CoolCoder44 commited on
Commit
7cb7f9c
·
verified ·
1 Parent(s): dceb95e

13ec767c6b707f37f35e0cd12111c4f22f3b374bc68fe5756bf7a15eb41aa19d

Browse files
Files changed (50) hide show
  1. eesanje/url_47_140_8.txt +5 -0
  2. eesanje/url_47_140_9.txt +6 -0
  3. eesanje/url_47_141_1.txt +4 -0
  4. eesanje/url_47_141_10.txt +7 -0
  5. eesanje/url_47_141_11.txt +4 -0
  6. eesanje/url_47_141_12.txt +4 -0
  7. eesanje/url_47_141_2.txt +10 -0
  8. eesanje/url_47_141_3.txt +4 -0
  9. eesanje/url_47_141_4.txt +4 -0
  10. eesanje/url_47_141_5.txt +6 -0
  11. eesanje/url_47_141_6.txt +4 -0
  12. eesanje/url_47_141_7.txt +6 -0
  13. eesanje/url_47_141_8.txt +8 -0
  14. eesanje/url_47_141_9.txt +8 -0
  15. eesanje/url_47_142_1.txt +5 -0
  16. eesanje/url_47_142_10.txt +6 -0
  17. eesanje/url_47_142_11.txt +9 -0
  18. eesanje/url_47_142_12.txt +4 -0
  19. eesanje/url_47_142_2.txt +5 -0
  20. eesanje/url_47_142_3.txt +9 -0
  21. eesanje/url_47_142_4.txt +10 -0
  22. eesanje/url_47_142_5.txt +5 -0
  23. eesanje/url_47_142_6.txt +4 -0
  24. eesanje/url_47_142_7.txt +7 -0
  25. eesanje/url_47_142_8.txt +3 -0
  26. eesanje/url_47_142_9.txt +4 -0
  27. eesanje/url_47_143_1.txt +9 -0
  28. eesanje/url_47_143_10.txt +5 -0
  29. eesanje/url_47_143_11.txt +4 -0
  30. eesanje/url_47_143_12.txt +6 -0
  31. eesanje/url_47_143_2.txt +7 -0
  32. eesanje/url_47_143_3.txt +5 -0
  33. eesanje/url_47_143_4.txt +5 -0
  34. eesanje/url_47_143_5.txt +8 -0
  35. eesanje/url_47_143_6.txt +5 -0
  36. eesanje/url_47_143_7.txt +4 -0
  37. eesanje/url_47_143_8.txt +5 -0
  38. eesanje/url_47_143_9.txt +6 -0
  39. eesanje/url_47_144_10.txt +5 -0
  40. eesanje/url_47_144_11.txt +5 -0
  41. eesanje/url_47_144_12.txt +6 -0
  42. eesanje/url_47_144_2.txt +5 -0
  43. eesanje/url_47_144_3.txt +6 -0
  44. eesanje/url_47_144_4.txt +6 -0
  45. eesanje/url_47_144_5.txt +8 -0
  46. eesanje/url_47_144_6.txt +4 -0
  47. eesanje/url_47_144_7.txt +5 -0
  48. eesanje/url_47_144_8.txt +5 -0
  49. eesanje/url_47_144_9.txt +4 -0
  50. eesanje/url_47_145_1.txt +38 -0
eesanje/url_47_140_8.txt ADDED
@@ -0,0 +1,5 @@
 
 
 
 
 
 
1
+ ರಷ್ಯಾ ಉಗ್ರರ ದಾಳಿಯನ್ನು ತೀವ್ರವಾಗಿ ಖಂಡಿಸಿದ ಪ್ರಧಾನಿ ಮೋದಿ
2
+ ನವದೆಹಲಿ,ಆ.23-ರಷ್ಯಾ ರಾಜಧಾನಿ ಮಾಸ್ಕೋದ ಕ್ರೋಕಸ್ ಕನ್ಸರ್ಟ್ ಹಾಲ್‍ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಪ್ರಧಾನಿ ನರೇಂದ್ರಮೋದಿ ಖಂಡಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಮಾತನಾಡಿರುವ ಅವರು ಮಾಸ್ಕೋದಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯನ್ನು ಬಲವಾಗಿ ಖಂಡಿಸುತ್ತೇವೆ.
3
+ ಸಂತ್ರಸ್ತ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಹೇಳಿದ್ದಾರೆ.ಇತ್ತ ದಾಳಿಗೆ ಸಂಬಂಧಪಟ್ಟಂತೆ ರಷ್ಯಾ ಅಧ್ಯಕ್ಷ ಪುಟಿನ್, ದಾಳಿಕೋರರು ತಕ್ಕ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕರನ್ನು ನಾವು ಸುಮ್ಮನೆ ಬಿಡಲ್ಲ ಎಂದು ದಾಳಿಯ ಹೊಣೆ ಹೊತ್ತ ಐಸಿಸ್‍ಗೆ ಎಚ್ಚರಿಕೆ ನೀಡಿದ್ದಾರೆ.
4
+ ನಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಸಂತ್ರಸ್ತರ ಕುಟುಂಬಗಳೊಂದಿಗೆ ಇವೆ. ಈ ದುಃಖದ ಸಮಯದಲ್ಲಿ ಭಾರತವು ರಷ್ಯಾದ ಒಕ್ಕೂಟದ ಸರ್ಕಾರ ಮತ್ತು ಜನರೊಂದಿಗೆ ಒಗ್ಗಟ್ಟಿನಿಂದ ನಿಂತಿದೆ ಎಂದು ಟ್ವೀಟ್ ಮಾಡಿದ್ದಾರೆ.
5
+ ಶುಕ್ರವಾರ ಮಧ್ಯರಾತ್ರಿ ಸಂಗೀತ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲಿ ನಡೆದ ಈ ಭೀಕರ ಭಯೋತ್ಪಾದಕ ದಾಳಿಯಲ್ಲಿ ಈವರೆಗೆ ಕನಿಷ್ಠ 70 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಮತ್ತು 140 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
eesanje/url_47_140_9.txt ADDED
@@ -0,0 +1,6 @@
 
 
 
 
 
 
 
1
+ 35 ಬಂಧಿತ ಸೊಮಾಲಿ ಕಡಲ್ಗಳ್ಳರನ್ನು ವಿಚಾರಣೆಗೆ ಭಾರತಕ್ಕೆ ಕರೆತಂದ ನೌಕಾಪಡೆ
2
+ ಮುಂಬೈ,ಮಾ.23-ಭಾರತೀಯ ನೌಕಾಪಡೆಯು ಕೋಲ್ಕತ್ತಾದ ಅರಬ್ಬಿ ಸಮುದ್ರದ ಬಳಿ 35 ಸೊಮಾಲಿಯನ್ ಕಡಲಗಳ್ಳರನ್ನು ಬಂಧಿಸಿದ್ದು, ಮುಂಬೈಗೆ ತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾರತೀಯ ದಂಡ ಸಂಹಿತೆ, ಕಡಲ್ಗಳ್ಳತನ ವಿರೋಧಿ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಸಂಬಂಧಿತ ಸೆಕ್ಷನ್‍ಗಳಡಿ ಪ್ರಕರಣವನ್ನು ದಾಖಲಿಸಲಾಗಿದೆ.
3
+ 40 ಗಂಟೆಗಳ ಕಾಲ ನಿರಂತರವಾದ ಹೈ-ಟೆಂಪೋ ಕಾರ್ಯಾಚರಣೆಗಳ ನಂತರ ಮಾರ್ಚ್ 16ರಂದು ಕಡಲುಗಳ್ಳರ ಒಗಿ ರುಯೆನ್ ಹಡಗನ್ನು ತಡೆದು ಅದರಲ್ಲಿದ್ದ ಭಾರತೀಯ ಹಾಗೂ ಬಲ್ಗೇರಿಯಾದ ಪ್ರಜೆಗಳನ್ನು ರಕ್ಷಣೆ ಮಾಡಲಾಗಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
4
+ ಈ ಹಡಗನ್ನು 2023 ಡಿಸೆಂಬರ್‍ನಲ್ಲಿ ಅಪಹರಣ ಮಾಡಲಾಗಿತ್ತು. ಭಾರತೀಯ ನೌಕಾಪಡೆಯು ಸಮುದ್ರ ಭದ್ರತಾ ಕಾರ್ಯಾಚರಣೆಗಳ ಭಾಗವಾಗಿ ಈ ಸಮುದ್ರದಲ್ಲಿ ಭಾರೀ ಕಾರ್ಯಚರಣೆಯನ್ನು ನಡೆಸಿ, ಒಗಿ ರುಯೆನ್ ಹಡಗುನ್ನು ರಕ್ಷಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೊಮಾಲಿಯಾದಿಂದ ಪೂರ್ವಕ್ಕೆ 260 ನಾಟಿಕಲ್ ಮೈಲಿ (ಎನ್‍ಎಂ) ದೂರದಲ್ಲಿ ಹಡಗನ್ನು ತಡೆಹಿಡಿಯಲು ಐಎನ್‍ಎಸ್ ಕೋಲ್ಕತ್ತಾಗೆ ನಿರ್ದೇಶನ ನೀಡಿತ್ತು. ಈ ಮೂಲಕ 35 ಕಡಲಗಳ್ಳರನ್ನು ಪತ್ತೆ ಮಾಡಲಾಗಿತ್ತು.
5
+ ಮಾರ್ಚ್ 15ರಂದು ಐಎನ್‍ಎಸ್ ಕೋಲ್ಕತ್ತಾದಲ್ಲಿ ಎಂವಿ ರುಯೆನ್ ಹಡಗನ್ನು ಪತ್ತೆ ಮಾಡಿ, ಅದರಲ್ಲಿದ್ದ ಜನರನ್ನು ರಕ್ಷಣೆ ಮಾಡಿದೆ. ಇದರ ಜತೆಗೆ ಈ ಹಡಗಿನ ಪತ್ತೆಗಾಗಿ ಬಳಸಿದ್ದ ಭಾರತೀಯ ಡ್ರೋನ್‍ನ್ನು ಕಡಲಗಳ್ಳರು ಹೊಡೆದುರುಳಿಸಿದರು. ಇನ್ನು ಈ ರಕ್ಷಣಾ ಕಾರ್ಯಚರಣೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ಹೇಳಲಾಗಿದೆ. ಇದೀಗ ಬಂಧನವಾಗಿರುವ 35 ಕಡಲಗಳ್ಳರನ್ನು ಮುಂಬೈಗೆ ತರಲಾಗಿದೆ.
6
+ ಮೋದಿಗೆ ಕೃತಜ್ಞತೆಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ಮತ್ತು ಅದರಲ್ಲಿದ್ದ ನಾಗಕರಿಕರ ಸಹಿತ ಸಿಬ್ಬಂದಿಯನ್ನು ಭಾರತೀಯ ನೌಕಾಪಡೆ ರಕ್ಷಣೆ ಮಾಡಿದೆ. ಈ ಬಗ್ಗೆ ಬಲ್ಗೇರಿಯ ದೇಶದ ಅಧ್ಯಕ್ಷ ರುಮೆನ್ ರಾದೇವ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ ಬಲ್ಗೇರಿಯದ ಅಧ್ಯಕ್ಷ ರುಮೆನ್ ರಾದೇವ್, 7 ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತದ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ಬರೆದುಕೊಂಡಿದ್ದಾರೆ.
eesanje/url_47_141_1.txt ADDED
@@ -0,0 +1,4 @@
 
 
 
 
 
1
+ ನಮ್ಮ ವಿರುದ್ಧ ಕೇಜ್ರಿವಾಲ್ ಬೇಹುಗಾರಿಕೆ ನಡೆಸಿರುವ ಸಾಕ್ಷಗಳಿವೆ : ಇಡಿ ಹೊಸ ಆರೋಪ
2
+ ನವದೆಹಲಿ,ಮಾ.22-ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಿದ್ದು, ಈ ಕುರಿತು ಸಾಕ್ಷಾಧಾರಗಳು ಇವೆ ಎಂದು ಜಾರಿನಿರ್ದೇಶನಾಲಯ ಮತ್ತೊಂದು ಹೊಸ ಆರೋಪ ಮಾಡಿದೆ.
3
+ ಅರವಿಂದ್ ಕೇಜ್ರಿವಾಲ್ ಬಂಧನವನ್ನು ಪ್ರಶ್ನಿಸಿ ಅವರ ವಕೀಲರು ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ನಮ್ಮ ವಾದವನ್ನು ಸಹ ಆಲಿಸಬೇಕೆಂದು ಇಡಿ ನ್ಯಾಯಾಲಯಕ್ಕೆ ಕೆವಿಯಟ್ ಸಲ್ಲಿಸಿದೆ.
4
+ ಕ್ರೇಜಿವಾಲ್ ತಮ್ಮ ವಿರುದ್ಧ ಬೇಹುಗಾರಿಕೆ ನಡೆಸಿರುವುದು ಸಾಬೀತಾಗಿದೆ. ಈ ಕುರಿತು ತಮ್ಮ ಬಳಿ ಸಾಕ್ಷ್ಯಾಧಾರಗಳು ಇವೆ. ನ್ಯಾಯಾಲಯ ಬಯಸಿದರೆ ಯಾವುದೇ ಕ್ಷಣದಲ್ಲಿ ಸಲ್ಲಿಸುತ್ತೇವೆ ಎಂದು ಇಡಿ ಪರ ವಕೀಲರು ಹೇಳಿದ್ದಾರೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಿನ್ನೆ ಇಡಿ ಅಕಾರಿಗಳು 2 ಗಂಟೆ ವಿಚಾರಣೆಯ ನಂತರ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು.
eesanje/url_47_141_10.txt ADDED
@@ -0,0 +1,7 @@
 
 
 
 
 
 
 
 
1
+ ಕಾಂಗ್ರೆಸ್‌ನವರು ಪಡೆದಿರುವ ಚುನಾವಣಾ ಬಾಂಡ್ ಹಣ ಹಫ್ತಾ ವಸೂಲಿಯೇ..? : ಅಮಿತ್ ಶಾ
2
+ ನವದೆಹಲಿ,ಮಾ.21-ಚುನಾವಣಾ ಬಾಂಡ್ಗಳನ್ನು ಹಫ್ತಾ ವಸೂಲಿ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ಕಾಂಗ್ರೆಸ್ ನಾಯಕರು ರೂ.1,600 ಕೋಟಿಯನ್ನು ಎಲ್ಲಿಂದ ಪಡೆದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
3
+ ಗಾಂಧಿ ಕೂಡ ರೂ.1,600 ಕೋಟಿ ಪಡೆದಿದ್ದಾರೆ. ಅವರು ಆ ಹಫ್ತಾ ವಸೂಲಿ ಎಲ್ಲಿಂದ ಪಡೆದರು ಎಂಬುದನ್ನು ಅವರು ಸ್ಪಷ್ಟಪಡಿಸಬೇಕು. ಇದು ಪಾರದರ್ಶಕ ದೇಣಿಗೆ ಎಂದು ನಾವು ಪ್ರತಿಪಾದಿಸುತ್ತೇವೆ, ಆದರೆ ಅವರು ಅದನ್ನು ವಸೂಲಿ ಎಂದು ಲೇಬಲ್ ಮಾಡಿದರೆ, ಅವರು ವಿವರಗಳನ್ನು ನೀಡಬೇಕು ಎಂದು ಶಾ ಅವರು ಎಕ್ಸ್ನಲ್ಲಿ ಪೊಸ್ಟ್ ಮಾಡಿದ್ದಾರೆ.
4
+ ಇತರ ಪಕ್ಷಗಳಂತೆ ಬಿಜೆಪಿಯು ತಮ್ಮ ದಾನಿಗಳ ಪಟ್ಟಿಯನ್ನು ಬಹಿರಂಗಪಡಿಸುತ್ತದೆಯೇ ಎಂದು ಕೇಳಿದಾಗ, ನಾನು ನಿಮಗೆ ಭರವಸೆ ನೀಡುತ್ತೇನೆ, ವಿವರಗಳು ಹೊರಬಂದ ನಂತರ ಇಂಡಿಯಾ ಮೈತ್ರಿಕೂಟವು ಸಾರ್ವಜನಿಕರನ್ನು ಎದುರಿಸಲು ಕಷ್ಟವಾಗುತ್ತದೆ ಎಂದು ಹೇಳಿದ್ದಾರೆ.
5
+ ಭಾರತೀಯ ರಾಜಕೀಯದಲ್ಲಿ ಕಪ್ಪುಹಣದ ಪ್ರಾಬಲ್ಯವನ್ನು ಕೊನೆಗೊಳಿಸಲು ಚುನಾವಣಾ ಬಾಂಡ್ಗಳನ್ನು ಪರಿಚಯಿಸಲಾಯಿತು, ಕಪ್ಪುಹಣವನ್ನು ನಿರ್ಮೂಲನೆ ಮಾಡಲು ಅವುಗಳನ್ನು ತರಲಾಯಿತು. ಈಗ ಈ ಯೋಜನೆಯನ್ನು ರದ್ದುಗೊಳಿಸಲಾಗಿದೆ ಮತ್ತು ಕಪ್ಪುಹಣ ವಾಪಸಾತಿಗೆ ನಾನು ಭಯಪಡುತ್ತೇನೆ ಎಂದು ಶಾ ಹೇಳಿದರು.
6
+ ಬಾಂಡ್ ರದ್ದುಪಡಿಸುವ ಬದಲು ಸುಧಾರಣೆಗಳು ಇರಬೇಕು ಎಂದು ನಾನು ನಂಬುತ್ತೇನೆ, ಆದರೆ ಇದು ಯಾವುದೇ ಮಹತ್ವವನ್ನು ಹೊಂದಿಲ್ಲ, ಏಕೆಂದರೆ ಉನ್ನತ ನ್ಯಾಯಾಲಯವು ತನ್ನ ತೀರ್ಪನ್ನು ನೀಡಿದೆ ಮತ್ತು ನಾನು ಅದನ್ನು ಗೌರವಿಸುತ್ತೇನೆ ಎಂದು ಅವರು ಹೇಳಿದರು.
7
+ ಆದರೆ ನನ್ನ ವೈಯಕ್ತಿಕ ಅಭಿಪ್ರಾಯವೆಂದರೆ ಬಾಂಡ್ಗಳು ರಾಜಕೀಯದಲ್ಲಿ ಕಪ್ಪುಹಣವನ್ನು ಬಹುತೇಕ ಅಂತ್ಯಗೊಳಿಸಿವೆ. ಇದಕ್ಕಾಗಿಯೇ ರಾಹುಲ್ ಗಾಂ„ ನೇತೃತ್ವದ ಇಡೀ ಇಂಡಿಯಾ ಬಣವು ಬಾಂಡ್ಗಳಿಗೆ ವಿರುದ್ಧವಾಗಿತ್ತು ಮತ್ತು ಅವರು ಮತ್ತೊಮ್ಮೆ ರಾಜಕೀಯವನ್ನು ಆಳಲು ಹಳೆಯ ಕಟ್ ಮನಿ ವ್ಯವಸ್ಥೆಯನ್ನು ಬಯಸಿದ್ದರು ಎಂದಿದ್ದಾರೆ.
eesanje/url_47_141_11.txt ADDED
@@ -0,0 +1,4 @@
 
 
 
 
 
1
+ ಇಂದು ಮುಂಜಾನೆ ಎರಡು ಬಾರಿ ಕಂಪಿಸಿದ ಅರುಣಾಚಲ
2
+ ದಪಶ್ಚಿಮ ಕಮೆಂಗ್,ಮಾ.21-ಅರುಣಾಚಲ ಪ್ರದೇಶದಲ್ಲಿ ಇಂದು ಮುಂಜಾನೆ ಎರಡು ಭೂಕಂಪಗಳು ವರದಿಯಾಗಿವೆ ಎಂದು ಭೂಕಂಪಶಾಸದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.3.7 ರ ತೀವ್ರತೆಯೊಂದಿಗೆ ಮೊದಲ ಭೂಕಂಪವು 01:49 ಕ್ಕೆ ಸಂಭವಿಸಿದೆ.
3
+ ಭೂಕಂಪದ ಕೇಂದ್ರವು ಅಕ್ಷಾಂಶ 27.38 ಮತ್ತು ರೇಖಾಂಶ 92.77 ರಲ್ಲಿ 10 ಕಿಲೋಮೀಟರ್ ಆಳದಲ್ಲಿದೆ. ಅರುಣಾಚಲ ಪ್ರದೇಶದ ಪಶ್ಚಿಮ ಕಮೆಂಗ್ ನಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಮೊದಲ ಕಂಪನವಾದ ಕೇವಲ ಎರಡು ಗಂಟೆಗಳ ನಂತರ ಮತ್ತೆ 03:40 ಕ್ಕೆ ಎರಡನೇ ಭೂಕಂಪನ ವರದಿಯಾಗಿದೆ.
4
+ ಈ ಭೂಕಂಪವು 3.4 ರ ತೀವ್ರತೆಯನ್ನು ಹೊಂದಿದ್ದು, ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ನಲ್ಲಿ ಕೇಂದ್ರೀಕೃತವಾಗಿತ್ತು. ಭೂಕಂಪದ ಕೇಂದ್ರವು 5 ಕಿಲೋಮೀಟರ್ ಆಳದೊಂದಿಗೆ ಅಕ್ಷಾಂಶ 27.46 ಮತ್ತು ರೇಖಾಂಶ 92.82 ನಲ್ಲಿತ್ತು ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ಎಕ್ಸ್ ಮಾಡಿದೆ.
eesanje/url_47_141_12.txt ADDED
@@ -0,0 +1,4 @@
 
 
 
 
 
1
+ ಮಂಡ್ಯದಿಂದ ಕುಮಾರಸ್ವಾಮಿ ಸ್ಪರ್ಧೆ : ಪುಟ್ಟರಾಜು
2
+ ಬೆಂಗಳೂರು,ಮಾ.21-ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿಕೂಟದ ಅಭ್ಯರ್ಥಿಯಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಲಿದ್ದಾರೆ ಎಂದು ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಹೇಳಿದ್ದಾರೆ.
3
+ ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದಿಂದ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಲಿದ್ದಾರೆ. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ ಎಂದಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರನ್ನು ಭಾರೀ ಬಹುಮತದಿಂದ ಗೆಲ್ಲಿಸುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
4
+ ಕುಮಾರಸ್ವಾಮಿ ಅವರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರೆ ಸಾಕು. ಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡು ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನು ನಾವೇ ಹೊರುತ್ತೇವೆ ಎಂದು ಅವರು ತಿಳಿಸಿದ್ದಾರೆ.
eesanje/url_47_141_2.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಭಾರತದ ಮೊದಲ ಮರುಬಳಕೆ ಉಡಾವಣಾ ವಾಹನ ‘ಪುಷ್ಪಕ್’ ಲ್ಯಾಂಡಿಂಗ್ ಪ್ರಯೋಗ ಯಶಸ್ವಿ
2
+ ನವದೆಹಲಿ,ಮಾ.22-ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕರ್ನಾಟಕದ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯಲ್ಲಿರುವ ಏರೋನಾಟಿಕಲ್ ಟೆಸ್ಟ್ ರೇಂಜ್(ಎಟಿಆರ್)ನಲ್ಲಿ ಪುಷ್ಪಕ ಆರ್‍ಎಲ್‍ವಿ (ಮರು ಬಳಕೆ ಉಡಾವಣಾ ವಾಹನ) ಲ್ಯಾಂಡಿಂಗ್ ಪ್ರಯೋಗ ಯಶಸ್ವಿಯಾಗಿದ್ದು, ಮತ್ತೊಂದು ಇತಹಾಸ ಸೃಷ್ಟಿಸಿದೆ.
3
+ ಬಾಹ್ಯಾಕಾಶ ಪ್ರವೇಶವನ್ನು ಅತ್ಯಂತ ಕೈಗೆಟುಕುವಂತೆ ಮಾಡುವಲ್ಲಿ ಇದು ಭಾರತದ ದಿಟ್ಟ ಹೆಜ್ಜೆ. ಕಕ್ಷೆಯಲ್ಲಿನ ಉಪಗ್ರಹಗಳಿಗೆ ಇಂಧನ ತುಂಬುವುದು, ನವೀಕರಣಕ್ಕಾಗಿ ಕಕ್ಷೆಯಿಂದ ಉಪಗ್ರಹಗಳನ್ನು ಹಿಂಪಡೆಯುವುದನ್ನು ಈ ವಾಹನದ ಮೂಲಕ ಮಾಡಬಹುದು. ಬಾಹ್ಯಾಕಾಶ ಅವಶೇಷಗಳನ್ನು ಕಡಿಮೆ ಮಾಡಲು ಇದು ಅನುಕೂಲಕಾರಿ ಎಂದು ಇಸ್ರೋ ತಿಳಿಸಿದೆ.
4
+ ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‍ನಲ್ಲಿ ಇಸ್ರೋ ಮಾಹಿತಿ ಹಂಚಿಕೊಂಡಿದ್ದು, -02 ಆರ್‍ಎಲ್‍ವಿಯನ್ನು ಬೆಳಿಗ್ಗೆ 7 ಗಂಟೆಗೆ ಚಳ್ಳಕೆರೆ ರನ್ ವೇಯಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಇದು ಆರ್‍ಲ್‍ವಿಯ ಮೂರನೇ ಲ್ಯಾಂಡಿಂಗ್ ಮಿಷನ್ ಆಗಿದೆ.
5
+ ಇಸ್ರೋ ಈ ಹಿಂದಿನ ಕಾರ್ಯಾಚರಣೆಗಳನ್ನು 2016 ಹಾಗೂ 2023ರ ಏಪ್ರಿಲ್‍ನಲ್ಲಿ ಯಶಸ್ವಿಯಾಗಿ ನಡೆಸಿತ್ತು. ರಾಮಾಯಣದಲ್ಲಿ ಬರುವ ಪೌರಾಣಿಕ ಬಾಹ್ಯಾಕಾಶ ನೌಕೆಯಂತೆಯೇ (ಆರ್‍ಲ್‍ವಿ) ಪುಷ್ಪಕ್ ಎಂಬ ಹೆಸರನ್ನಿಡಲಾಗಿದೆ. -01 ಮಿಷನ್ ಕಳೆದ ವರ್ಷ ಪೂರ್ಣಗೊಂಡ ನಂತರ, -02 ಲ್ಯಾಂಡಿಂಗ್ ಸಾಮಥ್ರ್ಯವನ್ನು ಪರಿಶೀಲಿಸಲಾಯಿತು. ಅದರಂತೆ ಯಶಸ್ವಿಯಾಗಿ ರನ್‍ವೇ ಮೇಲೆ ಇಳಿದಿದೆ.
6
+ ಭಾರತೀಯ ವಾಯುಪಡೆಯ ಚಿನೂಕ್ ಹೆಲಿಕಾಪ್ಟರ್ ಮೂಲಕ ಉಡಾವಣಾ ವಾಹನ ಪುಷ್ಪಕ್ ಅನ್ನುಸುಮಾರು 4.5 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯಲಾಯಿತು. ನಂತರ ಪೂರ್ವನಿರ್ಧರಿತ ಪಿಲ್‍ಬಾಕ್ಸ್ ನಿಯತಾಂಕಗಳನ್ನು ಸರಿಯಾಗಿಸಿದ ಬಳಿಕ ಉಡಾವಣೆ ಮಾಡಲಾಗಿದೆ.ಈ ಯೋಜನೆಯು ಬಾಹ್ಯಾಕಾಶಕ್ಕೆ ಕಡಿಮೆ ವೆಚ್ಚದ ಪ್ರವೇಶವನ್ನು ಸಕ್ರಿಯಗೊಳಿಸಲು ಸಂಪೂರ್ಣ ಮರುಬಳಕೆ ಮಾಡಬಹುದಾದ ಉಡಾವಣಾ ವಾಹನಕ್ಕಾಗಿ ಪೂರಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳ ಭಾಗ ಎಂದು ಇಸ್ರೋ ಹೇಳಿದೆ.
7
+ ಈ ಎರಡನೇ ಮಿಷನ್‍ನೊಂದಿಗೆ, ನ್ಯಾವಿಗೇಷನ್, ಕಂಟ್ರೋಲ್ ಸಿಸ್ಟಮ್ಸ್, ಲ್ಯಾಂಡಿಂಗ್ ಗೇರ್ ಮತ್ತು ಡಿಸೆಲರೇಶನ್ ಸಿಸ್ಟಮ್‍ಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಇಸ್ರೋ ಮರು-ಮೌಲ್ಯಮಾಪನ ಮಾಡಿದೆ. ಇದು ಆಸ್ಪೇಸ್ ರಿಟರ್ನ್ ವಾಹನದ ಹೆಚ್ಚಿನ-ವೇಗದ ಸ್ವಾಯತ್ತ ಲ್ಯಾಂಡಿಂಗ್ ಅನ್ನು ನಿರ್ವಹಿಸಲು ಅವಶ್ಯಕವಾಗಿದೆ.
8
+ ಈ ಎರಡನೇ ಮಿಷನ್‍ನೊಂದಿಗೆ, ನ್ಯಾವಿಗೇಷನ್, ಕಂಟ್ರೋಲ್ ಸಿಸ್ಟಮ್ಸ್, ಲ್ಯಾಂಡಿಂಗ್ ಗೇರ್ ಮತ್ತು ಡಿಸೆಲರೇಶನ್ ಸಿಸ್ಟಮ್‍ಗಳಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಇಸ್ರೋ ಮರು-ಮೌಲ್ಯಮಾಪನ ಮಾಡಿದೆ. ಇದು ಆಸ್ಪೇಸ್ ರಿಟರ್ನ್ ��ಾಹನದ ಹೆಚ್ಚಿನ-ವೇಗದ ಸ್ವಾಯತ್ತ ಲ್ಯಾಂಡಿಂಗ್ ಅನ್ನು ನಿರ್ವಹಿಸಲು ಅವಶ್ಯಕವಾಗಿದೆ.
9
+ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ () ಜೊತೆಗೆ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ () ಮತ್ತು ಐಖ್ಕu ಇನರ್ಷಿಯಲ್ ಸಿಸ್ಟಮ್ಸ್ ಯೂನಿಟ್ () ಮೂಲಕ ಈ ಕಾರ್ಯಾಚರಣೆಯನ್ನು ಸಾಸಲಾಗಿದೆ. , , ಮತ್ತು CEMILACಸೇರಿದಂತೆ ವಿವಿಧ ಏಜೆನ್ಸಿಗಳ ಸಹಯೋಗವು ಈ ಕಾರ್ಯಾಚರಣೆಯ ಯಶಸ್ಸಿಗೆ ಕಾರಣವಾಗಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು.
10
+ ಈ ಯಶಸ್ಸಿನ ಮೂಲಕ, ಎಸ್‍ಆರೊ ಟೆನಿನಲ್ ಹಂತದ ಕುಶಲತೆ, ಲ್ಯಾಂಡಿಂಗ್ ಮತ್ತು ಇಂಧನ ನಿರ್ವಹಣೆಯನ್ನು ಸಂಪೂರ್ಣ ಸ್ವಾಯತ್ತ ಕ್ರಮದಲ್ಲಿ ಕರಗತ ಮಾಡಿಕೊಳ್ಳಬಹುದು, ಇದು ಭವಿಷ್ಯದ ಕಕ್ಷೀಯ ಮರುಪ್ರವೇಶ ಕಾರ್ಯಾಚರಣೆಗಳ ಕಡೆಗೆ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಲ್ಯಾಂಡಿಂಗ್ ಎಕ್ಸ್‍ಪೆರಿಮೆನ್‍ನ ನಿರ್ದೇಶಕ ವಿಎಸ್‍ಎಸ್‍ಸಿ ಡಾ ಎಸ್.ಉನ್ನಿಕೃಷ್ಣನ್ ನಾಯರ್ ಹೇಳಿದ್ದಾರೆ.
eesanje/url_47_141_3.txt ADDED
@@ -0,0 +1,4 @@
 
