diff --git a/Kannada Sahitya/article_10.txt b/Kannada Sahitya/article_10.txt new file mode 100644 index 0000000000000000000000000000000000000000..0f8c1333168d88291d1202c0af498db851d39b21 --- /dev/null +++ b/Kannada Sahitya/article_10.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +-೧- +ವೇದಗಳು ಒಟ್ಟು ಭಾರತೀಯ ಚರಿತ್ರೆಯಲ್ಲಿ ವಹಿಸಿರುವ ನಿರ್ಣಾಯಕ ಪಾತ್ರದ ಬಗೆಗೆ ಹೆಚ್ಚು ಸೂಕ್ಷ್ಮವಾದ ಚರ್ಚೆ ಆಗಬೇಕಿದೆ. ‘ವೇದ ಪ್ರಾಮಾಣ್ಯ’ ಎನ್ನುವುದೊಂದು ಆತ್ಯಂತಿಕ ಮಾನದಂಡ ಎಂಬಂತೆ ಬೆಳೆಯುತ್ತ ಬಂದದ್ದು ನಿಜವಾದರೂ, ಅದು ಪ್ರಶ್ನಾತೀತ ಎಂಬಂಥ ಸ್ಥಿತಿಯಂತೂ ಯಾವಾಗಲೂ ಸೃಷ್ಟಿಯಾಗಲಿಲ್ಲ. ಅದಕ್ಕಿಂತ ಹೆಚ್ಚಾಗಿ ಅದು ‘ಸರ್ವಾಧಿಕಾರ ಏಕಾರ್ಥ’ದ ಪಠ್ಯ ಎಂಬ ಸ್ಥಿತಿ ಯಾವಾಗಲೂ ಉಂಟಾಗಲಿಲ್ಲ. ಹೀಗಾಗಿ, ವೇದ ಎನ್ನುವುದಕ್ಕೆ ವ್ಯಾಖ್ಯಾನ ಮುಕ್ತತೆಯೇ ಮೂಲಭೂತ ಸ್ವಭಾವವಾಗಿದ್ದು, ವೇದಾಧಾರಿತ ಧರ್ಮಗಳು ಅವನ್ನು ಅನೇಕ ಸಾರಿ ಅಪಾರ ಏಕಾಗ್ರತೆಯಿಂದ ಸರ್ವಾಧಿಕಾರೀ ಏಕಾರ್ಥಕ್ಕೆ ತಿರುಗಿಸಲು ಪ್ರಯತ್ನಿಸಿದವು. ಉದಾಹರಣೆಗೆ, ಭಾರತೀಯ ಸನ್ನಿವೇಶದಲ್ಲಿ ಪಾಷಂಡಿತನದ ವ್ಯಾಖ್ಯೆಗೆ ವೇದಪ್ರಾಮಾಣ್ಯವನ್ನೇ ಬಳಸಲಾಯಿತು. ಫ್ಲಾಹರ್ಟಿ ‘ಹಿಂದೂ ಧರ್ಮದಲ್ಲಿನ ಪಾಷಂಡಿತನದ ಸ್ವರೂಪ’ ಎಂಬ ಲೇಖನದಲ್ಲಿ ಪಾಷಂಡಿತನದ ಪಟ್ತಿ ನೀಡುತ್ತಾಳೆ. ಯಾರು ಪಾಷಂಡಿಗಳಲ್ಲ? ಶಿವಾರಾಧಕರಲ್ಲಿ ಅನೇಕ ಪಂಥಗಳು ಪಾಷಂಡಿ. ವಿಷ್ಣು ಭಕ್ತಿಯ ಪಂಥಗಳಲ್ಲಿ ಅನೇಕವು ಪಾಷಂಡಿ. ಅವರು ಇವರನ್ನು ಅ-ವೈದಿಕ ಎನ್ನುತ್ತಿದ್ದರು. ಇವರು ಅವರನ್ನು ಅ-ವೈದಿಕ ಎನ್ನುತ್ತಿದ್ದರು. ಆದರೆ, ಅವೆಲ್ಲ ತುಂಬ ಪರಿಷ್ಕೃತವಾದ ತರ್ಕ-ವಿವಾದಗಳಾಗಿ ಮಾತ್ರ ಮುಗಿಯುತ್ತಿದ್ದೇವೆಯೇ ಹೊರತು, ಇಡೀ ಸಮಾಜವನ್ನು ನಿಯಂತ್ರಿಸುವ ಏಕತ್ರ ಲೌಕಿಕ ಶಕ್ತಿಗಳಾಗಿ ಬೆಳೆಯಲಿಲ್ಲ. ಅದಕ್ಕಾಗಿಯೇ ‘ವೇದವೆಂಬುದು ಓದಿನ ಮಾತು’ ಎಂಬ ಉಗ್ರ ಮಾತು ಉಡಾಫೆಯ ಮಾತಾಗದೆ ಗಂಭೀರ ತತ್ವದ ಮಾತಾಗಿ ಉಳಿದು ಬಂದಿತ್ತು. ಭಾರತೀಯ ಸಂಸ್ಕೃತಿಯ ಇತಿಹಾಸದಲ್ಲಿ ವೇದಗಳ ಆಪ್ತ ರಹಸ್ಯಾತ್ಮಕತೆ ಮುಂದೆ ಸಾಮಾಜಿಕ ನಿಷಿದ್ಧವಾಗಿ ಬೆಳೆದಂತೆ, ಅವುಗಳ ಅನುಭಾವಿ ಮತ್ತು ದಾರ್ಶನಿಕ ಸೃಜನಶೀಲತೆ ಕಡಿಮೆಯಾಗುತ್ತ ಬಂತು. ಜಾತಿಪದ್ಧತಿಯ ಕಾರಣಕ್ಕಾಗಿ ವೇದದ ಲಭ್ಯತೆ ಸ್ತ್ರೀ ಮತ್ತು ಶೂದ್ರರಿಗೆ ಇಲ್ಲವಾದದ್ದೆ ಅದರ ಶಕ್ತಿಯೂ ಸೀಮಿತವಾಗಿಬಿಟ್ಟಿತು. ಹೀಗಾಗಿ, ಮುಂದೆ ಬಂದ ಭಕ್ತಿ ಮುಂತಾದ ಆಂದೋಲನಗಳಲ್ಲಿ ವೇದದ ಸೃಜನಶೀಲ ಉಪಯುಕ್ತತೆಯೇ ತುಂಬ ಗೌಣ ಎಂದಾಗಿಬಿಟ್ಟಿತು. ವೇದಗಳು ಜನತೆ ತಲುಪಲಾರದ, ಮುಖಾಮುಖಿಯಾಗಲಾರದ ಒಂದು ಅಧಿಕಾರದ ರಹಸ್ಯಾತ್ಮಕ ನಿಯಂತ್ರಣದಲ್ಲಿವೆ ಎಂಬ ಸ್ಥಿತಿ ಭಾರತೀಯ ದರ್ಶನಗಳ ಮೇಲೆ ಉಂಟುಮಾಡಿದ ಪರಿಣಾಮ ಊಹಾತೀತ. ಆಪ್ತ ರಹಸ್ಯಾತ್ಮಕತೆ ಮತ್ತು ಸಾಮಾಜಿಕ ನಿಷೇಧಗಳ ನಡುವೆ ವ್ಯತ್ಯಾಸ ಮಾಯವಾಗಿದ್ದರ ಬಗ್ಗೆ ಸಾಂಪ್ರದಾಯಿಕ ಆಚಾರ್ಯರಲ್ಲಿ ಅನೇಕರಿಗೆ ಕೋಪವಿತ್ತು. ರಾಮಾನುಜಾಚಾರ್ಯರು ಬಂಡೆದದ್ದೇ ಈ ರಹಸ್ಯಾತ್ಮಕತೆ ಜಾತಿ ನಿಷೇಧವಾಗಿ ಪರಿವರ್ತನೆಯಾಗಿದ್ದರ ಬಗ್ಗೆ. +ವೇದಗಳಿಗೆ ಇವುಗಳಿಂದ ನಷ್ಟವಾಯಿಯೆ? ಅಥವಾ ಭಾರತೀಯರ ದಾರ್ಶನಿಕ ಸೃಜನಶೀಲತೆಗೂ? ಈ ಪ್ರಶ್ನೆಗೆ ಉತ್ತರ ಕೊಡುವುದು ತುಂಬ ಕಷ್ಟ. ಜನರಿಗೆ ವಿಶಾಲ ಲಭ್ಯತೆ ಇರದಿದ್ದರೆ ದೇವರೂ ಕ್ಷೀಣಿಸುತ್ತಾನೆ. ಅಥವಾ ಜನರ ನಡುವೆ ಬಾಳಿ ಬೆಳೆಯದಿದ್ದರೆ ದೈವೀಗ್ರಂಥಗಳೂ ನೆಲ ಕಾಣದ ಬೀಜವಾಗುತ್ತವೆ. ಆತ್ಮಕ್ಕೆ ಒಡಲಿರದಿದ್ದರೆ ಅದೂ ಅಶರೀರಿಯಾಗಿಬಿಡುತ್ತದೆ. ನೆರೂದ ಇದನ್ನು ತನ್ನ ಮಾರ್ಮಿಕ ಕವನವೊಂದರಲ್ಲಿ ಶೋಧಿಸುತ್ತಾನೆ. ಕುಡುಕರ ನಡುವೆ ಮತ್ಸ್ಯಕನ್ಯೆಯೊಬ್ಬಳು ಜಲಜಗತ್ತಿನಿಂದ ತೇಲಿ ಬರುತ್ತಾಳೆ. ಅವಳನ್ನು ಗುರುತಿಸದ ಕುಡುಕರು ಆಕೆಯ ಮೇಲೆ ಉಗುಳುತ್ತಾರೆ. ಸಿಗರೇಟಿನಿಂದ ಸುಡುತ್ತಾರೆ. ಆಕೆ ಮತ್ತೆ ಸಾಗರಕ್ಕೆ ವಾಪಸಾಗುತ್ತಾಳೆ. ನೆರೂದ ಇಲ್ಲಿ ಬರೆಯುವ ಸಾಲು ತುಂಬ ಮುಖ್ಯ: ‘ಆಕೆ ಮತ್ತೆ ಸಾವಿನ ಕಡೆಗೆ ತೇಲಿದಳು. ’ ಆಕೆ ಸಾವಿನ ಕಡೆಗೆ ತೇಲಿದಳೆ? ಆಕೆ ದೈವವೇ ಆಗಿದ್ದರೂ ಮರ್ತ್ಯರ ನಡುವೆ ಮಾತ್ರ ಆಕೆ ಸಮೃದ್ಧವಾಗಿರಬಲ್ಲಳು. ಅದು ಬೇರು-ಕೊಂಬೆಗಳ ಸಂಬಂಧ. ಹೀಗೆ ಅಮೂರ್ತವಾಗಿ ಹೇಳುವುದಾದರೆ, ವೇದಗಳ ಲಭ್ಯತೆಯ ವಿಸ್ತರ ಕಡಿಮೆಯಾದ್ದರಿಂದ ಅವುಗಳ ದಾರ್ಶನಿಕ ಸಮೃದ್ಧತೆಯೂ ಕಡಿಮೆಯಾಗಿದೆ. ಅದು ಆ-ಚಾರಿತ್ರಿಕ ಎಂಬ ಮಾತು ಸರಿ. ಆದರೆ, ಚರಿತ್ರೆಯಲ್ಲಿ ಅವು ಬೆಳೆಯುವಲ್ಲಿ ವೈವಿಧ್ಯತೆಯೂ ಇಲ್ಲವಾಯಿತು. ಅವು ಮತ್ತೆ ಲೌಕಿಕ ಸಾಮಾನ್ಯರ ಜೀವನದಲ್ಲಿ ಇಳಿದು ಬಂದಾಗ ಏನಾಗುತ್ತದೆ? ಮಾರ್ಕ್ವೆಜ್‌ನ ಕಥೆಯೊಂದರಲ್ಲಿ ರೆಕ್ಕೆಗಳಿರುವ ಅಲೌಕಿಕ ಮುದುಕ ಬರುತ್ತಾನೆ. (ನರಹಳ್ಳಿ ಬಾಲಸುಬ್ರಹ್ಮಣ್ಯರ ಮಾರ್ಕ್ವೆಜ್‌ನ ಅನುವಾದಿತ ಕಥೆಗಳ ಸಂಗ್ರಹದಲ್ಲಿದೆ ಈ ಕೃತಿ). ಆತ ಅಲೌಕಿಕ, ಆ ಆ-ಸಾಮಾನ್ಯ. ಆದರೆ ಅವನೂ ಕ್ಷೀಣವಾಗುತ್ತಾನೆ. ಲಯವಾಗುತ್ತಾನೆ. ಹೀಗೆ, ವೇದಗಳೂ ಕೂಡಾ ಭಾರತೀಯರ ಮಟ್ಟಿಗೆ ಜೀವನ ವಿದೂರವಾಗಿ ಲಯವಾಗಿ ಬಿಟ್ಟಿವೆ. +ವೇದಗಳು ಈಗ ರೆಕ್ಕೆಗಳಿರುವ ಅಲೌಕಿಕ ಮುದುಕ. ಕುಡುಕರ ನಡುವೆ ತೇಲಿದ ಸ್ವಪ್ನ ಕನ್ಯೆ: ಪರಸ್ಪರ ನಷ್ಟ, ಪರಸ್ಪರ ಲಯ. +– ೨ – +ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮತ್ತು ನಂತರದ ಆದರ್ಶವಾದಿ ದಿನಗಳಲ್ಲಿ ಸಾಂಪ್ರದಾಯಿಕ ಸಂಸ್ಕೃತ ವಿದ್ವತ್ತಿಗೂ ಪ್ರಗತಿಪರ ಆದರ್ಶಗಳಲ್ಲಿ ಪರಂಪರೆಯನ್ನು ಅರ್ಥೈಸುವ ಹಠವಿತ್ತು. ವಿಜ್ಞಾನ ಮತ್ತು ಪಾಶ್ಚಾತ್ಯ ಸಂಸ್ಕ್ರಿತಿಗಳ ಬೆಳಕಿನಲ್ಲಿ ತೌಲನಿಕವಾಗಿ ಭಾರತೀಯ ಸಂಸ್ಕೃತಿಯನ್ನು ವಿಶ್ಲೇಷಿಸುವ ಕ್ರಮ ಆಗ ಬೆಳೆದಿತ್ತು. ವೇದಗಳಲ್ಲಿ ಎಲ್ಲವೂ ಇವೆ ಎಂಬ ಅಪ್ರಬದ್ಧ ಉತ್ಸಾಹ ಒಂದು ಕಡೆಗೆ. ಇನ್ನೊಂದು ಕಡೆಗೆ “ವೈದಿಕ ಸಂಸ್ಕ್ರಿತಿ ಮಾನವನ ಸಂಸ್ಕೃತಿಯ ಶೈಶವಾವಸ್ಥೆಯದು” ಎಂಬ ಅಭಿಪ್ರಾಯ. ಈ ಎರಡು ಅತಿಗಳ ಮಧ್ಯೆ ಮಾನವ ಬದುಕಿನ ಮೂಲಭೂತ ಸತ್ಯಗಳನ್ನು ಕಾಣುವ ಒಂದು ನಿರ್ದಿಷ್ಟ ಕ್ರಮವಾಗಿ ವೇದಾಧ್ಯಯನ ಮಾಡಿದ ವೇದಪಂಡಿತರ ಒಂದು ಪರಂಪರೆ ಇತ್ತು. ಆ ಪರಂಪರೆ ಕನ್ನಡದಲ್ಲಿ ಸಾಕಷ್ಟು ಸೃಜನಶೀಲವಾದ ಕೆಲಸ ಮಾಡಿತ್ತು. ಪಶ್ಚಿಮೇತರ ದಾರ್ಶನಿಕ ನೆಲೆ ತಿಳಿಯುವುದಕ್ಕೆ ಇದು ತುಂಬ ಅವಶ್ಯ. +ವೇದಗಳ ಬಗ್ಗೆ ನನಗಿರುವ ಆಸಕ್ತಿ ಮೂಲತಃ ಸೌಂದರ್ಯಾತ್ಮಕ ಮತ್ತು ತಾತ್ವಿಕ. ಅದನ್ನು ದಿವ್ಯದರ್ಶನಸಾರ ಎಂದು ನನ್ನ ವೈದಿಕೇತರ ಮನಸ್ಸು ಒಪ್ಪಲಾರದು. ಆದರೆ, ಈ ಅನುಮಾನ, ಕಟ್ಟೆಚ್ಚರಗಳು ವೈದಿಕ ವಾಕ್ಯ ಸಾಗರದಲ್ಲಿ ಕಾಲಿಟ್ಟಾಗ ಹಾಗೇ ಕರಗಿ ಹೋಗುತ್ತವೆ. ಬೌದ್ಧದರ್ಶನ-ಅದರಲ್ಲೂ ಮುಖ್ಯವಾಗಿ ನಾಗಾರ್ಜುನ-ವೈದಿಕ ಸಾಹಿತ್ಯಸಮೂಹವನ್ನು ದಟ್ಟವಾಗಿ ಅನುಮಾನಿಸಿದ್ದು, ನಿರಾಕರಿಸಿದ್ದು ಈ ಕಾರಣಕ್ಕಾಗಿಯೇ. ಇವೆಲ್ಲ ‘ಮೆಟಫಿಸಿಕಲ್ ಸ್ಪೆಕ್ಯುಲೇಷನ್’ ಎಂದು, ಅಧ್ಯಾತ್ಮಿಕ ಊಹಾಪೋಹಗಳು ಎಂದು ಬೌದ್ಧರು ಉಗ್ರವಾಗಿ ಟೀಕಿಸಿದರು. +ಆದರೆ, ಆಧ್ಯಾತ್ಮಿಕಾನುಭವದಲ್ಲಿ ಸೌಂದರ್ಯಾತ್ಮಕ ಪ್ರಯಾಣ ಸಲ್ಲದೆ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮತ್ತೆ ಮತ್ತೆ ಮೂಡಿದೆ. ಪಶ್ಚಿಮದ ಸಮಾಜ ವಿಜ್ಞಾನ ಮತ್ತು ವೇದಾಧ್ಯಯನ ಕ್ರಮದ ಒಂದು ಮಾದರಿ ವೇದದ ರಹಸ್ಯಾತ್ಮಕ ಪ್ರತಿಮೆಗಳನ್ನು ನೈಸರ್ಗಿಕ ವ್ಯಾಪಾರದ ಅಭಿನಯ ಎಂದು ಕರೆದವು. ಮಾರ್ಕ್ಸ್‌ವಾದಿ ವಿದ್ವಾಂಸ ಕೋಶಾಂಬಿಯಂಥವರು ಕೂಡಾ ಇದಕ್ಕೆ ಬಲಿಯಾದರು. ಆದರೆ, ವೇದಗಳಲ್ಲಿ ಪ್ರತಿಮಾರೂಪದ ಆಶ್ಚರ್ಯಕರ ಚಿಂತನೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಒಂದು ಸರಳ ತಾತ್ವಿಕ ಸೂತ್ರಕ್ಕೆ ಹೊದಲಾರದ ಬಹುಮುಖೀ ವೈವಿಧ್ಯತೆ ಇದೆ. ಇಲ್ಲಿ ಭೌತವಾದೀ ದನಿಗಳಿವೆ. ಜಗತ್ತು ಅಂತಿಮವಾಗಿ ನಿರ್ನಾಮವಾಗುವ ಒಂದು ಉದ್ದೇಶಹೀನ ಚಲನೆ ಎನ್ನುವ ಉಚ್ಛೇದವಾದಿಗಳಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅದ್ವೈತದ ದನಿ ಇದೆ. ಬೌದ್ಧ, ಜೈನರ ಛಾಯೆಗಳೂ ಕಾಣುತ್ತವೆ. ಆದರೆ ಈ ಕೃತಿಯ ಮಿತಿ ಎಂದರೆ ಒಂದು ನಿರ್ದಿಷ್ಟ ‘ಸಾಮರಸ್ಯ’ ತತ್ವದ ಹಿನ್ನೆಲೆಯಲ್ಲಿ ಋಗ್ವೇದವನ್ನು ಸಂಗ್ರಹಿಸಿರುವುದು. ಈ ಚೌಕಟ್ಟಿನಾಚೆಗಿನ ಪ್ರತಿಮೆಗಳು, ದೃಶ್ಯಗಳು ವೇದದಲ್ಲಿವೆ. ವೇದದ ಮುಖ್ಯಗುಣ ಅದರ ಬಹುಮುಖತೆ. ಆದರೆ ಇವೆಲ್ಲವೂ ಅಡಕವಾಗಿರುವುದು ನಾನು ಮೊದಲೇ ಹೇಳಿದ ಹಾಗೆ ಪ್ರತಿಮಾ ಮಾರ್ಗದ ಚಿಂತನೆಯಲ್ಲಿ. +ಪ್ರತಿಮಾಮಾರ್ಗ ಎಂದರೇನು? ಉದಾಹರಣೆಗೆ, ಚಕ್ರದ ಪ್ರತಿಮೆಯನ್ನೇ ತೆಗೆದುಕೊಳ್ಳಿ ಅದು ಋತ. ಲೋಹಿಯಾರ ಇತಿಹಾಸಚಕ್ರ ದರ್ಶನದ ಬೇರುಗಳು ಇಲ್ಲೇ ಇವೆ ಎನ್ನುವುದು ಆಶ್ಚರ್ಯಕಾರಿಯಾದರೂ ಸತ್ಯ. ಈ ಚಕ್ರದ ಚಲನ ನಿಸರ್ಗದಲ್ಲಿದೆ. ಪಶು-ಪಕ್ಷಿ, ಪ್ರಾಣಿಗಳ ಪ್ರಾಣ ವ್ಯಾಪಾರದಲ್ಲಿದೆ. ದೇವತೆಗಳ ಕ್ರಿಯೆಯಲ್ಲೂ ಚಕ್ರದ ಚಲನೆ ಇದೆ. ಮಾನವನ ಧೀಃಶಕ್ತಿ ಮೂಲಭೂತ ಸತ್ಯದ ಹುಡುಕಾಟದಲ್ಲಿ ಪ್ರತಿಮೆಗಳನ್ನು ಮಾತ್ರ ಸೃಷ್ಟಿಸುತ್ತದೆ. ಹಾಗೆಯೇ ಚಕ್ರದ ಜತೆಗೆ ನದಿಯ, ಜೀವನದಿಯ ಪ್ರತಿಮೆಯೂ ಒಟ್ಟಿಗೇ ಉಕ್ಕುತ್ತದೆ. ಈ ಪ್ರತಿಮೆಗಳು ಸಮಷ್ಟಿ, ನಿಸರ್ಗ, ವೈಯಕ್ತಿಕ ಹೀಗೆ ಮೂರು ಪಾತಳಿಗಳಲ್ಲಿ ಹಬ್ಬಿ ಬೆಳೆಯುತ್ತವೆ. “ವಿಶ್ವಕರ್ಮ ವಿಶ್ವ ಯಜ್ಞವೆಂಬ ಗಾನಾತ್ಮಕವಾದ ವಸ್ತ್ರವನ್ನು ಹೆಣೆಯುತ್ತಾನೆ” ಎಂಬ ರೀತಿಯ ವಾಕ್ಯಗಳ ಬಗ್ಗೆ ಬೃಹತ್ ಪುಸ್ತಕಗಳನ್ನು ಬರೆಯಬಹುದು. +ನಿಸರ್ಗದ ಶಕ್ತಿಗಳೇ ಪ್ರತಿಮೆಗಳಾಗುತ್ತವೆ. ಆದರೆ, ಈ ಪ್ರತಿಮೀಕರಣದಲ್ಲಿ ನಿಸರ್ಗದ ವ್ಯಾಪಾರದ ಸರಳ ಪ್ರತಿಫಲನವಿಲ್ಲ. ಅಗ್ನಿ ಎನುವುದು ಬರೀ ಬೆಂಕಿಯಲ್ಲ. ಅಗ್ನಿ ಎನ್ನುವುದು ನಿತ್ಯವಾದ ಇಳಾರೂಪಿ. ಅದು ಸರಸ್ವತಿ ರೂಪವೂ ಹೌದು. ಆತ ಕವಿ. ಅಗ್ನಿ ಯಾಕೆ ಕವಿ? ಅಥವಾ ಕವಿ ಯಾಕೆ ಅಗ್ನಿ? ವೈದಿಕ ಕಾವ್ಯ ಮೀಮಾಂಸೆಯ ಬಹುಮುಖ್ಯ ಹೊಳಹುಗಳು ಇಲ್ಲಿ ಸಿಗುತ್ತವೆ. ಕವಿಗಳು “ಋತದ ಪಥವನ್ನು ಪ್ರವೇಶಿಸಿ ಅತ್ಯಂತ ಗೂಢವಾದುದೂ ಅತ್ಯುತ್ತಮವಾದದೂ ಆದ ರಹಸ್ಯವನ್ನು ಅರಿಯುತ್ತಾರೆ”. ಹಾಗೆಯೇ ಛಂದಸ್ಸಿನ ಬಗ್ಗೆಯೂ ಇರುವ ವೈದಿಕ ಉಪನಿಷತ್ ವಿಚಾರ ಒಂದು ಹೊಸ ತಾತ್ವಿಕ ಪ್ರಸ್ಥಾನವನ್ನು ತೆರೆಯಬಲ್ಲದು. ಇದನ್ನು ಪ್ರೊ. ಚಕ್ರವರ್ತಿ ತಮ್ಮ ಇನ್ನೊಂದು ಇಂಗ್ಲಿಷ್ ಕೃತಿಯಲ್ಲಿ ವಿವರಿಸಿದ್ದಾರೆ. +ಸಾವಿನಿಂದ ಭೀತರಾದ ದೇವತೆಗಳು ಛಂದಸ್ಸಿನ ಮುಸುಕು ಧರಿಸುತ್ತಾರೆ. ವೇದತ್ರಯದ ಛಂದಸ್ಸಿನ ಪರದೆಯಲ್ಲಿ ಮರೆಯಾಗುತ್ತಾರೆ. ‘ಛದ್’ ಎಂದರೆ ಪರದೆ, ಮರೆ ಎಂಬರ್ಥವೂ ಇವೆ. ಸಾವಿನಿಂದ ಪಾರಾಗುವ ಆಸೆ ಛಂದಸ್ಸಿನ ಕಲ್ಪನೆಯ ಹಿನ್ನೆಲೆಯಲ್ಲಿ ಇದೆ ಎಂಬ ವಿಚಾರ ಕಾವ್ಯ ಮೀಮಾಂಸೆಯ ದೃಷ್ಟಿಯಿಂದ ರೋಮಾಂಚಕಾರಿ. ಆದರೆ, ಛಂದಸ್ಸಿನ ಮರೆ ಕೂಡಾ ದೋಷಪೂರ್ಣ. ದೇವತೆಗಳನ್ನು ಸಾವು ಮತ್ತೆ ಬಂದು ಕಾಡುತ್ತದೆ. ಗಾಯತ್ರಿ ಎಂಬ ದೈವತಕ್ಕೆ ಇಷ್ಟೆಲ್ಲಾ ಆಯಾಮಗಳು ಮಿಂಚುತ್ತಾ ಹೋಗುತ್ತವೆ. ಛಂದಸ್ಸಿನ ವಿಶ್ಲೇಷಣೆಗೆ ಆಧ್ಯಾತ್ಮಿಕ ಆಯಾಮ ಬಂದುಬಿಡುತ್ತದೆ. +ಈ ಚರ್ಚೆಯನ್ನು ಸಮಕಾಲೀನ ಕನ್ನಡ ಸಂಸ್ಕೃತಿಯ ವಿವೇಚನೆಗೆ ತಂದು ನಿಲ್ಲಿಸಲು ಸಾಧ್ಯ. ಕನ್ನಡ ಸಂಸ್ಕೃತಿ ರೂಪುಗೊಂಡಿರುವುದೇ ವೈದಿಕ-ವೈದಿಕೇತರ ಧಾರೆಗಳ ಮಿಲನ ಮತ್ತು ಸಂಘರ್ಷದಿಂದ. ವೈದಿಕಾಧ್ಯಯನದ ಅತ್ಯುತ್ತಮವನ್ನು ವೈದಿಕೇತರ ಅತ್ಯುತ್ತಮ ಎದುರಾದಾಗಲೇ ಕನ್ನಡ ಸಂಸ್ಕೃತಿ ತನ್ನ ಶಕ್ತಿ, ಸೌಂದರ್ಯವನ್ನು ಪಡೆದಿರುವುದು. ಹಳ್ಳಿ ಹೆಂಗಸಿನ ಹಾಡಿನಲ್ಲಿ ಕಾಣುವ ದೇವಿ ಹಾಗೂ ವೈದಿಕ ಋಷಿಗಳ ಅದಿತಿ ಎದುರುಬದುರಾಗಿಯೇ ಕನ್ನಡದ ಅನನ್ಯ ಸೌಂದರ್ಯ ಹುಟ್ತಿದೆ. ಆದರೆ ಇಂದು ಕನ್ನಡ ಸಂಸ್ಕೃತಿಯಲ್ಲಿ ಅಥವಾ ಕನ್ನಡ ಭಾಷೆಯೊಳಗೆ ಅತ್ಯುತ್ತಮ ವೈದಿಕ ಸಾಧನೆಗಳೇ ಕಾಣುತ್ತಿಲ್ಲ. ಹಿಂದೂ ಮತಾಂಧ ರಾಜಕಾರಣ ವೈದಿಕ ಸಂವೇದನೆಯನ್ನೂ ಹಿಗ್ಗಿಸುವುದಿಲ್ಲ. ಕನ್ನಡವನ್ನೂ ಹಿಗ್ಗಿಸುವುದಿಲ್ಲ. +ಜತೆಗೆ ಋಕ್‌ಸಂಹಿತ ಸಾಹಿತ್ಯ ಸಮೂಹದಲ್ಲಿ ಇರುವ ಜಾತ್ಯಾತೀತವಾದ, ಪ್ರಗತಿಪರವಾದ ಸಂವೇದನಾಕ್ರಮಗಳಿಗೆ ನಾವೂ ಮುಖಾಮುಖಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯಲ್ಲಿ ಹರಿದುಬಂದಿರುವ ಹಲವು ಪ್ರಾಣಧಾರೆಯಲ್ಲಿ ಯಾವುದೂ ಊನವಾಗದ ಹಾಗೆ, ಅಂಗವಿಕಲವಾಗದ ಹಾಗೆ ನಾವಿಂದು ನೋಡಿಕೊಳ್ಳಬೇಕಾಗಿದೆ. ಅದಾಗದಿದ್ದರೆ ಪಶ್ಚಿಮದಿಂದ ಬರುವ ಅಪಾಯಕಾರಿ ಖಡ್ಗಧಾರೆಗಳಿಂದಾಗಿ ನಾವು ನುಚ್ಚುನೂರಾದೇವು. ಇಲ್ಲ, ಒಳಗಿಂದಲೇ ಹುಟ್ಟುವ ಅಪಾಯಕಾರೀ ಹಿಂದೂ ಮತಾಂಧರ ಹೊದೆತಕ್ಕೆ ನಾಶವಾದೇವು. ಮತ್ತೆ ಸಾಂಸ್ಕೃತಿಕ ದೇಶೀವಾದ ಸಮಾಜವಾದಿ ಮೌಲ್ಯಗಳನ್ನು ಒಳಗೊಳ್ಳಬಲ್ಲದು ಎಂಬುದನ್ನು ನಮ್ಮ ಸಂಸ್ಕೃತಿ ಸಾಧಿಸಲು ಸಾಧ್ಯವಾದಾಗ ಮಾತ್ರ ಕನ್ನಡ ಸಂಸ್ಕೃತಿ ಬೆಳೆಯುತ್ತದೆ. +ಸಾಂಸ್ಕೃತಿಕ ವಿನಾಶ ಎಂದರೆ ಒಂದು ವಿಶೇಷ ಪರಿಣಿತಿಯನ್ನು ಕಣ್ಮರೆಯಾಗಲು, ಕರಗಿಹೋಗಲು ಅವಕಾಶಕೊಡುವುದು. ಈ ವಿಶೇಷ ಪರಿಣಿತಿಯ ಮಾತು ಎಲ್ಲ ರಂಗಗಳಿಗೂ ಸಲ್ಲುತ್ತದೆ. ಒಬ್ಬ ಬಿದಿರು ಕೆಲಸದಾತ, ಒಬ್ಬ ಬೆಳ್ಳಿ-ಬಂಗಾರ ಕೆಲಸದಾತ, ಒಬ್ಬ ಬಡಗಿ, ಒಬ್ಬ ಚಿತ್ರಕಾರ, ಒಬ್ಬ ನೃತ್ಯಗಾರ, ಒಬ್ಬ ಗಮಕಿ, ಒಬ್ಬ ನೇಕಾರ, ಒಬ್ಬ ಬಣ್ಣಗಾರ ಮರೆಯಾಗುವುದು ಎಷ್ಟು ವಿಷಾದದ ಸಂಗತಿಯೋ, ಹಾಗೆಯೇ ಒಬ್ಬ ಸಂಪ್ರದಾಯಸ್ಥ ಪಂಡಿತನ ಪರಿಣಿತಿ ನಿರುಪಯುಕ್ತವಾಗುವುದೂ ಕೂಡ. +(ಪ್ರೊ. ಜಿ. ಎನ್. ಚಕ್ರವರ್ತಿಯವರ ‘ಧರ್ಮಚಕ್ರ’ ಕೃತಿಗೆ ಬರೆದ ಸಂಪಾದಕೀಯ). (೧೯೯೩) +***** +ಕೀಲಿಕರಣ: ಸೀತಾಶೇಖರ್ +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […] +ಕನ್ನಡ ಓದುಗರಿಗೆ ಈಗಾಗಲೆ ಸಾಕಷ್ಟು ಪರಿಚಿತರಾಗಿರುವ ಕವಿ ಮಮತಾ ಜಿ. ಸಾಗರ ಅವರ ಮೊದಲ ಕವನ ಸಂಕಲನ ‘ಕಾಡ ನವಿಲಿನ ಹೆಜ್ಜೆ’ ೧೯೯೨ರಲ್ಲಿ ಪ್ರಕಟವಾಯಿತು. ಇದೀಗ ಆರು ವರ್ಷಗಳ ನಂತರ ಅವರ ಎರಡನೆ ಸಂಕಲನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_100.txt b/Kannada Sahitya/article_100.txt new file mode 100644 index 0000000000000000000000000000000000000000..7c732028b88ba65adca3760ecb05a4bc078d8cdf --- /dev/null +++ b/Kannada Sahitya/article_100.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಹ! ಪ್ರಾತಃಕಾಲ, ಮತ್ತೆ ಅದೊ ಚಿಮ್ಮುತಿದೆ +ಬಣ್ಣ ಬಣ್ಣದ ಮಣ್ಣ ಕಣ್ಣಿನಲಿ, ಹಕ್ಕಿಗಳ +ಇಂಚರದಿ, ಇಬ್ಬನಿಯ ಸೊಡರಿನಲಿ, ನಿಬ್ಬೆಗದಿ +ಹರಿವರಿದು ಬರುವ ಗಂಧೋದಕದಿ ಮಿಂದ ತಂ- +ಬೆಲರಿನಲಿ ಹೆರೆಹಿಂಗದಮೃತ ಚೈತನ್ಯ ಝರಿ! +ದಿವ್ಯಾನುಭೂತಿಯಲಿ ರಸದ ಪಾವಿತ್ರ್ಯದಲಿ +ಬಾಳ ತೊಳೆಯುವ ಬದುಕ ಸಿಂಗರಿಪ ಮಂತ್ರಮಿದೆ; +ರಸಾಹ್ಲಾದಿನಿ ಪರಾಪ್ರಕೃತಿ ಸಂಜೀವಿನಿ! +ಹೊತ್ತು ಹೋದರೆ ಮತ್ತ ಬಾರದೀ ಸಿರಿಯೊಸಗೆ +ಏಳು ಎಚ್ಚರಗೊಂಡು ನೆನೆ ಮನವೆ, ಇಂಥ ತಣ್- +ಪೊತ್ತಿನಲಿ ಜಗದೆಲ್ಲ ಉತ್ತಮ ವಿಭೂತಿಗಳ, +ಎದೆಗುಡಿಯ ಗದ್ದುಗೆಯಲಿರಿಸವರ ಶ್ರೀಪಾದ +ಪದ್ಮಗಳ, ಪೂಜೆಗೆಯ್, ನಿನ್ನ ನೀನಿಲ್ಲಗೆಯ್ +ಅಲ್ಪತೆಯು ಮಹದಲ್ಲಿ ಕರಗಿ ಒಂದಾಗಲಿ! +***** +೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […] +ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […] +೧ ತುಂಟಾಗಿ ನಾಚಿ ಮೊಣಕಾಲು ಮಡಿಸಿ, ಗಲ್ಲ ಊರಿ ಮುನಿದ೦ತೆ ನಟಿಸಿ ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ ಒಡಲುಗೊಳ್ಳುವ ಅವಳ ನಿರೀಕ್ಷೆ: ಅವನ ಧಾರಾಳ ಅವಕಾಶ ಮತ್ತು ಆಗ್ರಹ ೨ ಸುಮ್ಮಗೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_101.txt b/Kannada Sahitya/article_101.txt new file mode 100644 index 0000000000000000000000000000000000000000..072e803ac6a2f322cce8ea80009f42e41c6fe791 --- /dev/null +++ b/Kannada Sahitya/article_101.txt @@ -0,0 +1,87 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಾನು ಮತ್ತೆ ಒಂಟಿಯಾಗಿರಬಾರದೇಕೆ ಎನ್ನುವ ಯೋಚನೆ ರವಿಗೆ ಬಂದದ್ದು ಇದು ಮೊದಲನೆಯ ಬಾರಿಯೇನಾಗಿರಲಿಲ್ಲ. ಇತ್ತೀಚೆಗೆ ಗೀತ ಹತ್ತಿರವಿಲ್ಲದಿದ್ದಾಗ ಪ್ರತಿಬಾರಿ ಹಾಗೆಯೇ ಆಲೋಚಿಸುವಂತಾಗುತ್ತಿತ್ತು. ಇರಬಹುದು ಎನ್ನುವ ಧೈರ್ಯಕ್ಕಿಂತ ಏಕೆ ಇರಬೇಕು ಎನ್ನುವುದಕ್ಕೆ ತರ್ಕಕ್ಕೆ ನಿಲ್ಲುವ ಕಾರಣಗಳೇನಾದರೂ ಇವೆಯೇ ಎಂದು ಯೋಚಿಸುತ್ತಿದ್ದ. ಒಂಟಿಯಾಗಿರಬಹುದು, ಒಂಟಿಯಾಗಿರಬೇಕು ಎನ್ನುವ ಅನಿಸಿಕೆಗಿಂತ ಹೆಚ್ಚಿನ ಕಾರಣ ಬೇಕಿಲ್ಲವೆಂದೆನಿಸಿತು. ಒಂದು ಕಾಗದದ ಮೇಲೆ, ಸಮಾಜಕ್ಕೆ ಹಾಗೂ ಗೀತಳಿಗೆ ತಾನು ಕೊಡಬಹುದಾದ ನೆಪದಂಥ ಕಾರಣ ಹಾಗೂ ಒಂದುಪಕ್ಷ ಕಾನೂನಿನ ರೀತಿ ಹೋಗಬೇಕಾಗಿ ಬಂದಲ್ಲಿ ಕೋರ್ಟು ಒಪ್ಪುವಂಥ ಒಂದು ನಾಲ್ಕು ಸಾಲನ್ನು ಪಟ್ಟಿಮಾಡಬೇಕೆನಿಸಿತು. +೧. ಇನ್‌ಕಂಪ್ಯಾಟಿಬಲಿಟಿ +೨. ಪರಸ್ಪರರಲ್ಲಿ ನಂಬಿಕೆಯ ಅಭಾವ. +೩. ನಾನು ಮಾಡುತ್ತಿರುವ ಕೆಲಸದಲ್ಲಿ ಆಕೆಗಿರುವ ಅಸಡ್ಡೆ. +೪. ಆಕೆಯ ಕೆಲಸದಲ್ಲಿ ಆಕೆ ತನ್ನನ್ನು ತೀವ್ರವಾಗಿ ತೋಡಗಿಸಿಕೊಂಡಿರುವುದರಿಂದ ಆಕೆಯಿಂದ ಮಗುವೊಂದನ್ನು ತಾನು ಪಡೆಯಬಹುದು ಅನ್ನುವ ನಂಬಿಕೆಯನ್ನು ತಾನು ಕಳೆದುಕೊಂಡಿರುವುದರಿಂದು, ಹಾಗೂ ಹಾಗೇನಾದರೂ ಒಂದುಪಕ್ಷ ಪಡೆದರೂ ಆ ಮಗುವಿಗೆ ಗೀತ ಅಮ್ಮಳಾಗುತ್ತಾಳೆ ಅನ್ನುವ ವಿಶ್ವಾಸವನ್ನು ತಾನು ಕಳೆದುಕೊಂಡಿರುವುದು. +ಕಾರಣಗಳು ಕ್ಷುಲ್ಲಕ ಎನ್ನಿಸಿದವು. ಇವಕ್ಕೆ ಇನ್ನೊಂದೆರಡು ಸೇರಿಸಬೇಕು, ಪಕ್ಕಾ ಆಗಬೇಕಾದರೆ ಎಂದುಕೊಂಡ. ಪಕ್ಕಾ ಎಂದರೇನು ಎನ್ನುವುದಕ್ಕೆ ಸರಿಯಾದ ಅರ್ಥ ತಿಳಿಯಲಿಲ್ಲ. ಇರಲಿ, ಎಂದು ಚೀಟಿಯನ್ನು ಜೇಬಿನಲ್ಲಿ ಇಟ್ಟುಕೊಂಡ. +ಮನೆಗೆ ಬಂದು ಬಾಗಿಲು ತೆಗೆದು ಕೈಯಲ್ಲಿದ್ದ ಬ್ಯಾಗನ್ನು ಬೆಡ್ಡಿನ ಮೇಲೆ ಎಸೆದು ಫ್ರಿಜ್ಜಿನ ಒಳಗೆ ಏನಿದೆ ಎಂದು ನೋಡಿದ. ಮಿಕ್ಕಿದ್ದ ಕಿತ್ತಳೆಹಣ್ಣಿನ ಜ್ಯೂಸನ್ನು ಒಂದು ಗ್ಲಾಸಿಗೆ ಬಗ್ಗಿಸಿಕೊಂಡು ಹೊರಗೆ ಹೊರಟ. ಹೋಗುವಾಗ ಬಾಗಿಲಪಕ್ಕದ ಗೋಡೆಗೆ ಆನಿಸಿದ್ದ ಆನ್ಸರಿಂಗ್ ಮಶೀನಿನ ಮಿನುಗುತ್ತಿದ್ದ ಗುಂಡಿಯನ್ನೊಮ್ಮೆ ಒತ್ತಿದ.”ರಾತ್ರಿ ಬರುವುದು ತಡವಾಗುತ್ತದೆ. ಆಫೀಸಿನವರೊಂದಿಗೆ ಊಟಮಾಡಿ ಬರುತ್ತೇನೆ, ನನಗಾಗಿ ಕಾಯಬೇಡ. ಲವ್ ಯು” ಗೀತಳ ಧ್ವನಿ. ಆ ಕ್ಷಣದಲ್ಲಿ ಯಾಕೋ ಕಿತ್ತಳೆ ಜ್ಯೂಸು ಕುಡಿಯಲು ಮನಸ್ಸು ಬರಲಿಲ್ಲ. ಸಿಂಕಿನಲ್ಲಿ ಚೆಲ್ಲಿ ಫ್ರಿಜ್ಜಿನ ಮೇಲಿದ್ದ ಜ್ಯಾಕ್ ಡೇನಿಯಲ್ ಬಗ್ಗಿಸಿದ. ಫ್ರಿಜ್ಜಿನ ಬಾಗಿಲು ತೆರೆದು ಸ್ವಲ್ಪ ಐಸ್ ಸುರಿದುಕೊಂಡ. ಪೀಠವಿರುವ ಗಾಜಿನ ಲೋಟ ವೈನ್ ಕುಡಿಯುವುದಕ್ಕೆ ಚೆಂದ ಅನ್ನಿಸಿತು. ಜ್ಯಾಕ್ ಡೇನಿಯಲ್ ಪಕ್ಕದಲ್ಲಿರುವ ಗೀತಳ ಮೆಚ್ಚಿನ ಮರ್ಲೋ ಇತ್ತು. ನೋಡಿ ಸುಮ್ಮನಾದ. +ಹೊರಗೆ ಕತ್ತಲಿನ್ನೂ ಆಗಿರಲಿಲ್ಲ. ಕತ್ತಲು ಕಮ್ಮಿಯಾದಷ್ಟೂ ತಾನು ಜಾಸ್ತಿ ಒಂಟಿಯಾಗುತ್ತಿದ್ದೇನೆ ಅನ್ನಿಸಿತು. ಕತ್ತಲಲ್ಲಿ ಕಿಟಕಿಯಿಂದ ಹೊರಗಿಣುಕಿ ಕಾಣುವ ಕಪ್ಪನ್ನೇ ನಿಜವಾದ ಜಗತ್ತು, ಅದು ನನ್ನಿಂದ ಹೆಚ್ಚೇನೂ ಬೇರೆಯೇನಿಲ್ಲ ಅಂದುಕೊಳ್ಳುವಾಗ ಆನಂದವಾಗುತ್ತಿತ್ತು. ದಿನಗಳು ದೊಡ್ಡವಾದಾಗ ನಗುವ ಜಗತ್ತು ತನ್ನನ್ನು ಗೇಲಿಮಾಡುವುದಕ್ಕೇ ಅನ್ನುವುದನ್ನು ಬಲವಾಗಿ ನಂಬುವುದಕ್ಕೆ ಇತ್ತೀಚೆಗೆ ಶುರುಮಾಡಿದ್ದ. ಲಾನಿನ ಮೇಲೆ ಹಾಕಿಕೊಂಡಿದ್ದ ಕುರ್ಚಿಯಮೇಲೆ ಕೂತಿದ್ದ ರವಿಯನ್ನು ಕಂಡು ಪಕ್ಕದ ಮನೆಯ ಮುದುಕಿ ಬಂದು” ಕುಡಿಯುತ್ತಿದ್ದೀಯ ರ್ಯಾವಿ” ಕೇಳಿದಳು, ನಗುತ್ತಾ. ಸುಮ್ಮನೆ ಮುಗುಳ್ನಕ್ಕ. “ಸೊಗಸಾದ ದಿನ” ಎಂದಳು ಆಕಾಶ ನೋಡುತ್ತಾ. +” ಹೌದು” ಎಂದ. ಗೀತಾ ಎಲ್ಲಿ ಅನ್ನುವಂತೆ ನೋಡಿದಳು. “ಇನ್ನೂ ಬಂದಿಲ್ಲ” ಪ್ರಶ್ನೆ ಬರುವ ಮೊದಲೇ ಉತ್ತರಿಸಿದ. ” ಇಲ್ಲೇ ಪಾರ್ಕಿನಲ್ಲಿ ಜುಲೈ ನಾಲ್ಕರ ಪಟಾಕಿ ಹಾರಿಸುತ್ತಾರಂರೆ, ಬರುತ್ತೀಯಾ. ಡೇವಿಡ್ಡೂ ಬರುತ್ತಾನೆ” ಎಂದಳು. ” ಇಲ್ಲ, ನನಗೆ ಸ್ವಲ್ಪ ಕೆಲಸವಿದೆ, ಮನೆಯಲ್ಲಿ. ಸಾರಿ, ಆದರೆ ಥ್ಯಾಂಕ್ಸ್” ಎಂದ. ” ಪರವಾಗಿಲ್ಲ, ನಾವು ಬರುತ್ತೇವೆ, ಗುಡ್‌ನೈಟ್” ಎಂದು ಒಳಗೆ ಹೋದಳು. ಎದುರುಮನೆಯ ಜೋಡಿ ತಮ್ಮ ಅವಳಿಗಳನ್ನು ತಳ್ಳುಗಾಡಿಯಲ್ಲಿ ಕುಳ್ಳಿರಿಸಿ ತಮ್ಮ ಬೈಸಿಕಲ್ಲುಗಳ ಹಿಂದೆ ಕಟ್ಟಿ ಸೈಕಲ್ ತುಳಿಯುತ್ತಾ ಹೋಗುವಾಗ ರವಿಗೆ ಕೈ ಬೀಸಿದರು. ಕೈಯಲ್ಲಿದ್ದ ಗಾಜಿನ ಲೋಟವನ್ನೇ ಅಲ್ಲಾಡಿಸಿ ನಕ್ಕ, ರವಿ. +ತಮ್ಮ ಜೋಡಿಯೂ ಸರಿಯಾಗೇ ಇತ್ತು ಅಂದುಕೊಂಡ. ಆದರೆ, ಈಗ ತಾನು ಒಬ್ಬನೇ ಕೂತು ಸುತ್ತಲಿನ ಜೋಡಿಗಳನ್ನನುಭವಿಸುವಷ್ಟು ಗೀತಳ ಜೊತೆಜೊತೆಗೂ ಅನುಭವಿಸಲಾಗುತ್ತಿಲ್ಲವಲ್ಲ ಎನಿಸಿದಾಗ ನೋವೆನಿಸಿತ್ತಿತ್ತು. ಅದನ್ನಾಕೆ ಅರಿತುಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದಾಳೆ ಅನ್ನುವುದರ ಬಗೆಗೆ ರವಿಗೆ ನಂಬಿಕೆಯಿರಲಿಲ್ಲ. ಸವೆಯುವ ಚಪ್ಪಲಿಯಂತೆ ಹಳತಾಗುತ್ತಿದ್ದೇವೆ ಒಬ್ಬರಿಗೊಬ್ಬರು, ಅನ್ನಿಸುತ್ತಿತ್ತು ರವಿಗೆ. ಈ ಹಳಸಿನಲ್ಲಿ ಹೊಸತನ್ನು ಕತ್ತಲೆಯಲ್ಲಿ ಮಿಂಚನ್ನು ಅರಳಿಸಲು ಅರಿತೂ ಅರಿತೂ ಪ್ರಯತ್ನ ಪಡಬೇಕು, ಸಂಬಂಧ ಪುಕ್ಕಟೆಯಲ್ಲ, ಹಾಗೆ, ಹೀಗೆ ಅಂದುಕೊಂಡ. ಆದರೆ, ಗೀತಳಿಗೆ ತನಗನ್ನಿಸಿದಂತೆ ಅನ್ನಿಸುತ್ತದೆ ಎಂದು ತನಗನ್ನಿಸುವುದಿಲ್ಲ. ಆಕೆ ಕಾಲದ ಜತೆ ಸವೆಯುವ ಪ್ರಾಕೃತಿಕ ಕ್ರಿಯೆಯಂತೆ ಏನನ್ನೂ ಉಳಿಸುವ ಗೋಜಿಗೇ ಹೋಗಿತ್ತಿಲ್ಲವಲ್ಲ. ಹಾಗಾದರೆ ಐವತ್ತೈವತ್ತು ವರ್ಷ ಜೊತೆಯಾಗಿ ಸಂಸಾರ ಮಾಡುವವರು ಹೇಗೆ ಸುಖವಾಗಿರುತ್ತಾರೆ, ಎಂದನ್ನಿಸಿತು. +ಒಂದು ಬಾರಿ ಗ್ಲಾಸಿನಲ್ಲಿದ್ದನ್ನು ಒಮ್ಮೆಲೇ ಗಂಟಲಿಗೆ ಸುರಿದುಕೊಂಡು ಒಳಗೆ ಬಂದು ಡೆಸ್ಕಿನ ಮುಂದೆ ಕೂತು ಕಂಪ್ಯೂಟರನ್ನು ಆನ್ ಮಾಡಿದ.”ನಿನಗೆ ಮೈಲ್ ಇದೆ” ಎಂದು ಹೇಳುವ ಕಂಪ್ಯೂಟರಿನ ಧ್ವನಿಯೇ ತನ್ನನ್ನು ನಿಮಿರಿಸುವುದು ಅನ್ನಿಸಿತು. ಹೋಗಿ ’ಇನ್‌ಬಾಕ್ಸ್ ’ ತೆಗೆದ. ಯಾರೋ ಇಬ್ಬರು ಅಂತರ್ಜಾಲದ ಅಪ್ಸರೆಯರು ರವಿಯ ಮನಸ್ಸನ್ನು ಅರ್ಥಮಾಡಿಕೊಂಡಂತೆ ’ಕಮ್’ ’ಹಾರ್ಡ್’ ಇತರ ಮಿರುಮಿರುಗುವ ಪದಗಳಿರುವ ಮೈಲ್ ಕಳಿಸಿದ್ದರು. ಅವನಿಗರಿವಿಲ್ಲದಂತೆ ಒಂದನ್ನು ಅವನ ಮೌಸ್‌ನ ಮೇಲಿದ್ದ ಬೆರಳು ಕ್ಲಿಕ್ಕಿಸಿತು. ಒಂದು ನಿಮಿಷವೂ ಯೋಚಿಸದೆ ಇಂಥವುಗಳನ್ನೆಲ್ಲಾ ಚೆಕ್‌ಮಾರ್ಕೊತ್ತಿ ಡಿಲೀಟಾಗಿಸುತ್ತಿದ್ದ ಅರಿವೆಗೆ ಬಾರದ ರಿಫ್ಲೆಕ್ಸೂ ಅರಿವೆಗೆ ಬರದಂತೆ ಬದಲಾಗಿರುವುದನ್ನು ಕಂಡು ಹೆದರಿಕೆಯಾಯಿತು. ಕಂಪ್ಯೂಟರಿನ ಪಕ್ಕದಲ್ಲಿದ್ದ ಗೀತಳ ಪಕ್ಕದಲ್ಲಿದ್ದ ತನ್ನ ಮದುವೆಯ ಫೋಟೋದಲ್ಲಿದ್ದ ತಾನೇ ಈಗಿನ ತನ್ನನ್ನು ನೋಡಿ ನಗುತ್ತಿರುವಂತೆ ಅನ್ನಿಸಿತು. ಒಂದುಕ್ಷಣ ಹೆದರಿಕೆಯೆಂತೆನಿಸಿ ಕಂಪ್ಯೂಟರ್ ಅರಿಸಿಬಿಟ್ಟ. +ಫೋಟೊವನ್ನೊಮ್ಮೆ ದಿಟ್ಟಿಸಿ ನೋಡಿದ. ಆರುವರ್ಷಗಳ ಹಿಂದೆ ತೆಗೆದ ಫೋಟೋ ಅದು. ಜೀವನದ ಎಲ್ಲ ಸುಖದುಃಖಗಳಲ್ಲಿ ಸಮಭಾಗಿಗಳಾಗಿರುತ್ತೇವೆ ಎಂದು ಸಪ್ತಪದಿ ತುಳಿದ ದಿನ. ಒಮ್ಮೆಯೂ ನೋಡದಿದ್ದ ಸಾವಿರಾರು ಮೈಲಿ ದೂರವಿರುವ ತಾವಿಬ್ಬರೂ ಪರಸ್ಪರರನ್ನು ಇಂಥ ದೊಡ್ಡ ಕಮಿಟ್‌ಮೆಂಟಿಗೆ ಒಳಗಾಗಿಸಿಕೊಂಡಿದ್ದು ಹೇಗೆ.ಅಮ್ಮ ಕಳಿಸಿದ ಮೂರು ಹುಡುಗಿಯರ ಫೋಟೋಗಳಲ್ಲಿ ಗೀತಳನ್ನು ಇಷ್ಟಪಟ್ಟಿದ್ದ, ರವಿ. ಹದಿನೈದು ದಿನದ ರಜೆಯಲ್ಲಿ ನೋಡಿಬಂದ. ನಂತರ ಆದದ್ದು ಮಾಮೂಲಿ. ವಾರಕ್ಕೆರಡರಂತೆ ಫೋನ್‌ಗಳ ಸುರಿಮಳೆ. ಆರುತಿಂಗಳ ನಂತರ ಬೆಂಗಳೂರಲ್ಲಿ ಭಾರಿ ಮದುವೆ. ವಿಮಾನದಲ್ಲಿ ಒಟ್ಟಿಗೇ ಅಂಟಿಕೊಂಡು ಹದಿನೆಂಟುಗಂಟೆಯ ದೀರ್ಘ ಪ್ರಯಾಣದಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಸರಿಯಾಗಿ ನೋಡಿದ್ದು, ಬಾಯಿತುಂಬಾ ಮಾತಾಡಿದ್ದು. ಮೊಟ್ಟಮೊದಲ ಬಾರಿಗೇ ಫೋನಿನಲ್ಲಿ ಕೇಳಿದ ಧ್ವನಿ ತನ್ನೆದುರಿನ ಹುಡುಗಿಯದಲ್ಲವೇನೋ ಅನ್ನಿಸಿದಾಗ ಅಪಶಕುನವೆನ್ನಿಸಿದಂತೆ ವಿಮಾನದ ಟಾಯ್ಲೆಟ್ಟಿಗೆ ಹೋಗಿ ಕೆನ್ನೆ ಬಡಿದುಕೊಂಡು ಬಂದಿದ್ದ. ವಾಲೆಟ್ಟಿನಲ್ಲಿರುವ ದೇವರುಗಳನ್ನೆಲ್ಲಾ ಕಣ್ಣಿಗೊತ್ತಿಕೊಂಡಿದ್ದ. ” ನಾನೂ ಕೆಲಸ ಮಾಡಬೇಕು” ಅನ್ನುವ ವ್ಯಾವಹಾರಿಕ ಮಾತುಕತೆಗೆ ಮದುವೆಯ ಮೊದಲ ದಿನವೇ ಇಳಿದಿದ್ದಳು ಮಡದಿ. ಅದು ಪ್ರೀತಿ ಉಕ್ಕಿಸುವ ಮುಗ್ಧ ದೇಸೀ ಹೆಣ್ಣಿನ ಬೇಜಾರುಕಳೆಯುವ ಹವ್ಯಾಸದಂತೆ ಕಾಣಿಸಲಿಲ್ಲ.ತನ್ನ ಪುಟ್ಟಮನೆಯಲ್ಲಿ ತಾವಿಬ್ಬರೇ ಇದ್ದಾಗ ಬೆಚ್ಚನೆಯ ನೀರಿನ ಸ್ನಾನ ಮಾಡಿ, ಒಳಲಂಗದ ಮೇಲೆ ಟವಲ್ ಕಟ್ಟಿ, ನಿಲುವುಗನ್ನಡಿಯ ಮುಂದೆ ಕೂದಲು ಒಣಗಿಸಿಕೊಳ್ಳುತ್ತಾ ನಿಂತಿರುವ ಹೊಸ ಹೆಂಡತಿಯನ್ನು ಹಿಂದಿನಿಂದ ಬಂದು ’ಭೂ” ಮಾಡಿ ಹರಿಣಿಯಂತೆ ಹೆದರಿದಾಕೆ ಓಡಿಬಂದು ತನ್ನ ಎದೆಗೊರಗುವುದು ಮಣಿರತ್ನಂನ ಚಿತ್ರಗಳಲ್ಲಿ ಮಾತ್ರವೇನೋ ಎನ್ನುವ ಅನುಮಾನ ಮೂಡಿತ್ತು. ಅಥವಾ ಸ್ನಾನವಾದಮೇಲಿನ ಗಂಡಹೆಂಡಿರ ಸಂಬಂಧವನ್ನು ಮಣಿರತ್ನಂ ತನ್ನ ಯಾವಚಿತ್ರದಲ್ಲಿಯೂ ಹೇಳಿಲ್ಲ ಎಂದು ರವಿಗೆ ಸಮಾಧಾನದ ತರಹದ ಬೇಜಾರಾಗಿತ್ತು. +ಎರಡು ಬಾರಿ ಜ್ಯಾಕ್ ಡೇನಿಯಲ್ ಗ್ಲಾಸಿಗೆ ಬಗ್ಗಿಸಿದ್ದ. ಬೆಡ್‌ರೂಮಿಗೆ ಹೋಗಿ ಮಂಚದ ಮೇಲೆ ಕೂತು ಟೀವಿ ಹಾಕಿದ. ಚ್ಯಾನಲ್‌ಗಳನ್ನು ಸುಮ್ಮನೇ ಬದಲಾಯಿಸುತ್ತಿದ್ದ. ಈ ಚ್ಯಾನಲ್‌ಗಳಂತೆ ಮನಸ್ಸಿನ ಪದರಗಳನ್ನೂ ಏಕೆ ಒಬ್ಬನೇ ಕೂತಾಗ ಬದಲಾಯಿಸಲಾಗುವುದಿಲ್ಲ ಎನ್ನಿಸಿತು.ಬೆಡ್‌ರೂಮಿನ ಗೋಡೆಯ ಮೇಲೆ ಆರುವರ್ಷದ ಹಿಂದೆ ತೆಗೆಸಿದ ಗೀತಳ ಆಳೆತ್ತರದ ಫೋಟೊವೊಂದನ್ನು ಹಾಕಿದ್ದ. ಗೀತಳಿಗಿಂತ ಎತ್ತರವಾದ ಈ ಫೋಟೋ ಆತ ಗೀತಳಿಗೆ ಕೊಟ್ಟ ಮೊದಲ ’ಸರ್‌ಪ್ರೈಸ್” ಹೀಗೆಯೇ ಇರಬೇಕೆಂದು ಒಲ್ಲದ ಆಕೆಯನ್ನು ಬೈತಲೆಬೊಟ್ಟು, ಮೂಗುತಿಯಿಂದ ತನ್ನಿಷ್ಟ ಬಂದಂತೆ ಸಿಂಗರಿಸಿ ಬೆಂಗಳೂರಿನಲ್ಲಿ ತೆಗೆಸಿದ ಆ ಫೋಟೋವನ್ನು ಇಲ್ಲಿ ದೊಡ್ಡದಾಗಿಸಿದ್ದ. ಸ್ಟುಡಿಯೋದಲ್ಲಿ ಆ ಫೋಟೋದ ಜೊತೆಗೇ ತನ್ನ ಸಂಸಾರದ ಕನಸೂ ಹಿಗ್ಗುತ್ತಿತ್ತು. ಜೊತೆಗೆ ಎರಡಕ್ಕೂ ಮಿತಿಯಾದ ತನ್ನ ಜೇಬಿನ ವೈಶಾಲ್ಯ ಅದಕ್ಕೊಂದು ರೂಪು ಕೊಟ್ಟಿತ್ತು. ಮದುವೆಯ ಮುಂಚಿನ ದಿನಗಳಲ್ಲಿ ಗೀತಳ ನೆನಪು, ಪ್ರೇಮ, ಕಾಮ ಎಲ್ಲವನ್ನೂ ಪೂರೈಸಿತ್ತು ಆ ಫೋಟೋ. ತುಟಿಯೆಲ್ಲಿ, ಕಣ್ಣೆಲ್ಲಿ, ಎದೆಯೆಲ್ಲಿ ಎಂದು ಕಣ್ಣುಮುಚ್ಚಿ ಕೈಯಾಡಿಸಿದರೂ ಹೇಳಬಲ್ಲೆ ಎಂದು ಮುಂಚೆ ಫೋನಿನಲ್ಲಿ ಪೋಲಿಪೋಲಿಯಾಗಿ ಮಾತನಾಡುತ್ತಿದ್ದ. ಇಂದೂ ಹೇಳಬಲ್ಲೆ ಅನ್ನಿಸಿತು. ಮತ್ತೊಮ್ಮೆ ಇವತ್ತು ಬಹಳದಿನದ ಮೇಲೆ ಆ ಫೋಟೋವನ್ನು ಮೇಲಿನಿಂದ ಕೆಳಗಿನವರೆಗೆ ಸವರಿದ. ಚುಳ್ಳೆಂದು ಕೆಳಗೆ ಫೋಟೋದ ಅಂಚು ಚುಚ್ಚಿತು. ಅಂಚಿನವರೆಗೂ ಹೋದ ಕೈಬೆರಳಿನಿಂದ ರಕ್ತ ಬಂತು. ಪಕ್ಕದಲ್ಲೇ ನೋಡಿದ. ಇತ್ತೀಚೆಗೆ ತೆಗೆಸಿದ ಗೀತಳ ಇನ್ನೊಂದು ಫೋಟೋ. ನೋಡಿದ. ಕೂದಲು ಕತ್ತರಿಸಿದೆ. ಹುಬ್ಬಿಗೆ ಆಕಾರ ಬಂದಿದೆ.ತುಟಿಗೆ, ಕೆನ್ನೆಗೆ ಬಣ್ಣ ಬಂದಿದೆ. ಸೀರೆಯಬದಲು ಜೀನ್ಸ್ ಪ್ಯಾಂಟು ಬಂದಿದೆ. ಯಾವುದೂ ತಪ್ಪಲ್ಲವೆನ್ನಿಸಿತು. ಪ್ರಾಯಶಃ ಆಕೆಯ ಬದಲಾವಣೆಗೆ ತಾನು ಸ್ಪಂದಿಸುತ್ತಿಲ್ಲ ಅನ್ನಿಸಿತು. ಅಥವಾ ತನ್ನ ಕಲ್ಪನೆಗೂ ಮೀರಿ ಈಕೆ ಬೆಳೆಯುತ್ತಿದ್ದಾಳೆಯೇನೋ ಅನ್ನಿಸಿತು. ರೂಪವಂತೆ ಅನ್ನುವ ಮೊದಲ ಕಾರಣಕ್ಕೆ ಗೀತಳನ್ನು ಆರಿಸಿದ್ದ ರವಿ. . ಮದುವೆಯ ಹೊಸದರಲ್ಲಿ ಈ ಬಣ್ಣ, ಬಳುಕೆಲ್ಲಾ ಗೀತಳ ಸೌಂದರ್ಯಕ್ಕೆ ಮೆರುಗುಕೊಡುವುದಕ್ಕೆ ಮಾತ್ರ ಬೇಕು ಎಂದನಿಸಿತ್ತು. ಆದರೆ ಈಗ ಯಾಕೋ ಈ ಲಿಪ್‌ಲೈನರು ಐಲೈನರುಗಳೆಲ್ಲಾ ಗೀತಳನ್ನು ವಿವರಿಸಲಿಕ್ಕೇ ಬೇಕಾಗುತ್ತಿದೆ ಎನ್ನಿಸಿತು. ಹೆಂಡತಿಯ ಬದಲಾವಣೆಯ ಸ್ವಗತವೂ ಜಂಪಾಲಹಿರಿಯ ಸಾಲನ್ನು ಅವಲಂಬಿಸಿರುವುದು ತನ್ನ ಸಂವೇದನೆಗಳ ಬ್ಯಾಂಕ್ರಪ್ಟ್ಸಿಯನ್ನು ವಿಷದವಾಗಿ ತನಗೇ ಬಿಡಿಸಿಹೇಳುತ್ತಿದೆ ಅನ್ನಿಸಿ ಸಂಕಟವಾಯಿತು, ರವಿಗೆ. +ಇಲ್ಲಿಗೆ ಬಂದಾಕ್ಷಣ ಸ್ಕೂಲ್ಲಿಗೆ ಸೇರುತ್ತೇನೆಂದಳು. ಬೇಡ ಅನ್ನಲಾರದೇ ಒಪ್ಪಿದ್ದ. ಹೆಣ್ಣು ಯಾಕೆ ಕೆಲಸಮಾಡಬಾರದೆಂಬ ಅವಳ ಎರಡನೆಯ ತಿಂಗಳಿನ ಪ್ರಶ್ನೆಗೆ ಉತ್ತರ ಕೊಟ್ಟರೆ ಪುರುಷವಾದಿ ಎಂದುಕೊಳ್ಳುತ್ತಾಳೆ , ಮನೆಯಲ್ಲಿ ಸೆಕ್ಷುಯಲ್ ಹರಾಸ್ಮೆಂಟ್ ಎಂಬ ಕಾರ್ಪೋರೇಟ್ ಬೆಳವಣಿಗೆಯಾಗಬಾರದೆಂದು ಉತ್ತರವನ್ನು ತನ್ನಲ್ಲೇ ಅದುಮಿಟ್ಟುಕೊಳ್ಳುತ್ತಾ ಹೋದ.ಒಂದಾದ ನಂತರ ಒಂದು ಪ್ರಶ್ನೆ ಕೇಳುತ್ತಾ ಹೋದಳು, ಗೀತ. ಈತ ಉತ್ತರ ಕೊಡುತ್ತಲೇ ಹೋದ. ಬಹುಮಟ್ಟಿನ ಉತ್ತರ ಕ್ರಿಯೆಯಲ್ಲಿಯೇ ಇತ್ತು. ಅವಳ ಸ್ಕೂಲಿನ ಸಮಯಕ್ಕನುಕೂಲವಾಗುವಂತೆ ಮನೆ ಬದಲಿಸಿದ, ಕೆಲಸವನ್ನೂ ಬದಲಿಸಿದ. ಈಗ ಸದ್ಯಕ್ಕೆ ಮಗು ಬೇಡ ಅಂದಳು. ಆಯಿತು ಎಂದ. ತನ್ನ ವಾರ್ಡ್‌ರೋಬು ಪಾಲಿಸ್ಟರ್‌ನಿಂದ ಹಂಡ್ರೆಡ್ ಪರ್ಸೆಂಟ್ ಕಾಟನ್ ಆಗಲಿ ಅಂದಳು, ಆಯಿತು. ಪ್ರತಿಯೊಂದಕ್ಕೂ ಆತ ಕೊಟ್ಟುಕೊಳ್ಳುತ್ತಿದ್ದ ಉತ್ತರ- ಸಂಬಂಧಗಳು ಒಂದು ವ್ಯಾವಹಾರಿಕ ಒಪ್ಪಂದ. ಎರಡು ವ್ಯಕ್ತಿತ್ವಗಳು ಒಂದಕ್ಕೊಂದು ಸಮಾನಾಂತರವಾಗಿಯೇ ಹೋದರೆ ಆ ಸಂಬಂಧ ಒಂದಕ್ಕೊಂದು ಸೇರುವುದೂ ಇಲ್ಲ, ದೂರವಾಗುವುದೂ ಇಲ್ಲ. ಹಾಗಿದ್ದರೆ ಮಾತ್ರ ಅದು ಆರೋಗ್ಯಕರ. ಇದು ಅವನ ದೌರ್ಬಲ್ಯವೋ ಅಥವಾ ಆಫೀಸಿನ ಕಾರ್ಪೋರೇಟ್ ಬೈಲಾಗಳನ್ನು ಮನೆಗೆ ಅಳವಡಿಸಿದ್ದಕ್ಕೋ ಏನೋ ಎರಡೂ ಕಡೇ ಆತನಿಗೆ ಲಾಭವಾಗಿತ್ತು. ಆತನ ಕಂಪೆನಿ ಪಬ್ಲಿಕ್ಕಿಗೆ ಹೋಗಿತ್ತು. ಆದರೆ ಆತನ ಕೈಕೆಳಗಿನವರು ಇಪ್ಪತ್ತು ಜನ ಕೆಲಸ ಕಳೆದುಕೊಂಡಿದ್ದರು. ಗೀತ ತನ್ನ ಸ್ಕೂಲು ಮುಗಿಸಿ ಇವನಷ್ಟೇ ಒಳ್ಳೆಯ ಕೆಲಸವನ್ನು ಬೇರೆ ಕಂಪೆನಿಯಲ್ಲಿ ಪಡೆದಿದ್ದಳು. ರಾತ್ರಿ ಲೇಟಾಗಿ ಮನೆಗೆ ಬರುತ್ತಿದ್ದಳು. ಬರುತ್ತಲೇ ವೈನು ಕುಡಿಯುತ್ತಿದ್ದಳು. ಬರೀ ಬೀರು ಕುಡಿಯುತ್ತಿದ್ದ ರವಿ ಈಗ ಜ್ಯಾಕ್ ಡೇನಿಯಲ್ ಕುಡಿಯತೊಡಗಿದ್ದ. +ಬಾಗಿಲು ತೆರೆದ ಶಬ್ದವಾಯಿತು. ಗೀತ ಬಂದಳೆಂದುಕೊಂಡ. ’ಹಾಯ್’ ಎನ್ನುತ್ತಲೇ ಉತ್ತರಕ್ಕೆ ಕಾಯದೇ ತನ್ನ ಪರ್ಸನ್ನು ಸೋಫಾದ ಮೇಲೆ ಎಸೆದು ಬಚ್ಚಲಿಗೆ ಹೋದಳು. ರವಿ ತನ್ನಪಾಡಿಗೆ ತಾನು ಟೀವಿ ನೋಡುತ್ತಿದ್ದ. ಗ್ಲಾಸು ಮೂರನೇ ಸುತ್ತು ಮುಗಿದಿತ್ತು. +“ಊಟ ಆಯ್ತಾ” ಬಂದು ಪಕ್ಕದಲ್ಲಿ ಮಂಚದ ಮೇಳೆ ಉರುಳುತ್ತಾ ಕೇಳಿದಳು. ಆಗತಾನೆ ಸ್ನಾನ ಮಾಡಿದ್ದರಿಂದ ಮೂಗಿಗೆ ಸೋಪಿನ ವಾಸನೆ ಹಿತವಾಗಿ ಬರುತ್ತಿತ್ತು. ಬರೀ ಗೌನಿಗೆ ಮರುಳಾಗುವ ತನ್ನ ದೌರ್ಬಲ್ಯವನ್ನು ಕೊಂಚಹೊತ್ತಾದರೂ ದೂರವಿಡಬೇಕೆಂದು ಈ ಕಡೆ ತಿರುಗಿ ಮಲಗಿದ, ರವಿ. +ಟೀವಿಯ ರಿಮೋಟ್ ತೆಗೆದುಕೊಂಡು ಚಾನಲ್ ಬದಲಾಯಿಸತೊಡಳು. ಲೈಫ್‌ಟೈಂಗೆ ನಿಲ್ಲಿಸಿ ಆಸಕ್ತಿಯಿಂದ ನೋಡತೊಡಗಿದಳು. ಸಿಟ್‌ಕಾಮಿನಲ್ಲಿ ಎಲ್ಲೆಲ್ಲಿ ನಗಬೇಕೆಂದು ಹೇಳಿಕೊಡುವ ನಗುವ ಧ್ವನಿಗಳಿಗೆ ಪೈಪೋಟಿ ಕೊಡುವಂತೆ ನಗತೊಡಗಿದಳು. ದಿಂಬಿಗೊರಗಿ ಕಾಲೆತ್ತಿ ರವಿಯ ಮೇಲೆ ಹಾಕಿದಳು. ಮೈಮುರಿದು ಎದ್ದು ಕೆಳಗೆ ಕಾರ್ಪೆಟ್ಟಿನ ಮೇಲೆ ಕೂತಳು. “ಸ್ವಲ್ಪ ಬೆನ್ನು ಒತ್ತುತ್ತೀಯ” ಎಂದು ಕೇಳಿದಳು. ಇವೆಲ್ಲ ಆದದ್ದು ಕೇವಲ ಮೂರು ನಿಮಿಷದಲ್ಲಿ. +ಬೆನ್ನು ಒತ್ತುತ್ತಾ ” ನಾನು ಟೀವಿ ನೋಡುತ್ತಿದ್ದೆ.” ಎಂದ ರವಿ. ” ಇರಲಿ, ಲೈಫ್‌ಟೈಂ ನೋಡು, ಚೆನ್ನಾಗಿದೆ” ನಗುವಿನ ನಡುವೆ ರವಿಯ ಕೈಯನ್ನು ತನಗೆ ಬೇಕಾದ ಭುಜದ ಟ್ರಿಗರ್ ಪಾಯಿಂಟುಗಳ ಮೇಲೆ ಒತ್ತಿಸಿಕೊಳ್ಳುತ್ತಾ ಹೇಳಿದಳು. +“ನಾನು ವಿಂಬಲ್ಡನ್ ನೋಡಬೇಕೆಂದಿದ್ದೆ.” ಮತ್ತೆ ಸಂಕೋಚ ಅಂಟಿದ್ದ ಪಿರಿಕು. ತಾನು ಏನನ್ನೂ ನೇರವಾಗಿ ಹೇಳದೇ ಇದ್ದಿದ್ದೇ ಇದು ಇಲ್ಲಿಯತನಕ ಬರಲು ಕಾರಣವಾಗಿದೆ. ಇವತ್ತು ನಿಷ್ಠುರವಾಗಿಯೇ ಇರಬೇಕು ಅಂದುಕೊಂಡ. +“ಹೊರಗೆ ಲಿವಿಂಗ್ ರೂಮಿನಲ್ಲಿ ನೋಡಪ್ಪ. ಇದು ನನ್ನ ಫೇವರಿಟ್ ಶೋ.” ಕೈಗೊಂದು ಮುತ್ತಿಕ್ಕಿ ಹೇಳಿದಳು ಗೀತ. +“ಇಲ್ಲ, ನಾನು ಇಲ್ಲಿಯೇ ನೋಡುತ್ತೇನೆ, ನೀನು ಹೊರಗೆ ಹೋಗು” ಕಣ್ಣು ಮುಚ್ಚಿ ಹೇಳಿದ ರವಿ. ಧ್ವನಿ ನಡುಗುತ್ತಿತ್ತು. +” ನಾನು ಹೊರಗೆ ಹೋಗಬಹುದು ಎಂದು ನಂಬುವ ಧೈರ್ಯ ಯಾಕೆ ಮಾಡಿದ್ದೀಯ ನೀನು” ಕೇಳಿದಳು ಗೀತ. ಸಣ್ಣ ವಿಷಯವನ್ನು ದೊಡ್ಡದುಮಾಡಲು ಇಬ್ಬರಿಗೂ ತವಕವಾಗುತ್ತಿತ್ತು. +“ಯಾಕೆಂದರೆ, ಇದು ನನ್ನ ಮನೆ.” ಅಂದಮೇಲೆ ಜಾಸ್ತಿಯಾಯ್ತು ಅನ್ನಿಸಿತು. ಆದರೆ ಅಂದಾಗಿಬಿಟ್ಟಿತ್ತು. +“ಓಹೋ,” ಟಿವಿ ಆರಿಸಿದಳು. ಕಣ್ಣು ಮುಚ್ಚಿ ಬರುವ ಸಿಟ್ಟನ್ನು ತುಟಿಕಚ್ಚಿ ತಡೆದು ” ಇನ್ನೊಮ್ಮೆ ಹೀಗೆ ಮಾತಾಡಬೇಡ. ಸಂಬಳದ ಚೆಕ್ಕನ್ನು ನೋಡು. ಯಾರು ಯಾವುದಕ್ಕೆ ಎಷ್ಟು ಖರ್ಚು ಮಾಡಿದ್ದಾರೆ ಎಂದು. ಸುಮ್ಮನೆ ಮಾತು ಬೆಳೆಸಿ ಕೈ ತೋರಿಸಿ ಅವಲಕ್ಷಣ ಅನ್ನಿಸಿಕೊಳ್ಳಬೇಡ.” +“ಈ ಎರಡು ವರ್ಷದಿಂದ ಮಾತ್ರ.” ರವಿ ಬಿಡಲಿಲ್ಲ.” ಅದಕ್ಕೆ ಯಜಮಾನಿಯ ರೀತಿ ಆಡುವುದು ಸರಿಯಲ್ಲ” +“ನೀನಿರುವುದು ಭಾರತದಲ್ಲಲ್ಲ. ಇದ್ದರೂ ಅಲ್ಲಿಯೂ ನಿನ್ನ ಹಾಗೆ ಯಾರೂ ಅಡುವುದಿಲ್ಲ. ನಾನು ಹೆಣ್ಣಾದ ತಕ್ಷಣ ಮಟ್ಟಿಸಿಕೊಳ್ಳುವಳೇ ಆಗಬೇಕೆಂದು ಏನೂ ನಿಯಮವಿಲ್ಲ. ಒಂದೇ ಒಂದು ದಿನ ಮನೆಯಕೆಲಸ ಮಾಡುತ್ತೀಯಾ ನೀನು?” +” ನಾನ್ಯಾಕೆ ಮಾಡಬೇಕು. ಬೇಕಾದಷ್ಟು ಮಾಡಿದ್ದೇನೆ, ಈ ಮನೆಗೆ. ನೀನು ನಿನ್ನ ಕೆಲಸದ ಜೊತೆಗೆ ಮನೆಕೆಲಸ ಮಾಡಿದರೆ ಅದೇನು ತಪ್ಪು” ಮಾತು ತಾನೇ ಹಾಕಿಕೊಂಡ ಬೈಲಾಗಳನ್ನು ಎಲ್ಲೋ ಮೀರುತ್ತಿದೆ ಅನ್ನಿಸಿದರೂ, ಮನಸ್ಸಿನ ಯಾವುದೋ ಒಂದು ಭಾಗಕ್ಕೆ ಖುಷಿ ಸಿಕ್ಕುತ್ತಿದ್ದರಿಂದ ಹೀಗೆಯೇ ಮುಂದುವರಿಸೋಣವೆಂದೆನ್ನಿಸಿತು.” ನೀನು ಆಫೀಸಿನ ಪವರ್ ರಾಜಕೀಯಾನ ಮನೆಗೆ ತರಬೇಡ.ಮನೆಯಲ್ಲಿ ನಾನು ನಾನೇ.ನೀನು ನೀನೇ.” ಮಾತುಗಟ್ಟಿಯಾಗತೊಡಗಿತ್ತು, ಅವನಿಗೇ ಅಚ್ಚರಿಯಾಗುತ್ತಿತ್ತು, ಸಣ್ಣ ವಿಚಾರಗಳು ದೊಡ್ಡವಾಗುವ ಕ್ರಿಯೆ ಕೆಲವೊಮ್ಮೆ ಆ ವಿಷಯಗಳೊಂದಿಗೇ ಹಾಸುಹೊಕ್ಕಾಗಿರುತ್ತವೆಯೋ ಏನೋ, ಆದರೆ ಎಲ್ಲವಕ್ಕೂ ಕಾಲಕೂಡಿಬರಬೇಕು ಎಂದನ್ನಿಸಿತು, ಇಬ್ಬರಿಗೂ. ಇದು ಹೋಗುತ್ತಿರುವ ವೇಗ ಇಬ್ಬರಿಗೂ ಇಷ್ಟವಾಗದಿದ್ದರೂ ಉತ್ಕರ್ಷ ಕೆಟ್ಟ ಖುಶಿಯನ್ನು ರವಿಗಂತೂ ತರುತ್ತಿತ್ತು, ಅಥವಾ ಹಾಗಂದುಕೊಂಡಳು ಗೀತ. ಮಾತಾಡಬಾರದು, ಅದು ಈಡಿಯಸಿ ಎಂದೆನ್ನಿಸಿ ಸುಮ್ಮನಿದ್ದಳು. ಆದರೆ,ಇಂದು ಮಾತಾಡಲೇಬೇಕೆಂದು ನಿಶ್ಚಯ ಮಾಡಿದ್ದ, ರವಿ. +” ನೀವು ಹೆಂಗಸರು, ನನ್ನಂಥ ಗಂಡಂದಿರುವವರೆಗೆ ಈ ರೀತಿಯ ಧೋರಣೆಗಳಿಟ್ಟುಕೊಂಡು, ಅದಕ್ಕೆ ಸ್ತ್ರೀವಾದ, ಶೋಷಣೆ, ವಿಮೋಚನೆ ಇನ್ನೂ ಏನೇನನ್ನೋ ದೊಡ್ಡದೊಡ್ಡದಾಗಿ ಮಾತಾಡುತ್ತೀರಿ. ಆದರೆ ನಿನಗೂ ಗೊತ್ತಿರುವ ನಿಜವೇನು ಗೊತ್ತಾ, ಹೆಣ್ಣಿಗೆ ವಾದ ಮಾಡಬೇಕು ಅನ್ನಿಸಿದ್ದು ಆಕೆ ಬಲಿಷ್ಟೆಯಾದದ್ದರಿಂದಲ್ಲ. ನನ್ನಂಥ ನಾಮರ್ದಗಳು ದುರ್ಬಲರಾದ್ದರಿಂದ. ನನ್ನಂಥವರುಗಳನ್ನು ಮುಂದಿಟ್ಟುಕೊಂಡು ನಿನ್ನನ್ನು ನೀನು ಫೆಮಿನಿಸ್ಟ್ ಅಂತ ಕರಕೋತೀಯ. ಅಷ್ಟೆ.” +” ಅದು ತಪ್ಪೇನಿಲ್ಲ, ಪ್ರಪಂಚದಲ್ಲಿ ಪೂರ ಸತ್ಯ ಯಾವುದೂ ಇಲ್ಲ. ಮತ್ತೆ ನೀನು ಮಾಡುತ್ತಿರುವುದು ಒಂದು ತೀರ ದುರ್ಬಲವಾದ ವಾದ, ಕ್ಲಿಶೆ. ಅದು ಎಲ್ಲೂ ಗೆಲ್ಲುವುದಿಲ್ಲ. ಚೆನ್ನಮ್ಮನ ಕಾಲದಿಂದ ಇಲ್ಲಿನವರೆಗೂ ನಾವು ಇದ್ದೇ ಇದೀವಿ. ಇರುತ್ತಲೇ ಹೋಗುತ್ತೀವಿ.ಅದನ್ನು ಒಪ್ಪಿಕೊಳ್ಳೋ ಧೈರ್ಯ ನಿನ್ನಲಿಲ್ಲ. ನೀನು ನಿನ್ನನ್ನು ದುರ್ಬಲ, ನಾಮರ್ದ ಅಂತ ಕರಕೊಳ್ಳೋದು ಒಂದು ರೀತಿಯ ಡಿಫೆನ್ಸು, ಆತ್ಮರಕ್ಷಣೆ. ನಮ್ಮನ್ನೂ ನಾವು ವೀಕ್ ಅಂತ ತಿಳಕೊಳ್ಳಲಿ ಅನ್ನೋ ಭಾವನೆಯನ್ನು ನಮ್ಮಲ್ಲಿ ಮೂಡಿಸೋದಕ್ಕೆ ಎಸಿತಾ ಇರೋ ಕಟ್ಟ ಕಡೆಯ ಒಂದು ಹೊಲಸು ಅಸ್ತ್ರ. ಅದು ಯಾವತ್ತೂ ಕೆಲಸ ಮಾಡುವುದಿಲ್ಲ. ನಿನ್ನನ್ನಿಳಿಸಿಕೊಂಡು ನನ್ನನ್ನೇರಿಸಬೇಕಾಗಿಲ್ಲ. ನೀನು ಎಲ್ಲಿದ್ದೆಯೋ ಅಲ್ಲೇ ಇದ್ದೀಯಾ. ನಾನು ಮೇಲೆ ಹೋಗ್ತಾ ಇದೀನಿ, ಅದನ್ನು ಸುಮ್ಮನೆ ಒಪ್ಕೋ.” ಪಟ್ಟು ಬಿಡದೆ ಹೇಳಿದಳು ಗೀತ. +” ಹಾಗಾದ ತಕ್ಷಣ ನಿನ್ನ ಸುತ್ತ ಇರೋದೆಲ್ಲ ತುಚ್ಚ ಅಂತ ನೋಡೋದು ಎಷ್ಟು ಸರಿ” ಧ್ವನಿಯಲ್ಲಿ ಹತಾಶೆಯಿತ್ತು, ರವಿಯಲ್ಲಿ. +” ಹಾಗೆ ನಾನ್ಯಾವತ್ತೂ ಅಂದುಕೊಂಡಿಲ್ಲ. ನನ್ನ ದಿನಚರಿ, ಹೊರಗೆ ಕೆಲಸ ಮಾಡುತ್ತಿರುವ ಯಾವ ವ್ಯಕ್ತಿಯ ದಿನಚರಿಗಿಂತಾ ಏನೂ ಬೇರೆಯಾಗಿಲ್ಲ. ಆದ್ರೆ ಅದನ್ನು ನೋಡೋ ನಿನ್ನ ದೃಷ್ಟಿ ಸರಿಯಾಗಿಲ್ಲ ಅಷ್ಟೆ. ನನ್ನನ್ನು ಶೋಕೇಸಿನ ಬೊಂಬೆಯ ತರ ನೋಡೋದನ್ನು ಕಡಿಮೆ ಮಾಡಿ, ಸರೀಕಳ ಹಾಗೆ ನೋಡಲು ಪ್ರಯತ್ನ ಮಾಡು. ಆಗ ನಿನಗೇ ಅರ್ಥವಾಗುತ್ತದೆ. ಆದರೆ ಅದಕ್ಕೆ ನೀನು ರೆಡಿಯಾಗಿಲ್ಲ, ಅಷ್ಟೆ. ನಾನು ನಿನಗಿಂತ ಯಾಕೆ ಕಡಿಮೆ ಅನ್ನುವುದಕ್ಕೆ ಒಂದು ಒಳ್ಳೆಯ ಕಾರಣ ಕೊಡು.” +” ಯಾಕೆ ಕಡಿಮೆಯಾ, ನಿನ್ನನ್ನು ನೀನು ಕೇಳಿಕೋ. ಊರು ಕೇರಿ ಗೊತ್ತಿಲ್ಲದ ನನ್ನನ್ನು ಮದುವೆ ಮಾಡಿಕೊಂಡು ದೇಶ ಹಾರಿಬಂದರೆ ಕನಸೇ ಬೀಳದ ನಿನ್ನ ಕಣ್ಣುಗಳಿಗೂ ಕನಸುಬಿದ್ದು ಅವುಗಳನ್ನು ನನಸು ಮಾಡ್ಕೋಬಹುದು ಅನ್ನೋದನ್ನು ಯೋಚನೆ ಮಾಡುವುದಕ್ಕೆ ನಿನಗೆ ಸಾಧ್ಯವಾಗುವುದಕ್ಕೆ. ನಿನ್ನ ಓದು ಮುಗಿಯುವತನಕ ಅಥವಾ ಓದದಿದ್ದರೆ ಕೊನೆಯತನಕ ನಾನು ನೋಡ್ಕೋತೀನಿ ಅನ್ನೋ ಟೇಕನ್ ಫಾರ್ ಗ್ರಾಂಟೆಡ್ ನಂಬಿಕೆಗೆ, ನಿನ್ನನ್ನು ಸಾಯೋವರೆಗೂ ನೋಡ್ಕೋತೀನಿ ಅಂತ ನೀನು ನಿನ್ನ ಮನೆಯವರು ತಿಳ್ಕೊಂಡಿದೀರಲ್ಲ, ಆ ಗ್ಯಾರಂಟಿಗೆ. ನಿನಗೆ ಹುಶಾರಿಲ್ಲದಿದ್ದರೆ, ಮನೇಲಿ ಸಾಮಾನು ಕೆಟ್ಟರೆ ಡಾಕ್ಟರನ್ನೋ ರಿಪೇರಿಯವನನ್ನೋ ಕರೆಯುವ ಮುಂಚೆ ನನ್ನನ್ನು ಕರೀತಿಯಲ್ಲ, ನನ್ನ ಡೀ ಫಾಲ್ಟ್ ವ್ಯಕ್ತಿತ್ವಕ್ಕೆ. ಈಗ ನೀನು ಬಲಮಿದುಳಿಗೆ ಗೊತ್ತಾಗದಂತೆ ಎಡಮಿದುಳಿಗೆ ಯೋಚನೆಮಾಡಲು ಕಲಿಸಿದ್ದೀಯಲ್ಲ, ಅದಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ.” ರವಿ ಏನೇನು ಹೇಳಬೇಕೆಂದುಕೊಂಡಿದ್ದನೋ ಎಲ್ಲವನ್ನೂ ಒಟ್ಟಿಗೇ ಹೇಳಿ ಮುಗಿಸಿದ್ದ. +” ಸುಮ್ಮನೆ ಕೂಗಾಡಬೇಡ. ನೀನು ಏನೇ ಹೇಳು. ನನಗೆ ನಿನ್ನ ಮೇಲೆ ಏನು ನಂಬಿಕೆಗಳು, ಸಂಶಯಗಳು, ಇಶ್ಯೂಗಳು ಇದ್ದವೋ ನಿನಗೂ ಅವೇ ಇದ್ದವು, ನನ್ನ ಮೇಲೆ. ಇಲ್ಲದಿದ್ದರೆ ನನ್ನನ್ಯಾಕೆ ಅರ್ರಿಸುತ್ತಿದ್ದೆ. ನೀನಿಲ್ಲದಿದ್ದರೆ ನನಗೆ ಇನ್ನೊಬ್ಬ ಸಿಗುತ್ತಲೇ ಇದ್ದ. ನಿನಗೂ ಅಷ್ಟೆ. ಈಗಲೂ ಅಷ್ಟೆ. ಯಾರೂ ಯಾರಿಗೂ ಎಕ್ಸ್‌ಕ್ಲ್ಯೂಸಿವ್ ಅಲ್ಲ. ಎರಡು ವರ್ಷದ ಹಿಂದೆ ನಾನು ನಿನ್ನನ್ನು ಅವಲಂಬಿಸಿದ್ದೆ ನಿಜ, ಅದು ಜೀವನ ಪೂರ್ತಿ ನಾನು ಇನ್ನೊಬ್ಬನ ಹಂಗಿನಲ್ಲಿರಬಾರದೆಂದು ನನಗೆ ನಾನೇ ಮಾಡಿಕೊಂಡ ಹೊಂದಾಣಿಕೆ. ಅದಕ್ಕೆ ನನ್ನಿಂದ ನಿನಗೆ ಏನು ಸಿಕ್ಕಿದೆ ಅಂತ ನೀನೇ ಕೇಳಿಕೋ. ಎಲ್ಲವನ್ನೂ ದುಡ್ಡಿನ ಮೂಲಕ ಅಳೆಯೋದಾದ್ರೆ, ನನಗೂ ಲೆಕ್ಕ ಬರುತ್ತೆ” ಮುಖಕ್ಕೆ ಹೊಡೆದಂತೆ ಹೇಳಿ ಪಕ್ಕಕ್ಕೆ ತಿರುಗಿ ಮಲಗಿದಳು. +ರಾತ್ರಿ ಎಷ್ಟು ಹೊತ್ತೋ ಗೊತ್ತಿಲ್ಲ, ಗೀತಳ ಕೈ ರವಿಯ ಬೆನ್ನಮೇಲೆ ಬಿದ್ದಿತ್ತು, ಬೆಳಿಗ್ಗೆ ಎದ್ದಾಗ ರವಿಯ ಕೈಗಳೂ ಗೀತಳ ಮೇಲೆ ಬಿದ್ದಿದ್ದವು. ಎದ್ದು ರವಿಯ ಮುಖನೋಡಿ ನಗುತ್ತಾ ಹೋದಳು, ಗೀತ. ಕಾಮ ಗೀಳಾಗುವುದು, ಪ್ರೇಮ ಬೋಳಾಗಿ ಗೋಳಾದಾಗ ಮಾತ್ರ, ಬೇರೆ ಬರೆದ ಕವಿಗೆ ತಲೆಯಲ್ಲಿ ಬುದ್ಧಿಯಿಲ್ಲ ಅಂದುಕೊಂಡ ರವಿ. +ಆ ಫೀಸಿನಲ್ಲಿ ಸಿಕ್ಕಿದ್ದ ಬಿಲ್ಲಿ. “ನನ್ನ ಹೆಂಡತಿಯಿಂದ ಡೈವೋರ್ಸ್ ಸಿಕ್ಕಿತು” ಎಂದು ಖುಷಿಯಾಗಿ ಹೇಳಿದ. ಡೈವೋರ್ಸ್‌ಗೆ ಪ್ರಯತ್ನ ಮಾಡುತ್ತಿದ್ದಾನೆಂದು ರವಿಗೂ ಗೊತ್ತಿತ್ತು. ಆದರೆ ಮುಕ್ತಿಯಲ್ಲಿ ಇಷ್ಟೊಂದು ಸಂತೋಷವಿರುತ್ತದೆ ಎಂದು ಆತನಿಗೆ ಗೊತ್ತಿರಲಿಲ್ಲ. “ಒಟ್ಟು ಎಪ್ಪತ್ತು ಸಾವಿರ ಡಾಲರ್ ಕೈಬಿಟ್ಟಿತು.” ಅಂದ. ಒಂದು ಕ್ಷಣ ಆಶ್ಚರ್ಯವಾಯಿತು ರವಿಗೆ. “ಯಾಕೆ, ಆಕೆಯೂ ಕೆಲಸ ಮಾಡುತ್ತಿದ್ದಳು ಅಲ್ಲವೇ. ಅಲಿಮೊನಿ ಏನೂ ಕೊಡಬೇಕಾಗಿರಲಿಲ್ಲ ಅಲ್ಲವೇ.” ರವಿ ಮನಸ್ಸಿನಲ್ಲಿದ್ದ ಚಿಂತೆಯನ್ನು ಕೇಳಿಕೊಂಡ. +“ಚಮಚದಿಂದ ಎಲ್ಲವನ್ನೂ ಹಂಚಿಕೊಂಡಳು, ಮಾಯಾಂಗಿನಿ.ಐದುವರ್ಷ ಸಂಸಾರ ಮಾಡಿದ ಒಂದುಕಾರಣವೇ ಸಾಕು. ಮನೆಯ ಮೇಲೆ ಆಕೆ ಅಧಿಕಾರ ಪಡೆಯಲು. ಕೆಲಸಮಾಡಲಿ, ಬಿಡಲಿ. ಮನೆ, ಮನೆಯಲ್ಲಿರೋ ಸಾಮಾನುಗಳೇ ಸಾಕು ನನ್ನನ್ನು ದಿವಾಳಿ ಏಳಿಸಲು. ಯಾರೋ ಸರಿಯಾದ ಲಾಯರ್‌ನೇ ಹಿಡಿದಿದ್ದಾಳೆ. ನನ್ನ ಮನೆಯಲ್ಲಿ ನನ್ನನ್ನೇ ಇರದಹಾಗೆ ಮಾಡಿದಳು. ಮನೆಗೆ ದುಡ್ಡು ಕೊಟ್ಟವ ಮಾತ್ರ ನಾನಾದೆ. ಮನೆಯನ್ನು ಬೇಳೆಸಿ ಅದಕ್ಕೆ ರೂಪು ಕೊಟ್ಟಿದ್ದು ಆಕೆ, ಆದ್ದರಿಂದ ಮನೆ ಆಕೆಗೆ ಹೋಗಬೇಕು ಎಂದು ವಾದಿಸಿ ಗೆದ್ದಳು. ಆಕೆ ಇಷ್ಟೊಂದು ವ್ಯವಹಾರಸ್ಥೆ ಎಂದು ಗೊತ್ತಿದ್ದರೆ ಇನ್ನೊಂದೆರಡು ವರ್ಷ ಪ್ಲಾನ್ ಮಾಡಿ ಆಮೇಲೆ ಬಿಡುತ್ತಿದೆ.” ಎಂದ ಬಿಲ್ಲಿ. +” ಎನಿವೇ, ಕಂಗ್ರಾಟ್ಸ್ ಹೇಳಬೇಕೋ ಏನೋ ಗೊತ್ತಾಗುತ್ತಾ ಇಲ್ಲ. ಮುಂದಿನದೇನು ಪ್ಲಾನ್. ಡೇಟು, ಊಟ, ಪ್ರಪೋಸಲ್ಲು… ಮತ್ತೆ ಮೊದಲ ಮನೆಗೇ ವಾಪಸ್ಸು. ನಿಮ್ಮಗಳವ್ಯಾಪಾರವೇ ಅರ್ಥ ಆಗೋಲ್ಲ. ಎಲ್ಲ ಅನುಭವಿಸಿದ ಮೇಲೂ ಮತ್ತೆ ಯಾಕೆ ಇನ್ನೊಮ್ಮೆ ಮದುವೆ ಬೇಕು” +“ಮತ್ತೆ ಮದುವೆ ಆಗ್ತಾರೆ ಅಂದದ್ದು ಯಾರು” +” ಇದು ನಿನ್ನ ಎಷ್ಟನೇ ಮದುವೆ, “ಕೇಳಿದ ರವಿ. +“ಎರಡನೆಯದು. ಸಾಕಷ್ಟು ಬುದ್ಧಿ ಬಂದಿದೆ. ಮತ್ತೆ ಮದುವೆ ಅನ್ನೋ ಬಾವೀಲಿ ಬೀಳೋದಿಲ್ಲ. ಇನ್ನೇನಿದ್ದರೂ ಮದುವೆಯ ಹೊರಗಿನ ಸಂಬಂಧ ಮಾತ್ರ. ಯಾವಳಾದ್ರೂ ಸಿಕ್ಕರೆ. ನನ್ನ ಜೀವನ ನನ್ನದು, ಆಕೆಯದು ಆಕೆಗೆ. ಚೆನ್ನಾಗಿದ್ದರೆ ಮುಂದಿನ ಹಂತ. ಇಲ್ಲದಿದ್ದರೆ ಆಡಿಯೋಸ್” +“ಎಲ್ಲಿಯವರೆಗೆ” ಕುತೂಹಲದಿಂದ ಕೇಳಿದ ರವಿ. +” ಕೊನೆಯವರೆಗೆ” +“ಅಂಥವಳು ಸಿಗಬೇಕಲ್ಲ” +“ಹುಡುಕಿದರೆ ಸಿಕ್ಕೇ ಸಿಗ್ತಾರೆ, ರವಿ. ಇಬ್ಬರು ವ್ಯಕ್ತಿಗಳ ಸಂಬಂಧ ಒಂದು ವ್ಯವಸ್ಥೆ ಆಗೋದು ಮದುವೆಯಿಂದಲೇ. ಅದೊಂದು ವ್ಯವಸ್ಥೆ ಆದಮೇಲೆ ಅಲ್ಲಿ ಮೇಲಿನವ, ಕೆಳಗಿನವ, ನಿಯಮಗಳು ಎಲ್ಲಾ ಶುರೂ ಆಗ್ತವೆ. ಸರಕಾರ ತನ್ನ ಮೂಗು ತೂರಿಸುತ್ತೆ. ಐ‌ಆರ್‌ಎಸ್ ಒಟ್ಟಿಗೇ ತೆರಿಗೆ ಕೇಳುತ್ತೆ. ಎರದೂ ವ್ಯಕ್ತಿಗಳ ಹೆಸರು ಒಂದೇ ಚೆಕ್ಕಿನ ಮೇಲೆ ಬಂದಾಗ ಆಗೋ ರೋಮಾಂಚನ ಮೊದಲ ಮೂರು ದಿನಗಳು ಮಾತ್ರ. ಇಬ್ಬರಲ್ಲಿ ಯಾರಿಗಾದರೂ ಒಬ್ಬರಿಗೆ ತಲೆಕೆಟ್ಟರೂ ಸಾಕು, ಯಾವನೋ ಒಬ್ಬ ಒಳ್ಳೇ ಲಾಯರು ಬರ್ತಾನೆ. ಇಬ್ಬರೂ ಒಟ್ಟಿಗೆ ಇದ್ದಾಗ ಧಂಡಿಯಾಗಿ ಇದೆ ಅನ್ನಿಸಿದ್ದು ಸಮನಾಗಿ ಹೊಂಚಿಕೊಂಡರೆ ಎಲ್ಲ ಕಳಕೊಂಡಿದೀವಿ ಅನ್ನೋ ಭಾವನೆ ಇಬ್ಬರಿಗೂ ಬರುತ್ತದೆ. ಸರಕಾರ ಒಂದಿಷ್ಟು, ಲಾಯರ್ ಒಂದಿಷ್ಟು ಕಿತ್ಕೋತಾರೆ. ಪ್ರಾಕ್ಟಿಕಲ್ಲಾಗಿ ನೋಡಿದರೆ ಮದುವೆ ಅಷ್ಟು ಒಳ್ಳೇ ಬಿಸಿನೆಸ್ ಡಿಸಿಷನ್ ಅಲ್ಲ ಅನ್ನಿಸುತ್ತದೆ. ಮತ್ತೆಲ್ಲಾ ಆದಮೇಲೆ, ನಷ್ಟಕ್ಕೆ ಎಮೋಷನಲ್ ಬಣ್ಣ ಬೇರೆ. ಆದ್ದರಿಂದ ಇನ್ಮೇಲೆ ಯಾರಹತ್ತಿರಾನಾದ್ರೂ ಸಂಬಂಧ ಬೆಳೆಸಿದರೆ, ಅದು ಈ ಸಿಸ್ಟಂನ ಹತ್ತಿರ ಬರುತ್ತಿದೆ ಅನ್ನೋ ಹೊತ್ತಿಗೆ ನುಣುಚಿಕೊಳ್ಳುವಷ್ಟು ಜಾಣ್ಮೆ ಕಲಿಸ್ತಾ ಇದೆ. ಅದೇನಿದ್ರೂ ಒಂಥರಾ ವೃತ್ತಿಪರತೆ ಇದಹಾಗೆ. ನಿನ್ನ ಜೊತೆ ಇದೆಯಲ್ಲ ನನ್ನ ಸಂಬಂಧ, ಹಾಗೆ. ಅದು ವ್ಯವಸ್ಥಿತವಾಗೋದಕ್ಕೆ ಸಾಧ್ಯವೇ ಇಲ್ಲ. ಅನ್ಲೆಸ್……” ಎಂದು ಕಣ್ಣು ಹೊಡೆದ ಬಿಲ್ಲಿ. +ಎರಡೂ ಕೈ ಮೇಲೆತ್ತಿ ಭುಜ ಮೇಲೆ ಕುಣಿಸಿ ಬೆಳ್ಳನೆಯ “ಅಯ್ಯೋ” ಮಾಡಿದ, ರವಿ. ಅದರಲ್ಲಿ ಆಶ್ಚರ್ಯ, ಭಯ, ಚೇಷ್ಟೆ ಹಾಗೂ ನಿರಾಕರಣೆ ಎಲ್ಲವೂ ಕ್ರಮವಾಗಿದ್ದವು. +ರಾತ್ರಿ ಮನೆಗೆ ಬಂದ ರವಿ. ಗೀತ ಇನ್ನೂ ಮನೆಗೆ ಬಂದಿರಲಿಲ್ಲ. ಕೈ ಫ್ರಿಜ್ ಮೇಲಿನ ಜ್ಯಾಕ್ ಡೇನಿಯಲ್‌ಗೆ ಹೋದದ್ದು ಏಕೋ ತಡೆಯಿತು. ಪಕ್ಕದಲ್ಲಿದ್ದ ಮರ್ಲೋ ಬಗ್ಗಿಸಿಕೊಂಡ. ಫ್ರಿಜ್ಜಿನಲ್ಲಿದ್ದ ಹಸಿರು ಈರುಳ್ಳಿ ಹೆಚ್ಚತೊಡಗಿದ. +ಅವನಂದುಕೊಂಡಿದ್ದಕ್ಕಿಂತಾ ಸ್ವಲ್ಪ ಬೇಗಲೇ ಬಂದಳು, ಗೀತ. ರವಿಯ ಗ್ಲಾಸ್ ನೋಡಿ ನಕ್ಕಳು. ತಾನೂ ಮರ್ಲೋ ಬಗ್ಗಿಸಿಕೊಂಡಳು. ” ಅಡಿಗೆ ಮಾಡ್ತಿದೀಯ” ಕೇಳಿದಳು. +ಹೌದು ಎಂದು ನಕ್ಕ. +” ನಾನು ಚೈನೀಸ್ ತಂದಿದ್ದೇನೆ. ತಿಂತೀಯ. ನನಗೆ ಇಷ್ಟಾಂತ ತಂದೆ, ನನಗ್ಗೊತ್ತು, ನಿನಗೆ ಅಷ್ಟೊಂದು ಇಷ್ಟ ಇಲ್ಲಾ ಅಂತ. ” ಅಂದಳು. +” ಮತ್ಯಾಕೆ ತಂದೆ” +” ನನಗೋಸ್ಕರ” +” ನಾನೂ ಅಭ್ಯಾಸ ಮಾಡ್ಕೊಂಡರೆ” +” ನಾಳೆಯಿಂದ ಪ್ರಯತ್ನಪಡು ಬೇಕಾದರೆ. ಇವತ್ತು ನನಗೊಬ್ಬಳಿಗೆ ಸಾಕಾಗುವಷ್ಟು ತಂದಿದ್ದೀನಿ. ಬೇಕಾದರೆ ರುಚಿ ನೋಡು” ಎಂದು ತಂದಿದ್ದ ಅರ್ಧಕ್ಕಿಂತ ಜಾಸ್ತಿಯೇ ರವಿಯ ತಟ್ಟೆಗೆ ಹಾಕಿದಳು. +” ರುಚಿ ತುಂಬಾ ಚೆನ್ನಾಗಿದೆ.” ಹೇಳಿದ ರವಿ. +“ನಾನು ಮಲಗುತ್ತೇನೆ. ಸುಸ್ತಾಗಿದೆ.” ಹೇಳಿ ರೂಮಿಗೆ ಹೋದಳು. +” ನಾನೂ ಬಂದೆ.” ಬಾತ್‌ರೂಮಿಗೆ ಹೋಗಿ ಕೈಕಾಲು ತೊಳೆದು ದೇವರಪಟವನ್ನು ಕಣ್ಣಿಗೊತ್ತಿಕೊಂಡ. ತನ್ನ ಅವಸ್ಥೆ ನೋಡಿ ತನಗೇ ನಗು ಬಂತು. ಕೆಲವೊಂದು ಅಭ್ಯಾಸಗಳು, ಒಳ್ಳೆಯವೋ ಕೆಟ್ಟವೋ ಸುಲಭವಾಗಿ ಹೋಗುವುದಿಲ್ಲ ಅನ್ನಿಸಿತು. ಜೇಬಿನಲ್ಲಿ ಹಿಂದಿನ ದಿನ ಬರೆದಿಟ್ಟ ಚೀಟಿಯನ್ನೊಮ್ಮೆ ಬಿಡಿಸಿ ನೋಡಿದ. ಇದೇ ನಾಲ್ಕು ಕಾರಣಗಳನ್ನು ಸ್ವಲ್ಪ ತಿರುಚಿದರೆ ಆರಾಮಿರುತ್ತದೆ ಅಂದುಕೊಂಡ. ದೇವರಗೂಡಿನಲ್ಲಿ ಹೊರನಾಡ ಅನ್ನಪೂರ್ಣೇಶ್ವರಿಯ ಚಿತ್ರದ ಪಕ್ಕ ಹಳೇ ಇಂಗ್ಲಿಷ್ ಲಿಪಿಯಲ್ಲಿರುವ, ಗೀತ ಹಾಕಿದ್ದ ಬಿಬ್ಲಿಕಲ್ ಹೌದೋ ಅಲ್ಲವೋ ಗೊತ್ತಿಲ್ಲದ ಸುಭಾಷಿತವೊಂದನ್ನು ನೋಡಿದ. ಸರ್ವಧರ್ಮಸಮನ್ವಯವೆನ್ನುವ ಕಾನ್ಸೆಪ್ಟಿಗೆ ಹತ್ತಿರ ಬರುವ ಗೀತಳ ಪ್ರಯತ್ನವದಾಗಿತ್ತು. +“God +Grant me the serenity +to accept things that +I cannot change….. +courage to +change things that I can…. and +the wisdom to know the +difference.” +ಗಟ್ಟಿಯಾಗಿ ಓದಿದ. ಮೆದುವಾಗಿ “ಏಮನ್” ಅಂದ. +***** +ಜುಲೈ ೯, ೨೦೦೨ +-೧- ಸುಮನ ಆಫೀಸ್ ತಲುಪಿದಾಗಲೇ ಸಮಯ ಒಂಭತ್ತು ಗಂಟೆಯಾಗಿತ್ತು. ಇನ್ನರ್ಧ ಗಂಟೆಗೆ ಗ್ರೂಪ್ ಮೀಟಿಂಗ್ ಶುರುವಾಗುವುದರಲ್ಲಿತ್ತು. ಈ ವಾರ ಯಾರು ಯಾರು ಎಷ್ಟೆಷ್ಟು ಕೆಲಸಗಳನ್ನು ಮಾಡಿ ಮುಗಿಸಿದ್ದಾರೆ, ಅವರ ಕಾರ್ಯಗಳಲ್ಲಿ ಏನಾದರೂ ಎಡರು-ತೊಡರುಗಳು ಬಂದಿವೆಯೆ, […] +ಕರಿವೇಮಲದ ವೆಂಗಳರೆಡ್ಡಿಯನ್ನು ನೋಡಬೇಕೆಂಬ ನನ್ನ ಆಸೆ ಇನ್ನೊಂದೆರಡು ತಿಂಗಳಿಗೆ ದಶಮಾನೋತ್ಸವ ಆಚರಿಸುತ್ತದೆ. ನಾನು ಯಾವತ್ತು ಈ ಪವಿತ್ರ ಕೆಲಸಕ್ಕೆ ಸೇರಿದೆನೋ ಆವತ್ತಿನಿಂದಲೇ ಈ ಪ್ರಸಿದ್ಧ ಜಮೀನ್ದಾರರ ಬಗ್ಗೆ ತಲೆ ಕೆಡಿಸಿಕೊಂಡೆ. ನಾನು ವಾಸಕ್ಕಿದ್ದ ಮನೆಯ […] +ಕಾರವಾರ ಮುಂಬೈ ಹೆದ್ದಾರಿಯ ಪಕ್ಕದಲ್ಲಿದ್ದ ಹಳಿಯಾಳದ ಕಾರ್ಮೆಲ್ ಸ್ಕೂಲಿನ ಚಿಣ್ಣರ ಪ್ರಾರ್ಥನೆ ಗಲಾಟೆ ಬಾಯಿಪಾಠ ಪ್ರತಿಧ್ವನಿಸುವಷ್ಟು ಸನಿಹದಲ್ಲೇ ಇರುವ ನಲವತ್ತು ವರ್ಷಗಳಷ್ಟು ಹಳೆಯದಾದ ಗಜಾಕೋಕ್ ಚಾಳಿನ ಮೂರನೇ ನಂಬರಿನ ಮನೆಯಲ್ಲಿ ಮದುವೆಯಾಗಿ ಆಗಷ್ಟೇ ನಾಲ್ಕು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_102.txt b/Kannada Sahitya/article_102.txt new file mode 100644 index 0000000000000000000000000000000000000000..b9435600ccd72db7867b10c5fc42a395b8a874a3 --- /dev/null +++ b/Kannada Sahitya/article_102.txt @@ -0,0 +1,44 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? +ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? +ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? +ದೊರೆ, ಚರಾಚರ ರೂಪಗಳ ಈ ಬೆಳಕು ಯಾವ ಸೀಮೆಯದು? +ಆಶ್ಚರ್ಯ! ದೊರೆ, ಈ ಸದ್ದು ದೇವತೆಗಳ ಸೈನ್ಯದ್ದೆ? +ಅದ್ಭುತ! ದೊರೆ, ಎದ್ದ ಈ ನಗುವಿನ ಅಲೆ ಸ್ವರ್ಗದಪ್ಸರೆಯರದೆ? +ಯಾವ ದಿವ್ಯಗಾನವಿದು? ಆತ್ಮ ಹುಚ್ಚೆದ್ದು ಕುಣಿದಿದೆ +ಯಾವ ಶಿಳ್ಳೆಯದು? ಎದೆಯ ಹಕ್ಕಿ ರೆಕ್ಕೆ ಬಿಚ್ಚಿ ಚಡಪಡಿಸಿದೆ +ಯಾವ ಮದುವೆಯೂಟವಿದು? ಎಂಥ ಮದುವೆ? +ಸ್ವರ್ಗವೇ ಅಂತಃಪಟವಾದಂತೆ, ಬಂಗಾರ ಹರಿವಾಣದ ಚಂದ್ರನೇ ಬಂದಂತೆ +ಎಂಥಾ ಬೇಟೆ ಇದು? ವಿಧಿಯ ಬಾಣವೇ ಹಾರುತ್ತಿದೆ +ಅಲ್ಲವೆಂದರೆ ಈ ದಿವ್ಯ ಗಾಂಡೀವವೇಕೆ ಮಿಡಿದಿದೆ +ಬೆಸಗೊಳ್ಳಿರಿ, ಸಖಿಯರೆ, ಸುಭಸುದ್ದಿ +ತಟ್ಟಿ ಚಪ್ಪಾಳೆ, ಮಿಕ್ಕು ಮೀರಿ ಹೋಹ ಚಪ್ಪಾಳೆಯೊಡನೆ ಬಂದ +ಆಕಾಶಗಳ ಕೋಟೆಯಿಂದ ಅಭಯದ ದನಿ ಕೇಳಿದೆ +ಕಡಲ ತೆರೆಗಳ ಮಧ್ಯದಿಂದ ಎಂಥದೋ ಭಯ ಮೊರೆದಿದೆ +ಶ್ರೀಮಂತ ನಯನಗಳಿಗೆ ಸೊಕ್ಕೇರಿದೆ ನಿನ್ನ ದರ್ಶನದಿಂದ +ಕಣ್ಣಾರೆ ಕಂಡದ್ದಕ್ಕೆ ಸ್ವತಃ ಸಾಕ್ಷಿ ಹೇಳಿದೆ +ಬರಗಾಲದ ಬದುಕಿನಿಂದ ಹಾರಿ ಹೋಗು +ಅಗುಳಿಗಾಗಿ ಆತ್ಮಘಾತವಾಗುವ ಕಡೆಯಿಂದ ದೂರ ಸಾಗು +ಜೀವನಕ್ಕಿಂತ ಯಾವುದು ಸುಂದರ? +ಜೀವ ಹಾರಿತೆ, ಭಯವಿರಲಿ ದೂರ +ಜೀವ ಹಾರಿದ್ದಕ್ಕೆ ಅಳುವೇಕೆ? +ಜೀವದಾಗಮನಕ್ಕಿಂತ ಅದು ಒಳಿತಲ್ಲವೆ? +ಪ್ರತಿಯೊಬ್ಬನೂ ಎಂಥದಕ್ಕೂ ವಿಸ್ಮಯ ಶೀಲ +ನನ್ನ ವಿಸ್ಮಯದ ಮೂಲ! ಈತ ನಡುಮಧ್ಯವಿದ್ದೂ ಇಲ್ಲವಲ್ಲ +ಇದೇ ಶೂನ್ಯ, ನಾನು ವಿವರಿಸುವುದಿಲ್ಲ +ಏನು ವಿವರಿಸುತ್ತಿದ್ದಿ? +ಅಗೊ ವಿವರಗಳಾತ್ಮವೇ ಬಂದ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ನನ್ನ ಹೃದಯದ ಹಕ್ಕಿ ಮತ್ತೆ ಚೀರಿ ಹಾರಾಡಿತು ನನ್ನ ಆತ್ಮದರಗಿಣಿ ಮಾತ್ರ ಸಕ್ಕರೆ ಮೆಲ್ಲುತ್ತ ನೋಡಿತು ಹುಚ್ಚು ಕುಡುಕ ಒಂಟೆ ಮತ್ತೆ ವಿವೇಕದ ಸಂಕೋಲೆ ಹರಿಯಿತು ಹೆಂಡ ಮತ್ತೆ ಮೆದುಳಿಗೆ, ಕಂಗಳಿಗೆ ಏರಿ ಚಿತ್ತಾಗಿಸಿತು […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ವಸಂತಾಗಮನದ ಜತೆಗೆಯೇ ಬಂತು ನಲ್ಲನ ಸಂದೇಶ ನಾವೀಗ ಪ್ರೇಮ ಸುರೋನ್ಮತ್ತರು, ನಿಲ್ಲಲಾಗದೆ ತೂರಾಡಿದವರು ಹೋಗು ನಂದನವನಕ್ಕೆ ನನ್ನ ನಲ್ಲ, ಅಲ್ಲಿ ಕಾದ ನಂದನದ ಸುಂದರಿಯರು, ನಿನ್ನ ನಿರೀಕ್ಷೆಯಲ್ಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_103.txt b/Kannada Sahitya/article_103.txt new file mode 100644 index 0000000000000000000000000000000000000000..8c29a6f53f94878e8aadac6ae65204df7c636cef --- /dev/null +++ b/Kannada Sahitya/article_103.txt @@ -0,0 +1,60 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’ +ಈ ಗೀತೆ ಪ್ರತಿವರ್ಷವೂ ಚಿತ್ರರಂಗದಲ್ಲಿ ಕೇಳಿಬರುತ್ತಿದೆ. ಚಿತ್ರರಂಗದ ಅನವಶ್ಯಕವಾದ ವಿವಾದಗಳನ್ನು, ಬಾರದ ಟೀಕೆ ಟಿಪ್ಪಣಿಗಳನ್ನು ಕೇಳಿ ಕೇಳಿ ಸಾಕಾಗಿದೆ. +ವಾದ ಬೆಳಸಿ ಯಾವ ಲಾಭ +ಸಾಕು ನಿಲ್ಲಿಸು ಮಾತನು +ಒಡೆದ ಮುತ್ತು ಕೊಡಬಹುದೆ? +ಒಲಿದು ಒಲಿಸಿ ಸೋತೆನು +ಯಾರು ಯಾವುದೇ ಬಗೆಯ ಚಿತ್ರ ತೆಗೆಯಲಿ, ಅದು ಸದಭಿರುಚಿಯಿಂದ ಕೂಡಿದ್ದು ಮನೆಮಂದಿ ಎಲ್ಲ ಒಟ್ಟಿಗೆ ನೋಡುವಂತಿದ್ದರೆ ಅದಕ್ಕಿಂತ ಹೆಚ್ಚಿನ ಸಂತೋಷ ಮತ್ತೇನು ಬೇಕು? ಇದು ವ್ಯಾಪಾರೀ ಚಿತ್ರ – ಅದು ಕಲಾತ್ಮಕ ಚಿತ್ರ ಇನ್ನೊಂದು ಎಡಬಿಡಂಗಿ ಚಿತ್ರ ಎಂದು ವಾದ – ಪ್ರತಿವಾದ ಹೂಡುವುದರಲ್ಲೇ ಜೀವ ಸವೆಸುವುದರಲ್ಲಿ ಅರ್ಥವಿದೆಯೆ? +ಹೊಸ ಮುಖಗಳು ಬರುತಲಿವೆ +ಚಿತ್ರರಂಗದಲ್ಲಿ +ಅವರ ಮೆಚ್ಚೊ ಅಭಿಮಾನಿಗಳು +ಬೇಕು ಹೆಚ್ಚು ಸಂಖ್ಯೆಯಲ್ಲಿ +ನಿಜ….ಕನ್ನಡ ಚಿತ್ರರಂಗದಲ್ಲಿ ಈಗೊಂದಷ್ಟು ಹೊಸ ಮುಖಗಳು ಬರುತ್ತಿವೆ. ಸುದೀಪ್ ಸಂಜೀವ್, ರೇಖಾ, ಪ್ರಭುದೇವ ಸೋದರ ಪ್ರಸಾದ್, ಮತ್ತೊಬ್ಬಳು ರೇಖಾ, ಬಿ.ಸಿ.ಪಾಟೀಲ್, ಎಸ್. ಮಹೇಂದರ್‍, ಹೇಮಂತ್ ಹೆಗಡೆ, ಮುಂತಾದವರು ಚಿತ್ರ ನಟರಾಗಿ ತೆರೆಯ ಮೇಲೆ ಬಂದರೆ, ಮುನ್ನುಡಿ ಶೇಷಾದ್ರಿ, ಕವಿತಾ ಲಂಕೇಶ್, ಟಿ.ಎನ್. ಸೀತಾರಾಂ, ರಾಮದಾಸ ನಾಯಿಡು, ಅಶೋಕ್ ಪಾಟೀಲ್ ಮುಂತಾದವರು ನಿರ್ದೇಶನದಲ್ಲಿ ಹೊಸತನ ಚುಮುಕಿಸುತ್ತಿದ್ದಾರೆ. ವ್ಯಾಪಾರಿ ಚಿತ್ರಗಳಲ್ಲಿ ಅನೇಕ ನಟನಟಿಯರು ಮಿಂಚಿ ಅನುಪ್ರಭಾಕರ್‍ ಜನಪ್ರಿಯ ನಟಿ ಎನಿಸಿ, ಪ್ರೇಮಾ, ಶೃತಿ ಮುಂತಾದವರ ಪಕ್ಕಾ ಬಂದು ನಿಲ್ಲುತ್ತಿದ್ದಾಳೆ. ಹೊಸ ಪ್ರತಿಭೆಗಳು ಹೆಚ್ಚಬೇಕಿದ್ದಲ್ಲಿ ಚಿತ್ರರಸಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹ ನೀಡಬೇಕು. ಟಿ.ವಿ. ಮುಂದೆ ಕೂರುವುದು ಬಿಟ್ಟು ಚಿತ್ರಮಂದಿರಗಳತ್ತ ಟಿಕೇಟ್ ಕೊಳ್ಳಲು ತೆರಳಬೇಕು. +ಚಿತ್ರರಂಗದವರಿಗೀಗ +ಆಲ್ ಇನ್ ಆಲ್ ಹುಚ್ಚು +ಶ್ರದ್ಧೆ-ಭಕ್ತಿ-ಇದ್ದರೆ ಮಾತ್ರ +ಚಿತ್ರ ಅಚ್ಚುಮೆಚ್ಚು +ಯುಗಾದಿ ಅನಿಸಿಕೆಯೂ ತುಂಬಾ ಅರ್ಥಪೂರ್ಣ. ರವಿಚಂದ್ರನ್ ನಿರ್ಮಾಪಕರಾಗಿ ನಟರಾಗಿ ನಿರ್ದೇಶಕರಾಗಿ ಹೆಸರಾಗಿ ಕನ್ನಡ ಚಿತ್ರರಂಗಕ್ಕೆ ಗ್ರಾಂಜರ್‍ ತಂದರು. ಅನಂತರ ಅವರೇ ಸಂಗೀತ ನಿರ್ದೇಶಕರೂ ಆಗಿ ಹಾಡುಗಳನ್ನು ಬರೆಯ ಹೊರಟರು. ಸ್ಟುಡಿಯೋ ಓನರ್‍ ಆಗಿ ಎಲ್ಲ ಇಲ್ಲೇ ಬರಬೇಕೆಂದು ಒತ್ತಾಯವೂ ಹಾಕಿ ಆಲ್ ‘ಇನ್ ಆಲ್’ ಆಗಲು ಯತ್ನಿಸಿದರು. ನಟ ನಿರ್ಮಾಪಕರಾಗಿದ್ದ ಬಿ.ಸಿ.ಪಾಟೀಲ್ ನಿರ್ದೇಶಕನೂ ಆಗಲೂ ಮುಂದಾದರು. ಎಸ್.ಮಹೇಂದರ್‍ ನಿರ್ದೇಶಕನಾದ ನಾನು ಹೀರೋ ಕೂಡ ಆಗಬಲ್ಲೆ ಎಂದು ಗಟ್ಟಿಮೇಳ ತೆರೆಗಿತ್ತರು. ನಟರಾಗಿ ಜನಪ್ರಿಯರಾದ ವಿಷ್ಣು ಹೀರೋ ಪಾತ್ರದ ಜತೆ ವೃದ್ಧನ ಪಾತ್ರವೂ ಇರಲೆಂದು ಡಬ್ಬಲ್ ರೋಲ್ ಕಥೆಗಳನ್ನೇ ಆರಿಸತೊಡಗಿದ್ದರು. ದಿನೇಶ್ ಬಾಬು ಕಥೆ ಚಿತ್ರಕಥೆ-ಸಂಭಾಷಣೆ. ಕ್ಯಾಮರಾ ನಿರ್ದೇಶನ ಎಲ್ಲಕ್ಕೂ ಕೈಚಾಚಿದರು. ನಟ-ನಿರ್ಮಾಪಕ ಎಸ್. ನಾರಾಯಣ್ ಹೀರೋ ಆಗಿ ಮಿಂಚುತ್ತಾ ಟಿ.ವಿ. ಸೀರಿಯಲ್ ಮೆಗಾ ಧಾರವಾಹಿ ನಿರ್ದೇಶಕರಾಗಿ ಮುಂದುವರೆಯುತ್ತಾ ಟಿ.ವಿ. ಸೀರಿಯಲ್ ಮಾತ್ರ ಸಬ್‌ಕಾಂಟ್ರಾಕ್ಟ್ ಕೊಡತೊಡಗಿದರು. +ನಾಗಾಭರಣ, ಡಿ.ರಾಜೇಂದ್ರಬಾಬು, ನಾಗತಿಹಳ್ಳಿ ಸಹಾ ಹಿರಿ ಮತ್ತು ಕಿರುತೆರೆಯಲ್ಲಿ ‘ಆಲ್ ಇನ್ ಆಲ್’ ಆಗಲು ಹೊರಟಿದ್ದಾರೆ. ಜಗ್ಗೇಶ್ ನಟರಾದರು – ನಿರ್ಮಾಪಕರಾದರು, ಗಾಯಕರಾದರು ಈಗ ಅವರಿಗೆ ನಿರ್ದೇಶಕರಾಗುವ ಹುಚ್ಚು. ಚಿತ್ರ ಜನರಿಗೆ ಅಚ್ಚುಮೆಚ್ಚು ಎನಿಸುವುದು ‘ಸಿನ್ಸಿಯಾರಿಟಿ’ ಇದ್ದಾಗ ಮಾತ್ರ. +ಗೆಲ್ಲುವ ಕುದುರೆ ಬಾಲಕ್ಕೇ +ಎಲ್ಲ ಹಣವನು ಕಟ್ಟುವರು +ಸೋತ ಕುದುರೆಯನ್ನು +ಎಲ್ಲ ಕಸದ ತೊಟ್ಟಿಗೆ ತಳ್ಳುವರು +ಚಿತ್ರರಂಗಕ್ಕಂತೂ ಈ ಸಾಲುಗಳು ತುಂಬಾ ಸೂಕ್ತ. ಓಂ ಪ್ರಕಾಶ್‌ರಾವ್ ಎ.ಕೆ.೪೭ ನಿರ್ದೇಶಿಸಿದಾಗ ಎಲ್ಲ ‘ಆಹಾ’ ಎಂದರು. ‘ವಂದೆ ಮಾತರಂ’ ಅಡ್ರೆಸ್‌ಗಿಲ್ಲದೆ ಮಲಗಿದಾಗ ‘ಛೀ-ಥೂ’ ಎಂದರು. ಆಗಲೇ ಓಂ ಪ್ರಕಾಶ್ ‘ಪೊಲೀಸ್ ಡೈರಿ’ ಸೀರಿಯಲ್ ಮಾಡ ಹೊರಟಿದ್ದು, ಹೇಗೋ ಏನೋ ‘ಸೇತು’ ಅವರ ಕೈಸೇರಿ ‘ಹುಚ್ಚ’ ಆಯಿತು. ‘ಹುಚ್ಚ’ ನಂತರ ಭವ್ಯ ಪಮ್ಮೆಯ್ಯಳೊಂದಿಗೆ ೨ನೇ ಮದುವೆಯೂ ಆಯಿತು. ಈಗ ಹುಚ್ಚನ ಕಥೆ ಮುಗಿದಿದೆ ‘ಜಿಲ್ಲಾಧಿಕಾರಿ’ ಎನ್ನುತ್ತಿದ್ದಾರೆ ರಾಮು. +‘ಹಾಲಿವುಡ್’ ನಿರ್ದೇಶನದ್ದು ಹಲವು ಹಗರಣಗಳಾದುವು. ಧನರಾಜ್ ಚಿತ್ರದಲ್ಲಿ ಉಪೇಂದ್ರ ಪ್ರಭುದೇವ ಅಭಿನಯಿಸುವ ಸಂದರ್ಭ ಬಂದಾಗ ಹೊಸ ನಿರ್ದೇಶಕರಿಬ್ಬರು ಬಂದರು. ಯಜಮಾನ ಅದ್ಭುತ ಯಶಸ್ಸು ಗಳಿಸಿತು. ಆದರೆ ಪಾಪ! ನಿರ್ದೇಶಕ ಶೇಷಾದ್ರಿ ತೀರಿಕೊಂಡರು. ಅದೃಷ್ಟ ಕಾಲನೊಡನೆ ಪೈಪೋಟಿಗಿಳಿದಾಗ ಯಾರು ಯಾರ ಮೇಲೆ ಯಾವಾಗ ಸವಾರಿ ಮಾಡುತ್ತಾರೆ ಎಂದು ಹೇಳುವುದೂ ಕಷ್ಟ. +ಕತೆ, ಕಾದಂಬರಿ ಮರೆತಿಹರೆಲ್ಲ +ಕ್ಯಾಸೆಟ್ ಸಂಸ್ಕೃತಿ ಹೆಚ್ಚಿದೆಯಲ್ಲ +ಕನ್ನಡದಾ ಕಂಪು +ಮಾಯವಾಯಿತಲ್ಲ. +ನಿಜ. ಈಗ ೨೦ಕ್ಕೂ ಹೆಚ್ಚು ರೀಮೇಕ್ ಚಿತ್ರಗಳು ಬರಲಿವೆ. ಕ್ಯಾಸೆಟ್ ಸಂಸ್ಕೃತಿಯದೇ ರಾಜ್ಯಭಾರವಾದಾಗ ಕನ್ನಡ ನೆಲ-ಜಲ-ಸಂಸ್ಕೃತಿ ಮಣ್ಣುಪಾಲಾದಂತೆಯೇ! +‘ಮಕ್ಕಿಕಾ ಮಕ್ಕಿ, ಜೆರಾಕ್ಸ್ ಕಾಪಿ ಆದಾಗ ಸೃಜನಶೀಲತೆ ಎಲ್ಲಿ ಸಾಧ್ಯ?’ ಅಂದರು ಸುನೀಲ್ ಕುಮಾರ್‍ ದೇಸಾಯಿ. ಎಂಥ ಸತ್ಯದ ಮಾತು. +ಮೂಢನಂಬಿಕೆ ಬಿತ್ತುವರೆಲ್ಲ +ಪವಾಡ ಪ್ರಿಯರೆ ಆಗಿಹರೆಲ್ಲ +ಗ್ರಾಫಿಕ್ಸ್ ಹೆಸರಲಿ ಗೆಲ್ಲುವ ಕನಸು +ಮೋಸದ ಆಟ ಎಲ್ಲೆಲ್ಲು ಹುಲುಸು +‘ದುರ್ಗಾಶಕ್ತಿ, ನಾಗದೇವತೆ, ಗ್ರಾಮದೇವತೆಯಂಥ ಚಿತ್ರಗಳೇ ಈ ಮಾತಿಗೆ ಸಾಕ್ಷಿ. ನೀಲಾಂಬರಿಯೂ ಈ ದಿಕ್ಕಿನಲ್ಲೇ ಚಲಿಸೀತೇನೋ ಎಂಬ ಗುಮಾನಿ ಇದೆ. ನಿರ್ಮಾಪಕ, ನಟ, ನಿರ್ದೇಶಕರಿಗೂ ಒಂದು ಸಾಮಾಜಿಕ ಜವಾಬ್ದಾರಿ ಇಲ್ಲದಿದ್ದಲ್ಲಿ ಚಿತ್ರಗಳು ಹಣ ಕಸಿಯುವುದನ್ನೇ ಗುರಿ ಮಾಡಿಕೊಳ್ಳುವುದರಲ್ಲಿ ಸಂಶಯವಿಲ್ಲ. +ಫೈಟಿಂಗ್ ಹೆಸರಲಿ ಮಾರಣ ಹೋಮ +ಭ್ರಷ್ಟಾಚಾರದ ಬಗೆ ಬಗೆ ಡ್ರಾಮ +ಆದರ್ಶ ಮೌಲ್ಯಕ್ಕೆ ಎಳ್ಳುನೀರು +ಎಲ್ಲಿದೆ ಪ್ರೀತಿ-ಪ್ರೇಮಗಳ ಸ್ನೇಹದ ಖೀರು +ಆಕ್ಷನ್ ಫಿಲಂ ಹೆಸರುಗಳಲ್ಲಿ ಬರುವ ರಾಷ್ಟ್ರಗೀತೆಯಂಥ ಚಿತ್ರವನ್ನು, ಪೊಲೀಸ್‌ನವರು ಭ್ರಷ್ಟಾತಿಭ್ರಷ್ಟರೆಂದು ಸಾರುವ ಚಿತ್ರಗಳು ಯುವ ಜನಾಂಗಕ್ಕೆ ಯಾವ ಆದರ್ಶ ಮೌಲ್ಯಗಳನ್ನು ಸಾರೀತು. +ಅವನನ್ನು ಇವನು ತುಳಿದು +ಇವನನ್ನು ಅವನು ತುಳಿದು +ತಾನು ಮಾತ್ರ ಮಿಂಚುವಂಥ +ವೀರಾಗ್ರಣಿಗಳೆ ಎಲ್ಲೆಲ್ಲೂ +ಚಿತ್ರರಂಗದವರೆಲ್ಲ ಮೈಕ್ ಮುಂದೆ ‘ನಾವೆಲ್ಲ ಒಂದು ಕುಟುಂಬದವರು’ ಎನ್ನುತ್ತಾರೆ. ಚಿತ್ರ ಬಿಡುಗಡೆ ಸಮಯದಲ್ಲಿ ಪೈಪೋಟಿ ಪ್ರಾರಂಭ. ಚಿತ್ರ ಮಂದಿರದ ಮಾಲೀಕರ ಮರ್ಜಿಗನುಗುಣವಾಗಿ ಈ ಚಿತ್ರವನ್ನು ಆ ಚಿತ್ರ, ಆ ಚಿತ್ರವನ್ನು ಈ ಚಿತ್ರ, ಕಡೆಗೆ ನಾಯಕ-ನಾಯಕಿಯರ ಅವರವರದೇ ಚಿತ್ರ ಫೈಟಿಂಗ್‌ಗಿಳಿವ ದಿನಗಳಿವು. ಮುಂದಿನ ಯುಗಾದಿಯ ಹೊತ್ತಿಗೆ ಚಿತ್ರ ಬದಲಾಗಿ-ಬ್ರೈಟ್ ಫ್ಯೂಚರ್‍ ಬೆಳಗಲಿ ಎಂಬುದು ಈ ಯುಗಾದಿ ಅಂಬೋಣ. +***** +(೨೩-೩-೨೦೦೧) +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +‘ಗುಮ್ಮ ಬಂದ ಗುಮ್ಮ’ ಎಂದರೆ ಸಾಕು, ಮಕ್ಕಳು ಹೆದರಿ ನಡುಗುತ್ತವೆ ರಾತ್ರಿಯ ಹೊತ್ತು. ಹಾಗೆ ಹಾಡು ಹಗಲಿನಲ್ಲಿ ‘ವೀರಪ್ಪನ್ ಬಂದ’ ಎಂದರೆ ಸಾಕು ಕರ್ನಾಟಕ ಹಾಗೂ ತಮಿಳುನಾಡಿನ ಎರಡು ಸರಕಾರಗಳು ಗಡ ಗಡ ನಡುಗುತ್ತವೆ. […] +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_104.txt b/Kannada Sahitya/article_104.txt new file mode 100644 index 0000000000000000000000000000000000000000..a89e9870cf7ed31b2134d86cdb65a34470c01dc7 --- /dev/null +++ b/Kannada Sahitya/article_104.txt @@ -0,0 +1,52 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅವರು ಹೀಗಿರುವುದು ನಮ್ಮ ಅದೃಷ್ಟ, +ಹೀಗಿರದೇ ಹಾಗೆ – +’ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! +ಬೇಕಾದ್ದು ಮಾಡಬಹುದು +ಎಂದೂ ಏನೂ ಅಂದಿಲ್ಲ. +ಅದನ್ನೆಲ್ಲ ತಿಳಿಯವ ಆಸಕ್ತಿಯೂ ಅವರಿಗಿಲ್ಲ, +ಪುರಸೊತ್ತ೦ತು ಮೊದಲೇ ಇಲ್ಲ. +ನಮಗಂತೂ ಅವರ ಪಕ್ಕದಲ್ಲೇ ಜಾಗ. +ಅತ್ತ ಮೇಜು, ಕುರ್ಚಿ, ಟಿವಿ; ಇತ್ತ ನಾವು! +ಮತ್ತೆಲ್ಲ ಕಡೆ ರಾಶಿ ರಾಶಿ ಸಾಮಾನು. +ಸಂಜೆಗೆ ತಂಗಲೊಂದು ಮನೆ, +ರುಚಿಗೆ ತಕ್ಕ ಊಟ, ಮಲಗಲೊಂದಷ್ಟು ಜಾಗ… +ಮೂಲಭೂತ ಬೇಕುಗಳಲ್ಲೇ ಸಂತೃಪ್ತ. +ಸರ್ವೇಜನಾ ಸುಖಿನೋಭವಂತು! +ಬುದ್ಧನ ಅಪರಾವತಾರ. +ಆಸೆ ಇಲ್ಲ, ಅಹಂಕಾರವಿಲ್ಲ, ಕಾಮ ಮೋಹಗಳಿಲ್ಲ, +ಈ ಇಲ್ಲಗಳ ಬಾಲಗೋಚಿ ಅಳೆದು ನೋಡಿದರೆ, +ಕಡೆಗೆ ಏನೂ ಇಲ್ಲ. +ಸ್ವಯಂಕೇಂದ್ರಿತ ಅಹುದುಗಳಿಗೆ ಅಹುದೆನ್ನವ +ಕೂಪಮಂಡೂಕ. +ಬಟ್ಟೆ, ಪಾತ್ರೆ, ಅಡಿಗೆ… +ನಾವು ಮಾಡುವುದು ನಿತ್ಯಕರ್ಮ! +ಹುಣ್ಣಿಮೆಗೋ ಅಮಾವಾಸ್ಯೆಗೋ +ತಮ್ಮ ನಾಲಿಗೆ ರುಚಿಗೆ ತಾವು ಬೇಯಿಸಿಕೊಂಡದ್ದು +ನಮಗೆ ಮಾಡಿದ ಉಪಕಾರ? +ತಿಳಿದೇ ಇರಲಿಲ್ಲ ಇಂಥದ್ದನ್ನೆಲ್ಲಾ ಗಮನದಲ್ಲಿಡಬೇಕೆಂದು. +ಅವರು ಹೀಗಿರುವುದು ನಮ್ಮ ಅದೃಷ್ಟ, +ಹೀಗಿರದೇ “ಹಾಗೆ”- +`ಎಲ್ಲರ ಹಾಗೆ’ ಇದಿದ್ದರೆ, ಆಗ ತಿಳಿಯುತ್ತಿತ್ತು !! +ಛೆ! +ಎಷ್ಟು ದುರಹಂಕಾರ ನಮಗೆ!! +***** +ಮಲೆನಾಡ ನೀರ್ಝರಿಣಿ ತಡಿಯ ತಳಿರ್ದೊಂಗಲಲಿ ನಲಿವ ಮಂಗಲಪಕ್ಷಿ ನಿಚ್ಚ ಹಸುರಿನ ಒಸಗೆಹಾಡೆ ಈ ನೆಲದ ಮಣ್ಣಿಂದೊಗೆದ ಹಾಲ್ದೆನೆಗೆ, ಸೂರ್ಯಚಂದಿರ ತಾರೆ ನೋಡಿ ಮುಳುಗುವ ನೀಲಿತೇಲಿಸಿತು ನಿನ್ನೆಡೆಗೆ ತನ್ನಮೃತ ಲೀಲೆಯಂ! ಭವ್ಯತೆಯ ಕನಸು ಗರಿಗೆದರಿ ಮರದುದಿಯಿಂದಬಾನಮುಡಿಗೇರಿ […] +೧ ಈಗ ತಾನೆ ಬಂದಿತೇನೆ ಮಧುರ ಕಂಠ ಕೋಗಿಲೇ? ಜಗದ ಬಿನದ ನಿನ್ನ ಮುದದ ಗಾನವಾಯ್ತೆ ಒಮ್ಮೆಲೇ! ೨ ಕೆಂಪು ತಳಿರು ಕಂಪಿನಲರು ಸೂಸುತಿಹುದು ಮಾಮರಾ ಅಲ್ಲಿ ಕುಳಿತು ಎಲ್ಲ ಮರೆತು ಉಲಿಯುತಿರುವೆ ಸುಮಧುರಾ […] +ಹುಬ್ಬಿನಂಚಿನಲಿ ಹೊಕ್ಕಳಿನ ಸುರುಳಿಯಲಿ ಚುಚ್ಚಿ ಕೆಣಕುವ ರಿಂಗು. ವಿಷಕನ್ಯೆಯಂತೆ ತುಟಿ ನೀಲಿ ರಂಗು. ಬ್ರಹ್ಮಾಂಡ ಜಾರಿಸಲು ಇನ್ನೇನು ಜಾರುವಂತಿದೆ, ಹೆಜ್ಜೆ ಒಂದಿರಿಸಿದರೆ ಪರ್ಸಂಟೇಜ್ ಸೀರೆ. ಇಂಥವಳ ಅನಿರೀಕ್ಷಿತ ಲೇಸರ್ ನೋಟಕ್ಕೆ ತಿರುಗಿದ ಆಸೆಬುಗುರಿ ಕಣಕಣದಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_105.txt b/Kannada Sahitya/article_105.txt new file mode 100644 index 0000000000000000000000000000000000000000..79e286663a63c38d19d9ceed826070e60dbb75e8 --- /dev/null +++ b/Kannada Sahitya/article_105.txt @@ -0,0 +1,202 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು. +“ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?” +“ನಿಮ್ಮನ್ನ ಬಿಟ್ಟು ಅವರೆಲ್ಲಿ ಹೋಗತಾರ ತಡೀರಿ; ಈಗ ಹೇಳಿ ಕಳಸ್ತಾರ” ಅಂದ. ಅದೂ ನಿಜವೇ. ಗೌಡನಿಗೆ ತಾನು ವಕೀಲಿ ಪಾಸಾದದ್ದು ಗೊತ್ತಿಲ್ಲವೆ? ಏನು ಮಾಡೋಣವೆಂದು ಕೇಳಲಿಕ್ಕೆ ಬಂದೇ ಬರುತ್ತಾನೆ. ಬಂದಾಗ ಹೋದರಾಯಿತು ಎಂದುಕೊಂಡು ಕುತೂಹಲ ತಾಳಿಕೊಂಡು ಸುಮ್ಮನೇ ಕೂತ. +ಗೌರಿ, ಗಟಿವಾಳಪ್ಪನ ಹೆಣ ನೋಡಿ ದತ್ತಪ್ಪನಿಗೇನು ಗೌಡನಿಗೂ ಭಯವಾಯಿತು. ತಕ್ಷಣ ಬಾಗಿಲು ಹಾಕಿ ಇಬ್ಬರೂ ಮುಂದಿನ ಹಾದಿ ಯೋಚಿಸುತ್ತ ಕೂತುಬಿಟ್ಟರು. ನಿಂಗೂ ತಪ್ಪು ಮಾಡಿದ ಖರೆ, ಆದರೆ ಗಟಿವಾಳಪ್ಪ ಗೌರಿಯರದೂ ತಪ್ಪೇ. ಅಲ್ಲೆ ಮಲಗಿದ್ದ ಮಗ ಕಾಣದಷ್ಟು ಕುರುಡಾಗೋದಂದರೇನು? ಮನುಷ್ಯ ಸಹನೆಗೂ ಮಿತಿ ಇಲ್ಲವೆ? ಇಷಲ್ಲದ ಇವರ ಆಸೆಗೆ ನಿಂಗೂ ಯಾವಾಗ ಅಡ್ಡಿ ಮಾಡಿದ್ದ? ಕಾಮ ಮುದುಕನ ಕಣ್ಣು ಕುಕ್ಕಿತು ಸಿಟ್ಟು ನಿಂಗೂನ ಕಣ್ಣು ಕುಕ್ಕಿತು. ಇಬ್ಬರೂ ಕುರುಡರಾದರು. ಸತ್ತವರು ಸತ್ತು ಹೋದರು. ಇದ್ದವನ ಗತಿಯೇನು? +ಇಂಥ ಕೇಸುಗಳಲ್ಲಿ ಗೌಡನ ಮನಸ್ಸು ಹೇಗೆ ಓಡುತ್ತದೆಂದು ದತ್ತಪ್ಪ ಬಲ್ಲ. ಇಷ್ಟು ವರ್ಷ ಕೂಡಿದ್ದು ಊರುಗಾರಿಕೆ ಮಾಡಿ ಸುಸೂತ್ರ ಪಾರುಗಾಣಿಸಿದರಲ್ಲವೆ? ಆದರೆ ಇಬ್ಬರ ತಲೆಯಲ್ಲೂ ಗುಡಸೀಕರ ತಪ್ಪಿ ಸುಳಿಯಲಿಲ್ಲ. ಬೇರೆ ದಿನಗಳಾಗಿದ್ದರೆ ಆ ಮಾತು ಬೇರೆ. ನಾಳೆ ಕರಿಬೇಟೆಯ ಹಬ್ಬ. ನಾಯಕರ ಹುಡುಗರು ಇಂದು ಬೇಟೆಯಾಡಲಿಕ್ಕೆ ಹೋಗುತ್ತವೆ. ಆ ಸಮಯವೂ ಹತ್ತಿರ ಬಂತು, ಹೋಗುವ ಮುನ್ನ ಗೌಡನಿಗೆ ನಮಸ್ಕಾರ ಮಾಡಿ ಅವನಿಂದ ಕಾಯಿ ತಗೊಂಡು ಹೋಗುವದು ಪದ್ಧತಿ. ಅವರು ಗೌಡನ ಮನೆಗೆ ಹೋಗೋಣ, ಗೌಡ ಇಲ್ಲದಿರೋಣ, ಏನೇನೋ ಸಂಶಯಗಳೇಳೋಣ. ಆಗಲೇ ಈ ಸುದ್ದಿ ಎಷ್ಟು ಮಂದಿಗೆ ಗೊತ್ತಾಗಿದೆಯೋ, ಗೊತ್ತಾಗುವ ಮುನ್ನವೇ ಇದಕ್ಕೊಂದು ಮುಕ್ತಾಯ ಕೊಡಬೇಕೆಂದು ಇಬ್ಬರ ತವಕ. ಯೋಚಿಸುತ್ತ ಹೆಣ ಕಾಯುತ್ತ ಇಬ್ಬರೂ ಕೂತರು. ನಿಂಗೂ ಇನ್ನೂ ಬಂದಿರಲಿಲ್ಲ. +ಅಷ್ಟರಲ್ಲಿ ನಿಂಗೂ ಗುಡಸೀಕರ ಮತ್ತು ಕಳ್ಳ ಸಿದ್ದರಾಮನೊಂದಿಗೆ ಬಂದ. ದತ್ತಪ್ಪನ ಮೈಮುರಿಯಿತು. ಏನೋ ಮಾಡಿ ಈ ಮಗನ್ನ ಪಾರು ಮಾಡೋಣವೆಂದರೆ ಇದ್ದದ್ದೂ ಹೋಗಿ ಗುಡಸೀಕರನನ್ನು ಕರೆತಂದನಲ್ಲಾ ಎಂದುಕೊಂಡು ‘ಛೀ’ ಅಂದ. ಗೌಡನಿಗೆ ಅರ್ಥವಾಯಿತು. ಆದರೆ ಅವನಿಗೆ ಮನುಷ್ಯರ ಮೇಲೆ ಭಾರೀ ವಿಶ್ವಾಸ, “ಬಾ ಹುಡುಗಾ ನೀನೂ ಬಂದಿ, ಛೆಲೋ ಆತು” ಅಂದ. ಗುಡಸೀಕರ ನಿರ್ಲಕ್ಷ್ಯ ಮಾಡಿ ಗುಡಿಸಲು ಬಾಗಿಲು ತೆಗೆದು ಒಳಕ್ಕೆ ನೋಡಿ, ನೋಡಲಾರದೇ ಹೊರಗೆ ಬಂದ. ಗೌಡ, “ಕೂಡ ಬಾ” ಅಂದ. ಹೋಗಿ ಕೂತ. ಕಳ್ಳನಿಗೆ ಬಾಗಿಲು ಹಾಕಲಿಕ್ಕೆ ಹೇಳಿದರು, ಹಾಕಿದ. ಗುಡಸೀಕರನೂ ಹೆಣ ನೋಡಿ ಬೆವರಿದ್ದ. ಹತ್ತು ನಿಮಿಷ ಯಾರೂ ಮಾತಾಡಲಿಲ್ಲ. ನಿಂಗೂವನ್ನು ಬಿಟ್ಟು ಉಳಿದವರೆಲ್ಲ ನಿಶ್ಚಲರಾಗಿ ಕಲ್ಲಿನಂತೆ ಕೂತುಬಿಟ್ಟರು. ನಿಂಗೂ ಮಾತ್ರ ಅವನ ಮುಖವನ್ನೊಮ್ಮೆ ಇವನ ಮುಖವನ್ನೊಮ್ಮೆ ನೋಡುತ್ತ ಕಣ್ಣೀರು ಸುರಿಸುತ್ತ ದೀನನಾಗಿ, ಹೆದರಿ ತನ್ನ ಗತಿಯೇನಾಗುವುದೋ ಎಂದು ಚಡಪಡಿಸುತ್ತಿದ್ದ. +ಕೊನೆಗೆ ಗೌಡನೇ ಬಾಯಿಬಿಟ್ಟ- +“ದತ್ತೂ ಗುಡಿಸಲಕ ಬೆಂಕಿ ಹಚ್ಚಿದರ ಹೆಂಗ?” +“ಬರೋಬರಿ” ಅಂದ ದತ್ತಪ್ಪ. +ದತ್ತಪ್ಪ ಸೈ ಅಂದರಾಯ್ತು. ಅದು ಸರಿಯಾದ ತೀರ್ಮಾನವೆಂದೇ ಗೌಡನ ಲೆಕ್ಕ. “ನಿಂಗ್ಯಾ ಹೆಣ ಹೊರಗ ತಗೀಬ್ಯಾಡ. ಇಂದ ರಾತ್ರಿ ಗುಡಿಸಲಕ ಬೆಂಕಿ ಹಚ್ಚು. ಯಾರಿಗೇನೂ ಹೇಳಬ್ಯಾಡ. ಬೆಳಿಗ್ಗೆದ್ದ ಇಬ್ಬರೂ ಗುಡಿಸಲದಾಗ ಸುಟಗೊಂಡ ಸತ್ತರಂತ ಮಂದಿಗೆಲ್ಲಾ ಹೇಳು.” +ಗುಡಸೀಕರನಿಗೆ ಸಿಡಿಲು ಬಡಿದಂತಾಯ್ತು. ಇದು ಹೇಳಿ ಕೇಳಿ ಖೂನಿ ಕೇಸು. ಇದರಲ್ಲಿ ತಾನಲ್ಲದೇ ಇನ್ನು ಯಾರು ಸಲಹೆ ಕೊಡಬಲ್ಲರು? ಅದು ಬಿಟ್ಟು ಹಳ್ಳಿಯ ಗಮಾರ ಮುದಿಯರಿಬ್ಬರು ತಾವೇ ಕಾನೂನು ಬಲ್ಲವರಂತೆ ಕೇಸು ಮುಚ್ಚುತ್ತೇವೆಂದರೆ ದಡ್ಡತನಕ್ಕೊಂದು ಮಿತಿ ಬೇಡವೆ? ಗೌಡನಿಗೆ ಬುದ್ಧಿ ಬೇಡವೆ? ತಾನು ಮನೆಯಲ್ಲಿ ಕೂತಿದ್ದರೆ ಕರೆಸಲೇ ಇಲ್ಲ. ಹೋಗಲಿ, ಹೆಂಗೋ ಕಳ್ಳನೇ ನಿಂಗೂನನ್ನು ಬಳಿಗೆ ಕರೆತಂದ. ತಾನಿಲ್ಲಿಗೆ ಬಂದದ್ದಾಯಿತು. ಬಂದ ಮೇಲೂ ತನ್ನ ಬಗ್ಗೆ ಈ ನಿರ್ಲಕ್ಷ್ಯವೇ? ಈ ಹದ್ದುಗಳು ತನ್ನನ್ನೊಂದು ಹುಲ್ಲುಕಡ್ಡಿಗೆ ಸಮನ ಮಾಡುವುದೆಂದರೇನು? ಖೂನಿ ಅಂದರೇನು! ಸಣ್ಣ ಬಾಬತ್ತೆ? ಕೋರ್ಟಿದೆ, ಕಾನೂನಿದೆ, ಕಾಯ್ದೆ ಕಣ್ಣಲ್ಲಿ ಮಣ್ಣೆರೆಚುವ ಕೆಲಸವನ್ನು ಹಾಡಹಗಲೇ ಮಾಡುತ್ತಾನಲ್ಲ ಇವನ ಮುದಿ ಧೈರ್ಯ ಎಷ್ಟು? ಹೋಗಲಿ ತನ್ನನ್ನಾದರೂ ಕೇಳಿದನೆ? ದತ್ತೂನನ್ನು ಕೇಳಿದನಲ್ಲ! ಇವರಿಗೆ ಬುದ್ಧಿ ಕಲಿಸಬೇಕೆಂದು ಮನಸ್ಸಿನಲ್ಲಿಯೇ ತೀರ್ಮಾನಿಸಿಬಿಟ್ಟ ಗುಡಸೀಕರ. +“ಬೆಂಕಿ ಹಚ್ಚಿ ಕಾಯ್ದೆ ಕಾನೂನು ಯಾಕ ಮೈಮ್ಯಾಲ ಹಾಕ್ಕೋತೀರಿ? ಸುಮ್ಮನೆ ಪೋಜುದಾರನ್ನ ಕರಸಿ ಪಂಚನಾಮೆ ಮಾಡಸರಿ” ಅಂದ. +“ಕಾಯ್ದೇ ಕಾನೂನು ನಮಗೂ ಗೊತ್ತವ ಏನಪಾ,-ಆದರ….” +ಎಂದು ದತ್ತಪ್ಪ ಬಾಯಿ ಹಾಕಿದ. ಗೌದ ಅಷ್ಟಕ್ಕೇ ತಡೆದು +“ಕಾಯ್ದೆ ಕಾನೂನಂದರ ಸಣ್ಣ ಮಾತಲ್ಲಪಾ, ಕೆಟ್ಟ ಇಂಗರೇಜಿ ಸರಕಾರ, ಕೇಸ ಬೆಳಗಾಂವಿಗೆ ಹೋದರ ನಿಂಗೂ ಉಳಿಯಾಣಿಲ್ಲ. ಸುಮ್ಮನ ಎಲ್ಲಾರೂ ಕೂಡಿ ಒಬ್ಬಗ ತಿಳಿತು, ತಿಳೀಲಿಲ್ಲ ಅಷ್ಟರಾಗ ಮುಗಿಸಿಬಿಡೋಣ.” +“ನಿಂಗೂ ಯಾಕ ಉಳಿಯಾಣಿಲ್ಲ?” +“ಯಾಕಂದರ ತಪ್ಪು ಮಾಡ್ಯಾನ-ಅದಕ್ಕ” +“ತಪ್ಪು ಮಾಡಿದ್ದಽ ಖರೆ ಆದರ ಅನುಭವಿಸಲಿ” +“ಅಂದರೇನು ನಿಂಗೂನ ಜೈಲಿಗೆ ಕಳಿಸೋಣಂತೀಯೇನು?” +“ಜೇಲಿಗೆ ಯಾಕ ಹೋಗಬೇಕು? ಅವನ ಪರವಾಗಿ ನಾ ವಕೀಲಿ, ಹಿಡೀತೀನಿ” ಎಂದ ಗುಡಸೀಕರ, ತನ್ನ ಮಾತಿನಲ್ಲಿಯ ವಿರೋಧ ಗುರುತಿಸಿದ. ಈ ಹುಡುಗ ಯಾರ ಪರವಾಗಿದ್ದಾನೆಂದು ದತ್ತಪ್ಪನಿಗೆ ತಿಳಿಯದಾಯ್ತು. +“ನೋಡಪಾ ಗುಡಸೀಕರ, ನೀ ವಕೀಲ್ಕಿ ಹಿಡೀತೀನಂತೀಯಲ್ಲಾ, ಬರೋಬರಿ. ಹಿಡಿದ ಏನ್ ಮಾಡತಿ? ವಾದಾ ಮಾಡಿ ನಿಂಗೂನ ಉಳಿಸಬೇಕಂತಿ! ಇಲ್ಲೇ ಈಗಽ ಉಳಿಸಲ್ಲ. ಹಾಂಗಽ ನೋಡಿದರ ಕೋರ್ಟಿಗೆ ಹೋದಮ್ಯಾಲ ಹೇಸ ಹಾಂಗ ಆದೀತು, ಹೀಂಗ ಆದೀತು-ಅಂತ ಹೇಳಾಕ ಬರತೈತೇನು? ನಿನ್ನ ಕೈಗೂ ಮೀರಿದ್ದದು. ವಾದಾ ಮಾಡತಿ, ಕೂರತಿ. ನಿಂಗೂಗ ಏನ ಮಾಡಬೇಕಂತ ಹೇಳವರು ಯಾರು? ಜಜ್ಜ ಸಾಹೇಬನ? ನೀನ? ಖೂನಿ ಮಾಡ್ಯಾನಂದಮ್ಯಾಲ ಫಾಸಿ ಶಿಕ್ಷಾ ಆಗಬೇಕಂತ ಅಂದರ? ಆಗ ಏನ ಮಾಡತಿ?” +“ಹಾಂಗಂತ ಕಾಯ್ದೆ ಕಾನೂನು ಮೀರಾಕ ಆದೀತೇನ್ರಿ?” +“ಮೀರಾಕ ನಾವೇನೀಗ ಅನ್ಯಾಯ ಮಾಡಕ ಹತ್ತೀದೇವು?” +“ಹಾಂಗಂದರ ಖೂನಿ ಮಾಡಿದವರ್‍ನೆಲ್ಲಾ ನೀವು ಹೀಂಗ ಬಚಾವ ಮಾಡಿಕೋತ ಹೋದರ ನ್ಯಾಯ ನೀತಿ ಉಳಿದಾವು ಹೆಂಗ?” +“ಅಂದರ ಒಟ್ಟು ನಿಂಗೂಗ ಫಾಸಿ ಶಿಕ್ಷಾ ಆಗಲೆಂದೇನು?” +ಗುಡಸೀಕರ ನಿರುತ್ತರನಾದ. ಇವರ ಈ ಅನಿರೀಕ್ಷಿತ, ಸ್ವಚ್ಛಂದ ವಾದಕ್ಕೆ ಹೇಗೆ ಉತ್ತರ ಕೊಡಬೇಕೆಂಬುದೇ ತಿಳಿಯದಾಯ್ತು. ಕೋರ್ಟಿನಲ್ಲಿ ಆಗುವ ವಾಗ್ವಾದಕ್ಕಿಂತ ಬೇರೆಯದೇ ಆದ, ವಿಚಿತ್ರ ವಾದವಿದು. ಈ ವಾದ ಮುಂದುವರಿಸಬೇಕಾದರೆ ಮೊದಲು ತಾನೆಲ್ಲಿ ನಿಂತಿದ್ದೇನೆ ಅನ್ನುವುದನ್ನು ಮನದಟ್ಟು ಮಾಡಿಕೊಳ್ಳಬೇಕು. ಬರೀ ನ್ಯಾಯ ನೀತಿ ಎಂದರೆ ನಿಂಗೂ ಜೇಲಿಗೆ ಹೋಗಬೇಕು, ಆದರೆ ಅದು ಬೇಕಿಲ್ಲ. ಹಾಳಾಗಿ ಹೋಗಲೆಂದರೆ ಈ ಮುದಿ ನರಿಗಳು ಕಾನೂನನ್ನು ತಮ್ಮ ಕೈಯಲ್ಲಿ ತಕ್ಕೊಂಡು ತಮಗ ಬೇಕಾದಂತೆ ಅರ್ಥೈಸುತ್ತ ಊರಿಗೆಲ್ಲ ಹುಸಿ ಪುಡಾರಿಗಳಾಗುತ್ತಿದ್ದಾರೆ! +“ನೋಡ್ರಿ ನಿಂಗೂ ಉಳೀತಾನೋ ಬಿಡತಾನೊ; ಆದರ ಕಾಯ್ದೆ ಕಾನೂನಂದರ ನಿಮ್ಮ ಕೈಯಾಗಿನ ಜನಿವಾರವಲ್ಲ.” ಎಂದು ದತ್ತಪ್ಪನಿಗೆ ಹೇಳಿಬಿಟ್ಟ. ಜಾತಿ ಆಡಿದನಲ್ಲಾ ಎಂದು ಗೌದನಿಗೂ ವ್ಯಸನವಾಯಿತು. ಇನ್ನು ಸುಮ್ಮನಿದ್ದರೆ ದತ್ತಪ್ಪನ ಬಾಯಿ ಮುಚ್ಚುವುದು ಕಷ್ಟ. ನಿಂಗೂನಿಗಾಗಲೇ ಗುಡಸೀಕರನ ಮೇಲೆ ಸಿಟ್ಟುಬಂದಿತ್ತು. ಇದೇನಿದು? ದಾರಿಯ ಪೀಡೆ ತಂದು ಮೈಮೇಲೆ ತೂರಿಸಿಕೊಂಡಂತಾಯಿತಲ್ಲಾ ಎಂದುಕೊಂಡ. ಸ್ವಥಾ ಪಂಚಾಯ್ತಿ ಮೆಂಬರ ಕಳ್ಳನಿಗೂ ಅಸಮಧಾನವಾಯ್ತು. +“ಆಯ್ತಪ್ಪಾ ಈಗೇನ ಮಾಡೋಣಂದಿ?” +“ಏನಂದರ ಪೋಜುದಾರ್‍ನ ಕರಸಿ ಪಂಚನಾಮೆ ಮಾಡ್ರಿ” ಈ ಹುಡುಗನಿಗೊಮ್ಮೆ ಕೊನೆಯ ಬಾರಿ ಬುದ್ಧಿ ಹೇಳಿ ನೋಡೋಣ ಅನ್ನಿಸಿತು ಗೌಡನಿಗೆ, +“ನೋಡಪಾ, ನಿಮ್ಮ ಶಹರದಾಗಿನ ಕಾಯ್ದೆ ಬ್ಯಾರೆ, ನಮ್ಮ ಹಳ್ಳಿ ಕಾಯ್ದೆ ಬ್ಯಾರೆ. ನಮ್ಮದು ನಿನಗೂ ಗೊತ್ತಿದ್ದಾಂಗ ಭಾಳ ಸರಳ. ಇಲ್ಲಿ ಜಗಳಾದರ ಇಲ್ಲೇ ನ್ಯಾಯ ಸಿಗಬೇಕು. ಇಲ್ಲೀ ಜಗಳದ ಮ್ಯಾಲ ಬೆಳಗಾಂವಿ ತೀರ್ಪು ತಂದ ಹೇರತೀನಂತಿ, ಹೆಂಗ ಹೇಳು?” +“ಕಾಯ್ದೆದೊಳಗ ಹಳ್ಳಿದೊಂದು ಶಹರದೊಂದು ಅಂತ ಎರಡಿಲ್ಲರಿ” +“ಇಲ್ಲದಿದ್ದರ ಮಾಡಬೇಕಪಾ. ಮತ್ತ ಖರೇ ಸಿಕ್ಕೀತು ಹೆಂಗ ಹೇಳು? ಇಷ್ಟಽ ತಿಳಿ: ಇಲ್ಲಿಂದ ಬೆಳಗಾಂವಿಗೆ ಕೇಸ ಒಯ್ತಿ. ನಿಂಗೂ ದೇವರಾಣಿ ಮಾಡಿ ಸುಳ್ಳ ಹೇಳತಾನ, ಹೇಳಸ್ತಾನ, ಆ ಸಾಕ್ಷಿ ನಂಬಿ ನೀ ವಾದ ಮಾಡತಿ. ನಿನ್ನ ವಾದ ಕೇಳಿ ಜಜ್‌ಸಾಬ ಜಜ್‌ಮೆಂಟ ಬರೀತಾನ. ಬಡ್ಡ್ಯಾಗ ಸುಳ್ಳ ಐತಿ, ತುದ್ಯಾಗ ಕುಂತವಗ ಖರೆ ಹೆಂಗ ಕಂಡೀತು ಹೇಳು?” +ಯಾವ ಬದಿಯಿಂದ ನೋಡಿದರೂ ತಾನೇ ಸೋಲುತ್ತಿದ್ದೇನೆಂದು ಗುಡಸೀಕರನಿಗೆ ಅನ್ನಿಸಿತು . ದತ್ತಪ್ಪನಿಗೆ ಗೌಡನ ಅನುಭವ ಹೊಸದಲ್ಲ. ಗೌಡನ ಮಾತಿಗೆ ಮನಸ್ಸಿನಲ್ಲೇ ಭಲೇ ಅಂದ. ಗೌಡ ಮುಂದುವರೆಸಿದ- +“ನಾವೆಲ್ಲಾ ಮುದುಕರಾದಿವಪಾ; ನಮ್ಮ ಕಾಲ ಮುಗೀತು. ಇನ್ನ ಹಳ್ಳೀ ಕಾರಭಾರ ನೋಡಿಕೋಬೇಕಾದವ ನೀನು. ನಮ್ಮ ಕಾಲದ ಮಂದಿ ಸರಳ ಇದ್ದರು. ಹೇಳಿದ್ದ ಕೇಳತಿದ್ದರು. ನಮ್ಮ ಕಾಲದಾಗಂತೂ ನಾವು ಕೋರ್ಟು ಕಛೇರಿ ಕಟ್ಟಿ ಹತ್ತಲಿಲ್ಲ. ನೀ ವಕೀಲಿ ಪಾಸ ಮಾಡೀದಿ ಅಂತ ಈ ಮಂದೀನೆಲ್ಲಾ ಕೋರ್ಟಿಗೆ ಎಳೆದರ ಹೆಂಗ, ನೋಡು? ನರ ಮನಶ್ಯಾ ತಪ್ಪ ಮಾಡ್ತಾನ ಮನಶ್ಯಾ ಮಾಡದ ಇನ್ನೇನ ದೇವರ ತಪ್ಪ ಮಾದಾಕಾಗತೈತಿ? ತಪ್ಪು ಮಾಡಿದಾ ಅಂತ ಏಕದಂ ಕೊಲ್ಲಾಕ ನೀ ಯಾರು ಹೇಳು? ಮನಶ್ಯಾ ಬರೀ ಸಾಯಾಕಽ ಹುಟ್ಟಲಿಲ್ಲಪ್ಪಾ. ಬದುಕಾಕೂ ಹುಟ್ಯಾನ. ದೇವರ್‍ನ ನೋಡಲ್ಲ. ನಾವು ಮಾಡಿದ ತಪ್ಪ ನೋಡಿದರ ಒಂದಽ ಒಂದು ದಿನ ನಮ್ಮನ್ನ ಈ ಭೂಮಿ ಮ್ಯಾಗಿಡಬಾರದು. ಆದರೂ ಕರಿಮಾಯಿ ನಮ್ಮನ್ನೆಲ್ಲಾ ಇಟ್ಯಾಳಲ್ಲ? ಯಾಕ ಹೇಳು? ಯಾಕಂದರ ಸಾವಿನಕಿಂತ ಬದುಕ ದೊಡ್ಡದಪಾ….?” +ಇವರು ಅಂತಿಂಥ ವಾದಕ್ಕೆ ಮಣಿಯುವುದಿಲ್ಲವೆಂದು ಗುಡಸೀಕರನಿಗೆ ಖಾತ್ರಿಯಾಯ್ತು. ಇವರ ವಾದದಲ್ಲಿ ಹುರುಳಿಲ್ಲ. ನಿಜ, ಆದರೆ ಪ್ರತಿವಾದ ಹೇಗೆ ಹೂಡಬೇಕೆಂದು ತಿಳಿಯದಾಯ್ತು. +“ನೋಡರೀ, ಇಂದಿಲ್ಲ ನಾಳೆ ಈ ಸುದ್ದಿ ಪೋಲೀಸರಿಗೆ ಸಿಗೋದಽ. ಸಿಕ್ಕಿತು ಅಂದರ ನಿಂಗೂನ ಗತಿ ಬಿಡರಿ, ನೀವಿಬ್ಬರೂ ಈ ಕೇಸಿನ್ಯಾಗ ಸಿಗಬೀಳ್ತಿರಿ. ಈ ವಯಸ್ಸಿನಾಗ ನಿಮಗ ಜೇಲಾಗೋದಂದರ ಚೆಲೋ ಅಲ್ಲ; ತಿಳಿದ ನೋಡ್ರಿ.” +ದತ್ತಪ್ಪ ಈ ತನಕ ಬಾಯಿ ಮುಚ್ಚಿದ್ದೇ ಹೆಚ್ಚು. +“ಆತಪಾ ನಾವು ಜೇಲಿಗೂ ಹೋಗಾಕ ತಯಾರ. ಆದರ ನಿಂಗೂನ್ನ ಬಿಟ್ಟು ಕೊಡಾಕ ನಾವು ತಯಾರಿಲ್ಲ. ನಿಂಗೂ ಖೂನಿ ಮಾಡಬೇಕಂತ ಮಾಡಿಲ್ಲ. ಇನ್ನ ಮುಂದ ಮಾಡಾವನೂ ಅಲ್ಲ. ಏನೋ ಅಚಾನಕ ಆದದ್ದು. ನಾವಿಬ್ಬರೂ ಅವನ ಬೆನ್ನಿಗೆ ನಿಂದರಾವರಽ. ಬೇಕಂದರ ನೀ ಹೋಗಿ ಪೋಲೀಸರಿಗಿ ಹೇಳಿಕೊ ಹೋಗು.” +ಹಸಿ ಗೋಡೆಯಲ್ಲಿ ಹರಳು ನಟ್ಟಂತೆ ದತ್ತಪ್ಪನ ಈ ಮಾತು ಗುಡಸೀಕರನ ಎದೆಯಲ್ಲಿ ನಾಟಿಬಿಟ್ಟಿತು. ಈ ಮುದಿಯರಿಗೆ ಈ ಧೈರ್ಯವೇ? ಮಾತು ಬಿರುಸಾದ್ದು ಗೌಡನಿಗೂ ತಿಳಿದಿತ್ತು. ಕೂಡಲೇ ಹೇಳಿದ. +“ಆಯ್ತಪಾ; ನೀ ಅದೆನು ಶಿಕ್ಷೆ ಕೊಡ್ತಿ ಕೊಡು. ನೀ ಹೇಳಿದಾಂಗ ಕೇಳಾಕ ಹಚ್ಚತೀವಿ. ತಪ್ಪಿಗಿ ಶಿಕ್ಷಾ ಇಲ್ಲ ಅನಬ್ಯಾಡ. ಆದರ ಬೆಳಗಾಂವಿ ಮಂದಿ ನಮ್ಮ ಊರಿನ ಮನಶ್ಯಾಗ ಶಿಕ್ಷಾ ಕೊಡೋದು ಶಕ್ಯಿಲ್ಲ. ಏನಂತಿ?” +“ನಾ ಜಜ್ ಅಲ್ಲ.” +“ನಾವಽ ಮಾಡತೀವಲ್ಲ. ಬೇಕಂದರ ನಮಗೂ ಶಿಕ್ಷಾ ಕೊಡು. ನೀ ಹೇಳಿದ್ದಕ್ಕ ಎರಡೆಂದರ ನಮ್ಮ ನಾಲಿಗಿ ಕಳಚಿ ಬೀಳಲಿ; ಕರಿಮಾಯಿ ಆಣಿ, ಮತ್ತೇನೈತಿ?” +ಈ ತನಕ ನಿಂಗೂ ಬಾಯಿ ಮುಚ್ಚಿದನಲ್ಲ. ಈಗ ತಡೆದುಕೊಳ್ಳಲಾರದೇ ತೆರೆದೇಬಿಟ್ಟ. “ನೋಡೋ ಗುಡಸ್ಯಾ! ನಿನ್ನ ಮನಸ್ಸಿನ್ಯಾಗೇನೈತಿ ನಂಗೂ ತಿಳೀತು. ಇವರಿಬ್ಬರದೂ ಒಂದಽ ಒಂದ ಕೂದಲು ಕೊಂಕಿದರ, ಆಮ್ಯಾಲ ನೀ ಈ ಊರಾಗ ಬಾಳ್ವೆ ಮಾಡಾಕ ಆಗಾಣಿಲ್ಲ. ಮೊದಲಽ ಹೇಳಿರತೇನ.” +ನಿಂಗೂ ಇಂಥಾ ಮಾತಾಡಿದ್ದೇ ಮೊದಲು. ಬೇರೆ ಸಮಯದಲ್ಲಾಗಿದ್ದರೆ ಇದನ್ನು ನಿರ್ಲಕ್ಷ್ಯಿಸಬಹುದಿತ್ತು. +“ಬಲ್ಲಿನೋ ಮಗನ ನಿನ್ನ ಕುವ್ವತ್ತ. ನೀ ಏನಾದರೂ ಉಳುಯೋದಾದರ ಅದು ನನ್ನ ದಯದಿಂದ; ತಿಳಕೋ.” +“ಹೋಗಲೇ, ನನಗ ನಿನ್ನ ದಯಾಮಾಯಾ ಬ್ಯಾಡ. ಅದೇನ ಮಾಡ್ತಿ ಮಾಡಿಕೋ ಹೋಗ. ಮೊದಲ ನನ್ನ ಹೊಲದಾಗಿಂದ ಕಾಲ್ತಗಿ.” +ಇಷ್ಟು ಕೇಳಿದ್ದೇ ಗುಡಸೀಕರ ನೆಲ ಒದೆಯುತ್ತ ಊರ ಕಡೆ ಹೊರಟುಬಿಟ್ಟ. ನಿಂಗೂ ಹೀಗೆ ಹೇಳಿದ್ದು ಸರಿಯೆನಿಸಿತು ದತ್ತಪ್ಪನಿಗೆ. ಆದರೆ ಗೌಡನಿಗೆ ಅಸಮಧಾನವಾಯ್ತು. ಸುಮ್ಮನೇ ಕೂತ. ಮುಂದಾಗಬಹುದಾದ್ದನ್ನು ಮನಸ್ಸಿನಲ್ಲೇ ಧೇನಿಸಿದ. ಸರಪ,ಚ ಆದಾಗಿನಿಂದ ಗುಡಸೀಕರನನ್ನು ಗಮನಿಸುತ್ತ ಬಂದಿದ್ದ. ಹುಡುಗನ ಮನಸ್ಸು ಆರೋಗ್ಯದಿಂದಿಲ್ಲವೆಂದು ಆಗಲೇ ಖಾತ್ರಿಯಾಗಿತ್ತು. ದತ್ತಪ್ಪನಂತೂ ಇವನ ಬಗ್ಗೆ ಎಂದೋ ತೀರ್ಮಾನ ತಗೊಂಡುಬಿಟ್ಟಿದ್ದ. ಈ ಹುಡುಗನ ಕಣ್ಣಲ್ಲಿ ಬರೇ ಸ್ವಯಂಪ್ರತಿಷ್ಟೆಯೇ ಹೊರತು ಊರು ಮೂಡುತ್ತಿರಲಿಲ್ಲ. ಪ್ರತಿಷ್ಠೆಗಾಗಿ ಬೇಕಾದರೆ ಈತ ಊರನ್ನೇ ಬಲಿ ಕೊಡುವನೆಂದು ಹೇಳುತ್ತಿದ್ದ. ಆದರೆ ಗೌಡ ನಂಬಿಕೆ ಕಳೆದುಕೊಂಡಿರಲಿಲ್ಲ. ಇಂದಿಲ್ಲ ನಾಳೆ ಹಾದಿಗೆ ಬಂದಾನೆಂದುಕೊಂಡಿದ್ದ. ಆದರೆ ಇಂದಿನ ಮಾತುಕತೆಯಿಂದ ಗೌಡನಿಗೂ ನಿರಾಸೆಯಾಯಿತು. ಈ ಹುಡುಗ ಅಪಾಯಕಾರಿ ಎನ್ನಿಸಿತು. ಹಾಗೇ ಬಿಟ್ಟಿದ್ದರೆ ಎಷ್ಟು ಹೊತ್ತು ಯೋಚಿಸುತ್ತಿದ್ದನೋ, ದತ್ತಪ್ಪ ಎಚ್ಚರಿಸಿದ. +“ಈಗ ಬ್ಯಾಟಿ ಹುಡುಗೋರ ಹೊಂಡೊ ಯಾಳೆ ಆಯ್ತಲ್ಲಾಪಾ” +“ದತ್ತೂ ಇದ್ಯಾಕೋ ಬರೋಬರಿ ಆಗಲಿಲ್ಲಪಾ” +“ನೋಡೋಣಂತ ನಡಿ, ಹೊತ್ತ ಮುಳುಗಾಕ ಹತ್ತೇತಿ.” +ದತ್ತಪ್ಪನಿಗೆ ಗುಡಸೀಕರನ ಅಪಾಯದ ಬಗ್ಗೆ ಕಾಳಜಿ ಇತ್ತು. ಗೌಡನೇ ನಿಂಗೂನಿಗೆ ಹೇಳಿದ. +“ನಿಂಗೂ, ಈಗ ಗುಡಿಸಲಾ ಕೀಲಿ ಹಾಕು. ನೀ ಲಗುಮಿ ಮನ್ಯಾಗ ಇರು. ಗಾಬರಿಯಾಗಬ್ಯಾಡ. ಕರಿಮಾಯಿ ನೋಡಿಕೋತಾಳ. ಸಿದ್ರಾಮ ನೀನೂ ಯಾರ ಮುಂದೂ ಬಾಯಿ ಬಿಡಬ್ಯಾಡ. ಬಿಟ್ಟರ ನಾವಷ್ಟಽ ಅಲ್ಲ. ನೀನೂ ಕುಡಗೋಲ ನುಂಗಬೇಕಾಗತೈತಿ.” +ಎಂದು ಹೇಳಿ ಗೌಡ ಎದ್ದ. +ಗೌಡನೆಂದೂ ಈ ರೀತಿ ಚಿಂತಿ ಮಾಡಿದವನಲ್ಲ. ಮನೆಗೆ ಬಂದ ಮೇಲೂ ಜೀವ ಹಳಹಳಿಸತೊಡಗಿತ್ತು. ಪಂಚರನ್ನು ಈಗಲೇ ಕರೆಸೋಣವೆಂದುಕೊಂಡ. ಬೇಟೆಗಾರ ಹುಡುಗರ ಜೊತೆಗೆ ಬರುತ್ತಾರಲ್ಲ ಬರಲಿ ಎಂದು ಸುಮ್ಮನಾದ. ಆದರೂ ಮನಸ್ಸಿಗೆ ಸಮಾಧಾನವಾಗಲೊಲ್ಲದು. ಅಷ್ಟರಲ್ಲಿ ದತ್ತಪ್ಪ ಮತ್ತೆ ಅವಸರದಿಂದ ಬಂದ. ಮತ್ತೆ ಬಂದನಲ್ಲ ಯಾಕಿರಬಹುದೆಂದು ಗೌಡನಿಗೆ ದಿಗಿಲಾಯಿತು. ಬಂದ ಉಸಿರಿನಲ್ಲಿಯೇ ದತ್ತಪ್ಪ- +“ಹಬ್ಬ ಮಾಡೋಣಂದ್ಯೋ, ಬ್ಯಾಡಂದ್ಯೋ?” +ಎಂದ. ಹೌಂದಲ್ಲ! ಎಷ್ಟೇ ಮುಚ್ಚಿಟ್ಟರೂ ಹೆಣದ ವಾಸನೆ ಜನರ ಮೂಗಿಗೆ ಬಡಿಯೋದೇ. ಗೊತ್ತಾದರೆ ಯಾರ ಮನಸ್ಸೂ ಹಗುರವಾಗಿರದು. ಹ್ಯಾಗೊ ಸೂತಕವಾಗಿದೆ. ನಿಲ್ಲಿಸಿ ಬಿಡುವದೇ ಮೇಲೆಂದು ಯೋಚಿಸಿದ. ಬೇಡವೆಂದರೆ ಕುತೂಹಲ ಕೆರಳಿಸಿದಂತೆ. ಅದಕ್ಕೊಂದು ಸಮಾಧಾನ ಕೊಡಲೇಬೇಕು. ಏನೋ ಹೊಳೆಯಿತು. +“ದತ್ತೂ, ನಿನ್ನ ಚಿಂತಾಮಣಿ ಏನ ಹೇಳತೈತಿ?” ಅಂದ. ದತ್ತಪ್ಪ ಆಗಲೇ ನೋಡಿ ಬಂದಿದ್ದನೋ ಏನೋ- +“ತಾಯೀನ ಕೇಳಂತೈತಿ.” ಅಂದ. +“ಹೋಗಿ ಬಾ ಹಂಗಾದರ. ನೀ ಬರೋತನಕಾ ಹುಡುಗರನ್ನ ಇಲ್ಲೇ ನಿಲ್ಲಿಸ್ರ್ತೀನಿ” ಅಂದ. ದತ್ತಪ್ಪ ಓಡಿದ. +ಬೇಟಿಯ ಹುಡುಗರು ವಾದ್ಯಗಳೊಂದಿಗೆ ಬಂದರು. ಬಸೆಟ್ಟಿ, ಬಾಳು ಮೆರವಣಿಗೆಯ ಜೊತೆಯಲ್ಲಿಯೇ ಬಂದರು. ಗೌಡ ಎಂದಿನಂತೆ ಲವಲವಿಕೆಯಿಂದ ಇರಲಿಲ್ಲವೆಂದು ಎಲ್ಲರಿಗೂ ತಿಳಿಯಿತು. ಒಬ್ಬಿಬ್ಬರು “ಮೈಯಾಗ ಆರಾಮಿಲ್ಲೇನ್ರೀ” ಎಂದು ಕೇಳಿಯೂ ಬಿಟ್ಟರು. ಶುಂಠಿಯ ಕಾಡೆ(ಕಷಾಯ)ಇಂಥದ್ದಕ್ಕೆಲ್ಲ ಬಹಳ ಒಳ್ಳೆಯದೆಂದು ಬಸೆಟ್ಟಿ ಮದ್ದನ್ನೂ ಸೂಚಿಸಿದ. +ಗೌದ ಎಲ್ಲರಿಗೂ ಕೂರಲಿಕ್ಕೆ ಹೇಳಿದ. ಕೂತರು. ದತ್ತಪ್ಪ ಇನ್ನೂ ಬಂದಿರಲಿಲ್ಲ. ಮಂದಿಗೆ ಕೂರಲಿಕ್ಕೆ ಹೇಳಿ ಏನಾದರೂ ಮಾತಡಬೇಕಿತ್ತು. ಗೌಡ ಮಾತಾಡಲಾಗಲಿಲ್ಲ. ಮೈಯಲ್ಲಿ ಹುಷಾರಿಲ್ಲವಲ್ಲ ಎಂದುಕೊಂಡ ಜನ್ ತಮ್ಮಲ್ಲಿ ತಾವೇ ಮಾತಾಡಕೊಳ್ಳತೊಡಗಿದರು. ಶಿವನಿಂಗ ಬೇಟೆಯ ಹುಡುಗರಲ್ಲಿದ್ದ. ಅವನಿನ್ನೂ ಬೆಳ್ಳಂಬೆಳತನಕ ಅಡವಿಯಲ್ಲಿ ಅಲೆದಾಡಬೇಕು. “ಈ ಸಲ ಬೇಡ” ಎಂದ. ದತ್ತಪ್ಪ ಇನ್ನೂ ಬರಲಿಲ್ಲ. ಸಾಮಾನ್ಯವಾಗಿ ಗೌಡನ ಮನೆಯಲ್ಲಿ ತಡವಾಗುವುದಿಲ್ಲ. ಕಾಯಿ ತರಿಸಿ ತರುಣರಿಗೆ ಕೊಡುವುದೆಷ್ಟೋ ಅಷ್ಟೇ. ಆದರೆ ಗೌಡ ತರಾತುರಿ ಮಾದಲಿಲ್ಲ. ಶಿವನಿಂಗ ಕಾಯಿ ತಂದು ಆಗಲೇ ಗೌಡನ ಮುಂದೆ ಇಟ್ಟಿದ್ದ. ರಾತ್ರಿ ಬೇರೆ ಆಗುತ್ತಿತ್ತು. ಬೆಳ್ದಿಂಗಳಿತ್ತು ನಿಜ. +ಅಷ್ಟರಲ್ಲಿ ದತ್ತಪ್ಪ ಬಂದ. ಮುಖದಲ್ಲಿ ಉದ್ವಿಗ್ನತೆಯಿತ್ತು. ಬಂದವನೇ ಗೌಡನ ಕಿವಿಯಲ್ಲಿ “ಗುಡಸ್ಯಾ ಮೂರುಸಂಜಿ, ಬೆಳಗಾಂವಿಗೆ ಹೋದನಂತೆ” ಎಂದ. +“ತಾಯಿ ಏನು ಹೇಳಿದಳು?” +“ಹಬ್ಬಾ ಬಿಡಬ್ಯಾಡಂದ್ಲು.” +ಇಷ್ಟು ಕೇಳಿದ್ದೇ ಕಾಯಿ ತಗೊಂಡು ಬೇಟೆಯ ಹುಡುಗರ ನಾಯಕನಿಗೆ ಕೊಟ್ಟ. ಅನೇಕರಿಗೆ ಅನೇಕ ಬಗೆಯ ಅನುಮಾನಗಳು ಸುಳಿದರೂ ಕೇಳಲಾರದೇ ಎದ್ದು ಬೇಟೆಗೆ ಹೊರಟರು. ಗೌಡ ನಾಲ್ಕು ಜನ ವಿಶ್ವಾಸಿ ಹುಡುಗರನ್ನು ಕರೆದು ಬೇಟೆಗೆ ಹೋಗಬೇಡಿರೆಂದು ಹೇಳಿ, ಊಟ ಮಾಡಿ ಬರ್ರೆಂದು ಪಂಚರನ್ನು ಅಲ್ಲೇ ಕೂರಿಸಿಕೊಂಡ. +ಕರಿಬೇಟೆ +ಬೆಳಗಾಯಿತು. ಆದಿನ ಊರವರು ದಿನಕ್ಕಿಂತ ಹೆಚ್ಚು ಖುಷಿಪಡಬೇಕಾಗಿತ್ತು. ಯಾಕೆಂದರೆ ಕರಿಬೇಟೆಯ ದಿನ. ಕರಿಬೇಟೆ ಕ್ಷತ್ರಿಯ ನಾಯಕರ ಹಬ್ಬ. ಗೌಡನೂ ಅದೇ ಕುಲದವನು. ತರುಣ ನಾಯಕರೆಲ್ಲ ನಿನ್ನೆಯೇ ಬೇಟೆಯಾಡಲಿಕ್ಕೆ ಹೋಗಿದ್ದರಲ್ಲ. ಈ ಹೊತ್ತು ಅವರು ಬಂದೊಡನೆ ಬೇಟೆಯ ಮೆರವಣಿಗೆ ಮಾಡಿ, ಗೌಡನಿಗೊಂದು ಪಾಲು ಕೊಟ್ಟು ಮನೆಗಳಿಗೆ ಹೋಗುತ್ತಾರೆ. ಇಂದು ರಾತ್ರಿ ನಾಯಕರ ಮನೆಗಳಲ್ಲೆಲ್ಲ ಮಾಂಸದ ಅಡಿಗೆ. ಊಟ ಮಾಡಿ ಎಲ್ಲರೂ ಕರಿಮಾಯಿಯ ಗುಡಿಯಲ್ಲಿ ಸೇರುತ್ತಾರೆ. ತಾಜಾ ಭಟ್ಟಿಸೆರೆ ಕುಡಿಯುತ್ತ ಸೂಳೆಯರ ಬೇಟೆ ಹಾಡುಗಳಿಗೆ ತಕ್ಕಂತೆ ಕುಣಿಯುತ್ತಾ ವಿನೋದದಿಂದ ಕಾಲ ಕಳೆಯುತ್ತಾರೆ. ನಾಯಕರನ್ನು ಬಿಟ್ಟು ಬೇರೆಯವರು ಕುಣಿಯುವುದಿಲ್ಲ. ಆದರೆ ಉಳಿದವರು ವಿನೋದ ನೋಡುವ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. +ಹಾಡುಗಳ ತುಂಬ ಬೇಟೆಯ ಸಾಹಸದ ವರ್ಣನೆಗಳೇ, ಅವೆಲ್ಲ ಪದ್ಧತಿಯ ಹಾಡುಗಳು. ಹುಡುಗರು ಬೇಟೆಯಲ್ಲದ ಹಸಿಗಾಯಗಳುಳ್ಳ ಕರಿಯ ಬರಿ ಮೈಗಳನ್ನು ಉಬ್ಬುಬ್ಬಿಸಿ ತೋರುತ್ತಮದ ಉಕ್ಕುವ ಎಳೇ ಸೂಳೆಯಯರ ಸಂದಿಗೊಂದಿಗಳನ್ನು ಕಣ್ಣಿನಿಂದ ಬಗಿಯುತ್ತ, ಸೆರೆಯ ನಶೆಯಲ್ಲಿ ಸೊಂಟ ತೇಲಿಸುತ್ತ ಕುಣಿಯುತ್ತಿದ್ದರೆ ನೋಡುವ ಹೆಣ್ಣು ಕಣ್ಣುಗಳೆಲ್ಲ ಕನಸುಗಳನ್ನು ಹಡೆಯುತ್ತವೆ. ಅಷ್ಟೊಂದು ಹಸಿದ ಕಣ್ಣುಗಳಿಗೆ ಗುರಿಯಾಗುವ ಅವಕಾಶವನ್ನು ಯಾವ ಮತಿವಂತ ಸೂಳೆ ತಪ್ಪಿಸಿಕೊಂಡಾಳು? ಪರ ಊರಿನ ಸೂಳೆಯರನ್ನು ಎಲೆಯಡಿಕೆ ಕೊಟ್ಟು ಆಮಂತ್ರಿಸುವ ಪರಿಪಾಠವೂ ಇದೆ. ಈ ಸಲ ಯಾರು ಬಂದಿದ್ದಾರೆ, ಹ್ಯಾಂಗಿದ್ದಾರೆ, ಎಂಬೆಲ್ಲ ಕುತೂಹಲಗಳು ನೋಡುವವರಲ್ಲಿ ಇರುತ್ತಿದ್ದವು. ಅಷ್ಟೇ ಅಲ್ಲ, ಇನ್ನೂ ಹದಿನೈದು ದಿನ ಹಬ್ಬ ಇರುವಾಗಲೇ ನಾಯಕರ ಹುಡುಗರು ಭೇಟಿಯಾದರೆ “ಏನಪಾ ನಾಯಕಾ, ಈ ವರ್ಷ ಯಾ ಊರ ಸೂಳೇರ್‍ನ ಕರಸ್ತೀರೋ?” ಎಂದೆಲ್ಲ ಕೇಳುತ್ತಿದ್ದರು. +ಆದರೆ ಈ ದಿನ ಕೊನೇ ಪಕ್ಷ ಸುದ್ದಿ ತಿಳಿದವರಿಗಂತೂ ಆ ಉತ್ಸಾಹ ಉಳಿದಿರಲಿಲ್ಲ. ಗೌಡ ಎಂದಿನಂತೆ ಬೆಳಿಗ್ಗೆದ್ದು ಕೆರೆಯಲ್ಲಿ ಜಳಕ ಮಾಡಿ ಕರಿಮಾಯಿಗೆ ಕೈ ಮುಗಿದು ಮನೆಗೆ ಬಂದ. ನ್ಯಾರೆ ಮಾಡಿ ತೋಟದ ಕಡೆ ಹೊಂಟವನು ನಿಂಗೂನ ತೋಟಕ್ಕೆ ಹೋದ. ಹುಡುಗರ ಕೆಲಸ ನೋಡಿ ‘ಭಲೆ’ ಎಂದುಕೊಂಡು ಹಾಗೇ ತನ್ನ ತೋಟಕ್ಕೆ ಹೋದ. ಲಗಮವ್ವನನ್ನು ಕರೆಸಿದ. ಅವಳಿಂದ ಒಂದು ಕಾಯಿ ಸೆರೆ ತರಿಸಿ ಕುಡಿದು ಹೊರಸಿನ ಮೇಲೆ ಕೂತ. ಶಿವಸಾನಿ ಮಾತಾಡಿಸಿದ್ದು ಅವನ ಗಮನಕ್ಕೆ ಬರಲಿಲ್ಲ. +ಹೊತ್ತು ಮೇಲೇರಿತು. ಮಧ್ಯಾಹ್ನವಾಗಿ ಇಳಿಹೊತ್ತಾಯಿತು. ಹೊತ್ತು ಹೆಚ್ಚಾದಂತೆ ಹೆಚ್ಚು ಹೆಚ್ಚು ಮಂದಿಗೆ ಸುದ್ದಿ ಗೊತ್ತಾಯಿತು. ಕೆಲವರು ಕುತೂಹಲ ತಾಳದೇ ನಿಂಗೂನ ತೋಟದ ಕಡೆ ಹೋಗಿ ಬಂದರು. ನೀರು ತರುವ ಹೆಂಗಸರು ಗುಸುಗುಸು ಮಾತಾಡಿದರು. ಯಾರು ಸಿಕ್ಕರೂ “ಸುದ್ದಿ ಖರೆಯೇನಽ? ಹೆಂಗಾತಂತ?” ಎಂದು ಕೇಳುವ, ಹೇಳುವ ಆತುರ ಇರುತ್ತಿತ್ತು. ಎಲ್ಲರಿಗೂ ಈ ದಿನ ಮಾತಾಡುವ ಚಪಲ. ಗೌಡನಿಗೂ, ಗುಡಸೀಕರನಿಗೂ ಮಾರಾಮಾರಿಯಾಯಿತೆಂದೂ ಕೈ ಕೈ ಹತ್ತಿತೆಂದೂ, ಗೌಡನನ್ನು, ದತ್ತಪ್ಪನನ್ನು ಜೇಲಿನಲ್ಲಿ ಇಡದಿದ್ದರೆ ತನ್ನ ಹೆಸರು ಗುಡಸೀಕರನೇ ಅಲ್ಲವೆಂದು, ಗುಡಸೀಕರ ಕರಿಮಾಯಿಯ ಮೇಲೆ ಆಣೆ ಇಟ್ಟಿದ್ದಾನೆಂದೂ-ಹೀಗೆ ಯದ್ವಾ ತದ್ವಾ ಊಹೆಗಳಾಗಿ, ಊಹೆಗಳು ಕಥೆಯಾಗಿ, ಕಥೆಗಳೇ ನಿಜಘಟನೆಗಳಾಗಿ ಸಾಯಂಕಾಲವಾಗುವುದರೊಳಗೆ ನಿಂಗೂ ಕಥಾನಾಯಕನಾಗಿ, ಅವನ ಸುತ್ತ ಕಥೆ ಹಬ್ಬಿ, ಆ ಕಥೆಯ ನೂರಾರು ಪಾಠಾಂತರಗಳು ನಾನಾ ನಮೂನೆಯ ಹೊಸ ಹೊಸ ವಿವರಗಳೊಂದಿಗೆ ಬಾಯಿಗೊಂದು ಬಣ್ಣ ತಳೆಯುತ್ತ ಹಬ್ಬತೊಡಗಿದವು. +ಆದರೆ ಹಬ್ಬ ನಿಲ್ಲಿಸಬೇಕೆಂದು ಕೆಲವರು ಅಂದುಕೊಂಡರು. ಈಗ ಹೇಳಿದ್ದರೆ ನಾಯಕರ ಹುಡುಗರು ಸಿದ್ಧರಾಗುತ್ತಿದ್ದರೋ ಇಲ್ಲವೋ. ಯಾಕೆಂದರೆ ಈ ದಿನ ಊರ ವತಿಯಿಂದ ದುರ್ಗಿ ಕುಣಿಯುವವಳಿದ್ದಳು. ಪಕ್ಕದ ಪಾಶ್ಚಾಪುರದಿಂದ ಸುಂದರಿ ಬಂದಿದ್ದಳು. ಸತ್ತವರು ಯಾವ ದೊಡ್ಡ ಸಜ್ಜರರೆಂದು ಹಬ್ಬ ನಿಲ್ಲಿಸಬೇಕು? ಅಲ್ಲದೇ ನಿಲ್ಲಿಸುವದಾಗಿದ್ದರೆ ಗೌಡ ಹೇಳುತ್ತಿದ್ದ. ಕರಿಮಾಯಿಯ ವಾಕ್ಯ ಆಗುತ್ತಿತ್ತು. ಹೀಗೆ ಅವರ ತಲೆಯಲ್ಲಿ ವಿಚಾರ ಹೊಳೆಯುತ್ತಿರುವಾಗಲೇ ಬೇಟೆಗಾರರು ಮೆರವಣಿಗೆಯಲ್ಲಿ ಬಂದರು. +ಉಂಡು ಮಲಗುವ ಹೊತ್ತಿಗೆ ಎಲ್ಲರೂ ಬಂದು ಗುಡಿಯ ಪೌಳಿಯಲ್ಲಿ ಸೇರಿದರು. ಮುದಿ ನಾಯಕರಿಗೆ ಎಷ್ಟೂ ಉತ್ಸಾಹವಿರಲಿಲ್ಲ. ಹಿಂದಿನ ಹಬ್ಬಗಳಲ್ಲಾಗಿದ್ದರೆ ಸ್ವಥಾ ಲಗಮವ್ವ ಉಟ್ಟ ಸೀರೆಯ ನೆರಿಗೆಗಳನ್ನು ಮುಂಗೈಯಲ್ಲಾಡಿಸುತ್ತ ಬೇಟೆಯ ಪದ ಹಾಡತೊಡಗಿದರೆ, ರಂಗೇರಿದಂತೆ ಆಕೆಯ ಮೈಯ ಹಿಂದು ಮುಂದಿನ ಉಬ್ಬುಗಳನ್ನು ತುಳುಕುತ್ತ ಹೆಜ್ಜೆ ಹಾಕುತ್ತಿದ್ದರೆ, ಬಚ್ಚಬಾಯಿಯ ಮುದುಕರೂ ತೆರೆದ ಬಾಯಿ ತೆರೆದಂತೆಯೇ ಕುಣಿಯತೊಡಗುತ್ತಿದ್ದವು. ಮುದಿ ಮೈಗಳಲ್ಲೂ ಲಯ ತುಳುಕಿಸುತ್ತಿದ್ದಳು ಲಗುಮವ್ವ ತನ್ನ ಹಾಡುಗಾರಿಕೆಯಿಂದ. ಆದರೆ ಇಂದು ಗೌಡನೇನೋ ಬಂದಿದ್ದ; ಸುಮ್ಮನೇ ಕೂತಿದ್ದನಷ್ಟೆ. ಅವನ ನಗೆಯ ಮಜ ಮಾಯವಾಗಿತ್ತು. ಒಂದು ವಿಶೇಷವೆಂದರೆ ಸಾಮಾನ್ಯವಾಗಿ ಈ ಹಬ್ಬಕ್ಕೆ ದತ್ತಪ್ಪ ಬರುತ್ತಿರಲಿಲ್ಲ. ಇಂದು ಅವನೂ ಬಂದಿದ್ದ. ಇದರಿಂದಾಗಿ ವಾತಾವರಣದ ಗಾಂಭೀರ್ಯ ಉಸಿರುಗಟ್ಟುವಂತಾಗಿತ್ತು. +ದುರ್ಗಿಯ ಹಾಡುಗಾರಿಕೆ ಸುರುವಾಯ್ತು. ಬೆಳ್ದಿಂಗಳ ಸುಖದ ಮದ ಈಗಷ್ಟೇ ಹುಡುಗರ ಮೈಗೆ ತಾಗತೊಡಗಿತ್ತು. ಅಷ್ಟರಲ್ಲಿ ಗೌಡ, ದತ್ತಪ್ಪ ಮೊದಲೇ ನಿರೀಕ್ಷಿಸಿದ್ದಂತೆ ಪೋಲೀಸ್ ಜೀಪಿನ ಬೆಳಕು ಗುಂಪಿನ ಮೇಲೆ ಬಿತ್ತು. ಸ್ತಬ್ಧರಾಗಿ ಕೂತವರೆಲ್ಲ ಎದ್ದುನಿಂತರು. ಗೌಡನೂ ಅವನ ಹಿಂದಿನಿಂದ ದತ್ತಪ್ಪನೂ ಎದ್ದು ಮುಂದೆ ಬರುವದರೊಳಗಾಗಿ ಜೀಪು ಗುಡಿಯ ಹತ್ತಿರವೇ ಬಂದು ನಿಂತಿತು. +ನಡುವಯಸ್ಸಿನ ಫೌಜುದಾರನೊಬ್ಬ ಇಬ್ಬರು ಪೋಲೀಸ್‌ರೊಂದಿಗೆ ಇಳಿದು ಬಂದ. ಜನ ಗಾಬರಿಯಾಗಿ ಮಿಕಿಮಿಕಿ ಇವರನ್ನೇ ನೋಡುತ್ತಿದ್ದರು. ಗೌಡ, ದತ್ತಪ್ಪ ಮುಂದೆ ಬಂದು ನಮಸ್ಕರಿಸಿದರು. ತಾವಿಬ್ಬರೂ ಗೌಡ, ಕುಲಕರ್ಣಿ ಎಂದು ಪರಿಚಯಮಾಡಿಕೊಟ್ಟರು. ಇವರ ಮಾತು ನಿಲ್ಲಿಸಿ “ಈ ಮಂದಿ ಇಲ್ಯಾಕ ಸೇರ್‍ಯಾರ?” ಎಂದು ಫೌಜುದಾರ ಕೇಳಿದ. +“ಇಂದ ಕರಿಬ್ಯಾಟಿ ಹಬ್ಬ; ಕುಣ್ಯಾಕ ಹತ್ಯಾರರಿ.” +“ಹಬ್ಬ?” +“ಹೌಂದರಿ.” +“ಇಂದೇನ ಹಬ್ಬ ಮಾಡೋ ಜರೂರಿಲ್ಲ.” +ಇಷ್ಟು ಹೇಳಿ ಪೋಜುದಾರ ತಿರುಗಿದ. ಕೂಡಲೇ ದತ್ತಪ್ಪ ಸಣ್ಣದಾಗಿಸಿದ ಲಾಟೀನು ದೊಡ್ಡದು ಮಾಡಿ ಮುಂದೆ ಮುಂದೆ ಚಾವಡಿಯ ಕಡೆ ನಡೆದ. ಪೋಜುದಾರ, ಅವನ ಹಿಂದೆ ಪೋಲೀಸರು ನಡೆದರು. ಗೌಡ ಒಂದಿಬ್ಬರನ್ನು ಕರೆದು ಇನ್ನೇನೋ ಹೇಳಿ ಮುಂದೆ ಹೋಗುತ್ತಿದ್ದ ಪೋಜುದಾರನನ್ನು ಕೂಡಿಕೊಂಡ. +ಶಿವಪೂಜೆಯಲ್ಲಿ ಕರಡಿ ಬಿಟ್ಟಂತಾಯ್ತು ನಾಯಕರ ಹುಡುಗರಿಗೆ. ಇನ್ನು ಕೆಲವರಿಗೆ ಇದು ಗುಡಸೀಕರನ ಕರಾಮತಿಯೆಂದು ಗೊತ್ತಾಯಿತು. ಗೌಡ, ದತ್ತಪ್ಪನನ್ನು ಜೇಲಿಗೆ ಒಯ್ಯುತ್ತಾರೆಂದು ಕೆಲವರೆಂದರು. “ಯಾಕೆ? ಊರಾಗೇನ ಗಂಡಸರಿಲ್ಲೇನ?” ಎಂದು ಹುಡುಗರೆಂದರು. ತಮತಮಗೆ ಗುಜುಗುಜು ಮಾತಾಡಕೊಳ್ಳತೊಡಗಿದರು. +ಚಾವಡಿಗೆ ಹೋದೊಡನೆ ಪೋಜುದಾರ ನಿಂಗೂನನ್ನು ಕರೆತರುವಂತೆ ಹೇಳಿದ. ಊರಲ್ಲಿ ಖೂನಿ ಆಗಿದ್ದರೂ ಹಬ್ಬ ಮಾಡುತ್ತಿದ್ದುದಕ್ಕೆ ಛೀಮಾರಿ ಹಾಕಿದ. ಖೂನಿ ಗೀನಿ ಏನೂ ಆಗಿಲ್ಲವೆಂದೂ, ಆಗಿದ್ದರೆ ತಾನು ಸುಮ್ಮನಿರಲಿಕ್ಕಾಗುತ್ತಿತ್ತೆ? ಹಬ್ಬ ಮಾಡಲಿಕ್ಕಾಗುತ್ತಿತ್ತೆ? ಗೌರಿ ಗಟಿವಾಳಪ್ಪ ಸತ್ತು ಹದಿನೈದು ದಿನವಾಯಿತೆಂದೂ, ಹೋರಿ ಗರ್ಭಕ್ಕೆ ಇರಿದು ಗೌರಿ ಸತ್ತಳೆಂದೂ ಒಂದೆರಡು ದಿನ ಜ್ವರ ಅಂತ ಮಲಗಿದವನು ಗಟಿವಾಳಪ್ಪ ಮೇಲೇಳಲೇ ಇಲ್ಲವೆಂದು ಗೌಡ ಹೇಳಿದ. ದತ್ತಪ್ಪ ಮಧ್ಯ ಮಧ್ಯ ಹೌದು ಹೌದೆಂದು ಸೇರಿಸಿ, ತನ್ನ ಧಫ್ತರಿನಲ್ಲಿ ನಮೂದಿಸಿದ್ದಾಗಿ ಹೇಳಿದ. +ನಿಂಗೂ ಚಾವಡಿಗೆ ಬಂದಾಗ ಪೋಜುದಾರನಿಗೇನು, ಗೌಡ ದತ್ತಪ್ಪನಿಗೂ ದೂರ ನಿಂತಿದ್ದ ಜನಕ್ಕೂ ಹೊಯ್ಕಾಯಿತು. ಅವನಾಗಲೇ ಸೀರೆ ಉಟ್ಟು, ಕೈ ಬಳೆ ತೊಟ್ಟಿದ್ದ. ಅವನೂ ಬಂದು ಗೌಡ ಹೇಳಿದಂತೆ ಹೇಳಿದ. ಫೌಜುದಾರ ಪೇಚಿನಲ್ಲಿ ಸಿಕ್ಕ. ಈ ನಪುಂಸಕ ಹುಡುಗ ಖೂನಿ ಮಾಡುವದು ಸಾಧ್ಯವಿಲ್ಲೆಂದು ಅವನ ಅನುಭವ ಸಾರಿ ಸಾರಿ ಹೇಳಿತು. ತನಗೆ ಬಂದ ಸುದ್ದಿಯಲ್ಲಿ ಏನೋ ಐಬಿದೆಯೆಂದು ಅನ್ನಿಸಿತು. ಅಷ್ಟರಲ್ಲಿ ನಾಯಕರ ಹಿರಿಯನೊಬ್ಬ ಹಬ್ಬ ಆಚರಿಸಲು ಪರವಾನಗಿ ಕೇಳಲು ಬಂದ. ಪೋಜುದಾರ ಅವನನ್ನು ಕೇಳಿದ. ಅವನು “ಛೇ ಛೇ ಖೂನಿ ಆಗಿದ್ದರೆ ಸೂತಕ ಆಗುತ್ತಿತ್ತು. ಸೂತಕದಲ್ಲಿ ಕರಿಬೇಟೆ ಹಬ್ಬ ಆಚರಿಸಲು ಬರುವುದಿಲ್ಲವೆಂದು, ಊರಲ್ಲಿ ಸೂತಕ ಇಟ್ಟುಕೊಂಡು ಕರಿಬೇಟೆಯ ನೈವೇದ್ಯವನ್ನು ಕರಿಮಾಯಿಗೆ ನೀಡಿದರೆ “ತಾಯಿ ಸುಮ್ಮನಿದ್ದಾಳೇನ್ರೀ ಸಾಹೇಬರಽ” ಎಂದೂ ಅಂದ. ಕರಿಮಾಯಿ ಬೆಂಕಿ ಕೆಂಡದಂಥವಳು. ಹೈಗೈ ಆದರೆ ನಾವೂ ಇಲ್ಲ ನೀವೂ ಇಲ್ಲ. “ಈಗ ನಿಂಗೂನ ಗುಡಿಸಲ ನೋಡಬೇಕು” ಎಂದ. ನಾಳೆ ಮುಂಜಾನೆ ಹೋಗೋಣವೆಂದು ಗೌಡ, ಈಗಲೇ ಹೋಗಬೇಕೆಂದು ಫೌಜದಾರ ಎದ್ದ. +ರಾತ್ರಿಯೇ ತೋಟಕ್ಕೆ ಹೋದರು. ಹಿಂಡು ಜನ ಬೆನ್ನುಹತ್ತಿದರು. “ಬೆಂಕೀ ಹಚ್ಚಿದ ಗುಡಿಸಲೆಲ್ಲಿ” ಎಂದು ಪೋಜುದಾರ ಕೇಳಿದ. ಎಲ್ಲೀ ಬೆಂಕಿ ಏನು ಕತೆ? ಇದೇ ನಿಂಗೂನ ತೋಟ, ಇದೇ ಗುಡಿಸಲು ಎಂದು ಗೌಡ ಹೇಳಿದ. ಪೋಜುದಾರನಿಗೆ ಇದ್ದದೂ ಹಣಕಲಾಯಿತು, ತಿರುಗಿ ಬಂದರು. +ಗೌಡನ ಮನೆಯಲ್ಲಿ ಊಟಕ್ಕೆ ಕೂತರು. ಹ್ಯಾಗೂ ಬೇಟೆಯ ಪಲ್ಯ ಇತ್ತು. ಅಸಲ ಸೆರೆಯಿತ್ತು. ಅದು ಒಳಕ್ಕೆ ಇಳಿಯಲಾರಂಭಿಸಿದಂತೆ ಪೋಜುದಾರನ ತಲೆ ತೂಗಲಾರಂಭಿಸಿತು. ಇತ್ತ ಹುಡುಗರ ಹಾಡು, ಕುಣಿತ ಸುರುವಾಯಿತು. ಬಹುಶಃ ನಿರಾಸೆಯಿಂದಿರಬೇಕು. ಪೋಜುದಾರನ ತಲೆ ತಿರುಗಿತು. “ನಿಲ್ಲಿಸ್ರಿ ಅದನ್ನ” ಎಂದು ಊಟ ಮಾಡುತ್ತಲೇ ಕಿರುಚಿದ. ಗೌಡ ನಿಧಾನವಾಗಿಯೇ ಹೇಳಿದ. +“ಅದನ್ನ ನಿಲ್ಲಿಸಾಕ ನಾನಾಗಲಿ ನಿಮಗಾಗಲಿ ಹಕ್ಕಿಲ್ಲರೀ ಸಾಹೇಬರ” +“ಏ, ಗೌಡಾ, ನನಗೆ ಕಾಯ್ದೆ ಹೇಳಿಕೊಡ್ತಿ ಏನಲೇ? ಊರ ಗೌಡಾಗಿ, ಊರಾಗ ದೋ ಪಾರ್ಟಿ ಇಟಗೊಂಡು ಖೂನಿ ಮಾಡಿಸಿಕೊಂತ…. +“ಯಾವ ದೋ ಪಾರ್ಟಿ? ಎಲ್ಲಿ ಖೂನಿ? ಏನ ಸಾಹೇಬರ, ಏನಂಬೋ ಮಾತಿದು?” +“ನನಗ್ಗೊತ್ತಲೇ ಚೇರ್ಮನ್ ಪಾರ್ಟಿ ಮಂದೀನ ಇಂದ ಹಬ್ಬದ ನೆವದಾಗ ನಾಯಕರ ಹುಡುಗರ ಕಡಿಂದ ಬಡಸಬೇಕಂತ….” +ಎಲ್ಲ ಅರೆಮಾತುಗಳಾಗಿದ್ದರಿಂದ ಗುಡಸೀಕರ ಏನೇನು ಹೇಳಿದ್ದಾನೋ ಎಂದು ಗೌಡನಿಗೂ ದಿಗಿಲಾಯಿತು. ಕ್ರಮಬದ್ಧವಾಗಿ ಪೋಜುದಾರನ ಜೊತೆಮಾತಾಡುವುದೂ ಸಾಧ್ಯವಿರಲಿಲ್ಲ. ಮತ್ತೆ ಪೋಜುದಾರನೇ ಬಾಯಿಬಿಟ್ಟ- +“ನೋಡಾ ಗೌಡಾ, ಊರಾಗ ಹೊಡೆದಾಟ ಆಗೋ ಛಾನ್ಸ್ ಇದ್ದಾಗ ಇಂತಾ ಹಬ್ಬಾ ಮಾಡಾಕ ಕೊಡಬಾರದಂತ ಗೊತ್ತಿಲ್ಲ ನಿನಗ? ನಿಲ್ಲಿಸ ಮೊದಲ….” +“ಸಾಹೇಬರ ಹೊಡೆದಾಟ ಬಡಿದಾಟ ಅದರ ಆ ಜವಾಬ್ದಾರೀ ನಂದು. ತಮ್ಮ ಪಾಡಿಗೆ ತಾವ ಹಾಡಿಕೊಂಡ ಕುಣೀತಾವ. ನೀವು ಆರಾಮ ನಿದ್ದೀ ಮಾಡರಿ.” +ಎಂದ ಗೌಡ. ಪೋಜುದಾರನ ನೆತ್ತರು ಕುದಿಯಲಾರಂಭಿಸಿತು. ಒಳಗಿನ ದೇಸೀ ದೇವಿ ತುಳುಕಲಾರಂಭಿಸಿದಳು. ತನ್ನ ಮುಂದೆ ಈ ಹಳ್ಳೀ ಗೌಡನ ಸೊಕ್ಕೆಷ್ಟು ಅಂದ. ಕೈತೊಳೆದು ಎದ್ದವನೇ ತೂರಾಡುತ್ತ ಬಾಗಿಲು ತೆಗೆಯಹೋದ. ಹೊರಗಡೆಯಿಂದ ಚಿಲಕ ಹಾಕಿದ್ದರು. ಬಾಗಿಲು ಎಳೆದ, ಜಗ್ಗಿದ, ಒದ್ದ, ಕಾಲಿಗೆ ಪೆಟ್ಟು ತಾಗಿ ತಿರುಗಿ ಎಲ್ಲೇ ಇದ್ದ ಹಾಸಿಗೆಯ ಮೇಲೆ ಕೂತ. ‘ಬಾಗಲಾ ತೆಗಿಸಲೇ’ ಎಂದು ಒಂದೆರಡು ಬಾರಿ ಕಿರಿಚಿದ. ಪೋಲೀಸರಿಬ್ಬರೂ ಅತ್ತಿತ್ತ ಅಲೆದಾಡಿ ಹೊರಕ್ಕೆ ಹೋಗಲು ದಾರಿಯಿದೆಯೇ ನೋಡಿದರು. ಯಾರಾದರೂ ಹಾದಾಡುತ್ತಿದ್ದರೆ ಕರೆಯಬೇಕೆಂದು ಕಿಟಿಕಿಯಿಂದ ಇಣಿಕುತ್ತ ಚಡಪಡಿಸಿದರು. +ಗೌಡ ಇವರ ಒದ್ದಾಟ ನೋಡದಾದ. ಇವನ ನೆಮ್ಮದಿ ನೋಡಿ ಪೋಜುದಾರನ ನೆಮ್ಮದಿ ಹದಗೆಟ್ಟಿತು. +“ಏ ಗೌಡಾ, ನಾ ಇರೋವಾಗ ಇವರು ಹೆಂಗ ಹಬ್ಬ ಮಾಡತಾರ ನೋಡತೀನಿ, ನಿನ್ನೂ ನೋಡಿಕೋತೀನಿ….” +ಗೌಡ ಅದೇ ಸಮಾಧಾನದಿಂದ ಹೇಳಿದ- +“ಸಾಹೇಬರ, ಈ ಊರಿನ ನರ ನಿಮಗ್ಗೊತ್ತಿಲ್ಲರಿ” +“ಏ, ಇದು ನನ್ನ ಆಳಿಕಿ ಊರೋ…” +“ಅಲ್ಲ ಸಾಹೇಬರ, ನನ್ನ ಆಳಿಕೀದು. ನಾವೇನಾದರೂ ತಪ್ಪು ಮಾಡಿದರ ನಿಮ್ಮ ಆಳಿಕಿ. ಈಗ ಹಂತಾ ತಪ್ಪೇನು ಆಗಿಲ್ಲ. ಅಷ್ಟೂ ಮೀರಿ ನಿಮ್ಮ ಆಳಿಕಿ ತೋರಸ್ತೇವಂದರ, ನೋಡ್ರೀ, ಮೊದಲ ಹೇಳಿರತೀನಿ. ಅವು ಮೊದಲ ಹರೇದ ಸೊಕ್ಕೇರಿದ ಹುಡುಗರು, ಕಾಡ ಅಡ್ಡಾಡಿ ಬ್ಯಾಟಿ ತಂದಾವ, ಕುಡದ್ದಾವ. ಊರ ಸೂಳೇರಾಗಿದ್ದರ ಹೆಂಗೋ ನಡೀತಿತ್ತು; ಪರವೂರ ಸೂಳೇರ ಬಂದಾರ, ಅವರ ಮುಂದ ಕುಣ್ಯಾಕ ಹತ್ಯಾವ. ಅವರನ್ನ ನೀವು ಹೋಗಿ ತಡವಿದರ, ಖರೇ ಹೇಳತೀನ್ರಿ-ಮುಂದಿನ ಹೋನಾರಕ್ಕ ನಾನಂತೂ ಜವಾಬ್ದಾರಲ್ಲ.” +-ಅಂದ. ಪೋಜುದಾರನ ಬಾಯಿ ಬಂದಾಯಿತು, ಮಲಗಿದ. ಅಷ್ಟರಲ್ಲಿ ಪೋಜುದಾರ ನಿದ್ದೆ ಮಾಡುವುದನ್ನು ನೋಡಿದ ಪೋಲೀಸರು ತಾವೂ ಮಲಗಿಕೊಂಡರು. ಗೌಡ ಅವರನ್ನು ನೋಡಿ ಒಳಗೊಳಗೇ ನಕ್ಕ. ಎದ್ದು ಬಂದು ಕಿಟಕಿಯಲ್ಲಿ ಹಣಕಿ ಹಾಕಿದ. ದೂರದಿಂದ ಲಗುಮವ್ವನ ದನಿ ಹುಡುಗರ ಹುಯ್ಲಿನೊಂದಿಗೆ ಕೇಳಿ ಬರುತ್ತಿತ್ತು: +ಬ್ಯಾಟಿ ಬ್ಯಾಟಿಯನಾಡಿದಾ | +ಬ್ಯಾಡರ ಹುಡುಗ +ಕಾಡ ಬ್ಯಾಟಿಯನಾಡಿದ || +ಇಲ್ಲಿ ನಿಂತುಕೊಂಡೇ ಅವಳ ತುಳುಕಾಟ ಊಹಿಸಿದ. ಸೆರೆ ಸುರಿದ ಹಾಗೆ ಊರೆಲ್ಲ ಬೆಳ್ದಿಂಗಳಿಂದ ತೊಯ್ದು ಹೋಗಿತ್ತು. ಕೈಕಾಲು ಅಲುಗಿಸಲೂ ಆಗದಷ್ಟು ನಶೆಯೇರಿ ತೇಲುಗಣ್ಣ ಜೋಕಾಲಿಯಲ್ಲಿ ತೇಲುತ್ತ ಹಳ್ಳಿಗೆ ಹಳ್ಳೀಯೇ ಬಾಯಿಂದ ಸೆರೆ ಸಾಕಾಗಿ, ಈಗ ಕಿವಿಯಿಂದ ಹಾಡನ್ನು ಕೇಳುವಂತಿತ್ತು. ಪೋಜುದಾರ ಬಂದಾಗ ಊರು ಗಾಬರಿಯಾದದ್ದು ನಿಜ, ಬೆರಗಾದದ್ದು ನಿಜ. ಆದರೆ ಕುಡಿದ ಬೆಳ್ದಿಂಗಳು ಅಂಗಾಲಿನ ತನಕ ಇಳಿದ ಮೇಲೆ ಮತ್ತೆ ಮೊದಲಿನ ತನ್ನ ಸಹಜ ಸ್ಥಿಗೆ ತಲುಪಿತು. ಬದುಕಿನ ಬಗೆಗಿನ ಅದೇ ಉತ್ಸಾಹ ಉಕ್ಕತೊಡಗಿತು. ಪೋಲೀಸರು ಈ ಹಳ್ಳಿಗೆ ಬಂದುದು ಇದೇ ಪ್ರಥಮ ಸಲವೂ ಅಲ್ಲ. ಹಿಂದೆ ಎರಡು ಮೂರು ಬಾರಿ ಸ್ವಾತಂತ್ರ್ಯ ಚಳುವಳಿಗಾರರನ್ನು ಹುಡುಕುವ ನೆಪದಲ್ಲಿ ಬಂದಿದ್ದರು. ಹೇಗೆ ಬಂದರೂ ಹೊರಗಿನವರು ಹೊರಗೇ ಉಳಿದಿದ್ದರು. +ಪೋಜುದಾರನಿಗೆ ಎಚ್ಚರಾದಾಗ ಮುಂಜಾನೆ ಬೆಳ್ಳಂಬೆಳಗಾಗಿತ್ತು. ಎದ್ದ, ಬಾಗಿಲು ತೆರೆದಿತ್ತು. ‘ಗೌಡ, ಕುಲಕಣ್ಣಿ ಎಲ್ಲಿ?’ ಎಂದು ಹಳಬನನ್ನು ಕೇಳಿದ. ಚಾವಡಿಯಲ್ಲಿ ತಮ್ಮಗಾಗಿ ಕಾಯುತ್ತಿದ್ದಾರೆ ಎಂದನವ. ಬೆಳಗಿನ ವಿಧಿಗಳನ್ನು ಪೂರೈಸಿ ಚಾವಡಿಗೆ ಹೋದ. ಆಗಲೇ ಗೌಡ ನಿನ್ನೆ ರಾತ್ರಿ ಮನೆಯಲ್ಲಿ ನಡೆದುದನ್ನು ದತ್ತಪ್ಪನಿಗೆ ಹೇಳಿ ನಗಾಡುತ್ತಿದ್ದ. ಪೋಜುದಾರ ಬಂದವನೇ ಅವರನ್ನು ಕರೆದುಕೊಂಡು ಇನ್ನೊಮ್ಮೆ ನಿಂಗೂನ ತೋಟಕ್ಕೆ ಹೋದ. ಅದೇ ನಿಂಗೂನ ಗುಡಿಸಲು ಎಂದು ಖಾತ್ರಿ ಮಾಡಿಕೊಂಡ. +ಅದೆ ಗುಡಿಸಲು ಹಾಗೇ ಇತ್ತು. ಗುಡಸೀಕರ ಬೆಳಗಾಂವಿಗೆ ಹೋದೊಡನೆ ಗೌಡ ಗುಡಿಸಲನ್ನು ಸುಡಿಸದೆ ಹಾಗೇ ಇಟ್ಟಿದ್ದ. ಹೆಣ ಮಣ್ಣು ಮಾಡಿಸಿದ್ದ. ಗುಡಿಸಲನ್ನು ಹಸನು ಮಾಡಿಸಿ ಯಥಾಸ್ಥಿತಿಗೆ ತಂದಿದ್ದ. ಅದೀಗ ಎಷ್ಟು ಸಹಜವಾಗಿತ್ತೆಂದರೆ ಅಲ್ಲಿ ಖೂನಿಯಾಯಿತೆಂದು ಪೋಜುದಾರನಿಗೇನು, ಸ್ವತಃ ಆ ಊರಿನವನೂ ನಂಬಲಾಗುತ್ತಿರಲಿಲ್ಲ. +ತಿರುಗಿ ಚಾವಡಿಗೆ ಬಂದು ಗುಡಸೀಕರನಿಗೆ ಬುಲಾವ್ ಕಳಿಸಿದ. ಅವನು ಇಲ್ಲವೆಂದು ತಿಳಿಯುತ್ತಲೂ ನಿನ್ನೆಯ ಸಿಟ್ಟೆಲ್ಲ ಅವನ ಮೇಲೆ ತಿರುಗಿತು. ಅವನೇ ಬಂದು ಊರಲ್ಲಿ ದೋ ಪಾರ್ಟಿ ಉಂಟೆಂದೂ, ತನ್ನ ಪಾರ್ಟಿಯವನನ್ನು ಗೌಡನ ಪಾರ್ಟಿಯ ನಿಂಗೂ ಕೊಂದು ಗುಡಿಸಲಲ್ಲಿಟ್ಟು ಬೆಂಕೀ ಹಚ್ಚಿ ಸುಟ್ಟನೆಂದೂ ಇದಕ್ಕೆ ಗೌಡನ ಬೆಂಬಲವಿತ್ತೆಂದೂ, ಇಂದಿನ ಹಬ್ಬದ ದಿನ ಅನೇಕರ ಖುನಿ ಆಗಲಿವೆಯೆಂದೂ ವಕೀಲಿ ಓದಿದ್ದರೂ ದಡ್ಡತನದಿಂದ ಬಾಯಿಗೆ ಬಂದದ್ದನ್ನೆಲ್ಲ ಒದರಿ ಬರೆದುಕೊಟ್ಟಿದ್ದನಂತೆ. ಅದನ್ನೆಲ್ಲ ಹೇಳಿ ಪೂಜುದಾರ, ಅವನೇನು ಕಮ್ಮಿ?- ಬಾಯಿಗೆ ಬಂದ ಹಾಗೆ ಬಯ್ದು ಹೊರಟ. ಹಾಲು ಕುಡಿದು ಹೋಗಬೇಕೆಂದು ಗೌಡ ವಿನಂತಿಸಿಕೊಂಡ. ನಾಲ್ಕೈದು ತತ್ತೀ ಒಡೆದು ತಿಂದು ಚರಿಗೆ ಹಾಲು ಕುಡಿದು ಪೋಜುದಾರ ಜೀಪು ಹತ್ತಿದ. ಪೀಡೆ ಹೋಯಿತು. ಅವನು ಅತ್ತ ಹೋದೊಡನೆ ಸೀರೆ ಉಟ್ಟ ನಿಂಗೂನ್ನ ನೋಡಿ ಗೌಡ, ದತ್ತಪ್ಪ “ಹೋ, ಹೋ’ ಎಂದು ನಕ್ಕರು. +ನಿನ್ನೆ ನಿಂಗೂನ್ನ ಚಡಪಡಿಕೆ ನೋಡಲಾರದೆ ಲಗಮವ್ವ “ಕರಿಮಾಯಿಗೆ ಬೇಡಿಕೊ. ಪಾರ ಮಾಡುತಾಳು” ಎಂದಿದ್ದಳಂತೆ. ನಿಂಗೂ ಅವಳು ಹೇಳಿದಂತೆಯೇ “ಹಡದವ್ವಾ, ಇದರಿಂದ ನನ್ನ ಪಾರುಮಾಡು, ಸೀರೀ ಉಟ್ಟ ನಿನ ಮುಂದ ಕುಣಿತೀನು” ಎಂದು ಬೇಡಿಕೊಂಡನಂತೆ. ಹೀಗೆ ಹರಕೆ ಹೊತ್ತವನು ಕರಿಮಾಯಿ ಪಾರುಮಾಡುವ ತನಕ ಕೂಡ ಕಾಯದೆ ಸೀರೆ ಉಟ್ಟುಬಿಟ್ಟಿದ್ದ. ಕರಿಮಾಯಿಯ ಮಹಿಮೆಗೆ ಏನೆನ್ನೋಣ! ಅದರಿಂದ ಅವನಿಗೆ ಲಾಭವೇ ಆಗಿತ್ತು. +ಹೊರಗಿನ ಪೀಡೆ ಹೋಯಿತೇನೋ ನಿಜ. ಆದರೆ ಗುಡಸೀಕರನ ಮನಸ್ಸಿನಲ್ಲಿ ಸೇಡುಳಿಯಿತು. ಆ ದಿನ ಪೋಜುದಾರನೊಂದಿಗೆ ಅವನೂ ಜೀಪಿನಲ್ಲಿ ಬಂದಿದ್ದ. ಆದರೆ ಜನಗಳನ್ನು ಎದುರಿಸಲಾರದೆ ದೂರದಲ್ಲೇ ಇಳಿದು ಕಳ್ಳದಾರಿಯಿಂದ ಮನೆಸೇರಿದ್ದ. ಮಾರನೇ ದಿನ ಮುಂಜಾನೆ ಪೋಜುದಾರನ ಬುಲಾವ್ ಬಂದಾಗ ಮನೆಯಲ್ಲಿದ್ದರೂ ಇಲ್ಲವೆಂದು ತಂಗಿಯಿಂದ ಹೇಳಿಸಿದ್ದ. ಅಂದೇ ರಾತ್ರಿ ತಲೆಮರೆಸಿಕೊಂಡು ಬೆಳಗಾವಿಗೆ ಹೋಗಿ ಎಂಟು ದಿನ ಇದ್ದು ಊರಿಗೆ ಬಂದ. ಅವಮಾನದಿಂದ ವಿಕಾರಗೊಂಡ ಅವನ ಮುಖವನ್ನು ಗುರುತಿಸುವುದೇ ಕಷ್ಟವಾಗಿತ್ತು. ಬಂದಮೇಲೂ ತಾನೇನೂ ಮಾಡಿಲ್ಲದವನಂತೆ ಭಂಡತನದಿಂದಲೇ ಇದ್ದ. ಜನ ಅನ್ನುವಷ್ಟು ಅಂದು ಸುಮ್ಮನಾದರು. +ಗೌಡ ಗುಡಸೀಕರನ ಬಗ್ಗೆ ಯೋಚಿಸಲೇಬೇಕಾಗಿತ್ತು. ಹುಡುಗ ಯಾವುದನ್ನೂ ತನ್ನ ಮೂಗಿನ ನೇರದಿಂದಲೇ ನೋಡುತ್ತಿದ್ದ. ಹಾಗೆ ನೋಡಿದಾಗ ಎದುರಿಗೆ ಏನಿದ್ದರೂ, ಊರು ಸಹ ಎರಡಾಗಿ ಕಾಣಿಸುತ್ತಿತ್ತು. ನಂತರ ಬಂದ ಹೋಳಿ ಹಬ್ಬದಲ್ಲಿ ಇದು ಗೌಡನಿಗೂ ಖಾತ್ರಿಯಾಗಿ ಬಿಟ್ಟಿತು. +ಹೋಳೀ ಹಬ್ಬ +ಶಿವಪುರದ ಪಾಲಿಗೆ ಗಂಡಸರ ಹಬ್ಬವೆಂದರೆ ಇದೊಂದೇ. ಈ ಊರ ಹೋಳಿಹುಣ್ಣೀಮೆಯೆಂದರೆ ಸುತ್ತ ಹದಿನಾಲ್ಕು ಹಳ್ಳಿಗೆಲ್ಲ ಪ್ರಸಿದ್ಧವಾಗಿತ್ತು. ಗಂಡಸರು ಸಂಕೋಚವಿಲ್ಲದೆ ಹಿರಿನಿಂಗ ಕಿರಿನಿಂಗನ್ನೋ ಬೇಧವಿಲ್ಲದೆ ಹಬ್ಬದಲ್ಲಿ ಭಾಗವಹಿಸುತ್ತಿದ್ದುದು ಇದಕ್ಕೆ ಕಾರಣವಾಗಿರಬಹುದು ಅಥವಾ ಊರಿನ ಮದುವೆಯಾಗದ ಉಡಾಳರಿಗೂ, ಸೂಳೆಯರ ತಂಡಕ್ಕೂ ಹಾಡಿನ ಜಿದ್ದಾ ಜಿದ್ದಿ ಸ್ಪರ್ಧೆಯಾಗುತ್ತದಲ್ಲ ಅದಕ್ಕಿರಬಹುದು. ಅಥವ ಹೀಗೂ ಇರಬಹುದು; ಗೋಕಾವಿ ಕರದಂಟು, ತುಕೋಳ ತಂಬಾಕು, ನಿಪ್ಪಾಣಿಬೀಡಿ- ಹೀಗೆ ಒಂದೊಂದೂರು ಒಂದೊಂದಕ್ಕೆ ಪ್ರಸಿದ್ಧವಾದಂತೆ ಶಿವಪುರದ ಸೂಳೆ ಎಂಬ ಮಾತು ಇರೋಣದರಿಂದ ಸಹಜವಾಗಿಯೇ ಇಲ್ಲಿಯ ಸೂಲೆಯರು ಚೆಲುವೆಯರು. ಅಷ್ಟೇ ಯಾಕೆ ಒಬ್ಬ ಜನಪದ ಕವಿಯ ಪ್ರಕಾರ- +ಇಡೀ ಜಗತಾಗ ಎಲ್ಲೂ ಇಲ್ಲರಿ +ಇಂಥಾ ಮೋಜಿನ ಹುಡುಗೇರಾ || +ತುಂಬ ನಿತಂಬಾ ಹುಬ್ಬ ಕುಣಿಸತಾರ +ನಿಂತಲ್ಲೆ ಬೆವರ್‍ಯಾರ ಪೈಲ್ವಾನರಾ || +ತೊಡಿಗೋಳ ಹುರಿಮಾಡಿ ಉಸರ ಹಾಕತಾರ +ಬಾಸಿಂಗ ಕಾಣದ ಹುಡುಗೋರಾ || +ಏನಂತ ಹೇಳಲಿ ಶಿವಾಪುರ ಸೂಳೇರ +ಅಸಲ ಸೊಂಟದ ಸಡಗರಾ || +-ಎಂದೂ ಇರುವುದರಿಂದ ಇದೂ ಕಾರಣವಾಗಿರಬಹುದು. ಅಥವಾ ಬೇರೆ ಕಾರಣಗಳು ಇರಬಹುದು. ಅಂತೂ ಈ ಊರ ಹೋಳೀ ಹಬ್ಬ ಪ್ರಸಿದ್ಧವೆಂಬುದಂತೂ ನಿಜ. +ಇದು ಈ ಊರವರಿಗೂ ತಿಳಿದದ್ದೆ. ಆದರಿಂದಲೇ ಹೋಳೀ ಹುಣ್ಣಿಮೆ ಇನ್ನೂ ಹತ್ತು ಹನ್ನೆರಡು ದಿನ ಇರುವಾಗಲೇ ಊರಿನ ಜನ ಮಾನಸಿಕ ಸಿದ್ಧತೆ ಮಾಡಿಕೊಳ್ಳುತ್ತಾರೆ. ತದಿಗೆಯ ಚಂದ್ರನನ್ನು ನೋಡಿದೊಡನೆ ಮಕ್ಕಳೆಲ್ಲ ಓಣಿಯಲ್ಲಿ ಸೇರಿ ಹೊಯ್ಕೊಳ್ಳತೊಡಗುತ್ತವೆ. ಒಂದೆರಡು ಗಂಟೆ “ಹೊಯ್ಕೊಳ್ಳುವ ಸೇವೆ” ಮಾಡಿ, ಮಂದಿ ಮಲಗಿದ ಮೇಲೆ ಪಕ್ಕದ ಹಿತ್ತಲಗಳಿಗೆ ಹಾರಿ ಕುಳ್ಳು (ಬೆರಣಿ) ಕಟ್ಟಿಗೆ ಕದ್ದು ಹಾಳು ಮನೆಯಲ್ಲಿ ಸಂಗ್ರಹಿಸಿ ಮಲಗಲಿಕ್ಕೆ ಹೋಗುತ್ತವೆ. ಹುಣ್ಣಿಮೆ ಬರುವವರೆಗೆ ಪ್ರತಿರಾತ್ರಿ ಈ ಕಾರ್ಯಕ್ರಮ ಚಾಚೂ ತಪ್ಪದೆ ನಡೆಯುತ್ತದೆ. +ವಯಸ್ಸಿನಲ್ಲಿ ಇವರಿಗಿಂತ ದೊಡ್ಡ ಹುಡುಗರು, ಆದರೆ ಮದುವೆಯಾಗದವರು, ಕರಿಮಾಯಿಯ ಗುಡಿಯಲ್ಲಿ ರಾತ್ರಿ ಸೇರಿ ಹಳೆಯ ಹೋಳೀ ಪದ ಜ್ಞಾಪಿಸಿಕೊಳ್ಳುತ್ತ, ಹೊಸ ಪದ ಹೊಸೆಯತೊಡಗುತ್ತಾರೆ. ಈ ಹಬ್ಬವನ್ನು ಒಟ್ಟು ಎರಡು ದಿನ ಆಚರಿಸುತ್ತಾರೆ. ಹುಣ್ಣಿಮೆಯ ದಿನ ಗೌಡನ ನೇತೃತ್ವದಲ್ಲಿ ಹಿರಿಯರು, ಪಂಚರು ವಾದ್ಯ ಸಮೇತ ಕಾಡಿಗೆ ಹೋಗಿ ಎಸಳಾದ ಮರದ ಟೊಂಗೆಯೊಂದನ್ನು ಕಡಿದು ತಂದು ಕರಿಮಾಯಿಯ ಗುಡಿಯ ಮುಂದೆ ನಿಲ್ಲಿಸುತ್ತಾರೆ. ಮಕ್ಕಳು ಕದ್ದು ತಂದ ಕುಳ್ಳು ಕಟ್ಟಿಗೆಗಳನ್ನೆಲ್ಲ ತಂದು ಅದರ ಸುತ್ತ ಗುಂಪಿ ಹಾಕುತ್ತಾರೆ. ಆ ದಿನ ಮನೆಯಲ್ಲಿ ಹೋಳಿಗೆಯೂಟ, ರಾತ್ರಿ ಊರಿನ ಉತ್ಸಾಹಿಗಳು ತಯಾರು ಮಾಡಿದ ಆಟ, ಮೋಜು, ಸೋಗು ನಡೆಯುತ್ತವೆ. +ಮಾರನೇ ದಿನವೇ ಧೂಳವಾಡ. ಹೊತ್ತು ಹುಟ್ಟುವ ಮುಂಚೆಯೇ ಗೌಡನ ನೇತೃತ್ವದಲ್ಲಿ ಜನರೆಲ್ಲ ಕಾಮನನ್ನು, ಅರ್ಥಾತ್ ಮರದ ಟೊಂಗೆಯನ್ನು ನಿಲ್ಲಿಸಿದ ಸ್ಥಳಕ್ಕೆ ವಾದ್ಯ ಸಮೇತ ಬರುತ್ತಾರೆ. ಅವರೆಲ್ಲ ಕಾಮನ ಸುತ್ತ ಗಿಹಿಗಿಟ್ಟುತ್ತ ನಿಂತ ದೃಶ್ಯ ನೋಡಬೇಕು. ಒಬ್ಬರ ಮೈಮೇಲೂ ಸರಿಯಾಗಿ ಬಟ್ಟೆ ಇರುವುದಿಲ್ಲ. ಒಬ್ಬೊಬ್ಬರೂ ಈ ಹಬ್ಬಕ್ಕೆಂದೇ ಇಟ್ಟ ಹಳೇ, ಹರಿದ ಚಿಂದಿ ಬಟ್ಟೆಗಳನ್ನು ಹೊರತೆಗೆದು ಹಾಕಿಕೊಂಡಿರುತ್ತಾರೆ. ಸೊಂಟದ ಸುತ್ತ ಚಿಂದಿ ಬಟ್ಟೆಯ ಹಿಂಡು ಹಿಂಡು ಗಂಡಸರು ಬಾಯ್ಗೆ ಕೈ ಒಯ್ಯುವ ಅವಸರದಲ್ಲಿರಲು, ಮುದುಕರು ಲಗಮವ್ವನ ನಿತಂಬಗಳನ್ನೇ ನೋಡುತ್ತ ಹಳೆಯ ಕಾಲ ನೆನಪಿಸಿಕೊಂಡು ಸಂಭ್ರಮದಲ್ಲಿರಲು, ನೋಟ ಕಾಣದೆ ಅವಕಾಶ ಸಿಕ್ಕಲ್ಲಿ ನುಸುಳುತ್ತ ಸಣ್ಣ ಮಕ್ಕಳು ಚಡಪಡಿಸುತ್ತಿರಲು ಗೌಡ ಕಾಮನ ಗುಂಪಿಗೆ ಬೆಂಕಿ ಹಚ್ಚುತ್ತಾನೆ. ಕೂಡಲೇ ಎಲ್ಲರೂ ಅಕ್ಷರಶಃ ದನಿ ಮುಗಿಲು ಮುಟ್ಟುವ ಹಾಗೆ ಲಬೋ ಲಬೋ ಅಂತ ಹೊಯ್ಕೊಳ್ಳುತ್ತಾರೆ. ವಾದ್ಯದವರು ವಾದ್ಯ ಬಾರಿಸುತ್ತಾರೆ. ಅವರು ಹೊಯ್ಕೊಳ್ಳುವುವುದರ ಮೇಲಿಂದಲೇ ಬೇಕಾದರೆ ಅವರವರ ವಯಸ್ಸು ಹೇಳಿ ಬಿಡಬಹುದು. ಮುದುಕರು ಒಂದೆರಡು ಸಲ ಹೊಯ್ಕೊಂಡು ಸುಮ್ಮನಾದರೆ ನಡು ವಯಸ್ಸಿನವರು ಅವರಿಗಿಂತ ಹೆಚ್ಚು, ಮದುವೆಯಾಗದ ಹುಡುಗರು ಇನ್ನೂ ಹೆಚ್ಚು. ಮಕ್ಕಳು ನಿಲ್ಲಿಸುವುದೇ ಇಲ್ಲ. +ಅದೆಲ್ಲ ಸುಟ್ಟು ಬೂದಿಯಾದ ಮೇಲೆ ಲಗಮವ್ವ ಒಂದು ಹರಿವಾಣದಲ್ಲಿ ಬೂದಿ ತುಂಬಿಕೊಂಡು ಊರ ಸೀಮೆಯಗುಂಟ ಸಿಂಪಡಿಸಿ ಬರುತ್ತಾಳೆ. ಅಂದರೆ ಸೀಮೆಯಾಚೆಯ ರೋಗ-ರುಜಿನಾದಿಗಳು ಊರಿಗೆ ಬರುವುದಿಲ್ಲವೆಂದೂ, ಆ ಭಾಗ ಧನ-ಧಾನ್ಯಗಳಿಂದ ತುಂಬಿ ತುಳುಕುವಿದೆಂದೂ ನಂಬಿಕೆ. ಇಷ್ಟೊತ್ತಿಗಾಗಲೇ ಹೊತ್ತು ಮೂರು ಮಾರು ಏರಿರುತ್ತದೆ. ಸೀಮೆ ಕಟ್ಟಿದ ಲಗಮವ್ವ ಸೀದಾ ಹೊಲಗೇರಿಗೆ ಹೋಗಿ ಸೂಳೆಯರನ್ನೆಲ್ಲ ಕಲೆಹಾಕಿ ಗುಡಿಗೆ ಹೊರಡುತ್ತಾಳೆ. ಹಾಡಿನ ಜಿದ್ದಾದ ಮೇಲೆ ಬಣ್ಣ ಗೊಜ್ಜಾಡಬೇಕಲ್ಲ, ಸೂಳೆಯರು ಸಾಮಾನ್ಯವಾಗಿ ಹರಕು ಸೀರೆ ಉಟ್ಟಿರುತ್ತಾರೆ. ಅವರ ಸೀರೆ ಎಷ್ಟೆಷ್ಟು ಹರಿದಿದ್ದರೆ ರಸಿಕರ ಬಾಯಿ ಅಷ್ಟಷ್ಟು ತೆರೆದಿರುತ್ತವೆ. +ಹಾಗೆ ಇವರ ತಂಡ ಗುಡಿಯ ಕಡೆ ಹೊರಟಾಯಿತು. ಹುಡುಗರು ತಂಡತಂಡವಾಗಿ ಹೊಯ್ಕೊಳ್ಳುತ್ತ ಬೆನ್ನು ಹತ್ತುತ್ತಾರೆ. ಮಧ್ಯೆ ಮಧ್ಯೆ ಅವರಿಗೂ ಇವರಿಗೂ ಹ್ಯಾವದ ಮಾತು, ದೀಡೀ ದಿಕ್ಕಟ್ಟು, ಕುಚೇಷ್ಟೆಗಳು, ಕೊಡುಕೊಳೆ ನಡೆದಿರುತ್ತದೆ, ಉದಾ: “ಏಳೂರು ನೀರು ಕುಡಿದಲ್ಲದ ಈ ಮಣಕಿನ ಬೆದಿ ನಿಲ್ಲಾಣಿಲ್ಲಲೇ” ಎಂದು ಗಂಡು ಹಿಂಡಿನಿಂದ ಮಾತು ಬಂದರೆ “ಅಯ್ಯ, ತೊಯ್ಸಿಕೊಂಡ ಕಾಗೀ ಹಾಂಗ ಮಾರಿ ಮಾಡಿಕೊಂಡ ಎಷ್ಟ ಮಾತಾಡತೈತಿ ನೋಡಽ” ಎಂದು ಆ ಕಡೆಯಿಂದ ಬರುತ್ತದೆ. “ಹಿಡಿದ ಹಿಂಡಿದರ ಮೈಯಾಗ ತಟಕ ರಸ ಇಲ್ಲ; ಬಾಯಿ ನೋಡ ವಟ ವಟಾ” ಎಂದು ಈ ಕಡೆಯಿಂದ ಬಂದರೆ “ಸೀರೀ ಮರೀಗಿ ಸಿಂಬಳಾ ಒರಸತಾಳ, ಗಲ್ಲ ಕಡದರ ಗುಲ್ಲ ಮಾಡತಾಳ, ಯಾರಲೇ ಹುಡುಗಾ?” ಎಂದೊಂದು ಚಿಗುರು ದನಿ ಮೂಡಿದರೆ ಉಳಿದ ಹಿಂಡೆಲ್ಲ ಅವರಲ್ಲಿನ ಒಬ್ಬಳ ಹೆಸರು ಹೇಳಿ ಹೊಯ್ಕೊಳ್ಳತೊಡಗುತ್ತಾರೆ. ಹೀಗೆ ಸಭ್ಯತೆಯಿಂದ ಸುರುವಾದದ್ದು ಯಾವ ಕೊನೆ ತಲುಪೀತೆಂದು ಹೇಳಲಿಕ್ಕಾಗುವುದಿಲ್ಲ. ಗುಡಿಯ ತನಕ ಇಂಥ ಕೊಂಕು ಬಾಣಗಳ ಸುರಿಮಳೆ ಹಾಗೇ ಸಾಗೇ ಇರುತ್ತದೆ. +ಪ್ರತಿಯೊಬ್ಬ ಸೂಳೆಯ ಕೈಯಲ್ಲಿ ಈ ದಿನ ಆತ್ಮರಕ್ಷಣೆಗೆ ಒಂದೊಂದು ಮುಳ್ಳಿನ ಸಿಂಧೀ ಝಳಿಕಿ ಇರುತ್ತದೆ. ಯಾಕೆಂದರೆ ಬಣ್ಣ ಗೊಜ್ಜುವಾಗ, ಹೇಳಿ ಕೇಳಿ ಶಿವಾಪುರದ ಹುಡುಗರಾದ್ದರಿಂದ ಸೊಂಟದ ವಿಷ ಇಳಿಯುವತನಕ ಅವಕ್ಕೆ ಮನುಷ್ಯರ ಮಾತೇ ತಿಳಿಯುವುದಿಲ್ಲವಾದ್ದರಿಂದ ಏನಾದೀತು, ಏನಾಗಲಿಕ್ಕಿಲ್ಲ ಎಂದು ಹೇಳಬರುವಂತಿಲ್ಲ. ಈ ಹೊತ್ತು ಯಾರೇನು ಮಾಡಿದರೂ, ಯಾರೂ, ಸ್ವತಃ ದೇವರೂ ಕೇಳಬಾರದು. ಮುದಿ ಸೂಳೆಯರಿಗಂತೂ ಕೈಕೊಟ್ಟ ಹಳೇ ಮಿಂಡರ ಸೇಡು ತೀರಿಸಿಕೊಳ್ಳುವುದಕ್ಕೆ ಇದು ಒಳ್ಳೇ ಸಂಧರ್ಭ. ಜನಗಳಲ್ಲಿ ಹಿಗ್ಗಿ ನುಗ್ಗಿ ಮೈ ನೆತ್ತರಾಡುವ ಹಾಗೆ ಸಿಂಧೀ ಝಳಕಿಯಿಂದ ಬಾರಿಸುತ್ತಾರೆ. ಅವರು ತಾಕತ್ತಿದ್ದರೆ ಎದುರಿಸುತ್ತಾರೆ; ಇಲ್ಲವೆ ಹುಡುಗರ ಹಿಂದೆ ಅಡಗಿ ಅಡಗಿ ಓಡಿಹೋಗುತ್ತಾರೆ. ಇದು ಅವರವರ ಪ್ರೀತಿ, ಸೊಕ್ಕು, ಧಿಮಾಕು, ದಿಗರಿಗೆ ಸೇರಿದ್ದು. ಯಾಕೆಂದರೆ ಏಟು ತಿಂದಷ್ಟೂ ಅದು ಹೆಮ್ಮೆ ಪಡುವ ವಿಷಯ-ಗಂಡಸರಿಗೆ. +ಗುಡಿಯ ಕಟ್ಟೆಗೆ ಬಂದಾದ ಮೇಲೆ ಹಾಡುವ ಎರಡು ತುಂಡುಗಳೂ ಎದುರು ಬದುರು ನಿಲ್ಲುತ್ತವೆ. ಮಧ್ಯದಲ್ಲಿ ಹಲಗೆಯವರು ಅರೆ ನಗ್ನರಾದ ತೆರೆಬಾಯಿ ಗಂಡು ಹಿಂಡು ಸುತ್ತ ಸೇರುತ್ತದೆ. ಚಾವಡಿ ಕಟ್ಟೆಯ ಮೇಲೆ ಗೌಡ, ಅವನ ಸುತ್ತ ಹಕ್ಕಿನವರು, ಅಂದರೆ ಪಂಚರು, ಕುಲಕಣ್ಣಿ-ಕೂರುತ್ತಾರೆ. ಗೌಡ ಹಾಡುಗಾರಿಕೆ ಸುರುವಾಗಲೆಂದು ಅಪ್ಪಣೆ ಕೊಟ್ಟ ಕೂಡಲೇ ಎರಡೂ ತಂಡದ ನೇತಾರರು ಗೌಡನಿಗೂ, ಪಂಚರಿಗೂ ನಮಸ್ಕರಿಸಿ ಸುರುಮಾಡುತ್ತಾರೆ. +ಅವರ ಮೇಲೆ ಇವರು, ಇವರ ಮೇಲೆ ಅವರು ವ್ಯಂಗ್ಯದ ಪದ ಹೇಳುತ್ತ ನಡು ನಡುವೆ ರಸಿಕರ ಕೇಕೆ, ವವ್ವಾ, ಭಲೆಗಳೊಂದಿಗೆ ಹಾಡಿನಂತ್ಯದ ಹುಡುಗರ ಹೊಯ್ಕೊಳ್ಳುವುದರೊಂದಿಗೆ ಹಾಡುಗಾರಿಕೆ ಒಂದೆರಡು ತಾಸು-ಹಾಗೆ ರಂಗೇರಿದರೆ ಇನ್ನೂ ಒಂದೆರಡು ತಾಸು ಮುಂದುವರಿಯುತ್ತದೆ. ಮುಗಿದಾದ ಮೇಲೆ ಗೌಡ ಇಬ್ಬರಿಗೂ ಖುಷಿಯಾಗಲಿ ಅಂದರೆ ಒಂದೊಂದು ರೂಪಾಯಿ ಕೊಡುತ್ತಾನೆ. ಪಂಚರೂ ಕೊಡುತ್ತಾರೆ. ಅಲ್ಲಿಗೆ ಹಿರಿಯರ ಭಾಗ ಮುಗಿಯಿತು. ಮುಂದೆ ಹುಡುಗರದೇ ಆಟ. ಸೂಳೆಯರಿಗೆ ಬಣ್ಣ ಗೊಜ್ಜುತ್ತ ಅವರಿಂದ ಸಿಂಧೀ ಗರಿಯ ಏಟು ತಿನ್ನುತ್ತ ಆಟವಾಡುತ್ತಾರೆ. ಇದು ತಲೆತಲಾಂತರದಿಂದ ನಡೆದು ಬಂದ ಪದ್ಧತಿ. +ಆದರೆ ಈ ಸಲ ಹಾಗಾಗಲಿಲ್ಲ. ಗೌದನೊಬ್ಬನನ್ನು ಬಿಟ್ಟು ಉಳಿದವರೆಲ್ಲ ಬಂದಾಗಿತ್ತು. ಗುಡಿಯ ಕಟ್ಟೆಯ ಮೇಲೆ ಹಕ್ಕಿನವರು ಕುಳಿತುಕೊಂಡು ಗೌಡನಿಗಾಗಿ ಕಾಯುತ್ತಿದ್ದರು. ಹಾಡಿನ ತಂಡದವರು ತಂತಮ್ಮಲ್ಲೆ ಹಾಡಲಿರುವ ಪದಗಳ ಹೊಳಹು ಹಾಕುತ್ತ ಸೇರಿಸಬೇಕಾದ ವಿವರಗಳನ್ನು ಚರ್ಚಿಸುತ್ತ ಗುಂಪಿನ ಮೇಲೆ ಅದರಿಂದಾಗಬಹುದಾದ ಪರಿಣಾಮಗಳನ್ನು ಕಲ್ಪಿಸಿಕೊಳ್ಳುತ್ತ ಸಂತೋಷಿಸುತ್ತಿದ್ದರು. ನಾಯೆಲ್ಯಾ ಹಲಗಿ ಕಾಸಿ ಅದರ ನಾದ ಹದ ಮಾಡತೊಡಗಿದ್ದ. ಈ ವರ್ಷ ಸೂಳೆಯರ ತಂಡದಲ್ಲಿ ದುರ್ಗಿಯಿದ್ದುದೊಂದು ವಿಶೇಷ ಆಕರ್ಷಣೆಯಾಗಿತ್ತು. ಕೆಲವರು ಆಗಾಗ ದೀಡಿ ಮಾತು ಹೇಳಿ ದುರ್ಗಿಯ ಗಮನ ತಮ್ಮ ಕಡೆ ಸೆಳೆಯುತ್ತಲೂ, ಸೆಳೆದದ್ದಕ್ಕೆ ಹೆಮ್ಮೆಪಡುತ್ತಲೂ ಇದ್ದರು. ಮಾತು ಹೊಳೆಯದ ಮಂದಮತಿಗಳು ಎಲ್ಲರಿಗಿಂತ ಜೋರಾಗಿ ನಕ್ಕು, ಹಾಗೆ ನಕ್ಕರಾದರೂ ದುರ್ಗಿಯ ಗಮನ ತಮ್ಮ ಕಡೆ ಹರಿಯುವಂತೆ ಮಾಡಲು ಖಟಪಟಿ ಮಾಡುತ್ತಿದ್ದರು. ತಡವಾದದ್ದಕ್ಕೆ ತಡೆಯದೆ ಒಂದೆರಡು ಎಳೇ ಹಸುಳೆಗಳು ತಮಗಾಗಿ ಕಾದಿರುವಂತೆ ಹೊಯ್ಕಳ್ಳಲಾರಂಭಿಸಿ ಹಿರಿಯರ “ಬಾಯ್ಮುಚ್ರೆಲೇ, ಛೀ, ಥೂ”ಗಳಿಗೆ ಪಕ್ಕಾಗಿ ಸುಮ್ಮನಾದವು. +ಅಷ್ತರಲ್ಲಿ ಗುಡಸೀಕರನ ಸವಾರಿ ಆಗಮಿಸಿತು. ಕಳ್ಳ ಸಿದ್ರಾಮ ಕೂತ, ನಿಂತ ಮಂದಿಯನ್ನು ಬದಿಗೆ ಸರಿಸಿ ಹಾದಿ ಮಾಡುತ್ತ ಮುಂದೆ ಮುಂದೆ ಬಂದ. ಹಿಂದೆ ಗುಡಸೀಕರನೂ, ಅವನ ಹಿಂದೆ ಮೆಂಬರರೂ ಬರುತ್ತಿದ್ದರು. ಬಂದವರು ಇವರೇ ಎಂದು ಗೊತ್ತಾಗಿ ಜನ ಮತ್ತೆ ಮೊದಲಿನಂತಾದರು. ಕಳ್ಳ ಸಿದ್ರಾಮನನ್ನೂ ದಾಟಿ ಗುಡಸೀಕರ ನೇರವಾಗಿ ಕಟ್ಟೆಯ ಕಡೆ ನಡೆದ. ಕಟ್ಟೆಯಾಗಲೇ ಹಕ್ಕಿನ ಕುಳಗಳಿಂದ ಭರ್ತಿಯಾಗಿತ್ತು. ಗೌಡನಿಗಾಗಿ ಜಮಖಾನೆ ಹಾಸಿ, ಹಿಂದೊಂದು ತೆಕ್ಕೆಯಿಟ್ಟು ಒಬ್ಬರು ಕೂರುವಷ್ಟು ಮಾತ್ರ ಜಾಗ ಖಾಲಿಬಿಟ್ಟಿದ್ದರು. ಗುಡಸೀಕರ ನೆಟ್ಟಗೆ ಕಟ್ಟೇಯೇರಿ ಕುಳಿತ ಕುಳಗಳನ್ನು ದಾಟಿ ಗೌಡನ ಜಾಗದಲ್ಲೇ ಕೂತುಬಿಟ್ಟ! +ಕೂತ ನಿಂತವರೆಲ್ಲ ಒಮ್ಮೆಲೇ ಒಂದು ಕ್ಷಣ ಸ್ತಬ್ಧರಾಗಿ ಆ ಕಡೆ ನೋಡತೊಡಗಿದರು. ಮೆಲ್ಲಗೆ ತಮ್ಮತಮ್ಮಲ್ಲೇ ಗುಸುಗುಸು ಸುರುಮಾಡಿದರು. ಜನ ಇದನ್ನು ನಿರೀಕ್ಷಿಸಿರಲಿಲ್ಲ. ಆಗಬಾರದ್ದು ಆಗಿಹೋದಂತೆ ಹಿರಿಯರು ಕೈ ಕೈ ಹಿಸುಕಿಕೊಂಡರು. ನಾಯೆಲ್ಯಾ ಹಲಗೆ ಹದಮಾಡುವುದನ್ನು ಬಿಟ್ಟು ಕಾಲೆತ್ತರಿಸಿ ಗೌಡನ ಸ್ಥಳದಲ್ಲಿ ಕೂತ ಸರಪಂಚನನ್ನು ನೋಡಿದ. ದತ್ತಪ್ಪನ ಮುಖದ ಮೋಜು ಮಾಯವಾಯಿತು. +ಎಲ್ಲರ ಕಣ್ಣು ತನ್ನನ್ನೇ ಇರಿಯುತ್ತಿದ್ದುದು, ಎಲ್ಲರ ಪಿಸು ನುಡಿಗೆ ತಾನೇ ವಸ್ತುವಾದದ್ದು ಸರಪಂಚನಿಗೂ ತಿಳಿಯಿತು. ತನ್ನ ಪಾಡಿಗೆ ತಾನು ಏನನ್ನೂ ಗಮನಿಸಿಲ್ಲವೆಂಬಂತೆ ಸುಮ್ಮನಿರಲು ಯತ್ನಿಸಿದ. ಸಾಧ್ಯವಾಗಲಿಲ್ಲ. “ಎಲಡಿಕಿ ಚೀಲ ತಂದಿಯೇನಲೇ ನಿಂಗೂ?” ಎಂದು ಕಟ್ಟೆಯ ಹತ್ತಿರ ಕೈಕಟ್ಟಿ ನಿಂತ ನಿಂಗೂನನ್ನು ಕೇಳಿದ. ಅದನ್ನವನು ಸಾಮಾನ್ಯವೆಂಬಂತೆ ಹೇಳಿದರೂ ಅದು ಎಲ್ಲರಿಗೂ ಕೇಳಿಸುವಷ್ಟು, ಹೆದರಿದ ಹುಡುಗರು ಜೋರಾಗಿ ಮಾತಾಡುವಂತೆ ದನಿ ಎತ್ತರವಾಗಿತ್ತು.ತನ್ನ ಮಾತಿಗುತ್ತರವಾಗಿ ಯಾರಾದರೂ ಮಾತಾಡಬೇಕೆಂಬ ಆಸೆಯಿತ್ತು. ಅಲ್ಲಿ ಕೂರಬಾರದು, ಏಳಬಾರದು, ಕೂತರೆ ಎಲ್ಲರ ಕಣ್ಣು ಎದುರಿಸಬೇಕು, ಎದ್ದರೆ ಅವಮಾನ. ಏನಾದರೂ ಮಾಡುತ್ತಾನೆಂದರೆ ನಿಂಗೂ ಏನೂ ಹೇಳಲಾರದೆ ಒಂದು ಬಾರಿ ಹಲ್ಲು ಕಿಸಿದು ಜನಗಳನ್ನು ನೋಡಿದ ಅಷ್ಟೆ. +ದತ್ತಪ್ಪನ ಚಡಪಡಿಕೆ ಸ್ಪಷ್ಟವಾಗಿತ್ತು. ಆದರೆ ಬಾಯಿಬಿಟ್ಟು ಹೇಳಲೊಲ್ಲ. ಇಷ್ಟರಲ್ಲೇ ಗೌಡ ಬರಬಹುದು. ಅವನನ್ನೆಲ್ಲಿ ಕೂರಿಸಬೇಕು? ಹಾಗೇ ಕೂತ, ನಿಂತವರ ಅಸಮಧಾನವೂ ಸ್ಪಷ್ಟವಾಗಿತ್ತು. ಪಂಚಾಯ್ತಿ ಮೆಂಬರರು, ತಾವೇ ತಪ್ಪುಮಾಡಿದಂತೆ, ಅದನ್ನು ತೋರಗೊಡದೆ ಹರಕಂಗಿಯ ಜೇಬುಗಳಲ್ಲಿ ಏನೋ ಹುಡುಕುತ್ತಿದ್ದಂತೆ, ಮರೆತವರು, ಏನೋ ಜ್ಞಾಪಿಸಿಕೊಳ್ಳುತ್ತಿದ್ದಂತೆ ಅಭಿನಯಿಸತೊಡಗಿದರು. ಕೊನೆಗೆ ಕಳ್ಳ ತನ್ನ ಅಭಿನಯ ಸಾಲದೆಂದು ಕಂಡುಕೊಂಡು ಎದುರಿಗಿದ್ದ ಬಾಳೂನಿಗೆ “ಏ ಬಾಳೂ, ಎಲಡಿಕೆ ಚಂಚಿ ತಂದಿಯೇನಲಾ?” ಎಂದು ಕೇಳಿದ. ಕೊನೇ ಪಕ್ಷ ಅವನು ಇಲ್ಲವೆಂದಾದರೂ ಹೇಳಿಯಾನೆಂದು, ಬಾಳೂ ಎಲಡಿಕೆ ತಿನ್ನುತ್ತಿದ್ದವನು ಚಂಚಿಯನ್ನು ಎಡಗೈಯಲ್ಲಿ ಹಿಡಿದುಕೊಂಡು ಬಲಗೈ ಬೆರಳುಗಳನ್ನು ತುಟಿಗಂಟಿಸಿ ಪಿಚಕ್ ಎಂದು ಎಲ್ಲರಿಗೂ ಕೇಳಿಸುವಂತೆ. ಉಗುಳಿ ಇಲ್ಲವೆಂಬಂತೆ ಕೈಮಾಡಿದ. ಕಳ್ಳ, ಅವನು ತನ್ನ ಮೇಲೆ ಉಗುಳಿದ ಹಾಗೆ ಮುಖ ಸಿಂಗರಿಸಿಕೊಂಡು ಮಂದಿ ನೋಡಿದರೇನೋ ಎಂಬಂತೆ ಸುತ್ತ ನೋಡಿದ. +ಲಗಮವ್ವನಿಗೆ ಸುತ್ತ ಬಿಗಿದ ಮೌನ ತಡೆಯಲಾಗಲಿಲ್ಲ. “ಇಲ್ಲಿ ಯಾರೂ ಗಂಡಸರಽ ಇಲ್ಲೇನ್ರಿ?” ಎನ್ನುತ್ತ ಎದ್ದು ನಿಂತು ಏನೋ ಹೇಳಬೇಕೆಂದಿದ್ದಳು. ಅಷ್ಟರಲ್ಲಿ ಚೇರ್‍ಮನ್ ಇಡೀ ಸಭೆಗೆ ತಾನೇ ಹಿರಿಯನೆಂಬಂತೆ ತನ್ನ ಅಪ್ಪಣೆಗಾಗಿ ಎಲ್ಲರೂ ಕಾಯುತ್ತಿದ್ದಂತೆ- +“ಹೂ ಲಗಮವ್ವಾ, ಇನ್ನು ಸುರುಮಾಡಿರಿ” ಎಂದ. ನಿಂಗೂ ಸ್ವಲ್ಪ ಧೈರ್ಯ ತಾಳಿ- +“ಅದು ಗೌಡ್ರು ಕೂರೋ ಜಾಗ; ಅವರು ಬರೋ ಹೊತ್ತಾತು, ಆ ಜಾಗಾ ಬಿಟ್ಟ ಇಳೀತಿ?” +-ಎಂದು ಹೇಳುತ್ತಿರುವಂತೆಯೇ- +“ಬರಲಿ ಬರಲಿ, ಅವರಿಗೂ ಇಲ್ಲೇ ಜಾಗ ಮಾಡಿ ಕೊಡೋಣ; ಅದಕ್ಯಾಕಿಷ್ಟ ತಲೀ ಕೆಡಿಸಿಕೊಳ್ತಿ?” +-ಎಂದು ನಿರ್ಲಕ್ಷ್ಯ ನಟಿಸುತ್ತಾ ಹೇಳಿ, +“ಹೂ ಲಗಮವ್ವಾ, ಸುರು ಮಾಡರಿನ್ನ” +-ಎಂದ. ಲಗಮವ್ವ ಇವನ ಕಡೆ ಬೆನ್ನ ತಿರುಗಿಸಿ ಕೂತಳಷ್ಟೆ. ಎಲ್ಲೇ ನಿಂತಿದ್ದ ರಮೇಶ, ಇವನೂ ಒಬ್ಬ ಮೆಂಬರನೇ, ಸಂಧರ್ಭದ ಗಾಂಭೀರ್ಯ ಮುರಿಯುತ್ತ- +“ಸುರು ಮಾಡವಾ ಲಗಮವ್ವಾ, ಊರ ಚೇರ್ಮ್ಮರಽ ಹೇಳತಾರಂದರ ಕಿಮ್ಮತ್ತಿಲ್ಲೇನ? ಏ ನಾಯೆಲ್ಯಾ ಬಾರಿಸಲೇ ಹಲಗಿ” +-ಎಂದು ಚೇರ್‍ಮನ್ನರ ಅಭಿಮಾನದ ಪರವಾಗಿ ಮಾತಾಡಿದ. ತನ್ನನ್ನೇ ಕುರಿತು ರಮೇಶ ಹೇಳಿದ್ದರಿಂದ ಏನೂ ಮಾಡಲೂ ತೋಚದೆ ನಾಯೆಲ್ಯಾ ಎದ್ದು ನಿಲ್ಲುತ್ತಿದ್ದ; ಅಷ್ಟರಲ್ಲಿ ಲಗಮವ್ವ ಕೂತಲ್ಲಿಂದಲೇ- +“ನಮಗೇನೂ ಅವಸರಿಲ್ಲರೀ. ಗೌಡ ಬರಲಿ, ಸಾವಕಾಶ ಸುರು ಮಾಡೋಣಂತ” ಎಂದಳು. ಇದನ್ನು ಕೇಳಿ ನಾಯೆಲ್ಯಾ ಕುಕ್ಕರಿಸಿದ. ಸರಪಂಚನ ಮುಖ ಇಷ್ಟಿದ್ದದ್ದು ಇಷ್ಟಾಯಿತು. ಈ ಒರಟುತನ ಅವನ ನಿರೀಕ್ಷೆಗೆ ಮೀರಿದ್ದು. ಹೇಗೆ ಎದುರಿಸಬೇಕೆಂದು ಗೊತ್ತಾಗದೆ ಚಡಪಡಿಸಿದ. ಅವನ ಮುಖದಲ್ಲಿ ಚಡಪಡಿಕೆ ಅವನ ಮೂಗಿನಷ್ಟೇ ಸ್ಪಷ್ಟವಾಗಿ ಕಂಡುಬರುತ್ತಿತ್ತು. ಎಲ್ಲರ ಕಣ್ಣುಗಳು ತನ್ನನ್ನು ಇರಿಯುವಂತೆ ಅನ್ನಿಸಿತು. ಎಲ್ಲರ ಮನಸ್ಸುಗಳಲ್ಲಿ ತಾನು ರಾಡಿಯಲ್ಲಿ ಸಿಕ್ಕಿಬಿದ್ದು ಒದ್ದಾಡುತ್ತಿರುವಂತೆ ಅನ್ನಿಸಿತು. ಎದುರಿಸಲಾರದೆ ಕಿಸೆಗೆ ಕೈಬಿಟ್ಟು ಸಿಗರೇಟು ತೆಗೆದು ಹೊತ್ತಿಸಿ ಪುಸ್ ಪುಸ್ ಎಂದು ಹೊಗೆ ಬಿಟ್ಟ. ಬೇರೆ ಸಂದರ್ಭದಲ್ಲಾಗಿದ್ದರೆ ಜನ ಆ ಸಿಗರೇಟು, ಆ ಹೊಗೆ, ಅದರ ವಾಸನೆಯೊಂದಿಗೆ ಆಟವಾಡಬಹುದಿತ್ತು. +ಆಶ್ಚರ್ಯವೆಂದರೆ ದತ್ತಪ್ಪ ಸುಮ್ಮನೇ ಕೂತಿದ್ದ. ತಾನು ತೋರಬೇಕಾದ ಪ್ರತಿಕ್ರಿಯೆ ಜನರೇ ತೋರುತ್ತಿದ್ದಾರೆಂದೋ, ಗೌಡ ಬರಲಿ, ನೋಡಿಕೊಳ್ಳೋಣವೆಂದೋ-ಅಂತೂ ಸುಮ್ಮನಿದ್ದ. ಪರಿಸ್ಥಿತಿಯನ್ನು ಗಮನಿಸಿ ಒಬ್ಬ ಎಳೇ ಬಾಲಕ ಲಬೊ ಲಬೊ ಹೊಯ್ಕೊಂಡ. ಎಲ್ಲರೂ ಹೊಯ್ಕೊಂಡರು. ಇದು ತನ್ನನ್ನು ಕುರಿತಾಗಿಯೇ ಎಂದು ಗುಡಸೀಕರ ಬಲ್ಲ. ಅಷ್ಟರಲ್ಲಿ ಗುಂಪಿನಂಚಿನ ಒಬ್ಬ “ಗೌಡರು ಬಂದರು, ಬಂದರು” ಎಂದ. ಎಲ್ಲರೂ ಆ ಕಡೆ ಮುಖ ಹೊರಳಿಸಿದರು. ಗೌಡ ಅವಸರವಸರವಾಗಿ ಬರುತ್ತಿದ್ದ. ಇಂದಿನ ಹಾಡುಗಾರಿಕೆ ನಿರಂಬಳ ಸಾಗೀತೆಂದು ಯಾರಿಗೂ ಅನಿಸಲಿಲ್ಲ. ಗೌಡನಿಗೂ ಸರಪಂಚನಿಗೂ ಜಗಳವಾಗಬಹುದೆಂದು ಕೂಡ ಕೆಲವರು ಕಲ್ಪಿಸಿದರು. ಎಲ್ಲರ ಕಣ್ಣಲ್ಲಿ ವಿಚಿತ್ರ ಕುತೂಹಲ ಚಂಚಲಿಸಿತು. +ಜನ ಎದ್ದು ಗೌಡನಿಗೆ ಹಾದೀ ಮಾಡಿಕೊಟ್ಟರು. ಕೆಲವರು “ಶರಣ್ರೀಯೆಪ್ಪ” ಎಂದರು. ಗೌಡ ಪ್ರತಿ ನಮಸ್ಕರಿಸುತ್ತ ನಡೆದ. ತನ್ನ ಸ್ಥಳದಲ್ಲಿ ತೆಕ್ಕೆಗೆ ಆಧಾರವಾಗಿ, ತನ್ನತ್ತ ನೋಡದೆ, ಸಿಗರೇಟು ಸೇದುತ್ತ ಕೂತ ಸರಪಂಚನನ್ನು ನೋಡಿದ. ಎದ್ದು ನಿಂತ ದತ್ತಪ್ಪನ ಮುಖ ನೋಡಿದ. ಪರಿಸ್ಥಿತಿಯ ಅರಿವಾಗಿ ಹೋಯ್ತು. ಅವರಿವರನ್ನು ಹೆಸರುಗೊಂಡು ಕರೆದು “ಕೂಡ್ರಿ ಕೂಡಪಾ,” ಎನ್ನುತ್ತ ನೇರ ಕಟ್ಟೆಗೆ ಹೋದ. “ಶರಣರೀ ಸರಪಂಚರ” ಅಂದ, ದತ್ತಪ್ಪನ ಪಕ್ಕದಲ್ಲೇ ಸ್ಥಳ ಮಾಡಿಕೊಂಡು ಕೂರುತ್ತ “ಹೂ ಲಗಮವ್ವ ನೋಡೋಣ ಈ ವರ್ಷ ಏನೇನ ಹಾಡ ಕಟ್ಟೀರಿ, ಸುರುಮಾಡರಿ” ಅಂದ. ಏನೂ ಆಗಿಲ್ಲವೆಂಬಂತೆ. ಗೌಡನ ಮಾತು ಕೇಳಿ ದತ್ತಪ್ಪ ತಲೆ ಭಾರ ಇಳಿವಿದಷ್ಟು ಹಗುರಾದ. ಜನರಲ್ಲಿ ಗುಜು ಗುಜು ಇತ್ತು. ಅವರ ಮಾತು ಕೇಳಿಸುತ್ತಿರಲಿಲ್ಲ ನಿಜ; ಅವರ ಕೈ ಬಾಯಿ ನೋಡಿಯೇ ಹೇಳಬಹುದಿತ್ತು: ಅವರು ತಕರಾರು ತೆಗೆಯುತ್ತಿದ್ದಾರೆಂದು. ಗೌಡನಿಗೆ ಅರಿವಾಗಿ ದನಿದೋರಿದ: +“ನಮ್ಮ ಲಗಮವ್ವ ವರ್ಷಕ್ಕೊಂದು ಏನಾರ ಹೊಸಾ ಚೀಜ ತಂದಽ ಇರತಾಳ ನೋಡ, ದತ್ತೂ” ಎಂದು ಪಂಚರತ್ತ ನೋಡಿ ದುರ್ಗಿಯತ್ತ ಗಮನ ಸೆಳೆದ. “ಅಯ್ಯಽ ಇದು ಅಬಾಯೀ ಮಗಳ್ರಿ” ಎಂದು ಹೇಳಿ ‘ಹೋಗಽ ಗೌಡನ ಪಾದ ಹಿಡದ ಬಾ” ಎಂದು ಎದ್ದು ತಲೆಬಾಗಿ ನಿಂತ ದುರ್ಗಿಗೆ ಹೇಳಿದಳು. ದುರ್ಗಿ ಅಷ್ಟೂ ಜನರ ಕಣ್ಣಿಗೆ ಗುರಿಯಾಗಿ, ಎಳಕರ ಮನಸ್ಸಿಗೆ ಮುದವಾಗಿ, ಮದವಾಗಿ, ಆದ್ದರಿಂದ ನಾಚುತ್ತ, ಅದನ್ನು ಸಂತೋಷಿಸುತ್ತ ತಲೆ ತುಂಬ ಸೆರಗು ಹೊತ್ತು ಗೌಡನತ್ತ ಹೊರಟಳು. ಹೋಗಿ ಕಾಲು ಮುಟ್ಟಿ ನಮಸ್ಕರಿಸಿದಳು. ಪಕ್ಕದ ಹಿರಿಯರ ಕಾಲು ಮುಟ್ಟಿದಳು. ಅಥವಾ ನಾಚಿಕೆಯ ಅತಿಶಯದಲ್ಲಿ ಯಾರ್‍ಯಾರದೋ ಕಾಲು ಮುಟ್ಟಿ ಬೆದರಿದ ಮಣಕಿನಂತೆ ಓಡಿಬಂದಳು. ಹಾಡುಗಾರಿಕೆ ಸುರುವಾಯಿತು. ಲಗಮವ್ವ ಎದ್ದು ನಿಂತು, +ಕಲಿಯುಗ ಕಾಲಿಟ್ಟಿತು ಧರ್ಮ +ಉಳಿಯಲಿಲ್ಲ ಚೂರಾ | +ಕಲಿತವರ ಕಾಲಾಗ ಲೌಕಿಕವೆಂಬೋದು +ಅಧರ್ಮವಾಯಿತು ಪೂರಾ || +-ಎಂದು ಸುರುಮಾಡಿ “ಕಲಿತ ಕೋತಿ”ಗಳ ಭಂಡತನವನ್ನು ಬಯಲಿಗೆಳೆದಳು. ಇದು ಎದುರು ತಂಡಕ್ಕೆಸೆದ ಸವಾಲಾಗಿರಲಿಲ್ಲ. ಆದರೆ ಜನ ಈ ಹಾಡಿನಿಂದ ಎಷ್ಟು ಖುಷಿಪಟ್ಟರೆಂದರೆ ಹಾಡಿನಂತ್ಯದ ಹೊಯ್ಕೊಳ್ಳುವಿಕೆಗೆ ಮುದುಕರೂ ಸೇರಿದರು. ಆ ಹಾಡನ್ನು ತಾವೇ ಹೇಳಿದಂತೆ ಆನಂದಪಟ್ಟರು. ಹಾಡು ಯಾರನ್ನು ಕುರಿತದ್ದೆಂದು ಇವರಿಗೆ ಹೇಳಿಕೊಡಬೇಕೆ? ಗುಡಸೀಕರನ ಮುಖ ಇನ್ನೂ ಅಸಭ್ಯವಾಯಿತು. ಒಳಗೆ ಕತ ಕತ್ ಕುದಿಯುತ್ತಿದ್ದನೆಂಬುದನ್ನು ಅವನ ಕಣ್ಣ ಜ್ವಾಲೆಗಳೇ ಹೇಳುತ್ತಿದ್ದವು. ಗೌಡ ಮುಗುಳ್ನಕ್ಕು ಸುಮ್ಮನಾದರೆ, ದತ್ತಪ್ಪ ಜೋರಾಗಿಯೇ ನಕ್ಕ. ಜನ ಸಿಳ್ಳು ಹಾಕಿ ನಕ್ಕರು. ಕೆಲವರು ರುಂಬಾಲು ಹಾರಿಸಿ ನಕ್ಕರು. ಈ ಥರಾವರಿ ನಗೆಗಳನ್ನು ಸಂಯಮಿಸುವುದು ಗೌಡನಿಂದಲೂ ಸಾಧ್ಯವಿರಲಿಲ್ಲ. +ಪಂಚಾಯ್ತಿ ಮೆಂಬರರೆಲ್ಲ ಮುರುಟಿದ್ದರು. ಈ ನಗೆಗಳು ಗುಡಸೀಕರನ ಒಳಗಿನ ಬೆಂಕಿಗೆ ಹುಲ್ಲಾದವು. ಭಗ್ಗನೇ ಎದ್ದು ಕಟ್ಟೆಯಿಳಿದು, ಈಗಷ್ಟೇ ಹೊತ್ತಿಸಿದ ಸಿಗರೇಟನ್ನು ನೆಲಕ್ಕೆಸೆದು ತುಳಿದು, ಹೊಸಕಿ, ಬಿಟ್ಟ ಬಾಣದ ಹಾಗೆ ಹಿಂಡಿನಿಂದ ಮರೆಯಾದ. ಪಂಚಾಯ್ತಿ ಮೆಂಬರರು ಒಬ್ಬೊಬ್ಬರಾಗಿ ಬಾಲದ ಹಾಗೆ ಸಾಲಾಗಿ ಹಿಂಬಾಲಿಸಿದರು. +ಸಣ್ಣ ಮಗನ ಮೇಲೆ ಕೈಮಾಡಿದ +ಗುಡಸೀಕರ ತಾನೇನು ಮಾಡುತ್ತಿದ್ದೇನೆಂದು ಅರಿವಿಲ್ಲದೆ ತನಗೆ ಬಣ್ಣ ಎರಚಬಂದ ಬಾಳೂನ ಸಣ್ಣ ಮಗನನ್ನು ಹಿಂದುಮುಂದು ನೋಡದೆ ದನ ಬಡಿದಂತೆ ಬಡಿದ. ಅದು ನಡೆದದ್ದು ಹೀಗೆ- +ಲಗಮವ್ವನ ಹಾಡು ಕೇಳಿ, ಅಲ್ಲಿ ಕೂರಲಾರದೆ ಎದ್ದು ಬಂದನಲ್ಲ, ಸೀದಾ ಮನೆ ಹೊಕ್ಕ. ಹೊಕ್ಕವನೇ ದಡ ದಡ ಜಿನೆಯೇರಿ ಮಹಡಿ ಹತ್ತಿದ. ಹತ್ತಿದವನೇ ಅತ್ತಿತ್ತ ಅಲೆದಾಡಿದ. ಸಿಗರೇಟು ಹೊತ್ತಿಸಿದ. ಅಲ್ಲೇ ಇದ್ದ ಪಲ್ಲಂಗದ ಮೇಲೆ ಕುಕ್ಕರಿಸಿದ. ಕೂತಿರಲಾರದೆ ನಿಂತ. ನಿಂತಿರಲಾರದೆ ಅಡ್ಡಾಡಿದ. ಮತ್ತೆ ಕೂತ. ಮತ್ತೆ ನಿಂತ. ಸಿಗರೇಟು ಸೇದಿದ. ಎಸೆದ, ನಿಂತ, ಕೂತ. +ಮೆಂಬರರು, ಅದೇ ಹಿಂಬಾಲಕರು, ಸಪ್ಪಳ ಮಾದದೆ ಜಿನೆಹತ್ತಿ ಹಾಸಿದ್ದ ಜಮಖಾನದ ಮೇಲೆ ಗುಂಪಾಗಿ, ತುಟಿ ಎರಡು ಮಾಡದೆ, ಮುದುಡಿ ಇಷ್ಟಿದ್ದವರು ಇಷ್ಟಿಷ್ಟೇ ಆಗಿ, ಚಲಿಸದೆ ಕಲ್ಲಿನ ಗೊಂಬೆಗಳ ಹಾಗೆ ಕೂತರು. ಗುಡಸೀಕರ ಬಹಳ ಹೊತ್ತಿನ ತನಕ ಇವರನ್ನು ಗಮನಿಸದಂತೆ ಅಡ್ಡಾಡಿದ. ಕೂತು ಸಿಗರೇಟು ಹೊತ್ತಿಸುವಾಗ ಥಟ್ಟನೇ ತನ್ನ ಕಾಲಿಗೂ ನಮಸ್ಕರಿಸಿದ ದುರ್ಗಿಯ ನೆನಪಾಯಿತು. ಕಿಸೆಯಿಂದ ಐದರ ಎರಡು ನೋಟು ತೆಗೆದು ಕಳ್ಳನ ಕೈಗಿಡುತ್ತ “ಹೋಗು, ಸರಪಂಚ ಸಾಹೇಬರ ಕೊಟ್ಟಾರಂತ ಹೇಳಿ ದುರ್ಗಿಗೆ ಕೊಟ್ಟ ಬಾರಲೇ” ಎಂದ. ಸಿದರಾಮ ಓಡಿಹೋಗಿ ಹತ್ತು ರೂಪಾಯಿ ತಗೊಂಡು ಹೊರಟ. ಅವನು ಇನ್ನೂ ಇಪ್ಪತ್ತು ಹೆಜ್ಜೆ ಹೋಗಿರಲಾರ. ಅಂಡೂರಾಮೂ, ಉರ್ಪ್‌ರಮೇಶ ಎದ್ದು “ಅವ ಮೊದಲಽ ಕಳ್ಳ. ಕೊಡತಾನೋ ಇಲ್ಲೋ ನೋಡಿ ಬರತೇನ್ರೀ” ಎಂದು ಹೇಳುತ್ತ ಹೋಗಿಬಿಟ್ಟ. ಜಿಗಸು ಸಾತೀರ ಎದ್ದು “ಛೇ, ಛೇ, ಅವ ಮೊದಲ ಕುಡಕಽ ಏನ ಮಾಡತಾನೋ ನೋಡತೇನ್ರಿ” ಎಂದು ಅವನೂ ಹೋದ. ಕೊನೆಯವ ಆಯೀಮೆರೆ ಮಿಂಡ ಏನೂ ಹೇಳದೆ, ಯಾಕೆಂದರೆ ಏನೂ ಹೊಳೆಯದೆ ಕಳಚಿಕೊಂಡ. +ಗುದಸೀಕರನಿಗೆ ಇವರು ಬೇಕೂ ಆಗಿರಲಿಲ್ಲ. ಹೇಗೆ ಸೇಡು ತೀರಿಸಿಕೊಳ್ಳಬೇಕೆಂದು ದಾರಿ ತೋಚದೆ ಒಂದೇ ಸಮನೆ ಒದ್ದಾಡುತ್ತಿದ್ದ. ಹೊಯ್ಕೊಂಡ ಎಲ್ಲರ ನಾಲಿಗೆ ಸೀದು ಹೋಗುವ ಹಾಗೆ ಮಾಡುವ ಮಾಂತ್ರಿಕ ತಾನಾಗಿದ್ದರೆ, ಗೌಡ, ದತ್ತಪ್ಪ, ಲಗಮಿಯರನ್ನು ಜೇಲಿಗೆ ಕಳಿಸುವ ಅಧಿಕಾರಿ ತಾನಾಗಿದ್ದರೆ-ಅಂದುಕೊಂಡ. ತಕ್ಷಣ ಇನ್ನೊಂದು ಹೊಳೆಯಿತು: ಅರರೇ, ದುರ್ಗಿಗೆ ಈಗಷ್ಟೇ ಕೊಟ್ಟುಕಳಿಸಿದ ದುಡ್ಡನ್ನು ತುಂಬಿದ ಸಭೆಯಲ್ಲಿ ಆಗಲೇ ಕೊಟ್ಟಿದ್ದರೆ ಈ ಮಕ್ಕಳು ಕೊಡುವ ನಾಕಾಣೆ, ಎಂಟಾಣೆಗಿಂತ ಆ ಹತ್ತು ರೂಪಾಯಿ ಎಲ್ಲರ ಕಣ್ಣಲ್ಲಿ ಹೊಳೆಯುತ್ತಿತ್ತು. ಲಗಮವ್ವನಿಗೆ. ಗೌಡನಿಗೆ, ದತ್ತೂನಿಗೆ, ಹೊಯ್ಕಂಡ ಬಿಕನಾಸಿಗಳಿಗೆ ಎಲ್ಲರಿಗೂ ತನ್ನ ಬೆಲೆ ತಿಳಿಯುತ್ತಿತ್ತು. ಮಾತು ಮಿಂಚಿಹೋಗಿತ್ತು. ಅಷ್ಟರಲ್ಲಿ ತಂಗಿ ಗಿರಿಜವ್ವ ಊಟಕ್ಕೆ ಕರೆದಳು. +ಇಳಿ ಹೊತ್ತಾಗಿತ್ತು. ಓಣಿಯಲ್ಲಿ ಎಳೇ ಹುಡುಗರು ಬಣ್ಣ ಎರಚುತ್ತ ಹೊಯ್ಕಳ್ಳುತ್ತ, ನಗಾಡುತ್ತ ಗದ್ದಲ ಮಾಡುತ್ತಿದ್ದವು. ಅದನ್ನು ಕೇಳಿ ಉಂಡು ಮಲಗಿದ್ದ ಗುಡಸೀಕರನಿಗೆ ಎಚ್ಚರವಾಯಿತು. ಗದ್ದಲ ಸಮ ಸಮೀಪ ಬಂದು ತನ್ನ ಮನೆಯ ಮುಂದೆಯೇ ನಡೆಯುತ್ತಿರುವುದು ಗೊತ್ತಾಯಿತು. ಕೂಡಲೇ ಧಡಫಡ ಕೆಳಗಿಳಿದು ಹೋದ. +ಗಿರಿಜವ್ವ ಬಾಗಿಲಲ್ಲಿ ನಿಂತುಕೊಂಡು ಹುಡುಗರ ಬಣ್ಣದಾಟ ನೋಡಿ, ಎಲ್ಲರಿಗೂ ಕೇಳಿಸುವಂತೆ ನಗುತ್ತಿದ್ದಳು. “ನಾಚಿಕಿ ಬರಾಣಿಲ್ಲ? ಗಂಡ ಹುಡುಗೋರ್‍ನ ನೋಡಿಕೋತ ನಿಂತೀದಿ, ನಡಿ ಒಳಗ” ಎಂದು ಗದರಿಸಿ, ಒಳಗೆ ಕಳಿಸಿ ಆ ಸ್ಥಳದಲ್ಲಿ ತಾನು ನಿಂತುಕೊಂಡ. ಹುಡುಗರು ಒಬ್ಬರನ್ನೊಬ್ಬರು ಅಟ್ಟಿಸಿಕೊಂಡು ಹೋಗಿ ಬಣ್ಣ ಹಚ್ಚುತ್ತಿದ್ದರು. ಓಡಿಹೋದವನು ಸಿಕ್ಕೊಡನೆ ಹೋಹೋಽ ಹೋ ಹೊಯ್ಕೊಳ್ಳುತ್ತ ಬಣ್ಣ ಜೊಗ್ಗುತ್ತಿದ್ದರು. ಒಬ್ಬ ಹುಡುಗ, ಬಾಳೂನ ಸಣ್ಣ ಮಗ- ಗುಡಸೀಕರ ನಿಂತುದನ್ನು ನೋಡಿ, “ಸರಪಂಚ ಸಿಕ್ಕನ ಬರ್ರ್ಯೋ” ಎಂದು ಹೊಯ್ಕೊಳ್ಳುತ್ತ ಬಣ್ಣ ಎರಚಿದ. ಉಳಿದವರೂ ಬಂದು ಎರಚಿದರು. ಗುಡಸೀಕರ ಕೆಂಡಕೆಂಡವಾದ. ತಾನೇನು ಮಾಡುತ್ತಿದ್ದೇನೆಂದು ಅರಿವು ಬಿಟ್ಟು ಓಡಿಹೋಗಿ ಎಳೇ ಹುಡುಗನ್ನ ಹಿಡಿದೆಳೆದು ಎಲ್ಲೆಂದರಲ್ಲಿ ಕೈ ಬಾಯಿ ಎನ್ನದೆ ದನ ಬಡಿದಂತೆ ಬಡಿಯತೊಡಗಿದ. ಹುಡುಗ ಕಿರುಚಿ, ಕೂಗಿ ಒದರಿದರೂ ಬಿಡಲಿಲ್ಲ. ತಪ್ಪಿಸಿಕೊಂಡು ನಿಂತ ಎಳೆಯರ ಹಿಂಡಿನಲ್ಲಿ ಅಡಗಿದರೆ ಅಟ್ಟಿಸಿಕೊಂಡು ಓಡಿಹೋಗಿ ಹೊಡೆದ. ಕೈ ಸೋತು ಒದ್ದ. ಕಾಲು ಸೋತು ಹೊಡೆದ. ಹುಡುಗ “ಸತ್ತಿನ್ರೋ ಎಪ್ಪಾ” ಎಂದು ಆರ್ತನಾಗಿ ಕೂಗಿದ. ಉಳಿದ ಹುಡುಗರು ಗಾಬರಿಯಾಗಿ ಬಿಡಿಸಿಕೊಳ್ಳಲಾರದೆ, ಓಡಲಾರದೆ, ಕೂಗಲಾರದೆ ಒಂದರ ಹೊಂದೊಂದು, ಒಂದರ ಆಶ್ರಯದಲ್ಲಿನ್ನೊಂದು ಮುದುಡಿ ನಿಂತವು. ದೂರದಲ್ಲಿ ಹೊರಬಂದ ಹೆಂಗಸರ ಗುಂಪು ಬಂದು ಬಿಡಿಸಿಕೊಳ್ಳಲು ಧೈರ್ಯಸಾಲದೆ ಮರುಗುತ್ತಿದ್ದರು. ಸುದೈವದಿಂದ ನಿಂಗೂ ಓಡಿಬಂದು ಹುಡುಗನ್ನ ಬಿಡಿಸಿಕೊಂಡ. +“ಎಳೇ ಹುಡುಗನ ಮ್ಯಾಲ ಕೈ ಮಾಡ್ತೀ, ಬುದ್ಧಿ ಎಲ್ಲಿಟ್ಟಿಯೋ ನಮ್ಮಪ್ಪಾ?” ಎಂದ. ತಾನು ಮಾಡಿದ್ದು ತಪ್ಪೆಂದು ಅರಿವಾಯ್ತೋ ಏನೊ? ಗುಡಸೀಕರ ಮನೆಯೊಳಕ್ಕೆ ಸುಮ್ಮನೆ ನಡೆದ. ನಿಂಗೂ ಸುಮ್ಮನಾಗಲಿಲ್ಲ. “ಕನ್ನಡಿ ನೋಡಿಕೊಳ್ಳೋ ನಮ್ಮಪ್ಪಾ” ಅಂದ, ನಿಜ. ಗುಡಸೀಕರ ಆವೇಶದಲ್ಲಿ ಕೂದಲು ಕೆದರಿಕೊಂಡು ಅಸಹ್ಯವಾಗಿದ್ದ. ನಿಂಗೂನ ಮಾತು ಕೇಳಿ ಹೋಗುತ್ತಿದ್ದವನು ನಿಂತು: +“ಯಾಕಲೇ?” ಅಂದ. +“ಆ ಹುಡುಗನ ಮ್ಯಾಲ ಕೈ ಎತ್ತಿಧಾಂಗ ನನ್ನ ಮ್ಯಾಲ ಎತ್ತಬಾರದ? ತೋರಿಸ್ತೀನಿ” ಎಂದು ನಿಂಗೂ ಸವಾಲು ಹಾಕಿದ. ಗುಡಸೀಕರನಿಗೆ ಅಷ್ಟು ಸಾಕಾಯ್ತು. ಏನೋ ಮಾಡಲು ಹೋಗಿ ಏನೋ ಮಾಡಿದ್ದ. ಯಾರದೋ ಮೇಲಿನ ಸಿಟ್ಟನ್ನ ಯಾರದೋ ಮೇಲೆ ಹಾಕಿದ್ದ. ಅದನ್ನು ನಿಂಗೂ ಗಮನಿಸಿದ್ದ. ಇವನಿಗೂ ಅದು ತಿಳಿಯಿತು. ಸಣ್ಣವನಾಗಿ, ತಿರುಗುತ್ತರ ಕೊಡದೆ ಒಳಕ್ಕೆ ಹೋದ. +ಹುಡುಗನ ಮೈತುಂಬಾ ಬಾಸಳ ನೋಡಿ ಬಾಳೂ ವೀರಾವೇಶ ತಾಳಿದ. ದತ್ತಪ್ಪ ಬುದ್ಧಿ ಹೇಳಿ ಬಿಡಿಸಬೇಕಾದರೆ ಬೆವರು ಇಳಿಯಿತು. ಎಲ್ಲ ಕೇಳಿ “ಇವ ತನ್ನ ಗೋರಿ ತಾನಽ ತೋಡಿಕೊಳ್ಳಾಕ ಹತ್ಯಾನ” ಎಂದು ಗೌದ ಹೇಳಿದರೆ “ಇಲ್ಲಾ ಊರ ಗೋರಿ ತೋಡಾಕಹತ್ಯಾನೆಂದು” ಬಾಳೂ ಸಿಟ್ಟಿನಲ್ಲಿ ಅಂದ. +ಚತುಷ್ಟಯರು +ಗುಡಸೀಕರ ಕೊಟ್ಟ ಹತ್ತರ ಹಗರಣ ಸೇರೇದಂಗಡಿ ತೆಗೆಯಬೇಕೆಂಬ ನಿರ್ಧಾರದಲ್ಲಿ ಕೊನೆಗೊಂಡಿತು. +ಗುಡಸೀಕರನ ಹಿಂಬಾಲಕರು, ಅಂದರೆ ಗ್ರಾಮ ಪಂಚಾಯಿತಿಯ ಇತರೇ ಮೆಂಬರರೆಂದರೆ-ಕಳ್ಳ ಸಿದರಾಮ, ಅಂಡೂರಾಮಯ್ಯ, ಜಿಗಸೂ ಸಾತೀರ ಹಾಗೂ ಆಯೀ ಮೆರಿಮಿಂಡ, ಇವರೂ ಗುಡಸೀಕರನ ಸರಿಕರೆ, ಕೂಡಿ ಕಲಿತವರೆ. ಆದರೆ ಗುಡಸೀಕರ ಬೆಳಗಾವಿಗೆ ಹೆಚ್ಚಿನ ಶಿಕ್ಷಣಕ್ಕೆ ಹೋದ. ಇವರು ಹೋಗಲಿಲ್ಲ, ಅಷ್ಟೆ. ಇವರನ್ನು ದತ್ತಪ್ಪ ಒಮ್ಮೆ “ಚತುಷ್ಟಯರು” ಎಂದು ಕರೆದ; ಬಹುಶಃ ಮಹಾಭಾರತದ ದುಷ್ಟ ಚತುಷ್ಟಯದ ನೆನಪಾಗಿ. ಈಗಲೂ ಅವನು ನಾಲ್ವರನ್ನೂ ಒಟ್ಟಾಗಿ ಕರೆಯುವುದು ಹೀಗಯೇ. ನಾವು ಇನ್ನು ಮೇಲೆ ನಮ್ಮ ಕಥೆಯಲ್ಲಿ ಅವರನ್ನು ಹಾಗೇ ಕರೆಯೋಣ. +ಆದರೆ ದುಷ್ಟ ಚತುಷ್ಟಯಕ್ಕೂ ಇವರಿಗೂ ಅರ್ಥಾತ್ ಸಂಬಂಧವಿಲ್ಲ. ಮೊದಲನೆಯದಾಗಿ ಇವರು ದುಷ್ಟರಲ್ಲ. ಊರಿನ ಇತರೆಯವರಿಗಿಂತ ಭಿನ್ನರಲ್ಲ. ಅಷ್ಟಿಷ್ಟು ಕಲಿತದ್ದರ ಬಗ್ಗೆ ಸ್ವಲ್ಪ ಸೊಕ್ಕಿದೆ. ಅಷ್ಟೂ ಇಲ್ಲದಿದ್ದರೆ ಹ್ಯಾಗೆ? ಇನ್ನೊಬ್ಬರು ಹಿಂದೆ ಒತ್ತದ ಹೊರತು ಮುಂದೆ ಹೆಜ್ಜೆ ಹಾಕುವವರಲ್ಲ. ಹೆಜ್ಜೆ ಹಾಕಿದ ಮೇಲೆ ಒದಗುವ ಪರಿಣಾಮಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವವರೂ ಅಲ್ಲ. ಕಂದಕವೋ, ದಿನ್ನೆಯೋ, ಹೆಜ್ಜೆ ಹಾಕಿದರಾಯ್ತು, ಕಣ್ಣು ಮುಚ್ಚಿಕೊಂಡು. ಚತುಷ್ಟಯರೆಂದು ಒಟ್ಟಾಗಿ ಕರೆದರೂ ಇವರಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ವ್ಯಕ್ತಿತ್ವವಿದ್ದುದನ್ನು ನಿರಾಕರಿಸಲಾಗದು. +ಇವರಲ್ಲೆಲ್ಲ ಕಳ್ಳಸಿದರಾಮ ನೋಡುವುದಕ್ಕೂ ಧಾಂಡಿಗನಾದವನು. ಚಿಕ್ಕಂದಿನಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದು ತನ್ನ ಹೆಸರಿಗೆ ಆ ವಿಶೇಷಣ ಅಂಟಿಸಿಕೊಳ್ಳಬೇಕಾಯಿತು. ಆದರೆ ಅದಲ್ಲ ಅವನ ವೈಶಿಷ್ಟ್ಯ. ಅಂಗಾಲಿನಿಂದ ನೆತ್ತಿಯ ತನಕ ಅವನ ಹಟ. ಯಾವುದೇ ನೀರಸ ಘಟನೆಯನ್ನು ರಸವತ್ತಾಗಿ, ನಾಟಕೀಯವಾಗಿ ಕೇಳುವವರ ಕಣ್ಣಿಗೆ ಕಟ್ಟುವಂತೆ ಹೇಳಬಲ್ಲವನಾಗಿದ್ದ. ಒಮ್ಮೆ ಗುಡಸೀಕರ ದಿನಪತ್ರಿಕೆ ಓದಿ “ನೋಡೋ ಕಳ್ಳಾ; ಜಿನ್ನಾ ಬಂದು ಗಾಂಧೀಜಿಗೆ ಭೇಟ್ಯಾಗಿದ್ದನಂತ. ಮುಸಲ್ಮಾನರಿಗೇ ಒಂದು ಪ್ರತ್ಯೇಕ ದೇಶ, ಪಾಕೀಸ್ತಾನ ಬೇಕಂತ ಕೇಳಿದಾನಂತ” ಎಂದು ಹೇಳಿದ. ಹತ್ತೇ ಹತ್ತು ಶಬ್ದದ ಈ ಸಂಗತಿಯನ್ನು ಕಳ್ಳ ಮೆರೆಮಿಂಡನಿಗೆ ಹೇಳಿದ್ದು ಹೀಗೆ: +ದೇಶದಾಗ ಏನೇನ ನಡದೈತಿ ಗೊತ್ತೈತೇನಲೇ? ಮೊನ್ನಿ ಮಂಗಳವಾರ ದಿನ ಗಾಂಧೀ ಗುಡಿಸಲದಾಗ ಕುಂತಿದ್ನಂತ, ಸೇಂಗಾ ತಿನ್ನಕೋತ. ಅಷ್ಟೊತ್ತಿಗೆ ಜಿನ್ನಾ ಬಂದ. “ಶರಣರೀ ಗಾಂದೆಪ್ಪ” ಅಂದ. +“ಬಾರೋ ಜಿನ್ನಾ ಸಾಬ, ಬಾ ಕುಂದರ ಬಾ. ಎಲ್ಲಾ ಆರಾಮ? ಮಳಿ ಬೆಳಿ ಹೆಂಗ ನಿಮ್ಮ ಕಡೆ?” +-ಅಂದ(ಗಾಂಧೀಜಿ) +(ಜಿನ್ನಾ)”ಎಲ್ಲಾ ಆರಾಮೈತಿ ಖರೆ: ನಮ್ಮ ಹುಡುಗೋರು ಭಾಳ ತಕರಾರ ತಗ್ಯಾಕ ಹತ್ಯಾವರಿ. ನೂರ ವರ್ಷ ಕೂಡಿದ್ದರೂ ಅಣ್ಣಾ ತಮ್ಮಾ ಬ್ಯಾರ್‍ಯಾಗೋದೇನೂ ತಪ್ಪಾಣಿಲ್ಲಾ, ಅದಕ್ಕ ಈಗಽ ದೇಶದಾಗ ನಮಗಷ್ಟ ಪಾಲಾ ಕೊಡಸಂತ ಗಂಟುಬಿದ್ದಾರ.” +“ನಿನಾಪ್ನ! ಬ್ಯಾರ್‍ಯಾಗಿ ಏನ ಸುಖ ಉಣತೀರಿ? ನೆರಿ ಹೊರಿ ನಾಕ ಮಂದಿ ಹೆದರತಾರ, ಏನಪಾ. ಕೂಡಿದ್ದ ಅಣ್ಣತಮ್ಮರಿಗೆ ಹುಲಿ ಹಾದಿ ಬಿಡತೈತಿ. ಇಂದಽ ಬ್ಯಾರೆ ಆದರ ಇಲೀ ಹಂತಾ ಇಲಿ ಅಂಜಾಕಿಲ್ಲಾ. ಅಕ್ಕಪಕ್ಕ ನಿಮ್ಮನ್ನ ನುಂಗಿ ನೀರು ಕುಡೀತಾರ. ಎಚ್ಚರಲೆ ಪಾಲಾ ಬೇಡಂತ ಹೇಳವರಿಗೆ. ಇಲ್ಲದಿದ್ದರ ಕರತಾ, ಬುದ್ಧೀ ರೀತಿ ಹೇಳೋಣು.” +-ಎಂದರಂತ ಗಾಂಧೀಜಿ! ಈ ಕಳ್ಳ ಸಿದರಾಮ ನಟ ಭಯಂಕರನೆನ್ನುವುದು ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕೆ? +ಬಯಲಾಟದಲ್ಲಿ ಖಳನಾಯಕರ, ಅದರಲ್ಲೂ ರಾಕ್ಷಸ ಪಾತ್ರ ವಹಿಸುವುದೆಂದರೆ ಅವನಿಗೆ ಬಲು ಸುಖ. ಆ ಪಾತ್ರ ವಹಿಸಿದ ಒಂದಿಬ್ಬರು ಹಳೇ ನಟರು ಅಟ್ಟದ ಮೇಲೆ ಬಂದು ಗರ್ಜಿಸಿದಾಗ, ಗರ್ಭಿಣಿಯರ ಗರ್ಭಪಾತವಾಯಿತೆಂಬಂತೆ ಕಥೆ ಕೇಳಿದ್ದ. ತನ್ನ ಜೀವಮಾನದಲ್ಲಿ ತನ್ನ ಪಾತ್ರ ನೋಡಿ ಕೊನೇ ಪಕ್ಷ ಒಬ್ಬ ಗರ್ಭಿಣಿಯಾದರೂ ಗರ್ಭಪಾತ ಮಾಡಿಕೊಳ್ಳುವ ಹಾಗಾಗಬೇಕೆಂದು ಇವನ ಆಸೆ. ಅದಕ್ಕಾಗಿ ಒಬ್ಬನೇ ಇದ್ದಾಗಲೆಲ್ಲ ಅಂಥ ಗರ್ಜನೆಯನ್ನೇ ಅಭ್ಯಾಸ ಮಾಡುತ್ತಿದ್ದ! ಬಂಜೆಯರಿಗೆ ಗೆಜ್ಜೆ ಕಾಲಿನ ಮಕ್ಕಳನ್ನು ಕೊಡುವ ಕರಿಮಾಯಿ ಅವನ ಆಸೆ ಈಡೇರಿಸದಿರಲಿ. +ಎರಡನೆಯವನೇ ಅಂಡೂರಾಮಯ್ಯ ಉರ್ಫ್‌ರಮೇಸ. ಇವನ ಮೂಲ ನಾಮಾಂಕಿತ ರಾಮಯ್ಯ ಎಂದು. ಅವನು ಅಂಡು ಇರಬೇಕಾದ ಪ್ರಮಾಣಕ್ಕಿಂತ ದೊಡ್ಡದಾಗಿರುವುದರಿಂದ ಈ ವಿಶೇಷಣ ಸೇರಿಕೊಂಡಿತ್ತು. ಗುಡಸ್ಯಾಗೋಳ ಹೋಗಿ ಗುಡಸೀಕರ ಆದಂತೆ ಪಂಚಾಯ್ತಿ ಮೆಂಬರ್ ಆದ ಮೇಲೆ ಇವನೂ ಅಂಡೂ ರಾಮಯ್ಯ ಹೋಗಿ ರಮೇಸ ಆದ. ಹಾಗೇ ಸಹಿ ಕೂಡ ಮಾಡುತ್ತಿದ್ದ. ಗುಡಸೀಕರನಿಗೆ ಜನ ಹೆದರುತ್ತಿದ್ದರು. ಹಾಗೆಂದು ಕರೆದರು. ಇವ ಹೆಸರು ಬದಲಾಯಿಸಿದರೂ ಜನ ಮಾತ್ರ ಇವನನ್ನು ಅಂಡೂ ರಾಮಯ್ಯ ಎಂದೇ ಕರೆಯುತ್ತಿದ್ದರು. ಇಂಗ್ಲಿಷ್ ಕಲಿತವನಲ್ಲ. ಆದರೂ ಮಾತಿಗೊಮ್ಮೆ “ಎಸೆಸ್” ಎನ್ನುತ್ತಿದ್ದ. ಮತ್ತು ಹಾಗೆ ಎಸೆಸ್ ಎನ್ನುವ ಅವಕಾಶಕ್ಕಾಗಿ ತನ್ನ ಯಾವುದೇ ಅಭಿಪ್ರಾಯ ಬದಲಿಸಲೂ ಸಿದ್ಧನಿದ್ದ. +ಮೂರನೆಯವ ಆಯೀ ಮರೆಮಿಂಡ. ಇವನ ಎಡಗಣ್ಣು ಸಣ್ಣದಾಗಿ ಆಗಾಗ ಕಣ್ಣೀರು ಸುರಿಸುತ್ತಿದ್ದುದರಿಂದ ಒಂದು ಕಣ್ಣಿನಿಂದ ಅತ್ತಂತೆಯೂ ಇನ್ನೊಂದರಿಂದ ನಕ್ಕಂತೆಯೂ ಕಾಣಿಸುತ್ತಿದ್ದುದೊಂದೇ ಇವನ ವಿಶೇಷ. ಕೊನೆಯವ ಜಿಗಸು ಸಾತೀರ. ಇವನ ತಾಯಿ ನಡೆಯುವಾಗ ಹೆಜ್ಜೆ ಗತಿಗೆ ತಕ್ಕಂತೆ ಅವಳ ಜೋಡೆದೆ ಟನಕ್ ಟನಕ್ ಜಿಗಿಯುತ್ತಿದ್ದವು. ಆದ್ದರಿಂದ ಅವಳಿಗೆ ಮಂದಿ ಮೂಲ ಹೆಸರು ಬಿಟ್ಟು ಕೊನೆಗೆ ಮರೆತು, ಜಿಗಸೂ ಎಂದೇ ಕರೆಯುತ್ತಿದ್ದರು. ತಾಯಿಯಿಂದ ಮಗನಿಗೂ ಜಿಗಸೂ ಸಾತೀರನೆಂದೇ ಹೆಸರು ಬಂತು. ಇದ್ದ ನಾಲ್ವರಲ್ಲಿ ಕಚ್ಚೆ ಹರುಕುತನದ ಖ್ಯಾತಿ ಇವನೊಬ್ಬನಿಗೇ ಇತ್ತು. ಅದು ಹೀಗೆ: ಎಳೆಯರ ಕಳ್ಳ ಹಾದರದ ಕೇಸುಗಳನ್ನು ಹ್ಯಾಗೋ ಹೊಂಚಿ ಪತ್ತೆ ಹಚ್ಚುತ್ತಿದ್ದ. ಅವರು ಕ್ರಿಯೆಯಲ್ಲಿ ಸಿಕ್ಕಿಬಿದ್ದೊಡನೆ ಹುಡುಗಿಯೊಬ್ಬಳನ್ನೇ ಪ್ರತ್ಯೇಕಿಸಿ, ಅವಳ ತಂದೆ-ತಾಯಿಗಳಿಗೆ ಹೇಳುವುದಾಗಿ ಬೆದರಿಸುತ್ತಿದ್ದ. ಹಾಗೂ ಅದರ ಪ್ರಯೋಜನವನ್ನು ಚಕ್ರಬಡ್ಡಿ ಸಮೇತ ಪಡೆಯುತ್ತಿದ್ದ. +ಇವರಿಗೆಲ್ಲ ಒಂದು ಸಾಮಾನ್ಯ ವಿಷಯವೆಂದರೆ ಊರಿನ ಎಲ್ಲರಂತೆ ಇವರೂ ಹಣವಂತರಲ್ಲ. ಹಣ ಅಕಸ್ಮಾತ್ ಕಂಡರೋ ಬೆಳಗಾವಿಯ ಕನಸುಗಳಿಂದ ಉದ್ರಿಕ್ತರಾಗುತ್ತಿದ್ದರು. ಗುಡಸೀಕರ ಈ ದಿನ ಕೊಟ್ಟ ಹತ್ತು ರೂಪಾಯಿಗಳಿಂದ ಹುಚ್ಚುಹತ್ತುವಷ್ಟು ಪರವಶವಾದದ್ದು ಈ ಕಾರಣಕ್ಕೇ. +ಕಳ್ಳಸಿದರಾಮ ಗುಡಸೀಕರ ಕೊಟ್ಟ ಹತ್ತು ರೂಪಾಯಿಗಳನ್ನು ತಗೊಂಡು ಹೊರಬಿದ್ದು ಇನ್ನೂ ಹತ್ತು ಹೆಜ್ಜೆ ಇಟ್ಟಿರಲಿಲ್ಲ. ಅಂಡೂರಾಮಯ್ಯ ಉರ್ಫ್‌ರಮೇಸ ಬಂದು ಕೂಡಿಕೊಂಡ. ಬಂದವನು ಐದು ರೂಪಾಯಿ ದುರ್ಗಿಗೆ ಕೊಟ್ಟು ಇನ್ನೈದು ಕುಡಿಯೋಣವೆಂದು ಸೂಚನೆ ಕೊಟ್ಟ. “ಹೀಂಗ ಹೇಳ್ತೀಯೇನೋ? ಸರಪಂಚಗ ಹೇಳ್ತಿನ್ನೋಡು” ಎಂದು ಸಿದರಾಮ ಹೇಳಿದೊಡನೆ “ಎಸೆಸ್” ಎನ್ನುತ್ತ ತಣ್ಣಗಾದ. ಅಷ್ಟರಲ್ಲಿ ಜಿಗಸೂ ಸಾತೀರ ಇವರನ್ನು ಕೂಡಿಕೊಂಡು “ನೀವಿಬ್ಬರೊಳಗ ಒಬ್ಬನೂ ನಂಬಿಗಸ್ತನಲ್ಲಂತ: ಒಬ್ಬ ಕಳ್ಳ, ಇನ್ನೊಬ್ಬ ಕುಡುಕ. ನನ್ನ ಕೈಗಿ ಕೊಡು. ನಾನಽ ದುರ್ಗಿಗೆ ಕೊಡತೀನಿ” ಎಂದು ಹೇಳಿದ. ಉಳಿದಿಬ್ಬರು ಏಳರಲ್ಲಿ ಹುಟ್ಟಿದವರೆ? “ನಾನೇ ಕೊಡುತ್ತೇನೆಂದು ಕಳ್ಳ ಹೇಳಿದ. ಎಸೆಸ್ ನಾನು ಸಾಕ್ಷಿ ಹೇಳುತ್ತೇನೆಂದು ರಮೇಶ ಹೇಳಿದ. ಅಷ್ಟರಲ್ಲಿ ಆಯೀಮೆರೆಮಿಂಡನೂ ಅವರನ್ನು ಕೂಡಿಕೊಂಡ. “ಏ, ನಿಮ್ಮ ಮ್ಯಾಲ ಸರಪಂಚಗ ನಂಬಿಕಿಲ್ಲಂತ. ನೀನಽ ಇಸಕೊಂಡ ಹೋಗಿ ದುರ್ಗಿಗೆ ಕೊಡಂತ ಹೇಳ್ಯಾರ, ಕೂಡಲೇ ಕಳ್ಳ” ಎಂದ. +“ಬಂದ ನೋಡ್ರಲೇ ನಂಬಿಗಸ್ಥ! ಅಲ್ಲಪಾ, ನಿನ್ನ ಮ್ಯಾಲ ಅಷ್ಟ ವಿಶ್ವಾಸ ಇದ್ದಿದ್ದರ ನಿನ್ನ ಬಿಟ್ಟ ನನ್ನ ಕೈಯಾಗ ಯಾಕ ಕೊಡುತ್ತಿದ್ದರು ರೊಕ್ಕಾನ? ಹೋಗ ಹೋಗಲೇ” ಎಂದ ಕಳ್ಳ. +ಯಾರೊಬ್ಬರೂ ಸಿದರಾಮನನ್ನು ಬಿಟ್ಟು ಅಗಲಲೊಲ್ಲರು. ಕಳ್ಳನಂತೂ ಅಷ್ಟೂ ಹಣ ದುರ್ಗಿಗೆ ಕೊಡುವುದಿಲ್ಲವೆನ್ನುವುದು ಖಾತ್ರಿ. ಯಾಕೆಂದರೆ ಅವರ ದೇವರ ಗುಣ ಅವರಿಗೆ ಗೊತ್ತಿಲ್ಲವೆ? ಹ್ಯಾಗೋ ಮಾಡಿ ಕಳ್ಳ ಉಳಿಸಿಕೊಳ್ಳುವ ದುಡ್ಡಿನಲ್ಲಿ ನಾಲ್ವರೂ ಕುಡಿಯಬೇಕೆಂದು ಮೂವರ ಹಂಚಿಕೆ. ಎಷ್ಟೆಂದರೂ ಸರಪಂಚ ದುರ್ಗಿಯ ಹತ್ತಿರ ಹೋಗಿ ದುಡ್ಡಿನ ಬಗ್ಗೆ ವಿಚಾರಿಸಲಾರ. ಅಷ್ಟಾಗಿ ಎಂದೋ ವಿಚಾರಿಸಿದರೆ ಅವಳು ಸುಳ್ಳು ಹೇಳಿದಳೆಂದೋ, ಮರೆತಿದ್ದಾಳೆಂದೋ ಹೇಳಿ ಪಾರಾಗಬಹುದು. ಎಷ್ಟೆಲ್ಲ ಕಲ್ಪಕ ಶಕ್ತಿಯಿದ್ದವರು ಒಂದು ಹುಸಿ ಹೇಳಲಿಕ್ಕಾಗುವುದಿಲ್ಲವೆ? +ಆದರೆ ಕಳ್ಳನ ತರ್ಕವೇ ಬೇರೆ. ಈ ನರಿಗಳನ್ನು ಓಡಿಸಿ ತಾನೊಬ್ಬನೇ ದುರ್ಗಿಯ ಹತ್ತಿರ ಹೋಗಿ ಐದು ಕೊಟ್ಟು ಮಿಕ್ಕ ಐದರಲ್ಲಿ ಬೆಳಗಾವಿಗೆ ಹೋಗಿ ಮಜಾ ಮಾಡಿ ಬರಬೇಕೆಂದು ಅವನ ಉಪಾಯ. ಆದರೆ ಅವರೋ ಬಿಟ್ಟು ಹೋಗುವ ಲಕ್ಷಣಗಳೇ ಕಾಣಿಸುತ್ತಿಲ್ಲ. ದಿನಾ ಮಾತಿಗೊಮ್ಮೆ “ಕಳ್ಳ, ಕಳ್ಳ” ಎನ್ನುತ್ತಿದ್ದವರು ಇಂದು ಬಾಯ್ತುಂಬ “ಸಿದರಾಮಾ” ಎಂದು ಕರೆದರು. ಇಲ್ಲದ ಸದ್ಗುಣಗಳನ್ನು ಅವನ ಮೇಲೆ ಹೇರಿದರು. ಹಿಂದಿನ ಅನೇಕ ಘಟನೆಗಳಲ್ಲಿ ಹಾಸ್ಯಾಸ್ಪದನಾಗಿದ್ದ ಅವನನ್ನು ನಾಯಕನನ್ನಾಗಿಸಿ ಬಣ್ಣಕಟ್ಟಿ ವರ್ಣಿಸಿದರು. ಜಿಗಸು ಸಾತೀರ ಸಿದರಾಮನನ್ನು ಬೆಳಗಾವಿಗೆ ಕರೆದೊಯ್ದು ಅಲ್ಲಿ ತನ್ನ ಖರ್ಚಿನಲ್ಲಿ ಸಿನಿಮಾ ತೋರಿಸುವುದಾಗಿ ಭರವಸೆ ಕೊಟ್ಟ. ಬೆಳಗಾವಿಯ ಹುಡುಗಿಯರ ಜೋಡು ಹೆಳಲುಗಳನ್ನೂ, ಹೆಳಲಿನ ಕೊನೆಯ ಟೇಪುಗಳನ್ನೂ ವರ್ಣನೆ ಮಾಡಿದ. ನಿಜ ಹೇಳಬೇಕೆಂದರೆ ಅವನು ಒಂದು ಬಾರಿಯೂ ಬೆಳಗಾವಿ ಕಂಡವನಲ್ಲ. ಆ ಹತ್ತು ರೂಪಾಯಿಗೆ ಕಳ್ಳನಂತೂ ಬಿಡಿಸಲಾರದ ಗಂಟು. ಯಾಕೆಂದರೆ ಹಣ ಅವನಲ್ಲೇ ಇದೆ. ಆತ ತನ್ನನ್ನೂ ಖರ್ಚು ಮಾಡುವುದರಲ್ಲಿ ಸೇರಿಸಿಕೊಳ್ಳಬೇಕೆಂದು ಮೂವರ ಹವಣಿಕೆ. ದಿನಾ ಬೆಳಗ್ಗೆದ್ದು ಪರಸ್ಪರ ಮುಖ ನೋಡುವವರು, ಅವರವರ ಗೆರೆ ಅವರವರಿಗೆ ಗೊತ್ತಿಲ್ಲವೆ? ಸದರಿ ಮಾತುಗಳನ್ನು ಹೇಳುವವರೂ ನಂಬಿರಲಿಲ್ಲ. ಸಿದರಾಮ ಮೊದಲೇ ಕಳ್ಳ; ಅವನ್ಯಾಕೆ ನಂಬುತ್ತಾನೆ? ಅವರಿಂದ ಪಾರಾಗುವುದಕ್ಕಾಗಿ. +“ತಗಿ, ತಗಿಯೋ, ಈಗಽ ಹೋಗಿ ದುರ್ಗಿಗೆ ಕೊಟ್ಟ ಬರ್‍ತೀನಿ.” +ಎಂದು ದಾಪುಗಾಲು ಹಾಕಿ ನಡೆದ. ಆದರೆ ಅವರ್‍ಯಾರೂ ತಿರುಗಲಿಲ್ಲ, ಬೆನ್ನುಹತ್ತಿದರು. +ಹಾಗೇ ನಡೆದುಕೊಂಡು ಸಿದರಾಮನ ಮನೆಯ ತನಕ ಬಂದರು. ಸಿದರಾಮ ನಟನಲ್ಲವೆ?-ಮನಸ್ಸು ಬದಲಿಸಿದಂತೆ ಮಾಡಿ- +“ಛೇ, ಹಸವಾಗೇತಿ, ಊಟ ಮಾಡಿ ಆಮ್ಯಾಲ ದುರ್ಗಿಗೆ ಕೊಟ್ಟ ಬರ್ತೀನಿ” ಎಂದು ಹೇಳಿ ಮನೆಯೊಳಕ್ಕೆ ನಡೆದ. ಅಂಡೂ ರಾಮಯ್ಯ ಉರ್ಫ್ ರಮೇಸನಿಗೆ ಸಿಟ್ಟು ಬಂತು. +***** +ಮುಂದುವರೆಯುವುದು +ಆಹಾ… ಸ್ವಾಮೀಯ ಸೇವಾಕ್ಕ ಮಗನನ್ನ ಕೊಟ್ಟ ಅಪ್ಪ ಅಂಬುವ ಆ ದ್ಯಾವಪ್ಪನಿಗೆ ದೇಸಾಯರು ಏನು ಕೊಟ್ಟಾರೊ ಸ್ವಾಮೀಯ ಸೇವಾಕ್ಕ ಮಗನನ್ನ ನೀಡಿದ್ದಕ್ಕ ಹೇಳಿಧಂಗ ಕೊಟ್ಟಾರೆ – ಆಹಾಣಿ… ಎಂಟೆಕರೆ ಹೊಲವಾ ಕೊಟ್ಟಾರೇ ಧರಮನಟ್ಟೀಯ ತೆಂಕಣದ […] +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […] +ಗಡಿ ಸುತ್ತಿಟ್ಟ ಚಾಪೆಯನ್ನು ಮುಂಗಾಲಿನಿಂದ ತಳ್ಳಿ ತಳ್ಳಿ ಬಿಡಿಸಿದ ಹಾಗೆ, ತುಸು ಒದ್ದಂತೆ ಅದು ಬಿಚ್ಚಿಕೊಂಡು ಅಂಚಿನ ನಕ್ಷೆಗಳನ್ನು ಕಾಣಿಸಿ, ಮತ್ತೆ ನೂಕಿದಂತೆ ಮತ್ತಷ್ಟು ಬಿಚ್ಚಿಕೊಂಡು ನಡುವಿನ ಚಿತ್ರವನ್ನು ಕಾಣಿಸುವಂತೆ ಭಾನುವಾರದ ದಿನ ಜರುಗಬೇಕು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_106.txt b/Kannada Sahitya/article_106.txt new file mode 100644 index 0000000000000000000000000000000000000000..4101e85259adf6b7f97600e05eab3ea90983d7c8 --- /dev/null +++ b/Kannada Sahitya/article_106.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಮುಖಾರಿ +ತಾಳ — ಛಾಪು +ಕಷ್ಟಪಟ್ಟರೂ ಇಲ್ಲ ಕಳವಳಿಸಿದರಿಲ್ಲ | +ಭ್ರಷ್ಟಮಾನವ ಹಣೆಯಬರಹವಲ್ಲದೆ ಇಲ್ಲ ||ಪ|| +ಸಿರಿವಂತನ ಸ್ನೇಹಮಾಡಿ ನಡೆದರಿಲ್ಲ | +ಪರಿಪರಿಯಲಿ ವಿದ್ಯೆ ಕಲಿತರಿಲ್ಲ || +ನರಿಯ ಬುದ್ಧಿಯಲಿ ನಡೆದುಕೊಂಡರು ಇಲ್ಲ | +ಅರಿಯದೆ ಹಲವ ಹಂಬಲಿಸಿದರಿಲ್ಲ ||೧|| +ಕೊಂಡೆಗಾರಿಕೆಯನ್ನು ಹೇಳಿ ನಡೆದರಿಲ್ಲ | +ಕಂಡಕಂಡವರಿಗೆ ಕೈಮುಗಿದರಿಲ್ಲ || +ಗಂಡುಗತ್ತರಿಯನ್ನು ಕೊರಳಿಗಿಟ್ಟರು ಇಲ್ಲ ಪ್ರ – | +ಚಂಡನಾದರೂ ಇಲ್ಲ ಪರಿಹಾಸ್ಯವಲ್ಲ ||೨|| +ಕಟ್ಟಾಳು ಕಡುಜಾಣನಾಗಿ ಪುಟ್ಟಿದರಿಲ್ಲ | +ಬೆಟ್ಟಗಳನು ಕಿತ್ತಿ ಇಟ್ಟರಿಲ್ಲ || +ಸೃಷ್ಟಿಯೊಳು ಕಾಗಿನೆಲೆಯಾದಿಕೇಶವರಾಯ | +ಕೊಟ್ಟವರಿಗೆ ಉಂಟು ಕೊಡದವರಿಗೆ ಇಲ್ಲ ||೩|| +***** +ರಾಗ — ಮೋಹನ ತಾಳ — ಅಟ್ಟ ಆರು ಬಾಳಿದರೇನು ಆರು ಬದುಕಿದರೇನು | ನಾರಾಯಣನ ಸ್ಮರಣೆ ನಮಗಿಲ್ಲದನಕ ||ಪ|| ಉಣ್ಣಬರದವರಲ್ಲಿ ಊರೂಟವಾದರೆ ಏನು | ಹಣ್ಣು ಬಿಡದ ಮರಗಳು ಹಾಳಾದರೇನು || ಕಣ್ಣಿಲದವಗಿನ್ನು […] +ರಾಗ — ಭೈರವಿ ತಾಳ — ರೂಪಕ ನಾನು ನೀನು ಎನ್ನದಿರೋ ಹೀನಮಾನವ |ಜ್ಞಾನದಿಂದ ನಿನ್ನ ನೀನೆ ತಿಳಿದುನೋಡೆಲೊ – ಪ್ರಾಣಿ ||ಪ|| ಹೆಣ್ಣು – ಹೊನ್ನು – ಮಣ್ಣು ಮೂರು ನಿನ್ನವೇನೆಲೊ |ಅನ್ನದಿಂದ […] +ರಾಗ — ಕಾಂಬೋದಿ ತಾಳ — ಝಂಪೆ ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ | ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ|| ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ | ಕಟ್ಟೆಕಟ್ಟುತ ನೀರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_107.txt b/Kannada Sahitya/article_107.txt new file mode 100644 index 0000000000000000000000000000000000000000..13496aa1b0da1a17d75606896ccec72af44638ae --- /dev/null +++ b/Kannada Sahitya/article_107.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಒಮ್ಮೆಗೇ ಆಗಸ ಕಚ್ಚಿದ ಗುಡುಗುಡು ಮುಗಿಲು +ಫಳ್ಳನೆ ಮಿಂಚುವ ಮಿಂಚು +ಪ್ರಬುದ್ಧ ಮಳೆ ತೊನೆಯುತ್ತ +ಇಳೆಗೆ ಇಳಿಯುವ ಕುರುಹು +ನೆಲದ ಮೈತುಂಬ ಸಂಭ್ರಮ ಕಾತರ. +ಎಂದಿನದೇ ತೊಯ್ಯುವಿಕೆ +ಮರಳಿ ಸುರಿಯುವದೆಂದು +ಬಿಸಿಲು ಕಾರುವ ಹಸಿರು ಹೊಳಪು ಸಸಿಗಳಿಗೆಲ್ಲ +ಒನಪು ವೈಯಾರ +ಪುಳಕಿತ ಸ್ನಾನಕ್ಕಾಗಿ +ಮಮ್ಮಲ ತುಡಿಯುತ್ತಿರುವ +ಹೂ ಜಿಗ್ಗು ಮಣ್ಣು ಮೊಳೆತ ಗರಿಕೆಗಳ +ಮಿರಿಮಿರಿವ ಕಣದಲ್ಲು ಬಿರಿಬಿರಿವ ಮನದಲ್ಲು +ಸಂದಿಗೊಂದಿಗಳಲ್ಲು +ಕಚಗುಳಿಯ ಮೈ ಬೆವರು. +ಹಾಲಿನ ಹಾಡಿನ ಜತೆಗೆ ಸಂತಸದ ಹೊಗರು +ಹೂ ಬಿಲ್ಲು ಚುಂಬನದ +ಸವಿಯ ರೋಮಾಂಚನಕ್ಕಾಗಿ +ಹಸಿರುಗಳ ಒಕ್ಕೊರಲ ಜೀವಂತ ಕಾದಾಟ +ಆ ತನಕ ಆತಂಕ +ಆದರೆ +ಇನ್ನೂ ತಿಂಗಳು ತುಂಬದ ಹೊಸ +ಹೊಚ್ಚ ಸಸಿಗಳಿಗೆ ಹಸಿ ಹುಲ್ಲು ಮರಿಗಳಿಗೆ +ಹಸಿರುಗಟ್ಟುತ್ತಿರುವ +ಎಳೆ ಪಾಚಿಗರಿಗಳಿಗೆ ಮಾತ್ರ +ಎಲ್ಲವೂ ಅನಿರೀಕ್ಷಿತ +ಹೆದರುಗಟ್ಟುವ ಬೆವರು. +ಒಳಗೊಳಗೇ ನಡುಕ. +ಮಾತ್ರ ಕಣ್ಣು ಪಿಳುಕಿಸುತಿರುವ +ಚಿಗಿತ ಎಳೆ ಸಸಿಗಳಿಗೆ +ಹೊಸತೊಂದೆ ಅನುಭವದ ಬದ್ಧ ಕಾತರಿಕೆ +ಅಪ್ರಬುದ್ಧ ತಿಳುವಳಿಕೆ +ಏನೋ ಆಗಬಾರದ್ದು ಆಗಿ ಹೋಗಲಿರುವುದ +ಥರಗುಟ್ಟುವ ಮುಗಿಲು +ಮೈಮೇಲೆರಗುವುದ +ನೆನೆದೇ ಮೈ ಮುರಿ ಚೂಪು +ಕೊನೆಗೊಮ್ಮೆ +ಪುಟಪುಟಿಸಿ ಪುಳಕಿತ ಧಾರಾವರ್ಷ +ಹೂ ಎಸಳು ತಿಳು ಮೊಗ್ಗು ಚಿಗುರುಗಳ ತೊಯ್ಸುತ್ತ +ಪರಿಮಳದ ತಂಪನ್ನು ಕರಡುತ್ತ ಹರಡುತ್ತ +ಗಳಗಳಿಸಿ ಇಳಿದಾಗ +ಓರೆಕೋರೆಗಳಲ್ಲಿ ಮಡುವುಗಟ್ಟುವ ಹರುಷ +ಎಲ್ಲೆಲ್ಲು ನಿಟ್ಟುಸಿರು ತಂಪು ಸ್ಪರ್ಶ +ಮತ್ತು….. ಮತ್ತು….. +ನೆಲೆ ನಿಂತ ನೀರಿಂದ ಹೊರಗೆ ಚಿಮ್ಮುತ್ತಿರುವ +ಏನೋ ಸಹಿಸಿದೆನೆಂಬ +ಏನೋ ಸಹಿಸುವೆನೆಂಬ +ಪುಟಾಣಿ ಹಸಿರು ತಲೆಗಳ ಖುಷಿ +ಮುದ್ದು ಧಿಮಾಕು +***** +ಚೌಕಟ್ಟು ಅಡಿಗೆ ಮನೆ, ಹಾಲು, ಮಲಗುವ ಕೋಣೆ ನೀಟು ಚೌಕಟ್ಟು ಮಂಚ…ಹಾಸಿಗೆ…ಹೊದಿಕೆ. ಚಚ್ಚೌಕ ಓದುವ ಪುಸ್ತಕ ಮೇಜು ಕುರ್ಚಿ ….ಆಲೋಚನೆಯಧಾಟಿ! ಎಲ್ಲಕ್ಕೂ ಒಂದೊಂದು ಚೌಕಟ್ಟು. ಬಾಗಿಲು, ಸೂರು, ಗೋಡೆ…. ನೆಲಕ್ಕೆ ಚಾಚಿಕೊಂಡ ಬಿಳಿ ಟೈಲುಗಳು […] +ಇಲ್ಲಿ ಬಯಲಿದೆ, ಬರೀ ಬಯಲು. ಹುಚ್ಚು ಹೊಯ್ಲೆಂದರೂ ಅಡ್ಡಿಯಿಲ್ಲ ಕೇವಲ ಸಾಕ್ಷಿಯಾಗಿ ನಿಂತ ಇದಕ್ಕೆ ಈಗ ಅನಾವಶ್ಯಕ ಮಹತ್ವ. ಇಲ್ಲಿ ಇದ್ದವರು ಬಂದುಹೋದವರು ಯಾಕೆ? ಇಲ್ಲಿ ಇಲ್ಲವಾದವರೂ ಈ ಬಯಲ ಹೆಸರಲ್ಲಿ ಒಂದಲ್ಲಾ ಒಂದು […] +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_108.txt b/Kannada Sahitya/article_108.txt new file mode 100644 index 0000000000000000000000000000000000000000..37e0b91d7d701ada16df0a5f25bd7297a2173c0e --- /dev/null +++ b/Kannada Sahitya/article_108.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇದು ನಡೆದುದು ಬಹಳ ವರ್ಷಗಳ ಹಿಂದೆ ಎಂದಾಗಲಿ ಅಥವ ತೀರಾ ಇತ್ತೀಚೆಗೆ ಎಂದಾಗಲಿ ಹೇಳುವಂತಿಲ್ಲ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ಡಾ. ಎಂ ಎಂ ಕಲಬುರ್ಗಿಯವರು ನಿವೃತ್ತರಾಗುವ ಸ್ವಲ್ಪ ಮುಂಚೆ. ಚಲನ ಚಿತ್ರಗಳ ಕುರಿತಂತೆ ಒಂದು ವಿಚಾರಸಂಕಿರಣಕ್ಕೆ ಡಾ. ವಿಜಯಾ, ಮಧುರೈ ವಿಶ್ವವಿದ್ಯಾಲಯದ ಡಾ. ಹರೀಶ್‌ಭರಣಿ, ಕುಂ ವೀರಭದ್ರಪ್ಪ ಹಾಗು ನಾನು ಉಪನ್ಯಾಸ ನೀಡಲು ಆಹ್ವಾನಿತರಾಗಿದ್ದೆವು. +ಉಪನ್ಯಾಸದನಂತರ ಕಲಬುರ್ಗಿಯವರು ಉಪಹಾರಕ್ಕೆಂದು ತಮ್ಮ ಮನೆಗೆ ಉಪನ್ಯಾಸಕರನ್ನು ಆಹ್ವಾನಿಸಿದರು. ಉಪಹಾರದನಂತರ ಸಹಜವಾಗಿಯೇ ಮಾತು ಸಿನಿಮಾ ಕುರಿತಂತೆ ಹೊರಳಿತು. ವಿಶ್ವವಿದ್ಯಾಲಯಗಳು ಸಿನಿಮಾ ಬಗೆಗೆ ತೋರುತ್ತಾ ಬಂದಿರುವ ಉಪೇಕ್ಷೆಯ ಬಗೆಗೆ ನಾನು ಮಾತನಾಡುತ್ತಾ ‘ಸುಮಾರು ೫೦ ರಿಂದ ೬೦ ಕೋಟಿ ನಿರ್ಮಾಣ ವಹಿವಾಟುಳ್ಳ ಒಂದು ಕ್ಷೇತ್ರ, ಅದರ ಸಾಮಾಜಿಕ ಪರಿಣಾಮ, ಸೃಜನಶೀಲತೆ, ವಿಮರ್ಶೆ, ಇತ್ಯಾದಿ ಒಳನೋಟವುಳ್ಳ ವಿಶ್ಲೇಷಣೆ/ಮಾಹಿತಿಯ ಕೊರತೆ ಕುರಿತಂತೆ ಕಲಬುರ್ಗಿಯವರ ಗಮನ ಸೆಳೆದಾಗ ‘ನೀವು ಯಾರಾದರೂ ಮುಂದೆ ಬಂದು ಕೆಲಸ ಮಾಡಿದರೆ ಅದನ್ನು ವಿಶ್ವವಿದ್ಯಾನಿಲಯ ಪ್ರಕಟಿಸುವ ಜವಬ್ದಾರಿ ಹೊರಲು ತಯಾರಿದೆ’ ಎಂದು ಸ್ಥಳದಲ್ಲೇ ಘೋಷಿಸಿದರು. ‘ಇದೊಂದು ಉಪಾಹಾರದ ಸಂದರ್ಭದಲ್ಲಿನ ಘೊಷಣೆ ಎಂದಂದು ಕೊಂಡು ನಾನು ಸುಮ್ಮನಾದೆ. ಜೊತೆಗೆ ಕನ್ನಡ ಸಿನಿಮಾ ರಂಗದವರೊಡನೆ ಮುಂಚಿನಿಂದಲೂ ನನ್ನದು ಒಂದು ರೀತಿಯ ಅಂಟಿಯೂ ಅಂಟದಂತಹ ನಂಟು. ಸಂಘಟಿಸುವ ಚೈತನ್ಯದ ಕೊರತೆ ನನ್ನಲ್ಲಿದ್ದುದರಿಂದಲೂ ನಾನು ಸುಮ್ಮನಾಗಬೇಕಾಯಿತು. +ನಂತರದ ಕೆಲವು ದಿನಗಳಲ್ಲಿ, ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಕನ್ನಡ ಚಲನಚಿತ್ರ ಇತಿಹಾಸ ಕುರಿತಂತೆ ಸಮಗ್ರ ಮಾಹಿತಿಯುಳ್ಳ ಕೃತಿಗಳ ರಚನೆ ಹಾಗು ಪ್ರಕಟಣೆಯ ಕಾರ್ಯ ಕೈಗೊಂಡಿರುವುದರ ಬಗೆಗೆ ಅಲ್ಲಲ್ಲಿ ವರದಿಗಳನ್ನು ಓದಿದೆ. +‘ಕನ್ನಡ ಚಲನಚಿತ್ರ ಇತಿಹಾಸ’ ಇದರ ಪ್ರಧಾನ ಸಂಪಾದಕರಾದ ಡಾ. ವಿಜಯಾರವರು ಕಳೆದ ಮೂರು ದಶಕಗಳಿಂದ ಕನ್ನಡ ಚಿತ್ರೋದ್ಯಮದೊಂದಿಗೆ ನಿಕಟ ಬಾಂಧವ್ಯ ಇಟ್ಟುಕೊಂಡಿರುವವರು, ಚಲನಚಿತ್ರದ ಬಗೆಗೆ ಗಂಭೀರ ಆಸಕ್ತಿ ಉಳ್ಳವರು ಮತ್ತು ಹಿರಿಯರು. ನಿಷ್ಠುರವಾದ, ವಸ್ತುನಿಷ್ಠವಾದ ವಿಮರ್ಶೆ, ಲೇಖನ, ವರದಿಗಳನ್ನು ಪ್ರಕಟಿಸಿ ಗೌರವಾನ್ವಿತ ಸ್ಥಾನಗಳಿಸಿರುವವರು. +ಈಗ ‘ಕನ್ನಡ ಚಲನ ಚಿತ್ರ ಇತಿಹಾಸ’ ೨೩ ಲಕ್ಷ ರೂ.ಗಳ ವೆಚ್ಚದನಂತರ ಬಿಡುಗಡೆಯಾಗಿ, ಮಾರುಕಟ್ಟೆಯಿಂದ ಹಿಂದಕ್ಕೆ ಪಡೆಯಲಾಗಿದೆ. ಅಂದರೆ ಪರೋಕ್ಷವಾಗಿ ಹಿಂದಕ್ಕೆ ನಿಷೇಧಿಸಲಾಗಿದೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಈ ‘ವಾಪಸಾತಿಗೆ’ ಸೂಕ್ತ ಕಾರಣಗಳನ್ನು ನೀಡೀಲ್ಲ. ೨೩ ಲಕ್ಷ ರೂ. ಗಳನ್ನು ವ್ಯಯ ಮಾಡಿ ಪ್ರಕಟಿಸಿದ ಕೃತಿಯನ್ನು ಹಿಂದಕ್ಕೆ ಪಡೆಯುವ ಅವಶ್ಯಕತೆ ಏನಿತ್ತು? ಬರಿ ಗುಣಮಟ್ಟದ ಕೊರತೆಯೊಂದೇ ಆಗಿದ್ದರೆ ಅದನ್ನು – ಪರಿಷ್ಕರಣದಲ್ಲಿ ಸರಿ ಮಾಡುವ, ಈಗಾಗಲೇ ಖರೀದಿಸಿರುವವರಿಗೆ ‘ಹೆಚ್ಚಿನ’ ರಿಯಾಯ್ತಿ ಮಟ್ಟದಲ್ಲಿ ನೀಡುವ ಸರಳ ಪರಿಹಾರವಿತ್ತು. ಆದರೆ ಅದ್ಯಾವುದನ್ನೂ ಯೋಚಿಸದೆ ’ತಟಕ್ಕನೆ’ ಹಿಂದಕ್ಕೆ ಪಡೆಯಲಾಗಿದೆ. +ಹಿಂದಕ್ಕೆ ಪಡೆದುದರ ಹಿನ್ನೆಲೆ: +ಚಲನಚಿತ್ರ ವಾಣಿಜ್ಯ ಮಂಡಳಿ ಹಾಗು ಕನ್ನಡ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿನ ‘ಕನ್ನಡ ಚಲನಚಿತ್ರ ಇತಿಹಾಸ’ ಕೃತಿ ಯೋಜನೆ ಅನುಷ್ಠಾನಕ್ಕೆ ತರಲು ಆಸ್ಥಿತ್ವಕ್ಕೆ ಬಂದ ಸಂಪಾದಕೀಯ ಮಂಡಲಿಯಲ್ಲಿ ಗಂಗಾಧರ್ ಮೊದಲಿಯಾರ್ ಸೇರಿದಂತೆ ಸಾಕಷ್ಟು ಜನರಿದ್ದರು. ಪ್ರಧಾನ ಸಂಪಾದಕರಾಗಿ ಡಾ.ವಿಜಯಾರವರಿದ್ದರು. +ಸಾಕಷ್ಟು ಕಾಲ ಸಭೆಗಳಾದವು. ಲೇಖಕರನ್ನು ಸಂಪರ್ಕಿಸಲಾಯಿತು. ಕೆಲಸ ಮುಂದುವರಿಯುತ್ತಿದ್ದ ರೀತಿಗೆ ಅತೃಪ್ತರಾದ ಗಂಗಾಧರ್ ಮೊದಲಿಯಾರ್ ಸಂಪಾದಕೀಯ ಮಂಡಳಿಯಲ್ಲಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರಬಂದರು. ರಾಜಿನಾಮೆ ಸ್ವೀಕರಿಸಿದ ಚಲನಚಿತ್ರ ವಾಣಿಜ್ಯ ಮಂಡಳಿಯವರು ಗಂಗಾಧರ್‌ಮೊದಲಿಯಾರ್‌ರ ರಾಜಿನಾಮೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ಸೂಚಿಸಲಿಲ್ಲ. ಡಾ. ವಿಜಯಾ ಹಾಗು ಗಂಗಾಧರ್ ಮೊದಲಿಯಾರ್ ರ ನಡುವೆ ಅನೇಕ ಭಿನ್ನಾಭಿಪ್ರಾಯ/ವೈಮನಸ್ಯಗಳಿದ್ದು ಆ ಕಾರಣಕ್ಕೆ ‘ಇಬ್ಬರೂ ಸೂಕ್ತ ರೀತಿಯಲ್ಲಿ ಪರಸ್ಪರ ಸಹಕರಿಸುತ್ತಿಲ್ಲ’ ಎಂಬ ಒಳಕಾರಣದಿಂದಾಗಿ ಸುಮ್ಮನಾಗಿರಬೇಕು. +ಗಂಗಾಧರ್‌ಮೊದಲಿಯಾರ್ ರಾಜಿನಾಮೆ ನೀಡಿದನಂತರದ ವರ್ಷಕ್ಕೆ ಈಗ ‘ಕನ್ನಡ ಚಲನಚಿತ್ರ ಇತಿಹಾಸ’ ಬಿಡುಗಡೆಯಾದ ವೇಗದಲ್ಲೇ ನಿಷೇಧಕ್ಕೊಳಗಾಗಿದೆ. ಯಾವ ಕಾರಣಗಳಿಗಾಗಿ ಈ ನಿಷೇಧ ಎಂಬ ಬಗೆಗೆ ಆಲೋಚಿಸಿದಾಗಲೇ ’ಈ ಎಲ್ಲರ/ಎಲ್ಲದರ’ ಬಗೆಗೆ ಅಸಹ್ಯವುಂಟಾಗುತ್ತದೆ. ಕೃತಿಯಲ್ಲಿ ಕೆಲವರಿಗೆ ‘ಅಸಮಾಧಾನ’ ವುಂಟಾಗುವ ಸಾಲುಗಳಿವೆ (ಅವು ಐತಿಹಾಸಿಕವಾಗಿ ನಿಜವಿರಬಹುದು ಅಥವ ಕೃತಿಯಲ್ಲಿ ಅತಿಶಯೋಕ್ತಿಯ ಟೀಕೆಗಳಾಗಿರಬಹುದು) ಎಂಬ ಕಾರಣಕ್ಕೆ ವಿನಾಕಾರಣ ಕೃತಿಯೊಂದನ್ನು ನಿಷೇಧಕ್ಕೊಳಪಡಿಸಿಬಿಡುವಂತಹ ‘ಇಕ್ಕಟ್ಟಿನ ಪರಿಸ್ಥಿತಿಯನ್ನು ಸರ್ಕಾರಕ್ಕೂ’ ಉಂಟು ಮಾಡಿದರೆಂಬ ಮಾತುಗಳು ಸಹ ಕೇಳಿ ಬರುತ್ತಿವೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಮೇಲೆ ಸರ್ಕಾರ ಪರೋಕ್ಷವಾಗಿ ಒತ್ತಡ ಹೇರಿತ್ತು ಎಂಬ ಮಾತುಗಳು ಇದ್ದರೆ ಅವು ಅತಿಶಯೋಕ್ತಿಯೇನಲ್ಲ. ಜೊತೆಗೆ ಏಕಪಕ್ಷೀಯವಾಗಿ ಸಿಂಡಿಕೇಟ್ ‘ತಾತ್ಕಾಲಿಕ ಹಿಂತೆಗೆತದ’ ನಿರ್ಣಯ ಕೈಗೊಂಡಿತು. ಪರಿಷ್ಕರಣೆಗೆ ಇನ್ನೊಂದು ಸಮಿತಿಯ ನಿರ್ಧಾರವೂ ಆಗಿದೆ. ಒಳ್ಳೆಯ ಪ್ರಯತ್ನ ಅನೇಕ ವ್ಯಕ್ತಿಪ್ರತಿಷ್ಠೆಗಳಿಂದ ಗಟಾರಕ್ಕಿಳಿದಿದ್ದು ಕರ್ನಾಟಕದ, ಕನ್ನಡದ ಬೌದ್ಧಿಕ ದಿವಾಳಿತನವನ್ನಷ್ಟೆ ತೋರುತ್ತಿದೆ. ಇದೆಲ್ಲದರ ಪರಿಣಾಮವೆಂದರೆ ಸಾರ್ವಜನಿಕ ಹಣವೂ ಸೇರಿದಂತೆ ಒಟ್ಟು ೨೩ ಲಕ್ಷ ರೂಗಳನ್ನು ಗಟಾರಕ್ಕೆ ಸುರಿದಂತಾಗಿದೆ. ಐತಿಹಾಸಿಕ ವಸ್ತುನಿಷ್ಠತೆಯಿಂದ ಯಾವುದೇ ಸಂದರ್ಭವನ್ನೂ ನೋಡಬೇಕಾದ ವೈಚಾರಿಕ ಸ್ವಾತಂತ್ರ್ಯಕ್ಕೆ ಕೆಲವೇ ಕೆಲವು ಮಂದಿ ಅಡ್ಡಿಯಾದರೆ ಸಾರ್ವಜನಿಕರೂ ಸಹ ‘ಸುಮ್ಮನಿದ್ದು’ ಒಂದು ರೀತಿಯ ಭಯಾನಕ ವಾತಾವರಣ ಸೃಷ್ಟಿಯಾಗಿರುವುದು ಯಾರಿಗೂ ಹೆಮ್ಮೆಯ ವಿಷಯವಲ್ಲ. +ಈ ಕೆಲವೇ ಕೆಲವು ಮಂದಿಯ ಒತ್ತಡಕ್ಕೆ ಸರ್ಕಾರವೂ ಮಣಿದು ‘ಹೇಳಿಕೆ’ ನೀಡಿದರೆ ಆಶ್ಚರ್ಯವಿಲ್ಲ. +-ಶೇಖರ್‌ಪೂರ್ಣ +***** +೦೨ ಮೇ ೨೦೦೨ +ತಾಂತ್ರಿಕವಾದ ವಿಸ್ತರಣೆ ಬಗೆಗೆ ಅನೇಕ ರೀತಿಯ ಗಮನ ಕೊಡಲೇ ಬೇಕಾಗಿ ಬಂದದ್ದರಿಂದ ಈ ಬಾರಿಯ ಅಪ್‌ಡೇಟ್ ತಿಳಿಸಿದ್ದಕ್ಕಿಂತಲೂ ಎರಡು ವಾರ ತಡವಾಗಿ ಆಗುತ್ತಿದೆ. “ಎಲ್ಲದಕ್ಕೂ ಒಬ್ಬನೇ ಗಮನ ಕೊಡಬೇಕಾದಾಗ” ಹೀಗೆ ಆಗುವುದು ಸಹಜ. ಈ […] +ಆದದ್ದು ಎರಡು ಆಘಾತಗಳು. ಎರಡೂ ನನ್ನ ಮಟ್ಟಿಗೆ ಪ್ರಾಣಾಂತಿಕವೆ. ಒಂದು ನನಗಾದ ಹೃದಯಾಘಾತ. ನಾನು ಶ್ರೀಮಂತನೇನೂ ಅಲ್ಲ. ಮೊದಲನೆ ತಾರೀಖು ಬರುವ ಸಂಬಳವನ್ನು ನೆಚ್ಚಿಕೊಂಡು ತುಟಿಕಚ್ಚಿಕೊಂಡು ಬದುಕುವುದನ್ನು ಕಲಿತವನು. ಪ್ರಾಣ ಹೋಗಿದ್ದರೆ ಚೆನ್ನಿತ್ತೇನೋ ಎಂದನ್ನಿಸಿಬಿಡದಂತೆ […] +ಕಳೆದ ಎರಡು ತಿಂಗಳಲ್ಲಿ ನಡೆದ ಚಟುವಟಿಕೆಗಳು, ಕನ್ನಡಸಾಹಿತ್ಯ.ಕಾಂ ಆರಂಭಿಸಿದ ದಿನಗಳನ್ನು ಹೊರತು ಪಡಿಸಿದರೆ ಮತ್ತೆ ಇನ್ಯಾವುದೇ ಸಂದರ್ಭದಲ್ಲೂ ನಡೆದಿರಲಿಲ್ಲವೆಂದೆನ್ನಬಹುದು. ಎಷ್ಟೆಲ್ಲ ಸಂತೋಷದ ಸಂಗತಿಗಳು-ಜಿ ಎಸ್ ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂದೆನ್ನುವ ಮಾನ್ಯತೆಶಿವಮೊಗ್ಗದಲ್ಲಿ, ೭೩ ನೆಯ ಕನ್ನಡ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_109.txt b/Kannada Sahitya/article_109.txt new file mode 100644 index 0000000000000000000000000000000000000000..e190fd3270548ea317ef719395b12c63ee37ee4d --- /dev/null +++ b/Kannada Sahitya/article_109.txt @@ -0,0 +1,19 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕತ್ತಲು ಅವಚುತ್ತಿರುವಂತೆ +ಅವಳ ಮಾಂಸಖಂಡದೊಳಗೆ +ಸತ್ಯ ಕುಕ್ಕಿದಂತೆ +ಬೆಚ್ಚಿಬಿದ್ದೆ-ನನ್ನ +ಕಂಡುಕೊಂಡೆ +***** +ಹಬ್ಬದ ವೇಳೆ ಅಂಗಡಿಯಲ್ಲಿ ಸರ್ವ ವಿಘ್ನಾಪಹಾರಿ ವಿನಾಯಕರು ಗಂಭೀರ ಭಂಗಿಯಲ್ಲಿ ಕೂತಿದ್ದನ್ನು ಕಂಡೆ. ಪೀಡಾ ನಿವಾರಣೆಗಾಗಿ ಅವರೆದುರು ಬೆದರು ಬೊಂಬೆ ಇಟ್ಟಿದ್ದರು! ***** +ಪಾದ ಧೂಳಿಯಲ್ಲೇ ಬೀಜ ನೆನೆಸಿ ಹದ ಬೆಳೆಸಿ ಹಸಿರು ಉಸಿರುವಾಸೆ ಮೊಳಕೆಯ ಮೂಕಭಾಷೆ ***** +ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_11.txt b/Kannada Sahitya/article_11.txt new file mode 100644 index 0000000000000000000000000000000000000000..3075b25366e1b6c7ffa7e3854b23bc089a3187a5 --- /dev/null +++ b/Kannada Sahitya/article_11.txt @@ -0,0 +1,59 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಹಾಬುದ್ಧಿಜೀವಿಯಂತೆ ಕುರುಚಲು ಗಡ್ಡಬಿಟ್ಟು ಬಗಲಿಗೊಂದು ಬ್ಯಾಗ್ ನೇತು ಹಾಕಿಕೊಂಡು – ಹವಾಯಿ ಚಪ್ಪಲಿ ಕಾಲಿಗೆ ಮೆಟ್ಟಿಕೊಂಡು-ಎಲ್ಲ ಸಿನಿಪ್ರೆಸ್ ಮೀಟ್‌ಗಳಿಗೆ ಹಾಜರಾಗುತ್ತಿದ್ದ ‘ಮರೀಂದ್ರ’ ಮೊನ್ನೆ ಕೂಡ ಒಂದು ಮುಹೂರ್ತಕ್ಕೆ ಬಂದಿದ್ದ. +ಅವನದೊಂದು ಸಣ್ಣ ಸಿನಿ ಪತ್ರಿಕೆಯಾದರೂ ಅವನ ಮಾತಿನ ಧಾಟಿ, ಪರಿಚಯದ ವೈಖರಿ ಕಂಡವರೆಲ್ಲ ಅವನನ್ನೊಬ್ಬ ಭಾರಿ ಜರ್‍ನಲಿಸ್ಟ್ ಎಂದು ಭ್ರಮಿಸುತ್ತಿದ್ದರು. +“ಏನು ಮರಿ ಈಚೆಗೇನು ಬರೆದ್ರಿ?” ಎಂದೆ. +“ಬರೆದಿದ್ದಕ್ಕಿಂತ ನಾನು ಮರೆತಿದ್ದೇ ಜಾಸ್ತಿ. ಅದರಿಂದ್ಲೇ ನಮ್ಮ ಪೇರೆಂಟ್ಸ್ ‘ಮರಿ’ ಅಂತ ಹೆಸರಿಟ್ಟಿರಬೇಕು” ಎಂದು ತನ್ನ ಜೋಕಿಗೆ ತಾನೇ ನಕ್ಕ. +“ನಿಮ್ಮ ಪೇಪರಿಗೆ ‘ಫಿಲ್ಮಿ ಸರ್ಕಸ್’ ಎಂದು ಯಾಕೆ ಹೆಸರಿಟ್ಟಿದೀರಿ’ ಅಂದೆ. +‘ಸಿನಿಮಾಗಳಿಗಿಂತ ಸರ್ಕಸ್ಸುಗಳೇ ಜಾಸ್ತಿ ಅಲ್ಲಿ – ‘ಕನ್‌ವಿಕ್ಷನ್ಸ್’ಗಿಂತ ಕಾಂಟ್ರವರ್ಸಿಗಳೇ ಜಾಸ್ತಿ ಮಾಡೋದೂ ಒಂದು ಸರ್ಕಸ್ ಅಲ್ವೇ” ಎಂದು ದುರು ದುರು ನೋಡಿದ ನನ್ನತ್ತ. +ಆ ಹೊತ್ತಿಗೆ ರಾಜಕೀಯ ಪುಡಾರಿಗಳು, ಮಠಾಧೀಶರು-ಸಿನಿರಂಗದ ಗ್ಲಾಮರಸ್ ನಟ-ನಟಿಯರು ಹಾಜರಾದರು. ಬೆಲ್ಲಕ್ಕೆ ಇರುವೆ ಮುತ್ತಿದ್ದಂತೆ ಅಭಿಮಾನಿಗಳ ಮಹಾಪೂರವೇ ಹರಿಯಿತು ಅಲ್ಲಿ. ಆರಾಮವಾಗಿ ಕುರ್ಚಿಯ ಮೇಲೆ ಕೂತಿದ್ದ ಪತ್ರಕರ್ತರು ಪೆಚ್ಚಾಗಿ ಒಬ್ಬರ ಮುಖ ಒಬ್ಬರು ನೋಡಿಕೊಳ್ಳತೊಡಗಿದರು. ಅವರಿಗೆ ಕಾಣುತ್ತಿದ್ದುದೆಂದರೆ ಜನಗಳ ಬೆನ್ನು ಮಾತ್ರ. +“ಏನಾಗ್ತಿದೆ ಮರಿ ಅಲ್ಲಿ” ಎಂದೆ. +“ಅದ್ಯಾಕಯ್ಯ ಮೆಗಾಫೋನ್ ತಗೊಂಡೆ” ಎಂದರು ಪ್ರೆಸ್‌ನವರು ಕೋರಸ್‌ನಲ್ಲಿ. +“ಏನು ನಡೀತಿದೆ ಅಲ್ಲಿ ಎಂಬುದರ ರನ್ನಿಂಗ್ ಕಾಮೆಂಟ್ರಿ ಕೊಡ್ತೀನಿ” ಅಂತ ಶುರು ಹಚ್ಕೊಂಡ ತನ್ನ ಮಾತಿನ ಪ್ರವಾಹ – ಅದು ನಾನ್‌ಸ್ಟಾಪ್ ಬಸ್‌ನಂತಿತ್ತು. ಮಧ್ಯೆ ಮಧ್ಯೆ ಉದ್ಗಾರ-ಚೀತ್ಕಾರ. +“ಹಾ…. ಈಗ ನಿರ್ಮಾಪಕರು ಮಠಾಧೀಶರನ್ನು ಜ್ಯೋತಿ ಬೆಳಗಕ್ಕೆ ಆಹ್ವಾನಿಸಿದರು. ಬಂದ್ರು ಅವರು. ದೀಪ ಹಚ್ಚಕ್ಕೆ ಮ್ಯಾಚ್ ಬಾಕ್ಸ್ ಇಲ್ಲ. ಆ ಕಡೆ-ಈ ಕಡೆ ನೋಡ್ತಿದ್ದಾಗ ನಿರ್ದೇಶಕರು ಮ್ಯಾಚ್ ಬಾಕ್ಸ್ ಕೊಟ್ಟರು. ಮಠಾಧೀಶರು ಕಡ್ಡಿ ಗೀರ್‍ತಿದ್ದಾರೆ. ಅದು ಹತ್ಲಿಲ್ಲ. ಅರೆ….! ನಿನ್ನೆ ಮಳೇಲಿ ನೆಂದಿರಬೇಕು. ಅಂದಾಗ…. ಹ್ಯಾಂಡ್‌ಸಂ ಹೀರೋ ಸ್ಟೈಲಿಷ್ ಆಗಿ ಕಡ್ಡಿಪೆಟ್ಟಿಗೆ ತೆಕ್ಕೊಟ್ರು. ಹತ್ತಿತು ಕಡ್ಡಿ. ಜ್ಯೋತಿ ಬೆಳಗಿಸಿದರು. ಒಬ್ಬೊಬ್ಬರಾಗಿ ದಿಢೀರ್‍ ದಿಢೀರ್‍ ಅಂತ ಸ್ವಾಮಿಗಳ ಕಾಲಿಗೆ ಬೀಳ್ತಿದಾರೆ. ಕೂಲಿ ಹೊತ್ಕಂಬಂದ ಹಾಗೆ ೮ ಜನ ಒಂದು ಭಾರಿ ಹಾರ ಹೊತ್ತು ತಂದ್ರು. ಅದನ್ನು ನೋಡಿದ್ದೇ ಸಾಕು ಸ್ವಾಮೀಜಿ ಭಯಾನಕ ಎಕ್ಸ್‌ಪ್ರೆಷನ್ ಕೊಟ್ಟರು. ಹೀರೋ-ಹೀರೋಯಿನ್‌ಗೆ ಭಯ. ಎಲ್ಲಿ ಸ್ವಾಮೀಜಿ ಕುಸಿದು ಬೀಳ್ತಾರೋ ಅಂತ. ಅದರಿಂದ ಸ್ವಾಮೀಜಿನ ಬಲವಾಗಿ ಹಿಡಕೊಂಡ್ರು. ಕ್ಯಾಮರಾಗಳು ‘ಕ್ಲಿಕ್’ ‘ಕ್ಲಿಕ್’ ಅಂದವು. +ಈಗ ಮಂತ್ರಿವರೇಣ್ಯರು ಕೈಗೆ ಕ್ಲಾಪ್ ಬೋರ್ಡ್ ಕೊಟ್ಟರು. ಚಿತ್ರದ ಹೆಸರು ‘ಮಹಾಮೋಸ’ ಅಂತ ಅದರ ಮೇಲೆ ಬರೆದಿದ್ದಾರೆ. ಕ್ಯಾಮರಾಮನ್ ಕಪಿನಿ ಸರಸರ ಓಡ್ತಿದಾರೆ…. ಯಾಕೆ ಓಡ್ತಿದ್ದಾರೆ ಅಂತ ಎಲ್ಲ ಗಾಬರಿಯಿಂದ ಅವರ ಕಡೆ ನೋಡ್ತಿದಾರೆ. ಅವರು ಸೀದಾ ಜನ ಜಂಗುಳಿಯಲ್ಲಿ ಹಿಂದಕ್ಕೆ ತಳ್ಳಲ್ಪಟ್ಟಿದ್ದ ವಿತರಕ ವೀರೇಂದ್ರಕುಮಾರ್‌ನ-ಪೊಲೀಸ್ ಕಳ್ಳನನ್ನು ಎಳ್ಕೊಂಬಂದಂತೆ ಎಳತಂದು ಕ್ಯಾಮರಾ ಸ್ವಿಚಾನ್ ಮಾಡಿ ಅಂತ ಕರ್‍ಕೊಂಬಂದಿದಾರೆ ಕಪಿನಿ. +ಹಾ….ಈಗ ಹೀರೋಯಿನ್ ಹಿಮಾನಿ ತೆಳು ಸೀರೆಯುಟ್ಟು ಬಳ್ಳಿಯಂತೆ ಬಳುಕುತ್ತಾ – ಕುಲುಕುಲು ಎಂದು ಸೊಂಟ ಕುಲುಕಿಸುತ್ತ ಬರುತ್ತಿದ್ದಾಳೆ. ಇನ್ನೊಂದು ಪಕ್ಕದಿಂದ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿದ ಧ್ರುವಕುಮಾರ್‍-ರವಿಚಂದ್ರನ್ ಸ್ಟೈಲ್‌ನಲ್ಲಿ ಎಂಟ್ರಿಕೊಟ್ಟು “ನಿನ್ನ ಬಿಟ್ಟು ನಾನಿರಲಾರೆ” ಎಂದು ಹೇಳಿ ಅಪ್ಪಿಕೋ ಚಳವಳಿ ನೆನಪಿಸಿಕೊಂಡು – ಹೀರೋಯಿನ್‌ನ, ಬ್ಯಾಚಲರ್‌ಗಳು ದಿಂಬು ತಬ್ಬಿಕೊಳ್ಳುವಂತೆ ಬಲವಾಗಿ ತಬ್ಬಿ ಕೂತಿದ್ದಾನೆ. ‘ಹಾಯ್ ನನ್ನ ರಾಜಾ’ ಎಂದ ಹಿಮಾನಿ ಆ ಅಪ್ಪುಗೆಯ ಸವಿ ಘಳಿಗೆ ಸೊಗಸಾಗಿ ಬಿಂಬಿಸಿದ್ದಾಳೆ ಮೊಗದಲ್ಲಿ. ‘ಕಟ್’ ಅಂತಾರೆ ಡೈರೆಕ್ಟರ್‍. +ಹೀರೋ ಸಪ್ಪಗೆ ನಿಲ್ಲುವ. ಆಗ ಪ್ರಚಂಡ ಕರತಾಡನ. +ಸಿಹಿ ಡಬ್ಬಾ ಬಂತು. ಬೇಕ್‌ಬೇಕಾದವರು ತಮಗೆ ಇಷ್ಟವಾದವರಿಗೆ ಸಿಹಿ ತಿನ್ನಿಸ್ತಿದಾರೆ. ಕ್ಲಾಪ್ ಅಂಡ್ ಸ್ವಿಚಾನ್ ಮುಗೀತು. ಈಗ ಹಾರಗಳ ಹಾವಳಿ. ಹೀರೋ-ಹೀರೋಯಿನ್ ಹೊರಟರು. ಜನ ಚದುರ್‍ತಾ ಇದಾರೆ. ಇಲ್ಲಿಗೆ ಮುಹೂರ್ತ ಸಮಾರಂಭ ಮುಕ್ತಾಯವು. ಇದು ಯಾರಿದು ನನ್ನ ಹತ್ರ ಓಡಿ ಬರ್‍ತಿದಾನೆ….ಬಂದ….ವಿಚಾರಿಸಿದೆ ಅವನ್ನ….ಸಾರಿ….ಪತ್ರಕರ್ತ ಮಿತ್ರರಲ್ಲಿ ವಿನಂತಿ. ದಯಮಾಡಿ ಎಲ್ಲ ಬೇಗ ಬೇಗ ಆಚೆ ತೋಟದಲ್ಲಿ ಕೂರಬೇಕಂತೆ. ಇಡ್ಲಿ-ವಡೆ-ಸಾಂಬಾರ್‍ ತಣ್ಣಗಾಗೋದ್ರಲ್ಲಿ ತಿನ್ನಬೇಕಂತೆ” ಎಂದು ಮೆಗಾ ಫೋನ್ ಕೆಳಗಿಟ್ಟು ನಡೆದ. +ತಕ್ಷಣ ಮರಿ ಬಳಿ ಓಡೋಡಿ ಬಂದ ಒಬ್ಬ ಟಿಪ್‌ಟಾಪ್ ಸೂಟುಧಾರಿ. +‘ಸಾರ್‍-ತಾವು ತುಂಬಾ ಸೊಗಸಾಗಿ ರನ್ನಿಂಗ್ ಕಾಮೆಂಟ್ರಿ ಕೊಟ್ರಿ. ನಾವು ಹೀಗೆ ನಿರರ್ಗಳವಾಗಿ ಮಾತಾಡೋ ಒಬ್ಬ ಮಾತುಗಾರನ್ನ ಹುಡುಕ್ತಿದ್ವಿ. ಅಚಾನಕ್ಕಾಗಿ ಇವತ್ತು ನಿಮ್ಮ ಪ್ರತಿಭೆ ಪರಿಚಯವಾಯಿತು. ಅದರಿಂದ ಹೊಸದಾಗಿ ಓಪನ್ ಆಗ್ತಿರೋ ನಮ್ಮ ಚಾನೆಲ್‌ಗೆ ನೀವು ಆಂಕರ್‍” ಆಗಿ ಬರಬೇಕು. +‘ಆಂಕರ್‌ಗೋ-ಆಕ್ಟರಾಗೋ’ +“ಆಂಕರ್‍ ಅಂದ್ರೆ ನಿರೂಪಣೆ ಮಾಡೋದು-ಕಾರ್ಯಕ್ರಮ ನಡೆಸಿಕೊಡೋದು” +“ಸರಿ…. ಅಂದ್ರೆ” ಫಿಲ್ಮಿ ಸರ್ಕಸ್ ಅಂತನ್ನೋ ಪತ್ರಿಕೆ ನಡೆಸ್ತಿದೀನಿ ನಾನು. ಅದರ ಸಂಪಾದಕ ಮರಿ ನಾನು. ಈ ಕೆಲಸ ಹ್ಯಾಗೆ ಬಿಡ್ಲಿ” +“ಆ ಪೇಪರ್‍ ನಿಲ್ಸಿ ಅಂತ ಹೇಳ್ತಿಲ್ಲ ಮಿ.ಮರಿ. ನೀವು ನಮ್ಮಲ್ಲಿಗೆ ಬಂದ್ರೆ ತಿಂಗಳಿಗೆ ೧೦ ಸಾವಿರ ಸಂಬಳ ಕೊಡ್ತೀವಿ ಅಂತ ಓಪನ್ ಆಫರ್‍ ಕೊಡ್ತಿದೀವಿ” +“೧೦ ಸಾವಿರ ತಿಂಗಳಿಗೆ ಕೊಟ್ರೆ ಆ ಪೇಪರ್‍ ತಕರಾರು ಬೇಡವೇ ಬೇಡ ನಂಗೆ” +“ಹಾಗಾದರೆ ನೀವು ಒಪ್ಪಿದಿರಿ ಅಂತ ನಮ್ಮ ಬಾಸ್‌ಗೆ ಹೇಳಲಾ” +“ಖಂಡಿತಾ ಹೇಳಿ, ಇವತ್ತಿನ ಪ್ರೆಸ್ ಮೀಟೇ ನನ್ನ ಲಾಸ್ಟ್ ಪ್ರೆಸ್ ಮೀಟ್” +“ಹಾಗೆ ಯಾಕೆ ಅಂತೀರಿ. ಇನ್ನು ಮುಂದೆ ಪ್ರೆಸ್‌ಮೀಟ್ ೧೫ ದಿನಕ್ಕೊಂದು ಸಲ ಏರ್ಪಾಟು ಮಾಡ್ತಿರತೀವಿ. ಅಲ್ಲಿ ನೀವೇ ಆ ಪ್ರೆಸ್ ಮೀಟು ಕಂಡಕ್ಟ್ ಮಾಡಬೇಕು”. ಎಂದಾಗ ಮರಿ ಹಿರಿಹಿರಿ ಹಿಗ್ಗಿದ. ಅನಂತರ ‘ಮಹಾಮೋಸ’ ಚಿತ್ರದ ಪ್ರೆಸ್ ಮೀಟ್‌ನಲ್ಲಿ ನನ್ನ ಪಕ್ಕವೇ ಕುಳಿತು +“ಮಿಸ್ಟರ್‍ ಮೂರ್ತಿ ಇದೇ ನನ್ನ ಕಡೇ ಪ್ರೆಸ್‌ಮೀಟ್” ಎಂದ. +“ಯಾಕೆ? ಸೂಸೈಡ್ ಮಾಡ್ಕೋಬೇಕು ಅಂತ ಯೋಚನೆ ಮಾಡಿದೀರಾ?” +“ಒಬ್ಬ ಇಂಡಿವಿಷುಯಲಿ ಒಂದು ಪತ್ರಿಕೆ ತರಬೇಕಾದರೆ ಎಷ್ಟು ಮೈ ಹಿಡಿಮಾಡ್ಕೊಂಡು ಬದುಕಬೇಕು ಅಂತ ನನಗೆ ಗೊತ್ತು. ಆ ಕಾರಣಕ್ಕೆ ಎಷ್ಟೋ ಬಾರಿ ‘ಸೂಸೈಡ್’ ಮಾಡ್ಕೋಬೇಕು ಅಂತ ಯೋಚ್ನೆ ಮಾಡ್ತಿದ್ದದ್ದು ನಿಜ. ಆದರೆ ಇವತ್ತು ಮೆಗಾಫೋನ್ ಕೈಗೆ ಸಿಕ್ಕಿದ್ದು ನನ್ನ ಅದೃಷ್ಟದ ಬಾಗಿಲು ತೆಗೆದ ಹಾಗಾಯಿತು” ಎಂದ. +“ನೀವು ಏನು ಹೇಳ್ತಿದೀರಿ ಅರ್ಥವಾಗಲಿಲ್ಲ” ಅಂದೆ. +“ನನ್ನ ರನ್ನಿಂಗ್ ಕಾಮೆಂಟ್ರಿ ಕೇಳಿ ಹೊಸಾ ಚಾನೆಲ್‌ನವರು ಸಖತ್ ಖುಷಿಯಾಗಿ ತಿಂಗಳಿಗೆ ಹತ್ತು ಸಾವಿರ ಸಂಬಳ ಕೊಡ್ತೀವಿ-ಬರಬೇಕು ಅಂದ್ರು. ಹಿಂದೂ-ಮುಂದೂ ನೋಡದೆ ‘ಎಸ್’ ಅಂದಬಿಟ್ಟೆ ಎಂದ ಖುಶಿಯಾಗಿ. +“ಚಿತ್ರ ಮಹಾಮೋಸವಾಗಬಹುದು. ಆದ್ರೆ ನಿಮಗೇನು ಮೋಸವಾಗಲಿಲ್ಲ ಬಿಡಿ” ಎಂದೆ. +“ಅಷ್ಟೆ ಮೂರ್ತಿ ಸರ್‍-ಯಾವಾಗ್ಲೂ ನಾವು ಅನ್ಕೋಳ್ಳದೇ ಒಂದು – ಆಗೋದೇ ಇನ್ನೊಂದು” ಎಂದ. +-ಇದಾದ ಒಂದು ತಿಂಗಳೂ ಇಲ್ಲ. ರಸ್ತೆಯಲ್ಲಿ ಬರುತ್ತಿದ್ದಾಗ ಕಾರೊಂದು ನಿಂತಿತು ನನ್ನ ಪಕ್ಕ. ಗ್ಲಾಮರಸ್ ಹೀರೋನೂ ಮೀರಿಸಿದಂತೆ ಫುಲ್ ಸೂಟಿನಲ್ಲಿದ್ದ ಮರಿ. +ಮಾತು-ನಡಿಗೆ-ವೇಷ-ಭೂಷಣ-ಸ್ಟೈಲ್ ಎಲ್ಲ ಬದಲಾಗಿತ್ತು. +‘ತಗೊಳ್ಳಿ ಮಿಸ್ಟರ್‍ ಮೂರ್ತಿ’ ಅಂತ ವಿಸಿಟಿಂಗ್ ಕಾರ್ಡ್ ಕೊಟ್ಟ, ಅದರಲ್ಲಿನ ‘ಎಂಬ್ಲಂ’ ಮೆಗಾಫೋನ್ ಆಗಿತ್ತು. ಇದೇಕೆ ಮೆಗಾಫೋನ್ ಎಂದೆ. ನನ್ನ ಬದುಕು ಬಂಗಾರವಾಗಿಸಿದ ‘ಮೆಗಾಫೋನ್’ ಎಲ್ಲಾದರೂ ಮರೆಯುವುದು ಸಾಧ್ಯವೆ? ಅಬ್ಬಯ್ಯನಾಯಿಡು ‘ಕರಣೆ’ ಹಿಡಿದು ಬಂದು ‘ಕರಣೆಯೇ’ ತಮ್ಮ ಲಾಂಛನ ಮಾಡಿಕೊಂಡರು. +ಹಾಗೆ ನನಗೆ ಈ ಮೆಗಾ ಫೋನ್ ಎಂದ. +“ಭೇಷ್! ಅಷ್ಟರ ಮಟ್ಟಿನ ಕೃತಜ್ಞತೆ ಇರುವವರೂ ಈ ಕಾಲದಲ್ಲಿದ್ದಾರಲ್ಲ ಎಂದು ಸಂತಸಪಟ್ಟೆ. +(೭-೭-೨೦೦೦) +ಕೀಲಿಕರಣ: ಕಿಶೋರ್‍ ಚಂದ್ರ +ಮುಂಚೆ ವಾಮನನಂತೆ ಮೋಟು ಮೆಣಸಿನಕಾಯಿನಂತಿದ್ದ ಕನ್ನಡ ಚಿತ್ರರಂಗ ಈಗ ತ್ರಿವಿಕ್ರಮನಂತೆ ಬ್ರಹ್ಮಾಂಡವಾಗಿ ಬೆಳೆದು – ಫಾರಿನ್ ಷೂಟಿಂಗ್ ಕಾಮನ್ ಮಾಡಿಕೊಂಡಿದೆ. ಮುಂಚೆ ದ್ವಾರಕೀಶ್ ಸಿಂಗಾಪೂರ್‌ನಲ್ಲಿ ಆಫ್ರಿಕಾದಲ್ಲಿ ಷೂಟಿಂಗ್ ಮಾಡಿ ಬಂದಾಗ ಆತನನ್ನು ಮಹಾ ಕುಳ್ಳ […] +ಚಲನಚಿತ್ರ ಚಿತ್ರರಂಗದವರಿಗೆ ಚಿಕ್ಕಮಗಳೂರೊಂದು ಸೆಂಟರ್‍ ಆಫ್ ಅಟ್ರಾಕ್ಷನ್. ಈಗಂತೂ ಅದೊಂದು ರೀತಿ ಪರ್ಟ್ ಅಂಡ್ ಪಾರ್ಸ್‌ಲ್ ಆಫ್ ಫಿಲಂ ಇಂಡಸ್ಟ್ರಿ ಎಂಬಂತಾಗಿದೆ. ೧೦೦ಕ್ಕೆ ೮೦ ಚಿತ್ರಗಳವರು ಒಂದಲ್ಲ ಒಂದು ಕಾರಣಕ್ಕೆ ಚಿಕ್ಕಮಗಳೂರಿಗೆ ಹೋಗೇ ಹೋಗುತ್ತಾರೆ. […] +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_110.txt b/Kannada Sahitya/article_110.txt new file mode 100644 index 0000000000000000000000000000000000000000..aa1232efe3a1a421e0d949f3fc80e5ab7dcf7250 --- /dev/null +++ b/Kannada Sahitya/article_110.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಮೋಹನ +ತಾಳ — ಅಟ್ಟ +ಹೆತ್ತ ತಾಯಿಗಿಂತ ಅತ್ಯಧಿಕ ಮಾಯವುಂಟೆ | +ಉತ್ತಮ ಅಶ್ವವ ಕತ್ತೆ ಹೋಲುವುದುಂಟೆ? ||ಪ|| +ವಿತ್ತವುಳ್ಲವನ ಕುಲ ಎಣಿಸುವುದುಂಟೆ | +ಸ್ವಾರ್ಥಕೆ ನ್ಯಾಯವೆಂದಾದರೂ ಉಂಟೆ? ||೧|| +ಅತ್ತೆಮನೆ ಸೇರುವಗೆ ಅಭಿಮಾನವುಂಟೆ | +ಬತ್ತಲೆ ತಿರುಗುವಗೆ ಭಯವು ಇನ್ನುಂಟೆ? ||೨|| +ಪೃಥ್ವಿಯೊಳಗೆ ಕಾಗಿನೆಲೆಯಾದಿಕೇಶವಗೆ | +ಮರ್ತ್ಯದೊಳನ್ಯ ದೇವರು ಸರಿಯುಂಟೆ? ||೩|| +ರಾಗ — ಕೇದಾರಗೌಳ ತಾಳ — ಝಂಪೆ ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ | ಮರೆಯ ಮಾತೇಕಿನ್ನು ಅರಿತು ಪೇಳುವೆನು ||ಪ|| ತಾಯಿ – ತಂದೆಯ ಬಿಟ್ಟು ತಪವ ಮಾಡಲುಬಹುದು | ದಾಯಾದಿ […] +ಶಂಕರಾಭರಣ ಚಾಪು ತೂಗಿರೆ ರಂಗನ ತೂಗಿರೆ ಕೃಷ್ಣನ ತೂಗಿರೆ ಅಚ್ಯ್ತಾನಂತನ ಪ ತೂಗಿರೆ ವರಗಿರಿಯಪ್ಪ, ತಿಮ್ಮಪ್ಪನ ತೂಗಿರೆ ಕಾವೇರಿ ರಂಗಯ್ಯನ ಅ ನಾಗಲ್ಕದ ನಾರಾಯಣ ಮಲಗ್ಯಾನೆ ನಾಗಕನ್ನಿಕೆಯರು ತೂಗಿರೆ ನಾಗವೇಣಿಯರು ನೇಣಿ ಪಿಡಿದುಕೊಂಡು ಬೇಗನೆ […] +ಶಂಕರಾಭರಣ ಆದಿ ಯಾರೆ ರಂಗನ ಯಾರೆ ಕೃಷ್ಣನ ಯಾರೆ ರಂಗನ ಕರೆಯ ಬಂದವರು ಪ ಗೋಪಾಲಕೃಷ್ಣನ ಪಾಪವಿನಾಶನ ಈ ಪರಿಯಿಂದಲಿ ಕರೆಯಬಂದವರು ೧ ವೇಣುವಿನೊದನ ಪ್ರಾಣ ಪ್ರಿಯನ ಜಾಣೆಯರರಸನ ಕರೆಯ ಬಂದವರು ೨ ಕರಿರಾಜವರದನ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_111.txt b/Kannada Sahitya/article_111.txt new file mode 100644 index 0000000000000000000000000000000000000000..be2275b7ba8857a3143a97e1b82a631e9d9ef887 --- /dev/null +++ b/Kannada Sahitya/article_111.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […] +ಶನಿವಾರ ಸಂಜೆ, ಭಾನುವಾರ ಬೆಳಿಗ್ಗೆ ಆರ್ಕಾಟು ಶ್ರೀನಿವಾಸಾಚಾರ್ಯರ ಬೀದಿಯಲ್ಲಿ ಹೋಗುವುದೆಂದರೆ ನನಗೊಂದು ಸಂತೋಷ. ಇತರರ ಕಣ್ಣಿಗೆ ಬೀಳದ ಸೊಗಸೂ, ಮನಸ್ಸಿಗೆ ವೇದ್ಯವಾಗದ ಸುಖವೂ ನನ್ನದಾಗುವುದಕ್ಕೆ ನಮ್ಮ ಊರಿನ ಪ್ರತಿಯೊಂದು ಭಾಗವನ್ನೂ ಪ್ರತಿಯೊಂದು ಬೀದಿಯನ್ನೂ ನಾನು […] +ಮಧುಕರ, ಇನ್ನೊಮ್ಮೆ ಯೋಚಿಸುತ್ತ ಕೂತರೆ ಹಿಂದೆ ಅನೇಕ ಸಲ ಆದ ಹಾಗೆ ಅಡಧಳೆಯಾಗಿ, ಮನಸ್ಸಿಗೆ ನಿಷ್ಕಾರಣ ಕಣಕಣಿ ಆವರಿಸಿ; ನಿರ್ಧಾರ ಬದಲಾಗುವ ಎಲ್ಲ ಶಕ್ಯತೆಯೂ ಇದೆಯೆಂದು ಅನ್ನಿಸಿದ್ದರಿಂದ ಅಂದುಕೊಂಡದ್ದನ್ನು ಪಕ್ಕೀಮಾಡಲು ಟಪಾಲು ಬರೆದುಹಾಕಿದ್ದ. “…ಈ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_112.txt b/Kannada Sahitya/article_112.txt new file mode 100644 index 0000000000000000000000000000000000000000..ac3d8355f275e6e0051de5d4b7898267284c02f2 --- /dev/null +++ b/Kannada Sahitya/article_112.txt @@ -0,0 +1,83 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಇದೋ ಕಡಲು ! +ಅದೋ ಮುಗಿಲು ! +ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು! +ಎನಿತೆನಿತೋ ಹಗಲು ಇರುಳು +ತೆರೆಗಳ ಹೆಗಲೇರಿ ಬರಲು +ನೆಲವನಳಲ ಮಳಲಿನಲ್ಲಿ ಹುಗಿದು ಮುಂದೆ ಸಾಗಿವೆ! +ಋತು ಋತುಗಳು ಓತು ಬಂದು +ನದೀ ಮುಖದಿ ಕೂಗಿವೆ! +ಬೆಟ್ಟ ಬೆಟ್ಟ ಬೆಂಬಳಿಸಿವೆ- +ಗುಟ್ಟನರಿಯದಂತಿವೆ; +ಘಟ್ಟವೇರಿ ಘಟ್ಟವಿಳಿದು ಹಸಿರು ಪಟ್ಟವೇರಿದೆ ! +ಬಾನಿನೆದೆಯ ಭವ್ಯತೆಗಿದೋ +ಕಡಲು ಹಿಡಿದ ಕನ್ನಡಿ ! +ಬೇಡ ಬೇರೆ ಮುನ್ನುಡಿ. +೨ +ಅಗೋ ಅಲ್ಲಿ ! +ಉಸಿರ್ಕಟ್ಟಿ ದ್ವೀಪ ಮೇಲಕೆದ್ದಿವೆ +ನೀಲನಿದ್ದೆಗೈದಿವೆ. +ಹಾಯಿ ಬಿಚ್ಚಿ ಹಾಯಾಗಿವೆ ; +ದೋಣಿ ತೆರೆಯನೇರಿವೆ +ನೀರಿನಲ್ಲಿ ರಂಟೆ ಹೊಡೆದು ಹಡಗು ಕ್ಷಿತಿಜವನಡರಿದೆ ! +ಕೊರೆದ ಹರಿದ ನೀರಘಾಯ +ಮಟಮಾಯವಾಗಿದೆ. +ಈ ಪಡುವಣ ತೀರದಲ್ಲಿ +ತೀರದಂಥ ಮೊರೆತವೊ! +ಆಖಾತವೊ ಭೂಶಿರವೊ +ತೇಲುತಿರುವ ತೆಪ್ಪವೊ +ದೇಶಾಂತರದಾಸೆವೀಚಿ ಇದರುದರದಿ ಬೆರೆತವೊ ! +ತೆರ ತೆರೆಗಳು ಬಂದರದಲಿ ನೊರೆಯ ತೂರಿ ತೂರಿ +ಬರೆಯುತ್ತಿವೆ ದಿನಚರಿ! +೩ +ಅಲೆ ಅಲೆ ಅಲೆ ತೇಲಿಬರುವದಲ್ಲ ದೋಣಿ ಬಿನದ! +ಅಂಬಿಗರುಲಿ ನಿನದ; +ತುಣುಕು ಮೀನು +ಮಿಣುಕು ಮೀನು +ಅಣಕಿಸಿ ಪಾರಾದವೇನು? +ಬಿದ್ದವದೋ ಬುಟ್ಟಿಗೆ +ರಾಶಿ ರಾಶಿ ಒಟ್ಟಿಗೆ ! +ಮೀಂಬುಲಿಗನ ಹಕ್ಕಿ ಕೊಕ್ಕಿನಲ್ಲಿ ಕಚ್ಚಿ ಹಾರಿತು +ಬಲೆಗೆ ಬಿದ್ದ ಮೀನು ಮಾತ್ರ ವಿಲಿವಿಲಿ ಒದ್ದಾಡಿತು ! +ಬೊಕ್ಕುದಲೆಯ ಬರಿಮೈಯ +ಮಕ್ಕಳು ಮುಗಿಬಿದ್ದಿವೆ. +ಅವರ ಪಾಲಿಗಷ್ಟು ಇಷ್ಟು ಕಡಲು ಕೊಟ್ಟ ಕಾಣಿಕೆ +ಮತ್ಸ್ಯಗಂಧಿ ಯೋಜನಸುಗಂಧಿಯಾದಳೆಂಬ ವಾಡಿಕೆ ! +೪ +ಮೊನ್ನೆ ಮೊನ್ನೆ ಯುದ್ಧವಾಯ್ತು ಮನುಕುಲದುದ್ದಾರಕೆ! +ಕಳೆಯಲೆಂದೆ ಬಂದಿತೆನ್ನಿ +ದೇಶ ದಿಗ್ದೇಶಗಳ +ಶಾಂತಿಯ ಬಾಯಾರಿಕೆ ; +ನೆಲ ಬಾನ್ಗಳು ಸಾಲಲಿಲ್ಲ +ಕಡಲಿಗು ಕಿಡಿ ಸಿಡಿಯಿತು +‘ಉದ್ಧರೇದಾತ್ಮನಾತ್ಮಾನಂ’ +ಜಲಸುರಂಗ ಹಬ್ಬಿತು! +ಹಡಗು ಹಡಗು ಬುಡಮೇಲು +ಸುತ್ತು ತೋಪುಗಾವಲು; +ನಾಗರಿಕತೆ ಮುಗಿಲಿಗೇರಿ +ಬಾಂಬಿನ ಮಳೆಗರೆಯಿತು +ಆಗಸವೇ ಅದುರಿತು! +ಕಡಲು ದಂಡೆಗಪ್ಪಳಿಸಿತು +ಚಪ್ಪರಿಸಿತು ನಾಲಗೆ +ಈ ಯುದ್ದದ ಮದ್ದು ಗುಂಡು +ಸಾಲಬೇಕು ಅದರ ಯಾವ ಮೂಲೆಗೆ ? +೫ +ಇದೋ ಕಡಲು +ಅದೋ ಮುಗಿಲು +ಬಾಯ್ದೆರೆದಿವೆ ಒಂದಕೊಂದು ಅನಂತತೆಯ ಹೀರಲು +ಉರುಳುತ್ತಿಹ ಭೂಗೋಲದ ಆಯುಷ್ಯವು ತೀರಲು +ಅದೂ ಬೊಕ್ಕು ಬೋರಲು ! +***** +ನನ್ನೆಲ್ಲ ಹಂಬಲವನೊಂದು ಬಿಂದುವಿನಲ್ಲಿ ಬಿಂಬಿಸಿಹ ಕಂಬನಿಯೆ! ಹೇಳಕೇಳದೆ ಹೊರಟು ನಿಂತಿರುವ ಅತಿಥಿಯೊಲು ಕಣ್ಣ ಹೊಸತಿಲ ದಾಟು- ತಿರಲು ನಾನಿನ್ನೇವೆ? ಉರುಳುರುಳು ಎದೆಯಲ್ಲಿ ಕುದಿವ ಕಡಲೊಂದಿರಲು, ಶೋಕವಾಹಿನಿ ಹರಿದು ಮನದ ಮಲಿನತೆ ಕಳೆದು, ಅಮೃತವಾಹಿನಿಯಾಗಿ ಚಿಮ್ಮಿ […] +ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_113.txt b/Kannada Sahitya/article_113.txt new file mode 100644 index 0000000000000000000000000000000000000000..8d41ebcaff2080974d00979ce33bca6d78c37eee --- /dev/null +++ b/Kannada Sahitya/article_113.txt @@ -0,0 +1,119 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; +“ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. +ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ +ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ +ಹೇ ಶಿಖಂಡಿ ಹೇ ತ್ರಿದಂಡಿ ನಿನ್ನೊಡ ಚಾಮುಂಡೀ. +ತಾಂಡವಕ್ಕೆ ಹಾಸ್ಯ ಲಾಸ್ಯ ಬೆರೆಸುವ ರಣಚಂಡೀ. +“ದಿಕ್ಕು ದಿಕ್ಕು ಕತ್ತಲಿಸಿತು ಪ್ರಳಯವೇ ಇದು ಬಂತೆ +ಮುಳುಗಿಸುವುದೋ ತೇಲಿಸುವುದೊ ಕಾಲವೆ ಎಂಬಂತೆ.” +” ಥಕ ಥೈ ಥೈ ದಿಕಿ ತಟ ತೋಂ ಇದೇ ಕಾಲ ಮಳೆಯದೋ +ಹಳ್ಳ ಕೊಳ್ಳ ಗಿರಿದರಿಯಲಿ ಹರಿಯುತ್ತಿಹ ಹೊಳೆಯದೋ +ಬರಲಿಹ ಬೆಳೆ ಪಯಿರಿನಲ್ಲಿ ಕುತುಕದಿಂದ ಕುಣಿವುದೋ +ಋತುರಾಜನ ಋತುಜಾತದ ಜೀವನದಲಿ ಋಣವಿದೋ +ಓ ಕುಮಾರ, ಬೇಗ ಬಾರ, ತುಂಬಿ ತಾರ, ಬೆಳೆಯನು. +ಕಾರ್ತಿಕದಲಿ ಭೂಮಿ ಕಾಂಬ ಶಾರದೀಯ ತಳೆಯನು +ಆಹಾ ಸಖಿ, ಆಹಾ ಸುಖಿ, ಸಾವಿರ ಶಿಖಿ ಹೊತ್ತಿವೆ.” +“ಕುಣಿಯೊ ಕುಣಿ ಸಹಸ್ರ ಮುಖಿ ಆಸೆ ತಲೆಯನೆತ್ತಿದೆ +ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು +ತೆರೆ ತೆರೆಯಲಿ ತೆರೆಯಿತು ನವದುಃಖದ ಸಾಗರವು +ತಾರಕ ಸಂಹಾರಕನಾಗುತ ಅಗೊ ಕಂದರ್ಪ +ದರ್ಪದಿಂದ ಹೆಡೆ ಸೆಡೆಯುತತಾಂಡವಿಸಿತು ಸರ್ಪ.” +“ಶಕ್ತಿ ಕಂದ ಶಿವನಂದನ ಶಿಖಿ ಸ್ಕಂದನ ಕರೆವೆ +ವಾಹನವಾಗಲು ಅರ್ಪಿಸಿ ಅವನಲಿ ಮೈದೆರೆವೆ. +ಅಗ್ನಿದೇಹಿ ಆತ್ಮಸ್ನೇಹಿ ಬಾರೋ ಬಾ” ಷಣ್ಮುಖಾ +ಚತುರಂಗದ ಚಾತುರ್ಯದ ಜ್ಞಾನ ಕರ್ಮ ಸಮ ಸುಖಾ. +ಶುಖಿಗಂಡನೆ ಮೈಗೊಂಡನೆ ಕಂಗೆಂಡನೆ ತೋರೈ +ದೇವತೆಗಳ ಸೇನಾಪತಿ ಭೂರಂಗಕೆ ಬಾರೈ.” +“ಶಿಖಿ ಶಿಖಿ ಸಹಸ್ರನಖಿ ವರ್ಷಾ ವೀಣೆಯನೆ +ಬಾಜಿಸಿ ಪರ್ಜನ್ಯವ ಕರೆ ಅಂತರ್ಜ್ಞಾನಿಯನೆ”. +ಕಣಕಣದಲಿ ಕಣ್ ಕುಣಿಯಲಿ ಪರಮೇಷ್ಠಿಯ ಕಂಡು +ಸಾಮಾಷ್ಟಿಕ ಕ್ಷೇತ್ರದಲ್ಲಿ ವ್ಯಕ್ತಿಯ ಸುಖವುಂಡು +ಐಕ್ಯಸಮದ ಠಾಯಿಯಲ್ಲಿ ಬಹುವಧು ಉದ್ದೀಪ್ತ +ಆ ತುರಾಯಿ ಕುಣಿಸಿ ಕುಣೀ ಓ ಪ್ರಾಜ್ಞಾ ಸುಪ್ತಾ. +ಅಕ್ಷರದೀ ಬ್ರಹ್ಮಕೃತ್ಯ ನಿತ್ಯದ ಈ ನೃತ್ಯ +ಚಿತ್ರದಲಿ ಚಿತ್ರಿಸುತಿರೆ ಮರ್ತ್ಯವಹುದಮರ್ತ್ಯ. +ಪುರಷನಿದಿರು ಪ್ರಕೃತಿ ಕುಣಿವುದೆಂದು ಸಾಂಖ್ಯಸೂತ್ರ +ಪ್ರಕೃತಿ ಸಾಕ್ಷಿ ಪುರುಷ ನಾಟ್ಯ ನವೋನವ ವಿಚಿತ್ರ. +ಇದೆ ಪೌರುಷ, ಇದೇ ಸೌರಸ, ಇದೇ ಚೌರಸವೆಂದು +ನೆತ್ತಿ ಹೊತ್ತ ಆತ್ಮಶಿಖಿಯ ಪ್ರಣಾಮವ ಕಂಡು +ಬೇಸಗೆ ಸೆಖೆ ಶಿಖೆಗಂಡಿತು ಶತದಳ ಮುಖ ಉರಿಯೇ +ಹುಬ್ಬಿನ ಮಬ್ಬಿನ ಬಸಿರ್ ಬಂಗಾರದ ಬಾಯ್ದೆರೆಯೇ +ಗೌರೀಶಂಕರ ತಲೆಯೆತ್ತಿದೆ ಸೇತುವೆ ಎಂದೋ +ಧಿಮಕಿಡುತಿದೆ ಆ ಕುಮಾರಿ ಆ ಸೇತುವೆಯಿಂದೋ? +ಹಾ ಭಯವೋ ಓ ನಿದ್ದೆಯೋ ಮಿಥುನದ ಒಲವೋ +ರೌದ್ರದ ಮೊರೆಹೇಸಿಗೆ ಹೊರೆ ಮಾನವ ದಳವೋ. +(`ಅರಳು ಮರಳು’ ಸಂಕಲನದಿಂದ) +ನೃತ್ಯ ಯಜ್ಞ: ಕಾವ್ಯ ಬರಿ ವಿಲಾಸವಲ್ಲ. +ಕೆಲವು ಕವನಗಳು ಸಹೃದಯನಿಗೆ ಬೇಗ ಒಲಿಯುತ್ತವೆ. ತಮ್ಮೆಲ್ಲ ಅರ್ಥವನ್ನು ಬೇಗ ಬಿಚ್ಚಿಕೊಡುತ್ತವೆ. ಆದರೆ ಈ ರೀತಿಯ ಕವನ ಬೇರೆ ರೀತಿಯದು. ಎಷ್ಟೇ ಏಕಾಗ್ರತೆಯಿಂದ ಪ್ರಯತ್ನಿಸಿದರೂ ಪೂರ್ಣ ಕೈಗೆ ಸಿಗದಂಥದು. ಮೈಯೊಳಗೆ ಮಿಂಚು ಇಳಿದರೂ ಶರೀರ ಸಿಗದೆ ಮಾಯವಾಗಿ ಹೋಗುತ್ತದೆ. ಮಣಿಮಿಂಚಿನ ಬಿತ್ತನೆ ಇದು. ಇಂಥ ಕವನಗಳನ್ನು ಬೆನ್ನಟ್ಟಿ ಹೋಗುವ ವಿಮರ್ಶಕ ಆ ಪ್ರಯಾಣದಲ್ಲೆ ತಾನೂ ಬೆಳೆಯುತ್ತಾ ಹೋಗುತ್ತಾನೆ. +ಕುರ್ತಕೋಟಿಯವರ ಎರಡು ಪುಟದ ಬರವಣಿಗೆ, ಮೊಕಾಶಿಯವರಲ್ಲಿ ಸಣ್ಣ ಉಲ್ಲೇಖ ಬಿಟ್ಟರೆ ಕನ್ನಡ ವಿಮರ್ಶೆ ಅಷ್ಟಾಗಿ ಪ್ರಾಧಾನ್ಯ ನೀಡಿಲ್ಲದ ಈ ಕವನ ಬೇಂದ್ರೆಯವರ ಅತ್ಯುತ್ತಮ ಕವನಗಳಲ್ಲೊಂದು. ಎಪ್ಪತ್ತೇಳರ ರಾತ್ರಿಯಲ್ಲೊಂದರಲ್ಲಿ ಕಂಡ ಈ ನವಿಲನ್ನು ಅನೇಕ ಬಾರಿ ಬೆನ್ನಟ್ಟಿ ಹೋಗಿದ್ದರೂ, ಅದರ ಪೂರ್ಣ ಅನುಭವ ಸಿಕ್ಕಿಲ್ಲ. ಆದರೂ ರಿಲೇಕೋಲನ್ನು ಮುಂದೆ ಒಯ್ದಿದ್ದೇನೆ. +ಶ್ರದ್ದಾಂಜಲಿಯ ಪ್ರಯತ್ನ ಈ ನವಿಲಿನ ಕಡೆಗೆ ಮತ್ತೆ ಹೀಗುವಂತೆ ಮಾಡಿದೆ. +– ೨ – +ಬೇಂದ್ರೆಯವರ ಕಾವ್ಯದಲ್ಲಿ ನವಿಲು ಬಹುಮುಖೀ ಪ್ರತಿಮೆ. ಮುಖ್ಯವಾಗಿ ಅದು ಜೀವಚೈತನ್ಯವನ್ನು, ಕಲೆಯನ್ನು, ಪ್ರೇಮವನ್ನು ಸೂಚಿಸುತ್ತದೆ. ಹಾಗೆ ನೋಡಿದರೆ, ಪ್ರೇಮ ಬೇಂದ್ರೆ ಕಾವ್ಯದ ಪ್ರಮುಖ ವಸ್ತು; ಇದು ಉನ್ನತ ಸ್ಥಿತಿಯಲ್ಲಿ ಅವರ ಮಹತ್ವದ ಜೀವನ ದರ್ಶನವೂ ಹೌದು. ಈ ಕವನದ ಪ್ರಾರಂಭವೇ ನವಿಲಿನ ಕುಣಿತದಿಂದ. ಅದೂ ಪ್ರಣಯಾವೇಶದ ಕುಣಿತದಿಂದ. ಹೆಣ್ಣು ನವಿಲಿನ ಒಲವಿನ ಆಹ್ವಾನದಿಂದ ರೋಮಾಂಚನಗೊಂಡು ಗಂಡು ನವಿಲಿನ ಕುಣಿತ ಅದು. +ಗಿರಿ ಶಿಖರದಿ ಶಿಖಿಯನೆತ್ತಿ ಶಿಖಿಯ ಕೇಕೆ ಕರೆವುದು; +“ಮೋಡ ಬಂತು ಮಿಂಚಿತಂತು ಗುಡುಗು ಮಳೆಯು ಬರುವುದು”. +ಜಗವೆಲ್ಲವು ಮೊರೆಯಿಡುತಿರೆ ಕುಣಿಯುತ್ತಿದೆ ಕೇಕೀ +ಸಖಿ ಸಂಮುಖ ತಲ್ಲೀನತೆಯಲ್ಲಿ ಏಕಾಕಿ +ಈ ಹಂತದಲ್ಲೇ ಕವನದುದ್ದಕ್ಕೂ ಹರಿದು ಬರುವ ಒಂದು ಮುಖ್ಯ ಸಂಗತಿಯನ್ನು ಗಮನಿಸಬೇಕಾದ ಅಗತ್ಯವಿದೆ. ಈ ಕವನ ಶಿಲ್ಪ ಡೈಲೆಕ್ಟಿಕಲ್ ಎಂದು ಕರೆಯಬಹುದಾದ ಸಂಯೋಜನೆಯೊಂದ ನಿರ್ಮಾಣಗೊಂಡಿರುವಂಥದು. ಇಡೀ ಕವನ ದ್ವಂದ್ವಮಾನ ಶಕ್ತಿಗಳ ಅಂತರ-ಪ್ರಕ್ರಿಯೆಯಾಗಿಯೇ ಬೆಳೆಯುತ್ತಾ ಹೋಗುತ್ತದೆ. ಗಂಡು – ಹೆಣ್ಣು, ಸಮಷ್ಟಿ-ವ್ಯಷ್ಟಿ, ಮಳೆ- ಉರಿ, ನವಿಲು-ಸರ್ಪ, ಮರ್ತ್ಯ-ಅಮರ್ತ್ಯ ಹೀಗೆ, ಈ ದ್ವಂದ್ಯಗಳು ಉದ್ದಕ್ಕೂ ಕವನದ ಪ್ರತಿಮಾಶರೀರವನ್ನು ನಿರ್ಮಿಸಿವೆ. ಅತ್ಯಂತ ಆಳದಲ್ಲಿಇದು ಕವಿಯ ತಾತ್ವಿಕತೆಯೂ ಹೌದು. ಈ ದ್ವಂದ್ವ ಪ್ರತಿಮಾನಿರ್ಮಾಣಗಳೇ ಈ ಕವನಕ್ಕೆ ಅದ್ಭುತವಾದ ಸಕ್ತಿಯನ್ನು ನೀಡಿರುವುದು. +ಕವನದ ಉದೃತ ಭಾಗ ಮತ್ತು ಅದರ ಮುಂದಿನ ಬೆಳವಣಿಗೆಯನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ಬೇಂದ್ರೆಯವರ ಜೀವನ ಮೀಮಾಂಸೆಯ ಕೆಲವು ಮುಖ್ಯ ನೆಲೆಗಳನೆರವನ್ನೂ ಪಡೆಯಬೇಕಾಗುತ್ತದೆ. ಈ ಕವಿಯ ಪ್ರಕಾರ ಪ್ರೇಮ ಯಾವಾಗಲೂ ಸೃಜನಶೀಲತೆಯ ಮೂಲಭೂತ ಅಗತ್ಯತೆ. ಜೀವನದ ಇತ್ಯಾತ್ಮಕ ಶಕ್ತಿಗಳನ್ನು ಕ್ರಿಯಾಶೀಲವನ್ನಾಗಿ ಮಾಡಬಲ್ಲ ಶಕ್ತಿ ಇರುವುದು ಅದೊಂದಕ್ಕೆ ಮಾತ್ರ. `ಸಖೀಗೀತ’ದ ಆಶಯ ಇದೇ. +ಈ ಸಾಲುಗಳಲ್ಲಿ ಅದನ್ನು ನೋಡಬಹುದು. +ಅದು ಇದೆ ಎದೆಯಲ್ಲಿ ಬೆಳಕಿನ ಬದಿಯಲ್ಲಿ +ರಸಗಂಗಾ ನದಿಯಲ್ಲಿ ಅದರುಗಮ +ಹೆಸರದಕೆ ಪ್ರೀತಿಯ ಹಿಗ್ಗಿನ ರೀತಿಯ ಆತ್ಮದ ನೀತಿಯ ಮ್ಧುಸಂಗಮ +(ಸಖೀಗೀತ) +ಇದು ಮುಗ್ಧ ಅಥವಾ ಲೋಲುಪ ಪ್ರೇಮದ ಆರಾಧನೆಯಲ್ಲ ಎಂಬುದು ಸ್ಪಷ್ಟವಾಗುತ್ತಾ ಹೋಗುತ್ತದೆ. `ನೃತ್ಯಯಜ್ಞ’ ಕವನದ ನವಿಲಿನ ಪ್ರಣಯ ನೃತ್ಯವನ್ನು ಅರ್ಥ ಮಾಡಿಕೊಳ್ಳಬೇಕಾದದ್ದು ಈ ಹಿನ್ನೆಲೆಯಲ್ಲಿಯೇ. ಈ ಮೊರೆವ ಕತ್ತಲು, ಮಳೆ, ಪ್ರಳಯವನ್ನು ನೆನಪಿಸುವ ಈ ವಾಸ್ತವದಿಂದ ಪ್ರಣಯ ಮಾತ್ರ ಅವರಿಬ್ಬರನ್ನು ಕಾಡಿದೆ. ಸೃಜನಶೀಲತೆಯತ್ತ ಒಯ್ದಿದೆ. ಕವನದ ಅನೇಕ ದ್ವಂದ್ವಮಾನ ಪ್ರತಿಮೆಗಳಲ್ಲಿ ಒಂದರ ಹಿಂದೆ ಸುಂದರ ಲಾಸ್ಯವನ್ನು ಇಲ್ಲಿ ಕಾಣಬುದುದು. ಪ್ರಳದಂತಿದ್ದ ಸ್ಥಿತಿ ಮುಂದಿನ ಸಾಲುಗಳಲ್ಲಿ ಶುಷ್ಟಿಗೆ ತಿರುಗುತ್ತದೆ. ( ೧೯೩೮ ರ `ಉಯ್ಯಾಲೆ’ ಸಂಕಲನದ `ಪ್ರಳಯ-ಸೃಷ್ಟಿ’ ಸಾನೆಟ್ಟಿನಲ್ಲಿ ಈ ಡಲೆಕ್ಟಿಕಲ್ ಪ್ರತಿಮೆ ಬೇರಿದೆ. ಅಲ್ಲಿ ಕೂಡ ನವಿಲಿನದೇ ಚಿತ್ರ). ಈ ಸ್ಥಿತಿ ಹಸಿರನ್ನು, ಸ್ಮೃದ್ಧತೆಯನ್ನು ತರುತ್ತದೆ. ಆದ್ದರಿಂದಲೇ, ಮಳೆಯ ಕುಣಿತ ಎರ್ರಾಬಿರ್ರಿಯಾಗದೆ ನೃತ್ಯದ ಲಯಕ್ಕೆ ತಿರುಗುತ್ತದೆ. ರೋಮಾಚಕಾರಿ ಚಿತ್ರಣ ಈ ಸಾಲುಗಳಲ್ಲಿದೆ. +” ಥಕ ಥೈ ಥೈ ದಿಕಿ ತಟ ತೋಂ ಇದೇ ಕಾಲ ಮಳೆಯದೋ +ಹಳ್ಳ ಕೊಳ್ಳ ಗಿರಿದರಿಯಲಿ ಹರಿಯುತ್ತಿಹ ಹೊಳೆಯದೋ +ಬರಲಿಹ ಬೆಳೆ ಪಯಿರಿನಲ್ಲಿ ಕುತುಕದಿಂದ ಕುಣಿವುದೋ +ಋತುರಾಜನ ಋತುಜಾತದ ಜೀವನದಲಿ ಋಣವಿದೋ +ಹಾಗಾದರೆ ಮೊದಲ ಸಾಲುಗಳಲ್ಲಿ ಕಂಡ ವಿರೋಧದ ಸ್ತಿತಿ ಮಾಯವಾಗಿ ಪೂರ್ಣ ಸಾಮರಸ್ಯ ಮೂಡುವುದೇ? ಮೇಲೆ ಉದ್ಧರಿಸಿದ ಸಾಲುಗಳಲ್ಲಿ ಈ ಸೂಚನೆಯೇನೊ ಸಿಗುತ್ತದೆ. ಪ್ರಳಯ-ಸೃಷ್ಟಿಗಳ ಮುಖಾಮುಖಿಯೇನೊ ಆಯಿತು. ಆದರೆ ಕವನದ ಮೊದಲಲ್ಲೇ ಕಂಡ ನವಿಲಿನ ಪ್ರತಿ-ಪ್ರಹಿಮೆ ಎಲ್ಲಿ? ಈ ಸಾಲುಗಲ್ಲಿ ಮೂಡುವ ಪ್ರತಿಮೆ ಸರ್ಪದ್ದೇ. +ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು +ತೆರೆ ತೆರೆಯಲಿ ತೆರೆಯಿತು ನವದುಃಖದ ಸಾಗರವು +ತಾರಕ ಸಂಹಾರಕನಾಗುತ ಅಗೊ ಕಂದರ್ಪ +ದರ್ಪದಿಂದ ಹೆಡೆ ಸೆಡೆಯುತತಾಂಡವಿಸಿತು ಸರ್ಪ +– ಈ ವಿರೊಧದ ನಾಟ್ಯ ಕೂಡಾ ಬೇಂದ್ರೆ ತಾತ್ವಿಕತೆಗೆ ಸಹಜವಾದದ್ದು. ಜೀವನ ಬರೀ ನವಿಲಿನ, ನಲಿವಿನ ಕುಣಿತ ಎಂದು ನಂಬುವಷ್ಟು ಅಶಿಕ್ಷಿತ ಮುಗ್ದತೆ ಬೇಂದ್ರೆಯವರಿಗಿಲ್ಲ. `ಕೋಲುಸಖಿ ಚಂದ್ರಮುಖಿ, ಕೋಲೆ ನಾದ ಲೀಲೆ” ಎಂದು ಕುಣಿವಾಗಲೇ “ ಅತ್ತಣಿಂದ ಬೇಟೆಗಾರ ಬರುವ” ಸಂಜ್ಞೆಯೂ ಕೆಲಸ ಮಾಡುತ್ತಿರುತ್ತದೆ. ಇಲ್ಲಿಯೂ ಅಷ್ಟೆ, ನವಿಲಿನ ಜೊತೆಗೆಯೇ ಸರ್ಪ. ಇವಿಲ್‌ನ ಅನಿವಾರ್ಯ ಅಸ್ತಿತ್ವವನ್ನು ಈ ಭಾಗ ಅತ್ಯಂತ ನಾಟಕೀಯವಾಗಿ ಪ್ರತಿನಿಧಿಸುತ್ತದೆ. ಅದಕ್ಕೆ ಮುಖಾಮುಖಿಯಾಗಲೇಬೇಕು. ಹೋರಾಡಲೇ ಬೇಕು. “ಅನ್ನ ಅನ್ನ ಬುಸುಗುಡುತಿದೆ ಮಾನವ ನಾಗರವು” ಎಂಬ ಸಾಲು ಸ್ವಾರಸ್ಯಕರವಾದದ್ದು. ಜೀವನದಲ್ಲಿ ಸೃಷ್ಟಿಶೀಲತೆಗೆ ಯಾವಾಗಲೂ ಪರಮವಿರೋಧಿಯಾದವುಗಳೆಂದರೆ ಬಡತನ, ಹಸಿವು. ಈ ಸಾಲಿನಲ್ಲಿ ಸಣ್ಣಗೆ ಮಿಂಚಿ ಹೋದ ಸಾಮಾಜಿಕ ನಿಲುವು ಮತ್ತೆ ಕೊನೆ ಸಾಲಿನಲ್ಲಿ ವಾಪಸಾಗುತ್ತದೆ. +ಆದರೆ ನವಿಲು ತಾನೇ ಸರ್ಪವನ್ನು ಕೊಲ್ಲಲಾರದಲ್ಲ. ಪ್ರೇಮ ಉನ್ನತ ಶಕ್ತಿಯಾಗಿ ಪರಿವರ್ತನೆಯಾದಾಗ ಮಾತ್ರ ಅದಕ್ಕೆ ಆ ಶಕ್ತಿ ಬರುತ್ತದೆ. ಇದಾಕಾಗಿಯೇ ಬೇಂದ್ರೆವರಲ್ಲಿ ಪ್ರೇಮಿ-ಕವಿ-ಭಕ್ತ ಈ ಮೂವರನ್ನೂ ರೂಪಿಸುವುದು ಒಂದೇ ದ್ರವ್ಯ. ಈ ಕಾಮ “ಮನದಾಚೆಗೇನೊ ಅರಿತು” ಚಿರಭಕ್ತಿಯಾಗಿ ಪರಿವರ್ತಿತವಾಗುತ್ತದೆ. ಈ ತಾತ್ವಿಕತೆಯನ್ನು ಬೇಂದ್ರೆ “ಕನ್ನಡ ಮೇಘದೂತ”ದ ಪೀಠಿಕೆಯಲ್ಲಿ ಹೇಳುತ್ತಾರೆ. ದಿವ್ಯಶಕ್ತಿಯ ಗಳಿಕೆ ಆ ಪ್ರಕ್ರಿಯೆ. +ನವಿಲು ಸಹಜವಾಗಿ ಆ ಸರ್ಪವನ್ನು ಕೊಲ್ಲಲು ತನಗಿಂತ ದೊಡ್ಡದಾದ ಇನ್ನೊಂದು ಶಕ್ತಿಯೊಂದಕ್ಕೆ ಪ್ರಾರ್ಥಿಸುತ್ತದೆ. ಪ್ರೀತಿಯ, ಆರ್ತತೆಯ, ಗಾಢಶ್ರದ್ಧೆಯ ಪ್ರಾರ್ಥನೆ ಅದು.