ ಬಗ್ಗೆ ಎದ್ದ ವಿವಾದದ ಸಂದರ್ಭದಲ್ಲಿ ನನ್ನ ಪರವಾಗಿನಿಂತ ಅನೇಕರ ಹಾದಿಯಲ್ಲಿ ಜೊತೆಗೂಡಿದ ನಿವೃತ್ತ ಅಧಿಕಾರಿ ಪ್ರಸನ್ನ, ಗಂಗಾವತಿಯ ಪತ್ರಕರ್ತ ತಿಪ್ಪೇಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ ಶಿವಪ್ಪ ಹಾದಿಮನಿ, ವೆಂಕಟಗಿರಿ ದಳವಾಯಿ, ಅಮರೇಶ್ ಯತಗಲ್, ಮುಂತಾದವರ ಸಹಕಾರ ಸ್ಮರಣೀಯ. ಹೊರನಾಡ ಕನ್ನಡಿಗರೆಂದ ಕೂಡಲೇ ತಕ್ಷಣ ನೆನೆಪಾಗುವುದು ಮುಂಬೈನ ಡಾ. ಉಪಾಧ್ಯ, ಭರತ್ ಮುಂತಾದವರು. ಹೀಗೆ ಈ ಮಿತ್ರರ ಸಾಂಕೇತಿಕ ನೆನಪಿನ ಮೂಲಕ ಸಮಸ್ತ ಸ್ನೇಹಿತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file diff --git a/Kenda Sampige/article_99.txt b/Kenda Sampige/article_99.txt new file mode 100644 index 0000000000000000000000000000000000000000..6eed7dd312d4a359118858c35f124cc1a1474245 --- /dev/null +++ b/Kenda Sampige/article_99.txt @@ -0,0 +1,27 @@ +‘ದಾಸವಾಳ’ ನೀಳ್ಗತೆಗಳ ಸಂಕಲನ ಓದಿ ಮುಗಿಸಿದೆ. ಕೊಂಚ ಸಮಯ ಮಾತುಬಾರದೆ ಮೂಕಳಾದೆ. ಅಥವಾ ನನ್ನೊಳಗೆ ನಾನೇ‌ ಆಳಕ್ಕಿಳಿದೆ. ಬಹುತೇಕ ಕತೆಗಳು ಸ್ತ್ರೀ ದೃಷ್ಟಿ ಕೋನದಲ್ಲಿ ನಿರೂಪಣೆಯಾಗಿವೆ. ಹಾಗಾಗಿ ಅವೆಲ್ಲವೂ ನನ್ನನ್ನು ಬಹುವಾಗಿ ಆವರಿಸಿದವು. ಕೆಲವು ಸಾಲುಗಳು ಹೊಸ ನೋಟಕೊಟ್ಟು ಬೆರಗು ಹುಟ್ಟಿಸಿದವು. ಉದಾಹರಣೆಗೆ ‘ಕಣ್ಣು ಯಾವ ಕಡೆಗೆ ತಿರುಗಿದರೂ ರೆಪ್ಪೆಯಿಂದಿಳಿದು ಎದುರಿಗೆ ನಿಲ್ಲುತ್ತದೆ’ ಇಂಥ ಸಾಲುಗಳು ಪುಟ ಪುಟದಲ್ಲೂ ತುಂಬಿಹೋಗಿವೆ. + +(ಎ.