 
 
 
 
1
+ ಮನೆಯೊಂದರಲ್ಲಿ ನಿಷೇಧಿತ 2000 ಮುಖಬೆಲೆಯ 7 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ
2
+ ಕಾಸರಗೋಡು,ಮಾ.22-ಮನೆಯೊಂದರ ಮೇಲೆ ಪೊಲೀಸರ ತಂಡ ದಾಳಿ ನಡೆಸಿದಾಗ ನಿಷೇಧಗೊಂಡಿರುವ 2000 ಮುಖಬೆಲೆಯ ಬರೋಬ್ಬರಿ 7 ಕೋಟಿ ರೂ. ನಗದು ಹಣ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಕೇರಳದ ಕಾಸರಗೋಡು ಜಿಲ್ಲೆಯ ಗುರಪುರದ ಅಂಬಲತ್ತರ ಗ್ರಾಮದ ಮನೆಯೊಂದರಲ್ಲಿ ಚಲಾವಣೆಯಿಂದ ಹಿಂಪಡೆಯಲಾಗಿರುವ 2000 ಮುಖಬೆಲೆಯ ಸುಮಾರು 7 ಕೋಟಿ ರೂಪಾಯಿ ನಗದು ಪತ್ತೆಯಾಗಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.
3
+ ಖಚಿತ ಮಾಹಿತಿ ಪಡೆದ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಸದ್ಯ ನಗದನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ತನಿಖೆ ನಡೆಸುತ್ತಿದ್ದಾರೆ. ದುಬೈನಲ್ಲಿ ಉದ್ಯೋಗಿ ಕೆಪಿ ಬಾಬು ರಾಜ್ ಅವರ ಮಾಲೀಕತ್ವದ ಮನೆಯಲ್ಲಿ ಈ ಹಣ ಪತ್ತೆಯಾಗಿದ್ದು ಇವರು ಪಾಣತ್ತೂರು ನಿವಾಸಿ ಅಬ್ದುಲ್ ರಜಾಕ್ ಎಂಬುವವರಿಗೆ ಮನೆ ಬಾಡಿಗೆಗೆ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
4
+ ಕಳೆದ ಮೂರು ದಿನಗಳಿಂದ ಪೊಲೀಸರು ಮನೆಯ ಮೇಲೆ ನಿಗಾ ಇರಿಸಿದ್ದರು ನಂತರ ದಾಳಿ ನಡೆಸಿ ಎರಡು ಕೊಠಡಿಗಳಲ್ಲಿ ಥರ್ಮಾಕೋಲ್ ಬಾಕ್ಸ್, ರಟ್ಟಿನ ಬಾಕ್ಸ್ ಮತ್ತು ಗೋಣಿಚೀಲಗಳಲ್ಲಿ ಸಂಗ್ರಹಿಸಿಟ್ಟಿದ್ದ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.
eesanje/url_47_141_4.txt ADDED
@@ -0,0 +1,4 @@
 
 
 
 
 
1
+ ವಿವಾದಾತ್ಮಕ ಭೋಜ್‍ಶಾಲಾ ಸಂಕೀರ್ಣದ ಸಮೀಕ್ಷೆ ಆರಂಭ
2
+ ಧಾರ್, ಮಾ. 22 (ಪಿಟಿಐ) :ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯವಿರುವ ಧಾರ್ ಜಿಲ್ಲೆಯಲ್ಲಿ ನೆಲೆಸಿರುವ ವಿವಾದಾತ್ಮಕ ಭೋಜ್‍ಶಾಲಾ ಅಥವಾ ಕಮಲ್ ಮೌಲಾ ಮಸೀದಿ ಸಂಕೀರ್ಣದ ಸಮೀಕ್ಷೆಯನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‍ಐ) ಇಂದಿನಿಂದ ಆರಂಭಿಸಿದೆ.
3
+ ಹತ್ತಕ್ಕೂ ಹೆಚ್ಚು ಸದಸ್ಯರನ್ನು ಒಳಗೊಂಡ ಎಎಸ್‍ಐ ತಂಡ ಬೆಳಗ್ಗೆ ಸಂಕೀರ್ಣವನ್ನು ತಲುಪಿತು. ಇದರೊಂದಿಗೆ ಹಿರಿಯ ಸ್ಥಳೀಯ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಇದ್ದರು. ಮಧ್ಯಪ್ರದೇಶದ ಹೈಕೋರ್ಟ್ ಮಾರ್ಚ್ 11 ರಂದು ಎಎಸ್‍ಐಗೆ ಆರು ವಾರಗಳಲ್ಲಿ ಭೋಜಶಾಲಾ ಸಂಕೀರ್ಣದ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುವಂತೆ ಸೂಚಿಸಿತು, ಇದು ಮಧ್ಯಕಾಲೀನ ಯುಗದ ಸ್ಮಾರಕವಾಗಿದ್ದು, ಹಿಂದೂಗಳು ವಾಗ್ದೇವಿ (ಸರಸ್ವತಿ) ದೇವಿಯ ದೇವಾಲಯವೆಂದು ನಂಬುತ್ತಾರೆ ಮತ್ತು ಮುಸ್ಲಿಂ ಸಮುದಾಯವು ಕಮಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
4
+ ಕಳೆದ ಏಪ್ರಿಲ್ 7, 2003 ರಂದು ಹೊರಡಿಸಲಾದ ಎಎಸ್‍ಐ ಆದೇಶದ ಪ್ರಕಾರ, ಹಿಂದೂಗಳಿಗೆ ಪ್ರತಿ ಮಂಗಳವಾರ ಭೋಜಶಾಲಾ ಸಂಕೀರ್ಣದೊಳಗೆ ಪೂಜೆ ಮಾಡಲು ಅನುಮತಿಸಲಾಗಿದೆ, ಆದೇ ರೀತಿ ಮುಸ್ಲಿಮರು ಶುಕ್ರವಾರದಂದು ಸ್ಥಳದಲ್ಲಿ ನಮಾಜ್ ಮಾಡಲು ಅನುಮತಿಸಲಾಗಿದೆ.
eesanje/url_47_141_5.txt ADDED
@@ -0,0 +1,6 @@
 
 
 
 
 
 
 
1
+ ಕೇಜ್ರಿವಾಲ್ ಬಂಧನ ವಿರೋಧಿಸಿ ಪ್ರತಿಭಟಿಸುತ್ತಿದ್ದ ಎಎಪಿ ಕಾರ್ಯಕರ್ತರ ಮೇಲೆ ಪೊಲೀಸ್ ದೌರ್ಜನ್ಯ
2
+ ಮುಂಬೈ, ಮಾ 22 (ಪಿಟಿಐ) :ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿರುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರ ಮೇಲೆ ಮುಂಬೈ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
3
+ ಎಎಪಿಯ ಮಹಾರಾಷ್ಟ್ರ ಅಧ್ಯಕ್ಷೆ ಪ್ರೀತಿ ಶರ್ಮಾ ಮೆನನ್ ಅವರು, ತಮ್ಮ ಕಾರ್ಯಕರ್ತರನ್ನು ತಳ್ಳಲಾಯಿತು ಮತ್ತು ಥಳಿಸಲಾಯಿತು ಮತ್ತು ರಾತ್ರಿಯಲ್ಲಿ ಮಹಿಳೆಯರನ್ನು ಬಂಧಿಸಲಾಯಿತು ಎಂದು ಆರೋಪಿಸಿದ್ದಾರೆ. ಇಂದು ನಂಬಲಾಗದ ಪೊಲೀಸ್ ದೌರ್ಜನ್ಯ. ಮೋದಿಯವರ ಇಡಿಯಿಂದ ಅರವಿಂದ್ ಕೇಜ್ರಿವಾಲ್ ಅವರನ್ನು ಕಾನೂನುಬಾಹಿರವಾಗಿ ಬಂಧಿಸಿರುವುದನ್ನು ಪ್ರತಿಭಟಿಸುವಾಗ ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮೆನನ್ ಎಕ್ಸ್ ಮಾಡಿದ್ದಾರೆ.
4
+ ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್ ಅವರನ್ನು ನಿನ್ನೆ ರಾತ್ರಿ ಅಬಕಾರಿ ನೀತಿ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧಿಸಿ ಇಲ್ಲಿನ ಏಜೆನ್ಸಿಯ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಏಜೆನ್ಸಿಯ ಯಾವುದೇ ದಬ್ಬಾಳಿಕೆಯ ಕ್ರಮದಿಂದ ಎಎಪಿ ರಾಷ್ಟ್ರೀಯ ಸಂಚಾಲಕರಿಗೆ ರಕ್ಷಣೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಕೆಲವೇ ಗಂಟೆಗಳ ನಂತರ ಹಾಲಿ ಮುಖ್ಯಮಂತ್ರಿಯ ಮೊದಲ ಬಂಧನವಾಗಿದೆ.
5
+ ಲೋಕಸಭೆ ಚುನಾವಣೆಯ ಪ್ರಚಾರದ ಮಧ್ಯೆ 55 ವರ್ಷದ ನಾಯಕನ ಬಂಧನವು ಎಎಪಿಯಿಂದ ಕೋಪದ ಪ್ರತಿಕ್ರಿಯೆಗಳನ್ನು ಉಂಟುಮಾಡಿತು. ಕೇಜ್ರಿವಾಲ್ ಅವರು ದೆಹಲಿಯ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಪಕ್ಷ ಹೇಳಿದೆ. ಅಗತ್ಯವಿದ್ದರೆ, ಅವರು ಜೈಲಿನಿಂದ ಸರ್ಕಾರವನ್ನು ನಡೆಸುತ್ತಾರೆ ಎನ್ನಲಾಗಿದೆ.
6
+ ಇಂಡಿಯಾ ಬಣದ ವಿವಿಧ ಘಟಕಗಳು ಕೇಜ್ರಿವಾಲ್ ಅವರ ಬಂಧನವನ್ನು ಖಂಡಿಸಿದರು ಮತ್ತು ಮುಂಬರುವ ಲೋಕಸಭಾ ಚುನಾವಣೆಯ -ಫಲಿತಾಂಶದ ಬಗ್ಗೆ ಬಿಜೆಪಿ ಭಯಪಡುತ್ತಿದೆ ಮತ್ತು ಪ್ರತಿಪಕ್ಷಗಳಿಗೆ ಸಮಸ್ಯೆಗಳನ್ನು ಸೃಷ್ಟಿಸಲು ಭಯಭೀತರಾಗಿ ವರ್ತಿಸುತ್ತಿದೆ ಎಂದು ಹೇಳಿದ್ದಾರೆ.
eesanje/url_47_141_6.txt ADDED
@@ -0,0 +1,4 @@
 
 
 
 
 
1
+ ಮನೆಯಲ್ಲಿ ರಾಸಾಯನಿಕಗಳ ಪ್ರಯೋಗದ ವೇಳೆ ಸ್ಫೋಟ, ಬಾಲಕ ಸಾವು
2
+ ಚೆನ್ನೈ, ಮಾ.22 (ಪಿಟಿಐ)– ಮನೆಯಲ್ಲಿ ಕೆಲವು ರಾಸಾಯನಿಕಗಳ ಪ್ರಯೋಗ ನಡೆಸುತ್ತಿದ್ದಾಗ ಸಂಭವಿಸಿದ ಸ್ಪೋಟದಲ್ಲಿ 17 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೊಳತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ನಡೆದಿದೆ.ಸ್ಥಳೀಯ ಕಾಲೇಜಿನಲ್ಲಿ 12 ನೇ ತರಗತಿ ವಿದ್ಯಾರ್ಥಿಯಾಗಿದ್ದ ಬಾಲಕ ತನ್ನಮನೆಯ ಕೊಠಡಿಯಲ್ಲಿ ಶೈಕ್ಷಣಿಕ ಕಾರ್ಯದಲ್ಲಿ ಈ ಪ್ರಯೋಗವನ್ನು ನಡೆಸಿದ್ದಾಗ ಈ ದುರಂತ ಸಂಭವಿಸಿದೆ.
3
+ ರಾಸಾಯನಿಕಗಳು ಸ್ಪೋಟಗೊಂಡಾಗ ಕೊಠಡಿಯ ಗೋಡೆ ಕುಸಿದಿದ್ದು ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ನಂತರ, ಮೃತರು ಬಳಸಿದ ರಾಸಾಯನಿಕ ಪದಾರ್ಥಗಳನ್ನು ತಜ್ಞರು ಪರೀಕ್ಷಿಸುತ್ತಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.
4
+ ರಾಸಾಯನಿಕ ಪದಾರ್ಥಗಳೊಂದಿಗೆ ತನ್ನ ನಿವಾಸದಲ್ಲಿ ನಿರ್ಲಕ್ಷ್ಯದ ರೀತಿಯಲ್ಲಿ ಕೆಲವು ಪ್ರಯೋಗಗಳನ್ನು ನಡೆಸಿದಂತೆ ತೋರುತ್ತಿದೆ, ಈ ಹಿನ್ನೆಲೆಯಲ್ಲಿ, ಅಸ್ವಾಭಾವಿಕ ಸಾವಿನ ಪ್ರಕರಣವನ್ನುದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ವಿಧಿವಿಜ್ಞಾನ ವಿಭಾಗದ ತಜ್ಞರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ ಮತ್ತು ರಾಸಾಯನಿಕ ಪದಾರ್ಥಗಳನ್ನು ವಿಶ್ಲೇಷಿಸುತ್ತಿದ್ದಾರೆ. ಪ್ರಕರಣವು ತನಿಖೆ ನಂತರ ಹೆಚ್ಚನ ಮಾಹಿತಿ ಸಿಗಲಿದೆ.
eesanje/url_47_141_7.txt ADDED
@@ -0,0 +1,6 @@
 
 
 
 
 
 
 
1
+ ಅಸ್ಸಾಂನಲ್ಲಿ ಬಿಜೆಪಿಗೆ ಕೈ ಕೊಟ್ಟು ಕಾಂಗ್ರೆಸ್ ಸೇರಿದ ಅಲ್ಪಸಂಖ್ಯಾತ ಮುಖಂಡ
2
+ ಗುವಾಹಟಿ,ಮಾ.21-ಅಸ್ಸಾಂನಲ್ಲಿ ಲೋಕಸಭೆ ಚುನಾವಣೆಗೆ ಒಂದು ತಿಂಗಳು ಬಾಕಿ ಇರುವಾಗಲೇ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯ ಅಲ್ಪಸಂಖ್ಯಾತ ಉನ್ನತ ನಾಯಕ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದಾರೆ. ಅಮಿನುಲ್ ಹಕ್ ಲಸ್ಕರ್ 2016 ರಲ್ಲಿ ಅಸ್ಸಾಂ ಬಿಜೆಪಿಯ ಮೊದಲ ಅಲ್ಪಸಂಖ್ಯಾತ ಶಾಸಕರಾಗಿದ್ದವರು, ಇದೀಗ ಕೇಸರಿ ಪಕ್ಷಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
3
+ ಒಮ್ಮೆ ಅಸ್ಸಾಂ ವಿಧಾನಸಭೆಯ ಉಪ ಸ್ಪೀಕರ್ ಆಗಿದ್ದ ಲಸ್ಕರ್ ಅವರನ್ನು ಅಲ್ಪಸಂಖ್ಯಾತರ ಅಸ್ಸಾಂ ರಾಜ್ಯ ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. 2021 ರಲ್ಲಿ, ಅವರು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ -ಫ್ರಂಟ್ ಕರೀಮ್ ಉದ್ದೀನ್ ಬರ್ಭುಯಾ ವಿರುದ್ಧ ಸೋತರು.
4
+ ಅಸ್ಸಾಂನಲ್ಲಿ ಬಿಜೆಪಿ ತನ್ನ ರಾಜಕೀಯ ಸಿದ್ಧಾಂತವನ್ನು ಕಳೆದುಕೊಂಡಿದ್ದರಿಂದ ರಾಜೀನಾಮೆ ನೀಡಲು ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. ನಾನು 13 ವರ್ಷಗಳಿಂದ ಬಿಜೆಪಿಯಲ್ಲಿದ್ದೆ, ಅಂದಿನ ಬಿಜೆಪಿ ಮತ್ತು ಈಗ ಬಹಳಷ್ಟು ವಿಭಿನ್ನವಾಗಿದೆ, ಆಗ ಬಿಜೆಪಿ ಬದಲಾವಣೆಯ ಬಗ್ಗೆ ಮಾತನಾಡುತ್ತಿತ್ತು ಎಂದು ಅವರು ಹೇಳಿದರು.ಅವರು ಕಾಂಗ್ರೆಸ್ ಪಕ್ಷದ ಅಸ್ಸಾಂ ಉಸ್ತುವಾರಿ ಜಿತೇಂದ್ರ ಸಿಂಗ್ ಅಲ್ವಾರ್ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು.
5
+ ಅವರ ನಿರ್ಗಮನವು ಅಲ್ಪಸಂಖ್ಯಾತ ಸಮುದಾಯದಲ್ಲಿ ಆಡಳಿತ ಪಕ್ಷದ ವಿಶ್ವಾಸಾರ್ಹತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಲಸ್ಕರ್ ಎಚ್ಚರಿಸಿದ್ದಾರೆ ಮತ್ತು ಬಿಜೆಪಿಯ ಸಿದ್ಧಾಂತವು ಈಗ ಬದ್ರುದ್ದೀನ್ ಅಜ್ಮಲ್ ಅವರ ಎಐಯುಡಿಎ-ïನಂತೆಯೇ ಆಗುತ್ತಿದೆ ಎಂದು ಆರೋಪಿಸಿದ್ದಾರೆ.
6
+ ನಾನು 2016 ರಲ್ಲಿ ಬಿಜೆಪಿ ಶಾಸಕನಾಗಿದ್ದಾಗ, ನಾನು ಮುಸ್ಲಿಂ ಸಮುದಾಯದಿಂದ ಈ ಪ್ರದೇಶದಾದ್ಯಂತ ಒಬ್ಬನಾಗಿದ್ದೆ ಆದರೆ ಈಗ ನಾನು ಅದನ್ನು ತೊರೆದಿರುವುದರಿಂದ ಅಸ್ಸಾಂನ ಮುಸ್ಲಿಮರಲ್ಲಿ ಬಿಜೆಪಿಯ ವಿಶ್ವಾಸಾರ್ಹತೆಗೆ ಹಾನಿಯಾಗುತ್ತದೆ. ಬಿಜೆಪಿ ಈಗ ಅಸ್ಸಾಂನಲ್ಲಿ ಎಐಯುಡಿಎಫ್ ಜೊತೆ ಕೈಜೋಡಿಸಿದೆ ಎಂದು ಅವರು ಹೇಳಿದರು. ಮುಂಬರುವ ಲೋಕಸಭೆ ಚುನಾವಣೆಗೆ ಅಸ್ಸಾಂನಲ್ಲಿ ಏಪ್ರಿಲ್ 19, ಏಪ್ರಿಲ್ 26 ಮತ್ತು ಮೇ 7 ರಂದು ಮೂರು ಹಂತಗಳಲ್ಲಿ ಮತದಾನ ನಡೆಯಲಿದೆ.
eesanje/url_47_141_8.txt ADDED
@@ -0,0 +1,8 @@
 
 
 
 
 
 
 
 
 
1
+ ದೆಹಲಿ ಮಾಲಿನ್ಯದ ಬಗ್ಗೆ ಕೇಜ್ರಿವಾಲ್ ಕಾಲೇಳೆದ ಲೆಫ್ಟಿನೆಂಟ್ ಗವರ್ನರ್
2
+ ನವದೆಹಲಿ,ಮಾ.21-ಜಗತ್ತಿನ ಅತ್ಯಂತ ಕಲುಷಿತ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೆಹಲಿ ಬಗ್ಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಪತ್ರ ಬರೆದಿದ್ದು, ಇದು ರಾಷ್ಟ್ರೀಯ ಅವಮಾನ ಮತ್ತು ಆರೋಗ್ಯ ತುರ್ತು ಪರಿಸ್ಥಿತಿಯಂತಹ ಗಂಭೀರ ಚಿಂತನೆಗೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
3
+ ವಿಶ್ವ ವಾಯು ಗುಣಮಟ್ಟ ವರದಿ 2023 ಕಠಿಣ ಚಿತ್ರವನ್ನು ಚಿತ್ರಿಸುತ್ತದೆ ಎಂದು ಹೇಳುವ ಮೂಲಕ ಮಾಲಿನ್ಯದ ವಿಷಯದ ಬಗ್ಗೆ ಕೇಜ್ರಿವಾಲ್ ಸರ್ಕಾರದ ವಿರುದ್ಧ ಸಕ್ಸೇನಾ ವಾಗ್ದಾಳಿ ನಡೆಸಿದ್ದಾರೆ. ಈ ಸಂಶಯಾಸ್ಪದ ವ್ಯತ್ಯಾಸವು ರಾಷ್ಟ್ರೀಯ ಅವಮಾನ ಮತ್ತು ಸಾಮೂಹಿಕ ಕಾಳಜಿಯ ವಿಷಯವಾಗಿದೆ.
4
+ ದೆಹಲಿಯು 2022 ರಲ್ಲಿ ವಿಶ್ವದ ಎರಡನೇ ಅತ್ಯಂತ ಕಲುಷಿತ ರಾಜಧಾನಿ ಮತ್ತು 2021 ರಲ್ಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿಯಾಗಿರುವುದರಿಂದ, ಒಂಬತ್ತು ವರ್ಷಗಳ ಈ ವರದಿ ಕಾರ್ಡ್ ಎಂದು ನನಗೆ ಖಾತ್ರಿಯಿದೆ. ನಿಮ್ಮ ಸರ್ಕಾರವು ನೀವು ಹೆಮ್ಮೆಪಡುವಂತಹದ್ದಲ್ಲ. ದೆಹಲಿ ಮಾದರಿಯ ಬಗ್ಗೆ ಹೆಚ್ಚು ಮಾತನಾಡುವ ಹೊಗೆಯ ಮಬ್ಬು ಆವರಿಸಿದೆ ಎಂದು ಅವರು ಬರೆದಿದ್ದಾರೆ.
5
+ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಎಎಪಿ) ಎಲ್ಜಿ ಪತ್ರದ ಭಾಷೆಗೆ ಅಸಭ್ಯ, ಕಡಿವಾಣ ಮತ್ತು ನಿಂದನೆಯ ಗಡಿ ಎಂದು ಹೆಸರಿಸಿದೆ. ಇಂತಹ ಹೇಯ ಭಾಷೆಯ ಬಳಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದು ಎಎಪಿ ಹೇಳಿಕೆಯಲ್ಲಿ ತಿಳಿಸಿದೆ.ಸಕ್ಸೇನಾ ಅವರು ಕಳೆದ ಎರಡು ವರ್ಷಗಳಲ್ಲಿ ವಾಯು ಮಾಲಿನ್ಯದ ಸಮಸ್ಯೆಯನ್ನು ಅವರು ಸೇರಿದಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹೇಳಿದರು.
6
+ ಕಠಿಣ ಪ್ರಶ್ನೆಗಳು ಎದುರಾದಾಗಲೆಲ್ಲಾ ನಿಮ್ಮ ವಾಡಿಕೆಯಂತೆ ರಾಜಕೀಯ ದೂಷಣೆ ಆಟಕ್ಕೆ ಸಿಲುಕದಂತೆ ನಿಮ್ಮನ್ನು ತಡೆಯಲು ನಾನು ಇದನ್ನು ಒತ್ತಿಹೇಳುತ್ತಿದ್ದೇನೆ ಎಂದು ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
7
+ ನಗರದ ಆಸ್ಪತ್ರೆಗಳಲ್ಲಿ ಮಕ್ಕಳು ಮತ್ತು ವೃದ್ಧರು ಉಸಿರಾಟದ ಕಾಯಿಲೆಗಳಿಂದ ಹೆಚ್ಚು ಬಳಲುತ್ತಿದ್ದಾರೆ ಎಂಬ ನಿಯಮಿತ ವರದಿಗಳಿವೆ. ಈ ಸ್ಥಿತಿಯು ವರ್ಷದಿಂದ ವರ್ಷಕ್ಕೆ ತುಂಬಾ ಆತಂಕಕಾರಿಯಾಗಿದೆ, ಇದು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಿಂತ ಕಡಿಮೆಯಿಲ್ಲ. ದೆಹಲಿಯ ಜನರ ಮೂಲಭೂತ ನೈಸರ್ಗಿಕ ಮತ್ತು ಮೂಲಭೂತ ಹಕ್ಕನ್ನು ಉಲ್ಲಂಸುತ್ತದೆ ಎಂದು ಅವರು ಹೇಳಿದರು.
8
+ ಚಳಿಗಾಲದಲ್ಲಿ ನಗರದಲ್ಲಿನ ಅಪಾಯಕಾರಿ ಗಾಳಿಯ ಗುಣಮಟ್ಟವನ್ನು ಸೂಚಿಸುತ್ತಾ ಸಕ್ಸೇನಾ ಯಾವುದೇ ಸ್ವಾಭಿಮಾನಿ ನಾಯಕ ಅದರ ಜವಾಬ್ದಾರಿಯನ್ನು ಹೊಂದಿದ್ದರು ಮತ್ತು ನಿರ್ಣಾಯಕ ಕ್ರಮಗಳು ಮತ್ತು ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಈ ಕಾಳಜಿಯನ್ನು ಪರಿಹರಿಸಲು ಕಾಂಕ್ರೀಟ್ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.
eesanje/url_47_141_9.txt ADDED
@@ -0,0 +1,8 @@
 
 
 
 
 
 
 
 
 