ನವಿಲಿನ ಒಡೆಯನಾದ ಕುಮಾರಸ್ವಾಮಿಗೆ ಆಹ್ವಾನ. ನವಿಲು ಕುಣಿಯುತ್ತದೆ. ಒಲಸ್ವು ಉನ್ನತ ಸ್ಥಿತಿಗೇರುವ ಸೂಚನೆ. +“ಶಕ್ತಿ ಕಂದ ಶಿವನಂದನ ಶಿಖಿ ಸ್ಕಂದನ ಕರೆವೆ +ವಾಹನವಾಗಲು ಅರ್ಪಿಸಿ ಅವನಲಿ ಮೈದೆರೆವೆ. +ಅಗ್ನಿದೇಹಿ ಆತ್ಮಸ್ನೇಹಿ ಬಾರೋ ಬಾ” ಷಣ್ಮುಖಾ +ಚತುರಂಗದ ಚಾತುರ್ಯದ ಜ್ಞಾನ ಕರ್ಮ ಸಮ ಸುಖಾ. +ಶುಖಿಗಂಡನೆ ಮೈಗೊಂಡನೆ ಕಂಗೆಂಡನೆ ತೋರೈ +ದೇವತೆಗಳ ಸೇನಾಪತಿ ಭೂರಂಗಕೆ ಬಾರೈ.” +– ೩ – +ಕವನ ಮೈಝುಮ್ಮೆನ್ನುವಂಥ ನೆಲೆಗೆ ಹಾರುವುದು ಮುಂದಿನ ಸಾಲಿನಿಂದ. ಅಥವಾ ಇಲ್ಲಿಯತನಕ ಬೇರೆ ಬೇರೆ ರೂಪಗಳಲ್ಲಿ ಹರಿದು ಬರುತ್ತಿದ್ದ ಆಶಯವೊಂದು ಥಟ್ಟನೆ ನಿರ್ದಿಷ್ಟ ರೂಪವನ್ನು ತಳೆಯುತ್ತದೆ. ಇಲ್ಲಿಯತನಕ, ಜೀವನದ ಒಟ್ಟಾರೆ ಪ್ರತಿಮೆಯನ್ನು ಅನುಭವಿಸುತ್ತ ಬಂದ ನಾವು ಮುಂದಿನ ಸಾಲುಗಳಲ್ಲಿ ಥಟ್ಟನೆ ಕಲಾಮಯೂರವನ್ನು ಕಾಣುತ್ತೇವೆ. ಅದು ಕಾಣಿಸುವ ಪರಿಯಂತೂ ಅನನ್ಯವಾದದ್ದು. +“ಶಿಖಿ ಶಿಖಿ ಸಹಸ್ರನಖಿ ವರ್ಷಾ ವೀಣೆಯನೆ +ಬಾಜಿಸಿ ಪರ್ಜನ್ಯವ ಕರೆ ಅಂತರ್ಜ್ಞಾನಿಯನೆ”. +ಕಣಕಣದಲಿ ಕಣ್ ಕುಣಿಯಲಿ ಪರಮೇಷ್ಠಿಯ ಕಂಡು +ಸಾಮಾಷ್ಟಿಕ ಕ್ಷೇತ್ರದಲ್ಲಿ ವ್ಯಕ್ತಿಯ ಸುಖವುಂಡು +ಐಕ್ಯಸಮದ ಠಾಯಿಯಲ್ಲಿ ಬಹುವಧು ಉದ್ದೀಪ್ತ +ಆ ತುರಾಯಿ ಕುಣಿಸಿ ಕುಣೀ ಓ ಪ್ರಾಜ್ಞಾ ಸುಪ್ತಾ. +ಮಳೆಯೆಂಬ ವೀಣೆಯನ್ನು ಸಾವಿರ ಉಗುರುಗಳಲ್ಲಿ ಬಾರಿಸಲಾಗುತ್ತಿದೆಯಂತೆ. ಇಲ್ಲಿ ಬರುವ ವೀಣೆಯಿಂದಾಗಿ ಕವನ ನಿರ್ದಿಷ್ಟವಾಗಿ ಕಲೆಯ ಚಿಂತನೆಯ ಕಡೆಗೆ ತಿರುಗಿದೆಯೆಂದು ಹೇಳಬಹುದಾದರೂ, ಇದರ ಸೂಚನೆ ಹಿಂದಿನ ಸಾಲುಗಳಲ್ಲೇ ಇದೆ.ಅಥವಾ ಈ ಸಾಲುಗಳ ಬೆಳಕಿನಿಂದ ಹಿಂದಿನ ಸಾಲುಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಬಹುದು. ಕಲೆಯೆಂಬ, ಕಾವ್ಯವೆಂಬ ನವಿಲು ತನಗಿಂತ ಉನ್ನತ ಶಕ್ತಿಯೊಂದರ ವಾಹನವಾಗಬೇಕು. ಅದು ತಾನೇ ಸ್ವಯಂಪೂರ್ಣವಲ್ಲ. ಕಾವ್ಯ ಅಗ್ನಿದೇಹಿ, ಆತ್ಮಸ್ನೇಹಿ ಆಗುವುದು ಆಗಲೇ. ಅದು ಆಯುಧವೂ ಆಗುತ್ತದೆ. ಪ್ರಾಣಸ್ನೇಹಿತನೂ ಆಗುತ್ತದೆ. ಈ ಕವನದ ಬಗ್ಗೆ ಒಂದೇ ಸಾಲಿನ ವಿವರಣೆ ಕೊಟ್ಟಿರುವ ಕವಿ ಹೇಳುತ್ತಾರೆ “ ಸಾಹಿತ್ಯ-ಕಾವ್ಯ ಬರೀ ವಿಲಾಸವಲ್ಲ. ಅದು ಕಲ್ಯಾಣ ಕರೆಯುವ ಮಯೂರ ನೃತ್ಯ ಯಜ್ಞರೂಪ.” +ಮೇಲೆ ಉದ್ಧರಿಸಿರುವ ಪದ್ಯಭಾಗದಲ್ಲಿ ಬೇಂದ್ರೆಯವರ ಕಾವ್ಯದರ್ಶನದ ಅತ್ಯಂತ ಸೂಕ್ಷ್ಮವಾದ ಒಳನೋಟಗಳನ್ನು ಕಾಣಬಹುದು. ಕಾವ್ಯದ ಬೇರು ಇರುವುದೇ ಸಮಷ್ಟಿ-ವ್ಯಷ್ಟಿಗಳು ಬೆರೆವ ನೆಲೆಯಲ್ಲಿ; ಕಾವ್ಯ ಅತ್ಯಂತ ಎತ್ತರದ ಅನುಭವ ಲೋಕಗಳನ್ನು ಒಳಗೊಳ್ಳುವುದು ಸುಪ್ತಪ್ರಜ್ಞೆಯಲ್ಲಿ ಹುದುಗಿರುವ ಶಕ್ತಿಯನ್ನು ಕೂಡಿಕೊಂಡಾಗ. ಆ ಶಕ್ತಿಯ ತುರಾಯಿ ಕುಣಿದಾಗಲೇ ಕಾವ್ಯಕ್ಕೊಂದು ಹೊಸ ತೇಜಸ್ಸು. ಅಕ್ಷರದ ಈ ಬ್ರಹ್ಮಕೃತ್ಯದ ಈ ನಿತ್ಯನೃತ್ಯ ನಡೆದರೆ ಮರ್ತ್ಯವೇ ಅಮರ್ತ್ಯವಾಗುತ್ತದೆ. ಈ ಪುರುಷ ನಾಟ್ಯವನ್ನು ಪ್ರಕೃತಿ ಬೆರಗಿನಿಂದ ನೋಡುತ್ತದೆ. ಮತ್ತೆ ಅದೇ ಗಂಡು-ಹೆಣ್ಣಿನ ಪುನರಾವರ್ತನೆ. ಕಾವ್ಯಸೃಷ್ಟಿ ಮತ್ತು ಜೀವನಕ್ಕೆ ಸಂಬಂಧಿಸಿದ ಹಾಗೇ ಅತ್ಯಂತ ಸೂಕ್ಷ್ಮವಾದ, ಸಂಕೀರ್ಣವಾದ ಅನುಭವಗಳಿಗೆ ಇದು ಶರೀರ ನೀಡಿದೆ ಎಂಬುದು ಸ್ಪಷ್ಟ. +– ೪ – +ಇಷ್ಟಕ್ಕೆ ನಿಂತಿದ್ದರೆ ಅಥವಾ ಇದೇ ವಿನ್ಯಾಸದಲ್ಲಿ ಮುಂದುವರಿದಿದ್ದರೆ ಈ ಕವನ ಬಹುಶಃ ಇಷ್ಟೊಂದು ಮಹತ್ವದ ಸ್ಥಾನವನ್ನು ಪಡೆಯುತ್ತಿರಲಿಲ್ಲ. ಏಕೆಂದರೆ ಇಲ್ಲಿಯತನಕ ಕವನದ ವಿನ್ಯಾಸ ಕ್ರಮ ಬೇಂದ್ರೆಯವರ ಶ್ರೇಷ್ಠ ಪ್ರಾತಿನಿಧಿಕ ಕವನಗಳ ವಿನ್ಯಾಸವೇ ಆಗಿದೆ. ಅದರ ಲಕ್ಷಣ – ಜೀವನದಲ್ಲಿ ಪರಸ್ಪರ ವಿರುದ್ಧದ ಶಕ್ತಿಗಳನ್ನು, ದ್ವಂದ್ವಗಳನ್ನು ತೀವ್ರವಾಗಿ ಮುಖಾಮುಖಿಯಾಗಿಸುವುದು. ನಂತರ ಈ ಘರ್ಷಣೆ ಪರಿವರ್ತನೆಯಾಗುತ್ತದೆ. `ಬೇಟೆಯಲ್ಲ, ಬೇಟವೆಲ್ಲ, ಬೇಟದ ಬಗೆ’ ಎಂಬ ಅರಿವು ಮೂಡಿ ಅದು ಮೂಲ ಪ್ರೇಮದಲ್ಲಿ ಒಂದಾಗುತ್ತದೆ. ಚಕ್ರ ತಿರುಗಿ ಸಾಮರಸ್ಯಕ್ಕೆ ನಿಲ್ಲುತ್ತದೆ. ಕುತೂಹಲದ ಸಂಗತಿ ಎಂದರೆ, ಈ ವಿನ್ಯಾಸಕ್ಕೆ ವಿರುದ್ಧವಾದ ಕವನಗಳೂ ಬೇಂದ್ರೆಯವರಲ್ಲಿ ಸಾಕಷ್ಟಿವೆ. ಅಂಥ ಒಂದು ವಿಶಿಷ್ಟಕೃತಿ ಇದು. +ಮೇಲೆ ಉದಾಹರಿಸಿದ ಭಾಗದಿಂದಾಚೆಗೆ ಈ ಕವನ ನಿಗೂಢವಾಗಿ ಬೆಳೆಯತೊಡಗುತ್ತದೆ. ಕುಮಾರಸ್ವಾಮಿಯ ಅವತಾರದ ಮೇಲೆ ಮೂಡಿದ್ದ ಸಾಮರಸ್ಯ ಒಡೆದು ಹೋಗುತ್ತದೆ. ಇಲ್ಲಿ ಕೆಲವು ಸಾಲುಗಳ ನಿರ್ದಿಷ್ಟ ಅರ್ಥಪೂರ್ಣವಾಗಿ ಈ ಲೇಖಕನಿಗೆ ದೊರೆತಿಲ್ಲ. ಆದರೂ ಸಮರಸದ ಜೀವನ ಮಾಯವಾಗಿದೆ ಎಂಬುದಂತೂ ಸ್ಪಷ್ಟವಗಿ ಅನುಭವಕ್ಕೆ ಬರುತ್ತದೆ. ಮತ್ತೆ ಜೀವನದ ಮೂಲಸ್ವರೂಪದ ಕಡೆಗೆ ಕವನ ತೀವ್ರತೆಯತ್ತ ಧಾವಿಸುತ್ತದೆ. ಅಲ್ಲಿ ಕಂಡಿದ್ದೇನು? ಕೊನೆಯ ಈ ಎರಡು ಸಾಲುಗಳ ಶಬ್ಧವಂತೂ ರುದ್ರಸೌಂದರ್ಯದ ಶೃಂಗ. +ಹಾ ಭಯವೋ ಓ ನಿದ್ದೆಯೋ ಮಿಥುನದ ಒಲವೋ +ರೌದ್ರದ ಮೊರೆಹೇಸಿಗೆ ಹೊರೆ ಮಾನವ ದಳವೋ. +ಅಶಿಕ್ಷಿತ ಆಶಾವಾದತ್ತ ಜಾರಬಹುದಾಗಿದ್ದ ಸ್ಥಿತಿ ಈಗ ಇಲ್ಲವಾಗಿದೆ. ಭೀತಿ, ಆತಂಕ ಇಲ್ಲಿ ದೊರೆಯುತ್ತದೆ. ಆದರೆ ಹಾಗೆಂದು ನಿರಾಶಾವಾದವೂ ಇದಲ್ಲ. ನೀಷೆ ಹೇಳಿದ: ಸರಳ ಆಶಾವಾದ ಪೊಳ್ಳು ಮನಸ್ಸಿನದು. ನಿರಾಶಾವಾದ ಶಿಥಿಲ ಮನಸ್ಸಿನದು. ಅತ್ಯಂತ ಗಟ್ಟಿ ಮನಸ್ಸಿನ ಸ್ಥಿತಿ ಎಂದರೆ ರುದ್ರ ಆಶಾವಾದ. ಈ ರೀತಿಯ ಸ್ಥಿತಿಯನ್ನು ನಾವಿಲ್ಲಿ ಕಾಣುತ್ತೇವೆ. ಮನುಷ್ಯ ಜೀವನದ ಅದು ಮಿತಿಗಳೆಂದರೆ ಆಹಾರ, ಭಯ, ನಿದ್ರೆ,ಚಿಂತೆ, ಮೈಥುನ. ಇವುಗಳನ್ನು ಮೂಲರೂಪದಲ್ಲಿ ಎದುರಿಸಿದಾಗ ಮನುಷ್ಯ ಚೇತನ ತತ್ತರಿಸಿ ಹೋಗುತ್ತದೆ, ಮಂಕು ಹಿಡಿದು ಕೂರುತ್ತದೆ. ಇವುಗಳ ಜೊತೆಗೆ ರೌದ್ರ ಹಾಗು ಹೇಸಿಗೆಗೆಗಳ ಹೊಡೆತ ಬೇರೆ. ಇವುಗಳ ವಿರುದ್ಧ ಹೋರಾಡುವಾಗ ಜೀವನದಲ್ಲಿ ಸಾಮರಸ್ಯ ಎಲ್ಲಿರಲು ಸಾಧ್ಯ? ಈ ರೌದ್ರದ ಮೊರೆ ಹೇಸಿಗೆ ಹೊರೆಯ ಮುಂದೆ ಮಾನವ ಹೂವಿನ ಎಸಳಿದ್ದಹಾಗೆ. ಈ ಸುಕುಮಾರ ಹೂವೆತ್ತ ನಿಲ್ಲಬಲ್ಲದು! ಭೀತಿಯ ನೀರಿನಲ್ಲಿ ಪೂರಾ ಮುಳುಗಿದ ಹಾಗೆ, ಉಸಿರು ಕಟ್ಟುವ ಸ್ಥಿತಿ. ಅದರ `ಮಾನವದಳವೋ’ ಎಂಬ ಪದಕ್ಕೆ ಇನ್ನೊಂದು ಅರ್ಥವೂ ಇದೆ. ಇವೆರಡರ ಮುಂದೆ ಮಾನವ ದಳ ಅಂದರೆ ಸೇನೆ ಸಜ್ಜಾಗಿ ನಿಂತಿದೆ. ಹೋರಾಟ ನಡೆಯುತ್ತಲೇ ಇರುತ್ತದೆ. +ಈ ಸೃಷ್ಟ್ಯಾತ್ಮಕ ಸಂಧಿಗ್ಧತೆ ಕೊನೆಯ ಸಾಲಿನಲ್ಲಿ ಮೂಡಿ ಬಂದು ಇಡೀ ಕವನದ ಬೆಳವಣಿಗೆಯನ್ನು ಇನ್ನೊಂದು ನಿಟ್ಟಿನಿಂದ ನೋಡಲು ಸಾಧ್ಯವಾಗುವಂತೆ ಮಾಡುತ್ತದೆ. +***** +ದಲಿತ ಜೀವನದ ಸ್ಥಿತಿ ಮತ್ತು ಸಾಧ್ಯತೆ – ಇವುಗಳನ್ನು ಒಟ್ಟಾಗಿ ಹಿಡಿದು. ಹೀಗೆ ಒಟ್ಟಾಗಿ ಹಿಡಿಯುವ ಕ್ರಮದಿಂದಾಗಿ ಚಿತ್ರಣವನ್ನು ಚೈತನ್ಯಪೂರ್ಣವಾಗಿಸುವ ಸಾಹಿತ್ಯದ ಈವರೆಗಿನ ಪ್ರಯತ್ನಗಳನ್ನು ಅವಲೋಕಿಸಿದಾಗ ಮೂರು ಮುಖ್ಯ ಬಗೆಗಳನ್ನಾದರೂ ನಾವು ಕಾಣುತ್ತೇವೆ. ಮೊದಲು […] +ಕಥೆ ಆಯಿತೇ ಅಣ್ಣ, ಬಹಳ ಸಣ್ಣಕಥೆಯ ಮೈಗಿಂತ ಮಿಗಿಲದರ ಬಣ್ಣ-ದ.ರಾ.ಬೇಂದ್ರೆ(‘ಕನಸಿನ ಕಥೆ’ ಕವನದಲ್ಲಿ) ಬೇಂದ್ರೆ, ಮುಖ್ಯವಾಗಿ, ಪ್ರಜ್ಞೆಯ ವಿವಿಧ ಅವಸ್ಥೆಗಳನ್ನು ಕನ್ನಡದಲ್ಲಿ ಅನನ್ಯವೆಂಬಂತೆ ಸೃಷ್ಟಿಸಿರುವ ಕವಿ -ಡಾ|| ಯು.ಆರ್ ಅನಂತಮೂರ್ತಿ (‘ಪೂರ್ವಾಪರ’ ಸಂಕಲನದಲ್ಲಿ) ದಿವಂಗತ […] +ಪೀಠಿಕೆ: ಕನ್ನಡವು ವಿಶ್ವದ ಇಪ್ಪತ್ತು ಪ್ರಮುಖ ಭಾಷೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದೆ. ಈ ಭಾಷೆ ಇಂಗ್ಲೀಷಿಗಿಂತಲೂ ಪುರಾತನವಾಗಿದ್ದು, ಕನಿಷ್ಠ ೨೦೦೦ ವರ್ಷಗಳಷ್ಟು ಇತಿಹಾಸ ಹೊಂದಿದೆ. ಕನ್ನಡ ಸಾಹಿತ್ಯ ವಿಶ್ವದ ಇತರ ಯಾವುದೇ ಶ್ರೇಷ್ಠ ಸಾಹಿತ್ಯಕ್ಕೆ ಸರಿಸಾಟಿಯಾಗಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_114.txt b/Kannada Sahitya/article_114.txt new file mode 100644 index 0000000000000000000000000000000000000000..c0bde0467fb0f631e2b286862a3ab4afd9f88190 --- /dev/null +++ b/Kannada Sahitya/article_114.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಿ. ವೆಂಕಣ್ಣ ‘ಚಲನಚಿತ್ರ ನಟರೂ ಒಂದು ರೀತಿ ಸೂತ್ರದ ಬೊಂಬೆಗಳೆ?’ ಎಂಬ ಹೇಳಿಕೆಯಿಂದ ತನ್ನ ಸಿನಿಲೇಖನ ಆರಂಭಿಸಿದ್ದ. +ತೆರೆಯ ಹಿಂದೆ ನಿಂತ ಸೂತ್ರಧಾರ-ಸೂತ್ರ ಹಿಡಿದು ತನಗೆ ಬೇಕಾದಂತೆ ಬೊಂಬೆ ಕುಣಿಸುತ್ತಾ ಹೋಗುತ್ತಾನೆ. +“ಆದರೆ ನಟರನ್ನು ಸೂತ್ರದ ಬೊಂಬೆಗಳು ಎನ್ನುವುದು ಹೇಗೆ? ಅವರ ಕೈ ಕಾಲಿಗೆ ಯಾರೂ ದಾರ ಕಟ್ಟಿರುವುದಿಲ್ಲವಲ್ಲ” ಎಂಬ ಪ್ರಶ್ನೆಯೊಂದು ಛಂಗನೆ ಜಿಂಕೆಯಂತೆ ಎಗರಿತು. +“ಸಿನಿಮಾ ಆದಾಗ ನಿರ್ದೇಶಕ ಸೂತ್ರಧಾರನ ಸ್ಥಾನದಲ್ಲಿ ನಿಂತು ತನಗೆ ಬೇಕಾದಂತೆ ಕಲಾವಿದರನ್ನು ರೂಪಿಸುತ್ತಾನೆ. ಬೊಂಬೆ ಆಟದಲ್ಲಿ ಸೂತ್ರಗಳು ಕಾಣುತ್ತವೆ-ಆದರೆ ಕಾಣದ ಸೂತ್ರಗಳನ್ನು ಹಿಡಿದು ನಿರ್ದೇಶಕ ನಾನಾ ಸರ್ಕಸ್ ಮಾಡಿ ಭಾವ-ಭಂಗಿ, ಚಲನ-ವಲನ ಹೀಗೆ ಇರಬೇಕೆಂದು ನಿರ್ದೇಶಿಸುವ ಸಿನಿಮಾದಲ್ಲಿ” ವೆಂಕಣ್ಣನ ಮನಸಿನಂಗಳದಲ್ಲಿ ಹೀಗೆ ಪ್ರಶ್ನೋತ್ತರದ ಬಾಕ್ಸಿಂಗ್ ನಡೆಯುತ್ತಲೆ ಇತ್ತು. ಆಗ ನೇರವಾಗಿ ನಟರಿದ್ದಲ್ಲಿಗೇ ಹಾರಿ ಕಾಲ್ಪನಿಕ ಸಂದರ್ಶನ ಮಾಡುನ ಮನ ಮಾಡಿದ. ಯಾವುದೇ ಸಂಸ್ಥೆ ಆರಂಭಿಸಲಿ ಕಾರ್ಯಕ್ರಮವಾಗಲಿ ಮೊದಲು ಗಣೇಶನ ಪೂಜೆ ಮಾಡುವುದು ಸಂಪ್ರದಾಯ. ಹಾಗೆ ಹೊಸ ಪತ್ರಿಕೆಯಾಗಲಿ ಹೊಸ ಛಾನೆಲ್ ಆಗಲಿ ಮೊದಲು ಸಂದರ್ಶನಕ್ಕಾಗಿ ಮೊದಲಿಗೆ ಓಡುವುದು ಡಾ.ರಾಜ್‌ಕುಮಾರ್ ಬಳಿ. ಅದಕ್ಕೆ ವೆಂಕಣ್ಣನೂ ಹಾರಿದ ಅಲ್ಲಿಗೆ. +ಒಂದೂ ಕಪ್ಪು ಚುಕ್ಕಿ ಇಲ್ಲದ ಫ್ಯೂರ್ ವೈಟ್ ಡ್ರೆಸ್‌ನಲ್ಲಿದ್ದರು ಡಾ. ರಾಜ್. +ಡಾ. ರಾಜ್: “ಏನೇ ಮಾಡಿದ್ರೂ ಅದು ನಾವು ಮಾಡಿದ್ದು ಅಂತ ಹೇಳೋ ಹಾಗಿಲ್ಲ. ಕಾಣದ ಕೈಯೊಂದು ನಮ್ಮನ್ನು ನಿಯಂತ್ರಿಸ್ತಿರತ್ತೆ. ಇಂತಿಂಥ ವೇಳೆ ಇಂತಿಂತಹದೇ ಆಗ್ಲೇಬೇಕೂಂತಿರುತ್ತೆ. ಹಾಗೆ ನಡಿಯೋದು ಎಲ್ಲ. ‘ಶಬ್ದವೇಧಿ’ ಆಯಿತು ಈಗ ಅಂಬರೀಶ ಮಾಡಕ್ಕೆ ಹೊರಟಿದೀವಿ. ಸೆಟ್‌ಮೇಲೆ ಹೋದಾಗ ಹೀಗೆ ಹೀಗೆ ಅಭಿನಯಿಸಿ ಅಂತ ನಮ್ಮನ್ನು ನಿಯಂತ್ರಿಸೋರು ನಿರ್ದೇಶಕರು. ಅದಕ್ಕೆ ‘ನಿನ್ನ ಕೈಲಾಡೋ ಬೊಂಬೆ ನಾನಯ್ಯ’ ಅಂದಿರೋದು ಅಲ್ಲವೆ? ಈ ಸಾರಿ ನಮ್ಮ ಹುಟ್ಟುಹಬ್ಬ ಅಭಿಮಾನಿಗಳು ಭರ್ಜರಿಯಾಗಿ ನಡೆಸಿಕೊಟ್ರು. ಪ್ರೀತಿಯ ಹೊಳೆಹರಿಸಿದರಲ್ಲ ನಮ್ಮ ಮೇಲೆ ಅದಕ್ಕೆ ಕಾರಣವೇನು? ಯಾರ ಕೃಪೆಯಿಂದ ಇವೆಲ್ಲ ಆಯಿತು. ಹಿಂದೆ ನಾವು ರಾಘವೇಂದ್ರಸ್ವಾಮಿ ಪಾತ್ರ ಚಿತ್ರದಲ್ಲಿ ಮಾಡೋ ಸುದ್ದಿ ಬಂದಾಗ ಆ ಪಾತ್ರವನ್ನು ಡಾ. ರಾಜ್ ಮಾಡೋಕೆ ಸಾಧ್ಯವೆ? ಅನ್ನೋ ಅಪಸ್ವರ ಬಂತು. ಅವಾಗ ನಾವು ಮಾಡಲ್ಲ ಅಂದೆವು. ಅದಕ್ಕೆ ಜಿ.ವಿ. ಅಯ್ಯರ್ ‘ನಾಲ್ಕೈದು ಜನರ ಕೈಲಿ ಚೀಟಿ ಎತ್ತಿಸಿದೆವು. ನಿಮ್ಮ ಹೆಸರೇ ಬಂತು’ ಅಂದ್ರು. ಹಾಗಾರೆ ಸರಿ ಅಂತ ಮಾಡೇಬಿಟ್ಟೆವು. ಆ ಚೀಟಿಲೀ ನನ್ನ ಹೆಸರು ಬರೋ ಹಾಗೆ ಮಾಡಿದೋರು ಯಾರು? ಅದೊಂದು ಕಾಣದ ಶಕ್ತಿ. ಆ ಸೂತ್ರಧಾರ ಕಾಣಲ್ಲ. ಆದರೆ ತನಗೆ ಬೇಕಾದ ಹಾಗೆ ನಮ್ಮನ್ನು ಬೊಂಬೆಯಂತೆ ಕುಣಿಸ್ತಾನೆ’ ಅಂದರು ಡಾ.ರಾಜ್. ನಂತರ ವೆಂಕಣ್ಣ ಹಾರಿದ್ದು ವಿಷ್ಣು ಬಳಿ. +ವಿಷ್ಣು: ವಿಷ್ಣು ವೀರಪ್ಪನಾಯಕನ ವೇಷಭೂಷಣದಲ್ಲಿ ಮಿಂಚುತ್ತಿದ್ದರು. ಅವರನ್ನು ಮಾತನಾಡಿಸುವ ಮುನ್ನವೇ ಹೇಳಿದರು. +“ನಟ ನಿರ್ದೇಶಕನ ಕೈಗೊಂಬೆ ಅಂತ ನಾನು ಬಹಿರಂಗವಾಗಿ ಹೇಳಿ ಆಗಿದೆ. ನಿರ್ದೇಶಕ ಕಣಗಾಲ್ ಪುಟ್ಟಣ್ಣ ಇಲ್ಲಾ ಅಂದ್ರೆ ನಾನೆಲ್ಲಿರ್‍ತಿದ್ದೆ. ಕುಮಾರನ್ನ ಒಬ್ಬರು ವಿಷ್ಣುವರ್ಧನ ಮಾಡಿದ್ರು. ಮತ್ತೊಬ್ಬರು ಸಾಹಸ ಸಿಂಹ ಮಾಡಿದರು. ಮಗದೊಬ್ಬರು ವೀರಪ್ಪನಾಯಕ ಮಾಡಿದರು. ಹೀಗಾಗಿಯೇ ಅಲ್ಲವೆ ನಾನು ಸುದ್ದಿ ‘ಸೂರಪ್ಪ’ನಾದ್ದು. ನಿರ್ದೇಶಕನೇ ಶಿಲ್ಪಿ. ನಾವು ಅವನಿಂದ ಕೆತ್ತಲ್ಪಡೋ ಸುಂದರ ಶಿಲ್ಪಗಳು.” +ನಂತರ ವೆಂಕಣ್ಣ ಹಾರಿದ್ದು ಅಂಬರೀಶ್ ಬಳಿ, ಅಂಬಿ ರಾಜಕಾರಣಿಗಳ ಸಭೆಯಲ್ಲಿದ್ದರು. +ಅಂಬರೀಶ್: “ನಿರ್ದೇಶಕ ನಿಜವಾದ ಪಪೆಟಿಯರ್, ಸಿನಿಮಾ ಮಾತ್ರ ಅಂತಲ್ಲ ಈಗ ನಾನು ರಾಜಕೀಯದಲ್ಲಿ ಇರುವುದರಿಂದ ಅದರ ಬಗ್ಗೆಯೂ ಹೇಳಬಲ್ಲೆ. ಡೆಲ್ಲೀಲಿ ಕೂತು ನಮ್ಮನ್ನು ಬೊಂಬೆಗಳಂತೆ ಕುಣಿಸೋದು ಹೈಕಮಾಂಡ್, ಸೂತ್ರ ಇಲ್ಲಿ-ಸೂತ್ರಧಾರ ಅಲ್ಲಿ. ಸೆಟ್‌ಮೇಲೆ ಬಂದಾಗ ನಿರ್ದೇಶಕ ತನಗೆ ಬೇಕಾದ ರೀತಿ ನಮ್ಮನ್ನು ಕುಣಿಸ್ತಾರೆ. ನಾವು ಅವನು ಹೇಳಿದ ಹಾಗೆ ಕುಣೀತೀವಿ. ಚುನಾವಣೇಲಿ ಫಲಿತಾಂಶ ಹೇಳೋರು ಮತದಾರರು. ಚಿತ್ರ ರಿಲೀಸ್ ಆದಾಗ ನಮ್ಮ ಹಣೆಬರಹ ಬರೆಯೋದು ಚಿತ್ರ ರಸಿಕರು” ಎಂದು “ಕುಡಿಯೋಕೆ ಏನಾರು ತನ್ನಿ ಎಂಕಣ್ಣನಿಗೆ” ಎಂದು ಆರ್ಡ್‌ರ್ ಮಾಡಿದರು. +ನಂತರದ ಸರದಿ ಉಪೇಂದ್ರ ಅವರದು. +ಉಪೇಂದ್ರ: “ಫುಲ್ ಕಂಟ್ರೋಲ್ ಇರೋದು ನಿರ್ದೇಶಕನಿಗೆ. ನಟ-ನಟಿಯರು ಬೊಂಬೆಗಳು ಇದ್ದ ಹಾಗೆ. ಸ್ಟಾಂಡ್ ಅಂದ್ರೆ ನಿಂತ್ಕೋಬೇಕು-ಸಿಟ್ ಅಂದ್ರೆ ಕೂರಬೇಕು. ಡ್ಯಾನ್ಸ್ ಅಂದಾಗ ಕುಣೀಬೇಕು. ನನ್ನ ಲೆಕ್ಕದಲ್ಲಿ ಪಪೆಟಿಯರ್‌ನೂ ಮೀರಿಸಿದ ಡೈರೆಕ್ಟರ್ ಒಂದು ರೀತಿ ಡಿಕ್ಟೇಟರೂ ಹೌದು. +ಚಿತ್ರ ಹಣ ಮಾಡೋದು ಮುಖ್ಯ ಮಿಕ್ಕಿದ್ದೆಲ್ಲ ‘ಓಳು ಬರಿ ಓಳು’ ಎಂದು ಡಾನ್ಸೇ ಮಾಡಿಬಿಟ್ಟರು ಉಪೇಂದ್ರ. +ದೀಪಾವಳಿಯಲ್ಲಿ ವಿಷ್ಣು ಜತೆ ಅಭಿನಯಿಸಿದ ಖುಶಿಯಲ್ಲಿದ್ದ ರಮೇಶ್ ಬಳಿಗೆ ಹಾರಿದ ವೆಂಕಣ್ಣ. ‘ಹೂಂ ಅಂತೀಯಾ ಉಹುಂ ಅಂತೀಯಾ?’ ಎಂದು ಮೂವರು ನಾಯಕಿಯರನ್ನು ಪ್ರಶ್ನಿಸುತ್ತಿದ್ದ ರಮೇಶ್ ಸಡನ್ ಆಗಿ ವೆಂಕಣ್ಣನತ್ತ ತಿರುಗಿ. +ರಮೇಶ್: “ಚಿತ್ರಕ್ಕೆ ಡೈರಕ್ಟ್ರೇ ಕ್ಯಾಪ್ಟನ್ ಆಫ್ ದಿ ಷಿಪ್. ಅವರನ್ನು ನಂಬಿ ಗುಡ್‌ಫೇತ್ ಮೇಲೆ ಪಾರ್ಟು ಮಾಡಿ ಕೆಲವು ಸಲ ಏಟು ತಿಂದಿದೀನಿ ಅಂತ ಈಗ ಅರ್ಥವಾಗ್ತಿದೆ. ಡೈರಕ್ಟರ್ ಮನಸ್ಸು ಮಾಡಿದರೆ ನಮ್ಮನ್ನು ಅದ್ಭುತವಾಗಿ ಚಿತ್ರಿಸಬಲ್ಲ-ಬೇಡಾಂದ್ರೆ ಇವತ್ತು ಬಂದ ಹೊಸಬರನ್ನು ಆಕಾಶಕ್ಕೆ ಎತ್ತಿಹಿಡಿಬಲ್ಲ. ಇನ್ನು ಮುಂದೆ ನಂಗೆ ಪಪೆಟ್ ಆಗಕ್ಕೆ ಇಷ್ಟವಿಲ್ಲ. ಸೂತ್ರಧಾರ ಯಾವಾಗ್ಯಾವಾಗ ಯಾವ್ಯಾವ ಸೂತ್ರ ಎಳೀತಾನೆ ಗಮನಿಸಲೇಬೇಕು ಅನ್ನಿಸಿದೆ. ಇಲ್ಲಾ ಅಂದ್ರೆ ನಾವು ಕಲಾವಿದರಾಗಲ್ಲ ಕಲಾವಿದರ ನೆರಳಾಗ್ತೀವಿ” +ಎಂದು ನೊಂದು ನುಡಿದ ನಂತರ ರವಿಚಂದ್ರನ್ ಡಿಟಿ‌ಎಸ್ ಸ್ಟುಡಿಯೋಗೆ ಹಾರಿದ ವೆಂಕಣ್ಣ. +ಸಾಂಗ್ ಕಂಪೋಸಿಂಗ್‌ನಲ್ಲಿದ್ದ ರವಿಚಂದ್ರನ್ ಅಲ್ಲಿಗೆ ಬ್ರೇಕ್ ಕೊಟ್ಟು ಮಾತಿಗೆ ನಿಂತರು. +ರವಿಚಂದ್ರನ್: “ನಟನಿಗಿಂತ ನಿರ್ದೇಶಕನೇ ಗ್ರೇಟ್ ಅನ್ನೋನು ನಾನು. ರೀಮೇಕಾದ್ರೇನು – ಸ್ವಮೇಕ್ ಆದ್ರೇನು ಚಿತ್ರ ಚೆನ್ನಾಗಿದ್ದರೆ ಜನ ಬಂದೇ ಬರ್‍ತಾರೆ. ಎಲ್ಲ ನಟರೂ ನಾನು ಹೇಳಿದ ಹಾಗೆ ಅಭಿನಯಿಸಬೇಕು ಅನ್ನೋನು ನಾನು. ಎಲ್ಲ ಪಾತ್ರಗಳ ಸೂತ್ರವೂ ನನ್ನ ಕೈಲಿರುತ್ತೆ. ಓ.ಕೆ. ಎಂದು ಸ್ಟೈಲಿಷ್ ಆಗಿ ಸ್ಟುಡಿಯೋಗೆ ನಡೆದರು. +ಆನಂತರ ಹಾರಿದ್ದು ಅನಂತ್‌ನಾಗ್ ಬಳಿ. ಸಂಕೇತ್ ಬಗೆಗಿನ ಚಿತ್ರ ವಿಚಿತ್ರ ಹೇಳಿಕೆಗಳಿಂದ ನೊಂದಿದ್ದ ಅವರು ಹೇಳಿದರು. +ಅನಂತ್‌ನಾಗ್: “ಅಲ್ಲಿ ಸಲ್ತೀನಿ ಅಂತ ರಾಜಕೀಯಕ್ಕೆ ಹೋದೆ. ಅಲ್ಲಿ ಅವರು ನಮ್ಮನ್ನು ತನಗೆ ಬೇಕಾದ ಹಾಗೆ ಕುಣಿಸ್ತಾನೆ ನಾಯಕ. ಜನರ ಕೈಲಿ ಒಂದು ಸೂತ್ರ ನಾಯಕನ ಕೈಲಿ ಒಂದು ಸೂತ್ರ. ಅಲ್ಲಿನ ಜಗ್ಗಾಟ ವಿಚಿತ್ರ. ಹಾಗೆ ನೋಡಿದರೆ ಸಿನಿಮಾನೇ ವಾಸಿ. ಇಲ್ಲಿ ಡೈರೆಕ್ಟರ್ ಒಬ್ಬನೇ ಸೂತ್ರಧಾರ. ಅವನು ಹೇಳಿದ ಹಾಗೆ ನಾವು ಬೊಂಬೆಗಳಂತೆ ಕುಣಿದರೆ ಆಯಿತು. ಮಿಕ್ಕ ಹಣೆಬರಹ ಅವರದು” ಎಂದು ನಕ್ಕರು. +ಶಿವರಾಜ್‌ಕುಮಾರ್: ಮಾರಿಷಸ್‌ನಿಂದ ಬಂದಿದ್ದಾರೆ ಅಂತ ತಿಳಿದಿದ್ರಿಂದ ವೆಂಕಣ್ಣ ಹಾರಿದ ಅಲ್ಲಿಗೆ. “ಅರೆರೆ? ನಾವು ಪ್ಲೇನಲ್ಲಿ ಹಾರಿ ಬಂದೆವು. ನೀವು ಹ್ಯಾಗೆ ಹಾರಿ ಬಂದಿದೀರಿ ವೆಂಕಣ್ಣ” ಎಂದು ನಗೆಮೊಗದಿಂದ ಸ್ವಾಗತಿಸಿದರು ಶಿವು. +“ನಾನಂತೂ ಒಂದೊಂದು ಚಿತ್ರದಲ್ಲಿ ಮಾಡೋವಾಗ್ಲೂ ನಿರ್ದೇಶಕ ಯಾವ ರೀತಿ ಹೇಳ್ತಾನೋ ಹಾಗೆ ಅಭಿನಯಿಸ್ತಾ ಬಂದಿದೀನಿ ಅದರಿಂದಾನೆ ವೆರೈಟಿ ಕೊಡೋದು ಸಾಧ್ಯವಾಗಿದೆ. ನಾವು ಏನೋ ಅನ್ಕೋತೀವಿ ಆದ್ರೆ ಅದೇನೋ ಆಗುತ್ತೆ. ಮ್ಯಾನ್ ಪ್ರೊಪೋಸಸ್ ಗಾಡ್ ಡಿಸ್‌ಪೋಸಸ್ ಅನ್ನೋ ಹಾಗೆ. ‘ಪ್ರೀತ್ಸೆ’ ಹಾಗೆ ‘ಇಂದ್ರ ಧನುಷ್’ ಹೋಗತ್ತೆ ಅಂದ್ಕೊಂಡೆ. ‘ಹಗಲು ವೇಷ’ ತುಂಬ ಡಿಫರೆಂಟ್ ಆಗಿ ಕ್ಲಿಕ್ ಆಗುತ್ತೆ ಅನ್ಕೊಂಡೆ. +‘ಕೃಷ್ಣಲೀಲೆ’ ಜನಕ್ಕೆ ಒಂದು ರೀತಿ ಮಜಾ ಕೊಟ್ಟು ಹಿಟ್ ಆಗಬಹುದು ಅಂತ ಭಾವಿಸಿದೆ. ಈಗ ದೇವರ ಮಗ, ಗಲಾಟೆ ಅಳಿಯಂದಿರು- +ರಾಮಾನಾಯಿಡು ಚಿತ್ರ ಕ್ಲಿಕ್ ಆಗ್ಲಿ ಅಂತ ಅಶಿಸಬೇಕಷ್ಟೆ. ಯಾರು ಏನೇ ಹೇಳಲಿ ಡೈರಕ್ಟರ್ ಸುಪ್ರೀಂ. ನಾವು ಆತನ ಮುಂದೆ ‘ಪಪೆಟ್ಸ್’ ಎಂಬುದರಲ್ಲಿ ಅನುಮಾನವಿಲ್ಲ. ಎಷ್ಟೇ ಫಸ್ಟ್‌ಕ್ಲಾಸ್ ಫಿಲಂ ಮಾಡಿದ್ರೂ ವಿಧಿ-ಅದೃಷ್ಟದ ಕೈವಾಡದ ಮೇಲೆ ಎಲ್ಲಾ ನಿಂತಿರೋದು” ಎಂದು ಫಿಲಾಸಫಿ ಮಾತನಾಡತೊಡಗಿದರು ಶಿವು. +-ಇದಿಷ್ಟನ್ನೂ ದಾಖಲಿಸಿಕೊಂಡ ವೆಂಕಣ್ಣ ಅದನ್ನೇ ಒಂದು ಲೇಖನ ಮಾಡಿ ಪೋಸ್ಟ್ ಮಾಡಿದ. +ಈ ಬಗ್ಗೆ ನೀವೇನಂತೀರಿ ಅಂತ ಈಗ ಕೇಳಬಹುದಲ್ಲ. +***** +೧೨-೫-೨೦೦೦ +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +“ಇಬ್ಬರ ಜಗಳ ಮೂರನೆಯವನಿಗೆ ಲಾಭ” ಎಂಬುದು ಗಾದೆ ಮಾತು. ಆದರೆ ಫಿಲಂ ಚೇಂಬರ್ಸ್ ಹಾಗೂ ನಿರ್ಮಾಪಕರ ಸಂಘಗಳ ಕಿತ್ತಾಟದ ಪರಿಣಾಮವಾಗಿ ನಿರ್ದೇಶಕ ದಿನೇಶ್‌ಬಾಬು ‘ಇದು ನ್ಯಾಯವಾ ಶ್ರೀರಾಮಚಂದ್ರ’ ಎಂದು ಹಾಡುವಂತಾಗಿದೆ. ಹೊಸದಾಗಿ ನಿರ್ಮಾಣಗೊಂಡ ನಿರ್ಮಾಪಕರ […] +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […] +“ಪ್ರಶ್ನೆ” ಸಂಕಲನದ ಕಥೆಗಳನ್ನು ನಾನು ಸುಮಾರು ಹದಿನೆದು-ಹದಿನಾರು ವರ್ಷಗಳ ಹಿಂದೆ ಬರೆದದ್ದು. ಇಂಥ ಕತೆಗಳಿಗೆ ಆ ಕಾಲದಲ್ಲಿ ಇದ್ದ ಓದುಗರ ಸಂಖ್ಯೆ ಬಹಳ ಕಡಿಮೆ. ನನ್ನ ಕೆಲವೇ ಮಿತ್ರರಿಗಾಗಿ – ಮುಖ್ಯವಾಗಿ ನನ್ನ ಗೆಳೆಯ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_115.txt b/Kannada Sahitya/article_115.txt new file mode 100644 index 0000000000000000000000000000000000000000..75ba7675f02200e2a718691a118d77e687275dae --- /dev/null +++ b/Kannada Sahitya/article_115.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿದ್ದೆ ಮಡಿಲೊಳು ದಣಿದು ಮಲಗಿಹುದು +ಜಗದ ಬಾಳು ; +ಹಗಲಿನ ಅಪಸ್ವರಗಳೆಲ್ಲ ಮೌನದಲಿ +ಮರೆತಿಹವು ನೂರಾರು ಮೇಲುಕೀಳು ! +ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? +ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ ಬಿರುಸು ?! +ಕತ್ತಲೆಯ ಆಳದಲಿ +ಕೊರತೆಗಳನೆಲ್ಲವನು ಹೂಳು ಹೂಳು ! +* * * * +ಹರಿದು ತಿನ್ನುವ ಹದ್ದು +ತನ್ನ ಗೂಡೊಳು ಮಲಗಿ ನಿದ್ದೆಗೈದಿರುವ ಹೊತ್ತು +ಬಾನಿನೆದೆಯೊಳದಾವುದೋ ನೋವು ಮೆಲ್ಲನೆ ಹರಿದು +ಸುರುಳಿ ಸುತ್ತುತ ಕೊರಳ ಬಿಗಿಯುತಿತ್ತು ; +ಚಿಕ್ಕೆಗಣ್ಣುಗಳಿಂದ ಕಂಬನಿಗಳುರುಳುರುಳಿ +ಮಂದ ಬೆಳಕೂ ಕೂಡ ನಂದಿ ಹೋಗುತಲಿತ್ತು ! +ನರನರಗಳಲ್ಲಿ ವೇದನೆ ತುಂಬಿ ತುಡಿದಂತೆ +ಗಾಳಿ ನರಳಿತ್ತು ! +* * * * +ಕಣ್ದೆರೆಯುತಿದೆ ನಸುಕು +ಬಾನಬಸುರಿಂದೊಗೆದ ಕೂಸು ! +ಉಷೆಯ ತಾವರೆಗೈಗಳಲ್ಲಿ ಮಿಸುಕಾಡುತಿದೆ ! +ಹೊಂಬೆಳಕಿನಾನಂದ +ದಿಕ್ಕು ದಿಕ್ಕುಗಳನೊಂದೆ ತೆಕ್ಕೆಯೊಳು ಬಿಗಿದು +ಜೀವ ಜೀವದ ಹೂವ ಅರಳಿಸಿಹುದು ! +ಹೂವಿನೆಸಳಿನ ಮೇಲೆ ಚಿಕ್ಕೆಗಂಬನಿ ಜಾರಿ +ಮಿರುಗುತಿದೆ ಅಮೃತಬಿಂದು! +***** +ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** +ತುಳುಕು ಚಿಮ್ಮುವ ಹೊಳಪು ಸಿಗುರು ಚೀರುವ ಅರಚು ಹಿರಿದುದ್ದ ಬಳುಕಾಡಿ ತೊನೆದು ತೂರಿದ ಗುರಿ ಗರಿಮುರೀ ಬಿದಿರು ಚುಚ್ಚು ಮುಳ್ಳು. ಸಾವಿರದ ಅಲಗುಗಳ ಜೀವನದ ಕೆಚ್ಚು ಪರಂಪರೆಯ ಹುಚ್ಚು ತಿದಿಯಾರಿ ಹೊಗೆಯೆದ್ದ ಯಜ್ಞಕುಂಡ-ಪ್ರೇಮಿ ಅರೆಬರೆ […] +(೧)ಮಗುವನಾಡಿಸುತ ಹೂವಿಗೆ ಹೂವ ಪೋಣಿಸುತಜಾವ ಜಾವಕೆ ಹಾಡಿನೆಳೆಯ ಜಗ್ಗಿದುಂಡುಮಾಲೆಯ ಕನಸ ಕಟ್ಟಿ ಮುಡಿಯುತ್ತಿಹಳುಇರುಳಬಾನಿಗೆ ಚಂದ್ರ ತಾರೆಯಾಗಿ ! ನೀರು ತುಂಬಿದ ಕೆರೆಯ ಹೃದಯಾಂತರಾಳದಲಿಆ ನೀಲಿ ಆ ಮೋಡವೆಲ್ಲ ಮೂಡಿಹೇಳಬಾರದ ಹಿಗ್ಗು-ಬಾಯಿ ಬಿಟ್ಟಿತು ಮೊಗ್ಗುಯಾವುದೋ ಮಾಯೆಯಲಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_116.txt b/Kannada Sahitya/article_116.txt new file mode 100644 index 0000000000000000000000000000000000000000..6e7a33ee7b6f75d672e4756f154b13f363ba6ec7 --- /dev/null +++ b/Kannada Sahitya/article_116.txt @@ -0,0 +1,51 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವಿಷ್ಣು: ವಿಷ್ಣುಗೀಗ ಎಲ್ಲೆಡೆ ಡಿಮ್ಯಾಂಡಪ್ಪೊ ಡಿಮ್ಯಾಂಡು +ನಿರ್ಮಾಪಕರ ಪಾಲಿಗೆ ವಿಷ್ಣು ಹೈಕಮಾಂಡು +ವಿಷ್ಣು ಎಲ್ಲೇ ಹೋದರೂ ಈಗ +ಜನ ಜನ ಜನ +ನಿರ್ದೇಶಕರ ಕ್ಯೂ ಕೂಡಾ ಹೆಚ್ಚಿದೆ +ದಿನಾ ದಿನಾ ದಿನಾ +ಇತಿಹಾಸ: ಯಜಮಾನ ‘ವಾನತ್ತ ಪೋಲಾ’ ಚಿತ್ರದ ರೀಮೇಕ್ ಎಂಬುದು ನಿಜ. ತಮಿಳು ಹಾಡುಗಳ ಕನ್ನಡ ಅವತರಣಿಕೆ ನಿಜ. ಟ್ಯೂನ್ ಸಹಾ ಜೆರಾಕ್ಸ್ ಕಾಪಿ ನಿಜ. ಆದರೂ ವಿಕ್ರಮ್‌ನ ಅವರ ಒಟ್ಟು ಕುಟುಂಬದ ಕಥೆಯನ್ನು ಕನ್ನಡದ ಜನ ಬಹು ಇಷ್ಟಪಟ್ಟು ‘ವಿಷ್ಣು’ಗೆ ಜಯಕಾರ ಹಾಕಿದ್ದಾರೆ. ಚಿತ್ರ ನೂರೆಪ್ಪತ್ತೈದು ದಿನ ಓಡಿ ಚಿತ್ರ ಚರಿತ್ರೆಯಲ್ಲೇ ಒಂದು ಇತಿಹಾಸ ಸೃಷ್ಟಿಸಿದೆ. +ರೆಹಮಾನ್: ಈ ಯಶಸ್ಸಿನ ಅಮಲು ತಲೆಗೇರಿರುವುದು ವಿಷ್ಣುವರ್ಧನ್‌ಗಲ್ಲ ನಿರ್ಮಾಪಕ ರೆಹಮಾನ್‌ಗೆ. ಹುಚ್ಚನೂ ಹೀಗೆ ಗೆಲ್ಲುವನೆಂದು ಕನಸು ಕಾಣುತ್ತಿರುವ ರೆಹಮಾನ್ ಈಗ ತಾವೇನು ಮಾಡಿದರೂ ಜನ ಅದನ್ನು ಒಪ್ಪುತ್ತಾರೆ ಎಂಬ ಭ್ರಮೆಯಿಂದ ‘ಹಾಲಪ್ಪ’ ಈಗ ಬಿಡುಗಡೆ ಮಾಡಿ ‘ಮುಂದೇನಪ್ಪ’ ಎನ್ನುವ ಸ್ಥಿತಿ ತಂದುಕೊಂಡಿದ್ದಾರೆ. +ಸಿಲ್ವರ್‍ ಜ್ಯುಬಿಲಿ: ಯಜಮಾನದ ಸಂಭ್ರಮ ಉಣಬಡಿಸಲು ಕಂಠೀರವ ಸ್ಟೇಡಿಯಮ್ ಒಳಾಂಗಣದಲ್ಲಿ ವೈಬವೋಪೇತ ಕಾರ್ಯಕ್ರಮವೊಂದು ರೂಪಿಸಿದ್ದರು ರೆಹಮಾನ್, ಆ ಕಾರ್ಯಕ್ರಮ ‘ನಭೂತೋ’ ಎನುವಂತಿರಬೇಕು ಎಂಬುದು ವಿಷ್ಣು ಆಶಯವಾಗಿತ್ತು. ಅದಕ್ಕೆ ನಾಯಕ ಅತೀವ ಕಾಳಜಿವಹಿಸಿದ್ದು ನಿಜ. ಅದನ್ನೊಂದು ಅಭೂತಪೂರ್ವ ಈವೆಂಟ್ ಆಗಿಸಲು ಮಧು ಬಂಗಾರಪ್ಪ ಸಹಾ ತಮ್ಮ ಕ್ರಿಯೇಟಿವಿಟಿಗೆ ಇದೊಂದು ಚಾಲೆಂಜ್’ ಎಂದು ಸ್ವೀಕರಿಸಿ ವೇದಿಕೆ, ಬೆಳಕು ವಿನ್ಯಾಸ ‘ಆಹಾ’ ಎನ್ನುವಂತೆ ಮಾಡಿದ್ದರು. ರೆಹಮಾನರ ಬೇಜವಾಬ್ದಾರಿತನದಿಂದಾಗಿ ಇಡೀ ಕಾರ್ಯಕ್ರಮ ಹೊಳೆಯಲ್ಲಿ ಹುಣಸೇಹಣ್ಣು ಕಿವಿಚಿದಂತಾಗಿ ಇಡೀ ಕಾರ್ಯಕ್ರಮ ವ್ಯವಸ್ಥೆ ಒಂದು ಕಪ್ಪು ಚುಕ್ಕೆಯಾಯಿತು. +ಪತ್ರಕರ್ತರಿಗೆ ಪೆಟ್ಟು: ಪೊಲೀಸರ ದಬ್ಬಾಳಿಕೆಗೆ ಪತ್ರಕರ್ತರು ಬಲಿಯಾದರು ಲಾಠಿ ಏಟು ತಿಂದರು. +‘ಹೋಗಾಚೆ’ ಎಂದು ಗದರಿಸಿಕೊಳ್ಳಬೇಕಾದ ಪ್ರಸಂಗ ಬಂತು. ಪ್ರಕರ್ತರಿಗೆ ಮೀಸಲಾದ ಕುರ್ಚಿಗಳಲ್ಲಿ ಮೀಸೆ ಬಂದವರು, ಮೀಸೆ ಇನ್ನೂ ಚಿಗುರಿಲ್ಲದಿದ್ದವರು, ರಫ್ ಅಂಡ್ ಟಫ್ ಗಡ್ಡ ಬಿಟ್ಟ ರೌಡಿ ಗ್ಯಾಂಗಿನ ಪಡ್ಡೆ ಹುಡುಗರು, ಹೆಂಗಸರು ಮಕ್ಕಳು ಮಧ್ಯಾಹ್ನವೇ ಬಂದು ಕುರ್ಚಿಗಳನ್ನು ಆಕ್ರಮಿಸಿದ್ದರು. +ನಾವು ಪತ್ರಕರ್ತರು ಎಂದವರಿಗೆ ಪೊಲೀಸರು ‘ನಿಮ್ಮ ಕೆಲಸ ಬರೆಯೋದು. ನಮ್ಮ ಕೆಲಸ ಲಾಠಿ ತಿರುಗಿಸುವುದು’ ಎಂದು ಮೀಸೆ ತಿರುವಿದರು. +‘ಇದೇನ್ರಿ ರೆಹಮಾನ್ ಇಂಥ ದರಿದ್ರ ಏರ್ಪಾಡು ಮಾಡಿದೀರಿ ಹೇಳಿ ಬನ್ನಿ ಪೊಲೀಸರಿಗೆ’ ಎಂದವರಿಗೆ ‘ಹಹಹ, ನಾನೇನ್ರೀ ಮಾಡ್ಲಿ-ನನ್ನ ಒಳಕ್ಕೆ ಬಿಟ್ಟಿದ್ದೇ ಹೆಚ್ಚು-ನನ್ನೇ ತಡೆದರು. ನಾನೇನು ಮಾಡ್ಲಿ’ ಎಂದು ರಿಂಗಾದ ಮೊಬೈಲ್‌ನಲ್ಲಿ ಆರಾಮವಾಗಿ ಮಾತನಾಡುತ್ತ’ ಏನು ಬಂದೇ ಇಲ್ಲ. ಭರ್ಜರಿ ಫಂಕ್ಷನ್ ಬನ್ನಿ ಬನ್ನಿ’ ಎಂದು ಆಹ್ವಾನಿಸುತ್ತಿದ್ದರು. +ಆ ಹೊತ್ತಿಗೆ ಎಲ್ಲ ಬಾಗಿಲಿಗೂ ಬೀಗ ಹಾಕಿಯಾಗಿತ್ತು. +ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಬೇಕಿತ್ತು ಎಂಬ ಸಾಮಾನ್ಯ ಜ್ಞಾನವೂ ರೆಹಮಾನರಿಗೆ ಇಲ್ಲದೆ ಹೋದದ್ದು ದುರಂತ. ‘ಅಯ್ಯೋ ಹೀಗಾಯಿತೆ ಪಾಪ’ ಎನ್ನುವ ಸೌಜನ್ಯವೂ ಅವರಿಗಿರಲಿಲ್ಲ. +ಪ್ರಶಸ್ತಿ ವಿಜೇತರ ಜಾಗದಲ್ಲಿ ಕುಳಿತ ವಿಷ್ಣು ಅಭಿಮಾನಿಗಳು ಆ ಕುರ್ಚಿಗಳು ಅವರಪ್ಪನ ಜಹಗೀರು ಎಂಬ ಧೋರಣೆಯಲ್ಲಿ ಮಾತನಾಡುತ್ತಿದ್ದರು. +ಎಲ್ಲ ನೆಲದ ಮೇಲೆ: ಚಿತ್ರದ ತಂತ್ರಜ್ಞರು ವಿಧಿಯಿಲ್ಲದೆ ನೆಲದ ಮೇಲೆ ಕುಳಿತರು. ಪ್ರೇಮಾ, ಅಭಿಜಿತ್, ರಮೇಶ್ ಭಟ್, ಶಿವರಾಂ, ಅವಿನಾಶ್, ಮಾಳವಿಕ ಮುಂತಾದವರೆಲ್ಲ ಸೈಡ್‌ವಿಂಗ್‌ನಲ್ಲಿ ನಿಲ್ಲಬೇಕಾದದ್ದು ಅನಿವಾರ್ಯವಾಯಿತು. ಚಿತ್ರಶ್ರೀ, ದೇವಿಕಾ ಹಾಗೂ ಶಂಕರ್‌ಪ್ರಕಾಶ ನಿರೂಪಣೆಯ ಹೊಣೆ ಹೊತ್ತಿದ್ದರು. +ನಿರೂಪಕರು: ತುಂಬ ಸೊಗಸಾಗಿ ವಿಷ್ಣುವರ್ಧನ್ ಪರಿಚಯಿಸಿದ ಚಿತ್ರಶ್ರೀ ಮಾತೇ ಅಂದಿನ ಹೈಲೈಟ್. ದೇವಿಕಾ ಎಲ್ಲ ‘ಹಾಸನದಲ್ಲಿ ಕುಳಿತುಕೊಳ್ಳಬೇಕು’ ಎಂದಾಗಲಂತೂ ಎಲ್ಲ ಅಂಡು ಬಡಿದುಕೊಂಡು ಮುಸಿಮುಸಿ ನಕ್ಕರು. ಶಂಕರ್‍ ಪ್ರಕಾಶ್ ಧ್ವನಿ ತುಂಬಿಕೊಂಡಿತ್ತು ಎನ್ನುವುದು ನಿಜ. ಆದರೆ ಆ ವ್ಯಕ್ತಿಗೆ ಫಲಕ ಸ್ವೀಕರಿಸಿ ಕಲಾವಿದರು ತಾಂತ್ರಿಕ ತಜ್ಞರ ಬಗ್ಗೆ ಗೌರವವೇ ಇದ್ದಂತಿರಲಿಲ್ಲ. ಅವರೆಲ್ಲರನ್ನೂ ಅವರು ಸಂಬೋಧಿಸುತ್ತಿದ್ದ ರೀತಿ ಗದರಿದ ಕ್ರಮ ಹೇಸಿಗೆ ಹುಟ್ಟಿಸಿತು. +ಕಾರ್ಯಕ್ರಮ ನಡೆದ ಬಗೆ: ಚಿತ್ರದ ಬಗ್ಗೆ ಗಂಭೀರವಾಗಿ ವಿಶ್ಲೇಷಿಸುವ ಒಂದು ಸಾಲುಮಾತನಾಡುವವರೂ ಅಲ್ಲಿರಲಿಲ್ಲ. ಹಾರ-ತುರಾಯಿಗಳ ಸಂಭ್ರಮ ಅತಿಯಾಗಿ ‘ಬೇಕಿತ್ತೆ ಇಷ್ಟು ಅವಾಂತರ ಎನ್ನವಂತಾದದ್ದು ದುರ್ದೈವ. ಗುಜರಾತಿ ನೃತ್ಯವೊಂದು ಸಾಕಿತ್ತು. ಯಜಮಾನ ಚಿತ್ರದ ಹಾಡುಗಳ ಕುಣಿತ, ರಾಜೇಶ್ ರಾಮನಾಥ್ ನೃತ್ಯ ಮುಗಿದರೆ ಸಾಕೆ ಎನ್ನುವಂತಾಯಿತು. +ವಿಷ್ಣು ಎಂಟ್ರಿ ಗ್ರಾಂಡ್ ಎಂದು ಒಪ್ಪಲೇಬೇಕು. +ಫಲಕ ವಿತರಣೆಗೆ ಅತಿಥಿಗಳನ್ನು ಆಹ್ವಾನಿಸಿದ ನಂತರ ವೇದಿಕೆ ಸಿಟಿ ಮಾರ್ಕೆಟ್ ಕೊಂಪೆಯಾಯಿತು. ನಾನು ಎಷ್ಟೋ ಕಾರ್ಯಕ್ರಮಗಳನ್ನ, ಶತದಿನೋತ್ಸವಗಳನ್ನು ಕಂಡಿದ್ದೇನೆ ನಿರೂಪಿಸಿದ್ದೇನೆ. ಆದರೆ ಇಂಥ ಗೊಂದಲ ನಾನೆಲ್ಲೂ ಕಂಡಿರಲಿಲ್ಲ. ಕಡೆ ಕಡೆಗೆ ಯಾರು ಬೇಕಾದರೂ ಹೋಗಿ ಫಲಕ ಪಡೆದು ಬರಬಹುದಾದ ಸ್ಥಿತಿ ಉದ್ಭವವಾಗಿ ಅದೊಂದು ಗೊಂದಲಾಪುರವಾಯಿತು. ವಿಷ್ಣು ಹಾಡಿದ್ದೊಂದೇ ಅಂದಿನ ಹೈಲೈಟ್. ಅಂಥ ಸಭೆಗೆ ಗಾಂಭೀರ್ಯ ತರುವಂತಿರಲಿಲ್ಲ ಅಂಬರೀಶ್ ಮಾತುಗಳು. ಅಲ್ಲಿ ಬಂದ ಮಂದಿಗೆ ರಾಜಕಾರಣಿಗಳು ಬೇಕಿರಲಿಲ್ಲ. ಅಂಥವರನ್ನೆಲ್ಲ ಕೂರಿಸಿ ಆರಂಭಕ್ಕೆ ಮಾತನಾಡಿದ ರೆಹಮಾನ್‌ಗೆ ಸ್ವಾಗತಕ್ಕೂ, ವಂದನಾರ್ಪಣೆಗೂ, ಪರಾಕು ಪಂಪಿಗೂ ವ್ಯತ್ಯಾಸವೇ ತಿಳಿದಂತಿರಲಿಲ್ಲ. +ನೆನಪು: ಈ ಸಂಪತ್ತಿಗೆ ಈ ಕಾರ್ಯಕ್ರಮ ಹೇಗೆ ಮಾಡಬೇಕೆಂದು ತಿಳಿಯಲೆಂದೇ ಒಂದು ಪ್ರಸ್‌ಮೀಟ್ ರೆಹಮಾನ್ ಅವರು ಮಾಡಿದ್ದದ್ದೂ ಆಗ ನೆನಪಾಯಿತು. ‘ವಂಡರ್‌ಫುಲ್’ ಎನಿಸಿಕೊಳ್ಳಬಹುದಾಗಿದ್ದ ಕಾರ್ಯಕ್ರಮ ‘ಹಾರಿಬಲ್’ ಎನಿಸಿಕೊಳ್ಳಲು ರೆಹಮಾನ್ ಮುಖ್ಯ ಕಾರಣರಾದರು. +ವಿಷ್ಣು ಕಾರ್ಯಕ್ರಮ ಹೀಗಾಗದಂತೆ ನೋಡಿಕೊಳ್ಳುವ ಹೊಣೆ ಅಭಿಮಾನಿ ಸಂಘದ ಪ್ರಸನ್ನ ಅವರದೂ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ. +ನಾಗೇಶ್ ಕುಮಾರ್‍ ತ್ಯಾಗರಾಜ್ ಎಲ್ಲ ತೆಪ್ಪಗಿದ್ದರು ಅಂದು. +ನಾಟಕ ಅಕಾಡಮಿ ಪ್ರಶಸ್ತಿ ಕಾರ್ಯಕ್ರಮ ಹೂವಿನ ಹಡಗಲಿಯಲ್ಲಿ: +ಅಲ್ಲಿಗೆ ಬರುವ ಹಿಂದಿನ ದಿನ ನಾಟಕ ಅಕಾಡೆಮಿ ಪ್ರಶಸ್ತಿ ಸಮಾರಂಭಕ್ಕೆಂದು ಹೂವಿನ ಹಡಗಲಿಗೆ ಹೋಗಿ ಬಂದಿದ್ದೆ. ಅಲ್ಲಿ ಹತ್ತು ಕಲಾಕ್ಷೇತ್ರಕ್ಕಾಗುವ ಗ್ರಾಮೀಣ ಮಂದಿ ಇದ್ದರು. ಹತ್ತುಸಾವಿರಕ್ಕೂ ಹೆಚ್ಚು ಜನರ ಪಿನ್ ಡ್ರಾಪ್ ಸೈಲೆನ್ಸ್ ಇತ್ತು ಅಲ್ಲಿ. ಶಿಸ್ತು ಸಂಭ್ರಮ ಆ ಮಂದಿಯಿಂದ ಕಲಿಯಬೇಕು ಎನಿಸಿತು. ಅಲ್ಲೂ ಯಥಾಪ್ರಕಾರ ತೋಪಾದದ್ದು ಕನ್ನಡ ಓದಲೂ ಬಾರದವರನ್ನು ನಿರೂಪಣೆಗೆ ಬಿಟ್ಟಿದ್ದದ್ದು. ‘ಹ್ಯಾಮ್ಲೆಟ್ ನಾಟಕವನ್ನು ಹೆಲ್ಮೆಟ್’ ಎನ್ನುವಂತಹ ಮಹಿಳಾಮಣಿ ನಾಟಕ ಅಕಾಡೆಮಿ ಸದಸ್ಯೆ. ಹೊಸ ಅಕಾಡೆಮಿಯಲ್ಲಿ ಎಂಥವರಿರಬಾರದು ಎಂಬುದಕ್ಕೆ ಅದೊಂದು ಸಾಕ್ಷಿ ಎನ್ನುವಂತಿತ್ತು. +ಸಂಘಟನೆಗೆ ಹೆಸರಾದ ನಾಟಕ ಅಕಾಡಮಿ ಅಧ್ಯಕ್ಷ ಸಿ.ಜಿ.ಕೆ. ವೇದಿಕೆ ಕಲಾತ್ಮಕವಾಗಲು, ಊರವರಲ್ಲಿ ಸಂಭ್ರಮ ತುಂಬಲು-ರಂಗಾಸಕ್ತರನ್ನು ಕಲೆಹಾಕಿ ಅದ್ಭುತ ಸಮಾವೇಶ ಮಾಡಲು ಕಾರಣರಾಗಿದ್ದರು ಎಂಬುದು ಸಂತೋಷ. ಆದರೆ ಜೀವಮಾನದಲ್ಲಿ ಒಮ್ಮೆ ಬರುವ ಪ್ರಶಸ್ತಿ ಸ್ವೀಕಾರದ ಸಮಯದಲ್ಲಿ ಪ್ರಶಸ್ತಿ ವಿಜೇತರ ಹೆಸರುಗಳನ್ನು ಸರಿಯಾಗಿ ಹೇಳಲು ಬಾರದವರನ್ನು ಸದಸ್ಯರು ಎಂಬ ಒಂದೆ ಕಾರಣಕ್ಕೆ ವೇದಿಕೆಯ ಮೇಲೆ ಶೋಭಿಸಿ ಟಿ.ವಿ. ಕ್ಯಾಮರಾ ಎದುರು ಮಿಂಚಲು ಅವಕಾಶ ಮಾಡಿದ್ದದ್ದು ಘನಘೋರ ಅಪರಾಧವೆನಿಸಿತ್ತು. +ಅಂಥ ದೂರದೂರಿನ ಗ್ರಾಮೀಣ ಪ್ರದೇಶಗಳಲ್ಲಿ ಶಕ್ತಿ ಮೀರಿ ಸೊಗಸಾಗಿ ಏರ್ಪಾಟು ಮಾಡಲು ಕಾರಣರಾಗಿದ್ದ ಎಂ.ಪಿ.ಪ್ರಕಾಶರನ್ನು ಹೊಗಳಲೇಬೇಕೆನಿಸಿದ್ದು ನಿಜ. +ರವಿಚಂದ್ರನ್: ಆಗಲೇ ರವಿಚಂದ್ರನ್ ನನಗೆ ನೆನಪಾದದ್ದು. ತೆರೆ ಏಳುವ ಮುನ್ನವೇ ತಮ್ಮ ಸಿನಿಮಾದ ನಟ-ನಟಿಯರನ್ನು ತಾಂತ್ರಿಕ ತಜ್ಞರನ್ನು ಅವರವರ ಕುರ್ಚಿಯಲ್ಲಿ ಕುಳ್ಳಿರಿಸಿ ಎಲ್ಲರ ಕೈಗೂ ಅವರವರ ಫಲಕ ನೀಡಿ ತೆರೆ ಸರಿಸಿದಾಗ ಸಂಭ್ರಮ ತಾಂಡವಾಡಿತ್ತು. +ಒಂದೇ ಕ್ಷಣದಲ್ಲಿ ಫಲಕ ವಿತರಣೆ ಮುಗಿದ ಖುಶಿ ಎಲ್ಲರಿಗೂ. ಆ ಚಿತ್ರ ‘ರಣಧೀರ’ ಎಂದು ನೆನಪು. ಚೌಡಯ್ಯ ಮೊಮೋರಿಯಲ್ ಹಾಲ್‌ನಲ್ಲಿ ನಡೆದ ಸೊಗಸಾದ ಕಾರ್ಯಕ್ರಮವದು. +ಆ ಕಾಲ: ಸಿಲ್ವರ್‍ ಜ್ಯೂಬಿಲಿ ಕಾರ್ಯಕ್ರಮಗಳು ಶತದಿನೋತ್ಸವಗಳು, ಪ್ಲಾಟಿನಂ ಜ್ಯೂಬಿಲಿಗಳು ಹಿಂದ ಸಾಕಷ್ಟಾಗಿವೆ. ಅಲ್ಲಿ ಚಿತ್ರದ ಬಗ್ಗೆ ಗಂಭೀರವಾಗಿ ಮಾತನಾಡುವ ಜನರೂ ಇರುತ್ತಿದ್ದರು. ಫಲಕ ಸ್ವೀಕಾರ ಒಂದು ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು. ಪರಿಚಯದ ಸಿಹಿ ನುಡಿಗಳಿಂದ ಕಲಾವಿದರು ತಾಂತ್ರಿಕ ತಜ್ಞರು ಹಿರಿಹಿರಿ ಹಿಗ್ಗಲು ಕಾರಣವಾಗಿರುತ್ತಿತ್ತು. +ಈಗೇಕೆ ಹೀಗೆ: ಯಾರೋ ಒಬ್ಬ ನಟನನ್ನು-ನಟಿಯನ್ನು ವಿಜೃಂಭಿಸುವುದೇ ಮುಖ್ಯವಾಗಿ ಮುಂದೆ ಅವರ ಕಾಲ್‌ಷೀಟ್ ಪಡೆಯುವುದೇ ಗುರಿ ಎನಿಸಿದಾಗ ಜನರನ್ನು ತಾತ್ಸಾರ ಮಾಡಿ ನಟರನ್ನು ಓಲೈಸುವುದೇ ಮುಖ್ಯವಾಗಿ ಮಿಕ್ಕವರೆಲ್ಲ ನಗಣ್ಯರಾಗುತ್ತಾರೆ. +ಇಂಥ ಅದ್ಧೂರಿ ಕಾರ್ಯಕ್ರಮಗಳು ಎಡವಟ್ಟಿನ ಸರಮಾಲೆಯಾದಾಗ ವಿಷ್ಣುವರ್ಧನ್ ಅಂತಹ ನಟರೂ ಕಾರ್ಯಕ್ರಮ ರೂಪಿಸುವಾಗ ಸೂಕ್ತ ಸಲಹೆ-ಸೂಚನೆ ನೀಡುವುದು ಅಗತ್ಯ. +ಒಂದು ವಿನಂತಿ: ಪ್ರಿಯ ವಿಷ್ಣು, ನೀವೀಗ ಎತ್ತರೆತ್ತರ ಬೆಳೆದಿದ್ದೀರಿ. ಕಾಲ್‌ಷೀಟ್ ಕೊಡುವ ಮುನ್ನ ಕಥೆಯ ಬಗ್ಗೆ ತುಂಬ ಎಚ್ಚರ ವಹಿಸುತ್ತೀರಿ-ಗ್ರಾಮದೇವತೆ, ಕೆರೆಗೆ ಹಾರ ಎಂದಾಗ ‘ನೋ’ ಎಂದು ಖಂಡಿತವಾಗಿ ಹೇಳುತ್ತೀರಿ. +ಪ್ರತಿಭಾವಂತ ನಟರನ್ನು, ಸಹಕಲಾವಿದರನ್ನು ಮುಕ್ತಕಂಠದಿಂದ ಮೆಚ್ಚಿ ಧಾರಾಳವಾಗಿ ಹೊಗಳುತ್ತೀರಿ. ಈಗ ನಿಮ್ಮ ಹಿಂದೆ ಮುಂದೆ ಓಡಾಡುತ್ತ ‘ಜೈ’ ಎನ್ನುವವರು ಏಕೆ ಪರಾಕು ಪಂಪು ಒತ್ತುತ್ತಾರೆ ಎಂಬುದು ನಿಮಗೆ ಚೆನ್ನಾಗಿ ಗೊತ್ತು. ಕುಮಾರ್‍, ವಿಷ್ಣುವರ್ಧನ್ ಆಗುವುದಕ್ಕಿಂತ ಮುಂಚಿನ ಮಿತ್ರರನ್ನು ಅದೇ ಪ್ರೀತಿಯಿಂದ ಮಾತನಾಡಿಸುತ್ತೀರಿ. +ಹಾಗೆ ಮುಂದೆ ಇಂಥ ಕಾರ್ಯಕ್ರಮಗಳನ್ನು ರೂಪಿಸುವ ದಿನ ಬಂದಾಗ ಅದರ ಯಶಸ್ಸಿಗೂ ಎಚ್ಚರವಹಿಸಬೇಕೆಂಬ ಮಾತನ್ನು ನೀವು ನಿರ್ಮಾಪಕರಿಗೆ ಮಾತ್ರವಲ್ಲ, ಪ್ರಸನ್ನರಿಗೂ ತಿಳಿಸುವುದು ಅಗತ್ಯವಲ್ಲವೆ? +***** +(೨೫-೫-೨೦೦೧) +ಮೊನ್ನೆ ವೆಂಕಣ್ಣನ ಮನೆಗೆ ಹೋದಾಗ ಸಾಹಿತ್ಯ, ಸಂಗೀತ, ಸಿನಿಮಾ ಬಗ್ಗೆ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತ ಕುಳಿತಿದ್ದಾಗ, ಕಾಫಿ ತರಲು ಎದ್ದು ವೆಂಕಣ್ಣ “ಈ ಡೈರಿ ನೋಡ್ತಿರು-ಬಂದೆ” ಎಂದ. ಅಲ್ಲಿ ಸಿನಿ ಮುಹೂರ್ತಗಳ ಶತದಿನೋತ್ಸವಗಳ-ಪ್ರೆಸ್ ಮೀಟ್‌ಗಳ, […] +“ಜೈ ಸಂತೋಷಿಮಾ” ಎಂಬ ಒಂದು ಚಿತ್ರ “ಉಪೇಂದ್ರ’ ಚಿತ್ರಕ್ಕಿಂತಾ ಹೆಚ್ಚು ಹಣ ಸಂಪಾದಿಸಿತು ಗೊತ್ತಾ’ ಎಂದು ಮೀಸೆ ತಿರುವುತ್ತಿದ್ದ ರಂಗಣ್ಣ ಈಗ ತಾನೂ ಒಂದು ಚಿತ್ರಕ್ಕೆ ಕಥೆ ರೆಡಿ ಮಾಡಿದ್ದೇನೆ ಎಂದು ನುಗ್ಗೇಬಿಟ್ಟ ಫೈನಾನ್‌ಷಿಯರ್‍ […] +ನಮ್ಮ ಅಪೇಕ್ಷೆಗಳ ಇಂಗಿತ ತಿಳಿದ ಜಾಹೀರಾತುದಾರರ ಹೊಸ ಅಪೇಕ್ಷೆ ನಮ್ಮಲ್ಲಿ ಕುದುರುವಂತೆ ಸೂಕ್ಷ್ಮವಾಗಿ ನಮ್ಮ ಭಾವಗಳನ್ನು ನುಡಿಸುತ್ತಾನೆ. ಅವನ ಉದ್ದೇಶ ತನ್ನ ಸರಕಿನ ಮಾರಾಟ. ತನ್ನ ಕಷ್ಟವನ್ನು ಹೇಳಿಕೊಳ್ಳಲು ಬಂದವನೊಬ್ಬ ಕೂಡ ಹೀಗೆಯೆ ನಮ್ಮ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_117.txt b/Kannada Sahitya/article_117.txt new file mode 100644 index 0000000000000000000000000000000000000000..5334eb7833911d956ec953723625d669bb8cab28 --- /dev/null +++ b/Kannada Sahitya/article_117.txt @@ -0,0 +1,26 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದು ಇಲ್ಲದ ವಿರಸವಿಂದು ಕೂರಸಿಯಾಗಿ +ಮಾತು ಮಾತಿನ ಮೊನೆಯ ಮಸೆಯಿತೆಂತು? +ನಿನ್ನೆದೆಯ ಸಂತಾಪವಿಂತು ಹರಿಯಿತೆ ಪಾಪ! +ಮೌನದೇವತೆ ಶಾಪವಿತ್ತಳೆಂತು? +ಜಗದ ವ್ಯವಹಾರಿಕತೆಗೇಕೆ ವ್ಯಥೆ ಕಿಂಕರತೆ? +ಪ್ರೀತಿ ಅಂತಃಕರಣ ನಿನ್ನದಿದೆಕೊ! +ಅದನುಳಿದರೇನುಂಟು? ಬರಿಯ ಗಾಳಿಯ ಗಂಟು! +ತೆರೆದ ಹೃಯದೊಳದನೆ ಬರಮಾಡಿಕೊ! +ಬಿಡಿಸಿದಷ್ಟೂ ಬಾಳು ಬರಿ ಗುಂಜು ತೊಡಕು +ಕಂಡಕಂಡೆಡೆಯಲ್ಲಿ ಕರುಣೆಯನೆ ಹುಡುಕು; +ಅವರಿವರ ಅಲ್ಪತನಕಿನ್ನೇನು ಬೇಕು? +ನಿನ್ನ ನೋವಿಗೆ ನಿನ್ನ ಕಂಬನಿಯೆ ಸಾಕು! +***** +ಕಲ್ಲು ಕೂತ ಮಂಪಗಳ ಮೇಲೆ ಚಿತ್ತಾರಗಳ ಎಣಿಸುತ್ತ ಕನಸ ಚಿಲಿಪಿಲಿ ಗುಟ್ಟುವ ಗಿಳಿಗಳಾಡುವ ಮಾತು- ‘ನಾವು ರಾಯನ ಅರಸಿಯರು ಅರಸುತ್ತಿದ್ದೇವೆ ಅರಸೊತ್ತಿಗೆಯ ವೈಭವ, ಕಳೆದುಹೋದ ಪೀತಾಂಬರ ಮಕರಿಕಾ ಪತ್ರದ ಮೇಲೆ ರಾಯ ತಾನೇ ಬರೆದ […] +ಪ್ರೇತ ಅಗೋಚರ, ಅಗಮ್ಯವಲ್ಲಕಲ್ಪನೆಗಾದರೂ ಸಿಗತ್ತೆ ಅದುಆದರೆ ಈ ಕಾಳ ಬೆಕ್ಕಿನ ನುಣುಪಾದ ಮೈಯಲ್ಲಿಎಷ್ಟೇ ನಿಟ್ಟಿಸಿ ನೋಡು, ದೃಷ್ಟಿಕುರುಹಿಲ್ಲದಂತೆ ಕುಸಿದು ಬಿಡುವುದು. ಕತ್ತಲೆಯಲ್ಲಿ ವೃಥಾ ಅಲೆಯುವ ಹುಚ್ಚುತಲೆಹಚ್ಚಿ ಚಚ್ಚಿ ತನ್ನ ರೋಷ ಕಳಕೊಂಡಂತೆಸುಸ್ತಲ್ಲಿ ಸಾಂತ್ವನ, ನಿನಗೆ. […] +ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_118.txt b/Kannada Sahitya/article_118.txt new file mode 100644 index 0000000000000000000000000000000000000000..29ad2ca369651735bef66b42e96b1a1f5191bfd1 --- /dev/null +++ b/Kannada Sahitya/article_118.txt @@ -0,0 +1,158 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸು. ಕೃಷ್ಣಾನಂದರ ಎದುರೂ ಕುಕ್ಕರುಗಾಲಿನಲ್ಲಿ ಕುಳಿತು ಅವರಿಂದ ಬೈಸಿಕೊಂಡಿದ್ದನಂತೆ. ಅವನೂ ಕಣ್ಣು ಕಿರಿದು ಮಾಡಿದ. ಕಣ್ಣಂಚಿನಲ್ಲಿ ಸುಕ್ಕು ಮೂಡಿದವು. ತುಟಿಗಳ ಅಂಚನ್ನು ಕೆಳಗಿಳಿಸಿ ಮಾತಾಡಬಯಸುವವನಂತೆ ಆದರೆ ಮಾತಾಡಲಾರದವನಂತೆ ಪೆಚ್ಚಾಗಿ ನಕ್ಕು ಮುಂದೆ ಹೋದ. +ಅರ್ಧದಷ್ಟು ಮೆಟ್ಟಿಲಿಳಿದವನು ಮರದ ತುಂಬ ಕೂತಿದ್ದ. ಹಾರಾಡುತ್ತಿದ್ದ. ಸುಮ್ಮನೆ ನೋಡುತ್ತಿದ್ದ, ಮೈ ಕೆರೆದುಕೊಳ್ಳುತ್ತಿದ್ದ ಕೋತಿಗಳನ್ನು ಸ್ವಲ್ಪ ಹೊತ್ತು ನೋಡಿ ಮತ್ತೆ ಮೆಟ್ಟಿಲು ಹತ್ತಿ ಬಂದೆ. ನಾನು ಕೆಲಸ ಮಾಡುವ ಪ್ರೆಸ್ಸು ಬಾಗಿಲು ಹಾಕಿದೆ. ಗುರುಮಂದಿರದಲ್ಲಿ ಒಬ್ಬರೋ ಇಬ್ಬರೋ ಬಿಕೋ ಅಂತ ಸುಮ್ಮನೆ ಕೂತಿದ್ದಾರೆ. ಗಾಳಿ ಚಳಿಯಾಗಿದೆ. ತುಂತುರು ಬೀಳುತ್ತಿದೆ. +ನಾನು ಚಿಕ್ಕಮ್ಮನ ತಂಗಿಯ ಮದುವೆಗೆ ಗುಬ್ಬಿಗೆ ಹೋಗಿದ್ದೆ. ಆಗಿನ್ನೂ ನನಗೆ ಇಪ್ಪತ್ತು ವರ್ಷ. ಮದುವೆ ಮುಗಿದ ರಾತ್ರಿ. ಬೆಂಗಳೂರು ರಸ್ತೆಯಲ್ಲಿ ಮನೆಯ ಕಡೆ ಹೊರಟಿದ್ದಾಗ ಒಂದು ಲಾರಿ ಬಂತು. ಬೆಳಕು ಕೋರೈಸುತ್ತಿತ್ತು. ಕಣ್ಣು ಮುಚ್ಚಿಕೊಂಡೆ. ಮುಚ್ಚಿಕೊಂಡ ಕಣ್ಣಿನೊಳಗೆ, ರೆಪ್ಪೆಯ ನರಗಳೂ ಕಾಣುವಂತೆ, ಬೆಳಕು ಲಾರಿ ಹೊರಟುಹೋಯಿತು. ಜೋರಾಗಿ ಶಬ್ದ ಮಾಡುತ್ತಾ. ಆಗ ಒಂದು ಕ್ಷಣ ಅನ್ನಿಸಿತು: ನನ್ನ ಮೇಲೇ ಈ ಲಾರಿ ಹೋದರೆ. ಸತ್ತರೆ ಹೇಗಿರುತ್ತೆ? ಕಣ್ಣು ತೆರೆದರೆ ಕತ್ತಲು. ಮುಂದೆ ಹೋಗುತ್ತಿರುವ ಲಾರಿಯ ಬೆಳಕು ದಾರಿ ಪಕ್ಕದ ಆಲದ ಮರದ ಬಿಳಿಲುಗಳ ಮೇಲೆ ಬಿದ್ದು ಅದು ಆಲದ ಮರವೇ ಅಲ್ಲ ಅನ್ನುವ ಹಾಗೆ ಕಾಣುತ್ತಿತ್ತು. ಚಿಕ್ಕಪ್ಪನ ಜೊತೆ ಮಾತನಾಡುತ್ತಾ ಮನೆಗೆ ಬಂದೆ. +ಮನೆಯ ಮುಂದೆ ರಾತ್ರಿ ಬಹಳ ಹೊತ್ತು ಚಿಕ್ಕಮ್ಮನ ತಂಗಿಯರ ಜೊತೆ ಹರಟೆ ಹೊಡೆದು, ತಮಾಷೆ ಮಾಡಿ, ಜೋಕು ಹೇಳಿ ನಕ್ಕು ನಗಿಸಿ ಮಲಗಿಕೊಂಡೆ. ಬೆಳಗಿನ ಜಾವ ಸುದ್ದಿ ಬಂತು. ಫೋನು ಮಾಡಿದ್ದರಂತೆ. ಕೂಡಲೆ ನಾನು ಮೈಸೂರಿಗೆ ಹೋಗಬೇಕಂತೆ. +ಹೋದೆ. ಅಪ್ಪ ಸತ್ತಿರಬಹುದೆ? ಬಸ್ಸಿನಲ್ಲಿ ಯಾರೋ ಕಾಲೇಜು ಹುಡುಗಿಯರು. ಒಬ್ಬ ಮುಸ್ಲಿಂ ಹುಡುಗಿ. ಕಪ್ಪು ದಾವಣಿ ಹಾಕಿಕೊಂಡು ತೊಡೆ ಮೇಲೆ ಎರಡು ನೋಟು ಬುಕ್ಕು ಇಟ್ಟುಕೊಂಡು ಕೂತಿದ್ದಳು. ಅವಳು ನನ್ನ ಪಕ್ಕ ಕೂತಿದ್ದರೆ, ಅವಳ ತೋಳು ನನಗೆ ತಗಲುವಂತಿದ್ದರೆ ಅಂತ ಅಂದುಕೊಳ್ಳುತ್ತ ಅಪ್ಪ ಸತ್ತು ಹೋಗಿದ್ದರೆ ಅಂತ ಆಗಾಗ ಅಂದುಕೊಳ್ಳುತ್ತ-ಬಸ್ಸು ಮೈಸೂರು ತಲುಪಿತು. +ಆಟೋ ನಮ್ಮ ಮನೆಯ ತಿರುವಿಗೆ ಬಂದಿತು. ನಮ್ಮ ಮಹಡಿಯ ಅಂಗಳದ ತುಂಬ, ಗೇಟಿನ ಹತ್ತಿರ ಕೂಡ ಜನ ಸೇರಿದ್ದರು. ಅಪ್ಪ ಸತ್ತಿದ್ದಾರೆ ಅನ್ನಿಸಿತು. +ಎರಡು ದಿನದ ಹಿದೆ ಮದುವೆಗೆ ಹೋಗುವಾಗ ಷಡಕ್ಷರ ಮಹಾಕವಿಯೇ ಅಲ್ಲ ಅಂತ ಅಪ್ಪನ ಜೊತೆ ವಾದ ಮಾಡಿ ಹೋಗಿದ್ದೆ. ನಾನು ಮತ್ತು ಪಂಡಿತಾರಾಧ್ಯ ರಸ್ತೆ ತಿರುವಿನಲ್ಲಿ ಮರೆಯಾಗುವವರೆಗೆ ಅಪ್ಪ ನಮ್ಮನ್ನೇ ನೋಡುತ್ತ ನಿಂತಿದ್ದರು. ಸುಮ್ಮನೆ ಹಿಂದಿರುಗಿದಾಗ ಕಂಡದ್ದು ಅಷ್ಟೆ. ನಾವು ನೋಡಿದೆವೆಂದು ಅಪ್ಪನಿಗೆ ತಿಳಿಯಲೆ ಇಲ್ಲ. ‘ಯಾಕೋ ಅವನು ತಿರುಗಿ ನಮ್ಮತ್ತ ನೋಡಲೇ ಇಲ್ಲ ಕಣೆ’ ಅಂತ ಅಮ್ಮನ ಹತ್ತಿರ ಪೇಚಾಡಿದ್ದರಂತೆ. +ನಾನು ಮತ್ತೆ ಮೆಟ್ಟಿಲಿಳಿದು, ರಸ್ತೆ ದಾಟಿ, ಮತ್ತಷ್ಟು ಮೆಟ್ಟಿಲಿಳಿದು ಗಂಗಾನದಿಯ ದಡಕ್ಕೆ ಹೋದೆ. ನೆಲಕ್ಕೆ ಸಿಮೆಂಟಿನ ಹಾಸು ಇತ್ತು. ಟೇಲಿಫೋನು ಕಂಬದ ವೈರು ಹಿಡಿದು, ಅದರ ಮೇಲೆ ಭಾರ ಬಿಟ್ಟು ಸುಮ್ಮನೆ ನದಿ ನೋಡುತ್ತ ನಿಂತೆ. ರಾಮಝೂಲಾದ ಮೇಲೆ ಜನ ಓಡಾಡುತ್ತಿದ್ದರು. ನನ್ನ ಬೆನ್ನ ಹಿಂದೆ, ಮೇಲೆ, ಆಸ್ಪತ್ರೆಯ ಕಿಟಿಕಿಯ ಹತ್ತಿರ ಲೀಲಾ ನಿಂತಿದ್ದಳು. ಲೀಲಾ ಮಧ್ಯ ಪ್ರದೇಶದ ಯಾವುದೋ ಪುಟ್ಟ ಊರಿನವಳು. ಸ್ಕೂಲಿನಲ್ಲಿ ಮೇಡಂ ಅಂತೆ. ದಿನಾ ಸಂಜೆ ಹದಿನೈದು ದಿಮದಿಂದ ಸಂಜೆಯ ‘ಅನುಭವಾಮೃತ’ದ ತರಗತಿಗಳಲ್ಲಿ ನನ್ನ ಪಕ್ಕದಲ್ಲೇ ಕೂರುತ್ತಿದ್ದಳು. ಜ್ಞಾನದೇವನ ಅನುಭವಾಮೃತದ ಇಂಗ್ಲಿಷ್ ಅನುವಾದ ಅವಳ ಹತ್ತಿರ ಇರಲಿಲ್ಲ. ನನ್ನ ಪುಸ್ತಕವನ್ನೆ ನೋಡುತ್ತಿದ್ದಳು. ಅವಳ ಅಕ್ಷರ ತುಂಬ ಮುದ್ದಾಗಿತ್ತು. ಆಶ್ರಮದಲ್ಲಿದ್ದಷ್ಟು ದಿನ ಅವಳು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಳು. ಬ್ರಹ್ಮಾನಂದರ ನೇರ ಎದುರಿಗೆ ಮೂಲೆಯಲ್ಲಿ ನನನ್ ಜಾಗ, ನನ್ನ ಪಕ್ಕದಲ್ಲಿ ಲೀಲಾ. ಕೆಲವು ದಿನ ಬ್ರಹ್ಮಾನಂದರ ತರಗತಿಯಲ್ಲಿ ಜನ ಜಾಸ್ತಿ ಆದಾಗ ಚಕ್ಕಂಬಟ್ಟಲು ಹಾಕಿ ಕುಳಿತ ನಮ್ಮ ಮಂಡಿಗಳು ಸ್ಪರ್ಶಿಸುತ್ತಿದ್ದವು. ಅವಳೊಡನೆ ಹೆಚ್ಚು ಮಾತೇ ಆಡಲಿಲ್ಲ. ಆಡಿದ್ದು ಒಂದೇ ದಿನ, ಸಂಜೆ. ಕೃಷ್ಣಾನಂದರೊಡನೆ ಧ್ಯಾನ ಮಾಡಿ ನಮ್ಮ ನಮ್ಮ ಕೋಣೆಗಳಿಗೆ ಹೋಗುವಾಗ ಕೇಳಿದೆ- +“ಇದೇ ಮೊದಲಾ ನೀವು ಇಲ್ಲಿಗೆ ಬಂದದ್ದು?” +“ಹೌದು.” +“ನೀವು?” ಅಂತ ಕೇಳಿದಳು. +“ಇಲ್ಲೇ ಇರುವವನು.” +“ಯಾವ ಊರು?” +“ಬೆಂಗಳೂರು. ನಿಮ್ಮದು?” +ಇಂದೂರಿನ ಹತ್ತಿರ ಒಂದು ಹಳ್ಳಿಯ ಹೆಸರು ಹೇಳಿದಳು. +“ನೀವು ಸ್ಕೀಲಿನಲ್ಲಿ ಮೇಡಂ ಇರಬೇಕು. ಅಲ್ಲವಾ?” +“ಹೌದು. ನೀವು ತುಂಬ ಜಾಣರು” ಅಂದಳು. +ಅಷ್ಟೆ. ಆದರೂ ಅಲ್ಲಿರುವಷ್ಟು ದಿನ ಅವಳನ್ನು ಗಮನಿಸುತ್ತಲೇ ಇದ್ದೆ. +ಈಗ ಲೀಲ ನನ್ನ ಬೆನ್ನ ಹಿಂದೆ. ಅಲ್ಲಿ ಮೇಲೆ, ನಿಂತಿದ್ದಳು. ನನ್ನ ಬೆನ್ನು. ಜೋರಾಗಿ ಬೀಸುವ ಗಾಳಿಗೆ ಹಾರಾಡುವ ನನ್ನ ಕೂದಲು ಇವೆಲ್ಲ ಅವಳಿಗೆ ನನ್ನ, ನಿಶ್ಚಲವಾಗಿ ನಿಂತ ನನ್ನ ಮನಸ್ಸಿನ ವಿಷಾದವನ್ನು ತಲುಪಿಸುತ್ತಿರಬಹುದು ಅಂದುಕೊಂಡೆ. ಇನ್ನೇನು ಈಗ ಸಂಸ್ಕಾರ ಶುರುವಾಗುತ್ತದೆ. +ಹೋದತಕ್ಷಣ ನನಗೆ ಎಲ್ಲರೂ ಜಾಗ ಬಿಟ್ಟರು. ಹಾಲಿನಲ್ಲಿ ನಮ್ಮಪ್ಪ ಮಂಚದ ಮೇಲೆ ಮಲಗಿಬಿಟ್ಟಿದ್ದರು. ಅಮ್ಮ ಅಳುತ್ತಿದ್ದರು. ನಾನು ಅಮ್ಮನ ತೊಡೆಯಲ್ಲಿ ತಲೆ ಇಟ್ಟೆ. ಅಳು ಬರಲಿಲ್ಲ. ಅಥವ ಅಳಲು ಆಗಲಿಲ್ಲ. +ಹೊರಗೆ ಕರೆದುಕೊಂಡು ಬಂದರು. ವರಾಂಡದಲ್ಲಿ ಕೂತೆ. ಕೆಂಪು ಸಿಮೆಂಟಿನ ನೆಲದಲ್ಲಿ ಕೊರೆದಿದ್ದ ಎರಡು ನೇರ ಸರಳರೇಖೆಗಳ ನಡುವಿನ ಜಾಗವನ್ನು ಸುಮ್ಮನೆ ನೋಡುತ್ತ ಕುಳಿತೆ. ವಿಷಾದ ಖಾಲಿ. ನಾನು ಇರಲೇ ಇಲ್ಲವೋ ಏನೋ. +ಆ ಸನ್ಯಾಸಿ ಬಹಳ ಚೆನ್ನಾಗಿ ಹಾಡುತ್ತಿದ್ದನಂತೆ. ಅವನಿಗೆ ಹುಚ್ಚು ಹಿಡಿದಿತ್ತಂತೆ. +ಆಗಾಗ ಹಿಡಿಯುತ್ತಿತ್ತಂತೆ. ಅವನನ್ನು ಮಂಚಕ್ಕೆ ಕಟ್ಟಿಹಾಕಿದ್ದರಂತೆ. ಅವನು ರಾತ್ರಿ ಹೊತ್ತು ತಪ್ಪಿಸಿಕೊಂಡು ಓಡಿಹೋಗುತ್ತಿದ್ದನಂತೆ. ಚೆನ್ನಾಗಿದ್ದಾಗ ಅವನು ಆಸ್ಪತ್ರೆಯ ರೋಗಿಗಳನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಅಡುಗೆ ಮನೆಯ ಸ್ಟೋರಿನಲ್ಲೂ ಕೆಲಸ ಮಾಡುತ್ತಿದ್ದನಂತೆ. ಅವನು ಸಾಯಲಿಲ್ಲವಂತೆ. ಅಳುತ್ತಿದ್ದನಂತೆ. ಆತ್ಮಹತ್ಯೆ ಮಾಡಿಕೊಂಡನಂತೆ. ನಾನು ನೋಡದ ಸನ್ಯಾಸಿಯ ಕೇಳಿದ ಬದುಕು. ನಾನು ಹೀಗೆ ಇಲ್ಲೇ ಇದ್ದುಬಿಡಲೇ. +ನಮ್ಮಪ್ಪನಿಗೆ ಕೊನೆಯ ಸ್ನಾನ ಮಾಡಿಸುತ್ತಿದ್ದರು. ಮನೆಯ ಹೊರಗೆ, ಸಾಯಂಕಾಲ. ಪಂಡಿತ ಹೇಳಿದ-“ನಿನಗೆ ಅಪ್ಪಾಜಿ ಸತ್ತುಹೋಗಿರಬಹುದು ಅನ್ನಿಸಿತ್ತಾ?” ಲಾರಿ ಜ್ಞಾಪಕ ಬಂತು ರಾತ್ರಿ ಊಟ ಮಾಡಿ, ಹಾಲು ಕುಡಿದು, ಅಮ್ಮ ವೀಣೆ ನುಡಿಸಿದ್ದು ಕೇಳುತ್ತಾ ಮಲಗಿ ಹಗೇ ಸತ್ತುಹೋದರಂತೆ. ಅಪ್ಪನಿಗೆ ಸ್ನಾನ ಮಾಡಿಸುವುದು ನೋಡಿ ತುಂಬ ಅಳು ಬಂತು. ಪಂಡಿತನ ಭುಜಕ್ಕೆ ಒರಗಿ ಅತ್ತುಬಿಟ್ಟೆ. +ದೋಣಿಯನ್ನು ಬಾಡಿಗೆಗೆ ತೆಗೆದುಕೊಂಡಿದ್ದರು. ನಾಲ್ಕು ಜನ ಸನ್ಯಾಸಿಗಳು ಸತ್ತ ಸನ್ಯಾಸಿಯ ಹೆಣ ಅದರಲ್ಲಿಟ್ತರು. ಗಂಗಾ ನದಿಯಲ್ಲಿ ದೋಣಿ ಡರ್ ರ್ ಮೋಟರು ಸದ್ದು ಮಾಡುತ್ತ ಹೊರಟಿತು. ಗಂಗೆಯಲ್ಲಿ ನೇರ ಹೊರಟು ನಟ್ಟನಡುವೆ ನಾಲ್ಕೋ ಆರೋ ಪ್ರದಕ್ಷಿಣೆ ಹಾಕಿತು. ಇದ್ದಕ್ಕಿದ್ದಂತೆ, ಗಂಗೆಯ ನಟ್ಟನಡುವೆ ಸನ್ಯಾಸಿಯ ಹೆಣವನ್ನು ಡುಬಕ್ಕನೆ ನದಿಗೆ ಹಾಕಿಬಿಟ್ಟರು. ಸ್ವಲ್ಪ ನೀರು ಚಿಮ್ಮಿ ಹೆಣ ಮುಳುಗಿ ಹೋಯಿತು. +ನಾನು ತೀರ ಚಿಕ್ಕವನಿದ್ದಾಗ ಅಪ್ಪನೊಡನೆ ಉಲ್ಲಾಳಕ್ಕೆ ಹೋಗಿದ್ದೆ. ದೋಣಿಯಲ್ಲಿ ಹೋದೆವು. ಹುಟ್ಟುಹಾಕುವ ದೋಣಿ. ನೇತ್ರಾವತಿಯಲ್ಲಿ ಹೋಗುತ್ತಿದ್ದಾಗ ನನ್ನ ಎದುರಿಗೇ ಒಂದು ನಾಯಿಯ ಹೆಣ ತೇಲಿಕೊಂಡು ಬರುತ್ತಿತ್ತು. ಅದರ ತಲೆ ಮುಳುಗಿತ್ತು. ಹಿಂದಿನ ಎರಡು ಕಾಲು ಮಾತ್ರ ನದಿಯ ಮೇಲೆ ಆಕಾಶ ನೋಡುತ್ತ ಎತ್ತಿಕೊಂಡಿದ್ದವು. ನಮ್ಮ ದೋಣಿಯನ್ನು ದಾಟಿ ಸತ್ತ ನಾಯಿ ಸಮುದ್ರದ ಕಡೆ ತೇಲಿಕೊಂಡು ಹೋಯಿತು. ವರ್ಷಗಳೆಷ್ಟೋ ಕಳೆದ ಆಮೇಲೂ ಕನಸಿನಲ್ಲಿ ಶಿವಮೊಗ್ಗೆಯ ತುಂಗೆಯಲ್ಲಿ ಆ ನಾಯಿಯ ಹೆಣ ತೇಲಿಬಂದಂತೆ ಕಂಡದ್ದಿದೆ. ಅವತ್ತು ಸಾಯಂಕಾಲ ಸ್ಮಶಾನದಲ್ಲಿ ಅಪ್ಪನ ತಲೆಯ ಮೇಲೆ ಒಬ್ಬ. ನನ್ನ ವಿದ್ಯಾರ್ಥಿಯೇ ಆಗಿದ್ದ. ಸ್ವಾಮಿಯ ಪಾದಗಳನ್ನು ತೊಳೆಯುವಾಗ ತುಂಬ ಸಿಟ್ಟು ಬಂದಿತ್ತು. ಅವನು ಸ್ವಾಮಿಯಾದರೂ ಯಾವ ಥರದಲ್ಲೂ ಅಪ್ಪನಿಗಿಂತ ದೊಡ್ಡ ಮನುಷ್ಯ ಅಲ್ಲ ಅನ್ನುವ, ಅವನ ಕಾಲು ತೊಳೆಯಬೇಕಲ್ಲ ಅನ್ನುವ ಸಿಟ್ಟು. ಜೊತೆಗೆ ಇನ್ನೆಂದೂ ಅಪ್ಪನ ಮುಖ ನೋಡಲಾರೆ ಅನ್ನುವ ಅಳು. +ನಾನು ಇಲ್ಲೆ ಇದ್ದರೆ ನನ್ನ ಸಾವೂ ಹೀಗೇ ಆದೀತೇನೋ. ಏನೂ ಸಂಬಂಧ ಇಲ್ಲದ ಯಾರೋ ಒಬ್ಬ ಹೀಗೇ ನನ್ನ ಗಂಗೆ ಪಾಲು ಮಾಡುವುದು ನೋಡುತ್ತ ನಿಂತಿರುತ್ತಾನೋ ಏನೋ. ಅವನ ಹಿಂದೆ ಇನ್ನು ಯಾರೋ ಹುಡುಗಿ…. +ಅಪ್ಪ ಸತ್ತು ಇಪ್ಪತ್ತು ವರ್ಷ ಆಯಿತು. ತಾನು ಒಪ್ಪದ ಹುಡುಗಿಯನ್ನು ಮದುವೆ ಆದರೆ ಸಾಯುವುದಾಗಿ ಹೆದರಿಸಿದ ಅಮ್ಮ ಮತ್ತು ಅಮ್ಮನನ್ನು ಎದುರಿಸಿ ಮದುವೆಯಾದ ನಾನು ಇನ್ನೂ ಇದ್ದೇವೆ. ನಾನು ಮದುವೆಯಾದ ಹುಡುಗಿ ಈಗ ನಾನು ಇಲ್ಲಿರುವುದು ಗೊತ್ತೇ ಇಲ್ಲದೆ ಅಲ್ಲಿ ಇದ್ದಾಳೆ. ಅವರಿಗೆ ನಾನು ನನಗೆ ಅವರು ಸತ್ತುಹೋಗಿಲ್ಲವೇ? ಇಲ್ಲೇ ಇದ್ದುಬಿಟ್ಟರೆ ಏನಂತೆ? ಇದ್ದರೆ ಆಯಿತು. +ಮತ್ತೆ ಆರನೆಯ ದಿನವೇ ಬರೆದದ್ದು +ಎಂಥ ಕಣ್ಣು ಎಂಥಾ ಕಣ್ಣು ನಿನ್ನವೇ. ಕಣ್ಣುಗಳ ನೆನಪು ನಾಡಿನಲ್ಲಿ ಅಕ್ಷರಶಃ ಮೈಮರೆತು ಅಲೆದಿದ್ದೆ. ಹೊಳೆಯ ಸುಳಿಗಳಿಗಿಂತ ಆಳ ಕಣ್ಣಿನ ಚೆಲುವು. ಕಣ್ಣುಗಳು ನನ್ನನ್ನು ಸುಳಿಯಲ್ಲಿ ಮುಳುಗಿಸಿ ಹೀಗೆ ಇಲ್ಲಿ ಹೃಷಿಕೇಶದ ಗಂಗೆಯ ದಡದಲ್ಲಿ ತೇಲಿಸಿವೆ. +ಸುಳ್ಳು. ಅದು ಒಂದು ಕರಣ. ಅದೊಂದು ಕಾರಣ ಅಲ್ಲ. ಕಾರಣ ಅಥವ ಕಾರಣಗಳು ಏನಿದ್ದರೂ ನಾವು ಸುಮ್ಮನಿರಲಾರದೆ ಆಮೇಲೆ ಹುಡುಕಿಕೊಂಡವುಗಳು. +ಗಣೇಶಪುರಿ ಬಂದಿದ್ದಾರೆ. ನಾಳೆ ಬರುತ್ತಾರೆ. ಅಂದಾಗ ಸಾಧಕ ನಿವಾಸದಲ್ಲೆಲ್ಲ ಹುರುಪು. ನನಗೆ ತಳಮಳ ಆಗುತ್ತಿತ್ತು. ಅವರೆದುರು ಏನು ಹೇಳಲಿ ಹೇಗೆ ಹೇಳಲಿ. ಗುಜರಾತಿನ ಮುದುಕ ಸಂತೋಷವಾಗಿದ್ದ. ಸದ್ಯ ನಾಳೆ ಗುರುವಿನ ದರ್ಶನ ಪಡೆದು ಊರಿಗೆ ಹೋಗಬಹುದು. ಮನೆ ಬಿಟ್ಟು, ಅಂಗಡಿ ಬಿಟ್ಟು ತಿಂಗಳಾಯಿತು. ಸದ್ಯ ಈ ಸಾರಿ ಯಾತ್ರೆ ಚೆನ್ನಾಗಿ ಆಯಿತು. ಹೀಗಂದ, ಬಿಳೀ ಸೀರೆ ಉಟ್ಟ ಹೆಂದಸು ತನ್ನ ರೂಮಿನ ಮುಂದೆ ಓಡಾಡುತ್ತಿದ್ದಳು. ದಿನಾ ಊಟ ಅವಳಿದ್ದ ರೂಮಿಗೇ ಹೋಗುತ್ತಿತ್ತು. ಯಾರೋ ಅವಳು. ಆ ಆಶ್ರಮಕ್ಕೆ ತುಂಬ ಹಣ ಕೊಟ್ಟವಳೋ? ತುಂಬ ದುಃಳಿತಳೋ? ಹಣೇಸ್ಗಪುರಿ ಒಪ್ಪಿದರೆ. ನಾನು ಇಲ್ಲೇ ಇರುವಂತಾದರೆ ಅವಳು ನನ್ನ ಬಗ್ಗೆ ಏನೆಂದುಕೊಳ್ಳಬಹುದೋ? +ಒಂದು ವಾರದ ಹಿಂದಷ್ಟೆ ಸಾಧಕನಿವಾಸದಲ್ಲಿ ದೊಡ್ಡ ಭಂಡಾರ. ಅಂದರೆ ವಿಶೇಷ ಊಟ. ಎಂಥದೋ ಪೌರ್ಣಮಿಯ ನೆಪ. ಅಲ್ಲಿದ್ದ ನಮಗೆಲ್ಲ ಒಂದೊಂದು ಕೆಲಸ. ನನಗೆ ನೀರು ಹಂಚುವ ಕೆಲಸವಂತೆ. ಅವರು ಹಿಂದಿಯಲ್ಲಿ ಎಂಥದೋ ಪದ ಬಳಸಿ ಹೇಳಿದರು. ಅರೆಬರೆ ಇಂಗ್ಲೀಷು ಗೊತ್ತಿದ್ದ ಬೊಂಬಾಯಿಯ ಗಡ್ಡದ ಸನ್ಯಾಸಿಯನ್ನು ಕೇಳಿ ಖಚಿತಮಾಡಿಕೊಂಡೆ. ಗೀತಾಜಯಂತಿಯಂತೆ. +ಮಡಕೆಯ ತಟ್ಟೆಗಳು. ಮಣ್ಣಿನ ಕುಡಿಕೆಗಳು. ಸಿಹಿ, ಪೂರಿ, ಪಲ್ಯ, ಅನ್ನ, ಸಾರು. ಹರಿದ್ವಾರದ ಬಹುಶಃ ಎಲ್ಲ ಸನ್ಯಾಸಿಗಳೂ ಸೇರಿದ್ದರು. ಅವರ ಕೈಯಲ್ಲೆಲ್ಲ ಭಂಡಾರದ ಒಂದೊಂದು ಪಾಸು. “ಪಾನೀ, ಪಾನೀ.” ತಪ್ಪು. ಪಾನಿ ಅನ್ನಬಾರದು ನೀರನ್ನು. “ಜಲ” ಅನ್ನಬೇಕಂತೆ. ಮಧ್ಯಾಹ್ನದ ಬಿಸಿಲಿನಲ್ಲಿ ಒಮ್ಮೆಗೆ ಇನ್ನೂರರಂತೆ ನಾಲ್ಕೈದು ಪಂಕ್ತಿ ಊಟ. ಊಟ ಬಡಿಸಲು ಒಬ್ಬೊಬ್ಬರಿಗೆ ಒಂದೊಂದು ಕೆಲಸ. ಎಲ್ಲರಿಗೂ ಜಲ ಕುಡಿಸಿ, ಪೆಕರನಂತೆ ಬಿಸಿಲು ಮಚ್ಚು ಹತ್ತುತ್ತ ಇಳಿಯುತ್ತ ಹತ್ತುತ್ತ ಕೇಳಿದವರಿಗೆಲ್ಲ ನೀರು ಕುಡಿಸುತ್ತ ಸುಸ್ತಾದೆ. ಬಿಳೀ ಸೀರೆಯ ಹೆಂಗಸು ಮಹಿಳೆಯರ ಪಂಕಿಯಲ್ಲಿ ಎದ್ದುಕಾಣುತ್ತಿದ್ದಳು. ನಾನೂ ಅವರ ಮಠದವನೇ ಆಗಿಬಿಟ್ಟೆನೋ. ಕೆಲಸ ಮಾಡುತ್ತಿದ್ದೇನಲ್ಲ ಅಂತ ಆಶ್ಚರ್ಯಪಟ್ಟಹಾಗಿತ್ತು. ಊಟ ಮಾಡಿದವರಿಗೆಲ್ಲ ಹತ್ತು ರೂಪಾಯಿ ತಲಾ ದಕ್ಷಿಣೆ ಹಂಚುತ್ತ ಬಂದರು. ಕೆಲವರಿಗೆ ಐದು. ಕಡಿಮೆ ಸಿಕ್ಕವರು ಜಾಸ್ತಿ ಸಿಕ್ಕಬೇಕೆಂದು ಜಗಳ ತೆಗೆದರು. ಹೊರಗೆ ಭಂಡಾರದ ಪಾಸು ಸಿಗದವರು ನಮಗೆ ಯಾಕೆ ಪಾಸು ಇಲ್ಲ ಅಂತ ಗಲಾಟೆ ಮಾಡುತ್ತಿದ್ದರು. ಇನ್ನೂ ಕೆಲವು ಭಿಕ್ಷುಕರು ಊಟ ಮುಗಿಯುವುದನ್ನು ಕಾಯುತ್ತಿದ್ದರು. ನನಗೆ ಮತ್ತು ಊಟ ಬಡಿಸಿದ ಹುಡುಗರಿಗೆ ಇಪ್ಪತ್ತು ರೂಪಾಯಿ ಕೊಟ್ಟರು. ನಮ್ಮ ಕೆಲಸದ ಋಣ ಬೇಡವೆಂದೆ? ದಕ್ಷಿಣೆ ಎಂದೆ? ಕೂಲಿ ಎಂದೆ? ನನ್ನ ಖರ್ಚಾಗುತ್ತಿದ್ದ ಹಣಕ್ಕೆ ಇಪ್ಪತ್ತು ರೂಪಾಯಿ ಬಂದು ಸೇರಿತಲ್ಲ ಎಂದು ಸಂತೋಷವೂ ಆಯಿತು. +ಗಣೇಶಪುರಿ ಬಂದಿದ್ದಾರೆ. ಬೆಳಗಿನ ಜಾವ ಕಾಣಲಿಲ್ಲ. ಅಲ್ಲಿನ ಪ್ರಧಾನಮಂತ್ರಿಯನ್ನು ಕೇಳಿದೆ. ಎಂಟುಗಂಟೆಗೆ ಬಂದು ನೋಡು ಅಂದ. +ಮತ್ತೆ ಬರವಣಿಗೆಯ ಏಳನೆಯ ದಿನ +ಅದಕ್ಕೇ ಮುಳುಗುವುದಕ್ಕೆ ಭಯ ನನಗೆ. ನೆನಪು ಆಗಿ ಉಳಿದುಕೊಂಡಿದೆ ಎಂದೇ ಗೊತ್ತಿಲ್ಲದಿದ್ದ ಅಸಂಖ್ಯಾತ ವಿವರಗಳು ಒಮ್ಮೆಲೇ, ಅವೆಲ್ಲ ಈಗಲೇ ಆಗುತ್ತಿವೆಯೇನೋ ಎಂಬಂತೆ ಘಾತಿಸುತ್ತವೆ – ಬದರಿಯ ಬಳಿ, ಇಂಡಿಯಾದ ಕೊನೆಯ ಹಳ್ಳಿ ಮಾನಾವನ್ನು ದಾಟಿದಮೇಲೆ ಸಿಗುವ ಭೀಮಫೂಲ್‌ನ ಆರ್ಭಟಿಸುವ, ಆ‌ಆರ್ಭರ್ಭಟಿಸುವ ಪ್ರಚಂಡ ಭಯಂಕರ ವೇಗದ ಜಲಪಾತದ ಹಾಗೆ. ತುಂಬಿ ಮೊರೆಯುವ ನೂರು ಜೋಗ್ ಗಳನ್ನು ನಲವತ್ತು ಅಡಿಯ ಇಕ್ಕಟ್ಟಿನಲ್ಲಿ ಇರುಕಿಸಿದಹಾಗೆ ಅದು. +ಪಾಂಡವರು ಇಲ್ಲಿಂದ ಸ್ವರ್ಗಕ್ಕೆ ಹೋದರಂತೆ. ದಾರಿಗಡ್ಡವಾದ ಜಲಪಾತ. ದ್ರೌಪದಿಯೋ ಮಿಕ್ಕ ಪಾಂಡವರೋ ದಾಟಲೆಂದು ಭೀಮ ಎರಡೂ ದಂಡೆಗೆ ಅಡ್ಡಮಲಗಿದನಂತೆ. ಹಾಗೇ ಕಲ್ಲಾಗಿಬಿಟ್ಟನೋ! ಒಂದು ಕಲ್ಲು ಸೇತುವೆಯ ರೂಪದಲ್ಲಿ ಅಡ್ಡಾದಿಡ್ಡಿಯಾಗಿ ಜಲಪಾತದ ಬಳಿ ಇದೆ. ನಮ್ಮವರೆ ಯಾರೋ ವಿಚಾರಿಸಿ ತಂದ ಮಾಹಿತಿ ಅದು. ಅದು ಸರಸ್ವತಿ ನದಿಯಂತೆ. ಸ್ಫೂರ್ತಿಯೋ ನೆನಪೋ ಅವುಗಳ ದೇವತೆ ಸರಸ್ವತಿಯೋ ಈ ವೇಗದಲ್ಲಿ ಘಾತಿಸಿದರೆ ಗತಿಯೇನು? +ಎರಡೂ ಬದಿಗಳಲ್ಲಿ ಬಂಡೆ. ಬಂಡೆಗಳು. ಕಪ್ಪು ಕಪ್ಪು, ಆನೆ ಬಂಡೆಗಳು. ಭೀಮ ಬಂಡೆಗಳು. ಬೃಹತ್, ಕಠಿಣ, ಕ್ರೂರ, ಬಂಡೆಗಳು. ದುರ್ದಮ್ಯ. ಯಾವುದು? ಕಲ್ಲೋ ನೀರೋ? ತಟ್ಟನೆ ಪ್ರತ್ಯಕ್ಷವಾದಂತೆ ಕಾಣುವ, ನಮ್ಮ ಮೈಯೆಲ್ಲ ಕಂಪಿಸುವ ಕಿವಿಯೇ ಆಗಿಬಿಟ್ಟಿದೆ ಅನಿಸಿಬಿಡುವ, ಗೋಡೆಯಂತ ಬೆಟ್ಟದ ಮೇಲಿಂದ ಬೀಳುವ ವೇಗದಲ್ಲಿ ಕ್ಷಣಕ್ಷಣಕ್ಕೂ ರಭಸ ನೂರ್ಮಡಿಯಾಗುತ್ತ, ಮಣ್ಣನ್ನು ಕೊಚ್ಚಿ, ಬಿಳುಪು ಕೆಂಪಾಗಿ, ಕೆಂಪು ನೀರಿನ ಬಿಳುಪನ್ನು ಪೂರ್ತಿ ಮರೆಮಾಡದೆ, ನಿಷ್ಕರುಣೆಯಿಂದೆಂಬಂತೆ, ಅಲ್ಲ, ಸಹಜವಾಗಿ, ಕರುಣೆ ನಿಷ್ಕರುಣೆಯೇನೇನೂ ಅಲ್ಲದ, ತಾನು ವೇಗ ಮಾತ್ರ, ಬೀಳುತ್ತಿರುವ ನೀರು ಮಾತ್ರ, ಚಿಮ್ಮುವ ಹನಿ ಹೊಗೆ ಮಾತ್ರ, ಆರ್ಭಟ ಮಾತ್ರ ಎಂಬಂತೆ ಧುಮುಕುವ ಜಲದ ಅನಿವಾರ್ಯ ಪತನ ಪತನದ ಆಘಾತ. ಎಷ್ಟು ಲಕ್ಷ ವರ್ಷಗಳಿಂದ ಈ ಬಂಡೆಗಳನ್ನು ಅಪ್ಪಳಿಸಿದೆಯೋ. ನುಗ್ಗಿ ಬಿದ್ದು ನುಗ್ಗಿ ಹರಿಯುವ ದಿಕ್ಕಿಗೆ ವೇಗಕ್ಕೆ ಅನುಗುಣವಾಗಿ ಬಂಡೆಗಳು ಸವೆದು ಸವೆದು ನುಣ್ಣಗಾಗಿ, ಕಲ್ಲೆಲ್ಲ ಬೆಣ್ಣೆಯಾಗಿಬಿಟ್ಟಂತೆ ವಿಚಿತ್ರ ವಿನ್ಯಾಸಗಳು. ತೀರ್ಥಹಳ್ಳಿಯ ಹತ್ತಿರ ನದಿಯಲ್ಲಿ ಬಂಡೆಗಳು ಹೀಗೇ ಹರಿವ ನೀರಿಗೆ ಸಿಕ್ಕಿಬಿದ್ದು ನಮ್ಮ ಮನಸ್ಸಿನ ವಿಚಿತ್ರಗಳಿಗೇ ಆಕಾರ ಕೊಟ್ಟಂತೆ ಆಗಿಬಿಟ್ಟಿವೆಯಲ್ಲ ಅದನ್ನೆ ನೂರು ಪಟ್ಟು ಹೆಚ್ಚಿಸಿ ದೊಡ್ಡ ಭೂತಗನ್ನಡಿಯ ಆಚೆ ಬದಿ ನಿಂತು ನೋಡಿದಂತೆ ಆಗುತ್ತದೆ ಇಲ್ಲಿ. ಘರ್ಷಣೆ ಎಂದರೆ ಇದು. ಲಕ್ಷ ಲಕ್ಷ ವರ್ಷಗಳಿಂದ, ಒಂದು ಅರೆ ಕ್ಷಣವೂ ತಪ್ಪದಂತೆ, ಹೀಗೆ ಇಲ್ಲಿ ಈಗ ಬರೆಯುತ್ತಿರುವ ಹೊತ್ತಿನಲ್ಲೂ ಅಲ್ಲಿ ನಡೆದೇ ಇರುವ ಘರ್ಷಣೆ. ಗೊತ್ತು ಇಲ್ಲದ, ಗುರಿ ಇಲ್ಲದ, ಆಗುತ್ತಿರುವ, ಆಗುತ್ತಲೇ ಇರುವ ಘರ್ಷಣೆ. +ಹೇಮಕುಂಡದ ನೀರು ಪ್ರಶಾಂತವಾಗಿತ್ತು-ಮೇಲೆಲ್ಲ ಹೆಪ್ಪುಗಟ್ಟಿ ಚಳಿಯಲ್ಲಿ ನೀರ ಪದರದ ಮೇಲೆಲ್ಲ ಹಬೆಯಾಡುತ್ತ, ಹಿಮದ ತೆಳು ಹಲಗೆಗಳು ಒಡೆದು ತೇಲುತ್ತ, ನನ್ನ ಬೆರಳು ಮಾತ್ರ ನೀರನ್ನು ಮುಟ್ಟಿದವು. ಬಹುಶಃ ಸುತ್ತ ಇರುವ ಏಳು ಶಿಖರಗಳಷ್ಟೆ ಆಳ ಇದೆಯೋ? ಮುಟ್ಟಲಾಗದ ನೀರು. ಒಳಕ್ಕೆ ಬಾ ಎಂದು ಕರೆಯುವ, ಅಂಚನ್ನು ದಾಟಿ ಸ್ವಲ್ಪ ಮುಂದೆ ಹೋದರೆ ಖಾತರಿಯಾಗಿ ಇಲ್ಲವಾಗಿಸಿಬಿಡುವ ಸಾಯಿಸಿಬಿಡುವ ನೀರು. +ಪ್ರವಾಸಿಯಾಗಿ ಹೋಗಿ. ಗೆಳೆಯರೊಡನೆ ನಿಂತು. ಆಹಾ ಅಂದು ಓಹೋ ಅಂದು. ಕ್ಯಾಮರಾದಲ್ಲಿ ಫೊಟೋ ಹಿಡಿದು, ಮಾತಿನಲ್ಲಿ ವಿವರಿಸಿ ತಿಳಿದುಬಿಟ್ಟೆ. ತಿಳಿಸಿಬಿಟ್ಟೆ ಎಂಬುದೆಲ್ಲ ಬರೀ ಭ್ರಮೆ, ಸುಳ್ಳು. ಗೊತ್ತಿದೆ ಗುರಿಯಿದೆ ಅಂತೆಲ್ಲ ನಂಬಿಕೊಂಡಾಗ ಆಗುವುದೇ ಹಾಗೆ. ಸುಮ್ಮನೆ ಇರುವ ಅಗಾಧ ಶಕ್ತಿ ಮತ್ತು ಅದರ ಎದುರಿಗೆ ನಿಶ್ಯಕ್ತ ಮೈ. ನಿಶ್ಯಕ್ತ ಬುದ್ಧಿ, ನಿಶ್ಯಕ್ತ ಮನಸ್ಸು. +ಎರಡು ದಿನದಿಂದ ನೆನಪು ನಿಶ್ಯಕ್ತಿ ತಂದಿದೆ. ಅಥವ ಗೊತ್ತುಗುರಿ ಇಲ್ಲದ ನಿಶ್ಯಕ್ತಿ. ಸ್ವಲ್ಪ ಪಾದ ಮುಳುಗಿದರೂ ಸಾಕು, ಪಾದದ ಬೆರಳು ಸೋಕಿದರೂ ಸಾಕು, ಇಡೀ ಮುಳುಗಿದಂತೆಯೇ. ಇಷ್ಟುವರ್ಷ ಆದಮೇಲೂ ಈಗ ಮೈಗೆಲ್ಲ ನೆನಪು ಮೆತ್ತಿಕೊಂಡು ಒರೆಸಿಕೊಳ್ಳುವುದಕ್ಕೆ ಒಣಗಿಸಿಕೊಳ್ಳುವುದಕ್ಕೆ ಆಗದೆ ಮನಸ್ಸಿನ ಹೊಂಡದಲ್ಲಿ ಸುಮ್ಮನೆ ಬಿದ್ದಿರುವ ಆಸೆ ಆಗುತ್ತಿದೆ. +ಮೈಸೂರಿನಲ್ಲಿ ಸ್ಮಶಾನದಿಂದ ನಡೆದುಕೊಂಡು ಬರುತ್ತಿದ್ದೇನೆ. ಕತ್ತಲಾಗುತ್ತಿದೆ. ಜೊತೆಗೆ ಯಾರೋ ಇದ್ದಾರೆ. ಎದುರಿಗೆ ಇನ್ಯಾರೋ ಸಿಕ್ಕರು. “ಏನು ಈ ಕಡೆ? ನಿಮ್ಮ ತಂದೆಯವರನ್ನು ನೋಡದೆ ಬಹಳ ದಿನ ಆಯಿತು. ಊರಲಿಲ್ಲವೇ?” ಅಂತ ಕೇಳಿದರು. “ಹೋಗಿಬಿಟ್ಟರು” ಅಂದೆ. ಆಘಾತವಾದಂತಾಗಿ ನಿಂತುಬಿಟ್ಟರು. ನಾನೂ ನಿಂತೆ. ಆಮೇಲೆ ಸುಮ್ಮನೆ ಹೋದೆ. ಮನೆಗೆ ಹೋದಮೆಲೆ ಬಿಸಿನೀರಿನ ಸ್ನಾನ ಹಿತ ಅನ್ನಿಸಿತು. ಹುಳಿಯನ್ನದ ರುಚಿ ನಾಲಗೆಗೆ ತಿಳಿಯಿತು. ರಾತ್ರಿ ಒಂದು ಹೊತ್ತಿನಲ್ಲಿ ಅಮ್ಮ ಎದ್ದು ಅಳುತ್ತ ಕೆದರಿದ ತಲೆಗೂದಲನ್ನು ಸರಿಯಾಗಿ ಗಂಟುಹಾಕಿಕೊಂಡಾಗ ಪರವಾಗಿಲ್ಲ, ಮತ್ತೆ ಮಾಮೂಲಾಗುತ್ತಿದ್ದಾರೆ ನಿಧಾನವಾಗಿ ಅಂತ ಸಮಾಧಾನವಾಯಿತು. +ಎಂದಿನಂತೆ ಬೆಳಗಿನ ಜಾವ ನಾಲ್ಕೂವರೆಗೇ ಎಚ್ಚರವಾಯಿತು. ನನ್ನ ಸಹ-ವಾಸಿ, ತಮಿಳುನಾಡಿನ ಕೃಷ್ಣಮೂರ್ತಿ ಇನ್ನೂ ಬಿಗಿಯಾಗಿ ಹೊದ್ದು ಮಲಗಿದ್ದ. ಎಂದಿನಂತೆ. ಹಿಮಾಲಯದ ಚಳಿಗಾಲ. ಆಶ್ರಮದ ಜನರಿಗೆಲ್ಲ ನೀರು ಕಾಯಿಸುವ ಬಚ್ಚಲಮನೆಗೆ ಹೋದೆ. ಒಬ್ಬ ಮನುಷ್ಯ ದಿನಾ ಬೆಳಗಿನ ಮೂರು ಗಂಟೆಗೇ ಬಂದು ನೀರೊಲೆಗೆ ದೊಡ್ಡದಿಮ್ಮಿ ಒಡ್ಡಿ ನೀರು ಕಾಯಿಸುತ್ತ ಕೂತಿರುತ್ತಿದ್ದ. ನೀರೊಲೆಯ ಮುಂದೆ ಬೆಂಕಿಯ ಝಳ ಹಿತವಾಗಿತ್ತು. ಎಂದಿನಂತೆ. ಎಂದಿನಂತೆ ಅಲ್ಲಿ ಸ್ವಲ್ಪ ಹೊತ್ತು ಕೂತು ಸ್ನಾನಕ್ಕೆ ಮೊದಲು ಮೈ ಕಾಯಿಸಿಕೊಂಡೆ. ಆಶ್ರಮದ ಜನರಿಗೆ ಅಡುಗೆ ಮಾಡುವ ತೆಲುಗ ಮುದುಕ ಸ್ತೋತ್ರ ಹೇಳುತ್ತ ಸ್ನಾನ ಮಾಡುತ್ತಿದ್ದ. ಎಂದಿನಂತೆ. ಇನ್ನೊಂದು ಬಕೆಟ್ಟು ಬಿಸಿನೀರು ಕೃಷ್ಣಮೂರ್ತಿಗೆ ಒಯ್ದೆ. ಐದು ಗಂಟೆ. ರಾಧಾಕೃಷ್ಣಾನಂದ ಬೆಳಗಿನ ಧ್ಯಾನಕ್ಕೆ ಗುರುಮಂದಿರಕ್ಕೆ ಬಂದಿದ್ದರು. ಎಂದಿನಂತೆ. ಮಂದಪ್ರಕಾಶದ ಒಂದು ದೀಪ ಉರಿಯುತ್ತಿತ್ತು. ಎಂದಿನಂತೆ. ಕೆನಡಾದ ಮುದುಕ, ಅವನನ್ನು ಎಲ್ಲರೂ ಬಿಲ್ಲಿ ಅನ್ನುತ್ತಿದ್ದರು. ತನ್ನದೇ ಪುಟ್ಟ ಜಮಖಾನ ಹಾಸಿ ಕುಳಿತು ಧ್ಯಾನ ಮಾಡುತ್ತಿದ್ದ. ನಾವು ನಾಲ್ಕೇ ಜನ. ಮೌನ, ನಿಶ್ಯಬ್ಧ, ಕಣ್ಣು ಮುಚ್ಚಿ ಶಾಂತವಾಗಿ ಕೂತಿರುವಾಗ ಹೊರಗೆಲ್ಲ ಚಳಿಗಾಲದ ಬೆಳಗು ಆಗುತ್ತಿರುವುದು. ಕ್ಷಣ ಕ್ಷಣ ಆಗುತ್ತಿರುವ ಬದಲಾವಣೆಗಳು ಗೊತ್ತಿಲ್ಲದಂತೆಯೇ ಗೊತ್ತಾಗುತ್ತಿದ್ದವು. ವಿಶ್ವನಾಥಮಂದಿರದಲ್ಲಿ ಬೆಳಗಿನ ಪೂಜೆಯ ಗಂಟೆ ಬಾರಿಸಿತು. ರಾಜುಗಾರು, ಇನ್ನೊಬ್ಬ ತೆಲುಗು ಹುಡುಗ ಅಶೋಕ, ಹೃದಯ ರೋಗದಿಂದ ನರಳುತ್ತಿರುವ ಚಂಡೀಗಢದ ಮುದುಕಿ ಆಗಲೇ ಬಂದು ಪ್ರದಕ್ಷಿಣೆಹಾಕಿ, ನಮಸ್ಕಾರ ಮಾಡಿ, ಪ್ರಸಾದದ ಮಿಠಾಯಿ ಇಸಿದುಕೊಂಡು ತಿನ್ನುತ್ತಿದ್ದರು. ಎಂದಿನಂತೆ. ಊಟದ ಮನೆಯಲ್ಲಿ ಅವಲಕ್ಕಿ, ಚಹಾ ರೆಡಿಯಾಗಿತ್ತು. ನಕ್ಕು, ತಲೆದೂಗಿ, ಮಾತಾಡಿಸಿ ಒಬ್ಬರನ್ನಿನ್ನೊಬ್ಬರು, ತಿಂಡಿ ತಿಂದು ಎಲ್ಲರೂ ಹಿಂದಿರುಗಿದೆವು. ಎಂದಿನಂತೆ. ಬ್ರಹ್ಮಾನಂದರು ನಡೆಸುವ ಬೆಳಗಿನ ತರಗತಿ ಶುರುವಾಯಿತು. ಜ್ಞಾನದೇವನ ಅನುಭವಾಮೃತ, ನೇರ ಅವರೆದುರಿನ ಗೋಡೆಯ ಮೂಲೆಗೊರಗಿ ಕುಳಿತೆ. ನನ್ನ ಎಂದಿನ ಜಾಗದಲ್ಲಿ. ಲೀಲಾ ಬಂದು ನನ್ನ ಪಕ್ಕ ಕುಳಿತಳು. ಎಂದಿನಂತೆ. ಎಂಭತ್ತರ ಅಂಚಿನ ಬ್ರಹ್ಮಾನಂದರ ಮಾತು, ಕೇಳಿಸಿಕೊಂಡರೆ, ಎಂಥ ಕೆರಳಿದ ಮನಸ್ಸಿಗೂ ಅದ್ಭುತವಾದ ಸೆಡೆಟಿವ್. ಆಮೇಲೆ ನಾನು ಪ್ರೆಸ್ಸಿಗೆ ಹೋದೆ. ಎಂದಿನಂತೆ. ಫ್ರೂಫ್‌ಗಳು ಬಂದಿದ್ದವು, ಎಂದಿನಂತೆ. ಎಂದಿನಂತೆ. ನಿನ್ನೆ ಸತ್ತುಹೋದ ಸನ್ಯಾಸಿ ದೈನಿಕಗಳಲ್ಲಿ ಮರೆತುಹೋಗುತ್ತಿದ್ದ. ಇಡೀ ಆಶ್ರಮ ಅವನು ಇರಲೇ ಇಲ್ಲವೇನೋ ಅನ್ನುವ ಹಾಗೆ ಎಂದಿನಂತೆ ಇನ್ನೊಂದು ದಿನಕ್ಕೆ ಬಂದುಬಿಟ್ಟಿತ್ತು. +ನಮ್ಮ ಮನೆಯ ಹಿಂದೆ ದೊಡ್ಡಕೆರೆಯ ಏರಿ ಇತ್ತು. ಅದರ ಮೇಲೆ ಬೆಳಗಿನ ಜಾವದಲ್ಲಿ, ನಂಜನಗೂಡಿನ ಕಡೆಯಿಂದ ಸಾಲಾಗಿ ಎತ್ತಿನಗಾಡಿಗಳು ಲಾಟೀನು ಹಚ್ಚಿಕೊಂಡು ಬರುತ್ತಿದ್ದವು. ಮನೆಯ ಪಕ್ಕದಲ್ಲಿ ಎಲೆಯ ತೋಟವಿತ್ತು. ಅಲ್ಲಿ ಒಂದು ನಲ್ಲಿ ಇತ್ತು. ನಲ್ಲಿಯ ಮುಂದೆ ಹೆಂಗಸರು ಜಗಳವಾಡುತ್ತಿದ್ದರು. ಎಲ್ಲ ಎಂದಿನಂತೆ. ಅಪ್ಪ ನೆನಪು ಮಾತ್ರ ಆಗಿಬಿಟ್ಟಿದ್ದರು. +ಆಗಾಗ ಅನಿರೀಕ್ಷಿತವಾಗಿ, ನನ್ನ ಕನಸಿನಲ್ಲಿ ಜಡೆಹಾಕಿಕೊಂಡ ಅಪ್ಪನಾಗಿ, ಅಳುವ ಅಪ್ಪನಾಗಿ, ವಾದಮಾಡುವ ಅಪ್ಪನಾಗಿ, ಹೆದರಿಸುವ ಅಪ್ಪನಾಗಿ, ನಗುತ್ತ ಸಮಾಧಾನ ಹೇಳುವ ಅಪ್ಪನಾಗಿ, ಬಂದುಹೋಗುತ್ತಿದ್ದರು. ಮನೆ ಬದಲಾಯಿಸಿದೆವು. ಊರು ಬದಲಾಯಿಸಿದೆವು. ಬೇರೆ ಊರುಗಳಲ್ಲಿ ಬೇರೆ ಬೇರೆ ಮನೆಗಳಿಗೆ ಹೋದೆವು. ಊರು ಬದಲಾಗುತ್ತ, ಮನೆಬದಲಾಗುತ್ತ, ಜನ ಬದಲಾಗುತ್ತ, ನಾನು ಹೃಷಿಕೇಶಕ್ಕೆ ಬಂದೆ. +ಮುಗಿಸಬೇಕೆಂಬ ಆಸೆಯ ಬರವಣಿಗೆ +ಇದೇ ಮೊದಲ ಬಾರಿಗೆ ನನ್ನ ಹಿಮಾಲಯವನ್ನು ಕುರಿತು ನನ್ನದೇ ಕಂಪ್ಯೂಟರಿನಲ್ಲಿ ಬರೆಯುತ್ತಿದ್ದೇನೆ. ಹೃಷಿಕೇಶದಲ್ಲಿ ಆತ್ಮಾನಂದ ಕಲಿಸಿಕೊಟ್ಟ ವಿದ್ಯೆ ಈಗ ಉಪಯೋಗಕ್ಕೆ ಬರುತ್ತದೆ ಅಂದುಕೊಂಡಿರಲಿಲ್ಲ. ಆಗ. ಕೃಷ್ಣಾನಂದರು ನನ್ನ ಮೂರು ದಿನ ಸುಮ್ಮನೆ ಇರಲು ಬಿಟ್ಟು ಆಮೇಲೆ ಕೇಳಿದರು-“ನೀನು ಇಲ್ಲಿದ್ದು ಏನು ಮಾಡುತ್ತೀ?” ನನಗೆ ಉತ್ತರ ಹೇಳಲು ತೋರಲಿಲ್ಲ. ನಾನು ಇಷ್ಟು ವರ್ಷ ಕಲಿತ ವಿದ್ಯೆ. ನನ್ನ ಉದ್ಯೋಗ ಕೊಟ್ಟು, ಸಂಬಳ ಕೊಟ್ಟು, ಒಂದಷ್ಟು ಹೆಸರು ಕೊಟ್ಟು, ನಾನೆಂದರೆ ಏನೇನೋ ಅನ್ನುವ ಭ್ರಮೆ ಹುಟ್ಟಿಸಿದ್ದ ವಿದ್ಯೆ ಈಗ ಏನೇನೂ ಅಲ್ಲ ಅನ್ನಿಸಿಬಿಟ್ಟಿತ್ತು. ಓದು ಬರಹ ಮಾತು-ಇಷ್ಟು ಬಿಟ್ಟು ಇನ್ನೇನು ಮಾಡಬಲ್ಲೆ ನಾನು? ನನ್ನ ವಿದ್ಯಾರ್ಥಿಗಳಿಗೆ ಕಂಡಹಾಗಲ್ಲ. ನಮ್ಮ ಬಾಡಿಗೆ ಮನೆಯ ಯಜಮಾನನಿಗೆ ಕಂಡಹಾಗಲ್ಲ. ನನ್ನ ಹೆಂಡತಿಗೆ ಕಂಡಹಾಗಲ್ಲ. ನನ್ನ ಪ್ರೀತಿಸಿದ ಹುಡುಗಿಗೆ ಕಂಡಹಾಗಲ್ಲ. ನಾನು ಏನೇನೋ ಎಂದು ನನ್ನ ಕಲ್ಪನೆಯಲ್ಲಿ ನನಗೇ ಕಂಡ ಹಾಗೂ ಅಲ್ಲ ಧತ್ ಅಂತ ಪ್ರಶ್ನೆ ಎದುರು ನಿಂತಿತು. ನಾನು ಏನು ಮಾಡಬಲ್ಲೆ? ನಾನು ಮಾತಾಡುವ ಕ್ಷಣದಲ್ಲೇ ನನ್ನ ಉತ್ತರ ಪೆದ್ದು ಅನ್ನಿಸುತ್ತಿದ್ದರೂ, ನನಗೇ ಕೇಳಿಸದಷ್ಟು ದುರ್ಬಲ ಧ್ವನಿಯಲ್ಲಿ. ಏನೇನೂ ವಿಶ್ವಾಸ ಇಲ್ಲದೆ ಹೇಳಿದೆ: “ನನಗೆ ಕನ್ನಡ ಬರುತ್ತೆ, ಇಂಗ್ಲಿಷ್ ಬರುತ್ತೆ, ಇಲ್ಲಿನ ಗುರುಗಳ ಪುಸ್ತಕಗಳು ಇವೆಯಲ್ಲ ಅವನ್ನು ಅನುವಾದ ಮಾಡಬಲ್ಲೆ.” ತಟ್ಟನೆ ಕೇಳಿದರು: “ಯಾರು ಓದುತ್ತಾರೆ ಅವನ್ನೆಲ್ಲ?” ಕೃಷ್ಣಾನಂದರಿಗೆ ಸಂಸ್ಕೃತ, ಕನ್ನಡ, ತಮಿಳು, ಮಲೆಯಾಳಂ, ಇಂಗ್ಲಿಶ್ ಇಷ್ಟೂ ಚೆನ್ನಾಗಿ ಓದಲು, ಮಾತಾಡಲು, ಬರೆಯಲು ಬರುತ್ತಿತ್ತು. ವಿದ್ವಾಂಸ, ಮೊನಚು ಮಾತಿನ ಮೃದು ಹೃದಯದ ಖಂಡಾಖಂಡಿತವಾದ ಆದರೆ ನಿರ್ಲಿಪ್ತವಾದ ವರ್ತನೆಯ ವೃದ್ಧ, ಗುರು. ಹರಿದ್ವಾರದ ಪ್ರೊಫೆಷನಲ್ ಸನ್ಯಾಸಿಗಳಲ್ಲಿ ಇರದ ಏನೋ ಇವರಲ್ಲಿತ್ತು-ಅದು ಪ್ರಾಮಾಣಿಕತೆ, ನೋವು ಕೊಡದ, ನೋವು ಪಡದ ನಿರ್ಲಿಪ್ತ ಕಠಿಣ ಪ್ರೀತಿ. +ಹರಿದ್ವಾರದಿಂದ ಏಟು ತಿಂದ ಬೀದಿನಾಯಿಮರಿಯ ಹಾಗೆ ಹೃಷಿಕೇಶಕ್ಕೆ ಬಂದಿದ್ದೆ. ಗಣೇಶಪುರಿಯವರ ಎದುರಿನಲ್ಲಿ ಮಾತಾಡಲು ಆಗಲಿಲ್ಲ. ಅಥವ ನನ್ನ ಮನಸ್ಸು ಅವರಿಗೆ ತಿಳಿಯಲಿಲ್ಲ. ಅಥವ ಅವರಿಗೆ ನಾನು ಸುಳ್ಳು ಹೇಳಿದೆ. ಗಣೇಶಪುರಿ ಕೇಳಿದರು, ಹಿಂದಿಯಲ್ಲಿ-“ಹೇಳು, ನೀನು ಯಾರು, ಬಂದದ್ದು ಯಾಕೆ, ನಮ್ಮಿಂದ ಏನಾಗಬೇಕು?” “ ನನಗೆ ಹಿಂದಿ ಬರಲ್ಲ. ಮಾತಾಡುವುದು ಕಷ್ಟ” ಅಂದೆ. “ಪರವಾಗಿಲ್ಲ, ಭಾವ್ ಸಮಝ್ ತೇ ಹೈ, ಹೇಳು” ಅಂದರು. ದಿನಾ ಸಂಜೆ ಬೆಳಿಗ್ಗೆ ಬ್ರಾಹ್ಮಣ ಪಂಡಿತರ ಮಾತು ಕೇಳುತ್ತಿದ್ದ ಅಂಗಳದಲ್ಲಿ ಗಣೇಶಪುರಿ, ಅಲ್ಲಿನ ಮುಖ್ಯಮಂತ್ರಿ ಮತ್ತು ನಾನು ಇಷ್ಟೇ ಜನ ಇದ್ದದ್ದು. ಬೆಳಗಿನ ಬಿಸಿಲು ಇತ್ತು. ಚಳಿ ಇತ್ತು. ಇದುವರೆಗೆ ಅಲ್ಲಿನ ಮುಖ್ಯಸ್ಥರಂತಿದ್ದವರೆಲ್ಲ ಈಗ ಗಣೇಶ ಪುರಿ ಹಿಂದಿರುಗಿದ ಮೇಲೆ ಅಡಗಿಕೊಂಡಂತಿದ್ದರು. ಇಡೀ ಆಶ್ರಮ ನಿಶ್ಯಬ್ಧವಾಗಿತ್ತು. ನಾನು ಕಾಯುತ್ತಿದ್ದೇನೆ ಅಂದುಕೊಂಡಿದ್ದ ಕ್ಷಣ ಬಂದುಬಿಟ್ಟಿತ್ತು. ನನಗೆ ನಾನೇ ಹೇಳಿಕೊಂಡಿರದ ಮಾತನ್ನು ಈಗ ಗುರುವಿನ ಎದುರು ಹೇಳುವುದು ಹೇಗೆ? ನಾನು ಯಾರು ಅನ್ನುವುದಕ್ಕೆ ಸುಲಭವಾಗಿ ಇಂಥವನು. ಇಂಥ ಹೆಸರು, ಇಂಥ ಕೆಲಸ ಅಂತ ಹೇಳಿಬಿಟ್ಟೆ. ಯಾಕೆ ಬಂದದ್ದು ಅನ್ನವುದಕ್ಕೆ ತಡವರಿಸಿ, ನೆಲನೋಡಿ, ಮಾತು ಬರದೆ, ನಿಜ ಹೇಳಬೇಕೆನಿಸಿ ಆದರೆ ಹೇಳಲಾರದೆ, ಏನು ಬೇಕು ಎಂದು ತಿಳಿಯದೆ ನನಗೇ ಕೇಳಿಸದಷ್ಟು ಮೆಲ್ಲನೆ ಧ್ವನಿಯಲ್ಲಿ ಮಾತಾಡಿದೆ. +“ನನ್ನ ಹೆಂಡತಿ ನನ್ನ ದೂರ ಮಾಡಿದ್ದಾಳೆ.” +ಸುಳ್ಳು, ಹಾಗೆ ಹೇಳುತ್ತಿರುವ ಕ್ಷಣದಲ್ಲೆ ನನ್ನ ಬಗ್ಗೆಯೇ ಅ-ಸಹ್ಯ ಅನ್ನಿಸಿತು. ನಿಜ ಯಾವಾಗಲೂ ಯಾರಿಗೆ ಬೇಕಾದರೂ ಹೇಳಿಬಿಡುತ್ತೇನೆ ಅಂದುಕೊಂಡಿದ್ದೆ. ಅಲ್ಲ. ಹೇಳಬೇಕಾದ ಕ್ಷಣ ಬಂದಾಗ ಸಮರ್ಥನೆಯ ಗುಟ್ಟಾದ ಆಸೆ ನನ್ನ ತಪ್ಪೇನೂ ಇಲ್ಲ ಅನ್ನುವ ಹಾಗೆ. ನನಗೇ ಅನ್ಯಾಯ ಆಗಿದೆ ಎಂದು ತೋರಿಸಿಕೊಳ್ಳುವ ಹಾಗೆ, ಹೀಗೆ ನುಡಿಸಿಬಿಟ್ಟಿತು. +ಭಾವ ತಿಳಿಯಿತು ಎಂದು ಕಾಣುತ್ತದೆ. +“ಈಗ ಏನು ಮಾಡಬೇಕೆಂದಿದ್ದೀ?” +“ಇಲ್ಲೆ ಇರಬೇಕೆಂದಿದ್ದೇನೆ.” +“ಸಾಧ್ಯ ಇಲ್ಲ.” +“ಏನಾದರೂ ಕೆಲಸ ಮಾಡಿಕೊಂಡಿರುತ್ತೇನೆ.” +“ಇಲ್ಲಿ ನಾವು ಯಾರನ್ನೂ ಕೆಲಸಕ್ಕೆ ಇಟ್ಟುಕೊಳ್ಳಲ್ಲ.” +ಮಾತಾಡದೆ ಸುಮ್ಮನಿದ್ದೆ. +“ನಿನಗೆ ಏನು ಬೇಕು ಎಂದು ನಿನಗೆ ತಿಳಿದಿಲ್ಲ. ಅದು ಸ್ಪಷ್ಟ ಆದಾಗ ಬಾ. ನಮ್ಮಲ್ಲಿ ನಿನಗೆ ಕೊಡಲು ಏನೂ ಕೆಲಸ ಇಲ್ಲ.” +ಮಾತಾಡದೆ ಸುಮ್ಮನಿದ್ದೆ. +ಅವರೂ. +ಅತ್ತ ಇತ್ತ, ಬೆನ್ನಹಿಂದೆ ಕೈ ಕಟ್ಟಿಕೊಂಡು, ಆಗ ತಾನೇ ಸ್ನಾನ ಮಾಡಿಬಂದ ಮೈ ಹೊತ್ತುಕೊಂಡು, ಶತಪಥ ತಿರುಗಿದರು. +“ನೀನು ಈಗಲೇ ಇಲ್ಲಿಂದ ಹೊರಟುಹೋಗು. ಹೃಷಿಕೇಶಕ್ಕೆ ಹೋಗು. ಅದು ನಿನಗೆ ಸರಿಯಾದ ಜಾಗ ಅನ್ನಿಸುತ್ತೆ. ನಿಮ್ಮ ಭಾಷೆ ಮಾತಾಡುವವರು ಅಲ್ಲಿದ್ದಾರೆ. ನಿನಗೆ ಏನುಬೇಕು ಎಂದು ಸ್ಪಷ್ಟವಾಗಿ ತಿಳಿದಾಗ ಇಲ್ಲಿಗೆ ಬಾ.” ಅಂತ ಮಾತು ಮುಗಿಸಿದರು. ಹೃಷಿಕೇಶದಲ್ಲಿ ಯಾರನ್ನು ನೋಡಬೇಕೆಂದು ವಿಳಾಸ ಹೇಳಿದರು. +ಹೋಗು ಎಂದಮೇಲೆ, ಈಗಲೇ ಹೋಗು ಎಂದಮೇಲೆ ಇರುವುದು ಹೇಗೆ. ನಮಸ್ಕಾರ ಮಾಡಿ ಬಂದೆ. ಗುಜರಾತಿನ ಮುದುಕನ ಹತ್ತಿರ ಹೋಗಿ ಸ್ವಾಮಿಗಳ ದರ್ಶನ ಆಯಿತು. ಹೃಷಿಕೇಶಕ್ಕೆ ಹೋಗುವಂತೆ ಹೇಳಿದ್ದಾರೆ. ಹೊರಟೆ ಅಂತಹೇಳಿದೆ. ತಮಗಿಂತ ಮುಂಚೆ ಗುರುವನ್ನು ನಾನು ಅಷ್ಟು ಬೆಳಗ್ಗೆಯೇ ಕಂಡಿದ್ದಕ್ಕೆ ಆಶ್ಚರ್ಯ ಆಗಿತ್ತು ಅವರಿಗೆ. +“ಯಾವಾಗ ಹೋಗುತ್ತೀ?” +“ಈಗಲೇ.” +“ನಾವೂ ಇವತ್ತು ಸ್ವಾಮಿಗಳನ್ನು ನೋಡಿಕೊಂಡು, ಅವರು ಹೇಳಿದ ಮೇಲೆ ಊರಿಗೆ ಹೋಗುತ್ತೇವೆ. ನಮ್ಮ ಊರಿಗೆ ತಪ್ಪದೆ ಬಾ.” ವಿಳಾಸ ಕೊಟ್ಟರು. ಕಳೆದುಬಿಟ್ಟೆ. ಈಗ ಅವರ ನೆನಪು ಇದೆ. +ಹತ್ತು ನಿಮಿಷದಲ್ಲಿ ನನ್ನ ಇದ್ದ ಒಂದು ಚೀಲ ಸಿದ್ಧವಾಯಿತು. ನಾನು ಅಲ್ಲಿಗೆ ಮೊದಲು ಬಂದಾಗ ಸ್ವಾಗತಿಸಿದ್ದ ದಿನಾ ಶಾಂತಿ ಪಾಠ ಹೇಳುತ್ತಿದ್ದ ವೃದ್ಧನನ್ನು ಹುಡುಕಿದೆ. ಗಣೇಶ ಪುರಿ ಹೀಗೆ ಹೃಷಿಕೇಶಕ್ಕೆ ಇಂಥಲ್ಲಿಗೆ ಹೋಗಲು ಹೇಳಿದರು. ಹೋಗಿ ಬರುತ್ತೇನೆ. ನಿಮ್ಮ ಆಶ್ರಮಕ್ಕೆ ಏನಾದರೂ ಕೊಡಬೇಕನ್ನಿಸುತ್ತೆ. ಆದರೆ ಹಣ ಜಾಸ್ತಿ ಇಲ್ಲ. ಈ ಐವತ್ತು ರೂಪಾಯಿ ಇಟ್ಟುಕೊಳ್ಳು ಅಂದೆ. ನಿಮ್ಮ ಬಾಯಲ್ಲಿ ಕೊಡಬೇಕು ಅನ್ನುವ ಮಾತು ಬಂತಲ್ಲ, ಅಷ್ಟು ಸಾಕು. ಕೊಟ್ಟಂತೆಯೇ ಆಯಿತು. ನಿಮ್ಮ ಸಮಯಕ್ಕೆ ಆಗುತ್ತೆ. ನೀವೇ ಇಟ್ಟುಕೊಳ್ಳಿ ಅಂದ. ಆದರೂ ಕೊಟ್ಟೆ, ತೆಗೆದುಕೊಂಡು ಸೊಂಟಕ್ಕೆ ಸಿಕ್ಕಿಸಿಕೊಂಡ. ನಿಮಗೆ ಶಾಂತಿಸಿಗಲಿ. ಹೋಗಿಬನ್ನಿ, ಒಳ್ಳೆಯದಾಗುತ್ತದೆ ಅಂದ. +ತೀರ ಸಂತೋಷವಾಗಿ, ಹೋಗಲು ಇನ್ನೊಂದು ಗುರಿ ಸಿಕ್ಕಿತು ಅಂದುಕೊಂಡು ಬೆಳಗಿನ ಬಿಸಿಲಲ್ಲಿ ಹೊರಟುಬಿಟ್ಟೆ. ಗಂಗೆಯ ಸೇತುವೆ ದಾಟಿದೆ. ಇನ್ನಷ್ಟು ಮೇಲೆ, ಗಂಗೆಯ ತಡಿಯ ಇನ್ನೊಂದು ಊರಿಗೆ, ಹಿಮಾಲಯದ ಬೆಟ್ಟಗಳ ತಪ್ಪಲಿಗೆ. ಅಲ್ಲಿ ಹೀಗೆಲ್ಲ ಇರುತ್ತೇನೆಂದು ಅಂದುಕೊಂಡಿರಲಿಲ್ಲ. +ಮತ್ತೆ ಬರವಣಿಗೆಯ ಎಂಟನೆಯ ದಿನ +ಇನ್ನು ಹದಿನೈದು ಇಪ್ಪತ್ತು ದಿನಗಳಲ್ಲಿ ಬಹುಶಃ ಮತ್ತೆ ಹೃಷಿಕೇಶಕ್ಕೆ ಹೋಗುತ್ತೇನೆ. ಹಾಗಂದುಕೊಂಡಾಗ ಹುಮ್ಮಸ್ಸು, ಉತ್ಸಾಹ, ಅಲ್ಲಿನ ಜನ, ನದಿ, ಮೆಟ್ಟಿಲು, ಮರ, ಕೋತಿ, ಪ್ರೆಸ್ಸು, ಲೈಬ್ರರಿಯ ಮಾತಾಜಿ, ನರಸಿಂಹನ್, ಕೃಷ್ಣಮೂರ್ತಿ, ಜಯಕುಮಾರ, ಬ್ರಹ್ಮಾನಂದ….. ಕೊನೆಯಿಲ್ಲದಂತೆ ಬೆರೆತುಕೊಂಡ ಒಂದರೊಳಗೊಂದರೊಳಗೊಂದು ಚಿತ್ರಗಳು. ನಿಜದಲ್ಲೂ ಕನಸಿನಲ್ಲೂ. ಬೆಂಗಳೂರಿನ ನಮ್ಮ ಮನೆಯಲ್ಲಿ ಪುಸ್ತಕಗಳನ್ನು ಹುಡುಕುತ್ತಿದ್ದೇನೆ, ಕನಸಿನಲ್ಲಿ. ‘ಸ್ಪಿರಿಚ್ಯು‌ಅಲ್ ಇಂಪೋರ್ಟ್ ಆಫ್ ರಿಲಿಜಿಯಸ್ ಫೆಸ್ಟಿವಲ್’ ಪುಸ್ತಕ ಸಿಗುತ್ತಲೇ ಇಲ್ಲ. ಅದರಲ್ಲಿ ಆಶ್ರಮದ ಫೋನು ನಂಬರು ಬರೆದಿಟ್ಟಿದ್ದೇನೆ. ಸಿಗುತ್ತಲೇ ಇಲ್ಲ. ಇನ್ನೊಂದು. ಉದ್ದವಾದ ರೈಲ್ವೆ ಪ್ಲಾಟ್ ಫಾರಂ. ಖಾಲಿ ಕಂಬಿಗಳು. ನಾನು ಹತ್ತಬೇಕಾದ ರೈಲು ಅಲ್ಲಿಲ್ಲ. ಬೇರೆ ಕಡೆ ಬರುತ್ತದಂತೆ. ಓಡಿದೆ. ರೈಲಿನ ಕೊನೆಯ ಬೋಗಿ ಹೋಗುತ್ತಿರುವುದು ಕಾಣುತ್ತಿದೆ, ದೂರದಲ್ಲಿ. ಇನ್ನೊಂದು. ಎರಡೇ ಬೋಗಿಗಳ ರೈಲು. ಹತ್ತಿದರೆ ಮಲಗಲು ಜಾಗವೇ ಇಲ್ಲ. ಇನ್ನೊಂದು. ಇಳಿಜಾರಲ್ಲಿ ಸಾಗುವ ರೈಲು ಕಂಬಿಗಳು. ದೊಡ್ಡ ದೊಡ್ಡ ಬಿಳೀ ಜಲ್ಲಿ ಕಲ್ಲುಗಳು. ಎರಡು ದಿಕ್ಕಿಗೆ ಎರಡು ದಾರಿ. ಹೋಗುತ್ತಿರುವ ರೈಲು ಬಸ್ಸಾಗಿದೆ. ನಾನು ರೈಲಿನೊಳಗಿದ್ದು ಕಂಬಿ, ಜಲ್ಲಿ ನೋಡುತ್ತಿದ್ದಂತೆ ನಾನು ಹೊರಗಿದ್ದು ರೈಲು ಹೋಗಿಬಿಡುತ್ತಿದೆ. ಕನಸು. ಕನಸು. ಸ್ಟೇಷನ್ನು. ರೈಲು ಬದಲಾಯಿಸಬೇಕು. ಟಿಕೀಟುಕೊಡುವವನು ಇಲ್ಲ. ಇದಾನೆ. ನನ್ನ ಮಾತು ತಿಳಿಯುತ್ತಿಲ್ಲ. ಎಷ್ಟೊಂದು ದೊಡ್ಡ ರೈಲು ಬಂದು ಹೊರಟೇ ಬಿಡುತ್ತಿದೆ. ಸಾಯಂಕಾಲ. ಕತ್ತಲಾದರೂ ಕಬ್ಬಿಣದ ಗೇಟಿನ ಹತ್ತಿರ ಟಿಕೀಟು ಕೊಡುವ ಗೂಡನ್ನೇ ನೋಡುತ್ತ ಸುಮ್ಮನೆ ನಿಂತಿದ್ದೇನೆ. ನೀಲಿ ಬಣ್ಣದ ಕಂಬಗಳಿರುವ ಮಾಳಿಗೆ ಮನೆ. ಬೊಚ್ಚುಬಾಯಿ ರಾಜುಗಾರು ಜೊತೆಗೆ ಯಾರುಯಾರೋ ಸ್ವಾಮಿಗಳು. ‘ಕೃಷ್ಣಾನಂದರು ಎಲ್ಲಿ?’ ಅಂದೆ. ಯಾರೂ ಮಾತಾಡಲಿಲ್ಲ. ಹೃಷೀಕೇಶದ ಬೀದಿಗಳಲ್ಲಿ ಅಲೆದೆ. ಗಂಗೆಯ ಆಚೆ ದಡದ ಆಶ್ರಮ. ಹುಲ್ಲುಗಾವಲು. ಕಟ್ಟಡಕ್ಕೆ ದೀಪಮಾಲೆಗಳ ಅಲಂಕಾರ. ಸಾಲು ಸಾಲು ಕೋಣೆಗಳು. ಅಯ್ಯೋ. ಹಾಳಾಗಿಬಿಟ್ಟಿವೆ. ಎಷ್ಟೊಂದು ಜನ. ಯಾವುದೋ ಸಾವಿನ ಮನೆಯ ಥರ? ಯಾರೂ ನನ್ನ ಗುರುತು ಹಿಡಿಯುತ್ತಿಲ್ಲ. ಮಂಚಗಳ ಮೇಲೆ ಕೂತು ಹರಟೆ ಹೊಡೆಯುತ್ತಿದ್ದಾರೆ. ಸ್ನಾನ ಮಾಡಿ ಬರುತ್ತಿದ್ದಾರೆ. ಪ್ರೆಸ್ಸಿನ ಹಳೇ ಟೈಪ್ ರೈಟರ್ ಸುಮ್ಮನೆ ಇದೆ. ಪ್ರೆಸ್ಸಿನ ಪಕ್ಕದ ಗುರುಭವನದ ಮೆಟ್ಟಿಲಿಗೆ ಹಾಕಿರುವ ಹಿತ್ತಾಳೆ ತಗಡು ಬಿಸಿಲಲ್ಲಿ ಫಳಫಳ. +ಕನಸು ಬರೀ ಅನುಭವ. ಅದಕ್ಕೆ ಅರ್ಥದ ಗೊಡವೆ ಇಲ್ಲ. ಎಚ್ಚರದ ನೆನಪಿನಲ್ಲಿ ಒಂದೊಂದಕ್ಕೂ ಎಷ್ಟೊಂದು ಅರ್ಥ ಎಷ್ಟೊಂದು ವ್ಯಾಖ್ಯಾನ. ಎಲ್ಲ ನಿಜ, ಎಲ್ಲ ಸುಳ್ಳು, ಎಲ್ಲ ಹೌದು, ಎಲ್ಲ ಅಲ್ಲ, ಎಲ್ಲವೂ ಎಲ್ಲಾನೂ ಆಗಿರುವಾಗ ಯಾವುದೋ ಒಂದು ಹೌದು ಇನ್ನೊಂದು ಅಲ್ಲ ಅನ್ನುವ ಹಾಗೆ ಮಾತ್ರ ಮಾತಾಡಲು ಸಾಧ್ಯವಿರುವುದು ದುರಂತವೋ ಅತೃಪ್ತಿಯೋ. ಇಂಥದೇ ತೊಡಕು ಅವತ್ತು ಬೆಳಗ್ಗೆ ಎಂಟು ಗಂಟೆಯ ಹೊತ್ತಿನಲ್ಲಿ ಗಣೇಶಪುರಿಯವರ ಎದುರು ನನಗೆ ಎದುರಾಗಿತ್ತು. ಕೃಷ್ಣಾನಂದರ ಇದುರಿನಲ್ಲೂ ಅಷ್ಟೆ. +ಗಣೇಶಪುರಿ ಎತ್ತರವಾದ ಆಳು. ಏನನ್ನೂ ನೋಡದಿರುವಂಥ ಕಣ್ಣುಗಳು. ಸುಮ್ಮನೆ ಬೆನ್ನಹಿಂದೆ ಕೈಕಟ್ಟಿಕೊಂಡು ಓಡಾಡುತ್ತಿದ್ದರು. ಅವರನ್ನು ನೋಡಲೆಂದೆ ನಾನು ಹದಿನೈದು ದಿನ ಕಾದಿದ್ದೆ. ಅವರು ಎದುರು ನಿಲ್ಲುವ ಕ್ಷಣ ಬಂದಿತ್ತು. ಅವರೊಡನೆ ಮಾತಾಡುವ ಮೊದಲೇ ಯಾಕೋ ನಾನು ಅಲ್ಲಿರುವ ದಿನಗಳು ಮುಗಿದವು ಅನ್ನಿಸುತ್ತಿತ್ತು. +ಅಂಜುತ್ತ, ಅವರು ಕೇಳಬಹುದಾದ ನಿರೀಕ್ಷಿತ ಪ್ರಶ್ನೆಗಳಿಗೆ ನಿರೀಕ್ಷಿತ ಉತ್ತರ ಕೊಡಲಾರೆನೆಂದು ಗೊತ್ತಿದ್ದರಿಂದ ಅಳುಕುತ್ತ, ಒಳಗೇ ಕುಗ್ಗಿ, ಮಾತಿನಲ್ಲಿ ವಿವರಿಸಲಾರೆನೆಂದು ಮಾತಿನಲ್ಲಿ ಹೇಳಲಾಗದೆ ಇದ್ದರೆ ನಾನು ಇಲ್ಲವೇ ಆಗುತ್ತೇನೆಂದು ಬೆದರಿ ಅದೃಢನಾಗಿ….. +ಮುಗಿಸಬೇಕೆಂಬ ಅವಸರ, ಎರಡನೆಯ ದಿನ +ನನಗೆ ನೆನಪಿರುವ ಚಿಕ್ಕಂದಿನಿಂದಲೂ ಅಷ್ಟೆ. ನಾನು ಬೇರೆ ಎಲ್ಲೋ ಇರಬೇಕಿತ್ತು. ಬೇರೆ ಯಾವುದೋ ಮನೆಯಲ್ಲಿ ಇರಬೇಕಿತ್ತು. ನನ್ನ ಜೊತೆಯಲ್ಲಿ ಇರುವವರಿಗಿಂತ ಬೇರೆ ಯಾರೋ ನನ್ನ ಜೊತೆಯಲ್ಲಿ ಇರಬೇಕಿತ್ತು ಹೀಗೆಲ್ಲ ಅನ್ನಿಸುತ್ತಿತ್ತು. ಆದರೆ ಹಿಮಾಲಯದಲ್ಲಿ ಮೊದಲ ಬಾರಿ ಹೋದಾಗ, ಇನ್ನೊಮ್ಮೆ ಹೋಗಿ ಇದ್ದಾಗ, ಮತ್ತೆ ಮೂರನೆಯ ಬಾರಿ ಪ್ರವಾಸಿಯಾಗಿ ಕೆಲವೇ ದಿನದ ಮಟ್ಟಿಗೆ ಹೋದಾಗ ಇಲ್ಲಿ ಬಿಟ್ಟು ಇನ್ನೆಲ್ಲೂ ಇರಬಾರದು ಅನ್ನಿಸಿತ್ತು. ಜೊತೆಗೆ ಯಾರೂ ಬೇಡ ಅನ್ನಿಸಿತ್ತು. ಹಸಿವಿಗಷ್ಟು ಅನ್ನ, ನಿದ್ದೆಗಷ್ಟು ಬೆಚ್ಚನೆ ಜಾಗ ಇದ್ದರೆ ಸಾಕು ಅನ್ನಿಸಿತ್ತು. ಈ ಬರೆವಣಿಗೆಯಾದರೂ ಅಷ್ಟೆ. ಇದರಲ್ಲಿ ತೊಡಗಿರುವಷ್ಟು ಹೊತ್ತು ಇದು ಮಾತ್ರ ನಿಜ ಅನ್ನಿಸುತ್ತದೆ. ಸುಮಾರು ಒಂಬತ್ತು ವರ್ಷ ಆಯಿತಲ್ಲ ಬರೆಯಲು ತೊಡಗಿ, ಬರೆದದ್ದು ಕಳೆದು, ಮತ್ತೆ ಬರೆದು, ನಿಲ್ಲಿಸಿ, ಮತ್ತೆ ಹಿಮಾಲಯಕ್ಕೆ ಹೋಗಿ, ಇದ್ದು. ಬಂದು, ಮತ್ತೆ ಬರೆದು ಒಂದಷ್ಟು, ಆಮೇಲೆ ಮತ್ತೆ ಮೂರನೆಯ ಬಾರಿಗೆ ಹೋಗಿ ಬಂದು, ಈಗ ತಿರುಗಿ ಬರೆಯುತ್ತ-ನಾನು ಇದನ್ನು ಮುಗಿಸುವುದೇ ಇಲ್ಲವೇನೋ ಅನ್ನಿಸುತ್ತಿದೆ. ಮುಗಿಸುವುದೆಂದರೆ ಇದಕ್ಕೆ ಒಂದು ಆಕಾರ ಕೊಟ್ಟು ಅಥವ ಕೊಟ್ಟ ಆಕಾರ ಪೂರ್ಣವೆಂದು ಭಾವಿಸಿ, ನನ್ನನ್ನು ಬಲ್ಲ ಅಥವ ಅರಿಯದ ಯಾವುಯಾವುದೋ ಮನಸ್ಸುಗಳಿಗೆ ಒಪ್ಪಿಸುವ ಕೆಲಸ. ಧೈರ್ಯವಿಲ್ಲದೆ ಅದಕ್ಕೆ ಮುಗಿಸಲು ಆಗುತ್ತಿಲ್ಲವೋ ಏನೋ. +ಹೃಷಿಕೇಶಕ್ಕೆ ಬಂದಾಗ ಬೆಳಿಗ್ಗೆ. ಸೀದಾ ಗಣೇಶಪುರಿ ಹೇಳಿದ ವಿಳಾಸಕ್ಕೆ ಹೋದೆ. ಅಲ್ಲಿ ಒಬ್ಬ ಬಿಳಿ ಉಡುಪಿನ, ಕಪ್ಪು ಮುಖದ ಏಸುಕ್ರಿಸ್ತನ ಫೊಟೋತರಹದ ಮುಖ ಮತ್ತು ಉದ್ದಕೂದಲಿನ ಮಲೆಯಾಳಿ ಕುಳಿತಿದ್ದ. “ಏನು ಬೇಕು?” ಅಂದ. ಇಂಗ್ಲಿಷಿನಲ್ಲಿ ಕೇಳಿದ್ದರಿಂದ ಒಂದು ಥರ ಸಮಾಧಾನ ಆಯಿತು. ಹೇಳಿದೆ-ಇಲ್ಲಿ ಉಳಿಯುವುದಕ್ಕೆ ಜಾಗ ಬೇಕು. ಸಾಧ್ಯ ಇಲ್ಲ. ನೀವು ಬರುವುದು ಮೊದಲೇ ತಿಳಿಸಿದ್ದರೆ ಮಾತ್ರ ಉಳಿಯಲು ಜಾಗ ಸಿಗುತ್ತದೆ ಅಂದ. ನಾನು ಹಾಗೆ ಪ್ರವಾಸಕ್ಕೆ ಬಂದಿಲ್ಲ. ಇದ್ದ ಕೆಲಸಕ್ಕೆ ರಾಜಿನಾಮೆ ಕೊಟ್ಟು ಇಲ್ಲೇ ಇರಲು ಬಂದಿದ್ದೇನೆ ಅಂದೆ. ಹಾಗೋ, ನೀವು ಸ್ಪಿರಿಚಿಯಲ್ ಲೈನಿಗೆ ಸೇರಬೇಕೆಂದಿದ್ದೀರಾ? ಅದಕ್ಕೆ ಕೃಷ್ಣಾನಂದರು ಒಪ್ಪಿಗೆ ಕೊಡಬೇಕು. ಅವರನ್ನು ಕಂಡುಬನ್ನಿ ಅಂದ. ಒಂದು ನಿಮಿಷ ವಿಚಿತ್ರವಾದ ಸಿಟ್ಟು, ತಮಾಷೆ ಆತಂಕ ಎಲ್ಲ ಅನ್ನಿಸಿತು. ಸಿನಿಮಾಲೈನು, ಬಿಸಿನೆಸ್‌ಲೈನು ಅನ್ನುವ ಹಾಗೆ ಅವನು ನನ್ನನ್ನು ಆಧ್ಯಾತ್ಮದ ಲೈನಿಗೆ ಬಂಡವಾಳ ಹೂಡಲು ಬಂದವನಂತೆ ಅಥವ ಆಧ್ಯಾತ್ಮದ ಲೈನಿನಲ್ಲಿ ಅಂಗಡಿ ತೆರೆಯಲು ಬಂದವನಂತೆ ನನ್ನ ಮಾತಾಡಿಸಿದಾಗ ಏನೂ ಹೊಳೆಯಲಿಲ್ಲ. ಆದರೂ ಉಳಿಯಲು ಜಾಗ, ಮಾಡಲು ಕೆಲಸ ಬೇಕಿತ್ತಲ್ಲ. ಕೃಷ್ಣಾನಂದರನ್ನು ನೋಡಿಯೇಬಿಡುವುದು ಅಂತ ಹೊರಟೆ. +ಅದು ಆಸ್ಪತ್ರೆ. ಮಹಡಿ ಮೇಲೆ ಕೆಲವು ಬೆಡ್ಡುಗಳ ಮೇಲೆ ಮಲಗಿ ನರಳುತ್ತಿರುವ ರೋಗಿಗಳು. ರೋಗಿಗಳ ವಾರ್ಡು ದಾಟಿದ ನಂತರ ಒಂದು ಪುಟ್ಟ ಪಡಸಾಲೆ. ಅಲ್ಲಿ ಮೂಲೆಗೆ ಒಂದು ಕುರ್ಚಿ. ಖಾಲಿ. ಕುರ್ಚಿಯ ಹಿಂದೆ ಚಚ್ಚೌಕ ಮೆಷ್ಷಿನ ಉದ್ದನೆ ಕಿಟಕಿ. ಒಂದು ಹತ್ತು ಹದಿನೈದು ಜನ ಕಾಯುತ್ತ ನೆಲದ ಮೇಲೆ ಹಾಸಿದ್ದ ಚಾಪೆಗಳಲ್ಲಿ ಕೂತಿದ್ದರು. ಮುದುಕರು, ವಿದೇಶದವರಂತೆ ಕಾಣುವ ಕೆಲವು ಮಧ್ಯವಯಸ್ಕರು, ಸುಮ್ಮನೆ ಗೋಡೆಗೆ ಒರಗಿ ಕಣ್ಣು ಮುಚ್ಚಿದ್ದವರು, ಅವರೆಲ್ಲ ಎಷ್ಟೋ ಕಾಲದಿಂದ ಅಲ್ಲೇ ಇದ್ದುಬಿಟ್ಟವರಂತೆ, ನಿರಿಮ್ಮಳವಾಗಿ ಕೂತಿದ್ದರು. ಕೆಲವು ಕಾವಿ ಹಾಕಿದ ಸನ್ಯಾಸಿಗಳು ಕುರ್ಚಿಯ ಎದುರು ಮುಚ್ಚಿದ್ದ ಬಾಗಿಲನ್ನು ಭಯ ಗೌರವಗಳಿಂದ ತೆಗೆದು ಸ್ವಲ್ಪವೇ ತಲೆ ಒಳಗೆ ಇಣುಕಿಸಿ, ಆಮೇಲೆ ಪೂರ್ತಿ ಒಳಹೊಕ್ಕು ಬರುತ್ತಿದ್ದರು. ನಾನು ಇರುವುದು ನನಗೇ ತಿಳಿಯುವಂತೆ ಆತಂಕದಿಂದ, ಏನು ನಿರೀಕ್ಷಿಸಬೇಕು ತಿಳಿಯದ ಗೊಂದಲದಿಂದ, ಹೇಗೆ ಮಾತಾಡಬೇಕು ಎಂಬ ಸಿದ್ಧತೆ ಇಲ್ಲದ ಖಾಲಿತನದಿಂದ ಚಾಪೆಯ ಡಿಸೈನು, ಮುಚ್ಚಿದ ಬಾಗಿಲ ಚಿಲಕ, ಗೋಡೆಯ ಬಣ್ಣ ಇಂಥವನ್ನು ನೋಡುತ್ತ ಸುಮ್ಮನೆ ಕೂತಿದ್ದೆ. ಆಗ ಅವಳನ್ನು ನೋಡಿದೆ. +ಅಲ್ಲಿದ್ದ ನಾಲ್ಕಾರು ತಿಂಗಳು ಅವಳನ್ನು ದಿನವೂ ನೋಡುತ್ತಿದ್ದೆ. ಅಂಥ ಹೆಂಗಸರು ಬಹಳ ಮಂದಿ ಇರಲಾರರು. ಹರಿದ್ವಾರದಲ್ಲಿ ಬಿಳೀ ಸೀರೆಯ ಹೆಂಗಸಿನ ಮುಖದಲ್ಲಿದ್ದ ನೋವೋ, ಚಿಪ್ಪಿನೊಳಗೆ ಸೇರಿಕೊಂಡು ತನ್ನ ಪಾಡಿಗೆ ತಾನಿದ್ದೇನೆಂಬ ಭ್ರಮೆಯೋ ಇವಳಲ್ಲಿರಲಿಲ್ಲ. ಕಾವಿಯ ಲುಂಗಿ ಉಟ್ಟು ಕಾವಿಯ ಜುಬ್ಬಾ ಧರಿಸಿ ಕಾಲಿಗೆ ಹವಾಯಿ ಚಪ್ಪಲಿ ಹಾಕಿಕೊಂಡಿದ್ದಳು. ಅವಳಿಲ್ಲದೆ ಹೃಷಿಕೇಶದ ಆ ಭಾಗವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಹೆಂಗಸರು ಅವಳಷ್ಟು ದೃಢವಾಗಿ ಹೆಜ್ಜೆ ಇಡುವುದನ್ನು ನಾನು ನೋಡಿಲ್ಲ.ಆರೋಗ್ಯವಂತ ಕೆಂಪು ಹದವಾಗಿ ಮಿಶ್ರಗೊಂಡ ಬಿಳಿಯ ಮೈಬಣ್ಣ. ಗಂಟು ಹಾಕಿದ ಕೆಂಚು ಕೂದಲು. ಉದ್ದನೆಯ ಕೈಬೆರಳು. ಅವಳು ಮಾತಾಡಿದ್ದು ಬಹಳ ಅಪರೂಪ. ಆಡಿದರೂ ಕೃಷ್ಣಾನಂದರಿಗೆ ಮಾತ್ರ ಕೇಳುವಷ್ಟು ಮೃದುವಾಗಿ. ಯಾವ ದೇಶದವಳೋ. ಹೆಸರು ಕೂಡ ತಿಳಿಯಲಿಲ್ಲ. ಅವಳ ಮುಖದಲ್ಲಿ ಮುಗುಳು ನಗೆ ಇರುತ್ತಿತ್ತು. ಆದರೆ ಅದು ನನಗೆ ಅನಿಸುತ್ತಿರಲಿಲ್ಲ. ಅವಳು ಸುಮ್ಮನಿದ್ದರೂ ಸುಮ್ಮನಿದ್ದಾಳೆ ಅನ್ನಿಸುತ್ತಿರಲಿಲ್ಲ. ಏನೆಲ್ಲ ತೀರ ಸೂಕ್ಷ್ಮಗಳನ್ನು ಗಮನಿಸಿಯೂ ಎಷ್ಟೊಂದು ನಿರ್ಲಿಪ್ತಳಂತೆ ಸುಮ್ಮನಿರುತ್ತಿದ್ದಳು. ಅವಳಿದ್ದರೂ ಇದ್ದಾಳೆ ಅನ್ನಿಸುತ್ತಿರಲಿಲ್ಲ. ಆದರೆ ಇಲ್ಲದಿದ್ದರೆ ಮಾತ್ರ ಅವಳು ಇಲ್ಲ ಅಂತ ಥಟ್ಟನೆ ಗೊತ್ತಾಗಿಬಿಡುತ್ತಿತ್ತು. ಅವಳು ಎಲ್ಲಿದ್ದರೂ ಏನು ಮಾಡುತ್ತಿದ್ದರೂ ಕೃಷ್ಣಾನಂದರೇ ಅವಳ ಮನಸ್ಸಿನಲ್ಲಿ ತುಂಬಿದ್ದಾರೆ ಅನ್ನಿಸುತ್ತಿತ್ತು. ಕೃಷ್ಣಾನಂದರ ಕಾಲಬಳಿ, ನೆಲದ ಮೇಲೆ ಸ್ಥಿರವಾಗಿ ಚಕ್ಕಂಬಟ್ಟಲು ಹಾಕಿ, ಕೈಗಳನ್ನು ಮಡಿಲಲ್ಲಿ ಒಂದರಮೇಲೊಂದು ಇಟ್ಟುಕೊಂಡು, ಕತ್ತನ್ನು ತುಸುವೇ ಎತ್ತಿ, ಕಣ್ಣನ್ನು ಯಾವ ಸಂಕೋಚವೂ ಇಲ್ಲದೆ ಪೂರ್ಣವಾಗಿ ತೆರೆದು, ಕೃಷ್ಣಾನಂದರನ್ನೇ ಎವೆ ಇಡದೆ ನೋಡುತ್ತ ಕೂರುತ್ತಿದ್ದಳು. ಅವರನ್ನು ಕಾಪಾಡುವವಳಂತೆ, ಅವರ ಮನಸ್ಸಿನಲ್ಲಿ ಮೂಡಬಹುದಾದ ಯಾವುದೇ ಕೋರಿಕೆಯನ್ನು ಅದು ಮೂಡುತ್ತಿದ್ದಂತೆಯೇ ಗಮನಿಸಿಕೊಳ್ಳಲು ಸಿದ್ಧವಾಗಿರುವವಳಂತೆ, ತನ್ನ ಮಗುವಿಗೆ ಯಾವ ಭಾವ ಭಂಗಿಯೂ ಗಮನದಿಂದ ತಪ್ಪಿಸಿಕೊಂಡು ತನ್ನ ಭಾವಸಂಪತ್ತಿಗೆ ನಷ್ಟಮಾಡಿಕೊಳ್ಳಲು ಬಯಸದ ಹೊಸ ತಾಯಿಯಂತೆ, ತನ್ನ ಆರಾಧ್ಯ ದೈವದ ಸಾಮೀಪ್ಯ ಸದಾ ಸಾಮೀಪವಾಗೇ ಇರಬೇಕೆಂದು ಬಯಸುವವಳಂತೆ-ಸರಿ, ಇದೆಲ್ಲ ನನಗೆ ಅನ್ನಿಸಿದ್ದು. ಜೊತೆಗೇ ಕೆಲವು ಬಾರಿ ಯಾಕೋ ಅವಳು ಹುಲಿ. ತನ್ನನ್ನ ಪಳಗಿಸಿಕೊಂಡು ಸಾಕಿದ ಬೆಕ್ಕು ಆಗಿದ್ದಾಳೆ ಅಂತಲೂ ಅನ್ನಿಸುತ್ತಿತ್ತು. ಅಲ್ಲ, ಅವಳು ಓಡಾಡುವ ನಿರ್ಭಯ ಮೌನ ಅನ್ನಿಸುತ್ತಿತ್ತು. ತನ್ನದೇ ಲೋಕ ಕಟ್ಟುಕೊಂಡು ಇದ್ದಾಳೆಯೋ? ಬಹುಶಃ ಇಲ್ಲ. ಹಾಗಿದ್ದಿದ್ದರೆ ಅವಳು ಸಹಸ್ರಾರು ಜನ ಹೆಣ್ಣುಗಳಲ್ಲಿ ಒಬ್ಬಳಾಗಿರುತ್ತಿದ್ದಳು. ಹರಿದ್ವಾರದಲ್ಲಿದ್ದವಳು ಅಂತವಳು. ತನ್ನನ್ನು ಗಮನಿಸಲಿ ಲೋಕ ಎಂಬ ಆಸೆ ಇದೆಯೋ? ಬಹುಶಃ ಇಲ್ಲ, ಹಾಗಿದ್ದಿದ್ದರೂ ಅಸಂಖ್ಯಾತ ಹೆಣ್ಣುಗಳಲ್ಲಿ ಒಬ್ಬಳಾಗಿರುತ್ತಿದ್ದಳು. ತನ್ನ ಸುತ್ತಲ ಲೋಕ ನೋಡುತ್ತ, ಆದರೆ ಅದರಿಂದ ತನಗೇನೂ ಆಗಬೇಕಾಗಿಲ್ಲವೆಂಬಂತೆ, ತಾನು ಮಾಡಬೇಕಾದ ಯಾವುದನ್ನು ಮಾಡಲೂ ಇಷ್ಟಿಷ್ಟೂ ಹಿಂಜರಿಯದೆ, ಯಾರಿಂದಲೂ ಏನೂ ಬಯಸದೆ, ಈಗಿರುವುದನ್ನೆಲ್ಲ ಬೇಕಾದರೆ ಈಗಲೇ ಬಿಟ್ಟು ಹೊರಡಲು ಸಿದ್ಧವಾದವಳಂತೆ, ಗುರುವಿಗೆ ಪೂರ್ಣ ಶರಣಾದವಳಂತೆ ಆದರೆ ಸಂಪೂರ್ಣ ಸ್ವತಂತ್ರಳಂತೆ,-ಯಾವ ನಂಬಿಕೆ, ಯಾವ ಸಾಧನೆ, ಅದೇನು? ತಾನು ಹೀಗೆ ಇರಬೇಕೆಂದು ಹಂಬಲಿಸಿ ಬಯಸಿ ಹೀಗಾಗಿದ್ದಾಳೋ? ಎಷ್ಟೋ ದಿನದ ನಂತರ ಕೃಷ್ಣಾನಂದರ ಸಮೀಪದ ಜಯಕುಮಾರ ನನಗೆ ಪರಿಚಿತನಾಗಿ ಅಕಸ್ಮಾತ್ತಾಗಿ ಹೇಳಿದ ಒಂದು ವಾಕ್ಯ ನೆನಪಿದೆ, ಕಾಡು ಬೆಕ್ಕಿನ ಹಾಗಿದ್ದಳು. ಕೃಷ್ಣಾನಂದರು ಅವಳನ್ನು ಈ ಸ್ಥಿತಿಗೆ ತಂದ ಮಹಾತ್ಮರು. ಗೊತ್ತಿಲ್ಲ. ಅವಳೊಳಗಿನದೇ ಸ್ವಭಾವದ ಸಾಧ್ಯತೆ ಅರಳಿಕೊಂಡು ಹಿಗಾಗಿದ್ದಾಳೋ ಏನೋ. ನಾನು ಅಂಥವಳೊಬ್ಬಳನ್ನು ಕಂಡೇನು ಅಂದುಕೊಂಡಿರಲಿಲ್ಲ. ಹಿಮಾಲಯಕ್ಕೆ ನಮಸ್ಕಾರ. +ಮುಗಿಸಬೇಕೆಂಬ ಅವಸರ, ಮೂರನೆಯ ದಿನ +ಸಮರ್ಥನೆಯಲ್ಲದ ರೀತಿಯಲ್ಲಿ ನನ್ನ ಬಗ್ಗೆ ನಾನು ಹೇಳಿಕೊಳ್ಳುವುದು ಹೇಗೆ? ಗಣೇಶಪುರಿ ನನ್ನ ಮಾತಾಡಿಸಿದ ರೀತಿ ನಾನು ಅವರಿಗೆ ಉತ್ತರ ಹೇಳಿದ ರೀತಿ ಬೇರೆ, ಹ್ಯಾನ್ಸ್ ನೊಡನೆ ಹೇಳಿಕೊಂಡದ್ದು ಬೇರೆ. ರಾಮು ಜೊತೆ ಹೇಳುವುದೇ ಬೇರೆ. ಕೃಷ್ಣಾನಂದರು ನನ್ನ ಹಾಗೆ ಮಾತಾಡಿಸುತ್ತಾರೆ. ನಾನು ಹಾಗೆ ಹೇಳಿಕೊಳ್ಳುತ್ತೇನೆ ಅಂತ ಗೊತ್ತಿರಲಿಲ್ಲ. ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವಿದ್ದವರಿಗೆ ತೀರ ಕಡಿಮೆ ಮಾತಿನಲ್ಲಿ, ಸಾಧ್ಯವಿದ್ದಷ್ಟೂ ರೂಕ್ಷವಾಗಿ ಹೇಳಿಬಿಡುವುದೇ ಒಳ್ಳೆಯದೆಂದು. ವಿವರಗಳನ್ನೆಲ್ಲ ಅವರೇ ತುಂಬಿಕೊಳ್ಳುತ್ತಾರೆ. ಅಯ್ಯೋ ನಾನು ಹೀಗೆ ಹೀಗೆ ಮಾಡಿದ್ದಕ್ಕೆ ಇಂಥ ಇಂಥ ಕಾರಣ ಇದೆ, ಅರ್ಥ ಆಗುತ್ತೋ ಇಲ್ಲವೋ, ಹೇಗೆ ಹೇಳಲಿ ಎಂದು ಹೇಳುವ ರೀತಿಯ ಬಗ್ಗೆಯೇ ಯೋಚನೆಮಾಡಿದಷ್ಟೂ ಮಾತು ಸುಳ್ಳು ಮತ್ತಷ್ಟು ಸುಳ್ಳು ಆಗುತ್ತ ಹೋಗುತ್ತದೆ. +ಕೃಷ್ಣಾನಂದರು ಬಂದರು. ಕುಳ್ಳದೇಹ. ವಯಸ್ಸಾದ ಹಣ್ಣಾದ ಮೈ. ತೆಳ್ಳನೆ ಕಾವಿ ಪಂಚೆ, ಕಾವಿಯ ಮೇಲು ಹೊದಿಕೆ, ತಟ್ಟನೆ ಕೂತವರೆಲ್ಲ ಎದ್ದು ನಿಂತರು. ನೆಲಕ್ಕೆ ಹಣೆ ಮುಟ್ಟಿಸಿ ನಮಸ್ಕಾರ ಮಾಡಿದರು. ನಾನೂ, ಕಡಿಮೆ ಎತ್ತರದ ಕುರ್ಚಿಯ ಮೇಲೆ, ಕಾಲುಗಳನ್ನು ಮಡಿಸಿಕೊಂಡು ಕುಳಿತರು. ಸುಮ್ಮನೆ ಇದ್ದರು. ಕಣ್ಣು ಮುಚ್ಚಿದ್ದರು. ಮೌನ, ಬಹಳ ಹೊತ್ತು. ನನ್ನ ಸುತ್ತಲೂ ಇದ್ದವರು ಕಣ್ಣು ಮುಚ್ಚಿ ಕುಳಿತಿದ್ದರು. ನಾನೂ ಕಣ್ಣು ಮುಚ್ಚಿ ಕುಳಿತೆ. ತುಂಬ ಹೊತ್ತು ಹಾಗಿರಲು ಆಗಲಿಲ್ಲ. ಕಣ್ಣು ಬಿಟ್ಟೆ. ಕೃಷ್ಣಾನಂದರೂ ಉಳಿದವರೂ ಇನ್ನೂ ಸುಮ್ಮನೆ ಕಣ್ಣು ಮುಚ್ಚಿಯೇ ಕುಳಿತಿದ್ದರು. ನಾನೂ ಮತ್ತೆ ಕಣ್ಣು ಮುಚ್ಚಿದೆ, ತೆರೆದೆ. ಸುಮ್ಮನೆ ಕೂತೆ. ಕೃಷ್ಣಾನಂದರು ನಿಧಾನವಾಗಿ ಕಣ್ಣುತೆರೆದರು. ಸುಮ್ಮನೆ ಎಲ್ಲರನ್ನೂ ನೋಡಿದರು. ಹಿಂದಿಯಲ್ಲಿ ಮಾತಾಡಿದರು. +“ಅಲ್ಲಿ. ಕೆಂಪು ಉಲ್ಲನ್ ಟೋಪಿ, ಯಾರು ಅದು?” +ನನ್ನನ್ನೆ ಕುರಿತದ್ದು ಎಂದು ನನಗೆ ತಿಳಿಯಲು ಸ್ವಲ್ಪ ಹೊತ್ತು ಹಿಡಿಯಿತು. ಎಲ್ಲರೂ ನನ್ನನ್ನೇ ನೋಡುತ್ತಿದ್ದರು. “ನಾನೇ?” ಅಂದೆ. +“ಹೌದು, ನೀನೇ. ಯಾರು?” +ನನ್ನ ಹೆಸರು ಹೇಳಿದೆ. +“ಎಲ್ಲಿಂದ ಬಂದೆ?” +“ಬೆಂಗಳೂರು.” +“ನಿನ್ನ ಮಾತು ಕೇಳಿಸಲ್ಲ. ಬಾ ಇಲ್ಲಿ.” +ಹತ್ತಿರ ಹೋದೆ. ಅವರ ಮುಂದೆ ಕುಳಿತೆ. ಆಮೇಲೆ ಬೇರೆ ಯಾರನ್ನೋ ಏನೇನೋ ಕೇಳಿದರು. ಉತ್ತರ ಕಾಶಿಯಲ್ಲಿ ಭೂಕಂಪಕ್ಕೆ ಸಿಕ್ಕವರಿಗೆ ಏನೋ ನೆರವು ಕೊಡಲು ಹೋದವರು ಬರಲಿಲ್ಲವೇ ಅಂತ ಇರಬೇಕು. ಇನ್ನು ಯಾರನ್ನೋ ಇವತ್ತಿನ ಪೇಪರಿನಲ್ಲಿ ಏನು ಸುದ್ದಿ? ಒಳ್ಳೆಯದು ಏನೂ ಇಲ್ಲವೆ? ಯಾಕೆ ಓದುತ್ತೀರಿ ಹಾಗಾದರೆ ಪೇಪರನ್ನು ಅಂತ ಅಂದರು. ಆಮೇಲೆ ತಟ್ಟನೆ ನನ್ನ ಕುರಿತು +“ಯಾಕೆ ಬಂದದ್ದು?” ಎಂದು ನಿರೀಕ್ಷಿತ ಪ್ರಶ್ನೆಯನ್ನು ಅನಿರೀಕ್ಷಿತವಾಗಿ, ಖಚಿತ ಉತ್ತರ ಬಯಸುವ ಹಾಗೆ. ಚಾಟಿ ಏಟಿನ ದನಿಯಲ್ಲಿ, ಇಂಗ್ಲಿಷಿನಲ್ಲಿ ಕೇಳಿದರು. +“ನಾನು….ಕಾಲೇಜಿನಲ್ಲಿ….ಮೇಷ್ಟರಾಗಿದ್ದೆ….ಇಪ್ಪತ್ತು ವರ್ಷ ….ಕೆಲಸಮಾಡಿದೆ.” ಸುಮ್ಮನಾದೆ. ಹೊಳೆಯಲಿಲ್ಲ. +ಅವರೂ ಸುಮ್ಮನಿದ್ದರು. ಮತ್ತಷ್ಟು ಕಠಿಣ ದನಿಯಲ್ಲಿ “ಯಾಕೆ ಬಂದದ್ದು?” +“ಈಗ ಮನೆ ಬಿಟ್ಟು ಬಂದುಬಿಟ್ಟಿದ್ದೇನೆ.” +“ಯಾಕೆ?” +“ಬೇಜಾರಾಯಿತು.” +“ಯಾಕೆ?” +“ನಾನು ಪುಸ್ತಕ ಬರೆದೆ….ಹೆಸರು ಮಾಡಿದೆ….ಬಹುಮಾನಗಳು ಬಂದವು….ಕಾಂಪಿಟೀಷನ್ನು ಇಂಥವೆಲ್ಲ ನನಗೆ ಬೇಜಾರಾಯಿತು….” +“ಕಾಂಪೀಟ್ ಮಾಡು ಅಂತ ಯಾರು ಹೇಳಿದರು?” +ಸುಮ್ಮನಿದ್ದೆ. +ನಾನು ನಿಜ ಹೇಳುತ್ತಿಲ್ಲ ಎಂದು ತಿಳಿಸರೆಂಬಂತೆ ಕೇಳಿದರು. +“ಮದುವೆ ಆಗಿದೆಯಾ?” +“ಹೌದು.” +“ಮಕ್ಕಳು?” +“ಇಲ್ಲ.” +“ಕಾಲೇಜಿನಲ್ಲಿ ಏನು ಕಲಿಸುತ್ತಿದ್ದೆ?” +“ಇಂಗ್ಲಿಷು.” +“ಮನೆಯಲ್ಲಿ ಇನ್ನು ಯಾರಿದ್ದಾರೆ?” +“ಅಮ್ಮ.” +“ತಂದೆ?” +“ಇಲ್ಲ. ತೀರಿಹೋದರು.” +“ಅಣ್ಣ, ತಮ್ಮ?” +“ಯಾರೂ ಇಲ್ಲ.” +“ನೀನು ಮನೆ ಬಿಟ್ಟು ಬಂದಿದ್ದಕ್ಕೆ ನಿಮ್ಮ ಅಮ್ಮ, ನಿನ್ನ ಹೆಂಡತಿ ಇವರಿಗೆಲ್ಲ ದುಃಖ ಆಗಲ್ಲವಾ? ಕಷ್ಟ ಆಗಲ್ಲವಾ?” +“ಬೇಜಾರಾಗತ್ತೆ, ಕಷ್ಟ ಬಹುಶಃ ಆಗಲಾರದು. ಹೆಂಡತಿ ಕೆಲಸದಲ್ಲಿದ್ದಾಳೆ. ಇರುವುದಕ್ಕೆ ಸ್ವಂತ ಮನೆ ಇದೆ. ದುಃಖ ಆಗತ್ತೆ. ಆದರೆ ನಾನು ಅವರೆಲ್ಲರ ಜೊತೆ ಇರಲು ಆಗಲ್ಲ ಅನ್ನಿಸಿತು. ಹಾಗಂತ ಸನ್ಯಾಸಿ ಆಗೋಕೆ ಇಷ್ಟ ಇಲ್ಲ.” +ಅವರಿಗೆ ತುಂಬ ಸಿಟ್ಟು ಬಂತು. ಷಟ್ ಅಪ್ ಅನ್ನಲಿಲ್ಲ ಆದರೆ ಅದೇ ಧ್ವನಿಯಲ್ಲಿ, ಗದರಿಸುವಂತೆ “ಹಾಗೆಲ್ಲ ಮಾತಾಡಬಾರದು. ನೀನು ಬಂದದ್ದು ಯಾಕೆ?” +ಸಂಕೋಚದಿಂದ ತಲೆ ಬಗ್ಗಿಸಿ. ದನಿ ಕುಗ್ಗಿ ಹೇಳಿದೆ “ನಾನು ತಪ್ಪು ಮಾಡಿದೆ.” +“ಏನು ತಪ್ಪು?” ತಟ್ಟನೆ ಕನ್ನಡದಲ್ಲಿ ಕೇಳಿದರು. ಸುಮ್ಮನಿದ್ದೆ. +“ಹೇಳಬೇಕು.” +ಆಜ್ಞೆಯಂಥ ದನಿ. +ನನಗೂ ಕೇಳಿಸದಷ್ಟು ಮೆಲುವಾಗಿ ಹೇಳಿದೆ “ಬಹುಶಃ ಹೆಂಡತಿ ಒಪ್ಪಿಕೊಳ್ಳಲಾರದಂಥ ತಪ್ಪು.” +ತಲೆ ತಗ್ಗಿಸಿದ್ದೆ. ಬಹುಶಃ ನನ್ನ ನೋಡುತ್ತಿದ್ದರು. ಸ್ವಲ್ಪ ಹೊತ್ತಾದ ಮೇಲೆ “ಸರಿ. ಮೂರು ದಿನ ಇಲ್ಲಿರಿ. ನೋಡೋಣ. ದಿನಾ ಬೆಳಿಗ್ಗೆ ಸಂಜೆ ಬಂದು ನನ್ನ ನೋಡುತ್ತಿರಿ” ಅಂದು ಯಾರಿಗೋ ಫೋನು ಮಾಡಿ, “ಹೋಗಿ, ಕೆಳಗೆ ಮೈಕಲ್ ಅಂತ ಇದ್ದಾರೆ. ಅವರನ್ನು ನೋಡಿ. ನಿಮಗೆ ಇರಲು ಜಾಗ ಕೊಡುತ್ತಾರೆ ಅಂದು ಮಾತು ಮುಗಿಸಿದರು. +ಮುಗಿಸಬೇಕೆಂಬ ಆಸೆ, ನಾಲ್ಕನೆಯ ದಿನ +ಎಲ್ಲರೂ ಏನಾದರೂ ಕೆಲಸದಲ್ಲಿ ತೊಡಗಿರುವ, ನನ್ನ ನನ್ನ ಪಾಡಿಗೇ ಬಿಟ್ಟಿದ್ದಂತೆ, ಆದರೆ ನನ್ನ ಅಗತ್ಯಗಳನ್ನು ಗಮನಿಸಿಕೊಳ್ಳುತ್ತಿದ್ದ ಆಶ್ರಮದಲ್ಲಿ ಒಂದು ವಾರ ಸುಮ್ಮನೆ ಇದ್ದೆ. ಸುಮ್ಮನೆ ಇರುವುದು ಎಷ್ಟು ಕಷ್ಟ ಎಂದು ತಿಳಿಯಿತು. +ಸುಮ್ಮನಿರುವುದು ಎಷ್ಟು ಕಷ್ಟ. ಮನಸ್ಸು ಹಿಡಿದುಕೊಳ್ಳಲು ಏನಾದರೂ ಸಿಕ್ಕೀತೆ ಎಂದು ಬಯಸುತ್ತಿತ್ತು. ಹುಡುಕುತ್ತಿತ್ತು, ಹಂಬಲಿಸುತ್ತಿತ್ತು. ನೆನಪು, ನೋವು, ಸಮರ್ಥನೆ, ಹಿಂಜರಿಕೆ, ದೈನ್ಯ ಇಂಥವೆಲ್ಲ ಆಗ ನನ್ನ ಮನಸ್ಸಿನಲ್ಲಿ ಬಂದು ಹೋಗುತ್ತಿದ್ದಿರಬಹುದೆಂದು ಈಗ ಅನ್ನಿಸುತ್ತದೆ. ಆಗ. ಆಯಾ ಕ್ಷಣವನ್ನು ತುಂಬಿಕೊಳ್ಳಲು ಏನಾದರೂ ಸರಿ ಅನ್ನಿಸಿತ್ತು. ಓದುತ್ತಿದ್ದೆ. ಮೊದಲು ಉದ್ಯೋಗಕ್ಕೆ ಓದಿದ ಹಾಗಲ್ಲ. ಕೆಲಸ ಸಿಕ್ಕಮೇಲೆ ಓದುವುದೇ ಕೆಲಸವಾಯಿತಲ್ಲ. ಹಾಗೂ ಅಲ್ಲ. ನನಗೇ ಸ್ಪಷ್ಟವಾಗಿರದಿದ್ದ ಪ್ರಶ್ನೆಗೆ ಖಚಿತ ಉತ್ತರ ಸಿಗಬೇಕೆಂಬ ಅಪೇಕ್ಷೆಯ ಓದು. ಆದರೆ, ಬುದ್ಧಿ ಓದಿದ್ದನ್ನೆಲ್ಲ ಅಭ್ಯಾಸ ಬಲದಿಂದ ಪ್ರಶ್ನಿಸುತ್ತ ತಿರಸ್ಕರಿಸುತ್ತ ಅಹಂಕಾರವನ್ನು ಇನ್ನಷ್ಟು ಬೆಳೆಸುತ್ತಿತ್ತೆಂದು ಕಾಣುತ್ತದೆ. ಮನಸ್ಸು ನೊಣದ ಹಾಗೆ ಕೆಲವೇ ನೆನಪುಗಳ ಸುತ್ತ ಹಾರಿ ಹಾರಿ ಕೂರುತ್ತ. ನಾನು ನಡೆದುಕೊಂಡ ರೀತಿಗೆ ಬುದ್ಧಿ ಸಮರ್ಥನೆ ನೀಡಲೆಂದು ಬಯಸುತ್ತಿತ್ತೆಂದು ಕಾಣುತ್ತದೆ. ನನ್ನಮೈ ದಿನ ದಿನ ಹೊತ್ತಿಗೊತ್ತಿಗೆ ಸಿಗುವ ಊಟ ನಿದ್ದೆಗಳಿಗೆ ಹೊಂದಿಕೊಳ್ಳುತ್ತ ನಿಧಾನವಾಗಿ ಹಿತವಾಗಿ ಸಡಿಲಾಗಲು ಸಿದ್ಧವಾಗುತ್ತಿತ್ತು. ನಾನು ನನ್ನದೇ ಆದ ಒಂದು ಥಿಯರಿ ರೂಪಿಸಿಕೊಂಡೆ: ನನ್ನ ಬುದ್ಧಿ. ಮನಸ್ಸು ಮತ್ತು ದೇಹ ಬೇರೆ ಬೇರೆ ಅಪೇಕ್ಷೆಗಳನ್ನು ಹೊಂದಿವೆ, ಅವಕ್ಕೆ ತಾಳ-ಮೇಳ ಇಲ್ಲ. ಯಾಕೆ ಹೀಗೆ ಅಂತ ತಿಳಿಯುವುದೇ ನನ್ನ ಗುರಿ ಅಂತ. ಆದರೆ ಕೆಲವು ದಿನಗಳ ಪರಿಚಯದ ನಂತರ ಕೃಷ್ಣಾನಂದರ ಡ್ರೈವರಾಗಿದ್ದ ಜಯಕುಮಾರನ ಬಳಿ ಹೀಗೆಂದಾಗ ಅವನು ಜೋರಾಗಿ ನಕ್ಕು ನನ್ನ ಥಿಯರಿಯನ್ನು ಉಫ್ ಅಂದುಬಿಟ್ಟ. “ನಿಮ್ಮಲ್ಲಿ ಅಂಥ ಸ್ಪ್ಲಿಟ್ ಇದ್ದಿದ್ದರೆ ನೀವು ಒಂದು ಕ್ಷಣವೂ ಬದುಕಿರುತ್ತಿರಲಿಲ್ಲ. ನೀವು ತಿಳಿದದ್ದು ಜೀರ್ಣ ಆಗುತ್ತಿರಲಿಲ್ಲ. ಮೈ. ಮನಸ್ಸು, ಬುದ್ಧಿಗಳ ಸಂಬಂಧ ಅಷ್ಟು ಸುಲಭವಾಗಿ ಬೇರ್ಪಡುವುದಿಲ್ಲ.” +ಮುಗಿಸಬೇಕೆಂಬ ಆಸೆ ಐದನೆಯ ದಿನ +ತಿರುವನಂತಪುರದ ರೇಲ್ವೇ ಸ್ಟೆಷನ್ನಿನಲ್ಲಿ ಅವತ್ತು ರಾತ್ರಿ ಮಲಗಿದ್ದೆ. ಆಗಿನ್ನೂ ನಾನು ಹಿಮಾಲಯಕ್ಕೆ ಹೀಗೆ ಹೋಗಿ ಆಶ್ರಯ ಪಡೆದೇನು ಎಂದು ಗೊತ್ತಿರಲಿಲ್ಲ. ಡಾರ್ಮಿಟರಿ ಮಹಡಿಯ ಮೇಲೆ ಇತ್ತು. ನೈಟುಗೌನು ಹಾಕಿಕೊಂಡ ಒಬ್ಬ ಮಹಿಳೆ ಬೆತ್ತದ ಕುರ್ಚಿಯಮೇಲೆ ಸುಮ್ಮನೆ ರಾತ್ರಿ ಹತ್ತುಗಂಟೆಯ ನಿಯಾನ್ ಬೆಳಕಿನ ಸ್ಟೇಷನ್ ಆಚೆಯ ರಾತ್ರಿಯನ್ನು ನೋಡುತ್ತಿದ್ದಳು-ನನ್ನ ಹಾಗೇ. +ನನಗೆ ಕನ್ಯಾಕುಮಾರಿಗೆ ಹೋಗಬೇಕೆನಿಸಿತ್ತು. ತೀರ ಎಳವೆಯ ಅಪ್ಪ. ಅಮ್ಮನೊಡನೆ ಅಲ್ಲಿಗೆ ಹೋಗಿದ್ದೆ. ಆಗ ಅದು ಪುಟ್ಟ ಹಳ್ಳಿ. ವಿಶಾಲವಾದ ಮರಳ ಹಾಸು. ಎಲ್ಲಿಂದ ನೋಡಿದರೂ ಕಾಣುತ್ತಿದ್ದ ಕೆಂಪುಬಿಳಿ ಪಟ್ಟೆಗಳ ದೇವಸ್ಥಾನದ ಗೋಡೆ. ಒಂದು ಪುಟ್ಟ ಗಾಂಧಿ ಸ್ಮಾರಕ. ದಕ್ಷಿಣದ ನೆಲದ ತುದಿ ಸಮುದ್ರದ ಮೊರೆತ ಬಿಟ್ಟರೆ ಉಳಿದಂತೆ ನಿರ್ಜನ, ನಿಶ್ಯಬ್ಧ. ದೂರದಲ್ಲಿ ಇನ್ನೂ ವಿಕಾರ ಆಕಾರದ ಸ್ಮಾರಕ ಭವನ ಕಟ್ಟಿಕೊಳ್ಳದೆ, ಅಥವ ಅಂಥ ಅಪೇಕ್ಷೆಯೂ ಜನರಲ್ಲಿ ಮೂಡದೆ. ಅಗೋ ಅದು ವಿವೇಕಾನಂದ ತಪಸ್ಸು ಮಾಡಿದ ಕಲ್ಲು ಅಂತ ಬಾಯಿಮಾತಿನಲ್ಲಿ ಅವರಿವರು ತೋರುತ್ತಿದ್ದ ಸಹಜ ಬಂಡೆ. ಕನ್ಯಾಕುಮಾರಿಯ ನೆನಪು ಉಳಿದದ್ದು ಅಂದು ತುಂಬ ನಿರ್ಮಲ. ತುಂಬ ಪ್ರಶಾಂತ ಅನ್ನಿಸಿದ್ದಕ್ಕೆ ಮತ್ತು ಅಲ್ಲಿ ಭಯವಾಗಿದ್ದಕ್ಕೆ ಮತ್ತು ಅಲ್ಲಿ ಧುಃಖ ಅಲ್ಲ ನೋವು ಆಗಿದ್ದಕ್ಕೆ. +ಸಂಜೆ ಸೂರ್ಯ ಮುಳುಗಿದ ಮೇಲೆ ನಾನು, ಅಪ್ಪ ಮತ್ತು ಅಮ್ಮ ಮಾತ್ರ ಬರುತ್ತಿದ್ದೆವು. ಬೆಳಕು ಮಬ್ಬಾಗಿತ್ತು. ಸಮುದ್ರದ ಅಲೆಗಳಿಗೆ ಉಕ್ಕು ಬಂದಿತ್ತು. ಎತ್ತರಕ್ಕೆ ಹಾರಿ, ಮಬ್ಬಿನಲ್ಲಿ ಇಷ್ಟೆ ಹೊಳೆಯುವ ಬಿಳುಪು ನೊರೆಯ ಉದ್ದ ದಪ್ಪಗೆರೆಯಾಗಿ, ಅಲೆಯ ನೀಲಿ ಆಗುತ್ತಿರುವ ಕತ್ತಲ ಬಣ್ಣದ ಜೊತೆ ಬೆರೆತು. ಏರಿದ ಅಲೆಯ ಶಿಖರ ನೆಲಕ್ಕೆ ಆರ್ಭಟಿಸಿ ಬಡಿದು ನೀರಿನ ವಕ್ರಗೆರೆಗಳ ವಿನ್ಯಾಸವಾಗಿ ಮುಂದೆ ಬರುತ್ತಿದ್ದಂತೆಯೇ ಹಿಂದೆಸರಿಯುತ್ತ ಸರಿಯುವ ಮೊದಲೇ ಇನ್ನೊಂದಿ‌ಉ ಅಲೆಯ ಆರ್ಭಟ ಕಿವಿ ತುಂಬಿ, ಕಣ್ಣಿಗೆ ಒಂದರ ಹಿಂದೊಂದೊಂದು ಬರುತ್ತಲೇ ಇರುವ ಅಲೆಗಳ ಸಾಲು ಕಂಡು, ಬಿಳಿಯಾಗಿದ್ದ ಅಪ್ಪನ ತಲೆಗೂದಲು, ಗಾಳಿಗೆ ಹಾರಾಡುತ್ತಿದ್ದ ಬಿಳಿಯ ಪಂಚೆ, ಬಿಳಿಯದಾಗುತ್ತಿದ್ದ ಅಮ್ಮನ ಜಡೆ, ಯಾರ ಮಾತೂ ಕೇಳಿಸದ ಸಮುದ್ರದ ಮೊರೆತ, ಹೆಚ್ಚುತ್ತಿದ್ದ ಮಬ್ಬು ಎಲ್ಲ ಸೇರಿ ನನಗೆ ತುಂಬ ಭಯವಾಗಿತ್ತು. ಅವತ್ತು ರಾತ್ರಿ ದೇವಾಲಯದ ಮೆಟ್ಟಿಲು ಏರುವಾಗ ಬೆಳದಿಂದಳಿದ್ದರೂ ಆಬೆಳಕಿನಲ್ಲಿ ಸಮುದ್ರದ ಭಯ ಹೆಚ್ಚಾಯಿತು. ಅದು ಕಣ್ಣಿಗೆ ಬೀಳದಂತೆ ಪಾವಟಿಗೆಯ ಗೋಡೆ ಮಗ್ಗುಲಲ್ಲಿ ಅಂಬೆಗಾಲಿಡುವವನಂತೆ ಬಗ್ಗಿ. ಕಿವಿ ಮುಚ್ಚಿಕೊಂಡು ನಡೆದಿದ್ದೆ. ಕನ್ಯಾಕುಮಾರಿಯ ಎಲ್ಲರೂ ಸುಂದರವೆಂದು ಕರೆಯುವ ವಿಗ್ರಹದ ನೆನಪು ನನಗೆ ಉಳಿದೇ ಇಲ್ಲ. ಯಾಕೆಂದರೆ ನಾನು ಅದನ್ನು ನೋಡಲೇ ಇಲ್ಲ. ದೇವಸ್ಥಾನದಲ್ಲಿ ಇದ್ದರೂ ನನ್ನ ಗಮನವೆಲ್ಲ ಅಪ್ಪನ ಮೇಲಿತ್ತು. ಅವರು ತುಂಬ ಅಳುತ್ತಿದ್ದರು. ಯಾಕೆಂದು ತಿಳಿಯಲಿಲ್ಲ. ಅವರು ಆಡಿದ ಮಾತಿನ ತುಣುಕಿನಲ್ಲಿ ‘ಗರಗಸ’ ಅನ್ನುವುದು ಮಾತ್ರ ಉಳಿದಿದೆ. ಅಮ್ಮನನ್ನು ಹಾಗೆಂದರೆಂದು ನನಗೆ ಅನ್ನಿಸಿತು. ಅಪ್ಪನ ಕಣ್ಣಿರು ನೋಡಿ ನನಗೆ ದುಃಖಕ್ಕಿಂತ ನೋವು ಬಹಳ ಆಯಿತು. +ಮತ್ತೆ ಅದೆ ಕನ್ಯಾಕುಮಾರಿಗೆ ಸಾಕಷ್ಟು ಬೆಂದು ಹೋಗುತ್ತಿದ್ದೇನೆ. ನಾಳೆ ಬೆಳಿಗ್ಗೆ. ಈಗ ತಿರುವನಂತಪುರದ ಸ್ಟೇಷನ್ನಿನ ಮಹಡಿ ಮೇಲೆ ನಿಂತು ಸುಮ್ಮನೆ ನೋಡುತ್ತಿದ್ದೆ. ನೈಟ್ ಗೌನಿನ ಮಹಿಳೆಯ ಮಗಳು ಬಂದು ತಾಯಿಯ ಪಕ್ಕ ಕುಳಿತಳು. ಸ್ವಲ್ಪ ಹೊತ್ತಿನ ನಂತರ ಎದ್ದು ಹೋದರು. ತಿರುವನಂತಪುರ ಮಲಗುತ್ತಿತ್ತು. ಕೆಲವರು ಹೊಸದಾಗಿ ಎದ್ದಿದ್ದರು. ನಾನು ನಿಂತ ಎರಡನೆಯ ಮಹಡಿಯಿಂದ ಕಳ್ಳತನದಿಂದೆಂಬಂತೆ ಬಂದು ನಿಲ್ಲುವ ಟ್ಯಾಕ್ಸಿಗಳು. ಟ್ಯಾಕ್ಸಿಯಿಂದ ಸೊಂಟಕ್ಕೆ ಮೇಲೆತ್ತಿ ಕಟ್ಟಿದ ಬಿಳಿಪಂಚೆಯ ಒಬ್ಬ-ಇಬ್ಬ ಗಂಡಸರು. ಸೈಕಲ್ಲು ತಳ್ಳಿಕೊಂಡು ಬರುವ ಟೀ ಷರ್ಟಿನೊಡನೆ ಬರುವ ಹೆಂಗಸರು. ಇನ್ನೆಲ್ಲೊ ಕಂಬಕ್ಕೆ ಒರಗಿ ನಿಂತ ಹೆಂಗಸರು. ಒಬ್ಬನೇ ಒಬ್ಬ ಹೂ ಮಾರುವವ. ಕುದುರುವ ಕುದುರದಿರುವ ವ್ಯಾಪಾರ. ಗಟ್ಟಿಯಾಗಿಬಿಡುವ ದನಿಯನ್ನು ಪ್ರಯತ್ನ ಪೂರ್ವಕವಾಗಿ ಮೆಲುವಾಗಿಸುವ ಯತ್ನ. ಯಾರ ಮುಖವೂ ಕಾಣದೆ ಕೇವಲ ಗಂಡು-ಹೆಣ್ಣು ಆಕಾರಗಳ ಚಲನೆಯನ್ನು ಮಾತ್ರ ಕಾಣುತ್ತ ಬೆನ್ನಹಿಂದಿನ ಸ್ಟೇಷನ್ನಿನಲ್ಲಿ ನಿರಂತರವಾಗಿ ಕೇಳುತ್ತಲೇ ಇದ್ದ ದಡಕ್ ದಡಲ್ ದಡದಡಕ್ ಕ್ರೀಚ್-ಮನಸ್ಸಿನಲ್ಲಿ ಮುಖವಿಲ್ಲದ ಬತ್ತಲೆ ಗಂಡುಹೆಣ್ಣುಗಳು. +ಅಂದು ರಾತ್ರಿ ನನ್ನ ಜೊತೆಗಾರನಾಗಿದ್ದವನು ಕೇಳಿದ: “ಏನು, ನೀವು ತೀರ್ಥಯಾತ್ರೆ ಹೋಗುತ್ತಿದ್ದೀರಾ?” ಹೌದೆಂದು ಉತ್ತರಿಸಿ ಮಲಗಿದೆ. ಗಾಢವಾದ ನಿದ್ರೆ ಬಂದಿತು. ಮಧುರೆಯಿಂದ ಕ್ವಿಲಾನಿಗೆ ಬರುವಾಗ ಕಂಡ ದಟ್ಟಕಾಡು, ಬಿಸಿಲಿಗೆ ಹೊಳೆವ ದೊಡ್ಡ ಒದ್ದೆ ಬಂಡೆಗಳು. ಜಟಿಲ ಆಕಾರದ ನಿಬಿಡ ವೃಕ್ಷಗಳು, ಅಯ್ಯಪ್ಪನ ದರ್ಶನಕ್ಕೆ ಹೊರಟಿದ್ದ ಕುಟುಂಬದ ಪುಟ್ಟ ಹುಡುಗಿ, ತಮಿಳುಮಾತುಗಳು, ಕ್ವಿಲಾನಿನಲ್ಲಿ ಇಲ್ಲಿಗೆ ಬರುವ ಇನ್ನೊಂದು ರೈಲಿಗಾಗಿ ಸುಮ್ಮನೆ ಖಾಲಿ ಪ್ಲಾಟ್ ಫಾರ್ಮಿನಲ್ಲಿ ಕಾದು ಕಳೆದ ಮೂರು ಗಂಟೆಗಳು, ಬಂದ ರೈಲಿನ ತುಂಬ ಇದ್ದ ಆಫೀಸು ಮಹಿಳೆಯರು, ಕಿಟಿಕಿಯಾಚೆಯ ಕಡಲ ಹಿನ್ನೀರ ದಡದ ಒಂದರ ನಂತರ ಒಂದು ಬಂದೇ ಬರುವ ಹಳ್ಳಿಗಳು, ಮನಸ್ಸಿಗೆ ಇಳಿಯದ ಸಾವಿರದೆಂಟು ಮುಳಗಳು ಬಹುಶಃ ಆಯಾಸ. ಗಾಢವಾದ ನಿದ್ದೆ. +ಯಾವಾಗಲೋ ಒಮ್ಮೆ ತಟ್ಟನೆ ಎಚ್ಚರ. ಎಚ್ಚರವಾದ ಕ್ಷಣ ಇನ್ನೂ ಮುಂದುವರಿದಿದೆ ಅನ್ನಿಸುವಂತ ಗಾಢವಾದ ಕನಸು. ನೆನಪಿಗೆ ಬಂದಿತೋ ಅಥವ ನಿಜವೇ ಅನ್ನಿಸಿತೋ ಗೊತ್ತಿಲ್ಲ. ಅವಳ ಮನೆ, ಶಿವಮೊಗ್ಗದ ಪುಟ್ಟ ಮನೆ, ಪುಟ್ಟದಾದ್ದರಿಂದಲೇ ಬಟ್ಟೆಯಲ್ಲಿ ಒತ್ತಿ ಒತ್ತಿ ಒರೆಸಿದ ನೆಲದ ನೀರು ವಾಸನೆ, ಬಚ್ಚಲ ಬಳಿ ಅಂಗಳದಲ್ಲಿ ಒಗೆದು ಒಣ ಹಾಕಿದ ಉಡುಪುಗಳ ಸೋಪುನೀರು ಮಿಶ್ರಿತ ವಾಸನೆ, ಅಡುಗೆ ಮನೆಯಲ್ಲಿ ಅವಳು ಮಾಡುತ್ತಿರುವ ಅಡುಗೆಯ ವಾಸನೆ, ಸ್ಟೀಲಿನ ಪಾತ್ರೆಗಳು ಪರಸ್ಪರ ತಗುಲಿದ, ಒಲೆಯ ಮೇಲಿಟ್ಟ, ನೆಲದ ಮೇಲಿಟ್ಟ ಸದ್ದುಗಳು. ಮೂಲೆಯಲ್ಲಿ ಸಾಲಿಡೆರ್ ಕಪ್ಪು ಬಿಳುಪು ಟಿವಿ. ಸೋಫಾದಮೇಲಿನ ಸ್ವಲ್ಪ ಜಾರಿದ ಹೊದಿಕೆ ಬೆಡ್ ಶೀಟು. ದುಂಡನೆ ಬೆತ್ತದ ಕುರ್ಚಿ. ಅಂಗಳದ ತುಂಬ ಪ್ರೀತಿಯಿಂದ ಬೆಳೆಸುತ್ತಿರುವ ತೆಂಗಿನ, ಪರಂಗಿಯ, ಗೊರಟೆ ಹೂವಿನ, ಹೀರೆಯ ಸಸಿಗಳ ಕಂಪು, ನನ್ನೊಡನೆ ಮಾತಾಡುವಾಗಲೆಲ್ಲ ಉತ್ಕಂಠಿತವಾಗುತ್ತಿದ್ದ ಅವಳ ದನಿ, ಬೆಚ್ಚಗಾಗುತ್ತಿದ್ದ ಅವಳ ನೋಟ, ನನ್ನನ್ನು ಇನ್ನು ಯಾರೂ ಕರೆಯದಷ್ಟು ಮೃದುವಾದ ಅಕ್ಕರೆ ತುಂಬಿದ ಎಳೆಯದನಿಯಲ್ಲಿ ‘ಮಾವಾ ಮಾವಾ’ ಅಂತ ಮಾತು ಮಾತಿಗೆ ಕರೆದು ಮಾತನಾಡುತ್ತ, ದಿನವೆಲ್ಲ ನಡೆದದ್ದನ್ನೆಲ್ಲ ಹೇಳುತ್ತ, ಪುಟ್ಟ ಮೃದು ತೋಳುಗಳಲ್ಲಿ ಆಗಾಗ ನನ್ನ ತೋಳು ಬಳಸುತ್ತ, ಹೊಸದಾಗಿ ಕಲಿತ ಹಾಡು ಹಾಡಿ ತೋರುತ್ತ, ಚಿಗರೆ ಹಾಗೆ ಚಿಮ್ಮಿ ಓಡಿಬಂದು ನನ್ನ ಕೈಹಿಡಿದು ನನ್ನ ಕೈಹಿಡಿದು ಮನೆಗೆ ಕರೆಯುತ್ತ, ನನ್ನ ಪುಟ್ಟ ಮಗಳೇ ಎಂಬಂತೆ ಪ್ರೀತಿಯನ್ನು ತೋರುತ್ತಿದ್ದ ಅವಳ ಮಗಳು. +ಕನಸೋ ಎಚ್ಚರವೋ. ಅವಳ ಮನೆಯಂಗಳದಲ್ಲಿ ಬೆಳದಿಂಗಳಿತ್ತು. ಮೆಟ್ಟಿಲ ಮೇಲೆ ಚಂದ್ರ ಮತ್ತು ಅವಳು ಮಾತನಾಡುತ್ತ ಕೂತಿದ್ದರು. ನಾನು ಬಂದೆ. ಉಣುಗೋಲು ತೆಗೆದೆ. ದುಂಡನೆಯ ಬೆತ್ತದ ಕುರ್ಚಿಯ ಮೇಲೆ ಕುಳಿತೆ. ಟಿವಿಯಲ್ಲಿ ಚಿತ್ರಗೀತೆ ಬರುತ್ತಿತ್ತು. ಮಗಳು ಲೆಕ್ಕ ಮಾಡುತ್ತಿದ್ದಳು. ತುಂಬ ಸಂತೋಷದಿಂದ ಮಾತನಾಡಿದೆವು. ಚಂದ್ರಳಿಗೆ ತಿಳಿಯದಂತೆ ಅವಳು ನನ್ನಬಳಿ ಬಂದು ತುಟಿಗಳ ಮೇಲೆ ಒದ್ದೆಯ ತೇವದ ಬೆಚ್ಚನೆಯ ಒತ್ತು ಮುತ್ತು ಕೊಟ್ಟಳು. ನನ್ನ ಎದೆಯಮೇಲೆ ಹಿತವಾದ ಮೃದು ಭಾರ. +ನೆನಪಿನಲ್ಲಿ ಉಳಿಯುವ ಈ ಇನ್ನೊಂದು ಕನಸನ್ನು ಜೋಪಾನ ಮಾಡಿಕೊಂಡು ಕನ್ಯಾಕುಮಾರಿಗೆ ಹೋದೆ. ಒಂದು ದಿನವೂ ಉಳಿಯದೆ ಇದು ನಾನು ಬಯಸಿದ ಕನ್ಯಾಕುಮಾರಿಯಲ್ಲ ಎಂದು ಹಿಂದಿರುಗಿಬಿಟ್ಟೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿ. ಸಿಟಿ ಮಾರ್ಕೆಟ್ಟಿನ ಬಳಿ ಫುಟ್ ಪಾತಿನ ಮೇಲೆ ಇರುವಂಥ ಅಸಂಖ್ಯಾತ ಡಬ್ಬದಂಗಡಿಗಳು; ವ್ಯಾಪಾರಕ್ಕಿಟ್ಟ ವಿವೇಕಾನಂದ; ಸಮುದ್ರಭಯವನ್ನೂ ಹುಟ್ಟಿಸದೆ, ನೋವೂ ಕೊಡದೆ, ಪ್ರೀತಿಯನ್ನೂ ಮೂಡಿಸದೆ ಯಾರದೋ ಪಿಕ್ನಿಕ್ಕಿನಲ್ಲಿ ಅನಾಹ್ವಾನಿತನಾಗಿ ಇಲ್ಲಿಗೇಕೆ ಬಂದೆ ಅಂತನ್ನಿಸಿ ತಟ್ಟನೆ ಹಿಂದಿರುಗಿಬಿಟ್ಟೆ. +ಆತ್ಮಾನಂದ ನನಗೆ ಒಬ್ಬ ಗುರುವಾದ. ಕನ್ನಡ ಇಂಗ್ಲಿಷು ಹಿಂದಿಯನ್ನೆಲ್ಲ ಒಂದೇ ಭಾಷೆಯೆಂಬಂತೆ ಬೆರೆಸಿ ಸಹಜವಾಗಿಮಾತನಾಡುವ, ಮನಸ್ಸು ತುಂಬಿದ್ದಾಗ ಹಾರ್ಮೋನಿಯಂ ಹಿಡಿದು, ತಲೆ ಎತ್ತಿ, ಕಣ್ಣು ಅರ್ಧಮುಚ್ಚಿ, ಮನಸ್ಸನ್ನೇ ಹಾಡಾಗಿಸಿಬಿಡುವ, ಯಂತ್ರಗಳ ಭಾಷೆಯನ್ನು ಯಂತ್ರಗಳಿಗಿಂತ ಚೆನ್ನಾಗಿ ಬಲ್ಲ, ತೆಳ್ಳನೆಯ ಮೈಯ, ತಾನೇ ಉದುರಿಸಿಕೊಂಡ ಮುಂದಿನೆರಡು ಹಲ್ಲುಗಳನ್ನು ಕಟ್ಟಿಸಿಕೊಂಡು ಬೇಕೆಂದಂತೆ ಅವನ್ನು ನಾಲಗೆಯಿಂದ ಹೊರದಬ್ಬಿ ಒಳಗೆ ನುಂಗಿ ತಮಾಷೆ ಮಾಡುವ, ಕಪ್ಪು ದಟ್ಟ ಉದ್ದ ಕೂದಲ, ಗಡ್ಡದ ಹಳದಿ ಉಡುಗೆಯ ಯುವ ಬ್ರಹ್ಮಚಾರಿ ಪರಿಣಿತ. ಮೂರು ದಿನ ನಾಲ್ಕುದಿನ ನಿದ್ದೆಯಿಲ್ಲದೆ, ಊಟ ನೀರು ಏನೂ ಬಯಸದೆ ಸುಮ್ಮನೆ ದುಡಿಯುತ್ತಲೇ ಇರುವ ಅಥವ ನಾಲ್ಕುದಿನ ಮೈಮೇಲೆ ಎಚ್ಚರವೇ ಇಲ್ಲದೆ ಮಲಗಿಬಿಡುವ ಮನುಷ್ಯ, ಆಶ್ರಮದ ಯಾವ ಹಿರಿಯನನ್ನೂ ಅವನ ವರ್ತನೆ ಹಿಡಿಸದಿದ್ದರೆ ಮುಲಾಜಿಲ್ಲದೆ ಟೀಕಿಸುತ್ತಿದ್ದ. ಯಾರಾದರೂ ಭಯವಾಗುವುದಿಲ್ಲವೇ ಅಂದರೆ “ಮನೆಯನ್ನೇ ಬಿಟ್ಟುಬಂದವನಿಗೆ ಆಶ್ರಮ ಬಿಟ್ಟು ಹೋಗುವುದಕ್ಕೆ ಎಂಥ ಭಯ?” ಅನ್ನುತ್ತಿದ್ದ. +“ನೀನು ಸುಮ್ಮನೆ ಪ್ರಸ್ಸಿನಲ್ಲಿ ಯಾಕೆ ಫೂಫು ತಿದ್ದುತ್ತ ಕೂಡುತ್ತೀ? ನನ್ನ ಜೊತೆ ಬಾ. ನಿನಗೆ ಕಂಪ್ಯೂಟರ್ ಕಲಿಸುತ್ತೇನೆ.” ಅಂದ. ಹ್ಞೂಂ ಅಂದೆ. ಪ್ರಸ್ಸಿನ ದೇವಾನಂದರೂ ಕೃಷ್ಣಾನಂದರೂ ಒಪ್ಪಿದರು. ಕಂಪ್ಯೂಟರ್ ರೂಮಿಗೆ ಬಂದೆ. +ಮುಂದುವರೆಯುವುದು +ಕೀಲಿಕರಣ: ಸೀತಾಶೇಖರ್ +ಮತ್ತೆ ಬರವಣಿಗೆಯ ಎರಡನೆಯ ದಿನ ಮೊದಲ ಸಾರಿ ಹಿಮಾಲಯಕ್ಕೆ ಹೊರಟಾಗ ಎಂಥ ಎಷ್ಟು ಉತ್ಸಾಹ ಇತ್ತು. ಮೂರು ತಿಂಗಳ ಮೊದಲೆ ಬೇಕಾದದ್ದನ್ನೆಲ್ಲ ಸವರಿಸಿಕೊಳ್ಳತೊಡಗಿದ್ದೆವು. ಜೀನ್ಸ್ ಪ್ಯಾಂಟು, ಬಣ್ಣ ಬಣ್ಣದ ತುಂಬು ತೋಳಿನ ಹತ್ತಿಯ ತೆಳ್ಳನೆ […] +ಗೆಳೆಯರಾದ ಶ್ರೀ ಬಾಬು ಮೆಟ್‌ಗುಡ್‌ರವರು ಅಮೇರಿಕಕ್ಕೆ ಬರಲು ಆಹ್ವಾನಿಸಿದ್ದಾಗಲೆಲ್ಲ, ನಾನು ಇದೊಂದು ಸೌಜನ್ಯದ ಕರೆಯೆಂದು, ಉಪೇಕ್ಷಿಸಿದ್ದೆ. ಅವರು ಆತ್ಮೀಯವಾಗಿ ಕರೆದಾಗಲೆಲ್ಲ ಲೋಕಾಭಿರಾಮವಾಗಿ ಒಪ್ಪಿಕೊಂಡಂತೆ ನಟಿಸುತ್ತಿದ್ದೆ. ಆದರೆ ಈ ನಟನೆ ಬಹಳ ದಿನ ಉಳಿಯಲಿಲ್ಲ. ೧೯೯೭ರ […] +ಬರಿಗಾಲು. ನಿಧಾನವಾದರೂ ದೃಢವಾದ ಹೆಜ್ಜೆ. “ಯಾರು ನೀವು? ಏನು ಬೇಕು?” ಅಂತ ಆತ ಕೇಳಿದಾಗ ಉತ್ತರ ಹೇಳುವುದು ತಡ ಆಯಿತು. ನನಗೆ ಇರೋಕೆ ಜಾಗ ಬೇಕು, ಮಾಡೋಕೆ ಕೆಲಸ ಬೇಕು. ಅದನ್ನು ಕೊಡಿ ಅಂತ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_119.txt b/Kannada Sahitya/article_119.txt new file mode 100644 index 0000000000000000000000000000000000000000..1d5d41fa2c5dc6da293b00992e02d2ddbff5c2c1 --- /dev/null +++ b/Kannada Sahitya/article_119.txt @@ -0,0 +1,58 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ದಿನ ಭಾನುವಾರ- +ಹರಿವ ಹೊಳೆ ತಟ್ಟನೆ ನಿಂತು ಮಡುವಾಗಿ +ನನ್ನ ದಡದಲ್ಲಿರುವ ಗಿಡಮರ ಬಳ್ಳಿ +ಪ್ರತಿಫಲಿಸಿ, +ಏನೋ ಸಮಾಧಾನ. +ಅಂಥ ಅವಸರವಿಲ್ಲ, +ಬೆಳಗಿನ ನಿದ್ದೆಗಿನ್ನೊಂದಿಷ್ಟು ವಿಸ್ತರಣೆ +ಕೊಡಬಹುದು. +ಬೆಳೆದಿರುವ ಗಡ್ಡ ಇನ್ನೂ ಒಂದೆರಡು ತಾಸು +ಕಾಯಬಹುದು. +ಈ ಒಂದು ದಿನವಾದರೂ +ಬರುವ ಹೋಗುವ ಅವಸರದ ಹೆಜ್ಜೆಗಳ, +ಬೆಳೆವ ಕ್ಯೂ ಬಾಲಗಳ, ಉರುಳು ಗಾಲಿಗಳ, +ಫೋನುಗಳ, ಫೈಲುಗಳ ರಗಳೆಯಿಲ್ಲದ ಹಾಗೆ +ಬಿದ್ದಲ್ಲೇ ಬಿದ್ದು ನಾನೇ ನಾನಾಗಬಹುದು. +ಈ ನಾನು +ಪರಕ್ಕೆ ಟಿಕೆಟ್ಟು ತೆಗೆದಿರಿಸಿ +ಇಹದ ವೆಯಿಟಿಂಗ್ ರೂಮಿನಲ್ಲಿ +ರೈಲಿಗೆ ಕಾಯುತ್ತಿಲ್ಲ. +ನನ್ನ ಉದ್ಧಾರಕ್ಕೆ +ಯಾವ ದೇವರಿಗೂ ಲಂಚ ಕೊಡಬೇಕಾಗಿಲ್ಲ. +ಸಾಧ್ಯವಾದಷ್ಟು ಈ ಬೀದಿಗಳ ಮೇಲೆ +ನನ್ನ ಗಾಲಿಗಳನ್ನು ಉಜ್ಜಿ ಸವೆಸಿದ್ದೇವೆ; +ಈ ಒಂದು ದಿನ, ನಿಂತ ಗಾಲಿಗಳ ಕೀಲುಗಳಿಗೊಂದಿಷ್ಟು +ಎಣ್ಣೆ ಹೊಯ್ಯುತ್ತೇನೆ. +ಎಂಥ ಸೊಗಸಾಗಿದೆ ಕಿಟಕಿಯಾಚೆಗೆ +ನೀಲಿಯಲ್ಲಿ ತೆಳ್ಳಗೆ ತೇಲುವ ಮೋಡ, +ಕೆಳಗೆ ಒಂದೇ ಗುಡ್ಡ, ಗುಡ್ಡದ ಮೇಲೆ +ತಲೆಗೆದರಿ ನಿಂತ ಒಂದೇ ಮರ. +ಎಲ್ಲವೂ ರಜಾ ತೆಗೆದುಕೊಂಡಂತಿದೆ +ಈ ವಿರಾಮ! +ಇಂಥ ಭಾನುವಾರದ ಒಂದು ಕ್ಷಣವನ್ನೆ +ನಿತ್ಯವಾಗಿಸಿಕೊಂಡಿರಬಹುದೆ +ಸಂತ-ಸಿದ್ಧರ ಮನಸ್ಸು? +ಹಾಗೆ ನೋಡಿದರೆ, ಈ ಒಂದು ಕ್ಷಣ +ನಾನು ಒಬ್ಬ ಸಿದ್ಧ +ಅಥವಾ ಸ್ವಲ್ಪ ಕೆಳಗಿನ ಬುದ್ಧ! +***** +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +೧ ಒಂದರಗಳಿಗೆಯ ಬಂಧುರ ಸ್ಪರ್‍ಶಕೆ ಮಂದಾನಿಲನೈತಂದಿಹನು; ಹಗಲಿನ ಬಿಸಿಲಿಗೆ ಮಾಗಿದ ಬನಗಳ ಫಲಗಳ ಸೊಂಪಿನಲೀಜಿಹನು. ೨ ರವಿಯದೊ ಬಿದ್ದನು! ಕವಿಯಿದೊ ಎದ್ದನು ತಂಗಾಳಿಯ ಜತೆ ಕೇಳಿಯಲಿ- ನೀಲಾಂಗಣದಲಿ ಮೋಡದ ಪುತ್ಥಳಿ ತೂಕಡಿಸುತ್ತಿರೆ ನಿದ್ದೆಯಲಿ. ೩ […] +ಅನ್ಯಮನಸ್ಕನಾಗಿ ಬೆಳಗಿನ ಝಾವ ಗೇಟ್ ತೆರೆದು ಎಂದಿನಂತೆ ಒಳಬರುವಾಗ ಮನೆಯೊರಸಿ, ರಂಗೋಲೆಹಾಕಿ ಮುಂಭಾಗ ಓರಣಗೊಳಿಸಿ ಸುಸ್ತಾದ ಹೆಂಡತಿ ಕಾಲೊರೆಸಿಕೊಂಡು ಒಳಗೆ ಬನ್ನಿ ಎನ್ನುತ್ತಾಳೆ. ಎಂದಿನಂತೆ ಫುಟ್ ರಗ್ಗಿನ ಮೇಲೆ ಕಾಲೊರೆಸಿಕೊಳ್ಳುವುದು ರಗ್ಗಿಗೆ ಪಾದ ಜುಲುಮೆಯಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_12.txt b/Kannada Sahitya/article_12.txt new file mode 100644 index 0000000000000000000000000000000000000000..2e5e6718d6a3b981258b903a749f177a11131083 --- /dev/null +++ b/Kannada Sahitya/article_12.txt @@ -0,0 +1,402 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ನಾಗೇಶಾ – ನಾಗೇಶಾ” +ಹೊರಗೆ ಪೇಪರ್ ಓದುತ್ತ ಕೂತ ನಾಗೇಶ ಅವಸರವಾಗೆದ್ದು ಕೃಷ್ಣಪ್ಪ ಮಲಗಿದ ಕೋಣೆಗೆ ಬರುತ್ತಾನೆ. ತಾನು ಕರೆದರೇ ಖುಷಿಯಾಗುವ ನಾಗೇಶನನ್ನು ಕಂಡು ಕೃಷ್ಣಪ್ಪನಿಗೆ ಗೆಲುವಾಗುತ್ತದೆ. ಕಿಶೋರ ಕುಮಾರ ಹಾಸ್ಟೆಲಲ್ಲಿ ಹೀಗೇ ತನ್ನ ಸೇವೆ ಮಾಡಿದ್ದ -ಈಗ ಎಂಜಿನಿಯರ್ ಆಗಿದ್ದಾನೆ -ವರ್ಗ ಮಾಡಿಸಿಕೊಡಿರೆಂದು ಕೇಳಲು ಬಂದಿದ್ದ. ನಾಗೇಶ ಬಂದು ನಿಂತಾಗ ಯಾಕೆ ಕರೆದದ್ದು ಎಂಬುದೇ ಮರೆತುಹೋಗುತ್ತದೆ. ಅವನೇ ಕೇಳುತ್ತಾನೆ; +“ಪೇಪರ್ ಓದಬೇಕ ಗೌಡರೆ? ಇವತ್ತೇನೂ ಮುಖ್ಯ ಸುದ್ದಿ ಇರುವಂತಿಲ್ಲ” +“ಈ ದೇಶದಲ್ಲಿ ಅದೇನು ಸುದ್ದಿ ಇರುತ್ತೊ?” +ಕೃಷ್ಣಪ್ಪ ಕಿಟಕಿಯಾಚೆ ನೋಡುತ್ತ ಹೇಳಿದ. ತನ್ನಿಂದ ಪ್ರತಿಕ್ರಿಯೆ ಬಯಸಿ ಗೌಡರು ಮಾತಾಡಿಲ್ಲವೆಂದು ಅರಿತ ನಾಗೇಶ ಸುಮ್ಮನೆ ನಿಂತ. ಮಾತಿನ ಅಗತ್ಯ ಯಾವಾಗ ಇಲ್ಲವೆಂದು ತಿಳಿದ ಈ ನಾಗೇಶನಂಥವರು ರಾಜಕೀಯ ಕ್ಷೇತ್ರದಲ್ಲಿ ದುರ್ಲಭವೆಂದು ಕೃಷ್ಣಪ್ಪನಿಗೆ ಅವನೆಂದರೆ ಇಷ್ಟ. +“ಸೀತ ಬ್ಯಾಂಕಿಗೆ ಹೋದಲೇನೊ?” +“ಹೋದರು ಗೌಡರೆ, ವೀರಣ್ಣನವರು ಅವರಿಗೆ ಕಾರ್ ಕಳಿಸಿದ್ದರು. ಗೌರೀನೂ ನರ್ಸರಿಗೆ ಹೋದಳು.” +“ಬೆಳಗಾತ ಅದೇನೊ ರಂಪ ಹಿಡಿದಿತ್ತು….” +“ಸ್ಕೂಲಿಗೆ ಹೋಗಲ್ಲ ಅಂತ -” +ಕೃಷ್ಣಪ್ಪನ ಮುಖ ಮೃದುವಾಯಿತು! +“ನಂಗೂ ಅವಳ ವಯಸ್ಸಲ್ಲಿ ಸ್ಕೂಲಿಗೆ ಹೋಗಕ್ಕೆ ಇಷ್ಟವಿರಲಿಲ್ಲ ಮಾರಾಯ. ಜೋಯಿಸರು ಭಾರತ ಓತ್ತೀನಿ ಕಣೊ ಅಂತ ಪುಸಲಾಯಿಸಿ ಕರಕೊಂಡು ಹೋಗ್ತಿದ್ದರು.” +ನಾಗೇಶ ಕುರ್ಚಿಯನ್ನೆಳೆದು ಕೂತುಕೊಂದ. +“ಹೇಳ್ತೀರ. ಬರಕೋತೀನಿ” ಎಂದು ಒತ್ತಾಯವಿಲ್ಲದ ಧ್ವನಿಯಲ್ಲಿ ಕೇಳಿದ. +“ಬರಕೊಳ್ಳುವಿಯಂತೆ. ಇವತ್ತೇನೂ ಹೇಳಬೇಕೂಂತಲೆ ಅನ್ನಿಸಲ್ಲೊ ನಾಗೇಶ. ಕಾಲನ್ನ ಇನ್ನಷ್ಟು ಎತ್ತಬಹುದು ಅನ್ನಿಸ್ತು. ಪ್ರಯತ್ನ ಮಾಡಿದೆ. ಆಗತ್ತೆ ಅನ್ನೋದು ಭ್ರಮೆಯೋ ನಿಜವೋ ಅಂತ ನಿನ್ನ ಕೇಳಾಣ ಅಂತ ಕರೆದೆ -ನೋಡು.” +ಕೃಷ್ಣಪ್ಪ ಪಾದವನ್ನು ಎಳೆದುಕೊಳ್ಳಲು ಪ್ರಯತ್ನಿಸುತ್ತ ಏಕಾಗ್ರನಾದ. +“ನಿನ್ನೆಗಿಂತ ಹೆಚ್ಚು ಎಳಕೋತಿದೀನ ನಾಗೇಶ?” +ಸುಳ್ಳು ಹೇಳಿದರೆ ಕೃಷ್ಣಪ್ಪನಿಗೆ ಪ್ರಿಯವಾಗುವುದಿಲ್ಲವೆಂದು ತಿಳಿದ ನಾಗೇಶ -“ನನಗೆ ಹಾಗನ್ನಿಸಲ್ಲ ಗೌಡರೆ, ಕೈ ಹೇಗಿದೆ?” ಎಂದ. +“ಕೈಯಿ” ಎಂದು ಕೃಷ್ಣಪ್ಪ ನಾಗೇಶ ಕೊಟ್ಟ ರಬ್ಬರ್ ಬಾಲಿನ ಸುತ್ತ ಬೆರಳುಗಳನ್ನೆಲ್ಲ ಮಡಿಸಲು ಪ್ರಯತ್ನಿಸಿದ. ತನ್ನ ಪ್ರಾಣವನ್ನೆಲ್ಲ ತೀವ್ರವಾಗಿ ಬೆರಳುಗಳಲ್ಲಿ ನೂಕುತ್ತ ಅವಡುಕಚ್ಚಿದ. ಬಾಲಿನ ತಂಪಾದ ನುಣುಪಾದ ಹೊರಮೈ ಸುತ್ತ ಬೆರಳುಗಳು ಮಡಚಿಕೊಂಡವು. ಮೃದುವಾಗಿ ಬಾಲನ್ನು ಅಮುಕುವ ಅಪೇಕ್ಷೆ ದೇಹದಲ್ಲೆಲ್ಲ ಹುರಿಯಾಗಿ ಬೆರಳುಗಳಿಗೆ ಇಳಿಯಿತು. ಬಾಲು ಮುಷ್ಟಿಗೆ ದಕ್ಕುತ್ತಿದೆ ಎನ್ನಿಸಿ ಗೆಲುವಾಯಿತು. ಈ ಗೆಲುವು ನಾಗೇಶನ ಕಣ್ಣುಗಳಲ್ಲೂ ಮಿಂಚಿದ್ದರಿಂದ ಕೃಷ್ಣಪ್ಪನಿಗೆ ಹರ್ಷವಾಯಿತು. ಹಾಗೆ ಬಾಲನ್ನು ಹಿಡಿದು ತನ್ನ ಹಠಕ್ಕೆ ಅದರ ಮೃದುವಾದ ವಿರೋಧವನ್ನೂ ಒಪ್ಪಿಗೆಯನ್ನೂ ಸವಿಯುತ್ತ, +“ನಾನು ತುಂಬ ಚನ್ನಾಗಿ ಬುಗುರಿ ಬಿಡುತ್ತಿದ್ದೆ ಕಣೊ” ಎಂದ. ವಾರಂಗಲ್‌ನಿಂದ ಹಿಂದಿರುಗಿದ ಮೇಲೆ ಗದ್ದೆಯ ಕೆಸರಿನಲ್ಲಿ ಕೈಗಳನ್ನು ಹುಗಿದು ನೆಟ್ಟಿಯ ಸಮಯದಲ್ಲಿ ಭತ್ತದ ಸಸಿಯನ್ನು ನೆಡುತ್ತಿದ್ದುದು ನೆನಪಾಯಿತು. ಹಳ್ಳಿಗೆ ಹೋಗುವ ಮುಂಚೆ ಮಹೇಶ್ವರಯ್ಯನ ಜೊತೆ ಗೌರಿ ದೇಶಪಾಂಡೆಯನ್ನು ನೋಡಲು ಹೋಗಿದ್ದ. ಪರೀಕ್ಷೆಗೆಂದು ಓದುತ್ತಿದ್ದವಳು ಹೊರಗೆ ಬಂದು ಸ್ವಾಗತಿಸಿದ್ದಳು. ಅವಳ ತಲೆ ಬಾಚದೆ ಕೆದರಿಕೊಂಡಿತ್ತು. ಓದುತ್ತಿದ್ದುದರಿಂದ ಮುಖ ಬಾಡಿತ್ತು. ನಿಸ್ಸಹಾಯಕಳಾಗಿ ಸುಂದರಳಾಗಿ ಕಂಡಿದ್ದಳು. ನರಕದಿಂದ ಬಂದಿದ್ದ ಕೃಷ್ಣಪ್ಪ ಏನೂ ಮಾತಾಡಲಾರದೆ ಅವಳನ್ನು ನೋಡುತ್ತ ನಿಂತ. ತನ್ನ ಈಗಿನ ಅನುಭವಗಳಿಂದಾಗಿ ಅವಳಿಗೆ ಭಾರವಾಗುತ್ತೇನೆಂದು ಅನ್ನಿಸಿ ಮನಸ್ಸು ಕಲ್ಲಾಯಿತು. +“ಇವರು ಮಹೇಶ್ವರಯ್ಯ. ಹಳ್ಳಿಗೆ ಹೋಗೋ ಮುಂಚೆ ನಿಮ್ಮನ್ನು ಬಂದು ನೋಡಾಣ ಅನ್ನಿಸ್ತು” ಎಂದ. +ಅನಸೂಯಾಬಾಯಿ ಕಾಫ಼ಿಯನ್ನು ತಂದು ಉಪಚರಿಸಿದಳು. ಕೃಷ್ಣಪ್ಪ ಇಳಿದು ಕಂದಿದ್ದರ ಕಾರಣ ಕೇಳಿದರು. ಮಹೇಶ್ವರಯ್ಯನೇ ಕೃಷ್ಣಪ್ಪನಿಗೆ ಮುಜುಗರವಾಗದ ರೀತಿಯಲ್ಲಿ ಸೂಕ್ಷ್ಮವಾಗಿ ಆದದ್ದನ್ನು ವಿವರಿಸಿದರು. ತೇವವಾದ ಕಾತರವಾದ ಕಣ್ಣುಗಳಿಂದ ಗೌರಿ ತನ್ನನ್ನು ಆಗ ನೋಡುತ್ತ ಕೂತಿದ್ದಳಲ್ಲವೆ? +“ಪರೀಕ್ಷೆ ಮುಗಿಸಿ ನಮ್ಮ ಹಳ್ಳಿಗೆ ಬಂದು ಹೋಗಿ” +ಕೃಷ್ಣಪ್ಪ ಉಪಚಾರದ ಧ್ವನಿಯಲ್ಲಿ ಹೇಳಿದ್ದ. ಯಾಕೆ ಒತ್ತಾಯಪೂರ್ವಕವಾಗಿ ಹೇಳಲಾಗಲಿಲ್ಲ ತನಗೆ? ಗೌರಿ ತನ್ನ ಹಗುರಾದ ಮಾತಿನಿಂದ ನಿರಾಶಳಾದಂತೆ ಕಂಡಳು ಅಲ್ಲವೆ? ಈ ಸೂಕ್ಷ್ಮಗಳೆಲ್ಲ ಈಗ ಕೃಷ್ಣಪ್ಪನನ್ನು ಬಾಧಿಸುತ್ತವೆ. ನನ್ನ ಜೀವನ ಹೊರಳಿಕೊಳ್ಳುವ ಸಮಯದಲ್ಲಿ ಎಲ್ಲ ಸಾಧ್ಯತೆಗಳಿಗೂ ತಾನು ಪೂರ್ಣ ಎಚ್ಚರದಿಂದ ತೆರೆದುಕೊಂಡಿದ್ದೆನೋ ಇಲ್ಲವೋ ಎಂದು ಅನುಮಾನವಾಗುತ್ತದೆ. ಯಾವ ಕಾರಣದಿಂದ ತಾನು ಆಗ ಆಡಬೇಕಾದ್ದನ್ನು ಆಡಲಾರದೆ ಹೋದೆ? ನೀನು ಬೇಕು ಎಂದು ಹೇಳಿಕೊಳ್ಳಲಾಗದ ಗರ್ವವೆ? ಒಡನಾಡಿಗಾಗಿ ಹಾತೊರೆಯಬಾರದೆಂಬ ತನ್ನ ನಿಷ್ಠುರ ವ್ರತವೆ ಅಥವಾ ವಾರಂಗಲ್‌ನ ಪೋಲೀಸ್ ಠಾಣೆಯ ನರಕದಿಂದ ಎದ್ದು ಬಂದ ತಾನು ಪ್ರೇತದಂತಿದ್ದೆ ಎಂದು ಅನ್ನಿಸಿದ್ದೆ? ಹೌದು -ತನ್ನ ದೇಹ ಮಲಿನವಾಗಿದೆ ಎನ್ನಿಸಿತ್ತು -ಶುಭ್ರವಾದ ಕಾಂತಿಯ ಕೆದರಿದ ತಲೆಯ ಗೌರಿಯನ್ನು ನೋಡುತ್ತ ನಿಂತಂತೆ. ಅವಳು ಮೂಕವಾಗಿ ನಿಂತದ್ದು ನೋಡಿ, +“ನೀವೇನು ಮುಂದೆ ಮಾಡ್ತೀರಿ?” +ಎಂದು ಕೃಷ್ಣಪ್ಪ ಕೇಳಿದ್ದ. ಪ್ರಾಯಶಃ ತನ್ನ ಪ್ರಶ್ನೆಯ ಗತ್ತು ಲೋಕಾಭಿರಾಮವಾಗಿತ್ತೆಂದು ಗೌರಿಗೆ ದುಃಖವಾಗಿರಬೇಕು. ಅವಳೇನೂ ಅದಕ್ಕೆ ಉತ್ತರಕೊಡಲಿಲ್ಲ. +“ಯಾಕೋ ನಾಗೇಶ, ನಾವು ತೀವ್ರವಾಗಿ ಪ್ರೀತಿಸಿದ್ದನ್ನು ಪಡೆಯೋ ಧೈರ್ಯ ಮಾಡಲ್ಲ? ಪಡೆದ ಮೇಲೆ ಅದು ಅಷ್ಟೇ ಅಮೂಲ್ಯವಾಗಿ ಉಳಿಯಲ್ಲ ಅಂತ ಭಯವ?” +ನಾಗೇಶನ ಅಳವಿಗೆ ಈ ಪ್ರಶ್ನೆ ಮೀರಿತ್ತು. ಆದರೆ ಕೃಷ್ಣಪ್ಪ ಏನು ಯೋಚಿಸುತ್ತಿರಬಹುದೆಂದು ಊಹಿಸಿ ಹೇಳಿದ. +“ಗೌರಿ ದೇಶಪಾಡೆಯವರಿಗೆ ಬರಲಿಕ್ಕೆ ಬರ್ದಿದೀನಿ ದೆಹಲಿ ವಿಳಾಸಕ್ಕೆ” +ಕೃಷ್ಣಪ್ಪ ಕಾತರವಾದ ಕಣ್ಣುಗಳಿಂದ ನಾಗೇಶನನ್ನೇ ನೋಡಿ ದೀರ್ಘವಾಗಿ ಉಸಿರಾಡಿದ. ಅವಳು ಬರುವ ಮುಂಚೆ ಕಾಲು ಕೈಗಳು ಇನ್ನಷ್ಟು ಚಲಿಸುವಂತಾದರೆ ಎಂದು ಆಸೆಯಾಯಿತು. ಚಲಿಸುವಂತಾದರೆ ಮತ್ತೆ ಹಳ್ಳಿಗೆ ಹೋಗುವೆ. ಕೆಸರಿನಲ್ಲಿ ಕಾಲನ್ನ ಹುಗಿದು ಮತ್ತೆ ಭತ್ತದ ಸಸಿಗಳನ್ನ ನಡುವೆ. ದನ ಮೇಯಿಸುತ್ತ ಕೂತಿರುತ್ತಿದ್ದ ಅಶ್ವತ್ಥದ ಮರದ ಬುಡದಲ್ಲಿ ಮತ್ತೆ ಕೂರುವೆ. ಎದುರಿನ ಪೇರಳೆ ಗಿಡಕ್ಕೆ ಮತ್ತೆ ಪಂಚವರ್ಣದ ಗಿಣಿಗಳು ಬರುವುದಕ್ಕಾಗಿ ಕಾಯುವೆ. +“ಮಹೇಶ್ವರಯ್ಯನು ಬಂದಿದ್ರೆ ಚೆನ್ನಾಗಿರ್ತಿತ್ತೊ” +“ಬರೆಯೋಣ ಅಂದ್ರೆ ಅವರ ವಿಳಾಸವೇ ಇಲ್ವಲ್ಲ.” +“ಅವರು ಹಾಗೇನೇ. ಇದಕಿದ್ದಂತೆ ಬಂದುಬಿಡ್ತಾರೆ. ಮಾರಾಯ್ರಿಗೆ ಈಗ ರೇಸಿನ ಹುಚ್ಚು ಹಿಡಿದುಬಿಟ್ಟಿದೆ. ಬೆಂಗಳೂರಲ್ಲಿ ನಾಳೇಂದ ಸೀಸನ್ ಅಲ್ವ -ಬಂದರೂ ಬಂದರೆ…..” ಎಂದು ಕೃಷ್ಣಪ್ಪ ಮಗ್ಗುಲಾಗಲು ಇಚ್ಛಿಸುತ್ತ ಮಲಗಿದ. ಯಾವತ್ತು ಹೊರಳುವಷ್ಟು ಶಕ್ತಿ ಈ ದೇಹಕ್ಕೆ ಬರುತ್ತದೊ? ಅಷ್ಟರಲ್ಲಿ ಇನ್ನೊಂದು ಸ್ಟ್ರೋಕ್ ಹೊಡೆದು ಸಾಯಲೂ ಬಹುದು. ಎಲ್ಲೋ ಒಂದು ರಕ್ತದ ಬಿಂದು ಸಿಕ್ಕಿಬಿದ್ದಿದೆ. ಅದು ತಾನಾಗಿಯೇ ಚಲಿಸಲೂ ಬಹುದು, ಚಲಿಸದೆ ಅಲ್ಲೆ ನಿಂತುಬಿಡಲೂ ಬಹುದು. ಪ್ರತಿಕ್ಷಣ ಪ್ರಜ್ಞಾಪೂರ್ವಕವಾಗಿ ಬದುಕುವುದಷ್ಟೇ ಈಗ ನನಗೆ ಉಳಿದದ್ದು. ಅನಾಮತ್ತಾಗಿ ಈ ದೇಹ ಈ ಸ್ಥಿತಿಗೆ ಬಂದಿದೆ. ಹೇಳದೆ ಕೇಳದೆ ಎಚ್ಚರಿಕೆ ಕೊಡದೆ. +ಕೃಷ್ಣಪ್ಪನ ಜೀವನದಲ್ಲಿ ಪ್ರವೇಶಿಸಿದ ಯಾರು ಇಡಿಯಾಗಿ ಉಳಿದಿದ್ದಾರೆ, ಯಾರು ಇಲ್ಲ -ಅವನಿಗೆ ತಿಳಿಯುವುದಿಲ್ಲ. ಬಾಹ್ಯದಲ್ಲಿ ನೋಡಿ ಯಾರು ಹೇಗೆ ಎಂದು ಹೇಳುವುದು ಶಕ್ಯವಲ್ಲ. ಉದಾಹರಣೆಗೆ ಉಮೆ? ಅಣ್ಣಾಜಿಯ ಸಾವಿನಿಂದ ಅವಳಿಗೆ ಆದ ಆಘಾತ ಕೃಷ್ಣಪ್ಪನಿಗೆ ಮಾತ್ರ ಗೊತ್ತು. ಅವಳು ಯಾರಿಗೂ ಹೇಳಿಕೊಳ್ಳಲಾರದೆ ಆರೋಗ್ಯವಿಲ್ಲೆಂಬ ನೆವ ಹೂಡಿ ತವರಿಗೆ ಹೋಗಿದ್ದಳು. ಆಗ ಅವಳು ಬಸುರಿ. ಅಂದರೆ ಅಣ್ಣಾಜಿಯ ಮಗ ಈಗ ಬೆಳೆದಿದ್ದಾನೆ. ಮೋಟಾರ್ ಸೈಕಲ್ ಮೇಲೆ ಹಿಪ್ಪಿಯ ಹಾಗೆ ಕೂದಲು ಬಿಟ್ಟು ಅವನು ವಿಜೃಂಭಿಸುವುದನ್ನು ಕೃಷ್ಣಪ್ಪ ಕಂಡಿದ್ದಾನೆ. ಅವನಾದ ಮೇಲೆ ಉಮೆಗೆ ಇನ್ನೆರಡು ಮಕ್ಕಳಾಗಿದ್ದಾವಂತೆ. ಅವಳ ಗುಟ್ಟನ್ನು ಇಷ್ಟು ದಿನ ಕೃಷ್ಣಪ್ಪ ಮುಚ್ಚಿಟ್ಟುಕೊಂಡಿದ್ದಾನೆ. ತನ್ನ ಜೀವನಚರಿತ್ರೆ ಬರೆಸುವಾಗ ಈ ಘಟನೆಯನ್ನು ನಾಗೇಶನಿಗೂ ಅವನು ಹೇಳಿಲ್ಲ. ಪ್ರಾಯಶಃ ಅಣ್ಣಾಜಿಯ ಮನಸ್ಸು ರಾಜಕೀಯದಿಂದ ವಿಮುಖವಾಗಿ ದಾಂಪತ್ಯದ ನೆಮ್ಮದಿಯನ್ನು ಬಯಸಿದ್ದಾಗ ಅವನನ್ನು ಕೊಂದರು. ಅವನ ಆಯ್ಕೆಯಾದರೂ ಪ್ರಜ್ಞಾಪೂರ್ವಕವಾಗಿತ್ತೆ ಎಂದು ಅನುಮಾನವಾಗುತ್ತದೆ. ಆದರೆ ಸತ್ತಿದ್ದರಿಂದ ಅವನು ತನ್ನ ಪ್ರಶ್ನೆ ಅನುಮಾನಗಳಿಗೆ ಅತೀತನಾಗಿ ನಿಂತಂತೆಯೂ ಅನ್ನಿಸುತ್ತದೆ. ತಾನು ಕಂಡ ಒಬ್ಬ ದ್ರಷ್ಟಾರನೆಂದರೆ ಅವನೇ. ಎಷ್ಟೊಂದು ಕ್ಷುಲ್ಲಕತೆಗೆ ಒಳಗಾಗಿದ್ದರೂ ಅವನ ಬುದ್ಧಿ ಮಾತ್ರ ಪ್ರಖರವಾಗಿ ಬೆಳಕು ಬೀರುತ್ತಿತ್ತು. ಅವನು ಬದುಕಿದ್ದಾಗ ಪ್ರಾಮಾಣಿಕತೆಯ ಪ್ರಶ್ನೆ ಕೃಷ್ಣಪ್ಪನನ್ನು ಬಾಧಿಸಿದ್ದರೂ ಈಗ ಅಣ್ಣಾಜಿ ತನಗೆ ಮೀರಿದ್ದಕ್ಕಾಗಿ ದುಡಿದು ಸತ್ತವನಂತೆ ಕಾಣುತ್ತಾನೆ. ಉಮೆ? ಅವಳು ತನಗೆ ಎದುರಾದ್ದನ್ನು ಒಪ್ಪಿಕೊಂಡು ಬದುಕಿದಂತಿದೆ. +ಇನ್ನು ಆ ಬೈರಾಗಿ. ಅವನ ಬಗ್ಗೆ ಮಾತ್ರ ಕೃಷ್ಣಪ್ಪನಿಗೆ ಈಗಲೂ ಅರ್ಥವಾಗುವುದಿಲ್ಲ. ಅವನ ಒಳಬಾಳು ಉಜ್ವಲವಾಗಿ ಉರಿಯುತ್ತಿತ್ತೋ, ಅಥವಾ ಅವನೊಂದು ಠೊಳ್ಳು ತಿರುಳಿನ ತರಕಾರಿಯಂತವನೋ ಹೇಳುವುದು ಹೇಗೆ? ಜನ ಮಾತ್ರ ಅವನನ್ನು ಬಿಡಲಿಲ್ಲ. ಅವನು ಇದ್ದಲ್ಲಿ ಒಂದು ದೇವಸ್ಥಾನ ಕಟ್ಟಿದ್ದಾರೆ. ಕನಸಿನಲ್ಲಿ ಅವನು ಬಂದು ಪ್ರಶ್ನೆಗಳಿಗೆ ಉತ್ತರ ಹೇಳುವನೆಂದು ಪ್ರತೀತಿ ಹಬ್ಬಿ ಎಲ್ಲೆಲ್ಲಿಂದಲೋ ಜನರು ಬರತೊಡಗಿದ್ದಾರೆ. ಅವನು ಮಾತ್ರ ಯಾರ ಹತ್ತಿರವೂ ಮಾತಾಡುವುದಿಲ್ಲ. ನಿತ್ಯ ವಿಧಿಯಂತೆ ಬೆಳಿಗ್ಗೆ ಎದ್ದು ಅವನು ಬೀದಿ ತುದಿ ನಿಂತು ಭಗವದ್ಗೀತೆ ಹಾಡುತ್ತಾನೆ. ತನ್ನ ಆಹಾರ ಸಂಪಾದಿಸಿ ಬೇಯಿಸಿಕೊಂಡು ತಿನ್ನುತ್ತಾನೆ. ಇದು ನಿಂತಿಲ್ಲ. ಆದರೆ ಇದು ಹಿಂದಿನಂತೆ ಸರಳವಾಗಿ ಉಳಿದಿಲ್ಲ. ಅವನು ಹೋಗುವ ಬೀದಿಗೆ ತೋರಣ ಕಟ್ಟಿರುತ್ತದೆ. ಅವನು ಗೀತೆಯನ್ನು ಓದಲು ನಿಲ್ಲುವ ಜಾಗದಲ್ಲಿ ಪ್ಲಾಟ್‌ಫ಼ಾರಮ್ ಹಾಕಿ ಮೈಕನ್ನು ಇಟ್ಟಿರುತ್ತಾರೆ. ಬೈರಾಗಿಯನ್ನು ಸಿದ್ಧೇಶ್ವರ ಎಂದು ಕರೆಯುತ್ತಾರೆ. ಏನನ್ನೂ ಬೈರಾಗಿ ನಿರಾಕರಿಸುವುದಿಲ್ಲ. ಬೇಕೆಂದು ಕೇಳುವುದೂ ಇಲ್ಲ. ಆದರೆ ಜನರ ಅಗತ್ಯ ತನ್ನಿಂದ ಹೀಗೆ ಪೂರೈಕೆಯಾಗುತ್ತಿರುವುದಕ್ಕಾಗಿ ಅವನು ಸಂತೋಷ ಪಡುವಂತೆ ಕಾಣುತ್ತದಲ್ಲವೆ? ಅವನು ಮೈ ಕೈ ತುಂಬಿಕೊಳ್ಳುತ್ತ ಹೋದದ್ದನ್ನು ನೋಡಿದರೆ. ಇಕ್ಕಿದ್ದನ್ನು ಸ್ವೀಕರಿಸುವೆನೆಂಬ ಅವನ ವ್ರತವೇ ವಿಶೇಷವಾದ ಪೌಷ್ಟಿಕ ಆಹಾರ ಅವನಿಗೆ ದೊರೆಯುವಂತೆಯೂ ಮಾಡಿರಬೇಕು. +ಅವನಿಗೆ ಉತ್ತರ ಕೊಡಬೇಕೆನ್ನಿಸುವಂಥ ಪ್ರಶ್ನೆಯನ್ನು ಕೇಳಲು ತನಗೆ ಹೊಳೆಯಲೇ ಇಲ್ಲವೆಂದು ಬಹಳ ಸಾರಿ ಕೃಷ್ಣಪ್ಪ ತನ್ನ ಆಗಿನ ಮನಸ್ಥಿತಿಯ ಬಗೆ ಸಂಶಯಪಡುವುದುಂಟು. ಆಗ ವ್ಯಗ್ರನಾಗಿದ್ದದ್ದು ನಿಜ. ಆದರೆ ಅದಕ್ಕೆ ಕಾರಣವೆಂದು ತನಗೆ ಹೊಳೆಯುತ್ತಿದ್ದುದೆಲ್ಲ ಪೊಳ್ಳಿರಬಹುದು. ಆದ್ದರಿಂದಲೇ ಬೈರಾಗಿ ಹತ್ತಿರ ಪ್ರಶ್ನೆ ಕೇಳಲಾರದೆ ಹೋದೆ ಎಂದುಕೊಳ್ಳುತ್ತಾನೆ. ಬೈರಾಗಿ ಒಂದು ಬಗೆಯಲ್ಲಿ ಕೃಷ್ಣಪ್ಪನಿಗೆ ಹೀಗೆ ತನ್ನನ್ನು ಅಳೆಯುವ ಮಾನದಂಡವಾಗಿ ಕಂಡರೆ ಸರ್ಪ ಅವನ ಗುಹೆಯನ್ನು ಹೊಕ್ಕಾಗ ಅವನಿಗೆದುರಾದ ಹಿಂಸೆಯನ್ನು ಅವನು ತಾಳಲಾರದೆ ಹೋದ ಎಂಬುದು ಕೂರ್ಮರೂಪದ ಅವನ ತಪಸ್ಸಿನ ಬಗ್ಗೆ ಆಳವಾದ ಅನುಮಾನವನ್ನು ಹುಟ್ಟಿಸುತ್ತದೆ. ಎಲ್ಲ ಸಾಧ್ಯತೆಗಳಿಗೂ ಚುರುಕಾಗಿ ಸ್ಪಂದಿಸುತ್ತ ಬದುಕಬೇಕೆನ್ನುವ ಕೃಷ್ಣಪ್ಪನ ಆದರ್ಶಕ್ಕೆ ಅವನು ಕಂಡಿದ್ದರಲ್ಲಿ ಯಾವುದೂ ಸರಿಸಾಟಿಯಿಲ್ಲವೆನಿಸುತ್ತದೆ. +ತನ್ನಲ್ಲಿ ಬಿರುಕು ಎಲ್ಲಿ, ಹೇಗೆ ಕಾಣಿಸಿಕೊಂಡಿತು? ಸಾಯುವ ಮುಂಚೆ ಇದನ್ನು ತಿಳಿಯಬೇಕು. ಅಷ್ಟೇ ಉಳಿದದ್ದು ತನ್ನ ಪಾಲಿಗೆಂದು ಯೋಚಿಸುತ್ತಲೇ ತನ್ನ ಪಾರ್ಶ್ವಕ್ಕೆ ಪ್ರಾಣ ಶಕ್ತಿಯನ್ನು ಹರಿಸಲು ಉದ್ಯುಕ್ತನಾಗುತ್ತಾನೆ. +“ನಾಗೇಶ ನನ್ನ ಅಮ್ಮನನ್ನು ಕರಕೊಂಡು ಬರಕ್ಕೆ ಯಾರನ್ನಾದರೂ ಕಳಿಸಬೇಕಲ್ಲೊ -” +“ನಾನೇ ಹೋಗಿ ಬರಲ ಗೌಡರೆ?” +“ಬೇಡ ನೀನಿಲ್ಲಿ ಇರೋದು ಅಗತ್ಯ. ನಿನ್ನ ಸ್ನೇಹಿತರಲ್ಲಿ ಯಾರನ್ನಾದರೂ ಕಳಿಸು.” +* +* +* +ಮನೆಯ ಹೊರಗೆ ಕಾರು ಬಂದು ನಿಂತಿತು. ಅದರಿಂದ ವೀರಣ್ಣ ಇಳಿದ. ಖಾದಿ ಸಿಲ್ಕಿನ ಕ್ಲೋಸ್ ಕಾಲರ್ ಕೋಟು ಪ್ಯಾಂಟು ತೊಟ್ಟ ವೀರಣ್ಣನಿಗೆ ಸುಮಾರು ಅರವತ್ತು ವರ್ಷಗಳಿರಬಹುದು. ಬೆಂಗಳೂರಿನ ಎರಡು ದೊಡ್ಡ ಹೋಟೆಲುಗಳ, ಮೂರು ಥಿಯೇಟರುಗಳ ಮಾಲಿಕ ಈ ವೀರಣ್ಣ. ಅವನ ತಂದೆ ಒಬ್ಬ ಸಣ್ಣ ಕಂಟ್ರಾಕ್ಟರ್ ಆಗಿದ್ದವನು. ವೀರಣ್ಣ ತನ್ನ ಚಾಕಚಕ್ಯತೆಯಿಂದ ಲಕ್ಷಾಧೀಶನಾಗಿ ಬೆಳೆದಿದ್ದ. ತಿರುಪತಿಯ ವೆಂಕಟರಮಣನ ಪರಮಭಕ್ತನಾದ ವೀರಣ್ಣ ದೇಶವಿದೇಶಗಳಲ್ಲಿ ಅವನ ದೇವಾಲಯಗಳನ್ನು ಕಟ್ಟಿಸುವುದಕ್ಕೆ ಮುಂದಾಗಿದ್ದ. ಸೋಷಲಿಸ್ಟ್ ನಾಯಕನೆಂದೂ, ಶ್ರೀಮಂತವರ್ಗದ ವಿರೋಧಿಯೆಂದೂ ಹೆಸರಾದ ಕೃಷ್ಣಪ್ಪನನ್ನು ಈ ವೀರಣ್ಣ ಆರಾಧಿಸುವುದನ್ನು ಕಂಡು ಎಲ್ಲರೂ ಬೆರಗಾಗಿದ್ದರು. ಎಂಥೆಂಥ ಮಂತ್ರಿಗಳೂ ವೀರಣ್ಣನ ಕೃಪೆಗೆ ಕೈಯೊಡ್ಡುವಾಗ, ಯಾವುದನ್ನೂ ಯಾರ ಹತ್ತಿರವೂ ಬೇಡದ ಗರ್ವಿಷ್ಠ, ಕೃಷ್ಣಪ್ಪನ ಬಳಿ ಮಾತ್ರ ವೀರಣ್ಣ ಅತ್ಯಂತ ವಿನಯದಿಂದ ನಡೆದುಕೊಳ್ಳುವನು. ಕೃಷ್ಣಪ್ಪನಿಗೆ ಸ್ಟ್ರೋಕ್ ಹೊಡೆದಾಗ ಅವನು ವಾಸವಾಗಿದ್ದುದು ಗಾಂಧೀ ಬಜ಼ಾರಿನ ಹತ್ತಿರವಿದ್ದ ಒಂದು ಹಳೆಯ ಮನೆಯಲ್ಲಿ. ರೆಂಟ್ ಕಂಟ್ರೋಲಿಂದ ಪಡೆದಿದ್ದ ಮನೆ ಅದು. ತಿಂಗಳಿಗೆ ಒಂದು ನೂರು ರೂಪಾಯಿ ಬಾಡಿಗೆ. ಮನೆಯಿಂದ ಹೊರಕ್ಕೆ ಕಕ್ಕಸು. ಕೃಷ್ಣಪ್ಪನಿಗೆ ಇದು ತೀರಾ ಅನಾನುಕೂಲವೆಂದು ವೀರಣ್ಣ ಸದಾಶಿವನಗರದಲ್ಲಿರುವ ತಾನು ಬಾಡಿಗೆಗೆ ಕೊಟ್ಟಿರುವ ಫ಼್ಲಾಟುಗಳಲ್ಲಿ ಒಂದನ್ನು ತೆಗೆದುಕೊಳ್ಳುವಂತೆ ಬೇಡಿಕೊಂಡ. ಕೃಷ್ಣಪ್ಪನ ಹೆಂಡತಿ ಸೀತೆಯೂ ಅದು ತನ್ನ ಬ್ಯಾಂಕಿಗೆ ಹತ್ತಿರವೆಂದು ವಾದಿಸಿದಳು. ಆದರೆ ತನಗೆ ಎಂ.ಎಲ್.ಎ ಆಗಿ ಬರುವ ಸಂಬಳದಲ್ಲಿ ನೂರು ರೂಪಾಯಿಗಿಂತ ಹೆಚ್ಚಿನ ಬಾಡಿಗೆಯ ಮನೆಯಲ್ಲಿ ಇರುವುದು ಸಾಧ್ಯವೇ ಇಲ್ಲವೆಂದು ಕೃಷ್ಣಪ್ಪ ನಿರಾಕರಿಸಿದಾಗ – +“ಹಾಗಾದರೆ ನೂರೇ ನನಗೆ ಬಾಡಿಗೆ ಕೊಡಿ -ಸಾಕು” +ಎಂದು ವೀರಣ್ಣ ಪ್ರಾರ್ಥಿಸಿದ. +“ಆದರೆ ಅದಕ್ಕೆಷ್ಟು ಬಾಡಿಗೆ? ಏಳುನೂರು ಅಲ್ವ ವೀರಣ್ಣ?” +“ನಾನೇನು ಮಾಡ್ಬೇಕಾಗಿದೆ ಅಷ್ಟು ದುಡ್ಡು ತಗೊಂಡು? ನಾನೇನು ನಿಮಗೆ ಪುಗಸಟ್ಟೆಗೆ ಕೊಡ್ತ ಇಲ್ವಲ್ಲ?” +ಕೃಷ್ಣಪ್ಪ ತಾನಿದ್ದ ಅಸಹಾಯಕ ದೈಹಿಕ ಪರಿಸ್ಥಿತೀಲಿ ಫ಼್ಲಾಟಿಗೆ ಒಲ್ಲದ ಮನಸ್ಸಿಂದ ಬಂದಿದ್ದ. ಸೀತೆ ಪ್ರತಿನಿತ್ಯ ರಗಳೆ ಮಾಡುವುದು ತಪ್ಪುವುದಲ್ಲ ಎಂಬುದೂ ಹೀಗೆ ಬರಲು ಕಾರಣವಾಗಿತ್ತು. ಗೌರಿಗೆ ಹತ್ತಿರದಲ್ಲೇ ಇಂಗ್ಲಿಷ್ ನರ್ಸರಿ ಬೇರೆ ಇತ್ತೆಂದು ಸೀತೆಗೆ ಸಂತೋಷವಾಗಿತ್ತು. +ಕೃಷ್ಣಪ್ಪನಿಗೆ ಸ್ಟ್ರೋಕ್ ಹೊಡೆದಾಗ ದೇಶದಲ್ಲಿ ಅವನೆಷ್ಟು ದೊಡ್ಡ ಮನುಷ್ಯನೆಂಬುದು ಎಲ್ಲರಿಗೂ ಪ್ರತ್ಯಕ್ಷವಾಗಿ ಗೊತ್ತಾಗಿತ್ತು. ರಾಜ್ಯಪಾಲರೇ ಸ್ವತಃ ಹಾಸ್ಪಿಟಲ್‌ಗೆ ಬಂದು ಅವನನ್ನು ನೋಡಿದ್ದರು. ಕೃಷ್ಣಪ್ಪ ಅತ್ಯಂತ ಕಟುವಾಗಿ ಟೀಕಿಸುತ್ತಿದ್ದ ಮುಖ್ಯಮಂತ್ರಿ ಬೊಂಬಾಯಿಂದ ಒಬ್ಬ ಸ್ಪೆಶಲಿಸ್ಟನ್ನು ಕರೆಸಿದ್ದ. ದೇಶದ ಎಲ್ಲ ವಿ.ಐ.ಪಿಗಳೂ ಆಸ್ಪತ್ರೆಗೆ ಬಂದು ಅವನನ್ನು ನೋಡಿದ್ದರು. +ತಾನು ಏನನ್ನೂ ಬೇಡದೆ ಎಲ್ಲವೂ ತನಗೆ ದಕ್ಕುತ್ತಿರುವುದನ್ನು ಕಂಡು ಕೃಷ್ಣಪ್ಪನೇ ಬೆರಗಾಗಿದ್ದ. ಯಾವ ಫಲಾಪೇಕ್ಷೆಯೂ ಇಲ್ಲದೆ ವೀರಣ್ಣ ತನ್ನ ಸೇವೆ ಮಾಡುತ್ತಿದ್ದಾನೆಂದು ಕೃಷ್ಣಪ್ಪ ತಿಳಿದ. ಅವನಿಗೆ ತಾನೇನು ಹೆಚ್ಚು ಮಾಡಬಲ್ಲೆ? ಅಲ್ಲದೆ ಕೃಷ್ಣಪ್ಪ ವಿರೋಧಿಸುತ್ತಿದ್ದುದು ವ್ಯವಸ್ಥೆಯನ್ನೇ ಹೊರತಾಗಿ ವ್ಯಕ್ತಿಗಳನ್ನಲ್ಲವಲ್ಲ. ವೀರಣ್ಣ ಕೂಡ ಈ ವ್ಯವಸ್ಥೆಯಲ್ಲಿ ಎಲ್ಲರಂತೆ ಒಬ್ಬನಲ್ಲವೆ? +ಆದರೆ ಹೀಗೆಲ್ಲ ತರ್ಕ ಹೂಡಿಕೊಂಡು ತಾನು ವೀರಣ್ಣನನ್ನು ಒಪ್ಪಿಕೊಳ್ಳತೊಡಗಿದ್ದೆ ಎಂಬುದೇ ಕೃಷ್ಣಪ್ಪನನ್ನು ಆಗೀಗ ಬಾಧಿಸುವುದುಂಟು. ಅವನ ವಿನಯ ಧೂರ್ತಲಕ್ಷಣ ಎಂದು ಅನುಮಾನಿಸುವನು. ಅವನ ಕ್ಷೌರ ಮಾಡಿದ ನುಣುಪಾದ ಮುಖ, ಕಿವಿಯ ಮೇಲಿನ ಕೂದಲು, ಮೂಗಿನ ಮೇಲೆ ಕೂಡಿಕೊಂಡ ಪೊದೆ ಹುಬ್ಬು, ದಪ್ಪವಾದ ಕತ್ತು, ಹತ್ತಿರ ಹತ್ತಿರ ಹೆಜ್ಜೆಯಿಡುತ್ತ ತನ್ನ ಸುತ್ತಲೂ ಅವನು ನಡೆದಾಡುವ ರೀತಿ, ’ಅಮ್ಮ’ ’ಅಮ್ಮ’ ಎಂದು ಸೀತೆಯನ್ನು ಕರೆದು ಅವಳಿಗೆ ತಾನು ಮಾರ್ಕೆಟ್ಟಿಂದ ಕಟ್ಟಿಸಿ ತಂದ ತರಕಾರಿ ಬುಟ್ಟಿಯನ್ನು ಕೊಡುತ್ತ ಅವಳ ಮೆಚ್ಚುಗೆ ಪಡೆಯುವ ಮಾತಿನ ಸೇಳೆ -ಎಲ್ಲವೂ ಕೃಷ್ಣಪ್ಪನಿಗೆ ಕಿರಿಕಿರಿಯನ್ನುಂಟುಮಾಡುವುದು. ತನ್ನ ಕ್ರಾಂತಿಕಾರೀ ವ್ಯಕ್ತಿತ್ವಕ್ಕೆ ಒಲಿದ ನಾಗೇಶನಂಥ ಯುವಕರು ತನ್ನ ಬಳಿ ಇದ್ದಾಗ ಪರಮಾಪ್ತನಂತೆ ಬಂದು ವೀರಣ್ಣ ನಡೆದುಕೊಳ್ಳುವುದು ಕೃಷ್ಣಪ್ಪನಿಗೆ ತುಂಬ ಮುಜುಗರವಾಗಿಬಿಡುವುದು. +“ಹೇಗಿದೀರಿ ಗೌಡರೆ” ಎನ್ನುತ್ತ ವೀರಣ್ಣ ಒಳಗೆ ಬಂದು “ದಿನೇ ದಿನೇ ಇಂಪ್ರೂವ್ ಆಗ್ತಿದೀರಿ ನಮ್ಮ ದೇಶದ ಪುಣ್ಯ” ಎಂದು ಕುರ್ಚಿಯನ್ನೆಳೆದುಕೊಂಡು ಕೂತ. ತನ್ನ ದೇಹಸ್ಥಿತಿ ಬಗ್ಗೆ ಬಂದವರೆಲ್ಲ ಸಾಮಾನ್ಯವಾಗಿ ಸುಳ್ಳನ್ನೇ ಹೇಳುತ್ತಿದ್ದರು. ಕೃಷ್ಣಪ್ಪ ಇಂಥ ಔಪಚಾರಿಕ ಮಾತಿಗೆ ಉತ್ತರ ಕೊಡುವುದಿಲ್ಲ. +“ಸುಮ್ಮನೇ ನೋಡಿ ಹೋಗೋಣ ಅಂತ ಬಂದೆ ಗೌಡರೆ, ಇವತ್ತು ಮಧ್ಯಾಹ್ನ ದೆಹಲೀಂದ ಒಬ್ಬರು ಸ್ಪೆಶಲಿಸ್ಟ್ ಬಂದಿದಾರೆ -ಅವರನ್ನ ಕರ್ಕೊಂಡು ಬಂದು ನಿಮ್ಮನ್ನ ತೋರಿಸ್ತಿದೀನಿ -ಎಕ್ಸ್‌ಪರ್ಟ್ ಒಪೀನಿಯನ್‌ಗೆ. ಅಮ್ಮಾವರೀಗೆ ಕಷ್ಟವಾಗ್ತಿದೇಂತ ನಾಳೇಂದ ಒಬ್ಬರು ನರ್ಸಮ್ಮ ಬಂದು ನಿಮ್ಮನ್ನು ನೋಡ್ಕೊಂಡು ಹೋಗ್ತಾರೆ. ಈಗ ನಾನು ಹೋಗಲ?” +ವೀರಣ್ಣ ಎದ್ದು ನಿಂತು ಹೊರಟ. ರೂಮಿಂದ ಹೊರಗೆ ಹೋದವನು ಏನೋ ನೆನೆಸಿಕೊಂಡು ಹಿಂದಕ್ಕೆ ಬಂದ. +“ಮರೆತೇ ಬಿಟ್ಟೆ ಗೌಡರೆ. ನಿಮಗೊಂದು ಕಾರು ಬೇಕೇ ಬೇಕು. ಅಮ್ಮಾವ್ರಿಗೆ ಮನೆಕೆಲಸಮುಗಿಸಿ ಬ್ಯಾಂಕಿಗೆ ಹೋಗಬೇಕು. ಅಸೆಂಬ್ಲಿ ಶುರುವಾದ ಮೇಲೆ ನಿಮ್ಮನ್ನ ಕರ್ಕೊಂಡು ಹೋಗ್ಲಿಕ್ಕೆ ಬೇಕು. ಟ್ಯಾಕ್ಸಿಗೆ ತುಂಬ ಖರ್ಚಾಗತ್ತೆ. ನನ್ನ ಕಾರಿದೆ ಅನ್ನಿ. ಆದರೆ ಸಮಯಕ್ಕದು ಇರಬೇಕಲ್ಲ? ಆದ್ರಿಂದ ಈ ಫ಼ಾರಂಗೆ ಒಂದು ಸೈನ್ ಮಾಡಿ. ನಿಮಗೊಂದು ಫ಼ಿಯಟ್ಟನ್ನ ಸರ್ಕಾರ ಕೂಡ್ಲೆ ಮಂಜೂರು ಮಾಡಬೇಕು. ಎಂ.ಎಲ್.ಎ ಆಗಿ ನಿಮ್ಮ ಹಕ್ಕು ಅದು…..” +ವೀರಣ್ಣ ಭರ್ತಿ ಮಾಡಿದ್ದ ಅಪ್ಲಿಕೇಶನ್ನನ್ನು ಪೆನ್ನನ್ನು ರೆಡಿಮಾಡಿಕೊಂಡು ಕೃಷ್ಣಪ್ಪನ ಸಹಿ ತೆಗೆದುಕೊಳ್ಲಲು ಅವನ ಮಂಚದ ಮೇಲ್ಭಾಗವನ್ನು ಎತ್ತಲು ಹೋದ. +“ಬೇಡ ವೀರಣ್ಣನೋರೆ. ಕಾರು ತೆಗೆದುಕೊಳ್ಳುವಷ್ಟು ದುಡ್ಡು ನನ್ನ ಹತ್ರ ಇಲ್ಲ.” +“ಅಯ್ಯೋ ದುಡ್ಡು ದುಡ್ಡು. ಯಾಕೆ ಯಾವಾಗ್ಲೂ ದುಡ್ಡಿನ ವಿಷ್ಯ ಮಾತಾಡ್ತೀರಿ? ಅದನ್ನ ನನಗೆ ಬಿಡಿ.” +“ಅದೆಲ್ಲ ಸಾಧ್ಯವಿಲ್ಲ. ಸಾಲ ಮಾಡೋಕೆ ನನಗೆ ಇಷ್ಟವಿಲ್ಲ.” +“ಬ್ಯಾಡ. ಸಾಲ ಮಾಡೋದು ಬ್ಯಾಡ. ನಿಮ್ಮ ಕಾರನ್ನ ನಾನೇ ಕೊಂಡಿಟ್ಟುಕೋತೇನೆ. ನನ್ನ ಮಗನೂ ಒಂದು ಫ಼ಿಯಟ್ಟು ಬೇಕೂಂತ ಸತಾಯಿಸ್ತ ಇದಾನೆ. ಅಷ್ಟುಪಕಾರ ನೀವು ಮಾಡಿದ್ದಕ್ಕೆ ನಾನು ಬೇಕಾದಾಗ ನಿಮಗೆ ಉಪಯೋಗಿಸಿಕೊಳ್ಳಕ್ಕೆ ಕಾರನ್ನ ಕೊಡಬಹುದಲ್ಲ……” +ನಾಗೇಶ ರೂಮಿಂದ ಎದ್ದು ಹೋದ. ತನ್ನ ಮನಸ್ಸು ಈ ವೀರಣ್ಣನ ಉಪಕಾರಕ್ಕೆ ಕೃತಜ್ಞತೆಯಲ್ಲಿ ದುರ್ಬಲವಾಗೋದನ್ನ ಅವನು ಗಮನಿಸಿದ್ದಾನೆ. ತನಗೆ ಸುಲಭವಾಗಲೆಂದು ಅವನು ಹೊರಗೆ ಹೋಗಿದ್ದಾನೆ. +ಕೃಷ್ಣಪ್ಪ ಬೇಡವೇ ಬೇಡ ಎಂದು ತಲೆಯಲ್ಲಾಡಿಸುತ್ತ ವೀರಣ್ಣನಿಗೆ ಹೇಳಿದ. +“ಹೋಗ್ಲಿ ನಿಮಗೆ ಬೇಡ. ಆದರೆ ನನಗೊಂದು ಉಪಕಾರ ಮಾಡಬಹುದಲ್ಲ ನೀವು?” +ಲಕ್ಷಾಧೀಶನಾದ ವೀರಣ್ಣನಿಗೆ ಹತ್ತೋ ಹನ್ನೆರಡೊ ಸಾವಿರ ಕೊಟ್ಟು ಒಂದು ಫ಼ಿಯಟ್ಟನ್ನ ಕೊಳ್ಳುವುದು ಕಷ್ಟವೆ? ಅಷ್ಟಕ್ಕಾಗಿ ಅವನು ತನಗೆ ಕೈಯೊಡ್ಡುವ ಮನುಷ್ಯನೆ? ಆದರೂ ಉಪಕಾರ ಮಾಡಿ ಅನ್ನುವ ರೀತಿಯಲ್ಲಿ ಬೇಡುತ್ತಿದ್ದಾನೆ ಎಂದು ಕೃಷ್ಣಪ್ಪ, ಮೃದುವಾಗಿ ಫ಼ಾರಂಗೆ ಸೈನ್ ಮಾಡಿದ. ವೀರಣ್ಣ ಹೊರಟುಹೋದ ಮೇಲೆ ನಾಗೇಶ ಒಳಗೆ ಬಂದ. +“ಇದೂ ಕೂಡ ಕರಪ್ಶನ್ ಕಣೋ ನಾಗೇಶ. ವೀರಣ್ಣ ಹತ್ತು ಸಾವಿರವಾದ್ರೂ ಈ ಕಾರಿಂದ ಲಾಭ ಮಾಡಿಕೋತಿದಾನೆ. ನನಗೋಸ್ಕರ ಕೊಳ್ತಿದೀನಿ ಅಂತಾನೆ. ನಿಜವಿದ್ರೂ ಇರಬಹುದು……” +“ಬಿಡಿ ಗೌಡರೆ. ಆ ಕಾರೇನು ಅವನಿಗೆ ದೊಡ್ಡದ? ನಿಮ್ಮ ಅಗತ್ಯಕ್ಕೇಂತ ಕೊಳ್ತಿದಾನೆ. ಅಂಥವರು ಮಾಡಬೇಕಾದ ಡ್ಯೂಟಿ ಅದು.” +ನಾಗೇಶನ ಮಾತಿನಿಂದ ಕೃಷ್ಣಪ್ಪನಿಗೆ ಸಮಾಧಾನವಾಯಿತು. ಆದ್ದರಿಂದಲೇ ಕಟುವಾಗಿ ಮಾತಾಡುವುದು ಅವನಿಗೆ ಸುಲಭವಾಯಿತು. +“ನಿಂಗಿನ್ನೂ ಅನುಭವ ಸಾಲದು ನಾಗೇಶ. ನಾನು ಮೆತ್ತಗಾಗ್ತ ಆಗ್ತ ಬಂದಿದೀನಿ. ಒಳಗಿಂದ ಕೊಳೀತ ಇದೀನಿ. ಹತ್ತು ವರ್ಷಗಳ ಹಿಂದೆ ಇಂಥವರ ನೆರಳೂ ನನ್ನ ಹತ್ರ ಸುಳೀತ ಇರ್ಲಿಲ್ಲ” +ಈ ಮಾತಿಂದ ನಾಗೇಶನ ಮೆಚ್ಚುಗೆ ಇನ್ನಷ್ಟು ಹೆಚ್ಚಿದ್ದು ಕಂಡು ತನ್ನ ಬಗ್ಗೆ ಹೇಸಿಗೆ ಪಡುತ್ತ ಕೃಷ್ಣಪ್ಪ ಕಣ್ಣು ಮುಚ್ಚಿ – +“ನನ್ನ ವೀಲ್‌ಚೇರಿನ ಮೇಲೆ ಕೂರಿಸ್ತೀಯ ನಾಗೇಶ. ಹೊರಗ್ಯಾರೋ ಇದಾರೆ ಅವರನ್ನೂ ಕರಕೊ ಸಹಾಯಕ್ಕೆ” ಎಂದ. +* +* +* +ಅಕ್ಟೋಬರ್ ತಿಂಗಳಿನ ಹವೆ ಬೆಂಗಳೂರಿನಲ್ಲಿ ಹಿತವಾಗಿತ್ತು. ಸಿಮೆಂಟಿನ ಅಂಗಳದ ಬಿಸಿಲಲ್ಲಿ ಬರಿದಾದ ಕಾಲನ್ನೂ ಕೈಗಳನ್ನೂ ಕಾಯಿಸಿಕೊಳ್ಳುತ್ತ ಅವುಗಳಲ್ಲಿ ರಕ್ತ ಹರಿಯುವುದನ್ನು ಕಲ್ಪನೆಯಲ್ಲಿ ಅನುಭವಿಸಲು ಯತ್ನಿಸುತ್ತ ಕೃಷ್ಣಪ್ಪ ಕೂತ. +ವಾರಂಗಲ್‌ನಿಂದ ಹಳ್ಳಿಗೆ ಹಿಂದಕ್ಕೆ ಬಂದ ಮೇಲೆ ಸಣ್ಣದೊಂದು ಗುಡಿಸಲು ಕಟ್ಟಿಕೊಂಡು ಮಾವನಿಂದ ತನ್ನ ತಂದೆಗೆ ಸೇರಿದ್ದ ಗದ್ದೆಗಳನ್ನು ಬಿಡಿಸಿಕೊಂಡು ತಾಯಿಯ ಜೊತೆ ಸಂಸಾರ ಹೂಡಿದ್ದ. ಕೊಟ್ಟಿಗೆಯಲ್ಲಿ ಹಾಲು ಕರೆಯುವ ಎರಡು ದನಗಳಿದ್ದವು. ಹೊತ್ತಾರೆ ಎದ್ದು ಕೃಷ್ಣಪ್ಪನೇ ಹಾಲು ಕರೆಯುವುದು. ಈಗ ಜೀವವಿಲ್ಲದಂತಿರುವ ಬೆರಳುಗಳು ಆಗ ದನದ ಮೊಲೆಗಳನ್ನು ಪುಸಲಾಯಿಸಿ ಹಾಲಿಳಿಸಿಕೊಂಡು, ಮೇಲಿನಿಂದ ಕೆಳಕ್ಕೆ ಎರಡೂ ಕೈಗಳಲ್ಲೂ ಎರಡು ಮೊಲೆಗಳನ್ನೂ ಲಯಬದ್ಧವಾಗಿ ಒತ್ತಾಯಪೂರ್ವಕವಾಗಿ, ಆದರೆ ಮೃದುವಾಗಿ ಜಗ್ಗುತ್ತಿದ್ದುದು, ಮೊದಮೊದಲು ಕೈ ಬೇಗ ಬತ್ತುತ್ತಿತ್ತು. ಕ್ರಮೇಣ ಕಪ್ಪು ಬಿಳಿ ಚುಕ್ಕೆಗಳ ಕಾವೇರಿ ಹಿಂಗಾಲನ್ನು ಅಗಲಿಸಿ ನಿಂತು ತನ್ನ ಕೆಚ್ಚಲಿನ ಭಾರ ಕೃಷ್ಣಪ್ಪನ ಲಯಬದ್ಧವಾದ ಎಳೆತಕ್ಕೆ ಧಾರೆಧಾರೆ ಇಳಿಯುವುದನ್ನು ಸುಖಿಸುತ್ತ ದೀರ್ಘವಾಗಿ ಉಸಿರಾಡುತ್ತಿತ್ತು. ಒತ್ತುವಾಗ ಕ್ರಮೇಣ ಮೃದುವಾಗುತ್ತ ಹಾಲಿನಿಂದ ಸೆಟೆದೂ ತರಿತರಿಯಾಗಿಯೂ ಇರುತ್ತಿದ್ದ ಕೆಚ್ಚಲು. ತಾಯಿ ಕಾಯಿಸಿಕೊಟ್ಟ ಹಾಲು ಕುಡಿದು ಕೃಷ್ಣಪ್ಪ ಗದ್ದೆಗೆ ಹೋಗುವನು. ಬೇಸಗೆಯಲ್ಲಿ ಬಾವಿ ಬತ್ತಿ ಕಾಲು ಮುಳುಗುವಷ್ಟು ಮಾತ್ರ ನೀರಿದ್ದಾಗ ಬಾವಿಗೆ ಇಳಿಯುವನು. ಕೆಸರನ್ನು ಬಾಚಿ ಬಾಚಿ ಬಕೆಟ್ಟಿನಲ್ಲಿ ತುಂಬಿದರೆ ಮೇಲಿನಿಂದ ಶೇಷಪ್ಪ ಹಗ್ಗದಲ್ಲದನ್ನು ಎತ್ತಿಕೊಳ್ಳುವನು. ಉಸಿರು ಕಟ್ಟಿದ ಚಿಲುಮೆಗಳನ್ನು ಮುಟ್ಟಿ ಎಬ್ಬಿಸಲು ಕೈಗಳು ಕೆಸರು ಬಾಚುತ್ತ ಬಾಚುತ್ತ ಹಾತೊರೆಯುವುವು. ಮೊರಿಗೆಯಿಂದ ಹೀಗೆ ಕೆಸರು ನೀರು ಎತ್ತುವಾಗ ತಣ್ಣನೆಯ ನೀರಿನ ಚಿಲುಮೆ ಥಟ್ಟನೆ ಪುಟಿದು ಬೆರಳ ತುದಿಗಳಿಗೆ ತಾಕಿ ಇಡೀ ದೇಹವನ್ನು ರೋಮಾಂಚಗೊಳಿಸುವುದು. +“ಯಾಕ್ರೋ ಈ ಕಲ್ಕುಟುಕನ ಪೂಜೆ ಮಾಡ್ಕೊಂಡು ಮಂಕಾಗಿ ಕೂತಿದೀರಿ. ಅದೊಂದು ಕಲ್ಲು ಅಲ್ವ? ಎತ್ತಿ ಬಿಸಾಕಿ. ನಿಮ್ಮನ್ನು ಕಾಡೋ ದೆವ್ವ ಮಠದ ಏಜೆಂಟ್ ನರಸಿಂಹಭಟ್ಟ. ನೀವು ಗೆಯ್ದಿದ್ದನ್ನೆಲ್ಲ ಬಂದು ತಗೊಂಡು ಹೋಗ್ತಾನೆ -” +ಕೃಷ್ಣಪ್ಪ ತನ್ನ ಸುತ್ತಲಿನ ರೈತರಿಗೆ ಹೇಳುವನು. ಇದು ಜೋಯಿಸರ ಕಿವಿ ಮುಟ್ಟುವುದು. +“ಕಿಟ್ಟಪ್ಪ” ಎಂದು ಬಾಳೆಲೆ ಕೇಳುವ ನೆಪದಲ್ಲಿ ಜೋಯಿಸರು ಬಂದು ಚಾವಡಿಯ ಮೇಲೆ ಕೂತು, ಕೃಷ್ಣಪ್ಪ ಕೊಟ್ಟ ಹಾಲು ಕುಡಿದು ಅದೂ ಇದೂ ಮಾತಾಡುತ್ತ, “ಏನೋ ಕಿಟ್ಟಪ್ಪ? ಕಲ್ಕುಟಕ ಬರೀ ಕಲ್ಲು, ಎಸೀರಿ ಅಂದಿಯಂತೆ ಹೌದ?” ಎನ್ನುವರು. +ಜೋಯಿಸರ ಕೃಶವಾದ ಮೈಯನ್ನೂ, ಅವರ ಕುರುಚಲು ಬಿಳಿಗಡ್ಡ ದೊಡ್ಡ ಜುಟ್ಟುಗಳ ಮುಖದಲ್ಲಿ ಯಾವಾಗಲೂ ಸೌಮ್ಯವಾಗಿರುವ ಕಣ್ಣುಗಳನ್ನೂ ನೋಡುತ್ತ ಕೃಷ್ಣಪ್ಪ ನಿಧಾನವಾಗಿ ಹೇಳುವನು. ಜೋಯಿಸರು ಬಂದರೆಂದು ಎಲೆಯಡಿಕೆ ಮೆಲ್ಲುತ್ತ ತಾಯಿಯೂ ಚಾವಡಿಯಲ್ಲಿ ಕೂತಿರುವಳು. +“ನೀವೂ ನರಸಿಂಹ ದೇವರ ಒಕ್ಕಲಾಗಿದ್ದಿರಿ ಅಲ್ವ? ಅದು ಹೇಗೆ ನಿಮ್ಮ ತೋಟ ಕಳಕೊಂಡಿರಿ ಹೇಳಿ, ಯಾರು ಅದಕ್ಕೆ ಕಾರಣ?” +“ಇರೋದು ನಾನು ನನ್ನ ಹೆಂಡತಿ. ಒಂದಷ್ಟು ಪೆನ್ಶನ್ ಸಿಗುತ್ತೆ. ನಿನ್ನ ಮಾವ ಮತ್ತು ನಾಲ್ಕೈದು ಗೌಡರ ಮನೇವ್ರು ಏನೋ ಜ್ಯೋತಿಷ್ಯ ಹೇಳ್ತಾನಲ್ಲ, ಊರಲ್ಲೊಬ್ಬ ಬ್ರಾಹ್ಮಣ ಇರಲಿ ಅಂತ ಮನೇಗೆ ಬೇಕಾದ ಸೌದೆ, ಅಕ್ಕಿ, ತರಕಾರಿ, ಬಾಳೆಲೆ, ಹಣ್ಣು ಹಂಪಲು ಒದಗಿಸ್ತೀರಿ. ನಂಗೆ ಯಾಕೆ ತೋಟ ಬೇಕು ಹೇಳು?” +“ಸರಿ ಜೋಯಿಸ್ರೆ. ನರಸಿಂಹ ದೇವರ ಮಠದ ಏಜೆಂಟ್ ಭಟ್ಟ ಇದಾನಲ್ಲ ಅವ ಅಲ್ವ ನಿಮ್ಮನ್ನ ತೋಟದಿಂದ ಬಿಡಿಸಿ ತನ್ನ ಸ್ವಂತ ಸಾಗುವಳೀಂತ ಇಟ್ಟುಕೊಂಡದ್ದು?” +“ಗೇಣಿ ಸಂದಾಯ ಆಗ್ಲಿಲ್ಲಾಂತ ಇಟ್ಕೊಂಡ. ಸರಿ. ಅದನ್ನ ತಪ್ಪಿಸಕ್ಕಾಗತ್ತ?” +“ಆಗತ್ತೆ ಜೋಯಿಸ್ರೆ.” +“ಈಗಿನ ಕಾನೂನುಗಳು ನನಗೆ ಗೊತ್ತಿಲ್ಲಪ್ಪ. ಆದರೆ ಕೋರ್ಟು ಮೆಟ್ಟಿಲು ಹತ್ತಿ ಉದ್ಧಾರವಾದವ್ರನ್ನ ನಾನು ಕಾಣೆ. ನಾನು ಕೇಳಿದ ಪ್ರಶ್ನೆಗೂ ನಿನ್ನ ಈ ಪಾಟೀಸವಾಲಿಗೂ ಯಾಕೋ ನನಗೆ ಸಂಬಂಧಾನೇ ಹೊಳೀಲಿಲ್ಲ.” +“ಸಂಬಂಧ ಇದೆ -” +“ಹಾಗಾದರೆ ಹೇಳು ಮಾರಾಯ. ಶಿಷ್ಯಾದಿಚ್ಛೇತ್‌ಪರಾಜಯಂ ಅಂತಾರೆ” +“ಹೇಗೇಂದ್ರೆ ಜೋಯಿಸರೆ -ಇಗ ನೋಡಿ ಕಲ್ಕುಟಕನ್ನ ನಂಬಿಕೊಂಡು ಈ ನಮ್ಮ ಮೂರ್ಖ ಶೂದ್ರ ಜನ ಆ ನರಸಿಂಹ ಭಟ್ಟನಿಗೆ ಹೆದರ್ತಾರೆ. ತಮ್ಮ ಐಹಿಕ ಪಾಡಿನಲ್ಲಿ ಏನೂ ಮಾರ್ಪಾಟಾಗಲಿಕ್ಕೆ ಸಾಧ್ಯವಿಲ್ಲ ಅಂದುಕೋತಾರೆ. ಆ ಕುರಿ ಕೋಳೀ ತಿನ್ನೊ ಕಲ್ಕುಟಕನೇ ತಮ್ಮನ್ನ ಉದ್ಧಾರ ಮಾಡಬೇಕೂಂತ ತಿಳೀತಾರೆ.” +“ನಿಮ್ಮ ಜನಾನೂ ನಿರಾಕಾರ ನಿರ್ಗುಣ ಬ್ರಹ್ಮನನ್ನು ಅರಿಯೋ ಮಟ್ಟಕ್ಕೆ ಬರಬೇಕೂಂತ ಅನ್ನೋದನ್ನ ನಾನೂ ಒಪ್ತೀನೋ ಕಿಟ್ಟಣ್ಣ. ಧರ್ಮಕರ್ಮಗಳ ಮುಖೇನ ಅವರು ಮೇಲಕ್ಕೆ ಬರಬೇಕೇ ವಿನಹ -” +“ಅದಲ್ಲ ನಾನು ಹೇಳ್ತಿರೋದು ಜೋಯಿಸ್ರೆ -ಕೇಳಿ. ನರಸಿಂಹಭಟ್ರನ್ನ ಎದುರಿಸಿ ಅವರು ತಮ್ಮ ಐಹಿಕ ಬದುಕನ್ನ ಊರ್ಜಿತಗೊಳಿಸಿಕೊಂಡರೆ ಕ್ರಮೇಣ ಈ ಕುರಿಕೋಳಿ ತಿನ್ನೊ ದೆವ್ವಗಳ ಪೂಜೇಂದ ಮುಕ್ತರಾಗ್ತಾರೆ. ಆದರೆ ನರಸಿಂಹಭಟ್ಟನನ್ನ ಧಿಕ್ಕರಿಸಿ ನಡಕೊಳ್ಳೋಕೆ ಈ ಕಲ್ಕುಟಕನಲ್ಲಿರೋ ನಂಬಿಕೆ ಅಡ್ಡ ಬರತ್ತಲ್ಲ ಹೇಳಿ. ಆದ್ರಿಂದ ನಂಗೆ ಎದ್ದಿರೋ ಪ್ರಶ್ನೆ ಕಲ್ಕುಟಕನನ್ನ ಅವರು ಕಿತ್ತೆಸೆದು, ಅದ್ರಿಂದ ಬಂದ ಧೈರ್ಯದಿಂದ ನರಸಿಂಹ ಭಟ್ಟನ ಡೊಳ್ಳು ಹೊಟ್ಟೆಯನ್ನು ಕರಗಿಸಬೇಕೋ, ಅಥವಾ ಎರಡನೇದನ್ನ ಮೊದಲು ಮಾಡಿ ಕಲ್ಕುಟಕನ್ನ ಪೂಜಿಸೋ ಸ್ಥಿತೀಂದ ಮೇಲೇಳಬೇಕೋ….” +ನರಸಿಂಹಭಟ್ಟನನ್ನ ಏಕವಚನದಲ್ಲಿ ತಾನು ಹೀಯಾಳಿಸಿದ್ದರಿಂದ ಬ್ರಾಹ್ಮಣರಾದ ಜೋಯಿಸರಿಗೆ ಖೇದವಾದದ್ದನ್ನ ಕೃಷ್ಣಪ್ಪ ಗಮನಿಸುತ್ತಾನೆ. ಜೋಯಿಸರೇ ಸ್ವತಃ ನರಸಿಂಹಭಟ್ಟನ ಲೋಭವನ್ನ ಬೇಸರದಿಂದ ಜರೆಯುತ್ತ ಮಠವೇ ಧರ್ಮದ ದಾರಿ ಬಿಟ್ಟ ಮೇಲೆ ಏನು ಗತಿಯೆಂದು ಕೃಷ್ಣಪ್ಪನ ಎದುರು ನಿಟ್ಟುಸಿರಿಟ್ಟದ್ದಿದೆ. ಮಠದ ಸ್ವಾಮಿ ಸೂಳೆಯನ್ನಿಟ್ಟುಕೊಂಡು, ವ್ಯವಹಾರವನ್ನು ತನ್ನ ತಮ್ಮನಾದ ಈ ಭಟ್ಟನ ಕೈಯಲ್ಲಿ ಕೊಟ್ಟು ಜೋಯಿಸರಂಥ ಧರ್ಮಭೀರುಗಳಿಗೆ ಅಸಹ್ಯವಾಗುವಂತೆ ಮಾಡಿದ್ದ. ಅಣ್ಣಾಜಿ ತನ್ನಲ್ಲಿ ಬಿತ್ತಿದ ವಿಚಾರಗಳನ್ನಾಗಲೀ, ಅಥವಾ ತಾನು ವಾರಂಗಲ್ ಠಾಣೆಯಲ್ಲಿ ಕಂಡಿದ್ದ ನರಕವನ್ನಾಗಲೀ ಈ ಬ್ರಾಹ್ಮಣನೆದುರು ಹೇಳಿ ಅವರಿಗೆ ಮನದಟ್ಟು ಮಾಡುವುದು ಅಸಾಧ್ಯವೆಂದು ಕೃಷ್ಣಪ್ಪ ಕೈಬಿಟ್ಟಿದ್ದ. ಆದರೂ ಜೋಯಿಸರು ಮತ್ತು ಅವರ ಹೆಂಡತಿ ಕೃಷ್ಣಪ್ಪನಲ್ಲಿ ತನ್ನವರು ಎಂಬ ಭಾವನೆ ಹುಟ್ಟಿಸುವರು. ಹಳ್ಳಿಗೆ ಬಂದ ಪ್ರಾರಂಭದಲ್ಲಿ ಜೋಯಿಸರು ಚಳಿಯಲ್ಲಿ ಬರೀ ಪಂಚೆಯುಟ್ಟು ಧೋತ್ರ ಹೊದ್ದಿರುವುದನ್ನು ಕಂಡು ಕೃಷ್ಣಪ್ಪ ಅವರಿಗೊಂದು ಉಣ್ಣೆಯ ಶಾಲು ತಂದುಕೊಟ್ಟು ರುಕ್ಮಿಣಿಯಮ್ಮನ ಕಣ್ಣುಗಳಲ್ಲಿ ಬೆಳಕನ್ನೂ ನೀರನ್ನೂ ಉಕ್ಕುವಂತೆ ಮಾಡಿದ್ದ. +ಮಾಂಸ ತಿನ್ನದ್ದರಿಂದ ಕೃಷ್ಣಪ್ಪ ಜೋಯಿಸರಿಗೆ ಇನ್ನಷ್ಟು ಆತ್ಮೀಯನಾಗಿದ್ದ. ಈ ಲೋಕದಲ್ಲಿ ಈಗಲೂ ಮಳೆ ಬೆಳಯಾಗುತ್ತಿರುವುದು ಕೆಲವೇ ಕೆಲವು ಬ್ರಾಹ್ಮಣರಾದರೂ ತ್ರಿಕಾಲ ಸಂಧ್ಯಾವಂದನೆ ಮಾಡುತ್ತಿರುವುದರಿಂದ ಎಂಬ ಜೋಯಿಸರ ತಿಳುವಳಿಕೆಯನ್ನು ಪ್ರೀತಿಯಿಂದ ಕೃಷ್ಣಪ್ಪ ಸಹಿಸಿಕೊಳ್ಳುವನು. ತನ್ನ ಜಪತಪಾದಿಗಳಿಂದ ಕೃಷ್ಣಪ್ಪ ಶ್ರೇಯೋವಂತನಾಗುತ್ತಿದ್ದಾನೆ ಎಂದು ಜೋಯಿಸರು ತಿಳಿದಿದ್ದಾರೆಂದು ಕೃಷ್ಣಪ್ಪನಿಗೆ ಗೊತ್ತು. ಅದನ್ನೂ ಅವನು ಸಹಿಸಿಕೊಳ್ಳುವನು. ಅವರ ಜಪತಪದ ಫಲವಾದ ಈ ತಾನು ನರಸಿಂಹ ಭಟ್ಟ ಎಷ್ಟೇ ಕೊಳಕನಾದರೂ ಅವನಿಗೆ ಪೂರ್ವಜನ್ಮದ ಪುಣ್ಯದಿಂದ ಲಭಿಸಿದ ಬ್ರಾಹ್ಮಣ್ಯಕ್ಕೆ ಚೂರೂ ಮರ್ಯಾದೆ ಕೊಡದೇ ಇರುವುದು ಜೋಯಿಸರಿಗೆ ಸಮಸ್ಯೆಯಾಗಿದೆ ಎಂದೂ ಅವನಿಗೆ ಗೊತ್ತಿದೆ. +ವಸೂಲಿಯ ಕಾಲ ಬಂತೆಂದರೆ ನರಸಿಂಹಭಟ್ಟ, ಅವನ ಕಡೆ ಅಮೀನ, ಅವನ ಶಾನುಭೋಗ ಹಳ್ಳಿಯ ರೈತರಿಗೆ ಸಿಂಹಸ್ವಪ್ನವಾಗಿಬಿಡುವರು. ಈ ಸಾರಿ ಒಂದು ಘಟನೆ ನಡೆಯಿತು. ಸಂದಾಯವಾಗಬೇಕಿದ್ದ ಗೇಣಿಯನ್ನು ಕೊಡಲಿಲ್ಲೆಂದು ಬೀರೇಗೌಡ ಎಂಬ ರೈತನ ಮನೆಯನ್ನು ನರಸಿಂಹಭಟ್ಟ ತನ್ನ ಜವಾನರ ಜೊತೆಗೆ ಸ್ವತಃ ನುಗ್ಗಿದ. ಬೀರೇಗೌಡನ ಮಗುವಿಗೆ ಜ್ವರ ಬಂದಿತ್ತು. ಅವನ ಹೆಂಡತಿ ಮಗುವಿಗೆಂದು ಕಂಚಿನ ಪಾತ್ರೆಯಲ್ಲಿ ಹಾಲನ್ನು ಕಾಯಿಸುತ್ತಿದ್ದಳು. ಒಳಗೆಲ್ಲೋ ಅಡಿಕೆಯನ್ನು ಬೀರೇಗೌಡ ಬಚ್ಚಿಟ್ಟಿದ್ದಾನೆ ಎಂಬ ಗುಮಾನಿಯಿಂದ ಒಳಗೆ ನುಗ್ಗಿದ ಭಟ್ಟನಿಗೆ ಬರಿದಾದ ಮನೆ ಕಂಡು ಕಡುಕೋಪ ಬಂತು. ಇನ್ನೆಲ್ಲೊ ಅಡಿಕೆಯನ್ನು ಈ ಗೌಡ ಸಾಗಿಸಿದ್ದಾನೆ ಎಂದು ಕಟಕಟನೆ ಹಲ್ಲುಕಡಿಯುತ್ತ ಭಟ್ಟ ಒಳಗಿದ್ದುದನ್ನೆಲ್ಲ ಅಂಗಳಕ್ಕೆ ಎಸೆಯಲು ಜವಾನರಿಗೆ ಹೇಳಿ, ಗೌಡನ ಹೆಂಡತಿ ಕಾಲು ಹಿಡಿದುಕೊಂಡರೂ ಕರಗದೆ, ಒಲೆಯ ಮೇಲಿದ್ದ ಹಾಲನ್ನೂ ಎತ್ತಿಸಿ ಅಂಗಳದಲ್ಲಿ ಚೆಲ್ಲಿಸಿದ್ದ. ಈ ಘಟನೆ ಹಳ್ಳಿಯ ಜನರನ್ನು ಅವಾಕ್ಕಾಗಿಸಿತ್ತು. ಕಿವಿಯಲ್ಲಿ ಒಂಟಿ ತೊಟ್ಟು, ಹಣೆಗೆ ವಿಭೂತಿಯಿಟ್ಟು, ಕಚ್ಚೆಪಂಚೆಯ ಮೇಲೆ ಕರಿಯ ಸರ್ಜ್‌ಕೋಟನ್ನು ಹಾಕಿಕೊಂಡು ಕೈಯಲ್ಲಿ ದೊಣ್ಣೆ ಹಿಡಿದು ನಿಂತ ಉಬ್ಬು ಹಲ್ಲಿನ ಕಡುಕಪ್ಪು ಬಣ್ಣದ ಈ ಭಟ್ಟ ಬೀರೇಗೌಡನಿಗೆ ಯಮನಂತೆ ಕಂಡಿದ್ದ. ಅವತ್ತು ಸಂಜೆಯೇ ಜ್ವರ ಬಂದಿದ್ದ ಮಗು ಸತ್ತಿತು ಬೇರೆ. +ವಾರಂಗಲ್ ಠಾಣೆಯ ಹಿಂಸೆಯ ಬೇರುಗಳನ್ನು ತನ್ನ ಸುತ್ತಮುತ್ತಲೆಲ್ಲ ಕಂಡಿದ್ದ ಕೃಷ್ಣಪ್ಪ ಬೀರೇಗೌಡನ ಮಗುವನ್ನು ಹೂಳಲು ತಾನೇ ಹೋದ. ಅಲ್ಲಿ ನೆರೆದಿದ್ದ ರೈತರಿಗೆ ಹೇಳಿದ: ಮಠದ ಭಟ್ಟ ಪ್ರತಿ ವರ್ಷ ಹೆಚ್ಚು ಹೆಚ್ಚು ಗೇಣಿಯನ್ನು ಪಡೆಯುತ್ತಿದ್ದಾನೆ. ಅವನು ಗೇಣಿಯನ್ನು ಅಳೆಯಲು ತರುತ್ತಿರುವ ಕೊಳಗ ವರ್ಷೇ ವರ್ಷೇ ದೊಡ್ಡದಾಗುತ್ತ ಹೋಗಿದೆ. ಹಿಂದಿನ ಕೊಳಗದಲ್ಲಿ ಮಾತ್ರ ನೀವು ಗೇಣಿ ಅಳೆಯುತ್ತೀರೆಂದು ಹಠ ಮಾಡಿ. ಅವನು ಹಿಂಸೆ ಮಾಡಲು ಬರುತ್ತಾನೆ. ಮೊದಲೇ ನಿಮ್ಮ ಮನೆ ಹೆಂಗಸರಿಗೆ ಒಂದು ಪಾತ್ರೆ ಸಗಣಿ ನೀರನ್ನು ಬೆರೆಸಿ ಅದರಲ್ಲಿ ಪೊರಕೆ ಅದ್ದಿಡಲು ಹೇಳಿ. ಭಟ್ಟ ಒಳನುಗ್ಗಿದರೆ ಪೊರಕೆಯಲ್ಲಿ ಅವನಿಗೆ ಹೊಡೆಯಿರಿ. ಬ್ರಾಹ್ಮಣ ಇದರಿಂದ ಕಂಗಾಲಾಗುತ್ತಾನೆ. +ಮಾರನೇ ದಿನವೇ ಒಬ್ಬ ಬಡಗೌಡನ ಮನೆಯಲ್ಲಿ ಭಟ್ಟನ ಬಿಳಿ ಅಂಗಿ ಸರ್ಜ್‌ಕೋಟಿನ ಮೇಲೆ ಸಗಣಿ ನೀರದ್ದಿದ ಪೊರಕೆಯ ಪ್ರಕ್ಷಾಳನ ನಡೆಯಿತು. ಈ ಸುದ್ದಿ ತಾಲ್ಲೂಕಿನಲ್ಲೆಲ್ಲಾ ಹಬ್ಬಿತು. ಈ ಘಟನೆಯಿಂದ ಅನೇಕ ಬೆಳವಣಿಗೆಗಳಾದುವು. +ಪೋಲೀಸ್ ಸಹಾಯ ಪಡೆದು ಭಟ್ಟ ಒಕ್ಕಲೆಬ್ಬಿಸಲು ಶುರು ಮಾಡಿದ. ರೈತರು ಸಂಘಟಿತರಾಗಿ ತಮ್ಮ ಹೊಲವನ್ನು ಉಳಲು ಹೋದರು. ಅವರನ್ನು ಕಾನೂನಿನ ಪ್ರಕಾರ ಬಂಧಿಸಲಾಯಿತು. ಈ ಸುದ್ದಿ ಹರಡಿ ದೇಶದ ಅನೇಕ ಕಡೆಗಳಿಂದ ಸಮಾಜವಾದಿಗಳು ಬಂದು ಕೃಷ್ಣಪ್ಪನ ಹುಲಿಯೂರಲ್ಲಿ ದಸ್ತಗಿರಿಯಾಗತೊಡಗಿದರು. ಹುಲಿಯೂರು ಇಂಡಿಯಾದಲ್ಲೆಲ್ಲ ಈ ಘಟನೆಯಿಂದ ಕರ್ನಾಟಕದ ತೆಲಂಗಾಣವೆಂದು ಪ್ರಸಿದ್ಧವಾಯಿತು. +ರೈತರು ತಮ್ಮ ಹೋರಾಟದಲ್ಲಿ ಸಂಪೂರ್ಣ ಗೆಲ್ಲದಿದ್ದರೂ ಮಠ ಸ್ವಲ್ಪ ತಣ್ಣಗಾಯಿತು. ಕೊಳಗದ ಗಾತ್ರ ಹಿಗ್ಗುವುದು ನಿಂತು ಐದು ವರ್ಷಗಳ ಹಿಂದಿನ ತನ್ನ ಗಾತ್ರಕ್ಕೆ ಮರಳಿತು. ಈ ಘಟನೆ ಮೂಲಕ ರೈತರೆಲ್ಲರೂ ಸಂಘಟಿತರಾದರು. ಜನರ ಒತ್ತಾಯಕ್ಕೆ ಸಿಕ್ಕಿಬಿದ್ದು ಕೃಷ್ಣಪ್ಪ ಚುನಾವಣೆಗೆ ನಿಂತು ಗೆದ್ದು ಬಂದ. ಇದು ಮೂರನೇ ಬಾರಿ ಅವನು ಅಸೆಂಬ್ಲಿಗೆ ಆಯ್ಕೆಯಾಗಿರುವುದು. ಇಷ್ಟಿಷ್ಟೇ ರೈತರ ಸಮಸ್ಯೆಗಳು ಬಗೆ ಹರಿಯುತ್ತ ಬಂದಿದ್ದರಲ್ಲಿ ಅವನ ಪಾತ್ರ ಮಹತ್ವದ್ದೆಂದು ದೇಶದಲ್ಲಿ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಮೊದಲು ಬ್ರಾಹ್ಮಣರ ವಿರುದ್ಧವಿದ್ದ ಸರ್ಕಾರ ಇನಾಂದಾರಿಯನ್ನು ರದ್ದು ಮಾಡಿತು. ಆದರೆ ಜಮೀಂದಾರ ವರ್ಗವಾದ ಒಕ್ಕಲಿಗ ಲಿಂಗಾಯತರು ಅಧಿಕಾರದಲ್ಲಿದ್ದುದರಿಂದ ಭೂ ಹಿಡುವಳಿಗೆ ಸೀಲಿಂಗ್ ಹಾಕುವ ಹೋರಾಟ ಉಗ್ರವಾಗುತ್ತ ಹೋಗಬೇಕಾಯಿತು. ಉಳುವವನೇ ಹೊಲದೊಡೆಯ ಎಂಬ ಸ್ಲೋಗನನ್ನು ಮಾತಿನ ಮಟ್ಟದಲ್ಲಾದರೂ ಸರ್ಕಾರ ಈಗ ಒಪ್ಪಿಕೊಳ್ಳುತ್ತಿದೆ. ಆದರೆ ಎಲ್ಲಾ ಉಳುವವರೂ ಹೊಲದೊಡೆಯರಾಗಿಲ್ಲ. ಈಚೀಚೆಗೆ ಆದವರು ಉಳಿದವರು ಆಗುವುದನ್ನು ಇಷ್ಟಪಡುವುದಿಲ್ಲ. +ಮನುಷ್ಯನ ಸ್ವಾಭಿಮಾನ ಬೆಳೆಯಲು ಈ ಆಸ್ತಿಯ ಹೋರಾಟ ಅಗತ್ಯವೆಂದು ಅಣ್ಣಾಜಿ ಹೇಳಿದ್ದು ಕೃಷ್ಣಪ್ಪ ಗೌಡನ ಅನುಭವಕ್ಕೆ ಬಂದಿದೆ. ಆದರೆ ತಾನು ಮುಳುಗಿರುವ ರಾಜಕೀಯ ಹೋರಾಟ ಕ್ರಮೇಣವಾಗಿ ಮನುಷ್ಯನನ್ನು ಕ್ಷುಲ್ಲಕವಾದ್ದರಿಂದ ಬಿಡುಗಡೆ ಮಾಡುತ್ತದೆನ್ನುವುದರಲ್ಲಿ ಅವನಿಗಿನ್ನೂ ಅನುಮಾನ ಉಳಿದಿದೆ. ಮೂರು ಹೊತ್ತೂ ಜನರ ಮಧ್ಯವಿದ್ದು ಅವರ ಉಪದ್ವ್ಯಾಪಗಳನ್ನು ಕೇಳಿಸಿಕೊಳ್ಳುತ್ತಲೇ ಇರುವುದರಿಂದ ಅವನಿಗೆ ಸುಸ್ತಾಗುತ್ತದೆ. ಒಂಟಿಯಾಗಿರಬೇಕೆಂಬ ಆಸೆ ಮೊಳೆಯುತ್ತದೆ. ಸದಾ ಹೋರಾಟದಲ್ಲಿ ಮಗ್ನನಾಗಿರುವ ತನಗೆ ಪ್ರತಿಕ್ಷಣವೂ ಎಲ್ಲೆಲ್ಲೊ ಸದಾ ಫಲಿಸುತ್ತಲೇ ಇರುವ ಜೀವನದ ಸಣ್ಣ ಖುಷಿಗಳು ಕಾಣದೇ ಹೋಗುತ್ತಿವೆ ಎಂದು ಆತಂಕವಾಗುತ್ತದೆ. ಅವನು ಬಾಡಿಗೆಗಿದ್ದ ಗಾಂಧೀ ಬಜ಼ಾರಿನ ಬಡಾವಣೆಯಲ್ಲಿ ಯಾವತ್ತಾದರೂ ಸಂಜೆ ಒಂಟಿಯಾಗಿರುವುದು ಸಾಧ್ಯವಾದಾಗ ಹೊರಗೆ ಕಾಂಪೌಂಡಿನಲ್ಲಿ ಕೂತು ನೋಡುತ್ತಾನೆ. ಉದ್ದೇಶರಹಿತ ಸಂಭ್ರಮದಲ್ಲಿ ಉದ್ದ ಲಂಗ ತೊಟ್ಟ ಹುಡುಗಿಯರು ಓಡಾಡುವುದು ಕಂಡು ಅಸೂಯೆಯಾಗುತ್ತದೆ. ಜೀವನದಲ್ಲಿ ಮುಂದೆ ಬರುವ ಸಂದಿಗ್ಧಗಳು, ಮಧ್ಯಮವರ್ಗದ ತಾಯಿತಂದೆಯರ ಆತಂಕಗಳು ಅವರನ್ನು ಬಾಧಿಸುವಂತೆ ಕಾಣುವುದಿಲ್ಲ. ಜಡೆಗಳಿಗೆ ಮಲ್ಲಿಗೆ ಮುಡಿದು ಗುಂಪಾಗಿ ಗಲಿಬಿಲಿ ಮಾಡುತ್ತ ದೀಪಗಳ ಕೆಳಗೆ ಮರಗಳ ಕೆಳಗೆ ಅವರ ಒಯ್ಯಾರದ ಅರ್ಧ ತಾಸನ್ನು ಕೃಷ್ಣಪ್ಪ ಅಕ್ಕರೆಯಿಂದ ಗಮನಿಸುತ್ತಾನೆ. ಹುಡುಗರನ್ನು ಕಂಡರೆ ನಾಚುವ ಹುಡುಗಿಯರು ಹಲವರಾದರೆ, ಅವರನ್ನು ಚುಡಾಯಿಸುವವರೂ ಕೆಲವರು. ಕೃಷ್ಣಪ್ಪನನ್ನೆ ಅವನ ಜೊತೆ ಹುಡುಗಿಯರು ಆಫ಼್ರಿಕನ್ ಪ್ರಿನ್ಸ್ ಎನ್ನುತ್ತಿರಲಿಲ್ಲವೆ? ಆದರೆ ಯಾವತ್ತೂ ತಾನು ಮಾತ್ರ ಬಿಗಿ. +ಗೌರಿ ದೇಶಪಾಂಡೆ ಫ಼ಿಲಡೆಲ್ಫಿಯಾದಲ್ಲಿ ಏನು ಮಾಡುತ್ತಿರಬಹುದೆಂದು ಯೋಚಿಸುತ್ತಾನೆ. ಅವಳಿಂದ ಕಾಗದವಿಲ್ಲದೆ, ತಾನು ಬರೆಯದೆ ಬಹಳ ದಿನಗಳಾದವು. ಅವಳೂ ಈಚೆಗೆ ರಾಜಕೀಯದಲ್ಲಿ ಆಸಕ್ತಳಾಗಿದ್ದಾಳಂತೆ. ಅವಳ ಜೊತೆಗಾರ ಮಾರ್ಕ್ಸ್‌ವಾದಿ ಸೋಶಿಯಾಲಜಿಸ್ಟ್ ಅಂತೆ. ಪಾರ್ಲಿಮೆಂಟರಿ ರಾಜಕೀಯದಿಂದ ಇಂಡಿಯಾಕ್ಕೆ ಸುಖವಿಲ್ಲವೆಂದು ಅವಳು ವಾದಿಸುತ್ತಾಳೆ. ಗೌರಿ ಹಿಂದೆ ಹೀಗಿರಲಿಲ್ಲ. ಈಗಿನ ನಿಲುವು ಅವಳು ಕಡ ಪಡೆದದ್ದೋ -ಅಥವಾ ನಿಜವೋ ತಿಳಿಯುವುದಿಲ್ಲ. ಅಂತೂ ಅವಳನ್ನು ಮದುವೆಯಾಗೆಂದು ತಾನು ಕೇಳಲೇ ಇಲ್ಲ ಎಂದು ನೋವಾಗುತ್ತದೆ. ತಾನು ಮದುವೆಯಾಗೆಂದು ಕೇಳಿದ ಲೂಸಿನಾ ಅದನ್ನು ಗಂಭೀರವಾಗಿ ಮನಸ್ಸಿಗೆ ತಂದುಕೊಳ್ಳಲೇ ಇಲ್ಲ. ಆದರೆ ಈ ನೋವುಗಳೂ ಈಗ ತೀವ್ರವಾಗಿ ಉಳಿದಿಲ್ಲ. ಖಾಸಗಿ ವ್ಯಕ್ತಿಯಾಗಿ ತಾನು ಖಾಲಿಯಾಗುತ್ತ ಹೋಗುತ್ತಿದ್ದೇನೆಂದು ಭಯವಾಗುತ್ತದೆ. ಇಲ್ಲವಾದಲ್ಲಿ ನನಗೊಂದು ಒಳಬಾಳು ಇದೆ ಎಂಬುದನ್ನೂ ಚೂರೂ ಅರಿಯಲಾರದ ಸೀತೆಯನ್ನು ಮದುವೆ ಮಾಡಿಕೊಳ್ಳುತ್ತಿದ್ದೆನೆ ಎಂದು ಕಸಿವಿಸಿಯಾಗುತ್ತದೆ. ಗೋಪಾಲ ರೆಡ್ಡಿ ಸತ್ತ ಮೇಲೆ ಒಂಟಿಯಾಗಿರುವುದು ಅಸಾಧ್ಯವೆನ್ನಿಸಿ ಮದುವೆ ಆದದ್ದಲ್ಲವೆ? ಅವನ ಹಿತೈಷಿಗಳು ಊಟ ಉಪಚಾರಗಳನ್ನು ನೋಡಿಕೊಳ್ಳಬಲ್ಲ ಹೆಣ್ಣೆಂದು ಸೀತೆಯನ್ನು ಮದುವೆ ಮಾಡಿಕೊ ಎಂದಾಗ ಅಷ್ಟಕ್ಕೇ ಲಾಯಕ್ಕಾದವಳನ್ನು ಮಾಡಿಕೊಳ್ಳುವುದನ್ನು ಅವನು ಕೂಡ ಬಯಸಿದ್ದ. ಅಂದರೆ ಹೆಣ್ಣಿನ ಸಂಗದಲ್ಲಿ ತೀವ್ರತೆಗೆ ಹೆದರಿ ಸೀತೆಯಂಥವಳನ್ನು ಮದುವೆಯಾಗಿ, ಆಮೇಲೆ ತೀವ್ರತೆ ಬೇಕೆಂದು ಬಯಸುವ ತನ್ನ ವ್ಯಕ್ತಿತ್ವದಲ್ಲಿ ಎಲ್ಲೋ ಕೊರತೆಯಿರಲೇಬೇಕು. ಪ್ರಾಯಶಃ ಅಣ್ಣಾಜಿ ಹೇಳಿದಂತೆ ನಾನು ಫ಼್ಯೂಡಲ್, ಮದುವೆಯ ಅಗತ್ಯವಿಲ್ಲೆಂದು ಕಂಡದ್ದರಿಂದಲೇ ಲೂಸಿನಾ ಜೊತೆ ತೀವ್ರವಾದ ಪ್ರಣಯ ತನಗೆ ಸಾಧ್ಯವಾಗಿದ್ದಿರಬಹುದು. ಮದುವೆಯಲ್ಲಿ ತೊತ್ತನ್ನು ಬಯಸಿದೆನೇ ವಿನಹ ಸಖಿಯನ್ನಲ್ಲ. ಆದ್ದರಿಂದಲೇ ಬಹುಶಃ ಗೌರಿಯನ್ನು ಕಳಕೊಂಡೆ ಎಂದು ಸಿಗರೇಟ್ ಹತ್ತಿಸುತ್ತಾನೆ. ಹುಡುಗರು ಹುಡುಗಿಯರೆಲ್ಲ ಬೀದಿಯಿಂದ ಮರೆಯಾಗುತ್ತಾರೆ. ಪಕ್ಕದ ಮನೆಯಲ್ಲಿ ಮಗು ಮಗ್ಗಿ ಕಲಿಯುತ್ತಿದೆ. ಒಳಗೆ ಸೀತೆ ಏನೋ ಪರಚಿಕೊಳ್ಳುತ್ತಿದ್ದಾಳೆ. ಗಂಡ ಒಂಟಿಯಾಗಿ ಸಿಗೋದೇ ದುರ್ಲಭವಾದ್ದರಿಂದ ಸಿಕ್ಕಿದ ಈ ಸಮಯದಲ್ಲಿ ತನ್ನ ಸಿಟ್ಟನ್ನೆಲ್ಲ ಅವನ ಕಿವಿಗೆ ತಲ್ಪಿಸುತ್ತಿದ್ದಾಳೆ. ಕೃಷ್ಣಪ್ಪ ಒಳಗೆ ಹೋಗಿ ಪ್ರತಿ ಸಂಜೆ ತಾನು ಕುಡಿಯುವ ಕ್ವಾರ್ಟರ್ ವ್ಹಿಸ್ಕಿಯನ್ನು ಎದುರಿಗಿಟ್ಟುಕೊಂಡು ಮೇಜಿನ ಎದುರು ಕೂರುತ್ತಾನೆ. +ಇವತ್ತಾದ್ದು ನಾಳೆ ನೆನಪಿರುವುದಿಲ್ಲ. ದಿನಗಳ ಮೇಲೆ ದಿನಗಳು ಉರುಳುತ್ತವೆ. ಅಸೆಂಬ್ಲಿಯಲ್ಲಿ ಉಗ್ರಭಾಷಣ, ಹೊರಗೆ ಉಗ್ರಭಾಷಣ, ಅದರ ವಿರುದ್ಧ ಇದರ ವಿರುದ್ಧ ಪ್ರತಿಭಟನೆ, ಬೆಳಗಾದರೆ ಅದು ಬೇಕು ಇದು ಬೇಕು ಎಂದು ಬರುವ ಜನ, ಅದನ್ನು ಖಂಡಿಸಿ ಸಹಿ, ಇದನ್ನು ಸಮರ್ಥಿಸಿ ಸಹಿ -ತೇಯುತ್ತಾ ಹೋಗುತ್ತಾನೆ. ಈ ಮಧ್ಯೆ ಕೃಷ್ಣಪ್ಪನಿಗೆ ಆಗರ್ಭ ಶ್ರೀಮಂತನೊಬ್ಬ ಸ್ನೇಹಿತನಾಗಿದ್ದ. ಕೋಲಾರದ ಕಡೆಯಿಂದ ಆಯ್ಕೆಯಾದ ಈ ಗೋಪಾಲರೆಡ್ಡಿ ಶ್ರೀಮಂತನಾದರೂ ಮಾರ್ಕ್ಸ್‌ವಾದಿ. ಶುಭ್ರವಾದ ಬಿಳಿಪಂಚೆಯನ್ನು ಕಚ್ಚೆ ಹಾಕಿ ಉಟ್ಟು, ತೆಳುವಾದ ಜುಬ್ಬ ತೊಟ್ಟು ಬೆನ್ಸ್ ಕಾರಲ್ಲಿ ಓಡಾಡಿಕೊಂಡಿದ್ದ ಸಪುರ ಮೈ ನೀಳವಾದ ಮುಖಗಳ ಈ ಮಾರ್ಕ್ಸ್‌ವಾದಿ ತನ್ನ ವರ್ಗದ ನಾಶವನ್ನು ಬಯಸುವ ಉತ್ಕಟತೆಗೆ ಕೃಷ್ಣಪ್ಪ ಮಾರುಹೋಗಿದ್ದ. ಗೋಪಾಲರೆಡ್ಡಿ ಒಮ್ಮೆ ತನ್ನ ಸಂಗಡ ಜೈಲಿನಲ್ಲಿದ್ದಾಗ ಅವನ ಲವಲವಿಕೆ ಕಷ್ಟಸಹಿಷ್ಣುತೆ ಗಮನಿಸಿ ಚಕಿತನಾಗಿದ್ದ. ಹಣ, ಆಸ್ತಿ, ಸ್ಥಾನಗಳನ್ನು ಅಸಡ್ಡೆಯಿಂದ ಕಾಣುವ ಗೋಪಾಲರೆಡ್ಡಿ ಸಿನಿಮಾ, ಸಂಗೀತ, ಸಾಹಿತ್ಯ ಎಲ್ಲದರಲ್ಲೂ ಅತ್ಯುತ್ಕೃಷ್ಟವಾದದ್ದನ್ನು ಬೆನ್ನು ಹತ್ತಿದವ. ಕಲ್ಕತ್ತದಲ್ಲಿ ಅಲಿ ಅಕ್ಬರನ ಕಛೇರಿಯಿದೆ ಎಂದು ಪೇಪರಿನಲ್ಲಿ ಓದಿ ಕೃಷ್ಣಪ್ಪನನ್ನು ವಿಮಾನದಲ್ಲಿ ಕಲ್ಕತ್ತೆಗೆ ಕರೆದುಕೊಂಡು ಹೋದಂಥ ಹುಚ್ಚು ಅವನದು. ಬೊಂಬಾಯಿಯ ತಾಜ್‌ನಲ್ಲಿರುವಷ್ಟೇ ಸಲೀಸಾಗಿ ಸುಖವಾಗಿ ಗುಡಿಸಲಲ್ಲೂ, ಜೈಲಲ್ಲೂ ಅವನು ಇರಬಲ್ಲ. ಹಚ್ಚಿಕೊಳ್ಳದಂತೆ ಭೋಗಿಸಬಲ್ಲ. ಬೈನೆ ಮರದ ಹೆಂಡ ಮೆಣಸಿನಕಾಯಿ ಬೋಂಡಗಳು ಸ್ಕಾಚ್ ಮತ್ತು ಚೀಸಿನಷ್ಟೇ ಅವನಿಗೆ ಪ್ರಿಯ. ಅಪಾರವಾದ ಐಶ್ವರ್ಯ ಬದುಕಿಗಷ್ಟು ಮೆರುಗು ಮಾತ್ರ ತರುತ್ತದೆ ಎಂಬ ಕೃಷ್ಣಪ್ಪನ ಅಭಿಪ್ರಾಯ ಗೋಪಾಲರೆಡ್ಡಿಯ ಸಹವಾಸದಲ್ಲಿ ಬದಲಾಯ್ತು -ಐಶ್ವರ್ಯವಿದ್ದಲ್ಲಿ ಜೀವನದ ಗುಣಲಕ್ಷಣಗಳೇ ಭಿನ್ನವಾಗಿರುತ್ತವೆ ಎಂಬುದನ್ನು ಕಂಡ. ಕೃಷ್ಣಪ್ಪನ ಚುನಾವಣೆಗೆ ಹುಲಿಯೂರಿಗೆ ಬಂದು ಯಾವ ರೈತನ ಚಾವಡಿಯಲ್ಲಾದರೂ ಮಲಗಿ ಬೆಳಿಗ್ಗೆ ಬಾಳೆಲೆ ಮೇಲೆ ಬಡಿಸಿದ ಗಂಜಿಗೆ ಮಾವಿನ ಮಿಡಿ ಉಪ್ಪಿನಕಾಯನ್ನು ಬಡಿಸಿಕೊಂಡು ಅತ್ಯಂತ ರುಚಿಯಿಂದ ತಿನ್ನಬಲ್ಲ ಕೌಶಲ ಅವನದು. ಹುಲ್ಲಿನ ಚಾಪೆ, ಹಾಳೆಯ ಟೊಪ್ಪಿ, ಗೊರಬು, ಹಲಸಿನ ಹಣ್ಣಿನ ಕಡುಬು, ಬಿದಿರಿನ ಉಣಗೋಲು -ದೈನಿಕದಲ್ಲಿ ನಿಕೃಷ್ಟವೆನ್ನಿದ್ದೆಲ್ಲವೂ ಅವನ ನಿರ್ಲಿಪ್ತ ಮೆಚ್ಚುಗೆಯಲ್ಲಿ ಹಾಡುತ್ತಿದ್ದವು -ಅವನು ಭೋಗಿಸುವ ಹೆಣ್ಣಿನ ದೇಹ ಹಾಡಿದಂತೆ. +ಗೋಪಾಲ ರೆಡ್ಡಿಯ ಊರಿಗೇ ಹೋದಾಗ ಮಾತ್ರ ಕೃಷ್ಣಪ್ಪ ತನ್ನ ಗೆಳೆಯನ ಮಿತಿಯನ್ನು ಅರಿತದ್ದು. ಅಲ್ಲಿ ಅವನು ಧಣಿ. ಅವನ ಅಪ್ಪ ಟೈರೆಂಟ್. ಜವಾನರು ಬೆನ್ನು ತೋರಿಸಿ ನಡೆಯುವುದಿಲ್ಲ. ಅರಮನೆಯಂಥ ಅವನ ಮನೆಯಲ್ಲಿ ಮಕ್ಕಳು ಅಳುವುದು ಕೇಳುವುದಿಲ್ಲ. ಹೆಂಗಸರು ನಗುವುದು ಕೇಳುವುದಿಲ್ಲ. ರೆಡ್ಡಿಯ ಅಪ್ಪ ನಿಂತಲ್ಲಿ ಕೂತಲ್ಲಿ ಎಲ್ಲವೂ ಸ್ತಬ್ಧವಾಗಿರುತ್ತಿತ್ತು. ಗೋಪಾಲರೆಡ್ಡಿ ತುಂಬ ಮುಜುಗರದಿಂದ ಕೃಷ್ಣಪ್ಪನನ್ನು ಒಂದು ದಿನ ಮಾತ್ರ ಅಲ್ಲಿರಿಸಿಕೊಂಡಿದ್ದ -ಅಷ್ಟೆ. ತನ್ನ ಶ್ರೀಮಂತಿಕೆಯಿಂದ ಕೃಷ್ಣಪ್ಪ ಹೇಸಿದ್ದು ಕಂಡು ಗೋಪಾಲರೆಡ್ಡಿಗೆ ಅವನ ಮೇಲೆ ಅಭಿಮಾನ ಹೆಚ್ಚಿತು. ಇಂಥದನ್ನು ರಕ್ಷಿಸಲೆಂದೇ ವಾರಂಗಲ್‌ನಲ್ಲಿ ಕಂಡಂಥ ಪೋಲೀಸ್ ಠಾಣೆಗಳು ಇದ್ದಾವೆಂಬುದು ಗೋಪಾಲರೆಡ್ಡಿಗೆ ತಿಳಿಯದ ವಿಚಾರವೆ? +ಗೋಪಾಲರೆಡ್ಡಿಯ ವ್ಯಾಪಕವಾದ ಅಭಿಮಾನದಲ್ಲಿ ಕೃಷ್ಣಪ್ಪ ಸಡಿಲವಾದ, ಹಿಗ್ಗಿದ, ತೇಲಿದ, ಕುಡಿಯುವುದನ್ನು ಕಲಿತ. ಹುಡುಗಿಯರ ಜೊತೆ ಮಲಗಿದ. ದೇಹದ ಬೆವರಿನಂತೆ ವ್ಯಕ್ತವಾಗುತ್ತಿದ್ದ ಕೃಷ್ಣಪ್ಪನ ವ್ಯವಸ್ಥೆಯ ವಿರುದ್ಧದ ಕೋಪ, ಅದರ ಮೊದಲಿನ ತೀವ್ರತೆ, ಮಿತಿಗಳನ್ನು ಕಳೆದುಕೊಂಡು ಇಡಿಯಾಗಿ ಕಾಣಬಲ್ಲ ವಿಚಾರಗಳಾದವು. ಗೋಪಾಲರೆಡ್ಡಿ ಸದಾ ಕೃಷ್ಣಪ್ಪನ ವಿಪ್ಲವಕಾರಕ ಆರ್ತತೆಗೆ ತನ್ನ ಚುರುಕಾದ ವಿಚಾರವನ್ನೂ ಬೆಸೆಯುತ್ತಿದ್ದುದರಿಂದ, ಒಂದು ಇನ್ನೊಂದರಿಂದ ಕುಮ್ಮಕ್ಕು ಪಡೆದು ಬೆಳೆಯುತ್ತ ಹೋಗುತ್ತಿದ್ದುದರಿಂದ ಹೆಣ್ಣು, ವ್ಹಿಸ್ಕಿ, ಸಂಗೀತ ಕಛೇರಿಗಳು, ವಿಮಾನ ಸಂಚಾರಗಳು ಕೃಷ್ಣಪ್ಪನನ್ನು ನೈತಿಕವಾಗಿ ಬಾಧಿಸಲಿಲ್ಲ. ಕ್ಷುಲ್ಲಕ ವಿಷಯಗಳಿಂದ ಅಬಾಧಿತನಾಗಿರುವುದು, ಹಣಕ್ಕಾಗಿ ಪರಿದಾಡದಿರುವುದು, ನಿಷ್ಠುರವಾಗಿ ಮಾತಾಡುವುದು, ದೇಹವನ್ನು ಹೆಣ್ಣು ಊಟ ವ್ಹಿಸ್ಕಿಗಳಿಂದ ತಣಿಸಿಕೊಳ್ಳುವುದು, ಹಾತೊರೆಯದೆ ಬೇಕೆನಿಸಿದ್ದನ್ನ ಪಡೆಯುವುದು -ಎಲ್ಲವೂ ಒಟ್ಟಿಗೆ ಏಕಕಾಲದಲ್ಲೆ ಸಿಕ್ಕಿದ್ದರಿಂದ ಕೃಷ್ಣಪ್ಪ ತೇಲಿದ. ತಾನು ಅತ್ಯುನ್ನತ ಶಿಖರದಲ್ಲಿದ್ದೇನೆಂದು ಭಾವಿಸಿದ. ನಿನ್ನೆ ಯಾವ ಹುಡುಗಿಯ ಜೊತೆ ರಮಿಸಿದ್ದು ಎಂಬುದು ಇವತ್ತು ಮರೆಯುವುದೂ ಇತ್ತು. ಅಚ್ಚಳಿಯದೆ ಉಳಿದಿರುವುದೆಂದರೆ ಚಿರತೆಯ ಸೌಂದರ್ಯವನ್ನು ನೆನಪಿಗೆ ತರುವ ಲೂಸಿನಾ ಮಾತ್ರ. ಈಗೀಗ ವಾರಂಗಲ್ ಠಾಣೆಯಲ್ಲಿ ಕಳೆದ ಹಗಲು ರಾತ್ರೆಗಳು ನೆನಪಾಗುವುದಿತ್ತು. ಆದರೆ ಜೀವನವನ್ನು ಕಳೆಗುಂದಿಸುವ ಕ್ಷುಲ್ಲಕ ವಿಷಯಗಳನ್ನು ಅಪಾರವಾದ ಐಶ್ವರ್ಯ ಮತ್ತು ಔದಾರ್ಯಗಳ ಸಹಾಯದಿಂದ ಸುಡಬಲ್ಲ ಕೌಶಲ ಗೋಪಾಲರೆಡ್ಡಿಗೆ ಸಾಧಿಸಿತ್ತಲ್ಲವೆ? ಆಸ್ತಿಪಾಸ್ತಿಗಳಿಂದ ಅಬಾಧಿತವಾದ ತನ್ನ ಕನಸಿನ ಭವಿಷ್ಯದ ಹೊಸ ಬದುಕು ಅದರ ದೈನಿಕ ಸ್ವರೂಪದಲ್ಲಿ ಹೀಗೆ ನಿರಂಬಳವಾಗಿರುತ್ತದೆಂದು ಕೃಷ್ಣಪ್ಪ ಭಾವಿಸಿದ. +ಮಹೇಶ್ವರಯ್ಯ ಒಮ್ಮೆ ಬಂದವರು ಇಬ್ಬರನ್ನು ಒಟ್ಟಿಗೇ ಕಂಡು ಏನನ್ನೊ ನುಂಗಿಕೊಂಡಂತೆ ಅನ್ನಿಸಿತು. ಹೆಣ್ಣೆಂದರೆ ಲಂಪಟಪಡುವ ಅವರು ತಾನು ಪಡುತ್ತಿದ್ದ ಸುಖವನ್ನು ಜರೆದಿರಲಾರರು. ಹಾಗಾದರೆ ಮತ್ತೇನೆಂದು ಅವರನ್ನು ಪೀಡಿಸಲು “ಕೃಷ್ಣಪ್ಪ ಇದು ಬಹಳ ಕಾಲ ಉಳಿಯಲ್ಲೊ -ನಿನಗೆ ಮತ್ತೆ ಅಶ್ವತ್ಥಮರದ ಕೆಳಗೆ ದನಗಳನ್ನು ಕಾಯುತ್ತ ಕೂರಬೇಕೆನ್ನಿಸುತ್ತೊ” ಎಂದಿದ್ದರು. ಹೌದು ಅವರೆಂದಂತೆ ಇದು ಉಳಿಯಲಿಲ್ಲ. ಗೋಪಾಲರೆಡ್ಡಿ ಕ್ಯಾನ್ಸರ್ ಆಗಿ ಸತ್ತ. ಆಮೇಲೆ ಕೃಷ್ಣಪ್ಪ ಬಹಳ ದಿನ ಮಂಕಾಗಿದ್ದು ಹಿತೈಷಿಗಳ ಒತ್ತಾಯಕ್ಕೆ ಒಪ್ಪಿ ಸೀತೆಯನ್ನು ಮದುವೆಯಾದದ್ದು. +ಗೋಪಾಲರೆಡ್ಡಿಯಿಂದ ಪಡೆದ ಸಖ್ಯ ಈಗ ಭ್ರಮೆಯೆನ್ನಿಸುತ್ತದೆ. ತನಗಿಂದ ಹೆಚ್ಚು ಓದಿದ್ದ ಜ್ಞಾನಿ ಅವನು. ಒಳ್ಳೆಯ ಆಟಗಾರ. ಸಂಗೀತದಲ್ಲಿ ಸೂಕ್ಷ್ಮವಾದ ಅಭಿರುಚಿಯಿದ್ದವ. ಜೊತೆಗಿರುವ ಹೆಣ್ಣು ದುಡ್ಡುಕೊಟ್ಟು ಪಡೆದವಳು ಎಂಬುದು ಹೆಣ್ಣಿಗೇ ಮರೆಯುವಂತೆ ಮಾಡಬಲ್ಲ ಕೌಶಲಿ. ಅವನ ಶ್ರೀಮಂತಿಕೆಗೆ ತಾನು ಅವಾಕ್ಕಾಗುವಂಥವನಲ್ಲೆಂದು ಗೊತ್ತಾದ್ದರಿಂದಲೇ ಅವನು ತನ್ನ ಸಖ್ಯ ಬಯಸಿದ್ದಿರಬೇಕು. ತನ್ನಂಥವನ ಸಾಕ್ಷಿಯಲ್ಲಿ ಅವನಿಗೆ ಹಣವನ್ನು ಯಃಕಶ್ಚಿತ್ ಆಗಿ ಸುಡುವುದರಲ್ಲಿ ತೀವ್ರವಾದ ಬಿಡುಗಡೆಯ ಸುಖ ಸಿಕ್ಕಿರಬೇಕು. ಸಖನಾಗಿದ್ದೂ ತನ್ನನ್ನು ಅವನು ಒಂದು ಬಗೆಯ ಆರಾಧನಾಭಾವದಿಂದ ಕಾಣುತ್ತಿದ್ದ. ತನ್ನ ಬಿಗಿಗಳು ಸಡಿಲವಾಗಲು ಅಂಥ ಕಣ್ಣುಗಳು ಅಗತ್ಯವಾಗಿದ್ದವು. ಮಹೇಶ್ವರಯ್ಯ, ಅಣ್ಣಾಜಿ, ಗೌರಿಗಳಂತೆಯೇ ಇವನೂ ತನ್ನಲ್ಲಿ ಏನೋ ದಿವ್ಯವಾದ್ದಿದೆ ಎಂದು ಕಂಡಿದ್ದ. ಒಳಗೇ ಉಜ್ಜಿ ತನ್ನಲ್ಲಿ ಉರಿಯುತ್ತಿದುದರಲ್ಲಿ ಅವನು ಮೈಕಾಯಿಸಿಕೊಂಡಿದ್ದ. ಅಮುಕುತ್ತಿದ್ದ ತನ್ನ ತೀವ್ರತೆಯ ಬಾಧೆಗಳನ್ನು ಅವನ ಸಖ್ಯದಲ್ಲಿ ಹಾಡುವಂತೆ ಮಾಡಿದ್ದ. ಇದರಿಂದ ಕೃಷ್ಣಪ್ಪನಿಗೆ ತನ್ನ ಒಳಬಾಳಿನಲ್ಲಿ ತನಗೇ ಹೊಮ್ಮುತ್ತಿದ್ದ ಚೊಗರಿನಂಥ ಒಂದು ವಿಶೇಷವಾದ ರುಚಿ -ಅದರ ಅಸಹನೀಯ ಉತ್ಕಟ ರುಚಿ -ಕಡಿಮೆಯಾಗುತ್ತ ಹೋಯಿತು. ಗೋಪಾಲರೆಡ್ಡಿ ಸತ್ತಿದ್ದೇ ತಾನು ತಬ್ಬಲಿಯಾದೆನೆನ್ನಿಸಿತು. +“ನಾಗೇಶಾ” +ತನ್ನನ್ನು ಬಿಸಿಲಿನಲ್ಲಿ ಬಿಟ್ಟು ಒಳಗೆ ಕೂತಿದ್ದ ನಾಗೇಶ ಬಂದು ನಿಂತ. +“ಒಳಗೆ ಹೋಗೋಣ ಬಿಸಿಲು ಹೆಚ್ಚಾಯ್ತು” +ನಾಗೇಶ ತಳ್ಳಿಕೊಂಡು ರೂಮಿಗೆ ಕರೆದುಕೊಂಡು ಹೋದ. +“ಡ್ರಾನಲ್ಲಿ ಪರ್ಸಿದೆ ಕೊಡು” +ನಾಗೇಶ ಎತ್ತಿಕೊಟ್ಟ ಪರ್ಸಿಂದ ಇನ್ನೂರು ರೂಪಾಯಿಗಳನ್ನು ತೆಗೆದು ಅವನಿಗೆ ಕೊಟ್ಟ. ನಾಗೇಶ ಅರ್ಥವಾಗದೆ ಕೃಷ್ಣಪ್ಪನ ಮುಖ ನೋಡಲು, +“ನಿನ್ನ ಹತ್ತಿರ ಇನ್ನೊಂದು ಜೊತೆ ಬಟ್ಟೆ ಇರೋ ಹಾಗೆ ಕಾಣಿಸಲ್ಲ. ಹೊಲಿಸಿಕೊ” ಎಂದ. +“ಬೇಡ ಗೌಡರೆ -” +“ತಗೊಳ್ಳೊ. ನನ್ನ ಹತ್ತಿರ ಬಡಿವಾರ ಮಾಡಬೇಡ.” +“ನಿಮ್ಮ ಪರ್ಸಲ್ಲಿ ಇಷ್ಟೇ ಇರೋದು.” +“ನೋಡು ನಾಗೇಶ, ಬಲಗೈ ಇನ್ನೂ ಚಲಿಸ್ತ ಇದೆ. ಅದಕ್ಕೂ ಸ್ಟ್ರೋಕ್ ಹೊಡಿಯೋ ಮುಂಚೆ….” +ತಾನು ನಗುತ್ತ ಹೇಳಿದ ಈ ಮಾತಿನಿಂದ ನಾಗೇಶ ಖಿನ್ನನಾದ್ದು ಕಂಡು – +“ಹುಚ್ಚಪ್ಪ -ನಿಂಗೊತ್ತಿಲ್ಲ. ನನ್ನ ಹೆಂಡತಿ ಇದಾಳಲ್ಲ, ಮಹಾ ಜಿಪುಣಿ, ನನ್ನ ಸಂಬಳದಲ್ಲಿ ಉಳಿಸೀ ಉಳಿಸೀ ಬ್ಯಾಂಕಲ್ಲಿ ಹತ್ತು ಸಾವಿರ ಕೂಡಿಟ್ಟಿದ್ದಾಳೆ. ತಗೋ ಈ ಹಣಾನ್ನ ನೀನು ಬಾಯಿ ಮುಚ್ಚಿಕೊಂಡು -” ಎಂದ. +ಕೃಷ್ಣಪ್ಪನಿಗೆ ನಾಗೇಶನ ಹಿನ್ನೆಲೆ ಗೊತ್ತಿತ್ತು. ಬಡ ಬ್ರಾಹ್ಮಣ ಕುಟುಂಬ. ಅಪ್ಪ ಸದಾ ವ್ಯಗ್ರನಾಗಿರುತ್ತಿದ್ದ ಗುಮಾಸ್ತ. ಅಣ್ಣನೊಬ್ಬ ಇಂಜಿನಿಯರ್. ಅವನ ಹೆಂಡತಿ ಜಿಪುಣಿಯಾದ್ದರಿಂದ ಅವನಿಂದಾಗುವ ಸಹಾಯ ಅಷ್ಟಕ್ಕಷ್ಟೇ. ಆರು ಮದುವೆಯಾಗದ ಅಕ್ಕತಂಗಿಯರು. ಮಗ ಅರ್ಧಕ್ಕೆ ಓದು ನಿಲ್ಲಿಸಿ, ಮೆರವಣಿಗೆ ಮಣ್ಣು ಮಸೀ ಅಂತ ರಾಜಕೀಯದಲ್ಲಿ ಕಾಲ ಕಳೀತಾನೇಂತ ತಾಯಿಗೆ ದುಗುಡ. ನಾಗೇಶ ಮಲಗೋದು ಪಾರ್ಟಿ ಆಫ಼ೀಸಲ್ಲಿ. ಉಣ್ಣೋದು ಅಲ್ಲಿ ಇಲ್ಲಿ. ಕಾಫ಼ಿಗೆ ಸಿಗರೇಟಿಗೆ ಕಾಸಾದರೆ ಸಾಕು ಅವನಿಗೆ. ಬರಲಿರುವ ಸಮತಾ ವ್ಯವಸ್ಥೇಲಿ ತನ್ನ ಪಾಡು ಸುಧಾರಿಸುತ್ತದೆ ಎಂದು ಅವನು ಕನಸು ಕಟ್ಟುತ್ತಾನೆ. ಕಾಲಹರಣ ಮಾಡೋದು ಅವನಿಗೆ ಒಗ್ಗಿಹೋಗಿದೆ. ಎಚ್.ಎಂ.ಟೀಲಿ ಕೆಲಸ ಕೊಡಿಸಲೇನಯ್ಯ ಎಂದು ಕೇಳಿದರೆ ಬೇಡವೆನ್ನುತ್ತಾನೆ. ಹಾಗೆ ಕೇಳಿದ್ದರಿಂದ ಅವಮಾನವಾಗಿ ಸಿಟ್ಟಾಗುತ್ತಾನೆ; ಎಲ್ಲರಂತೆ ಉದ್ಯೋಗಿಯಾಗಿ ಬದುಕೋದು ಕಳಪೇಂತ ಅವನ ಅಭಿಪ್ರಾಯ. ಅಂಥ ಪ್ರತಿಭಾಶಾಲಿಯೂ ಅಲ್ಲ. ಆದರೆ ಕೃಷ್ಣಪ್ಪನ ವ್ಯಕ್ತಿತ್ವದ ಪ್ರಭೆಗೆ ಮರುಳಾದ ಯುವಕರಲ್ಲಿ ಇವನೂ ಒಬ್ಬ. ತನ್ನ ರಾಜಕೀಯ ವಿಚಾರ, ಜೀವನ ಕ್ರಮ ಇಂಥ ಮೋಡಿಯಲ್ಲಿ ಹಲವು ಯುವಕರನ್ನು ಸಿಕ್ಕಿಸಿದೆ ಎಂದು ಕೃಷ್ಣಪ್ಪನಿಗೆ ಪಶ್ಚಾತ್ತಾಪವಾಗುತ್ತದೆ. ಇಂಥವರಿಗೆ ವಯಸ್ಸಾಗುವುದನ್ನು ನೆನೆದರೆ ಹೆದರಿಕೆಯಾಗುತ್ತದೆ. +“ನಾಗೇಶ ನಿಂಗೊಂದು ಕಥೆ ಹೇಳ್ತೇನೆ” ಎಂದು ಜೋಯಿಸರ ವಿಷಯ ಥಟ್ಟನೆ ನೆನಪಿಗೆ ಬಂದು ಕೃಷ್ಣಪ್ಪ ಶುರು ಮಾಡುತ್ತಾನೆ. ನಾಗೇಶ ನೋಟ್‌ಬುಕ್ ಇಟ್ಟುಕೊಂಡು ಇವನ್ನೆಲ್ಲ ಗುರುತು ಮಾಡಿಕೊಳ್ಳುತ್ತ ಹೋಗುತ್ತಾನೆ. +ಹುಲಿಯೂರಿನ ರೈತರು ಪೊರಕೇನ್ನ ಸಗಣಿಯಲ್ಲದ್ದಿ ಭಟ್ಟನನ್ನು ಅಟ್ಟಲು ಶುರು ಮಾಡಿದಾಗ ಪ್ರತಿದಿನ ಅವನು ಜನಿವಾರ ಬದಲಾಯಿಸಬೇಕಾಗಿ ಬಂತು. ಬ್ರಾಹ್ಮಣನ ಮೇಲೆ ಇಂಥ ಹಲ್ಲೆ ಮಾಡುವುದನ್ನು ತಾಳಲಾರದೆ ದುಃಖಿತರಾದ ಜೋಯಿಸರಿಗೆ, “ನೀವು ಮಾಡೊ ಜನಿವಾರ ಈಗ ಹೆಚ್ಚು ಮಾರಾಟವಾಗ್ತಾ ಇದೆಯಲ್ಲ -ನೀವು ಯಾಕೆ ದುಃಖಪಡಬೇಕು” ಎಂದು ಗೇಲಿ ಮಾಡಬೇಕೆನ್ನಿಸಿದ್ದನ್ನು ಕೃಷ್ಣಪ್ಪ ತಡೆದುಕೊಂಡ. ಕೃಷ್ಣಪ್ಪನ ತಾಯಿಯೂ ಇದರಿಂದ ಭಯಪಟ್ಟಿದ್ದರಿಂದ ಕೃಷ್ಣಪ್ಪ ನಿಧಾನವಾಗಿ ಕೇಳಿದ. +“ನಾನು ನಿಮ್ಮ ಮಗ ಇದ್ದ ಹಾಗೆ ಅಂತ ನೀವು ತಿಳಿದಿದ್ದೀರಿ ಅಲ್ಲವ ಜೋಯಿಸ್ರೆ -” +“ಅದೆಂಥ ಪ್ರಶ್ನೆ ನೀನು ಕೇಳೋದು? ಇಲ್ದಿದ್ರೆ ನಾನು ನಿನಗೆ ಬುದ್ಧಿವಾದ ಹೇಳಕ್ಕೆ ಬರ್ತಿದ್ನ?” +“ಸಾಯ್ತಾ ಇರೋ ಮಗೂಗೇಂತ ಇಟ್ಟ ಹಾಲನ್ನ ಎಸೆಯೋದು ಹೆಚ್ಚು ತಪ್ಪೋ, ಅಥವಾ ಅಂಥ ಬ್ರಾಹ್ಮಣನ್ನ ಪೊರಕೇಲಿ ಹೊಡೆಯೋದೊ?” +“ಎರಡೂ ತಪ್ಪು. ಭಟ್ಟ ಅವನು ಮಾಡಿದ ಪಾಪಕ್ಕೆ ನರಕಕ್ಕೆ ಹೋಗ್ತಾನೆ. ಆದರೆ ಅದು ಬ್ರಾಹ್ಮಣ ಜನ್ಮವಲ್ವ? ಅವನನ್ನ ಪೊರಕೇಲಿ ಹೊಡೆಸಿ ನೀನು ಯಾಕೆ ಪಾಪ ಕಟ್ಟಿಕೋಬೇಕು?” +ಕೃಷ್ಣಪ್ಪನ ತಾಯಿಯೂ ಜೋಯಿಸರ ಮಾತು ಕೇಳಿಸಿಕೊಳ್ಳುತ್ತ ಹೊಗೆಸೊಪ್ಪಿಗೆ ಸುಣ್ಣ ಹಚ್ಚಿ ಬಾಯಿಗೆ ಹಾಕಿಕೊಂಡು ಆತಂಕದಿಂದ ತನ್ನ ಒಪ್ಪಿಗೆ ಸೂಚಿಸಿದಳು. ಇವರ ಹತ್ತಿರ ಮಾತು ಅಸಾಧ್ಯವೆನ್ನಿಸಿತ್ತು. ಉಪನಿಷತ್ತುಗಳನ್ನೆಲ್ಲ ಓದಿದ್ದ ಈ ಕಡು ಬಡವ ಬ್ರಾಹ್ಮಣನೂ ಎಷ್ಟು ಮೂರ್ಖನಾಗಬಲ್ಲನೆಂದು ಕೃಷ್ಣಪ್ಪನಿಗೆ ದುಃಖವಾಗಿತ್ತು. +“ನೀವೂನೂ ಜಾತಿ ಅನ್ನೊ ಕಾರಣಕ್ಕೆ ಭಟ್ಟನ ಪರವಾಗಿ ಮಾತಾಡೋದು ಕಂಡ್ರೆ ದುಃಖವಾಗತ್ತೆ ಜೋಯಿಸ್ರೆ -” +ಕೃಷ್ಣಪ್ಪ ನಿಜವಾಗಿ ವ್ಯಥೆಯಿಂದ ಮಾತಾಡಿದ್ದು ಕೇಳಿ ಜೋಯಿಸರು ತಬ್ಬಿಬ್ಬಾಗಿದ್ದರು. +“ಈ ಮಾಯಾಪ್ರಪಂಚದಲ್ಲಿ ಸಿಕ್ಕಿರೋ ತನಕ ಜಾತಿ ಗೀತಿ ಎಲ್ಲ ನಿಜವೇ ಅಲ್ವೇನಪ್ಪ?” +“ಹಾಗಾದ್ರೆ ನಾನೇನು ಪಾಪ ಮಾಡಿ ಶೂದ್ರನಾಗಿ ಹುಟ್ಟಿದೇಂತ ನಿಮ್ಮ ಭಾವನೆಯೋ? ನನ್ನ ಕಂಡರೆ ನಿಮಗೂ ದೊಡ್ಡವ್ವನಿಗೂ ಯಾಕೆ ಹಾಗಾರೆ ಮಗಾಂತ ಅನ್ನಿಸತ್ತೆ ಹೇಳಿ -” +ರುಕ್ಮಿಣಿಯಮ್ಮನನ್ನ ಕೃಷ್ಣಪ್ಪ ದೊಡ್ಡವ್ವ ಅನ್ನೋದು. +“ಭಟ್ಟನಂಥ ಪಾಷಂಡಿಗಳಿಂದ ನಮ್ಮ ಪೂರ್ವಜರು ಮಾಡಿದ ಪುಣ್ಯವೆಲ್ಲ ನೀರಲ್ಲಿ ಹೋಮಮಾಡಿದಂತಾಯ್ತು. ನಿನ್ನ ಅಂದೇನು ಪ್ರಯೋಜನ ಹೇಳು? ಸ್ವತಃ ಆದಿಶಂಕರರೇ ಕಾಲಟಿಯಿಂದ ಬದರಿಗೆ ಹೋಗೋ ಮಾರ್ಗದಲ್ಲಿ ದಿವ್ಯವಾದ್ದೊಂದು ಪ್ರಭೆಯನ್ನು ಕಂಡು ಈ ನರಸಿಂಹದೇವರನ್ನ ಸ್ಥಾಪಿಸಿದರು ಅಂತ ಐತಿಹ್ಯ ಇದೆ. ಹೇಗಿದ್ದ ಮಠ ಈಗ ಹೇಗಾಗಿಬಿಡ್ತು? ಮೂಕ ಪಶು ಪಕ್ಷಿಗಳನ್ನೂ ಹಿಂಸೆ ಮಾಡಬಾರ್ದು ಅಂತ ವೈದಿಕ ಧರ್ಮ ಹೇಳುತ್ತೆ….” +ಜೋಯಿಸರ ಕಣ್ಣುಗಳು ಒದ್ದೆಯಾದುವು. ಅವರು ರುದ್ರಾಕ್ಷಿ ಧರಿಸಿದ ಎಲುಬುಗಳು ಕಾಣುವ ಎದೆಯನ್ನು ನೋಡುತ್ತ ಕೃಷ್ಣಪ್ಪನ ಮನಸ್ಸು ಕರಗಿತು. +“ದೂರದಿಂದ ನೋಡಿದಾಗ ಹಿಂಸೆಯಷ್ಟೇ ಪ್ರತಿಹಿಂಸೆಯೂ ಕೊಳಕಾಗಿ ಕಾಣತ್ತೆ ಜೋಯಿಸರೆ. ಆದರೆ ಪೊರಕೇಲಿ ಹೊಡೆಯೋದಕ್ಕೂ ತಯಾರಾದಾಗ ಅವರಲ್ಲೆಷ್ಟು ಸ್ವಾಭಿಮಾನ ಬೆಳೆದಿರತ್ತೆ ನಿಮಗೆ ಕಾಣಿಸ್ತ ಇಲ್ಲ. ಅವರೆಲ್ಲ ಹುಳಗಳಂತೆ ಸಹಿಸ್ತ ಇದ್ದಿದ್ರಿಂದೇನೇ ಮಠಾನೂ ಕೊಳೀತ ಬಂತು. ನಿಮ್ಮ ಭಟ್ಟಾನೂ ಸಣ್ಣ ಹುಳಾನ ತಿನ್ನೋ ದೊಡ್ಡ ಹುಳ ಆಗೋದು ಸಾಧ್ಯ ಆಯ್ತು” +ಜೋಯಿಸರು ಮಂಕಾಗಿ ಎದ್ದು ನಿಂತರು. ಕೃಷ್ಣಪ್ಪ ಹಾಸ್ಯದ ಧಾಟಿಯಲ್ಲಿ ಅವರನ್ನು ಒಲಿಸಲು ಪ್ರಯತ್ನಿಸಿದ. +“ಬ್ರಾಹ್ಮಣರು ಅಂದ್ರೆ ನಮ್ಮ ಜನಕ್ಕೆ ಇನ್ನೂ ಗೌರವ ಉಳಿದಿದೆ ಜೋಯಿಸ್ರೆ. ಪೊರಕೇಲಿ ಹೊಡೀತಾರೆ ನಿಜ. ಆದ್ರೆ ಒಳಗೆ ಮನಸ್ಸಲ್ಲೆ ಕಲ್ಕುಟಕನಿಗೆ ತಪ್ಪು ಕಾಣಿಕೇನೂ ಕಟ್ತಾರೆ…..” +“ನೀನು ಧರ್ಮಿಷ್ಠಾಂತ ನನಗೆ ಗೊತ್ತಪ್ಪ. ಆ ಭಟ್ಟ ಎಲ್ಲಿ -ನೀನೆಲ್ಲಿ? ಆದರೆ………” +ಜೋಯಿಸರಿಗೆ ಮಾತು ಹೊಳೆಯದೆ ಎದ್ದು ಹೋಗಿದ್ದರು. ಕೃಷ್ಣಪ್ಪ ಈ ಘಟನೆಯನ್ನು ಮರೆಯಲಾರ. ತನ್ನ ಆರೋಗ್ಯಕ್ಕಾಗಿ ಊರಿನ ಜನ ಕಲ್ಕುಟಕನಿಗೆ ಕೋಲ ಕಟ್ಟಿಸುವ ಹರಕೆ ಹೊತ್ತ ಸುದ್ದಿ ಕೇಳಿ ಪ್ರಾಯಶಃ ತನಗೆ ಇವತ್ತು ಎಲ್ಲ ನೆನಪಾಗುತ್ತಿರಬಹುದು. +ನಾಗೇಶ ಹೇಳಿದ: +“ಇನ್ನಷ್ಟು ಒದೀಬೇಕು ಗೌಡರೆ ಬ್ರಾಹ್ಮಣರನ್ನ. ಆಗಲೇ ಈ ಜಾತಿವ್ಯವಸ್ಥೇನ್ನ ನಾಶ ಮಾಡೋದು ಸಾಧ್ಯ.” +ಕೃಷ್ಣಪ್ಪ ನಗತೊಡಗಿದ. ನಾಗೇಶ ತಬ್ಬಿಬ್ಬಾಗಿ ಯಾಕೆಂದು ಕೇಳಿದ: +“ಹಂದಿ ಕುರಿ ತಿನ್ನೋ ನಮ್ಮ ಗೌಡರು ನಿನ್ನಂಥ ಒಬ್ಬ ಪುಳಚಾರು ತಿನ್ನೊ ಬಡಪಾಯಿಯನ್ನು ಒದೀಬೇಕು ಅಂತೀಯಲ್ಲ -ಅದನ್ನು ಕಲ್ಪಿಸಿಕೊಂಡು ನಗು ಬಂತು. ನಮ್ಮ ಜಾತಿ ಜಮೀಂದಾರರೇನು ಯೋಗ್ಯರು ಅಂತ ನೀನು ತಿಳ್ದಿರೋದ?” +* +* +* +“ಏ ನಾಗೇಶ -ಈ ಸಾರಿಯ ಇಲಸ್ಟ್ರೇಟೆಡ್ ವೀಕ್ಲಿ ಆಫ಼್ ಇಂಡಿಯಾ ಓದಿದ್ದಿಯ?” +ಕೃಷ್ಣಪ್ಪ ಸಂಭ್ರಮದಿಂದ ಕೇಳುತ್ತಾನೆ. ಸಾಯಂಕಾಲದ ಹೊತ್ತಲ್ಲಿ ಕೃಷ್ಣಪ್ಪನನ್ನು ನೋಡಲೆಂದು ಬಂದ ಅವನ ಪಕ್ಷದ ಇಪ್ಪತ್ತು ಎಂ.ಎಲ್.ಎಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತ ವರಾಂಡದಲ್ಲಿ ಕೂತ ನಾಗೇಶ “ಯಾಕೆ ಗೌಡರೆ” ಎಂದು ಕೋಣೆಯೊಳಗೆ ಬರುತ್ತಾನೆ. +“ನೋಡು” ಎಂದು ಮಡಿಸಿದ ವೀಕ್ಲಿಯನ್ನು ಕೊಡುತ್ತಾನೆ. ಕೃಷ್ಣಪ್ಪನ ಮುಖ ಮೋಜಿನಿಂದ ಹಿಗ್ಗಿದ್ದನ್ನು ನಾಗೇಶ ಗಮನಿಸಿ ಓದಲು ಶುರುಮಾಡುತ್ತಾನೆ. +ಕೌಪೀನಧಾರಿಯಾದ ಬೈರಾಗಿಯ ದೊಡ್ಡದೊಂದು ಚಿತ್ರದ ಕೆಳಗೆ ಸರ್ಪಸಿದ್ಧೇಶ್ವರಾನಂದನೆಂದು ಬರೆದಿತ್ತು. ಬೈರಾಗಿಗೆ ಉದ್ದವಾದ ಬಿಳಿ ಗಡ್ಡ ಜಟೆಗಳು ಬೆಳೆದಿದ್ದವು. ಅವನು ಈ ಚಿತ್ರದಲ್ಲಿ ನಗುತ್ತಿದ್ದ. ಇನ್ನೊಂದು ಚಿತ್ರವಿತ್ತು -ಅದರಲ್ಲಿ ಬೈರಾಗಿ ಮರದ ಕೊಂಬೆಯೊಂದರ ಮೇಲೆ ಕೂತು ಮೈ ಕೆರೆದುಕೊಳ್ಳುತ್ತಿದ್ದ ಕಪಿಯಂತಿದ್ದ. ಹಲ್ಲು ಬಿದ್ದ ಬಾಯನ್ನು ಇಷ್ಟಗಲ ತೆಗೆದು ಪರಮ ಸುಖಿಯಂತೆ ಕಾಣುತ್ತಿದ್ದ. +“ನಾನು ಹೇಳ್ತ ಇದ್ದನಲ್ಲ -ನಮ್ಮ ಜಿಲ್ಲೆಯ ಬೈರಾಗಿ, ಮೌನಿ ಇವನೇ. ಗಟ್ಟಿಯಾಗಿ ಓದು” +ಬರೆದವನು ಉಪ್ಪು ಖಾರ ಬೆರೆಸಿರಬಹುದೆಂದು ಸಂಶಯವಾದರೂ ಲೇಖನ ಕೃಷ್ಣಪ್ಪನನ್ನು ಆಕರ್ಷಿಸಿತು. ಗೀತಾ ಪಠನಕ್ಕಾಗಿ ಮಾತ್ರ ತನ್ನ ಮೌನವನ್ನು ಮುರಿಯುತ್ತಿದ್ದ ಬೈರಾಗಿ ಕ್ರಮೇಣ ಪ್ರಸಿದ್ಧನಾದ ಕಥೆ ಲೇಖನದಲ್ಲಿತ್ತು. ಭಕ್ತರ ಮನಸ್ಸಿನಲ್ಲಿ ಕಾಣಿಸಿಕೊಂಡು ಮಾತಾಡುವನೆಂಬ ಪ್ರತೀತಿ ಹುಟ್ಟಿ ಜನ ಜಮಾಯಿಸುವುದು ಹೆಚ್ಚಾದಂತೆ ಒಂದು ದಿನ ಬೈರಾಗಿ ಗುಹೆ ಸೇರಿಬಿಟ್ಟ. ಹೊರಕ್ಕೆ ಬರಲೇ ಇಲ್ಲ. ಎರಡು ಮೂರು ದಿನಗಳಾದ ಮೇಲೆ ಬೆಟ್ಟದಲ್ಲಿ ನೆರೆದಿದ್ದ ಜನಸಮೂಹದಲ್ಲಿ ಒಬ್ಬಾತ ಈ ಮಹಿಮರೇನು ಮಾಡುತ್ತಿದ್ದಾರೆಂದು ನೋಡಲು ಗುಹೆಯಲ್ಲಿ ಇಣುಕಿದ. ಸರ್ಪದೋಪಾದಿಯಲ್ಲಿ ಬುಸ್ಸೆನ್ನುವ ಶಬ್ದ ಗುಹೆಯಿಂದ ಕೇಳಿಸಿತು. ಮಹಾತ್ಮರು ಈಶ್ವರನ ಶಿರಸ್ಸಿನ ಮೇಲೆ ಸರ್ಪದ ಭಾವ ತಾಳಿ ತಪಸ್ಸಿನಲ್ಲಿದ್ದಾರೆಂದು ಅವನು ನೆರೆದಿದ್ದ ಜನರಿಗೆ ಸಾರಿದ. ಪ್ರತಿ ದಿನ ಅವರು ನೈವೇದ್ಯವನ್ನು ಗುಹೆಯ ಬಾಯಲ್ಲಿ ತಳ್ಳಿ ಕಾಯುವರು. ಒಂದಷ್ಟನ್ನು ತಿಂದು ಉಳಿದದ್ದನ್ನು ಬೈರಾಗಿ ಹೊರಗೆಸೆಯುವನು. ಆ ಪ್ರಸಾದವನ್ನು ಭಕ್ತರೆಲ್ಲ ಒಂದೊಂದು ಅಗಳಾಗಿ ಹಂಚಿಕೊಳ್ಳುವರು. ಕೆಲವು ದಿನ ನೈವೇದ್ಯವನ್ನು ಬೈರಾಗಿ ಸ್ವೀಕರಿಸುತ್ತಿಲ್ಲವೆಂಬುದನ್ನು ಕಂಡ ಜನ ಗುಹೆಯ ಬಾಯಿಗೆ ಹೋಗಿ ಇಣುಕಿದರು. ಕತ್ತಲಲ್ಲಿ ಏನೂ ಕಾಣಲಿಲ್ಲ. ಆದರೆ ಬುಸ್ಸೆಂಬ ಶಬ್ದ ಜೋರಾಗಿ ಬಂತು -ಸಿಟ್ಟಿನಲ್ಲಿ ಇಣುಕಿದವರನ್ನು ಅಟ್ಟುವ ಥರ. ಮಹಾತ್ಮರು ಈಗ ಸರ್ಪವೇ ಆಗುದ್ದಾರೆಂದು ಭಕ್ತಾದಿಗಳೆಲ್ಲ ತಿಳಿದರು. ಆಮೇಲಿಂದ ಹಾಲನ್ನಿಡಲು ಶುರು ಮಾಡಿದರು. +ಹೀಗೆ ಮೂರು ಪಕ್ಷಗಳು ಕಳೆದ ಮೇಲೆ ಗುಹೆಯಿಂದ ಉಜ್ವಲವಾದ ಪ್ರಕಾಶದ ಮಹಿಮರು ಹೊರಗೆ ಬಂದರು. ಈಗವರು ಗೀತೆಯನ್ನು ಓದುವುದಿಲ್ಲ. ಮಾತೂ ಆಡುವುದಿಲ್ಲ. ಒಮ್ಮೊಮ್ಮೆ ಗಹಗಹಿಸಿ ನಗುವುದುಂಟು. ಅಥವಾ ಮರಹತ್ತಿ ಕೂತಿರುತ್ತಾರೆ. +ಸಹಸ್ರ ಸಂಖ್ಯೆಯಲ್ಲಿ ಪ್ರತಿನಿತ್ಯ ಈ ಸರ್ಪಸಿದ್ಧೇಶ್ವರಾನಂದರ ದರ್ಶನ ಪಡೆಯಲು ದೇಶಾದ್ಯಂತ ಜನ ನೆರೆಯುತ್ತಿದ್ದಾರೆ. ಇಲ್ಲಿ ಅನೇಕ ಪವಾಡಗಳು ನಡೆಯುತ್ತಾವೆಂಬ ಕಥೆಗಳಿವೆ. ಕೆಲವು ಸಾರಿ ಸರ್ಪಸಿದ್ಧೇಶ್ವರಾನಂದರು ಮತ್ತೆ ಗುಹೆ ಸೇರಿಬಿಡುತ್ತಾರೆ -ತಮ್ಮ ಸರ್ಪಸ್ವರೂಪಕ್ಕೆ ಮರಳಲೆಂದು. ಸರ್ಪರೂಪದಲ್ಲಿರುವ ಅವರನ್ನು ನೋಡಕೂಡದೆಂದೂ ನೋಡಿದರೆ ಸಾವು ಖಂಡಿತವೆಂದೂ ಜನರ ತಿಳುವಳಿಕೆ. ಕೆಲವು ದಿನ ಕಳೆದ ಮೇಲೆ ಮಹಿಮರೇ ಹೊರಬರುತ್ತಾರೆ -ನಗುತ್ತಾರೆ. ಮರ ಹತ್ತಿ ಕೂತಿರುತ್ತಾರೆ. +“ಏನನ್ನಿಸತ್ತೊ ನಿಂಗೆ?” +ಕೃಷ್ಣಪ್ಪ ಕುತೂಹಲದಿಂದ ಕೇಳುತ್ತಾನೆ. +“ಮೂಢನಂಬಿಕೆ ಅಷ್ಟೆ” +“ಈ ಬೈರಾಗಿ ಹುಚ್ಚನೂ ಇರಬಹುದು, ದೊಡ್ಡ ದ್ರಷ್ಟಾರನೂ ಇರಬಹುದು ಅಂತ ಅನುಮಾನ ನಿನಗಾಗಲ್ವ, ನಾಗೇಶ?” +“ಇಂಥದನ್ನು ನಂಬಿಕೊಂಡೇ ನಮ್ಮ ದೇಶ ಹೀಗಾಗಿದ್ದು” +“ಸರಿ” +“ನಮಗೆ ಬೇಕಾಗಿರೋದು ಅನ್ನ -ಅಧ್ಯಾತ್ಮ ಅಲ್ಲ” +ಕೃಷ್ಣಪ್ಪ ಸುಮ್ಮನಾದ್ದು ಕಂಡು ನಾಗೇಶ ಅವನನ್ನು ಹಾಸ್ಯ ಮಾಡುವ ಧೈರ್ಯ ತೋರಿಸುವನು! +“ಯಾಕೋ ಇತ್ತೀಚೆಗೆ ಗೌಡರು ಹಾಸಿಗೆ ಹಿಡಿದ ಮೇಲೆ ಈ ಮುಟ್ಠಾಳ ಢಾಂಬಿಕರನ್ನು ನಂಬೋ ಹಾಗೆ ಕಾಣುತ್ತೆ” +“ಅಣ್ಣಾಜೀನೂ ಹಾಗೆ ಹೇಳ್ತ ಇದ್ದ ಕಣಯ್ಯ” +ಕೃಷ್ಣಪ್ಪ ಆಲೋಚನೆಯಲ್ಲಿ ಮಗ್ನನಾಗಿದ್ದು, ಮೆಲ್ಲಗೆ ಹೇಳುವನು: +“ನೋಡು ನಾಗೇಶ, ದೇವರು ಇದ್ದೇ ಇದಾನೆ ಅಂತ ಒಬ್ಬನಿಗೆ ಗೊತ್ತು ಅನ್ನು. ನಂಬಿಕೆಯಲ್ಲ ನಾನು ಹೇಳೋದು -ನಿಶ್ಚಯವಾಗಿ ಗೊತ್ತು ಅನ್ನು. ಹಾಗೆ ಗೊತ್ತಿರೋದು ಸಾಧ್ಯವಿದ್ದರೆ ಅಂಥವನು ರಿಲಿಜಸ್ ಆಗೋದು ದೊಡ್ಡ ವಿಷಯ ಅಲ್ಲವೋ. ಬ್ಯಾಂಕಲ್ಲಿ ದುಡ್ಡಿಟ್ಟ ಹಾಗೆ ಅದು -ಬಡ್ಡಿ ಗ್ಯಾರಂಟಿ. ಆದರೆ ದೇವರು ಇದಾನೊ ಇಲ್ವೊ ಅನ್ನುವ ಆತಂಕದಲ್ಲೂ ದೇವರನ್ನ ನಂಬೋ ನಿರ್ಧಾರ ಮಾಡೋದಿದೆ ನೋಡು -ಅದು ನಿಜವಾದ ಶೌರ್ಯ. ಹಾಗೇನೇ ರಾಜಕೀಯದಲ್ಲಿ ನಮ್ಮ ಹೋರಾಟದಿಂದ ಪ್ರಗತಿಯಾಗತ್ತೆ, ಈ ಪ್ರಗತೀಂದ ಎಲ್ಲ ಒಳ್ಳೆದೇನೆ ಸಲೀಸಾಗಿ ಆಗ್ತ ಆಗ್ತ ಹೋಗತ್ತೆ ಅಂತ ತಿಳಿದು ಬಡವರ ಪರ ನಿಂತು ಕ್ರಾಂತಿಗೆ ಕೆಲಸ ಮಾಡೋದು ಒಂದು ವಿಧ. ಬಹಳ ಜನರ ಮಾರ್ಗ ಅದು. ಆದರೆ ನಾನು ವಾರಂಗಲ್‌ನಿಂದ ಹಿಂದೆ ಬಂದ ಮೇಲೆ ರಾಜಕೀಯಕ್ಕೆ ಧುಮುಕೋ ಮುಂಚೆ ನಾವು ತರೋ ಪ್ರಗತಿಯೆಲ್ಲ ಒಳ್ಳೇದನ್ನೆ ಮಾಡ್ತಾ ಹೋಗತ್ತೆ ಅಂತ ನಿಶ್ಚಯವಾಗಿ ತಿಳಿಯೋದು ನನಗೆ ಸಾಧ್ಯವಾಗ್ತಿರ್ಲಿಲ್ಲ. ಈಗಲೂ ಸಾಧ್ಯವಾಗ್ತಿಲ್ಲ. ಆದರೆ ಸುತ್ತಮುತ್ತಲಿನ ಕ್ಷುದ್ರತೆ, ದುಃಖ ಕಂಡಾಗ ಇದರ ವಿರುದ್ಧ ಹೋರಾಡೋದು ಅಗತ್ಯ ಅನ್ನೋದು ಮಾತ್ರ ನನಗೆ ಸ್ವಯಂಸಿದ್ಧ. ದೈನಿಕ ಜೀವನವೇ ಹೊಳೀಬೇಕು ಅಂತ ನನಗಿದ್ದ ಆಸೆ ಮಾತ್ರ ಸಫಲವಾಗಿಲ್ಲ. ನನ್ನ ಪ್ರಯತ್ನದಿಂದ ಅವತ್ತು ಒದೆಸಿಕೋತಿದ್ದ ಬೀರೇಗೌಡ ಇವತ್ತು ಇನ್ನೊಬ್ಬನನ್ನ ಒದೀತಿದಾನೆ. ಆದರೆ ಈ ಮಾತನ್ನು ಹೇಳೋವಾಗ ಸಮಾಜ ಚಲಿಸೋದರಲ್ಲಿ ಏನೂ ಅರ್ಥವಿಲ್ಲ ಅನ್ನೋ ಧ್ವನಿ ಹೊರಟರೆ ಅದೂ ಕೂಡ ಬಹಳ ಸುಲಭವಾದ ಸಲೀಸಾದ ಮಾತಾಗಿಬಿಡತ್ತೆ. ಏನನ್ನೂ ಮಾಡಲಾರದ ಮುಟ್ಠಾಳನೂ, ಏನೂ ಮಾಡಕೂಡದು ಅಂತ ವ್ಯವಸ್ಥೇನ್ನ ಕಾಪಾಡೋ ಕ್ರೂರಿಯೂ ಇದೇ ಮಾತಾಡ್ತಾನೆ ಅಲ್ವ? ಅಂದ್ರೆ ನಾನು ಹೇಳಬೇಕೂಂತಿರೋದು ನಾಗೇಶ……….” +ನಾಗೇಶ ಅರ್ಥವಾಗದೆ ಕೃಷ್ಣಪ್ಪನನ್ನು ನೋಡುತ್ತಾನೆ. ಬರಕೊಳ್ಳಲು ಪೆನ್ಸಿಲ್ ಎತ್ತಿಕೊಂಡದ್ದು ನೋಡಿ ಕೃಷ್ಣಪ್ಪ ಕಣ್ಣಿಂದ ಅದನ್ನು ತಡೆದು ಹೇಳುತ್ತಾನೆ: +“ಅಪಾರ್ಥಕ್ಕೆ ಎಡೆಗೊಡದೆ ನಾನು ಹೇಳಬೇಕೂಂತ ಇರೋದನ್ನ ಹೇಳಕ್ಕೆ ಆಗಲ್ವೊ ನಾಗೇಶ. ಹುಟ್ಟಿದ ಮೇಲೆ ಕರ್ಮದಲ್ಲಿ ತೊಡಗಲೇಬೇಕು, ಹೋರಾಡಲೇ ಬೇಕು. ಜೀವನಾನ ಕ್ಷುದ್ರಗೊಳಿಸೋ ತಮಸ್ಸನ್ನ ನೂಕತಾನೇ ಇರಬೇಕು. ಅಂದರೆ ನಮ್ಮ ಕ್ರಿಯೆಗಳ ಪರಿಣಾಮ ಹೀಗೂ ಆಗಬಹುದು ಹಾಗೂ ಆಗಬಹುದು ಅನ್ನೋ ಆತಂಕಾನ ಕಳಕೊಳ್ಳದಂತೆ…..” +ಕೃಷ್ಣಪ್ಪ ಮಾತು ಮುಗಿಸದೆ ಮುಖ ತಿರುಗಿಸಿ, +“ಹೊರಕೂತವರನ್ನ ಬರಹೇಳು” ಅನ್ನುತ್ತಾನೆ. +ಸದ್ಯದಲ್ಲೇ ಆಗಬಹುದಾದ ಪಕ್ಷಾಂತರದ ಗಲಿಬಿಲಿಯಲ್ಲಿ ತಾವು ಯಾವ ಪಾತ್ರ ವಹಿಸಬೇಕೆಂದು ಚರ್ಚಿಸಲು ಅವನ ಪಕ್ಷದ ಎಂ.ಎಲ್.