ಎನ್. ಪ್ರಸನ್ನ) + +‘ಕುಣಿಕೆ’ಯ ವಸ್ತು ಬೆಚ್ಚಿ ಬೀಳಿಸಿತು. ಬೇಲಿಯೇ ಎದ್ದು ಹೊಲ ಮೇಯ್ದಂತೆ ನಾಣ್ನುಡಿ ಇಂಥದನ್ನು ನೋಡಿಯೇ ಹುಟ್ಟಿತೇನೋ! ಅಂತ್ಯದಲ್ಲಿ ಮಗಳ ನಿಲುವು, ಎಚ್ಚರ ಬಡಿದೆಬ್ಬಿಸುತ್ತದೆ. ನಮ್ಮ ಬದುಕು ನಾವೇ ರೂಪಿಸಿಕೊಳ್ಳಬೇಕು. ಅದು ಯಾರ ಅಂಗೈಯಲ್ಲಿಯೂ ಬೆಚ್ಚಗಿರುವುದಿಲ್ಲ. + +‘ವಿಹಾರ’ ಕತೆಯು ಸಹ ಭಾವನೆಗಳ ಏರಿಳಿತದ ನಡುವೆ ಹೊಯ್ದಾಡುವಂತೆ ಮಾಡಿತು. ಕಲ್ಪನೆ ಕೊಡುವ ಸುಖ ಅನನ್ಯ. ಆದರೆ ವಾಸ್ತವವನ್ನು ಬಡಿದೋಡಿಸಲಾರೆವಲ್ಲ! ಮತ್ತದೇ ಬೇಸರ, ಅದೆ…. ಅಂದಹಾಗೆ. + +ನಿರ್ಧಾರ ‘ಸ್ವಭಾವಗಳು ಎಷ್ಟು ಭಿನ್ನ, ಆದರೆ ಅವು ವಿಕೃತವೂ ಆದಾಗ…. ಇಡೀ ವಾತಾವರಣ ಬದಲಾಗುವ ಬಗೆ ಒಮ್ಮೆಲೇ ನಡುಗಿಸಿತು. ಹೆಣ್ಣು ಮಗಳೊಬ್ಬಳು ಕ್ಷಮಿಸಲಾರದ ಅಪರಾಧಕ್ಕೆ ಶಿಕ್ಷೆ ಕೊಡದೇ ಬಿಡಳು. ಆ ತಿರುವು ಇಡೀ ಕಥಾ ಭಾಗಕ್ಕೆ ಬಹು ಮುಖ್ಯ. + +ಸಮಾಧಾನದ ನಸುನಗು ಎನ್ನುವ ಕೊನೆಯ ವಾಕ್ಯ ಬಹಳಷ್ಟನ್ನು ಹೇಳುತ್ತದೆ. ಅಪರೂಪ, ವಿಶಿಷ್ಟ ಅನ್ನಿಸಿದ ಕತೆ. ನಿಮ್ಮ ಕತೆಯಲ್ಲಿ ಬರುವ ಹೆಣ್ಣು ಪಾತ್ರಗಳು ಆಪ್ತವಾಗುತ್ತವೆ; ಬೆಚ್ಚಿಬೀಳಿಸುತ್ತವೆ. ‘ದಾಸವಾಳ’ ಕೂಡಾ ಮತ್ತೆ ಮತ್ತೆ ಕಾಡುವ ಕತೆ. ನೈತಿಕತೆ- ಅನೈತಿಕತೆಗಳೇ ಎದ್ದುಬಂದು ನಮ್ಮ ನಡುವಿನ ಸೂಕ್ಷ್ಮ ಕಂಡುಹಿಡಿಯಿರಿ ಎಂದು ಜಪ್ಪಿಸಿ ಕೇಳಿದಂತಾಯಿತು. + +ಸ್ವೇಚ್ಛೆ, ವಿಫಲ ಪ್ರಣಯ ಏನೇ ಇರಲಿ ಅಲ್ಲೊಂದು ಸ್ವಾತಂತ್ರ್ಯದ ತುಡಿತವಿದೆಯಲ್ಲ, ಅದೇ ಬಹುದೊಡ್ಡ ಶಕ್ತಿ.’