1
+ ರೋಹಿಂಗ್ಯಾಗಳಿಗೆ ನಿರಾಶ್ರೀತರ ಸ್ಥಾನ ನೀಡಲು ಸಾಧ್ಯವಿಲ್ಲ : ಕೇಂದ್ರ ಸರ್ಕಾರ
2
+ ನವದೆಹಲಿ,ಮಾ.21-ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಅಭಿವೃದ್ಧಿಶೀಲ ರಾಷ್ಟ್ರವಾಗಿರುವ ಭಾರತವು ತನ್ನದೇ ಆದ ನಾಗರಿಕರಿಗೆ ಆದ್ಯತೆ ನೀಡಬೇಕಾಗಿದೆ ಹೀಗಾಗಿ ಅಕ್ರಮ ವಲಸೆ ಮತ್ತು ರೊಹಿಂಗ್ಯಾ ನಿರಾಶ್ರೀತರು ರಾಷ್ಟ್ರೀಯ ಭದ್ರತೆಗೆ ಗಂಭೀರ ಪರಿಣಾಮ ಉಂಟು ಮಾಡುತ್ತಿರುವುದರಿಂದ ಅವರ ಬಿಡುಗಡೆ ಸಾಧ್ಯವಿಲ್ಲ ಎಂದು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ತಿಳಿಸಿದೆ,
3
+ ವಿದೇಶಿಯರ ಕಾಯಿದೆ ಉಲ್ಲಂಘನೆ ಆರೋಪದ ಮೇಲೆ ಬಂಧನದಲ್ಲಿರುವ ರೋಹಿಂಗ್ಯಾ ನಿರಾಶ್ರೀತರನ್ನು ಬಿಡುಗಡೆ ಮಾಡುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ನಿನ್ನೆ ಸಲ್ಲಿಸಲಾದ ಅಫಿಡವಿಟ್ನಲ್ಲಿ ಕೇಂದ್ರ ಸರ್ಕಾರ ಈ ವಿಷಯ ತಿಳಿಸಿದೆ.ರೋಹಿಂಗ್ಯಾ ನಿರಾಶ್ರೀತರು, ಅವರಲ್ಲಿ ಹೆಚ್ಚಿನವರು ಮುಸ್ಲಿಮರು, ಬೌದ್ಧರು ಬಹುಸಂಖ್ಯಾತ ಮ್ಯಾನ್ಮಾರ್ನಲ್ಲಿ ಜನಾಂಗೀಯ ಹಿಂಸಾಚಾರದಿಂದ ಓಡಿಹೋಗಿ ಭಾರತ, ಬಾಂಗ್ಲಾದೇಶ ಮತ್ತು ಇತರ ದೇಶಗಳಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ.
4
+ ಈ ದೇಶಗಳಲ್ಲಿ ಧಾರ್ಮಿಕ ಕಿರುಕುಳದಿಂದ ಪಲಾಯನಗೈದು ಭಾರತಕ್ಕೆ ಪ್ರವೇಶಿಸಿದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಮುಸ್ಲಿಮೇತರ ವಲಸಿಗರಿಗೆ ಪೌರತ್ವ ನೀಡಲು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕೇಂದ್ರದ ಅನುಷ್ಠಾನದ ಕುರಿತು ರೋಹಿಂಗ್ಯಾ ನಿರಾಶ್ರೀತರು ಈಗ ಹೊಸ ರಾಜಕೀಯ ಗದ್ದಲದ ಕೇಂದ್ರಬಿಂದುವಾಗಿದ್ದಾರೆ.
5
+ 2015 ಕ್ಕಿಂತ ಮೊದಲು. ಸಿಎಎ ಅನುಷ್ಠಾನಕ್ಕೆ ಸಂಬಂ„ಸಿದಂತೆ ರಾಷ್ಟ್ರೀಯ ಭದ್ರತೆಯ ಪ್ರಶ್ನೆಯನ್ನು ಎತ್ತಿದ್ದಕ್ಕಾಗಿ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ರೋಹಿಂಗ್ಯಾಗಳ ಪ್ರವೇಶವನ್ನು ವಿರೋಧ ಪಕ್ಷದ ನಾಯಕರು ಏಕೆ ವಿರೋಧಿಸುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
6
+ ತನ್ನ ಅಫಿಡವಿಟ್ನಲ್ಲಿ, 1951 ರ ನಿರಾಶ್ರೀತರ ಸಮಾವೇಶ ಮತ್ತು ನಿರಾಶ್ರೀತರ ಸ್ಥಿತಿ, 1967 ಗೆ ಸಂಬಂಧಿಸಿದ ಪ್ರೋಟೋಕಾಲ್ ಗೆ ಭಾರತವು ಸಹಿ ಹಾಕಿಲ್ಲ ಎಂದು ಕೇಂದ್ರವು ಹೇಳಿದೆ. ಆದ್ದರಿಂದ, ಯಾವುದೇ ವರ್ಗದ ವ್ಯಕ್ತಿಗಳನ್ನು ನಿರಾಶ್ರೀತರೆಂದು ಗುರುತಿಸಬೇಕೇ ಅಥವಾ ಇಲ್ಲವೇ ಎಂಬುದು ಶುದ್ಧ ನೀತಿ ನಿರ್ಧಾರ ಎಂದು ಅದು ಹೇಳಿದೆ.
7
+ ಪರಿಣಾಮಕಾರಿಯಾಗಿ, ಅದರಲ್ಲಿರುವ ಪ್ರಾರ್ಥನೆಗಳು ಅಕ್ರಮ ರೋಹಿಂಗ್ಯಾ ವಲಸಿಗರಿಗೆ ಭಾರತದ ಭೂಪ್ರದೇಶದಲ್ಲಿ ವಾಸಿಸುವ ಹಕ್ಕನ್ನು ಒದಗಿಸಲು ಪ್ರಯತ್ನಿಸುತ್ತಿವೆ, ಇದು ಸ್ಪಷ್ಟವಾಗಿ ಆರ್ಟಿಕಲ್ 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ವಿರುದ್ಧವಾಗಿದೆ. ಆರ್ಟಿಕಲ್ 19 ಅದರ ಅನ್ವಯದಲ್ಲಿ ಮಾತ್ರ ಸೀಮಿತವಾಗಿದೆ ಎಂದು ಸಲ್ಲಿಸಲಾಗಿದೆ. ನಾಗರಿಕರಿಗೆ ಮತ್ತು ವಿದೇಶಿಯರಿಗೆ ಅನ್ವಯಿಸಲು ವಿಸ್ತರಿಸಲಾಗುವುದಿಲ್ಲ ಎಂದು ಅದು ಹೇಳಿದೆ.
8
+ ಶಾಸಕಾಂಗ ಚೌಕಟ್ಟಿನ ಹೊರಗೆ ಯಾವುದೇ ಸಮುದಾಯಕ್ಕೆ ನಿರಾಶ್ರೀತರ ಸ್ಥಾನಮಾನವನ್ನು ನೀಡಲಾಗುವುದಿಲ್ಲ ಮತ್ತು ಅಂತಹ ಘೋಷಣೆಯನ್ನು ನ್ಯಾಯಾಂಗ ಆದೇಶದಿಂದ ಮಾಡಲಾಗುವುದಿಲ್ಲ ಎಂದು ಕೇಂದ್ರವು ಹೇಳಿದೆ.
eesanje/url_47_142_1.txt ADDED
@@ -0,0 +1,5 @@
 
 
 
 
 
 
1
+ ಗ್ಯಾಸ್ ಸೋರಿಕೆಯಾಗಿ ಮನೆಗೆ ಬೆಂಕಿ, ಕುಟುಂಬದ ಐವರು ಸಜೀವ ದಹನ
2
+ ಜೈಪುರ, ಮಾ.21 (ಪಿಟಿಐ) – :ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡು ಯುವ ದಂಪತಿಗಳು ಮತ್ತು ಅವರ ಮೂವರು ಮಕ್ಕಳು ಸಜೀವ ದಹನವಾಗಿರುವ ದುರಂತ ಘಟನೆ ಇಲ್ಲಿ ನಡೆದಿದೆ. ಜೈಪುರದ ವಿಶ್ವಕರ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಮನೆಯ ಕೋಣೆಯಲ್ಲಿ ಬೆಂಕಿ ಜ್ವಾಲೆ ಆವರಿಸಿ ಇದರಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಾಗದೆ ಸವನ್ನಪ್ಪಿದ್ದಾರೆ ಎಸ್‍ಎಚ್‍ಒ ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
3
+ ರಾಜೇಶ್ ಯಾದವ್ (25)ಅವರ ಪತ್ನಿ ರೂಬಿ (24), ಅವರ ಪುತ್ರಿಯರಾದ ಇಶು (7), ಖುಷಿಮಣಿ (4) ಮತ್ತು ಮಗ ದಿಲ್ಖುಷ್ (2) ಮೃತ ದುರ್ದೈವಿಗಳು. ಒಟ್ಟು 17-18 ಕೊಠಡಿಗಳಿರುವ ವಸತಿ ಕಟ್ಟಡದ ಕೊಠಡಿಯೊಂದರಲ್ಲಿ ಕುಟುಂಬ ಉಳಿದುಕೊಂಡಿತ್ತು,ಯಾದವ್, ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ನಾಲ್ಕು ತಿಂಗಳಿನಿಂದ ಅಲ್ಲಿ ವಾಸಿಸುತ್ತಿದ್ದರು ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ
4
+ ಇಂದು ಬೆಳಗ್ಗೆ ರಾಜೇಶ್ ಯಾದವ್ ಗ್ಯಾಸ್ ಸಿಲಿಂಡರ್ ಬದಲಾಯಿಸುತ್ತಿದ್ದಾಗ ಸಿಲಿಂಡರ್‍ನಿಂದ ಗ್ಯಾಸ್ ಸೋರಿಕೆಯಾಗಿದ್ದು, ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ ಇದರಿಂದ ಕುಟುಂಬದ ಎಲ್ಲರೂ ಸಜೀವ ದಹನ ಗೊಂಡಿದ್ದಾರೆ ಎಂದು ಅವರು ಹೇಳಿದರು.ರಾಜೇಶ್ ಯಾದವ್ ಬಿಹಾರದ ಮೋತಿಹಾರಿ ಮೂಲದವರು ಎಂದು ತಿಳಿದುಬ.ಂದಿದ್ದು ಘಟನೆಯಲ್ಲಿ ಬೇರೆ ಯಾವುದೇ ಕೊಠಡಿಗೆ ಹಾನಿಯಾಗಿಲ್ಲ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು,ಮೃತದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
5
+ ಮುಖ್ಯಮಂತ್ರಿ ಭಜನಲಾಲ್ ಶರ್ಮಾ ಮತ್ತು ಉಪಮುಖ್ಯಮಂತ್ರಿ ದಿಯಾ ಕುಮಾರಿ ಘಟನೆಯಲ್ಲಿ ಸಂತಾಪ ಸೂಚಿಸಿದ್ದಾರೆ. 5 ನಾಗರಿಕರು ಅಕಾಲಿಕ ಮರಣ ಹೊಂದಿದ ಸುದ್ದಿ ಹೃದಯ ವಿದ್ರಾವಕವಾಗಿದೆ, ಅಗಲಿದ ಆತ್ಮಗಳಿಗೆ ಶಾಂತಿ ಕೋರಿ ಮೃತರ ಇತರ ಕುಟುಂಬ ಸದಸ್ಯರಿಗೆ ಈ ದುರಂತದ ನೋವು ತಡೆದುಕೊಳ್ಳುವ ಶಕ್ತಿಯನ್ನು ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸಿಎಂ ಶರ್ಮಾ ಹೇಳಿದ್ದಾರೆ
eesanje/url_47_142_10.txt ADDED
@@ -0,0 +1,6 @@
 
 
 
 
 
 
 
1
+ ತಮಿಳಿಗರ ಕ್ಷಮೆ ಕೋರಿದ ಶೋಭಾ ಕರದ್ಲಾಂಜೆ
2
+ ಬೆಂಗಳೂರು,ಮಾ.20-ನಗರದ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಸ್ಪೋಟದಲ್ಲಿ ಭಾಗಿಯಾಗಿರುವ ಶಂಕಿತ ಆರೋಪಿ ತಮಿಳುನಾಡಿಗೆ ಸೇರಿದವರು ಎಂದು ನೀಡಿದ್ದ ಹೇಳಿಕೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷಮೆಯಾಚಿಸಿದ್ದಾರೆ.
3
+ ನನ್ನ ತಮಿಳು ಸಹೋದರರು ಮತ್ತು ಸಹೋದರಿಯರಿಗೆ ನೋವುಂಟು ಮಾಡುವ ಉದ್ದೇಶದಿಂದ ನಾನು ಆ ಹೇಳಿಕೆ ನೀಡಿಲ್ಲ. ಆದರೂ ನನ್ನ ಹೇಳಿಕೆಗಳು ಕೆಲವರಿಗೆ ನೋವು ತಂದಿದೆ ಎಂದು ನಾನು ಭಾವಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ ಎಂದು ಶೋಭಾ ಎಕ್ಸ್ ಮಾಡಿದ್ದಾರೆ.
4
+ ಶಂಕಿತ ಆರೋಪಿ ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದಿದ್ದು, ರಾಮೇಶ್ವರಂ ಕೆಫೆ ಸ್ಪೋಟ ಮಾಡಿದ್ದ ಎಂಬ ಮಾಹಿತಿ ಮೇರೆಗೆ ನಾನು ಆ ರೀತಿಯ ಹೇಳಿಕೆ ನೀಡಿದ್ದೇ. ನನ್ನ ಹೇಳಿಕೆಯಿಂದ ತಮಿಳುನಾಡಿನ ಯಾರಿಗಾದರೂ ನೋವುಂಟಾಗಿದ್ದಾರೆ ಅವರಿಗೆ ನನ್ನ ಹೃದಯದ ಆಳದಿಂದ ನಿಮ್ಮ ಕ್ಷಮೆ ಕೇಳುತ್ತೇನೆ ಎಂದು ಅವರು ಪೊಸ್ಟ್ ಮಾಡಿದ್ದಾರೆ.
5
+ ತಮಿಳಿಗರು ಕರ್ನಾಟಕದ ಸಾಮಾಜಿಕ ರಚನೆಯ ಅವಿಭಾಜ್ಯ ಅಂಗವಾಗಿದ್ದಾರೆ, ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾವು ನಿಕಟ ಸಾಂಸ್ಕøತಿಕ ಬಂಧಗಳನ್ನು ಹೊಂದಿದ್ದೇವೆ ಮತ್ತು ಇತಿಹಾಸವನ್ನು ಹಂಚಿಕೊಂಡಿದ್ದೇವೆ ಎಂದು ಅವರು ಹೇಳಿಕೊಂಡಿದ್ದಾರೆ.
6
+ ಕರಂದ್ಲಾಜೆ ಅವರ ಪ್ರಚೋದನಕಾರಿ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು, ಕೇಂದ್ರ ಸಚಿವರಿಗೆ ಇಂತಹ ಸಮರ್ಥನೆಗಳನ್ನು ಮಾಡುವ ಅಧಿಕಾರವಿಲ್ಲ ಎಂದು ಆರೋಪಿಸಿದ್ದರು.
eesanje/url_47_142_11.txt ADDED
@@ -0,0 +1,9 @@
 
 
 
 
 
 
 
 
 
 
1
+ ವಿಶ್ವದ ಅತಿದೊಡ್ಡ ಚುನಾವಣಾ ಹಬ್ಬ ಆರಂಭ, ಮೊದಲ ಹಂತದ ಲೋಕಸಭಾ ಚುನಾವಣೆಗೆ ಅಧಿಸೂಚನೆ ಜಾರಿ
2
+ ನವದೆಹಲಿ,ಮಾ.20-ಜಾಗತಿಕವಾಗಿ ಕುತೂಹಲ ಕೆರಳಿಸಿರುವ ದೇಶದ ಲೋಕಸಭೆ ಚುನಾವಣೆಗೆ ಇಂದಿನಿಂದ ಪ್ರಕ್ರಿಯೆಗಳು ಆರಂಭಗೊಂಡಿದ್ದು, ಮೊದಲ ಹಂತದ ಚುನಾವಣೆಗೆ ಅಧಿಸೂಚನೆ ಜಾರಿಯಾಗಿದೆ.21 ರಾಜ್ಯಗಳ 102 ಕ್ಷೇತ್ರಗಳಿಗೆ ಏಪ್ರಿಲ್ 19 ರಂದು ಚುನಾವಣೆ ನಡೆಯಲಿದೆ. ಅದಕ್ಕಾಗಿ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭಗೊಳ್ಳಲಿದ್ದು, ಮಾ.27 ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಮಾ.28 ರಂದು ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯಲು ಮಾ.30 ಕೊನೆಯ ದಿನವಾಗಿದೆ.
3
+ ಮೊದಲ ಹಂತದಲ್ಲಿ ಅರುಣಾಚಲ ಪ್ರದೇಶದ 2, ಅಸ್ಸಾಂನ 5, ಬಿಹಾರದ 4, ಛತ್ತೀಸ್ಘಡದ 1, ಮಧ್ಯಪ್ರದೇಶದ 6, ಮಹಾರಾಷ್ಟ್ರದ 5, ಮಣಿಪುರದ ಒಂದು ಕ್ಷೇತ್ರದ ಪೂರ್ತಿ ಚುನಾವಣೆ, ಮತ್ತೊಂದು ಕ್ಷೇತ್ರದ ಅರ್ಧ ಚುನಾವಣೆ, ಮೇಘಾಲಯದ 2, ಮಿಜೋರಾಂ, ನಾಗಾಲ್ಯಾಂಡ್, ಸಿಕಿಂ, ತ್ರಿಪುರ, ಅಂಡಮಾನ್-ನಿಕೋಬಾರ್, ಜಮ್ಮು-ಕಾಶ್ಮೀರ್, ಲಕ್ಷದ್ವೀಪ್, ಪಾಂಡಿಚೆರಿ ಕ್ಷೇತ್ರಗಳ ತಲಾ 1 ಕ್ಷೇತ್ರಗಳಿಗೆ, ರಾಜಸ್ಥಾನದ 12, ತಮಿಳುನಾಡಿನ 39, ಉತ್ತರ ಪ್ರದೇಶದ 8, ಉತ್ತರಾಖಾಂಡ್ನ 5, ಪಶ್ಚಿಮ ಬಂಗಾಳದ 3 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಪ್ರಮುಖ ರಾಜ್ಯಗಳ ಪೈಕಿ ತಮಿಳುನಾಡಿಗೆ ಮೊದಲ ಹಂತದಲ್ಲೇ ಎಲ್ಲಾ 39 ಕ್ಷೇತ್ರಗಳಿಗೆ ಚುನಾವಣೆ ಪೂರ್ಣಗೊಳ್ಳಲಿದೆ.
4
+ ಉತ್ತರಾಖಾಂಡ್ನ 5 ಕ್ಕೆ 5 ಕ್ಷೇತ್ರಗಳಿಗೂ ಚುನಾವಣೆ ಚಾಲ್ತಿಯಲ್ಲಿದೆ. ಉಳಿದಂತೆ ಒಂದೆರೆಡು ಕ್ಷೇತ್ರಗಳಿರುವ ಅರುಣಾಚಲ ಪ್ರದೇಶ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಸಿಕ್ಕಿಂ, ಅಂಡಮಾನ್-ನಿಕೋಬಾರ್, ಲಕ್ಷದ್ವೀಪ್, ಪಾಂಡಿಚೇರಿ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ.
5
+ ಲೋಕಸಭೆ ಚುಣಾವಣೆ ಪ್ರಕ್ರಿಯೆಯಲ್ಲಿ ಅತೀ ಹೆಚ್ಚು ಕ್ಷೇತ್ರಗಳಿಗೆ ಮೊದಲ ಹಂತದಲ್ಲೇ ಮತದಾನ ನಡೆಯುತ್ತಿರುವುದು ಗಮನಾರ್ಹ. ನಂತರದ ಹಂತದಲ್ಲಿ 89, 94, 96, 49 ಮತ್ತು ತಲಾ 57 ಕ್ಷೇತ್ರಗಳಿಗೆ ಉಳಿದ 6 ಹಂತಗಳಲ್ಲಿ ಕ್ರಮವಾಗಿ ಚುನಾವಣೆ ನಡೆಯುತ್ತಿದೆ.
6
+ 2ನೇ ಮತ್ತು 3ನೇ ಹಂತದಲ್ಲಿ ಕರ್ನಾಟಕದ 28 ಕ್ಷೇತ್ರಗಳಿಗೆ ಚುನಾವಣೆ ಪ್ರಕ್ರಿಯೆಗಳು ಚಾಲನೆಗೊಳ್ಳಲಿವೆ. ಬಿಹಾರ ಲೋಕಸಭೆ ಕ್ಷೇತ್ರಗಳಿಗೆ ಚುನಾವಣಾ ಪ್ರಕ್ರಿಯೆಯಲ್ಲಿ ಒಂದಿಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಬಿಹಾರದ 40 ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳಿಗೆ ಮಾತ್ರ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಕೆ ಇಂದಿನಿಂದಲೇ ಆರಂಭವಾಗಿದೆ. ಆದರೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವನ್ನು ಒಂದು ದಿನದ ಮಟ್ಟಿಗೆ ವಿಸ್ತರಿಸಿ ಮಾ.28 ರವರೆಗೆ ಗಡುವು ನೀಡಲಾಗಿದೆ.
7
+ ನಾಮಪತ್ರಗಳ ಪರಿಶೀಲನೆಗೆ ಮಾ.30, ನಾಮಪತ್ರ ಹಿಂಪಡೆಯಲು ಏ.2 ರವರೆಗೆ ಕಾಲಾವಕಾಶ ನೀಡಲಾಗಿದೆ.ಉಳಿದಂತೆ ಮತದಾನ ಏ.19 ರಂದೇ ನಡೆಯಲಿದ್ದು, ಜೂ.4 ರಂದು ಮತ ಎಣಿಕೆ ಹಾಗೂ ಜೂ. 6 ರಂದು ಚುನಾವಣಾ ಪ್ರಕ್ರಿಯೆ ಪ��ರ್ಣಗೊಳ್ಳಲಿದೆ ಎಂದು ಆಯೋಗ ತಿಳಿಸಿದೆ.
8
+ ರಾಷ್ಟ್ರಪತಿಗಳ ಪರವಾಗಿ ಚುನಾವಣಾ ಆಯೋಗ ಹೊರಡಿಸಿರುವ ಅಧಿಸೂಚನೆ ಪ್ರಕಾರ ಮಾರ್ಚ್ 27 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿರಲಿದೆ.ಆದಾಗ್ಯೂ, ಹಬ್ಬದ ಕಾರಣ, ಮೊದಲ ಹಂತದಲ್ಲಿ ಚುನಾವಣೆ ನಡೆಯಲಿರುವ ಬಿಹಾರದ ಲೋಕಸಭಾ ಸ್ಥಾನಗಳಿಗೆ ನಾಮಪತ್ರ ಸಲ್ಲಿಸಲು ಮಾರ್ಚ್ 28 ಕೊನೆಯ ದಿನಾಂಕವಾಗಿರಲಿದೆ. ಬಿಹಾರದ 40 ಸ್ಥಾನಗಳ ಪೈಕಿ ನಾಲ್ಕರಲ್ಲಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
9
+ 18ನೇ ಲೋಕಸಭೆಯ ಚುನಾವಣೆಯು ಏಪ್ರಿಲ್ 19 ರಂದು ಪ್ರಾರಂಭವಾಗುತ್ತದೆ ಮತ್ತು ನಂತರದ ಹಂತಗಳು ಏಪ್ರಿಲ್ 26, ಮೇ 7, ಮೇ 13, ಮೇ 20, ಮೇ 25 ಮತ್ತು ಜೂನ್ 1 ರಂದು ನಡೆಯಲಿದೆ. ಮತಗಳ ಎಣಿಕೆ ಜೂನ್ 4 ರಂದು ನಡೆಯಲಿದೆ.ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್ಗಢ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಕ್ಷದ್ವೀಪ ಮತ್ತು ಪುದುಚೇರಿ ಮೊದಲ ಹಂತದಲ್ಲಿ ಮತದಾನ ನಡೆಯಲಿದೆ.
eesanje/url_47_142_12.txt ADDED
@@ -0,0 +1,4 @@
 
 
 
 
 
1
+ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ಮನೆಯ ಛಾವಣಿ ಕುಸಿತ ; ಮೂವರಿಗೆ ಗಾಯ
2
+ ಥಾಣೆ, ಮಾ 20 –ಮನೆಯೊಂದರಲ್ಲಿ ಎಲೆಕ್ಟ್ರಿಕ್ ಮೋಟಾರ್ ಬೈಕ್ ಬ್ಯಾಟರಿ ಸ್ಫೋಟಗೊಂಡ ಪರಿಣಾಮ ಇಬ್ಬರು ಮಹಿಳೆಯರು ಮತ್ತು ಪುರುಷ ಗಾಯಗೊಂಡಿರುವ ಘಟನೆ ಕಲ್ವಾ ಪ್ರದೇಶದ ಶಾಂತಿ ನಗರ ಪ್ರದೇಶದ ಚಾಲ್ ನಡೆದಿದೆ.ಕಳೆದ ರಾತ್ರಿ ಸಂಭವಿಸಿದ ಸ್ಫೋಟದ ಪರಿಣಾಮದಿಂದಾಗಿ ಮನೆಯ ಮೇಲ್ಛಾವಣಿ ಮತ್ತು ಪಕ್ಕದ ಮನೆಯ ಗೋಡೆ ಕುಸಿದಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಷನ್ ನ ವಿಪತ್ತು ನಿರ್ವಹಣಾ ಕೋಶದ ಮುಖ್ಯಸ್ಥ ಯಾಸಿನ್ ತದ್ವಿ ತಿಳಿಸಿದ್ದಾರೆ.
3
+ ರಾತ್ರಿ 10.30ರ ಸುಮಾರಿಗೆ ಬ್ಯಾಟರಿ ಸ್ಫೋಟಗೊಂಡಿದ್ದು, ಚಾಜಿರ್ಂಗ್ ಮಾಡಲು ಬೈಕ್ ಬ್ಯಾಟರಿಯನ್ನು ಮನೆಯಲ್ಲಿ ಇಟ್ಟಿದ್ದರೆ ಅಥವಾ ಹೊರಗೆ ಇತ್ತೆ ಎಂಬುದು ಇನ್ನೂ ತಿಳಿದುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕುಸಿದು ಬಿದ್ದ ಮನೆಯಲ್ಲಿ ವಾಸವಿದ್ದ 28 ವರ್ಷದ ಮಹಿಳೆ ಹಾಗೂ ಪಕ್ಕದ ಮನೆಯಲ್ಲಿದ್ದ 66 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
4
+ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಪತ್ತು ನಿರ್ವಹಣಾ ದಳದ ತಂಡ ಸ್ಥಳಕ್ಕೆ ಧಾವಿಸಿ ಗಾಯಗೊಂಡ ಮೂವರನ್ನು ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.ಸ್ಫೋಟದ ಕಾರಣವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
eesanje/url_47_142_2.txt ADDED
@@ -0,0 +1,5 @@
 
 
 
 
 
 
1
+ ಸದ್ಗುರು ಆರೋಗ್ಯದಲ್ಲಿ ಚೇತರಿಕೆ : .ಇಶಾ ಫೌಂಡೇಶನ್
2
+ ನವದೆಹಲಿ,ಮಾ.21-ತಲೆಯಲ್ಲಿ ರಕ್ತಸ್ರಾವದಿಂದ ಬಳಲುತ್ತಿದ್ದ ಆಧ್ಯಾತ್ಮಿಕ ಸದ್ಗುರು ಜಗ್ಗಿ ವಾಸುದೇವ್ ಸದ್ಗುರು ಅವರಿಗೆ ಇಲ್ಲಿನ ಅಪೋಲೂ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಮಿದುಳಿನ ಶಸ್ತ್ರ ಚಿಕಿತ್ಸೆಗೆ ನಡೆದಿದು, ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಸ್ಥಿರ ಪ್ರಗತಿ ಸಾಧಿಸುತ್ತಿದ್ದಾರೆ ಎಂದು ಇಶಾ ಫೌಂಡೇಶನ್ ತಿಳಿಸಿದೆ.
3
+ ಇನ್‍ಸ್ಟಾಗ್ರಾಮ್‍ನಲ್ಲಿ ಸದ್ಗುರು ಅವರ ಪುತ್ರಿ ರಾಧೆ ಜಗ್ಗಿ ಅವರು ಸದ್ಗುರುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಮತ್ತು ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬರೆದಿದ್ದಾರೆ. 66 ವರ್ಷ ವಯಸ್ಸಿನ ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್ ನ ಸಂಸ್ಥಾಪಕರಾಗಿದ್ದಾರೆ ಮತ್ತು ಪರಿಸರ ಸಂರಕ್ಷಣೆಗಾಗಿ ಮಣ್ಣು ಉಳಿಸಿ ಮತ್ತು ನದಿಗಳ ಉಳಿವಿಗೆ ಅಭಿಯಾನಗಳನ್ನು ಪ್ರಾರಂಭಿಸಿ ವಿಶ್ವದಾದ್ಯಂತ ಭಕ್ತರನ್ನು ಹೊಂದಿದ್ದಾರೆ.
4
+ ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆ ತನ್ನ ಹೇಳಿಕೆಯಲ್ಲಿ ತಲೆಯಲ್ಲಿ ರಕ್ತಸ್ರಾವವ ಉಂಟಾಗಿತ್ತು ಇದಕ್ಕಾಗಿ ಕಳೆದ ಮಾರ್ಚ್ 17 ರಂದು ಶಸಚಿಕಿತ್ಸೆ ನಡೆಸಲಾಯಿತು. ಶಸಚಿಕಿತ್ಸೆಯ ನಂತರ ಸದ್ಗುರುಗಳನ್ನು ವೆಂಟಿಲೇಟರ್‍ನಿಂದ ಹೊರಬಂದು ಈಗ ಎಲ್ಲರೊಂದಿಗೆ ಮಾತನಡುತ್ತಿದ್ದಾರೆ.
5
+ ಉತ್ತಮವಾಗಿ ಆರೋಗ್ಯ ಸುಧಾರಿಸಿದೆ ಮತ್ತು ನಾವು ಪ್ರಮುಖ ನಿಯತಾಂಕಗಳು ಸುಧಾರಿಸಿವೆ ಎಂದು ಆಸ್ಪತ್ರೆ ಹೇಳಿದೆ.ಸದ್ಗುರುಗಳು ತಮ್ಮ ಆಸ್ಪತ್ರೆಯ ಬೆಡ್‍ನಿಂದ ವೀಡಿಯೊವನ್ನು ತಮ್ಮ ಜಾಲಜಾಣ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
eesanje/url_47_142_3.txt ADDED
@@ -0,0 +1,9 @@
 
 
 
 
 
 
 
 
 