ಎಗಳು ಬಂದಿದ್ದರು. ಅವರಲ್ಲಿ ಕೆಲವರು ಆಳುವ ಪಕ್ಷದಲ್ಲಿರುವ ಒಡಕು ತಮಗೆ ಅಸಂಬದ್ಧವೆಂದೂ ತಮ್ಮ ಕ್ರಾಂತಿಯ ಹಾದಿಯಲ್ಲಿ ಯಾರನ್ನೂ ಜೊತೆಗೆ ಕಟ್ಟಿಕೊಳ್ಳದೆ ಸಾಗಬೇಕೆಂದೂ ವಾದಿಸುವ ಉಗ್ರಧೋರಣೆಯವರು. ಹಲವರು ಆಳುವ ಪಕ್ಷದ ಒಡಕನ್ನು ಉಪಯೋಗಿಸಿಕೊಂಡು ಬೇರೊಂದು ಮಂತ್ರಿಮಂಡಲದ ರಚನೆಗೆ ತಾವು ಬೆಂಬಲ ಕೊಡಬೇಕೆಂದೂ ಹೀಗೆ ಬೆಂಬಲಿಸುವಾಗ ಒಂದು ಟೈಮ್ ಬೌಂಡ್ ಮಿನಿಮಮ್ ಪ್ರೋಗ್ರಾಂ ಗೆ ಬದ್ಧರಾಗಬೇಕೆಂದೂ ವಾದಿಸುವವರು. ಇವರಲ್ಲೂ ಈಗಿರುವ ಮುಖ್ಯಮಂತ್ರಿಗೇ ಬೆಂಬಲ ಕೊಡಬೇಕೆಂದು ಕೆಲವರ ವಾದ. ಮುಖ್ಯಮಂತ್ರಿಯ ಪ್ರತಿಸ್ಪರ್ಧಿಗೇ ಬೆಂಬಲ ಕೊಡಬೇಕೆಂದು ಉಳಿದವರ ವಾದ. ಮುಖ್ಯಮಂತ್ರಿಯ ಜೊತೆ ಈಗಾಗಲೇ ಮಾತಾಡಿರಬೇಕೆಂದು ’ಆ’ ಗುಂಪಿನ ಮೇಲೆ ’ಈ’ ಗುಂಪಿಗೆ ಸಂಶವಾದರೆ, ಭಯಂಕರ ದುಡ್ಡು ಚೆಲ್ಲುತ್ತಿರುವ ಪ್ರತಿಸ್ಪರ್ಧಿಯ ಜೊತೆ ಒಪ್ಪಂದವಾಗಿರಬೇಕೆಂದು ’ಈ’ ಗುಂಪಿನ ಮೇಲೆ ’ಆ’ ಗುಂಪಿನ ಸಂಶಯ. ವೀರಣ್ಣ ಕೃಷ್ಣಪ್ಪನ ಮೇಲೆ ತನಗಿರುವ ಪ್ರಭಾವ ಉಪಯೋಗಿಸಿ ’ಆ’ ಗುಂಪಿಗೆ ಬೆಂಬಲ ಕೊಡುವಂತೆ ಮಾಡಲು ಪ್ರಯತ್ನಿಸುತ್ತಿದ್ದ. ಈ ರಾಜಕೀಯವೇ ಅಸಂಬದ್ಧ ಎನ್ನುವ ಉಗ್ರರು ಹೆಚ್ಚಾಗಿ ಮಾತಿನ ಚಟದವರು. ಅಪಕ್ವ ಯುವಕರು, ಆದರೆ ಆದರ್ಶವಾದಿಗಳು; ಉಳಿದವರು ಜನಹಿತಕ್ಕಾಗಿ ನಿಜವಾಗಿ ದುಡಿದವರು, ದುಡಿದು ಸುಸ್ತಾದವರು; ಖದೀಮರು. ಕ್ರಾಂತಿಯ ಆಸ್ಫೋಟದಲ್ಲಿ ಮಾತ್ರ ಬದಲಾವಣೆ ಸಾಧ್ಯವೆಂದು ಒಬ್ಬರ ವಾದವಾದರೆ, ಆಡಳಿತದಲ್ಲಿ ಭಾಗವಹಿಸುವುದರ ಮೂಲಕ ಜನರನ್ನು ಕ್ರಾಂತಿಯ ದಿಕ್ಕಲ್ಲಿ ಹಚ್ಚಬಹುದೆಂದು ಇನ್ನೊಬ್ಬರ ವಾದ. +ಇವತ್ತು ಕೃಷ್ಣಪ್ಪನಲ್ಲಿ ಈ ವಾದ ವಿವಾದದಲ್ಲಿ ಭಾಗವಹಿಸುವ ಉಮೇದಿಲ್ಲದಿದ್ದರೂ ಅವರ ಜೊತೆ ಚರ್ಚಿಸಲು ಸನ್ನದ್ಧನಾದ. +* +* +* +ಸಹೋದ್ಯೋಗಿಗಳಲ್ಲಿ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ತನ್ನ ಮಾತು ಅವರು ಮೀರುವುದಿಲ್ಲೆಂದು ಕೃಷ್ಣಪ್ಪನಿಗೆ ಸಮಾಧಾನವಾಗಿತ್ತು. ಬದುಕು ಮತ್ತು ಸಾವಿನ ಹೊಸ್ತಿಲಲ್ಲಿದ್ದೂ ತನ್ನ ವರ್ಚಸ್ಸು ಕುಗ್ಗಿರಲಿಲ್ಲ. ದೆಹಲಿಯ ಡಾಕ್ಟರ್ ಪರೀಕ್ಷೆ ಮಾಡಿ ಎಕ್ಸ್‌ಟೆಂನ್ಸಿವ್ ಡ್ಯಾಮೇಜ್ ಆಗಿಲ್ಲ -ಫ಼ಿಸಿಯೋಥೆರಪಿ ಈಗ ಮುಖ್ಯ ಎಂದಿದ್ದರು. ಕೃಷ್ಣಪ್ಪ ಒಟ್ಟಿನಲ್ಲಿ ಈ ಎಲ್ಲದರಿಂದ ಗೆಲುವಾಗಿದ್ದಾಗ ರಾತ್ರೆ ಗೌರಿ ದೇಶಪಾಂಡೆಯ ಟೆಲಿಗ್ರಾಂ ಬಂತು -ನಾಡಿದ್ದು ಭಾನುವಾರ ಸಂಜೆ ವಿಮಾನದಲ್ಲಿ ಬರುತ್ತಿದ್ದೇನೆಂದು. ಅವಳು ದೆಹಲಿಗೆ ಅಮೆರಿಕಾದಿಂದ ಬಂದು ಆರು ತಿಂಗಳು ಮೇಲಾಗಿತ್ತು. ಅವಳನ್ನು ನೋಡಿ ಎಷ್ಟೋ ವರ್ಷಗಳಾಗಿಬಿಟ್ಟಿದ್ದುವು. ಈಗ ಹೇಗೆ ಕಾಣುವಳೊ. ದೆಹಲಿಗೆ ಬಂದವಳೇ ತನ್ನನ್ನು ನೋಡುವಳೆಂದು ಆಸೆಪಟ್ಟಿದ್ದ. ಬರಲಿಲ್ಲವಾದ್ದರಿಂದ ಅವಳು ತನ್ನ ಬಗ್ಗೆ ತಣ್ಣಗಾಗಿರಬಹುದೆಂದು ಭಾವಿಸಿದ್ದ. ಈಗ ಬರುತ್ತಿದ್ದಾಳೆ; ಎರಡು ದಿನ ಕಳೆದು. ಅಂದರೆ ಅವಸರಪಡದೆ, ಖಾಯಿಲೆ ಹಿಡಿದು ಮಲಗಿದ ಮೇಲೆ ತನ್ನ ಆತ್ಮರತಿ ಉಲ್ಬಣವಾಗಿದ್ದರಿಂದ ಹೀಗೆ ಯೋಚಿಸುತ್ತಿದ್ದೀನಲ್ಲವೆ ಎಂದು ಹೇಸಿಗೆಪಟ್ಟ. +ಸೀತೆ ತಂದಿಟ್ಟ ಪ್ಯಾನ್‌ನಲ್ಲಿ ಬೆಳಗಿನ ತನ್ನ ವಿಸರ್ಜನೆಗಳಲ್ಲಿ ತೊಡಗಿದ್ದಾಗ ಮಹೇಶ್ವರಯ್ಯ ಬಂದುಬಿಟ್ಟರು. ಕೃಷ್ಣಪ್ಪ ಆವೇಗದಿಂದ ಉಸಿರಾಡುತ್ತ ಹೊರಗೆ ಅವರು ಮಾತಾಡುವುದನ್ನು ಕೇಳಿಸಿಕೊಂಡ. ನಾಗೇಶ ಖಾಹಿಲೆ ವಿಷಯ ಹೇಳುತ್ತಿದ್ದಾನೆ. ಮಹೇಶ್ವರಯ್ಯ ಮಾತಾಡುವುದೇ ಇಲ್ಲ. ತನ್ನ ಭಾವವನ್ನು ತೋರಿಸಿಕೊಳ್ಳುವ ಮನುಷ್ಯನೂ ಅಲ್ಲ ಅವರು, ಅವರಿಗಾಗಿರುವ ಆಘಾತ ಊಹಿಸುತ್ತ ಕೃಷ್ಣಪ್ಪನಿಗೆ ಸಂಕಟವಾಯಿತು. ಎಪ್ಪತ್ತರ ಅವರ ವಯಸ್ಸಲ್ಲಿ ತನ್ನಿಂದ ಈ ದುಃಖ ಅವರಿಗಾಗಬಾರದಾಗಿತ್ತು. +ಬಿಸಿನೀರಿನಲ್ಲಿ ಒದ್ದೆ ಮಾಡಿದ ಬಟ್ಟೆಯಿಂದ ಸೀತೆ ಕೃಷ್ಣಪ್ಪನ ಮೈಯನ್ನು ಒರೆಸುತ್ತಿದ್ದಳು. ನಾಳೆಯಿಂದ ಈ ಕೆಲಸ ಮಾಡಲು ನರ್ಸ್ ಬರುತ್ತಾಳೆ. ಕಿರಿಕಿರಿಪಡುತ್ತ ಬ್ಯಾಂಕಿಗೆ ಹೋಗುವ ಅವಸರದಲ್ಲಿ ಸೀತೆ ಮಾಡುವ ಸೇವೆ ಕೃಷ್ಣಪ್ಪನಿಗೆ ಇಷ್ಟವಾಗುವುದಿಲ್ಲ. ಇವತ್ತು ಅವಳ ಮುಖದಲ್ಲಿ ಉರಿಯುವಂತೆ ಕಂಡ ದುಗುಡಕ್ಕೆ ಬೇರೆ ಕಾರಣವಿದೆ. ತನಗೆ ತುಂಬ ಪ್ರಿಯರಾದವರು ಯಾರು ಮನೆಗೆ ಬಂದರೂ ಅವಳಿಗೆ ಕರೆಕರೆ -ಅಭದ್ರ ಭಾವನೆ. +“ಕುದುರೆ ಬಾಲಾನ ಅಟ್ಟಿಕೊಂಡು ಬಂದಿರ್ಬೇಕು. ಈವಯ್ಯನ ಮುಖ ಕಂಡು ವರ್ಷದ ಮೇಲಾಯ್ತು” ಬೆನ್ನನ್ನು ಒರೆಸುತ್ತ ಸೀತೆ ಹೇಳುತ್ತಾಳೆ. +ಕೃಷ್ಣಪ್ಪನಿಗೆ ರುಮ್ಮನೆ ಸಿಟ್ಟು ಬಂತು. ತಾನೇನೆಂದು ಮಾಡುತ್ತಿದ್ದೇನೆಂದು ತಿಳಿಯೋದರ ಒಳಗೆ ಇನ್ನೂ ಶಕ್ತಿಯಿದ್ದ ತನ್ನ ಬಲಗೈಯಿಂದ ಅವಳನ್ನು ಗುದ್ದಿದ. ಅವಳು ಆದ ನೋವಿಗಿಂತ ಹೆಚ್ಚು ಸಂಕಟಪಡುತ್ತ “ಅಯ್ಯೋ” ಎಂದು ಕೂತು ಅಳತೊಡಗಿದಳು. ಕೃಷ್ಣಪ್ಪನಿಗೆ ತನ್ನ ಬಗ್ಗೆ ಅವಳ ಬಗ್ಗೆ ಹೇಸಿಗೆಯಾಗಿ ಸತ್ತುಬಿಡಬೇಕೆನ್ನಿಸಿತು. “ಹೆಣ್ಣುಹೆಂಗಸಿನ ಮೇಲೆ ಕೈ ಮಾಡೋ ಇವರು ಕ್ರಾಂತಿ ಮಾಡ್ತಾರಂತೆ-” ಶುರುವಾಯಿತು ಸೀತೆಯ ಗೊಣಗಾಟ. ಹೊಡೆದ ಮೇಲೆ ಅವನಿಗೆ ಕೂಡ ಹಾಗೆನ್ನಿಸುವುದರಿಂದ ಮಂಕಾಗಿ ಕೂತು ಕಾದ. ಅವಳೇ ಬಟ್ಟೆ ತೊಡಿಸಬೇಕು ಇನ್ನು. ಅವನ ಒಂದು ತಿಂಗಳ ಬಿಳಿಕಪ್ಪು ಮಿಶ್ರವಾದ ಗಡ್ಡದಲ್ಲಿ ಬಲಗೈಯ ಬೆರಳಾಡಿಸುತ್ತ ಸುಮ್ಮನೆ ಕೂರುತ್ತಾನೆ. ಸ್ಟ್ರೋಕ್ ಹೊಡೆದ ಮೇಲೆ ಬೆಳೆದ ಗಡ್ಡ ಇದು. ಈ ಗಡ್ಡ ಮೆಚ್ಚಿಗೆಯಾಗಿರೋದು ತನ್ನನ್ನು ಲೆನಿನ್ನಾಗಿ ನೋಡಲು ಬಯಸುವ ನಾಗೇಶನೊಬ್ಬನಿಗೇ. ಹೀಗೆ ಏನೇನೋ ಯೋಚಿಸುತ್ತ ಮೂಗನ್ನು ಸೀನಿಕೊಂಡು ಅಳುತ್ತ ಕೂತ ಸೀತೆಯನ್ನು ಮರೆಯಲು ಪ್ರಯತ್ನಿಸುತ್ತಾನೆ. ಆಗಲ್ಲ, ಅವಳು ಗೊಣಗುತ್ತ ಪಂಚೆಯುಡಿಸಿ ಜುಬ್ಬ ಹಾಕಿ ತಲೆ ಬಾಚಿಕೊಳ್ಳಲು ಬಾಚಣಿಗೆಯನ್ನು ಬಲಗೈಯಲ್ಲಿ ಇಡುತ್ತಾಳೆ. ಅವನು ಕೂತಿದ್ದ ವೀಲ್‌ಚೇರನ್ನು ರೂಮಿಗೆ ತಳ್ಳಿ ಗೊಣಗುತ್ತಲೇ ಅಡಿಗೆ ಮನೆಗೆ ಹೋಗುತ್ತಾಳೆ. ಅಡಿಗೆ ಮನೆಯಲ್ಲಿ ಮಗಳು ಗೌರಿ ವರಾತ ಹಿಡಿದಿದ್ದಾಳೆ. ಈಗ ಅವಳಿಗೆ ದಬದಬನೆ ಏಟು ಬೀಳುವುದಿದೆ. +ಮಹೇಶ್ವರಯ್ಯ ಒಳಗೆ ಬಂದು ಕೂತರು. ಮಾತಾಡಲಿಲ್ಲ. ಒಂದು ವರ್ಷದಲ್ಲೇ ಎಷ್ಟು ಮುದಿಯಾಗಿಬಿಟ್ಟಿದ್ದಾರೆಂದು ಅವರ ಮುಖವನ್ನೆ ದಿಟ್ಟಿಸಿದ. ಅವರ ನಡಿಗೆಯಲ್ಲಿ ಮುಖದಲ್ಲಿ ಹಿಂದಿದ್ದ ಧೃಡತೆ ಇರಲಿಲ್ಲ. ಕಣ್ಣಿಗೆ ಕೆಳಗೆ ಗಲ್ಲದ ಬಳಿ ಚರ್ಮ ಜೋತು ಬಿದ್ದಿತ್ತು. ಉಟ್ಟಬಟ್ಟೆಯಲ್ಲಿ ಹಿಂದಿನ ಶುಚಿ ಇರಲಿಲ್ಲ. ಹಣೆಯ ಮೇಲೆ ಕುಂಕುಮವಿರಲಿಲ್ಲ. +“ಎಲ್ಲಿ ಉಳ್ಕೊಂಡಿದೀರಿ?” +“ಅದೇ ನಿನ್ನ ಹಿಂದಿನ ಮನೆ -ಗಾಂಧೀ ಬಜ಼ಾರಿನಲ್ಲಿ ಇದ್ದದ್ದು -ಅಲ್ಲಿಗೆ ಹೋದೆ. ಅಲ್ಲಿಂದ ನೀನೇ ಬಿಟ್ಟದ್ದು ತಿಳಿದು ದಾರೀಲಿ ಸಿಕ್ಕ ಒಂದು ಹೋಟೆಲಲ್ಲಿ ಟ್ರಂಕನ್ನಿಟ್ಟು ಸ್ನಾನ ಮಾಡಿ ಬಂದೆ” ಎಂದು ಕೃಷ್ಣಪ್ಪನನ್ನು ಅಕ್ಕರೆಯಿಂದ ನೋಡಿದರು. +“ಆದರೆ ಅಲ್ಲಿ ಬರ್ತಿದ್ದವರು ಯಾರೂ ಇಲ್ಲಿಗೆ ಬರಲ್ಲ. ರೈತಾಪಿ ಜನಕ್ಕೆ ಇಲ್ಲಿಗೆ ಬರೋದಕ್ಕೆ ಬಸ್ಸಿನ ಸೌಕರ್ಯ ಸಾಲದು. ದೊಡ್ಡ ಜನರಿರೋ ಜಾಗವಲ್ವ? ಬಂದರೂ ದಂಗು ಬಡಿದು ನಿಲ್ಲುತ್ತಾರೆ. ಹಿಂದಿನಂತೆ ನೆಲದ ಮೇಲೆ ಕೂತು ಮಾತಾಡಲ್ಲ….” +ಕೃಷ್ಣಪ್ಪ ಕೊರಗುತ್ತ ಮಾತಾಡಿದ್ದನ್ನು ಕೇಳಿಸಿಕೊಳ್ಳುತ್ತ ಮಹೇಶ್ವರಯ್ಯ +“ಈಗ ನಿನಗೆ ಇಷ್ಟಾದರೂ ಸೌಕರ್ಯ ಬೇಡವೆ?” ಎಂದು ಅವನ ಮಾತನ್ನು ತಳ್ಳಿಹಾಕಿದರು. ಮತ್ತೆ ಇಬ್ಬರೂ ಮೌನವಾಗಿ ಕೂತರು. ಗೌರಿ ದೊಡ್ಡದಾಗಿ ಅಳುತ್ತ ಕೋಣೆಗೆ ಓಡಿಬಂದು ಅಲ್ಲಿ ಮಹೇಶ್ವರಯ್ಯನನ್ನು ಕಂಡು ಅಳು ನಿಲ್ಲಿಸಿ ಅಪ್ಪನ ಪಕ್ಕದಲ್ಲಿ ನಿಂತು ಬಿಕ್ಕಿದಳು: ಮಹೇಶ್ವರಯ್ಯ ಕೈಚೀಲದಿಂದ ದೊಡ್ಡದೊಂದು ಚಾಕಲೇಟುಗಳನ್ನು ಕಟ್ಟಿದ ಪೊಟ್ಟಣವನ್ನು ಅವಳ ಕೈಯಲ್ಲಿತ್ತು, “ಅಮ್ಮನ ಹತ್ತಿರ ಕೊಡು. ಈಗ ನೀನೊಂದು ತಿನ್ನು” ಎಂದು ಒಂದು ಚಾಕಲೇಟನ್ನು ಸುಲಿದು ಅವಳ ಬಾಯಲ್ಲಿಟ್ಟರು. +ಮಹೇಶ್ವರಯ್ಯ ಏನನ್ನೋ ಹೇಳಲು ಪ್ರಯತ್ನಿಸುತ್ತಿರುವಂತೆ ಕಂಡಿತು. ಅವರು ನಿಶ್ಚಲರಾಗಿ ಕೂತು ಯಾವುದಾದರೊಂದು ವಸ್ತುವನ್ನು ದುರುಗುಟ್ಟಿ ನೋಡತೊಡಗಿದರೆ ಏನನ್ನೋ ಹೇಳಲು ಸಿದ್ಧರಾಗುತ್ತಿದ್ದಾರೆ ಎಂದು ಅರ್ಥ. ಈಗ ಏನನ್ನಾದರೂ ಹೇಳಬೇಕಾದ ತನ್ನ ಒತ್ತಾಯ ಅವರ ಮೇಲಿಲ್ಲವೆಂದು ಸೂಚಿಸಲು ಕೃಷ್ಣಪ್ಪ ಬೇಳಗಿನ ಪತ್ರಿಕೆಯನ್ನು ಓದುತ್ತ ಕೂತ. ಕೈಕಾಲುಗಳನ್ನು ಎತ್ತಲು ಪ್ರಯತ್ನಿಸುವ ವ್ಯಾಯಾಮ ಕೂಡ ಅವರ ಏಕಾಗ್ರತೆಗೆ ಭಂಗ ತರುವಂತೆ ವಾತಾವರಣದಲ್ಲಿ ಒತ್ತಡವನ್ನುಂಟು ಮಾಡೀತು. +ಮೈಯೆಲ್ಲ ಕಿವಿ ಕಣ್ಣುಗಳಾಗಿ ಕೂರುವ ಹಕ್ಕಿಯನ್ನು ತೋರಿಸಿ ಮಹೇಶ್ವರಯ್ಯ ಅನ್ನುತ್ತಿದ್ದರು -“ಹಾಗಿರಬೇಕು ನಾವು” “ಪ್ರಪಂಚ ಸದಾ ನಮ್ಮ ಕಣ್ಣೆದುರಿಗಿರುತ್ತೆ. ಆದರೆ ಏನನ್ನೂ ನೋಡಲ್ವೊ ನಾವು. ನೋಡೋದೂಂದ್ರೆ ಪ್ರವೇಶ – ಹಿಡಿಯೋದು -ಗಪ್ಪಂತ ಹಿಡಿಯೋದು.” ಪೇಪರ್ ಓದುತ್ತ ಮಹೇಶ್ವರಯ್ಯ ಅಂದಿದ್ದ ಮಾತುಗಳನ್ನು ನೆನೆಯುತ್ತಿದ್ದಂತೆ ಯಾರೋ ಕೋಣೆಯೊಳಗೆ “ನಮಸ್ಕಾರ ಗೌಡರೆ” ಎಂದು ದೊಡ್ಡದಾಗಿ ಮಾತಾಡುತ್ತ ವಕ್ಕರಿಸಿದರು. ಮಹೇಶ್ವರಯ್ಯ ಕೃಷ್ಣಪ್ಪ ಬೆಚ್ಚಿ ನೋಡಲು ಎದುರು ಪಂಚಲಿಂಗಯ್ಯ ನಿಂತಿದ್ದರು. ಚಿಕ್ಕಮಗಳೂರಲ್ಲಿ ಕಾಫ಼ಿ ತೋಟದ ಮಾಲೀಕರು. +“ಏನು ಗೌಡರೆ -ಛೇ ಛೇ ಇದೇನು ನಿಮಗಾಗಿದ್ದು? ಎಷ್ಟು ಗಟ್ಟಿಮುಟ್ಟಾಗಿದ್ದಿರಿ?” +ಕೃಷ್ಣಪ್ಪ ಕುಗ್ಗುತ್ತ ಕೂತ. +“ಇಲ್ಲೊಬ್ರು ಸ್ಪೆಶಲಿಸ್ಟ್ ನಂಗೆ ಗುರ್ತಿದಾರೆ. ಕಾರಲ್ಲಿ ಹೋಗಿ ಕರ್ಕೊಂಬರ್ತೀನಿ.” +ಪಂಚಲಿಂಗಯ್ಯನ ಒತ್ತಾಯವನ್ನು ತಳ್ಳುತ್ತ, “ಬೇಡಿ -ಪರೀಕ್ಷೆ ಮಾಡಿಸಿಕೊಂಡಿದೀನಿ. ಏನು ಬಂದರಲ್ಲ?” ಎಂದು ಕೃಷ್ಣಪ್ಪ ಕೇಳಿದ. +“ಉಡುಪೀಲೊಂದು ಮೆಡಿಕಲ್ ಕಾಲೇಜಿದೆಯಲ್ಲ -ಅದನ್ನ ನಡೆಸೋವ್ರಿಗೆ ನೀವೂಂದ್ರೆ ಭಾರಿ ಗೌರವವಂತೆ. ಎಷ್ಟು ಡೊನೇಶನ್ ಕೇಳಿದರೂ ಕೊಡ್ತೀನಿ ಮಾರಾಯ್ರೆ -ಆದ್ರೂ ನಿಮ್ದೂ ಒಂದು ಮಾತು ಬೇಕು ನೋಡಿ ನನ್ನ ಮಗನಿಗೆ ಸೀಟ್ ಸಿಗಾಕೆ. ಎಲ್ಲ ಹೇಳ್ತಾರೆ -ಗೌಡರು ಜಪ್ಪಯ್ಯಾಂದ್ರೂ ಹೇಳಲ್ಲ ಅಂತ. ಅದಕ್ಕೇ ನಿಮ್ಮ ಮಾತಿಗಷ್ಟು ಬೆಲೆ ನೋಡಿ………ಹೌದ? ಒಂದು ಸುದ್ದಿ ಕೇಳಿ ಬಾಳ ಸಂತೋಷ ಆತು. ಆದರೆ ನೀವು ಹೀಗೆ ಮಲಗಿಬಿಟ್ಟಿದ್ದೀರಲ್ಲ?” +ಕೃಷ್ಣಪ್ಪ ಅವರ ಮಾತು ತನಗರ್ಥವಾಗಲಿಲ್ಲೆಂದು ಪ್ರಶ್ನಾರ್ಥಕವಾಗಿ ನೋಡಿದ. ಪಂಚಲಿಂಗಯ್ಯ ನಕ್ಕರು. ತಮ್ಮ ಹಿಂದೆ ನಿಂತ ಮಗನನ್ನು ತೋರಿಸಿ -“ಇವನೇ ಫ಼ಸ್ಟ್ ಅಟೆಂಪ್ಟಲ್ಲೇ ಪಾಸಾಗಿದಾನೆ. ಪರೀಕ್ಷೇಲಿ ಸ್ವಲ್ಪ ಮೈ ಸರಿಯಿರಲಿಲ್ಲ. ಇಲ್ದಿದ್ರೆ ಫ಼ಸ್ಟ್ ಕ್ಲಾಸ್ ತೊಗೋತಿದ್ದ. ನನ್ನ ಹತ್ತಿರ ಇರೋ ದುಡ್ಡನ್ನ ಕಟ್ಟಿಕೊಂಡು ಸಾಯಲಾ ನಾನು? ಇರೋನು ಒಬ್ಬನೇ ಮಗ. ಫ಼ಾರಿನ್‌ಗೆ ಹೋಗಬೇಕೂಂತ ಆಸೆ. ಮೆಡಿಕಲ್ ಮೆಡಿಕಲ್ ಅಂತ ದುಂಬಾಲು ಬಿದ್ದಿದ್ದಾನೆ. ಏನು ಮಾಡಬೇಕು ಹೇಳಿ ದುಡ್ಡನ್ನ? ನಿಮ್ಮಂಥೋರು ಮಾಡೋ ಒಳ್ಳೆ ಕೆಲಸಕ್ಕೋ ವಿದ್ಯೆಗೋ ಅದನ್ನೆಲ್ಲ ಚೆಲ್ಲೋದೂಂತ ಮನಸ್ಸು ಮಾಡಿದೀನಿ……..ಹೌದ? ನಿಮಗೆ ಗೊತ್ತೇ ಇಲ್ಲವ? ಇಡೀ ಬೆಂಗಳೂರೇ ಮಾತಾಡ್ಕೋತಿದೆ. ನಿನ್ನೆ ಗಾಲ್ಫ್ ಕ್ಲಬ್ಬಲ್ಲಿ ಅದೇ ಮಾತು. ನಿಮಗೇ ಗೊತ್ತಿಲ್ಲಾಂದ್ರೆ ಆಶ್ಚರ್ಯ ಮಾರಾಯ್ರ. ನೀವೇ ಮುಖ್ಯಮಂತ್ರಿ ಆಗ್ತೀರೀಂತ ಸುದ್ದಿ ಇದೆ. ಸಂತೋಷ. ಆದರೆ ನಿಮ್ಮನ್ನ ಆಮೇಲೆ ಹಿಂಗೆ ಮಾತಾಡಿಸಾಕೆ ಸಾಧ್ಯವೇ ಇಲ್ಲ….ಏನೋ ಮಾತಾಡ್ತ ಇದ್ರಿ. ಸಾಯಂಕಾಲ ಬಂದು ನೋಡ್ತೀನಿ. ಈಗ ನೀವು ಹೂಂತ್ಲೂ ಅನ್ನಬೇಡಿ ಉಹೂಂತ್ಲೂ ಅನ್ನಬೇಡಿ. ನೀವೇ ಖುದ್ದು ಹೇಳೋದೂ ಕೂಡದು. ಚೀಪಾಗಿ ಬಿಡ್ತದೆ -ನಂಗೊತ್ತು. ಅದಕ್ಕೊಂದು ಬೇರೆ ಮಾರ್ಗ ಇದೆ. ವೀರಣ್ಣನ ಹತ್ರ ಮಾತಾಡ್ತೀನಿ -ಸಾಯಂಕಾಲ ನೋಡಾನ…..ಬಾಳ ಒಳ್ಳೆ ಡಾಕ್ಟ್ರು ಅವರು ಮಾರಾಯ್ರ. ಸಾಯಂಕಾಲ ಕರ್ಕೊಂಬರ್ತೀನ್ರಿ…….” ಎಂದು ಪಂಚಲಿಂಗಯ್ಯ ನಮಸ್ಕಾರ ಮಾಡಿ ನಗುತ್ತ ಮಗನ ಜೊತೆ ಕೋಣೆಯಿಂದ ಹೊರಬಿದ್ದರು. +“ನೋಡಿ ಇಂಥವ್ರೆ ನನ್ನ ಹತ್ರ ಬರೋದು ಈಗ” +ಕೃಷ್ಣಪ್ಪ ದುಃಖದಿಂದ ಮಾತಾಡಿದ್ದು ಕೇಳಿ ಮಹೇಶ್ವರಯ್ಯ +“ನನಗೆ ಈಚೆಗೆ ಮನಸ್ಸನ್ನ ಒಂದು ಕಡೆ ನಿಲ್ಲಿಸೋಕೇ ಸಾಧ್ಯ ಆಗ್ತಾ ಇಲ್ಲ ಕಣಯ್ಯ. ಕಚ್ಚೆ ಹರಕನಂತೆ ಸುಮ್ಮನೆ ಅಲೆಯುತ್ತೆ ದರಿದ್ರದ್ದು” ಎಂದು ನಕ್ಕರು. ಕ್ಷಣ ಮೌನವಾಗಿದ್ದು, +“ನಿಂಗೆ ಮತ್ತೆ ಆ ಮರದ ಕೆಳಗೆ ಕೂತಿರಬೇಕೂಂತ ಅನ್ನಿಸತ್ತೆ ಕಣಯ್ಯ. ಪೇರಳೇ ಗಿಡದ ಮೇಲೆ ಬರೋ ಹಕ್ಕಿಗಳಿಗಾಗಿ ಕಾಯ್ತಾ ಕೂತಿರಬೇಕೂಂತ ಹಂಬಲಿಸಲಿಕ್ಕೆ ಶುರು ಮಾಡ್ತಿ ನೀನು. ಅದೇನು ಹೇಳಬೇಕೂಂತ ಇದ್ದೆ ಗೊತ್ತಾ? ಹೀಗೇ ನಾನು ಯೋಚಿಸ್ತಾ ಇದ್ದೆ! ನಿನಗೆ ಸ್ಟ್ರೋಕ್ ಆದಾಗ ನನಗೆ ಏನಾದರೂ ಅನ್ನಿಸಬೇಕಿತ್ತಲ್ಲ ಅಂತ. ಆದರೆ ನೋಡು ಈಗ ನನ್ನ ಮನಸ್ಸಿಗೆ ಕುದುರೆ ಚಪಲ ಹತ್ತಿಕೊಂಡಿದೆ. ಯಾವಾಗಲೂ ಏನಾದರೂ ಉದ್ರೇಕ ಬೇಕು ಅನ್ನಿಸತ್ತೆ. ಕುಡೀಲಿಕ್ಕೆ ಶುರು ಮಾಡಿದ್ರೆ ದಿನವಿಡೀ ಕುಡೀತ ಕೂತಿರ್ತೀನಿ. ಇಲ್ಲ ಹೀಗೆ ಅಲೀಲಿಕ್ಕೆ ಶುರುಮಾಡ್ತೀನಿ. ನೋಡು -ಈಗ್ಲೇ ನೋಡು ನನ್ನ -ಹೇಗೆ ಮನಸ್ಸು ಅಲೀತಿದೆ ಅಂತ. ಈಗ ಯೋಚಿಸ್ತ ಯೋಚಿಸ್ತ ಏನೋ ಹೇಳಬೇಕೂಂತಿದ್ದಾಗ ಆ ನಾಲ್ಕು ಬೆರಳಿಗೂ ಉಂಗುರ ಹಾಕ್ಕೊಂಡವರು ಬಂದು ಬಿಟ್ರು……ಅದೇನಿಲ್ಲ -ನೀನು ಹುಷಾರಾಗ್ತಿ ಅಂತ ಕಾಣಿಸುತ್ತೆ ನಂಗೆ -ಅದನ್ನೇ ಹೇಳಲಿಕ್ಕೆ ಹೋಗಿದ್ದೆ.” +ಕೊನೆಯ ವಾಕ್ಯವನ್ನು ಸಪ್ಪೆಯಾದ ಧ್ವನಿಯಲ್ಲಿ ಹೇಳಿದರು. +“ನನ್ನ ಸಮಾಧಾನಕ್ಕಲ್ಲವಲ್ಲ ನೀವು ಹೇಳೋದು?” +ಮಹೇಶ್ವರಯ್ಯ ಕೃಷ್ಣಪ್ಪನನ್ನು ನೋಡುತ್ತ ಗಂಭೀರವಾಗಿ “ಅಲ್ಲ” ಎಂದರು. ಸ್ವಲ್ಪ ತಡೆದು ಗೆಲುವಾಗಿ “ನೋಡಯ್ಯ ಈ ಕುದುರೆ ವ್ಯವಹಾರದಲ್ಲಿ ಮಾತ್ರ ನಂದೇ ನನಗೆ ಕಾಣಿಸಲ್ಲ: ಏನೂಂದ್ರೆ ಏನೂ ಕಾಣಿಸಲ್ಲ. ಒಟ್ಟಿನಲ್ಲಿ ಬುದ್ಧಿ ತೆಳ್ಳಗಾಗಿಬಿಟ್ಟಿದೆ. ಈಗ ಆದ್ದು ಮುಂದಿನ ಕ್ಷಣ ಮರೆತು ಹೋಗಿರುತ್ತೆ” +“ನೀವು ಇಲ್ಲೆ ಬಂದಿರಿ -” +“ನಿನ್ನ ಹೆಂಡತಿಗೆ ತೊಂದರೆಯಾಗಬಹುದು ಕಣೊ -” +“ಬನ್ನಿ” +ಆಗಲೆಂದು ಮಹೇಶ್ವರಯ್ಯ ಎದ್ದು ನಿಂತು – +“ಇವತ್ತು ನನ್ನ ಅದೃಷ್ಟ ಪರೀಕ್ಷೆ ಮಾಡಿಕೋತೀನಿ. ರಾತ್ರೆ ಬರ್ತೀನಿ” ಎಂದು ಹೋದರು. +ಕೃಷ್ಣಪ್ಪನಲ್ಲಿ ತುಂಬ ಲವಲವಿಕೆ ಮೂಡಿತು. ಖುಷಿಯಿಂದ “ನಾಗೇಶಾ” ಎಂದು ಕರೆದ. ನಾಗೇಶ ಸಪ್ಪಗಿರೋದು ಕಂಡು “ಯಾಕೋ” ಎಂದ. “ಯಾಕಿಲ್ಲ ಗೌಡರೆ” ಎಂದದ್ದಕ್ಕೆ “ಹೇಳೋ” ಎಂದು ಒತ್ತಾಯ ಮಾಡಿದ. +“ಅದೇ ನನ್ನ ಅಕ್ಕ ಕ್ಲಾರ್ಕ್ ಆಗಿದ್ದಳಲ್ಲ ಅವಳ ಕೆಲಸ ಹೋಯ್ತಂತೆ” +“ಅದಕ್ಯಾಕೆ ಯೋಚಿಸ್ತಿ. ವೀರಣ್ಣನಿಗೆ ಹೇಳಿ ಅವರ ಥಿಯೇಟರಿನಲ್ಲಿ ಕೊಡಿಸ್ತೀನಿ” +“ನಿಮ್ಮ ಹತ್ರ ಇಂಥ ಕೆಲಸ ಮಾಡಿಸೋಕೆ ಇಷ್ಟವಿಲ್ಲ ನಂಗೆ ಗೌಡ್ರೆ” +“ಭೇಷ್ ನಿಂಗೊಬ್ಬನಿಗಾದ್ರೂ ಹಾಗನ್ನಿಸತ್ತಲ್ಲ. ಗೌರಿ ದೇಶಪಾಂಡೆ ನಾಳೆ ರಾತ್ರೆ ಬರೋದು ಅಲ್ವೇನೊ?” +“ಹೌದು” +“ಅವಳನ್ನೆಲ್ಲಿ ಇಳಿಸುವುದೆಂದು ಚಿಂತೆಯಾಯ್ತು. ಮನೆಯಲ್ಲೆ ಇಳಿಸಬಹುದು. ಆದರೆ ಸೀತೆ ರಂಪ ಮಾಡಿಯಾಳು. ಹೋಟಲಲ್ಲಿ ಒಬ್ಬಳೇ ಇರೂಂತ ಹೇಗೆ ಹೇಳೋದು? ಎಲ್ಲಿ ಇಳಿಸೋದೋ ಅವಳನ್ನ?” +“ವೀರಣ್ಣನೋರ ಗೆಸ್ಟ್ ಹೌಸ್ ಇದೆಯಲ್ಲ ಗೌಡರೆ” +“ನೋಡಿದೆಯಾ ಹೇಗೆ ಕ್ರಮೇಣ ನಾನು ವೀರಣ್ಣನೋರ ಬಲೇಲಿ ಸಿಕ್ಕಿ ಹಾಕಿಕೋತಿದೀನಿ ಅಂತ.” +“ನಿಮ್ಮನ್ನ ಯಾರಿಗೆ ಕಟ್ಟಿಹಾಕಲಿಕ್ಕೆ ಸಾಧ್ಯ?” +“ನಿಂಗೊತ್ತಿಲ್ಲ ಅಷ್ಟೆ -ಇವೆಲ್ಲ ನನ್ನ ಅವನತಿಯ ಚಿಹ್ನೆಗಳು” +ನರ್ಸ್ ಬಂದಳು. ವೀರಣ್ಣ ಒಬ್ಬಳು ಮೃದುವಾದ ಕಣ್ಣುಗಳ ಹುಡುಗಿಯನ್ನೆ ಗೊತ್ತು ಮಾಡಿದ್ದ. ಅವಳು ಸದ್ದುಗದ್ದಲವಿಲ್ಲದೆ ಕ್ಯಾನ್‌ವಾಸ್ ಶೂಸಿನ ಮೇಲೆ ಓಡಾಡುತ್ತ ಕೃಷ್ಣಪ್ಪನ ಎಡಗೈ ಎಡಗಾಲುಗಳನ್ನು ನಾನಾ ವಿಧಗಳಲ್ಲಿ ತಿಕ್ಕಿದಳು. ಪೆಟ್ಟಾಗದಂತೆ ಮೇಲಿಂದ ಕೆಳಕ್ಕೆ ಕೆಳಗಿನಿಂದ ಮೇಲಕ್ಕೆ ತಾಡನ ಮಾಡಿದಳು. ವೀಲ್‌ಚೇರನ್ನು ತಳ್ಳುತ್ತ ಎಷ್ಟು ಬೇಕೋ ಅಷ್ಟು ಮಾತಾಡಿ ನೆಮ್ಮದಿಯಾಗುವಂತೆ ಮಾಡಿದಳು. +ಕೃಷ್ಣಪ್ಪನಿಗೆ ಗೋಪಾಲರೆಡ್ಡಿಯ ಸಖ್ಯದಲ್ಲಿ ತನಗೆ ಒಂದಿಡೀ ವರ್ಷ ಜೊತೆಗಾತಿಯಾಗಿದ್ದ ಲೂಸಿನಾಳ ನೆನಪಾಗುತ್ತದೆ -ಮತ್ತೆ, ಮತ್ತೆ. ಲೂಸಿನಾ ದೆಹಲಿಯಲ್ಲಿ ನರ್ಸ್ ಶಿಕ್ಷಣ ಪಡೆಯುತ್ತಿದ್ದಳು. ಅವಳ ಕಥೆ ದಾರುಣವಾಗಿತ್ತು. ಮಧ್ಯಮವರ್ಗದ ಮನೆ ಹುಡುಗಿ ಅವಳು. ವರ್ತಕನ ಮಗನೊಬ್ಬ ಅವಳನ್ನು ನಂಬಿಸಿ ಕಲ್ಕತ್ತದಿಂದ ದೆಹಲಿಗೆ ಕರೆದುಕೊಂಡು ಬಂದು ಮದುವೆಯಾಗುವೆನೆಂದು ಮೋಸ ಮಾಡಿ ತನ್ನ ಗೆಳೆಯರಲ್ಲಿ ಅವಳನ್ನು ಹಂಚಿಕೊಳ್ಳಲು ಪ್ರಯತ್ನಿಸಿದ್ದ. ಇದನ್ನು ಕೆಲವು ದಿನ ಸಹಿಸಿ, ಅದು ಅತಿರೇಕಕ್ಕೆ ಹೋದಾಗ ಅವನ ಬಂಧನದಲ್ಲಿದ್ದ ಲೂಸಿನಾ ಒಂದು ರಾತ್ರಿ ತಪ್ಪಿಸಿಕೊಂಡು ಎಲ್ಲಿ ಹೋಗುವುದೆಂದು ತಿಳಿಯದೆ ಪಾರ್ಲಿಮೆಂಟ್ ಸದಸ್ಯರ ನಿವಾಸದಲ್ಲಿ ಇಳಿದುಕೊಂಡಿದ್ದ ಗೋಪಾಲರೆಡ್ಡಿ ಕೃಷ್ಣಪ್ಪರ ಬಾಗಿಲು ತಟ್ಟಿದಳು. ಭೀತಳಾಗಿ ನಿಂತ ಹುಡುಗಿಯನ್ನು ರೆಡ್ಡಿ ಸಮಾಧಾನಪಡಿಸಿ ತಾವಿದ್ದ ಬಂಗಲೆಯ ರೂಮೊಂದರಲ್ಲಿ ಮಲಗುವಂತೆ ಹೇಳಿದ. ಲೂಸಿನಾ ಇಡೀ ರಾತ್ರೆ ಇಬ್ಬರಲ್ಲಿ ಒಬ್ಬ ತನ್ನ ಕೋಣೆಗೆ ಬರಬಹುದೆಂದು ಹೆದರಿಕೊಂಡು ಕಾದಿದ್ದಳು. ಬೆಳಗಾಯಿತು. ಅವಳು ಕೃತಜ್ಞಳಾಗಿ ಇವರನ್ನು ಹುಡುಕಿಕೊಂಡು ಡೈನಿಂಗ್ ಹಾಲಿಗೆ ಬಂದು ಅತ್ತಳು. ರೆಡ್ಡಿ ಅವಳನ್ನು ನರ್ಸಿಂಗ್ ಕಾಲೇಜಿಗೆ ಸೇರಿಸಿದ. ಕ್ರಮೇಣ ಅವಳಿಗೆ ಕೃಷ್ಣಪ್ಪನ ಮೇಲೆ ಮನಸ್ಸಾಯಿತು. ಕೃಷ್ಣಪ್ಪನಿಗೂ ಅವಳೆಂದರೆ ಇಷ್ಟವಾಯಿತು. ಆದರೆ ರೆಡ್ಡಿಯ ಋಣದಲ್ಲಿದ್ದೇನೆಂಬ ಕಾರಣಕ್ಕಾಗಿ ಅವಳು ತನ್ನನ್ನು ಇಷ್ಟಪಡುವುದೊ ಎಂದು ಸಂಕೋಚವಾಗಿ ಅವನು ಆಕೆಯನ್ನು ದೂರವಿರಿಸುತ್ತಲೇ ಇದ್ದ. ರಜೆಯಲ್ಲಿ ಒಮ್ಮೆ ಅವಳು ಅವನಿಗೆ ಬರೆದು ಬೆಂಗಳೂರಿಗೆ ಬಂದಳು. ರೆಡ್ಡಿಯ ಬಂಗಲೆಯಲ್ಲಿ ಆಗ ಕೃಷ್ಣಪ್ಪ ವಾಸವಾಗಿದ್ದುದು. ಒಂದು ರಾತ್ರೆ ಲೂಸಿನಾ ಬಾಗಿಲನ್ನು ಮೆತ್ತಗೆ ತೆರೆದು ಕೃಷ್ಣಪ್ಪನ ಮಗ್ಗುಲಲ್ಲಿ ಬಂದು ಮಲಗಿದಳು. +“ಯಾಕಿದನ್ನ ನೀನು ಮಾಡ್ತಿದಿ?” ಎಂದು ಕೇಳಿದ. +“ನಿನ್ನ ಮೇಲೆ ಇಷ್ಟ ನನಗೆ. ಅಷ್ಟೂ ನಿಂಗೆ ಗೊತ್ತಾಗಲ್ವಲ್ಲ?” +“ನನ್ನ ಮದುವೆಯಾಗ್ತೀಯೇನು ಹಾಗಾರೆ?” +“ಮುಂದೆ ಓದಕ್ಕೆ ಇಂಗ್ಲೆಂಡಿಗೆ ಹೋಗೋ ಆಸೆ ನನಗೆ. ನೀನು ಒತ್ತಾಯ ಮಾಡಿದ್ರೆ ಆಗ್ತೀನಿ.” +ಅವಳನ್ನು ತಬ್ಬಿಕೊಂಡ ಕೃಷ್ಣಪ್ಪನಿಗೆ ನಗು ಬಂತು. +“ಬೇರೆ ಹುಡುಗಿಯರ ಜೊತೆ ನಾನು ಮಲಗ್ತೀನೀಂತ ನಿನಗೆ ಗೊತ್ತಲ್ವ?” +“ಗೊತ್ತು. ಆದ್ರೆ ನಿನ್ನೆ ಬಂದಿದ್ದಳಲ್ಲ -ಅವಳೇನು ಚೆನ್ನಾಗಿದಾಳೇಂತ ನೀನು ಅವಳ ಜೊತೆ ಮಲಗಿದ್ದು?” ಮುನಿಸಿನಿಂದ ಲೂಸಿನಾ ಅವನ ಕೆನ್ನೆಗೆ ಹೊಡೆದಳು. +“ನೀನು ಮಹಡಿ ಮೇಲೆ ಮಲಗಿದ್ದೀಯಲ್ಲ -ನಿಂಗೆ ಗೊತ್ತಿರಲಿಲ್ಲ ಅಂತ ತಿಳ್ಕೊಂಡಿದ್ದೆ.” ಇಷ್ಟು ಸಲಿಗೆಯಿಂದ ಯಾವ ಹುಡುಗಿಯೂ ಅವನನ್ನು ಮಾತಾಡಿಸಿದ್ದಿಲ್ಲ. +“ನಾನೇನೂ ಪೆದ್ದಲ್ಲ. ಈಗ ನಾನಿಲ್ಲಿ ಇರೋ ತನಕ ನೀನು ಯಾರನ್ನೂ ಹತ್ತಿರ ಸೇರಿಸ್ಬಾರ್ದು. ನಾನು ನರ್ಸಿಂಗ್ ಸೇರಿದ ಮೇಲೆ ನಿನ್ನ ಮೇಲೆ ಆಸೆಯಾದ ದಿನದಿಂದ ಯಾರನ್ನೂ ನನ್ನ ಹತ್ತಿರ ಸೇರಿಸಿಲ್ಲ. ಗೊತ್ತ?” +“ಗೊತ್ತು” +ಅವಳೂ ತನ್ನಿಂದ ಸುಖಪಡುವುದನ್ನು ಕಂಡಿದ್ದರಿಂದ ಅವನನ್ನು ಪಾಪಭಾವನೆ ಕಾಡಿಸಲಿಲ್ಲ. ಹಿಂದೆ ಹೆಣ್ಣಿನ ಸಂಗಕ್ಕೆ ಮುಂಚೆ ಅವನು ಚೆನ್ನಾಗಿ ಕುಡಿದಿರುತ್ತಿದ್ದ. ಮತ್ತಿನಲ್ಲಿ ತನ್ನ ದೇಹದ ಬಯಕೆಯನ್ನು ಕಳೆದುಕೊಂಡು ಬೆಳಿಗ್ಗೆ ರಾತ್ರಿಯ ವ್ಯಭಿಚಾರಗಳನ್ನು ಮರೆಯಲೆಂದೇ ತೀವ್ರವಾಗಿ ರೆಡ್ಡಿಯ ಜೊತೆ ಏನೇನೋ ಅಮೂರ್ತ ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುತ್ತಿದ್ದ. ಆದರೆ ಲೂಸಿನಾ ಬರಿ ಇರುವುದೇ ಸುಖವೆನ್ನಿಸಿದ್ದಳು. ತನ್ನ ಗಾಂಭೀರ್ಯವನ್ನು ಸಂಭೋಗದಲ್ಲೂ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದ ಹಿಂದಿನ ತಾನು ಎಂಥ ಹಾಸ್ಯಾಸ್ಪದ ವ್ಯಕ್ತಿಯೆಂದು ಈಗ ತಿಳಿಯತೊಡಗಿತು. ಅವಳ ಮೃದುವಾದ ಬೆಚ್ಚಗಿನ ಯೋನಿ, ಪುಟ್ಟಗಿದ್ದರೂ ದೃಢವಾದ ಮೊಲೆಗಳು, ಸ್ವಲ್ಪ ದಪ್ಪವಾದ ತುಟಿಗಳು, ಎಣ್ಣೆಗೆಂಪು ಬಣ್ಣದ ಚರ್ಮ, ಅವಳ ಅಂಡಿನ ಮೇಲಿದ್ದ ಮಚ್ಚೆ, ಅವಳ ಪ್ರಶಾಂತ ಕಣ್ಣುಗಳು, ಬೆನ್ನಿಡೀ ಚೆಲ್ಲುವಷ್ಟು ಉದ್ದದ ಅವಳ ಕಪ್ಪು ಕೂದಲು -ಎಲ್ಲವನ್ನೂ ವಾರಂಗಲ್ ಠಾಣೆಯಲ್ಲಿ ಅವನು ಧ್ಯಾನ ಮಾಡುತ್ತಿದ್ದ ದೇವಿಯ ನಖಶಿಖಾಂತದ ವರ್ಣನೆಯ ಜೊತೆ ಹೋಲಿಸುವನು. ಸಂಸ್ಕೃತದ ಆ ಶ್ಲೋಕಗಳನ್ನು ಮೃದುವಾಗಿ ಹಾಡಿ ಅವಳಿಗೆ ಮೋಜೆನ್ನಿಸುವಂತೆ ಮಾಡುವನು. ಸಂಭೋಗವೆಂದರೆ ಅವಸರದ ವಿಸರ್ಜನೆಯೆಂದು ತಿಳಿದಿದ್ದ ಕೃಷ್ಣಪ್ಪನಿಗೆ ದೇಹದ ಎಲ್ಲ ಭಾಗಗಳು ಅಪೇಕ್ಷೆ, ಉದ್ರೇಕ, ತಣಿವುಗಳ ಬುಗ್ಗೆಯೆಂಬುದನ್ನು ಲೂಸಿನಾ ಕಲಿಸಿದಳು. ಸಂಭೋಗ ಮೈಥುನವಾಯಿತು. ಎಷ್ಟೆಂದರೆ ಅಷ್ಟು ವಿಸ್ತರಿಸುವ ಹಾಡಾಯಿತು. +ಆದರೆ ಕ್ರಮೇಣ ಅವಳನ್ನು ತಾನು ಬಿಟ್ಟಿರಲಾರೆ ಎಂಬ ವ್ಯಾಮೋಹ ಹುಟ್ಟಿಕೊಂಡಿತು. ಅದರಿಂದ ಅವನ ಹಿಗ್ಗಿನ ತೀವ್ರತೆಯೂ ಇಳಿಯುತ್ತ ಬಂತು. ಅವಳು ಯಾಕೆ ತನ್ನ ತಂದೆಯನ್ನು ದ್ವೇಷಿಸುತ್ತಾಳೆಂದು ಅವನ ಕುತೂಹಲ ಬೆಳೆಯುತ್ತ ಹೋದಂತೆ ಇದರಿಂದ ಅವಳಿಗೆ ಕರೆಕರೆಯಾಗುವುದನ್ನು ಗಮನಿಸಿದ. ಒಂದು ದಿನ ಅವಳು ತನ್ನ ತಂದೆಯೇ ತನ್ನನ್ನು ಬಯಸುತ್ತಿದ್ದ ಅದರಿಂದಾಗಿ ತಾಯಿ ತನ್ನನ್ನು ದ್ವೇಷಿಸುತ್ತಿದ್ದಳು -ಮನೆ ನರಕವಾಗತೊಡಗಿತ್ತು ತನಗೆ ಎಂದು ಹೇಳಿದಳು. ಅವಳ ತಂದೆ ಹಾಗಾದರೆ ಅವಳ ಜೊತೆ ಮಲಗಿದ್ದನೊ? ಅದನ್ನು ಕೇಳುವುದು ಹೇಗೆ? ಈ ಬಗೆಯಲ್ಲಿ ಕೃಷ್ಣಪ್ಪ ಕೊರಗುವುದು ಕಂಡು ಲೂಸಿನಾ, +“ನೀನು ಬೇರೆ ಥರದ ಗಂಡಸೂಂತ ತಿಳಿದಿದ್ದೆ” ಎಂದು ನಿರಾಶೆಯಲ್ಲಿ ಒಮ್ಮೆ ಹೇಳಿದಳು. +“ಬೇರೆ ಥರಾ ಅಂದ್ರೆ……” +“ಈ ಕ್ಷಣ ನಿನಗೆ ಸಾಲದ? ನನ್ನ ಭೂತ ಯಾಕೆ ನಿನಗೆ?” +“ನಿನ್ನ ನಾನು ಮದುವೆಯಾಗಬೇಕು -ಅದಕ್ಕೇ” +“ನಾನು ಮದುವೇಂದ್ರೆ ದ್ವೇಷಿಸ್ತೇನೆ” +“ಗೌರಿನೂ ಹೀಗೇ ಹೇಳ್ತ ಇದ್ದಳು,” ಕೃಷ್ಣಪ್ಪ ಚಿಂತಾಕ್ರಾಂತನಾಗಿ ಮಾತಾಡಿದರೆ ಲೂಸಿನಾ ಇನ್ನೇನೋ ಭಾವಿಸುವಳು. +“ಅವಳಿಗೆ ಹೀಗೆಲ್ಲಾ ನಿನ್ನ ಜೊತೆ ಮಾಡ್ಲಿಕ್ಕೆ ಬರ್ತಿತ್ತ?” +ಲೂಸಿನಾಳ ಮೊಗ್ಗಿನಂತಹ ಮೊಲೆಗಳಿಗೆ ಮುತ್ತಿಡುತ್ತ ಕೃಷ್ಣಪ್ಪ ಅವಳ ಮಾತಿನ ಧಾಟಿಯಲ್ಲಿದ್ದ ತುಂಟತನವನ್ನು ಕಂಡು, +“ನೀನು ಗೌರಿ ಹಾಗೇನೇ. ಆದರೆ ಅವಳು ಸೀರಿಯಸ್ಸಾಗಿಯೂ ಇರ್ತ ಇದ್ದಳು. ನೀನು ಮಾತ್ರ ಚೆಲ್ಲು ಹುಡುಗಿ” ತನಗಾಗಿದ್ದ ನಿರಾಸೆಯನ್ನು ಮರೆಯಲು ಕೃಷ್ಣಪ್ಪ ಪ್ರಯತ್ನಿಸುತ್ತಿದ್ದ. +“ಇದನ್ನೆಲ್ಲ ಮಾಡ್ತಾ ರಾಜಕೀಯಾನ್ನೂ ಚರ್ಚಿಸೋ ಹುಡುಗಿ ನಿನಗೆ ಬೇಕ?” +“ನಾನು ಹೇಳೋದು ನಿನಗೆ ಅರ್ಥವಾಗಲ್ಲ.” +ಈ ಲೂಸಿನಾ ಇವನ್ನೆಲ್ಲ ಎಲ್ಲಿ ಕಲಿತಳೆಂದು ಕೃಷ್ಣಪ್ಪನಿಗೆ ಅಸೂಯೆಯಾಗುತ್ತದೆ. ಯಾವ ಗಂಡು ಇವಳಿಗಿದನ್ನು ಕಲಿಸಿದ? +“ಮದುವೆ ಮಾತು ನೀನು ಶುರು ಮಾಡಿದ ಮೇಲೆ ನಿನ್ನ ದೇಹದಲ್ಲಿದ್ದ ಪುಳಕವೆಲ್ಲ ಬತ್ತಿ ಹೋಯ್ತು. ನಂದೂ ಹೋಯ್ತು.” +ಲೂಸಿನಾ ಎದ್ದು ಶವರ್ ತೆಗೆದುಕೊಳ್ಳಲು ಹೋಗುವಳು. ಕೃಷ್ಣಪ್ಪನೂ ಅವಳ ಹಿಂದೆ ಹೋಗಿ ಅವಳ ಜೊತೆ ಶವರ್‍ನ ತಂಪಾದ ನೀರಲ್ಲಿ ನಿಂತು ಅವಳ ಮೈಗೆ ಸೋಪನ್ನು ಬಳಿಯುವನು. ಮತ್ತೆ ಚುರುಕಾಗುವನು. ಇವಳ ನಿಸ್ಸಹಾಯಕತೆಯನ್ನು ತಾನು ದುರುಪಯೋಗಪಡಿಸಿಕೊಳ್ಳುತ್ತಿದ್ದೇನೆಯೇ ಎಂಬ ಸಂಶಯವನ್ನು ತಳ್ಳಲು ಅವಳನ್ನು ಮುತ್ತಿಡುತ್ತ ಆರಾಧಿಸುವನು. ಈ ಹೆಣ್ಣು ಗಂಡಿನ ಸಂಬಂಧದಲ್ಲಿ ಸಮತೋಲ ಸಾಧ್ಯವೇ ಇಲ್ಲವೆ ಎಂದು ಯೋಚಿಸುತ್ತ ಅಣ್ಣಾಜಿಯ ವಿವರಣೆಯನ್ನು ನೆನೆಯುವನು. ತನ್ನನ್ನು ಪ್ರವೇಶಿಸಿದ ಕೃಷ್ಣಪ್ಪ ಬೇರೇನೋ ಯೋಚಿಸುತ್ತಿರುವುದು ಕಂಡು ಲೂಸಿನಾ ಸಿಟ್ಟಾಗುವಳು. ಈ ಪ್ರೀತಿಯನ್ನು ಮೀರಿದ್ದು ತನ್ನಲ್ಲಿದೆ ಎಂದು ಲೂಸಿನಾಗೆ ತಿಳಿಯುವಂತೆ ಮಾಡುವ ದಾರಿ ಕಾಣದೆ ಕೃಷ್ಣಪ್ಪ ತಬ್ಬಿಬ್ಬಾಗುವನು. +ನಾನು ಅಣ್ಣಾಜಿಗೆ ಈಗ ನಿಜವಾಗಿ ಹತ್ತಿರವಾದೆ ಎಂದು ಕೃಷ್ಣಪ್ಪನಿಗೆ ಈ ದಿನಗಳಲ್ಲಿ ಖುಷಿಯೂ ಇತ್ತು. ಆದರೆ ಲೂಸಿನಾ ಎಷ್ಟು ಸಂಭ್ರಮದಲ್ಲಿ ತನ್ನ ದೇಹವನ್ನು ಹಾಡಿಸಿದ್ದಳೊ ಅಷ್ಟೇ ಸಂಭ್ರಮದಲ್ಲಿ ಇಂಗ್ಲೆಂಡಿಗೆ ಹೋದಳು. ಒಂದು ವರ್ಷದ ನಂತರ ತಾನು ಮದುವೆಯಾಗಿರುವುದಾಗಿ ಬರೆದು ತಮ್ಮಿಬ್ಬರ ಸಂಬಂಧ ಗೊತ್ತಿದ್ದ ತಾನು ಮದುವೆಯಾದ ಡಾಕ್ಟರ್ ಎಡ್ಡಿ ಗ್ರೀನೊ ಎಷ್ಟು ಉದಾರಿಯೆಂದು ಹೊಗಳಿದಳು. ಕೃಷ್ಣಪ್ಪ ಇದನ್ನೆಲ್ಲ ನೆನೆಯುತ್ತ ಚಕಿತನಾಗಿ ಶುದ್ಧ ಪತಿವ್ರತೆಯಾದ ಸೀತೆ ಎಷ್ಟು ಬರಡೆಂದು ಕೊರಗುತ್ತಾನೆ. ಪ್ರಾಯಶಃ ಮದುವೆಯಾಗಿದ್ದರೆ ಲೂಸಿನಾಳೂ ಹೀಗೆ ಆಗುತ್ತಿದ್ದಳೊ ಏನೊ -ಹೇಳುವುದು ಹೇಗೆ? +ನರ್ಸಿನ ಕಡೆ ನೋಡುತ್ತ “ನಿಮ್ಮ ಹೆಸರು? ಮರೆತೇ ಬಿಟ್ಟೆ” ಎನ್ನುತ್ತಾನೆ. +“ಜ್ಯೋತಿ” -ಅವಳು ಮುಗುಳ್ನಗುತ್ತ ಹೇಳುತ್ತಾಳೆ. +“ನಿಮಗೆ ಮದುವೆಯಾಗಿದೆಯಾ? ನನ್ನ ಕುತೂಹಲವನ್ನ ಕ್ಷಮಿಸಿ” +ಹೀಗೆ ಹೆಣ್ಣಿನ ಹತ್ತಿರ ಸಭ್ಯವಾಗಿ ಮಾತಾಡುವ ಕಲೆಯನ್ನು ಕೃಷ್ಣಪ್ಪ ಗೋಪಾಲರೆಡ್ಡಿಯಿಂದ ಕಲಿತದ್ದು. ಸಭ್ಯತನದಲ್ಲಿ ತೀವ್ರತೆ ಕುಗ್ಗುತ್ತದೆ ಎಂಬ ಅವನ ಭಾವನೆಯನ್ನು ಹಾಸ್ಯಮಾಡಿ ಮಾಡಿ ಗೋಪಾಲರೆಡ್ಡಿ ಹೆಚ್ಚು ಕಮ್ಮಿ ಹೋಗಲಾಡಿಸಿದ್ದ. +“ಇಲ್ಲ ಆಗಬೇಕೂಂತ ಇದೀನಿ. ನನ್ನ ಬಾಯ್‌ಫ಼್ರೆಂಡ್ ಎಂಜಿನಿಯರ್ ಪರೀಕ್ಷೆ ಮುಗಿಸಿ ಎರಡು ವರ್ಷಗಳಿಂದ ಕೆಲಸಕ್ಕಾಗಿ ಅಲೀತ ಇದಾನೆ. ಐದು ವರ್ಷಗಳಿಂದ ನಾವು ಕಾದಿದೇವೆ. ಕೆಲಸ ಸಿಕ್ಕದೆ ಮದುವೆಯಾಗಲ್ಲ ಅಂತಾನೆ ಅವನು.” +ಹೆಣ್ಣು ಎಷ್ಟೊಂದು ಬೇರೆ ಬೇರೆ ರೀತಿಯಲ್ಲಿ ಈ ದೇಹಕ್ಕೆ ಜೀವಸಂಚಾರ ತರುತ್ತಾಳೆಂದು ಆಶ್ಚರ್ಯಪಡುತ್ತ ಕೃಷ್ಣಪ್ಪ ಜ್ಯೋತಿಯ ಚಿಕಿತ್ಸಕ ಸ್ಪರ್ಶಕ್ಕೆ ಮೈಯನ್ನು ಒಡ್ಡುತ್ತಾನೆ. +“ನಾನು ಅವನಿಗೆ ಕೆಲಸ ಕೊಡಿಸಲಿಕ್ಕೆ ಪ್ರಯತ್ನ ಮಾಡಲ?” +ಬೆರಳುಗಳನ್ನು ಮೃದುವಾಗಿ ಮಡಿಸಲು ಕಲಿಸುತ್ತಿದ್ದ ಜ್ಯೋತಿಯ ಮುಖ ಖುಷಿಯಿಂದ ಅರಳಿದ್ದನ್ನು ಕಂಡು ಕೃಷ್ಣಪ್ಪನಿಗೆ ಅವಳ ಬಗ್ಗೆ ತೀವ್ರವಾದ ವಾತ್ಸಲ್ಯ ಮೂಡುತ್ತದೆ. +“ವೀರಣ್ಣ ಅಂತ ಒಬ್ಬ ದೊಡ್ಡ ಕಾಂಟ್ರಾಕ್ಟರ್ ನನ್ನ ಸ್ನೇಹಿತರಿದ್ದಾರೆ. ಅವರೇ ನಿಮ್ಮನ್ನ ಗೊತ್ತು ಮಾಡಿದ್ದು. ಅವರ ಹತ್ರಾನೇ ನಿಮ್ಮ ಬಾಯ್‌ಫ಼್ರೆಂಡಿಗೆ ಕೆಲಸ ಕೊಡಿಸ್ತೇನೆ -ಆಗಬಹುದ” +ಜ್ಯೋತಿಯ ಕಣ್ಣುಗಳು ಒದ್ದೆಯಾಗುತ್ತವೆ! +“ಅವನ ಕಾನ್ಫಿಡೆನ್ಸೇ ಹೊರಟು ಹೋಗಿದೆ ಗೊತ್ತ ಕೆಲಸ ಸಿಗ್ದೆ? ತಿಂಗಳಿಗೆ ಮುನ್ನೂರಾದರೂ ಸಾಕು ನಮಗೆ. ದಯವಿಟ್ಟು………” +ಕೃಷ್ಣಪ್ಪ ಅವಳ ಮುಂದಿನ ಮಾತನ್ನು ತಡೆಯುತ್ತಾನೆ. +* +* +* +ನಿನ್ನ ಸಂಗದಲ್ಲಿ ಅವನ ದೇಹ ಅರಳುವಂತಾಗಲಿ ಎಂದು ಮನಸ್ಸಲ್ಲೆ ಹಾರೈಸುತ್ತಾನೆ. ಕಾಮದ ಸಂದರ್ಭದಲ್ಲಿ ಇನ್ನೊಬ್ಬ ಗಂಡೂ ಸುಖಪಡಬೇಕೆಂದು ತನಗೀಗ ಹಠಾತ್ತನೆ ಅನಿಸಿದ್ದಕ್ಕಾಗಿ ಚಕಿತನಾಗುತ್ತಾನೆ. ಈ ತನಕ ಅವನು ಬೇರೊಬ್ಬ ಕಾಮದಲ್ಲಿ ಸಾರ್ಥಕವಾಗಬೇಕೆಂಬ ಆಸೆ ಮೂಡಲಾರದಂಥ ಅಸೂಯೆ ತನ್ನಲ್ಲಿನ್ನೂ ಉಳಿದಿರಬಹುದೆಂದು ಎಂದು‌ಒಕ್ಂಡಿದ್ದ. ಆದರೆ ಈಗ ತನ್ನ ಎದುರು ಸುಂದರವಾಗಿ ನಿಂತ ಹೆಣ್ಣು ಇನ್ನೊಬ್ಬನಿಂದ ಸುಖಪಡಲೆಂಬ ಆಸೆ ತನ್ನಲ್ಲಿ ಉಕ್ಕಿತೆಂದು ಸಂತೋಷಪಟ್ಟ. +* +* +* +ಅವತ್ತು ರಾತ್ರೆ ಮಹೇಶ್ವರಯ್ಯ ಮನೆಗೆ ಬಂದವರು ಊಟ ಬೇಡವೆಂದು ಮುಸುಕು ಹೊದ್ದು ಮಲಗಿದ್ದರು. ನಾಗೇಶನಿಂದ ವೀಲ್‌ಚೇರನ್ನು ತಳ್ಳಿಸಿಕೊಂಡು ಅವರ ರೂಮಿಗೆ ಹೋಗಿ, ನಾಗೇಶನನ್ನು ಹೊರಗೆ ಕಳಿಸಿ ಬಾಗಿಲು ಹಾಕಿಸಿಕೊಂಡು ಅವರನ್ನು ಎಬ್ಬಿಸಿದ. ಮಹೇಶ್ವರಯ್ಯ ಕುಡಿದಿದ್ದರು. ಅವರ ಕಣ್ಣುಗಳು ಕೆಂಪಾಗಿದ್ದವು. ಮುಖ ಕಳೆಗುಂದಿತ್ತು. ಬೆಳಿಗ್ಗೆಯೇ ಅವರ ಕೈಗಳು ನಡುಗುವುದನ್ನು ಕೃಷ್ಣಪ್ಪ ಗಮನಿಸಿದ್ದ. +“ಏನು ವಿಷಯ? ಯಾಕೆ ಹೀಗಾಗಿದೀರಿ ನೀವು?” ಎಂದ. +ಅವರಿಗೆ ಕೇಳಿದ ಪ್ರಶ್ನೆ ತಾನೇ ಕೇಳಿಕೊಂಡ ಪ್ರಶ್ನೆ ಎನ್ನಿಸುವಂಥ ಧಾಟಿಯಲ್ಲಿ ಕೃಷ್ಣಪ್ಪ ಮಾತಾಡಿದ್ದ. ಸಹಾನುಭೂತಿ ಕನಿಕರಗಳ ಧಾಟಿಯಲ್ಲಿ ಅವರ ಜೊತೆ ಮಾತಾಡುವುದು ಕೃಷ್ಣಪ್ಪನಿಗೆ ಸಾಧ್ಯವೇ ಇರಲಿಲ್ಲ. ಅಂಥ ಭಾವನೆಗಳನ್ನು ತನ್ನಲ್ಲಿ ಉಂಟುಮಾಡುತ್ತಿದ್ದೇನೆಂದು ಮಹೇಶ್ವರಯ್ಯ ತಿಳಿದರೆ ಅವರಿಗೆ ನೋವಾಗುತ್ತದೆಂದು ಕೃಷ್ಣಪ್ಪನಿಗೆ ಗೊತ್ತು. ತನ್ನೆದುರು ಅವರು ಇದರಿಂದ ಸಣ್ಣವರಾದಂತೆ ಎಂಬುದೂ ಅಲ್ಲ ಇದಕ್ಕೆ ಕಾರಣ. ತನಗಿರುವಂತೆ ಮಹೇಶ್ವರಯ್ಯನಿಗೆ ತಾನು ಯಾವಾಗಲೂ ಗಟ್ಟಿ ದೃಢ ಎಂದು ತೋರಿಸಿಕೊಳ್ಳುವ ಅಗತ್ಯವಿರಲಿಲ್ಲ. “ಬೆಟ್ಟದಡಿ ಹುಲ್ಲಾಗು” ಎಂಬ ಮಂಕುತಿಮ್ಮನ ಕಗ್ಗದ ಸಾಲು ಅವರಿಗೆ ತುಂಬ ಪ್ರಿಯೆವೆಂದು ಕೃಷ್ಣಪ್ಪನಿಗೆ ಗೊತ್ತು. ಯಾರ ಕಣ್ಣಿಗೂ ಬೀಳದಂತೆ ಪುಟ್ಟಗೆ, ಸಣ್ಣಗೆ, ಯಾವ ಸ್ಪಷ್ಟ ಬಣ್ಣವೂ ಇಲ್ಲದೆ ತನ್ನೊಳಗೇ ಹಾಡಿಕೊಳ್ಳುತ್ತ ಇರುವ ಹಕ್ಕಿಯಂತೆ ಇರಬೇಕೆಂಬುದು ಅವರ ನಿಲುವು. ಯಕ್ಷಗಾನದ ಕೋಡಂಗಿಯಂತೆ ಬಳುಕುತ್ತ, ಬಾಗುತ್ತ, ಲಾಗ ಹಾಕಿ ನಗಿಸುತ್ತ ಕೊಬ್ಬಿದವನ ಎದುರು ಕಣ್ ಕಣ್ ಬಿಡುತ್ತ ತನ್ನ ಒಳಗನ್ನು ರಕ್ಷಿಸಿಕೊಳ್ಳಬೇಕೆಂಬ ಜೀವನ ಕಲೆಯ ತತ್ತ್ವ ಅವರದ್ದು. ವಾರಂಗಲ್ ಠಾಣೆಯಲ್ಲಿ ದಪ್ಪ ಮೋರೆಯ ಅಧಿಕಾರಿ ಕೃಷ್ಣಪ್ಪನ ಬಿಡುಗಡೆಯನ್ನು ಮುಂದೂಡಲು ನೆವಗಳನ್ನೊಡ್ಡಿದಾಗ ಅವನಿಗೆ ಹ್ಯಾಪಮೋರೆಯಲ್ಲಿ ಕೈಮುಗಿದು ತಾನೊಬ್ಬ ಕ್ಷುದ್ರ ಜಂತು ಎಂಬ ಭಾವನೆ ಹುಟ್ಟಿಸಿ ಅವನನ್ನಿಷ್ಟು ಕೊಬ್ಬಿಸಿ ತೃಪ್ತಿಪಡಿಸಿ ಕೃಷ್ಣಪ್ಪನನ್ನು ಬಿಡಿಸಿಕೊಂಡಿದ್ದರಂತೆ. ಠಾಣೆಯ ಅನುಭವ ಕೃಷ್ಣಪ್ಪನನ್ನು ಮಂಕಾಗಿಸಿದ್ದ ದಿನಗಳಲ್ಲಿ ದಪ್ಪಮೋರೆಯ ಅಧಿಕಾರಿಯನ್ನು ರಾಕ್ಷಸನನ್ನಾಗಿಯೂ, ತನ್ನನ್ನು ವಿದೂಷಕನನ್ನಾಗಿಯೂ ಮಾಡಿಕೊಂಡು ತಾನು ಉಪಾಯದಲ್ಲಿ ಅವನನ್ನು ಗೆದ್ದುದನ್ನು ಯಕ್ಷಗಾನದ ರೀತಿಯಲ್ಲಿ ಅಭಿನಯಿಸಿ ತೋರಿಸಿ ಕೃಷ್ಣಪ್ಪನನ್ನು ನಗಿಸಿದ್ದರು. ಕೃಷ್ಣಪ್ಪನ ಮೂಲದಲ್ಲಿದ್ದ ಆತ್ಮಾಭಿಮಾನವನ್ನು ನಾಶ ಮಾಡಲು ಪ್ರಯತ್ನಿಸಿದ್ದ ಕ್ರೌರ್ಯ ಮಹೇಶ್ವರಯ್ಯನ ಅಭಿಪ್ರಾಯದಲ್ಲಿ ಕಾಲಾನುಕಾಲದಿಂದಲೂ ಉಬ್ಬುತ್ತ ಹೋಗುವುದರಿಂದಲೇ ಒಡೆಯುವ ಒಂದು ರಾಕ್ಷಸ ಬಣ್ಣದ ವೇಷವಾಗಿ ಮಾತ್ರ ಕಂಡು, ಕೃಷ್ಣಪ್ಪ ತನ್ನ ಜೀವದ ಸೂಕ್ಷ್ಮ ಬೇರುಗಳಿಗಾಗಿದ್ದ ಆಘಾತದಿಂದ ಚೇತರಿಸಿಕೊಂಡಿದ್ದ. ಮಹೇಶ್ವರಯ್ಯ ಉಮೇದು ಬಂದಾಗ ಮಾಡುವ ಈ ವಿದೂಷಕ ಅಭಿನಯ ಕಂಡು ಗೋಪಾಲರೆಡ್ಡಿ ಕೃಷ್ಣಪ್ಪನಿಗೆ ಹೇಳಿದ್ದ: “ಕೋಡಂಗಿ ನೋಡು -ಹೇಗೆ ನೀನು ಹೇಳೋ ಒಳಗೆ ಉರಿಯೋ ದೀಪಾನ ಉಳಿಸಿಕೋತಾನೆ! ಅಂದ ಹಾಗೆ ನಮ್ಮೂರಿನ ರೈತರಲ್ಲೂ ಈ ಗುಣ ಕಂಡಿದೀನಿ ನಾನು. ನನ್ನ ಅಪ್ಪನ ಕಣ್ಣಿಗೇ ಬೀಳದಂತೆ ಇದ್ದುಬಿಡ್ತಾರೆ. ಬಿದ್ದರೂ ತಾವು ಅಲ್ಪರು ಅನ್ನೋ ಹಾಗೆ ನಟಿಸ್ತಾರೆ……” ಕೃಷ್ಣಪ್ಪ ಈ ವಿಧಾನವನ್ನು ಒಪ್ಪುವುದಿಲ್ಲ. ಅವನ ಮನೋಧರ್ಮಕ್ಕೆ ಅದು ವಿರುದ್ಧವಾದದ್ದು. +ಮಹೇಶ್ವರಯ್ಯ ಸೋಲುವರಲ್ಲ ಎಂದು ಕೃಷ್ಣಪ್ಪ ತಿಳಿದಿದ್ದ. ಖಾಹಿಲೆಯಿಂದ ಮಲಗಿದ ಮೇಲೆ ತನ್ನ ಹಾದಿ ದುರ್ಗಮವೆನ್ನಿಸತೊಡಗಿದ್ದರಿಂದ ಮಹೇಶ್ವರಯ್ಯನೂ ಹಿಗೆ ಕಳೆಗುಂದಿರುವುದು ಅವನಿಗೆ ಸಮಸ್ಯೆಯಾಗಿತ್ತು. ಆದ್ದರಿಂದ ಮಹೇಶ್ವರಯ್ಯನನ್ನು ಅವನು ಪ್ರಶ್ನಿಸಿದಾಗ ಅವರಿಗೆ ತಮ್ಮ ಸ್ಥಿತಿಯ ಮೇಲೆ ಇನ್ನೂ ಪೂರ್ಣ ಸ್ವಾಮ್ಯವಿದೆಯೆಂದು ತಿಳಿದಿದ್ದ. +ಮಹೇಶ್ವರಯ್ಯ ಎದ್ದು ಕೂತು ಸ್ವಲ್ಪ ಆಲೋಚಿಸಿ ಹೇಳಿದರು: +“ಬೇಡ ನಿನಗೆ ಹೇಳಬಾರದು ನಾನು. ನಿನಗದರಿಂದ ತೊಂದರೆಯುಂಟು.” +ಕೃಷ್ಣಪ್ಪನಿಗೆ ಥಟ್ಟನೇ ಮಹೇಶ್ವರಯ್ಯ ಅಸಹಾಯಕರಾಗಿದ್ದಾರೆಂದು ಗೊತ್ತಾಯಿತು. ತನ್ನ ಸಹಾಯ ಅವರಿಗೆ ಅಗತ್ಯವಿದ್ದರೂ ಕೇಳುತ್ತಿಲ್ಲ. ಇದರಿಂದ ಅವನಿಗೆ ಅವಮಾನವಾದಂತೆ ಅನ್ನಿಸಿತು. ಸಿಟ್ಟುಬಂತು. +“ನನಗೆ ಅವಮಾನವಾಗುವಂತೆ ಮಾಡ್ತಿದೀರಿ ನೀವು” +ಮಹೇಶ್ವರಯ್ಯ ತಲೆಯಲ್ಲಾಡಿಸುತ್ತ ಕನಿಕರದಿಂದ ಅವನನ್ನು ನೋಡುತ್ತ ಹೇಳಿಕೊಂಡರು. +ಈಚೀಚೆಗೆ ಅವರಿಗೆ ಜೂಜಿನ ಉದ್ರೇಕವಿಲ್ಲದೆ ಬದುಕುವುದೇ ಸಾಧ್ಯವಾಗುತ್ತಿರಲಿಲ್ಲ. ದೇವಿಯ ಪೂಜೆಗೆ ಎಷ್ಟೋ ಬಾರಿ ಕೂತು ನೋಡಿದರು. ಓಡುವ ಕುದುರೆಯೇ ಅವರಿಗೆ ಕಾಣುವುದು. ತಮಗಿದ್ದ ಆಸ್ತಿಯೆಲ್ಲ ಇದರಿಂದ ಕರಗಿತು. ಜೀವನ ದುಸ್ತರವಾಗುತ್ತ ಹೋಯಿತು. ಮೊನ್ನೆ ಯಾರ್ಯಾರೋ ಮಿತ್ರರಿಂದ ಹತ್ತು ಸಾವಿರ ರೂಪಾಯಿ ಸಾಲ ಪಡೆದು ಬಂದರು. ತಾನು ಕಳಕೊಂಡದ್ದನ್ನೆಲ್ಲ ಗೆಲ್ಲುವೆನೆಂದು ಖಾತ್ರಿಯಾಗಿ ನಂಬಿ ಜೂಜಾಡಲು ಬಂದಿದ್ದರು. ಆದರೆ ತಂದಿದ್ದ ಹಣವನ್ನೆಲ್ಲ ಕಳೆದುಕೊಂಡರು. +“ಅಷ್ಟೇನಾ? ನಿಮಗೆ ಆ ಹತ್ತು ಸಾವಿರ ನಾನು ಕೊಡ್ತೇನೆ.” +ಕೃಷ್ಣಪ್ಪನಿಗೆ ತಾನಿಷ್ಟು ಮಾಡಬಹುದೆಂದು ತುಂಬ ಖುಷಿಯಾಗಿತ್ತು. ಮಹೇಶ್ವರಯ್ಯ ತನ್ನ ಮೇಲೆ ಸುರಿದ ಹಣಕ್ಕೆ ಲೆಕ್ಕವಿರಲಿಲ್ಲ. ಅವನು ಈ ತನಕ ಅವರಿಗೆ ಒಂದೇ ಒಂದು ಕಾಸು ಕೊಟ್ಟಿರಲಿಲ್ಲ. +“ಕೊಡ್ತೀಯಾಂತ ನನಗೆ ಗೊತ್ತು. ಆದರೆ ಆ ಹಣಾನ್ನೂ ನಾನು ನಾಳೆ ಜೂಜಾಡ್ತೀನಲ್ಲ?” +“ಆಡಿ. ನೀವು ಗೆಲ್ಲಲೂಬಹುದಲ್ಲ?” +ಮಹೇಶ್ವರಯ್ಯನ ಕಣ್ಣುಗಳು ಭರವಸೆಯಲ್ಲಿ ಹೊಳೆದವು! +“ಹೌದು. ಆದರೆ ಸೋಲಲೂಬಹುದು -” +“ಸೋಲಿ -” ಕೃಷ್ಣಪ್ಪ ನಗುತ್ತ ಹೇಳಿದ. +“ಇಲ್ಲ -ಧಾರವಾಡದ ಹತ್ತಿರ ಒಂದು ಹಳ್ಳೀಲಿ ನನಗೆ ಸ್ವಲ್ಪ ತೋಟವಿದೆ. ಒಂದು ಗುಡಿಸಿಲಿದೆ. ಅಲ್ಲಿ ನನ್ನ ಉಳಿದ ಕಾಲವನ್ನು ಕಳೆಯೋಣ, ಈ ಜೂಜನ್ನ ಬಿಟ್ಟುಬಿಡೋಣ ಅಂತಿದ್ದೆ -” +“ನಾಳೆ ಸೋತರೆ ಹಾಗೇ ಮಾಡಿ -” +ಮಹೇಶ್ವರಯ್ಯ ತುಂಬ ಗೆಲುವಾಗಿಬಿಟ್ಟದ್ದು ಕಂಡು ಕೃಷ್ಣಪ್ಪನಿಗೆ ಸಂತೋಷವಾಯಿತು. ಇಬ್ಬರೂ ಹಿಂದಿನಂತೆಯೇ ಪರಸ್ಪರ ನೋಡಿ ನಕ್ಕರು. ಆದರೆ ಕ್ಷಣ ಕಳೆದು ಮಹೇಶ್ವರಯ್ಯ ಚಿಂತಾಕ್ರಾಂತರಾಗಿ “ಭೋ” ಎಂದು +“ನಿನಗೆ ಇದರಿಂದ ತೊಂದರೆಯುಂಟು” ಎಂದು ಎದುರಿಗಿದ್ದ ಬಾಗಿಲನ್ನು ದುರುಗುಟ್ಟಿದರು. +“ಇರಲಿ ಬಿಡಿ” ಎಂದು ಕೃಷ್ಣಪ್ಪ ನಾಗೇಶಾ ಎಂದು ಕರೆದು ತನ್ನ ವೀಲ್‌ಚೇರನ್ನು ರೂಮಿಗೆ ತಳ್ಳಿಸಿಕೊಂಡು ಹೋಗಿ ಹೆಂಡತಿಯನ್ನು ಬರಹೇಳಿದ. ಬಾಗಿಲು ಮುಚ್ಚುವಂತೆ ಹೇಳಿ, +“ಸೀತ ಬ್ಯಾಂಕಲ್ಲಿ ನಿನ್ನ ಹೆಸರಲ್ಲಿ ಹತ್ತು ಸಾವಿರ ಇದೆಯಲ್ಲ -ಅದು ನಾಳೆ ಬೆಳಗ್ಗೆ ನನಗೆ ಬೇಕು” +ಹೆಂಡತಿಯನ್ನು ಹೆಸರು ಹಿಡಿದು ಕೃಷ್ಣಪ್ಪ ಕರೆಯುವವನಲ್ಲ. ಅವಳಿಗೆ ಆಶ್ಚರ್ಯವಾಗಿತ್ತು. +“ಯಾಕೆ?” ಎಂದಳು. +“ಮಹೇಶ್ವರಯ್ಯನಿಗೆ ಕೊಡಬೇಕಿತ್ತು.” +“ನೀವು ಸೋಷಲಿಸ್ಟ್ ಆಗಿ ಕುದುರೆಯ ಬಾಲಕ್ಕೆ ಹಣ ಕಟ್ಟೋದನ್ನ …” +“ಅದೆಲ್ಲ ಬೇಡ ಕೊಡು” ಕೃಷ್ಣಪ್ಪ ಗುಡುಗಿದ. +“ಇಲ್ಲ -ಕೊಡೋಕೆ ದುಡ್ಡಿಲ್ಲ -” +ಕೃಷ್ಣಪ್ಪ ಕೈ ಎತ್ತಿದ್ದು ನೋಡಿ ದೂರ ಸರಿದಳು. +“ಇದೆ -ಕೊಡು” +ಅವನ ಮನಸ್ಸು ನೆಗೆದು ಅವಳ ಕೈ ಹಿಡಿದು ಜಗ್ಗುವ ಸನ್ನಾಹ ಮಾಡಿತು. ಆದರೆ ದೇಹ ಹಂದಲಿಲ್ಲ. ಕೃಷ್ಣಪ್ಪನ ಕಣ್ಣುಗಳಲ್ಲಿ ನೀರು ಉಕ್ಕಿ ತುಟಿಗಳು ಅದುರತೊಡಗಿದುವು. +ಸೀತೆ ಮೆತ್ತಗಾಗಿ ಹೇಳಿದಳು: +“ಜಯಮಹಲ್ ಬಡಾವಣೆಯಲ್ಲಿ ಟ್ರಸ್ಟ್ ಬೋರ್ಡು ನನಗೊಂದು ಸೈಟ್ ಸ್ಯಾಂಕ್ಷನ್ ಮಾಡಿದೆ. ಅದನ್ನ ಕೊಳ್ಳೋಕೆ ಆ ಹಣ ಇಟ್ಟಿದೀನಿ….” +ಕೃಷ್ಣಪ್ಪನ ಕಣ್ಣುಗಳಲ್ಲಿ ನೀರಿಳಿದುವು . ಬಲಗೈಯಿಂದ ಒರೆಸಿಕೊಳ್ಳುತ್ತ – +“ಯಾವ ಸೈಟು” ಎಂದು ಬಿಕ್ಕಿದ. +“ವೀರಣ್ಣ ಅಪ್ಲಿಕೇಶನ್ ಹಾಕ್ಸಿದ್ರು. ಸ್ಯಾಂಕ್ಷನ್ ಆಯ್ತು” +ಸೀತೆ ಮೃದುವಾಗಿ ಹೇಳಿ ತಲೆ ತಗ್ಗಿಸಿದಳು. ಈ ಜಯಮಹಲ್ ಸೈಟುಗಳ ಬಗ್ಗೆ ಅಸೆಂಬ್ಲಿಯಲ್ಲಿ ಕೃಷ್ಣಪ್ಪ ಗಲಾಟೆ ಮಾಡಿದ್ದ. ಓಪನ್ ಮಾರ್ಕೆಟ್ಟುಗಳಲ್ಲಿ ನಲವತ್ತು ಐವತ್ತು ಸಾವಿರ ಬೆಲೆಬಾಳುವ ಸೈಟುಗಳನ್ನು ಏಳೆಂಟು ಸಾವಿರಕ್ಕೆ ನಿಗದಿ ಮಾಡಿ ಪೇಪರಿನಲ್ಲಿ ಪ್ರಕಟವಾದ್ದು ಕಂಡು ಕೃಷ್ಣಪ್ಪ ಈ ಸೈಟುಗಳನ್ನು ಮಂತ್ರಿಗಳು ತಮ್ಮಲ್ಲಿ ತಮ್ಮ ಬಳಗದವರಲ್ಲಿ ಹಂಚಿಕೊಳ್ಳಬಹುದೆಂದು ಗುಮಾನಿಪಟ್ಟಿದ್ದ. ಈಗ ಮಂತ್ರಿಮಂಡಳ ತನ್ನ ಹೆಂಡತಿಗೂ ಒಂದು ಸೈಟ್ ಕೊಟ್ಟು ತನ್ನ ಬಾಯಿ ಮುಚ್ಚಿಸಲು ಪ್ರಯತ್ನಿಸಿದೆ. ತನ್ನ ಉಮ್ಮಳವನ್ನು ಹತ್ತಿಕ್ಕಿಕೊಂಡು ಕೃಷ್ಣಪ್ಪ ಹೇಳಿದ, “ಸೀತ -ನೀನು ಈ ಸೈಟನ್ನು ಕೊಂಡುಕೋಬಾರದು.” +“ಯಾಕೆ? ನೀವೇನೂ ನನಗೆ ಮಾಡಬೇಡಿ. ಆದರೆ ಸೈಟ್ ಕೊಳ್ಳೋದು ನನ್ನ ಹಕ್ಕು. ಅದಕ್ಕೆ ಅಡ್ಡ ಬರಬೇಡಿ.” +“ಸೀತ, ಈ ಸೈಟು ನಮಗೆ ಬೇಡ. ನಾನು ಬೇರೆ ನಿನಗೆ ಕೊಂಡುಕೊಡ್ತೀನಿ” ಕೃಷ್ಣಪ್ಪ ಸಮಾಧಾನದಿಂದ ಹೇಳಿದ. +“ಕೊಡ್ತೀರಿ. ಕೊಡ್ತೀರಿ. ನಾಳೆ ನಿಮಗೆ ಏನಾದರೂ ಆದರೆ ನಾನು ನಿಮ್ಮ ಮಗಳು ಬಾಯಿಗೆ ಮಣ್ಣು ಹಾಕಿಕೋಬೇಕ?” +ಕೃಷ್ಣಪ್ಪ ಕಣ್ಣುಗಳನ್ನು ಮುಚ್ಚಿದ. +“ಹೋಗು. ಹೋಗು. ನನ್ನ ಹತಿರ ಸುಳೀಬೇಡ ಹೋಗು” ಎಂದು ಸಣ್ಣದನಿಯಲ್ಲಿ ಕರ್ಕಶವಾಗಿ ಕಿರುಚಿದ. +ಅವಳು ಹೋದ ಮೇಲೆ “ನಾಗೇಶ ” ಎಂದು ಕೂಗಿದ. ಕಣ್ಣುಗಳನ್ನು ಮುಚ್ಚಿದ್ದೇ ಹೇಳಿದ. +“ಈಗಲೇ ಹೋಗಿ ವೀರಣ್ಣನ ಹತ್ತಿರ ಹತ್ತು ಸಾವಿರ ಬೇಕೂಂತ ಕೇಳಿ ತಗೊಂಬಾ. ಆಟೋ ಮಾಡಿಕೊಂಡು ಹೋಗು. ಪರ್ಸಲ್ಲಿ ದುಡ್ಡೀರಬೇಕು ತಗೋ” +ನಾಗೇಶ ತನ್ನಲ್ಲಿ ಹಣವಿದೆಯೆಂದು ಹೋದ. ಮುಕ್ಕಾಲು ಗಂಟೆಯಲ್ಲಿ ಹಿಂದಕ್ಕೆ ಬಂದು ದೊಡ್ಡದೊಂದು ಕವರನ್ನು ಕೃಷ್ಣಪ್ಪನಿಗೆ ಕೊಟ್ಟ. ವೀರಣ್ಣ ದುಡ್ಡಿನ ಜೊತೆ ಒಂದು ಚೀಟಿಯನ್ನಿಟ್ಟಿದ್ದ. +“ಇದರಲಿ ಹದಿನೈದು ಸಾವಿರವಿದೆ. ಹೆಚ್ಚು ಬೇಕಾದರೆ ನಾಳೆ ಹೇಳಿಕಳಿಸಿ. ತಮ್ಮ ವಿಧೇಯ, ವೀರಣ್ಣ.” +“ತಳ್ಳು” ಎಂದು ಮಹೇಶ್ವರಯ್ಯನ ಕೋಣೆಗೆ ಹೋದ. ಅವರು ಎದ್ದು ಕೂತು ತಾನು ಬರುವ ಮುಂಚೆ ಧ್ಯಾನದಲ್ಲಿದ್ದಂತೆ ಕಂಡಿತು. +“ಹದಿನೈದು ಸಾವಿರ ಇದೆ. ನಾಳೆ ಬೇಕಾದರೆ ಇನ್ನಷ್ಟು ಕೊಡ್ತೇನೆ” ಎಂದು ಅವರ ಉತ್ತರಕ್ಕೆ ಕಾಯದೆ ನಾಗೇಶನಿಂದ ತಳ್ಳಿಸಿಕೊಂಡು ರೂಮಿಗೆ ಹೋಗಿ ಮಲಗಿದ. +* +* +* +ಕೃಷ್ಣಪ್ಪ ಸೀತೆಯ ಜೊತೆಗೆ ಜಗಳವಾಡಿದಾಗ್ಗೆಲ್ಲ ಮಗುವಿಗೆ ಹೇಗೋ ಅದು ಗೊತ್ತಾಗಿಬಿಡುವುದು. ಮಗಳು ತುಟಿಪಿಟಕ್ಕೆನ್ನದೆ ಕೊಟ್ಟದ್ದನ್ನು ತಿಂದು, ತಾಯಿ ತಲೆಯ ಸಿಕ್ಕು ಬಿಡಿಸುತ್ತ ಬಾಚಣಿಗೆಯಿಂದ ಅವಸರದಲ್ಲಿ ಜಗ್ಗುವಾಗ ಚೂರೂ ಪ್ರತಿಭಟಿಸದೆ ಮಂಕಾಗಿ ಕೂತಿದ್ದನ್ನು ಕಂಡು ಕೃಷ್ಣಪ್ಪನಿಗೆ ದುಃಖವಾಯಿತು. ನೀಟಾಗಿ, ಎರಡು ಜಡೆ ಹಾಕಿಕೊಂಡು ಯೂನಿಫ಼ಾರಂ ಧರಿಸಿ ಸ್ಕೂಲಿಗೆ ಹೊರಟ ಗೌರಿಯನ್ನು “ಗೌರಾ” ಎಂದು ಕರೆದ. ತನ್ನ ಹತಿರ ಬರಲು ಮಗಳು ಅಂಜುತ್ತಿದ್ದಾಳೆಂದು ಅನುಮಾನವಾಯಿತು. ಇನ್ನೊಮ್ಮೆ ಕರೆದ. ಹತ್ತಿರ ಬಂದು ನಿಂತಳು. ಅವಳ ಬೆನ್ನಿನ ಮೇಲೆ ಕೈಯಿಟ್ಟು ತಡವಿದ. ತಿರುಗಿಸಿ ನಿಲ್ಲಿಸಿಕೊಂಡು ಅವಳ ಮುಖ ನೋಡಿದ. ತನ್ನ ಕಣ್ಣುಗಳು -ಆದರೆ ತಾಯಿಯ ಗುಜ್ಜು ಮೂಗು. ತಾಯಿ ಕೋಪದಲ್ಲಿ ಹರಿದು ಬಾತುಕೊಂಡಿದ್ದ ತುಟಿ ಈಗ ಸರಿಹೋಗಿದೆ. ಮೂಗಿನಲ್ಲಿ ಸಿಂಬಳ ಸುರಿಯುತ್ತಿಲ್ಲ. ನಿರ್ಭಾವದಲ್ಲಿ ನಿಂತ ಎಳೆ ಮಗುವಿನ ಮುಖದಲ್ಲಿ ವಯಸ್ಸಿಗೆ ಮೀರಿದ ಪ್ರಬುದ್ಧತೆ ಮೂಡಿದಂತೆ ಕಂಡು ಅವನಿಗೆ ಕಸಿವಿಸಿಯಾಯಿತು. ಮಗು ಒಂಟಿಕಾಲಿನಲ್ಲಿ ಕುಣಿಯುತ್ತಲೋ ಬೀರುವಿನಲ್ಲಿದ್ದುದನ್ನು ಎಳೆದು ಬೀಳಿಸಿ ತಾಯಿಯಿಂದ ಬೈಸಿಕೊಂಡು ಎಗ್ಗಿಲ್ಲದೆ ಓಡುತ್ತಲೋ ಇರುವುದನ್ನು ಕಂಡು ಬಹಳ ದಿನಗಳಾದುವು ಎನ್ನಿಸಿತು. +ಗೌರಿ ಸ್ಕೂಲಿಗೆ ಹೋದ ಮೇಲೆ ಶುಭ್ರವಾದ ಸಿಲ್ಕ್ ಜುಬ್ಬ ಧರಿಸಿ ಹಣೆಗೆ ವಿಭೂತಿಯಿಟ್ಟು ಬಂದ ವೀರಣ್ಣ ಅದೊಂದು ಸಾಮಾನ್ಯ ಪ್ರಶ್ನೆ ಎನ್ನುವಂತೆ +“ಇನ್ನಷ್ಟು ಬೇಕ?” ಎಂದ. +ಬೇಡವೆಂದ ಕೃಷ್ಣಪ್ಪ, ಅವತ್ತು ರಾತ್ರೆ ಬರುವ ಗೌರಿ ದೇಶಪಾಂಡೆಯನ್ನು ನಿಲ್ದಾಣದಿಂದ ಕರೆತಂದು ಅವರ ಗೆಸ್ಟ್‌ಹೌಸಿನಲ್ಲಿ ಇಳಿಸಬೇಕೆಂದೂ, ಜ್ಯೋತಿಯ ಬಾಯ್‌ಫ಼್ರೆಂಡಿಗೂ ನಾಗೇಶನ ಅಕ್ಕನಿಗೂ ಕೆಲಸದ ವ್ಯವಸ್ಥೆ ಮಾಡಬೇಕೆಂದೂ ಹೇಳಿದ. ಅದೇನು ಮಹತ್ವದ ವಿಷಯವಲ್ಲವೆನ್ನುವಂತೆ “ಆಗಲಿ” ಎಂದ ವೀರಣ್ಣ. ಪಂಚಲಿಂಗಯ್ಯ ಬಂದಿದ್ದರೆಂದೂ ಗೌಡರ ಹತ್ತಿರ ಅಂಥ ಕೆಲಸ ಮಾಡಿಸಕೂಡದೆಂದೂ ಹೇಳಿ ತಾನೇ ಸೀಟಿಗೆ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದಾಗಿಯೂ ತಿಳಿಸಿ, +“ನೀವು ಬೇಗ ಗುಣವಾಗಬೇಕು” +ಎಂದ. ಹೇಳಿದ ಮಾತು ಸಾಮಾನ್ಯವಾದರೂ ಹೇಳಿದ ರೀತಿ ಅರ್ಥಗರ್ಭಿತವಾಗಿತ್ತು. ಕೃಷ್ಣಪ್ಪ ಕೇಳಿದ: +“ನಿಮ್ಮ ಮನಸ್ಸಲ್ಲೇನೋ ವಿಶೇಷವಿದೆ. ಹೇಳಿ” +“ನಿಮ್ಮ ತಲೆ ಕೆಡಿಸಬಾರದೆಂದು ನಿಮ್ಮ ಹತ್ತಿರ ಹೇಳ್ತಾ ಇಲ್ಲ. ನೀವು ತುಂಬ ದೊಡ್ಡ ಜವಾಬ್ದಾರಿ ಹೊರೋ ಕಾಲ ಬಹಳ ದೂರವೇನೂ ಇಲ್ಲ.” +“ನಾನೂ ಅದನ್ನ ಕೇಳಿಸಿಕೊಂಡೆ. ಆದರೆ ಪಕ್ಷಾಂತರ ಮಾಡೋವ್ರ ಜೊತೆ ನಾನು ಸೇರಲ್ವಲ್ಲ” +“ಸೇರಬೇಡಿ. ನೀವೇ ಮಂತ್ರಿಮಂಡಳ ರಚಿಸಿ. ನಿಮಗೆ ಹೊಸ ಗೇಣಿ ಶಾಸನ ತರಲಿಕ್ಕೆ ಇಷ್ಟ ಅಲ್ವ? ತನ್ನಿ. ಬೆಂಬಲ ಕೋಡೋವರು ಕೊಡ್ತಾರೆ. ಬೆಂಬಲ ಸಿಗಲಿಲ್ಲ ಅನ್ನಿ. ರಾಜೀನಾಮೆ ಕೊಟ್ಟರಾಯ್ತು….ಏನೇನೋ ತಮಗೆ ಬುದ್ಧಿವಾದ ಹೇಳೋ ಹಾಗೆ ಮಾತಾಡ್ತಿದೀನಿ. ಕ್ಷಮಿಸಬೇಕು” +“ವೀರಣ್ಣ -ಒಂದು ಮಾತು. ಅದು ಯಾಕೆ ಸೀತೆ ಹತ್ತಿರ ನೀವು ಸೈಟಿಗೆ ಅಪ್ಲೈ ಮಾಡಿಸಿದ್ರಿ?” +“ಒಳ್ಳೆ ತಮಾಷೆಯಾಯ್ತು ನೀವು ಹೇಳೋದು, ಆಕೆಯೇನು ಈ ದೇಶದ ಪ್ರಜೆ ಅಲ್ವ?” +ವೀರಣ್ಣ ನಕ್ಕು ಕೃಷ್ಣಪ್ಪನ ಮುಖ ಗಂಭೀರವಾಗಿರುವುದನ್ನು ಕಂಡು ಅವನೂ ಗಂಭೀರನಾಗಿ ಹೇಳಿದ: +“ಗೌಡರೆ ನೀವು ಎಷ್ಟೇ ದೊಡ್ಡವರಾಗಿರಿ ಹೆಂಗಸರಿಗೆ ಅದು ಗೊತ್ತಾಗೋದು ಇಂಥದೇನಾದ್ರೂ ಸಿಕ್ಕಾಗ. ಅವರನ್ನ ದೂರಿ ಏನು ಪ್ರಯೋಜನ ಹೇಳಿ? ಅವರಿಗಾಗಿ ಅದನ್ನವರು ಬಯಸ್ತಾರ? ಹೆಣ್ಣಿನ ಮೇಲೆ ಗೂಡುಕಟ್ಟೋ ಜವಾಬ್ದಾರಿ. ನಿಮಗೆ ವಿಶಾಲ ಆಕಾಶದಲ್ಲಿ ಹಾರಾಡೋ ಕೆಲಸ -ಇದು ಧರ್ಮ ಅಲ್ಲವ?” +“ಏನೇ ಹೇಳಿ -ಇದು ಕೂಡ ಕರಪ್ಷನ್” +“ಶಿವನೇ ನಿಮ್ಮ ಮಾತು ಚೆನ್ನಾಯ್ತು. ನಿಮ್ಮ ಹೆಂಡ್ತಿ ಕಷ್ಟಪಟ್ಟು ದುಡಿದ ಹಣದಲ್ಲೊಂದು ಸೈಟ್ ತಗೊಂಡರೆ ಕರಪ್ಷನ್ ಆದರೆ, ಸ್ಪೀಡ್‌ಮನಿ ಮಣ್ಣು ಮಶಿ ಅಂತ ಕೊಟ್ಕೊಂಡು ನಮ್ಮಂಥೋರು ಬಿಸಿನೆಸ್ ಮಾಡಬೇಕಲ್ಲ ಅದಕ್ಕೇನು ಅಂತೀರಿ ನೀವು. ಅವರವರಿಗೆ ಅವರವರ ಧರ್ಮ ಸರಿ ಅಲ್ಲವ?” +“ಇಲ್ಲ ನೀವು ಮಾಡ್ತಿರೋದೂ ತಪ್ಪೂಂತ ನಾನು ಅನ್ನೋದು” +“ತಪ್ಪಾದರೆ ತಪ್ಪು ಬಿಡಿ. ಅದು ಸರಿಹೋಗೋದು ಹೇಗೆ? ನಾನು ಸರಿಯಾದಾಗ್ಲ? ಅಥವಾ ದೇಶ ಸರಿಯಾದಾಗ್ಲ? ಈಗ ಪಿ.ಡಬ್ಲ್ಯು.ಡಿ ಇದೆ -ಅದು ಸರಿಹೋಗ್ದೆ ನಾನು ಸರಿಹೋಗೋದು ಸಾಧ್ಯಾನ? ಹೇಳಿ ನೀವೆ. ಯಾರು ಇದನ್ನೆಲ್ಲ ಕೂಲಂಕುಶ ಸರಿ ಮಾಡೋವ್ರು? -ನಿಮ್ಮಂಥವರು. ಅದಕ್ಕೇ ನಾನು ಹೇಳಿದ್ದು -ನೀವು ನಾಯಕರಾಗಬೇಕು, ಮಂತ್ರಿಮಂಡಳ ರಚಿಸಬೇಕೂಂತ. ಥಿಯೇಟರ್ ಹತ್ರ ಕೆಲಸವಿದೆ. ಹೋಗಬೇಕು ಬರ್ಲ ನಾನು?” +ವೀರಣ್ಣ ಹೊರಟು ಹೋದ. ತನ್ನನ್ನು ಹೊಗಳುವಾಗಲೂ, ಕೈಕಟ್ಟಿ ವಿನಯದಿಂದ ನಿಂತಾಗಲೂ ವೀರಣ್ಣ ತನ್ನನ್ನು ಸಂಪೂರ್ಣ ವಹಿಸಿಕೊಂಡವನಂತೆ ಕಾಣುತ್ತಿದ್ದ. ತನ್ನ ನಿರಾಕರಣೆಗೆ, ಅಸಹನೆಗೆ, ಕೋಪಕ್ಕೆ ಕೂಡ ಅವಕಾಶ ಕೊಟ್ಟು, ಆ ಮೂಲಕ ಉಬ್ಬಿಸಿ, ಅದನ್ನೇ ಹೊಗಳಿ ಕೊನೆಗೆ ಗೆಲ್ಲುವ ಸನ್ನಾಹ ಮಾಡಿದ್ದ. ಅವನ ಸ್ವಂತಕ್ಕಾಗಿ ಮಾತ್ರ ಇದನ್ನೆಲ್ಲ ಮಾಡುತ್ತಿದ್ದಾನೆಂದು ಹೇಳುವುದೂ ಕೃಷ್ಣಪ್ಪನಿಗೆ ಸಾಧ್ಯವಿರಲಿಲ್ಲ; ಈಗಿರುವ ಮುಖ್ಯಮಂತ್ರಿಯಿಂದಲೇ ಅವನು ಜಲಾಶಯ ಯೋಜನೆಯೊಂದರ ಕಾಂಟ್ರ್ಯಾಕ್ಟ್ ಪಡೆದಿದ್ದನಲ್ಲವೆ? ವೀರಣ್ಣನಲ್ಲದಿದ್ದರೆ ಇನ್ನೊಬ್ಬ ಪಡೆಯಬಹುದಾಗಿದ್ದ ಕಾಂಟ್ರ್ಯಾಕ್ಟ್ ಅದು. +ಕೃಷ್ಣಪ್ಪನಿಗೆ ವೀರಣ್ಣನ ಆಳ ಅಗಲ ತಿಳಿಯಲಾರದೆ ತಬ್ಬಿಬ್ಬಾಗಿ ವೀಲ್‌ಚೇರಿನ ಮೇಲೆ ಕೂತಿದ್ದಾಗ ಜ್ಯೋತಿ ಬಂದಳು. ಸದ್ದಿಲ್ಲದೆ ಅವನ ಸುತ್ತ ಸುಳಿದಾಡುತ್ತ ಹಾಸಿಗೆಗೆ ಹೊಸ ಶೀಟ್ ಹೊದೆಸಿ, ತಾನು ತಂದ ಗುಲಾಬಿ ಹೂಗಳನ್ನು ಕುಂಡದಲ್ಲಿ ಸುಂದರವಾಗಿ ಜೋಡಿಸಿ ಕೃಷ್ಣಪ್ಪನನ್ನು ತುಂಬ ಕೌಶಲದಿಂದ ಎಬ್ಬಿಸಿ ಮಲಗಿಸಿದಳು. ದೇಹವನ್ನು ಮಸಾಜ್ ಮಾಡುತ್ತ ಗೆಲುವಾಗಿ ತಾನು ರಾತ್ರಿ ನೋಡಿದ ಸಿನಿಮಾದ ಕಥೆ ಹೇಳತೊಡಗಿದಳು. ಸಿನಿಮಾ ನಾಯಕರ ವಿರಹದ ಕಥೆಯನ್ನು ಹೇಳುವ ಕ್ರಮದಲ್ಲೆ, ತನ್ನ ಒಳಗನ್ನೂ ಅಲ್ಲಿ ಸೊರಗುತ್ತಿದ್ದ ತನ್ನ ಸುಖದ ಅಪೇಕ್ಷೆಯನ್ನೂ ಸೂಚಿಸಿದಳು. ಕೆಲಸ ಸಿಗುವ ತನಕ ತನ್ನ ನಾಯಕನಿಗೆ ಅರಳದ ಮೊಗ್ಗಾಗಿ ಉಳಿದಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತಿದ್ದಾಳೆಂದು ಚಕಿತನಾದ. ಬಾಯ್‌ಫ಼್ರೆಂಡಿಗೆ ಕೆಲಸ ಸಿಗುತ್ತಿದೆಯೆಂದು ಅವಳು ಇವತ್ತು ಖುಷಿಯಾಗಿದ್ದಳು. ಪ್ರಾಯಶಃ ಇವತ್ತು ರಾತ್ರಿ ಅವನಿಗೆ ಅರಳುತ್ತಾಳೆ. ಅವಳ ಸಂಭ್ರಮ ಅವಳ ಮೃದುವಾದ ಕೈಗಳಿಂದ ತನ್ನ ಬಡವಾದ ಭುಜ, ತೋಳು, ಪಕ್ಕೆ, ಸೊಂಟ, ತೊಡೆ, ಕಾಲು, ಬೆರಳುಗಳಿಗೆ ಲಯಬದ್ಧವಾಗಿ ಇಳಿಯುತ್ತಿತ್ತು. ತನ್ನ ಸುತ್ತಮುತ್ತಲಿನ ಆರೋಗ್ಯವನ್ನೆಲ್ಲ ತಾನು ಹೀರುತ್ತಿದ್ದೇನೆಂದು ಕೃಷ್ಣಪ್ಪನಿಗೆ ಅನ್ನಿಸಿತು. +ಕುಂಡದಲ್ಲಿ ಸೊಕ್ಕಿ ಉಳಿದವಕ್ಕಿಂತ ಮೇಲೆ ನಿಂತ ಅರಳುತ್ತಿದ್ದ ಗುಲಾಬಿ ಹೂವೊಂದು ಅವನ ಕಣ್ಣು ಸೆಳೆಯಿತು. ಒದ್ದೆ ಆದ್ದರಿಂದ ಹೊಳೆಯುವ ದಳಗಳ ಕಟುವಾದ ಕೆಂಪು; ದೃಷ್ಟಿಯನ್ನು ಒಳಕ್ಕೆಳೆದುಕೊಳ್ಳುವಂತೆ ಅಂಚಿನಲ್ಲಿ ಮುರಿಯುತ್ತ, ತಿರುವಿಕೊಳ್ಳುತ್ತ ಸಣ್ಣದಾಗುತ್ತ, ಕೇಂದ್ರವನ್ನು ಬಚ್ಚಿಟ್ಟುಕೊಳ್ಳುವ ಈ ದಳಗಳ ಮೃದು ಮತ್ತು ಬಿಗಿ; ಆಹ್ವಾನ ಮತ್ತು ರಹಸ್ಯ; ಈ ಬಣ್ಣ ಈ ಬೆಡಗಿಗೂ ಒರಟಾದ ಎಲೆ, ಚೂಪು ಮುಳ್ಳುಗಳ ಹುರಿಯಾದ ಕಾಂಡ -ಹೀಗೇ ಏಕಾಗ್ರವಾಗಿ ಗುಲಾಬಿಯನ್ನು ನೋಡುತ್ತ ಜ್ಯೋತಿಯ ಇಂಪಾದ ಹರಟೆಗೆ ಕಿವಿಯನ್ನು ಒಡ್ಡಿದ, ತಣ್ಣಗೆ ಉರಿಯುವ ಜ್ವಾಲೆಯಂತಿತ್ತು ಗುಲಾಬಿ. ಏನೋ ಹೇಳುತ್ತ ಏನೋ ಬಚ್ಚಿಡುತ್ತ ಇರುವಂತೆ ಅದು ಇದ್ದುದರಿಂದ ಕೃಷ್ಣಪ್ಪನಿಗೆ ಅದನ್ನು ನೋಡುವುದು ಕಷ್ಟವಾಗತೊಡಗಿತು. ಜ್ಯೋತಿಯ ಮುಖವನ್ನು ನೋಡಿದ. ಆಯಾಸ ಪಡದೆ ಅವಳು ತನ್ನನ್ನು ಒತ್ತುತ್ತ ತೀಡುತ್ತ ತನ್ನ ಮಾತಿಗೆ ತಾನೇ ಹಸನ್ಮುಖಿಯಾಗಿರುವಂತೆ ಕಂಡಳು. ಅನಾಯಾಸೇನ ಮರಣಂ ಎಂದು ತಾನು ಆಗೀಗ ಬಯಸಿದ್ದನ್ನು ನೆನೆದ. ಇಲ್ಲ -ಈಗ ಜಡವಾಗಿದ್ದ ದೇಹವನ್ನು ಹುರಿದುಂಬಿಸಬೇಕೆನ್ನಿಸುತ್ತದೆ. ಮರ ಹತ್ತಬೇಕು, ಬಾವಿಯಲ್ಲಿಳಿದು ಕೆಸರು ತೋಡಬೇಕು, ಈಜಬೇಕು, ಗದ್ದೆಯಲ್ಲಿ ಸಸಿ ನೆಡಬೇಕು, ಹೂವಿನಂಥ ಪುಟ್ಟ ಕೋಳಿಮರಿಗಳನ್ನು ಅಂಗೈ ಮೇಲೆ ಇರಿಸಿಕೊಳ್ಳಬೇಕು -ಹೀಗೆ ಏನೇನೋ ಚಪಲಗಳು ಮೂಡುತ್ತವೆ. ವೀರಣ್ಣ ಹೇಳಿದ್ದನ್ನು ತಾನು ಕಿವಿಗೆ ಹಚ್ಚಿಕೊಳ್ಳದಂತೆ ಇದ್ದದ್ದು ಬರಿ ನಟನೆಯಲ್ಲವೆ? ಅಧಿಕಾರದಲ್ಲಿ ಈ ಜಡವಾದ ದೇಹ ಮತ್ತೆ ಚೈತನ್ಯದ ಬುಗ್ಗೆಯಾದೀತೆಂದು ಆಸೆಯಾಗುತ್ತದೆ. ತಾಯಿ ಅವಳ ಮಡಿಲಲ್ಲಿ ಹಲಸಿನ ಹಣ್ಣಿನ ಕಡುಬನ್ನು ಕದ್ದು ತಂದು ಕೊಡುತ್ತಿದ್ದುದು ನೆನಪಾಗುತ್ತದೆ. +ನಾಗೇಶ ವಿಷಣ್ಣನಾಗಿ ತನ್ನೆದುರು ಸುಳಿದದ್ದನ್ನು ಕಂಡು “ಅದೇನೋ ನಾಗೇಶ” ಎಂದ. ಜ್ಯೋತಿ ಸಂಜೆ ಬರ್ತೇನೆ ಎಂದು ಹೊರಟಳು. ನಾಗೇಶ ಉತ್ತರ ಕೊಡಲಿಲ್ಲ. ತನ್ನ ಕಣ್ಣು ತಪ್ಪಿಸಿಕೊಳ್ಳುವ ಅವನ ಹವಣಿಕೆಯಿಂದ ಕಿರಿಕಿರಿಯಾಗಿ ಮತ್ತೆ ಕರೆದ. ನಾಗೇಶ ದುಗುಡದಿಂದ ಕೃಷ್ಣಪ್ಪನಿಗೆ ಅವನು ಜೇಬಿನಲ್ಲಿ ಮಡಿಸಿಟ್ಟಿದ್ದ ಹತ್ತು ಪೈಸದ ಕಿಡಿ ಎಂಬ ಪತ್ರಿಕೆಯನ್ನು ಕೊಡುತ್ತ “ನಾಯಿ ಸೂಳೇಮಕ್ಕಳು. ಏನೋ ಬರೆದಿದ್ದಾವೆ. ಮನಸ್ಸಿಗೆ ಹಚ್ಚಿಕೋಬೇಡಿ” ಎಂದ. +ಕೃಷ್ಣಪ್ಪ ಓದಿದ: ಇಂಥ ಆಪಾದನೆಯನ್ನು ಯಾರೂ ಈವರೆಗೆ ಅವನ ಮೇಲೆ ಹೊರಿಸಿದ್ದಿಲ್ಲ. ’ಮುಖ್ಯಮಂತ್ರಿಯಾಗಲು ಕೃಷ್ಣಪ್ಪಗೌಡರ ಸಂಚು’ ಎಂಬ ಶಿರೋನಾಮೆಯಲ್ಲಿ ಆಪಾದನೆಗಳ ಪಟ್ಟಿಯಿತ್ತು. ಹೆಂಡತಿಯ ಹೆಸರಿನಲ್ಲಿ ಜಯಮಹಲ್ ಬಡಾವಣೆಯಲ್ಲಿ ಸೈಟ್ ಪಡೆದದ್ದು; ವೀರಣ್ಣನೆಂಬ ಕಂಟ್ರ್ಯಾಕ್ಟರ್‍ಗೆ ಪ್ರಸ್ತುತ ಸರ್ಕಾರ ಕೋಟಿಗಟ್ಟಲೆ ಲಾಭವಿರುವ ಜಲಾಶಯದ ಕಾಮಗಾರಿಯನ್ನು ಟೆಂಡರ್ ತಿದ್ದಿಕೊಟ್ಟಿದ್ದರೂ ಆ ಬಗ್ಗೆ ಗೌಡರು ಯಾಕೆ ಸೊಲ್ಲೆತ್ತಿಲ್ಲ? ಗತಿಸಿದ ಭಾರೀ ಜಮೀಂದಾರ ಗೋಪಾಲರೆಡ್ಡಿ, ದುಡ್ಡಿನ ಚೀಲದ ವೀರಣ್ಣ ಇಂಥವರೇ ಯಾಕೆ ಗೌಡರಿಗೆ ಆಪ್ತರು? ತನ್ನ ಹೆಸರಿನಲ್ಲಿ ಫ಼ಿಯೆಟ್ ಪಡೆದು ಅದನ್ನು ವೀರಣ್ಣನ ವ್ಯಭಿಚಾರೀ ಪುತ್ರನ ನಿಶಾಚರ ವೃತ್ತಿಗಳಿಗೆ ಕೊಟ್ಟಿರುವುದು ನಿಜವೆ? ಗೌಡರ ಹೆಂಡತಿ ಬ್ಯಾಂಕೊಂದರಲ್ಲಿ ಗುಮಾಸ್ತೆಯಾಗಿದ್ದವರು ಮ್ಯಾನೇಜರ್ ಸ್ಥಾನಕ್ಕೇರುತ್ತಿರುವುದು ಬರೀ ಗುಸುಗುಸು ಸುದ್ದಿಯೆ? ಆಳುವ ಪಕ್ಷ ಒಡೆಯುತ್ತಿರುವಾಗ ಸದ್ಯದ ಮುಖ್ಯಮಂತ್ರಿಯ ಗುಂಪು ಕ್ರಾಂತಿಕಾರನೆಂದು ಪ್ರತೀತಿ ಪಡೆದ ಗೌಡರನ್ನು ನಾಯಕನನ್ನಾಗಿ ಆರಿಸಿ ತಮ್ಮ ಸರ್ಕಾರ ಉಳಿಸಿಕೊಳ್ಳಲು ನಡೆಯುತ್ತಿರುವ ನಾಟಕದ ಹಿನ್ನೆಲೆಯಲ್ಲಿ ವೀರಣ್ಣ ಎಂ.ಎಲ್.ಎ ಗಳನ್ನು ಎಷ್ಟೆಷ್ಟು ಹಣ ಕೊಟ್ಟು ಕೊಳ್ಳುತ್ತಿದ್ದಾನೆ; ಮುಖ್ಯಮಂತ್ರಿಗೆ ವಿರೋಧವಾದ ಎಡಪಂಥೀಯರ ಜೊತೆ ಸೇರಬೇಕೆನ್ನುವ ಗೌಡರ ಪಕ್ಷದ ಗುಂಪನ್ನೂ ಹೆಚ್ಚು ದುಡ್ಡು ಕೊಟ್ಟು ವೀರಣ್ಣ ಕೊಳ್ಳುತ್ತಿರುವುದು ನಿಜವೆ? ವಿಚಾರವಾದಿಯೆಂದು ಖ್ಯಾತರಾದ ಗೌಡರು ರಹಸ್ಯದಲ್ಲಿ ಮಹೇಶ್ವರಯ್ಯ ಎಂಬ ಶಾಕ್ತ ಸಂಪ್ರದಾಯದವನ ಮೂಲಕ ವಾಮಾಚಾರದ ಪೂಜೆಗಳನ್ನು ಮಾಡಿಸಿ ಮುಖ್ಯಮಂತ್ರಿತ್ವ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ನಿಜವೆ? ಹೆಂಡತಿಗೆ ಹೊಡೆಯುವುದು, ಆರ್ತರಾದ ಹೆಣ್ಣುಮಕ್ಕಳನ್ನು ಭೋಗಿಸುವುದು, ಕುಡಿಯುವುದು, ಕೋಪಾವೇಶದ ಭಂಗಿಗಳಲ್ಲಿ ಜನಪ್ರಿಯತೆ ಗಿಟ್ಟಿಸಿಕೊಂಡು ಅದನ್ನು ಕರಪ್ಟ್ ವ್ಯವಸ್ಥೆಯನ್ನು ಎತ್ತಿ ಹಿಡಿಯಲು ಬಳಸುವುದು -ಇವೆಲ್ಲ ಕ್ರಾಂತಿಕಾರನ ಲಕ್ಷಣಗಳೆ? ಒಂದಾನೊಂದು ಕಾಲದಲ್ಲಿ ನಿಜವಾಗಿಯೂ ಗೇಣಿದಾರರಾಗಿ ಶ್ರಮಿಸಿದ ರೈತ ಕುಟುಂಬದಲ್ಲಿ ಹುಟ್ಟಿದವನೊಬ್ಬ ಹೀಗೆ ಭ್ರಷ್ಟಾಚಾರಿಗಳ ಕೈಗೊಂಬೆ ಆದದ್ದಾದರೂ ಹೇಗೆ? -ಲೇಖನ ಕೊನೆಯಲ್ಲಿ ತುಂಬ ವ್ಯಥೆಯಿಂದ ಕೊನೆಯಾಗಿತ್ತು. ಕೊನೆಯ ವಾಕ್ಯ ಮಾರ್ಮಿಕವಾಗಿ ಗೌಡರ ಅನಾರೋಗ್ಯವೇ ಹೇಗೆ ಜನ ಶತ್ರುಗಳಿಗೂ ಗೌಡರಿಗೂ ಜನರ ಭಾವನೆಯನ್ನು ದೋಚುವ ಸಾಧನವಾಗಿದೆ ಎಂಬುದನ್ನು ದಪ್ಪಕ್ಷರದಲ್ಲಿ ವಿವರಿಸಿತ್ತು. +ಕೃಷ್ಣಪ್ಪನ ಮುಖ ಲೇಖನವನ್ನು ಓದುತ್ತ ಕಾಂತಿಹೀನವಾದ್ದನ್ನು ಕಂಡು ನಾಗೇಶ ಅವನಿಗೆ ಹುರುಪು ತುಂಬಲು ಪ್ರಯತ್ನಿಸಿದ: +“ನಾಗರಾಜ್ ಇದನ್ನು ಬರೆಸಿದ್ದು ಗೌಡರೆ.” +“ನಾಗರಾಜ್ ನನ್ನ ವಿರೋಧಿಸ್ತಾನೆ ನಿಜ. ಆದರೆ ಹೆಸರು ಹಾಕದೇ ಬರೆಯುವ ವ್ಯಕ್ತಿಯಲ್ಲ” +ಕೃಷ್ಣಪ್ಪ ಗಂಭೀರವಾಗಿ ಹೇಳಿದ. +“ಅವನೇ ಬರೆದದ್ದು. ಬೆಳ್ಳಗಿರೋದೆಲ್ಲ ಹಾಲೂಂತ ನೀವು ತಿಳೀತೀರಿ….” +“ಅವರನ್ನು ಬರಹೇಳು. ಹೋಗೋಕೆ ಮುಂಚೆ ಪ್ಯಾಡು ಪೆನ್ನು ಕೊಡು” +ನಾಗರಾಜ್ ತನ್ನ ಹರೆಯದ ದಿನಗಳನ್ನು ನೆನಪು ಮಾಡುವಂತಿದ್ದ -ಅವನ ಉಗ್ರವಾದ ನಿಷ್ಠುರವಾದ ನಿಲುವಿನಲ್ಲಿ. ಅವನ ಅಸಹನೆಯಲ್ಲಿ. ವ್ಯತ್ಯಾಸವೆಂದರೆ, ತಾನು ರಾಜಕೀಯಕ್ಕೆ ಇಷ್ಟವಿಲ್ಲದೇ ಬಂದಿದ್ದೆ, ಜೀವನ ಸಫಲವಾಗಲು ಬೇರೆ ದಿಕ್ಕು ಕಾಣದೆ. ನಾಗರಾಜ್‌ಗೆ ರಾಜಕೀಯವಲ್ಲದೆ ಬೇರೇನೂ ಕಾಣಿಸುವುದೇ ಇಲ್ಲ. ಕ್ರಾಂತಿಯಲ್ಲಲ್ಲದೇ ಜೀವನ ಸಫಲವಾಗುವ ಬೇರೆ ಮಾರ್ಗಗಳೇ ಇಲ್ಲವೆಂದು ತಿಳಿದಿದ್ದಾನೆ. ಒಂದರ ಮೇಲೆ ಒಂದು ಚಾರ್ಮಿನಾರ್ ಸೇದುತ್ತ ಎಲ್ಲರೂ ತನ್ನ ಮೇಲೆ ಉರಿದು ಬೀಳುವಂತೆ ಮಾತಾಡುತ್ತಾನೆ. ತಾನು ಅದೇ ಮಾತನ್ನು ಅದೇ ಧಾಟಿ ತೀವ್ರತೆಗಳಲ್ಲಿ ಮಾತಾಡಿದಾಗ ಸಹಿಸಿಕೊಳ್ಳುವ ಸಹೋದ್ಯೋಗಿಗಳು ನಾಗರಾಜ್ ಬಾಯಿ ತೆರೆದದ್ದೇ ಆದರೆ ಅವನ ಮೇಲೆ ಬೀಳುತ್ತಾರೆ. ಅವನು ಒಬ್ಬ ಶ್ರೀಮಂತ ಕ್ರಿಮಿನಲ್ ವಕೀಲರ ಮಗ -ಡೆಲ್ಲಿ ಸ್ಕೂಲ್ ಅಫ಼್ ಎಕನಾಮಿಕ್ಸ್ ನಲ್ಲಿ ಓದುತ್ತ ಮಾರ್ಕ್ಸಿಸ್ಟ್ ಆಗಿ, ಕಮ್ಯುನಿಸ್ಟ್ ಪಕ್ಷದ ರಷ್ಯಾ ಪರ ನೀತಿಗೆ ವಿರೋಧಿಯಾಗಿ ಬೇರೆ ಮಾರ್ಗ ಕಾಣದೆ -ಸೋಷಲಿಸ್ಟ್ ಬಣವನ್ನು ಸೇರಿದವ. ಸೋಷಲಿಸ್ಟರೆಂದರೂ ಅವನಿಗೆ ಅಲರ್ಜಿ. ತಾನು ಸದ್ಯಕ್ಕೆ ಮಾತ್ರ ಇಲ್ಲಿದ್ದೇನೆ ಎಂದು ಮುಚ್ಚುಮರೆ ಮಾಡದೆ ಹೇಳುತ್ತಿದ್ದ. ತುಮಕೂರಿನ ರೈತರ ಕ್ಷೇತ್ರದಿಂದ ಭಾರಿ ಬೆಂಬಲ ಪಡೆದು ಗೆದ್ದು ಬಂದಿದ್ದನೆಂದು ಉಳಿದವರು ಅವನನ್ನು ಸಹಿಸುತ್ತಾರೆ. ಕೃಷ್ಣಪ್ಪನ ನಾಯಕ ಸ್ಥಾನಕ್ಕೆ ಆತ ಪ್ರತಿಸ್ಪರ್ಧಿಯೆಂದು ಉಳಿದವರು ಯಾವಾಗಲೂ ಕೃಷ್ಣಪ್ಪನಿಗೆ ಚಾಡಿ ತರುತ್ತಾರೆ. ತನಗೆ ಯಾರೂ ಸಮವಲ್ಲವೆನ್ನುವಂತೆ ಕೃಷ್ಣಪ್ಪ ನಡೆದುಕೊಳ್ಳುವ ಠೀವಿಯನ್ನು ನಾಗರಾಜ್ ಸಹಿಸುವುದಿಲ್ಲ. ಪಕ್ಷದ ಸಭೆಯಲ್ಲಿ ಅವನು ಕೃಷ್ಣಪ್ಪನನ್ನು ಫ಼್ಯೂಡಲ್ ಎಂದು ಜರೆದದ್ದಿದೆ. ಆಡಳಿತದ ಜೊತೆ ಯಾವ ಒಪ್ಪಂದಕ್ಕೂ ತಯಾರಿಲ್ಲದ ಅವನಿಗೆ ಕೃಷ್ಣಪ್ಪ ಹೇಳುವುದುಂಟು: “ಆಕಾಶ ಹಂಚಿಕೊಳ್ಳೋ ತನಕ ಭೂಮಿ ಹಂಚಿಕೊಂಡೇನು ಪ್ರಯೋಜನ ಅಂದ ಹಾಗಾಗತ್ತೆ -ನಿಮ್ಮ ವಾದದ ಕ್ರಮದಲ್ಲಿ.” ನಾಗರಾಜ್ ಕಟುವಾಗಿ ಹಂಗಿಸುತ್ತಾನೆ; “ಮಾವೋ ಹೇಳೋದು ನಿಜ; ಎನಿಮಿಗಿಂತ ರಿವಿಷನಿಸ್ಟ್ ಹೆಚ್ಚು ಅಪಾಯಕಾರಿ.” ಈ ನಾಗರಾಜ್ ಕ್ರಮೇಣ ಮೆದುವಾಗಿ ಒಪ್ಪಂದದ ದಾರಿ ಹಿಡಿದು ತಪ್ಪುಗಳನ್ನು ಮಾಡಿಯಾನೆಂದು ಗುಪ್ತವಾಗಿ ಕೃಷ್ಣಪ್ಪ ಬಯಸಿದ್ದಿದೆ. ಆದರೆ ಸುಖ, ಸವಲತ್ತು, ದಾಕ್ಷಿಣ್ಯಗಳಿಂದ ಸಂಪೂರ್ಣ ವಿಮುಖನಾಗಿ ಈ ವರೆಗೆ ನಾಗರಾಜ್ ಬದುಕಿದ್ದ, ಒಂಟಿ ಪಿಶಾಚಿಯಂತೆ. ತನ್ನ ತತ್ವಗಳಿಗೆ ಆತುಕೊಂಡು, ತನ್ನ ವ್ಯಕ್ತಿತ್ವವನ್ನು ತೀವ್ರವಾಗಿ ಒಂದೇ ಗುರಿಗೆ ಮಿತಗೊಳಿಸಿ, ಕೆಂಪಗೆ ಕಾದ ಕಬ್ಬಿಣದ ಸಲಾಕೆಯಂತೆ. ಕೃಷ್ಣಪ್ಪನಿಗೆ ಅವನನ್ನು ಕಂಡು ಅಸೂಯೆಯಾಗುತ್ತಿತ್ತು; ಅವನ ಅಪಕ್ವತೆ ಕಂಡು ಗೊಂದಲವಾಗುತ್ತಿತ್ತು. +ಕೃಷ್ಣಪ್ಪ ಬರೆದದ್ದನ್ನು ಇನ್ನೊಮ್ಮೆ ಓದಿ, ಅದರ ಮೇಲೆ ಪ್ಯಾಡಿಟ್ಟು ನಾಗರಾಜ್‌ಗೆ ಕಾದ. ಇಸ್ತ್ರಿಯಿಲ್ಲದ ಜುಬ್ಬ ತೊಟ್ಟು ಪ್ಯಾಂಟ್ ಹಾಕಿದ ನಾಗರಾಜ್ ಕೆದರಿದ ತಲೆಯನ್ನು ತುಸು ತಗ್ಗಿಸಿ, ಕೆಂಪುಕಣ್ಣುಗಳಲ್ಲಿ ದುರುಗುಡುತ್ತ, ಒಳಗೆ ಬಂದು, ಕುರ್ಚಿ ಎಳೆದು ಕೂತ. ನಾಗೇಶನಿಗೆ ಬಾಗಿಲು ಹಾಕಿಕೊಂಡು ಹೋಗುವಂತೆ ಕೃಷ್ಣಪ್ಪ ಕಣ್ಸನ್ನೆ ಮಾಡಿದ. +“ನಿಮ್ಮ ಆರೋಗ್ಯ ಹೇಗಿದೆ?” ಎಂದು ಕೂಡ ನಾಗರಾಜ್ ಕೇಳಲಿಲ್ಲ. ನಿಜವಾಗಿಯೂ ಇವನು ತನ್ನ ಹರೆಯದ ವ್ಯಂಗ್ಯ ಚಿತ್ರವೇ. ಕೃಷ್ಣಪ್ಪ ತನ್ನ ಮೇಲೆ ಬಂದ ಲೇಖನವನ್ನು ನಾಗರಾಜ್‌ಗೆ ಕೊಟ್ಟ. +“ನೋಡಿದ್ದೇನೆ” ಎಂದ ನಾಗರಾಜ್. +“ನೀವೇ ಇದನ್ನು ಬರೆಸಿದ್ದು ಅಂತ ಉಳಿದವರು ನನಗೆ ಹೇಳಿಯಾರು.” +“ನೀವದನ್ನ ನಂಬದಿದ್ದರೆ ಸಾಕು” +ನಾಗರಾಜ್ ಬಹು ಸರಳವಾಗಿ ನೇರವಾಗಿ ಮಾತಾಡಿದ್ದ. ಅವತ್ತಿನ ರಾತ್ರೆಯ ಮೀಟಿಂಗಲ್ಲೂ ಕೊನೆಯ ತನಕ ಸುಮ್ಮನಿದ್ದು, +“ಪಾರ್ಲಿಮೆಂಟರಿ ರಾಜಕೀಯದ ಗತಿಯೇ ಇದು. ಯಾವ ಗುಂಪಿಗೆ ಸೇರಿ ನಾವು ಸರ್ಕಾರ ರಚಿಸಿದರೂ ಏನನ್ನೂ ಸಾಧಿಸೋದು ಸಾಧ್ಯವಲ್ಲ. ಈ ಸ್ಟೇಟ್ ಆಳುವ ವರ್ಗಗಳ ಸಾಧನ. ಬೇರೆ ಥರ ಅದನ್ನ ಬಳಸೋದು ಪಾರ್ಲಿಮೆಂಟ್ ರಾಜಕೀಯದಲ್ಲಿ ಸಾಧ್ಯವಿಲ್ಲ” ಎಂದಿದ್ದ. ಅದರಿಂದ ರೇಗಿದ ಉಳಿದವರು +“ನೀವೇನು ಮಾಡುತ್ತಿದ್ದೀರಿ ಹಾಗಾದರೆ?” ಎಂದು ಮೇಲೆ ಬಿದ್ದಿದ್ದರು. +“ನಾನಾ? ನಮ್ಮ ಪಕ್ಷ ಸರ್ಕಾರ ರಚಿಸುವಾಗ ನಾನು ಅದರಿಂದ ಹೊರಗುಳಿತೇನೆ. ಪ್ರಾಯಶಃ ಅಸೆಂಬ್ಲಿ ಸದಸ್ಯತ್ವಕ್ಕೂ ರಾಜೀನಾಮೆ ಕೊಡ್ತೇನೆ. ಆ ಬಗ್ಗೆ ಇನ್ನೂ ನನ್ನ ಧೋರಣೆ ಸ್ಪಷ್ಟವಾಗಿಲ್ಲ” ಎಂದಿದ್ದ. +“ಪಾರ್ಲಿಮೆಂಟರಿ ರಾಜಕೀಯದ ಬಗ್ಗೆ ನಿಮ್ಮ ಧೋರಣೆ ಹಾಗಿದ್ದರೆ ಹೀಗೆ ಹೊಂಚು ಹಾಕ್ಕೊಂಡು ಇರೋದು ನೈತಿಕವಾಗಿ ಸರಿಯಲ್ಲ. ನಿಮ್ಮನ್ನೆ ನೀವು ಮೋಸ ಮಾಡ್ಕೋತಿದೀರಿ” ಎಂದು ಕೃಷ್ಣಪ್ಪ ಆಗ ಕೆಣಕಿದ್ದ. +“ನೀವು ಹೇಳ್ತಿರೋದ್ರಲ್ಲಿ ನಿಜವಿದೆ. ನನ್ನ ವರ್ಗದ ಭ್ರಾಂತಿಗಳಿಂದ ಇನ್ನೂ ನಾನು ಬಿಡುಗಡೆ ಪಡೆದಿಲ್ಲ” ಎಂದು ನಾಗರಾಜ್ ಸರಳವಾಗಿ ಹೇಳಿದಾಗ ಉಳಿದವರು ನಕ್ಕಿದ್ದರು. ಆದರೆ ಕೃಷ್ಣಪ್ಪನನ್ನ ಒಳಗಿನಿಂದ ಆ ಮಾತು ಮುಟ್ಟಿತ್ತು. ಮತ್ತೆ ಮತ್ತೆ ನೆನಪಾಗಿತ್ತು. +ಈಗಲೂ ಅದನ್ನು ನೆನೆದು ಕೃಷ್ಣಪ್ಪ ಉದ್ರೇಕಗೊಳ್ಳದೆ ಹೇಳಿದ: +“ನಾಗರಾಜ್ ಈ ಲೇಖನ ಓದಿದ ಮೇಲೆ ನಿಮ್ಮನ್ನು ಕೇಳಬೇಕೂಂತ ಅನ್ನಿಸ್ತು. ನನ್ನ ಬಗ್ಗೆ ನಿಮಗೂ ಹೀಗನ್ನಿಸತ್ತ? ನನಗೇ ಗೊಂದಲವಾದ್ರಿಂದ ಕೇಳ್ತಾ ಇದೀನಿ.” +“ವ್ಯಕ್ತಿಗಳ ಪ್ರಶ್ನೆ ಇಲ್ಲಿ ಮುಖ್ಯವಲ್ಲ. ಈ ವ್ಯವಸ್ಥೇಲಿ ಯಾರು ಎಷ್ಟು ಪ್ರಾಮಾಣಿಕರೂಂತ ಅನ್ನೋದು ರಿಲೇಟಿವ್ ಅಷ್ಟೆ. ನಿಮ್ಮನ್ನು ಈ ವ್ಯವಸ್ಥೆ ತನ್ನ ಬಲೇಲಿ ಸಿಕ್ಕಿಸ್ತ ಇದೇಂತ ನನಗೂ ಅನ್ನಿಸತ್ತೆ. ನಿಮಗೊಂದು ಇಮೇಜ್ ಇದೆ. ಆ ಇಮೇಜ್ ಈ ವ್ಯವಸ್ಥೇಲಿ ಈಗ ಅಗತ್ಯವಾಗಿದೆ -ತನ್ನನ್ನ ಕಾಪಾಡಿಕೊಳ್ಳೋಕೆ.” +“ಹಾಗಾದರೆ ಏನು ಮಾಡಬೇಕು ನಾನು ನಿಮ್ಮ ಪ್ರಕಾರ? ನಿಮ್ಮ ವಿಚಾರಾನ್ನ ನಾನು ಒಪ್ಪಲ್ಲ. ಆದರೆ ನಿಜವಾಗಿಯೂ ನಿಮ್ಮ ಅಡ್ವೈಸ್ ನನಗೆ ಬೇಕಾಗಿದೆ.” +“ನಮ್ಮ ಪಕ್ಷದ ರಾಜಕೀಯದ ಮಾರ್ಗ ಈವರೆಗೆ ಸರಿಯಾಗಿ ಇದ್ದಿದ್ರೆ ನಿಮ್ಮನ್ನ ಸೀಕ್ ಮಾಡಬೇಕೂಂತ್ಲೇ ವೀರಣ್ಣನಂಥೋರಿಗೆ ಅನ್ನಿಸ್ತ ಇರಲಿಲ್ಲ -ಅಲ್ಲವ?” +ಕೃಷ್ಣಪ್ಪನಿಗೆ ಥಟ್ಟನೆ ಸಿಟ್ಟು ಬಂತು: +“ನಾಗರಾಜ್ -ವೀರಣ್ಣ ನನಗೆ ಸಹಾಯ ಮಾಡಿರೋದು ನಿಜ, ಆದರೆ ಅದಕ್ಕೆ ನಾನು ಕೈಯೊಡ್ಡಲಿಲ್ಲ. ನೀವು ಶ್ರೀಮಂತರ ಮನೇಲಿ ಹುಟ್ಟಿದವ್ರು. ನನ್ನ ಹಾಗೆ ಹುಟ್ಟಿ ಬೆಳೆದಿದ್ರೆ ನೀವು ನನ್ನಷ್ಟು ಪ್ರಾಮಾಣಿಕರಾಗಿ ಉಳೀತಿದ್ರೋ ನೋಡ್ತಿದ್ದೆ.” +ನಾಗರಾಜ್ ಸಿಟ್ಟಾಗಲಿಲ್ಲ: +“ನೀವು ವ್ಯಕ್ತಿವಾದಿಯಾಗಿ ಮಾತಾಡ್ತೀರಿ. ನಿಮಗೆ ತಾತ್ವಿಕ ಕ್ಲಾರಿಟಿ ಇಲ್ಲ. ನಾನು ಆ ಪ್ರಶ್ನೇನ್ನ ಎತ್ತಲೇ ಇಲ್ಲ. ನಾನು ಪ್ರಾಮಾಣಿಕನಾಗಿದ್ರೆ ಇಲ್ಲಿ ಇರ್ತಿದ್ನ ಹೇಳಿ?” +“ದೇಶದ ಪ್ರಧಾನಿ ಡಿಕ್ಟೇಟರ್ ಆಗಲಿಕ್ಕೆ ನೋಡ್ತಿದಾರೆ, ಪ್ರಧಾನಿ ಗುಂಪಿನವರು ಇಲ್ಲಿ ಅಧಿಕಾರಕ್ಕೆ ಬಂದರೆ ಜನರಿಗೆ ಈಗಿರೋ ಸಿವಿಲ್ ರೈಟ್‌ಗಳೂ ನಾಶವಾಗ್ತಾವೆ. ಈಗಿರೋ ಮುಖ್ಯಮಂತ್ರಿ ರಿಯಾಕ್ಷನರಿ ನಿಜ. ಆದರೆ ಅವನ ಬೆಂಬಲದಲ್ಲಿ ನಾವು ಮಿನಿಮಮ್ ಟೈಮ್ ಬೌಂಡ್ ಕಾರ್ಯಕ್ರಮ ಹಾಕ್ಕೊಂಡು ಸರ್ಕಾರ ರಚಿಸಿದ್ರೆ ಅಲ್ಪಸ್ವಲ್ಪವಾದರೂ ಸಾಧಿಸಬಹುದು ಅನ್ನೋದರಲ್ಲಿ ತಿರುಳೇ ಇಲ್ಲವೇನು ಹಾಗಾದ್ರೆ…..” +“ಇಲ್ಲ. ದೇಶದ ಸ್ಥಿತಿ ಇನ್ನಷ್ಟು ಹದಗೆಟ್ಟಾಗಲೇ ಪಾರ್ಲಿಮೆಂಟರಿ ಸಿಸ್ಟಮ್ ಬಗ್ಗೆ ಇರೋ ಭ್ರಾಂತಿ ಜನರಲ್ಲಿ ನಾಶವಾಗತ್ತೆ. ತೇಪೆ ಹಾಕೋ ಕೆಲಸ ನನಗಿಷ್ಟವಿಲ್ಲ.” +ಕೃಷ್ಣಪ್ಪ ಒಂದು ನಿಮಿಷ ಸುಮ್ಮನಿದ್ದು ಹೇಳಿದ: +“ನಿಮ್ಮ ವಿಚಾರ ನಾನು ಒಪ್ಪಲ್ಲ. ಇರೋ ಮನೆಗೆ ಬೆಂಕಿ ಇಕ್ಕಿ ಮೈಕಾಯಿಸಿಕೊಳ್ಳೋ ಅಪಕ್ವ ಧೋರಣೆ ನಿಮ್ಮದು. ಆದರೆ ವೈಯಕ್ತಿಕವಾಗಿ ನನಗೆ ಕೆಲವು ಸಮಸ್ಯೆಗಳಿವೆ -ಅವು ನನ್ನ ಪ್ರಾಮಾಣಿಕತೆಗೆ ಸಂಬಂಧಪಟ್ಟದ್ದು. ಅದಕ್ಕಾಗಿ ನಿಮಗೆ ಹೇಳಿಕಳಿಸಿದೆ. ನಾನು ಯಾರದೋ ಬಲೇಲಿ ಸಿಕ್ಕಿಹಾಕಿಕೋತಿದೀನಿ ಅಂತ ನಿಮಗೂ ಅನ್ನಿಸಿದ್ರೆ ಇಕೊಳ್ಳಿ ಈ ಕಾಗದಕ್ಕೆ ಅಸೆಂಬ್ಲಿ ಸದಸ್ಯತ್ವಕ್ಕೇ ನನ್ನ ರಾಜೀನಾಮೆ ಬರ್ದಿದೀನಿ. ಇದನ್ನ ತಗೊಂಡು ಹೋಗಿ. ಒಂದು ಗಂಟೆ ನೀವೇ ಕೂಲಾಗಿ ವಿಚಾರ ಮಾಡಿ. ನಿಮಗೂ ಹಾಗನ್ನಿಸಿದರೆ ಈ ಕಾಗದಾನ್ನ ಸ್ಪೀಕರ್‍ಗೆ ಪೋಸ್ಟ್ ಮಾಡಿ.” +ಎಂದು ಕಾಗದ ಕೊಟ್ಟ. ನಾಗರಾಜ್ ಎದ್ದು ನಿಂತು ಯಾವ ಭಾವನೆಯನ್ನೂ ತೋರಿಸಿಕೊಳ್ಳದೆ ಹೇಳಿದ: +“ನೀವು ವ್ಯಕ್ತಿವಾದಿಯಾದ್ರಿಂದ ಪ್ರಾಮಾಣಿಕತೆ ಅಂತ ವಿಪರೀತ ಬಾದರ್ ಮಾಡ್ಕೋತೀರಿ. ಇದೊಂದು ಥರದ ಸಿಕ್ಲಿ ಇಂಡಲ್‌ಜನ್ಸ್….ಪ್ರಾಮಾಣಿಕತೆ ಪ್ರಶ್ನೆ ಬಂದರೆ…ನೀವು ನನಗಿಂತ ದೊಡ್ಡವರು….ಜನರಿಗೆ ನೀವೇ ನನಗಿಂತ ಹತ್ತಿರ. ಅದಕ್ಕೇ ನಿಮ್ಮ ವ್ಯಕ್ತಿತ್ವ ಮುಖ್ಯ ನನಗೆ. ಆದ್ದರಿಂದ ನೀವು ಶುದ್ಧವಾಗಿ ಉಳ್ದಿದೀರೋ ಇಲ್ಲವೋ ಅನ್ನೋ ಕಾರಣಕ್ಕಾಗಿ ರಾಜೀನಾಮೆ ಕೊಡೋದು ನನ್ನ ದೃಷ್ಟಿಯಲ್ಲಿ ಇರ್ರೆಲವೆಂಟ್. ಬೂರ್ಶ್ವಾ ಸಮಾಜದಲ್ಲಿ ಶುದ್ಧವಾಗಿರೋಕೆ ಎಲ್ಲಿ ಸಾಧ್ಯ? ಪಾರ್ಲಿಮೆಂಟರಿ ಹಾದಿ ಸರಿಯೋ ಅಲ್ವೋ ಅನ್ನುವ ವಿಚಾರದಲ್ಲಿ ನಮಗೀಗ ಕ್ಲಾರಿಟಿ ಬೇಕು.” +ನಾಗರಾಜ್ ಕೃಷ್ಣಪ್ಪ ಕೊಟ್ಟ ಕಾಗದವನ್ನು ಹಿಂದಕ್ಕೆ ಕೊಡುತ್ತ ಸಪ್ಪೆಯಾದ ಧಾಟಿಯಲ್ಲಿ ಮುಂದುವರಿಸಿದ: +“ನಿಮ್ಮ ಅನುಭವ ಅದಕ್ಕೇ ಮುಖ್ಯ. ನಾನಿನ್ನೂ ಹಸಿ ಮನುಷ್ಯ. ನೀವು ಈ ವಿಚಾರದಲ್ಲಿ ಒಂದು ನಿರ್ಧಾರಕ್ಕೆ ಬಂದಾಗ ನನಗೆ ಹೇಳಿಕಳಿಸಿ. ತಾತ್ಕಾಲಿಕವಾಗಿ ಫ಼್ಯಾಸಿಸ್ಟರನ್ನು ತಡೆಯೋಕೆ ಪಾರ್ಲಿಮೆಂಟರಿ ಮಾರ್ಗ ಅಗತ್ಯ ಅಂತ ನಿಜವಾಗಿ ನಿಮಗನ್ನಿಸುತ್ತ? ಯಾಕೇಂದ್ರೆ ನನ್ನ ಅಸಹನೆ ಕೂಡ ಅಡ್‌ವೆಂಚರಿಸ್ಟ್ ಇಂಡಲ್‌ಜನ್ಸ್ ಇರಬಹುದು. ಆದ್ದರಿಂದ ಜನರೊಡನೆ ಒಡನಾಡಿದ ನಿಮ್ಮ ನಿರ್ದೇಶನ ಈಗ ಬೇಕು.” +ನಾಗರಾಜ್ ಮಾತಾಡುತ್ತ ಗೊಂದಲಕ್ಕೆ ಸಿಕ್ಕಿಹಾಕಿಕೊಂಡಂತೆ ಅನ್ನಿಸಿತು. ಹಾಗೇ ನಿಂತಿದ್ದು, ಹೋಗುತ್ತೇನೆಂದೂ ಹೇಳದೆ ಅವನು ಹೊರಟು ಹೋದ. +ನಾಗರಾಜ್‌ನ ಮಾತುಗಳು ಕೃಷ್ಣಪ್ಪನನ್ನು ತೀವ್ರವಾಗಿ ಬಾಧಿಸಿದುವು. ಸಾವು ಬದುಕಿನ ಹೊಸ್ತಿಲಲಿರುವ ತಾನೀಗ ನಿಶ್ಚಯ ಮಾಡಬೇಕು; ತಾನು ದೇಶದ ಮುಖ್ಯಮಂತ್ರಿಯಾಗುವುದು ಫ಼್ಯಾಸಿಸ್ಟರ ಸಂಚನ್ನು ಮುರಿಯಲು ಅಗತ್ಯವೆ? ಅಂಥ ಬಯಕೆ ತನ್ನಲ್ಲಿ ಈಗ ಹುಟ್ಟಿದ್ದಕ್ಕೆ ಅದಕ್ಕೆ ಕಾರಣ ಸಾಯುತ್ತಿರುವ ತನಗೆ ಅಧಿಕಾರದ ಮೂಲಕ ಚೈತನ್ಯವನ್ನು ಪಡೆಯಬೇಕೆಂಬ ಇಚ್ಛೆಯೆ? ಅಥವಾ ವಾರಂಗಲ್ ಠಾಣೆಯಲ್ಲಿ ಕಂಡ ಅಧಿಕಾರದ ಕ್ರೂರ ಸ್ವರೂಪವನ್ನು ನಾಶಮಾಡಬೇಕೆಂಬ ಆಸೆಯೆ? ವೀರಣ್ಣನ ವರ್ಗ ಹಿತದ ಮೂಲಕವೂ ಫ಼್ಯಾಸಿಸ್ಟರನ್ನು ವಿರೋಧಿಸುವುದು ಸಾಧ್ಯವೆ? ಹೀಗೆ ತಾನು ಪ್ರಶ್ನೆ ಕೇಳುವಾಗ ತನ್ನ ವೈಯಕ್ತಿಕ ಹಿತಕ್ಕೆ ವೈಚಾರಿಕ ಕುಮ್ಮಕ್ಕು ಕೊಡುತ್ತಿದ್ದೇನೆಯೆ? +“ನಾಗರಾಜ್ -ನೀನು ಮೂರ್ಖ; ದೊಡ್ಡ ಮೂರ್ಖ; ನಿನಗೆ ಬದುಕಿನ ಸಂಕೀರ್ಣ ರೂಪವೇ ತಿಳಿಯದು; ಇವತ್ತು ರಾತ್ರೆ ಜ್ಯೋತಿ ಮತ್ತು ಅವಳ ಗೆಳೆಯ ತಮ್ಮ ದೇಹಗಳ ರಹಸ್ಯ ಸುಖಗಳನ್ನು ಅನುಭವಿಸಲಿ ಎಂದೇ ನಾನು ವೀರಣ್ಣನ ’ವರ್ಗಹಿತ’ಗಳನ್ನು ಅಲಕ್ಷ್ಯದಿಂದ ಕಂಡೇನು” ಎಂದೆಲ್ಲ ಕಿರುಚಿಕೊಳ್ಳಬೇಕೆನ್ನಿಸಿತು. “ಉಣ್ಣುವುದು, ನಿದ್ದೆ ಮಾಡುವುದು, ಸಂಭೋಗದಲ್ಲಿ ಮೈಗಳನ್ನು ಬೆಸೆಯುವುದು, ದೇವಿಯೋ ದಿಂಡೆಯೋ ಯಾವುದೋ ನೆವದಲ್ಲಿ ಅವ್ಯಕ್ತಕ್ಕೆ ಲಗ್ಗೆ ಹಾಕುವುದು, ಈ ಕ್ಷಣಿಕವಾದ ಬದುಕಿನಲ್ಲಿ ಸೊಂಟದಲ್ಲಿರುವ ಅಯ್ಯ ಮೆತ್ತಗಾದಾಗ ಕುದುರೆಬಾಲ ಹಿಡಿದು ಅಲೆಯುತ್ತ ಉದ್ರೇಕಗೊಳ್ಳುವುದು -ಇವನ್ನೆಲ್ಲ ಬಿಟ್ಟು ಇನ್ನೇನು ಇದೆಯೋ ಮೂರ್ಖ?” -ಜ್ಯೋತಿ ತೀಡಿದ್ದ ಕಾಲನ್ನು ಎತ್ತಲು ಪ್ರಯತ್ನಿಸುತ್ತ ಕೃಷ್ಣಪ್ಪ ಉಸಿರು ಕಟ್ಟಿದ. +* +* +* +ಈಗ ಐದೂವರೆ. ಆರು ಗಂಟೆಗೆ ವಿಮಾನದಿಂದ ಗೌರಿ ಇಳಿದಿರುತ್ತಾಳೆ. ನಾಗೇಶ ಅವಳು ಬಿಳಿಸೀರೆಯುಟ್ಟಿದ್ದ ಚಿತ್ರ ನೋಡಿದ್ದಾನೆ. +***** +ಮುಗಿಯಿತು +-೪- ಪಾದರಿ ಗೋನಸಾಲ್ವಿಸ್ ಶಿವಸಾಗರಕ್ಕೆ ಬಂದ ಕೆಲವೇ ವಾರಗಳಲ್ಲಿ ಅಲ್ಲಿಯ ಕ್ರೀಸುವರನ್ನು ತಪ್ಪದೆ ಕೊಪೆಲಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು. ಅವರ ಮತ್ತೊಂದು ಮುಖವನ್ನು ಬಹಳ ಬೇಗನೆ ಜನ ಕಂಡಿದ್ದರು. ಪ್ರಾರಂಭದಲ್ಲಿ ಪಾದರಿ ಗೋನಸಾಲ್ವಿಸ್ ರಿಗೆ ಕೋಪವೇ […] +ಹದ್ದುಗಳನ್ನು ಓಡಿಸಿದ ಬ್ರಾಹ್ಮಣರು ಪ್ರೇತಕಳೆಯ ತಮ್ಮ ಮುಖಗಳನ್ನು ಎತ್ತಿ, ಒಟ್ಟಾಗಿ ಬಂದು ಚಿಟ್ಟೆಯನ್ನು ಹತ್ತಿ ಪ್ರಶ್ನಾರ್ಥಕವಾಗಿ ಪ್ರಾಣೇಶಾಚಾರ್ಯರ ಮುಖ ನೋಡಿದರು. ಆಚಾರ್ಯರು ಉತ್ತರಿಸದೆ ವಿಲಂಬ ಮಾಡುತ್ತಿದ್ದುದು ಕಂಡು ಅವರಿಗೆ ದಿಗಿಲಾಯಿತು. ತನ್ನಿಂದ ಮಾರ್ಗದರ್ಶನವನ್ನು ಬಯಸಿ, […] +ಈಗೀಗ ಇನಾಸ ತನ್ನ ಮನೆ ಅಂಗಳಕ್ಕೆ ಬರುವ ಭಕ್ತರು ಅಧಿಕವಾಗುತ್ತಿದುದನ್ನು ಗಮನಿಸುತ್ತ ಬಂದಿದ್ದ. ಇನಾಸ ಅವರನ್ನು ಬರಬೇಡಿ ಎಂದು ತಡೆಯಲಾರ.. ಕಾರಣ ಎಲ್ಲ ಬೇಕಾದವರು. ಊರು ಕೇರಿಯವರು. ಹಿಂದಿನಿಂದಲೂ ಈ ದೇವರನ್ನು ನಂಬಿಕೊಂಡು ಬಂದವರು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_120.txt b/Kannada Sahitya/article_120.txt new file mode 100644 index 0000000000000000000000000000000000000000..35ca9821e474311a0b382b2f8221e5bff3e2ae5d --- /dev/null +++ b/Kannada Sahitya/article_120.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಯಾವ ಋತುವಿನೊಳಿಂತು ಕನಸು ಕಂಡಳೊ ಪೃಥಿವಿ +ಆಶೆ ಬೀಜಗಳೆನಿತೊ ಮಡಿಲೊಳಿರಿಸಿ +ಮಳೆಯ ರೂಪದಿ ಮುಗಿಲು ಮುತ್ತಿಡಲು ಮತ್ತೇರಿ +ಹೊತ್ತು ನಿಂತಿಹಳಮಿತ ವೃಕ್ಷರಾಶಿ. +೨ +ಮಾವು ಬೇವೂ ತೆಂಗು ಕೌಂಗು ನೇರಿಳೆ ಹಲಸು +ಹುಣಿಸೆ ಹುಲುಗಲ ತಾಳೆ ಬಾಳೆಯಂತೆ +ಮಾಧವಿ ತಮಾಲ ಮಾಲತಿ ಹೊಂಗೆ ಶ್ರೀಗಂಧ +ಸೀತಾಳಿ ಬಕುಳ ಸಂಪಿಗೆಗಳಂತೆ! +೩ +ದೇವಕನ್ನೆಯರಿಳೆಗೆ ಇಳಿತಂದು ಗುಟ್ಟಿನಲಿ +ತೊಟ್ಟಿಲವ ತೂಗಿ ಹೆಸರಿಟ್ಟರೇನೊ! +ಹೆಸರಿಲ್ಲದೆಯು ಹಸಿರ ಚಿಮ್ಮಿಸುವ ಪಸದನಕೆ +ಜುಮ್ಮೆಂದು ಮನಸೋತು ಬಿಟ್ಟರೇನೊ! +೪ +ಇಲ್ಲಿ ಬಣ್ಣದ ತಳಿರ ತುಟಿಯಲ್ಲಿ ಹೂನಗೆಯು +ಅಲ್ಲಿ ಹಣ್ಣಿನ ಗೊನೆಗೆ ಗಿಣಿಗಳೆರಡು +ಸೀಳುದಾರಿಯ ಬದಿಗೆ ಸಾಲು ಮರಗಳ ನೆಳಲು +ಗಾಳಿಯೂದುವ ಕೊಳಲು-ಹಕ್ಕಿ ಹಾಡು, +೫ +ಜಗದ ನೂರೆಂಟು ತರ ಕಲಹ ಕಂಟಕಗಳಿಗೆ +ತಾವು ಕಾರಣವಲ್ಲವೆಂಬ ಹಾಗೆ +ಹುಲ್ಲು ಮೇಯುವ ಹಸುಗಳಲ್ಲಿ ಮೆಲುಕಾಡಿಸಿವೆ +ಹುಲ್ಲುಗದ್ದೆಯೆ ತಮ್ಮದೆಂಬ ಹಾಗೆ, +೬ +ನಳಲ ಸೆರಗನು ಹಿಡಿದು ಬಿಸಿಲು ಮುಂದೋಡುತಿದೆ +ದೂರ ದೂರದ ತನ್ನ ಮನೆಯ ನೆನೆದು, +ಬಿಳಿಯ ಮೋಡವದೊಂದು ಬೆಟ್ಟದುದಿಯಲಿ ನಿಂದು +ಎಲ್ಲ ಬಲ್ಲವರಂತೆ ಸುಮ್ಮನಿಹುದು. +೭ +ಬಾಳ ಬಿಸಿಲಲಿ ಬಳಲಿ ದಣಿದು ಬಂದಿಹ ಪಥಿಕ +ಮರದ ತಣ್ಣೆಳಲೊಂದೆ ನಿನಗಾಸರು- +ಇಲ್ಲಿ ದಣಿವಾರಿ ಮನ ಶಾಂತಿ ಸಂತಸ ಪಡೆಯೆ +ಮುಂದೆ ನಡೆಯುವ ದಾರಿ ಎನಿತು ಹಗುರು! +೮ +ಪ್ರಕೃತಿ ತನ್ನೆದೆಯ ಮಧುವಾಟಿಕೆಯ ತೆರೆದಿರಲು +ಅದನು ತಣಿ ಹೀರದೆಯೆ ಸಾಗಬಹುದೆ? +ಯಾರಿಗೀ ಸುಂದರತೆ? ಯಾರಿಗೀ ಪರವಶತೆ? +ಯಾರ ಸುಖಕೀ ಸೃಷ್ಟಿ ನಿನಗಲ್ಲದೆ? +***** +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +ಸಂಜೆವೆಣ್ಣಿನ ಸಕಲ ಸೌಭಾಗ್ಯ ಹೊಮ್ಮುತಿದೆ! ಕಿಂಜಲ್ಕ ಕುಸುಮಗಳ ಹುಡಿಯ ಹಾರಿಸಿದಂತೆ ಕೆಂಕಮಾಗಿದೆ ಬಾನು; ಕಿತ್ತಿಳೆಯ ತೊಳೆಯಂತೆ ಕ್ಷಿತಿಜದಂಚಿನ ತುಟಿಗೆ ರಾಗ ರಂಗೇರುತಿದೆ! ಮುಂಗುರುಳು ಚಿನ್ನಾಟವಾಡಿದೊಲು ಮುಚ್ಚಂಜೆ ಕರಿನರಳ ಚಾಚಿಹುದು. ನೀಲ ಸೀಮಂತದಲಿ ಒಂದೊ ಎರಡೋ […] +(ಲೋಂಡಾದಿಂದ ಗೋವಾಕ್ಕೆ ಹೋಗುವ ಮಾರ್ಗದಲ್ಲಿ ಕಾಣಸಿಗುವ ದೂಧ್ ಸಾಗರ್ ಜಲಪಾತದ ನೋಟ ಮನೋಹರ. ಆಕಾಶದಿಂದ ಧುಮ್ಮಿಕ್ಕುವ ಹಾಲಿನ ಹೊಳೆಯಂತೆ ಕಾಣುವ ಇದರೆದುರು ನಿಂತಾಗ….) ಕ್ಷೀರ ಸಾಗರವ ಸುಮನಸ ವೃಂದ ಬಾನಿಂ ಕಟ್ಟಿರೆ ಸಡಲಿತೆ ಬಂಧ? […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_121.txt b/Kannada Sahitya/article_121.txt new file mode 100644 index 0000000000000000000000000000000000000000..2649fe13b25d6d4622c06176173161a3d0169c82 --- /dev/null +++ b/Kannada Sahitya/article_121.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಾನಿನೊಂದೆಡೆ ತಮದ ರುಂದ್ರ ಪಾತ್ರೆಯಲಿಳಿದು +ದೀನ ಮೊಗದಲಿ ಕಿರಣ ತಾನ ಸೋಪಾನದಲಿ +ನಿರ್‍ನಿಮೇಷಾಕ್ಷಿಯೊಳಗೇನನೀಕ್ಷಿಸುತಿರುವೆ ಲಲಿತಾಂಗಿ ನಕ್ಷತ್ರವೆ? +ಉನ್ನತದ ತಾರಕಿತ ಗಗನದೊಳು ಏಕಾಕಿ +ಬಿನ್ನಗಾಗುತ ಮೌನವ್ರತಧಾರಿಯಾಗಿರಲು +ಪನ್ನತಿಕೆ ಬಹುದೆಂದು? ಎದ ಭಾರವನು ಇಳುಹಲಾರದೆಯೆ ಕೊರಗುತಿರುವೆ! +ಭವದ ಬಾಳಿನೊಳಿಲ್ಲಿ ದಿವದ ಕನಸನು ಕಂಡು +ಜೀವನದ ಪಾವನಂಗೊಳಿಪ ಹಂಬಲದೊಳಿರೆ +ಆವ ನೋವಿನ ಕಾವು ಕೆಂಗುಲಿಮೆಯಲಿ ಕುದಿಸಿ ನಿನ್ನ ದಿಗ್ಬಲಿ ಹೊಡೆಯಿತೊ! ಭಾವುಕರಿಗಾತ್ಮಾಭಿರಾಮ ಧೀಮಂತರಿಗೆ +ನೋವಿನೊಡ ಹುಟ್ಟಿ ಮೃದು ಹೂವಾಗಿ ಪ್ರೇಮದಲಿ +ನವೆದ ಸತ್ಯಾಶ್ರಯರಿಗೀ ಜಗದೊಳುಳಿಗಾಲ ಬೆಳೆಗಾಲವಿಲ್ಲವೇನೊ! +ನೊಂದವರ ಕಣ್ಣೀರ ಬಿಂದುಬಿಂದುವು ಜಿನುಗಿ +ಕುಂದದಮರ ಪ್ರೇಮ ಬಾನಾಳ್ಮೆಯಲಿ ಮಿನುಗಿ- +ಅಂದಗೆಟ್ಟಿಹ ಬಾಳೊಳಾವ ಸಂದೇಶವನು ತಂದಿರುವೆ ಕಿರುತಾರಗೆ? +ಅಂಧಕಾರವು ಕಣ್ಣ ತಿವಿದು ನಿನ್ನದಗುದಿಗೆ +ಇಂಧನವನೊಟ್ಟಿ ಹಸಿ ಹೆಣವ ಬೇಯಿಸುತಲಿದೆ! +ಬಂಧಮುಕ್ತಿಯ ಪಡೆದ ಚೊಕ್ಕ ಬೆಳಕಿನ ಚಿಕ್ಕೆ ಮುಂದಾವ ಗುರಿಯು ನಿನಗೆ? +***** +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು ಕುರಿಗಳು, ಸಾರ್, ಕುರಿಗಳು: ಸಾಗಿದ್ದೇ ಗುರಿಗಳು. ಮಂದೆಯಲ್ಲಿ ಒಂದಾಗಿ, ಸ್ವಂತತೆಯೇ ಬಂದಾಗಿ ಇದರ ಬಾಲ ಅದು, ಮತ್ತೆ ಅದರ ಬಾಲ ಇದು ಮೂಸಿ ದನಿ ಕುಗ್ಗಿಸಿ, […] +ಇರುಳು ನಕ್ಷತ್ರ ಮಿನುಗುತ್ತವೆ- ಎಂದರೆ, ಬೆಳಕು ಬಾಯ್‌ಬಿಟ್ಟು, ತುಟಿಗೆ ತುಟಿ ಹಚ್ಚದೆ ಮಾತಾಡಿಕೊಳ್ಳುತ್ತವೆ. ಕವಿತೆ ಕಿವಿಗೊಟ್ಟು ಕೇಳುತ್ತದೆ. ಮಂದ ಬೆಳಕಿನಲ್ಲಿ ಗಿರಿ ಶಿಖರ ಗಿರಿಗಿರಿ ಬುಗುರಿಯಾಡಿ ಇದ್ದಲ್ಲೆ ನಿದ್ದೆ ಹೋಗುತ್ತವೆ. ಗಿಡಮರಗಳು ಆಕಾಶದಲ್ಲಿ ಬೇಕಾದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_122.txt b/Kannada Sahitya/article_122.txt new file mode 100644 index 0000000000000000000000000000000000000000..a7b24547140c3eb6cab28a26803f51571cc064be --- /dev/null +++ b/Kannada Sahitya/article_122.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಿಟ್ಟೋ ಸೆಡವೋ ಹಠವೋ ಜ್ವರವೋ +ತನಗೇ ತಿಳಿಯದೇ ಧುಮುಗುಡುವ ಸೂರ್ಯ, +ಕರಗುವುದ ಮರೆತು ಬಿಳುಚು ಹೊಡೆದು +ಹಿಂಜಿದ ಹತ್ತಿಯಂತಹ ಮೋಡಗಳು, +ಹನಿ ನೀರಿಗೆ ಕಳವಳಿಸಿದ ವಿಭ್ರಾಂತ ಭುವಿ, +ಕಾಕಾ ಎನ್ನಲೂ ತ್ರಾಣವಿಲ್ಲದ ಮರದ ಮೇಲಿನ ಕಾಗೆ… +ಬಿರುಬೇಸಿಗೆಯ ನಡು ಮಧ್ಯಾಹ್ನಗಳು +ಸ್ತಬ್ಧ ಚಿತ್ರಗಳಂತೆ.. ಅಲ್ಲಾಡದ ಎಲೆಗಳಚಿತೆ; +ಇಂಥ ಮಧ್ಯಾಹ್ನ +ಪುಟ್ಟ ಬೆರಳಲಿ ಬಾಗಿಲು ತೆರೆದು +ಗೇಟು ಸಂಧಿಯಲಿ ತೂರಿಕೊಂಡು +ಮಗುವೊಂದು ಓಡುತಿದೆ ರಸ್ತೆಯಲಿ +ಚಪ್ಪಲಿ ಕೂಡ ಹಾಕದ ಗುಲಾಬಿ ಪಾದಗಳು +ಯಾವುದೋ ಕರೆಯ ಬೆನ್ನತ್ತಿದಂತೆ, +ಮಗು ಎದುರು ಮನೆಯ ಬಾಗಿಲು ಬಡಿಯುತಿದೆ +ಎಳೆ ಬೆರಳ ಮಾಂತ್ರಿಕ ಸ್ಪರ್ಶಕೆ ತಟ್ಟನೆ ತೆರೆದ ಬಾಗಿಲು.. +ತೆಕ್ಕೆ ಬಡಿದ ಬಾಹುಗಳಲಿ +ಪುಟ್ಟ ಮಗುವಿನ ಕೇಕೆ.. +ಇಂಥ ಮಧ್ಯಾಹ್ನ +ನನ್ನೊಳಗೆ ಬೆಂಕಿಹೂಗಳ ಅರಳಿಸಿ +ತಟಸ್ಥ ನಿಂತ ಕೆಂಡಸಂಪಿಗೆ ಮರ +ಧ್ಯಾನಿಸುತಿದೆ ಮಳೆಯ ಸಂಜೆಯನು, +ಮಾಗಿಯ ಬೆಳಗನು, ಆಳದ ಮೌನವನು, +ಅನವರತ ಕನವರಿಸುತಿದೆ +ತುಕ್ಕು ಹಿಡಿದ ಗೇಟಿನ ಬಳಿ +ಕೇಳಲಿರುವ ಅಂಚೆಯವನ ಕರೆಯನು. +***** +ಅಲ್ಲಸಲ್ಲದ ವಿಷಮ ವಿಪರೀತ ಭಾವನೆಯ ವಿಷಗಾಳಿ ಎನ್ನ ಬಳಿ ಸುಳಿಯದಿರಲಿ; ಸೊಲ್ಲು ಸೊಲ್ಲಿಗೆ ಪರರನಣಕಿಸುವ ಕೆಣಕಿಸುವ ಅಶಿವ ನುಡಿ ಎನ್ನ ಕಿವಿ ಸೇರದಿರಲಿ. ಹಿಮಶೈಲದೆತ್ತರಕು ಕತ್ತೆತ್ತಿ ನಿಂತಿರುವ ಕರ್ತವ್ಯಪಾಲನೆಯ ಬುದ್ಧಿ ಬರಲಿ; ಕಾರ್ಮೋಡ ಬಾನನಂಡಲೆವಂತೆ […] +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ದೊರಗು ದೊರಗಾದ ತೊಗಟೆಯ ತೋರಿಕೆಯ ದರ್ಪವಿಲ್ಲದೆ ತೋರಿಕೊಳ್ಳದ ಮೃದುವಾದ ಊರ್ಧ್ವಮುಖಿ ತಿರುಳೂ ಇರಲ್ಲ; ಅಧೋಮುಖಿಯಾದ ನೆಲಕಚ್ಚುವ ಸಂಕಲ್ಪದ ಗುಪ್ತ ಬೇರೂ ಇರಲ್ಲ; ಈ ತೊಗಟೆಯನ್ನ ಅಪ್ಪಿ ಒಲಿಯುತ್ತಲೇ ತಿರುಳನ್ನ ಬಗೆಯುವಾತ ನಮ್ಮೆಲ್ಲ ನಿತ್ಯ ರಾಮಾಯಣಗಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_123.txt b/Kannada Sahitya/article_123.txt new file mode 100644 index 0000000000000000000000000000000000000000..531d1cb6abad1d85836c5ba8f238759c5f9eaf85 --- /dev/null +++ b/Kannada Sahitya/article_123.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲ ತಿಳಿಸುವ, +ಎಲ್ಲ ತಿಳಿದಿರುವ, +ಮಡಿಲ ಮೇಲಿನ ಗಣಕವೇ, +ವಿಶ್ವವ್ಯಾಪಿ, ಸರ್ವಜ್ಞಾನಿ ಬಲೆಯೇ +ಏನೇ ಬೇಡಿಕೆ, ಏನೇ ಹಂಬಲ, +ಬೇಕಾದರು, ಏನೇ ಬೆಂಬಲ +ಮೊರೆಹೋಗುವೆ ನಿನ್ನ, ನಾ ದುರ್ಬಲ! +ಜೀವಾತ್ಮದ ಸಂಚಯದ, +ಪರಮಾತ್ಮನ ಪರಿಚಯದ +ಬೇನೆ ಪರಿಹರಿಸುವೆಯ? +***** +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ಈ ಜುಲೈ ತಿಂಗಳ ಜಿಟಿ ಜಿಟಿ ಮಳೆ – ಗಟಗಟ ಕುಡಿದು ಧುತ್ತೆಂದು ಬೆಳೆದು ನಿಂತಿದೆ ಹುಲ್ಲು. ಎಲ್ಲಾದರೂ ಸ್ವಲ್ಪ ಪಡುವು ಸಿಕ್ಕರೆ ಸಾಕು : ಸಿಮೆಂಟುಗೋಡೆಯ ಬಿರುಕು, ಟಾರುಬೀದಿಯ ಒಡಕು – ಎಂಥ […] +‘ನಾ’ ‘ನೀ’ ಎಂದು ಹಿಗ್ಗಿ, ನುಗ್ಗಿ ಬರುತ್ತಿದ್ದ ನನ್ನ ಅಂತಃಕರಣದ ಮುಗ್ಧ ಸ್ನಿಗ್ಧ ಶಬ್ಧಗಳೆ, ಶೂನ್ಯಕ್ಕೆ ಕೊಂಬುಕೊಟ್ಟು, ಜಗ್ಗಿ ಕೆಳಗಿಳಿಸಿದಿ ‘ರಾ’? ಮ ‘ಮ’ಕಾರಕ್ಕೆ ಈಡಾಗಿ ಕಲ್ಲು ಇಟ್ಟಿಗೆ ನಡುವೆ ಎದೆಯ ಸೊಲ್ಲಡಗಿ ಕಣ್ಣುಪಟ್ಟಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_124.txt b/Kannada Sahitya/article_124.txt new file mode 100644 index 0000000000000000000000000000000000000000..362b1b07fe59f2a0e99bd2a0eef306c00414d6d6 --- /dev/null +++ b/Kannada Sahitya/article_124.txt @@ -0,0 +1,75 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ +ಸಂಜೆಯ ಕೆಂಪು ಕರಗುವ ಹೊತ್ತು, +ಮರದ ಬೊಡ್ಡೆಗೆ ಆತು +ಕೂತಿದ್ದ ಪುಟ್ಟ ಹುಡುಗ. +ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ +ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ +ಸಂಜೆಯಾಕಾಶಕ್ಕೆ ಗೆರೆ ಬರೆದ +ಗಿರಿಶಿಖರಗಳ ನೆರಳು. +ಈ ನೆರಳುಗಳ ನಡುವೆ +ನೆರ್ಳಾಗಿ ಕೂತವನನ್ನು +‘ಯಾಕೋ ಕೂತಿದ್ದೀಯಾ?-’ +ಅಂದೆ. +ಹೆದರಿ ಮೇಲೆದ್ದ. ಕಡ್ಡಿ ಕಾಲಿನ ಮೆಲೆ +ಹರುಕು ಚಿಂದಿಯ, ಜೋಲು ಮೋರೆಯ, +ಕೆದರಿದ ತಲೆಯ ಕೆಳಗೆ ಗಾಬರಿ ಕಣ್ಣು; +ಅಳು ಬೆರೆತ ಮಾತು; +‘ನಾನು ಬರಲಿಲ್ಲ, ಮನೆಯಲ್ಲಿ +ಒಡೇರು ಒದೀತಾರೆ…ಅದಕ್ಕೆ ಇಲ್ಲಿ…’ +ಸುತ್ತ ಕತ್ತಲ ಕಾಡು; ಆ ಬಗ್ಗೆ +ಭಯವಿಲ್ಲ ಇವನಿಗೆ +ತಪ್ಪಿಸಿಕೊಂಡ ದನ ಬಾರದ್ದಕ್ಕೆ +ತನಗೆ ಬೀಳುವೇಟಿನ ಭಯಕ್ಕೆ +ಇಲ್ಲಿ, ಸದ್ದಿರದೆ ಕೂತಿದ್ದಾನೆ. +ದನ ಬಾರದ್ದು ಇವನ ತಪ್ಪಲ್ಲ; +ಆದರೂ ದನ ಬಾರದೆ ಇವನು +ಹಿಂದಿರುಗುವಂತಿಲ್ಲ; ಹಿಂದಿರುಗಿದನೊ +ಏಟು ತಪ್ಪುವುದಿಲ್ಲ. ಹಾಗಂತ +ದಟ್ಟ ಕಾಡಿನ ಮೇಲೆ ಕತ್ತಲೆ ಇಳಿದು +ಹಬ್ಬುವುದು ನಿಲ್ಲುವುದಿಲ್ಲ; ಕಪ್ಪೆಗಳ +ವಟ ವಟ, ಚಿಕೆಗಳ ಮಿಣ ಮಿಣ- ಯಾವುದೂ +ನಿಲ್ಲುವುದಿಲ್ಲ. ಈ ಕತ್ತಲೆಯ ಒಳಗೆಲ್ಲೊ +ಕಾದಿದ್ದಾನೆ ಒಡೆಯ. +ಕೈಯಲ್ಲಿ ಚಾವಟಿ ಹಿಡಿದು, ಹೀಗೆಯೇ +ಇಂಥ ಕಡ್ಡಿ ಕಾಲಿನ, ಜೋಲು ಮೋರೆಯ +ಹಾಲುಗಣ್ಣಿನ ಮೈಯ ಚರ್ಮ ಸುಲಿಯುತ್ತ +ಈ ದಟ್ಟ ಕಾಡಿನ ಕತ್ತಲೆಗೆ ಕೆಂಗಣ್ಣು ಹಾಯಿಸುತ್ತ. +ಕವನ ಜಿ ಎಸ್ ಶಿವರುದ್ರಪ್ಪ +ವ್ಯರ್ಥ +ಇಲ್ಲ, ನಾವೂ ನೀವೂ ಸೇರಲೇ ಇಲ್ಲ; +ಮುಖಕ್ಕೆ ಮುಖ, ಎದೆಗೆ ಎದೆ ಹತ್ತಿರ ತಂದು +ಮಾತಾಡಲೇ ಇಲ್ಲ. +ನಮ್ಮ ಮಧ್ಯೆ ಸದಾ ಗಾಳಿ, ಮಳೆ ಕೆಸರು; +ತಂತಿ ಕಂಬಗಳುರುಳಿ, +ಇದ್ದ ಸೇತುವೆ ಮುರಿದು +ಅಲ್ಲಿನ ಗಾಡಿ ಅಲ್ಲೇ +ಇಲ್ಲಿನ ಗಾಡಿ ಇಲ್ಲೇ. +ಮುಚ್ಚಿದ್ದ ಕಿಟಕಿ, ಹೊಗೆ ಹಿಡಿದ ಸೂರಿನ ಕೆಳಗೆ +ಒಡೆದ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತ, +ಗಿಡದಲ್ಲರಳುತ್ತಿದ್ದ ಮೊಗ್ಗುಗಳನ್ನು ಬಡಿದು ಕೆಡವುತ್ತ, +ತಲೆಯನ್ನು ಗಾಳಿ ಊಳಿಡುವ ಪಾಳುಗುಡಿ ಮಾಡಿ +ಹತ್ತಿದ ಹಣತೆಗಳನ್ನು ನಂದಿಸುತ್ತ +ಕತ್ತಲಲ್ಲೇ ತಡಕಾಡಿಕೊಂಡು ಕೈ ಚಾಚುತ್ತೇವೆ, +ರಾಂಗ್ ನಂಬರಿಗೆ ಟೆಲಿಫೋನು ಮಾಡಿ +ಉತ್ತರಕ್ಕೆ ಕಾಯುತ್ತ ಕೂರುತ್ತೇವೆ. +***** +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +ಭೂತಕಾಲದ ಗರ್ಭದಲ್ಲಡಗಿ, ಮೈಯುಡುಗಿ, ಗಹಗಹಿಸಿ ನಗುವ ಕಾಲನತ್ಯದ್ಭುತ ದವಡೆ- ಯೊಲು ತೋರುತಿದೆ ಕಿತ್ತೂರ ಬಲ್‌ಕೋಟೆ ಗೋಡೆ! ಅಲ್ಲಲ್ಲಿ ಬೆಳಕಳಿದ ಬೆಳಕಿಂಡಿಯಲಿ ನುಗ್ಗಿ, ಗೋಳಿಡುವ ಅಪಸ್ವರದಂತೆ ಬಿಸುಸುಯ್ಯುತಿದೆ ಗಾಳಿ, ವೈತಾಳಿ! ಗಿಡಗಂಟಿ ಕೊನ್ನಾರದಲಿ ಗೂಡು ಕಟ್ಟಿಹ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_125.txt b/Kannada Sahitya/article_125.txt new file mode 100644 index 0000000000000000000000000000000000000000..7b31e47cc6855a9889110d27bc731bab76849d38 --- /dev/null +++ b/Kannada Sahitya/article_125.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಚಂದ್ರ ಹಂದಿ, +ಅವಳು ಗುಟುರುವುದು ನನ್ನ ಗಂಟಲಿನಿಂದ +ನನ್ನ ಒಳಗೆಲ್ಲ ಬೆಳಗುವ ಹಾಗೆ ಅವಳು ಹೊಳೆಯುತ್ತ ಹೋದಂತೆ +ಅಂತರಾಳದ ನನ್ನ ಕೆಸರು ಸಂಭ್ರಮಿಸಿ +ಕಾಂತಿಯುಕ್ತ ಬೆಳ್ಳಿಗುಳ್ಳೆಗಳಾಗಿ ಹೊಮ್ಮಿ ಚಿಮ್ಮುತ್ತವೆ +ನಾನು ಗಂಡು ಹಂದಿ +ಮತ್ತು ಕವಿ +ಅವಳು ತನ್ನ ಧವಳ ತುಟಿಗಳ ತೆರೆದು +ನನ್ನನ್ನು ನುಂಗಲೆಂದು ಅಗಲಿಸಿದಾಗ +ನಾನು ಅವನ್ನು ಕಚ್ಚಿಬಿಡುತ್ತೇನೆ +ಆಗ ಚಂದ್ರಲೋಕದಲ್ಲಿ ಹರ್ಷೋದ್ಘಾರ. +ಬಯಕೆಯ ನಿಶೆಯಲ್ಲಿ ನಾವಾಗ ತುಯ್ದಾಡುವುದು +ಗುಟುರುವುದು +ಗುಟುರುತ್ತಾ ಹೊಳೆಯುವುದು. +(Denis Levertov(೧೯೨೩-೧೯೯೭) ಅಮೆರಿಕಾದ ಈ ಕಾಲದ ಮುಖ್ಯ ಕವಿಗಳಲ್ಲಿ ಒಬ್ಬರು. ನಾನು ೮೦ರ ದಶಕದಲ್ಲಿ ಬಾಸ್ಟನ್ ಟಿಪ್ಟ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಾಪಕನಾಗಿದ್ದಾಗ ನನ್ನ ಸಹೋದ್ಯೋಗಿಯಾಗಿದ್ದ ಈಕೆ ತಮ್ಮ ಮನೆಯಲ್ಲಿ ಯುವಕ ಯುವತಿಯರಿಗೆ ಸತ್ಯಾಗ್ರಹ ಮಾಡುವುದು ಹೇಗೆ, ಹಿಂಸೆಗೆ ಪ್ರತಿಹಿಂಸೆ ಮಾಡದಂತೆ, ಜೀವನ ಪ್ರೀತಿ ಉತ್ಸಾಹ ಕಳೆಯದಂತೆ ಬದುಕುವುದು ಹೇಗೆ, ಪೊಲೀಸರ ಬಲಾತ್ಕಾರಕ್ಕೆ ಜಗ್ಗದಂತೆ ಕೂತಲ್ಲೇ ಕೂತಿರುವುದು ಹೇಗೆ ಇತ್ಯಾದಿಗಳನ್ನು ಕಲಿಸುವ ಶಾಲೆಯನ್ನು ನಡೆಸುತ್ತಿದ್ದರು. ಯೋಗ, ಹಾಡು, ಕವಿತೆ, ಕಥನ-ಇವೇ ಸತ್ಯಾಗ್ರಹ ಶಾಲೆಯ ಪಠ್ಯಗಳು, ಅಪ್ಪಟ ಗಾಂಧಿವಾದಿಯಾದ ಇವರು ಮಾರ್ಟಿನ್ ಲ್ಯೂಥರ್ ಕಿಂಗ್‌ನ ಚಳುವಳಿಯಲ್ಲೂ ವಿಯಟ್ನಾಂ ಮೇಲಿನ ಯುದ್ಧದ ವಿರೋಧಿಯಾಗಿಯೂ ತನ್ನ ಗಂಡನ ಜೊತೆ ಸಕ್ರಿಯರಾಗಿದ್ದವರು. ಇವರು ಯಾವ ಶಾಲೆಗೂ ಹೋಗದೆ, ಯಾವ ಡಿಗ್ರಿಯನ್ನು ಪಡೆಯದೆ ಸ್ವಾಧ್ಯಾಯನಿರತರಾಗಿ ಬೆಳೆದವರು. ತನ್ನ ಅನುಭಾವಿ ಅಪ್ಪನ ಮಾರ್ಗದರ್ಶನದಲ್ಲಿ ಬೆಳೆದ ಇವರು ರಾಜಕೀಯವಾಗಿ ಕ್ರಿಯಾಶೀಲರಾದರೂ, ಅವರ ಕಾವ್ಯ ಅನುಭಾವದ ನೆಲೆಯದು- ಘೋಷಣೆಯದಲ್ಲ. ನನ್ನ ಮೇಲೆ ವೈಯಕ್ತಿಕವಾಗಿ ತುಂಬ ಪ್ರಭಾವ ಬೀರಿದವರಲ್ಲಿ ಅಪ್ಪಟವಾದ ಸಂವೇದನಾಶೀಲರಾದ ನಿರ್ಭಯರೂ ನಿರಹಂಕಾರಿಯೂ ಆದ ಇವರೊಬ್ಬರು.) +ಸೂರ್ಯ ಆಗಾಗ ಹಗಲುಗಳ ನುಂಗಿ ಸುಖವಾಗಿ ಸಾಯುತ್ತಿದ್ದ ಅಥವಾ ಬದುಕುತ್ತಿದ್ದ ಆಗೊಮ್ಮೆ ಈಗೊಮ್ಮೆ ಹೆಣ್ಣುಗಳ ತುಟಿಯಲ್ಲಿ ಪಿಸುನುಸುಳುತ್ತಿದ್ದ ಅಯ್ಯೋ ಗದ್ದಲ ಭೂಮಿಯ ತುಂಬ ಮಕ್ಕಳೋ ಮಕ್ಕಳು! ***** +ಪೂರ್ವ ದಿಙ್ಮಂಡಲದಿ ಪುಣ್ಯವವತರಿಸುತಿದೆ- ಪೂರ್ಣ ಚಂದ್ರೋದಯದ ರೂಪದಲ್ಲಿ; ಪೂರ್ಣತೆಯು ಸಂಪೂರ್ಣ ಸಾಕಾರಗೊಳ್ಳುತಿದೆ- ಪೌರ್ಣಿಮೆಯ ಪೂರ್ಣೇಂದು ವೇಷದಲ್ಲಿ. ಬೈಗುಗೆಂಪಿನ ಬಣ್ಣ ಕಡಲಾಳ ತಳದಿಂದ ಬುರುಬುರನೆ ಮೇಲೆದ್ದ ಗುಳ್ಳೆಯಂತೆ, ತಂಗದಿರನುದಯಿಸಿದ, ಶಾಂತಿಮತಿ ಬಿಂಬಿಸಿದ ತಪಗೊಂಡ ಮೌನವ್ರತಧಾರಿಯಂತೆ. ಹೊನ್ನ […] +ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – ಕೊಂಬೆಗಳೆಲ್ಲ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_126.txt b/Kannada Sahitya/article_126.txt new file mode 100644 index 0000000000000000000000000000000000000000..6ee306f4172e7d1fcbd8d04f8d473298e2bd5b68 --- /dev/null +++ b/Kannada Sahitya/article_126.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರವಿ +ಕೂತಿದ್ದಾನೆ +ಪಡುವಣದ ಅಂಗಡಿಯಲ್ಲಿ +ಸೀರೆಗಳ +ಹ +ರವಿ. +***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ತನ್ನ ತುರುಬಿನಲಿ ಒಂಟಿಗೂದಲ ಗುರುತಿಸಿ ಹೌಹಾರಿದ ಚೆಲುವೆ ಯೌವನಸ್ಥೆ- ಆ ಚಿಂತೆಯನ್ನೇ ತಲೆಗೆ ಹಚ್ಚಿಕೊಂಡು ಇಡೀ ತಲೆಯನ್ನೇ ನರೆತಿಸಿಕೊಂಡಳು. ***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_127.txt b/Kannada Sahitya/article_127.txt new file mode 100644 index 0000000000000000000000000000000000000000..0b8fe65549727dbfc511793f7c1621addefcb44c --- /dev/null +++ b/Kannada Sahitya/article_127.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೨೧ನೇ ಜುಲೈ ೨೦೦೧) +ಇಂಗ್ಲಿಷಿನ ‘ಲಿಗಸಿ’ ಇದಕ್ಕೆ ಕನ್ನಡದ ಪರಿಭಾಷೆಯನು? ಹುಡುಕುತ್ತಲೇ ಇದ್ದೇನೆ. ಕಳೆದ ಹತ್ತು ವರ್ಷಗಳಿಂದ… ಅಂದರೆ ಮೈಯಲ್ಲಿ ಗಂಡಸ್ತಿಕೆಯ ಛಾಪು ಗಟ್ಟಿಕೊಂಡಂದಿನಿಂದ. ಮನಸ್ಸು ಹುಡುಗು ಅಳುಮುಂಜಿತನವನ್ನು ಕಳಚಿಕೊಂಡಾಗಿನಿಂದ. ಅಮ್ಮನ ಸೆರಗಿನಾಚೆಗಿನ ಪ್ರಪಂಚಕ್ಕೆ ನನ್ನನ್ನು ನಾನು ಒಡ್ಡಿಕೊಂಡಾಗಿನಿಂದ. ಸರಳವಾಗಿ ಈ ಬುದ್ಧಿ ತನ್ನ ಅತೀವ ಖಾಸಗೀ ಸ್ವಾಯತ್ತತೆಯನ್ನು ಅನುಭವಿಸತೊಡಗಿದಂದಿನಿಂದ. ಈವರೆಗಂತೂ ಸಿಕ್ಕಿಲ್ಲ. ನಿಮ್ಮಲ್ಲಿದ್ದರೆ ಹೇಳಿ. ಸದ್ಯದ ಜೀವಿತದಲ್ಲಿ ಸಿಕ್ಕ ಸಿಕ್ಕ ಇಂಗ್ಲಿಷ್- ಕನ್ನಡ ನಿಘಂಟುಗಳನ್ನು ತೆಗೆದು ‘ಲೆಗೆಸಿ’ಗೆ ಕನ್ನಡದ ಪರ್ಯಾಯವನ್ನು ತಡಕಿದ್ದೂ ಒಂದು ಪ್ರತೀತಿ. ಪಿತ್ರಾರ್ಜಿತ ಅನ್ನುವುದು ಎಲ್ಲೂ ಸಿಗುವ ಸಾಮಾನ್ಯ ಅರ್ಥವಾದರೂ ನನಗೆ ಅದೇಕೋ ಸೂಕ್ತ ಅಂತನ್ನಿಸುವುದಿಲ್ಲ. ಇದರಲ್ಲಿ ಅಡಕಗೊಂಡಿರುವ ಸೊತ್ತು. ಆಸ್ತಿಪಾಸ್ತಿ, ಎಂಥದೋ ನಿರಾಯಾಸದ ಗಳಿಕೆ… ಇಂಥ ಲಗತ್ತುಗಳು ನನಗೆ ಎಂದಿದ್ದರೂ ಹೇಸಿಗೆಯೇ. ನಾನು ಇಂಥವರ ಮಗ, ಇಂಥವಳ ಗಂಡ, ಇವರಿಗೆ ಅಳಿಯ, ಅವನಿಗೆ ಷಡ್ಡಕ… ಇವುಗಳೆಲ್ಲ ಒಂದು ನಮೂನೆ ಪಿಡುಗಿದ್ದ ಹಾಗೆ. ಸತ್ತು ವೈತರಣಿ ದಾಟಿಯೂ ಉಳಿದೇಬಿಡುವ ಸೋಂಕು. ಕಳಚಿಕೊಳ್ಳಲು ಸಾಧ್ಯವಿದ್ದಿದ್ದಲ್ಲಿ ಯಾತರದ್ದೂ ಹಂಗಿಲ್ಲದ ನಿರ್ವಾಣ ನನಗೆ ಪರಮಪ್ರಿಯ. ಮೊನ್ನೆ ಸುಮ್ಮನೆ ಖುಷಿಗೆಂದು ವಾರುಣಿಯೊಟ್ಟಿಗೆ ಗರುಡ ಮಾಲಿಗೆ ಹೋಗಿದ್ದೆ. ನನ್ನ ೨೮ನೇ ಹುಟ್ಟಿನ ತೇದಿಯ ಮುನ್ನಾ ದಿನ. ಉಡುಗೊರೆಯ ನೆವದಲ್ಲಿ ತಲೆಯಿಂದ ಕಾಲಿನವರೆಗೆ ಹೊಸ ತೊಡಿಕೆಗಳ ಖರೀದಿ. ನನಗೆಂದು ೧೦ ಸಾವಿರಕ್ಕೂ ಮೀರಿ ಕಾರ್ಡು ಉಜ್ಜಿದ್ದಳು. ಮರುದಿನ ಎಲ್ಲವನ್ನೂ ತೊಟ್ಟು ಅವಳೊಟ್ಟಿಗೆ ಹೊರಟಾಗ ಹತ್ತೆಂಟು ಬ್ರ್ಯಾಂಡುಗಳ ನಡೆದಾಡುವ ಜಾಹಿರಾತಿನಂತಾಗಿಬಿಟ್ಟಿದ್ದೆ. ಸಂಜೆ ಎಬೋನಿಯಲ್ಲಿ ವೈನ್ ಗುಟುಕಿಸುತ್ತ, ಊeಥಿ, I ಜಿeeಟ- I hಚಿve beಛಿome ಚಿ mಚಿಟಿiquiಟಿe ಡಿessuಡಿeಛಿಣeಜ!!! ಒಳ್ಳೇ ನಡೆದಾಡೋ ಅಡ್ವರ್ಟೈಸ್‌ಮೆಂಟ್ ಥರಾ ಮಾಡಿಬಿಟ್ಟಿದ್ದೀ… ಅಂತ ಮುನಿಸು ತೋರಿದ್ದೆ. ‘ಇನ್ನೆನು ಡೆಸರ್ಟಿನ ಹೊತ್ತಿಗೆ ಕಳಚುವುದು ಇದೆಯಲ್ಲ?’- ಅಂತ ಕಣ್ಣು ಮಿಟುಕಿಸಿದ್ದಳು. ‘ನನಗೆ ಈ ಹೆಸರುಗಳನ್ನು ಕುರಿತಾಗಿ ಮೊದಲಿನಿಂದಲೇ ಜಿಗುಪ್ಸೆ, ಅಡಿಡಾಸ್, ರೀಬಾಕ್, ಲೀ, ಜಾಕೀ, ಲೀ ಕೂಪರ್… ಅಸಹ್ಯ ಅನ್ನಿಸುತ್ತೆ, ವಾರೀ!!’ ಅಂದಾಗ ಹಾಗೇ ನಕ್ಕಿದ್ದಳು. ಸುಂದರ ಸಂಜೆ ಸರಿರಾತ್ರಿಯಲ್ಲಿ ಹೊರಳುವಾಗ ಇಬ್ಬರೂ ಅವಳ ಮನೆ ಸೇರಿದ್ದೆವು. ನನ್ನ ತೊಡಿಕೆಗಳನ್ನು ಒಂದೊಂದೇ ಕಳಚುತ್ತ ಮದುವೆ ವಿಷಯ ಪ್ರಸ್ತಾಪಿಸಿದ್ದಳು. ಲಗತ್ತುಗಳಿರದೆಯೇ ಬದುಕಬೇಕು ಎನ್ನುವ ನನ್ನ ಅಭಿಮತವನ್ನು ಮತ್ತೊಮ್ಮೆ ಖಡಾಖಂಡಿತ ಹೇಳಿದ್ದೆ. We ಚಿಡಿe ಣogeಣheಡಿ ಚಿs ಟoಟಿg ಚಿs ತಿe ಚಿಡಿe ಛಿomಜಿoಡಿಣಚಿbಟe ತಿiಣh eಚಿಛಿh oಣheಡಿ, hoಟಿeಥಿ! ಎಲ್ಲ ಕಳಚಿದ ಮೇಲೂ ತೊಟ್ಟ ಕಾಮಸೂತ್ರದ ಎಸಳನ್ನು ಕಂಡು ನಕ್ಕವಳು ಖಿhis is ಚಿ bಡಿಚಿಟಿಜ ಣoo!!ಎಂದು ಛೇಡಿಸಿದ್ದಳು. +ನಾನು ಹೀಗೇ. ನಾಗರಿಕತೆಗೆ ರೇಖೆಗಳ ರೂಪು ಹಚ್ಚುತ್ತ ಮನೆ ಮಠ ಊರು ಕಟ್ಟುವ ನಮ್ಮಂತಹವರೆಲ್ಲ ಪ್ರಾಯಶಃ ಹೀಗೆಯೇ ಏನೋ. ನಮ್ಮದು ಗೆರೆ ಬರೆಯುವ ಜಾಯಮಾನ. ಐ-ಬಾರಿನಲ್ಲಿ ಹೆಣ್ಣು ಹಬ್ಬಿ ತೊನೆದಷ್ಟೇ ಸರಾಗ ರಾಮನವಮಿಯ ಕಲ್ಯಾಣಿಗೆ ತಲೆದೂಗುವುದು. ಬರ್ಮ್ಯುಡಾಸ್ ಬಿಗಿದು ಮಾಲ್ ಹೊಕ್ಕಷ್ಟೇ ಸುಲಭ ಪಂಚೆ ಶಲ್ಯಕ್ಕೆ ಮೈಯಾಗುವುದು. ಒಮ್ಮೊಮ್ಮೆ ನಮ್ಮಷ್ಟು ಉಸಾಬರಿಯಿರುವ ಮಂದಿಯೇ ಇಲ್ಲ ಅನುಭವ ಹಾಗೆ… We ಜoಟಿಣ ಟಿeeಜ ಟಿo eಜuಛಿಚಿಣioಟಿ; We ಜoಟಿಣ ಟಿeeಜ ಟಿo seಟಜಿಛಿoಟಿಣಡಿoಟ- ಅಂತ ಓದು ದಿಕ್ಕರಿಸಿದರೂ ಪಿಂಕ್ ಪ್ಲಾಯ್ಡ್ ಮನಸ್ಸಿಗೇ ಮೂಗು ಹಿಡಿದು ಪ್ರಣವಸ್ಯ ಪರಬ್ರಹ್ಮ ಋಷಿ ಅಂತ ದೇಸೀ ಸಂಕಲ್ಪ! ಬರುಗುವ ಬಿಯರು ಉಕ್ಕಿ ಗಾಜಿನ ಅಂಚು ಮೀರಿದರೆ ಗುಟುಕು ಗುಟುಕಿನ ನಡುವೆ ಯೋನಿ ಚಕ್ರದ ವಿವರ! ಕಾಫೀ ಷಾಪಿನ ಟಿಷ್ಯೂ ಚೌಕದ ಮೇಲೆ ಗೀಚಿದ್ದೂ ವಿನ್ಯಾಸ. ಎಂಥದೋ ಪ್ರಣಾಳಿ ಅಂತೆಲ್ಲ ಅರ್ಥ. ಬಿಯರು ಮಗ್ಗಿನ ಭರ್ತಿ ಭಗವದ್ಗೀತೆಯ ನಿಷ್ಕರ್ಷೆ. ಬರೆದ ಗೆರೆಯೆಲ್ಲ ಬ್ರಹ್ಮ. ಬರೆಸಿಕೊಂಡ ಚೌಕ ಪರಬ್ರಹ್ಮದ ತುಣುಕು. ಬತ್ತಲಾದಾಗ ಕಾಂಡೋಮ್ ತೊಡಿಕೆ. ಅದೇ ಬ್ರಹ್ಮ ಸಾಕ್ಷಾತ್ಕಾರ. ಕೆಲವೊಮ್ಮೆ ಅಷ್ಟೇ ಸಲೀಸು ಮಾತು… ಮೊಹರುಗಳಿಲ್ಲದೆಯೆ… +ತಾಮರಸ ಜಲದಂತೆ- ಅಂತ ಅಮ್ಮ ಯಾವುದೋ ದಾಸಯ್ಯನ ಮಾತನ್ನು ದೇವವಾಣಿ ಅಂತ ನಂಬಿ ಬದುಕಿದ್ದಿದೆ. ಈಗಲೂ ಬದುಕುತ್ತಿದ್ದಾಳೆ. ಆವಳಿಗೆ ಹಾಗೆ ಮಾಡದೆ ಬೇರೆ ವಿಧಿಯೇ ಇರಲಿಲ್ಲ. ಆ ಮಾತು ಬೇರೆ. ಸೋಕಿದ್ದೂ ಸೋಕಿರದ ಹಾಗೆ ಬದುಕುವುದಿದೆಯಲ್ಲ- ಅದನ್ನೆ ನಾನು ಲಗತ್ತುಗಳಿಲ್ಲದೆಯೆ ಅನ್ನುವುದು. ಕಾಂಡೋಮ್ ಸಹಿತದ ಮೈಥುನವಿದ್ದ ಹಾಗೆ. ನನ್ನ ಹೆಸರಿನೊಟ್ಟಿಗಿರುವ ಈ ಕಡಿದಾಳ್ ಎಂಬ ಬಾಲವನ್ನು ನೋಡಿ. ಏನನ್ನಬೇಕು? ಕೆಲವೊಮ್ಮೆ ಅದು ಹೊರೆ ಅನಿಸಿಬಿಟ್ಟಿದೆ. ಈ ನಾಗರಿಕತೆಯಲ್ಲಿ ಅದು ಸದ್ಯಕ್ಕಂತೂ ಅನಿವಾರ್ಯದ ಅಳವಡಿಕೆ. ನನ್ನ ಆರ್ಕಿಟೆಕ್ಚರಿನ ಓದಿನ ದಿನಗಳಲ್ಲಿ ಮೊಟುಕುಗೊಂಡು ಒಂದು ನಮೂನೆಯ ಅಡ್ಡ ಹೆಸರಾಗಿ ಅದು ಮತ್ತಷ್ಟು ಜಗ್ಗಿಕೊಂಡಿದೆ. ನನ್ನ ಓರಗೆಯ ಗೆಳೆಯರೆಲ್ಲ ನನ್ನನ್ನು ‘ಕಡೀ’ ಅಂತಲೇ ಕರೆಯುವುದು. ಇನ್ನು ಅಮ್ಮ ಇಟ್ಟ ಹೆಸರೇನು? ನಾನು ಅವಳ ಬದುಕಿನ ಒಟ್ಟಾರೆ ಅಭೀಪ್ಸೆ ಅಂತ ಇಟ್ಟಿದ್ದು. ಈ ಔದ್ಯೋಗಿಕ ನಾಗರಿಕತೆಯಲ್ಲಿ, ಎರಡೂವರೆ ಬೆರಳಗಲದ ಬಿಸಿನೆಸ್ ಕಾರ್ಡಿನಲ್ಲಿ ನಾನು ಅಭೀಪ್ಸಾ ಕಡಿದಾಳ್!! ಕೆಲವರು ನನ್ನನ್ನು ಬಿಪ್ಸ್ ಎಂದೂ ಕರೆಯುವುದಿದೆ. ಅದೇನೇ ಇರಲಿ, ಈಗ ನನ್ನ ದಾವೆಯೇನಿದ್ದರೂ ನನ್ನ ಬೆನ್ನಿನಲ್ಲಿರುವ ಈ ಕಡಿದಾಳ್ ಎಂಬುದರ ಲೆಗೆಸಿಯನ್ನು ಕುರಿತು. +ತೊಂಬತ್ತೈದರ ಡಿಸೆಂಬರ್, ಸ್ಕೂಲ್ ಆಫ್ ಪ್ಲ್ಯಾನಿಂಗ್ ಎಂಡ್ ಆರ್ಕಿಟೆಕ್ಚರಿನಲ್ಲಿ ದಾಖಲಾದ ಸಂದರ್ಭ. ಪೀಯೂಸಿ ಮುಗಿಸಿದ್ದ ನನ್ನನ್ನು ಅಮ್ಮ ಡೀನ್ ಅನಂತಕೃಷ್ಣ ಅವರನ್ನು ಭೇಟಿಯಾಗಲು ಕರೆತಂದಿದ್ದಳು. ನನ್ನ ಮೇಲೆ ಎಷ್ಟೆಲ್ಲ ಭರವಸೆಯಿತ್ತು ಅವಳಿಗೆ. ನನ್ನ ಹೆಸರು ಓದಿದ ಡೀನ್, ‘ಅಕ್ಷೋಭ್ಯ ಕಡಿದಾಳ್ ಅಂತ ಒಬ್ಬರು ಆರ್ಕಿಟೆಕ್ಟ್ ಇದ್ದರು. ಅವರು ನನಗೆ ಚೆನ್ನಾಗಿ ಗೊತ್ತು. ಜೆ.ಜೆ. ಸ್ಕೂಲಿನಲ್ಲಿ ನನಗೆ ಕೆಲಕಾಲ ಮೇಷ್‌ಟ್ರರಾಗಿದ್ದರು. ನಿಮಗೆ ಗೊತ್ತೆ?- ಅಂತ ಕೇಳಿದ್ದರು. ಅಮ್ಮನಲ್ಲಿ ಕಸಿವಿಸಿ ತೊಟ್ಟಿಕ್ಕಿತ್ತು. ’ಅವರು ಇವನಿಗೆ ತಂದೆಯಾಗ…‘ ನಾಲಗೆಯಲ್ಲೇನೋ ಬೇವಾರಸಿ ತೊಡರು. ನನ್ನೊಳಗೂ ಮೂಕ ತಲ್ಲಣ. ’ಏನ್ರೀ ಹೀಗಂತೀರಿ? ನನಗೆ ಗೊತ್ತಿರೋ ಹಾಗೆ ಅವರಿಗೆ ಎರಡು ಹೆಣ್ಣು ಮಕ್ಕಳಿದ್ದವು. ಈಗ ಅಮೆರಿಕಾದಲ್ಲೆಲ್ಲೋ ಇದ್ದಾರೆ ಅಂತ ಕೇಳಿದ್ದೀನಿ…’ ಅಮ್ಮನಿಗೆ ಆಗ ಮಾತು ಹೊರಳಿರಲಿಲ್ಲ. ಊe ತಿಚಿs ಚಿ gಡಿeಚಿಣ mಚಿಟಿ. ಂಟಿಥಿತಿಚಿಥಿs, iಜಿ ಥಿouಡಿ soಟಿ ಜಿಚಿಡಿes ತಿeಟಟ iಟಿ eಟಿಣಡಿಚಿಟಿಛಿe ಣesಣ ತಿe shಚಿಟಟ ಛಿeಡಿಣಚಿiಟಿಟಥಿ ಣuಡಿಟಿ him iಟಿ!! ಡೀನ್‌ಗೆ ಎಂಥದೋ ಅನುಮಾನ, ಗುಮಾನಿ. ಹುರುಳಿಲ್ಲದ್ದೇನಲ್ಲ. ಅಮ್ಮ ಅವಮಾನದಿಂದ ತೊಪ್ಪೆಯಾಗಿದ್ದಳು. ಹೊಸತೇನಲ್ಲವಲ್ಲ. ಅವಳು ಬದುಕಿಗೆ ಹೆದರಿದ್ದಿದ್ದರೆ ನಾನು ಈ ಹಂತವನ್ನು ತಲುಪುತ್ತಲೇ ಇರಲಿಲ್ಲ. ‘ಕಂದ! ಇನ್ನೆಲ್ಲ ನಿನ್ನ ಕೈಯಲ್ಲಿದೆ. ನೀನು ನಿನ್ನ ವಾರಸಿಕೆಗೆ ಪುರಾವೆಯಾಗಬೇಕು.’ ಮನೆಗೆ ಬಂದಾಗ ಸಂಜೆ ಕರೆಯುತ್ತಿತ್ತು. ಮದರಾಸಿನ ಸೈಕ್ಲೋನ್ ಸುರಿತ. ಕತ್ತಲು ಜಿಟಿಪಿಟಿಸುತ್ತಿತ್ತು. ‘ಮಾಮ್! ಅವರೇಕೆ ನಮ್ಮ ಜತೆ ಇರಲೇ ಇಲ್ಲ?’ ಅದೇ ರೇಜಿಗೆಯ ಜಿಟಿಪಿಟಿ. ತನಿಖೆ. ‘ಅವರ ಹೆಂಡತಿ ಅವರಿಗೆ ಡಿವೋರ್ಸ್ ಕೊಡಲೇ ಇಲ್ಲವಲ್ಲ, ಅಭೀ…!!’ ಅವಳದ್ದು ವಾರಸು ಇರದ ನೋವು. +ಹಳೆಯ ತಲೆಮಾರಿನವರು ಅವರಿವರು ನನಗೆ ಸಿಕ್ಕಾಗ ಎಂಥದೋ ಶಂಕೆಯಿಂದ ‘ಹಿಂದೊಮ್ಮೆ ಕಡಿದಾಳ್ ಮಂಜಪ್ಪ ಅಂತ ಚೀಫ್ ಮಿನಿಸ್ಟರ್ ಆಗಿದ್ದರು. ಅವರೇನಾದರೂ…’ ಅಂತ ಸುರು ಹಚ್ಚಿದರೆ ಅವರ ಮಾತಿಗೆ ನಾನು ಎಡೆ ಕೊಡುವುದು ಕಡಿಮೆ. ‘ಹಾಗಂತ ನಾನೂ ಕೇಳಿದ್ದೇನೆ. ನನ್ನ ತಂದೆ ಅದೇ ಊರಿನವರಂತೆ.’ ಹಿಂದೆಯೇ ಮತ್ತೊಂದು ವರಸೆ. ‘ನಿಮ್ಮನು? ನೋಡಿದರೆ ಕನ್ನಡದವರು ಅಂತ ಅನಿ?ಸೋದೇ ಇಲ್ಲ…?’ ನನ್ನದೋ ?ವಾರಸಿ ಚರ್ಯೆ. ಪಂಜಾಬಿನ ಅಮ್ಮನನೆ? ಹೆಚ್ಚು ಹೊತ್ತುಕೊಂಡವ. ತಪ್ಪು ನನ್ನದಲ್ಲ. ಅಮ್ಮನೋ- ನನ್ನೊಳಗೆ ಈ ನೆಲದ ಕಸುವು ಹೂಡುವಲ್ಲಿ ಮಾಡದ ಪ್ರಯತ?ವೇ ಇಲ್ಲ. ಮಣ್ಣಿನ ವಾಸನೆ, ಮಾತು ಮನುಷ್ಯನಿಗೆ ಮುಖ್ಯ ಅಂತ ಅಪ್ಪ ಹೇಳುತ್ತಿದ್ದರಂತೆ. ‘ಎಷ್ಟು ಚಂದ ಕನ್ನಡ ಬರೀತೀಯೋ?’ ಅವರಿದ್ದಿದ್ದರೆ ಖುಷಿ ಪಡ್ತಾ ಇದ್ದರು… ಏನೇ ಆದರೂ ಸಂಧ್ಯಾವಂದನೆಯನ್ನು ಮಾತ್ರ ತಪ್ಪಿಸಬೇಡ…’ ಈಗ ಈ ಊರಿನಲ್ಲಿ ನನ್ನದೇ ಆದ ಉದ್ಧಿಮೆಯಿದೆ. ಅಕ್ಷ ಕಾನ್‌ಫ್ಲುಯೆನ್ಸ್! ಇದು ಅಮ್ಮನೇ ಕೊಟ್ಟ ಹೆಸರು. ‘ಅವರ ನೆನಪಾಗಿಯೂ ಇರುತ್ತೆ!!’ ತನ್ನ ಪ್ರೀತಿಗೆ ಬಹಿರಂಗದ ವಾರಸಿಕೆಯನ್ನು ಕೊಡದ ವ್ಯಕ್ತಿಯ ಮೇಲೆ ಅದೆಷ್ಟು ವಾಂಛೆ ಗೊತ್ತೆ ಅವಳಿಗೆ? ನನಗೆ ಸುತರಾಂ ಒಗ್ಗದಂಥದ್ದು. ಪ್ರೀತಿಯನ್ನು ಆ ಹೆಸರಿನಿಂದ ಗುರುತಿಸಲೂ ನನಗೆ ಸರಿ ಅನಿಸುವುದಿಲ್ಲ. ಒಮ್ಮೆಮ್ಮೆ ವಾರುಣಿಯನ್ನೂ ಇಂಥದೇ ಪ್ರೀತಿಯ ಗದ್ಗದ ಭಾವುಕಳನಾಗಿಸುತ್ತದೆ. I hಚಿಣe ಣhose ಜಿouಡಿ ಟeಣಣeಡಿs, mಚಿಟಿ. ಙou ಛಿಚಿಟಟ ಣhಚಿಣ ಚಿಟಿಥಿಣhiಟಿg, buಣ ಟove!! ನಗೆ ಯಾವ ಲಗತ್ತುಗಳೂ ಸರಿಯೆನಿಸುವುದಿಲ್ಲ. ಚಡಪಡಿಕೆಗೆ ಹೆಸರು ಮೊಹರು ಬೇಕಿಲ್ಲ. +ತಹತಹ ವಿರಹವಲ್ಲ. +* +* +* +(೧೮ನೇ ಅಕ್ಟೋಬರ್ ೨೦೦೧) +ಕೆಲವು ತಿರುವುಗಳು ಬದುಕಿನ ಮೂಲಭೂತ ನಂಬಿಕೆಗಳನ್ನೆ ಅಲುಗಿಸಿಬಿಡಬಹುದು – ಈವರೆಗಿನದೆಲ್ಲ ಪೊಳ್ಳು ಅನಿಸಿಬಿಡುವಷ್ಟು. ಬದುಕಿದ್ದೇ ಸುಳ್ಳು ಅನಿಸುವಷ್ಟು. ಈ ತನಕದ ಸತ್ಯವನು? ತತ್ಕಾಲದ ಸತ್ಯ ಕೊಚ್ಚಿ ತೊಳೆದುಬಿಡಬಹುದು. ನ್ಯೂಟನ್ನನ್ನು ಐನ್‌ಸ್ಟೀನ್, ಐನ್‌ಸ್ಟೀನ್‌ನನ್ನು ಹಾಕಿನ್ಸ್, ಡಾರ್ವಿನ್‌ನನ್ನು? ಮತ್ತೊ? …. ಹೀಗೆ. ಭೌತವಿಜ್ಞಾನ ತನ್ನ ನೆಲಗಟ್ಟನ್ನು ಪುನರ್ವಿಮರ್ಶಿಸಿಕೊಂಡಾಗಲೆಲ್ಲ ತತ್ತ್ವಜ್ಞಾನವೂ ತನ್ನ ನೆಲೆಯನ್ನು ಮತ್ತೊಮ್ಮೆ ರೂಪಿಸಿಕೊಳ್ಳುತ್ತದೆಯಂತೆ. ಹಾಗೆಯೇ ಸಾಮಾಜಿಕ ನೆಲೆಗಳೂ… Phಥಿsiಛಿs ಚಿಟಿಜ Phiಟosoಠಿhಥಿ ಚಿಡಿe iಟಿಣeಡಿಜeಠಿeಟಿಜeಟಿಣ. So is ಂಡಿಛಿhiಣeಛಿಣuಡಿe – ಣhಚಿಣ ಜeಠಿeಟಿಜs oಟಿ boಣh. ಮೊನ್ನೆ ಸ್ಕೂಲಿನಲ್ಲಿ ಇದೇ ಚರ್ಚೆಯಲ್ಲಿ ಹುಡುಗರನ್ನು ತೊಡಗಿಸಿದ್ದೆ. ನಮ್ಮ ಪ್ರಸಕ್ತ ನಾಗರಿಕತೆಯ ಎರಡು ಮುಖ್ಯ ಅಂಶಗಳಾದ ಮಾಹಿತಿ ಮತ್ತು ವೇಗಗಳನ್ನು ಕುರಿತಾಗಿ ಮಾತು. ನಮ್ಮನ್ನು ನಮಗರಿವಿಲ್ಲದೆಯೆ ತನ್ನಲ್ಲಿ ಅದ್ದಿಕೊಂಡಿರುವ ಅಪಾರ ಮಾಹಿತಿ ಮತ್ತು ವೇಗಾಂಶಗಳನ್ನು ಹೊಂದಿರುವ ಧಾತುವಿದೆಯಲ್ಲ – ಅದನ್ನು ಏನೆಂದು ಕರೆಯುವುದು? ಅದು ಆಕಾಶ ತತ್ವವಿದ್ದ ಹಾಗೆ. ಈ ಶತಮಾನದ ನಾಗರಿಕತೆ ನಮಗೆ ಕೊಟ್ಟಿರುವ ತತ್ವ. ಹೊಸ ಮಾಹಿತಿಯನ್ನು ದಕ್ಕಿಸಿಕೊಂಡಾಗ. ಮೈ-ಮನಸ್ಸಿಗೆ ವೇಗಸ್ಪರ್ಶವುಂಟಾದಾಗ ಪ್ರಪಂಚವನ್ನು ನೋಡುವ ಸಾಧಾರಣ ಕಣ್ಣಿಗಿರುವ ವೇಗ, ಒದಗುವ ಮಾಹಿತಿ ಅದೆಂಥದ್ದಿರಬಹುದು? ಹಿಮಾಂಶು ಅಂತ ನನ್ನ ಸ್ಟೂಡೆಂಟ್ ಒಬ್ಬನಿದ್ದಾನೆ. ಎಷ್ಟು ಚೆನ್ನಾಗಿ ವಾದಿಸಿದ ಗೊತ್ತೆ? Uಟಿಛಿಟಚಿimeಜ ಟiಟಿes – ಅಂತ ಕೊಲಾಜೊಂದನ್ನು ಡಿಸೈನ್ ಕ್ಲಾಸಿನಲ್ಲಿ ನಮ್ಮ ಮುಂದಿಟ್ಟಿದ್ದ. ಆಗಲೇ ನನ್ನ ನೋಟ್‌ಪ್ಯಾಡಿನಲ್ಲಿ ‘ಈ ಗೆರೆಗೆ ವಾರಸುಗಳಿಲ್ಲ.’ ಅಂತ ಗೀಚಿಕೊಂಡಿದ್ದೆ. ಅ?! ಎಂತಹ ಮೆಟಫರು ಅದು. ತಲೆಕೆಳಗಾಗಿ ನಿಂತು ಪ್ರಪಂಚವನ್ನು ನಿಟ್ಟಿಸಿದರೆ ಭೂಮಿ ಮೇಲೆ ಆಕಾಶ ಕೆಳಗೆ – ಅಂತ ಹೇಳಿ ಹೊಸನಿಟ್ಟಿನಲ್ಲಿ ನೋಡಿದಾಗ ಅರ್ಥವೆಲ್ಲ ಅನರ್ಥ ಅಂದ. ನಾನು ಈವರೆಗಿನ ಅರ್ಥವೆಲ್ಲ ಈಗ ಅನರ್ಥ ಅಂತ ತಿದ್ದುಪಡಿ ಮಾಡಿದೆ. ನಮ್ಮ ಕಾಲದ ತಂತ್ರಜ್ಞಾನ ರೂಢಿಸಿರುವ ಕಾಳಜಿಗಳೆ ಇಂಥವು. ಈವರೆಗಿನ ಓರೆಯೆಲ್ಲ ಸದ್ಯಕ್ಕಂತೂ ನೇರ. ನಿಖರವಾಗಿ ಸತ್ಯ ಅಂತ ಯಾವುದೂ ಇಲ್ಲ. ಎಲ್ಲವೂ ತಾತ್ಕಾಲಿಕ. ಸುಳ್ಳೇ ಪರಮಾರ್ಥ. +ಅಂದು ಎರಡರ ಸುಮಾರಿಗೆ ಸ್ಕೂಲಿನಿಂದ ‘ಅಕ್ಷ’ಗೆ ಬಂದೆ. ಮೇಜಿನ ಮೇಲೆ ಸ್ಪೆಕ್‌ಟ್ರಮ್ ಫೌಂಡೇಷನಿ?ನ ಟಪಾಲೊಂದು ಇತ್ತು. ಅದು ನನ್ನ ಜೀವಿತದ ನಂಬಿಕೆಗಳನ್ನು ಬುಡಮೇಲು ಮಾಡ ಬಹುದೆಂದು ಅಂದುಕೊಂಡಿರಲಿಲ್ಲ. ಅಥವಾ ಅದು ತಾತ್ಕಾಲಿಕ ಸತ್ಯದ ಸೆಳಕಷ್ಟೆಯೆ? ಲಕೋಟೆಯನ್ನು ಒಡೆಯುತ್ತಿರುವಾಗಲೇ ಸೌಮಿತ್ರೋ ಫೋನು ಬಂತು. ‘ಕಂಗ್ರಾಚುಲೇಷನ್ಸ್ ಬಿಪ್ಸ್! ನನಗೆ ತುಂಬ ಖುಷಿಯಾಗಿದೆ. ಗಿeಡಿಥಿ ಜeseಡಿviಟಿg ಛಿhoiಛಿe! ನಾನು ಫೌಂಡೇಷನ್ನಿನ ಮೂರು ಪುಟದ ವರದಿಯಲ್ಲಿ ಎದ್ದು ಕಾಣುವಂತೆ ‘ಅಕ್ಷ ಕಾನ್‌ಫ್ಲುಯೆನ್ಸ್’ನ ಹೆಸರು ನೋಡಿದಾಗಲೇ ನನಗೆ ಅರ್ಥವಾದದ್ದು – ನನಗೆ ಅಂದರೆ ನಮ್ಮ ಡಿಸೈನ್ ಪ್ರ್ಯಾಕ್ಟೀಸಿಗೆ ಒಂದು ರಾಷ್ಟ್ರೀಯ ಪುರಸ್ಕಾರ ಬಂದಿದೆಯೆಂದು! ಆ ಬಳಿಕ ಹತ್ತಾರು ಓರಗೆಯವರ ಕರೆಗಳು. ಖುಷಿಯ ಹಂಚಿಕೆ. ಸಂಜೆ ಐದರ ಸುಮಾರಿಗೆ ಅನೂಪ ಮೊದಲಿಗೆ ಕರೆದಾಗ ಮತ್ತೊಂದು ಅನಿರೀಕ್ಷಿತ ಕಾದಿತ್ತು. ‘ಅಕ್ಷೋಭ್ಯ ಕಡಿದಾಳ್ ಅಂತ ಒಬ್ಬರಿಗೆ ಪಾಸ್ಥ್ಯುಮಸ್ ಲೈಫ್‌ಟೈಮ್ ಅವಾರ್ಡ್ ಕೊಟ್ಟಿದ್ದಾರೆ. ಅವರು ನಿನಗೆ ಗೊತ್ತಾ?’ ನಾನು ನಿಂತಲ್ಲಿಯೇ ಹೆಪ್ಪಿಬಿಟ್ಟೆ. ನನ್ನನ್ನು ಫಲಿಸಿದ ವೀರ್ಯವಂತನಿಗೆ ಮರಣೋತ್ತರ ಪ್ರಶಸ್ತಿ! ಸಮಗ್ರ ಜೀವಿತ ಸಾಧನೆಯನು? ಪರಿಗಣಿಸಿ!! ಅಮ್ಮನಿಗೆ ಕೂಡಲೇ ಫೋನಿಸಿದೆ. ಅವಳ ಸಂತೋಷದ ಎಣೆಯೊಳಗೆ ನಾನಿದ್ದೇನೆಯೆ ಅಂತ ಕೊಂಚ ಗುಮಾನಿಯಾಯಿತು. +– ೪ – +‘ಅಭೀ! ನನಗೆ ಇವೊತ್ತು ತುಂಬ ಖುಷಿಯಾಗಿದೆ ಗೊತ್ತಾ? ಅವರಿದ್ದಾಗ ಅವರಿಗೆ ಹೀಗೆಲ್ಲ ರೆಕಗ್ನಿಷನ್ ಬರಲೇ ಇಲ್ಲ. ಅದಕ್ಕಂತ ಅವರು ಹಪಹಪಿಸಿದವರೂ ಅಲ್ಲ. ಅವರಿದ್ದಿದ್ದರೆ ನಿನ್ನ ಬಗ್ಗೇನೂ ತುಂಬ ಹೆಮ್ಮೆ ಪಡುತ್ತಾ ಇದ್ದರು.’ ರಾತ್ರಿ ಊಟಕ್ಕೆ ಕುಳಿತಾಗ ಅಮ್ಮನೇ ಮಾತು ಹೆಕ್ಕಿದ್ದಳು. ‘ಯಾಕಿಷ್ಟು ಬೇಜಾರಿನಲ್ಲಿದ್ದೀ? ಖುಷಿಯಲ್ಲಿರಬೇಕು ನೀನು!‘ ನಾನು ಮಾತನಾಡಲಿಲ್ಲ. ’ಅವರನ್ನೆ ಹೊತ್ತುಕೊಂಡುಬಿಟ್ಟಿದ್ದೀ ಸ್ವಭಾವದಲ್ಲಿ. ತಿಂಗಳಿಗೊಮ್ಮೆ ಬರುತ್ತಿದ್ದರು. ಬರುವಾಗ ಜತೆಗೆ ಒಂದಷ್ಟು ಬೇಸರ ಹೊತ್ತು ತರುತ್ತಿದ್ದರು. ಕೊನೆ ಕೊನೆಗಂತೂ ಏನೂ ರುಚಿಸುತ್ತಿರಲಿಲ್ಲ ಅವರಿಗೆ.’ ನಾನು ಅಸಹನೆ ಸಿಡಿಸಿದೆ. ಔh ಒom! Wiಟಟ ಥಿou sಣoಠಿ iಣ ಠಿಟeಚಿse?! ಅಮ್ಮ ಮೇಜಿನ ಮೂಲೆಗೆ ಮುಖವನ್ನಾತುಕೊಂಡು ಮುಸುಮುಸುವಿನಲ್ಲಿ ತೊಡಗಿದಳು. ನಾನು ಅವಳನ್ನು ಸಮಾಧಾನಪಡಿಸಲಿಲ್ಲ. ವಾಸ್ತವದಲ್ಲಿ ನನ್ನ ಅಸಮಾಧಾನಕ್ಕೆ ನನ್ನಲ್ಲಿ ಯಾವ ಕಾರಣವೂ ಇರಲಿಲ್ಲ. +ಆ ರಾತ್ರಿಯ ಆಳದವರೆಗೆ ಇಂಟರ್‌ನೆಟ್‌ನಲ್ಲಿ ಹುದುಗಿದ್ದೆ. ಒಂದೂವರೆಯ ಸುಮಾರಿಗೆ ಶಶಾಂಕ ಕೆಲಿಫೋರ್ನಿಯಾದಿಂದ ಮೆಸೇಜ್ ಮಾಡಿ ಕೂಡಲೇ ಮೇಯ್ಲ್ ಚೆಕ್ ಮಾಡುವಂತೆ ಹೇಳಿದ. ಅವನ ಅಂಚೆಯೊಟ್ಟಿಗೆ ಮೂರು ಪುಟದ ಲಗತ್ತು ಇತ್ತು. ಅದು ಅಕ್ಷೋಭ್ಯ ಕಡಿದಾಳ್ ಬಗೆಗಿನ ಬರೆಹ. ಅದರಲ್ಲಿ ಸಿಕ್ಕ ಕೆಲವು ಮಾಹಿತಿ ಸುತ್ತಲಿನ ಉದಾಸದ ಕೋಶವನ್ನು ಹರಿದುಬಿಟ್ಟಿತು. ಹತ್ತೊಂಭತ್ತು ನೂರ ಐವತ್ತರ ಸುಮಾರಿನಲ್ಲಿ ದೇಶವಿನ್ನೂ ಆಧುನಿಕತೆಯ ಗಾಳಿಗೆ ಒಡ್ಡಿಕೊಳ್ಳುತ್ತಿದ್ದಂತಹ ಸಂದರ್ಭ. ಕಾಂಕ್ರೀಟ್ ತಂತ್ರಜ್ಞಾನವನ್ನು ಅದರ ನೇರ ರೂಪದಲ್ಲಿ ದುಡಿಸಿಕೊಂಡ ಪ್ರಪಂಚದ ಕೆಲವೇ ವಿನ್ಯಾಸಕಾರರಲ್ಲಿ ಒಬ್ಬರು. ಪಶ್ಚಿಮ ಭಾರತದ ಮುಂಬಯಿಯ ಆಸುಪಾಸಿನಲ್ಲಿ ಕೆಲವಷ್ಟು ವಿನ್ಯಾಸಗಳ ರಚನೆ. ಗೋಲ್ಕೋನ್ ಹೆಸರಿನ ವಿದ್ಯಾರ್ಥಿ ವಸತಿಯ ವಿನ್ಯಾಸ ಸಂಪೂರ್ಣ ಕಾಂಕ್ರೀಟಿನಿಂದ ಮಾಡಲಾಗಿದ್ದು ಐವತ್ತು ವರ್ಷಗಳ ಬಳಿಕವೂ ಕಾಲಾತೀತವೆನಿಸುವಂತಹ ರಚನೆ. Iಣ is ಣimeಟess! ಊe ತಿಚಿs ಚಿ ಣಡಿue mಚಿsಣeಡಿ oಜಿ soಡಿಣs iಟಿ ಣhe subಛಿoಟಿಣiಟಿeಟಿಣ.. ಈತನ ಬಗ್ಗೆ ಈವರೆಗೆ ಲಭ್ಯವಿರುವ ಮಾಹಿತಿಗಳೂ ಕಡಿಮೆ… ಮತ್ತಿತರೆ, ಮತ್ತಿತರೆ… ಒಕ್ಕಣೆಯ ಕೊನೆಯಲ್ಲಿ ಒಂದು ಚಿಕ್ಕ ಅಡಿಬರೆಹ. ಸ್ಪೆಕ್‌ಟ್ರಂ ಫೌಂಡೇಷನ್ ಇವರ ಸಾಧನೆಯನ್ನು ಒಟ್ಟಾರೆ ಪರಿಗಣಿಸಿ ಅವರ ಎಲ್ಲ ಕೃತಿಗಳ ದಾಖಲಾಗಬೇಕೆಂದು ಒತ್ತು ಕೊಡುತ್ತದೆ. ನನಗೋ ಒಂದು ನಮೂನೆ ನವಿರೆದ್ದಂತಾಯಿತು. ಗೊತ್ತಿಲ್ಲದೆ ಕಣ್ಣುಕ್ಕಿದ್ದವು. ಅಟ್ಯಾಚ್‌ಮೆಂಟನ್ನು ಡೌನ್‌ಲೋಡ್ ಮಾಡಿ ಅದರ ಪ್ರಿಂಟ್ ತೆಗೆದುಕೊಂಡು ಮತ್ತೆ ಮತ್ತೆ ಓದಿದೆ. +ಈ ನಾಗರಿಕತೆಯ ಗಂಟಲಿನ ಹುಮ್ಮಸ್ಸನ್ನು ನೋಡಿ. ನಾಗಾಲೋಟದ ಭರದಲ್ಲಿ ತನ್ನನ್ನು ರೂಪಿಸಿದವರನ್ನೆಲ್ಲ ನುಂಗಿಬಿಡುತ್ತದೆ. ನೆನಪಿಗೆಂದೂ ತೇಗುವುದಿಲ್ಲ ಕೆಲವೊಮ್ಮೆ. ಅದೃಷ್ಟವಿದ್ದಲ್ಲಿ ಕೆಲವರು ತಮ್ಮ ಜೀವಿತದಲ್ಲಿಯೇ ದಂತಕತೆಯಾಗುತ್ತಾರೆ. ಕೆಲವರು ಸತ್ತ ಇಪ್ಪತ್ತು ವರ್ಷಗಳ ಬಳಿಕ ಅಚಾನಕ್ಕು ಬೆಳಕಿಗೆ ಬರುತ್ತಾರೆ. ಕೆಲವು ಗೆರೆಗಳಿಗೆ ವಾರಸುಗಳಿಲ್ಲ. ಅವು ಕಟ್ಟುವ ಆವರಣಕ್ಕೂ, ಅವುಗಳಾಚೆಗಿನ ಅರ್ಥಕ್ಕೂ… ಐiಟಿes- uಟಿಛಿಟಚಿimeಜ ಹಿಮಾಂಶುವಿನ ಸಾಲುಗಳು ನೆನಪಾದವು. +* +* +* +(೨೨ನೇ ಅಕ್ಟೋ?ರ್ ೨೦೦೧) +ಈ ಅಕ್ಷೋಭ್ಯ ಕಡಿದಾಳ್ ಎಂಬ ವ್ಯಕ್ತಿ ಎಲ್ಲಿಯವನು ಅಂತ ಎಷ್ಟೋ ಮಂದಿಗೆ ಗೊತ್ತಿರಲಿಲ್ಲವಂತೆ. ಮಾತು ಕಡಿಮೆ. ಎಷ್ಟು ಬೇಕೋ ಅಷ್ಟು. ತನ್ನ ಬಗ್ಗೆ ಯಾರೊಟ್ಟಿಗೂ ಹೇಳಿಕೊಂಡಿರದ ವ್ಯಕ್ತಿ. ಅಮ್ಮನಿಗೂ…. ಅಮ್ಮನ ಅಪ್ಪ ಸುಖ್‌ವೀರ್ ಸಿಂಗ್ ಬಾದಲ್ ದಿಲ್ಲಿಯಲ್ಲಿ ಹೆಸರಾಂತ ಉದ್ದಿಮೆದಾರನಿದ್ದಂತೆ. ತಾನು ಕಟ್ಟಲಿಕ್ಕಿದ್ದ ಹೊಸಮನೆಯ ವಿನ್ಯಾಸಕ್ಕೆ ದಕ್ಷಿಣದ ಆಕ್ಷೋಭ್ಯ ಕಡಿದಾಳ್‌ನನ್ನು ಅಪಾಯಿಂಟ್ ಮಾಡಿಕೊಂಡಿದ್ದು ನನ್ನ ಬದುಕಿನ ಕಥನಕ್ಕೆ ಪೀಠಿಕೆ. ಹತ್ತು ಸಾವಿರದ ಮುಂಗಡಕ್ಕೆ ರಸೀತಿಯನ್ನೂ ಕೊಡದೆ ಕಡಿದಾಳ್ ಆರು ತಿಂಗಳು ಸತಾಯಿಸಿದನಂತೆ. ಒಮ್ಮೆ ಒಳಗೊಳಗೇ ಆಗುತ್ತಿದ್ದ ಹಿಂಸೆಯನ್ನು ತಡೆಯಲಾರದೆ ಲೋನಾವಲಾಕ್ಕೆ ಫೋನು ಹಚ್ಚುತ್ತಿರುವಾಗ ಕಿಟಕಿಯಾಚೆಗಿನ ಅಂಗಳದ ಮೂಲೆಯಲ್ಲಿ ಅಕ್ಷೋಭ್ಯ ಒಬ್ಬನೇ ಕುಳಿತು ಏನೋ ಮಾಡುತ್ತಿರುವುದು ಕಣ್ಣಿಗೆ ಬಿತ್ತಂತೆ. ಸುಖ್‌ವೀರ್ ಆಚೆಗೆ ಬಂದವನೇ ಬಾಯಿಗೆ ಬಂದಂತೆ ಅಬ್ಬರಿಸಿದನಂತೆ. ಎರಡು ಮೂಟೆಗಳಷ್ಟು ಕಪ್ಪೆಚಿಪ್ಪನ್ನು ಸುರುವಿಕೊಂಡು ಕೈಕೆಲಸದಲ್ಲಿ ತೊಡಗಿದ್ದವನು ಇವನತ್ತ ಸುಮ್ಮನೆ ಒಮ್ಮೆ ಕೆಕ್ಕರಿಸಿಕೊಂಡು ನೋಡಿದ್ದಷ್ಟೆ. ಮರುಮಾತೇ ಇಲ್ಲ. ಎರಡು ಹಗಲು ಮೂರು ರಾತ್ರಿಗಳಲ್ಲಿ ಎಡೆಬಿಡದೆ ಕೈಗೂಡಿಸಿ ನಾಲ್ಕನೆಯ ಮುಂಜಾವಿನಲ್ಲಿ ತನ್ನ ಗಿರಾಕಿಯನ್ನು ಭೆಟ್ಟಿ ಮಾಡಿ ಕಪ್ಪೆಚಿಪ್ಪಿನಿಂದ ತೆಗೆದ ಅದ್ಭುತ ಕಲಾಕೃತಿಯನ್ನು ಕೊಟ್ಟು- ‘ಇಗೋ! ಇದಿನ್ನೂ ಶುರುವಾತು’ ಅಂತ ಕೈಕಟ್ಟಿ ನಿಂತಾಗ ಸುಖ್‌ವೀರ್‌ಗೆ ಮಾತೇ ಹೊರಳಲಿಲ್ಲವಂತೆ. ಇನ್ನೂ ಇಪ್ಪತ್ತೆರಡರ ಸುಮಾರಿನಲ್ಲಿದ್ದ ಜಸ್ ಪ್ರೀತ್ – ಸುಖ್‌ವೀರನ ಮಗಳಿಗೆ ಅಕ್ಷೋಭ್ಯನ ಕಲಾವಂತಿಕೆಗೆ ದಂಗುಬಡಿದಂತಾಯಿತಂತೆ. +ಓoಛಿಣiಟuಛಿಚಿ — ಶಂಖುವಿನ ಆಕೃತಿಯ ಅದರಲ್ಲಿ ಬೆಳಕು ಇಳಿಬಿಟ್ಟಿದ್ದೇ ಅದರ ರಂಧ್ರಗಳಿಂದ ಸೋರುವ ನೆಳಲಿನ ಚಿತ್ತಾರದಲ್ಲಿಯೇ ತನ್ನ ಭವಿಷ್ಯದ ಟಿಸಿಲುಗಳನು? ಕಂಡುಕೊಂಡಿದ್ದಳಂತೆ. +ಇವೆಲ್ಲ ನಡೆದದ್ದು ಮೂವ್ವತ್ತು ವರ್ಷಗಳ ಹಿಂದೆ ಅಂತ ಅಮ್ಮ ಸ್ಮೃತಿಯ ಹಂದರದಲ್ಲಿ ಆಗಾಗ್ಗೆ ಜೀಕುತ್ತಿರುತ್ತಾಳೆ. ನಮ್ಮ ಮನೆಯ ಹಜಾರದ ?ಳುಗೋಡೆಯ ಮೇಲೆ ಆ ದೀಪಶೃಂಖಲೆಯ ಆಳೆತ್ತರದ ಪಟವಿದೆ. ಅದು ಅಪ್ಪನೇ ತೆಗೆದ ಚಿತ್ರವಂತೆ. ಕಪ್ಪುಬಿಳುಪಿನ ಪಟ. ಒಳಗಿನಿಂದ ಒಡೆದ ಬೆಳಕಿನ ಚೆಲ್ಲಾಪಿಲ್ಲಿಯ ನೆರಳುಗಳಾಗಿ ಕಟ್ಟುವ ಸಂಯೋಜನೆ ಬೆರಗಿನದ್ದು. ಅಷ್ಟೇ ಜಟಿಲ ಸಹ. ‘ಅಕ್ಷೋಭ್ಯ ಈ ಬೆಳಕಿನ ಗುಡ್ಡೆ. ಇಲ್ಲಿನ ಛಾಯೆಯೆಲ್ಲ ನಾನು!’ ಅಮ್ಮ ಹೇಳುವಾಗ ಅವಳ ಕಣ್ಣುಗಳಲ್ಲಿ ಅದೇ ಬೆಳಗಿನ ತುಳುಕು. ಅದೇ ನೆಳಲ ಚಿತ್ತಾರ. ಅಷ್ಟೇ ಜಟಿಲವಾದದ್ದು. ಹಾಗೆ ನೋಡಿದರೆ ಅವಳ ಪ್ರೀತಿಯ ಜಾಡೂ ಅಷ್ಟೆ. ಮರದ ನೆರಳಿನ ಹಾಗೆ ಅಸ್ಪಷ್ಟ. ‘ನೆರಳಿದ್ದರಷ್ಟೆ ಬೆಳಕಿಗೆ ಬೆಲೆ, ಅಭೀ!’ ಎಂದು ತನ್ನ ಬದುಕೂ – ನೆರಳು ಬೆಳಕಿನ ಸರಣಿ ಅಂತ ಮತ್ತೆ ಮತ್ತೆ ಕಣ್ಣು ತುಂಬಿಕೊಳ್ಳುತ್ತಾಳೆ. ಒom, ಣheಡಿe is ಟಿo ಛಿಟಚಿimಚಿಟಿಣ ಜಿoಡಿ ಥಿouಡಿ ಟove – ಒom! Iಣs ಟiಞe ಚಿ bಚಿggಚಿge ಟeಜಿಣ behiಟಿಜ ಚಿಣ ಚಿ ಡಿಚಿiಟ sಣಚಿಣioಟಿ ಚಿಟಿಜ eಣeಡಿಟಿಚಿಟಟಥಿ uಟಿಛಿಟಚಿimeಜ!! ನಿನ್ನ ಪ್ರೀತಿಗೆ ವಾರಸೇ ಇಲ್ಲವಲ್ಲಮ್ಮಾ? ನನ್ನ ಹುಟ್ಟಿಗೂ ಸಹ…!!’ ನಾನು ಬಿಕ್ಕಿದ್ದಿದೆ. ಹಾಗಂದಾಗಲೆಲ್ಲ ಅಮ್ಮ ಜಟಿಲವಾದ ನೆಳಲು ಚೆಲ್ಲುತ್ತಾಳೆ. ತನ್ನ ಡಯರಿಯಲ್ಲಿ ಅವರು ಬರೆದು ಕೊಟ್ಟ ಪದ್ಯವೊಂದನು? ಮುಂದಕ್ಕೆ ಹಿಡಿಯುತ್ತಾಳೆ. ‘ಎಲೆಯ ವಂದರಿಯಲ್ಲಿ ಬಿಸಿಲಿನ ಜರಡಿ. ನುಣ್ಣನೆ ಬೆಳಕು ಮಣ್ಣಾಗುವ ಮೊದಲು ಸೆರಗೊಡ್ಡಿ ಕಟ್ಟಿಕೋ ತುಂಬ ಉಡಿಯಷ್ಟು. ಅದೋ ಕೊಬ್ಬಿದ ಮೋಡ ಬಿಸಿಲು ಮಾಚಿದರಂತೂ ನಿನ್ನ ಜೋಳಿಗೆ ತುಂಬ ನಾನು ಮಬ್ಬಿದ ಹಗಲು…’ ಹಾಳೆಯ ಮೇಲೆ ನನ್ನ ವಯಸ್ಸನ್ನೂ ಮೀರಿದ ಮಾಸಲು. ಸುಂದರ ಕೈ ಬರೆಹ. ಕೊನೆಗೆ ಅಕ್ಕಿ – ಎಂದು ಸಹಿ. ಸಹಿಯಲ್ಲಿ ಎಂಥದೋ ಉದಾಸ. ‘ಅವರಿಲ್ಲ ರುಜು ಮಾಡಿದ್ದು ಒಲ್ಲದ ಮನಸ್ಸಿನಿಂದ. ನನ್ನ ಒತ್ತಾಯಕ್ಕೆ. ಅವರ ಪದ್ಯ, his ತಿoಡಿಞ oಜಿ ಚಿಡಿಣ… ಕೊನೆಗೆ eveಟಿ his ಚಿಡಿಛಿhiಣeಛಿಣuಡಿe ಎಲ್ಲ ದಾಖಲನ್ನು ಮೀರಬೇಕು ಅಂತಲೇ ಅವರಿಗೆ ಇಷ್ಟ. ಪದ್ಯ ಬರೆಸಿಕೊಳ್ಳುವವರೆಗೆ ಮಾತ್ರ ನನ್ನದು. ಆಮೇಲೆ ನನ್ನದಲ್ಲ ಅಂತಾ ಇದ್ರು. ಅವರ ಕಟ್ಟಡಗಳ ದಾಖಲೆಯೇ ಅವರ ಹತ್ತಿರ ಇರಲಿಲ್ಲ. ಅವರ ಸಾವಿಗೂ ಅವರದ್ದೇ ಅಂತ ಪುರಾವೆಯಿರಲಿಲ್ಲ ಗೊತ್ತಾ?’ ವಿಚಿತ್ರವಲ್ಲವೆ? ನನ್ನ ಹುಟ್ಟಿಗೂ ನಾನು ಅವರಿಂದ ಅನ್ನುವ ಪುರಾವೆಯಿಲ್ಲ. +ನಾನು ಹುಟ್ಟುವಾಗ ಅಮ್ಮನಿಗೆ ಇಪ್ಪತ್ತೈದಾಗಿತ್ತಂತೆ. ಅವರಿಗೆ ಅರವತ್ತೆರಡು. ಹುಬ್ಬೇರಿತಲ್ಲವೆ? ನಾನು ಹುಟ್ಟಿದಾಗ ಅಮ್ಮನನು? ಆರೈಸುತ್ತಿದ್ದ ಮಿಷನರಿಯ ನನ್? ಅಮ್ಮನ ಜತೆಗಿದ್ದ ಅವರ ಚಿತ್ರವನು? ನೋಡಿ ನಕ್ಕಿದ್ದಳಂತೆ. ಔh! ಊe musಣ be ಚಿ ಡಿeಚಿಟ mಚಿಟಿ!! ಬಿನ್ನಿಸ್ಟನ್ ಗಾರ್ಡನ್ನಿನ ಬಲಮೂಲೆಯ ಚಿಕ್ಕ ಬಂಗಲೆಯಲ್ಲಿ ನಮ್ಮ ಆಗಿನ ಮನೆ. ನಾನು ಅಪ್ಪನನ್ನು ನೋಡಿದ್ದೇ ಕಡಿಮೆ. ತಿಂಗಳಿಗೊಮ್ಮೆ ಬಂದರೂ ಒಂದೋ ಎರಡು ದಿನಗಳ ಜತೆ ಅಷ್ಟೆ. ‘ಇರೋಣ ಅಂತಾನೇ ಬಂದದ್ದು. ಕೆಲಸದ ಒತ್ತಡ. ಲೋನಾವಾಲಕ್ಕೂ ಹೋಗಿ ಎಷ್ಟು ದಿನ ಆಯಿತು ಗೊತ್ತೆ? ಸರಿತೆಯೂ ಈಗೀಗ ನನ್ನನ್ನು ತುಂಬ ಹಚ್ಚಿಕೊಂಡು ಬಿಟ್ಟಿದ್ದಾಳೆ. ಉiಡಿಟs hಚಿve ಣo be mಚಿಡಿಡಿieಜ -ಅಂತ ಒಂದೇ ಸಮ ದುಂಬಾಲು. ಏನೋ ಜವಾಬ್ದಾರಿಯೆಲ್ಲ ಮುಗಿದ ಮೇಲೆ ನಿನ್ನ ಜತೆಯೇ ಉಳಿದ ಬದುಕು…’ ಆ ಬಾರಿ ಬಂದಾಗ ಅವರಂದದ್ದು ಮಸುಕಾಗಿ ನೆನಪು. ನನಗೆ ಆಗ ಹತ್ತು ವಯಸ್ಸು. ಅವರು ಹೊರಟು ನಿಂತಾಗ ನಾನು ಹಾಳೆಯ ಮೇಲೆ ಏನನ್ನೊ ಗೀಚುತ್ತಿದ್ದೆನಂತೆ. ಅವರು ಅದನ್ನು ನೋಡಿ ಏನನ್ನಿಸಿತೋ – ‘ಜಸ್! ನಿನ? ಮಗ ನನ್ನನ್ನೂ ಮೀರಿ ಬೆಳೆಯುತ್ತಾನೆ’ ಅಂತ ನನ?ನು? ಮುದ್ದಿಸಿ ಕಾಗದದ ಹಾಳೆಯನು? ಮಡಿಚಿ ಕೋಟಿನಲ್ಲಿ ಹಾಕಿಕೊಂಡಿದ್ದರಂತೆ. ನನಗೋ ಎಲ್ಲ ಮಸುಕು ಮಸುಕು. ನನ್ನ ವಯಸ್ಸು ಆಗ ಹತ್ತು ಇದ್ದಿರಬೇಕು…. +* +* +* +(೨೬ ಅಕ್ಟೋಬರ್ ೨೦೦೧) +ನಾನು ಡಯರಿನಲ್ಲಿ ಇವುಗಳನ್ನು ಬರೆದುಕೊಳ್ಳುವುದು ನನಗಾಗಿ ಅಷ್ಟೆ. ಇವೆಲ್ಲ ನಾನು ನನ್ನೊಟ್ಟಿಗೆ ನಡೆಸಿಕೊಳ್ಳುವ ತನಿಖೆ. ಕೆಲವಷ್ಟು ಉತ್ಖನನ. ಒಳಗಿನ ಆಳ ತಿಳಿಯಲು ಒಂದು ದಾರಿ. ಕೊರೆದಷ್ಟೂ ಆಳ. ಸಿಗುತ್ತಿಲ್ಲ. ಹಾಗಾಗಿ ತಳವಿಲ್ಲ. ಇದು ಯಾರಿಗಾದರೂ ಓದಸಿಕ್ಕಿದರೆ ಅಲ್ಲಿ ನನ್ನ ಯಜಮಾನಿಕೆಯಿಲ್ಲ. +ಅಮ್ಮ ಬೆಳಿಗ್ಗೆ ಅಪ್ಪನ ಸಾವಿನ ಬಗ್ಗೆ ಹೇಳಿದಳು. ಒಂದು ನಮೂನೆ ಝಿಲ್ಲೆಂದಿತು ಮನಸ್ಸು. ಅವರ ಬಗ್ಗೆ ಮೊದಲ ಸಲ ಮೌನ ಸೆಳಕಿತು. ಎಂಭತ್ತಮೂರರ ಏಪ್ರಿಲ್ಲಿನ ಆ ಭಾನುವಾರ. ಹೌರಾ ಸ್ಟೇಶನ್ನಿನ ಬೋಗಿಯೊಂದರಲ್ಲಿ ಒಂದು ಶವ ಸಿಕ್ಕಿತಂತೆ. ಸೂಟುಬೂಟು ಹಾಕಿಕೊಂಡಿದ್ದ ದೇಹ. ಸತ್ತು ನಾಲ್ಕು ದಿನವಾಗಿರಬೇಕು ಅಂತ ತಪಾಸಣೆಯ ವರದಿ. ಗುರುತಿಗೆ ಯಾವ ಸುಳಿವೂ ಇರಲಿಲ್ಲವಂತೆ. ಕೋಟಿನ ಮುಂಗಿಸೆಯಲ್ಲಿ ಒಂದು ಮಡಿಚಿದ ಕಾಗದದ ಚೌಕ ಸಿಕ್ಕಿತಂತೆ. ಅದರ ಮೇಲೆ ಟiಟಿe is ಟಿeveಡಿ oತಿಟಿeಜ – ಅಂತ ಕೈಬರೆಹ. ಅದರ ನಕಲುಗಳನ್ನು ಎಲ್ಲ ರೈಲ್ವೆ ಸ್ಟೇಷನ್ನುಗಳಲ್ಲಿ ಹಾಕಲಾಯಿತಂತೆ. ಜೇಜೇ ಸ್ಕೂಲಿನ ಸುದೀಪ್ತೋ ಮುಖರ್ಜಿ ಬೊರಿವಿಲ್ಲಿ ಸ್ಟೇಷನ್ನಿನಲ್ಲಿ ಅದರಲ್ಲಿನ ಬರೆವಣಿಗೆಯನ್ನು ನೋಡಿ – ಅಕ್ಷೋಭ್ಯ ಕಡಿದಾಳ್ ಅಂತ ಗುರುತು ಹಚ್ಚಿದರಂತೆ. ಒಂದು ತಿಂಗಳಿನ ಬಳಿಕ. +ನನ್ನೊಳಗಿನಿಂದ ಉಕ್ಕಿದ ಅಳಲನ್ನು ಹತ್ತಿಕಲಾಗಿಲ್ಲ. ಅಮ್ಮನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ಅತ್ತುಬಿಟ್ಟೆ. +ಗೆರೆಗೆ ವಾರಸುಗಳಿಲ್ಲ. ನೋವಿಗೂ… +* +* +* +(೨೮ನೇ ನವೆಂಬರ್ ೨೦೦೧) +ಪ್ರಶಸ್ತಿ ಪ್ರದಾನ ಸಭೆಯಲ್ಲಿ ಡೀನ್ ಸಿಕ್ಕಿದ್ದರು. ನನನ್ನು? ನೋಡಿದವರೇ ಅಪ್ಪಿಕೊಂಡರು. ಅವರ ಕಣ್ಣುಗಳು ಮಬ್ಬಾಗಿದ್ದವು. ಙou ಚಿಡಿe ಣಡಿuಟಥಿ his ಟegಚಿಛಿಥಿ, mಚಿಟಿ!!’- ಲೈಫ್‌ಟೈಂ ಅಚೀವ್‌ಮೆಂಟ್ ಅವಾರ್ಡಿನ ಮರಣೋತ್ತರ ಪ್ರಕಟಣೆಯನ್ನು ಮಾಡಿದಾಗ ಶ್ರೀಮತಿ ಸರಿತಾ ಕಡಿದಾಳ್ ವೇದಿಕೆಗೆ ಹೋದರು. ಏನೋ ಮಾತನಾಡಿದರು. ಮಾತಿನ ತುಂಬ ಗದ್ಗದ. ಅದರಲ್ಲೂ ವಾರಸಿಕೆ. ಅಮ್ಮನ ಕಣ್ಣು ತುಂಬಿದ್ದವು. ಯಂಗ್ ಅಚೀವರ್ಸ್ ಅವಾರ್ಡಿನ ಸೈಟೇಷನ್ ಓದಿದಾಗ ಸಭೆ ನನ್ನ ಹೆಸರಿನ ಬಲವನ್ನು ಅಕ್ಷೋಭ್ಯ ಕಡಿದಾಳ್‌ರೊಟ್ಟಿಗೆ ತಾಳೆ ಹಾಕುತ್ತಿರಬಹುದೆ ಎಂಬ ಸಂದೇಹ. ಚಪ್ಪಾಳೆ ಎಲ್ಲವನ್ನೂ ಒತ್ತರಿಸಿ ಬಿಟ್ಟಿತ್ತು. ಙou ಚಿಡಿe ಣಡಿuಟಥಿ his ಟegಚಿಛಿಥಿ, mಚಿಟಿ!!’ ಅಂತ ಪ್ರಶಸ್ತಿಯನ್ನು ಪಡೆದ ಬಳಿಕ ಮೈಕಿನಲ್ಲಿ ಹೇಳಿದೆ. ಗೆರೆಗಳಿಗೆ ನೋಡಿ ಯಜಮಾನಿಕೆಯಿಲ್ಲ. +ಗೆರೆಗೆ ವಾರಸುಗಳು ಬೇಡ. ಹಾಗೇ ಈ ಟಿಪ್ಪಣಿಗೂ. +***** +ಕೃಪೆ: ಕನ್ನಡಪ್ರಭ-೨೨-೦೧-೨೦೦೬ +(೧) ಭೃಗು ವಂಶದ ಒಬ್ಬ ಮಹರ್ಷಿ. ಆಸ್ತಿಕನ ತಂದೆ. ಈತನು ನೈಷ್ಠಿಕ ಬ್ರಹ್ಮಚರ್ಯ ದಿಂದಲೇ ಜೀವನವನ್ನು ಕೊನೆಗಾಣಿಸಬೇಕೆಂದಿದ್ದ. ಒಂದು ದಿನ ತನ್ನ ಪಿತೃಗಳು ತಲೆಕೆಳಗಾಗಿ ಜೋಲು ಬಿದ್ದಿದನ್ನು ಕಂಡು ‘ಅಯ್ಯಾ ನೀವು ಯಾರು? ಇಂತು […] +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […] +ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_128.txt b/Kannada Sahitya/article_128.txt new file mode 100644 index 0000000000000000000000000000000000000000..2fcd2cfb86bdb4468bf06d8f1980b67607d955e0 --- /dev/null +++ b/Kannada Sahitya/article_128.txt @@ -0,0 +1,133 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸರಸ ಚಿಕ್ಕಿಯೊಡನೆ ಆ ಹೆಬ್ಬಾಗಿಲು ಹೊಗ್ಗುವಾಗ ‘ಓ ಅಲ್ಲಿ ಹೊಡಿ ಮಣಿ’ ಎಂಬ ಸ್ವರ ಕೇಳಿಸಿತು. ಪಕ್ಕ ಹಿಂದಿರುಗಿ ನನ್ನನ್ನು ನೋಡಿದಳು ಚಿಕ್ಕಿ. “ಅಗ! ಮೀನಾಶ್ಚತ್ತೆ ಕತಿ! ಈಗೆಲ್ಲ ಇಷ್ಟೇ”-ಎಂಬಂತೆ. ಮುಖದಲ್ಲಿ ದುಃಖವೇನೂ ಇರಲಿಲ್ಲ. ಸಣ್ಣದೊಂದು ನಗೆ ಇತ್ತು. ‘ಆಚೆ ಹೋದ’ ಜೀವದ ‘ಈಚೆ ಸ್ವರ’ವನ್ನು ಹೆದರುತ್ತ ಹಿಲುಗಾರಿಕೆ ಮಾಡಿದಂತೆ. +ದೊಡ್ಡ ಅಂಗಳ ದಾಟಿ ಚಾವಡಿಗೆ ಬಂದೆವು. +ಒಂದು ಮೂಲೆಯಲ್ಲಿ ಹಾಸಿಗೆ ತುದಿಯಲ್ಲಿ ಕುಳಿತಿದ್ದರು ಮೀನಾಕ್ಷತ್ತೆ. ಎಂಥ ಚಾವಡಿ-ಕಳೆದ ಜೀವಗಳ ದೊಡ್ಡ ದೊಡ್ಡ ಪೋಟೋ, ಗೋಡೆಗೆ ಅಂಟಿಕೊಂಡು ಮುಂದೆ ನೀಡಿಕೊಂಡ ಕೊಂಬುಗಳು. ಜಿಂಕೆಯದು ಕಾಡುಕೋಣದ್ದು – ಹುಲಿ ಚರ್ಮ, ಮತ್ತೆ ಯಾವ ಕಾಲದ್ದೋ ಫ್ರೇಂ ಹಾಕಿ ಇಟ್ಟ ಒಂದು ಕ್ಯಾಲೆಂಡರ್‍ ಸುಂದರಿ. ಕೆಳಗೆ ಮೀನಾಕ್ಷತ್ತೆ ಕೂಗುತ್ತಿದ್ದರು. +“ಓ ಅಲ್ಲಿ – ಪಡು ಹೆಬ್ಬಾಗಿಲ ಅಜ್ಜಯ್ಯ ಬಂದಿದ್ರ್‍ ಕಾಣ್. ಈಗ ಯಾಕೆ ಬಂದ್ರಿ? ಬಂದ್ ದಾರಿಗೆ ಸುಂಕ ಇಲ್ಲೆ, ನಡೀನಿ ಅನ್” +ಮಾಣಿ ಪಕ ಪಕ ನಕ್ಕಿತು. “ಅಲ್ಲಿ ಅಜ್ಜಯ್ಯ ಇಲ್ಲೆ ಅಜ್ಜಿ-ಬೇರೆ ಯಾರೋ ಬಯಿಂದೋ-” ಅಂತು. +ಒಳಗಿಂದ ಸ್ವರ ಕೇಳಿತು. “ಮಾಣಿ ಪ್ರಕಾಶ, ಅಜ್ಜಿ ಹತ್ರ ಯಂತ ತರ್ಕ ಮಾಡ್ತೆ? ಅವರು ಹೇಳಿದ ಹಾಂಗೆ ಕೋಲು ಬೀಸುಕಾತ್ತಿಲ್ಯ?” +ತಲೆ ಎತ್ತಿ ನೋಡಿದರೆ ಮುಚ್ಚಿಗೆಯಲ್ಲಿ ಚಾಪೆ ಇಡುವ ಅಡ್ಡ. ಆ ಚಾಪೆಗಳ ಮೇಲೆ ಯಾರೆಲ್ಲ ಕೂತೆದ್ದು ಹೋದರೋ. ಈಗಂತೂ ಗಿಲಿಗಿಲಿ ಅವಸ್ಥೆ. ಎದುರು ಒಂದು ಕಂಡಿ ಇದೆ. ಅದರೊಳಗೆ ಇಣುಕಿದರೆ ದೇವರ ಕೋಣೆ. “ದೇವರ ಪೂಜೆ ಆಪತಿಗೆ ನಾವೆಲ್ಲ ಇಲ್ಲಿಂದ್ಲೇ ನೀಕುತ್ತಿದ್ದದ್ದು. ನೀನೂ ಇಣುಕು. ‘ಮನೆ ದೇವರು’, ಅಡ್ಡಬೀಳು.” ಎಂದಳು ಸರಸ ಚಿಕ್ಕಿ. +ನಾ ಇಣುಕಿದೆ. ಒಳಗೆ ಮರದ ಗೂಡಲ್ಲಿ ದೇವರು ತುಂಬಿಹೋಗಿತ್ತು. ಬೆಳಿಗ್ಗೆ ಪೂಜೆ ಮಾಡಿ ಹೋದದ್ದು ಹೋದ ಹಾಗೆಯೇ ಇತ್ತು. ನಿತ್ಯದ ಹಿತ್ತಾಲೆ ಆರತಿ ತಟ್ಟೆಯೂ. “ಶ್ಶೀ, ನೀ ಏನೇ ಹೇಳು. ಮುಂಚಿನ ಗಂಡಸ್ರ್‍ ಗಮ್ಮತಿಗೆ ಗಮ್ಮತೂ ಹೊಡೀತಿದ್ದೊ. ಪೂಜೆಗೆ ಪೂಜೆಯೂ ಮಾಡ್‌ತಿದ್ದೊ. ಈಗಿನವು ಯಂತಕ್ಕೂ ಆಗ. ಇದು ಅಪ್ಪಣ್ಣಯ್ಯನ ಕಾಲದ ದೇವರ ಕೋಣೆಯಾ?” ಎನ್ನುತ್ತಾ ಹಿಂಗಾಲು ಕತ್ರಿಯಿರಿಸಿ ಈಚೆಯಿಂದಲೇ ಅಡ್ಡಬಿದ್ದಳು ಚಿಕ್ಕಿ. ನಾನೂ. +“ಮಣಿ, ನಿಂಗ್ ಕಾಂತಿಲ್ಯ ಹಂಗರೆ? ಎಲ್ಲ ಬಂದ್ ಪಾಗಾರದ ಮೇಲೆ ಕೂತಿದ್ದೋ. ವಿಶಾಲು, ಗಿರಿಜಾಮಣಿ, ಕಾಶಿ, ಗುಲಾಬಿ… ಹೇಳು ಅವ್ರಿಗೆಲ್ಲ. ಅಜ್ಜಿಯನ್ನು ವಾಪಸು ಕಳ್ಸಿ ಆಯ್ತು ಅಂತೆಳಿ. ಕಾಶಿ ಊರು ಬಿಟ್ಟವಳು ಎಲ್ಲಿಗೆ ಹೋದ್ಲ್? ಸೀದಾ ಲಂಕಾ ಪಟ್ಣಕ್ಕೇ ಹಾರಿಳಾ-ಕೇಣ್ ಮಣೀ-” +“ಅತ್ಯಾ ಅದು ಯಾವ್ ಕಾಲದ್ ಕತಿ ತೆಕ್ಕಂತ್ರಿ? ಸುಮ್ನೆ ಮನ್ಕಣಿ ಕಾಂಬೋ. ದಿವ್ಸ ಹೋದ ಹಾಂಗೆ ಮರ್‍ಳ್ ಹರ್‍ಕಂಡ್ ಬೀಳತ್ತಾ ಕಾಂತ್-” – ಸೊಸೆಯ ಸ್ವರ ಮತ್ತೆ. +ಪ್ರಕಾಶಮಾಣಿ ಬಾಯಿ ತೆರೆದು ನಿಂತೇ ಇದ್ದದ್ದು ಮತ್ತೆ ಹೇಳಿತು. “ಅಜ್ಜೀ, ಯಾರೋ ಬಯಿಂದೋ-” +ಯಾರ್‍? ಯಾರ್‍ ಕೇಣ್. ನೀನ್ಯೆಂಥ ಗಂಡ್ಸ್ ಮತ್ತೆ!” +ಸರಸ ಚಿಕ್ಕಿ ಹೋಗಿ ಮೀನಾಕ್ಷತ್ತೆಯ ಎದುರು ಕುಳಿತು “ನಾನಲ್ದ ಮೀನಾಶ್ಚತ್ತೆ? ಸರಸ” ಎಂದಳು. +ಮೀನಾಕ್ಷತ್ತೆಯ ಕಣ್ಣು ಮಂದ ದೀಪದಂತೆ ಬೆಳಗಿತು. ಸರಸ ಚಿಕ್ಕಿಯ ತಲೆ ಬೆನ್ನು ಎಲ್ಲ ಸವರಿ “ಹೌದಲೆ! ಸರಸ! ಇಷ್ಟು ದಿವ್ಸದ್ ಮೇಲೆ ಬಪ್ಪ ಅಂತೆಳಿ ಕಾಂತಾ ಹೆಣೆ ನಿಂಗೆ? – ಅದ್ಯಾರ್‍ ನಿನ್ನೊಟ್ಟಿಗೆ?” +“ಕೊಕ್ಕರ್ಣೆ ಮಾವಯ್ಯನ್ ಮಗಳು. ನಿಮ್ಮನ್ನೆಲ್ಲ ಕಾಣ್ಕ್ ಅಂದ್ಲ್. ಕರ್‍ಕಂಡ್ ಬಂದೆ” +“ಬಾಳ ಸಾಪಾಯ್ತ್. ಕೂಕೋ ಮಗ. ನಿನ್ ಹೊಸರು ಯಂತ? ಅಬ್ಬೆ ಅಪ್ಪ ಎಲ್ಲ ಹುಶಾರಾ?-” ಮಾತಾಡುತ್ತ ಆಡುತ್ತ ಮೀನಾಶ್ಚತ್ತೆ ಥಟೆಂತ ಕಂಬಕ್ಕೊರಗಿ ಕಿವಿಗೆ ಕಡ್ಡಿ ಹಾಕಿ ರೊಂಯ್ಯ ತಿರುಗಿಸುತ್ತ ಹಾಯೆಂಬಂತೆ ಬಾಯಿ ವಾರೆ ಮಾಡಿಕೊಂಡು ನಮ್ಮನ್ನೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದ ಪ್ರಕಾಶ ಮಾಣಿಯತ್ತ ತಿರುಗಿ. +“ಆಗ ಮಣಿ-ಅಲ್ಲಿ ಅ ಮೂಲೆಯೊಳ್ಗೆ! ಶೂ-ಓಡ್ಸು” ಪ್ರಕಾಶ ಮಾಣಿ ಹಿಡಿ ಕಡ್ಡಿ ಬಿಸುಟು ಹತ್ತಿರದಲ್ಲಿಟ್ಟುಕೊಂಡ ಕೋಲನ್ನೆತ್ತಿಕೊಂಡು ಬಾಲ ಎತ್ತಿಕೊಂಡು ಓಡುವ ಕರುವಿನಂತೆ ಓಡಿತು. ಗಾಳಿಯಲ್ಲಿ ಕೋಲು ಬೀಸಿತು. ಓಡಿ ಬಂತು. ಅತ್ತ ನೋಡಿದರೆ ಯಾರೂ ಇರಲಿಲ್ಲ. ಅಷ್ಟೊತ್ತಿಗೆ ಸೊಸೆ ಹೊರಗೆ ಬಂದಳು. +ಕೈಯಲ್ಲಿದ್ದ ಮಗು ಎಂತದೋ ಕಚ್ಚಿಸಿಕೊಂಡು ಬೊಬ್ಬೆ ಹೊಡೆಯುತ್ತಿತ್ತು. ಅದನ್ನು ನೀವುತ್ತ “ಕಟ್ಟೆ ಕಚ್ಚಿತಾ ಕಾಂತ್-ನೀವು ಈಗ ಬಪ್ಪ ಭರವ? ಇದ್ ಯಾರು?” ಅಂದೆಲ್ಲ ಸ್ನೇಹದ ನಗೆ ಬೀರಿದಳು. “ಬರೀ ನೆಲದ ಮೇಲೆ ಕೂಕಂಡಿದ್ರ್‍ಯಲೆ!” ಎನ್ನುತ್ತಾ ಚಾಪೆ ಅಡ್ಡದಿಂದ ಒಂದು ಚಾಪೆ ಎಳೆಯಹೋದಳು. ನಾವು ಬೇಡ ಅಂದದ್ದೇ ಕೈ ಬಿಟ್ಟಳು. ಸರಸ ಚಿಕ್ಕಿ ಬರಲಿಕ್ಕೆ ಮುಂಚೆ ಹೇಳಿದ್ದು ಸಮನೆ. ಗಂಟೆ ಹನ್ನೊಂದಾದರೂ ಮೈ ಮುಖ ಚೊಕ್ಕ ಮಾಡಿಕೊಂಡಂತೆ ಕಾಣುತ್ತಿರಲಿಲ್ಲ. ಮನೆ ಕೆಲಸದ ಮೇಲೆಯೇ ಬಿದ್ದುಕೊಂಡಂತೆ ಇದ್ದಳು. “ಹೈತ್, ನಮ್ ಮೇಲೆ ಕೆಲ್ಸ ಇತ್ತ, ಕೆಲ್ಸದ ಮೇಲೆ ನಾವಾ?” ಎಂದು ನನ್ನನ್ನು ಗುಟ್ಟಲ್ಲಿ ಚಿವುಟಿದ ಸರಸ ಚಿಕ್ಕಿಯ ಗುಣುಗಿಗೆ ಸರಿಯಾಗಿ ಸೊಸೆ ತಾರಾಮತಿಯೂ ನುಡಿದಳು. +“ಯಲ್ಲರಿಗೂ ಮನೆ ಕೆಲ್ಸ ಮುಗೀತ್ತಂಬ್ರಪ್ಪ. ನಂಗೊಬ್ಳಿಗೆ ಮುಗಿಯುವುದಂತೆಳಿ ಇಲ್ಲೆ. ಮಾಡತ್ ಯಂತ ಕೇಂತ್ರಿಯಾ? ಯಂತದೂ ಇಲ್ಲೆ. ಈಗ ಇದೊಂದ್ ಮಾಣಿ ಹಟ ತೆಕ್ಕಂತಲೆ!”- ಎನ್ನುತ್ತಾ ಅದನ್ನು ತಿವಿದಳು. ಅದು ಇನ್ನಷ್ಟು ಜೋರು ಹಟ ಹರಡಿಕೊಂಡಿತು. “ಏ ನಾಗೂ ಬಾ ಇಲ್ಲಿ, ಇದನ್ನ ಆಚೆ ಕರ್‍ಕಂಡ್ ಹೋಗ್”-ಎನ್ನಲು ನಾಗ ಎಂಬವಳು ಬಂದು ಮಗುವನ್ನು ಆಚೆಗೆ ಕರೆದುಕೊಂಡು ಹೋದಳು. “ಕೂಕಣಿ….ಕಾಫಿ ಮಾಡುದಾ ಬೊಂಡ ತೆಗ್ಸುದಾ? ಊಟಕ್ಕೆ ಮನೆಗೇ ಹೋಯ್ಕೋ ಏನೋ ಅಲ್ದಾ?” +-ಅಡ್ಡಿಲ್ಲ, ಹೆಣ್ಣು ಒಳ್ಳೆಯ ಉಪಚಾರವನ್ನೇ ಮಾಡುತ್ತಿದೆ ಎಂಬಂತೆ ನಕ್ಕಳು ಸರಸ ಚಿಕ್ಕಿ. ಒಳಗೆ ಸರಿಯುವ ತಾರಾಮತಿಯ ಹೆಜ್ಜೆಗಳಲ್ಲಿ ಉಮೇದಿನ ಕೆತ್ತೆ ಸಹ ನನಗೆ ಕಾಣಲಿಲ್ಲವಾಗಿ ಸರಸ ಚಿಕ್ಕಿಯಷ್ಟು ಸಲೀಸಾಗಿ ನನಗೆ ನಗಲಾಗಲಿಲ್ಲ. +* * * * +ಅಪ್ಪಣ್ಣಜ್ಜಯ್ಯನ ಮನೆ ಉಪಚಾರ ಈ ಮಟ್ಟಕ್ಕೆ ಬಂದು ನಿಂತಿತೇ? ದೊಡ್ಡಮ್ಮ ಹೇಳಿದ ಚಿತ್ರ ಆಗಲೇ ಮಸುಕಾಗಿತ್ತು…. +ಅಪ್ಪಣ್ಣಜ್ಜಯ್ಯನ ಮನೆಯೆಂದರೆ ಯಾರು ಬಂದರೂ ಹೆಚ್ಚಲ್ಲ, ಹೋದರೆ ಕಡಿಮೆಯಲ್ಲ, ಬಂದು ಚಾವಡಿಯಲ್ಲಿ ಹಾಸಿದ ಚಾಪೆಯಲ್ಲಿ ಕುಳಿತರೆಂದರೆ ಕಾಟು ಮಾವಿನಹಣ್ಣಿನ ಪಾನಕವೋ, ಕಸೆ ಹಣ್ಣಿನ ಹೋಳೋ, ಬೆರೆಸಿದ ಮಜ್ಜಿಗೆಯೋ, ನೀರು ಮತ್ತು ಬೆಲ್ಲವೋ, ಕಾಫಿ ಮತ್ತು ಹುರುಳಿ ಹಪ್ಪಳವೋ…. ಆಯಾಯ ಕಾಲಕ್ಕೆ ತಕ್ಕಂತೆ ಬಂದವರೆದುರು ಬರುತ್ತವೆ. ಊಟಕ್ಕೇಳಿ ಎಂಬ ಉಪಚಾರ ಬೇರೆ. ಮೀನಾಕ್ಷತ್ತೆ ಮನೆಯ ಈ ಸಂಪ್ರದಾಯವನ್ನು ಪಾಲಿಸಿಕೊಂಡೇ ಬಂದವಳು. ಪಾಲಿಸಿಕೊಂಡು ಬಂದದ್ದು ಇದು ಮಾತ್ರವೇ? ಅಲ್ಲ, ಮನೆಯಲ್ಲಿ ಎಷ್ಟು ದೊಡ್ಡ ವಿಶೇಷಗಟ್ಟಲೆಗೂ ಸಾಕಾಗುವಷ್ಟು ಪಾತ್ರೆಗಳಿವೆ. ಅಲ್ಲದೆ….ಓಬೀರಾಯನ ಕಾಲದ ಒಂದು ಆರತಿ ತಟ್ಟೆಯೂ, ದಿನನಿತ್ಯದ ಬಳಕೆಗೆ ಯಾವುದು ಬೇಡವೋ ಅದೆಲ್ಲವೂ ಊರ ಉಪಕಾರಕ್ಕೆ ಎಂಬುದನ್ನೂ ಪಾಲಿಸಿಕೊಂಡು ಬಂದಾಕೆ. ಯಾರು ಯಾವ ಹೊತ್ತಿಗೆ ಬಂದು ಕೇಳಿದರೂ ಕೊಡುವುದೇ ಹೆಗ್ಗಳಿಗೆ ಎಂದು ತಿಳಿದವಳು. +ಒಂದು ಬೆಳ್ಳಿ ಆರತಿ ತಟ್ಟೆಯಂದರೆ….! ಅದರ ಕುಸುರಿ ಗೋಪುರಗಳು, ತಲೆಯ ಮೇಲೊಂದು ನಕ್ಷತ್ರ ಹರಳು, ನುಣುಪಾಗಿ ಒಪ್ಪವಾಗಿರುವ ಸುಳಿಯುಂಡೆಗಳು… ನೋಡಲು ಎರಡು ಕಣ್ಣು ಎತ್ತ ಸಾಕು? ಊರಿನ ಸೊಸೆಯಂದಿರೆಲ್ಲ ಅಂತಹದೊಂದು ತಟ್ಟೆ ತಮ್ಮ ಮನೆಯಲ್ಲಿದ್ದಿದ್ದರೆ ಎಂದು ಆಸೆಪಟ್ಟವರು. ಅಗ್ಗ ಸುಗ್ಗಿಯ ಕಾಲದಲ್ಲಿ ಅಷ್ಟನ್ನು ಮಾಡಿಸಿಡದ ತಮ್ಮ ಅತ್ತೆ ಮಾವ ಬರೀ ಬೂಸು ಎನ್ನುತ್ತ ಮಾಡಿಸಿಟ್ಟುಕೊಳ್ಳಬೇಕೆಂಬ ಬಯಕೆಯನ್ನು ಗಂಡಂದಿರ ಹತ್ತಿರ ಕೊಡವಿದವರು…. ಆದರೆ… +“ನಮ್ಮ ಕಾಲದ ಗಂಡಸರು ಈ ಕಾಲದ ಗಂಡಸರ ಹಾಂಗ? ಈಗಿನವು ಯಂತ ಕ್ಕಾಪೊ? ಹೆಂಡ್ರ್‍ ಹಲ್ಲು ಚಿರಿದ್ರೆ ತಾವೂ ಚಿರಿತೋ. ಸಾಲ ಸೋಲ ಮಾಡಿಯಾರೂ ಹೆಂಡ್ರ್‍ ಕೇಂಡದ್ ತಂದ್ ಹಾಕ್ತೊ….ಆಗಿನ ಗಂಡಸ್ರ್‍ ಸತ್ಯಕ್ಕೂ ಗಂಡಸ್ರೇ….” ದೊಡ್ಡಮ್ಮ ಹೇಳಿದ್ದಳು. ಯಾಕೆಂದರೆ ಹೆಂಡಂದಿರ ಮಾತಿಗೆ “ನಿಮಗೆಲ್ಲ ಯಂತ ಗೊತ್ತಿತ್ತಂತೆಳಿ ಬೇಕಲೆ. ಅದ್ಯೇನ್ ಸ್ವಲ್ಪದುಡ್ಡಿಂದ?” ….ಎಂದು ಕೆಲವರೂ “ಕಾಂಬ, ಕಾಂಬ, ಮನಿ ಉಸಾಬರಿ ನಿಮ್ಮ ಕೈಯಾಗ್ ಕೊಟ್ಟದ್ ಯಾರ್‍? ನಾನಿದ್ದೆ, ಕಂಡ್ಕಂತೆ” ಎಂದು ಮತ್ತೆ ಕೆಲವರೂ “ನಿನ್ ಅಪ್ಪ್‌ನ ಮನಿಯಿಂದ ತಂದ ಬೆಳ್ಳಿ ಇದ್ದಿದ್ರೆ ಈ ಕ್ಷಣ ಮಾಡಿಸ್ತಿದ್ದೆ”-ಎಂದು ಇನ್ನೂ ಕೆಲ ಗಂಡಸರೂ ಬರೆ ಕೊಟ್ಟದ್ದುಂಟು. +ಸಂಪಾದನೆಯೆನ್ನುವುದು ಕೇವಲ ಗಂಡಸೊಬ್ಬನಿಂದಲೇ ನಡೆದು ಮನೆ ವಾರ್ತೆಯ ರಥ ತಾನಿಲ್ಲದಿದ್ದರೆ ನಿಂತಲ್ಲೇ ನಿಲ್ಲುತ್ತದೆ ಎಂಬುದನ್ನು ಕಂಡುಕೊಂಡ ಯಾವ ಗಂಡಸೂ ಹುಲುಮೀಸೆಗೂ ಹುರಿ ಕೊಟ್ಟಾನು. ಸ್ಥಿತಿ ಹೀಗೇ ಇದ್ದದ್ದೇ ಹೌದಾದರೆ ಯಾವ ಕಾಲಕ್ಕೂ ಪ್ರಪಂಚದ ಯಾವ ಮುಲ್ಲೆಗೆ ನಡೆದರೂ ಗಂಡಸು ಹಾಂಗೇ ಹೆಂಗಸು ಹೀಂಗೇ ಅಂತೆಲ್ಲ ದೊಡ್ಡಮ್ಮನ ಹತ್ತಿರ ಹೇಳಿದರೆ ಅವಳು ಕೇಳುವವಳಲ್ಲ. ಅವಳ ಮಟ್ಟಿಗೆ ಹೆಂಗಸೆಂದರೆ ಆರತಿ ತಟ್ಟೆಯಂತೆಯೆ. ಎತ್ತಿದವರು ಹೇಳಿದಂತೆ ಸುತ್ತು ಹೊಡೆಯುವುದು ಮಾತ್ರ. ಸ್ವಂತ ಬುದ್ಧಿ ಸಲ್ಲ. “ಮಗೂ ಮೀನಾಶ್ಚತ್ತೆ- ಹಾಂಗಿದ್ದದ್ದಕ್ಕೆ ಗಂಡನ ಹತ್ತಿರ ಒಂದ್ ಜಗಳ ಮಾಡ್ಲಿಲ್ಲೆ, ಮಿಣ್ಣಗೆ ಅವಳಿಗಂತವೇ ಇದ್ ಕೆಲ್ಸ ಮಾಡಿಳ್, ಸುಮ್ನೆ ಕೂಕಂಡ್ಲ್”… ಮತ್ತೆ ತಟ್ಟಯನ್ನು ಒರೆಸಿಡುತ್ತಿದ್ದ ಕಾಶಿ-? +ಆರತಿ ತಟ್ಟೆಯನ್ನು ಕೇಳಲು ಯಾರು ಬಂದರೂ ಕಾಶಿಗೆ ಹೊರಗಿಣುಕದೆ ತಡೆಯದು. ಮೀನಾಕ್ಷತ್ತೆ ಜಾಗ್ರತೆಯಿಂದ ಖಾಕಿ ಚೀಲದೊಳಗೆ ಬಿಳಿ ಮಲ್ಲಿನಲ್ಲಿ ಮುಚ್ಚಿಟ್ಟ ಗಂಟನ್ನು ಅವರಿಗೆ ಹಸ್ತಾಂತರಿಸುವಾಗ ಹಿಂದು ಮುಂದಿಲ್ಲದ ಒಂದು ನಗೆಯಾಡುವವಳು ಕಾಶಿ. ಎಷ್ಟೋ ಸಲ ಮೀನಾಕ್ಷತ್ತೆ “ಅದ್ಯೆಂತ ಹಸೀ ಹಾದರಗಿತ್ತಿ ನಗಿ!” ಅಂತ ಹೇಳಿ ಗದರಿಸಿದ್ದುಂಟು, ಮೀನಾಕ್ಷತ್ತೆ ಗಂಟು ಸಮೇತ ಕೊಟ್ಟರೆಂದರೆ ಬಂದವರು ಅದನ್ನು ಬಿಚ್ಚಿ ಎಲ್ಲ ಸರಿಯುಂಟೇ ಕಾಂಬವರಲ್ಲ. ಮತ್ತೆ ವಾಪಾಸು ಬಂದ ಮೇಲೆ ಮೀನಾಕ್ಷತ್ತೆಯೂ ಕಾಂಬವರಲ್ಲ, ಪಡಸಾಲೆಯಲ್ಲಿ ಸದ್ಯಕ್ಕೆ ಒಂದು ಮರದ ಕಪಾಟಿನೊಳಗೆ ಸ್ವಲ್ಪ ದಿನ ಇದ್ದು ಕೈ ಬಿಡುವಾದಾಗ ಒರೆಸಿ ಚಿನ್ನ ಬೆಳ್ಳಿಯ ಟ್ರೆಜರಿಯಲ್ಲಿಡುವುದು ರೂಢಿ. ಹಾಗೆ ಒರೆಸಿಡುವ ಕೆಲಸವನ್ನು ಎಷ್ಟೋ ಸಲ ಕಾಶಿಯೇ ಮಾಡಿದ್ದುಂಟು. ಆಗ ಆಕೆ ಅದರೊಡನೆಯೇ ಮಾತಾಡಿದಂತೆ ಕಟ್ಟಿದ ಹಾಡುಗಳು ಎಷ್ಟೋ. ಆದರೆ ಕಾಶಿಯ ಹಾಡುಗಳನ್ನು ಯಾರೂ ಮದುವೆ ಮನೆಗಳಲ್ಲಿ ಹಾಡುವುದಿಲ್ಲ. “ಯಾಕೆಂದ್ರೆ ಅವೆಲ್ಲ ಬರೀ ಭಂಡು ಹಾಡುಗಳು…. ‘ಗಂಡನ ಕೊಳ್ಳಲು ಬೇಕು ಆರತೀ…ನೀನು ಮಿಂಡಽಗೆಂದೂ ಬೇಡ ಆರತೀ’…ಹೀಂಗಿಂದೇ” +-ಎಲ್ಲ ದೊಡ್ಡಮ್ಮನ ಪುರಾಣ. +* * * * +ಮೀನಾಕ್ಷತ್ತೆ ನಮ್ಮನ್ನೇ ಬಿಳೀಗಣ್ಣುಗಳಿಂದ ನೋಡುತ್ತಿದ್ದರು. ತುಟಿ ಆಗ ನೋಡಿ ನಕ್ಕದ್ದು ಈಗಲೂ ಉದ್ದವಾಗಿ ಹಾಗೆಯೇ ಇತ್ತು. ನಗೆ ಮುಗಿದುದರ ಅರಿವೇ ಇಲ್ಲದಂತೆ. ಈಗ ಅರಿವು-ಮರೆವಿನ ಸಮ್ಮಿಶ್ರವಾಗಿರುವ ಈ ಮೀನಾಕ್ಷತ್ತೆಯನ್ನು ಬಿಟ್ಟಗಣ್ಣಿಂದ ನೋಡುತ್ತಿದ್ದ ಹಾಗೆ ಸರಸ ಚಿಕ್ಕಿ ನುಡಿದಳು. “ಈ ಮೀನಾಶ್ಚತ್ತೆಯ ಅಣ್ಣ ಬಹಳ ದೊಡ್ಡಜನ. ಮಿಲ್ಟ್ರಿಯಲ್ಲಿ ಡಾಕ್ಟ್ರ್‍ ಆಯಿದ್ರ್‍… ಅವಾಗೆಲ್ಲ ಹಾಂಗೇಯಲೆ. ಹೆಣ್ಮಕ್ಳನ್ನ ಎಲ್ಲಿ ಶಾಲೆಗೆ ಕಳಿಸ್ತಿದ್ದೋ? ಹಾಂಗಂದ್ ಮೀನಾಶ್ಚತ್ತೆಯ ಯೋಗ್ಯತೆಯೇನು ಕಡೆಮೆಯ? ಎಲ್ಲಿ ಹೋದ್ರೂ ಆರ್ತಿ ಎತ್ತುಕೆ ಮೀನಾಶ್ಚತ್ತೆಯೇ ಆಯ್ಕ್. ಅಂಥಾ ಸಿರಿ ಮುತ್ತೈದೆ. ತಟ್ಟೆಯೂ ಹ್ಯಾಂಗೂ ಅವಳ ಮನೇದೇ ಅಲೆ! ನಾ ಕಂಡದ್ದೆ ಅದನ್ನ. ಒಂದು ತಟ್ಟೆ ಅಂದ್ರೆ! ಈ ಭಾರ!” ಹೇಳುತ್ತಿದ್ದಂತೆ ಭಾರವಾಗಿ ಅಂಗೈಯನ್ನು ಗಾಳಿಯಲ್ಲಿ ಎತ್ತಿ ಇಳಿಸಿದಳು. +ಹೋದಲ್ಲಿವರೆಗೂ ಆರತಿ ಮಾಡುವವಳೂ ಇವಳೇ. ಆರತಿ ತಟ್ಟೆಯೂ ಇವಳದೇ ಎಂದರೆ? ಹಾಗೆ ಒಮ್ಮೆ ತಿಮ್ಮಪ್ಪಣ್ಣಯ್ಯನ ಮಗಳ ಮದುವೆಯಲ್ಲಿ ಗಲಾಟೆ ಎದ್ದದ್ದಲ್ಲವೇ? (ಸರಸ ಚಿಕ್ಕಿಯ ಹತ್ತಿರ ಕೂತರೆ ಹೀಗೇ. ಕಿವಿ ಬಾಡಿಗೆಗೆ ಕೊಡಬೇಕು.) +“ನೀನೇ ಹೇಳು ಇವಳೇ. ತಿಮ್ಮಪ್ಪಣ್ಣಯ್ಯನ ಮನಿಗೂ ಈ ಮನಿಗೂ ಏನು ಸಂಬಂಧ? ಆರ್ತಿ ಮಾಡುವ ಹಕ್ಕು ಮೀನಾಶ್ಚತ್ತೆಗೆ ಹ್ಯಾಂಗೆ ಬಪ್ಪು? ಅದು ತಿಮ್ಮಪ್ಪಣ್ಣಯ್ಯನ ತಂಗಿಯಂದಿರದು. ಹಾಂಗಾಯ್ಲಿಲ್ಲೆ. ತಿಮ್ಮಪ್ಪಣ್ಣಯ್ಯನ ಹೆಂಡ್ತಿ ಮೀನಾಕ್ಷತ್ತೆಯನ್ನ ಎಬ್ಬಿಸಿದ್ಲು.” +…ಇವಳಾದರೂ ಎಂಥವಳು? ಕರೆದೊಡನೆ ಎರಡು ಸಲ ಒಲ್ಲೆ ಎಂಬಳು. ಮೂರನೆಯ ಸಲ ಎದ್ದೇ ಬಿಡುವಳು. ಮೀನಾಶ್ಚತ್ತೆ ಎದ್ದು ಮಂಟಪಕ್ಕೆ ತೆರಳಿದ್ದಾಳೆ…ಈಚೆ ಗುಸುಗುಸು ಮರಕುವ ಶಬ್ಧ. ಯಾರದೆಂತ ಮಾಡಿದೆ. ತಿಮ್ಮಪ್ಪಣ್ಣಯ್ಯನ ತಂಗಿ ವಿಶಾಲು! ಇಡೀ ದಿನ ಮೀನಾಶ್ಚತ್ತೆಯನ್ನು ಕರುಬುತ್ತಿದ್ದಳಲ್ಲ. ಮೀನಾಶ್ಚತ್ತೆ ಮನೆಯಲ್ಲಿ ಅದ ಹಾಂಗೇ ತನ್ನ ಮನೆಯಲ್ಲೂ ಆಗಬೇಕು ಅಂತ ಹಟ ಹಿಡಿಯುತ್ತಿದ್ದಳಲ್ಲ, ಅದೇ ನಮೂನೆ ಬಟಾಣಿ ಗೋಧಿಮಣಿ ಸರ, ಚಕ್ರ ಸರ, ಮಾವಿನಮಿಡಿ ನೆಕ್‌ಲೇಸ್….ಎಲ್ಲ ಎಲ್ಲ… ಅದೇ ನಮೂನೆ. ಗಂಡ ಮಾತ್ರ ಬೇರೆ, ಹುಟ್ಟುವಳಿ ಬೇರೆ. ಅಷ್ಟೇ ಹುಟ್ಟುವಳಿಯೊಳ್ಗೆ ಅಷ್ಟೆಲ್ಲ ಹ್ಯಾಂಗ್ ಮಾಡ್ಕಂಡ್ಲೋ… ಆ ವಿಶಾಲು, ಎಂತವಳೇ ಇರಲಿ. ಅಣ್ಣನ ಮನೆ ಮದುವೆಯಲ್ಲಿ ಮಾತ್ರ ಹಕ್ಕಿನ ವಿಶಾಲು ಅಲ್ಲವೇ? ಅಯ್ಯೋ ಒಂದು ಮರಕಿದ್ದಂದ್ರೆ “ನಾವು ಸತ್ ಲೆಕ್ಕ ಮಾಡಿಯ ಅಣ್ಣಯ್ಯ…” ಎಂಬ ಒಂದೇ ರಾಗ. +“ಪಾಪ ಮಾರಾಯ್ತಿ. ಆ ತಿಮ್ಮಪ್ಪಣ್ಣಯ್ಯಂಗೆ ಇದೆಲ್ಲಯಂತ ತೆಳಿತ್ತ? ಗಂಡಸಪ್ಪ. ಆರತಿ ವಿಚಾರಕ್ಕೂ ಮಂಡೆ ಹಾಕ್ಕಂಡ್ ಬಪ್ನಾ? …. ಎಲ್ಲ ಕಿತಾಪತಿ ಅವ್ನ ಹೆಂಡ್ತಿದು”… +ವಿಶಾಲುಗೂ ಅವಳಿಗೂ ಮುಂಚಿನಿಂದಲೂ ಅಷ್ಟಕಷ್ಟೇ. ವಿಶಾಲು ತನ್ನ ಮಗನ ಉಪನಯನಕ್ಕೆ ಹೇಳಿಕೆ ಮಾಡಲಿಕ್ಕೆ ಬಂದವಳು ತಿಮ್ಮಪ್ಪಣ್ಣಯ್ಯನ ಕಾಲಿಗೆ ಮಾತ್ರ ನಮಸ್ಕಾರ ಮಾಡದಳಂತೆ. ಇವಳ ಕಾಲಿಗೆ ಮಾಡಲಿಲ್ಲವಂತೆ. ಸುಮ್ನೆ ಯಾರದರೂ ಹೋದಳೇ? ನೀನ್ ನಂಗಿಂತ್ಲೂ ಸಣ್ಣವ್ಳು. ನಮಸ್ಕಾರ ಮಾಡ್ಕಂತೆಳಿ ಇಲ್ಲೆ” ಎಂದಳಂತೆ. ಎಷ್ಟೆಂದರೂ ಅತ್ತಿಗೆ ಅಲ್ಲವೇ? ಅತ್ತಿಗೆ ಸ್ಥಾನಕ್ಕೆ ಇವಳು ನಮಸ್ಕಾರ ಮಾಡಲೇಬೇಕಿತ್ತು…. ಗಂಟೇನು ಹೋಗುತ್ತಿರಲಿಲ್ಲ… +ಹೀಗೆ ಸರಸ ಚಿಕ್ಕಿ ಮಾತಾಡುತ್ತಿದ್ದಂತೆ ಒಮ್ಮಿಂದೊಮ್ಮೆ ನ್ಯಾಯಾಧೀಶರಂತೆ ಮಾತಾಡುವವಳು. ಅಲ್ಲಲ್ಲೇ ತೀರ್ಪು ಕೊಡುತ್ತ ಸಾಗುವವಳು…. “ತಕೋ, ತಿಮ್ಮಪ್ಪಣ್ಣಯ್ಯನ್ ಹೆಂಡ್ತಿ ಸಿಟ್ ತೀರ್‍ಸ್‌ಕಂಡದ್ ಹೀಂಗೆ.” +ವಿಶಾಲು ತನ್ನ ಗಂಡ ಮಕ್ಕಳನ್ನು ಕರೆದುಕೊಂಡು ಊಟಕ್ಕೆ ನಿಲ್ಲದೆ ಹರಟುಹೋದಳಲ್ಲ…. ಅಲ್ಲ, ಈ ಮೀನಾಶ್ಚತ್ತೆಗಾದರೂ ಬುದ್ಧಿ ಬೇಕಿತ್ತು ಹೌದನ? ಕರೆದರು ಅಂತ ಹೇಳಿ ಮಂಟಪಕ್ಕೆ ನುಗ್ಗುದೆಯ? ಅದು ತನ್ನ ಜಾಗ ಹೌದಾ ಅಲ್ದ ಕಾಂಬ ಪಂಚಾತಿಕೆ ಬೇಡವ? +“ಆರತಿಗೊಬ್ಬಳು ಮೀನಾಶ್ಚತ್ತೆ ಅಂತೆಳಿ ನಾವು ಒಂದಿಷ್ಟ್ ಮಂದಿ ಎದುರೆದುರೇ ತಮಾಷೆ ಮಾಡಿರೂ ಗೆರೆ ಮುಟ್ಕಂಬ ಜನ ಅಲ್ಲ ಕಾಣ್ ಈ ಹೆಂಗ್ಸ್…” +“ಆಂ… ಏನಾಂದೇ?….ಈಗೀಗ ಕೆಮಿ ಸಮ ಕ್ಯೇಂತಿಲ್ಲೆ ಮಾರಾಯ್ತಿ”…ಪಾಪ ಸರಸ ಚಿಕ್ಕಿಯ ಪಿಸುಮಾತು ಕೇಳಿಸದರೆ ಮೀನಾಶ್ಚತ್ತೆ ಕುಳಿತಲ್ಲೇ ಮುಂದೆ ಬಾಗಿದರು. ಮಾತು ಕೇಳುವ ಆಡುವ ಆಸೆಯೊಂದು ನಡುಗುತ್ತ ಮುಂದೆ ಬಾಗಿದಂತೆ. ದೊಡ್ಡ ಸ್ವರದಲ್ಲಿ ಕೇಳಿದರು. +“ಅಲ್ದನ ಸರಸಾ. ಆ ಕಾಶಿ ಯಂತ ಆದ್ಲಾ? ಊರ್‍ ಬಿಟ್ಟ ಮೇಲೆ ಕಂಡದ್ದೇ ಇಲ್ಲೆ ಕಾಣ್. ಸತ್ ಹೋಯಿಪ್ಳ?” +ಸರಸ ಚಿಕ್ಕಿ ಕೂಗಿ ಹೇಳಿದಳು… ಕಾಶಿ ಸತ್ತಿಲ್ಲ. ದೂರದ ಯಾವುದೋ ಊರಲ್ಲಿ ಇದ್ದಾಳೆ. ಈಗ ಯಾವುದಕ್ಕೂ ಕಡಿಮೆಯಿಲ್ಲವಂತೆ. ಮಗ ಮಸ್ತು ದುಡ್ಡು ಮಾಡಿದ್ದಾನಂತೆ… +“ಯಂತ ಮಾಡ್ರ್‍ ಏನ್? ಗಂಡ ಪೋಂಕಲೆ!” ಈ ಕ್ಷಣ ಸಾಯಬಹುದಾದ ಮೀನಾಕ್ಷತ್ತೆ ನಕ್ಕ ರೀತಿಯೆಂದರೆ! ಖಾಲಿ ಆರತಿ ತಟ್ಟೆ ಹೀಗೆ ನಗಲಾರದು. +ಸರಸ ಚಿಕ್ಕಿ ಎಂದಳು…. +“ತಮಾಷೆ ಮಾಡಿರೂ ಈ ಮೀನಾಶ್ಚತ್ತೆ ಗೆರೆ ಮುಟ್ಕಣ್ಲಿಲ್ಲೆ ಅಂದ್ನಲೆ. ಒಂದ್ನಮೂನೆ ಪಾಪದವಳು ಮಾರಾಯ್ತಿ” ಎನ್ನುತ್ತಾ “ಮೀನಾಶ್ಚತ್ತೇ… ಈಗ ಬತ್ತೊ. ಇವ್ಳಿಗೆ ಮನಿ ಕಾಣ್ಕಂಬ್ರ್‍” – ಸರಸ ಚಿಕ್ಕಿ ಪಡು ಹೆಬ್ಬಗಿಲತ್ತ ನಡೆದಳು. ಅವಳ ಹಿಂದೆ ನಾನು. “ಹೋಯಿಬನ್ನಿ… ಅಲ್ಲಿ ಮಂಡೆಕಾಕೆಗಳಿದ್ದೋ. ಕಾಂತ ಇದ್ಹಂಗೆ ತಲೀಗೇ ಬಂದ್ ಕುಕ್ತೋ. ಜಾಗ್ರತೆ” – ಎಂದಳು ಮೀನಾಕ್ಷತ್ತೆ. +ಹೆಬ್ಬಾಗಿಲ ಕೋಣೆ ಹೊರಗಿಂದ ಚಿಲಕ ಹಾಕಿತ್ತು. ಸರಸ ಚಿಕ್ಕಿ ಮೆಲ್ಲ ತೆಗೆದಳು. ಒಳಗೆ ಗಾಳಿ ಮರಕಟ್ಟಿದಂತಿತ್ತು. ಧೂಳು ಹಾಸಿ ಅಪ್ಪಳಿಸಿತ್ತು. ಹೀಂಗೂ ಇರಸ್ತಿಕೆಯ? ಏನೇ ಹೇಳು ಮೀನಾಕ್ಷತ್ತೆಯ ಮಾಣಿ ನರಸಿಂಹನ ವಹಿವಾಟು ಏನೂ ಸಾಲದು. ಎಂದು ಅವಳೆಂದಾಗ ತಾರಾಮತಿಯ ಉಮೇದಿಲ್ಲದ ಹೆಜ್ಜೆಗಳು ಕಣ್ಣೆದುರು ಬಂದವು. +“ಇಗ-ಇದೇ ಕೋಣಿ. ರಾತ್ರಿಯಾಯಿತಾ? ಗುಲಾಬಿ ಬಂದಳೆಂದೇ. ಹ್ಯಂಗೆ? ಒಳ್ಳೇ ವೀಳ್ಯದೆಲೆ ಹಾಕ್ಕಂಡ್, ತಲಿ ಬಾಚ್ಕಂಡ್, ಪೌಡರ್‍ ಹಾಕ್ಕಂಡ್, ಎದೆ ಕಣ್ಣು ಕಾಂಬ ಹಾಂಗಿನ ಒಂದು ರವಿಕೆ. ಮೇಲೊಂದ್ ತೆಳೂ ಸೀರಿ ಉಟ್ಕಂಡ್ ಅದ್ಕೇ ಅಲ್ದ ಇವತ್ತಿಗೂ ರಾತ್ರಿ ಕನ್ನಡಿ ಕಂಡ್ರೆ ‘ನೀನೇನ್ ಸೂಳಿಯಾ?’ ಅಂತೆಳಿ ದೊಡ್ಡವ್ರ್‍ ಬೈಯುದ್?…” +“ಹ್ಹಂ, ಮುಂದೆ ಹೇಳು” +“ನಮ್ ಊಟದ ಪಂಕ್ತಿ ಎಲ್ಲ ಮುಗಿದು ಹಾಸಿಗೆ ಹಾಕಂಬ ಗಲಾಟೆ. ಒಂದೆರಡ್ ಜನರಾ ಒಂದೆರಡ್ ಹಾಸಿಗಿಯಾ? ಈ ಗಲಾಟೆಯೊಳ್ಗೆ ಗುಲಾಬಿ ಬಂದದ್ ಗೊತ್ತಾಪುದು ಮೀನಾಶ್ಚತ್ತೆಗೆ ಮಾತ್ರ. ಅಡುಗೆ ಕೋಣೆ ಕಿಟಕಿಯಿಂದ್ಲೇ ಅವಳನ್ನು ಕಂಡಾಯ್ತ್. ತಕ್ಕಷಣ ಒಂದ್ ಲೋಟೆ ಹಾಲ್ ಬಗ್ಸಿ ಆಯ್ತ್, ನಮ್ಮನ್ ಯಾರನ್ನಾದ್ರೂ ಕರ್‍ದ್ ‘ಕೊಟ್ ಬಾ’ ಅಂತೆಳಿ ಕಳ್ಸಿಯಾಯ್ತ್… ಅಂಥಾ ಪಾಪದ್ ಹೆಂಗ್ಸ್ ಈ ಮೀನಾಶ್ಚತ್ತೆ…ಪ್ರಪಂಚದಗೆ ಇಂಥ ಹೆಂಗ್ಸ್ ಸಿಕ್ಕುವನ?” +-ಸರಸ ಚಿಕ್ಕಿ ಮುಂದುವರಿಸಿದಳು. ಪಾಪ ಎಷ್ಟು ಮಾಡಿದರೆ ಏನು? ಹೆಬ್ಬಾಗಿಲ ಕೋಣೆಯಲ್ಲಿ ಇರುವೆ. ಎಲ್ಲ್‌ಕಂಡ್ರೂ ಇರುವೆ. ಒಂದು ದಿನ ರಾತ್ರಿಯಂತೂ ಅಪ್ಪಣ್ಣಯ್ಯ ಮತ್ತು ಗುಲಾಬಿ ಅರ್ಧ ರಾತ್ರಿಯಲ್ಲಿ ಹಾಸಿಗೆ ಹೊತ್ತುಕೊಂಡು ಉಪ್ಪರಿಗೆ ಕೋಣೆಗೆ ಓಡಿದರು. ಸ್ವಲ್ಪ ಹೊತ್ತಾಗಲಿಕ್ಕೂ ಅಲ್ಲಿಯೂ ಇರುವೆ. ರಾತ್ರಿಯಿಡೀ ಗುಲಾಬಿಗೆ ಹಾಸಿಗೆ ಕೊಡಕುವ ಕೆಲಸ ಬಿಟ್ಟು ಬೇರೆ ಇಲ್ಲ. ಪ್ರತಿದಿನ ಇರುವೆ ಕಚ್ಚಿಸಿಕೊಳ್ಳುವುದಕ್ಕೆ ಅವಳಿಗೇನು ಗ್ರಾಚಾರವಾ? +“ಗಣಪತಿ ಶಾಪ ಇದ್ರೆ ಯರು ಬತ್ ಅಂಬ್ರಲೆ. ನಾನ್ ಇಲ್ಲಿಗ್ ಬಪ್ಪುದ್ ಗಣಪತಿ ದೇವ್ರಿಗೆ ಸಮಾಧಾನ ಇಲ್ಲೆ ಕಾಂತ್” ಅಂತೆಳಿ ಗುಲಾಬಿ ಮನೆಗೆ ಬರುವುದನ್ನೇ ಬಿಟ್ಟಳು. +-ಚಾವಡಿಯಲ್ಲಿ ಕುಳಿತಿದ್ದ ಮೀನಾಕ್ಷತ್ತೆ ಕಣ್ಣು ಹೊರಳಿಸುತ್ತ ಶೂನ್ಯದಲ್ಲಿದ್ದಂತೆ ಕಾಣುತ್ತಿದ್ದಳು…. ಅಥವಾ ಶೂನ್ಯದಲ್ಲಿ ನಮ್ಮನ್ನು ಹುಡುಕುತ್ತಿರಬಹುದೆ? ದೊಡ್ಡಮ್ಮ ಹೇಳುತ್ತಿದ್ದರು…. ಮೀನಾಕ್ಷತ್ತೆಯೆಂದ್ರೆ ಒಬ್ಬರಿಗೆ ಒಂದು ನೋವು ಮಾಡದವಳು. ಮಾತೆಂದರೆ ಇರುವೆಗೂ ನೋವಾಗ. ಅಂಥ ನಯ… ರಾಗ… ಮಿಣ್ಣಗೆ ತಾನಾಯ್ತ್ ತನ್ನ ಕೆಲಸ ಆಯ್ತ್… +ನೆನಪಾದಂತೆ ನಗೆ ಬಂತು. ಎಲಾ ಮೀನಾಕ್ಷತ್ತೇ, ನೀನೆಷ್ಟು ಮಿಣ್ಣಗೆ! ಬಣ್ಣವೇ ತಿಳಿಯದಂತೆ! ಅತ್ತ ಹಾಲೂ ಕೊಟ್ಟು ಇತ್ತ ಇರುವೆಯನ್ನೂ ಬಿಟ್ಟು! +-ಸರಸ ಚಿಕ್ಕಿ ಕೋಣೆ ಬಾಗಿಲು ಚಿಲಕ ಹಾಕಿ ಹತ್ತಿರದ ಜಗಲಿಗೆ ಬಂದು ಬದಿಯ ಕಂಬಕ್ಕೊರಗಿ ಕುಳಿತಳು…. ಈ ಸಾಲು ಕಂಬದಗೆ ನಾವು ಎಷ್ಟು ಸಲ ಕಂಬದಾಟ ಆಡಿದ್ದೆವೋ ಈಗಿನ ಮಕ್ಕಳಿಗೆ ಇಂತಹ ಆಟವೆಲ್ಲ ತಾಗುತ್ತದೆಯೇ? ಕಳೆದದ್ದು ಕಳೆಯಿತು… ಇನ್ನು ಬರುವುದಿಲ್ಲ. ಎನ್ನುತ್ತಾ ಒಂದು ಕಾಲು ಜಗಲಿ ಮೇಲಿಟ್ಟು ನೆನವರಿಕೆಯಲ್ಲಿ ಕುಳಿತಳು. +“ಇಂಥ ಕಂಬಕ್ಕೆಲ್ಲ ಗೇಣಿಕೊಡದ ಒಕ್ಕಲನ್ನು ಕಟ್ಟಿಹಾಕಿ ಹೊಡೀತಿದ್ದೋ ಅಂಬ್ರಲೇ….” ಅವಳ ಮೌನವನ್ನು ಮುರಿಯಲು ಕೇಳಿದೆ ನಾನು. +“ಅದೆಲ್ಲ ನಾನು ಕಂಡದ್ದಿಲ್ಲೆ. ಅರೆ ಈ ಕಂಬಕ್ಕೆ ಆರತಿ ತಟ್ಟೆ ನೆಪ ಮಾಡ್ಕಂಡ್ ಕಾಶಿಯನ್ನು ಕಟ್ಟಿಹಾಕಿ ಹೊಡ್ದದ್ ಗೊತ್. ನಾನೇ ಸ್ವತಃ ಕಂಡಿದ್ನಲೆ. ಅದೊಂದು ಮಾರಾಶಿಮಾತು…ಅಲ್ಲ. ‘ಗಂಡ ಪೋಂಕಲೆ’ ಅಂತೆಳಿ ರಾಗ ಎಳೆದ್ಲ್ ಮೀನಾಕ್ಷತ್ತೆ ಈಗ! ಪೋಂಕಿನೊಟ್ಟಿಗೆ ಮದುವೆ ಮಾಡ್ಸು ಸಮಿಗೆ ‘ಆಯ್ಲಿ ಒಳ್ಳೇ ಸಂಬಂಧ’ ಅಂದವ್ಳೂ ಅವ್ಳೇ. ಆರತಿ ಎತ್ತಿದವ್ಳೂ ಅವ್ಳೇ. ಆರತಿಗೇನೋ ಬುದ್ಧಿ ಇಲ್ಲೆ ಹೌದು. ಯಾರಿಗೆ ಬೇಕಾರೂ ಎತ್ತತ್-ಮಂಗಳಾರತಿಯನ್ನೂ ಮಾಡತ್. ಮಾಡುವವರಿಗೆ ಬುದ್ಧಿ ಬೇಕಾ ಬೇಡ್ದ….?” ಮಾತಿಗೊಂದು ನಗೆಯ ಬುರುಗು ಕೊಟ್ಟು ನಿಧಾನವಾಗಿ ಕಂಬ ಸವರಿದಳು ಸರಸ ಚಿಕ್ಕಿ. ಮುಂದುವರಿಸಿದಳು. +-ಗೊತ್ತುಂಟಲ್ಲ, ಆರತಿ ತಟ್ಟೆ ಬೇಕು ಅಂತ ಬಂದವರಿಗೆ ಇಲ್ಲ ಅನ್ನಲಾರದವಳು ಮೀನಾಕ್ಷತ್ತೆ. ಮದುಮಕ್ಕಳು ಅಂದರೆ ಏನು? ಸಾಕ್ಷಾತ್ ಲಕ್ಷ್ಮೀನಾರಾಯಣ ಸ್ವರೂಪರು. ವಟು ಅಂದರೆ ಭಗವಂತನ ಬಾಲಸ್ವರೂಪ ಬ್ರಹ್ಮಚಾರಿ. ಮತ್ತೆ ಬಸುರಿಗಾದರೆ….ಮತ್ತೂ ಒಂದು ಕೈ ಹೆಚ್ಚು ವಿಶೇಷ. ಈ ಯಾರಿಗೆ ಆರತಿ ಎತ್ತಿದರೂ ತನ್ನ ಮನೆ ಲಕ್ಷಣ ಉಕ್ಕಿ ಬರುತ್ತದೆ ಎಂದೇ ತಿಳಿದಾಕೆ. ಕೇಳಲು ಬಂದವರನ್ನು ಕೆಲ ಕಾಲ ಕೂಡಿಸಿಯಾಳು. ಕುಡಿಯಲು ಕೊಟ್ಟು ಮದುವೆಯೋ ಮುಂಜಿಯೋ ಸೀಮಂತವೋ ವಿಚಾರಿಸಿಯಾಳು. +“ಮಧ್ಯೆ ಆಯ್ಲಿಯಪ್ಪಾ ಆಯ್ಲಿ. (ಆಗಲಪ್ಪಾ ಆಗಲಿ) ಅಂಬ್‌ದು ಇದೇ ಅತ್ತೆಯಲ್ಲವೇ?” +“ಹ್ಞೂಂ-ಇದೇ ಅತ್ತೆ. ಅಡ್ಡಿಲ್ಲೆ, ನಿನ್ನ ದೊಡ್ಡಮ್ಮ ಸುಮಾರು ಹೇಳಿಟ್ಟಿದ್ಲ್! ಅದ್ಯೆಂಥಾ ‘ಆಯ್ಲಿಯಪ್ಪಾ ಆಯ್ಲಿ! ಎಂಬ ಭರವೋ ಮಾರಾಯ್ತಿ…” +“ಹುಡುಗ ಕಪ್ಪು, ಕಣ್ಣು ವಾರೆ… ಹುಟ್ಟುವಳಿ ಸಾಕೂ ಸಾಲದು. ಆದರೇನು? ಹೆಣ್ಣೂಕೊಡುವುದೆಂದೇ ತೀರ್ಮಾನಿಸಿದೆ-ನಾಳೆ ಒಳ್ಳೆಯದಾಗಲಿಕ್ಕಿಲ್ಲ ಅಂತ ಏನು ಗ್ಯಾರಂಟಿ?” ಎಂದರೂ “ಆಯ್ಲಿಯಪ್ಪಾ ಆಯ್ಲಿ. ರೂಪ ಏನು ಅನ್ನಹಾಕತ್ತಾ?” ಎಂದಾಳು. “ಹುಡುಗಿ ಮತ್ತೆ ಹುಡುಗಿಯ ತಾಯಿ ಕೊಂಯ ಕೊಂಯ ಅಂದರು. ನಾನು ಬಾಯಿ ಬಡಿದು ಕೂಡಿಸಿದೆ”-ಎಂದರೂ ‘ಆಯ್ಲಿಯಪ್ಪಾ ಆಯ್ಲಿ ಹೆಂಗಸ್ರ ಹತ್ರ ಕೇಂಡ್ ಕೆಲಸ ಆಯ್ತ್ ಅಂತೆಳಿ ಇತ್ತಾ? ಅವಕ್ಕೆಯಂತ ತೆಳಿತ್? ಮದ್ವೆಯಾದಂವ ಹೆಂಡ್ತೀನ ಚಂದವಾಯಿ ಕಂಡ ಅಂದ್ರೆ ಅವನೇ ಚಂದಗೋಪ…’ ಎಂದಾಳು. ಈ ಮಾತು ಹೆಕ್ಕಿಕೊಂಡು ತಂದೆಯಾದಂವ ಯಜಮಾನಿಕೆಯ ಬೀಗಿನಿಂದ ಮನೆಗೆ ಮರಳಿ ಆರತಿ ತಟ್ಟೆಯನ್ನು ಒಳಗಿಡುತ್ತ “ನೀವೆಲ್ಲ ಯಂತಕ್ಕಾಪ್ರಿ? ಆ ಮೀನಾಶ್ಚತ್ತೆ ಹೇಳುವ ಮಾತ್ ಕೇಣಿ. ಲೋಕ ಅನುಭವ ಇದ್ದವಳು. ಅವಳ ಕಾಲು ಕೆಳ್ಗೆ ನುಸುಳಿ ಬಂದ್ರೆ ನಿಮ್‌ಗೆಲ್ಲ ಬುದ್ಧಿಬಕ್” ಎಂದು ಹೇಳದೆ ಬಿಡ. +ಹೇಳುತ್ತಿದ್ದಂತೆ ಸರಸ ಚಿಕ್ಕಿಯ ದನಿ ಕಾದಿತು. ಕಂಬಕ್ಕೊರಗಿ ಕುಳಿತೇ ಬಿಟ್ಟಳು. “ಸರಸ ಚಿಕ್ಕೀ, ಯಂತದ?” “ಯಂತ ಇಲ್ಲೆ…ಸುಮ್ನೆ ಏನೋ ನೆನಪಾದ ಹಂಗೆ ಆಯ್ತ್…” -ಸರಸ ಚಿಕ್ಕಿಯ ಕಣ್ಣು ಮನೆಯ ಮಾಡು ಮೀರಿ ಕಾಣುವ ದೂರದ ಗೋಳಿಮರದ ತಲೆ ಕಾಣುತ್ತಿತು. ಮೆಲ್ಲ ನುಡಿದಳು. +-ಅಲ್ಲ, ಹೆಂಡತಿಯನ್ನು ಚಂದವಾಗಿ ಕಮಡವ ಚಂದಗೋಪ ಅಂದಳು ಮೀನಾಕ್ಷತ್ತೆ. ಚಂದವಾಗಿ ಕಾಣುವುದೆಂದರೆ? ಒಂದು ದೊಡ್ಡ ಪ್ರಶ್ನೆಯಲ್ಲವೇ? +-ಈ ಸರಸ ಚಿಕ್ಕಿ ಕನ್ನಡ ಪಂಡಿತರ ಮಗಳು. ಒಮ್ಮೊಮ್ಮೆ ಸ್ಪಷ್ಟ ಕನ್ನಡದಲ್ಲಿ ದೊಡ್ಡ ಪ್ರಶ್ನೆಯನ್ನೇ ಹರಡಿ ವೇದಾಂತಿಯಂತೆ ಕುಳಿತುಬಿಡವವಳು. +“ಈ ಪ್ರಶ್ನೆ ಯಾಕೆ ಬಂತು ಈಗ?” +“ಯಂತಕ್ಕಿಲ್ಲೆ….ನಂಗೇನು ಕಡಿಮೆ ಆಯಿತ್ ಅಂತೆಳಿ ತಿಳ್ಕಂಬೇಡ. ಮಾತಿನಂಶ ಅಂದೆ…ನನ್ ವಿಷ್ಯಕ್ಕಲ್ಲ…” – ಥಟ್ಟನೆ ಸರಸ ಚಿಕ್ಕಿ ನುಡಿದು ಗುಟ್ಟು ನುಂಗಿದವಳಂತೆ ಉಗುಳು ನುಂಗಿದಳು. ಕಡಿಮೆ ಇಲ್ಲ ಎನ್ನಲು ಜಗತ್ತಿನಲ್ಲಿ ಎಲ್ಲರ ಮನಸ್ಸು ಎಷ್ಟು ತವಕಿಸುತ್ತಿರುತ್ತದೆ!….ದೊಡ್ಡಮ್ಮ ಹೇಳಿದ್ದರು ಒಮ್ಮೆ. ಈ ಸರಸ ಚಿಕ್ಕಿ ಮದುವೆ ನಿಶ್ಚಯ ಆಗಿದ್ದೇ ಆಗಿದ್ದು ಪೂರ್ತಿ ಇಳಿದುಹೋದಳಂತೆ. ಮತ್ತೆ ಅವಳಿಗೆ ಮುಂಚಿನ ಮೈ ಬರಲೇ ಇಲ್ಲವಂತೆ… +ಸರಸಿ ಚಿಕ್ಕಿ ಅತ್ತ ತಿರುಗಿ ಕಣ್ಣಿಗೆ ಕಸ ಬಿದ್ದಂತೆ ಒರೆಸಿಕೊಂಡು ಇತ್ತ ತಿರುಗಿದಳು. +“ಮೀನಾಶ್ಚತ್ತೆ ಮಟ್ಟಿಗೆ ಚಂದವಾಗಿ ಕಾಂಬುದೆಂದರೆ ಯಂತಂತ ಮಾಡಿಯೆ? ಉಂಡಿಯ? ತಿಂದಿಯ? ಅಂತೆಳಿ ಗಂಡ ಕೇಂತಿದ್ರೆ ಸೈ. ಅವ ಚಂದಗೋಪ. ರಾತ್ರಿ ಗುಲಾಬಿ ಬಂದ್ ಹೆಬ್ಬಾಗಿಲು ಕೋಣೆಯಾಗೆ ಪ್ರತಿಷ್ಠಾಪನೆ ಆಪ್ಸಮಿಗೆ ಮೀನಾಶ್ಚತ್ತೆ ಕೆಲ್ಸ ಮುಗ್ಸಿ ಒಲೆಗೆ ಸೆಗಣಿ ಬಳಿಯೂ ಹೊತ್ತು. ಅಪ್ಪಣ್ಣಯ್ಯ ಒಳಗೆ ಬಂದ್ ‘ಇದ್ಕೆಲ್ಲ ಜನ ಇಟ್ಕಂಬುಕಾಗ್ದಾ? ಇನ್ನೂ ಇನ್ನೂ ನೀನೇ ಯಾಕೆ ಮಾಡುದು?’ ಅಂಬರು. ‘ಈಗ ಬೆನ್ ನೋವ್ ಹ್ಯಾಂಗಿತ್? ಅಡ್ಡಿಲ್ಯ? ಬೇಕಾರೆ ನಾಳೆ ಡಾಕ್ಟ್ರನ್ ಕರ್‍ಸುವ’ ಅಂಬರು. ಆಗ ಮೀನಾಶ್ಚತ್ತೆಯ ಮುಖ ಕಾಣ್ಕ್. ಅಗಲ ಆರತಿ ತಟ್ಟೆಯೇ…ಅದು ಯಂಥಾ ಖುಶಿಯೋ. ಮುಚ್ಚಿಟ್ಟಿದ್ ಒಂದ್ ಗಿಂಡಿ ಹಾಲು ಕೊಟ್ ‘ಕುಡ್ಕಂಡೇ ಹೋಪಿರಲೆ. ಅವ್ಳು ಬಂದ್ ಎಷ್ಟ್ ಹೋತ್ತಾಯ್ತ್!’ ಅಂಬಳು. ‘ಅವ್ಳಿಗೂ ಕಳ್ಸಿ ಕೊಟ್ಟೆ….’ ಅಂತೆಳಿ ನಾಚಿ ನಿಂತ್ಕಬ್ಳ್. ಅಪ್ಪಣ್ಣಯ್ಯ ಬೊರ್‍ರ ಹಾಲು ಕುಡ್ದ್ ಅಲ್ಲಿಂದ ಹೊರಡ್ತಿದ್ರ್‍. (ಅಲ್ಲಿದ್ ಇರುವೆ ಕತೆ ಅಲ್ಯಾದ) ಒಟ್ಟಾರೆ ಮೀನಾಶ್ಚತ್ತೆ ಮಟ್ಟಿಗ್ ಅವ್ನೇ ಚಂದಗೋಪ…ಸುಳ್ಳ?” +ಸರಸ ಚಿಕ್ಕೀ ಎಲ್ಲಿಂದ ಎಲ್ಲಿಗೆ ಹೋಗುತ್ತೀ! +ಪ್ರಕಾಶ ಮಾಣಿ ದೂರದಿಂದ ಕೋಲು ಬೀಸುವುದು ಕಾಣಿಸುತ್ತಿತ್ತು ‘ಅಲ್ಲ ಮಾರಾಯ್ತ್ಯ, ಆ ಸೊಸಿ ಇನ್ನೂ ಕಾಪಿ ಮಾಡಿಯೇ ಮುಗಿಸ್‌ಲಿಲ್ಯ? ಯಂಥಾ ಸುಟ್ ಕೆಲಸ ಹೇಳ್ ಹಂಗರೆ…’ ನಕ್ಕಳು ಸರಸ ಚಿಕ್ಕಿ. ಕಣ್ಣೊರಸಿಕೊಂಡು. +“ಯಂತದೋ. ಅವ್ಳ್ ಸುಮ್ನೆ ನಿಧಾನ ಅಂತೆಳಿ ಕಾಣತ್ತಾ ನಿಂಗೆ?” ನಾನಂದೆ. +“ಅದೂ ಸಮನೇ ಅನ್. ಅವ್ಳ್ ಹೊಟ್ಯೊಳ್ಗೆ ಯಾವ ಕೆಂಡ ಇತ್ತೋ. ಕೈ ಹಾಕಿ ಕಾಂಬುಕಾತ್ತಾ ನಮ್ಗೆ?… ನಾ ಯಂತ ಅಂತಿದ್ದೆ? ಈ ಕಂಬಕ್ಕೆ ಕಾಶಿನ್ನ ಕಟ್ಟಿ ಹಾಕಿ ಹೊಡ್‌ದ್ರ್‍ ಅಂತೆಳಿ ಅಲ್ದ? ಹ್ಞಾಂ…ಕೇಣ್. ಕಾಶಿ ಗಂಡ ಪೋಂಕು ಮಾರಾಯ್ತಿ. ಪೋಂಕಂದ್ರೆ ಬರೀ ಪಾಪದ್. ಇಲ್ಲಿ ಕೂಕೋ ಅಂದ್ರೆ ಅಲ್ಲೇ. ಮತ್ತೆ ಏಳ್ ಅಂಬಲ್ಲಿವರೆಗೂ. ಹಾಂಗಂಥ ಹ್ಯೆಂಡ್ತೆ ಮಾತ್ರ ಹತ್ರವೇ ಇರ್ಕ್! ಎಲ್ಲಿ ಹೋಪ್ದಾದ್ರೂ ಕಾಶಿ ಹಿಂದೇ ಬಪ್ಪ. ಅವ್ಳ್ ಹೇಳಿದ್ ಕೆಲ್ಸ ಮಾಡ್ವ. ಜಯದ್ರಥನಂಥವ. ನಾಲ್ಕು ಸೌದೆ ಜಪ್ಕಂಡ್ ಬಾ ಅಂದ್ರೂ ಭಾರೀ ಖುಶಿ. ಒಟ್ಟಾರೆ ಜಪ್ಪುದಂದ್ರೆ ಖುಶಿ ಕಾಣ್…ಒಂದಿನ ಏನಾಯ್ತಂತೆ?…”ಸರಸ ಚಿಕ್ಕಿ ಸರ್ತ ಕುಳಿತುಕೊಂಡು ಮುಂದುವರಿಸಿದಳು. +ಸೂರಪ್ಪ ಗೊತ್ತಲ್ಲ ನಿಂಗೆ? ನಾಚಿಕೆ ಮುದ್ದೆ. ಅಂಥಾ ಗಂಡಸನ್ನ ಯಾರೂ ಕಂಡಿರಲಿಕ್ಕಿಲ್ಲ. ಹೆಣ್ಣು ಮಕ್ಕಳು ಎದುರು ಬಂದರೆಂದರೆ ತಲೆ ಅಡಿ ಹಾಕಿಕೊಂಡು ಹೋಪಂಥವ. ಅವನಿಗೊಂದು ಹೆಂಡತಿ ಸಿಕ್ಕಿದ್ದೋ! ಹೆಸರು ಗಿರಿಜಾಮಣಿ. ತಲೆ ತಗ್ಗಿಸಿ ನಡೆಯುವವರನ್ನ ಹೆಚ್ಚಿಗೆ ನಂಬಲಿಕ್ಕಾಗುವುದಿಲ್ಲ-ಎಂಬ ಒಂದೇ ಮಂತ್ರ ಅವಳದ್ದು. ಗಂಡನ್ನ ಕಾಯುವುದೆಂದರೆ! ಅಂವ ಪಾಪ ಎಳೆದು ಸೂಳೆಮನೆಗೆ ತಂದು ಬಿಟ್ಟರೂ ಹೆದರಿ ಓಡಿ ಬಪ್ಪಂಥ ಪುಕ್ಕ… +(ಪುಕ್ಕ ಅಂದೇಕೆ ಹೇಳಿದಳು ಈ ಸರಸ ಚಿಕ್ಕಿ? ಹಾಗಾದರೆ ಓಡಿ ಬಾರದವ ಅಲ್ಲೇ ನಿಲ್ಲುವವ ಧೈರ್ಯಸ್ಥ ಅಂತವೇ? ಚಂದಗೋಪ ಯಾರು? ಪುಕ್ಕ ಯಾರು? ಈ ಸರಸ ಚಿಕ್ಕಿ ಅನೇಕ ಸಲ ಅರ್ಥವೇ ಆಗುವುದಿಲ್ಲ….) +ಈ ಸೂರಪ್ಪನ ಮಗಳ ಮದುವೆ. ಆರತಿ ತಟ್ಟೆ ಒಯ್ದ. ವಾಪಸು ತಂದು ಕೊಡುವಾಗ ಅದರಲ್ಲಿನ ಸುಳಿಯುಂಡೆ ಕಣ್ಣು ಮಾಯಕ! ಅದಾದರೂ ಅವ ತಂದು ಕೊಟ್ಟ ಕೂಡಲೆ ತಿಳಿಯಿತೇ? ಇಲ್ಲ. ಯಾವಾಗಲೂ ಅಷ್ಟೆ. ಮೀನಾಕ್ಷತ್ತೆ ತಕ್ಷಣ ನೋಡುವವರಲ್ಲವಲ್ಲ. ಎಷ್ಟೋ ದಿನದ ಮೇಲೆ ಹಳೆಯ ಮರದ ಕಪಾಟಿನಿಂದ ಗಂಟು ಹೊರತೆಗೆದು ಒರೆಸಿ ಒಳಗಿಡುವ ಅಂತ ಬಿಚ್ಚಿದಳು. ಅದರಲ್ಲಿ ಸುಳಿಯುಂಡೆಗಳೇ ಇರಲಿಲ್ಲ. ಹ್ಞಾಂ ಎಂದು ಎದೆ ನಿಂತುಹೋದ ಹಾಗೆ ಕ್ಷಣಕಾಲ ಕುಳಿತೇ ಬಿಟ್ಟಳು. ಸೂರಪ್ಪನಿಗಿಂತ ಹಿಂದೆ ಶಿವರಾಮನ ಮನೆಗಲ್ಲವೇ ಕೊಟ್ಟದ್ದು? ಅವನ ಮನೆಯಿಂದ ಬಂದ ಮೇಲೆ ವರೆಸಿ ಇಡುವಾಗ ಎಲ್ಲ ಸರಿಯಾಗಿಯೇ ಇತ್ತಲ್ಲವೇ? ಕಾಶಿ ಇದ್ದಳು. ಹೌದು ವರೆಸಿ ಇಟ್ಟದ್ದು ಅವಳೇ…ಹಾಗಾದರೆ ಈಗ ಯಾರು ಕದ್ದರು? +ಸುದ್ದಿ ಕೇಳಿ ಅಪ್ಪಣ್ಣಯ್ಯ ಹೊಟ್ಟೆ ಕುಲುಕಿ ಜರ್ಬಿನಿಂದ ಗಟ್ಟಿಯಾಗಿ ಒಂದು ಹೂಂಗುಟ್ಟಿದರು. ಒಂದು ದಿನ ಹೀಗಾಗುತ್ತದೆಂತ ತನಗೆ ತಿಳಿದಿದೆ ಅಂಬ ಹಾಗೆ. ಒಕ್ಕಲನ್ನು ಕರೆದು “ಕೂಡಲೇ ಸೂರಪ್ಪ ಬರಲಿ” ಎಂದರು. +ಸೂರಪ್ಪ ಬಂದ. ಸುದ್ದಿ ತಿಳಿದು ಕಂಗಾಲಾಗಿ ಒಂದು ಕ್ಷಣ ಬಾಯಿಕಳೆದು ನಿಂತೇಬಿಟ್ಟ. ಒಳಗಿನಿಂದ ತನ್ನ ಕೈಗೆ ಬಂದ ಗಂಟನ್ನ ಹಾಗೆಯೇ ತಂದು ಕೊಟ್ಟೆನಲ್ಲ. ಬಿಚ್ಚಿನೋಡಲಿಲ್ಲ ನಿಜ. ಆದರೆ ಅದು ಮತ್ತೆ ಯಾರ ಕೈ ದಾಟಲೂ ಇಲ್ಲ. ಹೆಂಡತಿ ಕೈಯಿಂದ ಬೀಗದ ಕಪಾಟಿಗೆ, ಬೀಗದ ಕಪಾಟಿನಿಂದ ಮಂಟಪಕ್ಕೆ, ಮಂಟಪದಿಂದ ದೇವರ ಕೋಣೆಗೆ, ಮತ್ತೆ ಸೀದಾ ಹೆಂಡತಿಯ ಕೈಗೆ-ತನಗೆ. ಹಾಗಾದರೆ ಕದ್ದದ್ದು ಯಾರು, ಭೂತವೇ?-ಎಂದು ತಾನೇ ಆಕ್ಷೇಪದ ಪ್ರಶ್ನೆ ಕೇಳಿಕೊಂಡ. +ಸೂರಪ್ಪನನ್ನು ಕೇಳಿದ್ದೆಂದರೆ ಗಿರಿಜಾಮಣಿ ಬಾಯಿಗೆ ಕೋಲು ಹಾಕಿದಂತೆಯೇ ಅಲ್ಲವೇ? ಅವ ಹೋದ ಸ್ವಲ್ಪ ಹೊತ್ತಿಗೆಲ್ಲ ಅವಳು ಓಡೋಡಿ ಬಂದಳು. ಸುದ್ದಿ ತಿಳಿದು ತನಗೆ ಇಂಥದ್ದಾಯಿತೆಂತ ತಿಳಿಯಲಿಲ್ಲ ಎಂದು ಹಲುಬುತ್ತಲೇ ಮೆಟ್ಟಲು ಏರಿದಳು. ತನ್ನ ಮನೆಯಲ್ಲಿಯೇ ಕಳವು ಆಗಬೇಕೆ? ಏಳೂವರೆ ಶನಿ ಬಿಡುವ ಕಾಲವಂತೆ- ತೋರಿಸಿಯೇ ಬಿಟ್ಟಿತು ಕಾಣಿ ಎಂಬೆಲ್ಲ ಮಾತಿನ ಮೇಲೆ ಜವಾಬ್ದಾರಿಯನ್ನು ಜಾರಿ ಬಿಡಲು ಪ್ರಯತ್ನಿಸಿದಳು. +ಮೀನಾಕ್ಷತ್ತೆಗೂ ಅವಳ ಅವಸ್ಥೆ ಕಂಡು ಬೇಸರವೇ. ಆದರೇನು? ಕಳೆದು ಹೋದವು ಬೆಳ್ಳಿಯವು. ಆದಿಕಾಲದವು. “ಇರಲಿ ಬಿಡು” ಎನ್ನುವಂತಿಲ್ಲ. +ಮದುವೆಗೆ ಹೊರಡುವ ಮೊದಲು ಮನೆದೇವರಿಗೆ ಕಾಯಿ ಇಡಲು ನೆನಪು ಹೋಯಿತು. ಅದಕ್ಕೇ ಹೀಗಾಗಿರಬಹುದೇ?-ಎಂಬಿತ್ಯಾದಿ ತನಗೇ ಕೇಳಿಕೊಳ್ಳುತ್ತಾ ಕುಳಿತಲ್ಲೇ ಪುಕು ಪುಕು ಎಂದು ವಿಲಿಗುಟ್ಟುತ್ತಾ ಕುಳಿತಿದ್ದ ಗಿರಿಜಾಮಣಿಗೆ ಕಂಡದ್ದು ಹುಣಿಸೆಕೋಡು ಒಡೆಯುತ್ತ ಒಂದು ಮೂಲೆಯಲ್ಲಿ ಕುಳಿತಿದ್ದ ಕಾಶಿ! +ಕೈಯೂರಿ ಕುಳಿತೇಬಿಟ್ಟಳು ಗಿರಿಜಾಮಣಿ. ತನ್ನ ಮಗ ರವಿಯ ಉಪನಯನದಲ್ಲಿ ಇದೇ ಕಾಶಿ ಮಾಡಿದ್ದು ಮರೆಯುವ ಮಾತೇ…? ಎಂದು ವರ್ಣಿಸಲು ಶಬ್ದ ಹುಡುಕುತ್ತ. ಆಗಿನ್ನೂ ತನ್ನ ಕೊನೆಯ ಮಗಳು ರತ್ನ ಮೂರು ವರ್ಷದ್ದು. ವರ್ಷ ಮೂರಾದರೂ ಮಾತು ಬಂದದ್ದು ತಡ. ಚಂದ ಕಾಣಲಿ ಎಂದು ಚಕ್ರದ ಸರ ಹಾಕಿಬಿಟ್ಟಿದ್ದೆ, ದೃಷ್ಟಿ ತಾಗುವ ಹಾಗೆ ಚಪ್ಪರದಲ್ಲಿ ಓಡಾಡುತ್ತಿತ್ತು ಹೆಣ್ಣು. ಒಂದು ಗಂಟೆಯೂ ಆಗಿರಲಿಕ್ಕಿಲ್ಲ, ಮರಕುತ್ತ ಬಂತು. ಎಂತ ಹೆಣೆ? ಎಂದರೆ ಕುತ್ತಿಗೆ ತೋರಿಸುತ್ತದೆ. ಕೈ ತಿರುಗಿಸಿ ತಾರಮ್ಮಯ್ಯ ಮಾಡುತ್ತದೆ. ತನಗೆ ಧಾತು ತಪ್ಪುವುದೊಂದು ಬಾಕಿ. +ಎದ್ದು ಹುಡುಕುವ ಎಂದರೆ ಮಂಟಪದಲ್ಲಿ ಬ್ರಹ್ಮೋಪದೇಶ ಮುಹೂರ್ತ. ವಟುವನ್ನು ಅಪ್ಪನ ತೊಡೆಯ ಮೇಲೆ ಕೂಡಿಸಿ ಮುಸುಕು ಹಾಕಿಬಿಟ್ಟರು! ಆ ಮುಸುಕಿನೊಳಗೆ ನನಗೆ ಉಸಿರು ಕಟ್ಟಿದ್ದಲ್ಲವೆ? ಅಂತೂ ಎಲ್ಲ ಮುಗಿದು ಬಂದು ನೋಡಿದರೆ ನೋಡುವುದೆಲ್ಲಿ? ಕೇಳುವುದು ಯಾರನ್ನು? ಎಲ್ಲರೂ ಅಪ್ಪಂಥವರೇ. +ಸಾಯಂಕಾಲ ಹೋದವರೆಲ್ಲ ಹೋಗಿ ಉಳಿದವರು ಪಟ್ಟಾಂಗ ಹೊಡಿಯುತ್ತಾ ಕುಳಿತಿದ್ದಾಗ ತಾನು ಕೇಳಿಯೇಬಿಟ್ಟೆ-ಹಾಗಾದರೆ ಆ ಹೆಣ್ಣಿನ ಕುತ್ತಿಗೆಗೆ ಕೈ ಹಾಕಿ ಸರ ಕಿತ್ತವರು ಯಾರು? ಯಾರೇ ಆಗಲಿ, ಅವರು ಊರಲಿಲ್ಲದ ಕಾಯಿಲೆ ಹಿಡಿದು ಕರಗಿ ಹೋಯಿಯಾರು. ಹೊಟ್ಟೆಬಾಯಿ ಕಟ್ಟಿ ಮಾಡಿಸಿದ ಸರ ಅದು. ಪುಗಸಟ್ಟೆ ಅಲ್ಲ. ಗಿರಿಜಾಮಣಿ ಸೆರಗಿನಲ್ಲಿ ಮುಖಮುಚ್ಚಿಕೊಂಡಳು. +“ನಾನು ಹೇಳಿದ್ ಇಷ್ಟೇ. ಒಂದಕ್ಷರ ಹೆಚ್ಚಿಗೆ ಹೇಳ್ಲಿಲ್ಲೆ ಮೀನಾಶ್ಚಮ್ಮ. ಇಂಥವರಿಗೇ ಅಂತೆಳಿ ಬೊಟ್ಟುಮಾಡಿ ಹೇಳ್ಲೂ ಇಲ್ಲೆ. ಅದಕ್ಕೆ ಈ ಶೂರ್ಪನಖಿ ಕಾಶಿ, ಕವುಂಚಿ ಮಲಗಿ ತಲೆ ಎತ್ತಿ ಎಲ್ಲ ಸಂಗ್ತಿ ಕೇಂಡವಳು, ಧಡಕ್ಕನೆ ಕೂತ್ಕಂಡ್ ‘ಏನೇ ಹೇಳಿ ನೀವು ಮಗುವಿಗ್ ಅಂಥಾ ದೊಡ್ ನಗ ಹಾಕಿಬಿಟ್ಟಿದ್ದೇ ತಪ್’-ಅಂದ್ಲ್ ಯಾಕೆ? ಯಾಕೆ ಬೇಕಿತ್ತ್ ಇವ್ಳಿಗೆ? ಇದ್ದವರ ಮನಿಕೂಳು ಹೆಕ್ಕಿ ತಿಂಬ ಪ್ರಾಣಿಗೆ?-ಮಾತಿಗೊಂದ್ ಮಾತಯ್ತ್. ಒಂದಾ, ಎರಡಾ? ಅವ್ಳೂ ಬಿಡಲಿಲ್ಲೆ. ನಾನೂ ಹೇಳಿಯೇಬಿಟ್ಟೆ. “ನೀನೇ ಕಳ್ಳೆ. ಮತ್ಯಾರೂ ಅಲ್ಲ-” ಅದಕ್ಕವ್ಳು ಹೇಳಿದ್ ಮಾತ್-ಅಯ್ಯೋ ಮೀನಾಶ್ಚಮ್ಮ-ಈಗ ನೆನಸಿಕಂಡ್ರೂ ಕೆರಿ ಬಾಮಿ ಕಾಣ್ಕ್ ನಾನ್-“ಬಿಕ್ಕಿದಳು. +“ಯೇ ಅಳೇ. ಅದ್ನೆಲ್ಲ ಈಗ ಯಾಕೆ ನೆನ್ಸ್‌ಕಂತೆ? ಹಾಂಗ್ ನೆನ್ಸುಕೆ ಹೋದ್ರೆ ನಾನೀಗ ಆ ಗುಲಾಬಿ, ಸೂರು, ನಾಗು ಎಲ್ಲರನ್ನೂ ನೆನೀತ ಮರ್‍ಕ್‌ತ ಕೂತ್ಕಂಕ್. ಅದೆಲ್ಲ ಒಂದು ಕಾಲ, ಒಂದು ಚಟ, ಕಡೀಗೆ ಗಂಡಸ್ರ್‍ ಅದ್ನೆಲ್ಲ ಬಿಡ್ತೊ-ಅದನ್ ದೊಡ್ದ್ ಮಾಡುಕಾಗ” ಎಂದು ಧೈರ್ಯ ಹೇಳಿದರು ಮೀನಾಕ್ಷತ್ತೆ. ಆದರೂ ಗಿರಿಜಾಮಣಿಯ ಕಣ್ಣುಗಳಿಂದ ಹರಿಯುವ ನೀರು ನಿಲ್ಲುವುದಿಲ್ಲ. +ಹೌದು, ಮರೆತುಬಿಡು ಅನ್ನುತ್ತೀರಿ. ಆದರೆ ಆಗ ಹೋದ ನಗ ಮರಳಿ ಬಂತೇ? ಬರಲಿಲ್ಲ. ಹೇಳಿ ನೀವೇ. ನಮ್ಮದು ಅನ್ನುವ ವಸ್ತು ಕಳೆದುಹೋದ ಮೇಲೆ ಮತ್ತೆ ಸಿಕ್ಕುವುದೆಂದು ಉಂಟೇ?-ಇತ್ಯಾದಿ ಎರಡು ಬದಿಯ ಮಾತಾಡಿ ದುಃಖದ ಕಡಲಾದಳು. +-ಸುಳಿಯುಂಡೆ ಕದ್ದದ್ದು ಮತ್ತೆ ಯಾರಲ್ಲ ಕಾಶಿಯೆ. ನಾ ಅವಳಿಗೆ ಮದುವೆಗೆ ಹೇಳಿರಲಿಲ್ಲ, ಆದರೂ ಬಂದಳು ಹೇಗೆ? ನನ್ನ ಗಂಡ ಹೇಳಿರಬಹುದೇ?-ಹಾಗೆ ಹೇಳದೆ ಅವಳು ಬರುವಳೇ? ಛಿ! ಮದುವೆಗೆ ಬಂದಳು-ಸುಳಿಯುಂಡೆ ಕದ್ದಳು-ನಾನು ಒಬ್ಬಳು ಸತ್ಯಂಭಟ್ಟೆ. ಎಲ್ಲ ಕವುಂಚಿ ಹೋದ ಮೇಲೆಯೇ ಗೊತ್ತಾಪವಳು-ಹಾಗಾದರೆ ನಾನು ಹೇಳದಿದ್ದರೂ ಖುಶಿ ಬಂದವರು ನಮ್ಮ ಮನೆಗೆ ಬರಬಹುದು ಅಂತಾಯಿತಲ್ಲ…. +-ಹೀಗೆ ಆಕೆ ನುಡಿಯುತ್ತಿದ್ದಂತೆಯೇ ಗಂಡನ ಜೊತೆಗೂಡಿ ತಗ್ಗಿಸಿದ ತಲೆ ಎತ್ತದೆ ಹುಣಿಸೆಕೋಡು ಗುದ್ದಿ ಹಣ್ಣು ತೆಗೆಯುತ್ತಿದ್ದ ಕಾಶಿ ಸಟಕ್ಕನೇ ಎದ್ದು ಬಂದಳು. ಹೊಡೆಯಲು ಬಂದಂತೆ. ಸುಡು ಜ್ವಾಲೆಯಂತೆ. +“ಹೌದ್, ನೀ ಹೇಳಿದ್ ಸಮನೇ ಗಿರಿಜಾಮಣಿ. ನಿನ್ ಗಂಡ ನನ್ನ ಮಿಂಡ ಕಾಣ್. ನಂಗೆ ಆ ಸುಳಿಯುಂಡೆ ಮುಚ್ಚಿ ಕೊಟ್ಟ. ನಾ ತಕಂಡ್ ಬಂದೆ. ಇನ್ ನನ್ನ ಎರಡು ಪೀಳಿಗೆವರೆಗೆ ಚಿಂತೆ ಇಲ್ಲೆ…” – ಎಂದವಳೇ ಚಾಡಿಯಂತೆ ಕೈ ಬೀಸುತ್ತ ಮತ್ತೆ ನಡೆದು ಇತ್ತಕಾಣದೆ ಕೆಲಸ ಸಾಗಿಸುತ್ತಿದ್ದ ಗಂಡನ ಪಕ್ಕ ಹೋಗಿ ಕುಳಿತು ಒಂದು ಕೋಡನ್ನು ಅಪ್ಪಚ್ಚಿಯಾಗುವಂತೆ ಗುದ್ದಿದಳು. +ಸಾಕೇ ? ಚಾಡಿಯೇಟು ಬೇರೆ ಬೇಕೆ? +ಈ ಉತ್ತರವನ್ನೇ ಕಾಯುವಂತಿದ್ದ ಗಿರಿಜಾಮಣಿ ಬೋರಲು ಬಿದ್ದಳು. +ಯಾವ ಜನ್ಮದಲ್ಲಿ ಯಾರನ್ನ ಒಳಗೆ ಹಾಕಿಕೊಂಡಿದ್ದೀಯೋ, ಅದಕ್ಕೇ ಈ ಜನ್ಮದಲ್ಲಿ ನಿಂಗೆ ಪೋಂಕು ಗಂಡ. ಇನ್ನು ಏಳೇಳು ಜನ್ಮಕ್ಕೂ ನಿಂಗೆ ಅವನೇ ಸಿಗಲಿ-ಎನ್ನುತ್ತ ಬಿಕ್ಕತೊಡಗಿದ ಗಿರಿಜಾಮಣಿ ಮಾತಾಡುತ್ತ ಆಡುತ್ತ ಗಂಡ ಪೋಂಕು ಅಂತ ಕಾಶಿ ಸೂರಪ್ಪನ ಹತ್ತಿರ ಬಂದಳೋ, ಇಲ್ಲ ಸೂರಪ್ಪನ ಹತ್ತಿರ ಅವಳು ಬಂದಳೆಂತ ಅವ ಸೋಕಾದನೋ ಎಂದು ಸಸೆಯತೊಡಗಿದಳು. ಆರತಿ ತಟ್ಟೆಗೆ ಕಿಚ್ಚೊಟ್ಟಿತು. ಸುಳಿಯುಂಡೆ ಸಿಕ್ಕದಿದರೆ ಅಷ್ಟೇ ಹೋಯಿತು. ನನ್ನ ಗಂಡನ್ನ ರಿಪೇರಿ ಮಾಡಿಕೊಳ್ಳಲು ಸಾಧ್ಯವಾಗದೇ ಹೋದೆನಲ್ಲ-ಎಂದು ಬಾಯಿ ಬಾಯಿ ಬಡಿದುಕೊಂಡಳು. +ಸುಳಿಯುಂಡೆ ಸಿಕ್ಕದಿದ್ದರೆ ಅಷ್ಟೇ ಹೋಯಿತು ಎಂದರೆ ಎಷ್ಟು ಹೋಯಿತು? ಮೇನಾಕ್ಷತ್ತೆ ಬಿಡವವಳೇ! +ಹಿರಿಯರಿಂದ ಬಂದದ್ದು ನಮ್ಮ ಕಾಲದಲ್ಲಿ ಕಳೆದುಹೋದ ಹಾಗಾಯತ್ತಲ್ಲ ಎಂಬ ವಾಂಛೆಯಿಂದ ಕೂಡಿದ ವೇದನೆಯನ್ನು ತಿರುಗಿಸಿ ತಿರುಗಿಸಿ ನೋವಾಗದಂತೆಯೂ ವಿಷಯ ತಿಳಿಯುವಂತೆಯೂ ಹೇಳುವಾಗ ಗಿರಿಜಾಮಣಿಯ ಹಲುಬುವಿಕೆ ಹೆಚ್ಚುತ್ತಾ ಹೋಗಿ ಕಡಿಮೆಯಾಗಿ ಇಳಿದು ಮುಗಿದು ಹಾಗಾದರೆ ಮುಂದಿನ ತಿಂಗಳೊಳಗೆ ಮಾಲಿಂಗಾಚಾರಿಯ ಹತ್ತಿರ ಹೇಳಿ ಮಾಡಿಸಿಕೊಡುತ್ತೇವೆ: ಮಾಡಿಸಿಕೊಟ್ಟೇ ಶುದ್ಧ – ಎಂದು ಕಡ್ಡಿ ಮುರಿದಂತೆ ಹೇಳಿ ಮೇಲಕ್ಕೆದ್ದಳು. +“ಗಿರಿಜಾಮಣೀ, ಇನ್ ಮನಿಗ್ ಹೋಯಿ ಗಂಡ್‌ನೆದ್ರು ರಾಮಾಯ್ಣ ತೆಗೀ ಬೇಡ. ನಮ್ ಆರತಿ ತಟ್ಟೆ ಕಂಡ್ ಕರುಬಿದವ್ರಿಗೇನ್ ಈ ಊರಗೆ ಕಮ್ಮಿಯಿಲ್ಲೆ. ಹಾಂಗೆ ಕರುಬಿದವ್ರೆ ಸುಳಿಯುಂಡೆ ಕದ್ದ್, ತಟ್ಟೆ ಮುಕ್ ಮಾಡಿಪ್ರ್‍. ಹ್ಯಾಂಗ್ ಹೇಳುದ್ ಅಲ್ಲ ಅಂತೆಳಿ?” – ಎಂದು ಮೀನಾಕ್ಷತ್ತೆ ಕೊನೆಯ ಮಾತು ಹೇಳಿದಾಗ ಇದು ವಿಶಾಲುವಿಗೇ ಇಟ್ಟ ಬತ್ತಿ ಎಂದು ಗಿರಿಜಾಮಣಿಗೆ ತಿಳಿದುಹೋಯಿತು. +ಅಲ್ಲಿಂದ ಹೊರಟವಳು ಅವಳು ಹೋದದ್ದು ತನ್ನ ಮನೆಗಲ್ಲ. ವಿಶಾಲು ಮನೆಗೆ. ಬಂದದ್ದು ಮಾಲಿಂಗಾಚಾರಿಯ ಹತ್ತಿರ ಹೊಸದಾಗಿ ಹೇಳಿ ಮಾಡಿಸಿದ ಸುಳಿಯುಂಡೆಗಳಲ್ಲ. ಬದಲು-ಅಷ್ಟೈಶ್ವರ್ಯದ ಐರಾವತದ ಮೇಲೆ ಕೂತರೂ ಆಸೆ ಪಿನಾರಿತನ ಬಿಡಲಿಲ್ಲ. ನಾನು ಅವರಷ್ಟಿದಿದ್ದರೆ ಕಳೆದುಹೋದದ್ದನನ್ನು ನನ್ನ ಹುರುಕಿಗೆ ಸಮ ಮಾಡುತ್ತಿದ್ದೆ… ಮನೆಯೊಳಗೆ ಕಾಶಿಯಂಥವರನ್ನು ಇಟ್ಟುಕೊಂಡು….-ಇತ್ಯಾದಿ ಮಾತುಗಳು. +ಅಷ್ಟಕ್ಕೆ ಮುಗಿಯಿತೇ? “ನಮಗೆ ಬೇಕಾ ಇವಳ ಮನೆ ಸುಳಿಯುಂಡೆ? ಅದು ಯಾವ ಭೂತ ನುಂಗ್ತೋ ಅದರಿಂದ ಕಾರಿಸ್ತೆ”-ಎಂದು ಕೂಗುತ್ತಾ ಬಂತ್ತಯ್ಯ ವಿಶಾಲು ಸವಾರಿ. ಹಿಂದೆಯೇ ಗಿರಿಜಾಮಣಿ, ಅಕ್ಷರಶಃ ಸೂರಪ್ಪನ ಕೈಹಿಡಿದು ಎಳೆದುಕೊಂಡೇ. ಮತ್ತೂ ಹಿಂದ ಬೇಕಾದವರು ಬೇಡದವರು. ಅಂತೂ ಒಂದು ದಿಬ್ಬಣವೇ ಹೆಬ್ಬಾಗಿಲು ಹೊಕ್ಕಿತು. +ನಾಲ್ಕು ದಿನದಿಂದ ಒಂದೇಸಮ ಗುದ್ದಿದರೂ ಕರಗದ ಹುಣಿಸೆ ಕೋಡುಗಳ ರಾಶಿಯೆದುರು ಕುಳಿತು ಕೆಲಸದಲ್ಲಿ ಮಗ್ನನಾಗಿದ್ದ ಕಾಶಿಯ ಗಂಡನ ಬಳಿಯೇ ಬಂದಳು ವಿಶಾಲು-ಜಮಧೈರ್ಯದವಳು. ಅವನ ಬೆನ್ನ ಮೇಲೆ ಒಂದು ಗಟ್ಟಿ ತಟ್ಟಿದಳು. ಕಾಶಿ ಕಣ್ಣು ಬಿಟ್ಟು ನೋಡುತ್ತಿರುವಂತೆಯೇ “ಹ್ಹೆ! ನೀನೊಂದು ಗಂಡ್ಸನ? ಕಳ್ಳೆ ಹೆಂಡ್ತಿಗೆ ನಾಲ್ಕು ಸಮಾ ಹಾಕುದು ಬಿಟ್ಟು. ಇದ್ದವರ ಮನೆ ಗಂಡಸ್ರಗೆ ಸೆರಗು ಹಾಸುದು. ಚಿನ್ನ ಬೆಳ್ಳಿ ಹಾರ್‍ಸುದು-ನಿಂಗ್ಯೆಂತ ಗೊತ್ತಾತ್ತಿಲ್ಲೆ ಕಾಣ್. ಅದ್ಕೇ ಲಾಯ್ಕಾಯ್ತ್ ಅವ್ಳಿಗೆ”-ಎಂದಳು. +ಪೋಂಕು ತೋಳಿನಿಂದ ಮುಖ ವರೆಸಿಕೊಂಡಿತು. ಕಿವಿಯೆಲ್ಲ ಟಪಟಪೆಂದು ಕುಣಿಯುವಂತೆ ತಲೆ ಕೊಡವಿಕೊಂಡಿತು. ಎದ್ದು ನಿಂತಿತು. ಹೇಳಿದೆನಲ್ಲ. ಮೊದಲೇ ನೋಡಲು ಜಯದ್ರಥನಂತೆ. ಸಿಟ್ಟು ಬಂದರಂತೂ ದುಶ್ಯಾಸನನೇ. ಕಾಶಿ ಬೊಬ್ಬೆ ಹೊಡೆಯುತ್ತಿದ್ದಂತೆಯೇ ಅವಳ ಜುಟ್ಟಿಗೆ ಕೈ ಹಾಕಿ ದರದರ ಎಳೆದುಕೊಂಡು ಬಂತು. ಇದೇ ಕಂಬಕ್ಕೆ ಕಟ್ಟಿ ಹಾಕಿತು-ಆಕೆ ದೊಡ್ಡ ಕಳ್ಳೆ ಎಂಬಂತೆಯೇ ಸಮಾ ಬೀಸಿತು. “ಹೇಳು-ಬಾಯಿ ಬಿಡು” – ಎಂಬುದು ಬಿಟ್ಟರೆ ಬೇರೆ ಇಲ್ಲ. ‘ನಾನಲ್ಲ’-ಅಂದರೆ ಮತ್ತೆ ನಾಲ್ಕು ಬಿಗಿತ. ಬೆಪ್ಪುಗಟ್ಟಿದ ಸೂರಪ್ಪನನ್ನು ದೂಡಿ ದೂಡಿ ನಗುತ್ತಿದ್ದ ಗಿರಿಜಾಮಣಿಯನ್ನು ಕಂಡು ಮತ್ತಷ್ಟು ಒದೆಯಿತು. ಎಲೆ ಜಗಿಯುತ್ತ ಬಂದ ಸೂರಪ್ಪ ಅದನ್ನು ಉಗಿಯಹೋದರೂ ಗಿರಿಜಾಮಣಿ ಜೊತೆಯಲ್ಲಿಯೇ ಹೋದಳು; ಅವನ ಹಿಂದೆಯೇ ವಾಪಸು ಬಂದಳು-ಅಯ್ಯಬ್ಬ ಎಷ್ಟು ಹೊಡೆಯಿತು ಅಂತಿಲ್ಲ. ಈಗ ನೆನೆಸಿದರೂ ಮೈ ಭಿಂಗರಿಸುತ್ತದೆ. ಕಡೆಗೆ ವಿಶಾಲುವೇ “ಸಾಕ್ ಮಾರಾಯ. ಕಡೆಗೆ ಸತ್‌ಗಿತ್ ಹೋದ್ರೆ ನಾವೆಲ್ಲ ಜೈಲಿಗ್ ಹೋಯ್ಕಾಯಿ ಬಕ್.” ಎಂದು ಹೊಸಿಲ ಮೇಲೆ ಹೆಬ್ಬರಸಿಯಂತೆ ಕುಳಿತು ಹೇಳಿದ ಗತ್ತು ಕಾಣಬೇಕಿತ್ತು. +“-ಅದ್ಯೇನ್ ಸರಸಚಿಕ್ಕೀ – ಮೀನಾಕ್ಷತ್ತೆ ಮನೆಯಗೆ ಇವರದ್ದೆಲ್ಲ ಯಂತ ಕಾರುಭಾರು? ವಿಶಾಲು ಹೊಸಿಲ ಮೇಲೆ ಹಾಂಗ್ ಕೂಕಂಡ್ ಅಧಿಕಾರ ನಡೆಸುವಷ್ಟ್ ಸಲಿಗೆ ಕೊಟ್ಟವ್ರ್‍ ಯಾರ್‍?-ಆದರೂ ಕಾಂತ್. ಕಾಶಿಗೆ ಅಷ್ಟ್ ಹೊಡ್ದ್ರೂ ಮೀನಾಕ್ಷತ್ತೆ ಏನೂ ಮಾತಾಡ್ಲಿಲ್ಲೆ-?” +“ಇಲ್ಲಪ್ಪಾ-ಪಾಪ. ಹೆದ್ರಿ ಒಳ್ಗೇ ಇದ್ಲ್-ಇದೇ ದೇವರ ಕೋಣೆಯೊಳ್ಗೆ ನಿಂತ್ಕಂಡ್ ಕಿಟಕಿಯೊಳಗಿಂದ ಕಾಽಂತ ನಿಂತಿದ್ಲ್ – ಕಾಶಿ ಗಂಡ ಹೊಡೆಯೂ ರೀತಿ ಕಂಡ್ ನಡು ನಡು ಮಿಣ್ಣಗೆ ನಗೆ-ಏನೇ ಹೇಳ್. ಯಾರನ್ನಾದ್ರೂ ಹೊಡಿಯುವುದು ಕಾಂಬೂಕೆ ಒಂಥರಾ ಲಾಯ್ಕ್ ಅಲ್ದ?” +ಅಪ್ಪಣ್ಣಯ್ಯ ಮಾತ್ರ ಅಷ್ಟು ರಾಷ್ಟ್ರದೊಳ್ಗೇ ಇರ್‍ಲಿಲ್ಲೇ ಕಾಣ್. ಕಡೆಗೂ ತನ್ನ ಅಂಗ್ಳದೊಳ್ಗೆ ಇಷೆಲ್ಲ ಗಲಾಟೆ ಯಾಕೆ ಮಡಿದ್ ಅಂತೇಳಿ ಸಾ! ಇರ್‍ಲಿ. ತಂಗಿ ಹೀಂಗೆಲ್ಲ ಮಾಡಿಳ್ ಅಂತೆಳಿ ತಿಮ್ಮಪ್ಪಣ್ಣಯ್ಯ ನಾಚ್ಕಂಡ ಅಂಬ್ರ್‍-ತಿಮ್ಮಪ್ಪಣ್ಣಯ್ಯನ ಹೆಂಡತಿಯಾ? ಮೊದಲೇ ಬಾಯಿ ಹೋದ ಕೊಡಲಿ. ’ಅಲ್ಲ ವಿಶಾಲತ್ತಿಗೆಗೆ ಅಂಥಾ ಸಿಟ್ ಯಾಕ್ ಬಂತ್? ಅಪ್ಪಣ್ಣಯ್ಯ ಆರತಿ ತಟ್ಟೆ ತನಗೆ ಕೊಡೂದು ಬಿಟ್ಟು ಕಾಶಿಗೆ ಕೊಡ್ತ ಅಂತೇಳಿ ಹೆದರಿಕೆಯ್ತ, ಹೊಟ್ಟೆಕಿಚ್ಚಾಯ್ತ? ಅಡ್ಡಿಲ್ಲೆ, ಮೀನಾಕ್ಷತ್ತೆ ಒಳ್ಳೇ ಜನನ್ನ ಎತ್ತಿಕಟ್ಟಿರು. ಇಲ್ದಿದ್ರೆ ಗಿರಿಜಾಮಣಿಗೋಸ್ಕರ ವಿಶಾಲತ್ತೆಗೆ ಏಳುವವಳಾ? ಅಂದ್‌ಬಿಟ್ಲ್-ತಕೋ-ಮತ್ ಅವ್ರವ್ರೊಳ್ಗೆ ಹಿಡ್ಕಂತ್-ನೀನೇ ಹೇಳ್. ಈ ಮೀನಾಕ್ಷತ್ತೆ ಪಾಪ ಅದ್ದಕ್ಕಲ್ದ ಇಷೆಲ್ಲ ಆದ್?-” +“ಆದರೂ ಸರಸ ಚಿಕ್ಕಿ ನಂಗೆ ನೀ ಹೇಳುವಷ್ಟು ಸುಲಭ ಕಾಂತಿಲ್ಲೆ. ಕದಿಯುವುದೇ ಹೌದಾದ್ರೆ ಬರೀ ಎರಡು ಸುಳಿಯುಂಡೆ ಕದೀತ್ರಾ? ಇಡೀ ತಟ್ಟೆಯೇ ಇಪ್ಸಮಿಗೆ? ಅಷ್ಟ್ ಸುಳಿಯುಂಡೆಯಾಗೆ ಯಂತ ಸಿಕ್ಕು? ಇಲ್ಲೆಂತದೋ ಹಿಕ್ಮತ್ ಇತ್ತ್” – +ಎಷ್ಟು ಕೇಳಿದರೂ ಸರಸ ಚಿಕ್ಕಿಯದು ಒಂದೇ ಉತ್ತರ “ಹೆಂಗಸರ ಪಂಚಾತಿಕೆ ಎಷ್ಟು ಬುಡ ಹರಡಿದರೂ ಎಂದಿಗೂ ಅರ್ಥ ಆಪಂಥದಲ್ಲಿ – ಅವು ಗಂಡಸ್ರ ಹಂಗಲ್ಲ. ಗಂಡಸರು ಸೀದ” – ತಾನೂ ಒಬ್ಬ ಗಂಡಸೇ ಎಂಬಷ್ಟು ದೃಢವಾಗಿ ಈ ಮಾತು ನುಡಿದಳು ಸರಸ ಚಿಕ್ಕಿ. +“ಕಾಪಿಗೆ ಬಪ್ಪಿರಲೆ” ಕರೆದಳು ತಾರಾಮತಿ. ಆಗ ಮೀನಾಕ್ಷತ್ತೆಯ ಮಗ ನರಸಿಂಹನೂ ಬಂದ. “ಓ ಹೋ ಹೋ ಏನಂಬ್ರ್‍” ಎನ್ನುತ್ತ ನಮ್ಮ ಜೊತೆಗೇ ತಾನೂ ಜಗಲಿ ಏರಿದ. “ನಮಗೂ ಲೋಟ ಕಾಪಿ ಬರಲೀ” ಎಂದ. ಅವನಿಗೂ ಒಂದು ಲೋಟ ಕಾಪಿ ಬಂತು. +ಒಣಗಿ ಸುರುಟಿಹೋಗಿದ್ದ ನರಸಿಂಹ. “ಏನು ಮಣಿ, ಹ್ಯಾಂಗಿದ್ದೆ?” – ಎಂದ ಸರಸ ಚಿಕ್ಕಿಯ ಪ್ರಶ್ನೆಗೆ “ಹೀಂಗಿದ್ನಲೆ!” – ಎಂದ. ನಾ ತಟ್ಟನೆ ತಾರಾಮತಿಯ ಮುಖ ನೋಡಿದೆ. ಅವಳು ಕಂತಿದ ಮುಖದಲ್ಲಿ ಮುಚ್ಚಿಗೆ ನೋಡುತ್ತಿದ್ದಳು. +“ನರಸಿಂಹನಾ? ಗಡ್ಡ ಬಿಟ್ಕಂಡ್ ಹಡೆ ತಿರ್‍ಗತ್. ಇದ್ದವರ ಮನೆ ಜಗಲಿ ಹತ್ತತ್ ಅಳೀತ್ ಇಳೀತ್. ತನ್ನ ಮನೆಯಗೆ ಚಿನ್ನ ಬೆಳ್ಳಿ ಅಷ್ಟಿದ್ದಿತ್ ಇಷ್ಟಿದ್ದಿತ್ ಆರತಿ ತಟ್ಟೆಯೂ ಇದ್ದಿತ್ ಅಂತೇಳಿ ಕೊಚ್ಚಿ ಇಳ್ಸತ್-” ಎಂದಿದ್ದರು ದೊಡ್ಡಮ್ಮ. ಮಾತಾಡುತ್ತ ಸರಸ ಚಿಕ್ಕಿ ಮೆಲು ದನಿಯಲ್ಲಿ “ಮಣಿ, ಆರತಿ ತಟ್ಟಿನ್ನೂ ಮಾರಿಯೆ ಅಂಬ್ರಲೇ. ಎಂಥಾ ಆದಿಕಾಲದ ತಟ್ಟಿ ಅದ್-” ಎಂದರೆ “ನಿಂಗೆ ಭ್ರಾಂತು ಅಲ್ದ ಸರಸ ಚಿಕ್ಕಿ? ಆದಿಕಾಲದ ತಟ್ಟಿ ದೊಡ್ಡಜ್ಜಯ್ಯನ ಕಾಲ್ದಾಗೇ ಹೊಸಲು ದಾಟಿ ಸೂಳಿಮನೆಗೆ ಹೋಯಾಯ್ತ್. ಅದೇ ತರದ್ದೇ ದೊಡ್ಡಜ್ಜಯ್ಯ ಹೊಸ್ತ್ ಮಾಡಿಸಿದ್ ಅಂಬ್ರ್‍ – ಕೇಣ್ – ಮುದ್ಕ ಮಾಲಿಂಗಾಚಾರಿ ಹತ್ರ. ಎಲ್ಲ ಕತಿ ಹೇಳ್ತ. ಆದಿಕಾಲದ್ ಯಾವುದ್ ಉಳೀತ್ ಹೇಳ್. ನಾನೂ ಇಲ್ಲೇ ನೀನೂ ಇಲ್ಲೆ. ಪ್ರಪಂಚವೇ ಹೊಸ್ತ್ ಆತಾ ಇರತ್. ಈ ಅಮ್ಮನಂಥವ್ರಿಗೊಂದು ಭ್ರಮೆ. ಮುಂಚಿಂದೆ ಉಳ್‌ಸ್ತೋ ಅಂತೆಳಿ. ಆರ್ತಿ ತಟ್ಟಿ ಮಾರಿ ವಿಷ್ಯ ಅಮ್ಮಂಗ್ ನಾನಿನ್ನೂ ಹೇಳ್ಲಿಲ್ಲೆ. ಹೇಳಿರೆ ಹಾಟ್ ಫೇಲ್ ಆಪು” – ಎಂದು ಉದ್ದ ವೇದಾಂತ ಬಿಡುತ್ತ “ಸಾಗುವಳಿಯೆಲ್ಲ ಒಕ್ಕಲಿಗಾದ ಮೇಲೆ ಇನ್ಯಂತ ಉಳೀತ ಸರಸ ಚಿಕ್ಕಿ?” – ಎಂದು ಬೀಡಿ ಹಚ್ಚಿ ಹೊಗೆಯ ಅಡ್ಡ ಸರಿದುಕೊಂಡ – ಅಬ್ಬೆಗೆ ಹಾರ್ಟ್‌ಫೇಲ್ ಆಗದಂತೆ ತಡೆದು ನಿಲ್ಲಿಸಿದ ಘನವಂತ ಮಗ! +“ತಕಣಿ, ಕಾಪಿ ತಕಣಿ ಎಲ್ಲ. ಬಪ್ಪುದೇ ಅಪರೂಪ. ಬಂದ್‌ಕೂಡ್ಲೆ ತಿರುಗುಕೆ. ಎದ್ದದ್ದಾ? ಹೆಣೇ ಸರಸಾ, ಇವತ್ತು ಉಂಡ್ಕಂಡೇ ಹೋಯ್ಕ್ ನೀವಿಬ್ರೂ-ಇವಳ ಹೊಸರು ಯಂತ ಅಂದೇ? – ಅಲ್ಲ ಕಾಶಿ ಮೇಲಿನೂರಿಗೆ ಹೋದ್ಲ್ ಅಂದ್ಯ? ಹೋಗ್ದೆ ಮತ್ತೆ? ಇನ್ಯಾರ್‍ ಈ ಊರಗೆ ಅವಳ್ನ ಸಾಂಕ್ತೊ? ಪೋಂಕು ಇತ್ತಾ, ಗಾಡಿ ಕಟ್ತಾ? ಪಾಪ. ಸಮಾ ಹೊಡೀತ್ ಹ್ಯೆಂಡ್ತೆಗೆ-ಹೊಡ್ದದ್ದಂದ್ರೆ! ಹಾಂಗನ! ಆ ನಮೂನಿ! ಒಂದ್ ಜನ ಸೇರಿದ್ದಂದ್ರೆ-ಗದ್ದೆ ಕೆಲ್ಸ ಬಿಟ್ ಎಲ್ಲ ಇಲ್ಲೇ- ಆವಾಗ ನೀನಿದ್ದೆ. ಸುಳ್ಳ? – ನಿಂಗಿನ್ನೂ ಮದಿ ಆಯಿರ್‍ಲಿಲ್ಲೆ.” ಚಪ್ಪರಿಸಿ ಚಪ್ಪರಿಸಿ ನುಡಿಯುತ್ತಿದ್ದಂತೆ ಮೀನಾಕ್ಷತ್ತೆ ಮತ್ತೆ ಚಡಪಡಿಸಿದರು. +“ಆ ಪ್ರಕಾಶ ಮಾಣಿ ಎಲ್ಲಿ ಸತ್ತ್‌ತ? ಜಗಲಿ ಮೇಲೆಲ್ಲ ಕಾಕಿಯಪ್ಪ. ಎಷ್ಟ್ ಓಡಿಸಿರೂ ಬತ್ತೋ. ಕರಾ ಕರಾ ಕರಾ ಅಂತೋ”- +ಪ್ರಕಾಶ ಮಾಣಿ ಅಲ್ಲೆಲ್ಲೂ ಕಾಣಿಸಲಿಲ್ಲವಾಗಿ ನರಸಿಂಹನೇ ನಮ್ಮತ್ತ ತಿರುಗಿ ಇದೊಂದು ಪ್ರಾರಬ್ಧ ಎಂಬಂತೆ ಹಣೆ ಏರಿಳಿಸಿ, ಜೋರಾಗಿ ಕೈ ಬೀಸಿದ. +ಚಿಟಿ ಚಿಟಿ ನಕ್ಕರು ಮೀನಾಕ್ಷತ್ತೆ…. “ಒಂದು ಬೀಸಿದ್ದೇ, ಎಲ್ಲ ಎಲ್ಲಿದ್ದೋ? ಪುಡ್ಚೋ!” +ಮಾಣಿ ಎಲ್ಲಿ ಎಂದು ಅರಸಿದೆ. ಪಡು ಹೆಬ್ಬಾಗಿಲಲ್ಲಿ ಹಿಡಿಕಡ್ಡಿಯ ಬಿಲ್ಲಿನಲ್ಲಿ ಹಿಡಿಕಡ್ಡಿಯ ಬಾಣ ಬಿಡುತ್ತ ನಿಂತಿತ್ತು. ಈಚೆ ಪೂರ ಮರೆತೇಬಿಟ್ಟಿತ್ತು. +**** +ಕೀಲಿಕರಣ : ಕಿಶೋರ ಚಂದ್ರ +ಕೀಲಿಕರಣ ದೋಷ ತಿದ್ದುಪಡಿ : ರಾಮಚಂದ್ರ ಎಮ್ +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […] +ಮಳೆಯ ಜಿಟಿಜಿಟಿ ರಾಗ ಶುರುವಾಗಿ ಆಗಲೇ ಮೂರು ದಿನ ಕಳೆದಿದೆ. ಕಾರ್ತೆಲ್ ತಿಂಗಳ ನಡುವದು. ಬೆಳಗುವ ತೆಂಗಿನ ಮಡಲು – ಕೊತ್ತಳಿಗೆ, ಸೌದೆ, ತರಗಲೆಗಳೆಲ್ಲ ಆ ರೀತಿ ಜೀರಿಗಟ್ಟಿ ಸುರಿವ ಮಳೆಯ ಆಲಾಪನೆ, ಥಂಡಿಗೆ […] +ಮಧ್ಯಾಹ್ನದ ಉರಿಬಿಸಿಲಿನ ಕೃಪೆಯಿಂದ ಮನೆಯ ಗೋಡೆ, ಛಾವಣಿ ಕಾದು, ಉಟ್ಟ ಸೀರೆಯೆಲ್ಲ ಬೆವರ ಮುದ್ದೆಯಾಗಿ, ಗಾಳಿಯ ಸುಳಿವೂ ಇಲ್ಲದ ಸ್ಥಿತಿಯಲ್ಲಿ ಉಸಿರುಗಟ್ಟಿದವಳಂತೆ ಒದ್ದಾಡಿದ ಅವಳು ಸಹಜವಾಗಿಯೇ ಹಾಯೆನಿಸುವ ವಾತಾವರಣವನ್ನು ಹುಡುಕಿಕೊಂಡು ಬೀಚಿಗೆ ಬಂದಿದ್ದಳು. ಇಡೀ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_129.txt b/Kannada Sahitya/article_129.txt new file mode 100644 index 0000000000000000000000000000000000000000..27161f75019bc66f2b826516421c4b3ba1f37da6 --- /dev/null +++ b/Kannada Sahitya/article_129.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನೀಲ ನಿರ್ಮಲದಾಗಸದಿ ನಿಶ್ಚಿಂತನಾಗಿಹ ಚಂದಿರ +ಬಾನು ತೊಳಗಿದೆ, ಬುವಿಯು ಬೆಳಗಿದೆ ಶುದ್ಧ ಪಳುಕಿನ ಮಂದಿರ. +ನಿನ್ನ ನಗೆ ತನಿವೆಳಕ ತುಳುಕಿಸಿ ಸೂರೆಯಾಗಿದೆ ಸುಂದರ +ನಿನ್ನ ದಯೆ ಸುಧೆಯಾಗಿ ಸುರಿದಿದೆ ಬೆಳ್ಳಿಗಿರಣದ ಹಂದರ. +ಚಿಕ್ಕೆ ಚಕ ಚಕ ಜೊನ್ನ ಪೂರದಿ ತೇಲಿಮುಳುಗಿವೆ ಮೋಹನ +ಜಗದ ಜಡ ಬಡ ಜೀವಗೇಹದಿ ಶಾಂತಿಯಮೃತದ ಸೇಚನ. +ಬಾನ ಮೂಲೆಯ ಮೋಡಪಡೆ ಮುದಗೊಂಡು ಬರುತಿದೆ ತೇಲುತ +ಮದುಮಗನ ಸ್ವಾಗತಿಸೆ ನಿಬ್ಬಣ ಹೊರಟ ಸಂಭ್ರಮ ಹೋಲುತ. +ಶಾಂತಿ ಬೆಳುದಿಂಗಳಿನ ಹಾಲಲಿ ಕರಗಿದಂತಿದೆ ತಿಂಗಳ +ಸುಯ್ಯೆಲರು ಹಾಯಾಗಿ ತೀಡಿದೆ ಹದುಳವೆನೆ ಶುಭಮಂಗಳ. +ದೂರದಿಂದಲಿ ಕೇಳಬರುತಿದೆ ಕೊಳಲ ಕೊರಳಿನ ಗಾಯನ +ಸುಗ್ಗಿಯಲಿ ಹಿರಿಹಿಗ್ಗಿ ರಿಂಗಣಗುಣಿದು ಹಾಡಿದೆ ಜನಮನ. +ಇಂಥ ಸಮಯದಿ ಹಂಬಲದಿ ಬಾಯ್ದೆರೆದ ಸಿಂಪಿದು ಭಾವನ +ತರಗೆಲೆಯು ಗಿರುಕೆನಲು ಮೌನವೆ ಬಿಕ್ಕಿದೊಲು ಬರಿ ಕಲ್ಪನ. +***** +ಓವೋ, ಹುತಾತ್ಮರಿರ! ಬಂಧಮುಕ್ತಿಯ ದೀಕ್ಷೆ ಬೀರಕಡಗವ ತೊಟ್ಟು, ನಿಮ್ಮದೆಯ ಬಿತ್ತರದಿ ಟೆಂಟಣಿಪ ಎಲುವುಗಳ ತೇದು ಕನ್ನೆತ್ತರದಿ ಭಾರತಿಯ ಭಾಗ್ಯನಿಧಿಗಾತ್ಮಾರ್ಪಣದ ರಕ್ಷೆ- ಗೈದವರೆ, ನುಡಿಯಲೇಂ? ಹೋಲಿಸಲ್ಕೆಣೆಯಿಲ್ಲ. ಬಲಿದಾನದಿತಿಹಾಸ ರಕ್ತಸಂಪುಟಮಾಗಿ ನಿಮ್ಮ ಪೆಸರೊಂದೊಂದು ಪೆರ್ಮೆತಾರಗೆಯಾಗಿ ಹೊಳೆದಿಹಿರಿ; ಕಲ್ಪಂಗಳುರುಳಿದರು […] +ಬಾಳಕೊಳಗುಳದಲ್ಲಿ ಚೀರಾಡಿ ಬೋರಾಡಿ ಬಡಬಡಿಸಿ ಅಟ್ಟುಂಡುದೇನು ಜೀವ? ದಿನಬೆಳಗು ಅವರಿವರ ಬಾಯಮಾತಿನ ಕಂತೆ ಮೋಡಿಯಲಿ ಕಳೆದರೇನೆದೆಯ ನೋವ? ತಲೆಗೊಂದು ನುಡಿಯುವರು, ಪಂಥವನೆ ಹೂಡುವರು ತಾವೆ ಅತಿರಥರೆಂತದು ಸಾರುತಿಹರು; ಅರೆಗೊಡದ ಬುಡುಬುಡಿಕೆ ಅಲ್ಪತೆಯ ತೋರ್ಪಡಿಕೆ ತಥ್ಯವಿಲ್ಲದ […] +ಎಗ್ಗಿಲ್ಲದ ಪ್ರಣಯಿ ಯಾಕೆ? ದಿಕ್ಕು ದಿವಾಣಿ ಇಲ್ಲದ ಅವಧೂತ ಕೂಡ- ದಿಟ್ಟರು, ಮೊಂಡರು, ಮೋಟುಮರ ಗಾಳಿಮಿಂಡ ಅಂತಾರಲ್ಲ ಹಾಗೆ ಜಗಭಂಡರು ಸೊಂಪಾಗಿ ಸುಮ್ಮನೇ ಗಾಳಿಗೂ ಬಿಸಿಲಿಗೂ ಚಳಿಗೂ ಸಲ್ಲುವ ಉಪಾಯದ ಅವಕಾಶಗಳನ್ನು ರೆಂಬೆಕೊಂಬೆಗಳಲ್ಲಿ ರೂಢಿಸಿಕೊಂಡು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_13.txt b/Kannada Sahitya/article_13.txt new file mode 100644 index 0000000000000000000000000000000000000000..1aec9744e4cd54cd00b8bbe09992b3aa061a3f45 --- /dev/null +++ b/Kannada Sahitya/article_13.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!” +ಭೂಭಾರಮಾದ ಕೊಳೆಬೆಳೆಯೆಲ್ಲ ಮಾಣ್ಗೆ! +ಒಳಿತಿದನು ಅರಿತು ಆಚರಿಪಂಗೆ +ದಿಟವೆಂದು ನಂಬುವಗೆ, +ಹಂಬಲಿಸಿ ಹರಿದೋಡುವಂಗೆ, +ಶೋಕಕೆದೆಗೊಟ್ಟವಗೆ, +ಲೋಕಹಿತಗೈವಂಗೆ +ಜಗಕೆ ಹೊಸ ಬಗೆಯ ನಲ್ ಕಾಣಿಕೆಯನೀವಂಗೆ! +ಹಿರಿಯಾಸೆ ಹೊದ್ದವಗೆ +ಬಿದ್ದು ಎದ್ದವಗೆ, – +ಮುಂದೋಡಿ ಹಿಂದೆ ನೋಡಿ, ಕೈಬೀಸಿ ಕರೆದು ಬೇಡಿ +ಕತ್ತೆತ್ತಿ ಮುನ್ನಡೆವ ಧೀರನೆ ಧುರೀಣ! +ಸಣ್ಣತನ ಸ್ವಾರ್ಥ ದಿಗ್ಭಂಧನವೆನುಚ್ಚಳಿಸಿ +ಎಸೆಯೊ ಪೊಸಮಸೆಯ ಬಾಣ +ಅದರಾಚೆ ನಮ್ಮ ತಾಣ, +ಸುವಿಶಾಲ ಪರಿಧಿ ಕಾಣ! +೨ +ದೇಶದಿಗ್ದೇಶಗಳ ಹೊಸ ಗಾಳಿ ಬೆಳಕು +ತನುಮನವನೆಳ್ಚರಿಸಿ ಬಾಳ ತೊಳೆಯುವ ಸೆಳಕು +ಇಂದಿಂದೆ ಬೇಕು +ಬಲಗೊಳಲಿ ಬದುಕು, +ಈಸು ದಿನ ಬೆದರಿ ಬೆದರಿ, ತನ್ನಲ್ಲೆ ಮುದುರಿ ಮುದುರಿ +ಬೂದಿಯಲಿ ಉರುಳಿ ಹೊರಳಿ +ತನಿಗೆಂಡದಂತ ನರಳಿ +ಮಲಗಿರುವ ಹೆಬ್ಬಯಕೆ ಮೈಕೊಡವಿ ಮೇಲೆದ್ದು +ಮೇರುಗಿರಿ ಗೆಲ್ಗೆ! +“ಸಾವುದೆಲ್ಲಾ ಸತ್ತು ಬಾನಾಳ್ಕೆ ಪೂಣ್ಗೆ!!” +***** +ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] +– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […] +ಮಾಮರದ ಆಸರದಿ ಮೇಲೇರಿ ಕುಡಿಚಾಚಿ ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ, ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ- ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ, ಗರಿಗೆದರಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_130.txt b/Kannada Sahitya/article_130.txt new file mode 100644 index 0000000000000000000000000000000000000000..a3610d43d1fb56ce6132e96bd20984c98b5b535a --- /dev/null +++ b/Kannada Sahitya/article_130.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ +ಇರುಳ ಸವಿಗನಸಿನಾಮೋದದಲಿ ಮೈಮರೆದು +ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು +ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ +ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ +ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ +ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, +ಚಿಗುರು ಚೆಂಗುಡಿಗಳಿಗೆ ಪನ್ನೀರ ಚಿಮುಕಿಸುತ +ಮೂಡಣದ ಹೊಸತಿಲಿಗೆ ಹೊಂಬಣ್ಣ ನೀರಿನಲಿ +ಸಾರಣೆಯ ಕಾರಣೆಯಗೈದು, ಕುಂಕುಮದಿಂದ +ಬೊಟ್ಟಿಟ್ಟು ತಳತ್ಥಳಿಸಿ, ಸಂತಸ ಶುಭೋದಯದ +ಝಣಿಝಣಿರು ಚಕಮಕಿತ ಭೂನಭೋರಂಗದಲಿ +ಉನ್ಮತ್ತರಾಗಿಣಿಯು, ಜಗದುದಯ ಕಾರಿಣಿಯು +ಚೆಲುವೆ, ಶುಭದರ್ಶಿನಿಯು-ಹೋ! ನರ್ತಿಸಿದಳುಷೆಯು. +***** +ಬಾಳಿನ ಬೀಳಿದು, ಕೂಳಿನ ಗೋಳಿದು ಸಾವಿನ ಸಂತೆಯು ನೆರೆಯುತಿದೆ; ವೇದ ಪುರಾಣದ ವಾದಕೆ ಸಿಲುಕದ ವೇದನೆಯೊಂದಿದು ಕೊರೆಯುತಿದೆ. ಹೊಟ್ಟೆಯು ಹಪ್ಪಳೆ, ಮೈಯೋ ಬತ್ತಲೆ ಕಣ್ಣಿಗೆ ಕತ್ತಲೆಗಟ್ಟುತಿದೆ; ಬಡತನ ಶಾಪಕೆ, ಒಡಲುರಿ ತಾಪಕೆ ಮಸ್ತಕ ಚಿಣ್ […] +ನಮ್ಮ ಮನೆಯ ಕನ್ನಡಿ ಯಲಿ ಮಾತ್ರ ನನಗೆ ನಾ ಚಂದ ಉಳಿದಲ್ಲಿ ಪ್ರೇತ ನರಪೇತಲ ಊದಿಕೊಂಡ ಗಲ್ಲ ಚಿಂತೆ ತುರಿಸುವ ಮೂಗು ಆಸೆ ಇಂಗಿದ ಕಣ್ಣು ತುಟಿ ಕಿವಿ ಥೇಟು ಮಳ್ಳ ನ ರೂಪ […] +ಮಮಕಾರ ಮೋಹಿನಿಯರೊಸೆದಿಟ್ಟ ಮೂರ್ತಿಯೆನೆ ಚೆಲುವು ಮೈವೆತ್ತಂತೆ, ರತಿಯ ಪುತ್ಥಳಿಯಂತೆ ಜನಿಸಿರ್ದ ಮಾಯೆ ಕಳೆಯೇರಿ ಬಗೆಗೊಳ್ಳುತ್ತಿರೆ, ವಿಧ ವಿಧದ ಹಾವಭಾವಂಗಳಲಿ ಭಣಿತೆಯಲಿ ಎಸೆದಿರಲು, ಜ್ಞಾನಿ ನಿರಹಂಕಾರರಮಿತ ತಪ- ಸೂನು ಶಿವರೂಪಾದ ಅಲ್ಲಮಂ ಮಧುಕೇಶ ಗುಡಿಯಲ್ಲಿ ನುಡಿಸುತಿರೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_131.txt b/Kannada Sahitya/article_131.txt new file mode 100644 index 0000000000000000000000000000000000000000..d8e6cde104c538cf8d6fc21818c6f5aa2ddd02b9 --- /dev/null +++ b/Kannada Sahitya/article_131.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಿತ್ಯ ಸುಡುವ ಸೂರ್ಯನಡಿ ನೆತ್ತಿ ಬಿರಿದರೂ +ಕಾಲು ಕೊಂಡೊಯ್ಯುತ್ತದೆ ನಡೆದ ದಾರಿಯಲ್ಲೇ +ಮತ್ತೆ ಮತ್ತೆ ನಡೆದು, +ಮೈಲಿಗಟ್ಟಲೆ ದೂರ ಹುಲ್ಲುಗಾವಲ ಹಾಗೆ +ಬಿದ್ದುಕೊಂಡಿದೆ ನೋಡಿ ಬೇಕು ಬೇಡಗಳು. +ರಾತ್ರಿ ಮಲ್ಲಿಗೆ ಹೂವ, +ಕಂಪು ಸುರಿಸಿದ ಮಳೆಯ +ಹುಣ್ಣಿಮೆಯ ಹೊನ್ನ ನೆನಪು, +ನೀವು ಜೊತೆಗಿದ್ದರೆ; +ಹರಿವ ನದಿಗೆ ಮೈ ಕೊಟ್ಟು +ಆಕಾಶಕ್ಕೂ ಮುತ್ತಿಟ್ಟು +ವಿಶಾಲ ವೃಕ್ಷದ ತಂಪಿನಲಿ ತಂಗಬೇಕು +ಕೊಂಚ ಮರೆಯಬೇಕು +ದಿನನಿತ್ಯ ತಿಂದು, ತೇಗಿ, ಮಲಗುವುದು. +ಕೊರೆವ ಛಳಿ, ಸುರಿವ ಮಳೆ +ಸುಮ್ಮನೆ ಜೊತೆಗಿದ್ದು ಭುಜಕ್ಕೆ ಭು ತಾಗಿಸಿ +ತಿಳಿಸಿದರೆ ಸಾಕು. +ಮುತ್ತುಗಳು ಮತ್ತುಗಳು ಸತ್ತು ಹೋಗಲಿ ಎಲ್ಲ +ಸುಟ್ಟು ಹೋಗಲಿ ಸ್ವಪ್ನ ಸಿಡಿಲಿನಲ್ಲಿ. +ಯಾವ ದೀಪದ ಬೆಳಕೊ +ಯಾವ ಚುಕ್ಕಿಯ ಹೊಳಪೊ +ಯಾವ ಬೆಂಕಿಯ ಕಾವೊ +ತಣ್ಣಗೆ ಎದೆ ಸುಟ್ಟು, +ಅಲ್ಲಿ ಹುಟ್ಟಲಿ ಮತ್ತೆ +ಹೊಸದೊಂದು ಪುಟ್ಟ ಹಾಡು. +***** +ನಶ್ಯದಲ್ಲಿ ನಾನಾ ನಮೂನೆಗಳಿವೆ. ಬಣ್ಣ, ದರ, ತರತಮ ಘಮಘಮ ಸಣ್ಣ, ನುಣ್ಣಗೆ, ದಪ್ಪ, ಇನ್ನೂ ಅನೇಕ ತರ- ಮದ್ರಾಸಿನಾರ್ಮುಗಂ ನಶ್ಯ, ಬೆಂಗ್ಳೂರು ಮಗಳಗೌರಿ ನಶ್ಯ, ಹಳ್ಳಿಹಳ್ಳಿಯ ದೇಶೀನಶ್ಯ, ಕೆಲವರಿಗಂತು ಪ್ಯಾರಿಸ್, ಕೊನೇಪಕ್ಷ ಲಂಡನ್ ಪಿಸ್ತೂಲ್ […] +ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […] +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_132.txt b/Kannada Sahitya/article_132.txt new file mode 100644 index 0000000000000000000000000000000000000000..8f23d6d48105d0aaefd2a190f28efe29f8d845aa --- /dev/null +++ b/Kannada Sahitya/article_132.txt @@ -0,0 +1,23 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಜಗಜ್ಯೋತಿ ಎನ್ನಿಸಿದ +ಮಹಾ ಜಾತ್ಯತೀತ ಚೇತನವನ್ನು +ಅನುಯಾಯಿಗಳು +‘ಜಗಜ್ಜಾತಿ’ ಮಾಡಿರುವುದಕ್ಕೆ ನೊಂದು +ಬಸವ +ಳಿದುಹೋದ; +ತನ್ನ ದಿವ್ಯ ಸಂದೇಶಗಳ ಪಾಲಿಗೆ +ಬಸವ +ಅಳಿದು ಹೋದ. +***** +ಕ್ಲಾಸಿನಲ್ಲಿ ಒತ್ತಾಗಿ ಕೂತಿದ್ದ ವಿದ್ಯಾರ್ಥಿಗಳೆಲ್ಲರೂ ಒಬ್ಬೊಬ್ಬರಾಗಿ ಯಾರೋ ಕರೆದಂತೆ ಪಾಠದ ಮಧ್ಯಕ್ಕೇ ಸಟ್ಟನೆ ಎದ್ದು ಹೊರಗೆ ನಡೆದುಬಿಡುತ್ತಾರೆ ***** +ಬಕ ಬಕ ರ ಸಮಾನ ಒಂದು ಸಂಗತಿಯಲ್ಲಿ: ತಲೆ ತಗ್ಗಿಸಿ ನಡೆಯುವುದರಲ್ಲಿ. ***** +ವಚನಕಾರರು ವಚನಶೂರರಲ್ಲ. ಬರೆದಂತೆ ಬದುಕಿದವರು ಬದುಕಿದಂತೆ ಬರೆದವರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_133.txt b/Kannada Sahitya/article_133.txt new file mode 100644 index 0000000000000000000000000000000000000000..23eadbfa1f9d2f855c9cf8b4de8e30863b76e276 --- /dev/null +++ b/Kannada Sahitya/article_133.txt @@ -0,0 +1,57 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬೆಂಗಳೂರಿನಲ್ಲಿರಲ್ಲಿ, ದೆಹಲ್ಲಿಯಲ್ಲಿರಲ್ಲಿ ನೆನೆವುದೆನ್ನ ಮನಂ ದೇವರಾಜ ಮಾರುಕಟ್ಟೆಯಂ. ಮೈಸೂರಿನ ದೇವರಾಜ ಮಾರುಕಟ್ಟೆಯನ್ನು ನೆಲಸಮ ಮಾಡುತ್ತಾರಂತೆ. ಈ ವಿಷಯ ಕೇಳಿಯೇ ನನ್ನ ಮನ ಮಮ್ಮಲ ಮರುಗಿತು. ಏಕೆಂದರೆ ಇದೇನು ಹುಡುಗಾಟದ ವಿಷಯವಲ್ಲ. ಈ ಮಾರ್ಕೆಟ್ ಮೈಸೂರಿನ ಹೃದಯ. ಈ ಹೃದಯದಲ್ಲಿ ನನಗೂ ಒಂದು ಪಾತ್ರವಿದೆ. ನನಗೂ ಅದಕ್ಕೂ ಒಂದು ರೀತಿಯ ಅವಿನಾಭಾವ ಸಂಬಂಧವೊಂದಿದೆ. ಅಂತಹ ಸಂಬಂಧವನ್ನು ಕಡಿದು ಕೊಳ್ಳುವುದು ಎಂದರೆ ಸಾಮಾನ್ಯವಾದ ಮಾತಲ್ಲ. ದೇವರಾಜ ಮಾರ್ಕೆಟ್ಟಿಗೂ ನನಗೂ ಇರುವುದು ಬಾಲ್ಯದ ಗೆಳೆತನಾ ಸ್ವಾಮಿ. ಅವನು ನನ್ನ ಆಪ್ತಮಿತ್ರ ಸ್ವಾಮಿ. ಕುಮಾರವ್ಯಾಸನಿಗೆ ವೀರನಾರಾಯಣ, ಕುವೆಂಪು ಅವರಿಗೆ ಕವಿಶೈಲ್ಲ, ಪುತಿನ ಅವರಿಗೆ ಯದುನಾರಾಯಣ, ಬೇಂದ್ರೆ ಅವರಿಗೆ ಧಾರವಾಡ. ನನಗೆ ಮಾತ್ರ ದೊಡ್ಡ ಮಾರ್ಕೆಟ್. ಎಲ್ಲರೂ ಅದನ್ನು ದೇವರಾಜ ಮಾರ್ಕೆಟ್ ಎಂದೇ ಕರೆಯಲ್ಲಿ. ನಾನು ಮಾತ್ರ ಅದನ್ನು ಕರೆಯುವುದು ದೊಡ್‌ಮಾರ್ಕೆಟ್ ಎಂದೇ. ಮೈಸೂರಿನಲ್ಲಿ ಎಲದಕ್ಕೂ ಈ ಪದ ಬಳಸುವುದು ಸಾಮಾನ್ಯ. ದೊಡ್ಡದಾಗಿರುವ ಮಾರ್ಕೆಟ್‌ಗೆ ದೊಡ್‌ಮಾರ್ಕೆಟ್ ಎಂತಲೂ, ಸರ್ಕಾರಿ ಆಸ್ಪತ್ರೆಗೆ ದೊಡ್ಡಾಸ್ಪತ್ರೆ ಎಂತಲೂ, ಅತಿ ದೊಡ್ಡ ಗಣೇಶ ವಿಗ್ರಹವಿದ್ದರೆ ದೊಡ್‌ಗಣೇಶ ಎಂದೂ ಕರೆಯುವುದು ವಾಡಿಕೆ. ಬಹುಶಃ ದೊಡ್ಡೇಗೌಡರು ಎಂಬ ನಾಮಧೇಯವೂ ಈ ರೀತಿಯೇ ಬಂದಿರಬೇಕು. +ಮೈಸೂರಿನಲ್ಲಿ ದೊಡ್ಡ ಮಾರ್ಕೆಟ್ಟಿಗೂ ಒಂದು ಇತಿಹಾಸವಿದೆ. ಚಿಕ್ಕ ಮಾರುಕಟ್ಟೆಗೂ ಒಂದು ಇತಿಹಾಸವಿದೆ . ನೆಲಸಮ ಪ್ರಕ್ರಿಯೆಯೇ ಇಲ್ಲದೆ ತನ್ನಿಂತಾನೆ ಕಣ್ಮುಚ್ಚಿರುವ ವಾಣಿವಿಲಾಸ ಮಾರುಕಟ್ಟೆಗೂ ಒಂದು ಇತಿಹಾಸವಿದೆ. ಇದು ಮೈಸೂರಿನ ಹೃದಯಾ ಸ್ವಾಮಿ. ನನ್ನ ಬಾಲ್ಯದ ಗೆಳೆಯಾ ಸ್ವಾಮಿ. ನನಗೆ ಬದುಕುವ ವ್ಯವಹಾರ, ಗಣಿತದ ಲೆಕ್ಕಾಚಾರ, ಚೌಕಾಶಿಯ ವ್ಯಾಪಾರ ಎಲ ಕಲಿಸ್ದಿದೇ ಈ ಮಾರ್ಕೆಟ್ ಸ್ವಾಮಿ. ಅಂತಹ ಒಬ್ಬ ಆಪ್ತಮಿತ್ರ ಇನ್ನ್ ಎನ್ನುವುದನ್ನು ನನ್ನಿಂದ ಅರಗಿಸಿಕೊಳ್ಳಲು ಸಾಧ್ಯವಾಗುತ್ತ್. ಮೈಸೂರಿಗೆ ಮುಂದೊಂದು ದಿನ ಹೋದಾಗ ಸಯ್ಯಾಜಿರಾವ್ ರಸ್ತೆಯಲ್ಲಿ ಓಡಾಡುವಾಗ ೧೧೦ ವರ್ಷಗಳಿಂದ ಎಷ್ಟೋ ಜನರ ಒಡನಾಟಕ್ಕೆ ಸಾಕ್ಷಿಯಾಗಿ ನಿಂತಿದ್ದ ಆ ಮಿತ್ರ ಅಲ್ಲಿರದೇ ಹೋದಾಗ, ವೇ ಮೊದಲ ರೂಪದ ರೋಮನ್ ಶೈಲ್ಲಿಯ ರಾಜಪರಂಪರೆಯ ಊರು ಎಂಬುದನ್ನು ಪದೇಪದೇ ಸಾಬೀತು ಪಡಿಸುತ್ತಾ ನಿಂತಿರುವ ಕಟ್ಟಡವನ್ನು ಕಾಣದಿದ್ದರೆ ಏನನ್ನೋ ಕಳೆದುಕೊಂಡಂತಾಗುವುದು ನಿಶ್ಚಿತ. ಏಕೆಂದರೆ ಮೈಸೂರಿನ ಹೃದಯಭಾಗವಾದ ಸಯ್ಯಾಜಿರಾವ್ ರಸ್ತೆಯ ಉದ್ದಕ್ಕೂ ಈ ಮಾರುಕಟ್ಟೆ ಮೈಚಾಚಿಕೊಂಡಿದೆ. ಎಲರ ಬದುಕಿನ ಉದಕ್ಕೂ ಒಂದ್ಲಲಾ ಒಂದು ರೀತಿಯಲ್ಲಿ ಕೈಚಾಚಿದೆ. ಒಂದು ತುದಿಯ ಗುರುಸ್ವೀಟ್ಸ್‌ನಲ್ಲಿ ಸಿಗುವ ಮೈಸೂರುಪಾಕು ಆಗಿರಬಹುದು, ಟಿಫಾನಿಸ್‌ನ ಸಮೋಸಾವೇ ಆಗಿರಬಹುದು, ಪ್ರಭಾತ್ ಬೇಕರಿಯ ಬ್ರೆಡ್ ಆಗಿರಬಹುದು. ರಾಚಯ್ಯ ಮಾರುವ ಪೆನ್ನೇ ಆಗಿರಬಹುದು, ಸಯ್ಯಾಜಿರಾವ್ ರಸ್ತೆಯ ಕಡೆಯಿಂದ ಸೆಳೆಯುತ್ತದೆ. ನಾಲ್ಕೂ ಕಡೆ ಸುತ್ತುವರೆದಿರುವ ರಸ್ತೆಗೆ ಇಳಿಯಲು ೧೫೪.೮ ಚದರ ಅಡಿ ವಿಸ್ತಾರದ ಈ ಮರುಕಟ್ಟೆ ಆರು ದ್ವಾರಗಳನ್ನು ಹೊಂದಿದೆ. ಆರೂ ದ್ವಾರಗಳೂ ಆರು ಕತೆಯನ್ನೊಳಗೊಂಡಿವೆ. ಆರೂ ದ್ವಾರದ ಚಿತ್ರ ವಿಭಿನ್ನವೇ. ಅಲ್ಲದೆ ಮಾರುಕಟ್ಟೆಯ ಪಕ್ಕದಲ್ಲೇ ಇದರೂ ಅದರ ಅವಿಭಾಜ್ಯ ಅಂಗವಾಗಿರುವ ಬೋಟಿ ಬಜಾರ್‌ನ ಮಹಿಮೆಯನ್ನು ಏನೆಂದು ಬಣ್ಣಿಸಲ್ಲಿ? ದೇವರಾಜ ಪೊಲೀಸ್ ಸ್ಟೇಷನ್ ಕಡೆಯಿಂದ ಮಾರುಕಟ್ಟೆಯನ್ನು ಪ್ರವೇಶಿಸುವವರಿಗೆ ಹೂ, ಹಣ್ಣು ಮಾರುವ ವಿಭಾಗವೇ ಅಂತ್ಯ. ಹೂ, ಹಣ್ಣು ಮಾರುವ ಕಡೆಯಿಂದ ಪ್ರವೇಶಿಸಿದರೆ, ಕೊತ್ತಂಬರಿ ಸೊಪ್ಪಿನ ಕಟ್ಟು ಮಾರುವ ಪೊಲೀಸ್ ಸ್ಟೇಷನ್ ಎಂಟ್ರಿ ಅಂತ್ಯ. ಬಹುಶಃ ಇಷ್ಟು ಅಚ್ಚುಕಟ್ಟು, ಇಷ್ಟು ಕರಾರುವಾಕ್ ವಿಂಗಡಣೆಯಾಗಿರುವ ಮಾರುಕಟ್ಟೆಯನ್ನು ನಾನು ಬೇರೆಲ್ಲೂ ನೋಡ್. ನಾನು ಮೈಸೂರಿನವನು ಎಂಬ ಕಾರಣಕ್ಕೆ ಈ ರೀತಿ ಜಂಭ ಹೊಡೆಯುತ್ತಿದ್ದೇನೆ ಎಂದು ಭಾವಿಸಬೇಡಿ, ಸಣ್ಣವಯಸ್ಸಿನಲ್ಲಿ ನಿಕ್ಕರ್ ಜೇಬಿನಲ್ಲಿ ಕೈ ಇಳಿಬಿಟ್ಟುಕೊಂಡು ಮಾರುಕಟ್ಟೆಯ ಮೂಲೆಮೂಲೆಯಲ್ಲೂ ಕುತೂಹಲದ ಕಣ್ಣುಗಳಿಂದ ಅಡ್ಡಾಡಿದವನಾಗಿರುವುದರಿಂದ ಅಂತಿಂಥ ಮಾರ್ಕೆಟ್ ಇದಲ್ಲಾ ಎಂಬ ಭಾವನೆಯೇ ನನ್ನೊಳಗೆ ಈಗಲೂ ಇದೆ. ಇದನ್ನು ಜಂಭಾ ಎಂದಾದರೂ ಕರೆಯಿರಿ, ಪೂರ್ವಗ್ರಹ ಎಂದಾದರೂ ಕರೆಯಿರಿ ನಾನು ದೇವರಾಜ ಮಾರ್ಕೆಟ್ ಪರ. +ಮರಿಮಲ್ಲಪ್ಪ ಶಾಲೆಯಲ್ಲಿ ಓದುತ್ತಿರುವಾಗ, ಒಂದು ನೋಟ್ ಬುಕ್ ಬೇಕಾದರೆ, ಟೆಕ್ಸ್ಟ್‌ಬುಕ್ ಬೇಕಾದರೆ, ಮಾರುಕಟ್ಟೆಯ ಮುಖ್ಯದ್ವಾರ ಎನ್ನಲಾಗುವ, ಚಿಕ್ಕಗಡಿಯಾರದ ಮುಂದಿರುವ ಬುಕ್ ಡಿಪೋಗೆ ಬರುವುದೇ ಒಂದು ಸಂಭ್ರಮ . ಇವೆಲ್ಲಾ ಮಾರುಕಟ್ಟೆಯ ಅವಿಭಾಜ್ಯ ಅಂಗ. ಆ ತುದಿಗೆ ಇರುವ ಫೋಟೋ ಫ್ರೇಮ್ ಅಂಗಡಿಗಳಲ್ಲಿ ಜಗಮಗಿಸುತ್ತಾ ಕುಳಿತಿರುವ ದೇವರ ಫೋಟೋಗಳನ್ನು ನೊಡುತ್ತಾ ಸಾಗಿದರೆ, ಕಳಾನಿಧಿ ಪ್ಯಾಕೆಟ್ ಕ್ಯಾಲೆಂಡರ್, ಮ್ಯಾಗಜೈನ್‌ಗಳನ್ನು ಕೈಯಲ್ಲಿ ಹೊತ್ತು ಮಾರುವವರ ದಂಡು, ವಿವಿಧ ಬ್ಯಾಗುಗಳನ್ನು ಹೆಗಲ್ಲಲೂ, ಕೈಯ್ಲಲೂ, ಮೈತುಂಬವೂ ಹೇರಿಕೊಂಡು ಮಾರುತ್ತಾ ಸುಳಿದಾಡುವವರ ಹಿಂಡು, ಹಣ್ಣುಗಳನ್ನು ಬುಟ್ಟಿಯಲ್ಲಿಟ್ಟುಕೊಂಡು ರೂಪಾಯಿಗೆ ಐದೋ, ನಾಲ್ಕೋ ಎಂದು ಕೂಗುತ್ತಾ ಬೊಬ್ಬೆ ಹಾಕುವ ವ್ಯಾಪಾರಿಗಳು ಮನಸ್ಸಿಗೆ ಜಾತ್ರೆಯ ವೈಭೋಗವನ್ನು ತುಂಬುತ್ತಾರೆ. ಮಾರ್ಕೆಟ್ ಬಾಗಿಲ್ಲ್ಲಲೇ ನಮ್ಮನ್ನು ಒಂದು ಆಹ್ಲಾದಕರ ವಾತಾವರಣಕ್ಕೆ ಮಾನಸಿಕವಾಗಿ ತಯಾರು ಮಾಡಿ ಒಳಕ್ಕೆ ಕಳುಹಿಸುವ ವಿಧಾನವೇನೋ ಇದು ಎನಿಸುತ್ತದೆ. ಒಳಗೆ ಕಾಲಿಟ್ಟರೆ ಮಧ್ಯದ ಸಾಲು ಹಣ್ಣುಗಳ ಮಳಿಗೆ, ಎಡಕ್ಕೆ ಎಲೆ, ಅಡಿಕೆ,ಅಂಗಡಿಗಳ ಸಾಲು, ಜತೆಗೆ ಕುಂಕುಮ ಹರಿಶಿನ, ಗ್ರಂದಿಗೆ ಅಂಗಡಿ, ಬಲಕ್ಕೆ ತೆಂಗಿನಕಾಯಿ ಅಂಗಡಿಗಳ ಸಾಲು, ಸ್ವಲ್ಪ ಮುಂದೆ ಹೋದರೆ ಹೂವಂಗಡಿಗಳದೇ ಒಂದು ಸಾಲು, ಜೋಡಿಸಿಟ್ಟ ಬೆಲ್ಲಗಳ ಪಿಂಡಿ ,ಅಚ್ಚುಬೆಲ್ಲ, ಉಂಡೆಬೆಲ್ಲಗಳ ಅಂಗಡಿಗಳ ಸಾಲುಸಾಲು, ಕಳ್ಳೇಪುರಿ ಅಂಗಡಿಗಳ ಆಕರ್ಷಣೆ….ನಿಮಗೆ ಪೊರಕೆ ಬೇಕೆ, ಇಲ್ಲಿ ಹಿಡಿಯುವ ಬೋನು ಬೇಕೆ? ಗೋಡೆ ಸುಣ್ಣ ಬೇಕೆ? ಇಲ್ಲಿ ಎಲ್ಲಾ ಇದೆ. ಮಾರುಕಟ್ಟೆಯ ವ್ಯವಸ್ಥೆಯೇ ಎಷ್ಟು ಅಚ್ಚುಕಟ್ಟು ನೋಡಿ, ಎಷ್ಟು ಸುಸಂಗತ ಸಂಧಾನ ನೋಡಿ, ಪೂಜಾ ಸಾಮಗ್ರಿಗಳೆಲ್ಲಾ ಒಂದೇ ಕಡೆ ಸಿಗುವ ಸುವ್ಯವಸ್ಥಿತ ವಿಂಗಡಣೆಯೇ ಒಂದು ರೀತಿಯಲ್ಲಿ ಮನಸ್ಸಿಗೆ ಹಿತ ನೀಡುತ್ತದೆ. +ನಾವು ಚಿಕ್ಕವರಿದ್ದಾಗ ಮೈಸೂರಿನಲ್ಲಿ ಸುತ್ತಾಡಲು ಏನಿತ್ತು? ರಜೆ ದಿನ ಬಂದರೆ ಕಾಲಕಳೆಯಲು ಯಾವ ಫನ್‌ವರ್ಲ್ಡ್ ಇತ್ತು? ಯಾವ ಮೆಟ್ರೊ ಇತ್ತು? ಎಷ್ಟು ಮಾಲ್‌ಗಳಿದ್ದವು? ಸಂಜೆಯಾಯಿತೆಂದರೆ, ಟೌನ್‌ಹಾಲ್ ಮೈದಾನಕ್ಕೆ ಹೋಗಿ, ನಾಲ್ಕಾಣೆಗೆ ಕಳ್ಳೇಕಾಯಿ ತೆಗೆದುಕೊಂಡು, ಟೌನ್‌ಹಾಲಿನ ತುದಿಯಲ್ಲಿ ತೂಗುಹಾಕಿರುವ ಲೌಡ್‌ಸ್ಪೀಕರ್‌ನಿಂದ ಬರುವ ವಾರ್ತೆಗಳು, ಚಿತ್ರಗೀತೆಗಳನ್ನು ಕೇಳುತ್ತಾ, ಕತ್ತಲೆಯಾದ ಮೇಲೆ, ಅದೇ ಮಂಕುಕವಿದ ದೀಪದ ರಸ್ತೆಗಳ ಮೂಲಕ ಮನೆಗೆ ಮರಳುವುದು..ನಿತ್ಯದ ದಿನಚರಿಯಾಗಿರುತ್ತಿತ್ತು. ಆದರೆ ಒಂದು ಬ್ಯಾಗು ಹಿಡಿದು ಕೊಂಡು ದೇವರಾಜ ಮಾರುಕಟ್ಟೆ ಪ್ರವೇಶಿಸಿದರೆ ಸಾಕು ಒಂದು ಹೊಸ ಕಿನ್ನರಲೋಕವೇ ಅಲ್ಲಿ ತೆರೆದುಕೊಳ್ಳುತ್ತಿತ್ತು. ಅದೊಂದು ಹತ್ತುಹಲವು ಬಗೆಯ ಬದುಕುಗಳ ಮತ್ತೊಂದು ಲೋಕ. ಅಂಗಡಿ-ಮುಂಗಟ್ಟು ಇಟ್ಟವರು ಗಂಟುಮೂಟೆ ಕಟ್ಟುವುದನ್ನು ನೋಡಿಯೇ ರಾತ್ರಿ ಹೊತ್ತಾಗುತ್ತಿದೆ ಎಂಬುದನ್ನು ತಿಳಿಯಬೇಕಿತ್ತು. ಈ ಮಾರುಕಟ್ಟೆ ಎಂತೆಂಥಾ ವ್ಯವಹಾರಗಳನ್ನು ನನಗೆ ಕಲಿಸಿದೆ ಅಂತೀರಾ? ಶಾಲೆಯಲ್ಲಿ ಪಾಠ ಕಲಿತೆ, ಮಾರುಕಟ್ಟೆಯಲ್ಲಿ ಬದುಕು ಕಲಿತೆ. ಅಂತಹ ಜಗತ್ತು ಇದು. +ಮೊದಲೇ ಹೇಳಿದೆನಲ್ಲಾ..