ಹದ್ದು ಹಾರುವ ಹೊತ್ತು’ ಒಂದು ಓದಿಗೆ ದಕ್ಕಲಿಲ್ಲ. ಮತ್ತೆ ಮತ್ತೆ ಓದಿದಾಗ ನಂಬಿಕೆ, ಬದುಕಿನ ಅನಿವಾರ್ಯ, ಎಲ್ಲಕ್ಕಿಂತ ಮಿಗಿಲಾದ ಸಂಕೀರ್ಣ ನಿಗೂಢತೆ ಬೆಚ್ಚಿ ಬೀಳಿಸಿತು. + +‘ಹೊರದಾರಿ’ಯಲ್ಲಿ ಬರುವ ದತ್ತು ಮಗುವಿನ ಸಮಸ್ಯೆ ಅನೇಕ ಸತ್ಯ ಘಟನೆಗಳನ್ನು ನೆನಪಿಸಿತು. ಇಂಥ ಸಮಸ್ಯೆಗಳಿಂದಲೇ ಇರಬೇಕು. ಈಗ ನಿಯಮಗಳು ತುಂಬಾ ಬಿಗಿಯಾಗಿವೆ. ಸುಲಭವಿಲ್ಲ ಮಗುವೊಂದನ್ನು ಪಡೆಯುವುದು. ಅದೇನೇ ಇರಲಿ ವಾಚ್ಯವಾಗಿ ಹೇಳದಿದ್ದರೂ ಹೆಣ್ಣು ಮಗುವೊಂದು ಮಾತ್ರ ಇನ್ನೊಂದು ಕರುಳಿನ ಕೂಗನ್ನು ಗ್ರಹಿಸಬಲ್ಲದು ಎಂದು ತೋರಿದ್ದೀರಿ. + +(ಡಾ. ವಿಜಯಾ) + +ಎಲ್ಲಕ್ಕಿಂತ ಮಿಗಿಲಾಗಿ ನನಗೆ ನೀವು ಕೊಡುವ ವಿವರಗಳು ಆಪ್ತವಾದವು. ಗಿಡ ಮರ ಬಳ್ಳಿಗಳ ಜೊತೆ ಮಾತಾಡಿಬಿಡುತ್ತೀರಿ! ಸುಳಿಗಾಳಿ, ಮೋಡ, ಮಳೆಗಳೂ ನಿಮ್ಮ ಕೈಯಲ್ಲಿ ಪಾತ್ರಗಳ ಹಾಗೆ ಮಾತಾಡುತ್ತವೆ. ಮನಸ್ಸಿನ ಹೊಯ್ದಾಟವನ್ನು ಗಾಳಿ, ಮಳೆಯ ತುಂತುರು, ಕಡೆಗೆ ಗಾಳಿಗಾಡುವ ಬಾಗಿಲು ಕಿಟಕಿಯ ಪರದೆಗಳೊಂದಿಗೂ ಪಿಸುಗುಡುತ್ತೀರಿ. + +ನಾನು ಊಹಿಸಿಯೂ ಇರದ ದಿಕ್ಕಿನಿಂದ ಸದ್ದಿಲ್ಲದೆ ಯಾವುದೋ ಬಳ್ಳಿ, ಹೂವು, ಮೋಡ ಮಾತನಾಡುವುದಿದೆಯಲ್ಲ, ಅದೊಂದು ಸಂಭ್ರಮ. ಕತೆಗಿಂತ ಮಿಗಿಲಾಗಿ ಈ ವಿವರಗಳ ನವಿರಿಗಾಗಿ ಹಾತೊರೆಯುವಂತಾಯಿತು. + + + +ಇದೊಂದು ವಿನೂತನ ಸಂಗತಿ ನನಗೆ. ತುಂಬಾ ಸಂತೋಷವಾಯಿತು. ಅಲ್ಲಿಯ ವಿವರಗಳು, ಕಾಣಕಾಣುತ್ತಲೇ ಬಹುದೊಡ್ಡ ವ್ಯಾಖ್ಯಾನ ಕ್ಕೆ ಒಡ್ಡಿಕೊಳ್ಳುತ್ತ ಪ್ರತಿಮೆಗಳಾಗಿ ಮಾರ್ಪಡುವ ಬಗೆ ಸಂಭ್ರಮವನ್ನೇ ಹುಟ್ಟು ಹಾಕಿದವು. ಅಭಿನಂದನೆ ಪ್ರಸನ್ನ. ಮುಂದುವರಿಸಿ. + +ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ \ No newline at end of file