 
1
+ ಚುನಾವಣಾ ಆಯುಕ್ತರನ್ನು ನೇಮಿಸುವ ಕಾನೂನು ತಡೆಗೆ ಸುಪ್ರೀಂ ನಕಾರ
2
+ ನವದೆಹಲಿ,ಮಾ.21-ಲೋಕಸಭಾ ಚುನಾವಣೆಯ ಮತದಾನ ನಡೆಯಲು ಇನ್ನು ಕೆಲವು ವಾರಗಳು ಸನಿಹದಲ್ಲಿರುವಾಗ ಚುನಾವಣಾ ಆಯುಕ್ತರನ್ನು ನೇಮಿಸುವ ಕಾನೂನಿಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಈ ಹಂತದಲ್ಲಿ ಹಾಗೆ ಮಾಡುವುದರಿಂದ ಅವ್ಯವಸ್ಥೆ ಸೃಷ್ಟಿಯಾಗುತ್ತದೆ ಎಂದು ಮಹತ್ವದ ಆದೇಶ ನೀಡಿದೆ.
3
+ ಅರ್ಜಿಗಳನ್ನು ಅವಲೋಕನಗಳನ್ನು ಮಾಡುವಾಗ, ಹೊಸ ಕಾನೂನಿನಡಿ ಹೊಸದಾಗಿ ನೇಮಕಗೊಂಡ ಚುನಾವಣಾ ಆಯುಕ್ತರಾದ ಜಾ್ಞನೇಶ್ ಕುಮಾರ್ ಮತ್ತು ಸುಖಬೀರ್ ಸಿಂಗ್ ಸಂಧು ವಿರುದ್ಧ ಯಾವುದೇ ಆರೋಪಗಳಿಲ್ಲ ಎಂದು ಆದೇಶ ನೀಡಿತು.2023ರ ಕಾನೂನಿನಡಿ ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ನ ತ್ರಿಸದಸ್ಯ ಪೀಠ ಆಯುಕ್ತರ ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿತು.
4
+ ಕೇಂದ್ರ ಚುನಾವಣಾ ಆಯೋಗದ ಆಯ್ಕೆ ಸಮಿತಿಯಿಂದ ಸುಪ್ರೀಂಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳನ್ನು (ಸಿಜೆಐ) ಕೈಬಿಡಲಾಗಿತ್ತು. ಇದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಸಂಜೀವ್ ಖನ್ನಾ ನೇತೃತ್ವದ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ತಡೆಯಾಜ್ಞೆ ನೀಡಬೇಕೆಂಬ ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು. ಕಾನೂನಿನಡಿ ನೇಮಕಾತಿ ನಡೆಸಲಾಗಿದೆ. ಹೀಗಾಗಿ ಇದಕ್ಕೆ ತಡೆಯಾಜ್ಞೆ ನೀಡಲು ಆಗುವುದಿಲ್ಲ. ಚುನಾವಣಾ ಆಯೋಗವು ಕಾರ್ಯಾಂಗದ ಹೆಬ್ಬೆರಳಿನಡಿ ಇದೆ ಎಂದು ನೀವು ಹೇಳಲು ಸಾಧ್ಯವಿಲ್ಲ. ಈ ಹಂತದಲ್ಲಿ, ನಾವು ಶಾಸನವನ್ನು ತಡೆಹಿಡಿಯಲಾಗುವುದಿಲ್ಲ ಇದು ಅವ್ಯವಸ್ಥೆ ಮತ್ತು ಅನಿಶ್ಚಿತತೆಗೆ ಕಾರಣವಾಗುತ್ತದೆ. ಚುನಾವಣಾ ಆಯೋಗ ಸ್ವತಂತ್ರ ಮತ್ತು ನ್ಯಾಯಸಮ್ಮತವಾಗಿರಬೇಕು ಎಂದೂ ಹೇಳಿದೆ.
5
+ ಚುನಾವಣಾ ಆಯೋಗಗಳ ಆಯ್ಕೆಗಾಗಿ ಸಭೆಯನ್ನು ಪೂರ್ವಭಾವಿಯಾಗಿ ಮುಂದೂಡಲಾಗಿದೆ, ವಾಸ್ತವವನ್ನು ಎತ್ತಿ ತೋರಿಸಲು ಪ್ರತ್ಯೇಕ ಅರ್ಜಿಯನ್ನು ಸಲ್ಲಿಸುವಂತೆ ಪೀಠ ಸೂಚನೆ ನೀಡಿದೆ.ಅರ್ಜಿದಾರ ಜಯಾ ಠಾಕೂರ್ ಪರವಾಗಿ ನ್ಯಾಯಾಲಯಕ್ಕೆ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್, ತೀರ್ಪು ನೀಡಿದಾಗ ಯಾವುದೇ ಉಲ್ಲಂಘನೆಯಾಗುವುದಿಲ್ಲ.
6
+ ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರದ ಅವ) ಕಾಯಿದೆ, 2023ರಲ್ಲಿ ಸ್ಪಷ್ಟವಾದ ಉಲ್ಲಂಘನೆಯಾಗಿದೆ ಎಂದು ಅವರು ಪ್ರತಿಪಾದಿಸಿದರು. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸ್ ಪರವಾಗಿ ವಕೀಲ ಪ್ರಶಾಂತ್ ಭೂಷಣ್ ನ್ಯಾಯಾಲಯಕ್ಕೆ ಹಾಜರಾಗಿದ್ದರು.
7
+ ಇದು ಆರೋಗ್ಯಕರ ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ಚುನಾವಣಾ ಆಯೋಗವನ್ನು ರಾಜಕೀಯ ಮತ್ತು ಕಾರ್ಯನಿರ್ವಾಹಕ ಹಸ್ತಕ್ಷೇಪ ದಿಂದ ಪ್ರತ್ಯೇಕಿಸಬೇಕು ಎಂದು ಪ್ರತಿಪಾದಿಸಿ ಮುಖ್ಯ ನ್ಯಾಯಮೂರ್ತಿಗಳನ್ನು ಸಮಿತಿಯಿಂದ ಹೊರಗಿಡುವುದನ್ನು ಪ್ರಶ್ನಿಸಿತು.ಅರ್ಜಿದಾರರ ಪರ ವಕೀಲ ವಿಕಾಸ್ ಸಿಂಗ್ ಅವರು, ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸಿಜೆಐ ಅವರನ್ನು ಕೈಬಿಟ್ಟಿರುವ ಕಾರಣ ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ನೀಡಬೇಕೆಂದು ಕೋರಿದರು.
8
+ ಕೇಂದ್ರ ಚುನಾವಣಾ ಆಯೋಗದ ಆಯ್ಕೆ ಸಮಿತಿಯಲ್ಲಿ ಸಿಜೆಐ ಕಡ್ಡಾಯವಾಗಿ ಭಾಗವಹಿಸಬೇಕೆಂಬ ಈ ಹಿಂದಿನ ಸುಪ್ರೀಂ ಕೋರ್ಟ್ನ ತೀರ್ಪಿನ ಪ್ರಕಾರ, ಇಬ್ಬರು ನೂತನ ಚುನಾವಣಾ ಆಯುಕ್ತರ ನೇಮಕ ಆಗಬೇಕು. ಆದರೆ ಸಿಜೆಐ ಅವರನ್ನು ಕೈಬಿಟ್ಟು, ಪ್ರಧಾನಿಯಿಂದ ನಾಮನಿರ್ದೇಶನ ಮಾಡಲಾದ ಕ್ಯಾಬಿನೆಟ್ ಮಂತ್ರಿಯನ್ನು ಸೇರಿಸಿಕೊಳ್ಳಲಾಗಿದೆ. ಈ ಮೂಲಕ ಹಿಂದಿನ ಕಾನೂನನ್ನು ಮರುಸ್ಥಾಪಿಸಲಾಗಿದೆ. ಅಂದರೆ ಕಾರ್ಯಾಂಗದ ಆಯ್ಕೆಯು ಕಾನೂನಿನ ನಿಯಮವನ್ನು ದುರ್ಬಲಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಹಾಕುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.
9
+ ಮುಖ್ಯ ಚುನಾವಣಾ ಆಯೋಗ ಮತ್ತು ಇತರ ಚುನಾವಣಾ ಆಯೋಗಗಳ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಕಚೇರಿಯ ಅವ) ಕಾಯ್ದೆ-2023ರ ಸೆಕ್ಷನ್ 7ರ ಅನುಷ್ಠಾನಕ್ಕೆ ತಡೆ ನೀಡಬೇಕು. ಚುನಾವಣಾ ಆಯೋಗವು ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳನ್ನು ನಡೆಸುವ ಜವಾಬ್ದಾರಿಯನ್ನು ಮಾತ್ರವಲ್ಲದೇ ವಿವಿಧ ರಾಜಕೀಯ ಪಕ್ಷಗಳ ನಡುವೆ ನಿರ್ಣಾಯಕ ಪಾತ್ರವನ್ನು ಸಹ ವಹಿಸುತ್ತದೆ. ಆದ್ದರಿಂದ ಚುನಾವಣಾ ಪ್ರಕ್ರಿಯೆಯ ಪರಿಶುದ್ಧತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಕಾನೂನಿನ ನಿಯಮದ ಸರಿಯಾದ ಅನುಷ್ಠಾನಕ್ಕಾಗಿ ನ್ಯಾಯದ ಹಿತಾಸಕ್ತಿಯಿಂದ ತಡೆ ನೀಡಬಹುದು ಎಂದು ಅರ್ಜಿಯಲ್ಲಿ ಸೇರಿಸಲಾಗಿತ್ತು.
eesanje/url_47_142_4.txt ADDED
@@ -0,0 +1,10 @@
 
 
 
 
 
 
 
 
 
 
 
1
+ ಕಾಂಗ್ರೆಸ್ ಖಾತೆ ಜಪ್ತಿ ಮಾಡಿ ಬಿಜೆಪಿ ಪ್ರಜಾಪ್ರಭುತ್ವದ ಕತ್ತು ಹಿಸುಕಿದೆ : ಖರ್ಗೆ
2
+ ದೆಹಲಿ,ಮಾ.21-ಲೋಕಸಭಾ ಚುನಾವಣೆ ಘೋಷಣೆಯಾಗುವ ಮೂರು ವಾರಗಳ ಮೊದಲು ಕಾಂಗ್ರೆಸ್ ಪಕ್ಷದ 11 ಖಾತೆಗಳನ್ನು ಜಪ್ತಿ ಮಾಡುವ ಮೂಲಕ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕತ್ತು ಹಿಸುಕುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ನ ಖರ್ಗೆ, ಕಾಂಗ್ರೆಸ್ ಸಂಸದೀಯ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಖಜಾಂಚಿ ಅಜಯ್ ಮಕೇನ್ ಸೇರಿದಂತೆ ಹಲವು ನಾಯಕರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
3
+ ಖರ್ಗೆಯವರು ಮಾತನಾಡಿ, ಭಾರತ ವಿಶ್ವದಲ್ಲೇ ದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ. 18ನೇ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಲ್ಲಾ ಪಕ್ಷಗಳಿಗೂ ಸಮಾನ ಸ್ಪರ್ಧೆಯ ವೇದಿಕೆ ಅಗತ್ಯವಿರುತ್ತದೆ. ಆದರೆ ಕೇಂದ್ರ ಸರ್ಕಾರ ಅಸಾಂವಿಧಾನಿಕವಾಗಿ ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ, ಚುನಾವಣಾ ಆಯೋಗಗಳನ್ನು ಏಕಸ್ವಾಮ್ಯವಾಗಿ ನಿಯಂತ್ರಿಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
4
+ ಕೇಂದ್ರ ಚುನಾವಣೆಯ ಚಂದಾ ವಸೂಲಿ ಬಗ್ಗೆ ಸುಪ್ರೀಂಕೋರ್ಟ್ ತೀರ್ಪು ಸ್ವಾಗತಾರ್ಹ. ಒಟ್ಟಾರೆ ಬಾಂಡ್ಗಳಲ್ಲಿ ಶೇ. 56 ರಷ್ಟು ಪಾಲನ್ನು ಬಿಜೆಪಿ ಪಡೆದಿದೆ. ಈ ಬಾಂಡ್ಗಳು ಅಸಾಂವಿಧಾನಿಕ ಮತ್ತು ಕಾನೂನು ಬಾಹಿರ ಎಂದು ನ್ಯಾಯಾಲಯ ಹೇಳಿದೆ. ಆಡಳಿತಾರೂಢ ಪಕ್ಷ ಅಧಿಕಾರ ದುರುಪಯೋಗಪಡಿಸಿಕೊಂಡು ಚಂದಾ ವಸೂಲಿ ಮಾಡಿರುವುದು ಆತಂಕಕಾರಿ ಮತ್ತು ನಾಚಿಕೆಗೇಡು ಎಂದು ಟೀಕಿಸಿದರು.
5
+ ಒಂದೆಡೆ ಬಿಜೆಪಿ ಚುನಾವಣಾ ಬಾಂಡ್ಗಳ ಮೂಲಕ ಸಾವಿರಾರು ಕೋಟಿ ರೂ.ಗಳನ್ನು ಸಂಗ್ರಹಿಸಿ ಚುನಾವಣೆ ನಡೆಸುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಇದು ಕಾಂಗ್ರೆಸ್ ಪಕ್ಷದ ಮೇಲಿನ ಆಕ್ರಮಣವಲ್ಲ. ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಈ ಹಿಂದೆ ನೆಹರೂ ಕಾಲದಿಂದಲೂ ವಿಪಕ್ಷಗಳಿಗೆ ಚುನಾವಣೆಯಲ್ಲಿ ಸ್ರ್ಪಸಲು ಸಮಾನ ವೇದಿಕೆಯನ್ನು ಕಲ್ಪಿಸಲಾಗಿತ್ತು. ಇದೇ ಮೊದಲ ಬಾರಿಗೆ ಬಿಜೆಪಿ ಏಕಸ್ವಾಮ್ಯ ಸಾಸುವ ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
6
+ ಸೋನಿಯಾಗಾಂಧಿ ಮಾತನಾಡಿ, ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಮೇಲೆ ಆರ್ಥಿಕ ದೌರ್ಜನ್ಯ ನಡೆಸುತ್ತಿದೆ. ಅಸಂಸದೀಯ ಮತ್ತು ಅಪ್ರಜಾಸತ್ತಾತ್ಮಕ ಕ್ರಮಗಳನ್ನು ಅನುಸರಿಸುತ್ತಿದೆ. ಚುನಾವಣಾ ಬಾಂಡ್ಗಳ ಹಗರಣ ಗಮನಾರ್ಹವಾಗಿದೆ ಎಂದು ಕಟಕಿಯಾಡಿದರು. ರಾಹುಲ್ ಗಾಂಧಿ ಮಾತನಾಡಿ, ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹಸಚಿವರು ಕಾಂಗ್ರೆಸ್ ಪಕ್ಷದ ವಿರುದ್ಧ ಕ್ರಿಮಿನಲ್ ಆ್ಯಕ್ಷನ್ ನಡೆಸುತ್ತಿದ್ದಾರೆ. ಆರ್ಥಿಕ ಮೂಲಗಳನ್ನು ಸ್ಥಗಿತಗೊಳಿಸಿದರೆ ಕುಟುಂಬಗಳು ಹಸಿವಿನಿಂದ ಸಾಯುತ್ತವೆ. ವ್ಯಾಪಾರ ನಶಿಸುತ್ತದೆ. ಅಂತಹುದೇ ತಂತ್ರಗಾರಿಕೆಯನ್ನು ಕಾಂಗ್ರೆಸ್ ವಿರುದ��ಧ ಅನುಸರಿಸಲಾಗುತ್ತಿದೆ. ನಮ್ಮ ಆರ್ಥಿಕ ಗುರುತುಗಳನ್ನು ಜಪ್ತಿ ಮಾಡಿದ್ದಾರೆ ಎಂದು ಕಿಡಿಕಾರಿದರು.
7
+ ದೇಶದಲ್ಲಿ ಪ್ರಜಾಪ್ರಭುತ್ವ ಇಲ್ಲವಾಗಿದೆ. ಅತಿ ದೊಡ್ಡ ವಿರೋಧ ಪಕ್ಷದ ವಿರುದ್ಧ ಇಷ್ಟೆಲ್ಲಾ ಅನ್ಯಾಯಗಳಾಗುತ್ತಿದ್ದರೂ ಚುನಾವಣಾ ಆಯೋಗ ಮತ್ತು ನ್ಯಾಯಾಲಯಗಳು ಮೌನವಾಗಿದೆ. ಬ್ಯಾಂಕ್ ಖಾತೆ ಜಪ್ತಿಯಿಂದಾಗಿ ನಮ್ಮ ಅಭ್ಯರ್ಥಿಗಳಿಗೆ ಆರ್ಥಿಕ ಸಹಾಯ ಮಾಡಲಾಗುತ್ತಿಲ್ಲ. ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲಾಗುತ್ತಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಕೆಲಸ ಮಾಡಲಾಗುತ್ತಿಲ್ಲ. ಒಂದೆಡೆಯಿಂದ ಮತ್ತೊಂದೆಡೆ ಮುಖಂಡರ ಪ್ರಯಾಣಕ್ಕೆ ರೈಲ್ವೆ ಹಾಗೂ ವಿಮಾನದ ಟಿಕೆಟ್ಗಳನ್ನು ಖರೀದಿಸಲಾಗುತ್ತಿಲ್ಲ. ಕಾರ್ಯಕರ್ತರಿಗೂ ಸಹಾಯ ಮಾಡಲಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
8
+ ಖಜಾಂಚಿ ಅಜಯ್ ಮಕೇನ್ ಮಾತನಾಡಿ, ದೇಶದ ರಾಜಕೀಯ ಪಕ್ಷಗಳಿಗೆ ಆದಾಯ ತೆರಿಗೆ ವಿನಾಯಿತಿ ಇದೆ. ಬಿಜೆಪಿ ಈವರೆಗೂ ಆದಾಯ ತೆರಿಗೆ ಪಾವತಿಸಿಲ್ಲ. 2017-18 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 210 ಕೋಟಿ ರೂ.ಗಳ ಹಣ ಸಂಗ್ರಹವಾಗಿದೆ ಎಂದು ಲೆಕ್ಕ ಹಾಕಲಾಗಿದೆ. ಒಟ್ಟಾರೆ ಸಂಗ್ರಹವಾಗಿರುವುದು 199 ಕೋಟಿ ರೂ., ಅದರಲ್ಲಿ ಪಕ್ಷದ ಸದಸ್ಯತ್ವ ಹಾಗೂ ಯುವ ಕಾಂಗ್ರೆಸ್ ಸದಸ್ಯತ್ವದ ಶುಲ್ಕ ಸೇರಿದೆ. 14.49 ಲಕ್ಷ ರೂ. ನಗದು ರೂಪದಲ್ಲಿ ಸ್ವೀಕರಿಸಲಾಗಿದೆ ಎಂಬ ಕಾರಣಕ್ಕೆ 2024ರ ಫೆ.13 ರಂದು ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿತ್ತು. ಒಟ್ಟು ಸಂಗ್ರಹದ ಹಣದಲ್ಲಿ ನಗದು ಸ್ವೀಕಾರದ ಪ್ರಮಾಣ ಶೇ. 0.07ರಷ್ಟು. ಇದಕ್ಕೆ ಶೇ. 106 ಪಟ್ಟು ದುಬಾರಿ ದಂಡ ವಿಧಿಸಲಾಗಿದೆ.
9
+ ಆದಾಯ ತೆರಿಗೆ ಇಲಾಖೆ ಕಾಯ್ದೆಯಲ್ಲಿ ದಂಡ ವಿಧಿಸಲು ಅವಕಾಶ ಇರುವುದು ಗರಿಷ್ಠ 10 ಸಾವಿರ ರೂ. ಮಾತ್ರ. ಆದರೆ ಆದಾಯ ತೆರಿಗೆ ಅಧಿಕಾರಿಗಳು 4 ಬ್ಯಾಂಕ್ಗಳಲ್ಲಿದ್ದ ಕಾಂಗ್ರೆಸ್ ಪಕ್ಷದ 11 ಖಾತೆಗಳನ್ನು ಜಪ್ತಿಗೊಳಿಸಿದ್ದಾರೆ ಮತ್ತು ಬ್ಯಾಂಕ್ ವ್ಯವಸ್ಥಾಪಕರನ್ನು ಬೆದರಿಸಿ 115 ಕೋಟಿ ರೂ.ಗಳನ್ನು ಬಲವಂತವಾಗಿ ಸರ್ಕಾರಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ವಿವರಿಸಿದರು.
10
+ 1993-94ನೇ ಸಾಲಿನಲ್ಲಿ ಸೀತಾರಾಮ್ ಕೇಸರಿ ಖಜಾಂಚಿಯಾಗಿದ್ದಾಗಿನ ವಹಿವಾಟಿಗೆ ಸಂಬಂಧಪಟ್ಟಂತೆ 31 ವರ್ಷಗಳ ಬಳಿಕ ಕಳೆದ ವಾರ ನೋಟಿಸ್ ನೀಡಲಾಗಿದೆ ಎಂದು ವಿವರಿಸಿದರು. ನಾವು ಕೇಂದ್ರ ಸರ್ಕಾರದ ಈ ಕ್ರಮವನ್ನು ಹೈಕೋರ್ಟ್, ಸುಪ್ರೀಂಕೋರ್ಟ್ನಲ್ಲೂ ಪ್ರಶ್ನೆ ಮಾಡಿದ್ದೇವೆ. ಜನತಾ ನ್ಯಾಯಾಲಯದಲ್ಲೂ ಪ್ರಸ್ತಾಪಿಸಿದ್ದೇವೆ ಎಂದು ಹೇಳಿದರು.
eesanje/url_47_142_5.txt ADDED
@@ -0,0 +1,5 @@
 
 
 
 
 
 
1
+ ಶಾಹಿ ಈದ್ಗಾ ಕೃಷ್ಣಕೂಪ್ ನಲ್ಲಿ ಪೂಜೆ ಸಲ್ಲಿಸಲು ಮುಸ್ಲಿಂರ ಆಕ್ಷೇಪ
2
+ ಪ್ರಯಾಗ್ರಾಜ್,ಮಾ.21-ಮಥುರಾದ ಶಾಹಿ ಈದ್ಗಾದ ಆವರಣದಲ್ಲಿರುವ ಕೃಷ್ಣ ಕೂಪ್ನಲ್ಲಿ ಪೂಜೆ ಸಲ್ಲಿಸುವಂತೆ ಕೋರಿ ಸಲ್ಲಿಸಿರುವ ಮನವಿಗೆ ಮುಸ್ಲಿಂ ಕಡೆಯವರು ಆಕ್ಷೇಪ ವ್ಯಕ್ತಪಡಿಸಿದ್ದು, ನಿರ್ವಹಣೆಯ ಮೊಕದ್ದಮೆ ತನ್ನ ಮುಂದೆ ಬಾಕಿ ಇರುವ ಕಾರಣ ಅರ್ಜಿಯ ಕುರಿತು ಯಾವುದೇ ಆದೇಶ ನೀಡಬಾರದು ಎಂದು ಅಲಹಾಬಾದ್ ಹೈಕೋರ್ಟ್ಗೆ ಮನವಿ ಮಾಡಿದೆ.
3
+ ಕತ್ರಾ ಕೇಶವ್ ದೇವ್ ದೇವಸ್ಥಾನದ 13.37 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿಕೊಳ್ಳುವ ಶಾಹಿ ಈದ್ಗಾ ಮಸೀದಿಯನ್ನು ತೆಗೆದುಹಾಕಲು ಕೋರುವ ನಿರ್ವಹಣೆಯ ಮೊಕದ್ದಮೆಯನ್ನು ಮುಸ್ಲಿಂ ಕಡೆಯವರು ಪ್ರಶ್ನಿಸಿದ್ದಾರೆ.ಎರಡು ಕಡೆಯ ವಾದವನ್ನು ಆಲಿಸಿದ ಹೈಕೋರ್ಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 1ಕ್ಕೆ ನಿಗದಿಪಡಿಸಿದೆ.
4
+ ನಿನ್ನೆ ಅಶುತೋಷ್ ಪಾಂಡೆ ಅವರು ಸಲ್ಲಿಸಿದ ಸಿವಿಲ್ ಪೊ್ರಸೀಜರ್ ಕೋಡ್ನ ಸೆಕ್ಷನ್ 151 (ನ್ಯಾಯಾಲಯದ ಅಂತರ್ಗತ ಅಧಿಕಾರ) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಮೇಲೆ ಮುಸ್ಲಿಂ ಕಡೆಯಿಂದ ಆಕ್ಷೇಪಣೆ ವ್ಯಕ್ತವಾಗಿದೆ. ತಮ್ಮ ಮನವಿಯಲ್ಲಿ, ಪಾಂಡೆ ಅವರು ಪ್ರತಿ ವರ್ಷ ಮಾತಾ ಸೀತಾ ಸಪ್ತಮಿ ಮತ್ತು ಮಾತಾ ಸೀತಾ ಅಷ್ಟಮಿ ಯಂದು ಕೃಷ್ಣ ಜನ್ಮಭೂಮಿ ದೇವಸ್ಥಾನದ ಪಕ್ಕದಲ್ಲಿರುವ ಶಾಹಿ ಈದ್ಗಾ ಸಂಕೀರ್ಣದಲ್ಲಿರುವ ಕೃಷ್ಣ ಕೂಪ್(ಬಾವಿ) ನಲ್ಲಿ ಹಿಂದೂ ಭಕ್ತರು ಬಾಸೋಡ ಪೂಜೆ ಮಾಡುತ್ತಾರೆ.
5
+ ಈ ವರ್ಷ ಏಪ್ರಿಲ್ 1 ರಂದು ಮಾತಾ ಸೀತಾ ಸಪ್ತಮಿ ಮತ್ತು ಏಪ್ರಿಲ್ 2 ರಂದು ಮಾತಾ ಸೀತಾ ಅಷ್ಟಮಿ ಇದೆ. ಆ ದಿನಗಳಲ್ಲಿ ಕೃಷ್ಣ ಕೂಪಿನಲ್ಲಿ ಬಾಸೋಡ ಪೂಜೆಯನ್ನು ಫಿರ್ಯಾದಿದಾರರು ಮಾಡಬೇಕಾಗಿದ್ದರೂ ಆರೋಪಿಗಳು ಪೂಜೆ ಮಾಡದಂತೆ ತಡೆಯುತ್ತಿದ್ದಾರೆ ಎಂದು ಪಾಂಡೆ ಮನವಿಯಲ್ಲಿ ತಿಳಿಸಿದ್ದಾರೆ. ನಿರ್ವಹಣೆಯ ಮೊಕದ್ದಮೆಯ ವಿಚಾರಣೆ ಬಾಕಿ ಉಳಿದಿದ್ದು, ಅಂತಹ ಅರ್ಜಿಯ ಕುರಿತು ಯಾವುದೇ ಆದೇಶವನ್ನು ರವಾನಿಸಬೇಕಾಗಿಲ್ಲ ಎಂದು ಮುಸ್ಲಿಂ ಕಡೆಯವರು ವಾದಿಸಿದರು.ಇದು ವಕ್ಪ್ ಆಸ್ತಿ ಮತ್ತು ಮನವಿಯನ್ನು ನಿರ್ವಹಿಸಲಾಗುವುದಿಲ್ಲ ಎಂದು ಮುಸ್ಲಿಂ ಕಡೆಯಿಂದ ಅರ್ಜಿಯನ್ನು ವಿರೋಧಿಸಲಾಗಿದೆ.
eesanje/url_47_142_6.txt ADDED
@@ -0,0 +1,4 @@
 
 
 
 
 
1
+ ತಮಿಳುನಾಡಿನ ಮಾಜಿ ಸಚಿವನ ಮನೆ ಮೇಲೆ ಇಡಿ ದಾಳಿ
2
+ ಚೆನ್ನೈ,ಮಾ.21-ತಮಿಳುನಾಡಿನ ಎಐಎಡಿಎಂಕೆ ನಾಯಕ ಹಾಗೂ ಮಾಜಿ ಸಚಿವ ಸಿ.ವಿಜಯಭಾಸ್ಕರ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶಾನಾಲಯ ದಾಳಿ ನಡೆಸಿದೆ.ಪ್ರತ್ಯೇಕ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಚೆನ್ನೈ ಮೂಲದ ರಿಯಲ್ ಎಸ್ಟೇಟ್ ಗುಂಪಿನ ಹೊರತಾಗಿ ಎಐಎಡಿಎಂಕೆ ನಾಯಕ ಮತ್ತು ತಮಿಳುನಾಡಿನ ಮಾಜಿ ಸಚಿವ ಸಿ ವಿಜಯಭಾಸ್ಕರ್ ವಿರುದ್ಧ ಜಾರಿ ನಿರ್ದೇಶನಾಲಯ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
3
+ ತಮಿಳುನಾಡಿನ ಪುದುಕೊಟೈನ ಪ್ರಬಲ ನಾಯಕರಾಗಿರುವ ವಿಜಯಭಾಸ್ಕರ್ ಅವರು ಮಾಜಿ ಆರೋಗ್ಯ ಸಚಿವರಾಗಿದ್ದವರು. ಅವರ ವಿರುದ್ಧ ರಾಜ್ಯ ವಿಜಿಲೆನ್ಸ್ (ಡಿವಿಎಸಿ) ತನಿಖೆಯ ಆಧಾರದ ಮೇಲೆ ಅಕ್ರಮ ಆಸ್ತಿಗಳನ್ನು ಹೊಂದಿರುವ ಆರೋಪದ ಮೇಲೆ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
4
+ ರಿಯಲ್ ಎಸ್ಟೇಟ್ ಗ್ರೂಪ್ ಜಿಸ್ಕ್ವೇರ್ಗೆ ಸೇರಿದ ಆವರಣಗಳು ಮತ್ತು ಚೆನ್ನೈ ನಗರ ಮತ್ತು ಸುತ್ತಮುತ್ತಲಿನ ಸಂಬಂಧಿತ ಘಟಕಗಳನ್ನು ಕೂಡ ಮನಿ ಲಾಂಡರಿಂಗ್ ತಡೆ ಕಾಯ್ದೆಯ (ಪಿಎಂಎಲ್ಎ) ನಿಬಂಧನೆಗಳ ಅಡಿಯಲ್ಲಿ ತನಿಖೆಯ ಭಾಗವಾಗಿ ಶೋಧಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
eesanje/url_47_142_7.txt ADDED
@@ -0,0 +1,7 @@
 
 
 
 
 
 
 