ಚಿಕ್ಕ ಗಡಿಯಾರದ ವೃತ್ತದ ಕಡೆಯಿಂದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದ್ದಂತೆಯೇ ಎತ್ತರಕ್ಕೆ ಇರುವ ವಿವಿಧ ಹಣ್ಣುಗಳ ಅಂಗಡಿಗಳ ಸಾಲು ಘಮ್ ಎನ್ನುತ್ತದೆ. ನೇತು ಹಾಕಿರುವ ತಟ್ಟೆಗಳ ತಕ್ಕಡಿಯೇ ನಮ್ಮನ್ನು ಸ್ವಾಗತಿಸುತ್ತದೆ. ಬಹುಪಾಲು ಅಂಗಡಿಗಳಲ್ಲಿ ಮಲಯಾಳಿಕಾಕಾಗಳು ಕಾಣಬರುತ್ತಾರೆ. ಮುಸ್ಲೀಮರೂ, ಕನ್ನಡಿಗರೂ ಸರಿಸಮವಾಗಿದ್ದಾರೆ. ಮಲಯಾಳಿಗಳ ಕನ್ನಡವೂ ವಿಚಿತ್ರವೇ. ಇವರ ವ್ಯಾಪಾರದ ರಹಸ್ಯ ಎಷ್ಟು ಗಟ್ಟಿ ಎಂಬುದನ್ನು ಅವರನ್ನು ನೋಡಿಯೇ ತಿಳಿಯಬೇಕು. ವ್ಯಾಪಾರ ಮಾಡಲು ಬಂದವರು ಯಾರೂ ಮನಸೆಳೆಯುವ ಸೇಬನ್ನೋ, ಮೂಸಂಬಿಯನ್ನೋ, ಕಿತ್ತಳೆಯನ್ನೋ ಮುಟ್ಟುವ ಅವಕಾಶವೇ ಇರುತ್ತಿರಲ್ಲ್. ಚೌಕಾಶಿಯ ನಂತರ ಕೈ ಬೆರಳಿಂದ ಏನು ಬೇಕು ಎಂಬುದನ್ನು ತೋರಿಸಿದರೆ, ಆತ ಅದರಿಂದ ತೆಗೆದು ಕೈಗೆಟುಕದ ಎತ್ತರಕ್ಕೆ ಕಟ್ಟಿರುವ ನೇತಾಡುವ ತಕ್ಕಡಿಯ ತಟ್ಟೆಗೆ ಅದನ್ನು ಹಾಕುತ್ತಾನೆ. ಆ ತಕ್ಕಡಿಯನ್ನು ಅವನ ನೆತ್ತಿಯಿಂದ ಮೇಲಕ್ಕೆ ಬರುವ ಹಾಗೆ ಏಕೆ ಕಟ್ಟಿದ್ದಾನೆ ಎಂಬುದರ ರಹಸ್ಯ ಒಡೆದರೆ, ನಿಮಗೆ ಅವನ ವ್ಯಾಪಾರದ ಗುಟ್ಟು ಗೊತ್ತಾಗುತ್ತದೆ. ತಕ್ಕಡಿ ಸರಿಯಾಗಿ ತೂಗುವುದ್. ತೂಕದ ಬಟ್ಟು ಇಡುವ ಕಡೆ ಅವನು ಎಷ್ಟು ಗ್ರಾಂನ ಬಟ್ಟು ಇಟ್ಟಿದ್ದಾನೋ? ಈ ಅನುಮಾನ ನಮಗೆ ಕಾಡಿದರೂ ಅವನು ಏನು ತಿಳಿದುಕೊಳ್ಳುತ್ತಾನೋ ಎಂಬ ಹಿಂಜರಿಕೆಯಲ್ಲಿ ಪ್ರಶ್ನಿಸಲು ಹೋಗುವುದ್. ಅವನು ಹಾಕಿದ ಹಣ್ಣು ಕೂಡಾ ಅರ್ಧ ಕೆಟ್ಟಿರುತ್ತದೆ ಇನ್ನರ್ಧ ಚೆನ್ನಾಗಿರುತ್ತದೆ. ಅವನು ಹಣ್ಣುಗಳನ್ನು ತಕ್ಕಡಿಯಿಂದ ತೆಗೆದು ಅದ್ಯಾವ ಮಾಯದಲ್ಲಿ ಹಣ್ಣುಗಳನ್ನು ಕವರಿಗೆ ತುಂಬಿ, ನಿಮ್ಮ ಕೈಯಲ್ಲಿಡುತ್ತಾನೋ ಆ ಶಿವನೇ ಬಲ್ಲ. ಒಮ್ಮೆ ವ್ಯಾಪಾರ ಮಾಡಿದವರು ಮತ್ತೊಮ್ಮೆ ಬರುವಷ್ಟರಲ್ಲಿ ಹುಷಾರಾಗಿ ವ್ಯಾಪಾರ ಮಾಡಬೇಕಾದ ವಿದ್ಯೆಯನ್ನು ಈ ವಿಭಾಗ ನಮಗೆ ಕಲಿಸುತ್ತದೆ. ಮೈಸೂರಿನಲ್ಲೇ ಏಕೆ ಇದು ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಮಾಮೂಲು. ಅದರ್‍ಲಲೂ ಬಸ್‌ನಿಲ್ದಾಣಗಳ ಮುಂದೆ ತಳ್ಳುಗಾಡಿಯಲ್ಲಿ ರಾಶಿ ಪೇರಿಸಿಕೊಂಡು ನಿಂತಿರುವ ಹಣ್ಣು ಮಾರಾಟಗಾರರು ಇಂತಹ ವ್ಯಾಪಾರದಲ್ಲಿ ನಿಷ್ಣಾತರು. ಕೊಳೆತ ಹಣ್ಣುಗಳನ್ನು ಮೊದಲೇ ಕವರ್‌ಗಳಲ್ಲಿ ತುಂಬಿ ಗಾಡಿಯ ಕೆಳಭಾಗದ್ಲಲೋ, ನಮ್ಮ ಕಣ್ಣಿಗೆ ಕಾಣದಂತೆಯೋ ಇಟ್ಟುಕೊಂಡಿರುತ್ತಾರೆ. ಬಸ್ ಏರುವ ತವಕದಲ್ಲಿ ವ್ಯಾಪಾರ ಮಾಡಿ, ನಾವು ಎತ್ತಿಕೊಟ್ಟ ಹಣ್ಣನ್ನೇ ಆತ ತಕ್ಕಡಿಗೆ ಹಾಕಿ ತೂಗಿರುತ್ತಾನೆ. ಕೈಯಲ್ಲಿ ಕವರಿಟ್ಟ ತಕ್ಷಣ ಅವನಿಗೆ ಹಣ ನೀಡಿ, ಚ್ರೆ ಪಡೆದು, ಜಾಗ ಖಾಲಿ ಮಾಡಿ,ಮನೆಗೆ ಬಂದಮೇಲಷ್ಟೇ ಆ ಕವರಿನ ಹೂರಣದ ಮರ್ಮ ಗೊತ್ತಾಗುವುದು. ಅದ್ಯಾವ ಕೈಚಳಕವೋ, ಕಣ್ಕಟ್ಟೋ? ಅದೇನು ವಿದ್ಯೆಯೋ? ಕ್ಷಣಮಾತ್ರದಲ್ಲಿ ನಮ್ಮನ್ನು ಆತ ಡೂಪ್ ಮಾಡಿರುತ್ತಾನೆ +* +* +* +ಮಾರುಕಟ್ಟೆಯಲ್ಲಿ ಎಲೆ ಅಡಿಕೆ ಜಗಿಯುವರಿಗಾಗಿಯೇ ಒಂದು ಪ್ರತ್ಯೇಕ ವಿಭಾಗವೇ ಇದೆ. ವೀಳ್ಯೆದೆಲೆಯನ್ನು ಅಲಂಕಾರಿಕವಾಗಿ ಜೋಡಿಸಿ ಇಟ್ಟಿರುವ ಪರಿಯನ್ನು ನೋಡಿಯೇ ಆನಂದಿಸಬೇಕು. ಹೋಲ್‌ಸೇಲ್‌ನಲ್ಲಿ ಮಾರುವವರು ದೊಡ್ಡ ಪಿಂಡಿಯನ್ನು ವೃತ್ತಾಕಾರವಾಗಿ ಜೋಡಿಸಿರುವ ರೀತಿಯೇ ಆಕರ್ಷಕ. ಸುತ್ತಮುತ್ತ ಎಲೆ ತೋಟದ ಹಳ್ಳಿಯವರು ನಿತ್ಯ ತಂದು ಬೆಳಿಗ್ಗೆಯಿಂದ ರಾತ್ರಿಯವರೆಗೆ ಅಲ್ಲೇ ಕುಳಿತು ಮಾರಾಟ ಮಾಡಿ ರಾತ್ರಿ ತಮ್ಮ ಊರಿಗೆ ಹಿಂದಿರುಗುತ್ತಾರೆ. ತಂದಿರುವ ಎಲೆಯನ್ನೇ ವಿಂಗಡಿಸಿ ಮೂರು ವಿಧವಾಗಿ ಬುಟ್ಟಿಯಲ್ಲಿ ಇಟ್ಟಿರುತ್ತಾರೆ. ತರುವುದೆಲ್ಲಾ ಮೈಸೂರು ಎಲೆಯೇ. ಅದರಲ್ಲೇ ಮೂರು ವಿಧ! ಇದನ್ನು ಯಾವ ಸಸ್ಯ ಶಾಸ್ತ್ರಜ್ಞನೂ ಹೇಳಿದ್ದಲ್ಲ. ಎಲೆ ಮಾರುವಾಕೆಯದೇ ಅದರ ಪೇಟೆಂಟ್. +ಮೈಸೂರು ಎಲೆ ಎಂದರೆ ಅದರ ಸೊಗಡೇ ಬೇರೆ. ಅದರಲ್ಲಿ ಕಪ್ಪನೆಯ ಎಲೆಯದೇ ಒಂದು ಗುಂಪು. ತಿಳಿ ಹಸಿರು ಬಣ್ಣದಲ್ಲಿ ಮಿರ ಮಿರ ಮಿಂಚುತ್ತಿದ್ದರೆ ಅದೇ ಬೇರೆ ವರ್ಗ. ಅದರ ರೇಟೇ ಬೇರೆ. ಇನ್ನು ಇದೇ ಜಾತಿಯ ಎಲೆಯಲ್ಲೇ ಚಿಕ್ಕ ಚಿಕ್ಕ ಎಲೆಗಳನ್ನೇ ಬೇರೆ ಇಟ್ಟು ಚಿಗುರೆಲೆ ಎಂದು ವರ್ಗೀಕರಿಸಿ ಅದರ ರೇಟನ್ನೇ ಬೇರೆ ನಿಗದಿಪಡಿಸುತ್ತಾರೆ. ಇನ್ನು ಅಂಬಾಡಿ ಎಲೆಯದೇ ಬೇರೆ ಕತೆ. ಅಂಬಾಡಿ ಎಲೆಯನ್ನು ಬರೀ ಮದ್ರಾಸಿಗಳೇ ತಿನ್ನುತ್ತಾರೆ ಎಂಬ ಭಾವನೆ ಹೆಚ್ಚಾಗಿರುವುದರಿಂದ, ಸುತ್ತಲ ಹಳ್ಳಿಯ ಹೆಂಗಸರು ತಂದು ಮಾರುವ ಎಲೆ ಕಟ್ಟಿನಲ್ಲಿ ಅಂಬಾಡಿ ಸಿಗುವುದ್. +ಮೈಸೂರು ಎಲೆಗಿಂತ ಅಂಬಾಡಿ ಎಲೆ ಸ್ವಲ್ಪ ಅಗ್ಗ. ಮೈಸೂರಿನಲ್ಲಿ ಬಹಳ ಜನ ತಿನ್ನುವುದು ಚಿಗುರೆಲೆ ಇಲ್ಲವೇ ತಿಳಿ ಹಸಿರಿನ ಎಲೆ. ಕಪ್ಪು ಮಿಶ್ರಿತ ಹಸಿರು ಅಂದರೆ ಗಟ್ಟಿ ಹಸಿರು ಬಣ್ಣದ ವೀಳ್ಯೆದೆಲೆ ಸ್ವಲ್ಪ ಖಾರ ಜಾಸ್ತಿ. ಆದರಿಂದ ಅದನ್ನು ಮ್ಲೆಲುವವರು, ಸುದೀರ್ಘ ಕಾಲದಿಂದ ಅಡಿಕೆ ಎಲೆ ಸುಣ್ಣ ಹಾಕಿ ಹಾಕಿ ನಾಲಿಗೆ ಮಂದವಾಗಿದ್ದವರೇ ಆಗಬೇಕು. ಇಲ್ಲದಿದ್ದರೆ ಮೊದಲನೆಯ ಬಾರಿ ಈ ಎಲೆ ಬಾಯಿಗೆ ಹಾಕಿಕೊಂಡು ಅಗಿದವರು, ನಾಲಗೆ ದಪ್ಪವಾಗುತ್ತದೆ. ಮುಂದೆ ಅವರು ಆಡುವ ಮಾತು ಸ್ಪಷ್ಟವಾಗಿ ಕೇಳಬೇಕೆಂದರೆ ಸ್ವಲ್ಪ ದಿನಗಳೇ ಆಗಬೇಕಾಗುತ್ತದೆ. +ಆದರೆ ಇತ್ತೀಚೆಗೆ ಪಾನ್ ಬೀಡಾ ಹಾಕುವವರು, ಮದ್ರಾಸ್ ಎಲೆ ಹಾಕು, ಬನಾರಸಿ, ಕಲ್ಕತ್ತಾ ಎಲೆ ಹಾಕು…. ಎಂದು ತಮ್ಮ ಆಯ್ಕೆಯನ್ನು ಹೇಳುತ್ತಾರೆ. ಯಾವುದರ ರುಚಿ ಹೇಗಿರುತ್ತದೆ ಎಂಬುದು ಅವರ ನಾಲಗೆಗೆ ಚೆನ್ನಾಗಿಯೇ ಗೊತ್ತಾಗುತ್ತದೆ. ಅದೇ ರೀತಿ ಮೈಸೂರಿನ ವೀಳ್ಯೆದೆಲೆ ರುಚಿ ಬಲ್ಲವರಿಗೆ ಮತ್ಯಾವ ಎಲೆಯ ರುಚಿಯೂ ಒಗ್ಗದು. ದೇವರಾಜ ಮಾರುಕಟ್ಟೆಯಲ್ಲಿ ಎಲೆ ಮಾರುವವರ ವ್ಯಾಪಾರವೆಲ್ಲಾ ಕವಳಿಗೆ ಲೆಕ್ಕ. ಒಂದು ಕವಳಿಗೆಗೆ ಅಂದು ಒಂದೇ ರೂಪಾಯಿ. ಈಗ ಅದು ಎಂಟು ರೂಪಾಯಿ. ಒಂದು ಕವಳಿಗೆಯಲ್ಲಿ ಇಪ್ಪತ್ತು ಎಲೆಗಳು ಇರುತ್ತವೆ. ನೀವು ನಿತ್ಯ ಹೋಗುವ ಮಾಮೂಲಿ ‘ಗಿರಾಕಿ’ ಆಗಿದ್ದು, ಎಲೆ ಮಾರುವ ಅಮ್ಮನ ಪರಿಚಯಸ್ಥರಾದರೆ ಕವಳಿಗೆಯಲ್ಲಿ ಇನ್ನೆರಡು ಎಲೆ ಜಾಸ್ತಿಯೂ ಇರಬಹುದು. ಅದು ನಿಮ್ಮನ್ನು ಮೆಚ್ಚಿ ಕೊಡುವ ಕೊಸರು. ನೀವು ಹೊಸಬರಾಗಿದ್ದು, ಸಿಕ್ಕಾಪಟ್ಟೆ ಚೌಕಾಸಿ ಮಾಡಿ ವ್ಯಾಪಾರ ಮಾಡಿದರಾದರೆ, ನೀವು ಕೊಂಡು ಹೋದ ‘ಕವಳಿಗೆ’ ಕಟ್ಟಿನಲ್ಲಿ ಹದಿನೈದೇ ಎಲೆ ಇರಬಹುದು! ನಿಮಗೆ ತೋರಿಸಿದ ವೀಳ್ಯೆದೆಲೆ ಕಟ್ಟು ಬೇರೆ, ನೀವು ಮನೆಗೆ ತಂದ ಕಟ್ಟು ಬೇರೆಯೇ ಆಗಿರಬಹುದು. +ಎಲೆಯನ್ನು ಸುತ್ತಲು ದಾರ ತೆಗೆಯುವ ಕ್ಷಣದಲ್ಲಿ ಕಟ್ಟಿನ ಹಲವು ಎಲೆಗಳು ಮಾರುವವರ ತೊಡೆಯ ಕೆಳಗೆ ಕಳಚಿಕೊಳ್ಳುವ ಕಣ್ಕಟ್ಟು ವಿದ್ಯೆಯನ್ನು ಕಲಿಯುವುದು ಸ್ವಲ್ಪ ಕಷ್ಟವೇ. ಅದನ್ನು ಆ ಗದ್ದಲದಲ್ಲಿ ಕಂಡುಹಿಡಿಯುವುದೂ ಕಷ್ಟ. ಮಾರುಕಟ್ಟೆಗೆ ಹೋದಾಗ ಮನಸ್ಸು ನೂರೆಂಟು ಕವಲುಗಳಲ್ಲಿ ಚದುರಿ ಹೋಗುವುದರಿಂದ ಅಲ್ಲಿ ಮನಸ್ಸಿಗೆ ಕಡಿವಾಣ ಹಾಕುವುದು ಕಷ್ಟ. ಆದರೆ ಚಾಣಾಕ್ಷತನ ಬೇಕೆನ್ನುತ್ತದೆ ಈ ಮಾರುಕಟ್ಟೆ. ಅಲ್ಲದೆ ಅದನ್ನು ಕಲಿಸುತ್ತದೆ ಕೂಡಾ. ಈ ಮಾರುಕಟ್ಟೆ ಬದುಕನ್ನು ಕಲಿಸುತ್ತದೆ. ಬದುಕಿನ ದಾರಿಯನ್ನು ಹೇಳಿಕೊಡುತ್ತೆ. ಎಲ್ಲವನ್ನು ಎದುರಿಸಿ, ಜೀವನದಲ್ಲಿ ಮುಂದು ಬರಬೇಕು ಎನ್ನುವವರು ಈ ಮಾರುಕಟ್ಟೆಯಲ್ಲಿ ವ್ಯವಹಾರ ನಡೆಸಲೇ ಬೇಕು. ಸುತ್ತಿಕೊಟ್ಟ ಎಲೆಯನ್ನು ಅಲ್ಲೇ ಎಣಿಸುವಂತ್. ಹಾಗೆ ಮಾಡಿದರೆ, ಮಾರುವಾಕೆಯ ಗ್ರಾಮ್ಯ ಸೊಗಡಿನ ಬೈಗುಳಗಳ ಪ್ರಹಾರವನ್ನೇ ಎದುರಿಸಬೇಕಾಗುತ್ತದೆ. ಅವಳು ಎದ್ದು, ನಿಮ್ಮ ಕೈಯಿಂದ ಎಲೆಕಟ್ಟನ್ನು ಕಿತ್ತುಕೊಂಡರೂ ಆಶ್ಚರ್ಯವ್. ಅವರ ಬಾಯಿಗಂಜಿ ಪರಾರಿಯಾಗಬೇಕಾಗುತ್ತದೆ. ಎಲೆ ಮಾರುವವವರು ಕುಳಿತುಕೊಳ್ಳುವ ರಸ್ತೆಗೆ ಅಂಟಿಕೊಂಡಂತಿರುವ ಮಳಿಗೆಗಳು ಅಡಿಕೆ ಅಂಗಡಿಗಳು. ಒಂದಕ್ಕೊಂದು ಪೂರಕ. ಅಡಿಕೆ ಅಂಗಡಿಗೆ ಹೋದರೆ, ಅಲ್ಲಿ ಅಡಕೆಯದೇ ಹಲವಾರು ವಿಧ. ಚೂರು ಅಡಿಕೆ. ಬಟ್ಲಡಿಕೆ, ಕೆಂಪು ಅಡಿಕೆ, ಕಾಯಿ ಅಡಿಕೆ, ಗೋಟಡಿಕೆ ಹೀಗೆ ನೀವು ಯಾವ ರುಚಿ ಬಲ್ಲಿರೋ ನಿಮಗೆ ಬೇಕಾದ ಆಯ್ಕೆ ಅಲ್ಲಿರುತ್ತದೆ. ಅಲ್ಲದೆ, ತಂಬಾಕುಗಳಿಗೂ ಬರವ್. ಕಡ್ಡಿಪುಡಿಗೂ ಕೊರತೆಯೆ… +* +* +* +ನನ್ನ ಗೆಳೆಯರು ಮಾರುಕಟ್ಟೆಗೆ ಹೋಗುವಾಗಲೆಲ್ಲಾ ನನ್ನನ್ನೂ ಹುಡುಕಿ ಕರೆದುಕೊಂಡು ಹೋಗುತ್ತಾರೆ. ನಾನು ವ್ಯಾಪಾರದಲ್ಲಿ ನಿಷ್ಣಾತ ಆಗಿರುವುದರಿಂದ ಸ್ನೇಹಿತರು ಹೀಗೆ ಮಾಡುತ್ತಾರೆ ಎಂದು ಯಾರಾದರೂ ತಿಳಿದರೆ ಅದು ತಪ್ಪು. ನನಗೂ ಮೊದಮೊದಲು ಹೀಗೇ ಅನಿಸಿತ್ತು. ಗೆಳೆಯರಿದ್ದರೆ ಇಂಥವರು ಇರಬೇಕು ಎಲ್ಲಿ ಹೋಗಬೇಕಾದರೂ ನನ್ನನ್ನು ಕರೆಯುತ್ತಾರೆ, ಎಂತಹ ಆತ್ಮೀಯ ಸ್ನೇಹ! ಎಂದು ಹೆಮ್ಮೆಯಿಂದ ಬೀಗಿದ್ದಿದೆ. +ಮಾರುಕಟ್ಟೆ ಒಳಗೆ, ಹೂವಿನ ಅಂಗಡಿ ಮುಂದೆ ವ್ಯಾಪಾರಕ್ಕೆ ನಿಂತಾಗ ಸ್ನೇಹಿತರ ಸ್ನೇಹದ ಗುಟ್ಟು ಬಹಿರಂಗವಾಗಿತ್ತು. ಅಲ್ಲಿ ಮಲ್ಲಿಗೆ ಹೂಗಳನ್ನು ‘ಮಾರು’ ಲೆಕ್ಕದಲ್ಲಿ ಮಾರುತ್ತಾರೆ. ನಮ್ಮ ಎರಡೂ ಕೈಗಳನ್ನು ಚಾಚಿದರೆ ಅದು ಎಷ್ಟು ಉದ್ದ ಬರುತ್ತದೋ ಅಷ್ಟುದ್ದ ಒಂದು ‘ಮಾರು’. ಮುನ್ಸಿಪಾಲಿಟಿಯವರು ಮೀಟರ್ ಲೆಕ್ಕದಲ್ಲಿ ಅಳತೆ ಮಾಡಬೇಕು ಎಂದು ಕಡ್ಡಾಯ ಮಾಡಿದ್ದರೂ, ಹೂ ಮಾರುವವರಿಗೆ ಕೈಯೇ ಮೀಟರ್. ಯಾರು ಪಾಲಿಸಬೇಕು ಸರ್ಕಾರದ ಆದೇಶ? +ಈಗ ಮಾರಿನ ಲೆಕ್ಕ ಕಣ್ಮರೆ ಆಗುತ್ತಿದೆ. ‘ಮೊಳ’ ಹಾಕುವ ಪದ್ಧತಿ ಜಾರಿಗೆ ಬಂದಿದೆ. ಹೂ ಎಷ್ಟು? ಎಂದು ಪ್ರಶ್ನಿಸಿದರೆ, ಮೊಳ ಐದು ರೂಪಾಯಿ ಎನ್ನುತ್ತಾರೆ. ಮೊಳ ಎಂದರೆ ಅರ್ಧ ಕೈ. ಅಳೆದು, ಎಳೆದು ಕಟ್ ಮಾಡುವಷ್ಟರಲ್ಲಿ ಅದು ಅಂಗೈಯಷ್ಟೇ ಉದ್ದವಾಗಿರುತ್ತದೆ. ಮಾರು ಅಳೆಯುವಾಗಲೂ ಹೂವಾಡಗಿತ್ತಿಯರು ಕಟ್ಟಿರುವ ಹೂವನ್ನು ಎಳೆದುಬಿಡುತ್ತಿದ್ದರು. ಹೀಗಾಗಿ ಒಂದು ಮಾರು ಹೂ ಅರ್ಧ ಮಾರಿಗೆ ಬಂದು ನಿಲ್ಲುತ್ತಿತ್ತು. ನನ್ನನ್ನು ಕರೆದುಕೊಂಡು ಹೋಗುತ್ತಿದ್ದ ಸ್ನೇಹಿತರು ಹೂ ವ್ಯಾಪಾರ ಮಾಡುವಾಗ, ಮಾರಿಗೆ ಇಷ್ಟು ಎಂದು ಹೇಳಿದರೆ, ಅಳತೆ ‘ನಮ್ಮ ಕೈಯಳತೆ’ ಎಂದು ವಾದಿಸುತ್ತಿದ್ದರು. ಕೆಲವರು ಒಪ್ಪುತ್ತಿದ್ದರು. ಕೆಲವರು ಬೈಗುಳಗಳ ಮಳೆಯನ್ನೇ ಹರಿಸುತ್ತಿದ್ದರು. +ಹೂ ಮಾರುವವರು ‘ನೀವೇ ಅಳ್ಕಳ್ಳಿ’ ಎಂದು ಹೇಳಿದ ತಕ್ಷಣ ನನ್ನ ಸ್ನೇಹಿತ, ‘ಇವರ ಕೈಗೆ ಹೂ ಕೊಡು’ ಎಂದು ನನ್ನನ್ನು ತೋರಿಸಿದ. ನನ್ನನ್ನು ನೋಡುತ್ತಲೇ ಹೂ ಮಾರುವವಳು, ಬೆಚ್ಚಿಬಿದ್ದು ‘ಹೂನೂ ಇಲ್ಲ, ಏನೂ ಇಲ್ಲ ಮುಂದಕ್ ನಡೀರಿ’ ಎಂದು ಬೈದು ನಿಮ್ಮಂತಹವರು ನಾಲ್ಕು ಜನ ಬಂದರೆ, ಮನೆ ಎಕ್ಕುಟ್ಟೋಗುತ್ತೆ” ಎಂದು ಗೊಣಗಿದಳು. ಮತ್ತೊಬ್ಬರ ಹತ್ತಿರವೂ ಇದೇ ತರಹದ ಮಂಗಳಾರತಿ ಆಯಿತು. ಕೆಲವರು ನಮ್ಮದೇ ಮಾರು ಆದರೆ, ಈ ರೇಟು, ನಿಮ್ಮದಾದರೆ ಡಬ್ಬಲ್ ಎಂದು ಹೇಳಿ ಸಾಗಹಾಕಿದರು. ನಾನು ಎಲ್ಲರಿಗಿಂತ ಸ್ವಲ್ಪ ಉದವಿದ್ದೆ. ನನ್ನ ಕೈಗಳೂ ಸ್ವಲ್ಪ ಲಂಭವೇ. ನಾನು ಎರಡೂ ಕೈಗಳನ್ನು ಅಗಲಿಸಿ ನಿಂತರೆ ಅದು, ಹೂ ಮಾರುವವರು ಅಳತೆ ಮಾಡಿಕೊಡುವ ಒಂದು ಮಾರು, ನನ್ನ ಕೈಲೆಕ್ಕದಲ್ಲಿ ಎರಡಾಗುತ್ತಿತ್ತು. ನನ್ನ “ಆಪ್ತ” ಸ್ನೇಹಿತರು ನನ್ನನ್ನು ಎಲ್ಲಿದ್ದರೂ ಹುಡುಕಿ ದೇವರಾಜ ಮಾರುಕಟ್ಟೆಗೆ ಕರೆದುಕೊಂಡು ಹೋಗುವ ರಹಸ್ಯ ಈಗ ನಿಮಗೆ ಗೊತ್ತಾಯಿತಲ್ಲ.! +* +* +* +ಹಬ್ಬದ ದಿನಗಳು ಬಂತೆಂದರೆ ಈ ಮಾರ್ಕೆಟ್ ತುಂಬಿ ತುಳುಕುತ್ತದೆ. ಅದು ಸಂಭ್ರಮದ ಕ್ಷಣ. ಜನ ತಳ್ಳಿಕೊಂಡೇ ಓಡಾಡುವಷ್ಟು ವಿಪರೀತದ ಜನಸಂದಣಿ. ಹೂ, ಹಣ್ಣುಗಳ ಅಂಗಡಿಗಳಿಗಂತೂ ಜನರ ಮುತ್ತಿಗೆ . ಆಗ ಮಾರಾಟಗಾರರ ಸಂಖ್ಯೆಯೂ ಹೆಚ್ಚು. ಪಚ್ಚೆಬಣ್ಣದ ತುಳಸಿಹೂ, ತುಳಸಿ ಹಾರದ ಸೊಗಸು, ಕಂತೆ ಕಂತೆಯಾಗಿ ಕೈಯಲ್ಲಿಡಿದು ಮಾರುವ ಘಮಘಮಿಸುವ ದವನ, ಮೈಸೂರು ಮಲ್ಲಿಗೆಯ ರಾಶಿರಾಶಿ, ಕೆಜಿ ಲೆಕ್ಕದಲ್ಲೂ ಲಭ್ಯ, ಮಾಲೆಯಾಗಿಯೂ ಸಿದ್ಧ. ಆ ಸಡಗರಕ್ಕೆ ಎಲ್ಲಿದೆ ಅಂತೀರಿ? +ತರಕಾರಿ ಮಾರುವವರ ಬಳಿ ವ್ಯಾಪಾರ ಮಾಡುವಾಗ ಬಹಳ ಹುಷಾರಾಗಿರಬೇಕು. ನಗರದಲ್ಲಿರುವ ವ್ಯಾಪಾರಿಗಳು, ಬೆಳೆಗಾರರಿಂದ ಖರೀದಿಸಿ ಇಲ್ಲಿ ತಂದು ಮಾರುತ್ತಾರೆ. ಅವರ ಬಳಿ ಎಲಾ ಒಂದೇ ದರ. ವ್ಯಾಪಾರವೂ ನಿಖರ. ಕೆಜಿ ಲೆಕ್ಕದಲ್ಲಿ ಹೆಚ್ಚು ಹೇಳುವುದು ಬೇರೆ. ಆದರೆ, ನೆಲದಲ್ಲಿ ಕುಳಿತು, ಕುಕ್ಕೆಯಲ್ಲಿ ಹೊತ್ತುತಂದ ತೋಟದ ತರಕಾರಿಗಳನ್ನು ಗುಡ್ಡೆ ಹಾಕಿಕೊಂಡೋ, ಇಲ್ಲವೆ ತಕ್ಕಡಿಯಲ್ಲಿ ತೂಗಿ ಸುರಿಯುವವರೋ ಬಹಳ ಡೇಂಜರಸ್. ಅವರು ಹೇಳಿದ್ದಕ್ಕೆಲ್ಲಾ ಒಪ್ಪಿ ನೀವು ತರಕಾರಿ ಕೊಂಡರೆ ಎಲ್ಲಾ ಸರಿ. ಇಲ್ಲವೇ ಅವರ ಸಿಟ್ಟು ಆಕಾಶಕ್ಕೇರುತ್ತದೆ. ನಾನೊಂದು ಬಾರಿ ಬೆಳಿಗ್ಗೆಯೇ ಮಾರುಕಟ್ಟೆಗೆ ಹೋದೆ. ಸಾಮಾನ್ಯವಾಗಿ ಒಂಬತ್ತುಗಂಟೆಯ ನಂತರವೇ ಮಾರ್ಕೆಟ್ಟಿನಲ್ಲಿ ಚಟುವಟಿಕೆ ಆರಂಭ. ಆಗ ತಾನೇ ಎಲ್ಲರೂ ಬಂದು ತಮ್ಮತಮ್ಮ ಜಗಲಿಗಳನ್ನು ಸ್ವಾಧೀನಕ್ಕೆ ತೆಗೆದುಕೊಂಡು ತಾವು ತಂದ ವಸ್ತುಗಳನ್ನು ಹರಡಿಕೊಳ್ಳುತ್ತಿರುತ್ತಾರೆ. ಅಂಥ ಸಮಯದಲ್ಲಿ ನಾನೊಂದು ದಿನ ಅಲ್ಲಿ ವ್ಯಾಪಾರಕ್ಕೆ ನಿಂತೆ. ಹಳ್ಳಿ ಹೆಂಗಸೊಬ್ಬಳು ಆಗ ತಾನೆ ತಂದಿದ್ದ, ನಳನಳಿಸುವ ಕೊತ್ತಂಬರಿ ಸೊಪ್ಪನ್ನ್ನು ಕಟ್ಟುಕಟ್ಟಾಗಿ ಪೇರಿಸುತ್ತಿದ್ದಳು. “ಇದು ಎಷ್ಟಮ್ಮಾ” ಎಂದು ಪ್ರಶ್ನಿಸುತ್ತಲೇ ನಾನು ಬಲಗೈಯಲ್ಲಿ ಬ್ಯಾಗಿದ್ದ ಕಾರಣ ಎಡಗೈಯಿಂದ ಕಟ್ಟನ್ನು ಎತ್ತಿಕೊಂಡೆ. ತಕ್ಷಣವೇ ನನ್ನ ಮೇಲೆ ಹಾರಿ ಬಿದ್ದ ಮಹಿಳೆ “ಇನ್ನು ಬೋಣೀನೇ ಆಗಿಲ್ಲಾ, ಬೆಳ್‌ಬೆಳಗ್ಗೆ ಬಂದು ಎಡಗೈಯಿಕ್ಕ್ದಿದೀಯಾ… ನಿನ್‌ಮನೆ ಕಾಯ್ವೊಗಾ…” ಎಂದೆಲ್ಲಾ ಆರಂಭಿಸಿ, ರಂಕಲು ತೆಗೆದಳು. ಅವಳ ಬಾಯಿಯಿಂದ ನುಗ್ಗಿದ ಬಿರುಗಾಳಿಯ ಹೊಡೆತಕ್ಕೆ ನಾನು ಕೆಲ ಕಾಲ ಕಕ್ಕಾವಿಕ್ಕಿಯಾದೆ. ಪರಿಸ್ಥಿತಿಯನ್ನು ಹೇಗಾದರೂ ನಿಭಾಯಿಸಲೇ ಬೇಕಾಗಿತ್ತು. ಆಗ ನನ್ನ ಎಡಗೈಯಲ್ಲಿರುವ ಆರನೇ ಬೆರಳು ನನ್ನ ನೆರವಿಗೆ ಬಂದಿತು. ನಾನು ಎಡಗೈನಲ್ಲಿ ಸೊಪ್ಪು ಮುಟ್ಟಿದೆ ಎಂಬ ಚಿಂತೆ ಬೇಡಾ ಕಣಮ್ಮಾ..ಅದು ಅದೃಷ್ಟದ ಕೈ…ನೋಡು ನನ್ನ ಎಡಗೈಯಲ್ಲಿ ಆರುಬೆರಳಿದೆ.. ಎಂದು ಅವಳಿಗೆ ತೋರಿಸಿದಾಗ ಅವಳು ಹಸನ್ಮುಖಿಯಾದಳು. ಮತ್ತೊಮ್ಮೆ ಆರುಬೆರಳನ್ನೆ ನಿಟ್ಟಿಸಿದಳು, ಅಯ್ಯೋ ಶಿವನೆ, ಎನ್ನುತ್ತಾ.. ಕೊತ್ತಂಬರಿ ಸೊಪ್ಪನ್ನು ಉಚಿತವಾಗಿಯೇ ಬ್ಯಾಗಿಗೆ ಹಾಕಿ ಕಳುಹಿಸಿಕೊಟ್ಟಳು. ರಾತ್ರಿಯವರೆಗೆ ಅವಳ ವ್ಯಾಪಾರ ಹೇಗಾಯಿತೋ ಗೊತ್ತಿಲ್ಲ. ಮತ್ತೆ ಆ ಕಡೆ ಹೋಗಿದ್ದರೆ ಕೇಳಿ. ಹೀಗೆ ನನ್ನನ್ನು ಅಪಾಯದಿಂದ ಪಾರು ಮಾಡಿದ ಎಡಗೈಯಲ್ಲಿರುವ ಆರನೇ ಬೆರಳಿನ ಬಗ್ಗೆ ಒಂದು ಜಿಜ್ಞಾಸೆ ಇದೆ. ಶಾಲಾದಿನಗಳಲ್ಲಿ ಅದು ಸ್ನೇಹಿತರು ಚುಡಾಯಿಸುವ ಅಂಗವಾಗಬಹುದು ಎಂಬ ಕಾರಣಕ್ಕೆ ಆಪರೇಷನ್ ಮಾಡಿ ತೆಗೆದು ಬಿಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದದುಂಟು. ಮಾರ್ಕೆಟ್ಟಿನಲ್ಲಿ ಅದು ನನ್ನ ರಕ್ಷಣೆಗೆ ಧಾವಿಸಿದ ನಂತರ ಅದು ನನ್ನ ಜತೆಜತೆಯೇ ಇರಲಿ ಎಂದು ನಾನು ಖಚಿತ ನಿರ್ಧಾರಕ್ಕೆ ಬಂದೆ. ಈಗ ಹೃತಿಕ್ ರೋಷನ್ ಸಿನಿಮಾಗಳು ಬಹಳ ಬಂದು, ಅವನ ಅಭಿಮಾನಿ ವೃಂದ ಜಾಸ್ತಿಯಾದ ಮೇಲೆ, ಮತ್ತೆ ನನ್ನ ಆರನೇ ಬೆರಳಿನತ್ತ ಜನರ ಗಮನ ಹರಿದಿದೆ. ಇವರಿಗೂ ಹೃತಿಕ್‌ರೋಷನ್ ತರಹ ಆರು ಬೆರಳಿದೆ ಎಂದು ಎಲ್ಲರೂ ಹೇಳುತ್ತಾರೆ. ನ್ಯಾಯವಾಗಿ ಅವನಿಗಿಂತ ನಾನೇ ಸೀನಿಯರ್ ಅಲ್ಲವೇ? ನನ್ನ ತರಹವೇ ಅವನಿಗೂ ಆರುಬೆರಳಿದೆ ಎಂದು ಹೇಳುವುದೇ ತರವಲ್ಲವೇ? +* +* +* +ದೇವರಾಜ ಮಾರುಕಟ್ಟೆಯ ಜತೆಜತೆಯ್ಲಲೇ ಅರಳಿ, ಕಮರಿದ ಬದುಕೊಂದು ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ತಳ ಊರಿ ಕಾಡುತ್ತಲೇ ಇದೆ. ಅವನು ಚನ್ನಯ್ಯ. ಅವನ ನೆನಪು ಭೂತವಾಗಿ ಕಾಡುತ್ತಿರುವುದು ಏಕೆ? ಎಂಬುದು ನನಗಂತೂ ಚಿದಂಬರ ರಹಸ್ಯ. ಅದು ಬದುಕಿನ ರಹಸ್ಯವಲ್ಲವೇ? ನನಗೂ ಅವನಿಗೂ ಯಾವ ಪರಿಚಯವೂ ಇಲ್ಲ. ಅವನನ್ನು ನಾನು ಮಾತನಾಡಿಸಿಯೂ ಇಲ್ಲ. ಅವನ ಬಳಿ ಹೋಗಿ ಅವನು ಮಾರುತ್ತಿದ್ದ ಗುಡ್ಡೆ ತರಕಾರಿಗಳ ವ್ಯಾಪಾರವನ್ನೂ ನಾನು ಎಂದೂ ಮಾಡಿದವನೂ ಅಲ್ಲ. ಆದರೆ ಅತ ಆಗಾಗ ಕಾಡುತ್ತಾನೆ. ಅವನ ಬದುಕು ಹೆಜ್ಜೆ ಹೆಜ್ಜೆಗೂ ನನ್ನ ಚಿತ್ತವನ್ನು ಕಲಕಿದ್ದಲ್ಲದೆ, ಬದುಕಿಗೆ ಯಾವ ಅರ್ಥವಿದೆ ಎಂದು ಹಲವಾರು ಬಾರಿ ನನ್ನಲ್ಲೇ ನಾನು ಚರ್ಚಿಸುವಂತಾಗಿದೆ. ಧನ್ವಂತರಿ ರಸ್ತೆಯ ಕಡೆಯಿಂದ ಮಾರುಕಟ್ಟೆ ಪ್ರವೇಶಿಸಿದರೆ, ಅಂತಹ ಒಳ್ಳೆಯ ದೃಶ್ಯವೇನೂ ಕಾಣಿಸುವುದಿಲ್ಲ. ಒಳಗೆ ಹೆಜ್ಜೆ ಇಟ್ಟು ಮೆಟ್ಟಲು ಇಳಿಯುತ್ತಿದ್ದಂತೆಯೇ, ಎಡಕ್ಕೆ ಮಾರುಕಟ್ಟೆ ಕಚೇರಿ, ಎಡಭಾಗದ ತುದಿಯಲ್ಲಿ ಒಂದು ಶೌಚಾಲಯವಿದೆ. ಶೌಚಾಲಯ ಎಲ್ಲಿದೆ ಎಂದು ಕೇಳುವ ಅವಶ್ಯಕತೆ ಯಾರಿಗೂ ಬರುವುದಿಲ್ಲ. ಏಕೆಂದರೆ ಅದರ ದುರ್ವಾಸನೆಯೇ ಅದರ ಇರುವಿಕೆಯನ್ನು ಒತ್ತಿ ಒತ್ತಿ ಸಾರುತ್ತದೆ. ಪುರುಷರು ಎಂಬ ಮಸುಕು ಮಸುಕಾದ ಬೋರ್ಡ್ ಇರುವ ಸ್ಥಳದಲ್ಲಿ ನಿಂತುಕೊಂಡು, ಅಲ್ಲಿಗೆ ಹೋಗುವವರಿಗೆ ಒಂದು ಡಬ್ಬಾದಲ್ಲಿ ನೀರು ಕೊಟ್ಟು, ಅವರಿಂದ ಒಂದು ರೂಪಾಯಿ ವಸೂಲು ಮಾಡುತ್ತಾ ನಿಂತಿರುವವನೇ ಚನ್ನಯ್ಯ, ಮತ್ತೊಂದು ತುದಿಯಲ್ಲಿ ಮಹಿಳೆಯರು ಎಂಬ ಬೋರ್ಡ್ ಇದಕಡೆ ನಿಂತಿದ್ದವಳು ಅವನ ಹೆಂಡತಿ. ಇಬ್ಬರ ವೃತ್ತಿಯೂ ಒಂದೇ. ಚನ್ನಯ್ಯ ತೆಲುಗಿನವನು. ಅವನ ಹೆಂಡತಿ ತಮಿಳಿನವಳು. ಇಬ್ಬರೂ ತಮ್ಮ ತಮ್ಮ ಮಾತೃ ಭಾಷೆಯನ್ನು ಮರೆತು, ಕನ್ನಡದಲ್ಲೇ ವ್ಯಹರಿಸುತ್ತಿದ್ದರು. ಕನ್ನಡವೇ ಅವರ ಜೀವನೋಪಾಯವಾಗಿತ್ತು. ಇಬ್ಬರದೂ ಪ್ರೇಮ ವಿವಾಹವಂತೆ, ಇಬ್ಬರೂ ಯಾವುದೋ ಊರಿನಿಂದ ವಲಸೆ ಬಂದು, ಬದುಕುವ ದಾರಿಗಾಗಿ ಮಾರುಕಟ್ಟೆಯನ್ನು ಆಶ್ರಯಿಸಿದವರು. ಗುರಿ ಒಂದೇ ಆಗಿದ್ದುದರಿಂದ ಇಬ್ಬರ ಮನಸ್ಸೂ ಒಂದಾಯಿತು. ಒಬ್ಬರಿಗೊಬ್ಬರು ಆಸರೆಯಾಗಲು ಮನಸ್ಸು ಮಾಡಿ, ಮದುವೆ ಮಾಡಿಕೊಂಡರಂತೆ. ಇಬ್ಬರೂ ಗತಿ ಇಲ್ಲದವರಾಗಿದ್ದರಿಂದ ಅದು ಮನಸ್ಸಿನ ಮದುವೆ ಆಗಿರಬಹುದು. ಒಟ್ಟಿನಲ್ಲಿ ಒಂದು ಸಂಸಾರವನ್ನು ಸಾಕುವ ಹೊಣೆಯನ್ನು ಈ ಮಾರುಕಟ್ಟೆ ಮೌನವಾಗಿಯೇ ವಹಿಸಿಕೊಂಡಿತು. ಈ ವಿಶಾಲ ಮಾರುಕಟ್ಟೆಯ ಒಡಲೊಳಗೆ ಎಷ್ಟೊಂದು ಸಂಸಾರಗಳ ತೊಟ್ಟಿಲು ತೂಗುತ್ತಿದೆಯೋ? ಎಂಥೆಂಥ ಜೀವನಕತೆಗಳು ಅಡಗಿದೆಯೋ? +ಶೌಚಾಲಯ ತೊಳೆಯುವುದರಿಂದ ದೊರಕುವ ಒಂದೊಂದು ರೂಪಾಯಿಯಲ್ಲಿ ಸಂಸಾರ ಸಾಗಿಸುವುದಾದರೂ ಹೇಗೆ? ಚನ್ನಯ್ಯನ ಫ್ಯಾಮಿಲಿ, ಶೌಚಾಲಯದ ಎದುರೇ ಒಂದು ಆಯಕಟ್ಟಿನ ಜಾಗ ನೋಡಿ, ತರಕಾರಿ ಗುಡ್ಡೆ ಹಾಕಿಕೊಂಡು ಮಾರುವ ವೃತ್ತಿಯನ್ನು ಜೊತೆ ಜೊತೆಗೇ ಆರಂಭಿಸಿತು. ಸಂಜೆಯಾದ ಮೇಲೆ ಗಂಡ- ಹೆಂಡತಿ ಇಬ್ಬರೂ ಅಕ್ಕಪಕ್ಕ ಮಬ್ಬು ಬೆಳಕಿನಲ್ಲಿ ಕೂತು, ಕೂಗಿ ಕೂಗಿ ಜನರನ್ನು ಕರೆಯುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆದರೆ ಒಂದು ದಿನವೂ ಅವರು ಮಾರುವ ತರಕಾರಿ ಕೊಳ್ಳುವ ಮನಸ್ಸು, ಧೈರ್ಯ ಮಾಡುತ್ತಿರಲಿಲ್ಲ. ಮಾರ್ಕೆಟ್‌ನಲ್ಲಿ ಇಂತಹ ಗುಡ್ಡೆ ವ್ಯಾಪಾರಿಗಳು ಬಹಳ ಜನ ಇದಾರೆ. ಅವರ ಬಳಿ ವ್ಯಾಪಾರ ಮಾಡುವ ಜನರ ವರ್ಗವೇ ಬೇರೆ ಇದೆ. ಅಂತಹ ವ್ಯಾಪಾರ ಮಾಡುವವರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಬಂಡವಾಳ ಹಾಕಿ ಹೋಲ್‌ಸೇಲ್‌ನಲ್ಲಿ ತರಕಾರಿ ಕೊಂಡು ತಂದು ಮಾರುವ ಸಾಮರ್ಥ್ಯ ಅವರಿಗೆ ಇರುವುದಿಲ್ಲ. ಅಲ್ಲಲ್ಲಿ ಬಿಸಾಡಿದ ತರಕಾರಿಗಳನ್ನು ತಂದು ಗುಡ್ಡೆಹಾಕಿಕೊಂಡು ಮಾರುತ್ತಾರೆ ಎಂಬ ಆಪಾದನೆಯೂ ಅವರ ಮೇಲಿದೆ. ಹೋಲ್‌ಸೇಲ್ ಅಂಗಡಿಗಳ ಮುಂದೆ ಬಿದ್ದಿರುವ ತರಕಾರಿ ಮೂಟೆಗಳನ್ನು ಮಾಲೀಕರಿಗೇ ಗೊತ್ತಿಲ್ಲದಂತೆ ಕೂಯ್ದು, ಅದನ್ನು ಕದ್ದುತಂದು ಮಾರುತ್ತಾರೆ ಎಂಬ ದೂರೂ ಇಂತಹ ಚಿಲ್ಲರೆ ವ್ಯಾಪಾರಿಗಳ ಮೇಲಿದೆ. ಸಣ್ಣ ಸಣ್ಣ ಹೊಟೇಲ್ ಇಟ್ಟುಕೊಂಡಿರುವವರಿಗೆ ಇಂತಹ ವ್ಯಾಪಾರ ಮಾಡುವವರಿಂದಲೇ ಹೆಚ್ಚು ಲಾಭ. ಅವರು ಗೋಣಿಚೀಲವನ್ನೇ ತಂದು ಎಲ್ಲ ತರಕಾರಿಗಳನ್ನು ತುಂಬಿಕೊಂಡು ಹೋಗಿ ಬಿಡುತ್ತಾರೆ. ಆ ಹೊಟೇಲಿನಲ್ಲಿ ತಿನ್ನುವವನು ಅದೃಷ್ಟಶಾಲಿಯಾಗಿರಬೇಕು! +ಇದೆಲ್ಲಾ ವ್ಯಾಪಾರದ ರಹಸ್ಯಗಳನ್ನು ಚನ್ನಯ್ಯ ಅರಿಯದವನೇನಲ್ಲ. ಅಲ್ಲೇ ಬಹಳ ದಿನಗಳಿಂದ ತಳ ಊರಿರುವ ಆತನಿಗೆ ಇದು ಏಕಲವ್ಯ ವಿದ್ಯೆ. ಇತರರನ್ನು ನೋಡಿ ತಾನೇ ಕಲಿತದ್ದಾಗಿರಬಹುದು. ಅದಕ್ಕೆ ಅವನು ಹೆಂಡತಿಯ ಸಹಯೋಗದೊಂದಿಗೆ ಈ ವ್ಯಾಪಾರ ಆರಂಭಿಸಿದ್ದ. ನಿತ್ಯ ಈ ವ್ಯಾಪಾರವೂ ನಡೆಯುತ್ತಿತ್ತು. ಜತೆಗೆ ಆಗಾಗ ಕೂಗಾಡುವುದು, ಬೈದಾಡುವುದು, ನಡದೇ ಇರುತ್ತಿತ್ತು. ಒಂದು ರಾತ್ರಿಯಂತೂ ಗಂಡ- ಹೆಂಡತಿ ಇಬ್ಬರೂ ಪರಸ್ಪರ ಬೈದಾಡಿಕೊಳ್ಳುತ್ತಿದ್ದರು. ಸುತ್ತ ಮುತ್ತಲ ಅಂಗಡಿಯವರು ಏನೂ ಆಗಿಯೆ ಇಲ್ಲವೇನೋ ಎಂಬಂತೆ ಅವರವರ ಪಾಡಿಗೆ ಅವರವರು ತಮ್ಮ ತಮ್ಮ ವ್ಯಾಪಾರದಲ್ಲಿ ಮಗ್ನರಾಗಿದ್ದರು. ಎಷ್ಟೊಂದು ಆರ್ತನಾದ, ಎಷ್ಟೊಂದು ನೋವು, ಯಾವ ಪರಿಯ ಹಸಿವು ಈ ಮಾರುಕಟ್ಟೆಯ ಗರ್ಭದೊಳಗೆ ಹೂತು ಹೋಗಿವೆಯೋ. +ನಾನು ಎಂದೇ ಮಾರುಕಟ್ಟೆ ಪ್ರವೇಶಿಸಿದರೂ ಮೊದಲು ಕಣ್ಣಿಗೆ ಬೀಳುತ್ತಿದ್ದುದೇ ಚನ್ನಯ್ಯ. ಅವನು ಕುಳಿತುಕೊಳ್ಳುತ್ತಿದ್ದ ಜಾಗ ಆ ರೀತಿ ಇತ್ತು. ಗೇಟಿನ ಎದುರೇ ಜಾಗ ಹಿಡಿದು ಕುಳಿತುಕೊಂಡುಬಿಡುತ್ತಿದ್ದ. ಅವನೂ, ಅವನ ಹೆಂಡತಿಯೂ ಅಕ್ಕಪಕ್ಕ ಕುಳಿತು ಗಿರಾಕಿಗಳಿಗಾಗಿ ಕಾಯುತ್ತಿದ್ದರು. ನಾನು ಬೇಡವೆಂದರೂ ಆ ನೋಟದಿಂದ ತಪ್ಪಿಸಿಕೊಳ್ಳಲಾಗುತ್ತಿರಲಿಲ್ಲ. ಒಮ್ಮೊಮ್ಮೆ ಅವರಿಬ್ಬರೂ ಜಗಳ ಆಡುತ್ತಿದ್ದ ದೃಶ್ಯ ಕಣ್ಣಿಗೆ ಬೀಳುತ್ತಿತ್ತು ಎಂದೆನಲ್ಲ, ಅಂದೂ ಹಾಗೇ ಆಯಿತು. ಅದು ರಾತ್ರಿ ೮ರ ನಂತರದ ಜಗಳ. ಉಂಡು ಮಲಗುವುದಕ್ಕೆ ಮುನ್ನ ಇರಬಹುದು. ಇಲ್ಲಾ ಉಣ್ಣುವುದಕ್ಕೆ ಮೊದಲೇ ಆಗ್ದಿದಿರಬಹುದು. ಇಬ್ಬರೂ ಕೆಟ್ಟ ಕೆಟ್ಟ ಪದಗಳನ್ನು ಬಳಸಿ ಬೈದಾಡಿಕೊಳ್ಳುತ್ತಿದ್ದರೆ, ಸುತ್ತ ವ್ಯಾಪಾರ ಮುಗಿಸಿದವರು, ಕೆಲಸವ್ದವರು ಶ್ರೋತೃಗಳಾಗಿ ನಿಂತು ಬೀದಿ ನಾಟಕ ನೋಡುವಂತೆ ನಿಂತಿರುತ್ತಿದ್ದರು. ಅವಳ ತಂದೆ ತಾಯಿಗಳನ್ನು ಚನ್ನಯ್ಯ ನೋಡಿಯೇ ಇರಲಿಲ್ಲ. ಅವರು ಹೇಗಿದ್ದರು ಎಂಬುದನ್ನು ಕೂಡ ಕಲ್ಪಿಸಿಕೊಂಡಿದ್ದನೋ ಇಲ್ಲವೋ, ಅವಳಿಗೂ ಅಷ್ಟೇ ಚನ್ನಯ್ಯನ ತಂದೆ ತಾಯಿ ಇರಲಿಲ್ಲ, ಕುಲಬಾಂಧವರಾರೆಂಬ ಕಲ್ಪನೆಯೂ ಇದಿರಲ್ಲಿಕ್ಕಿಲ್ಲ. ಆದರೆ ಬೈಗುಳದಲ್ಲಿ ಅವರೆಲ್ಲ ಧಾರಾಳವಾಗಿ ಬಂದು ಬಂದು ಹೋಗುತ್ತಿದ್ದರು! ಜಗಳ ಯಾರ ಮನೆಯಲಿಲ್ಲ. ಅದು ಶ್ರೀಮಂತರನ್ನೂ ಬಿಟ್ಟಿಲ್ಲ. ಬಡವರನ್ನೂ ಬಿಟ್ಟಿಲ್ಲ. ಇದು ಮನಸ್ಸುಗಳ ತಾಳಮೇಳಕ್ಕೆ ಸಂಬಂಧಪಟ್ಟ ವಿಷಯವಲ್ಲವೇ? ಹೀಗಾಗಿ ಚನ್ನಯ್ಯನ ಬದುಕಿನಲ್ಲಿ ಏಕತಾನತೆಯನ್ನು ಕಳೆಯುತ್ತಿದ್ದುದು ಜಗಳವೊಂದೇ ಅನಿಸುತ್ತದೆ. ಒಂದು ದಿನ ಇಬ್ಬರೂ ಬಡಿದಾಡಿಕೊಂಡು ಸಾಯುತ್ತಾರೇನೋ ಎನ್ನುವಷ್ಟರ ಮಟ್ಟಿಗೆ ವಿಕೋಪಕ್ಕೆ ಹೋಗಿದ್ದ ಜಗಳ ಎಷ್ಟು ಹೊತ್ತಾದರೂ ಬಗೆಹರಿದಿರಲಿಲ್ಲ. ನಾನೂ ಎಷ್ಟು ಹೊತ್ತು ಅಲ್ಲಿ ಇರಲು ಸಾಧ್ಯ? ತರಕಾರಿ ಮೂಟೆ ಹೊತ್ತುಕೊಂಡು ನಾನೂ ಕತ್ತಲಲ್ಲಿ ಮನೆ ಸೇರಬೇಕಲ್ಲವೇ? ಚನ್ನಯ್ಯನಿಗೂ ಅವನ ಹೆಂಡತಿಗೂ ಮನೆಯೂ ಅದೇ, ‘ಆಫೀಸೂ’ ಅದೇ, ಹೀಗಾಗಿ ಅವರು ನಿದ್ರೆ ಬರುವ ತನಕ ಜಗಳವಾಡಿ ನಂತರ ಅಲೇ ಬಿದ್ದುಕೊಳ್ಳಬಹುದು. ಆದರೆ ನನ್ನ ಕಥೆ ಅದಲ್ಲವಲ್ಲ. ಆದರೂ ಅವರ ಕಥೆ ಏನಾಯಿತು ಎಂಬ ತವಕದಲ್ಲೇ ಇಡೀ ದಿನ ಕಾದೆ. ಮರುದಿನ ರಾತ್ರಿ ಮತ್ತೆ ಮಾರ್ಕೆಟ್ಟಿಗೆ ಹೋದಾಗ ಹಿಂದಿನ ದಿನ ರಾತ್ರಿ ಏನೂ ಆಗದವರಂತೆ ಚನ್ನಯ್ಯನೂ ಅವನ ಹೆಂಡತಿಯೂ ವ್ಯಾಪಾರದಲ್ಲಿ ನಿರತರಾಗಿದ್ದುದು ನನಗೆ ಬದುಕಿನ ಹಲವು ಅಚ್ಚರಿಗಳಲ್ಲಿ ಒಂದಾಗಿತ್ತು. ವ್ಯಾಪಾರದ ಮಧ್ಯೆ ಮಧ್ಯೆ ಇಬ್ಬರೂ ಏನೋ ಮಾತನಾಡಿಕೊಳ್ಳುತ್ತಾ, ಪರಸ್ಪರ ಗಿಲ್ಲುತ್ತಾ, ಸರಸ ಬೇರೆ ನಡೆಸುತ್ತಿದ್ದುದು ನನಗೆ ಒಂದು ಚೋದ್ಯವಾಗಿಯೇ ಉಳಿದಿದೆ. +ಇವೆಲ್ಲಾ ಕ್ಷಣಿಕ ಎಂಬುದು ಆಗ ನನಗೆ ತಿಳಿದಿರಲ್ಲ. ಆರು ತಿಂಗಳ ನಂತರ ನಾನೊಂದು ದಿನ ಮಾರ್ಕೆಟ್ಟಿಗೆ ಹೋದಾಗ, ಅಲ್ಲಿ ಚೆನ್ನಯ್ಯನೊಬ್ಬನೇ ಇದ್ದ. ಅವನ ಹೆಂಡತಿ ಇರಲಿಲ್ಲ. ಅದರ ಬಗ್ಗೆ ನಾನೇಕೆ ತಲೆ ಕೆಡಿಸಿಕೊಳ್ಳಲಿ? ಸುಮ್ಮನಾದೆ. ಎಲ್ಲೋ ಹೋಗಿರಬೇಕಲ್ಲವೇ? ಸ್ವಲ್ಪ ದಿನಗಳ ನಂತರ ಮತ್ತೆ ಹೋದಾಗ, ಅಲ್ಲಿ ಸಣ್ಣ ಮಗುವೊಂದನ್ನು ಹಿಡಿದುಕೊಂಡು ಚನ್ನಯ್ಯನ ಹೆಂಡತಿ ವ್ಯಾಪಾರದಲ್ಲಿ ನಿರತಳಾಗಿದ್ದಳು. ಮಾರ್ಕೆಟ್‌ನಲ್ಲಿ ಮುಂದಿನ ದಿನಗಳ ವ್ಯಾಪಾರಿಯೊಬ್ಬ ಜನಿಸಿದ್ದ. ಯಾರಿಗೆ ಗೊತ್ತು? ಮುಂದೆ ಅವನೇ ಅಲ್ಲಿ ಅತಿ ದೊಡ್ಡ ವ್ಯಾಪಾರಿಯಾಗಲೂಬಹುದು. ಇವೆಲ್ಲಾ ಸಹಜ ಕ್ರಿಯೆ ಎಂಬಂತೆ ಅವರಿಬ್ಬರೂ ಎಂದಿನ ವ್ಯಾಪಾರದಲ್ಲಿ ಮುಳುಗಿದ್ದರು. ಅಲ್ಲಿ ಬಾಣಂತನವಾಗಲಿ, ಬಾಣಂತಿಯ ಶುಶ್ರೂಷೆಯಾಗಲಿ ಯಾವುದೂ ಕಾಣಲಿಲ್ಲ. ನನಗೆ ಆಶ್ಚರ್ಯವಾದುದೇನೆಂದರೆ, ಮತ್ತೆ ಕೆಲದಿನಗಳಲ್ಲೇ ಅವರಿಬ್ಬರೂ ಮತ್ತೆ ಜಗಳವಾಡಲಾರಂಭಿಸಿದ್ದರು, ಸುತ್ತಲ್ಲಿನ ವ್ಯಾಪಾರಿಗಳಿಗೂ, ಓಡಾಡುವ ಜನರಿಗೂ ಬಿಟ್ಟಿ ಮನರಂಜನೆ. ಅವನು ಶೌಚಾಲಯದ ಹಿಂಭಾಗದ ರಸ್ತೆಯಲ್ಲಿರುವ ಬೋಟಿ ಬಜಾರ್‌ಗೆ ಹೋಗಿ, ಸಾಕಷ್ಟು ಸಾರಾಯಿ ಕುಡಿದೇ ಬರುತ್ತಿದ್ದ ಕಾರಣ ಜಗಳದ ಸ್ವರೂಪ ಬಯಲಾಟವಾಗಿ ಪರಿವರ್ತನೆಯಾಗಿತ್ತು. ತರಕಾರಿಯೇ ಅಲ್ಲದೆ, ಕತ್ತಿ, ಬಟ್ಟೆಬರೆ ಹೀಗೆ ಸಿಕ್ಕಸಿಕ್ಕವೆಲ್ಲವೂ ರೊಂಯ್ಯನೆ ಹಾರುತ್ತಿದ್ದವು. +ಬಹಳ ದಿನಗಳ ನಂತರ ಈ ದೇವರಾಜ ಮಾರ್ಕೆಟ್‌ನಲ್ಲಿ ಕಂಡ ದೃಶ್ಯ ನನ್ನನ್ನು ಸ್ಥಂಭೀಭೂತನನ್ನಾಗಿಸಿತು. ಮಾರುಕಟ್ಟೆ ಪ್ರವೇಶಿಸುತ್ತಿದ್ದಂತೆಯೇ, ಚನ್ನಯ್ಯನನ್ನು ಕಂಡೆ, ಆದರೆ ಚನ್ನಯ್ಯನ ಹೆಂಡತಿ ಎಂದಿನಂತಿರಲಿಲ್ಲ. ವಿಕಾರ ರೂಪು, ಸುಟ್ಟ ಮುಖ. ನೋಡಿದರೇ ತಿಳಿಯುತ್ತಿತ್ತು, ಅವಳು ಬೆಂಕಿ ಅನಾಹುತಕ್ಕೆ ಒಳಗಾಗಿ ಪಾರಾಗಿದ್ದಾಳೆ. ಅದರೆ ಸುಟ್ಟು ಹೋದ ಅವಳ ವಿಕಾರ ರೂಪ ಮಾತ್ರ ಅವಳಿಗೆ ನಡೆದ ಘಟನೆಯನ್ನು ಮತ್ತೆಮತ್ತೆ ನೆನಪಿಸುತ್ತಿದೆ. ಅಲ್ಲೇ ಪಕ್ಕದ ಅಂಗಡಿಯವರು ಹೇಳಿದ ಪ್ರಕಾರ, ಚನ್ನಯ್ಯನ ಕುಟುಂಬದ ಕತೆ ನಿತ್ಯ ರಾಮಾಯಣ. ಚನ್ನಯ್ಯ ನಿತ್ಯ ರಾತ್ರಿ ಕುಡಿದು ಬಂದು ಹೆಂಡತಿ ಜತೆ ತಕರಾರು ತೆಗೆಯುವುದು, ಅವಳೂ ಅರಚುವುದು, ದುಡ್ಡಿಗಾಗಿ ಅವನು ಪೀಡಿಸುವುದು, ಅವಳು ಇಲ್ಲಾ ಎಂದು ರಂಪರಾಮಾಯಣ ಮಾಡುವುದು, ಅಲ್ಲಿನವರಿಗೆ ನಿತ್ಯದ ದೃಶ್ಯಗಳು. ಅವರಿಗೆ ಮೊದಮೊದಲು ಅದು ಬೇಸರ ತರುತ್ತಿದ್ದರೂ, ನಂತರ ಅದಕ್ಕೆ ಹೊಂದಿಕೊಂಡು, ಈ ದೃಶ್ಯಕ್ಕೆ ಹೆಚ್ಚಿನ ಮಹತ್ವವನ್ನೇ ನೀಡದೆ, ತಮ್ಮತಮ್ಮ ಕೆಲಸಗಳಲ್ಲಿ ಮಗ್ನರಾಗಿರುತ್ತಿದ್ದರು. ಅದೊಂದು ದಿನ ರಾತ್ರಿ ನಿತ್ಯದ ಜಗಳ ವಿಪರೀತಕ್ಕೆ ಹೋಯಿತು. ಅವಳು, ಕೂಗುತ್ತಾ, ಅರಚುತ್ತಾ, ಸೀಮೆ‌ಎಣ್ಣೆ ಡಬ್ಬ ಎತ್ತಿಕೊಂಡು ತಲೆ ಮೇಲೆ ಸುರಿದುಕೊಂಡಳು. ಕಡ್ಡಿ ಗೀರಿದಳು. ಭುಗ್ಗನೆ ಬೆಂಕಿ ಹತ್ತಿಕೊಂಡ ಮೇಲಷ್ಟೇ ಎಲ್ಲರಿಗೂ ಏನಾಗುತ್ತಿದೆ ಎಂಬುದು ಗೊತ್ತಾದದ್ದು. ಅವಳ ಕೂಗು ಆಗ ಬೇರೆ ರೀತಿಯಲ್ಲಿ ಬರಲಾರಂಭಿಸಿತು. ಚನ್ನಯ್ಯನಿಗೂ ಏರಿದ್ದ ಅಮಲು ಇಳಿದು ಅವನೂ ತನ್ನ ಹೆಂಡತಿಯನ್ನು ಬದುಕಿಸುವಂತೆ ಕೂಗಿಕೊಳ್ಳಲಾರಂಭಿಸಿದ. ದೇವರಾಜ ಮಾರ್ಕೆಟ್ಟಿಗೂ ಆಸ್ಪತ್ರೆಗೂ ಅಷ್ಟೇನೂ ದೂರವಿಲ್ಲ. ಎದುರಿಗೇ ಆಸ್ಪತ್ರೆ. ಇತರ ವ್ಯಾಪಾರಿಗಳು ಗುಂಪುಗೂಡಿ, ಅವಳ ಮೇಲೆ ಕಂಬಳಿಹಾಕಿ ಅದುಮಿ, ನೀರು ಸುರಿದು ಅವಳನ್ನು ಆಸ್ಪತ್ರೆಗೆ ಸಾಗಿಸಿದರು. ಅವಳು ಬದುಕುಳಿದಳು. ಅದರೆ ಮೊದಲಿನ ರೂಪ ಅವಳ ಬಳಿ ಉಳಿದಿರಲ್ಲ. ನಾಲ್ಕು ತಿಂಗಳ ನಂತರ ಏನೂ ಆಗೇ ಎಂಬಂತೆ ಆವಳು ಎಂದಿನಂತೆ ಬಂದು ಮತ್ತೆ ವ್ಯಾಪಾರಕ್ಕೆ ಕುಳಿತಳು. ಮಾರುಕಟ್ಟೆ ತಿಮಿಂಗಿಲವಿದ್ದಂತೆ. ಅದನ್ನೂ ನುಂಗಿ ತನ್ನ ವಹಿವಾಟನ್ನು ಮುಂದುವರೆಸಿತು. ಆರೇ ತಿಂಗಳಿಗೆ ಅವಳು ಬಸುರಿ. ಗಂಡ ಹೆಂಡತಿ ಎಂದರೆ ಹೀಗೇ ತಾನೇ? ‘ಅಮರ ಮಧುರ ಪ್ರೇಮ’ ಎಂದು ಸಿನಿಮಾ ಕವಿಗಳೂ ಹಾಡಿರುವುದು ಇದನ್ನೇ ಅಲವೇ? ಚನ್ನಯ್ಯನಿಗೆ ಕಷ್ಟಸುಖ, ದುಃಖ ದುಮ್ಮಾನ ಹೇಳಿಕೊಳ್ಳಲು ಮತ್ಯಾರು ಇದ್ದಾರೆ? ಅವಳಿಗಾದರೂ ಅಷ್ಟೇ ಅಲ್ಲವೇ? ಎಷ್ಟೇ ಬಡಿವಾರಗಳಿದ್ದರೂ ಅವರಿಬ್ಬರೂ ಅಲ್ಲೇ ಕಾಲಹಾಕಬೇಕಲ್ಲ? ಮಕ್ಕಳಿಬ್ಬರೂ ಅವರ ಪಾಡಿಗೆ ಆಟವಾಡುತ್ತಾ, ಅಲ್ಲಿ ಇಲ್ಲಿ ಓಡಾಡುತ್ತಾ ಇರುತ್ತಾರೆ. ಮಾರ್ಕೆಟ್ ಎಂಬ ಪ್ರಪಂಚವನ್ನು ಬಿಟ್ಟರೆ ಅವಕ್ಕೇನೂ ಗೊತ್ತಿಲ್ಲ. ಈ ವಿಶಾಲ ಮಾರ್ಕೆಟ್‌ನ ಹೊರಗೆ ಬೇರೆಯದೇ ಆದ ಜಗತ್ತಿದೆ ಎಂಬುದರ ಯಾವ ಅರಿವು ಇಲ್ಲದೆ ಆ ಪಿಳ್ಳೆಗಳು ಅಲ್ಲಿ ಆಟವಾಡುತ್ತಿರುತ್ತವೆ. ಈಗ ನಮ್ಮೊಂದಿಗೆ, ಮುಂದೆ ಅವಕ್ಕೆ ತೋಚಿದ್ದು ಅವು ಮಾಡಿಕೊಳ್ಳಲಿ ಎಂಬ ದಿವ್ಯ ಉದಾಸೀನದಲ್ಲಿ ಚನ್ನಯ್ಯನೂ ಅವನ ಪತ್ನಿಯೂ ಕಾಲ ಹಾಕುತ್ತಿದ್ದಾರೆ. +ಇತ್ತೀಚೆಗೆ ಬಹಳ ವರ್ಷಗಳ ಅಂತರದ ನಂತರ ಮಾರ್ಕೆಟ್ ಕಡೆ ಹೋಗಿದ್ದೆ. ಹಳೇ ನೆನಪುಗಳನ್ನು ಮತ್ತೆ ಮತ್ತೆ ಕೆದಕಿಕೊಳ್ಳಲು ನನಗೆ ಇಷ್ಟ. ಆದರೆ ಧನ್ವಂತರಿ ರಸ್ತೆಯ ಗೇಟ್‌ನಿಂದ ಮಾರ್ಕೆಟ್ ಪ್ರವೇಶಿಸಿದಾಗ ಮೊದಲಿನಂತೆ ಚನ್ನಯ್ಯನ ದರ್ಶನವಾಗಲೇ ಇಲ್ಲ. ಅವನ ಹೆಂಡತಿ ಕುಳಿತು ವ್ಯಾಪಾರ ಮಾಡುತ್ತಿದ್ದಳು. ಅದೇ ವಿಕಾರ ರೂಪು. ತಲೆಗೂದಲೆಲ್ಲಾ ಬೆಳ್ಳಗಾಗಿ ಮತ್ತಷ್ಟು ಭಯಂಕರವಾಗಿ ಕಾಣುತ್ತಿದ್ದಳು. ಮುದುಕಿಯಾಗಿ ಬಿಟ್ಟಿದ್ದಳು ಎಂಬುದು ತಿಳಿಯುತ್ತಿತ್ತು. ಬಡವರು ಬೇಗ ಮುದುಕರಾಗುತ್ತಾರೆ. ಸ್ವಲ್ಪ ಚನ್ನಯ್ಯನನ್ನೇ ಹೋಲುತ್ತಿದ್ದ ಮಗನೊಬ್ಬ ಅವಳ ಪಕ್ಕ ಕೂತು ವ್ಯಾಪಾರ ಮಾಡುತ್ತಿದ್ದ. ಈಗ ಅವಳನ್ನು ಮಾತನಾಡಿಸುವ ಧೈರ್ಯ ನನ್ನಲ್ಲಿತ್ತು. ಚನ್ನಯ್ಯನ ಬಗ್ಗೆ ವಿಚಾರಿಸಿದೆ. ಯಾವುದೇ ಭಾವನೆಗಳಿಲ್ಲದೆ, “ಅವನಾ.. ಸತ್ತೋದಾ..” ಎಂದು ರಾಗ ಎಳೆದು ಹೇಳಿದಳು. ಆ ಮಾತಿನಲ್ಲಿ ಒಂದು ಚೂರಾದರೂ ಅನುಕಂಪವಾಗಲಿ, ದುಃಖವಾಗಲಿ ಇದ್ದಂತೆ ಅನ್ನಿಸಲಿಲ್ಲ. ನನಗವಳು ಆಗ ಮತ್ತಷ್ಟು ವಿಕಾರವಾಗಿ ಕಂಡಳು. ಬಹುಶಃ ಕುಡಿದೂ ಕುಡಿದೂ ಸತ್ತು ಹೋಗಿರಬೇಕು ಎಂದು ನಾನೇ ಊಹಿಸಿಕೊಂಡೆ. ಇಲ್ಲದಿದ್ದರೆ ಚನ್ನಯ್ಯನಿಗೆ ಸಾವು ಯಾವ ರೀತಿ ಬರಲು ಸಾಧ್ಯವಿತ್ತು? ಮಾರುಕಟ್ಟೆಯಿಂದಾಚೆಗಿನ ಬದುಕನ್ನೇ ಅವನು ನೋಡಿದವನಲ್ಲವಲ್ಲ. ಮಾರ್ಕೆಟ್ ಇಂತಹ ಎಷ್ಟು ಜೀವಿಗಳನ್ನು ಕಂಡಿದೆಯೋ? ಏನೋ. +ಮಾರ್ಕೆಟ್ ನೆಲಸಮವಾದರೆ, ಚನ್ನಯ್ಯನ ಕತೆಯೂ ಅವನ ಸಂಸಾರದ ಕತೆಯೂ ಅದರೊಂದಿಗೇ ಮಣ್ಣುಗೂಡುತ್ತದೆ. ಮುಂದೆ ತಲೆ ಎತ್ತಲಿರುವ ಮಾಡ್ರನ್ ಮಾರ್ಕೆಟ್ ಕಟ್ಟಡದೊಳಗೆ ಜೀವನ ಸಾಗಿಸಲು ಚನ್ನಯ್ಯನ ಮಕ್ಕಳಿಗೆ ಅಧಿಕಾರವಿರುತ್ತದೆಯೇ? ಅಲ್ಲೇ ಉಳಿಯಲು ಅದೇನು ಪಿತ್ರಾರ್ಜಿತವೇ? +***** +ಕೃಪೆ: ಪ್ರಜಾವಾಣಿ ಹಾಗು ಪ್ರೆಸ್ ಕ್ಲಬ್ ಆಫ್ ಬೆಂಗಳೂರು +ಕೀಲಿಕರಣ ದೋಷ ತಿದ್ದುಪಡಿ: ಸೀತಾ ಶೇಖರ್ +ನರಕ, ಯಮಧರ್ಮರಾಯರ ವೈಭವೋಪೇತ ಆಸ್ಥಾನ. ಮುಖ್ಯ ಪೀಠದಲ್ಲಿ ನ್ಯಾಧೀಶನಾಗಿ ಯಮರಾಯರು ಕುಳಿತಿದ್ದಾರೆ. ಅವನ ಪಕ್ಕದಲ್ಲಿ ಚಿತ್ರಗುಪ್ತರು, ಅವನೆದುರು ದೂಡ್ಡ ಒಂದು ಪುಸ್ತಕ. ಅಡ್ಜರಲ್ಲಿ ಮಾನವ ಜೀವಿಗಳ ಇಡೀ ಚರಿತ್ರೆಯೇ ಇದೆ. ಅದನ್ನು ಪರಿಶೀಲಿಸಿ, ಅದರಲ್ಲಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_134.txt b/Kannada Sahitya/article_134.txt new file mode 100644 index 0000000000000000000000000000000000000000..0fb645b1e40ecee3c1dbe12eed09fcd49e42db6c --- /dev/null +++ b/Kannada Sahitya/article_134.txt @@ -0,0 +1,174 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ಶಾರದಾ ಮೇಡಂ ಆಬ್ಸೆಂಟು, ಬರ್ತಾನೇ ಇಲ್ಲ’ ಎಂದು ಪುಟ್ಟ ಅಕ್ಷಯ ಮೊದಲ ಬಾರಿಗೆ ಹೇಳಿದಾಗ ಗುಪ್ತಾ ಸಂಸಾರ ಅದನ್ನ ಮನಸ್ಸಿಗೆ ತೆಗೆದುಕೊಳ್ಳಲಿಲ್ಲ. ಆಗಷ್ಟೇ ಸ್ಕೂಲು ಸೇರಿ ಎಲ್.ಕೇ.ಜಿ.ಯಲ್ಲಿದ್ದ ಮಗ ಸತತವಾಗಿ ಒಂದು ವಾರ ಈ ವಿಷಯವನ್ನು ಪುನರುಚ್ಚರಿಸಿದಾಗ – ಗುಪ್ತಾ ಸಂಸಾರಕ್ಕೆ ಸ್ವಲ್ಪ ಚಿಂತೆ, ಕುತೂಹಲ ಉಂಟಾಯಿತು. ಯಾಕೆಂದರೆ ಮಕ್ಕಳಿಗಲ್ಲಾ ಶಾರದಾ ಮೇಡಂ ಅಂದರೆ ತುಂಬಾ ಇಷ್ಟ. ಆಕೆಯ ಬಳಿ ಅದೇನು ಜಾದೂ ಮಂತ್ರವಿತ್ತೋ ತಿಳಿಯದಾದರೂ ಮಕ್ಕಳು ಮಾತ್ರ ಶಾಲೆಗೆ ಹೋಗಲು ಪ್ರತಿದಿನ ತಹತಹಿಸುತ್ತಿದ್ದರು. ಎಷ್ಟರ ಮಟ್ಟಿಗೆಂದರೆ, ಪ್ರತಿ ಶನಿವಾರ ಗುಪ್ತಾಜಿ ಮತ್ತವರ ಶ್ರೀಮತಿಯವರಿಗೆ ಆಫೀಸಿರುವಾಗ ಮಗುವಿಗೆ ಶಾಲೆಯೇಕಿಲ್ಲವೆಂದು ವಿವರಿಸುವುದು ಕಷ್ಟವಾಗುವಷ್ಟರ ಮಟ್ಟಿಗೆ ಶಾಲೆ ಮತ್ತು ಶಾರದಾ ಮೇಡಂ ಅವರ ಜೀವನವನ್ನಾವರಿಸಿಬಿಟ್ಟಿದ್ದರು. ಎರಡನೇ ವಾರ ಕಳೆದರೂ ಶಾರದಾ ಮೇಡಂ ಶಾಲೆಗೆ ಬರದೇ ಉಳಿದಾಗಂತೂ ಗುಪ್ತಾಗಳಿಗೆ ಚಿಂತೆಯುಂಟಾಗಹತ್ತಿತು. +‘ನಾಳೆಯಿಂದ ನಾನೂ ಸ್ಕೂಲಿಗೆ ಆಬ್ಸೆಂಟಾಗ್ಹೋಗ್ತೀನಿ…. ನನಗೆ ಶೀಲಾಮೇಡಂ ಇಷ್ಟ ಇಲ್ಲ’ ಎಂದು ಮಗ ಪ್ರತಿದಿನ ರಾದ್ಧಾಂತ ಮಾಡಹತ್ತಿದಾಗ ಅವರಿಗೆ ಚಿಂತೆಯುಂಟಾಗುವುದು ಸಹಜವೇ ಇತ್ತು. +ಮಗು ತುಂಬಾ ಖುಷಿಯಿಂದ ಶಾಲೆಗೆ ಹೋಗುತ್ತದೆ ಎಂಬ ಕಾರಣಕ್ಕಾಗಿಯೇ ಅದು ತುಂಬಾ ಒಳ್ಳೆಯ ಶಾಲೆಯೆಂಬ ನಿರ್ಧಾರಕ್ಕೆ ಗುಪ್ತಾ ದಂಪತಿಗಳು ಎಂದೋ ಬಂದುಬಿಟ್ಟಿದ್ದರು. ಈಗ ಹೀಗೆ ಮಗ ಪ್ರತಿದಿನ ನಾನು ಆಬ್ಸೆಂಟಾಗ್ತೀನಿ ಎಂದು ವರಾತ ತೆಗೆದರೆ, ಬಹುಶಃ ಪೆಟಲ್ಸ್ ಸ್ಕೂಲಿನ ಬಗ್ಗೆಯೇ ಮರುವಿಚಾರ ಮಾಡಬೇಕಾದೀತೆಂದು ಶ್ರೀಮತಿ ಮತ್ತು ಶ್ರೀ ಗುಪ್ತಾ ಸಮಾಲೋಚಿಸಿದರು. ದಿನಬೆಳಗಾದರೆ, ಯೂನಿರ್ಮ್ ಹಾಕಿಕೊಳ್ಳಲು ರಂಪಾಟ ಮಾಡುತ್ತಿದ್ದ ಮಗನಿಂದಾಗಿ – ಶಾಲೆಯ ಬಗ್ಗೆ – ಈಗಿತ್ತಲಾಗಿ, ಇಬ್ಬರೂ ಬಹಳವೇ ರೋಸಿಹೋಗಿದ್ದರು. +(ಆ ಶಾಲೆಗೆ ಪೆಟಲ್ಸ್ ಎಂಬ ಹೆಸರು ಹೇಗೆ ಬಂತೆಂದು ಗೊತ್ತಾಗಿದ್ದರೆ ಬಹುಶಃ ಅಲ್ಲಿಗೆ ಮಗನನ್ನು ಸೇರಿಸುವ ಬಗ್ಗೆ ಗುಪ್ತಾ ದಂಪತಿಗಳು ಪುನರಾಲೋಚಿಸುತ್ತಿದ್ದರೋ ಏನೋ…. ಹತ್ತು ವರ್ಷಗಳ ಹಿಂದೆ ಈ ಶಾಲೆ ಪ್ರಾರಂವಾದಾಗ — ಅಮೆರಿಕೆಯಲ್ಲಿನ ಅನಿವಾಸಿ ರತೀಯ ಶ್ರೀಮಂತ ಹಾಗೂ ಗುಜರಾತಿ, ಮತ್ತು ಇನ್ನೇನೇನೂ.. ಆಗಿದ್ದ – ಭೂಪೇಂದ್ರಯಿ ಪಟೇಲ್ ದೊಡ್ಡ ಮೊಬಲಗನ್ನು ದಾನವಾಗಿ ನೀಡಿದ್ದ. ಹೀಗಾಗಿ ಆ ಶಾಲೆ ಪಟೇಲ್ಸ್ ಸ್ಕೂಲ್ ಆಗಬೇಕಿತ್ತು. ಮುಂದೆ ಸರದಾರ್ ವಲ್ಲಯಿ ಪಟೇಲರ ಟೋ ಹಾಕಿ ತಮ್ಮ ಶಾಲೆಗೆ ಗೌರವದ ಸ್ಧಾನವನ್ನ ದೊರಕಿಸಿಕೊಳ್ಳುವುದು ಶಾಲೆಯ ಮ್ಯಾನೇಜ್‌ಮೆಂಟಿನ ವಿಚಾರವಾಗಿತ್ತು. ಆದರೆ ಶಾಲೆಯ ಬೋರ್ಡನ್ನು ಪೇಂಟ್ ಮಾಡಿದ ಮಹಾಶಯನ ಅಕ್ಷರ ಜ್ಙಾನ ತಕ್ಕಮಟ್ಟಿಗೆ ಇಲ್ಲದ್ದರಿಂದ ಅವನು ಆ ಶಾಲೆಯಲ್ಲಂತೂ ಓದಿರಲಿಲ್ಲವಲ್ಲ – ಸಧ್ಯ! ಪಟೇಲರ ಜಾಗದಲ್ಲಿ ಪೆಟಲ್ಸ್ ಬಂದು ಸ್ಧಾಯಿಯಾಗಿಬಿಟ್ಟಿತ್ತು). +ಎರಡು ವಾರ ಕಳೆದರೂ ಶಾರದಾ ಮೇಡಂ ಆಬ್ಸೆಂಟಾಗಿಯೇ ಉಳಿದಾಗ ವಿಚಾರ ಗಹನವಾಗುತ್ತಿದೆಯೆಂದು ಗುಪ್ತಾ ದಂಪತಿಗಳಿಗೆ ಅನ್ನಿಸಿತು. ಒಮ್ಮೆ ಶಾಲೆಯವರೊಂದಿಗೆ ಮಾತಾಡಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬೇಕೆನ್ನುವ ನಿರ್ಧಾರಕ್ಕೆ ಗುಪ್ತಾ ದಂಪತಿಗಳು ಬಂದರು. ಆ ನಿರ್ಧಾರದನುಸಾರವಾಗಿ ಅಂದು ಆಫೀಸು ತಲುಪಿದಾಕ್ಷಣ ಗುಪ್ತಾಜಿ ಶಾಲೆಗೆ ನ್ ಹಚ್ಚಿದರು. ಶಾಲೆಯ ನಂಬರ್ ರಿಂಗ್ ಆಗುತ್ತಿದ್ದಂತೆ, ಗುಪ್ತಾಜಿಯ ಮನಸ್ಸಿನಲ್ಲಿ ಅನೇಕ ವಿಚಾರಗಳು ಕುಣಿದಾಡಿದವು – ಬಹುಶಃ ಆಕೆಯ ಆರೋಗ್ಯ ಸರಿಯಿರಲಿಕ್ಕಿಲ್ಲ, ಊರೆಲ್ಲಾ ಸೊಳ್ಳೆಗಳು ಹಬ್ಬಿ ಎಲ್ಲೆಲ್ಲೂ ಮಲೇರಿಯಾದಿಂದ ಜನ ನಡುಗುತ್ತಿದ್ದರು. ಅಥವಾ ಶಾರದಾಮೇಡಂ ಯಾವುದಾದರೂ ಶಸ್ತ್ರ ಚಿಕಿತ್ಸೆಗೆ ಒಳಗಾಗಿರಬಹುದು… ಅಥವಾ…. ಅಥವಾ…. ಗುಪ್ತಾಜಿ ಯೋಚಿಸುತ್ತಲೇ ಹೆಡ್‌ಮೇಡಂಗೆ ಹಲೋ ಹೇಳಿದರು. +‘ನಾನು ಅಕ್ಷಯನ ಅಪ್ಪ ಮಾತಾಡ್ತಾ ಇದ್ದೀನಿ. ಶಾರದಾ ಮೇಡಂ ಬರ್ತಾ ಇಲ್ಲಾಂತ ಅಕ್ಷಯ ಹೇಳಿದ, ಹೀಗಾಗಿ ಸ್ವಲ್ಪ ಎನ್‌ಕ್ವಯರಿಸೋಣಾಂತ ನ್ ಮಾಡಿದೆ…’ +‘ಓಹೋ, ಗುಪ್ತಾಜೀ, ನಮಸ್ಕಾರ, ನಮಸ್ಕಾರ.. ನಮಗೂ ಎಲ್ಲಕಡೆಯಿಂದ ನ್ ಬರ್ತಾಯಿದೆ, ಶಾರದಾ ಮೇಡಂ ಬಂದುಬಿಡ್ತಾರೆ, ಆದಷ್ಟು ಬೇಗನೇ ಬಂದುಬಿಡ್ತಾರೆ, ಏನೂ ಯೋಚನೆ ಮಾಡಬೇಡಿ, ಆ ಚಿಂತೆ ನಿಮಗಿಂತ ಹೆಚ್ಚು ನಮಗಿದೆ, ನೀವು ನಿರಾಳವಾಗಿರಿ.’ +‘ಅದಿರಲಿ.. ಆದರೆ ಪ್ರಾಬ್ಲಂ ಏನು? ಆರೋಗ್ಯ, ಆಸ್ಪತ್ರೆ, ಹೀಗೇನಾದರೂ?? ಬೇಕಿದ್ದರೆ ನಾವು ನಮ್ಮ ಕೆಪಾಸಿಟಿಗನುಸಾರ ಹೆಲ್ಪು ಮಾಡಬಹುದೂಂತ….’ +‘ಬಹಳ ಒಳ್ಳೆಯ ವಿಚಾರ. ನಿಮ್ಮಂತಹ ಪೇರೆಂಟ್ಸ್ ಮಕ್ಕಳು ನಮ್ಮ ಶಾಲೆಯಲ್ಲಿ ಓದ್ತಾ ಇರೋದು ನಮ್ಮ ಅದೃಷ್ಚ, ಗ್ಯ. ‘ಕೈಲಾದ ಸಹಾಯ’ ಅನ್ನೋ ವಿಷಯಕ್ಕೆ ಬಂದರೆ, ನೋಡಿ, ನಮ್ಮ ಶಾಲೆಯ ಹೊಸ ಬಿಲ್ಡಿಂಗಿಗಾಗಿ, ನಾವು ಪರದಾಡ್ತಾಯಿರೋದು ನಿಮಗೆ ತಿಳಿಯದ ವಿಷಯವೇನೂ ಅಲ್ಲ. ಅಲ್ಲಿ ಒಂದು ಪ್ಲಾಟ್ ಕೊಂಡದ್ದಾಗಿದೆ…. ಈಗ ನಿಮ್ಮಂತಹ ಪೇರೆಂಟ್ಸ್ ಸಹಾಯ ಮಾಡಿದರೆ ಒಳ್ಳೆಯ ಕೆಲಸ ಬೇಗ ಆಗುತ್ತೆ. ನೀವೂ ನಿಮ್ಮ ಕೈಲಾದ ಮಟ್ಟಿಗೆ ಸಹಾಯ ಮಾಡಿದರೆ….. ಇಷ್ಟೂಂತ ಇಲ್ಲ….. ಒಂದು, ಎರಡು, ಐದು, ಹತ್ತು….. ಎಷ್ಟಾದರೂನೂ ಸರಿಯೇ.’ +‘ಮೇಡಂ, ನಾನು ಶಾರದಾ ಮೇಡಂ ವಿಚಾರ ಮಾತಾಡುತ್ತಾ ಇದ್ದೆ..’ +‘ಆ ವಿಚಾರ ಬಿಡಿ. ಅವರ ಚಿಂತೆ ನಮಗಿರಲಿ ನೀವು ಸ್ಕೂಲಿನ ಚಿಂತೆ ಮಾಡಿ ಮಿಸ್ಟರ್ ಗುಪ್ತಾ.’ +‘ಸ್ಕೂಲಿಗೆ ಏನಾದರೂ ಮಾಡೋಣ ಮೇಡಂ…ಆದರೆ ಮಗು ಶಾರದಾ ಮೇಡಂ ಇದ್ದಷ್ಟು ದಿನ ಎವರೆಡಿಯಾಗಿ ಸ್ಕೂಲಿಗೆ ಹೋಗ್ತಾ ಇದ್ದವನು ಈಗ ಎವರಿಡೇ ಪ್ರಾಬ್ಲಂ ಮಾಡ್ತಾ ಇದ್ದಾನೆ……’ +‘ಮಿಸ್ಟರ್ ಗುಪ್ತಾ ಮುಂದಿನ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗಿನಲ್ಲಿ ಟಿಯಾಗೋಣ. ಶಾಲೆಗೆ ಸಹಾಯ ಮಾಡಲು ಒಪ್ಪಿಕೊಂಡದ್ದಕ್ಕೆ ಬಹಳ ಥ್ಯಾಂಕ್ಸ್. ಆ ದಿನ ನಾನು ಹೈಸ್ಕೂಲಿನ ಪ್ರಿನ್ಸಿಪಾಲರನ್ನೂ ನಮ್ಮಲ್ಲಿಗೆ ಬರಹೇಳುತ್ತೇನೆ. ನಮಗೆ ಚೆಕ್ ಆದರೂ ಆದೀತು. ಕ್ಯಾಷೇ ಬೇಕೂಂತ ನಾವೇನೂ ಇನ್‌ಸಿಸ್ಟ್ ಮಾಡೋದಿಲ್ಲ. ಯಾಕೇಂದ್ರೆ ನಾವು ಎಲ್ಲವನ್ನೂ ಖುಲ್ಲಂಖುಲ್ಲಾ ಮಾಡ್ತೇವೆ. ಥಾಂಕ್ಯೂ..’ +ಗುಪ್ತಾಜಿಗೆ ಮಾತುಕತೆ ಹೋದ ದಿಕ್ಕನ್ನು ಕಂಡು ದಿಗ್ಭ್ರಮೆಯಾಯಿತು. ಮಂದೆ ಮಾತೇ ಹೊರಡಲಿಲ್ಲ. ಹೊರಟಿದ್ದರೂ ಪ್ರಯೋಜನವಿರಲಿಲ್ಲ. ಹೆಡ್‌ಮೇಡಂ ಆಗಲೇ ನ್ ಇಟ್ಟಾಗಿತ್ತು. +* +* +* +ಪ್ರತಿಬಾರಿ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗಿಗೆ ಚಕ್ಕರ್ ಕೊಡುತ್ತಿದ್ದ ಗುಪ್ತಾಜಿ ಈ ಬಾರಿ ಹಾಜರಿ ಹಾಕಬೇಕೆಂದು ನಿರ್ಧರಿಸಿದರು. ಮೂಲತಃ ಶಾರದಾ ಮೇಡಂ ಕಥೆ ಏನೆಂದು ತಿಳಿವ ಕುತೂಹಲ ಪತಿ-ಪತ್ನಿಯರೀರ್ವರಿಗೂ ಇತ್ತು. ಅದೇ ಸಮಯಕ್ಕೆ ಹೆಡ್‌ಮೇಡಂ ಜತೆ ಆದ ಮಾತುಕಥೆಯೆಲ್ಲಿ ‘ಕೈಲಾದ ಸಹಾಯ’ ಹೊಕ್ಕಿದ್ದರಿಂದ ಗುಪ್ತಾಜಿ ಹೋಗಬೇಕೋ ಬೇಡವೋ ಎಂಬ ಡೈಲೆಮಾದಲ್ಲಿ ಬಿದ್ದರು. ಕಡೆಗೆ ಶ್ರೀಮತಿ ಮತ್ತು ಶ್ರೀ ಗುಪ್ತಾರ ಕ್ಯಾಂಪುಗಳ ಮಧ್ಯೆ ನಡೆದ ಎರಡು ರೌಂಡಿನ ಮಾತುಕತೆಯ ನಂತರ ಶ್ರೀಮತಿ ಗುಪ್ತಾ ಶಾಲೆಯ ಮೀಟಿಂಗಿಗೆ ಹೋಗಿ, ಉಪಾಯವಾಗಿ ಇತರ ಟೀಚರುಗಳ ಜತೆ ಮಾತಾಡಿ ಶಾರದಾ ಮೇಡಂ ಬಗ್ಗೆ ಮಾಹಿತಿ ಸಂಗ್ರಹಿಸುವುದೆಂದು ನಿರ್ಧಾರವಾಯಿತು. ಈ ಮೀಟಿಂಗಿನಲ್ಲಿ ಶ್ರೀಮತಿ ಗುಪ್ತಾ ಹೆಡ್‌ಮೇಡಂರನ್ನು ಸಾಧ್ಯವಾದ ಮಟ್ಟಿಗೆ ಟಿಯಾಗದಿರುವುದೇ ಒಳ್ಳೆಯದೆಂಬ ವಿಚಾರವನ್ನು ಇಬ್ಬರೂ ಒಪ್ಪಿದರು. ಮೀಟಿಂಗಿನ ನಂತರ ಮುಂದೇನು ಮಾಡಬೇಕೆಂಬ ಬಗ್ಗೆ ರಣನೀತಿ ತಯಾರಿಸಬೇಕೆಂಬ ನಿರ್ಧಾರವನ್ನು ಗಂಡ ಹೆಂಡಿರಿಬ್ಬರೂ ಸಮರ್ಥಿಸಿದರು. +ಶ್ರೀಮತಿ ಗುಪ್ತಾ ಹೆಡ್‌ಮೇಡಂಗೆ ಹೇಗೆ ಖೊಕ್ ಕೊಡಬೇಕೆಂಬುದರ ಬಗ್ಗೆ ಸಾಕಷ್ಟು ಮಾನಸಿಕ ತಯಾರಿ ನಡೆಸಿದ್ದರು. ಇದಕ್ಕೆ ಸ್ಕೂಲಿನ ನಕ್ಷೆ, ಮೀಟಿಂಗಿನಲ್ಲಿ ಯಾರು ಎಲ್ಲಿ ಕುಳಿತುಕೊಳ್ಳುತ್ತಾರೆಂಬ ಪೂರ್ವ ಮಾಹಿತಿ, ಹಾಗೂ ಶಾಲೆಯ ದ್ವಾರಗಳ ನಿಖರ ಸ್ಥಾನಗಳನ್ನು (ಆತಂಕವಾದಿಗಳ ಯೋಜನೆಯ ರೀತಿಯಲ್ಲಿ) ಅಧ್ಯಯನ ಮಾಡಿರಲಿಲ್ಲ ಎಂಬುದಷ್ಟೇ ಸಮಾಧಾನ ಕೊಡುವ ವಿಚಾರವಾಗಿತ್ತು. +ಶಾಲೆಯ ಆವರಣವನ್ನು ಶ್ರೀಮತಿ ಗುಪ್ತಾ ಪ್ರವೇಶಿಸಿದ ಕೂಡಲೇ ಮೊದಲಿಗೆ ಕಂಡವರು ರೋಹಿಣಿ ಮೇಡಂ. ಅವರ ಬಳಿಗೆ ಹೋಗಿ ಶಾರದಾ ಮೇಡಂ ವಿಚಾರ ಕೇಳುವಷ್ಟರಲ್ಲಿಯೇ ರೋಹಿಣಿ ಒಂದು ಚಮತ್ಕಾರದ ಟೂಥ್‌ಪೇಸ್ಟ್ ಜಾಹೀರಾತಿನ ಮುಗುಳ್ನಗೆ ಬೀರಿ, ದ್ರವಾಗಿ ಕೈಕುಲುಕಿದ್ದಷ್ಟೇ ಅಲ್ಲ – ಆ ಕೈಯನ್ನು ಬಿಡದೆಯೇ ದ್ರವಾಗಿ ಹಿಡಿದು ನಿಂತುಬಿಟ್ಟರು. ಟೂಥ್‌ಪೇಸ್ಟ್ ನಗೆಯ ನಂತರದ ಡಿಶುಂ ಡಿಶುಂ ಆಗಲೇ ಪ್ರಾರಂವಾಯಿತೆನ್ನಿಸುತ್ತದೆ. ಶ್ರೀಮತಿ ಗುಪ್ತಾರ ಮುಂದಿನ ಪ್ರಹಾರವಾಗುವುದಕ್ಕೆ ಮೊದಲೇ ರೋಹಿಣಿ ಮೇಡಂ ಬಲಗೈಯಲ್ಲಿ ಮಾಡಿದ್ದ ಪಾಣಿಗ್ರಹಣವನ್ನು ಬಿಟ್ಟುಕೊಡದೆಯೇ ದೂರದಲ್ಲಿ ನಿಂತಿದ್ದ ಹೆಡ್‌ಮೇಡಂ ಕಡೆಗೆ ಎಡಗೈಯಿಂದ ಸನ್ನೆ ಮಾಡಿದರು. ಶಾರದಾ ಮೇಡಂ ವಿಷಯ ಎತ್ತಬೇಕೆನ್ನುವಷ್ಟರಲ್ಲಿಯೇ ಶ್ರೀಮತಿ ಗುಪ್ತಾ ಹೆಡ್‌ಮೇಡಂ ಕೈಯಲ್ಲಿ ಬಂಧಿಯಾಗಿಬಿಟ್ಟಿದ್ದರು. (ಬಹುಶಃ ಶಾಲೆಯವರ ರಣನೀತಿ ಗುಪ್ತಾ ಸಂಸಾರದ ರಣನೀತಿಗಿಂತ ಉತ್ತಮವಾಗಿತ್ತೆನ್ನಿಸುತ್ತದೆ. ಎಷ್ಟಾದರೂ ಇಂಥಹ ಗುಪ್ತಾಗಳನೇಕರ ವಿಶ್ವಾಸದ ಅಡಿಪಾಯದ ಮೇಲೇ ಕಟ್ಟಿದ್ದ ಈ ಶಾಲೆಯ ಹೆಡ್‌ಮೇಡಂಗೆ, ಇಂಥಹ ಎಷ್ಟೋ ತಂದೆತಾಯಿಯರನ್ನು ನುಂಗಿ ನೀರುಕುಡಿದ ಅನುವವಿದ್ದಿರಲೇ ಬೇಕು.) ಆದರೂ ಶ್ರೀಮತಿ ಗುಪ್ತಾರ ತಲೆಯಲ್ಲಿ ಬೇಕಾದಷ್ಟು ವಿಚಾರಗಳು ಥಕಥೈ ಮಾಡುತ್ತಿದ್ದುವು – ಅಷ್ಟು ಸುಲವಾಗಿ ಸೋಲೊಪ್ಪಿ ಶರಣಾದರೆ ಇನ್ನು ಒಂದು ತಿಂಗಳ ಕಾಲ ಶ್ರೀ ಗುಪ್ತಾರ ಕಿಟಿಕಿಟಿ ರಿಸಬೇಕಾಗುತ್ತದೆ. ಸಾಲದ್ದಕ್ಕೆ ಶಾಲೆಗೆ ಹೋಗುವುದಿಲ್ಲವೆಂಬ ತಮ್ಮ ಮಗನ ಪಿರಿಪಿರಿಗೆ ಒಂದು ಉತ್ತರವನ್ನ ಕಂಡುಹಿಡಿಯದೇ ಹೋಗುವುದು ಆತ್ಮಘಾತುಕವೇ ಆಗಬಹುದು! +ಶ್ರೀಮತಿ ಗುಪ್ತಾ ಹೀಗೆ ಯೋಚನೆ ಮಾಡುತ್ತಿರುವಾಗಲೇ ಹೆಡ್‌ಮೇಡಂ – ‘ನೀವು ಬಂದದ್ದು ಬಹಳ ಸಂತೋಷ, ಗುಪ್ತಾಜಿ ಚೆಕ್ ಕಳಿಸುವುದಾಗಿ ಹೇಳಿದ್ದರು….. ಬನ್ನಿ ಬನ್ನಿ ಪ್ರಿನ್ಸಿಪಾಲರ ರೂಮಿಗೆ ಹೋಗೋಣ…’ ಎನ್ನುತ್ತಾ ಬೇರೆ ಮಾತಿಗೆ ತಾವಿಲ್ಲದಂತೆ ಶ್ರೀಮತಿ ಗುಪ್ತಾರನ್ನು ಒಳಕ್ಕೆ ಒಯ್ದೇ ಬಿಟ್ಟರು. +ಪ್ರಿನ್ಸಿಪಾಲರ ಕೋಣೆಗೆ ಹೊಕ್ಕ ಕೂಡಲೇ ಹೆಡ್‌ಮೇಡಂ ಮೊದಲು ಕೂಲ್‌ಡ್ರಿಂಕಿಗೆ ಆರ್ಡರ್ ಮಾಡಿದರು. ನಂತರ ಶ್ರೀಮತಿ ಗುಪ್ತಾರನ್ನು ಪ್ರಿನ್ಸಿಪಾಲರಿಗೆ ಪರಿಚಯ ಮಾಡಿ – ‘ಮಹಾ ಉದಾರಿಗಳು. ನಮ್ಮ ಹೊಸ ಶಾಲೆಯ ಪ್ರಾಜೆಕ್ಟ್ +ವಿಷಯ ಕೇಳಿದ ಕೂಡಲೇ ಖುಷಿಯಾಗಿ ಹತ್ತು ಸಾವಿರ ಡೊನೇಟ್ ಮಾಡ್ತೀವೀಂತ ತಾವಾಗಿಯೇ ಹೇಳಿದರು. ಈವತ್ತು ಚೆಕ್ ತಂದಿದ್ದಾರೆ…’ +ಶ್ರೀಮತಿ ಗುಪ್ತಾ ಈ ಪ್ರಹಾರಕ್ಕೆ ತಯಾರಾಗಿಯೇ ಇರಲಿಲ್ಲ. ಗುಪ್ತಾ ದಂಪತಿಗಳು ಎರಡು ಗಂಟೆಗಳ ಕಾಲ ತಲೆಗಳನ್ನೊಂದುಗೂಡಿಸಿ ಪೋಣಿಸಿದ್ದ ಸ್ಟ್ರಾಟಜಿಯೆಲ್ಲಾ ತಲೆಕೆಳಗಾಗಿ ಏನು ಹೇಳಬೇಕೆಂದು ತೋಚದೇ ಸೀರೆ ಸೆರಗಿನ ಗಂಟು ಹಾಕಿ ಬಿಚ್ಚ ತೊಡಗಿದರು. ಕಡೆಗೆ ಸಂಳಿಸಿಕೊಂಡು, ಪುಟ್ಟ ಮರುಪ್ರಹಾರ ಮಾಡಿದರು…. ‘ಹತ್ತು ಸಾವಿರಾಂತ ಕಮಿಟ್ ಮಾಡಿರಲಿಲ್ಲ…’ ಇಷ್ಟು ಹೇಳುವಷ್ಟರಲ್ಲಿಯೇ ಹೆಡ್‌ಮೇಡಂ ಮತ್ತೆ ಎರಡನೆಯ ಸುತ್ತಿನ ಪ್ರಹಾರ ಮಾಡಿದರು – ‘ಪರವಾಗಿಲ್ಲ ಪರವಾಗಿಲ್ಲ.. ಒಂದೆರಡು ಸಾವಿರ ಆಚೀಚೆಯಾದರೂ ಅಡ್ಡಿಯಿಲ್ಲ. ನಿಮ್ಮಂತಹ ಪೇರೆಂಟ್ಸ್ ಈ ಯೋಜನೆಯನ್ನ ಪ್ರೋತ್ಸಾಹಿಸುತ್ತೀರೆಂಬುದೇ ನಮಗೆ ತುಂಬಾ ಖುಷಿ ನೀಡಿವ ವಿಚಾರ. ಎಲ್ಲಕ್ಕಿಂತ ದೊಡ್ಡವಿಚಾರವೆಂದರೆ, ಇವರು ಚೆಕ್ಕನ್ನಂತೂ ತಂದಿದ್ದಾರೆ….’ ಎಂದರು. ಶ್ರೀಮತಿ ಗುಪ್ತಾರಿಗೆ ಮಿ ಬಿರಿಯಬಾರದೇ ಅನ್ನಿಸಿತು. ಈ ಗಂಡನೆಂಬ ಪ್ರಾಣಿ ನಲ್ಲಿ ಏನೇನು ವಟಗುಟ್ಟಿ ತನ್ನನ್ನು ಇಲ್ಲಿ ಸಿಕ್ಕಿಹಾಕುತ್ತಿದ್ದಾನೋ ತಿಳಿಯದೇ, ಗಂಡನಿಗೆ ಹಿಡಿಶಾಪ ಹಾಕಿದರು. ಬಹುಷಃ ಬಾಯಿಗೆ ಬಂದದ್ದೆಲ್ಲಾ ಮಾತಾಡಿದ್ದರಿಂದಲೇ ಆತ ಬರದೇ ತನ್ನನ್ನು ಸಾಗಹಾಕಿದ್ದರಬೇಕೆಂದು ಅನ್ನಿಸಿ ಒಂದು ಕ್ಷಣದ ಮಟ್ಟಿಗೆ ಆತನ ಕುತ್ತಿಗೆ ಹಿಸುಕಿ ತಾನು ವಿಧವೆಯಾಗುವುದೇ ಒಳ್ಳೆಯದೆಂಬ ವಿಚಾರ ಬಂದರೂ, ತಮ್ಮನ್ನು ತಾವೇ ಕಂಟ್ರೋಲ್ ಮಾಡಿಕೊಂಡರು. ಗಂಡ ಅಲ್ಲಿ ಇರಲಿಲ್ಲವಾದ್ದರಿಂದ ಕಂಟ್ರೋಲ್ ಮಾಡಿಕೊಳ್ಳದೇ ಬೇರೆ ವಿಧಿಯಿರಲಿಲ್ಲ. +‘ಇಲ್ಲ ನಿಜ ಹೇಳಬೇಕೆಂದರೆ ನಾನು ಚೆಕ್ ತಂದಿಲ್ಲ.. ಯಾಕೆಂದರೆ ಈ ಬಗ್ಗೆ ಅವರು ಸ್ಪಷ್ಟವಾಗಿ ನನಗೆ ಏನೂ ಹೇಳಿರಲಿಲ್ಲ.. ಜತೆಗೆ ಈವತ್ತು ಇಪ್ಪತ್ತನಾಲ್ಕನೇ ತಾರೀಖು… ತಿಂಗಳ ನಾಲ್ಕನೇ ವಾರ, ಎಷ್ಟೇ ಆದರೂ ನಾವೂ ಸ್ಯಾಲರೀಡ್ ಮಿಡಲ್ ಕ್ಲಾಸ್ ನೋಡಿ, ನಿಮಗೆ ನಮ್ಮ ತೊಂದರೆ ಗೊತ್ತೇ ಇರುತ್ತೆ.. ನಿಮಗೆ ತಿಳಿಯದ್ದೇನು……’ +ಇಷ್ಟು ಮಾತು ಹೇಳುವಷ್ಟರಲ್ಲಿಯೇ ಪ್ರಿನ್ಸಿಪಾಲರು ಸ್ವಲ್ಪ ಹುಷಾರಾದರು. ಶ್ರೀಮತಿ ಗುಪ್ತಾ ಈ ಲಾವಾದೇವಿಯಲ್ಲಿ ಮೇಲುಗೈ ಪಡೆದುಬಿಡಬಹುದೆಂಬ ಭೀತಿಯ ಆತುರದಲ್ಲಿಯೇ – ‘ಅರೇ ಅದಕ್ಕೇನಂತೆ, ಚೆಕ್ ಬರೆದಿಲ್ಲ, ಅಷ್ಟೇ ತಾನೆ, ಹೇಗೂ ಫೀಸ್ ಕಟ್ಟಲು ಚೆಕ್‌ಬುಕ್ ತಂದೇ ಇರುತ್ತೀರಿ, ಈ ಟರ್ಮಿನ ಫೀಸಿನ ಜತೆಗೇ ಬರೆದು ಕೊಟ್ಟುಬಿಡಿ. ನಾವು ಬ್ಯಾಂಕಿಗೆ ಎರಡನೇ ತಾರೀಕಿಗೇ ಹಾಕಿದರಾಯಿತು. ಅಥವಾ ಪೊಸ್ಟ್ ಡೇಟೆಡ್ ಆದರೂ ಆದೀತು….’ ಎನ್ನುತ್ತಾ ಹೊಸಧಾಳಿಯ ತಯಾರಿ ನಡೆಸಿದರು. ಶ್ರೀಮತಿ ಗುಪ್ತಾಗೆ ಈ ಎಲ್ಲ ಮಾತುಕತೆ ಪಡೆಯುತ್ತಿರುವ ದಿಕ್ಕಿನ ಬಗೆಗೆ ದಿಗ್ಭ್ರಮೆಯಾಯಿತು. ಶಾರದಾ ಮೇಡಂ ವಿಷಯ ತಿಳಿಯದಿದ್ದರೂ ನಡೆದೀತು, ಆದರೆ ಇಲ್ಲಿಂದ ಹೊರಬಿದ್ದರೆ ಸಾಕು ಅನ್ನುವ ಸ್ಥಿತಿಗೆ ಆಕೆ ಬಂದುಬಿಟ್ಟಿದ್ದರು. ಈಗ ಏನು ಮಾಡಬೇಕು, ಹೇಗೆ ಈ ಪೀಕಲಾಟದಿಂದ ಹೊರಬೀಳಬೇಕು ಅಂತ ಯೋಚಿಸುತ್ತಿರುವಷ್ಟರಲ್ಲಿಯೇ – ಪ್ರಿನ್ಸಿಪಾಲ್ ಮತ್ತು ಹೆಡ್‌ಮೇಡಂ ತಿಂಗಳ ಕೊನೆಯವಾರದಲ್ಲಿ ಪೇರೆಂಟ್ಸ್-ಟೀಚರ್‍ಸ್ ಮೀಟಿಂಗ್ ಇಡುವುದರ ಔಚಿತ್ಯದ ಬಗ್ಗೆ ಮತ್ತು ತಿಂಗಳ ಮೊದಲ ವಾರಕ್ಕೆ ಇದ್ದನ್ನು ಮುಂದೂಡುವುದರಿಂದ ಆಗಬಹುದಾದ ಯಿದೆಯ ಬಗ್ಗೆ ತಮ್ಮ ತಮ್ಮಲ್ಲೇ ಮಾತಾಡಿಕೊಳ್ಳತೊಡಗಿದ್ದರು. +ಕಡೆಗೂ ಶ್ರೀಮತಿ ಗುಪ್ತಾ ಸುಲವಾಗಿ ಇದರಿಂದ ಹೊರಬೀಳಲು ಆಗಲೇ ಇಲ್ಲ. ಚೆಕ್ ಇಲ್ಲ ಅಂದಾದ ಮೇಲೆ, ಕ್ರಡಿಟ್ ಕಾರ್ಡ್ ಆದರೂ ಆದೀತು ಅಂತ ಪ್ರಿನ್ಸಿಪಾಲರು ಹೇಳಿದರು… ಶಾಲೆಯಲ್ಲೂ ಈ ಕಾರ್ಡುಗಳು ಹೊಕ್ಕಿರಬಹುದೆಂದು ಯೋಚಿಸಿರದಿದ್ದ ಶ್ರೀಮತಿ ಗುಪ್ತಾಗೆ ನಿಜಕ್ಕೂ ತಲೆತಿರುಗಿತು. ಕಾರ್ಡನ್ನೂ ತಂದಿಲ್ಲವೆಂಬ ಸುಳ್ಳು ಹೇಳಿದಾಗ – ಎಲ್ಲರೂ ಒಂದು ತುರ್ತು ಒಪ್ಪಂದ ಮಾಡಿಕೊಳ್ಳುವುದು ಅನಿವಾರ್ಯ ಅಂತ ಪ್ರಿನ್ಸಿಪಾಲ್-ಹೆಡ್‌ಮೇಡಂ ದ್ವಯರು ಬಲವಂತ ಮಾಡಿದರು. ಆ ಒಪ್ಪಂದದ ಪ್ರಕಾರ, ಇಂದಿನ ಸಯಲ್ಲಿ ಗುಪ್ತಾ ಸಂಸಾರ ಶಾಲೆಗೆ ಇಪ್ಪತ್ತೈದು ಸಾವಿರ ರೂಪಾಯಿಗಳ ಧನಸಹಾಯ ಮಾಡುವುದಾಗಿ ಘೋಷಣೆ ಮಾಡುವುದೆಂದೂ, ಗುಪ್ತಾ ಸಂಸಾರ ಹೊಸ ಶಾಲೆಗೆ ಕನಿಷ್ಟ ೫೦೦೦ ರೂಪಾಯಾದರೂ ದೇಣಿಗೆ ನೀಡಬೇಕೆಂದೂ, ಇತರ ಮಾತಾಪಿತೃಗಳಿಗೆ ಈ ವಿಚಾರ ತಿಳಿಯಬಾರದೆಂದೂ ಒಪ್ಪಂದವಾದ ನಂತರವೇ ಸ ಪ್ರಾರಂವಾಯಿತು. ಕಡೆಗೂ ಶ್ರೀಮತಿ ಗುಪ್ತಾ ಅಲ್ಲಿಂದ ತಪ್ಪಿಸಿ ಹೊರಬೀಳುವಷ್ಟರಲ್ಲಿ ಆಕೆ ಬಂದ ಉದ್ದೇಶವೇ ತಲೆಕೆಳಗಾಗಿತ್ತು!! ಮತ್ತು ಆಕೆ ಹೊರಡುವಷ್ಟರಲ್ಲಿ ಹೆಡ್‌ಮೇಡಂ ಆರ್ಡರ್ ಮಾಡಿದ್ದ ಶ್ರೀಮತಿ ಗುಪ್ತಾರ ಕೂಲ್ ಡ್ರಿಂಕು ಬರಲೇ ಇಲ್ಲ. ಈ ಎಲ್ಲ ಗಲಯ ಮಧ್ಯೆ ಶಾರದಾ ಮೇಡಂ ಆಬ್ಸಂಟಾಗೇ ಇದ್ದರು. ಯಾರೂ ಆಕೆಯ ಬಗ್ಗೆ ಚಕಾರವೆತ್ತಿರಲಿಲ್ಲ!! +* +* +* +ಮಧುಸೂಧನ ಮೆಹತಾ ಮಾಡಲು ಏನೂ ಕೆಲಸವಿಲ್ಲದವನಾಗಿ ದಯಾಕರನ ಕೋಣೆಗೆ ಹೋದ. ಆಫೀಸಿನಲ್ಲಿ ಯಾರಿಗಾದರೂ ಟೈಂಪಾಸ್ ಮಾಡಬೇಕು ಅನ್ನಸಿದಾಗೆಲ್ಲಾ ಶುವಾಗಿ ಸೋಪು ಹಾಕಿ ಕೈತೊಳೆದು ದಯಾಕರ ಮೆನನ್ ರೂಮಿಗೆ ಹೋಗುತ್ತಿದ್ದರು. ದಯಾಕರನಿಗೆ ಇದ್ದ ಅನೇಕ ಆಸಕ್ತಿಗಳಲ್ಲಿ ಜನರ ಕೈನೋಡುವುದೂ ಒಂದು ಆಸಕ್ತಿಯಾಗಿತ್ತು. ಯಾರಾದರೂ ತನ್ನ ಕೋಣೆಗೆ ಬಂದು ಕೈ ತೋರಿಸಿದರೆ – ಕೈ ಹಿಡಿದು -ಮುಖ ನೋಡಿ, ಗೆರೆಗಳನ್ನು ತಾಳೆಹಾಕಿ ಏನಾದರೂ ಗಮ್ಮತ್ತಾದ ವಿಷಯ ಹೇಳುತ್ತಿದ್ದ. ಕೆಲವೊಂದು ಬಾರಿ ಅವನು ಹೇಳಿದ್ದು ನಡೆಯುತ್ತಿತ್ತು. ಕೆಲವಷ್ಟು ಜನ ತುಂಟತನಕ್ಕೆಂದೇ ‘ನಾನು ಮನೆ ಕೊಂಡುಕೊಳ್ಳುವ ಯೋಗ ಇದೆಯೋ ಹೇಗೆ, ಹೇಳಿ?’ ಎಂದು ಕೇಳುವರು. ಅಕಸ್ಮಾತ್ ದಯಾಕರ ಇಲ್ಲವೆಂದರೆ, ತಕ್ಷಣ – ‘ನಿನ್ನೆಯಷ್ಟೇ ಹೊಸ ಟಿಗೆ ಮುಂಗಡ ಹಣ ಕಟ್ಟಿ ಬಂದೆ.’ ಎಂದು ಅವನ ಕಾಲೆಳೆಯುತ್ತಿದ್ದರು. ದಯಾಕರ ಅದಕ್ಕೆ ಸರಿಯಾಗಿ ಏನಾದರೂ ಉತ್ತರ ತಯಾರಿಡುತ್ತಿದ್ದ. ಲೋನೆಷ್ಟು ತೆಗೊಂಡಿರಿ?.. ನೋಡಿ, ಈ ರೇಖೆ ದೊಡ್ಡ ಸಾಲವನ್ನು ಪ್ರತಿನಿಧಿಸುತ್ತದೆ. ಮನೆಯ ಲಕ್ಷಣ ನಿಮ್ಮ ಕೈಯಲ್ಲಿ ಇದೆಯಾಗಲೀ, ಆ ಮನೆಯಲ್ಲಿ ವಾಸಿಸುವ ಯೋಗ ಈ ಕ್ಷಣಕ್ಕೆ ಇಲ್ಲವಾದ್ದರಿಂದ ಈ ಗೃಹರೇಖೆ ದಿಕ್ಕು ತೋರಿಸುತ್ತಿಲ್ಲ ಎಂದೆಲ್ಲಾ ಹೇಳಿ ಬಚಾವಾಗುತ್ತಿದ್ದ. +ಈಗ ಮಧುಸೂಧನ ಮೆಹತಾ ತನ್ನ ಕೋಣೆ ಹೊಕ್ಕಾಗ, ಅವನು ತನ್ನ ಕೈ ತೋರಿಸಲೆಂದೇ ಬಂದಿದ್ದಾನೆಂದು ದಯಾಕರನಿಗೆ ತಿಳಿಯಿತು. ದಯಾಕರ ಮಧುಸೂಧನನ ಕೈನೋಡಿ, ಸ್ವಲ್ಪ ಅತ್ತ ಇತ್ತ ಯೋಚನೆ ಮಾಡಿ.. ‘ನಿನಗೆ ಗೃಹಯೋಗ ಇದೆ. ಒಂದೆರಡು ವರ್ಷಗಳಲ್ಲಿ ಎಲ್ಲಿಂದಾದರೂ ದೊಡ್ಡ ಮೊತ್ತದ ದುಡ್ಡು ಬಂದು ನೀನು ಮನೆ ಕಟ್ಟುತ್ತೀಯ.’ ಎಂದ. ಮಧುಸೂಧನನಿಗೆ ದಯಾಕರನ ವಿಷ್ಯದ ಬಗ್ಗೆ ಸ್ವಲ್ಪ ಹೆಚ್ಚಿನ ನಂಬುಗೆಯೇ ಇತ್ತು. ಹಿಂದೆ ಅವನು ಹೇಳಿದ್ದ ಒಂದೆರಡು ಘಟನೆಗಳು ತನ್ನ ಜೀವನದಲ್ಲಿ ನಿಜಕ್ಕೂ ಘಟಿಸಿದ್ದುವು. ಸ್ವಲ್ಪ ಹೊತ್ತು ಇಬ್ಬರೂ ಕಾಡು ಹರಟೆ ಹೊಡೆಯುತ್ತಿದ್ದರೂ ದಯಾಕರನ ದೃಷ್ಟಿ ಮಧುಸೂಧನನ ಕೈರೇಖೆಯ ಮೇಲೆಯೇ ಓಡಾಡುತ್ತಿತ್ತು. ಇನ್ನೇನು ಮಧುಸೂಧನ ಅಲ್ಲಿಂದ ಹೊರಡಲು ಏಳಬೇಕೆನ್ನುವಷ್ಟರಲ್ಲಿ ದಯಾಕರ ಗುಪ್ತವಾಗಿ ಮಧುಸೂಧನನ ಕೈಯೆಳೆದು ಹೇಳಿದ: +‘ಸ್ವಲ್ಪ ಹುಷಾರಾಗಿರು ಮಧು.. ನನಗನ್ನಿಸುತ್ತೆ – ಈ ಸ್ವಲ್ಪದಿನಗಳಲ್ಲೇ ಯು ಆರ್ ಗೋಯಿಂಗ್ ಟು ಹ್ಯಾವ್ ಎ ನೈಸ್ ಫ್ಲಿಂಗ್. ಯಾವುದಾದರೂ ಹುಡುಗಿ ಕಂಡರೆ ಸ್ವಲ್ಪ ಎಚ್ಚರದಿಂದಿರುವುದು ವಾಸಿ. ಹ್ಯಾವ್ ಎ ನೈಸ್ ಟೈಮ್.’ +ಅಲ್ಲಿಂದ ಏಳಬೇಕೆನ್ನುವಷ್ಟರಲ್ಲಿ ದಯಾಕರ ಎಸೆದ ಅಣುಬಾಂಬು ಮಧುವನ್ನು ವಿಚಲಿತಗೊಳಿಸಿತು. ಮಧುಸೂಧನ ನಲವತ್ತರ ಹೊಸ್ತಿಲಲ್ಲಿ ನಿಂತಿದ್ದ ಯುವಕನೂ ಅಲ್ಲದ ಮುದುಕನೂ ಅಲ್ಲದ ವಿಚಿತ್ರ ಪರಿಸ್ಥಿತಿಯಲ್ಲಿದ್ದ ಮಧ್ಯವಯಸ್ಕ. ನಾಲ್ಕು ವರ್ಷಗಳ ಕೆಳಗೆ ರೈಲು ಅಪಘಾತದಲ್ಲಿ ಅವನ ಹೆಂಡತಿ ತೀರಿಕೊಂಡಿದ್ದಳು. ಆ ಪ್ರಯಾಣದಲ್ಲಿ ಅವನೂ ತನ್ನ ಒಂದು ವರ್ಷದ ಮಗಳೂ ಪವಾಡಸದೃಶವಾಗಿ ತಪ್ಪಿಸಿಕೊಂಡಿದ್ದರು. ಅವನು ಕಾಲು ಮುರಿದು ಕೆಲವು ದಿನ ಆಸ್ಪತ್ತ್ರೆಯಲ್ಲಿದ್ದ. ಆದರೆ ಮಗಳಿಗೇನೂ ಆಗಿಯೇ ಇರಲಿಲ್ಲ. ಈ ಎಲ್ಲ ಗಲಾಟೆಯಲ್ಲಿ ಅವನಿಗೆ ಹೆಂಡತಿ ತೀರಿಕೊಂಡ ಸುದ್ದಿ ಮುಟ್ಟಿದರೂ, ಅವಳ ದೇಹ ನೋಡಲು ಸಿಕ್ಕಿರಲಿಲ್ಲ. ಹೆಚ್ಚಿನ ಜನರಿಗೆ ತನ್ನ ಈ ಹಿನ್ನೆಲೆ ಗೊತ್ತಿರಲಿಲ್ಲ. ಸ್ವಂತ ವ್ಯಾಪಾರ ಮಾಡುತ್ತಿದ್ದ ಮಧುವಿಗೆ, ತಾನು ಅತಿಯಾಗಿ ಪ್ರೀತಿಸುತ್ತಿದ್ದ ತನ್ನ ಹೆಂಡತಿ ತೀರಿಕೊಂಡಾಗಿನಿಂದಲೂ ಇದ್ದ ಆಸಕ್ತಿ ಒಂದೇ. ಆಗ ಒಂದು ವರ್ಷದವಳಾಗಿದ್ದ ಈಗ ಐದನೇ ವಯಸ್ಸಿಗೆ ಕಾಲಿಡುತ್ತಿರುವ ತನ್ನ ಮಗಳನ್ನು ಬೆಳೆಸಿ ಒಂದು ಘಟ್ಟ ತಲುಪಿಸುವುದೇ ಜೀವನೋದ್ದೇಶವಾಗಿಬಿಟ್ಟಿತ್ತು. ಅವಳನ್ನು ನೋಡಿಕೊಳ್ಳಲು ಸಾಕಷ್ಟು ಸಮಯ ವ್ಯಯಿಸಬೇಕಾದ್ದರಿಂದ, ಸ್ವಂತ ವ್ಯಾಪಾರವಿದ್ದರೆ ಓಡಾಟ ಹೆಚ್ಚಾಗಿ ಅವಳ ಜತೆ ಸಮಯ ಕಳೆಯಲು ಸಾಧ್ಯವಾಗದ್ದರಿಂದ ಈ ಸಂಸ್ಥೆಯಲ್ಲಿ ಅಕೌಂಟ್ಸ್ ವಿಗದಲ್ಲಿ ಕೆಲಸಕ್ಕೆ ಸೇರಿದ್ದ. ಹಳೆಯ ಊರು, ಹಳೆಯ ಜನರ ನಡುವೆ ಮನಸ್ಸಾಗದೇ, ಮುಂಬಯಿಗೆ ಬಂದು ಅನಾಮಿಕವಾದ ಜೀವನ ನಡೆಸುತ್ತಿದ್ದ. +ರೈಲು ಅಪಘಾತದ ನಂತರ ಮಧುವಿನ ಜೀವನ ದೃಷ್ಟಿಯಲ್ಲಿ ಮಹತ್ವದ ಪರಿವರ್ತನೆಯಾಗಿತ್ತು. ಜೀವನವನ್ನ ಲೈಟಾಗಿ ತೆಗೆದುಕೊಳ್ಳಬೇಕು, ಮಹಾ ಗಾಂಭೀರ್ಯದಿಂದ ಸಾಧಿಸುವುದೇನೂ ಇಲ್ಲ ಅಂತ ನಿರ್ಧರಿಸಿದ್ದರಿಂದ, ಎಷ್ಟೆಲ್ಲಾ ದುಃಖ ಕಂಡರೂ, ಯಾವಾಗಲೂ ನಗುನಗುತ್ತಾ, ಚಟಾಕಿ ಹಾರಿಸುತ್ತಾ ಉಡಾಯಿಂದ ಇರುತ್ತಿದ್ದ. ಮಗಳಿಗೆ ಯಾವ ದುಃಖದ ಸೋಂಕೂ ಇರಬಾರದೆಂದು ಅವನು ಹೀಗೆ ವರ್ತಿಸುತ್ತಿದ್ದ ಎನ್ನಿಸುತ್ತದೆ. ಎಂದೂ ಮರುಮದುವೆಯ, ಅಥವಾ ಬೇರಾವ ಉದ್ದ-ಅಥವಾ-ಅಡ್ಡ ದಾರಿಯ ಬಗ್ಗೆ ಯೋಚಿಸಿಯೇ ಇಲ್ಲದ ಮಧುವಿಗೆ ಇದ್ದಕ್ಕಿದ್ದಂತೆ ಈ ಹೊಸ ಸಾಧ್ಯತೆ ಹೊಸದೊಂದು ಬಾಗಿಲನ್ನು ತೆರೆದಂತೆನ್ನಿಸಿ, ಅವನು ಆಗಷ್ಟೇ ಪ್ರೇಮಜಾಲದಲ್ಲಿ ಸಿಕ್ಕಿಬಿದ್ದ ಯುವಕನಂತೆ ಪುಳಕಿತಗೊಂಡ. ಆ ದಿನದಿಂದ, ಆ ಕ್ಷಣದಿಂದ ಯಾವ ಯುವತಿ ಕಂಡರೂ, ಮಧುಸೂಧನ ಅವಳ ಮುಖ ನೋಡುವುದನ್ನ ಬಿಟ್ಟು ತನ್ನ ಕೈರೇಖೆ ನೋಡಿಕೊಳ್ಳುತ್ತಿದ್ದ. ’ನನ್ನ ಕೈ ರೇಖೆಯಲ್ಲಿರುವ ಹುಡುಗಿ ಬಹುಶಃ ಇವಳಾಗಿರಬಹುದೇ………?’ +* +* +* +ಪೆಟಲ್ಸ್ ಶಾಲೆಯ ಹೆಡ್‌ಮೇಡಂಗೆ ಶಾರದಾ ನಾಪತ್ತೆಯಾಗಿದ್ದದ್ದು ನಿಜಕ್ಕೂ ಪೀಕಲಾಟಕ್ಕೆ ಬಂದಿತ್ತು. ಕೆ.ಜಿ. ಸೆಕ್ಷನ್‌ಗೆ ಅನಿವಾರ್ಯ ಗವಾಗಿ ಶಾರದಾ ಬೆಳೆದು ಬಿಟ್ಟಿದ್ದಳು. ಮೂರು ವರ್ಷಗಳ ಹಿಂದೆ ಈ ಮುವ್ವತ್ತರ ಯುವತಿಯನ್ನ ಹೆಡ್‌ಮೇಡಂ ಖುದ್ದಾಗಿ ಸಂದರ್ಶನ ಮಾಡಿ ಶಾಲೆಯಲ್ಲಿ ಕೆಲಸ ಕೊಟ್ಟಿದ್ದರು. ಶಾರದಾ ಎಂ.ಎ ಮುಗಿಸಿದ್ದರೂ ಬಿ.ಎಡ್. ಮಾಡಿರಲಿಲ್ಲವಾದ್ದರಿಂದ ಹೈಸ್ಕೂಲಿಗೆ ಆಕೆಯನ್ನು ತೆಗೆದುಕೊಳ್ಳವುದು ನಿಯಮದ ಪ್ರಕಾರ ಕಷ್ಟವಾಗಿತ್ತು. ಜೊತೆಗೆ ಆಕೆಗೆ ಹಿಂದೆ ಸ್ಕೂಲಿನಲ್ಲಿ ಪಾಠಮಾಡಿದ ಅನುವವೂ ಇರಲಿಲ್ಲ. ಆದರೆ ಅಲ್ಲಿದ್ದುಕೊಂಡೇ ಅಣ್ಣಾಮಲೈ ಯುನಿವರ್ಸಿಟಿಯ ಕರಸ್ಪಾಂಡೆನ್ಸ್ ಬಿ.ಎಡ್ ಮಾಡಿದಲ್ಲಿ ಹೈಸ್ಕೂಲಿಗೆ ಬಡ್ತಿ ನೀಡುವುದಾಗಿ ಹೇಳಿದ್ದರೂ ಶಾರದಾ ಆ ಬಗ್ಗೆ ಆಸಕ್ತಿಯನ್ನೇನೂ ತೋರಿರಲಿಲ್ಲ. ಪುಟ್ಟ ಮಕ್ಕಳ ಮಧ್ಯೆ ನಿರಾತಂಕವಾಗಿ ಕಾಲ ಕಳೆಯಬಹುದೆಂದು ಆಕೆ ಹೇಳಿದ್ದಂತೆ ನೆನಪು. ಸ್ವಲ್ಪ ಕಾಲ ಕಳೆಯುವುದರಲ್ಲಿ ಆಕೆ ಮಕ್ಕಳ ಜತೆ ಹೊಂದಿಕೊಂಡು ಹೋದದ್ದನ್ನ ಕಂಡು ಮತ್ತೆ ಯಾರೂ ಶಾರದಾ ಮೇಡಂ ಹೈಸ್ಕೂಲಿನ ಟೀಚರಾಗುವ ವಿಚಾರವನ್ನ ಎತ್ತಿಯೇ ಇರಲಿಲ್ಲ. ಅಂದಿನಿಂದ ಇತ್ತೀಚಿನವರೆಗೂ ಶಾರದಾ ಎಂದೂ ಹೇಳದೇ ಕ್ಲಾಸ್ ತಪ್ಪಿಸಿದ್ದಿಲ್ಲ. ಈಗ ಎರಡುವಾರಗಳಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆಂದರೆ ಏನೋ ಬಹಳ ವಿಚಿತ್ರವೆನ್ನಿಸಿತು. +ಹೆಡ್‌ಮೇಡಂಗೆ ತಿಳಿದಂತೆ ಶಾರದಾ ತಾನು ಬಾಡಿಗೆಗೆ ಹಿಡಿದಿದ್ದ ಟಿನಲ್ಲಿ ಒಂಟಿಯಾಗಿ ಇದ್ದಳು. ಅವಳ ಹಿನ್ನೆಲೆಯ ಬಗ್ಗೆ ಯಾರಿಗೂ ಹೆಚ್ಚು ತಿಳಿದಿರಲಿಲ್ಲ. ಬಹಳಷ್ಟು ಮಟ್ಟಿಗೆ ತನ್ನ ಪಾಡಿಗೆ ತಾನಿರುತ್ತಿದ್ದುದರಿಂದ, ಯಾರೂ ಅವಳಲ್ಲಿ ಅವಶ್ಯಕತೆಗಿಂತ ಹೆಚ್ಚಿನ ಆಸಕ್ತಿ ತೋರುತ್ತಿರಲಿಲ್ಲ. ‘ಮಕ್ಕಳಿಗೆ ನನ್ನ ಖಾಸಗೀ ಜೀವನದ ಬಗ್ಗೆ ಅನಾವಶ್ಯಕ ಆಸಕ್ತಿಯಿಲ್ಲ ಆದ್ದರಿಂದಲೇ ಮಕ್ಕಳೆಂದರೆ ನನಗೆ ಬಹಳ ಇಷ್ಟ.’ ಅಂತ ಅವಳು ಒಮ್ಮೆ ಹೇಳಿದ್ದದ್ದು ಹೆಡ್‌ಮೇಡಂ ನೆನಪಿಗೆ ಬಂತು. ತನಗೆ ಮದುವೆಯಾಗಿದೆಯೆಂದು ಶಾರದಾ ಒಮ್ಮೆ ಹೇಳಿದ್ದಂತೆ ನೆನಪು. ಆದರೂ ಹೆಡ್‌ಮೇಡಂಗೆ ಆ ಬಗ್ಗೆ ಖಾತ್ರಿಯಿರಲಿಲ್ಲ. ಆದರೆ ಈಗ ಒಂಟಿಯಾಗಿ ಯಾಕೆ ಜೀವನ ಮಾಡುತ್ತಿದ್ದಳೆಂಬುದರ ಬಗ್ಗೆ ಯಾರಿಗೂ ಮಾಹಿತಿಯಿರಲಿಲ್ಲ. ಬಹುಶಃ ಡೈವೋರ್ಸ್ ಆಗಿ, ಆ ಬಗ್ಗೆ ಮಾತಾಡಲು ಇಷ್ಟ ಪಡದೇ ಇರಬಹುದು ಅಂತ ಜನ ಊಹಾಪೋಹ ಮಾಡಿದ್ದರು. ಬಹುಶಃ ಅದೇ ಕಾರಣವಾಗಿ ಅವಳು ತನ್ನ ಹಿಂದಿನ ಊರಾದ ಅಹಮದಾಬಾದಿನಿಂದ ಇಲ್ಲಿಗೆ ಬಂದಿದ್ದಿರಬೇಕು. +ಶಾರದಾ ಮೇಡಂ ಬಗ್ಗೆ ಮಕ್ಕಳಿಗಿರುವ ಪ್ರೀತಿ ಅಭಿಮಾನದ ಬಗ್ಗೆ ಸಾಕಷ್ಟು ಕಥಾವಳಿಗಳು ಆ ಶಾಲೆಯಲ್ಲಿ ಪ್ರತೀತಿಯಲ್ಲಿತ್ತು. ಎಲ್ಲಕ್ಕಿಂತ ಹಚ್ಚಿನ ಪ್ರತೀತಿಯಲ್ಲಿದ್ದ ಕಥೆಯೆಂದರೆ ಕುಸುಮಾಳದ್ದು. ಅದು ಆದದ್ದು ಹೀಗೆ. ಎರಡು ವರ್ಷಗಳ ಹಿಂದೆ ಆಗ ಎರಡನೆಯ ಇಯತ್ತೆಯಲ್ಲಿದ್ದ ಕುಸುಮಾ ಎಂಬ ಒಂದು ಪುಟ್ಟ ಹುಡುಗಿ ತನ್ನ ಪರೀಕ್ಷೆಯ ಉತ್ತರ ಪತ್ರಿಕೆಯಲ್ಲಿ ಏನೂ ಬರೆಯದೇ ಖಾಲಿ ಹಾಳೆ ಕೊಟ್ಟಿದ್ದಳು. ಸಾಮಾನ್ಯವಾಗಿ ಓದು ಬರಹದಲ್ಲಿ ಮುಂದಿದ್ದ ಇವಳು ಹೀಗೆ ಖಾಲಿ ಹಾಳೆ ಕೊಟ್ಟದ್ದು ಆಶ್ಟರ್ಯಕರವಾಗಿದ್ದು ಹೆಡ್‌ಮೇಡಂವರೆಗೂ ವಿಷಯ ಹೋಯಿತು. ಆಕೆ ಆ ಹುಡುಗಿಯನ್ನ ಕರೆದು ‘ಯಾಕೆ ಹೀಗೆ ಖಾಲಿ ಹಾಳೆ ಕೊಟ್ಟಿದ್ದೀಯ?’ ಅಂತ ಕೇಳಿದಾಗ – ‘ಇಲ್ಲ ಮೇಡಂ, ನಾನು ಲಾಗಬೇಕು, ಪಾಸಾದರೆ ಥರ್ಢ್ ಸ್ಟಾಂಡರ್ಡ್‌ನಲ್ಲಿ ಶಾರದಾ ಮೇಡಂ ಇರೊಲ್ಲ.. ಅದಕ್ಕೇ..’ ಅಂತ ಉತ್ತರ ಕೊಟ್ಟಿದ್ದಳೆಂದು ಪ್ರತೀತಿ. +ಈಗ ಇದ್ದಕ್ಕಿದ್ದಂತೆ ಇಂಥ ಶಾರದಾ ಮೇಡಂ ’ನೆಲದಿಂದ ಧಗೆ, ಚಿಮಣಿಯಿಂದ ಹೊಗೆ, ಎದ್ದುಹೋಗುವ ಹಾಗೆ…’ ನಾಪತ್ತೆಯಾಗಿದ್ದರೆಂದರೆ ಅದು ಎಲ್ಲರಿಗೂ ಚಿಂತೆಯುಂಟುಮಾಡುವ ವಿಷಯವೇ ಆಯಿತು. ಹೆಡ್‌ಮೇಡಂಗೆ ಎಲ್ಲ ರೀತಿಯಿಂದಲೂ ಇದು ತಲೆನೋವಾಗಿತ್ತು. ಒಂದು ಕಡೆ ಆಕೆ ಇಲ್ಲ, ಆಕೆಯ ಪರವಾಗಿ ಯಾರಾದರೂ ತರಗತಿಗಳನ್ನು ಸಂಳಿಸಬೇಕು. ಕೆ.ಜಿ.ಯ ಎರಡು ಸೆಕ್ಷನ್‌ಗಳನ್ನ ಸೇರಿಸಿ ಶೀಲಾಗೆ ಒಪ್ಪಿಸಿದ್ದಾಗಿತ್ತು. ಆದರೆ, ಈಗ ಶೀಲಾಗೂ ಇದನ್ನು ಸಂಳಿಸುವುದು ಕಷ್ಟವಾಗುತ್ತಿತ್ತು. ಶಾರದಾ ಬರುವುದೇ ಇಲ್ಲವೆಂದಾದರೆ, ಇದಕ್ಕೆ ಏನಾದರೂ ಒಂದು ಸ್ಥಾಯಿ ಏರ್ಪಾಟು ಮಾಡಬಹುದಿತ್ತು… ಆದರೆ ಯಾವುದೂ ನಿಖರವಾಗಿ ತಿಳಿದಿರಲಿಲ್ಲ. ಇನ್ನೊಂದು ಕಡೆ ಮಕ್ಕಳಿಗೆ ಈ ಏರ್ಪಾಟು ಇಷ್ಟವಾಗಿರಲಿಲ್ಲ. ಮಕ್ಕಳಿಗೆ ಹಿಡಿಸದೇ ಹೋದರೆ ಅವರು ಇದನ್ನ ತಮ್ಮ ತಂದೆತಾಯಂದರಿಗೆ ಹೇಳುವುದು ಖಂಡಿತ. ಹೀಗಾಗಿ ಮಕ್ಕಳ ತಂದೆತಾಯಿಯರ ತಪಾಸಣೆಯ ನು. ಈವರೆಗೂ ಆಕೆ ನಾಪತ್ತೆಯೆಂದು ಯಾರಿಗೂ ಹೇಳಿರಲಿಲ್ಲ. ಆದರೂ ಈ ಗುಟ್ಟನ್ನ ಎಷ್ಟುದಿನ ಗುಟ್ಟಾಗಿಡುವುದು? ಜತೆಗೆ ಶಾರದಾ ಪತ್ತೆಯಿಲ್ಲವೆಂದು ಪೋಲಿಸ್ ಕಂಪ್ಲೇಂಟ್ ಕೊಡಬೇಕೇ? ಹೀಗೆ ಏನೇನೋ ವಿಚಾರಗಳು ಹೆಡ್‌ಮೇಡಂ ತಲೆಯಲ್ಲಿ ಸುಳಿದಾಡಿದರೂ ಒಂದಕ್ಕೂ ಉತ್ತರವಿರಲಿಲ್ಲ. ಒಂದು ಕೊಂಡಿಯಿಂದ ಮತ್ತೊಂದಕ್ಕೆ ವಿಷಯ ಬೆಳೆಯುತ್ತಾ ಹೋಗಿ ಹೆಡ್‌ಮೇಡಂ ಒಂದು ದೊಡ್ಡ ಜಾಲದಲ್ಲಿ ಸಿಕ್ಕಿ ದಿಕ್ಕು ತೋರದೇ ನಿಂತುಬಿಟ್ಟಿದ್ದರು. +ಸ್ಕೂಲಿನ ಮಿಕ್ಕ ಮೇಡಂಗಳೆಲ್ಲಾ ಶಾರದಾಳ ಮನೆಯ ಬಳಿ ಸುಳಿದು ಬಂದರೂ ಬಾಗಿಲು ಬಡಿದಾಗ ಉತ್ತರ ಸಿಗದೇ ವಾಪಸಾಗಿದ್ದರು. ಈ ಗಹನ ವಿಚಾರದ ಬೀಗಕ್ಕೆ ಕೀಲಿಕೈ ಸಿಕ್ಕಿರಲಿಲ್ಲ. ಅಕ್ಕಪಕ್ಕದ ಮನೆಯವರನ್ನ ವಿಚಾರಿಸಿದವರೂ ಉಂಟು. ಆದರೆ ಸಮಾಧಾನಕರ ಉತ್ತರವಾಗಲೀ ಸುಳಿವಾಗಲೀ ಎಲ್ಲೂ ಸಿಗಲಿಲ್ಲ. +ಯಾವುದಕ್ಕೂ ಹತ್ತಿರದ ಠಾಣೆಗೆ ಹೋಗಿ ಇಂಥ ಕೇಸಿನಲ್ಲಿ ಏನು ಮಾಡಬೇಕೆಂದು ಕೇಳಿಬರುವುದು ವಾಸಿ ಅಂತ ಹೆಡ್‌ಮೇಡಂಗೆ ಅನ್ನಿಸಿತು. ಪೋಲೀಸರಿಗೆ ವಿಷಯ ತಿಳಿಸುವುದರಲ್ಲಿ ತೊಂದರೆಯೇನು? ತಾನೇನು ಶಾರದಾ ದುಡ್ಡು ಕಾಸು ಕದ್ದು ಹೋಗಿದ್ದಾಳೆಂದು ಫಿರ್ಯಾದು ಮಾಡುತ್ತಿಲ್ಲವಲ್ಲ!! ಹೀಗೆ ಯೋಚಿಸಿದ ಹೆಡ್‌ಮೇಡಂ ಹೈಸ್ಕೂಲಿನ ಪ್ರಿನ್ಸಿಪಾಲರ ಜತೆ ಹಾಗೂ ಪೆಟಲ್ಸ್ ಸ್ಕೂಲಿನ ಮುಖ್ಯ ಟ್ರಸ್ಟಿಯ ಜತೆ ಮಾತನಾಡಿ ಕಡೆಗೂ ಠಾಣೆಗೆ ಒಂದು ಪತ್ರ ಬರೆದು ಹಾಕಬೇಕೆಂದು ನಿರ್ಧರಿಸಿದರು. +* +* +* +ಶ್ರೀಮತಿ ಗುಪ್ತಾ ಮನೆಗೆ ಬಂದು ಸ್ಕೂಲಿನಲ್ಲಾದ ಘಟನೆಯನ್ನು ಗುಪ್ತಾಜಿಗೆ ವಿವರಿಸಿದಾಗ ಗುಪ್ತಾಜಿ ಕೆಂಡಾಮಂಡಲ ಆದರು. ಒಂದು ಕ್ಷಣಕ್ಕೆ ಹೆಡ್‌ಮೇಡಂ ಅನುಸರಿಸಿದ ಪದ್ಧತಿಯ ಬಗ್ಗೆ ಗೌರವ ಬಂದು ಅದನ್ನು ತಮ್ಮ ಕಂಪನಿಯ ಸಾಲಗಾರರ ಮೇಲೆ ಪ್ರಯೋಗಿಸಬೇಕೆಂಬ ಅದ್ಭುತ ಐಡಿಯಾ ಬಂದಿತಾದರೂ, ಬಹಿರಂಗವಾಗಿ ಇಪ್ಪತ್ತೈದು ಸಾವಿರ ರೂಪಾಯಿಗಳನ್ನು ದೇಣಿಗೆ ಕೊಡುವುದಾಗಿ ಅನೌನ್ಸ್ ಮಾಡಿಸಿದ್ದರಿಂದ ಉಂಟಾಗುವ ಹಾನಿಯ ಬಗ್ಗೆ ಯೋಚಿಸಬೇಕಾಯಿತು. ಇನ್ನು ಬೇಕಾದವರು ಬೇಡವಾದವರು ದೇಣಿಗೆ ಕೇಳುತ್ತಾ ಮನೆಗೆ ಹಾಜರಿ ಹಾಕುತ್ತಾರೆ. ಜನ ತನ್ನಲ್ಲಿರಬಹುದಾದ ಹಣದ ಬಗ್ಗೆ ಊಹಾಪೋಹದ ಮಾತುಗಳನ್ನಾಡುತ್ತಾರೆ. ಹಾಗೂ ಇದೆಲ್ಲಕ್ಕಿಂತ ಮುಖ್ಯವಾದ ವಿಷಯವೆಂದರೆ ಶಾರದಾ ಮೇಡಂ ಬಗ್ಗೆ ಸುಳಿವು ಕೊಡದೇ ಸತಾಯಿಸುತ್ತಿರುವ ಶಾಲೆಯ ಸ್ಟ್ರಾಟಜಿ ಏನಿರಬಹುದು ಎಂಬ ವಿಚಾರ ಗುಪ್ತವಾಗಿಯೇ ಉಳಿದಿತ್ತು. ಎರಡು ದಿನಗಳ ಕಾಲ ಯೋಚನೆ ಮಾಡಿದರೂ ಇದರಲ್ಲಿರುವ ಗಹನವಾದ ವಿಚಾರದ ಸುಳಿವು ಗುಪ್ತಾಜಿಗೆ ಕೈಗೆಟುಕದೇ ಹೋದಾಗ ಆತ, ತಮ್ಮ ಪೋಲೀಸು ವಲಯದ ಮಿತ್ರರು ಯಾರಿದ್ದಾರೆ ಎಂಬುದನ್ನು ನೆನಪು ಮಾಡಿಕೊಳ್ಳತೊಡಗಿದರು. +ಅಷ್ಟರಲ್ಲಿ ರಂಗಾರೆಡ್ಡಿಯ ನು ಬಂತು. ಸಾಮಾನ್ಯ ಪರಿಸ್ಥಿತಿಯಲ್ಲಿ ಗುಪ್ತಾಜಿ ಈ ಕಾಕತಾಳೀಯದ ಬಗ್ಗೆ ಸುಮಾರಷ್ಟು ಹೊತ್ತು ಯೋಚಿಸುತ್ತಿದ್ದುದುಂಟು. ಆದರೆ ಈಗ ಈ ಶಾರದಾ ಮೇಡಂ ಬಗೆಗಿನ ಕುತೂಹಲ ಆತನನ್ನು ಆವರಿಸಬಿಟ್ಟಿತ್ತು. ಅಷ್ಟು ಹೊತ್ತಿಗೆ ಸರಿಯಾಗಿ ರಂಗಾರೆಡ್ಡಿ ಕರೆ ಕೊಟ್ಟದ್ದು ಯಾವ ದೇವಲೀಲೆಯೋ ಯಾರಿಗೆ ಗೊತ್ತು? +ರಂಗಾರೆಡ್ಡಿ ನ್ ಮಾಡಿದ್ದೇ ತನ್ನ ಗೊಗ್ಗರು ಧ್ವನಿಯಲ್ಲಿ ಪ್ರಾರಂಭಿಸಿದ: ’ಏ ಗುಪ್ತಾ.. ನಿನ್ನ ಮಗನನ್ನ ಆ ಪೆಟಲ್ಸ್ ಸ್ಕೂಲಿಗೆ ಕಳಿಸ್ತಾ ಇದ್ದೀ ತಾನೇ, ನನಗೆ ಅಲ್ಲಿನ ಒಬ್ಬ ಮೇಡಂ ಬಗ್ಗೆ ಸ್ವಲ್ಪ ಸುದ್ದಿ ಬೇಕಿತ್ತೋ.. ನಮ್ಮ ಠಾಣೆಗೆ ಒಂದು ಕಂಪ್ಲೇಂಟ್ ಬಂದಿದೆ…’ +ಗುಪ್ತಾಜಿ ತಕ್ಷಣಕ್ಕೆ ಚುರುಕಾದರು. ‘ಯಾರು, ಶಾರದಾ ಮೇಡಂ ಅನ್ನೋ ಲೇಡಿ ವಿಷಯಾನಾ? ಇದ್ದಕ್ಕಿದ್ದಹಾಗೆ ಈ ಲೇಡಿ ಹಾಲಿಡೇ ಮೇಲೆ ಹೋಗಿಬಿಟ್ಟಿದ್ದಾರಲ್ಲಾ?’ +‘ಹೌದು ಕಣಯ್ಯಾ, ಜೀವನದಲ್ಲಿ ಒಂದು ಸರ್ತಿನಾದರೂ ನಿನ್ನ ತಲೆ ಪೋಲೀಸರ ತಲೆಯ ವೇಗಕ್ಕನುಸಾರವಾಗಿ ನಡೀತಾ ಇದೆಯಲ್ಲಾ, ಅದೇ ಆಶ್ಚರ್ಯ..’ +‘ಇಲ್ಲಯ್ಯಾ ಇದೇ ಇಷ್ಯೂ ಬಗ್ಗೆ ನಾನೂ ನಿನಗೆ ನ್ ತಿರುಗಿಸಬೇಕೂಂತ ಇದ್ದೆ. ನೋಡು ಆಕೆ ಎರಡು ವಾರದಿಂದ ಸ್ಕೂಲಿಗೆ ಬರ್ತಾಯಿಲ್ಲಾಂತ ನನ್ನ ಸನ್ನು ಹೇಳ್ತಾ ಇದ್ದಾನೆ. ಆದರೆ ಸ್ಕೂಲಿನವರು ರೀಸನ್ನು ಏನೂಂತ ಹೇಳ್ತಾ ಇಲ್ಲ. ಯಾವಾಗ ಕೇಳಿದರೂ ಘುಮಾಫಿರಾಯಿಸಿ ಉತ್ತರ ಕೊಡುತ್ತಾರೆ..’ +ರಂಗಾರೆಡ್ಡಿಗೆ ಗುಪ್ತಾಜಿಯ ಷಾಪ್ರಯೋಗ ಯಾವಾಗಲೂ ಸೋಜಿಗದ್ದೆನ್ನಿಸುತ್ತಿತ್ತು. ಆದರೂ ಈಗ ಅದನ್ನೆಲ್ಲ ಚರ್ಚಿಸಲು ಸಮಯವಿರಲಿಲ್ಲ. ತಕ್ಷಣಕ್ಕೆ ಈ ಮೇಡಂ ಬಗ್ಗೆ ಮಾಹಿತಿ ಒಂದುಗೂಡಿಸಬೇಕಿತ್ತು. ‘ಅದು ಸರಿ, ಈ ಶಾರದಾ ಬಗ್ಗೆ ನಿನಗೇನೇನು ಗೊತ್ತೋ ಹೇಳು..’ ಅಂದ. +‘ಅರೇ ಬಾಬಾ, ಆ ಕೆಲಸ ಒಪ್ಪಿಸಿರೋದು ನಿನಗೆ. ನನ್ನನ್ನ ಯಾಕೆ ಕೇಳ್ತೀಯ? ಆಕೆ ವಿದ್ಯಾರ್ಥಿಗಳ ಮಧ್ಯ ವರ್ಲ್ಡ್ ಮಸ್ ಆಗಿದ್ದಳೂಂತ ನಾನು ಕೇಳಿದ್ದೀನಿ. ಆಕೆ ಬರದಿದ್ದರೆ ಸ್ಕೂಲಿಗೆ ಡುಬ್ಬಾ ಹೊಡೆದೇ ಹೊಡಿತೀನೀಂತ ಕೂತಿದ್ದಾನೆ ಈ ನನ್ನ ಮಗ. ಅಷ್ಟು ಬಿಟ್ಟರೆ ನನಗೇನೂ ಜಾನ್‌ತಾ ನೈ.’ +‘ಅಲ್ಲಯ್ಯಾ, ಸ್ಕೂಲಿಗೆ ಮಗನನ್ನ ಕಳಿಸ್ತೀಯ, ಅವರಿಗೆ ಇಪ್ಪತ್ತೈದು ಸಾವಿರ ಡೊನೇಷನ್ ಕೊಡ್ತೀಯ, ಎಲ್ಲ ಆದಮೇಲೆ ಅಲ್ಲಿ ನಿನ್ನ ಮಗನ ಟೀಚರ್ ಯಾರು, ಏನು, ಎತ್ತ, ತಿಳೀದೇನೇ ಇಷ್ಟೆಲ್ಲಾ ಮಾಡೋರ್‍ನ ನಾನೆಲ್ಲೂ ನೋಡಿಲ್ಲ.’ +ಗುಪ್ತಾಜಿಗೆ ಈಗ ನಿಜಕ್ಕೂ ರೇಗಿತು. ಆದರೆ ರಂಗಾರೆಡ್ಡಿಯ ಮೇಲೆ ಕೆಂಡಕಾರುವುದರಲ್ಲಿ ಅರ್ಥವಿರಲಿಲ್ಲ. ಈ ಶಾಲೆಯವರೂ ಸರಿ, ಶಾರದಾ ಮೇಡಂ ಗಲಾಟೆಯನ್ನ ಪೋಲೀಸರ ಬಳಿಗೆ ಒಯ್ದರೋ, ಅಥವಾ ಯಾರುಯಾರ ಬಳಿ ಬ್ಲಾಕ್‌ಮೇಲ್ ಮಾಡಿ ಡೊನೇಶನ್ ವಸೂಲಿ ಮಾಡಿದರೋ ಅವರ ಯಾದಿ ಹಿಡಿದು ಓಡಾಡುತ್ತಿದ್ದಾರೋ ತಿಳಿಯದೇ ಪಿರಿಪಿರಿಗೊಂಡರತ್ತ‘ನನ್ನ ವಿಷಯ ಹಾಗಿರಲಿ, ಈಗ ನಿನಗೆ ಬೇಕಾದ್ದು ಏನು?’ ಗುಪ್ತಾಜಿ ಕೇಳಿಯೇ ಕೇಳಿದರು. +ರಂಗಾರೆಡ್ಡಿ ಸೋಲೊಪ್ಪಿದ. ಅವನಿಗೆ ಗುಪ್ತಾಜಿಯಿಂದ ಏನೂ ಮಾಹಿತಿ ಸಿಗುವಂತಿರಲಿಲ್ಲ. ಸರಿ ಇನ್ನೇನು ನ್ ಇಡಬೇಕೆನ್ನುವಷ್ಟರಲ್ಲಿ ಗುಪ್ತಾಜಿಯ ಮರುಪ್ರಹಾರ ಪ್ರಾರಂವಾಯಿತು. +‘ಅದು ಸರಿ ಕಣಯ್ಯ – ಪೋಲೀಸು ಡಿಪಾರ್ಟ್‌ಮೆಂಟಿನಲ್ಲಿದ್ದೀಯ. ನೀನು ಕಡಿದು ಕಟ್ಟೆ ಹಾಕಿದ ಎವಿಡೆನ್ಸು ಏನು?’ +ಈಗ ರಂಗಾರೆಡ್ಡಿಗೆ ನಿಜಕ್ಕೂ ಪೀಕಲಾಟಕ್ಕೆ ಬಂತು. ನಿನ್ನೆ ಈ ವಿಷಯದ ಬಗ್ಗೆ ಕಂಪ್ಲೇಂಟು ಬಂದಾಗಿನಿಂದಲೂ ಈ ವಿಷಯ ಗಹನವಾಗುತ್ತಾ ಹೋಗಿತ್ತು. ಮೊದಲಿಗೆ ರಂಗಾರೆಡ್ಡಿಯ ಠಾಣೆಯಿಂದ ಪೇದೆಯೊಬ್ಬನನ್ನು ಕಳಿಸಿ ಶಾರದಾ ಮೇಡಂ ಅಕ್ಕಪಕ್ಕದ ಟುಗಳಲ್ಲಿ ವಿಚಾರಣೆ ನಡೆಸಿದ. ಅಲ್ಲಿಂದ ಸಿಕ್ಕ ಮಾಹಿತಿಯಿಂದ ಶಾರದಾ ಬಗ್ಗೆ ಕುತೂಹಲ ಹೆಚ್ಚಾಯಿತೇ ವಿನಃ ಕಡಿಮೆಯಾಗಲಿಲ್ಲ. ಸಂಕ್ಷಿಪ್ತವಾಗಿ ರಂಗಾರೆಡ್ಡಿ ಶೇಖರಿಸಿದ ಮಾಹಿತಿ ಇದು: +ರೇನ್‌ಡ್ರಾಪ್ ಅಪಾರ್ಟ್‌ಮೆಂಟಿನ ಮೊದಲ ಮಹಡಿಯ ಟಿಗೆ ಶಾರದಾ ಮೂರು ವರ್ಷಗಳ ಕೆಳಗೆ ಬಂದು ಸೇರಿದಳು. ಆ ಟಿನ ಮಾಲೀಕ – ಮೋಹಿದ್ ಅಲಿ ದುಬಾಯಿಯಲ್ಲಿ ಕೆಲಸದಲ್ಲಿದ್ದ. ತನ್ನ ಹಳೆಯ ಗೆಳೆಯ ಚೌಧರಿ ಅಲ್ಲಿ ಟು ಕೊಳ್ಳವ ಪ್ಲಾನ್ ಹೇಳಿದಾಗ ಮೋಹಿದ್ ಅಲಿಯೂ ಅಲ್ಲಿಯೇ ತನಗೊಂದು ಟನ್ನ ಬುಕ್ ಮಾಡಲು ಹೇಳಿದ್ದ. ನಾಲ್ಕು ವರ್ಷಗಳ ಕೆಳಗೆ ಇಬ್ಬರೂ ಟನ್ನ ಕೊಂಡಿದ್ದರು. ಟಿನ ಮೊದಲ ನಿವಾಸಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಅವನು ವರ್ಗವಾಗಿ ಹೊರಟುಹೋದಾಗ, ಸ್ವಲ್ಪ ದಿನ ಟು ಖಾಲಿಯಾಗೇ ಇತ್ತು. ಆ ನಂತರ ಸ್ಥಳೀಯ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಾಗ ಶಾರದಾ ಬಂದು ಟನ್ನ ಬಾಡಿಗೆಗೆ ಹಿಡಿದಿದ್ದಳು. ಸ್ಕೂಲ್ ಮೇಡಂ, ಒಂಟಿಯಾಗಿರುತ್ತಾಳೆ ಎಂದು ತಿಳಿದಾಗ ಚೌಧರಿ, ಒಂದು ಕ್ಷಣದ ಮಟ್ಟಿಗೆ ಹಿಂದೇಟು ಹಾಕಿದರೂ, ಕಡೆಗೆ ಪಕ್ಕದಲ್ಲೇ ತಾನಿರುವುದರಿಂದ, ರಿಸ್ಕ್ ಏನೂ ಇಲ್ಲವೆನ್ನಿಸಿ ಬಾಡಿಗೆಗೆ ಕೊಡಲು ಒಪ್ಪಿದ್ದ. ಶಾರದಾ ಬಂದ ಕ್ಷಣದಿಂದಲೂ ಬಹಳ ಮರ್ಯಾದೆಯಾಗಿ ನಡೆದುಕೊಂಡಿದ್ದಳು. ಟಿನ ಬೀಗದಕೈ ಒಂದನ್ನು ಚೌಧರಿಯ ಮನೆಯಲ್ಲಿ ಪರ್ಮನೆಂಟಾಗಿ ಇರಸಿದ್ದು, ಸಮಯಕ್ಕೆ ಸರಿಯಾಗಿ ಬಾಡಿಗೆ ಕೊಡುತ್ತಿದ್ದುದರಿಂದ ಯಾವ ಯೋಚನೆಯೂ ಇರಲಿಲ್ಲ. ಆಕೆ ಅಲ್ಲಿಗೆ ಎಷ್ಟು ಹೊಂದಿಕೊಂಡು ಬಿಟ್ಟಿದ್ದಳೆಂದರೆ, ಚೌಧರಿಯಾಗಲೀ, ಮೋಹಿದ್ ಅಲಿಯಾಗಲೀ, ಮನೆ ಬಾಡಿಗೆ ಹೆಚ್ಚಿಸುವ ವಿಷಯವನ್ನು ಎತ್ತಿಯೇ ಇರಲಿಲ್ಲ. ತನ್ನ ಪಾಡಿಗೆ ತಾನಿರುತ್ತಿದ್ದ ಶಾರದಾ, ಪೆಟಲ್ಸ್ ಸ್ಕೂಲಿನಲ್ಲಿ ಟೀಚರ್ ಆಗಿದ್ದಾಳೆಂಬುದನ್ನು ಬಿಟ್ಟು ಯಾರಿಗೂ ಆಕೆಯ ಬಗ್ಗೆ ಹಚ್ಚಿನ ಮಾಹಿತಿಯಿರಲಿಲ್ಲ. ಮಾಹಿತಿ ಶೇಖರಿಸುವ ಅವಶ್ಯಕತೆಯನ್ನೂ ಯಾರೂ ಕಂಡಂತಿರಲಿಲ್ಲ. +ಮೊದಲಿಗೆ ಶಾರದಾ ನಾಪತ್ತೆಯಾದದ್ದನ್ನು ಯಾರೂ ಗಮನಿಸಿಯೇ ಇರಲಿಲ್ಲ. ಅದಕ್ಕೆ ಕಾರಣವೆಂದರೆ, ಮನೆಯಲ್ಲಿ ದೀಪಗಳು ಉರಿಯುತ್ತಿದ್ದುವು. ಮೇಲಾಗಿ, ಆ ಮನೆಬಾಗಿಲಿಗೇ ಅಡಕವಾಗಿದ್ದ ನೈಟ್‌ಲ್ಯಾಚ್ ಬೀಗವನ್ನು ಆಕೆ ಬಳಸುತ್ತಿದ್ದಳು. ಮಿಕ್ಕ ಮನೆಗಳಲ್ಲಿ ಬಾಗಿಲಿಗೆ ಹೊರಗಿನಿಂದ ಆಯಾ ಮನೆಯ ಮಾಲೀಕರು ಚಿಲಕ ಹಾಕಿಸಿಕೊಂಡಿದ್ದರು. ಆದರೆ ಶಾರದಾಳಿಗೆ ಅದರ ಅವಶ್ಯಕತೆ ಕಂಡಿರಲಿಲ್ಲ. ಶಾಲೆಯವರು ಬಂದು ಒಂದೆರಡು ಬಾರಿ ವಿಚಾರಿಸಿದಾಗ ಮಾತ್ರ ಚೌಧರಿಗೆ ಆಕೆ ಇಲ್ಲವೆಂಬ ವಿಷಯ ತಿಳಿಯಿತು. ಅಷ್ಟರಲ್ಲಿ ಚೌಧರಿಗೆ ಕೆಲಸದ ನಿಮಿತ್ತವಾಗಿ ಒಂದು ವಾರಕಾಲ ಮುಂಬಯಿಗೆ ಹೋಗಬೇಕಾದ್ದರಿಂದ, ಆ ಗಡಿಬಿಡಿಯಲ್ಲಿ ಆತ ಹೊರಟುಬಿಟ್ಟಿದ್ದ. ಎರಡು ದಿನಗಳ ಕೆಳಗಷ್ಟೇ ವಾಪಸಾದಾಗ, ಶಾರದಾ ಇನ್ನೂ ನಾಪತ್ತೆಯಾಗಿದ್ದಾಳೆಂದು ತಿಳಿಯಿತು. ಅಷ್ಟರಲ್ಲಿ ರಂಗಾರೆಡ್ಡಿಯ ವಿಚಾರಣೆಯೂ ಪ್ರಾರಂವಾಗಿ, ತನ್ನ ಮನೆಯಲ್ಲಿದ್ದ ಬೀಗದ ಕೈ ತಂದು ಬಾಗಿಲು ತೆರೆದು ನೋಡಿದ್ದರು. ಮನೆ ಸಾಮಾನ್ಯವಾಗೇ ಇತ್ತು. ಇದ್ದ ಅಲ್ಪ ಸಾಮಾನುಗಳು ಯಥಾಸ್ಥಾನದಲ್ಲಿದ್ದುವು. ಹೀಗೆ ಎಲ್ಲವೂ ನಾರ್ಮಲ್ ಆಗಿದ್ದರಿಂದ ರಂಗಾರೆಡ್ಡಿಗೆ ಈ ಕೇಸು ಗಹನವನ್ನಿಸಿ, ಏನೂ ತೋಚದಂತಾಯಿತು. +ಗುಪ್ತಾಜಿಗೆ ಈ ವಿಷಯಗಳನ್ನೆಲ್ಲ ರಂಗಾರೆಡ್ಡಿ ಹೇಳಿದ. ಆದರೆ ದಪ್ಪ ಚರ್ಮದ ಗುಪ್ತಾಜಿಗೆ ತನ್ನ ಮಗನ ಪ್ರತಿನಿತ್ಯದ ವರಾತವೇ ಮುಖ್ಯವಾಗಿ, ಆ ಬಗ್ಗೆಯೇ ತಲೆಕೆಡಿಸಿಕೊಂಡು, ಈ ವಿಷಯವನ್ನು ಮರೆಯಲು ಪ್ರಯತ್ನಿಸಿದರು. +* +* +* +ಕೈತೋರಿಸುವ ಪ್ರಕ್ರಿಯೆ ಆದ ಒಂದೆರಡು ದಿನಗಳಲ್ಲೇ ಮಧುಸೂಧನ ಮೆಹತಾನಿಗೆ ಮುಂಬಯಿನಿಂದ ಹೊರಗಡೆಗೆ ಹೋಗುವ ಯೋಗ ಕೂಡಿಬಂತು. ಹೈದರಾಬಾದಿನ ಬಳಿಯ ರೆಸಿಡೆನ್ಷಿಯಲ್ ಶಾಲೆಯೊಂದರಲ್ಲಿ ತನಗೂ ತನ್ನ ಮಗಳಿಗೂ ಸಂದರ್ಶನಕ್ಕಾಗಿ ಕರೆ ಬಂದಿತ್ತು. ಈ ವರ್ಷದ ಕೊನೆಗೆ ಕೆ.ಜಿ ಮುಗಿಸಿ ಮುಂದಿನ ವರ್ಷ ಒಂದನೇ ತರಗತಿಗೆ ಸೇರಲಿದ್ದ ತನ್ನ ಮಗಳನ್ನು ಯಾವುದಾದರೂ ಒಳ್ಳೆಯ ಬೋರ್ಡಿಂಗ್ ಶಾಲೆಗೆ ಹಾಕಬೇಕೆಂದು ಮಧುಸೂಧನ ನಿರ್ಧರಿಸಿದ್ದ. ಆಫೀಸಿನಲ್ಲಿ ಗೆಳೆಯರೊಬ್ಬರು ಹೈದರಾಬಾದಿನಲ್ಲಿದ್ದ ಈ ಬೋರ್ಡಿಂಗ್ ಸ್ಕೂಲಿನ ವಿಚಾರ ಹೇಳಿದಾಗ, ತನ್ನ ಹೆಂಡತಿ ಹೈದರಾಬದಿನಲ್ಲಿ ವಿದ್ಯಾಸ ಮಾಡಿದ್ದಳು ಎಂಬ ಕಾರಣವಾಗಿಯೇ ಅವನು ಉತ್ಸುಕನಾಗಿದ್ದ. ಒಬ್ಬನಿಗೇ ಆಫೀಸಿನ ಕೆಲಸಗಳ ನಡುವೆ ಮಗಳನ್ನೂ ಸಂಳಿಸುವುದು ಸ್ವಲ್ಪ ಕಷ್ಟವೇ ಆಗುತ್ತಿತ್ತು. ಅಡುಗೆಗೆ, ಮಗಳನ್ನು ನೋಡಿಕೊಳ್ಳುವುದಕ್ಕೆ ಬೇರೆ ಬೇರೆ ಇಬ್ಬರು ಕೆಲಸದವರನ್ನು ಅವನು ನೌಕರಿಯಲ್ಲಿ ಇಟ್ಟುಕೊಂಡಿದ್ದನಾದರೂ, ಆಗಾಗ ಕೆಲಸ ಬಿಟ್ಟು ಹೋಗುವ, ಹೊಸ ಕೆಲಸದವರನ್ನು ಹುಡುಕಬೇಕಾದ ಪಿರಿಪಿರಿ ಅವನಿಗೆ ಕಷ್ಟದ್ದೇ ಆಗಿತ್ತು. ಸಾಲದ್ದಕ್ಕೆ ಒಂಟಿ ಗಂಡಸೆಂದ ಮೇಲೆ ಕೆಲಸಕ್ಕೆ ಬರಲು ಕೆಲವರು ಹಿಂಜರಿಯುತ್ತಲೂ ಇದ್ದರು. ಹೀಗಾಗಿ ಮಗಳು ಬೆಳೆಯುತ್ತಾ ಹೋದಂತೆ ಅವಳ ವಾರಗೆಯವರ ಬಳಿ ಇದ್ದು ಆಡಿಕೊಳ್ಳಲಿ ಎಂಬ ಸದ್ವಿಚಾರದೊಂದಿಗೆ ಮಧು ಈ ಯೋಜನೆ ಹಾಕಿದ್ದ. +ಸ್ಕೂಲು ನಿಜಾಮಾಬಾದ್ ರಸ್ತೆಯಲ್ಲಿ ಸುಮಾರು ಮೂವತ್ತು ಕಿಲೋಮೀಟರ್ ದೂರದಲ್ಲಿತ್ತು. ಹೈದರಾಬಾದಿನ ಏರ್‌ಪೋರ್ಟ್‌ನಿಂದ ಅಲ್ಲಿಗೆ ತಲುಪಲು ದಾರಿ ಹುಡುಕುವುದು ಕಷ್ಟವಾಗುತ್ತದಾದ್ದರಿಂದ, ತನಗೆ ವಾಹನ ಸೌಕರ್ಯ ಕಲ್ಪಿಸಲು ಸಾಧ್ಯವೇ ಎಂದು ಶಾಲೆಯವರನ್ನ ಆತ ಪೋನು ಮಾಡಿ ಕೇಳಿದ್ದ. ತಮ್ಮ ಶಾಲೆಗೆ ಬರುವವರೆಲ್ಲ ಸ್ವಲ್ಪ ಶ್ರೀಮಂತರೂ, ಬೇರೆ ಊರಿನವರೂ ಆದ್ದರಿಂದ, ಶಾಲೆಗೆ ಇಂಥ ಒಂದು ಕೋರಿಕೆ ಹೊಸದೇನೂ ಆಗಿರಲಿಲ್ಲ. ಹೀಗಾಗಿ ಅವನ ಕೋರಿಕೆಯನ್ನ ಒಪ್ಪಿದ್ದರು. ಅಲ್ಲದೇ, ಅದಕ್ಕೆ ಆಗುವ ಹಣವನ್ನ ಮಧುಸೂಧನನೇ ಕಟ್ಟಬೇಕೆಂದು ಹೇಳುವುದನ್ನ ಮಾತ್ರ ಮರೆತಿರಲಿಲ್ಲ. ಪ್ಲೇನಿನಿಂದ ಇಳಿದು ಹೊರ ಬಂದಾಗ ಮಧುಸೂಧನನಿಗೆ ಶಾಲೆಯವರು ಕಳಿಸಿದ್ದ ಕಾರಿನ ಚಾಲಕ, ಬೋರ್ಡು ಹಿಡಿದು ನಿಂತಿದ್ದದ್ದು ಕಾಣಿಸಿತು. ಮಗಳನ್ನು ಕರೆದು ಅವನು ಕಾರಿನತ್ತ ಹೊರಟ. ಮಗಳ ಜೊತೆಗೆ ಹಲವು ದಿನಗಳಿಂದ ಹೆಚ್ಚು ಸಮಯ ಕಳೆದಿದ್ದಿರಲಿಲ್ಲ, ಹಾಗೂ ಇಲ್ಲಿ ಅಡ್ಮಿಷನ್ ಸಿಕ್ಕರೆ, ಅವಳು ಹಾಸ್ಟೆಲ್ಲಿನಲ್ಲಿರುತ್ತಾಳೆಂಬ ಪಾಪವನೆಯೂ ಅವನನ್ನು ಕಾಡಿದ್ದರಿಂದ, ಅವನು ಒಂದು ವಾರ ಕಾಲ ರಜೆ ಹಾಕಿದ್ದ. ಶಾಲೆಯ ಸಂದರ್ಶನ ಮುಗಿದ ನಂತರ ಅಲ್ಲಿಯೇ ಇದ್ದು ಹೈದರಾಬಾದಿನ ಸಾಲಾರ್‌ಜಂಗ್, ಮೃಗಾಲಯ, ಚಾರ್‌ಮಿನಾರ, ಗೋಲ್ಕೊಂಡ ಎಲ್ಲವನ್ನೂ ಮಗಳ ಜತೆ ಸುತ್ತಾಡಿ ಮುಂಬಯಿಗೆ ವಾಪಸಾಗುವುದು ಅಂತ ಯೋಚಿಸಿ, ದೊಡ್ಡ ಪ್ಲಾನನ್ನೇ ಹಾಕಿಕೊಂಡು ಬಂದಿದ್ದ. +ಕಾರಿನ ಡ್ರೈವರ್ ತನ್ನ ಲಗೇಜಿನ ಟ್ರಾಲಿಯನ್ನ ಪಡೆದು, ಕಾರಿನತ್ತ ತಳ್ಳಿಕೊಂಡು ಹೋದ. (ಸಾಕುನಾಯಿಯ ಹಾಗೆ ಎಂದು ಮನಸ್ಸಿನಲ್ಲೇ ಅಂದಕೊಳ್ಳುತ್ತಾ) ಮಧುಸೂಧನ ಅವನನ್ನು ಹಿಂಬಾಲಿಸಿದ. ಕಾರಿನ ಬಾಗಿಲು ತೆಗೆದಾಗ ಅಲ್ಲಿ ಹಿಂದಿನ ಸೀಟಿನಲ್ಲಿ ಯಾರೋ ಕುಳಿತಿದ್ದದ್ದು ಕಾಣಿಸಿತು. ಆಕೆ ಸುಮಾರು ಮೂವತ್ತು ಮೂವತ್ತೈದರ ಹೆಣ್ಣು. ಬಹುಶಃ ಶಾಲೆಯಿಂದ ಯಾರನ್ನಾದರೂ ಕಳಿಸಿರಬಹುದೆಂದು ಮಧುಸೂಧನ ಊಹಿಸಿದ. ಲಗೇಜನ್ನು ಡಿಕ್ಕಿಯಲ್ಲಿ ಸೇರಿಸಿ, ಮಗಳನ್ನು ಹಿಂದಿನ ಸೀಟಿಗೆ ಕಳುಹಿಸಿ ತಾನು ಮುಂದಿನ ಸೀಟಲ್ಲಿ ಬಂದು ಕೂತ. ಶಾಲೆಯಿಂದ ಕಳಿಸಿದ್ದರೆ ಆಕೆ ತನ್ನನ್ನು ಮಾತನಾಡಿಸಬೇಕಿತ್ತು. ಬದಲಿಗೆ ಆಕೆ ಮೌನ ಧರಿಸಿದ್ದಳು. ವಿಷಯ ಏನಿರಬಹುದು ಎಂದುಕೊಳ್ಳುತ್ತಲೇ ಮಧು ತನ್ನ ಕೈರೇಖೆಯನ್ನ ಒಮ್ಮೆ ನೋಡಿಕೊಂಡ. ದಯಾಕರ ಮೆನನ್ ತನ್ನ ಕೈ ನೋಡಿದಾಗಿನಿಂದಲೂ ಮಧುಸೂಧನನ ಮನಸ್ಸು ಸ್ಥಿಮಿತದಲ್ಲಿ ಇರಲಿಲ್ಲ. ಯಾಕೆ ಹೀಗಾಗುತ್ತಿದೆಯೆಂದು ತಿಳಿಯದೆಯೇ ಅನಾವಶ್ಯಕ ಅವನು ರೋಮಾಂಚಿತಗೊಂಡ. ಆಕೆ ಯಾರು ಅಂತ ತಿಳಿಯಲು ಹೆಚ್ಚು ಸಮಯ ಹಿಡಿಯಲಿಲ್ಲ. ತಾನು ಬಾಯಿಬಿಡುವುದಕ್ಕೆ ಮೊದಲೇ ಡ್ರೈವರ್ ಅವಳ ವಿವರಗಳನ್ನು ಕೊಡಲು ಪ್ರಾರಂಭಿಸಿದತ್ತ‘ಸಾಬ್ ಈ ಮೇಡಂ ಸ್ಕೂಲಿಗೆ ನೌಕರಿಗಾಗಿ ಇಂಟರ್‌ವ್ಯೂಗೆ ಬರ್ತಾ ಇದ್ದಾರೆ. ಹೇಗೂ ಹೈದರಾಬಾದಿಗೆ ಹೋಗ್ತಾಯಿದ್ದೀಯ, ಆಕೆಯನ್ನೂ ಕರಕೊಂಡು ಬಾ ಅಂತ ಪ್ರಿನ್ಸಿಪಾಲ್ ಸಾಹೇಬರು ಹೇಳಿದರು. ನಿಮಗೇನೂ ಅಂತರ ಇರಲಾರದು ಅಂತಲೂ ಹೇಳಿದರು….’ +ಮಧುಸೂಧನನಿಗೆ ಸ್ಕೂಲಿನವರ ಉಪಾಯ ತಿಳಿಯಿತು. ಆದರೆ ಕಾರು ಖಾಲಿ ಹೋಗುತ್ತಿರುವಾಗ ಅಲ್ಲಿ ಮತ್ತೊಬ್ಬಾಕೆ ಇದ್ದರೆ ತನ್ನ ಅಂತರವೇನಿದ್ದೀತು? ಬದಲಿಗೆ ದಾರಿಯಲ್ಲಿ ಮಾತಾಡಲು, ಸ್ಕೂಲಿನ ವಿಚಾರ ಇನ್ನಷ್ಟು ತಿಳಿಯಲು ಅವಕಾಶ ಸಿಕ್ಕಂತಾಯಿತು ಎಂದುಕೊಂಡು ಮಧುಸೂಧನ ಒಳಗೊಳಗೇ ಖುಷಿ ಪಟ್ಟ. +ಸಿಟಿಯಿಂದ ಹೈವೇಗೆ ಬರುವವರೆಗೂ ಮಧು ಏನೂ ಮಾತನಾಡಲಾರದವನಾಗಿ ಸುಮ್ಮನಿದ್ದ. ಹಸ್ತರೇಖೆಗಳು ಅವನ ತಲೆಯ ತುಂಬ ಥಕಥೈ ಮಾಡುತ್ತಿದ್ದುದರಿಂದ, ಅವನಿಗೆ ಸಹಜವಾಗಿ ಇರಲು ಸಾಧ್ಯವೇ ಆಗಿರಲಿಲ್ಲ. ಆಕೆಯ ಜತೆ ಮಾತು ಪ್ರಾರಂಭಿಸುವುದಾದರೂ ಹೇಗೆ? ಆಕೆಯಂತೂ ತಾನು ಕಾರಲ್ಲೇ ಇಲ್ಲವೆನ್ನುವ ಹಾಗೆ, ತನ್ನ ಮಗಳ ಜೊತೆ ಮಾತುಕತೆ ಶುರು ಹಚ್ಚಿಕೊಂಡು, ಮಧುಸೂಧನನ ಬಗ್ಗೆ ಶೇಖರಿಸಬೇಕಾದ ಮಾಹಿತಿಯನ್ನೆಲ್ಲಾ ಒಟ್ಟುಗೂಡಿಸುತ್ತಿದ್ದಳು – ತಾವು ಬಂದಿರುವುದು ಎಲ್ಲಿಂದ, ಯಾತಕ್ಕಾಗಿ, ಮುಂಬಯಿಯಲ್ಲಿ ಎಲ್ಲಿ ವಾಸವಾಗಿರುವುದು… ಹೀಗೆ ಎಲ್ಲ ಮಾಹಿತಿಯೂ ಪುಟ್ಟ ಮಗಳ ದೊಡ್ಡ ವಟಗುಟ್ಟುವ ಬಾಯಿಯ ಮೂಲಕ ಆಕೆಗೆ ತಲುಪಿಬಿಟ್ಟಿತ್ತು. +ಮುಂದಿನ ಸೀಟಿನಲ್ಲಿ ಕೂತಿದ್ದ ಮಧುಸೂಧನನಿಗೆ, ತಿರುಗಿ ನೋಡಲೂ ನಾಚಿಕೆಯಾಗಿತ್ತು. ಕಾರು ಹತ್ತಿದ ತಕ್ಷಣಕ್ಕೆ ಒಂದೇ ಒಂದು ಕ್ಷಣದ ಮಟ್ಟಿಗೆ ಅವಳ ಮುಖವನ್ನು ನೋಡಿದ್ದವನಿಗೆ ಅವಳು ಹೇಗಿದ್ದಾಳೋ ನೋಡಬೇಕೆಂಬ ಕುತೂಹಲ. ಆದರೆ ಆಕೆಯ ಧ್ವನಿ ಮಾತ್ರ ಕೇಳಿಸಿ, ಆಕೆ ಒಂದು ವಿಧದ ಅಶರೀರವಾಣಿಯಾಗಿಬಿಟ್ಟಿದ್ದಳು. +ಹೈವೇ ತಲುಪಿದ ನಂತರ ಕಡೆಗೂ ಧೈರ್ಯ ತಂದುಕೊಂಡು ಒಂದು ಢಾಬಾದ ಬಳಿ ಗಾಡಿ ನಿಲ್ಲಿಸಲು ಡ್ರೈವರನಿಗೆ ಹೇಳಿದ. ಕಾರು ನಿಂತ ತಕ್ಷಣವೇ – ‘ದೂರ ಪ್ರಯಾಣ ಮಾಡಿ ಸ್ವಲ್ವ ಸುಸ್ತಾಗಿದೆ, ಒಂದಿಷ್ಟು ಚಾ ಕುಡಿಯಬೇಕು, ನೀವೂ ಬರುತ್ತೀರಾ?’ ಅಂತ ಹಿಂದೆ ತಿರುಗಿ ಆಕೆಯನ್ನ ನೋಡಿ ಕೇಳಿಯೇ ಬಿಟ್ಟ. ಆಕೆ ಒಳ್ಳೆಯ ಮೂಡಿನಲ್ಲಿ ಇದ್ದಂತಿತ್ತು.. ‘ಓಹೋ ಅದಕ್ಕೇನು, ಕುಡಿಯೋಣ, ನನಗೂ ಚಾ ಕುಡೀಬೇಕು ಅಂತ ಅನ್ನಿಸುತ್ತಾ ಇದೆ, ಗಂಟಲು ಒಣಗಿ ಹೋಗಿದೆ. ಅಲ್ಲಿಗೆ ಹೋದಮೇಲೆ ಏನು ಸಿಗುತ್ತೋ ಏನೋ ಯಾರಿಗೆ ಗೊತ್ತು?’ ಎಂದಳಾಕೆ. +ಮೂರೂ, ಮತ್ತೊಂದು ಜನ ಕಾರಿನಿಂದ ಇಳಿದು ಢಾಬಾದ ಒಂದಂಚಿನಲ್ಲಿ ಹಾಕಿದ್ದ ಮೇಜು ಕುರ್ಚಿಗಳತ್ತ ಬಂದು ಕುಳಿತರು. ಮಧು ದೊಡ್ಡವರಿಗೆ ಚಹಾ, ಮಗಳಿಗೆ ಟಿ ಹೇಳಿದ. ‘ಇವಳಿಗೆ ಪೆಪ್ಸಿ ಬಹಳ ಇಷ್ಟ.. ಷಾರುಖ್ ಖಾನ್ ಅದನ್ನೇ ಕುಡೀತಾನೆ ಅಂತ ತುಂಬ ರಂಪ ಮಾಡಿ ತರಿಸಿಕೊಳ್ಳುತ್ತಾಳೆ. ಆದಷ್ಟು ಮಟ್ಟಿಗೆ ನಾನು ಅವಳಿಗೆ ಟ್ ಜ್ಯೂಸೇ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ…’ (ಸ್ಕೂಲ್ ಮೇಡಂಗಳಿಗೆ ಜಂಕ್ ಡ್, ಏರೇಟೆಡ್ ಡ್ರಿಂಕ್ಸ್ ಕಂಡರೆ ಅತೀ ಕೋಪವಿರುತ್ತದೆ ಎಂದು ಊಹಿಸಿ, ಅವಳನ್ನ ಮೆಚ್ಚಿಸಲೆಂದೇ ಟಿ ಹೇಳಿದವನಂತೆ ದೇಶಾವರಿ ನಗೆ ನಕ್ಕ). +ಆದರೆ ಆಕೆ ಇವನಿಗಿಂತ ಒಂದು ಕೈ ಮೇಲಿದ್ದಳು. ‘ವೆಲ್, ನನಗೂ ಪೆಪ್ಸಿಯೇ ಇಷ್ಟ.. ನಿಮಗೆ ಅಂತರವಿಲ್ಲದಿದ್ದರೆ ಚಹಾ ಕ್ಯಾನ್ಸಲ್ ಮಾಡಿಸಿ, ಪೆಪ್ಸಿ ಹೇಳುತ್ತೀರಾ.. ಪ್ಲೀಸ್….’ ಎಂದಳು. ಮಧುಸೂಧನ ಒಂದು ಕ್ಷಣದ ಮಟ್ಟಿಗೆ ದಂಗಾದ!!! +ಮಧುಸೂಧನನಿಗೆ ಮಾತು ಹೇಗೆ ಮುಂದುವರೆಸಬೇಕೋ ತಿಳಿಯದಾಯಿತು. ಇದ್ದಕ್ಕಿದ್ದಹಾಗೆ ‘ಹಾಗಾದರೆ ನಿಮಗೂ ಷಾರುಖ್ ಖಾನ್ ಇಷ್ಟವೇನು? ನಾನಂತೂ, ದಿಲ್ ತೋ ಪಾಗಲ್ ಹೈ ನೋಡಿದಾಗಿನಿಂದ ಅವನ ನ್ ಆಗಿಬಿಟ್ಟಿದ್ದೇನೆ.. ದೇವದಾಸ್‌ನಲ್ಲಿ ಎಷ್ಟು ಚೆನ್ನಾಗಿ ನಟಿಸಿದ್ದಾನೆ, ಅಲ್ಲವೇ? ಏನೇ ಆದರೂ ಘನ ಪಾತ್ರಗಳಿಗಿಂತ ಅವನು ನ್ನಿ ಪಾತ್ರಗಳಲ್ಲೇ ನನಗೆ ಇಷ್ಟ…’ ಎಂದುಬಿಟ್ಟ. ಅವಳ ಮನಸ್ಸಿಗೆ ಇಷ್ಟವಾಗುವ ಮಾತನ್ನು ಸಮಯಸ್ಫೂರ್ತಿಯಿಂದ ಹೇಗೆ ಹೇಳಿದೆ ಎಂದು ತನ್ನೊಳಗೇ ಬೀಗುವಷ್ಟರಲ್ಲಿ ಮಗಳು ಅದಕ್ಕೆ ತಣ್ಣೀರೆರಚಿದಳು. ‘ಅಪ್ಪ ಸುಳ್ಳು ಹೇಳ್ತಾ ಇದ್ದಾರೆ, ಅವರಿಗೆ ಷಾರುಖ್ ಕಂಡರೆ ಆಗುವುದಿಲ್ಲ. ನಾನು ಟಿ.ವಿ ನೋಡಬೇಕೂಂದಾಗೆಲ್ಲಾ ಅವನನ್ನ ಬೈತಾರೆ.’ ಅಂದು ತಾನು ಕಟ್ಟುತ್ತಿದ್ದ ಮಾತಿನ ಸೌಧಕ್ಕೆ ಬೆಂಕಿ ಹಚ್ಚಿದಳು. +ಮೇಡಂ ಸುಮ್ಮನಿರಲಿಲ್ಲ.. ಬಹುಶಃ ಮಧುಸೂಧನನ್ನು ಬಚಾಯಿಸಲೇ ಬೇಕು ಎಂಬಂತೆ, ‘ನನಗೂ ಆತ ಇಷ್ಟ ಇಲ್ಲ ಬಿಡಿ. ಸುಮ್ಮನೆ ತೊದಲುತ್ತಾನೆ. ಪೆಪ್ಸಿ ಇಷ್ಟವೆಂದ ಮಾತ್ರಕ್ಕೆ ಷಾರುಖ್ ಇಷ್ಟವಾಗಬೇಕೆಂದು ಏನೂ ನಿಯಮ ಇಲ್ಲವಲ್ಲ…. ನನಗೆ ಆಮೀರ್ ಇಷ್ಟ.’ ಅಂದಳು. ಮಧುಸೂಧನ ಚೇತರಿಸಿಕೊಂಡು ಮುಂದಿನ ಮಾತಾಡುವಷ್ಟರಲ್ಲಿ ಮತ್ತೆ ಮಗಳು ‘ಅಪ್ಪನಿಗೆ ಆಮೀರ್ ಕೂಡಾ ಇಷ್ಟವಿಲ್ಲ. ಬರೇ ಸುನಿಲ್ ಶೆಟ್ಟಿಯ ಸಿನೇಮಾ ನೋಡುತ್ತಾರೆ ಅಷ್ಟೇ….’ ಅಂದಳು. ಮಧುಸೂಧನನಿಗೆ ತನ್ನ ಲೆಕ್ಕಾಚಾರವೆಲ್ಲ ತಲೆಕೆಳಗಾಗುತ್ತಿದ್ದುದು ಕಂಡಿತು. ಈ ಪರಿಸ್ಥಿತಿಯಿಂದ ಹೊರಬಿದ್ದು ಮಾತುಕತೆ ಮುಂದುವರೆಸುವುದು ಹೇಗೆಂದು ತಿಳಿಯದೇ, ಪೆಕರು ಪೆಕರಾಗಿ ‘ಏ ಸುಮ್ಮನಿರೇ, ಈ ಮಕ್ಕಳಿಗೇನೂ ಗೊತ್ತಾಗೊಲ್ಲ, ಸುನೀಲ್ ಶೆಟ್ಟಿಯ ಆ ಕಾಮೆಡಿ ಹೇರಾರಿ ಇಷ್ಟವಾಗಿತ್ತು ಅಷ್ಟೇ.. ಅಂದಹಾಗೆ….’ +ಅವನು ಮಾತು ಮುಂದುವರೆಸುವುದಕ್ಕೆ ಮೊದಲೇ ಮೇಡಂ ‘ಛೆ ಮಕ್ಕಳನ್ನು ಅನ್ನಬೇಡಿ, ಅವರು ದೇವರಹಾಗೆ. ಯಾವಾಗಲೂ ತಾವು ಕಂಡದ್ದನ್ನೇ ಹೇಳುತ್ತಾರೆ…. ಹಾಂ, ನೀವೇನೋ ಹೇಳುತ್ತಿದ್ದಿರಿ….’ +‘ಏನಿಲ್ಲ, ನೀವು ಏನು ಮಾಡ್ತಾ ಇದ್ದೀರಿ, ಹಾಗೂ ನಿಮಗೆ ಈ ಸ್ಕೂಲಿನ ಬಗೆಗಿನ ಅಭಿಪ್ರಾಯವೇನು? ಯಾಕೆ ನೀವು +ನಿಮ್ಮ ಹಳೆಯ ಸ್ಕೂಲನ್ನು ಬಿಡುತ್ತಿದ್ದೀರಿ? ಈ ಶಾಲೆಗೆ ನೀವು ಸೇರಿದರೆ ನಿಮ್ಮ ಮನೆಯವರನ್ನೆಲ್ಲಾ ಬಿಟ್ಟು ಇಲ್ಲಿಗೇ ಬಂದುಬಿಡುತ್ತೀರಾ? ಈ ವಿಷಯಗಳನ್ನ ತಿಳಿದು ಕೊಳ್ಳೋಣಾಂತ. ನೋಡಿ, ನಾನು ಮುಂಬಯಿಯಿಂದ ಬರುತ್ತಿದ್ದೀನಿ. ನನಗೆ ಈ ಸ್ಕೂಲಿನ ವಿಷಯ ಯಾರೋ ಗೆಳೆಯರು ಹೇಳಿದರು. ಕೆಲ ವರ್ಷಗಳ ಹಿಂದೆ ನನ್ನ ಹೆಂಡತಿ ವಿಚಿತ್ರ ಪರಿಸ್ಥಿತಿಯಲ್ಲಿ ತೀರಿಕೊಂಡಳು. ಹೆಚ್ಚಿನ ಮನಸ್ಸಿಲ್ಲದಿದ್ದರೂ ಮಗಳನ್ನ ಬೋರ್ಡಿಂಗಿಗೆ ಹಾಕಬೇಕಾಗಿದೆ….’ +ಅವನು ಇಷ್ಟು ಹೇಳುವಷ್ಟರವೇಳೆಗೆ ಮೇಡಂ ಗಂಭೀರವಾದ ಮುಖ ಮುದ್ರೆ ಧರಿಸಿ ಸುಮ್ಮನಾದಳು. ಮಧುವಿಗೆ ಇದು ಬಹಳ ವಿಚಿತ್ರವನ್ನಿಸಿತು. ಹುಡುಗಿಯ ಮೂಲಕ ಮಾತಾಡಿದಾಗಲೆಲ್ಲ ಉತ್ಸಾಹದಿಂದ ತನ್ನ ಮಗಳನ್ನೇ ವಹಿಸಿಕೊಂಡು ಬಂದಂತೆ ಆಡಿದ ಈಕೆ, ನೇರ ಮಾತಾಡುವುದರಲ್ಲಿ ಹಿಂಜರಿಯುತ್ತಿದ್ದುದು ಏಕೆ? ಬಹುಶಃ ಮೊದಲ ಏಟಿಗೇ ಬಹಳ ಖಾಸಗೀ ಪ್ರಶ್ನೆಗಳನ್ನು ಕೇಳಿದ್ದರಿಂದ ಮೌನ ಧರಿಸಿದಳೇ? ಮಧುಸೂಧನಿಗೆ ಅರ್ಥವಾಗಲಿಲ್ಲ. ಬಿಲ್ ಕೊಟ್ಟನಂತರ ಕಾರಿನತ್ತ ಕಾಲೆಳೆಯುತ್ತಾ ನಡೆದ. ಅವರು ಎಲ್ಲರೂ ತನ್ನನ್ನ ಹಿಂಬಾಲಿಸಿದರು. ಮೇಡಂ ಮಗಳ ಜತೆ ಮಾತಾಡುತ್ತಿದ್ದಳಾಗಿಲೀ, ತನ್ನತ್ತ ಅಲ್ಪ ಗಮನವನ್ನೂ ಹರಿಸಲಿಲ್ಲ. ಮಧುಸೂಧನ ತನ್ನ ಕೈಗಳನ್ನೇ ನೋಡಿಕೊಳ್ಳುತ್ತಾ ಪ್ರಯಾಣವಿಡೀ ಮೌನವಾಗಿ ಕುಳಿತಿದ್ದ. +* +* +* +ಹೆಡ್‌ಮೇಡಂಗೆ ಶಾರದಾ ತಮ್ಮ ಶಾಲೆಯಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತಿದ್ದಳು ಅನ್ನುವುದು ಖಚಿತವಾಗಿ ತಿಳಿಯ ಹತ್ತಿತು. ಒಂದು ವಾರ ಬಂದಿರಲಿಲ್ಲವೆಂದ ಮಾತ್ರಕ್ಕೆ ಗುಪ್ತಾಜಿಯಂತಹ ಅನೇಕ ತಂದೆ ತಾಯಿಗಳ ಬಹಳ ನ್ ಕರೆಗಳು ಬಂದಿದ್ದುವು. ಮೇಲಾಗಿ, ಪೇರೆಂಟ್ಸ್-ಟೀಚರ್‍ಸ್ ಮೀಟಿಂಗಿನ ದಿನ, ಅನೇಕ ಮಂದಿ ಆಕೆಯ ಬಗ್ಗೆ ವಿಚಾರಿಸದ್ದರೆಂದು ಮಿಕ್ಕ ಟೀಚರುಗಳು ಹೇಳಿದ್ದರು. ಎಲ್ಲರಿಗೂ ಹೆಚ್ಚು-ಕಡಿಮೆ ಎರಡು ಮುಖ್ಯ ಅನುಮಾನಗಳಿದ್ದಂತಿತ್ತು – ಒಂದು: ಶಾರದಾ ಶಾಲೆಯನ್ನು ಬಿಟ್ಟು ಹೋಗಿದ್ದಾಳೆ. ಅದನ್ನ ಸ್ಕೂಲಿನವರು ಮುಚ್ಚಿಡುತ್ತಿದ್ದಾರೆ. ಎರಡು: ಶಾರದಾ ಯಾವುದೋ ಕಾರಣವಾಗಿ ಆಸ್ಪತ್ರೆಯ ಪಾಲಾಗಿರಬೇಕು. ಅದನ್ನು ಇವರು ಯಾರಿಗೂ ಹೇಳುತ್ತಿಲ್ಲ. ಅನುಮಾನ ಏನೇ ಇದ್ದರೂ ಧಕ್ಕೆಯಂತೂ ಶಾಲೆಗೇ ಆಗುತ್ತಿತ್ತು. ಆಕೆಯಂತಹ ಐದಾರು ಟೀಚರುಗಳಿದ್ದರೆ, ಶಾಲೆಯ ಹೊಸ ಬಿಲ್ಡಿಂಗಿಗೆ ಚಂದಾ ಎತ್ತುವುದು ಕಷ್ಟದ ವಿಷಯವೇನೂ ಅಲ್ಲವೆಂದು ಹೆಡ್‌ಮೇಡಂಗೆ ಮನವರಿಕೆಯಾಗುತ್ತಾ ಬಂತು. +ಶಾರದಾಳ ಗೈರುಹಾಜರಿಯನ್ನು ಪೋಲೀಸರಿಗೆ ತಿಳಿಸಿದ್ದರಿಂದ ಸ್ಕೂಲಿಗೆ ಒಳ್ಳೆಯದೇನೂ ಆಗಿರಲಿಲ್ಲ. ದಿನೇ ದಿನೇ ರಂಗಾರೆಡ್ಡಿಯ ಜನ ಬಂದು ಹೋಗುವುದನ್ನ ಮಕ್ಕಳು ಕಂಡು ಹೆದರಿದ್ದರು. ಸಾಲದ್ದಕ್ಕೆ ಇದನ್ನ ತಮ್ಮ ತಂದೆ ತಾಯಂದರಿಗೆ ಹೇಳಿದ್ದರಿಂದ, ಈಗ ಅದಕ್ಕೆ ಸಂಬಂಧಿಸಿದ ನ್ ಕರೆಗಳ ಮಹಾಪೂರ ಉಂಟಾಗಿತ್ತು. +ಇದು ಸಾಲದ್ದೆಂಬಂತೆ ಒಂದು ಬಾರಿ ಪೋಲೀಸರನ್ನ ಕರೆದ ಮೇಲೆ, ತಮ್ಮ ಮೇಲೇ ತಾವು ತರಿಸಿಕೊಳ್ಳಬಹುದಾದ ಅನಾಹುತವನ್ನ ಸ್ಕೂಲಿನವರು ಯೋಚಿಸಿರಲಿಲ್ಲ. ಶಾರದಾ ಬಗ್ಗೆ ತಮ್ಮಲ್ಲಿ ಹೆಚ್ಚಿನ ದಾಖಲೆಗಳು ಇರಲಿಲ್ಲ. ಹಾಗೆ ನೋಡಿದರೆ ಆಕೆಗೆ ಒಂದು ಅಪಾಯಿಂಟ್‌ಮಂಟ್ ಆರ್ಡರನ್ನ ಕೂಡಾ ಅವರು ಕೊಟ್ಟಿರಲಿಲ್ಲ. (ಕೊಟ್ಟರೆ ಅದನ್ನ ಉಪಯೋಗಿಸಿ ಬೇರೆ ಸ್ಕೂಲುಗಳಲ್ಲಿ ನೌಕರಿ ಪಡೆದುಬಿಡುತ್ತಾರೆಂಬ ವಿಕೃತ ಆಲೋಚನೆ ಸ್ಕೂಲಿನವರಿಗಿದ್ದಂತಿತ್ತು.) ಸಂಬಳವನ್ನೂ ಕ್ಯಾಷಿನಲ್ಲೇ ಕೊಡುತ್ತಿದ್ದರು. ಹೆಡ್‌ಮೇಡಂಗೆ ಈ ಲೇವಾದೇವಿಗಳ ಗಹನ ವಿಚಾರ ನಿಖರವಾಗಿ ತಿಳಿದಿರಲಿಲ್ಲ. ಈ ಎಲ್ಲವೂ ಮ್ಯಾನೇಜ್‌ಮೆಂಟಿನವರ ಆದೇಶದ ಮೇರೆಗೆ ನಡೆಯುತ್ತಿತ್ತು. ರಂಗಾರೆಡ್ಡಿಗೆ ಅವರು ಕೊಡಲು ಸಾಧ್ಯವಾದ ದಾಖಲೆಯೆಂದರೆ, ಪ್ರತಿವರ್ಷ ಮಕ್ಕಳ ಜತೆಗೆ ತಗೆಯುತ್ತಿದ್ದ ಗ್ರೂಪ್ ಟೋ, ಮತ್ತು ಶಾಲೆಯ ವಾರ್ಷಿಕ, ಸ್ಪೋರ್ಟ್ಸ್‌ಡೇ, ಹೀಗೆ ಬೇರೆ ಸಂದಗಳಲ್ಲಿ ತೆಗೆದ ಕಲವು ಟೋಗಳು. ಮಿಕ್ಕಂತೆ ರಂಗಾರೆಡ್ಡಿಗೆ ದೊರತದ್ದು ಊಹಾಪೋಹದ ಕಥೆಗಳು ಮಾತ್ರ. +ಈ ಮಧ್ಯೆ ಹೆಡ್‌ಮೇಡಂಗೆ ತಮ್ಮ ಸ್ವಂತ ದ್ವಂದ್ವಗಳೂ ಇದ್ದುವು. ಶಾರದಾ ನಿಜಕ್ಕೂ ಎಲ್ಲಿಗೆ ಹೋಗಿರಬಹುದು? ಆಕೆ ಈಗ ಈ ಕ್ಷಣ ಪ್ರತ್ಯಕ್ಷವಾದರೆ ಅವಳನ್ನು ಶಾಲೆಗೆ ಮತ್ತೆ ಸೇರಿಸಕೊಳ್ಳಬೇಕೇ? ಆಕೆಗೆ ಏನು ತುರ್ತು ಬಂದಿರಬಹುದು? ಯಾವುದಾದರೂ ಬೇರೆ ಸ್ಕೂಲಿಗೆ ಹೋಗಿ ಸೇರಿರಬಹುದೇ? ಹಿಂದೆ ಒಂದು ಬಾರಿ ಹಾಗೆ ಆಗಿದ್ದದ್ದು ಉಂಟು. ತಾನು ಬೇರೆಡೆಯಲ್ಲಿ ಪ್ರಯತ್ನ ಮಾಡುತ್ತಿರುವುದು ಶಾಲೆಗೆ ಗೊತ್ತಾದರೆ ಶಾಲೆ ಅವಳಿಗೆ ತೊಂದರೆ ಕೊಡಬಹುದೆಂಬ ಯಕ್ಕೆ ಒಬ್ಬ ಟೀಚರು, ಬೇರೆ ಶಾಲೆಯಲ್ಲಿ ನೌಕರಿ ಪಡೆದದ್ದಲ್ಲದೇ, ಅಲ್ಲಿ ಒಂದುವಾರ ಕಾಲ ಕೆಲಸ ಮಾಡಿದ ಮೇಲಷ್ಟೇ ಸ್ಕೂಲಿಗೆ ಬಂದು ರಾಜೀನಾಮೆ ಕೊಟ್ಟು ಹೋಗಿದ್ದಳು. ಆದರೆ ಇಲ್ಲಿ ಶಾರದಾ ತನ್ನ ಮನೆಯಿಂದಲೂ ನಾಪತ್ತೆಯಾಗಿರುವಳಲ್ಲ! ಅಥವಾ ಶಾರದಾಳ ಹಳೆಯ ಗಂಡ ಪ್ರತ್ಯಕ್ಷನಾಗಿರಬಹುದೇ? ಈ ಸಾಧ್ಯತೆ ಹೊಳೆದ ಕೂಡಲೇ ಹೆಡ್‌ಮೇಡಂ ರಂಗಾರೆಡ್ಡಿಗೆ ನ್ ಹಚ್ಚಿ ಶಾರದಾ ಅಹಮದಾಬಾದಿನಿಂದ ಬಂದಿದ್ದಳು, ಅಲ್ಲಿಂದ ಏನಾದರೂ ಸುಳಿವು ಸಿಗಬಹುದು ಅಂತ ಹೇಳಿದಳು. +ರಂಗಾರೆಡ್ಡಿಗೆ ರೇಗಿತ್ತು. ಈಕೆಯನ್ನ ಕಂಡುಹಿಡಿಯಲೇ ಬೇಕೆಂಬ ಆತುರ ಯಾರಿಗೂ ಇದ್ದಂತಿಲ್ಲ. ಮೇಲಾಗಿ ಅಹಮದಾಬಾದಿನಷ್ಟು ದೂರದಿಂದ ಎನ್‌ಕ್ವಯರಿ ಮಾಡುವ ಬಿಟ್ಟಿ ಸಲಹೆ ಬೇರೆ. ತನ್ನ ಮರ್ಜಿಯಲ್ಲಿದ್ದಿದ್ದರೆ ಕೇಸನ್ನ ಇಂದೇ ಮುಚ್ಚಿಬಿಡುತ್ತಿದ್ದೆ ಎಂದು ಒಂದು ಕ್ಷಣದ ಮಟ್ಟಿಗೆ ಅಂದುಕೊಂಡನಾದರೂ ಅವನಲ್ಲಿದ್ದ ಸಹಜ ಪೋಲೀಸು ಕುತೂಹಲ ಈ ಕೇಸಿನ ಬಗ್ಗೆ ಹೆಚ್ಚು ಯೋಚಿಸಲು ಪ್ರಚೋದಿಸಿತು. +ರಂಗಾರೆಡ್ಡಿ ಛಲಬಿಡದ ತ್ರಿವಿಕ್ರಮನಂತೆ, ಕಡೆಗೂ ಹಳೆಯ ಕಾಗದಗಳನ್ನ ತೆಗೆಯಲು ಹೇಳಿ, ಹಾಗೂ ಹೀಗೂ ಸ್ಕೂಲಿನ ಕಡತಗಳಿಂದ ಶಾರದಾಳ ಎಪ್ಲಿಕೇಶನ್ ರಮ್ಮನ್ನ ಹುಡುಕಿಸಿ ತೆಗೆಸಿದ. ಅದರಲ್ಲಿ ಅದೃಷ್ಟವಶಾತ್ತು ಆಕೆ ಹಿಂದೆ ಮಾಡುತ್ತಿದ್ದ ಕೆಲಸದ ವಿವರಗಳು ಇದ್ದದ್ದರಿಂದ ಅಹಮದಾಬಾದಿನಲ್ಲಿ ಈ ಬಗ್ಗೆ ವಿಚಾರಣೆ ನಡೆಸಬಹುದಿತ್ತು. ಇದು ಒಳ್ಳೆಯ ಪಾಯಿಂಟೆನ್ನಿಸಿ, ರಂಗಾರೆಡ್ಡಿ ಅಹಮದಾಬದಿನ ಪೋಲೀಸು ಇಲಾಖೆಗೆ ಈ ಬಗ್ಗೆ ಮಾಹಿತಿ ಕಳಿಸಬೇಕೆಂದು, ಹಿನ್ನೆಲೆಯನ್ನೆಲ್ಲ ವಿವರಿಸಿ ಒಂದು ಪತ್ರ ಬರೆದು ಹಾಕಿದ. ಎಲ್ಲಿಯಾದರೂ ಈ ಕೇಸಿನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಇದಕ್ಕೊಂದು ಪರಿಷ್ಕಾರ ಹುಡುಕಬಹುದಿತ್ತು. ಬರಬರುತ್ತಾ ಗಹನವಾಗುತ್ತಿದ್ದ ಈ ಕೇಸು ಅವನ ಮನಸ್ಸಿಗೆ ಕಸರತ್ತನ್ನು ನೀಡಿತ್ತು. ಕಳೆದ ಕೆಲ ವರ್ಷಗಳಲ್ಲಿ ರಂಗಾರೆಡ್ಡಿಯ ಕೈಗೆ ಬರೇ ಸಣ್ಣ ಪುಟ್ಟ ಕೊಲೆ-ಸುಲಿಗೆಯ ಕೇಸುಗಳೇ ಬಂದು ರೋಸಿಹೋಗಿದ್ದವನಿಗೆ ಇದರಲ್ಲಿ ಎಲ್ಲಿಲ್ಲದ ರೊಮಾಂಟಿಕ್ ದೃಷ್ಟಿಕೋನಗಳು ಕಂಡು ಅವನಿಗೆ ರೋಮಾಂಚನವಾಯಿತು.. +* +* +* +ಗುಪ್ತಾಜಿಯನ್ನ ತಮ್ಮ ಬಾಸ್ ಕೋಣೆಯೊಳಕ್ಕೆ ಬರಹೇಳಿದರು. ‘ನಿಮಗೊಂದು ಒಳ್ಳೆಯ ಸುದ್ದಿ, ಗುಪ್ತಾಜಿ, ಯು ಹ್ಯಾವ್ ಬೀನ್ ಕಿಕ್ಡ್ ಅಪ್‌ಸ್ಟೈರ್‍ಸ್ .. ನಿಮ್ಮನ್ನ ನಮ್ಮ ದೆಹಲಿ ವಿಗದ ಜನರಲ್ ಮ್ಯಾನೇಜರ್ ಆಗಿ ಬಡ್ತಿಯ ಮೇಲೆ ಕಳಿಸುತ್ತಿದ್ದೇವೆ..’ ಎಂದು ಹೇಳಿದರು. +ಗುಪ್ತಾಜಿಗೆ ಇದು ಒಳ್ಳೆಯ ಸುದ್ದಿಯೋ ಅಲ್ಲವೋ ತಿಳಿಯಲಿಲ್ಲ. ನೌಕರಿಯ ದೃಷ್ಟಿಯಿಂದ ಇದು ಒಳ್ಳೆಯದೇ ಆಗಿತ್ತು. ದೆಹಲಿ ತಮ್ಮ ಮುಖ್ಯ ಕಾರ್ಯಾಲಯಗಳಲ್ಲಿ ಒಂದಾದ್ದರಿಂದ ಅಲ್ಲಿಗೆ ಹೋಗುವುದು ಪ್ರತಿಷ್ಠೆಯ ವಿಷಯವೇ ಆದರೂ, ಗುಪ್ತಾಜಿ ಹೈದರಾಬಾದಿನಲ್ಲಿ ಚೆನ್ನಾಗಿ ಸೆಟಲ್ ಆಗಿಹೋಗಿದ್ದರು. ಬೇಗಂಪೇಟೆಯಲ್ಲಿ ಎರಡು ವರ್ಷಗಳ ಹಿಂದೆ ಕೊಂಡ ಟಿನಲ್ಲಿ ಗುಪ್ತಾಜೀ ಸಂಸಾರ ಸುಖವಾಗಿತ್ತು. ದಿನನಿತ್ಯ ಸಂಜೆಗೆ ಕಂಟ್ರಿ ಕ್ಲಬ್ಬಿಗೆ ಹೋಗಿ ಸಮಯ ಕಳೆವ ಸುಖಜೀವಿ ಗುಪ್ತಾಜಿಗೆ ಇದನ್ನು ಕಳೆದುಕೊಳ್ಳುವ ಮನಸ್ಸಂತೂ ಇರಲಿಲ್ಲ. ಸಾಲದ್ದಕ್ಕೆ ಶ್ರೀಮತಿ ಗುಪ್ತಾ ಕೂಡಾ ಇಲ್ಲಿ ಒಳ್ಳೆಯ ಕೆಲಸದಲ್ಲಿದ್ದರು. ಈಗ ಈ ಸುಖವನ್ನೆಲ್ಲ ಬಿಟ್ಟು ಹೋಗುವುದು ಕಷ್ಟವೇ ಆಗುತ್ತಿತ್ತು. ಗುಪ್ತಾಜಿ ಈ ಎಲ್ಲ ವಿಚಾರಗಳನ್ನು ತಲೆಯಲ್ಲಿ ಮಥಿಸುತ್ತಲೇ ದೇಶಾವರಿ ನಗೆ ಬೀರಿ, ಬಾಸಿನ ಕೈ ಕುಲುಕಿ, ‘ಥಾಂಕ್ಯೂ’ ಅಂತ ಮೆಲ್ಲನೆ ಉಸುರಿದರು. +ಇದನ್ನ ಹೇಗಾದರೂ ಅರಗಿಸಿಕೊಂಡು ಖುಷಿಯಿಂದ ದೆಹಲಿಗೆ ಹೋಗಬೇಕಿತ್ತು. ಶ್ರೀಮತಿ ಗುಪ್ತಾರ ಕಂಪನಿ ಕೇವಲ ಹೈದರಾಬಾದಿಗೇ ಪರಿಮಿತವಾಗಿದ್ದರಿಂದ ಆಕೆಗೆ ಬೇರೆ ಕೆಲಸ ಹುಡುಕುವ ಅನಿವಾರ್ಯತೆಯೂ ಇತ್ತು. ಹೊಸ ಊರು, ಹೊಸ ಪರಿಸರ – ಯಾವುದು ಹೇಗೆ ಒಗ್ಗುತ್ತದೋ ತಿಳಿಯದೇ ಗುಪ್ತಾಜಿ ವಿಚಲಿತರಾದರು. +ಈ ಎಲ್ಲದರ ಮಧ್ಯೆ ಅವರಿಗೆ ಕಂಡ ಒಂದೇ ಆಶಾಬಿಂದುವೆಂದರೆ, ತಮ್ಮ ಮಗ ಅಕ್ಷಯ.. ಸ್ಕೂಲಿಗೆ ಆಬ್ಸೆಂಟಾಗ್ತೀನಿ ಅಂತ ಇರೋವನಿಗೆ ಧೈರ್ಯವಾಗಿ ‘ಆಗು’ ಅಂತ ಹೇಳಿಬಿಡಬಹುದಿತ್ತು. ಇದರಿಂದಾಗಿ ಪೆಟಲ್ಸ್‌ಗೆ ಕೊಡಬೇಕಾದ ದೇಣಿಗೆಯೂ ಉಳಿತಾಯವಾಗುವುದನ್ನ ಅರಿತ ಗುಪ್ತಾಜಿ – ಈ ಕಾವ್ಯನ್ಯಾಯದ ಬಗ್ಗೆ ಖುಷಿಗೊಂಡರು. ‘ನೀವು ಹೀಗೆಲ್ಲಾ ನಮ್ಮ ಬಗ್ಗೆ ಸುಳ್ಳು ವಿಚಾರಗಳನ್ನು ಹಬ್ಬಿಸುತ್ತಿರುವುದರಿಂದ ಬೇಸತ್ತು ನಿಮ್ಮ ಸ್ಕೂಲಿನಿಂದ ನಮ್ಮ ಮಗನನ್ನು ತೆಗೆದು ಬೇರೆ ಸ್ಕೂಲಿಗೆ ಸೇರಿಸುತ್ತೇವೆ’ ಅಂತೆಲ್ಲಾ ನಾಟಕವನ್ನೂ ಆಡಬಹುದಿತ್ತು. ಈ ವಿಚಾರ ಮನಸ್ಸಿಗೆ ಬಂದಾಗ ಗುಪ್ತಾಜಿಗೆ ಈ ಬಾರಿ ತಾವೇ ಸ್ಕೂಲಿಗೆ ಹೋಗಿ, ಹೆಡ್‌ಮೇಡಂಗೆ ತಮ್ಮ ಮನಸ್ಸಿನ ಮಾತನ್ನು ಹೇಳಿ ಟಿ.ಸಿ. ಪಡೆದು ಬರಬೇಕೆಂಬ ಅದ್ಭುತ ವಿಚಾರವೂ ಹೊಳೆಯಿತು. ತಕ್ಷಣ ತಮ್ಮ ಸೆಲ್ನಿನಿಂದ ಹಂಡತಿಯ ನಂಬರ್ ಘುಮಾಯಿಸಿ ಅವಳಿಗೆ ವಿಚಾರ ತಿಳಿಸಿದರು. +ಶ್ರೀಮತಿ ಗುಪ್ತಾಗೆ ಇಲ್ಲಿನ ಕೆಲಸ ರೋಸಿಹೋಗಿತ್ತು. ಈ ಸುದ್ದಿ ಕೇಳಿದಾಕ್ಷಣ ಆಕೆಯೂ ಖುಷಿ ಪಟ್ಟು ದೆಹಲಿಯಲ್ಲಿ ಆರಾಮವಾಗಿ ಕೆಲಸವಿಲ್ಲದೇ ಕಿಟ್ಟಿ ಪಾರ್ಟಿ ಮಾಡಿಕೊಳ್ಳುತ್ತಾ ಹೇಗೆ ಮನೆಯಲ್ಲಿ ಸಮಯ ಕಳೆಯಬಹುದೆಂದು ಕನಸು ಕಾಣತೊಡಗಿದಳು. +* +* +* +ಮಧುಸೂಧನನಿಗೆ ಹೈದರಾಬಾದಿನಲ್ಲಿ ಸಮಯ ಹೇಗೆ ಕಳೆಯಿತೆಂಬುದೇ ತಿಳಿಯಲಿಲ್ಲ. ಇನ್ನೇನು, ಎರಡು ದಿನಗಳಲ್ಲಿ ತಾನು ಮಗಳೊಂದಿಗೆ ಮುಂಬಯಿಗೆ ವಾಪಸಾಗಬೇಕು. ತಾನು ಈ ೫ ದಿನಗಳ ಖುಷಿಯನ್ನು ವಿವರಿಸಲಾಗದೇ ಚಡಪಡಿಸಿದ. ಅಂದು ಶಾಲೆಗೆ ಹೋಗುವಷ್ಟು ಕಾಲವೂ ಆ ಹುಡುಗಿ (ಮಧುಸೂಧನ ಇದ್ದ ಮನಸ್ಥಿತಿಯಲ್ಲಿ ಆಕೆಯನ್ನು ಹೆಂಗಸು ಎಂದು ಕರೆಯುವುದು ತಪ್ಪಾದೀತು.) ತನ್ನ ಮಟ್ಟಿಗೆ ಮೌನವಾಗಿಯೇ ಇದ್ದಳು. ಆದರೆ ಮಗಳ ಜತೆಮಾತ್ರ ವಟಗುಟ್ಟುತ್ತಲೆ ಮುಂದುವರೆದಳು. ಅವನು ನಿರಂತರ ತನ್ನ ಕೈ ನೋಡಿಕೊಳ್ಳತ್ತಲೇ ಕೈಕೈ ಹಿಸುಕಿಕೊಳ್ಳುತ್ತಲೇ ಪ್ರಯಾಣವನ್ನು ಮುಂದುವರೆಸಿದ. ಶಾಲೆಯಲ್ಲಿ ತಂದೆ ಮಕ್ಕಳ ಸಂದರ್ಶನ ನಡೆಯಿತು. ಬರುವ ವೇಳೆಗಾಗಲೇ ಮಗಳಿಗೆ ಅಡ್ಮಿಶನ್ ಕೊಡುವುದಾಗಿಯೂ, ಹದಿನೈದು ದಿನಗಳೊಳಗಾಗಿ ವರ್ಷದ ಫೀಸನ್ನು ಕಟ್ಟಬೇಕೆಂದೂ ಪ್ರಿನ್ಸಿಪಾಲರು ಹೇಳಿದರು. ದಾರಿಯಲ್ಲಿ ವಾಪಸಾಗುವಾಗಲೂ ಅದೇ ಮೇಡಂ ಮತ್ತೆ ಕಾರಿನಲ್ಲಿ ತಮ್ಮ ಜೊತೆ ಸೇರಿದಳು. ಮತ್ತೆ ಮರುಪ್ರಯಾಣದಲ್ಲೂ ಅದೇ ಕಥೆ ಪುನರಾವೃತಗೊಂಡಾಗ ಮಧುಸೂಧನನಿಗೆ ಚಡಪಡಿಕೆಯುಂಟಾಯಿತು. ಈಕೆ ಬಹಳ ವಿಚಿತ್ರದ ಹೆಂಗಸೆನ್ನಿಸಿ ಅವಳ ಬಗ್ಗೆ ಆಸಕ್ತಿಯನ್ನೇ ಕಳೆದುಕೊಂಡುಬಿಟ್ಟ. ಆದರೆ ಮಗುವಿನ ಜತೆಗೆ ಆಕೆ ಬೆಳೆಸಿಕೊಂಡ ಗೆಳೆತನ ಅವನ ಗಮನವನ್ನ ತಪ್ಪಿಸಲಿಲ್ಲ. +ಹೈದರಾಬಾದಿಗೆ ಬಂದಾಗ ಮಧುಸೂಧನ ಅವಳನ್ನ ಮನೆಯ ಬಳಿ ಬಿಟ್ಟು ತಾನು ಹೋಟೆಲಿಗೆ ಹೋಗುವುದಾಗಿ ಹೇಳಿದ. ಆಕೆ ಒಪ್ಪಲಿಲ್ಲ. ಬದಲಿಗೆ ಹೋಟೆಲಿನ ಬಳಿ ಇಳಿಸಿ ನಂತರ ತಾನು ಮನೆ ಸೇರುವುದಾಗಿ ಹಠ ಹಿಡಿದಳು. ಮಧುಸೂಧನನಿಗೆ ಅವಳ ಬಳಿ ವಾದ ಮಾಡುವಷ್ಟು ಚೈತನ್ಯವಿರಲಿಲ್ಲ. ಮಂಜಾನೆ ಅಷ್ಟುಹೊತ್ತಿಗೇ ಮುಂಬೈನಿಂದ ಹೊರಟಿದ್ದವನಿಗೆ +ಸುಸ್ತಾಗಿತ್ತು. ಸರಿ ಎಂದು ಸುಮ್ಮನಾಗಿ ಗ್ರೀನ್‌ಪಾರ್ಕ್ ಹೋಟೆಲಿನಲ್ಲಿ ತಮ್ಮನ್ನು ಬಿಡಲು ಹೇಳಿ ಸುಮ್ಮನೆ ಕೂತುಬಿಟ್ಟ. +ಹೋಟೆಲಿನ ಮಹಾದ್ವಾರದ ಬಳಿ ಡ್ರೈವರ್ ಕಾರನ್ನು ನಿಲ್ಲಿಸಿದಾಗ, ಎಲ್ಲರೂ ಕಾರಿನಿಂದ ಇಳಿದರು. ಕಾರಿನ ಬಾಡಿಗೆ ಕೊಡಬೇಕು ಅಂತ ಪರ್ಸ್ ತೆಗೆಯುತ್ತಿರುವಾಗ ತನ್ನ ಮಗಳು, ‘ಆಂಟಿ, ಈವತ್ತು ನಮ್ಮ ಜೊತೇನೇ ಊಟಮಾಡಿ’ ಅಂತ ರಂಪ ಹಿಡಿದಳು. ಮಧುವಿಗೆ ಈ ಪರಿಸ್ಥಿತಿ ವಿಚಿತ್ರ ಅನ್ನಿಸಿತು. ಡ್ರೈವರ್ ಅವಳಿಗಾಗಿ ಕಾದಿರಲು ತಯಾರಿರಲಿಲ್ಲ. ಹಾಗೂ ಹೀಗೂ, ಎಲ್ಲರೂ ಒಟ್ಟಿಗೆ ಊಟ ಮಾಡುವುದೆಂದೂ, ಬೇರೆ ಟ್ಯಾಕ್ಸಿ ಅಥವಾ ಆಟೋ ಹಿಡಿದು ಅವಳು ನಂತರ ಮನೆಗೆ ಹೋಗುವುದೆಂದೂ ನಿರ್ಧಾರವಾಯಿತು. ಹಣ ಕೊಟ್ಟು ಡ್ರೈವರನನ್ನು ಮಧುಸೂಧನ ಕಳಿಸಿಬಿಟ್ಟ. +ಹೊರಗಿನ ಲೌಂಜಿನಲ್ಲಿ ಕುಳಿತಿರಲು ಆಕೆಗೆ ಹೇಳಿ ಮಧುಸೂಧನ್ ಹೋಟೆಲ್ ರೂಮಿಗೆ ಚೆಕಿನ್ ಮಾಡಿ, ಹದಿನೈದು ನಿಮಿಷಗಳಲ್ಲಿ ಮುಖ ತೊಳೆದು, ಬಟ್ಟೆ ಬದಲಾಯಿಸಿ ಅವಳೆದುರಿಗೆ ಹಾಜರಾದ. ಮೂವರೂ ಅಲ್ಲಿನ ರೆಸ್ಟುರಾಗೆ ಹೋಗಿ ಕುಳಿತರು. ಅಲ್ಲಿನ ವೇಟರ್ ಮಗುವಿಗಾಗಿಯೇ ಖಾಸ್ ಎತ್ತರದ ಕುರ್ಚಿ ತಂದು ಹಾಕಿ ಟೇಬಲ್ ಮೇಲಿನ ಕ್ಯಾಂಡಲ್ ಬೆಳಗಿಸಿದ. ಸುಮಾರು ಒಂದೂವರೆ ಘಂಟೆಕಾಲ ಅವಳೊಂದಿಗೆ ಕಳೆದ ನಂತರ ಮಧುವಿಗೆ ಸ್ವರ್ಗ ಕೈಗೆಟುಕುತ್ತಿದ್ದಂತೆ ಕಾಣುತ್ತಿತ್ತು. +ಅವಳ ಜೊತೆ ಮಾತಾನಾಡಿದಾಗ ಮಧುಸೂಧನನಿಗೆ ಅವಳು ಕಾರಿನಲ್ಲಿ ಯಾಕೆ ವಿಚಿತ್ರವಾಗಿ ವರ್ತಿಸಿದಳೆಂದು ಅರ್ಥವಾಯಿತು. ಸ್ಕೂಲಿನ ಪ್ರಿನ್ಸಿಪಾಲರಿಗೆ ತಿಳಿದ ಡ್ರೈವರನಾದ್ದರಿಂದ ತನ್ನ ಬಗ್ಗೆ ಖಂಡಿತವಾಗಿಯೂ ಅವರು ಪ್ರಶ್ನೆಗಳನ್ನು ಕೇಳುವುದು ಖಚಿತವಾದ್ದರಿಂದ, ಹುಷಾರಾಗಿರುವುದು ವಾಸಿ ಎನ್ನಿಸಿ ಸ್ಕೂಲಿನ ಬಗ್ಗೆ ಮಾತನಾಡದೇ ಮೌನ ವಹಿಸಿದ್ದಾಗಿ ಆಕೆ ಹೇಳಿದಳು. +ಮಾತು ಮುಂದುವರೆದಂತೆ ಮಗಳು ಆಕಳಿಸಿ ನಿದ್ದೆ ಬರುತ್ತಿದೆಯೆಂದು ಹೇಳಿದಳು. ಊಟ ಇನ್ನೂ ಮುಗಿದಿರಲಿಲ್ಲ, ಆದರೆ ಮಗಳಿಗೆ ನಿದ್ದೆ ತಡೆಯಲಾಗುತ್ತಿರಲಿಲ್ಲ. ಆಕೆ ಕುರ್ಚಿಯಲ್ಲೇ ತೂಕಡಿಸಿ ನಿದ್ದೆ ಮಾಡಿಬಿಟ್ಟಳು. ಅವಳನ್ನ ನಂತರ ಎತ್ತಿಕೊಂಡು ಹೋಗುತ್ತೇನೆಂದ ಮಧುಸೂಧನ ತನ್ನ ಮಾತನ್ನು ಮುಂದುವರೆಸಿದ. ತನ್ನ ಹಿನ್ನೆಲೆಯ ಬಗ್ಗೆ ಅವಳಿಗೆ ಹೇಳಬೇಕೆಂದು ಯಾಕೆ ಅನ್ನಿಸಿತೋ ತಿಳಿಯದು, ಆದರೆ ತನ್ನ ಕಳೆದ ಐದು ವರ್ಷಗಳ ಪರದಾಟವನ್ನು ಆಕೆಯ ಬಳಿ ತೋಡಿಕೊಂಡುಬಿಟ್ಟ. ತನ್ನ ಹೆಂಡತಿ ತೀರಿಕೊಂಡ ಪರಿಸ್ಥಿತಿಯನ್ನು ಅವಳಿಗೆ ಗ್ರಾಫಿಕ್ ಆಗಿ ವಿವರಿಸಿದ. +* +* +* +ನಾಲ್ಕು ವರ್ಷಗಳ ಕೆಳಗೆ ಮಧುಸೂಧನ ತನ್ನ ಸಂಸಾರದೊಂದಿಗೆ ರಜೆಯ ಸಲುವಾಗಿ ಕೇರಳಕ್ಕೆ ಹೊರಟಿದ್ದ. ಅಷ್ಟು ಹೊತ್ತಿಗೆ ಅವನಿಗಾಗಲೇ ಮದುವೆಯಾಗಿ ಆರು ವರ್ಷಗಳಾಗಿದ್ದವು. ಮದುವೆಯಾದಂದಿನಿಂದಲೂ ಪ್ರತಿವರ್ಷ ನವಂಬರ್ ಡಿಸೆಂಬರ್ ತಿಂಗಳಿನಲ್ಲಿ ಎರಡು ವಾರಗಳ ಕಾಲ ಧಂಧೆ ಬಿಟ್ಟು ದೇಶ ಸಂಚಾರ ಮಾಡುವುದು ದಂಪತಿಗಳ ನಿಯಮವಾಗಿತ್ತು. ಹೀಗೆ, ಮದವೆಯಾದಂದಿನಿಂದಲೂ ಇಬ್ಬರೂ ಕೂಡಿ ಮಸೂರಿ, ಶಿಮ್ಲಾ, ಕಲಕತ್ತಾ, ದೆಹಲಿ, ಅಗ್ರಾ, ಜೈಪುರ, ಊಟಿ – ಹೀಗೆಲ್ಲಾ ಅನೇಕ ಊರುಗಳನ್ನು ಸುತ್ತಿ ಬಂದಿದ್ದರು. ಈ ಬಾರಿ ಕೇರಳ ಲಕ್ಷದ್ವೀಪ ನೋಡುವ ಸರದಿಯಾಗಿತ್ತು. ಮುಂದಿನ ವರ್ಷಕ್ಕೆ ಅಂಡಮಾನ್ ಅಂತಲೂ ಪ್ಲಾನ್ ಹಾಕಿಕೊಂಡಿದ್ದರು. +ಮೊದಲು ಗೋವಾಕ್ಕೆ ಹೋಗಿ, ಕೊಂಕಣ್ ರೈಲ್ವೆಯ ಮಾರ್ಗವಾಗಿ ಕೇರಳ ಸುತ್ತಿ ಬರುವುದು ಈ ಬಾರಿಯ ಯೋಜನೆಯಾಗಿತ್ತು. ಅದಕ್ಕೆ ಹಿಂದನ ವರ್ಷ ಮಗು ತುಂಬಾ ಪುಟ್ಟದಾಗಿತ್ತಾದ್ದರಿಂದ ಈ ಪ್ರಯಾಣವನ್ನ ಅವರುಗಳು +ಬೆಳೆಸಿರಲಿಲ್ಲ. ಆದರೆ ಈ ಬಾರಿ ಮೊದಲ ಬಾರಿಗೆ ಪುಟ್ಟ ಮಗುವಿನ ಜೊತೆಗೆ ಇಷ್ಟು ದೊಡ್ಡ ಪ್ರಯಾಣ ಮಾಡುತ್ತಿದ್ದರು. ಗೋವಾ ಸುತ್ತಿ ಕೇರಳಕ್ಕೆ ರೈಲು ಹತ್ತಿದರು. ದಾರಿಯ ಸೌಂದರ್ಯ ಆಸ್ವಾದಿಸುತ್ತ ಸಮಯ ಕಳೆದದ್ದೇ ತಿಳಿಯಲಿಲ್ಲ. ಆದರೆ ಕತ್ತಲಾಗಿ ಎಲ್ಲರೂ ಮಲಗಿರುವಾಗಿನ ಗಾಢಾಂಧಕಾರದಲ್ಲಿ ರೈಲು ಒಂದು ದೊಡ್ಡ ಸೇತುವೆಯ ಮೇಲೆ ಹಳಿತಪ್ಪಿ ಕೆಳಕ್ಕೆ ವಾಲಿಬಿಟ್ಟಿತು. +‘ಫಾರ್ ರೆಕಾರ್‍ಡ್ ಸೇಕ್, ಕೊಂಕಣ್ ರೈಲ್ವೆಯ ಮೇಲೆ ಇದೇ ಮೊದಲ ಅಪಘಾತ! ಇನ್ನೂ ಹೆಚ್ಚು ವಿವರ ಬೇಕೆಂದರೆ ನಮ್ಮ ಬೋಗಿಗೆ ಎಲ್ಲಕ್ಕಿಂತ ಹೆಚ್ಚಾದ ಧಕ್ಕೆ ಉಂಟಾಯಿತು – ಆ ಬೋಗಿಯ ಪ್ರಯಾಣಿಕರಲ್ಲಿ ಉಳಿದದ್ದು ನಾನು ಮತ್ತು ನನ್ನ ಮಗಳು ಮಾತ್ರ. ಬಹಳಷ್ಟು ದಿನ ಈ ಅಪಘಾತದ ಚಿತ್ರಗಳು ನನ್ನ ನಿದ್ರೆಯನ್ನ ಕೆಡಿಸಿದೆ.’ +’ಈ ಅಪಘಾತದಲ್ಲಿ ನನ್ನ ಕಾಲು ಮುರಿಯಿತು. ಅದೃಷ್ಟವಶಾತ್ ಮಗಳಿಗೆ ಏನೂ ಆಗಲಿಲ್ಲ, ಹಾಗೂ ಆ ಗಲಯ ಮಧ್ಯದಲ್ಲೂ ಅವಳು ನನ್ನ ಬಳಿಯೇ ಇದ್ದಳಂತೆ. ನನಗೆ ಮಿಕ್ಕ ವಿವರಗಳು ಹೆಚ್ಚು ನೆನಪಿಲ್ಲ. ಬಹುಶಃ ಒಂದು ವಾರ ಕಾಲ ಆಸ್ಪತ್ರೆಯಿಂದ ಆಸ್ಪತ್ರೆಗೆ ನನ್ನನ್ನ ಹೊತ್ತೊಯ್ದರು. ಇಟ್ ವಾಸ್ ಎ ಮೇಜರ್ ಕೇವೊಸ್, ನಾನು ನನ್ನ ಹೆಂಡತಿಗಾಗಿ ಕೂಗಾಡುತ್ತಿದ್ದೆ – ಆದರೆ ಒಡಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. ಕಡೆಗೂ ಅವರುಗಳು ನನ್ನ ಹೆಂಡತಿ ತೀರಕೊಂಡಳೆಂದು ಹೇಳಿದರು. ನಾನಿದ್ದ ಪರಿಸ್ಥಿತಿಯಲ್ಲಿ ಅವಳ ದೇಹ ನೋಡಿ ಗುರುತಿಸಲೂ ನನಗೆ ಅವಕಾಶ ಸಿಗಲಿಲ್ಲ. ಜೊತೆಗೆ, ಎಷ್ಟೋ ದೇಹಗಳು ಗುರ್ತೇ ಸಿಗದಂತೆ ನಾಶವಾಗಿಬಿಟ್ಟಿದ್ದುವು. ಹೀಗಾಗಿ ಬಹುಶಃ ನಾನು ದೇಹವನ್ನ ಹುಡುಕುವ, ನೋಡುವ ಪ್ರಯತ್ನ ಮಾಡದಿದ್ದದ್ದೇ ಒಳ್ಳೆಯದಾಯಿತೇನೋ. ನನಗೆ ಮತ್ತೆ ನನ್ನ ವ್ಯಾಪಾರಕ್ಕೆ ಹೋಗುವ ಮನಸ್ಸಾಗಲಿಲ್ಲ. ಒಂದೇ ಬಾರಿ ಊರಿಗೆ ಹೋಗಿ ನಾಲ್ಕುದಿನ ಇದ್ದು ಎಲ್ಲವನ್ನೂ ಮಾರಿಹಾಕಿ ಮುಂಬಯಿಗೆ ಬಂದುಬಿಟ್ಟೆ. ಐ ಲೈಕ್ ದಿ ಅನಾನಿಮಿಟಿ ದಟ್ ಒನ್ ಗೆಟ್ಸ್ ದೇರ್, ಹಾಗೂ ಹೀಗೂ ಜೀವನದ ಹಲ ಕೊಂಡಿಗಳನ್ನು ಕೂಡಿಸಿ, ಅಲ್ಲಿ ಕಳೆದ ನಾಲ್ಕು ವರ್ಷಗಳಿಂದ ಮಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಂಡು ಜೀವನ ಮಾಡುತ್ತಿದ್ದೇನೆ.’ +ಅವನ ಬಾಕಿ ಸಂಸಾರದ ಬಗ್ಗೆ ಆಕೆ ಕೇಳಿದಳು… ಅದಕ್ಕೆ ಮಧುಸೂಧನ ವಿವರವಾದ ಉತ್ತರವನ್ನೇನೂ ನೀಡಲಿಲ್ಲ. ಇಲ್ಲ ನಮ್ಮದು ಪ್ರೇಮ ವಿವಾಹ.. ಮನೆಯವರಿಗೆ ಇಷ್ಟವಿರಲಿಲ್ಲ. ಮನಸ್ತಾಪವಾಯಿತು. ಅವರೊಂದಿಗೆ ಸಂಪರ್ಕ ಕಡಿದು ಅನೇಕ ವರ್ಷಗಳೇ ಆಗಿವೆ. ಎಂದಷ್ಟೇ ಹೇಳಿ ಅವನು ಸುಮ್ಮನಾಗಿ ಬಿಟ್ಟ. +* +* +* +ಅಹಮದಾಬಾದಿನಿಂದ ಬಂದ ರಿಪೋರ್ಟು ಪ್ರೋತ್ಸಾಹದಾಯಕವಾಗೇನೂ ಇರಲಿಲ್ಲ. ಶಾರದಾ ತನ್ನ ಹಿಂದಿನ ಕೆಲಸವನ್ನ ಹೈದರಾಬಾದಿಗೆ ಬರುವ ಮೂರು ವರ್ಷಗಳ ಹಿಂದೆಯೇ ಬಿಟ್ಟಿದ್ದಳು. ಆ ನಂತರ ಅವಳು ಎಲ್ಲಿ ಹೋದಳೆಂಬ ಬಗ್ಗೆ ಸುದ್ದಿಯಿರಲಿಲ್ಲ. ಬಹುಶಃ ಅಹಮದಾಬಾದಿನ ಪೋಲೀಸು ಇಲಾಖೆ ಈ ಕೇಸಿನ ಬಗ್ಗೆ ಹೆಚ್ಚಿನ ಆಸಕ್ತಿಯಿಂದ ಕೆಲಸ ಮಾಡಿರಲಿಲ್ಲವೆಂದು ರಂಗಾರೆಡ್ಡಿ ಊಹಿಸಿದ. ತಾನು ಅವರ ಸ್ಥಾನದಲ್ಲಿದ್ದಿದ್ದರೆ, ಆ ಸಂಸ್ಥೆಯಿಂದ ಆಕೆಯ ಮನೆ ವಿಳಾಸ ಹುಡುಕಿ, ಹೇಗಾದರೂ ಮಾಡಿ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸುತ್ತಿದ್ದ. +ಈ ಎಲ್ಲ ಆಗುವ ವೇಳೆಗೆ ಶಾರದಾ ನಾಪತ್ತೆಯಾಗಿ ಒಂದು ತಿಂಗಳಾಗುತ್ತಾ ಬಂದಿತ್ತು. ರಂಗಾರೆಡ್ಡಿಗೆ ಈ ಕೇಸು ಗಹನವಾಗುತ್ತಾ ಹೋಯಿತು. ಅದು ಹೇಗೆ ಒಂದು ವ್ಯಕ್ತಿಯ ಬಗ್ಗೆ ಇಷ್ಟು ಕಡಿಮೆ ಮಾಹಿತಿಯಿರಬಹುದು ಎನ್ನುವ ವಿಚಾರ ಅವನಿಗೆ ಅರ್ಥವೇ ಆಗಿರಲಿಲ್ಲ. ಬಹುಶಃ ಶಾರದಾಳಿಗೆ ಸ್ಕೂಲು ಬಿಟ್ಟರೆ ಬೇರಾವ ಸಂಪರ್ಕವೂ ಇದ್ದಂತೆ ಕಂಡಿಲ್ಲದ್ದರಿಂದ ಅವಳೂ ಗೈರುಹಾಜರಿ ರಿಪೋರ್ಟ್ ಆಗಲು ತಡವಾಗಿದ್ದಿರಬಹುದು. ಆದರೆ ಸ್ಕೂಲಿನವರಿಗಾದರೂ ಬುದ್ಧಿ ಬೇಡವೇ? ಅಂತ ಅವರಿಗೂ ಮನದಲ್ಲೇ ಶಾಪ ಹಾಕಿದ. +ರಂಗಾರೆಡ್ಡಿಗೆ ಈ ಬಗ್ಗೆ ಅನುಮಾನ ಹೆಚ್ಚಾಗುತ್ತಾ ಹೋದಂತೆ ಅವನು ಕಳೆದ ಒಂದು ತಿಂಗಳಿನಲ್ಲಾಗಿರಬಹುದಾದ ಕೊಲೆ, ಸಾವು, ಅಪಹರಣದ ಕೇಸುಗಳಲ್ಲಿ ಯಾವುದಾದರೂ ೩೦-೩೫ ವರ್ಷದ ಮಹಿಳೆ ಸಿಲುಕಿದ್ದಳೇ ಎಂಬ ಮಾಹಿತಿಯನ್ನ ಸಂಗ್ರಹಿಸಲು ತನ್ನ ಠಾಣೆಯವರಿಗೆ ಹೇಳಿದ. +* +* +* +ಈ ನಾಲ್ಕು ದಿನಗಳಲ್ಲಿ ಮಧುಸೂಧನ ಮೇಡಂ ಜೊತೆ ಅನೇಕ ಬಾರಿ ಟಿ ಮಾಡಿದ್ದ. ಅವನಿಗೆ ಇದೊಂದು ವಿಚಿತ್ರ ಅನುವವಾಗಿತ್ತು. ತನ್ನ ಮೊದಲ ಪ್ರೇಮ ಅಂಕುರಗೊಂಡ ರೀತಿಗೂ ಈ ಹುಡುಗಿಯ ಜೊತೆ ತನ್ನ ಸಂಬಂಧ ಬೆಳೆಯುತ್ತಿದ್ದ ರೀತಿಗೂ ಬಹಳವೇ ಅಂತರವಿತ್ತು. ಜೊತೆಗೆ ಇಲ್ಲಿ ತನ್ನ ಮಗಳಿದ್ದದ್ದರಿಂದ ಯಾವ ಮಾತುಕತೆಯೂ ಸರಾಗವಾಗಿ ನಡೆಯುತ್ತಿರಲಿಲ್ಲ. +ಆದರೆ ಮೊದಲ ಸಂಜೆಯ ಗ್ರೀನ್ ಪಾರ್ಕ್ ಹೋಟೇಲಿನ ಊಟದ ನಂತರ, ಆಕೆಯ ಟಿ ಮತ್ತೆ ಆಗಲಾರದು ಅಂದುಕೊಂಡಿದ್ದ. ಏನಾದರಾಗಲಿ ಎಂದು ‘ನಾಳೆ ಸಾಲಾರ್‌ಜಂಗ್ ಮ್ಯೂಸಿಯಂಗೆ ಇವಳನ್ನ ಕರೆದುಕೊಂಡು ಹೋಗ್ತೀನಿ, ನಿಮಗೆ ಸಮಯವಿದ್ದರೆ ಯಾಕೆ ನಮ್ಮ ಜೊತೆ ಬರಬಾರದು?’ ಅಂದ. ಅವಳು ಹೆಚ್ಚು ತೆಲೆಕೆಡಿಸಿಕೊಳ್ಳದೇ ಒಪ್ಪಿದ್ದು ಅವನಿಗೆ ಆಶ್ಚರ್ಯ ನೀಡಿತ್ತು. ‘ಮ್ಯೂಸಿಯಂಗೆ ನನ್ನ ವಿದ್ಯಾರ್ಥಿಗಳನ್ನ ಅನೇಕ ಬಾರಿ ಕರಕೊಂಡು ಬಂದಿದ್ದೀನಿ, ಹೀಗಾಗಿ ನಾನು ಬಂದರೆ ಚೆನ್ನಾಗಿರುತ್ತೆ, ಬರ್ತೀನಿ. ನನಗೂ ಆ ಸ್ಕೂಲಿನಿಂದ ಸುದ್ದಿ ಬರುವವರೆಗೂ ಬೇರೆ ಕೆಲಸವಿಲ್ಲ. ಸೋ…’ ಎಂದು ಅವಳು ಹೇಳಿದಾಗ ಮಧುಸೂಧನನಿಗೆ ವಿಚಿತ್ರ ಅನುತಿಯಾಯಿತು. ಅವನು ತನ್ನ ಕೈರೇಖೆ ನೋಡಿಕೊಂಡ. ಬೆಳಿಗ್ಗೆ ಈ ಸುದ್ದಿಯನ್ನ ಕೇಳಿದ ಮಗಳಿಗಂತೂ ಎಲ್ಲಿಲ್ಲದ ಖುಷಿಯಾಯಿತು. +ಹೀಗೆ ಪ್ರಾರಂವಾದ ಎರಡನೇ ದಿನದ ಕಾರ್ಯಕ್ರಮ, ಮತ್ತೆ ರಾತ್ರೆ ಗ್ರೀನ್‌ಪಾರ್ಕ್‌ನಲ್ಲಿ ಕ್ಯಾಂಡಲ್‌ಲೈಟ್ ಊಟದ ಜೊತೆ ಸಮಾಪ್ತವಾಯಿತು. ಮರುದಿನ ಮತ್ತೆ ಮಧುವೇ ಅವಳನ್ನು ಆಹ್ವಾನಿಸಿದ. ಇಬ್ಬರೂ ಸೇರಿ ಇಡೀ ಹೈದರಾಬಾದನ್ನು ಮಗಳಿಗೆ ತೋರಿಸುವ ನೆವದಲ್ಲಿ ಸುತ್ತಾಡಿದರು. +ನಾಲ್ಕನೇ ದಿನದ ವೇಳೆಗೆ ಅವಳಿಗೆ ಸ್ಕೂಲಿನಿಂದ ನ್ ಬಂತು. ‘ನಿಮಗೆ ನಮ್ಮ ಶಾಲೆಯಲ್ಲಿ ಕೆಲಸ ಕೊಡಲು ನಮಗೆ ಬಹಳ ಖುಷಿಯಾಗುತ್ತಿದೆ. ಆದರೆ ನಮ್ಮದು ರೆಸಿಡೆನ್ಷಿಯಲ್ ಶಾಲೆಯಾದ್ದರಿಂದ, ಹಾಗೂ ಅನೇಕ ಶ್ರೀಮಂತ ಜನರ ಮಕ್ಕಳು ಬರುವುದರಿಂದ ನೀವು ನಿಮ್ಮ ಮನೆಯಿರುವ ಇಲಾಖೆಯ ಪೋಲೀಸು ಠಾಣೆಯಿಂದ ಒಂದು ಸರ್ಟಿಫಿಕೇಟ್ ತರುವುದು ಅವಶ್ಯಕ. ಇದು ನಮ್ಮ ನಿಯಮ.. ದಯವಿಟ್ಟು ತಪು ಅರ್ಥ ಮಾಡಿಕೊಳ್ಳಬೇಡಿ. ಠಾಣೆಯವರು ನಿಮ್ಮ ಜೊತೆ ಸಹಕರಿಸದಿದ್ದರೆ ನನಗೆ ತಿಳಿಸಿ, ನಾನು ಐ.ಜಿ. ಯ ಜೊತೆ ಮಾತಾಡುತ್ತೇನೆ. ಹಿಂದೆ ನಮ್ಮ ಶಾಲೆಗೆ ಹಳೆಯ ಶಾಲೆಯಿಂದ ರಿಸೈನ್ ಮಾಡದೇ ಕ್ಲಿಯರೆನ್ಸ್ ಪಡೆಯದೇ ಜನ ಬಂದಿರುವುದುಂಟು. ನಮಗೆ ಆ ನಂತರ ಸಾಕಷ್ಟು ತೊಂದರೆಯಾಯಿತು. ನೀವು ಆದಷ್ಟು ಬೇಗ ನಿಮ್ಮ ಠಾಣೆಯಿಂದ ಈ ಸರ್ಟಿಫಿಕೇಟ್ ತರಿಸಿಕೊಡಿ. ಯಾವುದಕ್ಕೂ ನನಗೆ ಸಂಜೆಗೆ ನ್ ಮಾಡಿ.’ ಎಂದು ಪ್ರಿನ್ಸಿಪಾಲರು ಹೇಳಿದರಂತೆ. +‘ಹಾಗಾದರೆ ನೀವು ಅಲ್ಲಿಗೆ ಸೇರುತ್ತೀರಾ ಅಂತ ಆಯಿತು. ಇದರಿಂದ ನನ್ನ ಮನಸ್ಸಿಗೂ ನೆಮ್ಮದಿಯಾಯಿತು ಬಿಡಿ. ನನ್ನ ಮಗಳು ನಿಮ್ಮ ನಿಗರಾನಿಯಲ್ಲಿರುತ್ತಾಳೆ. ಬನ್ನಿ, ನೀವು ನನಗೆ ಇಷ್ಟೆಲ್ಲಾ ಹೈದರಾಬಾದು ತೋರಿಸಿದ್ದೀರ, ನಾನೂ ನಿಮ್ಮ +ಜೊತೆಗೆ ಠಾಣೆಗೆ ಬರುತ್ತೇನೆ. ಆ ಸರ್ಟಿಫಿಕೇಟ್ ಏನೋ ಇಂದೇ ತಂದುಬಿಡುವಾ.. ಎಷ್ಟಾದರೂ ನನ್ನ ಆಸಕ್ತಿಯೂ ನೀವು ಆ ಸ್ಕೂಲು ಸೇರುವುದರಲ್ಲೇ ಇದೆ.’ +ಮಧುವಿಗೆ ಈ ಪರಿಚಯವನ್ನು ಮುಂದುವರೆಸುವುದಕ್ಕೆ, ಬೆಳೆಸುವುದಕ್ಕೆ ಅವಕಾಶ ಸಿಕ್ಕದ್ದು ಮನಸ್ಸಿಗೆ ಉಲ್ಲಾಸ ತರಿಸಿತ್ತು. ಈ ನಾಲ್ಕು ದಿನಗಳಲ್ಲಿ ತನ್ನ ಬಗ್ಗೆ ತಾನು ಎಲ್ಲ ಹೇಳಿದ್ದಲ್ಲದೇ ಅವಳ ಬಗ್ಗೆಯೂ ಸಾಕಷ್ಟು ವಿವರಗಳನ್ನ ಮಧು ಒಟ್ಟುಗೂಡಿಸಿದ್ದ. ಈ ಪರಿಚಯ ಎತ್ತ ಸಾಗಬಹುದೋ ಯೋಚಿಸುತ್ತಾ ಮಧುಸೂಧನ ಮತ್ತೆ ತನ್ನ ಕೈ ನೋಡಿಕೊಂಡ. ಠಾಣೆಗೆ ಹೋಗುವಾಗ ಮಗಳನ್ನು ಒಯ್ಯುವುದು ಒಳ್ಳೆಯದಲ್ಲ ಅಂತ ಮಧುವಿನ ಅಭಿಪ್ರಾಯವಾಗಿತ್ತು. ಹೀಗಾಗಿ ಮಗಳನ್ನು ಆಕೆಯ ಗೆಳತಿಯ ಮನೆಯಲ್ಲಿ ಬಿಟ್ಟು ಇಬ್ಬರೂ ಆಟೋ ಹತ್ತಿದರು. +ದಾರಿಯಲ್ಲಿ ಆಕೆ ಹಿಂಜರಿದು ಹಿಂಜರಿದು ಇಫ್ ಯು ಡೋಂಟ್ ಮೈಂಡ್, ನಾನು ನಿಮ್ಮನ್ನ ಒಂದು ಪ್ರಶ್ನೆ ಕೇಳಬಹುದೇ?’ ಅಂದಳು. +ಮಧುಸೂಧನನಿಗೆ ಮಹತ್ವದ ಪ್ರಶ್ನೆಯೊಂದು ಈಗ ತನ್ನ ದಿಕ್ಕಿನಲ್ಲಿ ಬರಬಹುದೆನ್ನಿಸಿ ಮೈ ಜುಂ ಎಂದತು. ಈ ನಾಲ್ಕು ದಿನಗಳಲ್ಲಿ ಇದೇ ಮೊದಲ ಬಾರಿಗೆ ಮಗಳಿಲ್ಲದೇ, ಅವರಿಬ್ಬರೇ ಒಂಟಿಯಾಗಿದ್ದರು. ‘ಖಂಡಿತವಾಗಿ ಕೇಳಿ, ಇಷ್ಟು ದಿನಗಳಾದ ಮೇಲೂ ನೀವು ಪ್ರಶ್ನೆ ಕೇಳಬಹುದಾ ಅನ್ನೋ ಪ್ರಶ್ನೆಯನ್ನ ಕೇಳುತ್ತಿದ್ದೀರೆಂದರೆ ನಮ್ಮ ಈ ನಾಲ್ಕು ದಿನದ ಒಡನಾಟಕ್ಕೆ ಅವಮಾನ ಮಾಡಿದಂತೆ. ಪ್ಲೀಸ್, ಏನು ಕೇಳಬೇಕಂತ್ತಿದ್ದೀರೋ ಕೇಳಿ..’ +‘ಏನಿಲ್ಲ.. ಮೊದಲ ದಿನದಿಂದಲೂ ನೋಡುತ್ತಿದ್ದೇನೆ. ನಾನು ನಿಮ್ಮನ್ನು ಮಾತನಾಡಿಸಲು ಪ್ರಾರಂಭಿಸಿದಾಗಲೆಲ್ಲ ನೀವು ನಿಮ್ಮ ಕೈ ನೋಡಿಕೊಳ್ಳುತ್ತೀರಿ, ಮತ್ತು ಕೈಯನ್ನ ಒಮ್ಮೆ ಒತ್ತಿಕೊಳ್ಳುತ್ತೀರಿ. ಇದರ ಮಹತ್ವ ಏನೂ ಅಂತ… ಜಸ್ಟ್ ಕುತೂಹಲ ಅಷ್ಟೇ..’ +‘ಓಹ್ ಅದಾ…’ ಮಧೂಸೂಧನ ನಾಚಿದ. ಅವನ ಮುಖ ಕೆಂಪಾಯಿತು, ಹಣೆಯ ಮೇಲೆ ಬೆವರಿನ ಹನಿಗಳು ಬಂದುವು, ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯದೇ ಅವನು ತಬ್ಬಿಬ್ಬಾದ. ಕಡೆಗೂ ಧೈರ್ಯ ತಂದುಕೊಂಡು ಕೇಳಿದ: ‘ನಿಮಗೆ ನಿಜ ಹೇಳಬೇಕೋ ಸುಳ್ಳು ಹೇಳಬೇಕೋ ಹೇಳಿ.’ +’ಇದು ಒಳ್ಳೆಯ ಪ್ರಶ್ನೆಯಾಯಿತು. ಅಫ್‌ಕೋರ್‍ಸ್, ನಿಜವನ್ನೇ ಹೇಳಿ.. ಇದರಲ್ಲಿ ಸುಳ್ಳು ಹೇಳುವಂತಹ ವಿಚಾರ ಏನಿದ್ದೀತು?’ +‘ನೀವು ಸಿಟ್ಟಾಗಬಾರದು ಮತ್ತೆ..’ +‘ಇದರಲ್ಲಿ ಸಿಟ್ಟಾಗುವ ವಿಷಯವೇನಿದೆ? ಅಷ್ಟೂ ಮೆಚ್ಯೂರಿಟಿಯಿಲ್ಲದೇ ಯಾರಾದರೂ ವರ್ತಿಸುತ್ತಾರಾ, ಹೇಳಿ?’ +ಇಷ್ಟು ಆಶ್ವಾಸನೆ ಸಿಕ್ಕ ಕೂಡಲೇ ಮಧುಸೂಧನನಿಗೆ ಧೈರ್ಯ ಬಂತು. ದಯಾಕರ ಮೆನನ್ ಅವನಿಗೆ ಹೇಳಿದ್ದ ವಿಷ್ಯವಾಣಿಯ ಬಗ್ಗೆ ನಾಚುತ್ತಲೇ ಹೇಳಿದ. ಅದನ್ನು ಕೇಳಿದಾಗ ಅವಳ ಮುಖ ಕೆಂಪಾಯಿತು. +‘ಎಲ್ಲಿ, ಇದು ಯಾವ ರೇಖೆಯೋ ತೋರಿಸಿ…’ ಎನ್ನುತ್ತಾ ಅವನ ಪಾಣಿಗ್ರಹಣ ಮಾಡಿ, ಅದನ್ನ ಒಮ್ಮೆ ಒತ್ತಿದಳು. ಈ ಚರ್ಯೆ ಸಾವಿರ ಮಾತುಗಳಿಗಿಂತ ಹೆಚ್ಚಾಗಿತ್ತು. ಈ ಸುಖ ಕ್ಷಣಮಾತ್ರದ್ದಾಗಿತ್ತು. ಯಾಕೆಂದರೆ, ಇಬ್ಬರೂ ಬೇರೆ ಮಾತಾಡುವಷ್ಟರಲ್ಲಿ ಪೋಲೀಸು ಠಾಣೆಯನ್ನ ಆಟೋರಿಕ್ಷಾ ತಲುಪಿಬಿಟ್ಟಿತ್ತು. +* +* +* +ಠಾಣೆಯಲ್ಲಿ ಅವರು ನೇರ ಠಾಣೆದಾರನ ಕೋಣೆಗೆ ಹೋದರು. ಅಲ್ಲಿ ರಂಗಾರೆಡ್ಡಿ ಠೀವಿಯಿಂದ ಕೂತಿದ್ದ. ಇಬ್ಬರೂ ಬಂದದ್ದನ್ನ ನೋಡಿ ಅವರನ್ನ ಬರಮಾಡಿಕೊಂಡು ಎದುರಿನ ಕುರ್ಚಿಗಳಲ್ಲಿ ಕೂಡಿಸಿದ. ಆಕೆ ರಂಗಾರೆಡ್ಡಿಗೆ ತನ್ನ ಹೊಸ ಕೆಲಸದ ಬಗ್ಗೆ, ಸ್ಕೂಲಿನ ಬಗ್ಗೆ, ಹಾಗೂ ಬೇಕಾಗಿರುವ ಸರ್ಟಿಫಿಕೇಟ್ ಬಗ್ಗೆ ಹೇಳಿದಳು. ರಂಗಾರೆಡ್ಡಿ ತಲೆಯಾಡಿಸಿದ. ‘ಹೌದು, ಆ ಸ್ಕೂಲಿನ ಬಗ್ಗೆ ಕೇಳಿದ್ದೇನೆ, ಆಗಬಹುದು ಸರ್ಟಿಫಿಕೇಟ್ ಕೊಡುತ್ತೇನೆ, ನಿಮ್ಮ ವಿಳಾಸ ಇತ್ಯಾದಿ ಈ ಕಾಗದದ ಮೇಲೆ ಬರೆದು ಕೊಡಿ, ಎರಡು ದಿನಗಳಲ್ಲಿ ಎನ್‌ಕ್ವಯರಿ ಮಾಡಿ ಬರಕೊಡುತ್ತೇನೆ. ಅಂದಹಾಗೆ ಇವರು ಯಾರು?’ ಎಂದು ಕೇಳಿದ. +ಠಾಣೆಗೆ ಬರುವಾಗ ತಮಗೆ ಇಂಥ ಪ್ರಶ್ನೆಯೊಂದು ಎದುರಾಗಬಹುದೆಂದು ಇಬ್ಬರೂ ಯೋಚಿಸಿರಲಿಲ್ಲ. ಗೊಣಗುಟ್ಟುತ್ತಾ ಇಬ್ಬರೂ ಟಿಯಾದ ಪರಿಸ್ಥಿತಿಯನ್ನ ವಿವರಿಸಿದರು…. ರಂಗಾರೆಡ್ಡಿಗೆ ಇವರಿಬ್ಬರನ್ನೂ ನೋಡಿ ಅನುಮಾನ ಬಂತು.. ಮೇಜಿನ ಅಡಿಗದಲ್ಲಿದ್ದ ಬೆಲ್ ಒತ್ತಿ ಪೇದೆಯನ್ನು ಕರೆದ. ಅವರ ಮುಖವನ್ನ ನೋಡುತ್ತಲೇ, ಏನೂ ಆಗಿಲ್ಲವಂಬಂತೆ, ‘ಎರಡು ಕಾಫಿ ತೆಗೊಂಡು ಬಾ.. ಹಾಗೇ ಶಾರದಾ ಮೇಡಂ ಲನ್ನ ಕಳಿಸು…’ ಅಂದ. ಇಷ್ಟು ಹೇಳಿ ಪ್ರತಿಕ್ರಿಯೆಗಾಗಿ ಇಬ್ಬರ ಮುಖವನ್ನೂ ನೋಡಿದ. ಯಾವ ಪ್ರತಿಕ್ರಿಯೆಯೂ ಕಾಣಿಸದಾಗ, ಸ್ವಲ್ಪ ನಿರಾಳ ನಿಟ್ಟುಸಿರಿಟ್ಟ.. +‘ನೋಡಿ, ನಮ್ಮ ಠಾಣೆಗೆ ಈ ಮಧ್ಯೆ ಯಾಕೋ ಸ್ಕೂಲ್ ಟೀಚರುಗಳ ಕೇಸುಗಳೇ ಬರ್ತಾ ಇರೋಹಾಗಿದೆ.. ಮೂರು ವಾರಗಳ ಕೆಳಗೆ ಪೆಟಲ್ಸ್ ಸ್ಕೂಲಿನಿಂದ ಒಬ್ಬರು ಮೇಡಂ ನಾಪತ್ತೆಯಾಗಿದ್ದಾರೆ. ಅವರೂ, ಹೇಳದೇ ಕೇಳದೇ ಹೀಗೆ ಯಾವುದಾದರೂ ರೆಸಿಡೆನ್ಷಿಯಲ್ ಶಾಲೆ ಸೇರಿರಬಹುದೂಂತ ನಮ್ಮ ಅನುಮಾನ… ಹೀಗಾಗಿ ಪೋಲೀಸು ವೆರಿಫಿಕೇಶನ್ ಮಾಡಿಸಿಕೊಳ್ಳುವುದು ಒಳ್ಳೆಯದೇ ಅಂತ ನಮ್ಮ ಅಭಿಪ್ರಾಯ. ನೀವೇನಂತೀರಿ?’ ಎಂದು ಒಂದು ದೇಶಾವರಿ ನಗೆ ಬೀರಿದ. +ಇಬ್ಬರೂ ತಲೆಯಾಡಿಸಿದರು. ಮೊದಲಿಗೆ ಲ್ ಬಂತು. ರಂಗಾರೆಡ್ಡಿ ಅದನ್ನ ಒಮ್ಮೆ ಅಮೂಲಾಗ್ರ ನೋಡಿದ. ಅದರೊಳಗಿದ್ದ ಟೋವನ್ನ ಹತ್ತಿರದಿಂದ ನೋಡಿ, ಅವಳನ್ನೊಮ್ಮೆ ನೋಡಿದ.. ಉಹುಂ, ಇದು ಬೇರೆಯದೇ ಕೇಸು ಅಂದುಕೊಳ್ಳುತ್ತಾ ಲನ್ನ ಅವಳತ್ತ ತಿರುಗಿಸಿ – ‘ನೀವೂ ಟೀಚಿಂಗ್ ಪ್ರಷನ್‌ನಲ್ಲಿದ್ದೀರ… ನಿಮಗೆ ಇವರೇನಾದರೂ ಗೊತ್ತೇನೋ ನೋಡಿ ಹೇಳಿ.’ ಅಂದ. +‘ಇಲ್ಲ.’ ಅನ್ನುತ್ತಾ ಅವಳು ಆ ಲನ್ನು ಮಧುವಿಗೆ ಕೊಟ್ಟಳು. ಮಧುಸೂಧನ ಆ ಲನ್ನು ಪಡೆದು ಯಾವ ಆಸಕ್ತಿಯೂ ಇಲ್ಲದವನಂತೆ ನೋಡಿದ. ನೋಡಿದ ಕೂಡಲೇ ಜೋರಾಗಿ ‘ಓಹ್ ಗಾಡ್!!!’. ಅಂತ ಕಿರುಲಿದ. ರಂಗಾರೆಡ್ಡಿ ಮತ್ತು ಆಕೆ ಕೂಡಲೇ ಅವನತ್ತ ನೋಡಿ ಏಕಧ್ವನಿಯಲ್ಲಿ ‘ಏನಾಯಿತು?’ ಅಂದರು. +‘ಇದು… ಇದು… ಇದು ನನ್ನ ಹೆಂಡತಿ ಶಾರದಾ….’ ಎಂದ. +ಆ ಹೊತ್ತಿಗೆ ಸರಿಯಾಗಿ ಒಬ್ಬ ಕಾನ್‌ಸ್ಟೇಬಲ್ ಒಳಕ್ಕೆ ಬಂದ. ‘ಸರ್ ಪಂಜಾಗುಟ್ಟಾ ಠಾಣೆಯಿಂದ ರಿಪೋರ್ಟ್ ಬಂದಿದೆ, ಮೂರು ವಾರಗಳ ಕೆಳಗೆ ಹೂತಿಟ್ಟಿದ್ದ ಹೆಂಗಸಿನ ಶವ ಸಿಕ್ಕಿದೆಯಂತೆ. ನಾವು ಕಳಿಸಿದ ಆ ಮೇಡಂದೇನಾದರೂ ಇರಬಹುದು ಅಂತ ಅವರ ಅನುಮಾನ….’ +ರಂಗಾರೆಡ್ಡಿ ದಂಗಾದ. ಮಧುಸೂಧನ ಕಂಗಾಲಾಗಿ ಕಂಬವಾಗಿಬಿಟ್ಟಿದ್ದ. ಆ ಹುಡುಗಿ ಮಧುಸೂಧನನ ಕೈಯನ್ನು ದ್ರವಾಗಿ ಹಿಡಿದು ಅವನ ಕೈರೇಖೆಗಳನ್ನು ಸವರತೊಡಗಿದಳು. +***** +ಆ ದಿನ ಸಂಜೆ ಬಾಗಿಲು ತಟ್ಟುವ ಶಬ್ದ ಕೇಳಿಸುತ್ತಿದ್ದಾಗ ಹೊರಗಡೆ ಮಳೆ ಬರುವ ಲಕ್ಷಣ ಸ್ಪಷ್ಟವಾಗಿತ್ತು. ಗುಡುಗು ಆಕಾಶ ಭೂಮಿಗೂ ನಡುವೆ ಶಬ್ದ ಸೇತುವೆ ನಿರ್ಮಿಸುತ್ತಿದ್ದರೆ ಮಿಂಚು ಬೆಳಕಿನ ಸೇತುವೆ ಕಟ್ಟುವ ಸನ್ನಾಹವನ್ನು ಅಲ್ಲಗಳೆಯುವಂತಿರಲಿಲ್ಲ. […] +ಉಚೆ ಆಫ್ರಿಕಾ ಖಂಡದ ಸಣ್ಣ ದೇಶವೊಂದರಿಂದ ಬಂದವನು. ನಾವಿಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆವು. ಕಂಡಕಂಡ ದೇಶಗಳಲೆಲ್ಲ ತನ್ನ ವ್ಯಾಪಾರ ವಿಸ್ತರಿಸಿದ್ದ ಈ ಕಂಪನಿ, ಮುಂಬೈಯಲ್ಲಿ ನಡೆಸಿದ ಹತ್ತು ದಿನಗಳ ತರಬೇತಿ ಶಿಬಿರಕ್ಕೆ ಎಂಟು […] +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_135.txt b/Kannada Sahitya/article_135.txt new file mode 100644 index 0000000000000000000000000000000000000000..8af2ed78f351f925978bdb90cb5dc2f195c4917a --- /dev/null +++ b/Kannada Sahitya/article_135.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಿರುಕನಾಗಿ +ತಿರುಕನಾಗಿ +ಅಥವಾ ಮಾತು ಮಾತು ಮಾತುಗಳ +ಶಬ್ದ ಗುಮ್ಮಟವಾದ ಈ ಪ್ರಪಂಚ +ಕವಿಗೆ ತಿಪ್ಪೆಗುಂಡಿಯಂತೆ ಎನ್ನುವುದಾದರೆ +ತಲೆಕೆದರಿದ ತಿರುಕಿಯಂತೆ ಕವಿ +ಈ ತಿಪ್ಪೆಯಲ್ಲಿ ಮರೆತು ಬಿಸಾಕಿದ +ಹರಳು, ಗುಲಗಂಜಿ, ಹೇರ್‌ಪಿನ್ನು, ಬ್ಲೇಡು +ಸರದ ಹುಕ್ಕು, ಅದೃಷ್ಟವಿದ್ದರೆ ನಿರೀಕ್ಷಿಸದೇ ಇದ್ದ +ಮಗುವಿನ ಬೆಳ್ಳಿ ಒಳಲೆ ಇತ್ಯಾದಿ ವಿಶೇಷ ಹುಡುಕಿ ತೆಗೆದು +ಇಟ್ಟುಕೊಳ್ಳುತ್ತಾನೆ, ಅಥವಾ ರೀಸೈಕಲ್ ಮಾಡುತ್ತಾನೆ, ಅಥವಾ +ಒಡೀ ತಿಪ್ಪೆಯಿಂದ ಬಯೋಗ್ಯಾಸ್ ಮಾಡಿ +ದೀಪವನ್ನೂ ಉರಿಸಬಲ್ಲ ರೈತ ಅವನೆಂದರೂ ಸರಿಯೆ. +ಅಥವಾ ಅದೃಷ್ಟವಶಾತ್ +ಮಣಿಪಾಲದ ನನ್ನ ಗೆಳೆಯ ವಿಜಯನಾಥ ಶೆಣೈರಂತೆ +ಹಕ್ಕಿದ್ದನ್ನು ಹಕ್ಕಿಯಂತೆ ತಂದೂ ತಂದೂ ಜೋಡಿಸಿ +ಮಾಡಿದ ಗೂಡು ಅದ್ಭುತವೆನ್ನಿಸಿಬಿಟ್ಟು +ಏಕಾಂತಕ್ಕೆ ಸಲ್ಲದೆ +ಅಲ್ಲಿ ತಾನೇ ಕಾಣದಂತಾಗಿ +ಎಲ್ಲರಂತೆ ಇನ್ನೊಂದು ಸಾದಾಮನೆ ಬಾಡಿಗೆಗೆ ಹಿಡಿದು +ತಾನು ಕಟ್ಟಿದ್ದನ್ನು ಉಳಿದವರ ಕಣ್ಣಲ್ಲಿ ಕಂಡು ಸುಖಿಸುತ್ತಾನೆ. +೧೦-೧-೯೨ +ನಿಟ್ಟುಸಿರನೆಳೆದು ದಾಟಿತು ಕೊನೆಯರೈಲು : (ತಕ್ಕೊ ಕೈಮರದ ಕರಡೀಸಲಾಮು !) ಕೈಯ ಚಾಚಿದ ನೆರಳು ಚಲಿಸುತ್ತಿದೆ…..! ಮೆಲ್ಲಮೆಲ್ಲನೆ ಸಂಜೆ ಹಿಂಬಾಲಿಸುತ ಬಂತು! ಅಸ್ಥಿ ಪಂಜರದೊಡಲ ತುಂಬುತ್ತಿದೆ! ಕೈಯಕೋಲನು ಮೀಟಿ ಸೇತುವೆಯ ದಾಟಿ ಕೈಯ ಚಾಚಿದ […] +ಶಬ್ದಗಳು ಯಾತಕ್ಕೆ ಹೀಗೆ ಕಪ್ಪು ತುಂತುರು ಹನಿ! ಬಿಳಿಯ ಅವಕಾಶಕ್ಕೆ ಕೊಟ್ಟ ರೂಪ. ಶಬ್ದಗಳು ಯಾತಕ್ಕೆ ಹೀಗೆ ಕೇಳುವುದಿಲ್ಲ ಕಾಣುತ್ತವೆ, ಶಬ್ದಗಳು ಕಾಣದವೂ ಕೇಳುತ್ತವೆ. ***** +ಸಾಲಾಗಿ ನವಿಲು ಗರಿಗೆದರಿ ನರ್‍ತಿಸಿದಂತೆ ಮುಂಜಾವದಲಿ ಬೇಲಿತುಂಬ ನೀಲಿಯ ಹೂವುಜೀವನೋತ್ಸಾಹದಲಿ ಎದೆದುಂಬಿಸುವ ರೂಹು! ಭೂಮಿಯಾಳದ ಭಾವ ಮೇಳೈಸಿ ಪುಟಿದಂತೆ ಎಲ್ಲೆಂದರಲ್ಲೆ ಮನಸೇಚ್ಛೆ ಬೆಳೆದಿಹ ಬಳ್ಳಿತೆರೆದಿಹುದು ನೂರು ಸವಿರ ನೀಲ ಬಗೆಗಣ್ಣು!(ನೇಸರನಿಗೂ ಜಗಕು ಇನ್ನೂ ನಿದ್ದೆಗಣ್ಣು) […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_136.txt b/Kannada Sahitya/article_136.txt new file mode 100644 index 0000000000000000000000000000000000000000..5781ea282068ef142e7c7494326439cc60379ff9 --- /dev/null +++ b/Kannada Sahitya/article_136.txt @@ -0,0 +1,35 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. +“ಚಿತ್ರರಂಗ ಕುರಿತ ಲೇಖನವಾ?” ಎಂದೆ. +“ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ ಬಗ್ಗೆ ಚಿಂತಿಸಿ ಎಲ್ಲರಿಗೂ ಫೋನಿಸಿದೆ. ಅವರು ಹೇಳಿದ ವಿಷಯಗಳು ಮಹತ್ವದೆನ್ನಿಸಿ ಲೇಖನ ಅಣಿ ಮಾಡಿದೆ” +“ಹೇಳು ಮಹರಾಯ, ಅದೇನು?” “ಡಾ. ರಾಜ್‌ಕುಮಾರ್‍ ಅವರಿಗೆ ಫೋನಿಸಿ ಬಾಂಬ್ ಸ್ಫೋಟದ ಬಗ್ಗೆ ಏನಂತೀರಿ ಅಂದೆ” +“ಭಕ್ತ ಅಂಬರೀಶ ಮಾಡ್ತೀದೀನಲ್ಲ. ಅದರ ಸುದ್ದಿ ಕರ್ನಾಟಕದಲ್ಲಿ ಬಾಂಬ್‌ನಂತೆ ಸ್ಫೋಟಿಸಿತು. ಬರಗೂರು ಗೌತಮ ಬುದ್ಧ ಮಾಡಿ ಅಂದ್ರು. ಯೋಚ್ನೆ ಮಾಡ್ತೀನಿ ಅಂದದ್ದೇ ತಡ ಆ ಸುದ್ದಿಯೂ ಭಾರಿಯಾಗಿ ಸ್ಪೋಟಿಸಿತು. ಈಗ ನಮ್ಮ ರಾಘು-ಪುನೀತ್ ಮೆಗಾ ಧಾರಾವಾಹಿಗಳು ಮಾಡ್ತಿದಾರೆ ಅನ್ನೋದೇ ಎಲ್ಲಾ ಕಡೆ ಡಂ-ಡಮಾರ್‍ ಅಂತ ಸುದ್ದಿ ಮಾಡ್ತಿವೆ” ಎಂದು ನಕ್ಕರು. +ವಿಷ್ಣುವರ್ಧನ್ ಅವರಿಗೆ ರಿಂಗಿಸಿ ಪ್ರಶ್ನಿಸಿದಾಗ “ಕುಮಾರಸ್ವಾಮಿಯವರು ಹೆಲಿಕಾಪ್ಟರ್‍ ಕಳಿಸ್ತೀನಿ ಅಂದ್ರೂ ‘ಸೂರ್ಯವಂಶ’ ರಜತೋತ್ಸವಕ್ಕೆ ಬರಲಿಲ್ಲ ಅನ್ನೋ ಬಾಂಬ್ ಸ್ಫೋಟ ನಂಗೆ ತುಂಬ ಬೇಸರವಾಯಿತು. ಪ್ರಶಸ್ತಿ ಒನ್‌ಬೈಟು ಮಾಡೋದು ಬೇಡ ಅಂದೆ. ಅದು ಅವರ ಪಾಲಿಗೆ ಬಾಂಬ್ ಸ್ಫೋಟ ಅನ್ನಿಸಿರಬಹುದು. ಅದಕ್ಕೆ ನಾನೇನು ಮಾಡಕ್ಕೆ ಆಗಲ್ಲ” +ಶಿವರಾಜ್‌ಕುಮಾರ್‍ ರಿಸೀವರ್‍ ಹಿಡಿದು ಹೇಳಿದರು “ಸುಂದರ್‌ನಾಥ್ ಸುವರ್ಣ ಮನೋಹರ್‍ ಬಗ್ಗೆ ಮಾಡಿದ ಆಕ್ಷೇಪಣೆಗಳು ಬಾಂಬ್ ಸ್ಫೋಟದಷ್ಟೆ ಆಘಾತಕಾರಿಯಾಗಿತ್ತು. +ಇಂದ್ರಧನುಷ್ ಗೆಲುವಿಗೆ ಅಥವಾ ಸೋಲಿಗೆ ನಾನಾ ಕಾರಣಗಳಿರುತ್ತೆ. ಆ ಸಮಸ್ಯೆಗಳಿಗೆ ಬಗೆಹರಿಸಿಕೊಳ್ಳಬೇಕಾದ್ದು ಆಹ್ಲಾದಕರ ವಾತಾವರಣದಲ್ಲಿ. +ಅನಂತ್‌ನಾಗ್-‘ಬಾಂಬ್’ ಎಂದು ನಗುತ್ತ ‘ಸಂಕೇತ್ ಸ್ಟುಡಿಯೋ ಮಾಡಿದ್ದೇ ತಪ್ಪು ಅನ್ನೋ ಹಾಗೆ ಬಾಂಬ್ ಸ್ಫೋಟಿಸಿದರಲ್ಲ ಪತ್ರಿಕೆಗಳಲ್ಲಿ, ಹಣ ಹಾಕಿದೋನು ನಾನು-ಸಾಲ ತೀರಿಸೋನು ನಾನು. ನನ್ನ ಕಷ್ಟ ಯಾರಿಗೆ ಗೊತ್ತಾಗುತ್ತೆ. ಅದಕ್ಕೆ ಕೇಳಿದೋರಿಗೆಲ್ಲ ಕಾಲ್‌ಷೀಟ್ ಕೊಡ್ತಿದೀನಿ. ಇಷ್ಟು ವರ್ಷದ ನನ್ ಅನುಭವದಲ್ಲಿ ‘ಆಂಧ್ರ ಹೆಂಡ್ತೀಲಿ’ ಅಭಿನಯಿಸಿದ ಅನುಭವ ಇದೆಯಲ್ಲ ಅದು ಆಟಂಬಾಂಬಲ್ಲ ಹಾಸ್ಯದ ಹೈಡ್ರೋಜನ್ ಬಾಂಬ್. ಇಂಥಾ ಬಾಂಬ್‌ಗಳಿಂದ ನೋಡೋರಿಗೆ ಸ್ವಲ್ಪ ಕಷ್ಟ ಆಗಬಹುದಷ್ಟೆ-ಹೆಣಗಳು ಬೀಳಲ್ಲ” +ರಮೇಶ್‌ಗೆ ಫೋನಿಸಿದಾಗ “ನನ್ನ ಅನುಪ್ರಭಾಕರ್‌ನ ಒಂದು ಸಾರಿ ಗಾಸಿಪ್ ಕಾಲಂಗೆ ತಂದ್‌ಬಿಟ್ರಲ್ಲ ಪೇಪರ್‌ನವರು ಅಂದು ನಂಗೆ ಅದು ಬಾಂಬ್ ಸ್ಫೋಟ ಅನ್ನಿಸಿತು. ನಾನು ಲೌ-ಡೌ ಗಿವ್ ಎಲ್ಲ ಲಾಕರ್‌ನಲ್ಲಿ ಲಾಕ್ ಮಾಡಿಟ್ ಬಿಟ್ಟಿದ್ದೀನಿ. ಕತೆ ಇದೆ ಅಂತ ಬಂದವರು – ಕಾಲ್‌ಷೀಟ್‌ಗೆ ಕೈ ಚಾಚಿ-ಪ್ರೊಡ್ಯೂಸರ್‌ನೂ ನೀವೇ ಹುಡುಕಿಕೊಡಿ ಅಂದಾಗ ಬಾಂಬ್ ಸ್ಫೋಟವಾದ ಹಾಗೆ ಆಗಿ ನಾನು ಮೂರ್ಛೆ ಹೋಗಿದ್ದೀನಿ. ಇನ್ನು ನಿಜವಾದ ಬಾಂಬ್ ಸ್ಫೋಟವಾದರೆ ಎಷ್ಟು ನೋವಾಗಬೇಡ-ಪ್ರಾಣ ಹಾನಿ ಅಂದ್ರೆ ಹುಡುಗಾಟನೆ-ದಟ್ಸ್ ನಾನ್‌ಸೆನ್ಸ್” ನಿರ್ದೇಶಕ ಕಂ ನಟ ಎಸ್. ನಾರಾಯಣ್‌ಗೆ ಫೋನಿಸಿದ ಮರುಘಳಿಗೆ “ವೀರಪ್ಪನಾಯ್ಕ ಕದ್ದ ಕತೆ ಅಂತ ರವಿಚಂದ್ರನ್ ಹೇಳಿದಾಗ ಬಾಂಬ್ ಬಿದ್ದಾಗ ಆಗುವಷ್ಟೇ ಹಿಂಸೆ ಆಯಿತು. ಅದೇ ಥರಾ ಬಾಂಬ್ ಸ್ಪೋಟವಾದ್ದು ವಿಷ್ಣುವರ್ಧನ್ ತಮಗೆ ಬಂದ ನಟನೆ ಪ್ರಶಸ್ತಿ ನಂಗೆ ಕೊಡು ಅಂತ ನನ್ನ ತಮ್ಮನ ಕೈಲಿ ಕೊಟ್ಟಾಗ, ಇಂತ ಬಾಂಬ್ ಸುದ್ದಿಗಳು ನಂಗೆ ಸಾಮಾನ್ಯ. ನಾನು ನಂಜುಂಡೀಗೆ ತಮಿಳು ರೀಮೇಕ್ ಕನ್ನಡದಲ್ಲಿ ಮಾಡ್ಕೊಡ್ತೀನಿ ಅಂದಾಗ ಧನರಾಜ್ ಪ್ರೆಸ್‌ಮೀಟ್ ಭಾರಿ ಬಾಂಬ್ ಅನ್ನಿಸ್ತು. ಎಲ್ಲಿ ಆ ಬಾಂಬ್ ‘ಠುಸ್’ ಅಂದು ಸಾ.ರಾ.ಗೋವಿಂದು ಕೈಗೆ ಹೋಯಿತಲ್ಲ ಚಿತ್ರ ಮಾಡೋ ಹಕ್ಕು” ಹಂಸಲೇಖಾಗೆ ಫೋನಿಸಿದೆ ನಂತರ, “ಅಸುರ ರೀಮೇಕ್ ಚಿತ್ರಕ್ಕೆ ಒರಿಜಿನಲ್ ಮ್ಯೂಸಿಕ್ ಟ್ರಾಕ್ ಇರಲಿ ಅಂತ ಸಂದೇಶ್ ನಾಗರಾಜ್ ಅಂದಾಗ ಬಾಂಬ್ ಸ್ಫೋಟ ಅಂದ್ರೆ ಇದೇ ಅನ್ನಿಸ್ತು. ಆ ಸದ್ದಿಗೆ ಈಚೆ ಬಂದೋನು ನಾನು. ಈಗಲೂ ಯಾರಾದ್ರೂ ಅಪ್ಪಿ-ತಪ್ಪಿ ‘ಸುಗ್ಗಿ’ ಅಂದ್ರೆ ಸಾಕು ಬಾಂಬ್ ಸ್ಫೋಟವಾಯಿತು ಅನ್ನಿಸತ್ತೆ ನಂಗೆ” ಉಪೇಂದ್ರರನ್ನೆ ಮರೆತರೆ ಹ್ಯಾಗೆ. “ದನರಾಜ್ ಎನ್.ಎಸ್. ಶಂಕರ್‍ ಬೇಡ ಕಾವೇರಿಗೆ ಅಂದಾಗ ತಲೆಮೇಲೆ ಬಾಂಬ್ ಬಿದ್ದ ಹಾಗಾಯಿತು. ‘ಒಕೇಮಾಟ’ ತಲಗು ಚಿತ್ರ ಫ್ಲಾಪ್ ಆದಾಗ್ಲೂ ರಾತ್ರಿ ಕನಸಲ್ಲೆಲ್ಲಾ ಬಾಂಬ್ ಬ್ಲಾಸ್ಟ್ ಆದ ಹಾಗೆ ಆಗೋದು. ಇಂಥ ಬಾಂಬ್ ಸುದ್ದಿಗಳೇ ಬೇಡ ಅಂತ ಹಾಲಿವುಡ್‌ಗೆ ಹಾರ್‍ತಿರೋದು ನಾನು” – ಅಂತ ಹೇಳಿದ್ದು ಕೇಳಿ ಅದನ್ನೆಲ್ಲಾ ಸೇರಿಸಿ ಈ ಲೇಖನ ಮಾಡಿರುವೆ ಎಂದ ಮಿ.ವೆಂಕಣ್ಣ. +“ಸರಿ ಮಿ. ವೆಂಕಣ್ಣ ನಿಜ ಹೇಳಿ ಇವರಿಗೆಲ್ಲ ಫೋನ್ ಮಾಡಿದ್ರಾ ಅವರೆಲ್ಲ ಈ ರೀತಿ ನಿಜವಾಗಲೂ ಉತ್ರ ಕೊಟ್ರಾ” +“ಹೌದು! ಎಲ್ಲಾ ಇದೇ ಸಾಲುಗಳನ್ನೇ ಹೇಳಿದರು ನನ್ನ ಕನಸಲ್ಲಿ” ಎಂದ. +ಆಗ ನನ್ನೆದುರು ಬಾಂಬ್ ಸ್ಫೋಟವಾದಂತಾಯಿತು. +***** +(೨೫-೦೭-೨೦೦೦) +ಶುಕ್ರವಾರ ಸಿನಿಮಾಪುಟಗಳಲ್ಲಿ ವರ್ಣರಂಜಿತವಾದ ರಿಪೋರ್ಟ್‌ಗಳು ಮಿರಿಮಿರಿ ಮಿಂಚಬೇಕಾದರೆ ದೊಡ್ಡ ದೊಡ್ಡ ಹೆಸರುಗಳಿರಬೇಕು ಕಾಂಟ್ರವರ್ಸಿಯಾದರೂ ಚಿಂತೆಯಿಲ್ಲ ಸುದ್ದಿ ವಿಚಿತ್ರವಾಗಿರಬೇಕು ಅದಕ್ಕೊಂದು ಪ್ರೆಸ್‌ಮೀಟ್ ಮಾಡಲೇಬೇಕೆಂಬುದನ್ನು ಈಗ ಎಲ್ಲ ಬಲ್ಲರು. ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಂಗಳೂರಿನಲ್ಲಿ ಪ್ರೆಸ್ ಮೀಟ್ […] +ಇನ್‌ಕಂಟ್ಯಾಕ್ಸ್ ಡಿಪಾರ್ಟ್‌ಮೆಂಟ್‌ನವರು ದಿಢೀರ್‍ ಹಾಜರಾದರೆ ಎಲ್ಲರ ಹೃದಯ ‘ಡವ ಡವ’ ಎನ್ನುವುದು ನಿಜ. ಆ ‘ಡವ ಡವ’ ಸದ್ದು ಫಸ್ಟ್‌ಗೇರ್‌ನಲ್ಲಿದೆಯೇ, ಸೆಕೆಂಡ್ ಗೇರ್‌ನಲ್ಲಿದೆಯೇ, ಥರ್ಡ್‌ಗೇರ್‌ನಲ್ಲಿದೆಯೇ ತಿಳಿದ ತಕ್ಷಣ ಆ ಇಲಾಖೆಯವರಿಗೆ-ಬ್ಲಾಕಲ್ಲಿ ಎಷ್ಟು ತಗೊಂಡಿದಾರೆ ವೈಟಲ್ಲಿ […] +ಕನ್ನಡದ ಸಮರ್ಥ ನಿರ್ದೇಶಕರ ಸಾಲಿನಲ್ಲಿ ನಿಂತಿರುವ ವ್ಯಕ್ತಿ ಎಸ್. ಮಹೇಂದರ್‍. ಅವರ ಹಲವು ಚಿತ್ರಗಳ ಸಖತ್ ಹಿಟ್ ಆಗಿವೆ-ಹಲವು ಪುಸ್ ಎಂದು ಪಂಚರಾಗಿವೆ, ಈ ನಿರ್ದೇಶಕರು ಪ್ರೀತಿ-ಪ್ರೇಮ ದೃಶ್ಯಗಳನ್ನು ಕಲಾತ್ಮಕವಾಗಿ ಚಿತ್ರಿಸಿ ಸೆಂಟಿಮೆಂಟಿನ ಕಣ್ಣಾಮುಚ್ಚಾಲೆಯಿಂದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_137.txt b/Kannada Sahitya/article_137.txt new file mode 100644 index 0000000000000000000000000000000000000000..d79d3956208672b659217f9d614ea894ea977b96 --- /dev/null +++ b/Kannada Sahitya/article_137.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸುಲಭ ಲಭ್ಯವಾದ ಯಾವ ‘ಹು ಈಸ್ ಹು’ನಲ್ಲಾದರೂ +ಅವನ ಮಾಹಿತಿ ಸಿಗುತ್ತದೆ: +ಬಾಲ್ಯದಲ್ಲಿ ಕ್ರೂರಿಯಾದ ಅಪ್ಪನ ಶಿಕ್ಷೆ ಸಹಿಸಲಾರದೆ ಅವನು +ಪರಾರಿಯಾದದ್ದು +ಭಿಕಾರಿಯಾಗಿ ಅಲೆದದ್ದು, ನರಳಿದ್ದು +ಯೌವನವಿಡೀ ಹಗಲಿರುಳು ದುಡಿದು, ದಣಿದು, ಗೆದ್ದು ಖ್ಯಾತನಾಗುತ್ತ ಆಗುತ್ತ +ಸಮಾಜಕ್ಕೆ ಮಾದರಿಯಾದ ಘನವಂತನಾದದ್ದು. +ಮತ್ತೇನು ಮಾಡಿದ ಹೇಳಬೇಕಾಗಿಲ್ಲ, +ಮಾದರಿಯಾದವನು ಮಾಡಬೇಕಾದ್ದನ್ನೆಲ್ಲ ಅವನು ಮಾಡಿದ +ನದಿದಂಡೆಯ ಮೇಲೆ ಗಾಳಹಾಕಿ ಕೂತು ಮೀನು ಹಿಡಿದ +ಅಕ್ಕಪಕ್ಕದವರಂತೆ +ರಜೆಯಲ್ಲಿ ಅಪಾಯ ಲೆಕ್ಕಿಸದೆ ವರ್ಷಕ್ಕೊಮ್ಮೆ ನರಿಗಳ ಬೇಟೆಯಾಡಿದ +ತಲೆ ಸುತ್ತಿದರೂ ಹೊಸ ಬೆಟ್ಟಗಳ ಶಿಖರ ಹತ್ತಿದ. +ಅವನೇ ಪತ್ತೆ ಮಾಡಿ ಹೆಸರು ಕೊಟ್ಟ ಸಮುದ್ರದ ತೀರದ ಜಲರಾಶಿಯೂ +ಒಂದು ಇದೆ. +ಆಮೇಲೆ ಇವನ ಬಗ್ಗೆ ನಡೆದ ಸಂಶೋಧನೆಯಲ್ಲಿ ಹೊಸ ದಾಖಲೆ ಸಿಕ್ಕಿದೆ +ಪ್ರಣಯದಲ್ಲಿ ಘಾತನಾಗಿ ಇವನು +ನಮ್ಮಂತೆ ನಿಮ್ಮಂತೆ +ಬಿಕ್ಕಿ ಬಿಕ್ಕಿ ಅತ್ತಿದ್ದು ನಿಜ. +ಇನ್ನೂ ಮುಖ್ಯವಾಗಿ ಸಂಶೋಧನೆಯಲ್ಲಿ ತಿಳಿಯುವುದೆಂದರೆ, +ಸಂಶೋಧಕರಿಗೇ ಅಚ್ಚರಿಯಾಗುವಂತೆ +ನಿಟ್ಟುಸಿರಿಡುತ್ತ ಅವನು ಹಂಬಲಿಸಿದ್ದು ಮಾತ್ರ ಬೇರೊಬ್ಬನಂತಾಗಲು +ಒಂದು ಸರಳವಾದ ಮನೆ +ಇಲ್ಲಿ ತನ್ನ ಪಾಡಿಗೆ ತಾನಿರುವ ಬೇರೊಬ್ಬ +ನಿತ್ಯದ ನಿರ್ವಹಣೆಗೆ ಅಗತ್ಯವಾದ ಬಡಿಗೆ ಕೆಲಸ, ಕಿಟಕಿ ಬಾಗಿಲುಗಳಿಗೆ ಬಣ್ಣ ಹಚ್ಚುವ ಕೆಲಸ, ವಿದ್ಯುತ್‌ ಉಪಕರಣಗಳ ದುರಸ್ತಿ ಕೆಲಸ, ಅಡುಗೆಮನೆಯ ಚಾಕು ಚೂರಿಗಳನ್ನು ಹುಷಾರಾಗಿ ಉಜ್ಜಿ ಹರಿತ ಮಾಡುವ ಕೆಲಸ, ಸವೆದ ಪ್ಯಾಂಟುಗಳಿಗೆ ಸೂಜಿಯಲ್ಲಿ ನೀಟಾಗಿ ತೇಪೆ ಹಾಕುವ ಕೆಲಸ-ಇತ್ಯಾದಿಗಳನ್ನು ಖುಷಿಯಲ್ಲಿ ಸಿಳ್ಳೆ ಹಾಕುತ್ತ ನಾಜೂಕಾಗಿ ತಾನೆ ಮಾಡಿಕೊಳ್ಳುತ್ತಾನೆ. ಕೈದೋಟದಲ್ಲಿ ಕಳೆ ಕೀಳುತ್ತಲೋ, ಸಸಿ ನೆಡುತ್ತಲೋ, ಅದು ಇದು ಮಾಡುತ್ತ ಹೊತ್ತು ಕಳೆಯುತ್ತಾನೆ. ಏನೂ ಮಾಡದೆ ಸುಮ್ಮನೆಯೂ ಇರುತ್ತಾನೆ. +ತನಗೆ ಬಂದ ಉದ್ದುದ್ದನೆಯ ಮೆಚ್ಚುಗೆಯ ಪತ್ರಗಳನ್ನು ಓದಿ ಕೆಲವಕ್ಕೆ +ಉತ್ತರ ಬರೆಯುತ್ತಾನೆ. +ಆದರೆ ಇವನ್ನು ಜೋಪಾನ ಮಾಡಲು ಹೋಗುವುದಿಲ್ಲ. +***** +(ಡಬ್ಲ್ಯು.ಹೆಚ್. ಆಡೆನ್ ಪದ್ಯವೊಂದನ್ನು ಆಧರಿಸಿ, ಮೂಲ: Who’s Who) +ಅಂಥ ಅಚ್ಯುತ ಅಪೂರ್ಣನಂತೆ, ಪ್ರಿಯೆ, ತನ್ನವಳನ್ನುಮುದ್ದು ಮುದ್ದಾಗಿಯೇ ಮಳ್ಳ ಹೋಗುವುದಂತೆಸಿಕ್ಕಿ ಸಿಗದಂತೆ ತಣಿಯದೇ ತುಯ್ಯುವುದಂತೆ, ನಮ್ಮಂತೆಬೆವರಿ ಗದ್ಗದ ಬಿಕ್ಕಿ ಹೋಳಾಗರಂತೆಕೂಡಿ ಇಮ್ಮೈಯಾಗಿ ಪಡೆಯರಂತೆ ಅಲೆಯ ಮೇಲಲೆಯ ಸುಖವಂತೆ ಪಡುವಾಗಕಣ್ಣಲ್ಲಿ ಕಣ್‌ನೆಟ್ಟ ಶೋಧವಂತೆಕಣ್ ಮುಚ್ಚರಂತೆ ನಮ್ಮಂತೆ […] +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. ಓದುತೋದುತಲಿರಲು ಕಣ್ಣು ಹನಿಗೂಡಿತ್ತು; ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು ಕೃತಕತೆಯ […] +ಜಗದ ನಿದ್ರಾಲೋಲ ಮೊಗದ ಮೇಲುದವೆತ್ತಿ ಇರುಳ ಸವಿಗನಸಿನಾಮೋದದಲಿ ಮೈಮರೆದು ಮೆಲ್ಲಮೆಲ್ಲನೆ ಲಲ್ಲೆಗೈದು ಕಣ್ಣೆವೆದರೆದು ಹೂ ತುಟಿಗೆ ಮುತ್ತಿಟ್ಟು, ಹಕ್ಕಿಗಳನೆದೆಗೊತ್ತಿ ಮೈದಡವಿ, ಮಂಗಳದ ಗೀತಗಳನ್ನುಕ್ಕಿಸುತ ತಂಬೆಲರಿನುಸಿರ ನರುದಂಬುಲವ ಸ್ವೀಕರಿಸಿ ತುಂಬಿಗಳ ಜುಮ್ಮೆನಿಪ ಗುಂಗಿನಲಿ ಸಂಗಳಿಸಿ, ಚಿಗುರು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_138.txt b/Kannada Sahitya/article_138.txt new file mode 100644 index 0000000000000000000000000000000000000000..f5c2b88eea40177c78b070325e36420112ed8326 --- /dev/null +++ b/Kannada Sahitya/article_138.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ +ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ +ಹಿಡಿದೆಳೆದು ಒಂಟೆಗಳ ಸಾಲಿಗೆ +ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” +ಅವನು ರಕ್ತ ತೆಗೆದು ವೀರ್ಯವಾಗಿಸುತ್ತಾನೆ, ವೀರ್ಯದಿಂದ +ಜೀವ ಸೃಷ್ಟಿಸುತ್ತಾನೆ, ಜೀವದ ಬಂಧ +ಹಿಡಿದು ಕತ್ತರಿಸಿ ತರ್ಕ ಹುಟ್ಟಿಸುತ್ತಾನೆ +ಪುನರುತ್ಥಾನದ ಹಿರಿಮೆ ಮೊಳಗಿಸುತ್ತಾನೆ +ಕೋಲು ಹಿಡಿದು ಪಾರಿವಾಳ ಅಟ್ಟಿದಂತೆ +ಅಟ್ಟುತ್ತಾನೆ ನನ್ನ, ಲಕ್ಷ ರೀತಿಗಳಿಂದ +ಒಲಿಸಿ, ಪರಿಪರಿಯಾಗಿ ಹಂಬಲಿಸಿ +ತನ್ನ ಸನ್ನಿಧಿಗೆ ಹಾಜರಾಗಿಸಿ +ಸಮುದ್ರಯಾನಕ್ಕೆ ನನ್ನ ನಾವೆಯಾಗಿಸುತ್ತಾನೆ +ಹಿಡಿದು ಹಡಗಿನ ಕಂಭಕ್ಕೆ ಕಟ್ಟುತ್ತಾನೆ +ನಿರ್ಮಲತೆ ಶೋಧಕರಿಗೆ ನಾನು ಶುದ್ಧಜಲ +ಅದೃಷ್ಟಹೀನರ ದಾರಿಗೂ ಬರಿ ಗೊಬ್ಬಳಿ ಮುಳ್ಳು +ಅಷ್ಟ ಸ್ವರ್ಗಗಳ ಸೇರುವುದು ದೊರೆಯ ಗುರಿಯಲ್ಲ +ನಾನೆ ದೊರೆಯ ಗುರಿ, ಎಂಥಾ ಸೌಭಾಗ್ಯಶಾಲಿ! +ದೊರೆಯ ದಳಕ್ಕೆ ಸೇರಿದವರು ಸಾವಿನಿಂದ ಪಾರು +ದೊರೆಯ ಕೈಯ ಖಡ್ಗ ನೋಡಿ, ಮಾಡಿದ ಗುರಾಣಿ ಚೂರು +ಅಸಂಖ್ಯ ಹಗಲು ರಾತ್ರಿಗಳ ಆತ್ಮದ ಮುತ್ತಿಗೆಗೆ ನಾನು ಪಹರೆ +ಮುತ್ತುಗಳ ಮೊರೆವ ಕಡಲಲ್ಲೀಗ ಅದು ನನ್ನಿಂದ ಮರೆ +ಅವನ ಸೊಬಗನ್ನು ಎಷ್ಟೆಂದು ಬಣ್ಣಿಸುತ್ತಿ +ಅವನು ಉಪಮಾತೀತ, ಇಲ್ಲಿಗೆ ಸಾಕು. +ಪ್ರಳಯದ ಅಲೆಯು ಮೇಲೆ ನಾನು ಹೊರಟೆ +***** +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_139.txt b/Kannada Sahitya/article_139.txt new file mode 100644 index 0000000000000000000000000000000000000000..485fa6bbc7e64245eefb16cabcc655b1ee8aa05c --- /dev/null +++ b/Kannada Sahitya/article_139.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹುಬ್ಬಿನಂಚಿನಲಿ +ಹೊಕ್ಕಳಿನ ಸುರುಳಿಯಲಿ +ಚುಚ್ಚಿ ಕೆಣಕುವ ರಿಂಗು. +ವಿಷಕನ್ಯೆಯಂತೆ ತುಟಿ +ನೀಲಿ ರಂಗು. +ಬ್ರಹ್ಮಾಂಡ ಜಾರಿಸಲು +ಇನ್ನೇನು ಜಾರುವಂತಿದೆ, +ಹೆಜ್ಜೆ ಒಂದಿರಿಸಿದರೆ +ಪರ್ಸಂಟೇಜ್ ಸೀರೆ. +ಇಂಥವಳ ಅನಿರೀಕ್ಷಿತ +ಲೇಸರ್ ನೋಟಕ್ಕೆ +ತಿರುಗಿದ ಆಸೆಬುಗುರಿ +ಕಣಕಣದಲಿ ಸ್ಥಾಪಿಸಿತು +ಅಣುಸ್ಥಾವರ. +ಅಭಿಸಾರಕ್ಕೆ ಹಾತೊರೆದು +ಅವನಿಲ್ಲದ ಹೊತ್ತು ಅವಳ ಮನೆಯಲ್ಲಿ +ನಗ್ನ ಪರಿಪೂರ್ಣ +ಅನುಭೂತಿಗೋ +ಏಕೋ +ತಾಳಿ ತೆಗೆದಿಟ್ಟು +ನನ್ನೆದುರು +ಅವಳು ಬಯಸಿದ +ಹ್ಯಾಂಡಿಕ್ಯಾಮ್ ಹನಿಮೂನು +ದೇಶ-ವಿದೇಶದಲಿ ಅನಾವರಣ. +***** +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ನಡುರಸ್ತೆಯಲ್ಲಿ ಕೈಕೊಟ್ಟೆನೆಂಬ ಚಿಂತೆ ಬೇಡ ಗೆಳೆಯ ಈ ಪಯಣದಲ್ಲಿ ಇದು ಅನಿವಾರ್ಯ ನಿನ್ನದೊಂದು ದಾರಿ ನನ್ನದೊಂದು ಕವಲು ನಡೆಯುವುದೊಂದೇ ಗೊತ್ತು ಗುರಿ ಯಾರಿಗೆ? ನಾ ನಿಂತ ರಸ್ತೆಯೋ ಬಲುದೊಡ್ಡ ಹೆದ್ದಾರಿ ಆ ತುದಿಯು ಈ […] +ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_14.txt b/Kannada Sahitya/article_14.txt new file mode 100644 index 0000000000000000000000000000000000000000..f5c55447c7aa8bdd16d2db2d837877f2c756ced9 --- /dev/null +++ b/Kannada Sahitya/article_14.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅಸೂಯೆ +ಬಂದರೆ +ಆಕಳಿಗೆ +`ಹಸೂಯೆ’ +ಅಂದರೆ +ಏನು +ತೊಂದರೆ? +***** +ಕಾರ್ಯಸಾಧನೆಯಾದ ಮೇಲೆ ಚಾಚಿದ ಅಭಯ ಹಸ್ತ, ಗಾಢ ನಿದ್ದೆಯೊಳಗಿರುವವನನೆಬ್ಬಿಸಿ ನಿದ್ದೆ ಗುಳಿಗೆ ನೀಡಿದ ಹಾಗೆ ವ್ಯರ್ಥ. ***** +‘ನಾನು’ ಅಂದರೆ; ಒಂದು ಜೊತೆ ಮೆತ್ತಿಗನ ಮೊಲೆ, ತೊಡೆ ಸಂದಲ್ಲಿ ಅಡಗಿದ ಕತ್ತೆಲ ಕೋಶ. ***** +ಸಜ್ಜನನಿದ್ದರೆ ಖೂಳರ ಕೆಳೆಯಲಿ ಅವನುದ್ಧಾರವದೆಲ್ಲಿ? ಚಂದನ ಸೇರಿರೆ ಸೌದೆಯ ಹೊರೆಯಲಿ ಒಲೆಗದು ಉರಿಯುವ ಕೊಳ್ಳಿ. ಭವಿಗಳ ಮೇಲಿರೆ ಅನುಭಾವಿಯ ಕೃಪೆ ಕಳ್ಳಿಯೂ ಮಲ್ಲಿಗೆ ಬಳ್ಳಿ. ಚಂದ್ರನ ಕಿರಣದ ನೆರವೊಂದಿದ್ದರೆ ಕೊಚ್ಚೆಯ ಜಲವೂ ಬೆಳ್ಳಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_140.txt b/Kannada Sahitya/article_140.txt new file mode 100644 index 0000000000000000000000000000000000000000..5a8a0b0ad9c1cfae69fb355dd1abbe8629c03281 --- /dev/null +++ b/Kannada Sahitya/article_140.txt @@ -0,0 +1,43 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ತಿಳಿ ಹಳದಿ ಆಕಾಶದ ಮೈಯೆಲ್ಲ ಗಾಯ. +ಅಲ್ಲಲ್ಲಿ ಹೆಪ್ಪುಗಟ್ಟಿದ ನೀಲಿ +ನಿಟ್ಟುಸಿರು ಬಿಟ್ಟಹಾಗೆ +ಮುಸುಮುಸು ಅಳುವ ಗಾಳಿ. +ಬಾಗಿಲಿಂದಾಚೆ ಅವನು ಹೋಗುತ್ತಾನೆ. +ಮತ್ತದೇರೀತಿ; +ಕತ್ತಲಾಗುತ್ತದೆ. +ಎಂದಿನಂತೆ ಅಂದೂ, +ಕೈತೋಟದ ಹೂಗಳರಳಿ, +ಏನೋ ಹೊಸದು ಆಗೇಬಿಡುವುದೋ +ಎಂಬಂತೆ ಕಾದು ಕೂರುತ್ತವೆ. +ಮತ್ತೆ ಮಧ್ಯಾಹ್ನಾ; +ಊಟ, ತಿಂಡಿ, ಚಹಾ…… +ನೆನ್ನೆಯ ಹಾಗೇ ಕಂಡರೂ +’ಇಂದು’ ನೆನ್ನೆಯಲ್ಲವೆಂಬಷ್ಟೇ ವ್ಯತ್ಯಾಸ. +ಸಂಜೆಯಾಗುತ್ತಲೇ, +ಸುಟ್ಟಬೊಬ್ಬೆಯ ಹಾಗೆ ಸೂರ್ಯ +ನಿಟ್ಟುಸಿರಿಟ್ಟ ಹಾಗೆ ಗಾಳಿ +ಅವನು ಮಲಗಿದ್ದಾನೆ ಮಂಚದ ಮೇಲೆ +ಮರದ ಬೊಂಬೆಯ ಹಾಗೆ. +ಬಾಗಿಲಿಂದಾಚೆ ಅವಳು ಹೋಗುತ್ತಾಳೆ +ಕತ್ತಲಾಗುತ್ತದೆ. +***** +ನನ್ನ ಪ್ರೀತಿಯ ಹಿತ್ತಲಲ್ಲಿ ಅಮ್ಮ ನೆಟ್ಟು ತೊನೆಸಿದ ಬದನೆಯ ಬಳಿಯೇ ತಂದು ಸ್ಥಾಪಿಸಿದ್ದೇನೆ ಬಸಳೆ ಸಾಮ್ರಾಜ್ಯ ಚಪ್ಪರಿಸಿದ್ದೇನೆ ಬೇಗ ಬೇಗ ಊರು ಕೊಟ್ಟಿದ್ದೇ ತಡ ಹಬ್ಬಿದ್ದೇ ಹಬ್ಬಿದ್ದು ತಲೆ ತಗ್ಗಿಸಿ ಮನತುಂಬಿ ಚಪ್ಪರ ತಬ್ಬಿದೇ […] +೧ ತೆರಳಿದರು ಅತಿಧಿಗಳು ಮರಳಿದರು ಮನೆಗೆ ನನ್ನ ಮನೆ (ಗುಬ್ಬಿ ಹೆರವರ ಮನೆಗೆ ತನ್ನ ಮನೆ ಎಂದಂತೆ) ಬರಿದಾಯ್ತು ಕೊನೆಗೆ! ಎದೆಯೊಲವನರಳಿಸುತ ಕೆರಳಿಸುತ ಬಂದು ಒಂದು ದಿನ ನಿಂದು, ಏನೆಲ್ಲವನು ಒಮ್ಮೆ ಹೊಳಹಿನಲಿತಂದು ಎದೆಯ […] +ದೇವರಾಯನ ದುರ್ಗದ ಕಾಡಿನ ಕತ್ತಲಲ್ಲಿ ಸಂಜೆಯ ಕೆಂಪು ಕರಗುವ ಹೊತ್ತು, ಮರದ ಬೊಡ್ಡೆಗೆ ಆತು ಕೂತಿದ್ದ ಪುಟ್ಟ ಹುಡುಗ. ಸುತ್ತ ಗಿಜಿಗಿಜಿ ಕಾಡು; ಮರಮರದ ನಡುವೆ ಜೇರುಂಡೆಗಳ ಮೊರೆತ; ಕಪ್ಪೆಗಳ ವಟ ವಟ ಸಂಜೆಯಾಕಾಶಕ್ಕೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_141.txt b/Kannada Sahitya/article_141.txt new file mode 100644 index 0000000000000000000000000000000000000000..dfd4ca5e69a4424e8dc79feb43147cbf428ca72f --- /dev/null +++ b/Kannada Sahitya/article_141.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಾನಾ ಚೌಕದ ಬಳಿ, ನೀಲಿ ಗುಲಾಬಿ ನೇರಳೆಯಾಗಿ ಕಿರು ಬಿಸಿಲಿಗೆ ಮಿನುಗುತ್ತಿರುವ ಬೃಹತ್ ಮರ್ಫಿ ಬೇಬಿಯ ಪೋಸ್ಟರಿನ ಕೆಳಗೆ ಅದರ ಕಂಬಿಗಳನ್ನು ಹಿಡಿದು ಪುಟ್ಟಗೊಂಬೆಯಂತೆ ನಿಂತಿದ್ದ ರೂಪಕ್ ರಾಥೋಡನಿಗೆ ಸಟಸಟ ಎಲ್ಲ ಹೊಳೆದುಹೋಯಿತು. ಹೌದು, ಪಾರ್ಟನರ್‌ನ ನಡತೆ ಶತ ಸುಳ್ಳು. ಅವನಿಗೆ ಖಂಡಿತ ಯಾವುದೋ ಒಂದು ಭರ್ಜರಿ ನೌಕರಿ ಸಿಕ್ಕಿದೆ. ಕೈತುಂಬ ಸಂಬಳ ಬಂದಿದೆ. ಆದರೆ ಆ ವೈಭವ, ಸಂತಸವನ್ನು ಈ ಜುಜುಬಿ ಹಂಗಾಮಿ ಕಾರ್ಮಿಕನಾದ ನನ್ನೆದುರು ಆತ ಆಡಿ ತೋರಿಸಲಾರ. ಅಂತೆಯೇ ಸುಳ್ಳುಸುಳ್ಳೇ ಜೋಲು ಮೋರೆ ಹಾಕಿಕೊಂಡು ಬರುತ್ತಾನೆ. ಮೆಲ್ಲಗೆ ನನ್ನ ಕಣ್ಣುಗಳಿಂದ ತಪ್ಪಿಸಿಕೊಂಡು ತನ್ನದೇ ಒಂದು ಹೊಸ ಅಂತಸ್ತಿಗೆ ತೀರ ಏಕಾಂಗಿಯಾಗಿ, ಸದ್ದಿಲ್ಲದೆ, ಕಿಂಚಿತ್ತೂ ಸುಳಿವು ಕೊಡದೆ ತೇರ್ಗಡೆ ಹೊಂದುತ್ತಿದ್ದಾನೆ. +ಹಠಾತ್ತನೆ ಹೊಳೆದುಹೋದ ಈ ಸಂಗತಿಯಿಂದ ರೂಪಕ್ ರಾಥೋಡ್ ಹಾಯುವ ವಾಹನಗಳಿಂದ ಸುತ್ತುವರೆದ ಆ ಡಿವೈಡರಿನ ಬಿಂದುವಿನಲ್ಲಿ ಇದ್ದಲ್ಲೆ ಉತ್ತೇಜಿತನಾದ. ಒಂದು ಬಗೆಯ ಅರೆಬರೆ ನಿರುದ್ಯೋಗ ಪರ್ವವನ್ನೆ ಕಳೆದ ಒಂದು ವರುಷದಿಂದ ಜತೆಯಾಗಿ ಅನುಭವಿಸಿ, ಹತ್ತು ಚದುರಡಿಯ ಬಾಡಿಗೆ ಕೋಣೆಯನ್ನು ಹಂಚಿಕೊಂಡು ಬಂದಿರುವ ರೂಂಮೇಟ್ ಅಥವಾ ಪಾರ್ಟನರ್, ರೂಪಕನಿಗಿಂತ ಐದಾರು ವರುಷ ದೊಡ್ಡವನೇ ಇದ್ದಾನು. ಆದರೆ ಕೀಚಲು ದನಿಯಿಂದಾಗಿ ಎಳೆಯನೆಂಬ ಭ್ರಾಂತು ಹುಟ್ಟಿಸುತ್ತಾನೆ. ತನ್ನ ಊರು, ಕಸುಬು ಯಾವುದರ ಬಗ್ಗೂ ಏನನ್ನೂ ಆಡದ ಆತ ರೂಪಕನನ್ನೂ ಆ ಕುರಿತು ಕೇಳಿಲ್ಲ. ಅರೆಬರೆ ನೌಕರಿ, ಒಪ್ಪತ್ತು ಊಟ, ಒಂದಿಷ್ಟು ಸ್ಪಷ್ಟ ಸುಂದರ ಹಸಿ ಸುಳ್ಳು ಮತ್ತು ಪಬ್ಲಿಕ್‌ಪಾರ್ಕಿನ ಗೋಡೆಯ ಮೇಲೆ ಉಳಿದಿರುವ ಹರಿದ ಪೋಸ್ಟರುಗಳಂಥ ಕಾಮನೆಗಳು… ಹೀಗೆ ಇಬ್ಬರ ದಿನಚರಿಗಳಲ್ಲಿ ಅಂಥ ವ್ಯತ್ಯಾಸ, ಗುಟ್ಟು, ನಿಗೂಢಗಳು ಇರಲಿಲ್ಲ. ಹಣದ ಕೊಡುಕೊಳದ ಪ್ರಶ್ನೆ ಇರಲಿಲ್ಲ. ಯಾಕೆಂದರೆ ಹಣವೇ ಇರುತ್ತಿರಲಿಲ್ಲ. ಹೀಗೆ ಮಾತಿನ ಭಾರವಿಲ್ಲದ ಹಗುರಾಗಿದ್ದ ಪಾರ್ಟನರ್ ಯಾಕೋ ಒಂದು ವಾರದಿಂದ ಬಿಗಿಯಾಗಿಬಿಟ್ಟಿದ್ದಾನೆ. ಸೂಟ್‌ಕೇಸಿಗೆ ಪುಟ್ಟ ಬೀಗ ಜಡಿದಿದ್ದಾನೆ. ಏನೋ ನೋವಿದ್ದವನಂತೆ ನಟಿಸುತ್ತಾನೆ. ಸಂಬಳ ಎಷ್ಟು ಅಂತ ತಪ್ಪಿಯೂ ಹೇಳಿಲ್ಲ. ಅಲ್ಲಿಗಲ್ಲಿಗೆ ಆಗುತ್ತದೆ ಅಂತಾನೆ. “ಊಟಕ್ಕೆ ನೀನು ಹೋಗಿ ಬಾ, ನನಗೀಗ ಹಸಿವಿಲ್ಲ”- ಎಂದು ತನ್ನನ್ನು ಮೊದಲು ಕಳಿಸಿ, ನಂತರ ತುಂಬ ತಡವಾಗಿ, ಅಂದರೆ ಚೌಪಾಟಿ ಸಮುದ್ರತೀರದ ಕಾಲ ಖಟ್ಟಾ ಶರಬತ್ತಿನ ತಳ್ಳುಗಾಡಿಗಳು ತಮ್ಮ ವ್ಯಾಪಾರ ಮುಗಿಸಿ ಮನೆಗೆ ಮರಳುವ ಅಪರಾತ್ರಿಗೆ- ಒಬ್ಬನೇ ಹೋಗಿ ಬೇಕಾದುದನ್ನೆಲ್ಲ ತಿಂದು ಪಾನ್ ಮೆಲ್ಲುತ್ತ ಬಂದು ಮಲಗುತ್ತಾನೆ. ಸ್ನಾನದ ಸಾಬೂನಿನಲ್ಲೆ ಗಡ್ಡ ಹೆರೆದುಕೊಳ್ಳುತ್ತಿದ್ದನಲ್ಲ, ಈಗ ಕ್ರೀಮ್ ಸಾಬೂನಿನ ಟ್ಯೂಬನ್ನು ತಂದಿದ್ದಾನೆ. ಗಡ್ಡ-ಸ್ನಾನ ಮುಗಿಸಿ ಪಚ ಪಚ ಅಂತ ಮುಖಕ್ಕೆ ನಾಜೂಕಾಗಿ ಎಸೆದುಕೊಳ್ಳುವ ಪರಿಮಳಭರಿತ ಲೋಶನ್ ತಂದಿದ್ದಾನೆ. ಬೇಕಿದ್ದರೆ ನೀನೂ ಹಚ್ಚಿಕೋ. ಬೇಕಿದ್ದರೆ ನೀನೂ ಬಳಸು. ಹೀಗೆ ಹೇಳುತ್ತಾನೆ ಹೊರತು- ತಗೋ ನೀನೂ ಹಚ್ಚು ಎಂದು ಹೇಳುವುದಿಲ್ಲ. +ಹೌದು ಪಾರ್ಟನರ್‌ನ ಜಗತ್ತು ಬದಲಾಗುತ್ತಿದೆ. ಹೊಸದೊಂದು ಉಪಗ್ರಹಕ್ಕೆ ಉಡ್ಡಾಣಗೈಯ್ಯಲು ಆಯಲ್ಪಟ್ಟವನಂತೆ ಅವನು ಕಂಗೆಟ್ಟಿದ್ದಾನೆ. ಅವನ ಮಾತುಗಳು ಹೊಸ ವೇಷಗಳಿಗಾಗಿ ತಡಕಾಡುತ್ತಿವೆ. ತನ್ನೊಡನೆ ಮೊದಲಿನಂತೆ “ತೇರೆಕು, ಮೇರೆಕು, ಅಬೇ ಸೋಜಾ, ತೇರಿ ಮಾಕಿ…” ಎಂದೆಲ್ಲ ಮಾತಾಡಿದರೆ ಹೊಸ ಭೂಮಿಕೆ ಹಾಳಾಗಿ ಹೋಗುತ್ತದೆ ಎಂಬ ಭಯ ಆತನಿಗೆ. ರೂಪಕನಿಗೆ ಏಕ್‌ದಂ ಪಾರ್ಟನರ್‌ನ ಸಂಕಟ ಅರ್ಥವಾಗತೊಡಗಿತು. ಈಗಷ್ಟೆ ಅರ್ಧಗಂಟೆಯ ಮುನ್ನ ನಡೆದಿದ್ದ ಸನ್ನಿವೇಶ ಈಗ ಬೇರೆಯದೇ ಆಗಿ ತೋರತೊಡಗಿತು. +ಸಾಮಾನ್ಯವಾಗಿ ಒಂದು ಶರ್ಟನ್ನು ಮೂರ್ನಾಲ್ಕು ದಿನ, ಪ್ಯಾಂಟನ್ನು ಒಂದು ವಾರ- ಹೀಗೆ ಹಾಕಿಕೊಳ್ಳುತ್ತಿದ್ದ ಆತ ಈವತ್ತು ಸ್ನಾನ ಮುಗಿಸಿ ಬಂದವನೇ, ನಿನ್ನೆ ಹಾಕಿದ್ದ ಶರ್ಟು ಪ್ಯಾಂಟುಗಳನ್ನು ಮೂಲೆಗೆಸೆದು- ಟೈಮ್ಸ್ ಆಫ್ ಇಂಡಿಯಾದ ಹಾಳೆಯಲ್ಲಿ ನೂಲು ಹಾಕಿ ಕಟ್ಟಿಟ್ಟಿದ್ದ ಇಸ್ತ್ರಿಯ ಹೊಸ ಬಟ್ಟೆ ತೆಗೆದು ಹಾಕಿಕೊಂಡ. ರೂಪಕ ‘ಏನಪ್ಪಾ ಏನ್ ಕಥೆ’ ಎಂಬಂತೆ ನೋಡಿದಾಗ, ಹೊಸ ಆವೇಶ ಬಂದವನಂತೆ “ಅರೆ, ಇಲ್ಲೇ ಇಟ್ಟಿದ್ದೆ, ವಾಚು ಎಲ್ಲಿ ಹೋಯಿತು?” ಎಂದು ದೊಡ್ಡದಾಗಿ ಹುಡುಕಲಾರಂಭಿಸಿದ. ಆತ ತನ್ನ ಮೇಲೆ ಬಿಲ್‌ಕುಲ್ ಅನುಮಾನ ಪಡುತ್ತಿಲ್ಲ ಎಂಬುದು ಖಚಿತವಿದ್ದರೂ- ಅವನು ಹೀಗೆ ಹುಯಿಲೆಬ್ಬಿಸಿ ಹುಡುಕುವ ರೀತಿಯಿಂದ ವಿಚಿತ್ರ ಸಂಕಟಪಟ್ಟ ರೂಪಕ ತಾನೂ ಅಲ್ಲಿ ಇಲ್ಲಿ ಹುಡುಕಹತ್ತಿದಾಗ “ನೀನ್ಯಾಕೆ ಹುಡುಕ್ತಾ ಇದ್ದೀ? ಇಟ್ಟಿದ್ದು ನಾನು, ಡ್ಯೂಟಿ ಮುಗಿಸಿ ಬಂದಿದ್ದಿ. ನಿನಗೆ ತೊಂದ್ರೆ ಆಗ್ತಾ ಇದೆ ಅಂತ ಗೊತ್ತು. ಮಲಗು. ಮಲಗು. ವಾಚು. ಹೊಸ ವಾಚು. ಛೆ”- ಎಂದು ಮಂಚದ ಕೆಳಗೂ ಕೂತು, ಅಲ್ಲಿದ್ದ ರದ್ದಿಯನ್ನೆಲ್ಲ ಎಳೆದು ಜಾಲಾಡತೊಡಗಿದ. ಅತ್ತ ಸಲಿಗೆಯೂ ಇರುಸುಮುರುಸಿನಲ್ಲಿ ಕಂಗೆಟ್ಟ ರೂಪಕ ಸೂಕ್ಷ್ಮ ಅವಮಾನವನ್ನು ತಾಳಲಾರದೆ “ಹೊಸಾ ವಾಚಾಗಿದ್ರೆ ಯಾಕೆ ಅಲ್ಲಿ ಇಲ್ಲಿ ಇಡ್ತೀ? ನಿನ್ನ ವಿ‌ಐಪಿ ಸೂಟ್‌ಕೇಸಿನಲ್ಲಿ ಇಡಬೇಕಿತ್ತು”- ಎಂದು ಗೊಣಗಿದ. ಅದಕ್ಕೆ ಪಾರ್ಟನರ್ ಎರಡೂ ಕೈ ಮೇಲೆತ್ತಿ ರಪ್ಪೆಂದು ಮುಗಿದು “ಅಬ್ಬ! ಸೊರೀ…” ಎಂದು ಬೂಟು ಹಾಕಿಕೊಂಡು, ಬಾಗಿಲೆಳೆದುಕೊಂಡೂ ಹೋಗೇಬಿಟ್ಟ. +ಕೋಣೆಯಲ್ಲಿ ಕವಿದ ಮೂರ್ಖ ನಿಶ್ಶಬ್ದವನ್ನು ತಡೆಯಲಾಗದೆ, ಕೆಲ ಸಮಯದ ನಂತರ ಹೊರಬಿದ್ದು ಬಂದ ರೂಪಕನಿಗೆ ಹಾಯುವ ವಾಹನಗಳೆದುರು ಈ ಡಿಪ್ರೆಸರಿನಲ್ಲಿ ನಿಂತು ನೆನೆಸಿಕೊಂಡಾಗ ಪಾರ್ಟನರ್‌ನ ಎಲ್ಲ ಚಹರೆಗಳೂ ಹಾಸ್ಯಾಸ್ಪದವೂ ದಯನೀಯವೂ ಆಗಿ ತೋರತೊಡಗಿದವು. ಮೊನ್ನೆಯೇ ಹೊಸ ಹ್ಯಾಂಗರುಗಳನ್ನು ಪಾರ್ಟನರ್ ತಂದಿದ್ದ. ಕೋಣೆ ತುಂಬ ಅವ ಸುಳಿದಾಡಿದಲ್ಲೆಲ್ಲ ಒಂದು ಪರಿಮಳ ನಿಲ್ಲುತ್ತಿತ್ತು. ಮತ್ತು ಯಸ್, ಬೆಳ್ಳನೆ ಹೊಸ ಹವಾಯಿ ಚಪ್ಪಲ್. ರೂಪಕನ ಬಳಿ ಇಲ್ಲದ ಯಾವ ಹೊಸ ವಸ್ತುವನ್ನು ತರಲೂ ಪಾರ್ಟನರ್‌ಗೆ ವಿಚಿತ್ರ ಅಳುಕು. ಹೀಗಾಗಿ ಆ ಅಳುಕನ್ನು ಮೆಟ್ಟಿ ನಿಲ್ಲುವಂಥ ಮುಳ್ಳು ಠೇಂಕಾರ ಆ ಹವಾಯಿ ಚಪ್ಪಲಂತೂ ಈ ಪುಟ್ಟ ಕೋಣೆಯಲ್ಲಿ ಹಲ್‌ಚಲ್ ಎಬ್ಬಿಸಿಬಿಟ್ಟಿತು. ಕೋಣೆ ತುಂಬ ಅದನ್ನು ಹಾಕಿ ತಿರುಗುವ ಪಾರ್ಟನರ್, ಮೂಲೆಯ ಮೋರಿಯಲ್ಲಿ ಕೈಕಾಲು ತೊಳೆಯುವಾಗ ಅಥವ ನಡುನಿದ್ರೆಯಲ್ಲಿ ಮೂತ್ರ ಹೊಯ್ಯುವಾಗ ಅದನ್ನು ಹಾಕುತ್ತಾನೆ. ಒದ್ದೆಯಾದಾಗ ಅದು ಹೆಚ್ಚು ದಪ್ಪನೆಯ ಟಪ್ ಟಪ್ ಸದ್ದನ್ನು ಹೊರಡಿಸುತ್ತದೆ. ಹೀಗೆ ಇದ್ದ ಪುಟ್ಟ ಕೋಣೆಯಲ್ಲೂ, ತನ್ನ ಜಗತ್ತನ್ನು ಕಿರಿದುಗೊಳಿಸಲು ಪಾರ್ಟನರ್ ನಡೆಸುತ್ತಿರುವ ಘೋರ ಪ್ರಯತ್ನ ಮತ್ತು ಪಡುತ್ತಿರುವ ಸಂಕಟ ಎರಡೂ ಅಸಂಗತವಾಗಿ ರೂಪಕನಿಗೆ ತೋರತೊಡಗಿದವು. ನಿಷ್ಕಾರಣವಾಗಿ ಆತ ಪಡುತ್ತಿರುವ ಒತ್ತಡಕ್ಕೆ ಅಯ್ಯೋ ಅನಿಸಿತು. ಜಾಸ್ತಿ ಕಸಕಸಿ ಮಾಡಿಕೊಳ್ಳದೇ, ಎಣಿಸಿದ್ದಕ್ಕಿಂತ ಸುಲಭವಾಗಿ ಪಾರ್ಟನರ್‌ಗೆ ಸ್ವಾತಂತ್ರ್ಯ ಕೊಟ್ಟು, ಅವನ ಆ ಕೋಣೆಯಿಂದ ಹೊರಬಿದ್ದು ಹೋಗುವುದೇ ವಿಹಿತ ಅಂದುಕೊಂಡ. ಈವತ್ತೇ ಸಂಜೆ, ಆತ ಕೆಲಸದಿಂದ ಮರಳಿದ್ದೇ, ಅವನೆದುರು ಸಹಜವಾಗಿ, ರೂಮು ಬಿಡುತ್ತೇನೆಂದು ಹೇಳಿಬಿಡುವುದು ಎಂದು ನಿರ್ಧರಿಸಿಬಿಟ್ಟ. +ಡಿವೈಡರಿನಿಂದ ಇಳಿದು ರಸ್ತೆ ದಾಟಿದ ರೂಪಕ ಎಂದಿನ ಗುಡ್‌ಲಕ್ ಕಿರಾಣಿ ಅಂಗಡಿಯಲ್ಲಿ ಕೂತು ಮಸ್ಕಾಪಾವ್ ಮತ್ತು ಎರಡು ಕಪ್ ಚಹಾ ಕುಡಿದು ಬೆಕಲ್‌ವಾಡಿಯ ಕೋಣೆಯತ್ತ ಹೊರಟ. ದಾರಿಯಲ್ಲಿ ಕೆನಡೀ ಬ್ರಿಜ್ಜಿನಲ್ಲಿ ಎರಡು ಕ್ಷಣ ನಿಂತು ಕೆಳಗೆ ಹಾಯುವ ಪೀಕ್ ಅವರ್ ಲೋಕಲ್‌ಗಳನ್ನು ಮತ್ತು ಪಕ್ಕದ ಕಟ್ಟಡದಲ್ಲಿನ ಮೊದಲ ಮಜಲಿನ ಪೀಕ್ ಅವರ್ ಅಲ್ಲದ ನಾಚ್‌ವಾಲೀಗಳ ಕೋಣೆಗಳನ್ನು ನೋಡಿದ. ವಿಶಿಷ್ಟ ತಿಳಿಗುಲಾಬಿ ಬಣ್ಣದ ಪರದೆಗಳು, ಪುಟ್ಟ ಪುಟ್ಟ ರೇಶಿಮೆ ಹೊದಿಕೆಯ ಗೋಲ ದಿಂಬುಗಳು, ಕಸೂತಿಯ ಬಟ್ಟೆ ಹೊದಿಸಿಟ್ಟ ತಬಲಾ, ಹಸ್ತಿದಂತದ ಕುಸುರಿ ಕೆತ್ತನೆಯ ಸಾರಂಗಿ… ಎಲ್ಲವೂ ಈಗ ಹಾಡುಹಗಲಲ್ಲಿ ಹಾಳು ಸುರಿಯುತ್ತಿವೆ. ಯಾರೋ ಕಸ ಹೊಡೆಯುತ್ತಿರಬೇಕು ಅಲ್ಲಿ, ಏಕೆಂದರೆ ಬಿಸಿಲ ಕೋಲುಗಳು ಪ್ರಖರಗೊಳ್ಳುತ್ತಿವೆ. ಕೆಳಗೆ ಬೀದಿಯಲ್ಲಿ ಕೆಲ ಹೆಂಗಸರು ಆಮ್ಲೆಟ್ ಗಾಡಿಯವನ ಚೌಕಾಶಿ ಮಾಡುತ್ತಿದ್ದಾರೆ. ಇಬ್ಬರು ಪರಸ್ಪರ ಹೇನು ಹೆಕ್ಕುತ್ತ ಮೆಟ್ಟಿಲಲ್ಲಿ ಕುಳಿತಿದ್ದಾರೆ. ಇವರೇ ರಾತ್ರಿ ಅಲ್ಲಿ ತುಟಿಗೆ ಗುಲಾಬಿ ಮೆತ್ತಿಕೊಂಡು ಕುಣಿಯುತ್ತಾರೆ. ಪಾರ್ಟನರ್ ಮತ್ತು ರೂಪಕ ಎಷ್ಟೋ ಬಾರಿ ರಾತ್ರಿ ಇಲ್ಲಿ ಅಡ್ಡಾಡಲು ಬಂದು ಈ ಬ್ರಿಜ್ಜಿನ ಮೇಲೆ, ಆ ಗುಲಾಬಿ ಪರದೆಗಳು ಮುಚ್ಚಿದ ಕಿಟಕಿಗಳನ್ನೇ ನೋಡುತ್ತ ನಿಂತಿದ್ದಿದೆ. ಪಾಕೀಜಾ, ಮುಕದ್ದರ್ ಕಾ ಸಿಕಂದರ್, ಉಮ್ರಾವ್ ಜಾನ್‌ಗಳ ಹಾಡುಗಳ ತುಣುಕುಗಳು ಅಲ್ಲಿಂದ ಕೇಳಿ ಬರುತ್ತಿರುವಾಗ ಪಾರ್ಟನರ್… “ಅಲ್ಲಿ ಹೋಗೋದಕ್ಕೆ ಕಿಸೇಲಿ ಮಾಲ್ ಬೇಕು ರೂಪಕಾ… ಈಗ ಇಲ್ಲಿಂದಲೇ ಕೇಳೋಣ”- ಅಂತಿದ್ದ. ನಂತರ ಅವನಿಗಷ್ಟೆ ಏನೋ ಕಾಣುತ್ತಿದೆ ಎಂಬಂತೆ ಜತೆಗಿದ್ದ ತನ್ನನ್ನೂ ಮರೆತವನಂತೆ ಪೂರ್ಣ ತಲ್ಲೀನನಾಗಿ ಆ ಪರದೆ ಮುಚ್ಚಿದ ಗುಲಾಬಿ ಕಿಟಕಿಗಳನ್ನೇ ನೋಡುತ್ತಿದ್ದ. ಇವರು ನಿಂತಿದ್ದು ನೋಡಿದ ಕೆಲವರು ತಾವೂ ನಿಂತು ನೋಡುತ್ತಿದ್ದರು. ಏನೂ ಕಾಣುತ್ತಿರಲಿಲ್ಲ. ಆದರೆ ಎಲ್ಲರೂ ಏನೇನನ್ನೋ ಊಹಿಸಿಕೊಂಡು ನೋಡುತ್ತಿದ್ದರು. ಹಾಡುಗಳ ಚೂರು ಪಾರು ಸೊಲ್ಲಿಗೆ ಕಿವಿ ನಿಮಿರಿಸಿ ಕಣ್ಣು ನೆಟ್ಟು ಹಾಗೇ ಮತಿಭ್ರಷ್ಟರಂತೆ ನಿಲ್ಲುತ್ತಿದ್ದರು. ಈಗ ಎಲ್ಲ ಬೇರೆ ತೋರುತ್ತಿದೆ. ಆದರೆ ಜನ ಬೇರೆಯದೇ ಜಾಗದಲ್ಲಿರುವಂತೆ ಅಂಥದೇನೂ ಖಚಿತ ರೂಪವಿಲ್ಲದ ತಮ್ಮಿಬ್ಬರ ನಂಟಿನಂತೆ. +ಮರಳುತ್ತಿದ್ದಂತೆ ಕೋಣೆಯ ಬಾಗಿಲು ತೆಗೆದೇ ಇದ್ದುದು ಕಂಡು ಬೆಚ್ಚಿಬಿದ್ದ. ಓಡುತ್ತ ಒಳಹೊಕ್ಕರೆ ಅಲ್ಲಿ ಹಾಕಿಕೊಂಡಿದ್ದ ಇಸ್ತ್ರಿ ಉಡುಪಿನಲ್ಲೆ ಪಾರ್ಟನರ್ ಹಾಸಿಗೆಯ ಹೊಟ್ಟೆ ಅವಚಿಕೊಂಡು ಬಿದ್ದಿದ್ದಾನೆ. “ಅರೇ… ಏನಾಯ್ತು?” ಎಂದು ಗಾಬರಿಯಿಂದ ಸಮೀಪಿಸಿದ ರೂಪಕನನ್ನು ನೋಡಿ “ಬೇಡಾ, ಮುಟ್ಟಬೇಡಾ. ಹೊಟ್ಟೆ ಭಯಂಕರ ನೋಯ್ತಾ ಇದೆ” ಎಂದು ಕೂಗತೊಡಗಿದ. ಅವನ ಮುಖ ಬಿಳಿಚಿಕೊಂಡಿತ್ತು. ಧಾರಾಕಾರ ಬೆವರುತ್ತಿದ್ದ. ಅಕ್ಕಪಕ್ಕದವರು ಇಬ್ಬರು ಬಂದು ತಕ್ಷಣ “ಡಾಕ್ಟರ್ ಬಳಿ ಒಯ್ಯಿರಿ ಎಂದು ಅವಸರ ಮಾಡಿದ್ದೇ ಒಂದು ಟ್ಯಾಕ್ಸಿ ತಂದು ಅದರಲ್ಲಿ ಕೂರಿಸಿ ಭಾಟಿಯಾ ಆಸ್ಪತ್ರೆಗೆ ಒಯ್ದು ಓ.ಪಿ.ಡಿ.ಯಲ್ಲಿ ಚೀಟಿ ಮಾಡಿಸಿ ತರುವಷ್ಟರಲ್ಲಿ ಬೆಂಚಿನಲ್ಲಿ ಕೂತಲ್ಲೇ ಪಾರ್ಟನರ್ ಗಳಗಳ ಅಳಲಾರಂಭಿಸಿದ. “ಏಯ್, ಹೆದ್ರಬೇಡಾ. ಏನೂ ಆಗೋದಿಲ್ಲ” ಎಂದು ರೂಪಕ ಸಂತೈಸಿದ್ದೇ ಕೈ ಹಿಡಿದುಕೊಂಡು, ತನ್ನ ಕಿಸೆಯಿಂದ ಒಂದಿಷ್ಟು ಹಣ ತೆಗೆದು ಕೊಟ್ಟ. “ಇರಲಿ ಬಿಡೋ ಮಾರಾಯ. ಅದೆಲ್ಲ ನಂತರ ನೋಡಿದರಾಯ್ತು…” ಎಂದು ಬಾಯಲ್ಲಿ ಹೇಳುತ್ತಿದ್ದರೂ, ಖರ್ಚು ಎಷ್ಟು ಆದೀತೋ ಎಂಬ ಅಂದಾಜಿರದ ಭಯದಲ್ಲಿ ರೂಪಕ ಹಣವನ್ನು ತಕ್ಷಣ ತನ್ನ ಕೈಲಿ ಭದ್ರವಾಗಿ ತೆಗೆದುಕೊಂಡು ಅದರ ಕಡೆ ನೋಡುವ ಧೈರ್ಯವಾಗದೆ ಖಾಲಿ ಕಿಸೆಯಲ್ಲಿಟ್ಟ. ಗಾಲಿ ಖುರ್ಚಿಯಲ್ಲಿ ಕೂತು ಮುಂದೆ ಮುಂದೆ ಸಾಗಿದ ಪಾರ್ಟನರ್‌ನನ್ನು ಹಿಂಬಾಲಿಸಬೇಕೋ ಬೇಡವೋ ತಿಳಿಯದೆ ನಿಂತುಬಿಟ್ಟ. ತಳ್ಳುತ್ತಿದ್ದ ನರ್ಸ್ ಹಿಂತಿರುಗಿ ‘ಬನ್ನಿ’ ಎಂಬಂತೆ ಸನ್ನೆ ಮಾಡಿದಳು. +“ತೀವ್ರವಾದ ಅಪೆಂಡಿಸೈಟಿಸ್ ಆಗಿದೆ. ತಕ್ಷಣ ಆಪರೇಷನ್ ಆಗಬೇಕು” ಎಂದ ಡಾಕ್ಟರು ಯಾವುದೊ ಫಾರ್ಮಿಗೆ ಸಹಿ ಹಾಕಲು ಹೇಳಿದಾಗ ಬೆಚ್ಚಿದ. ‘ಬೇಗ ಬೇಗ’ ಎಂದು ಅವಸರಿಸಿದ ಡಾಕ್ಟರು ರೂಪಕ್ ರಾಥೋಡ್- ಎಂಬ ಹೆಸರು ನೋಡಿ ‘ನೈಸ್ ನೇಮ್’ ಎಂದರು. ಗಾಲಿ ಮಂಚದಲ್ಲಿ ಮಲಗಿದ್ದ ಪಾರ್ಟನರ್ ರೂಪಕನನ್ನೇ ನೋಡುತ್ತಿದ್ದ. ನರ್ಸು ಒಂದು ಕಾಗದ ಕೊಟ್ಟು “ಇವಿಷ್ಟು ಮೆಡಿಸನ್ ತನ್ನಿ” ಎಂದಳು. ಮೆಡಿಸಿನ್ ತಗೊಂಡು ಬಂದಾಗ ಗಾಲಿ ಮಂಚ ಆಪರೇಷನ್ ಥೇಟರಿನ ಬಾಗಿಲಲ್ಲಿ ಇತ್ತು. ಚಡ್ಡಿ, ಬನಿಯನ್ನು ಎಲ್ಲವನ್ನು ಇವನ ಕೈಗೆ ಕೊಟ್ಟಳು. ಶರ್ಟಿನಲ್ಲಿದ್ದ ಕೆಲವು ಕಾಗದದ ಚೂರುಗಳು ಕೆಳಬಿದ್ದವು. ಅದನ್ನು ಹೆಕ್ಕಿಕೊಳ್ಳುವಷ್ಟರಲ್ಲಿ ಮಲಗಿದ್ದರಿಂದಲೇ ಮಂಪರುಗಣ್ಣಲ್ಲಿ ನೋಡುತ್ತಿದ್ದ ಪಾರ್ಟನರ್ “ಇಲ್ನೋಡು… ಬೋರಿವಲಿಯಲ್ಲಿ ನನ್ನ ದೂರದ ಸಂಬಂಧಿ ಇದ್ದಾರೆ. ಸ್ಟೇಷನ್ ಹೊರಗೆ ಅವರ ಝೆರಾಕ್ಸ್ ಅಂಗಡಿಯಿದೆಯಂತೆ. ನಾನೂ ನೋಡಿಲ್ಲ ಅವರನ್ನು. ನನ್ನ ತಾಯಿ ಕಡೆ ಸಂಬಂಧ. ಬಕ್ಕ ತಲೆ…” ಎಂದ. ಅವನ ಕೀಚಲು ದನಿ ಈಗ ಇನ್ನೂ ಬೆಳ್ಳಗಾಗಿತ್ತು. “ರೂಪಕ, ಆಪರೇಷನ್ ಆದ ಮೇಲೆ ಕರೆಯೋಣ ಅವರನ್ನು…” ಎಂದದ್ದೇ “ಅಲ್ಲ… ಅಲ್ಲ… ಕರೆಯೋದು ಬೇಡ. ಅವರಿಗೆ ನಾನ್ಯಾರು ಅಂತ ಗೊತ್ತಿಲ್ಲ. ನೀನು ಕರದ್ರೂ ಬರೋದಿಲ್ಲ ಅವರು. ಅದಲ್ಲ. ಆಪರೇಷನ್‌ನಲ್ಲಿ ಏನಾದರೂ ಹೆಚ್ಚುಕಡಿಮೆ ಆದರೆ… ಉಳಿದ ಹಣ. ನನ್ನ ಸಾಮಾನು ಎಲ್ಲ ಅವರಿಗೆ ತಲುಪಿಸಿಬಿಡು” ಎಂದ. ಬಾಗಿಲಲ್ಲಿ ನಿಲ್ಲಿಸಿದ ಹಸಿರು ನಿಲುವಂಗಿಯ ಡಾಕ್ಟರು ಕತ್ತಿನಲ್ಲಿದ್ದ ಚಿನ್ನದ ಚೈನು ತೆಗೆಯಲು ಹೇಳಿದರು. ನರ್ಸು ತೆಗೆಯುವಾಗ ಅದು ಅವನ ತಲೆಯಲ್ಲಿ ಸಿಕ್ಕಿಹಾಕಿಕೊಂಡಿತು. ನರ್ಸು ಮತ್ತು ಡಾಕ್ಟರು ಇಬ್ಬರೂ ಪ್ರಯಾಸಪಟ್ಟು ಅದರ ಕೊಂಡಿ ತೆಗೆದು ಚೈನನ್ನು ರೂಪಕನ ಕೈಗೆ ಕೊಟ್ಟರು. ಹಸಿರು ನಿಲುವಂಗಿಯ ಗಾಲಿ ಮಂಚ ಒಳಗೆ ಹೋಯಿತು. +ಆಪರೇಷನ್ ಮುಗಿಯುವ ತನಕ ಹೊರಗೇ ಇರಬೇಕು ಎಂದು ಹೇಳಿದ್ದರಿಂದ ಅಲ್ಲಿಯೇ ಬೆಂಚಿನ ಮೇಲೆ ಕುಳಿತ. ಪಕ್ಕದಲ್ಲಿ ಕೂತ ಹೆಂಗಸೊಬ್ಬಳು ‘ಸೀರೆ ಬಂಪರ್ ರಿಡಕ್ಷನ್ ಸೇಲ್’ನ ಹ್ಯಾಂಡ್‌ಬಿಲ್ಲನ್ನು ತದೇಕಚಿತ್ತಳಾಗಿ ನೋಡುತ್ತ ಕೂತಿದ್ದಳು. ಚೈನು ತಲೆಯಲ್ಲಿ ಸಿಕ್ಕುಬಿದ್ದಾಗ ವಿಚಿತ್ರವಾಗಿ ತಲೆ ಅಲ್ಲಾಡಿಸಿ ಮಂಪರಿನಲ್ಲಿ ನರಳಿದ ಪಾರ್ಟನರ್‌ನ ಮುಖವೇ ರೂಪಕನ ಕಣ್ಣಿಗೆ ಕವಿಯತೊಡಗಿತು. ಕಿಸೆಯಲ್ಲಿದ್ದ ಚೈನು ತೆಗೆದು ಅಂಗೈಲಿಟ್ಟು ನೋಡಿದ. ಅದು ತುಂಬ ಪುಟ್ಟದಾಗಿ ಪಾಪದ್ದಾಗಿ ತೋರಿತು. ಹೆಂಗಸು “ನನ್ನ ಅಕ್ಕನಿಗೂ ಆಪರೇಷನ್. ಬೆಳಿಗ್ಗೆನೇ ಒಯ್ದಿದ್ದಾರೆ. ಅವಳ ಕೈಬಳೆ ತೆಗೆಯೋಕೇ ಆಗಲಿಲ್ಲ. ನಂತರ ಕಟ್ ಮಾಡಿ ತೆಗೆದರು”– ಎಂದಳು. ಪಾರ್ಟನರ್ ಆಪರೇಷನ್‌ನಲ್ಲಿ ನಿಜವಾಗಲೂ ಸತ್ತುಹೋದರೆ? ಏನಿಲ್ಲ. ನಾನೇನೂ ಅವನ ಸಂಬಂಧಿಯಲ್ಲ. ಕೇವಲ ರೂಂಮೇಟು. ನನಗೆ ಏನೂ ಗೊತ್ತಿಲ್ಲ. ಹೊಟ್ಟೆನೋವು ಅಂದ. ತಂದು ಹಾಕಿದೆ ಅಷ್ಟೆ ಎಂದು ಹೇಳಿ ಹೋಗಿಬಿಡುವುದು. ಆದರೆ ಅದು ಸುಲಭವೆ? ಅಥವಾ ಬೋರಿವಲಿಯಲ್ಲಿ ಆ ಹೆಸರಿಲ್ಲದ ಬಕ್ಕತಲೆಯ ರಕ್ತಸಂಬಂಧಿಯನ್ನು ಹುಡುಕುವುದೇ. ಹೆಂಗಸು, “ನಿಮ್ಮನ್ನು ಕರೀತಿದ್ದಾರೆ” ಎಂದಳು. ನರ್ಸು ಗೇಟಿನಾಚೆಯಿಂದ ಕರೆಯುತ್ತಿದ್ದಳು. +ಮೆಲ್ಲಗೆದ್ದು ರೂಪಕ ಹೋದಾಗ ಅವನನ್ನು ಪರದೆಯ ಮರೆಗೆ ಕರೆದರು. “ನೀವು ಪಾರ್ಟಿ ಅಲ್ಲವೆ?” ಅಂದರು. ನಂತರ ಮುಖದ ಹಸಿರು ಪಟ್ಟಿಯನ್ನು ತೆಗೆದಿದ್ದ ಡಾಕ್ಟರೊಬ್ಬರು ಸಣ್ಣ ಬೆಳ್ಳನೆ ಅಲ್ಯೂಮಿನಿಯಂ ತಟ್ಟೆಯಲ್ಲಿ ಹತ್ತಿಯಲ್ಲಿಟ್ಟಿದ್ದ ರಕ್ತಸಿಕ್ತ ಬೆರಳಿನಂಥದ್ದನ್ನು ತೋರಿಸಿದರು. “ನೋಡಿ, ಇದೇ ಅಪೆಂಡಿಕ್ಸ್, ಸೆಪ್ಟಿಕ್ ಆಗಿತ್ತು” ಎಂದರು. ಮಂಕಾಗಿ ಪಿಳಿ ಪಿಳಿ ನೋಡುತ್ತಿದ್ದ ರೂಪಕನನ್ನು ಎಚ್ಚರಿಸುವಂತೆ “ನೋಡಿದಿರಲ್ಲಾ?” ಎಂದು ಕೇಳಿದರು. ಅವನು ಹೌದು ಅನ್ನುವಂತೆ ತಲೆ ಅಲ್ಲಾಡಿಸಿದ. ತಟ್ಟಂತ ಅವರೆಲ್ಲ ಮತ್ತೆ ಒಳಗೆ ಹೊರಟುಹೋದರು. ನರ್ಸ್ ಮತ್ತೆ ಬಂದು “ಪೋಸ್ಟ್ ಆಪರೇಟಿವ್ ವಾರ್ಡ್‌ನಲ್ಲಿ ಒಂದು ದಿನ ಇಡ್ತಾರೆ. ನಾಳೆಯಿಂದ ಹಣ್ಣಿನ ರಸ ಕೊಡಬಹುದು” ಎಂದು ಮತ್ತಷ್ಟು ಮದ್ದುಗಳನ್ನು ಚೀಟಿಯಲ್ಲಿ ಬರೆದುಕೊಟ್ಟಳು. +ಹೊರಬಂದ ರೂಪಕನಿಗೆ ರಸ್ತೆಯಲ್ಲಿ ಓಡಾಡುತ್ತಿರುವ ಜಗತ್ತು ತನಗೆ ಸಂಬಂಧಪಡದಂತೆ ಕಂಡಿತು. ಸಲೂನ್‌ನಲ್ಲಿ ಹೇರ್‌ಕಟ್ ಆದ ಮೇಲೆ ಹಿಂದೊಂದು ದಿನ ಕನ್ನಡಿಯನ್ನು ಹಿಡಿದು ತೋರಿಸುವಂತೆ ಅವರು ಪಾರ್ಟನರ್‌ನ ಕರುಳಿನ ಆ ಪುಟ್ಟ ಬೆರಳನ್ನು ಬೆಳಕಿಗೆ ಹಿಡಿದು ತೋರಿಸಿದ್ದು, ಮತ್ತೆ ಅದಕ್ಕೆ ತಾನು ತಲೆದೂಗಿ “ಪುರಾವೆ ನೋಡಿದೆ” ಎಂಬಂತೆ ಒಪ್ಪಿಗೆ ಕೊಟ್ಟಿದ್ದು ಬೆಳ್ಳನೆ ಪರದೆಯ ಮೇಲೆ ನೋಡಿದ ಚಿತ್ರದಂತೆ ಮತ್ತೆ ಮತ್ತೆ ಕಂಡಿತು. ಅಮ್ಮ ಅಪ್ಪ ಯಾರೋ, ಎಲ್ಲಿದ್ದಾರೋ, ಅವನ ಕುರಿತು ಏನೇನೋ ಗೊತ್ತಿರದ ತಾನು ಅವನ ಒಳಗಿನ ಕರುಳ ತುಣುಕೊಂದನ್ನು ನೋಡಿದ ಕ್ಷಣ ನೆನೆದು ಮೈಜುಮ್ಮೆಂದಿತು. ಕೈಲಿದ್ದ ಪ್ಲಾಸ್ಟಿಕ್ ಚೀಲವನ್ನು ತೆರೆದು ಶರ್ಟು ಪ್ಯಾಂಟು ಬನೀನುಗಳನ್ನೊಮ್ಮೆ ನೋಡಿದ. ಬಾ ಎಂದು ಕರೆಯುತ್ತಿರುವ ಅಪರಿಚಿತನ ಸನಿಹ ಬರಲು ಹಿಂಜರಿಯುತ್ತಿರುವ ಮಕ್ಕಳ ಕಣ್ಣುಗಳಂತೆ ಕಂಡವು. ರೂಪಕನ ಕೈಗಳಲ್ಲಿ ಈಗ ಅವರು ಭದ್ರವಾಗಿದ್ದವು. ಅವಸರದಲ್ಲಿ ಮುದುಡಿ ತುರುಕಿದ್ದ ಅವುಗಳನ್ನು, ಬೆಂಚಲ್ಲಿ ಕೂತು, ಮತ್ತೆ ಹೊರತೆಗೆದು, ಸರಿಯಾಗಿ ಮಡಚಿ ಇಡತೊಡಗಿದ. ಸೀಸನ್ ಪಾಸು, ಬಾಚಣಿಗೆ, ತುದಿ ಮೊಂಡಾಗಿರುವ ಎಷ್ಟೊಂದು ಕಾಗದದ ಮಡಿಕೆಗಳು. ಪ್ಯಾಂಟಿನ ಕಿಸೆಯಲ್ಲಿ ಏನೋ ಗಟ್ಟಿ ಹತ್ತಿದಂತಾಗಿ ಕೈಹಾಕಿದರೆ ಫಳ ಫಳ ಹೊಸ ವಾಚು ಹೊರಬಂತು. ಬೆಳಿಗ್ಗೆ ಇದು ಕಿಸೆಯಲ್ಲಿದೆ ಅನ್ನೋದನ್ನು ಮರೆತೇಬಿಟ್ಟಿದ್ದನೋ, ಅಥವಾ ಬೇಕೆಂದೇ ಅದನ್ನು ಅಡಗಿಸಿಟ್ಟುಕೊಂಡಿದ್ದನೋ- ಇದ್ಯಾವುದೂ ರೂಪಕನನ್ನು ಬಾಧಿಸಲಿಲ್ಲ. ಏಕೆಂದರೆ, ನಾಗರಿಕ ಅವಿಶ್ವಾಸದ ಪರಮ ರೂಪದಂತೆ, ಅಲ್ಯುಮಿನಿಯಂ ತಟ್ಟೆಯ ಬೆಳ್ಳನೆ ಹತ್ತಿಯಲ್ಲಿ ಕೂತಿದ್ದ ಆ ಪುಟ್ಟ ಅಮಾಯಕ ಕರುಳಿನ ಬೆರಳು, ನಿಗೂಢ ನಂಟೊಂದನ್ನು ಅವನಲ್ಲಿ ಅರಳಿಸಿತ್ತು. ಆಟದಲ್ಲಿ ಮಕ್ಕಳು ಕಿಸೆಯಲ್ಲಿ ಬಚ್ಚಿಟ್ಟು ಮರೆತ ಪುಟ್ಟ ಆಟಿಕೆಯಂತಿತ್ತು. ಈ ವಾಚು ಅಚರ ಟಕ್ ಟಕ್ ಸದ್ದೊಂದೇ ಮುದ್ದಾಗಿ ಕೇಳುತ್ತಿತ್ತು. ಅಲ್ಲೇ ಇದ್ದ ಪಬ್ಲಿಕ್‌ಬೂಥಿನಿಂದ “ನಾಲ್ಕು ದಿನ ಬರಲಾಗುತ್ತಿಲ್ಲ” ಎಂದು ತನ್ನ ಕಾರ್ಖಾನೆಗೆ ಫೋನು ಮಾಡಿ… ಔಷಧಿಗಳನ್ನು ಕೊಂಡು, ಕಿಸೆಯಲ್ಲೀಗ ಎಷ್ಟು ಹಣ ಉಳಿದಿದೆ ಎಂಬುದನ್ನು ಸ್ಪಷ್ಟವಾಗಿ ಎಣಿಸಿ ನೋಡಿ, ಪೋಸ್ಟ ಆಪರೇಟಿವ್ ವಾರ್ಡಿಗೆ ಬಂದಾಗ, ಆಗಷ್ಟೆ ಅಲ್ಲಿಗೆ ತಂದಿದ್ದರು. ರಕ್ತ, ಸಲೈನು, ಇಸಿಜಿ ಹೀಗೆ ಎಷ್ಟೆಲ್ಲಾ ನಳಿಗೆ, ವಯರುಗಳ ಮಧ್ಯ ಹಸಿರು ಹಾಸಿಗೆಯಲ್ಲಿ, ಫ್ರಾಕಿನಂಥ ನಿಲುವಂಗಿಯಲ್ಲಿ, ಪಾರ್ಟನರ್ ನಿರುಪಾಯ ನಿದ್ರೆಯಲ್ಲಿದ್ದ. ಎವೆಯಿಕ್ಕದೇ ನೋಡುತ್ತ ನಿಂತ ರೂಪಕನತ್ತ ಮುಗುಳುನಕ್ಕ ನರ್ಸು “ಎಲ್ಲ ಸರೀಗಿದೆ, ನೀವಿನ್ನು ಊಟಮಾಡಿಕೊಂಡು ಬನ್ನಿ” ಎಂದು ಸನ್ನೆಯಲ್ಲೆ ಹೇಳಿದಳು. +***** +ಕೀಲಿಕರಣ ದೋಷ ತಿದ್ದಿದವರು: ಶ್ರೀಕಾಂತ ಮಿಶ್ರಿಕೋಟಿ +ಈ ಕಾಂಡಕ್ಟ್ ಸರ್ಟಿಫಿಕೇಟಿಗೆ ಡಾಕ್ಟರು ರೇವಣಸಿದ್ಧಪ್ಪನವ್ರ ಸಹಿ ಮಾಡಿಸ್ಕೊಂಡು ಬಂದ್ರೆ ನಿಂಗೆ ಅಡ್ಮಿಷನ್ ಇಲ್ಲಾಂದ್ರೆ ಔಟ್ ಎಂದು ಪ್ರಿನ್ಸಿಪಾಲರು ತಮ್ಮ ವಕ್ರ ವಕ್ರ ದಂತಗಳನ್ನು ಪ್ರದರ್ಶಿಸಿದಾಗಲೇ ನನ್ನ ಮನದ ಪುಟ್ಟ ತೆರೆಯ ಮೇಲೆ ಮಾಂಸಪರ್ವತವನ್ನು […] +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ನನ್ನ ಕಾರ್ಖಾನೆ ಬಸ್ಸು ಮಲ್ಲೇಶ್ವರಂ ಸ್ಟಾಪ್ ಬಳಿಗೆ ಬರುತ್ತಿದ್ದಂತೆ ನನ್ನ ಕಣ್ಣುಗಳು ಕಿಟಕಿಯತ್ತ ಹರಿಯುತ್ತವೆ. ಅಲ್ಲಿ ಕಾರ್ಮಿಕರ ಬಸ್ಸಿಗಾಗಿ ಕಾಯುತ್ತಾ ನಿಂತ ರವಿ ಕಾಣುತ್ತಾನೆ. ನನ್ನ ಮುಖ ಕಂಡೊಡನೆ ಮುಗುಳ್ನಗುತ್ತಾನೆ. “ಸಂಜೆ ಸಿಗ್ತೀಯಾ? ಎಲ್ಲಿ? […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_142.txt b/Kannada Sahitya/article_142.txt new file mode 100644 index 0000000000000000000000000000000000000000..9f5a5a0a5efa49c67d95b979cf13eef8faab9bd4 --- /dev/null +++ b/Kannada Sahitya/article_142.txt @@ -0,0 +1,63 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಯಾಕೆ ಸುಮ್ಮನೆ ನಾವು +ಹಾದಿ ಕಾಯುತ್ತೇವೋ +ಬಂದರೂ ಬಾರದ ಹಾಗೇ +ಇರುವಂಥವರ! +ಒಳಗಿನ ಬೆಂಕಿ ನಾಲಿಗೆಯ ಮೇಲಾಡಿ +ಕಣ್ಣ ಕೊನೆಯಿಂದ ಕಿಡಿ ಕಾರಿ +ಚಟ ಪಟ ಸಿಡಿದು +ಹೊರಟು ಹೋದವರ +ಕಾಯುತ್ತೇವೆ +ಯಾಕೆ? +– ಹೊಡೆದುಕೊಳ್ಳುವ ಎದೆಯ +ಅಂಗೈಲಿಟ್ಟುಕೊಂಡು. +ಇಲ್ಲವೆ ನಿಮ್ಮಲ್ಲಿ? ಇರಲಿ ಬಿಡಿ, +ಬಂದಾರು; ಸರಿ . . . ಬಂದರೆ ತಿಳಿಸುವೆ +ಬಂದರೆಂದು. +(ಆಚೆ ದನಿಗೇನು ಗೊತ್ತು ಬಾರದೆಯೂ ಇರಬಹುದೆಂದು) +ಯಾವುದೋ ಲಾರಿಯಡಿ! . . ಟ್ರಕ್ಕಿನಡಿ! . . +ಶಿವ ಶಿವಾ! ಒಲ್ಲೆ ಒಲ್ಲೆಂದು +ಹೇಳುವುದಕ್ಕಾಗೇ +ನೋವ ಕಾಯುತ್ತೇವೋ? +ಸಾವ ಕಾಯುತ್ತೇವೋ? +ಕಣ್ಣ ತುಂಬ ತುಂಬಿದ ಭಯ +ಆಚೀಚೆಗೂ ಚೆಲ್ಲಿ ಹನಿ ಹನಿಯಾಗಿ +ಹೆಪ್ಯ್ಪಗಟ್ಟುತದೆ ಕತ್ತಲಿನಲ್ಲಿ. +ಈಗ ಮುಗಿಯುತ್ತದೆ ಕಾದು ಕೂರುವ ಹೊತ್ತು +ಆಗ ಮುಗಿಯುತ್ತದೆ ಕಾದು ಕೂರುವ ಹೊತ್ತು +ಇನ್ನೇನು ಮುಗಿಯುತ್ತದೆ ಕಾದು ಕೂರುವ ಹೊತ್ತು . . +ಯಾರಾದರೂ ಬಂದು, +ಬಾಗಿಲ ಬಡಿದು +ತಿಳಿಸಿಬಿಡಲಿ! +ಏನ ಕಾಯುತ್ತೇವೆ +ಏಕೆ ಕಾಯುತ್ತೇವೆ +ಬರುವುದನ್ನೋ . . . +ಬಾರದಿರುವುದನ್ನೋ ? +ತೆರೆದ ಬಾಗಿಲಿನಿಂದ +ಕತ್ತಲು ನುಗ್ಗಿದ ಹಾಗೆ +ಕಡೆಗೂ +ಬಂದರು +ಬಾರದ ಹಾಗೆ! +ಕಾಯುವ ಮಾತಿನ್ನು +ಮತ್ತೊಂದು ದಿನಕ್ಕೆ +ಮತ್ತೊಂದು ರಾತ್ರಿಗೆ. +***** +೧ ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ, ಕಲ್ಯಾಣದ ಅಂಗಳದಲಿ ತಳಿ ಹೊಡೆದಳು ಛಂದಕೆ. ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವು, ಹಾರಾಡುವ ಹೊಸತಿಲಲ್ಲಿ ಹೊಯ್ದಾಡದ ದೀಪವು. ೨ ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು, […] +ಬಳೆ ಅಂಗಡಿಯ ಮುಂದೆ ನಿಂತವಳು ಒಳ ಹೋಗಲಾರಳು.. ಮನಸ್ಸು ಕಿಣಿಕಿಣಿಸುತ್ತ ಹೊರಬರಲೊಲ್ಲದು; ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ ಕಲಾವಿದನ ಚಿತ್ರದಂತೆ ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು ಕಾಡಿಗೆ […] +ಪಾಳು ಗುಮ್ಮಟದ ಮೈಗೆ ಪಾರಿವಾಳದ ತೇಪೆ ಹಸಿರು ಚಾದರದಂಚಿಗೆ ಹೊಳೆವ ಜರದೋಜ್ಹಿ ಕೈ ಕೆಲಸ ಮಂಡಿಯೂರಿ, ಬೆನ್ನಬಗ್ಗಿಸಿ ‘ಅಲ್ಲಾ….. ಹೂ…..!’ ಮುಂಜಾನೆ ಹೊನ್ನ ಬೆಳಕು ಶಹರಿನ ತುಂಬ ತಣ್ಣನೆ ಗಾಳಿ ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_143.txt b/Kannada Sahitya/article_143.txt new file mode 100644 index 0000000000000000000000000000000000000000..cdea509cfffed3abb0da4ad2848416f700557c1c --- /dev/null +++ b/Kannada Sahitya/article_143.txt @@ -0,0 +1,86 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. ಹೊಲದಲ್ಲಿ ಕೆಲಸ ಮಾಡುವದು, ಮನೆಯಲ್ಲಿ ಆಕಳ ಹಿಂಡುವದು, ಸೆಗಣಿಕಸ ಮಾಡುವದು ಅವನ ಕೆಲಸವಾಗಿತ್ತು. ಕಟ್ಟಡ ಕಟ್ಟುವದು, ಬಾವಿ ತೋಡುವದು ಮೊದಲಾದ ಎಲ್ಲ ಕೆಲಸ ಅವನಿಗೆ ಗೊತ್ತಿತ್ತು. ತಾನು ಮಾಡಿದ ಕೆಲಸದ ಬಗ್ಗೆ ಅವನಿಗೆ ಬಹಳ ಹೆಮ್ಮೆ ಇರುತ್ತಿತ್ತು. +ರಂಗರಾಯರ ಹೆಂಡತಿ ಒಮ್ಮೆ ನೀರು ತರಲಿಕ್ಕೆ ಬಾವಿಗೆ ಹೋದಾಗ ಹಗ್ಗ ಹರಿದು ಕೊಡಪಾನ ಬಾವ್ಯಾಗ ಬಿತ್ತಂತೆ. ಅವರು ಹಿಂದೆ ನೆಲಕ್ಕೆ ಬಿದ್ದರು. ನೋಡಿದ ಜನ ನಕ್ಕರಂತೆ. ಅದನ್ನ ಕೇಳಿದ ರಾಯರಿಗೆ ವಿಪರೀತ ಸಿಟ್ಟು ಬಂತು. +‘ಕಾಶೀಮಾ, ನಿಂತ್ ಕಾಲ್ ಮ್ಯಾಲೆ ನಮ್ಮ ಮನೀ ಹಿತ್ತಲದಾಗ ಒಂದ್ ಬಾವಿ ತೋಡು. ನಮ್ಮ ಹೆಣ್ಣುಮಕ್ಕಳು ಹೊರಗ ಹೋಗೋದು ಬ್ಯಾಡ’ ಅಂದ್ರು. +‘ಆಯಿತೆಪ್ಪ’ ಅಂದು ಎಂಟು ದಿನದಾಗ ಕಾಶೀಮ ರಾಯರ ಹಿತ್ತಲದಾಗ ಬಾವೀ ತೋಡಿ, ಕಟ್ಟಡ ಕಟ್ಟಿದ. +ರ೦ಗರಾಯರಿಗೆ ಮಗ ಹುಟ್ಟಿದ. ಶಾಮಣ್ಣ ಅಂತ ಹೆಸರಿಟ್ಟರು. ಹೆಂಡತಿ ಮಗನೊಡನೆ ಸುಖವಾಗಿ ಕಾಲ ಕಳೆಯುತ್ತಿದ್ದರು. ಆದರೆ ದುರ್ದೈವದಿಂದ ರಾಯರ ಹೆಂಡತಿ ತೀರಿಕೊಂಡರು. ಆಗಿನಿಂದಲೂ ಶಾಮಣ್ಣನನ್ನು ಕಾಶೀಂಸಾಬ ಮತ್ತು ಅವನ ಹೆಂಡತಿ ಕಾಶೀಂಬಿಯೇ ನೋಡಿಕೊಳ್ಳುತ್ತಿದ್ದರು. ಮನೆಗೆ ಕರೆದುಕೊಂಡು ಹೋಗಿ ಬಿಸಿ ರೊಟ್ಟಿ ಬೆಣ್ಣಿ ತಿನ್ನಿಸುತ್ತಿದ್ದರು. ಅದನ್ನು ರಾಯರಾಗಲಿ ಕಾಶೀ೦ಸಾಬನಾಗಲಿ ಯಾರ ಮುಂದೂ ಹೇಳುವಂತಿರಲಿಲ್ಲ. +ಒಮ್ಮೆ ಸಣ್ಣ ರಾಯರು ಏನೋ ಕಾರಣಕ್ಕೆ ಸಿಟ್ಟು ಬಂದು ಸೆಟಗೊಂಡು ಹೋಗಿ ಹನಮ೦ತದೇವರ ಗುಡಿಯ ಹತ್ತಿರಿದ್ದ ಬೇವಿನ ಗಿಡದ ಕಟ್ಟೆಯ ಮೇಲೆ ಮಲಗಿದರಂತೆ. ಅದನ್ನು ನೋಡಿದ ದೊಡ್ಡ ರಾಯರು +‘ಕಾಶೀಮಾ, ಅವಗ ಸಿಟ್ಟು ಬಂದಾಗ ಅಲ್ಲಿ ಇಲ್ಲಿ ಹೋಗಿ ಮಲಗೋದು ಬ್ಯಾಡ. ನಮ್ಮ ಹಿತ್ತಲದಾಗಿನ ಜಾಲೀಗಿಡಾನೆಲ್ಲಾ ಕಡದು ಒಂದು ಸಣ್ಣ ಮನೀ ಕಟ್ಟು. ಸಿಟ್ಟು ಸೆಡವು ಬಂದಾಗ ಅಂವ ಅಲ್ಲೇ ಹೋಗಿ ಮಲಕೊಳ್ಳಲಿ’ ಅಂದರು. +ಕಾಶೀಂಸಾಬನಿಗೆ ಹಿತ್ತಲಲ್ಲಿಯ ಜಾಲಿಗಿಡಗಳ ಮೇಲೆ ಅಪಾರ ಪ್ರೀತಿ. ಜಾಲೀಗಿಡಗಳ ಕಪ್ಪನೆಯ ಬೊಡ್ಡೆಗಳ ಮೇಲಿನ ಬಿಳಿ ಬುಳುಸು, ಹಳದಿ ಅಂಟು ಸೇರಿ ಒಳ್ಳೆ ಕುಸುರಿ ಕೆಲಸ ಮಾಡಿದಂತೆ ಕಾಣುತ್ತಿತ್ತು. ಮೆತ್ತನ್ನ ರೇಶಿಮೆಯಂಥ ಹಳದಿ ಹೂವು, ಮೈತುಂಬ ಬಿಟ್ಟ ಬೂದು ಬಣ್ಣದ ಕಾಯಿ ಇವುಗಳಿಂದ ಸೂಸುವ ಒಂದು ರೀತಿಯ ಪರಿಮಳ ಕಾಶೀ೦ಸಾಬನಿಗೆ ಬಹಳೇ ಇಷ್ಟವಾಗುತ್ತಿತ್ತು. ಅವುಗಳ ಮೇಲೆ ಎಷ್ಟೋ ಗುಬ್ಬಿ ಬಚ್ಚುಗಳು ಕಾಗೆ ಗೂಡುಗಳು ಇದ್ದವು. ಅವು ತಮ್ಮ ತಮ್ಮ ಮರಿಗಳಿಗೆ ಗುಟುಕು ಕೊಡುವ ದೃಶ್ಯ ಕಾಶೀಂಸಾಬನಿಗೆ ತುಂಬಾ ಹಿಡಿಸುತ್ತಿತ್ತು. ಮಧ್ಯಾಹ್ನ ಉಂಡು ಆ ಗಿಡಗಳ ನಡುವೆ ಸುತ್ತಾಡುತ್ತಿದ್ದ. ಅಲ್ಲೇ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಿದ್ದ. +ದೊಡ್ಡ ರಾಯರು ಜಾಲೀಗಿಡಗಳನ್ನೆಲ್ಲ ಕಡಿ ಅಂತ ಹೇಳಿದರೂ ಕಾಶೀ೦ಸಾಬನಿಗೆ ಅವನ್ನು ಕಡಿಯಲು ಮನಸ್ಸು ಬಾರದೆ, ಮುಂದೆ ಇದ್ದ ಸ್ವಲ್ಪ ಬಯಲು ಜಾಗದಲ್ಲೇ ಒಂದು ಸಣ್ಣ ಮನೆ ಕಟ್ಟಿದ. ಜಾಲೀಗಿಡದ ಹಿತ್ತಲಕ್ಕೂ, ಅವನೇ ಕಟ್ಟಿದ ಆ ಮನೆಗೂ ಇದ್ದ ನಂಟಿನಿಂದಾಗಿ ಎಲ್ಲರೂ ಅವನನ್ನು ಹಿತ್ತಲಮನಿ ಕಾಶೀ೦ಸಾಬ ಎಂದೇ ಕರೆಯುತ್ತಿದ್ದರು. +ಮುಂದೆ ಕೆಲವು ದಿನಗಳಲ್ಲಿ ಶಾಮಣ್ಣನಿಗೆ ಮದುವೆಯಾಯಿತು. ರಂಗರಾಯರು ತೀರಿಕೊಂಡದ್ದರಿಂದ ಮನೆಯಲ್ಲಿ ಹಿರಿಯರು ಇಲ್ಲದಂತಾಯಿತಲ್ಲ ಅಂತ ಶಾಮಣ್ಣ ಮತ್ತು ಶಾಂತಾಬಾಯಿಗೆ ಬಹಳ ದುಃಖವಾಯಿತು. ಕಾಶೀಂಸಾಬನೇ ಅವರಿಗೆ ಸಮಾಧಾನ ಹೇಳಿದ. +ಕಾಶೀ೦ಸಾಬ ಯಾವಾಗಲೂ ನಗುನಗುತ್ತ ಎಲ್ಲರಿಗೂ ಕೈಲಾದ ಸಹಾಯ ಮಾಡುತ್ತ ಊರಿಗೇ ಬೇಕಾದವನಾಗಿದ್ದ. ಯಾರಿಗೆ ಏನೇ ಕಷ್ಟ ಬಂದರೂ ಆತನ ಮುಂದೆ ಹೇಳಿಕೊಂಡು ತಮ್ಮ ದುಃಖ ಕಡಿಮೆ ಮಾಡಿಕೊಳ್ಳುತ್ತಿದ್ದರು. ಆತನ ಹೆಂಡತಿ ಕಾಶೀಂಬಿಯೂ ಅಂಥ ಸ್ವಭಾವದವಳೇ ಆಗಿದ್ದಳು. +ಅವರಿಗೆ ಮಕ್ಕಳೇ ಇರಲಿಲ್ಲ. ಆದರೂ ಊರಿನ ಮಕ್ಕಳೆಲ್ಲ ಅವರವೇ ಆಗಿದ್ದವು. ಮಕ್ಕಳು ಬಿಡದೇ ಅಳುತ್ತಿದ್ದರೆ ‘ಕಾಶಿಂಬಿ ಹಂತ್ಯಾಕ ಕೊಡ್ರಿಬೆ. ಆಕೀ ಕೈಯಾಗ ಅಂತಾದ್ದೇನೈತೋ ಏನೋ, ಮಕ್ಕಳು ಸುಮ್ಕಾಗಿ ನಿದ್ದಿ ಮಾಡಿಬಿಡತಾವು’ ಅಂತ ಓಣ್ಯಾಗಿನ ಹೆಣ್ಣುಮಕ್ಕಳು ಅನ್ನುತ್ತಿದ್ದರು. +ಇಂಥಾ ಕಾಶೀಂಬಿ ಮುಂದೆ ಬಹಳ ದಿನ ಬದುಕಿ ಉಳಿಯಲಿಲ್ಲ. ಕಾಶೀಂಸಾಬನಿಗೆ ಬಹಳೇ ದುಃಖವಾಯಿತು. ಹೆಂಡತಿ ಇಲ್ಲದ ಮನೆಯಲ್ಲಿ ಇರಲಾಗದೇ ಕಾಶೀಂಸಾಬ ರಾಯರ ಜಾಲೀಗಿಡದ ಹಿತ್ತಲಲ್ಲಿಯೇ ಒಂದು ಗುಡಿಸಿಲನ್ನು ಹಾಕಿಕೊಂಡ. ಲೆಕ್ಕಿಗಿಡಗಳನ್ನು ಸುತ್ತಲೂ ನೆಟ್ಟು ನೆರಿಕಿ ಕಟ್ಟಿದ. ಮೇಲೆ ಇಳಿಜಾರಿನ ಚಪ್ಪರ ಹಾಕಿ ಅದರ ಮೇಲೆ ಬಂದರಿಕಿ ಸೊಪ್ಪು ಹೊದಿಸಿ, ಬಾದೀ ಹುಲ್ಲು ಹರಡಿ, ಮೇಲೆ ಹಗುರವಾಗಿ ಮೇಲ್ಮುದ್ದಿ ಹಾಕಿ ‘ಗಾಳಿಗೆ ಹಾರದ್ಹಾಂಗ, ಮಳೀಗೆ ಸೋರದ್ಹಾಂಗ’ ಚಾಟು ಮಾಡಿಕೊಂಡು ಅಲ್ಲೆ ಇರತೊಡಗಿದ. +ಶಾಂತಾಬಾಯಿಗೆ ಸಾಲಾಗಿ ನಾಲ್ಕು ಹೆಣ್ಣುಮಕ್ಕಳು ಹುಟ್ಟಿದ್ದರಿಂದ ಗಂಡು ಮಗು ಆಗಲಿಲ್ಲವಲ್ಲ ಅಂತ ಶಾಮಣ್ಣ ‘ನಾ ಇನ್ನೊಂದು ಲಗ್ನ ಮಾಡಿಕೋತೀನಿ’ ಅಂತ ಹೇಳಿದರು. ಇದನ್ನು ಕೇಳಿ ಶಾಂತಾಬಾಯಿಗೆ ಚಿಂತೆ ಶುರುವಾಯಿತು. +ತಮ್ಮ ಮನೆಯ ಪಡಸಾಲೆಯಲ್ಲಿ ಕಂಬಕ್ಕೆ ಒರಗಿ ಕುಳಿತು ಯೋಚಿಸುತ್ತಿದ್ದಾಗ ಮನೆಯ ಆಳು ಕಾಶೀಂಸಾಬ ಹೊಲದಿಂದ ಬಂದು +‘ಯಾಕ್ ಅಳಾಕ ಹತ್ತೀರಿ, ಅವ್ವಾರ’ ಅಂತ ಕೇಳಿದ. +‘ಏನ್ ಹೇಳ್ಲೆಪ್ಪ, ಎಲ್ಲಾ ನನ್ನ ಹಣೇಬರಾ. ಬರೇ ನಾಕು ಹೆಣ್ಣು ಹುಟ್ಟಿದವು ಅಂತ ರಾಯರು ಇನ್ನೊಂದ್ ಲಗ್ನ ಮಾಡಿಕೋತೀನಿ ಅಂತಾರ. ಕನ್ಯಾನೂ ನೋಡ್ಲಿಕ್ಕೆ ಹತ್ತ್ಯಾರ. ಅಂದ ಮ್ಯಾಲೆ ನಾ ಅಳದ ಇನ್ನೇನು ಮಾಡ್ಲಿ, ಹೇಳು. ನನಗಂತೂ ಯಾರದೂ ಬಲ ಇಲ್ಲ. ಅವರು ಇನ್ನೊ೦ದ್ ಲಗ್ನ ಮಾಡಿಕೊಂಡ್ ಬಿಟ್ರ ನನ್ನ ಗತಿ ಅಧೋಗತಿ!’ ಅಂತ ತಂದೆಯ ವಯಸ್ಸಿನ ಕಾಶೀಂಸಾಬನನ್ನು ನೋಡಿ ಹೇಳಿದರು. +ಈ ಮಾತು ಕೇಳಿ ಕಾಶೀಂಸಾಬನಿಗೆ ದುಃಖವಾಯಿತು. +‘ಅವ್ವಾರ, ನೀವು ಅಳಬ್ಯಾಡ್ರಿ. ನಾ ಅದೀನಿ. ಸಣ್ಣ ರಾಯರಿಗೆ ಹೇಳ್ತೀನಿ.’ ಅಂತ ಧೈರ್ಯ ಹೇಳಿದ. +‘ನೀ ನನ್ನ್ ಪಾಲಿನ ದೇವರಿದ್ಹಾಂಗ ಇದ್ದೀ ನೋಡಪಾ. ಎಷ್ಟ”ಕಷ್ಟ ಬರ್ಲಿ ಧೈರ್ಯ ಹೇಳ್ತೀ. ಹೇಳಿದ ಹಾಂಗ ಮಾಡಿಯೂ ಮಾಡ್ತೀ. ನಿನ್ನ”ನಂಬೀನಿ. ಇನ್ನೊಂದ್ ಲಗ್ನ ಬ್ಯಾಡ ಅಂತ ಅವರಿಗೆ ಹೇಳು.’ +ಒಂದು ದಿನ ಕಾಶೀಂಸಾಬ ಶಾಮಣ್ಣನ ಹತ್ತಿರ ಮಾತಾಡುತ್ತ +‘ರಾಯರ”ನಂದೊಂದು ಮಾತು ನಡಸಿ ಕೊಡ್ತೀರಾ’ ಅಂತ ಕೇಳಿದ. +‘ಹೇಳಪಾ, ನಿನ್ ಮಾತು ಕೇಳದ ನಾ ಇನ್ಯಾರ ಮಾತು ಕೇಳಬೇಕು’ ಅಂತ ರಾಯರು ಅಂದ ಕೂಡಲೇ +‘ಆಮ್ಯಾಕ ನೀವು ಇಲ್ಲ ಅನಬಾರದು!’ +‘ಇಲ್ಲಪಾ, ಹೇಳು’ +‘ನೀವು ಇನ್ನೊಂದು ಮದಿವಿ ಮಾಡಿಕೊಂತೀರಿ ಅಂತ ಅವ್ವಾರು ಹೇಳಿದ್ರು. ಯಾಕ?’ +‘ಗಂಡು ಮಗ ಬೇಕಂತ ನನಗ ಆಶಾ ಇಲ್ಲೇನು? ನೀನೇ ಹೇಳು ಕಾಶೀಂಸಾಬ’ +‘ನೋಡೆರ”ನೋಡ್ರಿ, ರಾಯರ. ಈ ಬಾರಿ ಅವ್ವಾರ ಹೊಟ್ಟ್ಯಾಗ ಗಂಡು ಮಗ ಆಕ್ಕಾನ. ಈ ಮನಿಗಾಗಿ ನಾ ಈಟೆಲ್ಲ ಮಾಡೀನಿ. ಇದೊಂದು ನನ್ನ ಮಾತು ನಡೀತೈತೋ ಇಲ್ಲೋ ನೋಡೇ ಬಿಡ್ತೀನಿ. ಪ್ರಾಣಾನಾದ್ರು ಕೊಟ್ಟು ನನ್ ಮಾತು ಉಳಿಸಿಕೊಂತೀನಿ. ನೀವು ಇನ್ನೊಂದ್ ಮದಿವಿ ಮಾಡಿಕೊಣ್ಣಾಂಗಿಲ್ಲಾಂತ ನನಗ ವಚನಾ ಕೊಡಬೇಕು.’ +‘ಆಗಲೆಪಾ, ನಿನ್ ಮಾತಿನ್ಹಾಂಗ ನನಗೊಬ್ಬ ಮಗ ಹುಟ್ಟಿದರ ಸಾಕು. ಇನ್ನೊಂದ್ ಲಗ್ನ ಯಾರಿಗೆ ಬೇಕು?’ ಎಂದ ರಾಯರ ಮಾತು ಕೇಳಿ ಕಾಶೀಂಸಾಬನಿಗೆ ಹಿಡಿಸಲಾರದಷ್ಟು ಸಂತೋಷವಾಯಿತು. +‘ರಾಯರ, ಇದರಾಗ ನಂದೂ ಒಂದ್ ಸ್ವಾರ್ತ್ ಐತಿ. ನನ್ ಮಾತು ಕೇಳಿ ನೀವು ನಗಬ್ಯಾಡ್ರಿ ಮತ್ತ!’ ಅಂದ. +‘ಇಲ್ಲ. ಅದೇನ್ ಹೇಳಪಾ’ ಶಾಮಣ್ಣ ಕೇಳಿದ. +‘ನನಗಂತೂ ಹಿ೦ದಿಲ್ಲ ಮುಂದಿಲ್ಲ. ಮಕ್ಕಳಿಲ್ಲ ಮರಿಯಿಲ್ಲ. ಆದ್ರ ನನ್ ಹೆಸರು ಉಳೀಬೇಕು ಅಂತ ಬಾಳ ಆಶಾ ಐತಿ. ನಿಮಗ ಈಗ ಹುಟ್ಟೋ ಗಂಡು ಮಗ್ಗ ನನ್ನ ಹೆಸರ”ಇಡಬೇಕು. ತೊಟ್ಟಲದಾಗ”ನನ್ ಹೆಸರಿಟ್ಟು ಅಮ್ಯಾಕ ನೀವು ಬ್ಯಾರೆ ಹೆಸರು ಕರಕೊಳ್ರಿ. ಇದೊಂದ್ ಮಾತು ನೀವು ನಡಸಿಕೊಡಾಕ”ಬೇಕು.’ ಅಂತ ಕಾಶೀಂಸಾಬ ಕೈಮುಗಿದು ಕೇಳಿಕೊಂಡ. +‘ಈಗ”ಯಾಕ ನೀ ಸಾಯೋ ಮಾತು ಆಡ್ತೀ? ನೀ ಇನ್ನೂ ಒಂದಿಷ್ಟು ದಿವಸ ಬದಕಬೇಕು. ನಾ ಸಣ್ಣಾಂವಿದ್ದಾಗಿಂದ ನೀ ಜ್ವಾಕಿ ಮಾಡೀದಿ. ನನ್ ಹೊಟ್ಟ್ಯಾಗ”ನೀ ಹುಟ್ಟಿ ಬರತೀದಿ ಅಂದರ ಇದಕಿಂತ ಸಂತೋಷ ಬ್ಯಾರೆ ಏನದ? ನನ್ ಮಗ್ಗ ನಿನ್ ಹೆಸರು ಇಟ್ಟ”ಇಡ್ತೀನಿ.’ ಎಂದು ರಾಯರು ಮಾತು ಕೊಟ್ಟರು. +ಕಾಶೀಂಸಾಬ ಖುಶಿಯಿಂದ ಓಡುತ್ತ ಮನೆಗೆ ಬಂದು ಶಾ೦ತಾಬಾಯಿಯನ್ನು ನೋಡಿ +‘ಅವ್ವಾರ, ರಾಯರು ನನಗ ವಚನಾ ಕೊಟ್ಟಾರ. ನಿಮ್ಮ ಚಿಂತಿ ದೂರಾತು. ಇನ್ನ ಆರಾಂ ಇರ್ರಿ.’ ಅಂತ ಧೈರ್ಯ ಹೇಳಿ ‘ಗಡಾನ ಒಂದ್ ಕಪ್ ಚಾ ಕಾಶಿ ಕೊಡ್ರಿ.’ ಅಂದ. +‘ಎಂಥಾ ಛೊಲೋ ಸುದ್ದೀ ಹೇಳೀದಿ. ನಿನಗ ಬರೇ ಛಾ ಏನು? ಹೋಳಿಗೀ” ಮಾಡಿ ಕೊಡಬೇಕು.’ ಅಂತ ಖುಶಿಯಿಂದ ಶಾಂತಾಬಾಯಿ ಹೇಳಿದರು. +ಮುಂದೆ ಕೆಲವು ದಿನಗಳಲ್ಲಿ ಕಾಶೀಂಸಾಬ ಅರಾಮು ಇಲ್ಲದೆ ಹಾಸಿಗೆ ಹಿಡಿದ. ಅಂಥ ಪರಿಸ್ಥಿತಿಯಲ್ಲೂ +‘ಈ ಮನಿ ಉಳಸಾಕ” ಬೇಕು. ಈ ಮನೀಗೊಂದು ಗಂಡು ಮಗ ಹುಟ್ಟಾಕ” ಬೇಕು. ನನ್ನ ಪ್ರಾಣ ಕೊಟ್ಟರೂ ಸೈ.’ ಅಂತ ಕನವರಿಸುತ್ತಿದ್ದ. +ರಾಯರು, ಅವ್ವಾರು ಅವನ ಗುಡಿಸಲಿನಲ್ಲಿಯೇ ಅವನಿಗೆ ಚಹಾ, ಗಂಜಿ ಒಯ್ದು ಕೊಡುತ್ತಿದ್ದರು. ಆದರೆ ಕಾಶೀಂಸಾಬನ ಆಯುಷ್ಯ ತೀರಿತ್ತು. ಒಂದು ದಿನ ಕಾಶೀಂಸಾಬ ತೀರಿಕೊಂಡು ಬಿಟ್ಟ. +‘ಈ ಮನೀ ಸಲುವಾಗಿ ಕಾಶೀಂಸಾಬ ಅದೆಷ್ಟು ಕಳಕಳಿಯಿಂದ ಸೇವಾ ಮಾಡಿದ! ಸಾಯೋ ತನಕ ಈ ಮನೀ ಉಳಸಬೇಕು ಅಂದುಕೋತಾ” ಪ್ರಾಣಾ ಬಿಟ್ಟ.’ ಅಂತ ರಾಯರಿಗೆ ಬಹಳ ದುಃಖವಾಯಿತು. ಶಾಂತಾಬಾಯಿಯೂ +‘ನನಗ ತಂದೀ ಹಾಂಗ ಕಾಳಜೀ ಮಾಡ್ತಿದ್ದ. ಅಂಥಾವನ್ನ ಕಳಕೊಂಡುಬಿಟ್ಟೆವಲ್ಲ’ ಅಂತ ದುಃಖಿಸಿದಳು. +‘ಈ ಮುದುಕ ನನ್ನ ಕೈಲೆ ವಚನಾ ತೊಗೊಂಡು ಒಳ್ಳೇ ಇಕ್ಕಟ್ಟಿನ್ಯಾಗ ಸಿಗಿಸಿ ಬಿಟ್ಟ. ಅವನ ಮಾತು ಮೀರಿ ಒಂದು ವೇಳೆ ಲಗ್ನ ಮಾಡಿಕೊಂಡರೂ ಗಂಡ” ಹುಟ್ಟತದ ಅಂತ ಏನು ಗ್ಯಾರಂಟಿ? ನನ್ನ ಬಂಗಾರದಂಥಾ ಹೇಣ್ತೀಗೆ ಅನ್ಯಾಯ ಮಾಡಿದ್ಹಾಂಗ ಆಗ್ತದ. ಹೋಗಲಿ ಬಿಡು. ಕಾಶೀಂಸಾಬನ ಮಾತೂ ನಡಸಿ ಕೊಟ್ಟಾಂಗಾಗ್ತದ; ಹೇಣ್ತಿಗೂ ನನ್ ಮ್ಯಾಲೆ ಪ್ರೀತಿ ಉಳೀತದ’ ಅಂತ ಶಾಮಣ್ಣ ಸುಮ್ಮನಾಗಿ ಬಿಟ್ಟ. +ಮುಂದೆ ವರ್ಷ ತು೦ಬುವಷ್ಟರಲ್ಲಿ ಗಂಡಸು ಮಗ ಹುಟ್ಟಿದ. ಇದು ಕಾಶೀಂಸಾಬನ ಆಶೀರ್ವಾದ ಅಂತ ಗಂಡ ಹೆಂಡತಿ ಇಬ್ಬರೂ ತಿಳಿದುಕೊಂಡರು. ಹೆಸರಿಡುವ ಹೊತ್ತಿಗೆ ರಾಯರಿಗೆ ಧರ್ಮ ಸಂಕಟಕ್ಕೆ ಇಟ್ಟುಕೊಂಡಿತು. ವಚನ ಕೊಟ್ಟಂತೆ ಮಗನಿಗೆ ಕಾಶೀಂಸಾಬ ಅಂತ ಹೆಸರು ಇಡೋದು ಹ್ಯಾಂಗ? ‘ಈಗಂತೂ ರಂಗಣ್ಣ ಅಂತ ನಮ್ಮ ಅಪ್ಪನ ಹೆಸರನ್ನಿಡೋಣ’ ಎಂದು ಸಮಾಧಾನ ಹಚ್ಚಿಕೊಂಡರು. +ಆದರೆ ಕಾಶೀ೦ಸಾಬ ರಾಯರ ಮತ್ತು ಅವ್ವಾರ ಕನಸಿನಲ್ಲಿ ಬಂದು ‘ನನ್ ಹೆಸರಿಡೋದು ಮರತ” ಬಿಟ್ರಿ’ ಅ೦ತ ನೆನಪಿಸುತ್ತಿದ್ದ. ರಾಯರು ಅದನ್ನೂ ಲಕ್ಷ್ಯಕ್ಕೆ ತೆಗೆದುಕೊಳ್ಳಲಿಲ್ಲ. +ಆದರೆ ಶಾಂತಾಬಾಯಿಗೆ ಮಾತ್ರ ‘ನಾವು ತಪ್ಪು ಮಾಡಿದಿವಿ’ ಅನ್ನಿಸುತ್ತಿತ್ತು. ‘ಇನ್ನೊಂದು ಗಂಡು ಮಗ ಹುಟ್ಟಲಿ. ಅದಕ್ಕ ತಪ್ಪದ ನಿನ್ನ ಹೆಸರ್ನ”ಇಡತೀವಿ.’ ಅಂತ ಮನಸ್ಸಿನಲ್ಲೆ ಕೇಳಿಕೊಳ್ಳುತ್ತಿದ್ದರು. +ಮಗ ಬೆಳೆಯುತ್ತಿದ್ದ, ಆದರೆ ಆರೋಗ್ಯದಿಂದಲ್ಲ. ಯಾವಾಗಲೂ ಜಡ್ಡಿನಿಂದ ನೆರಳುತ್ತಿದ್ದ. +‘ಯಾಕ ಹಿಂಗಾಗ್ತಿದ್ದೀತು? ಕಾಶೀಂಸಾಬ ಏನಾದರೂ ಕಾಡ್ತಿದ್ದಾ”?’ ಅಂತ ಶಾಂತಾಬಾಯಿ ಅಂದಾಗ ರಾಯರಿಗೆ ಸಿಟ್ಟು ಬ೦ತು. +‘ಅಂವ ಯಾಕ ಕಾಡ್ತಾನ? ಅಂಥಾ ಮನಶ್ಯಾ ಅಲ್ಲ. ಅಂವ ದೇವರಾಗಿ ಹೋಗ್ಯಾನ.’ ಅಂತ ಸಮಾಧಾನ ಹೇಳಿದರಾದರೂ ಶಾಂತಾಬಾಯಿಯ ಮನಸ್ಸಿನಲ್ಲಿ ಅಳುಕು ಇದ್ದೇ ಇತ್ತು. +ಮುಂದೆರಡು ವರ್ಷ ಕಳೆಯುವಷ್ಟರಲ್ಲಿ ಶಾಂತಾಬಾಯಿ ಮತ್ತೆ ಬಸಿರಿ ಆದರು. +‘ಈ ಸರ್ತೇ ಗಂಡು ಹುಟ್ಟಿದರ ತಪ್ಪದ”” ಕಾಶೀಂಸಾಬನ ಹೆಸರು ಇಡಲಿಕ್ಕೇ ಬೇಕು. ಅಂವ ಪ್ರಾಣಾ ಕೊಟ್ಟು ತನ್ನ ಮಾತು ಉಳಿಸಿಕೊಂಡಾನ. ನಾವು ನಮ್ಮ ಮಾತು ಉಳಿಸಿಕೊಳ್ಳದಿದ್ದರ ಹ್ಯಾಂಗ? ಇಲ್ಲಾಂದ್ರ ಅವನ ಆಶಾ ತೀರೂದುಲ್ಲ.’ ಅಂತ ಶಾಂತಾಬಾಯಿ ಅಂದಾಗ ರಾಯರು +‘ಹೌದು, ಹೌದು. ಈ ಸರ್ತೀ ಮರೆಯೋ ಹಾಂಗಿಲ್ಲ.’ ಅಂದರು. +ಶಾಂತಾಬಾಯಿಗೆ ದಿನದಾಗ ಬಿತ್ತು. ರಾಯರು ಏನೋ ಅರ್ಜೆಂಟ್ ಕೆಲಸದ ನಿಮಿತ್ತ ಊರಿಗೆ ಹೋಗಬೇಕಾಗಿ ಬಂತು. ‘ದಿನ ತುಂಬಿದ ಬಸಿರಿಯನ್ನ ಬಿಟ್ಟು ಹ್ಯಾಂಗ ಹೋಗೋದು?’ ಅಂತ ಚಿಟಬರಿಸುತ್ತಲೇ ಹೊರಟರು. ಹೋಗುವಾಗ ಸೂಲಗಿತ್ತಿ ಎಲ್ಲವ್ವನಿಗೂ ಹೇಳಿ ಹೋದರು. +ಆದರೆ ಅವತ್ತೇ ರಾತ್ರಿ ಶಾಂತಾಬಾಯಿಗೆ ಹೊಟ್ಟೆನೋವು ಶುರುವಾಯಿತು. ‘ರಾಯರು ಬ್ಯಾರೆ ಊರಾಗಿಲ್ಲ. ಹ್ಯಾಂಗ ಮಾಡ್ಲೆಪ್ಪಾ ದೇವರ”’ ಅಂತ ಸೂಲಗಿತ್ತಿಯನ್ನು ಕರೆತರಲು ಆಳುಮಗನನ್ನು ಕಳಿಸಿದರು. +ಬ್ಯಾನಿ ತಡೆಯಲಾರದೆ ಮನೆಯಲ್ಲೇ ಅತ್ತಿಂದಿತ್ತ ಅಡ್ಡಾಡುತ್ತಿದ್ದರು. ನೋವು ಹೆಚ್ಚಾದಂತೆ ಮನೆಯಲ್ಲಿ ನಿಲ್ಲಲಿಕ್ಕೆ ಆಗಲಿಲ್ಲ. ಬ್ಯಾನಿ ತಿನ್ನುತ್ತಲೇ ಹಿತ್ತಲಕ್ಕೆ ಹೋದರು. ಯಾರೋ ಬಂದು ಅವರನ್ನು ಕೈಹಿಡಿದು ಕರೆದುಕೊಂಡು ಹೋದಂತಾಯಿತು. ಹುಣ್ಣಿವೆ ಮುಂದಿನ ಬೆಳದಿ೦ಗಳು ಹಿತ್ತಲ ತುಂಬೆಲ್ಲ ಹಾಲು ಚೆಲ್ಲಿದಂತೆ ಹರಡಿತ್ತು. ತಣ್ಣನ್ನ ಗಾಳಿ ಬೀಸುತ್ತಿತ್ತು. ಇದೆಲ್ಲ ಆಕೆಗೆ ಹಿತವೆನಿಸಿತು. ‘ಎಲ್ಲಾ ಸುಕವಾಗಿ ಆಗ್ತೈತಿ. ದೈರ್ಯವಾಗಿರಿ’ ಅಂತ ಕಾಶೀಂಸಾಬನ ಧ್ವನಿ ಕೇಳಿಸಿದಂತಾಯಿತು. ಶಾಂತಾಬಾಯಿ ಸುತ್ತಲೂ ನೋಡಿದಳು. ಯಾರೂ ಇರಲಿಲ್ಲ. +ನೋವು ಹೆಚ್ಚಾಗಿ ನಿಲ್ಲಲಿಕ್ಕೂ ಆಗದೆ ಜಾಲಿಯ ಗಿಡದ ಕೆಳಗೆ ಕುಳಿತುಕೊಂಡು ಬಿಟ್ಟಳು. +ಸೂಲಗಿತ್ತಿ ಅಡಬರಿಸಿಕೊಂಡು ಬಂದು ‘ಅವ್ವಾರು ಎಲ್ಲದಾರ?’ ಅಂತ ಮಕ್ಕಳನ್ನು ಕೇಳಿದಳು. +‘ಅವ್ವ ಹಿತ್ತಲಕ್ಕ ಹೋಗ್ಯಾಳ.’ ಎಂದು ಮಕ್ಕಳು ಹೇಳಿದ ಕೂಡಲೇ +‘ಅಯ್ಯ ಶಿವನೇ, ಹಿಂತಾ ಹೊತ್ನ್ಯಾಗ ಅಲ್ಲ್ಯಾಕ ಹೋದರ”” ಯವ್ವ?’ ಎಂದು ಓಡುತ್ತ ಹಿತ್ತಲಕ್ಕೆ ಬಂದು ನೋಡುವ ಹೊತ್ತಿಗೆ ಶಾಂತಾಬಾಯಿಗೆ ಸುಖವಾಗಿ ಹೆರಿಗೆ ಆಗಿಯೇ ಹೋಗಿತ್ತು. ಜಾಲಿ ಗಿಡದ ಕೆಳಗೆ ಗಂಡು ಕೂಸು ಹುಟ್ಟಿಯೇ ಬಿಟ್ಟಿತ್ತು. ಸೂಲಗಿತ್ತಿ ಕೂಸು ಬಾಣ೦ತಿಯನ್ನು ಮನೆಯೊಳಗೆ ಕರೆದುಕೊಂಡು ಬಂದಳು. +ಮರುದಿನ ರಾಯರು ಊರಿಂದ ಬಂದು ಕೂಸು ಬಾಣಂತಿಯನ್ನು ನೋಡಿ ನಗುತ್ತ +‘ಅಂತೂ ಕಾಶೀಂಸಾಬ ತನ್ನ ಪ್ರೀತಿಯ ಹಿತ್ತಲದಾಗ”ಹುಟ್ಟಿ ತನ್ನ ಆಶಾ ತೀರಿಸಿಕೊಂಡ ಅನ್ನು.’ ಅಂದರು. +‘ಇನ್ನೂ ಆತನ ಆಶಾ ತೀರಿಲ್ಲ. ತೊಟ್ಟಲದಾಗ ಆತನ ಹೆಸರಿಟ್ಟ ಮ್ಯಾಲ” ಆತನ ಆತ್ಮಕ್ಕ ಶಾಂತಿ ಸಿಗೋದು’ ಶಾಂತಾಬಾಯಿ ಹೇಳಿದರು. +ಕೂಸಿಗೆ ತೊಟ್ಟಿಲದಾಗ ‘ಹಿತ್ತಲಮನಿ ಕಾಶೀಂಸಾಬ’ ಅಂತನ”” ಹೆಸರಿಟ್ಟರು. ಕರೆಯುವದಕ್ಕೆ ಕೃಷ್ಣ ಎಂದು ಇನ್ನೊಂದು ಹೆಸರಿಟ್ಟರು. +ಕಾಶೀಂಸಾಬನ ಆಶೆ ತೀರಿತು. ಅಂದಿನಿಂದ ಮುಂದೆ ಅವನು ಯಾರ ಕನಸಿನಲ್ಲಿಯೂ ಬರಲಿಲ್ಲ. +***** +೦೮-೧೨-೨೦೦೫ +ಕೀಲಿಕರಣ ದೋಷ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ರಾತ್ರಿ ಹನ್ನೆರಡೂವರೆಗೆ ದಿನೇಶ ತಡವರಿಸುತ್ತಾ ಕಳ್ಳ ಹೆಜ್ಜೆಯಲ್ಲಿ ಮನೆಯ ಹಿಂಬದಿಯಿರುವ ಉದ್‌ಗಿಲ್ ಶಬ್ದವಾಗದಂತೆ ಮೆಲ್ಲಗೆ ಬದಿಗೆ ಸರಿಸಿ, ಹಟ್ಟಿಯ ಹಿಂಬದಿ, ಸೌದೆ ಕೊಟಗೆ ಬದಿಯಲ್ಲಿ ಬಚ್ಚಲಿನ ನೀರು ಹರಿದ ಕೆಸರಿನ ಪಕ್ಕ ಗೋಡೆಗೆ ಮೈತಾಗಿಸಿ, […] +ತುಂಬು ಗರ್ಭಿಣಿ ಅತ್ತಿಗೆಯ ತೇಜಃಪುಂಜ ನೋಟ ಕಸೂತಿ ನೂಲಿನ ಜೊತೆ ಏನೋ ಕನಸು ನೇಯುತ್ತಿತ್ತು. ಅಣ್ಣನ ದೃಷ್ಟಿ ಕಿಟಿಕಿಯ ಹೊರಗೆಲ್ಲೋ ಶೂನ್ಯವನ್ನು ತಡವರಿಸುತ್ತಿತ್ತು. ಕೋಣೆಯ ಒಳಗೆ ತುಂಬಿ ತುಳುಕುವ ಬೆಳಕು. ಅತ್ತಿಗೆಯ ಮುಡಿಯಿಂದ ಒಯ್ಯೊಯ್ಯನೆ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_144.txt b/Kannada Sahitya/article_144.txt new file mode 100644 index 0000000000000000000000000000000000000000..c2239767528b24d0f81a5882f8cfa522f21a33fe --- /dev/null +++ b/Kannada Sahitya/article_144.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಪಂಜರ ಬಿಟ್ಟು ಹಾರಿದ ಹಕ್ಕಿಗಳೆ +ಬಂದು ಒಂದು ಕ್ಷಣ ಮುಖದೋರಿರೆ +ಚೂರಾಗಿದೆ ಈ ಕಡಲಲ್ಲಿ ನಿಮ್ಮ ಹಡಗು +ಮೀನುಗಳಂತೆ ಅದು ಮತ್ತೆ ತೇಲಿದ ಬೆಡಗು +ಮಾಡು ಮುರಿದು ಮತ್ತೆ ಮೂಲ ಸಖನಿಗೆ ವಾಪಸೆ? +ಬಲೆ ಜಾರಿತೆ ಕೈಯಿಂದ ಮತ್ತೆ ಮಿಕ ಮಾಯವೆ? +ನಿಮ್ಮಾತ್ಮದ ಬೆಂಕಿಗೆ ನೀವೆ ತರಗೆಲೆಯೇ? +ಒಳಬೆಂಕಿ ಆರಿತೆ? ನೀವೆ ಭಗ್ಗೆಂದು ಉರಿದ ಬೆಳಕೆ? +ಆ ಗಾಳಿಯೆ ಪೀಡೆಯಾಗಿ ಕಾಡಿತೆ, ಹೋದ ಹೋದಲ್ಲಿ +ಜಿಪ್ಸಿರ್ ಗಾಳಿಯಾಗಿ ಕಾಡಿತೆ? ಅದು ಬಂದ ಬಂದಲ್ಲಿ +ಅಂತಕನ ದೂತರು ಬಂದಾಗ ಹುಟ್ಟಿದವರೆ +ನಿಮಗೀಗ ಮರುಜನ್ಮ, ಹುಟ್ಟಿರೆ, ಮತ್ತೆ ಹುಟ್ಟಿರೆ +ನೀವು ಭವಿಗಳೊ ಭಕ್ತರೊ ಎಂಬುದೀಗ ಮನಕ್ಕೆ ನಿರ್ಣಯವಾಗಲಿದೆ +ಮುಖದ ತೆರೆ ಸರಿಸಿರ +ತಬ್ರೀಜಿನ ಶಂಸ್‌ನ ಕೃಪೆಗೆ ನೀವು ಪಾತ್ರರೆ? +ಶೂನ್ಯ ಸಿಂಹಾಸನದ ಸರದಾರರು ನೀವು, ಅವನ ಅನಂತ ಕರುಣೆ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ ಹಿಡಿದೆಳೆದು ಒಂಟೆಗಳ ಸಾಲಿಗೆ ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ದೊರೆ, ಈ ಸುಗಂಧ ಆತ್ಮದ ತೋಟದಿಂದ ಬಂದದ್ದೆ? ಇಲ್ಲ ತಾರೆ ನೀಹಾರಿಕೆಗಳಾಚೆಯಿಂದ ಬೀಸಿದ್ದೆ? ದೊರೆ, ಉಕ್ಕಿದ ಈ ಜೀವ ಜಲದ ಸೆಲೆ ಯಾವ ನಾಡಿನದು? ದೊರೆ, ಚರಾಚರ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_145.txt b/Kannada Sahitya/article_145.txt new file mode 100644 index 0000000000000000000000000000000000000000..fec8d11593cd411d8ed450262fae7c8baa1f1fbf --- /dev/null +++ b/Kannada Sahitya/article_145.txt @@ -0,0 +1,47 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಗಿಡದ ರೆಂಬೆ ಕೊಂಬೆಗಳಲಿ ಚಿಗುರು ಕಣ್ಣ ತೆರೆದಿದೆ +ಎಲ್ಲಿ ನೋಡಿದಲ್ಲಿ ಚೆಲುವು ಗೆಲ್ಲುಗಂಬ ನಿಲಿಸಿದೆ! +ಹೊಸತು ಆಸೆ ಮೂಡಿದೆ +ಹರುಷ ಲಾಸ್ಯವಾಡಿದೆ +ಓ! ವಸಂತ ನಿನಗನಂತ ಆಲಿಂಗನ ಸಂದಿದೆ +ಸೃಷ್ಟಿ ನೋಂತು ನಿಂದಿದೆ! +೨ +ಎಂದೂ ಅಗಲಿ ಹೋದ ನಿನಗೆ ನಮ್ಮ ನೆನಪು ಬಾರದೆ? +ಮಾಗಿ ಕೊರೆದ ಗಾಯವಿನ್ನು ಇಹುದು ಮನದಿ ಮಾಯದೆ! +ಜೀವ ಕುಲವು ತಪಿಸಿದೆ +ನೂರು ಬಾರಿ ಶಪಿಸಿದೆ +ಪಾದರಸದ ತೆರದಿ ಜಾರಿ ಕಂಡ ಕಡೆಗೆ ಹರಿದಿದೆ +ತನ್ನತನವ ಮರೆದಿದೆ! +೩ +ತಳಿರ ತಳ್ಕೆಯಲ್ಲಿ ಮುದ್ದು ಕೋಗಿಲೆಯದೊ ಕುಳಿತಿದೆ +ಅದರ ಉದರದೊಂದು ಉಸಿರು ಹಾಸಿ ಬೀಸಿ ಬರುತಿದೆ; +ಓಹೊ! +ಎಲ್ಲೊ ಕಂಡ ಹಾಗಿದೆ +ಆಹಾ +ಎಂದೊ ಕೇಳಿದಂತಿದೆ +ಇಂದು ಜಾಡ್ಯ ಹರಿದು ಇಳೆಗೆ ರೋಮಾಂಚನ ತಂದಿದೆ! +-ಸಮರ ತೂರ್‍ಯದಂತಿದೆ! +ಏನು ಅಂದ ಬಿಸವಂದವೊ ನಿನ್ನ ಮಧುರ ಮೈತ್ರಿಯು! +ನೃತ್ಯ ಹಾಡು, ಸೊಗದ ಕೋಡು; ಧನ್ಯಳೀ ಧರಿತ್ರಿಯು; +ಹೇಮಂತನ ತ್ಯಾಗವೂ +ಈ ವಸಂತ ಭೋಗವೂ +ಬದುಕಿಗೆಂದೆ ಬಿಜಯಗೈಯೆ ಪ್ರೀತಿ ಸಮಾಯೋಗವು! +-ಹಾಗು ಹೀಗು ಹೇಗೆಯು. +ಬನದ ಬಯಕೆ ಮಾಗಿದೆ +ಚೈತ್ರೋದಯವಾಗಿದೆ +ಬಾ ವಸಂತ ನಿನಗನಂತ ಅಲಿಂಗನ ಸಂದಿದೆ! +-ಸೃಷ್ಟಿ ನೋಂತು ನಿಂದಿದೆ! +***** +ಮುಗ್ಧ ಆಕಾಶ ಕಣ್ಣುಬಿಟ್ಟಂತಿರುವ ನನ್ನ ಮೊಮ್ಮಕಳಿಗೆ, ಈವ ರಾಬಿನ್ನರಿಗೆ, ನಾನು ದೂರ ಅಂಗಲಾಚುತ್ತಾರೆ ಅಜ್ಜಿ ಜೊತೆ ಬೇಕೆಂದು ಕಟುಕ ಮಗ ಜಾರ್ಜನಿಗೆ ನಾನು ಬೇಡ. ಮಕ್ಕಳಿಬ್ಬರೂ ನನ್ನ ಸೊಸೆ ಕ್ಯಾರೊಲಿನ್ ಜೊತೆಗಿದ್ದಾಗ ಗುಲಾಬಿ ಗಿಡದಲ್ಲಿ […] +ಹಗಲೆಂದರೆ ಇವಳು ಕಾಣುವ ಕನಸು ಹೊತ್ತು ತರಬೇಕು ಇವಳಿದ್ದಲ್ಲಿ, ನಿದ್ದೆ-ಮಂಪರು-ಕನಸು-ಕಂಪನ; ಕದಡಿ ಹಾಕುತ್ತಾಳೆ ಕತ್ತಲ ಪೀಪಾಸೆಯಲ್ಲಿ ರಾತ್ರಿ ಚಾದರದಡಿಗೆ ದಂಡು ದಂಡು ಮಂದಿ ಬಂದು ಬೀಳುತ್ತಾರೆ ಉಂಡಷ್ಟೂ (ಸಹ) ಭೋಗ ಕೊಂಡಷ್ಟೂ (ಸ)ರಾಗವೆಂದು. ಸಾವಿರ […] +ನಿದ್ದೆ ಮಡಿಲೊಳು ದಣಿದು ಮಲಗಿಹುದು ಜಗದ ಬಾಳು ; ಹಗಲಿನ ಅಪಸ್ವರಗಳೆಲ್ಲ ಮೌನದಲಿ ಮರೆತಿಹವು ನೂರಾರು ಮೇಲುಕೀಳು ! ನಿದ್ದೆ ಬಾರದೆ ನಿನಗೆ? ಬೀಳದೆಯ ಸವಿಗನಸು ? ನೆಲದಿಂದ ಮುಗಿಲವರೆಗೂ ಚಿಮ್ಮಿ ಬರುತಿಹವೆ ಬಾಣ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_146.txt b/Kannada Sahitya/article_146.txt new file mode 100644 index 0000000000000000000000000000000000000000..b22e1e35d29bd684da2547e374a1ffac97cc70ff --- /dev/null +++ b/Kannada Sahitya/article_146.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +‘ನಾನು’ +ಅಂದರೆ; +ಒಂದು ಜೊತೆ +ಮೆತ್ತಿಗನ ಮೊಲೆ, +ತೊಡೆ ಸಂದಲ್ಲಿ ಅಡಗಿದ +ಕತ್ತೆಲ ಕೋಶ. +***** +ಗಗನ ಚುಂಬಿ ಕಟ್ಟಡಗಳ ನಡುವೆ ಸಿಕ್ಕು ನಲುಗುವ ಆಕಾಶ; ಆಕಾಶದ ತುಂಬಾ ಅವಕಾಶ! ***** +ಅವಳು ತಲೆ ಎತ್ತಿ ನೋಡಿದರೆ ಆಕಾಶದ ತುಂಬ ಬೆಳಕು ಅವಳ ಕಣ್ಣಲ್ಲಿ ತೇಲೋ ಮೋಡ. ಕಣ್ಣ ಮುಚ್ಚಿದರೆ, ಆಕಾಶಕ್ಕೇ ಕತ್ತಲು ಮೋಡ ಒಡೆದು ದುಃಖ ಧಾರಾಕಾರ. ***** +ನೆಹರು ಇಂದಿರಾ ಶಾಸ್ತ್ರಿ ಸ್ಥಾನಕ್ಕೆ ಆಮೇಲೆ ಬಂದ ಮಂದಿ ಹೆದ್ದಾರಿ ಜೊತೆ ಹೋಲಿಸಿದಂತೆ ಕಿಷ್ಕಂಧಿತ ಸಂದಿಗೊಂದಿ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_147.txt b/Kannada Sahitya/article_147.txt new file mode 100644 index 0000000000000000000000000000000000000000..8252c8750274e76dc32f1404d019f259062e17c1 --- /dev/null +++ b/Kannada Sahitya/article_147.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ +ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರ +ಈ ಕುಡುಕ ಒಂಟೆಯ ದಾರಿಯಾದರೂ ಎತ್ತ? +ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆ +ಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ? +ಅವನ ಬಲೆಯೊಳಗೆ ಬಿದ್ದ ಮೀನು ನಾನು, ದಡದ ಕಡೆಗೆ ಯಾನ +ಬೇಟೆಗಾರನ ಬೇಟಕ್ಕೆ ಹಾತೊರೆದಿದೆ ಹೃದಯದ ಗುಂಗಾನ +ಆಕಾಶದಲ್ಲಿ ಒಂಟೆ ಸಾಲಂತೆ ಮೋಡಗಳು +ಬಾಯಾರಿದ ಬಯಲಿಗೆ ಜಲಧಾರೆ +ಎಳೆದಾಡಿದ ನನ್ನನ್ನು ಬೆಟ್ಟಗಳಲ್ಲಿ +ಕಪ್ಪು ಕತ್ತಲಿನ ನೆಲದಾಳದ ಗವಿಗಳಿಗೆ +ಸುತ್ತ ಹಬ್ಬಿತು ಗುಡುಗಿನ ಮದ್ದಲೆ +ಅಣು ಬ್ರಹ್ಮಾಂಡಗಳಲ್ಲಿ ಹಬ್ಬಿತು ಜೀವದ ಅಲೆ +ಕೊಂಬೆ ಕೊಂಬೆಗೆ ಹಬ್ಬಿತು ವಸಂತ +ಗಂಧ ಗುಲಾಬಿಯ ನಾಳಕ್ಕೂ +ಬೀಜದೊಳಗೆ ಬಯಲ ವಿಸ್ತಾರದ ರೂಹು +ಸೃಷ್ಟಿಸಿದಾತನ ಕ್ರಿಯೆಯೆ ಈ ಹಣ್ಣು +ಮರದೊಳಗಣ ರಹಸ್ಯ ಬಚ್ಚಿಟ್ಟು ಬಯಲಿಗೆ +ಕೂಗಿ ಹೇಳಿದ್ದಾನೆ ಈಗ ತೂಗಾಡುವ ನೇಣಿಗೆ +ವಸಂತದ ಅಲೆಯ ವನದ ವಾಕರಿಕೆಗೆ ಪರಿಹಾರ +ಉಕ್ಕುತ್ತಿದೆ ವಾಂತಿ, ಚಳಿಯ ಗಡಗುಟ್ಟಿಸುವ ಕ್ರೌರ್ಯ +***** +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಕೆಂಪ ಕೆನ್ನೆಯ ಕಂಡು, ಕಲ್ಲುಗಿರಣಿ ಕೂಡಾ ಹುಚ್ಚೆದ್ದು ಕುಣಿದೀತು ಪರದೆಯಾಚೆಗಿನ ಮುಖ ಕಂಡು, ಮೂಕ ಪ್ರೇಮಿಯ ಹೃದಯ ಶಾಂತವಾದೀತು ಜ್ಞಾನ ದಿಕ್ಕೆಟ್ಟು ದಾರಿ ಮರೆತೀತು, ತಾರ್ಕಿಕನ […] +ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] +ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_148.txt b/Kannada Sahitya/article_148.txt new file mode 100644 index 0000000000000000000000000000000000000000..1e46b5cceac608c8e30d23f6ff1f25d62ec28188 --- /dev/null +++ b/Kannada Sahitya/article_148.txt @@ -0,0 +1,37 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾಗ — ಕೇದಾರಗೌಳ +ತಾಳ — ಅಟ್ಟ +ತನು ನಿನ್ನದು ಜೀವನ ನಿನ್ನದು ರಂಗ | +ಅನುದಿನದಲಿ ಬಾಹ ಸುಖ – ದುಃಖ ನಿನ್ನದಯ್ಯಾ ||ಪ|| +ಸವಿನುಡಿ ವೇದ – ಪುರಾಣ ಶಾಸ್ತ್ರಂಗಳ | +ಕಿವಿಯಿಂದ ಕೇಳುವ ಕಥೆ ನಿನ್ನದು || +ನವಮೋಹನಾಂಗಿಯರ ರೂಪವ ಕಣ್ಣಿಂದ | +ಎವೆಯಿಕ್ಕದಲೆ ನೋಡುವ ನೋಟ ನಿನ್ನದಯ್ಯ ||೧|| +ಒಡಗೂಡು ಗಂಧ – ಕಸ್ತೂರಿ ಪರಿಮಳಗಳ | +ಬಿಡದೆ ಲೇಪಿಸಿಕೊಂಬುದು ನಿನ್ನದು || +ಪಡುರಸದನ್ನಕೆ ನಲಿದಾಡುವ ಜಿಹ್ವೆ | +ಕುಡುರುಚುಗೊಂಡರಾರುಚಿ ನಿನ್ನದಯ್ಯ ||೨|| +ಮಾಯಾಪಾಶದ ಬಲೆಯೊಳಗೆ ಸಿಲ್ಕಿರುವಂಥ | +ಕಾಯಪಂಚೇಂದ್ರಿಯಗಳು ನಿನ್ನವು || +ನ್ಯಾಯದಿ ಕನಕನೊಡೆಯ ಆದಿಕೇಶವ – | +ರಾಯ ನೀನಲ್ಲದೆ ನರರು ಸ್ವತಂತ್ರರೆ ||೩|| +***** +ರಾಗ — ಶಂಕರಾ‌ಅಭರಣ ತಾಳ — ಏಕ ಎಂದೆಂದು ಇಂಥ ಚೋದ್ಯ ಕಂಡಿದ್ದಿಲ್ಲವೊ ||ಪ|| ಅಂಗಡಿಬೀದಿಯೊಳೊಂದು ಆಕಳ ಕರು ನುಂಗಿತು | ಲಂಘಿಸುವ ಹುಲಿಯ ಕಂಡ ನರಿಯು ನುಂಗಿತು ||೧|| ಹುತ್ತದೊಳಾಡುವ ಸರ್ಪ ಮತ್ತ […] +ರಾಗ — ಕಾಂಬೋದಿ ತಾಳ — ಝಂಪೆ ಭಜಿಸಿ ಬದುಕೆಲೊ ಮನುಜ ಮನಮುಟ್ಟಿ ಶ್ರೀಹರಿಯ | ಅಜಸುರೇಂದ್ರಾದಿಗಳು ಆದಿವಂದಿತಪಾದ ||ಪ|| ಪಾಕಶಾಸನಗೊಲಿದು ಬಲಿಯ ಮೆಟ್ಟಿದ ಪಾದ | ಕಾಕುಶಕಟನ ತುಳಿದು ಕೊಂದ ಪಾದ || […] +ರಾಗ — ನೀಲಾಂಬರಿ ತಾಳ — ಅಟ್ಟ ಇಷ್ಟು ದಿನ ಈ ವೈಕುಂಠ | ಎಷ್ಟು ದೂರವೊ ಎನ್ನುತಲಿದ್ದೆ || ದೃಷ್ಟಿಯಿಂದಲಿ ನಾನು ಕಂಡೆ | ಸೃಷ್ಟಿಗೀಶನೆ ಶ್ರೀರಂಗಶಾಯಿ ||ಪ|| ಎಂಟು – ಏಳನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_149.txt b/Kannada Sahitya/article_149.txt new file mode 100644 index 0000000000000000000000000000000000000000..62da855341b9993aa50ac1b69d6d8837a7ac8b16 --- /dev/null +++ b/Kannada Sahitya/article_149.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಂಗರಾಯರದು ನಾಕೆತ್ತಿನ ಕಮತದ ಮನಿ. ಮನೆಯಲ್ಲಿ ಸಾಕಷ್ಟು ಆಕಳೂ ಇದ್ದವು. ಕಾಶೀಂಸಾಬ ಚಿಕ್ಕಂದಿನಿಂದಲೂ ಅವರ ಮನೆಯಲ್ಲಿ ಕೆಲಸಕ್ಕೆ ಇದ್ದ. ನಂಬಿಗಸ್ತನಾಗಿದ್ದರಿಂದ ರಾಯರ ಮನೆಯಲ್ಲಿ ಅವನು ಕೆಲಸದ ಆಳು ಎಂದಾಗಿರಲೇ ಇಲ್ಲ. ಅವರ ಮನೆಯವರಲ್ಲೇ ಒಬ್ಬನಾಗಿದ್ದ. […] +ನನಗೆ ದಿಕ್ಕೇ ತೋಚದಾಯಿತು. ಮತ್ತಷ್ಟು ಮುದುಡಿ ಬಯಲ ಮೂಲೆಗೆ ಒತ್ತರಿಸಿದ್ದೆ. ಕೊಲೆಗಾರ; ಮರ್ಡರರ್‍ ಇತ್ಯಾದಿ ಕಠೋರ ಮಾತುಗಳು ಪ್ರೇಕ್ಷಕರಿಂದ ಕೇಳಿ ಬರುತ್ತಿದ್ದವು. ಈ ಕೊಲೆ ನಾನು ಮಾಡಿಲ್ಲವೆಂದು ಹಲವು ಹತ್ತು ಸಾರಿ ಹೇಳಿರಬಹುದು. ನನ್ನ […] +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_15.txt b/Kannada Sahitya/article_15.txt new file mode 100644 index 0000000000000000000000000000000000000000..48d25267281018f5bd65efe27797c8c107bd8226 --- /dev/null +++ b/Kannada Sahitya/article_15.txt @@ -0,0 +1,80 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೇಳಲು ಹೋದರೆ ಪುಟಪುಟವಾಗಿ ಎಷ್ಟೂ ಹೇಳಬಹುದು. ಆದರೆ ಅಮ್ಮಚ್ಚಿಯನ್ನು ಹಾಗೆ ವಿವರವಿವರವಾಗಿ ನೆನೆಯುತ್ತ ಹೋದಷ್ಟೂ ಆಯಾಸಗೊಳ್ಳುತ್ತೇನೆ. ಇಂತಹ ಆಯಾಸ ಏನೆಂದು ತಿಳಿದವರಿಗೆ ನಾನು ಹೆಚ್ಚು ವಿವರಿಸಬೇಕಾದ್ದೇ ಇಲ್ಲ ಅಲ್ಲವೆ? ಕೆಲವರನ್ನು ನೆನೆಯುವಾಗ ಮನಸ್ಸು ದಣಿಯುವ ರೀತಿಯೇ ಅಂಥದ್ದು. ಆದುದರಿಂದ ಹೀಗೆ ಇಂಥದ್ದೇ ಹೇಳುತ್ತೇನೆ ಎಂಬ ಯಾವ ಹಠವೂ ಇಲ್ಲದೆ ಈಗ ಏನೇನು ಮನಸ್ಸಿಗೆ ಬರುತ್ತದೋ ಅದನ್ನೆಲ್ಲ ಆದಷ್ಟೂ ಸಣ್ಣದಾಗಿ ಹೇಳಿ ವಿರಮಿಸುತ್ತೇನೆ. +ಅವತ್ತು ವಾರೆ ಬೈತಲೆ ತೆಗೆದು ಎರಡು ಜಡೆ ಕಟ್ಟಿಕೊಂಡು ಹೊರಟಿದ್ದಳಲ್ಲ ಅಮ್ಮಚ್ಚಿ. ಅಲ್ಲೇ ಆಚೆಗೆ, ಶಂಭಟ್ಟರ ಮೆನೆಯ ಸತ್ಯನಾರಾಯಣ ಪೂಜೆಗೆ. ಅವಳು ಉತ್ಸಾಹದಿಂದ ಹೋಗುತ್ತಿದ್ದುದು ಹಾಗೆ ನೋಡಿದರೆ ಶಂಭಟ್ಟರೆ ಮನೆಗೇ ಎಂದು ಗೋಚರವಾಗಬೇಕಾದರೆ ನನಗೆ ಇಷ್ಟು ವರ್ಷವಾಗಬೇಕಾಯಿತು. ಅದಿರಲಿ. ಅಲ್ಲಿಗೆ ಹೋಗಿಯಾದರು ಅವಳು ಮಾಡುತ್ತಿದ್ದುದು ಏನಪ್ಪಾ ಅಂತ ನೆನೆಸಿಕೊಂಡರೆ ಏನೂ ಇಲ್ಲ. ತದೇಕವಾಗಿ ಎಲ್ಲವನ್ನೂ ಎಲ್ಲರನ್ನೂ ನೋಡುವುದು ನೋಡುವುದು. ಇಂದು ಸತ್ಯನಾರಾಯಣ ಪೂಜೆಗೂ ನಡೆಯುವ ವೈಭವವನ್ನು ನೋಡುತ್ತ ನೋಡುತ್ತ ಮರಗಟ್ಟಿದಂತೆ ಕಾಣಿಸುವುದು. ಮರಗಟ್ಟಿದಂತೆ ಕಾಣಿಸುವುದು ಮಾತ್ರ. ನಿಜವಾದ ಅಮ್ಮಚ್ಚಿಯೋ ಯಾರನ್ನಾದರೂ ಮರಗಟ್ಟಿಸಿಯಾಳು, ಕೈಯಲ್ಲಿ ಮೂರು ಕಾಸು ಇಲ್ಲದೆಯೂ. ಅಮ್ಮಚ್ಚಿಗೂ ನನಗೂ ಏನು ಸಂಬಂಧ, ಹೇಗೆ ಗೆಳೆತನ ಎಂಬುದು ಕೂಡ ಅನವಶ್ಯವಲ್ಲವೆ? ಅಮ್ಮಚ್ಚಿ ಮಾತಾಡುವ ಫೋರ್ಸಿಗೆ ಬಹುಶಃ ನಾನು ಮರುಳಾಗಿಬಿಟ್ಟಿರಬೇಕು. ಅವಳ ಬೀಸುಮಾತಿಗೆ ಎಲ್ಲರೂ ಹೆದರುವವರೇ. ಅವಳ ಓರಗೆಯವರಂತೂ ಹತ್ತಿರ ಕೂಡ ಸುಳಿಯುತ್ತಿರಲಿಲ್ಲ. ಸುಳಿದರೂ ಅವರವರ ಮನೆಯವರು ಬೈದು ಜಬ್ಬುಜರಿಸಿಕೊಡುತ್ತಿದ್ದರು. ಅದೃಷ್ಟಕ್ಕೆ, ಅವಳ ಜೊತೆಗೆ ನಾನಿದ್ದರೆ ನನ್ನನ್ನು ಮನೆಯಲ್ಲಿ ಯಾರೂ ಗದರಿಸಲಿಲ್ಲವಾದ್ದರಿಂದ ಬೇಸರವಾದಾಗಲೆಲ್ಲ ನನ್ನ ದೊಡ್ಡ ಗೆಳತಿಯೆಂದರೆ ಅಮ್ಮಚ್ಚಿ. ಅವಳ ಹಿಂದೆ ನಾನು ಅಥವ ಮುಂದೆ ನಾನು. ಅಥವಾ ಕೈಹಿಡಿದು ಅವಳ ಹೆಜ್ಜೆಯ ವೇಗಕ್ಕೆ ಸರಿದೂಗಿಸಲು ನಾಲ್ಕು ಹೆಜ್ಜೆ ಕುಣಿಯುತ್ತ ನಾಲ್ಕು ಹೆಜ್ಜೆ ನಡೆಯುತ್ತ ನಾನು, ಅವಳು ಏನು ಹೇಳುವವಳೋ ಅದು ಅರ್ಥವಾಗಬೇಕಂತಲೂ ಇಲ್ಲದೆ ಹೂಂಗುಡುವುದು ನಗುವುದು ‘ಹೋಗಲಿ ಬಿಡು’ ಎನ್ನುವುದು……. +ಹಾಂ. ಹಾಗೆ ಹೊರಟಳಲ್ಲ ಎರಡು ಜಡೆ ಬಿಟ್ಟುಕೊಂಡು ಅಮ್ಮಚ್ಚಿ, ಸತ್ಯನಾರಾಯಣ ಪೂಜೆಗೆ, ವೆಂಕಪ್ಪಯ್ಯ ದಾರಿಯಲ್ಲೇ ಸಿಕ್ಕಿದ. “ಏನಿಯ? ಇದೇನಿಯ ಯೇಸ. ಬೊಂಬಾಯಿ ಲೇಡಿಯ ಹಂಗೆ, ವಾರೆ ಬಕ್ತಲೆ! ಶಿ……ಶಿ……ನಡೆ ಮನೆಗೆ. ಸರಿಯಾಯಿ ಬಾಚಿಂಡು ಹೋವು” ಎಂದ. ಅದಕ್ಕೆ ಅಮ್ಮಚ್ಚಿ “ಹೋವುಯ, ನೀ ಮನೆಗೆ ಹೋವು. ಹೋಯಿದ್ದ್ ಗಡದ್ದು ಒಂದು ಲೋಟೆ ಚಾಯ ಕುಡಿ. ಅಮ್ಮನ ಹಕ್ಕೆ ಹೇಳ್, ಹಂಗೂ ಮಾಡಿ ಕೊಡ್‌ತ್ಲ್…. ನನ್ನ ಸುದ್ದಿಗೆ ಮಿನಿ ಬರಳೆ. ಬೋಳುಮಂಡೆ ಕಾಕ. ನಿಂಗೆ ವಾರೆ ಬಿಡು, ಯಾವ ಬಕ್ತಲೆಯೂ ತೆಗೆಯಗಾಗದ ಸಂಕಟಕ್ಕೆ ನಂಗೆ ಯಾಕೆ ಹೇಳ್ತೆ?” ಎಂದವಳು ನನ್ನ ಕೈ ಹಿಡಿದು “ಬಾಯಿ ಬೀಸ ನೀನು. ಮೆಲ್ಲ ನಡೆದ್ರೆ ಹಿಂಗೇ. ನಾಯಿ ಸಂತಾನಗಳೆಲ್ಲ ಎದುರಾತೋ.” ಎಂದು ಎಳೆದುಕೊಂಡು ಮುಂದೆ ನಡೆದೇಬಿಟ್ಟಳು! “ಸುಟ್ಟದ್ ಎಲ್ಲಿ ತಯಾರಾಯ್ತೋ ನಮ್ಮ ಮನೆಗೇ….” ಅಂತೆಲ್ಲ ಗೊಣಗುತ್ತ. +ಕಾನೂನಿನವಳೆಂದೇ ಎಲ್ಲ ಹೇಳುವ ಅಮ್ಮಚ್ಚಿಯ ಕಾನೂನು ಎಂದರೆ ಹೀಗೆಂದೇ – ವೆಂಕಪ್ಪಯ್ಯನಿಗೆ ಖಿಶಿಯಿಲ್ಲವೆಂದು ತಾನು ಯಾಕೆ ವಾರೆಬೈತಲೆ ತೆಗೆಯಬಾರದು? ಎಂಬಂಥದೇ. ದಾತಾರರೆಂಬುವರು ಇಲ್ಲದ ಸೀತತ್ತೆಯ ಒಬ್ಬಳೇ ಮಗಳು ಅಮ್ಮಚ್ಚಿ. ಮನೆಯಲ್ಲಿ ಬೇರೆ ‘ಗಂಡು ಬಲ’ ಎಂಬುದು ಇಲ್ಲ. ಸೀತತ್ತೆಯ ‘ಸ್ಥಿತಿ ಲಾಗಾಯ್ತಿನಿಂದ’ ವೆಂಕಪ್ಪಯ್ಯನೇ ಎಲ್ಲದಕ್ಕೂ ಓಡಾಡಿದ ಹುಡುಗನಂತೆ. ತಂದೆ ಸಾಯುವಾಗ ಅಮ್ಮಚ್ಚಿಗೆ ಇನ್ನೂ ಆರು ತಿಂಗಳಷ್ಟೇ ಅಂತೆ. ಹನ್ನೆರಡು ವರ್ಷದ ವೆಂಕಪ್ಪನನ್ನು ಸೀತತ್ತೆ ಅಲ್ಲಿ ಇಲ್ಲಿ ಓಡಲು, ಅದು ತರಲು ಇದು ತರಲು ಹೇಳುತ್ತಿದ್ದರು. ಯಾರಿಲ್ಲದವ ಮನೆಯೆಂಬಂತೆಯೆ ಇದ್ದುಬಿಟ್ಟ. ಹೀಗೆ ಒಳಬಂದ ವೆಂಕಪ್ಪ ಬೆಳೆಯುತ್ತ ಬೆಳೆಯುತ್ತ ವೆಂಕಪ್ಪಯ್ಯನಾದ. ಅಮ್ಮಚ್ಚಿಯ ಹಕ್ಕುದಾರನೂ ತಾನೇ ಎಂಬಂತಾದ. “ಅವಳನ್ನು ಮದುವೆಯಾಪುಗೆ ಇನ್ನು ಯಾವ ಪುಣ್ಯಾತ್ಮ ಬಪ್ಪ? ಮಗಳ ಚಿಂತೆ ನೀವು ಮಾಡಳೆ. ನಾನಿದ್ದೆ.” ಎಂದು ಸೀತತ್ತೆಯ ಹತ್ತಿರವೂ ಹೇಳುತ್ತ ಊರ ತುಂಬವೂ ಅದನ್ನೇ ತುಂಬಿಸುತ್ತ ಅಮ್ಮಚ್ಚಿಯ ಕಣ್ಣಲ್ಲಿ ದಿನದಿನವೂ ಅಸಹ್ಯವಾಗುತ್ತ ಇದ್ದ. “ಗದ್ದೆ ಉಳುಪ ಕೋಣವಾದರೂ ಇವನಿಗಿಂತ ಊಂಚು…ಒಡ್ಡ ಎಲ್ಲಿದೋ. ಕಾಣ್, ಅವ ನನ್ನ ಕಂಡರೆ ನಿನ್ನ ಕಂಡಂಗೆ ಆತ್.” ಎಂದು ಕುಟು ಕುಟು ನಗುತ್ತಿದ್ದಳು ಅಮ್ಮಚ್ಚಿ. ನೋಡಿದರೇ ವೆಂಕಪ್ಪಯ್ಯನೇನೂ ಒಡ್ಡನಲ್ಲ! ಏನೋ ಅಮ್ಮಚ್ಚಿಯ ಮಾತೇ ಅರ್ಥವಾಗದೆಯೂ ನಾನು ನಗುತ್ತಿದ್ದೆ. “ಓಯ್, ಸಾಣೆಮಂಡೆ ಯಂಕಪ್ಪಯ್ಯ, ನಿಮ್ಮ ಚೀಟಿ ಜಪಾನಿಗೆ ಹೋತುದ್ ಯಾವಾಗ?” ಎಂದು ಅವ ಆಚೀಚೆ ಹೋಗುವಾಗ ಅವನಿಗೆ ಕೇಳದಂತೆ ನನಗೆ ಮಾತ್ರ ಕೇಳುವಂತೆ ಅವಳು ಹೇಳಿದರೆ, ಇದಾದರೆ ಸೈ ಅರ್ಥವಾಗುವುದೆ. ಪಾಪ, ಘಳಘಳ ಹೊಳೆಯುವ ಅವನ ಬೋಳುಮಂಡೆ ಇದ್ಯಾವ ಗೋಚರವೂ ಇಲ್ಲದೆ ಅತ್ತ ಸಾಗಿದಾಗ ನಗದೇ ಇರುವುದಾದರೂ ಹೇಗೆ? ಮಾತಿಗೊಂದು ನಗೆಯ ಗ್ಯಾರೆಂಟಿ ಸಿಕ್ಕಿದರೆ ಮಾತಾಡುವವರಿಗೂ ಹುರುಪು ಬರುತ್ತದಷ್ಟೆ. ಅಮ್ಮಚ್ಚಿ ಮತ್ತು ನನ್ನ ಜೊತೆ ಹಾಗಿತ್ತು. +ಅವತ್ತೊಂದು ದಿನ – +“ಪೇಟೆಗೆ ಹೋಪಯ!” ಎಂದಳು ಅಮ್ಮಚ್ಚಿ. +“ಹೋ.” +“ಅಲ್ಲಿಂದ ದೇವಸ್ಥಾನಕ್ಕೆ ಹೋಪ.” +“ಹೋ.” +“ಅಲ್ಲಿಂದ….. – ಅಮ್ಮ, ಮನೆಗೆ ಏನಾರು ಸಾಮಾನು ಗೀಮಾನು ಬೇಕ?” +“ಬೇಕಾರೆ ನೀ ಯಂತಕ್ಕೆ ಕೊಂಡರ್ತದ್ ಈಗ? ಅದೇ ನೆಪಲೆ ಪೇಟೆ ಮೆರವಣಿಗೆ ಮಾಡುಗ? ಯಂಕಪ್ಪಯ್ಯ ತರ್ತ?” +“ಯಾಕೆ? ಯಾಕೆ ಅವಂಗೆ ಹೇಳ್ತ್‌ದ್? ಒಂದು ಕಾಲಲೆ ಅವ ಬೇಕಾಯ್ತ್, ಹೇಳಿಯಾಯ್ತ್, ತ್ರಿಸಿಂಡಾಯ್ತ್. ಇನ್ನೂ ಇನ್ನೂ ಯಾಕೆ ಅವ ನಮಗೆ? ನಾನಿಲ್ಲಯ? ನಂಗೆ ತೆಳಿತಿಲ್ಲಯ? ನಂಗೆ ಹೇಳಗಾಗದ?” +“ಹಂಗಂದ್ರೆ ಸೈ ಮಾರಾಯ್ತಿ, ಹೋವು ನೀನೇ” – ಅಂತ ಬೇಕಾದ ಸಾಮಾನುಗಳನ್ನು ಹೇಳಿದರು, ದುಡ್ಡು ಕೊಟ್ಟರು ಸೀತತ್ತೆ. ಏನು ಪುಣ್ಯವೋ ಅಷ್ಟು ಬೇಗ ಒಪ್ಪಿದ್ದು. ಅಮ್ಮಚ್ಚಿಯ ಮುಖ ಆಗಿದ್ದೆಂದರೆ! “ಬಾ ಬಾ ಬಾ ಹೊರಡುವ. ಎನ್ನು ಆ ಸನ್ನಿಮೀರಿದವ ಬಂದರೆ ಜಂಬರ ಎಲ್ಲ ಆಡಿಮೇಲು” – ಎಂದು ಅವಸರದಿಂದ ಒಳಗೆ ಓಡಿದಳು. ಜಡೆ ಬಿಚ್ಚಿ ತಲೆ ಬಾಚಿಕೊಂಡು, ಹೆಣೆಯದೆ ಹಾಗೆಯೇ ಕಟ್ಟಿಕೊಂಡಳು. ಅದು ರುಮು ರುಮು ಹಾರುವಾಗ “ ಹೆಂಗೆ ಕಾಣ್ತಿಯ? ನಂಗೆ ಒಂಬುತ?” ಎಂದು ಉತ್ಸಾಹ ತಾಳಿದಳು. ಖಾಲಿಯಾತುತ್ತ ಬಂದಿದ್ದ ಹಿಮಾಲಯನ್ ಬುಕೆಯ ಉದ್ದ ಕರಡಿಗೆ ಬುಡವನ್ನು ಬಡಿದು ಬಡಿದು ತನ್ನ ಪುಟ್ಟ ಡಬ್ಬಿಗೆ ಪೌಡರು ಉದುರಿಸಿಕೊಂಡಳು. ಒಂದು ಡಬ್ಬಿ ತೆಗೆದುಕೊಂಡರೆ ವರ್ಷವಿಡೀ ಸಾಕಂತೆ ಅವಳಿಗೆ. “ಅಮ್ಮ ಹೆಂಗೂ ಪೌಡರುಗಿವ್ಡರು ಹಚ್ಚಿಂತಿಲ್ಲೆ. ಅವಳು ಹಚ್ಚಿಂಡ್ರೆ ಆತೆಂತದೂ ಇಲ್ಲೆ. ಜಾಸ್ತಿಯೆಂದರೆ ಆಚೀಚೆ ಹೋಪ್ತಿಗೆ ಉಂಚ ಪರಿಮಳ ಬಕ್ಕು. ಅವಳಿಗೆ ಬೆಡ ಉಂಬ್ರು. ಯಾರಾರು ಏನಾರೂ ಹೇಳ್ತ್ ಅಂದ್ ಅಂಜಿಕೆ. ಆ ಹೇಳ್ತವ್ರು ಉಂಟಲ್ಲ, ಮೂರಿ ಬಂದರಾರೂ ಸೈಸಿಂತೊ. ಪರಿಮಳನ್ನ ಸೈಸಿಂತಿಲ್ಲೆ.” ಎನ್ನುತ್ತ ಮುಖಕ್ಕೆ ಬಡಬಡ ಪೌಡರು ಹೊಡೆದುಕೊಂಡು ತಿಕ್ಕಿ ಒರೆಸಿಕೊಂಡಳು. ನನ್ನ ಮುಖಕ್ಕೂ ಪೌಡರು ಹೊಡೆದು ಲಾಲಗಂಧ ಇಟ್ಟಳು. ಅಮ್ಮಚ್ಚಿ ಹೊರಡುವಾಗ ಹೀಗೆ, ಸಂಭ್ರಮವೇ ಹೊರಡುತ್ತದೆ! ಆದರೆ ಆಗಲೇ ಹೇಳಿದಂತೆ, ಹೊರಡುವುದಾದರೂ ಎಲ್ಲಿಗೆ ಅಂತ ಬೇಕಲ್ಲ? “ಅಪ್ಪ ಸತ್ತ ಮೇಲೆ ನಮ್ಮನ್ನು ಮೂಸಿದವರುಂಟ? ಆಚೆ ಅಪ್ಪನ ಕಡೆಂದಲೂ ಇಲ್ಲೆ. ಈಚೆ ಅಮ್ಮನ ಕಡೆಂದಲೂ ಇಲ್ಲೆ…… ಹೋತ್‌ದ್ ಬಪ್ಪನಾಡು ಜಾತ್ರೆಗೆ. ಆದೂ ಇಲ್ಲದ್ರೆ ಏನು ಮಾಡಗಿತ್ತು!” ಎಂದು ನಕ್ಕಳು. “ಯಾರು ಇಲ್ಲದ್ದಕ್ಕೆ ಈ ಯಂಕಪ್ಪಯ್ಯ ಸವಾರಿ ಮಾಡ್ತ. ಅವಂಗೆ ಸಾವೂ ಬರ್ತಿಲ್ಲೆ ಅಲ್ದ?” ಎನ್ನುತ್ತಾ ಸೀರೆ ಉಟ್ಟಳು. ಸೆರಗು ಪಟ್ಟಿ ಮಾಡಿಕೊಂಡಳು. ಎರಡೂ ಅಂಚುಗಳು ಸರಿಯಾಗಿ ಕಾಣುವ ಹಾಗೆ ಮೂರು ಪಟ್ಟಿ ಮಾಡಿಕೊಂಡಳು. “ನಿಂಗೆ ಪಿನ್ನು ಕುತ್ತ್‌ಗೆ ತೆಳಿತ? ಅದು ಒಂಚೂರು ಹಿಂದೆ ಕುತ್ತಗು. ಕಾಂಬ, ಕುತ್ತು.” – ನಾನು ಅವಳು ಹೇಳಿದಲ್ಲಿಗೆ ಪಟ್ಟಿಸೆರಗಿಗೂ ರವಕಿಗೂ ಹೊಂದಿಸಿ ಪಿನ್ನು ಕುತ್ತಿದೆ. “ಹ್ಞಂ! ಹಿಂಗೆ! ನೀನೊಬ್ಬಳು ನಂಗೆ ಸಾರಥಿ. ನೀನೂ ಇಲ್ಲದ್ರೆ ಏನ್ ಮಾಡಗಿತ್ತು ನಾನು?” ಎಂದಳು. ಇದ್ದದ್ದನ್ನು ಹೇಳುತ್ತ ‘ಇಲ್ಲದಿದ್ದರೆ’ ಎಂದು ಚಿಂತಿಸುವ ಅಮ್ಮಚ್ಚಿ! ನಕ್ಕರೆ ಅವಳ ಗೆರಸಿ ಮುಖ ‘ಅರಳಿದ ಕಮಲದ ಹಾಗೆ’ ಎನ್ನುತ್ತಾರಲ್ಲ ಅದೇ. ಗೆಲು ನಮಗೂ ಹರಡಿಕೊಳ್ಳುತ್ತದೆ. ಅವಳು ಒಂದು ನಕ್ಕರೆ ಎದುರಿಗಿರುವವರು ನಾಲ್ಕು ನಗಬೇಕು….. ಹಿತವಿದ್ದರೆ. +ಅಮ್ಮಚ್ಚಿ ಅಮ್ಮಚ್ಚಿ….. +ಸಣ್ಣ ಉರುಟು ಕನ್ನಡಿಯಲ್ಲಿ ಆಚೆ ಬಗ್ಗಿ ಈಚೆ ಬಗ್ಗಿ ಹಿಂದೆ ಹೋಗಿ ಚೂರು ಚೂರೇ ನೋಡಿಕೊಳ್ಳುತ್ತ “ಅಲ್ಲ, ಶಂಭಟ್ಟರ ಮನೆಲೆ ಗೊತ್ತುಂಟ? ಎಷ್ಟುದ್ದ ಕನ್ನಡಿ! ಮೇಲಿಂದ ಹಿಡಿದು ಕೆಳಗಿನವರೆಗೆ ಕಾಣ್‌ತ್!! ಇದಯ, ಎಲ್ಲಂತೆ? ಮಾಯಿಯ ಕೋಣೆಲೇ!! ಮಾಯಿಗೆ ಎಂಥಾ ಗಮ್ಮತ್ತು ಕಾಣ್!…. +“ಎಂತ ಗಮ್ಮತ್ತು?” +“ಥೂ ನಿಂಗೆ ಗೊತ್ತಾತಿಲ್ಲೆ. ಉಂಚ ದೊಡ್ಡವಳಾಗ್ಗು…. ಅಲ್ಲ, ಅಷ್ಟು ದೊಡ್ಡ ಕನ್ನಡಿ ಮಾಯಿಗೆ ಬೇಕ? ಮೇಲಿಂದ ಕೆಳಗಿನವರೆಗೆ ಕಂಡಿಂತ್ರ ಹಂಗರೆ! ಕಂಡಿಂಬುಗೆ ಅವರಿಗೆ ಯಂತ ಉಳಿದಿಂತ್ ಅಂತ ಬೇಡ್ದ! ಆ ಕನ್ನಡಿ ನಂಗಾರೂ ಇದ್ದಿವ್ರೆ!” ಎಂದಳು. +ಹಾಂ ಅಂತೂ ಶೋಕು ಮುಗಿಯಿತು, ಇನ್ನೇನು ಹೊರಡಬೇಕು – ಬಂದೇಬಿಟ್ಟ ವೆಂಕಪ್ಪಯ್ಯ. +“ಬಂತಲ್ಲ ಯಂಕಪ್ಪಯ್ಯನ ಕೋಲ” +ಅಮ್ಮಚ್ಚಿಯ ಮುಖ ಕಂದಿದಂತೆ ಕಾಣಿಸಿ ನಾನೆಂದೆ, “ಯಂಕಪ್ಪಯ್ಯ ಅಲ್ಲ ಅವ – ಕುಂಕಪ್ಪಯ್ಯ” – ಸೈ, ಅಮ್ಮಚ್ಚಿ ಒಂದು ನಕ್ಕಿದ್ದೆಂದರೆ! ಬಿದ್ದು ಬಿದ್ದು ನಕ್ಕಳು, “ನೀನೊಬ್ಬಳೇ ಈ ಪ್ರಪಂಚಲೆ ಸಮ. ಮತ್ತೆ ಯಾರೂ ಸಮ ಇಲ್ಲೆ. ಕಾಣು, ಒಬ್ಬರಿಗಾದರೂ ಅವ ಕುಂಕಪ್ಪಯ್ಯನ ಹಂಗೆ ಕಾಣ್ತನ?….. ಎನ್ನುತ್ತ. +ಹಾಂಗಾದರೆ ಅಂದು ನಾನು ಒಟ್ಟಾರೆ ಹೇಳಿದ ‘ಕುಂಕಪ್ಪಯ್ಯ’ ಎಂಬುದಕ್ಕೆ ಏನೋ ವಿಶೇಷ ಅರ್ಥ ಇರಬೇಕಂತ ನಾನು ಎಷ್ಟು ದಿನ ಗಟ್ಟಿನಿಂಬಿಕೊಂಡಿದ್ದೆ. +ಹೂಂ…. ವೆಂಕಪ್ಪಯ್ಯ ಬಂದ “ಏನು ಏನು ಏನು! ಕೋಲ ಕಟ್ಟಿಂಡ್ ಹೊರಟ್‌ದ್ ಎಲ್ಲಿಗೆ ಮೆರವಣಿಗೆ?” +“ಟೋಕರ ಗುಡ್ಡೆಗೆ.” +“ಯಂತದಕ್ಕೆ ಹೊರಗೆ ಹೋತ್‌ದೀಗ?…..” +“ಸಂಕಪಾಸಣ ತಗಂಬುಗೆ. ದಾರಿ ಬಿಡಿಯ ನೀನು.” +ಆತ ದಾರಿ ಬಿಡದೆ “ಏನು ಯೇಸ ತಕಂಡು ಹೋತ ಪೇಟೆಯವ್ವ ಹಂಗೆ! ಶ್ಯೆಕ್ಕ್… ಎದೆ ಎರಡೂ ಕಾಣ್ತ ಹಂಗೆ ಪಟ್ಟಿ ಸೆರಗು ಹಾಸಿಂಡ್ ಹೊರಟೆಯಲ್ಲ! ಯಾರ ಮರ್ಯಾದೆ ತೆಗೆಗೆ?” ಎಂದ. ಅವ ಅಮ್ಮಚ್ಚಿಗೆ ಬೈದರೂ ಜೊತೆಗಿದ್ದ ನನಗೂ ಆ ಬೈಗುಳದ ಬಿಸಿಯನ್ನು ಹೇಗೆ ತಾಕಿಸುತ್ತಿದ್ದ! ಅಮ್ಮಚ್ಚಿ ದುರುಗುಟ್ಟಿ ಅವನನ್ನೇ ನೋಡುತ್ತ “ನೀ ಹೋವುಯಾ ಕೋಮಣ ಬಿಟ್ಟಿಂಡ್ ಎಲ್ಲಿಗೆ ಬೇಕಾರೂ. ನಾ ಕೇಣ್‌ತ್ನ? ನಾ ನಂಗೆ ಬೇಕಾದ ಹಂಗೆ ಹೊರಟರೆ ನಿಂಗೆ ಯಾಕೆ ಕಿಚ್ಚು?” +“ನಡೆ ಒಳಗೆ ಅಂದೆ.” +“ನೀ ಯಾರು ನಂಗೆ ಹೇಳುಗೆ ಅಂದೆ” +“ಕಾಲು ಮುರಿತೆ” +“ನಾನೇನು ಬಾಯಿಗೆ ಕಡ್ಲೆ ಕಾಳು ಬೀಸಿಂತ ಕುಳ್ಕಂತ್ನ?” +ವೆಂಕಪ್ಪಯ್ಯ ಸೀತತ್ತೆಯನ್ನು ಕರೆದ! “ಹಿಂಗೆಲ್ಲ ಮಾಡಿಂಡ್ ಇವಳು ಪೇಟೆಗೆ ಹೊರಡ್ತ್‌ದ್, ಬಾಸಾಯಿ ತಿಂತದ್, ಯಾಕೆ ಬೇಕಾಯಿ ಈಗ! ಪೇಟೆ ಸಾಮಾನು ಬೇಕಾರೆ ನಾನು ಕೊಣಂದ್ ಕೊಡ್ತಿಲ್ಲಯ?” ಮುಂತಾಗಿ ಹೇಳುತ್ತ ಹೇಳುತ್ತ ಕಡೆಯ ಬಾಣವಾಗಿ “ನಿಮಗೆ ಗೊತ್ತಿಲ್ಲೆ, ಇವಳು ಪೇಟೆ ಪೇಟೆ ಅಂದ್ ಹೋತ್‌ದ್ ಆ ಶಂಭಟ್ಟರಮನೆಗಲ್ದ? ಅವರ ಮನೆ ಜಗಲಿ ಕಾಸ್‌ತದ್, ಬಾಯಿ ಕಳ್ದ್ ನಗಾಡ್‌ತ್‌ದ್. ಅವು ಇವಳ ಹಲ್ಲೆಲ್ಲ ಲೆಕ್ಕ ಮಾಡಿಂತೋ.” ಸುಳ್ಳು. ಸುಳ್ಳು ಸೀತತ್ತೆ ಎಂದು ನಾನು ಕಷ್ಟಪಟ್ಟು ಕೂಗಿದ್ದು ಸೀತತ್ತೆಗೆ ಕೇಳಿಸುವುದೇ ಇಲ್ಲ. ಸುರುಮಾಡಿಯಾಯಿತು ಅವರು, “ಹೌದ್ದ ಹೆಣ್ಣೆ, ಹಿಂಗಾ ಇಚಾರ?….” ಅಂತೆಲ್ಲ ಇರುತ್ತಲ್ಲ? +“ಅವರ ಮನೆಗೆ ಹೋತಾರೆ ನಿಂಗೆ ಹೇಳಿಯೇ ಹೋಪೆ. ಸುಳ್ಳು ಹೇಳ್ತ ಗರ್ಜು ಇವತ್ತಿಗೆ ನಗಿಲ್ಲೆ. ಈ ಬಿರ್ಕನಕಟ್ಟೆ ದೈವದ ಮಾನು ಕೇಂಡ್‌ದ್ ನಂಗೆ ಯಾಕೆ ಬೈತೆ ನೀನು?” +ಸೀತತ್ತೆ ಸ್ಫೋಟವಾದರು. “ಅಯ್ಯೋ…. ಹೆಚ್ಚು ವಾದ ಮಾಡಳೆ ಮಾರಾಯ್ತೇ, ಇನ್ನು ಹೆಚ್ಚು ವಾದ ಮಾಡಳೆ. ಯೆಂಕಪ್ಪಯಾನು‌ಊ ಇಲ್ಲದೆ ಹೋದ್ರೆ ಆಗ ಗೊತ್ತಾಕ್ ನಿಂಗೆ ನಮ್ಮ ಅವಸ್ಥೆ ಏನ್ ಅಂದ್….” ಅಂತೆಲ್ಲ ಅವನ ಎದುರಿಗೆ ಕಿರುಚುತ್ತ, ಹೊರಟುನಿಂತ ಅಮ್ಮಚ್ಚಿಯನ್ನು ಅಕ್ಷರಶಃ ಒಳಗೆ ನೂಕಿದರು. ವೆಂಕಪ್ಪಯ್ಯ ನನ್ನನ್ನೂ ನುಂಗುವಂತೆ ನೋಡಿದ್ದೇ ನಾನು ಓಡಿಹೋಗಿ ಅಮ್ಮಚ್ಚಿಯನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಂಡೆ. ಕೈ ಬಿಡಿಸಿಕೊಂಡು ತಲೆ ನೇವರಿಸಿದಳು ಅಮ್ಮಚ್ಚಿ. “ಹೆದರಳೆ. ಅದು ಪೋಂಕು. ಪೋಂಕುಗಳಿಗೆಲ್ಲ ಹೆದರಗೇ ಆಗ. ಬಾ. ನಾವು ಮಡಲು ಹೆಣೆವ.” ಅವಳ ಸ್ವರ ಕಂಪಿಸುತ್ತಿತ್ತು. ಕಣ್ಣಲ್ಲಿ ಮಾತ್ರ ಒಂದು ಹನಿ ನೀರು ಕೂಡ ಇರಲಿಲ್ಲ. ಮಡಲು ನೆನೆಸಿದ ಕಟ್ಟೆಗೆ ನಡೆದಳು ಅಮ್ಮಚ್ಚಿ ತಣ್ಣಗೆ ಮಂಜುಗಡ್ಡೆಯಂತೆ. ನೆನೆದ ಒಂದು ದೊಡ್ಡ ಮಡಲನ್ನು ಎತ್ತಿ ಅಂಗಳಕ್ಕೆ ಹಾಸಿಕೊಂಡಳು. ನನಗೂ ಒಂದು ಚಿಕ್ಕ ಮಡಲು ಕೊಟ್ಟಳು. “ನಿಂಗೆ ಹೇಳಿ ಕೊಡ್ತೆ. ಕಲಿ. ಎಲ್ಲ ಇದ್ಯೆ ಬರಗು. ಯಾವ್ದೂ ಬರ್ತಿಲ್ಲೆ ಅಂತೆಳಿ ಇಪ್ಪುಗಾಗ.” ಒತ್ತಿಟ್ಟ ಹಾಗಿದ್ದ ಸ್ವರವನ್ನು ಸಹಜ ಮಾಡಿಕೊಂಡು ಸೋಲದಂತೆ ತನ್ನ ಸಧ್ಯವನ್ನು ನಿಭಾಯಿಸಲು ಹೊರಟಂತೆ ಮಾತು ಮುಂದುವರಿಸಿದಳು ಅಮ್ಮಚ್ಚಿ. +“ಇದ, ಈ ಗರಿ ಹಿಂಗೆ ಮುರಿ. ಹಿಂಗೆ ಹಿಮ್ಮಡ್ಚು. ಒಂದು ಬಿಟ್ಟು ಒಂದರ ಹಿಂದೆ ಒಂದು ಬಿಟ್ಟು ಒಂದರ ಹಿಂದೆ ಸೇರಿಸ್ತ ಬಾ. ಉಂಚ ಬಿಗೀ ಎಳಕೊ. ಇಲ್ಲದ್ರೆ ಚಡಿ ಬಿಡ್‌ತ್. ಚಾಪೆ ನೇಯ್ತ ಕ್ರಮವೂ ಹಿಂಗೇ. ನಂಗೆ ಮಡಲು ನೇಯ್ತ ಅಂದ್ರೆ ಸೈ” ಎಂದಳು. ಹಂಗೇ….. ಹಿಂಗೇ….. ಎಂದು ನಾನು ಹೆಣೆಯುತ್ತ ಬಂದ ಹಾಗೂ ರಾಗವೆಳೆದಳು. “ಸಾಬಾಸ್. ಇನ್ನು ಮೇಲೆ ದಿನಾ ಮೂರು ನಾಲ್ಕು ಮಡಲು ಹೆಣೆವೆನೆ? ಪಂಥ ಕಟ್ಟುವ. ಯಾರು ಹೆಚ್ಚ್ ಹೆಣೆತ್ರ್ ಅಂದ್. ಹೊತ್ತ್ ಹೋದ್ದೇ ತೆಳಿತಿಲ್ಲೆ…. ಮುಗಿತಾ? ಹಾಂ. ಬದಿಯ ಗರಿಯನ್ನೆಲ್ಲ ಒಟ್ಟು ಸೆರಿಸಿ ಅಂಚು ತಿಪ್ಪ್‌ತಾ ಬಾ. ಗಂಟೊ ಹಾಕು. ಹಣಣಣಗೆ…… ಅವಂಗೆ ಮಾಡ್‌ಸ್ತೆ ಬಗೆ. ನಾನು ಬಾಳ್ಪುತೆ ಅಂದ್ ಮಾಡಿದ. ಬಾಳ್ಪಿಯೇ ಬಿಟ್ಟೆನಾ ನಾನು? ಅವನ ಕಣ್ಣೆಲೆ ನೀರು ಬರಿಸ್ದೇ ಇದ್ರೆ ನಾನು ನನ್ನ ಹೆಸರಲ್ಲ….. ಯಾವುದಕ್ಕೂ ನಂಗೊಬ್ಬ ಗಂಡ ಬರಡು. ಮತ್ತೆ ಉಂಟು ಇವಂಗೆ ಕಂಬಳ….” ಅಮ್ಮಚ್ಚಿ ಅವಡುಗಟ್ಟಿ ಮಡಿಲಿನಂಚನ್ನು ತಿಪ್ಪುತ್ತಿದ್ದಳು. “ಹಿಂಗೇ ದಿವಸಾ ನೇಯ್ದರೆ ನಮ್ಮ ಮದುವೆಗೂ ನಾವು ಹೆಣೆದ ಮಡಲನ್ನೇ ಹಾಕಳಕ್ಕು. ಕಾಣೀಲ್ಲಿ ಎಷ್ಟಗಲ! ಅಂಕಣ ಚಾಪೆಗಿಂತ ಅಗಲ” ಎಂದು ನಕ್ಕಳು. ಕಣ್ಣಂಚು ಹೊಳೆಯುತ್ತಿತ್ತು. ನಗೆಗೂ ಅಳುವಿಗೂ ಸಿಟ್ಟಿಗೂ ಹೊಳೆದುಕೊಂಡೇ ಇರುವ ಕಣ್ಣಂಚಿನ ಅಮ್ಮಚ್ಚಿ.”ಅಮ್ಮ ನಾವು ದೇವಸ್ಥಾನಕ್ಕೆ ಹೋಯಿದ್ದ್ ಬರ್ತೊ.” ಎಂದು ನನ್ನನ್ನೂ ಕರೆದುಕೊಂಡು ಅಮ್ಮಚ್ಚಿ ಹೋದದ್ದು ಎಲ್ಲಿಗೆ ಎಂದರೆ ರಮಾ ಟೀಚರ್ ಮನೆಗೆ. “ಮತ್ತೆ? ಸೀದ ಹೇಳ್ತವರಿಗೆ ಕಾಲ ಅಲ್ಲಯ ಇದು. ಸತ್ಯ ಹೇಳಿದ್ರೆ ಬಿಡದ್ರ ಮೇಲೆ ಸುಳ್ಳು ಹೇಳಗೇ ಆಯ್ತ?” ಎಂದು ನನ್ನ ಆಶ್ಚರ್ಯ ತಿಳಿಯಿತೆಂಬಂತೆ ತಾನಾಗೇ ಹೇಳಿದಳು. ರಮಾ ಟೀಚರ್ ಹೊಲಿಗೆಯವರು. ಅಮ್ಮಚ್ಚಿಗೆ ಹಿಂದುಗುಬ್ಬಿಯ ರವಕೆ ಬೇಕಂತ ಉಂಟು.. ಶಂಭಟ್ಟರ ಮನೆಗೆ ಬರುವ ಹುಡುಗಿಯರು ಕೆಲವರು ಹಿಂದುಗುಬ್ಬಿಯ ತೊಟ್ಟದ್ದು ಕಂಡಿದ್ದಳಂತೆ. +“ನೀನು ಕಂಡಿದ್ದೆಯ?” +“ಇಲ್ಲಪ್ಪ” +“ಅದೆಲ್ಲ ನಿಂಗೆ ಕಾಣ್ತಿಲ್ಲೆ…. ಹಿಂದುಗಿಬ್ಬಿ ರವಕೆನ್ನ ರಮಾಟೀಚರ್ ಚಂದ ಹೊಲೀತ್‌ರಂಬ್ರು. ಅಲ್ಲಯ, ನಾನು ಹೊಲಿಸಿಂಡ್ರೆ ಹಿಂದಿನಿಂದ ನೀನು ಗುಬ್ಬಿ ಹಾಕ್ತೆಯಲ್ಲ….. ನಾನು ಅಭ್ಯಾಸ ಮಾಡಿಂತವರೆಗೆ?” +“ಒಹೊ. ನಾನೇ ಹಾಕ್ತೆ.” +“ನೀನು ಹಾಕ್ತ್‌ದ್ ಅಂದ್ ಮತ್ತೆ ಯಾರ ಹಾಕ್ಯೈಯೂ ಹೇಳಗಾಗ?” +“ಹೇಳ್‌ತಿಲ್ಲಪ್ಪ.” +ಹೊಲಿಗೆ ಮಿಶನ್ನಿನ ಮೇಲೆ ಕೆಲಸದಲ್ಲಿದ್ದ ರಮಾಟೀಚರ್ ಮಿಶನು ನಿಲ್ಲಿಸಿ ನಮ್ಮತ್ತ ನೋಡಿದರು. ಏನು ಬಂದಿರಿ ಎಂಬಂತೆ ಅರ್ಧ ಹೊಲೆಯುತ್ತಿರುವ ಬಟ್ಟೆಯನ್ನೂ ಅರ್ಧ ನಮ್ಮನ್ನೂ ನೋಡುತ್ತ ಹುಬ್ಬೇರಿಸಿ ಇಳಿಸಿದರು. ರವಕೆ ಬಟ್ಟೆಯನ್ನು ರಮಾಟೀಚರ್‌ಗೆ ಕೊಟ್ಟಳು ಅಮ್ಮಚ್ಚಿ. “ಹಿಂದುಗುಬ್ಬಿ ಇಡಿ ಟೀಚರ್. ಅಮ್ಮನಿಗೆ ಹೇಳುವುದು ಬೇಡ. ಅದರ ವಿಚಾರ ನಾನು ನೋಡಿಕೊಳ್ಳುತ್ತೇನೆ.” ಎಂದಳು. ಮನೆಯಿಂದ ಹೊರಗೆ ಬಂದಳೆಂದರೆ ಅಮ್ಮಚ್ಚಿ ಮಾತಾಡುವುದು ‘ಕರ್ನಾಟಕ’! ಕೊಂಕಣಿ ಜಾತಿಯ ರಮಾಟೀಚರೂ ಹೊರಗಿನವರೊಡನೆ ಮಾತಾಡುವುದು ‘ಕರ್ನಾಟಕ’ವೇ. ರಮಾಟೀಚರ್ ಟೇಪು ಬಿಚ್ಚಿ ಅಳತೆ ತೆಗೆದುಕೊಳ್ಳುತ್ತಿದ್ದರೆ ಅದರ ಜೊತೆಜೊತೆಗೇ ಒಳಗೇ ನಗುತ್ತಿದ್ದಾರೆ ಅಂತಲೂ ಕಂಡಿತು. ಅಮ್ಮಚ್ಚಿ ಹಿಂದುಗುಬ್ಬಿಯ ರವಕೆ ಆಸೆಪಟ್ಟರೆ ಏನೋ ತಮಾಷೆ ಕೇಳಿದ ಹಾಗೆ ರಮಾಟೀಚರ್ ಯಾಕೆ ನಗಬೇಕು? +ಎಲ್ಲ ಮುಗಿದ ಮೇಲೆ “ಅಲ್ಲವನ ಅಮ್ಮಚ್ಚಿ, ಬ್ಯಾಕ್ ಬಟನ್ ಬ್ಲೌಸ್ ಹೊಲಿಯಬಹುದು. ಕಷ್ಟವಲ್ಲ. ಆದರೆ ವೆಂಕಪ್ಪಯ್ಯ ಕೊನೆಗೆ ನನಗೆ ಬಂದು ಗಲಾಟೆ ಮಾಡಿದರೆ? ಅವನಿಗೆ ಇದೆಲ್ಲ ಖುಶಿ ಇದ್ದ ಹಾಗೆ ಕಾಣುವುದಿಲ್ಲ….” ಎಂದರು! +ಹಳಬೆ ರಮಾಟೀಚರ್‌ಗೆ ಊರಿನ ಎಲ್ಲರೂ ಗೊತ್ತು. ಎಲ್ಲರ ಮನೆ ವಿಚಾರವೂ ಗೊತ್ತು. ಎಲ್ಲರಿಗೂ ರಮಾಟೀಚರ್ ಗೊತ್ತು. ಆದರೆ ಅಮ್ಮಚ್ಚಿ ಅಷ್ಟಕ್ಕೆ ಹೆದರುವವಳೇ? +“ಹ್ಞಾಂ! ಏನಂದಿರಿ ಟೀಚರ್? ಅವ ಯಾವ ದೊಡ್ಡ ಗುರಿಕಾರ ನಿಮಗೆ ಗಲಾಟೆ ಮಾಡಲಿಕ್ಕೆ! ಇದು ನನ್ನ ರವಕೆ. ನನಗೆ ಬೇಕಾದ ಹಾಗೆ ಹೊಲೆಯಿರಿ.” ಅವಳ ಆಜ್ಞೆಯ ದನಿ ಕೇಳಿ ರಮಾಟೀಚರ್‌ಗೆ ಮತ್ತಷ್ಟು ಮುಸಿ ನಗೆ! ಅಮ್ಮಚ್ಚಿ ಹೇಳುವಷ್ಟು ಹೇಳಿ ಒಂದು ನಿಟ್ಟುಸಿರು ಬಿಟ್ಟು ಅಲ್ಲಿಂದ ಎದ್ದಳು. ದಾರಿಯಲ್ಲಿ ಮೌನವಾಗಿಯೇ ಸಾಗುತ್ತ ಸುಮಾರು ಹೊತ್ತಿನ ಮೇಲೆ “ಏನು ಹಾಂಕಾರಿ! ನಾನು ಹೇಳ್ತ್‌ದ್ ಬೇಡ ಆ ಟೀಚರ್ತಿಗೆ ಯಂಕಪ್ಪಯ್ಯ ಉಂಬ್ರು…. (ಚಾಳಿಸಿ) ಯಂ….ಕಪ್ಪಯ್ಯ. ಅಂವ ಯಾರು ಹೇಳುಗೆ?” – ಅವಳ ಏನಂತಿ ಏನಂತಿ? ಎಂಬುದಕ್ಕೆ ಹೂಂಗುಡಲು ನಾನಿದ್ದೆ. +ಶಂಭಟ್ಟರ ಮನೆ ದೂರದಿಂದ ಕಾಣಿಸಿತು. “ಹೋಗಳಾಯಿಪ್ಪು ಅಲ್ಲಿಗೆ. ಕಸ್ತಲಾಪುಗೆ ಇನ್ನೂ ಸುಮಾರು ಹೊತ್ತು ಉಂಟು…. ಬೇಡ. ಈಗ ಬೇಡ…. ಎಲ್ಲಾದರೂ ಆ ಕುದ್ರಾಳು ಹಾವು ಕಾಂಬು…. ಶಂಭಟ್ಟರ ಮಗ ಬರ್ತ ಅಂಬ್ರಲ್ದ? ಗೊತ್ತುಂಟು ನಿಂಗೆ? ಅವ ಇದ್ಯೆ ಕಲಿತು ಮುಗಿತುಂಬ್ರು. ಇನ್ಮೇಲೆ ತೋಟ ಕಂಡಿಂತ ಉಂಬ್ರು…… ಅವಂಗೆ ಹಳ್ಳಿ ಹುಡುಗಿನ ಮದುವೆ ಮಾಡಿದ್ದು ಮನೆಲೇ ಕೂಡಿಸ್ತ ಅಂದಾಜುಂಬ್ರಲ್ಲ? ಅದೇ ಒಳ್ಳೇದು ಅಲ್ಲಯ?… ಆದರೆ ಅವನ ಅಬ್ಬೆ ಉಂಟಲ್ಲ ದೊಡಾ….. ಗಜಾಲಿ. ಗಂಡಂಗೆ ಬೇಕಾರೆ ನಾಕು ಹಾಕುಗೂ ರೆಡಿಯಂಬ್ರು! ಕೇಣಿಯ! ಹ್ಹ! …. ಕಂಡಿದ್ದೆಯಾ ಅವನ್ನ? ಶಂಭಟ್ಟರ ಮಗನ್ನ? ಅವ ಬಂದ ಮೇಲೆ ಒಮ್ಮೆ ಹೋಪ. ಏನಾರು ನೆಪ ಮಾಡಿಂದ್. ನಿಂಗೆ ತೋರಿಸ್ತೆ. ಅವ ಮಾತಾಡ್ತ ಅಪ್ಪ, ಎಷ್ಟು ಬೇಕಾರೂ ಮಾತಾಡ್ತ. ಹಮ್ಮುಗಿಮ್ಮು ಒಂಚೂರೂ ಇಲ್ಲೆ…..” +ಹೀಗೇ ಮನೆ ಮುಟ್ಟಿದೆವು.ರಮಾಟೀಚರು ಈ ಸಲ ರವಕೆಯನ್ನು ವೆಂಕಪ್ಪಯ್ಯನ ಹತ್ತಿರ ಮೆನೆಗೇ ಕಳಿಸಿಕೊಟ್ಟರು! ಅಮ್ಮಚ್ಚಿ ಪೆಕೇಟು ತೆಗೆದುಕೊಂಡು ಹೇಗಾಗುತ್ತದೆ ಎಂದು ನೋಡುವ ಅಂತ ಒಳಗೆ ಹೋಗುವ ನೀರಿನಲ್ಲಿ ನೆನೆನ್ಸಿದ ಒಣ ಬಾಳೆಸಿಪ್ಪೆಯಿಂದ ಹಗ್ಗ ಸಿಗಿಯುತ್ತ ಪಿಂಡೆ ಕಟ್ಟುತ್ತ ಇದ್ದ ಸೀತ್ತತ್ತೆಯನ್ನು ನೋಡಿ ವೆಂಕಪ್ಪಯ್ಯ ಮೆಲು ನಕ್ಕ. ಅವ ನಕ್ಕದ್ದು ನನ್ನ ಕಣ್ಣಿಗೆ ಬಿತ್ತೆಂದು ನನ್ನನ್ನೊಮ್ಮೆ ಅಪರಾಧಿಯಂತೆ ನೋಡುವಂತೆ ನೋಡಿ “ಮಾಲಶ್ಮಿ ಮಾಯಿಗೆ ಹೇಳಗು. ಅಮ್ಮಚ್ಚಿಯ ಸಂಗಡ ನಿಮ್ಮ ಮಗಳನ್ನು ಹೆಚ್ಚು ಬಿಡಳೆ. ಅವಳೂ ಹಾಳಾತ್ಲ್ ಅಂದ್.” ಎಂದು ನನಗೆ ಕೇಳುವಂತೆ ನುಡಿದು ಸೀತ್ತತ್ತೆಗೆ ಕಾಣದಂತೆ ಕಣ್ಣಲ್ಲೆ ಹೆದರಿಸಿದ. ನಾನು ಅಲ್ಲಿಂದ ಮೆಲ್ಲ ಎದ್ದು ಅಮ್ಮಚ್ಚಿ ಇದ್ದಲ್ಲಿಗೆ ಹೋಗುವ ತವಕದ ಹೆಜ್ಜೆ ಇಟ್ಟಿದ್ದೇನಷ್ಟೆ – +ಚೀತ್ಕರಿಸಿದಳು ಅಮ್ಮಚ್ಚಿ ಒಳಕೋಣೆಯಿಂದ. ದಂಗಾಗಿ ನೋಡಿದರೆ ಸೀತತ್ತೆ ಮತ್ತು ವೆಂಕಪ್ಪಯ್ಯ ಸದ್ದಿಲ್ಲದೆ ನಗುತ್ತಿದ್ದರು. ಅಮ್ಮಚ್ಚೀ…. +ಅಮ್ಮಚ್ಚಿ ಕೋಣೆಯಿಂದ ಹೊರಬಂದಳು. ಏನೂ ನಡೆದೇ ಇಲ್ಲವೆಂಬಂತೆ “ಯಂತಯ? ಯಾಕೆ ಕರೆದೆ?” ಎನ್ನುತ್ತ ವೆಂಕಪ್ಪಯ್ಯ ಮತ್ತು ಸೀತತ್ತೆ ಕೂತಲ್ಲಿಗೇ ಬಂದು ಹಗ್ಗ ಸೀಳುತ್ತ ತಾನೂ ಪಿಂಡೆ ಸುತ್ತ ತೊಡಗಿದಳು. ಸೀತತ್ತೆ ನಗೆ ಕಳಕಿದ ದನಿಯಲ್ಲಿ “ಏನಿಯ! ಹೆಂಗಾತ್ ರವಕೆ?” ಎಂದರೆ “ಫಸ್ಟ್‌ಕ್ಲಾಸ್! ಆಗದೆ? ಇದು ಹೊಲ್‌ದ್‌ದ್ ಯಾರು? ರಮಾಟೀಚರ್ ಅಲ್ದ?” ಎಂದಳು ಅಮ್ಮಚ್ಚಿ ವೆಂಕಪ್ಪಯ್ಯನಿಗೆ ಈ ಉತ್ತರ ಎಂಬಂತೆ. ಅವನತ್ತ ತಿರುಗಿ ಹಗ್ಗವನ್ನು ಬಾಯಿಂದ ಕಚ್ಚಿ ತುಂಡು ಮಾಡಿ, ಬಾಯಿಗೆ ಏನೋ ಸಣ್ಣ ಕಸ ಸಿಕ್ಕಿದರೆ ತ್ಸು ಎಂದು ಉಗಿದಂತೆ ಅವನೆದುರಿಗೇ ತ್ಸು ಎಂದು ಉಗಿಯುತ್ತ……ಎಂಟು ದಿನ ವೆಂಕಪ್ಪಯ್ಯ ಇರಲಿಲ್ಲ. ತಿರುಪತಿಗೆ ಹೋದದ್ದಂತೆ. ವರ್ಷಂಪ್ರತಿ ತಿರುಪತಿಗೆ ಹೋಗುವವ. ಇಂಥವರನ್ನೆಲ್ಲ ನೋಡಬೇಕಲ್ಲ. ಆ ತಿರುಪತಿ ದೇವರು! ಅವಂಗೆ ಕಷ್ಟ. ನಮಗೆಲ್ಲ ಎನ್ನುವಳು ಅಮ್ಮಚ್ಚಿ. “ಈ ಒಡ್ಡನಿಗೆ ಅವ ಶಾಪ ಕೊಡಗು. ಊರಿಗೆ ಹೋದದ್ದೇ ಸುಟ್ಟು ಬೂದಿಯಾಗು ಅಥವಾ ಆ ಪರಶುರಾಮ ಕ್ಷೇತ್ರದಲ್ಲಿ ಎಂಜಲು ಹೆಕ್ಕುವ ಹಾಗೆ ಆಗು ಅಂದ್. ಅಷ್ಟು ಮಾಡಿರೆ ನಾನೂ ವರ್ಷಂಪ್ರತಿ ತಿರುಪತಿಗೆ ಹೋಪೆ – ಆದರೆ ದೇವರಿಗೆ ಬುದ್ಧಿ ಇರಗಲ್ಲ! ಇಂಥವರಿಗೂ ವರ ಕೊಡ್ಡ. ಯಾರಿಗೆ ನಾಮ ಹಾಕಿರೂ ಪಾಪ ಬರದ ಹಂಗೆ…..” ಎನ್ನುವಳು. “ಅವ ಹೆಂಗೂ ಇಲ್ಲೆ. ಬಾ. ಆ ಕುದ್ರಾಳಿನ ಕೋಣೆಗೆ ಹೋಪ. ಏನೆಲ್ಲ ಬೇತಿದ ಕಾಂಬ……” ಎಂದು ಪಿಸುವಾಗಿ ಕರೆದು ನನ್ನನ್ನು ಅವನ ಕೋಣೆಗೆ ಹೋದಳು ಅಮ್ಮಚ್ಚಿ. ಅಲ್ಲಿ ಏನು ಇತ್ತು, ಏನು ಇಲ್ಲ ಕಂಡವರು ಯಾರು? ಕಣ್ಣಿಗೆ ಮೊದಲು ಬಿದ್ದದ್ದೆ ಅವನ ಶರ್ಟು. ಗೂಟದ ಮೇಲೆ ನೇತಾಡುತ್ತಿತ್ತು. “ಹೋ. ಯಂಕಪ್ಪಯ್ಯ ಎರಡೂ ಕೈ ಅಲ್ಲಾಡಿಸಿಂಡ್ ಗೂಟಲೆ ನೇತಾಡ್ತ್‌ದ್ ಕಾಣಿಯ” ಎಂದು ನಕ್ಕಳು. ಶರ್ಟನ್ನು ಮುಟ್ಟಲೇ ಅಸಹ್ಯವೆಂಬಂತೆ ದೂರದಿಂದ ಕೈನೀಡಿ ಅಲ್ಲಿಂದ ತೆಗೆದಳು. “ಓಡು. ಅಮ್ಮಂಗೆ ಕಾಣದ ಹಂಗೆ ಕತ್ತರಿ, ಸೂಜಿ, ನೂಲು ತಾ” ಎಂದಳು. ಮಧ್ಯಾಹ್ನ ಮೂರು ಗಂಟೆ. ಸೀತತ್ತೆ ಮಲಗಿದ್ದರು. ನಾನು ಗಾಳಿ ಹೊಕ್ಕಿದಂತೆ ಹಾರಿ ಹೋಗಿ ಎಲ್ಲ ತಂದು ಕೊಟ್ಟೆ. ಅಮ್ಮಚ್ಚಿ ಕರಕ್ಕನೆ ಶರ್ಟಿನ ಹಿಂಭಾಗ ಕೊಯ್ದಳು. ಮುಂಭಾಗ ಹೊಲಿದಳು. ಮುಂಭಾಗದ ಗುಂಡಿಗಳನ್ನು ಹಿಂಭಾಗಕ್ಕೆ ಹೇಗೆ ಹೇಗೋ ಇಟ್ಟಳು. “ಇದ! ರೆಡಿ! ಕೋಡಂಗಿ ಶರ್ಟು. ತಿರುಪತಿಯಿಂದ ವಾಪಸು ಬಂದವಂಗೆ ಪೆಶಲ್…..!” ಎಂದು ಪುನಹಃ ಗೂಟಕ್ಕೆ ಹೇಗಿತ್ತೋ ಹಾಗೆ ತೂಗು ಹಾಕಿದಳು. “ನನ್ನ ರವಕೆಗೆ ರಮಾಟೀಚರ್ ಹತ್ರ ಹೋಗಿ ಮಸಲತ್ತು ಮಾಡ್ತ್‌ದ್ ಅಂದ್ರೆ ಅಷ್ಟು ಸುಲಭ ಅಂದ್ ಮಾಡಿಯ ಯಂಕಪ್ಪಯ್ಯ ನೀನು?” ಎಂದು ಹಲ್ಲು ಕಡಿದು ನನ್ನತ್ತ ತಿರುಗಿ “ಅಮ್ಮಂಗೆ ಹೇಳಡ. ಹೇಲಿರೆ ಕಾಣ್. ತನ್ನಂತೆ ಗೊತ್ತಾರೆ ಆಗಡ್. ನಾ ಹೆದರ್ತಿಲ್ಲೆ.” ನಾನು ಹೇಲುವುದಿಲ್ಲ ಎಂದು ತಿಳಿದೂ ಅವಳದೇ ಸ್ವಂತ ಧೈರ್ಯಕ್ಕೆ. ನಾನು ಹೇಳುವುದಿಲ್ಲ ಎಂದು ಆಣೆ ಹಾಕಿದೆ.ತಿರುಪತಿಯಿಂದ ಬಂದ ವೆಂಕಪ್ಪಯ್ಯ. ಹಾ ಹೂ ಹೊ ಎನ್ನುತ್ತ ಮೆಟ್ಟಿಲು ಹತ್ತಿದ. ಅಲ್ಲಿನ ವಡೆ, ಲಾಡು, ಮೊಸರನ್ನ ವರ್ಣನೆ ಮಾಡಿದ. “ಮಂಡೆ ಬೋಳ್ಸಿಂಬ ಕೆಲ್ಸವೇ ಇಲ್ಲೆ ಇವಂಗೆ” ಎಂದು ಅಮ್ಮಚ್ಚಿ ತನ್ನ ತೃಪ್ತಿಗೆ ತನ್ನೊಳಗೇ ಛೇಡಿಸಿ ಹಿಲಾಲು ಹಿಡಿಯುವುದರ ಗೋಚರವೇ ಆಗದೆ, ಆವೇಶದಿಂದ ಅಲ್ಲಿಯೇ ಹತ್ತಿರ ತಾನೊಂದು ಹೊಟೇಲು ಇಡುವ ಸುದ್ದಿಯನ್ನೂ ತಿಳಿಸಿದ. “ಅಯ್ಯ ದೇವರೆ ಅಷ್ಟಪ್ಪ ದೂರ!” ಎಂದು ಸೀತತ್ತೆ ಉದ್ಗರಿಸಿದರೆ “ಹೂಂ. ಇಟ್ಟರೆ ದೂರ ಇಡಗು. ದುಡ್ಡು ಮಾಡಿದ ಮೇಲೆಯೇ ಊರಿಗೆ ಬರಗು” ಅಂತೆಲ್ಲ ತಿಳುವಳಿಕೆ ಹೇಳುವ ಧಾಟಿಯಲ್ಲಿ ತನ್ನ ‘ಭಯಂಕರ’ ಪ್ಲಾನು ವಿವರಿಸಿದ. “ಅಬ್ಬ! ಅಂತೂ ಭಂಡಾರ ಹೋತು ಅಂತಾಯಿತು” ಎಂದಳು ಅಮ್ಮಚ್ಚಿ. ಪ್ರಸಾದದ ಗಂಟು ಬಿಚ್ಚಿ ಸೀತತ್ತೆಯ ಕೈಗೆ ಕೊಟ್ಟು “ಎಲ್ಲ ತಕಣಿ. ಉಂಚ ಬುದ್ಧಿ ಸಮಾ ಆತ ಕಾಂಬ” ಎಂದು ಅಮ್ಮಚ್ಚಿಯನ್ನು ನೋಡಿ ಹೇಳಿ ಸ್ನಾನಕ್ಕೆ ಹೊರಟುಹೋದ. ಸ್ನಾನ ಮುಗಿಸಿ ಬಂದು “ಇನ್ನು ಊಟ ಊಟ ಊಟ. ಯಂಥಾ ಹಸಿತ್ ಅಂದ್ರೆ! ಈಗ ಬಂದೆ ಶಟರು ಹಾಕಿಂಡ್….” ಎನ್ನುತ್ತ ಕೋಣೆಗೆ ಹೋದ. +ಹೊರಗೆ ಬಂದದ್ದು – ರಾವಣಾಸುರ! +“ಎಲ್ಲಿ ಆ ಸೂಟೆ. ಆ ಮಾರಿ…. ಹಾಂಕಾರಿ…. ಅವಳ ಸತ್ಯನಾಶ ಮಾಡಿಬಿಡ್ತೆ…..” +ಕೂಗಿಗೆ ಹೆದರಿ ಉಪ್ಪರಿಗೆ ಮೆಟ್ಟಿಲಿನ ಮೂಲೆಗೆ ಓಡಿ ಕುಳಿತುಕೊಂಡ ನನ್ನನ್ನು ಅನಾಮತ್ತು ಎತ್ತಿ “ಎಲ್ಲಿ……ಹೇಳು. ಹೇಳ್‌ತಿಯಾ ಇಲ್ಲ ಎರಡು ಬಾರ್ಸಗ?” ಸೀತತ್ತೆ ಗಾಬರಿಯಿಂದ “ಏನು? ಏನಾಯ್ತಿಯ? ಏನಾಯ್ತೀಗ…. ಬರ್ತಲೊಳಗೆ. ರಂಡೆ ಏನ್ ಮಾಡ್ತ್?” ಎಂದರೆ ಅದಕ್ಕುತ್ತರಿಸದೆ ಹಿಡಿತ ಇನ್ನಷ್ಟು ಬಿಗಿ ಮಾಡಿ “ಹೇಳ್, ಎಲ್ಲಿ ಅದ್…..” ಎಂದು ಮತ್ತೆ ಕೂಗಿದ. +“ಅಮ್ಮಚ್ಚೀ…..” +ಅಮ್ಮಚ್ಚಿ ಬಂದು ತಳಿಕಂಡಿಗೊರಗಿ ಕಿಲಿಕಿಲಿ ನಗುತ್ತ ನಿಂತದ್ದು ಕಾಣಿಸಿತು. “ಏನು, ತಿರುಪತಿಗೆ ಹೋದ್ದೇ ಕಣ್ಣು ಮೇಲಾಯ್ತ? ನಾನು ಇಲ್ಲೇ ಇದ್ದೆ. ಕಾಣ್ತಿಲ್ಲಯ? ಆ ಮಗುನ್ನ ಯಾಕೆ ಹಿಂಸೆ ಮಾಡ್ತೆ?” ಆಗ ವೆಂಕಪ್ಪಯ್ಯ ನನ್ನನ್ನು ಅಲ್ಲಿಯೇ ಧಡಕ್ಕ ಹೊತ್ತು ಹಾಕಿ “ಏನಂದೆ ಏನಂದೆ” ಎನ್ನುತ್ತ ಅವಳತ್ತ ನುಗ್ಗಿ, ಅವಳ ಜಡೆ ಬುಡಕ್ಕೆ ಕೈ ಹಾಕಿ ದರದರನೆ ಎಳೆಯುತ್ತ ಸೀದ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡ. “ಅಯ್ಯೋ ಅಯ್ಯೋ! ಏನಪ್ಪಾ ಇದೆಲ್ಲ….. ನಂಗೆ ಕಾಂಬ್‌ಗೇ ಆತಿಲ್ಲೆ. ಯೇ ಯಂಕಪ್ಪಯ್ಯ ಯಂಕಪ್ಪಯ್ಯ ಬಾಗಿಲು ತೆರೆ….. ಯಂಕಪ್ಪಯ್ಯ ಅಯ್ಯೋ ಮಾರಿ ಹೆಣ್ಣೇ…..” ಎಂದು ಎದೆ ಹೊಡೆದಂತೆ ಕೂಗಿಕೊಂಡರು ಸೀತತ್ತೆ. +ಕ್ಷ್ಣದಲ್ಲಿ ಕೋಣೆಯ ಬಾಗಿಲು ತೆರೆಯಿತು. ಅಮ್ಮಚ್ಚಿ ಹೊರಗೆ ಬಂದಳು. ಮುಖ ಧಗಧಗಿಸುತ್ತಿತ್ತು. ತುಟಿ ಒಡೆದು ರಕ್ತ ವಸರುತ್ತಿತ್ತು. +“ಅಮ್ಮಚ್ಚೀ…. ರಕ್ತ!” ಹೆದರಿ ಹೆಪ್ಪಾದ ದನಿಯಲ್ಲಿ ಕೂಗಿಕೊಂಡರೆ ಅದು ಕೇಳೇ ಇಲ್ಲವೆಂಬಂತೆ ನಿಧಾನವಾಗಿ ಒಳಕೋಣೆಯತ್ತ ನಡೆಯುತ್ತಿದ್ದ ಅಮ್ಮಚ್ಚಿ ಸೀತತ್ತೆಯ ಕಡೆಗೆ ತಿರುಗಿ “ನೀ ಸಾಯಿ. ನೀ ಯಾಕೆ ಇರ್ತ್‌ದ್? ನನ್ನ ಕೊಲ್ಲ್‌ಗಾ? ಎನ್ನುತ್ತಾ ಬಾಗಿಲು ಹಾಕಿಕೊಂಡಳು. +ವೆಂಕಪ್ಪಯ್ಯ ಕೋಣೆಯೊಳಗೇ ಗುಮ್ಮ ಕುಳಿತ. ಸತ್ತೇಹೋದವರಂತೆ ಕಂಬಕ್ಕೊರಗಿದ್ದ ಸೀತತ್ತೆಯನ್ನು ಕಂಡು ಇನ್ನಷ್ಟು ಭಯವಾಯಿತು. +“ಸೀತತ್ತೇ.” +ನಾನು ಅಂತೆಯೇ ಎಣಿಸಿಕೊಂಡಿದ್ದೆ.ಶಾಲೆ – ಮನೆಯ ನಡುವೆ ದಿನ ಹೋದದ್ದೇ ತಿಳಿಯುವುದಿಲ್ಲ. ಒಂದು ದಿನ ನೋಡುತ್ತೇನೆ, ಅಮ್ಮಚ್ಚಿ ಬರುತ್ತಿದ್ದಾಳೆ! ಅಮ್ಮಚ್ಚಿ ಅಮ್ಮಚ್ಚಿ! ಕಿಟಕಿ ದಂಡೆಯಿಂದ ಒಮ್ಮೆಲೇ ಹಾರಿ ಹೊರಗೋಡಿ ಅವಳ ಬೆನ್ನುಹಿಡಿದೆ ನಾನು. ಕೈ ಚೀಲ ತೆಗೆದುಕೊಂಡೆ. ಅವಳೂ ಟ್ರಂಕು ಹಿಡಿದು ಮುಂಚಿನಂತೆಯೇ ಏನೂ ಆಗದ ಹಾಗೆ ರೈಲು ಬಸ್ಸು ತಿರುಪತಿ, ತಿರುಪತಿ ದೇವರ ಕೈ, ನಾಮ, ತಮ್ಮ ಹೊಟೆಲ್ಲು, ದೋಸೆ, ಪೂರಿ, ಇಡ್ಲಿ, ಒಡೆ ಇತ್ಯಾದಿ ಮಾತಾಡುತ್ತ ಮುಂದೆ ನಡೆದಳು. ಅವಳಿಗೆ ಹೇಳಲು ನನ್ನ ಬಳಿ ಒಂದು ಸುದ್ದು ಇತ್ತು. ಹುರುಪಿನಿಂದ ನುಡಿದೆ. “ಅಮ್ಮಚ್ಚಿ, ಶಂಭಟ್ಟರ ಮಗ ಸೇಸ ಬಂದಿದ್ದ. ನಾಲ್ಕು ದಿನ ಆಯ್ತು. ಇನ್ನು ಅವ ಇಲ್ಲೇ ಇರ್ತ ಉಂಬ್ರು. ಮಾಯಿ ಹೇಳಿರ್.” ನಡೆಯುತ್ತಿದ್ದ ಅಮ್ಮಚ್ಚಿ ನಿಂತಳು. ಹಿಂದಿರುಗಿ ನನ್ನನ್ನು ನೋಡಿದಳು – ಏನು ಹೇಳಿದಳೆಂದು ಪುನಃ ಮರುಕಳಿಸಿಕೊಳ್ಳುವಂತೆ. ನನ್ನನ್ನೇ ನೋಡುತ್ತ “ಸಾಯಡ್. ಎಲ್ಲ ಸಾಯಡ್. ಸತ್ತ್ ಮಣ್ಣ್ ತಿನ್ನಡ್” ಎಂದಳು. ಅರ್ಥವಾಗದೆ ಪಿಳಿಪಿಳಿ ನೋಡಿದ ನನ್ನನ್ನು ತಬ್ಬಿಕೊಂಡು “ಎಲ್ಲರೂ ಸಾಯಡಿಯ. ನಾವಿಬ್ಬರೇ ಇಪ್ಪ. ನಾ ಮಾತಾಡುಗೆ. ನೀ ನೆಗಾಡುಗೆ.” ಶಿಲೆಕಲ್ಲಿನಂತೆ ಕಂಡಳು ಅಮ್ಮಚ್ಚಿ. ನಗುವುದಿರಲಿ, ನಗೆಯೆಂಬುದು ಮೂಲದಲ್ಲಿಯೇ ಸುರುಟಿ ಹೋಗಬೇಕು – ಹಾಗೆ. +ಅಂತೂ ಮನೆ ಬಂತು. ಸೀತತ್ತೆ ಓ ಅಷ್ಟು ದೂರದಿಂದಲೇ ಅವಳನ್ನು ಕಂಡವರೇ ಬೆನ್ನಿಗೆ ಕೈಕೊಟ್ಟು ಹಿಮ್ಮುಖ ಬಾಗಿ ಬಾಯಿ ಕಳೆದು ನಿಂತೇಬಿಟ್ಟರು. ಹತ್ತಿರ ಬರುತ್ತಲೇ “ಏನು ರಂಡೆ ಒಬ್ಬಳೇ! ಯಂತ ಕತೆ ಮಾಡಿಂಡೆ?” – ಎಂದರು ಗುಮಾನಿ ಬಂದಂತೆ. “ಒಬ್ಬಳೇ ಬರದೆ ಮತ್ತೆಂತ ಮಾಡ್ತ್‌ದ್ ಅಲ್ಲಿದ್ದ್? ನಿನ್ನ ಯಂಕಪ್ಪಯ್ಯ ನೇಣು ಹಾಕಿಂಡ” – ಎಂದಳು ಅಮ್ಮಚ್ಚಿ. ಸೀದ ಕಲ್ಲುಮರಿಗೆ ಇದ್ದಲ್ಲಿಗೆ ಹೋಗಿ ನೀರನ್ನು ಮುಖಕ್ಕೆ ಬೀಸಿ ಬಡಿದುಕೊಳ್ಳುತ್ತ ತಿರುಗಿ ತಾಯಿಯನ್ನು ನೋಡಿದಳು. ಸೆರಗಿಂದ ಮುಖವರೆಸಿಕೊಳ್ಳೂತ್ತ ಎಡೆಯಲ್ಲಿ ನನ್ನನ್ನು ನೋಡಿ ನಕ್ಕಳು! +ಯಾಕೋ ತಟಕ್ಕನೆ ನಾನು ವಾಚಾಮಗೋಚರಚಾಗಿ ಬೈಗುಳ ಸುರುಮಾಡಿದ್ದ ಸೀತತ್ತೆಯ ಮುಖ ನೋಡಿದೆ. ಅವರ ಕಣ್ಣುಗಳಲ್ಲಿ ಆ ಬೈಗುಳದ ಗಾವು ಇರಲೇ ಇಲ್ಲ. ಅರೆ ಚೋದ್ಯವೆ! ಈಗಲೂ ನೆನೆಸಿಕೊಳ್ಳುತ್ತೇನೆ ಆ ಕಣ್ಣುಗಳನ್ನು….. ಮತ್ತೇನಾದರೂ ಕಾಣುತ್ತದೆಯೇ? ಇಲ್ಲ, ಇಲ್ಲ….. ಈಗ ನಾನು ಏನು ಕಂಡರೂ ಅದು ಇವತ್ತಿನ ನನ್ನ ಹಂಬಲಕ್ಕೆ ಅನುಸಾರವಾಗಿಯೇ ಇರುವುದರಿಂದ ಹಾಗೆ ಇಣುಕುವುದನ್ನು ನಿಲ್ಲಿಸುತ್ತೇನೆ. ಸೆರಗಿನಿಂದ ಮುಖ ಒರೆಸಿಕೊಳ್ಳುತ್ತ ಎಡೆಯಲ್ಲಿ ಮಿಣಕ್ಕನೆ ಮುಚ್ಚಿತೆರೆದು ನಕ್ಕ ಅಮ್ಮಚ್ಚಿಯ ಕಣ್ಣುಗಳನ್ನೇ ನೆನೆಯುತ್ತೇನೆ. +ಬೆಳಗಿನ ಚಹದ ಆಡಂಬರ ಮುಗಿದು ರಾಮಕೃಷ್ಣ ಹಾಗು ಜಾನಕಿಯರು ತಮ್ಮ ಕೋಣೆಯ ಹೊರಗಿನ ಬಾಲ್ಕನಿಗೆ ಬರುವಾಗ ಅತ್ಯಂತ ಉಲ್ಲಸಿತ ಮನಃಸ್ಥಿತಿಯಲ್ಲಿದ್ದರು. ಇಂದು, ನಾಳೆ ಹಾಗೂ ನಾಡದು ಮೂರು ದಿನ ಒಂದರ ಹಿಂದೊಂದು ರಜೆಗಳು. ಕಳೆದ […] +“ಪಬ್ಬೂ ಬಂದಾನಂತಲ್ಲೋ, ಪಬ್ಬೂ ಅಂದರೆ ಯಾರು ಗೊತ್ತಾಯ್ತೋ? ಹಿಂದೆ ನೀನು ಕನ್ನಡ ಶಾಲೇಲಿ ಕಲಿಯುವಾಗ ಇದ್ದನಲ್ಲಾ, ಆಮೇಲೆ ಓಡ್ಹೋಗಿದ್ದ ನೋಡು, ಅಂವಾ….” ಅಂತ ಮಾಂಶಿ ಹೇಳಿದಾಗ ದಿಗಿಲುಬೀಳದಿದ್ದರೂ ಒಮ್ಮೆಗೇ ಉದ್ರೇಕಗೊಂಡೆ. ಈ ಪಬ್ಬೂ ಅಂದರೆ […] +ಮನೆಯ ಅಂಗಳಕ್ಕೇಕೆ ಇಡೀ ಕೇರಿಗೇ ಒಡವೆ ತೊಡಿಸಿದಂತಿರುವ ಅಂಗಳದ ಬೇವಿನ ಮರದಿಂದ ಕೆಳಕ್ಕಿಳಿಬಿದ್ದಿರೋ ಕೊಂಬೆಗೆ ಹಗ್ಗದಿಂದ ತೊಟ್ಟಿಲು ಕಟ್ಟಬೇಕೆಂಬ ಯೋಚನೆಯಲ್ಲಿದ್ದ ನಾಗವ್ವ ಕುಂಯ್ ಮರ್ರೋ ಎಂದು ರಂಪಾಟ ಮಾಡುತ್ತಿದ್ದ ಎಂಟೊಂಬತ್ತು ತಿಂಗಳ ಪ್ರಾಯ ಕಂದಯ್ಯನನ್ನು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_150.txt b/Kannada Sahitya/article_150.txt new file mode 100644 index 0000000000000000000000000000000000000000..56cfbfa75e2aabf95be559edacc538780e248624 --- /dev/null +++ b/Kannada Sahitya/article_150.txt @@ -0,0 +1,107 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹೀಗೀಗೆ ಆಗುತ್ತದೆ- ಆಗಲೇಬೇಕು’ – ಇದು ತರ್ಕ. ಮನುಷ್ಯನೊಬ್ಬನ ಸಕಲ ನಡವಳಿಕೆಗಳನ್ನು ಯಾವುದೇ ಒಂದು ತಾರ್ಕಿಕ ವಲಯಕ್ಕೆ ಮಾತ್ರ ಸೀಮಿತಗೊಳಿಸಿಬಿಟ್ಟರೆ ಒಬ್ಬರು ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ ಇಲ್ಲವೇನೊ. ಯಾವುದೋ ಒಂದನ್ನು ಹೇಳಬೇಕು ಎಂದನ್ನಿಸಿ ಹೇಳಬೇಕಾದ್ದನ್ನೆಲ್ಲ ಈ ತಾರ್ಕಿಕ ಪಥದಲ್ಲೇ ಹೇಳ ಹೊರಡುವುದು ಸದಾ ಸಾಧ್ಯವಾಗದ ಮಾತು. ಸಾಹಸಿಸಿದರೆ ಎಡವುವುದು ಸಹಜ. ಹೇಳುವವನ ಕೇಳುವವನ [ಪ್ರೇಕ್ಷಕ, ಓದುಗ, ಕೇಳುಗ ಇತ್ಯಾದಿ ] ನಡುವೆ ಸಂವಹನ ಕುಸಿದು ಬೀಳುತ್ತದೆ. ಆದ್ದರಿಂದಲೇ ನಾನು ಹೇಳ ಹೊರಟಿರುವುದನ್ನು ತರ್ಕರಾಹಿತ್ಯವಾಗಿ ನಡೆದ್ದದ್ದನ್ನು ನಡೆದಂತೆಯೆ, ಅನ್ನಿಸಿದ್ದನ್ನು ಅನ್ನಿಸಿದಂತೆಯೆ – ಬಹುಶಃ ಹೀಗಿರಬಹುದು- ಹೀಗಿದ್ದಿರಬೇಕು ಎಂಬ ಅಂದಾಜಿನ ತರ್ಕ [ಹೈಪೋತೀಸಿಸ್] ಬಳಸಿ ಹೇಳಲಾರಂಭಿಸುತ್ತೇನೆ. ಶಂಕೆಯಂತೂ ಇದ್ದೇ ಇದೆ. ನಾನು ಹೇಳಿದ ರೀತಿಯಲ್ಲೆ ಆಗಿರಬಹುದು. ನಿಮಗೆ ಬೇರೆನಾದರು ಅನ್ನಿಸಿದರೆ ನೀವು ಹೇಳಿ- ತರ್ಕ ಬೇಡ ಆಷ್ಟೆ. +ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ- +“ನನ್ನ ಹೆಂಡ್ತೀನ ನೋಡ್ಕೊಂಡ ಹಾಗೆ ಗಾಡೀನ ನೋಡ್ಕೊಂಡಿದೀನಿ. ಸಿಂಗಲ್ ಹ್ಯಾಂಡ್. ಬೇರೆ ಯಾರ ಕೈಗೂ ಕೊಡೋಲ್ಲ.” +ನನ್ನ ಬಳಿಯೂ ಒಂದು ಮೊಪೆಡ್ ಇದೆ. ೧೯೮೫ರ ಮಾಡೆಲ್‌ನದು. ಎಲ್ಲರೂ ಉಪಯೋಗಿಸುತ್ತಾರೆ! +ಪಾಪ, ಬಹಳ ಒಳ್ಳೆಯ ಗಾಡಿ- ಈಗ ಲಟಾರಿ ಎದ್ದು ಹೋಗಿದೆ. ಈಗೀಗ ಬಹಳ ಜನ ಹೇಳುತ್ತಾರೆ- “ಗುಜರಿಗಾಕೋ“. ” ಬೀಗ ಬೇರೆ ಯಾಕಾಕ್ತೀಯ? ಈ ಗಾಡೀನ ಯಾರೂ ಮುಟ್ಟೋ ಧೈರ್ಯ ಮಾಡೋಲ್ಲ, ಬಾ“- +” ಸ್ಕ್ರಾಪ್ ಇಟ್ , ಸೆಂಡ್ ಇಟ್ ಟು ಸಾಲ್ವೇಜ್”-ಹೀಗೆ ವ್ಯಂಗ್ಯದ ಸರಣಿ ನಾನು ಎದುರಿಸಬೇಕಾಗಿ ಬಂದ್ದದಿದೆ. ಆಗೆಲ್ಲ ನನಗೆ ಏನೂ ಅನ್ನಿಸುವುದಿಲ್ಲ. ಅವಮಾನವೂ ಇಲ್ಲ. ನಕ್ಕುಬಿಡುತ್ತೇನೆ. ‘ದೇವರೆ ಇವರು ಏನು ಹೇಳುತ್ತಿದ್ದಾರೊ ಇವರಿಗೆ ತಿಳಿಯದು, ಇವರನ್ನು ಕ್ಷಮಿಸು!’ ಬೇರೆಯವರಿರಲಿ, ಸೀತಳೂ ಒಮ್ಮೊಮ್ಮೆ ಹೇಳಿದ್ದಿದೆ,” ರೀ ಮಾರಾಕಿ ಬೇರೆ ಹೊಸದನ್ನಾದ್ರೂ ತೊಗೋ ಬಾರ್ದೇನ್ರಿ. . .” ಇವಳಿಗೂ ಅರ್ಥವಾಗುವುದಿಲ್ಲ. ಕ್ಷಮೆ ಇರಲಿ! +ಸೀತಳಿಗೂ ಸೇರಿದಂತೆ ಯಾರಿಗೂ ಅರ್ಥವಾಗುವುದಿಲ್ಲ. ನಾನು ಈ ಮೊಪೆಡ್ಡನ್ನ ಪ್ರೀತಿಸ್ತೀನಿ ಅಂತಂದ್ರೆ. ಬಹುಶಃ ನಿಮಗೂ ಗೊತ್ತಾಗುತ್ತೋ ಇಲ್ಲವೋ, ನನಗೆ ಗೊತ್ತಿಲ್ಲ. ಖಾತ್ರಿಯೂ ಇಲ್ಲ. ಷುಡ್ ಐ ಕೇರ್? ಉದ್ಧಟತನಕ್ಕೆ ಕ್ಷಮೆ ಇರಲಿ. +ಒಂದ್ಸಾರಿ ಏನಾಯ್ತೂಂದರೆ: +ನಾನೂ ನನ್ನ ದೊಡ್ಡಮ್ಮನ ಮಗ ಸುಬ್ಬು ಇಬ್ಬರೂ ನಮ್ಮ ಮಾವನ ಹಳ್ಳಿಗೆ ಹೋಗಬೇಕಾಯ್ತು. ನಾವಿಬ್ಬರೂ ಅಕ್ಕ ತಂಗಿಯರನ್ನೆ ಮದುವೆಯಾಗಿರೋದು. – ದಾರೀಲಿ ಗೌರಿಬಿದನೂರಿಗೆ ಸ್ವಲ್ಪ ದೂರದಲ್ಲಿ ಮೈನ್‌ರೋಡಿನಲ್ಲಿ ಅಂದರೆ ಮಾಕಳಿದುರ್ಗದ ಬಳಿ ಘಾಟಿಸುಬ್ರಹ್ಮಣ್ಯಕ್ಕೆ ದಾರಿ ಸೂಚನಾ ಫಲಕವೊಂದು ಇತ್ತು. ಆಸ್ತಿಕನಾದ ಸುಬ್ಬನಿಗೆ ಅದು ಕಣ್ಣಿಗೆ ಬಿದ್ದು ಕೂಗಿಕೊಂಡ; +”ಲೋ ಚಂದ್ರ, ಇಷ್ಟು ಹತ್ತಿರ ಬಂದಿದ್ದೀವಿ, ದೇವ್ರನ್ನ ನೋಡ್ಕೊಂಡು ಬಂದುಬಿಡೋಣ.” +ಸಮಯ ಬಹಳ ಕಡಿಮೆಯಿತ್ತು, ಅಪರಿಚಿತವಾದ ಹಾದಿ. ಅವನ ಬೇಡಿಕೆಯನ್ನ ನಿರಾಕರಿಸಿ ನನ್ನ ಲಟಾರಿ ಗಾಡಿಯಲ್ಲಿ ಹಾಗೂ ಹೀಗೂ ಅರ್ಧರಾತ್ರಿ ತಲುಪಿದೆ. ದಾರಿಯಲ್ಲಿ ಷೀಲ್ಡ್‌ಸ್ಕ್ರೂಗಳು ಕಳಚಿ ಹೋಗಿ, ಸೈಲೆನ್ಸರ್ ಕಳಚಿಕೊಂಡು ಅವಸ್ಥೆಯೋ ಅವಸ್ಥೆ. ಆದರೂ ಸಿಂಪ್ಲಿ ಐ ಲವ್ ದಿಸ್ ಮೊಪೆಡ್. ಸುಮಾರು ೧೩೦ ಕಿ. ಮೀ ಇಬ್ಬರನ್ನು ಹೊತ್ತು ತಂದಿತ್ತು! +ಅಲ್ಲಿಯ ಕೆಲಸ ಮುಗಿಸಿ ಎರಡು ದಿನದ ನಂತರ ಆ ಹಳ್ಳಿ ಬಿಟ್ಟು ಮರಳಿ ಹೊರೆಟೆವು. ಹಿಂದೂಪುರದಲ್ಲಿ ಒಂದು ಕಡೆ ಸ್ಕಿಡ್ ಆಯಿತು. ಸ್ವಲ್ಪ ದೂರ ಬಂದ ಮೇಲೆ ಹಿಂದಿನ ಬ್ರೇಕ್ ಪೂರ್ತಾ ಕೈ ಕೊಡಲಾರಂಭಿಸಿತು. ಆದರೂ ನನ್ನ ಮೊಪೆಡ್ ಮೇಲೆ ನನಗೆ ಬಹಳ ನಂಬಿಕೆ. ಒಳ್ಳೆಯ ಹಿಡಿತವೂ ಇತ್ತು. ಗೌರಿಬಿದನೂರಿನಲ್ಲಿ ‘ಬ್ರೇಕ್ ಷೂ ’ ಗೆ ಹುಡುಕಿದೆ. ಹೊಂದುವಂತದ್ದು ದೊರೆಯದೆ ವ್ಯರ್ಥ ಪ್ರಯತ್ನದನಂತರ ಹೊರಟು ಬಿಟ್ಟೆ. ಸುಬ್ಬ ಸ್ವಲ್ಪ ದೂರ ಈಡಿಸುತ್ತೇನೆಂದು ತಾನು ಸ್ಟೀರಿಂಗ್ ಹಿಡಿದಿದ್ದ. +ಘಾಟಿಸುಬ್ರಹ್ಮಣ್ಯದ ಸೂಚಿಫಲಕ ನೋಡಿದೊಡನೆ ನಾಸ್ತಿಕನಾದ ನಾನು ಸುಬ್ಬನ ಮುಖ ನೋಡಿದೆ. ಹೋಗಬೇಕೆಂಬ ಅವನ ಆಸಕ್ತಿಯನ್ನು ಶ್ರದ್ಧೆಯನ್ನು ತುಳಿಯುವುದು ನನ್ನಿಂದ ಅಸಾಧ್ಯವಾಯಿತು. +ಸ್ವಲ್ಪ ಹೊತ್ತು ಗಾಡಿಗೆ ವಿಶ್ರಾಂತಿ ಕೊಟ್ಟು ಸಿಗರೇಟು ಸೇದಿದನಂತರ ಸ್ಟೀರಿಂಗ್ ಹಿಡಿದೆ. ಮೈನ್‌ರೋಡಿನಿಂದ ಸ್ವಲ್ಪ ಒಳಕ್ಕೆ ನೋಡಿದೊಡನೆ. ಇಳುಕಲಿನ ತಿರುವು ಹಾದಿ. ಘಟ್ಟದ ಕಮರಿಗಳು ರಸ್ತೆ ಬದಿಗೆ, ಹಿಂದಿನ ಬ್ರೇಕ್ ಇಲ್ಲ. ಮುಂದಿನ ಬ್ರೇಕ್‌ನಲ್ಲೇ ವೇಗವನ್ನು ನಿಯಂತ್ರಿಸಬೇಕು. ಧೈರ್ಯ ಮಾಡಿ ಆಕ್ಸಿಲರೇಟರ್ ಆಫ್ ಮಾಡಿದೆ. ಇಳುಕಲಿನಲ್ಲಿ ಗಾಡಿ ಅಂದಾಜು ಮೀರಿ ವೇಗವಾಯ್ತು- ೫೦-೬೦. ಕಿ. ಮೀ. ವೇಗ. ತಿರುವೊಂದರಲ್ಲಿ ಗಾಡಿ ನಿಯಂತ್ರಣಕ್ಕೆ ಸಿಗದೆ ಸ್ಕಿಡ್ ಆಯಿತು. ಇಬ್ಬರಿಗೂ ಹೆಚ್ಚೇನು ಪೆಟ್ಟು ತಾಗಲಿಲ್ಲ, ಗಾಡಿಗೂ ಏನಾಗಲಿಲ್ಲ! +ಮತ್ತೆ ಇಳುಕಲಿನಲ್ಲಿ ಹೊರಟೆವು. ವೇಗವೋ ವೇಗ. ಬ್ರೇಕ್ ಹಾಕಿದೆ. ಬ್ರೇಕ್ ಕೇಬಲ್ ತುಂಡರಿಸಿ ಹೋಗಿತ್ತು. ಎಡಗಡೆಗೆ ಬೃಹತ್ ಬಂಡೆಗಳು- ಗುದ್ದಿದರೆ ‘ಸ್ಪಾಟ್ ಡೆತ್ ’ ರಿಪೋರ್ಟ್‌ಗಳಲ್ಲಿ ನಮ್ಮ ಹೆಸರಷ್ಟೆ ದಾಖಲಾಗುತ್ತಿತ್ತು. ಬಲಗಡೆಗೆ ಆಳವಾದ ಕಮರಿ. ಹೀಗೂ ಇಲ್ಲ- ಹಾಗೂ ಇಲ್ಲದಂತಹ ಸ್ಥಿತಿಯಲ್ಲಿ ಗಾಬರಿಯಿಂದ ಕೂಗಿಕೊಂಡೆ-” ಸುಬ್ಬ ಬ್ರೇಕ್ ಇಲ್ಲ, ದುಮುಕಿ ಬಿಡು.”- ಗಾಡಿಯ ವೇಗಕ್ಕೆ ಅವನೂ ಸಹ ತಬ್ಬಿಬ್ಬಾಗಿದ್ದಿರಬಹುದು. ಕೂತೆ ಇದ್ದ. ಹೆಬ್ಬಂಡೆಗಳಿಗಿಂತ ಕಮರಿಯೆ ಮೇಲು ಎಂದು ಸ್ಪ್ಲಿಟ್ ಆಫ್ ಸೆಕೆಂಡ್‌ನಲ್ಲಿ ತೀರ್ಮಾನಿಸಿ ಗಾಡಿಯನ್ನು ಬಲಗಡೆ ಕಮರಿಗೆ ನುಗ್ಗಿಸಿದೆ. ಎಂಟು ಹತ್ತು ಅಡಿಗಳ ಕಮರಿಗೆ ಐವತ್ತು ಅರವತ್ತು ಕಿ. ಮೀ ವೇಗದಲ್ಲಿ ೧೭೦ ಕೆ. ಜಿ ತೂಕದ ನಾವುಗಳು ಬಿದ್ದೆವು. ನಂಬಿದರೆ ನಂಬಿ- ಬಿಟ್ಟರೆ ಬಿಡಿ, ನನಗೆ ಒಂದು ಚೂರೂ ಗಾಯವಾಗಿರಲಿಲ್ಲ. ಸುಬ್ಬನಿಗೆ ಬಲ ಮೊಣಕಾಲಿನ ಕೆಳಗೆ ಒಂದಷ್ಟು ತರಚು ಗಾಯವಷ್ಟೆ. ಗಾಡಿಯ ಸೀಟಷ್ಟೇ ಬೆಂಡ್ ಆಗಿತ್ತು. ಉಳಿದಂತೆ ಹೆಡ್‌ಲೈಟ್ ಅಷ್ಟೆ ಸ್ವಲ್ಪ ಪೆಟ್ಟು ತಿಂದಿತ್ತು. +ಸುಬ್ಬ, ಏನೂ ಅಗದ್ದಕ್ಕೆ ತನ್ನ ದೈವಶ್ರದ್ಧೆಯ ಅಹಂಕಾರ ಬೀಗಿ – ಪ್ರಯಾಣ ಮುಂದುವರಿಸಲಾಗದ್ದಕ್ಕೆ ವ್ಯಥೆಪಟ್ಟು“ಮುಂದೊಮ್ಮೆ ಬಂದು ತನ್ನ ಕಾಣಿಕೆ ಸಲ್ಲಿಸುವುದಾಗಿ“ಬೇಡಿದ. ನಾನು ನನ್ನ ಮೊಪೆಡ್‌ಗೆ ನಮಸ್ಕರಿಸಿದೆ. ಆ ಮುಹೂರ್ತದಲ್ಲಿ ಮೊಪೆಡ್ ಬಗೆಗೆ ನನಗಿದ್ದ ಪ್ರೀತಿ ನೂರ್ಮಡಿಯಾಯಿತು. ನನ್ನ ಮತ್ತು ಮೊಪೆಡ್‌ನ ಸಂಬಂಧದಲ್ಲಿ ಇಂತಹ ಮುಹೂರ್ತಗಳೆಷ್ಟೋ ಇದ್ದವು. ಉಡುಪು ಕಳಚಿ ನನ್ನ ಬೆತ್ತಲೆ ಮೈ ನೋಡಿದರೆ ಅಲ್ಲೊಂದು ಇಲ್ಲೊಂದು ಗೀರು ಗಾಯದ ಗುರುತು ಕಂಡಾತು. +ಇಂತಹ ಮೊಪೆಡ್ಡನ್ನ ಮಾರು ಅನ್ನುತ್ತಾರಲ್ಲ, ಮೂದಲಿಸುತ್ತಾರಲ್ಲ, ಛೆ ಎಲ್ಲದರಿಂದಲೂ ಪಾರು ಮಾಡಿದ ಆ ಮೊಪೆಡ್ಡನ್ನ ನಾನು ಜೀವಕ್ಕಿಂತಲೂ ಅಧಿಕವಾಗಿ ಪ್ರೀತಿಸುತ್ತೇನೆ. ಮಾರಾಟದ ಸಲಹೆ ನೀಡಿದವರನ್ನು, ಮೂದಲಿಸುವವರನ್ನು ಕಂಡರೆ ನನಗೆ ವಿಪರೀತ ಸಿಟ್ಟು. ಆ ಸಿಟ್ಟನ್ನು ಎಂದೂ ತೋರಿಸದೆ ತೀರಾ ಗುಪ್ತವಾಗಿ ಇಟ್ಟು ನನ್ನ ಮೊಪೆಡ್ಡನ್ನ ಪ್ರೀತಿಸುತ್ತೇನೆ. ಅರ್ಥವಾಗುತ್ತಾ, ನಿಮಗೆ? +ಭಾಗ-೨ +ಶಿವಾ. . . . . +ನೀವು ಅವನನ್ನು ನೋಡಬೇಕು. ಕಪ್ಪು ಬಣ್ಣದ ತಮಿಳಿನವ. ಕಪ್ಪಾದ ಮೈಗೆಲ್ಲಾ ಗ್ರೀಸು. ಆಯಿಲ್ ಮಸಿ, ದೊಲ ದೊಲ ಪ್ಯಾಂಟು, ಶರಟು ಕಡುಕರೆ. ೧೮-೨೦ ವರ್ಷದವ. ಅಗಾಗ್ಯೆ ರಿಪೇರಿಯಲ್ಲಿ ಮೋಸ ಮಾಡುತ್ತಾನೆ. ಅವನು ಕೆಲಸ ಮಾಡುವುದನ್ನು ನೋಡಿದರೆ ನನಗೆ ಒಮ್ಮೊಮ್ಮೆ ಅನ್ನಿಸುತ್ತದೆ- ‘ವರ್ಕ್‌ಶಾಪ್ ಎನ್ನುವ ಈ ಪೆಟ್ಟಿಗೆ ಅಂಗಡಿಯಲ್ಲೇ ಇವನು ಹುಟ್ಟಿದನೇನೊ’- ಎಂದು. ಕೆಲಸಕ್ಕೆ, ಮನರಂಜನೆಗೆ, ಸ್ನೇಹಿತರೊಂದಿಗೆ ಹರಟುವುದಕ್ಕೆ, ಹಾದಿಬದಿಯ ಹುಡುಗಿಯರನ್ನು ಕಂಡು ಕಣ್ಣಲ್ಲಿ ಬೆಳಕು ತುಂಬಿಕೊಳ್ಳುವುದಕ್ಕೂ ಈ ವರ್ಕ್‌ಶಾಪ್ ನೆಲೆಯಾಗಿತ್ತು- ಸ್ಥಾವರವಾಗಿತ್ತು. ಸ್ಪಾನರ್, ಸ್ಕ್ರೂ ಡ್ರೈವರ್,ಪ್ಲೇಯರ್‌ಗಳು ಅವನ ಆಟಿಕೆಗಳಾಗಿದ್ದವು. ಆ ಜಾಗ ಮತ್ತು ತನ್ನ ಕೆಲಸದಲ್ಲಿ, ತನ್ನ ವಸ್ತುಗಳಲ್ಲಿ ಅವನಿಗೆ ಎಷ್ಟು ನಂಬಿಕೆಯೆಂದರೆ- ಅವನಿಗೆ ಒಮ್ಮೆ ಕಾಲ್ಬೆರಳು ಜಜ್ಜಿ ಹೋಗಿತ್ತು. . ಕ್ರೂಡ್ ಆಯಿಲ್ಲನ್ನು, ಗ್ರೀಸನ್ನು ಜಜ್ಜಿಹೋದ ಭಾಗಕ್ಕೆ ಗಸಗಸ ತಿಕ್ಕುತ್ತಿದ್ದ!“ಏನಯ್ಯ?“ಎಂದರೆ” ಸಾರ್ ಎಂತಾ ಗಾಯವಾದ್ರೂ ಆಯಿಲ್, ಗ್ರೀಸ್ ಹಚ್ಚಿಬಿಟ್ರೆ ಮಾಯವಾಗುತ್ತೆ.” ಎಂದು ಹಲ್ಕಿರಿದಿದ್ದ. ಹೈಜೀನಿಕ್, ಸ್ಟೆರಿಲೈಜೇಷನ್, ಸೆಪ್ಟಿಕ್, ಈ ಪದಗಳೆಲ್ಲ ಅವನು ಕೇಳಿಯೂ ಇಲ್ಲ. ವಾದಿಸಿದರೆ ಅವನಿಗೆ ಅರ್ಥವೂ ಆಗುವುದಿಲ್ಲ. ತನ್ನ ಫಸ್ಟ್‌ಐಡ್ ಮೊದಲು, ಅನಂತರವೆ ಡಾಕ್ಟರ್, ನಾನು ಹೇಳಬಹುದಾದಷ್ಟು ಹೇಳಿ ಸುಮ್ಮನಾದೆ. ಒಂದೆರಡು ದಿನ ಬಿಟ್ಟು ನೋಡಿದಾಗ, ‘ಮಿರಾಕಲ್ ’ ಎಂಬಂತೆ ಗಾಯ ಮಾಗಿಹೋಗಿತ್ತು! +ಕೆಲಸದಲ್ಲಿ ಅವನಿಗೆ ಎಂತದೋ ಖುಶಿ. ದುಡ್ಡು ಬರುತ್ತದೆ ಎಂಬುದಕ್ಕಷ್ಟೆ ಅಲ್ಲ. ಬೇರೇನೋ ತೆರೆನಾದ ಖುಷಿ. ತನ್ನ ಕೈಚಳಕಕ್ಕೆ-ತನ್ನ ಜಾಣ್ಮೆಗೆ ತನ್ನ ನಯ ವಿನಯಕ್ಕೆ ತಾನೆ ಮರುಳಾದಂತೆ. ಅದರಲ್ಲೇ ಮಗ್ನಗೊಂಡ ಖುಷಿ. ಈ ತೆರೆನಾದ ಖುಷಿ ಅವನಿಗೆ ಬೇರೆಲ್ಲು ಸಿಗುವುದಿಲ್ಲ. ಅವನ ತಂದೆ ತಾಯಿಯರು ಒಟ್ಟುಗೂಡಿ ಅಂಗಡಿ ಬೀದಿಯಲ್ಲಿ ಸಂಜೆ ಹೊತ್ತು ಬೋಂಡ ಬಜ್ಜಿ ವಡೆ ಸುಟ್ಟು ಮಾರುತ್ತಿದ್ದರು. ವರ್ಕ್‌ಶಾಪ್‌ನಂತರ ಶಿವ ಅವರಿಗೆ ಮಾರಾಟದ ಸಮಯದಲ್ಲಿ ಸಹಾಯಕನಾಗಿ ನಿಲ್ಲುತ್ತಿದ್ದ. ಆಗ ಅವನು ಸಪ್ಪಗೆ ಇರುತ್ತಿದ್ದುದನ್ನು ನೋಡಿ ನಗಿಸಲು ವೃಥಾ ಪ್ರಯತ್ನಿಸುತ್ತಿದ್ದೆ. ಅವನು ಅಷ್ಟಷ್ಟೆ ಸಪ್ಪಗಿರುತ್ತಿದ್ದ. +ಯಾವುದಾದರೂ ಒಂದು ಗಾಡಿಯೊಡನೆ ಅವನು ಸಾಧಿಸುವ ತಾದಾತ್ಮ್ಯದಲ್ಲಿ ಆಗಾಗ್ಯೆ ನಾನೂ ತಾದಾತ್ಮ್ಯ ಹೊಂದಿದ್ದಿದೆ. +ಆದರೆ ಅವನು ಎಗ್ಗಮುಗ್ಗಾ ಸುಲಿಯುವುದು ನೋಡಿ ಜಗಳ ಮಾಡಿ ಅವನಲ್ಲಿ ಹೋಗುವುದು ಬಿಟ್ಟುಬಿಟ್ಟೆ. +ಬೇರೆ ಮೆಕ್ಯಾನಿಕ್‌ಗಳ ಬಳಿ ನನ್ನ ಗಾಡಿ ತೆಗೆದುಕೊಂಡು ಹೋದಾಗ ಅವರ ಆಟಾಟೋಪ ಗಾಡಿ ಮೇಲೆ ಇರದೆ ಗಿರಾಕಿಗಳ ಮೇಲೂ ಇರುತ್ತಿತ್ತು. ಹೀಗಾಗಿದೆ- ಹೀಗಾಗಿರುವುದರಿಂದ ಹೀಗೇನೆ, ಇಂತಿಂತದನ್ನ ಬದಲಾಯಿಸಬೇಕು ಎಂಬ ತರ್ಕವಿರುತ್ತಿರಲಿಲ್ಲ. ಗಾಡಿ – ಗಿರಾಕಿ ಇಬ್ಬರೂ ತಮ್ಮ ಮುಲಾಜಿನಲ್ಲಿ ಇರುವಂತೆ , ತಾತ್ಸಾರ, ಉಪೇಕ್ಷೆ, ಉದಾಸೀನದಿಂದ” ತನ್ರಿ ಹಾಕ್ಕೊಡ್ತೀನಿ“. ಶಿವ ಎಂದೂ ಹಾಗೆ ಇರುತ್ತಿರಲಿಲ್ಲ. ಪ್ರೀತಿಯಿಂದ ಎಂತಹ ಲಡಾಸ್ ಗಾಡಿಯಾದರೂ ತಡವುತ್ತಿದ್ದ. ಲೋಪದೋಷಗಳನ್ನು ವಿವರಿಸಿ ಮನವರಿಕೆ ಮಾಡಿಕೊಡುತ್ತಿದ್ದ. ಬಹಳ ದಿನ ಅವನ ರೀತಿ ನೀತಿಗು, ಬೇರೆ ಮೆಕ್ಯಾನಿಕ್‌ಗಳ ರೀತಿನೀತಿಗೂ ಹೋಲಿಸಿ ಅವನೊಂದಿಗೆ ಜಗಳವಾಡಿದ್ದಕ್ಕೆ ಪಶ್ಚಾತ್ತಾಪ ಪಟ್ಟಿದ್ದೂ ಉಂಟು. +ಮೊಪೆಡ್ಡನ್ನು ಅವನ ಮುಂದೆಯೆ ಬೇರೆ ಮೆಕ್ಯಾನಿಕ್ ಬಳಿಗೆ ನೂಕಿಕೊಂಡು ಹೋಗುವಾಗ ಅವನು ಸಪ್ಪೆಯಾಗಿ ಕೂತಿರುತ್ತಿದ್ದ. ನಾನು ಅವನ ಕಡೆ ಗಮನಿಸಿಯೂ ಗಮನಿಸದವನಂತೆ ಹೊರಟು ಬಿಡುತ್ತಿದ್ದೆ. ಅವನೂ ಪಶ್ಚಾತ್ತಾಪ ಪಡಲಿ ಎಂದೊಮ್ಮೆ ಅನ್ನಿಸಿದರೆ , ಮತ್ತೊಮ್ಮೆ ಗಾಡಿ ನೂಕಿಕೊಂಡು ಹೊರಟಿರುತ್ತಿದ್ದುದನ್ನು ನೋಡಿ ಅವನು ಕಿಸಕ್ಕನೆ ನಕ್ಕುಬಿಟ್ಟರೆ ಎಂಬ ಭಯ ಇರುತ್ತಿತ್ತು. ಆ ಭಯದಿಂದಲೆ ನಾನು ಅವನ ಕಡೆ ನೋಡುತ್ತಿದ್ದೆ. ವ್ಯಂಗ್ಯವಾಗಲಿ, ಪರಿಹಾಸ್ಯದ ನಗುವಾಗಲಿ ಇರುತ್ತಿರಲಿಲ್ಲ. ಖಿನ್ನನಾಗಿರುತ್ತಿದ್ದ ಆಷ್ಟೆ. ಅವನ ಖಿನ್ನತೆಯನ್ನು ನೋಡುತ್ತಾ ಹೋಗುತ್ತಿದ್ದೆ. ಒಳಗೆ ಎಂಥದೋ ಖುಷಿಯಾಗುತ್ತಿತ್ತು. ಆದರೆ ಆವನ ಖಿನ್ನತೆಯೆ ನನ್ನದೂ ಆಗಿ, ಒಳಗೊಳಗೇ ಎಂಥದೋ ವಿಲವಿಲ. . . . +* +* +* +ಏರು ರಸ್ತೆಯಲ್ಲಿ ಇಬ್ಬರನ್ನು ಹೊತ್ತು ನನ್ನ ಮೊಪೆಡ್ ಸರಾಗವಾಗಿ ನುಗ್ಗುತ್ತಿದ್ದ ಕಾಲ ಸರಿದು ಬಹಳಾ ದಿನಗಳೆ ಆಗಿದ್ದವು. ತೀರಾ ಇತ್ತೀಚೆಗೆ ಒಬ್ಬನನ್ನೇ ಅದು ಎಳೆಯುತ್ತಿರಲಿಲ್ಲ. ನಿತ್ರಾಣವಾಗಿಹೋಗಿತ್ತು. ರಾತ್ರಿ ಪಾಳಿಗೆ ಅದನ್ನು ತೆಗೆದುಕೊಂಡು ಹೋಗಿ ಬಹಳ ಪ್ರಯಾಸ ಪಟ್ಟಿದ್ದಿದೆ. ಈಗೀಗಂತೂ ಏರು ರಸ್ತೆಯಲ್ಲಿ ಒಬ್ಬನನ್ನು ಅದು ಎಳೆಯುವುದಿರಲಿ, ಸಮತಟ್ಟಾದ ರಸ್ತೆಯಲ್ಲಿಯೂ ಪೆಡಲ್ ಮಾಡಬೇಕಾದ ಸ್ಥಿತಿಗೆ ಅದು ಇಳಿದಿತ್ತು. +ಓಡಿಸುವುದನ್ನು ನಿಲ್ಲಿಸಿದರೂ ಮೊಪೆಡ್ ಬಿಟ್ಟು ಇರಲಾಗಲಿಲ್ಲ. ಮೂಲೆಯಲ್ಲಿ ತಳ್ಳಿದ್ದ ಅದನ್ನು ನೋಡಿದಾಗ, ಅದರ ಹರಿದು ಹೋಗಿದ್ದ ಸೀಟು, ಟೈಲ್ ಲ್ಯಾಂಪ್ ಸೆಟ್‌ನ ಭಗ್ನಾವಸ್ಥೆ, ಮೂಲ ಬಣ್ಣದ ಕುರುಹು ಇರದಿದ್ದುದು, ಅಲ್ಲಲ್ಲಿ ತುಕ್ಕು ಹಿಡಿದದ್ದು ಕಂಡು ಜಿಗುಪ್ಸೆ ಉಂಟಾಯಿತು. +ಎಲ್ಲವನ್ನು ಬದಲಾಯಿಸಿ ಮೊಪೆಡ್ಡನ್ನು ಪೂರ್ವಸ್ಥಿತಿಗೆ ತರಲಿ ತೀರ್ಮಾನಿಸಿದ್ದೆ. ಮಾರಲು ತೀರ್ಮಾನಿಸಿದ್ದಿದ್ದರೆ ಸಾವಿರ ರೂಗಳೂ ಬರುತ್ತಿರಲಿಲ್ಲ! +ಪೂರ್ವಸ್ಥಿತಿಗೆ ತರುವುದೆಂದೇನೋ ತೀರ್ಮಾನಿಸಿದ್ದಾಯಿತು. ಆದರೆ ಅದನ್ನು ಬೇರೆ ಮೆಕ್ಯಾನಿಕ್‌ಗಳ ಬಳಿಗೆ ಅದನ್ನು ನೂಕಿಕೊಂಡು ಒಯ್ಯಲು ಬೇಕಿರಲಿಲ್ಲ. +ಹೇಗಾದರೂ ಆಗಲಿ, ಶಿವನನ್ನು ಒಮ್ಮೆ ಮಾತನಾಡಿಸಿ ಒಂದು ನಿರ್ಧಾರಕ್ಕೆ ಬರುವುದು ಒಳ್ಳೆಯದು ಎಂದನ್ನಿಸಿತು. ಹೊರಟೆ. +* +* +* +ಮುರುಕಲು ಕುರ್ಚೆ ಮೇಲೆ ಕೂತಿದ್ದ. ಸಪ್ಪಗಿದ್ದ. ಬಾಗಿಲಲ್ಲಿ ನನ್ನ ನೋಡಿದವನೆ ಅವನ ಕಣ್ಣುಗಳು ಮಿನುಗಿದವು. +“ಏನಣ್ಣಾ. .” – ಅದೇ ವಿನಯ. +“ಗಾಡಿ ಪಿಕಪ್ ಇಲ್ಲ. ಸೈಲೆನ್ಸರ್ ಕ್ಲೀನ್ ಮಾಡಿಸಿದ್ದಾಯ್ತು. ಡೀಕಾರ್ಬನ್ ಮಾಡಿಸಿಯಾಯ್ತು. ಆಯಿಲ್ ಸೀಲ್ ಚೇಂಜ್ ಮಾಡ್ಸಿಯಾಯ್ತು, ಪ್ರಯೋಜನವಿಲ್ಲ. . .” +“ಗಾಡಿ ತೊಗೊಂಬನ್ನಿ , ಬೋರ್ ಚೆಕ್ ಮಾಡಿ ಹೇಳ್ತೀನಿ. . +“ಗಾಡಿಯನ್ನು ತಂದೆ, ಚಕ ಚಕ ಬೋರ್ ಬಿಚ್ಚಿದ.” ಹೊಸಾ ಬೋರ್ ಹಾಕಿಸ್‌ಬೇಕು- ಚೈನು -ಸ್ಪ್ರಾಕೆಟ್ ಹೋಗಿವೆ. . . .” +ಹೊಸಬೋರು, ಚೈನುಸ್ಪ್ರಾಕೆಟ್‌ಗಳು, ಹೊಸಾ ಸೀಟು, ಸೈಡ್‌ಮಿರರ್, ಟೈಲ್‌ಲ್ಯಾಂಪ್ ಸೆಟ್ ಹೀಗೆ ಎಲ್ಲ ಹಳೆಯದನ್ನು ಕಿತ್ತು ಹಾಕಿ ಹೊಸದನ್ನು ಹಾಕಲು ತೀರ್ಮಾನಿಸಿದೆ. ಸಾವಿರದ ಮುನ್ನೂರ್ ರೂಪಾಯಿಗಳ ಬಾಬತ್ತು. ಆದರೂ ಶಿವಾನ ಮೇಲೆ ನಂಬಿಕೆಯಿತ್ತು. +ಸಾವಿರ ರುಪಾಯಿ ಅಡ್ವಾನ್ಸ್ ಎಣಿಸಿ ಹೊರಟಾಗ ಗಮನಕ್ಕೆ ಬಂತು, ಕಾಲಿಗೆ ಬ್ಯಾಂಡೇಜು ಕಟ್ಟಿದ್ದ. ಅದೆ ಕಾಲು, ಅದೆ ತೆರನಾದ ಬ್ಯಾಂಡೇಜು! +“ಏನೋ ಅದು?“ +“ಕಲ್ಲೇಟು ಬಿತ್ತು ಸಾರ್. ಜೊತೆಗೆ ಕೀವು ರಕ್ತ. +“ಕುಂಟುತ್ತಲೇ ಗಾಡಿಯ ಎಲ್ಲಾ ಭಾಗಗಳನ್ನು ಕಳಚಿ ಹಾಕುತ್ತ ನಗುನಗುತ್ತಾ ಗಾಡಿಯ ಬಗ್ಗೆ ಮಾತನಾಡಲು ತೊಡಗಿದ. ನಾನು ಬಹಳ ಹೊತ್ತು ಜೊತೆಗಿದ್ದೆ. ಏನೋ ಖುಷಿ ಖುಷಿ. ಅವನಿಗೂ ಹಾಗೆಯೇ ಇರಬೇಕು. +“ಗ್ರೀಸ್ ಆಯಿಲ್ ಹಚ್ಚಲಿಲ್ಲವೇನೋ?“ +– ಅಲ್ಲಿಂದ ಹೊರಟಾಗ ಹಾಸ್ಯವಾಡಿದೆ. +“ಸುಮ್ನಿರಿ ಸಾರ್, ನನ್ನ ಕಾಲು ನೋವು ನನಗೆ. .“ +ಅವನ ಕಣ್ಣುಗಳು ಮಿನುಗುತ್ತಲೇ ಇದ್ದವು. ನನ್ನ ಕಣ್ಣುಗಳು ಸಹ ಅರಳಿದ್ದವು. +* +* +* +ಮಾರನೆ ದಿನ ಗಾಡಿ ತಯಾರಾಗಿತ್ತು. ಶಿವಾ ಗಾಡಿ ಟ್ರಯಲ್‌ಗೆ ತೆಗೆದುಕೊಂಡು ಹೋಗುವ ಮುನ್ನ +“ಸಾರ್ ಕಿಕ್ ಮಾಡಿ ಸ್ಟಾರ್ಟ್ ಮಾಡಿಕೊಡಿ”- ಎಂದ. +ವಿಪರೀತವಾಗಿ ಕುಂಟುತ್ತಾ ನಡೆಯುತ್ತಿದ್ದ ಅವನನ್ನು ನೋಡಿ ಅಯ್ಯೋ ಎಂದನ್ನಿಸಿತು. ಕುಂಟುತ್ತಲೇ ಗಾಡಿಯನ್ನು ಸಿದ್ದ ಮಾಡಿದ್ದ. +“ಪ್ಯಾಂಟು ಮೇಲೆತ್ತು.” ಎಂದೆ. ಮಾತನಾಡದೆ ಪ್ಯಾಂಟು ಮೇಲೆತ್ತಿದ್ದ. ತೊಡೆಯಿಂದ ಅಂಗಾಲಿನವರೆಗೆ ಕಾಲು ವಿಪರೀತವಾಗಿ ಊದಿಕೊಂಡಿತ್ತು. ಕೊಳಕೊಳ ಬಿಗಿದುಕೊಂಡಂತೆ. ಶವದ ಕಾಲಿನಂತೆ. ನೋಡಿ ದಂಗಾದೆ. +“ವಿಪರೀತ ನೋಯುತ್ತೆ , ಸಾರ್.” +“ಮೊದಲು ಇವತ್ತೆ ಡಾಕ್ಟರ್ ಹತ್ರ ಹೋಗು, ತಡ ಮಾಡ್ಬೇಡ. . .” +ಎಂದೆನ್ನುತ್ತ ಗಾಡಿಯನ್ನ ಪೆಡಲ್-ಕಿಕ್ ಮಾಡಿದೆ. ಒಂದೆ ಕಿಕ್‌ಗೆ ಸ್ಟಾರ್ಟ್ ಆಯಿತು. ನನಗೋ ಖುಷಿಯಾಯಾಯಿತು. ಗಾಡಿ ಟ್ರಯಲ್‌ಗೆ ತೆಗೆದುಕೊಡು ಹೋದ. ವೇಗದಿಂದ ಮುನ್ನುಗ್ಗುತ್ತಾ ಹೋದ, ಗಾಡಿ ಕಣ್ಮರೆಯಾಗುವವರೆಗೆ ನೋಡುತ್ತಾ ನಿಂತಿದ್ದೆ. ಏನನ್ನೋ ಸಾಧಿಸಿದ ತೃಪ್ತಿ ಇತ್ತು. +ಟ್ರಯಲ್‌ನಿಂದ ಹಿಂತಿರುಗಿದ ಅವನಲ್ಲೂ ಅದೇ ತೃಪ್ತಿ ಇತ್ತು. +ನಾನು ಗಾಡಿ ತೆಗೆದುಕೊಂಡು ಹೊರಟಾಗ ಅವನಿಗೆ ಡಾಕ್ಟರ್ ಬಳಿ ಹೋಗಲು ಮತ್ತೊಮ್ಮೆ ಸೂಚಿಸುವುದನ್ನು ಮರೆಯಲಿಲ್ಲ. +* +* +* +ಎಡಕ್ಕೆ ಬಗ್ಗಿಸಿ, ಬಲಕ್ಕೆ ಬಾಗಿಸಿ, ನುಗ್ಗಿಸಿ ಒಂದಷ್ಟು ಗಾಡಿಗಳನ್ನು ಹಿಂದಕ್ಕೆ ಹಾಕುವ ಹೊಸ ವೇಗದಲ್ಲಿ ಮೈ ಮರೆತು , ಸುಖದಲ್ಲಿದ್ದೆ. ಆಚೀಚಿನ ಬಗ್ಗೆ ಪ್ರಜ್ಞೆಯನ್ನೇ ಕಳೆದು ಕೊಂಡಿದ್ದೆ. +ಗಾಡಿಗೂ ನನಗೂ ಹೊಸತೆ ಆದ ಜನ್ಮ ಸಿಕ್ಕಂತಾಗಿತ್ತು. ಸುಮಾರು ಒಂದು ತಿಂಗಳು ಶಿವಾನನ್ನು ನೋಡುವ ಅವಕಾಶವೇ ಆಗಲಿಲ್ಲ. ಸಂದರ್ಭವೂ ದೊರೆಯಲಿಲ್ಲ. +ಒಂದುದಿನ ಅವನ ವರ್ಕ್‌ಶಾಪ್ ಬಳಿ ಹೋದೆ. ನಿರಿಕ್ಷಿಸಿಯೇ ಇರಲಿಲ್ಲ. ಕುರ್ಚಿ ಮೇಲೆ ಸಪ್ಪಗೆ ಕುಳಿತಿದ್ದ. ಬಲಗಾಲು ಇರಲೇ ಇಲ್ಲ! ಏನಾಯ್ತೆಂದು ಕೇಳಲು ಬಾಯೇ ಬರಲಿಲ್ಲ. ಆದರೂ ಕೇಳಿದಾಗ: +“ಹದಿನೈದು ದಿನದಾಗೆ ನೀವು ಹೇಳ್ದ ಹಾಗೇನೆ ಆಸ್ಪತ್ರೆಗೆ ಹೋದೆ. ಅಡ್ಮಿಟ್ ಮಾಡ್ಕೊಂಡ್ರು. ಅದೆಂತದೋ ಗ್ಯಾಂಗ್‌ಇನೊ ಪಾಂಗ್ರೀನೊ ಆಗಿದೆ, ಕತ್ತರಿಸಬೇಕೂಂದ್ರು- ಕತ್ತರಿಸಿದ್ರು. ಇವತ್ತೇನೆ ಬಂದಿದ್ದು. ಬಂದೋನು ಇಲ್ಲಿಗೆ ಬಂದ್ಬಿಟ್ಟೆ. ನನ್ನ ತಮ್ಮ ಸೈಕಲ್ ಕ್ಯಾರಿಯರ್ ಮೇಲೆ ಕರಕೊಂಡು ಬಂದು ಬಿಟ್ಟುಹೋದ. ಎರಡು ಮೂರು ಸಾರ್ತಿ ನಿಮ್ಮ ಆಫೀಸಿಗೆ ಫೋನ್ ಮಾಡ್ಸಿದ್ದೆ, ಸೀಟಲ್ಲಿರಲಿಲ್ಲಾಂದ್ರಂತೆ. . .” +– ಅವನು, ಹೇಳುವುದನ್ನು ತಲೆ ತಗ್ಗಿಸಿ ಕೇಳಿಸಿಕೊಳ್ಳುತ್ತಿದ್ದ ನಾನು ಅವನ ಕಣ್ಣಲ್ಲಿ ನೀರಿದ್ದಾತು ಎಂದು ನೋಡಿದೆ. ನೀರಿರಲಿಲ್ಲ. ಬದಲಿಗೆ ಮಿನುಗುತ್ತಿದ್ದವು. +* +* +* +ಮತ್ತೆ ಅವನನ್ನು ನೋಡುವುದು ಒಂದು ವಾರವೇ ಆಯ್ತು. ಅಂಗಡಿ ಬೀದಿಯ ಅವರ ಬೋಂಡಾ ಅಂಗಡಿ ಮುಂದೆ ನೋಡಿದೊಡನೆಯೇ ಕೇಳಿದ- +“ಏನ್ಸಾರ್, ನಡ್ಕೊಂಡು ಬರ್ತಿದೀರ. . ?” +“ಗಾಡಿ ಮಾರ್ಬಿಟ್ಟೆ ಕಣೋ. . . .” ಅವನಿಗೆ ಅರ್ಥವಾಗಿತ್ತು. ಕಣ್ಣಲ್ಲಿ ನೂರ್ಮಡಿ ಬೆಳಕು ತೋರಿದ. +“ಎಷ್ಟಕ್ಕೆ ಮಾರಿದ್ರಿ ಸಾರ್?” +“ಒಂದೂ ಕಾಲು ಸಾವಿರಕ್ಕೆ. .” +“ನನಗೆ ಹೇಳಿದ್ದಿದ್ರೆ ಮೂರು ಸಾವಿರನಾದ್ರು ಕೊಡಿಸ್ತಿದ್‌ನಲ್ಲ ಸಾರ್. . . ” +“ಹೋಗಲಿ ಬಿಡೋ, ನನ್ನ ಸ್ನೇಹಿತನಿಗೆ ಮಾರಿದ್ದು. ” +“ವರ್ಕ್‌ಶಾಪನ್ನೂ ಮಾರಿಬಿಟ್ಟೆ ಸಾರ್“- ನನಗೂ ಅರ್ಥವಾಯಿತು! +ಒಂದು ರೂಪಾಯಿಗೆ ಬೋಂಡಾ ವಡೆ ಕಟ್ಟಿಸಿಕೊಂಡು ಬಿಸಿ ಬಿಸಿ ಇದ್ದ ಅವನ್ನು ತಿನ್ನುತ್ತಾ- ಎಷ್ಟು ಬೇಗ ಚಕಚಕ ಬೋಂಡಾ ವಡೆ ಹಾಕುತ್ತಿದ್ದಾನೆ- ಇವನೇನು ಬೋಂಡಾ ವಡೆ ಬೇಯಿಸುತ್ತಲೇ ಹುಟ್ಟಿದನೋ ಎಂಬ ಸೋಜಿಗ ಪಡುತ್ತ ಬೆಚ್ಚಗೆ ಕುಳಿತಿದ್ದೆ. +ಬಸ್ಸು ಬಂತು. ವಿಪರೀತ ಜನ ಗಮನಿಸಿ ನಾನೂ ಚಕಚಕ ಎದ್ದು ಫುಟ್ ಬೋರ್ಡಿಗೆ ಜೋತುಬೀಳುತ್ತ ಎಷ್ಟು ಬೇಗ ಯಾವುದೇ ಬೇಸರವಿಲ್ಲದೆ, ಜಿಗುಪ್ಸೆ ಇಲ್ಲದೆ ಈ ಜನಸಂದಣಿ ಮಧ್ಯೆ ಬಸ್ಸಿನಲ್ಲಿ ಜಾಗ ದಕ್ಕಿಸಿಕೊಂಡೆ ಎಂದು ಆಶ್ಚರ್ಯವಾಗುತ್ತಿದ್ದಂತೆಯೆ ಶಿವಾನನ್ನು ನೋಡಿ ಕೂಗೊಕೊಂಡೆ- +“ಬರ್ತೀನೊ ಶಿವಾ, ಸಿಕ್ತೀನಿ. . .” +ಇನ್ನೊಂದು ಆಶ್ಚರ್ಯವೆಂದರೆ ಇವೆಲ್ಲಾ ತಾರ್ಕಿಕವೆ? ಗೊತ್ತಿಲ್ಲ! +***** +ಸುದ್ಧಿಸಂಗಾತಿ ವಾರಪತ್ರಿಕೆಯಲ್ಲಿ ಪ್ರಕಟ- ಡಿಸೆಂಬರ್ ೧೯೯೧. +ಇನ್ನೂ ಕತ್ತಲು ಕತ್ತಲು ಎನ್ನುವಾಗ ನಾನು ಎದ್ದು ಕಣ್ಣುಜ್ಜಿಕೊಳ್ಳುತ್ತ ಅಂಗಳಕ್ಕೆ ಬಂದು ನೋಡಿದರೆ ಕೈಯ್ಯಲ್ಲೊಂದು ಗಂಟು ಹಿಡಿದು ಶೇಷಗಿರಿ ಉಡುಪರು ಹೊರಟು ನಿಂತಿದ್ದರು. ನನ್ನನ್ನು ನೋಡಿ “ಕುಡುಮಲ್ಲಿಗೆಗೆ ಹೋದವನು ನಿನ್ನ ಅಪ್ಪಯ್ಯ ಅಮ್ಮನನ್ನು ನೋಡುತ್ತೇನೋ” […] +ಮುತ್ತಣ್ಣನ ಪುಟ್ಟ ಕುಲುಮೆ ಮನೆ ರಗರಗ ಹೊಳೆವ ಬೆಂಕಿಯ ನಡುವೆ ಕಾರ್ಖಾನೆಯಂತೆ ಏರ್ಪಟ್ಟು ಅವನ ಸುತ್ತ ಕುಡಲುಗಳು ರಾಶಿಯಾಗಿ ಹಾಸಿಕೊಂಡಿದ್ದವು. ಢಣಾರ್ ಢಣಾರ್ ಎಂಬ ಸುತ್ತಿಗೆ ಲಯವೂ; ಕಾಯ್ದ ಅಲಗು ನೀರಲ್ಲಿಳಿಸಿದಂತೆ ಚೊರ್ರ್ ಎನ್ನುವ […] +೧ ಸಾಕವ್ವನ ನಾಕು ಕಂಬದ ತೊಟ್ಟಿ ಹಟ್ಟಿ ಅನ್ನೋದು ದೇಹವ ಭೂಮಿಗೆ ಇಳಿಬಿಟ್ಟು ಹಂಚು ಹುಲ್ಲು ತೆಂಗಿನಗರಿಯ ಅರರೆ ಮುಸುಡಿ ಮಾಡಿಕೊಂಡು ನಿಂತಿತ್ತು. ಆ ಹಟ್ಟೀಲಿ ಯಜಮಾನಿ ಸಾಕವ್ವ ಮೂಗಿನ ತುದೀಲಿ ಬಿಂಕಿಕೆಂಡ ಇಟುಗೊಂಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_151.txt b/Kannada Sahitya/article_151.txt new file mode 100644 index 0000000000000000000000000000000000000000..4157a02809c55bc334a4c5caa6550a006a59dd8f --- /dev/null +++ b/Kannada Sahitya/article_151.txt @@ -0,0 +1,66 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಏ ಸುಶೀಲಾ, ಇನ್ನೂ ನಿದ್ದೆ ಬಂದಿಲ್ಲೇನು? ಎಷ್ಟು ಹೊತ್ತದು? ಏನದು ಓದೋದು? ಹುಂ ನೋಡದ, ಹನ್ನೊಂದಾಗಿ ಹೋತು! ಮಲಕೊಳ್ಳ ಬಾ ಸುಮ್ನೆ” +ಶಾಮನ ಧ್ವನಿಯಲ್ಲಿ ಬೇಸರದ ಛಾಯೆ ಎದ್ದು ಕಾಣಿಸುತ್ತಿತ್ತು. ಸುಶೀಲೆಗೆ ಉತ್ತರ ಕೊಡಬಾರದೆಂದೆನಿಸಿತು. ಓದುವ ನಟನೆ ಮಾಡುತ್ತಿದ್ದ ಅವಳ ಕಣ್ಣುಗಳು ಕಿಡಕಿಯ ಹೊರಗಿನ ಕತ್ತಲೆಯೆಡೆಗೆ ಹೊರಳಿದವು. ಹಣೆ ಗಂಟಿಕ್ಕಿಕೊಂಡಿತು. ಹೊರಗಿನ ಗುಡುಗಿನ ಸಪ್ಪಳದೊಡನೆ ಥಟ್ಟನೆ ಅವಳಿಂದ ದನಿ ಹೊರಟಿತು. +“ಇನ್ನೂ ನಿದ್ದೆ ಬಂದಿಲ್ಲ ನನಗೆ. ನೀವು ಸುಮ್ಮನೆ ಮಲಕೊಳ್ಳಿರಿ ನೋಡೋಣ. ನನಗೆ ನಿದ್ದೆ ಬಂದಾಗ ನಾನು ಮಲಕೊಳ್ಳತೀನಿ. ನನ್ನ ಕಾಳಜಿ ಬೇಡ ನಿಮಗ.” +ಒಂದು ಬಗೆಯ ಕಾಠಿಣ್ಯ ಆ ಧ್ವನಿಯಲ್ಲಿ ಹೆಣಕಿ ಹಾಕುತ್ತಿತ್ತು. ಶ್ಯಾಮನಿಗೆ ಅದರ ಅರಿವಾಯಿತೋ ಇಲ್ಲವೋ, ಆತ ಅವಳೆಡೆಗೆ ಒಂದು ತೀಕ್ಷ್ಣವಾದ ನೋಟ ಬೀರಿ, ಮುಖ ಕಿವುಚಿ, ಮಗ್ಗಲು ಹೊರಳಿಸಿ ಮಲಗಿದ. ಮಗ್ಗಲು ಹೊರಳಿಸಿವಾಗ ಆದ ಸಣ್ಣ ಸದ್ದನ್ನು ಕೇಳಿ ಸುಶೀಲೆ ಅತ್ತ ದೃಷ್ಟಿ ಹೊರಳಿಸಿದಳು. ಅವಳ ದೃಷ್ಟಿಯಲ್ಲಿ ತಿರಸ್ಕಾರದ ಕಹಿ ಬೆರೆತಿತ್ತು. ಒಮ್ಮೆಲೆ ಅವಳ ತಲೆಯ ಮೂಲೆಯೊಂದರಲ್ಲಿ ಒಂದು ವಿಚಾರ ಮಿಂಚಾಡಿತು. +‘ಈಗಲೇ ಹೋಗಿ ಇವನ ಬೆನ್ನಲ್ಲಿ ಚಾಕುವಿನಿಂದ ಇರಿದರೆ ಹೇಗೆ?’ +ಬೆಚ್ಚಿ ಬಿದ್ದಳು ಸುಶೀಲೆ, ಅವಳ ವಿಚಾರದ ಮೊನೆ ಅವಳಿಗೇ ತಿವಿದಂತೆ! ‘ಅಯ್ಯೋ, ನನ್ನ ತಲೆಯಲ್ಲಿ ಇಂಥ ಕೆಟ್ಟ ಕೆಟ್ಟ ವಿಚಾರಗಳೇಕೆ ಬರುತ್ತಿವೆ ಇಂದು!’ ಮರಳಿ ಕಿಡಕಿಯ ಹೊರಗೆ ದೃಷ್ಟಿ ನೆಲೆಸಿದಳು. ಹೊರಗೆ ಸಣ್ಣಾಗಿ ಮಳೆ ಬೀಳುತ್ತಲೇ ಇತ್ತು. ಆದಿನ ಮುಂಜಾನೆ ಪ್ರಾರಂಭವಾದ ಮಳೆ ರಾತ್ರೆಯಾದರೂ ನಿಂತಿರಲಿಲ್ಲ. ಆಗಾಗ್ಗೆ ಝಗ್ಗೆನ್ನುವ ಮಿಂಚಿನಾಟ ರುದ್ರರಮ್ಯವಾಗಿ ತೋರಿತು ಸುಶೀಲೆಗೆ. ‘ಇಲ್ಲ, ನಾನೇ ಓಡಿಹೋಗಬೇಕು-ಈ ಮನೆಯಿಂದ ದೂರ, ಹೊರಗೆ-ಮಳೆಯಲ್ಲಿ, ಮಿಂಚಿನ ಬೆಳಕಿನಲ್ಲಿ, ಕತ್ತಲಲ್ಲಿ, ಅಲ್ಲಿ ಸಿಡಿಲಿನ ಹೊಡೆತಕ್ಕೆ ಸಿಕ್ಕು ಸಾಯಬೇಕು, ಎಂಥ ಹುಚ್ಚು ವಿಚಾರಗಳು. ಅಯ್ಯೋ, ಈ ಮಿದುಳುಯಂತ್ರ ಹೇಗೆ ನಿಲ್ಲಿಸಲಿ?’-ಕೂಡಲೇ ಟೇಬಲ್ ಮೇಲಿನ ಮಾಸಿಕವನ್ನೆತ್ತಿಕೊಂಡು ಅದರ ಹಾಳಿಗಳನ್ನು ಭರಭರನೆ ತಿರುವತೊಡಗಿದಳು. ದೃಢನಿಶ್ಚಯದಿಂದ ಒಂದು ಕತೆ ಓದಲು ಪ್ರಾರಂಭಿಸಿದಳು. ಅದರ ತಲೆ ಬರಹ ಅವಳಿಗೆ ಸೇರಲಿಲ್ಲ. ‘ಪ್ರೇಮದಾಹ’… ‘ಸುಟ್ಟು ಬರಲಿ ಈ ಪ್ರೇಮಕ್ಕೆ!’ ಆದರೂ ಬೆರಳು ಮುಂದಿನ ಹಾಳಿಗಳನ್ನು ಅರ್ಧ ಎತ್ತಿದ್ದರೂ ಕಣ್ಣು ಆ ಕತೆಯನ್ನು ಓದಲು ತೊಡಗಿದ್ದವು. ಅದರ ಪ್ರಾರಂಭ ಓದಿ ಅವಳಿಗೆ ಸಿಟ್ಟು ಬಂದಿತು. ಅದರಲ್ಲಿ ಒಂದು ಸಂಜೆಯ ವರ್ಣನೆ ಇತ್ತು, ತೀರ ಕಾವ್ಯಮಯವಾದದ್ದು. ಆ ದಿವ್ಯ ಸಂಜೆಯ ಭವ್ಯ ವಾತಾವರಣದಲ್ಲಿ ಒಂದು ಪ್ರೇಮಿಯುಗಲ, ಪ್ರೇಮ, ಸರ್ಯ, ಜೀವನ, ಅನಂತತೆ ಎಂದೇನೋ ಕಾವ್ಯ ಮಯವಾಗಿ ಮಾತನಾಡುತ್ತಿತ್ತು. ಅದರ ರಸಭರಿತ ವರ್ಣನೆ ಸುಶೀಲೆಗೆ ಕೃತಕವೆನಿಸಿತು. ‘ಇಂಥ ಅಸಹ್ಯ ವರ್ಣನೆಯಿಲ್ಲದೆ ಇವರಿಗೆ ಕತೆ ಬರೆಯಲು ಬರುವುದಿಲ್ಲವೇನೋ?’ ಎಂಬ ಯೋಚನೆಯ ಜೊತೆಗೆ ಅವಳ ಬೆರಳುಗಳು ಆ ಪುಟವನ್ನು ತಿರುಗಿಸಿದವು. ಓದುವುದೇ ಬೇಡವೆನಿಸಿತು. ಮತ್ತೆ ಕಿಡಕಿಯ ಹೊರಗೆ ದೃಷ್ಟಿಹೋಯಿತು. ಕತ್ತಲೆಯಲ್ಲಿಯ ಮಳೆ ಅವಳಿಗೆ ತನ್ನ ಮನಸ್ಸಿನ ಪ್ರತಿಬಿಂಬದಂತೆ ತೋರಿರಬೇಕು! ಅಷ್ಟರಲ್ಲಿ ಒಂದು ಮಿಂಚು ಬೆಳಕು ಬೀರಿ ಸರ್ರನೆ ಮಾಯವಾಯಿತು. +‘ಅವನೆಲ್ಲಿರಬಹುದು? ಪುಣೆಯಲ್ಲಿಯ ಯಾವುದೋ ಕಾಲೇಜಿನಲ್ಲಿ ಪ್ರಾಧ್ಯಾಪಕನತೆ.’ ಅವಳ ಕಣ್ಣೆದುರಿಗೆ ತಾನು ಹಿಂದೆ ಮನಸ್ಸಿನಲ್ಲಿ ಆಗಾಗ್ಗೆ ಕಟ್ಟಿದ ಒಂದು ಕನಸು-ಚಿತ್ರ ಬಂದು ನಿಂತಿತು. +ಶ್ರೀಧರ ಟೇಬಲ್ ಹತ್ತಿರ ನಿಂತು ಎಫ್.ವಾಯ್.ಕ್ಲಾಸಿಗೆ ಇಂಗ್ಲೀಷು ಕಲಿಸುತ್ತಿದ್ದಾನೆ. ಯಾವುದೋ ಒಂದು ಕವಿತೆಯನ್ನು ಓದಿ ಅದರ ಅರ್ಥವನ್ನು ರಸಭರಿತವಾಗಿ ಹೇಳುತ್ತಿದ್ದಾನೆ. ತಾನು ಸುಶೀಲೆ ಕೌತುಕದಿಂದ ಆತನೆಡೆಗೆ ನಿಟ್ಟಿಸುತ್ತಿದ್ದಾಳೆ. ಶ್ರೀಧರನ ದೃಷ್ಟಿ ಮೇಲಿಂದ ಮೇಲೆ ಅವಳೆಡೆಗೆ ಹೊರಳುತ್ತದೆ. ಅ ದೃಷ್ಟಿಗೆ ಉತ್ತರವೆಂದು ಅವಳು ಮಂದಸ್ಮಿತ ಬೀರುತ್ತಾಳೆ. +ಆ ಚಿತ್ರದ ಬೆಂಬತ್ತಿ ಇನ್ನೂ ಎಷ್ಟೋ ತುಣುಕು ಕನಸುಗಳು ಮಸುಮಸುಕಾಗಿ ಜಾರಿ ಹೋದವು. ಅಷ್ಟರಲ್ಲಿ ಶ್ಯಾಮನ ಗೊರಕೆ ಕೇಳಿಬಂತು. ಸುಶೀಲೆಯ ಕಣ್ಣುಗಳಲ್ಲಿ ನೀರಿನ ಪರದೆಯೊಂದು ತೂರಿ ಬಂತು. +ಇನ್ನೇಕ ಆ ಕನಸುಗಳು? ತನ್ನ ಬಾಳು ಇಲ್ಲಿ ಹುದುಗಿದಾಗ, ಇಲ್ಲಿಂದ ಬಿಡುಗಡೆಯ ದಾರಿಯೇ ಇಲ್ಲದಾಗ ಇನ್ನೇಕೆ ಆ ಕನಸುಗಳು? +ಮರಳಿ ಕೈಯಲ್ಲಿಯ ಮಾಸಿಕ ಪುಟಗಳನ್ನು ತಿರುವಹತ್ತಿದಳು. ಒಂದು ವ್ಯಂಗ್ಯಚಿತ್ರ ಕಣ್ಣಿಗೆ ಬಿತ್ತು. ಒಂದು ಗಾರ್ಡನ್ ಬೆಂಚಿನಮೇಲೆ ಒಂದು ತುದಿಗೆ ಒಂದು ಹೆಣ್ಣು, ಮತ್ತೊಂದು ತುದಿಗೆ ಒಂದು ಗಂಡು, ಆ ಹೆಣ್ಣು ಒಂದು ನಾಯಿಯ ಕುನ್ನಿಗೆ ಮುದ್ದು ಕೊಡುತ್ತಿರುವುದನ್ನು ಆ ಗಂಡು ಆಯೆಂದು ಬಾಯಿ ಬಿಟ್ಟು ತುದಿಗಣ್ಣಿನಿಂದ ನೋಡುತ್ತಿದ್ದಾನೆ. +ಸುಶೀಲೆಯ ಮೊಗದ ಮೇಲೆ ಹುಚ್ಚು ನಗೆ ಮೂಡಿಬಂತು. ಮಲಗಿದ ಗಂಡನ ಕಡೆಗೊಮ್ಮೆ ನೋಡಿದಳು. ಅವಳ ನೋಟದಲ್ಲಿ ತಿರಸ್ಕಾರದ ಅಲಗು ಮಿಂಚುತ್ತಿತ್ತು. ‘ಈತನಿಗೆ ಅಂದು ನಾನು ಮುದ್ದು ಕೊಟ್ಟೆ. ಮುದ್ದು ಕೊಟ್ಟು ದಾಸಿಯಾದೆ. ನನ್ನ ಹೃದಯವನ್ನು ಸುಟ್ಟು ಬೂದಿ ಮಾಡಿದೆ. ಅಯ್ಯೋ, ನನ್ನ ಹಾಳು ದೈವ! ಒಂದು ತಪ್ಪು ಮುಚ್ಚಲು ಇನ್ನೊಂದು ತಪ್ಪು! ನನ್ನನ್ನು ನಾನೇ ಕೊಂದೆ!’ +ಅವಳ ಕಣ್ಣೆದುರಿಗೆ, ಹಿಂದೆ ಯಾವುದೋ ಚಿತ್ರಪಟದಲ್ಲಿ, ತನ್ನ ಎದೆಯಲ್ಲಿ ತಾನೇ ಚೂರಿ ಚುಚ್ಚುಕೊಂಡು, ರಕ್ತದ ಮಡುವಿನಲ್ಲಿ ಬಿದ್ದ ನರ್ಗೀಸಳ ಚಿತ್ರ ಹಾಯ್ದುಹೋಯಿತು. ಅದರಿಂದ ಒಂದು ಬಗೆಯ ವಿಲಕ್ಷಣ ಭಾವನೆಯಿಂದ ಅವಳ ಮೈ ಜುಮ್ಮೆಂದಿತು. ಹಿಂದೊಂದು ಸಲ ಶ್ರೀಧರನು, ‘ಇಂದೇ ಇದೇ ಗಳಿಗೆಗೆ, ಇದೇ ನಿಮಿಷಕ್ಕೆ ನನ್ನ ಪ್ರಾಣ ಹಾರಿ ಹೋದರೆ ಎಷ್ಟು ಚನ್ನು!’ ಎಂದು ಹೇಳಿ ಅವಳ ತುಟಿಗೆ ತುಟಿಯೊತ್ತಿದ ರಸನಿಮಿಷದ ನೆನಪಾಯಿತು….. +ಆ ನೆನಪಿನ ಅನುಭವದೊಂದಿಗೆ ಇನ್ನೊಂದು ಭಾವನೆ ಮನದೆದುರು ಬಂದಿತು-‘ಶ್ರೀಧರನು ನಿಜವಾಗಿ ನನ್ನನ್ನು ಪ್ರೀತಿಸುತ್ತಿದ್ದಿಲ್ಲ…ಇಲ್ಲಿ ಸೂಟಿಗೆ ಬಂದಾಗ ವೇಳೆ ಕಳಿಯಲು ನನ್ನೊಡನೆ ಚಲ್ಲಾಟವಾಡುತ್ತಿದ್ದ… ಅವನು ಎಂದೂ ಅಷ್ಟೊಂದು ಆಸ್ಥೆಯಿಂದ ಮನಬಿಚ್ಚಿ ಮಾತನಾಡದೆ ಬರಿಯ ಒಣ ನಗೆನಾಚಿಕೆಯಲ್ಲಿಯೇ ಕಾಲ ಕಳೆಯುತ್ತಿದ್ದ…ಆತನ ಮುಖದಲ್ಲಿ ಎಂಥ ಮೋಹಕತೆ ಇತ್ತು!… ನನ್ನನ್ನೆಂದಿಗೂ ಮೋಸ ಮಾಡಲಾರ ಎಂದು ಬಗೆದಿದ್ದೆ. ಆದರೆ ಅವನದೇನು ತಪ್ಪು? ನಾನಾಗಿಯೇ ಅವನನ್ನು ಬಲೆಯಲ್ಲಿ ಹಾಕಲು ಯತ್ನಿಸಿದೆ. ಎಲ್ಲ ನನ್ನದೇ ತಪ್ಪು! ಅಯ್ಯೋ ಅವಲ ಸಲುವಾಗಿ ಏನು ಬೇಕಾದರೂ ಮಾಡಲು ಸಿದ್ಧಳಿದ್ದೆ. ಅವನೊಡನೆ ಎಲ್ಲಿ ಬೇಕಲ್ಲಿ ಹೋಗಲು ಸಿದ್ಧಳಿದ್ದೆ-ಮಳೆಯಲ್ಲಿ, ಮಿಂಚಿನ ಬೆಳಕಿನಲ್ಲಿ, ಕತ್ತಲ್ಲಲ್ಲಿ.’ +ಮಳೆಯ ಜೋರು ಕೊಂಚ ಹೆಚ್ಚಾಗಿತ್ತು. ಗಾಳಿಯೂ ಭರ್ರನೆ ಬೀಸುತ್ತಿತ್ತು. ಕಿಡಕಿಯ ಬಾಗಿಲು ಧಡ್ಡನೆ ಮುಚ್ಚಿ ತೆರೆಯಿತು. ಎದ್ದು ಹೋಗಿ ಅದನ್ನು ಮುಚ್ಚಿ ಬಂದಳು. ಬರುವಾಗ ಕಪಾಟಿನಲ್ಲಿಟ್ಟ ಶ್ರೀಧರನ ಅಂದೇ ಬಂದ ಪತ್ರವನ್ನು ಮತ್ತೊಮ್ಮೆ ಓದಬೇಕೆನಿಸಿತು. ‘ಶ್ರೀಧರನಿಗೆ ದುಂಬಾಲು ಬಿದ್ದು ಬೇಡಿಕೊಂಡಿದ್ದರೆ, ಅಥವಾ ಹಾಂ, ಬೆದರಿಕೆ ಹಾಕಿದ್ದರೆ, ಅವನು ಒಪ್ಪಬಹುದಾಗಿತ್ತೇನೋ… ಆದರೆ ನನ್ನ ಸ್ವಾಭಿಮಾನ… ನನ್ನನ್ನು ಮೋಸಗಾರ್ತಿ ಎಂದು ಆತ ನನ್ನ ಜೀವವಿರುವತನಕ ದೂಷಿಸದೆ ಬಿಡುತ್ತಿದ್ದಿಲ್ಲ… ಆದದ್ದು ಒಳ್ಳೆಯದಕ್ಕೆ ಆಗಿದೆಯೇನೋ!’ ಕಪಾಟಿನ ಮೂಲೆಯಲ್ಲಿಯ ಹರಕು ಪುಸ್ತಕವೊಂದರಲ್ಲಿ ತುರುಕಿದ ಆ ಪತ್ರವನ್ನು ತರಲು ಮೆಲ್ಲನೆ ಎದ್ದಳು. ಶ್ಯಾಮ ಇನ್ನೂ ಗೊರಕೆ ಹೊಡೆಯುತ್ತಲೇ ಇದ್ದ. ಅವನ ಮೇಲಿನ ಚಾದರ ಅಸ್ತವ್ಯಸ್ತವಾಗಿ ಅವನ ಕಾಲ್ಕೆಳಗೆ ಹೋಗಿ ಬಿದ್ದಿದ್ದಿತು. +‘ಇಂದು ಅಲ್ಲಿ ಶ್ರೀಧರನಿದ್ದಿದ್ದರೆ ಆ ಚಾದರವನ್ನು ನಯವಾಗಿ ಪ್ರೀತಿಯಿಂದ ಅವನ ಮೈಮೇಲೆ ಹೊದ್ದಿಸುತ್ತಿದ್ದೆನಲ್ಲವೇ? ಹೊದ್ದಿಸುವಾಗ ಆತ ಒಮ್ಮೆಲೆ ಎಚ್ಚರಾಗಿ ನನ್ನನ್ನು ನೋಡಿ, ಸರ್ರನೆ ಜಗ್ಗಿ, ನನ್ನನ್ನು….ಮತ್ತೆ ಹಾಳು ಕನಸು!’ +ಕಪಾಟಿನ ಬಾಗಿಲು ತೆರೆಯುವಾಗ ಸಪ್ಪಳಕ್ಕೆ ಗೊರಕೆ ಒಮ್ಮೆಲೆ ನಿಂತಿತು. ಸುಶೀಲೆ ಹಿಂದಿರುಗಿ ನೋಡಿ ಶ್ಯಾಮ ಎಚ್ಚೆತ್ತಿದ್ದ. +“ಏನೇ, ಎಷ್ಟು ಹೊತ್ತದು? ದೀಪಿದ್ದರ ನನಗ ನಿದ್ದೀನ ಛಲೋ ಹತ್ತೋದಿಲ್ಲ. ಮಲಕೊಳ್ಳಬಾರದ?… ಅಯ್ಯೊ, ಇನ್ನೂ ಕಪಾಟಿನಲ್ಲಿಯ ಪುಸ್ತಕ ಬ್ಯಾರೆ ಓದಬೇಕ?” ಎಂದು ಗೊಣಗುಟ್ಟಿದ ಸುಶೀಲೆ ತುಡುಗಿಯಂತೆ ಅಲ್ಲಿಯೇ ಸ್ತಂಭಿತಳಾಗಿ ನಿಂತಳು. ಅಷ್ಟರಲ್ಲಿ ಶ್ಯಾಮ ಸಂಪೂರ್ಣ ಎಚ್ಚೆತ್ತಿದ್ದ. ಎದ್ದು ಕುಳಿತ. +“ಕಾಲೇಜಿಗೆ ಹೋದರ ಎಷ್ಟು ಓದುತ್ತಿದ್ದಿಯೋ ಏನೋ? ಛಲೋ ಸ್ಕಾಲರಳಾಗಿ ಬಿಡತ್ತಿದ್ದಿಯಂತ ಕಣಿಸ್ತದ… ಹುಂ, ಸಾಕು ನಿನ್ನ ಓದು. ಬಂದಬೀಳಬಾರದ! ಓದಿಯಂತ-ನಾಳೆ!”… ಸಿಟ್ಟಿನ ಮೊನೆ ಆ ಮಾತಿನಲ್ಲಿ ಸ್ಪಷ್ಟವಾಗಿ ಕಾಣುತಿತ್ತು. +ಸುಶೀಲಳಿಗೂ ಮನೆ ಬಿಟ್ಟು ಓಡಿ ಹೋಗುವಷ್ಟು ಸಿಟ್ಟು ಬಂತು. ಕಪಾಟಿನ ಬಾಗಿಲನ್ನು ಧಡಕ್ಕನೆ ಮುಚ್ಚಿ ಜೋರಿನಿಂದ ಒದರಿದಳು: +“ಹೌದು, ನಾನೇನು ಕಾಲೇಜಿಗೆ ಹೋಗದೆ ಬಿಡತಿದ್ನೇನು? ನಿಮ್ಮನ್ನ ಕಟ್ಟಿಕೊಂಡು ಈ ಮೂಲೆಯಲ್ಲಿ ಕೊಳೀಬೇಕಾಗೇದ. ಈಗ ಅದೆಲ್ಲ ಬೇಡ. ಸುಮ್ನ ಮಲಕೊಳ್ಳಿರಿ ನೋಡೋಣೀಗ.” +“ಆಹ! ಹಾಂಗಾರ ನನ್ಯಾಕ ಲಗ್ನವಾದಿ?” ಕೆಣಕುವ ಧ್ವನಿಯಲ್ಲಿ ಶಾಮ ಕೇಳಿದ. +“ನಾಚಿಕೆ ಬರೋದಿಲ್ಲ ಕೇಳಾಕ? ಮಾಡೋದೆಲ್ಲ ಮಾಡಿ ಹ್ಯಾಂಗ ಕೇಳತಾರ ನೋಡ ಮತ್ತ?” +“ನಾಚಿಕ್ಯಾತರದು? ನಾ ಬೆನ್ನಹತ್ತಿದರೇನಾತು? ನೀನ ನನ್ನ ಕರೆಗೆ ಹುಂ ಅನ್ನಲಿಲ್ಲೇನು? ನಾನೇನು ಮೋಸಗೊಳಿಸಿದೆನೇನು? ಮಾಡಿದ ತಪ್ಪಿಗೆ ಲಗ್ನ ಆಗಾಕ ನಾನೇನು ಹಿಂಜರಿದ್ನೇನು? ನೀನ ಹೇಳು.” +ಸುಶೀಲೆಗೆ ಸಿಟ್ಟು ಉಕ್ಕೇರಿ ಬಂತು. ಎಷ್ಟೋ ದಿನಗಳಿಂದ ಹತ್ತಿಕ್ಕಿ ಇಟ್ಟ ಅವಳ ಕುದಿ ಹೊರಬಂತು. +“ನಾನಾಗಿಯೇ ಓ ಗೊಟ್ಟೆನೇ? ಅಯ್ಯೊ ಯಾವ ಬಾಯಿಂದ ಮಾತಾಡ್ತೀರಿ…ನನ್ನ ಅಜ್ಞಾನದ, ನನ್ನ ಕುತೂಹಲದ, ನನ್ನ ಮನಸ್ಸು ದುರ್ಬಲವಾದ ಕ್ಷಣದ ಲಾಭ ನೀವು ತೆಗೆದುಕೊಂಡು, ನನ್ನನ್ನು ಮೋಸ… ಅಲ್ಲ, ನನ್ನನ್ನು ಕೊಂದಿರಿ; ನನ್ನ ಹೃದಯಕ್ಕೇ ಬೆಂಕಿ ಹಚ್ಚಿದಿರಿ.” +ಶ್ಯಾಮನಿಗೆ ಸುಶೀಲಳ ಮಾತು ಹುಚ್ಚತನವೆಂದು ತೋರಿತು. ಒಮ್ಮೆಲೆ ಫಕ್ಕನೆ ನಕ್ಕುಬಿಟ್ಟ. ಸುಶೀಲೆಗೆ ಅವನ ಮುಖದ ಮೇಲೆ ಉಗಳಬೇಕೆನ್ನುವಷ್ಟು ತಿರಸ್ಕಾರವುಂಟಾಯಿತು. ಅವಳು ತುಟಿಕಚ್ಚಿ ಸುಮ್ಮನೆ ಸಿಂತುದನ್ನು ನೋಡಿ, ಕನಿಕರದಿಂದ ಅವಳನ್ನು ಸಂತೈಸುವವನಂತೆ ಶ್ಯಾಮ ಮಾತನಾಡತೊಡಗಿದ. +“ಆದದ್ದಾಯಿತು. ಇನ್ನೇನು ಮಾಡಲಿಕ್ಕಾಗುತ್ತದೆ? ನಿನ್ನನ್ನು ನಾನು ಪ್ರೀತಿಸೋದಿಲ್ಲಂತ ಎಲಿ ಹೇಳೀನಿ…?… ಬಾ.” +ಸುಶೀಲೆ ಸಿಡಿದು ಬಿದ್ದಳು. “ನಿಮ್ಮ ಪ್ರೀತಿಗೆ ಬೆಂಕಿ ಹತ್ತಿತು. ನಿಮ್ಮ ಸುಟ್ಟ ಪ್ರೀತಿ ಯಾರಿಗೆ ಬೇಕಾಗಿತ್ತು?” +“ಹಾಗಾದರೆ ಏನು ಬೇಕಾಗಿತ್ತು ನನ್ನಿಂದ?…ಹೇಳಲ್ಲ ಏನು ಬೇಕಾಗಿತ್ತು?” ಕೆಣಕುವ ತುಂಟ ಧ್ವನಿಯಲ್ಲಿ ಕೇಳಿದ. +“ಅಯ್ಯೋ, ನನ್ನ ಪೂರಾ ಕೊಂದೇಕೆ ಬಿಡುವದಿಲ್ಲ ನೀವು? ಹೌದು. ನಂದ ತಪ್ಪು, ನಾನೇ ಹಾಳು, ನಾನೇ ಕೆಟ್ಟವಳು, ನಾನಾಗೇ ನಿಮ್ಮ ಹತ್ತಿರ ಓಡಿ ಬಂದೆ, ಬೆನ್ನುಹತ್ತಿ ಬಂದೆ, ಆಯಿತಿಲ್ಲೋ?” +ಸುಶೀಲೆಗೆ ದುಃಖ ಏರಿಬಂತು. ಓಡಿಹೋಗಿ ಕುರ್ಚಿಯ ಮೇಲೆ ಕುಸಿದು ಬಿದ್ದು, ಟೇಬಲ್ ಮೇಲೆ ಮುಖ ಒರಗಿಸಿ ಬಿಕ್ಕಿ ಬಿಕ್ಕಿ ಅಳತೊಡಗಿದಳು. ಶ್ಯಾಮನು ಅವಳೆಡೆಗೆ ಮುಖ ಕಿವುಚಿ ನೋಡಿ ಹೇಳಿದ: +“ಅಳು, ಬೇಕಾದಷ್ಟು ಅಳು. ನನಗೇನು?” +ಕೊಂಚ ಹೊತ್ತು ನಿಃಶಬ್ದ. ಹೊರಗಿನ ಮಳೆಯ ಸಪ್ಪಳದಲ್ಲಿ ಅವಳ ಅಳುವ ಸಣ್ಣದನಿ ಮುಳುಗಿಹೋಯಿತು. ಶ್ಯಾಮನಿಗೆ ಏನು ಮಾಡಬೇಕೋ ತಿಳಿಯಲಿಲ್ಲ. ಎದ್ದು ಹೋಗಿ ಅವಳ ಬೆನ್ನಮೇಲೆ ಕೈಯಾಡಿಸತೊಡಗಿದ. ಸುಶೀಲೆಯು ತಿವಿಯಲ್ಪಟ್ಟ ಹಾವಿನಂತೆ ಹಾರಿಬಿದ್ದು, ಅವನನ್ನು ತನ್ನಿಂದ ದೂರ ನೂಕಿದಳು. ಶ್ಯಾಮನು ತನ್ನ ಸಿಟ್ಟನ್ನು ಬಿಗಿಹಿಡಿದು: +“ನಿನ್ನ ಸಿಟ್ಟು ಇಳಿದ ಮೇಲೆ ನೀನೇ ಹಾದಿಗೆ ಬರ್‍ತೀ” ಎಂದು ವೇದವಾಕ್ಯ ನುಡಿದು, ಮರಳಿ ಹೋಗಿ ಗೊಡೆಯ ಕಡೆಗೆ ಮುಖ ತಿರುಗಿಸಿ ಮಲಗಿದ…. +ದೂರ ಗುಡುಗಿನ ಸದ್ದು ಸಿಡಿಲು ಬಿದ್ದಂತೆ ಭಾಸವಾಯಿತು ಸುಶೀಲಳಿಗೆ. ಅಳುವುದನ್ನು ನಿಲ್ಲಿಸಿ, ಸರ್ರನೆ ಒಂದು ಹಾಳಿಯನ್ನು ತೆಗೆದುಕೊಂಡು ಏನೇನೋ ಗೀಚತೊಡಗಿದಳು. ಅದು ಶ್ರೀಧರನಿಗೆ ಬರೆದ ಪತ್ರವಾಗಿತ್ತು. +“…ಶ್ರೀಧರ, +ನಾನು ನಿಮಗೆ ‘ಪ್ರಿಯ’ನೆಂದು ಸಂಬೋಧಿಸುವ ಹಕ್ಕನ್ನು ಕಳೆದುಕೊಂಡಿರುವೆ…ನಿಮ್ಮ ಅಭಿನಂದನೆ, ನಮ್ಮೀರ್ವರ ಜೀವನ ಸುಖಮಯವಾಗಲಿ ಎಂಬ ನಿಮ್ಮ ಹರಕೆ, ನನ್ನ ಹೃದಯದಲ್ಲಿ ಅವ್ಯಕ್ತ ವೇದನೆಯನ್ನುಂಟು ಮಾಡಿದವು. ನೀವೇಕೆ ಹಾಗೆ ಅಣಕಿನ ಮಾತು ಹೇಳಿ ನನ್ನನ್ನು ದುಃಖಿಯನ್ನಾಗಿ ಮಾಡುತ್ತಿದ್ದೀರೋ ನಾ ಕಾಣೆ. ಶ್ಯಾಮನ ಮೇಲೆ ನನ್ನ ಪ್ರೀತಿ ಎಳ್ಳಷ್ಟೂ ಇಲ್ಲ. ಇದು ನಿಮಗೆ ಗೊತ್ತಿದ್ದರೂ ನೀವು ಅಭಿನಂದನೆಗಳನ್ನು ಕಳಿಸಿರುವಿರಿ…ಪ್ರೀತಿ ಇಲ್ಲದಿದ್ದರೆ ಆತನನ್ನೇಕೆ ಲಗ್ನವಾದೆ ಎಂದು ಕೇಳಬಹುದು. ಅದರ ಉತ್ತರ ನಿಮಗಲ್ಲದೆ ಮತ್ತಾರಿಗೆ ಹೇಳಲಿ? +ನೀವು ಹೋದ ಮೇ ತಿಂಗಳ ಸೂಟಿಯಲ್ಲಿ ಬಂದಾಗ ನಾನು ನಿಮಗೆ ಪ್ರಶ್ನಿಸಿದುದು ನೆನಪಿದೆಯೇ? +‘ಇಷ್ಟೆಲ್ಲ ನನ್ನೊಡನೆ ರೋಮಾನ್ಸ ಮಾಡಿದಿರಿ, ಕೊನೆಗೆ ನನ್ನನ್ನು ಲಗ್ನವಾಗುವದು ನಿಜ ತಾನೇ?’ +ಅದಕ್ಕೆ ನೀವು ನನ್ನನ್ನು ಬಿಗಿದಪ್ಪಿ, ‘ಆ ವಿಷಯ ಈಗಲೇ ಹೇಳುವದು ಹೇಗೆ? ನೀನಿನ್ನೂ ದೊಡ್ಡವಳಾಗಬೇಕು, ಕಾಲೇಜಿಗೆ ಹೋಗಿ ಕಲಿಯಬೇಕು. ಇಷ್ಟು ಬೇಗನೆ ವಿಚಾರ ಮಾಡುವ ವಿಷಯವಲ್ಲದು.’ ಎಂದು ಹೇಳಿದಿರಿ; ಹಾಗೂ ನಾನು ಮ್ಯಾಟ್ರಿಕ್ ಆದ ನಂತರ ಪುಣೆಯಲ್ಲಿಯ ನನ್ನ ಅತ್ತೆಯ ಮನೆಯಲ್ಲಿದ್ದು ನೀವಿದ್ದ ಕಾಲೇಜಿಗೆ ಬರಲು ನೀವೇ ಸೂಚಿಸಿದಿರಿ. +ಆದರೆ ನೀವು ಹೋದಮೇಲೆ ನಿಮ್ಮ ಪತ್ರದ ಹಾದಿಯನ್ನು ಕಾಯ್ದು ಬೇಸತ್ತೆ. ಆಗ ತಲೆಯಲ್ಲಿ ನೂರೆಂಟು ವಿಚಾರಗಳು. ನೀವು ನನ್ನ ಕೈಬಿಟ್ಟಿರುವಿರಿ ಎಂಬ ಭೀತಿ! ಅವೆಲ್ಲ ವಿಚಾರಗಳನ್ನು ಈಗ ಹೇಗೆ ಬರೆಯಲಿ? ಜೂನ ತಿಂಗಳಲ್ಲಿ ರಿಜಲ್ಟು ಆದಾಗ ನಾನು ನಾಪಾಸಾಗಿದ್ದೆ. ಅದಲ್ಲದೆ ಮುಟ್ಟಿ ನಿಂತಿತ್ತು…. ಮುಂದೆ ನಾನು ಬರೆದ ಎರಡು ಪತ್ರಗಳಿಗೆ ನೀವು ಯಾವ ಕಾರಣದಿಂದಲೇ ಉತ್ತರ ಬರೆಯಲಿಲ್ಲ. ನನ್ನ ಮನಸ್ಥಿತಿಯೇ ವಿಚಿತ್ರವಾಯಿತು. ಇದ್ದ ಸಂಗತಿಯನ್ನು ನಿಮಗೆ ತಿಳಿಸಿದ್ದರೆ ನಿಮ್ಮ ಕಣ್ಣು ತೆರೆಯುತ್ತಿದ್ದವೇನೋ…! ಮುಂದೆ ನನ್ನ ಕನಸುಗಳ ಮಂದಿರವೇ ಕುಸಿದು ಬಿದ್ದಂತಾಯಿತು ಆಗ ಹುಚ್ಚುಯಂತಿದ್ದೆ. ಆಗ…ಒಂದು ಉಪಾಯ ಹೊಳೆಯಿತು… ಮೊದಲಿನಿಂದಲೂ ನನ್ನ ಬೆನ್ನು ಹತ್ತಿದ್ದ ಶ್ಯಾಮ…ಅವನ ಜೊತೆಯಲ್ಲಿ… ನನ್ನ ದುರ್ದೈವ! ನನ್ನ ಕೊರಳಿಗೆ ನಾನೇ ನೇಣು ಹಾಕಿಕೊಂಡೆ… ನಿಮ್ಮ ವಿಚಾರವನ್ನೇ ಬಿಟ್ಟೆ. ಸ್ವಾಭಿಮಾನ ಬೇರೆ! ಶ್ಯಾಮ ಲಗ್ನವಾಗಲು ಸಿದ್ಧನೇ ಇದ್ದ….ನಮ್ಮ ಮನೆಯವರಿಗೂ ಶ್ಯಾಮ ಬೇಕಾದವ…ಆದರೆ ಈಗ ಎಲ್ಲವೂ ಶೂನ್ಯವಾಗಿದೆ. ಈ ಜೀವನವೇ ಬೇಡವಾಗಿದೆ. ನೀವಿಲ್ಲದೆ ನನ್ನ ಬಾಳು ಶೂನ್ಯ ಶೂನ್ಯ. ಮೇಲಾಗಿ ಇದು ಮೋಸದ ಬಾಳು…ನಿನ್ನ ಕೂಸು…” +ಮುಂದೆ ಬರೆಯುವದಾಗಲಿಲ್ಲ ಸುಶೀಲಳಿಗೆ…ದುಃಖ ಎದೆಯೊಳಗಿಂದ ಉಕ್ಕಿ ಬಂತು. ತನ್ನ ಎರಡೂ ಕೈಗಳಿಂದ ಮುಖಮುಚ್ಚಿಕೊಂಡು ಟೇಬಲ್ ಮೇಲೆ ಒರಗಿದಳು. ಮೊದಲೇ ಹನಿಗೂಡಿ ನಿಂತ ಕಣ್ಣುಗಳಿಂದ ನೀರು ಧಾರಾಳವಾಗಿ ಸುರಿಯತೊಡಗಿತು. +ಹೊರಗೆ ಮಳೆ ಬೀಳುತ್ತಲೇ ಇತ್ತು! +ಇತ್ತ ಶಾಮನ ಗೊರಕೆ ಸುರುವಾಗಿತ್ತು. +***** +ದಿನವೂ ನಮ್ಮ ಮನೆಗೆ ಹೂವು ತರುವ ಹುಡುಗಿ ಅಂದು ಅಬ್ಬಲಿಗೆ ಹೂವು ತಂದಾಗ ನನಗೇಕೋ ಒಮ್ಮೆಲೇ ಆಬೋಲೀನಳ ನೆನಪು ಬಂತು. ಅಬ್ಬಲಿಗೆ ತನ್ನ ಮೆಚ್ಚುಗೆಯ ಹೂವು: ಕೊಳ್ಳಬೇಕು ಅನ್ನಿಸಿತು. ಆದರೆ ಮರುಗಳಿಗೆ, ಈ ಹೂವು […] +ನಾನು ಅವಳನ್ನು ಹಾಗೆ ನೊಡಬಾರದಿತ್ತಾ..? ನಾನು ಅವಳನ್ನು ಹಾಗೆ ನೊಡಬಾರದಿತ್ತು.. ಅವಳು ಉಟ್ಟಿರೋ ಜೇನು ತುಪ್ಪದ ಬಣ್ಣದ ಸೀರೆಗೂ ದೃಷ್ಟಿಯಾಗುವ ಹಾಗೆ.. *********** ನಂಗೆ ಒಂದು ದುರಭ್ಯಾಸ.. ಒಂದು ಗಂಡು-ಹೆಣ್ಣು ಕೂತು ಮಾತಾಡ್ತಿದ್ದಾರೇಂದ್ರೆ ಅವರಿಬ್ಬರ […] +ಆ ವರುಷ ಆ ಹಳ್ಳಿಯಲ್ಲಿ-ದಯಮಾಡಿ ಯಾವ ವರುಷ? ಯಾವ ಹಳ್ಳಿ? ಎಂದು ಮಾತ್ರ ಕೇಳಬೇಡಿ. ಇಷ್ಟಕ್ಕೂ ನೀವು ಅದನ್ನೆಲ್ಲ ಊಹಿಸಿಕೊಂಡರೆ ಆ ಊಹೆಗೆ ನಾನು ಹೊಣೆಗಾರನಲ್ಲ. ಜೋಕೆ!-ಅಂತೂ ಅಂದು ಅಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_152.txt b/Kannada Sahitya/article_152.txt new file mode 100644 index 0000000000000000000000000000000000000000..f4e9ef5260ca1acdde0f8d7de8fcb0818c9ad215 --- /dev/null +++ b/Kannada Sahitya/article_152.txt @@ -0,0 +1,38 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಪಾಳು ಗುಮ್ಮಟದ ಮೈಗೆ +ಪಾರಿವಾಳದ ತೇಪೆ +ಹಸಿರು ಚಾದರದಂಚಿಗೆ +ಹೊಳೆವ ಜರದೋಜ್ಹಿ ಕೈ ಕೆಲಸ +ಮಂಡಿಯೂರಿ, ಬೆನ್ನಬಗ್ಗಿಸಿ +‘ಅಲ್ಲಾ….. ಹೂ…..!’ +ಮುಂಜಾನೆ ಹೊನ್ನ ಬೆಳಕು +ಶಹರಿನ ತುಂಬ ತಣ್ಣನೆ ಗಾಳಿ +ಎಡವಿದಲ್ಲೆಲ್ಲಾ ನೆನಪಿಗೊಂದು ದರ್ಗ +ಸಹಸ್ರ ಲಿಂಗದ ಹಾಗೆ; +ಈ ಊರ ಮೈ ತುಂಬ ಬಂಡೆಗಳು +ಇದ್ದಕ್ಕಿದ್ದಂತೆ ಎದ್ದು ನಿಲ್ಲುವ +ಬಿಡಿ ಬಿಡಿ ಬೆಟ್ಟಗಳು +ಅದರ ತುದಿಗೊಂದೊಂದು ಕಥೇ. +*ಹುಸೇನ್ ಸಾಗರದಲ್ಲಿ ವರ್ಷಕ್ಕೊಮ್ಮೆ +ಕೈಲಾಸಕ್ಕೊಂದು ಕಳ್ಳದಾರಿ. +* ಗಣೇಶ ಚತುರ್ಥಿಯ ಸಮಯದಲ್ಲಿ ಹೈದರಾಬಾದಿನ ಗಣಪತಿ ವಿಗ್ರಹಗಳನ್ನು ಸಾಮಾನ್ಯವಾಗಿ ‘ಹುಸೇನ್ ಸಾಗರ’ದಲ್ಲೇ ವಿಸರ್ಜನೆ ಮಾಡುವುದು. +***** +೧ ಹೊಗೆ ತುಂಬಿ ನಗೆ ತುಂಬಿ ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ ಜೀವ ತುಂಬಿ, ದೂರ ಹಾರುವದೆಂಬ ಭರವಸೆಯ ನಂಬಿ, ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು ಉತ್ಸಾಹ ಸಾಹಸಕೆ ರೂಪುಗೊಟ್ಟು ಮೇಲುನಾಡಿಗೆ ತೇಲಬಿಟ್ಟೆವಿದೊ […] +– ೧ – ನಮ್ಮದೊಂದು ಮನೆ ವಿನಾ ಮಿಕ್ಕೆಲ್ಲ ಮನೆಯೆದುರು ಪರಿಶುಭ್ರ ಹಲ್ಲಂತೆ ಮುಂಜಾನೆ ರಂಗವಲ್ಲಿ; ಕಿಲಿಕಿಲಿಸಿದಂತೆ ಇಡಿ ಗಲ್ಲಿ. ಹಾಲಿಗೆ ಹೊರಟಾಗ ಹೊತ್ತಾರೆ ಚಿತ್ತಾಪಹಾರಿ ಚಿತ್ತಾರ ಖಾಲಿ ಮನಸಿನ ಖೋಲಿ ಖೋಲಿಗಳ ಬೀಗ […] +ಇವು ನನ್ನ ಹಾಡೆಂಬ ಹಗರಣದಿ ಮೈಮರೆತು ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ ಅಣುರೇಣು ಜೀವಾಣು ನಿನ್ನ ಚರಣವನೋತು ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ ಕರಣಿಕನು ನಾನಾಗಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_153.txt b/Kannada Sahitya/article_153.txt new file mode 100644 index 0000000000000000000000000000000000000000..1e5db6a8b7fcf34799f7365d5baad23c298e6f25 --- /dev/null +++ b/Kannada Sahitya/article_153.txt @@ -0,0 +1,30 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಶಂಕರಾಭರಣ ಆದಿ +ಯಾರೆ ರಂಗನ ಯಾರೆ ಕೃಷ್ಣನ +ಯಾರೆ ರಂಗನ ಕರೆಯ ಬಂದವರು ಪ +ಗೋಪಾಲಕೃಷ್ಣನ ಪಾಪವಿನಾಶನ +ಈ ಪರಿಯಿಂದಲಿ ಕರೆಯಬಂದವರು ೧ +ವೇಣುವಿನೊದನ ಪ್ರಾಣ ಪ್ರಿಯನ +ಜಾಣೆಯರರಸನ ಕರೆಯ ಬಂದವರು ೨ +ಕರಿರಾಜವರದನ ಪರಮಪುರುಷನ +ಪುರಂದರವಿಠಲನ ಕರೆಯಬಂದವರು ೩ +***** +ರಾಗ — ಆನಂದಭೈರವಿ ತಾಳ — ಅಟ್ಟ ಮುಟ್ಟದಿರೋ ಎನ್ನನು – ರಂಗಯ್ಯ | ಮುಟ್ಟದಿರೋ ಎನ್ನನು ||ಪ|| ಮುಟ್ಟದಿರೊ ಎನ್ನ ಮುಂಗೈಯ ಸೆಳವಿಗೆ | ಮುತ್ತೆಲ್ಲ ಸಡಲುವವೊ – ಏ ಮುದ್ದುರಂಗ ||ಅ.ಪ.|| […] +ತೋಡಿ-ಚಾಪು ಗುಮ್ಮನ ಕರೆಯದಿರೆ ಅಮ್ಮ ನೀನು ಪ ಸುಮ್ಮನೆ ಇದ್ದೇನು ಅಮ್ಮಿಯ ಬೇಡೆನು ಮಮ್ಮು ಉಣ್ಣುತೇನೆ ಅಮ್ಮ ಅಳುವುದಿಲ್ಲ ಅ ಹೆಣ್ಣುಗಳಿರುವಲ್ಲಿ ಪೋಗಿ ಅವರ ಕಣ್ಣು ಮುಚ್ಚುವುದಿಲ್ಲವೆ ಚಿಣ್ಣರ ಬಡಿಯೆನು, ಅಣ್ಣನ ಬೈಯೆನು ಬೆಣ್ಣೆಯ […] +ಕೇಳನೋ ಹರಿ ತಾಳನೊ ಪ ತಾಳ ಮೇಳಗಳಿದ್ದು ಪ್ರೇಮವಿಲ್ಲದ ಗಾನ ||ಅ|| ತಂಬೂರಿ ಮೊದಲಾದ ಅಖಿಳ ವಾದ್ಯಗಳಿದ್ದು ಕೊಂಬು ಕೊಳಲು ಧ್ವನಿ ಸ್ವರಗಳಿದ್ದು ತುಂಬುರು ನಾರದರ ಗಾನ ಕೇಳುವ ಹರಿ ನಂಬಲಾರ ಈ ಡಂಭಕದ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_154.txt b/Kannada Sahitya/article_154.txt new file mode 100644 index 0000000000000000000000000000000000000000..9d5ed1b61522643344f479cdc73943ddbe7f6a2d --- /dev/null +++ b/Kannada Sahitya/article_154.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಒಂದೆ ಮನೆತನದಲ್ಲಿ ಜನಿಸಿದ್ದರೊಳಿತಿತ್ತು” +ಎಂಬ ಮುತ್ತಿನ ಸಾಲು ತಂಗಿಯೋಲೆಯೊಳಿತ್ತು. +ಓದುತೋದುತಲಿರಲು ಕಣ್ಣು ಹನಿಗೂಡಿತ್ತು; +ಕಿವಿಗವಿಗಳಲ್ಲಿ ಆ ನುಡಿಯೆ ಪಡಿ ನುಡಿದಿತ್ತು; +ಮೈ ನವಿರೊಳದ್ದಿತ್ತು; ಎದೆಯ ಬಟ್ಟಲಿನಲ್ಲಿ +ಧನ್ಯತೆಯ ವಿಮಲಜಲ ತುಂಬಿತುಳಾಕಾಡಿತ್ತು. +ಅವಳಂತರಂಗದೆಳವಳ್ಳಿ ದಾಂಗುಡಿಯಿಟ್ಟು +ಕೃತಕತೆಯ ಕಟ್ಟಳೆಯ ಮೀರಿ ಮಮತೆಯ ತೋರಿ +ಎನ್ನದೆಯನಾವರಿಸಿ ಕರುಣೆ ಹೂ ತಳೆದಿತ್ತು; +ತಿಳಿಯೊಲವು ನರುಗಂಪ ಸೂಸಿತ್ತು; ಪೂಸಿತ್ತು. +ಬಾಳಕೊಳಗುಳದಲ್ಲಿ ನೋವಿನೆಳೆದಾಟದಲಿ +ಆಶೆಯಾಕಾಂಕ್ಷೆಗಳು ಹುಡಿಗೂಡುವನಿತರಲಿ +ಗಾಸಿಗೊಂಡಿಳೆಗೊರಗಿ ಕಣ್ಣಿವೆಯು ಜಡಮಾಗಿ +ಬದುಕಿರುವ ಜೀವಿಗಿಹುದದುವೆ ತಣ್ಣೆಳಲಾಗಿ. +***** +– ೧ – ಜೋಗದ ಸಿರಿ ಬೆಳಕಿನಲ್ಲಿ, ತುಂಗೆಯ ತೆನೆ ಬಳುಕಿನಲ್ಲಿ ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ ನಿತ್ಯಹರಿದ್ವರ್ಣ ವನದ ತೇಗ, ಗಂಧ ತರುಗಳಲ್ಲಿ – ನಿತ್ಯೋತ್ಸವ, ತಾಯಿ, ನಿತ್ಯೋತ್ಸವ ನಿನಗೆ. – ೨ […] +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ವಲ್ಲಿ ಕ್ವಾಡ್ರಸ್, ಅಜೆಕಾರ್ (ಕನ್ನಡಕ್ಕೆ ಕೊಂಕಣಿ ಮೂಲದಿಂದ. ಅನುವಾದ ಲೇಖಕರಿಂದ) ಅಗೋ ಸತ್ತಿದೆ ನೋಡಲ್ಲಿ ನಾಯಿಯೊಂದು ರಾಜರಸ್ತೆಯಲ್ಲೇ ಹಾಡು ಹಗಲಲ್ಲೇ ತನ್ನ ಜೀವದ ಕೆಂಪು ರಗ್ತವ ಹರಿಸಿ ಆರಾಮವಾಗಿ ಹಾದು ಹೋಗುವ ಕಣ್ಣು, ಆತ್ಮ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_155.txt b/Kannada Sahitya/article_155.txt new file mode 100644 index 0000000000000000000000000000000000000000..acabd668881855590d2221bebcc8d29ea2312ad3 --- /dev/null +++ b/Kannada Sahitya/article_155.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ನಾಡಿನ +ತ್ರಿಶೂಲ +ಪ್ರಾಯ +ಸಮಸ್ಯೆಯೆಂದರೆ: +ನುಡಿ +ಗಡಿ +ಗುಡಿ. +***** +ಹದವಾಗಿ ಮಿದುವಾಗಿ ಥಣ್ಣಗೆ ತೇಯುತ್ತಿರುವ ಗಂಧದ ಮರಗಳ ನಡುವೆ ಒಮ್ಮೆಗೇ ಕಾವು ಕಕ್ಕುವ ಬೆಂಕಿಯುರಿ ***** +ಮುಗಿಲಿಗೆ ಸಾವಿರ ಕಣ್ಣು ನೇಗಿಲಿಗೆ ಮಿಡಿ ಹಣ್ಣು ತಾಜಾ ಬಿಸಿ ಬಿಸಿ ಸುದ್ದಿ ಗದ್ದೆ ತುಂಬ ***** +ಕತ್ತಲು ಅವಚುತ್ತಿರುವಂತೆ ಅವಳ ಮಾಂಸಖಂಡದೊಳಗೆ ಸತ್ಯ ಕುಕ್ಕಿದಂತೆ ಬೆಚ್ಚಿಬಿದ್ದೆ-ನನ್ನ ಕಂಡುಕೊಂಡೆ ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_156.txt b/Kannada Sahitya/article_156.txt new file mode 100644 index 0000000000000000000000000000000000000000..c271c321b3778809592470793d7ae0fe1e1e4a47 --- /dev/null +++ b/Kannada Sahitya/article_156.txt @@ -0,0 +1,65 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಇವ ಹುಟ್ಟು ಹಾರಾಟಗಾರ; +ಇವನಮ್ಮ, ಇವನಜ್ಜಿ +ಅಕ್ಕ-ತಂಗಿಯರ, ಅತ್ತೆಯಂದಿರ +ಮುದ್ದು ಹನುಮ. +ಚಿಕ್ಕಂದಿನಿಂದ ಹಾರುತ್ತಲೇ ಇದ್ದಾನೆ; +ಮನೆಬಾಗಿಲು, ಗೋಡೆ, ಮಹಡಿ ಮೆಟ್ಟಿಲು, +ಬಚ್ಚಲು, ತಿಕ್ಕಲು ಹರಿವ ಕೊಚ್ಚೆಯನೆಲ್ಲ +ಒಂದೇ ಏಟಿಗೆ +ಧಡಂ ಎಂದು ಹಾರುತ್ತಾ ಕಾಲ ಹಾಕುತ್ತಿರುತ್ತಾನೆ. +ಎರಡು ಹೆಜ್ಜೆಗೊಂದು ಹಾರು; +ಬೀಳುತ್ತಲೇ ಮೇಲೇಳುತ್ತಿರುತ್ತಾನೆ. +ಬಿದ್ದೆದ್ದು ಮಣ್ಣಾದ ಮೀಸೆಯ ಸವರಿ +ತನ್ನ ಗರಿ, ರೆಕ್ಕೆ, ಪುಕ್ಕಗಳ ನೇವರಿಸಿ +ಭೋಪರಾಕಿಗೆಂಬಂತೆ +ದಾರಿ ಬಿಡಿ, ದಾರಿ ಬಿಡಿ, ಅಡ್ಡಬಾರದಿರಿ +ಎನ್ನುತ್ತ ಹಾರುತ್ತಲೇ ಬರುತ್ತಾನೆ. +* +* +* +ಕಾಣಬಹುದು ನೀವೀತನನು +ಸತ್ತ ಮೀನಿನ +ಚೆಲುವ ಮೀನ ಕಣ್ಗಳ +ಮೀನಿನ ಮಾರ್ಕೆಟ್ಟಿನ ತಿರುವು ರಸ್ತೆಯ +ಮುರುವಿನಲ್ಲಿ; +ಬೇಕಿದ್ದರೆ ಗುರುತು – +ಜಗಿಯುತ್ತ ಇರುತ್ತಾನೆ +ತನ್ನ ಹುಲ್ಗಾವಲಿನ ಹಸಿ ಹಸಿ ಗರಿಕೆಗಳನ್ನು: +ಗುಟುರು ಹಾಕಲಿಕ್ಕೆ ಬೇಡವೇ ತ್ರಾಣ? +ಇವನಿಗೆ +ಹಸಿವಾದೊಡೆ ಭಕ್ಷ್ಯಾನ್ನಗಳುಂಟು +(ಅನ್ನ ಸಾಂಬಾರು, +ತಲೆ ಮಾಂಸ: ಅವರಿವರದು) +ತೃಷೆಯಾದೊಡೆ ಕೆರೆ ಬಾವಿಗಳುಂಟು +ದಾರಿಬದಿ ಹಾದುಹೋಗುವ ಕನಕಾಂಗಿಯರ +ಥೂ ಹಲ್ಕ ನೋಟ. +ಹಾರುತ್ತ ಹಾರುತ್ತಲೇ ಇರುತ್ತಾನೆ ಇವನು +ಮೋಸ ಹೋಗದಿರಿ. +ಇಂದಿಲ್ಲಿ, ಇವನ ಹಾರಿಗೆ ಸೆಳೆದು ಹೋದ ಗಾಳಿಗಳು +ನಾಳೆ ನಿಮಗೇ ಸಿಗಬಹುದು, +ಅಲ್ಲಿ: +ಅರೆ ಇದೆಲ್ಲಿ ಬಂತಪ್ಪ ಗ್ರಹಚಾರ, +ಹುಳಿಗಾಳಿ, ಕೆಸರ ಪಿಚಿಪಿಚಿ +ಎಂದು ಮೂಗು ಮುರಿಯುವರಾದರೆ – +ನೋಡಿ.. ನಿಮಗೆ ನಾನು ಮೊದಲೇ ಹೇಳಿಬಿಟ್ಟಿದ್ದೇನೆ. +***** +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಓ ತಂದೆ! ನಿನಗಿದೋ ಈ ನೆಲದ ಕಣಕಣವು ಕಣ್ಣೀರ ಸುರಿಸುತಿದೆ, ಹಲುಬಿ ಹಂಬಲಿಸುತಿದೆ; ಭಾರತದ ಬೀರಸಿರಿ ನಿನ್ನೊಡನೆ ಸಾಗುತಿದೆ. ಸತ್ಯತೆಯ ಪಂಜಿಗಿದೆ ನಿನ್ನೆದೆಯ ಪೌರುಷವು, ವಿಶ್ವದೆದೆಯಾಳವನೆ ಕಡೆದುಂಡ ಕರುಣಾಳು ಪ್ರೇಮದಮಲಜ್ಯೋತಿ, ಜಗದ ಸುಂದರ ಮೂರ್ತಿ […] +– ೧ – ಅಮೇರಿಕ ಅಮೇರಿಕ ನಿನ್ನ ಸಂಸ್ಕೃತಿಯನಾಗಸಕ್ಕೆತ್ತಿದಾಗೆಲ್ಲ ನಿನ್ನವರ ಟೈ ಸೂಟು ಸ್ಕರ್ಟುಗಳನ್ನೊಂದೊಂದೆ ಕಳಚಿ, ನೆತ್ತರಿನಿಂದ ಸ್ಪ್ಯಾನಿಶರ ಜರ್ಮನರ ಪೋರ್ಚುಗೀಸಾಂಗ್ಲ ನೀಗ್ರೊಗಳ ಕಡಲ್ಗಳ್ಳ ಹಂತಕ ಹಾದರಗಿತ್ತಿಯರನೆತ್ತೆತ್ತಿ ನಿನ್ನೆದುರು ನೂಕಿ ಪಕಪಕನೆ ನಗಬೇಕೆಂದಾಗ – […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_157.txt b/Kannada Sahitya/article_157.txt new file mode 100644 index 0000000000000000000000000000000000000000..d8110b9e8126055d57d5c1ca946abd8c91f9b9e3 --- /dev/null +++ b/Kannada Sahitya/article_157.txt @@ -0,0 +1,237 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +||ಶ್ರೀ|| +ಭಾಗ ಒಂದು : ಪುರುಕುತ್ಸ +-೧- +ಶ್ರೀ ರಾಮಚಂದ್ರನ ಹೆಸರಿನಿಂದ ಪುನೀತವಾದ ಅಯೋಧ್ಯೆ ಈಗ ಕುಗ್ರಾಮವಾಗಿದೆ. ಶ್ರೀರಾಮನು ಬರುವ ಮೊದಲು ಇದು ಅಂಥ ಕುಗ್ರಾಮವೇನೂ ಅಲ್ಲ. ಆದರೆ ಸಾಮ್ರಾಜ್ಯವೂ ಅಲ್ಲ. ೩೦-೪೦ ಗ್ರಾಮಗಳಿಗೆ ಅಧಿಪತಿಯಾಗಿ ರಜ್ಯಭಾರ ಮಾಡುತ್ತಿದ್ದ ಶ್ರೀಪುರುಕುತ್ಸ ಮಹಾರಜನ ರಾಜಧಾನಿಯಗಿತ್ತು.ಪುರುಕುತ್ಸನು ಸುಖ ಲೋಲುಪನು. ಇವನ ರಾಣಿ ನರ್ಮದಾ ಪುರುಕುತ್ಸಾನಿ. ಆದರೆ ಹೆಂಡತಿ ಜೊತೆಗೆ ಅವನಿಗೆ ಎನೂ ಸಂಬಂಧವಿರಲಿಲ್ಲ. ಏಕೆಂದರೆ ಪುರುಕುತ್ಸಾನಿ ಪುರುಕುತ್ಸ ಮಹಾರಾಜನ ತಂಗಿಯೂ ಹೌದು.ಸೂರ್ಯವಂಶದ ಪದ್ಧತಿಯಂತೆ ಚಿಕ್ಕಂದಿನಲ್ಲೇ ಅವರ ವಿವಾಹವು ಜರುಗಿಹೋಗಿತ್ತು.ರಾಜಮನೆತನದಲ್ಲಿ ಹೊರಗಿನವರು ಬಾರದಂತೆ ಮಾಡುವ ವ್ಯವಸ್ತೆ ಇದು.ಇಜಿಪ್ಶಿಯನ್ ರಾಜಮನೆತನಗಳಲ್ಲಿ ನಡೆದುಬಂದ ರೀತಿ ಇದು.ಪುರುಕುತ್ಸ ಮಹಾರಾಜನು ಪುರುಕುತ್ಸಾನಿ ತನ್ನ ತಂಗಿಯೆಂಬುವುದನ್ನು ಕೊನೆಯವರೆಗೂ ಮರೆಯಲು ಸಾಧ್ಯವಾಗಲಿಲ್ಲ. ಅವರಿಗೆ ಮಕ್ಕಳೂ ಆಗಲಿಲ್ಲ.ರಾಜಮನೆತನದ ಸಮಾನ ಅಧಿಕಾರಿಣಿಯಾಗಿದ್ದ ಪುರುಕುತ್ಸಾನಿ ತನ್ನ ವರ್ಚಸ್ಸಿನಿಂದ ಅಣ್ಣ-ಗಂಡನ ರಾಜ್ಯ ಸೂತ್ರಗಳನ್ನು ಭದ್ರವಾಗಿ ಕೈಯಲ್ಲಿ ಇರಿಸಿಕೊಂಡು ನಿಜವಾದ ರಾಜ್ನಿಯಂತೆ ಆಳುತ್ತಿದ್ದಳು.ಆದರೆ ಸಂಸಾರಸುಖವೊಂದು ಅವಳಿಗೆ ನಿಲುಕದ ವಿಷಯವಾಗಿತ್ತು.ರಾಜಮನೆತನದ ಈ ವಿಶಿಷ್ಟವಿವಾಹ ಪದ್ದತಿ ಹೇಗೆ ಮಾಯವಾಯಿತೆಂಬುದೇ ನಮ್ಮ ಕಾದಂಬರಿಯ ವಿಷಯ. +-೨- +“ಕಾಲಿಯಾ!” ಪುರುಕುತ್ಸ ಮಹಾರಾಜನು ಕೂಗಿದನು. +“ಮಹಾರಾಜ!” ಕಾಲಿಯ ಓಡಿಬಂದು ಮುಜುರೆ ಮಾಡಿ ನಿಂತನು. +“ತಾರ್ಕ್ಷ ಬಂದನೇ ?” ಪುರುಕುತ್ಸ ಮತ್ತೊಂದು ಗುಟುಕು ಮಧುಪಾನ ಮಾಡುತ್ತ ಕೇಳಿದನು, ಉತ್ಕಟೆಯಿಂದ. +“ಇನ್ನೂ ಬರಲಿಲ್ಲ ಸ್ವಾಮಿ !” ಎಂದ ಕಾಲಿಯಾ. +“ಬಂದಕೂಡಲೆ ಒಳಗೆ ಬರಹೇಳು!” ಎಂದನು ಮಹಾರಾಜ. +ಮಹಾರಾಜ ಅಂದು ಕೇಳಿದ್ದು ನಾಲ್ಕನೇ ಬಾರಿ. +ಕಾಲಿಯಾ ಹೇಳಿದ್ದೂ ನಾಲ್ಕನೇ ಬಾರಿ. +“ಆಗಲಿ ಮಹಾಪ್ರಭು!” +ಎರಡು ವರ್ಷ ಈ ಮಾತು ಕಾಲಿಯಾ ಕೇಳಿದ್ದ. ಅನೇಕಬಾರಿ ಇದೇ ಉತ್ತರ ಕೊಟ್ಟಿದ್ದ.ಅವರ ಸಂಭಾಷಣೆ ಇಲ್ಲಿಗೇ ಮುಕ್ತಾಯ. +ಹದಿನೇಳು ವರ್ಷದ ಕಾಲಿಯಾಗೆ ಇದೇ ಮಾತು ಕೇಳಿಕೇಳಿ ಬೇಸರವಾಗುತ್ತಿತ್ತು. +ಆಂರವನದಲ್ಲಿ ಒಂದು ಭವ್ಯ ಗುಡಿಸಲು. ಸುತ್ತಲೂ ಬೇಲಿ. ಬೇಲಿಯಹೊರಗೆ ಆತು ಪಹರೆಯವರು. ಒಳಗೇ ಓಮ್ತೀ ಮಹಾರಾಜ, ಅವನ ಆಪ್ತ ಆಳುಮಗ ಕಾಲಿಯಾ. ಹದಿನೈದು ವರ್ಷಕ್ಕೆ ಕೆಲಸಕ್ಕೆ ಸೇರಿಕೊಂಡ ಕಾಲಿಯಾನಿಗೆ ಪುರುಕುತ್ಸ ರಾಜನ ಸಿಬ್ಬಂದಿಯಲ್ಲಿ ವಿಶೇಷ ಸ್ಥಾನವಿತ್ತು. ಅವನು ಹೊಸಬ. ಯಾರದೂ ಪರಿಚಯವಿಲ್ಲ,ಮಾತುಕಮ್ಮಿ,ಆಸ್ಥಾನದ ಸುಶಿಕ್ಷಿತ ಭಾಷೆಯ ಪರಿಚಯ ಅವನಿಗಿರಲಿಲ್ಲ. ನಾಗಜಾತಿಯ ಹುಡುಗನಾಗಿದ್ದ ಅವನು, ಆಡುವ ಭಾಶೆಯ ಉಚ್ಚಾರವೂ ಕೇಳುವವರಿಗೆ ತಿಳಿಯಲು ಕಷ್ಟವಾಗುತ್ತಿತ್ತು. ಅಲ್ಲದೇ ಸುರಧ್ರೂಪಿ. ಏನೂ ಅರಿಯದವನು. ಈಗೀಗ ರಾಜನ ನಿತ್ಯಕರ್ಮದ ಪರಿಚಯ ತುಸು ಆಗಿತ್ತು. ತಾರ್ಕ್ಷ ಕುದುರೆಯಮೇಲೋ ರಥದಲ್ಲೋ ಕರೆದು ಕೊಂಡುಬಂದ ಗಣಿಕೆಯರು, ವಾರಾಂಗನೆಯರು, ರಾಜನ ಸಹವಾಸವಾದ ಮೇಲೆ ತಾವೂ ಕುಡಿದು ಮಲಗುತ್ತಿದ್ದರು. ಅವರನ್ನು ಎತ್ತಿಹೊರಗೆ ತಂದು ಹಾಕಿ, ಬೇಗ ಎಬ್ಬಿಸಿ,ಹೊರಗೆ ಅಟ್ಟುವುದು, ಪಹರೆಯವರಿಗೆ ಒಪ್ಪಿಸುವುದು- ಇದಷ್ಟು ಅವನು ಮಾಡುವ ನಿತ್ಯಕರ್ಮ. ಎಲ್ಲಿಂದ ಬಂದರೋ ಅವನಿಗೆ ತಿಳಿಯದು. ಅವರ ಮಾತು ಇವನಿಗೆ ಅರ್ಥವಾಗದು, ಇವನ ಮಾತು ಅವರಿಗೆ ಅರ್ಥವಾಗದು. ಮಹಾರಾಜರಿಗಷ್ಟೇ ಇವನ ಮಾತು ಅರ್ಥವಾಗುವುದು. ಏಕೆಂದರೆ ಅವರು ಈ ಭಾಷೆಯನ್ನು ಬಲ್ಲವರು . ಚಿಕ್ಕಂದಿನಿಂದಲೇ ಕಲಿತವರು. ತಾಯಿಯಿಂದಲೇ ಕಲಿತವರು. ತಾಯಿ ಬಿಂದುಮತಿದೇವಿ ನಾಗಕ್ಷತ್ರೀಯ ವಂಶದವಳು. ಆಕೆಯಕಾಲದಲ್ಲೇ ಆಕೆಯ ನಾಗಪೋಜೆಗಾಗಿ ಹಲವಾರು ನಾಗಬ್ರಾಹ್ಮಣರು ಅಯೋಧ್ಯೆಗೆ ವಲಸೆ ಬಂದು ನೆಲೆಸಿದ್ದರು. ಹಲವಾರು ನಾಗಸೇವಕರೂ ರಾಜನ ಸಿಬ್ಬಂದಿಯಲ್ಲಿ ಸೇರಿಕೊಂಡು ತುಸು ಸುಭದ್ರವಾಗಿ ಮೇಲ್ಪಂಕ್ತಿಗೆ ಏರಿದ್ದರು. ಪುರುಕುತ್ಸಾನಿ ಮಹಾರಾಣಿಯು ಕಾಲಿಯಾನನ್ನು ನೇಮಿಸಿಕೊಂಡು ಅರಸನ ಆಪ್ತಸೇವಕನನ್ನಾಗಿ ಮಾಡಿದುದೂ ಇದೇ ಕಾರಣದಿಂದ. ನಾಗಭಾಷೆಯೂ ಆರ್ಯಭಾಷೆಯೂ ತೀರ ಭಿನ್ನವೇನಲ್ಲ. ಆದರೆ ಉಚ್ಚಾರಣೆಯಲ್ಲಿ ತುಸು ಬೇರೆ. ಅಕಾರವು ಒಕಾರವಾಗುತ್ತಿತ್ತು. ಪ್ರತಿಮಾತಿಗೂ ಒಂದುಸಿರು ಮುಗಿದು ಮತ್ತೊಂದು ಉಸಿರು ಶುರುವಾಗಬೇಕಾದರೆ, ’ಆ’ ಎಂಬ ನಿದರ್ಶಕ ಲಘುಸ್ವರ ಬಂದು, ಕೇಳುವರಿಗೆ ಅರ್ಥವಾಗುವುದು ಕಠಿಣವಾಗುತ್ತಿತ್ತು. +ಐಗುಪ್ತದೇಶದ ಫೆರೋ ದೊರೆಗಳ ದೂರದ ಸಂಬಂಧಿಕನಾದ ಮಾಂಧಾತ ಮಹಾರಾಜನು ಅವರಿಗೆ ಪತ್ರ ಬರೆದು ಪುರುಕುತ್ಸ ಯುವರಾಜನ ಲಗ್ನದ ವಿಷಯಕ್ಕೆ ಸಲಹೆ ಕೇಳಿದ್ದನು. ಎರಡು ತಿಂಗಳಲ್ಲಿ ಅವರಿಂದ ಉತ್ತರ ಬಂದಿತ್ತು.–’ತಮ್ಮ ಪದ್ಧತಿಯಂತೆ ರಾಜವಂಶದ ರಕ್ತ ಶುದ್ಧ ಉಳಿಯಬೇಕು, ತೀರ ಸಮೀಪದ ಸಂಬಂಧಿಯನ್ನೇ ಮದುವೆ ಮಾಡಿಕೊಳ್ಳಬೇಕು. ವಂಶೋದ್ಧಾರವಾಗುತ್ತದೆ’ ಎಂದು. ಇಜಿಪ್ತ ರಕ್ತದವರಾರೂ ಇಲ್ಲ. ತಂಗಿ ಪುರುಕುತ್ಸಾನಿಯೊಬ್ಬಳೇ. ಅಯೋಧ್ಯೆಯ ವಶಿಷ್ಟಗೋತ್ರದ ಬ್ರಾಹ್ಮಣರು ಜನನರಹಸ್ಯದ ತತ್ವದ ಅನುಸಾರವಾಗಿ ಇದು ಬೇಡವೆಂದರು. ನಾಗಬ್ರಾಹ್ಮಣರು ತಮ್ಮ ಪದ್ದತಿಯಂತೆ ಇದು ಅಸಂಗತವೆಂದರು. ಬಿಂದುಮತೀದೇವಿಗೂ ಇದು ಧರ್ಮವಿರುದ್ಧವೆಂದು ತೋರಿತು. ಆದರೆ ರಾಜವಂಶದ ರಕ್ತಶುದ್ಧಿಯ ವಿಚಾರವನ್ನು ಒಪ್ಪಿದ ಕ್ಷತ್ರಿಯರು ಇದಕ್ಕೆ ಬೆಂಬಲ ಕೊಟ್ಟರು. ಹನ್ನೆರಡು ವರ್ಷದ ಪುರುಕುತ್ಸನಿಗೂ ಎಂಟು ವರ್ಷದ ನರ್ಮದಾ ಪುರುಕುತ್ಸಾನಿಗೂ ವಿವಾಹಮಂಗಲವಾಗಿಹೋಯಿತು. +ಪುರುಕುತ್ಸ ಹದಿನಾಲ್ಕು ವರ್ಷದವನಿದ್ದಾಗ ತಾಯಿ ಬಿಂದುಮತೀದೇವಿ ಕೊರಗಿ ನಿಧನ ಹೊಂದಿದಳು. ಅವನು ಹದಿನಾರು ವರ್ಷದವನಿದ್ದಾಗ ಮಾಂಧಾತ ಮಹಾರಾಜನು ರಾಜಯಕ್ಷ್ಮದಿಂದ ನಿಧನ ಹೊಂದಿದನು. ಮನೆಯವರೆಲ್ಲ ಕೂಡಿ ನಾಗಬ್ರಾಹ್ಮಣರ ಸಹಾಯದಿಂದ ಪುರುಕುತ್ಸನನ್ನು ಸಿಂಹಾಸನಕ್ಕೆ ಏರಿಸಿದರು. ಪುರುಕುತ್ಸನಿಗೆ ಆಗಿನ್ನೂ ಹನ್ನೆರಡು ವರ್ಷ. +ರಾಜಪುತ್ರಿಯರಂತೆ ಪುರುಕುತ್ಸಾನಿ ತುಸು ಗಂಡುಬೀರಿ. ಗಂಡನಜೊತೆಗೆ ಸಖಾಭಾವದಿಂದ ಆಟವಾಡುತ್ತಿದ್ದಳು. ಕುದುರೆ ಏರುತ್ತಿದ್ದಳು. ಮರ ಹತ್ತುತ್ತಿದ್ದಳು. ವ್ರಕ್ಷವಾನರ(ಮರಕೋತಿ) ಆಟದಲ್ಲಿ ಅವನನ್ನು ಸೋಲಿಸಿ ಅಳುವಂತೆ ಮಾಡುತ್ತಿದ್ದಳು. ಕುಸ್ತಿ ಆಟದಲ್ಲಿ ಅವನನ್ನು ಕೆಳಕ್ಕೆ ಹಾಕಿ ಎದೆಯಮೇಲೆ ಕೂಡುತ್ತಿದ್ದಳು. ಬೆತ್ತದಾಟದಲ್ಲಿ ಅವನ ಡುಬ್ಬಕ್ಕೆ ನಾಲ್ಕು ಸೆಳೆದು ಕಣ್ಣೀರು ಕಪಾಳಕ್ಕೆ ಬರುವಂತೆ ಮಾಡುತ್ತಿದ್ದಳು. ಮಗಳ ಭವಿಷ್ಯಕ್ಕೆ ಚಿಂತಿತಳಾದ ಬಿಂದುಮತೀದೇವಿ ಮಗಳಿಗೇ ಎರಡು ಪೆಟ್ಟು ಕೊಟ್ಟು ಆಟ ಸಮನಾಗುವಂತೆ ಮಾಡುತ್ತಿದ್ದಳು. ಪುರುಕುತ್ಸಾನಿ ಅಳುತ್ತಹೋಗಿ ತಂದೆ ಮಾಂಧಾತನ ಎದುರು ದೂರು ಕೊಡುತ್ತಿದ್ದಳು. ಮಾಂಧಾತ ಬಿಂದುಮತೀಯ ಮೇಲೆ ಸಿಟ್ಟು ಮಾಡುತ್ತಿದ್ದನು. ಒಂದೆರಡು ಬಾರಿ ಹೀಗೆ ಸಿಟ್ಟು ಮಾಡಿದ್ದಕ್ಕಾಗಿ ಬಿಂದುಮತೀದೇವಿ ಮಗಳ ಅಸಮ್ಮತ ಲಗ್ನದ ಮಾತೆತ್ತಿ ಅವನು ಮೌನಿಯಾಗುವಂತೆ ಮಾಡಿದ್ದಳು. ಅನಂತರ ಪುರುಕುತ್ಸಾನಿಗೇ ಸಮಾಧಾನ ಹೇಳಿ, ರಾಜ ಬಿಂದುಮತೀದೇವಿಯನ್ನು ಎದುರಿಸುವುದನ್ನು ಬಿಟ್ಟೂಕೊಟ್ಟನು. ಒಮ್ಮೆ ಜಗಳ ತೀರ ವಿಕೋಪಕ್ಕೆ ಹೋಗಿ ರಾಜ ದೇವಿಗೆ ’ಗಾದ್ಧಾವಿ’(’ಗಾರ್ಧಭಿ’) ಎಂದು ಅವಧೀ ಗ್ರಾಂಯಭಾಷೆಯಲ್ಲಿ ಕರೆದನು. “ಹೌದು ನಿಮ್ಮ ಮನೆತನವೇ ’ಗದ್ಧಾವಿ’ ಮನೆತನ” ಎಂದು ರಾಣಿ ಉತ್ತರ ಕೊಟ್ಟಳು. ಅಂದಿನಿಂದ ಸೊರಗುತ್ತ ಸೊರಗುತ್ತ ಆರು ತಿಂಗಳಲ್ಲಿ ಪ್ರಾಣ ಬಿಟ್ಟಳು. +ಪುರುಕುತ್ಸ ತನ್ನ ತಂಗಿಯೇ ತಾಯಿಯ ಮರಣಕ್ಕೆ ಕಾರಣವೆಂದು ನಂಬಿಬಿಟ್ಟ. ಸಾಮಾನ್ಯವಾಗಿ ಎಲ್ಲ ರಾಜಕುವರಿಯರಂತೆ ಪುರುಕುತ್ಸಾನಿಯು ತಡವಾಗಿ ಯೌವನವನ್ನು ತಲುಪಿದಳು. ಹದಿನಾಲ್ಕನೆಯ ವಯಸ್ಸಿನಲ್ಲಿ ಆಕೆ ಪ್ರಾಪ್ತವಯಸ್ಕಳಾದಳು-ತಾಯಿಯ ಮರಣದ ಎರಡು ತಿಂಗಳ ಮೇಲೆ. ಮೈಲಿಗೆಯ ದಿವಸಗಳಾದ್ದರಿಂದ ನಿಷೇಕಪ್ರಸ್ತವನ್ನು ಒಂದು ವರ್ಷ ಮುಂದೂಡಲಾಯಿತು. +ಆ ವರ್ಷ ತಿಂಗಳಲ್ಲಿ ಮೂರು ದಿನ ಬಿಟ್ಟು ಉಳಿದೆಲ್ಲ ದಿನಗಳಲ್ಲಿ ಹೆಂಡತಿ ಗಂಡನ ಜೊತೆಗೆ ಆಟವಾಡುವದನ್ನು ಬಿಡಲಿಲ್ಲ. ಎಲ್ಲ ಆಟಗಳಲ್ಲೂ ಆಕೆಯದೇ ಮೇಲುಗೈ. ಹುಡುಗ ಪುರುಕುತ್ಸನಿಗೆ ಆಟಕ್ಕೆ ಬೇರೆ ಯಾರನ್ನೂ ತರುವುದು ರಜಾಜ್ಞೆಯಂತೆ ನಿಷಿದ್ಧವಾಗಿತ್ತು. +ಮಾಂಧಾತ ಮಹಾರಾಜನ ರಾಜಯಕ್ಷ್ಮ ಉಲ್ಬಣಿಸಿದಂತೆ, ಮಗನ ನಿಷೇಕ ಪ್ರಸ್ತಕ್ಕೆ ಅವನು ಉತ್ಸುಕನಾದನು. ಸೂತಕದ ಒಂದು ವರ್ಷ ಕಳೆದಾದಮೇಲೆ ಶುಭದಿನ ನೋಡಿ ನಿಷೇಕಪ್ರಸ್ತವನ್ನು ಗೊತ್ತುಮಾಡಲಾಯಿತು. ವಿಧಿವಿಧಾನಗಳಿಂದ ಆರತಿ ಮಾಡಿ, ಹಸೆಗೆ ಕರೆದ ಹಾಡುಗಳನ್ನು ಹಾಡಿ, ಇಬ್ಬರನ್ನೂ ಒಂದು ಕೊಣೆಯಲ್ಲಿ ದೂಡಲಾಯಿತು. ತಾಯಿಯ ಗುಪ್ತ ಸಲಹೆಯಿಲ್ಲದೆ, ಮತ್ತಾರೂ ಗುಪ್ತವಿಷಯಗಳನ್ನು ಹೇಳಲಿಕ್ಕೆ ಧೈರ್ಯವಾಗದೆ, ಪುರುಕುತ್ಸಾನಿ ತನ್ನ ಆಟವನ್ನೇ ಒಳಗೆ ಮುಂದುವರೆಸಿದ್ದಳು. ಪುರುಕುತ್ಸ ಒಂದು ಮೂಲೆಯಲ್ಲಿದ್ದನು. ಅವನ ಬೆನ್ನ ಮೇಲಿನ ಬಾಸುಂಡೆ, ಕೈಯ ಮೇಲೆ ಮೂಡಿದ್ದ ಪುರುಕುತ್ಸಾನಿಯ ದಂತ ಪಂಕ್ತಿ, ತಂದೆಗೆ ತೋರಿಸಿದನು. ತಂದೆ ನಕ್ಕುಬಿಟ್ಟರು,’ಇನ್ನೂ ಎಳೆಯ ವಯಸ್ಸು! ಕಾಲವೇ ಸಂದರ್ಭವನ್ನು ಅರಿಕೆ ಮಾಡುತ್ತದೆ !’ ಎಂದು ಮನಸ್ಸಿನಲ್ಲೇ ಗುಣಿತಹಾಕಿ, +ಆದರೆ ಕಾಲ ಏನನ್ನೂ ಬದಲಾಯಿಸಲಿಲ್ಲ. +ಮಾಂಧಾತ ಮಹಾರಾಜನು ಇನ್ನೊಂದು ವರ್ಷಕ್ಕೆ ಮರಣ ಹೊಂದಿದನು. +ರಾಜನಾದ ಮರುದಿನವೇ ಪುರುಕುತ್ಸನು ಪುರುಕುತ್ಸಾನಿಯ ಜೊತೆಗೆ ಒಡನಾಟವನ್ನು ಬಿಟ್ಟುಕೊಟ್ಟನು. ಬೇರೆಕೋಣೆಯಲ್ಲಿ ಮಲಗತೊಡಗಿದನು. ಅವನ ಸುತ್ತಲೂ ಕೆಲವು ಆರ್ಯಕ್ಷತ್ರಿಯರೂ ಕೆಲವು ನಾಗಕ್ಷತ್ರಿಯರೂ ಕೆಲವು ವಣಿಕ ಪುತ್ರರೂ ಸೇರಿಕೊಂಡರು. ಮೊದಮೊದಲು ತಿನಿಸಿನ ಆಸೆಮೂಡಿಬಂದು ಜಿವ್ಹಲೌಲ್ಯಕ್ಕಾಗಿ ಹಲವಾರು ಜನರನ್ನು ಸಾಕಿದನು. ಮನೆಯವರು ಅವನಿಗೆ ಸ್ತ್ರೀಸೌಖ್ಯವನ್ನು ಕಲ್ಪಿಸಿದರು, ಗಣಿಕೆಯರು, ವಾರವನಿತೆಯರು ಅವನ ಸುಖಕ್ಕಾಗಿ ಬರತೊಡಗಿದರು. ಪುರುಕುತ್ಸನೇ ರಾಜನಾದದ್ದರಿಂದ ಜೊತೆಗಾರರ ನಿರ್ಬಂಧನೆ ಹೊರಟುಹೋಯಿತು. +ಆಟಕ್ಕೇ ಎಂದು ಭಾವಿಸಿದ ಪುರುಕುತ್ಸಾನಿ ಜೊತೆಗಾರ ಕೈಬಿಟ್ಟುದಕ್ಕಾಗಿ ತುಸುಮಿಡುಕಿದರೂ ತನ್ನ ಆಟಕ್ಕಾಗಿ ಸುಂದರಿ ಎಂಬ ಸರದಾರನ ಮಗಳನ್ನೂ, ವಜ್ರನೆಂಬ ಅವನ ಹನ್ನೆರಡು ವರ್ಷದ ತಮ್ಮನನ್ನೂ ಜೊತೆಗಾರರನ್ನಾಗಿ ಮಾಡಿಕೊಂಡಳು. ಸುಂದರಿಗೆ ಆಗ ಹದಿನಾರು ವಯಸ್ಸು. ಅವರ ಸ್ನೇಹ ಅನ್ಯೂನ್ಯವಾಗಿತ್ತು. ದುರ್ದೈವದಿಂದ ಆರು ತಿಂಗಳಲ್ಲಿಯೇ ಸುಂದರಿಯ ಲಗ್ನ ಗೊತ್ತಾಯಿತು. ಅದೇನಗರದ ಇನ್ನೊಬ್ಬ ಸರದಾರನ ಮಗನ ಜೊತೆಗೆ. ವತ್ಸರಾಜನೆಂದು ಅವನ ಹೆಸರು. ಇಪ್ಪತ್ತೆರಡು ವರ್ಷದ ಸುರಧ್ರೂಪಿ ಅನುಭವಿ ಯುವಕನು. ಚಿಕ್ಕವಳಾದ ಸುಂದರಿಗೆ ಯೋಗ್ಯ ಉಪಚಾರ ಮಾಡಿ ಸುಖಭೋಗಕ್ಕೆ ಓಲೈಸಿದ್ದನು. +ಲಗ್ನವಾದ ಎರಡು ಮೂರುವಾರಗಳಲ್ಲಿ ಸುಂದರಿ ತನ್ನ ಗೆಳತಿಯನ್ನು ಭೇಟಿಮಾಡಲು ಬಂದಳು. +ಮೊದಲಿನಂತೆ ಪುರುಕುತ್ಸಾನಿ ತನ್ನ ಗುದುಮುರುಗೆಗೆ ಮೊದಲು ಮಾಡಿದಳು. ಆದರೆ ಸುಂದರಿ ಅದಕ್ಕೆ ಒಪ್ಪಲಿಲ್ಲ. ’ನಾನೀಗ ಮದುವೆಯಗಿದ್ದೇನೆ. ಹಾಗೆಲ್ಲ ಹುಡುಗಾಟ ಸಲ್ಲ!’ ಎಂದು ಹೇಳಿಬಿಟ್ಟಳು. +’ನನ್ನದೂ ಮದುವೆಯಾಗಿದೆ!’ ಎಂದಳು ಪುರುಕುತ್ಸಾನಿ. ಸುಂದರಿಯ ಮದುವೆಯ ವಿವರಗಳನ್ನೆಲ್ಲ ವಿಚಾರಿಸಿದಳು. ಸ್ನೇಹದ ಗೆಳತಿ ಯಾದ್ದರಿಂದ ಸುಂದರಿ ಮುಚ್ಚುಮರೆಯಿಲ್ಲದೆ ಎಲ್ಲ ಹೇಳಿಬಿಟ್ಟಳು. +ಪುರುಕುತ್ಸಾನಿ ತನ್ನ ತೊಡೆಗಳನ್ನು ಮುಟ್ಟಿ ನೋಡಿಕೊಂಡಳು. ತನ್ನ ಕೌಮಾಯಣ ಇನ್ನೂಹಾಗೆ ಇದೆ ಎಂದು ಅರಿತಳು. +ಸುಂದರಿ ಹೇಳಿದ್ದ , “ಒಂದೆರಡು ದಿನ ಕುಂಟುತ್ತ ಅಡ್ಡಾಡಬೇಕಾಯಿತು. ಈಗ ಮನಸ್ಸು ಅದನ್ನೇ ಬಯಸುತ್ತದೆ” ಎಂಬ ಆ ಮಾತು ಪುರುಕುತ್ಸಾನಿಯ ಮನಸ್ಸಿನ ಮೇಲೆ ಅಚ್ಚೊತ್ತಿದಂತಾಯಿತು. +ಈಗ ಅವಳಲ್ಲಿ ಕಾಮೋದಯವಾಯಿತು.! +ಜೊತೆಗೆ ಸುಂದರಿ ಹೇಳಿದ ಇನ್ನೊಂದು ಮಾತು -“ನನಗೆ ಹಗಲಿರುಳು ಗಂಡನದೇ ಚಿಂತೆ ಎನ್ನ್ಯವುದರಲ್ಲೂ ಸೊಗಸಿಲ್ಲ. ಮೊದಲಿನಂತೆ ಆಟಪಾಟದಲ್ಲಿ ಮನಸ್ಸು ಹೋಗದು. ಅವರೇ ನನ್ನ ಯಜಮಾನರು.” +ಮುಂದೆ ಮೂರು ನಾಲ್ಕು ತಿಂಗಳಲ್ಲೇ ಸುಂದರಿ ಗರ್ಭಿಣಿಯಾದಳು. +ತನಗೆ ಎಂದು ಗರ್ಭ ನಿಲ್ಲುವುದು?- ಪುರುಕುತ್ಸಾನಿಯ ತವಕ. +ತನ್ನ ಇಬ್ಬರು ಚೇಟಿಯರನ್ನು ಗಂಡ ಪುರುಕುತ್ಸನ ಮೇಲೇ ಪಾಳತಿ ಇಡಲು ಕಳಿಸಿಕೊಟ್ಟಳು. ಅವರಿಗೆ ಅರಿಯದ ವಿಷಯವಿಲ್ಲ. ಒಡತಿಯ ಆಣತಿಯ ಮೇರೆಗೆ ರಾಜನಮೇಲೆ ಕಣ್ಣು ಇಟ್ಟರು. +ರಾಜನ ಕೋಣೆಗೆಬರುವ ವಾರಾಂಗನೆಯರೆಲ್ಲವತ್ಸರಾಜ ಸುಂದರಿಯರ ಅನುಭವ ಪಡೆದು ಕಾಣಿಕೆ ಪಡೆದು ಮರಳುತ್ತಿರುವ ವಿಷಯ ಗೊತ್ತಾಗಿ ಪುರುಕುತ್ಸಾನಿ ಇನ್ನಷ್ಟು ಸಂಕಟಕ್ಕೆ ಒಳಗಾದಳು. +ಚೇಟಿಯನ್ನು ಕರೆದು ಸಲಹೆ ಕೇಳಿದಳು. +ಅವರೆಲ್ಲ ಒಮ್ಮತದಿಂದ ಹೇಳಿದರು:”ನೀನು ಮಹಾರಾಜ್ನಿ,ವಾರಾಂಗನೆಯರು ರಾಜಮಂದಿರಕ್ಕೆ ಬರುವುದು ನಿನ್ನ ಘನತೆಗೆ ಕುಂದು. ಅದಕ್ಕೆ ಪ್ರತಿಬಂಧ ಮಾಡಬೇಕು. ಅರಸರಿಗೆ ಹೆಂಗೆಳೆಯರನ್ನು ತಂದು ಒಪ್ಪಿಸುವ ಸರದಾರರನ್ನು ಕರೆದು ಅವರಿಗೆ ನಿರ್ಭಂದ ಹಾಕಬೇಕು. ಅವರು ನಿನ್ನ ಮಾತುಕೇಳುವಂತೆ ಮಾಡಬೇಕು!” +ಒಬ್ಬ ಸಣ್ಣಾಕೆ ಚೇಟಿ “ನಾನೆಲ್ಲ ವ್ಯವಸ್ಥೆ ಮಾಡುತ್ತೇನೆ!” ಎಂದು ಗುಟ್ಟಾಗಿ ತಿಳಿಸಿದಳು. +ಸಂಜೆ ತಾನೇ ಬಂದು ಪುರುಕುತ್ಸಾನಿಯ ಗಂಡುಬೀರಿ ಮುಖಕ್ಕೆ ಕಮಲದ ಹುಡಿಯನ್ನು ಸಿಂಪಡಿಸಿ, ಒಳ್ಳೆಯ ದುಕೂಲ ಉಡಿಸಿ, ಕೇಶಾಲಂಕಾರಗೈದು ,ಎದುರಿಗೆ ಕನ್ನಡಿ ಹಿಡಿದಳು. ತನ್ನ ರೂಪಲಾವಣ್ಯಗಳು ಇಮ್ಮಡಿಗೊಂಡುದನ್ನು ರಾಣಿ ಕಣ್ತುಂಬ ನೋಡಿದಳು. ಚೇಟಿ ಹೇಳಿದ ಇನ್ನೊಂದು ಮಾತು ಅವಳ ಹೃ‌ಅದಯಕ್ಕೆ ನಾಟಿತು. “ಅರಸನ ಹಾಸಿಗೆಯ ಮೇಲೆ ನಿನ್ನದು ಮೊದಲ ಅಧಿಕಾರ. ಅದನ್ನು ಸ್ಥಾಪಿಸುವುದು ನಿನ್ನನ್ನೇ ಕೂಡಿದೆ. ಹೊತ್ತು ಮೂಡಿದ ಮೇಲೆ ನೀನು ರಾಜರನ್ನು ಶಯನಾಗಾರದಲ್ಲಿ ಸಂಧಿಸಬೇಕು. ಓಲೈಸಬೇಕು, ಮನಸ್ಸು ಒಲಿಸಬೇಕು. ನಿನ್ನ ರೂಪ ಲಾವಣ್ಯಗಳನ್ನು ನೋಡಿ ಅರಸು ಕುಣಿಯುತ್ತ ನಿನ್ನ ಅಪ್ಪಿಕೊಳ್ಳುತ್ತಾನೆ” ಎಂದು ಉತ್ತೇಜನವಿತ್ತು ಕಳಿಸಿಕೊಟ್ಟಳು. +ಪಾಟಲೀ ಪುತ್ರದಿಂದ ತಾರ್ಕ್ಷ್ಯನು ಕರೆದುಕೊಂಡು ಬಂದಿದ್ದ ಪಕ್ಷ್ಮಾ ಎಂಬ ನ್ರತ್ಯವಿಶಾರದೆಯು ನ್ರತ್ಯಕ್ಕೆ ತಕ್ಕ ಉಡುಪುತೊಟ್ಟು ಅರಸನ ಶಯ್ಯಾಗ್ರಹದ ಹೊರಗಿನ ಕೋಣೆಯಲ್ಲಿ ದಾರಿ ಕಾಯುತ್ತ ಕುಳಿತಿದ್ದಳು. ಅಂದು ಅರಸನಿಗೆ ನಿಕಟವರ್ತಿಗಳಾದ ಕೆಲವು ಮನ್ನೆ ಮಾನ್ನ್ಯರು, ಶ್ರೇಷ್ತಿಗಳು ಎರ್ಪಡಿಸಿದ್ದ ಚಿಕ್ಕಸಭೆಯೆದುರು ಪಕ್ಷ್ಮಾ ರಾಣಿಯ ನ್ರ್ತ್ಯಪದರ್ಶನ ಆಗಬೇಕಿತ್ತು. ಎಲ್ಲರೂ ಸಮೀಪವರ್ತಿಗಳು. ಯಾರಿಗೋ ನ್ರತ್ಯದಲ್ಲಿ ಆಸಕ್ತಿಯಿಲ್ಲ. ಅರಸನಿಗಂತೂ ಮೊದಲೇ ಇಲ್ಲ. ಇಂಥ ಸಂದರ್ಭಗಳಿಗೆ ಅರಸನ ಇಛ್ಛಾನುಸಾರ ಆಯಾ ನ್ರ್ತ್ಯಗಾತಿಯನ್ನು ಸೀದಾ ಅರಸನ ಶಯ್ಯಾಗ್ರಹಕ್ಕೆ ಕರೆದೊಯ್ದು, ’ಇಂದಿನ ಕರ್ಯಕ್ರಮ ನಾಳೆಗೆ ಮೊಂದೂಡಲಾಗಿದೆ!’ ಎಂದು ಸಾರಿ ಹೇಳಿ, ಬಂದವರನ್ನು ಮನೆಗೆ ಅಟ್ಟುವ ಕೆಲಸವೂ ತಾರ್ಕ್ಷನಿಗೇ ಕೂಡಿದ್ದು. ಏಗಾಗಲೆ ನಾಲ್ಕಾರು ಅತಿಥಿಗಳುಸಭಾಂಗಣಕ್ಕೆ ಬಂದು ಆಸೀನರಾಗಿದ್ದರು, ಅರಸನ ಭೋಜನ ಸಾಗಿತ್ತು ಶಯ್ಯಗ್ರಹದಲ್ಲಿ. ಇಂದೇನು ಆಗುವುದೋ ಎಂಬ ಉತ್ಕಠೆಯಿಂದ ತಾರ್‍ಕ್ಷ ಪಕ್ಷ್ಮಾ ರಾಣಿಯ ಜೊತೆಗೆ ಕುಳಿತಿದ್ದ .ಪಕ್ಷ್ಮಾ ರಾಣಿಯ ಕೀರ್ತಿಯನ್ನು ಕೇಳಿದವರು ಅವಳ ನ್ರತ್ಯವನ್ನು ನೋಡುವ ಆಸೆಯಿಂದ ಬೇಗ ಬಂದು ಕುಳಿತಿದ್ದರು. +ಇದೇ ವೇಳೆ ಪುರುಕುತ್ಸಾನಿ ಬಿರಬಿರನೆ ನಡೆಯುತ್ತ ಅರಸನ ಶಯ್ಯಾಗ್ರಹದತ್ತ ನಡೆದಳು. +ಪಕ್ಷ್ಮಾರಾಣಿಯ ವೇಷಭೂಷಣಗಳನ್ನು ಕಂಡೊಡನೆ ಅರಸನ ಕೋಣೆಯನ್ನು ಬಿಟ್ಟು ಹೊರಗಿನ ಕೋಣೆಯನ್ನು ಪ್ರವೇಶಿಸಿದಳು. +“ಯಾರು ನೀನು ?” ಎಂದು ಬಿರುಸಾಗಿ ಕೇಳಿದಳು. +ಅವಳನ್ನು ಕಾಣುತ್ತಲೇ ತಾರ್ಕ್ಷ್ಯ ಬಾಗಿಲ ಹೊರಗೆ ನುಸುಳಿಕೊಂಡನು. ಅವನತ್ತ ಪುರುಕುತ್ಸಾನಿ ನೋಡಲಿಲ್ಲ. +ಬಾಗಿಲ ಹೊರಗಿನಿಂದ ತಾರ್ಕ್ಷ್ಯ ’ಬೇಗ ಹೊರಗೆ ಬಾ’ ಎಂದು ಸನ್ನೆ ಮಾಡಿದನು. ಈ ಅನುಭವ ಅವನಿಗೆ ಹೊಸತು. ಏನು ಮಾಡಬೇಕೆಂದು ಅವನು ವಿಚಾರ ಮಾಡಿರಲಿಲ್ಲ. +ಪಕ್ಷ್ಮಾ ಏಳಲು ನೋಡಿದಳು. ಪುರುಕುತ್ಸಾನಿ ಬಲವಾಗಿ ಅವಳ ಹೆಡಕು ಹಿಡಿದು ಕೂರಿಸಿದಳು. +“ನಾನು ಪಕ್ಷ್ಮಾ. ಸಭೆಯಲ್ಲಿ ನ್ರತ್ಯ ಮಾಡುವುದಕ್ಕೆಬಂದಿದ್ದೇನೆ, ಪಾಟಲೀಪುತ್ರದಿಂದ.” +“ಯಾರು ನಿನ್ನನ್ನು ಕರೆತಂದರು?” +“ನಿಮ್ಮ ಸೇವಕರು” +“ಯಾರು ಅದು?” +ಅನುಮಾನಿಸುತ್ತ ಪಕ್ಷ್ಮಾ ಹೇಳಿದಳು: “ತಾರ್ಕ್ಷ್ಯ!” +ತಾರ್ಕ್ಷ್ಯ ಪುರುಕುತ್ಸಾನಿಗೆ ಅಪರಿಚಿತರಲ್ಲೆ ಒಂದು ರೀತಿ ಅವಳ ಕಡೆಯವನು. ನಾಗಕ್ಷತ್ರಿಯ. ತಾಯಿ ಬಿಂದುಮತೀದೇವಿಯ ಊಳಿಗದವನು. +“ನಾನು ಅವನಿಗೆ ಹೇಳುತ್ತೇನೆ. ನೀನು ಇಲ್ಲಿಂದ ಹೊರಟುಹೋಗು.” +ಪಕ್ಷ್ಮಾ ಅವಮಾನಿಸಿದಳು. ನ್ರತ್ಯ? — ಆದರೆ ಪುರುಕುತ್ಸಾನಿಯ ಬಲವಾದ ಮುಷ್ಟಿ ಇನ್ನೂ ಅವಳ ಹೆಗಲಮೇಲೆ ಚುರುಗುಟ್ಟುತ್ತಿತ್ತು.ಎದುರು ಮಾತಾಡದೇ ನೇರವಾಗಿ ಹೊರಗೆ ನಡೆದಳು. ಸಭಾಂಗಣಕ್ಕೆ ಹೋಗದೆ, ಸುತ್ತುವರಿದು ಹೊರಬಾಗಿಲನ್ನು ಕಂಡಳು. +ಇತ್ತ ಪುರುಕುತ್ಸಾನಿ ಹಲವು ಕ್ಷಣಗಳವರೆಗೆ ನಿಂತಲ್ಲೇ ನಿಂತು ತನ್ನ ಕೋಪವನ್ನು ಸಾವರಿಸಿಕೊಂಡಳು. ಕನ್ನಡಿಯಲ್ಲಿ ಮುಖ ನೋಡಿಕೊಂಡು, ಮುಂಗುರುಳು ತೀಡಿಕೊಂಡಳು. ಕ್ರತಕ ಮುಗುಳ್ನಗೆಯನ್ನು ಮುಖಕ್ಕೆ ತಂದು ಕೊಂಡಳು. +ಒಮ್ಮೆಲೆ ಶಯ್ಯಗ್ರಹವನ್ನು ಪ್ರವೇಶ ಮಾಡಿದಳು. +ಹಾಸಿಗೆಯಲ್ಲೇ ಅರಸನು ಓಟ ಮಾಡುತ್ತಿದ್ದನು. ಉಂಡು ಚೌರಂಗಿಯ ಮೇಲೆ ತಾಟು ಬಡಿಸಲಾಗಿತ್ತು. ಒಬ್ಬ ಚೇಟಿ ಬಡಿಸಲಿಕ್ಕೆ ಸಾಮಗ್ರಿಯೊಂದಿಗೆ ನಿಂತಿದ್ದಳು. +ದುರದುರನೆ ಹೋಗಿ ಚೇಟಿಯ ಕೈಯಲ್ಲಿನ ಸವಟು, ಪಾತ್ರೆಗಳನ್ನು ಕಸಿದು ಹೊರಗೆಹೋಗಲಿಕ್ಕೆ ಮಹಾರಾಣಿ ಹೇಳಿದಳು. +ಅರಸನು ಅಪ್ರತಿಭನಾಗಿ ನೋಡತೊಡಗಿದನು. +“ನಿಮಗೆ ಬಡಿಸುವುದು ನಮ್ಮ ಕೆಲಸ, ಊಟ ಮಾಡಿ, ಹೊಟ್ಟೆತುಂಬ, ಇನ್ನಷ್ಟು ತೊವ್ವೆ ಬೇಕೆ? ಅಥವಾ ಶ್ರೀಖಂಡ?” ಎಂದು ದುಮದುಮನೆ ಊಟ ಸಾಮಗ್ರಿಗಳನ್ನು ಪೀಠದಮೇಲೆ ಇಟ್ಟು, ಸವುಟಿನೊಂದಿಗೆ ಅವನ ಹಾಸಿಗೆಯ ಮೇಲೆಯೇ ಸಮೀಪ ಕುಳಿತು, ಬಡಿಸಲು ಅಣಿಯಾದಳು. +“ಇಂದು ನೆನಪಾಯಿತೇ?”- ಅರಸ ವ್ಯಂಗವಾಗಿ ನುಡಿದ. +“ನಿಮಗೆ ಬಡಿಸಲು ಪಾಟಲೀಪುತ್ರದ ನ್ರತ್ಯಂಗನೆಯರೇ ಬೇಕೆ?” ನಾನು ಬಡಿಸಿದರೆ ಸವಿಯಾಗದೆ?” +“ಆಕೆ ಬಂದುದು ನ್ರತ್ಯಕ್ಕಾಗಿ, ಊಟ ಬಡಿಸುವದಕ್ಕಾಗಿ ಅಲ್ಲ.” +“ಆಕೆ ಬಂದು ನನ್ನ ಸ್ಥಾನ ಆಕ್ರಮಿಸಿಕೊಳ್ಳೂತ್ತಾಳೆ, ನಿಮ್ಮ ಹಾಸಿಗೆಯ ಮೇಲೆ” +“ನಿನಗಾಗದ ಕೆಲಸ ಆಕೆ ಮಾಡಿದರೆ ನಿನಗೆ ಸಂತೋಷವಿಲ್ಲವೆ?” +“ಇಲ್ಲ ಇನ್ನು ಮೇಲೆ ನನ್ನ ಹೊರತು ಈ ಹಾಸಿಗೆಯನ್ನು ಯಾರೂ ಆಕ್ರಮಿಸುವಂತಿಲ್ಲ.” +ಮುಂದೆ ಏನಾಯಿತೆಂಬುದರ ಬಗ್ಗೆ ವಿವರಗಳು ಬೇಡ. ಒಂದೇ ಮಾತು ಸಾಕು. +ಅವನು ಅರ್ಧಕ್ಕೇ ಊಟ ನಿಲ್ಲಿಸಿ, ತಾಟು ಬದಿಗೆ ಸರಿಸಿ, ಹೊದ್ದುಕೊಂಡು ನಿದ್ದೆಹೋದ. +ಪುರುಕುತ್ಸಾನಿ ಅವನ ಬದಿಗೇ ಪವಡಿಸಿದಳು. ಅಷ್ಟೇ. +ಆದರೂ ಘಟನೆ ಊರ ತುಂಬ ಗಾಳಿಸುದ್ದಿಯಾಗಿ ಹರಡಿತು. +“ಇಂದು ನ್ರತ್ಯವಿಲ್ಲ. ಕ್ಷಮಿಸಿ” ಎಂದು ತಾರ್ಕ್ಷ್ಯ ಸಭಿಕರಿಗೆ ಹೇಳಿದ್ದೇನೋ ನಿಜ. ನ್ರತ್ಯರಸಿಕರಷ್ಟೇ ನಿರಾಶಗೊಂಡರು. ಇಲ್ಲಿಗೇ ಮಾತು ನಿಲ್ಲುವುದೆಂದು ತಿಳಿದಿದ್ದ ತಾರ್ಕ್ಷ್ಯನಿಗೆ ನಿರಾಸೆಯಾಯಿತು. ಹೀಗೆ ಸಭೆಯ ಕಾರ್ಯಕ್ರಮ ನಿಂತದ್ದು ಮೊದಲನೇ ಸಲವಲ್ಲ. ಆದರೆ- +ಬಾಗಿಲ ಬಳಿ ಕಾವಲುಗಾರರ ಮಧ್ಯ ಕುಳಿತ ನ್ರತ್ಯಾಂಗನೆ ಪಕ್ಷ್ಮಾದೇವಿಯನ್ನು ಹಲವರು ರಸಿಕರು ನೋಡಿದರು. ಆಕೆ ಅರಸನ ಶಯ್ಯಾಗಾರವನ್ನು ಪ್ರವೇಶಿಸಿದುದಕ್ಕಾಗಿ ನ್ರತ್ಯಕಾರ್ಯಕ್ರಮ ರದ್ದಾಯಿತೆಂದು ಅಪೇಕ್ಷಿಸಿದವರೂ ನ್ರತ್ಯ ರಸಿಕರೂ ಸೋಜಿಗಪಟ್ಟು ಅವಳನ್ನು ಸುತ್ತುವರೆದರಿದು ನಿಂತರು. ಆಕೆಗೆ ಪ್ರಶ್ನೆ ಕೇಳ ತೊಡಗಿದರು. ಪುರುಕುತ್ಸಾನಿ ತನ್ನನ್ನು ನಿಷೇಧಿಸಿದ ವಿಷಯವನ್ನು ಆಕೆ ವಿಸ್ತಾರವಾಗಿ ಹೇಳಿಬಿಟ್ಟಳು. +ಅಷ್ಟೊತ್ತಿಗೆ ತಾರ್ಕ್ಷ್ಯ ಅವಳನ್ನು ಹುಡುಕುತ್ತ ಅಲ್ಲಿಗೆ ಬಂದನು. ಆಕೆ ಮೌನವಿರುವಂತೆ ಬಾಯಮೇಲೆ ಬೆರಳಿಟ್ಟು ಸೋಚಿಸಿದನು, ಆಕೆ ಅರ್ಧಕ್ಕೆ ನಿಲ್ಲಿಸಿದಳಾದರೂ ಪುರುಕುತ್ಸಾನಿ ಆಕೆಯನ್ನೂ ತಾರ್ಕ್ಷ್ಯನನ್ನೂ ಓಡಿಸಿದ ವಿಷಯ ಎಲ್ಲ ಮನ್ನೆಯರಿಗೋ ಶ್ರೇಷ್ಟಿಗಳಿಗೂ ತಿಳಿದೇಹೋಗಿತ್ತು. ಅವರಲ್ಲಿ ರಸಿಕರಾದವರು ಇನ್ನೊಂದು ಕಡೆಗೆ ನ್ರತ್ಯವನ್ನು ಎರ್ಪಡಿಸಲು ಯತ್ನಿಸಿದರು.’ ಬೇಡ’ವೆಂದು ತಾರ್ಕ್ಷ್ಯನ ಮನಸ್ಸು, ಆದರೆ ಈ ಘಟನೆಯಮೂಲಕ ಮುಖಭಂಗವಾದ ಅವನಿಗೆ ಬೇಡವೆನ್ನಲಿಕ್ಕೆ ಆಗಲಿಲ್ಲ. ಆದರೂ ಪಕ್ಷ್ಮಾರಾಣಿಗೆ ಬೇರೆ ಒಯ್ದು “ಏನೂ ಹೇಳಬಾರದೆಂದು” ಗುಟ್ಟಾಗಿ ಹೇಳಿದ. ತಾನು ಮನೆಗೆ ಹೊರಟು ಹೋದ. ಅಂದಿನ ನ್ರತ್ಯಕ್ಕೆ ಮನ್ನೆಯರು, ಶ್ರೇಷ್ಟಿಯವರು ಕೋಡಿಸಿದ ೩೦ ವರಹಗಳಿಂದಷ್ಟೇ ನ್ರತ್ಯಾಂಗನೆ ಸಂತುಷ್ಟವಾಗಬೇಕಾಯಿತು. ಕರಾರು ನೂರುವರಹದ್ದು. +ಮರುದಿನ ಮಹಾರಾಜರು ಕೊಡಮಾಡಿದ್ದ ಒದು ನೂರು ವರಹದ ಬಹುಮಾನಕ್ಕಾಗಿ ತಾರ್ಕ್ಷ್ಯನಿಗೆ ಎನೂ ಕೊಡಬಾರದೆಂದು ಮಹಾರಾಣಿ ಹೇಳಿಕಳಿಸಿದ್ದಾರೆಂದು ಉತ್ತರ ಬಂದಿತು. +ಪಕ್ಷ್ಮಾರಾಣಿಯನ್ನು ಇಳಿಸಿದ ತಾಣಕ್ಕೆಬಂದ ತಾರ್ಕ್ಷ್ಯ, “ಎನೂ ಚಿಂತೆ ಇಲ್ಲೆ,ಇಲ್ಲಿಯೇ ನಾಲ್ಕೈದು ದಿನ ಇರು. ರಾಜರಿಂದ ಕರೆ ಬರುತ್ತದೆ” ಎಂದು ಭರವಸೆ ನೀಡಿ ಮನೆಗೆ ಹೋದ. +ಭಂಡಾರಿಗೆ ಹಾಗೆ ಹೇಳಿಕಳಿಸಿದುದರ ತಂತ್ರ ನಂತರ ತಾರ್ಕ್ಷ್ಯನಿಗೆ ಗೊತ್ತಾಯಿತು. ತಾಯಿಯ ಕಾಲದಿಂದ ನಾಗಪಕ್ಷದ ಅಭಿಮಾನಿಯಾದ ತಾರ್ಕ್ಷ್ಯನನ್ನು ತನ್ನೆಡೆ ಬರುವಂತೆ ಮಾಡಿ ತನ್ನ ಪಕ್ಷಕ್ಕೆ ಒಲಿಸಿಕೊಳ್ಳುವುದೇ ಪುರುಕುತ್ಸಾನಿಯ ಉದ್ದೇಶ, ನೂರು ವರಹ ಕೊಡಿಸುವ ಹವ್ಯಾಸದಲ್ಲಿಬೇರೆ ಉಪಾಯ ಕಾಣದೆ ತಾರ್ಕ್ಷ್ಯ ಪುರುಕುತ್ಸಾನಿಯನ್ನು ಕಂಡ. +ಪುರುಕುತ್ಸಾನಿ ನೂರುವರಹಕ್ಕೆ ಸರ್ವಥಾ ಒಪ್ಪಲಿಲ್ಲ. ಒಂದು ವರಹ ಕೊಡಬೇಕೆಂದು ಭಂಡಾರಿಗೆ ಅವನೆದುರೇ ಹೇಳಿ ಚೀಟಿಯನ್ನಿ ಕಳಿಸಿದಳು. +ಊರಿಗೇ ಊರೇ ಸುದ್ದಿ ತಿಳಿದುಕೊಂಡು ಪುರುಕುತ್ಸಾನಿಯ ಕೆಲಸಕ್ಕೆ ’ಸೈ’ಅಂದಿತು. +ಮಹಾರಾಜನ ಸಡಿಲು ನಡತೆಯಿಂದ ಭಂಡಾರ ಬರಿದಾಗುತ್ತಿದ್ದುದನ್ನು ನೋಡಿ ಬೇಸತ್ತ ಭಂಡಾರಿಯೂ ’ಸೈ’ ಎಂದನು. +ಅಯೋಧ್ಯೆ ಬಡ ದೇಶವಲ್ಲ. ಆದರೂ ಅರಸನ ಅಸಡ್ಡಾಳ ನಡತೆಯನ್ನು ನೋಡುತ್ತ ಉಪಾಯವಿಲ್ಲದೇ ಕೈ ಚೆಲ್ಲಿ ಕೂತಿದ್ದ ಪುರಜನಪ್ರಮುಖರು ’ವಾಹವ್ಹಾ!’ ಹಾಕಿ, ಸಣ್ಣ ಸಮಿತಿಯೊಂದಿಗೆ ಮಹಾರಾಣಿಯನ್ನು ಕಂಡು,’ಬಿಗಿ ಧೋರಣೆಗೆ ತಮ್ಮ ಸಮ್ಮತಿ ಹೇಳಿ,ಹೊಗಳಿ,ಹಾಡಿ ಹಿಂತಿರುಗಿದರು. +ನಾಲ್ಕು ದಿನಗಳವರೆಗೆ ನಿಂತ ಪಕ್ಷ್ಮಾರಾಣಿಗೆ ತನ್ನ ನೂರುವರಹ ದೊರಕಲಿಲ್ಲ. ಇನ್ನೆರಡು ಖಾಸಗೀ ಕಾರ್ಯಕ್ರಮ ಮಾಡಿ ಇನ್ನು ಮೂವತ್ತು ವರಹಗಳನ್ನು ಗಳಿಸಿದಳು. ಆಕೆಯ ಸೊಬಗಿಗೆ ಮನಸೋತ ನಡುವಯಸ್ಸಿನ ವತ್ಸರಾಜನ ತಂದೆ ವಿಧುರ ದೇವರಾಜ ಆಕೆಯ ಜೊತೆಗೆ ಎರಡು ರಾತ್ರಿ ಕಳೆದು, ಹತ್ತುವರಹ ದಾನಮಾಡಿ, ಸಂತುಷ್ಟನಾಗಿ ಮರಳಿದನು. ತಾರ್ಕ್ಷ್ಯನು ಮೋರೆ ತಪ್ಪಿಸತೊಡಗಿದನು. ಜೊತೆಗೆ… +ಪುರುಕುತ್ಸಾನಿಯ ಪ್ರೇರಣೆಯೋ.. +ತಾರ್ಕ್ಷ್ಯನ ಮೇಲಿನ ದ್ವೇಷವೋ… +ಪೌರರ ತಿರಸ್ಕಾರವೋ… +ಮೂವತ್ತು-ನಾಲ್ವತ್ತು ಪೋಕರಿಗಳು ಕೋಡಿಕೊಂಡು, ಕತ್ತಲಲ್ಲಿ ಪಕ್ಷ್ಮಾರಾಣಿ ವಾಸಿಸುತ್ತಿದ್ದ ಮನೆಯ ಮುಂದೆ ನಿಂತಿದ್ದ ದೇವರಾಜನ (ವತ್ಸರಾಜನ ತಂದೆ) ರಥದ ಕುದುರೆಯನ್ನು ಬಿಚ್ಚಿ ಮೇವು ತೋರಿಸಿ, ಆಸೆಗಾಗಿ ಅದನ್ನು‌ಊರ ಇನ್ನೊಂದು ಮೂಲೆಗೆ ಕರೆದೊಯ್ದು, ಮರಕ್ಕೆ ಕಟ್ಟಿದರು .ಗುಪ್ತ ಬೇಟಿಯಾದ್ದರಿಂದ ದೇವರಾಜ ತನ್ನ ಜೊತೆಗೆ ಸಾರಥಿಯನ್ನು ಒಯ್ದಿರಲಿಲ್ಲ. ಮರುದಿನ ಚುಮುಚುಮು ನಸುಕಿನಲ್ಲಿ ದೇವರಾಜ ಹೊರಗೆಬಂದು ನೋಡುತ್ತಾನೆ,ಕುದುರೆ ಮಂಗಮಾಯ! ರಥದ ಸಮೀಪ ಹೋಗಿ ನೋಡಿದರೆ, ಅಚ್ಚಿನ ಕೀಲಗಳೇ ಕಣ್ಮರೆಯಾಗಿವೆ. +’ರಥವನ್ನು ಕದ್ದು ಕುದುರೆಯನ್ನು ಇಲ್ಲೇ ಬಿಟ್ಟಿದ್ದರೆ..ಹತ್ತಿ ಮನೆ ಸೇರುತ್ತಿದ್ದೆನಲ್ಲ..’ಎಂದು ವಿಚಾರ ಮಾಡುತ್ತ ನಿಂತ ದೇವರಾಜನಿಗೆ ಗೋಡೆಯ ಮರೆಯಿಂದ ’ಖಿಕ್’ ಎಂದು ನಕ್ಕ ಶಬ್ದ ಕೇಳಿಸಿತು.ಸಂಶಯದಿಂದ ಅತ್ತಿತ್ತ ನೋಡುವಾಗ ಪಕ್ಷ್ಮಾ ರಾಣಿಯ ಮನೆಯ ಮೇಲೆಯೇ ಏನೋ ಬರೆದದ್ದು ಕಾಣಿಸಿತು.”ವ್ರದ್ಧ ದೇವರಾಜ-ಪಕ್ಷ್ಮಾರಾಣಿ ಕಲ್ಯಾಣಮಂಟಪ” ಎಂದು ಬರಹ. ಬರೆದದ್ದು ಕೇಲಗಳಿಂದಲೇ;ಅರಿಶಿನ-ಕುಂಕುಮವದ್ದಿದ ಕೇಲ ಎಣ್ಣೆಯಿಂದ. ಕೇಲದೆಣ್ಣೆಯ ಭಾಂಡವೂ, ಕೀಲಗಳೂ ಅಲ್ಲೇ ಬಿದ್ದಿದ್ದವು. ಮುದುಕ ತನ್ನ ಅಂಗವಸ್ತ್ರದಿಂದ ಬರೆದದ್ದನ್ನು ಒರೆಸತೊಡಗಿದ. ಗೋಡೆಯ ಮರೆಯಿಂದ ಯಾರೋ ಅದೇ ಒಕ್ಕಣಿಕೆಯನ್ನು ಕೂಗಿ ಹೇಳಿ ಓಡಿದರು, ಅವರ ಹಿಂದೆಯೇ “ಯಲಾಣಮಂಟಪ” ಎಂದು ಹತ್ತಾರು ಪೋಕರಿಗಳ ಧ್ವನಿ, ಓಡಿಹೋದ ಸದ್ದು. +ದೇವರಾಜ ಒರೆಸುವ ಕಾರ್ಯವನ್ನು ಪೂರ್ತಿಗೊಳಿಸಿದ. ಅಷ್ಟರಲ್ಲಿ ಕುದುರೆಯ ಖರಪುಟ ಧ್ವನಿ . ತನ್ನದೇ ಕುದುರೆಯಿರಬಹುದೆಂಬ ಆಸೆಯಿಂದ ಬೀದಿಯ ಮಧದಲ್ಲೇ ನಿಂತ. ಬಂದವನು ಪಹರೆಯ ರಾವುತ , ವೇರಸೇನ. ತನ್ನ ಸೆಲ್ಲೆಯನ್ನು ಧ್ವಜದ ಹಾಗೆ ಬೀಸಿ, ರಾವಿತನನ್ನು ನಿಲ್ಲಿಸಿ, ಹತ್ತು ವರಹ ಅವನಿಗೆ ಸಲ್ಲಿಸಿ, “ರಥದೊಡನೆಮನೆಗೆ ಬಂದು ಕುದುರೆ ಒಯ್ಯಿ! ಇನ್ನು ಹತ್ತು ವರಹ ಕೊಡುತ್ತೇನೆ” ಎಂದು ಅವನನ್ನು ಒಪ್ಪಿಸಿ, ಕುದುರೆಯನ್ನು ಕೈಗಡ ಪಡೆದು, ಮುದುಕ ಅಲ್ಲಿಂದ ನುಸುಳಿದ. ಎಲ್ಲವನ್ನೂ ತರ್ಕಿಸಿದ ರಾವುತ ಬೆಳಗು ಮುಂಜಾನೆ ಪ್ರಾಪ್ತಿಯ ಮುಹೂರ್ತವಾಯಿತು”, ಎಂಬ ಹಿಗ್ಗಿನಿಂದ ಕೀಲಗಳನ್ನು ಕೂಡಿಸಿ ರಥವನ್ನು ಎಳೆದುಕೊಂಡು ಹೋದ, “ಕುದುರೆ ಹುಡುಕಿಕೊಂಡು ಬಾ, ಅದು ಪಹರೆಯವರ ಕರ್ತವ್ಯ. ಆಮೇಲೆ ಹತ್ತು ವರಹ ಕೊಡುತ್ತೇನೆ” ಎಂಬ ಸರದಾರೀ ಧಾಟಿಯ ಗತ್ತು ದೇವರಾಜ ಸಾಧಿಸಿದ .ಪಹರೆಯವನಿಗೆ ತನ್ನ ಕುದುರೆ ಮರಳಿ ಸಿಕ್ಕರೆ ಸಾಕಾಗಿತ್ತು. “ನನ್ನ ಕುದುರೆ ಕೊಡಿರಿ ಓಡಾಡಿ ನೋಡುತ್ತೇನೆ, ಸ್ವಾಮಿ” ಎಂದು ಪಹರೆಯವ ಹೇಳಿದ. ಕುದುರೆ ಮರಳಿ ಕೊಟ್ಟರೆ ಅವ ಆಚು ಕಡಿಮೆಯಾಗುತ್ತದೆ ಎಂದು ದೇವರಾಜನ ಚಿಂತೆ.”ಮೊದಲು ನನ್ನ ಕುದುರೆ ತಂದು ಕೊಡು..” ಎಂದು ದೇವರಾಜ ಹೇಳುತ್ತಿರುವಾಗ, ಅಟ್ಟ ಇಳಿದು ವತ್ಸರಾಜ ಬರುತ್ತಿರುವುದು ಕಾಣಿಸಿತು. ಈ ಸುದ್ದಿ ಮಗವರೆಗೆ ಮುಟ್ಟಬಾರದೆಂಬ ಚಿಂತೆಯಲ್ಲಿ ಲಗುಬಗೆಯಿಂದ, “ಲಾಯದಲ್ಲಿ ಕುದುರೆ ಕಟ್ಟಿದೆ. ಒಯ್ಯಿ. ಸಂಜೆಯವರೆಗೆ ಕುದುರೆ ಬಾರದಿದ್ದರೆ ನಿನ್ನ ಕೆಲಸಕ್ಕೆ ಅಪಾಯ!” ಎಂದು ಅವನನ್ನು ಅಲ್ಲಿಂದ ಅಟ್ಟಿದ. +ಕುದುರೆಯೇನೋ ಸಿಕ್ಕಿತು.ಅಪಪ್ರಚಾರ ನಿಲ್ಲಲಿಲ್ಲ.ಸಂಜೆ ಇನ್ನಷ್ಟು ಪೋಕರಿಗಳು ಪಕ್ಷ್ಮಾದೇವಿಯ ಮನೆಯೆದುರು ವ್ರದ್ಧಪ್ರೇಮಿಯ ಹೆಸರಿನಿಂದ ಬೊಬ್ಬೆ ಹಾಕಿದರು. ಇನ್ನು ನಾಲ್ಕು ದಿವಸ ನಿಂತು ಹೋಗಬೇಕೆನ್ನುವ ಪಕ್ಷ್ಮಾದೇವಿಯ ಆಸೆ ನೆರವೇರಲಿಲ್ಲ. ಅಪಪ್ರಚಾರದಿಂದ ಇತರ ಸರದಾರರು,ಮನ್ನೆಯರು , ಪ್ರತಿಷ್ಟಿತರು, ಶ್ರೇಷ್ಟಿಗಳು ಬರುವುದು ನಿಂತು ಹೋಯಿತು. ತಾರ್ಕ್ಷ್ಯನ ಸುದ್ದಿಯೇ ಇಲ್ಲ. +ಇತ್ತ, ಊರ ಆಗುಹೋಗುಗಳನ್ನು ತಾರ್ಕ್ಷ್ಯನಿಂದಲೇ ಅರಿತುಕೊಂಡು ಪುರುಕುತ್ಸಾನಿ ತನ್ನ ವೈಭವದ ರಥವೇರಿ, ಎರಡು ಚೀಟಿಗಳೊಂದಿಗೆ ಪಕ್ಷ್ಮಾರಾಣಿಯು ಇಳಿದುಕೊಂಡ ಮನೆಗೆ ಬಂದಳು. ಚೀಟಿಯಜೊತೆಗೆ ಹೇಳಿಕಳುಹಿಸಿದಳು: “ನೀನು ಈ ರಾಜ್ಯದಲ್ಲಿ ಎಪ್ಪತ್ತು ವರಹ ಗಳಿಸಿರುವಿ. ಇನ್ನು ಮೂವತ್ತು ವರಹ ಮಹಾರಾಣಿ ಕೊಡುತ್ತಾರೆ. ನಿನ್ನನ್ನು ರಾಜ್ಯದ ಗಡಿಯವರೆಗೆ ಒಯ್ಯಲು ರಥವನ್ನು ಕೊಡುತ್ತಾರೆ. ಮತ್ತೆ ಈ ರಾಜ್ಯದಲ್ಲಿ ಕಾಲು ಇರಿಸಕೂಡದು. ಬಂದದ್ದು ಗೊತ್ತಾದರೆ ನಿನ್ನನ್ನು ಶೂಲಕ್ಕೆ ಏರಿಸಲಾಗುವುದು. ಈಗಲೇ ನೀನು ಹೊರಡಬೇಕು.” +ಪಕ್ಷ್ಮಾದೇವಿ ಕಣ್ಣುಕಣ್ಣು ಪಿಳುಕಿಸಿ, ಹಿಗ್ಗಿ ಹಾಗಲಕಾಯಾಗಿ ಮಹಾರಾಣಿಯವರಿಗೆ ನಮಿಸಲು ಬಂದಳು. “ನಿಮ್ಮ ಮನಸ್ಸಿಗೆ ನೋವು ಮಾಡಿದೆ;ಕ್ಷಮಾಭಿಕ್ಷೆ ಬೇಡುತ್ತೇನೆ’ ಎಂದು ಕಾಲು ಬಿದ್ದಳು .ಏನೂ ಮಾತಾಡದೆ,ತನ್ನ ಹಮ್ಮಿಣಿಯಿಂದ ೩೦ ವರಹಗಳನ್ನು ಅವಳ ಮುಂದೆ ಎಣಿಸಿ, ಹಿಂದೆ ನಿಂತಿದ್ದ ಒಂದು ಕ್ಷುದ್ರ ರಥದತ್ತ ಬೆರಳು ತೋರಿಸಿ, ಅಲ್ಲಿಂದ ಹೊರಟು ಹೋದಳು. +ಇದೆಲ್ಲವನ್ನೂ ಹಾಡುಹಗಲೇ ನೋಡುತ್ತ ನಿಂತ ಜನಜಂಗುಳಿ ’ಉಘೇ!’ ಎಂದು ಮಹಾರಾಣಿಯ ಔದಾರ್ಯವನ್ನು ಹಾಡಿ ಹರಸಿದರು. +ರಾಜನಾಗಿಯೂ ಇದ್ದು ಇರದಂತಿದ್ದ ಪುರುಕುತ್ಸ ಮಹಾರಾಜನಿಗಿಂತ ಮಹಾರಾಣಿ ಪುರುಕುತ್ಸಾನಿಯ ಹೆಸರು ಮೂರೇದಿನಗಳಲ್ಲಿ‌ಎಲ್ಲೆಡೆ ಹರಡಿತು. ಎಲ್ಲ ಅಧಿಕಾರಿಗಳು,ಮನ್ನೆಯರು,ಶ್ರೇಷ್ಟಿಗಳು ಕೊಂಡಾಡತೊಡಗಿದರು. ರಾಜ್ಯ ಸೋತ್ರಗಳೆಲ್ಲ ಪುರುಕುತ್ಸಾನಿಯ ವಶಕ್ಕೆ ಬಂದವು. ತಾರ್ಕ್ಷ್ಯನೂ ತೋರಿಕೆಗೆ ರಾಜನ ಆಪ್ತಸೇವಕನೇ ಹೊರತು, ಅಲ್ಲಿನ ಯಚ್ಚಯಾವತ್ ಘಟನೆಗಳನ್ನು ಕಳ್ಳ ರೀತಿಯಿಂದ ಮಹಾರಾಣಿಗೆ ತಿಳಿಸತೊಡಗಿದನು. +ಎಲ್ಲ ರೀತಿಯಿಂದ ಗೆದ್ದ ಪುರುಕುತ್ಸಾನಿ ಒಂದು ವಿಷಯದಲ್ಲಿ ಮಾತ್ರ ನಿರಾಶಳಾದಳು. ಎರಡು ವಾರ ಸತತಯತ್ನ ಮಾಡಿದರೂ ಅವಳ ಕೌಮಾರ್ಯ ಅಳಿಯಲಿಲ್ಲ. +ಇನ್ನೊಬ್ಬ ಹೆಣ್ಣಿಗೆ ಅರಸನ ಶಯ್ಯಾಗ್ರಹಕ್ಕೆ ಪ್ರವೇಶಕೊಡಲಿಲ್ಲ‌ಎಂಬುದೇ ಆಕೆಯ ಯಶಸ್ಸು. ಅರಸನಿಗೆ ಹದಿನೈದು ದಿನ ಉಣಬಡಿಸಿದ್ದೊಂದೇ ಆಕೆಗೆ ಹೆಗ್ಗಳೀಕೆ. +ಒಮ್ಮೆಯಂತೂ ಪುರುಕುತ್ಸ ಸ್ಪಷ್ಟ ಹೇಳಿಬಿಟ್ಟ: +“ಒಮ್ಮೆ ನಿನಗೆ ಲಭ್ಯವಾಗುವ ಸಂಧಿ ಇತ್ತು. ಅಂದು ನೀನೆ ನನ್ನನ್ನು ಹೊಡೆದು ಬಡೆದು ಮೂಲೆಯಲ್ಲಿ ಮಲಗಹಚ್ಚಿದೆ. ಈಗ ಅನುಭವಿಸು. ನನ್ನಿಂದ ಇದು ಆಗದ ಕೆಲಸ!” +ಇಷ್ಟು ಸ್ಪಷ್ಟ ಮಾತಾದ ಮೇಲೆ ಹತಾಶಳಾದ ಪುರುಕುತ್ಸಾನಿ ಅತ್ತ ಇನ್ನೊಂದು ವಿಚಾರ ಮಾಡಲಿಲ್ಲ. ರಾಜನನ್ನು ತಾರ್ಕ್ಷ್ಯನಿಗೆ ಒಪ್ಪಿಸಿಬಿಟ್ಟಳು. ನಾಗಬಾಲಕ ಕಾಲಿಯನನ್ನು ಅವನ ಸೇವೆಗೆ ಇಟ್ಟಳು. ತಾರ್ಕ್ಷ್ಯನು ಎರಡು ದಿನಕ್ಕೊಮ್ಮೆ ರಹಸ್ಯವರದಿ ಒಪ್ಪಿಸುತ್ತಿದ್ದ. ಅರಸನ ಶಯ್ಯಾಗ್ರಹಕ್ಕೆ‌ಇನ್ನೊಮ್ಮೆ ಪುರುಕುತ್ಸಾನಿ ಕಾಲು ಹಾಕಲಿಲ್ಲ. +ಪೌರಜನರು ತಾರ್ಕ್ಷ್ಯನ ಬಗ್ಗೆ ತಕರಾರು ತೆಗೆದುಕೊಂಡು ಬಂದರು,ಊರ ಗಣಿಕೆಯರನ್ನೆಲ್ಲ ರಾಜಗ್ರಹಕ್ಕೆಕರೆದೊಯ್ಯುತ್ತಾನೆಂದು. ತಾರ್ಕ್ಷ್ಯನ ಎರಡೂ ಮುಖಗಳನ್ನು ಅರಿತ ಪುರುಕುತ್ಸಾನಿ ಏನೂ ಹೇಳಲಿಲ್ಲ. ಪೌರರನ್ನೇ ಸಲಹೆ ಕೇಳಿದಳು. +“ಲೀಲಾವಿಲಾಸಕ್ಕಾಗಿಯೇ ಅಯೋಧ್ಯೆಯ ಹಿಂದಿನ ಮಹಾರಾಜರೆಲ್ಲರೂ ಆಮರವನದಲ್ಲಿಯ ಕುಟೀರದಲ್ಲಿ ಇರುತ್ತಿದ್ದರು. ಅವರ ವಿಲಾಸಗಳು ಪೌರರಿಂದ ಮರೆಯಾಗುತ್ತಿದ್ದವು. ರಾಜಗ್ರಹದಲ್ಲೇ ಇಂತ ಕ್ಷುದ್ರ ವಿಲಾಸಗಳು ನಡೆಯುವದು ಲೋಕನಿಂದೆಗೆ ಕಾರಣವಾಗುತ್ತದೆ. ಗಣಿಕೆಯರು ರಾಜಗ್ರಹ ಸೇರುವುದು ಎಲ್ಲರಿಗೂ ಅಪಮಾನಾಸ್ಪದ. ಇದರಮೇಲೆ ಮಹಾರಾಣಿಯವರ ಚಿತ್ತ!” +ಪರಿಸ್ತಿಥಿ ಕೈ ಮೀರಿದೆಯೆಂದು ಮಹಾರಾಣಿಗೆ ಮನದಟ್ಟಾಯಿತು. ತಮ್ಮ ಖಾಸಗೀ ಪತಿ-ಪತ್ನಿ ಸಂಬಧದ ವೈಫ಼ಲ್ಯವು ಎಲ್ಲ ಪ್ರಜಾಜನರಿಗೆ ಗೊತ್ತಾಗಿದೆಯೆಂಬುದು ಅಂಗೈ ಮೇಲಿನ ನೆಲ್ಲಿಕಾಯಿಯಷ್ಟು ಸ್ಪಷ್ಟ. ಮಹಾರಾಣಿಗೆ ಸಿಟ್ಟೂ ಬರಲಿಲ್ಲ. ಮನಸ್ಸುತೀರ ಕಹಿಗೊಂಡಿತು. ತಾಯಿ ಬಿಂದುಮತೀದೇವಿ ಈ ವಿವಾಹವನ್ನು ವಿರೋಧಿಸಿದ್ದಳೆಂದು ಅವಳಿಗೆ ತಿಳಿದಿತ್ತು. ಆದರೇನು ಮಾಡುವುದು? ಈಗ ಹಿಂಜರಿದರೆ ಸಲ್ಲದು. ತಾನೂ ಒಂದು ಹೆಜ್ಜೆ ಮುನ್ದೆಯೇಹಾಕಬೇಕು… +ಮಹಾರಾಜರು ಆಂರವನದಲ್ಲಿ‌ಇರತೊಡಗಿದರೆ, ಪ್ರಜೆಗಳನ್ನು ಸಂರಕ್ಷಿಸುವವರು ಯಾರು?” +ಒಬ್ಬಮಧ್ಯವಯಸ್ಕ ತೆಲೆತಿರುಕನು ಹೇಳಿಯೇಬಿಟ್ಟನು :”ಮಹಾರಾಣಿಯವರು ಸಮಾನ ಅಧಿಕಾರಿಗಳು,ಸಮರ್ಥರು,ವರ್ಚಸ್ವಿಗಳು…” +– ಹೀಗೆ ಸ್ಪಷ್ಟ ಮಾತು ಮಹಾರಾಣಿಗೆ ಬೇಕಿರಲಿಲ್ಲ. ಮನಸಾ ಒಪ್ಪಿಗೆಯಾಗುವ ಮಾತೇ ಸರಿ! ಆದರೆ ಈ ವಾಚ್ಚಾರ್ಥಕ್ಕೆ ಮಾತು ಇಳಿಯಬಾರದು. ರಾಣಿ ತೆಲೆ ಅಲ್ಲಾಡಿಸಿದಳು. ಅವಳ ಮನೋಧರ್ಮದ ಸೂಕ್ಷ್ಮವನ್ನು ಅರಿತ ಒಬ್ಬ ಅನುಭವಿ ಶ್ರೇಷ್ಟಿಯು ಈ ಮಾತಿನ ಮೊನಚನ್ನು ಮೊಂಡಗೊಳಿಸಲಿಕ್ಕೆಂದೇ ಹೇಳಿದ: +“ಸಾಮ್ರಾಜ್ಞಿ,ನಮ್ಮಲ್ಲಿ ಕೆಲವು ಧ್ರಷ್ಟರ ಮಾತನ್ನು ಕ್ಷಮಿಸಬೇಕು. ಮಹಾರಾಜ ಮಹಾರಾಜ್ಞಿಯವರನ್ನು ಅಗಲಿಸುವ ಉದ್ದೇಶ ನಮ್ಮದಲ್ಲ. ಆಯೋಧ್ಯೆಯ ಅನೇಕ ಪ್ರಭುಗಳು ವಿಲಾಸಿಗಳು. ಅದು ರಾಜಧರ್ಮದ ಒಂದು ಅಂಶ. ಗಣಿಕೆಯರಿಗೆ ರಾಜ್ಯಮಾನ್ಯತೆ ಸಿಕ್ಕುವ ಬಹಿರಂಗ ಪ್ರಘಾತದಿಂದಷ್ಟೇ ನಮಗೆ ಚಿಂತೆಯಾಗಿದೆ. ಮಹಾರಾಜ್ಞಿಯವರು ಏನಾದರೂ ಉಪಾಯ ಮಾಡಬೇಕು. ಗಣಿಕೆಯರು ರಾಜರಿಂದ ಮನ್ನಣೆ ಪಡೆದು ರಾಜರ ಸ್ಥಾನವನ್ನೇ ಆಕ್ರಮಿಸಿದ ಕೆಲವು ಉದಾಹಾರಣೆಗಳು ಇತ್ತೀಚೆಗೆ ಹೆಚ್ಚುತ್ತಿವೆ. ಆ ದೌರ್ಭಾಗ್ಯ ಅಯೋಧ್ಯೆಗೆ ಒದಗದಿರಲಿ, ಇಷ್ಟೇ ನಮ್ಮ ಆಶಯ. ಪ್ರಸಂಗಕ್ಕೆ ತಕ್ಕಂತೆ, ಮಹಾರಾಜರು ಒಂದು ಪಕ್ಷ ಒಂದು ಮಾಸ,ಇಚ್ಚಾನುಸಾರವಾಗಿ ಆಮ್ರವನಕ್ಕೆ ಹೋಗಿ ವಿಶ್ರಾಂತಿ ಪಡೆಯಬೇಕು. ಬೇಕಾದ ಗಣಿಕೆಯರನ್ನು ಅಲ್ಲಿಯೇ ಕರೆಸಿಕೊಳ್ಳಬಹುದು. ಮರಳಿ ಪ್ರಜಾಪಾಲನಕ್ಕಾಗಿ ಅರಮನೆಗೆ ಬರಬೇಕು. ಆಂರವನವೇನೂ ಅಯೊಧ್ಯೆಗೆ ದೂರವಲ್ಲ. ಒಂದೂವರೆ ಗಾವುದ ಅಷ್ಟೆ. ಅಂಥ ಅಗಥ್ಯ ಸಂದರ್ಭಗಳಲ್ಲಿ ಒಂದು ಎರಡು ಪ್ರಹರಗಳಲ್ಲಿ ಇಲ್ಲಿಬಂದು ನಿಲ್ಲಬಹುದು. ಆವರೆಗೆ ಮಹಾರಾಣಿಯವರ ನೇತ್ರತ್ವದಲ್ಲಿ ನಾವು ಹೋರಾಡುವ ಕಾಪಿನವರಾಗಿ ರಾಜ್ಯವನ್ನು ರಕ್ಶಿಸುತ್ತೇವೆ!” +ಈ ಶಬ್ಧರೂಪದಲ್ಲಿ ಮಹಾರಾಣಿ ಗೋಣುಹಾಕುವಂತಾಯಿತು. +ಆದರೂ ಯಾವ ನಿರ್ಣಯಕ್ಕೂ ಬರದೆ,”ನಾನು ವಿಚಾರ ಮಾಡಬೇಕು. ಅವಕಾಶ ಕೊಡಿರಿ!” ಇಷ್ಟೇ ಹೇಳಿ ಅವರನ್ನು ಕಳಿಸಿಕೊಟ್ಟಳು. ಅಪಕ್ವ ಜನರಿಗೆ ತಮ್ಮ ಸಂಧಾನ ವ್ಯರ್ಥವಾಯಿತೆಂದು ಅನಿಸಿತು. ಅನುಭವಿ ನಾಮಶ್ರೇಷ್ಟಿಯೂ, ಕೂದಲೆಳೆಯ ಅಗಲದಿಂದ ಮರ್ಯಾದೆ ಉಳಿಸಿಕೊಂಡ ಅನುಭವಿ ಲೋಲುಪ ದೇವರಾಜನಿಗೂ, ರಾಣಿಯ ಮೌನ ಗೋಣಲ್ಲಾಟವೇ ಸಾಕಾಯಿತು. ತಮ್ಮ ಸಂಧಾನ ಯಶಸ್ವಿಯಾಯಿತೆಂದೇ ಅವರು ನಿಶ್ಚಯಿಸಿದರು. ರಾಣಿ ಎಷ್ಟು ನಿಷ್ಟುರ ಕರ್ತವ್ಯಶಾಲಿಯೆಂಬುದನ್ನು ಹದಿನೈದೇ ದಿವಸಗಳಲ್ಲಿ ಅವರು ಅರಿತಿದ್ದರು. +ಮಹಾರಾಣಿ ತಕ್ಷಣ ಕರೆಸಿದ್ದು ತಾರ್ಕ್ಷ್ಯನನ್ನೇ. ತನ್ನಬಗ್ಗೆ ದೂರು ಕೊಡಲಿಕ್ಕೆಂದು ಪೌರರ ಸಮಿತಿಯೊಂದು ಮಹಾರಾಣಿಯವರ ಬಳಿಗೆ ಬಂದದ್ದನ್ನ್ನು ತಿಳಿಯುತ್ತಲೇ ಗರ್ಭಗಲಿತನಾದ ತಾರ್ಕ್ಷ್ಯನು ಗಡಗಡ ನಡುಗುತ್ತಲೇ ಮಹಾರಾಣಿಯ ಬಳಿಗೆ ಬಂದು, “ನನ್ನನ್ನು ರಕ್ಷಿಸಿರಿ” ಎಂದು ಸಾಷ್ಟಾಂಗ ಬಿದ್ದನು. +“ಹುಚ್ಚಾ ಏಳು ನಿನಗೆ ಸಂತೈಸಲು ನನಗೆ ಸಮಯವಿಲ್ಲ. ನಿನ್ನಿಂದ ಎರಡು ಕೆಲಸಗಳಾಗಬೇಕಿವೆ-ಒಂದು ,ನೀನು ಮಹಾರಾಜರ ಬಳಿ ಹೋಗಿ ಪಕ್ಷ್ಮಾದೇವಿಯ ಗುಣಗಾನ ಮಾಡು .ಶಯನದಲ್ಲಿ ಅವಳು ಬಹಳ ಸುಖವೆಂದು ಬಣ್ಣಿಸು. ನಿನಗೆ ಹೇಗೆ ಗೊತ್ತು, ಎಂದು ಮಹಾರಾಜರು ಕೇಳಬಹುದು. ಅಂಥ ಪ್ರಸಂಗ ಬಂದರೆ,ದೇವರಾಜ ಮನ್ನೆಯವರು ಹೇಳಿದರೆಂದು ಹೇಳು. ರಾಜರಿಗೆ ಆಗಣಿಕೆಯ ಲಾಲಸೆ ಇನ್ನೂ ಅಳಿದಿಲ್ಲ. ತಮಗೆಸಲ್ಲಬೇಕಾದುದು ದಕ್ಕಲಿಲ್ಲವೆಂಬ ಬಗ್ಗೆ ಅವರು ಖಿನ್ನರಾಗಿದ್ದಾರೆ. ನನ್ನ ಮೇಲೆ ಹರಿಹಾಯುತ್ತಾರೆ. ಎರಡನೇ ಕೆಲಸ,ನೀನು ಅವರ ಹಾಸಿಗೆಗೆ ಬೇಗನೇ ಪಕ್ಷ್ಮಾದೇವಿಯನ್ನು ಕರೆತರಬೇಕು!” +ತಾರ್ಕ್ಷ್ಯ ಬಾಯಿಬಿಟ್ಟು ನೋಡುತ್ತಲೇ ನಿಂತನು, ಚಕಿತನಾಗಿ. ಇದೇನು ಮಹಾರಾಣಿ ಆಟ ಆಡಿಸುತ್ತಿದ್ದಾರೆ. ಅವರ ಗುರಿ ಏನಿರಬಹುದು? +“ಮಹಾರಾಜ್ಞಿಯವರು ಪಕ್ಷ್ಮಾ ತಿರುಗಿ ಅಯೋಧ್ಯೆಗೆ ಬಂದರೆ ಶೂಲಕ್ಕೇರಿಸುವುದಾಗಿ ಅಪ್ಪಣೆ ಕೊಡಿಸಿರುವಿರಿ. ಆಕೆ ಬರಲು ಭಯಪಟ್ಟರೆ..” +“ಅಯೋಧ್ಯೆಗೆ ಕರೆತರಲು ಯಾರು ಹೇಳಿದರು?- ಆಮ್ರವನಕ್ಕೆ ಕರೆತರಬೇಕು. ಒಂದು ಗುಡಿಸಲಿನಲ್ಲಿ ಕೂಡಿಸಿ ಮಹಾರಜರನ್ನು ಕರೆದೊಯ್ಯಬೇಕು. ತೃಪ್ತಿಪಡಿಸಿ ಕರಕೊಂಡು ಬರಬೇಕು…” +“ಮಹಾರಾಣಿಯ ಕಣ್ಣಲ್ಲಿ ನೀರು ಊರಿತು,ತನ್ನ ಗಂಡನ ಸೂಳೆಗಾಗಿ ತಾನೇ ಕೊಂಟಲಗಿತ್ತಿಯಾಗಬೇಕಾಯಿತಲ್ಲಾ- ಎಂಬ ಕಲ್ಪನೆಯಿಂದ. +ತಾರ್ಕ್ಷ್ಯ ನೆಲ ನೋಡತೊಡಗಿದ. ಅವನಿಗೆ ಕಸಿವಿಸಿಯಾಯಿತು. ಎಷ್ಟಾದರೂ ಅವನು ರಾಣಿಯ ಗೋತ್ರದವನೇ. +“ಮಹಾರಾಜರು ಬರಲೊಪ್ಪದಿದ್ದರೆ…?” +ರಾಣಿಯಕೋಪ ಉದ್ರೇಕಿಸಿತು. “ನಿನಗೆ ಈ ಕೆಲಸ ಒಪ್ಪಿಸಿದೆ .ಅದನ್ನುಹೇಗೆ ಪೂರೈಸುವುದು ಅದು ನಿನ್ನ ಚಿಂತೆ. ಇಲ್ಲಿಂದ ಹೊರಡು. ನಿನಗೆ ಎಂಟು ದಿನ ಅವಧಿ ಕೊಟ್ಟಿದೆ. ” ರಾಣಿ ಬಿರಬಿರನೆ ಅಲ್ಲಿಂದ ಒಳಗೆ ನಡೆದಳು. ಬೆರಳು ತನ್ನ ಮುದ್ರಿಕೆಯ ಉಂಗುರವನ್ನುಕೊಡಲು ಮರೆಯಲಿಲ್ಲ. ಪಕ್ಷ್ಮಾಳಿಗೆ ಸಲ್ಲಬೇಕಾದ ನೂರುವರಹಗಳಿದ್ದ ಹಮ್ಮಿಣಿಯನ್ನು ಕೊಡಲು ಮರೆಯಲಿಲ್ಲ. ತಾರ್ಕ್ಷ್ಯ ನಿಟ್ಟುಸಿರುಬಿಟ್ಟು ಅಲ್ಲಿಯೇ ತುಸು ಸಮಯ ಕಂಭಕ್ಕೆ ಒರಗಿಕೊಂಡ. +ಪಕ್ಷ್ಮಾಳನ್ನು ನಂದಿಗ್ರಾಮದವರೆಗೆ ರಥ ಒಯ್ದಿತ್ತು. ಅಲ್ಲಿಂದ ಎರಡು ಸೀಳು ದಾರಿಗಳು. ಒಂದು ದಂಡಕಾರಣ್ಯಕ್ಕೆ. ಅತ್ತ ನಗರೋಪಜೀವಿ ಪಕ್ಷ್ಮಾ ಹೋಗಿರಲು ಸಾಧ್ಯವಿಲ್ಲ. ಇನ್ನೊಂದು ದಾರಿ ಹಿಡಿದು ಒಂದೆರಡು ಹಳ್ಳಿ ದಾಟಿ ಶ್ರಾವಸ್ತಿ ಸೇರಿರಬಹುದು. ಅದು ತಕ್ಕಮಟ್ಟಿಗೆ ದೊಡ್ಡ ಊರು. ಬಾಡಿಗೆಯ ರಥ ಮಾಡಿಕೊಂಡು ಮುಂದೆ ಕಾಶಿಗಾಗಲಿ ಪಾಟಲೀಪುತ್ರಕ್ಕಾಗಲಿ ಹೋಗಬಹುದು. ಕರೆತರುವಾಗ ಶ್ರಾವಸ್ತಿಯಲ್ಲಿ ಒಂದುದಿನ ಒಬ್ಬ ಅಡಗೂಲಜ್ಜಿಯ ಮನೆಯಲ್ಲಿ ಇಳಿದಿದ್ದರು. ಮೊದಲು ಆಕೆಯನ್ನುಸಂಧಿಸಿದರೆ ಸುದ್ದಿ ತಿಳಿಯಬಹುದು. ಬೇಗನೇ ಹೋಗಬೇಕು. ಆದರೆ ಕರೆತರುವಾಗ ಮಾತ್ರ ಸಂಶಯಬರದಂತೆ ರಥದ ಮೇಲೆ ಯವನಿಗೆ ಹಾಕಿ ತರಬೇಕು. ಪಹರೆಯವರಿಗೆ “ಮಹಾರಾಣಿಯಸ್ನೇಹಿತೆ” ಎಂದು ಹೇಳಿ ಉಂಗುರ ತೋರಿಸಬೇಕು. +ಹೊರಡುವ ಮೊದಲು ಮಹಾರಾಜನ್ನು ಕಂಡು ನ್ರತ್ಯಾಂಗನೆ ಪಕ್ಷ್ಮಾಳನ್ನು ಆಂರವನಕ್ಕೆ ತಂದರೆ ಹೇಗೆ? ಎಂದು ಕೇಳಬೇಕು. +ಎರಡನೆಯ ಕೆಲಸ ಸುಲಭವಾಗಿ ಕೈಗೂಡಿತು. +ತಾರ್ಕ್ಷ್ಯ ಮಹಾರಾಜರ ಶಯನಗ್ರಹದೆದುರು ತನ್ನ ಕುದುರೆಯನ್ನು ನಿಲ್ಲಿಸುತ್ತಲೆ ಕಾಲಿಯ ಓಡುತ್ತ ಬಂದು, “ಬೆಳಗಿನಿಂದ ಮಹಾರಾಜರು ನಿನ್ನನ್ನು ನೆನಸುತ್ತಿದ್ದಾರೆ. ಎಲ್ಲಿ ಹೋಗಿದ್ದಿ?” ಎಂದುಕೇಳಿ, ಕೈಹಿಡಿದು ಒಳಗೆ ಕರೆದುಕೊಂಡುಹೋದನು. +ಮಹರಾಣಿ ಕೋಣೆಗೆ ಬರುವುದನ್ನು ನಿಲ್ಲಿಸಿ ಐದೇ ದಿನವಾದರೂ, ಸ್ತ್ರೀ ಸಂಗವಿಲ್ಲದೇ ಮಹಾರಾಜರು ಇಪ್ಪತ್ತು ದಿನ ಕಳೆದಿದ್ದರು. ಪೌರಜನರ ಮನವಿಯ ಸುದ್ದಿ ತಿಳಿದ ಧೂರ್ತ ತಾರ್ಕ್ಷ್ಯನು ಗೆಳೆಯನಮನೆಸೇರಿ ಕಣ್ಮರೆಯಾಗಿದ್ದನು. ಅವನು ಅಲ್ಲಿ ಅಡಗಿ ಕುಳಿತದ್ದು ಮಹಾರಾಣಿಯವರಿಗಷ್ಟೇ ಗೊತ್ತು. ತಾರ್ಕ್ಷ್ಯ ಒಳಗೆ ಹೋಗುತ್ತಲೇ, ಮಹಾರಜರು ಸಿಡಿಮಿಡಿಮಾಡುತ್ತ “ಕತ್ತೇ, ಎಲ್ಲಿ ತೊಲಗಿದ್ದೆ?” ಎಂದು ಗರ್ಜಿಸಿದರು. +“ಪ್ರಭೂ, ಸೇವಕನನ್ನು ರಕ್ಷಿಸಬೇಕು” ಎಂದು ತಾರ್ಕ್ಷ್ಯ ಅವರ ಕಾಲಿಗೆ ಅಡ್ಡಬಿದ್ದು ಪ್ರಭುಗಳ ಕಾಲನ್ನು ಬಲವಾಗಿಹಿಡಿದುಕೊಂಡನು. +“ಏನಾಯಿತು?” +“ಮಹಾಪೌರರು ನನ್ನನ್ನು ಬಲವಂತವಾಗಿ ಹಿಡಿದು ಮಹಾರಾಣಿಯವರ ಎದುರು ನಿಲ್ಲಿಸುವ ಸಂಚು ಹೂಡಿದರು ಮರೆಯಾಗಿ ಅಡಗಿ ಕುಳಿತಿದ್ದೆ. ನಾನು ಕಲಾವಂತೆಯರನ್ನು ರಾಜಗ್ರಹಕ್ಕೇ ಕರೆದುಕೊಂಡು ಬರುವುದು ಪೌರರಿಗೆ ಅಪಮನವಂತೆ!” +“ಯಾರು ಹಾಗೆ ಹೇಳಿದವರು?” -ಆಗಲೇ ಅರಸನಿಗೆ ಅರ್ಧ ಮನವರಿಕೆಯಾದಂತೆ ಅವನ ಧ್ವನಿ ತತ್ತರಿಸಿತ್ತು. ಅವನ ಧ್ವನಿಯಲ್ಲಿ ಅರ್ಧ ಉಗ್ರತೆ ಇತ್ತಾದರೂ ಅನಿರ್ಧಾರವೂ ಇತ್ತು. +ತಾರ್ಕ್ಷ್ಯಾ ಚತುರ. ಈ ಪ್ರಶ್ನೆಗೆ ಉತ್ತರ ಕೊಡಲು ಹೋಗಲಿಲ್ಲ. ಬದಲಾಗಿ ತನ್ನ ಪೂರ್ವಯೋಜನೆಯನ್ನೇ ಮುಂದಿಟ್ಟ; +“ಪ್ರಭೂ, ತಮ್ಮ ಮೂರು ತೆಲೆಮಾರಿನ ಹಿರಿಯರು ವಿಲಾಸಕ್ಕಾಗಿಯೇ ಆಮ್ರವನದಲ್ಲಿ ಒಂದುಭೋಗಮಂದಿರ ಕಟ್ಟಿಸಿದ್ದಾರೆ. ಅಲ್ಲಿ ಬರುವ ಗಣಿಕೆಯರೂ ಬಾಯಿಹರಕರು. ಮಹಾರಾಜರ ಬೇಟಿಯನ್ನು ಬಣ್ಣಿಸಿ ಹೇಳಿ ತಮ್ಮ ತೆರವನ್ನು ಹೆಚ್ಚುಗೊಳಿಸುತ್ತಾರೆ. ಈಗ ಮ್ರಗನಯನೆಯ ತೆರ ಇಪ್ಪತ್ತು ವರಹಕ್ಕೆ ಏರಿದೆ. ಹೊಟ್ಟೆ ತುಂಬಿಸಿಕೊಳ್ಳಲ್ಲಿ. ಆದರೆ ಮಹಾರಾಜರಬಗ್ಗೆ ಲಘುಮಾತುಗಳು ನಡೆಯುವುದು ನನಗೆ ಬೇಸರವಾಗುತ್ತದೆ.” +ಅಷ್ಟರಲ್ಲಿಯೇ ತಾರ್ಕ್ಷ್ಯ ತನ್ನ ದ್ವೇಷ ಸಾಧಿಸಿಕೊಂಡಿದ್ದ. ಮ್ರಗನಯನೆ ಅವನಿಗೆ ಸಲ್ಲಬೇಕಾದಲಂಚವನ್ನುಕೊಟ್ಟಿರಲಿಲ್ಲ. +’ನೀನೂ ಆಪೌರರ ಹಾಗೇ ಮಾತಾಡುತ್ತಿದ್ದೀಯಲ್ಲ!” +“ಇಲ್ಲ ಮಹಾಪ್ರಭು! ದೂರದಿಂದಕರೆದುಕೊಂಡು ಬಂದ ಪಕ್ಷ್ಮಾರಾಣಿಯ ಬೇಟಿ ಮೊಟಕಾದದ್ದಕ್ಕೆ ನಾನಿನ್ನೂ ಮಿಡುಕುತ್ತಿದ್ದೇನೆ. ಮಹಾರಾಜರು ಆಮ್ರವನದಲ್ಲಿ ಆಕೆಯನ್ನು ಬಯಸಿದರೆ, ಮತ್ತೆ ಕರೆತರಲು ಯತ್ನಿಸುತ್ತೇನೆ.” +“ಆಕೆಯನ್ನು ಮಹಾರಾಣಿ ಊರು ಬಿಡಿಸಿದಳೆಂದು ನೀನೇ ಹೇಳಿದೆಯಲ್ಲ.” +“ಹೌದು, ಆದರೆ ದೂರ ಹೋಗಿರಲಾರಳು. ಅವಳನ್ನು ಕರೆತರುತ್ತೇನೆ, ಮಹಾರಾಣಿಯವರಿಗೂ ತಿಳಿಯದಷ್ಟು ಗುಪ್ತವಾಗಿ.” +“ಹಾಗಾದರೆ ಇಂದೇ ಆಮ್ರವನಕ್ಕೆ ಹೋಗುತ್ತೇನೆ” +“ಇಂದೇ ಬೇಡ ಪ್ರಭೂ. ನಾನು ಶೋಧಿಸಿ ತರುತ್ತೇನೆ.” +ರಾಜರೇ ಆಮ್ರವನಕ್ಕೆ ತೆರಳಲು ಉತ್ಸುಕರಾಗಿದ್ದು ಸುಸ್ಪಷ್ಟವಾಯಿತು. ಪಕ್ಷ್ಮಾಳನ್ನು ಹುಡುಕಲುಕನಿಷ್ಟ ೩-೪ದಿನಗಳು ಬೇಕು. ಆವರೆಗೆ ಅವರ ನಿಲಾಸಕ್ಕೆ ಬೇರೆ ಏನು ವ್ಯವಸ್ಥೆ ಮಾಡಬೇಕೆಂಬ ಚಿಂತೆಯನ್ನು ತಾರ್ಕ್ಷ್ಯ ಹೇಳಿದ್ದಕ್ಕೆ ಮಹಾರಾಜರು ಹೇಳಿದರು: +“ಇಲ್ಲ ಇಂದೇ ಆಮ್ರವನಕ್ಕೆಹೋಗುತ್ತೇನೆ. ನನ್ನ ಉಪ್ಪುಂಡು ದ್ರೋಹ ಮಾಡಿದ ಮ್ರಗನಯನೆಯಸುದ್ದಿ ಬೇಡ. ಶಶಾಂಕಿಯನ್ನು ಕಳಿಸಿಕೊಡು. ನೀನು ಬಹಳ ದಿನ ಮಾಯವಾಗಬೇಡ . ತಿಳಿಯಿತೇ?” +ತನ್ನ ಎರಡೂ ಕೆಲಸ ಸಲೀಸಾಗಿ ನೆರವೇರಿದ್ದನ್ನು ಕಂಡು ತಾರ್ಕ್ಷ್ಯ ಹಿಗ್ಗಿದ. +ಹಿಗ್ಗುತ್ತ-ಹಿಗ್ಗುತ್ತ ಮಹಾರಾಣಿಯವರಿಗೆ ವರದಿ ಒಪ್ಪಿಸಿ, ಶಶಾಂಕಿಯನ್ನು ಕಂಡು, ಅವಳನ್ನು ಕರೆದೊಯ್ಯಲಿಕ್ಕೆ ರಾವುತನನ್ನು ನೇಮಿಸಿ ಅಂದೇ ರಾತ್ರಿ ಕುದುರೆ ಹತ್ತಿ ಪಕ್ಷ್ಮಾಳ ಶೋಧನೆಗಾಗಿ ಮಧುವನಗ್ರಾಮಕ್ಕೆ ತೆರಳಿದ. +ತಾರ್ಕ್ಷ್ಯನ ತರ್ಕದಂತೆ ಪಕ್ಷ್ಮಾ ಶ್ರಾವಸ್ತಿ ರಾಜ್ಯದ ಗಡಿಯಮೇಲೆ ಮಧುವನ ಗ್ರಾಮದಲ್ಲಿ ಮನೆಹೋಡಿದ್ದಳು. ಅಡಗೂಲಜ್ಜಿಯೇ ಅಡುಗೆ ಮಾಡಿ ಎರಡೂ ಹೊತ್ತು ಬಡಿಸುತ್ತಿದ್ದಳು. ಮಾದ್ರಕನೆಂಬ ದೊಡ್ಡ ಸುಸಂಸ್ಕ್ರತ ಕೃಷಿವಲನೊಬ್ಬ ಅವಳ ಯಜಮಾನನಾಗಿದ್ದ. ಮನೆಗೆ ಒಂದು ತಿಂಗಳಿಗೆ ಬೇಕಾಗುವಷ್ಟು ಧನಧಾನ್ಯಗಳನ್ನು ಒದಗಿಸಿದ್ದ. ಒಂದುತಿಂಗಳಿನ ಕರಾರಿನ ಮೇಲೆ ಅವನ ಓಣಿಯಲ್ಲೇ ಬಸ್ತಾನ ಹೂಡಿದ್ದಳು. +ತಾರ್ಕ್ಷ್ಯ ನೇರವಾಗಿ ಆಕೆಯ ಮನೆಗೆ ಹೋಗಲಿಲ್ಲ. ಅಡಗೂಲಜ್ಜಿಯ ಮನಸ್ತೃಪ್ತಿಯಾಗುವಂತೆ ಐದು ವರಹ ನೀಡಿ, ಗಿರಾಕಿ ಬಂದಿದೆಯೆಂದು ಪಕ್ಷ್ಮಾಳನ್ನು ಕರೆತರಲು ಕಳುಹಿಸಿಕೊಟ್ಟ. +ಪಕ್ಷ್ಮಾ ಬಂದಳು, ತಾರ್ಕ್ಷ್ಯನನ್ನು ಕಂಡು ತತ್ತರಿಸಿ ಓಡಿಹೋಗಲು ಯತ್ನಿಸಿದಳು. ಅಡಗೂಲಜ್ಜಿ ಹೊರಗಿನ ಬಾಗಿಲನ್ನು ಹಾಕಿಕೊಂಡಳು. +ತಾರ್ಕ್ಷ್ಯನ ಮಾತನ್ನು ಆಕೆ ಕೇಳಲೇ ಬೇಕಾಯಿತು. +ತಾರ್ಕ್ಷ್ಯ ಎಷ್ಟು ಹೇಳಬೇಕೋ ಅಷ್ಟನ್ನೇ ಆಯ್ಕೆ ಮಾಡಿ ಹೇಳಿದ. ಪಕ್ಷ್ಮಾಳನ್ನು ಅವಗುಂಠನ ಸಹಿತವಾದ ರಥದಲ್ಲಿ ಕರೆದುಕೊಂಡೊಯ್ಯುವೆನೆಂದೂ, ಇದಕ್ಕೆ ರಾಣಿಯೇ ಸಮ್ಮತಿಸಿರುವಳೆಂದೂ, ಆಮ್ರವನ ಅಯೋಧ್ಯೆಯಲ್ಲವೆಂದೂ, ಅವಳ ಶರೀರಕ್ಕೆ ಯಾವ ಹಿಂಸೆಯೂ ಆಗಲಾರದೆಂದೂ, ಪುರುಕುತ್ಸ ಮಹಾರಾಜ ಆಕೆಯನ್ನು ಕಾಣಲು ಲವಲವಿಸುತ್ತಿರುವರೆಂದೂ ವಿವರಿಸಿ ಹೇಳಿದ. +“ಈಗ ನಾನು ಮದ್ರಕನ ದಾಸಿ. ಒಂದು ತಿಂಗಳು ಇಲ್ಲಿಂದ ಕದಲ ಲಾರೆ” ಎಂದಳು ಪಕ್ಷ್ಮಾ. +“ಮಹಾರಾಜರು ನಿನ್ನ ತೆರವನ್ನು ಕಳಿಸಿದ್ದಾರೆ” ಎಂದು ನೂರುವರಹಗಳ ಹಮ್ಮಿಣಿಯನ್ನೂ, ಕಾಯಿ ವೇಳ್ಯದೆಲೆ-ಅಡಿಕೆಗಳನ್ನೂ ಒಂದು ಬೆಳ್ಳಿಯ ಹರಿವಾಣದಲ್ಲಿ ಇರಿಸಿ, ಆಕೆಯ ಪದತಲದಲ್ಲಿ ಅರ್ಪಿಸಿದ. ” ನಾನು ಸುಳ್ಳುಗಾರನಲ್ಲವೆಂದು ಕಾಮದೇವನೇ ಸಾಕ್ಷಿಹೇಳಲಿ” ಹಮ್ಮಿಣಿಗೆ ನಮಸ್ಕಾರ ಮಾಡಿದ. +“ಅದೆಲ್ಲ ನಂತರ, ಮೊದಲುಮಾದ್ರಕನು ಒಪ್ಪಬೇಕು. ನಾನು ಪಾಟಲೀ ಪುತ್ರದ ಕೆಳ ಓಣಿಯ ಚಿಲ್ಲರೆ ವೇಶ್ಯೆಯಲ್ಲ. ನಾನು ಕಲಾವಂತಿ . ನಮಗೂ ನಮ್ಮ ಧರ್ಮವಿದೆ” ಎಂದು ಕೂಗಾಡಿದಳು ಪಾಕ್ಷ್ಮೆ. +“ಪಕ್ಷ್ಮಾ, ನಾನು ರಾಜದೂತ. ಅರಸರ ಕಾಮನೆಯನ್ನು ನಿನ್ನ ಮುಂದೆ ಇಟ್ಟಿದ್ದೇನೆ. ಆಗಿಹೋದದ್ದನ್ನು ಮರೆತುಬಿಡು, ಕರಾರುವಕ್ಕಿನಂತೆ ಹಣ ತಂದು ಒಪ್ಪಿಸಿದ್ದೇನೆ. ಬೇಕಾದರೆ ಮಾದ್ರಕನನ್ನು ಬೇಟಿಮಾಡುತ್ತೇನೆ. ಆದರೆ ಮಹಾರಾಜರ ಸೇವಕನಾಗಿ ಬಂದ ನಾನು ಮಹಾರಾಜರಿಗೆ ಅವಮಾನವಾಗುವಂಥ ಮಾತು ಆಡಲಾರೆ. ವಾತ್ಸ್ಯಾಯನ ಮುನಿಗಳು ಕಾಮಶಾಸ್ತ್ರದಲ್ಲಿ ಹೇಳಿದ್ದಾರೆ: ಕಾಮ ಸಾಧನೆಗಾಗಿ ಸುಳ್ಳನ್ನು ಹೇಳಬೇಕು. ಮಾದ್ರಕನಂಥ ಗ್ರಾಮಸ್ಥನ ಎದುರು ಅಯೋಧ್ಯೆಯ ಮಹಾರಾಜರ ಮಾತು ಎತ್ತುವುದು ಸಭ್ಯವೇ? ನೀನೇ ಹೇಳು.” +ತಾನು ಆಗಲೇ ಕಟ್ಟಿದ ಸುಳ್ಳು ನಾಟಕವನ್ನು ಪಕ್ಷ್ಮಾಳಿಗೆ ಹೇಳಿ, ಅದಕ್ಕೆ ಅವಳ ಅನುಮೋದನೆ ಪಡೆದ. ಆಕೆಗೆ ಹಮ್ಮಿಣಿ ಒಪ್ಪಿಸಿ ಕಳುಹಿಸಿಕೊಟ್ಟ. +ಪಕ್ಷ್ಮಾದೇವಿ ಸತ್ಯಧರ್ಮಪರಾಯಣೆ ಹೌದೋ ಅಲ್ಲವೋ, ಎರಡು ಮೂರು ದಿನಗಳ ಮಾದ್ರಕನ ಸಹವಾಸದಲ್ಲಿ ಆಕೆಗೆ ಹೊಸದೊಂದು ಚಿಂತೆ ಹುಟ್ಟಿಕೊಂಡಿತ್ತು. ಮಾದ್ರಕನಿಗೆ ಆಗ ಅರವತ್ತು ವಯಸ್ಸು. ಕಟ್ಟುಮಸ್ತು ಆಳು. ಅವನ ಎಳೆದಾಟಕ್ಕೆ ತನ್ನ ನ್ರತ್ಯಕಲೆಗೆ ಬೇಕಾಗುವ ಅಂಗಸೌಷ್ಟವ ಕೆಟ್ಟುಹೋಗುವ ಸಂಭವ ಹೆಚ್ಚು. ಮಾದ್ರಕನಿಗೆ ನ್ರತ್ಯದ ಗಂಧ ಕೂಡ ಇಲ್ಲ. ಅವನ ಹರೆಯದ ಮಕ್ಕಳು ಮ್ರದಂಗ, ವೀಣೆಗಳಲ್ಲಿನಿಷ್ಣಾತರಾಗಿದ್ದರು. ಒಮ್ಮೆಯೇ ಆದ ನೃತ್ಯದಲ್ಲಿ ಇಬ್ಬರೂ ಪ್ರಾವೀಣ್ಯದಿಂದ ಆಕೆಗೆ ಸಂಗತಿ ನೀಡಿದ್ದರು. ಆ ಕ್ರತಜ್ಞತೆ-ಆಕರ್ಷಣೆಗಾಗಿ, ತನಗಿ ಒದಗಿದ ದುರ್ದಶೆಯ ಪರಿಸ್ತಿತಿಯಲ್ಲಿ ಬೇರೆ ಉಪಾಯವಿಲ್ಲದೇ, ಮಾದ್ರಕನಿಗೆ ವಶವಾಗಿದ್ದಳು, ಸಂತೋಷದಿಂದ ಅಲ್ಲ. ಕೃಷಿವಲನ ಸಂಗಕ್ಕಿಂತ ಅರಸನ ಸಂಗ ಎಷ್ಟೋವಾಸಿ ಎಂದು ಅವಳ ಭಾವನೆ. ಅರಸರು ಹೀಗೆ ಹುಂಬ ಎಳೆದಾಟಕ್ಕೆ ಬೀಳರು, ಎಂದು ಅವಳ ನಂಬಿಕೆ. ಇಲ್ಲಿಯವರೆಗಿನ ಅನುಭವಗಳಲ್ಲಿ ಯಾವ ರಾಜನೂ ಮಾದ್ರಕನ ಹಾಗೆ ಆಕೆಯ ದೇಹಕ್ಕೆ ಮುಗಿಬಿದ್ದಿದ್ದಿಲ್ಲ. +ಸಂಜೆ ಮಾದ್ರಕ ಬರುವಮೊದಲೇ ತಾರ್ಕ್ಷ್ಯ ಪಕ್ಷ್ಮಾಳ ಮನೆಗೆ ಹೋಗಿ ಹೊರ ಅಂಗಳದಲ್ಲಿ ಕುಳಿತ. ಮೊದಲೇ ಗೊತ್ತಾಗದಂತೆ ಪಕ್ಷ್ಮಾ ಬಾಗಿಲಹಾಕಿ ಒಳ ಚಿಲಕ ಭದ್ರಪಡಿಸಿಕೊಂಡಿದ್ದಳು, ತನ್ನವ್ರತಭಂಗವಾಗಿಲ್ಲದ್ದಕ್ಕೆ ಸಾಕ್ಷಿಯಂತೆ. +ಮಾದ್ರಕಬಂದೊಡನೆ, ತಾರ್ಷ್ಯ ಗಂಭೀರವಾಗಿ ಎದ್ದು ನಿಂತು “ತ್ರಾಹಿ, ತ್ರಾಹಿ ” ಎಂದು ಕೈ ಮುಗಿದ. +“ಏನಪ್ಪ ನಿನ್ನ ಮೇಲೆ ಬಂದ ಸಂಕಟ ?” ಎಂದು ಮಾದ್ರಕ ಕೇಳಿದ. +“ಒಂದು ತಿಂಗಳು ಮಾದ್ರಕನ ಜೊತೆಗೆ ಇರಬೇಕೆಂದು ವಾಗ್ದಾನ ಕೊಟ್ಟಿದ್ದೇನೆ ” ಎಂದು ಪಕ್ಷ್ಮಾದೇವಿ ಹೇಳುತ್ತಿದ್ದಾಳೆ. ನನ್ನಧನಿ ದೇವರಾಜ ಭದ್ರಮುಖರು ’ನನಗೆ ಕೊಟ್ಟವಾಗ್ದಾನವೇನಾಯಿತು ?’ ಎಂದು ಕೇಳುತ್ತಿದ್ದಾರೆ. +ಅಯೋಧ್ಯೆಯಿಂದ ನನ್ನನ್ನು ಕಳಿಸಿದ್ದಾರೆ. ಏನು ಮಾಡಬೇಕೋ ತಿಳಿಯದಾಗಿದೆ. ನಾನುಬರಿಗೈಯಿಂದ ಹೋದರೆ ನನ್ನ ರುಂಡ ಹಾರುತ್ತದೆ. ನಿನ್ನಲ್ಲಿ ಜೀವಭಿಕ್ಷೆ ಬೇಡುವದಕ್ಕಾಗಿ ಬಂದಿದ್ದೇನೆ. ಕುಡುಗೋಲು ಕೊಂಬಳಕಾಯಿ! ಏನು ಬೇಕಾದರೂ ಮಾಡು!” +“ಯಾರು ದೇವರಾಜರೆಂದರೆ? ಧರ್ಮರಾಜರ ಹಿರಿಯಪುತ್ರರೆ ?” +“ಹೌದು, ಮಾದ್ರಕಾ!ನಿನಗೆ ಈ ಭೂಮಿಯನ್ನು ಉಳುವುದಕ್ಕಾಗಿ ಗೆದ್ದು ಕೊಟ್ಟ ಧರ್ಮರಾಜ ಭದ್ರಮುಖರ ಹಿರಿಯ ಚಿರಂಜೀವಿ ದೇವರಾಜರು! ರಾಜ್ಯಗಳು ಉರುಳುತ್ತವೆ, ಕೈ ಬಿಡುತ್ತವೆ. ಆದರೆ ಕೃಷಿ ಧರ್ಮ ಮಾತ್ರ ಉಳಿಯುತ್ತದೆ. ಏನಂತೀ ನೀನು ?” +“ನಾನು ಹದಿನೈದು ವರ್ಷದವನಿದ್ದಾಗ ದೇವರಾಜನಿಗೆ ಹದಿಮೂರು ವರ್ಷ ಮಾತ್ರ. ಗಂಗಾತಟಾಕದಲ್ಲಿ ಗುಬ್ಬಿಮನೆ ಕಟ್ಟಿ ಆಡುತ್ತಿದ್ದೆವು.” +“ಅದನ್ನು ದೇವರಾಜ ಇನ್ನೂ ನೆನೆಸುತ್ತಾರೆ.” +“ವಾಗ್ದಾನದ ಕತೆ ಏನು?” +“ಅಯೋಧ್ಯೆಯ ರಸಿಕರ ಹ್ರದಯಗಳನ್ನು ಸೂರೆಗೈದಳು ಪಕ್ಷ್ಮಾದೇವಿ. ಆಕೆಯ ರೂಪಲಾವಣ್ಯಕ್ಕೆ ಮನಸೋತು ಹದಿನೈದು ದಿವಸಗಳ ವಾಗ್ದಾನ ಪಡೆದು ತಮ್ಮ ಅರಮನೆಯ ವಿಶಾಲವಾದ ರಂಗಸಜ್ಜಿಕೆಯಲ್ಲಿ ತಂದಿಟ್ಟುಕೊಂಡರು. ಈಕೆ ಬಂದ ಎರಡು ದಿನಗಳಲ್ಲೇ ದೂರ್ವಾಸ ಮುನಿಗಳಾ ಮರಿಮಗ ಕವಾಸ ಮುನಿಗಳು ಶಿಷ್ಯ ಸಹವರ್ತಮಾನ ದೇವರಾಜ ಭದ್ರಮುಖರ ಮನೆಗೆ ಬಂದು ಮೂರುದಿನಗಳ ಮಟ್ಟಿಗೆ ಉಳಿದುಕೊಂಡರು. ಮುತ್ತಜ್ಜನ ತಪಸ್ಸು ಅಲ್ಲದಿದ್ದರೂ, ಅವನ ಕ್ರೋಧ ಕವಾಸರಲ್ಲಿ ಪೂರ್ಣವಾಗಿ ಇಳಿದಿದೆ. ಅನಪೇಕ್ಷಿತ ಆಗಮನದಿಂದ ಭಯಭೀತರಾದ ದೇವರಾಜರು ’ಮೂರುದಿನಗಳಮಟ್ಟಿಗೆ ನೀನು ಇಲ್ಲಿ ಬರಬೇಡ!’ ಎಂದು ಹೇಳಿದ್ದೇ ತಡ, ಸೆಡವಿನಿಂದ ಪಕ್ಷ್ಮಾರಾಣಿ ಅಯೋಧ್ಯೆಯನ್ನೇ ತೊರೆದು ಶ್ರಾವಸ್ತಿ ರಾಜ್ಯಕ್ಕೆ ಬಂದಿದ್ದಾಳೆ. ಕವಾಸ ಮುನಿಗಳು ಇಂದ್ರಿಯನಿಗ್ರಹಕ್ಕಾಗಿ ಅಷ್ಟುಪ್ರಸಿದ್ಧರಲ್ಲ. ಅವರು ಪಕ್ಷ್ಮಾಳನ್ನು ನೋಡಿ ಮನಸ್ಸುಚಂಚಲವಾದರೆ ಏನು ಗತಿ? –ಆಗದಿದ್ದರೂ ದುರ್ಗತಿ. ತಮ್ಮಗೋತ್ರದವನಾದ ಒಬ್ಬ ಸ್ತ್ರೀಯ ಲೋಲುಪನೆಂದು ಅವರು ಕ್ಷುದ್ಧರಾದರೆ ದೇವರೇ ಗತಿ!– ಉಭಯ ಸಂಕಟದಲ್ಲಿ…” +ಒಳಗೆ ಈ ಮಾತುಗಳನ್ನು ಕೇಳುತ್ತ ನಿಂತಿದ್ದ ಪಕ್ಷ್ಮಾರಾಣಿ ಈ ಮಾತಿಗೆ ಸರಿಯಾಗಿ ಧಡಾರನೆ ಬಾಗಿಲ ತೆರೆದು, “ಇದು ನ್ಯಾಯವೇ ? ಇದು ಧರ್ಮ ಸಮ್ಮತವೇ ?” ಎಂದು ಕೂಗುತ್ತ ಹೊರಗೆ ಬಂದಳು. +“ಶ್…ಶ್.. ಸದ್ದು ಬೇಡ” ಎಂದು ಮಾದ್ರಕನೇ ಬಾಯಿ ಮೇಲೆ ಬೆರಳಿಟ್ಟ. +ಮಾದ್ರಕನಿಗೆ ಬೇರೊಂದು ತನ್ನದೇ ಚಿಂತೆ ಕಾಡುತ್ತಿತ್ತು. ಶ್ರಾವಸ್ತಿಯ ಯಾವನೊಬ್ಬ ರಾಜಭಟನಿಗೂ ಪಾಟಲೀಪುತ್ರದ ಪ್ರಸಿದ್ಧ ನ್ರತ್ಯಾಂಗನೆ ಮಾದ್ರಕನ ಆಸರೆಗೆಬಂದು ನಿಂತಿದ್ದಾಳೆಂದು ಗೊತ್ತಾದರೆ, ರಾಜನವರೆಗೆ ಈ ವಾರ್ತೆ ಮುಟ್ಟಿ, ಒಂದಿಲ್ಲೊಂದು ನೆಪದಿಂದ ತನಗೆ ದಂಡನೆಯಾಗಿ, ಪಕ್ಷ್ಮಾದೇವಿ ರಾಜನ ಊಳಿಗ ಸೇರುವದರಲ್ಲಿ ಸಂದೇಹವೇ ಇರಲಿಲ್ಲ. ತನ್ನ ಬಣಿವೆಗೆ ಮರೆಯಾಗಿದ್ದ ಈ ಮನೆಯಲಿ ಅದಕ್ಕೆಂದೇ ಪಕ್ಷ್ಮಾಲನ್ನು ತಂದು ಇರಿಸಿದ್ದು. ಇಂದಲ್ಲ ನಾಳೆ ಸುದ್ದಿ ಬಯಲಾಗಿ, ರಾಜಭಟರು ತನ್ನಮನೆ ಮುತ್ತಿದರೆ, ತಾನೇ ಪಕ್ಷ್ಮಾಳನ್ನು ಕರೆದೊಯ್ದು ರಾಜನಿಗೆ ಕಾಣಿಕೆಯಾಗಿ ಒಪ್ಪಿಸಬೇಕೆಂದು ಮೊದಲೇ ನಿರ್ಧರಿಸಿಕೊಂಡಿದ್ದ. ’ನನಗೇಕೆ ಈ ನರ್ತಕಿಯರ ಹವ್ಯಾಸ? ನನಗೆ ಹೊಲದಲ್ಲಿ ನೆಲ್ಲು ಕೀಳುವ ಆಳುಮಕ್ಕಳೇ ಸಾಕು!’ ಎಂದು ಮೊದಲಿನಿಂದ ನಂಬಿದ್ದ ಮಾದ್ರಕನಿಗೆ, ಪಕ್ಷ್ಮಳ ಏರು ಜವ್ವನದ ಸೊಗಸು ಎಲ್ಲಿಯವರೆಗೆ ದಕ್ಕುತ್ತದೋ ಅಲ್ಲಿಯವರೆಗೆ ಹೀರಿಬಿಡಬೇಕೆಂಬ ಆಸೆ. +ಅವನ ಸೂಚನೆಯಂತೆ ಮೂವರೂ ಮನೆಯ ಒಳಗೆ ಹೋದರು. ಅಲ್ಲಿಮಾದ್ರಕನೇ ಮುಂದಾಗಿ, “ಹುಡುಗೀ, ಕವಾಸ ಮಹಾಮುನಿಯ ಯೋಗ್ಯತೆ ನಿನಗೆ ಗೊತ್ತಿದೆಯೆ? ಸಿಟ್ಟಿಗೆದ್ದರೆಯೋಜನದುದ್ದ ಗೋದಿ ಬೆಳೆಯನ್ನುದ್ರಷ್ಟಿ ಮಾತ್ರದಿಂದ ದಗ್ದ ಮಾಡುತ್ತಾರೆ. ದೇವರಾಜರ ಹಿರಿಯರೇ ನನಗೆ ಭೂಮಿದಾನ ಮಾಡಿದವರು. ಅವರ ಉಪಕಾರವನ್ನು ನಾನು ಮರೆಯಲಾರೆ. ನಿನ್ನನ್ನು ತಂದು ಇಟ್ಟುಕೊಳ್ಳುವ ಸಾಮರ್ಥ್ಯ ಅವರಿಂದಲೇ ನನಗೆ ಬಂದದ್ದು ” ಎಂದು ಹೇಳತೊಡಗಿದನು. +“ನನ್ನ ಬಗ್ಗೆ ನಿಮಗೆ ವಿಚಾರವೇ ಇಲ್ಲ! ನನ್ನಂಥ ಪುಣ್ಯಜೀವಿಗಳು ಮೂರುದಿನ ಅಯೋಧ್ಯೆಯಂಥ ಪಟ್ಟಣದಲ್ಲಿ ಎಲ್ಲಿ ಕಳೆಯುವದು? ವಿಚಾರ ಮಾಡಿದಿರಾ? ವಗ್ದಾನ ಮಾಡಿಬಿಟ್ಟಿದ್ದೆ. ಬೇರೆಕಡೆ ಹೋಗುವುದು ನಮ್ಮಧರ್ಮದ ವಿರುದ್ಧ, ಬೇರೆ ಉಪಾಯ ಕಾಣದೆ, ಅಯೋಧ್ಯೆಯನ್ನೇ ತೊರೆದೆ! ಅಯೋಧ್ಯೆಯಭಾಗ್ಯ ನನ್ನ ಪಾಲಿಗಿಲ್ಲವೆಂದು ಅನಿಸಿತು !” +“ಈಗ ಅಯೋಧ್ಯೆಯ ಭಾಗ್ಯ ನಿನ್ನ ಪಾದತಲದಲ್ಲಿ ಇದೆಯಲ್ಲ!” ಎಂದನು ತಾರ್ಕ್ಷ್ಯ. +ಅಂತೂ ಪಕ್ಷ್ಮಾದೇವಿ ಒಂದು ಕರಾರಿನ ಮೇಲೆ ಅಯೊಧ್ಯೆಗೆ ಬರಲು ಒಪ್ಪಿದಳು : “ಮಾದ್ರಕ ಕೊಟ್ಟ ತಿಂಗಳ ಆಹಾರ ಸಾಮಗ್ರಿ ಇದೇ ಮನೆಯಲ್ಲಿ ಇರತಕ್ಕದ್ದು. ಇನ್ನಾವ ಹೆಣ್ಣೂ ಈ ಮನೆಯಲ್ಲಿ ತಿಂಗಳವರೆಗೆ ಬರಕೂಡದು. ಅಯೋಧ್ಯೆಯಲ್ಲಿ ಇನ್ನು ಹದಿಮೂರು ದಿನ ಇದ್ದು ತಾನು ಮರಳಿ ಇದೇ ಮನೆಗೆ ಬರುತ್ತೇನೆ!” +ಆಗ ಮಾದ್ರಕನಿಗೆ ತುಸು ಸಂಶಯ ಬಂದಿತು. ತನ್ನ ನೆರೆಗೂದಲನ್ನು ತೀಡುತ್ತ, “ನಿನ್ನಂಥವಳು ನನ್ನಂಥವನ ಬಳಿಗೆ ಬರುವ ಕಾರಣವೇನು ?” ಎಂದ. ಅದಕ್ಕೆ ತಾರ್ಕ್ಷ್ಯ ಸಮಾಧಾನ ಹೇಳಿದ: +“ಪಕ್ಷ್ಮಾದೇವಿ ಒಂದೇ ಮಾತಿನವಳು. ವಾಗ್ದಾನವಿತ್ತ ಮೇಲೆ ಅದರಂತೆ ನಡೆಯುವದು ಗಣಿಕಾ ಧರ್ಮ!” +ಆಗ ತನ್ನ ಮನಸ್ಸಿನ ಒಳ ಅಳುಕನ್ನು ಮಾದ್ರಕನು ತೋಡಿಕೊಂಡ. ರಾಜ ಭಟರಿಗೆ ಪಕ್ಷ್ಮಾ ಇಲ್ಲಿರುವ ಸುದ್ದಿ ತಿಳಿದರೆ, ಅನಿವಾರ್ಯವಾಗಿ ತಾನು ರಾಜನಿಗೆ ಪಕ್ಷ್ಮಳನ್ನು ಒಪ್ಪಿಸಬೇಕಾಗುತ್ತದೆ-ಎಂದು. +ಆಗ ಪಕ್ಷ್ಮಾ ಇನ್ನಷ್ಟು ಉತ್ಸಾಹಿತಳಾದಳು. ಬಚ್ಚಿಟ್ಟುಕೊಂಡು ಹೇಳಿದಳು :”ಈಗ ನೀವು ನನ್ನನ್ನು ದೇವರಾಜ ಭದ್ರಮುಖರಿಗೆ ಒಪ್ಪಿಸುತ್ತಿದ್ದೀರಿ. ಅನಂತರ ನೀವೇ ನನ್ನನ್ನು ಶ್ರಾವಸ್ತಿಯ ಮಹಾಪ್ರಭುಗಳಿಗೆ ಒಪ್ಪಿಸಬಹುದು. ಆದರೆ ವಾಗ್ದಾನದಂತೆ ಒಂದು ತಿಂಗಳು ನಾನು ವಶವರ್ತಿ. ಆಜ್ಞಾಧಾರಕಿ .ಅದು ನನ್ನ ಧರ್ಮ. ನನ್ನ ಧರ್ಮಪರಿಪಾಲನೆಯಿಂದಲೇ ನನಗೆ ಮೋಕ್ಷ. ನನ್ನ ತಾಯಿ ಹಾಕಿಕೊಟ್ಟ ಧರ್ಮದಂತೆ ನಾನು ನಡೆಯುತ್ತೇನೆ. ಧರ್ಮ ಕಾವಲಿದ್ದಾಗ ಕವಾಸ ಮಹಾಮುನಿಗಳು ನನಗೆ ಏನೂ ಮಾಡಲಾರರು!” ಎಂದಳು. +ಮುದುಕನಿಗೆ ಈ ಧರ್ಮಬುದ್ಧಿಯನ್ನು ನೋಡಿ ಅನುರಾಗ ಉಕ್ಕೇರಿತು. ತಾರ್ಕ್ಶ್ಯನ ಕಣ್ಣಮುಂದೆಯೇ ಪಕ್ಷ್ಮಾ ಹಿಂಡಿ ಹಿಪ್ಪೆಯಾಗುವಂತೆ ಅಪ್ಪಿಕೊಂಡ. ಪಕ್ಷ್ಮಾ ಅವನತೋಳಸೆರೆಯಿಂದ ಬಲುಕಷ್ಟದಿಂದ ಬಿಡಿಸಿಕೊಳ್ಳುತ್ತ, ಹೇಳಿದಳು: +“ಈರಾತ್ರಿಯೊಂದು ನಿಮ್ಮ ಸೇವೆ ಮಾಡುವ ಅವಕಾಶ ಕೊಡಿ!” +ಮಾದ್ರಕನಿಗೆ ಕೂಡಲೇ ತನ್ನ ಅವಿವೇಕದ ಅರಿವಾಯಿತು. ಒಮ್ಮೆಲೇದೂರಸರಿದು, “ನನ್ನ ಅನ್ನದಾತನ ಪತ್ನಿಯಾದ ನೀನು ನನಗೆ ತಾಯಿಯ ಸಮಾನ! ಮಗಳೇ, ನಿನಗಾಗಿ ದೇವರಾಜರು ಕಾಯುತ್ತಿದ್ದಾರೆ. ನಾನು ಕಾಯಿಸುವದು ಅಧರ್ಮ, ಈಗಲೇ ನಿನ್ನ ಬಟ್ಟೆಬರೆ ಕಟ್ಟಿಕೊಂಡು ಹೊರಟುಬಿಡು. ಇಲ್ಲಿಂದ ಸರಯೂತೀರದ ನಂದಿಗ್ರಾಮಕ್ಕೆ ಹೋಗಲು ಒಳದಾರಿ ಇದೆ, ಒಂದು ಹಂತದವರೆಗೆ ನಾನೇ ಕಳಿಸಲುಬರುತ್ತೇನೆ. ಶ್ರಾವಸ್ತಿಯ ಗಡಿ ದಾಟಿದಮೇಲೆ ನನ್ನ ಹೊಣೆ ಮುಗಿಯುತ್ತದೆ. ನಡೆ, ಸಿಧ್ಧತೆ ಮಾಡು!” ಎಂದು ಹೇಳಿ, ತಾರ್ಕ್ಷ್ಯನನ್ನು ಕರೆದುಕೊಂಡು ಮಾದ್ರಕ ಹೊರಗೆ ನಡೆದ. +ಎರಡೂ ಸಂಭ್ಯಾವತೆಗಳನ್ನು ಅನುಲಕ್ಷಿಸಿ ಪಕ್ಷ್ಮಾದೇವಿ ತನ್ನ ಅತ್ಯಗತ್ಯವಸ್ತುಗಳನ್ನು ಒಂದು ಗಂಟಿನಲ್ಲಿ ಈಗಾಗಲೇ ಕಟ್ಟಿಟ್ಟಿದ್ದಳು. ಉಳಿದ ದಿನಬಳಕೆಯ ಬಟ್ಟೆಬರೆಗಳನ್ನು ಇನ್ನೊಂದು ಗಂಟಿನಲ್ಲಿ ಕಟ್ಟಿದಳು. ಅನುಭವಿ ಪ್ರವಾಸಿಯಾದ ಅವಳು ಎರಡೂ ಗಂಟುಗಳನ್ನು ಕುದುರೆಯ ಮೇಲೆ ಹಾಕಿದರೆ ಸಮತೋಲನವಾಗುವಂತೆಯೇ ಹಸಿಬೆಯ ಡರ್ತಿಯಲ್ಲಿ ಕಟ್ಟಿದಳು. +ಹೊರಗೆ ತಾರ್ಕ್ಷ್ಯ ಶ್ರಾವಸ್ತಿಯ ಅರಸನ ನೀತಿನಿಯಮಗಳನ್ನೂ ಅಜ್ಞಾತ ಒಳಹಾದಿಯ ಮುಖ್ಯತಿರುವುಗಳನ್ನೂ ಚರ್ಚಿಸಿದ. ಅಷ್ಟು ಹೊತ್ತಿಗೆ ಅಡಗೂಲಜ್ಜಿ ರಾತ್ರಿಯ ಊಟವನ್ನು ಚಟಿಗೆಗಳಲ್ಲಿ ಗಂಟುಕಟ್ಟಿಕೊಂಡು ಬಂದಳು. ಪಕ್ಷ್ಮಾ ಆಕೆಗೆ ಒಂದು ವರಹ ಕೊಡಲಿಕ್ಕೆ ಹೋದಾಗ, ತಾರ್ಕ್ಷ್ಯ ಚಟ್ಟನೆದ್ದು, ಹತ್ತು ವರಹಗಳನ್ನು ಆಕೆಗೆ ಎಣಿಸಿ, “ಇದು ನಮ್ಮ ರಾಜರ ಕಾಣಿಕೆ..” ಎಂದ. +“ಯಾವ ರಾಜರು?” ಎಂದು ಸಾಶಂಕವಾಗಿ ಮಾದ್ರಕ ಕೇಳಿದ. +“ದೇವರಾಜರು… ಇನ್ನ್ಯಾರು?”ಎಂದು ಫಡಪೋಶಿತನದಿಂದ ಪಕ್ಶ್ಮಳ ಕೈಯಲ್ಲಿನ ಎರಡು ಗಂಟುಗಳನ್ನು ತನ್ನ ಕುದುರೆಯ ತಡಿಗೆ ಗಂಟುಹಾಕಿ ಎರಡೂಕಡೆಗೆ ಇಳಿಬಿಟ್ಟ. ಪಕ್ಷ್ಮಾ ಊಟದ ಗಂಟಿನೊಂದಿಗೆ ಕುದುರೆ ಏರಿದಳು. +“ಅಲ್ಲಪ್ಪಾ ಮರಿ, ನಿನಗೆ ಈ ಮನೆ ಸಿಕ್ಕಿದ್ದು ಹೇಗೆ?” ಎಂದು ಕೇಳಿದ ಮಾದ್ರಕ. +ತಾರ್ಕ್ಷ್ಯ ಆ ಅಡಗೂಲಜ್ಜಿಯ ಕಡೆಗೆ ಬೆಟ್ಟುಮಾಡಿ, “ಆಕೆ ಹೇಳುತ್ತಾಳೆ” ಎಂದು ಹೇಳಿದ. +“ನಾನು ದಾರಿ ತೋರಿಸಲಿಕ್ಕೆ ಕುದುರೆ ತೆಗೆದುಕೊಂಡುಬರುತ್ತೇನೆ, ನಿಲ್ಲು” ಎಂದು ಮಾದ್ರಕ ಮನೆಯವರೆಗೂ ಓಡಿದ. +ಅವನು ಓಡಿದ್ದನ್ನು ಕಂಡ ತಾರ್ಕ್ಷ್ಯಮೆಲ್ಲನೆ ಕುದುರೆ ಏರಿ, ಅದರ ಹೊಟ್ಟೆಗೆ ತನ್ನ ಮೆಟ್ಟಿನಿಂದ ಬಲವಾಗಿ ಒತ್ತಿದ. +ಕುದುರೆ ನಾಗಾಲೋಟದಿಂದ ಹೊಲದ ಪೈರಿನ ನಡುವೆ ನುಗ್ಗಿತು. +“ಮುದುಕ ಬರುವವರೆಗೂ ನಿಲ್ಲಬೇಕಾಗಿತ್ತು !” ಎಂದಳು ಪಕ್ಷ್ಮಾ. +“ಕಾಮದಲ್ಲಿ ಸುಳ್ಳೂ ಒಂದು ಧರ್ಮ!” ಎಂದ ತಾರ್ಕ್ಷ್ಯ. +ದಾರಿಯಲ್ಲಿ ಕುದುರೆಯ ಖುರಪುಟಕ್ಕೆ ಉದ್ರಿಕ್ತಳಾದ ಪಕ್ಷ್ಮಾರಾಣಿ ನಿಟ್ಟುಸಿರುಬಿಡುತ್ತ ತಾರ್ಕ್ಷ್ಯನ ಕೊರಳಲ್ಲಿ ಕೈ ಹಾಕಿ ಮುದ್ದಿಡಲು ಯತ್ನಿಸಿದಳು. +“ಪಕ್ಷ್ಮಾ ನಾನು ಕಾಮಶಾಸ್ತ್ರಿ, ಲೋಲುಪನಲ್ಲ. ಸ್ತ್ರೀ ಲೋಲುಪರು ಮೂರ್ಖರು. ನಿನ್ನ ಲೀಲೆಗಳೆಲ್ಲ ಮುಗಿದ ಮೇಲೆ ಒಮ್ಮೆ ಸ್ವತಂತ್ರರಾಗಿ ಕೂಡೋಣ. ಆಗ ನಿನಗೆ ಕಾಮದ ನಿಜವಾದ ಅನುಭವವಾಗುವುದು. ಈಗ ನೀನು ಮಹಾರಾಜರ ಸೊತ್ತು. ಅಕ್ರಮವಾಗಿ ನಾನು ನಿನ್ನಲ್ಲಿ ನಿರತನಾಗಲಾರೆ” ಎಂದು ಹೇಳಿದ. +ಅದು ನಿಜವಾದರೂ ಒಂದು ರೀತಿಯಲ್ಲಿ ಸುಳ್ಳು. ಪಕ್ಷ್ಮಳನ್ನು ಮಹಾರಾಣಿಯವರ ಅಪ್ಪಣೆಯಮೇರೆಗೆ ಕರೆದೊಯ್ಯುತ್ತಿದ್ದನೇ ಹೊರತು ಇದರಲ್ಲಿ ಮಹಾರಾಜರ ಕಾಮ ಅಪ್ರಸ್ತುತ. +ಇದರಲ್ಲಿ ರಾಣಿಯ ಉದ್ದೇಶವೇನು-ಎಂಬುದು ಇನ್ನೂ ಬಗೆಹರಿಯದ ಸಮಸ್ಯೆಯಾಗಿತ್ತು, ತಾರ್ಕ್ಷ್ಯನಿಗೆ. +೩ +ನಂದಿಗ್ರಾಮದಲ್ಲಿ ಕೊತವಾಲನಿಗೆ ರಾಣಿಯ ಮುದ್ರಿಕೆ ತೋರಿಸಿ, ಯವನಿಕೆಯಿಂದ ಮುಚ್ಚಿದ ಒಂದು ರಥದಲ್ಲಿ ಪಕ್ಷ್ಮಾರಾಣಿಯನ್ನು ಕೂರಿಸಿದ ತಾರ್ಕ್ಷ್ಯ ಜೊತೆಗೆ ಒಬ್ಬ ರಾವುತನನ್ನೂ ಕರೆದೊಯ್ದನು. ರಥವು ಸೀದಾ ಆಮ್ರವನದವರೆಗೂ ಹೋಯಿತು. ಎರಡೇ ದಿನಗಳು ಸಂದಿದ್ದವು. ಆದರೂ ಪಕ್ಷ್ಮಾಳನ್ನು ಒಂದು ಗುಡಿಸಲಿನಲ್ಲಿ ಹಾಕಿ ಇಡಲಾಯಿತು. ಮಹಾರಾಜರು ಅದೇ ಶಶಾಂಕಿಗೆ ವಿದಾಯ ಹೇಳಿದರು. ಹತ್ತು ದಿನಗಳ ವರೆಗೆ ಪಕ್ಷ್ಮಾದೇವಿ-ಪುರುಕುತ್ಸ ಮಹಾರಾಜರ ವಿಹಾರ ಅವ್ಯಾಹತವಾಗಿ ಸಾಗಿತು. +ಪಕ್ಷ್ಮಾಳನ್ನು ರಾಜರ ವಶಕ್ಕೆ ಒಪ್ಪಿಸಿದವನೇ ತಾರ್ಕ್ಷ್ಯ ವಿಶ್ರಾಂತಿಗಾಗಿ ಅಯೊಧ್ಯೆಗೆ ಮರಳಿದನು. ಮಹಾರಾಣಿಯವರಿಗೆ ಸಾದ್ಯಂತ ವರದಿ ಒಪ್ಪಿಸಿದನು. +ಮಹಾರಾಜರು ಸ್ವೇಚ್ಛೆಯಿಂದಲೇ ಆಮ್ರವನಕ್ಕೆ ತೆರಳಿದವರು. ಆದರೆ ಪೌರಜನರಲ್ಲಿ ಮಹಾರಾಣಿ ಪುರುಕುತ್ಸಾನಿ ರಾಜರಿಗೆ ಸಿಟ್ಟು ಮಾಡಿ ಆಮ್ರವನಕ್ಕೆ ಅಟ್ಟಿದ್ದಾಳೆಂಬ ವದಂತಿ ದಟ್ಟವಾಗಿ ಹಬ್ಬಿತು. ಈಗಾಗಲೇ ವಾಸ್ತವವಾಗಿ ಎಲ್ಲ ರಾಜ್ಯಸೂತ್ರವನ್ನೂ ತನ್ನ ಕೈಯಲ್ಲಿಯೇ ಇಟ್ಟೂಕೊಂಡ ಮಹಾರಾಣಿ, ಈಗಂತೂ ಪ್ರಜಾವತ್ಸಲೆಯೆಂದು ಕೀರ್ತಿ ಪಡೆದು ಅಧಿಕಾರದ ನ್ಯಾಯಿಕ ಸ್ಥಾನಮಾನವನ್ನೂ ಪಡೆದಳು. ಅವಳೇ ಸಾಮ್ರಾಜ್ಞಿಯಾದಂತೆ. +ಆದರೆ ಹೆಣ್ಣು ಹೃದಯದ ಅವಳನ್ನು ಪೂರ್ತಿ ಅರಿತವರಾರು? +ಬರೀ ಆಡಳಿತದ ಅಧಿಕಾರಿಗಳು ತನ್ನ ಆಜ್ಞೆಯಂತೆ ನಡೆಯುವಷ್ಟೇ ತನ್ನ ಮುಂದಾಳು ತನವಾಯಿತೇ? ರಾಜ್ಯದ ಪ್ರತಿಷ್ಟರ ಮೇಲೆ ತನ್ನ ಸತ್ತೆ ಸಾಧಿಸಿದಂತಾಯಿತೆ? +ಮಹಾರಾಜ-ಪಕ್ಷ್ಮಾರಾಣಿಯರ ವಿಲಾಸವು ಆಗಲೇ ಒಂದು ವಾರ ಹಳತಾಗಿತ್ತು. ನಿಪುಣೆಯಾದ ಪಕ್ಷ್ಮಾ ಮಹಾರಾಜನ ಅಂಗಾಂಗಗಳಿಗೂ ಸುಖ ಕೊಡುತ್ತಿರುವ ವರದಿ ಚೇಟಿಯರ ಮೂಖಾಂತರ ತಿಳಿಯಿತು. ತರುಣಿ ರಾಣಿಯಲ್ಲಿ ಅಸೂಯೆ ಭುಗಿಲನ್ನೇ ಎಬ್ಬಿಸಿದಳು. ಆದರೆ ರಾಣಿ ಹೊರಗೆ ಏನೂ ತೋರಗೊಡಲಿಲ್ಲ. ತನ್ನ ತೊಡೆಯನ್ನು ಮುಟ್ಟಿಕೊಂಡು ಕೌಮಾರ್ಯ ಹಾಗೇ ಉಳಿದುದನ್ನು ನೆನೆಸಿಕೊಂಡಳು, ಅಷ್ಟೇ. +ಚೇಟಿಯರ ಮುಖಾಂತರ ಪುರುಕುತ್ಸಾನಿ ದೇವರಾಜ ಭದ್ರಮುಖರನ್ನು ಮುಖಭಂಗದಿಂದ ಪಾರುಮಾಡಿದ ರಾಹುತ ವೀರಸೇನನಿಗೆ ಕರೆಕಳಿಸಿದಳು. +ಅವನು ಬಂದು ಮುಜುರೆ ಸಲ್ಲಿಸಿ ನಿಂತನು. +“ಅಂದು ನೀನು ಭದ್ರಮುಖ ದೇವರಾಜರನ್ನು ಅವಮಾನದಿಂದ ಉಳಿಸಿದೆ ಅದಕ್ಕಾಗಿ ನಿನಗೆ ಅವರು ಏನು ಬಹುಮಾನ ಸಲ್ಲಿಸಿದರು?” +ಪಹರೆಯ ಕುದುರೆಯನ್ನು ಅವರಿಗೆ ಕೊಟ್ಟಿದ್ದು ಆಡಳಿತದ ನಿಯಮದ ವಿರುದ್ಧ. ಅದನ್ನು ಬಚ್ಚಿಟ್ಟುಕೊಂಡೂ ರಾಹುತವೀರಸೇನ ಹೇಳಿದ :”ಹತ್ತು ವರಹ, ಒಡತಿ!” +“ಹತ್ತೇ ವರಹಗಳೇ ?” ತೀಕ್ಷ್ಣವಾಗಿ ಕೇಳೀದಳು ರಾಣಿ ನರ್ಮದೆ. +“ಕುದುರೆ ಬೇಡಿದರು ಕೊಟ್ಟೆ. ಹತ್ತು ವರಹ ಬಹುಮಾನ ಕೊಟ್ಟರು.” +“ಒಟ್ಟು ಇಪ್ಪತ್ತು ವರಹ ಅಲ್ಲವೇ ?” +ವೀರಸೇನ ತಬ್ಬಿಬ್ಬಾದ. ಇಷ್ಟೆಲ್ಲ ವಿವರ ಮಹಾರಾಣಿಯ ಕಿವಿಯವರೆಗೆ ಹೋದದ್ದು ಹೇಗೆ ?- “ಅವರು ಕುದುರೆ ಬೇಡಿದರು ಕೊಟ್ಟೆ. ತಪ್ಪಾಯಿತು, ಮಹಾರಾಜ್ನಿ.” +“ಒಬ್ಬ ರಾಜಪುರುಷನ ಮರ್ಯಾದೆ ಕಾಯುವುದಕ್ಕಾಗಿ ಎರಡು ಗಂಟೆ ಪಹರೆಯ ಕುದುರೆ ಕೊಡಮಾಡಿದ್ದೇನು ತಪ್ಪಲ್ಲ. ಇನ್ನೆಷ್ಟು ಬೇಕಾಗಿತ್ತು ?” +ನಾನು ಕುದುರೆ ಬೇಡಲಿಕ್ಕೆ ಹೋದೆ. ’ನನ್ನ ಕುದುರೆ ಶೋಧಿಸಿ ತಾ. ಆಮೇಲೆ ಹತ್ತು ವರಹ’ ಎಂದು ಹೇಳುವುದು ರಾಜಪುರುಷರ ಧರ್ಮವೇ, ಮಹಾರಾಣಿ ?” +“ಹಾಗನ್ನುವುದು ನಿನಗೆ ಅನ್ಯಾಯ. ಅಲ್ಲದೇ, ನಿನಗೆ ಇಪ್ಪತ್ತೇ ವರಹ ಕೊಟ್ಟಿದ್ದು ನನ್ನ ಮನಸ್ಸಿಗೆ ಬಾರದು. ಇನ್ನಷ್ಟು ಗಳಿಸುವದು ನಿನ್ನ ಮನಸ್ಸಿನಲ್ಲಿ ಇದೆಯೇ? +ಇಪ್ಪತ್ತು ವರಹ ಅನ್ಯಾಯವೆಂದು ಹೇಳಿದ್ದು ಏಕೆ, ಒಮ್ಮೆಲೇ ವೀರಸೇನನಿಗೆ ಹೊಳೆಯಲಿಲ್ಲ. ಏನು ಹೇಳಬೇಕೆಂದು ತಿಳಿಯದೆ “ದೇವರು ಕೊಟ್ಟಷ್ಟು ಬೇಕು ಮಹಾರಾಣಿ !” ಎಂದ ವೀರಸೇನ. +“ನೀನು ಈಗ ಗೈದದ್ದು ಅಪದ್ಧರ್ಮ ಮಾತ್ರ. ಒಂದು ರೀತಿಯಿಂದ ನಿನ್ನ ಕರ್ತವ್ಯವೂ ಹೌದು. ಆದರೆ ದೇವರಾಜ ಭದ್ರಮುಖರಿಗೆ ನಿನ್ನಿಂದ ಒಂದು ಸುಖದ ದೇಣಿಗೆಯಾಗಬೇಕು. ಆವಾಗ ಏನು ಕೊಡುತ್ತಾರೆ, ಅದನ್ನು ಬಂದು ನನಗೆ ತಿಳಿಸು.” +“ಭದ್ರಮುಖರು ಅಪೇಕ್ಷಿಸುವ ಯಾವ ಸುಖವನ್ನು ನಾನು ಮಾಡಬಲ್ಲೆ ?” +“ನೋಡು, ಎರಡೇ ದಿನ ಅವರು ಪಕ್ಶ್ಮಾದೇವಿಯ ಸಂಗವನ್ನು ಅನುಭವಿಸಿದರು. ಈಗ ಪಕ್ಶ್ಮಾರಾಣಿ ಇಲ್ಲಿಯೇ ಸಮೀಪದಲ್ಲಿ ಇದ್ದಾಳೆಂದು ವರದಿ ಬಂದಿದೆ . ದೇವರಾಜರು ವಿಧುರರು. ಈ ವಾರ್ತೆ ತಿಳಿದರೆ ಅವರು ಕುಣಿದಾಡುತ್ತಾರೆ. ತಿಳಿಸುವುದು ನಿನ್ನನ್ನು ಕೂಡಿದೆ..”ಎಂದು ಹೇಳಿ ವಿವರಗಳನ್ನು ಮಹಾರಾಣಿ ತಿಳಿಸಿದಳು. ಅದನ್ನು ಹೇಗೆ ಹೇಳುವುದೆಂದೂ ಸೂಚನೆ ನೀಡೀದಳು. ಪಕ್ಶ್ಮಾರಾಣಿ ಮಹಾರಾಜರ ಸಂಗದಲ್ಲಿ‌ಇದ್ದುದನ್ನು ಮಾತ್ರ ಬಚ್ಚಿಟ್ಟಳು. +ಹತ್ತಿಪ್ಪತ್ತು ವರಹ ಕೊಡಲು ಬಂದರೆ ಸ್ವೀಕರಿಸಬೇಡ. ಎಷ್ಟು ಕೊಡಮಾಡಿದರೆಂಬುದನ್ನು ನನಗೆ ಬಂದು ಗುಟ್ಟಾಗಿ ಹೇಳು. ನಿನಗೆ ಸಲ್ಲಬೇಕಾದ ಹಣ ನಾನು ಕೋಡುತ್ತೇನೆ. ರಾಜಪುರುಷರ ಔದಾರ್ಯದ ಪರೀಕ್ಷೆ ಆಗಲಿ !” ಎಂದಳು. +ದೇವರಾಜರ ನಡತೆಯನ್ನು ನೋಡಿ ಬೇಸರಗೊಂಡ ವೀರಸೇನ ಈ ಸುಸಂಧಿಯನ್ನು ಚೆನ್ನಾಗಿಯೇ ಬಳಸಿಕೊಂಡನು. ದೇವರಾಜರ ಮನೆಗೆ ಹೋಗಿ, “ಒಂದು ಗುಟ್ಟು ಹೇಳುವುದಿದೆ. ನಿಮಗೆ ಸಂತೋಷವಾದರೆ ತಕ್ಕ ಬಹುಮಾನ ಕೊಡುವ ನಿಮ್ಮ ಔದಾರ್ಯದ ಬಗ್ಗೆ ನನಗೆ ಭರವಸೆ ಇದೆ” ಎಂದು ಭದ್ರಮುಖರಿಗೆ ಹೇಳಿದನು. +ಅವನ ಕೈಸನ್ನೆ-ಬಾಯಿಸನ್ನೆಗಳನ್ನು, ಕಣ್ಣುಮಿಟಿಕೆಗಳನ್ನು ನೋಡಿ ದೇವರಾಜ ಅವನನ್ನು ಗುಪ್ತಕೊಠಡಿಯಲ್ಲಿ ನಿಲ್ಲಿಸಿ ಯಾರನ್ನೂ ಒಳಗೆ ಬಿಡಬಾರದೆಂದು ಪಹರೆಯವರಿಗೆ ಹೇಳಿದನು, +ಆಂರವನದಬಳಿಯ ಗುಡಿಸಿಲಿನಲ್ಲಿ ಪಕ್ಷ್ಮಾದೇವಿ ಹೂ ಕುಯ್ಯುತ್ತ ನಿಂತಿರುವುದನ್ನು ತಾನು ಪ್ರತ್ಯಕ್ಷ ನೋಡಿರುವುದಾಗಿಯೂ, ತನ್ನನ್ನು ಕಾಣುತ್ತಲೇ ಭಯಭೀತಳಾಗಿ ಒಳಗೆ ಓಡಿದುದಾಗಿಯೂ ವೀರಸೇನ ವಾರ್ತೆ ಹೇಳಿದನು. +ಭದ್ರಮುಖರು ಮೊದಲು ನಂಬಲಿಲ್ಲ. ಮಹಾರಾಣಿಯವರಿಂದ ನಿಷೇಧಕ್ಕೊಳಗಾದ ತಿರುಗಿ ರಾಜ್ಯದಲ್ಲಿ ಕಾಲಿಡುವ ಧೈರ್ಯ ಹೇಗೆ ಮಾಡಿದಳು ? ಮಹಾರಾಜರು ಆಮ್ರವನದಲ್ಲಿ ಇದ್ದುದು ದೇವರಾಜರಿಗೆ ಗೊತ್ತು. ಅವರೇ ತಮ್ಮ ಆಜ್ನೆ ಚಲಾಯಿಸಿ ಪಕ್ಷ್ಮೆಯನ್ನು ಕರೆತಂದಿರಬಹುದೆ?-ಹಾಗಾದರೆ ಮಹಾರಾಜರ ವರ್ಚಸ್ಸು ಮಹಾರಾಣಿಯವರಿಗಿಂತ ಮೇಲಾಗಿರಬಹುದೆ?- ಅಥವಾ ಇದೆಲ್ಲ ತಾರ್ಕ್ಷ್ಯನ ಕೈಚಳಕವಿರಬಹುದೇ? ಈ ವಾರ್ತೆಯ ಸಹಾಯದಿಂದ ತಾರ್ಕ್ಷ್ಯನನ್ನು ಮಹಾರಾಣಿಯವರ ಅವಕೃಪೆಯ ಜಾಲದಲ್ಲಿ ತೊಡಗಿಸಿತಾವು ಮಹಾರಾಣಿಯವರ ಕೃಪೆಯನ್ನು ಗಳಿಸಬಹುದೆ ? ಇಂಥ ವಿಚಾರಗಳ ತೊಳಲಾಟದಲ್ಲಿ ಸಿಲುಕಿಕೊಂಡು ಭದ್ರಮುಖರು ಮೌನದಿಂದ ಇದ್ದರು. +ಅವರ ಮುಖವನ್ನೇ ಮಿಕಿಮಿಕಿ ನೋಡುತ್ತ, “ಪ್ರಭು, ತಮಗೆ ಸಂತೋಷವಾಗಲಿಲ್ಲವೇ ?” ಎಂದು ಕೇಳಿದನು ವೀರಸೇನ. +ಆಯಿತು, ನೋಡೋಣ. ನಾಳೆ ನೀನು ಬಾ. ವಿಚಾರ ಮಾಡುತ್ತೇನೆ. ನೀನು ಹೋಗಬಹುದು” ಎಂದರು. +ವೀರಸೇನ ಕಾಲು ಕೀಳಲಿಲ್ಲ. ಭದ್ರಮುಖರು ತುಸು ಅಸಮಾಧಾನದಿಂದಲೇ ಅವನಿಗೆ ಒಂದು ವರಹ ಬಹುಮಾನವಿತ್ತು ಅಲ್ಲಿಂದ ಕಳಿಸಿಕೊಟ್ಟರು. +ಐದು ವರ್ಷದಿಂದ ವಿದುರರಾದ ದೇವರಾಜರಿಗೆ ಸಂಸಾರದಲ್ಲಿ ಸುಖವಿರಲಿಲ್ಲ. ವಿದುರರಾದ ಹೊಸತರಲ್ಲಿ ವೈರಾಗ್ಯಭವತಾಳಿ, ಕವಾಸಮುನಿಗಳ ಶಿಷ್ಯತ್ವವನ್ನು ಸ್ವೀಕಾರಮಾಡಿದ್ದರು. ಆದರೆ ಇತ್ತೀಚೆಗೆ ಇನ್ನೊಂದು ಮದುವೆಯಾಗುವ ವಿಚಾರದಲ್ಲಿ ತೊಡಗಿದ್ದರು. ಮಗ ವತ್ಸರಾಜನ ಹೆಂಡತಿ ಸುಂದರಿ ತುಂಬುಬಸಿರಿ. +***** +ಮುಂದುವರೆಯುವುದು +ಕೀಲಿಕರಣ ದೋಷ ತಿದ್ದುಪಡಿ: ಶ್ರೀಶ ಕಾರಾಂತ್ +ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು […] +ಪಂಚಮಾಶ್ವಾಸಂ ರಾಜಕಾರಣಿಯೂ ಪಂಚತಂತ್ರ ಪ್ರವೀಣನೂ, ಚತುರೋಪಾಯ ದುರಂಧರನೂ ಆದ ಗುಲಾಂನಬಿ ಟಾಯ್ಲೆಟ್ಟಿನಲ್ಲಿ ಮಾಡುತ್ತಿದ್ದ ರಾಜಕಾರಣ ಕಿಚನ್ ರೂಮಿಗೆ ಗೊತ್ತಾಗುತ್ತಿರಲಿಲ್ಲ, ಕಿಚನ್ ರೂಮಿನಲ್ಲಿ ಮಾಡುತ್ತಿದ್ದ ರಾಜಕಾರಣ ಬೆಡ್ ರೂಮಿಗೆ ಗೊತ್ತಾಗುತ್ತಿರಲಿಲ್ಲ.. ತಾನು ಇನ್ನೊಬ್ಬರ ಮೊಣಕಾಲಿಗೆ ಇದ್ದರೆ […] +ನಿಧಾನವಾಗಿ ಸುಧಾರಿಸಿಕೊಂಡ, “ಗೌಡ್ರ ಕಾಲ ಹಿಡಕೋ ಅಂತ ನಾನಽ ಕಳಿಸಿದೆ” ಎಂದು ಕಳ್ಳ ಹೇಳಿದೊಡನೆ ಗುಡಸೀಕರನ ಮುಖದ ಮೇಲೆ ತಣ್ಣಿರು ಎರಚಿದಂತಾಯ್ತು. “ಅಲ್ಲಲೇ, ಇಂಥಾ ಕೇಸಿನ್ಯಾಗ ಗೌಡಗೇನ ತಿಳಿತೈತಿ? ವಕೀಲ ನಾನೋ? ಗೌಡನೋ?” “ನಿಮ್ಮನ್ನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_158.txt b/Kannada Sahitya/article_158.txt new file mode 100644 index 0000000000000000000000000000000000000000..985769a7554a445a34e2692d2f62ab8f49d6db5c --- /dev/null +++ b/Kannada Sahitya/article_158.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಾರಿ ಚಿಕ್ಕಮಗಳೂರಿಗೆ ‘ಪರ್ವ’ ಮುಹೂರ್ತಕ್ಕೆ ಹೋಗಿದ್ದಾಗ ವಿಷ್ಣುವರ್ಧನ್ ಹರ್ಷದ ಮಹಾಪೂರದಲ್ಲಿದ್ದರು. ಯಜಮಾನ ಚಿತ್ರದ ಯಶಸ್ಸಿನ ಖುಷಿ ಜತೆಗೆ ಬೇರೆ ಬೇರೆ ಊರುಗಳಿಗೆ ಹೋದಾಗ ಅಭಿಮಾನಿಗಳು ತೋರಿದ ವಾತ್ಸಲ್ಯದಿಂದ ಸಂಭ್ರಮಿಸುತ್ತಿದ್ದ ವಿಷ್ಣು ನಗೆ ಲಹರಿಗೂ ದಾರಿಮಾಡಿ ಹಲವು ಕಿರುಕಥೆಗಳನ್ನೂ ತೇಲಿಬಿಟ್ಟರು. +ಅವೆಲ್ಲದರ ಸೆಂಟ್ರಲ್ ‘ಥೀಂ’ ಅವಾರ್ಡ್ +ಓದಿ-ನಕ್ಕು-ಮರೆತುಬಿಡಿ… ನೆನಪಿದ್ದರೆ ನಿಮ್ಮ ಗೆಳೆಯರಿಗೆ ಹೇಳಿ +ಇದ್ದರಿಬ್ಬರು ಗೆಳೆಯರು +ಈ ಇಬ್ಬರು ಚಿತ್ರರಂಗ ಪ್ರವೇಶಿಸಿದರು ಒಟ್ಟಿಗೆ. +ಒಂದು ಚಿತ್ರದಲ್ಲಿ ಹೀರೋ ಆದ ‘ಎ’. ನಂತರ ಮೋಬೈಲ್ ಬಂತು. ಕಾರ್‍ ಬಂತು. ಸ್ಟೈಲ್ ಬದಲಾಯಿತು. ದಿನಕ್ಕೊಂದು ಡ್ರೆಸ್. ಆನಂತರ ‘ಬಿ’ ಸಹಾ ಚಿತ್ರರಂಗದಲ್ಲಿ ಹೆಸರಾದ. ತಾನೂ ‘ಎ’ ತರಹವೇ ಆಗಬೇಕೆಂದು ಮೊಬೈಲ್ ಕೊಂಡ-ಅದೇ ಬಣ್ಣದ ಕಾರೂ ಕೊಂಡ. ಸ್ಟೈಲಿಷ್ ಕಿಂಗ ಎನ್ನವಂತೆ ತಾನೂ ಡ್ರೆಸ್ ಮಾಡಿದ. ಎ ದಿನಕ್ಕೊಂದು ಡ್ರೆಸ್ ಹಾಕಿದರೆ ಬಿ ಘಂಟೆಗೊಂದು ಡ್ರೆಸ್ ಹಾಕಿದ. +“ಎಲಾ ಇವ್ನ” ಎಂದಿದ್ದೇ ಎ ಒಂದು ಭರ್ಜರಿ ಬಂಗಲೆ ಕಟ್ಟಿಸಿದ. +ಬಿ ನಾನೇನು ಕಮ್ಮಿ ಎಂದು ಅದಕ್ಕಿಂತ ಭರ್ಜರಿ ಬಂಗಲೆ ಕಟ್ಟಿಸಿ ಮೀಸೆ ತಿರುವಿದ. +ಬಿ ಗೆ ಪಾಠಕಲಿಸಬೇಕೆಂದು ‘ಎ’ ದೊಡ್ಡ ಪ್ರಮಾಣದಲ್ಲಿ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಆರಂಭಿಸಿದ. +“ನಾನು ನಿನಗೇನು ಕಡಮೆ ಇಲ್ಲ’ ಎಂದು ‘ಬಿ’ ಅದೇ ಪ್ರಮಾಣದಲ್ಲಿ ತಾನೂ ಟ್ರಾನ್ಸ್‌ಪೋರ್ಟ್ ಬಿಸಿನೆಸ್ ಆರಂಭಿಸಿದ. +ಮುಂದಿನ ವರ್ಷ ಎ ಗೆ ಅಭಿನಯಿಸಿದ ಚಿತ್ರಕ್ಕೆ ಸೆಂಟ್ರಲ್ ಅವಾರ್ಡ್ ಬಂತು. +ಈಗ ಏನಂತೀರಿ ಮಿಸ್ಟರ್‍ ‘ಬಿ’ ಎಂದು ಗಹಗಹಿಸಿ ನಕ್ಕಾಗ ‘ಬಿ’ ಸೋತು-ಸಪ್ಪಗಾಗಿ “ಇಲ್ಲಪ್ಪ-ನಾನು ಅಷ್ಟು ಶ್ರೀಮಂತನಾಗಿಲ್ಲ ಇನ್ನೂ” ಎಂದು ಕೈ ಮುಗಿದನಂತೆ. +ಮಿತ್ರರ ಫೋನ್ +ಅವಾರ್ಡುಗಳ ಅನೌನ್ಸ್ ಆದಾಗ ‘ಕಂಗ್ರಾಜುಲೇಷನ್ಸ್’ ಹೇಳುವಂಥ ಕರೆಗಳು ಫ್ಯಾನ್ಸ್‌ಗಳಿಂದ ಬೇಕಾದಷ್ಟು ಬರುತ್ತೆ. ಅಂಥ ಫೋನ್‌ಗಳು ಮನಸ್ಸಿಗೆ ಮುದ ನೀಡುತ್ತೆ. ಅವಾರ್ಡ್ ಬರಕ್ಕೆ ಮುಂಚೆ ಕೆಲವು ಫೋನ್ ಬಂದಾಗ ಮನಸ್ಸಿಗೆ ಕಿರಿಕಿರಿಯಾಗುತ್ತೆ. “ವಿಷ್ಣುಸಾರ್‍ – ಈ ಸಾರಿ ನಿಮಗೇ ಅವಾರ್ಡ್ ಬಂದಿರೋದು. ನಿಮ್ಮ ಹೆಸರು ರೆಕಮೆಂಡ ಮಾಡಿದೋನು ನಾನೇ, ಅಂತ ಆ ಸ್ಟೇಟ್‌ಮೆಂಟ್‌ಗೊಂದು ಒಗ್ಗರಣೆ ಬೇರೆ ಹಾಕ್ತಾರೆ. ಕ್ಲಿಷ್ಟವಾದ ಪಾತ್ರ ಕಷ್ಟಪಟ್ಟು ಅಭಿನಯಿಸಿರೋನು ನಾನು. ವರ ರೆಕಮಂಡೇಷನ್‌ನಿಂದ ನಂಗೆ ಅವಾರ್ಡ್ ಬರೋದಾದ್ರೆ ಆ ಅವಾರ್ಡ್‌ಗೇನು ಬೆಲೆ ಇರುತ್ತೆ? +ಮಿಸ್ಟರ್‍ ಪಾರ್ಥೇನಿಯಂ +ಇನ್ನೊಬ್ಬ ವ್ಯಕ್ತಿ ಇದ್ದಾನೆ. ಆತ ಒಬ್ಬ ಕ್ರಿಮಿ. ಹೆಸರು ಹೇಳಬಹುದು. ಬೇಡ ಈಗ. ಒಂದೇ ಮಾತಲ್ಲಿ ಹೇಳಬೇಕಾದ್ರೆ ಆತ ಪಾರ್ಥೇನಿಯಂ. ಅವನೊಂದು ಸರ್ತಿ ಫೋನ್ ಮಾಡಿ “ಸಾರ್‍ ಈ ಸಾರಿ ನಿಮಕುದಾ ಅವಾರ್ಡ್ ವಂದಿರಕು ಅಂತ ಅಷ್ಟೇ ಹೇಳಿದ್ದರೆ ಪರವಾಗಿರಲಿಲ್ಲ. ‘ನಾಳೆ ಇಂಥವರು ಫ್ಯಾಮಿಲಿ ಸಮೇತ ಬರ್‍ತಾರೆ. ಪಾಷ್ ಹೋಟೆಲ್‌ನಲ್ಲಿ ಅವರನ್ನ ಚೆನ್ನಾಗಿ ಟ್ರೀಟ್ ಪಣ್ಣಂಗೊ’ ಅಂದ. ಸುಮ್ನೆ ಫೋನ್ ಕುಕ್ಕಿದೆ. ಫ್ರೆಂಡ್ಸ್ ಯಾರೋ ಊರಿಂದ ಬಂದರೆ ಅವರಿಗೆ ಅತಿಥಿ ಸತ್ಕಾರ ಚೆನ್ನಾಗಿ ಮಾಡೋದು ನಮ್ಮ ಸಂಸ್ಕೃತಿ. ಓ ಕೆ…. ಆದರೆ ಅವರು ಅವಾರ್ಡ್ ಕೊಡೋರು. ಅವರನ್ನ ಆ ಕಾರಣಕ್ಕೆ ಚೆನ್ನಾಗಿ ಟ್ರೀಟ್ ಮಾಡಿ ಅಂದ್ರೆ ಕೋಪ ಬರುತ್ತೋ ಇಲ್ಲವೋ? ಇಂಥ ಚಮಚಾಗಿರಿ ಮಾಡಿ ಅವಾರ್ಡ್ ತಗೊಂಡ್ರೆ ಮನಸ್ಸಿಗೆ ತೃಪ್ತಿ ಇರುತ್ತಾ ನಾನ್‌ಸೆನ್ಸ್”. +ಒಂದೊಂದು ಅವಾರ್ಡ್‌ದು ಒಂದೊಂದು ಕಥೆ +ಫಿಲಂ ಫೇರ್‍ ಅವಾರ್ಡು, ಆ ಅವಾರ್ಡು ಈ ಅವಾರ್ಡು ಅಂತ ಈಗ ಅವರ್ಡುಗಳಲ್ಲೂ ಥರಾ ಥರಾ. +ಇನ್ನು ಸೆಂಟ್ರಲ್ ಅವಾರ್ಡು ಕಥೆ ಈಗ ಹಾದಿರಂಪ-ಬೀದಿರಂಪ. +‘ವೀರಪ್ಪನಾಯ್ಕ’ ಸಹ ಹಿಂದೆ ಸೆಂಟ್ರಲ್ ಅವಾರ್ಡ್‌ಗೆ ಹೋಗಿತ್ತು. ನೋಡಿದರೆ ತಾನೆ ಚೆನ್ನ-ಚಾರು ಹೇಳೋದು ಸಾಧ್ಯ. ವೀರಪ್ಪನಾಯಕ ಡಬ್ಬ ತೆಪ್ಪಗೆ ಬಿದ್ದಿತ್ತಂತೆ. ಆ ಡಬ್ಬ ತೆಗೆದು ನೋಡೋ ಮನಸೂ ಬರಲಿಲ್ಲ ಅವರಿಗೆ. ಹೀಗಾದರೆ ಯಾರಿಗೆ ಆದ್ರೂ ನ್ಯಾಯ ಸಿಕ್ಕೀತು ಹೇಗೆ?” +ಪುಟ್ಟಣ್ಣಾಜಿ ಮತ್ತು ನಾಗರಹಾವು +“ಕುಮಾರ್‍ ಅಂತ ಇದ್ದ ಹೆಸರನ್ನ ವಿಷ್ಣುವರ್ಧನ್ ಅಂತ ಹೆಸರು ಬದಲಿಸಿದ್ದೇ ನನ್ನ ಗುರುಗಳಾದ ಕಣಗಾಲ್ ಪುಟ್ಟಣ್ಣಾಜಿ. ಅವರು ‘ನಾಗರಹಾವು’ ಚಿತ್ರದ ಮೂಲಕ ನನ್ನಂಥ ಕಗ್ಗಲ್ಲನ್ನ ಸುಂದರ ಶಿಲ್ಪವಾಗಿ ಕೆತ್ತಿ ಆಶೀರ್ವದಿಸಿದರು. ಚಿತ್ರದುರ್ಗದ ಮಂದಿ ಮಾತ್ರ ಅಲ್ಲ ಇಡೀ ಕನ್ನಡ ಕುಲಕೋಟಿ ಅವತ್ತಿಂದ ಇವತ್ತಿನವರೆಗೂ ತಮ್ಮ ಪ್ರೀತಿ ಧಾರಾಳವಾಗಿ ಧಾರೆ ಎರೆದಿದ್ದಾರೆ. ಬೇಕಾದಷ್ಟು ಸನ್ಮಾನ ಮಾಡಿದ್ದಾರೆ. ಅವಾರ್ಡ್‌ಗಳು ಕೊಟ್ಟಿದ್ದಾರೆ. ‘ನಾಗರಹಾವು’ ಆಗ ಬೇಕಾದಷ್ಟು ಅವಾರ್ಡ್‌ಗಳು ಪಡೀತು. ಅಂಥ ಜನರ ಪ್ರೀತಿಯ ಸವಿ ಉಂಡವನು ನಾನು. ಇವತ್ತು “ಎಲ್ಲಿ ಹೋದವು ಆ ದಿನ” ಅಂತ ಪ್ಯಾಥೋಸ್ ಟ್ಯೂನ್‌ನಲ್ಲಿ ಹಾಡಬೇಕಾದ ದಿನ ಬಂದಿದೆ.” +ಒನ್ ಬೈಟು ಅವಾರ್ಡ್‌ಗಳು +“ಯಾವುದೇ ಒಂದು ಅವಾರ್ಡು ಹಿರಿಯರಿಗೆ-ಕಿರಿಯರಿಗೆ ಬಂದರೆ ಖುಷಿಯಾಗಿ ಸಂತೋಷ ಹಂಚಿಕೊಳ್ಳೋನು ನಾನು. ಆದರೆ ಅವಾರ್ಡನ್ನು ಒನ್‌ಬೈಟು ಮಾಡೋದು ಸರಿಯಲ್ಲ ಅಂತ ಮುಂಚಿನಿಂದ ಹೇಳ್ಕೊಂಡು ಬಂದಿದೀನಿ. ಅಂಥಾದ್ರಲ್ಲಿ ರಾಜ್ಯ ಪ್ರಶಸ್ತಿ ನಂಗೆ, ರಮೇಶ್‌ಗೆ ಒಟ್ಟಿಗೆ ಕೊಟ್ರು. ಮುಂದಾದರೂ ಹೀಗೆ ಮಾಡದೆ ಇರಲಿ ಅಂತ ಪಬ್ಲಿಕ್ ಆಗಿ ಅದನ್ನು ಡೈರೆಕ್ಟರ್‌ಗೆ ಕೊಡಿ ಅಂತ ಪ್ರಶಸ್ತಿ ಸಮಾರಂಭದಲ್ಲೇ ವಾಪಾಸ್ಸು ಮಾಡಿದೆ.” +ನಿಜವಾಗಿ ಅವಾರ್ಡ್‌‌ಗಳು ಬಂದಾಗ ತುಂಬ ಖುಷಿ ಆಗುತ್ತೆ ಅನ್ನೋದು ನಿಜ. ಆದರೆ ಬಗೆ ಬಗೆ ಲಾಬಿಯಿಂದ ಅವಾರ್ಡ್ ಬಂದರೆ ಏನು ಪ್ರಯೋಜನ? ಈಗಂತೂ ಸರಕಾರಿ ಅವಾರ್ಡ್ ರಿಜೆಕ್ಟ್ ಮಾಡಿದರೆ-ಅದಕ್ಕೂ ಒಂದು ಅವಾರ್ಡ್ ಕೊಡೋ ಸಂಪ್ರದಾಯ ಹೊಸದಾಗಿ ಈಗ ತಲೆ ಎತ್ತಿದೆ. ಇಂಥ ಅಂಶಗಳೂ ಚಿತ್ರರಸಿಕರಿಗೆ ತಿಳಿದಿರಲೆಂದೇ ವಿಷ್ಣು ಪುರಾಣದ ಅವಾರ್ಡ್ ಕಥೆಗಳನ್ನು ಹೇಳಿದ್ದು. +***** +(೪-೫-೨೦೦೧) +ರವಿಚಂದ್ರನ್ ರಮ್ಯಕೃಷ್ಣ ಅವರೊಂದಿಗೆ ದಾವಣಗೆರೆಯಲ್ಲಿ ‘ಕ್ರೇಜಿ ನೈಟ್’ ಏರ್ಪಡಿಸಿದಂದು ಇಡೀ ದಾವಣಗೆರೆಯ ಎಲ್ಲಾ ರಸ್ತೆಗಳೂ ಆ ಸಭಾಂಗಣದತ್ತಲೇ. ಅಂದು ಆ ಊರಿನಲ್ಲಿ ಯಾವುದೇ ಸಂಗೀತ, ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿಲ್ಲ. ಜನತುಂಬಿ ತುಳುಕಿದ್ದರು. ಆನಂತರದ ಸಂತೋಷಕೂಟದಲ್ಲಿ […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_159.txt b/Kannada Sahitya/article_159.txt new file mode 100644 index 0000000000000000000000000000000000000000..9bf9ea9f9630e94022bac0a3ccb4bcf5412995dc --- /dev/null +++ b/Kannada Sahitya/article_159.txt @@ -0,0 +1,33 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಮುದ್ರ ಸೀಳಿ ಲಾಗ ಹೊಡೆಯುವ +ತಿಮಿಂಗಲ +ಆಕಾಶವನ್ನೇ ಹರಿದು ಸುರಿಯುವ +ಮಳೆ +ಚಂದ್ರ ತಾರೆಗಳನ್ನೆ ನುಂಗಿಬಿಡುವ +ಮೋಡ +ಭೂಮಿಯೊಳಗಿಂದ ಹಟಾತ್ತನೆ ಸಿಡಿದು +ನಡುಗಿಸುವ ಕಂಪನ; +ನುಡಿಸಿದರೆ ರಾಗ, +ಹೀಗಿರಬೇಕು! +ರೋಮ ರೋಮಕ್ಕೂ ಲಗ್ಗೆ ಇಟ್ಟು +ಕೊಲ್ಲುವ ಹಾಗೆ! +ಕೀಲಿಕರಣ: ಕಿಶೋರ್‍ ಚಂದ್ರ +ನಿನ್ನ ಬಸಿರೊಳೊಗೆದು ಬಂದು ಎದೆಯ ಹಾಲ ಕುಡಿದು ನಿ೦ದು ತೋಳ ತೊಟ್ಟಿಲಲ್ಲಿ ತೂಗಿ ಲಾಲಿಯಾಡಿದೆ; ನಿನ್ನ ಕರುಣ ರಸದೊಳಾಳ್ದು ತೊದಲು ನುಡಿಯ ಜಾಲ ನೆಯ್ದು ಹಸುಳೆತನದ ಹಾಲುಗಡಲ ಸವಿಯ ನೋಡಿದೆ. ೨ ನಿನ್ನ ಮುತ್ತು […] +ಇವು ನನ್ನ ಹಾಡೆಂಬ ಹಗರಣದಿ ಮೈಮರೆತು ಅಹಮಿಕೆಯ ದರ್ಶನವ ಮಾಡಲೇಕ್ಕೆ ದೇವ; ನೀನಿತ್ತ ಸಂಪದವ, ನಿನ್ನಾಣತಿಗೆ ಮಣಿವ ಅಣುರೇಣು ಜೀವಾಣು ನಿನ್ನ ಚರಣವನೋತು ಚೆಲುವಿನೊಲವಿನ ವಿವಿಧ ವಿನ್ಯಾಸಗಳನಾಂತು ಹೆಜ್ಜೆಯಿಡುತಿರಲದರ ಹಲವಾರು ಹವಣಿಕೆಯ ಕರಣಿಕನು ನಾನಾಗಿ […] +ಪಡೆದು ಕೆಟ್ಟಾರು ಕಮ್ಯುನಿಸ್ಟರುಕೆಟ್ಟು ಪಡೆದರು ಕಾಂಗಿ ಕಾಂಗರುಕೇಡದೆ ಉಳಿದವರಾರು ಎಂದರೆಬಿಸಿಲು ಕಾಯುವ ಬೆಪ್ಪರು. ೨೬-೧೨-೯೧ +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_16.txt b/Kannada Sahitya/article_16.txt new file mode 100644 index 0000000000000000000000000000000000000000..e945c66d8dc257a519112c60c8608359d9fad0c8 --- /dev/null +++ b/Kannada Sahitya/article_16.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಡಾ.ಕೃಷ್ಣರಾಜು ಚಿಕಾಗೋಗೆ ಕರೆದಿದ್ದಾರೆ. ಕನ್ನಡ ಸಂಘದವರಿಂದ ನಾಡಹಬ್ಬದ ಆಚರಣೆ, ಬನ್ನಿ ಎಂದು. ಆಯೋವಾಸಿಟಿಯಿಂದ ಚಿಕಾಗೋಗೆ ಗ್ರೇಹೌಂಡ್ ಬಸ್ಸಿನಲ್ಲಿ ಸುಮಾರು ಐದುಗಂಟೆಗಳ ಪ್ರಯಾಣ. ಕತ್ತಲು; ದಾರಿಯುದ್ದಕ್ಕೂ ಮೋಟೆಲ್‌ಗಳು ಹ್ಯಾಂಬರ್ಗರ್ ಸಿಗುವ ಜಾಗಗಳು; ಗ್ಯಾಸ್ ಸ್ಟೇಶನ್‌ಗಳ ಜಾಗಿರಾತುಗಳು; ಮುಂದೆ ಎಕ್ಸಿಟ್ ಇಂಥ ಊರಿಗೆ, ಇಂತಿಷ್ಟು ನಿಮಿಷಗಳಿಗೆ, ಈ ನಂಬರ್ ದಾರಿಗೆ ಬಲಕ್ಕೆ ತಿರುಗಿ, ಇಲ್ಲಿ ಎಡಕ್ಕೆ ತಿರುಗಬೇಡಿ, ನೇರವಾಗಿ ಹೋಗಿ – ದಾರಿಯುದ್ದಕ್ಕೂ ಹೊಳೆಯುವ ಸೂಚಿಗಳು. ಇದನ್ನು ತಿನ್ನಿ, ಇದನ್ನು ಕುಡಿಯಿರಿ – ಕಣ್ಣು ಕಿವಿಗಳ ಮೇಲೆ ಸತತವಾದ ಧಾಳಿ. ನನ್ನ ಮರೆವು ಎಷ್ಟೆಂದರೆ ಒಂದೇ ಒಂದು ಜಾಹಿರಾತು ನನಗೆ ನೆನಪಿರುವುದಿಲ್ಲ. ಬಸ್ಸು ಕೆಲವೆಡೆ ನಿಲ್ಲುತ್ತದೆ. ಮೆಶಿನ್‌ನಿಂದ ಬಿಸಿಯಾದ ಕಾಫಿ, ತಣ್ಣಗಿನ ಸೆವೆನ್ ಆಪ್, ಕೋಕೋಕೋಲ, ಬಿಸಿಬಿಸಿ ಸೂಪು, ಸಿಗರೇಟು ಪಡೆದು ಪ್ರಯಾಣಿಕರು ಬಸ್ಸಿಗೆ ಹಿಂದಿರುಗುತ್ತಾರೆ. ಆರಡಿಗೂ ಹೆಚ್ಚು ಎತ್ತರದ, ನೀಳವಾದ ಶರೀರದ ಕಪ್ಪು ಮನುಷ್ಯ ನಮ್ಮ ಚಾಲಕ. ನಾವು ಎಲ್ಲಿದ್ದೇವೆ, ಎಷ್ಟು ಹೊತ್ತಿಗೆ ಚಿಕಾಗೋ ಸೇರುತ್ತೇವೆ – ಮೈಕಿನಲ್ಲಿ ಹೇಳುತ್ತಾನೆ, “ಎದುರುಗಡೆ ಸೀಟುಗಳಲ್ಲಿ ಸಿಗರೇಟು ಸೇದುವುದು ಕಾನೂನುಬಾಹಿರ, ಹಿಂದಿನ ಸೀಟಿನಲ್ಲಿ ಮಾತ್ರ ಸೇದಬಹುದು” ಎಂದು ಅವನು ಹೇಳಿದ್ದನ್ನು ಕೇಳಿ ನಾನು ಸಿಗರೇಟಿನ ಸಹಿತ ಹಿಂದಿನ ಸೀಟಿಗೆ ಹೋಗಿ ಕೂರುತ್ತೇನೆ. ಸೀಟನ್ನು ಹಿಂದಕ್ಕೆ ತಳ್ಳಿ ಸಿಗರೇಟು ಹಚ್ಚಿ ವಿಶ್ರಮಿಸುತ್ತೇನೆ. ಬಸ್ಸು ಕಾನೂನಿನ ಪ್ರಕಾರ ಐವತ್ತೈದು ಮೈಲುಗಳ ವೇಗದಲ್ಲಿ ಓಡುತ್ತದೆ. ಕಿಟಕಿಯಿಂದ ಸಾಲುಸಾಲಾಗಿ ಇರುವೆಯಂತೆ ಇನ್ನೊಂದು ದಿಕ್ಕಿನಲಿ ಓಡುವ ಕಾರುಗಳು ಕಾಣುತ್ತವೆ. ತನ್ನ ತನ್ನ ಪರಿಧಿಯಲ್ಲಿ ಎಲ್ಲವೂ ನಿಯಂತ್ರಿತವಾಗಿ ನಡೆಯುತ್ತದೆ. ಎಲ್ಲ ಹಿಡಿತದಲ್ಲಿದೆ, ಕ್ಷೇಮವಾಗಿದೆ ಎನ್ನಿಸಿದರೂ ರೇಡಿಯೋ ಹಾಕಿದಾಗ್ಗೆಲ್ಲ ಕೇಳುವುದು ಅಪಘಾತ. +ಇಲ್ಲ ಇಂಥ ಹೈವೇಗಳನ್ನು ನಮ್ಮ ದೇಶ ನಿರ್ಮಿಸುವುದು ಸಾಧ್ಯವಿಲ್ಲ. ಎಷ್ಟೋ ಹಳ್ಳಿಗಳನ್ನು ನಿರ್ನಾಮಮಾಡಬೇಕಾದೀತು. ಅಲ್ಲದೆ ನಮಗೆ ಇಷ್ಟೊಂದು ಕಾರುಗಳೂ ಬೇಡ, ಪಾರ್ಕ್ ಮಾಡುವ ಪರದಾಟವೂ ಬೇಡ. ಇಷ್ಟೊಂದು ಜನ ಎಲ್ಲಿಗೆ ಯಾಕೆ ಬರಿದೇ ತಿರುಗಾಡುತ್ತಾರೆ? ತೇಪೆ ಹಾಕಿದ ಬ್ಲೂ ಜೀನ್ಸ್ ತೊಟ್ಟು, ಉದ್ದಕೂದಲು ಗಡ್ಡಗಳನ್ನು ಬಿಟ್ಟ ನನ್ನ ವಿದ್ಯಾರ್ಥಿಗಳನ್ನು ಕೆಲವರು ಹೇಳುತ್ತಾರೆ : “ಈ ಕಾರುಗಳನ್ನು ನಾವು ದ್ವೇಷಿಸುತ್ತೇವೆ; ಈ ಟಿನ್ ಆಹಾರವನ್ನು ನಾವು ದ್ವೇಷಿಸುತ್ತೇವೆ. ಈ ಪದಾರ್ಥ ವ್ಯಾಮೋಹ, ಈ ಪ್ರಾಪಂಚಿಕತೆ ನಾವು ದ್ವೇಷಿಸುತ್ತೇವೆ; ನಮ್ಮ ವಾತಾವರಣ ಮಲಿನವಾಗುತ್ತಿದೆ. ನಮಗೆ ನ್ಯಾಚುರಲ್ ಫುಡ್ ಬೇಕು.” ನನ್ನ ಜೊತೆ ಕೆಲಸ ಮಾಡುವ ಇಬ್ಬರು ರಿಸರ್ಚ್ ಅಸಿಸ್ಟೆಂಟ್ ಹುಡುಗಿಯರು ತಿನ್ನುವುದು ಬರೀ ಮೊಸರು, ತರಕಾರಿ. +ಆದರೆ ನ್ಯೂಯಾರ್ಕ್ನಲ್ಲೊಂದು ಅಂಗಡಿಯಿದೆ. ಶ್ರೀನಿವಾಸರಾವ್ ನನಗಿದನ್ನು ಹೇಳಿದ್ದು. ಯೆಹೂದ್ಯನೊಬ್ಬ ಅಂಗಡಿಯ ಮಾಲೀಕ. ಭಾರತೀಯರಿಗೆ ಸ್ವಾಗತವೆಂದು ಹಿಂದಿಯಲ್ಲಿ ಬೋರ್ಡ್‌ಹಾಕಿಃದಾನಂತೆ. ೨೨೦ ವೋಲ್ಟ್‌ಗಳಲ್ಲಿ ನಡೆಯುವ ವಿದ್ಯುತ್ ಸರಕುಗಳನ್ನು ಅವನು ಮಾರುತ್ತಾನೆ. ಅಲ್ಲಿ ನಮ್ಮ ಭಾರತೀಯರು ಕಿಕ್ಕಿರಿದಿರುತ್ತಾರೆ. ಅದನ್ನು ಕೊಡು, ಇದನ್ನು ಕೊಡು ಎಂದು ಎತ್ತಿದ ಎರಡು ಕೈಗಳಿಂದಲೂ ಸರಕುಗಳನ್ನು ತೋರಿಸುತ್ತ ನಮ್ಮವರು ಹಾತೊರೆಯುವ ದೃಶ್ಯವನ್ನು ಶ್ರೀನಿವಾಸರಾವ್ ನನ್ನ ಕಣ್ಣಿಗೆ ಕಟ್ಟುವಂತೆ ವಿವರಿಸಿದರು. ನನಗೂ ಒಂದು ಕ್ಯಾಮರ, ಒಂದು ಕ್ಯಾಸೆಟ್ ಟೇಪ್ ರಿಕಾರ್ಡರ್, ಒಂದು ಒಳ್ಳೆಯ ಸ್ಟೀರಿಯೋ ರಿಕಾರ್ಡ್‌ಪ್ಲೇಯರ್ ಕೊಳ್ಳುವ ಆಸೆ. ಆದರೆ ನಾಚಿಕೆ. +ಪಕ್ಕದಲ್ಲಿ ಕೂತವ ’ಹಾಯ್’ ಎಂದ. ಗಟ್ಟುಮುಟ್ಟಾದ ಆಳು. ಗುಂಡು ಮುಖ. ಚಿಕಾಗೋ ಸೇರಲು ಇನ್ನೆಷ್ಟು ಸಮಯ ಬೇಕು ಎಂದೆ. “ಒಂದೂವರೆ ಗಂಟೆ. ನಿನ್ನದು ಯಾವ ದೇಶ?” +ಪರಸ್ಪರ ಪರಿಚಯವಾಯಿತು. ಅವನ ಪೂರ್ವಿಕರು ವೆಲ್ಶ್‌ಜನ. ಅವನದು ಊರಿಂದ ಊರಿಗೆ ಪ್ರಯಾಣ. ಕೆಲಸ ಸಿಕ್ಕಲ್ಲಿ ದುಡಿಮೆ. ಅವನ ಕನಸು : ಪರ್ವತ ಪ್ರದೇಶದಲ್ಲಿ ಗುಡಿಸಲು ಕಟ್ಟಬೇಕು. ರೈತನಾಗಿ ಬದುಕಬೇಕು ಈಜಬೇಕು, ಬೆಟ್ಟಗಳನ್ನು ಹತ್ತಬೇಕು, ಕೈಯಲ್ಲಿ ಬೆಳೆದದ್ದನ್ನು ತಿನ್ನಬೇಕು. ಟಿನ್ ಆಹಾರ, ಟೆಲಿವಿಶನ್, ಕಾರುಗಳು – ಎಲ್ಲದರಿಂದ ದೂರವಾಗಬೇಕು. +“ಹಾಗಾದರೆ ನೀನು ಅಮೆರಿಕಾನ್ನ ದ್ವೇಷಿಸುತ್ತಿ?” +“ಇಲ್ಲ. ಪ್ರಪಂಚದಲ್ಲಿ ಸದ್ಯಕ್ಕೆ ಇದೇ ಒಳ್ಳೆ ದೇಶ. ಇಲ್ಲಿ ಸ್ವಾತಂತ್ರ್ಯವಿದೆ. ಇಲ್ಲಿ ಯಾರೂ ದೊಡ್ಡವನಲ್ಲ, ಯಾರೂ ಚಿಕ್ಕವನಲ್ಲ, ನಾವು ನಿಕ್ಸನ್‌ಗೆ ಏನು ಮಾಡಿದೆವು ನಿನಗೆ ಗೊತ್ತಿರಬಹುದಲ್ಲ?” +“ಸರಿ, ಆದರೆ ನಿಮ್ಮ ಸ್ವಾತಂತ್ರ್ಯದ ಹಿಂದೆ ಸಮೃದ್ಧಿಯಿದೆ, ನಿಮ್ಮ ಸಮೃದ್ಧಿ ಸಾಧ್ಯವಾದ್ದು ನಮ್ಮ ದೇಶಗಳ ಬಡತನದಿಂದಾಗಿ, ನೋಡು – ನಿಮಗೆ ಪೆಟ್ರೊಲ್ ಚೀಪಾಗಿ ಸಿಗುತ್ತದೆ. ಆದರೆ ನಾವು ಕೊಳ್ಳುವ ನಿಮ್ಮ ಮೇಶಿನು ತುಂಬ ದುಬಾರಿ. ಈಗ ಪೆಟ್ರೊಲಿನ ಬೆಲೆ ಏರುತ್ತಿರುವುದರಿಂದ ಜನರಲ್ ಮೋಟಾರ್ಸ್‌ನಲ್ಲಿ ಕೆಲಸ ಮಾಡುವ ಎಷ್ಟೋಜನ ನಿರುದ್ಯೋಗಿಗಳಾಗಿದ್ದಾರೆ. ನಿಮ್ಮ ಸ್ಥಿತಿ ಹೀಗೆ ಮುಂದುವರಿಯುತ್ತದೆಂಬ ಭ್ರಮೆ ಇಟ್ಟುಕೊಳ್ಳುವುದು ತಪ್ಪು”. +“ನೀನು ಹೋಳೋದು ಸರಿಯಿರಬಹುದು. ರಾಜಕೀಯವೆಂದರೆ ನನಗೆ ಬೋರು, ಗ್ರಾಸ್‌ಸೇದುತ್ತೀಯೇನು?” +ಬ್ಯಾಗಿನಿಂದ ಅವ ಒಂದು ಚಿಕ್ಕ ಲೋಹದ ಪೈಪನ್ನು ತೆಗೆದ. ಇನ್ನೊಂದು ಪುಟ್ಟ ಚೀಲದಿಂದ ಮರಿವಾನಾವನ್ನು ತೆಗೆದು ತುಂಬಿದ. +“ನೋಡು – ಇದನ್ನು ಸೇದೋದು ಕಾನೂನು ಬಾಹಿರ. ನಮ್ಮನ್ನು ಪೋಲೀಸರು ಈಗ ಬಂಧಿಸಬಹುದು. ಆದರೆ ನನಗೆ ಅದರ ಎಗ್ಗಿಲ್ಲ. ಸಿಗರೇಟ್‌ಗಿಂತ ಇದು ಹೆಚ್ಚು ಕೆಟ್ಟದಲ್ಲ. ನಿಮ್ಮ ದೇಶದ್ದು : ರುಚಿನೋಡು. ಗ್ರಾಸ್ ಅಷ್ಟು ಚೆನ್ನಾಗಿಲ್ಲ. ಹೂ ತಗೋ”. +ದಾಕ್ಷಿಣ್ಯಕ್ಕಾಗಿ ಸೇದಿದೆ. ನಮ್ಮ ಸೇಟಿನ ಪಕ್ಕದಲ್ಲಿ ಇಬ್ಬರು ತೆಳುವಾದ ಮುಖಗಳ ಹುಡುಗಿಯರಿದ್ದರು. ನಾನು ಎರಡು ದಂ ಎಳೆದು ಕೊಟ್ಟ ಪೈಪನ್ನು ಅವನು ಅವರಿಗೆ ಕೊಟ್ಟ. ಅವರೂ ಅವನಿಗೆ ಅಪರಿಚಿತರು. ಪೈಪ್ ನಮ್ಮ ನಡುವೆ ಸುತ್ತಾಡಿತು. ಮುಂದೆ ಕೂತವರು ತಮಗಿದು ತಿಳಿಯದೆಂಬಂತೆ ನಟಿಸುತ್ತ ಸೆಟೆದುಕೂತಿದ್ದರು. ನನಗೆ ಗ್ರಾಸ್ ಸ್ವಲ್ಪವೂ ಸೇರಲಿಲ್ಲ. ಯಾವ ಪರಿಣಾಮವನ್ನೂ ಮಾಡಲಿಲ್ಲ. ಆದರೆ ಸ್ನೇಹಕ್ಕೆ ಬೇಡವೆನ್ನಲಾರದೆ ಸೇದಿದೆ. ನನ್ನ ಪಾಲಿಗೆ ಪೈಪ್ ಬಂದಾಗ ಒಂದು ದಂ ಎಳೆದು ಅವನಿಗೆ ಹಿಂದಕ್ಕೆ ಕೊಡುತ್ತಿದ್ದೆ. ನನ್ನ ದಾಕ್ಷಿಣ್ಯ ಅವನಿಗೆ ಅರ್ಥವಾಗಲಿಲ್ಲ. ಅವನು ತನ್ನ ವೆಲ್ಶ್ ಪೂರ್ವಿಕರ ಬಗ್ಗೆ, ತನ್ನ ಮೀನು ಹಿಡಿಯುವ ಸಾಹಸಗಳ ಬಗ್ಗೆ, ತಾನು ಇನ್ನೂ ಓದಲು ಇಚ್ಛಿಸುವ ಮಕ್ಕಳ ಅದ್ಭುತಕತೆಗಳ ಬಗ್ಗೆ, ಅಮೆರಿಕಾದಲ್ಲಿ ಹುಟ್ಟಿ ಬೆಳೆದ ತನಗೂ ಇನ್ನೊಂದು ಪ್ರಪಂಚ ಎನ್ನಿಸುವ ನ್ಯೂಯಾರ್ಕಿನ ಬಗ್ಗೆ ಮಾತಾಡಲು ಪ್ರಾರಂಭಿಸಿದ್ದ. ಹಿಂದಿನ ಸೀಟಿನಲ್ಲಿ ಸುತ್ತಾಡುವ ಪೈಪ್ ಒಂದು ಸಣ್ಣ ಕುಟುಂಬವನ್ನು ರಚಿಸಿತ್ತು. +“ಇದೇ ಚಿಕಾಗೋನ ಎತ್ತರದ ಬಿಲ್ಡಿಂಗ್ – ಜಾನ್‌ಹ್ಯಾಂಕಾಕ್. ಸಿಯರ್ಸ್ ಇದಕ್ಕೂ ಹೆಚ್ಚು ಎತ್ತರವೆನ್ನುತ್ತಾರೆ. ಪ್ಮೇಬಾಯ್ ಪ್ರಕಟವಾಗುವುದು ನಿಮ್ಮ ಬಲಕ್ಕೆ ಕಾಣುವ ಆ ಎತ್ತರವಾದ ಕಟ್ಟದಲ್ಲಿ”. ನಮ್ಮ ಚಾಲಕ ಮೈಕ್‌ನಲ್ಲಿ ನಮ್ಮ ಪುರ ಪ್ರವೇಶವನ್ನು ಸಾರಿದ. +“ಚಿಕಾಗೋದಲ್ಲಿ ಏನು ಮಾಡುತ್ತಿ?” +“ಕ್ಯಾಲಿಫೋರ್ನಿಯಾ ಬೋರಾಯಿತು. ಈಗ ಚಿಕಾಗೋದಲ್ಲಿ ಕೆಲಸ ಹುಡುಕುತ್ತೇನೆ. ಯಾವುದೋ ಒಂದು ದಿನ ಬೆಟ್ಟದ ಮೇಲೊಂದು ಮನೆ ಕಟ್ಟುತ್ತೇನೆ. ಅಡಿಗೆ ಮಾಡುವುದರಲ್ಲಿ ಖುಷಿಯಿರುವ ಹುಡುಗಿಯನ್ನು ಮದುವೆಯಾಗುತ್ತೇನೆ. ಅಮೇರಿಕಾದ ಹುಡುಗಿಯರು ಗಂಡಸರಂತೆ ಆಗುತ್ತಿದ್ದಾರೆ. ನನ್ನ ಎದುರು ಕೂತ ಈ ಹುಡುಗಿಯನ್ನು ನೋಡು. ಅವಳ ಜೊತೆ ಸಂಭೋಗ ಮಾಡಬೇಕೆಂದು ನಿನಗನ್ನಿಸುತ್ತದೆಯೆ?” +ನನ್ನ ಮುಖದಲ್ಲಿ ಮೂಡಿದ ಮುಜುಗರ ಕತ್ತಲಿನಲ್ಲಿ ಅವನಿಗೆ ಅರ್ಥವಾಗಲಿಲ್ಲ. ಬಸ್ಸು ನಿಂತಾಗ ಅವನು ಎದ್ದುನಿಂತ. ಎತ್ತರವಾದ ಮೈಕಟ್ಟಿನ ಯುವಕ. ಅಮೆರಿಕಾದ ಸಮೃದ್ಧಿಯ ಶಿಶು. ಭಾರತದ ಗ್ರಾಸ್ ಎಂದು ಅವನು ಸೇದಿದ್ದು ನಿಜವಾಗಿಯೂ ಹುಲ್ಲೇ ಇರಬಹುದು. ಸ್ನೇಹಿತರೊಬ್ಬರು ಹೇಳಿದ್ದರು: ಬಾಳೆ ಹಣ್ಣಿನ ಒಣಗಿದ ಸಿಪ್ಪೆಯನ್ನು ಸೇದುವುದು ಮಾದಕವೆಂದು ಯುವಕರು ನಂಬಿ ಸೇದಲು ಪ್ರಾರಂಭಿಸಿದರಂತೆ. ಹಲವರಿಗೆ ಅದು ಮಾದಕವಾಗಿಯೂ ಕಂಡಿತಂತೆ. ಈ ಯುವಕರು ಏನನ್ನಾದರೂ ನಂಬಲು ಹಾತೊರೆದಿದ್ದಾರೆ…..