 
1
+ ತಪ್ಪು ಜಾಹೀರಾತಿಗಾಗಿ ಕ್ಷಮೆ ಯಾಚಿಸಿದ ಪತಂಜಲಿ ಸಂಸ್ಥೆ
2
+ ನವದೆಹಲಿ,ಮಾ.21-ಪತಂಜಲಿ ಆಯುರ್ವೇದದ ವ್ಯವಸ್ಥಾಪಕ ನಿರ್ದೇಶಕ ಮತ್ತು ಯೋಗ ಗುರು ರಾಮ್ದೇವ್ ಅವರ ಸಹಾಯಕ ಆಚಾರ್ಯ ಬಾಲಕೃಷ್ಣ ಅವರು ತಮ್ಮ ಉತ್ಪನ್ನಗಳು ಮತ್ತು ಅವುಗಳ ಔಷಧೀಯ ಪರಿಣಾಮಕಾರಿತ್ವದ ಬಗ್ಗೆ ಕಂಪನಿಯ ತಪ್ಪುದಾರಿಗೆಳೆಯುವ ಹಕ್ಕುಗಳಿಗಾಗಿ ಸುಪ್ರೀಂ ಕೋರ್ಟ್ನಲ್ಲಿ ಕ್ಷಮೆಯಾಚಿಸಿದ್ದಾರೆ.
3
+ ದಾರಿತಪ್ಪಿಸುವ ಜಾಹೀರಾತುಗಳ ಮೇಲಿನ ಅವಹೇಳನ ನೋಟಿಸ್ಗೆ ಪ್ರತಿಕ್ರಿಯಿಸದಿದ್ದಕ್ಕಾಗಿ ಪತಂಜಲಿ ಆಯುರ್ವೇದ ಸಂಸ್ಥೆಯನ್ನು ನ್ಯಾಯಾಲಯವು ತೀವ್ರವಾಗಿ ಖಂಡಿಸಿದ ಒಂದು ದಿನದ ನಂತರ ನಿನ್ನೆ ಅಫಿಡವಿಟ್ ಸಲ್ಲಿಸಲಾಗಿದೆ. ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ಏಪ್ರಿಲ್ 2 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಬಾಲಕೃಷ್ಣ ಮತ್ತು ರಾಮ್ದೇವ್ಗೆ ಸೂಚಿಸಿತ್ತು.
4
+ ನ್ಯಾಯಾಲಯಕ್ಕೆ ಸಲ್ಲಿಸಿದ ಅಫಿಡವಿಟ್ನಲ್ಲಿ ಬಾಲಕೃಷ್ಣ ಅವರು ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಗೌರವವನ್ನು ಹೊಂದಿದ್ದೇವೆ ಎಂದು ಹೇಳಿದ್ದಾರೆ. ಅನರ್ಹ ಕ್ಷಮೆ ವಿಸ್ತರಿಸಿದ ಅವರು, ಕಂಪನಿಯು ಭವಿಷ್ಯದಲ್ಲಿ ಅಂತಹ ಜಾಹೀರಾತುಗಳನ್ನು ನೀಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.
5
+ ಪತಂಜಲಿಯ ಉತ್ಪನ್ನಗಳನ್ನು ಸೇವಿಸುವ ಮೂಲಕ ಆರೋಗ್ಯಕರ ಜೀವನ ನಡೆಸಲು ಈ ದೇಶದ ನಾಗರಿಕರನ್ನು ಉತ್ತೇಜಿಸುವುದು ಕಂಪನಿಯ ಉದ್ದೇಶವಾಗಿದೆ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು. ಮ್ಯಾಜಿಕ್ ಕ್ಯೂರ್ ಕ್ಲೈಮ್ಗಳ ಜಾಹೀರಾತುಗಳನ್ನು ನಿಷೇಧಿಸುವ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ (ಆಕ್ಷೇಪಾರ್ಹ ಜಾಹೀರಾತುಗಳು) ಕಾಯ್ದೆಯ ನಿಬಂಧನೆಗಳು ಪ್ರಾಚೀನ ಮತ್ತು ಆಯುರ್ವೇದ ಸಂಶೋಧನೆಯಲ್ಲಿ ವೈಜ್ಞಾನಿಕ ಪುರಾವೆಗಳ ಕೊರತೆಯಿರುವಾಗ ಶಾಸನದಲ್ಲಿ ಕೊನೆಯ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು.
6
+ ಪ್ರತಿಯೊಬ್ಬ ನಾಗರಿಕನ ಉತ್ತಮ ಮತ್ತು ಆರೋಗ್ಯಕರ ಜೀವನಕ್ಕಾಗಿ ಮತ್ತು ಜೀವನಶೈಲಿ ಸಂಬಂಧಿತ ವೈದ್ಯಕೀಯ ತೊಡಕುಗಳಿಗೆ ಸಮಗ್ರ, ಸಾಕ್ಷ್ಯ ಆಧಾರಿತ ಪರಿಹಾರಗಳನ್ನು ಒದಗಿಸುವ ಮೂಲಕ ದೇಶಗಳ ಆರೋಗ್ಯ ಮೂಲಸೌಕರ್ಯಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುವುದು ಪ್ರತಿವಾದಿಯ ಏಕೈಕ ಅನ್ವೇಷಣೆಯಾಗಿದೆ ಎಂದು ವಿನಮ್ರವಾಗಿ ಸಲ್ಲಿಸಲಾಗಿದೆ.
7
+ ರಾಮ್ದೇವ್ ಮತ್ತು ಬಾಲಕೃಷ್ಣರಿಂದ 2006 ರಲ್ಲಿ ಸ್ಥಾಪಿತವಾದ ಪತಂಜಲಿ ಆಯುರ್ವೇದ ಬಹುರಾಷ್ಟ್ರೀಯ ಸಂಘಟಿತವಾಗಿದೆ, ಇದು ಆಯುರ್ವೇದ ಔಷಧದಿಂದ ಸೌಂದರ್ಯವರ್ಧಕಗಳವರೆಗೆ ಆಹಾರ ಪದಾರ್ಥಗಳವರೆಗೆ ಉತ್ಪನ್ನಗಳ ದೀರ್ಘ ಪಟ್ಟಿಯನ್ನು ತಯಾರಿಸುತ್ತದೆ. ತಮ್ಮ ಉತ್ಪನ್ನಗಳ ಪರಿಣಾಮಕಾರಿತ್ವದ ಬಗ್ಗೆ ತಪ್ಪುದಾರಿಗೆಳೆಯುವ ಜಾಹೀರಾತುಗಳಿಂದ ಸಂಘಟಿತ ಸಂಸ್ಥೆಯು ತೊಂದರೆಗೆ ಸಿಲುಕಿದೆ.
eesanje/url_47_142_8.txt ADDED
@@ -0,0 +1,3 @@
 
 
 
 
1
+ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡು ಪತ್ತೆ
2
+ ಶ್ರೀನಗರ, ಮಾ.20-ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ ಸಿಬ್ಬಂದಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಪತ್ತೆ ಹಚ್ಚಿದ್ದಾರೆ. ಬಿಎಸ್‍ಎಫ್, ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಈ ಭಾರಿ ಪ್ರಮಾಣದ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಗಡಿ ಭಧ್ರತಾ ಪಡೆ ಅಧಿಕಾರಯೊಬ್ಬರು ತಿಳಿಸಿದ್ದಾರೆ.
3
+ ಗುಪ್ತಚರ ಮಾಹಿತಿ ಮೇಲೆ ಇಂದು ರಂಗವಾರ್, ಕುಪ್ವಾರ ಪ್ರದೇಶದಲ್ಲಿ ನಡೆಸಿದ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಅಡಗಿಸಿಟ್ಟಿದ್ದ 9 ಎಂಎಂ ಪಿಸ್ತೂಲ್ 01 ಮ್ಯಾಗ್ 29 ಆರ್ಡಿಎಸ್, 01 ಮ್ಯಾಗ್ ಎಕೆ 47/400 ರ್‍ಡಿಎಕ್ಸ್ , 02 ಕಾಮನ್ ಸೆಟ್‍ಗಳು, ಹ್ಯಾಂಡ್ ಗ್ರೆನೇಡ್ ಸೇರಿದಂತೆ ಹಲವು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
eesanje/url_47_142_9.txt ADDED
@@ -0,0 +1,4 @@
 
 
 
 
 
1
+ ತಿರುಪತಿಯಲ್ಲಿ ತಿಮ್ಮಪ್ಪನಿಗೆ ಅದ್ದೂರಿ ತೆಪ್ಪೋತ್ಸವ
2
+ ತಿರುಪತಿ , ಮಾ.21 (ಪಿಟಿಐ) :ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಾರ್ಷಿಕ ತೆಪ್ಪೋತ್ಸವ ಅದ್ದೂರಿಯಾಗಿ ಆರಂಭವಾಗಿದೆ. ಹಬ್ಬದ ಅಂಗವಾಗಿ ಮೊದಲ ದಿನ ಸೀತಾ ದೇವಿ ಮತ್ತು ಲಕ್ಷ್ಮಣನೊಂದಿಗೆ ಶ್ರೀರಾಮನನ್ನು ಪೂಜಿಸಲಾಗುತ್ತದೆ ಮತ್ತು ಸ್ವಾಮಿ ಪುಷ್ಕರಿಣಿ ನೀರಿನಲ್ಲಿ ಅಲಂಕೃತವಾದ ತೇರಿನ ಮೇಲೆ ಸ್ವರ್ಗೀಯ ಸವಾರಿ ನಡೆಸಲಾಗುತ್ತದೆ ಎಂದು ಟಿಟಿಡಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
3
+ ನಿನ್ನೆ ತಿರುಮಲದಲ್ಲಿ ರಾಮಚಂದ್ರುಡಿತಾಡು, ರಘುವೀರುಡು ಮತ್ತು ಇತರ ಶ್ರೀರಾಮ ಸಂಕೀರ್ತನೆಗಳನ್ನು (ಸ್ತೋತ್ರಗಳು) ಪ್ರಸ್ತುತಪಡಿಸುವುದರ ಜತೆಗೆ ವೇದಗಳು ಮತ್ತು ವೇದ ಸ್ತೋತ್ರಗಳನ್ನು ಪಠಿಸಲಾಯಿತು. ತೆಪ್ಪೋತ್ಸವದ ಎರಡನೇ ದಿನದಂದು ಇಂದು ಶ್ರೀ ಕೃಷ್ಣ ಮತ್ತು ರುಕ್ಮಿಣಿಯನ್ನು ತೇಲಲ್ಲಿ ಕರೆದೊಯ್ಯಲಾಗುತ್ತದೆ.
4
+ ಉಳಿದ ಮೂರು ದಿನಗಳಲ್ಲಿ ಶ್ರೀ ಮಲಯಪ್ಪ ಸ್ವಾಮಿಯನ್ನು ಶ್ರೀದೇವಿ ಮತ್ತು ಭೂದೇವಿಯೊಂದಿಗೆ ದೇವಾಲಯದ ತೊಟ್ಟಿಯಲ್ಲಿ ವಿಹಾರಕ್ಕೆ ಕರೆದೊಯ್ಯಲಾಗುತ್ತದೆ. ಏತನ್ಮಧ್ಯೆ, ತೆಪ್ಪೋತ್ಸವದ ನಿಮಿತ್ತ ಟಿಟಿಡಿ ಸಹಸ್ರ ದೀಪಾಲಂಕಾರ ಸೇವೆಯನ್ನು ರದ್ದುಗೊಳಿಸಿದೆ.
eesanje/url_47_143_1.txt ADDED
@@ -0,0 +1,9 @@
 
 
 
 
 
 
 
 
 
 
1
+ 2004ರ ಇಂಡಿಯಾ ಶೈನಿಂಗ್ ಘೋಷ ವಾಖ್ಯದಂತೆ ಮೋದಿ ಭರವಸೆಗಳು ಹುಸಿಯಾಗಲಿವೆ : ಖರ್ಗೆ
2
+ ದೆಹಲಿ, ಮಾ.19-ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಭರವಸೆಗಳು 2004ರ ಇಂಡಿಯಾ ಶೈನಿಂಗ್ ಎಂಬ ಘೋಷ ವಾಖ್ಯದಂತೆ ಹುಸಿಯಾಗಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದ್ದಾರೆ. ದೆಹಲಿಯಲ್ಲಿಂದು ನಡೆದ ಕಾಂಗ್ರೆಸ್ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆರಂಭದಲ್ಲಿ ಮಾತ ನಾಡಿದ ಅವರು, ಪ್ರಸ್ತುತ ಸರ್ಕಾರ ಪ್ರಸ್ತುತಪಡಿಸುತ್ತಿರುವ ಖಾತರಿಗಳು 2004 ರ ಇಂಡಿಯಾ ಶೈನಿಂಗ್ ಸ್ಲೋಗನ್ನಂತೆ ಪೊಳ್ಳಾಗಿದೆ. ನಮ್ಮ ಪ್ರಣಾಳಿಕೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ಪ್ರಚಾರವನ್ನು ಪಡೆಯು ತ್ತಿದೆ ಮತ್ತು ನಮ್ಮ ಬದ್ಧತೆಯನ್ನು ದೇಶಾದ್ಯಂತದ ಪ್ರತಿ ಮನೆಗಳಿಗೆ ಮತ್ತು ದೊಡ್ಡ ಜನರಿಗೆ ತಲುಪಿಸ ಲಾಗುತ್ತಿದೆ ಎಂದು ಹೇಳಿದರು.
3
+ ಕಾಂಗ್ರೆಸ್ ತನ್ನ ಪ್ರಣಾಳಿಕೆ ತಯಾರಿಕೆಯನ್ನು ಅಕಾಡೆಮಿಕ್ ಚರ್ಚೆಗೆ ಸೀಮಿತಗೊಳಿಸದೆ, ಸಾರ್ವ ಜನಿಕರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ರೂಪಿಸಿರು ವುದು ಹೆಗ್ಗಳಿಕೆಯಾಗಿದೆ. ದೇಶದ ವಿವಿಧ ಭಾಗಗಳಲ್ಲಿ ವ್ಯಾಪಕವಾದ ಸಮಾಲೋಚನೆಗಳನ್ನು ನಡೆಸ ಲಾಗಿದೆ. ಅಂತಿಮವಾಗಿ ಮಾ.6 ರಂದು ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಕರಡು ಪ್ರಣಾಳಿಕೆಯನ್ನು ಸಲ್ಲಿಸಿದ್ದಾರೆ ಎಂದು ವಿವರಿಸಿದರು.
4
+ ಅವಾಜ್ ಭಾರತ್ ಕಿ ಅಭಿಯಾನದ ಮೂಲಕ ಆನ್ಲೈನ್ ವೆಬ್ಸೈಟ್ನ ಮೂಲಕವೂ ಸಲಹೆಗಳು ಮತ್ತು ಕಾಮೆಂಟ್ಗಳನ್ನು ಪಡೆಯಲಾಗಿದೆ. ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಲಾಗಿದೆ, ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಪ್ರಣಾಳಿಕೆಯಲ್ಲಿ ಭರವಸೆಗಳನ್ನು ನೀಡುವ ಮೊದಲು, ಈ ಭರವಸೆಗಳು ಕಾರ್ಯರೂಪಕ್ಕೆ ಬರುವುದನ್ನು ಖಚಿತಪಡಿಸಿಕೊಳ್ಳಲು ಆಳವಾದ ಚರ್ಚೆ ಮಾಡಲಾಗಿದೆ ಎಂದು ಹೇಳಿದರು.
5
+ ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ಪಕ್ಷದ ಮೊದಲ ಪ್ರಣಾಳಿಕೆಯನ್ನು ಪಂಡಿತ್ ಜವಾಹರಲಾಲ್ ನೆಹರು ಅವರ ನೇತೃತ್ವದಲ್ಲಿ ಬಿಡುಗಡೆ ಮಾಡಲಾಯಿತು. ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆಗಳನ್ನು ಈಡೇರಿಸುವ ಬದ್ಧತೆ ಹೊಂದಿದೆ. ಅದೇ ಕಾರಣದಿಂದ 1926 ರಿಂದ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ನಂಬಿಕೆ ಮತ್ತು ಬದ್ಧತೆಯ ಉದಾಹರಣೆಯಾಗಿದೆ ಎಂದು ಹೇಳಿದರು.
6
+ ಮಾ.16 ರಂದು ಮುಂಬೈನಲ್ಲಿ ಮುಕ್ತಾಯಗೊಂಡ 63 ದಿನಗಳ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡ ಖರ್ಗೆ ಅವರು, ಮುಂಬೈ ನಮಗೆ ಪ್ರಮುಖ ಸ್ಥಳವಾಗಿದೆ. ಕಾಂಗ್ರೆಸ್ ಪಕ್ಷ ಸ್ಥಾಪನೆಗೊಂಡಿದ್ದೆ ಅಲ್ಲಿ ಎಂದರು.ಭಾರತ್ ಜೋಡೋ ಮತ್ತು ಭಾರತ್ ನ್ಯಾಯ ಯಾತ್ರೆಗಳು ಕೇವಲ ರಾಜಕೀಯಕ್ಕೆ ಸೀಮಿತವಾಗಿರಲಿಲ್ಲ. ಐತಿಹಾಸಿಕವಾದ ದೊಡ್ಡ ಜನಸಂಪರ್ಕ ಆಂದೋಲನಗಳಾಗಿವೆ. ಜನರ ಸಮಸ್ಯೆಯನ್ನು ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿವೆ. ಯಾತ್ರೆಯ ಸಂದರ್ಭದಲ್ಲಿ, ನಾನು ಮತ್ತು ರಾಹುಲ್ ಇಬ್ಬರೂ ಹಲವಾರು ಸಾರ್ವಜನಿಕ ರ್ಯಾಲಿಗಳನ್ನುದ್ದೇಶಿಸಿ ಮಾತನ���ಡಿದ್ದೇವೆ ಎಂದರು.
7
+ ಯಾತ್ರೆಯ ಐದು ಸ್ತಂಭಗಳಾದ ಕಿಸಾನ್ ನ್ಯಾಯ್, ಯುವ ನ್ಯಾಯ್, ನಾರಿ ನ್ಯಾಯ್, ಶ್ರಮಿಕ್ ನ್ಯಾಯ್ ಮತ್ತು ಹಿಸ್ಸೆದಾರಿ ನ್ಯಾಯ್ ಅಡಿಯಲ್ಲಿ ನಮ್ಮ ಖಾತರಿಗಳು ಮತ್ತು ಬದ್ಧತೆಗಳ ಬಗ್ಗೆ ಜನರಿಗೆ ವಿವರಿಸಿದ್ದೇವೆ. ಕಳೆದ ಎರಡು ತಿಂಗಳುಗಳಲ್ಲಿ, ಒಟ್ಟು 25 ಗ್ಯಾರಂಟಿಗಳು – 5 ನ್ಯಾಯ್ಗಳಿಗೆ ತಲಾ 5 ಗ್ಯಾರಂಟಿಗಳನ್ನು ಘೋಷಿಸ ಲಾಗಿದೆ.
8
+ ಈ ಗ್ಯಾರಂಟಿಗಳಿಗೆ ಸಂಬಂಧಿಸಿದಂತೆ ಭಾರತ್ ಜೋಡೋ ನ್ಯಾಯ್ ಯಾತ್ರೆಯಲ್ಲಿ ಹೆಚ್ಚು ಚರ್ಚೆಗಳಾಗಿವೆ. ಮುಂದಿನ 5 ವರ್ಷಗಳಲ್ಲಿ ನಮ್ಮ ಆದ್ಯತೆಗಳು, ನೀತಿಗಳು ಮತ್ತು ಕಾರ್ಯಕ್ರಮಗಳು ಏನಾಗಲಿವೆ ಎಂಬುದನ್ನು ಚುನಾವಣೆ ಕಾಲಘಟ್ಟದಲ್ಲಿ ಜನರಿಗೆ ನಾವು ವಿವರಿಸಬೇಕಿದೆ ಎಂದರು.
9
+ ಪ್ರಣಾಳಿಕೆಯ ಕರಡು ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಆ ನಂತರ ಸಭೆಯಲ್ಲಿ ನಡೆಯುವ ಚರ್ಚೆಯ ಅಂಶಗಳನ್ನು ಆಧರಿಸಿ ಪ್ರಣಾಳಿಕೆಯನ್ನು ಅಂತಿಮಗೊಳಿಸ ಲಾಗುತ್ತದೆ. ದೇಶದಲ್ಲಿ ಬದಲಾವಣೆಯ ಕಾಲ ಬಂದಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂ ಜಿ, ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಪಿ.ಚಿದಂಬರಂ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.
eesanje/url_47_143_10.txt ADDED
@@ -0,0 +1,5 @@
 
 
 
 
 
 
1
+ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಪೊಲೀಸರ ಎನ್‍ಕೌಂಟರ್, ನಾಲ್ವರು ನಕ್ಸಲರ ಹತ್ಯೆ
2
+ ಗಡ್ಚಿರೋಲಿ, ಮಾ.19 –ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ಪೊಲೀಸರು ನಡೆಸಿದ ಎನ್‍ಕೌಂಟರ್ ನಲ್ಲಿ ನಾಲ್ವರು ನಕ್ಸಲೀಯರು ಹತರಾಗಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯ ನಡುವೆ ವಿಧ್ವಂಸಕ ಚಟುವಟಿಕೆಗಳನ್ನು ನಡೆಸುವ ಉದ್ದೇಶದಿಂದ ಕೆಲವು ನಕ್ಸಲೀಯರು ನೆರೆಯ ತೆಲಂಗಾಣದಿಂದ ಪ್ರಾಣಹಿತ ನದಿ ದಾಟಿ ಗಡ್ಚಿರೋಲಿಗೆ ಪ್ರವೇಶಿಸಿದ್ದಾರೆ ಎಂಬ ಮಾಹಿತಿ ಅನ್ವಯ ಪೊಲೀಸರಿಗೆ ಸಿಕ್ಕ ಮಾಹಿತಿ ಅನ್ವಯಕಾರ್ಯಾಚರಣೆ ನಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ನೀಲೋತ್ಪಾಲ್ ತಿಳಿಸಿದ್ದಾರೆ.
3
+ ಮೃತ ನಕ್ಸಲರ ಪತ್ತೆಗೆ ಬಹುಮಾನವನ್ನು ಘೋಷಿಸಲಾಗಿತ್ತು ಗಡ್ಚಿರೋಲಿ ಪೊಲೀಸರ ವಿಶೇಷ ತಂಡಗಳು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಕ್ವಿಕ್ ಆಕ್ಷನ್ ತಂಡವನ್ನು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು.
4
+ ಬೆಳಗ್ಗೆ ರೆಪನ್‍ಪಲ್ಲಿ ಸಮೀಪದ ಕೋಲಮಾರ್ಕ ಪರ್ವತಗಳಲ್ಲಿ ಶೋಧ ನಡೆಸುತ್ತಿದ್ದಾಗ ನಕ್ಸಲೀಯರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
5
+ ಗುಂಡಿನ ದಾಳಿ ನಿಂತ ನಂತರ, ಆ ಪ್ರದೇಶದಲ್ಲಿ ಶೋಧ ನಡೆಸಲಾಯಿತು ನಾಲ್ವರು ನಾಲ್ವರು ಪುರುಷ ನಕ್ಸಲೀಯರ ಮೃತದೇಹಗಳು ಪತ್ತೆಯಾಗಿವೆ, ಅವರ ತಲೆಯ ಮೇಲೆ 36 ಲಕ್ಷ ರೂಪಾಯಿಗಳ ಸಾಮೂಹಿಕ ನಗದು ಬಹುಮಾನವನ್ನು ಹೊತ್ತಿದ್ದಾರೆ ಎಂದು ಅವರು ಹೇಳಿದರು.
eesanje/url_47_143_11.txt ADDED
@@ -0,0 +1,4 @@
 
 
 
 
 
1
+ ಸ್ಪರ್ಧೆಯಿಂದ ಹಿಂದೆ ಸರಿದ ಕಾಂಗ್ರೆಸ್ ಅಭ್ಯರ್ಥಿ
2
+ ಅಹಮದಾಬಾದ್, ಮಾ 19-ಗುಜರಾತ್‍ನ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರೋಹನ್ ಗುಪ್ತಾ ಅವರು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿರುವುದಾಗಿ ಹೇಳಿದ್ದಾರೆ. ಗುಪ್ತಾ ಅವರು ಕಾಂಗ್ರೆಸ್‍ನ ರಾಷ್ಟ್ರೀಯ ವಕ್ತಾರರಾಗಿದ್ದು, ಮಾರ್ಚ್ 12 ರಂದು ಪಕ್ಷವು ಘೋಷಿಸಿದ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರಿತ್ತುಆದರೆ ಕೌಟುಂಬಿಕ ಕಾರಣ ನಾನು ಹಿಂದೆ ಸರಿಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.
3
+ ನನ್ನ ತಂದೆಯ ಸ್ಥಿತಿ ಗಂಭೀರವಾದ ಕಾರಣ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಹಾಗಾಗಿ ನಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಹಮದಾಬಾದ್ ಪೂರ್ವ ಕ್ಷೇತ್ರದಿಂದ ಸ್ರ್ಪಧಿಸುವುದಿಲ್ಲ ಹೊಸ ಅಭ್ಯರ್ಥಿಗೆ ನಾನು ಸಂಪೂರ್ಣ ಬೆಂಬಲವನ್ನು ನೀಡುತ್ತೇನೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
4
+ ಅವರು ಗುಜರಾತ್ ಕಾಂಗ್ರೆಸ್ ಅಧ್ಯಕ್ಷ ಶಕ್ತಿಸಿನ್ಹ್ ಗೋಹಿಲ್ ಅವರಿಗೆ ತಮ್ಮ ಕೈಬರಹದ ಪತ್ರ ಮೂಲಕ ತಿಳಿಸಿರುವುದಾಗಿ ಪೋಸ್ಟ್ ಮಾಡಿದ್ದಾರೆ, ಪ್ರಸ್ತು ಗುಜರಾತ್‍ನ ಎಲ್ಲಾ 26 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.ಕಾಂಗ್ರೆಸ್ ಇನ್ನೂ 19 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿಲ್ಲ.ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದಲ್ಲಿ ಇದುವರೆಗೆ 22 ಅಭ್ಯರ್ಥಿಗಳನ್ನು ಘೋಷಿಸಿದೆ.
eesanje/url_47_143_12.txt ADDED
@@ -0,0 +1,6 @@
 
 
 
 
 
 
 
1
+ ತೆಲಂಗಾಣ ರಾಜ್ಯಪಾಲೆ ತಮಿಳುಸಾಯಿ ಸೌಂದರರಾಜನ್ ರಾಜೀನಾಮೆ
2
+ ಹೈದರಾಬಾದ್,ಮಾ.18- ತೆಲಂಗಾಣದ ರಾಜ್ಯಪಾಲರಾಗಿದ್ದ ತಮಿಳುಸಾಯಿ ಸೌಂದರರಾಜನ್ ಅವರು ತಮ್ಮ ಹುದ್ದೆಗೆ ದಿಢೀರನೆ ರಾಜೀನಾಮೆ ನೀಡಿದ್ದಾರೆ. ನವದೆಹಲಿಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಮಾಡಿದ ಅವರು, ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.
3
+ ವೈಯಕ್ತಿಕ ಕಾರಣಗಳಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದಯಮಾಡಿ ರಾಜೀನಾಮೆ ಪತ್ರವನ್ನು ಅಂಗೀಕರಿಸಬೇಕೆಂದು ಅವರು ಮನವಿಯಲ್ಲಿ ಕೋರಿಕೊಂಡಿದ್ದಾರೆ. ಮೂಲಗಳ ಪ್ರಕಾರ ಅವರು ಲೋಕಸಭೆ ಚುನಾವಣೆಗೆ ತಮಿಳುನಾಡಿನ ಯಾವುದಾ ದರೊಂದು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಂಭವವಿದೆ.ಈ ಹಿಂದೆ ತಮಿಳುನಾಡಿನ ಬಿಜೆಪಿ ಘಟಕದ ಅಧ್ಯಕ್ಷರಾಗಿ ಕೆಲಸ ಮಾಡಿದ ಅನುಭವ ಅವರಿಗಿದೆ. ರಾಜ್ಯಪಾಲರ ಹುದ್ದೆಗೆ ರಾಜೀನಾಮೆ ನೀಡಿ ಚುನಾವಣೆಗೆ ಸಜ್ಜಾಗಬೇಕೆಂದು ಪಕ್ಷದ ವರಿಷ್ಠರೇ ಸೂಚನೆ ನೀಡಿದ್ದರು ಎಂದು ತಿಳಿದುಬದಿದೆ.
4
+ ಪ್ರಧಾನಿ ಮೋದಿ ಭಾಷಣವನ್ನು ಕನ್ನಡದಲ್ಲೇ ಕೇಳಿಸಲು ಮೊರೆ ಹೋದ ಬಿಜೆಪಿ
5
+ ಪುದುಚೇರಿಯಲ್ಲಿ ಎನ್‍ಆರ್ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟದ ಪರವಾಗಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸ್ರ್ಪಧಿಸಲಿದ್ದಾರೆ. ಹಾಗೆಯೇ ತಮಿಳುನಾಡಿನಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ 39 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೆಲವು ದಿನಗಳ ಹಿಂದೆ ತಮಿಳುಸಾಯಿ ಸೌಂದರರಾಜನ್ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕತ್ವದಲ್ಲಿ ಸ್ರ್ಪಧಿಸುವ ಇಚ್ಛೆ ವ್ಯಕ್ತಪಡಿಸಿದ್ದರು.
6
+ ಲೋಕಸಭೆ ಚುನಾವಣೆಗೆ ಬಿಜೆಪಿಯ ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ ಸೌಂದರರಾಜನ್ ಅವರ ಹೆಸರನ್ನು ಘೋಷಿಸುವ ಸಾಧ್ಯತೆಯಿದ್ದು,ಅವರು ಉತ್ತರ ತಮಿಳುನಾಡು, ಪುದುಚೇರಿ ಅಥವಾ ಚೆನ್ನೈ ದಕ್ಷಿಣ ಕ್ಷೇತ್ರದಿಂದ ಚುನಾವಣೆಗೆ ಸ್ರ್ಪಧಿಸಬಹುದು ಎಂದು ಮೂಲಗಳು ತಿಳಿಸಿವೆ.
eesanje/url_47_143_2.txt ADDED
@@ -0,0 +1,7 @@
 
 
 
 
 
 
 