ಅಥವಾ ನಾನು ಸೇದಿದ್ದು ನಿಜವಾಗಿಯೂ ಮಾರಿವಾನವೆ? ಬಸ್ಸನ್ನು ತಡವರಿಸದೇ ಇಳಿದಿದ್ದೆ. ಚಿಕಾಗೋನ ಅತ್ಯಂತ ಎತ್ತರದ ಜಾನ್ ಹ್ಯಾಂಕಾಕ್ ಆಗಲೀ, ಸಿಯರ್ಸ್ ಆಗಲೀ ನನ್ನ ಕಣ್ಣಲ್ಲಿ ತೇಲಿರಲಿಲ್ಲ; ಅದ್ಭುತವಾಗಿ ಖಂಡಿತ ಕಂಡಿರಲಿಲ್ಲ. +* +* +* +ಡಾ.ಕೃಷ್ಣರಾಜು ನನಗಾಗಿ ಕಾದಿದ್ದರು. +“ನೀ ಮೆಟ್ಟುವ ನೆಲ ಅದೆ ಕರ್ನಾಟಕ” +ಅಮೇರಿಕಾದ ಮಿಡ್‌ವೆಸ್ಟ್ ವಿದ್ಯಾರಣ್ಯವಾಗಿದೆ, ಮಿಚಿಗನ್ ನೃಪತುಂಗವಾಗಿದೆ. ನ್ಯೂಯಾರ್ಕ್ ಕಾವೇರಿಯಾಗಿದೆ, ಕ್ಯಾಲಿಪೋರ್ನಿಯಾ ಕರ್ನಾಟಕವಾಗಿದೆ. ಕನ್ನಡನಾಡಿನಲ್ಲಿ ಓದಿ ಅಮೇರಿಕಾದಲ್ಲಿ ಕೆಲಸ ಮಾಡುವ ನಮ್ಮ ಕನ್ನಡಿಗ ಡಾಕ್ಟರರು, ಎಂಜಿನಿಯರ್‌ಗಳು ತಾವು ಮೆಟ್ಟುವ ನೆಲವನ್ನು ಕರ್ನಾಟಕ ಮಾಡಿದ್ದಾರೆ; ಹೆಸರು ಕೊಟ್ಟು ಹಿಗ್ಗಿದ್ದಾರೆ. ಕೊರೆಯುವ ಚಳಿ, ಪ್ರಖರವಾದ ಬೆಳಕಿನ ಬಿಸಿಲಿನಲ್ಲಿ ಕ್ರೈಸ್ತ ಧರ್ಮದ ಕಾಲೇಜೊಂದರಲ್ಲಿ ಮಧ್ಯಾಹ್ನ ನಾಡಹಬ್ಬಕ್ಕೆಂದು ಸೇರುತ್ತಿದ್ದ ಕನ್ನಡಿಗರನ್ನು ನೋಡುತ್ತ ಅಡ್ಡಾಡಿದೆ. ಅಷ್ಟೇನೂ ಕನ್ನಡ ಕಿವಿಯ ಮೇಲೆ ಬೇಳಲಿಲ್ಲ. ಆದರೆ ಈ ಜರಿ ಅಂಚು ಸೆರಗುಗಳ ರೇಷ್ಮೆ ಸೀರೆಯನ್ನುಟ್ಟು ಸಡಗರದಲ್ಲಿ ಓಡಾಡುವ ಹೆಂಗಸರು ಕನ್ನಡಿಗರೇ – ಖಂಡಿತ. ಯಾರು ಕಮ್ಮೆ, ಯಾರು ಕರ್ನಾಟಕ, ಯಾರು ಮಾಧ್ವ, ಯಾರು ಶ್ರೀ ವೈಷ್ನವ ಎಂದು ಕೂಡ ಊಹಿಸಬಹುದು: ಅವರು ಮನೆಯಿಂದ ಮಾಡಿ ತಂದ ಓಗರಗಳ ವೈವಿಧ್ಯದಲ್ಲಿ. ಅದನ್ನು ಅವರು ಟೇಬಲ್ಲಿನ ಮೇಲೆ ಇಡುತ್ತಿದ್ದ ಸಂಭ್ರಮದಲ್ಲಿ, ಏಕಾಗ್ರತೆಯಲ್ಲಿ. ನಾಲ್ಕೈದು ರೀತಿಯ ಬಿಸಿಬೇಳೆ ಹುಳಿಯನ್ನ, ಮೊಸರನ್ನ, ಪುಳಿಯೋಗರೆ, ಜಾಮೂನು, ಇತ್ಯಾದಿ ಪ್ರತ್ಯಕ್ಷವಾದವು. ಮಕ್ಕಳು ತಾಯಂದಿರಿಗೆ ಅಂಟಿಕೊಂಡು ಅತ್ತವು. ಗೊಂದಲ. ಯಾರು ಏನು ಹಾಡಬೇಕು? ಯಾವುದರ ನಂತರ ಯಾವುದು? ಭಾರತದಲ್ಲಿ ಕ್ಷಾಮವೆ? ನಿಜವೆ? ಅಥವಾ ಅಮೆರಿಕಾದ ಪ್ರಚಾರವೆ? ಐದಾರು ವರ್ಷಗಳಿಂದ ದೇಶಕ್ಕೆ ಹಿಂದಿರಿಗದಿದ್ದವರು ನನ್ನ ಕೇಳಿದರು. ಒಬ್ಬ ಕನ್ನಡಗಿತ್ತಿ ಗೊಣಗಿದಳು: ಇವರೇ ನೋಡಿ ನೀವು ಏನೇ ಹೇಳಿ, ನಮ್ಮನ್ನು ಕಂಡರೆ ಈ ಜನಕ್ಕೆ ಆಗಲ್ಲ. ಅದರಲ್ಲೂ ಇಲ್ಲಿನ ಕರಿಯರಂತೂ…… +ಸೀರೆ ಮತ್ತು ಅಡಿಗೆ – ಈ ಎರಡು ಅಂಶಗಳಲ್ಲಿ ಭಾರತೀಯತೆ ನಾಶವಾಗದೇ ಉಳಿಯುತ್ತದೆ. ಜೊತೆಗೇ ಅಪಾರ್ಟ್‌ಮೆಂಟ್‌ಗಳ ಕಿಷ್ಕಿಂಧದಲ್ಲೂ ಕೆಲವು ಇಂಚುಗಳನ್ನು ಆಕ್ರಮಿಸುವ ದೇವರ ಚಿತ್ರಗಳಲ್ಲಿ. ಬೆಳ್ಳಿಯ ತಿಮ್ಮಪ್ಪನ ಪಟ, ಬೆಳ್ಳಿಯ ಕೃಷ್ಣ, ಕುಂಕುಮ, ಅರಿಶಿನ, ಮೈಸೂರಿನ ಊದುಬತ್ತಿ, ಲಕ್ಷ್ಮೀಪಟ. ದೇವರ ಮುಖ ಚೆಂದಾಗಿರಬೇಕೆಂದಿಲ್ಲ, ಆಶ್ಚರ್ಯವೆಂದರೆ ಅಮೇರಿಕಾದ ಕೃಷ್ಣಪಂಥದವರು ಪ್ರಕಟಿಸುವ ಪುಸ್ತಕಗಳಲ್ಲಿರುವ ನಮ್ಮ ದೇವರುಗಳ ವರ್ಣರಂಜಿತ ಚಿತ್ರಗಳೂ ಹೀಗೇ ಇರುತ್ತವೆ. +ನಾನು ಚಿಕಾಗೋದಲ್ಲಿ ಒಂದು ವಿಷಯ ಅರಿತೆ. ನಮ್ಮ ಹೆಂಗಸರಿಗೆ ಸ್ವಲ್ಪವಾದರು ನಮ್ಮ ಸಂಸ್ಕೃತಿಯ ಪರಿಚಯವಿರುತ್ತದೆ. ಕೊನೆಗೆ ಒಂದು ಹಾಡಾದರೂ. ಒಬ್ಬಾಕೆ ಅದ್ಭುತವಾಗಿ ಪುರಂದರದಾಸರ ಹಾಡುಗಳನ್ನು ಹೇಳಿದರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು – ಈ ಹಾಡನ್ನು ಚಿಕಾಗೋದಲ್ಲಿ ಕೇಳುವುದು ಒಂದು ಅಸಂಗತ ಅನುಭವ. +ಡಾಕ್ಟರರ ಹೆಂಡರು ಸಹ ಡಾಕ್ಟರರು. ಇಲ್ಲಿಂದ ಕರ್ನಾಟಕಕ್ಕೆ ಹೋಗಿ ವಿಧಿಪೂರ್ವಕ ಮದುವೆಯಾಗಿ ಗ್ಯಾಡ್ಜೆಟ್‌ಗಳ ಸ್ವರ್ಗದಲ್ಲಿ ಸಂಸಾರ ಹೂಡಿದ ದಂಪತಿಗಳು; ಜಾತಕ, ಜಾತಿ, ಕಸುಬು ಎಲ್ಲ ಕೂಡಿ ಬಂದಿರುವ ಅದೃಷ್ಟಶಾಲಿಗಳು. ಅವರ ಪ್ರಕಾರ: ಭಾರತವನ್ನು ಅವರು ಪ್ರೀತಿಸುತ್ತಾರೆ, ಪಾಶ್ಚಿಮಾತ್ಯರ ಸಂಸ್ಕೃತಿಹೀನತೆಯನ್ನು ದ್ವೇಷಿಸುತ್ತಾರೆ, ಆದರೆ ಅವರ ಯೋಗ್ಯತೆಗೆ ಸರಿಯಾದ ಕೆಲಸ ಭಾರತದಲ್ಲಿ ಅವರಿಗೆ ಸಿಗದಿದ್ದರಿಂದ…… ಇತ್ಯಾದಿ. ಈ ವಾದದ ವಿರುದ್ಧ ಎಲ್ಲ ವಾದವೂ ವ್ಯರ್ಥವೆಂದು ನನಗೆ ಗೊತ್ತು. ಒಂದು ಡಾಲರಿಗೆ ಎಂಟುರೂಪಾಯಿ – ಅದು ನಿಜ. ಒಬ್ಬ ಹುಡುಗಿ ಮಾತ್ರ ನಿಜವಾದ ಮಾತು ಹೇಳಿದಳು. ಸುಧಾಳ ಪ್ರಕಾರ ಒಂದು ಡಾಲರು ಒಂದು ರೂಪಾಯಿಗೆ ಸಮವಾಗಿದ್ದರೆ ಈ ಚಳಿದೇಶಕ್ಕೆ ನಾವೆಲ್ಲ ಯಾಕೆ ಬರಬೇಕಿತ್ತು? ಸುಂದರವಾದ ಥಿಯೇಟರ್, ಮಕ್ಕಳು, ದೊಡ್ಡ ಕುಂಕುಮದ ಮುದುಕಿಯರು, ಈಚೆಗೆ ಭಾರತದಿಂದ ಬಂದಿರುವರೆಂಬುದಕ್ಕೆ ದ್ಯೋತಕವಾಗಿ ಟೈಟ್ ಪ್ಯಾಂಟ್‌ಗಳನ್ನು ಧರಿಸಿದ ಯುವಕ ಡಾಕ್ಟರರು, ಎಂಜಿನಿಯರು, ಕರ್ನಾಟಕದ ನಾಡಹಬ್ಬದಂತೆಯೇ ಈ ನಾಡಹಬ್ಬವೂ ನಡೆಯಿತು. ರತ್ನನ ಪದಗಳು; ಕನ್ನಡ ಮತ್ತು ಹಿಂದಿ ಸಿನಿಮಾ ಹಾಡುಗಳು; ರಂಗದಿಂದ ಪಿಸುಮಾತೂ ಕೇಳಿಸಬಲ್ಲಂಥ ಥಿಯೇಟರಿನಲ್ಲಿ ಮೈಕು; ಅದು ಅನಾಮತ್ತಾಗಿ ಹಾಡಿನ ಮಧ್ಯೆ ಕಿರುಚುವುದು; ಮೈಕಿನ ವೈರನ್ನು ರಂಗನಿರ್ಗಮನದ ಅವಸರದಲ್ಲಿ ಎಡವೋದು; ತಾಯಿ ಹಾಡುತ್ತಿರುವಾಗ ಮಗು ಮೆಲ್ಲಮೆಲ್ಲನೆ ರಂಗ ಪ್ರವೇಶ ಮಾಡಿ ಎಲೆಕ್ಟ್ರಿಕ್ ವೈರಿನ ಮೂಲವನ್ನು ಎಳೆಯುವುದು; ಅದರಿಂದ ನಾವು ಗಾಬರಿಯಾಗುವುದು – ಅಮೇರಿಕನ್ನರ ಇಜಿಜಿiಛಿieಟಿಛಿಥಿ ಮಾನವೀಯವಲ್ಲವೆಂದು ವಾದಿಸುತ್ತ ಪರಕೀಯರ ನಡುವಿನ ನನ್ನ ದಿಗ್ಭ್ರಮೆ ಮುಚ್ಚಿಕೊಳ್ಳುವ ನನಗೆ, ಈ ವಾತಾವರಣ ನಿಜವಾಗಿಯೂ ಹಿತವೆನ್ನಿಸಿತು. +ನಾವು ತಿಂದ ಬಿಸಿ ಬೇಳೆ ಅನ್ನ ಕರಗುವಷ್ಟು ಕಾಲ ಶಾಸ್ತೀಯ ಸಂಗೀತ, ಭರತನಾಟ್ಯ, ಹಳ್ಳಿಮಾತಿನ ಅಣಕ, ಸಿನಿಮಾ ಹಾಡಿಗಳ ಕನ್ನಡ ಸಂಸ್ಕೃತಿಯ ಚೌಚೌ ನಡೆಯಿತು. +ಮುಖ್ಯ ಅತಿಥಿಯ ಭಾಷಣದಲ್ಲಿ ನಾನು ಹೇಳಿದೆ: ನಮ್ಮ ದೇಶ ಇನ್ನೂ ಎರಡು ಮೂರು ಶತಮಾನ ಪ್ರಯತ್ನಿಸಿದರೂ ಮುಟ್ಟಲಾರದ ಸಮೃದ್ಧಿಯನ್ನು ಒಂದು ದಿನದ ಪ್ರಯಾಣದಲ್ಲಿ ಪಡೆದವರು ನೀವು. ಭಾರತದ ಅಸಂಖ್ಯಾತ ಬಡವರು ಈ ಕನಸನ್ನು ಸಹ ಕಾಣಲಾರರು. ಆದರೆ ಇಂಡಿಯಾದ ಭವಿಷ್ಯವನ್ನು ರೂಪಿಸುವವರು ನೀವಲ್ಲ – ಅವರು. ಯಾಕೆಂದರೆ ನಿಮ್ಮ ಹಾಗೆ ಅವರು ಶತಮಾನಗಳನ್ನು ಜಿಗಿಯಲಾರರು; ಆದ್ದರಿಂದ ಅವರು ಭಾರತಕ್ಕೆ ಬದ್ಧರು. ಅವರು ತುಳಿಯುವ ಹಾದಿ ಕ್ರಾಂತಿಯಾದರೆ, ಹಿಂಸೆಯಾದರೆ ಅದನ್ನು ಟೀಕಿಸುವ ಹಕ್ಕು ನಿಮಗಿಲ್ಲ. ನೀವು ಚಕ್ರಕ್ಕೆ ಕೈ ಹಚ್ಚಿದವರಲ್ಲ. +ಮೇಲಿನ ಮಾತುಗಳನ್ನು ಬರೆಯುತ್ತಿದ್ದಂತೆ ನನಗೆ ಮುಜುಗರವಾಗುತ್ತಿದೆ. ಅಮೆರಿಕಾದಲ್ಲಿರುವ ಈ ಕನ್ನಡಿಗರಲ್ಲಿ ಹಲವರು ಹಲವರು ವಾರಾನ್ನದಿಂದ ಓದಿದವರು. ತಮ್ಮಂದಿರ ವಿದ್ಯಾಭ್ಯಾಸ, ತಂಗಿಯರ ಮದುವೆ – ಇತ್ಯಾದಿ ಜವಾಬ್ದಾರಿಗಳ ನಿರ್ವಹಣೆಗಾಗಿ ವಲಸೆ ಬಂದವರು. ಇಲ್ಲ ನನಗೆ ಯಾರನ್ನೂ ಟೀಕಿಸುವ ಅಧಿಕಾರವಿಲ್ಲ. ಭಾರತದಲ್ಲಿದ್ದೂ ಜನಸಮುದಾಯದ ಸುಖದುಃಖಗಳಲ್ಲಿ ಭಾಗಿಯಾಗುವವರು ಎಷ್ಟು ಜನ? ಇವರು ನನ್ನವರು, ನನ್ನಂಥವರು. ನಾವು ಅರಿಯಬೇಕಾದ್ದು; ಚರಿತ್ರೆ ಚಕ್ರ ಇಂಡಿಯಾದಲ್ಲಿ ತಿರುಗಲು ಶುರುವಾದಾಗ ನಮ್ಮ ಅಭಿಪ್ರಾಯಗಳು, ನಮ್ಮ ಸಣ್ಣ ಸಂಕಟಗಳು, ಕಷ್ಟಗಳು, ಒಳ ಜಗಳಗಳು – ಎಲ್ಲ ಎಷ್ಟು ಅಸಂಬದ್ಧ ಎಂಬುದನ್ನು. ಆದರೆ ಇವರು ಕೂಡ ನಿಜವಾಗಿ ಗುಂಪನ್ನು ಪ್ರೀತಿಸುವ ಜನ. ದೋಸೆ, ಇಡ್ಲಿ, ನಮ್ಮ ಮಂತ್ರಿಗಳ ಲಂಚಕೋರತನ, ಯಾರು ಈಗ ಯಾವ ಹುದ್ದೆಯಲ್ಲಿ – ಇತ್ಯಾದಿಗಳಲ್ಲಿದ್ದೇ ನಾನು ಕ್ಷಣ ಮೈಮರೆತು ನನ್ನ ಭಾಷೆಯನ್ನು ಮಾತಾಡುವ ಜನರ ಜೊತೆ ಒಂದಾಗಿ ಹೋದೆ. +ಈಚೆಗೆ ನಾನು ಗಾಢವಾಗಿ ಅನುಭವಿಸಬಲ್ಲ ಭಾವನೆಯೆಂದರೆ ಸಿಟ್ಟಲ್ಲ – ವಿಷಾದ. +ನರ್ಮದಾ ಬಚಾವ್ ಆಂದೋಳನದ ಮೇಧಾ ಪಾಟ್ಕರ್ ಈಗೇನು ಮಾಡುತ್ತಾರೆ? ತಮ್ಮ ಹೋರಾಟವನ್ನ ಯಾವ ದಿಕ್ಕಿನಲ್ಲಿ ತಿರುಗಿಸುತ್ತಾರೆ? ಅಣೆಕಟ್ಟಿನ ಕಲಸ ಮುಂದುವರಸಬಹುದೆಂಬ ಸುಪ್ರೀಂ ಕೋರ್ಟಿನ ತೀರ್ಪು ಬಂದಕೂಡಲೇ ಗುಜರಾತ್ ರಾಜ್ಯದಲ್ಲಿ ಅನೇಕ ಕಡೆ ಪಟಾಕಿ ಹಚ್ಚಿ […] +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ಕೆನರಾಬ್ಯಾಂಕ್‌ನಲ್ಲಿ ನನ್ನ ವೃತ್ತಿಜೀವನದ ಪ್ರಾರಂಭದಿಂದಲೂ ನನಗೆ ದಿ.ಅ.ನ ಸುಬ್ಬರಾಯರ ಕಲಾಮಂದಿರ ಒಂದಿಲ್ಲೊಂದು ರೀತಿಯ ನಂಟು. ಹಾಗೆಯೇ ‘ಅಭಿನಯತರಂಗ’ ಒಂದು ಸಂಜೆಯ ಕಾರ್ಯಕ್ರಮದಲ್ಲಿ ಊಟೋಪಚಾರದ ಗಮ್ಮತ್ತಿನಮಧ್ಯೆ ಕಲಾವಿದರ,ಪತ್ರಕರ್ತರ ಹಾಗೂ ಖಾಸಾ ಸ್ನೇಹಿತರ ಜೊತೆಗೆ ಸಂವಾದ ನಡೆದಿತ್ತು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_160.txt b/Kannada Sahitya/article_160.txt new file mode 100644 index 0000000000000000000000000000000000000000..c7b8f18404b6b44b84dd7193ab244f37c08ca3d6 --- /dev/null +++ b/Kannada Sahitya/article_160.txt @@ -0,0 +1,98 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ತುಂಬಾ ದೊಡ್ಡ ಪ್ರಮಾದವಾಗಿಬಿಟ್ಟಿದೆ…! “ತಮ್ಮಲ್ಲೇ ಹಳಿದುಕೊಂಡರು ಪ್ರೊ.ಸ್ಟ್ಯಾನ್ಲಿ. ಆಗಿನಿಂದ ಅವರು ಅದನ್ನೇ ಮೂರು ಬಾರಿ ನುಡಿದಿದ್ದರು. ಎದುರಿಗೆ ಕುಳಿತಿದ್ದ ಅವರ ಸಹಾಯಕರಾದ ಡಾ. ನೇಹಾ ಮತ್ತು ಸೈಂಟಿಸ್ಟ್ ದೇವ್ ಇಬ್ಬರಿಗೂ ಈ ವಿಜ್ಞಾನಿ ಏನೋ ಎಡವಟ್ಟು ಮಾಡಿಕೊಂಡಿರುವುದು ಗೊತ್ತಾಗಿತ್ತು. ಅದರೆ ಚಿತ್ರ ಸಂಪೂರ್ಣವಾಗಿ ಎದುರಿಗೆ ಬಾರದೆ ಪರಿಸ್ಥಿತಿ ಎನೆಂದು ಅರಿವಾಗುತ್ತಿಲ್ಲ. +“ಪ್ರೊಫೆಸರ್. ನೀವು ಪೂರ್ತಿ ವಿಷಯ ಹೇಳಿದರೆ ನಾವು ಏನಾದರೂ ಮಾಡಲು ಸಾಧ್ಯವಾಗುತ್ತದೆ. ಇಲ್ಲವಾದರೆ ಸಮಯ ಸರಿದು ಹೋದಷ್ಟು ಕೇಸು ಜಟಿಲಗೊಳ್ಳಬಹುದು…! “ದೇವ್ ನುಡಿಯುತ್ತಿದ್ದರೆ, +“ಐ ನೊ ದ್ಯಾಟ್ ಯು ಕ್ಯಾನ್ ಹೆಲ್ಪ್ ಬಟ್… ಅದು ಅಷ್ಟು ಸುಲಭದಲ್ಲಿ ಸಾಧ್ಯ ಇಲ್ಲ. ಮಿ.ದೇವ್. ಯಾಕೆಂದರೆ ಅವನು ತಪ್ಪಿಸಿಕೊಂಡು ಬಿಟ್ಟಿದಾನೆ. ಯಾವಾಗ ಏನು ಅನಾಹುತ ಮಾಡುತ್ತಾನೋ ಗೊತ್ತಾಗ್ತಾ ಇಲ್ಲ….” +“ಮೈ ಗಾಡ್… ಯಾರು… ಮಿಲ್ಟನ್ ಕಾಣೆಯಾಗಿದ್ದಾನಾ..? “ಅಂದಾಜಿಸುತ್ತಾ ಬಗ್ಗಿದ ದೇವ್. +“ಹೌದು ದೇವ್. ಅವನು ತಪ್ಪಿಸಿಕೊಂಡಿದ್ದಾನೆ. ಜೊತೆಗೆ ನನ್ನ ಫಾರ್ಮುಲಾ ಕೂಡಾ ಯಶಸ್ವಿಯಾಗಿ ಕೊಂಡೊಯ್ದುಬಿಟ್ಟಿದಾನೆ…” +“ಯಾವುದು…?” +“ಆಪರೇಶನ್ ಥರ್ಡ್ ಐ…” +“ರಿಯಲ್ಲಿ…? ಸರ್ ಇಸ್ ಇಟ್ ಪಾಸಿಬಲ್..? “ನಂಬಿಕೆಯಾಗದೆ ಪ್ರಶ್ನಿಸಿದಳು ನೇಹಾ. +“ಹೌದು. ನೇಹಾ. ಮಿಲ್ಟನ್ ಯಾವತ್ತೋ ಒಂದಿನ ಕೈ ಕೊಡ್ತಾನೆ ಅಂತಾ ದೇವ್ ಹೇಳಿದಾಗ ನಾನು ನಂಬಿರಲಿಲ್ಲ. ಅಷ್ಟು ಮಾತ್ರ ಮೊದ್ದನ೦ತಿರುವವ ಅದ್ಹೇಗೆ ತಾನೆ ನಮ್ಮ ಪ್ರಯೋಗವನ್ನ ಕದಿಯುತ್ತಾನೆ ಎಂದುಕೊ೦ಡಿದ್ದೆ. ಆದರೆ ದೇವ್ ಹೇಳಿದ ಹಾಗೆ ಆಗಿದೆ. ಅವನು ಕೇವಲ ನನ್ನ ಫಾರ್ಮುಲಾ ಮಾತ್ರ ಕದ್ದಿಲ್ಲ. ಅದರ ವ್ಯವಸ್ಥಿತವಾಗಿ ಇಂಪ್ಲಾಂಟ್ ಕೂಡಾ ಮಾಡಿಸಿಕೊಂಡಿದ್ದಾನೆ … ನೋಡಿ…”ಎನ್ನುತ್ತಾ ಏಳೆಂಟು ದಿನಪತ್ರಿಕೆಗಳನ್ನು ಎದುರಿಗೆ ಹರಡಿದರು. +ಅವೆಲ್ಲವನ್ನು ಅವರು ನೋಡಿಲ್ಲವೆಂದಲ್ಲ. ಆದರೆ ಅದಕ್ಕೆಲ್ಲಾ ಕಾರಣ ಮಿಲ್ಟನ್ ಎಂದು ಮಾತ್ರ ಅಂದಾಜಿರಲಿಲ್ಲ. ಯಾರು ಯಾರನ್ನೋ ಲೇಸರ್ ಗನ್ನಿನಿಂದ ಶೂಟ್ ಮಾಡಿದ ಸುದ್ಡಿಗಳು… ಕರೆಂಟ್ ಶಾಕ್‌ನಿಂದ ಆದ ಸಾವೇ ಎಂದು ಇನ್ವೆಸ್ಟಿಗೇಶನ್ ನಡೆಯುತ್ತಿರುವ ನ್ಯೂಸ್‌ಗಳು ಅಲ್ಲಿದ್ದವು. ಅದಕ್ಕಿಂತಲೂ ದಾರುಣವಾದುದೆಂದರೆ ಮೊನ್ನೆಯಷ್ಟೆ ನಡೆದ ಹನ್ನೆರಡು ವರ್ಷದ ಬಾಲಕಿಯೊಬ್ಬಳನ್ನು ಇದೇ ತಂತ್ರಜ್ಞಾನ ಉಪಯೋಗಿಸಿ ಮಿಲ್ಟನ್ ಕಣ್ಣು ಕಾಣದಂತೆ ಮಾಡಿಬಿಟ್ಟಿದ್ದಾನೆ. ಸಾಯಿಸುವುದು ಬೇರೆ. ಆದರೆ ಈ ರೀತಿ ಪ್ರಮುಖ ಅಂಗಗಳನ್ನು ದೇಹದಿಂದಲೇ ಒರೆಸಿ ಹಾಕಿಬಿಡುವುದು ಬೇರೆ. ಅದಕ್ಕಾಗೇ ಪ್ರೊ.ಸ್ಟ್ಯಾನ್ಲಿ ಅಷ್ಟೊಂದು ತಳಮಳಿಸುತ್ತಿದ್ದರು. +“ಹೀಗೆ ನಿಮ್ಮ ಫಾರ್ಮುಲಾವನ್ನು ಉಪಯೋಗಿಸುದರ ಜೊತೆಗೆ, ಬೇಕಿದ್ದಾಗ ಅದನ್ನು ನಿಲ್ಲಿಸಿಬಿಡುವಂತೆ ಮಾಡಲು ಯಾವುದಾದರೊ ಕೌಂಟರ್ ರೂಲ್ ಅದಕ್ಕಿರಬೇಕಲ್ಲವಾ…? ” +“ಎಲ್ಲದಕ್ಕೂ ಒಂದು ಕೌಂಟರ್ ರೂಲ್ ಇದ್ದೇ ಇರುತ್ತದೆ ದೇವ್. ಆದರೆ ಯಾವುದೊಂದು ಪ್ರಯೋಗ ಪೂರ್ತಿಯಾಗೋ ಮುಂಚೆನೆ ಅದರ ಉಪಯೋಗಕ್ಕಿಳಿದರೆ ಕೌಂಟರ್‌ರೂಲಿನ ಮನೆ ಹಾಳಾಗಲಿ ಅಟ್ಲೀಸ್ಟ್ ಅದನ್ನು ತಡೆಯೋದಾದರೂ ಹೇಗೆ ಸಾಧ್ಯ…? ” +“ಶಿಟ್… ಅಷ್ಟಕ್ಕೂ ಮಿಲ್ಟನ್ ಅದನ್ನು ನಿರಂತರವಾಗಿ ಉಪಯೋಗಿಸಕ್ಕೆ ಆಗುತ್ತೆ ಅಂತೀರಾ…? ” +“ಎಸ್. ಅದನ್ನು ನಿರಂತರವಾಗಿ ಉಪಯೋಗಿಸಲು ಮಿಲ್ಟನ್‌ನಿಂದ ಸಾಧ್ಯವಿದೆ. ಬೇರಾರೋ ಆಗಿದ್ದರೆ ಸಾಧ್ಯವಿರಲಿಲ್ಲವೇನೋ. ಆದರೆ ಅವನು ನನ್ನೊಂದಿಗೆ ಈ ಪ್ರಯೋಗಾಲಯದಲ್ಲಿ ಪಳಗಿದೋನು. ಹೋಗುವಾಗ ಸಾಕಷ್ಟು ಪರಿಕರಗಳನ್ನು ಇಲ್ಲಿಂದ ಎತ್ತಿಕೊಂಡೇ ಹೋಗಿದಾನೆ. ಪ್ರಮುಖವಾಗಿ ನಾನು ತುಂಬಾ ಜತನದಿಂದ ಕಾಯ್ದಿರಿಸಿದ್ದ ಆ ಮಣಿಗಳನ್ನು ಕೂಡಾ ಒಂದಷ್ಟು ತೆಗೆದುಕೊಂಡು ಹೋಗಿದ್ದಾನೆ. ಮುಖ್ಯವಾಗಿ ಅದಕ್ಕೆ ಸಂಬಂಧಿಸಿದ ಎಲ್ಲಾ ವಿವರಗಳಿರುವ ಫೈಲ್‌ನ್ನು ರೆಕಾರ್ಡ್ ಮಾಡಿಕೊಂಡು ಹೋಗಿದ್ದಾನೆ. ಅಲ್ಲದೇ ಈಗಾಗಲೇ ನಡೆಯುತ್ತಿರುವ ಅನಾಹುತವನ್ನು ನೋಡಿದರೆ ಖಂಡಿತವಾಗಲೂ ಆತ ಅದನ್ನು ವ್ಯವಸ್ಥಿತವಾಗಿ ಪ್ರಯೋಗಿಸಿದ್ದಾನಲ್ಲದೇ ಇನ್ನು ಮೇಲೆ ಕೂಡಾ ಅದನ್ನು ಉಪಯೋಗಿಸಬಲ್ಲ ಎಂದೆನ್ನಿಸುತ್ತಿದೆ.” +“ಪ್ರೊಫೆಸರ್ ಖಂಡಿತವಾಗಿಯೂ ಮಿಲ್ಟನ್ ಅಂತಹದ್ಡೊಂದು ದೊಡ್ಡ ದುರಾಕ್ರಮಣವನ್ನು ಎಸಗುವ ಮುಂಚೆ ಅವನನ್ನು ಹಿಡಿಯಬೇಕು. ಬೈ ದಿ ಬೈ… ಅವನನ್ನು ಹಿಡಿದರೆ ವಾಪಸ್ಸು ಅವನಿಂದ ಆ ಶಕ್ತಿಯನ್ನು ಕಿತ್ತುಕೊಳ್ಳಲು ಸಾಧ್ಯವಾ…? ” +“ಅದನ್ನ ಹೇಗೋ ಮಾಡಬಹುದು. ಒತ್ತಾಯದಿಂದ ಇಲ್ಲ ಬಲಾತ್ಕಾರದಿಂದಲಾರೂ ಮಾಡಬಹುದು… ಒಮ್ಮೆ ಮಣಿಯನ್ನು ಕಿತ್ತರೇ ಮುಗಿಯಿತಲ್ಲ. ನಂತರ ಎಲ್ಲಾ ಸರಿಯಾಗೇ ನಡೆಯುತ್ತೇ…” +“ದೆನ್ ಡೋಂಟ್ ವರಿ ಪ್ರೊಫೆಸರ್. ಆದರೆ ಅವನ ಕೈಗೆ ನೀವು ಮಾತ್ರ ಕನಿಷ್ಠ ಹದಿನೈದು ದಿನವಾದರೂ ಸಿಗದಂತಿದ್ದರೆ ಅವನನ್ನು ಯಶಸ್ವಿಯಾಗಿ ಹಿಡಿಯಬಹುದೆಂದುಕೊಳ್ಳುತ್ತೇನೆ…” +“ಓಕೆ… ನಾನು ಲ್ಯಾಬ್ ಬಿಟ್ಟು ಎಲ್ಲೂ ಹೋಗುವುದೇ ಇಲ್ಲ ” +“ನೋ.. ನೀವು ಲ್ಯಾಬ್ ಬಿಟ್ಟು ಬೇರೆಲ್ಲೂ ಇರಲಾರಿರಿ ಎಂದು ಮಿಲ್ಟನ್‌ಗೆ ಕೂಡಾ ಚೆನ್ನಾಗೇ ಗೊತ್ತಿದೆ. ಸೋ. ಆದಷ್ಟು ನಿಮ್ಮನ್ನು ಇಲ್ಲಿಯೇ ಹಿಡಿಯಲು ಅವನು ಯತ್ನಿಸುತ್ತಾನೆ. ಅದಕ್ಕಾಗಿ ಸಧ್ಯ ನಿಮ್ಮ ಸ್ಥಾವರವನ್ನು ಇಲ್ಲಿಂದ ಬದಲಾಯಿಸೋಣ. ಅದಕ್ಕೂ ಮೊದಲು ಮಾಡಬೇಕಾದ ಕೆಲಸಗಳಿವೆ. ನಾನು ಮತ್ತೇ ನಿಮ್ಮನ್ನು ನೋಡುತ್ತೇನೆ…”ಎದ್ದು ನಿಂತ ದೇವ್. ಅವನನ್ನೇ ಹಿಂಬಾಲಿಸಿದಳು ನೇಹಾ. ತಲೆಗೆ ಕೈ ಹೂಡಿ ಕುಳಿತುಕೊಂಡರು ಪ್ರೊಫೆಸರ್. +* +* +* +ಸೌರ ಶಕ್ತಿಯನ್ನು ವಿಶೇಷವಾಗಿ ಅಭ್ಯಸಿಸುತ್ತಿದ್ದ ವಿಜ್ಞಾನಿ ಪ್ರೊ.ಸ್ಟ್ಯಾನ್ಲಿಗೆ ಇದ್ದಕ್ಕಿದ್ದಂತೆ ಒಮ್ಮೆ ಈ ಶಕ್ತಿಯನ್ನು ಜೈವಿಕವಾಗಿ ನಮಗೆ ಬೇಕೆಂದಾಗ ಬೇಕಾದಂತೆ ಬಳಸಿಕೊಳ್ಳಬಾರದೇಕೆ ಎಂಬ ಯೋಚನೆ ಮೂಡಿಬಂತು. ಸೋ. ಕೂಡಲೇ ಆ ದಿಕ್ಕಿನಲ್ಲಿ ಯೋಚನೆಗಳನ್ನು ಹರಿಬಿಟ್ಟಾಗ ತಲುಪಿದ ಹಂತವೇ… ಸೂರ್ಯನ ಶಕ್ತಿಯನ್ನು ಬಳಸಿಕೊಂಡು ಅದನ್ನು ಬೇಕೆಂದಾಗ ಸುಡುವ ಕಿರಣವಾಗಿ ಬದಲಾಯಿಸುವ ಯೋಜನೆ. ಅಸಲಿಗೆ ಅದು ಅವರ ಕನಸಿನ ಯೋಜನೆ. ಅದಕ್ಕೆ ಪೂರಕವಾಗಿ ದಕ್ಷಿಣ ಅಫ್ರಿಕಾದ “ಕೌಮಾರೋ “ಪ್ರಾಂತ್ಯದಲ್ಲಿ ಸಿಗುವ ಮಣಿಗಳು (ಕ್ವಾರ್ಟ್ಸ್ ) ಒಂದು ವಿಷೇಶ ಶಕ್ತಿಯನ್ನು ಹೊಂದಿದ್ದು ಹಗಲಿನಲ್ಲಿ ಸೂರ್ಯನ ಶಕ್ತಿಯನ್ನು ಹೀರಿಕೊಂಡು ರಾತ್ರಿಯಲ್ಲಿ ಮರುತ್ಪತ್ತಿಗೊಳಿಸುತ್ತವೆ ಎಂಬುದು. +ಈ ಸುದ್ಡಿಯ ಹಿನ್ನೆಲೆಯಲ್ಲಿ ಅದರ ಬೆನ್ನು ಬಿದ್ದ ವಿಜ್ಞಾನಿಯ ತಲೆಯಲ್ಲಿ ಅದ್ಭುತ ಯೋಜನೆಯೊಂದು ರೂಪಗೊಂಡಿತು. ಆ ಅಂಗವಾಗಿ ಅವರು ಮೊದಲು ತಮ್ಮ ಜ್ಯೂನಿಯರ್ ಆಗಿದ್ದ ದೇವ್ ಮತ್ತು ಮಿಲ್ಟನ್‌ರನ್ನು ಸಂಪರ್ಕಿಸಿ ತಮ್ಮ ಯೋಜನೆಯ ಶ್ರೇಯಸ್ಸಿಗೆ ಬೆಂಬಲವನ್ನು ಕೋರಿದರು. ಅದರಂತೆ ಅವರ ಮುಂದೆ ವಾದ ಮ೦ಡಿಸಿದಾಗ ಮೊದಲ ಆಕ್ಷೇಪವನ್ನು ಎತ್ತಿದವನೇ ಸೈಂಟಿಸ್ಟ್ ದೇವ್. +“ಬೇಡ ಪ್ರೋಫೆಸರ್. ಅಕಸ್ಮಾತಾಗಿ ನೀವು ಈ ರೀತಿಯಲ್ಲಿ ಕಥೆ ಹೇಳಿದಂತೆ ಹೇಳುತ್ತಿರುವ ವಿಷಯ ನಿಜವಾಗಿ, ನಿಮ್ಮ ಯೋಜನೆ ಯಶಸ್ವಿಯಾಗಿ ಆ ಶಕ್ತಿ ಕೈಗೂಡಿಬಿಟ್ಟರೆ ಅದರಿಂದ ಇನ್ನಿಲ್ಲದ ಅದ್ಭುತವೇನೋ ಘಟಿಸಬಹುದು ಆದರೆ ಅಕಸ್ಮಾತ ಅದೇನಾದರು ದುರುಳರ ಕೈಗೆ ಸಿಕ್ಕಿದರೆ ಇನ್ನಿಲ್ಲದ ಅಪಾಯವಾಗುತ್ತದೆ…” +“ಛೇ… ಹಾಗೆಲ್ಲ ಇಲ್ಲ ದೇವ್. ಇಲ್ಲಿ ನೋಡು. ಅಕಸ್ಮಾತ ನಾವು ಹಾಗೆ ಶಕ್ತಿಯನ್ನು ಹಿಡಿದುಕೊಳ್ಳಲು ಸಾಧ್ಯವಾಗೋದೇ ಆದರೆ ಅದಕ್ಕಿಂತ ಹೆಮ್ಮೆ ಇನ್ನೇನಿದೆ. ಏನು ಬೇಕಾದರೂ ಮಾಡಬಹುದು..” +“ಅಸಲಿಗೆ ಇದು ಸಾಧ್ಯ ಅಂತೀರಾ…ಪ್ರೊಫೆಸರ್…? “ಅಲ್ಲಿಯವರೆಗೂ ಸುಮ್ಮನಿದ್ದ ಮಿಲ್ಟನ್ ಹುಬ್ಬೇರಿಸಿದ. +’ ಖಂಡಿತಕ್ಕೂ ಸಾಧ್ಯವಿದೆ ಮಿಲ್ಟನ್…” +“ಆದರೆ ಒಂದು ವೇಳೆ ಹಾಗೆ ಹಿಡಿದಿಡುವ ಶಕ್ತಿ ಕರೆಕ್ಟಾಗಿ ಬಿಡುಗಡೆಯಾಗದಿದ್ದರೆ…? ” +“ಎಸ್… ನನಗೂ ಅಂಥಹದ್ದೊಂದು ಸಂಶಯ ಇದ್ದೇ ಇತ್ತು. ಅಸಲಿಗೆ ಅದನ್ನು ಈ ರೀತಿಯಲ್ಲಿ ಹೇಳಬಹುದು. ನೋಡು ಸೂರ್ಯನಿಂದ ಬೀರಲ್ಪಡುವ ಬೆಳಕು ಎಲ್ಲೆಂದರಲ್ಲಿ ಚದುರುವಾಗ ಬೀರುವ ಕಿರಣಗಳನ್ನು ಗ್ರಹಿಸುವ ಕ್ರಿಯೆ ಮೂಲಕ ಈ ಮಣಿಗಳು ತಮ್ಮ ಬೆಳಕಿನ ಅರ್ಥಾತ್ ಶಕ್ತಿಯ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುತ್ತವೆ… ಹೌದೇ…? ” +“ಹೌದು. ಇದರಲ್ಲೇನು ವಿಶೇಷ ಪೊಫೆಸರ್. ಯಾಕೆಂದರೆ ಈಗಾಗಲೇ ಈ ಕ್ವಾರ್ಟ್ಸ್‌ಗಳನ್ನು ಕೆಲವು ವಿದುನ್ಮಾನ ಯಂತ್ರಗಳಲ್ಲಿ, ಟೈಮರ್ ಸೆಟ್ಟಿಂಗ್ ಇತ್ಯಾದಿ ಕೆಲಸದಲ್ಲಿ ಉಪಯೋಗಿಸುತ್ತಲೇ ಇದ್ದಾರಲ್ಲ. …” +“ಎಸ್. ನನಗೂ ಅದೇ ಬೇಕಾಗಿರುವುದು. ಅಂದರೆ ಅವರೆಲ್ಲಾ ಈ ಮಣಿಯಿಂದ ಶಕ್ತಿಯನ್ನು ಹೀರಿಸಿ ನಂತರ ತಮಗೆ ಬೇಕಾದ ಹೊತ್ತಿನಲ್ಲಿ ಬೇಕಾದ ಹಾಗೆ ಅದರಿಂದ ರಿಲೀಸ್ ಮಾಡುತ್ತಿದ್ದಾರೆ…. ಹೌದೇ …? ” +“ಹೌದು …” +“ಅದೇ ರೀತಿಯಲ್ಲಿ ನಾನು ಕೂಡಾ ಈ ಮಣಿಯನ್ನು ಮಾನವ ಸಂಪರ್ಕಕ್ಕೇ ತರುವುದರ ಮೂಲಕ ಅವರುಗಳೆಲ್ಲಾ ಅದನ್ನು ನಿಯಂತ್ರಣಕ್ಕೆಂದು ಹೇಗೆ ಮೆಶಿನ್‌ಗಳನ್ನು ಅವಲಂಬಿಸಿದ್ದಾರೋ ಹಾಗೆ ನಾನು ಮಾನವನನ್ನೇ ಈ ಕ್ವಾರ್ಟ್ಸ್‌ಗೆ ಅಳವಡಿಸುತ್ತೇನೆ. ಸೂರ್ಯನ ಬೆಳಕನ್ನು ಸಂಸ್ಕರಿಸಿ ಬಿಡುವ ಮೂಲಕ ಭೂತಗನ್ನಡಿಯ ರೇಸು ಕಾಗದವನ್ನು ಕ್ಷಣಾರ್ಧದದಲ್ಲಿ ಸುಟ್ಟು ಹಾಕುತ್ತದೆ ಹೌದೇ…? ” +“ಹೌದು. ಅದರಲ್ಲಿ ಸಾಂದ್ರೀಕೃತಗೊಳ್ಳುವ ಆ ಬೆಳಕಿನ ಕಿರಣಗಳು ವಕ್ರೀಭವನದ ಪರಿಣಾಮಕ್ಕೊಳಪಡುತ್ತಲೇ ಕನ್ನಡಿಯ ಪ್ಯಾರಾಬೋಲಿಕ್ ಇಫ್ಹೇಕ್ಟಿಗೆ ಒಳಪಡುವುದರಿಂದಾಗಿ ಸಂಪೂಣ೯ ಬೆಳಕಿನ ಶಕ್ತಿ ಒಂದು ಕಿರಣವಾಗಿ ಹೊರಬರುತ್ತದೆ. ಅದಕ್ಕೆ ಕಾರಣ ಮನುಶ್ಯ ನಿರ್ಮಿತ ಪುಟ್ಟ ಕನ್ನಡಿ. ನಾನು ಅದಕ್ಕಿಂತಲೂ ಪವರ್‌ಫುಲ್ ಆದ ಕನ್ನಡಿ ಮತ್ತು ಅದಕ್ಕೂ ಹೆಚ್ಚಿನ ರೇಡಿಯಸ್ ಇಫೇಕ್ಟ್ ಇರುವ ಮಸೂರ ಬಳಸುತ್ತೇನೆ…” +“ಅದಾವುದು ಅಂತಹ ಮಸೂರ …? ” +“ಯೋಚಿಸು… ಅದಕ್ಕೂ ಮೊದಲು ನನ್ನ ಸೂತ್ರ ಹೇಗೆ ಕೆಲಸ ಮಾಡುತ್ತದೆ ಗೊತ್ತೆ..? ಭೂತ ಕನ್ನಡಿಯನ್ನು ನೇರವಾಗಿ ಬಿಸಿಲಿಗೆ ಹಿಡಿಯುವುದರ ಮೂಲಕ ಕೆಲವು ಕ್ಷಣಗಳಲ್ಲಿ ಕಾಗದದ ಚೂರು ಬೆಂಕಿಗಾಹುತಿಯಾಗುವುದನ್ನು ಗಮನಿಸಿರಬಹುದು. ಅಲ್ಲಿ ನಡೆಯುತ್ತಿದ್ದ ತಂತ್ರಜ್ಞಾನವೆಂದರೆ ಇಷ್ಟೆನೆ. ಸೂರ್ಯನ ಕಿರಣವನ್ನು ಲೆನ್ಸ್ ಮುಖಾಂತರ ಕೇಂದ್ರೀಕರಿಸುವುದರಿಂದ ಆ ಲೆನ್ಸ್‌ನ ವ್ಯಾಪ್ತಿಯೊಳಗೆ ಬರುವ ಎಲ್ಲ ಶಾಖವೂ ಕೇಂದ್ರೀಕರಣಗೊಂಡು ಕಿರಣದ ರೂಪದಲ್ಲಿ ಹೊರಹೊಮ್ಮುವಾಗ ಪ್ರಖರವಾಗಿ ಬರುತ್ತದೆ ಮತ್ತು ಒ೦ದೆಡೆಗೆ ಕೇಂದ್ರೀಕೃತಗೊಳ್ಳುವುದರಿಂದ ಕೆಲವೇ ಸೆಕೆಂಡುಗಳಲ್ಲಿ ಕಾಗದವನ್ನು ಸುಟ್ಟುಬಿಡುತ್ತದೆ. ಅದನ್ನೇ ಆಧಾರವಾಗಿಸಿಕೊಳ್ಳೋದಾದರೆ ಸೂರ್ಯನ ಕಿರಣಗಳಿಂದಲೇ ಅಂತಹ ಶಕ್ತಿಯುತ ಕಿರಣವನ್ನು ಪಡೆಯಬಾರದೇಕೆ…? ಹಾಗೆ ಪಡೆಯಬಹುದಾದಲ್ಲಿ ಮತ್ತು ಅಂತಹ ಏನನ್ನೂ ಸುಟ್ಟು ಬಿಡುವ ತಾಕತ್ತಿನ ಕಿರಣವನ್ನು ನಾವು ಕೈಗೆಟುಕಿಸಿಕೊಳ್ಳುತ್ತೇವೆ ಎಂದಾದಲ್ಲಿ ಅದರ ಹೆಸರನ್ನು ಹೀಗೆ ಕರೆಯಬಹುದು. ಅದೆಂದರೆ… +… ಇನ್ಫ್ರಾರೆಡ್ ಲೇಸರ್ ಬೀಂ… ! +ಹೀಗೆ ಸೂರ್ಯನಿಂದ ಇನ್ಫ್ರಾರೆಡ್ ಲೇಸರ್ ಬೀಂ ಪಡೆಯಬಹುದೆ…? ಸಾಧ್ಯವಿದೆ ಎನ್ನುತ್ತದೆ ವಿಜ್ಞಾನ. ಕಾರಣ ಈಗಾಗಲೇ ಸಾಬೀತಾಗಿರುವಂತೆ ಯಾವುದೇ ಒಂದು ಬೆಳಕಿನ ಕಿರಣದ ಕೇಂದ್ರದಿಂದ ಬಾಹ್ಯ ಕಿರಣಗಳನ್ನು ವಿಭಜಿಸಿದರೆ ಅದು ಲೇಸರ್ ಕಿರಣವಾಗಿ ಬದಲಾಗುತ್ತದೆ…. ಇದನ್ನೆ ಕೊಂಚ ಬಯಾಲಜಿ ಮತ್ತು ಜಿಯಾಲಜಿಯನ್ನು ಬೆರೆಸಿ ಉಪಯೋಗಿಸುವುದರ ಮುಖಾಂತರ ಕಣ್ಣಿನಿಂದಲೂ ಬೀಂಗಳನ್ನು ಹೊರಡಿಸಬಹುದೆನ್ನುತ್ತೇನೆ ನಾನು. +ಕಾರಣ ಲೇಸರ್ ಬೀ೦ನ್ನು ಉಪಯೋಗಿಸುವುದರ ಮುಖಾಂತರ ಎಷ್ಟೇ ದೂರದ ಗುರಿಯನ್ನು ಹತ್ತಿರವಾಗಿಸಿಕೊಳ್ಳುವುದು ಸಾಧ್ಯವಿದೆ ಎ೦ದಾಗ ಮತ್ತು ಲೇಸರ್ ಬೀಂ ಉಪಯೋಗಿಸಿ ಖಂಡಾಂತರ ಕ್ಷಿಪಣಿಗಳಂತಹ ಯುದ್ಧಾಸ್ತ್ರಗಳನ್ನೇ ನಾಶಪಡಿಸಬಹುದೆನ್ನುವ ಸತ್ಯ ನಮ್ಮೆದುರಿಗಿರುವಾಗ ಅದನ್ನು ಪಳಗಿಸಿ ಜೈವಿಕವಾಗಿ ಹೊರಹೊಮ್ಮಿಸುವುದು ಕಷ್ಟವೇನಲ್ಲ. ಅಸಲಿಗೆ ಸೂರ್ಯ ಕೂಡಾ ಒ೦ದು ಜೈವಿಕ ಶಕ್ತಿಯ ಆಗರವೇ ತಾನೆ. +ಯಾಕೆಂದರೆ ಜಿಯಾಲಜಿಯಲ್ಲಿ ಪಾಂಡಿತ್ಯವಿದ್ದವರಿಗೆ ಈ ಸೌರ ಶಕ್ತಿಯನ್ನು ಬಳಸಿಕೊಳ್ಳುವ ಕ್ವಾರ್ಟ್ಸ್‌ಗಳ ಬಗ್ಗೆ ವಿವರಿಸಬೇಕಾದ ಅಗತ್ಯವಿಲ್ಲ. ಅದರಲ್ಲೂ ದಕ್ಷಿಣ ಆಫ್ರಿಕಾದ “ಕೌಮಾರೋ “ಗಣಿಗಳಲ್ಲಿ ಲಭ್ಯವಿರುವ ಅತ್ಯುನ್ನತ ಮಟ್ಟದ ಕ್ವಾರ್ಟ್ಸ್ ಇವತ್ತಿಗೂ ಜಗತ್ತಿನಲ್ಲಿ ಹೆಸರುವಾಸಿ. ಅವು ಹೇಗೆ ತಮ್ಮಲ್ಲಿ ಶಕ್ತಿಯನ್ನು ಶೇಖರಿಸಿ ಮರುತ್ಪತ್ತಿ ಮಾಡಬಲ್ಲವೋ ಹಾಗೇ ನಾನು ಬೇಕೆಂದಾಗ ಅವು ತೀಕ್ಷ್ಣತಮಗೊಳ್ಳಬೇಕು ಮತ್ತು ಅವು ನಮ್ಮದೇಹದಲ್ಲಿ ಅಡಗಿಸಬೇಕು…” +“ಅಂದರೆ ಕ್ವಾರ್ಟ್ಸ್ ಗಳನ್ನು ಮಾನವ ದೇಹದೊಂದಿಗೆ ಸಮ್ಮಿಳನಗೊಳಿಸುವುದೇ … ? ” +“ಹೌದು ಹೀಗೆ ಮಾಡುವುದರ ಮುಖಾಂತರ ಅದರ ಉಪಯೋಗವನ್ನು ನಾನು ಮನಸ್ಸಿನ ನಿಯಂತ್ರಣಕ್ಕೆ ಬಿಡಬಹುದೆಂದುಕೊಂಡಿದ್ದೇನೆ… ” +“ಆದರೆ ಆ ಕ್ವಾರ್ಟ್ಸ್ ದೇಹದ ಮೇಲೆ ಯಾವುದಾದರೂ ಪರಿಣಾಮ ಬೀರಿದರೆ…? ಅಷ್ಟಕ್ಕೂ ಅದನ್ನು ದೇಹದ ಯಾವ ಭಾಗದಲ್ಲಿ ಇಂಪ್ಲಾಂಟ್ ಮಾಡಲಿದ್ದೀರಿ …? ” +“ನೋಡುತ್ತಿರು. ಅದಕ್ಕೂ ಮೊದಲು ನಿನ್ನ ಎರಡನೆಯ ಸಂದೇಹ… ಕ್ವಾರ್ಟ್ಸ್ ದೇಹದ ಮೇಲೆ ಯಾವುದೇ ಪರಿಣಾಮ ಬೀರಲಾರವು. ಯಾಕೆಂದರೆ ಈ ಕ್ವಾರ್ಟ್ಸ್ ಕಲ್ಲುಗಳಿಗೆ ಶೇಕಡಾ ನೂರರಷ್ಟು ಸೂರ್ಯನ ಬೆಳಕಿನ ಶಾಖ ಮತ್ತು ಉಷ್ಣತೆಯನ್ನು ಹಿಡಿದುಕೊಳ್ಳುವ ತಾಕತ್ತಿದೆ. ಆದರೆ ಅಷ್ಟೊಂದು ಪ್ರಮಾಣದ ಭಾರಿ ಹೀರುವಿಕೆಯನ್ನು ಅರಗಿಸಿಕೊಂಡೂ ಕೂಡಾ ಈ ಕಲ್ಲುಗಳು ಯಾವುದೇ ರಾಸಾಯನಿಕ ಅಥವಾ ಭೌತಿಕ ( ಕೆಮಿಕಲ್ ಪ್ರಾಪರ್ಟೀಸ್) ಬದಲಾವಣೆಗಳನ್ನು ತೋರದೆ ಸುಮ್ಮನಿರುತ್ತವೆ. ಈ ಒಂದು ಗುಣವನ್ನೇ ಬಳಸಿಕೊಳ್ಳಲು ಹೊರಟಿರುವ ನಾನು ಅದರಿಂದ ಪ್ರಖರ ಉಷ್ಣವನ್ನು ಪ್ರತಿಫಲಿಸುತ್ತೇನೆ. ಜೊತೆಗೆ ಈ ಪ್ರಯೋಗ ಯಶಸ್ಸಾದರೆ ಪರಶಿವನಿಗಿದ್ದ ಮೂರನೆಯ ಕಣ್ಣು ಸುಳ್ಳೆಂದು ಸಾಬೀತು ಮಾಡುತ್ತೇನೆ. ನನ್ನ ಪ್ರಯೋಗದ ಮನುಶ್ಯನೂ ಕೂಡಾ ಶಿವನಂತೆ ಈಗಿರುವ ಕಣ್ಣನ್ನೇ ಬಳಸಿಕೊಂಡು … ಇನ್ಫ್ರಾರೆಡ್ ಲೇಸರ್ ಬೀಂ ನ್ನು ಬಿಡುಗಡೆಗೊಳಿಸಬಲ್ಲ. ಆಗ ಮೂರನೆಯ ಕಣ್ಣೆ ಬೇಕಿಲ್ಲ. ಮಾಮೂಲಿನ ಕಣ್ಣು ಕೂಡಾ ಆ ಕೆಲಸವನ್ನು ಮಾಡುತ್ತದೆ. ” +“ಮೈ ಗಾಡ್ ಕಣ್ಣಿನಲ್ಲಿ ಕ್ವಾರ್ಟ್ಸ್ ಹೂಡಿ ಅದರಿಂದ ಪ್ರತಿಫಲನವನ್ನು ಬೀಂ ಆಗಿ ಪಡೆಯುವುದೇ… ? ” +“ಹೌದು. ಹೇಗೆಂದರೆ ಒಮ್ಮೆ ಸಾಕಷ್ಟು ನಡು ಹಗಲಿನ ಪ್ರಖರ ಸೂರ್ಯನ ಬೆಳಕು ಕಣ್ಣನ್ನು ಪ್ರವೇಶಿಸುತ್ತಿದ್ದಂತೆ ಮಾಮೂಲಿನ ಕಣ್ಣಿನಲ್ಲಿ ನಡೆಯುವ ಆಕ್ಟಿವಿಟೀಸ್‌ಗಳ ಜೊತೆಯಲ್ಲಿ ಕೇವಲ ಬಿಂಬ ಸಂವಹನದ ಹೊರತಾಗಿ ಉಳಿದೆಲ್ಲ ಬೆಳಕು ಈ ಕ್ವಾರ್ಟ್ಸ್‌ನ ಮೇಲೆ ಬೀಳುವುದರೊಂದಿಗೆ ಅಲ್ಲಿ ಸಾಕಷ್ಟು ಶಕ್ತಿಯ ಸಂಗ್ರಹಣ ಆಗೇ ಆಗುತ್ತದೆ. ಇಲ್ಲಿ ನೈಸರ್ಗಿಕವಾಗಿ ದೊರೆಯುವ ಹರ್ಬಲ್ ಶೈಲಿಯ ಕ್ವಾರ್ಟ್ಸನ್ನು ನಾವು ಕಣ್ಣಿನ ಮಾಮೂಲಿನ ವ್ಯವಸ್ಥೆಗೆ ತೊಂದರೆಯಾಗದಂತೆ ಇಂಪ್ಲಾಂಟ್ ಮಾಡಲು ಸಾಧ್ಯವಾದಲ್ಲಿ ಈ ವಾದಕ್ಕೆ ಹೆಚ್ಚಿನ ಬೆಂಬಲ ಸಿಗುವುದರಲ್ಲಿ ಆಶ್ಚರ್ಯವೇನಿಲ್ಲ ಮತ್ತದು ಸಾಧ್ಯವಿದೆ ಕೂಡಾ. +ಯಾಕೆಂದರೆ ಮಿಂಚು ಹುಳುಗಳಾಗಲಿ… ರಾತ್ರಿ ಬೆಳಕು ಸೂಸುವ ಇತರೆ ಕೀಟಗಳಾಗಲಿ, ಕೆಲವೊಂದು ರಾತ್ರಿ ಬೆಳಕು ಬೀರುವ ಜೈವಿಕ ಸಸ್ಯಗಳಾಗಲಿ ನಮ್ಮ ಮುಂದಿರುವ ಸಣ್ಣ ಉದಾಹರಣೆಗಳೆ… ಒಮ್ಮೆ ಹೀಗೆ ಕಣ್ಣಿನಲ್ಲಿ ಹಗಲೆಲ್ಲಾ ಸೂರ್ಯನ ಶಕ್ತಿಯನ್ನು ಸಂಗ್ರಹಿಸಲು ಸಾಧ್ಯವಾಗುವಂತೆ ನಾವು ಹರ್ಬಲ್ ಕ್ವಾರ್ಟ್ಸ್‌ನ ಮೂಲಕ ಸಾಧಿಸಿದರೆ ಅಷ್ಟೆ, ಅದರಿಂದ ಹೊರಹೊಮ್ಮುವ ಬೆಳಕು ನೇರವಾಗಿ ಹೊರಕ್ಕೆ ಬಾರದೆ ಮೊದಲು ಕಣ್ಣಿನ ಒಳ ಆವರಣವಾದ ರೆಟಿನಾದ ವಕ್ರ ಮೇಲ್ಮೈ ಮೇಲೆ ಬೀಳುತ್ತದೆ. ಒಮ್ಮೆ ಅಲ್ಲಿಂದ ಹೊರಕ್ಕೆ ಚಿಮ್ಮಿಸಬೇಕೆಂದರೆ ಸಹಜವಾಗೇ ಭೂತಗನ್ನಡಿಯ ಥಿಯರಿಯಂತೆ ಅದು ಸಾಂದ್ರೀಕೃತಗೊಂಡು ದೃಷ್ಠಿಯ ಪಾಯಿಂಟಿನ ಕಡೆಗೆ ನುಗ್ಗುತ್ತದೆ. +ಅಸಲಿಗೆ ಈ ಮೊದಲೇ ಹೇಳಿದಂತೆ ಯಾವುದೇ ಒಂದು ಬೆಳಕಿನ ಕಿರಣದ ಕೇಂದ್ರದಿಂದ ಬಾಹ್ಯ ಕಿರಣಗಳನ್ನು ವಿಭಜಿಸಿದರೆ ಅದು ಲೇಸರ್ ಕಿರಣವಾಗಿ ಬದಲಾಗುತ್ತದೆ ಮತ್ತು ಆ ಕೆಲಸವನ್ನು ಈಗಾಗಲೇ ಕಣ್ಣಿನಲ್ಲಿ ದೃಷ್ಟಿ ಸಂಬಂಧಿ ಕ್ರಿಯೆಯಲ್ಲಿ ನಡೆಯುತ್ತಲೇ ಇದೆ. ಆದ್ರೆ ಇಲ್ಲಿಯವರೆಗೂ ಕಣ್ಣಿನಿಂದ ಕೇವಲ ವಸ್ತುವಿನ ಪ್ರತಿಫಲನವನ್ನು ಸ್ವೀಕರಿಸಿ ಪ್ರತಿಬಿಂಬವನ್ನು ಮೂಡಿಸುವ ಕೆಲಸವಾಗುತ್ತಿಡ್ದುದರಿಂದ ನಮಗೆ ಕಣ್ಣನ್ನು ಹೀಗೂ ಉಪಯೋಗಿಸಬಹುದು ಎನ್ನುವ ಅರಿವಿರಲಿಲ್ಲ. ಅಸಲಿಗೆ ಸಾಧನೆಯ ಮೂಲಕ ಕಣ್ಣನ್ನು ಎಷ್ಟೊಂದು ಪವರ್ ಫುಲ್ ಆಗಿ ಬಳಸುತ್ತಾರೆನ್ನುವುದು ಗೊತ್ತೇ ಇದೆ. ಅವರೆಲ್ಲಾ ಕಣ್ಣಿನಿಂದ ಕಿರಣಗಳನ್ನು ಯಾವ ರೀತಿಯಲ್ಲಿ ಸಂಕುಚಿಸಿ ದೃಷ್ಠಿಯನ್ನು ಹೊರಹಾಕುತ್ತಾರೋ ಅದೇ ಕ್ರಿಯೆಯನ್ನು ಇಲ್ಲಿ ಬಳಸಿಕೊಳ್ಳಬೇಕಾಗುತ್ತದೆ. +ಹಾಗೆ ಒಮ್ಮೆ ವಕ್ರ ಮೇಲ್ಮೈ ಮೇಲೆ ಬೀಳುವ ಬೆಳಕು ಸಹಜವಾಗೇ ಲೇಸರ್ ಆಗಿ ಬದಲಾಗುತ್ತಾ, ಅದೂ ಸಾಂದ್ರೀಕೃತಗೊಂಡು ಹೊಮ್ಮುವ ಬೆಳಕಿನ ಕಿರಣವಾಗಿದ್ದರಿಂದ ಸಾಕಷ್ಟು ಪವರ್ ಫುಲ್ ಆಗಿ ನುಗ್ಗಿ ಬರುತ್ತದೆ. ಜೊತೆಗೆ ಭೂತಗನ್ನಡಿಗೆ ಹೋಲಿಸಿದರೆ ರೆಟಿನಾದ ಒಳಮೈ ರೇಡಿಯಸ್ ತುಂಬಾ ಹೆಚ್ಚು. ಹಾಗಾಗಿ ಪ್ರತಿಫಲಿಸುವ ಕಿರಣಗಳ ಮಟ್ಟ ಕೂಡಾ ತುಂಬಾ ಹೆಚ್ಚು. ಅದನ್ನು ಸರಿಯಾಗಿ ದೃಷ್ಟಿಯನ್ನು ಕುಗ್ಗಿ ಪ್ರಯೋಗಿಸುವುದರ ಮೂಲಕ ಉಪಯೋಗಿಸಿದರೆ ಅದು ಬರಿ ಸುಡುವುದೇನು… ನೇರವಾಗಿ ಸೀಳಿ ಬಿಡಬಲ್ಲಷ್ಟು ಪ್ರಖರವಾಗಿ ಕಿರಣದ ರೂಪದಲ್ಲಿ ಬರುತ್ತದೆನ್ನುವುದರಲ್ಲಿ ಸಂಶಯವೇ ಇಲ್ಲ. +ಇನ್ನು ಕಣ್ಣನ್ನು ಕುಗ್ಗಿಸಿ ಪ್ರಯೋಗಿಸುವುದೆಂದರೇನು… ? ಅಸಲಿಗೆ ನಾವು ಯಾವುದೇ ದೂರದ ಅಥವಾ ತುಂಬಾ ಹತ್ತಿರದ ವಸ್ತು ಅಥವಾ ದೃಶ್ಯಗಳನ್ನು ನೋಡುವಾಗ ಮಾಡುವ ಕಣ್ಣಿನ ವ್ಯತ್ಯಾಸಾತ್ಮಕ ಪರಿಧಿಯಿಂದ ಹೊರಬೀಳುವ ಮತ್ತು ಒಳ ಬರುವ ಬೆಳಕಿನ ಕಿರಣದಿಂದಾಗಿ ಸ್ಪಷ್ಟತೆ ಹೆಚ್ಚಾಗುತ್ತದೆ. ಕೆಲವೊಮ್ಮೆ ನೇರವಾಗಿ ಕಾಣದ ಚಿತ್ರಗಳು ಕಣ್ಣಿನ ಕುಗ್ಗಿಸಿ ನೋಡುವ ದೃಷ್ಟಿಗೆ ಸ್ಪಷ್ಟವಾಗೇ ಗೋಚರಿಸುತ್ತವೆ. ( ಟಿ.ವಿ.ಯಲ್ಲಿ ಕೆಲವು ಚಿತ್ರಗಳನ್ನು ಬೇಕೆಂದೆ ಮಸುಕಾಗಿಸಿದ್ದನ್ನು ಈ ವಿಧಾನದ ಮೂಲಕ ಸ್ಪಷ್ಟವಾಗೇ ನೋಡಬಹುದು. ಆದರೆ ಇದನ್ನು ಸಾಧಿಸಲು ಕೊಂಚ ಪ್ರಯತ್ನಿಸಬೇಕಾಗುತ್ತದೆ ) ಆಗ ಕಣ್ಣಿನ ರೆಟಿನಾಗೆ ಪೂರೈಸುವ ಬೆಳಕಿನ ಕಿರಣಗಳ ಸಾ೦ದ್ರತೆ ಮಾಮೂಲಿನದಕ್ಕಿಂತ ಶೇ. ಐವತ್ತಕ್ಕೂ ಹೆಚ್ಚು. ಇದನ್ನೇ ರಿವರ್ಸಾಗಿ ಉಪಯೋಗಿಸಿದಾಗ ಅಗತ್ಯದಷ್ಟು ಬೆಳಕು ತೂರಿ ಹೋಗುತ್ತದೆ. ಹೀಗೆ ತೂರಿ ಹೋಗುವ ದೃಷ್ಟಿಯ ಕಿರಣಗಳ ಜೊತೆಯಲ್ಲಿ ಕಣ್ಣಿನ ಒಳಾವರಣದಲ್ಲಿ ಸ್ಥಾಪಿತಗೊಳ್ಳುವ ಕ್ವಾರ್ಟ್ಸ್ ಮಣಿಗಳು ಬೆಳಕನ್ನು ಸಂಕುಚಿಸಿ ಹೊರಬಿಟ್ಟರೆ ಎದುರಿಗಿರುವ ಯಾವುದೇ ಪದಾರ್ಥ ಮಟಾಶ್… “ದೊಡ್ಡದಾಗಿ ಕೈಯೆತ್ತಿ ಘೋಷಿಸಿದರು ಪ್ರೊಫೆಸರ್ ಸ್ಟ್ಯಾನ್ಲಿ. +ಅವರೆಷ್ಟು ಉತ್ಸುಕರಾಗಿದ್ದರೆಂದರೆ ಇನ್ನು ಕೆಲವೇ ದಿನದಲ್ಲಿ ಅವರು ಮಾನವನ ಮಾಮೂಲಿನ ಕಣ್ಣಿಗೆ ಪರಶಿವನ ಶಕ್ತಿಯನ್ನು ತುಂಬುವುದು ಖಚಿತವಾಗಿತ್ತು. ಆದರೆ ಇದನ್ನು ದೇವ್ ವಿರೋಧಿಸಿದ್ದ. ಇದರಿಂದ ಯಾವುದೇ ಉಪಯೋಗ ಇದೆ ಎನ್ನುವುದಕ್ಕಿಂತಲೂ ಏನಾದರೂ ಅವಘಡ ನಡೆಯುವ ಸಂದರ್ಭವೇ ಜಾಸ್ತಿ ಎಂದರೂ ವೃದ್ಧ ವಿಜ್ಞಾನಿ ಕಿವಿಗೊಡಲಿಲ್ಲ. ಕೇವಲ ಆರು ತಿಂಗಳ ಅವಧಿಯಲ್ಲಿ ಅದನ್ನು ಕೈವಶ ಮಾಡಿಕೊಂಡರು. ಪ್ರಾಯೋಗಿಕ ಪರೀಕ್ಷೆಗಳು ನಡೆದವು. ಫಲಿತಾಂಶ ಅದ್ಭುತವಾಗಿತ್ತು. ಅದಾದ ಕೆಲವೇ ದಿನದಲ್ಲಿ ಮಿಲ್ಟನ್ ಅದನ್ನು ಅಪಹರಿಸಿ ತನ್ನೊಂದಿಗೆ ಒಯ್ದು ಬಿಟ್ಟಿದ್ದ. ಅಕ್ಷರಶ: ಅದನ್ನು ತನ್ನ ಮೇಲೆ ಪ್ರಯೋಗಿಸಿಕೊಂಡಿದ್ದನಲ್ಲದೇ ತನಗೆ ಬೇಕಾದಂತೆ ಅದನ್ನು ಉಪಯೋಗಿಸಲು ಆರಂಭಿಸಿದ್ದ. +ಅವನನ್ನು ತಡೆಯುವ ಮುಂಚೆ ಒಮ್ಮೆ ಆ ಕಣ್ಣನ್ನು ತೆರೆದು ಕಿರಿದುಗೊಳಿಸಿ ಪ್ರಯೋಗಿಸಿದರೆ ಸಾಕಿತ್ತು. ಸುಮಾರು ಐವತ್ತು ಅರವತ್ತು ಮೀಟರ್ ದೂರದವರೆಗಿನ ವ್ಯಕ್ತಿ ವಸ್ತುಗಳೆಲ್ಲಾ ಪ್ರೊಫೆಸರ್ ಹೇಳಿದಂತೆ ಮಟಾಶ್. ಆದರೆ ಅದರ ದುರುಪಯೋಗ ವ್ಯವಸ್ಥಿತವಾಗಿ ಮಿಲ್ಟನ್ ಆರಂಭಿಸಿದ್ದ. ಜೊತೆಗೆ ಅದರ ಮುಂದಿನ ಗುರಿ ಪ್ರೊಫೆಸರ್ ಎನ್ನುವುದರಲ್ಲಿ ಯಾವುದೇ ಸಂಶಯವಿರಲಿಲ್ಲ. ಕಾರಣ ಆ ಪ್ರಯೋಗಕ್ಕೆ ಸಂಬಂಧಿಸಿದ ಇಬ್ಬರನ್ನು ಅವನು ಆಗಲೇ ಬಲಿತೆಗೆದುಕೊಂಡಾಗಿತ್ತು. ಅದರ ಜೊತೆಗೆ ತನ್ನ ಚಟಕ್ಕೆ ಒಬ್ಬನನ್ನು ಕೊಂದಿದ್ದ. ಇನ್ನೋರ್ವಳನ್ನು ತೀಟೆಗೆ ಬಳಸಿಕೊಂಡು ಅರ್ಧ ಸುಟ್ಟಿದ್ದ. ಸಹಜವಾಗೇ ಪ್ರೊಫೆಸರ್ ಸಾವಿನ ಬಾಗಿಲಿಗೆ ಬಂದು ನಿಂತಿದ್ದರು. +* +* +* +ಮಿಲ್ಟನ್‌ನನ್ನು ತಲುಪಬೇಕಾದ ಒಂದೇ ಒಂದು ದಾರಿಯೆಂದರೆ ಅವನಿಗೆ ಈಗ ಪ್ರೊಫೆಸರ್ ಇಲ್ಲಿದ್ದಾರೆಂದು ತಿಳಿಯ ಪಡಿಸುವುದು. ಇಲ್ಲವಾದರೆ ಅವನು ಇಷ್ಟೊತ್ತಿಗೆ ಇಲ್ಲಿಗೆ ಬರುತ್ತಾನೆಂದು ತಿಳಿದುಕೊಂಡು ಹೊ೦ಚು ಹಾಕಿ ಹಿಡಿಯಬೇಕು. ಒಮ್ಮೆ ಅವನು ಕಣ್ಬಿಟ್ಟು ಬೆಂಕಿಯುಗುಳುವ ಮುಂಚೆ ಹಿಡಿದು ನಿಲ್ಲಿಸಿದರೆ ನಂತರ ಅವನನ್ನು ಆಪರೇಶನ್ ಟೇಬಲ್‌ಗೆ ಹೊತ್ತೊಯ್ಯುವುದು ಕಷ್ಟವೇನಲ್ಲ. ಆದರೆ ಅದು ಅಷ್ಟು ಸುಲಭವಲ್ಲ. ಯಾಕೆಂದರೆ ಅವನಿಗೂ ಗೊತ್ತು ಒಮ್ಮೆ ತಾನು ಅದನ್ನು ಅಪಹರಿಸಿದ ನಂತರ ಪ್ರೊಫೆಸರ್ ತನ್ನ ಹಿಂದೆ ಬಿದ್ದಿರುತ್ತಾನೆಂದು ಅಥವಾ ಪೋಲಿಸ್… ಆದರೆ ಅವನು ದೇವ್ ದೇವ್ ಕೂಡಾ ಹೀಗೆ ಹಿಂಬಾಲಿಸಬಹುದೆಂದು ಅಂದಾಜಿಸಲಿಲ್ಲ. +ಕೂಡಲೇ ದೇವ್ ಮತ್ತು ನೇಹಾ ಇಬ್ಬರೂ ಮಿಲ್ಟನ್‌ನ ಮೊಬೈಲ್ ನಂಬರನ್ನು ತೆಗೆದುಕೊಂಡು ಅದರ ಆಧಾರದ ಮೇಲೆ ಅವನನ್ನು ಟ್ರೇಸ್ ಮಾಡಲು ಯತ್ನಿಸಿದರು. ಅದೂ ಆಗಲಿಲ್ಲ. ಮಿಲ್ಟನ್ ತುಂಬಾ ಅಗತ್ಯವಿದ್ದಾಗ ಮಾತ್ರ ಮೊಬೈಲ್ ಬಳಸಲಾರಂಭಿಸಿದ್ದ. ಅಲ್ಲದೆ ಈ ಮೊದಲೇ ಎಸಗಿದ ಅಪರಾಧಗಳನ್ನು ಗಮನಿಸಿದರೆ ಅವನು ಅದಕ್ಕಾಗಿ ಕೈಗೊಂಡಿರಬಹುದಾದ ತಯಾರಿಯೂ ಕೂಡಾ ಅದ್ಭುತವಾಗಿದ್ದು ಕಂಡು ಬಂತು. ಕೂಡಲೇ ಅವನು ಮೇಯಿಲ್ ಡೌನ್ ಮಾಡುತ್ತಿದ್ದಾನೋ ಇಲ್ಲವೋ ಎನ್ನುವುದನ್ನು ಹ್ಯಾಕಿಂಗ್ ಮಾಡುವುದರ ಮೂಲಕ ಪತ್ತೆ ಹಚ್ಚಿದ ನೇಹಾ ಅವನನ್ನು ಬಲೆಗೆ ಹಾಕಲು ಒಂದು ಉಪಾಯ ಸೂಚಿಸಿದಳು. ಅದರಂತೆ ಒಮ್ಮೆ ಮಿಲ್ಟನ್ ಮೊಬೈಲಿನಲ್ಲಿ ದೇವ್‌ನಿಗೆ ಭೇಟಿಯಾದ. +“ಮಿಲ್ಟನ್ ದಯವಿಟ್ಟು ಇಲ್ಲಿವರೆಗೆ ಆಗಿದ್ದನ್ನು ನಾವು ಯಾರಿಗೂ ತಿಳಿಸುವುದಿಲ್ಲ. ಆದ್ದರಿಂದ ನೀನು ಆ ಆಪರೇಶನ್‌ನಿಂದ ಹೊರಕ್ಕೆ ಬಂದು ಬಿಡು. ..” +“ಹ್ಹ… ಹ್ಹ… ಹ್ಹಾ… ನೋಡು ದೇವ್ ಮೊದಲಿನಿಂದಲೂ ನಾನು ನಿಮ್ಮಷ್ಟು ಬುದ್ಧಿವಂತನಲ್ಲ. ಆದರೆ ಈ ಬಾರಿ ಮೋಸ ಹೋಗಲಿಲ್ಲ. ಅಷ್ಟಕ್ಕೂ ನನಗೆ ಬೇಕಾದ್ದನ್ನೆಲ್ಲಾ ಪಡೆಯುತ್ತಿದ್ದೇನೆ. ನಿಮ್ಮ ಕೈಗೆ ಸಿಕ್ಕರೆ ಅಷ್ಟೆ. ನನ್ನನ್ನು ನನ್ನ ಈ ಪವರ್ ಫುಲ್ ಕಣ್ಣನ್ನು ಇನ್ನಿಲ್ಲದಂತೆ ತೆಗೆದು ಬಿಸಾಡುತ್ತೀರ. ಮಿ.ದೇವ್ ಅದೆಲ್ಲಾ ಆಗೋಲ್ಲ. ಸಧ್ಯ ನಿನ್ನ ಮೇಲೆ ನನ್ನ ಕಣ್ಣು ಬಿದ್ದಿಲ್ಲ ಅದಕ್ಕೆ ಖುಷಿಪಡು..”ಎಂದ. +“ನೋ.. ಮಿಲ್ಟನ್ ನೋಡು… “ಇನ್ನೇನೊ ಹೇಳಲಿದ್ದಳು ನೇಹಾ. ಅಷ್ಟರಲ್ಲಿ ಆ ಕಡೆಯಿಂದ ಕರ್ಕಶವಾಗಿ ನುಡಿದ ಮಿಲ್ಟನ್. +“ಏಯ್ ಹುಡುಗಿ ನೀನು ತುಂಬ ಬುದ್ಧಿವಂತೆ ಅಂದ್ಕೋಬೇಡ. ಏನಾದರೂ ಮಾಡಿ ನನ್ನನ್ನು ಹಿಡಿಯಲು ಬೀಸುತ್ತಿರುವ ಉಪಾಯವಿದು. ನೆನಪಿಟ್ಟುಕೋ. ನನಗೆ ಬೇಕಾದ ಹೆಣ್ಣನ್ನು … ವಸ್ತುವನ್ನು ನಾನು ಬೇಕಾದ ರೀತಿಯಲ್ಲಿ ಪಡೆಯಬಲ್ಲೆ. ನೀನು ಅದಕ್ಕೆ ಬಲಿಯಾಗಬಾರದೆಂದಿದ್ದರೆ ಆ ಮುದುಕನ್ನ ಅವನ ಪಾಡಿಗೆ ಬಿಟ್ಟು ನನಗೆ ಬಲಿ ಕೊಟ್ಟು ಬಿಡು. ಇಲ್ಲದಿದ್ದರೆ ಅವನಿಗಿಂತಲೂ ಮೊದಲು ನೀವು ಬಲಿಯಾಗುತ್ತೀರ.. ಹುಶಾರ್..”ಎಂದವನೇ ಸಂಪರ್ಕ ಕತ್ತರಿಸಿದ. +ಇನ್ನು ಅವನೊಡನೆ ಮಾತಾಡಿ ಉಪಯೋಗ ಇಲ್ಲ ಎನ್ನಿಸಿತು. ಆದರೆ ಯಾವುದೇ ಕಾರಣಕ್ಕೂ ಪ್ರೊಫೆಸರ್ ಅವನ ಕಣ್ಣಿಗೆ ಬೀಳದಂತೆ ರಕ್ಷಿಸಿಕೊಳ್ಳಬೇಕು. ಅದು ಮುಖ್ಯ. ಆದರೆ ಅದು ಅಷ್ಟು ಸುಲಭದಲ್ಲಿ ಸಾಧ್ಯವಿರಲಿಲ್ಲ. ಕಾರಣ ತುಂಬ ಹತ್ತಿರದಲ್ಲೇ ಪ್ರೊಫೆಸರ್ ತುಂಬಿದ ಸಭೆಯನ್ನು ಉದ್ದೇಶಿಸಿ ಮಾತಾಡಬೇಕಿತ್ತು. ಮತ್ತದಾಗಲೇ ಜಗಜ್ಜಾಹೀರಾದ ವಿಷಯವಾಗಿತ್ತು. ಅಲ್ಲಿ ಪ್ರೊಫೆಸರ್‌ನ್ನು ಉಳಿಸಿಕೊಳ್ಳುವುದು ತುಂಬಾ ಕಷ್ಟದ ಕೆಲಸ. ಬಹುಶ ಪೊಫೆಸರ್ ತಮ್ಮ ಪ್ರಯೋಗಕ್ಕೇ ಬಲಿಯಾಗುತ್ತಾರಾ…? ಗೊತ್ತಿಲ್ಲ… ತಲೆ ಕೆದರಿಕೊಳ್ಳುತ್ತಾ ಲ್ಯಾಬ್ ನತ್ತ ಸರಿದು ಹೋದರು ಇಬ್ಬರು. +* +* +* +ಆ ಸಭಾ ಭವನ ಇನ್ನಿಲ್ಲದಂತೆ ತುಂಬಿದೆ. ಪ್ರೊಫೆಸರ್ ಯಾವ ಮಾರ್ಗವಾಗಿ ಬರುವುದೋ ಅದನ್ನು ಮೊದಲೇ ನಿರ್ಧರಿಸಿ ತಕ್ಕ ಬಂದೋಬಸ್ತು ಮಾಡಲಾಗಿತ್ತು. ಆದರೆ ಈ ಎಲ್ಲ ಗಡಿಬಿಡಿಯ ಮಧ್ಯೆ ಎಲ್ಲೊ ಒಂದು ಕಡೆಯಿಂದ ಮಿಲ್ಟನ್‌ನ ದೃಷ್ಠಿಗೆ ನಿಲುಕಿದರೂ ಸಾಕಲ್ಲ. ಪ್ರೊಫೆಸರ್ ಕಥೆ ಮುಗಿದಂತೆನೆ. ಅದಕ್ಕಾಗಿಯೇ ಪ್ರೊಫೆಸರಿಗೆ ಒಳಗಿನ ಕೋಣೆಯಿಂದಲೇ ಭಾಷಣ ಮಾಡುವಂತೆಯೂ ಅದನ್ನು ಕ್ಯಾಮೆರಾಗಳ ಮೂಲಕ ಎಲ್ಲರೆದುರಿಗೆ ಸ್ಕ್ರೀನ್ ಮೇಲೆ ಪ್ರಸಾರ ಮಾಡುವುದೆಂದು ಯೋಜಿಸಲಾಯಿತು. ಅದೇ ರೀತಿಯಲ್ಲಿ ಎಲ್ಲ ಸಿದ್ಧತೆಗಳು ಜರುಗಿದವು. ಪ್ರೊಫೆಸರ್ ಗುಪ್ತವಾಗಿ ಬಂದು ಆ ಕೋಣೆಯನ್ನು ಸೇರಿಕೊಂಡರು. ಕೆಲವೇ ಕ್ಷಣದಲ್ಲಿ ಅವರ ಭಾಷಣ ಆರಂಭವಾಗಲಿತ್ತು. ಆದರೆ ಈ ಮೊದಲೇ ಅಲ್ಲಿಗೆ ಬಂದು ಸೇರಿದ್ದ ಮಿಲ್ಟನ್ ನಿಧಾನಕ್ಕೆ ಪ್ರೊಫೆಸರ್ ಕೋಣೆಯಲ್ಲಿ ಕಾಲಿಟ್ಟ. +“ನೋ.. ಮಿಲ್ಟನ್ ಏನೂ ಮಾಡ್ಬೇಡ..”ಕೂಗಿದರು ಪ್ರೊಫೆಸರ್. +“ಪ್ರೊಫೆಸರ್ ಸ್ಟ್ಯಾನ್ಲಿ. ತುಂಬಾ ಉಪಕಾರ ಮಾಡಿದ್ದೀಯ ಈ ಪ್ರಯೋಗ ಕಂಡು ಹಿಡಿದು. ಅದಕ್ಕಾಗಿ ನಿನಗೆ ಯಾವುದೇ ಚಿತ್ರ ಹಿಂಸೆಯಾಗದಂತೆ ಕೊಂದು ಬಿಡುತ್ತೇನೆ. ನೇರವಾಗಿ ಎದೆಗೆ ಹಾಯಿಸಲಾ ಲೇಸರ್ ಬೀಂ ನ್ನು. “ವಿಕಟವಾಗಿ ನಕ್ಕ ಮಿಲ್ಟನ್. ಆಗ ಎದ್ದು ನಿಂತರು ಪ್ರೊಫೆಸರ್ ಅವನೆದುರಿಗೆ, +“ಮೂರ್ಖಾ ನಿನ್ನಂತವರು ಇದ್ದೇ ಇರುತ್ತಾರೆ ಎಂದು ನಾನದಕ್ಕೆ ಪರ್ಯಾಯವನ್ನು ಕಂಡುಕೊಂಡಿದ್ದೆ. ಅದನ್ನು ಪ್ರಯೋಗಾತ್ಮಕವಾಗಿ ಪ್ರಯೋಗಿಸಿರಲಿಲ್ಲ ಅಷ್ಟೆ. ಅದೇನು ಮಾಡುತ್ತೀಯೊ ಮಾಡಿಕೊ. ನಿನ್ನಿಂದ ಹೇಗೆ ಬದುಕಿಕೋ ಬೇಕು ನನಗೆ ಗೊತ್ತು…”ಎನ್ನುತ್ತಾ ಆಚೆ ತಿರುಗಿದರು. +“ಪ್ರೊಫೆಸರ್ … “ಎನ್ನುತ್ತಾ ಮಿಲ್ಟನ್ ಒಮ್ಮೆ ಜೋರಾಗಿ ಕಿರುಚಿ ಅವರೆದುರಿಗೆ ಕಣ್ಣನ್ನು ಉಜ್ಜುತ್ತಾ ಕಿರಿದುಗೊಳಿಸಿ ತೀಕ್ಷ್ಣವಾಗಿ ದಿಟ್ಟಿಸಿ ಬೀಂನ್ನು ಹರಿಸಲು ಯತ್ನಿಸಿದ. ಅಷ್ಟೊತ್ತಿಗೆ ಅಲ್ಲೆಲ್ಲಾ ಕರೆಂಟು ಹೊರಟು ಹೋಗಿ ಕತ್ತಲು ಕೋರೈಸಿತು. +“ಎಯ್..”ಎಂದು ಕಿರುಚಿದ ಮಿಲ್ಟನ್. ಮುಂದಿನ ಎರಡು ಸೆಕೆಂಡುಗಳಲ್ಲಿ ಬೆಳಕು ಮರಳಿತು. ಅಷ್ಟು ದೂರದಲ್ಲಿದ್ದಾರೆ ಪ್ರೊಫೆಸರ್. ಮಿಲ್ಟನ್ ಬೀಂ ನ್ನು ತೂರಿ ಅವರ ಮೇಲೆ ಬಿಟ್ಟ. ಆಗ ನಡೆಯಿತಾ ಘಟನೆ…. ಸರಕ್ಕನೆ ಪ್ರೊಫೆಸರ್ ತಿರುಗಿದಂತೆ ಆಯಿತು. ಮರುಕ್ಷಣದಲ್ಲಿ ನೂರಾರು ಕಿರಣಗಳು ಅವನ ಸುತ್ತಲೂ ತೂರಿ ಬಂದವು. ಮುಖ್ಯವಾಗಿ ಅವನ ಕಣ್ಣಿಗೆ ಇನ್ನಿಲ್ಲದ ಘಾಸಿಯಾಗುವಂತೆ ಚಿಮ್ಮಿಬಂದ ಕಿರಣಗಳು ಅವನನ್ನು ಘಾಸಿಗೊಳಿಸಿ ಕೆಡವಿದವು. ನೆಲಕ್ಕೆ ಬಿದ್ದ ಮಿಲ್ಟನ್ ಒದ್ದಾಡ ತೊಡಗಿದ. ಕಣ್ಣುಗಳಲ್ಲಿ ಬೆಂಕಿ ಇಟ್ಟ ಅನುಭವ. ಎದ್ಡು ನಿಲ್ಲಲಾಗುತ್ತಿಲ್ಲ. ಆ ಪಕ್ಕದಿಂದ ಆ ಸದ್ಡು ಕೇಳಿಸಿತು. +“ಮಿಲ್ಟನ್. ನಿನಗೆ ಈ ಮೊದಲೇ ಎಚ್ಚರಿಸಿದ್ದೆ. ಆದರೆ ನೀನು ಕೇಳಲಿಲ್ಲ. ಈಗ ಅನುಭವಿಸು. ನೀನು ಎಲ್ಲಿಂದಾದರೂ ಪ್ರೊಫೆಸರ್ ಮೇಲೆ ಗುರಿಯಿರಿಸಿಕೊಂಡು ಬಂದೆ ಬರುತ್ತಿ ಎಂದು ನನಗೆ ಗೊತ್ತಿತ್ತು. ಅದಕ್ಕೆ ಈ ರೂಮನ್ನು ವಿಶೇಷವಾಗಿ ವ್ಯವಸ್ಥೆಗೊಳಿಸಲಾಗಿತ್ತು. ರೂಲಿಂಗ್ ಮೀರರ್‌ಗಳ ಮೇಲೆ ಬೀಳುವ ಬೆಳಕು ಎಲ್ಲವೂ ಒಂದೇ ಕೋನದಲ್ಲಿ ಪ್ರತಿಫಲಿಸುವಂತೆ ಲೆಕ್ಕಾಚಾರ ಮಾಡಿ ಯಾವ ಕೋನಗಳಿಗೂ ತಿರುಗುವಂತೆ ಹೊಂದಿಸಲಾಗಿತ್ತು. +ನಿನಗೆ ಬರಬೇಕಾದ ದಾರಿ ಒಂದೇ ಒಂದು. ಅಲ್ಲಿಂದ ಹೇಗೆ ನೋಡಿದರೂ ಇಂಥಲ್ಲೇ ನಿನ್ನ ದೃಷ್ಠಿ ಬೀಳುತ್ತೆ ಎಂದು ಅಂದಾಜಿಸಿದ ನನ್ನ ಊಹೆ ತಪ್ಪಾಗಲಿಲ್ಲ. ಅದಕ್ಕೆ ರೂಲಿಂಗ್ ಮೀರರ್‌ಗಳನ್ನು ಹೊಂದಿಸಿಟ್ಟು ಅಕಸ್ಮಾತ ಮೊದಲ ಬಾರಿಗೆ ನಿನಗೆ ಘಾಸಿಯಾಗದಿದ್ದರೆ ನಂತರದಲ್ಲಾದರೂ ನಿನ್ನ ನೇರಕ್ಕೆ ಹೊಂದಿಕೆಯಾಗುವಂತೆ ಚಲಿಸುವ ಕನ್ನಡಿಗಳ ಬ್ರಹತ್ ವ್ಯವಸ್ಥೆ ಮಾಡಿಸಿದ್ದೆ. ಅದಕ್ಕೆ ತಕ್ಕಂತೆ ಕರೆಂಟು ಹೋದಾಕ್ಷಣ ಕಕ್ಕಾಬಿಕ್ಕಿಯಾದ ನೀನು ಬೆಳಕು ಬಂದ ತಕ್ಷಣ ಮಾನವನ ಸಹಜ ಸ್ವಭಾವದಂತೆ ಬೆಳಕಿನ ಮೂಲದತ್ತ ದೃಷ್ಠಿ ಹರಿಸಿದೆ. +ಅಷ್ಟೊತ್ತಿಗಾಗಲೇ ತಡವಾಗಿತ್ತು. ನಿನಗೆ ಕಂಡಿದ್ಡು ಪ್ರೊಫೆಸರ್ ಬಿಂಬ ಮಾತ್ರ. ಕೂಡಲೇ ಪ್ರತಿಕ್ರಿಯಿಸಿದ್ದಿ. ನಿನ್ನ ಕಣ್ಣಿನಿಂದ ಹೊರಟ ಬೀಂಗಳು ತಮ್ಮ ಕೆಲಸ ಪೂರೈಸಿದ್ದವು. ನೀನು ಉರಿಸಿದ ಬೆಂಕಿಯ ಕಿರಣ ನಿನಗೇ ಹಿಂದಿರುಗಲು ನಾನು ಮಾಡಿದ ವ್ಯವಸ್ಥೆ ತುಂಬಾ ಸರಿಯಾಗಿ ಕಾರ್ಯ ನಿರ್ವಹಿಸಿದವು. ಎಷ್ಟೆಂದರೂ ಅದು ಗಾಜು. ಬಿದ್ದ ಬೆಳಕಿನ ಕಿರಣಗಳನ್ನು ಅದೇ ವೇಗ ಮತ್ತು ಕೋನದಲ್ಲಿ ಹಿಂದಿರುಗಿಸುತ್ತೆ. ನೀನು ಕಣ್ಣನ್ನು ತೆರೆಯುತ್ತಿದ್ದಂತೆ ಎಲ್ಲೆಡೆಯಿಂದ ಕೇಂದ್ರೀಕೃತವಾಗಿ ಹೊರಟ ಕಿರಣಗಳು ಪ್ರತಿಫಲಿಸಿ, ನಿನ್ನ ಮೇಲೆ ಮುಖ್ಯ ನಿನ್ನ ಕಣ್ಣಿಗೇ ದಾಳಿ ಮಾಡಿದವು. ಅದರ ಮೇಲೆ ಅದೇ ಮೀರರ್‌ಗಳ ಪ್ಯಾರಾಬೊಲಿಕ್ ಏಫ್ಹೆಕ್ಟ್ ಕೂಡಾ ಅದರೊಂದಿಗೆ ಇದ್ದುದರಿಂದ ನೀನೀಗ ಸಂಪೂರ್ಣ ದೃಷ್ಠಿಯನ್ನು ಕಳೆದುಕೊಂಡಿದ್ದರೂ ಹೆಚ್ಚೇನಲ್ಲ. ಪ್ರೊಫೆಸರಿಂದ ಪಡೆದಿದ್ದ ಮೂರನೆಯ ಕಣ್ಣಿನ ಬದಲಾಗಿ ನಿನ್ನ ಎರಡೂ ಕಣ್ಣು ಹೋದರೂ ಆಶ್ಚರ್ಯವೇನಿಲ್ಲ.”ಸ್ಪಷ್ಟವಾಗಿ ನುಡಿದ ದೇವ್. +“ಪ್ರೊಫೆಸರ್ ಬನ್ನಿ “ಎನ್ನುತ್ತ ಹೊರಕ್ಕೆ ಹೋಗಿ ಬಾಗಿಲು ಹಾಕಿಕೊಂಡ. ಎದ್ಡು ನಿಂತ ಮಿಲ್ಟನ್‌ಗೆ ಸುತ್ತಲೂ ಗಾಡಾಂದಾಕಾರದ ವಿನಹ ಇನ್ನೇನು ಕಾಣಲಿಲ್ಲ. ಎರಡು ನಿಮಿಷ ಹಾಗೆ ಕಳೆದ. ಅಷ್ಟರಲ್ಲಿ ಹೊರಗಿನಿಂದ ಪ್ರೊಫೆಸರ್ ಭಾಷಣ ಕೇಳಿ ಬರಲಾರಂಭಿಸಿತು. +“ಎಸ್. ಯಾವುದೇ ಕಾರಣದಿಂದಲೂ ವಿಜ್ಞಾನ ಮಾನವನ ಕೈಯ್ಯಲ್ಲಿ ಆಟಿಕೆಯಂತಾಗಬಾರದು…”ಇತ್ಯಾದಿ. … ಇತ್ಯಾದಿ… ಜೋರಾಗಿ ಕಿರುಚಬೇಕೆಂದವನು ಸುಮ್ಮನಾಗಿ ಬಿಟ್ಟ ಮಿಲ್ಟನ್ ಹೊರಗಡೆ ಹೋಗಬೇಕೆಂದು ಕೊಂಡು ಅತ್ತ ಹೆಜ್ಜೆ ಸರಿಸಿದ. ಎದುರಿಗೆ ಕತ್ತಲೆಯ ಪರದೆ ಎದ್ದು ನಿಂತಿತ್ತು. ಸುತ್ತಲೂ ಬರಿ ಕತ್ತಲು… ಕತ್ತಲು… ಅಸ್ಪಷ್ಟ ಬೆಳಕು… ದೃಷ್ಠಿ ಸಹಕರಿಸಲಿಲ್ಲ. +***** +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ. ಸುಸ್ತಾಗಿ ಊರ ಹೊರಗಿನ ಒಂದು ಗಿಡದ […] +ದಿನಾಂಕ ೧, ಜೂನ್ ೧೯೮೯ ಏರ್‌ಬ್ಯಾಗ್ ಹೆಗಲಿಗೇರಿಸಿ ರೈಲಿನಿಂದ ಕೆಳಗಿಳಿದೆ. ಬೆಳಗಿನ ಏಳುಗಂಟೆಯ ಸಡಗರದಲ್ಲಿ ಜಮ್ಮು ತವಿ ನಿಧಾನವಾಗಿ ಕಣ್ಣು ಬಿಡುತ್ತಿತ್ತು. ಚಾಯ್‌ವಾಲಾಗಳು ಗಂಟಲು ಹರಿಯುವಂತೆ ‘ಚಾಯಾ…ಚಾಯಾ…’ ಕೂಗುತ್ತ ಫ್ಲಾಟ್‌ಫಾರಂ ತುಂಬಾ ಓಡಾಡುತ್ತಿದ್ದರು. ಇಲ್ಲಿಂದ […] +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_161.txt b/Kannada Sahitya/article_161.txt new file mode 100644 index 0000000000000000000000000000000000000000..19550b4d47db9d5132acc7f278d4f33b62de0cf5 --- /dev/null +++ b/Kannada Sahitya/article_161.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ ತೋರುವ ಸೆಕ್ಸೀ ಥೇಟರುಗಳು, ಚಿತ್ರ ಗಬ್ಬಾಗಿದ್ದರೂ ಡೋಟ್‌ವರಿ, ನಾನಿದ್ದೇನೆ ನಿಮಗೆ ‘ಮಜಾ ಕೊಡಲು’ ಎಂದು ಪರದೆ ಮೇಲಿನ ಚಿತ್ರ ಮರೆಸಲು ಕಾಮ ಕೇಳಿಯ ‘ಲೈವ್ ಷೋ’ಗೆ ಅಣಿಯಾಗಿ ಬರುವ ಕಾಲ್‌ಗರ್ಲ್‌ಗಳ ಹಾವಳಿ ಇರುವಂಥ ಚಿತ್ರಮಂದಿರಗಳೂ ಕೆಂಪೇಗೌಡ ರೋಡಿನಲ್ಲಿವೆ. +ಕೋಟಿ ಕೋಟಿ ಹಣವನ್ನು ‘ಧಾಂ-ಧೂಂ’ ಎಂದು ವೆಚ್ಚಿಸಲು ಅಣಿಯಾಗಿರುವ ಚಿತ್ರ ನಿರ್ಮಾಪಕ-ನಿರ್ದೇಶಕರು ಒನ್ ಸೈಡ್ ಆದರೆ, ಇನ್ನೊಂದು ಸೈಡಿನಲ್ಲಿ ರೋಡ್‌ಸೈಡಿನ ತಿಂಡಿ ಕಾಫಿಗಳಲ್ಲೇ ತೃಪ್ತರಾಗಿ ಏನಾದರೂ ಹೊಸದನ್ನು ಮಾಡಿ ತೋರುವ ಲೋ ಬಜೆಟ್ ಚಿತ್ರ ನಿರ್ಮಾಪಕ-ನಿರ್ದೇಶಕರೂ ಇನ್ನೊಂದೆಡೆ ಇದ್ದಾರೆ. +ಒಬ್ಬೊಬ್ಬರಿಗೆ ಒಂದೊಂದು ಹುಚ್ಚು, ಕೆಲವರಿಗೆ ಹಣ ಮಾಡುವುದೇ ಜೀವನದ ಮುಖ್ಯ ಗುರಿ. ಇನ್ನು ಕೆಲವರಿಗೆ ಸದಭಿರುಚಿ ಚಿತ್ರ ಮಾಡುವುದು ಅವರ ಕಿರೀಟಕ್ಕೊಂದು ಗರಿ. ಇನ್ನೂ ಹಲವರು “ಏನು ಕೊಟ್ಟರೂ ನೋಡುತ್ತಾರೆ. ನಮ್ಮ ವೀರ ಕನ್ನಡಿಗರು. ಅವರು ನಿಜವಾದ “ಕುರಿ” ಅಂತ್ಲೂ ಅಂತಿರ್‍ತಾರೆ. +ಯಾರು ಏನೇ ಅನ್ನಲಿ-ಎಲ್ಲರಿಗೂ ಒಳ್ಳೆ ಚಿತ್ರಮಂದಿರಗಳು ಬೇಕು. ಈಗ ಒಳ್ಳೇ ಥಿಯೇಟರ್‌ಗಳ ಬಾಡಿಗೆ ಕೇಳಿದರೆ ‘ಹಾರ್‍ಟ್ ಫೈಲ್ಯೂರ್‍’ ಆಗುವಂಥ ದಿನ ಬಂದು ಹೋಗಿದೆ. ಎಷ್ಟೋ ನಿರ್ಮಾಪಕರು ಬಾಡಿಗೆ ಕಟ್ಟಲಾಗದೆ ಚಿತ್ರದ ಡಬ್ಬಗಳನ್ನು ಚಿತ್ರಮಂದಿರಗಳಲ್ಲೇ ತಿಂಗಳಾನುಗಟ್ಟಲೆ ಬಿಟ್ಟು ಬಂದಿರುವುದೂ ಉಂಟು. +ಹೊಟ್ಟೆ-ಬಟ್ಟೆ ಕಟ್ಟಿ ಲೋಬಜೆಟ್ ಚಿತ್ರ ತೆಗೆದವ – ಅಬ್ಬಬ್ಬ ಅಂದರೆ ಒಂದೋ-ಎರಡೋ ಪ್ರಿಂಟ್ ಹಾಕಿಸಬಲ್ಲ. ಭಾರಿಸ್ಟಾರ್‍ಸ್ ಇಲ್ಲ ಎಂದಾಗ ಗಾಂಧೀನಗರ ಅಂತ ನಿರ್ಮಾಪಕರಿಗೆ ಕಾಫಿಯೂ ಕೊಡಿಸುವುದಿಲ್ಲ-ಕ್ಯಾರೆ ಎಂದೂ ಅನ್ನುವುದಿಲ್ಲ. +ಹಾಗೆ ನೋಡಿದರೆ ಇಂಥ ಮಂದಿ ಮಾತ್ರ ಏನಾದರೂ ಕ್ರಿಯೇಟೀವ್ ಆಗಿ ಥಿಂಕ್ ಮಾಡಬಲ್ಲರು-ಸೃಜನಶೀಲವಾದುದನ್ನು ಏನಾದರೂ ಹೇಳಬಲ್ಲರು-ಸ್ಟಾರ್‍ಸ್ ಅಲ್ಲದವರನ್ನೂ ಮಿರುಮಿರುಗುವ ನಕ್ಷತ್ರವಾಗಿ ಮಿಂಚಿಸಬಲ್ಲರು. +ಸಬ್ಸಿಡಿಗಳು-ಪ್ರಶಸ್ತಿಗಳು ಇಂಥ ಮಂದಿಗೆ ನಿಜವಾದ ಆಶಾಕಿರಣಗಳು. +ಕೋಟಿ ಕೋಟಿ ಖರ್ಚು ಮಾಡಬಲ್ಲವರಿಗೆ ಈ ಹಣ ಮಹಾಜುಜಬಿ. ಒಂದು ದಿನದ ಕಾಕ್‌ಟೇಲ್ ಪಾರ್ಟಿ ಖರ್ಚು. +ಕನ್ನಡದ ಜನಪ್ರಿಯ ಹೀರೋ ಹೀರೋಯಿನ್‌ಗೆ ಕೊಡುವ ಸಂಭಾವನೆಯಲ್ಲಿ ಒಂದು ಲೋಬಜೆಟ್ ಚಿತ್ರ ತೆಗೆಯಬಲ್ಲ ಉತ್ಸಾಹೀ ಯುವ ನಿರ್ದೇಶಕರೂ ಇಂದು ಬಂದಿದ್ದಾರೆ. ಇಂಥ ಪ್ರಯತ್ನಗಳು ಹೆಚ್ಚಿದಾಗ ಮಾತ್ರ ಹೊಸ ಹೊಸ ಮುಖಗಳು ಚಿತ್ರರಂಗಕ್ಕೆ ಬರುವುದು ಸಾಧ್ಯ. +ಸರ್ಕಾರದ ಸದಾಶಯಗಳು ಕಾರ್ಯರೂಪಕ್ಕೆ ಬರಲೇಬೇಕೆಂದರೆ ಇಂಥ ಚಿತ್ರಗಳಿಗೇ ಮೀಸಲಾದ ಸುಸಜ್ಜಿತ ಮಿನಿ ಚಿತ್ರಮಂದಿರಗಳು ಬೇಕು. ಅವಿಲ್ಲದಿರುವುದರಿಂದಾಗಿಯೇ ಲೋಬಜೆಟ್ ಚಿತ್ರಗಳು-ವ್ಯಾಪಾರಿ ಚಿತ್ರಗಳ ಅಬ್ಬರದ ಅಲೆಯ ಮಾರುತಕ್ಕೆ ಸಿಲುಕಿ ಚಿಂದಿ ಎದ್ದು ಹೋಗಿದೆ. ಅರಮನೆ ಪಕ್ಕದಲ್ಲಿರುವ ಗುಡಿಸಲುಗಳು ಭೀಕರ ಬಿರುಗಾಳಿಗೆ ತತ್ತರಿಸಿ ಅಡ್ರೆಸ್ಸಿಗಿಲ್ಲದಂತಾಗುತ್ತದೆ. +ಕಣಗಾಲ್ ಪುಟ್ಟಣ್ಣ ಚಿತ್ರಮಂದಿರವಾದರೂ ಇಂಥ ಲೋಬಜೆಟ್ ಚಿತ್ರದವರಿಗೆ ಪರ್ಸಂಟೇಜ್ ಮೇಲೆ ಸಿಕ್ಕಲ್ಲಿ-ಅದೊಂದು ‘ಆಕ್ಸಿಜನ್ ಸಿಲಿಂಡರ್‍’ ಎನಿಸೀತು. +ಕಣಗಾಲರು ಚಿತ್ರರಂಗಕ್ಕೆ ಕೊಡುಗೆಯಾಗಿತ್ತ ಅಂಬರೀಷ್ ಹಾಗೂ ವಿಷ್ಣು-ತಮ್ಮ ಗುರುಗಳ ಹೆಸರಿನ ಚಿತ್ರಮಂದಿರಕ್ಕೆ ಹೊಸತನದ ಮೆರುಗು ನೀಡುವೆವು ಎಂದರು. +ಅದು ಈವರೆಗೆ ಮಂತ್ರಿಗಳ ಆಶ್ವಾಸನೆಯಂತೆ ಆಗಿದೆ. ಹೀಗಾಗಿ ಹೊಸ ಹೊಸ ಚಿಂತನೆಗಳು ಚಿತ್ರರಂಗದಲ್ಲಿ ಅರಳುವುದಾದರೂ ಎಂತು? ಸದಭಿರುಚಿ, ಸೂಕ್ಷ್ಮಭಾವನೆಗಳು, ಅರ್ಥಪೂರ್ಣ ಅನಿಸಿಕೆಗಳು, ಹೊಸ ಹೊಸ ಪ್ರಯೋಗಗಳು ಚಲನಚಿತ್ರರಂಗದಿಂದ ಗಾವುದ ದೂರವೇ ಇರಬೇಕೆ? +ಮಿನಿ ಚಿತ್ರಮಂದಿರಗಳಿಲ್ಲದಿರುವುದರಿಂದಾಗಿ ಲೋಬಜೆಟ್ ನಿರ್ಮಾಪಕ-ನಿರ್ದೇಶಕರು ಗಾಂಧೀನಗರದಿಂದ ‘ಔಟ್ ಆಫ್ ಬೌಂಡ್ಸ್’ ಎನ್ನುವಂತಾಗಿದೆ. +ಸದಭಿರುಚಿ ಚಿತ್ರಗಳ ಬಗ್ಗೆ ತುಂಬ ಒಲವು ತೋರುವ ವಾರ್ತಾ ಸಚಿವ ಪ್ರೊ. ಬಿ.ಕೆ.ಸಿ. ಇಂಥ ಕಡೆ ಮುಖ್ಯಮಂತ್ರಿಗಳ ಗಮನವನ್ನು ಎಳೆವಂತಾದರೆ ಚೆನ್ನ. +ಇಲ್ಲವಾದಲ್ಲಿ ಜನಪ್ರಿಯ ನಟ-ನಟಿಯರೂ ಕ್ರೌಡ್ ಪುಲ್ಲಿಂಗ್‌ಗೆ ಬೇಕಾದವರು ಎಂಬ ಹಿಂದೆ ಕಾರಣಕ್ಕೆ ನೋಡಿದ ಅದೇ ನಾಲ್ಕಾರು ಮುಖಗಳನ್ನು ಅವರಿಗೆ ಎಷ್ಟೇ ವಯಸ್ಸಾಗಲಿ ಕಾಲೇಜು ಹುಡುಗರೆಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ. +ಚಿತ್ರದ ನಿಜವಾದ ಹೀರೋ ಕಥೆ ಎಂದು ಜನ ಒಪ್ಪಿದ ಮರುಘಳಿಗೆ ಹೊಸ ಮುಖಕ್ಕೂ ಆರತಿ ಎತ್ತತೊಡಗುತ್ತಾರೆ. ಇಲ್ಲವಾದಲ್ಲಿ ಜನ ಕೇಳಿದ್ದನ್ನು ಕೊಡುತ್ತಿದ್ದೇವೆ ಎಂಬ ಕಾರಣಮಾಡಿ ಡಬ್ಬಲ್ ಮೀನಿಂಗ್, ಟ್ರಿಬ್ಬಲ್ ಮೀನಿಂಗ್ ಡೈಲಾಗ್‌ಗಳನ್ನು ತುರುಕಿ, ಸೆಕ್ಸೀ ದೃಶ್ಯಗಳ ಸರಮಾಲೆ ಪೋಣಿಸಿ ನಾನಾ ಷೇಪಿನವರನ್ನು ಕರೆತಂದು ಬೆತ್ತಲಾಗಿಸಿ ‘ರೇಪ್’ ಮಾಡಿಸಿ, ಆಕ್ಷನ್ ಫಿಲಂಗಳ ಹೆಸರಿನಲ್ಲಿ ಎಲ್ಲ ಚಿತ್ರಮಂದಿರಗಳನ್ನೂ ಕಾಮಪ್ರಚೋದನಾ ಕೇಂದ್ರಗಳಾಗಿ ಮಾಡಬಲ್ಲ ಮಹಾ ಚಾಣಾಕ್ಷರೂ ಗಾಂಧೀನಗರದಲ್ಲಿದ್ದಾರೆ. +ಇದಕ್ಕೆ ಪರ್‍ಯಾಯ ತಂತ್ರವೆಂದರೆ ನಾಲ್ಕಾರು ಮಿನಿಚಿತ್ರಮಂದಿರಗಳನ್ನು ಆರಂಭಿಸುವುದು ತುಂಬ ಮುಖ್ಯ. ಇಲ್ಲವಾದಲ್ಲಿ ನಾಳೆ ಆಹ್ವಾನ ಪತ್ರಿಕೆಗಳು ಹೀಗೆ ಬಂದೀತು. +ಆತ್ಮೀಯ ಪತ್ರಕರ್ತರೆ, +“ಈಗ ತುಂಬ ಕಡಿಮೆ ವೆಚ್ಚದಲ್ಲಿ ಒಂದು ಚಿತ್ರ ಅಣಿ ಮಾಡಿರುವೆ. ಗಾಂಧೀನಗರದ ವಿತರಕರು ನಮ್ಮನ್ನು ಕ್ಯಾರೇ ಎನ್ನುತ್ತಿಲ್ಲ. ಚಿತ್ರ ಮಾಡಿದ ಮೇಲೆ ಅದು ಡಬ್ಬದಲ್ಲೇ ಕೊಳೆಯುವುದು ನಮಗಿಷ್ಟವಿಲ್ಲ. ಕನಿಷ್ಠ ನೀವಾದರೂ ಬಂದು ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದಲ್ಲಿ ಉಪಕಾರ. ಇದೆ ಚಿತ್ರ ೪ ದಿನ ಕಾರ್ಪೊರೇಷನ್ ಎದುರಿಗಿರುವ ಬಾದಾಮಿ ಹೌಸ್‌ನಲ್ಲಿ ಏರ್ಪಡಿಸಿದ್ದೇವೆ. +-ಮಲ-ಮೂತ್ರಗಳನ್ನು ದಯಮಾಡಿ ಮನೆಯಲ್ಲೇ ಮುಗಿಸಿಕೊಂಡು ಬನ್ನಿ. ಏಕೆಂದರೆ ಅಲ್ಲಿರುವುದು ಒಂದೆ ಟಾಯ್ಲೆಟ್. +ಇಂಟ್ರವೆಲ್‌ನಲ್ಲಿ ನೀವು ‘ಕ್ಯೂ’ನಲ್ಲಿ ನಿಂತು ವಾಪಸ್ಸು ಬರುವ ಹೊತ್ತಿಗೆ ಒಂದು ರೀಲ್ ಮುಗಿದು ಕಥೆಯೇ ಅರ್ಥವಾಗದೆ ಹೋದೀತು. ಹಾಗಾದಲ್ಲಿ ನಮ್ಮ ಪ್ರಯತ್ನ ವ್ಯರ್ಥ ಎಂಬ ಕಾರಣಕ್ಕೆ ಈ ವಿವರಣೆ ನೀಡಿದ್ದೇವೆ. ಖಂಡಿತಾ ಬನ್ನಿ- +-ನಿರ್ಮಾಪಕರು” +– ಇಂಥ ಪರಿಸ್ಥಿತಿ +ಬರದಿರಬೇಕಾದರೆ ಮಿನಿಚಿತ್ರಮಂದಿರಗಳು ಅಗತ್ಯ ಬೇಕಲ್ಲವೆ? +***** +(೨೦-೧೦-೨೦೦೦) +ಕನ್ನಡ ಚಿತ್ರರಂಗದಲ್ಲಿ ತನ್ನ ಸ್ವಂತ ಪ್ರತಿಭೆಯನ್ನೇ ಬಂಡವಾಳ ಮಾಡಿಕೊಂಡು ಯಾವ ಗಾಡ್‌ಫಾದರ್‍ ನೆರವೂ ಇಲ್ಲದೆ ತನ್ನದೇ ಆದ ಒಂದು ಹೊಸ ಟ್ರೆಂಡನ್ನು ಹುಟ್ಟುಹಾಕಿದ ಪ್ರತಿಭಾವಂತ ಜಗ್ಗೇಶ್. ಒಂದು ಕಾಲದಲ್ಲಿ ಆತ ಅಂಗಲಾಚಿದರೂ ಪತ್ರಿಕೆಗಳಲ್ಲಿ ಒಂದೇ […] +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_162.txt b/Kannada Sahitya/article_162.txt new file mode 100644 index 0000000000000000000000000000000000000000..958a465da5853f30aa8026c564f2d72376c04877 --- /dev/null +++ b/Kannada Sahitya/article_162.txt @@ -0,0 +1,40 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಬಗೆಯೇ ಬಿಸಿ ಬಿಸಿ ಚರ್ಚೆ ನಡೆಯುತ್ತಿತ್ತು. ಮಿ. ಎಂಕನ ಮನೆಯಲ್ಲಿ ಉದಯ ಟಿ.ವಿ. ದೂರದರ್ಶನ, ಸಿಟಿ ಚಾನೆಲ್, ಇನ್ ಬೆಂಗಳೂರು ಮುಂತಾದವುಗಳಿಂದಲೇ ‘ಮನೆ’ ಬಿಟ್ಟು ಚಿತ್ರಮಂದಿರದತ್ತ ಹೋಗುವವರ ಸಂಖ್ಯೆ ಕಡಿಮೆಯಾಗಿದೆ ಎಂದು ಗೊಣಗುತ್ತಿದ್ದರು ಎಲ್ಲ. +“ಇನ್ನು ಬಿಡು, ಎಂಕ, ಸುಪ್ರಭಾತ-ಕಾವೇರಿ-ಜ್ಹೀಟೀವಿಯವರು-ಈ ಟೀವೀಯವರು ಭರ್‍ರನೆ ಬರುವ ಸಿದ್ಧತೆ ನಡೆಸಿದ್ದಾರೆ. ಉದಯವಾಣಿಯ ‘ಪೈ’ ಅವರು, ವಿಜಯ ಕರ್ನಾಟಕದ ವಿಜಯ ಸಂಕೇಶ್ವರ ಅವರೂ ಒಂದೊಂದು ಹೊಸ ಛಾನೆಲ್ ಆರಂಭಿಸುವರೆಂಬ ಮಾತಿದೆ. ಅವೆಲ್ಲ ಆದರೆ ಸಿನಿಮಾ ಕಡೆ ತಿರುಗಿ ನೋಡೋರು ಇರಲ್ಲ.” +“ಹಾಗೆ ಹೇಳಬೇಡ ಗೆಳೆಯ, ಟೀವೀಲಿ ಟೈಟಾನಿಕ್ ನೋಡೋಕೂ- ದೊಡ್ಡ ತೆರೇಲಿ ಟೈಟಾನಿಕ್ ನೋಡೋಕೂ ವ್ಯತ್ಯಾಸ ಇಲ್ಲವೆ? ಆ ಸಿನಿಮಾ ಅದ್ಭುತ ಅನಿಸಿಬೇಕಾದ್ರೆ ಬಿಗ್‌ಸ್ಕ್ರೀನ್‌ನಲ್ಲೇ ನೋಡಬೇಕು” ಎಂದು ಎಂಕ ಆಶಾವಾದಿಯಂತೆ ನುಡಿದ. +“ಅಂತ ಅಪರೂಪದ ಚಿತ್ರಗಳು ಸಾವಿರಕ್ಕೆ ಒಂದಿರಬಹುದಷ್ಟೆ” +“ಹಾಗೆ ಯಾಕೆ ಅಂತೀ, ಕನ್ನಡಕ್ಕೆ ಹೆಸರು ತರಬಲ್ಲ ಕೆಲವಾದರೂ ಒಳ್ಳೆ ಚಿತ್ರಗಳು ಬಂದಿವೆ” +“ಕೆಲವಾದರೂ ಅಂದೆಯಲ್ಲ ಎಂಕ. ಈ ಮಾತು ಒಪ್ಪಬಹುದು. ಆದರೆ ಬರಬಾರದಂಥ ಕನ್ನಡ ಚಿತ್ರಗಳದೇ ಮೆಜಾರಿಟಿ ಇದೆಯಲ್ಲ ಅದಕ್ಕೆ ಏನು ಹೇಳ್ತೀ?” +“ಮಾಡಿದ್ದುಣ್ಣೋ ಮಾಹರಾಯ ಅನ್ನಬೇಕಷ್ಟೆ. ಅದಕ್ಕೆ ಏನು ಮಾಡಕ್ಕೆ ಆಗಲ್ಲ” +“ಈಗಂತೂ ಸಿನಿಮಾದವರೆಲ್ಲ ಟೀವೀಲಿ ಮಾಡ್ತಿದಾರೆ. ಟೀವಿ ಒಂದು ಥರಾ ‘ವಿಸ್ಕಿ’ ಇದ್ದ ಹಾಗೆ. ಹಣವೂ ಬರುತ್ತೆ-ಹೆಸರೂ ಬರುತ್ತೆ-ಜನಪ್ರಿಯತೆಯ ಅಮಲೂ ಸಿಗತ್ತೆ. +‘ಸಿನಿಮಾ’ನ ‘ವಿಸ್ಕಿ’ ಅಂತ ಹೇಳಕ್ಕೆ ಆಗಲ್ಲ. ಅದು ತುಂಬಾ ರಿಸ್ಕಿ. ರೇಸ್ ಕುದುರೆ ಮೇಲೆ ಹಣ ಕಟ್ಟಿದ ಹಾಗೆ. ಗೆದ್ದರೆ ಜಾಕ್‌ಪಾಟ್. ಸೋತರೆ ಕೇರಾಫ್ ಫುಟ್ಪಾತ್. ಅಂದರೆ ಲಕ್ಷಾಧೀಶ ಇಲ್ಲವೇ ಭಿಕ್ಷಾಧೀಶ’ +ಹೀಗೆ ಮೇನ್ ರೋಡ್‌ನಲ್ಲಿ ಆರಂಭವಾದ ಮಾತು ಸಂದು-ಗೊಂದುಗಳಲ್ಲೂ ನುಗ್ಗಿ ಕೆಲವೊಮ್ಮೆ ಹೆಲಿಕಾಪ್ಟರ್‌ನಲ್ಲಿ ಹಿಮಾಲಯದೆತ್ತರಕ್ಕೆ ಹಾರಿದರೂ ವಾಸ್ತವಕ್ಕೆ ಮರಳಿದಾಗ ಎಲ್ಲ ಖಿನ್ನರಾಗೇ ಕುಳಿತಿದ್ದರು. +“ಹೆಚ್ಚು ಚಾನೆಲ್‌ಗಳು ಬಂದದ್ದರಿಂದ ಕನ್ನಡ ಕಲೆ, ಸಂಸ್ಕೃತಿ ಉದ್ಧಾರವಾದೀತಲ್ಲವೆ ಎಂಕ” +“ಹಾಗೆ ಹೇಳಕ್ಕೆ ಆಗಲ್ಲ. ಕನ್ನಡ ನೆಟ್ಟಗೆ ಮಾತಾಡೋರು ಎಷ್ಟು ಜನ ಇದ್ದಾರೆ. ದೂರದರ್ಶನ ನೋಡು. ಉದಯ ಟೀವಿ ನೋಡು ಎಂಗೆ-ಪಂಗೆ ಅಂತ ಮಾತಾಡೋರೇ ಜಾಸ್ತಿ. ಡಾ. ರಾಜ್ ಥರಾ ಸ್ಪಷ್ಟವಾಗಿ ಕನ್ನಡ ಉಚ್ಛಾರ ಮಾಡೋರು ಎಷ್ಟು ಜನ ಇದ್ದಾರೆ.” +“ಆ ಮಾತು ಒಪ್ಕೊಳ್ಳೋಣ. ಆದ್ರೆ ಹೊಸ ಮುಖಗಳು ಬರಲಿಕ್ಕೆ ಟಿ.ವಿ.ಚಾನೆಲ್‌ಗಳು ಹೆಚ್ಚು ಅವಕಾಶ ಮಾಡತ್ತಲ್ವ” +“ಇಲ್ಲ ಅಂತ ಹೇಳಕ್ಕೆ ಆಗಲ್ಲ, ಆದರೆ ಜಾಹಿರಾತು ಹಿಡ್ಕೊಂಡು ಬರಬಲ್ಲ ಯಾರು ಬೇಕಾದ್ರೂ ನಟ-ನಟಿಯರಾಗಬಲ್ಲ ಒಂದು ಅಪಾಯವೂ ಇದೆ ಟ.ವಿ.ಗಳಿಂದ” +“ಅಲ್ಲ ಎಂಕ, ಹತ್ತಾರು ಚಾನೆಲ್‌ಗಳಾದಾಗಲೇ ಅಲ್ಲವಾ ಹೊಸ ಹೊಸ ನಟ-ನಟಿಯರು ಬರೋದು” +“ನಿಜ, ಈಗ ರಂಗಭೂಮಿಲಿ ಇರೋರೆಲ್ಲ ಹೋಲ್‌ಸೇಲ್ ಆಗಿ ಟಿ.ವಿ.ಗೆ ಬಂದಿದ್ದಾರೆ. ಆದರಿಂದಲೇ ನಾಟಕದ ಮೇಜರ್‍ ಪ್ರೊಡಕ್ಷನ್ಸ್ ಆಗ್ತಾನೆ ಇಲ್ಲ. ಕಂಪನಿ ರಂಗಭೂಮೀಲಿ ನಟ-ನಟಿಯರನ್ನು ಹಾರಿಸ್ಕೊಂಡು ಹೋಗೋರು. ಈಗ ಅದೇ ಕೆಲಸ ಮೆಗಾ ಧಾರಾವಾಹಿ ಹೆಸರು ಹೇಳಿ ಟೀವಿಯವರು ಮಾಡ್ತಿದಾರೆ ಅಲ್ವ?” +“ಅದರಿಂದಲೇ ಬಹಳ ಕನ್ನಡ ಸಿನಿಮಾಗಳು ನೋಡಿದಾಗ ಒಂದು ನಾಟಕ ನೋಡಿದ ಹಾಗೆ ಆಗುತ್ತೆ, ಇಲ್ಲವೇ ಒಂದು ಟ.ವಿ.ಸೀರಿಯಲ್ ನೋಡಿದ ಹಾಗೆ ಆಗುತ್ತೆ” +“ಇನ್ನೊಂದು ಐದು ವರ್ಷ ಕಾದು ನೋಡು. ಕನ್ನಡ ಎಕ್ಕುಟ್ಟಿ ಹೋಗಿರತ್ತೆ. ಹೈಸ್ಕೂಲು-ಕಾಲೇಜುಗಳಲ್ಲಿ ಚಿಕ್ಕಪುಟ್ಟ ಪಾರ್ಟ್ ಮಾಡತಿದ್ದವರೆಲ್ಲ ನಟ-ನಟಿಯರಾಗ್ ಬಿಡ್ತಾರೆ” +“ಹಾಗಾರೆ ಹೊಸ ಮುಖಗಳು ಬರೋದು ತಪ್ಪಾ? ಎಷ್ಟೇ ವಯಸ್ಸು ಆದರೂ ಮತ್ತೆ ಅದೇ ಅದೇ ಮುಖಗಳನ್ನು ನೋಡ್ತಿರಬೇಕಾ, ನಾಲ್ಕು ಮಕ್ಕಳ ತಂದೆ-ತಾಯಿ ಆದವರು ಹೀರೋ-ಹೀರೋಯಿನ್ ಅಂತ ಎಷ್ಟು ದಿನ ಒಪ್ಪಿಕೊಳ್ಳೋದು”. +“ಈಗ ಕನ್ನಡದ ಹಿರಿಯ ನಟ-ನಟಿಯರು ವಯೋಮಾನಕ್ಕೆ ತಕ್ಕ ಪಾತ್ರ ಮಾಡೋ ಮನಸ್ಸು ಮಾಡ್ತಿದಾರೆ ಅಂತ ಈಚೆಗೆ ಬರ್‍ತಿರೋ ಚಿತ್ರಗಳು ನೋಡಿದರೆ ಸ್ಪಷ್ಟವಾಗುತ್ತೆ. ಆದರೆ ಅವರಿಗಿದ್ದ ಡೆಡಿಕೇಷನ್ ಈಗಿನ ಎಂಗರ್‍ ಜನರೇಷನ್‌ಗೆ ಇದೆ ಅಂತ ಹೇಳಲಾರೆ” +“ಹಾಗಾಗಕ್ಕೆ ಕಾರಣ?” +“ಹಣ, ದಿಢೀರ್‍ ಜನಪ್ರಿಯತೆ-ಧಾರಾಳವಾದ ಹಣದ ಹೊಳೆ. ಮುಂಚೆ ಯೂನಿಟ್‌ಗಳಲ್ಲಿ ಇದ್ದ ಪ್ರೀತಿ-ಸೌಹಾರ್ದ ಈಗ ಎಲ್ಲಿದೆ. ಈ ಮಾತನ್ನು ನಾಗರಹೊಳೆ ರೀ ರಿಲೀಸ್ ಟೈಂನಲ್ಲಿ ರಾಜೇಂದ್ರಸಿಂಗ್‌ಬಾಬು ತುಂಬಾ ಚೆನ್ನಾಗಿ ಹೇಳಿದರು” +“ಹಾಗಾರೀಗ ಏನಾಗಬೇಕೂಂತ ಎಂಕ?” +ಮೊನ್ನೆ ಕನ್ನಡದ ಖ್ಯಾತ ವಿಮರ್ಶಕ ಲೇಖಕ ಕಿ.ರಂ. ನಾಗರಾಜ್ ಹೇಳತಿದ್ರು “ಮೊದಲು ಎಲ್ರಿಗೂ ಕನ್ನಡ ಮಾತಾಡೋದು. ಬರಿಯೋದು ಕಲಿಸಬೇಕು. ಕನ್ನಡದ ಸಾಹಿತ್ಯದಲ್ಲಿರೋ ಲಾಲಿತ್ಯದ ಸೊಗಸನ್ನು, ಅಂತ್ಯ ಪ್ರಾಸಗಳ ಅಂದವನ್ನು, ಧ್ವನಿಯ ಏರಿಳಿತದಿಂದ ಉಂಟಾಗುವ ಪ್ರಭಾವವನ್ನು ಈಗಿಂದ ಮಕ್ಕಳಿಗೂ ಕಲಿಸಬೇಕು. ಅವರೇ ನಾಳಿನ ಲೇಖಕರು, ನಟರು, ಮೇಷ್ಟ್ರುಗಳು, ಕಾಯಕವೇ ಕೈಲಾಸ. ಪ್ರಯತ್ನಪಟ್ಟರೆ ಯಾರು ಏನುಬೇಕಾದ್ರೂ ಆಗಬಹುದು. ಆದರೆ ಒಳ್ಳೆ ಕನ್ನಡ ಬರೆಯೋದು. ಮಾತಾಡೋದು ಸತ್ವಪೂರ್ಣ ಸಾಹಿತ್ಯ ರಚಿಸೋದು ಸಾಧ್ಯವಾಬೇಕೂಂದ್ರೆ ಕಲಿಕೆಯಲ್ಲಿ ಪ್ರೀತಿ ಇರಬೇಕು. ಗ್ರಹಿಕೆಯಲ್ಲಿ ಒಲವಿರಬೇಕು. ಅದಕ್ಕೆ ಲೇಖಕರಾಗುವ ಮುನ್ನ, ನಟರಾಗುವ ಮುನ್ನ, ಸಂಗೀತ ನಿರ್ದೇಶಕರಾಗುವ ಮುನ್ನ, ಎಲ್ಲಕ್ಕೂ ತರಬೇತಿ ಶಿಬಿರಗಳು ಅಗತ್ಯ” ಎಂದರು. +“ಈ ಮಾತು ಖಂಡಿತಾ ನಿಜವೆನ್ನಿಸುತ್ತೆ” ಎಂದಾಗ ಚರ್ಚೆಗೆ ಮೌನದ ಮುದ್ರೆ ಬಿತ್ತು. +***** +(೧೪-೪-೨೦೦೦) +ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […] +ಕನ್ನಡ ಚಿತ್ರರಂಗದಲ್ಲಿ ಆರಂಭಕ್ಕೆ ‘ಪುಸ್ತಕ ಸಂಸ್ಕೃತಿ’ಗೆ ಪ್ರಥಮ ಪ್ರಾಧಾನ್ಯತೆ ಇತ್ತು. ಕತೆ, ಕಾದಂಬರಿ ಆಧಾರಿತ ಚಿತ್ರಗಳನೇಕವು ಬಂದು ಸಧಭಿರುಚಿಗೆ ಹೆಸರಾದುವು. ರೀಮೇಕಿನ ಒಲವು ಅತಿಯಾದಾಗ ಪುಸ್ತಕ ಸಂಸ್ಕೃತಿ ದಿಢೀರನೆ ಮಾಯವಾಗಿ ಬೇರೆ ಭಾಷೆಯ ಜನಪ್ರಿಯ […] +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_163.txt b/Kannada Sahitya/article_163.txt new file mode 100644 index 0000000000000000000000000000000000000000..f3f8d5f6c39a2e25f2367006d3158840371bd317 --- /dev/null +++ b/Kannada Sahitya/article_163.txt @@ -0,0 +1,46 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನಮ್ಮ ಮನೆ ಎದುರಿನ ಮರ +ಶಿಶಿರದಲ್ಲಿ ಉದುರಿ +ನಾಚಿಕೆಯೇ ಇಲ್ಲದೆ +ಬೆತ್ತಲೆ ನಿಂತು +ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ +ಬೆಳಗಿನ ಚುಮು ಚುಮು ಚಳಿಗೆ +ಮೈಯೊಡ್ಡಿ ನಿಂತು +ಹದಗೊಳ್ಳುತ್ತದೆ. +ಮತ್ತೆ ವಸಂತದಲ್ಲಿ +ನವವಧುವಿನಂತೆ +ಮತ್ತೆ ಹಸೆಮಣೆ ಏರಿ +ಮತ್ತೆ ಪ್ರಸ್ತದ ಕೋಣೆ ಸೇರಿ +ನೀರು ಬೆಳಕು ಗಂದಗಳ +ಸಾವಿರಕ್ಕೆ ಮತ್ತೆ ತಾಯಾಗಿ +ಮತ್ತೆ ತನ್ನವರನ್ನೆಲ್ಲಾ ತಬ್ಬಿ ನಿಲ್ಲುತ್ತದೆ. +ನಾವು, +ಕತ್ತಲೆಯು ಕರಗುವುದರೊಳಗೆ +ಉದುರಿ ಬೆತ್ತಲಾಗಿ, +ಬೆತ್ತಲಾದದ್ದಕ್ಕೆ ನಾಚಿ +ಹೆದರಿ +ಹೆದರಿದ್ದಕ್ಕೆ ಹೆರಲು ಹೊರಟಾಗ +ತೆರೆದು ಕೊಂಡದ್ದು ಮಾತ್ರಾ +ಬೆತ್ತಲಾಳದಿಂದ ಕತ್ತಲಿಗೆ ಕರಗುವ +ಮುನ್ನ ಉಳಿದ +ಕಾಮಕೇಳಿಗೆ. +***** +ಅಪ್ಪನ ಬಿಗಿ ಚಪ್ಪಲಿಗಳಲಿ ಕಾಲು ತೂರಿಸ ಹೊರಟೆ ಅವ ಬಿಡಲಿಲ್ಲ -ವೆಂದಲ್ಲ ನಾ ಹಿಂತೆಗೆದದ್ದು ಅದಿಲ್ಲದಿರೆ ಅವನ ಕಳೆಯೋ ಕತ್ತಲ ಹೊಳೆಯೋ ಗೊತ್ತಾಗುವಂತಿರಲಿಲ್ಲ. ಅದೊಂದು ದಿನ ಬರಲಿಕ್ಕುಂಟು ನಮ್ಮ ಮನೆ ಆತನ ಕಳಕೊಂಡು ಬಿಕ್ಕಿ […] +ಹೋದೆ ಹೋದೆನು ದೂರ ನಡೆದೆನು ಕನಸು ಕೈಹಿಡಿದಾಚೆಗೆ, ಊರಿನಾಚೆಗೆ ಗಿರಿಯ ಶೃಂಗಕೆ ಚೆಲುವು ಚಿಮ್ಮುವ ಕಾಡಿಗೆ; ಕಾಡಗಿಡಗಳು ಮುಗಿಲ ಮುತ್ತಿಡೆ ಈರ್ಷೆ ತೋರಿಸುವಲ್ಲಿಗೆ, ಹಚ್ಚ ಹಸುರಿನ ಪಚ್ಚ ಪಯಿರಿನ ನಿಚ್ಚಸುಂದರ ಬೀಡಿಗೆ ಏರಿ ಗಿರಿಯನು, […] +ಮುಗಿಲ ಮರೆಗಿರುವ ಮಿಂಚಿನಬಳ್ಳಿ, ಗಗನದಂ- ಚಿಗೆ ತನ್ನ ಕುಡಿನಾಲಗೆಯ ಚಾಚಿ ಕತ್ತಲೆಯ ತುತ್ತುವೊಲು, ಸಾಮಾನ್ಯದಲ್ಲು ಅಸಮಾನತೆಯ ಕಿಡಿಯೊಂದು ಅರಿಯದೊಲು ಅಡಗಿಹುದು ಕೃತುಬಲಂ! ಜನಜೀವನದ ಉಗ್ರ ಜಾಗ್ರತಿಯ ಬಿರುಗಾಳಿ ಬೀಸಲದೆ ಪ್ರಜ್ವಲಿಸಿ, ಕ್ರಾಂತಿಕಲಿಗಳ ಕೈಯ ಪಂಜಿನೊಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_164.txt b/Kannada Sahitya/article_164.txt new file mode 100644 index 0000000000000000000000000000000000000000..0e3372b4576e867d0985abffe2260d33748ec006 --- /dev/null +++ b/Kannada Sahitya/article_164.txt @@ -0,0 +1,41 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಲ್ಲವೂ ಸತ್ಯವನ್ನು ಮೀರಿದಂತೆ ಇತ್ತು. ನಾನು ಟ್ರೈನ್‌ನಲ್ಲಿ ಕುಳಿತಿದ್ದುದು…ಕುಳಿತಿದ್ದ ಅನುಭವವಂತೂ ಸತ್ಯ. ಟ್ರೈನ್ ಕೂಡ ತೂಗುತ್ತಿತ್ತು. ಕಿಟಕಿ ಒಂದು ಕ್ಯಾಮರಾದ ಕಿಂಡಿಯಂತೆ ಹೊರಗಿನ ಜಗತ್ತನ್ನು ತೋರಿಸುತಿತ್ತು. ಒಮ್ಮೊಮ್ಮೆ ರಭಸವಾಗಿ, ಒಮ್ಮೊಮ್ಮೆ ಮೆಲ್ಲಗೆ…ಸಾಗುತ್ತಾ ಕಂಡದ್ದಾದರೂ ಏನು? +ಮರಗಳು, ಗಿಡಗಳು, ಆಕಾಶ, ನಕ್ಷತ್ರ ಎಲ್ಲವೂ…ಸತ್ಯದ ಆಚೆ ಇನ್ನೆಲ್ಲೋ ಇದ್ದಂತೆ, ಎಲ್ಲವೂ ಹಿಂದೆ ಹಿಂದೆ ಹೋಗುತ್ತಿದ್ದಂತೆ. +ಆಗಷ್ಟೆ ಆಗಿದ್ದ ಅನುಭವದಿಂದ ಹೀಗನ್ನಿಸುತ್ತಿತ್ತೋ ಏನೋ, ಗೊತ್ತಿಲ್ಲ. ಮಧ್ಯಾಹ್ನದ ಬಿಸಿಲೇನು ರಣ ಬಿಸಿಲಾಗಿರಲಿಲ್ಲ. ಅದೇ ಹೇಳಿದೆನಲ್ಲ, ಸತ್ಯ ತನ್ನನ್ನು ತಾನೇ ಮೀರಿ ಒಂದು “ಪರ್‌ಫ಼ಾರ್‌ಮೆನ್ಸ್” ನಂತೆ ಇತ್ತು. ಅದರ ಹಿಂದೆ ಇದ್ದುದು ರಾಗ್ ಮಾರ್ವ, ಮಲ್ಲಿಕಾರ್ಜುನ್ ಮನ್ಸೂರ್ ಅವರದ್ದು. ಆ ಸಂಜೆ ಬೆಳಕು, ತೆಳುವಾಗಿ ಕತ್ತಲಾಗೋದು, ಆಗುತ್ತಾ ಆಗುತ್ತಾ ಒಪ್ಪಿಕೊಳ್ಳಲೇಬೇಕು ಅನ್ನುವ ಅದರ ಹಟವನ್ನು ಸಂಜೆ ಇಳಿಯುತ್ತಾ ತಿಳಿಸುತ್ತಿತ್ತು. “ಲಚ್ಛಾ ಸಾಕ್”ನಲ್ಲಿ ರಾಜಶೇಖರ್ ಅವರೂ ಅಷ್ಟೆ. +ಯಾರು ಹೇಳಿದ್ದು ಸಂಗೀತ ಅಮೂರ್ತ, ಅದು ಸ್ಪರ್ಶಕ್ಕೆ ಸಿಗುವುದಿಲ್ಲ ಎಂದು? ಮಲ್ಲಿಕಾರ್ಜುನರ ಆ ಮಾರ್ವದ “ರಿ” ಅಂದು ನನಗೆ ಮಾಡಿದ್ದಾದರೂ ಏನು? ನಿಂತ ನೀರನ್ನು ಕಲಕಿ ಉಂಗುರ ಏಳಿಸಿದ ಹಾಗೆ ಕಲಕಲ ಮಾಡಿ, ಮೇಲೆ ಅದರ ವಿಜೃಂಭಣೆ. +ಒಂದು ರೀತಿಯ ದಿಗ್ಭ್ರಾಂತಿಗೆ ಒಳಗಾದವಳಂತೆ ನಾನು. ಮುಂಬೈ ತಲುಪುತ್ತಾ, ತಲುಪುತ್ತಾ, ಈ ಎಲ್ಲ ಸತ್ಯಗಳೂ ಮತ್ತಷ್ಟು ವಿಸ್ತರಿಸುತ್ತಿರುವಂತೆ…ಗೊಂದಲ, ಕಸಿವಿಸಿ… +ಹಾಡುತ್ತಿದ್ದವರು ಮಲ್ಲಿಕಾರ್ಜುನ ಮನ್ಸೂರ ಮತ್ತು ಅವರ ಮಗ ರಾಜಶೇಖರರು. ನನ್ನ ಸತ್ಯಗಳಿಗೇನಾಗುತ್ತಿದೆ ಅದರಿಂದ? ನನ್ನ ಮೇಷ್ಟ್ರು ಕಲಿಸಿಕೊಡುವಾಗ ಹೇಳಿದ್ದು ತಟ್ಟನೆ ನೆನಪಾಯಿತು. ಸಂಗೀತ ಯಾವಾಗ ಏನು ರೂಪ ತಾಳುತ್ತದೋ ಗೊತ್ತಿಲ್ಲ ಎಂದು. +ಹೌದು, ಇದನ್ನೆಲ್ಲ ಅರ್ಥ ಮಾಡಿಕೊಳ್ಳಲು ಇಷ್ಟು ವರ್ಷ ಬೇಕಾಯಿತು. ಹಾ! ಹತ್ತು ವರ್ಷಗಳ ಹಿಂದೆ ಹೀಗೆ ಸಂಗೀತದಿಂದ ಸತ್ಯವನ್ನು ಮೀರಿದ ಅನುಭವ ಆಗಲು ಸಾಧ್ಯವೇ ಇರಲಿಲ್ಲ. ಯಾಕೆ ಅಂತೀರ? ಸಂಗೀತ ಕೇಳೋದು ಬಿಟ್ಟು ಅದರ “ವ್ಯಾಕರಣ” ಎಂಬ ಗೋಣೀಚೀಲದಲ್ಲಿ ಹುದುಗಿ ನನ್ನನ್ನು ನಾನೇ ಹೊಲಿದುಕೊಂಡುಬಿಡುತ್ತಿದ್ದೆ. +ಟ್ರೈನ್ ಹೋಗುವ ಸದ್ದು. ಮನುಷ್ಯರು ಮಾತಾಡುವ ಸದ್ದು, ಆದೂ ಇದೂ ಮಾರಿಕೊಂಡು ಬರುವವರ ಸದ್ದು ಬಿಟ್ಟರೆ, ಬರೇ ಮೌನ. ಆ ಸದ್ದುಗಳು ತಾವಾಗಿಯೇ ಮುಳುಗಿ ಹೋದವು ಅನಿಸಿತು. ಮನ್ಸೂರರು ಮಾರ್ವದಲ್ಲಿ ತಾರಸ್ಥಾಯಿಗೆ ಹೋಗಿ “ರಿ” ಹಿಡಿದದ್ದು ಮೌನಕ್ಕೆ ಒಂದು ವಿಚಿತ್ರ ಅಭಿವ್ಯಕ್ತಿ ಕೊಟ್ಟಂತೆ ಇತ್ತು. ಆ ಮೌನ ಬಿರುಗಾಳಿ, ಭೂಕಂಪದ ಮುಂಚಿನ ತಣ್ಣನೆಯ ತಲ್ಲಣದಂತೆ. +ಮತ್ತೆ ಮೇಲೆ ರಣ ಬಿಸಿಲಲ್ಲ. ಸೂರ್ಯ ಯಾಕೋ ಎಲ್ಲ ಕಳೆದುಕೊಂಡು ನಿರಾಸೆಯ ಸೊಂಪಿನಲ್ಲಿ ಹಾಗೆ ತೂಗಾಡುತ್ತಾ ಇದ್ದಾನೆ ಎನ್ನಿಸಿತು. ನನಗೋ ಗೊತ್ತುಗುರಿ ಇಲ್ಲದ ಹುಡುಕಾಟ. ಇದರ ಮಧ್ಯೆ ಈ ಮನುಷ್ಯ ತನ್ನ ಲೋಕವನ್ನು ಭಸ್ಮ ಮಾಡಿ, ಮೈಗೆ ಬಳಿದುಕೊಂಡು “ನಾ ಜಾನೊ ಕಬ ಘರ ಆಯೆ…” ಅಂತ ಹಾಡಿದಾಗ ಈ ಮೂರು ಸತ್ಯಗಳ ಅರಿವಾದಂತೆ ಅನಿಸಿತು. +ಒಂದಡೆ ಸೂರ್ಯ, ಮತ್ತೊಂದಡೆ ಮನ್ಸೂರರ ಮಾರ್ವ, ಮತ್ತು ನಾನು. ಜನ್ಮಜನ್ಮಕ್ಕೂ ನನ್ನ ಮೇಷ್ಟ್ರ ಋಣವನ್ನು ತೀರಿಸುವುದು ಸಾಧ್ಯವೇ ಇಲ್ಲ. ಅವರು ನನ್ನನ್ನು ಬೆಳೆಸಿದ ರೀತಿ, ಇಂದು ನಾನು ಈ ಸತ್ಯಗಳನ್ನು ಒರೆಗೆ ಹಚ್ಚಿ ನೋಡುವಂತೆ ಮಾಡಿದೆ. ಮೊದಲು ನನ್ನ ಬಾಯಲ್ಲಿ ಬರುತ್ತಿದ್ದ ಮಾತೆಂದರೆ “ಅವರು ಚೆನ್ನಾಗಿ ಹಾಡ್ತಾರೆ…ಇವರಿಗೆ ಹಾಡಲಿಕ್ಕೆ ಬರಲ್ಲ…ಅವರ ಕಾನ್ ಸ್ವಲ್ಪ ವೀಕ್ ಆಗಿದೆ, ಅವರ ಸುರ್ ಅಷ್ಟೇನೂ ಸುರೇಲ್ ಆಗಿಲ್ಲ…” ಕಲಿಯುತ್ತಾ, ಕಲಿಯುತ್ತಾ, ಏಟು ತಿನ್ನುತ್ತಾ, ಪ್ರೀತಿಸುತ್ತಾ, ಅನುಭವಿಸುತ್ತಾ ಬಂದ ನನಗೆ ಇಂದು ಅರ್ಥವಾಗೋದು ಇಷ್ಟೆ. ಅದು ಒಂದು “ಘಳಿಗೆ” (ಮೊಮೆಂಟ್) ಆ ಘಳಿಗೆಯಲ್ಲಿ ಏನು “ಝಗ್” ಎಂದು ತೂರಿಕೊಂಡು ಬರುತ್ತದೋ ಎಂಬುದು ಹಾಡುವವರಿಗೆ ಮಾತ್ರ ಗೊತ್ತಿದ್ದಿರಬಹುದು. ಅದು ಒಂದು ಅನುಭವ, ಆ ಘಳಿಗೆಗೆ ತಕ್ಕ ಹಾಗೆ ನಾವು ತಿರುಗಬೇಕು, “ವೈಬ್ರೇಟ್” ಆದರೆ ಸರಿ, ಇಲ್ಲದಿದ್ದರೆ ಬಿಟ್ಟು ಬಿಡಬೇಕು. +ಅರೇ! ನಾನು ಕೇಳ್ತಿರೋದು ವಾಕ್‌ಮ್ಯಾನ್‌ನಲ್ಲಿ. ಅವರು ಉಸಿರುಕಟ್ಟಿ ಜಡಿದ “ತಾನು” ಬಂದು ಕಿಟಕಿಯಂದಾಚೆ ಇರುವ ಆ ಎಲೆಗಳನ್ನು ಗಾಬರಿ ಪಡಿಸಿದರೇ? ಸೂರ್ಯನೂ ಕೂಡ ಏನೋ ನೋಡುತ್ತಾ ನೋಡುತ್ತಾ ಈ “ತಾನ್” ಗೆ ನಿಟ್ಟುಸಿರು ಬಿಟ್ಟ ಎನ್ನಿಸಿತು. ನನ್ನ, ಸೂರ್ಯನ ಮತ್ತು ಮನ್ಸೂರರ ಅಕ್ಕಪಕ್ಕ ಜಗತ್ತು ತನ್ನದೇ ಆದ ಲಯದಲ್ಲಿ ನಡೀತಾನೇ ಇದೆ. ಇದ್ದಕ್ಕಿದ್ದಂತೆ ತನ್ನನ್ನು ತಾನು ಭಸ್ಮ ಮಾಡಿಕೊಂಡರೂ ಪ್ರತ್ಯಕ್ಷವಾಗದ ಶಿವನ ಮೇಲೆ ಸಿಟ್ಟು, ನಿರಾಸೆಯಾದಂತೆ ಮನ್ಸೂರರು ಆ ತಾನ್‌ಗಳ ಉಸಿರಾಟವನ್ನು ನಿಲ್ಲಿಸಿ ಆ ಶಡ್ಜ ಹಿಡಿದದ್ದು ಶಿವನನ್ನು ದುರುಗುಟ್ಟಿ ನೋಡಿದಂತೆ ಅನ್ನಿಸಿತು. ನನ್ನ ಕಲ್ಪನೆಗೆ ನಗು ಬಂತು. ಹೌದಲ್ಲ! ಅದು ಸತ್ಯ, ಕಲ್ಪನೆ ಅಲ್ಲ. +ನನ್ನ ಶಿವ, ನನ್ನ ಖುಸ್ರೋ, ನನ್ನ ಪ್ರೀತಿ…ಇಷ್ಟಾದರೂ ಇವರನ್ನೇ ನಾನು ಅರಸುತ್ತಿರುವುದು…ಶಿವನೂ ಇಲ್ಲ, ಹುಚ್ಚುತನ ಬರಲು ಒಳಗೆ ಸರಕೀ ಇಲ್ಲ…ಹ! ಇನ್ನು ಪ್ರೀತಿ ಎಲ್ಲಿ? ಈಗ ನನಗೆ ನಿಟ್ಟುಸಿರು. ಆ ಸೂರ್ಯನಿಗಾದರೂ ಎಂತಹ ಕಸಿವಿಸಿ? “ಈ ಮನ್ಸೂರ ಏನು? ನನ್ನ ಕೆಲಸ ಮಾಡುತ್ತಿರುವಂತೆ ಇದೆ!” ಎಂದುಕೊಂಡಾನೇನೋ. +ಯಾರು ಹೇಳಿದ್ದು ಸಂಗೀತ ಬರೀ ಕಿವಿಗೆ ಕೇಳಿಸೋದು ಅಂತ? ಸ್ಪರ್ಶಕ್ಕೆ ಸಿಗುತ್ತದೆ…ಕಣ್ಣಿಗೆ ಕಾಣುತ್ತದೆ…ವಿಚಿತ್ರವಾದ ಪರಿಮಳವನ್ನು ಹೊಂದಿಸುತ್ತಾ ಹೋಗುತ್ತದೆ. +ನಿಜ ಹೇಳಲಾ? ನಿಮಗೆ ಹುಚ್ಚು ಎನಿಸಬಹುದು. ವಿಲಾಯತ್ ಹುಸೇನ್ ಖಾನ್ ಸಾಹೇಬರ ಟೇಪ್ ಕೊಂಡಾಗ ಮೊದಲು “ಬಾಗೇಶ್ರೀ ಬಹಾರ್” ಎಂದು ಬರೆದಲ್ಲಿ ಮೂಸಿನೋಡಿದೆ. ಅದನ್ನು ಕೇಳುತ್ತಿದ್ದಾಗ ಒಳ್ಳೆ ಅಡಿಗೆಯ ಘಮವನ್ನು ಮೂಗಿಗೆ ತುಂಬಿಕೊಂಡಂತೆ ಬಾರಿ ಬಾರಿಗೂ ಉಸಿರೆಳೆದುಕೊಳ್ಳುತ್ತಿದ್ದೆ. ಬಾಯಿಗೆ ಸಿಕ್ಕ ರುಚಿಯಷ್ಟೇ ರುಚಿಯಲ್ಲ. ಹಾಡಿನ, ಸಂಗೀತದ ರುಚಿ ಕೂಡ ಹತ್ತುತ್ತದೆ… “ಟೇಸ್ಟ್ ಆಫ಼್ ಸಿಂಗಿಂಗ್” ಯಾರಾದರೂ ಹಾಡಬಹುದು…ಮತ್ತೆ ಈ “ಸೆರಿನಿಟಿ” ರಾಜಶೇಖರ್ ಅವರ “ಲಚ್ಛಾ ಸಾಕ್”…ಈಗಂತೂ ಬಣ್ಣಗಳೂ ತಮ್ಮ ಪಾತ್ರವಹಿಸಲು ಶುರು ಮಾಡಿದ್ದವು. ಕತ್ತಲು ಆಗುತ್ತಾ, ಆಗುತ್ತಾ ಹಸಿರೆಲೆಗಳ ಹಸಿರು ಕತ್ತಲ ಬಣ್ಣದಲ್ಲಿ ಸೇರಿಕೊಂಡು…ಮೋಡಗಳು ಲಚ್ಛಾ ಸಾಕ್‌ನ ಕೋಮಲ್ ನಿಷಾದ್‌ನ ಬಣ್ಣ ತಳೆದಂತೆ ಇತ್ತು. ಎಲ್ಲಿಯೋ ಸರಿದು ಹೋದಂತ ಒಂದು ಬೆಳಕಿನ ತುಂಡು ಆ ಅಂತರದಲ್ಲಿ ಬರುವ ಶುದ್ಧ ನಿಷಾದದಂತೆ…ಬೆಚ್ಚಿ ಬಿದ್ದು ಎದ್ದೆ. ನಿದ್ದೆಯಲ್ಲ ಅದು. ಹುಚ್ಚು. ಹೆದರಿಕೆ. ಗೊಂದಲ. ಅನಾಥಪ್ರಜ್ಝ್ನೆ ಬೆಳೆಯುತ್ತಾ ಇದೆ. ಪ್ರತಿಯೊಬ್ಬರ ಸಂಗೀತ ಕೇಳಿ, ಅರ್ಥವಾಗದ, ಅರ್ಥವಾಗುವ ಸತ್ಯಗಳನ್ನು ಅರಗಿಸಿಕೊಂಡಾಗಲೆಲ್ಲ, ನನ್ನ ಮೇಷ್ಟ್ರು ಇಲ್ಲದೆ ನನಗೆ ಜಗತ್ತೇ ಇಲ್ಲ ಎನಿಸಿ…ಮತ್ತೆ ರಾಜಶೇಖರರು ಆ ಶುದ್ಧ ನಿಷಾದ ಹಚ್ಚಿದರು..ಅಯ್ಯೋ ಹಳದಿ ಬಣ್ಣ…ಆ ಹಳದಿಯಲ್ಲಿ ಕೆಂಪೂ ಇದೆ ಸ್ವಲ್ಪ, ಸ್ವಲ್ಪ ನೇರಳೆ, ಸ್ವಲ್ಪ ಎಳೆ ನೇರಳೆ, ಆ ಹಳದಿ…ರಾಜಶೇಖರ ಅವರ ಆವಾಜು ಎರಡನ್ನೂ ಕಲಸಿ ಮೈಗೆಲ್ಲ ಹಚ್ಚುತ್ತಾ ಹಚ್ಚುತ್ತಾ, ಮತ್ತೆ ಎಚ್ಚರ… ಕನಸಲ್ಲ..ಸತ್ಯಗಳು, ತಮ್ಮನ್ನ ತಾವೇ ಮೀರಿ ನಿಂತಂತ ಸತ್ಯಗಳು. +ಇಡೀ ಜೈಪುರ ಘರಾಣಾದವರು…ಒಬ್ಬರಿಗಿಂತ ಒಬ್ಬರು…ಒಂದೇ “ಸ್ಕೂಲ್ ಆಫ಼್ ಥಾಟ್”…ಘರಾಣಾದ ಎಲ್ಲಾ ಅಂಶಗಳನ್ನು ಒಬ್ಬೊಬ್ಬರೂ ಬಳಸುವ ಅವರ ಪೂಜೆ…ಒಬ್ಬರು ಆಕಾಶದಂತೆ ಕಂಡರೆ ಇನ್ನೊಬ್ಬರು ತಮ್ಮನ್ನು ತಾವೇ ಸುಟ್ಟುಕೊಂಡು ಜಗತ್ತೇ ಇಲ್ಲ, ಇರುವುದು ಶಿವನೊಬ್ಬನೇ ಎಂಬಂತೆ, ಇನ್ನೊಬ್ಬರು ರಾಣಿಯಂತೆ, ಮತ್ತೊಬ್ಬರು ಗಾಂಭೀರ್ಯದಲ್ಲೆ ತಮ್ಮನ್ನು ತಾವು ಕಂಡುಕೊಳ್ಳುವಂತೆ… +ಹೌದು, ನನ್ನ ಈ ಜಗತ್ತಿನಲ್ಲಿ ಇವರ ಸಂಗೀತ ಯಾರ್‍ಯಾರನ್ನೆಲ್ಲ ಬದುಕಿಸಿಬಿಟ್ಟಿದೆ ಅಲ್ಲ? ನನಗೆ ಆ ಜೀವಗಳ ಬಗೆಗಿಗ ಸತ್ಯವನ್ನು ಪರಿಚಯಿಸಿದೆ..ಮತ್ತೆ ಟ್ರೈನ್ ನಲ್ಲಿ ಜಾತ್ರೆ ಸಾಗುತ್ತಲೇ ಇದೆ…ಯಾವುದೋ ಎರಡು ದೊಡ್ಡ ಕೈಗಳು ಚಾಚಿ ಕರೆದಂತಾಯಿತು. ಕೇಳುತ್ತಾ, ಕೇಳುತ್ತಾ ಕಣ್ಣಲ್ಲೆಲ್ಲಾ ನೀರು…ನನಗಿಂತಹ ಗುರುಗಳು ಸಿಗದೇ ಇದ್ದರೆ ಈ ಹುಚ್ಚೇ ಹಿಡಿಯುತ್ತಿರಲಿಲ್ಲ…ಇಲ್ಲ, ಈ ಹುಚ್ಚು ಬೇಕು…ಇದರಲ್ಲಿ ಮಿಂದು ಬೆಳಗಬೇಕು…ಭಸ್ಮವಾಗಿಬಿಡಬೇಕು… +ಮತ್ತೆ ರಾಜಶೇಖರರ ಗೋಧನ್ ಗೌರಿ…ಯಾವುದಕ್ಕೋ ಸಜ್ಜಾದಂತೆ… +ಒಂದು ನಗೆ ಬಂತು… +“ಕೇಳುತ್ತಾ ಕೇಳುತ್ತಾ ಕಣ್ಣು ಮುಚ್ಚಿದೆ ನೋಡವ್ವ +ಕೇಳುತ್ತಾ ಕೇಳುತ್ತಾ ಜಗವೇ ತೆರೆದುಕೊಂಡಿದೆ ನೋಡು…” +***** +ಮೊಗ್ಗು ಮೂಡುವ ಸಮಯವದು. ಎಷ್ಟೋ ದಿನಗಳ ನಾಡಿಮಿಡಿತ, ಹೃದಯದ ಬಡಿತ, ತುಮುಲಗಳ ಹಿಡಿತಗಳೆಲ್ಲಾ ಚುಕ್ಕಿಯಾಗಿ ಗಟ್ಟಿಯಾಗಿ ಕಾಳಾಗಿ ಒಳಗೊಳಗೇ ರಕ್ತ ಮಾಂಸಗಳ ಮುದ್ದೆಯಾಗಿ ದೈನ್ಯತೆ ಮತ್ತು ಪ್ರಾರ್ಥನೆಗಳ ಅಮೃತಘಳಿಗೆ ಯದು. ಗಿಡದೊಳಗೊಂದು ಮೊಗ್ಗು ಮೂಡುವ […] +ಈತ ನನ್ನೂರಿನ ಬಾಂಧವ. ಒಂದೇ ಒಂದು ಮುಖ್ಯ ರಸ್ತೆ ಇರುವ ಆ ಊರಿಗೆ ಎರಡೋ ಮೂರೋ ಸಣ್ಣ ರಸ್ತೆಗಳು. ದೊಡ್ಡ ಬೀದಿ ಅಂತನ್ನಿಸಿಕೊಂಡಿರುವ ರಸ್ತೆಯಲ್ಲಿ ಬರೀ ಲಿಂಗಾಯಿತರ ಪಾಳಿ. ಊರಿಗೆ ಒಂದು ದೇವಸ್ಥಾನ ಅಂತ […] +ಒಂದು ಬಿನ್ನಹ ಹುಲಿಯೆ ಕೇಳು ಕಂದನಿರುವನು ದೊಡ್ಡಿಯೊಳಗೆ ಒಂದು ನಿಮಿಷದಿ ಮೊಲೆಯ ಕೊಟ್ಟು ಬಂದು ಸೇರುವೆನಿಲ್ಲಿಗೆ…. ಈ ಸಾಲುಗಳನ್ನು ನೆನಪಿಸಿಕೊಂಡಾಗೆಲ್ಲ ಒಂದು ಅನುಮಾನ ಕಾಡುತ್ತಿತ್ತು. ಈಗ ತಮಾಷೆಯಾಗಿ ಕಾಣುವ ಅನುಮಾನ ಇದು; ಪುಣ್ಯಕೋಟಿಯೇನೋ ದೊಡ್ಡಿಯಲ್ಲಿರುವ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_165.txt b/Kannada Sahitya/article_165.txt new file mode 100644 index 0000000000000000000000000000000000000000..e155fb756cf935346f0d3c4325dbe13b6da46ec6 --- /dev/null +++ b/Kannada Sahitya/article_165.txt @@ -0,0 +1,95 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಂದೆಂದಿಗೂ ಒಂದಾಗಲಾರರು ಎಂದು ಅಂದುಕೊಂಡಿದ್ದ ಈ ಪುರಾತನ ಪ್ರೇಮಿಗಳನ್ನು ನಾನು ಸುಮಾರು ಕಾಲು ಶತಮಾನಗಳ ನಂತರ ಆದೂ ಕೆಸರು ರಾಡಿಚಿರಿಚಿರಿ ಮಳೆಯಲ್ಲಿ ಈ ವೀರಾಜಪೇಟೆಯ ಮಂಕು ಕವಿದ ಬಸ್ಸು ನಿಲ್ದಾಣದಲ್ಲಿ ಹೀಗೆ ಗಾಳಿಗೆ ಸಿಕ್ಕಿದ ತರಗೆಲೆಗಳ ಹಾಗೆ ಕಂಡುಬಿಡುವೆನೆಂದು ಅಂದು ಕೊಂಡಿರಲಿಲ್ಲ. +ವೀರಾಜಪೇಟೆಯ ಆ ಪುಟ್ಟ ಗಜಿಬಿಜಿ ಖಾಸಗೀ ಬಸ್ಸು ನಿಲ್ದಾಣದಲ್ಲಿ ಕಂಡಕ್ಟರು ಏಜಂಟರುಗಳ ಕೂಗು, ಬಸ್ಸುಗಳ ತಾರಾಟ, ಹಳೆಯ ಲಟಾರಿ ಯಜ್ದಿ ಬೈಕುಗಳನ್ನು ಸುಮ್ಮನೆ ಸದ್ದು ಮಾಡುತ್ತಾ ಓಡಿಸುವ ಯುವಕರು,ಸೀರೆಯ ನೆರಿಗೆ ಎತ್ತಿಕೊಂಡು ನಡೆಯುವ ಯುವತಿಯರು,ಮಲಯಾಳಿ ದೇಶದಕಡೆಗೆ ಹೋಗುವ ಕೊನೆಯ ಬಸ್ಸಿಗಾಗಿ ಕಾದು ನಿಂತಿರುವ ಕ್ರೈಸ್ತಕನ್ಯಾಸ್ತ್ರೀಯರು, ಬೆಳ್ಳನೆಯ ಮುಂಡಾಸು ಸುತ್ತಿಕೊಂಡ ಮುಸ್ಲಿಂ ಮತಪಂಡಿತ ಮಕ್ಕಳು. ವಾಂತಿ ಮಾಡಿಕೊಂಡು ಸುಸ್ತಾಗಿ ಬಸ್ಸೊಳಗೆ ತಮ್ಮತಮ್ಮ ಗಂಡಂದಿರ ಎದೆಗೆ ಒರಗಿ ನಿದ್ರಿಸುತ್ತಿರುವ ಎಳೆಯ ಪತ್ನಿಯರು….ಕುಡಿದು ಹೆಗಲಿಗೆ ಹೆಗಲು ಕೋಸಿಕೊಂಡು ಮಳೆಯಲ್ಲಿ ಸಿಳ್ಳೆ ಹೊಡೆದು ಕೊಂಡು ನಡೆದು ಹೋಗುತ್ತಿರುವ ಗೆಣೆಕಾರರು… +ಆ ದಿನ ಸಂಜೆ ವೀರಾಜಪೇಟೆಯಲ್ಲಿ ,ಆ ಕೆಸರು ಮಳೆ ಮನುಷ್ಯವಾಸನೆಗಳ ನಡುವೆ ಕೊಡೆ ಹಿಡಿದು ಕೊಂಡಿದ್ದ ನನಗೆ ಯಾಕೋ ಯಾವುದರಲ್ಲೂ ಆಸಕ್ತಿ ಉಳಿದಿರಲಿಲ್ಲ.ಅದು ಡಿಸೆಂಬರ್ ತಿಂಗಳ ಕೊನೆಯ ವಾರ.ಆದರೂ ಚಿರಿಚಿರಿ ಮಳೆ. ಅದು ರಂಜಾನ್ ತಿಂಗಳ ಕೊನೆಯ ದಿನಗಳು.ದಿನವಿಡೀ ಉಪವಾಸ ಹಿಡಿದ ಮುಸಲ್ಮಾನ ಭಾಂದವರು ಸಂಜೆ ಇನ್ನೇನು ಉಪವಾಸ ಮುಗಿಸಲು ಕಾಯುತ್ತಿದ್ದರು. ಹಾಗಾಗಿ ಒಂದು ತರಹದ ಧಾರ್ಮಿಕ ಹಸಿವೋ ಹಠ ವೋ ಅವರ ಮುಖದಲ್ಲಿತ್ತು. ಕ್ರಿಸ್ಮಸ್ ಗೆ ಇನ್ನು ಎರಡೇ ದಿನಗಳಿತ್ತು. ಕನ್ಯಾಶ್ರಮಗಳಿಂದ ಅನುಮತಿ ಪಡೆದು ತಮ್ಮ ಕುಟುಂಬ ವನ್ನು ಕಾಣಲು ಹೊರಟ ಕನ್ಯಾಸ್ತ್ರೀಯರ ಮುಖಗಳಲ್ಲಿ ಅಷ್ಟೇನೂ ಉಲ್ಲಾಸ ಕಾಣಿಸುತ್ತಿರಲಿಲ್ಲ.ಕಾಫಿಗೆ ಬೆಲೆಯಿಲ್ಲದೆ ಶುಂಠಿಗೆ ಬೆಲೆಯಿಲ್ಲದೆ ಅವೆರಡಕ್ಕೆ ಬೆಲೆಯಿಲ್ಲದಿದ್ದರೆ ಬೇರೆ ಏತಕ್ಕೂ ಬೆಲೆಕೊಡದ ಕೊಡಗಿನ ಬೆಳೆಗಾರರ ಮುಖಗಳೂ ಆಸಕ್ತಿ ಹುಟ್ಟಿಸುವಂತಿರಲಿಲ್ಲ. +ಸುಮ್ಮನೆ ಹತ್ತಬೇಕಿದ್ದ ಬಸ್ಸುಗಳನ್ನೆಲ್ಲ ತಪ್ಪಿಸಿಕೊಳ್ಳುತ್ತ ಎಲ್ಲಿಗಾದರೂ ಯಾಕಾದರೂ ಹೋಗಬೇಕು ಎಂದುಕೊಳ್ಳುತ್ತ ನಿಂತಿದ್ದವನ ಮುಂದೆ ಅವರಿಬ್ಬರು ಗಾಳಿಗೆ ಸಿಕ್ಕಿದ ಒಣ ಎಲೆಗಳಂತೆ ನಡೆದು ಬರುತ್ತಿದ್ದರು.ಮುಂದೆ ಮೌಲಾನ್ ಕುಟ್ಟಿ ಕಾಕಾ ಎಂಬ ಮುದುಕ ಮತ್ತು ಅವರ ಹಿಂದೆ ಪಾತುಂಞಿ ಎಂಬ ಸುಂದರಿ ಮುದುಕಿ… ಎಷ್ಟೋಕಾಲದ ನಂತರ ಇಬ್ಬರು ಮರಣದ ನಂತರವೇ ಒಂದಾಗಿರುವರೋ ಎಂಬಂತೆ ಆ ಮಂಜು ಮಳೆ ಗಾಳಿಯ ನಡುವೆ ನಡೆದು ಬರುತ್ತಿದ್ದರು. ಪಾತುಂಞಿ ತಾತಾಳ ಇತಿಹಾಸ ಪ್ರಸಿದ್ಧ ಬೆಳ್ಳಗಿನ ಬಣ್ಣ ಮತ್ತು ಅವಳ ತುಟಿಯಮೇಲಿದ್ದ ಕಪ್ಪಗಿನ ಕೆಡು ಮತ್ತು ಅದರ ಮೇಲೆ ಬೆಳೆದಿದ್ದ ಕಪ್ಪಗಿನ ಕೂದಲು ಈಗ ವಯಸ್ಸಾಗಿದ್ದರಿಂದ ಮಾತ್ರ ಬೆಳ್ಳಗಾಗಿ ಬಿಟ್ಟಿತ್ತು.ಇಲ್ಲದಿದ್ದರೆ ಮುದುಕಿ ಇನ್ನೂ ಸುಂದರಿಯಾಗಿಯೇ ಉಳಿದಿದ್ದಳು. +ಮೌಲಾನ್ ಕುಟ್ಟಿ ಕಾಕಾ ಮಾತ್ರ ಕೊಂಚ ತಲೆ ಕೆಟ್ಟವರಂತೆ ಕಾಣಿಸುತ್ತಿದ್ದರು. ಕಾಲಲ್ಲಿರಬೇಕಾದ ರಬ್ಬರಿನ ಚಪ್ಪಲಿಗಳನ್ನು ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆಯಲ್ಲಿ ಸುತ್ತಿಕೊಂಡು ಓಲಾಡಿಕೊಂಡು ನಡೆಯುತ್ತಿದರ್ದು.ಅವರ ಬಿಳಿ ಪಂಚೆ ಗಾಳಿ ಮಳೆ ಕೆಸರುಮಣ್ಣಿಗೆ ಸಿಲುಕಿ ಯಾವುದೋ ಬಣ್ಣ ಪಡೆದಿತ್ತು. ಎಲೆ ಅಡಿಕೆಯ ಜೊಲ್ಲು ಬಾಯಿಂದ ಇಳಿದು ಗಡ್ಡಕ್ಕೆ ಸೇರುತ್ತಿತ್ತು..ಬಾಯಲ್ಲಿ ಯಾವಾಗಲೋ ಆರಿಹೋಗಿದ್ದ ಮೋಟು ಬೀಡಿ.ಮುದುಕ ಗಾಳಿಗೆ ಸಿಕ್ಕಿ ಆರಲು ಹೊರಟ ಮೋಂಬತ್ತಿಯಂತೆ ನಡೆದಾಡುತ್ತಿದ್ದ. ಅವರ ಹಿಂದೆ ಕೊಂಚ ಸ್ತಿರವಾಗಿ ಪಾತುಂಞಿ ತಾತಾ ನಡೆದು ಬರುತ್ತಿದ್ದಳು .ಮುದುಕಿಯ ಮುಖದಲ್ಲಿ ಎಂತಹದೋ ಉಲ್ಲಾಸ ಕಂಡು ಬರುತ್ತಿತ್ತು. ಯಾಕೋ ಇಬ್ಬರಿಗೂ ತಲೆ ಕೆಟ್ಟು ಹೋಗಿ ಬಿಟ್ಟಿದೆ ಅನಿಸಿತು. +ಯಾಕೋ ಸಂಕಟ ನುಗ್ಗಿ ಬಂತು.ಸುಮಾರು ಇಪ್ಪತ್ತೈದು ವರ್ಷಗಳ ನಂತರ ನಾನು ಮತ್ತೆ ಈ ಇಬ್ಬರ ಮುಖವನ್ನು ಕಾಣುತ್ತಿರುವುದು.ಈ ದಿನ ನೋಡಿರದಿದ್ದರೆ ಇತರ ನೂರಾರು ಸಾವಿರಾರು ವಯಸ್ಸಾದವರ ಹಾಗೆ ಈ ಇಬ್ಬರು ಅಮರ ಪ್ರೇಮಿಗಳೂತೀರಿಕೊಂಡು ಹೋಗಿರುವರು ಅಂತಲೇ ತಿಳಿದು ಕೊಂಡಿರುತ್ತಿದ್ದೆ. ಮೂರು ವರ್ಷಗಳ ಹಿಂದೆ ನನ್ನ ಬಾಪಾ ತೀರಿಹೋಗಿದ್ದರು.ಈ ಇಬ್ಬರು ಅವರಿಗಿಂತ ಎಷ್ಟೋ ದೊಡ್ಡವರು.ನಾವು ಸಣ್ಣದಿರುವಾಗ ನದಿಬದಿಯಲ್ಲಿ ಕತ್ತಲಲ್ಲಿ ಕೂತುಗೊಂಡು ವಯಸ್ಸ್ಸಾದವರಲ್ಲಿ ಯಾರು ಮೊದಲು ತೀರಿಹೋಗಬಹುದು ಯಾರು ನಂತರ ಎಂದು ಲೆಕ್ಕ ಹಾಕುತ್ತಿದ್ದೆವು.ಆಗ ಮೊದಲು ಮೊದಲಿಗೇ ಬರುತ್ತಿದ್ದುದು ಈ ಮೌಲಾನ್ ಕುಟ್ಟಿಯವರ ಹೆಸರು. ನಂತರ ನದಿಯಲ್ಲಿ ಕತ್ತಲಲ್ಲಿ ಬತ್ತಲೆ ಸ್ನಾನ ಮಾಡುತ್ತಿದ್ದ ಪಾತುಂಞ್ ಎಂಬ ಅವರ ಸುಂದರಿ ಪ್ರೇಯಸಿಯ ಹೆಸರು.ಅಪ್ಪಿತಪ್ಪಿಯೂ ಕೂಡಾ ನಾವು ಹುಡುಗರು ತೀರಿ ಹೋಗಲಿರುವವರ ಯಾದಿಯಲ್ಲಿ ನಮ್ಮ ತಂದೆ ತಾಯಿಯರ ಹೆಸರು ಹೇಳುತ್ತಿರಲಿಲ್ಲ. ಈಗ ನೋಡಿದರೆ ನಾವು ಹೆಸರು ಹೇಳದವರೆಲ್ಲ ತೀರಿಹೋಗಿದ್ದರೂ ಈ ಇಬ್ಬರು ಎಂದೂ ಒಂದಾಗಿರದಿದ್ದ ಅಮರ ಪ್ರೇಮಿಗಳು ನನ್ನೆದುರೇ ಜೀವಂತ ದೇವತೆಯರಂತೆ ನಡೆದು ಬರುತ್ತಿದ್ದರು ಯಾಕೋ ಇವರಿಬ್ಬರನ್ನು ಇಪ್ಪತ್ತೈದು ವರ್ಷಗಳ ನಂತರ ಇದ್ದಕ್ಕಿದ್ದಂತೆ ಆ ರೂಪದಲ್ಲಿ ಕಂಡೊಡನೆ ನನಗೆ ಕಣ್ಣು ತುಂಬಿ ಬಂತು. ವೀರಾಜಪೇಟೆಯ ಆ ಸಾಧಾರಣ ಬಸ್ಸು ನಿಲ್ದಾಣ ಜನನ-ಮರಣಗಳ ಪಾಪ-ಪುಣ್ಯಗಳ ರಂಗತಾಣವಾಗಿ ಕಂಡು ಸಣ್ಣಗೆ ನಡುಗಿದೆ. +ಮೌಲಾನ್‌ಕುಟ್ಟಿಯವರು ವಶೀಕರಣಕ್ಕೊಳಪಟ್ಟ ಮಂತ್ರವಾದಿಯಂತೆ ನಲುಗಿಹೋಗಿದ್ದರು.ಅವರ ತಲೆ ಬೋಳಾಗಿ,ಗಡ್ಡ ಮೀಸೆ ಕಣ್ಣಹುಬ್ಬು ಎಲ್ಲ ಬೆಳ್ಳಗಾಗಿಹೋಗಿತ್ತು.ಅವರು ತೊದಲುತ್ತಿದ್ದರು.ಕಂಡಕಂಡವರಿಗೆ ಅಸಹಜವಾಗಿ ಕೈ ಮುಗಿದು ನಗುತ್ತಿದ್ದರು. ನೋಡಿದವರಿಗೆ ಅದು ಅಳುವಂತೆ ತೋರುತ್ತಿತ್ತು. ಅವರ ಹಿಂದೆ ಬರುತ್ತಿದ್ದ ಪಾತುಂಞಿ ತಾತಾ ಒಂದು ಚೂರೂ ಮಾಸದ ಬೆಳ್ಳನೆ ಯ ಕುಪ್ಪಾಯ ಹಸಿರು ಅರೆ ಸೀರೆ ಸೊಂಟಕ್ಕೆ ಬೆಳ್ಳಿಯ ಉಡಿಪಟ್ಟಿ ಮತ್ತು ತಲೆಗೊಂದು ಬೆಳ್ಳನೆಯ ಬಟ್ಟೆಯನ್ನು ಕಟ್ಟಿಕೊಂಡು ಅಭೂತಪೂರ್ವ ಸುಂದರಿಯಂತೆ ನಡೆಯುತ್ತಿದ್ದರು.ಆ ಮುದುಕಿಯ ಮುಖದಲ್ಲಿ ಹೇಳಲಿಕ್ಕಾಗದ ಒಂದು ಮಂದಹಾಸವಿತ್ತು. ನಾನು ದೀನನಾಗಿ ಏನೂ ಮಾಡಲಾಗದವನಂತೆ ಆ ಜನ ಜಂಗುಳಿಯಲ್ಲಿ ಅವರನ್ನು ನೋಡುತ್ತಾ ನಿಂತಿದ್ದವನು ಹತ್ತಿರಕ್ಕೆ ಹೋಗಿ ಅವರಿಬ್ಬರ ಮುಂದೆ ನಿಂತೆ. +ನನ್ನ ಗುರುತಾಯಿತಾ..ಎಂದು ಮಲಯಾಳದಲ್ಲಿ ಕೇಳಿದೆ. +ಪಾತುಂಞಿ ತಾತಾ ಎಲ್ಲರ ಮುಖ ನೋಡುವಂತೆಯೇ ನನ್ನ ಮುಖವನ್ನೂ ನೋಡಿ ಮಂದಹಾಸ ಸೂಸಿತು +ಮುದುಕ ಕಿವಿಯನ್ನು ಮುಂದೆ ಮಾಡಿಕೊಂಡು ಹತ್ತಿರಕ್ಕೆ ಬಂದು ಸುಮ್ಮನೆ ನಕ್ಕಿತು. +ಅಲ್ಲಿಗೆ ನನಗೆ ಗೊತ್ತಾಗಿ ಹೋಯಿತು. ಈ ಇಬ್ಬರು ಪುರಾತನ ಪ್ರೇಮಿಗಳು ತಿರುಗಿ ಬರಲಾಗದ ಲೋಕವೊಂದಕ್ಕೆ ಬದುಕಿರುವಾಗಲೇ ಹೋಗಿಬಿಟ್ಟಿದ್ದಾರೆ. ಇನ್ನು ಇವರ ಜೊತೆ ಮಾತನಾಡಿ ಸುಖ ದುಃಖ ವಿಚಾರಿಸಿ ಏನೂ ಸುಖವಿಲ್ಲವೆಂದು ಗೊತ್ತಾಗಿ ಪೆಚ್ಚಾಗಿ ಹೋದೆ. +* +* +* +ಇಂದಿರಮ್ಮ ಎಂಬ ಒಂದು ಆಕಳನ್ನು ನೆನೆಯದೆ ಮತ್ತು ಈ ಆಕಳಿಗೆ ಇಂದಿರಮ್ಮ ಎಂಬ ಹೆಸರಿಟ್ಟ ನನ್ನ ಬಾಪಾನನ್ನು ನೆನೆಸಿಕೊಳ್ಳದೆ ನಾನು ಈ ಇಬ್ಬರು ಪ್ರೇಮಿಗಳ ಕತೆಯನ್ನು ಮುಂದುವರಿಸುವ ಹಾಗೆಯೇ ಇಲ್ಲ. ಹಾಗೆ ನೋಡಿದರೆ ವೀರಾಜಪೇಟೆ ಬಸ್ಸು ನಿಲ್ದಾಣದಲ್ಲಿ ತರಗೆಲೆಯಂತೆ ತೂರಿಕೊಂಡು ನಡೆದು ಬರುತ್ತಿದ್ದ ಇವರಿಬ್ಬರು ಕಣ್ಣಿಗೆ ಬಿದ್ದ ಕೂಡಲೇ ನನ್ನ ಮನಸ್ಸು ತುಂಬಿಕೊಂಡದ್ದು ತೀರಿಹೋದ ನನ್ನ ಬಾಪಾನ ನೆನಪು ಮತ್ತು ಅವರು ಹೆಸರಿಟ್ಟು ಸಾಕಿದ್ದ ಇಂದಿರಮ್ಮ ಎಂಬ ಪಾಪದ ಕಂದು ಆಕಳಿನ ರೂಪು. +ನಮ್ಮಲ್ಲಿ ಇಂದಿರಮ್ಮ ಎಂಬ ಆಕಳು ಇದ್ದದ್ದು ನಿಜ.ಇದಕ್ಕೂ ಮೊದಲು ಇಂದಿರಮ್ಮ ಎಂಬ ಇನ್ನೊಂದು ಹಳೆಯ ಆಕಳಿತ್ತು.ಇಂದಿರಾ ಗಾಂಧಿಯವರ ಪರಮ ಅಭಿಮಾನಿಂಗಿದ್ದ ನನ್ನ ಬಾಪಾ ಅದಕ್ಕೆ ಕರುವಾಗಿರುವಾಗಲೇ ಇಂದಿರಮ್ಮ ಎಂಬ ಹೆಸರಿಟ್ಟಿದ್ದರು.ಆ ಹಸು ತುಂಬಾ ಒಳ್ಳೆ ಸ್ವಭಾವದ ಹಸುವಾಗಿತ್ತಂತೆ.ಅಷ್ಟೊಂದು ಹಾಲು ಕೊಡುತ್ತಿತ್ತಂತೆ.ಆದರೆ ನನಗೆ ನೆನಪಿರುವಾಗಲೇ ಅದಕ್ಕೆ ತುಂಬಾ ವಯಸ್ಸಾಗಿ ತೀರಿಹೋಗಿತ್ತು.ಅದರ ನೆನಪಿಗೆ ಅಂತ ಇನ್ನೊಂದು ಕರುವಿಗೆ ಇಂದಿರಮ್ಮ ಎಂದು ಇನ್ನೊಮ್ಮೆ ಹೆಸರಿಟ್ಟಿದ್ದರು.ಈ ಇಂದಿರಮ್ಮನೂ ತುಂಬ ಒಳ್ಳೆಯ ಹಸು.ಆದರೆ ತುಂಬ ದಡ್ಡ ಹಸು.ಅದಕ್ಕೆ ತಾನು ಹಸುವೆಂಬುದೇ ತಿಳಿದಿರಲಿಲ್ಲ.ಹಾಗಾಗಿ ಕರುಹಾಕದೆ,ಹಾಲು ಕೊಡದೆ ಎಲ್ಲರಿಂದಲು ಬಯ್ಯಿಸಿಕೊಳ್ಳುತ್ತಿತ್ತು. ಕೋಳಿಗಳ ಜೊತೆ ಕೋಳಿಯಂತೆ ವರ್ತಿಸುವುದು, ನಾಯಿಗಳೊಂದಿಗೆ ಆಟವಾಡಲು ಹೋಗಿ ಕಚ್ಚಿಸಿಕೊಳ್ಳುವುದು,ನಾವು ಮಕ್ಕಳು ಎರಡು ಕಾಲಲ್ಲಿ ಓಡಿನಡೆದಾಡುವ ಕಡೆಯಲ್ಲೆಲ್ಲಾ ತಾನೂ ನಡೆಯಲು ಹೋಗಿ ಸಿಕ್ಕಿಹಾಕಿ ಕೊಳ್ಳುವುದು ಹೀಗೆಲ್ಲಾ ಮಾಡಿ ದೊಡ್ಡವರಿಂದ ಸಕತ್ತಾಗಿ ಏಟು ತಿನ್ನುತ್ತಿತ್ತು. +ಆ ಸಣ್ಣ ವಯಸ್ಸಿನಲ್ಲೇ ಪೋಲಿ ಬಿದ್ದು ಹೋಗಿದ್ದ ನನ್ನನ್ನು ಸರಿದಾರಿಗೆ ತರಲು ನನ್ನ ಬಾಪಾ ಇಂದಿರಮ್ಮ ಎಂಬ ಈ ಆಕಳನ್ನು ನನ್ನ ಸುಪರ್ದಿಗೆ ಬಿಟ್ಟಿದ್ದರು.ಅಂದರೆ ಅದನ್ನು ನೋಡಿಕೊಳ್ಳುವುದು,ಮೇಯಿಸಲು ಒಯ್ಯುವುದು,ತೊಳೆಯಲು ನದಿಗೆ ಕೊಂಡುಹೋಗುವುದು ಇದನ್ನೆಲ್ಲ ನಾನು ಮಾಡಬೇಕೆಂದು ಕನಸು ಕಂಡಿದ್ದರು.ಒಂದು ವೇಳೆ ಈ ಇಂದಿರಮ್ಮ ಕರು ಹಾಕಿದ್ದೇ ಆದರೆ ಹಾಲು ಕರೆಯುವುದು,ಅಳೆಯುವುದು,ಮಾರುವುದು,ಲೆಕ್ಕ ಇಟ್ಟುಕೊಳ್ಳುವುದು,ದುಡ್ಡು ವಸೂಲು ಮಾಡುವುದು ಇದನ್ನೆಲ್ಲಾ ನಾನೇ ಮಾಡಬೇಕೆಂದೂ ಇದರಿಂದ ನನ್ನ ಪೋಲಿ ತಿರುಗುವ ಚಟ ಅಳಿದು,ಜವಾಬ್ಧಾರಿಬುದ್ಧಿ ಬರುವುದೆಂದೂ ಇದರಿಂದ ತುಂಬ ಕಷ್ಟದಲ್ಲಿ ಬದುಕುತ್ತಿರುವ ನಮ್ಮ ಕುಟುಂಬವೇ ಉದ್ಧಾರವಾಗುವುದೆಂದೂ ಅವರು ಕನಸು ಕಂಡಿದ್ದರು. +ನನ್ನ ಬಾಪಾನ ಆತ್ಮಕ್ಕೆ ಶಾಂತಿಯಿರಲಿ. +ಅವರು ಅಂದು ಕೊಂಡಂತೆ ನಾನು ನಡೆದುಕೊಳ್ಳಲೇ ಇಲ್ಲ.ಇಂದಿರಮ್ಮ ಎಂಬ ಆ ಆಕಳನ್ನು ಕರೆದುಕೊಂಡು ಹೊರಟೆನೆಂದರೆ ನನಗೆ ಬೇರೆಯೇ ಯೋಚನೆಗಳು ಹೊಳೆಯುತ್ತಿದ್ದವು.ನದಿಯಲ್ಲಿ ಮೀಯಿಸಲು ಹೊರಟರೆ ಬೇರೆಯೇ ತರಹದ ಜನರು ಭೇಟಿಯಾಗುತ್ತಿದ್ದರು.ಅದು ಬೇರೆಯೇ ಒಂದು ಲೋಕ! +ಅಲ್ಲಿ ನದಿಯ ಬದಿಯಲ್ಲಿ ಇಂದಿರಮ್ಮನನ್ನು ಮೇಯಲು ಬಿಟ್ಟು ನಾನು ಬೇರೆ ಕೆಲಸಗಳಲ್ಲಿ ತೊಡಗುತ್ತಿದ್ದೆ.ಅದರಲ್ಲಿ ಪ್ರಮಖವಾದುದು ನದಿಯಲ್ಲಿ ಮೀಯಲು ಬರುವ ಹೆಣ್ಣು ಮಕ್ಕಳನ್ನು ಕಡೆಗಣ್ಣಿನಿಂದ ವೀಕ್ಷಿಸುವುದು. +ಹಾಗೆ ವೀಕ್ಷಿಸುತ್ತಿದ್ದಾಗಲೇ ಒಮ್ಮೆ ಈ ಮೌಲಾನ್ ಕುಟ್ಟಿ ಕಾಕಾ ನನ್ನ ಕಡೆಗಣ್ಣಿಗೆ ಸಿಕ್ಕಿಹಾಕಿಕೊಂಡದ್ದು. +ಅವರೂ ನನ್ನ ಹಾಗೆಯೇ ವೀಕ್ಷಣೆ ನಡೆಸಿದ್ದರು. +ಅವರು ಕದ್ದು ನೋಡುತ್ತಿದ್ದುದು ನದಿಯಲ್ಲಿ ಅರೆ ಬತ್ತಲೆಯಾಗಿ ಮೀಯುತ್ತಿದ್ದ ಪಾತುಂಞಿ ಎಂಬ ಸುಂದರಿ ಮುದುಕಿಯನ್ನು . ನದಿಯಲ್ಲಿ ಮೀಯುತ್ತಿದ್ದರೆ ಈ ಪಾತುಂಞಿ ಮುದುಕಿ ಅಂತ ಯಾರೂ ಹೇಳುವ ಹಾಗಿರಲಿಲ್ಲ.ನಾನೇ ಎಷ್ಟೋ ಸಲ ಬೆನ್ನು ತೋರಿಸಿಕೊಂಡು ಸ್ನಾನ ಮಾಡುತ್ತಿದ್ದ ಈ ಅಜ್ಜಿಯನ್ನು ಯಾರೋ ಸುಂದರಿಯುವತಿ ಎಂದು ಕದ್ದು ನೋಡುತ್ತಾ ನಂತರ ಗೊತ್ತಾಗಿ ಓಡಿ ಹೋಗಿದ್ದುಂಟು. +ಹಾಗಾಗಿ ಮುದುಕರಾದ ಮೌಲಾನ್ ಕುಟ್ಟಿಯವರು ಮುದುಕಿಯಾದ ಪಾತುಂಞಿಯನ್ನು ಕದ್ದು ನೋಡುವುದರಲ್ಲಿ ಅಂತಹ ತಪ್ಪೇನೂ ನನಗೆ ಈಗ ಕಾಣಿಸುವುದಿಲ್ಲ. ಆದರೆ ಆಗ ಚಿಕ್ಕವನಾಗಿರುವಾಗ ನನಗೆ ಅಸೂಯೆಯಾಗುತ್ತಿತ್ತು. +ಹಾಗಾಗಿ ವಿಚಿತ್ರವಾಗಿ ಕೂಗಿಕೊಳ್ಳುತ್ತಿದ್ದೆ. +ಈಗ ಎಲ್ಲ ವಿಚಿತ್ರವಾಗಿ ಕಾಣಿಸುತ್ತಿದೆ. +ಪಾತುಂಞಿ ವಿಚಿತ್ರ ಮುದುಕಿ.ಆಕೆ ತನ್ನನ್ನು ಬೆಳ್ಳೆಕ್ಕಾರನ ಅಂದರೆ ಬ್ರಿಟಿಷ್ ದೊರೆಯೊಬ್ಬನ ಮೊಮ್ಮಗಳು ಅಂತ ತಿಳಿದಿದ್ದಳು.ಕಾಡು ಕಡಿದು ಕಾಫಿತೋಟ ಮಾಡಲು ಬಂದ ಬೆಳ್ಳೆಕ್ಕಾರ ಈ ಪಾತುಂಞಿಯ ಅಜ್ಜಿಯನ್ನು ಮೋಹಿಸಿದ್ದನಂತೆ. ಹಾಗಾಗಿ ಪಾತುಂಞಿ ಅಷ್ಟು ಬೆಳ್ಳಗೆಯಂತೆ.ಪಾತುಂಞಿ ಆ ವಯಸ್ಸು ಕಾಲದಲ್ಲೂ ಅದನ್ನು ಎಲ್ಲರ ಬಳಿ ಹೇಳಿಕೊಂಡು ತಿರುಗಾಡುತ್ತಿತ್ತು.ಅದನ್ನು ಎಲ್ಲರಿಗೆ ತೋರಿಸಲು ನದಿಯಲ್ಲಿ ಅರೆ ಬತ್ತಲಾಗಿ ಮೀಯುತ್ತಿತ್ತು. +ಎರಡೋ ಮೂರೋ ಮದುವೆಯಾಗಿ ಅದರಲ್ಲಿ ಅಸಂಖ್ಯಾತ ಮಕ್ಕಳನ್ನೂ ಮೊಮ್ಮಕ್ಕಳನ್ನೂ ಪಡೆದಿದ್ದ ಮೌಲಾನ್ ಕುಟ್ಟಿ ಪಾತುಂಞಿ ಎಂಬ ಸುಂದರಿ ಮೀಯುವುದನ್ನು ನೋಡುತ್ತಿತ್ತು. +ತನ್ನ ಮಕ್ಕಳು ಮೊಮ್ಮಕಳ ಎದುರಲ್ಲೂ ನಾಚುಕೆಯಿಲ್ಲದೆ ನೋಡುತ್ತಾ ನಿಲ್ಲುತ್ತಿತ್ತು +‘ನನಗೆ ನಾಚುಕೆ ಏಕೆ? ಅವಳು ನನಗೆ ಮೀಸಲಾಗಿದ್ದವಳು..ಒಂದಲ್ಲ ಒಂದು ದಿನ ಅವಳ ಕುರುಡು ಗಂಡನ ಕೈ ಬಿಡಿಸಿಕೊಂಡು ನನ್ನ ಕೈ ಹಿಡಿದು ಬರಬೇಕಾದವಳು.. +ಆ ವಯಸ್ಸುಕಾಲದಲ್ಲೂ ಮೌಲಾನ್ ಕುಟ್ಟಿ ಪಾತುಂಞಿಯ ಮೇಲಿನ ತಮ್ಮ ನೂರಾರು ವರ್ಷಗಳ ಪ್ರೇಮದ ಕತೆಯನ್ನು ಎಲ್ಲರೆದುರು ಹೇಳಿಕೊಳ್ಳುತ್ತಿದ್ದರು. +ಪಾತುಂಞಿ ‘ಆ ಮುದುಕನಿಗೆ ಮರಳು… ಅವನು ನೂರು ವರ್ಷಗಳಿಂದ ಕಾಯುತ್ತಿದ್ದರೆ ಇನ್ನೂ ನೂರು ವರ್ಷ ಕಾಯಲಿ , ನಾನು ನನ್ನ ಕುರುಡು ಗಂಡನ ಬಿಟ್ಟು ಅವನ ಮಂಚಕ್ಕೆ ಹೋಗುವುದಿಲ್ಲ ಎಂದು ನಟಿಕೆ ಮುರಿಯುತ್ತಿದ್ದಳು. +ನಾನು ಇಂದಿರಮ್ಮ ಎಂಬ ಆಕಳನ್ನು ನದಿಯ ಬದಿಯಲ್ಲಿ ಮೇಯಲು ಬಿಟ್ಟು ಇವರಿಬ್ಬರ ನೂರಾರು ವರ್ಷಗಳ ಪ್ರೇಮ ಸಮರವನ್ನು ಕದ್ದು ಅನುಭವಿಸುತ್ತಿದ್ದೆ. +ಅದು ಅವರಿಬ್ಬರಿಗೂ ಗೊತ್ತಿತ್ತು. ಹಾಗಾಗಿ ಅವರಿಬ್ಬರೂ ಹುಡುಗನಾಗಿದ್ದರೂ ನನಗೆ ಮರ್ಯಾದೆ ತೋರಿಸುತ್ತಿದ್ದರು ಹಾಗೂ ಅವರಿಬ್ಬರು ಒಬ್ಬರನ್ನೊಬ್ಬರು ಹೇಗೆ ಮೋಹಿಸುತ್ತಿದ್ದರೆಂದೂ ಹೇಗೆ ಅವರಿಗೆ ಇನ್ನೊಬ್ಬರಿಂದ ಮೋಸವಾಯಿತೆಂದೂ ವಿವರಿಸುತ್ತಿದ್ದರು. +ನಾನು ಅವರಿಬ್ಬರ ಪ್ರೇಮವಾಗ್ವಾದಗಳಿಂದ ತಪ್ಪಿಸಿ ಕೊಂಡು ನದಿಯ ಬದಿಯಲ್ಲಿ ಕಳೆದು ಹೋದ ಇಂದಿರಮ್ಮ ಎಂಬ ಆಕಳನ್ನು ಹುಡುಕುವವನಂತೆ ಓಡಿಬಿಡುತ್ತಿದ್ದೆ. +* +* +* +ಆ ಹೊಟೇಲಿನ ನೂರಾರು ಕತ್ತಲ ಕೋಣೆಗಳೊಳಗಿನಿಂದ ಏಕಕಾಲದಲ್ಲಿ ನೂರಾರುಗಾಜಿನ ಬಳೆಗಳ ಕಲರವ,ಬೆಳ್ಳಿಕಾಲುಗೆಜ್ಜೆಗಳ ಗಿಜಿಗಿಜಿ, ನಗುವ, ನಿಟ್ಟುಸಿರುಬಿಡುವ, ಮೂಗೆಳೆಯುವ, ಅರೆಯುವ, ತೊಳೆಯುವ, ಗೇರುವ, ಕುಟ್ಟುವ ಸಡಗರ ಬೇಸರದ ಸದ್ದು ಕೇಳಿಬರುತ್ತಿತ್ತೆಂದರೆ, ಭೂಮಿ ಆಕಾಶಗಳನ್ನು ಒಂದು ಮಾಡುವಂತೆ ಎಲ್ಲಕಡೆ ಒಲೆಯಹೊಗೆ ತುಂಬಿಕೊಂಡು ಆ ಹೊಗೆಯ ನಡುವೆ ಒಂದಿಷ್ಟು ಜಾಗ ಮಾಡಿಕೊಂಡು ಒಂದು ಕರಿಹಿಡಿದ ಟೇಬಲಿನ ಮುಂದೆ ಹೊಗೆಗೋ ಅಥವಾ ಯಾತಕ್ಕೋ ಗೊತ್ತಾಗದೆ ಕಣ್ಣಲ್ಲಿ ನೀರು ಸುರಿಸಿಕೊಂಡು ಮೌಲಾನ್ ಕುಟ್ಟಿಯವರು ದಿನದ ಹಣ ಎಣಿಸುತ್ತಾ ಕೂತಿದ್ದಾರೆಂದರೆ ಮೈನಾಡಿನಲ್ಲಿ ಸಂಜೆಯಾಯಿತು ಎಂದು ಅರ್ಥ.ಅಷ್ಟು ಹೊತ್ತಿಗೆ ಮೌಲಾನ್ ಜ್ಯೇಷ್ಟ ಮಗಳಾದ ಸುಹುರಾ ಎಂಬ ನಡುವಯಸ್ಸಿನ ಸುಂದರಿ ಹುಡುಗಿ ಗ್ಯಾಸ್ ಲೈಟಿಗೆ ಗಾಳಿ ಹೊಡೆದು ಕಡ್ಡಿಗೀರಿ ಬೆಳಕು ಎಲ್ಲಕಡೆ ಬುಸ್ಸೆಂದು ಹೊತ್ತಿಕೊಂಡಿತೆಂದರೆ ಇನ್ನು ಸ್ಥಳೀಯ ಗಂಡಸರಿಗೆ ಅಲ್ಲಿ ಕೆಲಸವಿಲ್ಲವೆಂದು ಅರ್ಥ. +ಇನ್ನು ಅಲ್ಲಿ ನಮ್ಮಂತ ಹುಡುಗರಿಗೂ ಕೂರಲು ಅನುಮತಿಯಿಲ್ಲ. ಇನ್ನು ಅಲ್ಲಿ ನಡೆಯುವುದು ಮೌಲಾನ್ ಕುಟ್ಟಿಯವರ ಸ್ತ್ರೀಸಂಸಾರದ ರಾತ್ರಿ ಊಟದ ಹೋಟೆಲು. ಹಗಲೆಲ್ಲ ಮಲಗಿರುವ ಮುದುಕನಂತೆ ಗೊರಗುಟ್ಟಿಕೊಂಡಿರುವ ಅ ಹೋಟೆಲ್ಲು ಇರುಳು ಕವಿಯುತ್ತಿದ್ದಂತೆಯೇ ಜಗಜಗಿಸಲು ತೊಡಗುತ್ತದೆ. +‘ ಇನ್ನು ಹುಡುಗರು ಜಾಗ ಖಾಲಿ ಮಾಡಬಹುದು.. ಎಂದು +ಮೌಲಾನ್ ಕುಟ್ಟಿಯವರ ಮೊದಲನೆಯ ಹೆಂಡತಿ ಖತೀಜುಮ್ಮ ಎಲೆಯಡಿಕೆ ಜಗಿದ ರಸವನ್ನು ಹಿತ್ತಾಳೆಯ ಪೀಕುದಾನಿಗೆ ತುಪ್ಪಿ ಗಹಗಹಿಸಿ ನಕ್ಕರೆಂದರೆ ಇನ್ನು ಮೌಲಾನ್ ಕುಟ್ಟಿಯವರನ್ನೂ ಸೇರಿಸಿದಂತೆ ಸ್ಥಳೀಯ ಗಂಡಸರಿಗಾಗಲೀ ಹುಡುಗರಿಗಾಗಲೀ ಅಲ್ಲಿ ಜಾಗವಿಲ್ಲವೆಂದು ಅರ್ಥ. ನಾವು ಹುಡುಗರು ಉದಾಸೀನರಾಗಿ ಅಷ್ಟುಹೊತ್ತು ಬಿಸಿಮಾಡಿಟ್ಟುಕೊಂಡಿದ್ದ ಬೆಂಚುಗಳನ್ನು ಬಿಟ್ಟು ಏಳಲು ಪಾಡುಪಡುತ್ತಿದ್ದಂತೆ ಮೌಲಾನ್ ಕುಟ್ಟಿಯವರ ಎರಡನೆಯ ಹೆಂಡತಿ ಪಾತುಮ್ಮ ಹಭೆ ಏಳುವ ಬೇಯಿಸಿದ ಮರಗೆಣಸು ತುಂಬಿದ ಬಾಂಡಲಿಯನ್ನು ಎತ್ತಿಕೊಂಡು ಬಂದು ಕಪಾಟಿನೊಳಗಡೆ ಕುಕ್ಕುತ್ತಾರೆ. +ಆ ಇರುಳುಕತ್ತಲಿನಲ್ಲಿ ಹೊರಗೆ ಮಂಜುಕವಿದು ಒಳಗಡೆ ಬೇಯಿಸಿದ ಮರಗೆಣಸಿನ ಹಭೆಕವಿದು ನಂತರ ಮೌಲಾನ್ ಕುಟ್ಟಿಯವರ ಸುಂದರಿಯರಾದ ಹೆಣ್ಣುಮಕ್ಕಳು ಒಬ್ಬೊಬ್ಬರಾಗಿ ಕಾಯಿಸಿದ ಮೀನು,ಒಣಗಿಸಿ ಹುರಿದ ಮಾಂಸ. +ಕಾಡು ಮೊಲದ ಮಾಂಸ ಹಭೆಯಲ್ಲಿ ಬೇಯಿಸಿದ ನೂಲು ಹಿಟ್ಟು, ಕರಿದ ನೇಂದ್ರ, ಹುರಿದ ನೇಂದ್ರ, ಬೇಯಿಸಿದ ನೇಂದ್ರ.. .. ಹೀಗೆ ಒಂದೊಂದೇ ಖಾಧ್ಯಗಳ ಬಾಂಡಲಿಗಳನ್ನು ಹಿಡಿದು ಹೊರಬಂದು ಅಡ್ಡಾಡತೊಡಗಿದರೆಂದರೆ ಅಲ್ಲೊಂದು ಯಕ್ಷಿಗಳ ಲೋಕವೇ ಸೃಷ್ಟಿಯಾಗಿಬಿಡುತ್ತಿತ್ತು. +ಮೌಲಾನ್ ಕುಟ್ಟಿಯವರ ಜೊತೆಗೆ ನಾವು ಹುಡುಗರೂ ಆ ಹೋಟೆಲ್ಲಿನಿಂದ ಜಾಗ ಖಾಲಿಮಾಡುತ್ತಿದ್ದೆವು.ಗಂಡಸರಾದ ನಮ್ಮ ಸದ್ದು ಅಲ್ಲಿಂದ ಅಡಗುತ್ತಿದ್ದಂತೆಯೇ ಅಲ್ಲಿ ಹೆಂಗಸರ ಹೇಳಲಾಗದಂತಹ ಸದ್ದಿನ ಸಂತೆಯೊಂದು ಶುರುವಾಗುತ್ತಿತ್ತು. ಮತ್ತು ಮಲೆಯಮೇಲಿನ ತೇಗದ ಕೂಪಿನಿಂದ ಇಳಿದುಬರುವ ಲಾರಿಗಳು ಒಂದೊದಾಗಿ ಸದ್ದು ಮಾಡುತ್ತಾ ಆ ಹೋಟೆಲಿನ ಮುಂದೆ ನಿಲ್ಲಲು ತೊಡಗಿ ಆ ಲಾರಿಗಳ ಡ್ರೈವರುಗಳೂ ಲೋಡರುಗಳೂ ಕ್ಲೀನರುಗಳಾದ ಹುಡುಗರುಗಳೂ ತಮತಮಗೆ ತಕ್ಕುದಾದ ಗಂಡಸುತನವನ್ನು ತಮ್ಮತಮ್ಮ ಮುಖಗಳಲ್ಲೂ ಮೈಯ್ಯ ಮಾಂಸಖಂಡಗಳಲ್ಲೂ ತೋರಿಸಿಕೊಳ್ಳುತ್ತ ಹೋಟೆಲಿನ ಒಳಗಡೆಹೊಕ್ಕುಬಿಡುತ್ತಿದ್ದರು. +ಮೌಲಾನ್ ಕುಟ್ಟಿಯವರ ಹೋಟೆಲ್ಲಿನಿಂದ ದೂಡಿಸಿಕೊಂಡ ನಾವು ಹುಡುಗರು ಅನಾಥರಂತೆ ನದಿಯಬದಿಯಲ್ಲಿ ಕುಳಿತುಕೊಂಡು ಸಂಜೆಕತ್ತಲಿನಲ್ಲಿ ನದಿಯಿಂದ +ಏಳುವ ಕಾವಳದಲ್ಲಿ ಜಿಗಿಯುವ ಉಸಿರುಬಿಡುವ ನಾನಾತರಹದ ಜಲಜಂತುಗಳನ್ನು ನೋಡುತ್ತಾ ನಿಟ್ಟುಸಿರು ಬಿಡುತ್ತಿದ್ದೆವು. +ಮೌಲಾನ್ ಕುಟ್ಟಿಯವರು ದಿಕ್ಕುತಪ್ಪಿದವರಂತೆ ಕತ್ತಲಿನಲ್ಲಿ ಎಡವಿಕೊಂಡು ಸೇತುವ ದಾಟಿ ಮಸೀದಿಯ ಅಂಗಳ ಸೇರಿ ಅಲ್ಲಾಹುವಿನಲ್ಲಿ ಪ್ರಾರ್ಥಿಸಲು ತೊಡಗುತ್ತಿದ್ದರು +‘ಓ ಅಲ್ಲಾಹುವೇ ನನಗಾಗಿ ನಿನ್ನ ಕರುಣೆಯ ಬಾಗಿಲುಗಳನ್ನು ತೆರೆ +‘ಓ ಪ್ರಭುವೇ ನೀನು ನನ್ನನ್ನು ಅತ್ಯಂತ ಸರಳವಾಗಿ ವಿಚಾರಣೆ ನಡೆಸು.. .. +* +* +* +ಪಾತುಂಞಿತಾತಾಳ ಕುರುಡ ಗಂಡನ ಹೆಸರು ಅಲವಿ ಕೋಯಾ ಅಂತ. .ಅವರನ್ನು ಹಲವರು ಕುರುಡು ಕೋಯಾ ಎಂತಲೂ ಇನ್ನು ಕೆಲವರು ಮಾಯದ ಕೋಯಾ ಎಂತಲೂಕರೆಯುತ್ತಿದ್ದರು ಕೋಯಾ ತನ್ನ ಬಿದಿರಿನ ಬಿಡಾರವನ್ನೆಲ್ಲ ಕತ್ತಲು ಮಾಡಿಕೊಂಡು ಎಲ್ಲೋ ಒಂದು ಮೂಲೆಯಲ್ಲಿ ಕಣ್ಣುಬಿಚ್ಚಿಕೊಂಡು ಕುಳಿತುಕೊಂಡುಬಿಟ್ಟರೆ ಮನೆಯೊಳಗೆ ಗಾಳಿ ಅಲ್ಲಾಡುವುದೂ ಆತನಿಗೆ ಕಾಣಿಸುತ್ತಿತ್ತು.ಪಾತುಂಞಿ ಸುಮ್ಮನೆ ಶೆಖೆಗೆ ಅಂತ ಕುಪ್ಪಾಯದ ಒಂದು ಗುಂಡಿ ಸರಿಸಿದರೂ ಆತ ಹೂಂಕರಿಸಿಬಿಡುತ್ತಿದ್ದ.ಆಕೆಯ ಕಾಲ ಸಪ್ಪಳದಿಂದಲೇ ಆಕೆ ಹೋಗುವುದು ನದಿಗೋ ನೀರಿಗೋ ತಂಡಾಸಿಗೋ ಎಂದು ಗೊತ್ತು ಹಿಡಿಯುತ್ತಿದ್ದ.ಅದಕ್ಕೇ ಪಾತುಂಞಿ ಕುರುಡು ಗಂಡ ಕೋಲು ಊರಿಕೊಂಡು ನದಿಯ ಆಚೆ ಕರೆಯ ಮಸೀದಿಗೆ ನಡೆಯುತ್ತಿದ್ದಂತೆ ಕದ್ದು ನದಿಗಿಳಿಯುತ್ತಿದ್ದಳು.ನಮಾಝ್ ಮುಗಿಸಿ ಬಂದ ಕೋಯಾನಿಗೆ ಹೆಂಡತಿ ನದಿಯಲ್ಲಿ ಮೀದು ಬಂದದ್ದು ವಾಸನೆ ಯಿಂದಲೇ ಗೊತ್ತಾಗಿ ಹೋಗುತ್ತಿತ್ತು +ಬೆಕ್ಕಿಗೆ ಕಣ್ಣಿಲ್ಲಾ ಎಂದು ಕಟ್ಟಿಕೊಂಡರೆ ಅದಕ್ಕೆ ಕುಂಡೆಯಲ್ಲೂ ಕಣ್ಣು..ಪಾತುಂಞಿ ಜೋರಾಗಿಯೇ ಗೊಣಗುತ್ತಿದ್ದಳು. ಕುರುಡ ಕೋಯಾ ಹೆಂಡತಿಯನ್ನು ಮನೆಯೆಲ್ಲಾ ಅಟ್ಟಾಡಿಸಿಕೊಂಡು ಹೊಡೆಯಲು ಹೋಗಿ ಗೋಡೆಗೆ ಡಿಕ್ಕಿ ಹೊಡೆಯುತ್ತಿದ್ದ ಈ ಬೆಳ್ಳಗಿನ ಹೆಣ್ಣಿನ ಮೈ ಕಾಣುವವರು ಯಾರೂ ಮುಟ್ಟಬಾರದು ಅಂತ ಕುರುಡನನ್ನು ಕಟ್ಟಿಕೊಂಡರೆ ಇವನು ಮೂರುಕಣ್ಣಿನವನಾದನಲ್ಲ ಪಡೆದವನೇ ಎಂದು ಪಾತುಂಞಿ ಅವನಿಂದ ತಪ್ಪಿಸಿಕೊಳ್ಳುತ್ತಾ ಬೊಬ್ಬೆ ಹೊಡೆಯುತ್ತಿದ್ದಳು +ಹಾಗಾಗಿ ಅಲವಿಕೋಯಾ ಆದಷ್ಟು ಮನೆಯಮುಂದಿನ ಮಣ್ಣಿನ ಹಾಸಿನಲ್ಲೇ ಆದಷ್ಟು ನಮಾಝು ಮಾಡಿಮುಗಿಸುತ್ತಿದ್ದರು ಮತ್ತು ಶುಕ್ರವಾರದಂದು ಮಾತ್ರ ಮಸೀದಿಗೆ ಹೋಗಿಬರುತ್ತಿದ್ದರು.ಅಥವಾ ಪಾತುಂಞಿಯ ಜೊತೆ ತಾನೂ ತಡಕುತ್ತಾ ನದಿಗೆ ನಡೆದು ದಡದಲ್ಲಿ ಕೂತುಬಿಡುತ್ತಿದ್ದರು.ಆಗ ಮಾತ್ರ ಪಾತುಂಞಿ ಬೆತ್ತಲಾಗುತ್ತಿರಲಿಲ್ಲ…ಮತ್ತು ಮೌಲಾನ್ ಕುಟ್ಟಿಯವರು ನದಿಯ ಬದಿಗೆ ಸುಳಿಯುತ್ತಿರಲಿಲ್ಲ. ಮತ್ತು ನಾನು ಇಂದಿರಮ್ಮ ಎಂಬ ಆಕಳನ್ನು ಕುರುಡ ಕೋಯನಿಗೆ ಸದ್ದು ಕೇಳಿಸದ ಹಾಗೆ ನದಿ ದಾಟಿಸಿ ಕರೆದೊಯ್ದು ಬಿಡುತ್ತಿದ್ದೆ +* +* +* +ಅದೆಲ್ಲಿಂದಲೋ ಮಸೀದಿಯಿಂದ ಸಂಜೆಯ ಉಪವಾಸ ಮುಗಿಸುವ ಬಾಂಗಿನ ಕೂಗು ಕ್ಷೀಣವಾಗಿ ಹಸಿದ ಹೊಟ್ಟೆಯೊಳಗಿಂದ ಕೇಳಿಬರುವ ದೀನಕೂಗಿನಂತೆ ಕೇಳಿಬರುತ್ತಿದ್ದಂತೆ ಮಲಗಿಕೊಂಡಂತಿದ್ದ ಆ ನಗರ ಸೆಟೆದುಕೊಂಡು ಅಲ್ಲಾಡಲು ತೊಡಗಿತು.ಅದೆಲ್ಲೋತೆರೆದುಕೊಳ್ಳಲು ತೊಡಗಿದಹೋಟೆಲ್ಲುಗಳು, ಗ್ಲಾಸಿನಸದ್ದು, ತಿನ್ನುವಸದ್ದು, ಖರ್ಜೂರ,ಗಸಗಸೆ,ಹುರಿದಮೊಟ್ಟೆ,ಮೆಂತೆಯಪಾಯಸ, ಸುಲಿದ ಕಿತ್ತಳೆಯಪರಿಮಳ.. +ಮಳೆ ನಿಂತು ಆಕಾಶ ಒಂದುತರಹದ ಹಳದಿಯಿಂದ ತುಂಬಿಕೊಂಡು ಕುಡಿದವರು ಕುಡಿಯದವರು ಉಪವಾಸವಿದ್ದವರು ಇರದಿದ್ದವರು ಎಲ್ಲರೂ ಆ ಹಳದಿ ಬೆಳಕಿನಲ್ಲಿ ವಿಚಲಿತರಾಗಿ ನಡೆಯುತ್ತಿರುವವರಂತೆ ತೋರುತ್ತಿದ್ದರು ಮೌಲಾನ್ ಕುಟ್ಟಿ ಮತ್ತು ಪಾತುಂಞಿ ಎಂಬ ಅಮರ ಪ್ರೇಮಿಗಳು ಅದಾಗ ತಾನೇ ತೆರೆದುಕೊಂಡ ಹೋಟೆಲ್ಲೊಂದರ ಮುಂದೆ ದೀನರಾಗಿ ನಿಂತು ಕೊಂಡು ಉಪವಾಸ ಮುರಿಯಲು ಏನನ್ನಾದರೂ ತಿನ್ನಲು ಕೊಡಲು ಕೈಯೆತ್ತಿ ಬೇಡಿಕೊಳ್ಳುತ್ತಿದ್ದರು +‘ಇಹ ಲೋಕದಲ್ಲಿ ಕೈಯೆತ್ತಿ ಕೊಟ್ಟರೆ ಪರಲೋಕದಲ್ಲಿ ಆ ಪಡೆದವನು ನಿಮಗೆ ಕೈಯೆತ್ತಿ ನೀಡುತ್ತಾನೆ ಮಕ್ಕಳೇ’ ಮೌಲಾನ್ ಕುಟ್ಟಿಯವರು ಎರಡೂ ಕೈಗಳನ್ನೆತ್ತಿ ಒಮ್ಮೆ ಆಕಾಶನೋಡುತ್ತಾ ಇನ್ನೊಮ್ಮೆ ಹೋಟೆಲ್ಲಿನಿಂದ ಹೊರಬರುವ ತಿಂದುಂಡ ಬಾಯಿಗಳನ್ನು ಆಸೆಯಿಂದ ನಿರುಕಿಸುತ್ತಾ ನಾಲಿಗೆ ತೀಡಿಕೊಳ್ಳುತ್ತಾ ಕೇಳಿಕೊಳ್ಳುತ್ತಿದ್ದರು ‘ಈ ವಯಸ್ಸಾದ ಯತೀಂ ಮುದುಕರ ಉಪವಾಸ ಬಿಡಿಸಿದರೆ ಮೂವತ್ತೂ ಉಪವಾಸ ಮಾಡಿದ ಕೂಲಿ ಪರಲೋಕದಲ್ಲಿ ಸಿಗುತ್ತದೆ ನನ್ನ ಮುದ್ದು ಮಕ್ಕಳೇ ಪಾತುಂಞಿ ತಾತಾ ಮೋಹಕವಾಗಿ ಕೂಗಿಕೊಳ್ಳುತ್ತಿದ್ದಳು. +ಮುದುಕಿಯಾದರೂ ಇನ್ನೂ ಹಾಗೇ ಇರುವ ಆಕೆಯ ಬೆಳದಿಂಗಳಂತಹ ಮೈ.. ಆಕೆಯ ತುಟಿಯ ಮೇಲಿನ ಕಪ್ಪಗಿನ ಕೆಡು.. ಹಳದಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ವೀರಾಜಪೇಟೆಯ ಆ ಸಂಜೆ.. ಉಪವಾಸ ಮುರಿದು ತಲೆಗೆ ಬೆಳ್ಳಗಿನ ಬಟ್ಟೆ ಕಟ್ಟಿಕೊಂಡು ಪ್ರಾರ್ಥಿಸಲು ಮಸೀದಿಗೆ ದಾವಿಸುತ್ತಿರುವ ಮಂದಿ.. +ಯಾಕೋ ಕಣ್ಣು ತುಂಬಿಕೊಳ್ಳತೊಡಗಿ ನಗು ಬಂತು. +ಬಂದ ಬಸ್ಸುಗಳನ್ನೆಲ್ಲ ತಪ್ಪಿಸಿ ಕೊಂಡು ಎಲ್ಲಿಗೆ ಯಾಕಾದರೂ ಹೋಗಬೇಕೆಂದು ನನ್ನ ಬಾಲ್ಯ ಕಾಲದ ಈ ಪುರಾತನ ಪ್ರೇಮಿಗಳನ್ನು ಕಣ್ಣೆವೆ ಬಿಡಿಸದೆ ಸುಮ್ಮನೆ ನೋಡುತ್ತಿರುವ ನಾನು.. ಉಪವಾಸವೂ ಇರದೆ ಪಡೆದವನನ್ನೂ ಕಾಣದೆ ನಾನಾ ಖಯಾಲಿಗಳಲ್ಲಿ ಮುಳುಗಿರುವ ನಾನು.. +ಅವರಿಬ್ಬರನ್ನು ಕರೆದು ಹೋಟೆಲ್ಲಿನೊಳಗೆ ಕೂರಿಸಿ ಅಪರಿಚಿತನಂತೆ ನಟಿಸುತ್ತಾ ಅವರ ಉಪವಾಸ ಬಿಡಿಸಿದೆ. ಅವರು ನೂರಾರು ದಿನಗಳಿಂದ ಉಪವಾಸ ಇದ್ದವರಂತೆ ತಿನ್ನುತ್ತಿದ್ದರು. +ತಿಂದು ಮುಗಿಸಿದ ಮೌಲಾನ್ ಕುಟ್ಟಿಯವರು ಸುಮ್ಮನೇ ತೇಗುತ್ತಿದ್ದರು.ತಿಂದು ಮುಗಿದಮೇಲೆ ಪಾತುಂಞಿ ತಾತಾ‘ನಿನ್ನ ಪಡೆದವನು ರಹಮತ್ತಿನಲ್ಲಿ ಇಡಲಿ ಮಗನೇ..ಎಂದರು +ಆಮೇಲೆ ಕೊಂಚ ತಡೆದು‘ ನಿನ್ನದು ಎಲ್ಲಿಯಾಯಿತು ಮಗನೇ ಎಂದು ಕೇಳಿದಳು ಯಾಕೋ ಸುಳ್ಳು ಹೇಳಬೇಕೆನಿಸಿತು ಇಲ್ಲೇ ಕೇರಳದಲ್ಲಿ..ಇರಿಟ್ಟಿಯ ಹತ್ತಿರ.. ಇಲ್ಲಿ ಶುಂಠಿ ವ್ಯಾಪಾರಕ್ಕೆ ಬಂದಿರುವೆ..ಎಂದು ಹೇಳಿಬಿಟ್ಟೆ. ಮೌಲಾನ್ ಕುಟ್ಟಿಯವರು ತೇಗುವುದು ಮುಗಿದು ಅಲ್ಲೇ ಹೋಟೆಲಿನೊಳಗೇ ಪ್ರಾರ್ಥಿಸಲು ಶುರುಮಾಡಿದರು ‘ಪಡೆದವನೇ..ಎಲ್ಲಿಂದಲೋ ಬಂದು ನಮಗೆ ಈ ದಿನದ ಉಪವಾಸ ಮುರಿಸಿದ ಈ ಮಗುವಿಗೆ ಇಹದಲ್ಲೂ ಪರದಲ್ಲೂ ಬರಕತ್ತನ್ನೂ ರಹಮತ್ತನ್ನೂ ಕರುಣಿಸು ಪಡೆದವನೇ ಅಂತಿಮ ದಿನದಂದು ಇವನನ್ನು ಅತ್ಯಂತ ಸರಳವಾಗಿ ವಿಚಾರಣೆ ನಡೆಸು ಕರುಣಾಮಯನಾದ ಅಲ್ಲಾಹುವೇ.. +ನಮ್ಮ ಇಂದಿರಮ್ಮ ಎಂಬ ಆಕಳುಸತ್ತುಹೋಗಿದ್ದು ಮತ್ತು ಪಾತುಂಞಿ ತಾತಾಳ ಗಂಡ ಕುರುಡ ಕೋಯಾ ತೀರಿಹೋಗಿದ್ದು ಒಂದೇದಿನದಲ್ಲಿ ಮತ್ತು ಒಂದೇ ನದಿಯಲ್ಲಿ.. ಸುಮಾರು ಕಾಲು ಶತಮಾನದ ಹಿಂದೆ ಇಂತಹದೇ ಒಂದು ಸಂಜೆ ಮೈನಾಡಿನ ನದಿಯಲ್ಲಿ ಪಾತುಂಞಿ ನದಿಯ ನೀರಲ್ಲಿ ಮುಳುಗು ಹಾಕುತ್ತಿರುವಾಗ ಪಾಪದ ಆಕಳು ನಾನಿಲ್ಲದೆ ನದಿ ದಾಟಲು ಹೋಗಿ ನೀರಲ್ಲಿ ಸಿಲುಕಿ ಪಾತುಂಞಿ ಬೊಬ್ಬೆ ಹಾಕಿದಳಂತೆ.ಕುರುಡು ಕೋಯ ನದಿಗೆ ಹಾರಿದನಂತೆ.ನಾವು ಶಾಲೆ ಬಿಟ್ಟು ಬಂದಾಗ ಆಕಳ ದೇಹ ಮತ್ತು ಕುರುಡು ಕೋಯನ ಶರೀರ ಎರಡನ್ನೂ ದಡದಲ್ಲಿ ಮಲಗಿಸಿ ಪಾತುಂಞಿ ಪಡೆದವನಿಗೆ ಶಾಪ ಹಾಕುತ್ತಿದ್ದಳು.ಮೌಲಾನ್ ಕುಟ್ಟಿಯವರು ನೋಡುತ್ತಿದ್ದರು.. +ನಾವು ಮಕ್ಕಳು ಅಳುತ್ತಿದ್ದೆವು.. +ಪ್ರಿಯ ಓದುಗರೇ, +ಈ ಕತೆ ಹೇಗೆ ಮುಗಿಸುವುದು ಎಂದು ಕುಳಿತಿರುವಾಗಲೇ ಮೌಲಾನ್ ಕುಟ್ಟಿಯವರು ತೀರಿ ಹೋದ ಸುದ್ದಿ ಬಂದಿದೆ +ಪಾತುಂಞಿ ತೀರಿಹೋದ ಅವರ ದೇಹದ ಬಳಿ ಇದ್ದಳಂತೆ ಮತ್ತು ಮೌಲಾನ್ ಕುಟ್ಟಿಯವರ ದೇಹವನ್ನು ದಫನಕ್ಕೆ ಮೈನಾಡಿನ ಖಬರ ಸ್ಥಾನಕ್ಕೆ ಕೊಂಡು ಹೋಗುವಾಗ ಪಡೆದವನಿಗೆ ಶಾಪ ಹಾಕುತ್ತಿದ್ದಳಂತೆ.ಮತ್ತು ಈಗಲೂ ಅವಳ ಬಿದಿರಿನ ಬಿಡಾರವನ್ನು ಕತ್ತಲೆ ಮಾಡಿಕೊಂಡು ಕೂತಿರುತ್ತಾಳಂತೆ. +ಎಲ್ಲರ ಆತ್ಮಕ್ಕೂ ಶಾಂತಿಯಿರಲಿ +***** +ಕನಸಿನೊಳಗೆ ಬುಳು ಬುಳು ಸುರಿದದ್ದಾಗಲೀ ಬೆಳಕು ಹರಿದದ್ದಾಗಲೀ ತಡ ಆಗಲಿಲ್ಲ. ನಲ್ಲಿ ಗುಂಡಿಯೊಳಗೆ ಬಗ್ಗಿ ಕೊಡ ಎತ್ತಿಕೊಳ್ಳಬೇಕೆನ್ನುವಷ್ಟರಲ್ಲಿ ವಡ್ದರ ತಿಮ್ಮಿಯ ಹುಂಜ ಊರು ಮಾಡೋ ಗೌಡನ ತಿಪ್ಪೆಯ ಬಂಗಾರದ ಶಿಖರದ ಮೇಲೆ ನಿಗುರಿ ನಿಂತು […] +ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. […] +ಕಾಲೇಜು ಅಧ್ಯಾಪಕ ವಿಶ್ವನಾಥ್ ಅವರು ತಾವು ಕಾಲೇಜಿಗೆ ಹೋಗುವಾಗ ತಮ್ಮ ಪತ್ನಿಯನ್ನು ಮನೆಯಲ್ಲಿ ಕೂಡಿ ಎಲ್ಲ ಕಡೆ ಬೀಗ ಹಾಕಿ ಹೋಗುತ್ತಾರೆ…. ಎಂಬ ಸುದ್ದಿ ಇಡೀ ಕಾಲೇಜಿನಲ್ಲಿ, ವಿಶ್ವವಿದ್ಯಾನಿಲಯದಲ್ಲಿ ಹಬ್ಬಿಬಿಟ್ಟಿತು. ವಿಶ್ವನಾಥ್ ಅವರ ವಿರುದ್ಧ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_166.txt b/Kannada Sahitya/article_166.txt new file mode 100644 index 0000000000000000000000000000000000000000..eb8acc87715ab526ee5c3b4266e33308ad7c84f8 --- /dev/null +++ b/Kannada Sahitya/article_166.txt @@ -0,0 +1,81 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮಕ್ಕಳಿಗೆ ಕೂಗಿ ಕೂಗಿ ಪಾಠ ಹೇಳಿ ಗಂಟಲು ನೋಯುತ್ತಿತ್ತು. ಹೊಟ್ಟೆ ರಕ ರಕ ಎನ್ನುತ್ತಿತ್ತು. ರೂಮಿಗೆ ಬಂದು ಡಬ್ಬಿ ತೆಗೆದ ದೇವಕಿ ಗಬ ಗಬ ತಿನ್ನತೊಡಗಿದಳು. ಉಳಿದ ಸಹೋದ್ಯೋಗಿಗಳೂ ಆಗಲೇ ಊಟ ಮಾಡುತ್ತಿದ್ದರು. ಊಟಕ್ಕೆ ಕುಳಿತಾಗ ಮೊದಲೆಲ್ಲ ತಂದದ್ದನ್ನು ಹಂಚಿಕೊಳ್ಳುವಷ್ಟು ಪ್ರೇಮವಿತ್ತು ಅವರಲ್ಲಿ. ಅವಳು ಬಂದಮೇಲೆ ಎಲ್ಲಿ ತನ್ನ ಊಟದಲ್ಲಿಯೂ ಪಾಲು ಕೊಡುತ್ತಾಳೋ ಎನ್ನುವ ಭಯದಿಂದ ಆ ಪ್ರೀತಿ ತನ್ನಷ್ಟಕ್ಕೆ ತಾನೇ ಮಾಯವಾಗಿತ್ತು. ಒಂದಿಷ್ಟೂ ಸುಳಿವು ಕೊಡದೆ. ಇದು ದೇವಕಿಗೇನೋ ದುಃಖದ ಸಂಗತಿ. ಆದರೆ ಅವಳಾದರೂ ತಾನೆ ಏನು ಮಾಡಬಲ್ಲಳು? ಆ ಜಾತಿಯಲ್ಲಿ ಹುಟ್ಟಿದ್ದು ತನ್ನ ತಪ್ಪೇನಲ್ಲ, ಆ ಜಾತಿಯನ್ನು ಹುಟ್ಟಿಸಿದವರದ್ದೇ ತಪ್ಪು ಎನ್ನುವ ವಾದ ಅವಳದು. ಹಾಗೆಂದು ವಾದ ಬೆಳೆಸುವವಳೂ ಅವಳಲ್ಲ. ಅಷ್ಟೇ ಅಲ್ಲ, ಕೀಳರಿಮೆಯಿಂದ ಅವರ ಮುಂದೆ ಕುಗ್ಗಿ ನಡೆಯುವದು ದೌರ್ಬಲ್ಯವೆಂದುಕೊಂಡಿದ್ದಳು. ಅವರಾದರೂ ಊಟ ಅಡುಗೆಯ ವಿಷಯದಲ್ಲಿ ಅಷ್ಟು ಕಟ್ಟುನಿಟ್ಟಾದರೂ ಉಳಿದುದರಲ್ಲಿ ಸ್ನೇಹಿತರೇ. +“ದೇವಕೀ, ನಿಮ್ಮ ಸೀರಿ ಎಷ್ಟ ಛಂದ ಅದ, ಎಲ್ಲಿ ಕೊಂಡಿರಿ?” ಎಂದು ಶ್ಯಾಮಲಾ ಕೇಳಿದರೆ- +“ದೇವಕೀ. ನಿಮಗ ಕರ್ರಗ ಮೊಣಕಾಲತನಾ ಉದ್ದ ಕೂದಲು ಅದಾವ, ಯಾವ ಎಣ್ಣೀ ಹಚ್ತೀರಿ?” ಮಂದಾಕಿನಿ ವಿಚಾರಿಸುವಳು. +“ಶುದ್ಧ ನಾರಿಯಲ್ ತೇಲ್” ಎಂದು ಟಿ.ವಿ. ಜಾಹಿರಾತಿನಂತೆ ಕಣ್ಣು ತಿರುಗಿಸುತ್ತ ದೇವಕಿ ಹೇಳುವಾಗ ಎಲ್ಲರೂ ನಕ್ಕುಬಿಡುವರು. +“ನಿಮ್ಮ ದನಿ ಕೋಗಿಲೆ ಹಾಂಗ ಎಷ್ಟ ಮಧುರ ಅದ ದೇವಕಿ, ಈ ಸಾರೆ ವಾರ್ಷಿಕೋತ್ಸವಕ ಮಕ್ಕಳಿಗೆ ಗ್ರುಪ್‌ಸಾಂಗ್ ನೀವ ಕಲಸರಿ” ಎಂದು ಸರಿತಾ ಉಪಾಯವಾಗಿ ಹೊಣೆ ಹೊರಿಸುವಳು. +“ನಮ್ಮ ಶಾಲೆಯ ಲತಾ ಮಂಗೇಶಕರ ನಾನೇ” ಎಂದು ಅವರ ಪ್ರಶಂಸೆಯನ್ನು ನಗೆಯಲ್ಲಿ ತೇಲಿಸಿಬಿಡುವಳು ದೇವಕಿ- +ಆ ದಿನ ಶ್ಯಾಮಲಾಳ ಮುಖ ಬಾಡಿತ್ತು, ಕಣ್ಣು ಕೆಂಪಾಗಿತ್ತು. “ಯಾಕ್ರೀ ಶ್ಯಾಮಲಾ, ಏನಾಗೆದ? ಆರಾಮ ಅದೀರಿಲ್ಲೊ?” ದೇವಕಿಯ ಮೆತ್ತಗಿನ ದನಿಯಲ್ಲಿಯ ಪ್ರೀತಿ ಶ್ಯಾಮಲಾಳ ದುಃಖಕ್ಕೆ ಚಾಲನೆ ಕೊಟ್ಟಿತು. +ಏನೂ ಇಲ್ಲ ಎನ್ನುತ್ತಲೇ ಅಳುತ್ತ ಎಲ್ಲ ಹೇಳಿದಳು ಶ್ಯಾಮಲಾ. ಅವಳ ತಾಯಿಗೆ ಜಡ್ಡಾಗಿದೆ. ತಮ್ಮ, ಹಣಕ್ಕಾಗಿ ಪತ್ರ ಬರೆದಿದ್ದಾನೆ. ತಿಂಗಳಿಗೆ ಸಾವಿರಾರು ರೂಪಾಯಿ ಸಂಪಾದಿಸುವ ಗಂಡ ಹಣ ಕೊಡಲು ತಯಾರಿಲ್ಲ. ತವರಿನವರ ಕಷ್ಟಕ್ಕೆ ಸಹಾಯ ಮಾಡಬೇಕೆಂಬ ಮನಸ್ಸಿಗೆ ನೋವಾಗುತ್ತಿದೆ. ಗಂಡ ಇವಳ ಪೂರ್ತಿ ಸಂಬಳ ಬ್ಯಾಂಕಿಗೆ ಹಾಕುತ್ತಾನೆ. ತನ್ನ ಖರ್ಚಿಗೆ ಬೇಕಾದರೂ ಜಗಳ ಮಾಡಿ ಪಡೆಯಬೇಕು. ದೇವಕಿಗೆ ಆಶ್ಚರ್ಯ, ಸಿಟ್ಟು. ಅವಳು ದುಡಿದ ಹಣದ ಮೇಲೆ ಅವಳಿಗೆ ಹಕ್ಕಿಲ್ಲವೇ? ಶ್ಯಾಮಲಾಳ ಗಂಡ ಜಿಪುಣ, ಮಂದಾಕಿನಿ ಗಂಡ ತವರುಮನೆಯಿಂದ ತಾ ಎಂದು ಬರೆ ಹಾಕ್ತಾನೆ. ಸರಿತಾನ ಅತ್ತೆ ಅವಳು ಬಂಜೆ ಎಂದು ಎಲ್ಲರೆದುರು ಹೀಯಾಳಿಸಿ, ಹಿಂಸೆ ಮಾಡ್ತಾಳೆ. ಎಂಥ ಹೆಂಗಸರಿವರು, ಎಷ್ಟೊಂದು ನೋವು ನುಂಗ್ತಾರೆ, ಮತ್ತೆ ತಮ್ಮ ಸಮಾನರು ಯಾರಿಲ್ಲ ಅಂತ ಸೊಕ್ಕು ಮಾಡ್ತಾರೆ. ಕಣ್ಣೀರಿನಲ್ಲಿ ಕೈ ತೊಳೀತಾರೆ. ಸಹಿಸಲಿಕ್ಕೆ ಆಗದಿದ್ದಾಗ ಜೀವಾ ಕೊಡ್ತಾರೆ. ಎದುರಿಸಿ ನಿಲ್ಲೋ ಅಷ್ಟು ಛಾತೀನೇ ಇಲ್ಲ ಇವರಲ್ಲಿ. ಕಲಿತವರೂ ಅಷ್ಟೇ, ಮೇಲ್ಜಾತಿಯವರಾದರೇನು, ನಮ್ಮವರಾದರೇನು ಒಬ್ಬೊಬ್ಬರದು ಒಂದೊಂದು ತರದ ದೌರ್ಬಲ್ಯ, ಮೂರ್ಖತನ, ಹೇಡಿಗಳು-ದೇವಕಿ ವಿಚಾರ ಮಾಡುತ್ತ ಕೈ ತೊಳೆಯಲು ಎದ್ದಾಗ ಕೋಣೆ ಖಾಲಿಯಾಗಿತ್ತು. ಮರುದಿನ ದೇವಕಿ ಶ್ಯಾಮಲಾಳಿಗೆ ನೂರು ರೂಪಾಯಿ ಕೊಟ್ಟಿದ್ದಳು. ಅವಳು ತಿರುಗಿ ಕೊಡ್ತಾಳೆ ಎನ್ನುವ ಭರವಸೆಯೂ ಇಲ್ಲದೆ. +ತನ್ನ ಹಿಂದೆ ತನ್ನ ಬಗ್ಗೆ ಏನು ಮಾತಾಡ್ಕೊಳ್ತಾರೆ ಎನ್ನುವ ಬಗ್ಗೆ ದೇವಕಿ ಎಂದೂತಲೆ ಕೆಡಿಸಿಕೊಂಡವಳಲ್ಲ. ಕ್ಲಾಸು ಮುಗಿಸಿ ಡಬ್ಬಿ ಹಿಡಿದು ಬರುವುದು ಒಂದು ದಿನ ತಡವಾದಾಗ ಶ್ಯಾಮಲಾ ಮಂದಾಕಿನಿಗೆ ಹೇಳುತ್ತಿದ್ದ ಮಾತು ಕಿವಿಗೆ ಬಿತ್ತು. +“ಗಂಡನ್ನ ಬಿಟ್ಟು ಬಂದು ಆರಾಮ ಚೈನೀ ಅದಾಳ ತಾನೊಬ್ಬಳ, ಇಂಥವರಿಗೆಲ್ಲಾ ಏನ ನೀತಿ-ನಡಾವಳಿ ಇರ್ತದ, ಮನಸ್ಸಿಗಿ ಬಂದದ್ದ ಮಾಡತಾರ.” +ಅವರ ಮಾತು ಕಿವಿಗೆ ಬಿದ್ದೇ ಇಲ್ಲವೆನ್ನುವಂತೆ ಒಳಗೆ ಬಂದು ಎಲ್ಲರನ್ನೂ ನೋಡಿ ನಗು ತೂರಿ ಡಬ್ಬಿ ಬಿಚ್ಚಿದಳು. ಶ್ಯಾಮಲಾ ಮಾತ್ರ ತಗ್ಗಿಸಿದ ತಲೆ ಎತ್ತಿರಲಿಲ್ಲ. +ತನ್ನ ಬಗ್ಗೆ, ತನ್ನ ಹಿಂದಿನ ಜೀವನದ ಬಗ್ಗೆ ಇವರಿಗೆಲ್ಲ ಏನು ಗೊತ್ತಿದೆ? ತನ್ನ ಮನೆ ಎಲ್ಲಿದೆ. ಮನೆಯಲ್ಲಿ ಯಾರಾರಿದ್ದಾರೆ ಎನ್ನೋದು ಗೊತ್ತಿಲ್ಲ. ತನ್ನ ಗಂಡ ಯಾರು ಅನ್ನೋದು ಇವರಿಗೆ ಗೊತ್ತಿಲ್ಲ. ಈ ದಿನ ತನ್ನ ಮನೆಯಲ್ಲಿ ಏನಾಗಿದೆ? ತನಗೆ ಏನು ಕಷ್ಟ ಇದೆ, ಹ್ಯಾಗೆ ಜೀವನ ಮಾಡ್ತೀನಿ-ಉಹು ತಿಳಕೊಳ್ಳೋದರಲ್ಲಿ ಯಾರಿಗೂ ಆಸಕ್ತಿ ಇಲ್ಲ. ಇಂಥವರ ಮುಂದೆ ನಾನು ನನ್ನ ಸುಖ-ದುಃಖ ತೋಡಿಕೊಳ್ಳಲೇ? ಉಹುಂ, ನನ್ನ ಅಭಿಮಾನ ಒಪ್ಪೋದಿಲ್ಲ-ಢಣ್‌ಢಣ್ ಶಾಲೆಯ ಗಂಟೆ ದೇವಕಿಯನ್ನು ಎಚ್ಚರಿಸಿ ಮನೆಗೆ ಓಡುವಂತೆ ಮಾಡಿತು. +ದೇವಕಿಯ ಕೈ ಮಗಳನ್ನು ತಟ್ಟುತ್ತಿದ್ದರೂ ಬಾಗಮ್ಮನ ಮುಖವೇ ಕಣ್ಣಮುಂದೆ ಕಟ್ಟಿತ್ತು. ಜ್ವರ ಬಂದ ಕಿರಣಳನ್ನು ಸಂಜೆಯವರೆಗೆ ನೋಡಿಕೊಂಡಿದ್ದಳು. ಆದರೆ ಇವತ್ತು ಅವಳಿಗೆ ಅವಸರದಲ್ಲಿ ಏನೂ ತಂದಿರಲಿಲ್ಲ. ಎಲೆ ಅಡಿಕೆ, ನಾಶೀಪುಡಿ ಏನಾದರೂ ತರಬೇಕಿತ್ತು. ತನ್ನ ಖಾಲಿ ಕೈ ನೋಡಿ ಬಾಗಮ್ಮನವರ ಮುಖ ಗಂಟಾಗಿತ್ತು. ನಿರಾಶೆಯಿಂದ ಮುಖ ತಿರುವಿದ್ದಳು. ಆದರೆ ಹೀಗೆ ತಂದುಕೊಡುವ ಆಸೆಯನ್ನು ಹಚ್ಚಿದವಳು ತಾನೆ. ಮೊದಮೊದಲು ಮುದುಕಿ ಏನೂ ಬೇಡ ಬೇಡ ಎನ್ನುತ್ತಿದ್ದಳು. ಈಗೀಗ ಏನಾದರೂ ತರದಿದ್ದರೆ ಸಿಟ್ಟು ಬರುತ್ತದೆ ಬಾಗಮ್ಮನಿಗೆ… +ಗೌತಮ ಬುದ್ಧ ಹೇಳಿದ್ದು ಸತ್ಯ. ‘ಅಸೆಯೇ ದುಃಖಕ್ಕೆ ಮೂಲ’ ಎಂದು ಹೇಳಿದ ಬುದ್ದ ಆಸೆಯನ್ನು ಗೆದ್ದು ಮಹಾಪುರುಷನಾದ. ಆದರೆ ತನ್ನ ಗುರು, ಮಾರ್ಗದರ್ಶಿ, ಕೇರಿಯ ಯುವಕರ ನಾಯಕ ತನ್ನ ಶ್ರೀಧರಣ್ಣ ಏನಾದ? ಬುದ್ಧನ ತತ್ತ್ವಗಳಿಗೆ ಮರುಳಾಗಿ ಬೌದ್ದನಾಗಿ ನಮ್ಮ ಕೇರಿಯನ್ನು ಬಿಟ್ಟು ಒಳ್ಳೆಯ ಬೀದಿಗೆ, ಅಂತಸ್ತಿಗೆ, ಮಹಡಿ ಮನೆಗೆ, ಬದಲಾಗುತ್ತ ಹೋದ ಶ್ರೀಧರಣ್ಣ ಎತ್ತರಕ್ಕೆ ಏರಲು ಹೋಗಿ ಕೆಳಗೆ ಬಿದ್ದುಬಿಟ್ಟಿದ್ದ. ನಾವಿದ್ದ ಜಾಗದಿಂದಲೇ ಮೇಲೆ ಹೋಗೋದಕ್ಕೆ ಸಾಧ್ಯವಿಲ್ಲವೇ? ಯಾಕಿಲ್ಲ? ಮನುಷ್ಯ ಬದಲಾಗಬೇಕೆ ಹೊರತು ಒಂದಂಗಿ ಬಿಟ್ಟು ಇನ್ನೊಂದನ್ನು ತೊಡುವ ಹಾಗೆ ಆಗಬಾರದು. ಧರ್ಮ ಬದಲಾದರೆ ಒಳಗಿನ ಆಸೆ, ರೋಷ, ದುಷ್ಟತನ ಎಲ್ಲ ಹೋಗಿಬಿಡುತ್ತವೆಯೆ ಎಂದು ಅವನೊಡನೆ ತುಂಬಾ ಜಗಳಾಡಿದೆ. ‘ನೀನೂ ಸದಾಶಿವನ ಹಾಂಗ ಮಾತಾಡಬ್ಯಾಡಾ’ ಅಂದ. ‘ಯಾರು ಸದಾಶಿವ’ ಅಂದೆ, ತನ್ನ ಗೆಳೆಯನ ಪರಿಚಯ ಮಾಡಿ ಕೊಟ್ಟ…. +‘ನಿನ್ನ ಸೀದ್ರಣ್ಣ ಬೌದ್ಧ ಆಗಿ ಆನಂದ ಆಗಲಿಕ್ಕೆ ಹೊಂಟಾನ, ನೀ ಏನ ಆಗ್ತೀ” ಸದಾಶಿವ ಮೊದಲನೇ ಪ್ರಶ್ನೆ ಎಸೆದಿದ್ದ. +“ಈ ಮಾತಿನಿಂದ ಅಣ್ಣನ ಕೂಡ ಮನ್ಯಾಗ ದಿನಾ ಜಗಳಾಡತೀನಿ. ಅಂವಾ ಕೇಳವೊಲ್ಲ, ಅಂವನ ತಲ್ಯಾಗ ದೆವ್ವ ಹೊಕ್ಕೈತಿ”. +“ಹೌದು, ನೀ ಅನ್ನೋದು ಖರೆ ಐತಿ, ಅಂವನ ತಲ್ಯಾಗ ದೆವ್ವ ಹೊಕ್ಕೈತಿ. ನಾನು, ಸಂಘದ ಗೆಳೆಯರು ಎಲ್ಲಾರೂ ಕೂಡಿ ಭಾಳ ಪ್ರಯತ್ನ ಮಾಡಿದಿವಿ. ಏನೂ ಉಪಯೋಗ ಆಗಲಿಲ್ಲ. ಅಂವಾ ಅಂತೂ ನಮ್ಮ ಕೈ ಬಿಟ್ಟ ಹೊಂಟಾನ, ನೀ ಏನ ಮಾಡೂವಾಕಿ ಹೇಳ. ಇಲ್ಲೇ ಅಪ್ಪ-ಅವ್ವನ ಕೂಡ ಇರ್ತೀಯೋ, ನೀನೂ ಹೋಗ್ತಿಯೊ?” +“ನಮ್ಮಪ್ಪ-ಅವ್ವ, ತಮ್ಮಂದಿರು ಎಲ್ಲಾರೂ ಅಣ್ಣನ ಕೂಡ ಹೋಗಲಿಕ್ಕೆ ಒಂಟಿಗಾಲ ಮ್ಯಾಲ ನಿಂತಾರ. ನಾ ಮಾತ್ರ ಗಟ್ಟಿ ಮನಸ ಮಾಡೇನಿ. ನಾ ಒಬ್ಬಾಕಿ ಆದರೂ ಅಡ್ಡಿಯಿಲ್ಲಾ, ಇಲ್ಲೇ ಕೇರಿಯೊಳಗ ಇದ ಗುಡಿಸಲದಾಗ ನಾ ಇರಾಕಿ.” +“ಹೊಟ್ಟಿಗೆ ಏನ್ಮಾಡ್ತಿ?” +“ಪಿ.ಯು.ಸಿ. ಪಾಸಾಗೇನಿ.ಎಲ್ಲೆರ ಕೆಲಸಾ ಹುಡಕತೇನಿ, ಯೋಗೀಶ ಪ್ರಿಂಟಿಂಗ ಪ್ರೆಸ್ಸಿನ್ಯಾಗ ಕೆಲಸಾ ಕೊಡಸ್ತೀನಿ ಅಂದಾನ ನಮ್ಮ ಸಂಘದ ಕೆಲಸಾ ಮಾಡತೇನಿ. ನಮ್ಮ ಜನರಿಗೆ ತಿಳವಳಿಕಿ ಹೇಳ್ತೀನಿ. ಅವರಿಗೆ ಆಗೂ ಅನ್ಯಾಯ, ಅತ್ಯಾಚಾರಾ ಎದುರಿಸತೀನಿ” ಆವೇಶದಿಂದ ಹೇಳಿದೆ. ಅವನ ಕಣ್ಣುಗಳಲ್ಲಿ ಮೆಚ್ಚುಗೆ ಮೂಡಿತ್ತು. +“ವಾಹ್‌ರೇ ಹುಡುಗೀ. ಇನ್ನೂತನಾ ನಿನ್ನಂಥಾ ಹುಡೂಗೀನ ನನಗ ಸಿಕ್ಕಿದ್ದಿಲ್ಲಾ.” ಅವನ ಹೊಗಳಿಕೆ ತನ್ನ ಕಪ್ಪು ಕೆನ್ನೆಗಳನ್ನು ಕೆಂಪಾಗಿಸಿದ್ದು ಅವನಿಗೆ ಕಾಣುವುದು ಹೇಗೆ ಸಾಧ್ಯ? ಹಾಗೇ ಮಾತು ಮುಂದುವರಿಸಿದ್ದ. “ನಿನ್ನ ಛಲ, ದಿಟ್ಟಿತನದ ಮಾತು, ಗಟ್ಟಿ ಮನಸ್ಸು ನೋಡಿದರ ನಮ್ಮ ಅವ್ವನ ನೆನಪ ಆಗತೈತಿ.” ಸದಾಶಿವನ ಅವ್ವನನ್ನು ಎಂದಾದರೂ ನೋಡಬೇಕೆಂದು ತನಗೆ ಆಗಲೇ ಅನ್ನಿಸಿತ್ತು. +ಸಂಘ, ಸಮ್ಮೇಳನ, ಹೋರಾಟ, ಮೆರವಣಿಗೆಯ ಕೆಲಸಗಳಲ್ಲಿ ನನ್ನ, ಸದಾಶಿವನ ಓಡಾಟ, ಒಡನಾಟ ಹೆಚ್ಚಾಗತೊಡಗಿತು. ಕೇರಿಯ ಜನರ ಬಾಯಿ ಸುಮ್ಮನಿದ್ದೀತೆ? ನನ್ನ ಬಳಿ ಅರಿವೆ ಮಾತು, ಓದು, ಬುದ್ಧಿ ಅವರಿಂದ ನನ್ನನ್ನು ದೂರ ಒಯ್ದಿರಬೇಕು. ನನಗೆ ತಂಗಿಯೇ ಇಲ್ಲ, ಸತ್ತು ಹೋಗಿದ್ದಾಳೆಂದು ಒದರಿ ಜಗಳಾಡಿ ಹೋಗಿದ್ದ ಸೀದ್ರಣ್ಣನ ಮನೆಯ ಹೊಸಲು ನಾನು ಮತ್ತೆ ಮೆಟ್ಟಿರಲಿಲ್ಲ. ತನ್ನ ಸುತ್ತಮುತ್ತೆಲ್ಲ ಹುಡುಗರೇ ಇದ್ದರೂ ತನಗೆ ಸರಿಯಾಗುವಂಥ ಒಬ್ಬ ಯುವಕನೂ ಕಣ್ಣಿಗೆ ಬಿದ್ದಿರಲಿಲ್ಲ. ಅಣ್ಣನ ವೈರಿಗಳು, ನನ್ನ ಬಗ್ಗೆ ಹೊಟ್ಟೆಕಿಚ್ಚು ಪಡುವವರೂ ಅಲ್ಲಿದ್ದರು. ಅಂಥವರ ಮಾತುಗಳಿಂದ ತಳಮಳಗೊಳ್ಳುತ್ತಿದ್ದೆ. ಅಂಥ ದಿನಗಳಲ್ಲೇ- +“ದೇವಕೀ, ನೀ ನನ್ನ ಮದುವೀ ಆಗ್ತೀಯಾ” ಸದಾಶಿವನ ಮಾತಿಗೆ ಬೆಚ್ಚಿಬಿದ್ದಿದ್ದೆ. ನನ್ನ ಮನಸ್ಸಿನ ಮಾತುಗಳನ್ನೇ ಕಿವಿ ಕೇಳುತ್ತಿರುವ ಭ್ರಮೆ ಎಂದುಕೊಂಡೆ. +“ದೇವೂ ನನಗೆ ನಿನ್ನ ಸ್ವಭಾವ, ಗುಣಾ ಭಾಳ ಸೇರ್ತದ. ನಾವಿಬ್ಬರೂ ಮದುವೀ ಮಾಡಿಕೊಂಡರ ಸುಖದಿಂದ ಇರ್ತೀವಿ ಅನಸ್ತದ.” +“ನನ್ನ ರೂಪ, ಬಣ್ಣಾ…?” +“ಅಮಾವಾಸ್ಯಿ ದಿನ ನಕ್ಷತ್ರ ಹೊಳದಾಂಗ ಥಳಾಥಳಾ ಹೊಳೀತಾವಲ್ಲ ಈ ಜೋಡಿ ಕಣ್ಣು. ಇದರ ಮುಂದ ನಾ ಜಗತ್ತ ಮರೀತೇನಿ. ಈ ನಿನ್ನ ಉದ್ದನ್ನ ಕೂದಲ ನನಗೆ ಎಷ್ಟ ಹುಚ್ಚ ಹಿಡಿಸೈತಿ ಅಂದರ ಸಾಯೂವಾಗ ಈ ನಿನ್ನ ಜಡೀಲೆ ಉರ್ಲ ಹಾಕ್ಯೋಬೇಕು ಅನಸತೈತಿ.” ತಳಮಳ, ಉದ್ವೇಗ ಎಲ್ಲ ಶಾಂತವಾಗಿ ಶುದ್ಧ ಪ್ರೇಮ ಒಂದೇ ಉಳಿದಿತ್ತು ನನ್ನ ಮನಸ್ಸಿನಲ್ಲಿ. +ಮಾನವ ಕುಲವೇ ನಮ್ಮ ಕುಟುಂಬ ಎಂದುಕೊಂಡ. ನಾವಿಬ್ಬರೂ ಒಂದು ಸಭೆಯಲ್ಲಿ ನೂರಾರು ಜನರ ಎದುರು ಹಾರ ಬದಲಾಯಿಸಿ ಸತಿ-ಪತಿಗಳಾದೆವು. ನನಗೆ ಅಷ್ಟೇ ಸಾಕಿತ್ತು. ಸದಾಶಿವ ಸುಮ್ಮನಿರದೆ ರಜಿಸ್ಟ್ರಾರ ಕಛೇರಿಯಲ್ಲಿಯೂ ಮದುವೆ ನೊಂದಾಯಿಸಿದ. ಮನುಷ್ಯನಿಗೆ ಕಾಣುವಂಥ ಮುಖವೊಂದೇ ಅಲ್ಲದೆ ಇನ್ನೂ ಬೇರೆ ಬೇರೆ ಮುಖಗಳಿರುತ್ತವೆಂದು ತಿಳಿಯದಷ್ಟು ನಾನು ಮುಗ್ಧಳಾಗಿದ್ದೆ. ಅಲ್ಲದೇ ನನಗೆ ಇದ್ದಿದ್ದೊಂದೇ ಮುಖ. ಅಲ್ಲದೆ ನನ್ನ ಬದುಕಿನ ಹೀರೋ ನಾಲ್ಕಾರು ವರ್ಷಗಳಲ್ಲಿ ಸಂಪೂರ್ಣ ಬದಲಾಗಿದ್ದ. ಮನಸ್ಸಿನ ಆಸೆಗೆ ಮಿತಿಯಿಲ್ಲ ಎನ್ನುವ ಮಾತಿಗೆ ಸದಾಶಿವನೂ ಹೊರತಾಗಿರಲಿಲ್ಲ. ಆದರ್ಶ ಪ್ರೇಮವನ್ನು ಎಲ್ಲೋ ಒಗೆದುಬಿಟ್ಟು ಅಂತರ್ಜಾತಿ ವಿವಾಹಕ್ಕೆ ಸರಕಾರ ಕೊಡುವ ಎಲ್ಲ ಸವಲತ್ತುಗಳನ್ನೂ ಪಡೆದ. ಹಣ, ನೌಕರಿ, ಸೈಟು ಎಲ್ಲ ಬಾಚಿಕೊಂಡ. ಮದುವೆಯಾದೊಡನೆ ನಾನು ಕೇರಿಯ ಗುಡಿಸಲನ್ನು ಬಿಡಬೇಕಾಗಿತ್ತು. ಅದೇ ನನ್ನ ತಪ್ಪು. ಸದಾಶಿವ ನನ್ನ ಜೊತೆಗೆ ನನ್ನ ಗುಡಿಸಲಲ್ಲಿ ಇರಲು ಸಾಧ್ಯವೇಕಿಲ್ಲ ಎನ್ನುವ ಪ್ರಶ್ನೆ ನನ್ನ ಮನದಲ್ಲಿ ಹುಟ್ಟದಷ್ಟು ಅವನ ಪ್ರೇಮನಾಟಕದ ನಾಯಕಿಯ ಪಾತ್ರದಲ್ಲಿ ಕಳೆದುಹೋಗಿದ್ದೆ. ಸರಕಾರೀ ಕಾಲೇಜಿನ ರೀಡರು, ಒಳ್ಳೇ ಮನೆ, ಸೀರೆಗಳು, ಪಾತ್ರೆ-ಸಾಮಾನು, ಓಡಾಡಲು ಸ್ಕೂಟರು, ಕಂಕುಳಲ್ಲೊಂದು ಮಗು, ಕೆಲಸ ಬಿಟ್ಟು ಹಾಯಾಗಿದ್ದೆ, ಎಲ್ಲ ಇತ್ತು, ಇನ್ನೇನು ಬೇಕಿತ್ತು ನನಗೆ. ಇಷ್ಟೆ ಸಾಕೆ? ಸಾಕಾಗಿಲ್ಲ ಇನ್ನೂ ಏನೋ ಬೇಕು ಎನ್ನುವ ಅತೃಪ್ತಿ ಒಳಗೇ ಹೊಗೆಯಾಡುತ್ತಿತ್ತು. ಸದಾಶಿವ ಕ್ಲಾಸು, ಪರೀಕ್ಷೆ ಕಾಲೇಜು ಎಂದು ಸಂಘದ ಕೆಲಸಕ್ಕೆ ತಪ್ಪಿಸಿಕೊಳ್ಳುತ್ತಿದ್ದ ವಿಷಯ ನನ್ನ ಗಮನಕ್ಕೆ ಬರುತ್ತಿತ್ತು. ಬರಬರುತ್ತ ನಾನು ಹೋದರೂ ಗೊಣಗುತ್ತಿದ್ದ. ಕೊನೆಗೆ ನಿರ್ಬಂಧ ಹಾಕಿದ. ಅದೇ ಅಸಮಧಾನ ಬೆಳೆದು ತನ್ನಲ್ಲಿ ಬಿಸಿಯಾಗಿ ಜಗಳಗಳಾಗುತ್ತಿದ್ದವು. ಪ್ರೇಮದ ಕಾವು ಇಳಿಯುತ್ತ ಹೋದಂತೆ ಈ ಎಲ್ಲ ಕೊರತೆಗಳು ಸ್ಪಷ್ಟವಾಗಿ ಇಬ್ಬರ ನಡುವಿನ ಬಿರುಕು ಹೆಚ್ಚುತ್ತಾ ಹೋಯಿತು. ಅಂದು ತಾನು ಹಟ ತೊಟ್ಟು. ಕಿರಣಗಳನ್ನು ಎತ್ತಿಕೊಂಡೇ ಮೆರವಣಿಗೆಯಲ್ಲಿ ಹೋದೆ. ಸದಾಶಿವ ಸಿಟ್ಟಾಗಿ ತನ್ನನ್ನು ಹೊಡೆದು ಮರ್ಯಾದೆ ಹಾಳಾಗುತ್ತಿದೆಯೆಂದು ಕೂಗಾಡಿದ. ಇತ್ತಿತ್ತಲಾಗಿ ಅವನು ತನ್ನನ್ನು ತೀವ್ರವಾಗಿ ಪ್ರೇಮಿಸಲೂ ಹಿಂಜರಿಯುತ್ತಿದ್ದ. ನಮ್ಮ ದಾರಿ ಕವಲೊಡೆದಿದ್ದುವು. ಈ ಬದಲಾವಣೆ ಹೇಗೆ ಕೊನೆಗೊಳ್ಳುತ್ತದೆ ಎಂದು ತಾನು ಭಯಪಡುತ್ತಿದ್ದ ದಿನಗಳಲ್ಲೇ – +“ದೇವಕಿ, ನಾ ಹಳ್ಳೀಗೆ ಹೋಗಿ ಬರತೀನಿ. ಕೆಲಸ ಅದ. ತಿರುಗಿ ಬರೂದು ತಡಾ ಆಗ್ತದ, ನನ್ನ ದಾರೀ ನೋಡಬ್ಯಾಡಾ.” +“ನಿಮ್ಮ ಅವ್ವನ್ನ, ಹಳ್ಳೀನ ನಾನೂ ನೋಡಬೇಕು. ಈ ಸಲಾ ಆದ್ರೂ ನನ್ನೂ ಕರಕೊಂಡು ಹೋಗ್ರಿ.” +“ಇಲ್ಲಾ ನನ್ನ ಮದುವೀ ಅಗೇದ. ಅದೂ ಹರಿಜನ ಹುಡುಗೀ ಮಾಡಿಕೊಂಡೀನಿ ಅಂತ ನಾ ಯಾರಿಗೂ ಹೇಳಿಲ್ಲ. ಗೊತ್ತಾದರ ಅವ್ವ ಎದಿ ಒಡಕೊಂಡ ಸಾಯ್ತಾಳ. ನೀ ಬರೂದು ಬ್ಯಾಡಾ.” +ಸದಾಶಿವ ಹೊರಟುಹೋಗಿದ್ದ. ನಮ್ಮ ಮದುವೆಯಾಗಿ ಮೂರು ವರ್ಷ ಕಳೆದಿದ್ದರೂ ಈ ಸುದ್ದಿ ಮನೆಯಲ್ಲಿ ಹೇಳಿಲ್ಲ ಎಂದಿದ್ದ ಸದಾಶಿವನ ಇನ್ನೊಂದು ಮುಖದ ಪರಿಚಯ ಆದಾಗ ನಾನು ಕುಸಿದುಬಿದ್ದೆ. ಅದೇ ಕೊನೆಯ ಭೆಟ್ಟಿ. ತಿಂಗಳೂ ಕಳೆದರೂ ಸದಾಶಿವ ಬರಲಿಲ್ಲ. ಮನೆಯ ದಿನಸಿ ತೀರಿದಾಗ ಒಂದೆರಡು ಪಾತ್ರೆ ಮಾರಿದೆ. ಸದಾಶಿವನೇ ಬಿಟ್ಟು ಹೋದಮೇಲೆ ಆ ಮನೆಯಲ್ಲಿ ಇರುವ ಅಧಿಕಾರ ತನಗಿಲ್ಲ ಎನ್ನಿಸಿದಾಗ ಎರಡು ದಿನ ಉಪವಾಸವಿದ್ದೆ. ಪೈಸೆ ಖರ್ಚಿಲ್ಲದೆ ಮಗಳ ಜೊತೆ ಕೆರೆಗೆ ಬಿದ್ದು ಸಾಯಬೇಕೆನ್ನುವ ಯೋಚನೆಯೂ ಬಂದಿತ್ತು ಮನೆಯವರು, ಕೇರಿಯವರು, ಸಮಾಜ, ವ್ಯವಸ್ಥೆ ಎಲ್ಲದರ ವಿರುದ್ಧ ಹೋರಾಡುವ ದಿಟ್ಟೆಯಾಗಿದ್ದ ನಾನು ಈ ಭಂಡ ಗಂಡನ ಜೊತೆಗಿದ್ದು ಹೇಡಿಯಾಗಿಬಿಟ್ಟೆನೇ? ಉಹುಂ-ಸೋತು ಸಾಯಬಾರದು. ಕಷ್ಟ ನನಗೇನೂ ಹೊಸದಲ್ಲ. ಮಗಳೊದನೆ ಸ್ವತಂತ್ರವಾಗಿ ಬದುಕಬೇಕು. ಆದರೆ ಅದಕ್ಕೂ ಮೊದಲು ಸದಾಶಿವನ ಬಣ್ಣ ಬಯಲು ಮಾಡಬೇಕು. ಅವನ ಅವ್ವನಿಗೆ ತಾನ್ಯಾರೆಂದು ತಿಳಿಯಬೇಕು. +ವಿಚಾರ ಮಾಡುತ್ತ ಮಲಗಿದ ದೇವಕಿಗೆ ಒಮ್ಮೆಲೆ ಎಚ್ಚರಾಯಿತು. ಕಿರಣಳ ಜ್ವರ ಇಳಿದು ಬೆವರು ಸುರಿದಿತ್ತು. ಕಿಡಿಕಿಯ ಕೆಳಗೆ ಪತ್ರವೊಂದು ಬಿದ್ದಿತ್ತು-ತನಗೆ ಬರೆಯುವವರಾದರೂ ಯಾರು-ಅಪರಿಚಿತ ಕೈಬರಹ. ಕುತೂಹಲದಿಂದ ಓದಿದಳು. +ಪ್ರೀತಿಯ ದೇವೂ, +ನಾನು ನಿನಗೆ ಬರೆಯುತ್ತಿರುವುದು ಇದೇ ಮೊದಲು. ಕೊನೆಯದೂ ಇದೇ ಪತ್ರ. ಕೆಲವು ತಿಂಗಳುಗಳಿಂದ ನನ್ನ ಅರೋಗ್ಯ ಸರಿ ಇರಲಿಲ್ಲ. ಡಾಕ್ಟರರಿಗೆ ತೋರಿಸಲು ಹೋದೆ. ನಾನಾ ತರದ ಪರೀಕ್ಷೆಗಳಾದ ಮೇಲೆ ಡಾಕ್ಟರ ಕ್ಯಾನ್ಸರ ಆಗಿದೆ, ಬೇಗ ಆಪರೇಷನ್ ಮಾಡಬೇಕೆಂದರು. ಈ ರೋಗದ ಬಗ್ಗೆ ನಾನೂ ಅಷ್ಟಿಷ್ಟು ಓದಿಕೊಂಡಿದ್ದೇನೆ. ಇದು ಸಾವನ್ನು ಮುಂದೆ ಹಾಕುವ ರೋಗವೇ ಹೊರತು ಗುಣವಾಗುವದಲ್ಲ. ಮಕ್ಕಳಿಬ್ಬರ ಬೇಜವಾಬ್ದಾರಿಯಿಂದ ಆಸ್ತಿ ಹಾಳಾಗುತ್ತಿದೆ. ಅಂಥವರ ಮೇಲೆ ನನ್ನ ಆಪರೇಷನ್ ಖರ್ಚೂ ಹಾಕಲು ಮನಸ್ಸು ಒಪ್ಪುವುದಿಲ್ಲ. ನನ್ನ ಕೆಲಸ ಮುಗಿದಿದೆ. ಇನ್ನೂ ಬದುಕಬೇಕೆನ್ನುವ ಆಸೆಯೂ ನನಗಿಲ್ಲ. ನಿನಗೆ, ಕಿರಣಳಿಗೆ ಆಶೀರ್ವಾದಗಳು. ನನ್ನ ಬದುಕನ್ನು ಮುಗಿಸುವ ನಿರ್ಧಾರ ಕೈಗೊಂಡಿದ್ದೇನೆ. ಬದುಕೇ ಒಂದು ಹೋರಾಟ, ನಿನ್ನ ಹೋರಾಟದಲ್ಲಿ ಯಶಸ್ಸು ಸಿಗಲಿ. +ನಿನ್ನ +ಗೌರತ್ತೆ +ಮನೆಯ ಛಾವಣಿಯೇ ತನ್ನ ಮೇಮೆ ಕಡಿದುಕೊಂಡು ಬೀಳುತ್ತಿದೆಯೆ. ತಲೆ ಗಟ್ಟಿಯಾಗಿ ಹಿಡಿದುಕೊಂಡು ದೇವಕಿ ಚೀರಿದಳು. ಅತ್ತು ದುಃಖ ಹಗುರ ಮಾಡಿಕೊಳ್ಳಲು ತನಗೆ ಅತ್ತೆಯ ತೊಡೆಯೊಂದು ಇತ್ತು. ಈಗ…ಈಗ ತಾನು ನಿಜವಾಗಿಯೂ ಅನಾಥೆ, ಸಂಜೆಯ ಕತ್ತಲು ಆವರಿಸಿಕೊಳ್ಳುತ್ತಿದ್ದಂತೆ ಅಳುವು ನಿಂತು ಮನಸ್ಸಿನಲ್ಲಿ ಶೂನ್ಯ ತುಂಬಿಕೊಳ್ಳತೊಡಗಿತ್ತು. ಕಿರಣ ‘ಅವ್ವಾಹಸಿವಿ’ ಎಂದಾಗ ಎಚ್ಚೆತ್ತು ಅವಳಿಗೆ ಹಾಲು ಕುಡಿಸಿ ಬಗಲಲ್ಲಿಟ್ಟುಕೊಂಡು ಬಸ್‌ಸ್ಟ್ಯಾಂಡ್ ದಾರೀ ಹಿಡಿದಳು. ಏನಾದರಾಗಲಿ-ಅತ್ತೆಯನ್ನೊಮ್ಮೆ ನೋಡಲೇಬೇಕು-ಅವಳನ್ನು ಮೊದಲು ನೋಡಿದ ದಿನ- +“ನೀನು ದೇವಕಿ ಏನು? ನಾನು ಸದಾಶಿವನ ಅವ್ವ ಗೌರವ್ವ. ಸರವೂರಿಂದ ಬಂದೀನಿ. ಇಂವಾ ನಮ್ಮ ಆಳುಮಗಾ ಫಕೀರ, ಪಕೀರಾ ನೀ ಹೊರಗ ಕಟ್ಟೀಮ್ಯಾಲೆ ಕೂಡ್ರು.” +ಎತ್ತರವಾದ, ಕೆಂಪುಬಣ್ಣದ ಬೆಳ್ಳಿಗೂದಲಿನ ಹೆಂಗಸೊಬ್ಬಳು ಹೊಸ್ತಿಲ ದಾಟಿ ಒಳಬರುತ್ತ ಹೇಳಿದಾಗ ದೇವಕಿಯ ಎದೆ ಡವಡವ ಎಂದಿತ್ತು. ಯಾವ ಉಪಚಾರಕ್ಕೂ ಕಾಯದೆ ಒಳಗೆ ಬಂದು ಕುಳಿತ ಅತ್ತೆಯನ್ನು ನೋಡಿ ಸಿಟ್ಟಿನ ಮಾತುಗಳಲ್ಲ ಒಳಗೇ ಇಂಗಿ ಹೋಗಿದ್ದವು. ನಿಧಾನವಾಗಿ ಮಾತನಾಡಿದ್ದಳು ಗೌರತ್ತೆ. +“ನಿನ್ನ ಪತ್ರಾ ಮುಟ್ಟಿತು ದೇವೂ, ಆದರ ಭಾಳ ತಡಾ ಆತು. ನಿನ್ನ ಮದುವೀ ಆಗೀನಿ ಅಂತ ಸದಾಶಿವ ನಮಗ ತಿಳಿಸೇ ಇಲ್ಲ- ಅವಂಗ ನನ ಮಗಾ ಅನಲಿಕ್ಕೂ ನಾಚಿಕೆ ಬರ್ತದ- ಈಗ ಹದಿನೈದು ದಿನಾ ಆತು ನಮ್ಮ ಜಾತೀದ ಇನ್ನೊಂದ ಹುಡುಗಿ ಮದುವೀ ಮಾಡಿಕೊಂಡು ಹನಿಮೂನ ಹೋಗ್ಯಾನ. ಈ ಸುದ್ದಿ ಕೇಳಿದರ ನಿನಗ ಕೆಟ್ಟ ಅನಸ್ತದ ಅನ್ನೋದು ಗೊತ್ತಾಗೇ ನಾನ ಬಂದೆ. ನಿನ್ನ ನೋಡಿ ಮಾತಾಡಬೇಕು ಅನ್ನಿಸ್ತು ಬಂದೆ.” ಅವಳ ದನಿಯಲ್ಲಿಯ ನಿಷ್ಕಪಟತೆ ನನ್ನ ಮನಸ್ಸನ್ನು ಮುಟ್ಟಿ ನಂಬುವಂತೆ ಮಾಡಿತು. ತಾನು ಮೋಸಕ್ಕೆ ಬಲಿಯಾದೆ ಅನ್ನೋದು ನೆನಪಾಗಿ ದುಃಖ ಉಕ್ಕಿ ಬಂತು. ಅದನ್ನು ತಿಳಿದವಳಂತೆ ಗೌರತ್ತೆ ತನ್ನನ್ನು ಹತ್ತಿರ ಎಳೆದುಕೊಂಡಳು. ಆಕೀ ಉಡಿಯೊಳಗ ನಾ ಮನಸಾ ಅತ್ತುಬಿಟ್ಟೆ. +“ನನ್ನ ಮಗಾ ಒಂದ ಹೆಣ್ಣಿನ ಕುತಿಗೀ ಕೊಯ್ದಾ ಅಂದರ ಆಂವಾ ನನ್ನ ಪಾಲಿಗೆ ಸತ್ತಾಂಗ. ಆದರ ನಾ ಈಗ ಏನ ಮಾಡಿದರೂ, ಏನ ಆಡಿದರೂ ಆಗಿಹೋದ ತಪ್ಪು ತಿದ್ದಾಕ ಆಗೂದಿಲ್ಲ. ನಿನಗ ಏನ ಸಹಾಯ ಬೇಕಾದರೂ ಕೇಳು, ಮಾಡ್ತೀನಿ.” ಮಗಳ್ನ ಕರಕೊಂಡು ಒಬ್ಬರ ಮನೀ ಬಾಗಿಲಿಗೆ ಹೋಗಬಾರದು. ಯಾರಿಗೂ ಭಾರ ಆಗಬಾರದು. ನನ್ನ ಕಾಲ ಮ್ಯಾಲ ನಾ ನಿಂತು ಜೀವನಾ ಮಾಡಬೇಕಂತೀನಿ.” ಅನ್ನೂ ನನ್ನ ಮಾತು ಕೇಳಿ ಮತ್ತೊಮ್ಮೆ ಅಪ್ಪಿಕೊಂಡಳು. +“ಮಗಳ ನಿನ ಬಣ್ಣ ಕಪ್ಪ ಅದರೂ ಮನಸ್ಸು ಬೆಳ್ಳಗೈತಿ. ನಿನ್ನಂತಾ ಹೆಣ್ತಿ ಕೂಡ ಬಾಳೇ ಮಾಡೂ ದೈವ ಆ ಎಡವಟ್ಟಗಿಲ್ಲ ಮತ್ತೇನ ಬೇಕಾದರೂ ಕೇಳು. ನಿನಗ ಅಧಿಕಾರ ಐತಿ. ಬರಬೇಕು ಅನ್ನಿಸಿದಾಗ ಹಳ್ಳೀ ಮನೀಗಿ ಬಾ. ನನಗೂ ಹೆಣ್ಣುಮಕ್ಕಳಿಲ್ಲ. ಎರಡೂ ಗಂಡು. ಸಾಲೀ ಕಲಿತು ಶಾಣ್ಯಾ ಆಗಿ ನಾಕ ಮಂದಿಗೆ ಉಪಕಾರ ಮಾಡಲಿ ಅಂತ ಕಲಿಸಿದರ ಇಂವಾ ಹಿಂಗ ಮಾಡಿದಾ. ಇವನ ತಮ್ಮ ಮಲ್ಲೇಶಿ ವಿದ್ಯಾ ತಲೀಗೆ ಹತ್ತಲಾರದ ಹೊಲಾ ಮಾಡ್ತೀನಿ ಅಂತ ಊರಾಗ ಬಿಳೇ ಅರಿವಿ ಹಾಕ್ಕೊಂಡ ತಿರಗತಾನ. ಮನ್ಯಾಗ ಹೆಣ್ತೀ ಮಕ್ಕಳು ಇದ್ರೂ ರಾತ್ರಿ ಯಾವಾಕಿನ್ನರೆ ಹುಡುಕ್ಕೊಂಡು ಹೊಲಗೇರಿಗೆ ಹೋಕ್ಕಾನ. ಹಿಂತಾ ಮಕ್ಕಳು ಹುಟ್ಟದಿದ್ದರ ಛೊಲೋ ಇತ್ತು. ಮುಪ್ಪಿನ ಕಾಲಕ್ಕ ಮನಸೀಗಿ ಶಾಂತಿ ಇರಬೇಕು. ಇದನೆಲ್ಲಾ ನೋಡಿದರ ಲಗೂನ ಕಣ್ಣು ಮುಚ್ಚಲಿ ಅಂತೀನಿ.” ರಾತ್ರಿ ಪಕ್ಕದಲ್ಲಿ ಮಲಗಿದ ಗೌರತ್ತೆ ಕಣ್ಣಿರು ತಂದು ಹೇಳಿದ್ದಳು. +“ಯವ್ವಾ ನೀನ ನನ್ನವ್ವ. ಹಂಗ ಸಾಯೂ ಮಾತ ಆಡಬ್ಯಾಡ” ಅಂದಿದ್ದೆ. ಎಂದೂ ಕಾಣದ ಆ ಹೆಂಗಸಿನೊಡನೆ ತನ್ನ ಸಂಬಂಧ ಏನಿತ್ತು? ಅವಳು ತನ್ನನ್ನು ಬಿಟ್ಟು ಹೋದ ಗಂಡನ ಅವ್ವ. ಆದರೆ ಬದುಕಿನಲ್ಲಿ ಸುಖಕ್ಕಿಂತ ಕಷ್ಟವನ್ನೇ ಹೆಚ್ಚು ಉಂಡ ಹೆಣ್ಣು ಎಂದು ಕೇಳಿದ್ದೆ. ಬಹುಶಃ ಅದೇ ತಮ್ಮಿಬ್ಬರನ್ನು ತಳಕು ಹಾಕಿರಬೇಕು. +“ಯವ್ವ, ನೀ ಎಲ್ಲಾರ ಹಾಂಗ ಅಲ್ಲ. ಜಗತ್ತಿನ್ಯಾಗಿನ ಎಲ್ಲಾ ಹೆಂಗಸರೂ ಒಂದ ಅಂದರ, ನೀ ಒಬ್ಬಾಕೀನೇ ಒಂದು ಅನಿಸೇದ ನನಗ.” +“ಹುಚ್ಚವ್ವ, ನಾ ಏನ ಹೆಚ್ಚಿನಾಕಿ ಕಂಡೆ ನಿನಗ.” +“ನಿನ್ನ ಕುಲಾ ಹೆಂತಾದ್ದು ಏನ ಕತಿ. ಆದರೂ ನೀ ನನ್ನ ಒಪ್ಪಿಕೊಂಡು ಅಪ್ಪಿಕೊಂಡಿ, ಇದು ಭಾಳ ದೊಡ್ಡ ಮಾತು, ಸಭಾದಾಗ ದೊಡ್ಡ ಮನುಷ್ಯರು ದೊಡ್ಡ ದೊಡ್ಡ ಮಾತ ಹೇಳತಾರ. ಆದರ ಮನೀ ಬಾಗಿಲಿಗಿ ಹೋದರ ಒಳಗ ಬಾ ಅನ್ನಾಂಗಿಲ್ಲ, ನೀ ಒಬ್ಬಾಕಿ ಅಪವಾದ ಅದೀ.” +“ಅದಕ್ಕ ಬ್ಯಾರೇನೇ ಕಾರಣ ಐತಿ ದೇವೂ. ಹುಟ್ಟಿದ ಮನ್ಯಾಗ ನಾ ಬೆಳದದ್ದ ಹಾಂಗ. ನಮ್ಮಪ್ಪ ವೀರಪ್ಪ ದೇಶಕ್ಕ ಸ್ವತಂತ್ರ ತರಾಕ ಹೋರಾಡಿ ಪೋಲೀಸರ ಹೊಡೆತಾ ತಿಂದು ಜೇಲಿಗೆ ಹೋಗಿದ್ದ. ಗಾಂಧೀ ಅಜ್ಜನ ಕಟ್ಟಾ ಭಕ್ತಾ ಅಂವಾ. ಮಕ್ಕಳಿಗೆಲ್ಲಾ ಓದು-ಬರಹ ಕಲಿಸಿದಾ, ಖಾದಿ ತೊಡಾಕ ಹಚ್ಚಿದ್ದಾ, ನೂಲಾಕ ರಾಟೀ ತಂದುಕೊಟ್ಟಿದ್ದಾ, ರಟ್ಟೀ ಮುರುದು ದುಡದ ತಿನ್ರಿ ಅಂತಿದ್ದಾ. ಈ ಜಾತಿ ಪಾತಿ ಎಲ್ಲಾ ಮನಿಶೇರ ಮಾಡಿ ಕೊಂಡಿದ್ದೋ ಮಕ್ಕಳ್ರಾ, ಎಲ್ಲಾರ ಮೈಯಾನ ರಕ್ತ ಕೆಂಪ ಐತಿ, ಹುಟ್ಟಿಸಿದ ದೇವರು ಒಬ್ಬನ ಅದಾನ ತಿಳಕೊಳ್ರಿ ಅಂತ ಬುದ್ಧಿ ಹೇಳತಿದ್ದಾ.” +“ಹಂತಾ ದೊಡ್ಡ ಮನಶ್ಯಾನ ಮಗಳಾಗಿ ನೀ ಹಿಂತಾಕಿ ಆಗೀ ಯವ್ವಾ. ಮತ್ತ ನಿನ್ನ ಮಗ್ಗ ಅಟ ಹಿಂತಾ ಬುದ್ಧಿ ಯಾಕ ಬರಲಿಲ್ಲಾ, ನಿನ ಟಂಕ ಸಾಲ್ಯಾಗ ಖೊಟ್ಟಿ ರೂಪಾಯಿ ಅದ ಅಲ್ಲ ಅಂವಾ?” +ಗೌರತ್ತೆ ಉಸಿರು ಬಿಟ್ಟು ಎಷ್ಟೋ ಹೊತ್ತು ಸುಮ್ಮನಿದ್ದು ಹೇಳಿದ್ದಳು “ಸದಾಶಿವ ತಮ್ಮ ಅಪ್ಪನ್ನ ಹೋತಾನ ದೇವೂ” ಎಂದು, ಕುತೂಹಲ ತಡೆಯದೆ ಮತ್ತಷ್ಟು ಕೆದಕಿದ್ದಳು. +“ಹದಿನಾರು ವರ್ಷಕ್ಕ ಸರವೂರ ಸಾವಕಾರನ ಎರಡನೇ ಹೇಣ್ತಿ ಆಗಿ ಬಂದೆ ದೇವೂ. ಆಗಿಂದ ನಾ ಬರೇ ಕಷ್ಟಾನ ಸೋಸೀನಿ. ಬೇಕಾದಷ್ಟ ಶ್ರೀಮಂತಿಕಿ ಇದ್ರೂ ಗೌಡಗ ಗುಣ ಇದ್ದಿದ್ದಿಲ್ಲ. ಲಂಗು ಲಗಾಮು ಇಲ್ಲದ ಗೂಳಿ ಹಾಂಗ ಮೆರದಾ. ಮೊದಲನೆಯಾಕಿ ಇವನ ಹೊಡತಕ್ಕ ಸತ್ತಿದ್ದಳಂತ. ಪೊಲೀಸರ ಬಾಯಿಗೆ ರೊಕ್ಕಾ ತುಂಬಿ ಉಳಕೊಂಡಿದ್ದಾ. ಹೇಣ್ತಿ ಅಂದರ ಕಾಲಾನ ಚಪ್ಪಲಿ ಆಗಿತ್ತು ಅವಂಗ. ಹಾಂಗ ಗುದ್ದಾಡಿಕೊಂತ ಸದಾಶಿವ, ಮಲ್ಲೇಶಿ ಹುಟ್ಟಿದ್ದರು. ಗೌಡ ಊರಾಗ ರಂಡೀ ಇಟ್ಟಿದ್ದು ಗೊತ್ತಾತು. ನನ್ನ ರಕ್ತಾ ಕುದೀತು. ಇಂವನ ಕೂಡ ಬಾಳೇ ಸಾಕಾಗಿ ಹೋಗಿತ್ತು. ತಿರಿಗಿ ಬಿದ್ದೆ ನೋಡು, ನನ್ನ ಸನೇಕ ಬರಗೊಡಲಿಲ್ಲಾ. ನೀ ನನ್ನ ಮುಟ್ಟಿದೀ ಅಂದರ ನೋಡು ಅಂತ ಕುಡಗೋಲು ತೋರಿಸಿದ್ನಿ. ಖೋಲಿ ಬಾಗಲಾ ಹಾಕ್ಕೊಂಡು ಮಕ್ಕಳ್ನ ಕರಕೊಂಡು ಕುಡಗೋಲ ತಲೆದಿಂಬಿಗೆ ಇಟಕೊಂಡ ಮಲಗತಿದ್ದೆ. ಸಾಯೂತನಾ ಹಿಂಗ ಇದ್ದಿವಿ. ಸೆರೆ, ಕೆಟ್ಟ ಚಾಳಿ ಎಲ್ಲಾ ಕೂಡಿ ಅವನ್ನಾ ಜೀವಾ ತೊಗೊಂಡ್ವು. ಮನೀ ಭಾರಾ ಎಲ್ಲಾ ನಾ ಹೊತ್ಕೊಂಡೆ. +“ಸತ್ಯಕ್ಕ ನ್ಯಾಯಕ್ಕ ಹೊಡದಾಡೂವಾಕಿಯವ್ವಾ ನೀನು. ಅದಕ ನಿನ ಮಾರೀ ಮ್ಯಾಲೆ ಕಳೇ ಹ್ಯಾಂಗ ಐತಿ ನೋಡು.” +“ಸುಮ್ಮನ ಹೊಗಳಬ್ಯಾಡ ಹುಡುಗೀ ನೀನು. ಈ ಹೊಡೆದಾಟದಾಗ ನಮ ಜೀವ ಸಣ್ಣಾಗತೈತಿ ಅನ್ನೂದ ಮರೀಬ್ಯಾಡಾ, ಸರ್ಪದ ಜೋಡಿ ಸರಸಾ ಆಡಿದಾಂಗ ಆಕ್ಕೈತಿ ನಮ ಬಾಳೆ. ನೀ ಮನಸಿಗೆ, ದೇಹಕ್ಕೆ ಮುಗುದಾಣಾ ಹಾಕಿ ಕೈಯಾಗ ಇಟಕೊಂಡು ತಪ್ಪ ಹೆಜ್ಜಿ ಇಡದಂಗ ನಡದೀ ಅಂದರ ಈ ಮಂದಿ ಡೊಗ್ಗಿ ಸಲಾಮು ಹಾಕತಾರ. ನೀ ಹಾದೀ ಬಿಟ್ಟೀ ಅಂದರ ಅದ ಮಂದಿ ಆಳಿಗೊಂದು ಕಲ್ಲು ಹೊಡೆದು ಸಾಯಿಸ್ತಾರ. ನಾಕ ಮಂದಿ ಬೆರಳ ಎತ್ತೂಹಾಂಗ ನಾ ಬಾಳೇ ಮಾಡಲಿಲ್ಲ. ನನಗ ಅದ ಬಲಾ. ನಿನಗೂ ಒಂದ ಮಾತ ಹೇಳ್ತೇನಿ. ನೆಪ್ಪ ಇಟಕೊ. ನಿನ್ನ ಕಾಲಮ್ಯಾಲ ನಿಂತು ಅನ್ನಾ ಸಂಪಾದಿಸಿಕೋ. ಆದರೂ ನೀ ಇನ್ನೂ ಸಣ್ಣಾಕಿ. ಜೋಡಿ ಬೇಕು ಅನಿಸಿದರ ಸದಾನ ಕಡೆ ಸೋಡಚೀಟಿ ತೊಗೊಂಡು ಬ್ಯಾರೆ ಮದುವೀ ಮಾಡಿಕೋ. ಅಂವನ ಕಿವಿ ಹಿಡಿದು ತಂದು ನಿಮ್ಮನ್ನ ಕೂಡಸಾಕ ನನಗ ಬರತೈತಿ. ಆದರ ಒಮ್ಮೆ ಮನಸ ಮುರದ ಮ್ಯಾಲೆ ಬಾಳೆ ಮಾಡಿದರ ಏನ ಸಂವಿ ಇರತೈತಿ. ಆ ಹುಡುಗೀಗೂ ಮೋಸ ಆಗೇದ. ಸಾಯೂತನಕ ಈ ಚಿಂತಿ ನನ್ನ ಕಾಡತೈತಿ.” ಆ ರಾತ್ರಿ ಅತ್ತೆ-ಸೊಸೆ ಕಣ್ಣು ಮುಚ್ಚಿರಲಿಲ್ಲ- +‘ಸರವೂರು ಬಂತು, ಯಾರು ಇಳೀರಿ’ ಕಂಡಕ್ಟರ ಕೂಗುತ್ತಿದ್ದ. ದಿಗ್ಗನೆ ಎದ್ದಳು ದೇವಕಿ. ಒಂದು ಕಾಲದ ಗಂಡನ ಮನೆ ಹುಡುಕಿಕೊಂಡು ಬಾಗಿಲಿಗೆ ಬಂದ ದೇವಕಿಯ ಕಾಲಿನ ಶಕ್ತಿ ಸೋರಿಹೋಯಿತು. ರಣಹಲಗೆ ಆಳು…. ಜನರ ನೂಕು ನುಗ್ಗಲು ದಾಟಿದಳು- +“ನನ್ನವ್ವ ಏನು ಛಂದ ಕಾಣತಾಳ ನೋಡ್ರೇ ಕರೀ ಸೀರಿ ಉಟಗೊಂಡು, ಈಬೂತಿ ಪಟ್ಟಾ ಬಡಕೊಂಡು, ರುದ್ರಾಕ್ಷಿ ಸರಾ ಹಾಕ್ಕೊಂಡು ಶಿವಪೂಜೆ ಮಾಡಾಕ ಹ್ವಾದಳೇನ್ರೇ ನನ್ನವ್ವ” – ಕೂಡಿದ ಹೆಂಗಸರೆಲ್ಲ ಹಾಡಿ ಹಾಡಿಕೊಂಡು ಅಳುತ್ತಿದ್ದಾಗ- +“ಸರ್ರಿ ಸರ್ರಿ ಸ್ವಾಮೇರ ಬಂದ್ರು ಜಾಗಾ ಬಿಡ್ರಿ. ಪಾದಪೂಜೆ ಮಾಡಸರಿ, ಕಾಯಿ ಒಡೀರಿ, ಕಪ್ಪಾರ ಹಚ್ಚರಿ, ಪತ್ರೀ ಹಂಚಿರಿ, ಬಾರೋ ಮಲ್ಲೇಶ, ಸದಾಶಿವ ನೀ ಇತ್ಲಾಗ ನಿಲ್ಲು. ಶೇಕವ್ವ, ವಿಜಯವ್ವ ಮುಂದಕ ಬರ್ರಿ. ಕಡೀ ಪೂಜಾ ಇದು, ಎತ್ತಬೇಕಿನ್ನ, ಮನೀ ಮಂದಿ ಎಲ್ಲಾರೂ ಬರ್ರಿ”- ಆ ಜನ ಜಾತ್ರೆಯಲ್ಲಿ ದೇವಕಿ ಯಾರೆಂದು ಯಾರೂ ಕೇಳಿರಲಿಲ್ಲ. ಸದಾಶಿವ ಮಾತ್ರ ಕೆಕ್ಕರಿಸಿ ನೋಡಿದ್ದ. ಅವನತ್ತ ಕಣ್ಣೆತ್ತಿಯೂ ನೋಡದೆ ಕಿರಣಳನ್ನೆತ್ತಿಕೊಂಡು ಗೋಡೆಗೆ ಒರಗಿ ನಿಂತಿದ್ದಳು ದೇವಕಿ. +ಗೌರತ್ತೆಯ ಮುಖ ಮಣ್ಣಿನಲ್ಲಿ ಮರೆಯಾದಂತೆ ದೇವಕಿಯೂ ಅಲ್ಲಿಂದ ಮರೆಯಾಗುತ್ತಿದ್ದಳು. ಸದಾಶಿವ ಸುಮ್ಮನಿರಲಿಲ್ಲ. ಶತಮೂರ್ಖ! ದೇವಕಿಯ ರಟ್ಟೆ ಹಿಡಿದೆಳೆದು ಹೊರಗಿನ ಕಟ್ಟೆಗೆ ಎಳೆದೊಯ್ದು, “ನೀ ಯಾಕ ಬಂದಿ ಇಲ್ಲೆ? ಏನ ಸಂಬಂಧ? ಯಾರ ಹೇಳಿ ಕಳಿಸಿದ್ರು ನಿನಗ?” ಪೌರುಷ ತೋರಿಸಲು ದಬಾಯಿಸಿದ. +ಅಲ್ಲಿಯವರೆಗೆ ಅವಳ ಕಡೆಗೆ ಲಕ್ಷ್ಯ ಕೊಡದ ಮನೆಯ ಜನರೆಲ್ಲ ತಮಾಷೆ ನೋಡುವವರಂತೆ ಬಂದು ಗುಂಪಾದರು. ದೇವಕಿಯ ರಕ್ತ ಕುದಿಯಿತು. ಕಣ್ಣು ಕೆಂಪೇರಿದವು. ಹೊಟ್ಟೆಯ ಸಂಕಟ, ದುಃಖವೆಲ್ಲ ನುಗ್ಗಿ ಬಾಯಿಗೆ ಬಲ ಕೊಟ್ಟಿತು. +“ಏನೋ ಭಾಡ್ಯಾ. ನೀ ಯಾರು ಅಂತೀಯಲ್ಲ. ನಿನ್ನ ಹೇಣ್ತಿ ದೇವಕಿ ನಾನು. ಈ ಹುಡುಗಿ ನಿನ್ನ ಮಗಳು. ಈ ಮನೀ ಸೊಸಿ ನಾನು. ನಮ್ಮತ್ತೀ ಮಣ್ಣಿಗೆ ಬಂದೇನಿ. ಯಾರ ಯಾಕ ಕರಸಬೇಕೋ ನನ್ನ?” +ಸದಾಶಿವನ ಸಿಟ್ಟು ಏರುತ್ತಿದ್ದರೂ ಕಾಲಿನ ಬಲ ಸೋರಿಹೋಗಿ ಥರಥರ ನಡುಗತೊಡಗಿದ. ಆಧಾರಕ್ಕೆ ಹೆಬ್ಬಾಗಿಲ ಚೌಕಟ್ಟಿಗೆ ಆನಿಸಿ ನಿಂತು ಚೀರಿದ. “ಹೆಣ್ತೀ ಇದ್ದಿ. ಆದರ ಈಗಲ್ಲ. ಮಾನಾ ಮರ್ಯಾದಿ ಇದ್ದವರು ಮನ್ಯಾಗ ಇರತಾರ. ಕಂಡ ಕಂಡ ಗಂಡಸರ ಹಿಂದ ಬೀದಿ ಬೀದಿ ಅಡ್ಡ್ಯಾಡಾಕ ಓಡಿಹೋಗೂದಿಲ್ಲ.” +“ಓಡಿ ಹೋದಾಕೀ ನಾ ಅಲ್ಲೋ ನೀನು. ಹೇಳದ ಕೇಳದ ಹೋಗಿ ಈ ಗೊಂಬೀನ್ನ ಲಗ್ನಾ ಮಾಡಿಕೊಂಡ ಬಂದೀ, ಪ್ರೇಮ, ಪ್ರೀತಿ ಅಂತ ನನ್ನ ಹೊಂದ ಓಡ್ಯಾಡಿ ಲಗ್ನಾ ಮಾಡಿಕೊಂಡದ್ದಕ್ಕ ರಜಿಸ್ಟ್ರಾರ ಕಚೇರ್ಯಾಗ ದಾಖಲೆ ಐತಿ. ನಾ ಮನಸ ಮಾಡಿದ್ದರ ನಿನ್ನ ಜೇಲಿಗೆ ಕಳಸತಿದ್ದೆ. ಪುಣ್ಯವಂತಿ, ನಮ್ಮ ಗೌರತ್ತಿ ಮಾರೀ ನೋಡಿ ಸುಮ್ಮನಾಗೀನಿ. ಯಾಕ ಬಂದೀ ಅಂದೆಲ್ಲಾ. ಒಂಬತ್ತ ತಿಂಗಳ ಹೊತ್ತ ಹಡದ ತಾಯೀನ ಬಾವಿಪಾಲು ಮಾಡಿದವರು ನೀವು. ಗಂಡಸರ? ನನಗ ಗೊತ್ತಾಗಿದ್ದರ ನಾ ಜ್ವಾಪಾನ ಮಾಡುತ್ತಿದ್ದೆ ಅತ್ತೀನ. ಇಕಾ ನೋಡಿಲ್ಲೆ, ಅತೀ ಪತ್ರಾ” ಎಂದು ಗೌರವ್ವನ ಪತ್ರವನ್ನು ಅವನತ್ತ ಬೀಸಿ ಒಗೆದವಳೇ ಮಗಳನ್ನು ಎತ್ತಿಕೊಂಡು ಭರಭರ ನಡೆದುಬಿಟ್ಟಳು. ಕೂಡಿದ ಮಂದಿ ಉಸಿರಾಡುವದನ್ನೂ ಮರೆತು ಕಲ್ಲಿನಂತೆ ನಿಂತಿದ್ದರು. ಆ ನಿಶ್ಯಬ್ದವನ್ನು ತೂರಿಕೊಂಡು ಒಂದು ಹೆಣ್ಣಿನ ಬಿಕ್ಕಳಿಕೆ ಮಾತ್ರ ದೇವಕಿಯ ಬೆನ್ನು ಹತ್ತಿತ್ತು. +***** +“ಸ್ವಧರ್ಮೇ ನಿಧನಂ ಶ್ರೇಯಃ ಪರಧರ್ಮೋ ಭಯಾವಹಃ” -ಗೀತೆ ರಾತ್ರಿಯ ಕತ್ತಲಿನಲ್ಲಿ ಯಾರ ಕಣ್ಣಿಗೂ ಬೀಳದೆ ಎಲ್ಲೆಲ್ಲಿಂದಲೂ ಹೊಲಸು ಕೊಚ್ಚೆ ಗುಂಡಿಗಳಿಂದ ಗೊಟರು ಹಾಕುವ ಗೊಂಟರು ಕಪ್ಪೆಗಳ ಶ್ವಾಸಕೋಶ ಎಂಥದಿರಬೇಕೆಂದು ಯೋಚಿಸುತ್ತ ನಿದ್ದೆ ಬಾರದ ರಾಜಣ್ಣ […] +ಊರಿನ ತುಂಬ ಉಸಿರಿಸೀಳುವ ಧೂಳು ತುಂಬಿಕೊಂಡು; ಆ ಧೂಳೇ ಅವರ ಗೆಳೆಯನಂತಾಗಿ ಇಡೀ ಊರು ಕೇರಿ ಅಸಾಧ್ಯ ಕಸ, ಕಮಟು ವಾಸನೆ, ಚಿಂದಿಚೂರುಗಳಿಂದ ಅಲಂಕಾರವಾಗಿ ಬಿಟ್ಟಿತ್ತು. ಅಲ್ಲಿನ ಜನ ಕುಂತರೆ ನಿಂತರೆ ಸವಕಲು ಮಾತುಕತೆ […] +(ಹೆಚ್ಚಾಗಿ ಕನ್ನಡದಲ್ಲಿ ಬಳಕೆಯಲ್ಲಿಲ್ಲದ-ಪ್ರಾದೇಶಿಕವೆನ್ನಬಹುದಾದ ಪದಗಳ ಅರ್ಥಗಳನ್ನು ಕೆಳಗೆ ನೀಡಲಾಗಿದೆ-ಸಂ) ಕಾರ್ತಿಕ ಮಾಸದ ಮುಸ್ಸಂಜೆ. ಆ ತರವಾಡು ಮನೆಯ ಅಗಲ ಕಿರಿದಾದ ಮೂರು ಸುತ್ತು ಉದ್ದೋ ಉದ್ದ ಚಾಚಿರುವ ಚಾವಡಿಗೆ ಕತ್ತಲು ಅಂಬೆಗಾಲಿಕ್ಕುತ್ತಿತ್ತು. ಮುಂಭಾಗದ ಚಾವಡಿಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_167.txt b/Kannada Sahitya/article_167.txt new file mode 100644 index 0000000000000000000000000000000000000000..a994d68b075145efabf7c687e08add55a024409e --- /dev/null +++ b/Kannada Sahitya/article_167.txt @@ -0,0 +1,99 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಸುತ್ತು ಹತ್ತೂ ಕಡೆಗೆ ಹೊಳೆಯುತಿವೆ ಕಂಗಳು +ಮಗುವಿನೆಳನಗೆಯಲ್ಲಿ ಹಗಲುಹಗಲೇ ನುಸುಳಿ ಬಂದಿಹುದು ಬೆಳುದಿಂಗಳು ! +ಕತ್ತಲೆಯ ಅಚ್ಚಿನಲಿ ಬೆಳಕಿನೆರಕವ ಹೊಯ್ದು +ತೆಗೆದಿರುವ ಅಪ್ರತಿಮ ಪ್ರತಿಮೆ ನೂರು ! +ಮೂರು-ಸಂಜೆಯ ಮೃದುಲ ನೀಲಿಯಾಗಸದೆದೆಯ +ತುಡಿವ ಬೆಳ್ಳಕ್ಕಿಗಳ ಬಯಕೆ-ಸಾಲು ; +ದೂರ ಬೆಟ್ಟವನಿಳಿದು ಮೆಲುಕಾಡಿಸುತ ಬರುವ ಕೊರಳ ಗಂಟೆಯು ಮಿಡಿವ ನಾದ ಹೊಳಲು. +ಗಿರಿಯ ಮುಡಿಗಿರುವ ಗುಡಿಯಲ್ಲಿ ನಂದಾದೀಪ +ಬಾನಿಗೇರಿದೆ ಹೊಗರು ಅಗರುಧೂಪ- +ಶೂನ್ಯದೊಡನನ್ಯೋನ್ಯವಾಗಿ ಬೆರೆದಿದೆ ವಿಶ್ವಚೈತನ್ಯ ವಿವಿಧರೂಪ. +ಮುಳ್ಳು ಜಾಲಿಯ ಹೂವ ಸೌಗಂಧದಲಿ ತೇಲೆ ದುಂಬಿಗನಸು +ಜೋಂಪಿಸುತ್ತಿದೆ ಮಗುವಿನೆಳೆಯ ಮನಸು. +‘ಕಂದ ಜೋ ಜೋ … ಬೆಳಕಿನಂದ ಜೋ ಜೋ’ +ಹೊಂಗೆ ಹುಣಿಸೆಯು ಬೊಗಸೆ ಬೊಗಸೆ ಸುರಿದಿವೆ ಹೂವು +ಹಣ್ಣು ತೂಗಿದೆ ಕೊಂಬೆ ಕೊಂಬೆಯಲಿ ಮಾವು ; +ಧೂಳಿ ನುಣ್ಣಗೆ ನೆಲಕೆ ಜಾರುತಿದೆ ಗಾಳಿಯಲಿ ಆರುತಿಹುದದರ ಕಾವು +ಮನೆಯ ಜಗುಲಿಯನೇರಿ ಬೆಳಕು ತೂಗಾಡುತಿದೆ +ಒಳದನಿಯು ಹಾಡುತಿಹುದು : +‘ಕಂದ ಜೋ ಜೋ ಪೂರ್ಣಚಂದ್ರ ಜೋ ಜೋ’ +ನೀಲಪರದೆಯ ನಡುವಿನೆಳೆಯ ಜಗ್ಗಲು ಝಗ್ಗನೆದ್ದು ಕುಣಿದಿವೆ ತಾರೆ +ನೆಲದೆದೆಯ ಮೊಗ್ಗರಳಿ ಪರಿಮಳದ ಸೂರೆ ! +ಮುಗಿಲ ಮಂಚವನೇರಿ ಅಂಚೆದುಪ್ಪಳ ಹೊದೆದು +ಚಿಕ್ಕೆಗಂಗಳ ಮುಚ್ಚಿ ತೆರೆವ ನೀರೆ! +ಆಡಿ ದಣಿದಿದೆ ಮಗುವು +(ಅದಕೆ ದಣಿವೇ ಇಲ್ಲ !) +ಎಳೆಯ ಕಂಗಳ ಎವೆಗೆ ತಂಗಾಳಿಯಾಗಿ ಸುಳಿ, ಜೇನಾಗಿ ಇಳಿದು ಬಾರೆ ! +* * * * +೨ +ಹಗಲು ಕೋಳಿಯ ನಿದ್ದೆ- +ಬಯಲಾಟದಲಿ ಸೋಗು ಕುಣಿದದ್ದೂ ಕುಣಿದದ್ದೆ +ತಕ್ಕ ಥೈ ತಕ್ಕ ಥೈ +ಕಾಳಿಂಗನ ಹೆಡೆಯ ಹತ್ತಿ ಹತ್ತಿ ತುಳಿದ ಬಾಲಕೃಷ್ಣ +ಧಿತ್ಥೈ ಥೈ ! +ಆಚೆ ಬೀದಿಗು ಗಸ್ತಿ ಹೊಡೆದು ಬರುವದು ಕೇಕೆ +ಕೊಟ್ಟು ಎಚ್ಚರಿಕೆ ! +ಬಿಳಿ ಜೋಳ ಹೊಲದಲ್ಲಿ ಕವಡೆಗಲ್ಲನು ಬೀರಿ ಹಕ್ಕಿ ಹಾರಿಸುತಿಹನು +ಅತ್ತಿತ್ತ ಸುಳಿದೀರಿ ಮತ್ತೆ, ಜೋಕೆ ! +ತಾಸಿಗಿಪ್ಪತ್ತು ಮೈಲಿನ ವೇಗ ಮೀರುವುದು +ಮನೆತುಂಬ ಓಡುವುದು ಅಂಬೆಗಾಲಿನ ಕಾರು ! +ನೋಡ ನೋಡುತ ಧುಮುಕಿ ಹೊಡೆದು ಮೇಲೇಳುವದು +ಬ್ರೇಕು ಹಾಕಲು ವೇಗ ಮತ್ತಿಷ್ಟು ಜೋರು ! +ಏನಿಲ್ಲವೆಂದರೂ ದಿನಕೆಂಟು ಅಪಘಾತ +ಇನ್ನೆಂಟು ಆದರೂ ಈತ ನಿರ್ಭೀತ, +ಎಂಥ ಅದ್ಭುತವಡಗಿ ಕುಳಿತು ಆಡಿಸುತಿಹುದೊ +ಎಂಟು ತಿಂಗಳ ಪುಟ್ಟ ಜೀವಯಂತ್ರ ! +೩ +ಮೈಮರೆತು ಕುಳಿತ ಕಡೆಗಿವನ ಮಿಂಚಿನದಾಳಿ +ಹೊಂಚುಗಾರ ! +ಎಲ್ಲಿಂದಲೊ ಸರ್ರನೆರಗಿ ಬಡಿಯುವ ಗಿಡುಗ +ಆಕ್ರಮಣಶೀಲ ! +ರಾಶಿಯೊಕ್ಕುವ ಸಮಯಕೆದ್ದ ಸುಂಟರಗಾಳಿ- +ಕೋಲಾಹಲ! +ಏಳು ಮೆಟ್ಟಿನ ಹುಲಿಯ ಹಿಡಿದು ಪಳಗಿಸಬಲ್ಲ +ಚಂಡ ಪ್ರಚಂಡ ! +ಕಣ್ಗೆ ಬಿದ್ದು ದನೆಲ್ಲ ಕಸಿದು ಕೈವಶಗೊಂಬ +ಪುಂಡ ಮಾರ್ತಾಂಡ ! +ನಜರು ಕಾಣಿಕೆ ಕೊಟ್ಟು ಮುಜುರೆ ಹೊಡೆದರು ಕೂಡ +ಸಂಧಾನ ವಿಫಲ ವಿಫಲ ! +ತುಂಟನಗೆ ಸಮ್ಮೋಹನಾಸ್ತ್ರ ಬೀರುವ ಬಂಟ +ನಿತ್ಯ ಜಯಶೀಲ ! +* * * * +೪ +ಎರೆದು ಧೂಪವ ಹಾಕಿ ಹೊಚ್ಚಿ ಬೆಚ್ಚಗೆ ತುಂಬುದೊಟ್ಟಿಲನು ತೂಗಿ +ಮೆಲ್ಲನುಲಿಯಲಿ ಇವಳು ಜೋಗುಳವ ಹಾಡುತಿರೆ +ಹೊಮ್ಮಿ ಬರುವುದು ಇವಗು ಕಾವ್ಯ ಸ್ಫೂರ್ತಿ ! +ಯಾವ ದೈವಿಕ ಭಾಷೆ ಯಾವುದೋ ಧಾಟಿ- +ಹಾಡಿಯೇ ಹಾಡುವನು ಕಂಠಪೂರ್ತಿ- +ತೂಗಿದವರಿಗೆ ಬಂತು ತೂಕಡಿಕೆ ಎಂದಾಗ +ಹಾಡು ಮುಗಿವುದು ಕನಸಿನಲ್ಲಿ ಕರಗಿ. +ಏರಿ ಗಗನಕೆ ಹಾರಿ ತೂರಿ ಬಿನ್ನಾಣದಲಿ +ಬಗೆ ಬಗೆಯ ಲಾಗ ಹಾಕಿ +ಗೂಡಿಗಿಳಿವುದು ಪಾರಿವಾಳ ನೆಟ್ಟಗೆ ಬಂದು +ಬಾನಿನಲಿ ಸಂಜೆಯಾಗಿ. +ದಡಸೂಸಿ ಹರಿವ ನದಿ ಮಡುವಾಗಿ ನಿಂತಂತೆ +ಇರುಳಿನಲಿ ಇವನ ನಿದ್ದೆ- +(ನಿದ್ದೆಯಲ್ಲೂ ಮುಖವು ಮುದ್ದು ಮುದ್ದೇ) +ನಡುವೆ ಏನೋ ಕನಸು, ತುಟಿಯಂಚಿನಲಿ ಮಿಂಚು- +ಮೂಡಿಮರೆಯಾಗುವದು ದಿವದ ಬೆಳಕು ; +ಕೊಳದ ತಳದಿಂದ ಮೇಲೆದ್ದು ಮುಳುಗಲು ಮೀನು +ಥಳಥಳಿಸಿ ಹೊಳೆಯುವೊಲು ನೀರಿನಂಚು ! +ಎಲ್ಲೊ ಒಲವಿನ ಸೂತ್ರ ಹಿಡಿದು ಆಡಿಸುತಿರಲು +ಆನಂದದುಯ್ಯಾಲೆ ಒಳಗು ಹೊರಗು ; +ಸೂರ್ಯಚಂದ್ರರು ದಿನವು ಮೂಡಿ ಬೆಳಕಾಡಿದರು +ಇವನಿಂದಲೇ ನಮಗೆ ಬೈಗು-ಬೆಳಗು. +***** +ನೂರಾರು ವರುಷಗಳ ಭೀರುನೊಗವನ್ನಿಳುಹಿ, ‘ಬಿಳಿಯರಾಳಿಕೆಗಿಂದು ಕೊನೆಗಾಲ ತಂದಪೆವು ಸಾಕು ಸಾಕೀಗೋಳು ದಾಸ್ಯ ಹಾಸ್ಯದ ಬಾಳು’- ಎಂಬ ನುಡಿ ಕಿಡಿಗೊಂಡು ಬತ್ತಿದೆದೆಯಲಿ ಹೊತ್ತಿ ಹಳ್ಳಿದಿಳ್ಳಿಗು ಮುತ್ತಿ ನಾಡ ಗಡಿಯಂ ಸುತ್ತಿ ಪಂಜಾಯ್ತು! ಪರರಡಿಯಲುರುಳುತಿಹ ನರಳುತಿಹ ಭಾರತದ […] +ಅದ್ಯಾಕಪ್ಪ ಇಂತಪ್ಪ ದುಃಖ ಭೂಲೋಕದೊಳಗೆ? ಅಂದರೆ- ಹರಿದಾಸರು ಹೇಳುವ ಪುರಾಣ ಕಥೆಯೇ ಬೇರೆ; ಅದೆಂತೆಂದರೆ: ಶಿವದೇವರ ಕತ್ತಿನ ವಿಷ ಕೊಳೆತು ಹುಣ್ಣಾಯಿತಂತೆ. ಹುಣ್ಣಿನ ನೋವನ್ನು ಸರಿಕರಿಗೆ ಅರುಹದೆ ಒಳಗೊಳಗೇ ಅನುಭವಿಸುತ್ತ ಸಾಯಲಾರೆ ಶಿವನೆ ಬದುಕಲಾರೆ […] +ನದಿಯೊಳಗೆ ಆಕಾಶ – ಮೋಡ – ತಣ್ಣಗಿನ ಸೂರ್ಯ, ನನ್ನ ಬೊಗಸೆಯಲ್ಲೊಂದು ನದಿ. ಮೇಲೆರಚಿದರೆ ಹನಿಹನಿಯಾಗಿ ಚೆಲ್ಲುವುದು ಮೈ ಮೇಲೆ ನದಿ – ಆಕಾಶ – ಮೋಡ – ಸೂರ್ಯ. ಬೊಗಸೆ ನೀರು ಕುಡಿದರೆ, […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_168.txt b/Kannada Sahitya/article_168.txt new file mode 100644 index 0000000000000000000000000000000000000000..46d1bc8128c3e85abd23694d658c7b267b529ab0 --- /dev/null +++ b/Kannada Sahitya/article_168.txt @@ -0,0 +1,77 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +“ಹಾಂ ನಿನ್ನನ್ನು ಕಂಡೆ. ಅವಳನ್ನು ಕರೆದುಕೊಂಡು ನೀನುಳಿದುಕೊಂಡಿದ್ದ ಕಡೆ ಹೋದದ್ದನ್ನು; ಮತ್ತೆ ಅಲ್ಲಿಂದ ಅವಳ ಮನೆಗೆ….” +ಆತ ನಿರ್ಲಿಪ್ತನಾಗಿ ಕೇಳುತ್ತಿದ್ದವ ಮೆಲ್ಲನುಡಿದ “ಅಂಥ ಸಂಶಯಗಳೇ ಇರಕೂಡದು. ಸತ್ಯ ಹೇಳು. ನೀನು ಇದುವರೆಗೂ ಬೇರೆ ಯಾರ ಜೊತೆಯೂ ಮಲಗಿಲ್ಲವ?” +ನಿಶ್ಚಲತೆಯಿಂದ ಉತ್ತರಿಸಿದಳು ಅವಳು. “ಇಲ್ಲ”. +“ಬೇರೆ ಯಾರನ್ನೂ ಪ್ರೀತಿಸಿಲ್ಲವ?” +“ಇಲ್ಲ”. +ಒಂದು ಸಣ್ಣ ಉಸಿರು ಆತನ ಮುಖದಿಂದ ತಿಳಿಯುವಂತೆಯೇ ಹೊರಬಿತ್ತು. “ಇರಲಿ ಹೊತ್ತಾಯಿತು. ನಾನು ಹೊರಟೆ.” – ಎಂದ. +“ಹೂಂ…. ಹೋಗು. ಅಲ್ಲಿಗೇ…” +ಆತನಿಗೆ ಸಿಟ್ಟು ಬರುವುದಿಲ್ಲ. ಸುಮ್ಮನೆ ನಗುವ. ಮಗುವಿನಂತೆ ನಿಲ್ಲುವ. “ನೀನೊಬ್ಬಳೇ ನನಗೆ ಏಳೇಳು ಜನ್ಮಕ್ಕೂ ಅಂತೆಲ್ಲ ನಾಟಕದ ಮಾತು ಹೇಳಬೇಕೆ? ಬೇಕೆಂದರೆ ಹೇಳುವೆ.” +“……….” +ಕೇಳಿದ “ನಾನಿನ್ನು ಹೊರಡಲೆ?” +“ಬೇಡ. ಹನ್ನೆರಡೂವರೆಗೆ ಒಂದು ನಿಮಿಷವಿದೆ. ಅಷ್ಟು ಕಳೆಯಲಿ.” +ಎದ್ದು ನಿಂತ ಅವನನ್ನು ಒತ್ತಿ ಕುಳ್ಳರಿಸಿದಳು ಅವಳು. ಒಂದೇ ನಿಮಿಷ…. +ಹನ್ನೆರಡೂವರೆಯಾಯಿತು. ಆತ ಹೊರಟು ಹೋದ. +ಆತ ತನ್ನ ಮಟ್ಟಿಗೆ ಪ್ರಪಂಚವೇ ಆಗಿರುವನಲ್ಲವೆ! ಬಾಗಿಲು ಹಾಕಿದಳು ಆಕೆ. ಫ್ಯಾನಿನಡಿ ಕೈಕಾಲುಗಳನ್ನು ಸಡಿಲಾಗಿ ಚೆಲ್ಲಿ ಕಣ್ಣು ಮುಚ್ಚಿ ಮಲಗಿದಳು. ….ನಿಧಾನವಾಗಿ ಉಸಿರಾಡು. ಇನ್ನೂ ನಿಧಾನ. ತಲೆಯಲ್ಲಿ ಬೇರೆ ಯಾವ ವಿಚಾರ ಬೇಡ. ಆಳವಾಗಿ ಒಂದು ನಿದ್ದೆ ಬರಲಿ. ನಿದ್ದೆ ಬರಲಿ. ನಿದ್ದೆ ಬರಲಿ…. ತನ್ನೊಳಗೇ ಹೇಳಿಕೊಂಡಳು. +ಆದರೂ ಆತ ಆ ಪ್ರಶ್ನೆ ಕೇಳಿದನಲ್ಲ! ಎಲವೋ, ಗಂಡಸರು ಮಲಗುವಷ್ಟು ಸುಲಭವಾಗಿ ಹೆಂಗಸರು ಮಲಗುವುದಿಲ್ಲ ತಿಳಕೊ. ಅವರ ಆಯ್ಕೆ ಬಹಳ ಸೂಕ್ಷ್ಮದ್ದು. ಜಾಗರೂಕತೆಯದು. ಎಷ್ಟೆಂದರೆ ಆಯ್ಕೆ ಮುಗಿಯುವಾಗ ಅವರ ಆಯುಷ್ಯವೇ ಅರ್ಧ ಮುಗಿಯುತ್ತದೆ. ಅದಕ್ಕೇ ಬಹುಶಃ ಅವರಿಗೆ ಆಯ್ಕೆಯ ಅವಕಾಶವನ್ನೇ ಕತ್ತರಿಸಿ ಹಾಕಿರುವುದು. +ಉಸಿರಾಟ ಆಳವಾದಂತೆ ಧ್ಯಾನವೂ ಆಳ ಆಳಕ್ಕೆ ಇಳಿಯುತ್ತಿತ್ತು. ಎಲ್ಲೋ ಆಳತಳಕ್ಕೆ ಹೋಗಿ ಸ್ಮೃತಿ ಕಚ್ಚಿ ಎತ್ತಿ ಮೇಲ್ತಂದಂತೆ, ಹಿಡಿತ ತಪ್ಪಿ ಮತ್ತದು ಕೆಳಗೆ ಬಿದ್ದಂತೆ. ಮತ್ತೆ ಮತ್ತೆ ಹೆಕ್ಕಿಕೊಂಡಂತೆ. ಏನದು? ಯಾರ ನೆನಪು? +ಪಕ್ಕದಲ್ಲಿ ಕುಳಿತಿದ್ದ ಅರುಂಧತಿ “ಈ ಮಾಸ್ಟರು ಚಂದ ಇದ್ದಾರೆ ಅಲ್ಲನ?” ಎಂದು ಕಿವಿಯಲ್ಲಿ ಪಿಸುಗುಟ್ಟಿದಾಗ “ಥೂ ಹಾಗೆಲ್ಲ ಹೇಳಬಾರದು. ಅಸಹ್ಯ.” – ಎಂದಿದ್ದೆ ತಾನು. ಮನೆಗೆ ಹೋದ ಮೇಲೆ ಅರುಂಧತಿ ಹೀಗೆ ಹೇಳಿದಳು ಎಂದು, ತಾನಾದರೆ ದೊಡ್ಡ ಸುಭಗಿತ್ತಿ ಹಾಗೆಲ್ಲ ಹೇಳುವವಳಲ್ಲ ಎಂಬಂತೆ ಅಮ್ಮನೊಡನೆ ಹೇಳುತ್ತ ಆ ಮಾಸ್ಟರ ವಿಷಯವನ್ನು ಮತ್ತೆ ಎತ್ತಿದರೆ. +“ಕಲಿಯುವ ಮಕ್ಕಳಿಗೆ ಏನದು ಅಧಿಕ? ಮಾಸ್ಟರು ಹೇಗಿದ್ದರೇನು?” – ಅಮ್ಮ ತಾನು ಹೇಳುವುದನ್ನು ಪೂರ್ತಿ ಯಾಕೆ ಕೇಳಬಾರದು? ತಾನು ಅಂಥವಳಲ್ಲ ಅಂತ ಅಮ್ಮನಿಗೇಕೆ ತಿಳಿಯುವುದಿಲ್ಲ? +ಆದರೂ….. ಬೆನ್ನ ಹಿಂದೆ ಕೈಕಟ್ಟಿಕೊಂಡು ಪಾಠ ಹೇಳುತ್ತ ತಿರುಗುತ್ತಿದ್ದ ಅವರು ಒಮ್ಮೆ ತನ್ನ ಸಮೀಪಕ್ಕೆ ಬಂದಾಗ ಅವರ ಶರ್ಟಿನ ತುದಿಯನ್ನು ತಾನು ಮುಟ್ಟಿದ್ದು ಅಮ್ಮನಿಗೆ ಹೇಳಲೇ ಇಲ್ಲ ತಾನು. +ಅದು ಅಷ್ಟೇ. ಅಲ್ಲಿಗೆ ಮುಗಿಯಿತು. +ಅವರಿಗೂ ಲೆಕ್ಕದ ಟೀಚರಿಗೂ ದೋಸ್ತಿ ಬಿದ್ದಿದೆ ಎಂದಳು ಗಿರಿಜ ಎಂಬವಳು. ಹೇಗೆ ಗೊತ್ತಾಯಿತು ನಿನಗೆ ಎಂದರೆ ಗೊತ್ತಾಯಿತು ಹೇಗೋ ಎಂದಳು. ಕಣ್ಣಲ್ಲಿ ಕಂಡಂತೆ ಏನೇನೋ ವಿವರಿಸಿದಳು. “ಟೀಚರು ಮಾತಾಡುವಾಗ ಮಾಸ್ಟರು ಅವರನ್ನೇ ನೋಡುತ್ತಿರುತ್ತಾರೆ. ಇನ್ನೊಮ್ಮೆ ಸರೀ ನೋಡು” ಎಂದಳು. ಅಷ್ಟರವರೆಗೆ ಮಾಸ್ಟರು ಕೊಟ್ಟ ಹೋಮ್ವರ್ಕನ್ನು ಜತನದಿಂದ ಮಾಡುತ್ತಿದ್ದ ತಾನು ಆಮೇಲಿಂದ ಒಟ್ಟಾರೆಯಾಗಿ ಮಾಡಿದೆನಲ್ಲವೆ? ಅರುಂಧತಿ ಮತ್ತು ಗಿರಿಜ ಕೂಡ ಬಹುಶಃ. +ಒಂದು ರಾತ್ರಿ ಊಟದ ಸಮಯ. “ಅಮ್ಮ, ಆ ಶಾಂತಪ್ಪ ಮಾಸ್ಟರು ಲೆಕ್ಕದ ಟೀಚರೊಡನೆ….” ಎಂದು ಹೇಳಲು ಹೊರಟದ್ದೇ “ಮಾಸ್ಟರುಗಳಿಗೆ ಮಕ್ಕಳಿಗೆ ಪಾಠ ಹೇಳುವುದು ಬಿಟ್ಟು ಯಾಕೆ ಇಂಥದ್ದೆಲ್ಲ, ಬೇಕಾಗಿದೆಯ?” ಎಂದೆಲ್ಲ ಹೇಳುತ್ತ ಮುಂದೆ ತಾನು ಉದ್ದ ಎಳೆಯಬೇಕೆಂದಿದ್ದ ಮಾತುಗಳನ್ನೆಲ್ಲ ಗುಡಿಸಿಹಾಕಿಬಿಟ್ಟಳು. ತನಗೆ ಊಟ ಸೇರಲಿಲ್ಲ. “ಉಣ್ಣು. ರಾತ್ರಿ ಅಡಿಕೆಯಷ್ಟು ಉಂಡರೂ ಆನೆಯಷ್ಟು ಬಲ” – ಕಣ್ಣು ಕೆಂಚರಿಸಿದಳು ಅಮ್ಮ. +ಎಲ್ಲಿಯ ಶಾಂತಪ್ಪ ಮಾಸ್ಟರೋ ಯಾವ ಲೆಕ್ಕದ ಟೀಚರೋ. ಈಗ ಆ ಮಾಸ್ಟರು ಎಲ್ಲಿದ್ದಾರೆ? ಆ ಟೀಚರಂತೂ ಮದುವೆಯಾಗಲೇ ಇಲ್ಲವಂತೆ. ಟೀಚರ್‍, ದೊಡ್ಡ ತಪ್ಪು ಮಾಡಿದಿರಿ. ಆತ ಯೌವನವನ್ನು ಪ್ರೀತಿ ಮಾಡುವವ. ಜೀವವನ್ನಲ್ಲ. ನೀವು ಬಿಳಿಗೂದಲಿನವರಾದರೆ ಅವನಿಗೆ ಬೇಡ. ಇದೆಲ್ಲ ನಿಮಗೆ ಯಾಕೆ ತಿಳಿಯದೇ ಹೋಯಿತು ಟೀಚರ್‍? +ಸ್ವತಃ ಟೀಚರೇ ಎದುರು ನಿಂತು ನಗುತ್ತಿದ್ದರು. ಪ್ರಶ್ನೆಯನ್ನು ಅವಳಿಗೇ ತಿರುಗಿ ಸಿಟ್ಟಂತೆ. ಎಲ್ಲ ಪುರುಷರೂ ಹಾಗೇ ಎಂಬಂತೆ. +ಕಿರುಚಿದಳು ಆಕೆ. “ಟೀಚರ್‍, ಆತನೇನು ಶಾಂತಪ್ಪ ಮಾಸ್ಟರ ಹಾಗಲ್ಲ ತಿಳೀತಾ?” ನಸುನಗುತ್ತ ಟೀಚರು ಮರೆಯಾದರು. ಆಕೆ ಮೆಲುವಾಗಿ ಉಸಿರಾಡಿ ಮನಸ್ಸನ್ನು ಹತೋಟಿಗೆ ತಂದುಕೊಳ್ಳಬೇಕೆಂದಷ್ಟೂ ಅದು ವೇಗದಿಂದ ಏರಿಳಿಯ ತೊಡಗಿತು. ಶಾಂತಪ್ಪ ಮಾಸ್ಟರ ಕಣ್ಣುಗಳನ್ನು ನೆನಪಿಸಿಕೊಳ್ಳ ಹೋದಳು. ಅವು ಟೊಳ್ಳು ಬಿದ್ದಿದ್ದವು! +….ಕಣ್ಣೆದುರು ಆತ ನಿಂತಿದ್ದ. ಅದೇ ಸಂಯಮದ ನಗೆ. +ನಂಬುತ್ತೀಯ ಇದನ್ನ? ಇನ್ನೂ ಏಳೆಂಟು ವರ್ಷದ ಹುಡುಗಿಯ ಪ್ರೀತಿ ಕಥೆಯನ್ನ? ಆತ ಎಲ್ಲ ಬಲ್ಲಂತೆ ದೊಡ್ಡದಾಗಿ ನಕ್ಕ. ಅಕೆ ಆ ನಗೆಯನ್ನೇ ದಿಟ್ಟಿಸಿದಳು. ಆತನ ನಗೆಯ ಗೆರೆ ಶಾಂತಪ್ಪ ಮಾಸ್ಟರ ನಗೆಯ ಗೆರೆಯನ್ನೇ ಹೋಲುತ್ತಿದೆಯೇ….! ಮೆಲ್ಲ ಅ ಗೆರೆಯ ಮೇಲೆ ಕೈಯಾಡಿಸಿದಳು. ಬಾಲ್ಯದ ಮೃದು ಭಾವನೆಯನ್ನು ಪ್ರೀತಿಯಿಂದ ಸವರಿದಂತೆ. +ಆತ ಮಾಯವಾದ. +ನಾಟಕದ ಹಾಡುಗಳಿಗೆ ಹಾರ್‍ಮೋನಿಯಂ ನುಡಿಸಲು ಬರುತ್ತಿದ್ದ ರಘುಪತಿ! ನೀನು ಇನ್ನೂ ಇಲ್ಲಿದ್ದೀಯ? ಇಲ್ಲವೇ ಇಲ್ಲ ಎಂದು ತಿಳಿದಿದ್ದೆ. ಹಾರ್‍ಮೋನಿಯಂ ನುಡಿಸುವ ಆ ದೃಢವಾದ ಬೆರಳುಗಳನ್ನೇ ನಾವು ನೋಡುತ್ತಾ ಇರುತ್ತಿದ್ದೆವಲ್ಲ! ಕೆಂಪು ಗುಲಾಬಿ ಮಿಶ್ರ ಉಗುರುಗಳು. ಬೆರಳುಗಂಟಿನ ಮೇಲೆಯೂ ರೋಮ. ಅವು ಹಾರ್‍ಮೋನಿಯಂನ ಮೆನಯ ಮೇಲೆ ಕುಣಿಯುತ್ತ ಅತ್ತ ಇತ್ತ ಸಾಗುವಾಗ ಸಮ್ಮೋಹಗೊಂಡವರಂತೆ ನೋಡುತ್ತಿದ್ದೆವಲ್ಲ ಎಲ್ಲ ಹುಡುಗಿಯರೂ. ಮನೆ ಪಕ್ಕದ ಕಸ್ತೂರಿಯೂ. ಇಲ್ಲವಾದರೆ ಅವನ ಕುರಿತು ಮಾತಾಡುವಾಗೆಲ್ಲ ಕಸ್ತೂರಿಯ ಮುಖ ಯಾಕೆ ಹೊಳೆಯುತ್ತಿತ್ತು? ಆತ ಕಾಟುಜಾತಿಯವ ಎಂದು ತಿಳಿದ ದಿನ ಅವಳ ದನಿಯೇಕೆ ಬೇಸರ ಕಾಸಿದಂತಿತ್ತು? +“ನಿಂಗೇನು ಅವರು ಯಾವ ಜಾತಿಯಾದರೆ?” – ಸುಭಗಿತ್ತಿ ತಾನು ಕೇಳಿದ್ದೆ. ಕಸ್ತೂರಿ ಮಾತಾಡಲಿಲ್ಲ. ಬಹಳ ಹೊತ್ತಿನವರೆಗೂ ಯೋಚನೆಯಲ್ಲಿದ್ದಂತೆ ಕಂಡಳು. ಅವಳ ದುಃಖ ಕಂಡು ತನಗೆ ಖುಶಿಯಾಗಿತ್ತು. ಜೊತೆಗೇ ಅವ ಕಾಟುಜಾತಿಯಂತ ಒಳಗೊಳಗೇ ಖುಶಿ ನಂದಿಹೋಗುತ್ತಿತ್ತು ಕೂಡ. ಆದರೂ ಬಾಯಿಪಾಠ ಹೇಳುವಂತೆ ಹೇಳಿದ್ದೆ. “ಜಾತಿಗೀತಿ ಎಂಥದನಾ? ಅದೆಲ್ಲ ಸುಮ್ಮನೆ” – ಎಂದು. +ಮನ ಮುಟ್ಟುವುದರೊಳಗೆ ಅವಳೊಡನೆ ಬೇಕೆಂದೇ ಜಗಳಾಡಿದ್ದೆ. ಸಣ್ಣ ವಿಷಯಕ್ಕೆ. ಆತ ಚಾಕ್ಪೀಸ್ ಹಿಡಿಯುವುದು ಸಿಗರೇಟು ಹಿಡಿದ ಹಾಗೇ ಎಂದು ಆಕೆ ಹೇಳಿದ್ದಕ್ಕೆ. ಸ್ವಲ್ಪ ಸಮಯದ ನಂತರ ಮತ್ತೊಂದು ಸುದ್ದಿ ತಂದವಳೂ ಅವಳೇ. “ಏಯ್ ರಘುಪತಿಗೆ ಮದುವೆಯಂತೆ. ಸಾವಿರಗಟ್ಟಲೆ ವರದಕ್ಷಿಣೆಯಂತೆ.” ಆಕೆ ಹೇಳಿದ್ದು ‘ನಿನಗೆ ಹಾಗೇ ಆಗಬೇಕು’ ಎಂಬ ಧಾಟಿಯಲ್ಲಿ! ಯಾವುದೂ ಸ್ವಷ್ಟವಿಲ್ಲದ ಸ್ಪಷ್ಟ ನುಡಿಯದ ಸ್ವಷ್ಟಗೊಳ್ಳಲು ಹೆದರುವ ದಿನಗಳವು. ಎಲ್ಲ ಮುಸುಕಿನೊಳಗಿನ ಗುಮಾನಿ. +ತಾನು ಮುಟ್ಟಿನವಳು ಬೇರೆ. ಕೆಳಹೊಟ್ಟೆ ಅಸಾಧ್ಯ ನೋಯುತ್ತಿತ್ತು. ಕಾಲು ಜಗಿಯುತ್ತಿತ್ತು. ಮನೆ ಮುಟ್ಟಿದವಳೇ ವಾಂತಿ ಮಾಡಿದೆ. ತಿಂಡಿ ಬೇಡ ಕಾಫಿ ಬೇಡ ಎಂದು ಮುಟ್ಟಿನ ಮೂಲೆಯಲ್ಲಿ ಕವುಚಿ ಮಲಗಿಬಿಟ್ಟೆ. ಒಳಗಿನಿಂದ ಕೇಳಿಸುತ್ತಿತ್ತು. “ಎಸ್ಸೆಸ್ಸೆಲ್ಸಿ ಆಗಿಬಿಟ್ಟರೆ ಸಾಕು. ಮುಂದೆ ಕಳಿಸುವುದು ಬೇಡ. ಮುಟ್ಟಿನ ಹೊತ್ತಿನಲ್ಲೆಲ್ಲಾ ಶಾಲೆಗೆ ಹೋಗುವುದು, ಉಳಿದವರನ್ನು ಮುಟ್ಟುವುದು, ಹಾರುವುದು ಕುಣಿಯುವುದು, ಯಾಕಾಗುತ್ತದೆ? ಮುಂದೆ ಹೆತ್ತು ಹಿಡಿಯ ಬೇಕಾದವರು.” +“ಅಷ್ಟೇ ಸೈಯಾ? ಯಾರನ್ನಾದರೂ ಕಟ್ಟಿಕೊಂಡು ಹಾರಿದರೆ!…. ಜಾತಿಗೀತಿ ನೋಡಿಕೊಂಡು ಹಾರಿದರಾದರೂ ಅದೊಂದು ಲೆಕ್ಕ” – ದೊಡ್ಡ ನಗೆಯಲ್ಲಿ ಮಾತು ಉರುಳಿಸಿಬಿಡುವ ಗುಂಡಕ್ಕ. ಅವರಿಗೆ ಇದೆಲ್ಲ ಹೇಗೆ ತಿಳಿಯುತ್ತದೆ? +ತಾನು ಬಿಕ್ಕುತ್ತಿದ್ದೆ. ಗುಂಡಕ್ಕನಿಗೆ ಕಾಣಿಸುತ್ತಿರಲಿಲ್ಲ. +ಮರೆಯಾಗಿದ್ದ ರಘುಪತಿ ಯಕಿಲ್ಲಿ ಮತ್ತೆ ಪ್ರತ್ಯಕ್ಷನಾದ? ನನಗಂತೂ ಬೇಡ. +…..ಮುಂದೆ? ಕೇಳಿದನಾತ ಬಾನ್ಸುರಿಯಂತೆ. ಅರೆ, ರಘುಪತಿಯ ನಗೆಯ ಬಿಳಲು ಇಲ್ಲಿ, ನಿನ್ನ ಕಣ್ಣಲ್ಲಿ! ಹೋಗು ಹೋಗು, ನಾ ಮುಂದೆ ಹೇಳುವುದಿಲ್ಲ. ಅದೂ ನಿನ್ನ ಹತ್ತಿರ. +ಹೊರಳಿದಳಾಕೆ. ಏನು ಮಾಡಿದರೂ ನಿದ್ದೆ ಬರಲೊಲ್ಲದು. ಸುತ್ತ ನಿಶ್ಶಬ್ದ. ನಿಶ್ಶಬ್ದತೆ ಸೀಳಿಕೊಂಡು ನಂಬರು ಕರೆದಂತೆ. +ಹಂಡ್ರೆಡ್ ಅಂಡ್ ಏಯ್ಟ್? +ಎಸ್ ಸರ್‍. +ಈ ಸರ್‍ಗೆ ಎಷ್ಟು ಬೇಗ ‘ನೋ’ ಅನ್ನಬೇಕಾಯ್ತು. ಅತನ ನಿಲುವು ನಡಿಗೆಯನ್ನು ತಾನು ಕಣ್ಣಿಂದ ಹಿಂಬಾಲಿಸುತ್ತಿರುವಾಗಲೇ ಫಕ್ಕನೆ ಆತ ತೀರ ಕೊಳಕಾಗಿ ಕಂಡಿದ್ದ. ಸಧ್ಯ ತಾನು ಬಯಿಬಿಡದ್ದು ಎಷ್ಟು ಒಳ್ಳೆಯದಾಯಿತು! ಮತ್ತೆ, ಪ್ರೀತಿಸುತ್ತೇನೆಂದು ಜಗವೆಲ್ಲ ಹೇಳಿಕೊಂಡು ಬಂದ ಮತ್ತೊಬ್ಬ ಸರ್‍. ಬಲು ತಮಾಷೆಯಾಗಿದ್ದ. ಆಚೀಚೆ ಹೋಗುವಾಗ ಸಣ್ಣಗೆ ಸಿಳ್ಳಿನಲ್ಲಿ ಹಾಡು ನುಡಿಸುತ್ತಿದ್ದ. ಪ್ರೀತಿಯ ವಿಷಯ ಮಾತಾಡುವಾಗೆಲ್ಲ ಎದೆಯ ಮೇಲೆ ಕೈಯಿರಿಸಿಕೊಳ್ಳುತ್ತಿದ್ದ. ತನಗೆ ತಡೆಯಲಾರದ ನಗು ಬರುತ್ತಿತ್ತು. ಮತ್ತು ತಾನು ಅವನಿಗೂ ‘ನೋ’ ವಾಗಬೇಕಾಯಿತು. ಅವರ ಮುಖಗಳನ್ನೆಲ್ಲ ಈಗ ಎಣಿಸಹೋದರೆ ಒಂದೂ ಮೂಡುತ್ತಿಲ್ಲ! +ಕೇಳಿಲ್ಲಿ, ಎಲ್ಲಿಯೂ ಬೀಳದೆ ಜೋತಾಡದೆ ಸೋಲದೆ ತೆರೆದುಕೊಳ್ಳುತ್ತ ಮುಚ್ಚಿಕೊಳ್ಳುತ್ತ ಮತ್ತೆ ತೆರೆದುಕೊಳ್ಳುತ್ತ ಬದುಕಿಗೆ ಮಿಡಿಯುತ್ತಲೇ ಇದ್ದೆ. ಇನ್ನೂ ಹೇಳಬೇಕೇನು ನಿನಗೆ? ಕೇಳುವಂಥವನಾಗಿ ಧೀರ. +* * * * +ಅಂದೊಮ್ಮೆ ನೈಟ್ ಬಸ್ಸಿನಲ್ಲಿ ಕುಳಿತಿದ್ದೆ. ತನ್ನ ಬಳಿಯೇ ಓರ್ವ ಬಂದು ಕುಳಿತ. ಎಲ್ಲಿಯವನೋ ಯಾರೋ. ಬಸ್ಸು ವಾಲುವಾಗ ತೋಳಿಗೆ ತೋಳು ತಾಕುತಿತ್ತು. ಮೊದಮೊದಲು ಮುದುರುತ್ತಿದ್ದ ಆತ ಆ ಮೇಲೆ ಮಾತಿಗೆ ತೊಡಗಿದ. ಸ್ವರದಲ್ಲಿ ಹೊಳಪಿತ್ತು. ಏನು ಮಾತಾಡಿದ ಅಂದರೆ ತನ್ನ ಕೆಲಸ ಹೆಸರು ಊರು… ಹೀಗೇ. ಯಾಕೆ ಹೇಳಿದನೋ. ಮನುಷ್ಯ ತನ್ನನ್ನು ತಾನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ ಎಂಬ ಕಾರಣಕ್ಕಾಗಿಯೇ ಇರಬಹುದು. ಕಣ್ಣು ಕೂರುತ್ತಿತ್ತು. ಒಮ್ಮೊಮ್ಮೆ ಅವನ ತಲೆ ನನ್ನ ಹೆಗಲಿಗೆ ಬಂದು ತೂಗುತ್ತಿತ್ತು. (ಉದ್ದ ಪಯಣ. ನಾನೂ ಏನೂ ಮಾಡುವಂತಿರಲಿಲ್ಲ ಅಂತೆಲ್ಲ ಹೇಳಬೇಕೇ?) ಕತ್ತಲಲ್ಲಿ ಅವನ ಮುಖ ಕಾಣುತ್ತಿರಲಿಲ್ಲ. ಆದರೆ ಲೈಟು ಹತ್ತಿದಾಗಲೂ ನಾನು ಕಿಟಕಿಯ ಹೊರಗೆ ನೋಡುತ್ತಿದ್ದೆ! ನನಗವನನ್ನು ನೋಡಬೇಕೆಂದು ಅನಿಸಲೇ ಇಲ್ಲ. ಬೆಳಕಲ್ಲಿ ಅವನ ಮಾತು ಕೇಳಬೇಕೆಂತಲೂ ಅನಿಸುತ್ತಿರಲಿಲ್ಲ. ಮಬ್ಬುಗತ್ತಲೆಯಲ್ಲಿ, ಬೆಕ್ಕಿನನಿದ್ದೆಯಂತಹ ಸಣ್ಣ ಸಣ್ಣ ನಿದ್ದೆಗಳೆಡೆಯಲ್ಲಿ ಆತ ಮಾತಾಡುತ್ತಲೇ ಇದ್ದ. ಏನಂತ? ನೆನಪಿಲ್ಲ. ನಾನೇನೂ ನಿದ್ದೆ ಹೋಗಿರಲಿಲ್ಲ. ಆದರೆ ಅವನ ಮಾತಿನ ಸಾರ ನನಗೆ ಬೇಕಂತಲೂ ಇರಲಿಲ್ಲ. ಮರೆತುಹೋಗದಿರುವುದು ಬಸ್ಸಿನ ಕುಲುಕಟ ಮಾತ್ರ. +ಬೆಳಗಿನ ನಸುಕು. ಅವನ ಊರು ಬಂತು ಬಂತೆನುವಾಗ ತನ್ನ ಸೂಟ್ಕೇಸ್ ಇತ್ಯಾದಿ ಜೋಡಿಸಿಕೊಳ್ಳತೊಡಗಿದ. ಅಷ್ಟು ಹೊತ್ತೂ ಜೊತೆಗೇ ಕುಳಿತು ಚಂದ ದನಿಯಲ್ಲಿ ಮಾತಾಡುತ್ತಲೇ ಬಂದ ಆತ ಊರು ಬರುತ್ತಲೂ ಅಪರಿಚಿತರಂತೆ ತಟಪಟ ಇಳಿದು ಹೋಗಿ ಬಿಟ್ಟ. ಎಲ್ಲಿಗೋ ಏನೋ? ಮನುಷ್ಯ ಮನುಷ್ಯನಾಗಿ ಇರುವುದು ಇಂತಹ ಕೆಲ ಕ್ಷಣಗಳಲ್ಲಿ ಮಾತ್ರವಿರಬಹುದೆ? ಸಭ್ಯತೆಯ ಎಲ್ಲೆ ಮೀರದೆಯೂ ನೆನಪು ಉಳಿಸಿ ಹೋದ. ಹೋಗುವಾಗ ನನಗೂ ದುಃಖವಾಗಲಿಲ್ಲ. …ಇನ್ನೂ ಇದ್ದಾನೆ ಒಳಗೆ ಅಂದರೆ! ಕೇವಲ ಧ್ವನಿಯಾಗಿ. +ಹೇಳು. ಇದಕ್ಕೆಲ್ಲ ಪ್ರೀತಿಯ ಹೆಸರು ಕೊಡುತ್ತೀಯ? ಮಲಗುವುದೆಂದರೆ ಇದೇ ಮತ್ತೆ ಎನ್ನುತ್ತೀಯ? ಆದರೆ ನಾನು ಹಾಗೆಣಿಸುವುದಿಲ್ಲ. ಬಹುಶಃ ಪ್ರೀತಿಸುವ ಗುಣದ ಮನ ಆ ಸ್ವಭಾವ ಒಣಗಿ ಹೋಗದಂತೆ ಮೃದುತ್ವದ ಸಿಂಚನ ಮಾಡುತ್ತ ತನ್ನನ್ನು ತಾನೇ ಕಾಪಾಡಿಕೊಂಡು ಬರುವ ಬಗೆಯಾಗಿರಬಹುದು ಅದು. ಇದೆಲ್ಲ ನಡೆದದ್ದು ಮುಂದೊಂದು ದಿನದ ಒಂದು ಘನಕ್ಕಾಗಿ. ಒಂದು ನಿಜಕ್ಕಾಗಿ. ಒಂದು ನಿಜವಾದ ಮಲಗುವಿಕೆಗಾಗಿ. ಅರ್ಥವಾಗುತ್ತಿದೆಯೆ ನಿನಗೆ? ಅರ್ಥ ಮಾಡಿಸಬೇಕಿಲ್ಲ. ಅದೂ ನಿನಗೆ! +ಇಷ್ಟಕ್ಕೂ ಅರ್ಥ ಮಾಡಿಸುವ ಕೆಲಸ ಬಲುಕಷ್ಟದ್ದು. ಉದಾಹರಣೆಗೆ ಆ ಶತದಡ್ಡ ಹುಡುಗ, ಅಡ್ಡಡ್ಡ ಬೆಳೆಕುಕೊಂಡವ, ಬಂದ ಎಂದರೆ ಎಲ್ಲಿಲ್ಲದ ಗಲುವು ಯಾಕೆ ತುಂಬುತ್ತಿತ್ತೆಂದು ಹೇಳಲು ಹೇಗೆ ಸಾಧ್ಯ? ಅವನಿರುವಷ್ಟು ಹೊತ್ತು ಮಾತಿಗೆ ಮುಂಚೆ ನಗೆ. ನಗೆಗಾಗಿಯೇ ಅರಳುವಂತಹ ನಗೆ. ಈಗಲೂ ಅವನನ್ನು ನೆನೆಸಿಕೊಮಡರೆ ಒಮದು ಹಾಸು ನಗೆ ಬರುತ್ತದೆ ತನಗೆ. +ಈ ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ನೋಡಿದರೆ ನನಗೇ ಆಶ್ಚರ್ಯವಾಗುತ್ತದೆ. ಕೇವಲ ಆಶ್ಚರ್ಯವೇ? ಚೇಷ್ಟೆಯ ನಗು. ತೆಳು ಅಲೆಯ ಮೃದು ವೇದನೆ. ಎಲ್ಲೋ ಸಂಧಿಸಿದ ಕಣ್ಣುಗಳು ಯಾವ ಸೇತುಬಂಧವಿಲ್ಲದೆಯೂ ಹರಿದುಬರುವ ಮಂದಸ್ಮಿತಗಳು ಶಬ್ದವಿಲ್ಲದ ಮತುಗಳು ಕೇಳದ ರಾಗಗಳು….. +* * * * +“ಹೂಂ. ಹಾಗೆ ಬಾ ಮತ್ತೆ.” +“ಅರೇ, ನೀನಿನ್ನೂ ಹೋಗಿಲ್ಲವೆ? ಹನ್ನೆರಡೂವರೆಯಾದೊಡನೆ ಹೋಗುವೆನೆಂದು ಹೊರಟವನು? ಹೋಗು ಹೋಗು. ನನ್ನ ಬಳಿ ಮಾತಿಲ್ಲದೆ ಕುಳಿತುಕೊಳ್ಳುವವನು ಅದು ಹೇಗೆ ಇನ್ನೊಬ್ಬಳು ಎದುರು ಬಂದರೆ ವಾಚಾಳಿಯಾಗುತ್ತಿ? ನೀನೆಂದರೆ ಅಸಹ್ಯವಾಗುವಂತೆ ವರ್ತಿಸುತ್ತಿ? ನೀನೇ ಅಲ್ಲ ಅಂತನಿಸುವಷ್ಟು ಕೆಟ್ಟದಾಗಿ ನಗುತ್ತೀ ಚಲಿಸುತ್ತೀ…..” +ಆಕೆ ಅವನನ್ನೇ ದಿಟ್ಟಿಸಿದಳು. +ಆ ಮುಖದಲ್ಲಿ ಗೆರೆಯಿತ್ತು. ತುಟಿಯಲ್ಲಿ ಸಿಳ್ಳಿತ್ತು. ಬೆರಳ ತುದಿಯಲ್ಲಿ ಗುಲಾಬಿ ಗೆಂಪಿತ್ತು. ಕಣ್ಣಲ್ಲಿ ನಗೆಯಿತ್ತು. +ಸೊಂಟಕ್ಕೆ ಕೈಕೊಟ್ಟು ನಗುತ್ತ ನಿಂತಿದ್ದನಾತ. +ಬಾ. ದೇವರಗೂಡಲ್ಲಿ ಕೈಗೆ ಕಡಗೋಲು ಕೊಟ್ಟು ಕೂರಿಸುತ್ತೇನೆ….. +* * * * +ಆಕೆ ತಲೆಯನ್ನೊಮ್ಮೆ ಜೋರಾಗಿ ಅಲುಗಿಸಿ ಮಲಗಿದಳು. ಈಗ ಶವಾಸನ. ಕಾಲನ್ನು ಅಗಲಿಸಿ ಎದೆಯ ಮೇಲೆ ಬಲಗೈಯಿಟ್ಟು ಎಡಗೈಯನ್ನು ನಾಭಿಯ ಮೇಲಿಟ್ಟು ಉಸಿರಿನ ಏರಿಳಿತವನ್ನೇ ಗಮನಿಸು – ಎಂದು ತನಗೇ ಹೇಳಿಕೊಳ್ಳುತ್ತ. ನಿಧಾನವಾಗಿ ಆಳವಾಗಿ ಉಸಿರಾಡುತ್ತ. +ಫ್ಯಾನು ತಿರುಗುತ್ತಲೇ ಇತ್ತು. ತನ್ನ ಸುತ್ತ ತಾನೇ. ಸ್ವಂತ ಗತಿಯ ಮೇಲೆ ತನಗೇ ನಿಯಂತ್ರಣವಿಲ್ಲದ ವಸ್ತು. +ಅಂಗಳದಲ್ಲಿ ಹೂ ಬಿಸಿಲು ಹರಡಿತ್ತು. ಸಂಜೆಯ ಕಾಫಿ ಕುಡಿದು ಮುಂದುಗಡೆ ಬಂದು ಕುಳಿತು ಪತ್ರಿಕೆಯ ಮೇಲೆ ಕಣ್ಣು ಓಡಿಸುತ್ತಿದ್ದೆ. ಉಮಾ ದೇಶಪಾಂಡೆ ಬೆಳಗ್ಗೆ ಫೋನು ಮಾಡಿದ್ದಳು. ‘ಸಂಜೆ ಶಾಪಿಂಗ್ನಿಂದ ಹಿಂದಿರುಗುವಾಗ ನಿಮ್ಮ ಮನೆಗೆ ಬರುತ್ತೇನೆ’ […] +ಆಶ್ರಮ ಶಾಲೆಯಲ್ಲಿದ್ದ ಕಾನ್‌ತೋಟದ ಹಸಲರ ಹುಡುಗ ಮತ್ತೆ ಕಾಣೆಯಾಗಿದ್ದಾನೆ ಎಂಬುದು ತಿಳಿದಾಗ ಸೋಮಣ್ಣ ಬೇಲಿಯ ಮೇಲೆ ಬಟ್ಟೆ ಒಣಹಾಕುತ್ತಿದ್ದ. ನಿನ್ನೆ ರಾತ್ರಿ ಇದ್ದನಂತೆ, ಊಟಕ್ಕೆ ಎಲ್ಲರ ಜೊತೆಯಲ್ಲಿ ಕುಳಿತಿದ್ದನಂತೆ………. ಆದರೆ ಮುಂಜಾನೆಯ ಪ್ರಾರ್ಥನೆಗೆಂದು ಎಲ್ಲ […] +ಎಂದಿನಂತೆಯೇ, ದೀಪ ಹಚ್ಚುವ ಹೊತ್ತಿಗೇ ಊಟವನ್ನು ಮುಗಿಸಿ, ಊರ ಇನ್ನೊಂದು ಕೊನೆಯಲ್ಲಿದ್ದ ಮೊಮ್ಮಗಳ ಮನೆಗೆ ಹೊರಟುನಿಂತ ಬುಡಣಸಾಬರು ಒಳಗೆ ಅಡಿಗೆಮನೆಯಲ್ಲೆಲ್ಲೋ ಕೆಲಸದಲ್ಲಿ ತೊಡಗಿದ ಮೊಮ್ಮಗನ ಹೆಂಡತಿಯನ್ನು ಕರೆದು, “ಚಾಂದಬೀಬೀ, ಕದ ಅಡ್ಡ ಮಾಡಿಕೋ, ಫಾತಿಮಾಳ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_169.txt b/Kannada Sahitya/article_169.txt new file mode 100644 index 0000000000000000000000000000000000000000..c24c0704b938508a23fd9903190267ed1e97f7e2 --- /dev/null +++ b/Kannada Sahitya/article_169.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಬಳೆ ಅಂಗಡಿಯ ಮುಂದೆ ನಿಂತವಳು +ಒಳ ಹೋಗಲಾರಳು.. ಮನಸ್ಸು +ಕಿಣಿಕಿಣಿಸುತ್ತ ಹೊರಬರಲೊಲ್ಲದು; +ಬಣ್ಣ ಖರ್ಚಾಗಿ ಅರ್ಧಕ್ಕೇ ನಿಲ್ಲಿಸಿದ +ಕಲಾವಿದನ ಚಿತ್ರದಂತೆ +ನಿಲ್ಲುತ್ತಾಳವಳು ಹೀಗೆ ಅಲ್ಲಾಡದ ರೇಖೆಯಂತೆ +ಯಾವುದೋ ಹುಡುಗಿಯ ಮೆಹಂದಿ ಬೆರಳ ಲಾಸ್ಯವನ್ನು +ಕಾಡಿಗೆ ಕಣ್ಣ ಹೊಳಪನ್ನು ನೋಡುತ್ತ, +ಸಂಜೆ ಸಿಂಗಾರವಾಗಿ +ಗೇಟಿಗಾತು ನಿಂತ ಹೆಂಗಸರ ಹಗುರ ಪರಿಮಳವ, +ಕೋಲಾಟದ ಹುಡುಗಿಯರ ಗೆಜ್ಜೆ ಹೆಜ್ಜೆಗಳ, +ತುಂಬಿದ ಬಸುರಿಯೊಳಗಿನ ಮಿಸುಗಾಟವ +ಗಮನಿಸುತ್ತ.. ಫಕ್ಕನೆ ನಿಂತು ಬಿಡುತ್ತಾಳೆ; +ಇದೆಂಥ ಎದೆ ಭಾರ +ಯಾವ ಕ್ಷಣದೊಳು ಮನ ಒಳ ಸರಿದು +ಯಾರದು ಬಾಗಿಲು ಮುಚ್ಚಿ ಬೀಗ ಜಡಿದಿದ್ದು? +ಯಾರು ಯಾರದು ಕೀ ಕಳೆದಿದ್ದು? +ಅಥವ ಕೀ ಇಲ್ಲದ ಬೀಗವೆ? +ಒಳಗಿನ ಮೌನ +ಹೊರಗಿನ ಮೌನಕೆ ಕೇಳುತಿದೆ +ಬೀಗ ಮುರಿಯಲಾರೆಯಾ? +***** +ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು. ಔಂಸು ತೂಕದ ರಕ್ತ ಮಾಂಸವೆರಡನು ಬೆರಸು; ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು; ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು; ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು; […] +ಬೆಟ್ಟದ ಮೇಲೆ ಹಿಂದೆ ತಲೆಯೆತ್ತಿ ಮೆರೆದು, ಇಂದು ಹಾಳು ಬಿದಿರಿವಂಥ ಕೋಟೆ. ಅಲ್ಲಿದ್ದನೊಬ್ಬ ಮುದುಕ, ಅವಗೊಬ್ಬನೇ ಮಗ ಹೇಗೊ ಸಾಗಿಸುತ್ತಿದ್ದ ಬದುಕ. ಒಂದು ದಿನ ಇದ್ದಕ್ಕಿದ್ದಂತೆ ಕಾಣೆಯಾಯಿತು ಅವನ ಕುದುರೆ, ಅವನಿಗಿದ್ದಾಸರೆ. ಬೆಟ್ಟದ ಕೆಳಗೆ […] +೧ ನೂರು ಹೃದಯ ಮೇರು ಭಾವಗಳ ನೂರಾರು ಸಾಲುದೀಪ ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ- ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ: ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು ಕೊಳ್ಳೆ ಹೊಡೆಯಲು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_17.txt b/Kannada Sahitya/article_17.txt new file mode 100644 index 0000000000000000000000000000000000000000..6236c6f4314aaadb4b62806876278bf585f1c5a8 --- /dev/null +++ b/Kannada Sahitya/article_17.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ರಾತ್ರಿ ತಾನು ಎಷ್ಟು ಗಂಟೆಯವರೆಗೆ ಬರೆದೆನೆನ್ನುವುದು ರಾಮಚಂದ್ರನಿಗೆ ಗೊತ್ತಾಗಲಿಲ್ಲ. ಬೆಳಿಗ್ಗೆ ಎಚ್ಚರವಾದದ್ದು ಅಡಿಗೆಯ ಹುಡುಗ ದಿನದ ಪದ್ದತಿಯಂತೆ ಚಹದ ಕಪ್ಪನ್ನು ಹಿಡಿದು ಕೋಣೆಯ ಕದ ತಟ್ಟಿದಾಗ. ಕನ್ಣು ತೆರೆದರೆ ಫಕ್ಕನೆ ಎಲ್ಲಿದ್ದೇನೆ ಎನ್ನುವುದೇ ಕೆಲಹೊತ್ತು ತಿಳಿಯಲಿಲ್ಲ. ಮೈಯೆಲ್ಲ ಬಿಗಿದು ಕತ್ಟಿದ ಹಾಗೆ, ಅಲುಗಾಡಿಸಲೂ ಆಗುತ್ತಿರಲಿಲ್ಲ. ಅಗಳಿ ಹಾಕಿಲ್ಲ. ಹಾಗೇ ಕದ ದೂಡಿ ಬಾ ಎನ್ನೋಣವೆಂದರೆ ನಾಲಗೆ ಏಳದಾಯಿತು. ವಾಸು ತಾನೇ ಕದ ದೂಡಿ ಒಳಗೆ ಬಂದವನು ಇವನನ್ನು ನೋಡಿ ಥಕ್ಕಾಗಿ ನಿಂತುಬಿಟ್ಟ. “ಇದೆ! ರಾತ್ರಿಯೆಲ್ಲ ಕುರ್ಚಿಯಲ್ಲೇ ನಿದ್ದೆ ಮಾಡಿದಿರೋ ನೋಡುತ್ತೇನೆ” ಎಂದಾಗ, ಮೆಲ್ಲಗೆ ದೃಷ್ಟಿಗೆ ಬಿದ್ದಿದ್ದುವು: ರಾತ್ರಿಯಿಡೀ ಉರಿದ ದೀಪದ ಬೆಳಕಿನಲ್ಲಿ ಬೆಳಗಿನಿಂತ ಮಲಗುವ ಕೋಣೆ ; ನಿರಿ ಮುರಿಯದೇ ಇದ್ದ ಹಾಸಿಗೆ ; ಪ್ರಿಯವಾದ ಪುಸ್ತಕಗಳ ಕಪಾಟು. ವಿರಾಮ ಕುರ್ಚಿಯಲ್ಲಿ ಕುಳಿತು ಕಾಲುಗಳ ಮೇಲಿರಿಸಿ ಬರೆದ ವಹಿ ಅವನಿಂದ ದೂರ ಸಿಡಿದು ನೆಲದ ಮೇಲೆ ಬಿದ್ದಿತ್ತು. ಅವನನ್ನೇ ಮಿಕಿಮಿಕಿ ನೋಡುತ್ತಿದ್ದ ವಾಸು ಚಕಿತನಾಗಿ, “ರಾತ್ರಿಯೆಲ್ಲ ಕೂತು ಮಾಡಿದ ಬರೆಯುವ ಕೆಲಸ ಇದೇ ಏನೋ ಅನ್ನುತೇನೆ. ಅದು ಯಾಕೆ ಹಾಗೆ ರಾಯರ ಬನೀನು ಮಸಿಯಲ್ಲಿ ಅದ್ದುಬಿಟ್ಟಿದೆ?” ಎಂದಾಗ ನೋಡಿಕೊಂಡ : ಹೌದು. ತೆರೆದೇ ಇದ್ದ ಪೆನ್ನಿನ ನಿಬ್ಬು ಬನಿಯನ್ನಿನ ಎದೆಯ ಭಾಗದಲ್ಲಿ ಊರಿಕೊಂಡಲ್ಲೇ ಇಷ್ಟು ದೊಡ್ಡ ಚಕ್ರಾಕಾರದ ಮಸಿಯ ಕಲೆಯನ್ನು ಮೂಡಿಸಿತ್ತು : ವಾಸೂನ ವಿನೋದ ಬುದ್ಧಿಗೆ ನಗು ಬಂತು. ಕುರ್ಚಿಯಿಂದ ಏಳುವ ಪ್ರಯತ್ನ ಮಾಡದೇ ಕುಳಿತಲ್ಲಿಂದ ಪೆನ್ನಿಗಾಗಿ ತಡಕಾಡಿದ. ವಹಿ ಬಿದ್ದ ಜಾಗದ ಸಮೀಪವೇ ಬಿದ್ದಿತ್ತು. ವಾಸೂನೇ ವಹಿ ಮತ್ತು ಪೆನ್ನುಗಳೆರಡನ್ನೂ ಎತ್ತಿ ಹತ್ತಿರದ ತೇಬಲ್ಲಿನ ಮೇಲಿಟ್ಟು ಚಹದ ಕಪ್ಪನ್ನು ಕೈಗೆ ಕೊಟ್ಟು ಎಂದಿನ ಹಾಗೆ ರೂಮಿನಿಂದ ಹೊರಟುಹೋಗದೇ ಗೋಡೆಗೆ ಒರಗಿ ಕೈಕಟ್ಟಿ ಕುಕ್ಕರುಗಾಲಲ್ಲಿ ಕುಳಿತುಕೊಂಡ. ತನ್ನ ರಾಯರಲ್ಲಿ ಕಂಡ ಎಂತಹುದೋ ವಿಶೇಷ ಬದಲು ಹಿಂದೆಂದೂ ತೋರದೇ ಇದ್ದ ಸಲುಗೆಗೆ ಎಡೆಮಾಡಿಕೊಟ್ಟಂತಿತ್ತು. ಓದುವ ಕೋಣೆ, ಮಲಗುವ ಕೋಣೆ ಎರಡೂ ಒಂದೇ ಆಗಿದ್ದ ಆ ದೊಡ್ಡ ಕೋಣೆಯನ್ನು ಮೊದಲ ಬಾರಿಯೇ ನೋಡುತ್ತಿದ್ದೇನೆ ಎನ್ನುವವನ ಹಾಗೆ ಬೆರಗುಗಣ್ಣುಗಳಿಂದ ನೋಡುತ್ತ, “ರಾಯರೇ”, ಎಂದ. “ನೀವು ಇಷ್ಟೆಲ್ಲ ಪುಸ್ತಕಗಳನ್ನು ಓದಿದ್ದೀರಾ?” ಎಂದು ಕೇಳಿದ. “ಇಲ್ಲ ವಾಸೂ, ಎಲ್ಲ ಪುಸ್ತಕಗಳನ್ನೂ ಪೂರ ಓದಿಲ್ಲ. ಓದುವುದು ಇನ್ನೂ ಬಹಳ ಇದೆ,” ಎಂದು ರಾಮಚಂದ್ರ ಹೇಳಿದಾಗ, ವಾಸು ಪುಸ್ತಕಗಳನ್ನು ನೋಡುತ್ತ ಕುಳಿತುಬಿಟ್ಟ. +ವಾಸು ಈ ಮನೆಗೆ ಹೊಸಬ. ಬಂದು ಒಂದು ತಿಂಗಳಷ್ಟೇ ಆಗಿರಬೇಕು. ರಾಮಚಂದ್ರನ ಊರಿನ ಕಡೆಯವನೇ. ಮುಂಬಯಿಯ ಉಡುಪಿ ಹಾಟೆಲ್ ಒಂದರಲ್ಲಿ ಮಾಣಿಯ ಕೆಲಸ ಮಾಡುತ್ತಿದ್ದವನನ್ನು ಈ ಮೊದಲಿನ ಅಡಿಗೆಯವನೇ ತಾನು ರಜೆಯ ಮೇಲೆ ಹೋಗುವಾಗ ತಂದುಕೊಟ್ಟಿದ್ದ. ವಾಸು ಈ ವರೆಗೂ ತನ್ನ ಹತ್ತಿರ ಹೀಗೆ ಮಾತನಾಡಿದ್ದು ರಾಮಚಂದ್ರನಿಗೆ ನೆನಪಿಲ್ಲ. ತನ್ನ ಮೋರೆಯ ಅದೆಂತಹ ಬದಲು ಕಂಡು ಈ ಬಗೆಯ ಸಲುಗೆಗೆ ಧೈರ್ಯ ಮಾಡಿದನೋ ಎಂದು ಕುತೂಹಲವೆನಿಸಿತು. ನಾಲ್ಕು ಮಲಗುವ ಕೋಣೆಗಳು ; ಹಿರಿದಾದ ದಿವಾಣಖಾನೆ ; ಮೂರು ಬಾಲ್ಕನಿಗಳು, ನಾಲ್ಕು ಬಚ್ಚಲುಮನೆಗಳು. ಇಷ್ಟು ದೊಡ್ಡ ಮನೆಯಲ್ಲಿ ಇರುತ್ತಿದ್ದವರು ತಾವಿಬ್ಬರೇ. ತಾನು ಪ್ರಿಂಟಿಂಗ್ ಪ್ರೆಸ್ಸಿಗೆ ಹೊರಟುಹೋದಮೇಲಂತೂ ‘ಚೀಂ’ ಎನ್ನುತ್ತಿದ್ದ ಮನೆಯಲ್ಲಿ ವಾಸು ಒಬ್ಬಂಟಿ. ಪಾಪ! ಬೇಸರ ಬರಲಾರದೇ? ಮೇಲಾಗಿ, ಕಳೆದ ಕೆಲವು ದಿನಗಳಿಂದ ಪ್ರೆಸ್ಸಿಗೆ ಮೊದಲಿನ ಹಾಗೆ ದಿನವೂ ತಪ್ಪದೇ ಹೋಗದೇ ಆಗೊಮ್ಮೆ ಈಗೊಮ್ಮೆ ಗರಜು ಬಿದ್ದಾಗಷ್ಟೇ ಹೋಗುತ್ತಿದ್ದರೂ ಮನೆಯಲ್ಲಿರುತ್ತಿದ್ದುದು ಕಡಿಮೆಯೇ. ಈ ಎರಡು ದಿನ ಮಾತ್ರ ಮನೆಯಲ್ಲೇ ಇದ್ದೆ. ಆದರೆ ಇಡೀ ದಿನವೆಂಬಂತೆ ಪುಸ್ತಕಗಳಲ್ಲಿ ತಲೆ ಮರೆಸಿ ಕೂತವನು ಇದೀಗ ಮಾತನಾಡಲು ಸಿಕ್ಕನೆಂದನ್ನಿಸಿರಬೇಕು : ರಾಮಚಂದ್ರ ತಾನೂ ವಾಸುವಿನೊಂದಿಗೆ ಹರಟೆ ಹೊಡೆಯಲು ಸಿದ್ಧನಾದ : +“ನಿನ್ನೆ ರಾತ್ರಿ ಏನೋ ಬರೆಯುತ್ತೇನೆ ಎಂದು ಕೂತಿರಲ್ಲ. ಏನು ಬರೆದಿರಿ?” +“ಒಂದು ಕತೆ ಬರೆದೆ ವಾಸೂ.” +“ಯಾರ ಬಗ್ಗೆ? ಆ ಕತೆಯಲ್ಲಿ ನಾನೂ ಬಂದಿದ್ದೇನೋ ಏನೋ….” +“ಕೆಲವು ದಿನಗಳ ಹಿಂದೆ ಇಲ್ಲೊಬ್ಬ ಹೆಂಗಸು ಬಂದಿದ್ದಳಲ್ಲ. ಅವಳ ಬಗ್ಗೆ.” +“ಓ ! ಕಾಶಿಗೆ ಹೋದ ಮುದುಕಮ್ಮನಾ? ಅವಳ ಬಗ್ಗೆ ಏನಪ್ಪ ಬರೆಯೋ ಹಾಗೆ ಇದೆ? ಅವಳು ಸತ್ತಾಗ ಯಾಕೆ ಅಷ್ಟೊಂದು ಅತ್ತಿರಿ? ಮೊನ್ನೆ ಬಂದಿದ್ದರಲ್ಲ ಅವರು?” +“ಯಾರು ಬಂದಿದ್ದರೋ ವಾಸು?” +“ಅವರೇ ಬೆಳ್ಳಗೆ ಚೆಂದವಾಗಿದ್ದಾರಲ್ಲ…?” ವಾಸೂನ ಮೋರೆ ಕೆಂಪಾಯಿತು. ವಾಸೂ ಹೇಳುತ್ತಿದ್ದುದು ಗೆಣೆಗಾತಿ ವೀಣಾಳ ಬಗ್ಗೆ ಇರಬೇಕು ಎಂಬುದು ಗೊತ್ತಾಗಿ, +“ಅವರೇ? ಏನೆಂದರು?” ಎಂದು ಕೇಳಿದ ರಾಮಚಂದ್ರ, ಮೋರೆಯ ಮೇಲೆ ತಾವ ಭಾವನೆಯನ್ನೂ ವ್ಯಕ್ತಪಡಿಸದೇ. +“ಅವರೂ ಹೇಳುತ್ತಿದ್ದರು : ಆಮುದುಕಿ ಸತ್ತದ್ದನ್ನು ನೀವು ಅಷ್ಟೊಂದು ಮನಸ್ಸಿಗೆ ಹಚ್ಚಿಕೊಂಡಿರೋ ಎಂದು. ಅವರು ಹೇಳಿದ್ದೂ ಸುಳ್ಳಲ್ಲ. ಆ ಮುದುಕಮ್ಮ ಸತ್ತಾಗಲಾಯ್ತು ನೀವು ಒಂದು ನಮೂನೆ ಆಗಿಬಿಟ್ಟಿದ್ದೀರಿ…” ಎಂದ. ರಾಮಚಂದ್ರ ಕೂಡಲೇ ಏನೂ ಮಾತನಾಡಲಿಲ್ಲ. ತುಸು ಹೊತ್ತಿನ ಮೇಲೆ, ಕತೆಯಲ್ಲಿ ತನ್ನ ಬಗ್ಗೆ ಏನು ಬಂದಿದೆ ಎಂದು ವಾಸು ಕೇಳಿದ ಪ್ರಶ್ನೆ ಈಗ ಲಕ್ಷ್ಯಕ್ಕೆ ಬಂದವನ ಹಾಗೆ, +“ನೋಡು, ವಾಸೂ ನೀನೂ ನನ್ನ ಕತೆಯಲ್ಲಿ ಬಂದಿದ್ದೀ. ಆ ಮುದುಕಮ್ಮನ ತಂಗಿಯ ಮಗ ನಾಗಪ್ಪನೋ ಇನ್ನಾರೋ ಆಗಿರಬೇಕು-ಸರಿಯಾಗಿ ನೆನಪಿಲ್ಲ,” ಎಂದ, ಮುಗುಳುನಗುತ್ತ. ಈ ಪರಕಾಯಪ್ರವೇಶ ವಿದ್ಯೆಯ ತುದಿ ಬುಡ ಗೊತ್ತಾಗದೇ ಆಶ್ಚರ್ಯಚಕಿತನಾಗಿ ಬಾಯಿ ತೆರೆದು ಕುಳಿತುಬಿಟ್ಟ ವಾಸು. ಆಮೇಲೆ ಕ್ರಮೇಣ ಅವನ ಪ್ರಶ್ನೆಗಳು ವೀಣಾಳ ಕಡೆಗೆ, ಅವಳ ತಾಯಿ ಕಡೆಗೆ ತಿರುಗಿದ್ದರಿಂದ ಸಲುಗೆಯನ್ನು ಅತಿಗೆ ಹೋಗಕೊಡಲು ಮನಸ್ಸಿಲ್ಲದವನ ಹಾಗೆ, “ವಾಸೂ ಆಮೇಲೆ ನಿನಗೆ ಕತೆಯನ್ನು ಓದಿ ತೋರಿಸುತ್ತೇನೆ. ಆಗದೇ? ಬ್ರೇಕ್‌ಫಾಸ್ಟಿಗೆ ಏನಾದರೂ ಸ್ಪೆಶಲ್ ಮಾಡು ನೋಡೋಣ,” ಎಂದ, ಅವನನ್ನು ಅಲ್ಲಿಂದ ಓಡಿಸಲೆಂದೇ. ಹಾಗೆ ಹೇಳಿದ್ದೇ, ತನಗೆ ಬಹಳ ಹಸಿವೆಯಾಗಿದೆ ಎಂದೂ ಅನ್ನಿಸಿತು. ವಾಸೂಗೆ ಏಳುವ ಮನಸ್ಸಾದಂತೆ ತೋರಲಿಲ್ಲ. ಆದರೂ ಕತೆ ಓದಿ ತೋರಿಸುತ್ತೇನೆ ಎಂದುದಕ್ಕೇ ಜೋತುಬಿದ್ದು, ಖಾಲಿಯಾದ ಕಪ್ಪು ಬಸಿಗಳನ್ನೆತ್ತಿಕೊಂಡು ಅಡುಗೆಯ ಮನೆಗೆ ನಡೆದ. +ಪ್ರಾತರ್ವಿಧಿಗಳನ್ನು ಮುಗಿಸಲು ಹೊರಡೋಣವೆಂದು ವಿರಾಮ ಕುರ್ಚಿಯಿಂದ ಏಳುವಾಗ ತಿರುಗಿ ಬನಿಯನ್ನಿನ ಮೇಲಿನ ನಾಲ್ಕು ಇಂಚು ವ್ಯಾಸದಷ್ಟು ದೊಡ್ಡದಾದ ಕಲೆಯನ್ನು ನೋಡಿ ‘ರಾತ್ರಿಯೆಲ್ಲ ಕೂತು ಮಾಡಿದ ಬರೆಯುವ ಕೆಲಸ ಇದೇ ಏನೋ ಅನ್ನುತ್ತೇನೆ,’ ಎಂದು ಆಗ ವಾಸು ಹೇಳಿದ್ದು ನೆನಪಾಗಿ, ರಾಮಚಂದ್ರ ತನ್ನಷ್ತಕ್ಕೇ ನಕ್ಕ. ವಹಿ ತೆರೆದು ನೋಡುವ ಕುತೂಹಲವಾಗಿ ಅದನ್ನು ಕೈಗೆತಿಕೊಳ್ಳೋಣವೆಂದರೆ ಹತ್ತಿರ ಹೋಗುವಷ್ಟರಲ್ಲಿ-ಈಗ ಬೇಡ ಬ್ರೇಕ್‌ಫಾಸ್ಟ್ ಮುಗಿಸಿದ ಮೇಲೇ-ಎಂದುಕೊಂಡು, ಬರೆದದ್ದನ್ನು ಓದಿ ನೋಡುವ ತವಕವನ್ನು ಹತ್ತಿಕ್ಕಿಯೇ ಬಚ್ಚಲು ಮನೆಗೆ ಹೋದ….ಎಂದಿನ ಹಾಗೆ, ಒಂದು ಇನ್ನೊಂದಕ್ಕೆ, ಇನ್ನೊಂದು ಮತ್ತೊಂದಕ್ಕೆ, ಮತ್ತೊಂದು ಮಗದೊಂದಕ್ಕೆ ಪ್ರತೀಕವಾಗುತ್ತ ಒಗಟು ಒಗಟಾದ ಹಳವಂಡದ ಹಾಗೆ, ಕನಸಿನ ಹಾಗೆ ಆಗದೇ ಈ ಸಾರೆ ಎಲ್ಲವನ್ನೂ ಸ್ಪಸ್ಟವಾಗಿ ಮುಚ್ಚುಮರೆಯಿಲ್ಲದೇನೇ ಹೇಳಿಕೊಂಡಿದ್ದೇನೆ ಎನ್ನುವ ಹರವಾದ ಭಾವನೆಯಿಂದ ಮನಸ್ಸು ತುಂಬ ಹಗುರವಾಗಿ, ಒಂದು ತರದ ಹುಡುಗುತನದಿಂದ ಗೆಲುವಾಗಿತ್ತು. +ವೀಣಾಳನ್ನು ಕಾಣದೇ ಎಷ್ಟು ದಿನಗಳಾದವು, ಅನ್ನಿಸಿತು. ತುಂಬ ಮನಸ್ಸಿಗೆ ಹಚ್ಚಿಕೊಂಡಿರಬೇಕು ಹುಡುಗಿ. ಅವಳ ತಾಯಿ ಕೂಡ. ನಾಳೆ ಹೋದರಾಯಿತು ಎಂದುಕೊಂಡ. ಏಕೋ ಈಗ ಮೊದಲಿನ ಜೋಮೂ ಉಳಿದಿಲ್ಲ. ಅದಕ್ಕಿಂತ ಹೆಚ್ಚಾಗಿ ವೀಣಾ ತನ್ನನ್ನು ಹಚ್ಚಿಕೊಂಡ ರೀತಿಗೆ ಒಂದು ಬಗೆಯ ಹೆದರಿಕೆಯಾಗುತ್ತದೆ. ಯಾವ ಬಂಧನವೂ ಬೇಡ ಎಂದುಕೊಂಡವನ ಕಾಲಿಗೆ ಇವಳ ಪ್ರೀತಿಯ ಕರುಳುಬಲ್ಳಿ ತೊಡಕಾಗದಿರಲಿ ದೇವರೇ! ತನ್ನ ಮನೆ, ಭರಭರಾಟೆಯಿಂದ ನಡೆದ ಪ್ರೆಸ್ಸು, ಬ್ಯಾಂಕಿನಲ್ಲಿದ್ದ ಹಣದ ಮೋಹಕ್ಕಾಗಿ ತನ್ನನ್ನು ಪ್ರೀತಿಸಿದ್ದಾಳೆಂದು ಬಗೆದು ತಳೆದ ಧೈರ್ಯ ಇತ್ತಿತ್ತ ಕುಗ್ಗುತ್ತಿದೆ. ವೀಣಾಳಿಗಿಂತ ಮೊದಲಿನ ಹುಡುಗಿಯರನ್ನು ಮನೆಗೆಂದೂ ಕರೆಸಿದವನಲ್ಲ. ಬೇಕೆನ್ನಿಸಿದಾಗ ತಾನೇ ಅವರಲ್ಲಿ ಹೋಗುತ್ತಿದ್ದ. ಆದರೆ ವೀಣಾ ಮಾತ್ರ ಗೆಳೆತನವಾದ ಐದಾರು ವರುಷಗಳಲ್ಲಿ ಆಗೊಮ್ಮೆ ಈಗೊಮ್ಮೆ ಬಂದಿದ್ದಾಳೆ. ಅದೂ ಹಗಲು ಹೊತ್ತಿಗೆ ಮಾತ್ರ. ರಾತ್ರಿಯಲ್ಲಿ ಎಂದೂ ಇಲ್ಲಿ ಕಳೆದವಳಲ್ಲ. ಆದರೆ ಸಾತಕ್ಕ ಸತ್ತಾಗ ಇಡೀ ಮನೆಯೇ ತಿನ್ನಲು ಎದ್ದು ಬಂದ ರೀತಿ ಬಿಕೋ ಎನ್ನಿಸಿದಾಗ ನಾಲ್ಕು ದಿನ ಇಲ್ಲೇ ಇದ್ದಳು. ಒಂದೇ ಹಾಸಿಗೆಯಲ್ಲಿ ಮಲಗಿಯೂ ಅವಳನ್ನು ಮುಟ್ಟಿರಲಿಲ್ಲ. ಕಾರಣ ಗೊತ್ತಿದ್ದೂ ರಾತ್ರಿಯಿಡೀ ಅತ್ತವಳಂತೆ ಕಣ್ಣುಗಳನ್ನು ಕೆಂಪಗೆ ಊದಿಸಿಕೊಂಡೇ ಏಳುತ್ತಿದ್ದಳು. ಅವಳನ್ನು ಮೈದಡವಿ ಸಂತೈಯಿಸುವ ಹಾಗೆ ಏನಾದರೂ ಮಾತನಾಡಬೇಕೆನ್ನಿಸಿದರೂ ಏನೊಂದೂ ಸೂಚಿಸದೇ ಮನಸ್ಸು ಸುನ್ನವಾಗುತ್ತಿತ್ತು. ಸಾತಕ್ಕ ಆಸ್ಪತ್ರೆಯಲ್ಲಿದ್ದಾಗ ಕೂಡ ತನ್ನೊಡನೆ ಓಡಾಡುತ್ತಿದ್ದಾಗ ಹೆಚ್ಚಾಗಿ ಮಾತನಾಡಿಸಿದ್ದು ನೆನಪಿಲ್ಲ. ಒಂದು ದಿನವಂತೂ “ಅವಳು ಕುರೂಪಿಯಾದ ಮುದುಕಿಯಾಗಿರದಿದ್ದರೆ ಅವಳು ನಿಮ್ಮ ಚಿಕ್ಕಂದಿನ ಪ್ರೇಯಸಿಯೆಂದು ಸಂಶಯಪಡುತ್ತಿದ್ದೆ,” ಎಂದು ಸಿಟ್ಟು ವ್ಯಕ್ತಪಡಿಸಿದಳು….ಸಾತಕ್ಕನ ಬಗ್ಗೆ ವೀಣಾಗೆ ಅನ್ನಿಸಿದ ಅಸೂಯೆಯ ನೆನಪಾದಾಗ ರಾಮಚಂದ್ರನಿಗೆ ನಗು ಬಂತು. ಬಚ್ಚಲುಮನೆಯಿಂದ ಹೊರಗೆ ಬರುವಾಗ ಫಕ್ಕನೆ ಎಂಬಂತೆ ಹೊಳೆದುಬಿಟ್ಟಿತು : ವಾಸು ತನ್ನೊಡನೆ ವರ್ತಿಸುವಾಗ ಪ್ರಕಟಿಸುತ್ತಿದ್ದ ಸಲಿಗೆಯ ಕಾರಣ ಬಹುಶಃ ತನಗೂ ವೀಣಾಗೂ ಇದ್ದ ಸಂಬಂಧ ಗೊತ್ತಾದದ್ದು ಎಂದು. ಸೂಳೇಮಗನೇ ಎಂದುಕೊಂಡ. +ಉಪಾಹಾರಕ್ಕೆ ಕೂತಾಗ ವಾಸೂನೊಡನೆ ಸಲುಗೆಯಿಂದಲೇ ಮಾತನಾದಬೇಕೆಂದು ಬಯಸಿದರೆ ವಾಸು ಒಮ್ಮಿಂದೊಮ್ಮೆಲೇ ತನ್ನ ಮೊದಲಿನ ನಡವಳಿಕೆಯ ರೀತಿ ಹಿಂತಿರುಗಿದಂತಿತ್ತು. ಇವನಿಗೇನಾಯಿತಪ್ಪ ಎಂದುಕೊಂಡ. ವೀಣಾಳ ಬಗ್ಗೆ ಮಾತು ತೆಗೆದಾಗ ಅರ್ಧಕ್ಕೇ ತಡೆದದ್ದಕ್ಕೆ ಕೆಡುಕೆನಿಸಿರಬೇಕು. ಇಲ್ಲ, ತನ್ನ ನಡತೆಯ ಬಗ್ಗೆ ತನಗೇ ಹೆದರಿಕೆಯಾಗಿರಬೇಕು….ರಾಮಚಂದ್ರ ಕೂಡಲೇ ಮಾತನಾಡಿಸುವ ಗೋಜಿಗೆ ಹೋಗದೇ ನಾಸ್ತಾ ಮುಗಿಸಿ ಓದುವ ಕೋಣೆಗೆ ಹೋಗಬೇಕು ಎನ್ನುವಷ್ಟರಲ್ಲಿ ವಾಸು ಬಾಗಿಲಲ್ಲಿ ಪ್ರಕಟವಾಗಿ, “ರಾಯರೇ,” ಎಂದ, ದುಗುಡ ತುಂಬಿದ ದನಿಯಲ್ಲಿ. “ನಿಮ್ಮ ಊರಿನ ಆ ನಾಗಪ್ಪ ಎಂತಹ ಹುಡುಗ?” ಯಾವ ನಾಗಪ್ಪ ಎಂದು ಗೊತ್ತಾಗದೇ ರಾಮಚಂದ್ರ ತಬ್ಬಿಬ್ಬಾದದ್ದನ್ನು ನೋಡಿ ತಾನು ಕೇಳಿದ ಪ್ರಶ್ನೆಯನ್ನು ಸ್ಪಷ್ಟಪಡಿಸುತ್ತ, “ಈಗ ನಿಮ್ಮ ಕತೆಯಲ್ಲಿ ನನ್ನನ್ನು ನಾಗಪ್ಪನನ್ನಾಗಿ ಮಾಡಿದ್ದೆನೆ ಎಂದಿದ್ದಿರಲ್ಲ-ಆ ನಾಗಪ್ಪ. ನಿಮಗೆ ನನ್ನ ಬಗ್ಗೆ ಏನೂ ಗೊತ್ತಿಲ್ಲ ರಾಯರೇ,” ಎಂದು ತಡೆದ. ಕೆಲ ಹೊತ್ತಿನ ಮೇಲೆ ಅದೇ ಗಾಂಭೀರ್ಯದಿಂದ “ನನ್ನ ಅಕ್ಕ ತುಂಬ ಒಳ್ಳೆಯವಳು. ಅವಳೊಬ್ಬಳೇ ನನ್ನನ್ನು ಅಕ್ಕರೆ ಮಾಡುತ್ತಿದ್ದುದು ನಮ್ಮ ಮನೆಯಲ್ಲಿ. ಅವಳ ಬಗ್ಗೆ…ಇಲ್ಲಿ ಬಂದಿದ್ದರಲ್ಲ ಅವರಿಗೆಲ್ಲ ಹೇಳಿದ್ದೇನೆ ಆ ಹೊತ್ತು. ಅಕ್ಕನನ್ನೇ ನಿಮ್ಮ ಕತೆಯಲ್ಲಿ ಹಾಕಿ” ಎಂದ. ಚೋಟುದ್ದದ ಈ ವಾಸುವಿನಲ್ಲೂ ಮಾತಿನಲ್ಲಿ ಪ್ರಕಟವಾಗಲು ಹಾತೊರೆಯುವ ವಿಶ್ವವೊಂದು ಅಡಗಿದ್ದು ಲಕ್ಷ್ಯಕ್ಕೆ ಬಂದು ಅಪ್ರತಿಭನಾದ. ಹಾಗೂ “ಆಗಲಪ್ಪಾ, ಒಂದು ದಿನ ನೀನೇ ಎಲ್ಲ ಹೇಳು : ಬರೆಯುತ್ತೇನೆ ಆಗದೇ?” ಎಂದು ಭರವಸೆಯಿತ್ತ. ವಾಸು ಖುಷಿಯಿಂದ ಹಲ್ಲು ತೋರಿಸಿ ನಕ್ಕ. +ಹೆಬ್ಬಾಗಿಲ ಮೇಲೆ ಯಾರೋ ಬಡಿದ ಸದ್ದು ಕೇಳಿಸಿ, ಬಾಗಿಲ ಗಂಟೆಯಿದ್ದಾಗಲೂ ಹೀಗೆ ಕದ ಬಡಿಯುವವ ಮಗ್ಗಲು ಮನೆಯ ಪಾರಸಿ ಗೃಹಸ್ಥ ನೊಶೀರ್ ಖಂಬಾಟಾ ಅಲ್ಲದೇ ಬೇರೆ ಯಾರೂ ಅಲ್ಲ ಎಂಬ ಭರವಸೆಯಿಂದ ಲಗುಬಗೆಯಿಂದ ಕದ ತೆರೆದು. “ಬಾ ಬಾ ನೊಶೀರ್-ಬಾ” ಎಂದು ತನಗೇ ಅರ್ಥವಾಗಿರದ ಖುಷಿಯಿಂದ ನೋಶೀರನನ್ನು ಬರಮಾಡಿಕೊಂಡು ಡ್ರಾಯಿಂಗ್ ರೂಮಿಗೆ ಕರೆದೊಯ್ಯುತ್ತ ವಾಸೂವಿಗೆ ಇನ್ನೆರಡು ಕಪ್ಪು ಚಹ ತರಲಿಕ್ಕೆ ಹೇಳಿದ. “ಇಲ್ಲೇ ಬಾಲ್ಕನಿಯಲ್ಲಿ ಕೂಡ್ರೋಣ. ಇವತ್ತು ಸಮುದ್ರದ ನೀರು ಎಳೆಬಿಸಿಲಲ್ಲಿ ಎಷ್ಟೊಂದು ಭವ್ಯವಾಗಿದೆ ನೋಡು,” ಎನ್ನುತ್ತ ನೋಶೀರನಿಗೆ ಒಂದು ಡೆಕ್‌ಚೇರ್ ಕೊಡುತ್ತ ತಾನೂ ಒಂದರಲ್ಲಿ ಕುಳಿತುಕೊಂಡ. ರಾಮಚಂದ್ರನ ಈ ಉತ್ಸಾಹ, ಗೆಲುವು ನೋಶೀರನನ್ನು ಬಲವಾಗಿ ತಟ್ಟಿದುವು : “ನಿನ್ನೆ ಇಡೀ ರಾತ್ರಿ ನಿನ್ನೆ ಕೋಣೆಯಲ್ಲಿ ದೀಪ ಉರಿದಂತಿತ್ತು. ನಾನು ರಾತ್ರಿ ಎಚ್ಚರವಾಗಿ ಬಾತ್‌ರೂಮಿಗೆ ಹೋದ ಎರಡು ಸಲವೂ ಕಂಡೆ. ಅಂತೂ ಬಹಳ ದಿನಗಳ ನಂತರ ದೊಡ್ಡ ಕೃತಿಯೊಂದು ಹುಟ್ಟಿರಬೇಕು,” ಎಂದ ನೋಶೋರ್ ಸಂತೋಷ ವ್ಯಕ್ತಪಡಿಸಿದ. +“ನನ್ನ ಮಸ್ತೆರ್ಪಿ‌ಎಚೆ ನೋಶೀರ್, ನನ್ನ ಮಸ್ತೆರ್ಪಿ‌ಎಚೆ ! ನಿನಗೆ ಕನ್ನಡ ಅರ್ಥವಾಗುತ್ತಿದ್ದರೆ ಇಡೀ ಕಥೆಯನ್ನು ಓದಿ ತೋರಿಸುತ್ತಿದ್ದೆ. ರಾತ್ರಿಯ ಊಟ ಮುಗಿಸಿದ್ದೇ ಬರೆಯಲು ಕೂತವನು ಬೆಳಿಗ್ಗೆ ಎಷ್ಟು ಗಂಟೆಗೆ ಮಲಗಿದೆನೋ ನೆನಪಿಲ್ಲ ನೋಡು. ಹಿಂದೆಂದೂ ಇಡೀ ಕತೆಯನ್ನು ಹೀಗೆ ಒಂದೇ ಪಟ್ಟಿಗೆ ಕೂತು ಬರೆದು ಮುಗಿಸಿರಲಿಲ್ಲ. ಇದೊಂದು ತೀರ ಹೊಸ ಅನುಭವ. ನಿನ್ನೆ ಸಂಜೆ ಹೀಗೆ ಈ ಸಮುದ್ರವನ್ನು ನೋಡುತ್ತ ಕೂತಿದ್ದೆ. ನೀನಿದನ್ನು ನಂಬಬೇಕು ನೋಶೀರ್. ನೋಡುತ್ತ ಕೂತಿರುವಾಗ ತೆರೆಗಳು ಎದ್ದೆದ್ದು ಬೀಳುತ್ತಿದ್ದ ರೀತಿಗೆ ಮನಸ್ಸಿಗೆ ಒಂದು ಬಗೆಯ ಗುಂಗು ಹಿಡಿದ ಹಾಗೆ : ನಾನೇ ಸಮುದ್ರ ಆದ ಹಾಗೆ. ಆಳದಲ್ಲಿದ್ದದ್ದು ತಾನೇ ಎದ್ದು ಬಂದ ಹಾಗೆ…” +ವಾಸು ಚಹದ ಕಪ್ಪುಗಲನ್ನು ಕೈಗಿತ್ತಾಗ ರಾಮಚಂದ್ರನ ಮನಸ್ಸು ವಾಸ್ತವಕ್ಕೆ ಇಳಿದಿತ್ತು. ಇವನು ಎಂದಿನ ರಾಮಚಂದ್ರನಲ್ಲ ಎಂದನ್ನಿಸಿತು ನೋಶೀರನಿಗೆ, ಕೌತುಕ, ಕುತೂಹಲ ತುಂಬಿದ ದೃಷ್ಟಿಯಿಂದ ಅವನನ್ನು ನೋಡುತ್ತ, “ಕತೆ ಯಾತರ ಬಗ್ಗೆ ಇದೆ?” ಎಂದು ಕೇಳಿದ. +ಬಿಸಿಬಿಸಿ ಚಹದ ಗುಟುಕೊಂದನ್ನು ಸೀಪುತ್ತ, “ಉತ್ತರ ಕೊಡುವುದು ಕಷ್ಟ…ಮೊನ್ನೆ ನಮ್ಮ ಮನೆಗೆ ಬಂದ ಒಬ್ಬ ಮುದುಕಿ ಸತ್ತಳಲ್ಲ…ಅವಳ ಸಾವು, ಈ ಸಮುದ್ರ ಕೂಡಿ ಏನೋ ವಿಚಿತ್ರ ಪರಿಣಾಮ ಮಾಡಿರಬೇಕು ಕತೆ ಅವಳ ಬಗ್ಗೆಯೇ ಇದೆ. ಈ ಸಮುದ್ರದ ಬಗ್ಗೆಯೂ ಇದೆ. ಹಾಗೆ ನೋಡಿದರೆ ಅದು ನಾನು ಬರೆದದ್ದೇ ಅಲ್ಲವೆನಿಸುತ್ತದೆ….ವಿಚಿತ್ರ ನೋಡು : ನೀನು ಇಲ್ಲಿ ಬಂದಾಗ ಇಡೀ ಕತೆ ನಿಚ್ಚಳವಾಗಿ ನೆನಪಿದ್ದ ಭಾವನೆ. ನಿನಗದನ್ನು ಹೇಳಬೇಕೆಂದು ಆತುರನಾಗಿದ್ದೆ ಕೂಡ. ಆದರೆ ಈಗ ಅದೆಲ್ಲ ಮರೆತೇಹೋದಂತಿದೆ. ಆಶ್ಚರ್ಯ. ಈಗ ನೆನಪಿನಲ್ಲಿದ್ದುವು-ಎರಡೇ: ತೀರ ಸದ್ಯದ ಸಾತಕ್ಕನ ಸಾವು ಹಾಗೂ ಅನಾದಿಯಾದ ಈ ಸಮುದ್ರದ ನೀರು…” +ನೋಶೀರನಿಗೆ ಇದಾವುದೂ ಅರ್ಥವಾಗಲಿಲ್ಲ. ಎಲ್ಲ ಲೇಖಕರೇ ಹೀಗಿರಬೇಕೆಂದುಕೊಂಡು ಚಹ ಕುಡಿಯುತ್ತ ಮುಗುಳುನಕ್ಕ. ರಾಮಚಂದ್ರ ಅರಿವಿಲ್ಲದೇನೇ ತಾನೂ ಮುಗುಳುನಕ್ಕ. ಬಾಗಿಲ ಗಂಟೆ ಬಾರಿಸಿದ್ದು ಕೇಳಿ ವಾಸು ಹೋಗಿ ಕದ ತೆರೆದ. ನೋಶೀರನ ಮಗಳು ಟೆಲಿಫೋನ್ ಕರೆ ಬಂದಿದೆಯೆಂದು ತಿಳಿಸಲು ಬಂದಿದ್ದಳು. ನೋಶೀರ್ ಈ ಕರೆಯ ಹಾದಿಯನ್ನೇ ಕಾಯುತ್ತಿದ್ದವನ ಹಾಗೆ, “ಆಮೇಲೆ ಮತ್ತೆ ಬರುತ್ತೇನೆ. ಬರೆದದ್ದನ್ನು ಇನ್ನೊಮ್ಮೆ ಓದಿ ನೋಡು. ಎಂದಿನ ಹಾಗೇ ನಿನ್ನ ಕತೆಯನ್ನು ಕೇಳಲು ಉತ್ಸುಕನಾಗಿದ್ದೇನೆ” ಎಂದು ಅವನಿಂದ ಬೀಳ್ಕೊಂಡು ಮನೆಗೆ ನಡೆದ. +ನೋಶೀರ್ ಹೊರಟುಹೋದಮೇಲೆ ಕುರ್ಚಿಯಲ್ಲಿ ಕುಳಿತಲ್ಲೇ ಇದೀಗ, ಒಂದು ಕ್ಷಣದ ಮೊದಲಷ್ಟೇ ಅನ್ನಿಸುತ್ತಿದ್ದ ಗೆಲುವು ಮಾಯವಾಗಹತ್ತಿ ಅದರ ಜಾಗದಲ್ಲಿ ಅರ್ಥವಾಗದ, ನಿರಾಕಾರವಾದ ಕಾತರ ನೆಲೆಸಹತ್ತಿದೆ ಎಂಬಂತಹ ಭಾವನೆಯಿಂದ ಎದೆಯ ಗುಂಡಿಯಲ್ಲಿ ಒದ್ದೆತನ ಅನುಭವವಾಗಿ ಅಸ್ವಸ್ಥಗೊಂಡ, ನಿನ್ನೆ ರಾತ್ರಿ ಬರೆದದ್ದನ್ನು ಓದಿ ನೋಡಬೇಕೆಂದು ಕೋಣೆಗೆ ಹೋಗಿ ವಹಿಯನ್ನು ತೆರೆಯಲು ಹೋದರೆ ತನಗನ್ನಿಸುತ್ತಿದ್ದ ಭಯದ ಮೂಲಸ್ಥಾನವೇ ಅಲ್ಲಿತ್ತೆಂಬಂತೆ ವಹಿಗೆ ಕೈಹಚ್ಚುವ ಧೈರ್ಯವಾಗಲೇ ಇಲ್ಲ. ಕುರ್ಚಿಯಿಂದ ಎದ್ದು ಹೋಗಿ ಅಡ್ಡ ಮಾಡಿದ ಕದ ತೆರೆದು ‘ವಾಸೂ ಬಾ ಕತೆ ಓದಿ ತೋರಿಸುತ್ತೇನೆಂ’ದು, ಅವನನ್ನು ಕರೆದು ಮುಂದೆ ಕೂಡ್ರಿಸಿ ವಹಿಯನ್ನು ತೆರೆದ. ತೆರೆದರೆ ತನ್ನ ಕಣ್ಣುಗಳನ್ನು ತಾನೇ ನಂಬದಾದ : ನೂರಕ್ಕೂ ಮಿಕ್ಕಿದ ಪುಟಗಳಲ್ಲಿ ತೋಡಿಕೊಂಡದ್ದೆಲ್ಲ ಬರಿಯ ಗೀಚು ಗೀಚಾಗಿತ್ತೇ ಹೊರತು ಓದಲು ಶಕ್ಯವಾದ ಅಕ್ಷರಗಳಾಗಿ ಮೂಡಿರಲೇ ಇಲ್ಲ! ಆದ ಆಘಾತದಿಂದ ತತ್ತರಿಸಿ ಬೆವರಹತ್ತಿದ. ಮೊದಮೊದಲು ಉತ್ಸುಕತೆಯಿಂದ, ಆಮೇಲೆ ಒಂದು ಬಗೆಯ ಅಸಹನೆಯಿಂದ ಕೊನೆಗೆ ಇವೆಲ್ಲವುಗಳನ್ನೂ ಮೀರಿ ನಿಂತ ಕಾತರತೆಯಿಂದ ಅವಲೋಕಿಸುತ್ತಿದ್ದ ವಾಸು ಇವನಲ್ಲಿ ಆಗ ನಡೆಯುತ್ತಿದ್ದ ಅತಿಮಾನುಷ ಎಂಬಂತಹ ಪ್ರಕ್ರಿಯೆಗೆ ಸಂಪೂರ್ಣವಾಗಿ ಪ್ರತಿಸ್ಪಂದಿಯಾಗಿದ್ದವನ ಹಾಗೆ ಹೆದರಿ ಭಡಕ್ಕನೆ ಎದ್ದವನೇ ಚಕಾರ ಶಬ್ದವನ್ನೂ ಕೂಡ ಆಡದೇನೇ ಹೊರಗೆ ನಡದೇ ಬಿಟ್ಟ. ಆದ ಆಘಾತದಿಂದ ಚೇತರಿಸಿಕೊಳ್ಳಲು ರಾಮಚಂದ್ರನಿಗೆ ತುಂಬ ಸಮಯ ಹಿಡಿಯಿತು. ಆಮೇಲೆ ಒಂದೊಂದೇ ಪುಟವನ್ನು ತಿರುವು ಹಾಕುತ್ತ ಹೋದ ಹಾಗೆ ಯಾವುದೋ ಶಿಲಾಯುಗದ, ನಮಗೆ ಅರ್ಥವಾಗದ್ಗುಪ್ತಲಿಪಿಯಲ್ಲಿ ಬರೆದಂತಿದ್ದ ಗೀಚುಗೀಚಾದ ಬರೆವಣಿಗೆಯಲ್ಲಿ ಕೂಡ ಅಲ್ಲಿ ಇಲ್ಲಿ ಓದಲು ಸಾಧ್ಯವಾಗುವಂತಹ ಅರ್ಥವಾಗಬಲ್ಲಂತಹ ಕೆಲವು ಅಕ್ಷರಗಳಿದ್ದದ್ದು ಲಕ್ಷ್ಯಕ್ಕೆ ಬಂದು, ಗಾಬರಿ ತುಂಬಿದ ಆತುರದಲ್ಲಿ ಓದಿಕೊಂಡಾಗ ಪ್ರಜ್ಞೆಗೆ ದಕ್ಕಿದಿಷ್ಟು : +ಪುಟ ೧ : +“…ಇಂದು ನನ್ನ ಪಾರ್ವತಿಯ ‘ಶ್ರಾದ್ಧ’ ದಿನ, ಅವಳು ಸತ್ತು ಇಂದಿಗೆ ಇಪ್ಪತ್ತೈದು ವರ್ಷಗಳು…ನಂಬುವುದು ಕಷ್ಟ…” +ಪುಟ ೩ : +“…ಪಾರ್ವತಿಗೆ ಮೆಚ್ಚಿಗೆಯಾದೀತೆಂದು ಬಗೆದು ಮುಂಬಾದೇವಿಗೆ ಹೋಗಿ ಅವಳ ಹೆಸರಿನಲ್ಲಿ ಒಂದು ಪೂಜೆ ಸಲ್ಲಿಸಿ ಬಂದೆ…” +ಪುಟ ೧೦ : +“…ಮರೆಯಲಾಗದ ಈ ದುರಂತದಲ್ಲಿ ಆರು ಪಾತ್ರಗಳಿವೆ : ಅಪ್ಪ, ಅಮ್ಮ, ಪಾರ್ವತಿ, ನಾನು ಮತ್ತು ಒಂದು ಬಾವಿ ಹಾಗೂ ನಾನು ಕೊನೆಗೂ ಬರೆಯದೆ ಉಳಿದ ಒಂದು ಪತ್ರ…” +ಪುಟ ೩೦ : +“…ಒಂದು ತಿಂಗಳ ಹಿಂದೆ ಊರಿನಿಂದ ಕಾಶಿಯಾತ್ರೆಗೆ ಹೊರಟು ಸಾತಕ್ಕ ನಮ್ಮಲ್ಲಿಗೆ ಬಂದಿದ್ದಳು… ಇಂತಹ ಮುದಿ ವಯಸ್ಸಿನಲ್ಲೂ ಅವಳನ್ನು ಇಂತಹ ದೂರದ ಪ್ರವಾಸಕ್ಕೆ ಕಳುಹಿಸುವ ಧೈರ್ಯವನ್ನು ಹೇಗೆ ಮಾಡಿದರೋ…ಕಾಶಿಯಿಂದ ಹಿಂತಿರುಗಿ ಬರುವಾಗ ದಾರಿಯಲ್ಲಿ ನ್ಯೂಮೋನಿಯ ಆಗಿ ಕೊನೆಗೆ ಇಲ್ಲಿಯದೇ ಆಸ್ಪತ್ರೆಯೊಂದರಲ್ಲಿ ಸತ್ತಳು… ಧಗಧಗ ಉರಿಯುವ ಅವಳ ಚಿತೆಯನ್ನು ನೋಡುತ್ತಿದ್ದಾಗ… ಏಕೋ ನನ್ನನ್ನು ಗಾಢವಾಗಿ ತಟ್ಟುತ್ತಿದ್ದ ಪ್ರತಿಯೊಂದು ಸಾವಿಗೆ ನಾನೇ ಕಾರಣವೇನೋ ಎನ್ನುವಂತಹ ಭ್ರಮೆಯಾಗುತ್ತದೆ ಇತ್ತಿತ್ತ…” +ಪುಟ ೩೫ : +“…ಸತ್ತವಳು ಸಾತಕ್ಕನಲ್ಲವೆ? ಪಾರ್ನತಕ್ಕನೆಂದೇಕೆ ಹೇಳುತ್ತೀರಿ ಎಂದು ವೀಣಾ ಕೇಳಿದಾಗ ಎದೆ ಧಸ್ ಎಂದಿತು…” +ಪುಟ ೬೬ : +“…ನನ್ನ ಪ್ರೀತಿಯ ಪಾರ್ವತೀ… ನಿನ್ನನ್ನು ಪ್ರೀತಿಸಿ ಮದುವೆಯಾಗುತ್ತೇನೆಂದು ಭರವಸೆ ಕೊಟ್ಟ ಈ ಎಂಟೆದೆಯ ಬಂಟ ನಿನಗೆ ದಿನ ಹೋಗಿವೆ ಎಂದು ತಿಳಿದ ಕ್ಷಣವೇ…ಹೆದರಬೇಡ. ಹೆದರಬೇಡ… ಊರಿಗೆ ಹೋದದ್ದೇ ಅಪ್ಪ-ಅಮ್ಮಂದಿರನ್ನು ಒಪ್ಪಿಸಿ ನಿನಗೆ ಪತ್ರ ಬರೆಯುತ್ತೇನೆ ಇಲ್ಲ ಖುದ್ದು ನಾನೇ ಬಂದು ಕಾಣುತ್ತೇನೆ… ಕೈಮೇಲೆ ಕೈಯಿಟ್ಟು ಭಾಷೆ ಕೊಟ್ಟು ಊರಿಗೆ ಬಂದವನು…ಎಂಟೆಂಟು ದಿನಕ್ಕೆ ಒಂದಿಲ್ಲ ಒಂದು ನೆಪ ಮಾಡಿ ನಿನ್ನ ಊರಿಗೆ ಬರುತ್ತಿದ್ದವನು ಒಮ್ಮೊಂದೊಮ್ಮೆಲೇ ತನ್ನ ಪ್ರೇಮಸಂಚಾರವನ್ನು ನಿಲ್ಲಿಸಿ ಆಯತ ವೇಳೆಗೆ ಪುಸ್ತಕ ಓದುವ ಹುಚ್ಚು ಹಿಡಿಸಿಕೊಂಡು ಮೂಲೆಗುಂಪಾದೆನಲ್ಲವೇ…” +ಪುಟ ೮೦ : +“…ಮುದುಕನಾಗುತ್ತಿದ್ದೇನೆ ಪಾರ್ವತೀ…ತಲೆಯ ಕೂದಲು, ಉದ್ದವಾಗಿ ಬಿಟ್ಟ ಗಡ್ಡ ಮೀಸೆ ಎಲ್ಲ ಬೆಳ್ಳಗಾಗಹತ್ತಿವೆ…” +ಪುಟ ೮೨ : +“ಹಳ್ಳಿಯಲ್ಲೀಗ ಯಾರೂ ಇಲ್ಲ. ಅಪ್ಪ-ಅಮ್ಮ ಎಂದೋ ಸತ್ತಿದ್ದಾರೆ…ಹೊಲ ಮನೆ ಎಲ್ಲ ಮಾರಿ ಮುಂಬಯಿಯಲ್ಲಿಯ ಪ್ರಿಂಟಿಂಗ್ ಪ್ರೆಸ್ ಹಾಕಿದ್ದೇನೆ…ಹಣ ದಿನದಿನಕ್ಕೆ ಮರಿಹಾಕುತ್ತ ಬ್ಯಾಂಕಿನಲ್ಲಿ ಬೆಳೆಯಹತ್ತಿದೆ. ಹಣ ಹೇಗೆ ಖರ್ಚು ಮಾಡಬೇಕೆಂದು ಗೊತ್ತಾಗದೇ ಬಂಗಲೆಯಂತಹ ದೊಡ್ಡ ಮನೆ ಕಟ್ಟಿಸಿದ್ದೇನೆ…ಜಿಲ್ಲೆಯ ಕಾಲೇಜಿನಲ್ಲಿ ಪಾರ್ವತಿಯ ಹೆಸರಿನ ಹಾಲ್ ಕಟ್ಟಿಸಿದ್ದೇನೆ. ಇಲ್ಲಿಯ ಹಲವು ಮಹಿಳಾ ಸಂಸ್ಥೆಗಳಿಗೆ ಎಷ್ಟೆಲ್ಲ ಹಣ ದೇಣಿಗೆ ಕೊಟ್ಟಿದ್ದೇನೆ! ಪಾರ್ವತಿ ಯಾರೆಂಬುದು ಮಾತ್ರ ಯಾರಿಗೂ ಗೊತ್ತಿಲ್ಲ….” +ಪುಟ ೮೭ : +“…ಕತೆ ಬರೆಯುವುದನ್ನು ಎಂದೋ ನಿಲ್ಲಿಸಿದ್ದೇನೆ….