 
1
+ ಬಿಜೆಪಿಯಿಂದ ಚಂದಾ ಕಾ ಧಂಡಾ : ಶತ್ರುಘ್ನ ಸಿನ್ಹಾ
2
+ ಪಾಟ್ನಾ,ಮಾ.19-ಚುನಾವಣಾ ಬಾಂಡ್ ಯೋಜನೆ ಮೂಲಕ ವಿರೋಧ ಪಕ್ಷಗಳು ದೇಣಿಗೆ ಪಡೆದಿವೆ, ಆದರೆ ಬಿಜೆಪಿಯು ಸುಲಿಗೆ ಮತ್ತು ಬ್ಲ್ಯಾಕ್ಮೇಲ್ಗೆ ವ್ಯವಸ್ಥೆಯನ್ನು ಬಳಸಿಕೊಂಡಿದೆ ಎಂದು ನಟ ಕಮ್ ರಾಜಕಾರಣಿ ಶತ್ರುಘ್ನ ಸಿನ್ಹಾ ಆರೋಪಿಸಿದ್ದಾರೆ.
3
+ ಪಶ್ಚಿಮ ಬಂಗಾಳದ ಅಸನ್ಸೋಲ್ನಲ್ಲಿ ಲೋಕಸಭೆ ಕದನಕ್ಕೆ ಸಜ್ಜಾಗುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದ ಸಿನ್ಹಾ ಅವರು, ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.ಈಗ ರದ್ದಾಗಿರುವ ವ್ಯವಸ್ಥೆಯ ಮೂಲಕ ದೇಣಿಗೆ ಪಡೆದ ಪಕ್ಷಗಳ ಪಟ್ಟಿಯಲ್ಲಿ ತೃಣಮೂಲ ಕಾಂಗ್ರೆಸ್ ಎರಡನೇ ಸ್ಥಾನದಲ್ಲಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷ ಅಥವಾ ಯಾವುದೇ ವಿರೋಧ ಪಕ್ಷವು ಸುಲಿಗೆ ಅಥವಾ ಬ್ಲ್ಯಾಕ್ಮೇಲ್ಗೆ ಆಶ್ರಯಿಸಿದೆಯೇ? ಅವರು ಒತ್ತಡ ಹೇರಿದ್ದಾರೆಯೇ? ನೀವು ದೇಣಿಗೆ ನೀಡದಿದ್ದರೆ, ಇಡಿ, ಸಿಬಿಐ ಮತ್ತು ಆದಾಯ ತೆರಿಗೆ ನಿಮ್ಮ ಹಿಂದೆ ಹೋಗುತ್ತದೆಯೇ? ಎಂದು ಬೆದರಿಸಿಲ್ಲ ಎಂದಿದ್ದಾರೆ. ಚುನಾವಣಾ ಬಾಂಡ್ಗಳ ಮೂಲಕ ದೇಣಿಗೆ ನೀಡಿದವರು ಸಾವಿರಾರು ಕೋಟಿ ಮೌಲ್ಯದ ಒಪ್ಪಂದಗಳನ್ನು ಪಡೆದಿದ್ದಾರೆಯೇ? ಎಂದು ಪ್ರಶ್ನಿಸಿದ್ದಾರೆ.
4
+ ರಾಜಕೀಯ ನಿಧಿಗಾಗಿ ಚುನಾವಣಾ ಬಾಂಡ್ಗಳ ಯೋಜನೆ ಪರಿಚಯಿಸಿದ್ದು ಬಿಜೆಪಿ ಎಂದು ಸಿನ್ಹಾ ಹೇಳಿದರು. ನೀವು ದಾರಿಯನ್ನು ತೆರವುಗೊಳಿಸಿದ್ದೀರಿ, ಇತರರು ಹಾರಿದರೆ ಏನು ಸಮಸ್ಯೆ? ಅವರು ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡಿಲ್ಲ ಅಥವಾ ಸಂಚು ರೂಪಿಸಿಲ್ಲ ಅಥವಾ ವಂಚನೆ ಮಾಡಿಲ್ಲ, ಅವರು ದೌರ್ಜನ್ಯ ಎಸಗಿಲ್ಲ ಅಥವಾ ಜನರನ್ನು ಬಂಧಿಸುವ ಬೆದರಿಕೆ ಹಾಕಿಲ್ಲ ಎಂದು ಅವರು ಹೇಳಿದರು.
5
+ ಆಡಳಿತಾರೂಢ ಬಿಜೆಪಿಯು ಚಂದಾ ಕಾ ಧಂಡಾ (ದೇಣಿಗೆಯ ವ್ಯಾಪಾರ) ಮಾಡಿದೆ ಎಂದು ಅವರು ಹೇಳಿದರು. ನೀವು ಒಪ್ಪಂದಗಳನ್ನು ನೀಡಿದ್ದೀರಿ (ದೇಣಿಗೆಯ ಆಧಾರದ ಮೇಲೆ), ಬಂಧನಗಳನ್ನು ಮಾಡಿದ್ದೀರಿ, ಜನರನ್ನು ಬೆದರಿಸಿದ್ದೀರಿ. ನಿಮ್ಮ ನಮ್ಮ ನಡುವೆ ವ್ಯತ್ಯಾಸದ ಸಮುದ್ರವಿದೆ ಎಂದು ಅವರು ಹೇಳಿದರು.
6
+ ಅದು ತೃಣಮೂಲ ಕಾಂಗ್ರೆಸ್ ಅಥವಾ ಸಮಾಜವಾದಿ ಪಕ್ಷ ಅಥವಾ ಕಾಂಗ್ರೆಸ್ ಆಗಿರಲಿ, ಅವರು ವ್ಯವಸ್ಥೆಯ ಅಡಿಯಲ್ಲಿ ಹಣವನ್ನು ಪಡೆದರು, ಆದರೆ ಅವರು ಅದನ್ನು ದುರುಪಯೋಗಪಡಿಸಿ ಕೊಳ್ಳಲಿಲ್ಲ, ಅವರು ಅದನ್ನು ಭಯವಾಗಿ ಪರಿವರ್ತಿಸಲು ಪ್ರಯತ್ನಿಸಲಿಲ್ಲ. ನೀವು ನಮ್ಮ ಮತ್ತು ಆಡಳಿತ ಪಕ್ಷದ ನಡುವೆ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
7
+ ಭಾರತದ ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಅಂಕಿಅಂಶಗಳ ಪ್ರಕಾರ, 2018 ರಲ್ಲಿ ಯೋಜನೆಯನ್ನು ಜಾರಿಗೊಳಿಸಿದಾಗಿನಿಂದ ಬಿಜೆಪಿಯು ಈ ಬಾಂಡ್ಗಳ ಮೂಲಕ ಗರಿಷ್ಠ ಹಣವನ್ನು (ರೂ 6,986.5 ಕೋಟಿ) ಸ್ವೀಕರಿಸಿದೆ. ತೃಣಮೂಲ ಕಾಂಗ್ರೆಸ್ ದೂರದ ಎರಡನೇ (ರೂ. 1,397 ಕೋಟಿ) ಮತ್ತು ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ ( ರೂ 1,334 ಕೋಟಿ).
eesanje/url_47_143_3.txt ADDED
@@ -0,0 +1,5 @@
 
 
 
 
 
 
1
+ ತಮಿಳುನಾಡಿನಲ್ಲಿ ಬಿಜೆಪಿ-ಪಿಎಂಕೆ ಮೈತ್ರಿ
2
+ ವಿಲ್ಲುಪುರಂ ,ಮಾ. 19 (ಪಿಟಿಐ) :ಬರುವ ಏಪ್ರಿಲ್ 19 ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ತಮಿಳುನಾಡಿನ ಡಾ ಎಸ್ ರಾಮದಾಸ್ ನೇತೃತ್ವದ ಪಟ್ಟಾಳಿ ಮಕ್ಕಳ್ ಕಚ್ಚಿ (ಪಿಎಂಕೆ) ಜೊತೆ ಸೀಟು ಹಂಚಿಕೆ ಒಪ್ಪಂದ ಮಾಡಿಕೊಳ್ಳಲು ಬಿಜೆಪಿ ತೀರ್ಮಾನಿಸಿದೆ. ಪ್ರಾದೇಶಿಕ ಪಕ್ಷಗಳಿಗೆ 10 ಸ್ಥಾನ ಬಿಟ್ಟುಕೊಡುವ ಒಪ್ಪಂದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ಪಿಎಂಕೆ ಸಂಸ್ಥಾಪಕ ರಾಮದಾಸ್ ಅವರು ಇಲ್ಲಿನ ತೈಲಾಪುರಂ ನಿವಾಸದಲ್ಲಿ ಸಹಿ ಹಾಕಿದರು.
3
+ ಪಿಎಂಕೆ ವನ್ನಿಯಾರ್ ಸಮುದಾಯದ ಪ್ರಾಬಲ್ಯದ ಪಕ್ಷವಾಗಿದೆ ಮತ್ತು ರಾಜ್ಯದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಗಮನಾರ್ಹ ಪ್ರಭಾವವನ್ನು ಹೊಂದಿದೆ. ಪಿಎಂಕೆ ಎನ್ಡಿಎಯಲ್ಲಿ ತಮಿಳುನಾಡಿನ 10 ಸ್ಥಾನಗಳಿಂದ ಸ್ಪರ್ಧಿಸಲಿದೆ ಎಂದು ಅಣ್ಣಾಮಲೈ ಮತ್ತು ಪಿಎಂಕೆ ಅಧ್ಯಕ್ಷ ಮತ್ತು ರಾಜ್ಯಸಭಾ ಸಂಸದ ಡಾ ಅನ್ಬುಮಣಿ ರಾಮದಾಸ್ ಅವರುಗಳು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
4
+ ಪಿಎಂಕೆ ಕಳೆದ 10 ವರ್ಷಗಳಿಂದ ಎನ್ಡಿಎಯಲ್ಲಿದೆ, 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಬಣದ ಒಂದು ಘಟಕವಾಗಿ ಹೋರಾಡುತ್ತಿದೆ ಎಂದು ಇಬ್ಬರೂ ನಾಯಕರು ಹೇಳಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತುತ ಮಾಡುತ್ತಿರುವ ಸಮಾಜದ ಹಿತದೃಷ್ಟಿಯಿಂದ ಕ್ರಾಂತಿಕಾರಿ ಆಲೋಚನೆಗಳನ್ನು ಜಾರಿಗೆ ತರಲು ಅವರು ಬಯಸಿದ್ದಾರೆ ಎಂದು ಅಣ್ಣಾಮಲೈ ರಾಮದಾಸ್ ಅವರನ್ನು ಶ್ಲಾಸಿದರು.
5
+ ಉಭಯ ಪಕ್ಷಗಳ ಪ್ರಮುಖರ ನಡುವೆ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಎಲ.ಮುರುಗನ್ ಉಪಸ್ಥಿತರಿದ್ದರು. ಸೇಲಂ ಜಿಲ್ಲೆಯಲ್ಲಿ ನಡೆಯಲಿರುವ ರ್ಯಾಲಿಯಲ್ಲಿ ರಾಮದಾಸ್ ಅವರು ಪ್ರಧಾನಿಯವರೊಂದಿಗೆ ಪಾಲ್ಗೊಳ್ಳುವ ನಿರೀಕ್ಷೆಯಿದೆ.
eesanje/url_47_143_4.txt ADDED
@@ -0,0 +1,5 @@
 
 
 
 
 
 
1
+ ಹಿಂದೂ ಮಹಾಸಾಗರದ ಭದ್ರತೆಗೆ ಭಾರತ ಬದ್ಧ ; ಪ್ರಧಾನಿ ಮೋದಿ
2
+ ನವದೆಹಲಿ, ಮಾ.19 (ಪಿಟಿಐ) :ಹಿಂದೂ ಮಹಾಸಾಗರ ಪ್ರದೇಶದಲ್ಲಿ ಸಮುದ್ರಯಾನ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.
3
+ ಭಾರತೀಯ ನೌಕಾಪಡೆಯು ತನ್ನ ದೇಶದ ಹಡಗು ಮತ್ತು ಸಿಬ್ಬಂದಿಯನ್ನು ರಕ್ಷಿಸಿದ್ದಕ್ಕಾಗಿ ಬಲ್ಗೇರಿಯಾದ ಅಧ್ಯಕ್ಷ ರುಮೆನ್ ರಾದೇವ್ ಅವರು ಮೋದಿಗೆ ಧನ್ಯವಾದ ಸಲ್ಲಿಸಿದ ನಂತರ ಮಾತನಾಡಿದ ಪ್ರಧಾನಿಗಳು ಈ ಭರವಸೆ ನೀಡಿದ್ದಾರೆ.
4
+ ಏಳು ಬಲ್ಗೇರಿಯನ್ ನಾಗರಿಕರು ಸೇರಿದಂತೆ ಅಪಹರಣಕ್ಕೊಳಗಾದ ಬಲ್ಗೇರಿಯನ್ ಹಡಗು ರುಯೆನ್ ಮತ್ತು ಅದರ ಸಿಬ್ಬಂದಿಯನ್ನು ರಕ್ಷಿಸಿದ ಭಾರತೀಯ ನೌಕಾಪಡೆಯ ಕೆಚ್ಚೆದೆಯ ಕ್ರಮಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನನ್ನ ಪ್ರಾಮಾಣಿಕ ಕೃತಜ್ಞತೆಗಳು ಎಂದು ರಾದೇವ್ ಎಕ್ಸ್ನಲ್ಲಿ ಪೊಸ್ಟ್ ಮಾಡಿದ್ದಾರೆ.ತಮ್ಮ ಉತ್ತರದಲ್ಲಿ ಮೋದಿ ಈ ಸಂದೇಶವನ್ನು ನಾನು ಪ್ರಶಂಸಿಸುತ್ತೇನೆ ಎಂದು ಹೇಳಿದರು.
5
+ ಏಳು ಬಲ್ಗೇರಿಯನ್ ಪ್ರಜೆಗಳು ಸುರಕ್ಷಿತವಾಗಿದ್ದಾರೆ ಮತ್ತು ಶೀಘ್ರದಲ್ಲೇ ಮನೆಗೆ ಮರಳುತ್ತಿದ್ದಾರೆ ಎಂದು ನಮಗೆ ಸಂತೋಷವಾಗಿದೆ. ನೌಕಾಯಾನ ಸ್ವಾತಂತ್ರ್ಯವನ್ನು ರಕ್ಷಿಸಲು ಮತ್ತು ಹಿಂದೂ ಮಹಾಸಾಗರದ ಪ್ರದೇಶದಲ್ಲಿ ಕಡಲ್ಗಳ್ಳತನ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಭಾರತ ಬದ್ಧವಾಗಿದೆ ಎಂದು ಅವರು ಹೇಳಿದರು.
eesanje/url_47_143_5.txt ADDED
@@ -0,0 +1,8 @@
 
 
 
 
 
 
 
 
 
1
+ ದೆಹಲಿ ವಿಶ್ವದ ಅತ್ಯಂತ ಕಲುಷಿತ ರಾಜಧಾನಿ, ಬಿಹಾರದ ಬೇಗುಸರಾಯ್ ಅತ್ಯಂತ ಕಲುಷಿತ ನಗರ
2
+ ನವದೆಹಲಿ, ಮಾ 19 (ಪಿಟಿಐ) :ಬಿಹಾರದ ಬೇಗುಸರಾಯ್ ವಿಶ್ವದ ಅತ್ಯಂತ ಕಲುಷಿತ ಮಹಾನಗರ ಪ್ರದೇಶವಾಗಿ ಹೊರಹೊಮ್ಮಿದೆ ಮತ್ತು ದೆಹಲಿಯು ಅತ್ಯಂತ ಕಳಪೆ ಗಾಳಿಯ ಗುಣಮಟ್ಟದ ರಾಜಧಾನಿಯಾಗಿ ಗುರುತಿಸಲ್ಪಟ್ಟಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
3
+ ಪ್ರತಿ ಘನ ಮೀಟರ್ಗೆ ಸರಾಸರಿ 54.4 ಮೈಕ್ರೋಗ್ರಾಂಗಳಷ್ಟು 2.5 ಪಿಎಂ ಸಾಂದ್ರತೆಯೊಂದಿಗೆ, ಬಾಂಗ್ಲಾದೇಶ (ಪ್ರತಿ ಘನ ಮೀಟರ್ಗೆ 79.9 ಮೈಕ್ರೋಗ್ರಾಂಗಳು) ಮತ್ತು ಪಾಕಿಸ್ತಾನ (73.7 ಮೈಕ್ರೋಗ್ರಾಂ ಪ್ರತಿ ಘನ ಮೀಟರ್) ನಂತರ 2023 ರಲ್ಲಿ 134 ದೇಶಗಳಲ್ಲಿ ಭಾರತವು ಮೂರನೇ ಕೆಟ್ಟ ಗಾಳಿಯ ಗುಣಮಟ್ಟವನ್ನು ಹೊಂದಿತ್ತು ಎಂದು ಸ್ವಿಸ್ ಸಂಸ್ಥೆ ಸಂಸ್ಥೆ ತಿಳಿಸಿದೆ.
4
+ 2022 ರಲ್ಲಿ ಪ್ರತಿ ಘನ ಮೀಟರ್ಗೆ ಸರಾಸರಿ 53.3 ಮೈಕ್ರೋಗ್ರಾಂಗಳಷ್ಟು ಪಿಎಂ 2.5 ಸಾಂದ್ರತೆಯೊಂದಿಗೆ ಭಾರತವು ಎಂಟನೇ ಅತ್ಯಂತ ಕಲುಷಿತ ರಾಷ್ಟ್ರವಾಗಿದೆ. ಬೇಗುಸರಾಯ್ ಪ್ರತಿ ಘನ ಮೀಟರ್ಗೆ ಸರಾಸರಿ 118.9 ಮೈಕ್ರೋಗ್ರಾಂಗಳಷ್ಟು ಪಿಎಂ 2.5 ಸಾಂದ್ರತೆಯೊಂದಿಗೆ ಜಾಗತಿಕವಾಗಿ ಅತ್ಯಂತ ಕಲುಷಿತ ಮೆಟ್ರೋಪಾಲಿಟನ್ ಪ್ರದೇಶವಾಗಿದೆ. ನಗರವು 2022 ರ ಶ್ರೇಯಾಂಕದಲ್ಲಿ ಸಹ ಕಾಣಿಸಿಕೊಂಡಿಲ್ಲ.
5
+ ದೆಹಲಿಯ ಪಿಎಂ 2.5 ಮಟ್ಟವು 2022 ರಲ್ಲಿ ಘನ ಮೀಟರ್ಗೆ 89.1 ಮೈಕ್ರೋಗ್ರಾಂನಿಂದ 2023 ರಲ್ಲಿ ಪ್ರತಿ ಘನ ಮೀಟರ್ಗೆ 92.7 ಮೈಕ್ರೋಗ್ರಾಂಗಳಿಗೆ ಹದಗೆಟ್ಟಿದೆ.2018 ರ ಆರಂಭದ ಟ್ರೊಟ್ನಲ್ಲಿ ರಾಷ್ಟ್ರೀಯ ರಾಜಧಾನಿಯು ವಿಶ್ವದ ಅತ್ಯಂತ ಕಲುಷಿತ ರಾಜಧಾನಿ ನಗರವಾಗಿ ನಾಲ್ಕು ಬಾರಿ ಸ್ಥಾನ ಪಡೆದಿದೆ. ಭಾರತದಲ್ಲಿ 1.36 ಶತಕೋಟಿ ಜನರು ಪಿಎಂ 2.5 ಸಾಂದ್ರತೆಯನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಶಿಫಾರಸು ಮಾಡಿದ ವಾರ್ಷಿಕ ಮಾರ್ಗಸೂಚಿ ಮಟ್ಟವನ್ನು ಪ್ರತಿ ಘನ ಮೀಟರ್ಗೆ 5 ಮೈಕ್ರೋಗ್ರಾಂಗಳಷ್ಟು ಮೀರಿದೆ ಎಂದು ಅಂದಾಜಿಸಲಾಗಿದೆ ಎಂದು ವರದಿ ಹೇಳಿದೆ.
6
+ ಅಲ್ಲದೆ, 1.33 ಶತಕೋಟಿ ಜನರು, ಭಾರತೀಯ ಜನಸಂಖ್ಯೆಯ 96 ಪ್ರತಿಶತ ಜನರು, ವಾರ್ಷಿಕ ಪಿಎಂ 2.5 ಮಾರ್ಗಸೂಚಿಗಿಂತ ಏಳು ಪಟ್ಟು ಹೆಚ್ಚಿದೆ. ಈ ಪ್ರವೃತ್ತಿಯು ನಗರ ಮಟ್ಟದ ದತ್ತಾಂಶದಲ್ಲಿ ಪ್ರತಿಫಲಿಸುತ್ತದೆ, ದೇಶದ 66 ಪ್ರತಿಶತಕ್ಕಿಂತಲೂ ಹೆಚ್ಚಿನ ನಗರಗಳು ಪ್ರತಿ ಘನ ಮೀಟರ್ಗೆ ವಾರ್ಷಿಕ ಸರಾಸರಿ 35 ಮೈಕ್ರೋಗ್ರಾಂಗಳಿಗಿಂತ ಹೆಚ್ಚಿನದನ್ನು ವರದಿ ಮಾಡುತ್ತವೆ.
7
+ ಈ ವರದಿಯನ್ನು ರಚಿಸಲು ಬಳಸಲಾದ ಡೇಟಾವನ್ನು 30,000 ಕ್ಕೂ ಹೆಚ್ಚು ನಿಯಂತ್ರಕ ವಾಯು ಗುಣಮಟ್ಟ ಮಾನಿಟರಿಂಗ್ ಸ್ಟೇಷನ್ಗಳು ಮತ್ತು ಸಂಶೋಧನಾ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸೌಲಭ್ಯಗಳು, ಲಾಭರಹಿತ ಸರ್ಕಾರೇತರ ಸಂಸ್ಥೆಗಳು ನಿರ್ವಹಿಸುವ ಕಡಿಮೆ-ವೆಚ್ಚದ ಗಾಳಿಯ ಗುಣಮಟ್ಟದ ಸಂವೇದಕಗಳ ಜಾಗತಿಕ ವಿತರಣೆಯಿಂದ ಒಟ್ಟುಗೂಡಿಸಲಾಗಿದೆ ಎಂದು ಐಕಿಅಜ್ಟಿ ಹೇಳಿದೆ. ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ನಾಗರಿಕ ವಿ��್ಞಾನಿಗಳು.
8
+ 2022 ರ ವಿಶ್ವ ವಾಯು ಗುಣಮಟ್ಟ ವರದಿಯು 131 ದೇಶಗಳು, ಪ್ರದೇಶಗಳು ಮತ್ತು ಪ್ರಾಂತ್ಯಗಳಲ್ಲಿ 7,323 ಸ್ಥಳಗಳಿಂದ ಡೇಟಾವನ್ನು ಒಳಗೊಂಡಿದೆ. 2023 ರಲ್ಲಿ, ಆ ಸಂಖ್ಯೆಗಳು 134 ದೇಶಗಳು, ಪ್ರದೇಶಗಳು ಮತ್ತು ಪ್ರಾಂತ್ಯಗಳಲ್ಲಿ 7,812 ಸ್ಥಳಗಳನ್ನು ಒಳಗೊಂಡಿವೆ.
eesanje/url_47_143_6.txt ADDED
@@ -0,0 +1,5 @@
 
 
 
 
 
 
1
+ ಗುಜರಾತ್ : ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಮುಖಂಡ
2
+ ವಡೋದರಾ, ಮಾ 19 (ಪಿಟಿಐ) :ಲೋಕಸಭೆ ಚುನಾವಣೆಗೆ ಮುನ್ನ ಗುಜರಾತ್ ನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಕೇತನ್ ಇನಾಮದಾರ್ ವಿಧಾನಸಭೆಗೆ ರಾಜೀನಾಮೆ ಸಲ್ಲಿಸಿದ್ದಾರೆ.
3
+ ವಡೋದರ ಜಿಲ್ಲೆಯ ಸಾವ್ಲಿ ಕ್ಷೇತ್ರದಿಂದ ಮೂರು ಅವಧಿಗೆ ಶಾಸಕರಾಗಿರುವ ಇನಾಮದಾರ್ ಅವರು ತಮ್ಮ ರಾಜೀನಾಮೆಯನ್ನು ವಿಧಾನಸಭಾ ಸ್ಪೀಕರ್ ಶಂಕರ್ ಚೌಧರಿ ಅವರಿಗೆ ಸಲ್ಲಿಸಿದ್ದಾರೆ. ಪತ್ರದಲ್ಲಿ, ಇನಾಮದಾರ್ ಅವರು ತಮ್ಮ ಒಳಗಿನ ಧ್ವನಿ ಆಲಿಸಿದ ನಂತರ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ.
4
+ ಇನಾಮದಾರ್ 2012ರ ವಿಧಾನಸಭೆ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಗೆದ್ದಿದ್ದರು. ನಂತರ ಬಿಜೆಪಿ ಸೇರಿ 2017 ಮತ್ತು 2022ರಲ್ಲಿ ಎರಡು ಬಾರಿ ಗೆದ್ದಿದ್ದರು. ಇದಕ್ಕೂ ಮೊದಲು, ಅವರು 2020 ರ ಜನವರಿಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದರು, ಆದರೆ ಅದನ್ನು ಸ್ಪೀಕರ್ ಅಂಗೀಕರಿಸಲಿಲ್ಲ.
5
+ ಹಿರಿಯ ಸರ್ಕಾರಿ ಅಧಿಕಾರಿಗಳು ಮತ್ತು ಸಚಿವರು ತಮ್ಮನ್ನು ಮತ್ತು ತಮ್ಮ ಕ್ಷೇತ್ರವನ್ನು ನಿರ್ಲಕ್ಷಿಸುತ್ತಿದ್ದಾರೆ ಮತ್ತು ಕೇಸರಿ ಪಕ್ಷದ ಅನೇಕ ಶಾಸಕರು ತಮ್ಮಂತೆ ಹತಾಶೆ ಅನುಭವಿಸುತ್ತಿದ್ದಾರೆ ಎಂದು ಇನಾಮದಾರ್ ಆಗ ಹೇಳಿಕೊಂಡಿದ್ದರು.ಗುಜರಾತ್ ವಿಧಾನಸಭೆಯ ಒಟ್ಟು 182 ಸ್ಥಾನಗಳಲ್ಲಿ ಪ್ರಸ್ತುತ ಬಿಜೆಪಿ 156 ಸ್ಥಾನಗಳನ್ನು ಹೊಂದಿದೆ. ಗುಜರಾತ್ನ ಎಲ್ಲಾ 26 ಲೋಕಸಭಾ ಕ್ಷೇತ್ರಗಳಿಗೆ ಮೇ 7 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಜೂನ್ 4 ರಂದು ಮತ ಎಣಿಕೆ ನಡೆಯಲಿದೆ.
eesanje/url_47_143_7.txt ADDED
@@ -0,0 +1,4 @@
 
 
 
 
 
1
+ ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ಪೂಜಾರಿಗೆ ಜೈಲು
2
+ ಭುವನೇಶ್ವರ್, ಮಾ 19 (ಪಿಟಿಐ) :ವಿದೇಶಿ ಮಹಿಳಾ ಪ್ರವಾಸಿಗರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಒಡಿಶಾದ ರಾಜಧಾನಿಯಲ್ಲಿರುವ ಲಿಂಗರಾಜ ದೇವಸ್ಥಾನದ ಸೇವಾಯತ್ (ಪೂಜಾರಿ)ಗೆ ನ್ಯಾಯಾಲಯವು 18 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯವು ಅಪರಾಧ ನಡೆದ ನಾಲ್ಕು ವಾರಗಳಲ್ಲಿ ಈ ಮಹತ್ವದ ತೀರ್ಪು ಪ್ರಕಟಿಸಿದೆ.
3
+ ಫೆಬ್ರವರಿ 19 ರಂದು ಇಲ್ಲಿನ 11ನೇ ಶತಮಾನದ ಲಿಂಗರಾಜ ದೇವಸ್ಥಾನದ ಬಳಿ ಒಂಟಿಯಾಗಿ ತಿರುಗಾಡುತ್ತಿದ್ದ ಸ್ವೀಡನ್ ಪ್ರವಾಸಿ ಮಹಿಳೆಗೆ ಕುಂದನ್ ಮಹಾಪಾತ್ರ ಎಂಬಾತ ಲೈಂಗಿಕ ಕಿರುಕುಳ ನೀಡಿದ್ದ.ಘಟನೆಯ ನಂತರ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದು, ಅದೇ ದಿನ ಅರ್ಚಕನನ್ನು ಬಂಧಿಸಲಾಗಿತ್ತು.
4
+ ಪೊಲೀಸರು ಕೇವಲ ನಾಲ್ಕು ದಿನಗಳಲ್ಲಿ (-ಫೆಬ್ರವರಿ 23) ಚಾರ್ಜ್ ಶೀಟ್ ಸಲ್ಲಿಸಿದರು ಮತ್ತು ಫೆಬ್ರವರಿ 26 ರಂದು ವಿಚಾರಣೆ ಪ್ರಾರಂಭವಾಗಿದ್ದು, ಕೆಲವೇ ದಿನಗಳಲ್ಲಿ ತೀರ್ಪು ಪ್ರಕಟವಾಗಿರುವುದು ವಿಶೇಷವಾಗಿದೆ.
eesanje/url_47_143_8.txt ADDED
@@ -0,0 +1,5 @@
 
 
 
 
 
 
1
+ ನಮಾಜ್ ವಿಷಯಕ್ಕೆ ವಿದೇಶಿ ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡನೀಯ : ಕೇರಳ ರಾಜ್ಯಪಾಲ ಖಾನ್
2
+ ಗಾಂಧಿನಗರ, ಮಾ 19 (ಪಿಟಿಐ) :ಗುಜರಾತ್ ವಿಶ್ವವಿದ್ಯಾಲಯದ ಹಾಸ್ಟೆಲ್ ಬ್ಲಾಕ್‍ನಲ್ಲಿ ನಮಾಜ್ ಮಾಡಲು ವಿದೇಶಿ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಯಂತಹ ಘಟನೆಗಳು ದೇಶದ ಜನರಿಗೆ ಅದರ ಸಂಪ್ರದಾಯಗಳು ಮತ್ತು ಸಂಸ್ಕøತಿಯ ಪರಂಪರೆಯ ಬಗ್ಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ.
3
+ ಗಾಂಧಿನಗರದಲ್ಲಿರುವ ಗುಜರಾತ್ ಕೇಂದ್ರೀಯ ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಜ್ಞಾನ ಸಂಪ್ರದಾಯ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಲು ಆಹ್ವಾನಿಸಿದ ಸಂದರ್ಭದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡುವಾಗ ಖಾನ್ ಈ ವಿಷಯ ತಿಳಿಸಿದರು. ದಾಳಿಯ ಕುರಿತು ಪ್ರಶ್ನಿಸಿದ ಅವರು, ಇಂತಹ ಘಟನೆಗಳು ನಮ್ಮದೇ ಆದ ಸಂಪ್ರದಾಯಗಳು ಮತ್ತು ಸಂಸ್ಕøತಿ ಪರಂಪರೆಯ ಬಗ್ಗೆ ನಮಗೆ ಇನ್ನೂ ಸಂಪೂರ್ಣವಾಗಿ ತಿಳಿದಿಲ್ಲ ಎಂದು ಸೂಚಿಸುತ್ತದೆ. ಈ ರೀತಿಯ ಸಮ್ಮೇಳನಗಳು ನಮ್ಮ ಸಂಪ್ರದಾಯಗಳು ಯಾವುವು ಎಂಬುದನ್ನು ಅರ್ಥಮಾಡಿಕೊಳ್ಳಲು ನಮಗೆ ಸಹಾಯ ಮಾಡುತ್ತದೆ.
4
+ ಜನರು ವಿಭಿನ್ನ ನಂಬಿಕೆಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸುತ್ತಿದ್ದರೂ, ಅಂತಿಮವಾಗಿ ಅವರು ತಮ್ಮ ಆತ್ಮದಿಂದ ಒಂದಾಗುತ್ತಾರೆ ಎಂದು ಖಾನ್ ತಮ್ಮ ಭಾಷಣದಲ್ಲಿ ಹೇಳಿದರು. ನಾವೆಲ್ಲರೂ ನಮ್ಮ ಭಕ್ತಿಯನ್ನು ವ್ಯಕ್ತಪಡಿಸಲು ವಿಭಿನ್ನ ಮಾರ್ಗಗಳನ್ನು ಹೊಂದಿರಬಹುದು. ನನ್ನ ಭಾಷೆ, ಚರ್ಮದ ಬಣ್ಣ ಮತ್ತು ಸಂಪ್ರದಾಯಗಳು ಮತ್ತು ಸಂಪ್ರದಾಯಗಳು ನಿಮ್ಮಿಂದ ಭಿನ್ನವಾಗಿರಬಹುದು. ಆದರೂ, ನಾವೆಲ್ಲರೂ ನಮ್ಮ ಆತ್ಮದಿಂದ ಒಂದಾಗಿದ್ದೇವೆ, ಭಾರತೀಯ ಜ್ಞಾನ ಸಂಪ್ರದಾಯವು ನಮಗೆ ಕಲಿಸುತ್ತದೆ, ಅವರು ಹೇಳಿದರು.
5
+ ಈ ಸಂದರ್ಭದಲ್ಲಿ, ಖಾನ್ ಅವರು ವೇದಗಳು ಮತ್ತು ಭಗವದ್ಗೀತೆಯಿಂದ ಹಲವಾರು ಶ್ಲೋಕಗಳು ಮತ್ತು ಶ್ಲೋಕಗಳನ್ನು ಪಠಿಸಿದರು ಮತ್ತು ಭಾರತವು ನಿರ್ಮಿಸಿದ ಹೆಚ್ಚಿನ ವಿದ್ವಾಂಸರು ಸಂತರು ಎಂದು ಸಭಿಕರಿಗೆ ತಿಳಿಸಿದರು.ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಉಲ್ಲೇಖಿಸಿದ ಖಾನ್, ಸಮಾಜದಲ್ಲಿ ಗೋಚರಿಸುವ ವೈವಿಧ್ಯತೆಯ ಹಿಂದೆ ಯಾವಾಗಲೂ ಏಕತೆಯನ್ನು ಕಂಡುಕೊಳ್ಳುವ ಜ್ಞಾನವುಳ್ಳ ವ್ಯಕ್ತಿ ಎಂದು ಹೇಳಿದರು.
eesanje/url_47_143_9.txt ADDED
@@ -0,0 +1,6 @@
 
 
 
 
 
 
 
1
+ ಮೋದಿ ವಿರುದ್ಧ ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು
2
+ ಕೋಲ್ಕತ್ತಾ, ಮಾ.19 (ಪಿಟಿಐ) –ವಾರಣಾಸಿಯ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕಾಗಿ ಕೇಂದ್ರ ಸರ್ಕಾರದ ಹಣವನ್ನು ಬಳಸಿಕೊಂಡು ಮಾದರಿ ನೀತಿ ಸಂಹಿತೆ ಉಲ್ಲಂಸಿದ್ದಾರೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
3
+ ಮುಖ್ಯ ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ, ಟಿಎಂಸಿ ರಾಜ್ಯಸಭಾ ಸಂಸದ ಡೆರೆಕ್ ಒ ಬ್ರೇನ್ ಅವರು, ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ಮಾರ್ಚ್ 16 ರಂದು ತಮ್ಮ ಸರ್ಕಾರದ ಕಾರ್ಯಕ್ರಮಗಳನ್ನು ಹೈಲೈಟ್ ಮಾಡುವ ಪ್ರಧಾನಿ ಸಂದೇಶವು ಮತದಾರರನ್ನು ತಲುಪಿದೆ ಎಂದು ಹೇಳಿದರು.
4
+ ಮಾರ್ಚ್ 15 ರಂದು ಮತದಾರರಿಗೆ ಪತ್ರದ ರೂಪದಲ್ಲಿ ಮೋದಿ ಸಂದೇಶವನ್ನು ಬರೆದಿದ್ದಾರೆ ಎಂದು ಟಿಎಂಸಿ ನಾಯಕ ಹೇಳಿದ್ದಾರೆ. ಪ್ರಧಾನಿ ಕಚೇರಿಯನ್ನು ಬಳಸಿಕೊಂಡು, ಭಾರತ ಸರ್ಕಾರವು ಕಳುಹಿಸಿರುವ ಸಂದೇಶದ ನೆಪದಲ್ಲಿ ಬಿಜೆಪಿಯು ಸಾರ್ವಜನಿಕ ಖಜಾನೆ ವೆಚ್ಚದಲ್ಲಿ ಈ ಮೇಲಿನ ಪತ್ರವನ್ನು ಬಿಡುಗಡೆ ಮಾಡಿದೆ.
5
+ ಇಂತಹ ಸಾಮೂಹಿಕ ಚಲಾವಣೆಯು ಮತದಾರರಿಗೆ ಮನವಿಯಾಗಿದೆ. ಬಿಜೆಪಿ ಮತ್ತು ಮೋದಿ ಪರವಾಗಿ ಮತ್ತು ಆ ಮೂಲಕ ಭಾರತದ ಚುನಾವಣಾ ಆಯೋಗದ ಆದೇಶವನ್ನು ಉಲ್ಲಂಸಿದ್ದಾರೆ, ಎಂದು ಓ ಬ್ರೇನ್ ದೂರಿನಲ್ಲಿ ತಿಳಿಸಿದ್ದಾರೆ.
6
+ ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಭವಿಷ್ಯದ ಪ್ರಚಾರಗಳನ್ನು ತಡೆಹಿಡಿಯಲು ಮತ್ತು ಪತ್ರವನ್ನು ಹಿಂಪಡೆಯಲು ಬಿಜೆಪಿ ಮತ್ತು ಅದರ ಅಭ್ಯರ್ಥಿ ಮೋದಿಗೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಅವರು ಇಸಿ ಖಚಿತಪಡಿಸಿಕೊಳ್ಳಬೇಕು. ಪ್ರಧಾನಿಯವರ ಪತ್ರವನ್ನು ಮತದಾರರಿಗೆ ಕಳುಹಿಸಲು ತಗಲುವ ವೆಚ್ಚವನ್ನು ಬಿಜೆಪಿ ಮತ್ತು ಮೋದಿಯವರ ಖಾತೆಗಳಲ್ಲಿ ಚುನಾವಣಾ ವೆಚ್ಚದಲ್ಲಿ ಸೇರಿಸಬೇಕು ಎಂದು ಓಬ್ರೇನ್ ಹೇಳಿದರು.
eesanje/url_47_144_10.txt ADDED
@@ -0,0 +1,5 @@
 
 
 
 
 
 
1
+ ಆರ್‌ಎಸ್‌ಎಸ್‌ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆ
2
+ ನಾಗ್ಪುರ,ಮಾ.17-ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ಆಗಿ ಮುಂದಿನ 3 ವರ್ಷಗಳವರೆಗೆ ಕರ್ನಾಟಕದ ಮೂಲದವರಾದ ದತ್ತಾತ್ರೇಯ ಹೊಸಬಾಳೆ ಮರು ಆಯ್ಕೆಗೊಂಡಿದ್ದಾರೆ.
3
+ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಭಾರತೀಯ ಪ್ರತಿನಿಧಿ ಸಭೆ ಕಳೆದ ಶುಕ್ರವಾರದಿಂದ ಆರಂಭವಾಗಿ ಮೂರು ದಿನಗಳ ಕಾಲ ಮಹಾರಾಷ್ಟ್ರದ ನಾಗ್ಪುರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದಿದೆ.
4
+ ಸಭೆಯಲ್ಲಿ 2024 ರಿಂದ 2027 ರವರೆಗೆ ಆರ್‍ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿಯಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಪುನರ್ ಆಯ್ಕೆ ಮಾಡಲಾಗುವುದು. 2021 ರಿಂದಲೂ ಸರಕಾರ್ಯವಾಹ ಆಗಿ ಕೆಲಸ ಮಾಡುತ್ತಿರುವ ಹೊಸಬಾಳೆ ಮತ್ತೊಂದು ಅವಗೆ ಮರು ಆಯ್ಕೆಯಾಗಿದ್ದಾರೆ.
5
+ ಭಾರತೀಯ ಪ್ರತಿನಿಧಿ ಸಭೆಯಲ್ಲಿ ದೇಶಾದ್ಯಂತ ಒಂದೂವರೆ ಸಾವಿರಕ್ಕೂ ಹೆಚ್ಚು ಮಂದಿ ಪ್ರತಿನಿಧಿಗಳು ಮತ್ತು ಆರ್‍ಎಸ್‍ಎಸ್‍ನ ಮಾನ್ಯತೆ ಪಡೆದ ಸಂಘಟನೆಗಳ ಸದಸ್ಯರು ಭಾಗವಹಿಸಿದ್ದರು.
eesanje/url_47_144_11.txt ADDED
@@ -0,0 +1,5 @@
 
 
 
 
 
 
1
+ ಪಾಕಿಸ್ತಾನದಿಂದ ಬಂದ 18 ಹಿಂದೂ ನಿರಾಶ್ರಿತರಿಗೆ ಭಾರತೀಯ ಪೌರತ್ವ
2
+ ಅಹಮದಾಬಾದ್,ಮಾ.17- ನಗರದಲ್ಲಿ ವಾಸಿಸುತ್ತಿರುವ ಪಾಕಿಸ್ತಾನದಿಂದ ಬಂದಿರುವ ಹದಿನೆಂಟು ಹಿಂದೂ ನಿರಾಶ್ರಿತರಿಗೆ ಗುಜರಾತ್ ಗೃಹಖಾತೆ ರಾಜ್ಯ ಸಚಿವ ಹರ್ಷ ಸಂಘ್ವಿ ಅವರು ಪಾಲ್ಗೊಂಡಿದ್ದ ಶಿಬಿರದಲ್ಲಿ ಭಾರತೀಯ ಪೌರತ್ವವನ್ನು ನೀಡಲಾಯಿತು.
3
+ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಶಿಬಿರದಲ್ಲಿ ಈ 18 ಮಂದಿಗೆ ಸಂಘ್ವಿ ಅವರು ಭಾರತೀಯ ಪೌರತ್ವವನ್ನು ಪ್ರದಾನ ಮಾಡಿ ನವಭಾರತದ ಕನಸನ್ನು ಸಾಕಾರಗೊಳಿಸಲು ಒಗ್ಗೂಡಿ ಕೆಲಸ ಮಾಡುವಂತೆ ಹೇಳಿದರು.
4
+ 2016 ಮತ್ತು 2018 ರ ರಾಜ್ಯ ಪತ್ರ(ಗೆಜೆಟ್) ಅಧಿಸೂಚನೆಗಳು ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶಗಳಿಂದ ಬಂದ ಅಲ್ಪಸಂಖ್ಯಾತ ಸಮುದಾಯಗಳ ಜನತೆಗೆ ಭಾರತೀಯ ಪೌರತ್ವ ನೀಡುವ ಅಧಿಕಾರವನ್ನು ಗುಜರಾತ್‍ನ ಅಹಮದಾಬಾದ್, ಗಾಂಧಿನಗರ ಮತ್ತು ಕಛ್ ನಗರಗಳ ಜಿಲ್ಲಾಧಿಕಾರಿಗಳಿಗೆ ಕೊಡಮಾಡಿದೆ ಎಂದು ಅಧಿಕೃತ ಪ್ರಕಟಣೆಯೊಂದು ತಿಳಿಸಿದೆ.
5
+ ಇದರೊಂದಿಗೆ ಪಾಕಿಸ್ತಾನದಿಂದ ಬಂದು ಅಹಮದಾಬಾದ್‍ನಲ್ಲಿ ವಾಸಿಸುತ್ತಿರುವ ಒಟ್ಟು 1,167 ಹಿಂದೂ ನಿರಾಶ್ರಿತರು ಭಾರತೀಯ ಪೌರತ್ವವನ್ನು ಪಡೆದಂತಾಗಿದೆ ಎಂದು ಅದು ಹೇಳಿದೆ.
eesanje/url_47_144_12.txt ADDED
@@ -0,0 +1,6 @@
 
 
 
 
 
 
 
1
+ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಮೃತಪಟ್ಟ ಯುವಕನ ಮೃತದೇಹ ಹೈದರಾಬಾದ್‍ ಆಗಮನ
2
+ ಹೈದರಾಬಾದ್, ಮಾ 16 – ರಷ್ಯಾ ಸೇನೆಗೆ ಸಹಾಯಕ ಎಂದು ಅಲ್ಲಿಗೆ ತೆರಳಿ ಸಂಘರ್ಷದಲ್ಲಿ ಮೃತಪಟ್ಟ ಹೈದರಾಬಾದ್ ನಿವಾಸಿಯ ಮೃತದೇಹ ಕಳೆದ ರಾತ್ರಿ ಹೈದರಾಬಾದ್‍ಗೆ ಆಗಮಿಸಿದೆ.ಮೊಹಮ್ಮದ್ ಅಸಾನ್ ಅವರ ಪಾರ್ಥಿವ ಶರೀರ ಹೈದರಾಬಾದ್‍ನ ಬಜಾರ್‍ಘಾಟ್‍ನಲ್ಲಿರುವ ಅವರ ನಿವಾಸಕ್ಕೆ ಶನಿವಾರ ತಡರಾತ್ರಿ ತಲುಪಿದೆ ಎಂದು ಎಐಎಂಐಎಂ ಮೂಲಗಳು ತಿಳಿಸಿವೆ.
3
+ ಮಾರ್ಚ್ 6 ರಂದು ಮಾಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಸಾನ್ ಅವರ ಸಾವನ್ನು ದೃಢಪಡಿಸಿತು ಮತ್ತು ಹೈದರಾಬಾದ್‍ನಲ್ಲಿರುವ ಅವರ ಕುಟುಂಬ ಸದಸ್ಯರೊಂದಿಗೆ ಸಂಪರ್ಕದಲ್ಲಿದೆ ಎಂದು ಹೇಳಿದರು.
4
+ ಉದ್ಯೋಗ ನೀಡುವ ಭರವಸೆಯ ಮೇರೆಗೆ ಏಜೆಂಟರಿಂದ ವಂಚನೆಗೊಳಗಾದ ಭಾರತೀಯರಲ್ಲಿ ಅಸಾನ್ (30) ಅವರನ್ನು ರಷ್ಯಾಕ್ಕೆ ಕರೆದೊಯ್ಯಲಾಯಿತು ಮತ್ತು ರಷ್ಯಾದ ಸೈನ್ಯದ ಸಹಾಯಕ ನಾಗಿ ಕೆಲಸ ಮಾಡಲು ಒತ್ತಾಯಿಸಲಾಯಿತು ಎಂದು ಅವರ ಸಹೋದರ ಇಮ್ರಾನ್ ಈ ಹಿಂದೆ ಹೇಳಿದ್ದರು.
5
+ ಫೆಬ್ರವರಿ 21 ರಂದು, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ತೆಲಂಗಾಣದ ಇಬ್ಬರು ಸೇರಿದಂತೆ ಕೆಲವು ಭಾರತೀಯ ಯುವಕರ ಕುಟುಂಬ ಸದಸ್ಯರು ತಮ್ಮ ಸಂಬಂಧಿಕರನ್ನು ಉದ್ಯೋಗ ಭರವಸೆಯ ಮೇಲೆ ಏಜೆಂಟರು ವಂಚಿಸಿ ರಷ್ಯಾಕ್ಕೆ ಕರೆದೊಯ್ದಿದ್ದಾರೆ ಎಂದು ತಿಳಿಸಿದ್ದಾರೆ.
6
+ ಆದಾಗ್ಯೂ, ಅವರನ್ನು ರಷ್ಯಾ-ಉಕ್ರೇನ್ ಗಡಿಯಲ್ಲಿ ಯುದ್ಧದ ಮುಂಭಾಗಕ್ಕೆ ಕಳುಹಿಸಲಾಗಿದೆ ಎಂದು ಆರೋಪಿಸಲಾಗಿತ್ತು. ರಷ್ಯಾ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕೇಂದ್ರ ಸರ್ಕಾರ ಸುಮಾರು 50ಕ್ಕೂ ಹೆಚ್ಚು ಯುವಕರನ್ನು ಭಾರತಕ್ಕೆ ವಾಪಸ್ ಕರೆತರಲಾಗಿತ್ತು.
eesanje/url_47_144_2.txt ADDED
@@ -0,0 +1,5 @@
 
 
 
 
 
 
1
+ ಚುನಾವಣಾ ಬಾಂಡ್ ಖರೀದಿಸಿಲ್ಲ: ಕಿರಣ್ ಮಜುಂದಾರ್ ಶಾ
2
+ ನವದೆಹಲಿ,ಮಾ.18- ಯಾವುದೇ ರಾಜಕೀಯ ಪಕ್ಷಗಳಿಗೆ ನಮ್ಮ ಸಂಸ್ಥೆ ಚುನಾವಣಾ ಬಾಂಡ್ ಮೂಲಕ ದೇಣಿಗೆ ನೀಡಿಲ್ಲ ಎಂದು ಬೆಂಗಳೂರು ಮೂಲದ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ ಹೇಳಿದ್ದಾರೆ. ಆದಾಗ್ಯೂ, ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ನೇತೃತ್ವದ ಜನತಾ ದಳ (ಜಾತ್ಯತೀತ) ಸೇರಿದಂತೆ ಹಲವು ಪಕ್ಷಗಳಿಗೆ ದೇಣಿಗೆ ನೀಡಲು ವೈಯಕ್ತಿಕ ಮಟ್ಟದಲ್ಲಿ ಚುನಾವಣಾ ದೇಣಿಗೆ ನೀಡಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
3
+ ಚುನಾವಣೆಗಾಗಿ ಬಯೋಕಾನ್ ಜೆಡಿಎಸ್ ಅಥವಾ ಇತರ ಯಾವುದೇ ಪಕ್ಷಕ್ಕೆ ಯಾವುದೇ ರಾಜಕೀಯ ದೇಣಿಗೆ ನೀಡಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದರು. ವೈಯಕ್ತಿಕ ಮಟ್ಟದಲ್ಲಿ, ನಾನು ಜೆಡಿಎಸ್ ಮತ್ತು ಹಲವಾರು ಪಕ್ಷಗಳಿಗೆ ದೇಣಿಗೆ ನೀಡಿದ ಚುನಾವಣಾ ಬಾಂಡ್‍ಗಳನ್ನು ಖರೀದಿಸಿದೆ. ಚುನಾವಣೆಗೆ ಹಣ ನೀಡುವ ತತ್ವದ ಮೇಲೆ ನನ್ನ ದೇಣಿಗೆಗಳು ನಾಮಮಾತ್ರವಾಗಿದೆ ಎಂದು ಅವರು ಎಕ್ಸ್‍ನಲ್ಲಿನ ಪೋಸ್ಟ್‍ನಲ್ಲಿ ಹೇಳಿದ್ದಾರೆ.
4
+ 28 ಸ್ಥಾನಗಳನ್ನು ಗೆಲ್ಲುವಲ್ಲಿ ವಿಜಯೇಂದ್ರ ಯಶಸ್ವಿಯಾಗಲಿ: ಈಶ್ವರಪ್ಪ
5
+ ಎಲೆಕ್ಟೋರಲ್ ಬಾಂಡ್‍ಗಳನ್ನು ಬಳಸಿಕೊಂಡು ಅವರು ಎಷ್ಟು ದೇಣಿಗೆ ನೀಡಿದ್ದಾರೆ ಎಂಬುದರ ಕುರಿತು ಎಕ್ಸ್‍ನಲ್ಲಿ ಬಳಕೆದಾರರಿಂದ ಲೆಕ್ಕಾಚಾರದ ದೋಷವನ್ನು ಸೂಚಿಸಿದ ಕೆಲವು ದಿನಗಳ ನಂತರ ಅವರ ಸ್ಪಷ್ಟೀಕರಣವು ಬಂದಿದೆ. ಕಳೆದ ವರ್ಷ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಗೂ ಮುನ್ನ ಪ್ರತಿ ತಿಂಗಳು ? 5 ಕೋಟಿ ದೇಣಿಗೆ ನೀಡುತ್ತಿದ್ದರು ಎಂದು ಬಳಕೆದಾರರೊಬ್ಬರು ಹೇಳಿಕೊಂಡಿದ್ದರು. ಈ ಪೋಸ್ಟ್‍ಗೆ ಉತ್ತರಿಸಿರುವ ಶಾ ಅವರು ನಿಮ್ಮ ಗಣಿತ ತಪ್ಪು ನಾವು ಇದುವರೆಗೂ ಕೇವಲ 6ಕೋಟಿ ರೂ.ಗಳನ್ನು ಮಾತ್ರ ನೀಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
eesanje/url_47_144_3.txt ADDED
@@ -0,0 +1,6 @@
 
 
 
 
 
 
 
1
+ ಹಳಿತಪ್ಪಿದ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್‌ ರೈಲು
2
+ ಅಜ್ಮೀರ್, ಮಾ.18-ಇಂದು ಬೆಳಗ್ಗೆ ರಾಜಸ್ಥಾನದ ಅಜ್ಮೀರ್ ನಿಲ್ದಾಣದ ಬಳಿ ಸಬರಮತಿ-ಆಗ್ರಾ ಸೂಪರ್‌ಫಾಸ್ಟ್‌ ರೈಲಿನ ನಾಲ್ಕು ಬೋಗಿಗಳು ಹಳಿತಪ್ಪಿವೆ. ಬೆಳಗಿನ ಜಾವ 1 ಗಂಟೆ ಸುಮಾರಿಗೆ ಸಂಭವಿಸಿದ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3
+ ರೈಲು ಎಕ್ಸ್‍ಪ್ರೆಸ್ ರೈಲು ಆಗ್ರಾಕ್ಕೆ ತೆರಳುತ್ತಿತ್ತು,ಅಜ್ಮೀರ್ ನಿಲ್ದಾಣವನ್ನು ದಾಟಿ ಮದರ್ ನಿಲ್ದಾಣವನ್ನು ತಲುಪುವ ಹಂತದಲ್ಲಿದ್ದಾಗ ಈ ಘಟನೆ ಸಂಭವಿಸಿದೆ. ಹಳಿ ತಪ್ಪಲು ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ವಾಯುವ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿ ಕಿರಣ್ ತಿಳಿಸಿದ್ದಾರೆ.
4
+ ಪೊನ್ಮುಡಿಗೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರ ನಿರಾಕರಣೆ
5
+ ಪ್ರಯಾಣಿಕರಿಗೆ ಯಾವುದೇ ಗಾಯ ಅಥವಾ ಸಾವುನೋವು ವರದಿಯಾಗಿಲ್ಲ. ದೆಹಲಿಯ ಕಡೆಗೆ ಮೇಲಕ್ಕೆ/ಕೆಳಗಿನ ದಿಕ್ಕಿನಲ್ಲಿ ರೈಲು ಸಂಚಾರ ಈಗಾಗಲೇ ಪ್ರಾರಂಭವಾಗಿದೆ. ನಾವು ಉತ್ತರ ಪ್ರದೇಶ ದಿಕ್ಕಿನಲ್ಲಿಯೂ ಸೇವೆಗಳನ್ನು ಪ್ರಾರಂಭಿಸಲಿದ್ದೇವೆ ಎಂದು ಅವರು ಹೇಳಿದರು. ಅಜ್ಮೀರ್ ನಿಲ್ದಾಣದಲ್ಲಿ ಸಹಾಯವಾಣಿಯನ್ನು ಸ್ಥಾಪಿಸಿದೆ ಮತ್ತು ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಬಂಧಿಕರಿಗಾಗಿ ಸಹಾಯವಾಣಿ ಸಂಖ್ಯೆ — 0145-2429642 ಅನ್ನು ಸಹ ಬಿಡುಗಡೆ ಮಾಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
6
+ ಘಟನೆಯಿಂದಾಗಿ ಆರು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಎರಡು ರೈಲುಗಳನ್ನು ಬೇರೆ ಮಾರ್ಗಗಳಿಗೆ ತಿರುಗಿಸಲಾಗಿದೆ ಎಂದು ಕಿರಣ್ ಹೇಳಿದರು.
eesanje/url_47_144_4.txt ADDED
@@ -0,0 +1,6 @@
 
 
 
 
 
 
 
1
+ ರಾಜಕೀಯಕ್ಕೆ ಲಾಲೂ ಪುತ್ರಿ ಎಂಟ್ರಿ
2
+ ಪಾಟ್ನಾ,ಮಾ.18- ರಾಷ್ಟ್ರೀಯ ಜನತಾ ದಳ (ಆರ್‍ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ರಾಜಕೀಯಕ್ಕೆ ಪ್ರವೇಶಿಸಲು ನಿರ್ಧರಿಸಿದ್ದು ಅವರು ಬಿಹಾರದ ಸರನ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಪಾದಾರ್ಪಣೆ ಮಾಡಲು ಸಿದ್ಧರಾಗಿದ್ದಾರೆ ಎಂದು ತಿಳಿದುಬಂದಿದೆ. ಇದು ಸಂಭವಿಸಿದಲ್ಲಿ, 44 ವರ್ಷದ ಲಾಲೂ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ ಅವರ ನಾಲ್ಕನೇ ಮಗು ರಾಜಕೀಯಕ್ಕೆ ಪ್ರವೇಶಿಸಿದಂತಾಗುತ್ತದೆ.
3
+ ರೋಹಿಣಿ ಅವರ ಸಹೋದರ ತೇಜಸ್ವಿ ಯಾದವ್ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಆರ್‍ಜೆಡಿ ಅಧ್ಯಕ್ಷರಾಗಿದ್ದಾರೆ. ಆಕೆಯ ಇತರ ಇಬ್ಬರು ಒಡಹುಟ್ಟಿದವರಾದ ತೇಜ್ ಪ್ರತಾಪ್ ಯಾದವ್ ಮತ್ತು ಮಿಶಾ ಭಾರತಿ ಕ್ರಮವಾಗಿ ಬಿಹಾರ ವಿಧಾನಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಯಾದವ್ ಕುಟುಂಬಕ್ಕೆ ನಿಕಟವಾಗಿರುವ ಬಿಹಾರ ವಿಧಾನ ಪರಿಷತ್ತಿನ ಸದಸ್ಯ ಸುನಿಲ್ ಕುಮಾರ್ ಸಿಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ರೋಹಿಣಿ ಅವರ ರಾಜಕೀಯ ಪ್ರವೇಶದ ಬಗ್ಗೆ ಊಹಾಪೋಹಗಳು ಉಲ್ಬಣಗೊಂಡಿವೆ.
4
+ ಡಾ ರೋಹಿಣಿ ಆಚಾರ್ಯ ಅವರು ತಮ್ಮ ತಂದೆಯ ಮೇಲಿನ ಪ್ರೀತಿ, ಭಕ್ತಿ ಮತ್ತು ಸಮರ್ಪಣೆಯನ್ನು ಸಂಕೇತಿಸುತ್ತಾರೆ. ಸರನ್ ಪ್ರದೇಶದ ಎಲ್ಲಾ ಪಕ್ಷದ ಕಾರ್ಯಕರ್ತರು ಅವರನ್ನು ಸರನ್‍ಗೆ ಪಕ್ಷದ ಲೋಕಸಭಾ ಅಭ್ಯರ್ಥಿಯಾಗಿ ಹೆಸರಿಸಬೇಕೆಂದು ಬಯಸುತ್ತಾರೆ ಎಂದು ಸಿಂಗ್ ನಿನ್ನೆ ಪೋಸ್ಟ್ ಮಾಡಿದ್ದಾರೆ. ಈ ತಿಂಗಳ ಆರಂಭದಲ್ಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ನಡೆದ ಆರ್‍ಜೆಡಿ ರ್ಯಾಲಿಯಲ್ಲಿ ಎಂಎಸ್ ರೋಹಿಣಿ ಕೂಡ ಉಪಸ್ಥಿತರಿದ್ದರು. ಸರನ್ ಲೋಕಸಭಾ ಕ್ಷೇತ್ರವನ್ನು ಪ್ರಸ್ತುತ ಬಿಜೆಪಿಯ ರಾಜೀವ್ ಪ್ರತಾಪ್ ರೂಡಿ ಹೊಂದಿದ್ದಾರೆ. ಇದನ್ನು ಹಿಂದೆ ಲಾಲು ಪ್ರಸಾದ್ ಯಾದವ್ ಪ್ರತಿನಿಧಿಸಿದ್ದರು.
5
+ ರೋಹಿಣಿ ಆಚಾರ್ಯ ಯಾರು?ರೋಹಿಣಿ ಆಚಾರ್ಯ ಅವರು ಶಿಕ್ಷಣದಿಂದ ವೈದ್ಯರಾಗಿದ್ದಾರೆ 2002 ರಲ್ಲಿ, ಅವರು ಇಂಜಿನಿಯರ್ ಮತ್ತು ನಿವೃತ್ತ ಆದಾಯ ತೆರಿಗೆ ಅಧಿಕಾರಿ ಮತ್ತು ಲಾಲು ಯಾದವ್ ಅವರ ಸ್ನೇಹಿತ ರೈ ರಣವಿಜಯ್ ಸಿಂಗ್ ಅವರ ಮಗ ಸಮರೇಶ್ ಸಿಂಗ್ ಅವರನ್ನು ವಿವಾಹವಾಗಿದ್ದರು. ಕಳೆದ ಎರಡು ದಶಕಗಳಲ್ಲಿ ಅವರು ತಮ್ಮ ಪತಿ ಜತೆ ಸಿಂಗಾಪುರ ಮತ್ತು ಯುಎಸ್‍ನಲ್ಲಿ ವಾಸಿಸುತ್ತಿದ್ದಾರೆ. ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.
6
+ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ಆಚಾರ್ಯ ಅವರು 2022 ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ತಮ್ಮ ತಂದೆ ಲಾಲೂ ಅವರಿಗೆ ತಮ್ಮ ಕಿಡ್ನಿಗಳಲ್ಲಿ ಒಂದನ್ನು ದಾನ ಮಾಡಿದ್ದರು. ಈ ಹಿಂದೆ, 2017 ರಲ್ಲೇ ಅವರು ಅಸೆಂಬ್ಲಿ ಚುನಾವಣೆಯಲ್ಲಿ ಮೂಲಕ ತಮ್ಮ ರಾಜಕೀಯ ಪಾದಾರ್ಪಣೆ ಮಾಡುತ್ತಾರೆ ಎಂಬ ಊಹಾಪೋಹವಿತ್ತು. ಆದರೆ ಅಂತಿಮವಾಗಿ ಅದು ಆಗಲಿಲ್ಲ.
eesanje/url_47_144_5.txt ADDED
@@ -0,0 +1,8 @@
 