ಬರೆದರೂ ಪ್ರಕಟಿಸುವುದನ್ನು….ಬರೆಯಲು ಕೂತರೆ ನನಗರಿವು ಇಲ್ಲದೇನೆ ಪಾರ್ವತಿಯ ಸಾವಿನ ನೆರಳೇ ಎದ್ದು ಬರುತ್ತದೆ…” +ಪುಟ ೮೯ : +“…ಬದುಕಿನ ಅರ್ಥ ಹುಡುಕುವುದೇ ತಪ್ಪೇನೋ, ಇದ್ದರೆ ತಾನೇ ಹುಡುಕುವುದು?….ಅದು ನಾವು ಕೊಟ್ಟದ್ದು ಹುಟ್ಟಿಸಿದ್ದು…ನೀನು ಬಂದದ್ದೇ ನನ್ನ ಬದುಕಿಗೆ ಅರ್ಥ ಬಂದಿತ್ತು…ನಿನ್ನೊಡನೆಯೇ ಹೋಗಿಬಿಟ್ಟಿದೆ…..ನಿನಗೆ ನನ್ನಿಂದಾದ ಘೋರ ಅನ್ಯಾಯವನ್ನು ಧೈರ್ಯದಿಂದ ಒಪ್ಪಿಕೊಳ್ಳುವ ಬದಲು ನ್ಯಾಯ-ಅನ್ಯಾಯ: ಒಳಿತು-ಕೆಡಕು: ಪಾಪ-ಪುಣ್ಯ ಇಂಥ ಬೇಧಗಳಿಗೆ ಅರ್ಥವೇ ಇಲ್ಲ ಎನ್ನುವಂತಿದೆ… ಅಂಥ ತಾರತಮ್ಯಗಳನ್ನು ನಿರಾಕರಿಸುವಂತಿದೆ ನಾನು ಇಂದು ಬದುಕುವ ರೀತಿ….ಇದೆಲ್ಲ ಅಪ್ಪ-ಅಮ್ಮರ ಗೊಡ್ಡು ಬ್ರಾಹ್ಮಣ ಮಡಿವಂತಿಕೆಯ ವಿರುದ್ಧ ನಾನೆಬ್ಬಿಸಿದ ಬಂಡಾಯವಾಗಿರಬಹುದೇ? ನನ್ನ ಸ್ವಭಾವಕ್ಕೆ ಮನೋಧರ್ಮಕ್ಕೆ ಒಗ್ಗುವಂತಹುದಲ್ಲವೆಂದು ಗೊತ್ತಿದ್ದೂ ಕ್ರಾಂತಿಕಾರಿ ರಾಜಕೀಯ ಪಕ್ಷವೊಂದನ್ನು ಸೇರಬೇಕೆಂದಿದ್ದೇನೆ…” +ಪುಟ ೯೫ : +“ಸ್ವತಃ ಕಾಮುಕನೂ ದುಷ್ಟನೂ ಆಗಿದ್ದ ಅಪ್ಪ ನನ್ನ-ನಿನ್ನ ಸಂಬಂಧದ ಸುಳಿವು ಹತ್ತಿದ್ದೇ ನಿನ್ ನಿನ್ ನಿನ್… ಸಿಗಿದು ತೋರಣ ಕಟ್ಟುತ್ತೇನೆಂದು ಜಮದಗ್ನಿಯ ಅವತಾರನಾಗಿದ್ದನಲ್ಲ…ನಾನು ಹುಟ್ಟಿದ್ದೆ ಅಪ್ಪನಿಗೆ ವಿರಕ್ತಿ ಬಂದು ತೀರ್ಥಯಾತ್ರೆಗೆ ಹೋರಟುಹೋಗಿದ್ದರೆ ಅಥವಾ ಶೂದ್ರಳಾದ ನಿನ್ನೊಡನೆ ಮದುವೆಯಾದರೆ ಬಾವಿಯಲ್ಲಿ ಹಾರಿ ಜೀವ ತೆಗೆದುಕೊಳ್ಳುತ್ತೇನೆಂದು ಚಂಡಿಯ ಅವತಾರವಾದ ಅಮ್ಮ ನಾನು ಹುಟ್ಟುವಾಗಲೇ ಸತ್ತುಹೋಗಿದ್ದರೆ…ಅಥವಾ ಜಾನಪದ ಕತೆಗಳಲ್ಲಿ ಕುದುರೆ ಸವಾರನಾಗಿ ಬರುವ ಪೊತ್ತೆ ಮೀಸೆಯ ಸರದಾರನ ಹಾಗೆ ನಾನೇ ಎದೆ ಗಟ್ಟಿಮಾಡಿ ನಿನಗೆ ಇಂತಿಂಥಲ್ಲಿ ಬಂದು ನಿಲ್ಲು ಎಂದು ಗುಪ್ತ ಸಂದೇಶ ಕಳಿಸಿ… ನಿನ್ನೊಡನೆ ಓಡಿಹೋಗಿದ್ದರೆ…. ಅಥವಾ…ನಿನ್ನ ಬಸಿರಿಗೆ ಕಾರಣನಾದ ನಾನೇ ಷಂಡನಾಗಿದ್ದರೆ… ದೇವರೇ… ನನ್ನ ಪಾಪದ ಪಿಂಡವನ್ನು ಗರ್ಭದಲ್ಲೇ ಹೊತ್ತು ಬಾವಿಯಲ್ಲಿ ಹಾರಿ ಪಾರ್ವತಿ ಜೀವ ತೆಗೆದುಕೊಂಡ ಕರಾಳ ಸತ್ಯಕ್ಕೆ ಕಣ್ಣು ಮುಚ್ಚಲು ಎಷ್ಟೊಂದು ಒಳದಾರಿಗಳು…” +ಪುಟ ೯೬ : +“… ನನ್ನ ಕೈಯಿಂದ ನಡೆದ ಈ ಶೂದ್ರಹತ್ಯೆಗೆ ಈಗ ಎಷ್ಟು ಕಾಲವಾಯಿತು? ಸಾವಿರ ವರ್ಷಗಳೇ? ಇಲ್ಲ, ಸಾವಿರ ನಿಮಿಷಗಳೇ?….ಕಾಲಪ್ರಜ್ಞೆಯೇ ಮಸುಕಾಗುತ್ತಿದೆ…” +ಪುಟ: … +ಮುಂದಿನ ಹತ್ತು ಹದಿನೈದು ಪುಟಗಳ ಮೇಲೂ ಓದಲು ಶಕ್ಯವಾಗುವಂತಹ ಕೆಲವು ಅಕ್ಷರಗಳಿದ್ದವು. ಆದರೆ ರಾಮಚಂದ್ರನಿಗೆ ಅವುಗಳನ್ನು ಓದುವುದಾಗಲಿಲ್ಲ : ಕಣ್ಣುಗಳು ಆಗಲೇ ಹನಿಗೂಡಹತ್ತಿ ದೃಷ್ಟಿ ಮಂಜಾಗಿತ್ತು. ವಹಿಯನ್ನು ಮುಚ್ಚಿಟ್ಟು ಅತ್ತುಬಿಡಬೇಕು ಎನ್ನುವ ಬಲವಾದ ಬಯಕೆಯನ್ನು ಪ್ರಯತ್ನಪೂರ್ವಕವಾಗಿ ಹತ್ತಿಕ್ಕಿ ಕೈಗಳೆರಡನ್ನೂ ಗಟ್ಟಿಯಾಗಿ ಎದೆಗವಚಿ ಕುಳಿತುಬಿಟ್ಟ : ಇಲ್ಲ ಇಲ್ಲ ಇಲ್ಲ ಪಾರ್ವತೀ, ನನ್ನ-ನಿನ್ನ ನಿಜವಾದ ಸಂಬಂಧವನ್ನು, ನನ್ನ ಕೈಯಿಂದಾದ ಕ್ರೂರ ಅಪರಾಧವನ್ನು ನೇರವಾದ, ಸ್ಪಷ್ಟವಾದ ಮಾತುಗಳಲ್ಲಿ ಎಲ್ಲರಿಗೂ ಜಾಹೀರುಪಡಿಸುವ ಎದೆಗಾರಿಕೆ ಇನ್ನೂ ಹುಟ್ಟಿಲ್ಲ ಈ ಹೇಡಿಗೆ…ಅಂತಹ ಎದೆಗಾರಿಕೆ ಹುಟ್ಟುವವರೆಗೂ ಇಂತಹ ಹೊಸ ಹೊಸ ಆಟಗಳನ್ನು ಹೂಡುತ್ತೇನೆ. ಆಟ ಆಡುವವರೆಗೂ ಇದು ಆಟ ಎನ್ನುವುದು ನನಗೇ ಗೊತ್ತಾಗದ ಹಾಗೆ, ನನ್ನನ್ನು ನಾನೇ ವಂಚಿಸುವ ಹಾಗೆ ಹೊಸ ಹೊಸ ಉಪಾಯಗಳನ್ನು ಹುಡುಕುತ್ತೇನೆ. ಕಾಲಕಾಲಕ್ಕೆ ನಿನ್ನ ಸಾವಿನ ದುಃಖವನ್ನು ಮೊತ್ತಮೊದಲು ಅನುಭವಿಸಿದಾಗಿನ ಉತ್ಕಟತೆಯಿಂದಲೇ ತಿರುತಿರುಗಿ ಅನುಭವಿಸುವ ಹಾಗೆ ಇಂತಹ ಹೊಸ ಹೊಸ ತಂತ್ರಗಳನ್ನು ಯೋಜಿಸುತ್ತೇನೆ. ಬೆನ್ನ ಹುರಿಯಲ್ಲೆ ಬೇರು ಬಿಟ್ಟ ಈ ಪಾಪಪ್ರಜ್ಞೆಯಿಂದ ನವೆಯುತ್ತ-ಕೆಂಪು ಜ್ವಾಲೆಯ ನಾಲಗೆಗಳಿಂದ ಕಾಲ ದಿಕ್ಕುಗಳನ್ನು ನೆಕ್ಕುತ್ತ ಉರಿದ ನಿನ್ನ ಚಿತೆಯಿಂದಲೇ ಎತ್ತಿಕೊಂಡಂತಿದ್ದ ಈ ಸುಡುವ ಕೆಂಡಗಳನ್ನು ತಲೆಯಲ್ಲಿ ಹೊತ್ತು ಮೂಲೆಮೂಲೆಗಳಲ್ಲಿ ತಂಪನ್ನರಸುತ್ತ ಅಲೆಯುತ್ತಿರುತ್ತೇನೆ… +ಸಾವಿರ ವರ್ಷಗಳ ಬಿಗುಮಾನವನ್ನು ಅರೆನಿಮಿಷದಲ್ಲಿ ಕಳಕೊಂಡವನ ಹಾಗೆ ರಾಮಚಂದ್ರ, ಹೊರಗಿನಿಂದ ವಾಸು ಕೇಳಬಹುದೆಂಬುದರ ಪರಿವೆ ಕೂಡ ಮಾಡದೇನೇ ಅಳಹತ್ತಿದ. ಕಿವಿಗಳನ್ನು ಇತ್ತಲೇ ನೆಟ್ಟು ಅಡುಗೆ ಮನೆಯಲ್ಲಿ ಕೂತ ವಾಸು ತನ್ನ ರಾಯರ ಅಳಲು ಎಂದಾದರೂ ಮುಗಿದೀತೆ ಎಂಬ ಆತಂಕದಿಂದ ಕಂಗಾಲಾದ. +***** +೧೯೭೭ +ಹಗಲು ಇನ್ನೂ ಪೂರ್ತಿ ಕಣ್ಣು ಬಿಡುವುದರೊಳಗೆ ಪುಟ್ಟಮ್ಮತ್ತೆಗೆ ಬೆಳಗಾಗುತ್ತದೆ. “ರಾತ್ರಿ ಒಂದ್ ಹುಂಡ್ ನಿದ್ದಿ ಬಿದ್ದಿದ್ರ್ ಹೇಳ್! ಯಾಚೀಗ್ ಮಗುಚಿರೂ ಊಹೂಂ. ನಾ ಯೇಳುವತಿಗೆ ಕೋಳಿ ಸಾ ಎದ್ದಿರ್‍ಲಿಲ್ಲೆ” – ಎನ್ನುವ ಪುಟ್ಟಮ್ಮತ್ತೆ ಐದಕ್ಕೆ […] +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ನೀವು ಇತ್ತೀಚೆಗೆ ಬಂದ ಜರ್ಮನ್ ಸಿನೆಮಾ . `ರನ್ ಲೋಲಾ ರನ್’ನೋಡಿದ್ದೀರಾ? ಇಲ್ಲವೆ? ಅದೆಂಥವರು ನೀವು? ಲೇಟೆಸ್ಟ್ ಆಗಿರುವುದನ್ನು `ಕ್ಯಾಚ್’ ಮಾಡುವ ಹವ್ಯಾಸ ನಿಮಗಿಲ್ಲವೆ?ಮತ್ತೇನು ಮಾಡುತ್ತಿದ್ದೀರಿ? ನೀವು ನೋಡಬೇಕು, ನೋಡಲೇಬೇಕು. ನೋಡಿ. ಬಿಡಬೇಡಿ. ತಪ್ಪದೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_170.txt b/Kannada Sahitya/article_170.txt new file mode 100644 index 0000000000000000000000000000000000000000..a685b65b8ee21a6f8a550fa8067f6792a92407b8 --- /dev/null +++ b/Kannada Sahitya/article_170.txt @@ -0,0 +1,234 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಕಪ್ಪು ಮೋಡ, ಬೆಳ್ಳಿ ಅಂಚು +ಮುಂಗೈಯಲ್ಲಿ ಸಣ್ಣನೆಯ ನೋವು, ಒಳಗೆ ಸೂಜಿ ಸುಳಿದಾಡಿ ಹೊರಗೆಳೆದಂತೆ. ಮೆಲ್ಲನೆ ಕಣ್ಣು ತೆರೆದೆ. ಶೀಲಾ ಮಂಚದ ಕಂಬಿಗೆ ನೇತು ಹಾಕಿದ್ದ ಗ್ಲೂಕೋಸ್ ಡ್ರಿಪ್ಸ್ ಬಿಚ್ಚಿ ಕೆಳಗಿಡುತ್ತಾ ಕೇಳಿದಳು- +‘ಈಗ ಹೇಗಿದೆ?’ +ಪ್ರಯಾಸಪಟ್ಟು ಸಣ್ಣ ನಗೆ ಎಳೆದು- +‘ಓ.ಕೆ. ಹುಷಾರಾಗಿದ್ದೀನಿ, ನೀ ಇನ್ನು ಹೋಗು. ನಿಮ್ಮನೆಯೊರು ಕಾಯ್ತಾ ಇರ್‍ತಾರೆ. ಪುಟ್ಟ ಬೇರೆ ನಿಮ್ಮನೇಲಿ….’ +‘ಹೆಚ್ಚು ಮಾತಾಡ್‌ಬೇಡ. ನಾನಿವತ್ತು ಇಲ್ಲೇ ಮಲಗ್ತೀನಿ. ಅವರು ಮಕ್ಕಳನ್ನ ನೋಡಿಕೊಳ್ತಾರೆ.’ +‘ಬೇಡ ಶೀಲಾ ಪರವಾಗಿಲ್ಲ…. ನಾ ಈಗ ಸರಿಯಾಗಿದ್ದೀನಿ….’ ನನ್ನ ಬಾಯ ಮೇಲೆ ಬೆರಳಿಟ್ಟು ‘ಹುಷ್’ ಎಂದು ಗದರಿದಳು. ನಾ ಮೆಲ್ಲನೆ ಹೇಳಿದೆ- +‘ಹೆದರಬೇಡ, ನಾ ಮತ್ತೆ ನಿದ್ದೆ ಗುಳಿಗೆ ತೆಗೆದುಕೊಳ್ಳೋಲ್ಲ….’ +ಮೋಸಂಬಿ ರಸ ಹಿಂಡುತ್ತಿದ್ದ ಶೀಲಾ ತಟ್ಟನೆ ತಲೆ ಎತ್ತಿದಳು. +‘ನೀ ಮತ್ತೆ ತೆಗೆದುಕೊಳ್ಳಬೇಕೆಂದಿದ್ರೆ ಧಾರಾಳವಾಗಿ ತಗೋ. ಈ ಬಾರಿ ಉಳಿಸೋಕೆ ನಾ ಬರೋಲ್ಲ ಅಷ್ಟೆ….’ +ತಮಾಷೆಗೇನೋ ಎಂದು ನೋಡಿದೆ. ಅವಳ ಮುಖಭಾವ ಕಟುವಾಗಿತ್ತು. ಮರುಕ್ಷಣ ತಿಳಿಯಾದಳು. +‘ಬದುಕಿನ ಎಲ್ಲಾ ಸಮಸ್ಯೆಗೂ ಸಾವೇ ಉತ್ತರ ಅನ್ನೋ ಹಾಗಿದ್ರೆ ಈ ಜಗತ್ತಿನಲ್ಲಿ ಒಂದು ನರಪಿಳ್ಳೆಯೂ ಉಳೀತಿರಲಿಲ್ಲ ಕಣೇ….’ +ನಾನು ಮೆಲ್ಲನೆ ನಕ್ಕೆ +‘ಅರೆ ಹುಡುಗಿ, ನಾನು ಎಲ್ಲಿ ಸಾಯಲು ಹೋಗಿದ್ದೆ. ನನ್ನ ಸಾವಿನ ಯತ್ನ ಕೂಡ, ಬದುಕೋ ಹತಾಶ ಪ್ರಯತ್ನ ಆಗಿತ್ತು. ರವೀನ ಹೇಗಾದರೂ ಸರಿ ಉಳಿಸಿಕೊಳ್ಳೋ ಕಟ್ಟಕಡೆಯ ವಿಪರೀತ ಪ್ರಯಾಸವಾಗಿತ್ತು.’ +‘ಅವನ ಉಳಿವು ಅಳಿವಿಗೂ, ನಿನ್ನ ಉಳಿವು ಅಳಿವಿಗೂ ಯಾಕೆ ಕೊಂಡಿ ಹಾಕ್ತೀಯಾ….’ ಲೋಟ ನನ್ನ ಕೈಗಿಡುತ್ತಾ ಒರಟಾಗಿ ಹೇಳಿದಳು. ‘ಅವನಿಲ್ಲದೆ ಬದುಕಿಲ್ಲ ಅಂತಲೆ…? ಅದಕ್ಕೇನಂತಾರೆ, ಅಮೋಘ ಪ್ರೇಮ….’ ಮತ್ತೆ ಕುಟಕಿದಳು. ‘ಓಹ್ ಕಮಾನ್ ಮಧು. ಜೀವನದ ಸರ್ವೇಸಾಮಾನ್ಯ ಸಂಬಂಧಗಳಿಗೆಲ್ಲ ಬಹು ದೊಡ್ಡ ಅರ್ಥ ಕಲ್ಪಿಸಬೇಡ. ಮೂಲಭೂತ ಅವಲಂಬನೆಗೆ, ಮೇಲೆ ನೀನು ಎಷ್ಟೇ ಕೋಟ್ ಪ್ರೀತಿ ಪ್ರೇಮದ ಡಿಸ್‌ಟೆಂಪರ್ ಹೊಡೆದರೂ….’ ಜೋರಾಗಿ ನಗತೊಡಗಿದಳು. +ನಾನು ಗಂಭೀರವಾಗಿ ಹೇಳಲು ಹೊರಟೆ- +‘ರವಿ ಇಲ್ಲದೆ ನಾನು ಯಾಕೆ ಬದುಕಬೇಕು ಅನ್ನಿಸುತ್ತೆ….’ +ಶೀಲಾ ಕುರ್ಚಿ ಎಳಕೊಂಡು, ನನ್ನೆದುರು ಬಲು ಹತ್ತಿರದಲ್ಲಿ ಕುಳಿತು ಕಣ್ಣಲ್ಲಿ ಕಣ್ಣಿಟ್ಟು ಕೇಳಿದಳು-‘ಯಾಕೆ ರವಿ ಇಲ್ಲದೆ ಬದುಕುವುದು ಪ್ರಯಾಸ ಅಂತಲೆ? ಬದುಕುವುದನ್ನು ಎಂದಾದರೂ ನೀನು ಕಲಿಯಲೇಬೇಕು ಮರಿ, ಈಗ ಮಲಗು….’ ಬಾಗಿಲು ಮುಂದೆ ಮಾಡಿ ಹೊರಗೆ ಹೊರಟು ಹೋದಳು. +ಬಹಳ ಹೊತ್ತು ನಿದ್ದೆ ಬರಲಿಲ್ಲ. ನೋವು, ಆಯಾಸ ಸ್ವಲ್ಪ ತಗ್ಗಿತ್ತು. ವಾರದ ಹಿಂದೆ ತಟ್ಟನೆ ಪ್ರಾರಂಭವಾದ ಈ ಹಾಳು ಜ್ವರ ಈಗಷ್ಟೇ ಬಿಟ್ಟಿತ್ತು. +ಬದುಕು ಅನಿರೀಕ್ಷಿತಗಳನ್ನೇ ಹೊತ್ತು ತರುತ್ತದೆ, ಅದೂ ತಯಾರಿಲ್ಲದವರ ಹೆಗಲಿಗೆ? ಹತ್ತು ವರ್ಷಗಳ ವೈವಾಹಿಕ ಬದುಕಿನ ಒಂದು ಸಂಜೆ- +ನನ್ನವನಾದ ರವಿ ನನ್ನೆದುರು ಚಡಪಡಿಸುತ್ತಾ ಕುಳಿತಿದ್ದ. ಅವ ಸುಮಾರು ಎರಡು ಗಂಟೆ ಕೊರೆದ ಸುದೀರ್ಘ ಕತೆಯ ಒಟ್ಟು ಸಾರಾಂಶ ಇದು- +‘ನಮ್ಮ ನಡುವೆ ಏನೂ ಉಳಿದಿಲ್ಲ. ನಿಧಾನವಾಗಿ ನಿರ್ಣಯಕ್ಕೆ ಬಾ. ಆದರೆ ಈ ವಿಚ್ಛೇದನ ಅನಿವಾರ್ಯ. ನನ್ನ ಮನಸ್ಸು ಬೇರೆಲ್ಲಿಗೋ ಹಾರಿದೆ. ನಾನು ಸ್ವತಂತ್ರವಾಗ ಬಯಸುತ್ತೇನೆ.’ +ಎಷ್ಟು ಸಲೀಸಾಗಿ ಒಪ್ಪಿಸಿದ್ದ. ನಾ ಬೆಕ್ಕಸಬೆರಗಾಗಿ ಕೇಳಿದೆಲ್ಲವನ್ನೂ ನಂಬಲಾರದೆ ಕಣ್ಣರಳಿಸಿ ಕುಳಿತುಬಿಟ್ಟಿದ್ದೆ. ನಮ್ಮ ಅತ್ಯಂತ ಆಪ್ತರಲ್ಲೂ, ಆತ್ಮೀಯರಲ್ಲೂ…. ನಮ್ಮ ಗಂಡಂದಿರಲ್ಲೂ ನಾವು ಕಾಣದ ಎಷ್ಟೊಂದು ಮುಖಗಳಿವೆ? +‘ನಿನ್ನ-ಪುಟ್ಟಿಯ ಖರ್ಚು ವೆಚ್ಚ ಆಮೇಲೂ ನಾ ವಹಿಸ್ತೀನಿ. ನೀ ಅದರ ಚಿಂತೆ ಮಾಡಬೇಡ’ ಈ ಕ್ಷಣದ ಅವನ ಆಶ್ವಾಸನೆಗಳಿಗೆ ನನ್ನ ಭವಿಷ್ಯವನ್ನೆಲ್ಲ ತೂಗು ಹಾಕಲು ಕರೆಕೊಟ್ಟ. ಅವನ ಸ್ವಾತಂತ್ರ್ಯಕ್ಕೆ ಅವ ತಿಂಗಳಿಗೆ ಸಾವಿರದೈನೂರು ದಂಡ ತೆರಲು ನಿದ್ಧನಿದ್ದ! +ನಾನು ಅತ್ತೆ, ಕೂಗಾಡಿದೆ. ಯಾವುದಕ್ಕೂ ಅವ ಪ್ರತಿಕ್ರಿಯಿಸದೆ ತನ್ನ ನಿರ್ಧಾರವನ್ನೇ ಮುಂದಿಟ್ಟು ಕಲ್ಲು ದೇವರಾದ. ಒಂದು ಕ್ಷಣ… ‘ನನ್ನ ಮನೆ, ನನ್ನ ಗಂಡ, ನನ್ನ ಮಗು, ನಾಲ್ಕಂಕಿಯ ಸಂಬಳ….’ ಎಂಬ ಅತ್ಯಂತ ಸುಭದ್ರ ಸಂಬಂಧದಲ್ಲಿ ಕಾಲುಚಾಚಿ ಆರಾಮ ಕುಳಿತ ನನ್ನನ್ನು, ಕೂತ ಜಮಖಾನದಿಂದಲೇ ತೆಗೆದೊಗೆದಂತಾಗಿತ್ತು. +ತಟ್ಟನೆ ಆಗ ತೋರಿದ್ದು ಒಂದೇ ದಾರಿ, ನಿದ್ದೆ ಗುಳಿಗೆ ನುಂಗಿದೆ. ಎದ್ದಾಗ ಆಸ್ಪತ್ರೆಯಲ್ಲಿದ್ದೆ. ರವಿ ತಲೆ ಕೆಳಗೆ ಹಾಕಿ ಚಿಂತಾಕ್ರಾಂತನಾಗಿ ಕುಳಿತಿದ್ದ. ನನಗೆ ಗೊತ್ತಿತ್ತು ನಾನು ಸಾಯುವುದಿಲ್ಲ ಎಂದು. ಹೆಚ್ಚು ಗುಳಿಗೆ ತೆಗೆದುಕೊಂಡಿರಲಿಲ್ಲ. ಬದುಕಿನ ಸೆರಗನ್ನು ಭದ್ರ ಹಿಡಿದುಕೊಂಡೇ ಸಾವಿನ ಪ್ರಪಾತಕ್ಕೆ ಧುಮುಕಿದ್ದೆ. +ರವಿ ಉಳಿದ-ಮನೆಯಲ್ಲಿ. ಮತ್ತೆ ವಿಚ್ಛೇದನದ ಮಾತು ಎತ್ತಲಿಲ್ಲ. ಬೆಳಿಗ್ಗೆ ಎಂಟಕ್ಕೆ ಮನೆ ಬಿಡುವ, ರಾತ್ರಿ ಹತ್ತಕ್ಕೆ ಬರುವ ‘ಊಟ’ ಎಂದರೆ ‘ನನ್ನದಾಗಿದೆ-’ ಎಂಬ ಮೊಟಕು ಉತ್ತರ. ಒಂದೇ ಮನೆಯಲ್ಲಿ ಒಂದೇ ಹಾಸಿಗೆಯಲ್ಲಿ ಶುದ್ಧ ಅಪರಿಚಿತರು. +ಎಲ್ಲಾ ಬದಲಾಗಿತ್ತು. +ಮಾತು ಮಾತಿಗೆ ಸಿಡುಕುವುದು, ರೇಗುವುದು ನಿಂತಿತ್ತು. ನನ್ನೆಲ್ಲ ಅಳು-ಕೂಗಾಟಕ್ಕೆ ಅವನ ಮೌನ ನಿರ್ಲಕ್ಷ್ಯವಷ್ಟೇ ಉತ್ತರವಾಗಿತ್ತು. ನನ್ನ ಅಸ್ತಿತ್ವವೇ ಇಲ್ಲವೆಂಬಂತೆ ವರ್ತಿಸುವ ಅವನಿಗೆ ನನ್ನ ಅವಶ್ಯಕತೆಯೇ ಇಲ್ಲದೆ, ನಾನು ಮಾತ್ರ ಅವನನ್ನು ಬಿಡದೆ ತಬ್ಬಿ ಹಿಡಿದ ಸತ್ಯ ಹೊಳೆಯಲು ಹೆಚ್ಚು ಸಮಯ ಬೇಕಾಗಲಿಲ್ಲ. +ಒಂದು ಮುಂಜಾನೆ ತನ್ನ ಬಟ್ಟೆಗಳನ್ನು ಸೂಟ್‌ಕೇಸಿಗೆ ತುರುಕಿ ನಡೆದವ ಮತ್ತೆ ಬರಲಿಲ್ಲ. ಕಾನೂನಿಗಲ್ಲದಿದ್ದರೂ, ಸಮಾಜದ ಕಣ್ಣಿಗೆ ಒಂದು ವಿವಾಹವಾಗಿದ್ದ. ಅವಳು ಎರಡೆಳೆ ಕರಿಮಣಿ ಸರದ ದಪ್ಪ ತಾಳಿಯನ್ನು ಎದೆಯ ಮೇಲೆ ಹೆಮ್ಮೆಯಿಂದ ಹಾಕಿಕೊಂಡು ಜಾಹಿರಾತು ಮಾಡಿದಳು. ತನ್ನ ಹೆಸರಿನ ಮುಂದಕ್ಕೆ ‘ರವಿ ಹುಲಸೂರ್’ ಎಂದು ಇವನ ಹೆಸರು, ಊರುಗಳನ್ನು ಅಂಟಿಸಿಕೊಂಡಳು. ನನಗಿಂತ ಹೆಚ್ಚು ಅಭದ್ರತೆಗಳು ಅವಳನ್ನು ಕಾಡಿದಂತಿತ್ತು! +ನಕ್ಕು ನಗಿಸಿದ ಇನಿಯ, ಇರಿದು ಕರಗದೆ ನಡೆದಿದ್ದ. +ವರ್ಷಗಳು ನೀರೆರೆದು, ಕ್ಷಣದಲ್ಲಿ ಬುಡ ಕಡಿದಿದ್ದ. +ಹೆಚ್ಚು ಕಾಲ ಬೇಕಾಗಿರಲಿಲ್ಲ. ಈ ವ್ಯರ್ಥ ಸಂಬಂಧ ಜಗ್ಗಿ ಹಿಡಿಯುವುದರಲ್ಲಿ ಅರ್ಥವಿರಲಿಲ್ಲ. ಅಂದು ಸಂಜೆ ಸಹಿ ಹಾಕಿದೆ. ಅವನ ಹಿಡಿದೆಳೆದ ಸೂತ್ರ ಕತ್ತರಿಸಿ, ಹಾರಲು ಬಿಟ್ಟೆ. ಹೋಗಲಿ, ಅವನ ಮನ ಬಂದತ್ತ. +‘ಏನು ಮಾಡ್ತೀಯ ಮಧು, ಯೋಚಿಸಿದ್ಯಾ ಏನಾದ್ರೂ….?’ ಶೀಲಾಳ ಪ್ರಶ್ನೆಗೆ ಕೇಳಿಸದವಳಂತೆ ಕಿಟಕಿ ಆಚೆ ನೋಡುತ್ತಾ ನಿಂತೇ ಇದ್ದೆ. +‘ಮಧೂ….’ ಗಟ್ಟಿಯಾಗಿ ಕೂಗಿದಳು. ‘ಅವರಿವರ ಅನುಕಂಪದ ಚಟ್ಟ ಏರಬೇಡ. ಆ ಅನುಕಂಪ ನಿನ್ನ ಒಂದು ಹೊತ್ತಿನ ಊಟಕ್ಕೂ ಒದಗದು….’ ಗದರಿಸುವಂತೆ ಹೇಳಿದಳು. +“ಈ ಶೋಕ ಎಷ್ಟು ದಿನ? ಸತ್ತವರಿಗೂ ಹದಿಮೂರನೇ ದಿನಕ್ಕೆ ತಿಥಿ ಮಾಡಿ ಮುಗಿಸ್ತಾರೆ’- ಕಟುವಾಗಿತ್ತು ಅವಳ ವಾಕ್ಯ. +‘ಮತ್ತೆ ಆತ್ಮಹತ್ಯೆ….? ಕೆಣಕಿ ಪ್ರಶ್ನಿಸಿದಳು. +‘ಇಲ್ಲಾ ನಾ ಖಂಡಿತಾ ಸಾಯೋಲ್ಲ….’ ದೃಢವಾಗಿ ಹೇಳಿದೆ. ‘ಪುಟ್ಟಿಗಾಗಿ ನಾನು ಬದುಕಬೇಕೆನಿಸಿದೆ…’ ಬದುಕಲು ನಾ ಕೆದಕಿದ ಹೊಸ ಹೊಸ ಕಾರಣಗಳಿಂದ ಶೀಲಾ ಸ್ವಲ್ಪವೂ ಕದಲಲಿಲ್ಲ. ಜೋರಾಗಿ ನಕ್ಕಳು. +‘ಬದುಕಲು ನೆನಪುಗಳನ್ನು ಹುಡುಕಬೇಡವೇ ಮಧು, ನಿನಗಾಗಿ, ನಿನ್ನ ಬದುಕಿಗಾಗಿ, ಈ ಜೀವನದ ಸೋಲುಗಳನ್ನೆಲ್ಲ ಸವಾಲುಗಳನ್ನಾಗಿ ಉತ್ತರಿಸುವ ಛಲಕ್ಕಾಗಿ ಪಂಥಾಹ್ವಾನಕ್ಕಾಗಿ ಬದುಕು. ನಾಳೆ ಪುಟ್ಟಿ ಬೆಳೆದು ದೂರಾಗಬಹುದು. ಋಣಭಾರವನ್ನು ಅವಳ ಹೆಗಲಿಗೆ ಹೇರಿ ಹಿಡಿದಿಡಬೇಡ. ಹಾರಲು ಬಿಡು ಹಕ್ಕಿಯಂತೆ. ಮತ್ತೆ ಗಾಳಿಪಟದಂತೆ ಜಗ್ಗಿ ಸೂತ್ರ ಎಳೆಯಬೇಡ. ನೀ ನಿಲ್ಲಬಲ್ಲೆ ನಿನ್ನದೇ ಪಾದಗಳ ಬಲದ ಮೇಲೆ…’ +ಅವಳು ಹೇಳಿದಷ್ಟು ಸುಲಭವಿರಲಿಲ್ಲ ಬದುಕುವುದು, ಮತ್ತೆ ಪ್ರಾರಂಭಿಸುವುದು. ಮನಸ್ಸಿಗೆ ಶಾಂತಿ ಇರಲಿಲ್ಲ. ಕುದಿವ ಆಕ್ರೋಶ, ಅವನತ್ತ ವಿಪರೀತ ನಿಷ್ಠೆಯಿಂದ ಬಾಳಿದ ಬದುಕು, ನಿಷ್ಠೆಯನ್ನು ಹಕ್ಕಿನಂತೆ ನಿರೀಕ್ಷಿಸಿತ್ತು. ನಾನೆಂದೂ ಮೈಯಿರಲಿ, ಮನಸ್ಸಿನಲ್ಲೂ ‘ಜಾರಿರಲಿಲ್ಲ’ ಅದು ನನ್ನ ದೌರ್ಬಲ್ಯವೋ, ಹೆಚ್ಚಳಿಕೆಯೋ, ಗೊತ್ತಿರಲಿಲ್ಲ. ಅದು ನನ್ನ ಸೋಲೆನ್ನಬೇಕೆ, ಶ್ರೇಷ್ಠತೆ ಎನ್ನಲೇ ತಿಳಿದಿರಲಿಲ್ಲ. ನನ್ನ ಮನೆ, ಮನೆಯಂಗಳದಾಚೆ ನಾ ಕಂಡ ಬದುಕೆಷ್ಟಿತ್ತು? ಒಮ್ಮೆ, ಒಮ್ಮೆ ಮಾತ್ರ ರವಿಯ ಸ್ನೇಹಿತನೊಬ್ಬ ಬಂದು ಉಳಿದ ನಾಲ್ಕು ದಿನ-ಬೆಳಿಗ್ಗೆ ಎದ್ದೊಡನೆ ನೈಟಿ ತೆಗೆದು, ಜಡೆ ಹೆಣೆದು, ನಾಲ್ಕು ಮಾತು ಹೆಚ್ಚೇ ಆಡಿದ್ದೆ-ರವಿಯ ಕಣ್ಣು ಕೆಂಪಾಗಿತ್ತು. ಒಂದಿಷ್ಟು ಹಗರಣವೇ ಆದ ನೆನಪಿದೆ. ನಾ ಮತ್ತೆ ಅಡಿಗೆ ಮನೆ ಸೇರಿದೆ. ‘ಗಂಡನ ಇಚ್ಛೆಯನರಿವ ಸತಿ’ಯಾದೆ. ಗಂಡನ ಅಭಿಪ್ರಾಯಕ್ಕೆ ಪೂರಕವಾಗಿ ನನ್ನ ನಡವಳಿಕೆಯ ತಿದ್ದಿಕೊಂಡೆ. ನಿಜ, ಇದನ್ನು ಪೂರಾ ಅವ ಹೇರಿದ್ದಲ್ಲ. ನಾ ಸ್ಥಾಪಿಸಿದೆ ಬಿಟ್ಟಿದ್ದೆ ನನ್ನ ವ್ಯಕ್ತಿತ್ವವನ್ನು. ವಾದಿಸುವ, ಹೋರಾಡುವ ಆ ಶ್ರಮವೇಕೆ ಎಂಬ ಆಲಸ್ಯದಲ್ಲಿ. ಆದರೂ ಅನಿಸಿದ್ದೇನೊ ನಿಜ- +ನಾವು ರೇಣುಕೆಯರು +ನಿಂತ ನೀರಲ್ಲಿ +ಪುರುಷನ ನೆರಳು ಕಂಡೇ +ಅಪವಿತ್ರರಾದವರು +ಪರಶುರಾಮನ ಕೊಡಲಿ ಏಟಿಗೆ +ಸತ್ತವರು, ಮತ್ತೆ ಹುಟ್ಟಿದವರು. +ಯುಗಗಳ ನಂತರವೂ +ಕಾದಿದೆ ಕೊರಳ ಮೇಲೆ +ಪುರುಷ-ರಾಮರ ಕೊಡಲಿಗಳು +ಅವನಿಗೆಲ್ಲಿತ್ತು ಆ ಮಿತಿ, ಆ ಸೀಮೆ-ಸರಹದ್ದು. ಸೀತೆಯ ಪಾದಕ್ಕೇ ನಿಂತಿತ್ತಲ್ಲ ಲಕ್ಷ್ಮಣ ರೇಖೆ. ತ್ರೇತಾಯುಗದ ರಾವಣರಿರಲಿಲ್ಲ. ಆದರೂ ಹಾಕಿದ ಗೆರೆಯ ದಾಟಲು ಎಂಥಾ ಅಳುಕು. ಅವ ಲಗ್ಗೆ ಇಟ್ಟಿದ್ದ. ವಯಸ್ಸು ಮರೆತು ಹೊಸ ಪ್ರೀತಿ-ಸಾಹಸಕ್ಕೆ, ಮತ್ತೆ ಪ್ರೀತಿಸುವ ಹಕ್ಕನ್ನು ಕಾನೂನು ಕೂಡಾ ಕಿತ್ತುಕೊಳ್ಳಲಾರದುನನ್ನ ವಯಸ್ಸು ಮಾತ್ರ ಹಣೆಯಲ್ಲಿ ನವಿರಾದ ಗೆರೆಗಳಾಗಿತ್ತು. ನನ್ನ ವಯಸ್ಸು ಹಿಡಿ ಮಾತ್ರ ಉಳಿದ ಕರುಳ ಗುಚ್ಛವಾಗಿತ್ತು. ನನ್ನ ವಯಸ್ಸು ದಶಕಗಳ ಕುಪ್ಪಳಿಸಿ ಖಾಲಿಯಾಗಿತ್ತು. ಅದರಾಚೆ ಏನೂ ಆಗಲಿಲ್ಲ. ಬದುಕು ಮಾತ್ರ ಉಳಿದುಬಿಟ್ಟಿತ್ತು. ಸೀಮಾರೇಖೆಯ ಹೊರ ಸುಳಿಯದೆಯೆ. ನಾನೇ ಒಡ್ಡಿಕೊಂಡ ಅವಲಂಬನೆಯ ಮಯಣದರಮನೆ ಕರಗುತ್ತಿತ್ತು. +ಕಿಡಿಗೇಡಿ ಪ್ರಶ್ನೆಯೊಂದು ಕಣ್ಣು ಮಿಟುಕಿಸಿತು. +ಶೋಷಿತರು ಯಾರು? ನಾನೇ, ಅವಳೇ? +ಯೌವನವನ್ನೆಲ್ಲ ಅವನಿಗೆ ಅರ್ಪಿಸಿ ಖಾಲಿಯಾದ ನಾನೇ? ಇಲ್ಲ ಇಪ್ಪತ್ತರ ಕುಡಿ ಯೌವನವನ್ನು ಅವನಿಗೆ ಅರ್ಪಿಸ ಹೊರಟ ಅವಳೆ? +ಎಂಥಾ ಹುಚ್ಚಿಯರು! ಅರೆ-ಗಂಡನಿಗೂ ಪೂರ್ಣ ‘ಸತಿ’ಯಾದವರು! +ರವಿಯ ಬಗ್ಗೆ ಚಿಂತಿಸಿದಷ್ಟೂ ನನ್ನ ಸಿಟ್ಟು ಆಕ್ರೋಶ, ಮಿತಿಮೀರುತ್ತಿತ್ತು. ಒಮ್ಮೆ ಪ್ರಜ್ಞೆ ತಪ್ಪಿ ಬಿದ್ದಾಗ, ಶೀಲಾ ಗಟ್ಟಿಯಾಗಿ ರೇಗಿದಳು- +‘ನಿನ್ನ ಬಿ.ಪಿ. ಏರ್‍ತಾ ಇದೆ…. ಗಂಡನ ಜೊತೆ ಆರೋಗ್ಯಾನೂ ಕಳಕೊಳ್ಳೋ ಪಣ ತೊಟ್ಟಿದ್ದೀಯಾ?’ ಮತ್ತೆ ಮೆತ್ತಗಾದರೂ, ಅಷ್ಟೇ ದೃಢಸ್ವರದಲ್ಲಿ- +‘ನೋಡು, ರವಿ ಬಗ್ಗೆ ನೀನು ಎಷ್ಟೇ ಯೋಚಿಸಿದರೂ, ಕೋಪಗೊಂಡರೂ ಅವನಿಗದು ಯಾವ ರೀತಿಯಲ್ಲೂ ತಟ್ಟದು. ನೀನು ಪ್ರಯತ್ನಪೂರ್ವಕವಾಗಿ ಅವನತ್ತ ಚಿಂತಿಸೋದ ನಿಲ್ಲಿಸಬೇಕು’ ವ್ಯೆದ್ಯಳ ಗತ್ತಿನಲ್ಲಿ ಆಜ್ಞಾಪಿಸಿದಳು. +“ವಿವಾಹದ ಪವಿತ್ರ ಬಂಧನಾನ….’ ನಾನು ಇನ್ನೂ ರಗಳೆ ಪ್ರಾರಂಭಿಸುವ ಮೊದಲೇ ಕತ್ತರಿಸಿ- +‘ಅವನನ್ನು ಬಿಡು, ಅವನ ಬದುಕಿನ, ಅವನ ಗತಿಗೆ, ಇದು ಯಾವ ಕಾಲ ವಿವಾಹ-ದ್ರೋಹ ಎಂದೆಲ್ಲ ನಡೆಯದ ನಾಣ್ಯಗಳನ್ನು ಹಿಡಿದು ತಿರುಗಾಡಲು. ಒಂದು ತಾಳಿಯಿಂದ, ಒಂದು ಕಾನೂನಿನಿಂದ ಮನುಷ್ಯ ಸಂಬಂಧಗಳನ್ನು ಕಟ್ಟಿಡಲು ಸಾಧ್ಯವೇ? ಅವನಿಗೆ ನೀನು ಬೇಕಿಲ್ಲದ ಮೇಲೆ, ನಿನಗೇಕೆ ಅವನು ಅಷ್ಟು ಬೇಕು?’ +ಏಕೆ ಬೇಕು….? ಎದೆಗೆ ಗುದ್ದಿದ ಪ್ರಶ್ನೆ. +‘ಅವನನ್ನು ಮರೆಯೋದು, ಅವನಷ್ಟು ಸುಲಭವಾಗಿ ಪ್ರೀತಿಯನ್ನು ಮರೆಯೋದು….’ ಮತ್ತೆ ಕತ್ತರಿ ಬಿತ್ತು ನನ್ನ ಪ್ರಲಾಪಕ್ಕೆ. +ಇದನ್ನು ಪ್ರೀತಿ ಎಂದು ಅರ್ಥೈಸಬೇಡ ಅಂತ ನಾನು ಹೇಳಿದ್ದೆ. ಅವಲಂಬನೆಯ ಮೂಲಭೂತ ಬೇಡಿಕೆಗೆ ಪ್ರೀತಿ-ಪ್ರೇಮದ ಎಷ್ಟೊಂದು ರಂಗಿನ ಪದಗಳನ್ನು ಹೊದಿಸದರೂ, ಅದರ ಹರಕು ಕಣ್ಣಿಗೆ ರಾಚುತ್ತೆ. ರವಿ ಒಂದು ಪಕ್ಷ ಹಣ ಕಳುಹಿಸದಿದ್ದರೆ ನಿನ್ನ ಮುಂದಿನ ತಿಂಗಳ ದಿನಸಿ ಎಲ್ಲಿಂದ ಬರುತ್ತೆ. ಮನೆ ಬಾಡಿಗೆ, ಹಾಲಿಗೆ ಹಣ, ಪುಟ್ಟಿ ಫೀಸ್…. ಮೊದಲು ಇದಕ್ಕೆ ಉತ್ತರ ಹುಡುಕು, ಪ್ರೀತಿ-ಪೇಮದ ಬಗ್ಗೆ ನಂತರ ಚಿಂತಿಸಿದರಾಯ್ತು, ಪುರುಸೊತ್ತಾಗಿ,’ +ಬಿ. ಪಿ. ಸಲಕರಣೆ ಚೀಲಕ್ಕೆ ತುರುಕಿ ನಡೆದೇ‌ಇಟ್ಟಳು ಶೀಲಾ. +ಶೀಲಾ ಮುಲಾಜಿಲ್ಲದ ಹೆಂಗಸು. ಸರ್ಕಾರಿ ಆಸ್ಪತ್ರೆಯಲ್ಲಿ ದಿನಕ್ಕೆ ಮೂರ್ನಾಲ್ಕು ಹೆರಿಗೆ, ಶಸ್ತ್ರಕ್ರಿಯೆ ಮಾಡುವ, ನೂರೆಂಟು ಕಾರಣಗಳಿಗೆ ಬಸಿರಿಳಿಸುವ-ಸ್ತ್ರೀತಜ್ಞೆ. ವೃತ್ತಿ ಸಹಜವೇನೋ ಎಂಬಂತೆ ಶೀಲಾಳಿಗೆ ನಯನಾಜೂಕಿನ ಮಾತುಗಳನ್ನು ಪೋಣಿಸುವ ಸಹನೆ ಇರಲಿಲ್ಲ. ಇದ್ದದ್ದನ್ನು ಮುಖಕ್ಕೆ ಎತ್ತೆ ಒಗೆವಂತೆ ಹೇಳುವಳು. +‘ಬದುಕುವುದು ಅಂತಲೇ ನಿರ್ಧರಿಸಿದ ಮೇಲೆ ಹೇಗಾದರೂ ಬದುಕೋದು ಅಂದರೇನು? ಬದುಕೋದಾದರೆ ಗರ್ವದಿಂದ ಬದುಕು’ ಎನ್ನುವಳು. +‘ಅವರಿವರ ಸಹಾನುಭೂತಿಯ ಗುಡ್ಡೆ ಹಾಕಿಕೊಂಡು ನೀ ಗದ್ದುಗೆ ಏರೋಕಾಗಲ್ಲ’ ಎಚ್ಚರಿಸುವಳು. +‘ಸಾಕು ಹೊರಗೆ ಬಾ ಈ ದುರಂತ ನಾಯಕಿಯ ಪಾತ್ರದಿಂದ. ನಿನಗೆ ಈ ನೋವು ಒಂದು ರೀತಿ ಮಜ ಕೊಡ್ತಾ ಇದೆ ಅಲ್ಲ’ ಕೆಣಕುವಳು. +ನಾ ಬೆಚ್ಚುತ್ತಿದ್ದೆ. ನನ್ನ ಮುಖವಾಡಗಳನ್ನೆಲ್ಲ ಕಿತ್ತೆಸೆಯುವ ಅವಳ ಪರಿಗೆ, ಪೂರ್ಣ ಬೆತ್ತಲಾಗುವ ಭಯಕ್ಕೆ. ಅವಳ ಒಂದೊಂದು ಮಾತು, ನನ್ನ ಒಳಗೊಳಗೇ ಮುಟ್ಟಿ-ತಟ್ಟಿ ಪ್ರಶ್ನಿಸುವುವು. ನನ್ನ-ಅವನ ಸಂಬಂಧ ಹುಸಿ-ದಿಟವ ಬೇರ್ಪಡಿಸಲು ಪ್ರೇರೇಪಿಸುತ್ತಿದ್ದವು. +ಈಗ ಕುಳಿತು ಯೋಚಿಸಿದರೆ, ನಮ್ಮ ಸಾಂಗತ್ಯ ವಿಚಿತ್ರವಿತ್ತು ಅನಿಸುತ್ತದೆ. ವಾರಗಕ್ಕಲೆ ರವಿ ಪ್ರವಾಸಕ್ಕೆ ಹೋದಾಗ ನಾನು ಚಡಪಡಿಸುತ್ತಿದ್ದೆ. ಹಾಲಿನವನ ಲೆಕ್ಕ ದಿನಸಿಯವನ ಲೆಕ್ಕ ಎಲ್ಲವನ್ನೂ ಎಡತಾಡಲು. ಎಲೆಕ್ಟ್ರಿಸಿಟಿ ಬಿಲ್‌ಗೆ ಪಕ್ಕದ ಮನೆ ಶಶಿಯನ್ನು ಕೇಳಬೇಕಿತ್ತು. ಶೀಲಾ ಕೈಲಿ ಇವರು ಕೊಟ್ಟ ಬೇರರ್ ಚೆಕ್ ಕಳುಹಿಸುತ್ತಿದ್ದೆ. +ರವಿ ಕೂಡಾ ನನ್ನ ‘ಮಿಸ್’ ಮಾಡುತ್ತಿದ್ದ. ನಾನು ಅನಿವಾರ್ಯವಾಗಿ ತೌರಿಗೆ ಹೋದ ಒಂದೆರಡು ಸನ್ನಿವೇಶದಲ್ಲಿ, ಬೆಳಿಗ್ಗೆ ಬಿಸಿ ಬಿಸಿ ಕಾಫಿ ಇಲ್ಲದೆ, ಘಮ ಘಮ ಉಪ್ಪಿಟ್ಟಿಲ್ಲದೆ, ಮಧ್ಯಾಹ್ನಕ್ಕೆ ಹಾಜರಾಗುವ ಮೂರು ಡಬ್ಬದ ಕ್ಯಾರಿಯರ್ ಇಲ್ಲದೆ, ಸಂಜೆ ತೆರೆದ ಬಾಗಿಲಿನ ನಗುವ ಪತ್ನಿಯ ಸ್ವಾಗತಿವಿಲ್ಲದೆ. +ಅವಲಂಬಿತರು…. ಪರಮ ಅವಲಂಬಿತರು. ಅವನ ಅವಲಂಬನೆಗಳಿಗೆ ಬಹಳ ಸುಲಭವಾಗಿ ಬದಲು ಸಿಕ್ಕಾಗಿದೆ. ನನ್ನ ಅವಲಂಬನೆಯೇ ಅಧಿಕವಿತ್ತು. ಆರ್ಥಿಕ ಅವಲಂಬನೆ. ಮಾನಸಿಕ ಅವಲಂಬನೆ, ಹೊರಗಿನೆಲ್ಲ ಪ್ರಪಂಚಕ್ಕೆ ಕದವಿಕ್ಕಿ ಕುಳಿತ ಏಕಾಂಗಿಯ ಸಾಂಗತ್ಯದ ಅವಲಂಬನೆ. +ಈ ಮನೆಯ ಮುಖಂಡತ್ವವನ್ನು ನಾನೇ ಬಿಟ್ಟುಕೊಟ್ಟಿದ್ದೆ, ಯಾರದೋ ನೆರಳಲ್ಲಿ ಯಾರದೋ ಹೆಗಲಿಗೆ ಜವಾಬ್ದಾರಿ ಹೇರಿ, ಯಾರದೋ ಆಸರೆಯಲ್ಲಿ ಉಳಿಯುವುದರಲ್ಲಿ ಒಂದು ಬಗೆಯ ಆರಾಮವಿತ್ತು. ಬ್ಯಾಂಕಿನಿಂದ ಹಣ ಬೇಕು, ರವಿ ತರುತ್ತಿದ್ದ. ಪೋಸ್ಟ್ ಆಫೀಸ್ ಉಳಿತಾಯ, ರವಿ ಕಟ್ಟಿ ಬರುತ್ತಿದ್ದ. ದೀಪ ಕೆಟ್ಟು ಹೋಯ್ತು, ರವಿ ಬದಲಿಸುತ್ತಿದ್ದ. ಪುಟ್ಟಿಯ ಹೆಚ್ಚಿನ ಪ್ರಶ್ನೆಗಳಿಗೆಲ್ಲ ‘ಅಪ್ಪ ಬರಲಿ, ಅಪ್ಪನ ಕೇಳು, ಅಪ್ಪಂಗೆ ಹೇಳ್ತೀನಿ ತಾಳು….’ ಉತ್ತರವಾಗಿತ್ತು. ರವಿ ಕಿತ್ತುಕೊಳ್ಳದಿದ್ದರೂ ಅವನ ಶಿರಕ್ಕೆ ಕಿರೀಟ ಇಟ್ಟು, ನಾ ಪದತಳದಲ್ಲಿ ಕುಳಿತಿದ್ದೆ. +ಎಷ್ಟು ಸಣ್ಣ ಘಟನೆಗಳು…. +‘ಅಮ್ಮ ಇರಾಕ್ ಯಾವ ಖಂಡದಲ್ಲಿದೆ?’ +‘ಅಪ್ಪನ ಕೇಳೋಗಮ್ಮ….’ +‘ಅಮ್ಮ ರಿಪೋರ್ಟ್ ಕಾರ್ಡ್‌ಗೆ ಸಹಿ ಹಾಕು….’ +‘ಅಪ್ಪನ ಹತ್ರ ಹಾಕಿಸ್ಕೋ….’ +‘ಇವತ್ತು ಪೇರೆಂಟ್ಸ್ ಡೇ….’ +‘ರವಿ, ನೀನು ಹೋಗಿ ಬರ್ತೀಯಾ, ಮರೀಬೇಡ….’ +ಸಣ್ಣ ಸಣ್ಣ ಕೆಲಸಗಳು. ನನ್ನ ಶಕ್ತಿ ಮೀರಿದ ಹಿಮಾಲಯವನ್ನು ಎತ್ತಿಡಬೇಕಾದ ಘನ ಕಾರ್ಯಗಳಲ್ಲ. ಪುಟ್ಟ ಪುಟ್ಟ ಕೆಲಸಗಳು…. ನಾನು ಹೊರಲಾರದ್ದಲ್ಲ. ನಾನು ಹಂಚಿಕೊಳ್ಳದೆ ಉಳಿದದ್ದು…. ನಾನು ಕಲಿಯದ್ದು! +ಶೀಲಾ ಹೇಳುತ್ತಾಳೆ ಒರಟಾಗಿ- +‘ಬದುಕಿಗೆ ತಯಾರಾಗುವ ಯೋಚನೆಯೇ ನಿನಗೆ ಬಂದಿರಲಿಲ್ಲವಾ ಮಧು? ಆಪತ್ಕಾಲಕ್ಕಷ್ಟೇ ನಾವು ಕಲಿತ ವಿದ್ಯೆ, ಪ್ರತಿಭೆ, ಚಟುವಟಿಕೆ ನೆನಪಾಗುತ್ತದೆ. ಇಲ್ಲಾ ಹೀಗೇ ತಗ್ಗಿಗೆ ಹರಿಯೋ ನೀರಿನಂತೆ ಹೋದತ್ತಲೇ ಹಾದಿಯೆಂದು ಕೈ ಕಟ್ಟಿ ಕೂರುತ್ತೇವೆ.’ +ಬದುಕಿಗೆ ತಯಾರಾಗುವ ಪ್ರಮೇಯವೇ ಬಂದಿರಲಿಲ್ಲ. ಶೇಕಡ ತೊಂಬತ್ತೊಂಬತ್ತು ಸಂಸಾರಗಳು, ಏನೇ ತೊಂದರೆ ಬಂದರೂ, ಹೇಗೋ ಕೊನೆಯವರೆಗೂ ನಿಭಾಯಿಸುತ್ತವೆ. ಉಳಿದ ಆ ಶೇಕಡ ಒಂದರ ಸಾಧ್ಯತೆ…. ಅತಿ ಕಡಿಮೆ. ಬದುಕು ನನ್ನ ಗಣಿತ, ಹುಣಾಕಾರದ ಎಗ್ಗಿಲ್ಲದೆ ನಕ್ಕಿತ್ತು! +ಹೊಸ ಬದುಕಿಗೆ ಒಂದೊಂದೇ ಹೆಜ್ಜೆಗಳು, ಪ್ಲಾಸ್ಟರ್‍ನಲ್ಲಿದ್ದ ಕಾಲನ್ನು ಉಪಯೋಗಿಸದೆ ಬಿಟ್ಟು ನಡೆಯಲು ತಡವರಿಸುವ ಪರಿ ನನ್ನದಾಗಿತ್ತು. ಶೀಲಾ ಎರಡು ದಿನ ರಜೆ ಹಾಕಿ ನನ್ನೊಂದನೆ ಬಂದಳು. ಬ್ಯಾಂಕಿನಲ್ಲೊಂದು ಅಕೌಂಟ್ ತೆಗೆಸಿದಳು. ವಿದ್ಯಾವಂತೆ ನಾನು. ಒಂದು ಚೆಕ್ ಬರೆಯುವುದು ಕಲಿತದ್ದು…. ಮುವ್ವತೈದಕ್ಕೆ! ಅಂಚೆ ಕವರಿನ ಬೆಲೆ ಒಂದು ರೂ. ಎಂದು ತಿಳಿದದ್ದು…. ಮುವ್ವತೈದಕ್ಕೆ! ಪುಟ್ಟಿಯ ಅಂಕ ಗಣಿತಕ್ಕೆ ಉತ್ತರ ಹುಡುಕಿದ್ದು ಮುವ್ವತೈದಕ್ಕೆ! +‘ಮದು, ಏನು ಮಾಡಬೇಕು ಅಂತ ಯೋಚಿಸಿದ್ದೀಯಾ?’ ಮತ್ತೆ ಒತ್ತಿ ಕೇಳಿದ ಶೀಲಾಗೆ ಅರೆಮನಸ್ಸಿನಿಂದ ಹೇಳಿದೆ- +‘ಬಿ. ಎ. ಕಟ್ತೀನಿ….’ +‘ಬಿ. ಎ. ಮಾಡಿ ಏನು ಮಾಡ್ತೀಯಾ?’ ನೇರವಿತ್ತು ಅವಳ ಪ್ರಶ್ನೆ. +‘ಗೊತ್ತಿಲ್ಲ, ನನ್ನ ಉದಾಸೀನದ ಉತ್ತರ. +‘ಮಧು, ನಿನಗೆ ಮತ್ತೆ ಈ ಸಾವಿರದೈನೂರ ಜೀವನಾಂಶದಲ್ಲಿ ಬದುಕು ಒಗ್ಗಿ ಹೋಗುತ್ತೆ…. ಏನಾದರೂ ಮಾಡಬೇಕು ಅನ್ನೋ ಉತ್ಸಾಹ, ಛಲ, ಒಂದಿಷ್ಟೂ ಬೇಡವೇ?’ ಅಸಮಾಧಾನದಿಂದ ರೇಗಿದಳು. +‘ಶೀಲಾ ಪ್ಲೀಸ್…. ನನ್ನನ್ನು ಏನು ಮಾಡು ಅಂತೀಯಾ? ಡಿಗ್ರಿ ಇಲ್ಲ. ಮತ್ತೆ ಹಿಂದಿರುಗಿದರೆ ಸ್ವಾಗತಿಸೋಕೆ ತೌರಿನ ಸಂಪತ್ತಿಲ್ಲ. ನನ್ನ ಕಸ ಗುಡಿಸು, ಮುಸುರೆ ತಿಕ್ಕು ಅಂತೀಯಾ….’ +ಶೀಲಾ ಬಹಳ ಹೊತ್ತು ಉತ್ತರಿಸಲಿಲ್ಲ. +‘ಮಧು… ನೀನು ತಗ್ಗಿನ ಹಾದಿಯನ್ನೆ ಹಿಡಿಯುತ್ತಿ. ವಿದ್ಯುತ್ತು ಅತಿ ಕಡಿಮೆ ನಿರೋಧಕ ದಾರಿಯನ್ನು ತುಳಿಯುತ್ತೆ. ಮನುಷ್ಯ ಕೂಡ ಅತಿ ಕಡಿಮೆ ಪರಿಶ್ರಮದ ಮಾರ್ಗ ಹುಡುಕ್ತಾ ಇರ್‍ತಾನೆ. ನೀ ಏನು ಆಗಬೇಕು ಅಂತ ನಿಶ್ಚಯಿಸಬೇಕಾದವಳು ನೀನು. ನಿನ್ನಿಂದ ಏನು ಸಾಧ್ಯ ಅಂತ ತಲೆ ಕೆಡಿಸಿಕೊಳ್ಳಬೇಕಾದವಳೂ ನೀನೇ….’ +ನಾ ಏನೂ ಹೇಳದೇ ಸುಮ್ಮನೆ ಕುಳಿತೆ. +ಯುದ್ಧದಲ್ಲಿ ಶಸ್ತ್ರಾಭ್ಯಾಸ ಮಾಡಲು ಹೊರಟಿದ್ದೆ. ಈ ಜೀವನ ಸಮರಕ್ಕೆ ನಾನು ಸಿದ್ಧವಿರಬೇಕಿತ್ತು. ಎಷ್ಟು ಮಧಾಹ್ನಗಳು ಎಷ್ಟು ಸಂಜೆಗಳು ವ್ಯರ್ಥವಾಗಿ ಕಳೆದದ್ದು. ಮನೆಗೆ ಮಿಕ್ಸಿ ಬಂತು. ಫ್ರಿಜ್ ಬಂತು. ವಾಷಿಂಗ್ ಮಷಿನ್ ಬಂತು…. ನನ್ನ ಕೆಲಸವಿಷ್ಟು ಹಗುರವಾಗಿತ್ತು. ಸಮಯವಿಷ್ಟು ಮಿಕ್ಕಿ ಉಳಿದಿತ್ತು. +ನಾವು ಜಡತ್ವವನ್ನು ಅವಳಿಯಾಗಿ ಪಡೆದು ಬಂದವರು. ಅವಶ್ಯಕತೆ ಇಲ್ಲದೆ ಏನನ್ನೂ ಕಲಿಯಲು, ಒಂದಿಂಚೂ ಬೆಳೆಯಲು ಸಿದ್ಧರಿಲ್ಲದವರು. ನಿಜ, ನಾ ಹೋರಾಡಬೇಕಿರಲಿಲ್ಲ. ಒಂಬತ್ತರಿಂದ ಐದರ ಕೆಲಸ ಹಿಡಿದು. ಆದರೆ ನನ್ನ ಬೆರಳ ತುದಿಯ ಪ್ರತಿಭೆಯನ್ನು ಉಳಿಸಿಕೊಳ್ಳಬಹುದಿತ್ತು. ಕಲಿತ ವಿದ್ಯೆಯನ್ನು ಬಳಸಿಕೊಳ್ಳಬಹುದಿತ್ತು. ಸ್ವತಃದುಡಿಮೆಯ ಸವಿರುಚಿಯ ಒಂದಿಷ್ಟು ಸವಿಯಬಹುದಿತ್ತು. ಅಂಥಾ ಯಾವ ಯತ್ನವನ್ನೂ ಮಾಡಲಿಲ್ಲ. ಈ ಒಂದು ದಶಕದಲ್ಲಿ. ಎಂಥಾ ಹುಚ್ಚು ಜನ ನಾವು, ಬದುಕು ಅಂಚಿಗೆ ನೂಕುವವರೆಗೂ ನಿಂತಿರುತ್ತೇವೆ. ಕೊನೆಗೆ ಆ ತುದಿಯ ಹಿಡಿದು ಜೋತಾಡುತ್ತೇವೆ. ಬೀಳಬಹುದಾದ ಪ್ರಪಾತಕ್ಕೆ ಹೆದರಿ ತಲ್ಲಣಿಸಿ. +ಒಂದು ದಶಕ ಹೇಗೆ ಕಳೆದಿತ್ತು? +ಪುಟ್ಟಿ-ಹುಟ್ಟಿದಳು, ಹೊಟ್ಟೆ ಕೆಳಗಾದಳು, ಅಂಬೆಗಾಲಿಟ್ಟಳು. ಹೆಜ್ಜೆ ಇಟ್ಟು ನಡೆದೇಬಿಟ್ಟಳು…. ಎಷ್ಟೊಂದು ಬೆಳವಣಿಗೆ! +ರವಿ…. ಎಂ. ಬಿ. ಎ. ಮುಗಿಸಿದ. ಕಂಪ್ಯೂಟರ್…. ಮಾರ್ಕೆಟಿಂ ಅಂತ ಡಿಗ್ರಿ…. ಡಿಪ್ಲಮೋಗಳ ಪೋಣಿಸಿಕೊಂಡ. ಸಾವಿರದಿನ್ನೂರರ ಸಂಬಳಕ್ಕೆ ಸೇರಿದಾತ, ಆರು ಸಾವಿರದ ಅಂಚಿಗೆ ಬಂದ! +ನಾನು…. ತಾಯಾದೆ, ಒಂದಿಷ್ಟು ದಪ್ಪವಾದೆ. ಮನೆಗೆಲಸ, ವಿಡಿಯೋ, ಮತ್ತೆ ಜೋಡಿಸಿ ಹೋದ ಕೇಬಲ್ ಟಿ. ವಿ. ಗೆ ಜೋತುಬಿಟ್ಟೆ ದಶಕವನ್ನು. ಮೂಲೆಮನೆಯ ಸೀತಾ ಹುಬ್ಬು ಕಿತ್ತು ಹಣಗಳಿಸುವುದನ್ನು, ಪಕ್ಕದ ಮನೆ ಶಶಿ, ಅರಚಿಕೊಳ್ಳೊ ಮಕ್ಕಳನ್ನು ಸಂಭಾಳಿಸುತ್ತಾ ಬೇಬಿ ನರ್‍ಸರಿ ತೆರೆದದ್ದನ್ನು ಮೋಜಿನಿಂದ ಕಂಡೆ, ಆಡಿಕೊಂಡೆ. ‘ಇವರಿಗೆ ಇಷ್ಟವಾಗೋಲ್ಲ’ ಎಂಬ ಸಬೂಬನ್ನು ಹೊಂದಿಸಿಕೊಂಡೆ. ಹಾಗೆ ನೋಡಿದರೆ ರವಿ, ನನ್ನ ಕೆಲಸ, ಹವ್ಯಾಸಗಳಿಗೆ ಯಾವತ್ತೂ ಆಕ್ಷೇಪ ಎತ್ತಿರಲಿಲ್ಲ. ಇಬ್ಬರೇ ಇದ್ದ ಮನೆಯಲ್ಲಿ ಹಿರಿಯರ ಅಂಕೆ ಅಡ್ಡಿಯೂ ಇರಲಿಲ್ಲ. ಏಕೋ ಏನೋ ಮಾಡಬೇಕಿನಿಸಲಿಲ್ಲ. ಬಾಲ್ಯ್ದ ವೇಗ, ಆವೇಗ, ಸ್ಪರ್ಧೆ ಯಾವುದೂ ಇಲ್ಲದ ಈ ವಿವಾಹಿತ ಬದುಕು, ಸಮತಟ್ಟು ತಲುಪಿತ್ತು. ಎಲ್ಲಾ ಹುಡುಗಿಯರಂತೆ ನಾನೂ ಶಾಲೆಯಲ್ಲಿ ಚಿತ್ರ ಬಿಡಿಸಿದ್ದೆ. ಪ್ರಬಂಧ ಬರೆದಿದ್ದೆ. ಕದ್ದು ಮುಚ್ಚಿ ಕವನಗಳನ್ನೂ ಬರೆಯುತ್ತಿದ್ದೆ. ಅಲಂಕಾರದ ಬಟ್ಟೆಗಳನ್ನೂ ಹೊಲೆದುಕೊಳ್ಳುತ್ತಿದ್ದೆ. ಅವಕ್ಕೆಲ್ಲ ಇದ್ದ ಕಾರಣಗಳು ಈಗ ಇರಲಿಲ್ಲ. ಕಾರಣಗಳಿಲ್ಲದೆಯೂ ಸಾಧಿಸುವ ಛಲಕ್ಕೆ ಬೇಕಾದ ಪರಿಶ್ರಮದ ಅಗತ್ಯ ಕಾಣಲಿಲ್ಲ. ‘ಏನೂ ಮಾಡ್ತಾ ಇಲ್ವಾ ಮಧು….. ಪೇಂಟಿಂಗ್, ಹೊಲಿಗೆ….’ ಅಂದಾಗೆಲ್ಲ ‘ಪುಟ್ಟ ಮಗು ಇದೆ ಸಮಯವೆಲ್ಲಿ….’ ಅನ್ನುತ್ತಿದ್ದೆ. ಕಾರಣಗಳಿತ್ತು. ನೂರು ಕಾರಣಗಳು…. ಪುಟ್ಟಿ ಬೆಳೆದಂತೆ ಕಾರಣಗಳೆಲ್ಲ ನೆಪಗಳಾದವು. ‘ಮಗು ಬಂದಾಗ ಮನೆಯಲ್ಲಿರಬೇಕು’ ಇವರು ಬಂದ ತಕ್ಷಣ ಕಾಫಿ ಆಗಬೇಕು….’ ಕಾರಣಗಳ ಕೊಟ್ಟುಕೊಂಡೆ. ಗೃಹಿಣಿಯ ಮಾದರಿಯಾಗುವ ಆಸೆಯಿಂದಲ್ಲ. ಮತ್ತೇನೂ ಆಗಲಾರದ ಆಲಸ್ಯದಿಂದ. +ಅಂದು, ಅವನ ಮೊದಲ ಚೆಕ್ ಬಂದಿತ್ತು. +ಈಗ ನನ್ನ…. ಅವನ ನಡುವೆ ಉಳಿದ ಸಂಬಂಧ ಈ ಹಣವೊಂದೇ. +ಇಷ್ಟೇ ಇತ್ತೇ ನಮ್ಮ ಸಂಬಂಧ…. ಇಷ್ಟೇ? ‘ಇರಲಿಕ್ಕಿಲ್ಲ ರವಿ…. ಒಂದಿಷ್ಟು ಮತ್ತೇನೋ ಇತ್ತು. ಇಲ್ಲದಿದ್ದರೆ ಸಮಯ ಹೀಗೇಗೆ ನಿಂತುಬಿಟ್ಟಿದೆ, ನೀ-ನಿಲ್ಲದ ಈ ಹೊತ್ತಿನಲ್ಲಿ. ಅವಳು ಕಣ್ಣೊತ್ತುವುದೇಕೆ, ಸಂಜೆ ಕೆಂಪಿನ ಕತ್ತಲಲ್ಲೆ. ಶೀಲಾ ಏನೇ ಹೇಳಿದರೂ ನನ್ನ-ಅವನ ನಡುವೆ ಅವಲಂಬನೆಯ ಹೊರತಾಗಿಯೂ ಒಂದು ಸಂಬಂಧವಿತ್ತು. ಪ್ರೀತಿಯೋ-ಪ್ರೇಮವೋ ಯಾವುದೋ ಒಂದು. ನನ್ನನ್ನು ಈ ವೈವಾಹಿಕ ನಿಶ್ಚಿಂತೆಯಲ್ಲಿ, ಸುಷುಪ್ತಿಯಲ್ಲಿ ಮಲಗಿಸಿದ ಒಂದಿಷ್ಟು ಸಿಹಿವರ್ಷಗಳು. +ಸತ್ಯ ಇಷ್ಟೆ, ಪ್ರೇಮ-ಕಾಮ, ವಾತ್ಸಲ್ಯ, ಭರವಸೆ, ನಿಷ್ಠೆ ಎಲ್ಲಾ ಬಂಧನಗಳೂ ಕಿತ್ತುಕೊಂಡ ಮೇಲೂ ಜಗ್ಗಾಡಿ ಉಳಿದುಕೊಂಡ ಕೊಂಡಿ…. ಈ ಹಣದ್ದು! +‘ಬೇಡ, ನಾ ಹಸಕ್ಕೊಂಡಾದ್ರೂ ಸಾಯ್ತೀನಿ. ಭಿಕ್ಷೇನಾದ್ರೂ ಬೇಡ್ತೀನಿ. ಅವನ ಹಣ ಬೇಕಿಲ್ಲ. ನನಗೂ ಆತ್ಮಗೌರವ ಇದೆ’ ಬುಸುಗುಟ್ಟುತ್ತ ಚೆಕ್ ಅತ್ತ ಬಿಸುಟೆ. ಅದು ಬರೀ ಬಾಯಿ ಮಾತಿನ ಚೀರಾಟ ಎಂದು ನನಗೂ ಗೊತ್ತಿತ್ತು. ಈ ಸಾವಿರದೈನೂರರ ಮೇಲೆ ನನ್ನ ತಿಂಗಳು ಪೂರಾ ಒಂಟಿಗಾಲಲ್ಲಿ ನಿಂತಿತ್ತು. +ಶೀಲಾ ನಾ ಬಿಸುಟ ಚೆಕ್ಕನ್ನು ನಿಧಾನವಾಗಿ ಎತ್ತಿ ಮೇಜಿನ ಮೇಲಿಟ್ಟು, ನನ್ನ ಬಳಿ ಬಂದು, ಭುಜ ತತ್ಟುತ್ತಾ ನನ್ನ ಹೈ-ಡ್ರಾಮಾದಿಂದ ಕೊಂಚವೂ ವಿಚಲಿತವಾಗದೆ ಹೇಳಿದಳು- +“ಙou ಛಿಚಿಟಿ’ಣ ಚಿಜಿಜಿoಡಿಜ seಟಜಿ ಡಿesಠಿeಛಿಣ mಥಿ ಜeಚಿಡಿ, ಆತ್ಮಗೌರವ ಬಹಳ ದುಬಾರಿಯಾದುದು. ಸದ್ಯಕ್ಕೆ ನಾಳೆ ಹೋಗಿ ಇದನ್ನು ಜಮಾ ಮಾಡು. ಅವನ ಈ ಚೆಕ್ಕನ್ನು ಬಿಸುಡಬಲ್ಲ ತಾಕತ್ತು ನಿನಗೆ ಬಂದಾಗ ಹೇಳುವಿಯಂತೆ….’ +ಶೀಲಾಳದು ಕಡ್ಡಿ ಮುರಿದಂಥಾ ಮಾತು. ವೈದ್ಯಳು ಸಕ್ಕರೆ ಬೆರೆಸದೆಯೇ ಕಹಿ ಔಷಧಿಯ ಗಂಟಲಲ್ಲಿ ನುಗ್ಗಿಸಬಲ್ಲವಳು. ಶಸ್ತ್ರಕ್ರಿಯೆಯಂತೆ ಸುಳ್ಳು, ಪೊಳ್ಳುಗಳಲ್ಲಿ ಸಿಲುಕಿದ ಸತ್ಯವನ್ನು ಕತ್ತರಿಸಿ ಬೇರ್ಪಡಿಸಿ ಕಣ್ಣೆದುರು ತೂಗುಹಾಕಬಲ್ಲವಳು. ನನ್ನ ಬಗ್ಗೆ ಒಂದಿಷ್ಟು ಸಿಟ್ಟೂ ಇದ್ದವಳು. ಬಹುಶಃ ಬದುಕನ್ನು ವ್ಯವಸ್ಥಿತವಾಗಿ ಬದುಕಿದವರಿಗೆ, ಬದುಕಿನೆಲ್ಲ ಸಾಧ್ಯತೆಗಳನ್ನು ಊಹಿಸಿ ತಯಾರಾದ ಜಾಣರಿಗೆ ನನ್ನಂಥಾ ಗಬ್ಬೆಬ್ಬಿಸಿಕೊಂಡ ಬದುಕು ರೇಗಿಸಬಹುದು. ಹೇಸಿಗೆ ಎನಿಸಬಹುದು. ಒಮ್ಮೆ ಮೆತ್ತಗಾದ ಕ್ಷಣದಲ್ಲಿ ಶೀಲಾ ಹೇಳಿದ್ದಳು- +‘ನಾ ಅನುಕಂಪ ಸುರಿಸಬಹುದು, ನಿನ್ನ ಪರ ವಹಿಸಿ ಅವನಿಗಿಷ್ಟು ಹಿಡಿಶಾಪ ಹಾಕಬಹುದು. ಹೇಳು ಅದರಿಂದೇನು ಪ್ರಯೋಜನ? ಭೂತ ಎಷ್ಟೇ ಸುಂದರವಿದ್ದರೂ ಬರೀ ಇತಿಹಾಸವಾಗುತ್ತೆ. ಅವಶೇಷಗಳಷ್ಟೇ ಉಳಿಯುತ್ತೆ. ಈ ಅನುತಾಪ, ಅನುಕಂಪವನ್ನೆಲ್ಲ ಚಾಚಿ ಹರಡಿ ಹೊದ್ದು ಮಲಗಿಬಿಡುತ್ತೀ. ನಿನಗೀಗ ಬೇಕಿರೋದು ಎದ್ದು ಕುಳಿತುಕೊಳ್ಳುವ ಕ್ರಿಯೆ. ನೀನು ಎಂದೂ ನಿನ್ನ ಭವಿಷ್ಯದ ಬಗ್ಗೆ ಚಿಂತಿಸಲಿಕ್ಕಿಲ್ಲ ಅಲ್ಲ…. ಅದನ್ನೂ ರವಿಗೇ ಬಿಟ್ಟಿದ್ದೆ. ಅಥವಾ ಈಗಲೂ ಬಿಟ್ಟಿರುವೆ.’ +ನಾನು ಭವಿಷ್ಯದ ಬಗ್ಗೆ ಯೋಚಿಸಿದ್ದೆ. ಬೆಳಗಾಗೆದ್ದರೆ ಪತ್ರಿಕೆಯಲ್ಲಿ ಅಪಘಾತಗಳ ಸುದ್ದಿ ಓದಿಯೇ ನಡುಗುತ್ತಿದ್ದೆ. ರವಿ ಬರುವುದು ಕೊಂಚ ತಡವಾದರೂ ತಳಮಳಿಸುತ್ತಿದ್ದೆ. ಮೆಜೆಸ್ಟಿಕ್ ಸರ್ಕಲ್ ಹತ್ತಿರ ಯಾವನೋ ಕೆಂಪು ದೀಪ ನೋಡಿಯೂ ನುಗ್ಗಿಸಿ, ರವಿ ಬ್ರೇಕ್ ಒತ್ತಿ ಮುಗ್ಗರಿಸಿದ ಪ್ರಕರಣ…. ಮೊಣಕೈ ತರಚಿದ್ದಕ್ಕೆ ಆತಂಕಪಟ್ಟಿದ್ದೆ. ನನ್ನ ಮನಸ್ಸಿಗೆ ಹೊಳೆದಿದ್ದ, ನಾ ಊಹಿಸಿದ್ದ, ಚಿಂತಿಸಿದ್ದ, ಅತಿ ದೊಡ್ಡ ದುರಂತ ರವಿಯ ಸಾವು! +ಅಂತಹ ಸಮಯಕ್ಕೂ ಒಂದು ಬಗೆಯ ನೆರವಿತ್ತು, ನೆರಳಿತ್ತು. ರವಿ ಜೀವ ವಿಮೆ ಮಾಡಿಸಿದ್ದ. ಇಪ್ಪತ್ತು ಪರ್‍ಸೆಂಟ್ ಪಿ. ಎಫ಼್. ಕಟ್ಟುತ್ತಿದ್ದ. ನಲವತ್ತರ ವಯಸ್ಸಿಗೇ ಪ್ಲಾಟ್ ಬುಕ್ ಮಾಡಿದ್ದ. ಆರ್ಥಿಕ ಸ್ಥಿತಿಯ ಬಗ್ಗೆ ನಾ ಯೋಚಿಸಬೇಕಿರಲಿಲ್ಲ. +ಇಂದು ರವಿಯ ಸಾವಿಗಿಂತ ದೊಡ್ಡ ದುರಂತ ನನ್ನ ಕಣ್ಣ ಮುಂದೆ ನಿಂತಿದೆ. ಬಾಡಿಗೆ ಮನೆಯಲ್ಲಿ ಬಿಡಿಗಾಸಿಲ್ಲದೆ, ರವಿಯ ಆಶ್ವಾಸನೆಯ ಮೇಲೆ ನಿಂತಿದ್ದೆ, ಅವನ ತಿಂಗಳ ಹಣದ ನಿರೀಕ್ಷೆಯಲ್ಲಿ, ಒಂದು ಪಕ್ಷ ಬಾರದಿದ್ದರೆ ಎಂಬ ಆತಂಕದಲ್ಲಿ, ಜೀವನಾಂಶಕ್ಕೆ ಹೋರಾಡಬೇಕಿತ್ತೆ ಎಂಬ ಡೈಲಮಾದಲ್ಲಿ! +ಛೀ, ನಾನು ರವಿಯ ಸಾವನ್ನು ಬಯಸುತ್ತಿರುವೆನೆ? ದೇವರೆ, ಸಂಬಂಧಗಳು ಕೂಡ ಕಟ್ಟಕಡೆಗೆ ತಮ್ಮ ಸ್ವಾರ್ಥವನ್ನಷ್ಟೇ ಹುಡುಕಿ ನಿಲ್ಲುತ್ತವಲ್ಲ. ಏನೆಲ್ಲ ಇನ್‌ಷೂರ್ ಮಾಡಿದ್ದೆವು. ಈ ವಿವಾಹ, ಈ ಸಂಬಂಧ, ಈ ಪ್ರೀತಿ ಇನ್‌ಷೂರ್ ಆಗುವಂತಿದ್ದರೆ! +ರವಿ ನನ್ನ ಬದುಕನ್ನು ಈ ಮಟ್ಟಿಗೆ ನಿಯಂತ್ರಿಸಲು ಬಿಡಬಾರದು. ರವಿಯ ಹಣದ ಮೇಲೆ ನನ್ನ ಹಕ್ಕಿರಬಹುದು….. ಅವ ಹೊರಗೆ ದುಡಿದಂತೆಯೇ, ನಾ ಒಳಗೆ ದುಡಿದಿದ್ದೆ. ನನ್ನ ಪತಿಯ ಸ್ಥಾನದಿಂದ ನಿವೃತ್ತನಾದರೂ, ಪುಟ್ಟಿಯ ಅಪ್ಪನಾಗಿ, ಅವನ ಕರ್ತವ್ಯಗಳಿವೆ. ಆದರೂ ಈ ಹಣ ನನ್ನ ಕುಟುಕುತ್ತದೆ, ಕಟ್ಟಿಕೊಂಡ ತಪ್ಪಿಗಾಗಿ, ಬಿಟ್ಟು ಹೋದ ಗಂಡ ‘ಕಪ್ಪ’ ತೆರುತ್ತಿರುವ ಹಣ! +ನನ್ನ ಸ್ವಾವಲಂಬನೆಗೆ ಶೀಲಾ ನೂರು ಹಾದಿಗಳನ್ನು ತಡಕಾಡಿದಳು. ಟೈಪಿಂಗ್, ಬೇಬಿ ಸಿಟ್ಟಿಂಗ್, ಪ್ಲಾಂಟ್ ನರ್ಸರಿ…. ನಾ ಎಲ್ಲಕ್ಕೂ, ನಕಾರ ಹೇಳುತ್ತಾ ಬಂದೆ. ತಟ್ಟನೆ ಏನೋ ಹೊಳೆದಂತೆ- +‘ಮಧು, ನಿನ್ನ ಬೆಡ್‌ರೂಂನಲ್ಲಿ ಹೊಲಿಗೆ ಮೆಷೀನ್ ನೋಡಿದ್ದೆ. ನೀ ಅಮ್ಮನ ಮನೆಯಿಂದ ತಂದಿದ್ದಲ್ಲಾ? ಆಗೇನೇನೋ ಹೊಲಕೊಳ್ತಾ ಇದ್ದೆ. ಇದಕ್ಕೆ ಫ್ರಿಲ್, ಅದಕ್ಕೆ ಪಫ್ ಅಂತ ಏನೇನೋ ಹೊಲಕೊಂಡು ಮೆರಿತಾ ಇದ್ದದ್ದು ನೆನಪಿದೆ. ನಿನ್ನ ಭವಿಷ್ಯಕ್ಕೆ ಈಗ ಹೊಲಿಗೆ ಸಾಕು.’ +‘ಏನು ರವಿಕೆ ಹೊಲಕೊಂಡು ಹೊಟ್ಟೆ ಹೊರೆಯೋಗಾಗುತ್ತಾ? +‘ಥೂ ನಿನ್ನ, ಹೊಲೆಯೋದು ಅಂದರೆ ಈ ನಮ್ಮ ಹಿಂದೀ ಚಿತ್ರಗಳಲ್ಲಿ ತೋರಿಸ್ತಾರಲ್ಲ, ಹಗಲೂ ರಾತ್ರಿ ಕೆಮ್ಮಿಕೊಂಡು ನಾಲ್ಕು ಕಾಸು ಸಂಪಾದಿಸೋ ವಿಧವೆ ತಾಯಂದಿರ ಚಿತ್ರ, ಹಾಗೆ ಅಂದುಕೊಂಡೆಯಾ? ನೀ ದರ್ಜಿ ಅಲ್ಲ. ಡ್ರೆಸ್ ಡಿಸೈನರ್ ಆಗ್ತೀಯಾ…. ನೋಡು ಹೇಗೂ ಮುಂದಿನ ಕೋಣೆ, ವರಾಂಡಕ್ಕೆ ತೆರೆದಿದೆ. ದೊಡ್ಡದಾಗೂ ಇದೆ. ಇವತ್ತೇ ಹೋಲ್ ಸೇಲಿನಲ್ಲಿ ಒಂದಿಷ್ಟು ಬಟ್ಟೆ, ಲೇಸು, ಬಟನ್ ಎಲ್ಲಾ ತರೋಣ. ನೀ ಬೊಟೀಕ್ ಪ್ರಾರಂಭಿಸು.’ +ಶೀಲಾಳ ಒಂದು ಪುಟ್ಟ ಸಲಹೆ. ನನ್ನ ಭವಿಷ್ಯಕ್ಕೆ ಕಿರು ಬಾಗಿಲು ತೆರೆದಿತ್ತು. ಶೀಲಾಳ ಬಾಲವಿಡಿದು ಒಂದಿಷ್ಟು ಸುತ್ತಿದೆ. ಬಣ್ಣ ಬಣ್ಣದ ಹೊಸ ವಿನ್ಯಾಸಗಳ ಶೋ ರೂಂಗಳನ್ನು ನೋಡಿಯೇ ನನಗಷ್ಟು ಐಡಿಯಾ ಬರುತ್ತಿತ್ತು. ಶೀಲಾ ಐದಾರು ಉಡುಪು ವಿನ್ಯಾಸದ ಪುಸ್ತಕಗಳನ್ನು ತಂದುಕೊಟ್ಟಳು. ಒಂದಿಷ್ಟು ಉತ್ಸಾಹದಿಂದಲೇ ಆರಂಭವಾಯಿತು. ನನ್ನ ಬೆರಳ ತುದಿಯ ಪ್ರತಿಭೆಯ ಉದ್ಯಮವಾಗಿಸುವ ಬೃಹತ್‌ಕಾರ್ಯ. +ಏಕೋ, ಸಮಯ ಸರಿದಂತೆ ಮನಸ್ಸು ಮತ್ತೆ ನಿಧಾನವಾಗಿ ಹಳೆಯ ಬದುಕಿಗೆ ಬಂದು ನಿಂತಿತು. ಆರು ತಿಂಗಳು ಕಳೆದಿತ್ತು. ಅವನ ಚೆಕ್ ತಿಂಗಳು ತಿಂಗಳು ತಪ್ಪದೆ ತಲುಪುತ್ತಿತ್ತು. ಪುಟ್ಟಿಯ ಬಗ್ಗೆ ಆಗಾಗ್ಗೆ ಬಂದು ವಿಚಾರಿಸಿಕೊಳ್ಳುವ. ಅವ ಬಿಟ್ಟು ಹೋದ ಹೊಸತರಲ್ಲಿ ಧೂಳೆದ್ದ ಛಲ ಮತ್ತೆ ಸೋಲತೊಡಗಿತ್ತು. ಒಂದಿಷ್ಟು ಅಕ್ಕಪಕ್ಕದವರ ರವಿಕೆ-ಫ್ರಾಕ್ಸ್ ಹೊಲೆದುಕೊಟ್ಟಿದ್ದೆ ಅಷ್ಟೆ. ಅದರಾಚೆ ಹೊಲಿಗೆಯನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆರಂಭದ ಆ ಉತ್ಸಾಹ ಹೆಚ್ಚು ದಿನ ಉಳಿಯಲಿಲ್ಲ. ದಿನದ ಇಪ್ಪತ್ನಾಲ್ಕು ಗಂಟೆಯೂ ಮನೆಯಲ್ಲೇ ಇದ್ದವಳಿಗೆ ಈ ಓಡಾಟ-ಹೋರಾಟ ಅತಿ ಪ್ರಾಯಾಸದ್ದೆನಿಸಿತ್ತು. +ಶೀಲಾ ತಿವಿದು ಕೇಳಿದಾಗೆಲ್ಲ-‘ಯಾರೇ ನನ್ಹತ್ರ ಬರ್ತಾರೆ. ಬಂದ್ರೂ ಇವತ್ತು ಕೊಟ್ಟು ನಾಳೇನೇ ಕೊಡಿ ಅಂತಾರೆ. ಇಡೀ ರಾತ್ರಿ ಕುಳಿತು ಹೊಲೆಯಬೇಕು. ಮತ್ತೆ ಇಲ್ಲಿ ಸಡಿಲ, ಅಲ್ಲಿ ಬಿಗಿ ಅನ್ನೋ ದೂರುಗಳನ್ನು ಕೇಳಬೇಕು’ ಎಂದಿದ್ದೆ. +“ಮಧು ಸೆಲ್ಫ್‌ಡ್ರೈವ್ ಇಲ್ಲದ ಜನಕ್ಕೆ ಹೊರಗಿಂದ ಎಷ್ಟೇ ಪಂಪ್ ಹೊಡೆದರೂ ತುಸುಕ್ ಅಂತ ಕೂರುತ್ತಾರೆ. ನೀನು ಆ ಗುಂಪಿನೋಳು. ನಿನ್ನ ಸ್ವಾವಲಂಬನೆ ಒಂದು ದಿನದಲ್ಲಿ ಒಂದು ರವಿಕೆ ಹೊಲೆದೊಡನೆ ಧಾವಿಸಿ ಬರುತ್ತೆ ಅಂದುಕೊಂಡೆಯಾ?’ ಶೀಲಾ ಗುಡುಗಿ ಕೇಳಿದಳು. +ಏಕೋ ನನ್ನಲ್ಲಿ ಉತ್ಸಾಹವೇ ಮೂಡಲಿಲ್ಲ. ಒಂದು ಜೀವನಕ್ರಮಕ್ಕೆ ಒಗ್ಗಿದ ದೇಹ-ಮನಸ್ಸು ಬದಲಾವಣೆಗೆ ಎಷ್ಟೊಂದು ಪ್ರತಿಭಟಿಸುತ್ತದೆ! ಇದು ಒಂಬತ್ತರಿಂದ ಐದರ ಕೆಲಸವಾಗಿರಲಿಲ್ಲ. ಅತ್ತ ಮಾಡಿ ಬಿಸುಟು ಪ್ರತಿ ತಿಂಗಳ ನಿಗದಿತ ಸಂಬಳವನ್ನು ನಿಶ್ಚಿಂತೆಯಿಂದ ನಿರೀಕ್ಷಿಸಲು. ನಾನೊಂದು ಉದ್ಯಮವಾಗಬೇಕಿತ್ತು. ಏಕ ವ್ಯಕ್ತಿಯ ಉದ್ಯಮ. ವಿನ್ಯಾಸ ಹುಡುಕುವುದು, ಉಡುಪುಗಳಿಗೆ ಅಳವಡಿಸಿ ತಯಾರಿಸುವುದು, ಮತ್ತೆ ಕೊಳ್ಳುವ ಗಿರಾಕಿಗಳ ಹುಡುಕುವುದು. ನನ್ನ ಗತಿ ಬಲು ನಿಧಾನವಾಗಿತ್ತು. ಒಂದೆರಡು ಹೊಲೆದು ಸುತ್ತಮುತ್ತ ಒಂದಿಬ್ಬರಿಗೆ ತೋರಿಸುವುದು. ಮತ್ತೆ ಖರ್ಚಾಗದಿದ್ದರೆ ‘ಇದೆಲ್ಲಾ ನನ್ನಿಂದಾಗೋಲ್ಲ ಬಿಡು’ ಎಂದು ಖಿನ್ನಳಾಗುವುದು. ಇದರ ಲೈನಿಂಗ್ ಬಟ್ಟೆ ಇಲ್ಲ. ಇದರ ಶೋ-ಬಟನ್ ಸಿಕ್ಕಿಲ್ಲ. ನಾಳೆ ತಂದರಾಯಿತು. ನಾಡಿದ್ದು…. ಹೀಗೇ ಮುಂದೂಡುವ ನನ್ನ ಸೋಮಾರಿತನದಲ್ಲಿ ಒಂದು ಸಣ್ಣ ಆಸೆಯೂ ಇತ್ತು…. ರವಿ ಮತ್ತೆ ಬರಬಹುದೆಂದು….. ನನ್ನ ನಿಷ್ಕ್ರಿಯತೆ ಕಂಡುಕೊಂಡ ಆಶಾವಾದ ಅದು. +ಅಪ್ಪಟ ಅವಶ್ಯಕತೆ ಇದ್ದರೂ ಬದುಕದ ನಮ್ಮಂಥವರಿಗೆ ಕೆಲವೊಮ್ಮೆ ಶಾಕ್-ಟ್ರೀಟ್‌ಮೆಂಟ್ ಒಂದೇ ಉತ್ತರವಿರಬೇಕು. ಬದುಕು ಬದಲಾಯಿತು. ಆ ಒಂದು ಘಯ್ಟನೆಯಲ್ಲಿ! +ಪುಟ್ಟಿಯ ಹುಟ್ಟು ಹಬ್ಬ-ನೆನಪಿರಬಹುದೆ ರವಿಗೆ? ರವಿ ಈ ವಿಷಯಗಳಲ್ಲಿ ಬಹಳ ಮರೆವಿನವ. ಹುಟ್ಟು ಹಬ್ಬ, ನಮ್ಮ ಮದುವೆಯಾದ ದಿನ ಎಲ್ಲವನ್ನೂ ವಾರಗಟ್ಟಲೆ ಮೊದಲೇ ಕೊರೆದು ನೆನಪಿಸಿ ಅಂದು ಸಂಜೆ ನುಗ್ಗುತ್ತಿದ್ದೆವು, ಎಂ. ಜಿ. ರಸ್ತೆ-ಡಿನ್ನರ್-ಐಸ್‌ಕ್ರೀಮ್ ಅಂತ. ಇಲ್ಲ ಅಂದರೆ ಅದೇ ಸಂಜೆ ಆಫೀಸಿನಲ್ಲೇನೋ ಕೆಲಸ ಬಿತ್ತು ಎಂದು ಎಂಟರವರೆಗೂ ಆರಾಮವಾಗಿ ಮರೆತು ಕೂರುವ ಆಸಾಮಿ. ಅದ್ಯಾಕೋ ರವಿಗೆ ಈ ಸಣ್ಣ ಸಣ್ಣ ವಿಷಯಗಳು ಸಣ್ಣ ಸಣ್ಣ ಸುಖಗಳು ಕಣ್ಣಿಗೆ ಕಾಣುತ್ತಲೇ ಇರಲಿಲ್ಲವೇನೋ. ಯಾವುದೋ ಭಯಂಕರ ಸುಖದ ಬೇಟೆಯಲ್ಲಿದ್ದ….! +ನಾಳೆ ರವಿ ಬರಲಿ ಬಿಡಲಿ, ಹುಟ್ಟುಹಬ್ಬ ಆಚರಿಸಬೇಕು. ತಿಂಗಳ ಕೊನೆಯಲ್ಲಿ ಉಳಿದ ಹಣ ಲೆಕ್ಕ ಹಾಕಿ, ಕೂಡಿಸಿ, ಗುಣಿಸಿ, ನೋಡಿದೆ. ಒಟ್ಟು ನೂರು ರೂಪಾಯಿಗಳಷ್ಟು ತೆಗೆದಿಡಬಹುದು. ಪುಟ್ಟಿಗೊಂದು ಹೊಸ ಫ್ರಾಕ್ ತರಬೇಕು. ಪುಟ್ಟಿಯ ಕೈ ಹಿಡಿದು ‘ಕಮರ್ಷಿಯಲ್ ರಸ್ತೆ’ ತುಳಿದೆ. ಒಂದೊಂದೇ ಅಂಗಡಿಗಳು-ಝಗಮಗಿಸುವ ಬೆಳಕು. +‘ಬನ್ನಿ ಮೇಡಂ, ಏನು ಬೇಕು?’ ಮುಗುಳ್ನಗೆಯ ಸ್ವಾಗತದ ಸೇಲ್ಸ್‌ಗರ್ಲ್. +“ಒಂದು ಫ್ರಾಕ್ ಬೇಕು….’ ಒಂದೇನು ರಾಶಿ ರಾಶಿ ಮೊಗೆದು ಬಿತ್ತು. ಒಂದೊಂದೇ ಬೆಲೆಯ ಚೀಟಿಯ ಎತ್ತಿ ನೋಡಿದೆ. ಎದೆ ಧಸಕ್ ಎಂದಿತು. ಈ ಒಂದು ವರ್ಷದಲ್ಲಿ ಏನೆಲ್ಲಾ ಬದಲಾಯಿತೋ ಗೊತ್ತಿಲ್ಲ. ರವಿಯ ಸಂಬಳದಲ್ಲೂ ಇಷ್ಟು ಬಡ್ತಿ ಆಗಿರಲಿಕ್ಕಿಲ್ಲ. ಫ್ರಾಕ್‌ಗಳೆಲ್ಲದರ ಬೆಲೆ ೩೦೦-೩೫೦ರ ಫಲಕ ಹೊತ್ತು ಕುಳಿತಿದ್ದವು ಮೆಲ್ಲನೆ ನಡುಗಿದೆ. +‘ಇದು ಬೇಡ, ತುಂಬಾ ಗ್ರಾಂಡ್ ಆಯ್ತು. ಇದರ ಬಣ್ಣ ಗಾಡಿ….’ ನನ್ನ ಸಬೂಬುಗಳನ್ನು ಇರಿದು ನೋಡುವಂತೆ- +‘ಯಾವ ಬಣ್ಣ ಬೇಕು ಹೇಳಿ ತೋರಿಸ್ತೀವಿ. ಇನ್ನೂ ಕಡಿಮೆ ಬೆಲೆಯದಾದರೆ ಅವೂ ಇವೆ….’ +‘ಹಾಗಲ್ಲ….’ ನಾ ತಡವರಿಸುತ್ತಿದ್ದಂತೆಯೇ ಮತ್ತೊಂದು ರಾಶಿ ಕಡಿಮೆ ಬೆಲೆಯ ೨೦೦-೨೫೦ರ ಫ್ರಾಕ್‌ಗಳು! ಮುಜುಗರಗೊಂಡೆ. ಬಲೆಯಲ್ಲಿ ಸಿಕ್ಕಿಕೊಂಡ ಮೃಗದಂತೆ ಚಡಪಡಿಸಿದೆ. +‘ಇಲ್ಲ ಇದು ಬೇಡ…. ನೋಡಿ ಬರ್ತೀನಿ….’ ನಾ ತಟ್ಟನೆ ತಿರುಗಿ ಪುಟ್ಟಿಯ ಕೈ ಹಿಡಿದು ಹೊರಟಂತೆ, ಎತ್ತಿ ಹಾಕಿದ ರಾಶಿಯ ಹ್ಯಾಂಗರ್‍ಗೆ ಸೇರಿಸುತ್ತಿದ್ದ ಆ ಸೇಲ್ಸ್‌ಗರ್ಲ್ ವ್ಯಂಗ್ಯವಾಗಿ ಬದಿಯವಳಿಗೆ- +‘ನೋಡಿ ಬರ್ತಾರಂತೆ….’ ಎಂದು ಮೆಲ್ಲನೆ ಹೇಳಿ ಕಿಸಕ್ಕನೆ ನಕ್ಕದ್ದು, ಎದೆ ಇರಿಯಿತು. ಈ ಅಂಗಡಿಯವರು, ಗಿರಾಕಿಗಳ ಆರ್ಥಿಕ ಸ್ಥಿತಿಯನ್ನು ಮನದಲ್ಲೇ ಓದಿ ಬಿಡುವಷ್ಟು ನಿಪುಣರು. ಓರ್ವ ಸೇಲ್ಸ್‌ಗರ್ಲ್-ಓರ್ವ ಯಕಶ್ಚಿತ್ ಸೇಲ್ಸ್‌ಗರ್ಲ್‌ಳ ಅಪಹಾಸ್ಯಕ್ಕೆ ಗುರಿಯಾಗಿದ್ದೆ. ಇಂದು ಹೆಚ್ಚೆಂದರೆ ಅವಳ ಸಂಬಳ ಎಷ್ಟಿರಬಹುದು…. ಐನೂರು.. ಇಲ್ಲ.. ಸಾವಿರ… ಅಷ್ಟಕ್ಕೇ ಇಷ್ಟು ಗರ್ವವೇ? ಕುದಿದ ಕೋಪದ ಮನಕ್ಕೆ ಎಲ್ಲಿಯದೋ ಉತ್ತರ- +‘ಇರಬಹುದು…. ಆದರೆ ಅದು ಅವಳು ದುಡಿದ ಹಣ… ತಿಂಗಳೂ ತಿಂಗಳೂ ಬಿಟ್ಟು ಹೋದ ಗಂಡ ಒಲ್ಲದ ಮನಸ್ಸಿನಿಂದ ಬಿಸುಡುವ ಹಣವಲ್ಲ…. ತಿಂಗಳು ತಿಂಗಳೂ ಅನಿಶ್ಚಯದ ಕಾಯುವಿಕೆ ಅವಳಿಗಿಲ್ಲ.’ +ತಟ್ಟನೆ ಸುಧಾರಿಸಿಕೊಂಡೆ. ಕೋಪ-ಅಸಹಾಯಕತೆಗೆ ಇದು ಕಾಲವಲ್ಲ. ಮಲ್ಲೇಶ್ವರಂನಲ್ಲಿಳಿದು, ಗಾರ್ಡನ್ ಬಟ್ಟೆ ಎರಡೂವರೆ ಮೀಟರ್ ಹರಿಸಿಕೊಂಡೆ. ಒಂದಿಷ್ಟು ಸ್ಯಾಟಿನ್ ರಿಬ್ಬನ್, ಜರಿ, ಲೇಸು, ಅಲಂಕಾರದ ಗುಂಡಿಗಳನ್ನು ಕೊಂಡೆ. +‘ಏನು ಮಾಡ್ತಾ ಇದ್ದೀಯಾ ಅಮ್ಮಾ….’ ಎಂದಪುಟ್ಟಿಗೆ- +“ಆ ಫ್ರಾಕ್ ಯಾವುದೂ ಚೆನ್ನಾಗೇ ಇರಲಿಲ್ಲ ಪುಟ್ಟಿ. ನೋಡ್ತಾ ಇರು ಎಂಥಾ ಸಿಂಡ್ರೆಲ್ಲಾ ಡ್ರೆಸ್ ಹೊಲೀತೀನಿ….’ +ಅಪಮಾನಕ್ಕಿಂತ ದೊಡ್ಡ ಚಾಲಕಶಕ್ತಿ ಮತ್ತೊಂದಿರಲಾರದು. ಶೀಲಾ ಕೂಡಾ ತುಂಬಲು ಯತ್ನಿಸಿ ವಿಫಲಳಾದ ಆ ಸಾಹಸ ಪ್ರವೃತ್ತಿ ಮೈಮೇಲೆ ಆವರಿಸಿತ್ತು. ಹೊಲಿಗೆ ಯಂತ್ರದ ಮೇಲೆ ಕುಳಿತ ನನ್ನ ಕಣ್ಣ ಮುಂದೆ ಅಂಗಡಿಯ ಶೋ-ಕೇಸಿನಲ್ಲಿ ತೂಗಾಡಿದ ಆ ೩೦೦ ರೂ. ಗಳ ಫ್ರಾಕ್ ! ಕಡೆಗೂ ಹೊಲಿದು ಮುಗಿಸಿದ್ದೆ. ರಾತ್ರಿಯ ಆಳದಲ್ಲೇ ಲೇಸ್ ಜೋಡಿಸಿ, ಗುಂಡಿ ಅಲಂಕರಿಸಿ ಸಿದ್ಧವಾದಾಗ ನನ್ನ ಛಲವೇ ಗೆದ್ದಿತ್ತು…. ಸಿಂಡ್ರೆಲ್ಲಾ ಫ್ರಾಕ್! ಲೆಕ್ಕಹಾಕಿದೆ. ನೂರಾ ಐದು ರೂಪಾಯಿ ವೆಚ್ಚ ತಗುಲಿತ್ತು. ಒಂದು ನೂರು ರೂಗಳ ಉಡುಪಿಗೆ ಮುನ್ನೂರರ ಬೆಲೆಯೆ? ನನ್ನ ಬೆರಳ ತುದಿಯಲ್ಲಿ ಎಂಥ ಪ್ರತಿಭೆ ಇದೆ. ಅದನ್ನೇಕೆ ಕಟ್ಟಿ ಕೂಡಿ ಹಾಕಿರುವೆ? ನಾ ಬರೀ ಸೀರೆ ಅಂಚು, ಫಾಲ್ಸ್ ಹೊಲಿಯೋ ಹೆಂಗಸಲ್ಲ. ನಾ ಡಿಸೈನ್ ಮಾಡಬಲ್ಲೆ-ಅವರಿವರ ಬಟ್ಟೆ ಬರೆಗಳ, ತೋಳು ರವಿಕೆಗಳ, ಸಲವಾರ್-ಕಮೀಜುಗಳ, ಸಿಂಗರಿಸಬಲ್ಲೆ. ಲವಲವಿಕೆಯ ಲೇಸುಗಳಿಂದ ರಂಗೇರಿಸಬಲ್ಲೆ, ಬಣ್ಣ ಬಣ್ಣದ ಹೊಳಪು ಚಮಕಿಗಳಿಂದ… ನನ್ನ ಬದುಕನ್ನೂ, +ಈ ಒಂದು ಘಟನೆಯಲ್ಲ…. +ಮತ್ತೆ ಮತ್ತೆ ಎದುರಾದವು ನನಗೆ ಸವಾಲಾದ ಸಮಸ್ಯೆಗಳು, ಘಟನೆಗಳು. +ಅಂದು ಪುಟ್ಟಿಯನ್ನು ಎಳೆದುಕೊಂಡು ಎಂ. ಜಿ. ರಸ್ತೆಗೆ ಹೋಗಿದ್ದ ಪ್ರಸಂಗ, ‘ಲೇಕ್ ವ್ಯೂ’ ಬಳಿ ಬರುತ್ತಿದ್ದಂತೆ ಪುಟ್ಟಿ ಕುಣಿದಳು- +‘ಅಮ್ಮಾ ಐಸ್‌ಕ್ರೀಂ, ದೊಡ್ಡದು…. ಬ್ಲಾಕ್ ಫಾರೆಸ್ಟ್ ಐಸ್‌ಕ್ರೀಮ್….’ +ಅದೆಷ್ಟು ಬಾರಿ ಬಂದಿದ್ದೆ ಇಲ್ಲಿಗೆ…. ರವಿಯೊಡನೆ. ಬ್ಲಾಕ್ ಫಾರೆಸ್ಟ್…. ಹದಿನೆಂಟು ರೂಪಾಯಿ ಬೆಲೆಯದು…. ಮೆಲ್ಲನೆ ಪರ್ಸ್ ತೆರೆದೆ. ಹತ್ತು ರೂಪಾಯಿಯ ಒಂದು ನೋಟು, ಒಂದೂವರೆ ರೂಗಳ ಚಿಲ್ಲರೆ ವಿಷಾದದಿಂದ ನಕ್ಕಿತು. +‘ಈಗ ಬೇಡ ಪುಟ್ಟಿ, ಮತ್ತೆ ಬರೋಣ….’ +‘ಉಹುಂ ಈಗಲೇ ಬೇಕು….’ ಕಾಲನ್ನು ನೆಲಕ್ಕೆ ಅಪ್ಪಳಿಸಿ ಹಟದಿಂದ ಹೇಳಿದಳು. +‘ನೆಗಡಿಯಾಗುತ್ತೆ, ಕೆಮ್ಮು ಬರುತ್ತೆ ನೋಡು….’ ನನ್ನ ಒಣ ಗದರಿಕೆಯೆಂದೂ ಅವಳ ತಟ್ಟಲಿಲ್ಲ. +‘ಏನೂ ಬರೋಲ್ಲ, ಈಗಲೇ ಬೇಕು….’ ಆಗಲೇ ತಾರಕ ಸ್ವರ ಹೊರ ಬರುವ ಎಲ್ಲಾ ಸೂಚನೆಗಳೂ ಕಂಡವು. +ಸೋತೆ…. ಪೂರ್ಣ ಸೋತೆ. +‘ಪುಟ್ಟಿ…’ ಅವಳ ಕೆನ್ನೆ ಹಿಡಿದು ಅತ್ಯಂತ ದೀನಳಾಗಿ ಹೇಳಿದೆ- +‘ಪುಟ್ಟಿ, ನನ್ನತ್ರ ಹಣ ಇಲ್ಲ ಕಣೆ, ನೋಡು….’ ಖಾಲಿಯಾಗಿ ಸೊರಗಿ ಬಾಯಿಬಿಟ್ಟ ಪರ್ಸ್ ಹಿಡಿದೆ. ಪುಟ್ಟಿ ತಟ್ಟನೆ ಮೌನವಾದಳು. ಪರ್ಸ್‌ನೆಲ್ಲ ಒಮ್ಮೆ ತಡಕಾಡಿದಳು. ನನ್ನ ನೂರು ಸುಳ್ಳುಗಳಿಗಿಲ್ಲದ ತಾಕತ್ತು ಆ ಒಂದು ಸತ್ಯಕ್ಕಿತ್ತು. +‘ಯಾಕೆ ದುಡ್ಡಿಲ್ಲ….? ಮತ್ತೆ ಅಪ್ಪ ಯಾವಾಗ್ಲೂ ಕೊಡಿಸ್ತಿದ್ರು….’ +‘ಅಪ್ಪ ಹತ್ತಿರ ದುಡ್ಡಿದೆ ಪುಟ್ಟಿ…. ಅಪ್ಪ ಕೆಲಸ ಮಾಡ್ತಾರೆ….’ +ಅವಳಿಗೆ ಕೊಟ್ಟ ಉತ್ತರ ನನಗೇ ಹೇಳಿಕೊಂಡಂತಿತ್ತು. ಹಾಗಾದರೆ ನಾನೀವರೆಗೆ ಮಾಡಿದ್ದಾವುದೂ ಕೆಲಸವಲ್ಲವೆ? +ಮಾತಿಲ್ಲದೆ ಕಾಲೆಳೆಯುತ್ತಾ ನನ್ನ ಕೈ ಹಿಡಿದು ನಡೆದ ಸಪ್ಪೆ ಮುಖವನ್ನೇ ನೋಡಿದೆ. +‘ಸಾಫ್ಟೀ ಕೊಡಿಸಲಾ?’ ಪಕ್ಕದ ರಸ್ತೆ ಬದಿಯ ಎರಡು ರೂಪಾಯಿಯ ಕೋನ್ ತೆಗೆದುಕೊಟ್ಟೆ. ಸುಮ್ಮನೆ ಎತ್ತಿಕೊಂಡು ತಿನ್ನುತ್ತಾ ಬಂದಳು. +ಹೆಚ್ಚು ಮಾತಿಲ್ಲದೆ ಊಟ ಮುಗಿಯಿತು. ಹಾಸಿಗೆ ಸರಿಪಡಿಸಿ, ಕತ್ತಿನವರೆಗೂ ಬೆಚ್ಚಗೆ ಹೊದ್ದಿಸಿ ಮಲಗಿಸಿದೆ. ತಟ್ಟನೆ ಪುಟ್ಟಿ ಹಾಸಿಗೆಯಿಂದ ಪುಟಿದೆದ್ದು ಕುಳಿತಳು. +‘ಅಮ್ಮ ನನ್ನ ಫೀಸ್‌ಗೆ ಮತ್ತೆ ದುಡ್ಡು?’ ಅವಳ ಎಳೆಯ ಮುಖದಲ್ಲಿ ಗಾಢವಾದ ಆಕಂಕ ಅಭದ್ರತೆ, ಎದೆಯ ತಟ್ಟಿತು. ಮುಖ ಗೆಲುವಾಗಿಸಿ ಪ್ರಯತ್ನಪಟ್ಟು ಹೇಳಿದೆ- +‘ಅಪ್ಪ ದುಡ್ಡು ಕಳಿಸ್ತಾರೆ ಪುಟ್ಟಿ….’ +ತಿಂಗಳಿಗೊಮ್ಮೆ ಕಾಣುವ ಅಪ್ಪನ ಯಾವುದೋ ಭರವಸೆಯಲ್ಲಿ ಮತ್ತೆ ಹೊದ್ದು ಮಲಗಿದಳು. ಮಲಗಿದ ಅವಳ ಮುಖವನ್ನೇ ತುಂಬಿದಗಣ್ಣುಗಳಿಂದ ನೋಡಿದೆ. ಉಬ್ಬಿದ ಹಾಲುಗೆನ್ನೆಗಳ ನಡುವೆ ಸಣ್ಣ ಬಾಯಿ ನೋವಿನಿಂದ ನಸು ಬಾಗಿತ್ತು. ನಿದ್ದೆಯಲ್ಲೂ ಅತೃಪ್ತಿ-ಆತಂಕದ ಚಿನ್ಹೆ. ಮುಖದಲ್ಲಿ ದುಗುಡ ತುಂಬಿತ್ತು. +ದೇವರೆ, ನೊಂದವರ ಮೇಲೆ ನೋವುಗಳ ಹೇರಿ, ಬೆಂದವರ ಮೇಲೆ ಬೆಂಕಿಯ ಚೆಲ್ಲುವ ನಿನ್ನ ಈ ಪರಿ ಎಂಥದ್ದು? ನೋವು ನಲಿವುಗಳು ತಕ್ಕಡಿಯಲ್ಲಿ ತೂಗಿ ಸಮನಾಗಿ ಹಂಚಬೇಕಿತ್ತು ನೀನು. +ಒಳಗೆಲ್ಲ ಸಂಕಟ. ನನ್ನ ಮಗಳಿಗೆ, ವೈಭವದ ಐಶ್ವರ್ಯದ ಬದುಕು ಬೇಡ- ಅವಳಿಗೆ ಒಗ್ಗಿದ ಮಧ್ಯಮವರ್ಗದ ಬದುಕನ್ನೂ ನೀಡಲಾರದಾಗಿದ್ದೆ. ಪುಟ್ಟಿ ಕೇಳಿದ ಐಸ್‌ಕ್ರೀಂ ಕೊಡಿಸದ ಸಂಕಟ ಕಾಡಿತ್ತು. ಎಷ್ಟೋ ಬಾರಿ ನೆಗಡಿ, ಕೆಮ್ಮು ಇದ್ದಾಗ ಕೊಡಿಸದೆ ಗದರಿಸಿ ಕರೆತಂದದ್ದುಂಟು. ಆದರೆ ಎಂದೂ ಇಷ್ಟು ಸಂಕಟವಾಗಿರಲಿಲ್ಲ. ಪರ್ಸ್‌ನಲ್ಲಿ ಕೇವಲ ಹತ್ತು ರೂಪಾಯಿಗಳನ್ನು ಹಿಡಿದು ತಿಂಗಳ ಮತ್ತೈದು ದಿನಗಳನ್ನು ಎದುರುಗೊಳ್ಳುವ ಕಲ್ಪನೆಯೇ ಎದೆಯಲ್ಲಿ ತಮಟೆ ಬಾರಿಸಿತ್ತು. +ತಟ್ಟನೆ ಎದ್ದೆ. ಪುಟ್ಟಿಗೆ ಹೊದಿಕೆ ಹೊದ್ದಿಸಿ, ದೀಪ ಆರಿಸಿ ಹಾಲಿಗೆ ಬಂದೆ. ಶೀಲಾ ತಂದಿಟ್ಟ ಫ್ಯಾಷನ್ ಪತ್ರಿಕೆಗಳನ್ನು ಹೊರಗೆಳೆದೆ. ಒಂದೊಂದು ಉಡುಪಿನ ವಿನ್ಯಾಸವನ್ನು ಅಧ್ಯಯಿಸುತ್ತಾ ಬೇಕಾಗುವ ಸಾಮುಗ್ರಿ-ಬಟ್ಟೆಯ ಅಳತೆ ಅಂದಾಜು ಮಾಡಿ ಪಟ್ಟಿ ಮಾಡತೊಡಗಿದೆ. ನಾ ಡಿಸೈನರ್ ಆಗಲೇಬೇಕು…. ಈ ಹರಕು ವರ್ತಮಾನಕ್ಕೆ ತೇಪೆ ಹಚ್ಚುವ ಕೆಲಸ ಬೇಡ. ನಾಳಿನ ಚಿಂತೆ ಇಲ್ಲದಷ್ಟು ಹಣ ಸಂಪಾದಿಸುವ ಉದ್ಯಮಿಯಾಗಬೇಕು. ಪುಟ್ಟಿಗೆ ಅವಳಿಗೊಗ್ಗಿದ ಬದುಕನ್ನು ನೀಡುವಷ್ಟು. +ನನಗೆ ಅಷ್ಟೈಶ್ವರ್ಯಗಳೂ ಬೇಕು. ಕಮರ್ಷಿಯಲ್ ರಸ್ತೆಯಲ್ಲಿ ಮುನ್ನೂರರ ಆ ಫ್ರಾಕು ಕೊಳ್ಳುವೆನೋ ಇಲ್ಲವೋ, ಆ ಕೊಳ್ಳಬಲ್ಲ ಶಕ್ತಿ ನಾನು ಗಳಿಸಬೇಕು. ಹದಿನೆಂಟು ರೂಪಾಯಿಗಳ ಐಸ್‌ಕ್ರೀಂಗೆ ಸುರಿಯುವುದು ಎಷ್ಟು ಸಾಧುವೋ ಚಿಂತೆ ಇಲ್ಲ. ಅದು ಬೇಡ ಎಂದು ನಿರ್ಣಯಿಸಬಲ್ಲ ಆಯ್ಕೆ ನನಗೆ ಬೇಕು. +ಈ ಹಣದಿಂದ ಎಲ್ಲವನ್ನೂ ಕೊಳ್ಳಲಾರೆ ನಿಜ. ಆದರೆ ಹಣದಿಂದ ನಾನು ಬಹಳಷ್ಟು ಕೊಳ್ಳಬಲ್ಲೆ. ಹಣವನ್ನು ಬೇಡವೆನ್ನುವ ಆಯ್ಕೆ ನನಗಿರಲಿ. ಇಲ್ಲದ್ದನ್ನು ಒಲ್ಲೆನೆನ್ನುವ ಹುಸಿ ವೈರಾಗ್ಯ ಬೇಡ. ಮತ್ತೆ ಮುಷ್ಟಿಯಲ್ಲಿ ಮುದುಡಿದ ಹತ್ತು ರೂ. ಹಿಡಿದು ತಿಂಗಳ ಮತ್ತೈದು ದಿನಗಳನ್ನು ಎದುರು ನೋಡುವ ಭಯಂಕರ ನಿರೀಕ್ಷೆ ಬೇಡ. +ನನ್ನ ಹಣ ನನಗೆ ಬಹಳಷ್ಟನ್ನು ಕೊಡಬಲ್ಲದು. +-ಪುಟ್ಟಿಯ ಭವಿಷ್ಯವನ್ನು ಕೊಡಬಲ್ಲದು. +-ನನ್ನ ನಾಳೆಗಳನ್ನು ಕೊಡಬಲ್ಲದು. +-ನನ್ನ ಕಳಕೊಂಡ ಆತ್ಮವಿಶ್ವಾಸವನ್ನು ಕೊಡಬಲ್ಲದು. +ಇದಾವುದನ್ನೂ ರವಿಯ ಹಣ ನನಗೆ ಒದಗಿಸಲಾರದು. ಬಲಾತ್ಕಾರದ ಕರ್ತವ್ಯ ನಿರ್ವಹಣೆಯ ಆ ಹಣ ತಿಂಗಳಿಗೆ ಸಾವಿರವಲ್ಲ, ಹತ್ತು ಸಾವಿರವಾದರೂ ನನ್ನ ಬದುಕಿಗೆ ಮತ್ತೆ ಭದ್ರತೆಯನ್ನು ನೀಡಲಾರದು. +ಮನಸ್ಸಿನ ಮೂಲೆಯಲ್ಲಿದ್ದ ಕಹಿಯನ್ನೆಲ್ಲ ಗುಡಿಸಿ ಹಾಕಿದೆ. +ಪರೀಕ್ಷೆಗಿಡದ ಪ್ರೀತಿಗಳಿಗಿಂತ ಈ ಸೋತ ಸಂಬಂಧಗಳೇ ಮೇಲೇನೋ. +ಏಕಾಯಿತು ಹೀಗೆ? ಏಕೆ? ಉತ್ತರವಿಲ್ಲದ ಪ್ರಶ್ನೆಗಳನ್ನು ಕೇಳಿಕೊಳ್ಳುವುದೇಕೆ? ಉಪಯೋಗವಿಲ್ಲದ ಉತ್ತರಗಳ ತಲಾಷೆಯಾದರೂ ಏಕೆ? ಈ ಉತ್ತರಗಳೊಂದೂ ಅವನನ್ನು ನನ್ನಲ್ಲಿಗೆ ಮತ್ತೆ ತರಲಾರವು. +ಅವನನ್ನೇ ಕೇಳಿದರೆ ಕಾರಣಗಳನ್ನು ಪೋಣಿಸಬಲ್ಲ…. ಹತ್ತಲ್ಲ… ನೂರು. ಅದೆಲ್ಲ ಮತ್ತೆ ಯೋಚಿಸಿದ ನಂತರ ಹುಟ್ಟಿದ ಕಾರಣಗಳು…. ನೆಪಗಳು ಬರೀ ನೆಪಗಳು. ಶೀಲಾ ಹೇಳಿದ್ದು ನಿಜವಿರಬಹುದು- ‘ಇದ್ದದ್ದೆಲ್ಲ ಹಳತಾಗುತ್ತದೆ. ಹೆಂಡತಿಯೂ ಸೇರಿದಂತೆ….’ ಎಂದು ನಕ್ಕಿದ್ದಳು. ನಾನೂ ತೆಪ್ಪಗೆ ನಕ್ಕೆ, ಗೆಲುವಾದೆ, ಅವನ ದೌರ್ಬಲ್ಯಕ್ಕೆ ನನ್ನಲ್ಲೇಕೆ ತಪ್ಪುಗಳ ಹುಡುಕಿಕೊಳ್ಳಲಿ! ‘ಹೌದು ಶೀಲಾ, ಹಲತಾದದ್ದೆಲ್ಲ ಆಕರ್ಷಣೆ ಕಳಕೊಳ್ಳುತ್ತದೆ, ಗಂಡನೂ ಸೇರಿದಂತೆ….’ ಎಂದೆ. ‘ಹೌದಾ….?’ ಹುಬ್ಬೇರಿಸಿ ನಕ್ಕಳು. ‘ಹೂಂ, ಹೀಗಿದ್ದೂ, ಮೆಟ್ಟ ಚಪ್ಪಲಿಯಂತೆ, ಹೊದ್ದ ಛಾದರದಂತೆ, ತೊಟ್ಟ ಬಳೆಯಂತೆ, ಬಳಸಿದ್ದೆಲ್ಲ ಹಿತವಾಗಿರುತ್ತದೆ…. ಹಳತಾದಂತೆ. ಬದುಕನ್ನು ಈ ತಿರುವಿನಲ್ಲಿ ತಟ್ಟನೆ ಹೊಸತಾಗಿ ಪ್ರಾರಂಭಿಸೋದು ಎಷ್ಟು ಕಷ್ಟ….’ +‘ಇದು ಕಥೆಯಲ್ಲ, ಸಿನೆಮಾ ಅಲ್ಲ. ಮೂರನೆಯ ಹೆಣ್ಣು ಖಳನಾಯಕಿಯಾಗಬೇಕಿಲ್ಲ. ಪತ್ನಿಯ ಪಾತಿವ್ರತ್ಯದ ಅಖಂಡ ಜಯವಾಗಬೇಕಿಲ್ಲ…’ ಶೀಲಾ ಮತ್ತೆ ವಾಸ್ತವಕ್ಕೆ ಎಳೆದಳು. +ನಾ ಮತ್ತೆ ಮತ್ತೆ ಹೇಳಿಕೊಂಡೆ. ಚಡಪಡಿಸಿದ ಮನಸ್ಸಿನ ತಲೆಯ ಮೇಲೆ ಮೊಟ್ಟಿ ಮೊಟ್ಟಿ ಹೇಳಿಕೊಂಡ ಮಾತು…. ಬಿಡು ಅವನನ್ನು, ಅವನ ಬದುಕಿಗೆ. +ನಿನ್ನ ನೀತಿ-ಪ್ರೀತಿ ತಕ್ಕಡಿಯಲ್ಲಿ ತೂಗಿ ಸೋಲುವುದೇಕೆ, ಅದರ ಫಲಿತಾಂಶಗಳೆಂದೂ ಅವನ ತಟ್ಟದ ಮೇಲೆ. ಅವನಿಗೆ ಶಿಕ್ಷೆ ನೀಡುವ ಹಕ್ಕು, ಅಧಿಕಾರವಿಲ್ಲದಾಗ ಅವನ ತಪ್ಪು-ಒಪ್ಪುಗಳನ್ನು, ಪಾಪ-ಪುಣ್ಯಗಳನ್ನು, ನ್ಯಾಯ-ಅನ್ಯಾಯಗಳನ್ನು ತೂಗಿ ತೂಗಿ ತೃಪ್ತಿ ಪಡುವುದೇಕೆ? ಬಿಡು ಅವನನ್ನು ಅವನ ಬದುಕಿಗೆ, ಅದರೊಡನೆಯ ಪಾಪ-ಪುಣ್ಯಗಳ ತಕ್ಕಡಿಗೆ, ಒಪ್ಪು-ತಪ್ಪುಗಳ ಇತ್ಯರ್ಥಕ್ಕೆ, ಪ್ರೀತಿ-ಪ್ರೇಮಗಳ ಹೆಣಗಾಟಕ್ಕೆ. ಮತ್ತೆ ಮತ್ತೆ ಮಂತ್ರದಂತೆ ಹೇಳಿಕೊಂಡೆ. ಅವನತ್ತ ವ್ಯರ್ಥ ಚಿಂತಿಸಿ ಪೋಲಾಗುತ್ತಿದ್ದ ತನ್ನ ಮನಸ್ಸನ್ನು ಎಳೆದೆಳೆದು ಗೂಟಕ್ಕೆ ಕಟ್ಟಿದೆ-ವರ್ತಮಾನದ ಗೂಟಕ್ಕೆ ನನ್ನ ಶಕ್ತಿ ಚಿಂತನಾ ಸಾಮರ್ಥ್ಯವನ್ನೆಲ್ಲ ಆಕ್ರೋಶದ ಕಡಾಯಿಯಲ್ಲಿ ಹಾಕಿ ಕುದಿಸಿ ಕುದಿಸಿ ಕರಕಲಾಗಿಸುವುದರಲ್ಲೇನು ಲಾಭ? +ಕ್ಲೀಷೆಯಾಗುವಷ್ಟು ಬಾರಿ ಶೀಲಾ ಹೇಳಿ ಹೋದಳು- +‘ಬದುಕು ಎಲ್ಲವನ್ನೂ ಕಲಿಸುತ್ತದೆ, ಬದುಕುವುದನ್ನೂ….’ +ಕಲಿಕೆ ಕಷ್ಟವಿರಲಿಲ್ಲ, ನಾನಂದುಕೊಂಡಷ್ಟು. ಮೊದಲ ಹೆಜ್ಜೆಯಷ್ಟೇ ಭಾರವಿತ್ತು. ಎತ್ತಿ ಇಟ್ಟೊಡನೆ ನಡಿಗೆ ಸುಲಭವಾಯ್ತು. ಆರಂಭವಷ್ಟೇ ಪ್ರಾಯಾಸದ್ದು, ಹಾದಿ ಹಗುರವಿತ್ತು. ಹೊರಗಿನ ಪ್ರಪಂಚ ನಾನು ಕಲ್ಪಿಸಿದಷ್ಟು ಭಯಂಕರವಿರಲಿಲ್ಲ. ನನ್ನ ನೋಡಿ ನಕ್ಕು ಮುಕ್ಕಳಿಸಲು ಜನಕ್ಕೆ ಸಮಯವೆಲ್ಲಿ? ತಮ್ಮ ಬದುಕಿನ ಓಟದಲ್ಲಿ ಓಡುತ್ತಿರುವ ಜನ…. ಪುರುಸೊತ್ತಿಲ್ಲದ ಜನ. +ಮುಗುಳ್ನಗೆ, ಮೊದಲ ಬಾರಿಗೆ ಸ್ವಾತಂತ್ರ್ಯದ ಅನುಭವವಾಯಿತು. ಏಕಾಂತ ನಾನು ಕಲ್ಪಿಸಿದಷ್ಟು ಅಸಹನೀಯವಿರಲಿಲ್ಲ. ಸ್ವಲ್ಪ ಸ್ವಲ್ಪವಾಗಿ ಸಹ್ಯವಾಗುತ್ತಾ ಆಪ್ತವಾಗತೊಡಗಿತು. ‘ನನಗೆ ಸ್ವತಂತ್ರ ಕೊಡು’ ಅಂದಿದ್ದ ಅವ, ಅವನ ನೆನಪು-ಅಪರಾಧಿ ಪ್ರಜ್ಞೆಯಿಂದ ಸ್ವತಂತ್ರನಾದನೋ ಇಲ್ಲವೋ ಗೊತ್ತಿಲ್ಲ. ಅವನಿಗೆ ಸ್ವಾತಂತ್ರ್ಯ ನೀಡುತ್ತಲೇ ನಾನು ಸ್ವತಂತ್ರಳಾದೆ. ನನ್ನೊಳಗಿನ-ನಾನೇ ಗುರುತಿಸಿರದ ವ್ಯಕ್ತಿಯೊಂದು ನುಸುಳಿ ಹೊರಬಂದಿತ್ತು. +ನನ್ನ ಬದುಕಿನಲ್ಲಿ ಮತ್ತೆ ಸ್ನೇಹ-ಸಂಬಂಧಗಳು ಬರಬಹುದು, ಆದರೆ ಅವಲಂಬನೆಗಳಲ್ಲ. +ನನ್ನ ಬದುಕಿನಲ್ಲಿ ಮತ್ತೆ ಪುರುಷರು ಹಾಯಬಹುದು, ಆದರೆ ಯಜಮಾನರಲ್ಲ. +ನಾನಿಂದು ಯಾರಿಗೂ ಉತ್ತರಿಸಬೇಕಿಲ್ಲ. ಎಲ್ಲಿ ಹೋದೆ, ಯಾವಾಗ ಬಂದೆ. ಏನು ಮಾಡಿದೆ, ಅಡಿಗೆ ಏಕಾಗಿಲ್ಲ, ಕಾಫಿ ಬಿಸಿ ಇಲ್ಲ-ಯಾವುದಕ್ಕೂ ಉತ್ತರಿಸಬೇಕಿಲ್ಲ. ಬದುಕು ಒಂಟಿತನವನ್ನೇ ನನ್ನ ಜೋಳಿಗೆಗೆ ಹಾಕಿದ್ದರೆ, ಈ ಏಕಾಂತದಲ್ಲೇ ಅಡಗಿರುವ ಲಾಭವನ್ನು ಅಗೆಯ ಹೋದೆ, ನಿಜವಾದ ಉದ್ಯಮಿಯಂತೆ! ಸುಳ್ಳು ಏಕೆ…. ನಿಜ, ರಾತ್ರಿಗಳು ತಟ್ಟನೆ ತಣ್ಣಗಾಗುತ್ತವೆ…. ಗ್ರೀಷ್ಮದ ರಾತ್ರಿಗಳೂ ಕೂಡಾ. ನಮ್ಮದೊಂದು ಅದ್ಭುತ ಲೈಂಗಿಕ ಬದುಕಿತ್ತು ಎಂದಲ್ಲ. ಹೀಗಿದ್ದೂ ರವಿ ಹುದುಗಿಕೊಂಡಿರುವ ಎದೆಯಲ್ಲಿ ಮುಳ್ಳಿನ ಹಾಗೆ, ನೆನಪಾದಾಗಲೆಲ್ಲ ಅಲುಗಿ ನೋಯುವ ಹಾಗೆ, ಇವನ ನೆನಪು, ಅದುಮಿ ಇಟ್ಟಷ್ಟೂ ಪುಟಿವ ಚಂಡು. ನನ್ನ ಜಾಗೃತ ಅವಸ್ಥೆಗೆ ಮರೆಯಾಗಿ, ಇಲ್ಲ ಮರೆತಂತೆ ನಟಿಸುವಾಗಲೇ ರಾತ್ರಿ ಕನಸಿನಲ್ಲಿ ತಟ್ಟನೆ ಮೈ-ಮನಗಳನ್ನು ಮುಟ್ಟಿ ಬೆಚ್ಚಿಸುವುದುಂಟು. ನನ್ನ ಚಿಂತನೆಯ ಎಷ್ಟು ಭಾಗವನ್ನು ಕೆಲವು ಕಾಲದ ಮಟ್ಟಿಗಾದರೂ ಅವ ಆವರಿಸಿದ್ದು ತಿಳಿದರೆ, ಅವನಿಗಿರಲಿ ನನಗೇ ಅಚ್ಚರಿಯಾಗುತ್ತದೆ. +ಈಗ ನಾ ಹೋರಾಡುವುದನ್ನು ಬಿಟ್ಟೆ, ನೆನಪುಗಳನ್ನು ಉದ್ದೇಶಪೂರ್ವಕವಾಗಿ ತಡೆಹಿಡಿಯುವುದನ್ನು ಬಿಟ್ಟೆ. ಬನ್ನಿ ನೆನಪುಗಳೇ ಅದೇನು ಮಾಡುತ್ತೀರೋ ಎಂದು ಎದೆ ಕೊಟ್ಟು ನಿಂತೆ. ಭೂತವನ್ನು ಅಳಿಸುವ ಶ್ರಮವೇಕೆ? ಭೂತವನ್ನು ಭೂತವಾಗಿ ಸ್ವೀಕರಿಸಿಬಿಟ್ಟರಾಯಿತು, ಭವಿಷ್ಯವಾಗಲು ಬಿಡದೆ. +ಮತ್ತೆ ಪ್ರಾರಂಭಿಸಿದೆ, ಅರೆಮನಸ್ಸಿನ ಯತ್ನವಲ್ಲ, ಪೂರ್ಣಪ್ರಮಾಣದ ಪ್ರಯತ್ನ. +ಶೀಲಾ ನಾಲ್ಕು ಜನ ಪರಿಚಯ ಇದ್ದವಳು, ಹೊರಗೆ ತಿರುಗಾಡುವವಳು. ನಾನು ರಾತ್ರಿಯೆಲ್ಲ ಕುಳಿತು ಡಿಸೈನ್ ಮಾಡಿದ ಸಲವಾರ್-ಕಮೀಜಗಳನ್ನು ತಾನೇ ಹಾಕಿಕೊಂಡು ಜಾಹೀರಾತು ಮಾಡಿದಳು. ಬಹಳ ಪರಿಶ್ರಮದಿಂದ ಐದಾರು ಸೆಟ್ ತಯಾರಿಸಿದ್ದೆ. ಭಾರವಾದ ತಾಳಿ ಸರ ಮಾರಿ ಬಂದ ಹಣದಲ್ಲಿ ಬಹಳಷ್ಟನ್ನು ನನ್ನ ಗಾರ್ಮೆಂಟ್ ಉದ್ಯಮಕ್ಕೆ ತೊಡಗಿಸಿದೆ. ಶೀಲಾ ನನ್ನ ಹೊಸ ಉತ್ಸಾಹ ಕಂಡಳು. ನಾಲ್ಕೇ ವಾರದಲ್ಲಿ ಒಂದಷ್ಟು ಆರ್ಡರ್‍ಸ್ ತಂದಳು. ಮನೆಯಲ್ಲೇ ಸಿದ್ಧ ಉಡುಪುಗಳನ್ನು ತೂಗುಹಾಕಲು ಸಮಯ ಹಿಡಿಯಲಿಲ್ಲ. ಹತ್ತು-ಹದಿನೈದು ಉಡುಪುಗಳು ಸದಾ ಸಿದ್ಧವಿದ್ದವು. ಮೆಲ್ಲಮೆಲ್ಲನೆ ನನ್ನ ಮುದುಡಿದ ನೈಟಿಯ ಕವಚದಿಂದ ಪೂರ್ಣ ಪ್ರಮಾಣದ ಮಹಿಳಾ ಉದ್ಯಮಿ ಹೊರಬಂದಳು-ಸುತ್ತಮುತ್ತಲ ಕಾಲೇಜು ಹುಡುಗಿಯರು, ಅವರ ಸ್ನೇಹಿತರು…. ಆರು ತಿಂಗಳು, ಕೇವಲ ಆರು ತಿಂಗಳು…. ನನ್ನ ಆದಾಯ ಎರಡು ಸಾವಿರ ಮುಟ್ಟಿತ್ತು! +ನನ್ನ ನೋಡುತ್ತಿದ್ದ ಪುಟ್ಟಿಯ ಕಣ್ಣುಗಳಲ್ಲಿ ಹೊಳಪು-ಹೆಮ್ಮೆ ಕಂಡೆ. ಮೆಲ್ಲಮೆಲ್ಲನೆ ಹಣವಿಲ್ಲದ ಆತಂಕ ತಗ್ಗಿತು. ಅವಳ ಊಟ-ತಿಂಡಿ-ಉಡುಪುಗಳಲ್ಲಿ ಕಡಿತವಿರಲಿಲ್ಲ. ಈ ಮಧ್ಯೆ ಶೀಲಾ ತನ್ನ ಬಳಿಗೆ ಯಾವುದೋ ದೂರದರ್ಶನದ ಸ್ಕ್ರಿಪ್ಟ್‌ಗೆಂದು ವೈಧ್ಯಕೀಯ ಮಾಹಿತಿ ಹುಡುಕಿ ಬಂದ ನಿರ್ದೇಶಕನಿಗೆ ನನ್ನ ಹೆಸರು ಸೂಚಿಸಿದ್ದಳು. ‘ವಸ್ತ್ರ ವಿನ್ಯಾಸ’- ನನ್ನ ಸಾಧಾರಣ ಹೊಲಿಗೆಗೆ ಹೊಸ ಹೊಸ ಹೆಸರುಗಳು, ಮಾಧ್ಯಮಗಳು, ಆಯಾಮಗಳು, ‘ಕ್ರೆಡಿಟ್ ಲೈನ್’ ಇರಬೇಕೆಂಬ ಒಪ್ಪಂದದ ಮೇಲೆ ಒಪ್ಪಿದೆ. ಮೊದಲ ಪ್ರಯತ್ನ. ಹಗಲಿರುಳ ನಿದ್ದೆ ತೊರೆದು ಹೊಚ್ಚ ಹೊಸ ವಿನ್ಯಾಸಗಳನ್ನು ಹುಡುಕಿದೆ. ದೇಶೀ, ವಿದೇಶೀ, ಪತ್ರಿಕೆಗಳನ್ನೆಲ್ಲಾ ತಡಕಾಡಿ ಹೊಂದಿಸಿದೆ. ಬದುಕು ಬದಲಾಯಿತು, ಪುಟ್ಟ ತೆರೆಯ ಮೇಲೆ ಪ್ರಸಾರವಾದ ಆ ಒಂದು ಸಾಲಿನಿಂದ, ವಸ್ತ್ರ ವಿನ್ಯಾಸ- ‘ಮಧು ಬುಟೀಕ್, ಮಲ್ಲೇಶ್ವರಂ.’ +ಮತ್ತೆಂದೂ ಹಿಂದೆ ನೋಡುವ, ನಾ ಹೊರಟ ಹಾದಿಯಲ್ಲಿ ತಡವರಿಸುವ ಅಪಾಯವಿಲ್ಲದೆ ನಡೆದೆ. ಭವಿಷ್ಯದ ಗಾಬರಿ ಮರೆಯಾಯಿತು. ಬ್ಯಾಂಕ್‌ನಲ್ಲಿ ಸ್ವಲ್ಪ ಸ್ವಲ್ಪವಾಗಿ ಕೂಡಿದ ಹಣ ಎದೆಯ ಆತಂಕ ಸಂಪೂರ್ಣ ತಗ್ಗಿಸಿತು. ಒಂದು ದೊಡ್ಡ ಪ್ರಶ್ನೆಯಾಗಿದ್ದ ‘ನಾಳೆ’ ನೂರು ಅರ್ಥಗಳೊಡನೆ, ನೂರು ಸಾಧ್ಯತೆಗಳೊಡನೆ ಕೈ ನೀಡಿತು. +‘ಅಮ್ಮ ನಾ ಫಸ್ಟ್ ಬಂದಿದ್ದೀನಿ….’ ರಿಪೋರ್ಟ್ ಕಾರ್ಡ್ ಹಿಡಿದು ಕುಣಿಯುತ್ತಾ ಬಂದ ಪುಟ್ಟಿಯ ಎತ್ತಿ ಮುತ್ತಿಟ್ಟೆ. +‘ಅಮ್ಮ ನಂಗೇನ್ ಕೊಡಿಸ್ತೀಯಾ?’ ಪುಟ್ಟಿ ಕೇಳಿದಳು. +‘ನಡಿ ಸೆಲಿಬ್ರೇಟ್ ಮಾಡೋಣ….’ ಬಟ್ಟೆ ಬದಲಿಸುತ್ತಾ ಹೇಳಿದೆ. +‘ನಾವಿಬ್ರೆ?’ +‘ನಾವಿಬ್ರೂ….’ ಒತ್ತಿ ಹೇಳಿದೆ. +ಅದೇ ‘ಲೇಕ್ ವ್ಯೂ.’ ಏನೂ ಬದಲಾಗಿರಲಿಲ್ಲ. ಐಸ್‌ಕ್ರೀಂ ಬೆಲೆಯ ಹೊರತು. +‘ಅಮ್ಮ ಐಸ್‌ಕ್ರೀಂ…. ದೊಡ್ಡದು….’ ಕುರ್ಚಿಯಿಂದ ಕಾಲು ಕೆಳಗೆ ಇಳಿಬಿಟ್ಟು, ಜೋಡಿ ಜುಟ್ಟುಗಳನ್ನು ಕುಣಿಸುತ್ತಾ ಹೇಳಿದಳು. ಗಲ್ಲಕ್ಕೆ ಕೈಯೂರಿ ಖುಷಿಯಿಂದ ಮೇಜಿನ ಮೇಲೆ ತಾಳ ಕುಟ್ಟುತ್ತಾ ಕೂತೆ. ಬೇರರ್ ಬಂದ, ಮೆನು ಕಾರ್ಡ್ ಕೈಗಿಟ್ಟ. +‘ಐಸ್‌ಕ್ರೀಂ-ಮೆರ್ರಿ ವಿಡೋ ಸ್ಪೆಷಲ್…. ಎರಡು’ +‘ದೊಡ್ಡದು….’ ಪುಟ್ಟಿ ಅವಳ ಪರಿಯಲ್ಲಿ ಹೇಳಿದಳು. +ಅಗಲ ಪಿಂಗಾಣಿ ತಟ್ಟೆಯಲ್ಲಿ ಹರಡಿಕೊಂಡ ಮೂರು-ನಾಲ್ಕು ಸವಿಯ ಐಸ್‌ಕ್ರೀಂ ಮೇಲೆ ಕಂದುಬಣ್ಣದ ಕೇಕಿನ ನಾಲ್ಕು ತುಂಡುಗಳ ಅಲಂಕೃತ ಮುಕುಟ. ಯಾರು ಇದಕ್ಕೆ ಈ ಹೆಸರಿಟ್ಟವರು…. ‘ಮೆರ್ರಿ ವಿಡೋ ಸ್ಪೆಷಲ್’…. ಮೆರ್ರಿ….! ಜೋರಾಗಿ ನಗತೊಡಗಿದೆ. +‘ತುಂಬಾ ಚೆನ್ನಾಗಿ ಇದೆ ಅಲ್ಲ ಅಮ್ಮಾ ?’ ಪುಟ್ಟಿ ಸವಿ ಸವಿದು ತಿಂದಳು. +‘ಹೂಂ….’ ಎಂದೆ. ಸಂತೃಪ್ತಿಯ ಅವಳ ಮುಖವನ್ನೇ ನೋಡುತ್ತ . +ಶೀಲಾ ಯಾವಾಗಲೂ ಗುಣಿಗುಣಿಸುತ್ತಿದ್ದ ‘ಸಮತಾ’ದ ಹಾಡು ಕಿವಿಯಲ್ಲಿ ಮೊರೆ ಇಟ್ಟಿತು – +‘ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವಾ…. ಬೆಳಕಿಗಿಂದು ಹೊರಗೆ ಬಾ ಕಂಡೀತು ಜೀವನ….’ +ಬಿಲ್ ಕೊಟ್ಟು ಹೊರಗೆ ಬಂದೆ. ಆಕಾಶದಲ್ಲಿ ಅಲ್ಲಿಷ್ಟು ಕಪ್ಪು ಮೋಡ ಆವರಿಸಿತ್ತು. +‘ಮಳೆ ಬರುತ್ತೆ ಬೇಗ ಹೋಗೋಣ ಬಾ ಪುಟ್ಟಿ….’ ಕೈ ಹಿಡಿದು ಹೊರಟೆ, ತಟ್ಟನೆ ಎದುರಿಗೆ ರವಿ ನಿಂತಿದ್ದ! +‘ಅಪ್ಪಾ….’ ಜೋರಾಗಿ ಓಡಿ ಪುಟ್ಟಿ ಅಪ್ಪಿದಳು. ರವಿ ಎರಡೂ ಕೆನ್ನೆಗೆ ಮುತ್ತಿಟ್ಟ, +‘ಪುಟ್ಟಿ ಐಸ್‌ಕ್ರೀಂ ತಿಂತಿಯಾ ?’ ಮುದ್ದಿನಿಂದ ಕೇಳಿದ. +‘ನಾವಾಗ್ಲೇ ತಿಂದ್ವಿ….’ +ಪುಟ್ಟಿಯನ್ನು ಮೆಲ್ಲನೆ ಕೆಳಗಿಳಿಸಿ, ರವಿ ನನ್ನನ್ನೇ ನೋಡಿದ. ಮೂರು ಹೊತ್ತು ನೈಟಿಯಲ್ಲಿ ಕಂಡಿದ್ದ ಪತ್ನಿಯ ಗುರುತು ಸಿಕ್ಕಲಿಲ್ಲವೇನೋ, ರವಿ ಬಿಟ್ಟುಹೋದ ಹೆಣ್ಣು ಅಲ್ಲಿರಲಿಲ್ಲ. ಅವನಲ್ಲಿ ಒಂದಿಷ್ಟು ಅಳುಕಿತ್ತು, ಅಪರಾಧೀ ಪ್ರಜ್ಞೆ ತುಡಿದಿರಬೇಕು. +‘ಮಧೂ ಹಣದ ತೊಂದರೆ ಏನಾದ್ರೂ ಇದೆಯಾ? ಸಾವಿರದೈನೂರರಲ್ಲಿ ಸಂಭಾಳಿಸೋದು ಕಷ್ಟ ಗೊತ್ತು. ಆದರೆ ನನ್ನೊಬ್ಬನ ಸಂಬಳದಲ್ಲಿ ಎರಡು ಸಂಸಾರ ನಡೀಬೇಕು. ನನಗೀಬಾರಿ ಪೇ-ರಿವೈಸ್ ಆದ್ರೆ ಸ್ವಲ್ಪ ಹೆಚ್ಚು ಕೊಡಬಲ್ಲೆ….’ ತಡವರಿಸಿದ. ನಾ ಮೆಲ್ಲನೆ ನಕ್ಕೆ. +‘ಡೋಂಟ್ ವರಿ ರವಿ. ನೀ ನನಗಾಗಿ ಕಳಿಸೋ ಅವಶ್ಯಕತೆ ಇಲ್ಲ. ಆದರೆ ಹಾಂ…. ಈ ಪುಟ್ಟಿ ನನ್ನ ಮಗಳಂತೆ ನಿನ್ನ ಮಗಳೂ ಹೌದು. ಅವಳಿಗೆ ಅಪ್ಪನ ಹಕ್ಕು ಖಂಡಿತಾ ಇದೆ. ನನಗೆ ಕಳಿಸ್ತಾ ಇದ್ದ ಹಣಾನ ಬೇಕಾದ್ರೆ ಅವಳ ಹೆಸರಲ್ಲಿ ಬ್ಯಾಂಕಿಗೆ ಹಾಕು….’ +‘ಆದ್ರೆ ನೀ ಹೇಗೆ….’ ಅವನ ಮಾತನ್ನು ಮಧ್ಯೆ ತುಂಡರಿಸಿ ಹೇಳಿದೆ- +‘ರವಿ ಅವಲಂಬಿತರು ಎಂದಾದರೂ ತಮ್ಮ ಕಾಲ ಮೇಲೆ ತಾವು ನಿಲ್ಲಲೇಬೇಕು…. ಪುಟ್ಟಿ ಹೊರಡೋಣ, ಅಪ್ಪಂಗೆ ಟಾಟಾ ಮಾಡು….’ +ಆಟೋದಲ್ಲಿ ಕುಳಿತು, ಕಲ್ಲಿನಂತೆ ನಿಂತೇ ಇದ್ದ ರವಿಗೆ ಕೈ ಬೀಸಿದೆ. ತಲೆ ಹೊರಹಾಕಿ ನೋಡಿದೆ- +ಆಗಸದಲ್ಲಿ ಮೂಡಿದ್ದ ಕಪ್ಪು ಮೋಡಕ್ಕೊಂದು ಬೆಳ್ಳಿ ಅಂಚಿತ್ತು. +***** +(ಸ್ಪಾನಿಶ್) ಮೂಲ ಲೇಖಕರು: ಹೊರ್ಹೆ ಲೂಯಿ ಬೊರ್ಹೆಸ್ ಅರ್ಚಕ ಗೋವಿಂದನೇನೊ ಒಳ್ಳೆಯವನೇ. ಉತ್ತಮ ಮನೆತನ, ಬ೦ಧುಗಳು, ತಕ್ಕಷ್ಟು ವಿದ್ಯೆ ಬೇರೆ. ಆದರೆ, ಮನೆತನದಿ೦ದ ಬ೦ದ ವೈದಿಕ ವೃತ್ತಿಯಿ೦ದಷ್ಟೇ ಅವನಿಗೆ ತೃಪ್ತಿಯಿಲ್ಲ. ಮಂತ್ರ-ತಂತ್ರ ವಿದ್ಯೆ, ಪವಾಡಗಳನ್ನು […] +ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […] +ಅಂದು ಭಾನುವಾರ, ಡಿಸೆಂಬರ್ ೨೬. ರಾಜು ಮತ್ತು ಕುಸುಮ ಮದುವೆಯಾಗಿ ಅಂದಿಗೆ ೫ ವರ್ಷಗಳಾಗಿತ್ತು. ಆಕಸ್ಮಿಕವಾಗಿ ಅವರ ಬಾಲ್ಯ ಸ್ನೇಹಿತ ಕಿಶೋರ್ ಕೂಡ ಯಾವುದೋ ಬಿಜ಼ಿನೆಸ್ ಟ್ರಿಪ್ ಮೇಲೆ ಬಂದವನು ಆಗ ಅವರ ಜೊತೆಯಲ್ಲೇ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_171.txt b/Kannada Sahitya/article_171.txt new file mode 100644 index 0000000000000000000000000000000000000000..9c755b7aaa171aeab91908a765c6366924c506b9 --- /dev/null +++ b/Kannada Sahitya/article_171.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ ಗೆಳೆಯ ಮಿಸ್ಟರ್‍ ಎಂಕಣ್ಣ “ಒಂದು ವಿಶೇಷ ಲೇಖನ ಅಣಿ ಮಾಡಿರುವೆ” ಎಂದು ಸಂಭ್ರಮಿದಿಂದ ಬಂದ. “ಚಿತ್ರರಂಗ ಕುರಿತ ಲೇಖನವಾ?” ಎಂದೆ. “ನಾನು ಬಾಂಬ್ ಸ್ಫೋಟದ ಬಗ್ಗೆ ಚಿತ್ರರಂಗದ ಮಹಾನ್ ನಟ-ನಟಿಯರ ಅಭಿಪ್ರಾಯ ಸಂಗ್ರಹಿಸುವ […] +ಚಲನಚಿತ್ರ ರಂಗದಲ್ಲಿ ಯಾರು ಏನು ಬೇಕಾದರೂ ಆಗಬಹುದು ಎಂಬುದಕ್ಕೆ ಈಗ ಥ್ರಿಲ್ಲರ್‍ ಮಂಜುವೇ ಸಾಕ್ಷಿ. ‘ಥ್ರಿಲ್ಲರ್‍ ಮಂಜು ಸ್ಟಂಟ್ ಮಾಸ್ಟರ್‍ ಎನ್ನಿ’ ಒಪ್ಪೋಣ. ಅವರ ಫೈಟ್ಸ್ ತುಂಬ ಥ್ರಿಲ್ಲಿಂಗ್ ಎನ್ನಿ ಅನುಮಾನವೇ ಇಲ್ಲ. ಆಕ್ಷನ್ […] +ಮೆಗಾ ಧಾರಾವಾಹಿಗಳಿಂದ ಹಾಗೂ ಸಿನಿಮಾ ಆಕರ್ಷಣೆಯಿಂದ ನಾಟಕಗಳಿಗೆ ಜನ ಬರುತ್ತಿಲ್ಲ. ರಂಗಭೂಮಿಯವರೆಲ್ಲ ಸಿನಿಮಾ ಟೀವಿಗಳಿಗೆ ರಫ್ತಾಗುತ್ತಿದ್ದಾರೆ. ಸೆಕೆಂಡ್ ಲೈನರ್‍ಸ್‌ನ ಬೆಳೆಸುವಲ್ಲಿ ಹಿರಿಯರು ಪ್ರೀತಿ ತೋರುತ್ತಿಲ್ಲ ಎಂಬೆಲ್ಲ ಮಾತು ಕ್ಲೀಷೆಯಾಗಿದೆ ಇಂದು. ಇಂಥ ವೇಳೆ ಕೋಟಿ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_172.txt b/Kannada Sahitya/article_172.txt new file mode 100644 index 0000000000000000000000000000000000000000..b097320bec8f6083366de46f8a77ca79f92c8d28 --- /dev/null +++ b/Kannada Sahitya/article_172.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಲೆಸನ್ -೧ +ಪಾರ್ಟ್ಸ್ ಆಫ್ ದ ಬಾಡಿ +ಒಮ್ಮೊಮ್ಮೆ +ಎಲ್ಲರೂ ಒಂದೇ ರೀತಿ ಕಾಣುತ್ತಾರೆ, +ಕಣ್ಣು, ಮೂಗು, ಮುಖ, ಕೈ, ಕಾಲು….. +ಲಯಬದ್ಧವಾಗಿ ಮಿಡಿಯುವ ಹೃದಯ +ಅದರಲ್ಲೊಂದಷ್ಟು ಪ್ರೀತಿ. +***** +ಸಿನೀ ಮೋಹ ವಿಲಾ ಮೋಹ ದಷ್ಟೆ ದಿಗ್ಗೇಡಿ. ***** +ಹಿಂಡಾಗುಲಿವ ಮಳೆ ತಗಡು ತತ್ತರಿಸುವ ಶಾಲೆ ಮಾಡು……. ಮಧ್ಯಾಹ್ನ ರಿಸೆಸ್ಸು ಬಿಟ್ಟಾಗ ಕೆಂಪು ವರಾಂಡದ ತುಂಬ ಜಿಟಿ ಜಿಟೀ ಪರೆ ಗಾಳಿಕೊಡೆ ***** +ಭಿಕ್ಷುಕನಿಗೆ ಕಾಸು ಎಸೆಯದಿದ್ದರು ಚಿಂತೆಯಿಲ್ಲ; ಅವನೆದುರು ಕಿಸೆಯಲ್ಲಿ ಕೈ ಹಾಕದಿರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_173.txt b/Kannada Sahitya/article_173.txt new file mode 100644 index 0000000000000000000000000000000000000000..5ab56ed491e4615efb9e41dd1bfd89eef4d57828 --- /dev/null +++ b/Kannada Sahitya/article_173.txt @@ -0,0 +1,76 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಎಷ್ಟು ಕಾಲದಿಂದ ಗರುಡಪಕ್ಷಿ ನಾರಾಯಣರಾಯರನ್ನು ನೋಡಬೇಕು ಅಂತ ಎಣಿಸಿಕೊಂಡೇ ಇದ್ದೆ. ಸನ್ಯಾಸಿಯಾದ ಮೇಲೆಯೂ. ಅದು ಯಾಕೆ ಆಗಲಿಲ್ಲವೋ. ಎಣಿಸಿದ್ದೆಲ್ಲ ಎಷ್ಟೋ ಸಲ ಮಾಡಲಿಕ್ಕೇ ಆಗುವುದಿಲ್ಲ. ಸಾಧ್ಯವಿಲ್ಲದೆ ಏನಲ್ಲ. ಮನಸ್ಸು ಉಮೇದು ತಾಳುವುದು ಸಾಕಾಗುವುದಿಲ್ಲ, ಸಕಾರಣವಾಗಿಯೇ. +ಅವರ ಕುರಿತು ನಂಬಬೇಕೋ ಬಿಡಬೇಕೋ, ನಂಬದಿದ್ದರೂ ಸರಿಯೇ ಎಂಬಂತಹ ಉದಾಸೀನದ, ವಿನೋದದ, ಖೇದದ ಹಲವು ಕತೆಗಳಿವೆ. ಒಂದು ಉದಾಹರಣೆಗೆ – ಆತ ಹುಟ್ಟುವಾಗ ತಲೆಗಿಂತ ಮೊದಲು ಮೂಗು ಬಂತಂತೆ. ಮಿಡ್ಬಾಯಿ ಮೂಗನ್ನೇ ಒತ್ತಿ ಹಿಡಿದು ಎಳೆದಳಂತೆ. ಹಾಗಾಗಿ ಅದು ನಡುಮಧ್ಯೆ ಡೊಂಕಾಗಿ ತುದಿಬಾಗಿ ಗರುಡ ಮೂಗಿನಂತೆಯೇ ಆಯಿತಂತೆ. ಅಲ್ಲಲ್ಲ. ಅದು ಹುಟ್ಟಾ ಗರುಡಮೂಗು ಎನ್ನುವವರೂ ಇದ್ದಾರೆ. ಇನ್ನೂ ಒಂದು ಕತೆ – ದೇವತ್ತೆ ಅವರೊಟ್ಟಿಗೆ ಬದುಕಲಾರೆ ಎನ್ನುತ್ತಾ ಮೊದಲ ರಾತ್ರಿಯೇ ಕೋಣೆ ಬಾಗಿಲು ಪಟಾರೆಂತ ತೆಗೆದು ಹೊರಗೋಡಿ ಬಂದದ್ದು. “ನೋಡುವುದಕ್ಕೆ ಮಾತ್ರ ಮನುಷ್ಯ. ಸತ್ಯಕ್ಕೂ ಅದು ಗರುಡಪಕ್ಷಿ.” – ಅಂತ ಹೇಳಿ ಹೇಳಿ ಅತ್ತದ್ದು. ಏನೇನು ಮಾಡಿದರೂ ಗಂಡನ ಮನೆಗೆ ಹೋಗದೆ ಕುಳಿತದ್ದು. +ಮರುಮದುವೆ ಮಾಡಲಿಕ್ಕೆ ಹೊರಟರೂ ಅತ್ತೆ ಒಪ್ಪಲೇ ಇಲ್ಲವಂತೆ. ಬದಲು ಜವಳಿ ವ್ಯಾಪಾರಕ್ಕೆಂದು ಮಂಗಳೂರಿಗೆ ಬಂದಿದ್ದ ಚೆಟ್ಟಿಯಾರ್ ಕುಟುಂಬವೊಂದು, ಮನೆಯ ಸಮೀಪದಲ್ಲಿಯೇ ವಾಸವಾಗಿದ್ದದ್ದು, ವ್ಯಾಪಾರವನ್ನು ಮಕ್ಕಳಿಗೆ ಒಪ್ಪಿಸಿ ಮದ್ರಾಸಿಗೆ ಮರಳುವಾಗ ಜೊತೆಯಲ್ಲಿ ಅಡುಗೆಯವಳಾಗಿ ಮದ್ರಾಸಿಗೆ ಹೋಗಿಬಿಟ್ಟಳಂತೆ. ಯಾರ್‍ಯಾರು ಎಷ್ಟೆಷ್ಟು ಪರಿಯಲ್ಲಿ ಹೇಳಿದರೂ ಕೇಳದೆ. ಆಮೇಲೆ ಒಬ್ಬರೂ ಅವಳನ್ನು ಕಂಡದ್ದಿಲ್ಲ. ಅದೂ ಕೂಡ ಸಾಧ್ಯವಿಲ್ಲದೆ ಏನಲ್ಲ; ಇರಲಿ. +ದೇವತ್ತೆ ನಾರಾಯಣರಾಯರಿಗೆ ಗರುಡಪಕ್ಷಿ ಎಂದದ್ದು ದಾಟುತ್ತಾ ದಾಟುತ್ತಾ ಕೊನೆಗೆ ಅವರಿಗೆ “ಗರುಡಪಕ್ಷಿ ನಾರಾಯಣರಾರು” – ಎಂದೇ ಅಡ್ಡಹೆಸರು ಬಂದುಬಿಟ್ಟಿತು. ಇದೆಲ್ಲ ತಡೆಯಲಾರದೆ ನಾರಾಯಣರಾಯರು ಊರು ಬಿಟ್ಟು ಸೀದಾ ಕಾಶಿಗೆ ಹೋದರು. ಅಲ್ಲಿ ದಿನಾ ಬೆಳಿಗ್ಗೆ ಸಂಜೆಯೆನ್ನದೆ ಗಂಗಾನದಿಯಲ್ಲಿ ಮುಳುಗು ಹಾಕಿ ಹಾಕಿ ಎದ್ದರು. ಅವಮಾನದ ಕಲೆ ಅಳಿಸಿಹೋಗದೆ ಅಲ್ಲಿಂದಲೂ ಹೊರಟು ಉತ್ತರ ದೇಶವನೆಲ್ಲ ತಿರುಗಿ ತಿರುಗಿ ಸನ್ಯಾಸಿಯಾಗಿಬಿಡುವ ನಿರ್ಧಾರಕ್ಕೆ ತಲುಪಿದರು. +ದೀಕ್ಷೆಗಾಗಿ ಹಿಮಾಲಯದಲ್ಲಿ ಒಬ್ಬ ದೊಡ್ಡ ಗುರುವಿನ ಬಳಿಗೆ ಹೋಗಿ ನಿಂತಾಗ ಗಂಗೆಯಲ್ಲಿ ಮಿಂದೂ ತಣಿಯದ ಅವಮಾನದ ಬೇಗೆ ಸನ್ಯಾಸಿಯಾದರೂ ತಣಿಯದು ಎಂದ ಆ ಗುರು “ಸನ್ಯಾಸ ಖಂಡಿತಾ ಬೇಡ. ಹೋಗು. ಕಂಡದ್ದು ಮಾಡು. ಅದರಲ್ಲೇ ನಿನಗೆ ಸಿದ್ದಿ. ನಿನಗೆ ನಾರಾಯಣ ದೇವರ ಅನುಗ್ರಹವಿದೆ. ನಿನ್ನ ಗರಡಮೂಗೇ ಅದನ್ನು ಹೇಳುತ್ತದೆ.” – ಎಂದರಂತೆ. (ಗರುಡ ಮೂಗೇ ಹಾಗೆ. ಬಹಳ ಲಕ್ಷಣದ್ದು-ಶಾಂತಕ್ಕ) +ಮೂರು ನಾಲ್ಕು ಜನ ಸಾಧು ಸಂತ ಸಾಧಕ ತಾಂತ್ರಿಕರೂ ಇದೇ ಮಾತು ಹೇಳಿದಾಗ ನಾರಾಯಣರಾಯರು ಮನಸ್ಸು ಬದಲಾಯಿಸಿ ಹಿಮಾಲಯ ಇಳಿಯತೊಡಗಿದರು. ಚಿಂತಿಸುತ್ತಾ ಇಳಿಯುತ್ತಾ ಇನ್ನೇನು ಬುಡ ತಲುಪಬೇಕು; ಥಟ್ಟೆಂತ ಅವರ ಮನಸ್ಸಿಗೆ ಗೋಚರಿಸಿದ್ದು – ಇಲ್ಲೊಂದು ಉಡುಪಿ ಹೋಟೆಲು ಇಲ್ಲವಲ್ಲ – ಅಂತ. ಆ ಕ್ಷಣದಲ್ಲೇ ಸನ್ಯಾಸದ ಕನವರಿಕೆ ಕಂತುತ್ತ ಹೋಟೆಲಿನ ಜಾನ ಹೆಚ್ಚುತ್ತ ಹೋಗಿ ಹೋಟೆಲ್ ಸುರುಮಾಡಿಯೂಬಿಟ್ಟರು. ಗೊತ್ತಲ್ಲ, ಒಬ್ಬ ಋಷಿ ಒಂದು ಇಲಿ ಮರಿಯನ್ನು ಹುಡುಗಿಯನ್ನಾಗಿ ಮಾಡಿ ಸಾಕಿ ಸಲಹಿ ಪ್ರಾಪ್ತ ವಯಸ್ಸಿನಲ್ಲಿ ಅವಳಿಗೆ ವರ ಹುಡುಕಲು ಹೊರಟಾಗ ಯಾವ ಯಾವ ವರವನ್ನೂ ಒಲ್ಲೆಂದ ಹುಡುಗಿ ಕೊನೆಗೆ ಒಂದು ಇಲಿಯನ್ನು ಕಂಡೊಡನೆ ವರಿಸಲೊಪ್ಪಿದ್ದು? ಅಂತೆಯೇ ಹಿಮಾಲಯದ ಬುಡದಲ್ಲಿಯೂ ನಾರಾಯಣರಾಯರಿಗೆ ತೋಚಿದ್ದು ತನ್ನೂರಿನ ಕಾಫಿ ಕ್ಲಬ್ಬೇ – ಅಂತ ವಿನೋದಪ್ರಿಯರು ಹೇಳದೆ ಬಿಡರು. +ಊರಲ್ಲಿ ಯಾರಿಗೂ ಚಕಾರ ವರ್ತಮಾನ ಕೊಡದೆ ಹೆಸರು ಸಹ ಇಡದೆ ಕಾಫಿ, ಇಡ್ಲಿ, ದೋಸೆ, ಹುಳಿಯವಲಕ್ಕಿ ಅಂತ ಸಣ್ಣದಾಗಿ ಪ್ರಾರಂಭವಾದ ಒಬ್ಬರೇ ನಡೆಸುತ್ತಿದ್ದ ಹೋಟೆಲು ಕ್ರಮೇಣ ಸಣ್ಣದೊಂದು ಬೋರ್ಡು ಧರಿಸಿತು. ತನಗೆ ಅವಮಾನ ತಂದ ಹೆಸರನ್ನೇ ಮುಂದಿಟ್ಟುಕೊಂಡರು ನಾರಾಯಣರಾಯರು. ‘ಹೋಟೆಲು ಗರುಡ ಕಾಫಿ ಕ್ಲಬ್’ – ಆರಂಭದಿಂದಲೂ ಕ್ಷಣದಿಂದ ಊರ್ಧ್ವಮುಖಿಯೇ. ಒಬ್ಬನೇ ನೋಡಿಕೊಳ್ಳುವುದು ಸಾಧ್ಯವೇ ಆಗದಂತಾಗಿ – ತಾನು ಇಂಥಲ್ಲಿದ್ದೇನೆ, ಹೀಗೆ ಹೀಗೆ ವಿಚಾರ ಅಂತೆಲ್ಲ ಬರೆದು ಊರಿನಿಂದ ಮಾಣಿಗಳನ್ನು ಭಟ್ಟರನ್ನು ಕರೆಸಿಕೊಂಡರು. ಹೋಟೆಲು ಇನ್ನಷ್ಟು ದೊಡ್ಡದಾಗುತ್ತ ಒಂದಿದ್ದದ್ದು ಎರಡಾಗಿ ನಾಲ್ಕಾಗಿ ಆರಾಗಿ ಕೊನೆಗೆ ‘ಗರುಡ ಗ್ರೂಪ್ ಆಫ್ ಹೋಟೆಲ್ಸ್’ ಅಂತಾಗಿ ಉತ್ತರ ದೇಶದ ಯಾತ್ರಾಸ್ಥಳಗಳಲ್ಲೆಲ್ಲ ಹರಡಿಕೊಂಡು ಹೆಸರು ಮಾಡಿತು. ಎಲ್ಲ ಗರುಡಮೂಗಿನ ಲಕ್ಷಣದಿಂದಾಗಿಯೇ – ಎಂದು ಹತ್ತು ಸಮಸ್ತರಿಗೂ ನಂಬಿಕೆ ಬರುವಂತೆ. ಇಷ್ಟೆಲ್ಲ ಆಗಿ ಗಟ್ಟಿ ನಿಂತ ಕಾಲಾಂತರದ ಮೇಲೆಯೇ ನಾರಾಯಣರಾಯರು ಊರಿನ ಕಡೆ ಬರತೊಡಗಿದ್ದು. ನಾರಾಯಣರಾಯರು ಬಂದರೆಂದರೆ ಈಗ ಕಷ್ಟಸುಖ ಕೇಳುವ ಜೀವವೊಂದು ಬಂದ ಹಾಗೆ. ಮದುವೆ ಮುಂಜಿ ಕಾಯಿಲೆ ಕಸಾಲೆ ಸಂಕಷ್ಟಗಳ ಏನೇ ಖರ್ಚಿರಲಿ ನಾರಾಯಣ ರಾಯರು ಅಂತಃಕರಣ ಮಿಡಿದು ಯಾವ ಅಹಂಕಾರವನ್ನೂ ತೋರದೆ ಸಹಾಯ ಮಾಡುವರು. “ಇದನ್ನು ಸಹಾಯ ಎನ್ನಬೇಡಿ. ನಾನು ದುಡಿದ ಕೂಡಲೇ ಅದು ನನ್ನದೇ ದುಡ್ಡು ಅಂತೇನೂ ಅಲ್ಲ. ಸಮಸ್ತರಿಗೆ ಸೇರಿದ್ದು” ಎಂಬ ಮಾತಿನ ತಂಪೆರೆಯುವರು. ಈ ಕಿಸೆಯಿಂದ ಆ ಕಿಸೆಯಿಂದ ಒಳಕಿಸೆಯಿಂದ ತೆಗೆದಷ್ಟೂ ದುಡ್ಡು. ಚೆಕ್ಕು ಡಿಡಿ ಯಾವುದಕ್ಕೂ ಲೆಕ್ಕಪತ್ರ ಇಲ್ಲ. ಎಲ್ಲಾದರೂ ಹೊಟ್ಟೆಕಿಚ್ಚು ಕಂಡಿತೇ ಮೊದಲು ಅದನ್ನು ನಂದಿಸಿ ಪ್ರಸನ್ನತೆ ಸ್ಥಾಪಿಸುವರು. +“ಆದರೂ…. ಆ ಮನುಷ್ಯನ ಒಂದು ವಿಲಕ್ಷಣ ಗುಣ ನೋಡು” – ಎಂದಳು ಶಾಂತಕ್ಕ. ಯಾವ ಶಾಂತಕ್ಕ ಎಂದರೆ ಅದೇ, ಇದುವರೆಗೆ ನಾರಾಯಣರಾಯರ ಕುರಿತು ಹೇಳಿದೆನಲ್ಲ ಅದನ್ನೆಲ್ಲ ಆಗಾಗ ಅಷ್ಟಷ್ಟೇ ನನಗೆ ಹೇಳುತ್ತ ಮುಂದುವರಿಸಿಕೊಂಡು ಬರುವ ಶಾಂತಕ್ಕ. ಅವರ ದೊಡ್ಡ ಅಭಿಮಾನಿ. ಸಂಪಾದಿಸಿದರೆ ಅವರ ಹಾಗೆ. ಖರ್ಚು ಮಾಡಿದರೆ ಅವರ ಹಾಗೆ. ವೈರಾಗ್ಯ ಬಂದರೆ ಅವರ ಹಾಗೆ ಇರಬೇಕು ಎಂಬವಳು. ಅವಳೊಡನೆ ಯಾವ ಮಾತಿಗೆ ಇಳಿದರೂ ಸುತ್ತಿ ಬಳಸಿ ಆಕೆ ಮುಟ್ಟಿಕೊಳ್ಳುವುದು ನಾರಾಯಣರಾಯರ ವಿಚಾರಕ್ಕೇ. ಮೊದಮೊದಲು ನನಗೂ ಹೊಳೆಯಲಿಲ್ಲ. ಆಮೇಲಾಮೇಲೆ ಗುರುತು ಹತ್ತಿದಂತೆ ಮೆಲ್ಲ ಛೇಡಿಸುತ್ತಿದ್ದೆ. ಛೇಡಿಸಿದರೆ ಏನೂ ಬೇಸರವಿಲ್ಲದೆ ಸುಖವಾಗಿ ನಗುತ್ತ ನಿಲ್ಲುವಳು. +“ಆ ಮನುಷ್ಯನ ಒಂದು ವಿಲಕ್ಷಣ ಗುಣ ನೋಡು, ಸಹಾಯ ಮಾಡುತ್ತಾನೆ ಮರುಗುತ್ತಾನೆ ಮಾತಾಡುತ್ತಾನೆ ಎಲ್ಲ ಸಮ. ಹೆಣ್ಣುಮಕ್ಕಳ ಮುಖ ಮಾತ್ರ ಸುತರಾಂ ನೋಡುವುದಿಲ್ಲ! ಹೆಂಗಸರು ಮಾತಾಡಿಸಿದರೆ, ಅವರು ಹಳಬರೇ ಇರಲಿ ಬೇಕಾದರೆ, ಗೋಡೆ ನೋಡುತ್ತ ಒಂದು ಮಾತಿಗೆ ಒಂದೇ ಉತ್ತರ. ಕೊಟ್ಟರೆ ಕೊಟ್ಟ ಇಲ್ಲದಿದ್ದರೆ ಅದೂ ಇಲ್ಲ.” +“ನಿನ್ನ ಹತ್ತಿರವೂ?” +“ಹೌದಪ್ಪ, ನನ್ನ ಹತ್ತಿರವೂ. ನಾನು ಯಾವದೊಡ್ಡ ಸ್ಪೆಶಲ್? ನಮ್ಮ ಪುಟ್ಟನ ಉಪನಯನಕ್ಕೆ ಬಂದಿದ್ದರಲ್ಲ. ಇವರಿಗೇನೋ, ತನ್ನದಾಗಿ ಇರಲಿ ಸ್ವಲ್ಪ ಅಂತ ಮರೆಯಲ್ಲಿ ಕರೆದು ದುಡ್ಡು ಕೊಟ್ಟರಂತೆ. ಆದರೆ, ನನ್ನ ಹತ್ತಿರ ಸ್ಯಾಂಪಲ್ಲಿಗೆ ಒಂದು ಮಾತು? ಒಂದು ನಗೆ? ಕಡೆಗೆ ಕಣ್ಣೆತ್ತಿ ನೋಡಿದರೆ ಹೇಳು….! ಅದಕ್ಕೇ….” +“ಏನು ಅದಕ್ಕೆ? ನಾನಾಗಿದ್ದರೆ ಆ ದುಡ್ಡು ವಾಪಾಸು ಕೊಡಿ ಅವರಿಗೆ ಎನ್ನುತ್ತಿದ್ದೆ.” +“ಯಾಕೆ? ಆತ ದ್ವೇಷದಿಂದ ಮಾತಾಡದೆ ಹೋದರೆ ಸರಿ. ಆದರೆ ಇದು ಹಾಗಲ್ಲವಲ್ಲ. ಹೆಂಗಸರ ಮುಖ ನೋಡುವ ಅಭ್ಯಾಸವೇ ಇಲ್ಲದವರು? ಈ ವ್ಯತ್ಯಾಸ ತಿಳಕೊ. ಅದಕ್ಕೇ….” +“ಏನು ‘ಅದಕ್ಕೆ’? ಹೇಳಿಬಿಡು.” +“ಅದಕ್ಕೇ ನನಗೊಂದು ಹಟ” – ನಕ್ಕಳು ಶಾಂತಕ್ಕ. “ಏನಂತ ಹೇಗೆ ಬೇಕಾದರೂ ಊಹಿಸಿಕೊ.” +“ಹೇಗೆ ಬೇಕಾದರೂ ಯಾಕೆ ಊಹಿಸಿಕೊಳ್ಳುತ್ತೇನೆ ನಾನು? ಹೆಚ್ಚಂದರೆ ಅಂತಹ ಗೋಡೆ ನೋಡುವ ಗಂಡಸನ್ನು ಒಮ್ಮೆ ಕಣ್ಣಲ್ಲಿ ಕಣ್ಣಿಟ್ಟು ಮಾತಾಡಿಸಲೇಬೇಕೆಂಬ ಹಟ ಅಂತ ಊಹಿಸುವೆ.” +“ಆದರೆ ಅದು ಸಾಧ್ಯವಿಲ್ಲವೇ. ಸೊಲ್ಲು ಎತ್ತುವುದರೊಳಗೆ ಆತ ಅಲ್ಲಿಂದ ಕಣ್ಮಾಯಕ.” +* +* +* +ಕಡೆಗೇನಾಯಿತು ಎಂದರೆ ನಾರಾಯಣರಾಯರಿಗೆ ಹೋಟೆಲು ಮಾಡಿ ಮಾಡಿ ಸಾಕಾಯಿತು. ವೈರಾಗ್ಯವೂ ಹೆಚ್ಚೆಚ್ಚು ಕವಿಯಿತು. ಹೋಟೆಲುಗಳನ್ನು ಅಲ್ಲಲ್ಲಿನ ಕೆಲಸದವರಿಗೇ ವಹಿಸಿಕೊಟ್ಟು, ಒಂದು ಮಸಾಲೆ ವ್ಯಾಪಾರ ತೆರೆದರು. ಅಲ್ಲಿಯೂ ದುಡ್ಡು. ಅಡಿಕೆಪುಡಿ ಅಂಗಡಿ ತೆರೆದರು. ಅಲ್ಲಿಯೂ ವ್ಯಾಪಾರ. ಕಡೆಗೆ ಅದೂ ಬೇಡ ಅಂತ ಅದನ್ನೂ ಯಾರಿಗೋ ವಹಿಸಿಕೊಟ್ಟು ನಸ್ಯದ ಅಂಗಡಿ ತೆರೆದರೆ ಅಲ್ಲಿಯೂ ದುಡ್ಡಿನ ಬುದುಬುದು ಅವತಾರವೇ! ಊರುಕಡೆಯ ಗಂಡುಮಕ್ಕಳನ್ನು ಕರೆಕರೆದು ವ್ಯಾಪಾರದಲ್ಲಿ ಭದ್ರ ಕೂಡಿಸಿದರು. ಈ ದುಡ್ಡು ಎಂಬುದುಂಟಲ್ಲ, ಯಾವಾಗ ಒಲಿಯುತ್ತದೆ, ಯಾಕೆ ಒಲಿಯುತ್ತದೆ, ಯಾವಾಗ ಮುನಿಯುತ್ತದೆ, ಯಾಕೆ ಮುನಿಯುತ್ತದೆ ಅಂತ ಹೇಳಲಿಕ್ಕೇ ಸಾಧ್ಯವಿಲ್ಲ ನೋಡು. ದುಡ್ಡು ಒಲಿಯಿತೆಂದರೆ ಆತ ಬುದ್ಧಿವಂತ ಎನ್ನುತ್ತಾರೆ. ನಷ್ಟವಾದರೆ ದಡ್ಡ ಎನ್ನುತ್ತಾರೆ ಸಲೀಸಾಗಿ. ಅದೆಲ್ಲ ಬಹುಶಃ ಹಾಗಲ್ಲ. ಅಂತಹ ಶ್ರಮವಂತನೂ ಅಲ್ಲದ ನಡುನಡುವೆ ವೈರಾಗ್ಯದಿಂದ ಎತ್ತಲೋ ಹೇಳದೆ ಕೇಳದೆ ಹೊರಟೂಬಿಡುವ ನಾರಾಯಣರಾಯರಿಗೆ ಏನು ಮಾಡಿದರೂ ಝಣಝಣ ಹಣವೆಂದರೆ! ದಿನವಿಡೀ ಗಲ್ಲಾಪೆಟ್ಟಿಗೆಯ ಮೇಲೆಯೇ ಪ್ರತಿಷ್ಠಾಪನೆ ಆಗಿರುವವರಿಗಿಂತ ಸಾವಿರ ಪಾಲು ಸಂಪಾದಿಸಿ ಅನಾಯಾಸವಾಗಿ ಹೀಗೆ ದುಡ್ಡು ತನಗೆ ಒಲಿದು ಬಂದು ಬೀಳುವುದು ಕಂಡೇ ದಿಗಿಲಾಯಿತೊ ಎಂತದೊ. ಸಾಯಲಿ ಈ ವ್ಯವಹಾರ ಅಂತ ಎಲ್ಲವನ್ನೂ ತ್ಯಜಿಸಿ ಕಡೆಗೆ ಸನ್ಯಾಸಿಯಾಗಿಬಿಟ್ಟರು. +ಸನ್ಯಾಸಿಯಾದರೂ ಹೆಣ್ಣುಮಕ್ಕಳನ್ನು ಮಾತ್ರ ನೋಡರು. ಅಪ್ಪಿತಪ್ಪಿ ಮಾತಾಡಲೇ ಬೇಕಾಗಿ ಬಂದರೆ ಆಕಾಶ ನೆಲ ಗೋಡೆ ಮಾಡು ನೋಡುತ್ತ ಕಷ್ಟದಲ್ಲಿ ಎರಡು ಮಾತು ಒಗೆದು ಮುಗಿಸುವ ವಿಚಿತ್ರ ಸನ್ಯಾಸಿ. ಹಾಗಾದರೆ ಆ ಸನ್ಯಾಸತ್ವ ಎಂತಹದು? – ಪ್ರತೀಸಲ ನಾರಾಯಣರಾಯರ ಕುರಿತು ಮಾತು ಮುಗಿಸುವಾಗಲೂ ಶಾಂತಕ್ಕನ ಪ್ರಶ್ನೆ ಇದು. +ಸನ್ಯಾಸಿಯಾದ ಮೇಲೆಯೂ ವರ್ಷಕ್ಕೊಮ್ಮೆ ತಪ್ಪದೆ ಊರಿಗೆ ಬರುತ್ತಿದ್ದರು ನಾರಾಯಣರಾಯರು. ದೇವಸ್ಥಾನದಲ್ಲಿ ಪ್ರವಚನವಿರುತ್ತಿತ್ತು. ಶಾಂತಕ್ಕ ತಪ್ಪದೇ ಹೋಗುತ್ತಿದ್ದಳು. “ಬಾ ಎಂದರೆ ಬರುವಿದಿಲ್ಲ ನೀನು. ಬಂದರೆ ಏನು ನಷ್ಟ? ಪ್ರವಚನ ಮಾಡುವಾಗ ಅವರ ಕಣ್ಣು ನೋವಿನ ಪಸೆಯಿಂದ ಮಿನಿಗುವುದನ್ನು ನೋಡಬೇಕು. ಆ ಕಣ್ಣಿಗೂ ಆ ನೋವಿಗೂ ಏನು ಲಗತ್ತು ಅಂತಿ! ನೋಡುತ್ತಿದ್ದರೆ ನೋಡುತ್ತಾ ಕುಳಿತುಕೊಳ್ಳಬೇಕು – ಹಾಗೆ. ನಾನಂತೂ ಒಂದೇ ಒಂದು ಪ್ರವಚನ ತಪ್ಪಿಸುವುದಿಲ್ಲ. ‘ಇವರು’ ಎಷ್ಟೇ ತಮಾಷೆ ಮಾಡಿದರೂ. ಅಲ್ಲ… ಒಮ್ಮೆ ಬಾ. ನಾ ಹೇಳುವುದು ನಿನಗೇ ತಿಳಿಯುತ್ತದೆ.” +ಪ್ರವಚನ ಕೇಳಲು ಹೋಗಿ ಕಣ್ಣು ನೋಡುತ್ತ ಕುಳಿತುಕೊಳ್ಳುವುದನ್ನ ಯಾವ ಮರೆಯಿಲ್ಲದೆ ಹೇಳುವ ಪ್ರೀತಿಯ ಶಾಂತಕ್ಕ. ಸನ್ಯಾಸಿ ಗಡ್ಡದ ರೋಮ ರೋಮದಲ್ಲಿಯೂ ಅಪಾರ ವೇದನೆಯನ್ನು ಊಹಿಸುವವಳು. “ಸುಲಭವಾಗಿ ಬ್ರಹ್ಮಚರ್ಯೆ ಸಾಧನೆಯಾದವರಲ್ಲಿ ಈ ಪರಿಯ ನೋವು ಇರುವುದಿಲ್ಲ. ರಾಮಕೃಷ್ಣ ಪರಮಹಂಸರ ಕಣ್ಣು ನೋಡು. ವಿವೇಕಾನಂದರ ಕಣ್ಣು ನೋಡು. ಶುಭ್ರ ಕೊಳ. ಅದೇ ನಾರಾಯಣರಾಯರ ಕಣ್ಣು ನೋಡು….” +“ಕಣ್ಣು ನೋಡದೆ ಮೂಗು ನೋಡಿದರೆ ಸೈಯಪ್ಪ.” +“ಹಾಂ. ಮೂಗನ್ನಾದರೂ ನೋಡಲ್ಲ. ಅದು ಗರುಡ ಮೂಗು. ಯಾರಿಗೆ ಗೊತ್ತು, ಯಾವ ಶಾಪಕ್ಕಾಗಿ ಈ ಭೂಮಿಯ ಮೇಲೆ ಜನಿಸಿದ ವಿರಹಿ ಗರುಡಪಕ್ಷಿಯೊ!” +“ಓಹೋಹೋ. ನಿನ್ನ ತಲೆಯೆಂದರೆ ತಲೆ! ಇಷ್ಟಕ್ಕೂ ಅವರು ಬ್ರಹ್ಮಚಾರಿಯಾಗಿಯೇ ಇದ್ದರೆಂದು ಹೇಗೆ ಹೇಳುತ್ತಿ ನೀನು?” +“ಹ! ಪ್ರಶ್ನೆಯೇ ಇದು?” +” ಆ ನೋವು ಅದೇ ಅಂತಾದರೂ ಹೇಗೆ ಗೊತ್ತು ನಿನಗೆ? ತಿರುಗಮುರುಗವೂ ಇರಬಹುದಲ್ಲ. ಎಲ್ಲ ಅನುಭವಿಸಿಯೂ…. ಇದೆಲ್ಲ ಇಷ್ಟೆಯೇ? ಯಾರ ಮಾತೂ ಕೇಳದೆ ಮೊದಲೇ ಸನ್ಯಾಸ ಸ್ವೀಕರಿಸಬಹುದಿತ್ತಲ್ಲಪ್ಪ, ಅಂತಲೂ?” +“ಅಯ್ಯೊ, ‘ಎಲ್ಲ’ ಅನುಭವಿಸುವುದೆ? ಅವರೆ? ಅದು ಅಂತಹ ಅಸಾಮಿಯೇ ಅಲ್ಲವೇ. ಒಮ್ಮೆ ಬಾ. ನೋಡು. ಕಡೆಗೆ ಮಾತಾಡು.” ಕಳವಳಿಸಿದಳು ಶಾಂತಕ್ಕ. +ಹಾಗೆ ನೋಡಿದರೆ ಎಷ್ಟೊತ್ತಿಗೂ ಗಳಿಸುತ್ತಲೇ ಹೋದ, ವಿನಿಯೋಗಿಸುತ್ತಲೇ ಹೋದ, ಕೈಹಾಕಿದಲ್ಲೆಲ್ಲ ಯಶಸ್ವಿಯಾದ ಆದರೂ ಅವ್ಯಕ್ತ ನೋವಲ್ಲಿ ಅದ್ದಿಕೊಂಡಂತೆ ಕಾಣುವ ಎಲ್ಲಿಯೂ ಯಾರಲ್ಲಿಯೂ ತನ್ನ ವೈಯಕ್ತಿಕ ಬದುಕಿನ ಯಾವ ವಿವರವನ್ನೂ ಬಿಟ್ಟುಕೊಡದೆ ಇಹಪರಗಳ ಕುರಿತು ಪ್ರವಚನ ಮಾಡುವ ನಾರಾಯಣರಾಯರ ಕುರಿತು ನನಗೂ ನನ್ನದೇ ಆದ ಕುತೂಹಲವಿತ್ತು. ಅವರು ಗೋಡೆಯ ಮೇಲಿಂದ ಕಣ್ಣು ಕಿತ್ತು ಧೈರ್ಯದಿಂದ ನೇರ ನೋಡುತ್ತ ಮಾತಾಡಲು ಪ್ರೇರಿಸ ಬಯಸುವ ಪ್ರಶ್ನೆಗಳೂ. ಆದರೆ ಅದೇ, ಹೇಳಿದೆನಲ್ಲ; ಗೋಡೆ ನೋಡಿ ಮಾತಾಡುವವರ ಭೇಟಿಗೆ ಮನಸ್ಸು ಬೇಕೆಂದರೂ ಉಮೇದು ತಾಳುವುದಿಲ್ಲ. +* +* +* +“ಇವರು ಹೇಳಿದರು-ನಾರಾಯಣರಾಯರು (ಆತನಿಗೆ ಏನೋ ಒಂದು ‘ಆನಂದ’ ಸ್ವಾಮಿ ಅಂತ ಹೆಸರಿದ್ದರೂ ಶಾಂತಕ್ಕನಿಗೆ ಆ ಹೆಸರು ಯಾವತ್ತೂ ಬಾಯಲ್ಲಿ ಬಂದದ್ದೇ ಇಲ್ಲ.) ಊರಿಗೆ ಬಂದಿದ್ದಾರಂತೆ. ‘ನಿನ್ನ ಪ್ರೇಮಿ ಬಂದಿದ್ದಾನೆ’ ಅಂತ ಎಷ್ಟು ಸರಾಗವಾಗಿ ಹೇಳಿ ನಕ್ಕರು ಗೊತ್ತೆ? ಗಂಡಸರಿಗೂ ಸೂಕ್ಷ್ಮವಿರುತ್ತದೆ ನೋಡು.” – ನಕ್ಕಳು ಶಾಂತಕ್ಕ. “ಈ ಸಲ ಖಂಡಿತಾ ನಾನವರನ್ನು ಮಾತಾಡಿಸಲೇಬೇಕು. ನೀನು ಜೊತೆಯಲ್ಲಿದ್ದರೆ ಸಾಕು. ಧೈರ್ಯಕ್ಕೆ. ನಾಳೆ ಪ್ರವಚನಕ್ಕೆ ಹೋಗೋಣ.” +“………” +“ಸಂಜೆ ಆರಕ್ಕೆ ಪ್ರವಚನ. ಒಂದು ಗಂಟೆ ಮೊದಲೇ ಹೋದರೆ ಮಾತಿಗೆ ಸಿಕ್ಕಿಯಾರು. ಬರುತ್ತೀಯಲ್ಲ?” +“ನೋಡುವ…..” +“ಏನು, ನೋಡುವ ಗೀಡುವ ಮಾತೇ ಇಲ್ಲ. ರೆಡಿಯಾಗಿರು ಎಂದರೆ ರೆಡಿಯಾಗಿರಬೇಕು. ಕಡೇಕ್ಷಣದಲ್ಲಿ ಮನಸ್ಸು ಬದಲಾಯಿಸಬೇಡ ಮತ್ತೆ. ಈ ಸಲ ಒಮ್ಮೆ ನೋಡಿಬಿಡು. ಆಮೇಲೆ ಪ್ರತೀಸಲ ಹೋಗುತ್ತೀ ನಾನು ಹೇಳದೇನೇ.” ನಗೆ. +ನಾಳೆಯಾಗಿ ಸಂಜೆ ನಾಲ್ಕಕ್ಕೆ ಹತ್ತಿರವಾಗಿರಬೇಕು. ಮತ್ತೆ ಶಾಂತಕ್ಕನ ಪೋನು. “ಹೇ, ದೇವತ್ತೆ ಬಂದಿದ್ದಾಳಂತೆ!” +“ಆಂ!….ಯಾರು…. ನಿನ್ನ ಗರುಡಪಕ್ಷಿ…..” +“ನಾರಾಯಣರಾಯರ ಹೆಂಡತಿ. ಬಂದಿದ್ದಾಳಂತೆ. ಫ್ಲೈಟಿನಲ್ಲಿ! ಇದ್ದಕ್ಕಿದ್ದಂತೆ. ಏ… ಗೊತ್ತುಂಟ? ಅವರು ಮದ್ರಾಸಿನಲ್ಲಿ ಪ್ರವಚನ ಮಾಡುವಾಗ ದೇವತ್ತೆ ನಿತ್ಯವೂ ಹೋಗುತ್ತಿದ್ದರಂತೆ…” +“!! ಇದೆಲ್ಲ ನಿನಗೆ ಗೊತ್ತಾಯಿತಾದರೂ ಹೇಗೆ?” +“ಇನ್ನೂ ಏನೆಲ್ಲ ಗೊತ್ತಾಗಿದೆ. ಎಲ್ಲ ಆಮೇಲೆ ಹೇಳುತ್ತೇನೆ….” ಶಾಂತಕ್ಕನ ಸ್ವರ ಹುರುಪೆಲ್ಲ ಕಳೆದು ಬಾವಿಯಿಂದ ಬಂದ ಹಾಗೆ ಕೇಳಿಸುತ್ತಿತ್ತು. ಫೋನು ಧಡಕ್ಕನೆ ಇಟ್ಟಳು. ಅಷ್ಟು ಬೇಗ ಮಾತಾಡಿ ಎಂದೂ ಮುಗಿಸದವಳು. +ಅದುವರೆಗೆ ಹೋಗಲೋ ಬೇಡವೋ ಅಂತ ಉದಾಸೀನದಿಂದ ಇದ್ದವಳನ್ನು ಹೊಡೆದೆಬ್ಬಿಸಿದಂತಾಗಿ ನಾನು ಲಗುಬಗನೆ ಹೊರಡತೊಡಗಿದೆ. ಕಣ್ಣಮುಂದೆ ಗರುಡಮೂಗೊಂದು ಚಿತ್ರ ಕಟ್ಟುತ್ತಿತ್ತು. ಕೇಳುತ್ತ ಕೇಳುತ್ತ ತನ್ನಷ್ಟಕ್ಕೆ ರೂಪ ಆಕಾರ ತಾಳಿಕೊಂಡಿದ್ದ ದೇವತ್ತೆ ಆಕಾಶ ಮಾರ್ಗದಿಂದ ಕೆಳಗಿಳಿಯುತ್ತಿದ್ದಳು. ಒಳಗೆ ನಗೆಯೊಂದು ಮೆಲ್ಲಗೆ ಮೃದುವಾಗಿ ನಿರಾಮಯ ಹರಡಿಕೊಂಡಿತು. +ಎಷ್ಟು ಹೊತ್ತು ಈ ಶಾಂತಕ್ಕನಿಗೆ ಬರಲು? ಎಂದುಕೊಳ್ಳುತ್ತಿರುವಾಗಲೇ ಅವಳದೇ ಪೋನು. “ಏನು? ಹೊರಟಿದ್ದೀಯ? ಇಲ್ಲ, ನನಗೆ ಗೊತ್ತು. ನಾನೂ ಹೋಗುವುದಿಲ್ಲ ಬಿಡು.” +“ಅರೆ! ಕಡೇಕ್ಷಣದಲ್ಲಿ….?” +“ಸಾರಿ. ಯಾಕೋ ಹೊರಡಬೇಕೆಂತಲೇ ಕಾಣುತ್ತಿಲ್ಲ. ಉಮೇದೇ ಇಲ್ಲಪ್ಪ.” +“ಆದರೆ ಶಾಂತಕ್ಕ ನಾನು ಹೊರಟಿದ್ದೇನೆ. ಬಾರೇ.” +“ನೀನ! ಹೊರಟಿದ್ದೀಯ!” +“ಹೌದು. ಬಾ ಬೇಗ. ಹೋಗುವ.” +“ಇಲ್ಲ ನಾ ಬರುವುದಿಲ್ಲ…. ನೀನಾದರೂ ಯಾಕೆ ಎಲ್ಲ ಬಿಟ್ಟು ಈಗ ಹೋಗಬೇಕು?” +“………..” +ಫೋನಿಟ್ಟು, ನಾನು ಹೊರಬಂದೆ. +***** +ಕೀಲಿಕರಣ ದೋಷ ತಿದ್ದುಪಡಿ: ಕಿಶೋರ್ ಚಂದ್ರ +ನೀರು ಪಂಪುಗಳನ್ನು ಮಾರುವ ನನ್ನ ಸೇಲ್ಸಮನ್ ಕೆಲಸದ ನಿಮಿತ್ತ ಊರೂರು ತಿರುಗುವಾಗ ಎಷ್ಟೋ ಬಾರಿ ಪೀಕೆ ಅಂದರೆ ಪ್ರಮೋದಕುಮಾರ್ ನನಗೆ ಜೊತೆ ಕೊಟ್ಟಿದ್ದರು. ಅವರು ನಮ್ಮ ಕಂಪನಿಯ ಏರಿಯಾ ಸೇಲ್ಸ್ ಮ್ಯಾನೇಜರ್. ನನ್ನ ಕ್ಷೇತ್ರದ […] +ಈ ಕಥಾ ಪ್ರಸಂಗ ಬಹಳ ವರ್ಷಗಳ ಹಿಂದೆ ಕುಮಟೆಯಲ್ಲಿ ನಡೆಯಿತು. ಕಥೆ ಕೇಳಿದ ಮೇಲೆ ಇದು ನಮ್ಮ ಕಾಲಕ್ಕೆ ಸೇರಿದ್ದೇ ಅಲ್ಲವೆಂದು ನಿಮಗೆ ಅನ್ನಿಸಿದರೆ ಆಶ್ಚರ್ಯವಲ್ಲ. ನನಗೂ ಮೊದಲು ಹಾಗೇ ಅನ್ನಿಸಿತ್ತು. ಆದರೆ ಇದು […] +ಶಿವಾಜಿ ವೃತ್ತದಿಂದ ನೇರಕ್ಕೆ ಗಾಂಧೀ ಚೌಕ್‌ನತ್ತ ಹೋಗುವ ರಸ್ತೆಯಲ್ಲಿ ದಿವಾಕರನ ಪುಟ್ಟ ಪಾನ್ ಶಾಪ್ ಇದ್ದಿದ್ದು. ಎಷ್ಟೋ ವರ್ಷಗಳಿಂದ ಅಲ್ಲಿಯ ಪ್ರತಿದಿನದ ಆಗುಹೋಗುಗಳಿಗೆ ಮೂಕಸಾಕ್ಷಿಯಾಗಿ ನಿಂತು, ಹಾಗೆ ನಿಂತು ನೋಡಿ ನೋಡಿ, ಇದೀಗ ತುಸು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_174.txt b/Kannada Sahitya/article_174.txt new file mode 100644 index 0000000000000000000000000000000000000000..dfb6476ec06eebfc52c46603fe5445af77533765 --- /dev/null +++ b/Kannada Sahitya/article_174.txt @@ -0,0 +1,84 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ +ಚಾಣದಲಿ ಹೊಡೆದಂತೆ ಹತ್ತು ಗಂಟೆ +ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು +ಇರಲಿ ಬಿಡು, ನಮಗೇತಕದರ ತಂಟೆ ? +ಮಂದ ಬೆಳಕ ತಂದ್ರಿಯಲ್ಲಿ +ಇಂದ್ರಚಾಪದಂತೆ ಬಾಗಿ +ಒಲವು ಸವಿಯ ನೀಡಿತು; +ಹಿಗ್ಗು ಪಡೆದ ಪ್ರಣಯಪಕ್ಷಿ +ನೀಲದಾಳದಲ್ಲಿ ಸುಳಿದು +ನಿರಾಯಾಸವಾಗಿ ಇಳಿದು +ಎದೆಯಗೂಡ ಸೇರಿತು. +ದೀಪವಿಳಿದು ಆರಿತು +ಕತ್ತಲೆ ಮೈ ಚಾಚಿತು +ನಿದ್ದೆಲೋಹಚುಂಬಕದೊಲು +ಎಳೆವ ಸೆಳೆವ ಹೊತ್ತಿನಲ್ಲೆ +ತಂಬೂರಿಯ ನಾದದಂತೆ +ನಾರದರವತರಿಸಿದಂತೆ +ಝೇಂಕರಿಸಿತು +ಮೂಲೆಯಲ್ಲಿ ಕಾದು ಕುಳಿತ ಸೊಳ್ಳೆ +ತನ್ನ ಗತ್ತಿನಲ್ಲೆ! +೨ +ಕೊಳ್ಳೆ ಹೊಡೆಯಲು ಬರುವ ಮೆತ್ತಗಿನ ಕಳ್ಳನೊಲು +ಸುಳ್ಳು ಸುಳ್ಳೇ ಹಾಡಿ ಹರಸುತಿತ್ತು; +ಬಾಂಬನಸೆಯುವ ಮೊದಲು ಅತ್ತಿತ್ತ ಹಾರಾಡಿ +ಸುತ್ತುವ ವಿಮಾನದೊಲು ಮರಸುತಿತ್ತು. +ಬಂತು ಅಗೊ! +ಬಂದೇಬಿಟ್ಟಿತು +ಮಹಾಸೈನ್ಯವನು ಹಿಂದಿರಿಸಿ ಮೊರೆದು ‘ಸ್ವಾಹಾ’ +“ನೀನಾರಿಗಾದೆಯೋ ಎಲೆ ಮಾನವಾ” +ಪರಿಚಿತರು ಸಲಿಗೆಯಲಿ ಮಾತನಾಡುತ್ತ ಬಂದು +ಹೆಗಲಮೇಲೆಯೆ ಕೈಯನಿರಿಸುವಂತೆ +ಬಂದು ಕುಳಿತಿದೆ ಮುಖದಮೇಲೆ ಅಂತೆ ; +ಕೈ ಮುಟ್ಟಿ ಮೈ ಮುಟ್ಟಿ ಬಂದು +ಗುಂಯ್‌ ಗುಟ್ಟುತಿದೆ +ಕಿವಿಯಲ್ಲಿ ಸ್ಕ್ರೂ ಇಟ್ಟು ತಿರುವಿದಂತೆ +ರೋಮರೋಮಕೆ ಸೂಜಿ ಮದ್ದಿನಂತೆ! +ಇಂಥ ಧೈರ್ಯವದೆಂತು ಬಂತೋ ಕಾಣೆ. +ಕೋಣೆಯಾಚೆಗೆ ಇದನು +ಹೊಡೆದೋಡಿಸದೆ ಮಾಣೆ! +೩ +ಅದು ಮುಂದು ಮುಂದೆ +ನಾನು ಸೂತ್ರದಗೊಂಬೆ +ಅಂತೆ ಆಡಿಸಿತೆನ್ನ ಹಿಂದುಮುಂದೆ. +ಗುಂಗಾಡಗುಂಗು ಮೈದುಂಬಿ ಹಂಗಿಸುತಿತ್ತು +ಆದರೂ ಆಗಲೆಂದೆ; +ಮನಕೆ ಮಾಯಾಮೃಗದ ನೆನಪು ತಂದು +ಪುಂಗಿಯೂದಿತು ಕಿವಿಯ ಬಳಿಗೆ ಬಂದು; +ಚಪ್ಪಾಳೆಗೂ ಸೊಪ್ಪು ಹಾಕದೆಯೆ ಕೈ ತಪ್ಪಿ +ಮೂಲೆಯ ಕಪಾಟಿನಲ್ಲಿ ಲೀನವಾಯ್ತು. +ಶಿಸ್ತಿನಿಂದ ಹಿಂದೆ ಸರಿದ +ಸೈನಿಕನೊಲು ಮರಳಿದೆ, +ಹಾಸಿಗೆಯಲ್ಲಿ ಹೊರಳಿದೆ +………….. +ಕನಸಿನಲ್ಲಿ ಗೊರವ ಬಂದು +ಜಾಗಟೆಯನು ಬಡಿದನು: +‘ಏಳ್ಕೋಟಿಗೇಳ್ಳೋಟಿಗೇಳ್ಕೊಟಿಗೋ’ +ಕಣ್ಣೆರೆದೆನು +? ? ? +ಕಿವಿ ನಿಮಿರಿತು +! ! ! +ಗಡಿಯಾರ ಬಾರಿಸಿತು +ಏಳುಗಂಟೆ. +***** +ಎಲೆ ಎಲೆಯೆ ನಿನ್ನ ಹಸಿ ಹಸಿದ ಹಸಿ ರು ಮೈಗುಂಟ ಸರಾಗ ಕೊರೆಯುತ್ತವೆ ನರಗಳ ದೌರ್‍ಬಲ್ಯ. ಹಾದಿಗಳೆಲ್ಲ ಕಾಲು ಚಾಚಿ ಮಲಗಿವೆ ಅಲ್ಲಲ್ಲಿ ಇತಿಹಾಸ ಹೆಕ್ಕುತ್ತ ಸಂಚರಿಸುವ ಬಾಧೆಗಳು ತೊಲಗಿವೆ ಹಸಿರುಗಚ್ಚುತ್ತಿರುವ ಕೋಶಗಳೆದುರೂ ಮೈ […] +ಇರುಳು ಇನ್ನೂ ಹೊದ್ದಿಲ್ಲ ಧರೆಯ ಇಂದ್ರನ ಸಹಸ್ರ ಸಹಸ್ರ ನಯನ ತಾರೆ,ತೆರೆದಿಲ್ಲ ಪೂರ್ಣ ಬುದ್ಧಿರಾಗಸದ ಮೈಯ ಹೆಡೆಯೆತ್ತದ ರಭಸಕ್ಕಲ್ಲದ ಗಾಳಿ ತೂಗಿ , ನಿತ್ಯ ಹರಿತ್ತಿನ ಮಳೆಕಾಡು ಭವ್ಯ ಸುಳಿದಾಡುವ ವನ್ಯ ಅದೋ ಬೂದಿ […] +ಹೀಗೆ, ಹಾಳೆಯ ಮೇಲೆ ‘ಹಾಡು’ ಹಚ್ಚೆ ಹೊಯ್ದ ಚಿತ್ತಾರದ ಹಾಗೆ ಹಾಡು ಹಾಳೆಯಿಂದೆದ್ದು ಶಬ್ದ, ಅದರ ಹಿಂದೊಂದು ಶಬ್ದ; ಶಬ್ದ ಶಬ್ದಗಳ ಸರಣಿ ಗಾಳಿಯಲಿ ತೇಲಿ ಬಿಟ್ಟರೆ….. ಹಾಡು! ಈಗ ಹಾಳೆಯ ಮೇಲೆ ಹಾಡು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_175.txt b/Kannada Sahitya/article_175.txt new file mode 100644 index 0000000000000000000000000000000000000000..ffec39424797dc005c4d3a2d97a838aecd3a5c05 --- /dev/null +++ b/Kannada Sahitya/article_175.txt @@ -0,0 +1,42 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಮೂರ್ತಿಗೆ ಈಚೆಗೆ ವಿವರಿಸಲಾಗದ ಆತಂಕ ಹೆಚ್ಚಾಗ ತೊಡಗಿದೆ. ನಾಡಿನ ಖ್ಯಾತ ನಾಸ್ತಿಕ ಬುದ್ಧಿಜೀವಿಯೆಂದು ಮೊದಮೊದಲು ಹೆಮ್ಮೆಯಿಂದ ಬೀಗುತ್ತಿದ್ದರೂ ಈಚೆಗೆ ಅಧೀರತೆ ಹೆಚ್ಚಾಗತೊಡಗಿ, ಮಾತಿನಲ್ಲಿ ಮೊದಲಿದ್ದ ಆತ್ಮವಿಶ್ವಾಸ ಕಡಿಮೆಯಾಗಿ ಬಿಟ್ಟಿದೆ. ಎರಡು ದಿನದ ಹಿಂದೆ ತಾನೆ ತನ್ನ ಐವತ್ತು ವರ್ಷ ಆಚರಿಸಿಕೊಂಡಿದ್ದರು. ಬ್ರಹ್ಮಚಾರಿಯ ಜೀವನದಲ್ಲಿ ಹುಟ್ಟುಹಬ್ಬಕ್ಕೆ ವಿಶೇಷ ಅರ್ಥ ತಲ್ಲಣ ಎರಡು ಇರುತ್ತದೆ ಎಂದು ಮೂರ್ತಿ ಆ ಸಂಜೆ ಗುಂಡಿನ ಗುಂಗಿನಲ್ಲಿ ದೊಡ್ಡದಾಗಿ ಮಾತನಾಡುತ್ತಿದ್ದರು. ಅವರು ಬಿಟ್ಟರೆ ಅಲ್ಲಿದ್ದವರೆಲ್ಲರೂ ವಿವಾಹಿತ ಗಂಡಸರೇ. ಮೂರ್ತಿಯವರ ಚಿಂತನೆಯ ಬರವಣಿಗೆಯ ಅಭಿಮಾನಿಗಳು. +’ವಿವಾಹಿತರಿಗಿಲ್ಲದ ವಿಶೇಷ ಏನದು ನಿಮಗೆ, ಮೂರ್ತಿ?’ – ಪ್ರಶ್ನೆ ಕೇಳಿದವರು ಗಣಪತಿ. ಕಟ್ಟಾ ಮಾರ್ಕ್ಸ್‌ವಾದಿ ಸರ್ಕಾರಿ ಅಧಿಕಾರಿ. ಮಾತಿನಲ್ಲಿ ಅಣಕವಿತ್ತು. ಆದರೆ, ಮೂರ್ತಿ ತುಂಬ ಆಳವಾದ ಪದರಗಳುಳ್ಳ ಮನುಷ್ಯನಾದ್ದರಿಂದ ಏನೊ ಆಳವಾದ ಹೊಳೆಯೇ ಈ ಹೇಳಿಕೆಯಲ್ಲಿರಬಹುದೆಂಬ ಅನುಮಾನವೂ ಇತ್ತು ಆ ಮಾತಿನಲ್ಲಿ. +ವಿಶೇಷವೇ? ಮಕ್ಕಳನ್ನು ಪಡೆದಾತ ತಾನು ಮಕಳಲ್ಲಿ ಮುಂದೆಯೇ ಬಾಳುತ್ತೇನೆ ಎಂದು ನಂಬುತ್ತಾನೆ. ಆದರೆ ಬ್ರಹ್ಮಚಾರಿಗೆ ಪ್ರತಿ ವರ್ಷದ ಹುಟ್ಟು ಹಬ್ಬವೂ ತಾನು ನಾಶವಾಗುವುದರ, ನಿರ್ನಾಮವಾಗುವುದರ ಸೂಚನೆ. ಮೂರ್ತಿ ನಿಧಾನಕ್ಕೆ ವಿಸ್ಕಿ ಗುಟುಕರಿಸುತ್ತಾ ಹೇಳಿದರು. ಕಣ್ಣಾಲಿಗಳಲ್ಲಿ ಅರ್ಧ ನೀರಿತ್ತು. ವಿವರಿಸಲಾಗದ ಭಯವಿತ್ತು. ಅಕ್ಕಕ್ಕೆ, ಪಕ್ಕಕ್ಕೆ, ಎದುರಿಗೆ ಎಲ್ಲವೂ ಬಹು ಅಂತಸ್ತಿನ ಕಟ್ಟಡಗಳೇ. ಮೂರ್ತಿಯದೊಂದು ಮಾತ್ರ ಹಳೆಯ ಕಾಲದ ಸಣ್ಣ ಮನೆ. ಹಠದಿಂದ ಮೂರ್ತಿ ಅದನ್ನು ಉಳಿಸಿಕೊಂಡಿದ್ದರು. ವೈಶಾಖ ಪೂರ್ಣಿಮೆಯ ದಿನ ಮೂರ್ತಿ ಹುಟ್ಟಿದ್ದರಿಂದ ಅಂದೇ ಅದನ್ನು ಮೂರ್ತಿ ಸಂಭ್ರಮದಿಂದ ಆಚರಿಸುತ್ತಿದ್ದರು. ರಾತ್ರೆ ಹನ್ನೊಂದುವರೆಯಾಗಿತ್ತು. ಬೀದಿಗಳಲ್ಲಿ ಬಿಕೋ ಎನ್ನುವ ಮೌನ. ಸೆಖೆ. ಸೇರಿದ್ದವರು ಹತ್ತು, ಹನ್ನೆರಡು ಜನ. ವಿಸ್ಕಿ ಧಾರಳವಾಗಿ ಹರಿಯ ತೊಡಗಿತ್ತು. ಮೂರ್ತಿ ಎಂದಿಗಿಂತ ಹೆಚ್ಚಾಗಿ ಕುಡಿದಂತಿತ್ತು. ನಿರರ್ಗಳ, ಸ್ಪಷ್ಟ ಮಾತಿಗೆ ಹೆಸರಾಗಿದ್ದ ಮೂರ್ತಿಯ ಮಾತುಗಳು ಈ ದಿನ ವಾಕ್ಯದ ಅರ್ಧಕ್ಕೇ ನಿಂತು ಬಿಡುತ್ತಿತ್ತು. ಒಗಟಿನ ಥರ, ರೂಪಕದ ಥರ ವಾಕ್ಯಗಳು ಕೇಳಿಸುತ್ತಿದ್ದವು. +’ಮೂರ್ತಿ, ನಿನಗೆ ಯಾಕೆ ಈ ಥರದ ಯೋಚನೆ? ನಿನ್ನ ಮಕ್ಕಳು ಕೂಡಾ ಎಲ್ಲೊ ಯಾವುದೋ ಬಸ್ ಸ್ಟಾಂಡ್‌ನಲ್ಲಿ ಕುಯ್ಯೊ ಮರ್ರೊ ಎಂದು ಅಳುತ್ತಿರಬೇಕು’ ಎಂದು ಮೂರ್ತಿಯ ಹಳೆಯ ಗೆಳೆಯ ಪೀಟರ್ ಹೇಳಿದಾಗ, ಒಮ್ಮೆಗೆಯೇ ಮೂರ್ತಿ ವ್ಯಗ್ರರಾಗಿಬಿಟ್ಟರು. ’ರ್‍ಯಾಸ್ಕಲ್, ಹಾಗೆ ಮಾತನಾಡಬೇಡ ನನ್ನ ಬಗ್ಗೆ ಎಂದು ಎಷ್ಟು ಸಲ ಹೇಳಿಲ್ಲ ನಿನಗೆ?’ ಎಂದು ಹೊಡೆಯುವವರಂತೆ ಅವನ ಕಡೆಗೆ ನುಗ್ಗಿದರು. ಅವನು ತೂರಾಡುತ್ತಾ ಒಳಗೆ ಇನ್ನೊಂದು ರೂಮಿಗೆ ಓಡಿಹೋದ. ಉಳಿದವರು ಚಪ್ಪಾಳೆ ಹೊಡೆದು ನಕ್ಕರು. ಮೂರ್ತಿ ಮಾತ್ರ ಗಂಭೀರವಾಗಿಬಿಟ್ಟರು. ಅವರೊಳಗೆ ಯಾವುದೋ ಅತಿ ಸೂಕ್ಷ್ಮವಾದದ್ದನ್ನುಪೀಟರ್ ಮುಟ್ಟಿ ಚುಟುಕು ಮುಳ್ಳಾಡಿಸಿದಂತೆ ಅತ್ತಿತ್ತ ಹೊರಳಿದರು. ಕೂತಿದ್ದ ಲಾನ್‌ನ ಹಸಿರು ಹುಲ್ಲು, ಗಿಡ, ಮರ, ಆಕಾಶ ಎಲ್ಲವೂ ಅವರನ್ನು ಅಣಕಿಸಿದಂತೆ ತೋರುತ್ತಿತ್ತು. ಹಾಗೇ ಕಣ್ಣು ಮುಚ್ಚಿ ಕೂತರು. ಎಷ್ಟೋ ಯುಗಗಳಾದಂತೆ, ದೀರ್ಘ ನಿದ್ರೆಯಲ್ಲಿ ಮುಳುಗಿ ಬಿಟ್ಟಂತೆ ಅನ್ನಿಸಿತು. ಉಳಿದವರು ಎದ್ದು ಒಳಗೆ ನಡೆದರು. ಯಾರ ನಡಿಗೆಯಲ್ಲೂ ಸ್ತಿಮಿತವಿರಲಿಲ್ಲ. ಮೂರ್ತಿ ಒಮ್ಮೆಗೇ ಎಚ್ಚೆತ್ತು ನೋಡಿದರು. ಸುತ್ತ ಯಾರೂ ಇಲ್ಲ. ಎದುರು ಮನೆಯಲ್ಲಿ ಎರಡನೆಯ ಮಹಡಿಯ ಇಂಜಿನಿಯರ್ ಜೋಶಿ ಬಾಲ್ಕನಿಯಿಂದ ಇವರ ಕಡೆಗೆ ಕೈ ಬೀಸಿದ. ಆತ ಇವರನ್ನೇ ಕುತೂಹಲದಿಂದ ದಿಟ್ಟಿಸುತ್ತಿದ್ದಂತೆ, ಅಭ್ಯಾಸ ಮಾಡುತ್ತಿದ್ದಂತೆ ಇತ್ತು. ಗಂಟೆ ಎಷ್ಟೆಂದು ತಿಳಿಯಲೂ ಹೆದರಿಕೆಯಾಗಿ ಎಷ್ಟೋ ದಶಕಗಳ ಹಿಂದೆಯೇ ಕೈಗಡಿಯಾರ ಕಟ್ಟುವುದನ್ನೇ ಮೂರ್ತಿ ಬಿಟ್ಟಿದ್ದರು. ಹನ್ನೆರಡೋ, ಹನ್ನೆರಡೂವರೆಯೋ ಆಗಿರಬೇಕು. ಎಲ್ಲರನ್ನೂ ಊಟಕ್ಕಾದರೂ ಎಬ್ಬಿಸೋಣ ಎಂದು ಎದ್ದು ಮುಂಚೆ ಬಾತ್ ರೂಮಿಗೆ ಹೋಗಲು ಹಿಂಭಾಗದ ಬಾತ್ ರೂಮಿಗೆ ಹೋಗುವಾಗ ಹಾಲಿನಿಂದ ಮಾತುಕತೆ ಕಿವಿಗೆ ಬಿತ್ತು. ಕದ್ದು ಕೇಳಲೆಂದು ನಿಂತರು. +ಪೀಟರ್ ಗಂಭೀರವಾಗಿ ಹೇಳುತ್ತಿದ್ದ – ಮೂರ್ತಿಗೆ ಏನಾಗಿದೆ ಅಂತ ಗೊತ್ತಿಲ್ಲ. ಕಚಡಾ ಹೆಂಗಸರನ್ನೆಲ್ಲಾ ತಂದು ಮನೇಲಿ ತಿಂಗಳು, ಎರಡು ತಿಂಗಳು ಇಟ್ಟುಕೋತಾನೆ. ಅವರ್‍ಯಾರು ರೂಮು ಬಿಟ್ಟು ಹೊರಗೆ ಕೂಡಾ ಬರೋದಿಲ್ಲ. ಆಮೇಲೆ ಅವರು ಎಲ್ಲಿ ಹೋಗ್ತಾರೋ? ಏನೋ? ಆಮೇಲೆ ಇನ್ಯಾರೋ ಬಂದಿರ್‍ತಾರೆ. ಇವನಿಗೆ ಅಂಥೋರನ್ನ ಯಾರು ಸಪ್ಲೈ ಮಾಡ್ತಾರೋ ಏನೋ ಗೊತ್ತಾಗೋದೇ ಇಲ್ಲ. ಯಾವ ಜಾತಿ, ಕುಲ, ಭಾಷೆ ಅಂತ ತಿಳಿಯೋದು ಕಷ್ಟವೇ. ಧಂಡಿ ಸೂಳೆಗಾರಿಕೆ ಮಾಡ್ತಾನೆ. ಸಂತಾನ ಮುಂದುವರೆಸೋರಿಗೆ ಮಾತ್ರ ದೇವರು ಬೇಕು ಅಂತ ಅದನ್ನು ದೊಡ್ಡಾದಾಗಿ ತತ್ವ ಕೊಡ್ತಾನೆ. ಉಳಿದವರು ಏಕೋ ಚಪ್ಪಾಳೆ ಹೊಡೆದು ನಕ್ಕರು. ತುಂಟ ಗಣಪತಿ ಏನೋ ವ್ಯಗ್ರವಾದ ಪೋಲಿ ಜೋಕು ಹೊಡೆದಿರಬೇಕು. ತನಗೆ ಅದು ಕೇಳಿಸದೇ ಹೋಯಿತಲ್ಲ ಎಂದು ಮು‌ಊರ್ತಿ ತಮ್ಮ ಮೇಲೆಯೇ ಕೃದ್ಧರಾದರು. ಶ್ ಎಂದು ಸುಮ್ಮನಿರಿಸಿ ಪೀಟರ್ ಮುಂದುವರೆಸಿದ. +’ನಿಮಗೆ ಗೊತ್ತಿರೋ ಹಾಗೆ ನಾನೇ ಮೂರ್ತಿಗೆ ಆಪ್ತ ಸ್ನೇಹಿತ. ನನ್ನ ಹತ್ತಿರ ಕೂಡಾ ಆತ ತನ್ನ ಲೈಂಗಿಕ ಜೀವನದ ವಿವರಗಳನ್ನು, ಗುಟ್ಟುಗಳನ್ನು ಹೇಳಲ್ಲ. ನಾನು ಮೊದಲಿಗೆ ಕೆದಕ್ತಾ ಇದ್ದೆ. ಈಗ ಅದನ್ನೂ ಬಿಟ್ಟು ಬಿಟ್ಟಿದೀನಿ. ಹೆಂಗಸರನ್ನು ಹೇಗೆ ಬೆನ್ನು ಹತ್ತಿದರೆ ಹೇಗೆ ಅಂತ ಮೊನ್ನೆ ಕೇಳಿದೆ. ’ನನ್ನ ನೈತಿಕತೆ ನಿನಗೆ ಗೊತ್ತಾಗಲ್ಲ ಪೀಟರ್’ ಅಂತ ಬೈದು ಕೂರಿಸಿಬಿಟ್ಟ ಅಯೋಗ್ಯ’ – ಈ ವಾಕ್ಯ ಮುಗಿಯುವ ಹೊತ್ತಿಗೆ ಮೂರ್ತಿ ಒಳಗೆ ಬಗ್ಗಿ ನೋಡಿದರೆ, ಕಿಟಕಿ ಸಂದಿಯಿಂದ ಪೀಟರ್ ಬೆತ್ತದ ಕುರ್ಚಿಯ ಮೇಲೆ ಕೂತು ಗಂಭೀರವಾಗಿ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ಹಾಗೆ ಮಾತನಾಡುತ್ತಿದ್ದ. ಉಳಿದವರೆಲ್ಲ ನೆಲದ ಮೇಲೆ ದಿವಾನ್‌ಗಳ ಮೇಲೆ ಅಡ್ಡಾದಿಡ್ಡಿಯಾಗಿ ಬಿದ್ದಿದ್ದರು. ಹೊಗೆ ರೂಮಿನಲ್ಲಿ ತುಂಬಿ ಹೋಗಿತ್ತು. ಮಂಜಿನ ಮಧ್ಯೆ ಅವರು ಅಸ್ಪಷ್ಟವಾಗಿ, ಕದಡಿ ಹೋಗಿದ್ದ ಆಕೃತಿಗಳಂತೆ ಮಾತ್ರ ಕಾಣುತ್ತಿದ್ದರು. ಅವರೆಲ್ಲ ತನ್ನ ಅಭಿಮಾನಿಗಳೇ ತಾನೆ? ಮೂರ್ತಿ ನಕ್ಕರು. +ಗಣಪತಿ ಎದ್ದುನಿಂತು ನಾಟಕೀಯವಾಗಿ ಹೇಳಿದ – ’ಬಿಡ್ರಮ್ಮ, ವಿಷಯ ಇದು ನಮ್ಮ ಗುರು ವಿಷಯ ಶಾನೆ ಸೀರಿಯಸ್. ಅವನ ಬೆಡ್ ರೂಮ್ ವಿಚಾರ ನಮಗ್ಯಾಕೆ? ನಮಗೆ ಅವನ ಲೈಬ್ರರಿ ವಿಚಾರ, ಈ ಗುಂಡು ಹಾಕೋ ಜಾಗ ಲಾನ್ ವಿಚಾರ ಸಾಕು’ ಎಂದ. +ಮೂಲೆಯಲ್ಲಿ ಕುಳಿತು ಕೋಳಿಯಂತೆ ಜ್ಯೂಕರಿಸುತ್ತಾ ಕೂತಿದ್ದ ಶ್ರೀಧರ ಚಪ್ಪಾಳೆ ಹೊಡೆದು ಎದ್ದು ನಿಂತ. ಅವನು ಕುಡಿದಾಗ ಹುಚ್ಚುಚ್ಚಾಗಿ ಆಡುವುದು ಪ್ರಸಿದ್ಧವಾದ್ದರಿಂದ ಇಡೀ ಗುಂಪು ಬೆಚ್ಚಿದಂತೆ ಕಂಡಿತು. ಅವನನ್ನು ನಿಯಂತ್ರಣ ಮಾಡಿದರೆ ಮತ್ತಷ್ಟು ಗಲಾಟೆ ಮಾಡುತ್ತಾನೆ ಎಂದು ಗೊತ್ತಿದ್ದರಿಂದ ಸುಮ್ಮನೆ ಕೂತರು. ಯ್ಯಕ್ ಯ್ಯಕ್ ಎಂದು ಎರಡು ಸಾರಿ ಬಿಕ್ಕಳಿಸಿದ. ಮೂರ್ತಿಗೂ ಒಳಗೆ ಹೋಗಿ ಕೂರಬೇಕೆನ್ನಿಸಿತು. ತನ್ನ ಬಗ್ಗೆ ಚರ್ಚೆ ಆಗುತ್ತಿರುವಾಗ ತಾನೂ ಅಲ್ಲಿದ್ದರೆ ಒಳ್ಳೆಯದು ಎನ್ನಿಸಿತು. ತಾನು ಇರುವಾಗ ಅವರು ಮುಕ್ತವಾಗಿ ಚರ್ಚಿಸುವುದಿಲ್ಲ ಎಂದು ಹೊಳೆದು ಅಲ್ಲೇ ಗೋಡೆಗೆ ಒರಗಿ ನಿಂತರು. ಮಾತನ್ನು ಮನಸ್ಸಿನ ಒಂದು, ಸಣ್ಣ ಭಾಗ ಮಾತ್ರ ಕೇಳುತ್ತಿತ್ತು. ಉಳಿದದ್ದು ಎಲ್ಲೋ ಅಶಾಂತವಾಗಿ ಅಲೆದಾಡುತ್ತಿತ್ತು. ಕೇಳಿಸಿಕೊಂಡ ಮಾತುಗಳೇ ಅಲೆದಾಡುತ್ತಿದ್ದ ಮನಸ್ಸನ್ನು ಮತ್ತಷ್ಟು ದೂರ ತಳ್ಳಿಬಿಟ್ಟಿತು. ಯ್ಯಾಕ್, ಯ್ಯಾಕ್ ಎಂದು ನಿಲ್ಲದ ಬಿಕ್ಕಳಿಕೆಯ ಮಧ್ಯದಲ್ಲೇ ಏನೋ ಹೇಳಲು ಪ್ರಯತ್ನಿಸಿ ವಿಫಲನಾಗಿ ಮತ್ತೆ ಎರಡು ನಿಮಿಷ ನೀರು ಕುಡಿದು ಸುಧಾರಿಸಿಕೊಂಡು ಶ್ರೀಧರ ಮಾತನಾಡತೊಡಗಿದ. ಒಮ್ಮೆಗೇ ಸುತ್ತಲಿನ ಎಲ್ಲ ನಾಯಿಗಳೂ ಬೊಗಳಲು ಶುರು ಮಾಡಲು ಮೂರ್ತಿ ಬೀದಿ ಕಡೆ ನೋಡಿದರು. ಯಾವುದೋ ಒಂದು ಗೂಳಿ ತಪ್ಪಿಸಿಕೊಂಡು ಬಂದು ಬಿಟ್ಟಿತ್ತು. ನಾಯಿಗಳು ಅದನ್ನು ಇಟ್ಟಾಡಿಸುತ್ತಿದ್ದವು. ಗೂಳಿ ಬೆದರಿ ಅತ್ತ ಇತ್ತ ಓಡಿ ಆಗಾಗ ತೀರಾ ಮೇಲೇರಿ ಬಂದ ನಾಯಿಗೆ ಹಾಯಲು ಯತ್ನಿಸಿ ಅಡ್ಡಾದಿಡ್ಡಿಯಾಗಿ ಹಾಯುತ್ತಿತ್ತು. ಗಂಟೆ ಗಣಗಣ ಎಂದು ಶಬ್ಚ ಮಾಡುತ್ತಿತ್ತು. ಟಕ್ ಟಕ್ ಎಂದು ಎದುರಿಗಿನ ಕಟ್ಟಡದ ದೀಪಗಳು ಬಂದು. ಒಂದೆರಡು ಮುಖಗಳು ಕಂಡವು ಕಿಟಕಿಗಳಲ್ಲಿ. ಒಂದು, ನಿಸ್ಸಂದೇಹವಾಗಿ ಜೋಶಿಯದೇ ಎಂದುಕೊಂಡರು ಮೂರ್ತಿ. ’ನಿಮ್ಮ ನಂದಿಗೆ, ಶಿವನ ವಾಹನಕ್ಕೆ ನಾಯಿಗಳು ಕೂಡ ಕಚ್ತಾ ಇವೆ ಜೋಶಿ’ ಎಂದು ಕೂಗಿ ಹೇಳಬೇಕೆನ್ನಿಸಿತು. ತೀರಾ ಒರಟಾಗಿ ಬಿಡುತ್ತದೆಂದು ಭಯವಾಗಿ ಎಲ್ಲೇ ಮತ್ತಷ್ಟು ಮರೆಗೆ, ಸಂಪಿಗೆ ಮರದ ಮರೆಗೆ ಸರಿದರು. ಈ ನಾಯಿಗಳ ಬೊಗಳುವಿಕೆ, ಗಲಾಟೆ ಕೂಡಾ ಈ ಮೂರ್ತಿಗೆ, ಮನೆಗೆ ಸಂಬಂಧಿಸಿದ್ದೇ ಇರಬೇಕೆಂದು ಹೊರಗೆ ತಲೆಹಾಕಿದ ಜೋಶಿಗೆ ನಿರಾಶೆಯಾಗಿ ಟಕ್ ಎಂದು ದೀಪ ಆರಿಸಿದರು. ಬೆದರಿದಂತೆ ಗೂಳಿ ಧಡಧಡನೆ ಇನ್ನೊಂದು ರಸ್ತೆಗೆ ಓಡಿ ಹೋಯಿತು. ನಾಯಿಗಳ ಹಿಂಡು ಹಿಂಬಾಲಿಸಿತು. ಮೂರ್ತಿಯವರ ಕರುಳು ಚುರುಕ್ಕೆಂದಿತು. ಎಷ್ಟು ಹೊತ್ತಾಯಿತು ತಾನು ಕಡೆಯ ವಾಕ್ಯ ಕೇಳಿ ತಿಳಿಯಲಿಲ್ಲ. ಮತ್ತೆ ಎಚ್ಚರದಿಂದ ಕಿವಿಗೊಟ್ಟು ಕೇಳಿದರು. ಹಾಗೇ ಕಿಟಕಿ ಸಂದಿನಿಂದ ಬಗ್ಗಿಯೂ ನೋಡಿದರು. ಅವರು ಮುಂಚೆ ನೋಡಿದ ಭಂಗಿಗಳಿಗಿಂತ ಎಲ್ಲರೂ ಬೇರೆ ರೀತಿಯಲ್ಲಿದ್ದಂತೆ ಕಂಡಿತು. ಶ್ರೀಧರ ದಿವಾನ್ ಅಂಚಿಗೆ ಪದ್ಮಾಸನ ಹಾಕಿ ಕೂತು ಮಾತನಾಡುತ್ತಿದ್ದ. +ಅದೆಲ್ಲಾ ಬಿಡಿ, ನಾನು ಹೇಳೋ ಮುಖ್ಯ ವಿಚಾರ ಅಂದ್ರೆ.. ಯ್ಯಕ್, ನಾನು ನಾಸ್ತಿಕ ಆದದ್ದೇ ಮೂರ್ತಿ ಪುಸ್ತಕ ಓದಿ. ಮಹಾ ಟ್ರೆಡೀಷನಲ್ ಫ್ಯಾಮಿಲೀಯಿಂದ ಬಂದೋನು ನಾನು. ಮೂರ್ತಿ ಪುಸ್ತಕ ಓದಿ ಅದರಲ್ಲೂ ಅವರ ಪುಸ್ತಕ ’ದೇವರನ್ನು ಧೂಸ ಮಾಡಿ’ ಓದಿ ದೇವರ ಮನೇಲಿ ಉಚ್ಚೆ ಹೊಯ್ದೊನು ನಾನು. ಯಾರೂ ಇಲ್ಲದಾಗ ಅಂತ ಇಟ್ಟುಕೋಳಿ, ಅಫ್‌ಕೋರ್ಸ್ ಎಲ್ಲಿದೆ ಆತ್ಮ? ಪುಸ್ತಕ ಓದಿ ಪೂರ್ಣವಾಗಿ ನಾಸ್ತಿಕ ಆದೆ ಕಣ್ರೋ. ಆದರೆ, ಈಚೆಗೆ ಯಾಕೋ ಮೂರ್ತಿ ಬಗ್ಗೆ ಅನುಮಾನ ಬರ್ತಿದೆ ಕಣ್ರೋ. ’ಆ ಸೂಳೇಮಗ ದೇವರಿಗೆ ಹೇಳಿದೆ, ಯಾಕೆ ಜನರನ್ನು ಈ ರೀತಿ ಕಾಡ್ತೀಯ’ ಅಂತ ಹೇಳಿದೆ ದೇವರಿಗೆ ಅಂತ ಮೊನ್ನೆ ಮೂರ್ತಿ ಹೇಳಿದ್ರು ಯ್ಯಕ್. ಎರಡು ಸಾರಿ ಆ ಡೈಲಾಗ್ ರಿಪೀಟ್ ಮಾಡಿದ್ರು. ದೇವರು ಇದಾನೆ ಅಂತ, ತಾನು ಆತನ ವಿರೋಧಿ ಅಂತ ಮೂರ್ತಿ ನಂಬೋ ಹಾಗೆ ಕಾಣ್ತಾನೆ. ಅಯ್ಯೋ ಯ್ಯಕ್, ಏನ್ರೋ ಗತಿ ಅಗ ನಮ್ಮಂಥೋರದು? ಅಯ್ಯೋ ಯ್ಯಕ್..’ ಎಂದು ಗೋಳಾಡಲಾರಂಭಿಸಿದ. ಅದು ಗಂಭೀರವೋ, ತಮಾಷೆಯೋ ಯಾರಿಗೂ ಹೊಳೆಯಲಿಲ್ಲ. +ಮೂರ್ತಿಯವರಿಗೆ ಮಾತ್ರ ಶಾಕ್ ಹೊಡೆದಂತಾಯಿತು. ದಿಕ್ಕು ತಪ್ಪಿ ಅಲೆದಾಡುತ್ತಿದ್ದ ಎರಡು ವೈರುಗಳು ಥಟಕ್ಕನೆ ಕಚ್ಚಿಕೊಂಡಂತೆ. ತಲೆ ಗಿರ್ರೆಂದಿತು. ಎಂಥಾ ಮಾತು ಶ್ರೀಧರನದು? ಎಂಥಾ ಮರ್ಮಘಾತಕ ಹೇಳಿಕೆ ಇದು? +ಮೂರ್ತಿ ತೂರಾಡುತ್ತಾ ಒಳಗೆ ಬಂದರು. ಎಲ್ಲರೂ ಮೌನವಾಗಿ ಅವರ ಕಡೆಗೇ ನೋಡಿದರು. ಅಚಿಥಾ ಮತ್ತಿನಲ್ಲೂ ತನ್ನ ಮಾತು ಅವರಿಗೆ ಕೇಳಿಸಿರಬಹುದೇ ಎಂದು ಗಾಬರಿಯಾಗಿ, ಕುಡಿದು ಪೂರಾ ಚಿತ್ತಾಗಿರುವವನಂತೆ ಶ್ರೀಧರ ಕುತ್ತಿಗೆಯನ್ನು ಎಡಕ್ಕೆ ವಾಲಿಸಿದ. ಮೂರ್ತಿ ಮೌನವಾಗಿ ಅವನನ್ನು ಎಬ್ಬಿಸಿದರು. ಹತ್ತು ನಿಮಿಷದಲ್ಲೆ ಊಟ ಮುಗಿದೇ ಹೋಯಿತು. ಮಧ್ಯೆ ಒಂದು ಮಾತೂ ಇಲ್ಲ. ಮೂರ್ತಿಯವರ ಮನಸ್ಸು ಮಾತ್ರ ಎಲ್ಲಿಯೋ ಇತ್ತು. +ಎಲ್ಲರೂ ಚಕಚಕನೆ ತಮ್ಮ ಸ್ಕೂಟರ್, ಲೂನಾ ಹತ್ತಿ ಹೊರಟರು. ಒಮ್ಮೆಗೇ ಏಳೆಂಟು ಗಾಡಿಗಳು ಶುರುವಾದಾಗ ಇಡೀ ಬೀದಿ ಮತ್ತೆ ಒದ್ದಾಡಿದಂತೆ ಕಂಡಿತು. ಮತ್ತೆ ಗೂಳಿ ಚಕ್ಕನೆ ಓಡಿ ಬಂದಿತು. ನಾಯಿಗಳ ಹಿಂಡು ಹಿಂದೆ. ಈ ಗಾಡಿಗಳ ಮಧ್ಯೆ ಅದು ನುಗ್ಗಿತು. ಒಂದಿಬ್ಬರು ’ಅರರೇ’ ಎಂದು ಬೆದರಿ ಲೂನಾಗಳನ್ನು ದಬ್ಬಿ ಹಾಕಿಕೊಂಡು ಕೆಳಕ್ಕೆ ಬಿದ್ದು ಬಿಟ್ಟರು. ನಾಯಿಗಳು ಹಿಂಬಾಲಿಸಿದವು. ಗದ್ದಲಕ್ಕೆ ಮತ್ತೆ ಎದುರಿನ ಕಟ್ಟಡದಲ್ಲಿ ’ಟಕ್’ ’ಟಕ್’ ಎಂದು ದೀಪ ಹತ್ತಿದವು. ಗಾಡಿಗಳು ಹೊರಟವು. +ಮೂರ್ತಿಯವರಿಗೆ ಎಚ್ಚರವಾಯಿತು. ಕತ್ತಲ ಅಧೋಲೋಕದಲ್ಲಿ ವಿಚಿತ್ರ ಸ್ವಪ್ನಗಳಲ್ಲಿ ಮುಳುಗಿ ಹೋಗಿದ್ದವರಿಗೆ ಇದ್ದಕ್ಕಿದ್ದಂತೆ ಎಲ್ಲಿಗೊ ರೋಯ್ಯನೆ ಎಸೆದು ಬಿಟ್ಟಂತೆ ಎಚ್ಚರವಾಯಿತು. ಅಯ್ಯೋ, ದೀಪವೇಕೆ ಬಂತು? ಯಾರಲ್ಲಿ? ಯಾರು ಆ ಕತ್ತಲ ಮೂಲೆಯಲ್ಲಿ ಬೆಂಕಿಯ ಮರದಂತೆ ನಿಂತವರು? ಅಯ್ಯೋ? ಯಾರು ನೀನು? ಕುತ್ತಿಗೆಯನ್ನು ಉಸಿರುಕಟ್ಟಿಸುವಂತೆ ಹಿಸುಕುತ್ತಿದ್ದ, ಇದ್ದಕ್ಕಿದ್ದಂತೆ ಗಾಳಿಗಿಂತ ಹಗುರವಾಗಿ ದೀಪವಾಗಿ ಬಿಟ್ಟಿದ್ದವರು ಯಾರು? ಮೂರ್ತಿ ಝಗ್ಗನೆದ್ದು ಕೂತರು. ತಮ್ಮ ಮಂಚವೇ ಸಾವಿರ ಸೂರ್ಯನಂತೆ ಹೊಳೆಯುತ್ತಿದ್ದಂತೆ ದೀಪವಾರಿಸದೆ ತಾನೇಕೆ ಮಲಗಿದೆ? ಎನ್ನಿಸಿ ಮಂಚದ ಹತ್ತಿರವೇ ಇದ್ದ ಸ್ವಿಚ್ ಆರಿಸಿದರು. ಮೂಲೆಯಲ್ಲಿ ಯಾರೋ ಕೂತಂತೆ, ಚಿಕ್ಕ ಮಕ್ಕಳ ಹಾಗೆ ಭೀತಿಯಿಂದ ಅತ್ತಕಡೆಗೆ ನೋಡದೆಯೇ ಮೈಚಾಚಿದರು. +ಕನಸಲ್ಲೋ ಭ್ರಮೆಯಲ್ಲೋ ಅಥವಾ ವೈಚಾರಿಕ ಸಂಕಲ್ಪದಲ್ಲೋ ಮೂರ್ತಿ ಮತ್ತೆ ತೇಲತೊಡಗಿದರು. ಶ್ರೀಧರ ಅವರ ಮರ್ಮವೊಂದನ್ನೆ ಮೀಟಿ ಬಿಟ್ಟಿದ್ದ. ತನಗೆ ದೇವರ ಬಗ್ಗೆ ಅಷ್ಟೇಕೆ ಹುಚ್ಚು? ಅವನು ಇಲ್ಲವೆಂದು ಹೇಳುವ ಮತ್ತೆ ಮತ್ತೆ ಅದನ್ನು ಪ್ರತಿಪಾದಿಸುವ ಹುಚ್ಚು? ಕಣ್ಣು ಬಿಟ್ಟರು. ಸದ್ಯ, ದೊಡ್ದ ಕತ್ತಲೆಯ ಖಾಂಡಲಿ ಮುಳುಗಿಬಿದ್ದಂತೆ, ಅದರಲ್ಲೂ ತಾವು ಕೆಳಗೆ ಸಿಕ್ಕಿದಂತೆ. +ಈಚೀಚೆಗೆ ದೇವರು ಅವರಿಗೆ ನಿಜವಾಗ ತೊಡಗಿದ್ದ. ಆದರೆ, ಅವರು ಅವನನ್ನು ತಮ್ಮ ಶತ್ರು ಎಂದು ಭಾವಿಸತೊಡಗಿದ್ದರು. ಅಷ್ಟೆ ಬರೇ ನಾಸ್ತಿಕ ಸಾಹಿತ್ಯ ಓದಿ ಅದನ್ನೇ ಮತ್ತೆ ಭಾಷೆಯಲ್ಲಿ ಇಳಿಸುವ ತನಕ ಅವರಿಗೆ ಯಾವ ಸಮಸ್ಯೆಯೂ ಕಂಡಿರಲಿಲ್ಲ. ಆದರೆ, ಈಚೆಗೆ ತೀರಾ ಸ್ವಂತದ್ದೆ ಏನಾದರೂ ಹೇಳಬೇಕು ಎನ್ನಿಸಿ ಧಾರ್ಮಿಕ ಸಾಹಿತ್ಯವನ್ನು, ಅನುಭಾವಿ ಸಾಹಿತ್ಯವನ್ನು ಆಳವಾಗಿ ಅಭ್ಯಾಸ ಮಾಡ ಹತ್ತಿದರು. ಅದರಿಂದ ಆದ ಪರಿಣಾಮ ಮಾತ್ರ ಬೇರೆಯೇ ಆದ ರೀತಿಯದಾಗಿತ್ತು. ಹೊರಗೆ ಹೇಳುತ್ತಿದ್ದ ವಾಕ್ಯಗಳು ಹಳೆಯವೇ ಆಗಿದ್ದರೂ, ಅದಕ್ಕೆ ಹೊಸ ರೀತಿ ತೀವ್ರತೆ, ಅರ್ಥ ಬಂದು ಬಿಟ್ಟಿತು. ಇದನ್ನು ಕೇಳುತ್ತಿದ್ದ ಅವರ ಅಭಿಮಾನಿಗಳಿಗೆ ರೋಮಾಂಚನವಾಗುತ್ತಿತ್ತು. ಆದರೆ, ಅವರು ಅದನ್ನು ಗ್ರಹಿಸುತ್ತಿದ್ದ ರೀತಿಗೂ, ತಮಗೂ ಒಂದು ಸೂಕ್ಷ್ಮವಾದ ವ್ಯತ್ಯಾಸವೇನೋ ಬಂದು ಬಿಟ್ಟಿದೆ ಎಂದು ಮಾತ್ರ ಅವರಿಗೆ ಗೊತ್ತಾಗಿತ್ತು. ಅದೇನು, ಅದರ ಸ್ವರೂಪದ ಸೂಕ್ಷ್ಮತೆಗಳ ಬಗೆಗೆ ಮಾತ್ರ ಅವರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಅಷ್ಟೇ ಅಲ್ಲ, ಅದರ ಬಗ್ಗೆ ಯೋಚಿಸಲು, ತರ್ಕೀಕರಿಸಲು ಕೂಡಾ ಹೆದರುತ್ತಿದ್ದರು. ಭಾವನಾ ಜಗತ್ತಿನ ಸೂಕ್ಷ್ಮ ವ್ಯತ್ಯಾಸವಾಗಿ ಪ್ರಾರಂಭವಾದದ್ದು, ಅದು ಅಂತಿಮವಾಗಿ ಬೌದ್ಧಿಕ ಜಗತ್ತಿಗೂ ಇಳಿಯುತ್ತಿದ್ದುದು ಅವರಿಗೂ ಅನುಭವಕ್ಕೆ ಬಂದಿತ್ತು. ಆದರೆ, ಅದನ್ನು ಒಪ್ಪಿಕೊಳ್ಳಲು ಮಾತ್ರ ಸಿದ್ಧರಾಗಿರಲಿಲ್ಲ. ನಿದ್ರೆ ಏಕೋ ಭೀಕರವಾಗತೊಡಗಿತು. +ಕಣ್ಣು ಬಿಟ್ಟು ನೋಡಲು ಪ್ರಯತ್ನಿಸಿದರು. ಮೂಲೆಯಲ್ಲಿನ ಕುರ್ಚಿಯಲ್ಲಿ ಯಾರೋ ಕೂತಹಾಗಿತ್ತು. ಅಸ್ಪಷ್ಟ ಆಕಾರ, ಬೆಚ್ಚಿ ಅವರು ಯಾರು, ಯಾರದು ಎಂದರು. ಟಕ್, ಬೆಳಕು ಬಂತು. ಕೂತಿದ್ದವಳು ಕಲಾ. +’ನೀನು ಯಾಕೆ ಬಂದೆ, ಯಾವಾಗ ಬಂದೆ, ಹೇಗೆ….’ ಮಾತು ಒಂದೇ ಸಮವಾಗಿ ಹೊರಡುತ್ತಿತ್ತು. ಹೊರಡದೆ ಒದ್ದಾಡುತ್ತಿತ್ತು. +’ಸುಮ್ಮನೆ ಬಿದ್ಕೊಳಿ, ಸುಸ್ತು ಮಾಡಿಕೋ ಬೇಡಿ, ಪ್ರಶ್ನೆ ಕೇಳಿ. ಯಾಕೆ ಬಂದೆ ಅಚಿದ್ರೆ…. ಇಷ್ಟು ದಿನ ಜತೇಲಿ ಮಲಗಿಸಿಕೊಂಡು ಈಗ ಬೇಡ ಅಂದ್ರೆ ಹೋಗಿ ಬಿಡ್ತೀನಾ’. ಧ್ವನಿಯಲ್ಲಿ ಕಾಠಿಣ್ಯವಿತ್ತು. ನಿರ್ಧಾರವಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಏನೋ ಒಂದು ಬಗೆಯ ಒಳಸಂಚಿದ್ದಹಾಗಿತ್ತು. +’ಏನೇ ಹಾಗಂದ್ರೆ, ಬಿಟ್ಟಿ ಮಲಗಿದಿಯೇನು ನೀನು, ಇಲ್ವಲ್ಲಾ. ದುಡ್ದು ತಗೊಂಡಿಲ್ವಾ’ ಮೆತ್ತಗೆ ಈ ಮಾತು. ಗಟ್ಟಿಯಾಗಿ ಹೇಳಲು ಸಾಧ್ಯವಾಗಲಿಲ್ಲ. ತಾನು ಎಷ್ಟೇ ಚೀರಿ ಹೇಳಿದರೂ ಕಲಾಳ ಗಂಟಲು ಅದನ್ನು ಮೀರುತ್ತದೆಂದು ಮೂರ್ತಿಗೆ ಚೆನ್ನಾಗಿ ಗೊತ್ತು. ಕಲಾ ಧಡಕ್ಕನೆ ಎದ್ದಳು. ಎದ್ದು ಧಡಧಡನೆ ಹೆಜ್ಜೆ ಹಾಕಿ ಬಂದು ಜುಟ್ಟು ಹಿಡಿದಳು. +’ಈವತ್ತು ತಾನೇ ಅಬಾರ್ಷನ್ ಮಾಡಿಸಿಕೊಂಡು ಬಂದಿದೀನಿ. ಸೀದಾ ಆಸ್ಪತ್ರೆಯಿಂದ್ಲೇ ಬರ್ತಿದೀನಿ ತಿಳ್ಕೊ’ – ಮೂಸುವಂತೆ ಮೈಯನ್ನು ಇನ್ನಷ್ಟು ಹತ್ತಿರ ಒಡ್ಡಿದಳು. ಆಸ್ಪತ್ರೆಗೆ ಮಾತ್ರ ವಿಶಿಷ್ಟವಾದ ಅನೇಕ ವಾಸನೆಗಳು ಬಂದು ಆವರಿಸಿಬಿಟ್ಟವು. ಅದು ನಿಜವಾಗಿ ಆಸ್ಪತ್ರೆಯ ವಾಸನೆಗಳೇ, ಅಥವಾ ತಮ್ಮ ಭ್ರಮೆಯೇ ಎನ್ನುವುದನ್ನು ತಿಳಿಯುವ ಶಕ್ತಿ ಮೂರ್ತಿಗೆ ಹೊರಟು ಹೋಗಿತ್ತು. +***** +ಕೀಲಿಕರಣ: ಎಂ ಆರ್ ರಕ್ಷಿತ್ +ಬಳ್ಳಾರಿ ಅನ್ನೋ ಊರಿನಲ್ಲಿ ಅಂತೂ ಇಂತೂ ಐದು ವರ್ಷ ಮುಗಿಸಿದ್ದ ಡಾ.ವಿನಾಯಕ ಜೋಷಿ, ಎಂ. ಬಿ.ಬಿ.ಎಸ್. ಹೆಸರಿನ ಹಿಂದೆ ಒಂದು,ಮತ್ತು ಮುಂದೆ ನಾಲ್ಕಕ್ಷರ ಹಾಕಿಕೊಳ್ಳಲು ತಲಾ ಒಂಭತ್ತು ತಿಂಗಳು ಬೇಕಾಗಿತ್ತು. ತನ್ನ ಹೆಸರನ್ನು ಒಂದು […] +ಅಕ್ಕ ಆ ಹಿತ್ತಲಿನ ಅಂಗಳದಲ್ಲಿ ನಿಂತಿದಾಳೆ. ಅವಳ ಕಾಲಿನ ಕೆಳಗೆ ಕಟ್ಟಿರುವೆಗಳ ಸಾಲು ಹಬ್ಬಿದೆ. ಮೇಲೆ ಆಕಾಶ ನಗ್ತಿದೆ. ಮುಂದೆ ಚೆನ್ನಾಗಿ ಓದು ಮಾರಾಯ ಅಂತ ಅಕ್ಕ ನನಗೆ ಹೇಳ್ತಾಳೆ. ಸೋದರತ್ತ್ತೆಯ ಕಣ್ಣಿಗೆ ಕಾಣಿಸದ […] +ಅಂದು ಪತ್ನಾಜೆ. ಬಯಲಾಟದ ಮೇಳಗಳು ಮುಂಬರುವ ಆರು ತಿಂಗಳ ಮಳೆಗಾಲಕ್ಕಾಗಿ ತಮ್ಮ ಆಟಗಳನ್ನು ನಿಲ್ಲಿಸುವ ದಿನ. ಕಳೆದ ಆರು ತಿಂಗಳುಗಳಿಂದ ಗೆಜ್ಜೆ ಕಟ್ಟಿ, ಬಣ್ಣ ಬಳಿದು, ವೇಷ ತೊಟ್ಟು ಕುಣಿದ ವೇಷಧಾರಿಗಳು, ಇನ್ನು ತಮ್ಮ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_176.txt b/Kannada Sahitya/article_176.txt new file mode 100644 index 0000000000000000000000000000000000000000..e632430acd47b6204e8f0858c8bf112649687b90 --- /dev/null +++ b/Kannada Sahitya/article_176.txt @@ -0,0 +1,186 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಧನ್ಯತೆಯ ಧ್ಯಾಸ +ಕನ್ನಡ ಸಾಹಿತ್ಯಸಮ್ಮೇಳನದ ಅಧ್ಯಕ್ಷತೆಯ ದೊಡ್ಡ ಗೌರವ ನೀಡಿ ನನ್ನ ಮೇಲೆ ಕೃಪಾವರ್ಷ ಕರೆದ ಎಲ್ಲ ಚಿನ್ಮಯ ಶಕ್ತಿಗಳಿಗೆ ಕೈಮುಗಿದು, ಹರಸಿದ ಎಲ್ಲ ವ್ಯಕ್ತಿಗಳಿಗೂ ಕನ್ನಡ ಸಾಹಿತ್ಯ ಪರಿಷತ್ತಿಗೂ ತಲೆಬಾಗಿ, ಕನ್ನಡದ ಮನ್ನಣೆಯ ಈ ಮಣೆ ಹತ್ತಿ ಪ್ಲಾವಿತಳಾಗಿ, ತುಸು ಭಾವುಕಳೂ ಆಗಿ ನಿಂತಿದ್ದೇನೆ. ಮೂಡಬಿದಿರೆಯ ಈ ಮಂಜುಳ ಹರ್ಷಾಭಿಷೇಕದ ಮಂಗಳಮಯ ಸಮ್ಮೇಳನ ನನಗೆ ಪುರಾಣಗಳು ಹೇಳುವ ದೇವಪುಷ್ಪ ವೃಷ್ಟಿಯ ಪುಳಕಾನುಭವವೂ ಆಗುತ್ತಿದೆಯೆಂದು ಪ್ರಾಂಜಲವಾಗಿ ನಿವೇದಿಸುತ್ತೇನೆ. +ನನ್ನ ನಿಡುಬಾಳಿನಲ್ಲಿ ಕಂಡುಂಡ ಋತಸತ್ಯಗಳನ್ನು, ನಂಬಿ ನಡೆದ ಸಿದ್ಧಾಂತಗಳನ್ನು, ಯೋಗ್ಯ ಹಾಗೂ ಮೌಲಿಕವೆಂದು ಹೊಳೆದ ಚಿಂತನೆಗಳನ್ನು ಮನಬಿಚ್ಚಿ ನುಡಿಯಲು ನೀವೆಲ್ಲ ಸ್ಫೂರ್ತಿಯಾಗಬೇಕೆಂದು ಪ್ರಾರ್ಥಿಸುತ್ತೇನೆ. ಎಲ್ಲ ವಿಷಯಗಳನ್ನು ಕುರಿತು ಹೇಳುವ ಪ್ರಜ್ಞಾಪ್ರಭುತ್ವವಾಗಲಿ ಸರ್ವಜ್ಞತ್ವವಾಗಲಿ ನನಗೆ ಇಲ್ಲ. ನಾನು ಬಲ್ಲ ಹಾಗೂ ಗ್ರಹಿಸಿದ ವಿಚಾರಗಳನ್ನು ನಿರೂಪಿಸುವಾಗ ಕೂಡ ಸರ್ವಜ್ಞತ್ವವನ್ನು ಆರೋಪಿಸಿಕೊಂಡು ಹೂಂಕರಿಸುವ ಅಹಂಕಾರ ನನ್ನನ್ನು ಆಕ್ರಮಿಸದಿರಲಿ. +ಅಧ್ಯಕ್ಷಭಾಷಣದ ಆರಂಭದಲ್ಲಿಯೇ ಹೇಳಬೇಕಾದ ಕೆಲವು ಸಂಗತಿಗಳನ್ನು ಮೊದಲು ಪ್ರಸ್ತಾಪಿಸುತ್ತೇನೆ. ನಾನು ನಿಂತಿರುವ ವೇದಿಕೆಗೆ ಹೆಸರಿಟ್ಟಿರುವ ಮಹಾಕವಿ ರತ್ನಾಕರವರ್ಣಿಗೂ ನನ್ನ ಅಧ್ಯಯನ-ಅಧ್ಯಾಪನ ಶಿಸ್ತಿಗೂ ಅರ್ಧಶತಮಾನದ ಬೆಸುಗೆಯಿದೆ. ಪ್ರೌಢಶಾಲೆಯಲ್ಲಿ ಭರತೇಶ ವೈಭವದ ಸಾಂಗತ್ಯ ಪದ್ಯಗಳ ವಾಚನ ಪರಿಚಯವಾಗಿ, ಕಾಲೇಜು ತರಗತಿಯಲ್ಲಿ ಶತಕಗಳ ಹಾಗೂ ಸಮಗ್ರ ಭರತೇಶ ವೈಭವದ ಅನುಸಂಧಾನವಾಯಿತು. ಆ ಮಹಾಕಾವ್ಯವನ್ನು ೧೯೬೭ರಲ್ಲಿ ಪ್ರೊ.ಜಿ. ಬ್ರಹ್ಮಪ್ಪ, ಪ್ರೊ. ಹಂಪನಾ ಮತ್ತು ನಾನು, ಹೊಸ ಓಲೆಗರಿಗಳ ನೆರವಿನಿಂದ ಸಂಪಾದಿಸಿದ್ದೆವು. ಇದೀಗ ಅದರ ಮರುಮುದ್ರಣ ಮಾಡಿ ಸಾಹಿತ್ಯ ಪರಿಷತ್ತು ಪ್ರಕಟಿಸಿದ್ದು ಈ ಸಮ್ಮೇಳನದಲ್ಲಿ ಬಿಡುಗಡೆ ಆಗುತ್ತಿದೆ. ೧೯೭೯ರಲ್ಲಿ ಡಾ. ಹಂಪನಾ ೨೩೮ ರತ್ನಾಕರನ ಹಾಡುಗಳನ್ನು ಏಕೈಕ ಹಸ್ತ ಪ್ರತಿಯ ಸಹಾಯದಿಂದ ಸಂಪಾದಿಸಿದಾಗಲೂ ನಾನು ಸಹಕರಿಸಿದ್ದೆ. ರತ್ನಾಕರನ ಕಾವ್ಯಗಳನ್ನು ಕುರಿತು ಇದೇ ಮೂಡಬಿದಿರೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವಿಚಾರ ಸಂಕಿರಣ ನಡೆಸಿದಾಗಲೂ ನಾನು ಭಾಗವಹಿಸಿದ್ದೆ. ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ವತಿಯಿಂದ ಏರ್ಪಾಡಾಗುತ್ತಿದ್ದ ಉಪನ್ಯಾಸಗಳಿಗೆ ಇಲ್ಲಿಗೆ ನಾನು ಆಗಮಿಸಿದ ನೆನಪು ಹಸಿರಾಗಿದೆ. ಈ ೭೧ನೆಯ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಮಹಾಪೋಷಕರಾದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮಿಯವರು ಪಟ್ಟಾಭಿಷಕ್ತರಾದ ಶುಭ ದಿವಸ ಕೂಡ, ಪದ್ಮಭೂಷಣ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ನನ್ನನ್ನೂ ಬರಮಾಡಿಕೊಂಡಿದ್ದರು. +ಸಾವಿರ ಕಂಬದ ಬಸದಿ ಹೆಸರಿನ ಇಲ್ಲಿಯ ಉತ್ಕ ಷ್ಟ ತ್ರಿಭುವನ ತಿಲಕ ಚೂಡಾಮಣಿ ಚೈತ್ಯಾಲಯ ಮತ್ತು ಇತರ ಬಸದಿಗಳ ವಾಸ್ತುಶಿಲ್ಪದ ದರ್ಶನದಿಂದ ರೋಮಾಂಚಗೊಂಡಿದ್ದೇನೆ. ಆಳುಪರು, ಚೌಟರು, ಅಜಿಲರು ಮತ್ತು ಬಂಗರು ಹೊಂದಿದ್ದ ಧಾರ್ಮಿಕ ಶ್ರದ್ಧೆ, ಕಲಾಪ್ರೇಮವನ್ನು ಇಲ್ಲಿಯ ೧೮ ಜಿನಾಲಯಗಳಲ್ಲದೆ ಇನ್ನಿತರ ೧೮ ದೇವಾಲಯಗಳೂ ಕೆರೆಗಳೂ ಶಾಸನಗಳೂ ಸಾರುತ್ತಿವೆ. ಸಮಸ್ತ ಆಗಮ ಪರಂಪರೆಯ ಸಾರ ಸಮಸ್ತವನ್ನು ಗರ್ಭೀಕರಿಸಿದ ಧವಲ, ಜಯಧವಲ, ಮಹಾಧವಲದ ಏಕೈಕ ಸಂರಕ್ಷಿತ ಹಸ್ತಪ್ರತಿ ಇಲ್ಲಿನ ಶ್ರುತಭಂಡಾರದ ತವನಿಧಿಯಾಗಿ ಬೆಳಗಿದ್ದನ್ನೂ ಹಾಗೂ ವಿದ್ವನ್ಮಣಿಗಳಾದ ಶಾಸ್ತ್ರಿಗಳ ಪರಂಪರೆಯಿಂದ ಸುಶೋಭಿತವಾದುದನ್ನೂ, ಇನ್ನು ಎಂದೆಂದಿಗೂ ಸಿಗಲಾರದೆಂದು ತಿಳಿದಿದ್ದ ನಾಗವರ್ಮನ ವರ್ಧಮಾನಪುರಾಣ ಇಲ್ಲಿನ ಶ್ರುತ ಭಂಡಾರದಿಂದ ಬೆಳಕು ಕಂಡಿತೆಂಬುದನ್ನೂ, ಕನ್ನಡ ಸಾಹಿತ್ಯ ಪರಂಪರೆಯ ಉಜ್ವಲ ದೀಪಸ್ತಂಭವಾದ ವಡ್ಡಾರಾಧನೆಯ ಪರಿಷ್ಕಾರಕ್ಕೆ ಇಲ್ಲಿನ ತಾಳೆಗರಿ ಗ್ರಂಥಗಳು ಮುಖ್ಯ ಆಕರವೆಂಬುದನ್ನೂ ಕನ್ನಡ ವಿದ್ವತ್ತು ಬಲ್ಲುದು. ಕನ್ನಡ ಸಾಹಿತ್ಯ, ಸಂಸ್ಕ ತಿ, ವಾಸ್ತು, ಶಿಲ್ಪ ಮತ್ತು ಕಲೆಗಳಿಗೆ ತನ್ನ ವಿಶಿಷ್ಟ ಕೊಡುಗೆ ನೀಡಿ ಅಕ್ಷಯ ಭಂಡಾರವೆನಿಸಿದ ಮೂಡಬಿದರೆಯಲ್ಲಿ ನಡೆಯುತ್ತಿರುವ ಸಮ್ಮೇಳನದ ಅಧ್ಯಕ್ಷತೆಗೆ ನನ್ನನ್ನು ಸರ್ವಾನುಮತದಿಂದ ಆರಿಸಿದ್ದರ ಹಿಂದೆ ಅತೀತ ಶಕ್ತಿಯೊಂದು ಪ್ರವರ್ತನಶೀಲವಾಗಿರಬೇಕೆಂದು ಊಹಿಸುತ್ತೇನೆ. ರತ್ನಾಕರವರ್ಣಿಯ ಹೆಸರಿನ ವೇದಿಕೆ ಹತ್ತಿಸಿ, ಮಹಾಕವಿಯ ಹೆಗಲಮೇಲೆ ಕೂಡಿಸಿ, ಸಾಹಿತ್ಯ ಜಗತ್ತಿಗೆ ನಾನು ಕಾಣುವಂತೆ ಅಕ್ಕರೆ ತೋರಿದವರಿಗೆಲ್ಲ ಸಾರ್ದ್ರ ಹೃದಯಳಾಗಿ ನಮಸ್ಕರಿಸುತ್ತೇನೆ. +ದಕ್ಷಿಣ ಕನ್ನಡ ಜಿಲ್ಲೆಯಂತೂ ಕರ್ನಾಟಕಕ್ಕೇ ಅಲ್ಲದೆ ಭಾರತಕ್ಕೂ ಜಗತ್ತಿಗೂ ಹಲವು ವಿಷಯಗಳಲ್ಲಿ ಮಾದರಿ. ಬಹು ಭಾಷೆಗಳವರು ಒಟ್ಟೊಟ್ಟಿಗೆ ನಗುನಗುತ್ತ ಸಾಮರಸ್ಯದಿಂದ ಬಾಳುವುದು ಸಾಧ್ಯವಿದೆ ಎಂಬ ಲಕ್ಷಣಕ್ಕೆ ಈ ಜಿಲ್ಲೆ ಲಕ್ಷ ವಾಗಿದೆ. ಅನನ್ಯ ಯಕ್ಷಗಾನ ಕಲೆಯ ತಾಯಿನೆಲ ಆಗಿರುವುದಲ್ಲದೆ ಬ್ಯಾಂಕಿಂಗ್ ಮತ್ತು ಹೋಟೆಲ್ ಉದ್ಯಮಗಳಿಗೆ ಮೇಲ್ಪಂಕ್ತಿಯಾಗಿದೆ. ಇಲ್ಲಿನ ಧರ್ಮ ಸಮನ್ವಯ, ಹೊಸದರತ್ತ ತುಡಿಯುವಿಕೆ, ಸಾಹಸಕ್ಕಾಗಿ ದೂರ ದೂರದ ಊರು-ನಾಡುಗಳಿಗೆ ದಾಂಗುಡಿಯಿಡುವ ವಿಜಗೀಷು ಪ್ರವೃತ್ತಿ ಅನುಕರಣಯೋಗ್ಯವಾದುದು. ಮುಂಬಯಿಯಲ್ಲಿರುವ ಲಕ್ಷಾಂತರ ಕನ್ನಡಿಗರಲ್ಲಿ ಬಹುಪಾಲಿನವರು ತುಳುನಾಡಿನವರು. ಪರಮದೇವಕವಿಯ ತುರಂಗಭಾರತ ಮೊದಲು ಬೆಳಕು ಕಂಡಿದ್ದು ಅಲ್ಲಿ, ತೌಳವರ ನೆರವಿನಿಂದ. ಮುಂಬಯಿ ನಗರಸಭೆ ಬ್ರಿಟಿಷರಿಗೆ ಒಪ್ಪಿಸಿದ ಮಾನಪತ್ರ ಕನ್ನಡದಲ್ಲಿದ್ದುದಕ್ಕೆ ಕಾರಣ ಇಲ್ಲಿಂದ ಅಲ್ಲಿಗೆ ಹೋಗಿ ಹೆಸರು ಮಾಡಿದ ವೀರಾಭಿಮಾನಿ ತೌಳವರು. +ಬಹುಭಾಷೆಯ ಈ ನೆಲದಲ್ಲಿ ತುಳು ಹೆಚ್ಚು ಜನರ ತಾಯಿನುಡಿ. ಕೊಂಕಣಿ ಮಾತೃಭಾಷೆಯಾಗಿರುವ ಸಹಸ್ರಾರು ಜನರಿದ್ದಾರೆ. ಬ್ಯಾರಿಗಳಿದ್ದಾರೆ. ಮೋಯ ಮಾತಾಡುವವರಿದ್ದಾರೆ. ಹೀಗೆ ಮನೆಯ ಮಾತು ತುಳುವೊ ಕೊಂಕಣಿಯೊ ಮತ್ತೊಂದೊ ಇದ್ದರೂ ಈ ಜಿಲ್ಲೆಯ ಜನರು ಶಾಲೆಯಲ್ಲಿ ಓದುವುದು ಕಲಿಯುವುದು ಬರೆಯುವುದು ಕನ್ನಡ ಭಾಷೆ. ಇವರೆಲ್ಲ ತಮ್ಮ ತುಳು ಅಥವಾ ಕೊಂಕಣಿಯಲ್ಲಿ ಪತ್ರ ಬರೆಯುವಾಗ ಬಳಸುವುದು ಕನ್ನಡ ಲಿಪಿಯನ್ನು. ಹೀಗೆ ಇಲ್ಲಿನ ಜನಪದರು ಭಾವಿಸುವುದು, ಬಾಳಿಸುವುದು ಕನ್ನಡವನ್ನು. ಮಾತೃಭಾಷೆಯಾದ ತುಳು, ಕೊಂಕಣಿಯನ್ನು ಉಳಿಸಿಕೊಂಡು ಕನ್ನಡದ ಮೇಲಾಳಿಕೆಯನ್ನು ಮಾನ್ಯಮಾಡಿದ ಇಂಥ ಹೃದಯ ಸಂಪನ್ನರ ಸಿರಿಗಂಧದ ನೆಲದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು ಅದರ ಕೇಂದ್ರದಲ್ಲಿ ನಿಲ್ಲುವ ಗೌರವ ಪ್ರಾಪ್ತಿಗಾಗಿ ಹರ್ಷಪುಳಕಿತಳಾಗಿದ್ದೇನೆ. +ಕನ್ನಡ – ಕರ್ನಾಟಕ : ಒಳನಾಡು +ಕನ್ನಡ ನಿನ್ನೆ ಮೊನ್ನೆ ಹುಟ್ಟಿದ ಕೂಸುಕಂದಯ್ಯನಲ್ಲ. ಅದು ಎರಡೂವರೆ ಸಾವಿರ ವರ್ಷಗಳ ಸಾತತ್ಯ, ಸತ್ವ ಮತ್ತು ಸತ್ಯ. ಅದರ ಬೆಳಕಿನಲ್ಲಿ ಕೋಟಿಕೋಟಿ ಕನ್ನಡಿಗರು ಬಾಳಿದ್ದಾರೆ. ಶತಮಾನಗಳ ಹಾಸಿನಲ್ಲಿ ರಾಜರು ಆಳಿದರು, ಸಾಹಿತ್ಯ ಕೃತಿಗಳು ಬೆಳಗಿದುವು. ಸಂಸ್ಕ ತ, ಪ್ರಾಕೃತಗಳ ಶ್ರೇಷ್ಠ ಕಾವ್ಯಗಳ ಸಾರಸಮಸ್ತವನ್ನೂ ಹೀರಿ ಸೂರೆ ಮಾಡಿ ಅದನ್ನು ಕನ್ನಡದ ಕಾಲುವೆಯಲ್ಲಿ ಹರಿಸಿದರು. (ಇದೇ ತತ್ವ ಇಂಗ್ಲಿಷ್ ಹಾಗೂ ಇತರ ವಿದೇಶೀಯ ಭಾಷೆಗಳಿಗೂ, ತಮಿಳು ತೆಲುಗು ಬಂಗಾಳಿ ಮರಾಠಿ ಹಿಂದಿ ಮೊದಲಾದ ದೇಶೀ ಭಾಷೆಗಳಿಗೂ ಅನ್ವಯವಾಗಬೇಕು). ಸಂಸ್ಕ ತ ಪ್ರಾಕೃತಗಳಿಗೆ ಕನ್ನಡ ಎಲ್ಲ ರೀತಿಯಲ್ಲೂ ಸರಿಸಮವೆಂದು ತೋರಿಸಿದ ಆದ್ಯರು ಶ್ರಮಣರು, ಶರಣರು, ದಾಸರು. ಅವರೆಲ್ಲ ಕನ್ನಡದಲ್ಲಿ ಭಾವಿಸಿ ಅನುಭವಿಸಿದರಲ್ಲದೆ ಕನ್ನಡಕ್ಕಿರುವ ಅಗಾಧ ಹಸಿವು, ಜೀರ್ಣಶಕ್ತಿ ಮತ್ತು ಅಸ್ಮಿತೆಯನ್ನು ತೋರಿಸಿದರು. ಕನ್ನಡದ ಮೂಲಕ ದುಃಖ ದುಮ್ಮಾನ ತೋಡಿಕೊಂಡರು, ಸುಖ ಸುಮ್ಮಾನ ಪಡೆದರು. ಮಾತೃ ಭಾಷೆಯನ್ನು ಸಂಪನ್ನಗೊಳಿಸಿದರು. ಕುತ್ತಿಗೆಯವರೆಗೆ ಬಂದ ಕುತ್ತಗಳಿಂದ ಕನ್ನಡವನ್ನು ಬದುಕಿಸಿದ ಮೃತ್ಯುಂಜಯರವರು. ಚಿರಂಜೀವ ಕೃತಿಗಳ ಅಮೃತ ಕಲಶ ತಂದ ವೈನತೇಯರವರು. +ಭಾಷೆಯ ಸಂರಚನೆಯಲ್ಲಿ ತರಬಹುದಾದ ಸುಧಾರಣೆಯ ದಿಕ್ಕಿನತ್ತ ಹೊರಟವರು ಸಹಜ ಪ್ರಕ್ರಿಯೆಯಿಂದ ಕೂಡಿದ ವ್ಯತ್ಯಾಸಗಳನ್ನು ಚಿಂತಿಸುವಾಗ ಮೂಲ ಬೇರು, ಬುಡ ಒಣಗದಂತೆ, ಅದರ ಪಸಿಮೆ ಇರುವಂತೆ ನೋಡಿಕೊಳ್ಳುವುದೂ ಮುಖ್ಯವೆ. ಕನ್ನಡ ಭಾಷೆ ಯಾವತ್ತೂ ನಿಂತ ನೀರಾಗದೆ ಹರಿಯುವ ತೀರ್ಥವಾಗಿದೆ. ಇನ್ನು ಮುಂದೆ ಕನ್ನಡ ಭಾಷೆಯಲ್ಲಿ ಇಂಗ್ಲಿಷ್ ಶಬ್ದಗಳು ವಿಲೀನಗೊಳ್ಳುವ ಪ್ರಕ್ರಿಯೆ ದಟ್ಟವಾಗುತ್ತದೆ. ಕನ್ನಡದ ಕುಂದಣದಲ್ಲಿ ಅನೇಕ ಇಂಗ್ಲಿಷ್ ಹರಳುಗಳನ್ನು ಈಗಾಗಲೆ ಕೂಡಿಸಲಾಗಿದೆ. ಕನ್ನಡ ನಿಘಂಟಿನಲ್ಲಿ ಸಾವಿರಾರು ಇಂಗ್ಲಿಷ್ ಮಾತುಗಳು ಕೋದುಕೊಂಡಿವೆ. ಪ್ರಾಕೃತ ಮತ್ತು ಸಂಸ್ಕ ತ ಶಬ್ದಗಳು ಕನ್ನಡದಲ್ಲಿ ಹಾಸುಹೊಕ್ಕಾಗಿ ಬೆರೆಯುವ ಕಾರ್ಯ ಹತ್ತನೆಯ ಶತಮಾನದ ವೇಳೆಗೆ ಪೂರೈಸಿತ್ತು. ನಡುಗನ್ನಡದ ಕಾಲಘಟ್ಟದಲ್ಲಿ ಅರಬ್ಬಿ ಮತ್ತು ಪಾರಸಿ ಭಾಷೆಗಳ ಪ್ರಭಾವವನ್ನು ಕನ್ನಡ ಅರಗಿಸಿಕೊಂಡಿತು. ಕನ್ನಡ-ಇಂಗ್ಲಿಷ್ ಭಾಷಾಸಂಕರ ಇನ್ನೂರು ವರ್ಷಗಳಿಂದ ಆಮೆವೇಗದಿಂದ ಆರಂಭವಾಗಿ ಇದೀಗ ಮೊಲದ ವೇಗ ಪಡೆಯುತ್ತಿದೆ. ಈ ಕನ್ನಡ ಇಂಗ್ಲಿಷ್ ಬೆರಸಿದ ‘ಕಂಗ್ಲಿಷ್’ ಬಳಕೆ ಹಳ್ಳಿಗಳವರೆಗೆ ದಾಂಗುಡಿಯಿಟ್ಟಿದೆ. ಅರಬ್ಬಿ, ಪಾರಸಿ, ಇಂಗ್ಲಿಷ್, ಹಿಂದಿ ಬೆರಸಿದ ‘ಹಿಂಗ್ಲಿಷ್’ಬೇರೆ ಚಾಲ್ತಿಯಲ್ಲಿದೆ. ಇವೇನೂ ಗಾಬರಿಯ ವಿಷಯಗಳಲ್ಲ. ಭಾಷೆಯಲ್ಲಿ ಮಡಿವಂತಿಕೆಗೆ ಜಾಗವಿಲ್ಲ ಎಂಬುದು. ನಿತ್ಯದ ವ್ಯವಹಾರಕ್ಕೆ ಅನಿವಾರ್‍ಯವಾದ ಹೊಸ ಶಬ್ದಗಳು ಬರಲಿ. ಆದರೆ ಅನಗತ್ಯವಾಗಿ ಇದನ್ನು ಉತ್ತೇಜಿಸಬಾರದು, ನಮ್ಮಲ್ಲಿರುವ ಮಾತುಗಳನ್ನು ಮೂಲೆಗೊತ್ತಿ ಅನಗತ್ಯವಾಗಿ ಅನ್ಯಭಾಷೆಯ ಶಬ್ದಗಳನ್ನು ಬಳಸುವುದನ್ನು ಖಂಡಿಸಬೇಕು. +ಸಾಹಿತಿಗಳಲ್ಲದೆ ವಿಶೇಷವಾಗಿ ಜನಸಾಮಾನ್ಯರು ಕನ್ನಡವನ್ನು ಸಾವಿರಾರು ವರ್ಷಗಳಿಂದ ಸಲಹಿದ್ದಾರೆ. ಅವರ ಅಸೀಮ ಅಕ್ಕರೆಯಿಂದಾಗಿ ಇಂದಿಗೂ ಕನ್ನಡ ಕೋಟಿಕೋಟಿ ಜನರ ತಾಯ್ನುಡಿಯಾಗಿದೆ. ಜನಮನ ತನ್ನ ನಾಡು ನುಡಿ ಪ್ರೇಮವನ್ನೂ ನುಡಿಜಾಣರಿಗೆ ಹೆಚ್ಚಿನ ಮನ್ನಣೆಯನ್ನೂ ಬಗೆ ಬಗೆಯಲ್ಲಿ ಪ್ರಕಟಿಸಿದ್ದಾರೆ. ಕುವೆಂಪು, ಬೇಂದ್ರೆ, ಮಾಸ್ತಿ, ವಿಸೀ ಮೊದಲಾದವರ ಹೆಸರುಗಳನ್ನು ಬಡಾವಣೆಗಳಿಗೆ, ರಸ್ತೆಗಳಿಗೆ ನಾಮಕರಣ ಮಾಡಿದ್ದಾರೆ. ಪಂಪ ಮಹಾಕವಿ ರಸ್ತೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಇದೆ. ಕನ್ನಡಿಗರ ಈ ಉತ್ಕಟ ನಾಡುನುಡಿ ಅಭಿಮಾನ, ನುಡಿಜಾಣರಿಗೆ ನಮನ ಅನನ್ಯವೆನಿಸುವಷ್ಟಿದೆ. ಕುರಿತೋದದ ಜನರೂ ಪರಂಪರೆಗೆ ಪ್ರಾಂಜಲವಾಗಿ, ಒಮ್ಮೊಮ್ಮೆ ಅತಿಭಾವುಕವೆನಿಸುವಷ್ಟು ಸ್ಪಂದಿಸುವ ರೀತಿಗೆ ಬೆರಗಾಗಿದ್ದೇನೆ. +ಕನ್ನಡಕ್ಕೆ ಸಾರ್ವಭೌಮಸ್ಥಾನ ಇರಬೇಕೆಂಬುದಕ್ಕೆ ಯಾವ ರಾಜಕೀಯ ಪಕ್ಷವೂ ವಿರೋಧವಾಗಿಲ್ಲ. ಕನ್ನಡವನ್ನು ಬಾಲವಾಡಿ ಮತ್ತು ಪ್ರಾಥಮಿಕ ಹಂತದಿಂದಲೇ ಗಟ್ಟಿಗೊಳಿಸಬೇಕೆಂಬುದನ್ನು ಉತ್ರೆ ಕ್ಷಿಸಬೇಕಾಗಿಲ್ಲ. ಕನ್ನಡದ ಕಾಳುಗಳನ್ನು ಮಕ್ಕಳ ಮನಸ್ಸಿನ ಹೊಲದಲ್ಲಿ ಬಿತ್ತಬೇಕು. ಚಿಕ್ಕವರಿಗೆ ಪ್ರಾಮುಖ್ಯ ಕೊಡುವುದನ್ನು ರಾಷ್ಟ್ರಾಧ್ಯಕ್ಷರಾದ ಎ.ಪಿ.ಜೆ. ಅಬ್ದುಲ್ ಕಲಾಮರಿಂದ ಕಲಿಯಬೇಕು. ಬಾಲವಾಡಿಗಳ ಹಂತದಿಂದಲೇ ಕನ್ನಡದ ಕೂಸುಗಳನ್ನು ಕನ್ನಡದಿಂದ ಕಿತ್ತು ಬೇರೆ ಕಡೆ ನಾಟಿ ಮಾಡಲಾಗುತ್ತಿದೆ. ಕಿರಿಯ ಪ್ರಾಥಮಿಕ ತರಗತಿಯಿಂದ ಕನ್ನಡ ಪಠ್ಯ ಕಡ್ಡಾಯವಾಗುವುದು ಸಮಂಜಸವಾದ ನಿರ್ಧಾರ. ಇಂಗ್ಲಿಷ್ ಮಾಧ್ಯಮದ ಶಾಲೆಗಳಲ್ಲಂತೂ ಇದು ಅತ್ಯಗತ್ಯ. ಕನ್ನಡ ಕಲಿಕೆ ಕಡ್ಡಾಯವಾಗುವುದರೊಂದಿಗೆ ಅದನ್ನು ಕಾಟಾಚಾರವಾಗಿ ಕಲಿಸಿದಂತೆ ಕಣ್ಣೊರಸುವುದಾಗಬಾರದು. +ಕನ್ನಡ ಕಲಿಸದಿದ್ದರೆ ಎಲ್ಲ ಕಾನ್ವೆಂಟುಗಳನ್ನೂ ಇಂಗ್ಲಿಷ್ ಮಾಧ್ಯಮಶಾಲೆಗಳನ್ನೂ ಸರ್ಕಾರ ತಕ್ಷಣ ರಾಷ್ಟ್ರೀಕರಣಗೊಳಿಸಿ ತನ್ನ ಆಡಳಿತ ಕಕ್ಷೆಗೆ ತೆಗೆದುಕೊಳ್ಳುವುದು ಸೂಕ್ತ. ಕನ್ನಡ ಶಾಲೆಗಳ ಸ್ಥಿತಿಗತಿ ಆಮೂಲಾಗ್ರವಾಗಿ ಸುಧಾರಣೆಯಾಗುವ ಜರೂರಿದೆ. ವಿದ್ಯೆ ಇಂದು ವಾಣಿಜ್ಯವಾಗಿದೆ. ಸಂಪಾದನೆಗೆಂದು ಹೋಟೆಲೊ ಅಂಗಡಿಯೊ ಕಲ್ಯಾಣಮಂಟಪವೊ ಪ್ರಾರಂಭ ಮಾಡುವುದಕ್ಕಿಂತ ಇಂಗ್ಲಿಷ್ ಮಾಧ್ಯಮಶಾಲೆ ತೆರೆಯುವುದು ಧಿಡೀರ್ ಧನಾಢ್ಯತೆಗೆ ರಾಜಮಾರ್ಗ. ಅದರಿಂದ ಅಲ್ಲಿ ಅಚ್ಚುಕಟ್ಟಾದ ವ್ಯವಸ್ಥೆಗೆ ಸುಲಭವಾಗಿದೆ. ಇದಕ್ಕೆ ತದ್ವಿರುದ್ಧವಾಗಿ ಕನ್ನಡಶಾಲೆಗಳ ದುಸ್ಥಿತಿ ಕಣ್ಣಿಗೆ ಬಡಿಯುತ್ತದೆ. ಈ ದುರವಸ್ಥೆಯನ್ನು ತಪ್ಪಿಸಲು ಸರ್ಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯ. ಇಂಗ್ಲಿಷ್ ಶಾಲೆಗಳಿಗಿಂತ ಕನ್ನಡಶಾಲೆಗಳು ಶುಭ್ರವಾಗಿದ್ದು ಸಮವಸ್ತ್ರವೂ ಜಾರಿಗೆ ಬರಲಿ ಎಂಬುದು ಕನ್ನಡಪರ ಚಿಂತಕರ ಅಪೇಕ್ಷೆ. +ಬಾಲವಾಡಿಯಿಂದ ಸ್ನಾತಕೋತ್ತರದವರೆಗೆ, ಅಡಿಯಿಂದ ಹಿಡಿದು ಮುಡಿಯತನಕ ಇಂಗ್ಲಿಷ್ ಮಾಧ್ಯಮದ್ದೇ ದರಬಾರು. ‘ತುರ್ತುನಿಗಾ ಕೊಡಬೇಕಾದ ಆಲಯ’ದೊಳಗೆ ದೂಡಿರುವ ಕನ್ನಡ ಮಾಧ್ಯಮಕ್ಕೆ ಆಮ್ಲಜನಕವಿತ್ತು ಉಳಿಸಬೇಕಾಗಿ ಬಂದಿದೆ. ಸ್ವಾತಂತ್ರ ಪೂರ್ವದಲ್ಲಿ ಬ್ರಿಟಿಷರು ಆಳುತ್ತಿದ್ದಾಗ ಕನ್ನಡಕ್ಕೆ ಇದ್ದ ಶೈಕ್ಷಣಿಕ ಸ್ಥಾನ ಮನ್ನಣೆ, ನಮ್ಮವರೇ ಆಳುವ ಸಂದರ್ಭದಲ್ಲಿ ತಪ್ಪಿಹೋಗಿರುವುದು ವಿಪರ್ಯಾಸ. +ಇಂಗ್ಲಿಷ್ ಎಂಬುದು ಅಧಿಕಾರ, ಘನತೆ, ಗೌರವ, ಮನ್ನಣೆ, ಪ್ರತಿಷ್ಠೆ ಹಾಗೂ ಪ್ರಚಾರ ಇರುವ ಹಾಗೂ ಹೆರುವ ಭಾಷೆಯೆಂಬ ಪ್ರತೀತಿ ಪ್ರಬಲವಾಗಿ ಹಬ್ಬಿದೆ. ಕನ್ನಡಕ್ಕೆ ಕೀಳರಿಮೆ ಅಂಟಿಕೊಂಡಿದೆ. ಇದು ಸರಿದೂಗಬೇಕಾದರೆ ಇರುವ ದಾರಿ ಒಂದೇ, ಇಂಗ್ಲಿಷಿನ ಸ್ಥಾನಮಾನವನ್ನು ಕನ್ನಡವೂ ಕರ್ನಾಟಕದಲ್ಲಿ ಪಡೆಯಬೇಕು. ಕನ್ನಡವನ್ನು ಪುಷ್ಟವಾಗಿಸುವ ಸಬಲೀಕರಣದ ಕೆಲಸ ನಮ್ಮಿಂದಲೇ ಆಗಬೇಕು. ಮಕ್ಕಳಿಗಿಂತ ಹೆಚ್ಚಾಗಿ ತಾಯಿತಂದೆ ನೆಂಟರು ಇಂಗ್ಲಿಷನ್ನು ಧ್ಯಾನಿಸುತ್ತಾರೆ. ಇಂಗ್ಲಿಷಿಗೆ ಅಧಿಕಾರಾರೂಢರ ಕುಮ್ಮಕ್ಕಿನೊಂದಿಗೆ ಬಂಡವಾಳಶಾಹಿಗಳ ಬೆಂಬಲವಿದೆ. ದೇಸೀಯ ಸಂಸ್ಕ ತಿಯ ಬುಡಕ್ಕೆ ಸಿಡಿಲು ಬಡಿಯಲು ಬಿಡಬಾರದು. ಇಂಗ್ಲಿಷು ವಸಾಹತುಶಾಹಿಯ ಪರಿಣಾಮವಾಗಿ ತಲೆಯೆತ್ತಿತ್ತು. ಇಂಗ್ಲಿಷನ್ನು ನಿರಾಕರಿಸುವುದು ಸಾಧುವಲ್ಲ, ಸಾಧ್ಯವಿಲ್ಲ. ಜ್ಞಾನದ ಆ ಕಿಟಕಿಯನ್ನು ಮುಚ್ಚಬೇಕಾಗಿಲ್ಲ. ಸಾಹಿತ್ಯ ಎಲ್ಲರಿಗೂ ಅಲ್ಲ ಎಂದು ಸರ್ವಜ್ಞ ಹೇಳಿದ ಹಾಗೆ, ಇಂಗ್ಲಿಷು ಎಲ್ಲರಿಗೂ ಅಲ್ಲ. ಅದು ಕೆಲವರಿಗಷ್ಟೇ ಬೇಕು. ಆ ಕೆಲವರಿಗಾಗಿ ಕೋಟ್ಯಂತರರು ಗೊಬ್ಬರವಾಗಬೇಕಾಗಿಲ್ಲ. ಕನ್ನಡವನ್ನು ಬಿಡದೆ ಇಂಗ್ಲಿಷ್ ಶಿಕ್ಷಣ ಬಯಸುವವರು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲು ಎಲ್ಲ ಪರ್‍ಯಾಯ ಅನುಕೂಲಗಳಿರಲಿ. +ಬಹು ಭಾಷೆಗಳ ಭಾರತದಲ್ಲಿ ಶಿಷ್ಟ, ಪ್ರತಿಷ್ಠಿತ ಎಂದು ಮಾನ್ಯತೆ ಪಡೆದ ಸಾಹಿತ್ಯಕ ಭಾಷೆಗಳು ಸಾಕಷ್ಟಿವೆ. ಕೇಂದ್ರ ಸಾಹಿತ್ಯ ಅಕಾದೆಮಿ ಡೋಗ್ರಿ, ಮೈಥಿಲೀ, ರಾಜಸ್ತಾನಿ ಮತ್ತು ಸಿಂಧಿ ಭಾಷೆಗಳೂ ಸೇರಿ ೨೨ ಭಾಷೆಗಳಿಗೆ ಮಣೆಹಾಸಿದೆ. ಭಾರತದ ಯಾವೊಂದು ಅಧಿಕೃತ ಮನ್ನಣೆ ಪಡೆದ ಭಾಷೆಯಲ್ಲಿ ಬರೆದರೂ ಲೇಖಕರು ಪ್ರಾದೇಶಿಕರಾಗಿ ಪರಿಣಿತರಾಗುತ್ತಾರೆ. ಪ್ರಾದೇಶಿಕ ಪ್ರಗತಿಗೆ ಕೊಡುವ ಆದ್ಯತೆ ಅರಾಷ್ಟ್ರೀಯವಲ್ಲ. ವಿಚಿತ್ರವೆಂದರೆ ಯೂರೋಪು ರಾಷ್ಟ್ರಗಳಲ್ಲಿ ವ್ಯವಹಾರದಲ್ಲಿರುವ, ನಮಗಿಂತ ಬಹಳ ಕಡಿಮೆ ಸಂಖ್ಯೆಯ ಜನರಾಡುವ ಭಾಷೆಯಲ್ಲಿ ಬರೆದರೂ “ರಾಷ್ಟ್ರೀಯ ಲೇಖಕ”ರೆಂಬ ಮಾನ್ಯತೆಗಳಿಸುತ್ತಾರೆ. ಹಿಂದಿಯಲ್ಲಿ ಬರೆದವರಿಗೆ ಸಿಗುವ ಪ್ರಸಾರ-ಪ್ರಚಾರ ಹಿಂದಿಯೇತರ ಭಾರತೀಯ ಭಾಷೆಗಳವರಿಗೂ ಸಿಗಬೇಕು. ಇನ್ನೂ ವಿರೋಧಾಭಾಸವೆಂದರೆ, ಭಾರತದಲ್ಲಿಯು, ಕೇವಲ ಶೇಕಡಾ ಇಬ್ಬರು ಮಾತಾಡುವ ಇಂಗ್ಲಿಷ್ ಭಾಷೆಯಲ್ಲಿ ಬರೆದವರಿಗೆ ಬಹುದೂರದವರೆಗೆ, ಭಾರತವೇ ಅಲ್ಲದೆ ಅದರ ಆಚೆಗೂ ಚಾಚಿಕೊಳ್ಳುವ ಅವಕಾಶವಿದೆ. ಇದು ಇಂದು ಭಾರತೀಯ ಭಾಷೆಗಳಲ್ಲಿ ಬರೆಯುತ್ತಿರುವ ಬರೆಹಗಾರರಿಗೆ ಇರುವ ವ್ಯಾಪ್ತಿಯ ಮಿತಿ ಮತ್ತು ಸವಾಲು. ಲೇಖಕರು, ಅದರಲ್ಲಿಯೂ ಲೇಖಕಿಯರು, ಈ ಪ್ರಸಾ(ಚಾ)ರ ಪ್ರವಾಹದ ಎದುರು ಈಜಿ, ದಾಟಿ “ರಾಷ್ಟ್ರೀಯ ಭಾಷೆ”, “ರಾಷ್ಟ್ರೀಯ ಸಾಹಿತಿ” ಎಂಬ ಎರಡು ಮಿಥ್‌ಗಳನ್ನು ಮೀರಬೇಕಾದ ದೊಡ್ಡ ಸವಾಲಿದೆ. +ಕನ್ನಡ : ಗಡಿನಾಡು, ಹೊರನಾಡು +ಕನ್ನಡನಾಡು ಎಂದು ಹೇಳಿದಾಗ ಅದು ಬರಿಯ ಭೌತಿಕ ಜಗತ್ತಲ್ಲ. ಕನ್ನಡ ಎನ್ನುವುದು ಐದುಕೋಟಿ ಕನ್ನಡಿಗರ ಭಾವಪ್ರಪಂಚ. ಭಾವಜಗತ್ತಿನ ಮುಂದೆ ಮೂರುಲೋಕ ಕೂಡ ಹುಲ್ಲು ಕಡ್ಡಿ. ಹೊರನಾಡ ಕನ್ನಡಿಗರ ಕಡೆ ನಿಗಾ ಇರುವುದು ಅವಶ್ಯಕ. ಮಹಾರಾಷ್ಟ್ರದಲ್ಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ದೆಹಲಿಯಲ್ಲಿ ಇರುವಂತೆ ಮುಂಬಯಿಯಲ್ಲಿಯೂ ಕರ್ನಾಟಕ ಸರಕಾರದ ಒಡೆತನವಿರುವ ಒಂದು ಕನ್ನಡ ಭವನ ಅವಶ್ಯವಿದೆ. ಒಳನಾಡಿನ ಚಟುವಟಿಕೆಯೊಂದಿಗೆ ಸಾಂಸ್ಕ ತಿಕ ಸಂಪರ್ಕ ಸದಾ ಜೀವಂತವಾಗಿದ್ದರೆ ಅಲ್ಲಿ ಕನ್ನಡ ಬಳಗ ಬಾಡುವುದಿಲ್ಲ. ಒಂದು ಕಾಲಕ್ಕೆ ಕನ್ನಡ ಶಾಲೆಗಳು ಮುಂಬಯಿಯಲ್ಲಿ ನೂರಾರಿದ್ದುವು. ಈಗಲೂ ಮುಂಬಯಿಯ ನಗರಪಾಲಿಕೆ ನೆರವಿನಿಂದ ೬೩ ಕನ್ನಡ ಶಾಲೆಗಳು ನಡೆಯುತ್ತಿವೆ. ಆದರೆ ಭಾರತದ ಎಲ್ಲ ಪ್ರಾಂತಗಳಂತೆ ಇಲ್ಲಿಯೂ ಇಂಗ್ಲಿಷ್ ಶಾಲೆಗಳು ಹಬ್ಬುತ್ತ ಕನ್ನಡಶಾಲೆಗಳನ್ನು ಕಬಳಿಸುತ್ತಿವೆ. ಗೋವಾದಲ್ಲಿ ಇಂದಿಗೂ ಕನ್ನಡ ಶಾಲೆಗಳಿವೆಯಾದರೂ ಅವರಿಗೆ ಬೇಕಾದ ಪಠ್ಯಪುಸ್ತಕಗಳು ಸಿಗುತ್ತಿಲ್ಲ. ಕನ್ನಡ ಪಠ್ಯಗಳನ್ನು ಉಚಿತವಾಗಿ ಪೂರೈಸುವ ಮೂಲಕ ಅಲ್ಲಿ ಕನ್ನಡದ ಕಲಿಕೆ ಬತ್ತದಂತೆ ನಿಲ್ಲಿಸಬಹುದು. ಮುಂಬಯಿ, ಕಾಸರಗೋಡು ಕನ್ನಡಿಗರ ಪ್ರತಿನಿಧಿಗಳು, ಸಾಹಿತ್ಯ ಪರಿಷತ್ತಿನಲ್ಲಿದ್ದಾರೆ. ಇದರಂತೆ ಎಲ್ಲ ಅಕಾಡೆಮಿಗಳಲ್ಲಿಯೂ ಒಬ್ಬೊಬ್ಬರು ಸದಸ್ಯರು ಇರುವುದು ಸೂಕ್ತ. ಗೋವಾಕ್ಕೂ ಒಂದು ಪ್ರಾತಿನಿಧ್ಯವಿರಲಿ. ಸಾಂಸ್ಕ ತಿಕ ಪರಂಪರೆಯ ಬೇರುಗಳ ಪಸಿಮೆ ಒಣಗದೆ ಇರಬೇಕಾದರೆ ಇಲ್ಲಿಂದ ಗೊಬ್ಬರ ನೀರು ಸರಬರಾಜು ನಿಲ್ಲಬಾರದು. ತೇವ ಇದ್ದರೆ ಜೀವ ಉಸಿರಾಡುತ್ತಿರುತ್ತದೆ. +ಗಡಿನಾಡ ಕನ್ನಡಿಗರ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದಕ್ಕೆ ಆದ್ಯತೆ ಕೊಡುವ ನೆಲೆಯಲ್ಲೇ ಹೊರನಾಡ ಕನ್ನಡಿಗರಿಗೂ ಸೂಕ್ತ ಪ್ರಾತಿನಿಧ್ಯ ಇರಬೇಕೆಂಬುದನ್ನು ಮರೆಯುವಂತಿಲ್ಲ. ಮುಂಬಯಿ, ಮದರಾಸು, ಕಾಸರಗೋಡು, ಮದುರೈ, ಹೈದರಾಬಾದು ವಿಶ್ವವಿದ್ಯಾಲಯಗಳಲ್ಲಿ ಕನ್ನಡ ಎಂ.ಎಂ, ಎಂ.ಫಿಲ್, ಪಿ‌ಎಚ್.ಡಿ ಓದುವ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ಹತ್ತು ಸಾವಿರ ರೂಪಾಯಿ ಮೊತ್ತದ ವಿದ್ಯಾರ್ಥಿವೇತನ ಕೊಟ್ಟು ಅಲ್ಲಿ ಕನ್ನಡ ಕಲಿಯಲೂ ಕಲಿಸಲೂ ಕಾಲೂರಿ ನಿಲ್ಲಲೂ ಅನುವು ಮಾಡುವುದು ಒಳ್ಳೆಯದು. ಗಡಿಯ ಎಡೆಗಳಲ್ಲೂ ಈ ಹೊರನಾಡುಗಳಲ್ಲೂ ಕನ್ನಡದ ಸೊಲ್ಲೂ ಸೊಗಡೂ ಸೂಸುವ ಹಾಗೆ ತಿಂಗಳಿಗೊಂದು ಸಾಂಸ್ಕ ತಿಕ ಕಾರ್ಯಕ್ರಮವನ್ನು ಅಕಾಡೆಮಿಗಳ ಮೂಲಕ ಏರ್ಪಡಿಸುವುದು ಸೂಕ್ತ. +ಬಳ್ಳಾರಿ ಜಿಲ್ಲೆಯ ಕಪ್ಪಗಲ್ಲು ಹಳ್ಳಿಯಲ್ಲಿ ವರ್ಷದುದ್ದಕ್ಕೂ ಮಿಡಿಯುವ ಕನ್ನಡ ನಾಡಿಯ ಸ್ಪಂದನ ಅನುಕರಣೀಯ ಯೋಗ್ಯವಾಗಿದೆ. ವಾಸ್ತವವಾಗಿ ಭಾಷೆಯ ಪ್ರೇಮ ಇನ್ನೂ ಬಲವಾಗಿ ಉಳಿದಿರುವುದು ಹಳ್ಳಿಗಳಲ್ಲೇ. ಅದರಿಂದ ಹೊಸ ಉಪಕ್ರಮಗಳು ಹಳ್ಳಿಯಿಂದಲೇ ಆರಂಭವಾಗಬೇಕು, ಪಟ್ಟಣಗಳು ಅದಕ್ಕೆ ಸ್ಪಂದಿಸಿ ಅನುರಣಿಸಲಿ. ಸಿಗರೇಟು ಪ್ಯಾಕುಗಳ ಮೇಲೆ ಸಣ್ಣಕ್ಷರಗಳಲ್ಲಿ ‘ಧೂಮಪಾನ ಆರೋಗ್ಯಕ್ಕೆ ಹಾನಿಕರ’ ಎಂದು ಮುದ್ರಿಸಿದಂತಾಗಬಾರದು ‘ಕನ್ನಡ ಉಳಿಸಿ, ಕನ್ನಡ ಬಳಸಿ’ ಎಂಬ ಗೋಡೆ ಬರೆಹ. ಕನ್ನಡ ರಾಜ್ಯೋತ್ಸವ ನವೆಂಬರೋತ್ಸವ ಮಾತ್ರ ಆಗದೆ ವರ್ಷವಿಡೀ ಆಚರಣೆಯಲ್ಲಿರುವ ನಿತ್ಯೋತ್ಸವವೆನಿಸುವತ್ತ ಅಣಿಯಾಗಲಿ, ಸಮಗ್ರ ಕರ್ನಾಟಕವೇ ಕನ್ನಡಿಗರ ಆಶೋತ್ತರಗಳ ವೇದಿಕೆಯಾಗಲಿ, ಕನ್ನಡಿಗರು ಅಭಿಮಾನಶೂನ್ಯರಾಗದಿರಲಿ ಎಂಬುದು ಅಂತರಂಗದ ಮಾತಾದರೆ ಅದಕ್ಕೆ ಪುಷ್ಟಿ ಬರುತ್ತದೆ. +ಭಾಷಾವಾರು ಪ್ರಾಂತ್ಯ ರಚನೆಯಿಂದ ಆಗಿರುವ ಲಾಭಕ್ಕಿಂತ ನಷ್ಟವೇ ಹೆಚ್ಚು. ಕರ್ನಾಟಕದ ಏಕೀಕರಣವಾಗಿ ನಮಗೆ ಬರಬೇಕಾದ ನೆಲವೆಲ್ಲ ಒಂದು ಆಡಳಿತದ ಕೆಳಗೆ ಬಂದಿದೆ ಎಂದಲ್ಲ. ನಮಗೆ ಸೇರಬೇಕಾದ ಎಷ್ಟೋ ಭೂಮಿ, ಊರು ಕೇರಿ ಇನ್ನೂ ನೆರೆರಾಜ್ಯಗಳಲ್ಲಿ ಉಳಿದಿದೆ. ಏಕೀಕರಣಾನಂತರದ ಕರ್ನಾಟಕದಲ್ಲಿ ಅನ್ಯಭಾಷೆಗಳ ಪ್ರಾಬಲ್ಯ, ಪ್ರತಿಷ್ಠೆ, ಸವಲತ್ತು, ಶಿಕ್ಷಣಾನುಕೂಲ ತಗ್ಗಿಲ್ಲ. ಆದರೆ ಕರ್ನಾಟಕದ ಪಕ್ಕದ ಪ್ರಾಂತ್ಯಗಳಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿ ದಯನೀಯವಾಗಿದೆ, ಹಿಂದೆ ಇದ್ದುದಕ್ಕಿಂತ ಶೇಕಡಾ ಎಪ್ಪತ್ತೈದರಷ್ಟು ಕಡಿಮೆಯಾಗಿದೆ. ಕನ್ನಡ ಶಾಲಾ ಕಾಲೇಜುಗಳೂ, ಕನ್ನಡ ಶಿಕ್ಷಕರೂ ತಮಿಳುನಾಡು, ಆಂಧ್ರ ಮತ್ತು ಕೇರಳದಲ್ಲಿ ನಾಲ್ಕನೆಯ ಒಂದು ಭಾಗಕ್ಕೆ ಕುಗ್ಗಿದೆ. ಇಷ್ಟೆಲ್ಲ ಹೊಡೆತ ತಿಂದರೂ ಕನ್ನಡ ಮಾತ್ರ ತುಟಿಪಿಟಕ್ ಎನ್ನದೆ ತೆಪ್ಪಗಿದೆ. ಇದಕ್ಕೆ ತದ್ವಿರುದ್ಧವಾಗಿ ಕರ್ನಾಟಕದಲ್ಲಿ ಅನುಕೂಲಗಳು ಅಧಿಕವಿದ್ದೂ ಹೊರಭಾಷೆಗಳವರು ಆಗಾಗ ಅನ್ಯಾಯವಾಗಿದೆಯೆಂದು ಬೊಬ್ಬೆ ಹಾಕುತ್ತಿದ್ದಾರೆ. ಬಾಯಿದ್ದವರು ಬರಗಾಲದಲ್ಲಿಯೂ ಬದುಕುತ್ತಾರೆ, ಸುಭಿಕ್ಷದಲ್ಲೂ ವಿಜೃಂಭಿಸುತ್ತಾರೆ. ಇಂದು ನಮ್ಮ ಯಾವ ಜಿಲ್ಲೆಯೂ ಶುದ್ಧ ಕನ್ನಡ ಜಿಲ್ಲೆಯಾಗಿ ಉಳಿದಿಲ್ಲ. ಈ ಉದಾಸೀನ ಪ್ರವೃತ್ತಿ ಹೀಗೆಯೇ ಮುಂದುವರಿದರೆ ನಮ್ಮ ಜೀವಿತ ಕಾಲದಲ್ಲಿಯೇ ಕನ್ನಡ ಕಣ್ಮರೆಯಾಗಬಹುದೆಂಬ ಭೀತಿ ಬಂದಿದೆ. ಗಡಿಗಳೆಡೆಯಲ್ಲಿ ಕಟ್ಟೆಚ್ಚರ ಸಡಿಲವಾಗಿದೆ. ಕೊಳ್ಳೆಗಾಲ ತಾಲೂಕಿಗೆ ಸೇರಿದ ೧೮೦೦ ಎಕರೆ ಭೂಮಿಯನ್ನು ತಮಿಳುನಾಡು ಒತ್ತರಿಸಿದೆಯೆಂದು ಗುಂಡ್ಲುಪೇಟೆ ಶಾಸಕರು ಶಾಸನಸಭೆಯಲ್ಲಿ ಪ್ರಸ್ತಾಪಿಸಿದ ವರದಿ ಗಾಬರಿ ತರುತ್ತದೆ. ಈ ವಿಚಾರದಲ್ಲಿ ನಿಜಾಂಶ ಏನು, ಕರ್ನಾಟಕ ಸರ್ಕಾರ ಕೈಗೊಂಡ ಕ್ರಮವೇನು ತಿಳಿಯದು. ಇಂತಹುದು ಆಗಬಾರದು ಮತ್ತು ಇದು ಮರುಕಳಿಸಬಾರದು. +ಕೇರಳ ಸರಕಾರ ಯಾವುದೇ ರೀತಿಯಲ್ಲಿ ಕಾಸರಗೋಡಿನ ಕನ್ನಡತನವನ್ನು ನಿರ್ವೀರ್ಯಗೊಳಿಸುತ್ತ ಕ್ರಮೇಣ ಕೊಲ್ಲದಂತೆ ನಿಗಾವಹಿಸಬೇಕಾದ ಅನಿವಾರ್‍ಯ ಬಂದಿದೆ. ಅಲ್ಲಿನ ಕನ್ನಡವೆಂದಾಗ ಕೇವಲ ಕನ್ನಡ ಭಾಷೆಯಷ್ಟೇ ಅಲ್ಲ. ಅದರೊಂದಿಗೆ ಅವಿಭಾಜ್ಯವಾಗಿ ಬೆಸೆದ ಇತಿಹಾಸ, ಕೋಟೆಕೊತ್ತಲ, ಯಕ್ಷಗಾನ, ಜಾನಪದ, ಪರಂಪರೆ, ಸಾಹಿತ್ಯ ಸಂಸ್ಕ ತಿಯೂ ಸಂರಕ್ಷಿಸಲ್ಪಡಬೇಕು. ಭಾಷಾ ಅಲ್ಪಸಂಖ್ಯಾತರಿಗೆ ಸಂವಿಧಾನಾತ್ಮಕವಾಗಿ ಕಲ್ಪಿತವಾದ ಸವಲತ್ತುಗಳೂ ಕಾಸರಗೋಡು ಜಿಲ್ಲಾದ್ಯಂತ ಹಾಗೂ ಕೇರಳದ ಎಲ್ಲ ಕನ್ನಡಿಗರಿಗೂ ಸಿಗಬೇಕು. ಕಾಸರಗೋಡು ಜಿಲ್ಲೆ ಇಡಿಯಾಗಿ ಕನ್ನಡ ನಾಡಿನೊಂದಿಗೆ ಕೂಡಲಸಂಗಮವಾಗುವವರಿಗೆ ಈ ಎಲ್ಲ ಹಕ್ಕೊತ್ತಾಯ ಜೀವಂತವಾಗಿ ಜಾರಿಯಲ್ಲಿರಬೇಕು. ಜೊತೆಗೆ ಉಭಯ ಸರಕಾರಗಳು ಶಾಶ್ವತ ಅನುದಾನವನ್ನು ಮಂಜೂರು ಮಾಡಲು ನಾನು ಆಗ್ರಹಪಡಿಸುತ್ತೇನೆ. ಅಲ್ಲಿನ ಕನ್ನಡ ಶಾಲೆಗಳು ಒಣಗದಂತೆ, ದುರ್ಬಲಗೊಳ್ಳದೆ ಚೈತನ್ಯದಿಂದ ಇರುವಂತೆ ಮಾಡುವ ಜವಾಬ್ದಾರಿ ಎರಡೂ ಸರಕಾರಗಳ ಮೇಲಿದೆ. ಕೇರಳದ ಮಲೆಯಾಳ ಮಾತಾಡುವ ಲಕ್ಷಾಂತರ ಪ್ರಜೆಗಳು ಕರ್ನಾಟಕದ ದೊಡ್ಡ ಕೊಡೆಯ ಅಡಿಯಲ್ಲಿ ಹಾಯಾಗಿ ಜೀವನ ನಡೆಸುತ್ತಿದ್ದಾರೆಂಬ ಸಂಗತಿಯನ್ನು ಕೇರಳ ಸರ್ಕಾರ ಮರೆಯಬಾರದೆಂಬುದನ್ನು ರಾಜಕೀಯ ಭಾಷೆಯ ನೆಲೆಯಲ್ಲಿ ಜ್ಞಾಪಿಸಬಯಸುತ್ತೇನೆ. +ಇದೇ ನೆಲೆಯ ಮಾತು ಮಹಾರಾಷ್ಟ್ರ ಸರಕಾರಕ್ಕೂ ಅನ್ವಯಿಸುತ್ತದೆ. ಮುಂಬಯಿಯಲ್ಲಿ ಹಾಗೂ ಇಡೀ ಮಹಾರಾಷ್ಟ್ರದಲ್ಲಿ ಕನ್ನಡಿಗರು ಎಂದೂ ಒಂದು ಭಾಷಾದ್ವೀಪವಾಗಿ ಪ್ರತ್ಯೇಕ ಹಕ್ಕೊತ್ತಾಯಗಳನ್ನು ಮುಂದಿಟ್ಟಿಲ್ಲ. ಅದರ ಬದಲು ಕನ್ನಡಿಗರು ಆ ರಾಜ್ಯದ ಮುಖ್ಯವಾಹಿನಿಯಲ್ಲಿ ವಿಲೀನವಾಗಿದ್ದಾರೆ. ಹೀಗಿದ್ದೂ ಅವರ ಮೇಲೆ ಆಗಾಗ ವಿನಾಕಾರಣ ಕಾಲುಕೆರೆದು ಹಲ್ಲೆ ಮಾಡುವುದು ನಿಲ್ಲಬೇಕು. ಬೆಳಗಾವಿ ಮಹಾನಗರದಲ್ಲೂ ಅದರ ಗಡಿಗಳಲ್ಲೂ ತಂಟೆ ತಕರಾರು ತೆಗೆದು ಗಲಾಟೆ ಮಾಡುವುದು ನಿಂತಿಲ್ಲ. ಇದು ಅವರ ತಪ್ಪೋ ಅಥವಾ ಅವರು ನಿಂತ ನೆಲದ ತಪ್ಪೊ ಎಂದು ಯೋಚಿಸುವಂತಿದೆ. ಇದಕ್ಕೆ ಇರುವ ಪರಿಹಾರದ ಮಹಾಮಾರ್ಗವೆಂದರೆ ಮಹಾಜನ ವರದಿಯೇ ಐತೀರ್ಪೆಂದು ತಲೆಬಾಗುವುದು. ಅದು ಜಾರಿಗೆ ಬರುವವರೆಗೆ ಈಗ ಇರುವ ವ್ಯವಸ್ಥೆಯಲ್ಲಿ ಸೌಹಾರ್ದವನ್ನು ಕಲಕಿ ರಾಡಿಗೊಳಿಸದೆ ಒಟ್ಟಿಗೆ ಬಾಳುವುದು ಮುಖ್ಯ. ಮಹಾಜನ ವರದಿಯನ್ನು ಮತ್ತೆ ತಿರುಚುವ, ತೆರೆಯುವ ಪ್ರಶ್ನೆಯೇ ಇಲ್ಲ. ಒಂದು ರೂಪಕದ ಮೂಲಕ ಇದರ ಸೂಕ್ಷ ವನ್ನು ಅನಾವರಣಗೊಳಿಸುತ್ತೇನೆ. ಒಬ್ಬ ಶಾಲಾ ಅಧ್ಯಾಪಕರಿಗೆ ಇಬ್ಬರು ಮಕ್ಕಳಿದ್ದರು. ಆ ಅಧ್ಯಾಪಕರು ಕರ್ನಾಟಕದಲ್ಲಿದ್ದಾಗ ಒಬ್ಬ ಮಗ ಹುಟ್ಟಿದ, ಮಹಾರಾಷ್ಟ್ರದಲ್ಲಿ ಇದ್ದಾಗ ಇನ್ನೊಬ್ಬ ಮಗ ಹುಟ್ಟಿದ. ಕರ್ನಾಟಕದಲ್ಲಿ ಹುಟ್ಟಿದ ಮಗನಿಗೆ ಎಷ್ಟು ಕೊಟ್ಟರೆ ಅಷ್ಟಕ್ಕೇ ತೃಪ್ತನಾಗುತ್ತಿದ್ದ. ಆದರೆ ಮಹಾರಾಷ್ಟ್ರದಲ್ಲಿದ್ದಾಗ ಹುಟ್ಟಿದವನಿಗೆ ಎಷ್ಟು ಕೊಟ್ಟರೂ ತೃಪ್ತನಾಗದೆ ಅದು ಬೇಕು, ಇದು ಬೇಕು, ಇನ್ನೂ ಬೇಕು ಎಂದು ರಂಪ ಮಾಡುತ್ತಿದ್ದ. ಮಹಾಜನ ವರದಿಯ ಸಂಬಂಧದಲ್ಲಿಯೂ ಇದೇ ಬಗೆಯ ಗದ್ದಲ ಮಾಡುತ್ತಿರುವವರು ಯಾರು ಮತ್ತು ಯಾಕೆ ಎಂದು ನಾನು ವಿಸ್ತರಿಸುವುದು ಅನಗತ್ಯ. ಇಷ್ಟು ಮಾತ್ರ ನಿಜ. ಭಗವಂತ ಬಂದರೂ ಬೆಳಗಾವಿಯನ್ನು ಕನ್ನಡಿಗರಿಗೆ ಒಪ್ಪಿಸುತ್ತಾನೆ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವೆಂಬುದು ಸತ್ಯಸ್ಯ ಸತ್ಯ. +ಕರ್ನಾಟಕದ ಏಕೀಕರಣವನ್ನು ೧.೧೧.೧೯೫೯ರಂದು ಅಂದಿನ ರಾಷ್ಟ್ರಪತಿಯಾಗಿದ್ದ ಡಾ. ರಾಜೇಂದ್ರ ಪ್ರಸಾದರು ಅಧಿಕೃತವಾಗಿ ಉದ್ಘಾಟಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ. ಜಯಚಾಮರಾಜ ಒಡೆಯರ್, ಎಸ್. ನಿಜಲಿಂಗಪ್ಪ ಮೊದಲಾದ ನಾಡಿನ ಗಣ್ಯರು ಮತ್ತು ಸಹಸ್ರ ಸಹಸ್ರ ಸಂಖ್ಯೆಯ ಕನ್ನಡಿಗರು ಭಾಗವಹಿಸಿದ ಮರೆಯಲಾಗದ ಮಹತ್ವದ ಸಮಾರಂಭದ ಅದು ಆ ಐತಿಹಾಸಿಕ ಘಟನೆಯ ನೆನಪಿಗಾಗಿ ಇದುವರೆಗೆ ಏನೊಂದೂ ಸ್ಮಾರಕ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದ ಬಳಿ ನಿರ್ಮಾಣವಾಗಿಲ್ಲ. ಕನ್ನಡ ನಾಡಿನ ಇತಿಹಾಸದಲ್ಲಿ ಅಪೂರ್ವ ಕ್ಷಣವನ್ನು ಕಂಡ ಜಾಗದಲ್ಲಿ ಸೂಕ್ತ ಸ್ಮಾರಕ ಇರಬೇಕಾದ ಅಗತ್ಯ ಮತ್ತು ಮಹತ್ವವನ್ನು ಹೆಚ್ಚು ವಿಸ್ತರಿಸಿ, ಉತ್ಪ್ರೇಕ್ಷಿಸಿ ಹೇಳುವ ಅಗತ್ಯವಿಲ್ಲ. ಈ ಕೆಲಸಕ್ಕೆ ಸರ್ಕಾರ ಕೂಡಲೆ ಗಮನ ಕೊಡಬೇಕೆಂದು ಒತ್ತಾಯಿಸುತ್ತೇನೆ. +ಒಟ್ಟು ಕನ್ನಡಿಗರಲ್ಲಿ ದೇಸೀ ಕನ್ನಡಿಗರು ವಿದೇಶೀ ಕನ್ನಡಿಗರಿಗೆ ಬೆಂಬಲಿಗರೆಂಬುದಕ್ಕೆ ಅರೆಕೊರೆ ಇರಬಾರದು. ಒಳನಾಡು ಕನ್ನಡಿಗರಿಗೆ ಇರುವ ಪ್ರಮಾಣದಲ್ಲಿ ಹೊರನಾಡು ಕನ್ನಡಿಗರಿಗೆ ಸವಲತ್ತುಗಳನ್ನು ವಿಸ್ತರಿಸುವುದಕ್ಕೆ ಮಿತಿಗಳುಂಟು, ದಿಟವೆ. ಹಾಗೆಂದು ಹೊರನಾಡು ಮತ್ತು ಹೊರದೇಶಗಳ ಕನ್ನಡಿಗರತ್ತ ನಮ್ಮ ಲಕ್ಷ ನಿಲ್ಲಬಾರದು. ಅಲ್ಲೆಲ್ಲ ಕನ್ನಡವನ್ನು ಜೀವಂತವಾಗಿ ರಿಸಲು ಸುಸಂಬದ್ಧ, ಪರಿಣಾಮಕಾರಿ ‘ಪ್ಯಾಕೇಜ್’ ಸಿದ್ಧಪಡಿಸುವುದು ಸೂಕ್ತ. ದೃಶ್ಯ-ಶ್ರವ್ಯ ಮಾಧ್ಯಮಗಳ ಪ್ರಭಾವಿಶಕ್ತಿಯನ್ನು ದುಡಿಸಿಕೊಳ್ಳುವುದರೊಂದಿಗೆ ಕಲಾವಿದರ ಪ್ರತಿಭೆಯನ್ನೂ ಬಳಸಬಹುದು. ಎಲ್ಲ ಅಕಾಡೆಮಿಗಳ ಒಟ್ಟು ಕಾರ್ಯಕ್ರಮಗಳಲ್ಲಿ ಮೂರನೆಯ ಒಂದು ಭಾಗ ಕಡ್ಡಾಯವಾಗಿ ಹೊರನಾಡು ಕನ್ನಡಿಗರ ನೆರವಿಗಿರಲಿ. +ಉದ್ಯೋಗಗಳಿಗೆ ನೇಮಕಾತಿಯ ನಿಯಮಗಳು ಕನ್ನಡಪರವಾಗಿಲ್ಲ. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ನ್ಯಾಯ ಯಾವಾಗಲೂ ಲಭಿಸಿಲ್ಲ. ಸಿಬ್ಬಂದಿಯ ನೇಮಕದಲ್ಲಿ ಕರ್ನಾಟಕಕ್ಕೆ ‘ಶೂನ್ಯ ಸಂಪಾದನೆಯೊಂದೇ ಗ್ಯಾರಂಟಿ’ ಎನ್ನುವಂತಾಗಿದೆ. ಮೊದಲೇ ನಿರುದ್ಯೋಗ ಸಮಸ್ಯೆ ಪೆಡಂಭೂತವಾಗಿ ಕಾಡುತ್ತಿರುವಾಗ ಯುವ ಕನ್ನಡ ಚೇತನಗಳಿಗೆ ಉದ್ಯೋಗಾವಕಾಶದ ಬಾಗಿಲುಗಳು ಹೀಗೆ ಮುಚ್ಚಿದ್ದರೆ ನಾಡಿಗೆ ಹಿನ್ನಡೆ ಕಟ್ಟಿಟ್ಟ ಬುತ್ತಿ. ಕೇಂದ್ರ ಸರಕಾರ ನಡೆಸುವ ಪ್ರತಿಯೊಂದು ಪರೀಕ್ಷೆಯೂ ಪ್ರಾದೇಶಿಕ ಭಾಷೆಗಳಲ್ಲಿ ನಡೆಯುವುದು ಅನಿವಾರ್‍ಯ. ಕೇಂದ್ರದ ನೇಮಕಾತಿಗಳಲ್ಲಿ ಪ್ರತಿರಾಜ್ಯದವರಿಗೂ ಇಂತಿಷ್ಟು ನೌಕರಿಯೆಂದು ಶೇಕಡಾವಾರು ಪ್ರಮಾಣವನ್ನು ಗೊತ್ತುಪಡಿಸಿ ಸಮರ್ಪಕ ಪಾಲು ಕರ್ನಾಟಕಕ್ಕೆ ಸಿಗುವುದು ಅತ್ಯವಶ್ಯ. ಈ ದಿಶೆಯಲ್ಲಿ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕರ್ನಾಟಕದ ಶಾಸಕರು ತಮ್ಮ ಹಕ್ಕೊತ್ತಾಯಗಳನ್ನು ಅಂಕಿ ಅಂಶಗಳೊಂದಿಗೆ ಬಲಿಷ್ಠವಾಗಿ ಪ್ರತಿಪಾದಿಸುವುದು ಅತ್ಯಗತ್ಯ. ನೈ‌ಋತ್ಯ ರೈಲ್ವೆ ಕಾರ್ಯಾಲಯ ಹೆಸರಿಗೆ ಹುಬ್ಬಳ್ಳಿಯಲ್ಲಿದ್ದರೂ ಅಲ್ಲಿಯ ಸಿಬ್ಬಂದಿಯವರು ಅನ್ಯಭಾಷಿಕರು, ಹೊರಗಿನವರು. +ಕರ್ನಾಟಕ ಏಕೀಕರಣ ಶ್ರಮ-ಪ್ರೇಮ ಮಿಶ್ರಿತ ಸಾಧನೆಯಿಂದ ಸಂಭವಿಸಿದೆ. ಬೇರೆ ಬೇರೆಯಾಗಿ ಹಂಚಿಹೋಗಿದ್ದ ನಾಡಿನ ಭಾಗಗಳು ಸೇರಿ ಒಂದಾಗಿರುವ ಕರ್ನಾಟಕವನ್ನು ಮತ್ತೆ ಸೀಳಿ ಹೋಳುಗಳಾಗಲು ಬಿಡಬಾರದು. ಪ್ರತ್ಯೇಕತೆಯ ಕೂಗು ಆರೋಗ್ಯಕರವಲ್ಲ. +ಪ್ರಾದೇಶಿಕ ಅಸಮಾನತೆ ಇದೆಯೆಂಬ ಭಾವನೆಯನ್ನು ಬೇರುಸಹಿತ ಮೊದಲು ಕಿತ್ತುಹಾಕುವುದಕ್ಕೆ ಆದ್ಯತೆಯಿರಲಿ. ನಮ್ಮನ್ನು ಅಲಕ್ಷ್ಯ ಮಾಡುತ್ತಿದ್ದಾರೆಂಬ ಅಪಸ್ವರ ಬಲಿತು ದೊಡ್ಡದಾಗಲು ಬಿಡಬಾರದು. ಇಷ್ಟು ವರ್ಷ ಒಟ್ಟಿಗೆ ಇದ್ದರೂ ನಮ್ಮತ್ತ ಕಣ್ಣೆತ್ತಿ ನೋಡಲಿಲ್ಲ, ಕಾಳಜಿ ತೋರಿಸುತ್ತಿಲ್ಲ, ಮುಖ್ಯ ವಾಹಿನಿಯಿಂದ ದೂರವಿಟ್ಟಿದ್ದಾರೆ – ಎಂಬಿತ್ಯಾದಿ ಸಂಶಯದ ಕಾಳುಗಳು ಅಖಂಡ ಕರ್ನಾಟಕದ ಯಾವ ಭಾಗದಲ್ಲೂ ಮೊಳಕೆಯೊಡೆಯಲು ಬಿಡಬಾರದು. ಕೊರತೆಯ, ಕೊರಗಿನ ಮುಲುಕು ಮೂಡದಂತೆ ಅಕ್ಕರೆಯ ತೆಕ್ಕೆಯ ಮುತುವರ್ಜಿ ನೇವರಿಸುತ್ತಿರಲಿ. ಉಗುರಿನಲ್ಲಿ ಹೋಗುವುದಕ್ಕೆ ಕೊಡಲಿ ಬಳಸುವಂತಾಗಬಾರದು. +ಉತ್ತರ ಕರ್ನಾಟಕದಲ್ಲಿ ಹೈಕೋರ್ಟ್ ನ್ಯಾಯಪೀಠ ಬೇಗ ಆಗಲಿ. ಮೀನ ಮೇಷ ಎಣಿಸಿ ಗುಣಿಸಿ ನ್ಯಾಯಯುತ ಬೇಡಿಕೆಯನ್ನು ಮುಂದೂಡುವುದು ಬೇಡ. ಜೊತೆಗೆ ಮುಖ್ಯಮಂತ್ರಿಗಳ ಕಾರ್ಯಾಲಯ ಕಚೇರಿಯೊಂದು ಉತ್ತರ ಕರ್ನಾಟಕದ ಜಿಲ್ಲಾ ಕೇಂದ್ರವೊಂದರಲ್ಲಿ ತೆರೆದು ತಿಂಗಳಲ್ಲಿ ಒಂದು ದಿನ ಉತ್ತರ ಕರ್ನಾಟಕದ ಆ ಕಚೇರಿಯಲ್ಲಿ ಮುಖ್ಯಮಂತ್ರಿಗಳು ಉಪಸ್ಥಿತರಿರುವುದು ತುಂಬ ಒಳ್ಳೆಯ ಮಾರ್ಗ. ಏಕೆಂದರೆ ವಿಶ್ವಾಸವಿದೆ ಎಂದು ಮಾತಿನಲ್ಲಿ ಹೇಳಿದರೆ ಸಾಲದು, ಜನಕ್ಕೆ ಅಂಥ ನಂಬಿಕೆ ಬರುವುದು ಬಹಳ ಮುಖ್ಯ. ಸರಕಾರದ ಇಚ್ಛಾಶಕ್ತಿ ಕನ್ನಡಪರವಾಗಿದೆ ಎಂಬುದು ಜನಮನಕ್ಕೆ ನಾಟಬೇಕು. +ನೆಲ, ಜಲ, ರೈತ : ಸಮಸ್ಯೆಯ ಚಕ್ರತೀರ್ಥ +ನೆಲ, ಜಲ, ಮತ್ತು ವಿದ್ಯುತ್ತು ಇದ್ದರೆ ರೈತರು ಬಂಗಾರ ಬೆಳೆದಾರು. ಆದರೆ ಭೂಮಿಯಿದ್ದೂ ರೈತರು ನೀರು ಇಲ್ಲದೆ ಪರದಾಡುತ್ತಿದ್ದಾರೆ. ಕ್ಷಾಮಡಾಮರಗಳಿಗೆ ನಾಂದಿ ಜಲಕ್ಷಾಮ. ಅಂತರ್ಜಲದ ಸೆಲೆಗಳು ಬತ್ತುತ್ತಾ ಪೂರಾ ನೀರು ಇಂಗಿಹೋಗುತ್ತಿದೆ. ಕೆರೆಗಳ ಹೂಳು ತೆಗೆಯುವ ಹಳೆಯ ರೂಢಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಕನ್ನಡ ನಾಡು ಕೆರೆಗಳ ಬೀಡು. ಕೆರೆಗಳಲ್ಲಿ ಊಳು ತೆಗೆಸುವುದು ಅಪರೂಪವಾಗುತ್ತಿದೆ. ಜಲಾಶಯಗಳಲ್ಲಿ ತುಂಬಿದ ಊಳು ತೆಗೆಸುವುದು ಕಷ್ಟ. ಊಳು ತುಂಬಿದ ಕಾರಣ ಶೇಕಡಾ ೨೫ರಷ್ಟು ನೀರಿನ ಸಂಗ್ರಹ ಪ್ರಮಾಣ ಕಡಮೆಯಾಗಿದೆಯೆನ್ನಲಾಗಿದೆ. ಅದರಿಂದ ಈ ನಷ್ಟದ ಪ್ರಮಾಣಕ್ಕೆ ಅನುಗುಣವಾದ ಪರಿಹಾರಕ್ಕೆ, ಅಂದರೆ ಈಗ ಕರ್ನಾಟಕಕ್ಕೆ ಗೊತ್ತು ಮಾಡಿರುವ ಪ್ರಮಾಣಕ್ಕೆ, ಈ ಊಳು ತುಂಬಿದ ಕಾರಣ ಕಡಮೆ ಆಗಿರುವ ಹೊರಹರಿವಿನ ಶೇಕಡಾ ಪ್ರಮಾಣದಷ್ಟು ನೀರಿಗೆ ಹಕ್ಕೊತ್ತಾಯ ನಿಲ್ಲಿಸಬಾರದು. ಜೊತೆಗೆ ಅನುತ್ಪಾದಕ ಹಾಗೂ ನಷ್ಟದ ಬಿಳಿ ಆನೆ ಸಾಕೊ ರೀತಿಯ ಯೋಜನೆಗಳಿಗೆ ದುಡ್ಡು ಸುರಿಯುವುದನ್ನು ತಪ್ಪಿಸೋಣ ಮತ್ತು ಅಂತರ್ಜಲ ಪುನರುತ್ಪಾದಕವಾಗಿಸುವ ಜಲಯೋಜನೆಗಳಿಗೆ ಚೈತನ್ಯ ತುಂಬೋಣ. +ಹೀಗೆ ಹೇಳುವಾಗ ನಾನು ಹೆಚ್ಚು ಒತ್ತು ಕೊಡುತ್ತಿರುವುದು ಹಮ್ಮಿಕೊಂಡಿರುವ ಯೋಜನೆಗಳನ್ನು ಬೇಗ ಬೇಗ ಪೂರೈಸುವುದಕ್ಕೆ. ಚಿತ್ರಾವತಿ ತೊರೆಗೆ ಪರಗೋಡು ಅಡ್ಡಕಟ್ಟೆ ಕಟ್ಟುವುದನ್ನು ಏನೇ ಆದರೂ ನಿಲ್ಲಿಸದೆ ಪೂರೈಸಲಾಗುವುದೆಂಬ ಕೆಚ್ಚು ತೋರಿದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣರನ್ನು ಅಭಿನಂದಿಸುತ್ತೇನೆ. ಇದೇ ದಿಟ್ಟ ನಿಲುವನ್ನು ಇತರ ನೀರಾವರಿ ಯೋಜನೆಗಳಿಗೂ ತೋರಿಸಿದರೆ “ಅಭಿನವ ಭಗೀರಥ” ರೆಂಬ ಕೀರ್ತಿಗೆ ಪಾತ್ರರಾಗಬಹುದು. ಬಚಾವತ್ ನ್ಯಾಯಾಧಿಕರಣದ ‘ಎ ಸ್ಕೀಂ’ ಶಿಫಾರಸಿನಂತೆ ಕೃಷ್ಣಾನದಿ ಕೊಳ್ಳದ ಹಳ್ಳಗಳಿಂದ ಸಿಗುವ ನೀರಿನ ಪಾಲನ್ನು ಬಳಸಿದಂತೆ ‘ಬಿ ಸ್ಕೀಂ’ ನ ಹೆಚ್ಚುವರಿ ನೀರನ್ನೂ ಕರ್ನಾಟಕ ಧಾರಾಳವಾಗಿ ಬಳಸುವ ಧೈರ್ಯ ಮತ್ತು ವಿವೇಕ ತೋರಬೇಕು. ಆಂಧ್ರ ಸರಕಾರ ಈ ಕೆಲಸ ಮಾಡಿದೆ. ಸಿಂಗಟಾಲೂರು ನೀರಾವರಿ ಯೋಜನೆಯ ಗಾತ್ರವನ್ನು ಹಿಗ್ಗಿಸಿದ್ದು ‘ಬಿ ಸ್ಕೀಂ’ಗೆ ಅನುಗುಣ ವಾಗಿರುವುದರಿಂದ ನಮ್ಮ ಆ ಯೋಜನೆ ಬೇಗ ಪೂರ್ಣಗೊಳ್ಳಬೇಕು. +ನಗರವಾಸಿಗಳೂ ನೀರನ್ನು ಮಿತವಾಗಿ ಬಳಸುವ ಅಗತ್ಯವಿದೆ. ದಿನನಿತ್ಯ ಬಕೆಟ್ಟುಗಟ್ಟಲೆ ನೀರು ಸುರಿದು ಮೀಯುವವರೊಂದು ಕಡೆ, ಮೂರು ನಾಲ್ಕು ದಿನಕ್ಕೊಮ್ಮೆ ಸ್ನಾನ ಮಾಡಲು ನೀರಿಗೆ ಬರ ಇರುವವರು ಇನ್ನೊಂದು ಕಡೆ. ಈ ಎರಡು ತುದಿಗಳ ಸಮನ್ವಯವೆಂದರೆ ಕೇವಲ ಸ್ನಾನಕ್ಕೆ ಸಂಬಂಧಿಸಿದ ಪ್ರಶ್ನೆಯಲ್ಲ. ನೀರಿನ ಸದ್ವಿನಿಯೋಗ ಹೇಗೆಂಬ ಗಂಭೀರ ಪರಾಮರ್ಶೆಯ ಜರೂರು ಒದಗಿದೆಯೆಂಬತ್ತ ಗಮನ ಕೇಂದ್ರೀಕರಿಸುವುದು; ಹನಿಹನಿ ಕೂಡಿದರೆ ಹಳ್ಳ ಎಂಬ ಜಾಣ್ಣುಡಿಯು ವಾಸ್ತವವಾಗಲೆಂಬ ಗ್ರಹಿಕೆ. +ವ್ಯವಸಾಯ, ಜಗತ್ತಿನ ಹಳೆಯ ವೃತ್ತಿ. ನಮ್ಮ ಸಂಸ್ಕ ತಿ ಐದುಸಾವಿರ ವರ್ಷಗಳಷ್ಟು ಹಳೆಯದು ಎಂದು ಹೆಮ್ಮೆಯಿಂದ ಭಾಷಣ ಮಾಡುತ್ತೇವೆ. ಕೃಷಿ ಹನ್ನೆರಡು ಸಾವಿರ ವರ್ಷಗಳಷ್ಟು ಪ್ರಾಚೀನವಾದುದು. ಈ ಉದ್ದ ನಡಿಗೆಯಲ್ಲಿ ರೈತರು ಬೇಸಾಯ ಪದ್ಧತಿಯಲ್ಲಿ ಸಾಕಷ್ಟು ಸುಧಾರಣೆ ಅಳವಡಿಸುತ್ತ ಬಂದಿದ್ದಾರೆ. ಎಷ್ಟೇ ಕಷ್ಟಗಳು ಎದುರಾದರೂ ವೃತ್ತಿಗೆ ವಿದಾಯ ಹೇಳದೆ, ನಂಬಿದ ನೆಲವನ್ನು ಕೈಬಿಡದೆ ಬಾಳಿದ್ದಾರೆ. ನೀರಿನ ಆಸರೆ ಹುಡುಕುತ್ತ ಆಗಾಗ ವಲಸೆ ಹೋಗಿರಬಹುದು. ಹೀಗಿದ್ದೂ ರೈತರು ಕಂಗಾಲಾಗಿ ಸರಣಿ ಆತ್ಮಹತ್ಯೆಗೆ ಹೊರಟಿದ್ದು ಇತ್ತೀಚಿನ ವರ್ಷಗಳಲ್ಲಿ. ಅದು ತನ್ನ ಪರಾಕಾಷ್ಠೆ ಮುಟ್ಟಿದ್ದು ಈ ವರ್ಷ. ಪರ್ಯಾಯ ಕುಸುಬುಗಳನ್ನು ಕಲಿತಿಲ್ಲದ ರೈತರು ಗುಳೆ ಹೊರಟಿದ್ದಾರೆ. ಒಂದು ಅಂದಾಜಿನಂತೆ ಸುಮಾರು ಅಯ್ವತ್ತು ಸಾವಿರ ರೈತರು ಕರ್ನಾಟಕ ಬಿಟ್ಟು ವಲಸೆ ಹೋಗಿದ್ದಾರೆ. ಪ್ರಪಂಚಕ್ಕೂ ಭಾರತಕ್ಕೂ ಬರಗಾಲ ಹೊಸದಲ್ಲ. ಹಾಗೆ ನೋಡುವುದಾದರೆ ಕರ್ನಾಟಕದ ಅಧಿಕೃತ ಇತಿಹಾಸ ಅನಾವರಣಗೊಳ್ಳುವುದೇ ಬರಗಾಲದ ಹಿನ್ನೆಲೆಯಲ್ಲಿ. ಉತ್ತರ ಭಾರತದಲ್ಲಿ ೧೨ ವರ್ಷಗಳ ಭೀಕರ ಬರಬಂದಾಗ ಮೌರ್ಯ ಸಾಮ್ರಾಟ ಚಂದ್ರಗುಪ್ತನು ಶ್ರುತಕೇವಲಿ ಭದ್ರಬಾಹು ಮತ್ತು ಸಾವಿರಾರು ಮುನಿಗಳೊಂದಿಗೆ ಸುಭಿಕ್ಷ ಕನ್ನಡ ನಾಡಿಗೆ ಕ್ರಿ.ಪೂ. ನಾಲ್ಕನೆಯ ಶತಮಾನದಲ್ಲಿ ಆಗಮಿಸಿ ಶ್ರವಣಬೆಳಗೊಳದಲ್ಲಿ ನೆಲಸಿದನು. ಇಂತಹ ಸಮೃದ್ಧ ಕರ್ನಾಟಕ ಕಳೆದ ೨೦ ವರ್ಷಗಳಿಂದ ಸರಿಯಾದ, ಹದವಾದ ಮಳೆಗಾಲವನ್ನು ಕಾಣಲಿಲ್ಲ. ಹಿಂದೆಲ್ಲ ರಾಜಮಹಾರಾಜರು ಉಗ್ರಾಣಗಳ ದವಸಧಾನ್ಯವನ್ನು ಜನರಿಗೆ ಹಂಚಿದರು. ಮಠಮಾನ್ಯಗಳು ಜನತೆಗೆ ಗಂಜಿ ಊಟಕ್ಕೆ ನೆರವಾದರು. ಈಗ ಸರ್ಕಾರ ತನ್ನ ಕೈಲಾದುದನ್ನು ಮಾಡುತ್ತ ಬಂದಿದೆ, ಸಹಾಯ ಹಸ್ತ ಚಾಚಲು ಹಿಂದೆ ಬಿದ್ದಿಲ್ಲ. ಇಂಥ ಸಂದರ್ಭದಲ್ಲಿ ರೈತರ ಮಕ್ಕಳಾದ ಗ್ರಾಮೀಣ ಕನ್ನಡಿಗ ಯುವಕರಿಗೆ ಕೃಪಾಂಕವಿತ್ತು ನೇಮಕ ಮಾಡಿದ್ದು ಒಳ್ಳೆಯ ಉಪಕ್ರಮ. ಈ ನೆಲದ ಮಕ್ಕಳಿಗೆ ಉದ್ಯೋಗದಲ್ಲಿ ಯಾವಾಗಲೂ ಆದ್ಯತೆಯಿರಲಿ. +ಆದರೆ ಕಳೆದ ನಾಲ್ಕೈದು ವರ್ಷಗಳಿಂದ ಮಳೆಬೆಳೆ ಸರಿಯಾಗಿಲ್ಲ. ನೀರೂ ಇಲ್ಲ, ವಿದ್ಯುತ್ತೂ ಇಲ್ಲ. ಸಾಲಸೋಲ ಅಧಿಕವಾಗಿದ್ದುದು ಕ್ರಮೇಣ ಅಧಿಕತರವಾಗಿ, ಕಡೆಗೆ ಅಧಿಕತಮವಾಯಿತು. ಒಂದು ವರ್ಷ ಸುಧಾರಿಸಿದರು, ಎರಡನೆಯ ವರ್ಷ ಕೂಡಿಟ್ಟ ಆಪದ್ಧನ ಮುಗಿಯಿತು, ಮೂರನೆಯ ವರ್ಷ ದನಕರು ಮಾರಿದರು. ನಾಲ್ಕನೆಯ ವರ್ಷ ಪಾತ್ರೆ ಪಡಗ ಆಸ್ತಿ ಮಾರಿದರು. ಈಗ ಇನ್ನೇನೂ ಉಳಿಯದೆ ತ್ರಾಣ ಇರುವ ಕೆಲವರು ಗುಳೆ ಹೋದರು. ಅನೇಕರು ಪ್ರಾಣ ತೆತ್ತರು. ಮಳೆಯಾಗಿ ಬೆಳೆ ಬರುತ್ತದೆ, ಮಾಡಿದ ಸಾಲ ತೀರಿಸೋಣ ಎಂಬ ಕನಸುಗಳೊಂದಿಗೆ ಇಟ್ಟ ಬೆಳೆಯೂ ಒಟ್ಟೊಟ್ಟಿಗೆ ಒಣಗಿದುವು. ಕಡು ಬಡತನದ ಸಿಡಿಲ ಹೊಡೆತ ತಾಳಲಾರದೆ ಪ್ರಾಣತೆತ್ತ ರೈತರ ಸರಣಿ ಆತ್ಮಹತ್ಯೆ ನೆನೆದಾಗ ನನಗೆ ಜನಪದ ಗೀತೆಯೊಂದು ನೆನಪಾಗುತ್ತದೆ: +ಬಡವರು ಸತ್ತರೆ ಸುಡಲಿಕೆ ಸೌದಿಲ್ಲೊ +ಒಡಲ ಬೆಂಕೀಲಿ ಹೆಣ ಬೆಂದೊ +ದೇವರೆ ಬಡವರಿಗೆ ಸಾವ ಕೊಡಬೇಡೊ|| +ಇಂಥ ರೈತರು ಬೆಳೆದು, ಕೊಟ್ಟ ಅನ್ನ ತಿಂದು ಬೆಳೆದ ನಾನು ಈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವವನ್ನು ಕೃತಜ್ಞತೆಯಿಂದ ರೈತರ ಚಿರಸ್ಮರಣೆಗೆ ಸಮರ್ಪಿಸುತ್ತೇನೆ. ಆದರೆ ಅದೇ ಉಸಿರಿನಲ್ಲಿ ನಮ್ಮ ರೈತರು ಬದುಕಿನ ಸವಾಲನ್ನು ಎದುರಿಸುತ್ತ ಬಂದ ಎದೆಗಾರಿಕೆಯನ್ನು ಕಳೆದುಕೊಳ್ಳಬಾರದೆಂದೂ ಕೋರುತ್ತೇನೆ. ತಮ್ಮನ್ನು ಕಾಪಾಡುವವರೂ ಕೇಳುವವರೂ ಯಾರೂ ಇಲ್ಲವೆಂಬ ಹತಾಶೆಕಾಡಿ, ‘ಭೂಮಿ ನಂಬಿ ನಾವು ಕೆಟ್ಟೆವು. ಈ ನೆಲ ಉಳೋದು ಬಿಟ್ಟು ನೌಕರಿ ಚಾಕರಿ ಮಾಡಲು ಹೋಗಿದ್ದರೆ ಬದುಕುತ್ತಿದ್ದೆವು’ ಎಂಬ ಭಾವನೆ ಬಲವಾಗುತ್ತಿದೆ. ಹೆಂಗಸರು ‘ಇನ್ನು ಅಡುಗೆ ಮನೆ ಬೇಡ’ ಎಂದೂ, ರೈತರು ‘ಇನ್ನು ಭೂಮಿ ಬೇಡ, ಹೊಲಕ್ಕೆ ಹೋಗುವುದಿಲ್ಲ’ ಎಂದೂ ವಿದಾಯ ಹೇಳಿದರೆ ಮನೆಗೂ ನೆಲಕ್ಕೂ ಬೆಂಕಿ ಬಿದ್ದ ಹಾಗೆ. ಒಲೆ ಹತ್ತಿ ಉರಿದರೆ ನಿಲಬಹುದಲ್ಲದೆ ಧರೆ ಹತ್ತಿ ಉರಿದಡೆ ನಿಲಬಹುದೆ ಎಂದು ನಾಡು ಚಿಂತಿಸಬೇಕು. ಕರುಣೆ, ಅನುಕಂಪ, ಸಹಾನುಭೂತಿಗಳು ಸಾಲುವುದಿಲ್ಲ. ಆತನ ಆರ್ಥಿಕ ಸ್ಥಿತಿಗತಿ ಸುಧಾರಿಸುವ ಹಾಗೆ ಶಾಶ್ವತ ಪರಿಹಾರದ ದಾರಿಗಳನ್ನು ಹುಡುಕಬೇಕು. +೨೫-೩೦ ಎಕರೆಗಿಂತ ಕಡಿಮೆ ಭೂಮಿಯ ಸಣ್ಣ ರೈತರಿಗೆ ಸಾಲವನ್ನು ಮನ್ನಾಮಾಡಿ ಉತ್ತೇಜಿಸಬೇಕು. ಹಸಿರು ಕ್ರಾಂತಿ ಎಂಬುದು ಹೆಸರಿಗಷ್ಟೆ. ಹಳ್ಳಿಗಳ ಅಭಿವೃದ್ಧಿ ತೃಪ್ತಿಕರವಾಗಿಲ್ಲ. ಕೃಷಿವಲಯಕ್ಕೆ ಹೊಸ ಚೈತನ್ಯ ತುಂಬಬೇಕಾಗಿದೆ. ರೈತರಿಗೆ ಕೃಷಿ ಆಧಾರಿತ ಉದ್ಯೋಗಗಳು ಗ್ರಾಮಪರಿಸರದಲ್ಲಿಯೇ ಕಲ್ಪಿತವಾದರೆ ಗುಳೆ ಹೋಗುವುದು ತಪ್ಪಿ ಸ್ವಾವಲಂಬಿತ ಬದುಕಿಗೆ ದಾರಿಯಾಗುತ್ತದೆ. ಸರ್ಕಾರದೊಂದಿಗೆ ಸಾಹಿತಿಗಳೂ ರೈತರ ಸಮಸ್ಯೆಗೆ ಮುಖಾಮುಖಿಯಾಗಿ ನಿಂತು ಸಾಂತ್ವನ ಹೇಳಬೇಕು. ಸಾಹಿತಿಗಳಾದ ನಾವೆಲ್ಲ ನಿಮ್ಮ ಜೊತೆಗೆ ಇದ್ದೀವಿ ಎಂದು ಧೈರ್‍ಯ ಹೇಳಬೇಕು. +ಮುನ್ನೂರು ವರ್ಷ ಆಳಿದ ಪರಕೀಯರ ಗುರುತು ಗಾಯಗಳು ಪೂರಾ ಅಳಿಸುವ ಮೊದಲೆ ಮತ್ತೆ ಹೊರಗಿನವರ ಪ್ರವೇಶದ ಹಿಂದೆ ಪ್ರವರ್ತಿಸುವ ಮೂಲ ಆಶಯಗಳನ್ನು ಗುಮಾನಿಯಿಂದ ಹೆಕ್ಕಬೇಕಾಗಿದೆ. ಏಕೆಂದರೆ ಹಾಲಿ ಎದುರಿಸುತ್ತಿರುವ ಇಕ್ಕಟ್ಟಿನ ನಡುವೆ ‘ಗ್ಯಾಟ್’ ಒಪ್ಪಂದದಿಂದ ದೂರಗಾಮಿ ದುಷ್ಪರಿಣಾಮಗಳಿಗೆ ಒಳಗಾಗುವ ಅಪಾಯವೂ ಎದುರಾಗಿದೆ. ಈಸ್ಟ್ ಇಂಡಿಯಾ ಕಂಪನಿ ಮಾರು ವೇಷಗಳಲ್ಲಿ ಮರುಕಳಿಸಿ ಭಾರತವನ್ನು ನುಂಗಿ, ಆಪೋಷನಕ್ಕೆ ಕಾಯುತ್ತಿವೆ. ಗ್ಯಾಟ್ ಎಂಬುದು ಅದರ ಒಂದು ಸುಧಾರಿತ ಆವೃತ್ತಿ, ಮೆಟ್ರೊ ಎಂಬುದು ಅದರದೇ ಇನ್ನೊಂದು ರೂಪ. ಬಹುರಾಷ್ಟ್ರೀಯ ಕಂಪನಿಗಳ ಈ ವಿವಿಧೋದ್ದೇಶಗಳಿಗೆ ವಿವಿಧ ದೇಶಗಳನ್ನು ಕಬಳಿಸಿ ನುಂಗಿ ನೀರು ಕುಡಿಯುವ ಆಶಯವಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ದೇಶಭಾಷೆಗಳ ಬಗ್ಗೆ ಅಸಡ್ಡೆ. ಸ್ಥಳೀಯ ವಿಚಾರದಲ್ಲಿ ನಿರ್ದಯಿಗಳು. ಇಲ್ಲಿನ ಸಂಪತ್ತು ಮಾತ್ರ ಬೇಕೆಂಬುದು ಹಗಲು ದರೋಡೆಯಲ್ಲದೆ ಮತ್ತೇನು? ಕರ್ನಾಟಕವನ್ನು ಕಡೆಗಣಿಸಿ ವಿಜೃಂಭಿಸಬಯಸುವ ಪ್ರವೃತ್ತಿಗಳನ್ನು ಹತ್ತಿಕ್ಕಿದರೆ ತಪ್ಪಲ್ಲ. ಕೃಷಿಯೇ ಭಾರತದ ಶಕ್ತಿ ಎಂಬುದನ್ನು ವಿದೇಶಿ ಜಾಣರು ಚೆನ್ನಾಗಿ ಬಲ್ಲರು. ಕಡಿಮೆ ದರದಲ್ಲಿ ವಿದೇಶಿ ಸರಕುಗಳನ್ನು ಆರಂಭದ ವರ್ಷ ಒದಗಿಸುತ್ತ ಕ್ರಮೇಣ ಇಲ್ಲಿನ ವ್ಯವಸಾಯ ಮತ್ತು ಮಾರುಕಟ್ಟೆಯನ್ನು ದಾಸ್ಯಕ್ಕೆ ತಳ್ಳುವ ಷಡ್ಯಂತ್ರಜಾಲ ಸಿದ್ಧವಾಗುತ್ತಿದೆ. ಹತ್ತು ದಿನ ಇಟ್ಟರೂ ಕೆಡದಂಥ ಹಾಲನ್ನು ಡೆನ್ಮಾರ್ಕಿನವರು ಇಲ್ಲಿಯೂ ಹಂಚಿದರೆ ಇಲ್ಲಿನ ಎಮ್ಮೆ ಹಸುಗಳನ್ನೂ ಹಾಲನ್ನೂ ಕೇಳುವವರು ಯಾರು? ಇಳುವರಿ ಹೆಚ್ಚಲೆಂಬ ಕಾರಣಕ್ಕೆ ವಿದೇಶಿ ಮಿಶ್ರತಳಿ ಕಾಳು ಬಳಸುತ್ತಾರೆ. ಆದರೆ ಮುಂದಿನ ಬೆಳೆಗೆ ಅವು ನಿರುಪಯೋಗಿ, ಮರು ಉತ್ಪಾದಕವಲ್ಲ. ಅದರಿಂದ ಮತ್ತೆ ವಿದೇಶಿ ಮಾಲಕರ ಬಳಿ ಬಿತ್ತನೆ ಕಾಳಿಗೆ ಕೈಯೊಡ್ಡಿ ಪಾಳಿ ನಿಲ್ಲುವುದು ತಪ್ಪುವುದಿಲ್ಲ. ಈ ದಿಕ್ಕಿನ ಲೆಕ್ಕಾಚಾರವನ್ನು ನಮ್ಮ ರೈತ ಸಂಘಗಳು ಪರಿಭಾವಿಸಬೇಕಾದ ಸಂಕ್ರಮಣಾವಸ್ಥೆ ಬಂದಿದೆ. ಹೀಗೆ ಹೇಳುವಾಗ ಮತ್ತೆ ಹಳೆಯ ಪದ್ಧತಿಗಳಿಗೇ ಗಂಟು ಬೀಳಬೇಕೆಂದು ನಾನು ಸೂಚಿಸುತ್ತಿಲ್ಲ. ಕಾಲಕಾಲಕ್ಕೆ ತಕ್ಕ ಬದಲಾವಣೆ ಆಗುವಾಗಲೂ ನಾಳೆಗಳ ಮುನ್ನೋಟವೂ ನೆನಪಿರಲೆಂಬ ಗ್ರಹಿಕೆಯಿಂದ ಈ ನಾಲ್ಕು ಮಾತು ಆಡಿದ್ದೇನೆ. +ಶತಮಾನಗಳಿಂದ ಸ್ವಾಭಿಮಾನಿಗಳಾಗಿ ಬಾಳುತ್ತ ಬಂದಿರುವ ನೇಗಿಲಯೋಗಿಗಳು ಮರ್ಯಾದಾ ಪುರುಷೋತ್ತಮರು. ಈ ನಮ್ಮ ಅನ್ನದಾತರು ಇಂದು ಸರಣಿ ಆತ್ಮಹತ್ಯೆಯತ್ತ ಅಭಿಮುಖರಾಗಿರುವುದು ಕಳವಳಕಾರಿಯಾದ ಬೆಳವಣಿಗೆ. ಅಲ್ಲೊಬ್ಬ ಇಲ್ಲೊಬ್ಬರೆಂದು ಆರಂಭವಾಗಿ ಒಟ್ಟೊಟ್ಟಿಗೆ ಕುಟುಂಬಗಳೇ ಉರುಳಿಗೆ ಕೊರಳೊಡ್ಡಿದ ವರದಿಗಳು ತಲ್ಲಣಗೊಳಿಸುತ್ತಿವೆ. ಈ ದಾರುಣ ಘಟನೆಗಳಿಗೆ ವಿಷಣ್ಣರಾಗಿ ಮೊಸಳೆ ಕಣ್ಣೀರು ಸುರಿಸಿ ವಿರಮಿಸದೆ ನಾವೀಗ ಈ ಇಡೀ ಪ್ರಸಂಗಗಳ ಹಿಂದಿರುವ ವಾಸ್ತವವನ್ನು ಸರಿಯಾಗಿ ಅರಿತು ಪರಿಹಾರದ ದಾರಿಗಳನ್ನು ಹುಡುಕುವ ವಿವೇಕ ತೋರಬೇಕೆನಿಸಿದೆ. ರೈತರೇ ಅಲ್ಲದೆ ಇದೇ ಬಗೆಯ ಬವಣೆ ಬೇಗುದಿಯಲ್ಲಿ ಬೇಯುತ್ತಿರುವ, ಕೈಮಗ್ಗಗಳನ್ನು ನಂಬಿದ ನೇಕಾರರನ್ನೂ ಗಿರಣಿಗಳನ್ನು ಅವಲಂಬಿಸಿದ ಕಾರ್ಮಿಕರನ್ನೂ ಕೂಲಿನಾಲಿ ಮಾಡಿ ಹೊಟ್ಟೆ ಹೊರೆಯುವವರನ್ನೂ ಪರಿಗಣಿಸಿ ಪರಿಹಾರಕ್ಕೆ ಮುಂದಾಗಬೇಕಾಗಿದೆ. ಬೇಕಾಬಿಟ್ಟಿ ಬಂದ್‌ಗೆ ಕರೆಕೊಡುವುದರಿಂದ ಇವರೆಲ್ಲರಿಗೂ ಆಗುವ ಬೃಹತ್ ಪ್ರಮಾಣದ ನಷ್ಟವನ್ನೂ ಗಮನಿಸಬೇಕು. +ಪುರುಷ ಪ್ರಧಾನವಾದ ಕುಟುಂಬಗಳಲ್ಲಿ ಆರ್ಥಿಕ ವಹಿವಾಟು ಬಹುವಾಗಿ ಯಜಮಾನ ಗಂಡಸಿನ ಕಾರ್ಯಭಾರವಾಗಿರುವುದರಿಂದ ಈಗಿನ ಆತ್ಮಹತ್ಯೆಯು ಅದಕ್ಕೆ ಆತ ತೆತ್ತಬೆಲೆಯೆ – ಎಂಬುದನ್ನೂ ಪರಾಮರ್ಶಿಸಬೇಕು. ಹಾಲಿ ಇರುವ ಸಾಂಸಾರಿಕ ಸ್ವರೂಪದಲ್ಲಿ ಸ್ವಲ್ಪ ಮಾರ್ಪಾಟು ತಂದುಕೊಂಡು ಹೆಂಗಸರಿಗೂ ಮನೆಯ ಆರ್ಥಿಕ ವಹಿವಾಟನ್ನು ವಹಿಸಿದ ಪಕ್ಷದಲ್ಲಿ ಈ ದುರಂತ ನಿವಾರಣೆಯಾದೀತೆ ಎಂದೂ ಪರಿಶೀಲಿಸಬೇಕು. ಇತ್ತೀಚೆಗೆ ಪ್ರಬಲ ಚಳವಳಿಯಾಗಿ ಹಳ್ಳಿಗಳವರೆಗೂ ಹಬ್ಬುತ್ತಿರುವ ಸ್ತ್ರೀಶಕ್ತಿ ಸಂಘಟನೆಯ ಸಬಲೀಕರಣ ಪ್ರಗತಿಯನ್ನು ಗಮನಿಸಿದಾಗ ಹೆಣ್ಣಿಗೆ ಆರ್ಥಿಕ ಸಬಲತೆ ತರುವ ನಿಟ್ಟಿನಲ್ಲಿಯೂ ಕಾರ್ಯತತ್ಪರರಾಗಬಹುದು. ರೈತರಿಗೂ ಕೂಲಿನಾಲಿಗಳಿಗೂ ಕಾರ್ಮಿಕರಿಗೂ ನೀಡುವ ಸಾಲಗಳಿಗೆ ಬಡ್ಡಿದರ ಬಹಳ ಕಡಿಮೆ ಇರಬೇಕು. ಚಕ್ರಬಡ್ಡಿ ಹಾಕಬಾರದು. ಮತ್ತು ದೀರ್ಘಾವಧಿ ಸಾಲ ಸುಲಭವಾಗಿ ಶೀಘ್ರವಾಗಿ ಸಿಗುವಂತಾಗಬೇಕು ಮಧ್ಯವರ್ತಿಗಳ ಬೋನುಗಳಿಂದ ಬಿಡಿಸಿ ಕೃಷಿ ಮಾರುಕಟ್ಟೆ ಸಂಘಗಳ ಮೂಲಕ ರೈತನ ಬೆಳೆಗೆ ನ್ಯಾಯಬೆಲೆ ಸಿಗುವಂತೆ ಕೊಳ್ಳಬೇಕು. ಆತ ಇಡೀ ವರ್ಷ ಬಂಡವಾಳ ಹೂಡಿ ಸರಿಯಾದ ಬೆಲೆ ಸಿಗಲಿಲ್ಲವೆಂದು ಹತಾಶನಾಗಿ ಹೊಲದಲ್ಲೂ ರಸ್ತೆ ಬದಿಯಲ್ಲೂ ತನ್ನ ಬೇಗೆಯನ್ನು ಬಿಸಾಕಿ ಕೈಚೆಲ್ಲುತ್ತಿದ್ದಾನೆ. ದಲ್ಲಾಳಿಗಳೊಂದಿಗೆ ಪೈಪೋಟಿಯಿಂದ ಸ್ಪರ್ಧಿಸಲಾಗದೆ ಮುಗ್ಗರಿಸುತ್ತಿದ್ದಾನೆ. +ರೈತರು ಬರ್ಬರತೆಗೆ ಒಲಿದವರಲ್ಲವಾದರೂ ಸಿಟ್ಟಿಗೇಳುವ ರಟ್ಟೆ ಬಲ ಇಲ್ಲವೆಂದಲ್ಲ. ಆದರೆ ಭೂಮಿಯನ್ನು ನಂಬಿದ ಅವರಿಗೆ ಭೂಮಿತೂಕದ ತಾಳ್ಮೆಯೂ ಸಹಜವಾಗಿ ಬಂದಿದೆ. ಈ ಹಿನ್ನೆಲೆಯಲ್ಲಿ ರೈತರ ಸಂಘಟನೆಯನ್ನು ಪುರಸ್ಕರಿಸಬೇಕು. ತಾನು ಬೆಳೆದದ್ದಕ್ಕೆ ಸರಿಯಾದ ಬೆಲೆ, ಪ್ರತಿಫಲ ಸಿಗಬೇಕೆಂಬುದು ನ್ಯಾಯ. ಕಾಯಕ ಜೀವಿಗಳ ಹೊಟ್ಟೆಯ ಮೇಲೆ ಬರೆ ಹಾಕಬಾರದು. ದಳ್ಳಾಳಿಗಳ ಬೋನಿಗೆ ಬೀಳದಂತೆ ರಕ್ಷಿಸುತ್ತ ಕಡಮೆ ಬಡ್ಡಿಯಲ್ಲಿ ಸುಲಭವಾಗಿ ಸಾಲ ಸಿಗುವಂತಾಗಬೇಕು. +ಮಹಿಳೆ : ಲೇಖಕಿಯ ಸುತ್ತಮುತ್ತ +ನಾನು ಮೊದಲಿಂದ ಸ್ತ್ರೀವಾದಿಯೆಂಬ ಠಸ್ಸೆ ಒತ್ತಿದ್ದಾರೆ. ಇದನ್ನು ಬೇಷರತ್ತಾಗಿ ಒಪ್ಪಿಕೊಳ್ಳಲು ನನಗೆ ಯಾವ ಮುಜುಗರವೂ ಇಲ್ಲ. ಮಹಿಳೆಯರ ಪರವಾಗಿ ಮುಂದೆ ನಿಂತು ಮಾತಾಡುವುದು ನನಗೆ ದಣಿವರಿಯದ ಪ್ರಿಯವಾದ ಕಾಯಕ. ಮಹಿಳೆಯನ್ನು ಎಲ್ಲೆಡೆ ಎರಡನೆಯ ದರ್ಜೆಯವಳೆಂದು ತಿಳಿಯುವ ಪರಿಪಾಟಿ ಈಗಲೂ ನಿಂತಿಲ್ಲ. ಹೆಣ್ಣು ಭ್ರೂಣಹತ್ಯೆ ವ್ಯವಸ್ಥಿತವಾಗಿ ಮುಂದುವರಿದಿದೆ. ಹೆಂಗಸರೇ ಹೆಂಗಸರಿಗೆ ಹಗೆಗಳಾಗದೆ, ತಮ್ಮನ್ನು ಕೀಳಾಗಿ ಕಾಣುವ ಕೀಳರಿಮೆಯಿಂದ ನರಳದೆ ಸಂಘಟಿತರಾಗಿ ಆತ್ಮಸ್ಥೈರ್ಯ ತಾಳಬೇಕು. ಹೆಣ್ಣು, ಲೋಕ ಹೇಳುವಷ್ಟು ದುರ್ಬಲಳೇನಲ್ಲ. ಕಳೆದ ಮೂರು ದಶಕಗಳಿಂದ ಈಚೆಗೆ ಸ್ತ್ರೀಪರವಾದ ಹೋರಾಟ ಹುರಿಗೊಳ್ಳುತ್ತಿದೆ. ವಿದೇಶಗಳಲ್ಲಿಯೂ ಸ್ತ್ರೀಯ ಶೋಷಣೆ ಅವ್ಯಾಹತವಾಗಿ ನಡೆದಿದೆ. ಆದರೆ ಹೆಣ್ಣಿಗೆ ಸರಿಸಮಾನ ಸ್ಥಾನಮಾನ ಸಿಗಬೇಕೆಂಬ ಹೋರಾಟ ಅಲ್ಲಿ ದಟ್ಟವಾಗಿದೆ. ಇಲ್ಲಿಗಿಂತ ಅಲ್ಲಿ ಸ್ತ್ರೀ ಆರ್ಥಿಕವಾಗಿ ಸಬಲೆ. +ಇಪ್ಪತ್ತು ಮೂವತ್ತು ವರ್ಷಗಳ ಹಿಂದಣ ಮಹಿಳಾ ಸಾಹಿತ್ಯದೊಂದಿಗೆ ಇಂದಿನ ಲೇಖಕಿಯರ, ಕೃತಿಗಳನ್ನು ಹೋಲಿಸಿದರೆ ಸ್ತ್ರೀಯರ ಬರೆಹ ನಿಚ್ಚಳವಾಗಿ ಗುಣಾತ್ಮಕವಾಗಿ ಮೌಲಿಕವಾಗುತ್ತಿರುವುದು ಕಾಣುತ್ತದೆ. ಅದರಲ್ಲಿಯೂ ೧೯೮೫-೯೦ ರಿಂದ ಈಚೆಗಿನ ಲೇಖಕಿಯರ ಬರವಣಿಗೆ ಮಹತ್ತರವಾದ ಬೆಳವಣಿಗೆಯನ್ನು ಬಿಂಬಿಸಿದೆ. ಹೀಗಿದ್ದೂ ಮಹಿಳಾ ಸಾಹಿತ್ಯಕ್ಕೆ ಸಿಗಬೇಕಾದ ಮನ್ನಣೆ, ಪುರಸ್ಕಾರ ಸಿಕ್ಕಿಲ್ಲ. +ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯನ್ನು ಪಕ್ಕಕ್ಕೆ ಸರಿಸುವ ರೂಢಿ ಈಗಲೂ ಇದೆ. ಆದರೆ ಸ್ತ್ರೀಯ ಸ್ವಾಭಿಮಾನ ಜಾಗೃತವಾಗಿದೆ. ಆಕೆ ಮಹಿಳೆಯೆಂಬ ರಿಯಾಯಿತಿ ಅಥವಾ ಸಹಾನುಭೂತಿ ಬೇಡವೆಂದು ಹೇಳುವ ಸ್ಥಿತಿಯಲ್ಲಿದ್ದಾಳೆ. ಸಾಹಿತ್ಯದಲ್ಲಿ ಲಿಂಗಭೇದ ಆಧಾರಿತ ತಾರತಮ್ಯವನ್ನೂ ವಿರೋಧಿಸಬೇಕು. ಆತ್ಯಂತಿಕವಾಗಿ ನಿಲ್ಲುವುದು ಮಾಡಿದ ದೊಡ್ಡ ಸಾಧನೆಗಳ ಗುಣಮಟ್ಟ. ತನ್ನ ಅರ್ಹತೆಯಿಂದಲೇ ಸೋಪಾನಗಳನ್ನೇರಿ ಎತ್ತರಗಳನ್ನು ಎಟುಕಿಸುವ ಈ ಆರೋಗ್ಯಕರ ಧೋರಣೆ ಶ್ಲಾಘ್ಯವಾದುದು. ಅಮೂರ್ತ ಸಿದ್ಧಾಂತಗಳಲ್ಲಿ ಸಾಹಿತ್ಯ ಅರಳುವುದಿಲ್ಲ. ಅದಕ್ಕೆ ಈ ನೆಲದ ಬದುಕಿನ ಬದ್ಧತೆ ಇರುತ್ತದೆ. ಶ್ರೇಷ್ಠ ಸಾಹಿತ್ಯ ಪ್ರಾದೇಶಿಕ ಹಾಗೂ ರಾಷ್ಟ್ರೀಯ ತುರ್ತುಗಳಿಗೆ ಸ್ಪಂದಿಸುತ್ತ ಕಡೆಗೆ ಎಲ್ಲ ಪರಿಮಿತ ಒತ್ತಡಗಳನ್ನು ಮೀರಿ ಜಾಗತಿಕ ಎತ್ತರಗಳಿಗೆ ಎಟುಕಬೇಕು. ಅಂದರೆ ಸಮಸ್ತ ಮನುಷ್ಯರ ಪರವಾಗಿ ನಿಂತು ಎಲ್ಲ ರೀತಿಯಿಂದ ಶೋಷಣೆಯನ್ನೂ ಸರ್ವಾಧಿಕಾರವನ್ನೂ ತುಳಿತವನ್ನೂ ಧಿಕ್ಕರಿಸಬೇಕೆಂಬ ಅರಿವು ಲೇಖಕಿಯರಿಗಿದೆ. +ದೇಶದ ಮುಖ್ಯವಾಹಿನಿಯೆಂದರೆ ಅದು ಪುರುಷ ವಾಹಿನಿಯೆಂಬ ಗ್ರಹಿಕೆಯಲ್ಲಿ ತಿದ್ದುಪಡಿ ಬರಲಿ. IZಜ್ಞಿ oಠ್ಟಿಛಿZಞ ಎಂದರೆ IZಛಿ oಠ್ಟಿಛಿZಞ ಮಾತ್ರ ಎಂಬ ಹೇಳಿಕೆಗೆ ಸಾಹಿತ್ಯವೂ ಹೊರತಲ್ಲ. ‘ಸಾಹಿತ್ಯ ಪುರುಷ ಪ್ರಧಾನ ಹಾಗೂ ಪುರುಷ ಕೇಂದ್ರಿತವಾಗಿದ್ದು ಸ್ತ್ರೀ ಅದರ ಅಂಚಿನಲ್ಲಷ್ಟೇ ಸಂಚರಿಸಬಹುದು, ಬಟ್ಟೆಯ ತುದಿಗಳಲ್ಲಿ ಅಲಂಕಾರಕ್ಕೆ ಇಳಿಯಬಿಟ್ಟ ಬಣ್ಣದ ಎಳೆಗಳಂತೆ. ಕಳೆದ ಎರಡು ದಶಕಗಳಿಂದ ಹಲವಾರು ಮಹಿಳೆಯರು ಲೇಖಣಿ ಹಿಡಿದಿದ್ದಾರೆ -ಎಂದಾಕ್ಷಣ ಪೊರಕೆ, ಲಟ್ಟಣಿಗೆ, ಸೌಟು ಕೆಳಗಿಟ್ಟಿದ್ದಾಳೆ ಎಂದು ಅರ್ಥವಲ್ಲ, ಈ ಶತಮಾನದಲ್ಲಿ ಬರೆಹಗಾರ್ತಿಯರ ಬಳಗ ದಟ್ಟವಾಗಿದ್ದು ಅವರ ಬರೆಹವೂ ಮಹತ್ವದಾಗುತ್ತಿದೆ. ಕಳೆದ ಶತಮಾನ ಮಹಿಳೆಯರು ಸಹಸ್ರಮಾನಗಳ ಮೌನ ಮುರಿದು ಮಾತಾಡಿದ ಹಾಗೂ ಬರೆಯತೊಡಗಿದ ಕಾಲಮಾನವಾದರೆ, ಈ ಶತಮಾನ ಆ ಬರೆಹ ಮತ್ತು ಮಾತನ್ನು ಶ್ರೇಷ್ಠ ಕಲಾಕೃತಿಯಾಗಿಸುವ ಹಂತ. ಸಾಮಾಜಿಕ, ಸಾಂಸ್ಕ ತಿಕ, ಆರ್ಥಿಕ, ರಾಜಕೀಯ ಪ್ರಗತಿಗೆ ಪಾಲುದಾರಳೆಂಬ ಗ್ರಹಿಕೆ ಸ್ಥಾಪಿತವಾಗುತ್ತಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಅಸ್ಪಶ್ಯರೆಂದೊ ಶೂದ್ರರೆಂದೊ ಕೆಲವರನ್ನು ಕೀಳಾಗಿ ಕಂಡಂತೆ ಲೇಖಕಿಯರನ್ನು ಕಡೆಗಣಿಸುವುದು ಅಸಾಧ್ಯವೆಂಬ ವಾಸ್ತವತೆ ಮನವರಿಕೆ ಆಗುತ್ತಿದೆ. ಮಾನದಂಡದ ಈ ಪಲ್ಲಟದಿಂದಾಗಿ, ಸಮಗ್ರ ಭಾರತೀಯ ಚರಿತ್ರೆಯನ್ನು, ಎಲ್ಲ ಭಾರತೀಯ ಭಾಷೆಗಳ ಸಾಹಿತ್ಯ ಚರಿತ್ರೆಯನ್ನು ಮತ್ತೆ ಬರೆದು ಲೇಖಕಿಯರಿಗೆ ತೋರಿರುವ ಅನಾದರವನ್ನು ಸರಿಪಡಿಸಬೇಕಾಗಿದೆ. ನ್ಯಾಯವಾಗಿ, ಅರ್ಹತೆಯಿಂದ ಸಲ್ಲಬೇಕಾದ ನಮ್ಮ ಪಾಲನ್ನು ನಮಗೆ ಕೊಡಿ ಎಂದು ಲೇಖಕಿಯರು ಆಗ್ರಹಿಸುವ ತನಕ ಕಾಯಬೇಕಾಗಿಲ್ಲ. +ಮಹಿಳೆಯರನ್ನು ಮಾರಾಟದ ಸರಕು ಎಂಬಂತೆ ಬಿಂಬಿಸುತ್ತ ಇಂದಿನ ದಿನಗಳಲ್ಲಿ ಚಾಲ್ತಿಯಲ್ಲಿರುವ ಜಾಹಿರಾತು ಲೋಕದ ಪಾಪದ ಮುಖವನ್ನು ಕುರಿತು ನಾನು ಹೇಳಲೇಬೇಕಾದ ಪ್ರತಿಕ್ರಿಯೆ ಇದೆ. ಪ್ರತಿದಿವಸ ಮಾಧ್ಯಮಗಳಲ್ಲಿ ಮುದ್ರಣವಾಗುವ, ದೂರದರ್ಶನದಲ್ಲಿ ಪ್ರಸಾರವಾಗುವ ಅರ್ಥಹೀನ ಜಾಹಿರಾತುಗಳು ವಾಕರಿಕೆ ತರುತ್ತವೆ. ಗಂಡಸರು ಮುಖಕ್ಷೌರ ಮಾಡಿಕೊಳ್ಳುವ ರೇಜರ್ ಮತ್ತು ಬ್ಲೇಡುಗಳ, ಧರಿಸುವ ಒಳ ಚಡ್ಡಿಯ ಜಾಹಿರಾತಿಗೆ ಮಹಿಳೆಯನ್ನು ಬಳಸಿಕೊಳ್ಳುವ ರೀತಿ ಅಸಹ್ಯ ಹುಟ್ಟಿಸುತ್ತದೆ. ಸುವಾಸನೆಯ ದ್ರವ್ಯಗಳನ್ನು ಪುರುಷ ಮೈಗೆ ಸಿಂಡಪಿಸಿಕೊಂಡ ಕೂಡಲೆ ಹೆಂಗಸರು ಮೈಮರೆತು ಓಡೋಡಿ ಬರುತ್ತಾರೆಂದೂ, ತಂಪುಪಾನೀಯ ಶೀರ್ಷೆಯನ್ನು ಗಂಡಸರ ಕೈಯಲ್ಲಿ ನೋಡುವುದೆ ತಡ ಸ್ತ್ರೀಯರು ದಡದಡಿಸಿ ಬಂದು ಮುತ್ತಿಕೊಳ್ಳುತ್ತಾರೆಂದೂ ತುಚ್ಛವಾಗಿ ತೋರಿಸಲಾಗುತ್ತಿದೆ. ಇಂಥ ಜಾಹಿರಾತುಗಳು ಆರೋಗ್ಯಕರ ಸಮಾಜಕ್ಕೆ ಶತ್ರುಗಳು. ಮಹಿಳೆಯರಿಗೇ ಅಲ್ಲದೆ ಪುರುಷರಿಗೂ ಅಪಮಾನಕರವಾದ ಈ ಬಗೆಯ ಜಾಹಿರಾತುಗಳನ್ನು ಖಂಡಿಸಬೇಕು. ಮಹಿಳೆಯರನ್ನು ಕೀಳಾಗಿ ಕಾಣಿಸುವ ಈ ದುರ್ಬಳಕೆಯನ್ನು ನಿಯಂತ್ರಿಸುವಂತೆ, ಪ್ರಪಂಚದಾದ್ಯಂತ ಅನ್ವಯಿಸುವಂತೆ ಜಾಹಿರಾತು ನೀತಿಸಂಹಿತೆಯನ್ನು ಜಾರಿಗೆ ತರಬೇಕೆಂದು ಈ ವೇದಿಕೆಯಿಂದ ಆಗ್ರಹಪಡಿಸುತ್ತೇನೆ. ಕೆಲವು ಮಾನವೀಯ ಘನತೆಯನ್ನು ಮಾನ್ಯಮಾಡಿ ಸ್ತ್ರೀಪುರುಷರೆಂಬ ತಾರತಮ್ಯಗಳಿಲ್ಲದೆ ಮಾನವತೆಯ ಮಣೆಯ ಮೇಲೆ ನಿಲ್ಲಿಸುವ ವಿವೇಕ ಆಳಬೇಕು. +ಮಹಿಳೆ ಹಿಂದುಳಿದವರಲ್ಲಿ ಬಹು ಹಿಂದುಳಿದವಳು, ಶೋಷಿತರಲ್ಲಿ ಬಹು ಶೋಷಿತಳು. ಸಾಮಾಜಿಕವಾಗಿ ಮಂದುವರಿದ ಸಮಾಜವಿರಲಿ, ಧಾರ್ಮಿಕವಾಗಿ ಮೇಲು ಜಾತಿಯ ಸಂಸಾರಗಳಾಗಲಿ, ಆರ್ಥಿಕವಾಗಿ ಸದೃಢವಾದ ಕುಟುಂಬಗಳಿರಲಿ – ಎಲ್ಲೆಲ್ಲೂ ಮಹಿಳೆಗೆ ಎರಡನೆಯ ಸಾಲು. ಸುಲಿಗೆಯ ರೂಪ ಸ್ವರೂಪ ವ್ಯತ್ಯಾಸಗೊಳ್ಳಬಹುದೇ ಹೊರತು ಶೋಷಣೆ ನಿಂತಿಲ್ಲ. ಕೊಳಚೆ ಪ್ರದೇಶಗಳ ಹೆಂಗಸರು, ಮಕ್ಕಳು ಶಿಕ್ಷಣ ಸೌಲಭ್ಯದಿಂದ ದೂರ ಇದ್ದಾರೆ. ಲೈಂಗಿಕ ಕಿರುಕುಳ ಹಾಗೂ ಕೌಟಿಂಬಿಕ ಕಲಹಗಳಿಗೆ ಮೀಸಲಾದ ಕಾನೂನನ್ನು ಸಾಮಾಜಿಕ, ಮಾನಸಿಕ ದೃಷ್ಟಿಯಿಂದ ವಿಶ್ಲೇಷಿಸುವತ್ತ ಕಾರ್ಯವಿಧಾನವನ್ನು ಅಳವಡಿಸಿಕೊಂಡು ಮಹಿಳಾ ಆಯೋಗ ಇನ್ನೂ ಸಶಕ್ತವಾಗಬೇಕು. ಇಂದು ಹೆಣ್ಣಿಗೆ ಸ್ವಾಭಿಮಾನದ ಹಸಿವು ಮುಖ್ಯವೆನಿಸಿದೆಯೆಂಬ ಅರಿವು ಪುರುಷರಲ್ಲೂ ಉಂಟಾಗಿ ಸಹಕರಿಸುತ್ತಿರುವುದು ಸ್ವಾಗತಾರ್ಹ. ಇಷ್ಟಿದ್ದೂ ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಲು ಲೋಕಸಭಾ ಸದಸ್ಯರು, ಒಂದಿಲ್ಲೊಂದು ಕಾರಣಗಳನ್ನು ಮುಂದಿಟ್ಟು, ಮುಂದೂಡುತ್ತಿರುವುದು ದುರಂತ. ರಾಜಕೀಯ ಇಚ್ಛಾಶಕ್ತಿ ಮಹಿಳಾಪರ ಧೋರಣೆಗೆ ಓಗೊಟ್ಟು ಬೇಗ ಸ್ಪಂದಿಸಿದರೆ ಸ್ತ್ರೀಶಕ್ತಿಯ ಸಂಘಟನೆಗೆ ಸಿಂಹಬಲ ಬರುತ್ತದೆ. +ಭಾರತದಲ್ಲಿ ಅಕ್ಷರಸ್ಥ ಸ್ತ್ರೀಯರ ಸಂಖ್ಯೆ ಕಡಿಮೆ. ಲೇಖಕಿಯರು ಮತ್ತೂ ಕಡಿಮೆ. ಸ್ತ್ರೀಯರ ಲೇಖನಕ್ಷೇತ್ರದ ಹಸಿರು ಕ್ರಾಂತಿಗೆ ಅಂತಾರಾಷ್ಟ್ರೀಯ ಮಹಿಳಾವರ್ಷ ಪ್ರೇರಣೆಯಾದದ್ದು ನಿಜ. ಮಹಿಳಾ ಸಾಹಿತ್ಯದ ನೆಲೆಬೆಲೆಯ ಪರಾಮರ್ಶೆಗೂ ಆತ್ಮಾವಲೋಕನಕ್ಕೂ ಭೂಮಿಕೆ ಸೃಷ್ಟಿಯಾದದ್ದು ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ ೧೯೭೫ರಲ್ಲಿ ನಡೆಸಿದ ಲೇಖಕಿಯರ ಸಮ್ಮೇಳನದಲ್ಲಿ. ಅದು ಮೊತ್ತಮೊದಲ ಐತಿಹಾಸಿಕ ಹೆಜ್ಜೆ. ಅಲ್ಲಿಂದ ವೈಚಾರಿಕ, ವೈಜ್ಞಾನಿಕ ಬುದ್ಧಿ ಭಾವಗಳ ಸಿದ್ಧತೆಯ ಮಶಾಲು ಹಿಡಿದು ಹೊರಟ ಲೇಖಕಿಯರ ಗಂಭೀರ, ಸೃಜನಶೀಲ ಕೃತಿಗಳು ಹೊರಬರಲು ಸಾಧ್ಯವಾಯಿತು. ಸಾಹಿತ್ಯದಲ್ಲಿ ಲಿಂಗಭೇದ ಆಧರಿಸಿದ ತಾರತಮ್ಯ ಇಲ್ಲವೆಂಬ ಅರಿವಿನಿಂದ ಸತ್ವಶಾಲಿ ಬರವಣಿಗೆಯೇ ಮೌಲಿಕವೆಂಬ ಗ್ರಹಿಕೆ ಗಟ್ಟಿಯಾಯಿತು. ಸಾಹಿತ್ಯದ ಪಲ್ಲಟಗಳ ಹಾಗೂ ಸಾಮಾಜಿಕ ಸ್ಥಿತ್ಯಂತರಗಳ ಅರಿವಿನ ಸ್ಪೋಟದಿಂದ ಲೇಖಕಿಯರು ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಕ್ರಿಯಾಶೀಲರಾಗಿದ್ದಾರೆ. +ನಾನು ಅದೃಷ್ಟಶಾಲಿ. ನನ್ನ ಕೆಲವು ಕನಸುಗಳು ನನಸಾದುವು, ಪ್ರಯತ್ನಗಳು ಫಲಿಸಿದುವು. ಕರ್ನಾಟಕ ಸರ್ಕಾರ ಪ್ರತಿವರ್ಷ ಅತ್ತಿಮಬ್ಬೆಯ ಹೆಸರಿನಲ್ಲಿ ಸಾಹಿತ್ಯಕವಾಗಿ ದೀರ್ಘಕಾಲಿಕ ಮಹತ್ಸಾಧನೆ ಮಾಡಿದ ಮಹತ್ವದ ಲೇಖಕಿಗೆ ಒಂದು ಲಕ್ಷ ರೂಪಾಯಿ ನಗದನ್ನೂ ಒಳಗೊಂಡ ಪ್ರಶಸ್ತಿಯಿಂದ ಪುರಸ್ಕರಿಸಬೇಕೆಂದು ಎಡೆಬಿಡದೆ ಸರಕಾರವನ್ನು ಕಾಡಿದೆ. ನನ್ನ ಹೋರಾಟದ ಸಾಂಸ್ಕ ತಿಕ ಆಯಾಮವನ್ನು ಮನಗಂಡು ಘನ ಕರ್ನಾಟಕ ಸರ್ಕಾರ ನಾನಿತ್ತ ಸೂಚನೆಯನ್ನು ಪೂರ್ತಿಯಾಗಿ ಮಾನ್ಯಮಾಡಿತು. ನನ್ನ ಮನವಿಗೆ ಸಂಪೂರ್ಣ ಸ್ಪಂದಿಸಿದ, ಅಂದು ಮುಖ್ಯಮಂತ್ರಿಯಾಗಿದ್ದ ದೇವೇಗೌಡರನ್ನೂ ಸಂಸ್ಕ ತಿ ಸಚಿವೆಯಾಗಿದ್ದ ಬಿ.ಟಿ. ಲಲಿತಾನಾಯಕ ಅವರನ್ನೂ ಇಂದೂ ಸಹ ಕೃತಜ್ಞತೆಯಿಂದ ನೆನೆಯುತ್ತೇನೆ. +ಅಬ್ಬಕ್ಕರಾಣಿಯ ಸಾಹಸ ಆಕೆಯ ಜೀವಿತ ಕಾಲದಲ್ಲಿ ಜಾಗತಿಕ ವೇದಿಕೆಗೆ ಸಂದಿತ್ತು. ಆ ತಾಯಿ ಮಗಳು ಧೈರ್ಯ ಸಾಹಸ ತೋರಿರದಿದ್ದರೆ ದೇಶದ ಇತಿಹಾಸ ಪಲ್ಲಟಗೊಂಡು ಇಂದು ಭಾರತವನ್ನು ಬ್ರಿಟಿಷರ ಬದಲು ಪೋರ್ಚುಗೀಸರು ಆಳುತ್ತಿದ್ದರು. ಅಂಥ ಸ್ವಾಭಿಮಾನಿ ರಾಣಿಯ ನೆನಪನ್ನು ಚಿರಸ್ಥಾಯಿಗೊಳಿಸುವ ನಿಟ್ಟಿನಲ್ಲಿ ಏನೇನು ಉಪಕ್ರಮಗಳನ್ನು ಕೈಗೊಳ್ಳಬೇಕೆಂದು ಹಲವು ಸಲ ಸೂಚಿಸಿದ್ದೇನೆ. ಮಂಗಳೂರು ಬಂದರಿಗೂ, ಮಂಗಳೂರಿಂದ ಹೊರಡುವ ಅಥವಾ ಬರುವ ರೈಲು ಒಂದಕ್ಕೆ ಅಬ್ಬಕ್ಕರಾಣಿಯ ಹೆಸರಿಡುವುದರಲ್ಲಿ ಔಚಿತ್ಯವಿದೆ. +ದೀರ್ಘಕಾಲ ಆಳಿದ ಏಕಮೇವಾದ್ವಿತೀಯ ಮಹಾಮಂಡಲೇಶ್ವರಿ, ಕರಿಮೆಣಸಿನ ರಾಣಿ ಚೆನ್ನಭೈರಾದೇವಿಯ ನೆನಪನ್ನು ಚಿರಸ್ಥಾಯಿಗೊಳಿಸುವ ದಿಕ್ಕಿನಲ್ಲಿ ಈ ನಾಡು ಮಾಡಬೇಕಾದ ಕೆಲಸಗಳನ್ನು ಸರಕಾರದ ಹಾಗೂ ಜನತೆಯ ಗಮನಕ್ಕೆ ತಂದಿದ್ದು ಇನ್ನೂ ನೆನೆಗುದಿಗೆ ಬಿದ್ದಿವೆ. ಹೊನ್ನಾವರ, ಹಾಡುವಳ್ಳಿ, ಬಾರಕೂರು, ಭಟ್ಕಳ, ನಗಿರೆ ರಾಜ್ಯಗಳನ್ನು ಒಳಗೊಂಡ ವ್ಯಾಪಕ ಪ್ರದೇಶವನ್ನು ಗೆರಸೊಪ್ಪೆ ರಾಜಧಾನಿಯಿಂದ ಆಳಿದ ಈ ಮಹಾರಾಣಿ ಕರ್ನಾಟಕದ ಸಾಹಿತ್ಯ, ಶಿಲ್ಪ, ಕಲೆ, ವಾಣಿಜ್ಯ ವ್ಯವಹಾರ, ಸಂಸ್ಕ ತಿ ಪುರೋಭಿವೃದ್ಧಿಗೆ ನೀಡಿದ ಕೊಡುಗೆ ದೊಡ್ಡದು. +ಮಹಿಳಾ ವಿಶ್ವವಿದ್ಯಾಲಯ ಆಗಬೇಕೆಂದು ನಿರಂತರವಾಗಿ ೧೯೯೩ರಿಂದ ಒಕ್ಕೊರಲಿಂದ ಸಾರುತ್ತ ಬಂದಿದ್ದೆ. ನೂರಾರು ವೇದಿಕೆಗಳಿಂದ ಹಕ್ಕೊತ್ತಾಯ ಮಾಡುತ್ತ ಸರಕಾರದ ಮೇಲೆ ಒತ್ತಡ ಏರಿದ್ದಲ್ಲದೆ ಸಾರ್ವಜನಿಕ ಅಭಿಪ್ರಾಯವನ್ನೂ ರೂಪಿಸಿದೆ. ನಮ್ಮ ಘನ ಸರಕಾರ ಈ ವರ್ಷದಿಂದ ಮಹಿಳಾ ವಿಶ್ವವಿದ್ಯಾಲಯವನ್ನು ಆರಂಭಿಸಿದೆ. ಇದಕ್ಕಾಗಿ ಸರಕಾರವನ್ನು ಅಭಿನಂದಿಸಲು ಹರ್ಷಿಸುತ್ತೇನೆ. +ಜನಭಾಷೆಯಾದ ಕನ್ನಡವನ್ನು ಮಹಾಕಾವ್ಯದ ಭಾಷೆಯನ್ನಾಗಿಸಿದ ಆದಿಕವಿ ಪಂಪನ ೧೧೦೦ನೆಯ ಹುಟ್ಟುಹಬ್ಬವನ್ನು ನಾಡಹಬ್ಬವನ್ನಾಗಿ ಆಚರಿಸಲು ಜನತೆಗೂ ಸರಕಾರಕ್ಕೂ ಕರೆ ಕೊಟ್ಟಿದ್ದು ಬಹುವಾಗಿ ಈಡೇರಿದೆ. ಸಾಹಿತ್ಯ ಪರಿಷತ್ತಿನ ವತಿಯಿಂದ ಹಲವಾರು ಕಾರ್ಯಕ್ರಮ ಗಳಾದುವು. ಸಾರ್ವಜನಿಕ ಸಂಘ ಸಂಸ್ಥೆಗಳೂ ಶಾಲಾ ಕಾಲೇಜುಗಳೂ ವಿಶ್ವವಿದ್ಯಾನಿಲಯಗಳೂ ಪಂಪನ ಕಾವ್ಯಗಳ ಚಿಂತನ ಮಂಥನ ನಡೆಸಿವೆ. ನನಗೆ ತಿಳಿದಂತೆ ೯೦ ಕಾರ್ಯಕ್ರಮಗಳಾಗಿವೆ. ಪ್ರತಿವರ್ಷ ಪಂಪ ಪ್ರಶಸ್ತಿಯನ್ನು ಸಹ ಸರಕಾರ ನೀಡುತ್ತ ಬಂದಿದೆ. +ಕನ್ನಡ ಸಂಸ್ಕ ತಿ ಇಲಾಖೆ ಈ ವಿಚಾರದಲ್ಲಿ ಆದ್ಯತೆ ಮೇರೆಗೆ ಕಾರ್‍ಯಪ್ರವೃತ್ತವಾಗಲು ತಕ್ಷಣ ನಾನುಕೊಟ್ಟ ಮನವಿ ಪತ್ರದ ಮೇಲೇ ಸೂಚನೆಯಿತ್ತು ಚಾಲನೆ ನೀಡಿದ ಮುಖ್ಯಮಂತ್ರಿ ಯವರಿಗೆ ಈ ವೇದಿಕೆಯಿಂದ ವಂದನೆ ಹೇಳುತ್ತೇನೆ. ಅಲ್ಲದೆ ಅವರು ಈ ಸಂಬಂಧವಾಗಿ ತುರ್ತಾಗಿ ಮಾಡಲೇಬೇಕಾದ ಇನ್ನೊಂದು ಕಾರ್ಯಕ್ರಮಕ್ಕೂ ಮುಂದಾಗಬೇಕೆಂದು ಪ್ರಾರ್ಥಿಸುತ್ತೇನೆ. ನಾನು ಮಾಡಿದ ಮನವಿ ಹಾಗೂ ಮಂಡಿಸಿದ ಸೂಚನೆಗಳಲ್ಲಿ ಶಿಖರ ಪ್ರಾಯವಾದುವು ಎರಡು: +ಕರ್ನಾಟಕಾಂಧ್ರ ಸರಕಾರಗಳು ಸಂಯುಕ್ತವಾಗಿ ಸಹಯೋಗದಿಂದ ಆಂಧ್ರದ ಕರೀಂನಗರ ಜಿಲ್ಲೆಯ ಗಂಗಾಧರಂ ತಾಲೂಕಿನ ಕುರ್ಕ್ಯಾಲ ಗ್ರಾಮದ ಹತ್ತಿರವಿರುವ ಜಿನವಲ್ಲಭನ ಶಾಸನ ಇರುವ ಮಹತ್ವದ ಗುಡ್ಡವನ್ನು ರಾಷ್ಟ್ರೀಯ ಸ್ಮಾರಕವಾಗಿ ಕಾಪಾಡುವುದು ಜರೂರು ಆಗಬೇಕು. ಅದನ್ನು ಸಾಹಿತ್ಯ, ಸಂಸ್ಕ ತಿ ಮಹತ್ವದ ಪ್ರವಾಸಿ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಬೇಕು. ಮೂಲನಿಧಿಯಾದ ಶಿಲ್ಪ ಹಾಗೂ ಶಾಸನಕ್ಕೆ ಧಕ್ಕೆ ಆಗದಂತೆ ಆ ಬೆಟ್ಟವನ್ನು ಹತ್ತಲೂ ಇಳಿಯಲೂ ಮೆಟ್ಟಿಲನ್ನು ಮಾಡಿಸಬೇಕು, ಎರಡೂ ರಾಜ್ಯದ ಮುಖ್ಯಮಂತ್ರಿಗಳೊಮ್ಮೆ ಅಲ್ಲಿಗೆ ಸಂಸ್ಕ ತಿ ಸೌಹಾರ್ದವರ್ಧನ ಯಾತ್ರೆ ಮಾಡುವುದು ಅಗತ್ಯ. ತೆಲುಗು ಭಾಷೆಯ ಪ್ರಥಮ ಹಾಗೂ ಪ್ರಾಚೀನ ಪದ್ಯಗಳನ್ನು ಅಲ್ಲಿ ಪಂಪನ ತಮ್ಮ ಜಿನವಲ್ಲಭ ಕ್ರಿ.ಶ. ೯೫೦ರಲ್ಲಿ ಬರೆದಿದ್ದಾನೆ. ಸಂಸ್ಕ ತ – ತೆಲುಗು- ಕನ್ನಡ ಮೂರು ಭಾಷೆಗಳಲ್ಲಿ ಆ ಶಾಸನವಿದೆ. ತೆಲುಗು ಭಾಷೆಯ ಆದಿಕವಿ ಜಿನವಲ್ಲಭನ ಹಾಗೂ ಕನ್ನಡದ ಆದಿಕವಿ ಪಂಪನ ನೆನಪನ್ನು ಹೊತ್ತು ಎತ್ತರದಲ್ಲಿ ನಿಂತಿರುವ ಈ ಭವ್ಯ ಸ್ಮಾರಕದ ಮಹತ್ವವನ್ನು ನಾನಿಲ್ಲಿ ಮತ್ತೆ ಉತ್ಪ್ರೇಕ್ಷಿಸಬೇಕಾದ ಅಗತ್ಯವಿಲ್ಲ. ಉಭಯ ಸರಕಾರಗಳಿಗೆ ಕೀರ್ತಿ ತರುವ ಈ ಕೆಲಸವನ್ನು ಅವಶ್ಯ ಮಾಡಬೇಕಾದ ಕರ್ತವ್ಯವೆಂದು ಪರಿಗಣಿಸಬೇಕು. +ಪಂಪ ಕರ್ನಾಟಕಾಂಧ್ರವಲ್ಲದೆ ಇಡೀ ಭಾರತದ ರಾಷ್ಟ್ರಕವಿ. ಆತನ ಕಾವ್ಯಗಳ ಸಾಹಿತ್ಯಕ ಹಾಗೂ ಸಾಂಸ್ಕ ತಿಕ ಅಭಿವ್ಯಾಪಕ ಆಯಾಮವನ್ನು ಭಾರತಕ್ಕೆ ಬಿತ್ತರಿಸುವ ರೀತಿಯಲ್ಲಿ ದೆಹಲಿಯಲ್ಲಿ ಇಂಗ್ಲಿಷಿನಲ್ಲಿ ಮೂರು ದಿವಸಗಳ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಸಂಯೋಜಿಸಬೇಕೆಂದು ಸರಕಾರಕ್ಕೆ ಒಪ್ಪಿಸಿದ್ದ ಹಾಗೂ ಮುಖ್ಯಮಂತ್ರಿ ಶ್ರೀ ಎಸ್. ಎಂ. ಕೃಷ್ಣ ಅವರ ಸಹಿಯೊಂದಿಗೆ ಸಂಸ್ಕ ತಿ ಇಲಾಖೆಗೆ ರವಾನೆಯಾದ ಪತ್ರದಲ್ಲಿ ನಮೂದಿಸಿದ್ದೆ. ಅದು ಇನ್ನೂ ಕಾರ್ಯಗತ ಆಗಿಲ್ಲ. ಮಾನ್ಯ ಮುಖ್ಯಮಂತ್ರಿಗಳು ಕೃಪೆಯಿಟ್ಟು ಈ ವಿಚಾರದಲ್ಲಿ ಸೂಕ್ತ ಆದೇಶವನ್ನು ಕೊಡಬೇಕೆಂದು ಪ್ರಾರ್ಥಿಸುತ್ತೇನೆ. ಕನ್ನಡವನ್ನೂ ಕರ್ನಾಟಕವನ್ನೂ ತನ್ನೆಲ್ಲ ರಾಜಕೀಯ ವೈಭವದೊಂದಿಗೆ ಪ್ರತಿಷ್ಠಾಪಿಸಿದ ಪಂಪನ ಪ್ರಯತ್ನ ಅನನ್ಯವಾದದ್ದು. ಪಂಪನ ಹೆಸರು ಹೇಳಿದರೆ, ಅವನ ಕಾವ್ಯ ಓದಿದರೆ ಮಿಂಚಿನ ಸಂಚಾರವಾಗುತ್ತದೆ, ಸಾಹಿತಿಗಳಿಗೆ ಸ್ಫೂರ್ತಿಯ ಸೆಲೆ ಚಿಮ್ಮುತ್ತದೆ. ಭಾರತೀಯ ಭಾಷೆಗಳಲ್ಲಿಯೇ ವ್ಯಾಸಭಾರತವನ್ನು ಸಂಸ್ಕ ತದಿಂದ ಜನಭಾಷೆಗೆ ಜಗ್ಗಿ ಇಳಿಸಿದವನು ಕನ್ನಡದ ಪಂಪನೇ ಮೊತ್ತಮೊದಲಿಗನೆಂಬುದನ್ನು ನೆನೆದಾಗ ಈಗಲೂ ಮೈ ನವಿರೇಳುತ್ತದೆ. ಅದರಿಂದ ಕನ್ನಡದ ಏಳಿಗೆಗೆ, ಕನ್ನಡದ ಮಹತ್ವವನ್ನು ಅನ್ಯಭಾಷಾ ಸಾಹಿತ್ಯ ವಲಯದಲ್ಲಿ ನಿಲ್ಲಿಸುವುದಕ್ಕೆ ಈ ರಾಷ್ಟ್ರೀಯ ವಿಚಾರ ಸಂಕಿರಣ ಅಧಿಷ್ಠಾನವಾಗುತ್ತದೆ. +ತಂತ್ರಜ್ಞಾನ : ಸವಾಲು, ಜವಾಬು +ನಮ್ಮ ಕಾಲದ ಸಾಧನೆಗಳ ಬೃಹತ್ತು ಮಹತ್ತು ಅಸೀಮವಾದುದು ದೀರ್ಘಕಾಲ ದೊಡ್ಡಬಾಳು ಬದುಕಿದ ಬಹುದೊಡ್ಡ ಲೇಖಕರು ಆಗಿಹೋದ ಶತಮಾನ. ಸಂಪರ್ಕ ಸುಲಭವಾಗಿದೆ, ಸಂವಹನ ಸೌಕರ್ಯ ಹೆಚ್ಚಿದೆ. ಇಂದು ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಮನುಷ್ಯ ಲೋಕವನ್ನು ತಬ್ಬಿದೆ. ಈ ವಿದ್ಯುನ್ಮಾನ – ಟೆಕ್ನಾಲಜಿಯೆಂಬ ಬಾಹುಬಂಧನ ಧೃತರಾಷ್ಟ್ರ ಆಲಿಂಗನ ಆಗದಂತೆ ಎಚ್ಚರ ಇರಬೇಕು. ಹೈಟೆಕ್ ನಮಗೆ ಶಾಪವಾಗದೆ ವರವಾಗಿ ಬರಬೇಕು. ಯಾವುದೇ ಆವಿಷ್ಕಾರ ಮನುಷ್ಯ ಸಂಬಂಧವನ್ನು ಹಾಗೂ ಪುಸ್ತಕ ಸಂಸ್ಕ ತಿಯನ್ನು ಅಳಿಸಿ ಹಾಕಲು ಬಿಡಬಾರದು. ಕನ್ನಡ ಭಾಷೆ ಹಾಗೂ ಲಿಪಿಯ ನಾಶ ಆಗಬಾರದು. ಬಹುರಾಷ್ಟ್ರೀಯ ಕಂಪನಿಗಳು ಭಾರತೀಯ ಮಾರುಕಟ್ಟೆಯನ್ನು ಮೆಲ್ಲಗೆ ನುಸುಳುತ್ತಿವೆ. ಇದು ಬಿಡಾರದೊಳಗೆ ಒಂಟೆ ತಲೆಹಾಕಿದಂತೆ ಆಗಬಾರದು. ಮೆಟ್ರೊ ಬೃಹತ್ ಮಳಿಗೆ ಬೆಂಗಳೂರಲ್ಲಿ ಕಾಲೂರಿದೆ. ಇದು ಕೊಳ್ಳುಬಾಕತನದ ಚಟ ಹುಟ್ಟಿಸಿ ಆಮೇಲೆ ನಮ್ಮನ್ನು ಗುಲಾಮರನ್ನಾಗಿಸುವ ವಿದೇಶಿ ಹುನ್ನಾರ. ಪರ್‍ಯಾಯವಾಗಿ ಕನ್ನಡ ಸಂಸ್ಕ ತಿಯ ಮೇಲೆ ನಡೆಯುವ ಹಲ್ಲೆ. +ಆಧುನೀಕರಣ, ಜಾಗತೀಕರಣ ಎಂಬುವು ಕನ್ನಡದ ಕುತ್ತಿಗೆ ಅದುಮಿ ಉಸಿರಾಟವನ್ನು ನಿಲ್ಲಿಸುವ ದಿಕ್ಕಿನಲ್ಲಿ ಹಬ್ಬಲು ಬಿಡಬಾರದು. ಕನ್ನಡ ರಾಷ್ಟ್ರೀಯತೆಯ ಗಟ್ಟಿ ಬುಡ ಬೇರುಗಳನ್ನು ಸಡಿಲಿಸಲು ತೊಡಗಿದರೆ ಒಡನೆಯೇ ಸಾಹಿತಿಗಳೂ ಕಲಾವಿದರೂ ತಮ್ಮ ಲೇಖನಿ ಕುಂಚಗಳನ್ನು ಖಡ್ಗವಾಗಿಸಿ ಝಳಪಿಸಲು ಸಿದ್ಧವಾಗಿರಬೇಕು. ಪ್ರಸ್ತುತಕ್ಕೆ ಬೇಕಾದ ಪ್ರಖರ ಸಾಹಿತ್ಯ ಪಥ ನಿರ್ಮಾಣವಾಗಿ ಹೊಸಪಂಥ ಹುಟ್ಟಿ ಸಮಾಜಮುಖಿ ನೆಲೆಗಳತ್ತ ಹುರಿಗೊಳ್ಳಲಿ. ತುಂಬ ಉಮೇದಿನಿಂದ ಭೋರ್ಗರೆದು ವೇಗವಾಗಿ ಹೊರಟಿರುವ ಮಾಹಿತಿ ತಂತ್ರಜ್ಞಾನದ ಓಘದಲ್ಲಿ ಕನ್ನಡದ ತಂತ್ರಾಂಶ ಸೊರಗದಂತೆ ವರ್ತಿಸೋಣ. ಕಂಪ್ಯೂಟರ್ ವಿದ್ಯುನ್ಮಾನದತ್ತವಾದ ಈ ಟಿ.