 
 
 
 
 
 
 
 
1
+ ಪೊನ್ಮುಡಿಗೆ ಪ್ರಮಾಣ ವಚನ ಬೋಧಿಸಲು ರಾಜ್ಯಪಾಲರ ನಿರಾಕರಣೆ
2
+ ಚೆನ್ನೈ,ಮಾ.18- ಕೆ.ಪೊನ್ಮುಡಿ ಅವರನ್ನು ಮತ್ತೆ ಸಚಿವರಾಗಲು ಪ್ರಮಾಣ ವಚನ ಬೋಧಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮಾಡಿರುವ ಶಿಫರಸನ್ನು ತಮಿಳುನಾಡು ರಾಜ್ಯಪಾಲ ಆರ್. ಎನ್.ರವಿ ನಿರಾಕರಿಸಿದ್ದಾರೆ.
3
+ ಅನರ್ಹಗೊಂಡ ತಮಿಳುನಾಡು ಸಚಿವ ಮತ್ತು ಡಿಎಂಕೆ ಹಿರಿಯ ನಾಯಕ ಕೆ ಪೊನ್ಮುಡಿ ಅವರನ್ನು ಮಾರ್ಚ್ 13, 2024 ರಂದು ಅಕ್ರಮ ಆಸ್ತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಅವರ ಅಪರಾಧ ಮತ್ತು ಮೂರು ವರ್ಷಗಳ ಜೈಲು ಶಿಕ್ಷೆಗೆ ತಡೆ ನೀಡಿದ ಕೆಲವು ದಿನಗಳ ನಂತರ ಅವರನ್ನು ಮರುಸೇರ್ಪಡೆ ಮಾಡಿಕೊಳ್ಳಲಾಗಿತ್ತು.ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯವು ಪೊನ್ಮುಡಿ ಮತ್ತು ಅವರ ಪತ್ನಿ ವಿಶಾಲಾಕ್ಷಿ ವಿರುದ್ಧ 2011 ರಲ್ಲಿ ಪ್ರಕರಣ ದಾಖಲಿಸಿತ್ತು. 2006 ರಿಂದ 2011 ರವರೆಗೆ ಡಿಎಂಕೆ ಆಡಳಿತದಲ್ಲಿ ಪೊನ್ಮುಡಿ ಉನ್ನತ ಶಿಕ್ಷಣ ಮತ್ತು ಗಣಿ ಸಚಿವರಾಗಿದ್ದರು.
4
+ ರಾಜ್ಯ ವಿಧಾನಸಭಾ ಸ್ಪೀಕರ್ ಎಂ.ಅಪ್ಪಾವು ಅವರು ಪೊನ್ಮುಡಿ ಅವರನ್ನು ಮರುಸೇರ್ಪಡೆಗೊಳಿಸಿದ್ದು, ಅವರು ವಿಧಾನಸಭೆಯ ಸದಸ್ಯರಾಗಿ ಮುಂದುವರಿಯಲಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ಪೊನ್ಮುಡಿ ಅವರ ಸದಸ್ಯತ್ವವನ್ನು ಮರುಸ್ಥಾಪಿಸಲಾಗಿದೆ ಎಂದು ಹೇಳಿದ್ದರು.
5
+ ಇದೇ ವೇಳೆ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ತಮಿಳುನಾಡು ರಾಜ್ಯಪಾಲ ಆರ್ ಎನ್ ರವಿ ಅವರಿಗೆ ಪತ್ರ ಬರೆದು ಡಿಎಂಕೆ ಹಿರಿಯ ನಾಯಕ ಪೊನ್ಮುಡಿ ಸಚಿವರಾಗಿ ಪ್ರಮಾಣ ವಚನ ಬೋದಿಸುವಂತೆ ಕೋರಿದ್ದರು.ಪೊನ್ಮುಡಿ (ಡಿಎಂಕೆ ಹಿರಿಯ ನಾಯಕ ಮತ್ತು ಮಾಜಿ ಉನ್ನತ ಶಿಕ್ಷಣ ಸಚಿವ) ಅವರ ದೋಷಾರೋಪಣೆಯನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕದ ಕಾರಣ ಅವರಿಗೆ ಪ್ರಮಾಣ ವಚನ ಬೋಧಿಸಲು ಸಾಧ್ಯವಿಲ್ಲ ಎಂದು ರಾಜ್ಯಪಾಲ ಆರ್‍ಎನ್ ರವಿ ರಾಜ್ಯ ಸರ್ಕಾರಕ್ಕೆ ಪತ್ರ ಕಳುಹಿಸಿದ್ದಾರೆ. ಪೊನ್ಮುಡಿ ಅವರನ್ನು ಮತ್ತೆ ಸಚಿವರನ್ನಾಗಿ ಮಾಡಲು ರಾಜ್ಯಪಾಲರು ಅಸಮರ್ಥತೆ ವ್ಯಕ್ತಪಡಿಸಿದ್ದಾರೆ.
6
+ ಐದಂತಸ್ತಿನ ಕಟ್ಟಡ ಕುಸಿದು ಇಬ್ಬರ ದುರ್ಮರಣ
7
+ ಕಳೆದ ಮಾರ್ಚ್ 1 ರಂದು ತಮಿಳುನಾಡು ವಿರೋಧ ಪಕ್ಷದ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಅವರು ರಾಜ್ಯ ವಿಧಾನಸಭೆಯ ಸದಸ್ಯರಾಗಿ ಕೆ.ಪೊನ್ಮುಡಿ ಅವರನ್ನು ಅನರ್ಹಗೊಳಿಸಿದ ಮತ್ತು ಅದರ ಪರಿಣಾಮವಾಗಿ ವಿಧಾನಸಭೆ ಸ್ಥಾನವನ್ನು ತೆರವುಗೊಳಿಸುವುದಕ್ಕೆ ಸಂಬಂಧಿಸಿದಂತೆ ಸ್ಪೀಕರ್ ಅಪ್ಪಾವು ಅವರಿಗೆ ಪತ್ರ ಬರೆದಿದ್ದರು.
8
+ ತಿರುಕ್ಕೊಯಿಲೂರು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಮತ್ತು ಪ್ರಸ್ತುತ ಸರ್ಕಾರದಲ್ಲಿ ಸಚಿವರೂ ಆಗಿರುವ ಕೆ.ಪೊನ್ಮುಡಿ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಕ್ಕಾಗಿ ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಅಪರಾ„ ಎಂದು ಸಾಬೀತಾಗಿರುವ ಸಂಗತಿ ನಿಮ್ಮ ಕಚೇರಿಗೆ ತಿಳಿದಿದೆ. ಡಿಸೆಂಬರ್ 21, 2023 ರ ಆದೇಶದ ಪ್ರಕಾರ ಮದ್ರಾಸ್ ಹೈಕೋರ್ಟ್ ತಿಳಿದಿರುವ ಆದಾಯದ ಮೂಲಕ���ಕೆ ಅಸಮಾನವಾಗಿದೆ. ಹೈಕೋರ್ಟ್ ನೀಡಿದ ಶಿಕ್ಷೆಯ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿಲ್ಲ, ಎಂದು ಎಡಪ್ಪಾಡಿ ಪಳನಿಸ್ವಾಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
eesanje/url_47_144_6.txt ADDED
@@ -0,0 +1,4 @@
 
 
 
 
 
1
+ ಟ್ರ್ಯಾಕ್ಟರ್ – ಜೀಪ್ ನಡುವೆ ಡಿಕ್ಕಿ: 7 ಮಂದಿ ಸಾವು
2
+ ಖಗಾರಿಯಾ, ಮಾ 18 (ಪಿಟಿಐ) ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಟ್ರ್ಯಾಕ್ಟರ್ ಮತ್ತು ಜೀಪ್ ನಡುವೆ ಡಿಕ್ಕಿ ಸಂಭವಿಸಿ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ಎರಡು ವಾಹನಗಳು ಮುಖಾಮುಖಿ ಡಿಕ್ಕಿಯಾಗಿ ಪಸ್ರಾಹಾ ಪ್ರದೇಶದ ಪೆಟ್ರೋಲ್ ಪಂಪ್ ಬಳಿ ಇಂದು ಬೆಳಿಗ್ಗೆ 6.30 ರ ಸುಮಾರಿಗೆ ಅಪಘಾತ ಸಂಭವಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಜೀಪಿನಲ್ಲಿ ಪ್ರಯಾಣಿಸುತ್ತಿದ್ದವರು ಮದುವೆ ಸಮಾರಂಭ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಟ್ರಾಕ್ಟರ್ ಓವರ್ ಲೋಡ್ ಆಗಿದ್ದು, ಅದಕ್ಕೆ ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ನಲ್ಲಿದ್ದವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಗಾಯಗೊಂಡ ಎಲ್ಲ ಜನರನ್ನು ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
4
+ ಖಗಾರಿಯಾ ಪೊಲೀಸ್ ಚಂದನ್ ಕುಶ್ವಾಹ, ಹಿರಿಯ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಹೇಳಿದರು.
eesanje/url_47_144_7.txt ADDED
@@ -0,0 +1,5 @@
 
 
 
 
 
 
1
+ ಐದಂತಸ್ತಿನ ಕಟ್ಟಡ ಕುಸಿದು ಇಬ್ಬರ ದುರ್ಮರಣ
2
+ ಕೋಲ್ಕತ್ತಾ, ಮಾ 18 (ಪಿಟಿಐ) ಕೋಲ್ಕತ್ತಾದ ಗಾರ್ಡನ್ ರೀಚ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ಕುಸಿದು ಇಬ್ಬರು ಸಾವನ್ನಪ್ಪಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ ಎಂದು ನಗರದ ಮೇಯರ್ ಫಿರ್ಹಾದ್ ಹಕೀಮ್ ಹೇಳಿದ್ದಾರೆ.ಇನ್ನೂ ಕೆಲವರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹಕೀಮ್ ಶಂಕಿಸಿದ್ದಾರೆ.
3
+ ನಗರದ ಪಶ್ಚಿಮ ಪರಿ„ಯ ಅಜಾನ್ ಮೊಲ್ಲಾ ಲೇನ್‍ನಲ್ಲಿರುವ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.ಕೋಲ್ಕತ್ತಾ ಮುನ್ಸಿಪಲ್ ಕಾರ್ಪೋರೇಶನ್‍ನ ಗಾರ್ಡನ್ ರೀಚ್ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದ ಮನೆ ಕುಸಿತದ ದುರಂತದ ಬಗ್ಗೆ ತಿಳಿದುಕೊಳ್ಳಲು ದುಃಖವಾಗಿದೆ.
4
+ ನಮ್ಮ ಮೇಯರ್, ಅಗ್ನಿಶಾಮಕ ಸಚಿವರು, ಕಾರ್ಯದರ್ಶಿಗಳು ಮತ್ತು ಪೊಲೀಸ್ ಆಯುಕ್ತರು, ನಾಗರಿಕ, ಪೊಲೀಸ್ , ಅಗ್ನಿಶಾಮಕ ಮತ್ತು ವಿಪತ್ತು ನಿರ್ವಹಣಾ ಅಧಿಕಾರಿಗಳು ಮತ್ತು ತಂಡಗಳು ( ಎನ್‍ಡಿಆರ್‍ಎ- ಕೆಎಂಸಿ ಮತ್ತು ಕೆಪಿ ತಂಡಗಳು ಸೇರಿದಂತೆ) ವಿಪತ್ತು ತಗ್ಗಿಸಲು ರಾತ್ರಿಯಿಡೀ ಸ್ಥಳದಲ್ಲಿಯೇ ಇದ್ದವು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಎಕ್ಸ್‍ನಲ್ಲಿ ಬರೆದಿದ್ದಾರೆ. ಮೃತರ ಮತ್ತು ಗಾಯಗೊಂಡ ವ್ಯಕ್ತಿಗಳ ಸಂಬಂಧಿಕರಿಗೆ ಸರ್ಕಾರ ಪರಿಹಾರವನ್ನು ನೀಡುತ್ತದೆ ಎಂದು ಅವರು ಹೇಳಿದರು.
5
+ ನಾವು ಸಂಕಷ್ಟದಲ್ಲಿರುವ ಕುಟುಂಬಗಳ ಪರವಾಗಿ ನಿಲ್ಲುತ್ತೇವೆ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರಿಯುತ್ತವೆ ಎಂದು ಬ್ಯಾನರ್ಜಿ ಮೈಕ್ರೋಬ್ಲಾಗಿಂಗ್ ಸೈಟ್‍ನಲ್ಲಿ ಹೇಳಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡವು ಮಧ್ಯರಾತ್ರಿಯ ಸುಮಾರಿಗೆ ಕುಸಿದಿದೆ. ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ ಏಳು ಜನರು ಗಾಯಗೊಂಡಿದ್ದಾರೆ ಎಂದು ಹಕೀಮ್ ಹೇಳಿದರು. ಸ್ಥಳದಿಂದ ಕನಿಷ್ಠ 10 ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
eesanje/url_47_144_8.txt ADDED
@@ -0,0 +1,5 @@
 
 
 
 
 
 
1
+ ಇಡಿ ನೀಡಿದ ಮತ್ತೊಂದು ಸಮನ್ಸ್‍ಗೂ ಕೇಜ್ರಿ ಡೋಂಟ್‍ಕೇರ್
2
+ ನವದೆಹಲಿ, ಮಾ 18 (ಪಿಟಿಐ) ದೆಹಲಿ ಜಲ ಮಂಡಳಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ಕೂಡ ಇಡಿ ಮುಂದೆ ಹಾಜರಾಗಲು ನಿರಾಕರಿಸಿದ್ದಾರೆ. ಆಮ್ ಆದ್ಮಿ ಪಕ್ಷವು (ಎಎಪಿ) ಸಮನ್ಸ್ ಅನ್ನು ಕಾನೂನುಬಾಹಿರ ಎಂದು ಕರೆದಿದೆ ಮತ್ತು ಕೇಂದ್ರದ ಬಿಜೆಪಿ ಸರ್ಕಾರವು ಕೇಜ್ರಿವಾಲ್ ಅವರನ್ನು ಗುರಿಯಾಗಿಸಲು ಜಾರಿ ನಿರ್ದೇಶನಾಲಯವನ್ನು (ಇಡಿ) ಬಳಸುತ್ತಿದೆ ಎಂದು ಆರೋಪಿಸಿದೆ.
3
+ ಡಿಜೆಬಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಹಣ ವರ್ಗಾವಣೆ ತನಿಖೆಯಲ್ಲಿ ಇಡಿ ಕೇಜ್ರಿವಾಲ್ ಅವರನ್ನು ವಿಚಾರಣೆಗೆ ಕರೆದಿತ್ತು. ಎಎಪಿ ರಾಷ್ಟ್ರೀಯ ಸಂಚಾಲಕರೂ ಆಗಿರುವ 55ರ ಹರೆಯದ ರಾಜಕಾರಣಿಗೆ ಸಮನ್ಸ್ ನೀಡಲಾಗಿರುವ ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನಡಿ ದಾಖಲಾಗಿರುವ ಎರಡನೇ ಪ್ರಕರಣ ಇದಾಗಿದೆ.
4
+ ದೆಹಲಿ ಅಬಕಾರಿ ನೀತಿ ಸಂಬಂ„ತ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರು ಈಗಾಗಲೇ ವಿಚಾರಣೆಗೆ ಸಮನ್ಸ್ ಎದುರಿಸುತ್ತಿದ್ದಾರೆ. ಕೇಜ್ರಿವಾಲ್ ಈ ಪ್ರಕರಣದಲ್ಲಿ ಇದುವರೆಗೆ ಎಂಟು ಸಮನ್ಸ್‍ಗಳನ್ನು ಬಿಟ್ಟುಬಿಟ್ಟಿದ್ದಾರೆ, ಅವುಗಳನ್ನು ಕಾನೂನುಬಾಹಿರ ಎಂದು ಹೇಳಿದ್ದಾರೆ.
5
+ ಅಬಕಾರಿ ನೀತಿ ಪ್ರಕರಣದಲ್ಲಿ ಅಂತಹ ಹೊಸ ಮತ್ತು ಒಂಬತ್ತನೇ ನೋಟೀಸ್ ಮಾರ್ಚ್ 21 ರಂದು ಇಡಿ ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಷರತ್ತು ವಿಧಿಸಿದೆ.
eesanje/url_47_144_9.txt ADDED
@@ -0,0 +1,4 @@
 
 
 
 
 
1
+ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಗೆ ಗುಂಡಿಕ್ಕಿ ಹತ್ಯೆ
2
+ ಪುಣೆ, ಮಾ 17-ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಪುಣೆ ಜಿಲ್ಲೆಯ ಇಂದಾಪುರ ಪ್ರದೇಶದಲ್ಲಿ ಕಳೆದ ರಾತ್ರಿ ನಡೆದಿದೆ.ಮೃತರನ್ನು ಅವಿನಾಶ್ ಧನ್ವೆ ಎಂದು ಗುರುತಿಸಲಾಗಿದ್ದು, ಸುಮಾರು 8 ಜನರ ಗುಂಪು ಏಕಾ ಏಕಿ ಆತನ ಮೇಲೆ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
3
+ ಕೊಲೆಗೆ ಹೆಳೇ ದ್ವೇಷದ ಕಾರಣ ಎಂದು ಹೇಳಲಾಗುತ್ತಿದೆ,ಸಿಸಿಟಿವಿ ದೃಶ್ಯಾವಳಿಯಲ್ಲಿ ಈ ಭೀಕರ ಘಟನೆಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.ಹಂತರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಪುಣೆ ಗ್ರಾಮಾಂತರ ಪೊಲೀಸ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
4
+ ಈತನ ಮೇಲೆ ಅನೇಕ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು .ಪ್ರಾಥಮಿಕ ಮಾಹಿತ ಪ್ರಕಾರ ಪ್ರತಿಸ್ರ್ಪಗುಂಪಿನೊಂದಿಗಿನ ದ್ವೇಷ ಹತ್ಯೆಗೆ ಕಾರಣವೆಂದು ತೋರುತ್ತದೆ, ಘಟನೆಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
eesanje/url_47_145_1.txt ADDED
@@ -0,0 +1,38 @@
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
 
1
+ : ಮಹಾಸಮರಕ್ಕೆ ಮಹೂರ್ತ ಫಿಕ್ಸ್, ಇಲ್ಲಿದೆ ಲೋಕಕದನದ ವೇಳಾಪಟ್ಟಿ
2
+ ನವದದೆಹಲಿ,ಮಾ.16- ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತದ 18ನೇ ಲೋಕಸಭೆ ಚುನಾವಣೆ ಏ.19ರಿಂದ ಜೂನ್1ರವರೆಗೆ ಏಳು ಹಂತಗಳಲ್ಲಿ ನಡೆಯಲಿದ್ದು, ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನವದೆಹಲಿಯ ವಿಜ್ಞಾನ ಭವನದಲ್ಲಿ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್‍ಕುಮಾರ್ ಲೋಕಸಭೆ ಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.
3
+ 543 ಲೋಕಸಭಾ ಕ್ಷೇತ್ರಗಳಿಗೆ ಒಟ್ಟು ಏಳು ಹಂತದಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ಏ.19, ಎರಡನೇ ಹಂತದ ಏ.26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಹಾಗೂ ಕೊನೆಯ ಏಳನೇ ಹಂತದ ಮತದಾನ ಜೂನ್ 1ರಂದು ನಡೆಯಲಿದೆ.
4
+ ಅರುಣಾಚಲ ಪ್ರದೇಶ, ಅಂಡಮಾನ್ ನಿಕೋಬಾರ್, ಛತ್ತೀಸ್‍ಘಡ, ದಾದರ್ ಮತ್ತು ಹವೇಲಿ, ದೆಹಲಿ, ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಹರಿಯಾಣ, ಕೇರಳ, ಲಕ್ಷದ್ವೀಪ, ಲಡಾಖ್, ಮಿಜೋರಾಂ, ಮೇಘಾಲಯ, ನಾಗಲ್ಯಾಂಡ್, ಪುದುಚೇರಿ, ಸಿಕ್ಕಿಂ, ತಮಿಳುನಾಡು, ಪಂಜಾಬ್, ತೆಲಂಗಾಣ ಹಾಗೂ ಉತ್ತರಖಂಡ್‍ನಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಕರ್ನಾಟಕ, ರಾಜಸ್ಥಾನ, ತ್ರಿಪುರ, ಮತ್ತು ಮಣಿಪುರದಲ್ಲಿ ಎರಡನೇ ಹಂತದ ಮತದಾನ ನಡೆದರೆ ಛತ್ತೀಸ್‍ಘಡ ಮತ್ತು ಅಸ್ಸಾಂನಲ್ಲಿ ಮೂರು ಹಂತದ ಮತದಾನ ನಡೆಸಲು ಆಯೋಗ ತೀರ್ಮಾನಿಸಿದೆ.
5
+ ಒಡಿಸ್ಸಾ, ಮಧ್ಯಪ್ರದೇಶ ಮತ್ತು ಜಾರ್ಖಂಡ್‍ನಲ್ಲಿ ನಾಲ್ಕು ಹಂತ, ಮಹಾರಾಷ್ಟ್ರ, ಜಮ್ಮುಕಾಶ್ಮೀರದಲ್ಲಿ 5 ಹಂತ ಹಾಗೂ ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿ ದೇಶಾದ್ಯಂತ 97 ಕೋಟಿ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲಿದ್ದು, ಮೊದಲ ಬಾರಿಗೆ ಅಂದರೆ 18ರಿಂದ 19 ವರ್ಷದೊಳಗಿನ ಸುಮಾರು 1.80 ಕೋಟಿ ಮತದಾರರು ಮತದಾನದ ಹಕ್ಕು ಹೊಂದಿದ್ದಾರೆ.
6
+ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಿಂದಲೇ ಮತ ಚಲಾಯಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಬಾರಿ 12 ರಾಜ್ಯಗಳಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿದ್ದು, ಶೇ.40ಕ್ಕಿಂತ ಹೆಚ್ಚು ವಿಕಲಚೇತನರಿದ್ದರೆ ಅವರು ಕೂಡ ಮನೆಯಿಂದಲೇ ಮತ ಚಲಾಯಿಸಬಹುದು. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕಡ್ಡಾಯವಾಗಿ ತಮ್ಮ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
7
+ ಸುಳ್ಳು ಮಾಹಿತಿ ಮತ್ತು ನಕಲು ಸುದ್ದಿ, ನೀತಿಸಂಹಿತೆ ಉಲ್ಲಂಘನೆ, ತೋಳ್ಬಲ ಮತ್ತು ಹಣದ ಪ್ರಭಾವ ತಡೆಗಟ್ಟುವುದು ಚುನಾವಣಾ ಆಯೋಗಕ್ಕೆ ಈ ಬಾರಿ ಸವಾಲುಗಳಾಗಿವೆ ಎಂದು ಆಯೋಗದ ಮುಖ್ಯಸ್ಥರು ಹೇಳಿದ್ದಾರೆ. ಗಡಿಯಲ್ಲಿ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ದ್ರೋಣ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಮತದಾರರಿಗೆ ಕುಕ್ಕರ್, ಟಿವಿ, ಫ್ರಿಡ್ಜ್, ನಗದು, ಉಡುಗೊರೆಗಳು, ಮದ್ಯ ಸೇರಿದಂತೆ ಇತರೆ ಆಮಿಷವೊಡ್ಡಿದರೆ ಕಾನೂನು ಜರುಗಿಸುವುದಾಗಿ ���ಚ್ಚರಿಕೆ ನೀಡಿದರು.
8
+ ಸೂರ್ಯಾಸ್ತದ ಬಳಿಕ ಎಟಿಎಂ ವಾಹನಗಳ ಸಂಚಾರಕ್ಕೆ ಕಟ್ಟುನಿಟ್ಟಿನ ನಿಬಂಧನೆ ಹಾಕಿರುವ ಆಯೋಗ ಕಪ್ಪು ಹಣ ಸಾಗಿಸಿದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಎಚ್ಚರಿಕೆ ನೀಡಲಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಆಯೋಗ ಸುಳ್ಳು ಸುದ್ದಿ ಹಬ್ಬಿಸುವುದು, ಖಾಸಗಿ ಬದುಕಿನ ಮೇಲೆ ವಾಗ್ದಾಳಿ, ಜಾತಿ, ಧರ್ಮ ಆಧಾರಿತ ಪ್ರಚಾರ ಹಾಗೂ ಸುಳ್ಳು ಜಾಹಿರಾತು ನೀಡುವುದಕ್ಕೆ ನಿರ್ಬಂಧ ಹಾಕಿದೆ. ಮಕ್ಕಳನ್ನು ಚುನಾವಣಾ ಪ್ರಚಾರಕ್ಕೆ ಬಳಸುವಂತಿಲ್ಲ.
9
+ ಮೊದಲ ಹಂತ – ಏ.19ಒಟ್ಟು ಲೋಕಸಭಾ ಕ್ಷೇತ್ರಗಳು 102ಅಸೂಚನೆ ಮಾ.20ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಮಾ.27ನಾಮಪತ್ರಗಳ ಪರಿಶೀಲನೆ – ಮಾ.28ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಮಾ.30
10
+ ಎರಡನೇ ಹಂತ – ಏ.26ಒಟ್ಟು ಲೋಕಸಭಾ ಕ್ಷೇತ್ರಗಳು 89ಅಸೂಚನೆ ಮಾ.28ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏಪ್ರಿಲ್ 4ನಾಮಪತ್ರಗಳ ಪರಿಶೀಲನೆ – ಏಪ್ರಿಲ್ 5,ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಏಪ್ರಿಲ್ 8
11
+ ಮೂರನೇ ಹಂತ – ಮೇ7ಒಟ್ಟು ಲೋಕಸಭಾ ಕ್ಷೇತ್ರಗಳು 94ಅಸೂಚನೆ ಏಪ್ರಿಲ್12ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏಪ್ರಿಲ್ 19ನಾಮಪತ್ರಗಳ ಪರಿಶೀಲನೆ – ಏಪ್ರಿಲ್ 20ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಏಪ್ರಿಲ್ 22
12
+ ನಾಲ್ಕನೇ ಹಂತ – ಮೇ 13ಒಟ್ಟು ಲೋಕಸಭಾ ಕ್ಷೇತ್ರಗಳು 96ಅಸೂಚನೆ ಏ.18ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಏಪ್ರಿಲ್ 25ನಾಮಪತ್ರಗಳ ಪರಿಶೀಲನೆ – ಏಪ್ರಿಲ್ 26,ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಏಪ್ರಿಲ್ 29
13
+ ಐದನೇ ಹಂತ – ಮೇ 20ಒಟ್ಟು ಲೋಕಸಭಾ ಕ್ಷೇತ್ರಗಳು 49ಅಸೂಚನೆ ಏ.26ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಮೇ 3ನಾಮಪತ್ರಗಳ ಪರಿಶೀಲನೆ – ಮೇ 4ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಮೇ 6
14
+ ಆರನೇ ಹಂತ – ಮೇ 25ಒಟ್ಟು ಲೋಕಸಭಾ ಕ್ಷೇತ್ರಗಳು 57ಅಸೂಚನೆ ಏ.29ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಮೇ 6ನಾಮಪತ್ರಗಳ ಪರಿಶೀಲನೆ – ಮೇ 7ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಮೇ 9
15
+ 7ನೇ ಹಂತ – ಜೂನ್ 1ಒಟ್ಟು ಲೋಕಸಭಾ ಕ್ಷೇತ್ರಗಳು 57ಅಸೂಚನೆ ಮೇ 7ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಮೇ 14ನಾಮಪತ್ರಗಳ ಪರಿಶೀಲನೆ – ಮೇ 15ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನ ಮೇ 17
16
+ ಮತದಾರರ ವಿವರಗಳು :ಒಟ್ಟು ಮತದಾರರು 97 ಕೋಟಿ49.72 ಕೋಟಿ ಪುರುಷರು47.15 ಕೋಟಿ ಮಹಿಳೆಯರು2.18 ಶತಾಯುಷಿ ಮತದಾರರು80 ವರ್ಷ ದಾಟಿದವರು 1.98 ಕೋಟಿ20-29 ವರ್ಷದೊಳಗಿನವರು 19.74 ಕೋಟಿ18-19 ವರ್ಷದವರು 1.84 ಕೋಟಿಯುವತಿಯರು 85 ಲಕ್ಷ
17
+ 88 ಲಕ್ಷ ವಿಶೇಷ ವಿಕಲ ಚೇತನರುತೃತೀಯ ಲಿಂಗಿಗಳು 48 ಸಾವಿರ
18
+ ಒಟ್ಟು ಮತಗಟ್ಟೆ 10.5 ಲಕ್ಷಇವಿಎಂ 55 ಲಕ್ಷ4 ಲಕ್ಷ ವಾಹನ2100 ವೀಕ್ಷಕರ ನೇಮಕ1.5 ಕೋಟಿ ಭದ್ರತಾ ಸಿಬ್ಬಂದಿ ನಿಯೋಜನೆ
19
+
20
+
21
+
22
+
23
+
24
+
25
+
26
+
27
+
28
+
29
+
30
+
31
+
32
+
33
+
34
+
35
+
36
+ ಮತದಾರರ ಅಂಕಿಅಂಶ :
37
+ ಒಟ್ಟು ಮತದಾರರು 97 ಕೋಟಿ49.72 ಕೋಟಿ ಪುರುಷರು47.15 ಕೋಟಿ ಮಹಿಳೆಯರು80 ವರ್ಷ ದಾಟಿದವರು 1.98 ಕೋಟಿ20-29 ವರ್ಷದೊಳಗಿನವರು 19.74 ಕೋಟಿ18-19 ವರ್ಷದವರು 1.84 ಕೋಟಿಯುವತಿಯರು 85 ಲಕ್ಷ88 ಲಕ್ಷ ವಿಶೇಷ ವಿಕಲ ಚೇತನರು2.18 ಶತಾಯುಷಿ ಮತದಾರರು
38
+ ಒಟ್ಟು ಮತಗಟ್ಟೆ 10.5 ಲಕ್ಷಇವಿಎಂ 55 ಲಕ್ಷ4 ಲಕ್ಷ ವಾಹನ1.5 ಕೋಟಿ ಭದ್ರತಾ ಸಿಬ್ಬಂದಿ ನಿಯೋಜನೆ