ವಿ., ವಿಡಿಯೊ ಆಟಗಳು ಕನ್ನಡ ಭಾಷೆಗೆ ಮಾರಕವೊ ಪೂರಕವೊ ಎಂಬ ವಾಗ್ವಾದ ನಡೆದಿದೆ. ದೂರದರ್ಶನದ ಮುಂದೆ ಮುಂಜಾವಿನಿಂದ ಸಂಜೆಯತನಕ ಅಂಟಿಕೊಂಡ ಕಣ್ಣನ್ನು ಬೇರೆ ಕಡೆ ಹೊರಳಿಸದ ಆಬಾಲವೃದ್ದರು ಕೋಟಿಗಟ್ಟಲೆ ಇದ್ದಾರೆಂದು ಸಮೀಕ್ಷೆಗಳು ವರದಿಮಾಡಿವೆ. ಧಾರಾವಾಹಿಗಳಿಗೆ ತನ್ನನ್ನು ತೆತ್ತುಕೊಂಡ ಬುದ್ಧಿ ಭಾವಗಳಿಗೆ ಅವುಗಳ ಪ್ರಸಾರ ವೇಳೆಯಲ್ಲಿ ಎಂಥ ಹತ್ತಿರದ, ಆಪ್ತ ನೆಂಟರಿಷ್ಟರು ಬಂದರೂ ‘ಈ ಶನಿಗಳು ಯಾಕೆ ವಕ್ರಿಸಿದರೊ’ ಎಂದು ಗೊಣಗುವರು ಇದ್ದಾರೆ. ಕ್ಯಾಸೆಟ್ಟುಗಳೂ ಸಿಡಿಗಳೂ ಸುಲಭವಾಗಿ ಸಿಗುತ್ತವೆ. ಇವುಗಳೊಂದಿಗೆ ಟಿವಿ ಮುಂದೆ ಕುಳಿತರೆ ಅದೇ ಜಗತ್ತು. ಹೊರಗೆ ಬಾಂಬು ಹಾಕಿದರೂ ಅಲ್ಲಾಡರು. +ಹಳೆಯದೆಲ್ಲ ಹೊನ್ನಲ್ಲ ಎಂದು ಅಲ್ಲಗಳೆಯುವ, ಹಳತೆಲ್ಲ ಹಳಸಲಲ್ಲ ಎಂದು ಮೆಚ್ಚುವ ಎರಡು ತುದಿಗಳಿರುತ್ತವೆ. ಈ ತುದಿಗಳ ಸಮನ್ವಯದೊಂದಿಗೆ ವೈಚಾರಿಕ, ವೈಜ್ಞಾನಿಕ ಚಿಂತನ ಮಂಥನ ಜಗತ್ತಿನಲ್ಲಿ ವಿಪುಲವಾಗಿ ನಡೆದಿವೆ. ಪರಿಣಾಮವಾಗಿ ನಾನಾ ಜ್ಞಾನ ಕ್ಷೇತ್ರಗಳಲ್ಲಿ ವಿನೂತನ ಜಾಗತಿಕ ಪರಿಕಲ್ಪನೆಗಳು ಚಿಗುರಿವೆ. ಜಾಗತಿಕ ಚಿಂತನೆಗಳು ದೇಶೀಯ ಹಾಗೂ ಸ್ಥಳೀಯ ಕ್ರಿಯೆಗಳ ಹಾಸಿನಲ್ಲಿ ಹೆಣೆದುಕೊಳ್ಳಬೇಕು. +ತಂತ್ರಜ್ಞಾನದ ಅನನ್ಯ ಚೈತನ್ಯವನ್ನು ಅಲಕ್ಷಿಸುವಂತಿಲ್ಲ. ತಂತ್ರಜ್ಞಾನ ಹೊಸಕಾಲದ ಅನಿವಾರ್ಯತೆ. ಹೊಸಕಾಲವನ್ನು ಹೊಸ ತಂತ್ರಜ್ಞಾನದ ಮೂಲಕವೇ ಪಳಗಿಸಿ, ದುಡಿಸಿ ನಾಡು ಅಭಿವೃದ್ಧಿ ಹೊಂದಬೇಕು. ನಾವು ವಿiನುಗಳಂತೆ ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ಈಜುವುದು ಸಾಧ್ಯವಿಲ್ಲ. +ವಿಜ್ಞಾನವೇ ಸರ್ವಜ್ಞ ಅಥವಾ ಸರ್ವಸ್ವ ಅಲ್ಲ. ಅದರ ಗ್ರಹಿಕೆಗೂ ಮೀರಿದ ಸಂಗತಿಗಳು, ಸಂಬಂಧಗಳು ಸೃಷ್ಟಿಯಲ್ಲಿವೆ. ಅಕ್ಷರ ಜ್ಞಾನದ ಆಚೆಗೂ ಚಾಚಿರುವ ಅದ್ಭುತಗಳಿವೆ. ವಿದ್ಯಾವಂತರೆಲ್ಲ ವಿಚಾರವಂತರಲ್ಲ. ಅವಿದ್ಯಾವಂತರೆಲ್ಲ ಅಜ್ಞಾನಿಗಳಲ್ಲ. ಅವಿದ್ಯಾವಂತ ಜ್ಞಾನಿಗಳೂ ಅಶಿಕ್ಷಿತರ ಸಂಸ್ಕ ತಿಯೂ ಉಪಾದೇಯವೇ. +ಆಧುನೀಕರಣ ಎಂದೂ ಉದಾರೀಕರಣ, ಕೈಗಾರಿಕೀಕರಣ, ಜಾಗತೀಕರಣ, ಖಾಸಗೀಕರಣ, ನಗರೀಕರಣ ಎಂದೂ ಹೊಸ ಪಂಚಕರಣಗಳು ಮೊಳಗುತ್ತಿವೆ. ಇವುಗಳಿಗೆ ನಾವು ಸ್ಪಂದಿಸದಿರುವುದು ಸಾಧ್ಯವಿಲ್ಲ. ಹೊಸದನ್ನು ಬರಮಾಡಿಕೊಳ್ಳಲು ಅನುಮಾನಗಳೂ ಆತಂಕಗಳೂ ಇರುವುದು ಸಹಜ. ಒಂದು ವ್ಯವಸ್ಥೆಗೆ, ಜೀವನ ಶೈಲಿಗೆ, ಚಿಂತನಾಕ್ರಮಕ್ಕೆ ಒಗ್ಗಿದ ನಮ್ಮ ಬುದ್ಧಿ ಭಾವಗಳು ಬದಲಾವಣೆಗೆ ತಯಾರಾಗದೆ ತಕರಾರು ಮಾಡುತ್ತವೆ. +ಜಾಗತೀಕರಣ ತಂತ್ರಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನದಿಂದ ಎಲ್ಲ ಸಮಸ್ಯೆಗಳೂ ಕರಗಿ ಹೋಗಿ ಬಾಳು ಒಮ್ಮೆಲೇ ಸುಗಮಗೊಳ್ಳತ್ತದೆಂಬುದು ಭ್ರಮೆಯೆನಿಸಿದರೂ ಅದು ಬೊಗಳೆಯಲ್ಲ. ಜಾಗತೀಕರಣದ ದೂರಗಾಮಿ ಪರಿಣಾಮಗಳ ವಿಚಾರದಲ್ಲಿ ಗುಮಾನಿಗಳಿವೆ, ನಿಜ. ಹಾಗೆಂದು ಅದರ ಸಾಧಕ ಬಾಧಕಗಳನ್ನು ಈಗಲೇ ದಿಢೀರನೆ ತೀರ್ಪು ಕೊಡುವುದು ಬೇಡ. ಜ್ಞಾನಪಥ ಚಲನಶೀಲವಾಗಿರುತ್ತದೆ. ಹೊಸ ವಿಚಾರಗಳ ಬೀಜ ಚೆಲ್ಲುತ್ತ ಶಿಲಾಯುಗದಿಂದ ಮನುಷ್ಯ ಬಹಳ ದೂರ ಬಂದಿದ್ದಾನೆ. ತನ್ನ ಅರಿವನ್ನು ಸಮಾಜದ ಮೇಲ್ಮೆಗೆ ಬಳಸಿದಾಗ ಮೇಲೇರಿದ್ದಾನೆ, ಅಪಮಾರ್ಗದ ವಿನಾಶಕ್ಕೆ ಉಪಯೋಗಿಸಿದಾಗ ನೆಲಕಚ್ಚಿದ್ದಾನೆ. ಶ್ರೇಷ್ಠ ಮೌಲ್ಯಗಳ ಸದಭಿರುಚಿಯನ್ನು ಉಳಿಸುತ್ತ, ಸುಸಂಸ್ಕ ತ ಸಮಾಜದ ಹೃದಯದ ಬಡಿತ ನಿಲ್ಲದಂತೆ ಉಸಿರಾಡಿಸುವ ಚಿಂತಕರು ಎಲ್ಲ ದೇಶಗಳಲ್ಲೂ ಇದ್ದಾರೆ. ಕನ್ನಡ ಸಾಹಿತ್ಯದ ಸಂದರ್ಭದಲ್ಲೂ ಈ ಪರಂಪರೆಯಿದೆ. ಲೇಖಕರಿಗೆ ಬೇಕಾಗಿರುವುದು ಗನ್ ಅಲ್ಲ, ತ್ರಿಶೂಲ ಅಲ್ಲ, ಆಮಿಷಗಳಿಗೆ ಬಾಗದ ಪೆನ್ನು. ನಿಜದನಿಯ ಲೇಖನದ ಮೊನಚಿಗೆ ಹರಿಹರರೂ ಅಂಜುವರು. ನಮ್ಮ ಲೇಖಣಿಯ ಹರಿತವನ್ನು ಹೈಟೆಕ್ ವಿದ್ಯುನ್ಮಾನ ಮೊಂಡು ಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಅಂತಿಮವಾಗಿ ಲೇಖಕರದು. +ಜಾಗತಿಕ ಪ್ರeಗೆ ಸಮಾನಾಂತರವಾಗಿ ಕನ್ನಡ ತನ್ನ ಧಾರಣಶಕ್ತಿಗೆ ಸಜ್ಜಾಗದೆ ಗತ್ಯಂತರವಿಲ್ಲ. “ಇದು ವೈಜ್ಞಾನಿಕ ಯುಗ, ಹೈಟೆಕ್ ಕಾಲ. ಕೈಗಾರಿಕಾದಿ ಉದ್ಯಮಗಳಿಗೆ, ಗಣಕಯಂತ್ರಗಳಿಗೆ, ತಂತ್ರಾಂಶಗಳಿಗೆ, ಕಂಪ್ಯೂಟರಿಗೆ ಆದ್ಯತೆ. ಅದರಿಂದ ಸಾಹಿತ್ಯದ ಅಗತ್ಯ ಇದೆಯೆ” – ಎಂಬ ಪ್ರಶ್ನೆ ಎದ್ದಿದೆ. ಯಾವ ಯುಗದಲ್ಲೂ ಸಾಹಿತ್ಯವನ್ನು ಗೌಣವೆಂದು ಗುಡಿಸಿ ಹಾಕುವಂತಿಲ್ಲ. ಸಾಹಿತ್ಯ ಶಾಸ್ತ್ರವೂ ಹೌದು, ವಿಜ್ಞಾನವೂ ಹೌದು, ಮನೋವಿಜ್ಞಾನವೂ ಹೌದು. ವಿಜ್ಞಾನ, ತಂತ್ರಜ್ಞಾನ ಹಾಗೂ ಸಮಸ್ತ ಜ್ಞಾನಗಳ ಕಲಿಕೆಗೆ ಕನ್ನಡ ಸಶಕ್ತವಾಗಿದೆಯೆಂದು ಜಗತ್ತಿಗೆ ತೋರಿಸಲು ವಿಜ್ಞಾನಿಗಳು ಕನ್ನಡವನ್ನು ಬಳಸಬೇಕು. +ಇಂಥ ಆತ್ಮಪ್ರತ್ಯಯ ಮೂಡಲು ಕನ್ನಡ ನಡೆದು ಬಂದ ದಾರಿಯನ್ನೊಮ್ಮೆ ಹಿಂತಿರುಗಿ ನೋಡಬೇಕು. ಇಡೀ ದಕ್ಷಿಣ ಏಷಿಯಾರಾಷ್ಟ್ರಗಳ ಪ್ರಭುತ್ವದ ಭಾಷೆಯಾಗಿ ರಾಜರ ಒಡ್ಡೋಲಗಗಳಲ್ಲಿ ಸಂಸ್ಕ ತ ಪ್ರತಿಷ್ಠಿತವಾಗಿದ್ದ ಕಾಲಘಟ್ಟದಲ್ಲಿ ಶ್ರೀ ವಿಜಯ (೮೫೦), ಆದಿ ಗುಣವರ್ಮ (೯೦೦), ಪಂಪ (೯೪೧) ಪೊನ್ನ (೯೯೫), ರನ್ನ (೯೯೩) ಮೊದಲಾದವರು ಪುಟ್ಟ ಪ್ರದೇಶದ ಜನಭಾಷೆಯಾದ ಕನ್ನಡವನ್ನು ರಾಜಮನ್ನಣೆಯ ಆಸ್ಥಾನ ಭಾಷೆಯಾಗಿಸಿ, ಮಹಾಕಾವ್ಯಗಳ ಭಾಷೆಯಾಗಿಸಿ ಕೀಳರಿಮೆಯ ಬೇರುಗಳನ್ನು ಕತ್ತರಿಸಿದರು, ಕನ್ನಡದ ಸೃಷ್ಟಿ ಶಕ್ತಿಯನ್ನು ಎತ್ತರಿಸಿದರು. ಅದೇ ರೀತಿ ಇಂದು ಶ್ರೇಷ್ಠ ವಿಜ್ಞಾನಿಗಳು ಕನ್ನಡದಲ್ಲಿ ಸ್ವತಂತ್ರ, ಸ್ವೋಪಜ್ಞ, ಅನ್ಯಾವಲಂಬಿಯಲ್ಲದ, ಅನುಕರಣವಲ್ಲದ ಅಸಲು ಕೃತಿಗಳಿಗೆ ಜನ್ಮದಾತರಾಗಬೇಕು. ವಿನೂತನ ವೈಜ್ಞಾನಿಕ ಆವಿಷ್ಕಾರಗಳು ಹೀಗೆ ಕನ್ನಡದಲ್ಲಿಯೇ ಉದ್ಭವಿಸಿದರೆ ಆಗ ಕನ್ನಡ ಮಾತೃಕೆಯಾಗುತ್ತದೆ. ಜೊತೆಗೆ ವಿಜ್ಞಾನವನ್ನು ಕನ್ನಡದಲ್ಲಿ ಮನಮುಟ್ಟುವಂತೆ ಹೇಳಲು ಸಾಧ್ಯವಾದಾಗ ಸಹಜವಾಗಿ ಕನ್ನಡ ಮಾಧ್ಯಮಕ್ಕೆ ಶಕ್ತಿ ಬರುತ್ತದೆಯಲ್ಲದೆ ಕನ್ನಡ ಕಲಿಯುವರಿಗೂ ಕಲಿಸುವವರಿಗೂ ವಿಶ್ವಾಸದೊಂದಿಗೆ ಉತ್ಸಾಹ ಗರಿಗೆದರುತ್ತದೆ. +ತಂತ್ರಜ್ಞಾನದ ನಿರಾಕರಣೆ ಸಲ್ಲದು. ಕನ್ನಡ ಜಗತ್ತಿಗೆ ತಂತ್ರಜ್ಞಾನದ ಪ್ರವೇಶ ಸ್ವಾಗತಾರ್ಹ. ಎರಡು ದಶಕಗಳಿಂದಲೂ ಈ ನಿಟ್ಟಿನಲ್ಲಿ ಕೆಲಸ ನಡೆಯುತ್ತಿರುವುದು ಸಂತಸದಾಯಕ ಸಂಗತಿ. ತಂತ್ರಜ್ಞಾನವನ್ನು ಒಂದು ಭಾಷೆಗೆ ತರುವಾಗ ತಂತ್ರಜ್ಞಾನದ ಸಲಕರಣೆಗಳ (ಟೆಕ್ನಾಲಜಿ ಟೂಲ್ಸ್) ನಿರ್ಮಾಣ ಆಯಾ ಭಾಷೆಯ ಜಾಯಮಾನ ಮತ್ತು ಸಾಂಸ್ಕ ತಿಕ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನಿರ್ಮಿಸಬೇಕು. ಜೊತೆಗೆ ತಂತ್ರಜ್ಞಾನವೆಂದಾಕ್ಷಣ ಕನ್ನಡತನವನ್ನು ಕ್ಲಿಷ್ಟಗೊಳಿಸಲಾಗಲಿ ನಷ್ಟಗೊಳಿಸಲಾಗಲಿ ಸಂಯೋಜಿಸಲಾಗುತ್ತಿಲ್ಲ ಎಂಬ ಅಂಶ ಆದರ್ಶವಾಗಿರಬೇಕು. ಕನ್ನಡಕ್ಕೆ ಮಾರಕವಾಗದೆ ಪೂರಕವಾಗಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುವಾಗ ಗಮನಿಸಬಹುದಾದ ಕೆಲವು ಸಂಕೀರ್ಣ ಸಂಗತಿಗಳನ್ನು ಸಂಗ್ರಹವಾಗಿ ಪ್ರಸ್ತಾಪಿಸುತ್ತೇನೆ. +೧. ಒಸಿ‌ಆರ್ (uಇ = umಠಿಜ್ಚಿZ eZZಠಿಛ್ಟಿ ಛ್ಚಿಟಜ್ಞಜಿಠಿಜಿಟ್ಞ), ಅಂದರೆ ‘ಚಾಕ್ಷುಷ ಅಕ್ಷರ ಗುರುತಿಸುವಿಕೆ’ ಎಂಬ ತಂತ್ರಾಂಶದ ನಿರ್ಮಾಣ ಕನ್ನಡಕ್ಕೆ ಅತ್ಯವಶ್ಯಕವಾದದ್ದು. ಈ ತಂತ್ರಾಂಶದಿಂದ ನೂರಾರು ವರ್ಷಗಳ ಹಳೆಯ ಪ್ರತಿಯ ಮರು ಮುದ್ರಣ ಸುಲಭ ಸಾಧ್ಯವಾಗುತ್ತದೆ. ಆದರೆ ಹಳೆಯ ಓಲೆಗರಿ ಪ್ರತಿಗಳನ್ನು ‘ಸ್ಕಾ ನ್’ ಮಾಡಿ ಯಥಾವತ್ತಾಗಿ ಅದನ್ನು ಕಂಪ್ಯೂಟರ್ ಮುಖಾಂತರ ಸಂರಕ್ಷಿಸಬೇಕೇ ಹೊರತು ಮೂಲಪ್ರತಿಯನ್ನೇ ತಿದ್ದುವ ಪರಿಪಾಠವನ್ನು ಪ್ರಾರಂಭಿಸಬಾರದು. ಅಂದರೆ ಒಸಿ‌ಆರ್ (uಇ) ಅನ್ನು ಸಾಧಕವನ್ನಾಗಿ ಉಪಯೋಗಿಸಿಕೊಳ್ಳಬೇಕೇ ವಿನಾ ಬಾಧಕವಾಗಿ ಅಲ್ಲ. +೨. ಪಠ್ಯದಿಂದ ವಾಕ್ (ಠಿಛ್ಡಿಠಿ ಠಿಟ omಛಿಛ್ಚಿe=SSಖ) ಮತ್ತು ವಾಕ್‌ನಿಂದ ಪಠ್ಯ (omಛಿಛ್ಚಿe ಠಿಟ ಠಿಛ್ಡಿಠಿ = ಖSS) ಎಂಬ ತಂತ್ರಾಂಶ ನಿರ್ಮಾಣದಲ್ಲಿ ಕನ್ನಡ ಭಾಷೆಯ ವಾಕ್ಯ ವಿಜ್ಞಾನ (ಖqsಠಿZ) ಮತ್ತು ಶಬ್ದಾರ್ಥ ವಿಜ್ಞಾನಕ್ಕೆ (ಖಛಿಞZಠಿಜ್ಚಿo) ಲೋಪ ಬರದಂತೆ ಕಾರ್ಯನಿರ್ಮಾಣ ಸಮರ್ಪಕ ರೀತಿಯಲ್ಲಿ ಸಂಯೋಜಿತವಾಗಬೇಕು. +೩. ಸ್ವಯಂ ವಾಕ್ ಜ್ಞಾನ (ZಠಿಟಞZಠಿಜ್ಚಿ omಛಿಛ್ಚಿe ಛ್ಚಿಟಜ್ಞಜಿಠಿಜಿಟ್ಞ = ಅಖ್ಟ) ತಂತ್ರಾಂಶ ನಿರ್ಮಾಣದಲ್ಲಿಯೂ ಕನ್ನಡ ಭಾಷಾ ಪ್ರಯೋಗದೊಂದಿಗೆ ಕನ್ನಡ ಉಪಭಾಷೆಗಳ ಪ್ರಯೋಗವನ್ನೂ ಗಮನದಲ್ಲಿ ಇರಿಸಿಕೊಂಡು ಕೆಲಸ ಮಾಡಬೇಕಾದ ಜವಾಬ್ದಾರಿಯೂ ಇದೆ. +೪. ಯಂತ್ರ ಭಾಷಾಂತರವೂ ಸ್ವಾಗತಾರ್ಹವೇ ಆದರೂ ಇದು ‘ವಾಕ್’ನಿಂದ ‘ವಾಕ್’ಗೆ (omಛಿಛ್ಚಿe ಠಿಟ omಛಿಛ್ಚಿe) ರೂಪದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಯಂತ್ರಮುಖೇನ ಪ್ರವಹಣಗೊಳ್ಳುವುದರಿಂದ ಭಾಷೆಯ ಕಣ ಕಣವನ್ನೂ ಪರಿಗಣಿಸಿ ಭಾಷೆಗೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕಾಗುತ್ತದೆ. +೫. ಕನ್ನಡ ಭಾಷೆಗೊಂದು ಪ್ರತ್ಯೇಕ ವಿದ್ಯುನ್ಮಾನ ಅಂಚೆಯ (ಜ್ಚಿಟbಛಿ) ಉಪಯೋಗ ಲಭ್ಯವಾಗಬೇಕು. ಇದಕ್ಕಾಗಿ ವಿದ್ಯುನ್ಮಾನ ನಿಘಂಟುಗಳು ನಿರ್ಮಾಣವಾಗಬೇಕಲ್ಲದೆ ವಿದ್ಯುನ್ಮಾನ ಕೃತಿಗಳ ಅವತರಣಿಕೆಯೂ ಆಗಬೇಕು. ವಿದ್ಯುನ್ಮಾನ ನಿಘಂಟುಗಳ ಉಪಯುಕ್ತತೆ ವ್ಯಾಪಕವಾಗಿರಲು ಅವು ಏಕಭಾಷಾ ಆಗಿರದೆ ದ್ವಿಭಾಷಾ ತ್ರಿಭಾಷಾ ಬಹುಭಾಷಾ ನಿಘಂಟುಗಳಾಗಿರಬೇಕು. ಇಂಥ ವಿದ್ಯುನ್ಮಾನ ನಿಘಂಟುಗಳಂದ ಕನ್ನಡ ಭಾಷಾ ಸಾಹಿತ್ಯ ಕರ್ನಾಟಕ ದಾಟಿ ಹೊರನಾಡುಗಳಲ್ಲಿಯೂ ದಾಂಗುಡಿಯಿಡುತ್ತದೆ. ಇನ್ನು ಮುಂದೆ ಕರ್ನಾಟಕ ಪಸರಿಸುವ ಪರಿ ಇದಾದೀತು. +೬. ಈ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಕನ್ನಡ ವರ್ಣಮಾಲೆ ಕಳೆದುಹೋಗದಂತೆ ಹೆಚ್ಚಿನ ನಿಗಾ ವಹಿಸಬೇಕು. ಕನ್ನಡ ಅಕ್ಷರಗಳಿಗೆ ಧಕ್ಕೆ ಆಗದೆ ಯಥಾವತ್ತಾಗಿ ಉಳಿಯಬೇಕೆಂದು ಹೇಳುವಾಗ ಕೆಲವು ದ್ವಂದ್ವಗಳೂ ಎದುರಾಗಬಹುದು. ಉದಾಹರಣೆಗೆ ವಿi-ಮೀ, ಪು-ಪು, ಪೂ-ಪೂ, ಪೊ-ಪೊ ಎಂಬ ಎರಡೆರಡು ಸಮಾನ ರೂಪಗಳಲ್ಲಿ ಯಾವುದಾದರೂ ಒಂದನ್ನು ಒಪ್ಪಿಕೊಳ್ಳುವುದರಿಂದ ಸುಭಗತೆ, ಸರಳತೆ ಬರುತ್ತದೆ. ಹೊಸದಾಗಿ ಕಲಿಯುವವರಿಗೆ ಗೊಂದಲಗಳಿರುವುದಿಲ್ಲ. +ಇಂದು ಅನೇಕ ಜಾಲತಾಣಗಳು ಲಭ್ಯವಿವೆ. ಕಾಲದ, ಸ್ಥಳದ, ಪರಿಸರದ ನಿರ್ಬಂಧಗಳನ್ನು ಸೀಮೋಲ್ಲಂಘನ ಮಾಡಿ ಮಾಹಿತಿಯು ವಿಶ್ವಾದ್ಯಂತ ಲಭ್ಯವಾಗುತ್ತಿದೆ. ಇದು ಅಯಾಚಿತವಾಗಿ ಅವಲೀಲೆಯಿಂದ ದಕ್ಕುತ್ತಿರುವ ಕಾರಣಕ್ಕಾಗಿಯೂ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು (ಜ್ಞ್ಛಿಟ್ಟಞZಠಿಜಿಟ್ಞ ಠಿಛ್ಚಿeಟ್ಝಟಜqs ಠಿಟಟ್ಝo) ಅಳವಡಿಕೆಯಲ್ಲಿ ಅತ್ಯಂತ ಕಾಳಜಿ ವಹಿಸಬೇಕಾದ ಗುರುತರವಾದ ಹೊಣೆಯಿದೆ. +ಮುಖ್ಯವಾಗಿ ಭಾರತೀಯ ವಿಜ್ಞಾನ ಸಂಸ್ಥೆಯಂಥ ತಜ್ಞರು ಕನ್ನಡ ಭಾಷೆಗೆ ಮಾಹಿತಿ ತಂತ್ರಜ್ಞಾನ ಸಲಕರಣೆಗಳನ್ನು ನಿರ್ಮಿಸುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ. ಮಾಹಿತಿ ತಂತ್ರಜ್ಞಾನದ ಉಪಯೋಗ ಎಷ್ಟೆಂಬುದನ್ನು ಬಲ್ಲವರೆಲ್ಲ ಸ್ವಾಗತಿಸುತ್ತಾರೆ. ಒಂದೇ ಒಂದು ಅಯಸ್ಕಾಂತ ತಟ್ಟೆ (‘ಸಿಡಿ’)ಯಲ್ಲಿ ಸುಮಾರು ಐನೂರು ಪುಸ್ತಕಗಳನ್ನು ಅಳವಡಿಸಬಲ್ಲ ಸೌಕರ್ಯವಿದೆಯೆಂದ ಮೇಲೆ ಅದರ ಅನುಕೂಲ, ಮಿತವ್ಯಯಾಸಕ್ತಿ ದೊಡ್ಡ ಆಕರ್ಷಣೆಯಾಗಿದೆ. ಈ ಅನುಕೂಲ ನಾಳೆ ನಮ್ಮ ಮುದ್ರಣ ಕ್ಷೇತ್ರಕ್ಕೆ ಸವಾಲಾಗಿ ನಿಲ್ಲಲೂಬಹುದು. ಒಂದೊಂದು ಅಯಸ್ಕಾಂತ ತಟ್ಟೆ (‘ಸಿಡಿ’) ನೂರಾರು ಗ್ರಂಥಗೆಳನ್ನು ಹಿಡಿದುಕೊಡುವಾಗ ಇನ್ನು ಮುಂದೆ ಮುದ್ರಕರು, ಪ್ರಕಾಶಕರು, ವಿತರಕರು, ಲೇಖಕರು ಕಷ್ಟಗಳಿಗೆ ಸಿಕ್ಕಿ ಬೀಳಬಹುದಲ್ಲವೆ? – ಈ ನಿಟ್ಟಿನಲ್ಲಿಯೂ ನಾವು ಇಂದೇ ಮುನ್ನೆಚ್ಚರಿಕೆ ವಹಿಸಬೇಕಾದ ಜರೂರು ಬಂದಿದೆ. ಒಂದರಿಂದ ೨೫ರ ವರೆಗೆ ಮಗ್ಗಿ ಹೇಳುತ್ತ ಮಕ್ಕಳ ಜ್ಞಾಪಕ ಶಕ್ತಿಯನ್ನು ಹರಿತವಾಗಿಡಲು ಶಾಲೆಯಲ್ಲಿ ಶಿಕ್ಷಣ ಕೊಡುತ್ತಿದ್ದರು. ಕ್ಯಾಲಿಕ್ಯುಲೇಟರ್‌ನ ಬಹುಬಳಕೆಯಿಂದ ಆ ಪದ್ಧತಿಯಲ್ಲಿ ಆಸಕ್ತಿ ಬತ್ತಿ ಹೋಗಿದೆ. ಎರಡು ಎರಡು ಸೇರಿದರೆ ಎಷ್ಟು ಎಂಬುದಕ್ಕೂ ಕ್ಯಾಲಿಕ್ಯುಲೇಟರನ್ನು ಆಶ್ರಯಿಸುವಂತಾದರೆ ಬುದ್ಧಿಗೆ ತುಕ್ಕು ಹಿಡಿಯುತ್ತದೆ. ಈಗ ಕಂಪ್ಯೂಟರಿನ ಮೂಲಕ ಓದು, ಬರೆಹ, ಪತ್ರವ್ಯವಹಾರ ಜನಪ್ರಿಯವಾಗುತ್ತಿದೆ. ಇದರಿಂದ ಮುಂದೆ ಕೈಯಿಂದ ಅಕ್ಷರಗಳನ್ನು ಬರೆಯುವ ಪರಿಪಾಟಿಯೂ ತಪ್ಪಬಹುದು. ಇಂದು ಇರುವ ವಿದ್ಯಾವಂತರು ಮತ್ತು ಅವಿದ್ಯಾವಂತರು ಎಂಬೆರಡು ವರ್ಗಗಳಿಗೆ ಸಮಾನಾಂತರವಾಗಿ ಕಂಪ್ಯೂಟರ್ ಇರುವವರು ಮತ್ತು ಇಲ್ಲದವರ ನಡುವೆ ಬಿರುಕು ಮೂಡಿ ಎರಡು ವರ್ಗಗಳು ಏರ್ಪಡಬಹುದು. ಆದ್ದರಿಂದ ತಂತ್ರಜ್ಞಾನವೆಂಬುದು ಕೇವಲ ಮಾಹಿತಿಯನ್ನು ‘ಕೊಳ್ಳೋದು-ಮಾರೋದು’ ಎಂಬ ಯಾಂತ್ರಿಕ ವ್ಯವಹಾರ ಆಗದೆ ವಿದ್ಯೆಯನ್ನು ಸೃಷ್ಟಿಸುತ್ತ ಕನ್ನಡವನ್ನು ಹದಗೊಳಿಸುವ ಕಾರ್ಯಗತಿಯಾಗಲಿ. ದೇಶೀಯ ಭಾಷೆಗಳನ್ನು ಒತ್ತರಿಸುತ್ತ ಇಂಗ್ಲಿಷಿನಂಥ ಪ್ರಪಂಚದ ಬಲಿಷ್ಠ ಭಾಷೆಯ ಮುನ್ನುಗ್ಗುವಿಕೆಯನ್ನು ಎದುರಿಸಿ ನಿಲ್ಲುವ ತಾಕತ್ತನ್ನು ಕನ್ನಡಕ್ಕೆ ಈ ವಿದ್ಯುನ್ಮಾನ ತಾಂತ್ರಿಕ ಸಲಕರಣೆ ತುಂಬಬೇಕಾಗಿದೆ. ಫ್ರೆಂಚ್, ಜರ್ಮನ್, ಹಂಗೇರಿಯನ್ ಮೊದಲಾದ ಯೂರೋಪಿಯನ್ ಭಾಷೆಗಳು ಇಂಥ ಸಾಮರ್ಥ್ಯದಿಂದ ಇಂಗ್ಲಿಷಿನ ದಾಳಿಯನ್ನು ಹಿಮ್ಮೆಟ್ಟಿಸಿ ನಿಂತಿರುವ ದೃಷ್ಟಾಂತಗಳಿಂದ ಸ್ಫೂರ್ತಿಗೊಳ್ಳೋಣ. ಸಹಸ್ರಮಾನಗಳ ಹಿಂದೆ ಶ್ರಮಣ ಪರಂಪರೆ ಜನಭಾಷೆಗೆ ನಾಲಗೆಯಾದದ್ದು ಇಂಥ ಜನಮುಖಿ ತುಡಿತಗಳಿಂದ. ಶತಮಾನಗಳ ಹಿಂದೆ ಸಂಸ್ಕ ತದ ಯಜಮಾನ್ಯವನ್ನು ದೂರವಿಟ್ಟು ‘ಅನ್ಯರ ಮನೆಯ ಬಾವಿಯ ಸಿಹಿನೀರಿಗಿಂತ ನಮ್ಮ ಮನೆಯ ಉಪ್ಪುನೀರೇ ಲೇಸೆಂದು’ ಕನ್ನಡವನ್ನು ಪೊರೆದ ಶರಣರ, ದಾಸರ ಮಾದರಿ ನಮಗೆ ದಾರಿದೀಪವಾಗಬೇಕು. ವಿದ್ಯುನ್ಮಾನ ಸಾಧನೆಗಳು ಕನ್ನಡಕ್ಕೆ ದಕ್ಕುವ ದಿಕ್ಕಿನಲ್ಲಿ ಏನೇನು ಮಾಡಬೇಕೆಂಬುದನ್ನು ಸೂಚಿಸುವಂಥ ಪರಿಣತಿ ಗಳಿಕೆಗೆ ಕನ್ನಡ ವಿಶ್ವವಿದ್ಯಾಲಯ ತನ್ನ ಸಮಯ ಸಾಮರ್ಥ್ಯವನ್ನು ಕೇಂದ್ರೀಕರಿಸಬೇಕು. +ಬಹುತಾಂತ್ರಿಕ ಆಧುನೀಕರಣ ಮತ್ತು ಜಾಗತೀಕರಣದ ತುಡಿತದಿಂದಾಗಿ ಪ್ರಾದೇಶಿಕ ಭಾಷೆಯ ಯುವ ಪ್ರತಿಭೆಗಳು ಮಾತೃಭಾಷೆಯನ್ನು ತೊರೆದು ಇ-ಶಿಕ್ಷಣಕೆ ಪಲಾಯನ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಮೊದಲೇ ಪರಿಮಿತವಾಗಿದ್ದ ಪ್ರಾದೇಶಿಕ ಭಾಷೆಗಳ ಓದುಗರ ಪ್ರಮಾಣ ಈಗ ಮತ್ತಷ್ಟು ಇಳಿಮುಖಗೊಂಡಿದೆ. ಇಂಥ ಇಳಿಗಾಲದಲ್ಲಿ ಕನ್ನಡಕ್ಕೆ ಉಳಿಗಾಲ ಎಲ್ಲಿ, ಹೇಗೆ ಎಂಬುದು ಗಂಭೀರ ಪರಿಭಾವನೆಯ ಸಮಸ್ಯೆ. ಇದನ್ನು ಮತ್ತಷ್ಟು ಉಲ್ಬಣಗೊಳಿಸಿರುವುದು ಹೊಸ ಪೀಳಿಗೆ ತಾಯಿಭಾಷೆಯ ಹೊಕ್ಕಳ ಬಳ್ಳಿಯಿಂದ ಕಳಚಿಕೊಳ್ಳುತ್ತಿರುವುದಲ್ಲದೆ ತಾಯಿಭಾಷೆಯ ಸಾಹಿತ್ಯದಿಂದಲೂ ದೂರ ಸರಿಯುತ್ತಿರುವುದು. ಸವಾಲುಗಳು ಹೀಗೆ ಸಂಕೀರ್ಣತರಗೊಳ್ಳುತ್ತ ಸಾಗುತ್ತಿರುವಾಗ ಅದಕ್ಕೆ ಸಡ್ಡು ಹೊಡೆದು ಸಜ್ಜಾಗಿ ನಿಲ್ಲುವ ಕಸುವು ಇದೆಯೆ ಎಂಬ ಶೋಧನೆಯ ತುರ್ತು ಒದಗಿದೆ. ಮಾತೃಭಾಷೆ ಯಾವುದೇ ಇರಲಿ, ಕರ್ನಾಟಕದಲ್ಲಿ ವಾಸಿಸುವ ಎಲ್ಲರೂ ಕನ್ನಡವನ್ನು ಒಪ್ಪಿಕೊಳ್ಳಬೇಕು. ಕನ್ನಡವನ್ನು ಒಪ್ಪಿಕೊಳ್ಳದವರಿಗೆ ಇಲ್ಲಿ ಜಾಗ ಸಿಗುವುದಿಲ್ಲವೆಂಬ ಒತ್ತಡ ತರುವುದಲ್ಲದೆ ರಾಜಧಾನಿಯಾದ ಬೆಂಗಳೂರು ಮೊದಲು ಕನ್ನಡಮಯವಾಗಬೇಕು. ಈ ಸಿಲಿಕಾನ್ ನಗರ ಕನ್ನಡವಾದರೆ ಇಡೀ ಕರ್ನಾಟಕ ಕನ್ನಡವಾಗುತ್ತದೆ. ಆಡಳಿತ ಗಂಗೋತ್ರಿಯಾದ ವಿಧಾನಸೌಧ ಕನ್ನಡವಾದರೆ ಬೆಂಗಳೂರು ತನಗೆ ತಾನು ಕನ್ನಡವಾಗುತ್ತದೆ. ರಾಜಧಾನಿಯಲ್ಲಿ ಕನ್ನಡವನ್ನು ಜೀವಂತವಾಗಿಡಲು ಹಾಗೂ ಕನ್ನಡದ ಬೇರುಗಳು ಒಣಗದಂತೆ ಸತತವಾಗಿ ಎಚ್ಚರಿಸುತ್ತಿರುವ ಕನ್ನಡ ಚಳವಳಿಗಾರರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. +ಪುಸ್ತಕ ಸಂಸ್ಕ ತಿ +ಮನುಷ್ಯರನ್ನು ಹತ್ತಿರವಾಗಿಸುವ ಹಾಗೂ ಮನಸ್ಸುಗಳನ್ನು ಕೂಡಿಸುವ ಸಾಹಿತ್ಯ ನಿರ್ಮಿತಿ ಅಚ್ಯುತವಾಗಿ ನಡೆಯಬೇಕು. ಉದಾರೀಕರಣ ಹಾಗೂ ಜಾಗತೀಕರಣದ ಪರಿಣಾಮ ಪುಸ್ತಕ ಸಂಸ್ಕ ತಿಯ ಸಂದರ್ಭದಲ್ಲಿ ಯಾವ ಸ್ವರೂಪದ್ದಾಗಿ ಪರಿಣಮಿಸೀತೆಂಬ ಸಮೀಕ್ಷೆ ನಡೆಯಲಿ. ಪುಸ್ತಕ ಸಂಸ್ಕ ತಿ ಅವಿನಾಶಿಯೆಂದು ಕೈಕಟ್ಟಿ ಕುಳಿತುಕೊಳ್ಳುವಂತಿಲ್ಲ. ಪುಸ್ತಕಗಳ ಸ್ವರೂಪ, ಬಳಸುವ ಸಾಮಗ್ರಿ ಬದಲಾಗುತ್ತ ಬಂದಿದೆ. ಓಲೆಗರಿಯಿಂದ ಕಾಗದಕ್ಕೆ ಮುದ್ರಣ ಕಲೆ ನಾಗಲೋಟದಿಂದ ಬೆಳೆಯುತ್ತ ಬದಲಾಗುತ್ತ ಚಲನಶೀಲವಾಗಿದೆ. ಇಂದು ಅಚ್ಚಾಗಿ ಹೊರಬರುತ್ತಿರುವ ಪುಸ್ತಕಗಳ ಚೆಲುವಿಗೆ ಮಾರುಹೋಗುತ್ತೇವೆ. ಹಿಂದೆಂದೂ ಕಾಣದಂಥ ಅಂದ ಚೆಂದದ ಬೊಂಬೆಗಳಂತೆ ಮನಮೋಹಕ ಹೊರಪುಟ ಹೊದಿಕೆಯೊಂದಿಗೆ ಕನ್ನಡ ಪುಸ್ತಕಗಳು ಹೊರಬರುತ್ತಿವೆ. ಸತ್ವಶಾಲಿ ಒಳಹೂರಣವೂ ಉಂಟು. ಓಲೆಗರಿ, ಕಾಗದಗಳ ಯುಗ ಮುಗಿದು ಕ್ಯಾಸೆಟ್ಟು, ಫ್ಲಾಪಿ, ಸಿಡಿರಾಂಗಳ ಕಾಲದಲ್ಲಿದ್ದೇವೆ. ಸಾಹಿತಿಗಳು ಅಕ್ಷರ ಸಂಸ್ಕ ತಿಯ ವಕ್ತಾರರು ಹಾಗೂ ಪುಸ್ತಕ ಸಂಸ್ಕ ತಿಯ ವಾರಸುದಾರರು. +ಹೈಟೆಕ್ ಮತ್ತು ಮಾಹಿತಿ ತಂತ್ರಜ್ಞಾನದ ನೆರಳು ಎಲ್ಲ ಕ್ಷೇತ್ರಗಳ ಮೇಲೆ ಬೀಳುತ್ತಿರುವಾಗ ಸಾಹಿತಿಗಳೂ ಕಲಾವಿದರೂ ಚಲನಚಿತ್ರ ನಿರ್ಮಾಪಕರೂ ಪುಸ್ತಕ ಪ್ರಕಾಶಕರೂ ತಟಸ್ಥರಾಗುವುದು ಅಸಾಧ್ಯ. ಪುಸ್ತಕ ಸಂಸ್ಕ ತಿಯ ಅಪಾಯಗಳನ್ನು ನಿವಾರಿಸುವುದಕ್ಕೂ ಸನ್ನದ್ಧವಾಗಿರಬೇಕಾಗುತ್ತದೆ. ನಾಡಿನ ಸಂಸ್ಕ ತಿಯ ಅಂತಸ್ಸತ್ವವನ್ನು ಅರಿಯಲೂ ಪರಿಚಯಿಸಲೂ ಸೂಕ್ತ ಪರಿಸರವನ್ನು ನಿರ್ಮಿಸುವ ಸದುದ್ದೇಶ ಪ್ರೇರಿತರಾಗಿ ಹಿಂದೆ ಕೆಂಗಲ್ ಹನುಮಂತಯ್ಯನವರು ಕನ್ನಡ-ಸಂಸ್ಕ ತಿ ಇಲಾಖೆಯನ್ನು ತೆರೆದರು, ಹಳ್ಳಿಗಳಲ್ಲಿ ಉಪನ್ಯಾಸಗಳಿಗೆ ಎಡೆಮಾಡಿದರು, ಎರಡು ರೂಪಾಯಿಗೆ ಕುಮಾರವ್ಯಾಸ ಭಾರತ ಕಾವ್ಯ ಜನರಿಗೆ ಎಟುಕುವಂತೆ ಮಾಡಿದರು. ಇಂದು ಪುಸ್ತಕ ವಿತರಣಾ ನೀತಿ ಸಂಹಿತೆಯನ್ನು ರೂಪಿಸಿ ಗ್ರಂಥ ಉದ್ಯಮವನ್ನು ಸಶಕ್ತವಾಗಿಸಬೇಕಾಗಿದೆ. ವಿಶ್ವವಿದ್ಯಾಲಯಗಳು, ಅನುದಾನಿತ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಂಸ್ಕ ತಿ ಇಲಾಖೆ, ಪುಸ್ತಕ ಪ್ರಾಧಿಕಾರ – ಇವೆಲ್ಲದರ ಸಹಭಾಗಿತ್ವದಲ್ಲಿ ಈ ಕಾರ್ಯ ನಡೆಯಲಿ. ಓದುಗನಿಗೆ ಒಂದೇ ಸೂರಿನಡಿ ತನಗೆ ಬೇಕಾದ ಪುಸ್ತಕ ಸಿಗುವ ಹಾಗೆ ಅನುಕೂಲ ಕಲ್ಪಿಸುವುದೆಂದರೆ ಪ್ರತಿ ಜಿಲ್ಲೆ ಮತ್ತು ತಾಲ್ಲೂಕುಗಳಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಾಹಿತ್ಯ ಭವನದಲ್ಲಿ ಮಾರಾಟ ಮಳಿಗೆ ತೆರೆಯಲಿ. +ಲೇಖಕ, ಪ್ರಕಾಶಕ, ಮುದ್ರಕ, ವಿತರಕ, ವಾಚಕ – ಇವು ಅಯ್ದು ಪುಸ್ತಕ ಸಂಸ್ಕ ತಿಯ ಪಂಚಾಂಗ. ಲೇಖಕ – ಪ್ರಕಾಶಕರಿಗೆ ಪ್ರಶಸ್ತಿಗಳಿರುವಂತೆ ಮುದ್ರಕರಿಗೂ ವಿತರಕರಿಗೂ, ಅದರಲ್ಲಿಯೂ ಏಕವ್ಯಕ್ತಿ ವಿತರಕರಿಗೂ, ಪ್ರಶಸ್ತಿಯ ಪ್ರೋತ್ಸಾಹವಿರಲಿ. +ಪುಸ್ತಕ ಸಂಸ್ಕ ತಿ ಸಂವರ್ಧನೆಗೆ ಸಾಹಿತ್ಯ ಸಮ್ಮೇಳನ ಗಟ್ಟಿ ಅಡಿಪಾಯವಾಗುತ್ತಿದೆ. ಓದುಗರ ಸಂಖ್ಯೆ ಇಳಿಮುಖವಾಗಿಲ್ಲ ಮತ್ತು ವಾಚನಾಭಿರುಚಿ ಒಣಗಿಲ್ಲ ಎಂಬುದಕ್ಕೆ ಪುಸ್ತಕ ಮಳಿಗೆಗಳು ಕನ್ನಡಿ ಹಿಡಿದಿವೆ. ಆದರೆ ಪೋಷಕರೂ ಅಧ್ಯಾಪಕರೂ ಶಾಲಾ ಮಕ್ಕಳಿಗೆ ರಜೆ ಬಂದರೆ ಪ್ರವಾಸ, ಪಿಕ್‌ನಿಕ್, ಚಲನಚಿತ್ರ, ಮನರಂಜನೆಗೆ ಕರೆದುಕೊಂಡು ಹೋಗುತ್ತಾರೆ. ಗ್ರಂಥಾಲಯಗಳಿಗಂತೂ ಹೋಗುವುದಿಲ್ಲ. ಹೀಗಿರುವಾಗ ಪುಸ್ತಕ ಪ್ರೀತಿ ಬತ್ತದೆ ಹಸಿರಾಗುವುದು ಹೇಗೆ. ಬುದ್ಧಿವಂತಿಕೆಯೊಂದಿಗೆ ಹೃದಯವಂತಿಕೆಗೆ, ಬೌದ್ಧಿಕ ವಿಕಾಸದೊಂದಿಗೆ ಮಾನಸಿಕ ಪಕ್ವತೆಗೆ ಓದು ಸಹಕಾರಿ. ಯಂತ್ರಮಾನವನಾಗದೆ ಹೃದಯ ಸಿರಿಯ ನಾಗರಿಕರಾಗಲು ಪುಸ್ತಕ ಪ್ರೀತಿ ಸಹಾಯವಾಗುತ್ತದೆ. +ಕರ್ನಾಟಕದಲ್ಲಿ ಚಲನಚಿತ್ರೋದ್ಯಮ ಪ್ರತಿಭಾ ಸಂಪನ್ನರ ಕ್ಷೇತ್ರವಾಗಿ ವರ್ಧಿಸುತ್ತಿದೆ. ನಟನಟಿಯರೂ ನಿರ್ದೇಶಕ ನಿರ್ಮಾಪಕರೂ ಕರ್ನಾಟಕದ ಸಾಂಸ್ಕ ತಿಕ ಪರಂಪರೆಯನ್ನು ಜನತೆಗೆ ಪ್ರಭಾವಶಾಲಿಯಾಗಿ ತಲಪಿಸುವ ದಿಕ್ಕಿನಲ್ಲಿ ಪ್ರಶಂಸಾರ್ಹ ರೀತಿಯಲ್ಲಿ ಶ್ರಮಿಸುತ್ತಿರುವ ಈ ಇಡೀ ಸಮುದಾಯವನ್ನು ಅಭಿನಂದಿಸುತ್ತೇನೆ. ಕಿರುತೆರೆಯ ಕ್ಷೇತ್ರದವರೂ ಹಿರಿತೆರೆಯವರಿಗಿಂತ ಕಡಿಮೆಯಿಲ್ಲದಂತೆ ಉತ್ತಮ ಧಾರಾವಾಹಿಗಳಿಂದ ಮನುಷ್ಯ ಸಮಾಜದ ಕತ್ತಲೆ ಬೆಳಕನ್ನು ಬಿಂಬಿಸುತ್ತಿದ್ದಾರೆ. ಅತ್ಯಾಚಾರ, ಕಳ್ಳತನ, ಕ್ರೌರ್‍ಯ, ದರೋಡೆ, ವಂಚನೆ, ಹಿಂಸೆಗಳಿಂದ ಸಮಾಜದ ನೆಮ್ಮದಿಯನ್ನು ಕೊಲ್ಲುವ ವ್ಯಕ್ತಿ, ಶಕ್ತಿ, ಪ್ರವೃತ್ತಿಗಳನ್ನು ಈ ಮಾಧ್ಯಮಗಳು ಬಯಲಿಗೆಳೆಯುತ್ತಿವೆ. ಆದರೆ ಇವನ್ನು ಅತಿಯಾಗಿ ಉತ್ಪ್ರೇಕ್ಷಿಸಿ ವೈಭವೀಕರಿಸುವುದಕ್ಕೆ ನಿಯಂತ್ರಣವಿರಬೇಕು. +ಸಾಹಿತ್ಯದಂತೆ ಮಾಧ್ಯಮಗಳೂ ಮನೆ ಮನಸ್ಸುಗಳನ್ನು ಮುರಿಯುವ ಹಾಗೂ ಹುರಿದುಮುಕ್ಕುವ ದಿಕ್ಕಿಗೆ ಹೆಜ್ಜೆ ಹಾಕುವುದಕ್ಕೆ ಪ್ರಚೋದನೆಯಾಗಬಾರದು. ಜನಮುಖಿ ಹಾಗೂ ಜೀವಪರ ತುಡಿತದ ತರಂಗಗಳಿಗೆ ಅಂತರಂಗ ಪುಟಿಯುವಂಥ ಪ್ರೇರಣೆ ಬರಲಿ. ಹೊಸಪೀಳಿಗೆಯ ಅರಳುವ ಪ್ರತಿಭೆಗಳಿಗೆ, ಸೃಜನಶೀಲ ಕರ್ಷಣಕ್ಕೆ ಎಂಥ ಪ್ರತಿಕೂಲ ಆತಂಕಗಳಿವೆ ಎಂಬುದನ್ನು ಬಲ್ಲೆ. ಇಡೀ ಭಾರತೀಯ ಪ್ರಜ್ಞಾವಲಯದಲ್ಲಿ ತುಂಬಿ ತುಳುಕುತ್ತ ಒಳಗೊಳಗೇ ಹಬ್ಬುತ್ತಿರುವ ಮಾಫಿಯ ಷಡ್ಯಂತ್ರ ಜಾಲ ಈ ಶ್ರವ್ಯ-ದೃಶ್ಯ ಮಾಧ್ಯಮಗಳನ್ನು ಆವರಿಸಿರುವುದು ಗೊತ್ತಿದೆ. ಆದರೆ ಇಂಥ ಇಕ್ಕಟ್ಟುಗಳ ಅಡಕತ್ತರಿಗೆ ಸಿಲುಕದೆ, ಪೂರ್ವಗ್ರಹದ ವಿಮರ್ಶೆಗಳ ಬುತ್ತಿಯನ್ನು ಬೆನ್ನಲ್ಲಿ ಕಟ್ಟಿಕೊಳ್ಳದೆ ಆರೋಗ್ಯಕರ ಸಮಾಜಕ್ಕೆ ಆಮ್ಲಜನಕ ತುಂಬುವ ಒತ್ತಾಸೆಯೇ ಮುಖ್ಯ ಪ್ರೇರಣೆಯಾಗಿರಲಿ. ಯಾವುದೇ ವೃತ್ತಿಯ ಪಾವಿತ್ರ್ಯ, ಘನತೆ ಮತ್ತು ಕ್ರಮವನ್ನು ಅಬದ್ಧವಾಗಿ ಯದ್ವಾತದ್ವಾ ತೋರಿಸುವುದು ಅರ್ಥಹೀನವಾಗುತ್ತದೆ. ಪೊಲೀಸರನ್ನು ನಿಷ್ಪ್ರಯೋಜಕರು, ದಡ್ಡರು ಎಂಬಿತ್ಯಾದಿಯಾಗಿ ಅಪಹಾಸ್ಯ ಹಾಗೂ ಗೇಲಿ ಮಾಡಿ ತೋರಿಸುವ ಪ್ರವೃತ್ತಿ ವಾಡಿಕೆಯಲ್ಲಿದೆ. ನ್ಯಾಯಾಲಯದ ನಡವಳಿಕೆಯಲ್ಲಿ ವಕೀಲರು ಮೇಜು ಮುರಿಯುವ ಹಾಗೆ ಗುದ್ದಿ ಕಟ್ಟಡ ಬಿರಿಯಂತೆ ಕೂಗಾಡುವುದು ಅವಾಸ್ತವ ಚಿತ್ರಣ. ಆಸ್ಪತ್ರೆ ಮತ್ತು ವೈದ್ಯ ವೃತ್ತಿಯನ್ನು ಪ್ರತಿನಿಧಿಸುವ ರೀತಿಯೂ ಅಷ್ಟೆ. ರೋಗಿಗೆ ನೇರವಾಗಿ ಒಬ್ಬನಿಂದ ಇನ್ನೊಬ್ಬನಿಗೆ ರಕ್ತ ಕೊಡುವಂತೆ ತೋರಿಸುವುದು ಅಪಹಾಸ್ಯವಾಗುತ್ತದೆ. +ಕನ್ನಡ ಅಧ್ಯಾಪಕರನ್ನು ಗೇಲಿ ಮಾಡುವುದು, ಶಾಲಾ ಕಾಲೇಜುಗಳನ್ನೂ ಚುಡಾಯಿಸಿ ಅಸಭ್ಯವಾಗಿ ರೌಡಿಗಳಂತೆ ವರ್ತಿಸುವುದೊಂದೇ ಇಂದಿನ ಹುಡುಗರು ನಡೆದುಕೊಳ್ಳುವ ಸಹಜ ನಡೆವಳಿಕೆ – ಎಂಬಂತೆ ಬಿಂಬಿಸುವುದು ಸರಿಯಲ್ಲ. ಇವೆಲ್ಲವೂ ಪ್ರೇಕ್ಷಕರ ಗುಣಮಟ್ಟವನ್ನು ಕೀಳಾಗಿ ತಿಳಿದು ಚಿತ್ರಿಸುವ ವಿಧಾನ. ವಾಸ್ತವತೆಯನ್ನು ಕೊಲ್ಲದೆ ಕತೆಯ ಹಂದರವನ್ನು ಪ್ರಭಾವಶಾಲಿಯಾಗಿ ಮಾಡುವ ಸಾಮರ್ಥ್ಯ ಬಳಕೆಯಾಗಲಿ ಎಂದು ಹೇಳುವಾಗ ಚಿತ್ರಣ ಆದರ್ಶಗಳ ಮುದ್ದೆಯಾಗಬೇಕೆಂಬುದು ನನ್ನ ಅಭಿಪ್ರಾಯವಲ್ಲ. ಯಾವುದೇ ವೃತ್ತಿಗಳಲ್ಲಿ ತಾಂಡವವಾಡುವ ಕೊರಮರನ್ನು ಬಯಲಿಗೆಳೆಯುವಾಗ ವಸ್ತುಸ್ಥಿತಿಯ ತಪ್ಪು ಚಿತ್ರಣ, ದೋಷಗಳು ನುಸುಳಬಾರದೆಂಬ ಪ್ರೇಕ್ಷಕರ ಪರವಾದ ಸೂಚನೆಯಿದೆ. ಕನ್ನಡದ ಮಾತುಗಳನ್ನು ಮುಳುಗಿಸಿ ಅದರ ಮೇಲೆ ಅತಿಯಾಗಿ ಅನಗತ್ಯವಾಗಿ ಇಂಗ್ಲಿಷ್ ಸವಾರಿ ಮಾಡಿಸುವುದನ್ನು ದೃಶ್ಯ ಮಾಧ್ಯಮಗಳು ನಿಯಂತ್ರಿಸಬೇಕು. +ಕನ್ನಡ ಸಾಹಿತ್ಯ ಪರಿಷತ್ತು +ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಸಾಹಿತ್ಯ, ಸಂಸ್ಕ ತಿ ಕ್ಷೇತ್ರಗಳ ಅನಭಿಷಿಕ್ತ ಸೌರ್ವಭೌಮ ಸಂಸ್ಥೆ. ನಾಡು ನುಡಿ ಕಲೆ ಸಂಸ್ಕ ತಿಗಳ ಸರ್ವಾಂಗೀಣ ಸಂವರ್ಧನೆಗಾಗಿ ಸೇವೆ ಸಲ್ಲಿಸುತ್ತಿರುವ ಹಿರಿಯ ಸಂಸ್ಥೆ. ಲೇಖಕರಿಗೂ ಸಾಹಿತ್ಯಾಸಕ್ತರಿಗೂ ಅಂತರ್ಜಾಲವನ್ನು ನೇಯುವ, ಸಾಂಸ್ಕ ತಿಕ ಚೈತನ್ಯವನ್ನು ಉಕ್ಕಿಸುವ ಸಂಸ್ಥೆ. ನಾಡಿನ ಉದ್ದಗಲಗಳಲ್ಲಿ ಇದರ ಕೊಂಬೆ ರೆಂಬೆಗಳು ಪಲ್ಲವಿಸಿವೆ. ಜಿಲ್ಲಾ ಹಾಗೂ ತಾಲ್ಲೂಕು ಸಮ್ಮೇಳನಗಳಲ್ಲದೆ ಇತರ ಚಟುವಟಿಕೆಗಳು ಚೆನ್ನಾಗಿ ನಡೆಯುತ್ತಿವೆ. ಆದರೆ ಅಲ್ಲಿಯೂ ಸಾಹಿತಿಗಳಿಗೇ ವೇದಿಕೆಗಳು ಸಲ್ಲುವಂತೆ ನಿಗಾ ವಹಿಸುವುದು ಒಳ್ಳೆಯದು. +ಕನ್ನಡ ಚೈತನ್ಯಕ್ಕೆ ಎಲ್ಲವನ್ನೂ ತಾಳಬಲ್ಲ ಕಸುವು ಇದೆ. ಎಂಥದೇ ಕಠಿಣಗಳನ್ನು ಜೀರ್ಣಿಸಿಕೊಂಡು ಪುಷ್ಟವಾಗುವ ವಿಶೇಷ ಮಹಿಮೆಯಿದೆ. ಪರ ಭಾಷೆಗಳನ್ನು, ಪರ ಸಂಸ್ಕ ತಿ ಮತ್ತು ವಿಚಾರಗಳನ್ನೂ ತನ್ನ ಮುಖ್ಯ ವಾಹಿನಿಯಲ್ಲಿ ಸೇರಿಸಿಕೊಳ್ಳುತ್ತ ಕನ್ನಡ ಬೆಳೆದುಬಂದಿದೆ. ಕನ್ನಡದ ಸಾಂಸ್ಕ ತಿಕ ಪರಂಪರೆಯ ನಿಜದನಿಯನ್ನು ಮೊದಲು ದಾಖಲಿಸಿದ ಕವಿ ಶ್ರೀವಿಜಯ. ಕವಿರಾಜಮಾರ್ಗದಲ್ಲಿ ಆತ ಈ ಸಂಗತಿಯನ್ನು ಹಿಡಿದಿಟ್ಟ ಪದ್ಯ ಹೀಗಿದೆ: +ಕಸವರಮೆಂಬುದು ನೆರೆ ಸೈ +ರಿಸಲಾರ್ಪೊಡೆ ಪರ ವಿಚಾರಮಂ ಪರಧರ್ಮ್ಮಮುಮಂ +ಕಸವೇಂ ಕಸವರಮೇನು +ಬ್ಬಸಮಂ ಬಸಮಲ್ಲದಿರ್ದು ಮಾಡುವರೆಲ್ಲಂ|| +ನಮಗೆ ಬೇಕಾದದ್ದು ಎಲ್ಲ ಭಾಷೆಯವರೂ ಎಲ್ಲ ಧರ್ಮದವರೂ ಎಲ್ಲ ವಯಸ್ಸಿನವರೂ ಒಟ್ಟಿಗೆ ಸೌಹಾರ್ದದಿಂದ ಬಾಳಬಹುದಾದ ಸಂತೋಷ. ಅಂತರಂಗದಲ್ಲಿ ಪ್ರೀತಿಯ ಅಂತರ್ಜಲ ಪಾತಾಳಕ್ಕಿಳಿದಿದೆ, ರಿಗ್ ಹಾಕಿ ನೂರಾರು ಅಡಿ ಆಳಕ್ಕಳಿದರೂ ಇದು ಚಿಮ್ಮುವುದು ಕಷ್ಟವಾಗಿದೆ. ಶಬ್ದಗಳ ಅಳವಡಿಕೆಯಲ್ಲಿ ತೀರ ಮಡಿವಂತಿಕೆ ಬೇಡ. ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಹೊಸ ನುಡಿಗಳು ಸೇರ್ಪಡೆ ಆದರೆ ತಪ್ಪಿಲ್ಲ. ಆಯ್ದ ಅನ್ಯಭಾಷೆಯ ಮಾತುಗಳು ಕನ್ನಡ ನೇಯಿಗೆಯಲ್ಲಿ ಧಾರಾಳವಾಗಿ ಹೆಣೆದುಕೊಳ್ಳಲಿ. ಸಾವಿರಾರು ವರ್ಷಗಳಿಂದ ಕನ್ನಡ ಬಾಳಿದ್ದು ಹೀಗೆ, ಬೆಳೆದದ್ದು ಹಾಗೆ. ಜನಪ್ರಿಯ ನಿಘಂಟಿನ ಆವೃತ್ತಿಗಳು ಹೊಸ ಶಬ್ದಗಳ ಸೇರ್ಪಡೆಯಿಂದ ಪರಿಷ್ಕ ತಗೊಂಡು ಸಾಹಿತ್ಯ ಪರಿಷತ್ತಿನ ಪ್ರಕಟನೆಯಾಗಿ ಪ್ರತಿವರ್ಷ ಹೊರಬರುತ್ತಿರಲಿ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಸುಲಭ ಬೆಲೆಯಲ್ಲಿ ಸಿಗಲಿ. ಜನಕ್ಕೆ ಕನ್ನಡದಲ್ಲಿ ಅಕ್ಕರೆಯಿದೆ ಎಂಬುದಕ್ಕೆ ಇಂಥ ಸಾಹಿತ್ಯ ಸಮ್ಮೇಳನಗಳು ಜ್ವಲಂತ ಸಾಕ್ಷಿ. ಹಾಸನದ ಸಮ್ಮೇಳನದಂತೆ ಪ್ರತಿಯೊಂದು ಕನ್ನಡ ಸಾಹಿತ್ಯ ಸಮ್ಮೇಳನಗಳ ನೇರ ಪ್ರಸಾರವಾಗಬೇಕು. ಕೋಟ್ಯಂತರ ಜನ ಮನೆಯಲ್ಲಿ ಕುಳಿತು ದೂರದರ್ಶನದಲ್ಲಿ ಸಾಹಿತ್ಯ ಸಮ್ಮೇಳನವನ್ನು ನೋಡಿ ಸವಿಯುವಂತಾಗಲಿ. +ಪ್ರಾದೇಶಿಕ ಭಾಷೆಗೆ ಸಂಸ್ಕ ತಿಗೆ ತನ್ನದೇ ಆದೊಂದು ಸೊಗಡು, ಮೊಹರು, ಘಾಟು ಇರುತ್ತದೆ. ಭಾಷಾ ಏಕರೂಪತೆಗೆ ಗದ್ದುಗೆ ಹತ್ತಿಸುವುದಕ್ಕಿಂತ ಸ್ಥಳೀಯ ವೈವಿಧ್ಯಗಳನ್ನು ಉಳಿಸಿ ಬಾಳಿಸುವುದು ಒಳ್ಳೆಯದು. ಇದನ್ನು ಪತ್ರಿಕೆಗಳೂ ಬಳಸಿ ಪ್ರೋತ್ಸಾಹಿಸಬೇಕು. ಪತ್ರಿಕೆಗಳಿಂದಾಗಿ ಕನ್ನಡ ಭಾಷೆ, ಒಂದು ಶಿಷ್ಟರೂಪಕ್ಕೆ ಹೆಜ್ಜೆ ಹಾಕುತ್ತಲಿದೆ. ಆದರೆ ಉತ್ತರ ಕರ್ನಾಟಕದ ಪತ್ರಿಕೆಗಳು ಅಲ್ಲಿಯ ಜನಭಾಷೆಯ ವಿಶಿಷ್ಟತೆಯನ್ನು ಬಿಂಬಿಸುವುದು ಚೆನ್ನು. ಹೀಗೆಯೇ ದಕ್ಷಿಣ ಕನ್ನಡ ಜಿಲ್ಲೆಯ ಪತ್ರಿಕೆಗಳು ಅಲ್ಲಿಯ ಪ್ರಾದೇಶಿಕ ಭಾಷೆಯ ಸ್ವರೂಪವನ್ನು ಬಿಡಬಾರದು. ಜನಭಾಷೆಯ ಸೊಗಸು ಇರುವುದೇ ಅದರ ಸೊಗಡಿನಲ್ಲಿ. ತನ್ನ ಸ್ವಂತಿಕೆಯ ಸ್ವರೂಪವನ್ನು ಬಳಸಲು ಯಾವ ಕೀಳರಿಮೆಯೂ ಕಾಡಬಾರದು. +ಸಮ್ಮೇಳನ ಇನ್ನಷ್ಟು ಪ್ರಭಾವಶಾಲಿ ಆಗಲು ಸಾಧ್ಯವಿದೆ. ಗೋಷ್ಠಿಗಳ ವಿನ್ಯಾಸ ಅರ್ಥಪೂರ್ಣವಾಗಿಸಬಹುದು ನಾಲ್ಕೆ ದು ತಿಂಗಳ ಮುಂಚೆಯೇ ಪತ್ರವ್ಯವಹಾರ ನಡೆಸಿದರೆ ಪ್ರಬಂಧಕಾರರಿಗೆ ಸಿದ್ಧತೆಗೆ ಹೆಚ್ಚು ಸಮಯಾವಕಾಶವಿರುತ್ತದೆ. +ಸಾಹಿತ್ಯ ಪರಿಷತ್ತಿನ ಜಿಲ್ಲೆ ಮತ್ತು ತಾಲ್ಲೂಕು ಘಟಕಗಳ ಪುನಶ್ಚೇತನಕ್ಕೆ ತಕ್ಕ ತಳಪಾಯವೆಂದರೆ ಕನ್ನಡ ಭವನಗಳ ನಿರ್ಮಾಣ. ಬಹೂಪಯೋಗಿ ಜಿಲ್ಲಾ ಕನ್ನಡ ಭವನಗಳ ಪರಿಕಲ್ಪನೆಯನ್ನು ೧೯೭೮-೭೯ರಲ್ಲಿ ಆಗಿನ ಪರಿಷದಧ್ಯಕ್ಷರು ಸರಕಾರಕ್ಕೆ ಒಪ್ಪಿಸಿದ್ದರೂ ಇದುವರೆಗೆ ನಾಲ್ಕೆ ದು ಜಿಲ್ಲಾ ಕನ್ನಡ ಭವನಗಳು ರೂಪಗೊಂಡಿವೆ. ಇದು ಇನ್ನೂ ಬೇಗ ವ್ಯಾಪಕವಾಗಿ ಎಲ್ಲ ಜಿಲ್ಲೆ – ತಾಲ್ಲೂಕುಗಳಿಗೆ ಹಬ್ಬಿದರೆ ಆಗ ಕನ್ನಡಪರ ಸಾಹಿತ್ಯ ಸಂಸ್ಕ ತಿ ಚಟುವಟಿಕೆಗಳಿಗೆ ಕಾಯಕಲ್ಪವಾಗುತ್ತದೆ. ಕನ್ನಡದ ಪುಸ್ತಕಗಳು, ಪ್ರಕಾಶಕರು ಯಾರೇ ಇರಲಿ, ಎಲ್ಲ ಲೇಖಕರ ಪುಸ್ತಕಗಳು ಕನ್ನಡ ಭವನದಲ್ಲಿ ದೊರೆಯುವಂತಾಗಲಿ. ಕನ್ನಡ ಕಾರ್ಯಕ್ರಮಗಳಿಗೆ ಅದರಲ್ಲಿ ಸುಸಜ್ಜಿತ, ಅತ್ಯಾಧುನಿಕ ಸಭಾಂಗಣವಿರಲಿ. ಲಾಭ-ನಷ್ಟ ಇರದ ಕಡಿಮೆ ಬಾಡಿಗೆ ದರದಲ್ಲಿ ಆ ಸಭಾಂಗಣ ಎಲ್ಲ ಕನ್ನಡ ಚಟುವಟಿಕೆಗಳಿಗೆ ಸಿಗಬೇಕೆ ವಿನಾ ಅದು ಮದುವೆಗಳಿಗೆ ತೆರೆದ ಇನ್ನೊಂದು ಕಲ್ಯಾಣಮಂಟಪ ಆಗಬಾರದು. +ಕನ್ನಡ ಸಾಹಿತ್ಯ ಮೊದಲು ಧರ್ಮಕೇಂದ್ರಿತವಾಗಿತ್ತು, ಸಂಸ್ಕ ತ ಪ್ರಾಕೃತ ಪ್ರೇರಿತವಾಗಿತ್ತು. ಅನಂತರ ಅದರ ಪ್ರೇರಣೆ ಪರಿಕಲ್ಪನೆ ಇಂಗ್ಲಿಷ್ ಸಾಹಿತ್ಯದಿಂದ ಮೂಡಿ ಕನ್ನಡವೂ ಇಂಗ್ಲಿಷ್ ಕೇಂದ್ರಿತವಾಯಿತು. ಈಗೀಗ ಅದು ಹೈಟೆಕ್ ಕೇಂದ್ರಿತವಾಗುತ್ತಿದೆ. ಅನಿವಾರ್‍ಯವಾಗಿ ಆಗುವ ಬದಲಾವಣೆಗಳನ್ನು ಎಚ್ಚರಿಕೆಯಿಂದ ಬರಮಾಡಿಕೊಳ್ಳೋಣ. ಸುಗಮ ಜೀವನ ಮುಕ್ತದ್ವಾರವಾಗಿರಲಿ. ಆದರೆ ಇವೆಲ್ಲವೂ ಮಾನವ ಹಾಗೂ ಕನ್ನಡ ಕೇಂದ್ರಿತವಾಗಿಯೇ ಕ್ರಿಯಾಶೀಲವಾಗಿರುವಂತೆ ನಿರ್ವಹಿಸುವ ಹೊಣೆ ಜ್ಞಾನಿಗಳನ್ನು ಅವಲಂಬಿಸಿದೆ. +ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಮನ್ವಂತರದ ಮತ್ತೊಂದು ವೈಶಿಷ್ಟ್ಯವೂ ಪರಿಭಾವನ ಯೋಗ್ಯವಾಗಿದೆ. ಹತ್ತನೆಯ ಶತಮಾನದಲ್ಲಿದ್ದ ಪಂಪನ ೧೧೦೦ನೆಯ ಜನ್ಮೋತ್ಸವ ಮುಗಿದು ಇಪ್ಪತ್ತನೆಯ ಶತಮಾನದ ಕುವೆಂಪು ಅವರ ಶತಮಾನೋತ್ಸವ ಪ್ರಾರಂಭವಾದದ್ದು ಆಕಸ್ಮಿಕವಿರಲಾರದು. ಹೊಸಗನ್ನಡಕ್ಕೆ ಹೊಸದಿಕ್ಕು, ದನಿ, ಬಿಗಿಬನಿ ನೀಡಿದ ಕುವೆಂಪುರವರು ಆದಿಕವಿ ಪಂಪನ ಮಹಾನ್ ಪರಂಪರೆ ವಿಚ್ಛಿನ್ನವಾಗದಂತೆ ಮುಂದುವರಿಸಿದವರು. ಕುವೆಂಪು ವಿರಚಿತ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ಭಾವಗೀತೆ ಕರ್ನಾಟಕದ ನಾಡಗೀತೆಯಾಗಿರುವುದು ಔಚಿತ್ಯಪೂರ್ಣವಾಗಿದೆ. ಭಾರತ ಅಸ್ತಿತ್ವದಲ್ಲಿ ಇದ್ದರೆ ಆಗ ಕರ್ನಾಟಕವೂ ಅಸ್ತಿತ್ವದಲ್ಲಿ ಇರುತ್ತದೆ. ಹಾಗೆಂದು ಪ್ರಾದೇಶಿಕ ಸ್ವಂತಿಕೆಯನ್ನು, ವ್ಯಕ್ತಿತ್ವವನ್ನು ಮಾರಿಕೊಳ್ಳುವುದು ಅಂತ ಅರ್ಥವಲ್ಲ. ಕುವೆಂಪು ಪ್ರತಿಷ್ಠಾನ ನೊಂದಾವಣೆ ಆದದ್ದು ಮತ್ತು ಪ್ರತಿಷ್ಠಾನದ ವಿಳಾಸ ನಮ್ಮ ಮನೆಯದೇ ಆಗಿದ್ದುದು ಮರೆಯಲಾಗದ ನೆನಪು. ಕುವೆಂಪು ಶತಮಾನೋತ್ಸವ ಆರಂಭವಾಗುತ್ತಿರುವ ಡಿಸೆಂಬರ್ ತಿಂಗಳಲ್ಲಿ ಮತ್ತು ಆ ಮಹಾಕವಿಯ ಕವಿತೆ ಜಯಭಾರತ ಜನನಿಯ ತನುಜಾತೆ ಕನ್ನಡ ನಾಡಗೀತೆ ಆದ ಸುಸಂದರ್ಭದಲ್ಲಿ ಈ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದೂ, ಇದರ ಅಧ್ಯಕ್ಷತೆಯ ಗೌರವ ನನಗೆ ಪ್ರಾಪ್ತವಾಗಿರುವುದೂ ನನಗೆ ದಕ್ಕಿದ ಸಿರಿಸಂಪದ. +ಹಳ್ಳಿಗಳ ಅಚ್ಚಗನ್ನಡದ ಹಳೆಯ ಹೆಸರುಗಳನ್ನು ಸಂಸ್ಕ ತಮಯವಾಗಿಸುವುದು ತರವಲ್ಲ. ಸಾಂಸ್ಕ ತಿಕ ಇತಿಹಾಸ ಹಿನ್ನೆಲೆ ಇರುವ ಎಮ್ಮೆಯೂರು, ಬೆಳ್ಳೂರುಗಳನ್ನು ಸುರಧೇನುಪುರ, ಶ್ವೇತಪುರ ಎಂದೇಕೆ ಬದಲಾಯಿಸಬೇಕು. ದೊಮ್ಮಲೂರನ್ನು ಭಗತ್‌ಸಿಂಗ್‌ನಗರ ಮಾಡುವುದರಲ್ಲಿ ಅರ್ಥವಿಲ್ಲ. ಕನ್ನಡ ಪರಂಪರೆಯ ಮೇಲೆ ಆಗುವ ಈ ಬಗೆಯ ಗದಾಪ್ರಹಾರವನ್ನು ತಡೆಯುವ ಭೀಮಬಲ ಸಾಹಿತ್ಯ ಪರಿಷತ್ತಿನಿಂದ ವ್ಯಕ್ತವಾಗಬೇಕು. ನಮ್ಮ ನಾಡಿನ ಮೂಲೆ ಮುಡುಕುಗಳಿಗೆ ಕನ್ನಡವನ್ನು ಬೆಳಗಿಸುವ ನಂದಾದೀಪವಾಗುವುದರ ಜೊತೆಗೆ ಅವಿರತ ಎಚ್ಚರಿಸುವ ದುಂದುಭಿಯೂ ಆಗಿರಬೇಕು. +ಸಂಕೀರ್ಣ ಚಿಂತನೆಗಳು +ರಾಜಕಾರಣದ ಸ್ವರೂಪ ಇಂದು ಹಿಂದೆ ಇದ್ದಂತಿಲ್ಲ. ಏಕಪಕ್ಷದ ಬದಲು ಬಹುಪಕ್ಷಗಳು ಸಖ್ಯದಿಂದ ಆಡಳಿತ ನಡೆಸುವುದು ಶಕ್ಯವಾಗಿದೆ. ಒಂದು ದೇಶದ ಭಯೋತ್ಪಾದಕತೆಯನ್ನು ಇನ್ನೊಂದು ದೇಶ ತಟಸ್ಥ ಪ್ರೇಕ್ಷಕನಾಗಿ ನೋಡುವುದು ತಪ್ಪೆಂಬ, ಕಷ್ಟ ಸುಖಗಳಲ್ಲಿ ಪರಸ್ಪರರು ನೆರವಿಗೆ ಒದೆಗಲ್ಲಾಗಿ ನಿಲ್ಲಬೇಕೆಂಬ ತವಕ ಬಂದಿದೆ. ಅಸ್ತ್ರಶಸ್ತ್ರಗಳ ಬಲ, ಸೈನ್ಯ ಬಲ, ಆರ್ಥಿಕ ಬಲಗಳ ಪ್ರಮತ್ತತೆಗೆ ಧಕ್ಕೆಯಾಗಿದೆ. ಒಟ್ಟಾರೆ ಪಶ್ಚಿಮದ ಸಾಂಸ್ಕ ತಿಕ ಯಾಜಮಾನ್ಯ ನೆಲಕಚ್ಚುತ್ತಿದೆ. ಸಾಮ್ರಾಜ್ಯಶಾಹಿಗಳ ಠೇಂಕಾರ ಮುಗಿಯಿತು. ತಾನೇ ಲೋಕನಾಯಕನೆಂಬ ಅಮಲಿನಿಂದ ಸೊಕ್ಕಿದವರು ಬಾಗಿ ನಡೆಯುವುದರ ವಿವೇಕಕ್ಕೆ ಸ್ಪಂದಿಸಿದ್ದಾರೆ. ತನ್ನ ಬೆಂಕಿಯಿಂದಲೇ ಬೆಳಕು, ತನ್ನ ಕೋಳಿಯಿಂದಲೇ ಬೆಳಗು-ಎಂಬ ಭ್ರಾಂತಿಯಲ್ಲಿ ಮೆರೆಯುವುದು ಇನ್ನು ಸಾಧ್ಯವಾಗದೆಂಬ ತಿಳಿವಳಿಕೆಯ ತರಂಗಗಳು ಅನುರಣಿಸುತ್ತ ಗೋಳವನ್ನು ಆವರ್ತಿಸಿವೆ. +ಲೋಕಸಭೆಯ ಮಧ್ಯಂತರ ಚುನಾವಣೆಯದಿನಾಂಕವನ್ನು ಗೊತ್ತುಪಡಿಸುವ ಮೊದಲೆ ಪ್ರಚಾರ ಪ್ರಾರಂಭವಾಗಿದೆ. ತಪ್ಪೇನಲ್ಲ. ಆದರೆ ಆಡಳಿತಾರೂಢರೂ ಇತರರೂ ಮಾಡುತ್ತಿರುವ ಆರೋಪ ಪ್ರತ್ಯಾರೋಪಗಳು ಘನತೆ ತರುವಂತಹುದಲ್ಲ. ಈ ಬಗೆಯ ಚುನಾವಣೆಯ ಪ್ರಚಾರ ವೈಖರಿ ಅಸಹ್ಯ ಹುಟ್ಟಿಸುತ್ತಿದೆ. ಪರಸ್ಪರ ಕಚ್ಚಾಡುತ್ತ ಮಣ್ಣೆರೆಚುವ ಈ ಜನಕ್ಕೆ ಮತಕೊಡಬೇಕೆ ಎಂದು ಚಿಂತಿಸುವಂತಾಗಿದೆ. ತಮ್ಮ ಪಕ್ಷದ ಸಿದ್ಧಿ ಸಾಧನೆಗಳನ್ನು ವೈಭವೀಕರಿಸಿ ಹೇಳಿದರೂ ಸಹಿಸಬಹುದು. ಆದರೆ ಎದುರು ಪಕ್ಷಗಳನ್ನು ಹಳಿಯುವುದು ಸರಿಯಲ್ಲ. ಅದರಲ್ಲಿಯೂ ವ್ಯಕ್ತಿನಿಂದನೆ ಕೆಳಮಟ್ಟಕ್ಕೆ ಇಳಿದಿರುವುದು ಅಕ್ಷಮ್ಯ. ಚುನಾವಣಾ ಆಯೋಗವು ಎಲ್ಲ ಪಕ್ಷಗಳಿಗೂ ಒಂದು ಏಕರೂಪದ ಪ್ರಚಾರ ಸಂಹಿತೆಯನ್ನು ಅನುಶಾಸನವಾಗಿಸಬೇಕು. ಚುನಾವಣಾ ಸಂಹಿತೆಯಲ್ಲಿ +ಯಾರೂ ಯಾವ ಪಕ್ಷವನ್ನೂ ಖಂಡಿಸಕೂಡದು +ಯಾರೂ ಯಾವ ವ್ಯಕ್ತಿಯನ್ನೂ ನಿಂದಿಸಕೂಡದು +ಎಂಬ ಎರಡು ಅಂಶಗಳಿಗೆ ಒತ್ತುಕೊಡಬೇಕು. ಈ ಲಕ್ಷಣರೇಖೆಯನ್ನು ಉಲ್ಲಂಘಿಸಿದ ವ್ಯಕ್ತಿಯನ್ನು ಚುನಾವಣಾ ಅಭ್ಯರ್ಥಿತನಕ್ಕೆ ಅನರ್ಹಗೊಳಿಸಬೇಕು. ವಿಧಾನಸಬೆಗಾಗಲಿ, ಲೋಕ ಸಭೆಗಾಗಲಿ ಎಲ್ಲ ಚುನಾವಣೆಯೂ ಆರೋಗ್ಯಕರ ನೆಲೆಯಲ್ಲಿ ಗಂಭೀರವಾಗಿ ನಡಯಬೇಕೆಂದು ಮತದಾರರು ಬಯಸುತ್ತಾರೆ. ಎಲ್ಲ ಪಕ್ಷಗಳೂ ಜನಸೇವೆಗೆಂದು ಹುಟ್ಟಿದ ಶ್ರೇಷ್ಠ ಪಕ್ಷಗಳು. ನಾನು ಯಾವ ಪಕ್ಷಕ್ಕೂ ಸೇರಿದವಳಲ್ಲ ಎನ್ನುವುದಕ್ಕಿಂತಾ ಎಲ್ಲ ಪಕ್ಷಗಳಿಗೂ ಸೇರಿದವಳು ಎಂದು ಹೇಳುವುದರಲ್ಲಿ ಅರ್ಥವಿದೆ. ಜನಪರ ಜೀವಪರ ತುಡಿತದ, ಮಾನವೀಯ ಕಾಳಜಿಯ ಪಕ್ಷಗಳಿಗೆ ನನ್ನ ಸಹಮತ ಉಂಟು. +ದೀನದಲಿತರ ದುಃಖದುಮ್ಮಾನಗಳನ್ನು ಹೋಗಲಾಡಿಸಿ ಕಣ್ಣೀರನ್ನು ಒರೆಸುವುದಕ್ಕೆ ನಾಡು ಮುಂದಾಗಬೇಕೆಂದು ನೂರು ವರ್ಷಗಳ ಹಿಂದೆ ಸಿಂಹವಾಣಿ ಮೊಳಗಿಸಿದ್ದು ಸ್ವಾಮಿ ವಿವೇಕಾನಂದರು. ಅವರು ‘ದರಿದ್ರ ದೇವೋ ಭವ’ ಎಂಬ ವಾಕ್ಯ ಹೇಳಿದರು. ನಾವು ಅದರೊಂದಿಗೆ ಕೃಷಿಕ ದೇವೋಭವ, ಕಾರ್ಮಿಕ ದೇವೋಭವ, ಎಂದೂ ಸೇರಿಸಬಹುದು. ನಿಜ, ದುಡಿಯುವವರೇ ದೇವರು. ಶ್ರಮವೇ ದೇವರು. ಮೈಗಳ್ಳರು ಪ್ರೇತಗಳು. ದಶಾವತಾರಗಳಿಂದ ರಾಮನಾಗಿ ಕೃಷ್ಣನಾಗಿ, ಬುದ್ಧನಾಗಿ, ಯಾವುದಾದರೂ ಒಂದು ರೂಪದಲ್ಲಿ ದೇವರು ಬರುತ್ತಾನೆಂಬ ನಂಬಿಕೆಗೆ ಇಂಬುಕೊಟ್ಟು ಹೇಳುವುದಾದರೆ, ಇಂದು ದೇವರು ನಾಡಿಗಾಗಿ, ಜನರಿಗಾಗಿ ದುಡಿಯುವವರ ರೂಪದಲ್ಲಿ ಬಂದಿದ್ದಾನೆಂದು ತಿಳಿಯಬಹುದು. +ಜಾತಿಮತ ಮಠ ಮಂದಿರ ಮಸೀದಿ ಚರ್ಚು ಗುಡಿ ಗೋಪುರಗಳು ಅವುಗಳ ಪಾಡಿಗೆ ಅವು ಇರಲಿ. ಧರ್ಮಗಳೂ ಧರ್ಮಗುರುಗಳೂ ಮಠಾಧೀಶರೂ ಸಮಾಜದ ಹಿತಚಿಂತಕರು. ಧರ್ಮದಿಂದ ಧರ್ಮಸಂಸ್ಥೆಗಳಿಂದ ಅಶಾಂತಿ ಇಲ್ಲ. ಆದರೆ ಧರ್ಮಾಂಧರಾದ ಮೂಲಭೂತವಾದಿ ರಕ್ಕಸರಿಂದ ರಕ್ತಪಾತಗಳಾಗುತ್ತಿವೆ. ಮತಗಳಿಂದ ಅಪಾಯವಾಗಲಿಲ್ಲ. ಮತಾಂಧರಿಂದ ಗಂಡಾಂತರ ಬಂದಿದೆ. ಮತ ಧರ್ಮಗಳಲ್ಲಿ ಗುರುಪೀಠಗಳಲ್ಲಿ ಜನಮುಖಿ ಹಾಗೂ ಸಹಿಷ್ಣುತೆ – ಸಹಕಾರ – ಸಮನ್ವಯಗಳ ಧೋರಣೆ ಕಾಣಿಸದಿದ್ದಾಗ ಮುಖ ಮೋರೆ ನೋಡದೆ ಸಮಾಜ ಮತ್ತು ಸರಕಾರ ತನ್ನ ಗದಾಪ್ರಹಾರ ಮಾಡುವುದು ತಪ್ಪಲ್ಲ. ಪೂಜಾ ಸ್ಥಳಗಳೂ ಪ್ರಾರ್ಥನಾ ಮಂದಿರಗಳೂ ಸಿಡಿಮದ್ದು, ಬಂದೂಕು ತುಂಬಿದ ಆಯುಧಾಗಾರ ಆಗಬಾರದು. ಹೋಳಿ ಹಬ್ಬದ ದಿವಸ, ಮೊಹರಮ್ಮಿನ ಹಬ್ಬದಲ್ಲಿ, ಜಾತ್ರೆತೇರು ಹರಿಯುವಾಗ, ಉರುಸು ಸಾಗುವಾಗ ಅಣ್ಣತಮ್ಮಂದಿರೆಂದು ಅಪ್ಪಿ ಆಲಂಗಿಸುವುದು ಅದೊಂದು ಗಳಿಗೆಯ ತೋರಿಕೆಯ ನಾಟಕಾಭಿನಯ ಆಗಬಾರದು. ಬದುಕಿನುದ್ದಕ್ಕೂ ನಿತ್ಯ ನಡೆವಳಿಕೆಯಲ್ಲಿ ಭ್ರಾತೃತ್ವ, ಸೌಹಾರ್ದ ಬೇರು ಬಿಟ್ಟು ಜೀವಂತವಾಗಬೇಕು. ನನ್ನದೊಂದು ಕವಿತೆ ನೆನಪಾಗುತ್ತಿದೆ. +ನಾ ಬರೆದೆ ನಿಮಗಾಗಿ +ನಾ ಬರೆದೆ ನನಗಾಗಿ +ನಾ ಬರೆದೆ ಜನಕಾಗಿ +ನಾ ಬರೆದೆ ಜಗಕಾಗಿ +ಎಲ್ಲರಿಗು ತಲಪಲಿ ನನ್ನ ಈ ಕವನ +ಎಲ್ಲರಿಗು ಸೇರಲಿ ನನ್ನ ಈ ಕವನ +ಎಲ್ಲರಿಗೂ ದೊರಕಲಿ ನನ್ನ ಈ ಕವನ +ಶತ್ರುತ್ವ ತೊಲಗಲಿ +ಮಿತ್ರತ್ವ ಉಳಿಯಲಿ +ಭ್ರಾತೃತ್ವ ಬೆಳೆಯಲಿ +ಎಲ್ಲರಿಗು ಸೇರಲಿ ನನ್ನ ಈ ಕವನ +ಸಹನೆಯ ಬಿತ್ತೋಣ +ಶಾಂತಿಯ ಬೆಳೆಯೋಣ +ಮಾನವತೆ ಉಳಿಸೋಣ +ಎಲ್ಲರಿಗು ದೊರಕಲಿ ನನ್ನ ಈ ಕವನ +ಪ್ರತಿಯೊಬ್ಬರಿಗೂ ವಾಕ್ ಸ್ವಾತಂತ್ರ್ಯ, ಧಾರ್ಮಿಕ ಸ್ವಾತಂತ್ರ್ಯ ಸಂವಿಧಾನಾತ್ಮಕ ಹಕ್ಕು. ಇದಕ್ಕೆ ಯಾವತ್ತೂ ಚ್ಯುತಿ ಬರಬಾರದು. ತಮಗೆ ಇಷ್ಟ ಬಂದ ದೈವವನ್ನು ಮನಬಂದಂತೆ ಪೂಜಿಸುವ ಸ್ವಾತಂತ್ರ ಕ್ಕೆ ಧಕ್ಕೆಯಾಗದಿರಲಿ. ಆದರೆ ಧ್ವನಿವರ್ಧಕ ಬಳಸಿ ಇಡೀ ಪರಿಸರದ ಪ್ರಶಾಂತತೆಯನ್ನು ಕಲಕುವುದು, ಬಲವಂತ ಮಾಘಸ್ನಾನ ಮಾಡುವುದು ಬೇಡ. ಅವರವರ ಮನೆಯಲ್ಲಿ, ಮಂದಿರದಲ್ಲಿ ಮಾಡುವ ಮಂತ್ರ ಪಠನ, ಪೂಜೆ ಅವರವರಿಗಷ್ಟೇ ಸೀಮಿತವಾಗಿದ್ದು ಉಳಿದವರ ಮೇಲೆ ಹೇರುವ ದಬ್ಬಾಳಿಕೆ ಸರಿಯಲ್ಲ. ಪೂಜಾ ಮಂದಿರ ಹಾಗೂ ಪ್ರಾರ್ಥನಾ ಸ್ಥಳಗಳಿಗೆ ಧ್ವನಿವರ್ಧಕಗಳನ್ನು ಅಳವಡಿಸಿ ಶಬ್ದ ಮಾಲಿನ್ಯಗೊಳಿಸುವುದು ತಕ್ಷಣ ನಿಲ್ಲಿಸುವುದು ಲೇಸು. ಯಾವುದೇ ಒಂದು ಧರ್ಮವನ್ನು ಕುರಿತು ನಾನು ಇಲ್ಲಿ ಉಲ್ಲೇಖಿಸುತ್ತಿಲ್ಲ. ಎಲ್ಲ ಧರ್ಮಗಳ ಪೂಜಾ ಸ್ಥಳಗಳಿಗೂ ಪ್ರಾರ್ಥನಾ ಮಂದಿರಗಳಿಗೂ ಅನ್ವಯಿಸುವ ಏಕರೂಪದ ಶಾಸನ ತಂದು ಧ್ವನಿವರ್ಧಕಗಳನ್ನು ಅಳವಡಿಸುವಂತೆ ನಿಯಂತ್ರಿಸಿದರೆ ವಿದ್ಯಾರ್ಥಿಗಳಿಗೆ, ರೋಗಿಗಳಿಗೆ, ಶಾಂತಿಪ್ರಿಯರಿಗೆ, ಕಾರ್ಯಮಗ್ನರ ನೆಮ್ಮದಿಗೆ ಪೂಜಾಸ್ಥಳಗಳು ಉಪಕಾರ ಮಾಡಿದಂತೆ ಆದೀತು. +ಇರಲಿರಲಿ ಅವರವರ ಧರ್ಮಗುಡಿಗಳು +ಅಂತರ್ಮುಖಿಯಾಗಿರಲಿ ಆರಾಧಿಸುವ ಹಕ್ಕುಗಳು +ತಂತಮ್ಮ ಮಂತ್ರ ಪಠಣ ಪೂಜಾ ಘೋಷಗಳು +ನಿರಂತರ ನಡೆಯುತಿರಲಿ ನಿಲ್ಲದೆಯೆ ಹಗಲಿರಳು +ಗುಡಿಗೋಪುರ ಚರ್ಚುಗಳಲಿ ಮಸೀದಿಗಳಲಿ +ಪರಮ ಪವಿತ್ರ ಪೂಜಾ ಮಂದಿರಗಳಲಿ +ಹೊಮ್ಮಲಿ ಧೂಪಧೂಮ ಅಗರು ಕರ್ಪೂರ +ಆರತಿ ಬೆಳಗಲಿ ಗಂಟೆಜಾಗಟೆಯು ಮೊಳಗಲಿ +ಮುಗಿದು ಮಣಿಯುವ ಮನಸು ಕನಸುಗಳಿಗೆ +ಉಣಿಸಲಿ ಗ್ರಹಿಸಲಿ ದೈವ ಅನುಗ್ರಹಿಸಲಿ +ಬಾಳು ನೆಮ್ಮದಿಗೆ ಪ್ರಾರ್ಥನೆಗಳು ಘಟಿಸಲಿ +ಯಾರ ತಕರಾರು ಅಡ್ಡಿ ಹಂಗು ಹಸಾದ +ಜನರ ಮೌನ ಪ್ರಾರ್ಥನೆಗೆ ಅಡ್ಡ ಬರದಿರಲಿ +ನಿಶ್ಯಬ್ದ ಪರಮ ಪ್ರಾರ್ಥನೆಯ ಕದಡುವೀ +ಧ್ವನಿವರ್ಧಕಗಳ ಬಳಕೆಗೆ ನಿಷೇಧವಿರಲಿ +ಕನ್ನಡ ಸಾಹಿತ್ಯದ ಉದ್ದಕ್ಕೂ ಭಿನ್ನಪಾತಳಿಗಳಲ್ಲಿ ಎದ್ದುಕಾಣುವ ಬಂಡಾಯ ಸಹ ಸಾಂಸ್ಕ ತಿಕ ಸರ್ವಾಧಿಕಾರ ಧೋರಣೆಯ ವಿರುದ್ಧವಾಗಿತ್ತು. ಭಾಷೆಯ ದಬ್ಬಾಳಿಕೆಯನ್ನು ಧಿಕ್ಕರಿಸಿದ್ದು, ಮಾರ್ಗ-ದೇಸಿ ಹಾಗೂ ವಸ್ತುಕ-ವರ್ಣಕ ಪಲ್ಲಟ, ಛಂದಸ್ಸಿನಲ್ಲಾದ ಮಾರ್ಪಾಟು, ಜನಭಾಷೆಯನ್ನು ಮಹಾಕಾವ್ಯ ಮತ್ತು ಆಸ್ಥಾನದ ಭಾಷೆಯಾಗಿಸಿದಂತೆ ಮತ್ತೆ ಅದನ್ನು ಜನಭಾಷೆಗೇ ಜಗ್ಗಿದ್ದು-ಇವೆಲ್ಲ ಕನ್ನಡ ಸಾಹಿತ್ಯ ಕಂಡ ಸ್ಥಿತ್ಯಂತರಗಳು. ಜೈನರ ಕಾವ್ಯದ, ಶರಣರ ವಚನದ, ದಾಸರ ಹಾಡಿನ ಕನ್ನಡ ನಡೆದುಬಂದ ದಾರಿಯ ಈ ವೈವಿಧ್ಯಗಳ ದಿವ್ಯ ತಿರುವು ನಮ್ಮ ಸಾಹಿತ್ಯದ ಶಕ್ತಿ. ರತ್ನಾಕರವರ್ಣಿಯ ಸಂದೇಶ ಸಾರ್ವಕಾಲಿಕ ವಾಸ್ತವಕ್ಕೆ ಕೆತ್ತಿದೆ ಪ್ರತಿಮೆ, ಎತ್ತಿದ ಸೊಲ್ಲು : +ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು +ರಯ್ಯ ಮಂಚಿದಿಯೆನೆ ತೆಲುಗರು +ಅಯ್ಯಯ್ಯ ಎಂಚ ಪೊರ್ಲಾಂಡೆಂದು ತುಳುವರು +ಮೆಯ್ಯುಬ್ಬಿ ಕೇಳಬೇಕಣ್ಣ || +ಇಡೀ ಭಾರತೀಯ ಸಾಹಿತ್ಯ ಪರಂಪರೆಯಲ್ಲಿ ಹೀಗೆ ತನ್ನ ಭಾಷೆಯೊಂದಿಗೆ ನೆರೆಹೊರೆಯ ಜನರ ತಾಯಿಭಾಷೆಯನ್ನೂ ಪರಿಭಾವಿಸಿ ಅಕ್ಕರೆಯುಕ್ಕಿ ಹೀಗೆ ಚಿಂತಿಸಿದ ಹೃದಯಸಿರಿ ಅಪರೂಪ. ಸಾಹಿತಿಗಳಿಗೂ ಇದು ದಿಕ್ಸೂಚಿಯಾಗಿರುವ ಮಾತು. ದೂರದ ಇಂಗ್ಲಿಷ್ ಭಾಷೆಯಲ್ಲಿ ಏನಾಗುತ್ತಿದೆ ಎಂದು ವಾಗ್ವಾದ ನಡೆಸುತ್ತೇವೆ, ಅದು ತಪ್ಪಲ್ಲ ಎಂಬುದೂ ದಿಟವೆ. ಆದರೆ ನಮ್ಮ ಅಕ್ಕಪಕ್ಕದ ಭಾಷೆಗಳಲ್ಲಾಗುತ್ತಿರುವ ಪ್ರಗತಿ ಪಲ್ಲಟಗಳ ಪರಿಚಯವೇ ಇರುವುದಿಲ್ಲವೆಂಬುದು ವಿಷಾದನೀಯ. ನಮ್ಮ ಬದುಕಿನ ಸಾಂಸ್ಕ ತಿಕ ಬೇರುಗಳಿಗೆ ತಾಕಿದ, ಉಸಿರಿಗೆ ಹತ್ತಿರದ ಭಾಷಾಸಾಹಿತ್ಯದ ಪರಿಚಯ ಇರಬೇಕಾದುದು ಅನಿವಾರ್‍ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕ ತಿಕ ಇರಬೇಕಾದುದು ಅನಿವಾರ್‍ಯ ಹಾಗೂ ಪ್ರಯೋಜನಕಾರಿ. ಭಾಷಾ ಬಾಂಧವ್ಯದ ಬೆಸುಗೆಗೆ, ಸಾಂಸ್ಕ ತಿಕ ‘ಕೊಡು-ಪಡೆ’ಗಳಿಗೆ ಇದು ದಾರಿ ತೆರೆಯುತ್ತದೆ. ರತ್ನಾಕರವರ್ಣಿಯ ಈ ತಿಳಿವಳಿಕೆಯ ಬೆಳಕು ಇಂದಿನ ಯುಗಕ್ಕೆ ತೀರ ಅವಶ್ಯ. ರತ್ನಾಕರವರ್ಣಿಯ ಹಾಡುಗಳು ಮೈಲಿಗೆಯಲ್ಲ. ನಮ್ಮ ಸಂಗೀತಗಾರರು ಸಂಗೀತ ಕಚೇರಿಗಳಲ್ಲಿ ಕಡ್ಡಾಯವಾಗಿ ಹಾಡಬೇಕು. ಜೇನು ಸವರಿದ ಸುಮಧುರ ಕಂಠಸಿರಿಯಿಂದ ಕನ್ನಡ ಕವಿತೆಗಳನ್ನು ಹಾಡಿ ಮನೆ ಮನಗಳನ್ನು ತಣಿಸಿ ಕುಣಿಸುತ್ತಿರುವ ಸುಗಮ ಸಂಗೀತಗಾರರನ್ನು ಅಭಿನಂದಿಸುತ್ತೇನೆ. ಈ ಕಲಾವಿದರು ಆಧುನಿಕ ಕವಿತೆಗಳ ಜೊತೆಗೆ ಪ್ರಾಚೀನ ಕಾವ್ಯಗಳಿಂದಲೂ ಆರಿಸಿದ ಅರ್ಥಪೂರ್ಣ ಪದ್ಯಗಳನ್ನು ಹಾಡುವುದು ಅಗತ್ಯ. ಆ ಮೂಲಕ ಪರಂಪರೆಯ ಸುವರ್ಣ ಕೊಂಡಿ ಕಳಚಿ ಹೋಗದ ಹಾಗೆ ಪುನರುಜ್ಜೀವಿಸಬೇಕು. ಕನ್ನಡ ಕಾವ್ಯಪರಂಪರೆಯ ಸಾತತ್ಯವನ್ನು ಪುನರುತ್ಥಾನಿಸುವುದಕ್ಕೆ ಗಮಕಿಗಳೂ ಪ್ರಯತ್ನಶೀಲರಾಗಿರುವುದು ಶ್ಲಾಘನೀಯ. ಗಮಕಿಗಳು ಚಂಪೂಕಾವ್ಯಗಳನ್ನೂ ರಗಳೆ ವಚನಗಳನ್ನೂ ಬೇರೆಬೇರೆ ಷಟ್ಪದಿ ಕಾವ್ಯಗಳನ್ನೂ ಹಾಡಿ ಗಮಕಕ್ಕೆ ವಿಸ್ತಾರ ಮತ್ತು ವೈವಿಧ್ಯ ತರಬೇಕು. +ಜೀವಸಂಕುಲವನ್ನು ಕಾಪಾಡಿದ, ಈಗಲೂ ರಕ್ಷಿಸುತ್ತಿರುವ ಅಮೃತ ಚೈತನ್ಯದ ಆಮ್ಲಜನಕಕ್ಕೆ ಚ್ಯುತಿ ಬಾರದಂತೆ ಉಳಿಸುವ ನೈತಿಕ ಹೊಣೆ ಹೊತ್ತು, ಪರಿಸರಮಾಲಿನ್ಯಕ್ಕೆ ಎಡೆಕೊಡುವುದಿಲ್ಲವೆಂಬ ದೃಢ ಪ್ರತಿe ನಮ್ಮದಾಗಲಿ. ಗಿಡಮರಗಳ ಮಹತ್ವವನ್ನು ಮನಗಾಣಿಸುವ ಪಾಠಗಳು ಪಠ್ಯಗಳಲ್ಲಿ ಹೆಚ್ಚು ಸೇರಲಿ. +ಕಾಶ್ಮೀರದಲ್ಲಿ ದಿನನಿತ್ಯ ನಿರಂತರವಾಗಿ ನಡೆಯುತ್ತಿರುವ ಬರ್ಬರ ಹತ್ಯಾಕಾಂಡ ಕಲ್ಲೆದೆಗಳನ್ನೂ ತಲ್ಲಣಗೊಳಿಸುವಂಥದು. ಉಗ್ರಗಾಮಿ ಭಯೋತ್ಪಾದಕರು ಹಿಂಸಾಕಾಂಡದಲ್ಲಿ ವಿಜೃಂಭಿಸುತ್ತ ಅಮಾಯಕ ನಾಗರಿಕರನ್ನು, ಕಾಶ್ಮೀರಿ ಪಂಡಿತರನ್ನು, ಹತ್ಯೆ ಮಾಡುತ್ತಿದ್ದಾರೆ. ಹಿಂಸೆಗೆ ಪ್ರತಿಹಿಂಸೆ ಪರಿಹಾರವಲ್ಲವೆಂಬ ದಿಟದ ಮನವರಿಕೆಯಾದರೂ ಜೀವಹಾನಿಗೆ ವಿರಾಮ ಸಾಧ್ಯವಾಗಿಲ್ಲ. ಒಮ್ಮೆ ಭಾರತದ ತೊಟ್ಟಿಲು ತೂಗುತ್ತ ಇನ್ನೊಮ್ಮೆ ಪಾಕಿಸ್ತಾನವನ್ನು ಚಿವುಟುತ್ತ, ಮದ್ದು ಗುಂಡು ಯುದ್ಧವಿಮಾನ ಸರಬರಾಜು ಮಾಡುತ್ತ, ಹಲವು ರಾಷ್ಟ್ರಗಳನ್ನು ಅಲ್ಲೋಲ ಕಲ್ಲೋಲಗೊಳಿಸುವ ಬಲಿಷ್ಠ ಗೋಮುಖ ವ್ಯಾಘ್ರಗಳನ್ನು ಸಂಪೂರ್ಣ ನಂಬಬಾರದು. ಭಾರತ, ಚೈನಾ, ಪಾಕಿಸ್ತಾನ, ಶ್ರೀಲಂಕಾ, ಮಯನ್ಮಾರು ಮುಂತಾದ ರಾಷ್ಟ್ರಗಳೆಲ್ಲ ಒಗ್ಗೂಡಿದರೆ ಅಮೆರಿಕವನ್ನು ಮೂಸುವವರು ಯಾರು? ಈ ಕಾರಣಕ್ಕಾಗಿಯೇ ಅಭಿವೃದ್ಧಿ ಪಥದಲ್ಲಿರುವ ನಮ್ಮಂಥ ದೇಶಗಳ ನಡುವೆ ಹೊಂದಾಣಿಕೆ ಸಾಧ್ಯವಾಗದಂತೆ ಒಡಕುಮೂಡಿಸಲು ಬಲಿಷ್ಠ ರಾಷ್ಟ್ರದ ಹುನ್ನಾರ. ಅಮೆರಿಕದ ಸೊಕ್ಕು ಮಣ್ಣುಮುಕ್ಕುವ ದಿನಗಳು ಹತ್ತಿರ ಬಂದಿವೆ. ಭಯೋತ್ಪಾದಕತೆಯನ್ನು ಹತ್ತಿಕ್ಕುವ ದಿಕ್ಕಿನಲ್ಲಿ ಮುಂದುವರಿದ ರಾಷ್ಟ್ರಗಳು ಪರಾವಲಂಬಿ ಗಳಾಗಿದ್ದಾರೆ. ಸಾಮೂಹಿಕ ಸಂಘಟನೆಯಿಂದಲೇ ಸಮೂಹ ಸನ್ನಿಯನ್ನು ಬಗ್ಗುಬಡಿಯಲು ಸಾಧ್ಯವೆಂಬ ವಾಸ್ತವ ಪ್ರe ಎಚ್ಚೆತ್ತಿದೆ. +ರಾಷ್ಟ್ರೀಯ ಪಕ್ಷಗಳ ಅಟ್ಟಹಾಸದಲ್ಲಿ ಪ್ರಾಂತೀಯ ಪಕ್ಷಗಳು ಕುಸಿಯಬಾರದು. ಪ್ರಾಂತೀಯ ಪಕ್ಷಗಳ ಕುತ್ತಿಗೆ ಹಿಚುಕುವ ಹುನ್ನಾರಗಳಿಗೆ ಬಲಿಯಾಗಬಾರದು. ರಾಷ್ಟ್ರೀಯ ಭಾಷೆಗಳ ಮೆರವಣಿಗೆಯಲ್ಲಿ ಪ್ರಾದೇಶಿಕ ಭಾಷೆಗಳೂ ರಾಷ್ಟ್ರೀಯ ಧರ್ಮದ ಸೋಗಿನಲ್ಲಿ ದೇಸೀಯ ಜನಪದರ ಧರ್ಮಗಳೂ ಕಳೆದುಹೋಗಬಾರದು. ರಾಷ್ಟ್ರೀಯ ಪ್ರಧಾನ ಸಂಸ್ಕ ತಿಯ ಹಮ್ಮು ಬಿಮ್ಮುಗಳಲ್ಲಿ ಪ್ರಾದೇಶಿಕ ಸಮಸಂಸ್ಕ ತಿಗಳ ಉಸಿರು ಕಟ್ಟಬಾರದು. ದೇಸೀಯ ಹಾಗೂ ಸ್ಥಳೀಯ ತತ್ವಗಳಿಗೆ ಸಲ್ಲಬೇಕಾದ ಮಹತ್ವ, ಮನ್ನಣೆ ಇತ್ತು ಉಳಿಸಿಕೊಳ್ಳುವುದು ಒಳ್ಳೆಯದು. ಪ್ರಾದೇಶಿಕ ವೈವಿಧ್ಯ ಅಪಾಯಕಾರಿಯಲ್ಲ. +ಭಾರತ ರಜಗಳ ಮಹಾರಾಜ. ಪ್ರಗತಿ ಬಯಸುವ ಯಾವ ರಾಷ್ಟ್ರದಲ್ಲಿಯೂ ಇಲ್ಲಿರುವಷ್ಟು ರಜಗಳಿಲ್ಲ. ಹೊಸವರ್ಷದ ಪಂಚಾಂಗ ಹಿಡಿದರೆ ಮೊದಲು ನೋಡುವುದು ಆ ವರ್ಷದಲ್ಲಿ ಎಷ್ಟು ರಜಗಳಿವೆ, ರಜದ ಹಬ್ಬಗಳು ಭಾನುವಾರ ಬಂದು ಎಷ್ಟು ರಜ ತಪ್ಪಿತು – ಎಂದು! ಹಾಲಿ ಇರುವ ರಜಗಳ ಏರ್ಪಾಟನ್ನು ಮುರಿದು ಮರುಸಂಯೋಜನೆ ಮಾಡುವುದರತ್ತ ಪರಿಭಾವಿಸುವ ಹಂತ ಮುಟ್ಟಿದ್ದೇವೆ. ಇಡೀ ದೇಶಕ್ಕೆ ಅನ್ವಯಿಸುವಂತೆ ವರ್ಷಕ್ಕೆ ಇಷ್ಟು ಎಂದು ರಜಗಳ ಸಂಹಿತೆ ಜಾರಿಗೊಳ್ಳುವುದು ಲೇಸು. ಸಾರ್ವತ್ರಿಕ ರಜಗಳು ರಾಷ್ಟ್ರೀಯ ಮಹತ್ವದ್ದಾಗುವುದು ಸೂಕ್ತ : ಆಗಸ್ಟ್ ೧೫, ಅಕ್ಟೋಬರ್ ೨, ಜನವರಿ ೨೬ – ಈ ಮೂರು ದಿನಗಳಷ್ಟೆ ಇಡೀ ಭಾರತಕ್ಕೆ ಅನ್ವಯಿಸುವ ರಜೆಯ ದಿನಗಳಾಗುವುದು ಸಮಂಜಸ. ಆಯಾ ಪ್ರಾಂತ್ಯದ ಸಾಂಸ್ಕ ತಿಕ ಮಹತ್ವದ ಹಾಗೂ ಜಾತಿಮತಧರ್ಮದ ಸೋಂಕು ಇರದ ಒಂದು ದಿನ ವರ್ಷದ ರಜಕ್ಕೆ ಅರ್ಹವಾಗಬಹುದು. ಕರ್ನಾಟಕದಲ್ಲಿ ನವೆಂಬರ್ ೧ ರಾಜ್ಯೋತ್ಸವ ಮಹತ್ವದ ರಜದ ದಿವಸವಾಗುವುದು ಸರಿ. ಉಳಿದಂತೆ ಉದ್ಯೋಗದಲ್ಲಿರುವ ಪ್ರತಿಯೊಬ್ಬರಿಗೂ ವರ್ಷದಲ್ಲಿ, ಅವರ ಗಳಿಕೆಯ ರಜವಲ್ಲದೆ, ಒಟ್ಟು ಇಪ್ಪತ್ತು ದಿನಗಳ ಸಾಂದರ್ಭಿಕ ರಜ ಪಡೆಯಲು ಅವಕಾಶವಿದ್ದರೆ ಸಾಕು. ಒಟ್ಟಾರೆ, ಎಲ್ಲ ಮತಧರ್ಮಗಳೂ ಶ್ರೇಷ್ಠವೆ ಆಗಿರುವುದರಿಂದ ಯಾವೊಂದನ್ನೂ ನಿಯಮ ಮುರಿದು ಓಲೈಸಬೇಕಾಗಿಲ್ಲ. ಆತ್ಯಂತಿಕವಾಗಿ ರಾಷ್ಟ್ರಧರ್ಮಕ್ಕೆ ಮನ್ನಣೆ ಸಲ್ಲಲಿ. +ಸಮೂಹ ಸನ್ನಿಯಿಂದ ಸಾಂಸ್ಕ ತಿಕ ಚಳವಳಿಗಳು ಹದ್ದು ಮೀರಿ, ದಾರಿತಪ್ಪಿದ್ದುಂಟು. ಅತಿಭಾವುಕತೆಯ ಅಪಸ್ಮಾರದಿಂದ ಪಥಭ್ರಷ್ಟರಾಗುವ ಅಪಾಯ ತಪ್ಪಿದ್ದಲ್ಲ. ಮುಷ್ಕರ, ಧರಣಿ, ಪ್ರತಿಭಟನೆ, ಬಂದ್ ಮೊದಲಾದುವು ಇಂದು ಮೂಲಾರ್ಥದಿಂದ ಬಹುದೂರ ಬಂದು, ತಮ್ಮ ಶಕ್ತಿಯ ಪಾವಿತ್ರ ವನ್ನು ಕೆಡಿಸಿ ದುರುಪಯೋಗ ಮಾಡುತ್ತಿವೆ. ನಮ್ಮ ಯಾವುದೇ ವಿರೋಧಾಭಿವ್ಯಕ್ತಿಯ ವಿಧಾನ ಪ್ರಗತಿಚಕ್ರದ ಚಾಲನೆಯನ್ನು ನಿಲ್ಲಿಸಬಾರದು. ಮಾತತ್ತಿದರೆ ಬಂದ್‌ಗೆ ಕರೆ ಕೊಡುವುದು ವಿಪರ್ಯಾಸ. ಸಮಾಜದ ಸೌಷ್ಠವ ಚಲನೆಯನ್ನೇ ಅಸ್ತವ್ಯಸ್ತಗೊಳಿಸುವ ‘ಬಂದ್’, ಜೀವವಿರೋಧಿಯಾದ ಉಪಕ್ರಮ. ಅದರಿಂದ ಆಗುವ ಅನಾಹುತ, ನಷ್ಟ, ನೋವು ಊಹಾತೀತ. ಮುನ್ನಡೆಯನ್ನು ಬಯಸುವ ರಾಷ್ಟ್ರಗಳ, ಶತ್ರುಗಳು ಬಂದ್ ಮತ್ತು ಮುಷ್ಕರ. ಹೀಗೆ ಹೇಳುವಾಗ ಧರಣಿ, ಮುಷ್ಕರ, ಪ್ರತಿಭಟನೆ ತೋರದೆ ಎಲ್ಲ ದಬ್ಬಾಳಿಕೆಯನ್ನು ಮೌನವಾಗಿ ಸಹಿಸಿಕೊಳ್ಳಬೇಕೆಂದು ಅರ್ಥವಲ್ಲ. ಮಾನವ ಸ್ವಾತಂತ್ರ್ಯ ಹಾಗೂ ಮಾನವ ಹಕ್ಕುಗಳನ್ನು ಸುಲಿಗೆ ಮಾಡುವ, ದಮನಗೊಳಿಸುವ ಎಲ್ಲ ಹುನ್ನಾರಗಳನ್ನು ಬಯಲಿಗೆ ಎಳೆದು ಖಂಡಿಸಬಾರದೆಂದಲ್ಲ. ಸಾಮ್ರಾಜ್ಯಷಾಹಿ ಪ್ರಮತ್ತತೆಯನ್ನು ಬಗ್ಗುಬಡಿಯುವುದು ಅನಿವಾರ್‍ಯ. ಆದರೆ ವಿರೋಧವನ್ನು ದಾಖಲಿಸುವ ವಿಧಾನದ ಸ್ವರೂಪ ಉತ್ಪಾದಕವಾಗಿರಬೇಕು. ಪ್ರತಿಭಟನೆಯ ಪ್ರತೀಕವಾಗಿ ಕಪ್ಪು ಪಟ್ಟಿಯನ್ನು ಧರಿಸಿ ಕೆಲಸಕ್ಕೆ ಹಾಜರಾಗಬಹುದು, ಕೆಲಸದ ಅವಧಿ ಮುಗಿಸಿ ಅನಂತರ ಜನತಾಂತ್ರಿಕವಾದ ಸಂಧಾನದ ಮಾರ್ಗಗಳಿಂದ ಪ್ರತಿಭಟನೆ ಸಂಬಂಧದ ಸಭೆ ನಡೆಸಬಹುದು. +ಹೀಗೆಯೇ ಭಾರತದ ಸರ್ವಾಂಗೀಣ ಪ್ರಗತಿಗಾಗಿ ಸಂವಿಧಾನಾತ್ಮಕವಾಗಿ ಅಳವಡಿಸಬೇಕಾದ ಇನ್ನೊಂದು ಜರೂರು ಜನಸಂಖ್ಯಾಸ್ಫೋಟ ನಿಯಂತ್ರಣ. ಜಾತಿಮತ ಧರ್ಮ ಪಕ್ಷ ಪ್ರದೇಶಗಳ ತಾರತಮ್ಯ ತೋರದೆ, ಒಬ್ಬರು ಅಥವಾ ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿಗೆ ಅವಕಾಶ ಕೊಡದಂತೆ ಜನಸಂಖ್ಯೆಯನ್ನು ನಿಯಂತ್ರಿಸುವ ಕಾಯಿದೆ ೨೦೦೫ ರಿಂದ ಜಾರಿಗೆ ಬರಬೇಕು. +ಉಲ್ಬಣಿಸುತ್ತಿರುವ ಪ್ರಜಾಸಂಖ್ಯೆಯ ನಿಯಂತ್ರಣ ಗೋಳದ ಅಗತ್ಯಗಳಲ್ಲೊಂದು. ಭಾರತದ ಹಲವು ಸಮಸ್ಯೆಗಳಿಗೆ ಜನಸಂಖ್ಯಾಸ್ಫೋಟ ಕಾರಣ. ಜನರಿಗೆ ಇದರ ಅರಿವನ್ನು ಮೂಡಿಸಲು ಸರಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ, ಜನರೂ ಇದರಲ್ಲಿ ಕೈಜೋಡಿಸಿ ಸಹಕರಿಸಬೇಕು. ಜನಸಂಖ್ಯೆಯನ್ನು ಹತೋಟಿ ಮೀರದಂತೆ ಹಿಡಿತಕ್ಕೆ ತರಬೇಕಾದರೆ ಕಠಿಣ ಕ್ರಮಕ್ಕೂ ಮುಂದಾಗಬೇಕು. ಯಾವ ಧರ್ಮವೂ ಪ್ರಜೆಯೂ ದೇಶಕ್ಕಿಂತ ದೊಡ್ಡದಾಗಬಾರದು. ಮುಂದಿನ ವರ್ಷದಿಂದಲೇ ಸುಗ್ರೀವಾಜ್ಞೆ ಹೊರಡಿಸಿ ವಿಧಿಸಬೇಕಾದ ಷರತ್ತು: +೧. ಯಾವ ಪಕ್ಷವೇ ಆಗಲಿ ಚುನಾವಣೆಗೆ ಅಭ್ಯರ್ಥಿಯಾಗಿ ನಿಲ್ಲಬೇಕಾದರೆ ಇಬ್ಬರಿಗಿಂತ ಹೆಚ್ಚು ಮಕ್ಕಳಿರಕೂಡದು. ಚುನಾವಣೆ ಸಮೀಪಿಸುತ್ತಿದೆ, ಚುನಾವಣೆಗೆ ನಿಲ್ಲುವವರು ಕನ್ನಡ ಬಲ್ಲವರಾಗಿರಬೇಕು ಕನ್ನಡ ಬಲ್ಲವರಿಗೆ ಸೀಟು ಕನ್ನಡ ತಿಳಿದವರಿಗೆ ಓಟು ಎನ್ನುವುದು ಚುನಾವಣೆಯ ಒಂದು ತಾರಕ ಮಂತ್ರವಾಗಬೇಕು. ಸ್ವತಂತ್ರವಾಗಿ ಸ್ಪರ್ಧಿಸಿದ ಅಭ್ಯರ್ಥಿಗೆ ಕೂಡ ಇದೇ ನಿಯಮ. +೨. ಇಬ್ಬರು ಮಕ್ಕಳಿಗಿಂತ ಹೆಚ್ಚು ಮಕ್ಕಳಿದ್ದರೆ ಅಂಥ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿವೇತನ ಕೊಡಬಾರದು. +೩. ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರ ಸಾಲ ಕೊಡಬಾರದು. ಕೆಲಸಕ್ಕೆ ಸೇರುವಾಗ ಎರಡು ಮಕ್ಕಳಿದ್ದು ಆಮೇಲೆ ಹೆಚ್ಚು ಮಕ್ಕಳಾದರೆ ಯಾವುದೇ ಮುಂಬಡ್ತಿಗಳು ಸಿಗುವುದಿಲ್ಲವೆಂಬಂತಾಗಬೇಕು. +೪. ಅಲ್ಪಸಂಖ್ಯಾತ ಅಥವಾ ಧಾರ್ಮಿಕ ಕಾರಣಗಳ ರಿಯಾಯಿತಿ ಖಂಡಿತ ಇರಬಾರದು. +೫. ಕಾರ್ಮಿಕರೂ ರೈತರೂ ಸೇರಿದಂತೆ ಪ್ರತಿಯೊಬ್ಬ ಪ್ರಜೆಗೂ ಈ ನಿಯಮವಿರಬೇಕು. +೬. ಈ ನಿಯಮ ಪಾಲನೆಯಿಂದ ರೈತ ಕುಟುಂಬಗಳಿಗೆ ಹೆಚ್ಚು ಸುಖಪ್ರಾಪ್ತಿಯಿದೆ. ಆಸ್ತಿಯ ಹಂಚಿಕೆಯೂ ದೊಡ್ಡ ಕುಟುಂಬ ನಿರ್ವಹಣೆಯ ಹೊಣೆಯೂ ನಿವಾರಣೆ ಆಗುತ್ತದೆ. ಸಾಲಗಾರರಾಗುವುದು ತಪ್ಪುತ್ತದೆ. +* +* +* +ಅನೇಕಾನೇಕ ಪ್ರಶ್ನೆಗಳ ಸರಮಾಲೆ ಹಿಡಿದು ಅಧ್ಯಕ್ಷಭಾಷಣವನ್ನು ಲಂಬಿಸುವ ಅಪೇಕ್ಷೆ ಇಲ್ಲ. ನನಗೆ ನನ್ನ ಮಿತಿಯ ಅರಿವು ಇದೆ. ಕೆಲವೇ ಸಂಕೀರ್ಣ ಸಮಸ್ಯೆಗಳಿಗೆ ಸ್ಪಂದಿಸಿ ನನ್ನ ಗ್ರಹಿಕೆಗಳ ನಿರ್ವಚನಕ್ಕೆ ಸೀಮಿತಗೊಳಿಸಿದ್ದೇನೆ. ಸಮಾಜ, ಸಾಹಿತ್ಯ, ಸಂಸ್ಕ ತಿ, ಭಾಷೆ ಕುರಿತು ನನ್ನೊಳಗೆ ಮಿಡುಕುತ್ತ ಚಿಮುಗುಡುವ ಭಾವನೆಗಳನ್ನು ನಿಮ್ಮ ಮಡಿಲಿಗಿಟ್ಟಿದ್ದೇನೆ. ನಾನು ಹುಟ್ಟಿದಂದಿನಿಂದ ಕನ್ನಡದ ಶಿಷ್ಯೆ. ಸಮಗ್ರ ಕನ್ನಡ ಪರಂಪರೆಯೇ ನನ್ನ ಪಠ್ಯ, ಕರ್ನಾಟಕವೇ ನನ್ನ ಪಾಠಶಾಲೆ. ಈ ಕನ್ನಡ ಶಾಲೆಯಲ್ಲಿ ನಾನು ಜೀವನ ಪಾಠಗಳನ್ನು ಕಲಿತು ಬೆಳೆದ ವಿದ್ಯಾರ್ಥಿನಿ. ಹತ್ತಾರು ಸಂಗತಿಗಳಿಗೆ ಮುಖಾಮುಖಿಯಾಗುತ್ತ ಮಾತಾಡಿದ್ದೀನೆ. ಇದು ನನಗೆ ನಾನು ಗಟ್ಟಿಯಾಗಿ ಹೇಳಿಕೊಂಡ ಉಪನ್ಯಾಸವೂ ಹೌದು. ಆಶಾವಾದಿಯಾದ ನನ್ನ ಕಳಕಳಿಯನ್ನು ಪ್ರಾಮಾಣಿಕ ಪರಿಭಾವನೆಯನ್ನು ಆಲಿಸುವ ಔದಾರ್ಯ ತೋರಿದ ತಮ್ಮ ಹೃದಯಸಿರಿಗೆ, ಸುಹೃದ್ ಗಣಾವೃತ ಕನ್ನಡ ಜನ ಸಂಸದಾಂತರ್ಗತ ನಿರ್ಮಲ ಜ್ಯೋತಿಗೆ ನಮಸ್ಕರಿಸುತ್ತೇನೆ. +ದಿನಾಂಕ: ೧೮ ಡಿಸೆಂಬರ್, ೨೦೦೩, ಸ್ಥಳ: ಮೂಡುಬಿದಿರೆ (ಕವಿ ಮುದ್ದಣ್ಣ ನಗರ) +***** +ಕೆಲವು ದಿನಗಳ ಹಿಂದೆ ‘ಪ್ರಜಾವಾಣಿ’, ‘ಕನ್ನಡಪ್ರಭ’ ದಿನಪತ್ರಿಕೆಗಳಲ್ಲಿ ಕೆ.ವಿ. ಸುಬ್ಬಣ್ಣನವರ ಪತ್ರವೊಂದಿತ್ತು. ಆ ಪತ್ರ ಬೆಂಗಳೂರಿನ ಹತ್ತಿರ ಜಪಾನಿ ಟೌನ್‌ಶಿಪ್ ಒಂದು ಬರುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿತ್ತು. ಆದರೆ, ಆ ಪತ್ರವನ್ನು ಕನ್ನಡ ಜನತೆ […] +ಮೇಧಾ ಪಾಟ್ಕರ್ ಅವರ ಉಪವಾಸ ಸತ್ಯಾಗ್ರಹದ ಹಿಂದೆ ನಮ್ಮನ್ನು ಆಳುವವರಲ್ಲಿ ಒಳ್ಳೆತನ ಇರಹುದು ಎಂಬ ನಿರೀಕ್ಷೆ ಇದೆ. ದುರಂತವೆಂದರೆ ಪ್ರಜಾತಂತ್ರದಲ್ಲಿ ಇಂಥ ನಿರೀಕ್ಷೆಯನ್ನು ಇಟ್ಟುಕೊಂಡಿರುವವರ ಮಾತನ್ನು ಸರಕಾರ ಕೇಳುತ್ತಿಲ್ಲ. ಬದಲಿಗೆ ಬಂದೂಕು ಹಿಡಿದು ಕೊಲ್ಲುವುದರ […] +ಜಗತ್ತಿನ ಅತ್ಯಂತ ದೊಡ್ಡ ಕವಿಗಳಲ್ಲಿ ಒಬ್ಬನಾದ ಜಲಾಲುದ್ದೀನ್ ರೂಮಿ ಕ್ರಿ.ಶ. ೧೨೦೭ರಲ್ಲಿ ಬಾಲ್ಕ್ ಎಂಬಲ್ಲಿ ಹುಟ್ಟಿದನು. ಈಗ ಅದು ಆಫ್‌ಘಾನಿಸ್ಥಾನದ ಗಡಿ ಪ್ರದೇಶ. ಏಶ್ಯಾಟಿಕ್ ಟರ್ಕಿಯಲ್ಲಿ ೧೨೭೩ರಲ್ಲಿ ಸತ್ತ. ಸಾಯುವ ಹೊತ್ತಿಗೆ ಪರ್ಶಿಯನ್ ನಾಗರಿಕತೆಯ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_177.txt b/Kannada Sahitya/article_177.txt new file mode 100644 index 0000000000000000000000000000000000000000..ea14e61705a48f112b2a467dcf4f70aaf62d31a4 --- /dev/null +++ b/Kannada Sahitya/article_177.txt @@ -0,0 +1,78 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸಂದರ್ಶಕಿ : ಪ್ರೀತಿ ನಾಗರಾಜ್ +ಸಮಯ: ಮಧ್ಯಾಹ್ನ ೨:೩೦ ಘಂಟೆ +ಸ್ಥಳ: ಜಯನಗರ +ಉದ್ದೇಶ: ಗಿರೀಶ ಕಾಸರವಳ್ಳಿ ಸಂದರ್ಶನ +ಚುರು-ಚುರು ಬಿಸಿಲು. “ಈವತ್ತು ಪ್ರವೀಣ ಸ್ಟುಡಿಯೊದಲ್ಲೇ ಇರ್ತೀನಿ. ಡಬ್ಬಿಂಗ್ ಇದೆ. ಅಲ್ಲಿಗೇ ಬಂದು ಬಿಡಿ. ಅಲ್ಲೇ ಮಾತಾಡೋಣ” ಅಂದಿದ್ದರು ಗಿರೀಶ್. ಬೆಂಗಳೂರನ್ನು ಬಲ್ಲದವರಿಗೆ ಜಯನಗರದಲ್ಲಿ ವಿಳಾಸ ಹುಡುಕುವುದು ಎಷ್ಟು ಕಷ್ಟದ ಕೆಲಸ ಎನ್ನುವುದು ಬಹುಶಃ ಅನುಭವಿಸಿದವರಿಗೇ ಗೊತ್ತು. ಎರಡು ಬಾರಿ ರಸ್ತೆ ತಪ್ಪಿ ಹೋಗಿ, ಅಲ್ಲಲ್ಲೇ ಸುತ್ತು ಹೊಡೆಯುತ್ತಾ ಫೋನ್ ಮಾಡಿ ಮತ್ತೆ ಖಾತ್ರಿ ಮಾಡಿಕೊಂಡು ಕಾರುಗಳು ಸಾಲುಗಟ್ಟಿದ್ದ ಮನೆ-ಕಂ-ಸ್ಟುಡಿಯೋ ಸೇರಿದಾಗ ಒಂದು ಹಂತದ ಸಂದರ್ಶನ ಮುಗಿದಷ್ಟೇ ನಿರಾಳ. +ರಿಸೆಪ್ಶನ್ನಿನಲ್ಲಿ ಕೂತ ಕನ್ನಡಕಧಾರಿ “ಗಿರೀಶ್ ಅವರನ್ನ ನೋಡಲಿಕ್ಕೆ ಬಂದಿದ್ದೀರ? ಅಲ್ಲಿ ಕೂತುಕೊಳ್ಳಿ, ಬರ್ತಾರೆ,” ಅಂತ ಹೇಳಿದರು. “ಹೋಗೋ, ಅವರನ್ನ ಹಿಂದೆ ಕೂರಿಸಿ, ಗಿರೀಶ್ ಸಾಹೇಬ್ರಿಗೆ ಯಾರೋ ಲೇಡೀಸ್ ಬಂದಿದ್ದಾರೆ ಅಂತ ಹೇಳು.” +ಮೂಕಪ್ರಾಣಿಯಂತೆ ನನ್ನ ಮುಂದೆ ಹೊರಟ ಕಪ್ಪು-ಬಿಳಿ ಚೌಕಳಿ ಅಂಗಿಯವನನ್ನು ಹಿಂಬಾಲಿಸಿದೆ. ಒಳಗೆ ಮಾತುಗಳ ರೆಕಾರ್ಡಿಂಗ್..”ಅಯ್ಯೋ ಹಾಗಲ್ಲರೀ, ಇನ್ನೊಮ್ಮೆ ಹೇಳಿ” “ಹೂಂ, ಹೂಂ, ಮತ್ತೊಮ್ಮೆ” ಅಂತೆಲ್ಲ ಮಾತುಗಳು ತೆರೆದ ಕಿಟಕಿಯಿಂದ ಕೇಳಿ ಬರುತ್ತಿದ್ದವು. +ಮಧ್ಯೆ, ಮಧ್ಯೆ ರೇಡಿಯೊ ಅಲೆ. ಅದರ ಸದ್ದನ್ನು ಮುಚ್ಚಿ ಹಾಕುವ ಪ್ರಯತ್ನವೆಂಬಂತೆ “ಮ್ಯೂಸಿಕ್ ಪ್ಲೀಸ್..” ಅನ್ನುವ ಧ್ವನಿ. ಅದು ಮುಳುಗುವ ಮೊದಲೇ ಶುರುವಾಗುವ ಸಂಗೀತ…”ರಂಗಣ್ಣಾ, ಪುಟ್ಟಪ್ಪಾ ನನ್ನ ಮೇಲೆ ಹಾಕಿದ ಕೇಸ್ ಸೋತುಬಿಟ್ರು…” ಪದೇ ಪದೇ ಅದೇ ಮಾತು…”ಗೃಹಭಂಗ”ದ ಸಾಲುಗಳ ಹಿನ್ನೆಲೆ…ಇದಕ್ಕೆಲ್ಲ ಸಾಕ್ಷಿಯೆನ್ನುವಂತೆ ನಾನು, ಪ್ರವೀಣ್ ಸ್ಟುಡಿಯೋದ ಹಿತ್ತಲಿನಲ್ಲಿ. +ಅಲ್ಲೊಂದು ತೆಂಗಿನ ಮರ. ಕೂತವರಿಗೆ ಕಾಣುವುದು ಬರೀ ಬಡ್ಡೆ. ಕತ್ತು ನೋಯುವಷ್ಟು ಮೇಲೆ ತಲೆ ಎತ್ತಿ ನೋಡಿದರೆ, ಹಿತ್ತಲಿಗೆ ಛಾವಣಿಯಾಗಿದ್ದ ಹಸಿರು-ನೀಲಿ ಪ್ಲಾಸ್ಟಿಕ್ ಶೀಟನ್ನೂ ಮೀರಿ ಬೆಳೆದಿದ್ದ ಮರದಿಂದ ಜೋತು ಬಿದ್ದಿರುವ ದುಡ್ಡಿನ ಗಿಡ – ಅಲಿಯಾಸ್ – ಮನಿ ಪ್ಲಾಂಟುಗಳು. ಅವೆಲ್ಲ ದುಡ್ಡು ಬಿಡಬಹುದು ಅನ್ನುವಂಥಾ ಆಶಾವಾದಿ ಇಲ್ಲಿದ್ದನೇನೋ ಎಂಬಂತೆ ಪಾಚಿಗಟ್ಟಿದ ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು, ಅದರಲ್ಲಿ ಮತ್ತಷ್ಟು ಪ್ಲಾಂಟುಗಳು. +ತೆಂಗಿನ ಗಿಡವನ್ನು ಭದ್ರವಾಗಿ ಹಿಡಿದಿದೆಯೆನೋ ಅನ್ನುವ ಭ್ರಮೆ ತರಿಸುತ್ತಿದ್ದ ಕಟ್ಟೆಯ ಮೇಲೆ ಅರಿಶಿಣ-ಕುಂಕುಮಗಳಿಂದ ಅಲಂಕೃತವಾಗಿದ್ದ ತುಳಸಿ ಗಿಡ. ಮನಿ ಪ್ಲಾಂಟುಗಳ ಪಾಪವನ್ನು ತುಳಸಿ ಗಿಡ ಟಿuಟಟiಜಿಥಿ ಮಾಡುತ್ತಿತ್ತೇನೋ ಎಂಬಂತೆ. +ಅವುಗಳಿಂದ ಉದುರಿದ ಎಲೆ ಕಸವಾಗಿ ಮಾರ್ಪಾಡಾಗಿತ್ತು. ಯಾರೂ ಸ್ವಚ್ಛಗೊಳಿಸುವ ಕಾಯಕಕ್ಕೆ ಕೈ ಹಾಕಿದಂತಿರಲಿಲ್ಲ. ಮಣ್ಣು ಎಲೆಗಳ ಮಿಶ್ರಣವನ್ನು ಯಾರೂ ಮನೆಯ ಒಳಗೆ ಮೆಟ್ಟಿ ಹೋಗದಂತೆ ಹಿಂಬಾಗಿಲಿನ ಮುಂದೆ ಹಳೆಯ ಫುಟ್ ರಗ್. ಅದರ ಪಕ್ಕದಲ್ಲಿ ಹವಾಯಿ ಚಪ್ಪಲಿಗಳು. ಮೂಲೆಯಲ್ಲಿ ಸಿಂಕು… ಸ್ವಲ್ಪ ಮೇಲೆ ಸಣ್ಣ ಕನ್ನಡಿ..ಅದರ ಮೇಲೆಲ್ಲ ಕಡು ಕೆಂಪು ಸ್ಟಿಕ್ಕರುಗಳು. ಬಾಜುವಿನಲ್ಲಿ ಆಗಲೋ ಈಗಲೋ ಕೈಗೆ ಬರುವ ಸ್ಥಿತಿಯಲ್ಲಿದ್ದ ಬಾಗಿಲಿಗೆ “ಖಿoiಟeಣ” ಅನ್ನುವ ಫಲಕ. ಆಗಾಗ ಧಡ್-ಧಡ್ ಅಂತಾ ಬಂದು, ಪ್ಲಾಸ್ಟಿಕ್ ಕುರ್ಚಿಯ ಮೇಲೆ ಕೂತ ಹೆಂಗಸನ್ನು ಕಂಡ ತಕ್ಷಣ ಮೆಲ್ಲಗೆ ಟಾಯ್ಲೆಟ್ಟಿನೊಳಗೆ ಜಾರುವ ಗಂಡಸರು. +ಅದರ ಅಟ್ಟ ಯಾವ್ಯಾವುದೋ ವಸ್ತುಗಳ ಮನೆಯಾಗಿ ಮಾರ್ಪಾಡಾಗಿತ್ತು. ಹಸಿರು, ಬಿಳಿ, ಕಪ್ಪು, ಕೆಂಪು ಬಣ್ಣಗಳ ಚಿತ್ರವಿದ್ದ ರಟ್ಟಿನ ಡಬ್ಬಗಳು ಯರ್ರಾಬಿರ್ರಿಯಾಗಿ ಬಿದ್ದಿದ್ದವು. ಅವುಗಳ ಧೂಳಿನ ನಾತ ಅಲ್ಲೆಲ್ಲಾ ಹರಡಿತ್ತು. ನಾನು ಕೂತ ಕುರ್ಚಿಯನ್ನೂ ಸೇರಿಸಿ ಇದ್ದ ನಾಲ್ಕು ಪ್ಲಾಸ್ಟಿಕ್ ಕುರ್ಚಿ, ಒಂದು ಮ್ಯಾಚಿಂಗ್ ಟೇಬಲ್ಲಿನ ಮೇಲೆ ಧಾರಾಳವಾಗಿ ಹರಡಿದ್ದ ಧೂಳು. +ಒಮ್ಮೊಮ್ಮೆ ಶಬ್ದದ ಗತಿಯನ್ನು ಮುರಿಯುವ ಪ್ರಯತ್ನವೆಂಬಂತೆ ತೇಲುವ ಮೌನ. ಅದಕ್ಕೆ ಪೈಪೋಟಿಯಾಗಿ ಮೊಬೈಲ್ ಫೋನುಗಳ ಚಿತ್ರ-ವಿಚಿತ್ರ ರಿಂಗಣ. “ಆಫ್ ಮಾಡ್ರೀ ಅವನ್ನ..” ಅಂತ ಯಾರದೋ ಅಸಮಾಧಾನದ ಧ್ವನಿ. ಮತ್ತೆ “ರಂಗಣ್ಣಾ, ಪುಟ್ಟಣ್ಣಾ…” ಕನವರಿಕೆ. +* +* +* +ಬಾದಾಮಿ ಬಣ್ಣದ ಜುಬ್ಬಾಧಾರಿಯಾಗಿ ಗಿರೀಶ್ ಆಗಮನ. “ಹಲೊ”ಗಳ ವಿನಿಮಯ ಮುಗಿದ ಮೇಲೆ ಸಂದರ್ಶನಕ್ಕೆ ಕೂತರು. ಮೊದಮೊದಲು ಸ್ವಲ್ಪ ಬಿಗಿಯಾಗೇ ಕೂತ ಗಿರೀಶರನ್ನು ರಿಲ್ಯಾಕ್ಸ್ ಆಗುವಂತೆ ಮಾಡಿದ್ದು ನನ್ನ ಮೊದಲ ತಪ್ಪು ಪ್ರಶ್ನೆ. “ನಿಮಗೆ ರಾಷ್ಟ್ರ ಪ್ರಶಸ್ತಿ ಬಂದಿರುವುದು ಇದು ಏಳನೇ ಬಾರಿ ಅಲ್ಲವೇ?” +ಹೌದೋ ಅಲ್ಲವೋ ಅನ್ನುವಂತೆ ನಕ್ಕ ಗಿರೀಶರು “ಇಲ್ಲ, ಇದು ಎಂಟನೇ ಬಾರಿ” ಎಂದು ತಿದ್ದಿದರು. +(ನಾಲ್ಕು ಸ್ವರ್ಣ, ನಾಲ್ಕು ರಜತ ಕಮಲ) +ಮುಂದೆ ನಡೆದದ್ದಿಷ್ಟು: +ಪ್ರ: ಗಿರೀಶರಿಗೆ ಸಿನಿಮಾ ಎಷ್ಟು ಅನಿವಾರ್ಯ ಮತ್ತು ಸಿನಿಮಾಕ್ಕೆ ಗಿರೀಶರು ಎಷ್ಟು ಅನಿವಾರ್ಯ? +ಉ: ಗಿರೀಶ್‌ಗೆ ಸಿನಿಮಾ ಜಾಸ್ತಿ ಅನಿವಾರ್ಯ. ಯಾಕೆ ಅಂದರೆ, ನನಗೆ ಸಿನಿಮಾ ಬಿಟ್ಟರೆ ಬೇರೆ ಗೊತ್ತಿಲ್ಲ. ಆದರೆ, ಸಿನಿಮಾಕ್ಕೆ ಬೇಕಾದಷ್ಟು ವ್ಯಕ್ತಿಗಳ “ಚಾಯ್ಸ್” ಇದೆ. ಗಿರೀಶ್ ಅದರಲ್ಲೊಬ್ಬ ಮಾತ್ರ. ಆದರೆ ಗಿರೀಶ್‌ಗೆ ಸಿನಿಮಾ ಬಿಟ್ಟರೆ ಬೇರೆ ದಿಕ್ಕು ಇಲ್ಲ. +ಪ್ರ: ಕನ್ನಡಕ್ಕೆ ಎಂಟು ಬಾರಿ ರಾಷ್ಟ್ರ ಪ್ರಶಸ್ತಿ ಗಳಿಸಿ ಕೊಟ್ಟಿದ್ದೀರ ಅನ್ನುವುದನ್ನು ಗಮನದಲ್ಲಿಟ್ಟು ಯೋಚಿಸಿದರೆ? +ಉ: ಹಾಗೆ ನೋಡಿದರೆ, ಪ್ರಾಯಶ:, ಕನ್ನಡ ಸಿನಿಮಾಕ್ಕೆ ಗಿರೀಶ್ ಬೇಕು ಅನ್ನಬಹುದು. ಅನಿವಾರ್ಯ ಅಂತ ಹೇಳಲಿಕ್ಕೆ ಆಗುವುದಿಲ್ಲ. ಒಬ್ಬ ಗಿರೀಶ್ ಇಲ್ಲದಿದ್ದರೆ ಅಂಥಾ ನಷ್ಟವೇನೂ ಆಗಲಾರದು. ಇನ್ಯಾರೋ ಹುಟ್ಟಿಕೊಳ್ಳುತ್ತಾರೆ. ಕಲೆಗೆ ಕಲಾವಿದರು “ಮಿತಿ” ಆಗಲಾರರು. ಇದು ಎಲ್ಲಾ ಕಲೆಗೂ ಅನ್ವಯಿಸುವಂಥಾ ಮಾತು. +ಪ್ರ: ಸಿನಿಮಾ ಒಂದು ಮಾಧ್ಯಮವಾಗಿ ಬೆಳೆದ ಹಾಗೆ ಅದರ “ವಿಮರ್ಶೆ” ಬೆಳೆಯಲಿಲ್ಲ ಅನ್ನುವ ಒಂದು ಅಭಿಪ್ರಾಯವಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ? +ಉ: ಹೌದು. ಸಿನಿಮಾ ಒಂದು ಕಲೆಯಾಗಿ ಬೆಳೆದಂತೆ, ಅದರ ವಿಮರ್ಶೆ ಒಂದು ಕಲೆಯಾಗಿ ಬೆಳೆಯಲಿಲ್ಲ. ಒಂದು “ಛಿiಟಿemಚಿಣiಛಿ ಟiಟಿgo” ವಿಕಸನಗೊಳ್ಳಲಿಲ್ಲ. ಹಲವಾರು ವರ್ಷಗಳಲ್ಲಿ, ವಿಮರ್ಶೆಯ ಪ್ರಪಂಚದಲ್ಲಿ ಅಂಥಾ ಬದಲಾವಣೆಯೇನೂ ಕಂಡಿಲ್ಲ. ಸಿನಿಮಾ ಗುಣಗ್ರಹಣ ಕ್ರಮ ಇದೆಯಲ್ಲ, ಅದನ್ನು ಬರಹದಲ್ಲಿ ಸಿದ್ಧಿಸಿಕೊಂಡವರು ತುಂಬಾ ಕಮ್ಮಿ. ಇಲ್ಲಿಯವರೆಗೂ ಸಿನಿಮಾ, ವಿಮರ್ಶಕರ ದೃಷ್ಟಿಯಲ್ಲಿ ಕಥೆಯ ವಿಸ್ತರಣೆಯಾಗಿ ಬೆಳೆದಿದೆ. ಒಂದು ಸಿನಿಮಾದ ಮೂಲ ಕಥೆಯನ್ನ “sಣಚಿಟಿಜಚಿಡಿಜ” ಆಗಿ ಇಟ್ಟುಕೊಂಡು ಬರೆದಿರುವಂಥ ವಿಮರ್ಶೆಯನ್ನೇ ಜಾಸ್ತಿ ಕಾಣಬಹುದು. ಇದು ತಪ್ಪು ಅನ್ನುವ ಅಭಿಪ್ರಾಯವಿದೆ. ಯಾಕೆಂದರೆ, ಸಿನಿಮಾ ಚಿತ್ರಗಳ ಅಥವ imಚಿges ಮೇಲೆ ನಿರ್ಮಾಣವಾಗಿ ಅವುಗಳ ಮೇಲೇ ನಿಲ್ಲುವ ಒಂದು ಕಲೆ ಅಥವ ಮಾಧ್ಯಮ. +ಸಿನಿಮಾದಲ್ಲಿ ಕಾಣುವ “ಠಿoಟiಣiಛಿs oಜಿ imಚಿges” ಬಗ್ಗೆ ಆಳವಾಗಿ ಆಲೋಚಿಸತೊಡಗಿದರೆ ಆ ಮಾಧ್ಯಮವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಅದನ್ನು ಬಿಟ್ಟು ಅದರ ಕಥೆ ಅಥವ “ಫ್ರೇಂ” ಗಳನ್ನು ಮಾತ್ರ ನೋಡಿ ಬರೆದದ್ದು ವಿಮರ್ಶೆ ಆಗುವುದಿಲ್ಲ. ಅದು ಆ ಸಿನಿಮಾದ ವಿಮರ್ಶೆಯೂ ಆಗಿರಬಹುದು ಮತ್ತು ಮೂಲ ಕಥೆಯ ವಿಮರ್ಶೆಯೂ ಆಗಿರಬಹುದು. +ಇದು ಬರೀ ಕನ್ನಡ ಸಿನಿಮಾಕ್ಕೆ ಮಾತ್ರ ಅನ್ವಯಿಸುವುದಿಲ್ಲ. ನನಗೆ ತಿಳಿದ ಮಟ್ಟಿಗೆ ಹಿಂದಿ ಸಿನಿಮಾಕ್ಕೂ ಅಷ್ಟೆ, ಒಟ್ಟಾರೆ ಸಿನಿಮಾ ಮಾಧ್ಯಮಕ್ಕೇ ಅನ್ವಯಿಸುವಂಥಾ ಮಾತು. +ಹಿಂದಿ ಅಥವಾ ರಾಷ್ಟ್ರೀಯ ಪತ್ರಿಕೆಗಳಲ್ಲಿ ಬರುವ ವಿಮರ್ಶೆಯನ್ನು ಓದಿದರೆ ಸ್ವಲ್ಪ ವ್ಯತ್ಯಾಸ ಕಾಣಬಹುದು. ಅಲ್ಲಿನ ವಿಮರ್ಶಕರು ಬೇರೆ ದೇಶಗಳ ಸಿನಿಮಾಕ್ಕೆ ನಮ್ಮವರಿಗಿಂತ ಹೆಚ್ಚು ಹತ್ತಿರವಾದವರು. ದೆಹಲಿಯಲ್ಲಿ ಇರುವ ವಿಮರ್ಶಕರು ಅಂತರ ರಾಷ್ಟ್ರೀಯ ಸಿನಿಮಾಕ್ಕೆ ನಮ್ಮವರಿಗಿಂತ ಹತ್ತಿರವಾದವರು. ಆ ಕಾರಣದಿಂದ ಅವರ ವಿಮರ್ಶೆಯಲ್ಲಿ ಕೊಂಚ ವ್ಯತ್ಯಾಸ ಕಾಣಬಹುದೇನೋ…ಆದರೆ, ಅದರ ಒಟ್ಟು ಪರಿಣಾಮ “ವಿಮರ್ಶಾ ಪ್ರಪಂಚ” ದ ಮೇಲೆ ಕಮ್ಮಿ. +ಅದಕ್ಕೆ ಹಲವಾರು ಕಾರಣಗಳು ಇರಬಹುದು. ನಮ್ಮ ವಿಮರ್ಶಕರಿಗೆ ಬೆಂಗಾಲಿ, ಚೈನೀಸ್, ಜರ್ಮನ್, ಇಟಾಲಿಯನ್, ಫ್ರೆಂಚ್, ಮರಾಠಿ ಇತ್ಯಾದಿ ಭಾಷೆಗಳ ಸಿನಿಮಾಗಳನ್ನು ವೀಕ್ಷಿಸುವ ಅವಕಾಶಗಳು ಕಮ್ಮಿ. ಮತ್ತೆ, ಅದರ ಬಗ್ಗೆ ಏನಾದರೂ ಮಾಡಬೇಕು, ಹೇಗಾದರೂ ಮಾಡಿ ಈ ಸಿನಿಮಾಗಳನ್ನ ವೀಕ್ಷಿಸಬೇಕು ಅನ್ನುವ ತುಡಿತವೂ ಇದ್ದಂತಿಲ್ಲ. ಹಾಗಾಗಿ, ನಮ್ಮಲ್ಲಿ ವಿಮರ್ಶೆ ನಿಂತ ನೀರಾಗಿ ಬಿಟ್ಟಿದೆ. +[“Poಟiಣiಛಿs oಜಿ imಚಿges” ಅನ್ನು ಸ್ವಲ್ಪ ವಿವರಿಸಿದ ಗಿರೀಶರು ಹೇಳುವಂತೆ ನಾವು ತೆರೆಯ ಮೇಲೆ ನೋಡುವ ಯಾವ ಇಮೇಜೂ “ನ್ಯೂಟ್ರಲ್” ಅಲ್ಲ. “ಉದಾರಹಣೆಗೆ ಓರ್ವ houseತಿiಜಿe ಅನ್ನು ಕಲ್ಪಿಸಿಕೊಳ್ಳಿ ಎಂದು ಒಬ್ಬ ಸಾಮಾನ್ಯ ಮನುಷ್ಯನಿಗೆ ಹೇಳಿದರೆ, ಅವನ ಮನಸ್ಸಿನಲ್ಲಿ ಯಾವುದೋ ಜಾಹೀರಾತು ಇಲ್ಲಾ ಧಾರಾವಾಹಿಯಲ್ಲಿ ನೋಡಿದ ಗರಿ-ಗರಿಯಾದ ಸೀರೆಯುಟ್ಟ, ನೀಟಾಗಿ ತಲೆ ಬಾಚಿಕೊಂಡು, ಕುಂಕುಮ ಇಟ್ಟುಕೊಂಡು ನಗುನಗುತ್ತಾ ಇರುವ ಹೆಂಗಸು ನೆನಪಿಗೆ ಬರುತ್ತಾಳೆ. ಅಸ್ತವ್ಯಸ್ತವಾದ ಸೀರೆ, ಕೂದಲಿಗೆ ಎಣ್ಣೆ ಹಚ್ಚಿಕೊಂಡವಳಲ್ಲ. ಯಾಕೆಂದರೆ, ದಶಕಗಳ ಕಾಲ, ಅಂಥಾ ಒಂದು ಇಮೇಜನ್ನು ಟೀವಿ ಮತ್ತು ಸಿನಿಮಾ ಸೃಷ್ಟಿ ಮಾಡಿವೆ.] +ಪ್ರ: ಸಾಹಿತಿಗಳು ಇದನ್ನು ಬದಲಾಯಿಸಲಿಕ್ಕೆ ಸಾಧ್ಯ ಇತ್ತೇ? ಕಲಾತ್ಮಕ ಸಿನೆಮಾಕ್ಕೆ ಮೂಲ ವಸ್ತುವನ್ನು ಕೊಟ್ಟವರು ಅದರ ವಿಮರ್ಶೆಯ ಬೆಳವಣಿಗೆಗೂ ಸಹಾಯಕರಾಗಬಹುದಿತ್ತಲ್ಲವೇ? +ಉ: ಇಲ್ಲ. ಇದು ಸಾಹಿತಿಗಳ ಕೆಲಸ ಖಂಡಿತಾ ಅಲ್ಲ. ಇದು ಸಂಪೂರ್ಣವಾಗಿ ವಿಮರ್ಶಕರ ಕೆಲಸ. ಸಾಹಿತಿಗಳು ನಮ್ಮ ಸಿನಿಮಾಕ್ಕೆ ಮೂಲ ವಸ್ತುವನ್ನು ಒದಗಿಸಿ ಕೊಟ್ಟ ಮೇಲೆ ಅದು ತೆರೆಯ ಮೇಲೆ ಹೇಗೆ ಮೂಡಿ ಬಂದಿದೆ ಅನ್ನುವುದನ್ನು ನೋಡಿ ಸಂತೃಪ್ತಿ ಅಥವಾ ಅಸಂತೃಪ್ತಿಯನ್ನು ವ್ಯಕ್ತ ಪಡಿಸುವುದರ ಮೂಲಕ ತಮ್ಮ ಜವಾಬ್ದಾರಿ ಮುಗಿಸುತ್ತಾರೆ. ಅಲ್ಲಿಂದ ಮುಂದಿನದು ವಿಮರ್ಶಕರ ಕೆಲಸ. ಸಿನಿಮಾವನ್ನು ಒಂದು ಭಾಷೆಯಾಗಿ ಅರ್ಥ ಮಾಡಿಕೊಳ್ಳುವ ಅವಶ್ಯಕತೆ ಸಾಹಿತಿಗಳಿಗಿಂತ ವಿಮರ್ಶಕರಿಗೆ ಜಾಸ್ತಿ ಇದೆ. ಗಮನಿಸಿ ನೋದಿ, ಇಂದಿಗೂ ಒಂದು ಸಿನಿಮಾದ ವಿಮರ್ಶೆ ವಿಮರ್ಶಕನ “ಣಚಿsಣe” ಮೇಲೆ ಬಹುಮಟ್ಟಿಗೆ ನಿಂತಿದೆಯೇ ಹೊರತು ಅವರ “exಠಿosuಡಿe ಣo ಣhe ಚಿಡಿಣ” ಮೇಲೆ ನಿಲ್ಲುವಿದು ಬಹಳ ಅಪರೂಪ. ಇಲ್ಲವೇ ಇಲ್ಲ ಅಂತ ಹೇಳಿದರೆ ತಪ್ಪೇನಿಲ್ಲ. +ಪ್ರ: ಈಗ ಇರುವ ವಿಮರ್ಶಕರಲ್ಲಿ ಯಾರ ಕೃತಿಯನ್ನು ನೀವು ಓದುತ್ತೀರಿ? +ಉ: ಇದು ಸ್ವಲ್ಪ ಸೂಕ್ಷ್ಮವಾದ ಪ್ರಶ್ನೆ. ನಾನು ಇದಕ್ಕೆ ಉತ್ತರಿಸಲಾರೆ. ಆದರೆ, ನಾನು ವಿಮರ್ಶೆಯನ್ನು ಓದುವ ರೀತಿಯ ಬಗ್ಗೆ ಸ್ವಲ್ಪ ಹೇಳಬಲ್ಲೆ. ಒಬ್ಬ ವಿಮರ್ಶಕನ ಕೃತಿಯನ್ನು ಓದುವಾಗ ಆ ವ್ಯಕ್ತಿಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಖಂಡಿತ ಮಾಡಿರುತ್ತೇನೆ. ಅವರು ಮೆಚ್ಚಿದ ಸಿನಿಮಾ ಯಾವುದು, ಯಾಕೆ, ಅದರ ಬಗ್ಗೆ ಏನು ಮತ್ತು ಹೇಗೆ ಬರೆದಿದ್ದರು, ಬೇರೆ ಸಿನಿಮಾದ (ಅದು ನನ್ನ ಸಿನಿಮಾನೇ ಆಗಿರಬೇಕು ಅಂತೇನಿಲ್ಲ) ಬಗ್ಗೆ ಏನು ಬರೆದಿದ್ದರು, ಇತ್ಯಾದಿ. ಇಷ್ಟು ತಿಳಿದ ಮೇಲೆ ಅವರ ವಿಮರ್ಶೆಯಲ್ಲಿ ಪದಗಳ ಬಳಕೆ ಹೇಗೆ, ಒಂದು ಪದ ಪ್ರಯೋಗ ಮಾಡುವುದರ ಮೂಲಕ ಏನನ್ನು ಹೇಳುವ ಪ್ರಯತ್ನ ಮಾಡಿದ್ದಾರೆ ಅನ್ನುವ ತೀರ್ಮಾನಕ್ಕೆ ಬರ್ತೀನಿ. ಒಂದು ವಿಮರ್ಶೆಯಲ್ಲಿ “ಸಿನಿಮಾದ ಸಂಕಲನ ಬಹಳ ಬಿಗಿಯಾಗಿತ್ತು” ಎಂದು ಹೇಳಿದರೆ, ಸಂಕಲನಕಾರ ತಕ್ಷಣ ಹೆಮ್ಮೆ ಪಡುವ ಮುನ್ನ ಆಲೋಚಿಸಬೇಕಾಗುತ್ತದೆ. ಬಿಗಿ ಸಂಕಲನ ಆ ಸಿನಿಮಾಕ್ಕೆ ಅವಶ್ಯಕವಾಗಿಲ್ಲದಿದ್ದರೆ, ಆ ಒಂದು ವಾಕ್ಯ “ಟಿegಚಿಣive ಆಗ ಬಹುದು. ಇನ್ನೊಂದು ಕಡೆ “ಒಳಾಂಗಣ” ಅಥವ “ಹೊರಾಂಗಣ” ಅತೀ ಸುಂದರವಾಗಿತ್ತು ಎಂದಾಗ ಅದರ uಟಿಜeಡಿಟಥಿiಟಿg ಣoಟಿe ಬೇರೆಯೇ ಆಗಿರಬಹುದು. ಯಾಕೆಂದರೆ, ಒಳಾಂಗಣ ಅಥವ ಹೊರಾಂಗಣ ಆ ಒಂದು ಸಿನಿಮಾಕ್ಕೆ ಅರ್ಥ ಬರುವಂಥ ರೀತಿಯಲ್ಲಿ ಬಳಕೆಯಾಗದಿದ್ದಲ್ಲಿ, ವಿಮರ್ಶಕ “ಅವುಗಳನ್ನು ಬಿಟ್ಟರೆ ಆ ಸಿನಿಮಾದಲ್ಲಿ ಇನ್ನೇನೂ ಇರಲಿಲ್ಲ” ಅನ್ನುವ ಅರ್ಥದಲ್ಲಿ ಹೇಳಿರಬಹುದು! ಅಥವಾ ವಿಮರ್ಶಕನ ಗಮನ ಸೆಳೆದ ಆ ಅಂಶಗಳಷ್ಟೇ (ಹೊರಾಂಗಣ ಅಥವಾ ಒಳಾಂಗಣ) ಒಂದು ಉತ್ತಮ ಸಿನಿಮಾ ಆಗಬಲ್ಲವು ಅನ್ನುವ ನಿರ್ಣಯಕ್ಕೆ ಓದುಗ ಬಂದುಬಿಡಬಾರದು. ನಿರ್ದೇಶನದಿಂದ ಹಿಡಿದು, ಮುಂದೆ ಬರುವ ಎಲ್ಲ “ಛಿomಠಿoಟಿeಟಿಣs” ಆ ಸಿನಿಮಾಕ್ಕೆ ನೆಲೆ ಕಟ್ಟಿಕೊಡಬೇಕು…ಅಲ್ಲಿಂದ ಮುಂದಕ್ಕೂ ಸಿನಿಮಾ ಬೆಳೆಯಬೇಕು. ಅವ್ಯಾವೂ “ಜಿuಟಟ sಣoಠಿ” ಆಗಬಾರದು! +ಪ್ರ: ನಿಮ್ಮ ಸಿನಿಮಾಗಳಲ್ಲಿ ಅತಿ sombಡಿe ಬಣ್ಣಗಳನ್ನು ಉಪಯೋಗಿಸುತ್ತೀರ, ಮತ್ತು ಠಿಡಿimಚಿಡಿಥಿ ಬಣ್ಣಗಳ ಬಳಕೆ ತುಂಬಾ ವಿರಳ ಎಂದು ವಿಮರ್ಶಕರು ಅಭಿಪ್ರಾಯಪಟ್ಟಿದ್ದಾರೆ. +ಉ: ಇಲ್ಲ. ನನ್ನ ಸಿನಿಮಾದಲ್ಲಿ ಬಣ್ಣಗಳ ಬಳಕೆಯ ಮೇಲೆ ಯಾವ ನಿರ್ಬಂಧವೂ ಇಲ್ಲ. ಯಾವ ಬಣ್ಣವೇ ಆಗಲಿ, ಅದು ನನ್ನ ಕಥೆ, ಪಾತ್ರ ಮತ್ತು ಸಂದರ್ಭಕ್ಕೆ ಹೊಂದಿಕೊಳ್ಳುವಂತಿದ್ದರೆ ಅದರ ಬಳಕೆಯನ್ನು ಖಂಡಿತವಾಗಿ ಮಾಡಿದ್ದೇನೆ. ಈಗ “ದ್ವೀಪ”ದ ಉದಾಹರಣೆ ತೆಗೆದುಕೊಂಡರೆ, ಅದು ಮಲೆನಾಡಿನ ಒಂದು ಹಳ್ಳಿಯಲ್ಲಿ ಮೂಡಿರುವ ಕಥೆ. ಆ ಹಳ್ಳಿಯಲ್ಲಿ ನನ್ನ ಪಾತ್ರಗಳಿಗೆ ಹತ್ತಿರವಾಗಿರುವಂಥ ವ್ಯಕ್ತಿಗಳು ಏನೇನನ್ನು ತೊಡಬಹುದು ಅನ್ನುವ ಅಂಶವನ್ನು ಗಮನಿಸಿ ನನ್ನ ಪಾತ್ರಗಳ ವಸ್ತ್ರಗಳನ್ನು ನಿರ್ಧರಿಸಲಾಗಿದೆ. ಆ ಪಾತ್ರಗಳು ತಿಳಿ ಅಥವ ಗಾಢ ಬಣ್ಣಗಳನ್ನು ಧರಿಸಿದ್ದರೆ, ಅವುಗಳ ಬಳಕೆ ಆ ಪರಿಸರದಲ್ಲಿ ಆಗಿದ್ದರೆ, ನನ್ನ ಸಿನಿಮಾ ಕೂಡ ಅದನ್ನೇ ಪ್ರತಿಬಿಂಬಿಸಿರುತ್ತದೇ ಹೊರತು, ಅದರಲ್ಲಿ ನಾನು ಛಿoಟಿಣಡಿoಟ ಮಾಡುವಂಥ ಸಾಧ್ಯತೆ ಕಮ್ಮಿ. +ಇನ್ನೊಂದು ಸಂದರ್ಭದಲ್ಲಿ ನೋಡಿದರೆ, ನನ್ನ ಸಿನಿಮಾದಲ್ಲಿನ “ಎ” ಮತ್ತು “ಬಿ” ವ್ಯಕ್ತಿಗಳು ಏನು ಹಾಕಿಕೊಳ್ಳಬೇಕು ಅನ್ನುವುದನ್ನು ನಿರ್ಧರಿಸುವವ ನಾನು, ಅಂದರೆ ನಿರ್ದೇಶಕ. ಸಿನಿಮಾಕ್ಕೆ ಹೊರತಾಗಿ ಅವರಿಬ್ಬರೂ ಬೇರೆ ಉಡುಗೆಗಳನ್ನೇ ತೊಡಬಹುದು…ಅಂದರೆ, ನಿಜ ಜೀವನದಲ್ಲಿ, ಅಂಥ ಇಬ್ಬರು ವ್ಯಕ್ತಿಗಳು ತಾವೇನನ್ನ ತೊಡಬೇಕು ಅನ್ನುವುದನ್ನು ತಾವೇ ನಿರ್ಧರಿಸುತ್ತಾರೆ…ಆದರೆ, ಸಿನಿಮಾದಲ್ಲಿ ಹಾಗಲ್ಲ, ಅವರಿಬ್ಬರ ಉಡುಗೆಗಳನ್ನು ಇನ್ನೊಬ್ಬ ನಿರ್ಧರಿಸುತ್ತಾನೆ, ಸಂದರ್ಭಕ್ಕೆ ತಕ್ಕಂತೆ. +ಪ್ರ: ಎರಡು-ಮೂರು ದಶಕಗಳ ಮುನ್ನ, ಕನ್ನಡ ಸಿನಿಮಾದಲ್ಲಿ ಕಲಾತ್ಮಕ ಚಿತ್ರಗಳ ಒಂದು movemeಟಿಣ ( ಆಂದೋಲನ) ಶುರುವಾಯಿತು. ಆದರೆ, ಅದು ಒಂದು ದಿಕ್ಕನ್ನು ಹಿಡಿಯಲಿಲ್ಲ. ಯಾಕೆ? +ಉ: ಜಗತ್ತಿನ ಹಾಗೂ ಸಿನಿಮಾ ಪ್ರಪಂಚದ ಯಾವುದೇ “movemeಟಿಣ” ಅನ್ನು ನೋಡಿದಾಗ, ಒಂದು ಅಂಶವನ್ನು ಗಮನಿಸಬಹುದು. ಬಹಳಷ್ಟು ಚಳುವಳಿ ಅಥವ ಆಂದೋಲನಗಳಿಗೆ ಒಂದು ನಿರ್ದಿಷ್ಟ “ಆದಿ” ಇರುತ್ತದೆ. +ಯೂರೋಪಿನಲ್ಲಿ ಜರ್ಮನ್ ಚಿನೆಮ, ಇಟಾಲಿಯನ್ ಸಿನಿಮಾ ಅಥವ “ಫ್ರೆಂಚ್ ನ್ಯೂ ವೇವ್”, ಇವೆಲ್ಲಕ್ಕೂ ಒಂದು “ಪ್ರಾರಂಭ” ಇತ್ತು…ಒಂದು “ಛಿommoಟಿ mಚಿಟಿiಜಿesಣo” ಇತ್ತು. ಇಲ್ಲಿ ಅಂಥಾದ್ದೇನೂ ಆಗಿರಲಿಲ್ಲ. ಆದ್ದರಿಂದ ಒಂದು ಆಂದೋಲನ ಶುರುವಾಗಿತ್ತು ಅನ್ನುವುದೇ “ತಪ್ಪು” ಕಲ್ಪನೆ ಆನುವುದು ನನ್ನ ಅಭಿಪ್ರಾಯ. +ನಮ್ಮಲ್ಲಿ ಏನಾಯಿತು ಅಂದರೆ, ಯಾರೋ ಒಬ್ಬರು ಸಿನಿಮಾ ಮಾಡಲಿಕ್ಕೆ ಶುರು ಮಾಡಿದರು, ಉಳಿದವರು ಅದರಿಂದ ಸ್ಫೂರ್ತಿ ಪಡೆದು ಅನುಸರಿಸಿ, ಅನುಕರಿಸಿದರು. ಇಲ್ಲಿ, “ಛಿommoಟಿ mಚಿಟಿiಜಿesಣo” ಇರಲಿಲ್ಲ. ಸಿನಿಮಾ ಯಾಕೆ, ಎಲ್ಲಿ, ಏನನ್ನ ಸಾಧಿಸಲಿಕ್ಕೆ? ಅನ್ನುವ ಪ್ರಶ್ನೆಗಳು ಉದ್ಭವಿಸಿ ಕಾಡಲಿಲ್ಲ. ಅವರೆಲ್ಲ, ತಮ್ಮ-ತಮ್ಮ ಮನಸ್ಸಿಗೆ ಸರಿ ಅನ್ನಿಸಿದ್ದನ್ನ ಮಾಡಿ, ಬೇರೆ-ಬೇರೆ ದಾರಿ ಹಿಡಿದರು. +ಹಾಗೆ ಆದಾಗ, ನಾನಾ ಥರದ ಸಿನಿಮಾಗಳು “ಕಲಾತ್ಮಕ” ಅನ್ನಿಸಿಕೊಂಡವು. ಯಾವುದು ಚಿಟಿ ಣಡಿಚಿ ಸಿನಿಮಾ ಆಗಿರಲಿಲ್ಲವೋ, ಅದು ಕಲಾತ್ಮಕ ಅನ್ನಿಸಿಕೊಂಡಿತೇ ಹೊರತು, ಅದು “ಕಲಾತ್ಮಕ” ಸಿನಿಮಾ ದ ಎಲ್ಲ ಅಂಶಗಳನ್ನು ಮೈಗೂಡಿಸಿಕೊಂಡಿತ್ತು ಅಂತ ಅಲ್ಲ! +ಆ ರೀತಿ ಹರಡಿಕೊಂಡ ಒಂದು ಚಳುವಳಿಗೆ ಆಯಸ್ಸು ಕಮ್ಮಿ ಆದ್ದದ್ದು ಸಹಜವೇ. ಇಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲ ಒಳ್ಳೆ ಅವಕಾಶಗಳು ಸಿಕ್ಕ ತಕ್ಷಣ ಅವರು ಹೊರಟು ಹೋದರು. ಇನ್ನು ಕೆಲವರು, ಬಿ ವಿ ಕಾರಂತರಂಥವರು, ಇಲ್ಲಿ ಸ್ವಲ್ಪ ಡಿesisಣಚಿಟಿಛಿe ಕಂಡ ಕೂಡಲೆ, ನಾಟಕದ ಕಡೆ ವಾಪಾಸು ಹೊರಳಿದರು. ಅವರಿಗೆ ನಾಟಕವೇ ತಮ್ಮ ಮನೆ ಆನಿಸಿತೇ ಹೊರತು, ಸಿನಿಮಾದ ಬಗ್ಗೆ ಅಷ್ಟು ವ್ಯಾಮೋಹ ಬೆಳೆ ಯಲಿಲ್ಲ…೧೯೭೫ರಲ್ಲಿ “ಚೋಮನ ದುಡಿ” ಮಾಡಿದರು…ಆಗೊಮ್ಮೆ, ಈಗೊಮ್ಮೆ ಅದ್ಭುತವಾದ ಸಂಗೀತದ ಕೊಡಲು ಬಂದು ಹೋದರು..ಆದರೆ, ಇಲ್ಲಿ ನೆಲೆ ನಿಲ್ಲಲಿಲ್ಲ. +ನನಗೆ, ಇದೇ ಮನೆ. ನಾನು ಸಿನಿಮಾಕ್ಕೇ ಸೇರಿದವ. ಈ ಮಾಧ್ಯಮದ ಭಾಷೆ ನನಗೆ ಇಷ್ಟ…ಕಾರಂತರಂಥವರಿಗೆ ಹಾಗಲ್ಲ. ನಾಟಕವೇ ಅವರ ಮನೆ. +ಪ್ರ: ನಿಮ್ಮ ಸಿನಿಮಾದ ಮೂಲಕ ಛಿommuಟಿiಛಿಚಿಣioಟಿ ಸಾಧ್ಯವಾಗಿದೆಯೆ? ಏನನ್ನ ಹೇಳಲಿಕ್ಕೆ ಪ್ರಯತ್ನಿಸುತ್ತಿದ್ದಿರೋ ಅದನ್ನ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೀರಾ? +ಉ: ಬಹು ಮಟ್ಟಿಗೆ ಹೌದು. ಛಿommuಟಿiಛಿಚಿಣioಟಿ ವಿಷಯದಲ್ಲಿ ನಾನು ಸುಮಾರು ಯಶಸ್ವಿಯಾಗಿದ್ದೇನೆ, ನನಗನ್ನಿಸಿದ್ದನ್ನ ಪ್ರೇಕ್ಷಕನಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದೇನೆ ಅನ್ನಿಸಿದೆ. ಆದರೆ, ಒಬ್ಬ ಕಲೆಗಾರನಿಗೆ ತನ್ನ ಸೃಷ್ಟಿಯ ಬಗೆಗೆ ಎಂದೂ ಪೂರ್ತಿಯಾಗಿ ಖುಶಿ ಇರುವುದಿಲ್ಲ. ಒಂದರಿಂದ ಇನ್ನೊಂದು ಸೃಷ್ಟಿಗೆ ಅದನ್ನು ಉತ್ತಮ ಪಡಿಸುವ, ಹಾರುವ ಆತುರ ಒಬ್ಬ ಕಲೆಗಾರನಿಗೆ ಇದ್ದೇ ಇರುತ್ತದೆ. +ಪ್ರ: ಯಾವಾಗಲಾದರೂ ನಿಮ್ಮ ಸಿನಿಮಾದ “ಪ್ರೇಕ್ಷಕ”ನೊಡನೆ ಮಾತಾಡಿದ್ದೀರ? ಅಂದರೆ, ನಿಮ್ಮ ಸಿನಿಮಾ ಎಷ್ಟರ ಮಟ್ಟಿಗೆ ನಿಮ್ಮ ಭಾವನೆ, ಅನಿಸಿಕೆಗಳನ್ನು ಪ್ರೇಕ್ಷಕರಿಗೆ ಮುಟ್ಟಿಸಿದೆ ಅನ್ನುವುದನ್ನು ತಿಳಿಯುವ ಮಾನದಂಡವೇನಾದರೂ ಇದೆಯೆ? +ಉ: ಮಾನದಂಡ ಪ್ರೇಕ್ಷಕನ ಹೊರತು ಇನ್ನೇನೂ ಇಲ್ಲ. ಪ್ರೇಕ್ಷಕರು ಬಂದು ಹೇಳದ ಹೊರತು ನಮಗೆ ಹೇಗೆ ತಿಳಿಯಬೇಕು? ನೀವು ಸಿನಿಮಾ ನೋಡಿ ಬಂದು ಹೇಳಿದರೆ ಮಾತ್ರ ನಮಗೆ ಅರಿವಾಗುವುದು. +ಕೆಲವೊಮ್ಮೆ ಇದರಲ್ಲೂ ಎಡವಿ ಬೀಳುವ ಸಾಧ್ಯತೆ ಇದೆ. ಕೆಲವರು ಸುಮ್ಮನೆ ಯಾವುದೋ ಸಿನಿಮಾವನ್ನು ನನ್ನದು ಎಂದು ಭಾವಿಸಿ ಹೊಗಳುತ್ತಾರೆ. “ನಿಮಗೆಲ್ಲೋ ಕನ್‌ಫ್ಯೂಶನ್ ಆಗಿರಬೇಕು” ಅನ್ನುತ್ತೇನೆ. ಆಗಲೂ ನಿಲ್ಲಿಸದಿದ್ದರೆ, ಅವರು ಹೇಳುತ್ತಿರುವುದು ಸುಳ್ಳು ಎಂದು ನನಗೆ ಖಾತ್ರಿ! +ಆದರೆ, ಕೆಲವು ಪ್ರೇಕ್ಷಕರು ಸಿನಿಮಾದ ಬಗ್ಗೆ ನಿಜವಾದ ಕಳಕಳಿಯಿಂದ ಮಾತಾಡುತ್ತಾರೆ. ಅಂತಹವರು ಸುಮ್ಮನಿದ್ದು ಬಿಡುತ್ತಾರೆ, ಇಲ್ಲಾಂದರೆ ಕೆಲವು ಶಬ್ದಗಳಲ್ಲಿ ತಮಗನ್ನಿಸಿದ್ದನ್ನ ಹೇಳಿಬಿಡುತ್ತಾರೆ. +ಆದರೆ, ಎರಡನೇ ಗುಂಪಿಗೆ ಸೇರುವ ಜನರ ಸಂಖ್ಯೆ ಕಮ್ಮಿ!! +ಈ ಸಂದರ್ಶನ ಬರೆದು ಮುಗಿಸುವ ಹೊತ್ತಿಗೆ “ದ್ವೀಪ”ಕ್ಕೆ ರಾಜ್ಯ ಪ್ರಶಸ್ತಿ ಸಂದಿದೆ. ಎಲ್ಲಾ ಪ್ರಶಸ್ತಿಗಳು ತರುವ ಸಂಭ್ರಮವನ್ನು ಈ ಪ್ರಶಸ್ತಿ ತಂದಿಲ್ಲವಂತೆ. ಫೋನ್ ಮಾಡಿದರೆ, “ಡಿಪ್ಲೊಮ್ಯಾಟಿಕ್” ಆಗಿ ಪ್ರತಿಕ್ರಿಯಿಸಲು ಪ್ರಾರಂಭಿಸಿದ ಗಿರೀಶರು, ಸ್ವಲ್ಪ ಖಾರವಾಗಿಯೇ ಮಾತು ಮುಗಿಸಿದರು. +“ಒಬ್ಬ ಕಲಾವಿದನಿಗೆ ಯಾವ ಪ್ರಶಸ್ತಿಯೇ ಆಗಲಿ ಖುಶಿ ತರುತ್ತದೆ…ತರಲೇಬೇಕು. ಆದರೆ, “ದ್ವೀಪ”ಕ್ಕೆ ರಾಜ್ಯ ಪ್ರಶಸ್ತಿ ಬಂದಿರುವ ಬಗ್ಗೆ ನನಗೆ ಸಂತೋಶಕ್ಕಿಂತಾ ನೋವು ಜಾಸ್ತಿ ಆಗಿದೆ, ನಮ್ಮ “ರಿಡಿಥಿ” ಆಡಿರುವ ಮಾತಿನಿಂದ. ಅವರ ಪ್ರಕಾರ, ರಾಷ್ಟ್ರ ಪ್ರಶಸ್ತಿ ಬಂದಿರುವ ಸಿನಿಮಾಕ್ಕೆ ರಾಜ್ಯ ಪ್ರಶಸ್ತಿ ಕೊಡಲೇಬೇಕಾದಂಥ ಅನಿವಾರ್ಯತೆ ಇತ್ತಂತೆ. ಏನಿದರ ಅರ್ಥ? ನಮ್ಮ ಜ್ಯೂರಿಗೆ ಸ್ವಂತ ನಿರ್ಧಾರ ತೆಗೆದುಕೊಳ್ಳುವ ಹಕ್ಕು, ಧೈರ್ಯ ಇಲ್ಲವೆಂತಲೇ? ಏನಿವರು ಹೇಳುವ “ಅನಿವಾರ್ಯತೆ” ಎಂಬುದರ ಅರ್ಥ? ಸಿನಿಮಾಕ್ಕೆ ಯೋಗ್ಯತೆ ಇಲ್ಲದಿದ್ದರೂ ಕೊಟ್ಟೆವು ಎಂದೋ?” +“ಇದು ಬರೀ “ದ್ವೀಪ”ದ ವಿಷಯವಲ್ಲ. ಒಟ್ಟಿನಲ್ಲಿ ಇಂಥಾ ಧೋರಣೆ ಒಂದು ಒಳ್ಳೆಯ ಸಿನಿಮಾ ಮಾಡಬೇಕೆಂಬ ಹಂಬಲ ಇರುವ ಯಾರಿಗೂ ಪ್ರೋತ್ಸಾಹ ನೀಡುವಂಥದ್ದಲ್ಲ. ಮತ್ತು, ನಮ್ಮ ಜ್ಯೂರಿಯ ಸ್ಥಾನಕ್ಕೆ ಶೋಭೆ ತರುವಂಥದ್ದಂತೂ ಖಂಡಿತಾ ಅಲ್ಲ…” +ಅರೆ! “ಡಿಪ್ಲೋಮ್ಯಾಟಿಕ್” ಆಗಿರುವ ಗಿರೀಶರು ಹೀಗೆಲ್ಲಾ ಹೇಳಬಲ್ಲರೇ ಎಂದು ಯೋಚಿಸುತ್ತಾ, ಸರಸರನೆ ಇದನ್ನೆಲ್ಲ ಬರೆದುಕೊಳ್ಳುತ್ತಿದ್ದವಳಿಗೆ ಕೊನೆಗೂ ಉತ್ತರ ಸಿಕ್ಕಿತು. +“ನಮ್ಮಲ್ಲಿ, “ದ್ವೀಪ” ಸಿನಿಮಾಕ್ಕೂ, ಅದರ ಛಾಯಾಗ್ರಾಹಕ ರಾಮಚಂದ್ರನಿಗೂ ರಾಜ್ಯ ಪ್ರಶಸ್ತಿ ರಾಷ್ಟ್ರ ಪ್ರಶಸ್ತಿ ಎರಡೂ ಬಂದಿದೆ. ನಮ್ಮ ಜ್ಯೂರಿ ಯಾರ ಬಗ್ಗೆ ಹೇಳಿದರು (ಸಿನಿಮಾದ ಬಗ್ಗೆಯೋ ಇಲ್ಲಾ ಛಾಯಗ್ರಾಹಕರ ಬಗ್ಗೆಯೋ) ಎಂಬುದು ಸ್ಪಷ್ಟವಾಗಿಲ್ಲ…” +***** +‘ಅಪ್ಸರ’ಕ್ಕಿಂತಾ ಅಶ್ಲೀಲ ಚಿತ್ರ ಬೇಕೆ ನಿರ್ಮಾಪಕ ಸಂಘದ ನೇತಾರರೆ….? ಮಾನ್ಯರೆ, ಎಲ್ಲೆಲ್ಲೋ ಚೆದುರಿ-ಚಿಪ್ಪಾ-ಚೂರಾಗಿದ್ದ ನಿರ್ಮಾಪಕರೆಲ್ಲಾ ಒಂದೆಡೆ ಸೇರಿ ಭದ್ರ ಬುನಾದಿಯ ಮೇಲೆ ನಿರ್ಮಾಪಕರ ಸಂಘಕ್ಕೆ ಹೊಸ ಹುಟ್ಟು ನೀಡಿದಿರಿ. ಎಲ್ಲರ ಹಿತ ಕಾಯುವಂಥ ಹತ್ತು-ಹಲವು […] +ಪಾತ್ರಧಾರಿಗಳು: ಕೊರ್ಮ (ನಿರ್ದೇಶಕ), ಶೀಲಾ (ಚಿತ್ರ ನಟಿಯಾಗುವ ಕನಸು ಹೊತ್ತ ಲಲನೆ), ಕುಂಭಕೋಣಂ (ಚಿತ್ರ ನಿರ್ಮಾಪಕ), ಪೋಸ್ಟ್‌ಮ್ಯಾನ್. (ರಂಗ ಮಧ್ಯದಲ್ಲೊಂದು ದೊಡ್ಡ ಕೆಂಪು ಡಬ್ಬವಿದೆ. ಬಲಭಾಗದಲ್ಲಿ ಶೀಲಾ ಇದ್ದಾಳೆ. ಎಡಭಾಗದಲ್ಲಿ ಕೊರ್ಮ ಇರುವ) ಕೊರ್ಮ: […] +‘ಅಂಬಿ’ಗಂದು ಸನ್ಮಾನ ಪ್ರೆಸ್‌ನವರಿಗೆ ‘ಥೂ-ಛೀ’ ಎಂದು ಅವಮಾನ ದಾವಣಗೆರೆಯಲ್ಲಿ ಅಂಬರೀಶ್ ಹುಟ್ಟುಹಬ್ಬದ ಅದ್ದೂರಿ ಸಮಾರಂಭದ ಜಾಹೀರಾತು ಪುಟ್ಟಗಟ್ಟಲೆ ಬಂತು. ವಿಷ್ಣು, ನಟ ನಟಿಯರು ಹಿಂಡು ಹಿಂಡಾಗಿ ಬರುತ್ತಾರೆ. ‘ಅಂಬಿ ವಜ್ರ ಕಿರೀಟ ಧಾರಣೋತ್ಸವಕ್ಕೆ’ ಎಂದು […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_178.txt b/Kannada Sahitya/article_178.txt new file mode 100644 index 0000000000000000000000000000000000000000..0d5e8e7988ab266a90ec57c1eb9c9a7670bfad81 --- /dev/null +++ b/Kannada Sahitya/article_178.txt @@ -0,0 +1,87 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಆಗಸ್ಟ್ ೨ರ ಶನಿವಾರ ಕೆ‌ಏಸ್‌ಸಿಯ ಪಾಲಿಗೆ ಅತ್ಯಂತ ಮಹತ್ವವಾದದ್ದು ಎಂದರೆ ಉತ್ಪ್ರೇಕ್ಷೆಯಲ್ಲ ಎಂದು ಭಾವಿಸುತ್ತೇನೆ. ಸದಾ ತರಾತುರಿಯಲ್ಲಿಯೇ ಕೆಲವು ಗಂಟೆಗಳ ಕಾಲಾವಧಿಯಲ್ಲಿ ನಡೆಯುತ್ತಿದ್ದ ಚರ್ಚೆಗಳು, ಸಭೆಗಳಿಗೆ ಬದಲಾಗಿ ಒಂದಿಡೀ ದಿನ ಕೆ‌ಏಸ್‌ಸಿಯ ಆಶಯ, ಸಾಧನೆ ಹಾಗೂ ಭವಿಷ್ಯದ ಬಗ್ಗೆ ಚರ್ಚಿಸಲು ಮೀಸಲಾಗಿದ್ದುದು ಒಂದು ವಿಶೇಷ. ಅದಕ್ಕೆ ಪೂರಕವಾಗಿ ಬೆಂಗಳೂರಿನಿಂದ ದೂರವಾಗಿ, ಚೇತೋಹಾರಿಯಾದ ಪ್ರಕೃತಿಯ ಮಡಿಲಲ್ಲಿ ಸೇರಿದ್ದು ಮತ್ತೊಂದು ವಿಶೇಷ. ಈ ವಿಶೇಷಗಳ ಫಲಶ್ರುತಿ ಈ ಸುಧೀರ್ಘ ವರದಿಯ ರೂಪದಲ್ಲಿ ನಿಮ್ಮ ಮುಂದಿದೆ. +ಬೆಂಗಳೂರಿನ ಗೌಜು ಗದ್ದಲದಲ್ಲಿ, ಸದಾ ಕೆಲಸದ ಒತ್ತಡದಲ್ಲಿ ಮುಳುಗಿರುವ ಎಲ್ಲರಿಗೂ ಓದೇಕಾರ್ ಫಾರಂ ಮುದ ನೀಡಿತು ಎಂದರೆ ಸುಳ್ಳಾಗುವುದಿಲ್ಲ. ಶ್ರೀ ಮೂರ್ತಿ ದಂಪತಿಗಳ ಉಪಚಾರದೊಂದಿಗೆ ಪುಷ್ಕಳ ಭೋಜನದ ನಂತರ ಪೂರ್ವನಿರ್ಧಾರಿತವಾದಂತೆ ೪ ಗಂಟೆಗೆ ಅಧಿಕೃತ ಸಭೆ ಪ್ರಾರಂಭವಾಯಿತು. ಮೊದಲಿಗೆ ಶೇಖರ್‌ಪೂರ್ಣರವರು ಕೆ‌ಏಸ್‌ಸಿಯ ಅಂಗವಾಗಿ ಸಂವಾದ.ಕಾಂನ ಪ್ರಾರಂಭದ ಬಗ್ಗೆ ಮಾತನಾಡಿದರು. ದೃಶ್ಯ ಮಾಧ್ಯಮದ ಬಗ್ಗೆ ಎಲ್ಲೂ ಮೌಲ್ಯಯುತವಾದ ಚರ್ಚೆ ನಡೆಯದಿರುವ ಬಗ್ಗೆ ಪ್ರಸ್ತಾಪಿಸುತ್ತಾ ಸಂವಾದ.ಕಾಂ ಈ ಕೊರತೆಯನ್ನು ನೀಗಿಸುವ ವೇದಿಕೆಯಾಗಲಿದೆ ಎಂದು ಹೇಳಿದರು. ನಾಟಕ, ಸಿನಿಮಾ ಅಥವಾ ಚಿತ್ರಕಲೆಯನ್ನು ನೋಡುವುದಷ್ಟೇ ಅಲ್ಲದೆ, ಅರ್ಥೈಸಿಕೊಳ್ಳುವ, ಆಸ್ವಾದಿಸುವ ಕಲೆಯನ್ನು, ಆಸಕ್ತಿಯನ್ನು ಹುಟ್ಟುಹಾಕಲು ಸಂವಾದ.ಕಾಂ ರೂವಾರಿಯಾಗಬೇಕು, ಮಾರ್ಗದರ್ಶಿಯಾಗಬೇಕು ಎಂಬ ತಮ್ಮ ಆಶಯವನ್ನೂ, ಅಂತಹ ಒಂದು ಕೆಲಸದ ಪ್ರಸ್ತುತತೆ, ಅಗತ್ಯತೆಯನ್ನೂ ವಿವರಿಸಿದರು. ಇತ್ತೀಚಿಗೆ ನಡೆದ ಮಠ ಚಿತ್ರದ ಸಂವಾದ ಕಾರ್ಯಕ್ರಮದ ಯಶಸ್ಸಿನ ಬಗ್ಗೆ ಪ್ರಸ್ತಾಪಿಸುತ್ತ ಈಗಾಗಲೇ ಕೆಲವು ನಿರ್ಮಾಪಕರು, ನಿರ್ದೇಶಕರು ಇಂತಹ ಕಾರ್ಯಕ್ರಮದ ಬಗ್ಗೆ ಉತ್ಸಾಹಿತರಾಗಿದ್ದಾರೆಂದು ಸೂಚಿಸಿದರು. +ಕೆ‌ಏಸ್‌ಸಿ ಸಾಲದೆ? ಸಂವಾದ.ಕಾಂ ಬೇಕೆ? ಬೇಕಿದ್ದರೆ ಅದು ಬೇರೆಯಾಗಿರಬೇಕೆ? ಇದರಿಂದ ಕೆ‌ಏಸ್‌ಸಿಯ ಬಗ್ಗೆ ಆಸಕ್ತಿ ಕಡಿಮೆಯಾಗುವುದಿಲ್ಲವೇ? ನಮ್ಮ ಮೂಲ ಆಶಯದಿಂದ ದೂರ ಹೋಗುತ್ತಿದ್ದೇವೆಯೇ? ಕೆ‌ಏಸ್‌ಸಿಯ ಕೆಲಸಗಳೇ ಇನ್ನೂ ಉಳಿದಿರುವಾಗ, ಇನ್ನೊಂದನ್ನು ಹುಟ್ಟುಹಾಕಿ ನಿರ್ವಹಿಸುವುದು ಕಷ್ಟವಾಗುವುದಿಲ್ಲವೆ? ಎಂಬ ಅನೇಕ ಪ್ರಶ್ನೆಗಳು ಸಭೆಯಲ್ಲಿ ಭಾಗವಿಹಿಸಿದ್ದವರಿಂದ ವ್ಯಕ್ತವಾದವು. ಇದಕ್ಕೆ ಉತ್ತರಿಸಿದ ಶೇಖರ್‌ಪೂರ್ಣರವರು ಕೆ‌ಏಸ್‌ಸಿಯ ಪ್ರಧಾನ ಆಶಯ ಜನಸಾಮಾನ್ಯರಿಗೆ ಬೇಕಾದ ದೇಸಿ ಸಂಸ್ಕೃತಿಗೆ ಒಗ್ಗುವಂತೆ ತಾಂತ್ರಿಕತೆಯನ್ನು ರೂಪಿಸುವುದೇ ಆಗಿದೆ. ಪ್ರಧಾನ ಸಂಸ್ಕೃತಿ ಮುಖ್ಯವಾಗಿ ಬಿಂಬಿತವಾಗುವುದು ಪಠ್ಯ ಹಾಗೂ ದೃಶ್ಯ ಮಾಧ್ಯಮಗಳಲ್ಲಿ, ಪಠ್ಯಕ್ಕೆ ಕನ್ನಡಸಾಹಿತ್ಯ.ಕಾಂ ಇರುವಂತೆ ದೃಶ್ಯಕ್ಕೆ ಸಂವಾದ.ಕಾಂ ಇರುತ್ತದೆ ಎಂದು ತಮ್ಮ ಉದ್ದೇಶವನ್ನು ಮತ್ತಷ್ಟು ಸ್ಪಷ್ಟಪಡಿಸಿದರು. +ನಂತರ ಸಂವಾದ.ಕಾಂಗೆ ತನ್ನದೇ ಆದ ಟ್ರಸ್ಟ್ ಇರುವ ಅಗತ್ಯತೆಯನ್ನು ಸೂಚಿಸಿ, ಸಭೆಯಲ್ಲಿ ನೆರೆದಿದ್ದವರನ್ನು ಸ್ವಪ್ರೇರಣೆಯಿಂದ ಸದಸ್ಯರಾಗಲು ಆಹ್ವಾನಿಸಿದರು. ಅಜಿತ್ ಮುಂದೆ ಬಂದವರಲ್ಲಿ ಮೊದಲಿಗರಾದರು. ನಂತರ ಕಿರಣ್, ಶೇಖರ್, ರವಿ ಅರೇಹಳ್ಳಿ, ರುದ್ರಮೂರ್ತಿ, ರಾಘವ ಕೋಟೆಕರ್, ಲಾವಣ್ಯ, ಸೌಮ್ಯ, ಕಿಶೋರ್, ಶೇಖರ್‌ಪೂರ್ಣ, ರಮೇಶ್ ಜೊತೆಗೂಡಿದರು. ಅಜೀವ ಸದಸ್ಯರಾಗಲು ಅಜಿತ್ ಒಪ್ಪಿಕೊಂಡರು. ಟ್ರಸ್ಟ್‌ನ ಸದಸ್ಯರೆಲ್ಲರೂ ಕನಿಷ್ಠ ರೂ.೧೦೦೧/- ನ್ನು ದೇಣಿಗೆಯಾಗಿ ನೀಡಬೇಕೆಂದು ತೀರ್ಮಾನಿಸಲಾಯಿತು. +ಟ್ರಸ್ಟನ ವಿವಿಧ ಹುದ್ದೆಗಳಿಗೆ ಸದಸ್ಯರ ಹೆಸರುಗಳನ್ನು ಸೂಚಿಸಲು ಆಹ್ವಾನಿಸಲಾಯಿತು. +೧) ಅಧ್ಯಕ್ಷರ ಸ್ಥಾನಕ್ಕೆ ಶೇಖರ್‌ಪೂರ್ಣರವರು ಶ್ರೀ ಶೇಖರ್ ಅವರನ್ನು ಸೂಚಿಸಿದರು, ಕಿಶೋರ್ ಚಂದ್ರ ಅನುಮೋದಿಸಿದರು. +೨) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ನೂತನ ಅಧ್ಯಕ್ಷರಾದ ಶೇಖರ್ ರವರು ಶ್ರೀ ರವಿ ಅರೇಹಳ್ಳಿಯವರನ್ನು ಸೂಚಿಸಿದರು, ಲಾವಣ್ಯ ಅನುಮೋದಿಸಿದರು. +೩) ಖಚಾಂಚಿ ಸ್ಥಾನಕ್ಕೆ ಅಜಿತ್ ರವರು ಶ್ರೀ ಕಿರಣ್‌ರವರನ್ನು ಸೂಚಿಸಿದರು, ರಾಘವ ಕೋಟೆಕರ್ ರವರು ಅನುಮೋದಿಸಿದರು. +೪) ಕಾರ್ಯದರ್ಶಿ ಸ್ಥಾನಕ್ಕೆ ರುದ್ರಮೂರ್ತಿಯವರು ಶ್ರೀಮತಿ ಲಾವಣ್ಯರವರನ್ನು ಸೂಚಿಸಿದರು, ಸೌಮ್ಯ ಅನುಮೋದಿಸಿದರು. +ಈ ಎಲ್ಲ ಸ್ಥಾನಗಳಿಗೆ ಆಯ್ಕೆಯಾದ ಅಭ್ಯರ್ಥಿಗಳನ್ನು ಸಭೆ ಒಮ್ಮತದಿಂದ ಅಂಗೀಕರಿಸಿತು. +ಸಭೆಯಲ್ಲಿ ತೆಗೆದುಕೊಂಡ ಕೆಲವು ಪ್ರಮುಖ ನಿರ್ಣಯಗಳು: +೧) ಟ್ರಸ್ಟ್ ರಿಜಿಸ್ಟರ್ ಮಾಡಲು ಬೇಕಾದ ಎಲ್ಲ ಕಾಗದ ಪತ್ರಗಳನ್ನು ಶೇಖರ್‌ಪೂರ್ಣರವರು ತಯಾರು ಮಾಡತಕ್ಕದ್ದು. ರಿಜಿಸ್ಟರ್ ಮಾಡುವ ದಿನದಂದು ಎಲ್ಲರೂ ಹಾಜರಿರಬೇಕಾದ ಕಾರಣ ಆ ದಿನಾಂಕವನ್ನು ಒಂದು ವಾರ ಮುಂಚೆ ಎಲ್ಲರಿಗೂ ತಿಳಿಸುವುದು. +೨) ಇನ್ನು ಮುಂದೆ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಬಳಸುವ ಬ್ಯಾನರ್‌ಗಳು ಹಾಗೂ ಲೆಟರ್ ಹೆಡ್‌ಗಳಲ್ಲಿ “ಕನ್ನಡ ಸಾಹಿತ್ಯ.ಕಾಂ ಬೆಂಬಲಿಗರ ಬಳಗ” ಹಾಗೂ “ಸಂವಾದ.ಕಾಂ” ಎರಡೂ ಹೆಸರುಗಳು ಇರಬೇಕು. +೩) ಕೆ‌ಏಸ್‌ಸಿ ಹಾಗೂ ಸಂವಾದ.ಕಾಂನ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಹೋಗಲು ಕೆಲವು ಸಮಿತಿಗಳನ್ನು ರಚಿಸಲಾಯಿತು ಹಾಗೂ ಅದಕ್ಕೆ ಕೆಲವು ಸದಸ್ಯರನ್ನು ನಿಯೋಜಿಸಲಾಯಿತು. ಅವು ಹೀಗಿವೆ: +ಅ) ಸಂಪಾದಕ ಸಮಿತಿ +ಸಂಪಾದಕರು – ಶ್ರೀ ಶೇಖರ್‌ಪೂರ್ಣ +ಉಪ ಸಂಪಾದಕರು – ಶ್ರೀ ವಿಕ್ರಮ್ ಹತ್ವಾರ್ +ಶ್ರೀ ಕಿರಣ್ ಎಂ +ಶ್ರೀ ಜಯಕುಮಾರ್ +ಕಲಾ ನಿರ್ದೇಶಕರು – ಶ್ರೀ ಪಿ.ಟಿ.ಪ್ರಮೋದ್ +ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು +ಸಂಗ್ರಹದಲ್ಲಿರುವ ಎಲ್ಲ ಪಠ್ಯವನ್ನು ಮುಖ್ಯ ತಾಣಕ್ಕೆ ವರ್ಗಾಯಿಸುವುದು. +ತಾಣವನ್ನು ವಿಶಿಷ್ಟವಾಗಿರುವಂತೆ ನೋಡಿಕೊಳ್ಳುವುದು (ಈoಛಿus oಟಿ Pಡಿeseಟಿಣಚಿಣioಟಿ ಣo ಞeeಠಿ ಣhe siಣe uಟಿique) +ಬ) ಕಾರ್ಯ ನಿರ್ವಾಹಕ ಸಮಿತಿ +ಃಡಿಚಿಟಿಜ Pಡಿomoಣioಟಿ ಚಿಟಿಜ Pಖ ಔಠಿeಡಿಚಿಣioಟಿs – ಶ್ರೀ ಕಿಶೋರ್ ಚಂದ್ರ +ಶ್ರೀ ರವಿ ಅರೇಹಳ್ಳಿ +ಶ್ರೀ ರಾಜ್‌ಕುಮಾರ್ +ಈuಟಿಜ ಡಿಚಿisiಟಿg +ಶ್ರೀ ಅಜಿತ್ +ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು +ಕೆ‌ಏಸ್‌ಸಿಯ ಬಗ್ಗೆ ಒಂದು ಮಾಹಿತಿ ಕೈಪಿಡಿ(ಃಡಿoಛಿhuಡಿe) +ಎಲ್ಲ ಸಕ್ರಿಯ ಸದಸ್ಯರಿಗೆ ಕೆ‌ಏಸ್‌ಸಿ mಚಿiಟ iಜ +ಎಲ್ಲ ಸದಸ್ಯರ ಮೈಲುಗಳಲ್ಲಿ ಸಹಿ ಇರುವ ಕಡೆ ಕೆ‌ಏಸ್‌ಸಿಯನ್ನು ಪ್ರತಿನಿಧಿಸುವ ಒಕ್ಕಣೆ +ಪ್ರತಿ ತಿಂಗಳು ಒಂದು ಚಟುವಟಿಕೆ +ಪ್ರಚಾರಕ್ಕಾಗಿ ಬಳಸುವ ಎಲ್ಲ ಸಾಮಗ್ರಿಗಳು ಕೆ‌ಏಸ್‌ಸಿ ಹೆಸರಿನಲ್ಲಿರಬೇಕು +ಸಕ್ರಿಯ ಸದಸ್ಯರಿಗೆ ಗುರುತಿನ ಚೀಟಿ +ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಚಾಂಚಿಗೆ ಪ್ರತ್ಯೇಕ ವಿಸಿಟಿಂಗ್ ಕಾರ್ಡ್ ಹಾಗೂ ಇತರರಿಗೆ ಕೆ‌ಏಸ್‌ಸಿ ಗುರುತಿನ ಚೀಟಿ +ಸದಸ್ಯರಿಗೆ ಕೆ‌ಏಸ್‌ಸಿಯ ಲೋಗೋ ಇರುವ ಟೀ-ಶರ್ಟ್ +ಕ) ತಾಂತ್ರಿಕ ಸಮಿತಿ +ಶ್ರೀ ರುದ್ರಮೂರ್ತಿ +ಶ್ರೀ ರಾಘವ ಕೋಟೆಕರ್ +ಶ್ರೀ ವಿವೇಕ್ +ಶ್ರೀಮತಿ ಲಾವಣ್ಯ +ಕುಮಾರಿ ಸೌಮ್ಯ +ಜರೂರಾಗಿ ಗಮನ ಕೊಡಬೇಕಾದ ಕೆಲಸಗಳು +ಪ್ರತಿ ತಿಂಗಳೂ ಪ್ರಕಟವಾಗುವ ಪಠ್ಯವನ್ನು ಬ್ಯಾಕಪ್ ಮಾಡುವುದು.(ವಿವೇಕ್ ಈ ಹೊಣೆಯನ್ನು ಹೊತ್ತಿದ್ದಾರೆ) +“ಸಂಪೂರ್ಣ” ಅ‌ಒS ಅನ್ನು ಸಂಪೂರ್ಣಗೊಳಿಸುವುದು +೪) ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದಲ್ಲಿ ಸಂವಾದ.ಕಾಂಗೆ ಮಾತ್ರ ಲಿಂಕ್ ಇರಬೇಕು. ಬೇರೆ ಯಾವುದೇ ತಾಣದ ಲಿಂಕ್ ಸಂವಾದ.ಕಾಂ ತಾಣದಲ್ಲಿ ಕೊಡಬಹುದು. +೫) ಯಾವುದೇ ಚಟುವಟಿಕೆಯ ಪ್ರಕಟಣೆಯನ್ನು ಸಂಪಾದಕ ಸಮಿತಿ ಸಾರ್ವಜನಿಕ ಸಂಪರ್ಕಾಧಿಕಾರಿ(ರವಿ ಅರೇಹಳ್ಳಿ)ಯ ಮುಖಾಂತರ ಕೊಡತಕ್ಕದ್ದು. +೬) ಕೆ‌ಏಸ್‌ಸಿಯ ಜಿಲ್ಲಾವಾರು ಬೆಂಬಲಿಗರ ಬಳಗಗಳಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಸಲಹೆಗಳು ಹಾಗೂ ಸಹಾಚಿi ಮೂಲ ಗುಂಪಿನಿಂದ ಸಿಗುತ್ತದೆ. ಯಾವುದೇ ಕಾರ್ಯಕ್ರಮಕ್ಕೆ ಬೇಕಾದ ಹಣ ಸಂಗ್ರಹಣೆ ಆಯಾ ಜಿಲ್ಲೆಗಳ ಸಂಚಾಲಕ ಹಾಗೂ ಸದಸ್ಯರಿಗೆ ಬಿಟ್ಟಿದ್ದು. ಕಾರ್ಯಕ್ರಮದ ನಂತರ ಖರ್ಚು ವೆಚ್ಚದ ವರದಿಯನ್ನು ಮೂಲ ಗುಂಪು ಹಾಗೂ ಟ್ರಸ್ಟ್‌ಗಳಿಗೆ ಸಲ್ಲಿಸತಕ್ಕದ್ದು. +ಅಕ್ಟೋಬರ್ ಕೊನೆಯ ವಾರದಲ್ಲಿ ನಡೆಸಬೇಕೆಂದು ಯೋಚಿಸಿರುವ “ಪರ್ಯಾಯ ಸಿನಿಮಾ ನನ್ನ ದೃಷ್ಟಿಯಲ್ಲಿ?” ಎರಡು ದಿನಗಳ ಕಾರ್ಯಶಿಬಿರದ ಬಗ್ಗೆ ಶೇಖರ್‌ಪೂರ್ಣರವರು ಪ್ರಸ್ತಾಪಿಸಲು, ಎರಡು ದಿನವಿರಬೇಕೆ? ಒಂದು ದಿನ ಸಾಲದೆ ಎಂಬ ಸ್ವರಗಳು ಜೋರಾಗಿಯೇ ಎದ್ದರೂ ಕೊನೆಗೆ ಅಡಗಬೇಕಾಯಿತು. ಶಿಬಿರ ಎರಡು ದಿನಗಳು ನಡೆಯುವುದೆಂದು ತೀರ್ಮಾನಿಸಲಾಯಿತು. ಸಂಭವನೀಯ ಕಾರ್ಯಕ್ರಮದ ಪಟ್ಟಿ ಹೀಗಿದೆ: +ಮೊದಲ ದಿನ – ಉದ್ಘಾಟನೆ +“ಘಟಶ್ರಾದ್ಧ” ಸಿನಿಮಾ ಪ್ರದರ್ಶನ +ಚಲನಚಿತ್ರದ ಬಗ್ಗೆ ತಜ್ಞರಿಂದ ಮೂರು ಉಪನ್ಯಾಸಗಳು +ಏರಡನೆಯ ದಿನ – ಶ್ರೀ ಗಿರೀಶ್ ಕಾಸರವಳ್ಳಿಯವರ ಮತ್ತೊಂದು ಸಿನಿಮಾ ಪ್ರದರ್ಶನ +ಪರ್ಯಾಯ ಚಲನಚಿತ್ರಗಳ ಬಗ್ಗೆ ಎರಡು ಉಪನ್ಯಾಸ +ಶ್ರೀ ಗಿರೀಶ್ ಕಾಸರವಳ್ಳಿಯವರೊಂದಿಗೆ ಸಂವಾದ +ಈ ನಿಟ್ಟಿನಲ್ಲಿ ಸದಸ್ಯರ ಜವಾಬ್ದಾರಿಗಳು +ಸತತ ಎರಡು ತಿಂಗಳ ಆನ್‌ಲೈನ್ ಪ್ರಚಾರ – ರಾಘವ ಕೋಟೇಕರ್, ಲಾವಣ್ಯ +ಅತಿಥಿಗಳ ಜವಾಬ್ದಾರಿ – ಶ್ರೀ ಶೇಖರ್‌ಪೂರ್ಣ +ಸಾರ್ವಜನಿಕ ಸಂಪರ್ಕ – ರವಿ ಅರೇಹಳ್ಳಿ +ಊಟೋಪಚಾರ – ಶ್ರೀ ಶೇಖರ್, ರಮೇಶ್ +ನೆನಪಿನ ಕಾಣಿಕೆ – ರಮೇಶ್, ಸೌಮ್ಯ +ನೆನಪಿನ ಕಾಣಿಕೆಯ ರೂಪುರೇಷೆ – ಕಿಶೋರ್ ಚಂದ್ರ +ಶಿಬಿರಾರ್ಥಿಗಳಿಗೆ ಕೊಡುವ ಪೇಪರ್ ಚೀಲ ಇತ್ಯಾದಿ – ರಮೇಶ್ +ಇಷ್ಟಾದ ನಂತರ, ಸಮಯ ರಾತ್ರಿ ೨.೩೦ ಆದ್ದರಿಂದ ಬಲವಂತವಾಗಿ ಚರ್ಚೆಯನ್ನು ನಿಲ್ಲಿಸಿ ಸಭೆಯನ್ನು ಮುಗಿಸಲಾಯಿತು. ಮರುದಿನ ತಿಂಡಿ ತಿಂದು, ಮತ್ತೊಂದು ಸುತ್ತು ತೋಟ ನೋಡಿ, ವರ್ಷಕ್ಕೊಮ್ಮೆಯಾದರೂ ಇಂತಹ ಶಿಬಿರ ಇರಬೇಕು ಎಂದುಕೊಳ್ಳುತ್ತ, ನಮ್ಮ ನಮ್ಮ ಜವಾಬ್ದಾರಿಯನ್ನು ಹೊತ್ತುಕೊಂಡು ಎಲ್ಲರೂ ಹೊರಟಿದ್ದಾಯಿತು. +***** +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಅಂತೂ ಇವತ್ತು ಸಂಸ್ಕೃತವು ಶ್ರೀ ಸಾಮಾನ್ಯನ ಭಾಷೆಯಾಗಿಲ್ಲ. ಮೂರು ಕೋಟಿ ಕನ್ನಡಿಗರಲ್ಲಿ ಎಷ್ಟು ಜನರಿಗೆ ಸಂಸ್ಕೃತದಲ್ಲಿ ಪ್ರವೇಶ ಸಾಧ್ಯ ? ಸುಮಾರು […] +ಲೇಖನಕ್ಕೆ ತೊಡಗಿಕೊಳ್ಳುವ ಮೊದಲು ಬರವಣಿಗೆಯ ಸ್ವರೂಪವನ್ನು ಅಸ್ಪಷ್ಟವಾಗಿಯಾದರೂ ಗುರುತಿಸಿಕೊಳ್ಳಲೇಬೇಕಾಗಿರುವುದರಿಂದ ಈ ಲೇಖನವನ್ನು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡ ನನ್ನ ಅನುಭವಗಳ ಮಟ್ಟಕ್ಕೆ ಸೀಮಿತಗೊಳಿಸಲು ನಿರ್ಧರಿಸಿದ್ದೇನೆ. ತಾಂತ್ರಿಕ ವೃತ್ತಿಯವನಾದ ನನ್ನ ಆಸಕ್ತಿಯ ವಿಷಯವಾದ ಸಾಹಿತ್ಯ, ಅದರ ಸುತ್ತ […] +ಭಾಷಾ ಸಮಿತಿಯ ವರದಿ ದಿನಾಂಕ: ೨೭-೧-೧೯೮೧ (ಡಾ| ಗೋಕಾಕ್ ಸಮಿತಿ ವರದಿ) ಸನ್ಮಾನ್ಯ ಶಿಕ್ಷಣ ಸಚಿವರಿಗೆ, ಸಂಸ್ಕೃತವನ್ನು ಪ್ರಥಮಭಾಷೆಗಳ ಪಟ್ಟಿಯಿಂದ ತೆಗೆಯಲು ೧೯೭೯ನೇ ಅಕ್ಟೋಬರ್ ತಿಂಗಳಲ್ಲಿ ಸರ್ಕಾರ ಆದೇಶ ಹೊರಡಿಸಿದುದರಿಂದ ಉಂಟಾದ ವಿವಾದವನ್ನು ತಜ್ಞರ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_179.txt b/Kannada Sahitya/article_179.txt new file mode 100644 index 0000000000000000000000000000000000000000..46f4a37e8a01d3c6a6e80ebd6de736920d7074c0 --- /dev/null +++ b/Kannada Sahitya/article_179.txt @@ -0,0 +1,74 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಸವತಿ ಮಕ್ಕಳ ಹಾಗೆ ಕಾಣಬೇಡವ್ವ +ಸವತಿ ಮಕ್ಕಳ ಹಾಗೆ ಕಾಣಬೇಡ. +– ೧ – +ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ +ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ +ಮರುಧರೆಯ ಮರುಳರ ಕಡು ನೆಂಟರೆಂಬೆ +ಪಕ್ಕದ ಖೂಳನ ಏಜೆಂಟರೆಂಬೆ, +ಹಳೆ ಹೇಳಿಗೆಯ ನಂಜೆದೆಯ ತಳಿಗಳ ಜೊತೆಯಲ್ಲೆ, +ಹೊಸ ಪೀಳಿಗೆಯ ನಿರಪಾಯ ಏಳಿಗೆಯ ಸುಳಿಗಳನು +ದೂಡುವೆ ಸಂಶಯದ ಖೆಡ್ಡಕ್ಕೆ ತಾಯಿ +ಲೇಬಲ್ಲನಂಟಿಸುವೆ ಗಡ್ಡಕ್ಕೆ ತಾಯಿ, +ಸವತಿ ಮಕ್ಕಳ ಹಾಗೆ….. +– ೨ – +ಧರ್ಮಾಂಧ ಧೂರ್ತರ ಎಡಗೈಯ ತುತ್ತಿಗೆ +ಕೊಬ್ಬಿರುವ ಮನೆಮುರುಕ ಮಂದಿಯ ಕತ್ತಿಗೆ +ಒರೆಯಾಗಿ ಇಹರಿವರು ಒಳಗೊಳಗೆ ಮೆತ್ತಗೆ, +ಕೊಯ್ಯಲು ಕುತ್ತಿಗೆ ಸರಿಯಾದ ಹೊತ್ತಿಗೆ +ಹೊಂಚಿಹರು ಎಂಬಂತೆ, ತಲೆ ಹೊಯ್ದು ಇಟರೂ +ಸೋರೆ ಬುರುಡೆಯ ಎಂದು ಶಂಕಿಸುವೆ ನಮ್ಮವ್ವ- +ಚಲ್ಲಣರ ಎದೆಯಲ್ಲು ತಲ್ಲಣದ ದೆವ್ವ +ಕುಣಿಸುತ್ತ, ತಿರುಚುವೆ ಹೊಂಗನಸ ಹುವ್ವ, +ಸವತಿ ಮಕ್ಕಳ ಹಾಗೆ….. +– ೩ – +ಹೆಚ್ಚು ಕಡಿಮೆಗಳಿಲ್ಲ ಇಂಡಿಯನ್ನರು ಒಂದೆ +ಹಲವು ಬಣ್ಣದ ಕುರಿಗಳಿಂದಾದ ಮಂದೆ +ಎಂದು ಲೋಕಕೆ ಸಾರಿ, ಪಶ್ಚಿಮರ ಮುಂದೆ +ಮೆರೆಸುವೆ ರಾಷ್ಟ್ರಪತಿ ದಾಡಿಗನ ಮಂಡೆ. +ಬಾಡಿಗೆಯ ಮನೆಗಿಲ್ಲಿ ಅಲೆದಿರಲು, ಮನೆಯೊಡೆಯ +ಹೆಸರಿಂದ ಕುಲವರಿತು, ಅಟ್ಟಲು ಕಾರಣ- +ಮುದಿ ತಾಯ ಮಡಿತನವನೊಡ್ಡುವೆ ಅಮ್ಮ, +ಬೇವರ್ಸಿಗಳ ಹಾಗೆ ಅಲೆಸುವೆ ಅಮ್ಮ, +ಸವತಿ ಮಕ್ಕಳ ಹಾಗೆ….. +– ೪ – +ನಾವೂನು ಭಾರತಿಯ ಬಸಿರವರೆ ಎನ್ನುತ್ತ +ತಾಯೆಂಬ ಬಾಯಲ್ಲೆ ನಾಯುಣಿಸು ತಿನ್ನುತ್ತ +ಮೀರ್ ಸಾದಖರು ಮತ್ತೆ ನಮ್ಮಕ್ ಹರಾಮರು +ಮೊಘಲಾಯಿ ದೌಲತ್ತು ಮೆರೆವ ಅನಾಮರು- +ಇದ್ದಾರು ಕೋಮಿನ ಕಂತ್ರಾಟುದಾರರು +ಮಾಸೂಮು ಮಂದಿಯ ನೆಮ್ಮದಿ ಚೋರರು; +ಮಾಡವ್ವ ಅಂಥವರ ಸುಳಿಯ ಸಘಾಯಿ; +ನಿಷ್ಪಾಪಿಗಳಿಗಾಗು ನಿರ್ಭಯದಾಯಿ, +ಸವತಿ ಮಕ್ಕಳ ಹಾಗೆ….. +– ೫ – +ಬೆಳಕ ಕಂಡೆವು ಇಲ್ಲೆ, ಬಾಡಿ ಬೀಳುವೆವಿಲ್ಲೆ, +ಏನಾಟ ನಡೆದರೂ ನಿನ್ನಡಿಯ ಗಡಿಯಲ್ಲೆ. +ಮರಳಂತೆ ಸಣ್ಣಾಗಿ ಬಾಳ್ದೊರೆಯ ತಡಿಯಲ್ಲೆ +ಸುಡು ಬಿಸಿಲನುಂಡರೂ, ಕೈನೀಡಿನೆಡೆಯಲ್ಲೆ +ಹರಿವ ನೀರನು ಕಂಡು, ನೀರಡಿಕೆ ಉಲ್ಬಣಿಸಿ, +ನಿನ್ನ ಹಳಿಯುವ ಖೋಡಿ ತಿಳಿಗೇಡಿಗಳ ಹರಸಿ- +ತೆಗೆದುಕೊ ಇವರನ್ನೂ ಲೆಕ್ಕಕ್ಕೆ ತಾಯೆ +ಪರದೆಯೆಳಿ ಇವರೆದೆಯ ದುಃಖಕ್ಕೆ ತಾಯೆ +ಸವತಿ ಮಕ್ಕಳ ಹಾಗೆ….. +***** +ಕೀಲಿಕರಣ: ಶ್ರೀನಿವಾಸ +ನಮ್ಮ ಕಮ್ಯುನಿಸ್ಟರ ದೇಶದಲ್ಲಿ ಗುಟ್ಟಾದ ದೇವರ ಗುಡಿ ಚೆಂದ ಬಲರೆಪ್ಪೆ ಅದುರೀತೆಂದು ಭಯ ಬೀಳುವ ಸುಶಿಕ್ಷಿತಳ ಬೆಡಗು ಚೆಂದ ನಿಷ್ಠೆ, ಕರ್ತವ್ಯ, ಹೊಣೆಗಾರಿಕೆ ಇತ್ಯಾದಿಗಳಿಂದ ಬೀಗಿಕೊಂಡ ನೀತಿವಂತ ಸಭ್ಯರ ಘನತೆಗಿಂತ ತಂಗಿಯ ಹೇನು ಹೆಕ್ಕುತ್ತ […] +ನಡುವಗಲ ಪೊಳ್ತು; ಬೆಂಬಿಸಿಲಾಳುತಿದೆ ಜಗವ. ಗಿರಿಸಾನು ಪೇರಡವಿ ದಿಙ್ಮೂಢವಾಗಿಹವು; ಬೇಲಿಪೊದ ಸಾಲಿನಲಿ ಕೀಟಗಳ ನಸು ಸುಳಿವು; ಮೇಲೆ ನೀಲಾಂಬರದಿ ನುಸುಳಿ ಮಲ್ಲಡಿಯಿಡುವ ತೇಲು-ಮೋಡದ ಕೂಸು; ಹುಲ್ಲುಗಾವಲದಲ್ಲಿ ಹೆಸರಿರದ ಚಿತ್ರಮಯ ಹೂಗಳೊಡನಾಡುತಿದೆ ಏಕಾಂಗಿ ಚಿಟ್ಟೆ; ಅಲುಗುತ್ತಿವ […] +೧ ಅಂಚೆಯಾಳು ಬಂದನೇನು? ತಂದನೇನು ಓಲೆಯ? ಮನವ ಕೊಂಡು ಕೊನೆವ ಒಲವು ಸಮೆದ ನುಡಿಯ ಮಾಲೆಯ? ಕಳುಹಲಿಲ್ಲವೇನು ಗಾಳಿಯೊಡನೆ ಬಯಲಿನಾಲಯ? ಅವನ ಬರವ ಹಾರೈಸುತ ಯೋಚನೆಯೊಡನೋಲವಿಸುತ ಬಂಧು ಬಳಗವೆಲ್ಲವಿಲ್ಲೆ ಎದೆಗೆ ಬಿಜಯಗೈಸುತ ದೂರ ಸಾರಿ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_18.txt b/Kannada Sahitya/article_18.txt new file mode 100644 index 0000000000000000000000000000000000000000..03cbdc8544c7d6f884fde906011bfb4037ba2774 --- /dev/null +++ b/Kannada Sahitya/article_18.txt @@ -0,0 +1,61 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು, +ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು. +ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ +ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು. +ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ – +ಕೊಂಬೆಗಳೆಲ್ಲ ಸಂಜೆ ಬಾನಿನ ನಿರಾಳ ಮನದೊಳಚ್ಚೊತ್ತಿ +ಚಿತ್ತಾರವಾಗಿ ಕಪ್ಪು ಮುಸುಕಿನ ಒಳಗೆ ಹುದುಗುವವು +ಇದ್ದು ಇಲ್ಲದ ಹಾಗೆ. ಇರುಳಿನಲಿ ಒಮ್ಮೆಲೇ ಚಿಗುರೊಡೆದು +ಅಂತರಂಗವ ಬಿಚ್ಚಿ ಬಯಲಿಗಿಡುವದು ಬಾನು: +ಎಚ್ಚರಾಗದ ಹಾಗೆ ನೆಲದ ಮೈದಡವಿ ಮುದ್ದಿಸುವದು. +ಆಗ ಎಲ್ಲರಿಗು ನಿದ್ದೆ. ಬೆಳಗಿನ ಜಾವ ಯಾವುದೊ +ಕನಸು: ಬೆಳಗಾದ ಮೇಲೆ ಮರೆತು ನೆನೆಸುವದು – +ತಿರುಗಾಡಿ ಬರುವಾಗ ಗೆಳೆಯರಿಗು ಹೇಳಿ ನಕ್ಕು +ನಗಿಸುವದು; ಹೂ ಗಿಡಕೆ ನೀರು ಹಣೆಸುವದು. +* * * * +ಚಳಿಗಾಲದಲ್ಲಿ ಒಂದೊಂದೆ ಎಲೆಯುದುರಿ ನೆನಪು ಕಳಚು +ತ್ತಿರುವಾಗ ಯಾರಿಗೂ ಕಾಣದ ಹಾಗೆ ಬೇರಿಂದ ರಸ ಹೀರಿ +ಚಿಗುರಿ ನಿಂತವರಾರು? ಬಿರುಗಾಳಿ ಬೀಸಿ ಆಕಾಶದುದ್ದ +ಧೂಳಡರಿ ದಿಕ್ಕು ತಪ್ಪಿಸಿ, ಮನೆಮನೆಯ ಕಿಡಕಿ ಬಾಗಿಲು +ಬಡಿದು ಪಟಪಟ ಹನಿಯುದುರಿದಾಗ ಯಾರು ನೆಲಕಿಳಿದು +ಬಂದವರು? ಮರುದಿನ ಬೇಲಿಗುಂಟ ಹೂವರಳಿದಾಗ ಯಾರು +ಕಿಲಕಿಲ ನಕ್ಕು ಹೋದವರು? ನಿರ್ಮಲವಾಗಿ ನಿಂತ ಮೋಡ +ಹೊಯ್ದಾಡಿ ಎಲ್ಲೊ ಇಳಿಯುವುದು-ಭೂಮಿ ಗುಟುಕರಿಸುವದು. +ಆಗೀಗ ಮಿಂಚಿ ಅಂತರಿಕ್ಷದಲೇನೊ ಹೊಳೆಯುವದು. +* * * * +ಯಾವುದೋ ಗಳಿಗೆಯಲಿ ಹಟಾತ್ತನೆ ಒಳಗೆ ಅನಿಸುವ- +ದೊಂದು ; ಬೆಟ್ಟದ ಮುಡಿಯ ಕಲ್ಲು ಬಂಡೆಯಲಿ ಚೆಲ್ಲನೆ ಬುಗ್ಗೆ +ಚಿಮ್ಮಿ ಮುಂದೆ ಹರಿದದ್ದೆಲ್ಲೊ. ಹಗಲಿರುಳು ಜಾರುವವು +ದಿನದಿನವು ನನ್ನೊಳಗಿಂದ ಏನೊ ಹೀರುವವು ; ಮತ್ತೆಲ್ಲೊ +ತಿರುಗಿ, ಪತ್ತೆಯಿಲ್ಲದ ಹಾಗೆ ಜೇನಿಟ್ಟು ‘ಬಿಡಿಸಿಕೊ’ ಎಂದು +ದುಡಿಸುವವು. ಜೋಂಗೊಡುವ ಕಂಡು ಅಚ್ಚರಿಗೊಂಡರೂ +ಅವಸರ ಪಡುವ ಹಾಗಿಲ್ಲ ; ದಾಹ ತೀರಿಸಲು ನೀರಿಲ್ಲ. +ಮತ್ತು ಬರಿಸುವ ಮದ್ಯವಲ್ಲ. ಅಂಗೈಯಲ್ಲಿ ಹನಿಹನಿ +ಹಾಕಿ, ನೆಕ್ಕಿ ನಾಲಗೆ ತುಂಬ ಸವಿದು, ಕಣ್ಮುಚ್ಚಿ +ತೆರೆಯಬೇಕು. +* * * * +ನನ್ನ ನಂಬಿಕೆಯೊಂದು ಆಕಾಶ: +ನಿಜ, ಅದಕೆ ತಲೆಬುಡವಿಲ್ಲ, ನಾನೆಷ್ಟು ಬೆಳೆದರೂ +ನನಗೆ ನಿಲುಕುವುದಿಲ್ಲ, ದೂರದಿಂದಲ್ಲದೆ ನಾನದನು +ಮುಟ್ಟಿ ಅನುಭವಿಸಿಲ್ಲ. ಮೇಲೆ ನೋಡದೆ ಸೆಟೆದುಕೊಂಡೇ +ನಡೆದರೂ ಅದು ಸದಾ ನನ್ನ ತಲೆಯ ಮೇಲೆ. +ಹಗಲು ಹೊತ್ತಿನಲಿ ಅದರೆಡೆಗೆ ಲಕ್ಷ್ಯವಿಲ್ಲ. ನಮ್ಮ ಬದುಕಿನಲಿ +ನಾವು ಮಗ್ನರಾದರೆ ಸಾಕು, ಅದಕೆ ಚಿಂತೆಯಿಲ್ಲ. +ರಾತ್ರಿ ವಿದ್ಯುದ್ದೀಪ ಕೈಕೊಟ್ಟು, ಮಿಣಿ ಮಿಣಿ ಮೇಣ- +ಬತ್ತಿಯ ಹಚ್ಚಿ, ಅಂಜಿ ಆಕಳಿಸುತ್ತ ಕುಳಿತಾಗಲೂ +ಆಕಾಶದಲಿ ಹೊಳೆವ ನಕ್ಷತ್ರಕ್ಕೆ ಲೆಕ್ಕವಿಲ್ಲ. +***** +೧೯೬೯ +ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […] +– ೧ – ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: ಬೆಟ್ಟ ಮಾಡಿ ರವೆಯಷ್ಟನ್ನು ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. ಅವುಗಳಿಗೆ ಅತಿ ಮುಖ್ಯ ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. ಶಾಶ್ವತದ ಹೂರಣಕ್ಕೆ ಮಾಡಿ […] +ಬಾನ ಬೀದಿಗೆ ಜೋಲಿ ಹೊಡೆದು ಉರುಳಿವೆ ಮೋಡಪಡುವಣದ ಪಡಖಾನೆಯಿಂದ ತೂರಿ;ಬೇಕು ಬೇಕಾದತ್ತ ಹೊರಳಿ ಅಸ್ತವ್ಯಸ್ತಸುಸ್ತಾಗಿ ಬಿದ್ದಿಹವು ನೆರಳು ಕಾರಿ! ಹಗಲು ಮೂರ್‍ಛೆಗೆ ಸಂದ ಗಾಳಿ ಇದ್ದೆಡೆಯಿಂದಮೈ ಮುರಿದು ಆಗೀಗ ಆಕಳಿಸಿದೆ-ಆಗ ಬೆಚ್ಚನೆ ಧೂಳಿ ಹುಚ್ಚೆದ್ದು […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_180.txt b/Kannada Sahitya/article_180.txt new file mode 100644 index 0000000000000000000000000000000000000000..51a83ff22d1624c9bd9a7a81c8d165ae0980d0a4 --- /dev/null +++ b/Kannada Sahitya/article_180.txt @@ -0,0 +1,45 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +(೧೯೭೮ ರಲ್ಲಿ ಬಾಸ್ಟನ್ ಪ್ರದೇಶದಲ್ಲಿ ಟಪ್ಟ್ಸ್ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕನಾಗಿದ್ದಾಗ ಮತ್ತು ಏಳುವರ್ಷದ ನಂತರ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ಈಡಾಬೀಮ್ ಪ್ರೊಫೆಸರ್ ಆಗಿದ್ದಾಗಿನ ದಿನಚರಿಗಳಿಂದ ಆಯ್ದ ಭಾಗಗಳು ಇವು. ಅಮೆರಿಕಾದ ಯುವಜನರ ರಾಜಕೀಯ, ಸಾಂಸ್ಕೃತಿಕ ಚಿಂತನೆಯಲ್ಲಿ ಆಗುತ್ತಿರುವ ಪಲ್ಲಟವನ್ನು ಈ ಟಿಪ್ಪಣಿಗಳು ಗುರುತಿಸುತ್ತವೆ) +ಭಾನುವಾರ ಫೆಬ್ರವರಿ ೧೯, ೧೯೭೮, ಖಿuಜಿಣs, ಒeಜಜಿoಡಿಜ +ಹಗುರಾಗಿ ಕುಣಿಯುವ ಪಾದಗಳ, ಚಿರತೆಯಂತೆ ಬಳಕುವ ಮೈಕಟ್ಟಿನ ಮಹಮ್ಮದಾಲಿ ಸೋತ. ಇನ್ನು ಮುಂದೆ ಇವ ಜಗತ್ತಿನ ಬಾಕ್ಸಿಂಗ್ ಚಾಂಪಿಯನ್ ಅಲ್ಲ. ಎದುರಾಳಿಯ ಹೊಡೆತಗಳನ್ನು ಪುಷ್ಪಾರ್ಚನೆಯೆಂಬಂತೆ ಸ್ವೀಕರಿಸುತ್ತ, ನಗುತ್ತ, ಹೀಯಾಳಿಸುತ್ತ ಅವು ಅತಿಯಾದಾಗ ಗರ್ಜಿಸುತ್ತ, ಛಂಗನೆ ನೆಗೆಯುತ್ತ, ನಾವು ನೋಡುತ್ತಿರುವುದು ಅವನ ಮುಷ್ಟಿಯನ್ನೋ ನಗುವ ಕಣ್ಣುಗಳನ್ನೋ ಜಿಗಿದಾಡುವ ಕಾಲುಗಳನ್ನೋ ಎಂಬುದೇ ತಿಳಿಯದ ಹಾಗೆ ಪ್ರೇಕ್ಷಕರನ್ನು ರಮಿಸುತ್ತ, ರಕ್ತದಾಹದ ಭೀಕರ ಮುಷ್ಟಿಯುದ್ದವನ್ನೇ ಮೋಹಕ ಕಲೆಯಾಗಿ ಇವನು ಮಾಡಿದ್ದ. ಈ ಕಪ್ಪು ಯುವಕ ತನ್ನ ಹೆಸರನ್ನೂ ಹೆಂಡತಿಯನ್ನೂ ಬದಲಾಯಿಸಿಕೊಂಡು ಮುಸ್ಲಿಂ ಆದವನು. ಕ್ಯಾಸಿಯಸ್ ಕ್ಮೇ ಎಂಬ ಹೆಸರಲ್ಲಿ ಹುಟ್ಟಿ ಬೆಳೆದು ನಂತರ ಮಹಮದಾಲಿಯಾಗಿ ತನ್ನ ನಾಡಿನ ಬಿಳಿ ಜನರ ಧರ್ಮದ ಹಂಗನ್ನು ತೊರೆದವನು; ಕ್ರೌರ್ಯವೂ ಮೋಹಕವಾದ ಆಟವಾಗಬಹುದೆಂಬುದನ್ನು ತನ್ನ ದೇಹವನ್ನೇ ಒಡ್ಡಿಕೊಂಡು ಈತ ಸಾಧಿಸಿದ್ದು ಕಪ್ಪು ಜನಾಂಗದ ಅವಮಾನ, ಒಳಗುದಿಗಳನ್ನು ಮೀರಲಿಕ್ಕೋಸ್ಕರ; ಅಥವಾ ಹಾಗೆನ್ನಿಸುವಂತೆ ಮೀಡಿಯಾ ಬಳಸಿಕೊಂಡಿತು. +ಹೀಗೆ ಸ್ಲಮ್‌ಗಳಲ್ಲಿ ಹಠಾತ್ತನೆ ಸಿಡಿದೇಳುತ್ತಿದ್ದ ದ್ವೇಷವೇ ರಂಗಭೂಮಿಯ ಪ್ರೇಕ್ಷಣೀಯ ನಾಟಕವಾಗಿ ಬಿಡುತ್ತಿತ್ತು. ಬಾಕ್ಸಿಂಗ್ ಅಂಕಣದ ಸ್ಪಾಟ್ ಲೈಟಿನ ವಿಧಿನಿಯಮಗಳ ಚೌಕಟ್ಟಿನಲ್ಲಿ ಕಪ್ಪು ರೋಷದ ತಮವನ್ನು ರಜೋಗುಣ ಮಾಡಿ, ಈ ರಜೋಗುಣವನ್ನು ತನ್ನ ವಿಶ್ರಾಂತಿ ಕಾಲದಲ್ಲಿ ಧಾರ್ಮಿಕವಾದ ಸತ್ವಗುಣವಾಗಿ ಮಾಡಲು ತನ್ನ ಮೋಹಕ ಮಾತುಗಾರಿಕೆಯಲ್ಲಿ, ಮುಗ್ಧ ನಗುವಿನಲ್ಲಿ, ಅಮಾಯಕವಾದ ಜಂಬಗಾರಿಕೆಯಲ್ಲಿ ಮಹಮದಾಲಿ ಶ್ರಮಿಸಿದವನು. ಇನ್ನು ಯಾವ ರಂಗದಲ್ಲೂ ಹೀಗೆ ಒಬ್ಬಮಾತ್ರ ಎಂಬಂತೆ ಇರುವ ಏಕಮೇವಾದ್ವಿತೀಯ – ನಿಜವಾಗಿ – ಇವನೇ. ಕರ್ಮದಲ್ಲಿ ಕೌಶಲವೇ ಯೋಗವೆನ್ನುವುದಾದರೆ ಇವನೂ ಒಬ್ಬ ಯೋಗಿಯೇ. ಕೋಪತಾಪದ್ವೇಷಗಳು ಅಭಿನಯಕ್ಕಾಗಿ ಈತನಿಗೆ ಒದಗುತ್ತಿದ್ದ ಸರಕುಗಳು-ಅಷ್ಟೇ. ಹಾಗೆನ್ನಿಸುವಷ್ಟು ರಾಗದ್ವೇಷಗಳನ್ನು ಹಾಸ್ಯಾಸ್ಪದವಾಗುವಷ್ಟು ಅವುಗಳ ಅತಿಗೆ ಮಾತಿನಲ್ಲಿ ಉಬ್ಬಿಸಿ ಚೀರುತ್ತಿದ್ದವನು ಇವನು. ಹೀಗೆ ಮಹಮದಾಲಿಯಲ್ಲಿ ಎಲ್ಲವೂ ಉತ್ಪ್ರೇಕ್ಷೆಯ ಹುಂಬಲೀಲೆ; ಅತ್ಯಂತ ಜಂಬದ ಮಾತುಗಳೆಲ್ಲವೂ ವಾಸ್ತವಸತ್ಯ. ಅವನು ಕೊಚ್ಚಿಕೊಳ್ಳುತ್ತಿದ್ದಂತೆ ನಿಜಕ್ಕೂ ಅವನು ’ಗ್ರೇಟೆಸ್ಟ್’. ವಿಪರ್ಯಾಸವೆಂದರೆ ಹಲವು ಬಾರಿ ಈ ಕಪ್ಪು ಶಕ್ತಿ ವ್ಯಕ್ತವಾದ್ದು ಕಪ್ಪು ಬಾಕ್ಸರ್‌ಗಳನ್ನು ಕೆಡವಿಯೇ. +ಅರವತ್ತರ ದಶಕದಲ್ಲಿ ಈ ಜಂಬದ ಹುಂಜ ಕವಿಯಾಗಿ, ಸುಂದರ ಪುರುಷನಾಗಿ, ಮನೋಹರ ಕಲೆಗಾರನಾಗಿ ಮೆರೆದ. ಕಪ್ಪು ಜನರ ಸ್ವಾಭಿಮಾನವನ್ನು ಬ್ರಿಟಿಷ್ ರಾಣಿಯ ಜೊತೆ ನರ್ತಿಸಿ ಘಾನಾದ ಅಧ್ಯಕ್ಷ ನುಕ್ರುಮಾ ಸ್ಥಾಪಿಸಿದಂತೆ. ಮಹಮದಾಲಿ ಬಾಕ್ಸಿಂಗ್‌ರಿಂಗ್‌ನಲ್ಲಿ ಚೀರಿ ಕುಣಿದು ಕಪ್ಪು ಹೊಳೆಯುವಂತೆ ಮಾಡಿದ. ಬುದ್ಧಿಶಕ್ತಿಯ ಪಟುತ್ವವಿಲ್ಲದಿದ್ದಲ್ಲಿ ಅವನ ಕೈಕಾಲುಗಳ ಚಳಕ ಮಿಂಚುವ ಕಲೆಗಾರಿಕೆಯಾಗುತ್ತಿರಲಿಲ್ಲ. ಬುದ್ಧಿಶಕ್ತಿಯಿಂದಾಗಿಯೇ ಈ ಕಲೆಗಾರಿಕೆ ಬಂಡಾಯವಾಗುವುದೂ ರಾಜಕೀಯವಾಗುವುದೂ ಅನಿವಾರ್ಯವಾಯಿತು; ಅವನ ಕಲೆಯನ್ನು ಗುತ್ತಿಗೆ ಹಿಡಿಯುತ್ತಿದ್ದವರಿಗೆ ಸಮಸ್ಯೆಯೂ ಆಯಿತು. ವಿಯಟ್ನಾಂ ಯುದ್ಧಕ್ಕೆ ವಿರೋಧಿಯಾದ ಮಹಮ್ಮದಾಲಿ ಡ್ರಾಪ್ಟ್ ಕಾರ್ಡನ್ನು ಹರಿದುಹಾಕಿ, ಕಾನೂನು ಭಂಗ ಮಾಡಿ, ಬಾಕ್ಸಿಂಗ್ ಕಣಕ್ಕೆ ಮರಳುವ ಅವಕಾಶವನ್ನು ಕಳೆದುಕೊಂಡ. ಅಮೆರಿಕನ್ ಯುವಜನರ ಸಿಟ್ಟಿಗೆ ಸಂಕೇತವಾದ. ಅಂತೆಯೇ ಬೆವರುವ ಅವಕಾಶವಿಲ್ಲದೆ ಬಳಲಿದ, ತುಸುತೋರವಾದ. ತನ್ನನ್ನು ಬೆಳೆಸಿದ ಮೀಡಿಯಾವನ್ನೂ ಮೀರಿದ. +ಇವತ್ತು ಮಹಮ್ಮದಾಲಿ ಸೋತಿದ್ದಾದರೂ ಯಾರಿಗೆ? ಸಾಮಾನ್ಯ ಕಸುವಿನ ಇನ್ನೊಬ್ಬ ಕಪ್ಪು ಯುವಕನಿಗೆ. ಈ ಯುವಕ ವಿಯಟ್ನಾಂ ಯುದ್ಧದ ಮಾಜಿಯೋಧ ಬೇರೆ! ಮಹಮದಾಲಿಯ ಕಾಲಕ್ಕೆ ತದ್ವಿರುದ್ಧವಾದ ಎಪ್ಪತ್ತರ ದಶಕದ ಮುಖಹೀನ ಹೊಂದಾಣಿಕೆಗೆ ಈತನ ಯಶಸ್ಸು ಒಂದು ಉತ್ತಮ ಸಂಕೇತ. +ನನಗೆ ಆಶ್ಚರ್ಯವೆಂದರೆ ಹಳಬರನ್ನು ಬಿಟ್ಟರೆ ಇನ್ನು ಯಾರೂ ಮಹಮದಾಲಿಯ ಈ ಸೋಲಿನಿಂದ ದುಃಖಿತರಾಗಿಲ್ಲ. ನನ್ನ ಗೆಳೆಯ ಜಾನ್ ಪೆರೆ – ಅರವತ್ತರ ದಶಕದ ಕ್ರಾಂತಿಕಾರಿ ಸಮಾಜವಾದಿ ಮಾತ್ರ ನಿರ್ವಿಣ್ಣವಾಗಿ ಈ ಬಗ್ಗೆ ಮಾತಾಡುತ್ತಾನೆ, ಬಿಟ್ಟರೆ ಸುದ್ದಿಗಾಗಿ ಹಾತೊರೆಯುವ ಅಮೆರಿಕಾದಲ್ಲಿ ಇದೊಂದು ದೊಡ್ಡ ಸುದ್ದಿಯೇ ಅಲ್ಲ. ನಿತ್ಯದ ಆರಾಧಕರಿಗೆ ಶಾಶ್ವತವಾದ ಸ್ಮೃತಿಯೇ ಇಲ್ಲವೇನೋ. ಮಹಮದಾಲಿಯ ಕಲೆಗಾರಿಕೆ ಕೂಡ ಈ ಬಗೆಯ ಸಂಸ್ಕೃತಿಯಿಂದಲೇ ಹುಟ್ಟಿದ್ದಲ್ಲವೆ? ಸಂಚಾರಿಯೇ ಇಲ್ಲಿ ಸ್ಥಾಯಿ….ಬೇಂದ್ರೆ ಅನ್ನುವಂತೆ ’ನಿನ್ನ ತಾಯಿಯೇ ವ್ಯಭಿಚಾರಿ’. ಯಾವ ಮೀಡಿಯಾದ ಭೂತಕನ್ನಡಿ ಮಹಮದಾಲಿಯನ್ನು ದೊಡ್ಡದು ಮಾಡಿತೋ, ಅದೇ ಅವನನ್ನು ಹಿಂಡಿ ಹೀರಿ ಬಿಸಾಡಿತು. +ಮಹಮದಾಲಿ ಕಪ್ಪುಜನದ ದ್ವೇಷ ರೋಷಗಳನ್ನು ಮುಷ್ಟಿಯುದ್ಧದ ಕಲೆಯನ್ನಾಗಿ ಮಾಡಿದ ಪ್ರತಿಭಾಶಾಲಿಯಾದರೆ ಇದಕ್ಕಿಂತ ಅನ್ಯವಾದ ನೈತಿಕವಾದ ಪ್ರತಿಭೆ, ಅಹಿಂಸಾವಾದಿ ಮಾರ್ಟಿನ್ ಲ್ಯೂಥರ್ ಕಿಂಗ್‌ನದು. ಜೆಫರ್‌ಸನ್, ಲಿಂಕನ್‌ರ ನಂತರ ಅಮೆರಿಕಾ ಒಂದು ರಾಷ್ಟ್ರವಾಗಿ ಪಡೆದ ಮಹಾನುಭಾವನೆಂದರೆ ಮಾರ್ಟಿನ್ ಲೂಥರ್‌ಕಿಂಗ್. ಹೋದವಾರ ಅವನ ಬಗ್ಗೆ ತುಂಬ ಧೈರ್ಯದಿಂದ ತಯಾರಿಸಿದ ಚಿತ್ರವೊಂದನ್ನು ಟೆಲಿವಿಷನ್‌ನಲ್ಲಿ ತೋರಿಸಿದರು. ಅಮೆರಿಕಾದ ಗಾಂಧಿಯಾದ ಕಿಂಗ್ ತನ್ನ ನಡುಪ್ರಾಯದಲ್ಲೇ ಕೊಲೆಗೆ ಈಡಾದ. ಇಡೀ ಅಮೆರಿಕಾದ ಅಂತಃಸಾಕ್ಷಿಯೆಂಬಂತೆ ಹೋರಾಡಿ ಸತ್ತ ಇವನ ಬಗೆಗಿನ ಚಿತ್ರವನ್ನು ಎಲ್ಲ ಹೃದಯಗಳನ್ನೂ ಕಲಕೀತೆಂಬ ನಿರೀಕ್ಷೆಯಲ್ಲಿ ತಯಾರಿಸಲಾಗಿತ್ತು. ಅರವತ್ತರ ದಶಕದ ಅತ್ಯಂತ ಉಜ್ವಲವಾದ ವ್ಯಕ್ತಿ ಈತ – ಹಲವು ಬಿಳಿಯರು ದ್ವೇಷಿಸಿದ, ಕೆಲವು ಬಿಳಿಯರು ತುಂಬ ಪ್ರೀತಿಸಿದ, ತನ್ನ ಮಾತಿನಿಂದ ಲಕ್ಷಾಂತರ ಜನರ ಮಂಪರು ಹರಿದಿದ್ದ ಅಪ್ಪಟ ಅಹಿಂಸಾತ್ಮಕ ಹೋರಾಟಗಾರನಾದ ಈ ಕಪ್ಪು ಮನುಷ್ಯ ಒಬ್ಬ ಧೀರ ಗಾಂಧಿವಾದಿ. ಗಾಂಧೀಜಿಯ ನಂತರ ನಾವು ಕಾಣುವ ದೊಡ್ಡ ಅಹಿಂಸಾವಾದಿ ಜನನಾಯಕ. ಅಮೆರಿಕಾ ಮತ್ತೆ ಮರ್ಯಾದೆಯಿಂದ ತಲೆಯೆತ್ತುವಂತೆ ಮಾಡಿದವನು ಇವನೊಬ್ಬನೇ. +ಇವನು ತನ್ನ ನಾಡಿನ ಸಂಸ್ಕೃತಿಗೆ ಒಳಗಿನವನಾದ ಕ್ರಿಶ್ಚಿಯನ್; ಜೊತೆಗೇ ತನ್ನ ನಾಡಿ ಸಂಸ್ಕೃತಿಯನ್ನು ನಿಷ್ಠುರವಾಗಿ ಛೇಡಿಸುತ್ತಿದ್ದ ಬಂಡಾಯಗಾರ. ಹೀಗೆ ಏಕಕಾಲದಲ್ಲಿ ಒಳಗಿನವನೂ ಬಂಡಾಯಗಾರನೂ ಆದ ಮಾರ್ಟಿನ್ ಲ್ಯೂಥರ್ ಕಿಂಗ್ ಕರಿಯರಿಗೆ ಆತ್ಮ ಗೌರವವನ್ನು ತಂದುಕೊಟ್ಟ. ಸಮಾನತೆಯ ಹೋರಾಟದಲ್ಲಿ ಪೂರ್ಣವಲ್ಲದಿದ್ದರೂ ಬಹುಪಾಲು ಯಶಸ್ವಿಯಾದ. ಇವನ ಯಶಸ್ಸು ಹಿಂಸಾತ್ಮಕ ಬಂಡಾಯಕ್ಕೂ ತಯಾರಾಗಿದ್ದ, ಅಮೆರಿಕನ್ ಸಂಸ್ಕೃತಿಯನ್ನೇ ಧಿಕ್ಕರಿಸಿ ನಿಂತಿದ್ದ ಬ್ಲಾಕ್ ಪ್ಯಾಂಥರ್ಸ್ ಸಾಧಿಸಿದ್ದಕ್ಕಿಂತ ವ್ಯಾಪಕತೆಯಲ್ಲಿ ಹೆಚ್ಚಿನದೆಂದೇ ಹೇಳಬಹುದು. ಈತ ಬಿಳಿಯರ ದ್ವೇಷಕ್ಕೆ ಒಳಗಾದ, ಜೊತೆಗೇ ಬಂಡಾಯಗಾರ ಕರಿಯರ ಅನುಮಾನಕ್ಕೂ ತುತ್ತಾದ. ಕಿಂನಂಥ ನಾಯಕರು ಯಾವ ಸಂಸ್ಕೃತಿಯಲ್ಲೇ ಆಗಲಿ ಹೆಚ್ಚು ಆತಂಕದಲ್ಲಿ, ಹೆಚ್ಚು ಮನಃಪೂರ್ವಕ ಶ್ರದ್ಧೆಯಲ್ಲಿ, ಹೆಚ್ಚು ಜವಾಬ್ದಾರಿಯಲ್ಲಿ ಕಾರ್ಯೋನ್ಮುಖರಾಗಿರುತ್ತಾರೆ. ಅಂಥವರು ಇಡುವ ಪ್ರತಿ ಹೆಜ್ಜೆಯೂ ನೈಜವಾಗಿರುತ್ತದೆ. ಕ್ರಾಂತಿ ಇವರಿಗೆ ಎಂದೂ ತೀಟೆಯಲ್ಲ, ಉಮ್ಮಳದ ಚಪಲವಲ್ಲ, ಶೌರ್ಯದ ಪ್ರದರ್ಶನವಲ್ಲ. ಗಂಧದಂತೆ ನಿತ್ಯ ತನ್ನನ್ನು ತೇದುಕೊಳ್ಳುವ ಸಂಸಾರಿಯ ಹಾಗೆ ಪಾಲನೆಗಾಗಿ ಕ್ರಿಯಾಶೀಲರಾಗುವ ಮಾರ್ಟಿನ್ ಲ್ಯೂಥರ್ ಕಿಂಗ್ ಮತ್ತು ಗಾಂಧೀಜಿಯಂಥವರು ಮಾನವನ ದೈನಿಕದ ಉಪದ್ವ್ಯಾಪಗಳಲ್ಲೇ ದೈವಿಕವಾದ್ದನ್ನೂ ಹುಡುಕುವವರು, ಪಡೆಯುವವರು. ಸಂಸಾರದ ಗೂಡು ಕಟ್ಟಲೆಂದೇ ಸಮಾಜ ಪರಿವರ್ತನೆಯ ಬಿರುಗಾಳಿಗೂ ಸಿದ್ದರಾದಾಗ ಇಂಥವರಲ್ಲಿ ಹುಟ್ಟುವ ನಿಶ್ಚಯದ ಚೆಲುವು ಕೆಲವು ಕ್ಷಣಗಳಲ್ಲಿ ಮಾತ್ರ ಮೆರೆಯಬಲ್ಲ, ಮೆರುಗಬಲ್ಲ ರಮ್ಯವಲ್ಲ. +ಬ್ಲಾಕ್ ಪ್ಯಾಂಥರ್ಸ್‌ನ ನಾಯಕನಾಗಿದ್ದ ಮಾಲ್ಕಮ್ ಎಕ್ಸ್ ಕರಿಯರಲ್ಲಿ ಅರಿವಿನ ಸ್ಫೋಟ ಉಂಟುಮಾಡಿದ – ನಿಜ. ಪೂರ್ಣ ಧಿಕ್ಕಾರದಿಂದ ಹುಟ್ಟುವ ಮಿಂಚಿನ ಶಕ್ತಿ ಅವನದು. ಅದು ನಿತ್ಯದ ಬಳಕೆಯ ಭಾವನೆಯಾಗದು. ಮಾರ್ಟಿನ್ ಲ್ಯೂಥರ್ ಕಿಂಗ್‌ರಂಥವರ ಕ್ರಿಯೆಯಲ್ಲಿ ಕಂಕುಳಲ್ಲಿ ಕೂಸುಹೊತ್ತ ತಾಯಂದಿರು, ಬ್ರೆಡ್ಡು ಬೆಣ್ಣೆಗಳು ತುಟ್ಟಿಯಾಯಿತೆಂದು ಪರದಾಡುವ ಗಂಡಂದಿರು, ಸಂಸಾರ ಹೂಡುವ ಕನಸಿನ ಗೆಳೆಯ ಗೆಳತಿಯರು ಭಾಗಿಯಾಗಬಲ್ಲರು. ಮಾಲ್ಕಮ್ ಎಕ್ಸ್, ಮಹಮದಾಲಿಯವರದು ಯೌವನಕ್ಕೆ ಸಹಜವಾದ ಆಕರ್ಷಕವಾದ ಆತ್ಮಪ್ರದರ್ಶನದ ಮಾರ್ಗ; ಕಿಂಗ್‌ನದು ಎದುರಾಳಿಯ ಹೃದಯಗೆಲ್ಲುವ (ಹೊಂದಾಣಿಗಳಲ್ಲೂ ಗೆಲ್ಲುವ) ಹಠದ ಮಾರ್ಗ. ಕಿಂಗ್‌ನ ಅನುಯಾಯಿಯಾದ ಕರಿಯ ತನ್ನ ವಿರೋಧಿ ಬಿಳಿಯನಿಗಿಂತಲೂ ಹೆಚ್ಚು ಒಳ್ಳೆಯವನಾಗಲು ಶ್ರಮಿಸಬೇಕಾಗುತ್ತದೆ. ಮಾಲ್ಕಮ್ ಎಕ್ಸ್‌ನ ಅನುಯಾಯಿ ಬಿಳಿಯನನ್ನು ತರಸ್ಕರಿಸಿ ತನ್ನ ಉಮೇದಿನಲ್ಲಿ, ಹಿಗ್ಗಿನಲ್ಲಿ ತತ್ಕ್ಷಣದ ಸ್ವಂತಿಕೆ ಗಳಿಸುತ್ತಾನೆ. ಮಹಮದಾಲಿ ತನ್ನ ವಿಶಿಷ್ಟತೆಯಲ್ಲೇ ಅದರ ಪ್ರದರ್ಶನದಲ್ಲೇ ಖುಷಿಪಡುತ್ತ ಖುಷಿ ಕೊಡುತ್ತಾನೆ. ನಾವು ಅವನಿಂದ ಪಡೆಯುವ ಖುಷಿ ’ಮೂಲಕ ಮಹಾಶಯ’ರಾಗಿ; ನಾವು ಮಾಡಲಾರದ್ದನ್ನು ಅವನು ಮಾಡುತ್ತಿದ್ದಾನೆಂದು. ಅವನ ಮೂಲಕ ಬದುಕುವ ಈ ನಮ್ಮ ಖುಷಿ ಸತ್ಯವೂ ಅಲ್ಲ, ನಿತ್ಯವೂ ಅಲ್ಲ – ಮೇಲಾಗಿ ಅನಧಿಕೃತ. +* +* +* +ಕಿಂಗ್ ಕುರಿತ ಚಿತ್ರವನ್ನು ಟೆಲಿವಿಷನ್‌ನಲ್ಲಿ ನೋಡುತ್ತಿರುವುದೇ ಒಂದು ವಿಚಿತ್ರ ಹಿಂಸೆಯ ಭಾವನೆಯಾಯಿತು. ಈ ಚಿತ್ರ ನಿರ್ಮಾಪಕರು ತುಂಬ ಹಣ ಖರ್ಚು ಮಾಡಿದ್ದರು; ಅಧಿಕಸಂಖ್ಯೆಯ ಪ್ರೇಕ್ಷಕರನ್ನು ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಎಲ್ಲ ಪತ್ರಿಕೆಗಳೂ ಈ ಚಿತ್ರವನ್ನು ಸೋಲೆಂದು ಕರೆದುವು. ಚಿತ್ರ ಚೆನ್ನಾಗಿರಲಿಲ್ಲ ಎಂದಲ್ಲ. ನೋಡಬೇಕಾದಷ್ಟು ಜನ ನೋಡಲಿಲ್ಲ ಎಂದು. ಕರಿಯರೂ ನಿರಾಸಕ್ತರಾಗಿದ್ದರು ಎಂದು. +ಅರವತ್ತರ ದಶಕದ ಭರವಸೆ, ಕನಸುಗಳು ಅಮೆರಿಕಾದಲ್ಲಿ ಉಳಿದಿಲ್ಲ ಎಂದಾಯಿತು. +ಟೆಲಿವಿಷನ್‌ನಲ್ಲಿ ಚಿತ್ರ ನೋಡುವುದೇ ಒಂದು ಹಿಂಸೆ ಎಂದೆ. ನಡುನಡುವೆ ಕಮರ್ಷಿಯಲ್ ಜಾಹೀರಾತುಗಳನ್ನು ನೋಡಬೇಕಾಗುತ್ತದೆ. ಟೆಲಿವಿಷನ್ ಸಂಸ್ಥೆ ಸಂಪಾದಿಸುವುದೇ ಈ ಮಾರ್ಗದಿಂದ. ತಮಾಷೆಯೆಂದರೆ ನಮ್ಮ ಮನಸ್ಸನ್ನು ಕಲಕುವ ಮಾರ್ಟಿನ್ ಲ್ಯೂಥರ್ ಕಿಂಗ್‌ನ ಉಜ್ವಲ ಭಾಷಣದ ನಡುವೆ ಅದನ್ನು ಅಣಕಿಸುವಂಥ ಉಜ್ವಲ ಗದ್ಗದ ಕಂಠದಲ್ಲಿ ಬೆಕ್ಕಿಗೆ ರುಚಿಯಾದ ಮಾಂಸದ ಪೊಟ್ಟಣ ಒಂದರ ಜಾಹೀರಾತು ಕೇಳಿಸಿಕೊಳ್ಳಬೇಕಾಗುತ್ತದೆ. ಇದರಿಂದ ಮನಸ್ಸಿಗೆ ಕಿರಿಕಿರಿಯಾಗುತ್ತದೆ. ಒಂದು ಉತ್ಕೃಷ್ಟ ಭವನೆಯನ್ನು ಅತ್ಯಂತ ಆಯಸ್ಥಳಗಳಲ್ಲಿ ಮುರಿಯುವ ಈ ಜಾಹೀರಾತುಗಳು ಅಸಂಬದ್ಧವೆನ್ನಿಸುತ್ತವೆ. ಜೊತೆಗೇ ಕಿಂಗ್‌ನ ಪಾದ್ರೀ ಭಾಷಣ ವಾಗ್ವೈಖರಿಯ ಹಿಂದಿರುವ ಆರ್ತತೆ ಮರೆಯಾಗಿ ವೈಖರಿಯೇ ಮುಂದಾದಂತೆ ತೋರುತ್ತದೆ. +ಆದರೆ ಟೆಲಿವಿಷನ್ ಸಂಸ್ಥೆಗೆ ಅಮೆರಿಕಾದ ಸರ್ವಶಕ್ತ, ಕಿಂಗ್ ವಿರೋಧಿ ಪೋಲೀಸ್ ಎಫ್‌ಬಿ‌ಐಯನ್ನು ವಿರೋಧಿಸಿ ಹೀಗೊಂದು ಚಿತ್ರ ತಯಾರಿಸಲು ಸಾಧ್ಯವಾದ್ದು ಕೂಡ, ಈ ಜಾಹೀರಾತುಗಳಿಂದ ಬೆಳೆಯುವ ಅಮೆರಿಕಾದ ಬಂಡವಾಳಶಾಹಿ ಸಂಸ್ಥೆಯಿಂದಾಗಿ ಎಂದು ನನ್ನ ಗೆಳೆಯ ಜಾನ್‌ಪೆರಿ ವ್ಯಂಗ್ಯವಾಗಿ ಹೇಳುತ್ತಾನೆ. ಮುಖ್ಯವಾದ್ದು ಮಾರಾಟ; ಇಸ್ರೇಲಿಗೂ ಯುದ್ಧಕ್ಕೆ ಬೇಕಾದ ವಿಮಾನ ಕೊಡುತ್ತೇವೆ, ಈಜಿಪ್ಟಿಗೂ ಕೊಡುತ್ತೇವೆ; ಎಫ್‌ಬಿ‌ಐಪೊಲೀಸರ ಮುಖೇನ ವ್ಯವಸ್ಥೆ ರಕ್ಷಿಸುತ್ತೇವೆ; ಕಿಂಗ್ ಚಿತ್ರದ ಮುಖಾಂತರ ಮಾಲು ಮಾರಿ ವ್ಯವಸ್ಥೆ ಪೋಷಿಸುತ್ತೇವೆ; ಹೀಗೆ ಮಾಡುವಾಗ ನಿಮ್ಮ ಅಂತಃಸಾಕ್ಷಿ ತಣಿಯುವಂತೆ ಕಿಂಗ್‌ಗೆ ಇಡೀ ವ್ಯವಸ್ಥೆ ಎಷ್ಟು ಅನ್ಯಾಯ ಮಾಡಿತು ಎಂಬ ನಿರುಪದ್ರವಿಯಾದ ವ್ಯಾಕುಲದ ಭಾವನೆಯನ್ನೂ ಹುಟ್ಟಿಸುತ್ತೇವೆ. ಮಹಮದಾಲಿಗೆ ರೋಷ ಉಕ್ಕುವಂತೆ ಮಾಡಿ, ಈ ರೋಷವನ್ನು ಮೀಡಿಯಾಗಳಲ್ಲಿ ರಂಜಕಕಲೆಯಾಗುವಂತೆ ಮಾಡಿ, ವಾಸ್ತವಕ್ಕೂ ನಟನೆಗೂ ನಡುವಿನ ಭೇದವೇ ಸುಳ್ಳೆನ್ನುವಂತೆ ಮಾಡುತ್ತೇವೆ. +ಅಯೋವಾ ಸಿಟಿ, ಅಕ್ಟೋಬರ್-ನವೆಂಬರ್ ೧೯೮೫ +೧೯೭೮ರಲ್ಲಿ ನಾನು ಅಮೆರಿಕಾದ ಯುವಜನರಲ್ಲಾಗುತ್ತಿದ್ದ ಕೆಲವು ಬದಲಾವಣೆಗಳನ್ನು ಗುರುತಿಸಿದ್ದೆ. ಏಳುವರ್ಷಗಳ ನಂತರ ಮತ್ತೆ ನೋಡಿದಾಗ ಈ ಬದಲಾವಣೆ ಪೂರ್ಣವಾಗಿತ್ತು. ಈ ದಿನಗಳಲ್ಲಿ ಕ್ರಾಂತಿಕಾರಕ ಬದಲಾವಣೆಗಾಗಿ ಯುವಶಕ್ತಿ ಹಂಬಲಿಸುತ್ತಿಲ್ಲ. ಆಗ ಹಿಂದಿರುಗಿದ ಹಿಪ್ಪೀಗಳು ಎಲೆಕ್ಟ್ರಿಕ್ ಬಾಚಣಿಗೆಗಳಲ್ಲಿ ಓರಣಗೊಳಿಸಿಕೊಳ್ಳುತ್ತಿದ್ದ ಉದ್ದ ಕೂದಲು ಕೂಡ ವಿಶ್ವವಿದ್ಯಾನಿಲಯಗಳಲ್ಲಿ ಈಗ ಕಾಣಿಸುವುದಿಲ್ಲ. ನೀಟಾಗಿ ಕಾಣುವ ಯುವಕ ಯುವತಿಯರು ಒಳ್ಳೆಯ ಉದ್ಯೋಗಗಳಿಗಾಗಿ ಹಂಬಲಿಸುವ ಕ್ಯರಿಯರಿಸ್ಟರಾಗಿದ್ದಾರೆ. ಅರವತ್ತರ ದಶಕದಲ್ಲಿ ವಿದ್ಯಾರ್ಥಿ ಚಳುವಳಿಯಲ್ಲಿ ಕ್ರಾಂತಿಕಾರಕ ಮಾರ್ಕ್ಸ್‌ವಾದಿಯಾಗಿದ್ದ ಗೆಳೆಯ ಶೆಲ್ಡನ್ ಈಗ ದೊಡ್ಡ ಸಂಸ್ಕೃತ ಪ್ರಾಧ್ಯಾಪಕರು; ರಾಮಾಯಣವನ್ನು ಇಂಗ್ಲಿಷಿಗೆ ಭಾಷಾಂತರಿಸುತ್ತಿರುವ ಹಾರ್ವಾರ್ಡ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಯಾಗಿದ್ದವರು. ಇವರು ಗುಪ್ತಚಾರ ಸಿ.ಐ.ಎ. ವಿರುದ್ಧ ಯುವಕರನ್ನು ಸಂಘಟಿಸಲು ಪ್ರಯತ್ನಿಸುತ್ತಿದ್ದಾರೆ. ಸಿ.ಐ.ಎ ಯಾವ ನಾಚಿಕೆಯಾಗಲೀ ಆತಂಕವಾಗಲೀ ಇಲ್ಲದೆ ಯೂನಿವರ್ಸಿಟಿಯ ಕ್ಯಾಂಪಸ್ಸಿನೊಳಗೇ ಬಿಡಾರಮಾಡಿ ವಿದ್ಯಾರ್ಥಿಗಳನ್ನು ಕೆಲಸಗಳಿಗಾಗಿ ಸಂದರ್ಶಿಸುತ್ತಿದೆ. ಇದರಿಂದ ವಿಶ್ವವಿದ್ಯಾನಿಲಯಗಳ ವಸ್ತುನಿಷ್ಠತೆಯ ಆದರ್ಶಕ್ಕೆ ಭಂಗವಾಗುತ್ತದೆಂದು ನನ್ನ ಈ ಗೆಳೆಯನ ವಾದ. ಸಿ.ಐ.ಎ ಜೊತೆ ಸಂಬಂಧವಿರಬಹುದೆಂಬ ಅನುಮಾನದಿಂದಾಗಿ ಈಗಾಗಲೇ ಅಮೆರಿಕನ್ ವಿದ್ವಾಂಸರಿಗೆ ಭರತಕ್ಕೆ ಅಧ್ಯಯನಕ್ಕೆಂದು ಬರಲು ಸಿಗುತ್ತಿದ್ದ ವೀಸಾ ಕಠಿಣವಾಗಿದೆ. ವಿಶ್ವವಿದ್ಯಾನಿಲಯದ ಒಳಗೇ ಈ ಭೀಕರ ಗುಪ್ತಚಾರ ಸಂಸ್ಥೆಗೆ ಅವಕಾಶ ಮಾಡಿಕೊಟ್ಟಲ್ಲಿ ಶಕ್ತಿರಾಜಕಾರಣದಲ್ಲಿ ಅನಾಸಕ್ತವಾದ ಧೋರಣೆಯಿಂದ ಮಾತ್ರ ಬೆಳೆಯಬಲ್ಲ ಜ್ಞಾನದ ಶಿಸ್ತುಗಳಿಗೆ ಇರುವ ಸರ್ವಮಾನ್ಯತೆ ಅನುಮಾನಾಸ್ಪದವಾಗುತ್ತದೆಂದು ಈ ಗೆಳೆಯ ಸಂಕಟ ಪಡುತ್ತಾನೆ. +ಆದರೆ ನನಗಾದ ಆಶ್ಚರ್ಯವೆಂದರೆ ನಡುವಯಸ್ಸಿನ ಈ ನನ್ನ ಗೆಳೆಯನಲ್ಲಿ ಕಂಡುಬಂದ ಆದರ್ಶ ಕಿರಿಯರಲ್ಲಿ ಇರಲಿಲ್ಲ. ವಿಯಟ್ನಾಂ ಯುದ್ಧದ ಸಮಯದಲ್ಲಿ, ಕರಿಜನರ ಹಕ್ಕುಗಳಿಗಾಗಿ ಸಿವಿಲ್‌ರೈಟ್ಸ್ ಚಳವಳಿಯಲ್ಲಿ ಮಾರ್ಟಿನ್ ಲ್ಯೂಥರ್ ಕಿಂಗ್‌ರ ನೇತೃತ್ವದಲ್ಲಿ ಕೆಲಸ ಮಾಡಿದವರಲ್ಲಿ ಕಾಣುವ ಸಮುದಾಯಚಿಂತನೆ ಈಗ ಎಳೆಯರಲ್ಲಿ ಇಲ್ಲವಾಗಿದೆ. ವಯಸ್ಸಾದವರಲ್ಲಿ ಇನ್ನೂ ಉಳಿದಿರುವ ಕ್ಯಾಂತಿಕಾರಕತೆ ಎಳೆಯರಲ್ಲಿ ಇಲ್ಲದಿರುವ ವಿಪರ್ಯಾಸ ಅಮೆರಿಕಾದಂತಹ ಬಲಿಷ್ಠ ದೇಶದಲ್ಲಿ ಆತಂಕಕಾರಿಯಾದದ್ದು. ಬಂಡವಾಳಶಾಹೀ ಪದ್ಧತಿಯ ಅತ್ಯಂತ ಅಪಾಯಕಾರಿ ಪರಿಣಾಮವೆಂದರೆ ಈ ಬಗೆಯ ಸ್ವಾರ್ಥಪರವಾದ ವ್ಯಕ್ತಿವಾದದ ಬೆಲವಣಿಗೆ ಎನ್ನಬಹುದು. +ಮಾನವನ ನೈತಿಕವಾದ ವಿಚಾರಗಳೆಲ್ಲ ಹುಟ್ಟುವುದು ವ್ಯಕ್ತಿಗೂ ಸಮುದಾಯಕ್ಕೂ ಇರುವ ನಂಟಿನ ಬಗ್ಗೆ ನಮಗೆ ಇರುವ ಆಸಕ್ತಿಯಿಂದಾಗಿ. ಈ ಸಂಬಂಧ ವ್ಯಕ್ತಿಯನ್ನು ಅರಳಿಸಲೂ ಬಹುದು, ಬಾಡಿಸಲೂ ಬಹುದು ಎಂಬ ಆತಂಕವನ್ನು ಪಡುವವರೆಲ್ಲರೂ ರಾಜಕೀಯ ಸಾಂಸ್ಕೃತಿಕ ವಿಷಯಗಳಲ್ಲಿ ಆಸಕ್ತರಾಗುತ್ತಾರೆ. ಸಮುದಾಯವೆಂದರೆ ಬಿಡಿಬಿಡಿಯಾದ ವ್ಯಕ್ತಿಗಳು ಕ್ಷಣಿಕ ಪ್ರಯೋಜನಗಳಿಗಾಗಿ ಮಾಡಿಕೊಂಡ ಸಂಬಂಧವಲ್ಲ; ವ್ಯಕ್ತಿಯ ಸೃಷ್ಟಿಶೀಲತೆ ಪರಿಪೂರ್ಣವೆನ್ನುವಂತೆ ಅರಳಲು ಆರೋಗ್ಯಕರವಾದ ಸಮುದಾಯದ ಸದಸ್ಯ ಅವನಾಗಿರಬೇಕು; ಅಂತೆಯೇ ಈ ಸೃಷ್ಟಿಶೀಲತೆಯ ಪ್ರಯೋಜನಕ್ಕಾಗಿ, ಬಳಕೆಗಾಗಿ ಕುಟುಂಬ ಸದೃಶವಾದ ಸಮುದಾಯ ಬೇಕು. ಪ್ರಾಯಶಃ ಈ ಆದರ್ಶ ತನ್ನಿಂದ ತಾನಾಗಿಯೇ ಕೈಗೂಡುವಂಥದ್ದು ಅಲ್ಲ. ಯಾವತ್ತೂ ಆದರ್ಶ ಸ್ಥಿತಿಯಲ್ಲಿ ಇದ್ದುದೂ ಅಲ್ಲ. ನಾವು ಕಟ್ಟಿಕೊಳ್ಳುವ ಅರ್ಥವ್ಯವಸ್ಥೆಯೇ ಅತ್ಯಂತ ಜಟಿಲವಾಗಿ ಇಡೀ ಸಮುದಾಯ ಕೇವಲ ಗ್ರಾಹಕರಾಗಿ ಬಿಡುವ ಅಪಾಯ ಬಂಡವಾಳಶಾಹಿ ವ್ಯವಸ್ಥೆಯಲ್ಲಿದೆ. ದುಡ್ಡೇ ದೊಡ್ಡಪ್ಪನಾಗಿ ಬಿಡುವುದು ಬಂಡವಾಳಶಾಹೀ ವ್ಯವಸ್ಥೆಯಲ್ಲಿ; ಫ್ಯೂಡಲ್ ವ್ಯವಸ್ಥೆಯಲ್ಲಲ್ಲ…… ಆದ್ದರಿಂದಲೇ ಏನೋ ಸಮುದಾಯ ಮುಖ್ಯವಾಗುವ ಸಮಾಜವಾದೀ ವ್ಯವಸ್ಥೆಗೆ ಫ್ಯೂಡಲ್ ದೇಶಗಳು ಮಾನಸಿಕವಾಗಿ ತಯಾರಾಗಿರುವಂತೆ ಸಿರಿವಂತ ದೇಶಗಳು ಸನ್ನದ್ಧವಾಗಿಲ್ಲ. ವಿಯೆಟ್ನಾಂ, ಕ್ಯೂಬಾ, ಚೈನಾ – ಈ ದೇಶದ ಜನರಿಗೆ ಸಾಧ್ಯವಾದದ್ದು ಪ್ರತಿಯೊಬ್ಬನೂ ತನಗೇ ಒಂದು ಕಾರು ಬೇಕೆಂದು ಬಯಸುವ ಮುಂದುವರಿದ ದೇಶಗಳ ಪ್ರಜೆಗಳಿಗೆ ಸಾಧ್ಯವಾಗಿಲ್ಲ. ಪೂರ್ವಯೂರೋಪಿನ ಕಮ್ಯುನಿಸ್ಟ್ ದೇಶಗಳ ಜನರೂ ಈ ಬಗೆಯ ವ್ಯಕ್ತಿವಾದದಿಂದ ಪ್ರಭಾವಿತರಾಗುತ್ತಿರುವುದರಲ್ಲಿ ಯಾವ ಆಶ್ಚರ್ಯವೂ ಇಲ್ಲ. +ಯಾಕೆ, ಈಗ ಮಹಮದಾಲಿಯೂ ವಿ.ಐ.ಪಿ; ಹೊರ ಜಗತ್ತಿಗೆ ಅಮೆರಿಕನ್ ರಾಯಭಾರಿ. ತಾನು ಅಮೆರಿಕಾದ ಜೀವನಕ್ರಮವನ್ನು ಎಷ್ಟು ಪ್ರೀತಿಸುತ್ತಿರುವೆನೆಂದು ಅವನಿಗೆ ತಿಳಿದದ್ದು ಕೂಡ ಅವನು ಹೊರಗೆ ಹೋದಾಗ, ಕಮ್ಯುನಿಸ್ಟ್ ದೇಶಗಳಲ್ಲಿ ಅಲೆದಾಡಿದಾಗ. ನನ್ನ ಗೆಳೆಯ ಶೆಲ್ಡನ್ ಮಾತ್ರ ತನ್ನ ಚೀಲದಲ್ಲಿ ಕರಪತ್ರಗಳನ್ನು ತುಂಬಿಕೊಂಡು ಕ್ಯಾಂಪಸ್ಸಿಡೀ ಕನಸುಗಾರ ಯುವಕರಿಗಾಗಿ ಅಲೆದಾಡುತ್ತಾನೆ. ’ಸಿ.ಐ.ಎ.ಯನ್ನು ಇಲ್ಲಿಬರಲು ಬಿಡಬೇಡಿ’ ’ನಿಕರಾಗುವಾದ ಸರ್ಕಾರ ಬೆಂಬಲಿಸಿ’ ’ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ ವಿರೋಧಿಸಿ’ ’ತಾರಾಯುದ್ಧ ಅರ್ಥಹೀನವಾದ್ದು’ ’ನಗುವ ರೀಗನ್ ರಕ್ತ ಪಿಪಾಸು’. +ರಷ್ಯಾದ ಕಮ್ಯುನಿಸ್ಟ್ ವ್ಯವಸ್ಥೆಯನ್ನು ಜರೆಯುವುದು ಇವನಿಗೆ ಅಪ್ರಸ್ತುತ. ತನ್ನ ದೇಶದ ವ್ಯವಸ್ಥೆಯ ಅಸಹನೆ, ಹಸ್ತಕ್ಷೇಪದ ದುಷ್ಟರಾಜಕೀಯ ಇವನನ್ನು ಸದಾ ಬಾಧಿಸುತ್ತದೆ. ಉಳಿದ ಸಮಯದಲ್ಲಿ ನನ್ನ ಗೆಳೆಯ ರಾಮಾಯಣ ಭಾಷಾಂತರಿಸುತ್ತಾನೆ. ಸಂಸ್ಕೃತ ಹೇಳಿಕೊಡುತ್ತಾನೆ. ಜೆಫರಸನ್, ಲಿಂಕನ್, ಮಾರ್ಟಿನ್ ಲ್ಯೂಥರ್ ಕಿಂಗ್ – ಹೀಗೆ ಅವನಲ್ಲಿ ಸಣ್ಣದಾಗಿಯಾದರೂ ಉರಿಯುತ್ತಾರೆ; ನನಗಷ್ಟೇ ಸಮಾಧಾನ. +ಈ ನನ್ನ ಗೆಳೆಯ ಈಗ ತನ್ನೆರಡು ಮಕ್ಕಳ ಜೊತೆ ಬದುಕುತ್ತಿದ್ದಾನೆ. ನಾಲ್ಕೈದು ವರ್ಷಗಳ ಹೊಯ್ದಾಟದ ಅನಂತರ ಹೆಂಡತಿಯಿಂದ ಬೇರಾಗಿದ್ದಾನೆ. ಅರವತ್ತರ ದಶಕದ ಹೋರಾಟಗಳಲ್ಲಿ ಸಂಗಾತಿಯಾಗಿದ್ದ ಅವಳು ಕ್ರಮೇಣ ಅವನಿಂದ ದೂರವಾಗಿಬಿಟ್ಟದ್ದೂ ಮಾನಸಿಕ ದೈಹಿಕ ಕಾರಣಗಳಿಗಾಗಿ ಮಾತ್ರವಲ್ಲ; ಯಾವುದು ಅವರಿಬ್ಬರನ್ನು ಬೆಸೆದಿತ್ತೋ ಈಗ ಅದು ಅವರು ಉಸಿರಾಡುವ ಗಾಳಿಯಲ್ಲಿಲ್ಲ. ಹಾಗೆಂದೇ ನನ್ನ ಗೆಳೆಯ ತನ್ನ ಖಾಸಗಿ ಜೀವನದ ಕಷ್ಟಗಳನ್ನು ವ್ಯಾಖ್ಯಾನಿಸುತ್ತಾನೆಂಬುದು ಗಮನಿಸಬೇಕಾದ ಸಂಗತಿ. ಚಿತ್ರಕಾರಳಾದ ಹೆಂಡತಿ ವಸ್ತುವಿಗಿಂತ ಹೆಚ್ಚಾಗಿ ರೂಪದಲ್ಲಿ ಮಗ್ನಳಾದಳು; ರೂಪಮಗ್ನತೆ ಕ್ರಮೇಣ ಅಮೂರ್ತ ವಿಚಾರಗಳ ಸ್ವಪ್ರತಿಷ್ಠೆಯಾಯಿತು. ತನ್ನ ಹೆಂಡತಿ ಹೆಚ್ಚು ಹೆಚ್ಚಾಗಿ ಹೀಗೆ ಸ್ವಮಗ್ನಳಾಗುತ್ತ ಹೋದಂತೆ ತಾನೂ ಅವಳಿಂದ ದೂರವಾದೆ ಎಂದು ತಮ್ಮ ದಾಂಪತ್ಯವನ್ನೂ ರಾಜಕೀಯ ಚಿಂತನೆಯ ಒಂದಂಶವಾಗಿ ಕಾಣುವ ನನ್ನ ಗೆಳೆಯ ತನ್ನ ಬಗ್ಗೆಯೂ ವ್ಯಥೆಯಿಂದ ಹೇಳಿಕೊಳ್ಳುತ್ತಾನೆ. “ನಾನೂ ಈಚೆಗೆ ಬರಿದಾಗಿಬಿಟ್ಟಿದ್ದೇನೆ. ಏನೋ ಹಳೆಯ ಕಾಲದ ಹಳಹಳಕೆಯಿಂದಾಗಿ ಈ ಕರಪತ್ರಗಳನ್ನು ಅಚ್ಚುಮಾಡಿಸಿ ಹಂಚುತ್ತೇನೆ – ಅಷ್ಟೆ. ಆದರೆ ನನ್ನ ಹೃದಯವಿರುವುದು ಈಗ ಇಲ್ಲಿ ಯಾರಿಗೂ ಬೇಡದ ಪಾಂಡಿತ್ಯದ ಪ್ರಶ್ನೆಗಳಲ್ಲಿ. ಆದರೆ ನಾನು ಕೆಲಸ ಮಾಡುತ್ತಿರುವ ಸರಕು ನಿನ್ನ ದೇಶದಲ್ಲಿ ಇನ್ನೂ ಎಷ್ಟು ನೈಜ – ಅದೇ ನನ್ನ ಸಮಾಧಾನ. ಸಂಸ್ಕೃತಿಯ ದೃಷ್ಟಿಯಿಂದ ಶೇಕ್ಸ್‌ಪಿಯರ್‌ಗಿಂತ ವಾಲ್ಮೀಕಿಯೇ ಹೆಚ್ಚು ಜೀವಂತ ಅಲ್ಲವೇ ಹೇಳು”. +ಅರವತ್ತರ ದಶಕದ ಆದರ್ಶಗಳನ್ನು ಇನ್ನೂ ಉಳಿಸಿಕೊಂಡ ಈ ಗೆಳೆಯನಂಥವರ ಸ್ವಂತ ಜೀವನದ ಅನಿವಾರ್ಯ ಕಷ್ಟಗಳು, ಭಾರತದಲ್ಲಿ ಅಂಥವರ ಆಸಕ್ತಿ _ ಈ ಎರಡೂ ನನಗೆ ಅರ್ಥಪೂರ್ಣವೆನ್ನಿಸಿದುವು. ಎಲ್ಲೇ ಆಗಲಿ, ಯಾವತ್ತೇ ಆಗಲಿ ನಾವು ಬದುಕುವ ಜೀವನ ನಮ್ಮದು ಮಾತ್ರವಲ್ಲ, ಸುಲಭವೂ ಅಲ್ಲ. ಮಕ್ಕಳು ಸ್ಕೂಲಿನಿಂದ ಬರುವ ಮುಂಚೆ ಅವಸರವಾಗಿ ಮನೆಗೆ ಹೋಗಿ ಊಟಕ್ಕೆ ಸಿದ್ಧಮಾಡುವ ಈ ನನ್ನ ಗೆಳೆಯ ಪಾಲನೆಯ ಕಟ್ಟುಪಾಡುಗಳಿಗೆ ಬದ್ಧನಾಗಿದ್ದು, ಈ ಪಾಲನೆಯ ಅವಿಭಾಜ್ಯ ಅಂಶವಾಗಿಯೇ ರಾಜಕೀಯವನ್ನೂ ಕಾಣುತ್ತಾನಲ್ಲ – ಅದೇ ನನಗೆ ಅಮೆರಿಕಾದ ಅರವತ್ತರ ದಶಕದ ಹೆಚ್ಚುಗಾರಿಕೆಯೆನ್ನಿಸಿತು. +ಆ ನದಿ ದಂಡೆಯಲ್ಲಿ ಕನಿಷ್ಠ ಎರಡು ಲಕ್ಷ ಕಾಂಡ್ಲ ಕಾಡಿನ ಮರಗಳಿವೆ. ಅಷ್ಟೆ ಸಂಖ್ಯೆಯಲ್ಲಿ ಅದರ ಮರಿ ಮ್ಯಾಂಗ್ರೋಗಳು ಮೊಳೆತು ನಿಂತಿವೆ. ಇನ್ನೊಂದೆಡೆಯಲ್ಲಿ ದಿನಕ್ಕೆ ಸಾವಿರಾರು ಕೆ.ಜಿ. ಉಪ್ಪನ್ನು ಮೊಗೆಮೊಗೆದು ಹಾಕಲಾಗುತ್ತಿದೆ. ಮಕ್ಕಳು, ಮರಿ, […] +‘ಶಿಲಾಲತೆ’ ಸಂಗ್ರಹ ಪ್ರಕಟವಾಗುವುದಕ್ಕೂ ಮುಂಚೆ ಅದರಲ್ಲಿರುವ ’ಗಡಿಯಾರದಂಗಡಿಯ ಮುಂದೆ’ ಎನ್ನುವ ಕವಿತೆ ’ಪ್ರಜಾವಾಣಿ’ಯಲ್ಲಿ ಪ್ರಕಟವಾದಾಗ ನಾವು ಅನೇಕರು ಆ ಕವಿತೆಯ ಅರ್ಥ ಬಿಡಿಸಲಿಕ್ಕೆ ಹೆಣಗಾಡಿದೆವು. ಕ್ಲಿಷ್ಟತೆ, ಅಪೂರ್ವ ಕಾವ್ಯ ಪ್ರತಿಮೆಗಳು, ಕಾವ್ಯಶಿಲ್ಪ, ಬೌದ್ಧಿಕತೆ ಮತ್ತು […] +ಕರ್ನಾಟಕದ ಪಾಲಿಗೆ ೨೦೦೦ ಇಸವಿ ಆತಂಕ, ಕಳವಳದ ವರ್ಷವಾಗಿದ್ದು, ಕಾವೇರಿ ಜಲವಿವಾದ ಮತ್ತು ಮಾಜಿ ಸಚಿವ ನಾಗಪ್ಪ ಅಪಹರಣ ಪ್ರಕರಣಗಳು ಜನರ ಪಾಲಿಗೆ ಸಾಕಷ್ಟು ಕಷ್ಟನಷ್ಟಗಳಿಗೆ ಕಾರಣವಾದುವು. ವರ್ಷಾಂತ್ಯದ ವೇಳೆಗೆ ನಾಗಪ್ಪ ಅಪಹರಣ ಪ್ರಕರಣ […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_181.txt b/Kannada Sahitya/article_181.txt new file mode 100644 index 0000000000000000000000000000000000000000..855ba527d4933ff15a22bf170a7b1895b36a8d7f --- /dev/null +++ b/Kannada Sahitya/article_181.txt @@ -0,0 +1,70 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +– ೧ – +ಸುದ್ದಿ ಮಾಧ್ಯಮಗಳ ಹಣೆಬರಹವೇ ಅಷ್ಟು: +ಬೆಟ್ಟ ಮಾಡಿ ರವೆಯಷ್ಟನ್ನು +ಎತ್ತಿ ಮೆರೆಸುತ್ತವೆ ಬರೀ ಗಷ್ಟನ್ನು. +ಅವುಗಳಿಗೆ ಅತಿ ಮುಖ್ಯ +ಮಿಂಚು, ಮಳೆಬಿಲ್ಲು, ಸಂಜೆ ಮುಗಿಲಿನ ಸಖ್ಯ. +ಶಾಶ್ವತದ ಹೂರಣಕ್ಕೆ ಮಾಡಿ ದಖಲ್ ಪಟ್ಟಿ +ಮುಜುರೆ ಸಲ್ಲಿಸುತ್ತವೆ +ಸಾಮಯಿಕ ಕಣಕಕ್ಕೆ ಪಟ್ಟಿ ಕಟ್ಟಿ. +ತಾರಾಮೌಲ್ಯವಿರದ ಭೂಪ +ಅವುಗಳ ಪಾಲಿಗೆ ಮರೆವಿನ ಕೂಪ; +ಚಾಲ್ತಿಯಿಲ್ಲದ ಭೂಗತ ಸ್ತೂಪ. +ಎಂದೇ, ಆ ಮಾಧ್ಯಮಗಳ ಉದ್ದಗಲ +ಲೌಕಿಕ ಸಾಧಾರಣರದೇ ನಿತ್ಯ ಗದ್ದಲ: +ರಾಜಕಾರಣಿ ಶಕುನಿ, ಸಿನಿಮಾ ಮೊದ್ದು ಕಣ್ಮಣಿ, +ಕ್ರಿಕೆಟ್ ಶಿಖಾಮಣಿಗಳದೇ ಕೈಫಿಯತ್ತು; +ಅವರದೇ ದೇಖಾವೆಯ ದೊಂಬರಾಟದ ಗರ್ದಿ ಗಮ್ಮತ್ತು. +– ೨ – +ಸಾಧನಾಸಮರ್ಪಿತ ಅಂತರ್ಮುಖಿಗಳಾಗಿ +ಲೋಕ ಕಲ್ಯಾಣಾರ್ಥ ಜೀವವನೆ ಚಂದನಗಳಾಗಿ ನೀಗಿ +ದೂರದೇಕಾಂತದಜ್ಞಾತ ಎಡೆಗಳಲ್ಲಿ +ಪರಿಪಕ್ವವಾಗುತ್ತ ಆಧ್ಯಾತ್ಮ ಅನುಭಾವದಡೆಗಳಲ್ಲಿ, +ಕಂಗಾಲರನವರತ ಕೈಂಕರ್ಯದಾರೈಕೆಯಲ್ಲಿ, +ಸಚರಾಚರದ ಶ್ರೇಯಸಿನ ಹಾರ್ದ ಹಾರೈಕೆಯಲ್ಲಿ +ಬದುಕ ಕೃತಕೃತ್ಯತೆಗೆ ಹಾಯಿಸಿದ +ಯೋಗಿ ಸಂತ ದಾರ್ಶನಿಕ ಮಹಾಕವಿ ಸತ್ವಗಳ +ತೇಜೋಜ್ವಲ ಚಿರ ಚೇತನ ಮಹತ್ವಗಳ +ಅರಿವು ಬಾರದು ಸಮೂಹ ಮಾಧ್ಯಮಗಳಿಗೆ +ದಿನನಿತ್ಯದಾಗುಹೋಗುಗಲ ಬಾಲವನು +ನೇರ್ಪಡಿಸುವುದರಲ್ಲಿ ನಿಮಗ್ನವಾದ ನಫೆಯ ನಳಿಗೆಗಳಿಗೆ. +– ೩ – +ಲೋಕದ ಜಾಯಮಾನವೇ ಹೀಗೆ +ಸುಪ್ರಶಸ್ತ ಅದಕ್ಕೆ ಕಾಗೆ, ಡೇಗೆ; +ನೆನಪಾಗುವುದು ಅಪರೂಪ ಸೋಗೆ. +ಅದರ ಸ್ಥೂಲ ದೃಷ್ಟಿಗೆ ಬಿದ್ದು +ಕಾಣಿಸುವುದು ತತ್‌ಕ್ಷಣಕ್ಕೆದ್ದು +ಮೇಲುಗಡೆ ರಾರಾಜಿಸುವ ಹರಳಿನುಂಗುರದ +ನಾಲ್ಕು ಬೆರಳು ಮಾತ್ರ; +ತಗ್ಗಿನ ಹೆಬ್ಬೆಟ್ಟು ಅದರ ಕೃಪಾವಲೋಕನಕ್ಕೆ ಚಿರ ಅಪಾತ್ರ. +ಅದರದು ಕೆಳಗಿರುತ್ತಲೇ, +ಸ್ವಂತ ಮೇಲ್ಮನೆಯನು ಮರೆಸುತ್ತಲೇ +ಸಲ್ಲಿಸುತ್ತದೆ ಸತ್ಕಾಯಕವ, ನಿರಾಭರಣ. +ಎಂದೇ, ಎಲ್ಲ ಬೆರಳುಗಳಿಗಿಂತ ಅದು ಗಣ್ಯ, ಅಸಾಧಾರಣ. +ಅದರ ನೆರವಿರದೆ ಯಾವುದನು ತಾನೆ +ಹಿಡಿಯಲಾದೀತು ಗಟ್ಟಿ? +ಕಾರ್ಯ ನೆರವೇರಿಸಲಾದೀತು ಬೆರಳುಗಳು ಮುಟ್ಟಿ? +ಅದನುಳಿದು ಮುಚ್ಚಿದರೆ +ಅಪೂರ್ಣ, ಅಸಾರ್ಥಕ ಭದ್ರ ಮುಷ್ಟಿ. +***** +ಕೀಲಿಕರಣ: ಶ್ರೀನಿವಾಸ +ಅನುಭವ ಇಲ್ಲದ ಕವಿತೆ ತಿಂಗಳು ತುಂಬದ ಕೂಸು ಅವಸರವಸರದಿಂದ ಉಸಿರಿಗಾಗಿ ವಿಲಿವಿಲಿಸುತ್ತ ಹೊರ ಬರುತ್ತದೆ ಬಿಸಿಲಿಗೆ ರಾತ್ರಿ ಅಂಗಡಿ ಮುಚ್ಚಿ ಬಿಕೋ ಬೀದಿಗಳಲ್ಲಿ ನಡೆದು ಬರುವಂತೆ ಬರೀ ನೆನಪುಗಳ ಊಹೆಗಳ ಹಗುರ ನಿರ್ಣಯಗಳ ತಪ್ಪಿ […] +ನಮ್ಮ ಮನೆ ಎದುರಿನ ಮರ ಶಿಶಿರದಲ್ಲಿ ಉದುರಿ ನಾಚಿಕೆಯೇ ಇಲ್ಲದೆ ಬೆತ್ತಲೆ ನಿಂತು ಕತ್ತಲೆಯ ಸುರಂಗದಿಂದ ತೀಡಿಬರುವ ಗಾಳಿಗೆ ಬೆಳಗಿನ ಚುಮು ಚುಮು ಚಳಿಗೆ ಮೈಯೊಡ್ಡಿ ನಿಂತು ಹದಗೊಳ್ಳುತ್ತದೆ. ಮತ್ತೆ ವಸಂತದಲ್ಲಿ ನವವಧುವಿನಂತೆ ಮತ್ತೆ […] +ಉಲೂಪಿ ನೀ ಕೊಟ್ಟ ಗುಲಾಬಿ ಬತ್ತಿ ಎಷ್ಟೋ ದಿವಸ- ಕೈಗಿನ್ನೂ ಹತ್ತಿದಂತಿರುವ ನಿನ್ನ ಮೈ ಬಿಸಿ ಮೃದುತ್ವ ರೇಶಿಮೆಯ ನುಣುಪನ್ನು ಉಲೂಪಿ, ನಿನ್ನ ತರಿತರಿ ಮೈಯ ಸದಾಪು ವಾಸನೆಯನ್ನು ಮರೆಯಲಾರೆ. ಮಲಗಿದ್ದಾರೆ ಸುಭದ್ರೆ ಅಭಿಮನ್ಯು. […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_182.txt b/Kannada Sahitya/article_182.txt new file mode 100644 index 0000000000000000000000000000000000000000..3a40360f2aae22f98c26d9a623fe6a9a02eb1f68 --- /dev/null +++ b/Kannada Sahitya/article_182.txt @@ -0,0 +1,20 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಈ ಚೆಪ್ಪೆ +ನೆಲದಾಳದಿಂದ +ಬಳಕ್ಕನೆ ಪುಟಿದ +ದಳ ದಳ ಬಣ್ಣ +ಹೊರತಾಗದ +ಸುಖದಚ್ಚರಿ +***** +ತರಗೆಲೆಯನೂ ಬೀಳಿಸದಿಹ ಮೇ ತಿಂಗಳ ಮುದಿಯ ಗಾಳಿ ಏದಿರುವುದು ತರಗು ಪೇಟೆ ಕೂಲಿಯಾಳ ಒಡಲ ಹೋಲಿ. ***** +ಬಸ್‌ ಸ್ಟಾಂಡಿನ ಕಕ್ಕಸಿನ ಸ್ಥಿತಿ ತುಂಬಾ ಶೌಚನೀಯ. ***** +ರಸ್ತೆಯಲ್ಲಿ ನಡೆಯುವಾಗ “ಮುಂದೆ ನೋಡಿಕೊಂಡು ಹೋಗು” ಎನ್ನುತ್ತಾರೆ ತಿಳಿದವರು. ಕೆಳಗೂ ಕಣ್ಣು ಹಾಯಿಸಬೇಡವೆ? ಅಲ್ಲಿ ಬಿದ್ದಿರಬಹುದಲ್ಲ ಲೈವ್ ವೈರು. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_183.txt b/Kannada Sahitya/article_183.txt new file mode 100644 index 0000000000000000000000000000000000000000..f152ff094d5540d907585e169e62849c9c55e4c1 --- /dev/null +++ b/Kannada Sahitya/article_183.txt @@ -0,0 +1,130 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಖಂಡಿತ ಅವನು “ಭಿರಂಡಿ” ಯ ಆಸೆಗಾಗಿ ಈ ಮಾತು ಆಡಿಲ್ಲವೆಂದು ಖಾತ್ರಿಯಾಯ್ತು. ಬಸವರಾಜು ತಕ್ಷಣ ಹೋಗಿ ಕಳ್ಳನನ್ನು ತಬ್ಬಿಕೊಂಡು ತಾನೇಕೈಯಾರೆ ಕುಡಿಸಿದ. ಉಳಿದವರೂ ಆನೆ ಮಾಡಿದರು. +ತಾಸರ್ಧ ತಾಸು ಮೀಟಿಂಗ್ ಮಾಡಿ ಬಸವರಾಜು ಚತುಷ್ಟಯರನ್ನು ಅವಸರದಿಂದ ಎಬ್ಬಿಸಿದ ತಾಕೆಂದು ಅಮಲಿನಲ್ಲಿದ್ದ ಅವರೂ ಕೇಳಲಿಲ್ಲ. ಗುಡಸೀಕರನೂ ಎದ್ದ “ಒಳಗ ಹಣಕಿ ಹಾಕೋ ರಾಜಾ, ನಿನಗಾಗಿ ಏನ ತಂದೆನ್ನೋಡು ಎಂದು ಹೇಳಿ ಗುಡಸೀಕರನನ್ನು ಅಲ್ಲೇ ಬಿಟ್ಟು ಮಿಕ್ಕವರೊಂದಿಗೆ ಹೊರಬಂದು ಬಾಗಿಲಿಕ್ಕಿಕೊಂಡ. ಒಳಗೆ ಚಿಮಣಾ ಇದ್ದಳು. +ಊರು ವಿ-ವಿಚಿತ್ರವಾಯಿತು +ಚುನಾವಣೆ ಆ ಸಣ್ಣ ಹಳ್ಳಿಗೆ ವಿಚಿತ್ರವಾಗಿ ಕಂಡಿತು. ಚತುಷ್ಟಯರ ಹಿರಿಯರು ಗೌಡರ ವಿರುದ್ಧ ನಿಂತುದಕ್ಕೆ ಬೈದು ಬುದ್ಧಿ ಹೇಳಿದರು. ಅದೇನು ಭಂಡತನವೋ, ಒಳಕ್ಕಿಳಿವ ಹೆಂಡವೋ ನಿಂತರೆ ತಪ್ಪೇನೆಂದು ಸಾಧಿಸಿದರು. ಹ್ಯಾಗೂ ಸೋಲುತ್ತವೆ, ನಿಂತರೆ ನಿಂತುಕೊಳ್ಳಲೆಂದು ಅವರೂ ಸುಮ್ಮನಾದರು. ಇಷ್ಟಾಗಿಯೂ ಊರ ಜೀವನ ನೆಮ್ಮದಿಯಾಗೇ ಇತ್ತು. ಚುನಾವಣೆಯ ಹುಳ ಕೊರೆಯುತ್ತಿದ್ದುದು ಇವರ ತಲೆಯಲ್ಲಿ ಮಾತ್ರ. +ಸರಕಾರೀ ಕಚೇರಿಯಿಂದ ಹುರಿಯಾಳುಗಳ ಹೆಸರು ಸ್ಥಿರಪಟ್ಟಿ ಬಗ್ಗೆ ಪತ್ರ ಬಂತು. ಶ್ರೀ ಪರಗೌಡಾ ಶಿವಗೌಡಾ ನಾಯಕ, ಶ್ರೀ ದತ್ತೋಬಾ ದೋಂಡೋಬಾ ಕುಲಕರ್ಣಿ, ಶ್ರೀ ಬಾಳಪ್ಪ ಬಸವಂತಪ್ಪ ಮುಗಳಿ, ಶ್ರೀ ಬಸೆಟ್ಟಿ ಪರಮಸೆಟ್ಟಿ ಪುಗಸೆಟ್ಟಿ, ಶ್ರೀ ನಿಂಗಪ್ಪ ಗೊಲೇರ, ದೇವರೇಸಿ ಇವರು ಐದು ಜನ ಒಂದು ಪಕ್ಷವಾದರೆ ಶ್ರೀ ಜಿ. ಎಂ. ಗುಡಸೀಕರ ಬಿ. ಎ. ಎಲ್. ಎಲ್.ಬಿ, ಶ್ರೀ ಸಿ. ಬಿ. ರಮೇಸ್, ಶ್ರೀ ಎಂ.ವಾಯ್ ಮೆರಮಿಂಡ, ಶ್ರೀ ಡಿ. ಬಿ. ಸಾತೀರ, ಶ್ರೀ ಎಸ್. ಎಸ್. ಕಡ್ಲಿ( ಅಂದರೆ ಕಳ್ಳ ಸಿದರಾಮ) ಇವರು ಇನ್ನೊಂದು ಪಕ್ಷವಾದರು ಜನ ಚುನಾವಣೆ ಅರಿಯದವರಲ್ಲ. ಈ ಹಿಂದೊಮ್ಮೆ ಒಂದು ನಡೆದಿತ್ತು. ಹೂಡಿದ ಎತ್ತು, ಗುಡಿಸಲ ಚಿತ್ರಗಳ ಮಧ್ಯೆ. ಹೂಡಿದ ಎತ್ತು ನಮ್ಮ ತಂದೆ ಇದ್ದ ಹಾಗೆ. ಅದಕ್ಕೇ ಹೋಟು ಬರೆಯೋಣ ಎಂದು ಗೌಡ ಹೇಳಿದ್ದರಿಂದ ಹೋಗಿ ಹೋಟು ಬರೆದು ಬಂದಿದ್ದರು. ಈ ಸಲ ಗುಡಸೀಕರನ ಗುಂಪಿಗೆ ತಕ್ಕಡಿಯ ಗುರುತನ್ನು ಕೊಡಲಾಗಿತ್ತು. +ಚತುಷ್ಟಯರು ಕೈಯಿಂದ ಹಣ ಖರ್ಚು ಮಾಡುವಂಥದೇನೂ ಇರಲಿಲ್ಲ, ಗುಡಸೀಕರನ ದಯದಿಂದ. ಆದ್ದರಿಂದ ನಾಲ್ವರೂ ಧಾರಾಳಿಗಳಾದರು. ಮಾತಾಡಿಸಿದವರಿಗೆಲ್ಲ ಬೀಡಿ ಕೊಡುತ್ತ ತಮಗೇ ಹೋಟು ಹಾಕಬೇಕೆಂದರು. ಬಸವರಾಜು ಬೆಳಗಾವಿಯಿಂದ ಒಬ್ಬ ಪೇಂಟರನ್ನು ಗೊತ್ತು ಮಾಡಿ ತಂದ. ಬಂದವನು ಗುಡಸೀಕರನ ಮನೆಯ ಸುಣ್ಣದ ಗೋಡೆಯ ಮೇಲೆ ದೊಡ್ಡ ತಕ್ಕಡಿಯ ಚಿತ್ರ ಬರೆದು “ನಿಮ್ಮ ಹೋಟು ತಕ್ಕಡಿಗೆ” ಎಂದು ಬರೆದಿದ್ದ. +ಬಣ್ಣದಿಂದ ಬರೆದ ಆ ಚಿತ್ರ ಎಷ್ಟು ದೂರದಿಂದ ನೋಡಿದರೂ ಒಡೆದು ಕಾಣುತ್ತಿತ್ತು. ಜನ ಗುಡಸೀಕರನ ಮನೇ ಮುಂದೆ ನಿಂತು, ನಡೆದಾಡಿ ನೋಡಿ ನೋಡಿ ಬಂದರು. ಚಿತ್ರಗಾರ ಪುಕ್ಕಟ್ಟಿ ಬರೆಯುವುದು ಗೊತ್ತಾದೊಡನೆ ಬಸವರಾಜನಿಗೆ ವಿನಂತಿಸಿಕೊಂಡು ಜನ ತಂತಮ್ಮ ಮನೆ ಗೋಡೆಗಳ ಮೇಲೆ ಅಂಥವೇ ಚಿತ್ರ ಬರೆಸಿದರು. ಹೀಗಾಗಿ ಪ್ರತಿ ಮನೆಯ ಗೋಡೆಯ ಮೇಲೆ ಚಿತ್ರದ ತಕ್ಕಡಿ ತೂಗ ತೊಡಗಿತು. ಮಕ್ಕಳು “ನಮ್ಮ ಮನೆಯ ತಕ್ಕಡಿ ದೊಡ್ದದು, ನಿಮ್ಮದು ಸಣ್ಣದೆಂದು ತಂತಮ್ಮಲ್ಲಿ ಜಗಳವಾಡತೊಡಗಿದರು. ಕೆಲವು ಸ್ಥಳಿಕ ಕಲಾವಿದರು ಬರೀ ತಕ್ಕಡಿಯಲ್ಲಿ ಹಣ್ಣು, ತೆಂಗಿನಕಾಯಿ, ವೀಳ್ಯೆದೆಲೆ ಬರೆದರು. ಇನ್ನೊಬ್ಬ ಕಲಾವಿದ ಒಂದು ಪರಡಿಗೆಯಲ್ಲಿ ಹಕ್ಕಿಯನ್ನೂ ಇನ್ನೊಂದರಲ್ಲಿ ರೂಪಾಯಿಗಳನ್ನೂ ಬರೆದ. ಗೌಡನಪಕ್ಷದವರು ಬರೆಸಲಿಲ್ಲವಾದ್ದರಿಂದ ಮರದ ಚಿತ್ರ ಮೂಡಲೇ ಇಲ್ಲ. ಆದರೆ ಗೌಡನ ಪಕ್ಷದ ಸಂಕೇತ ಮರವೆಂದು ಗುರುತಾದೊಡನೆ ತಂತಮ್ಮ ಮನೆಗಳ ತಕ್ಕಡಿಯಲ್ಲಿ ಮರ ಕೂರಿಸಿದಂತೆ, ಅದರ ಮೇಲೆ ಹಕ್ಕಿ ಕೂತ ಹಾಗೆ, ಅದರ ನೆರಳಿನಲ್ಲಿ ದನ ನಿಂತಂತೆ, ಕೆರೆಯಲ್ಲಿ ಕರಿಮಾಯಿ ಕಮಲದ ಹೂ ಹಿಡಿದಿದ್ದಂತೆ ಚಿತ್ರ ಬರೆದರು. ಹೀಗಾಗಿ ಇಡೀ ಊರು ತಕ್ಕಡಿ ಮರಗಳ ವಿಚಿತ್ರ ಪ್ರದರ್ಶನದಂತೆ ಕಾಣುತ್ತಿತ್ತು. +ಊರು ರಂಗು ರಂಗಾಗಿ ಕಂಡಿತಲ್ಲ, ಹಳೆಯ ಮಂದಿ ಅವರೂ ಸೋಜಿಗಪಟ್ಟರೇ, ಆನಂದಪಟ್ಟರೇ, ನೆವದಲ್ಲಿ ನೆವ ಊರಾದರೂ ಚೆಂದಾಯಿತಲ್ಲ ಎಂದರು. ಆದರೆ ಅವರಿಗೆಂದೂ ತಮ್ಮ ಯಶಸ್ಸಿನ ಬಗ್ಗೆ ಸಂದೇಹ ಬರಲಿಲ್ಲ, ಜನಕ್ಕೂ. +ಇತ್ತ ಚತುಷ್ಟಯರು ಅಂದಂದಿನ ಪರಿಣಾಮಗಳನ್ನು ಚರ್ಚಿಸಲು ಪ್ರತಿದಿನ ಗುಡಿಸಲಿನಲ್ಲಿ ಸೇರುತ್ತಿದ್ದರು. ನಾಳೆ ಮಾಡಬೇಕಾದ ಕೆಲಸಗಳನ್ನು ಬಸವರಾಜು ವಿವರಿಸುತ್ತಿದ್ದ. ಅವನ ತಂತ್ರಗಳ ಬಗ್ಗೆ ಈಗ ಗುಡಸೀಕರನಲ್ಲೂ ನಂಬಿಕೆ ಮೂಡಿತ್ತು. ಯಾಕೆಂದರೆ ತಕ್ಕಡಿಯ ಚಿತ್ರ ಬರೆಸುವ ಮೂಲ ವಿಚಾರ ಆತನದೆ. ಈಗಂತೂ ಅವನ ಮಾತೇ ಮಾತು. ಪ್ರಚಾರ ಮಾತ್ರ ಏಕಪಕ್ಷೀಯವಾಗಿತ್ತು. ಈ ತನಕ ಮಂದಿಗೆ ಬೀಡಿಕೊಟ್ಟು, “ನಮಗ ಹೋಟು ಹಾಕ್ರಿ” ಎಂದು ಹೇಳುತ್ತಿದ್ದವರು. ಈಗ ಸಿಗರೇಟು ಹಂಚತೊಡಗಿದರು. ಒಂದು ದಿನ ಬಸವರಾಜು ಇದ್ದಕ್ಕಿದ್ದಂತೆ ಬೆಳಗಾವಿಗೆ ಹೋಗಿ ಇನ್ನೂರು, ಮುನ್ನೂರು ಬಾಡಿತಂದು, ಗಿರಿಜಾ ಮೂಲಕ ಹೆಂಗಸರಿಗೆ ಗೋಪ್ಯವಾಗಿ ಹಂಚಿ, ಆ ಎಲ್ಲರಿಂದಲೂ ಗುಡಸೀಕರ ಪಾರ್ಟಿಗೇ ಹೋಟು ಹಾಕುವಂತೆ ಕರಿಮಾಯಿಯ ಆಣೆ ಮಾಡಿಸಿದ್ದ. +ಇತ್ತ ಚತುಷ್ಟಯರು ಸುಮ್ಮನೆ ಕೂತಿರಲಿಲ್ಲ. ಸಾಲೆ ಮಕ್ಕಳ ಮೆರವಣಿಗೆಯಲ್ಲಿ ದಿನಾ ಮಾಲೆ ಹಾಕಿಕೊಂಡಿ ಕಂಡ ಕಂಡವರಿಗೆ ಬೀಡಿ ಸಿಗರೇಟು ಕೊಡುತ್ತ ಪ್ರಚಾರ ಮಾಡತೊಡಗಿದರು. ಎಲ್ಲಕ್ಕಿಂತ ಹೆಚ್ಚಾಗಿ ನಾಲ್ವರಿಗೂ ಪುಷ್ಕಳ ಸಿಕ್ಕುತ್ತಿದ್ದ ಭಾಷಣದ ಅವಕಾಶಗಳನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಇವರ ಭಾಷಣ ಕೇಳಲಿಕ್ಕೆ ಜನ ಬರಲಿ, ಬಿಡಲಿ, ಒಬ್ಬರಿರಲಿ, ಇಬ್ಬರಿರಲಿ, ಬಸವರಾಜು ಕಲಿಸಿದ ಸ್ಟೈಲಿನಲ್ಲಿ ನಿಂತುಕೊಂಡು ಭಾಷಣ ಮಾಡುತ್ತಿದ್ದರು. ಬರೀ ಒಬ್ಬಿಬ್ಬರು ಗಂಡಸರಿದ್ದ ಸಭೆಯಲ್ಲಿ ಚತುಷ್ಟಯರು “ನನ್ನ ನೆಚ್ಚಿನ ಬಂಧು ಭಗಿನಿಯರೇ” ಎಂದೇ ಸುರುಮಾಡಿ ಜೈಹಿಂದಿನಲ್ಲೇ ಮುಗಿಸುತ್ತಿದ್ದರು. ಮಕ್ಕಳು ಮೆರವಣಿಗೆ ಹೊರಟಾಗ “ಮುದಿಯರ ಕಾಲ ಮುಗೀತು, ತರುಣರ ಕಾಲ ಸುರುವಾತು, ಹಳಬರ ಗೊಡ್ಡು ನೀತಿಗೆ ದಿಃಕ್ಕಾರ! ಹೊಸ ರೀತಿಗೆ ಜಯಕಾರ! ಏನೇ ಬರಲಿ, ಒಗ್ಗಟ್ಟಿರಲಿ”, ಇತ್ಯಾದಿ ಕಿರುಚುತ್ತಿದ್ದವು. ಚತುಷ್ಟಯರ ಪೈಕಿ ಇದ್ದುದರಲ್ಲೇ ಸ್ವಲ್ಪ ಸ್ವಂತಿಕೆಯಿದ್ದವರೆಂದರೆ ಕಳ್ಳ ಹಾಗೂ ರಮೇಸ. ಕಳ್ಳ ಉಳಿದವರಂತೆ ಭಾಷಣ ಸುರುಮಾಡಿ ಮುಗಿಸುತ್ತಿದ್ದರೂ ಮಧ್ಯದಲ್ಲಿ ದೃಷ್ಟಾಂತಗಳನ್ನು ಸೇರಿಸುತ್ತಿದ್ದ. ಅವನ ಭಾಷಣದ ಸಾಧ್ಯವಾದಷ್ಟು ಅಶ್ಲೀಲವಲ್ಲದ ಭಾಗವನ್ನು ಕೆಳಗೆ ಉದಾಹರಿಸಿದ್ದೇನೆ. +“ಒಬ್ಬಾಕಿ, ಒಳೇ ಚಂದ, ನವ ತರುಣಿ ಇದ್ದಳಂತ. ಮದಿವ್ಯಾಗೋ ವಯಸ್ಸು ಬಂತು. ಯಾರನ್ನ ಮದಿವ್ಯಾಗಬೇಕು? ವಾರಿಗಿ ಹುಡುಗನ್ನ ಮದಿವ್ಯಾದರ ಅವಂಗ ರಾತ್ರಿ ಬರೋಬರಿ ಕೆಲಸಾ ಮಾಡಾಕ ಬರತೈತೋ ಇಲ್ಲೋ! ಅದಕ್ಕೆ ಒಬ್ಬಾಂವ ವಯಸ್ಸಾದ ಮುದುಕನ್ನ ಮದಿವ್ಯಾದರ, ಹೆಂಗೂ ಅನುಭವ ಇರತೈತಿ, ಕೆಲಸಾ ಬರೋಬರಿ ಮಾಡತಾನು! +ನನ್ನ ನೆಚ್ಚಿನ, ಅಚ್ಚುಮೆಚ್ಚಿನ ಶಿವಾಪುರದ ಬಾಂಧವರೇ, ಹಾಂಗ ತಿಳಕೊಂಡ ಆಕಿ ಮುದುಕನ್ನ ಮದಿವ್ಯಾದಳಂತ! ರಾತ್ರಿ ಸಡಗರ ಮಾಡಿಕೋತ ಹ್ವಾದರ ಅಲ್ಲೇನೈತಿ? ಅನುಭವ ಇತ್ತ ಖರೆ! ಗೂಟ? ಆದ್ದರಿಂದ ನನ್ನ ಬಂಧು ಭಗಿನಿಯರೇ, ಆ ನವ ತರುಣಿ ಹಾಂಗ ಹಳೇ ಬುಡ್ಡಾಗೋಳಿಗಿ ಹೋಟ ಹಾಕಿ ಗೂಟ ಇಲ್ಲಬೇ ಅಂತ ಅಳಬ್ಯಾಡರಿ. ಜೈಹಿಂದ್.” +ಇದಕ್ಕೆ ರಮೇಸನ ವಿವರಣೆ ಹೀಗಿರುತ್ತಿತ್ತು: +“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಶಿವಾಪುರದ ಬಂಧು ಭಗಿನಿಯರೇ, ನಮ್ಮ ಕಳ್ಳರವರು ಹೇಳಿದ ಮಾತನ್ನು ಬರೋಬರಿ ತಿಳಕೊಳ್ಳಿರಿ. ಅವರು ಹೇಳಿದ ಕತೆ ಸುಳ್ಳಲ್ಲ. ಅದರೊಳಗ ನವತರುಣಿ ಅಂದರ ಹೋಟು ಹಾಕುವಂತಾ ನೀವು. ಬುಡ್ಡಾ ಅಂದರ ಗೌಡರ ಪಾರ್ಟಿ, ಮುದಿವ್ಯಾಗೋದಂದರ ಹೋಟ ಹಾಕೋದು; ರಾತ್ರಿ ಅಂದರ ಎಲೆಕ್ಷನ್ ಆದಮೇಲೆ ಅಂತ ಅರ್ತ. ಆ ನವ ತರುಣಿಯು ಯಾವ ರೀತಿ ಬುಡ್ಡಾನನ್ನು ಮದಿವ್ಯಾಗಿ ರಾತ್ರಿ ಗೂಟವಿಲ್ಲೆಂದು ಅತ್ತಳೋ, ಅದೇ ರೀತಿ ನೀವು ಗೌಡರ ಪಾರ್ಟಿಗೆ ಹೋಟು ಹಾಕಿ, ಬಂಧು ಭಗಿನಿಯರೇ, ಗೋಳಾಡಬ್ಯಾಡಿರಿ. ಮದುವೆ ಜೀವನದಾಗ ಮ್ಯಾಲಿಂದ ಮ್ಯಾಲ ಆಗೋದಿಲ್ಲ. ಈಗ ಆ ನವ ತರುಣಿ ಏನು ಮಾಡಬೇಕು? ಗೂಟಿಲ್ಲದ ಬುಡ್ಡಾ ಒಂದು ಕಡೆ, ನವ ಪ್ರಾಯ ತುಂಬಿ ತುಳುಕುವ ನವ ತರುಣ ಇನ್ನೊಂದು ಕಡೆ. ವಿಚಾರ ಮಾಡಿರಿ, ಏನು ಮಾಡಬೇಕು?” +ಅಷ್ಟರಲ್ಲಿ ಸಭಿಕರಲ್ಲಿ ಒಬ್ಬ “ಹಾದರ ಮಾದಬೇಕಪಾ” ಅಂದ. ರಮೇಸ ಅದನ್ನೇ ಮುಂದುವರೆಸಿದ. +“ನನ್ನ ನೆಚ್ಚಿನ ಅಚ್ಚುಮೆಚ್ಚಿನ ಬಂಧು ಭಗಿನಿಯರೇ, ಮೊದಲೇ ನವ ತರುಣನಾದ ಹುಡುಗನ್ನ ಮದಿವ್ಯಾಗಿದ್ದರೆ ಹಾದರ ಯಾಕೆ ಮಾಡಬೇಕಾಗಿತ್ತು? ಅದಕ್ಕೆ ನಮಗೇ ಹೋಟು ಹಾಕಿರಿ. ಜೈಹಿಂದ್!” +ಇವರು ಇಷ್ಟೆಲ್ಲ ಪ್ರಚಾರ ಮಾಡಿದ ಮೇಲೆ ಯಾವನಾದರೊಬ್ಬ “ಛೇ ಛೇ ನೀವೆಲ್ಲಾ ಗೌಡರ ಮುಂದಿನ ಕರುಗಳು. ಇನ್ನ ತಲೀ ಮ್ಯಾಲಿನ ಮಾಂಸ ಆರಿಲ್ಲ, ಚುನಾವಣೆ ಗೆಲ್ಲತಾರಂತ” ಹೀಗಂದರ ಸಾಕು ಪ್ರಚಾರ ಇನ್ನೂ ತೀವ್ರವಾಗುತ್ತಿತ್ತು. +ಬಹಳ ದಿನಗಳಿಂದ ಮನರಂಜನೆ ಕಾಣದಿದ್ದ ಊರಿಗೆ ಇದೆಲ್ಲ ಸೊಗಸಾಗೇ ಕಂಡಿತು. ಸೋಲು ಗೆಲುವುಗಳ ಬಗ್ಗೆ ಗುಡಸೀಕರ ಮತ್ತು ಪಾರ್ಟಿಯವರು ಮನಸ್ಸಿಗೆ ಹಚ್ಚಿಕೊಂಡಂತೆ ಉಳಿದವರ್‍ಯಾರೂ ಹಚ್ಚಿಕೊಳ್ಳಲೂ ಇಲ್ಲ. ಮಗನನ್ನು ಕಳೆದುಕೊಂಡ ಚಿಂತೆಯಲ್ಲಿದ್ದ ಗೌಡನಿಗಾಗಲಿ, ಆ ಬಗ್ಗೆ ಸಹಾನುಭೂತಿಯಲ್ಲಿದ್ದ ಹಿರಿಯರಿಗಾಗಲಿ ಪ್ರಚಾರ ಮಾಡುವ ಬುದ್ಧಿ ಬರಲೇ ಇಲ್ಲ. ಅವರಿಗೂ ಪ್ರಚಾರದ ಈ ಹುಡುಗಾಟ ಮೋಜೆನಿಸಿತು. ಚುನಾವಣೆಯ ದಿನ ಸಮೀಪಿಸಿದಂತೆ ಗುಡಸೀಕರನ ಪಾರ್ಟಿಯವರ ಚಡಪಡಿಕೆ ಜಾಸ್ತಿಯಾಗುತ್ತಿತ್ತು.ಚಡಪಡಿಕೆಯಲ್ಲಿ ಒಮ್ಮೊಮ್ಮೆ ಅಲ್ಲದ್ದನ್ನೂ ಆಡುತ್ತಿದ್ದರು. “ಚಿಮಣಾನ ಬಸರ ಮಾಡಿದ ಗೌಡನಿಗೆ ಧಿಕ್ಕಾರ” ಎಂದು ಮಕ್ಕಳಿಂದ ಒದರಿಸಿದರು. ಆದರೆ ಜನ ಛೀ, ಥೂ ಉಗುಳಿ ಹುಡುಗರನ್ನು ಹೊಡೆದದ್ದರಿಂದ ಅಷ್ಟಕ್ಕೇ ನಿಲ್ಲಿಸಿದರು. +ನೆತ್ತಿಯ ಸೀಳಿದಂತೆ +ಹಗಲು ಹೊತ್ತಿನಲ್ಲಿ ಚತುಷ್ಟಯರ ಪ್ರಚಾರ ಕಾರ್ಯ ನಡೆದರೆ, ರಾತ್ರಿ ಹೊತ್ತು ಬಸವರಾಜೂನ ಸಂಚುಗಳು ನಡೆಯುತ್ತಿದ್ದವು. ಹಳ್ಳಿಯ ಕೊಳ್ಳೀ ಬೆಳಕಿನಲ್ಲಿ ಅವು ಜನಗಳ ಕಣ್ಣಿಗೆ ಬೀಳುತ್ತಿರಲಿಲ್ಲ. +ಮುಂಗಾರಿ ಬೆಳೆ ಬಂದಾಗಿತ್ತು. ಹಿಂಗಾರಿಯಿನ್ನೂ ಹೊಲಗಳಲ್ಲಿತ್ತು. ಈಗ ದೇವರೇಸಿಗೆ ಮೈತುಂಬ ಕೆಲಸ. ಓಡಾಡಿ ಆಯ ತರಬೇಕಿತ್ತು. ಸಂಜೆಯ ತನಕ ಕಣದಿಂದ ಕಣಕ್ಕೆ ಅಲೆದಾಡಿ ಗುಡಿಸಲಿಗೆ ಬಂದರೆ, ಕಂಬಳಿ ಚೆಲ್ಲಿಕೊಂಡು ಬಿದ್ದರೆ ಸಾಕಾಗಿತ್ತು. ಆದರೆ ಎಷ್ಟಂದರೂ ಚಪಲದ ಬಾಯಿ, ಕಂಠಮಟ ಕುಡಿಯಬೇಕೆನಿಸಿ ಒಣಗುತ್ತಿತ್ತು. ಇತ್ತ ಲಗಮವ್ವನಿಗೂ ಆಯ ಸಂಗ್ರಹಿಸುವ ಕೆಲಸ. ಭಟ್ಟಿಯಿಳಿಸುವುದು ಅವಳಿಂದ ಸಾಧ್ಯವಿರಲಿಲ್ಲ. ಅವಳು ಅಡಿಗೆ ಮಾಡಿಕೊಳ್ಳುವುದೇ ಅಪರೂಪವಾಗಿತ್ತು. ಹೊಲಗಳಲ್ಲಿ ರೈತರು ಕೊಡುವ ರೊಟ್ಟಿಯಿಂದಲೇ ತೃಪ್ತಳಾಗುತ್ತಿದ್ದಳು. ಇಷ್ಟು ದಿನ ಗುಡಿಸಲಲ್ಲಿ ದುರ್ಗಿಯಿರುತ್ತಿದ್ದಳು. ಲಗಮವ್ವ ಬೇಕೆನಿಸಿದರೆ ಒಂದು ರೊಟ್ಟಿ ಸುಡಿಸಿಕೊಳ್ಳುತ್ತಿದ್ದಳು. ಈಗ ದುರ್ಗಿಯ ಬಳಕೆ ಕಮ್ಮಿಯಾಗಿತ್ತು. +ಇತ್ತ ದಿನ ಅಲ್ಲ, ಕಾಲವಲ್ಲ, ಧೀನ್ ಅಂದ ಹಾಗೆ ಸುಂದರಿಯ ಸಡಗರ ಕಟ್ಟುಮೀರಿತ್ತು. ಗುಡಸೀಕರ ಮತ್ತೆ ಸಿಕ್ಕ ಸಂಭ್ರಮದಲ್ಲಿ ಮೈಮರೆತು ಖಬರಗೇಡಿಯಾಗಿದ್ದಳು. ಅವಳನ್ನು ಹಿಡಿಯುವುದೇ ಕಷ್ಟವಾಗಿ ಕಣ್ಣಿ ಬಿಚ್ಚಿದ ಉಡಾಳ ದನದಂತೆ ಮೈ ಉಮೇದಿಯನ್ನು ಕೇರಿಯ ತುಂಬ ತುಳುಕಿದಳು. ನೆಲ ಗುಡಿಸುವ ಹಾಗೆ ನೆರಿಗೆ ಹೊಡೆದು ಇಪ್ಪತ್ತು ರೂಪಾಯಿಯ ಶಾಪೂರಿ ಸೀರೆ ಉಟ್ಟು ಮೆರೆದಳು. ಬಾಡಿಯ ಎದೆಯಲ್ಲೆರಡು ಚೂಪಾದ ಚೂರಿ ಇಟ್ಟುಕೊಂಡು ಗುಡಸೀಕರನ ಕಣ್ಣಿರಿದಳು. ಸೊಂಟಕ್ಕೆ ಬೆಂಕಿ ಹಚ್ಚಿದಳು. ಮೂಗಿನ ದಿಗರಿನಲ್ಲಿ ಕೆಳಗಿನ ನೆಲ ಮರೆತಳು. ಜನ ಕೆಲಸಗಳಲ್ಲಿ ಬಹಿಷ್ಕಾರ ಮರೆತರು. ಇವಳ ಉಡಿಗೆ ತೊಡಿಗೆ ನಡಿಗೆಯ ವಿಲಾಸ ಊರವರ ಕಣ್ಣು ಕುಕ್ಕದಿರಲಿಲ್ಲ. ಆದರೆ ಹೇಳಿ ಕೇಳಿ ಸೂಳೆಯಾದ್ದರಿಂದ, ಅದೂ ಪರವೂರವಳಾದ್ದರಿಂದ ಅನ್ನುವಷ್ಟು ಅಂದು ಸುಮ್ಮನಾದರು. ಆದರೆ ಮೂಗಿನ ಮೂಗುತಿಯಲ್ಲೇ ನದರ ನೆಟ್ಟ ಸುಂದರಿಗೆ ಈ ಮಾತು ಕೇಳಿಸಲಿಲ್ಲ. ಚೈನಿಯ, ಪ್ರೇಮದ, ಕಾಮದ, ಸುಖದ ಉನ್ಮಾದದಲ್ಲಿ ಹುಚ್ಚು ಕುದುರೆಯಾಗಿದ್ದಳು. ಏರಿದವನ ಖರೆ, ಖೊಟ್ಟಿ, ತಿಳಿಯದೆ, ಗೊತ್ತುಗುರಿ ಗೊತ್ತಿಲ್ಲದೆ ಮೂಗಿನ ಮುಂದಿನ ದಿಕ್ಕಿಗೆ, ಎದುರು ತಗ್ಗಿರಲಿ, ದಿನ್ನೆಯಿರಲಿ, ಏಳಲಿ, ಬೀಳಲಿ, ಓಟಕ್ಕೆ ಸಿದ್ಧವಾಗುತ್ತಿದ್ದಳು. ಆದರೆ ಅವಳಿಗೂ ತಿಳಿದಿರಲಿಲ್ಲ. ತನ್ನ ನಿಜವಾದ ಸವಾರ ಯಾರೆಂದು. +ಇತ್ತ ಬಸವರಾಜು ಜಾತ್ಯಾ ಕಮ್ಮಾರನಂತೆ ಕುಲುಮೆಯಲ್ಲಿ ಅನೇಕ ಕಬ್ಬಿಣ ಹಾಕಿ ಕಾಸುತ್ತಿದ್ದ. ಚತುಷ್ಟಯರಿಂದ ತಿದಿ ಊದಿಸುತ್ತಿದ್ದ. ಇದ್ದಿಲು ಹಾಕುತ್ತಿದ್ದ. ಕಬ್ಬಿಣ ಕಾದೊಡನೆ ಗುಡಸೀಕರನಿಂದ ಹೊಡೆಸಿ ಏನೋ ಸಾಮಾನು ಮಾಡುತ್ತಿದ್ದ. ಆದರೆ ಮಾಡಿದ ಸಾಮಾನು ಯಾರಿಗೆ ಯಾವ ಕೆಲಸಕ್ಕೆ ಉಪಯೋಗ ಬೀಳುತ್ತದೆಂಬುದು ಮಾತ್ರ ಬೇರೆಯವರಿಗೆ ತಿಳಿಯುತ್ತಲೇ ಇರಲಿಲ್ಲ. ಅವನ ಕುಲುಮೆಯಲ್ಲಿ ಅನೇಕ ದಿನಗಳಿಂದ ಬಿದ್ದಿದ್ದ ಸಲಾಕೆಯೊಂದಿತ್ತು. ಹೊಸ ಮಿದು ಕಬ್ಬಿಣವೊಂದು ಬಂದು ಸೇರಿತ್ತು. ಅದೇನು ಸಾಮಾನು ಮಾಡುತ್ತಾನೋ ನೋಡೋಣ. +ಒಂದು ದಿನ ದೇವರೇಸಿ ಹೊಲದಿಂದ ಮೂರು ಸಂಜೆಗೇ ಬಂದ. ಬಸವರಾಜು ಮೆತ್ತಗೆ ದೇವರೇಸಿಯ ಗುಡಿಸಲಲ್ಲಿ ಕಾಲಿಟ್ತ. ನೋಡನೋಡುತ್ತಿದ್ದಂತೇ “ತಾಯೀ” ಎಂದು ಬಂದವನೇ ಕಾಲು ಹಿಡಿದ. ಅವನ ಬಗ್ಗೆ ದೇವರೇಸಿಗೇನೂ ಸಿಟ್ಟಿರಲಿಲ್ಲ. ಅಸಮಧಾನವೂ ಇರಲಿಲ್ಲ. ಆದರೆ ಆತ ತನ್ನ ಗುಡಿಸಲಿಗೆ ಬಂದಾನೆಂದು ಕನಸು ಮನಸಿನಲ್ಲೂ ಧೇನಿಸಿದವನಲ್ಲ. ತಾನಾಗಿ ಗುಡಿಸಲಿಗೆ ಬಂದನಲ್ಲ, ದೇವರೇಸಿಗೆ ಸಂತೋಷವೇ ಆಯ್ತು. ಇಂಗರೇಜಿ ಕಲಿತವರು ತನ್ನನ್ನು ನಿರ್ಲಕ್ಷ್ಯ ಮಾಡುತ್ತಾರೆಂದು ಮನಸಿನಲ್ಲಿ ಸ್ವಲ್ಪ ಅಸಮಧಾನ ಕೂಡ ಇತ್ತು. ಗುದಸೀಕರ ಒಮ್ಮೆಯೂ ಇವನ ಕಾಲು ಮುಟ್ಟಿರಲಿಲ್ಲ. ತಾಯೀ ಅಂದಿರಲಿಲ್ಲ. ಈತನಾದರೆ ಗುಡಸೀಕರನಿಗಿಂತ ಸ್ವಲ್ಪ ಹೆಚ್ಚು ಕಲಿತಿರಬೇಕೆಂದೇ ಅನೇಕರು ಮಾತಾಡಿಕೊಂಡಿದ್ದರು. ಈಗ ಇವನೇ ಬಂದು ಕಾಲು ಹಿಡಿದು, ಕೊಡಬೇಕಾದ ಗೌರವ ಕೊಟ್ಟಿದ್ದನಲ್ಲ, ಆ ಮಾತು ನಿಜವೆನ್ನಿಸಿತು. ಆದರೆ ಕೂಡಲೇ ಏನು ಮಾಡಬೇಕು? ಏನು ಮಾತಾಡಬೇಕೆಂದು ತೋಚಲಿಲ್ಲ. ಎದ್ದು ಹೋಗಿ ಮೂಲೆ ನೆಲುವಿಗಿದ್ದ ಬಂಡಾರ ಚೀಲತಂದು ಅವನ ಹಣೆಗಂಟಿಸಿ ಕೂತ. ಬಸವರಾಜು ಕೈಮುಗಿದೇ ಕೂತ. “ತಾಯೀ ನಮ್ಮ ಗುಡಿಸಲ ತನಕ ಪಾದಾ ಬೆಳೆಸಿ, ನಮ್ಮ ಸೇವಾ ಒಪ್ಪಿಸಿಕೋಬೇಕು” ಅಂದ. ದೇವರೇಸಿಗೆ ಇನ್ನೂ ದಿಗಿಲು. ಅವನ ಬರುವಿನ ಹಾಗೆ ಅವನ ಈ ಮಾತನ್ನೂ ಆತ ನಿರೀಕ್ಷಿಸಿರಲಿಲ್ಲ. ಹೂಂ ಎನ್ನಬೇಕೆ?ಈ ಅಡ್ಡದಿನ ಅಡ್ಡವೇಳೆಯಲ್ಲಿ ಸೇವೆ ಒಪ್ಪಿಸಿಕೊಳ್ಳೋದೆಂದರೇನು? ಗುಡಿಸಲ ತನಕ ಬರಬೇಕಂತ ಅಲ್ಲವೆ ಹೇಳಿದ್ದು? ಹೋಗಿ ಅದೇನು ಸೇವೆಯೋ ನೋಡೋಣವೆಂದುಕೊಂಡು ” ಆಗಲಿ” ಅಂದ. ಬಸವರಾಜು ಎದ್ದುನಿಂತ ಕೈ ಮುಗಿದುಕೊಂಡೇ, ಅವನ ಹೋಗದೆ ಅಲ್ಲೇ ನಿಂತದ್ದನ್ನು ನೋಡಿ ಬಹುಶಃ ಈಗಲೇ ಬಾ ಅಂತಿದ್ದಾನೆಂದು ದೇವರೇಸಿಯು ಎದ್ದ. ಬಸವರಾಜು ಮುಂದೆ ಹೊರಟ. ದೇವರೇಸಿ ಬೆನ್ನು ಹತ್ತಿದ. +ಕಂಬಳಿ ಹಾಸಿತ್ತು. ತಾಯಿ ಗದ್ದಿಗೆಗೊಂಡಳು. ಬಸವರಾಜು ಒಳಹೊರಗೆ ಓಡಾಡುತ್ತ, ಸಂಭ್ರಮ ಮಾಡುತ್ತ ಒಂದು ಹರಿವಾಣ ತುಂಬ ವಿಸ್ಕಿ ಸುರಿದು ತಾಯಿಗಿತ್ತ. ತಾಯಿಗೆ ಹಿಗ್ಗೋ ಹಿಗ್ಗು. ಈಗ ಹದಿನೈದು ದಿನಗಳಿಂದ ಮುಟ್ಟಿರಲಿಲ್ಲವಲ್ಲ, ಕುಡಿಯೋದನ್ನ ಬಿಟ್ಟು ವರ್ಷವಾದಂತಾಗಿತ್ತು. ಅಲ್ಲದೆ ಈ ತನಕ ಕುಡಿದದ್ದು ಕಂಟ್ರಿ ಸೆರೆ; ಅದೂ ಲಗಮವ್ವ ಮಾಡಿದ್ದು. ಇದಾದರೆ ಥಳಥಳ ಹೊಳೆಯುವ ಬಣ್ಣದ ಬಾಟ್ಲಿಯಲ್ಲಿಟ್ಟಿದ್ದು, ತನ್ನೆದುರಿಗೇ ಅದನ್ನು ಒಡೆದದ್ದು. ಮುಂದಿಡುವುದೇ ತಡ ತಾಯಿ ಒಂದೇ ಗುಟುಕಿಗೆ ತಳಕ್ಕೊಂದು ಹನಿ ಕೂಡ ಬಿಡದೆ ಮುಗಿಸಿದಳು. ಕರುಳಿನಲ್ಲಿ ಭಗ್ಗನೆ ಹೊತ್ತಿದಂತಾಗಿ ಕಿವಿ, ಮೂಗು, ಬಾಯಿಗಳಲ್ಲಿ ಬಿಸಿ ಗಾಳಿ ಸೂಸಿತು. ಆಮೇಲೆ ಒಳಗೆ ಹೋಗಿ ಹರಿವಾಣದ ತುಂಬ ಖಂಡದ ಪಲ್ಯ, ಏಳೆಂಟು ರೊಟ್ಟಿ ತಂದು ಮುಂದಿಟ್ಟ. ತಾಯಿಯ ಕಣ್ಣರಳಿ, ಮೂಗರಳಿ, ಆ ಈ ಕಡೆ ನೋಡದೆ ಪಚಪಚ ತಿನ್ನತೊಡಗಿದಳು. +ನೀರು ಕೂಡ ಬೆರೆಸದೆ ಇಡೀ ಬಾಟ್ಲಿ ವಿಸ್ಕಿಯನ್ನು ಒಂದೇ ಗುಟುಕಿಗೆ ಸೇವಿಸಿದಾಗ ಬಸವರಾಜು ಕಣ್ಣಗಲಿಸಿ ಆಶ್ಚರ್ಯ ಸೂಚಿಸಿದ್ದರೆ ಚಿಮಣಾ ಕಣ್ಣರಳಿಸಿ ನಾಲಿಗೆ ಕಚ್ಚಿಕೊಂಡು ಹೊಯ್ಮಾಲಿ ಹೊಯ್ಕಗೊಂಡಳು. ಈಗ ದೇವರೇಸಿ ಪ್ರಾಣಿಗಳ ಹಾಗೆ ಸಪ್ಪಳ ಮಾಡುತ್ತ ಖಂಡ ತಿನ್ನುವುದನ್ನು ನೋಡಿ ಬಸವರಾಜು ಮುಗುಳುನಕ್ಕ. ಒಳಗಿದ್ದ ಸುಂದರಿ ಇಶ್ಯೀ ಎಂದು ಕಿಸಕ್ಕನೆ ನಕ್ಕಳು. ದೇವರೇಸಿ ಮಾತ್ರ ಇದಾವುದರ ಪರಿವೆಯಿಲ್ಲದೆ ತಿನ್ನುತ್ತಿದ್ದ. +ಮೈಯಲ್ಲಿ ಸೊಂಟದ ಧೋತ್ರ ಬಿಟ್ಟರೆ ಒಂದು ಚೂರು ಬಟ್ಟೆಯಿರಲಿಲ್ಲ. ಖಂಡ ಹೆಂಡ ಎರಡೂ ಸೇರಿ ಮೈಮೇಲೆ ಧಾರಾಕಾರ ಬೆವರು ಸುರಿಯುತ್ತಿತ್ತು. ಮೊದಲೇ ಕರ್ರಗೆ ಕಬ್ಬಿಣದಂತಿದ್ದ ಮೈ, ಬೆವರಿನಿಂದ ಇನ್ನಷ್ಟು ಹೊಳೆಯತೊಡಗಿತ್ತು. ಆ ಮೈಕಟ್ಟಿಗೆ ಅರವತ್ತು ವರ್ಷ ಬಹಳವಾಯ್ತು. ಎದೆ, ರಟ್ಟೆಯ ಮಾಂಸಖಂಡ ಗಟ್ಟಿಗೊಂಡು ಹುರಿಯಾಗಿದ್ದವು. ಹಿಂದೆ ಮಾರುದ್ದ ಜಡೆ, ಮುಂದೆ ಗಡ್ಡ, ಹೆಂಗಸಲ್ಲದ ಗಂಡಸಲ್ಲದ ಆ ಆಕೃತಿ ವಿಶೇಷ ನೋಡಿ ಬಸವರಾಜನಿಗೆ ಮೋಜೆನಿಸಿತು. ಸುಂದರಿಗೂ ಮುಂದೆ ಬಂದು ದೇವರೇಸಿಯಿಂದ ನೋಡಿಸಿಕೊಳ್ಳಬೇಕೆಂದಳು. ತಾನು ಹೇಳದ ಹೊರತು ಹೊರಗೆ ಬರಕೂಡದೆಂದು ಬಸವರಾಜು ಹೇಳಿದ್ದ, ಸುಮ್ಮನಿದ್ದಳು. ಬಹುಶಃ ಖಾರ ಜಾಸ್ತಿಯಾಗಿರಬೇಕು ಪಲ್ಯಕ್ಕೆ. ದೇವರೇಸಿಯ ಮೂಗು ಸೋರಿ ಕಣ್ಣೀರೂ ಅದರೊಂದಿಗೆ ಬೆರೆತು, ಬೆವರುಗೈಯಿಂದಲೇ ಅದನ್ನೆಲ್ಲ ಒರೆಸಿಕೊಳ್ಳುತ್ತ ಉಂಡ. ಉಂಡಮೇಲೆ ಗುಡಿಸಲು ನಡುಗಿ, ಪಕ್ಕದ ಗುಡಿಸಲು ಮಕ್ಕಳು ಹೆದರಿ ಚೀರುವ ಹಾಗೆ ಡರ್ರ್ರ್ ಎಂದು ಢರಿಕೆ ತೇಗಿದ, ಸುಂದರಿಗೆ ಅಸಹ್ಯವಾಯ್ತು. +ಊಟವಾದ ಮೇಲೆ ಬಸವರಾಜು ಮತ್ತು ಸುಂದರಿ ಇಬ್ಬರೂ ಒಳಗೊಳಗೇ ನಗುತ್ತ ತಾಯಿಗೆ ಅಡ್ಡಬಿದ್ದರು. ತಾಯಿ ಅವರ ಹಣೆಗೆ ಬಂಡಾರ ಹಚ್ಚಲಿಲ್ಲ. ಹರಕೆ ನುಡಿಯಲಿಲ್ಲ. ತೇಲುಗಣ್ಣು ಮಾಡಿಕೊಂಡು ‘ತಾಯಿ’ ಎನ್ನುತ್ತ ಎದ್ದಳು. ತೂಕ ತಪ್ಪಿತು. ಬಸವರಾಜು ಹೋಗಿ ಹಿಡಿದುಕೊಂಡು ಅವಳ ಗುಡಿಸಲು ತನಕ ಹೋಗಿ ಬಿಟ್ಟುಬಂದ. +ಆ ದಿನ ರಾತ್ರಿ ದೇವರೇಸಿಗೆ ಯಾರೋ ನೆತ್ತಿಯ ಮೇಲೆ ಕೊಡ್ಲಿಯಿಂದ ಏಟು ಹಾಕಿದಂತೆ ಕನಸಾಯಿತು. ಗಡಬಡಿಸಿ ಎದ್ದುಕೂತ. ಬಿಕ್ಕಲಾಗಲಿಲ್ಲ. ಕನಸಿನ ಅರ್ಥವೂ ತಿಳಿಯಲಿಲ್ಲ. ಆದರೆ ಮಾರನೇ ದಿನದಿಂದ ತಾಯಿಯ ಕೃಪಾದೃಷ್ಟಿ ಬಸವರಾಜೂನ ಗುಡಿಸಲ ಕಡೆಗೆ ಬೀಳತೊಡಗಿತು. ಬಸವರಾಜು ನಿರಸೆಗೊಳಿಸಲಿಲ್ಲ. +ಊರು ಬೀದಿಗಿಳಿಯಿತು +‘ರಂಡಿ ಹುಣ್ಣಿವೆ’ಯಿನ್ನೂ ನಾಕು ದಿನ ಇತ್ತು. ಅಂದು ಮಧ್ಯಾಹ್ನ ಬೇಸಿಗೆಯಂಥ ಬಿಸಿಲು ಬಿದ್ದು ದನಕರು ಕೆರೆಯಲ್ಲಿ ಬಿದ್ದು ತಂಪಿನ ಅಮಲಿನಲ್ಲಿದ್ದವು. ಹೊಲಗಳಲ್ಲಿದ್ದವರು ಒಣ ಕನಿಕೆಯ ಗೂಡು, ಮರ, ಮರೆಯ ನೆರಳುಗಳಲ್ಲಿ ಆಶ್ರಯ ಪಡೆದಿದ್ದರು. ಭೂಮಿ ಸೀಮೆಯ ಸುತ್ತಮುತ್ತ ಎತ್ತ ನೋಡಿದರೂ ಬಿಸಿಲುಗುದುರೆಗಳ ಓಟ ಕಾಣಿಸುತ್ತಿತ್ತು. ಊರಿನಲ್ಲಿ ಜನ ಕಟ್ಟೆಗಳ ಮೇಲೆ, ಪಡಸಾಲೆಯಲ್ಲಿ ತಂಪಾಗಿ ಕೂತಿದ್ದರು. ಉರಿ ಬಿಸಿಲಿನ ಪ್ರತಾಪ ಎಷ್ಟು ತೀವ್ರವಾಗಿತ್ತೆಂದರೆ ಮಾತಾಡುವುದಕ್ಕೆ ಕೂಡ ಮನಸ್ಸಾಗುತ್ತಿರಲಿಲ್ಲ. ಹೀಗಾಗಿ ಹಗಲಾದರೂ ರಾತ್ರಿಯಷ್ಟೇ ಊರು ನಿಶ್ಯಬ್ದವಾಗಿತ್ತು. +ಅಷ್ಟರಲ್ಲಿ ಊರವರು ಹಿಂದೆಂದೂ ಕೇಳರಿಯದ, ಊಹಿಸಬರದ, ಕಲ್ಪಿಸಬರದ ವಿಕಾರ ಸ್ವರ ಕಿವಿಯಲ್ಲಿ ಗೂಟ ಜಡಿದಂತೆ, ಇಡೀ ಊರು ಸಿಡಿದು ಸ್ಪೋಟಗೊಂಡಂತೆ, ಗುಡ್ಡ ಉರುಳಿ ಮೈ ಮೇಲೆ ಬಿದ್ದಂತೆ ಕೇಳಿಸಿ ಊರಿಗೂರೇ ಕೆಲವು ಕ್ಷಣ ದಿಗ್ಭ್ರಮೆಗೊಂಡಿತು. ಮಲಗಿದ್ದವರು ದುಃಸ್ವಪ್ನ ಕಂಡಂತೆ ಚಕ್ಕನೆ ಎದ್ದು ಕೂತರು. ಕೆರೆಯಲ್ಲಿದ್ದ ದನಗಳು ಬೆದರಿ, ಹೊರಗೋಡಿದವು. ಅನೇಕರ ಸೀರೆ ಧೋತ್ರಗಳು ಒದ್ದೆಯಾದವು. ಮಕ್ಕಳು ಕಿಟಾರನೆ ಕಿರುಚಿದವು. ಲಗಮವ್ವ ಹೇಳಿದ್ದು ನಿಜವೇ ಎನ್ನುವುದಾದರೆ, ಕರಿಮಾಯಿಯ ಮೂರ್ತಿ ಈ ದನಿ ಕೇಳಿ ಗಕ್ಕನೆ ಹಾರಿ, ಕುಪ್ಪಳಿಸಿ, ಮುರಿದ ಕೈ ಜಾರಿ ಕೆಳಗೆ ಬಿತ್ತಂತೆ! ಲಗಮವ್ವ ಅದನ್ನು ಮತ್ತೆ ಅವಳ ಕೈಯಲ್ಲಿಟ್ಟು ನೋಡಿದಾಗ ಮೂರ್ತಿ ಸಣ್ಣದಾಗಿ ಬೆವರಿತ್ತಂತೆ! ಕೆರೆಯ ಸುತ್ತಲಿನ ಗಿಡಮರಗಳಲ್ಲಿ ಕೂತ ಹಕ್ಕಿ ಪಕ್ಕಿಗಳು ಏನೋ ಆಘಾತವಾದಂತೆ ಕಿರ್ರ್ ಎಂದು ಕಿರುಚು‌ಉ‌ಅ ಹಾರಾಡತೊಡಗಿದವು! ಏನೇನೂ ಅತಿಶಯೋಕ್ತಿಯಿಲ್ಲದೆ ವರ್ಣಿಸಬೇಕೆಂದರೆ ಮನೆಗಳಲ್ಲಿ ಒಬ್ಬರೂ ಉಳಿಯದೆ ಊರಿಗೆ ಊರೇ ಹೊಟ್ಟೆ ತೊಳಸಿ ವಾಂತಿ ಮಾಡಿಕೊಂಡಂತೆ ಎಲ್ಲ ಜನ ಹಿರಿಕಿರಿಯರೆನ್ನದೆ, ಗಂಡು ಹೆಣ್ಣೆನ್ನದೆ ಬೀದಿಗೆ ಬಂದರು! ಮೊದಮೊದಲು ಅದರ ದನಿ ಮಾತ್ರ ಕೇಳಿಸಿ, ಅನಂತರ “ನಿಮ್ಮ ಹೋಟು ಯಾರಿಗೆ? ಗುಡಸೀಕರ ಸಾಹೇಬರಿಗೆ” ಎಂಬ ಶಬ್ದಗಳು ಕೇಳಿದ್ದರಿಂದ ಸ್ವಲ್ಪ ನೆಮ್ಮದಿಗೊಂಡು ದನಿಬಂದ ಕಡೆಗೆ ಕೂತ ನಿಂತವರೆಲ್ಲ ನುಗ್ಗಿದರು. ಗುಡಸೀಕರ ಮೈಕ್ ತರಿಸಿ ಮಟ ಮಟಾ ಮಧ್ಯಾಹ್ನದ ಹೊತ್ತಿನಲ್ಲಿ ಮಾರಾಯ, ಕರಿಮಾಯಿ ಅವನ ಹೊಟ್ಟಿ ತಣ್ಣಗಿಡಲಿ, ಚುನಾವಣೆಯ ಪ್ರಚಾರ ಒದರಿಸುತ್ತಿದ್ದ. +ಆ ದಿನ ಯಾರ ಬಾಯೊಳಗೆಲ್ಲ ಅದೇ ಮಾತು. ಉದ್ರೇಕಕರ ಕತೆಗಳಿಂದ, ಸುದ್ದಿಗಳಿಂದ, ಸಪ್ಪಳದಿಂದ, ಉರಿ ಬಿಸಿಲಿನಿಂದ ಊರು ದುಮುಗುಟ್ಟಿತು. ದುರ್ದೈವವೆಂದರೆ ಒಬ್ಬರ ಮಾತು ಒಬ್ಬರಿಗೆ ಕೇಳಿಸುತ್ತಿರಲಿಲ್ಲ. ಕಿರಿಚಿ, ಅಭಿನಯಿಸಿ, ಗಂಡಸರು ಗುಂಪುಗೂಡಿ, ಹೆಂಗಸರು ಹೊರಗಡೆ ಹೋದಲ್ಲಿ ಮಾತಾಡಿಕೊಂಡರು. ಹಿರಿಯರು ಕೂಡ ಹೆಂಗಸರಂತೆ ಆಡಿಕೊಂಡರು. ಮೈಕ್ ಶಬ್ಧವನ್ನು ಒಂಯ್ಕ್ ಒಂಯ್ಕ್ ಎಂದು ಅಣಕಿಸಿದರು. ಇದಕ್ಕೆಲ್ಲ ಎಷ್ಟು ಖರ್ಚು ಬಂದಿರಬಹುದೆಂದು ಅಂದಾಜು ಹಾಕಿದರು. ಅವರಪ್ಪ ಮಂದಿಯ ಗೋಣು ಮುರಿದು ಕೂಡಿಸಿದ್ದನ್ನೆಲ್ಲ ಮಗ ಕಕ್ಕಲೆಂದರು. ಎಲ್ಲರೂ ಆ ದಿನ ತಡವಾಗಿ ಮಲಗಿದರು. +ಹಳೆಯ ಪಂಚರೀಗ ಚಿಂತೆ ಮಾಡಲೇಬೇಕಾಯಿತು. ಈ ತನಕ ಅವರಿಗೆ ತಮ್ಮ ಗೆಲುವಿನಲ್ಲಿ ಭರವಸೆಯೇನೋ ಇತ್ತು. ಆದರೆ ಎದುರಿನವರ ಪ್ರಚಾರ ತಂತ್ರಕ್ಕೆ ತಲೆಬಾಗದೆ ವಿಧಿಯಿರಲಿಲ್ಲ. ಹೆಂಗಸರಲ್ಲಿ ಬಾಡಿ ಹಂಚಿ ಆಣೆ ಮಾಡಿಸಿದ ಸುದ್ದಿ ಕಿವಿಗೆ ತಲುಪಿತ್ತು. ಹುಣ್ಣಿಮೆಯ ಮಾರನೇ ದಿನ ಚುನಾವಣೆಯಿದ್ದುದೊಂದೇ ಅವರಿಗಿದ್ದ ಧೈರ್ಯ. ಆ ದಿನ ಹೆಂಗೂ ಬಂಗಾರದ ಮೂರ್ತಿ ಏಳುತ್ತದೆ. ದೇವರ ಕಾರಣಿಕವಾಗುತ್ತದೆ. ಕರಿಮಾಯಿ ಊರಿಗೊಂದು ಆಜ್ಞೆ ಕೊಟ್ಟೇ ಕೊಡುತ್ತಾಳೆ. ಅಂದರೆ ಅದು ತಮ್ಮ ಪರವಾಗೇ ಇರುತ್ತದೆಂದು ಇವರ ನಂಬಿಕೆ. ಹಾಗೆಂದು ಸುಮ್ಮನೆ ಕೂರುವುದ್ಯಾಕೆಂದು ಭೇಟಿಯಾದವರಿಗೆ ತಮ್ಮ ‘ಮರದ ಗುರುತಿಗೆ ಹೋಟ ಹಾಕ್ರೆಪಾ’ ಎಂದು ಅವರೂ ಹೇಳತೊಡಗಿದರು. +ಇತ್ತ ಗುಡಸೀಕರನಿಗೆ ಹುಣ್ಣಿಮೆಯ ಭಯ ಇರಲಿಲ್ಲವೆಂದಲ್ಲ. ಯಾಕೆಂದರೆ ನಿಂತ ಐವರಲ್ಲಿ ದೇವರೇಸಿಯೂ ಒಬ್ಬ. ಆದರೆ ಆ ಕಾಳಜಿ ನಿಮ್ಮದಲ್ಲ, ನನ್ನದೆಂದು ಬಸವರಾಜು ಹೇಳಿದ್ದರಿಂದ ಹ್ಯಾಗೋ ಸಮಾಧಾನ ಮಾಡಿಕೊಂಡಿದ್ದ. ಅದೇನೆಂದು ಬಸವರಾಜು ಹೇಳಿರಲಿಲ್ಲ. +ದೀಪವಾರಿತು +ಮಾರನೇ ದಿನ ಮಂಗಳವಾರ ಮುಂಜಾನೆ ದೇವರೇಸಿ ಗುಡಿಗೆ ಹೋಗಿ ಪೂಜೆ ಮಾಡುತ್ತಿದ್ದ. ದೇವಿಯ ಮೈಮೇಲಿನ ಆಭರಣ ಕಳಚಿ ಮಜ್ಜನ ಮಾಡಿಸಿದ, ಮಡಿಯುಡಿಸಿದ, ಮತ್ತೆ ತೊಡಿಸಬೇಕೆಂದು ನೋಡಿದರೆ ಆಭರಣಗಳೇ ಇರಲಿಲ್ಲ. ಅಲ್ಲಲ್ಲಿ ಹುಡುಕಾಡಿದ. ಮೊದಲು ಇದ್ದುವೆ? ಇಲ್ಲವೆ? ಎಂದು ನೆನಪು ಮಾಡಿಕೊಂಡ. ಇದ್ದವು ಮಾತ್ರವಲ್ಲ, ಅವನ್ನು ಕಳಚಿಟ್ಟ ಸ್ಥಳವೂ ನೆನಪಿತ್ತು. ಆದರೆ ಆ ಸ್ಥಳದಲ್ಲಿ ಅವಿರಲಿಲ್ಲ. ಗುಡಿಯಲ್ಲಿ ತನ್ನ ಬಿಟ್ಟು ಯಾರೂ ಇರಲಿಲ್ಲ. ದೇವಿಯ ಮಾಯೆಯೇ? ಎಂದೊಂದು ಕ್ಷಣ ಅಧೀರನಾದ. ಇರಲಾರದೆಂದು ಉಡಿಸಿದ ಸೀರೆಬಿಚ್ಚಿ ಜಾಡಿಸಿ ಹುಡುಕಿದ. ಸಿಕ್ಕಲಿಲ್ಲ. ಮತ್ತೆ ಉಡಿಸಿ ಮೂರ್ತಿಯ ಹಿಂದೆ ಮುಂದೆ ಹುಡುಕಿದ. ಧೋತ್ರದಲ್ಲಿರಬಹುದೇ ಎಂದು ಜಾಡಿಸಿಕೊಂಡ. ಯಾಕೆಂದರೆ ದೇವಿಯ ಸುತ್ತ ಕೆಲವು ಕಿಲಾಡಿ ಭೂತಗಳಿರುತ್ತವಲ್ಲ, ಅವು ಒಮ್ಮೊಮ್ಮೆ ಏನೇನೋ ಮಾಡಬಹುದು. ತನ್ನ ಧೋತರ ಕಚ್ಚೆ ಬಿಚ್ಚಿ ಹುಡುಕುತ್ತಿರುವಾಗ ಯಾರೋ ಕುಲುಕುಲು ನಕ್ಕಂತಾಯಿತು. ತಿರುಗಿ ನೋಡಿದರೆ ಸುಂದರಿ! ಭೂತವೇ ಇವಳ ರೂಪದಲ್ಲಿ ಬಂದಿದೆಯೋ ಎಂದುಕೊಂಡು ಕೂಡಲೇ ತಾಯಿಯ ಚೌರಿ ಹಿಡಿದ. ಈ ಭೂತ ಮಾಯವಾಗಲಿಲ್ಲ. ಇನ್ನೂ ನಗುತ್ತಿದ್ದಳು. ಸದ್ಯ ಅವಳೇ ಬಾಯಿ ಬಿಟ್ಟು ಮಾತಾಡಿದಳು. “ನನಗ ಈ ಸರ ಹೆಂಗ ಕಾಣತೈತಿ?” ನೋಡಿದರೆ ದೇವಿಯ ಕತ್ತಿನಲ್ಲಿದ್ದ ದಪ್ಪ ಕವಡೆಯ ಸರ ಚಿಮಣಾಳ ಕತ್ತಿನಲ್ಲಿತ್ತು! ಆ ಸರದಲ್ಲಿ ಎಣಿಸಿದರೆ ಹೆಬ್ಬೆರಳು ಗಾತ್ರದ ಇಪ್ಪತ್ತೊಂದು ಕವಡೆಗಳಿದ್ದವು. ಅದು ಅಲಂಕಾರಕ್ಕಾಗಿ ಹಾಕಿದ ಸರವಲ್ಲ. ದೇವಿ ಇಷ್ಟಪಟ್ಟಿದ್ದರೆ ಅಂಥ ಬಂಗಾರದ ಸರವನ್ನೇ ಊರಿನ ಜನ ಹಾಕಬಹುದಿತ್ತು. ಅವಳ ತೂಕದ ಬಂಗಾರದ ಮುಖ ಮಾಡಿಸಿಕೊಟ್ಟವರಿಗೆ ಒಂದು ಸರ ಮಾಡಿಸುವುದೇನು ದೊಡ್ಡದಲ್ಲ. ತಾಯಿ ದೇವತೆಗಳಿಗೆ ಹೆದರಿ ತನ್ನ ಇಪ್ಪತ್ತೊಂದು ಮಕ್ಕಳನ್ನು ಸಂಜೆಯವರೆಗೆ ಆಡಬಿಟ್ಟು ಸೂರ್ಯಾಸ್ತಮವಾದೊಡನೆ ಅವರನ್ನು ಕವಡೆಗಳಾಗಿ ಮಾರ್ಪಡಿಸಿ ಸರ ಮಾಡಿ ಕೊರಳಲ್ಲಿ ಧರಿಸುತ್ತಿದ್ದಳು! ಆ ಕವಡೆಗಳ ಸರವಿದು! ಪೂಜೆ ಮಾಡುವಾಗ ತಾಯಿಗೆ ಮಜ್ಜನ ಮಾಡಿಸಿದಂತೆ ಈ ಕವಡೆ ಸರವನ್ನೂ ಒಂದು ಸಲ ನೀರಿನಲ್ಲದ್ದಿ ಮತ್ತೆ ತೊಡಿಸುವ ಕ್ರಮವಿದೆ. +ಸುಂದರಿಗೆ ಇದೆಲ್ಲ ಯಾವ ಲೆಕ್ಕ? ದೇವರೇಸಿ ಗಡಬಡಿಸಿ ದೇವಿಯ ಹಿಂದೋಡಿ ಒದ್ದೆ ಧೋತ್ರ ಸುತ್ತಿಕೊಳ್ಳುತ್ತಿದ್ದ. ಅಷ್ಟರಲ್ಲಿ ದೂರದಿಂದ ದತ್ತಪ್ಪ ಬರುತ್ತಿರುವುದು ಕಾಣಿಸಿತು. ದೇವರೇಸಿಗೆ ಏನು ಮಾಡಬೇಕೆಂದು ತೋಚದಾಯಿತು. ದತ್ತಪ್ಪನದು ಮೊದಲೇ ತೀಕ್ಷ್ಣಬುದ್ಧಿ. ದೇವಿಗೆ ನಮಸ್ಕರಿಸುವಾಗ ಕತ್ತಿನಲ್ಲಿ ಸರ ಇಲ್ಲದ್ದು ಕಂಡರೆ, ಕಂಡು ಸರ ಎಲ್ಲಿ ಎಂದು ಕೇಳಿದರೆ, ಏನು ಹೇಳುವುದು? ಹೊರಗೆ ಗುಡಿಯನ್ನು ಬಲಗೊಳ್ಳುತಿದ್ದ ದತ್ತಪ್ಪನಿಗೆ ಕಾಣದಂತೆ ಅವಳ ಹತ್ತಿರ ಹೋಗಿ ಸರ ಕೊಡುವಂತೆ ಕೈಸನ್ನೆಯಿಂದಲೇ ಕೇಳಿದ. ಇವಳೂ ಕೈಸನ್ನೆಯಿಂದಲೇ ಕೊಡುವುದಿಲ್ಲವೆಂದು ಹೇಳುವಷ್ಟರಲ್ಲಿ ದತ್ತಪ್ಪ ಒಳ ಬಂದ. ದೇವರೇಸಿ ಹಾಗೇ ಅವಳ ಬಾಯಿಮುಚ್ಚಿ ಕುರಿಮರಿಯಂತೆ ಅವಳನ್ನು ಹಿಡಿದುಕೊಂಡು, ದೇವಿಯ ಮರದ ಮೂರ್ತಿಯ ಕೆಳಗಡೆ ಡೊಗ್ಗಿ ಅಡಗಿದ. ದತ್ತಪ್ಪನಿಗೆ ಇದ್ಯಾವುದೂ ತಿಳಿಯಲಿಲ್ಲ. ತಾನು ತಂದ ಹೂಗಳನ್ನು ದೇವಿಯ ಮೇಲೆ ಚೆಲ್ಲಿ ಅಡ್ಡಬಿದ್ದು ಹೊರಟುಹೋದ. +ಅವ ದೂರ ಹೋದ ಎಂದು ಖಾತ್ರಿಯಾದ ಮೇಲೆ ದೇವರೇಸಿ ಎದ್ದು “ಛೇ, ಎಷ್ಟ ಹೆದರ್‍ಸಿದಿ. ಕೊಡ ಕೊಡ ಸರ ಕೊಡು” ಅಂದ. ಇಂಥ ಚೇಷ್ಟೆಯನ್ನು ದೇವರೇಸಿಯೇನು, ಆ ಊರಿನ ಯಾರೂ ಸಹಿಸುವುದು ಸಾಧ್ಯವಿಲ್ಲ. ದೇವರೇಸಿಗೆ ಸಿಟ್ಟು ಬಂತು. “ಕೊಡ್ತೀಯೋ,…..” ಎಂದು ಅನ್ನುವಷ್ಟರಲ್ಲಿ ಯಾವುದೋ ಮಾಯೆಯಿಂದ ಬಸವರಾಜು ಹಾಜರಾದ. ಸುಂದರಿ ಮುಸಿ ಮುಸಿ ನಗುತ್ತ “ಕೊಡೋದಿಲ್ಲ” ಎಂದು ಹೇಳಿ ಇವನ ಹಿಂದಿನ ಜಡೆ ಎತ್ತಿ ಬೆನ್ನಿಗೆ ಅಪ್ಪಳಿಸಿ ಓಡಿ ಹೋದಳು. ಬಸವರಾಜು ಬಂದ ಹಾಗೇ ಮಾಯವಾದ. +ದೇವರೇಸಿಗೆ ಆಕಾಶವೇ ಕಳಚಿ ತಲೆಮೇಲೆ ಬಿದ್ದಹಾಗಾಯಿತು. ಇದೇನಿದು? ಬೆಂಕಿ ಕೆಂಡದಂಥ ದೇವಿಯ ಜೊತೆಗೆ ಚೇಷ್ಟೆಯೆ? ಓಡಿ ಬೆನ್ನು ಹತ್ತಿ ಹೋಗಿ ಸರ ಕಸಿದು ತರುವುದು ತರವಲ್ಲ ಎಂದುಕೊಂಡ. ಗಡಿಬಿಡಿಯಿಂದ ಪೂಜೆ ಮಾಡಿದ. ಕತ್ತು ಕಾಣದ ಹಾಗೆ ತಾಯಿಗೆ ಸೀರೆ ಸುತ್ತಿದ. ಎವ್ವಾ ಎಂದು ಅಡ್ದಬಿದ್ದ. ಕಣ್ಣಲ್ಲಿ ದಳ ದಳ ಕಣ್ಣೀರು ಹರಿಯಿತು. ತಪ್ಪಾಯಿತೆಂದು ಗಲ್ಲ ಬಡಿದುಕೊಂಡ. ಕಿವಿಗೆ ಹರಳು ಹಚ್ಚಿಕೊಂಡ. ಸರ ಸಿಕ್ಕ ಮೇಲೆ ಇವರ ಮುಖ ನೋಡುವುದಿಲ್ಲವೆಂದು ಆಣೆ ಪ್ರಮಾಣ ಮಾಡಿಕೊಂಡ. ಮತ್ತೆ ಮತ್ತೆ ಅಡ್ಡಬಿದ್ದ. ಅವನ ಉಸಿರಿಗೋ, ಗಾಳಿಗೋ ಹಚ್ಚಿಟ್ಟ ದೀಪ ಆರಿತು. ಜೀವ ಗಕ್ಕನೆ ಬಂದು ಗಂಟಲಿಗೆ ಹಾದಂತಾಗಿ “ಅಯ್ಯೋ, ಎವ್ವಾ” ಎಂದು ಕುಕ್ಕರಿಸಿದ. ಬಾಯಿ ಒಣಗಿತು. ಕೈಕಾಲಲ್ಲಿಯ ಶಕ್ತಿ ಉಡುಗಿ ಹೋಯ್ತು. ತಡವರಿಸಿಕೊಂಡು ಎದ್ದು ಮತ್ತೆ ದೀಪಹಚ್ಚಿ ತನ್ನ ಗುಡಿಸಲಿಗೆ ನಡೆದ. +ಕಂಬಳಿ ಹಾಸಿದವನೇ ದೊಪ್ಪನೇ ಬಿದ್ದ. ಎವ್ವಾ ಎನ್ನುತ್ತಾ ಹೊರಳಾಡಿ ಮುಳುಮುಳು ಅತ್ತ. ನಾಕು ತಾಸು ಹೊತ್ತೇರಿ ಜ್ವರ ಬಂದು, ಕರಿಮೈ ಕಾದ ಹಂಚಿನಂತೆ ಸುಡುತ್ತಿತ್ತು. ಅತ್ತು ಅತ್ತು ಕಣ್ಣು ಕೆಂಪಗೆ ಕಾದಿದ್ದವು. ಅಂಥ ಜ್ವರದಲ್ಲಿ ಎದ್ದು ಬಸವರಾಜೂನ ಗುಡಿಸಲಿಗೆ ಹೋಗಿ ಬಂದ. ಬಸವರಾಜೂ ಇದ್ದ. ಸುಂದರಿ ಇಲ್ಲವೆಂದು ಗುಡಸೀಕರನ ಹೊಲಕ್ಕೆ ಹೋಗಿರುವಳೆಂದೂ, ರಾತ್ರಿ ಬರುವಳೆಂದೂ, ಹೇಳಿದ. ಹೊಲಕ್ಕೆ ಹೋಗಿ ಕೇಳುವಂತಿರಲಿಲ್ಲ. ಜನಕ್ಕೆ ಗೊತ್ತಾದರೆ ಕಷ್ಟ. ಈ ಮಧ್ಯೆ ಯಾರು ಯಾವಾಗ ಗುಡಿಯ ಕಡೆ ಹೋಗಿ ತಾಯಿಯ ಕತ್ತಿನಲ್ಲಿ ಸರ ಇಲ್ಲದ್ದನ್ನು ಪತ್ತೆ ಹಚ್ಚುತ್ತಾರೋ ಎಂಬ ಭಯ. ಜ್ವರದಿಂದ ತಲೆ ಸಿಡಿಯತೊಡಗಿತ್ತು. ದೇವಿಯ ಮುಂದೆ ದೀಪವಾರಿತ್ತು. ತಾನಿಂದು ಸಾಯುವುದೇ ಖಾತ್ರಿ ಎಂದುಕೊಂಡ. ಒಳ್ಳೆಯದೇ, ಹಾಗಾದರೆ ತನ್ನ ಮೇಲೆ ಹರಲಿ ಬರುವುದಿಲ್ಲ. ಅನ್ಯಾಯವಾಯಿತೇನೋ. ಹಿಡಿದು ಸುಂದರಿಯ ಕೆನ್ನೆಗೆರಡು ಬಿಟ್ಟು ಸರ ಕಸಿಯಬೇಕಾಗಿತ್ತು. ಅವರಲ್ಲಿ ಹೆಂಡ ಖಂಡ ತಿಂದದ್ದು ಹೇಲುಹುಚ್ಚೆ ತಿಂದಂತಾಯಿತೆಂದು ಪಶ್ಚಾತ್ತಾಪಪಟ್ಟ. ಈಗ ಬಂದಿದ್ದಾಳೆಂದು ಮಧ್ಯಾಹ್ನ ಇನ್ನೊಮ್ಮೆ ಅವರ ಗುಡಿಸಲಿಗೆ ಹೋದ. ಈಗಲೂ ಬಸವರಾಜ ಇಲ್ಲವೆಂದ. ದೇವರೇಸಿ ಹಾಹೂ ಎನ್ನದೆ ತಿರುಗಿದ. ಹತ್ತು ಹೆಜ್ಜೆ ನಡೆಯುವಷ್ಟರಲ್ಲಿ ತಲೆ ತಿರುಗಿದಂತಾಯಿತು. ಊಟವಿಲ್ಲ, ಬಿಸಿಲು, ಮಾನಸಿಕ ಯಾತನೆ ಬೇರೆ, ಬಂದವನೇ ತನ್ನ ಗುಡಿಸಲ ಮುಂದೆ ಕೂತುಕೊಂಡು ವಾಂತಿ ಮಾಡಿಕೊಂಡ. ಕೊನೆಯಲ್ಲಿ ಒಂದಿಷ್ಟು ರಕ್ತ ಬಿತ್ತು. ತಾಯಿ ರಕ್ತ ಕಾರಿಸುತ್ತಿದ್ದಾಳೆ ಎಂದುಕೊಂಡ. ಒಳಗೆ ಹೋಗಿ ತಾಯಿಗೆ ನಮಸ್ಕರಿಸುವಂತೆ ಬೆನ್ನು ಮೇಲಾಗಿ ಹಾಗೇ ಬಿದ್ದುಕೊಂಡ. +ರಂಡಿ ಹುಣ್ಣಿವೆ +ಆ ದಿನ ರಾತ್ರಿ ದೇವರೇಸಿ ಬಯಸಿದ ಸರವೇನೋ ಸಿಕ್ಕಿತು. ಆದರೆ ತಾಯಿಯಿಂದ ಭಿನ್ನನಾದ. +ದೇವರೇಸಿ ಬಂದು ಹೋದಾಗ ಸುಂದರಿ ಒಳಗಿದ್ದರೂ ಬಸವರಾಜು ಇಲ್ಲವೆಂದು ಹೇಳಿದ್ದ. ದೇವರೇಸಿಯ ಮುಖಚರ್‍ಯೆ ನೋಡಿ ತೊಡೆತಟ್ಟಿ ನಕ್ಕ. ರಾತ್ರಿ ಮಂದಿ ಉಂಡು ಮಲಗೋ ಹೊತ್ತು. ಬಸವರಾಜು ಮತ್ತು ಸುಂದರಿ ರೇಡಿಯೋ ಕೇಳುತ್ತ ಕಾಲಮೇಲೆ ಕಾಲ ಹಾಕಿಕೊಂಡು ಕೂತಿದ್ದರು. ನಿರೀಕ್ಷಿಸಿದಂತೆ ದೇವರೇಸಿ ಬಂದ. ಮುಖ ಹೀರಿ ಒಗೆದ ಸೊಟ್ಟಿಯಾಗಿತ್ತು. ಕಣ್ಣು ಕೆಂಪಗಾಗಿ ಹರಳಾಗಿದ್ದವು. ಅವ ಬಂದಾಗ ಇಬ್ಬರೂ ಏಳಲಿಲ್ಲ. ಕೂತುಕೊಂಡೇ ಬಸವರಾಜು ‘ಬಾರವಾ ತಾಯಿ’ ಅಂದ. ಸುಂದರಿ ಇವನ ಮಾತಿನ ಧಾಟಿಗೆ ಮಾತಿಗೊಮ್ಮೆಬದಲಾಗುವ ಕೈಮುದ್ರೆಗೆ ಮೋಜುಗೊಂಡಳು. ಏನೂ ಮಾತಾಡದೆ ಒಳಕ್ಕೆ ಹೋದಳು. ಬಸವರಾಜು ಕಾಲು ಬದಲಿಸಿ ‘ಅದೇನ ದೊಡ್ಡ ಕಿಮ್ಮತ್ತಿನ ಸರಾ? ಅದ್ಯಾಕಿಷ್ಟ ಕಳವಳಪಡ್ತಿ?’ ಎಂದ. ದೇವರೇಸಿಗೆ ಅಸಮಧಾನವಾಯ್ತು. +“ಏನಂಬೋ ಮಾತೋ ಹುಡುಗಾ? ಬೆಂಕಿ ಕೆಂಡದಂಥಾ ದೇವೀ ಜೋಡಿ ನಗಾಡತಾರೇನೊ ಹುಚ್ಚಾ?” +ಈ ತನಕ ಬಾತಿಗೆಬಾರದ ಸರವಾಗಿದ್ದ ಅದರ ಬೆಲೆ, ದೇವರೇಸಿಯ ದೈನಾಸ ನೋಡಿದ ಮೇಲೆ, ಬಸವರಾಜನಿಗೆ ತಿಳಿದುಬಿಟ್ಟಿತು. ‘ಕೊಡೋಣಂತ, ನಾವೆಲ್ಲಿ ಓಡಿಹೋಗ್ತೇವೇನು? ಏನೋ ಹುಡುಗಾಟದ ಹುಡುಗಿ, ತಂದಾಳ, ಕೊಡಸ್ತೀನಿ. ಕೂತುಕೊ ಬಾ’ ಎಂದ. ಅಷ್ಟರಲ್ಲಿ ಸುಂದರಿ ಹರಿವಾಣದ ತುಂಬ ಭಟ್ಟೀ ಸೆರೆತಂದು ಮುಂದಿಟ್ಟಳು. ಈಗ ಸರ ತಿರುಗಿ ಕೊಡಿಸುತ್ತಾನೆಂದು ಖಾತ್ರಿಯಾಗಿತ್ತು. ಕೂತ. ಬೆಳಗಿನಿಂದ ತುತ್ತು ಕೂಳಿಲ್ಲ, ಹನಿ ನೀರು ಮುಟ್ಟಿರಲಿಲ್ಲ. ಒಮ್ಮೆಲೆ ಹಸಿದ ಅರಿವಾಯ್ತು. ಕುಡಿದ. “ಇನ್ನ ಸರ ಕೊಡವಾ” ಅಂದ. ಇನ್ನೊಮ್ಮೆ ಹರಿವಾಣ ತುಂಬಿದಳು. ಅದನ್ನೂ ಕುಡಿದ. ಖಂಡಬಂತು, ತಿಂದ. ಸುಮ್ಮನೇ ಕೂತ. ಬಸವರಾಜು ಹೇಳಿದ-“ಬೆಂಕೀಕೆಂಡದಂಥಾ ದೇವೀ ಅಂತೀ; ಆ ಸರ ಇದ್ದಲ್ಲಿಂದ ಇಲ್ಲಿ ಬಂದ ಬೀಳೋ ಹಾಂಗ ಮಾಡು” ಅಂದ. ದೇವರೇಸಿ ಸುಮ್ಮನಾದ. “ತಾಯೀ ಸತ್ಯ ಅಷ್ಟಿದ್ದರ ನಾ ರಕ್ತ ಕಾರಿ ಸಾಯೋ ಹಂಗ ಮಾಡಲಿ” ಎಂದು ಸುಂದರಿಯೂ ಮಾತು ಸೇರಿಸಿದಳು, ಬಸವರಾಜನ ಮುಗುಳು ನಗೆಗೆ ತನ್ನ ಹೀಹೀ ನಗೆ ಸೇರಿಸುತ್ತ. ದೇವರೇಸಿ ಒಂದು ಸಲ ಢರ್ರನೆ ತೇಗಿ ಬಿಕ್ಕತೊಡಗಿದ. ಕೂಡಲೇ ಬಸವರಾಜು “ತಾಯಿ ಬಂದಾಳ ಪಾದಾ ಹಿಡಕೊ” ಎಂದು ಸುಂದರಿಗೆ ಹೇಳಿದ. ಸುಂದರಿ ಓಡಿಹೋಗಿ ಕಾಲು ಹಿಡಿದಳು. +ಪಾದಾ ಹಿಡಕೊಂಡವಳು ಹಾಗೇ ಕಾಲು ತಿಕ್ಕತೊಡಗಿದಳು. ದೇವರೇಸಿ ತೇಲು ಗಣ್ಣಾಗಿ ಹಾಗೇ ಹಿಂದೆ ಮುಂದೆ ತೂಗುತ್ತ, ಬಿಕ್ಕುತ್ತ ಕೂತ. ಇದು ದೇವೀ ಮೈಮೇಲೆ ಬಂದ ಗುರುತು. ಬಸವರಾಜು ಒಳಗೊಳಗೇ ನಗುತ್ತಿದ್ದವನು ಸುಂದರಿಗೆ ಕಣ್ಣು ಹೊಡೆದ. ಅವಳು ಕಾಲು ತಿಕ್ಕುತ್ತ, ತಿಕ್ಕುತ್ತ ಮೊಳಕಾಲು ದಾಟಿ ತೊಡೆ ತಿಕ್ಕತೊಡಗಿದಳು. ತಾಯಿಯ ಬಿಕ್ಕು ಗಕ್ಕನೆ ನಿಂತು, ಗಡಬಡಿಸಿ ತೊಡೆಯ ಮೇಲಿನ ಕೈ ನಿವಾರಿಸಿದ. ಸುಂದರಿ ಹೋ ಎಂದು ನಕ್ಕಳು. ಬಸವರಾಜು ಹುಸಿ ಸಿಟ್ಟಿನಿಂದ ‘ತಾಯೀ ತೊಡೆಯಲ್ಲಿ ಬೆಂಕಿಯಿದೆ. ಹಾಗೆಲ್ಲ ಆಟ ಆಡಬ್ಯಾಡ’ ಎಂದ. ಸುಂದರಿ ಇನ್ನೂ ನಕ್ಕಳು. ನಗು ತಡೆಯದೆ ಒಳಗೆ ಹೋದಳು. ಮತ್ತೆ ಹರಿವಾನ ತುಂಬಿದಳು. ದೇವರೇಸಿ ಕುಡಿಯದೆ “ತಾಯೀ ನನ್ನ ಕೊಂದ ಹಾಕತಾಳ ಸರಾ ಕೊಡ ಎವ್ವಾ” ಎಂದು ದೊಡ್ಡ ದನಿ ತೆಗೆದು ಅಳುತ್ತಾ ಸುಂದರಿಗೆ ಕೈ ಮುಗಿದ. ಬಸವರಾಜು ಗಾಬರಿಯಾಗಿ ತಕ್ಷಣ ಸರ ಕೊಡುವಂತೆ ಹೇಳಿ ಹೊರಗೆ ಬಂದ, ಯಾರಾದರೂ ಇಲ್ಲಿ ನಡೆಯುವುದನ್ನ ಗಮನಿಸುತ್ತಿದ್ದಾರೆಯೋ ಎಂದು ನೋಡುವುದಕ್ಕೆ. ಸಧ್ಯ ಯಾರಿರಲಿಲ್ಲ, ಅಲ್ಲೇ ನಿಂತ. +ಸುಂದರಿ ಸರ ತಂದು, ‘ತಗೋ’ ಎಂದಳು. ದೇವರೇಸಿ ಅಡರಾಸಿ ಅದಕ್ಕೆ ಕೈಹಾಕ ಹೋದಾಗ ನಗುತ್ತ ಹಿಂದೆ ಸರಿದಳು. ಬುಡಕಡಿದ ದೊಡ್ಡ ಮರ ಬಿದ್ದ ಹಾಗೆ ದೇವರೇಸಿ ಸಮತೋಲ ತಪ್ಪಿಬಿದ್ದ. ಮತ್ತೆ ತೋರಿಸಿದಳು. ಮತ್ತೆ ಎದ್ದು ಅಲ್ಲೀತನಕ ತೂರಾಡುತ್ತ ಹೋಗಿ ಕೈಹಾಕಿದ. ಮತ್ತೆಯೂ ಹಿಂದೆ ಸರಿದಳು. ಹೀಗೆ ನಾಲ್ಕೈದು ಸಲ ಮಾಡಿದಾಗ ಕೊನೆಗೆ ಅವಳನ್ನೇ ಗಟ್ಟಿಯಾಗಿ ಹಿಡಿದು ಕಸಿಯುತ್ತಿದ್ದ. ಬೆಳಗಿನಿಂದ ಹಸಿದು ನಿಶ್ಯಕ್ತಗೊಂಡಿದ್ದ. ರಕ್ತ ಕಾರಿಕೊಂಡಿದ್ದ. ಮೈಮೇಲೆ ಅಡರಿದ್ದ ಅವನನ್ನು ಜೋರಿನಿಂದ ಚಿಮಣಾ ದೂಕಿದಳು. ಅಲ್ಲೇ ಜೋಲಿ ತಪ್ಪಿ ಕುಸಿದ. ಕೈಕಾಲೂರಿ ಏಳಬೇಕೆಂದಾಗ ಚಿಮಣಾ ಓಡಿಹೋಗಿ ಅವನ ಡುಬ್ಬ ಹತ್ತಿ ಕುಕ್ಕರಿಸಿದಳು. ಏಳಲಾರದೆ ಬೀಳಲಾರದೆ ನೊಂದ ಪ್ರಾಣಿಯ ಹಾಗೆ ದೇವರೇಸಿ ಹೋರಾಡುತ್ತಿದ್ದ. ಹೇಳಿ ಕಳಿಸಿದ ಹಾಗೆ ಬಸವರಾಜು ಒಳಗೆ ಬಂದ. ಅದೇನು ಉಮೇದಿ ಉಕ್ಕಿತ್ತೋ ಸುಂದರಿ ಹೋ ಎಂದು ನಗುತ್ತ ಹುಲಿಯೇರಿದ ಕರಿಮಾಯಿಯ ಭಂಗಿಯಲ್ಲಿ ಕೂತು ಆಶೀರ್ವದಿಸಿದಳು. ಬಸವರಾಜನಿಗೆ ದಿಗಿಲಾಯಿತೇನೋ, ಗಂಭೀರವಾಗಿ ಕೈಮುಗಿದ! +ಅಂತೂ ಹುಣ್ಣೀಮೆಯೇನೋ ಬಂತು. ತಾಯಿ ರಂಡಿಯೂ ಆದಳು. +ತಾಯಿ ರಂಡಿ ಆದುದಕ್ಕೆ ಏನೋ ಚಂದ್ರ ಕ್ಷಯರೋಗಿಯಂತೆ ಬಿಳಿಚಿದ. +ಆ ದಿನ ಬೆಳಗಿನ ಬೆಳ್ಳಿಮೂಡುವ ಸಮಯದಲ್ಲಿ ಗೌಡನಿಗೆ, ಕರಿಮಾಯಿಯ ಗುಡಿಯ ನಡುಗಂಬ ನಡುಗಿ ಇಡೀ ಗುಡೀ ಕುಸಿದಂತೆ ಕನಸಾಯಿತು. ಫಕ್ಕನೆ ಎದ್ದು ಕೂತ. ಎದೆ ನಡುಗಿತು. ಕೂತು ಚಿಂತಿಸಲಾಗಲಿಲ್ಲ. ಅನಾಹುತ ತಪ್ಪಿಸುವುದು ಸಾಧ್ಯವೇ ಎಂದು ನೋಡಿದ. ಹಾದಿ ಕಾಣಲಿಲ್ಲ. ಕನಸನ್ನು ದತ್ತಪ್ಪನಿಗೆ ತಿಳಿಸಬೇಕೆಂದು ಆಗಲೇ ಜಳಕಕ್ಕೆ ಕೆರೆಯ ಕಡೆ ನಡೆದ. +ಊರಿಗಿನ್ನೂ ಬೆಳಗಾಗಿರಲಿಲ್ಲ. ಗುಡಿಗೆ ಹೋದ. ಒಳಗೆ ಕತ್ತಲೆಯಿತ್ತು. ತಾಯಿಯ ಮೂರ್ತಿ ಕಾಣಿಸುತ್ತಿರಲಿಲ್ಲ. ಹಾಗೇ ಪ್ರದಕ್ಷಿಣೆ ಹಾಕಿ ನಮಸ್ಕರಿಸಿ ಬಂದು ಹೊರಗೆ ಪೌಳಿಯ ದೀಪಗಂಬದ ಕಟ್ಟೆಯ ಮೇಲೆ ಕೂತ. ಶೀಗೆ ಹುಣ್ಣಿಮೆಯಲ್ಲಿ ತಾಯಿಯ ಕೈ ಮುರಿದವರ ಪತ್ತೆಯಾಗಿರಲಿಲ್ಲ. ಗುಡಿಕಟ್ಟಿಸಿದ ತನ್ನ ಹಿರಿಯರ ನೆನಪಾಯಿತು. ತಾಯಿ ಸೇಡು ತೀರಿಸಿಕೊಳ್ಳುತ್ತಿದ್ದಾಳೆನ್ನಿಸಿ ಭಯವಾಯ್ತು. ಮತ್ತೆ ಮಗನ ನೆನಪಾಗಿ ಕಂಠ ತುಬಿ ಬಂತು. ಎಷ್ಟು ಹೊತ್ತು ಕೂತಿದ್ದನೋ, ಮೈಯೆಚ್ಚರ ಬಂದಾಗ ಬೆಳ್ಳಂಬೆಳಕಾಗಿತ್ತು. ಮತ್ತೊಮ್ಮೆ ಪ್ರದಕ್ಷಿಣೆ ಹಾಕಿದ. ಕಣ್ಣುತುಂಬ ತಾಯಿಯ ಮೂರ್‍ತಿ ನೋಡಿದ. ‘ಹಡದವ್ವಾ ನನ್ನ ಮನೀ ದೀಪಾ ಉಳಸು’ ಎಂದು ಅಡ್ಡಬಿದ್ದ. ಶೀಗೇ ಹುಣ್ಣಿಮೆಯಲ್ಲಿ ಮುರಿದ ಕೈಯನ್ನು ಹಾಗೇ ಕಟ್ಟಿದ್ದರಲ್ಲ, ಅದು ಕೆಳಗೆ ಬಿದ್ದಿತ್ತು. “ಕತ್ತಿ ಚೆಲ್ಲೋದ ನಿನ್ನ ಪದವಿ ಅಲ್ಲ ತಾಯಿ, ಮತ್ತ ಹಿಡಿದ ಊರ ಜೀಂವಾ ಕಾಯಿ” ಎಂದು ಮತ್ತೆ ಮೊದಲಿನಂತೆ ಕಟ್ಟಿದ. ಆ ಕನಸು. ಈ ಅಪಶಕುನ ಒಟ್ಟಾರೆ ಅಮಂಗಳವೆನ್ನಿಸಿ ದತ್ತೂನ ಮನೆ ಕಡೆ ಹೆಜ್ಜೆ ಹಾಕಿದ. +ಅಲ್ಲಿ ದತ್ತಪ್ಪ ಸ್ನಾನ ಕೂಡ ಮಾದದೆ ತಲೆಮೇಲೆ ಕೈಹೊತ್ತು ಚಿಂತಾಮಣಿ ನೋಡುತ್ತ ಕೂತಿದ್ದ. ಇವ ತನ್ನ ಕನಸು ಹೇಳಬೇಕೆಂದು ಬಾಯಿ ತೆರೆಯುವುದರೊಳಗೆ ದತ್ತಪ್ಪ +“ಗೌಡಾ, ರಾತ್ರಿ ಕನಸಿನಾಗ ನನ್ನ ಚಿಂತಾಮಣಿ ಕಳಧಾಂಗಿತ್ತೊ!’ ಅಂದ. ಗೌಡ ಮಾತಾಡಲೇ ಇಲ್ಲ. +ಬಹುಶಃ ಇವರಿಬ್ಬರ ಕನಸು ಕೇಳಿದಮೇಲೆ ಹೇಳಿದಳೋ, ಅಥವಾ ನೆನೆಸಿಕೊಂಡಳೋ ಯಾಕೆಂದರೆ ಲಗಮವ್ವ ಕವಿಯತ್ರಿಯಾದ್ದರಿಂದ ಬೇಕುಬೇಕಾದ ಸಮಾಂತರ ಸಂಗತಿಗಳನ್ನು ನಿಂತಕಾಲ ಮೇಲೇ ಹೊಸೆಯಬಲ್ಲವಳಾದ್ದರಿಂದ ಹೀಗೆ ಹೇಳಬೇಕಾಯಿತು. ಅವಳ ನಾಲಗೆ ಕಳಚಿ ಬಿದ್ದಂತೆ ಕನಸಾಗಿತ್ತು. +ಊರಿಗೆಲ್ಲ ಆದಂತೆ ದೇವರೇಸಿಯ ಗುಡಿಸಲಿಗೂ ಬೆಳಗಾಯಿತು. ಬೆಳತನಕ ಕಣ್ಣಿಗೆ ಕಣ್ಣು ಹಚ್ಚಿರಲಿಲ್ಲವಾದ್ದರಿಂದ ಕಣ್ಣು ಕೆಂಪಗೆ ಕರಿಮಾಯಿಯ ಕಣ್ಣಂತೆ ಕಾಣುತ್ತಿದ್ದವು. ಜ್ವರದಿಂದ ಮೈ ಸಿಡಿಯುತ್ತಿತ್ತು. ತಾನಿಂದು ಬದುಕುವುದಿಲ್ಲವೆಂದು ಖಚಿತವಾಗಿತ್ತು. ಏನಿದ್ದದ್ದು ಏನಾಗಿ ಹೋಗಿತ್ತು! ಊರವರ ಮುಖ ನೋಡುವುದಿರಲಿ, ತಾಯಿಯ ಮುಖ ಕಣ್ಣಾರೆ ನೋಡುವುದು ಹ್ಯಾಗೆ, ಕೈಯ್ಯಾರೆ ಮುಟ್ಟಿ ಪೂಜೆ ಮಾಡೋದು ಹ್ಯಾಗೆ? ಓಡಿಹೋಗಿ ಒಂದು ಸಲ ನಿನ್ನೆ ನಡೆದಿದ್ದನ್ನೆಲ್ಲ ಗೌಡನ ಮುಂದೆ ಒದರಿ ಬಿಡಲೆ ಎನ್ನಿಸಿತು. ಯಾಕೆ, ತಾಯಿಯ ಮುಂದೇ ಒದರೋಣ. ಆದರೆ ಕಣ್ಣುತಪ್ಪಿ ನಡೆಯೋದೇನಿದೆ? ಊರು ಮುಚ್ಚಿರಬಹುದು, ತಾಯಿ ಕಣ್ಣು ಮುಚ್ಚುವುದು ಸಾಧ್ಯವೆ? ಹಾಗಂತ ಈ ದಿನ ಹಿಂದೆ ಸರಿಯುವುದೂ ಸಾಧ್ಯವಿಲ್ಲ. ತಾಯಿಯ ಮಹತ್ವದ ಹುಣಿಮೆ ಇದು; ತಾಯಿ ರಂಡಿಯಾಗುವ ಹುಣ್ಣಿಮೆ. ಆದದ್ದಾಗಲಿ ತಾಯಿ ಬೇಕಾದರೆ ನನ್ನನ್ನು ರಕ್ತಕಾರಿಸಿ ಕೊಂದು ಇನ್ನೊಬ್ಬರನ್ನಾಯ್ದುಕೊಳ್ಳಲಿ ಎಂದುಕೊಂಡ. ಇಷ್ಟು ವರ್ಷ ದೇವರೇಸಿಯಾಗಿದ್ದವನಿಗೆ ಅದೇ ಮಾನದ ಸಾವು. ಅಥವಾ ತಾಯಿ, ಎಷ್ಟಂದರೂ ಹಡದ ಕರುಳು. ನನ್ನ ತಪ್ಪನ್ನು ಹೊಟ್ಟೆಯಲ್ಲಿ ಹಾಕಿಕೊಳ್ಳಬಾರದೇಕೆ? ‘ನಾವೋ ಉಪ್ಪು ಹುಳಿ ಖಾರ ತಿಂಬವರು, ತಪ್ಪು ಮಾಡುವವರು, ತಾಯಿಯಲ್ಲದೆ ಇನ್ಯಾರು ಕಾಪಾಡಬೇಕು? ಮಗು ಹೇಸಿಗೆ ಮಾಡಿಕೊಳ್ಳುತ್ತದೆ. ತಾಯಿ ತೊಳೆದು ಹತ್ತಿರ ಕರೆದುಕೊಳ್ಳುವುದಿಲ್ಲವೆ? ಏನು ಮಾಡುತ್ತಿದ್ದೇನಂತ ಅರಿವಿಲ್ಲದೆ ಮಗು ತಾಯಿಗೆ ಹೊಡೆಯುತ್ತದೆ. ಹಸಿದಾಗ ಮತ್ತೆ ಅವ್ವಾ ಎನ್ನುತ್ತದೆ. ಹೊಡೆದಾಗ ಹೊಡಿಸಿಕೊಂಬುವಳೂ ಅವಳೇ. ಹಸಿದಾಗ ಮೊಲೆಯೂಡುವವಳೂ ಅವಳೇ ಅಥವಾ, +ಉಗುಳಿದಳು ಅನ್ನೋಣ, ಅವಳೇನು ಹೊರಗಿನವಳೆ? ತಾಯಿಯಲ್ಲವೆ? ಅವಳಿಗೆ ಉಗುಳುವ ಹಕ್ಕಿದೆ. ಆಕೆ ನನ್ನನ್ನು ಗಡಿಯಾಚೆ ಉಗುಳಿದರೂ ಅದು ಮಾನವೆ. ಅವಳೇ ಹುಟ್ಟಿಸಿದಳು. ಅವಳೇ ಕೊಲ್ಲಲಿ, ಎಂದುಕೊಂಡು ಧೋತರ ತಗೊಂಡೆದ್ದ. ಮೈಯಲ್ಲಿ ದಿನದ ಕಸುವಿರಲಿಲ್ಲ. ಉತ್ಸಾಹವಿರಲಿಲ್ಲ. ಮಂದಿಯ ಮುಖ ನೋಡುವ ಧೈರ್ಯವಿರಲಿಲ್ಲ. ಸುಡುಸುಡುವ ಜ್ವರ ಬೇರೆ. ಮೆಲ್ಲಗೆ ಸಾಧ್ಯವಿದ್ದಷ್ಟು ಜನಗಳನ್ನು ನಿವಾರಿಸಿ ಕೆರೆಗೆ ಹೋಗಿ ಮಿಂದ. ಒದ್ದೆಯುಟ್ಟು ಗುಡಿಗೆ ಬಂದ. ಕಣ್ಣಿಗೆ ಕತ್ತಲು ಬಂದು ಗುಡಿಯ ಹೊಸ್ತಿಲ ಮೇಲೆ ಬಿದ್ದ. ಮತ್ತೆ ತಾನೇ ಎದ್ದು ಒಳಗೆ ಹೋದ. +ದೀಪ ಹಚ್ಚಿದ. ತಾಯಿಯ ಸೀರೆ ಕಳಚಿ ಮೈಗೆ ಮಜ್ಜನ ಮಾಡಿಸುವಾಗ ಮೈ ಝುಂ ಎಂದು ಚಳಿ ಬಂದು ನಡುಗಿದ. ನಡುಗುವ ಕೈಗಳಿಂದಲೇ ಮಡಿ ಉಡಿಸಿದ. ತಾನು ತಂದಿದ್ದ ಕವಡೆಯ ಸರ ಹಾಕಿದ. ಹೂವೇರಿಸಿದ. ಗಂಟೆ ಬಾರಿಸಿದ.ಕೊನೆಗೆ ಪ್ರದಕ್ಷಿಣೆ ಹಾಕಿ ಅಡ್ಡಬಿದ್ದ. ಏಳುವ ಮನಸ್ಸಾಗಲೊಲ್ಲದು. ಚಳಿಜ್ವರ ನೆತ್ತಿಗೇರತೊಡಗಿತು. +ತಡವರಿಸಿಕೊಂಡು ಮೇಲೆದ್ದು ತಾಯಿಯ ಮುಖದ ಕಡೆ ನೋಡಿದ. ಒತ್ತರಿಸಿ ದುಃಖ ತಡೆಯಲಾಗದೆ ‘ಎವ್ವಾ’ ಎಂದು ಅಳತೊಡಗಿದ. “ಎದಿ ಕಲ್ಲ ಮಾಡಿಕೊ ಬ್ಯಾಡ ತಾಯೀ”, ಎಂದು ಎದೆ ಎದೆ ಬಡಿದುಕೊಂಡ. “ನಾ ನಿನ್ನ ಮಗಾನ ಹಡದವ್ವಾ” ಎನ್ನುತ್ತ ಹಣೆಯನ್ನು ಕಲ್ಲಿಗೆ, ಗದ್ದಿಗೆಗೆ ಬಾರಿಸಿದ. ಅದೇನು ಕರಿಮಾಯಿಯ ಮಾಯೆಯೋ, ಮೂರ್‍ತಿಯ ಬಲಭುಜದ ಹೂವು ಕೆಳಗೆ ಬಿತ್ತು. ದೇವರೇಸಿಗೆ ಹೋದ ಜೀವ ತಿರುಗಿ ಬಂದಷ್ಟು ಸಂತೋಷವಾಯ್ತು. ಸ್ವಥಾ ತಾಯಿ ಅವನನ್ನು ತಬ್ಬಿಕೊಂಡು, ಮೈದಡವಿ ‘ಮಗನ ಚಿಂತೀ ಮಾಡಬ್ಯಾಡ. ನಾ ಇದ್ದೀನಿ’ ಅಂದಷ್ಟು ನೆಮ್ಮದಿಯಾಯ್ತು. ಮೈ ಹುಷಾರಾಗಿ ಚಳಿ ಜ್ವರ ಬಿಟ್ಟೋಡಿ ಮೈ ಬೆವರಿದ. ತಾಯಿಗೆ ಅತ್ಯಂತ ವಿನೀತನಾದ….ಕೃತಜ್ಞತೆಯಿಂದ ತುಂಬಿ ತುಂಬಿ ಕಣ್ಣೀರು ತುಳುಕಿದ. “ತಾಯಿ ನನ್ನ ತಪ್ಪ ಹೊಟ್ಯಾಗ ಹಾಕ್ಕೊಂಡ್ಳು; ತಾಯೀ ಆಶೀರ್ವಾದ ಆತು” ಎಂದು ತನಗೆ ತಾನೇ ಗಟ್ಟಿಯಾಗಿ ಹೇಳಿಕೊಳ್ಳುತ್ತ ಗುಡಿಸಲ ಕಡೆ ನಡೆದ. +ಇಡೀ ದಿನ ಗುಡಸೀಕರನ ಪಾರ್ಟಿಯ ಪ್ರಚಾರವೋ ಪ್ರಚಾರ. ಬೆಳಗಾವಿಯಿಂದ ಬ್ಯಾಂಡ್‌ಸೆಟ್‌ನವರನ್ನು, ಅವರ ಹಿಂದೆ ಕುಣಿಯುವ ಪಾತ್ರದ ಸೂಳೆಯರನ್ನು ಕರೆತಂದು ಊರ ತುಂಬ ಕುಣಿಸಿದರು. ಸ್ವಯಂ ಗುಡಸೀಕರ ಚತುಷ್ಟಯರೊಂದಿಗೆ ಮನೆ ಮನೆಗೆ ಹೋಗಿ ತಮಗೇ ಹೋಟು ಹಾಕಬೇಕೆಂದು ಆಬಾಲವೃದ್ಧರಿಗೆ ವಿನಂತಿಸಿಕೊಂಡು ಬಂದ. ಗೌಡ ದತ್ತಪ್ಪ ಹೋಗಲಿಲ್ಲ. ಕನಸುಗಳಿಂದ ಅವರ ಮನಸ್ಸು ಮೊದಲೇ ಜರ್ಜರಿತವಾಗಿತ್ತು. ನಿಂಗೂ ಮಾತ್ರ ಕುಸ್ತಿ ಹುಡುಗರನ್ನು ಕರೆದುಕೊಂಡು ಗೌಡರಿಗೇ ಹೋಟು ಹಾಕಬೇಕೆಂದು, ಗಂಡಸರು, ಹೆಂಗಸರೆನ್ನದೆ ಎಲ್ಲರಿಗೂ ಹೇಳಿಬಂದ. ಲಗಮವ್ವ ಹೆಂಗಸು ರೀತಿಯಲ್ಲಿ ಹೇಳಿಬಂದಳು. ಬಾಳೂ ಬಸೆಟ್ಟಿ ಅವರೂ ಅಲೆದಾಡಿ ಬಂದರು. ಕಂಡಕಂಡವರಿಗೆಲ್ಲ ದೇವಿಯ ಬಂಡಾರ ಹಚ್ಚಿಬಂದರು. ಈ ಗಡಿಬಿಡಿಯಲ್ಲಿ ಸಂಜೆಯಾದದ್ದೇ ಯಾರಿಗೂ ತಿಳಿಯಲಿಲ್ಲ. +ಸೂರ್ಯ ಪಶ್ಚಿಮದಲ್ಲಿ ಮುಳುಗುತ್ತಿದ್ದ. ದನಕರು ಮನೆಗೆ ಧಾವಿಸುವ ಅವಸರದಲ್ಲಿ ಎದ್ದ ಧೂಳು, ಪ್ರಚಾರಕ್ಕಾಗಿ ಜನ ಓಡಾಡಿ ಎದ್ದ ಧೂಳು, ಪಾತ್ರದವರು ಕುಣಿದಾಡಿ ಅವರ ಸುತ್ತ ಗುಂಪುಗೂಡಿ ತುಳಿದಾಡಿ ಎದ್ದ ಧೂಳು, ಕಾರಖಾನೆಯ ಹೊಗೆಯಂತೆ ಅಡರಿದ್ದ ಕಲಬೆರಕೆಯ ವಿಚಿತ್ರ ಧೂಳಿನಲ್ಲಿ ಊರಿನ ವಿವರಗಳು ಅಸ್ಪಷ್ಟವಾಗಿ ತೋರುತ್ತಿದ್ದವು. ಇದರ ಜೊತೆಗೆ ಮೈಕಿನ, ಬ್ಯಾಂಡ್‌ಸೆಟ್ಟಿನ, ಮನುಷ್ಯರ ವಿಕಾರ ದನಿಗಳು ಬೆರೆತು ಊರಿಗೂರೇ ಕಿಟಾರನೆ ಕಿರುಚುತ್ತಿದ್ದಂತೆ ಕೇಳಿಸುತ್ತಿತ್ತು. ಮಕ್ಕಳು ಹೆದರಿ ಮೊಲೆ ಮರೆತು ಚೀರಿದರೂ ಯಾರಿಗೂ ಕೇಳಿಸದಂತಾಗಿತ್ತು. ಪಶ್ಚಿಮದ ಆಗಸ ಕರಿಮಾಯಿಯ ಕೆಂಗಣ್ಣಿನಂತೆ ಕೆಂಪಾಗಿತ್ತು. ಮೂಡಣದಲ್ಲಿ ಹುಣ್ಣಿಮೆ ಚಂದ್ರನ ಆಕೃತಿ ಮೂಡಿತು. +ಇಂದು ಉಳಿದೆಲ್ಲ ಹುಣ್ಣಿಮೆಯಂತಿರಲಿಲ್ಲ. ಎದ್ದ ಧೂಳು ನೆಲಕ್ಕಂಟಿರಲಿಲ್ಲ. ಸಪ್ಪಳ ನಿಂತಿರಲಿಲ್ಲ.ಬೆಳದಿಂಗಳು ಹುಚ್ಚೆಚ್ಚು ಕೆರಳಿದಂತೆ ಆಕಾರಗೊಂಡುದಕ್ಕೆಲ್ಲ ನೆರಳು ಬಂತು. ನೆರಳು ಕ್ಷಣೇ ಕ್ಷಣೇ ದಟ್ಟವಾಗಿ ಕತ್ತಲೆಯ ಮರಿಯಂತಾಯಿತು. +ನಾನಾ ನಮೂನೆಯಲ್ಲಿ ದನಿಗಳಲ್ಲಿ ಗೌಡನ ಮನೆಯಿಂದ ಹೊರಟ ಹಲಗೆ, ಡೊಳ್ಳಿನ ದನಿಯೂ ಒಂದಷ್ಟೆ. ಕೆಲವರ ಊಟವಾಗಿತ್ತು; ಕೆಲವರದಿಲ್ಲ. ಆಗಲೇ ಪಂಚರು, ಹಿರಿಯರು, ಆಳು ಮಕ್ಕಳು, ಗರತಿಯರು ಗೌಡನ ಮನೆಮುಂದೆ ಸೇರಿದ್ದರು. ಪಲ್ಲಕ್ಕಿಯಲ್ಲಾಗಲೇ ದೇವಿಯ ಬಂಗಾರದ ಮುಖವನ್ನಿಟ್ಟಿದ್ದರು. ಒಂದು ಕಡೆಯಿಂದ ದತ್ತಪ್ಪ, ಇನ್ನೊಂದು ಕಡೆಯಿಂದ ಗೌಡ ತಾಯಿಗೆ ಚೌರಿ ಬೀಸುತ್ತಿದ್ದರು. ಡೊಳ್ಳಿನ ಅಬ್ಬರದಲ್ಲಿ ಅವರ ಹಾಡು ಕೇಳಿಸುತ್ತಿರಲಿಲ್ಲ. ಬರುವವರೆಲ್ಲ ಬಂದುದು ಖಚಿತವಾದೊಡನೆ ಗೌಡ ಮೆರವಣಿಗೆಹೊರಡಲೆಂದ. ‘ಚಾಂಗು ಭಲೇ’ ಎಂದು ಮೆರವಣಿಗೆ ಹೊರಟಿತು. +ಮೆರವಣಿಗೆ ಊರಿನ ಮುಖ್ಯ ರಸ್ತೆಗಳಲ್ಲಿ ಹಾದು ದೇವರೇಸಿಯ ಗುಡಿಸಿಲಿಗೆ ಬಂತು. ದೇವರೇಸಿಯಾಗಲೇ ಹಸಿರು ಸೀರೆ ಉಟ್ಟು ಸಿದ್ಧನಾಗಿದ್ದ. ದೇವರೇಸಿಯ ಮೈ ಸುಡುತ್ತಿದ್ದುದನ್ನು ಗಮನಿಸಿ ಲಗಮವ್ವ “ಯಾಕೋ ಅವ್ವನ ಮೈ ಕಾದ ತಗಡಾಗೇತಿ” ಎಂದಳು. ಉಳಿದ ಗರತಿಯರೂ ಗಮನಿಸಿದರು. ದೇವರೇಸಿ ಉತ್ತರ ಕೊಡಲಿಲ್ಲ. ಮುತ್ತೈದೆಯರು ಹಾಡುತ್ತ ಅವನ ಎರಡೂ ಕೈಗೆ ಐದು ವರ್ಣಗಳ ಬಳೆ ಮೊಳಕೈತನಕ ತೊಡಿಸಿದರು. ಹಣೆತುಂಬ ಕುಂಕುಮ, ಬಂಡಾರ ಹಚ್ಚಿದರು. ಜಡೆಗೆ ಹೂ ಮುಡಿಸಿ ಬಂಡಾರ ಸಿಡಿಸಿದರು. ಕಾಲಿಗೆ ತೋಡೆ ತೊಡಿಸಿದರು. ಕೈಯಲ್ಲಿ ನವಿಲು ಗರಿಯ ಚೌರಿ ಹಿಡಿದುಕೊಂಡಾದ ಮೇಲೆ ‘ಚಾಂಗು ಭಲೇ’ ಎಂದು ಮೆರವಣಿಗೆ ಗುಡಿಯ ಕಡೆ ನಡೆಯಿತು…. +ಪೌಳಿಗೆ ಬಂದು ವಾಲಗ ಸುರುವಾಯಿತು. ಗೌಡ ತಾಯಿಯ ಬಂಗಾರದ ಮುಖವನ್ನೂ ಮಡಿಲಲ್ಲಿ ಬಚ್ಚಿಟ್ಟು ಕೂಸಿನಂತೆ ಎದೆಗವಚಿಕೊಂಡ. ದತ್ತಪ್ಪ ಚೌರಿ ಬೀಸುತ್ತ ದಾರಿ ತೋರಿಸಿದ. ತಾಯಿಯ ಬಂಗಾರದ ಮುಖವನ್ನು ಗರ್ಭಗುಡಿಗೆ ಒಯ್ದರು. ನಿಶ್ಯಕ್ತಿಯಿಂದ ದೇವರೇಸಿ ನಡೆಯಲಾರದಾಗಿದ್ದ. ಲಗಮವ್ವ ರಟ್ಟೆಯಲ್ಲಿ ಕೈಹಾಕಿ ಒಳಗೊಯ್ದಳು. ಅವರಷ್ಟೆ ಒಳಗೆ ಹೋದೊಡನೆ ಬಾಗಿಲಿಕ್ಕಿತು. +ತಾಯಿಯ ಬಂಗಾರದ ಮುಖವನ್ನು ಮೂಲ ವಿಗ್ರಹಕ್ಕೆ ಜೋಡಿಸಿದರು. ಕೆಂಪಗೆ ಥಳ ಥಳ ಹೊಳೆಯುವ ಕಣ್ಣುಪಟ್ಟಿಗಳನ್ನು ಹೊಂದಿಸಿದರು. ಕವಡೆಯ ಸರ ತೆಗೆದು ತಾಯಿಯ ಎದುರಿಗಿಟ್ಟರು. ಗರಿಗರಿ ನೆರಿಗೆ ಹೊಯ್ದು ಹಸಿರು ಸೀರೆ ಉಡಿಸಿದರು. ಬಂಗಾರದ ಥರಾವರಿ ಆಭರಣ ತೊಡಿಸಿದರು. ವಿಗ್ರಹದ ಕೈಗೂ ಐದು ವರ್ಣದ ಬಳೆ ತೊಡಿಸಿದರು ತಾಯಿಯ ಈ ಬಗೆಯ ಶೃಂಗಾರ ಇನ್ನು ಒಂದು ತಿಂಗಳ ತನಕ ನೋಡದೊರೆಯಿವುದಿಲ್ಲ. ಆದ್ದರಿಂದ ಗೌಡ, ಲಗಮವ್ವ, ದತ್ತಪ್ಪ ಬಿದ್ದ ಕನಸುಗಳಿಗೆ ಹೆದರಿದ್ದರಿಂದ ಇದ್ದೀತು, ತುಂಬ ಭಾವುಕರಾಗಿ ಕಣ್ಣುತುಂಬ ನೋಡಿದರು. ಹಿಂದೆ ತಾಯಿಯ ಕೈ ಸಿಡಿಯುವಂತೆ ಮಾಡಿದ ಪಾಪಿಯ ಪತ್ತೆಯಾಗಿರಲಿಲ್ಲ. ತಾಯಿಯ ಮಾತೇ ಹೀಗೆ. ಎಲ್ಲಾ ತಮ್ಮ ಪರಿಣಾಮಗಳಿಂ,ದಲೇ ತಿಳಿಯುತ್ತವೆ. ಮೊದಲೇ ಗೊತ್ತಾದರೆ ಆಗುವ ಅನಾಹುತವನ್ನಾದರೂ ತಪ್ಪಿಸಬಹುದು. ಆದರೆ ತಿಳಿಯುವಂತೆ ಮಾತಾಡಲು ತಾಯಿ ತಮ್ಮಂತೆ ಮನುಷ್ಯಳೆ? ಆಕೆಯ ವ್ಯವಹಾರದಲ್ಲಿ ಕೈಹಾಕುವುದು ತಮ್ಮಿಂದೇನಾದೀತು? ಇದನ್ನೆಲ್ಲ ನೆನೆದಾಗ ತಾವೆಂಥ ದುರ್ಬಲರೆಂದು ಅನಿಸುತ್ತದೆ. ಆಗೋದನ್ನ ಕೈಕಟ್ಟಿಕೊಂಡು ಸಾಕ್ಷಿಯಾಗಿ ನೋಡುವುದೆಷ್ಟೇ ಅಷ್ಟೆ. +ದೇವರೇಸಿಯನ್ನು ಎಬ್ಬಿಸಬೇಕಾಯ್ತು. ಎಬ್ಬಿಸುವಾಗ ಮೈ ಸುಡುತ್ತಿದ್ದುದು ಗೌಡನಿಗೂ ತಿಳಿದು ಹಳಹಳಿಸಿದ. ದೇವರೇಸಿ ಎದ್ದು ದೂಪಾರತಿಯನ್ನು ಕೈಗೆತ್ತಿಕೊಂಡೊಡನೆ ಗರ್ಭಗುಡಿಯ ಬಾಗಿಲು ತೆರೆದರು. ಹೊರಗೆ ನೆರೆದಿದ್ದ ಭಕ್ತರೆಲ್ಲ ಬಾಗಿಲಿಗೆ ಮುಕುರಿ ತಾಯಿಯ ಬಂಗಾರದ ಶೃಂಗಾರ ಮೂರ್ತಿಯನ್ನು ಕಣ್ಣತುಂಬ ನೋಡಿದರು. ದೇವರೇಸಿ ದೂಪಾರತಿ ತಗೊಂಡು ಹೊರಬಂದು ಗುಡಿ ಪ್ರದಕ್ಷಿಣೆ ಹಾಕಿದ. ದೀಪಕಂಬದ ಹತ್ತಿರ ಹೋಗಿ ಅಲ್ಲಿದ್ದ ಗಣಗಳಿಗೆ ದೂಪಾರತಿಯ ಕೈ ಮೇಲೆತ್ತಿ ‘ಚಾಂಗುಭಲೇ’ ಎಂದು ಕಿರಿಚಿ ನೆಲಕ್ಕೆ ಕುಕ್ಕಿದ ಕೂಡಲೇ ನೆರೆದ ಭಕ್ತರೆಲ್ಲ ಗುಡಿಯಲ್ಲಿದ್ದ ಎಲ್ಲ ಗಂಟಿ, ಜಾಗಟಿ, ತಾಳ, ಡೊಳ್ಳುಗಳನ್ನು ಚಾಂಗು ಭಲೇ ಎಂದು ಕಿರುಚುತ್ತ ಕಿವಿಗಡಚಿಕ್ಕುವಂತೆ ಬಾರಿಸತೊಡಗಿದರು. +ದೇವರೇಸಿ ಓಡೋಡುತ್ತ ಬಂದು ಗರ್ಭಗುಡಿ ಹೊಕ್ಕ. ಈಗ ತಪಸ್ಸಿಗಾಗಿ ಅಡವಿಯಲ್ಲಿದ್ದ ಜಡೆಮುನಿಯ ಸಂಹಾರವಾಯಿತೆಂದೂ ಆ ಸುದ್ದಿಯನ್ನು ದೇವರೇಸಿ ಓಡೋಡುತ್ತ ಬಂದು ತಾಯಿಗೆ ಅರಿಕೆಮಾಡಿದನೆಂದೂ ಇದರರ್ಥ. ತಾಯಿಯೀಗ ರಂಡೆ (ವಿಧವೆ)ಯಾದ್ದರಿಂದ ಆಕೆಯ ಕೈಬಳೆ ಒಡೆಯುತ್ತಾರೆ. ಗೌಡ ಆವೇಶದಲ್ಲಿದ್ದ ದೇವರೇಸಿಯನ್ನು ತೆಕ್ಕೆಹಾಯ್ದು ಹಿಡಿದುಕೊಂಡಿದ್ದ. ಲಗಮವ್ವ ಅವಸರದಲ್ಲಿ ದೇವರೇಸಿಯ ಕೈಬಳೆ ಒಡೆದಳು. ಕುಂಕುಮ ಅಳಿಸಿದಳು. ದತ್ತಪ್ಪ ಮೂರ್ತಿಯ ಕೈಬಳೆ ಒಡೆದು ಕುಂಕುಮ ಅಳಿಸಿದ. ಕೂಡಲೇ ಕೂಡಿದ ಭಕ್ತರು ಬಿಲ್ಲುಬಾಣೆಸೆದಂತೆ ಮೂರ್ತಿಯ ಕಡೆಗೆ ಅಡಿಕೆಗಳನ್ನು ಎಸೆದರು. ದೇವದಾನವರು ತಾಯಿಯ ಗರ್ಭಕ್ಕೆ ಆಯುಧಗಳನ್ನೆಸೆದರೆಂದು ಇದರರ್ಥ. ಗರ್ಭ ಕಳಚಿದೊಡನೆ ದೇವರೇಸಿ ವಿಕಾರವಾಗಿ ಕಿರಿಚಿದ. ಗೌಡ, ದತ್ತಪ್ಪ ಲಗುಬಗೆಯಿಂದ ನಾನಾ ಬಗೆಯ ಇಪ್ಪತ್ತೊಂದು ಹಣ್ಣುಗಳನ್ನು ತಾಯಿಯ ಉಡಿಯಲ್ಲಿ ಕಟ್ಟಿದರು. +ತಾಯಿ ಕೂಡಲೇ ಕೋಪಗೊಂಡಳು. ಮೈತುಂಬಿ ಮುಳ್ಳಾವಿಗೆ ಹತ್ತಿದಳು. ಕೈಯಲ್ಲಿ ಖಡ್ಗ ಕೊಟ್ಟರು. ಎಡಗೈಯಲ್ಲಿ ಪಂಜು ಕೊಟ್ಟರು. ರಭಸದಿಂದ ಗುಡಿಬಿಟ್ಟುಹೊರಗೆ ಪೌಳಿಗೋಡಿದಳು. ಪೌಳಿಯ ತು,ಬ ಗಂಡಸರು ಕಿಕ್ಕಿರಿದು ನೆರೆದಿದ್ದರು. ಈಗ ತಾಯಿ ದೇವದಾನವರ ಸಂಹಾರಕ್ಕೆ ಹೊರಡುವ ಸಮಯ. ಆ ಅವಸರದಲ್ಲಿಯೇ ಹಕ್ಕಿನ ಹಿರಿಯರನ್ನು ಕರೆದು ಊರ ಯೋಗಕ್ಷೇಮದ ಬಗ್ಗೆ ಮೂರು ವಿಶೇಷ ಕಾರಣಿಕ ಹೇಳಿ ಊರ ಸೀಮೆ ದಾಟುತ್ತಾಳೆ. ಪಲ್ಲಕ್ಕಿಯ ಹತ್ತಿರ ನಿಂತೊಡನೆ ತಾಯಿ ಪಂಜಿನ ಕೈ ಎತ್ತಿ ‘ಏಽಽಽಽ’ ಎಂದು ಕಿರಿಚಿದಳು. ಕೇಳುವುದಕ್ಕೆ ಎಲ್ಲರೂ ಸ್ತಬ್ಧರಾದರು. ಗೌಡ ಗಪ್ಪಬೆ ಬಗ್ಗಿ ತಾಯಿಯ ಮುಳ್ಳಾವಿಗೆಯ ಮೇಲೆ ನಿಂತ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡ. ಗುಡಿಯ ಒಳಗಡೆ ಹೆಂಗಸರು ಇನ್ನೂ ಗದ್ದಲ ಮಾಡುತ್ತಿದ್ದರು. ದತ್ತಪ್ಪ ಗದರಿಸಿದ, ಸುಮ್ಮನಾದರು. ಆದರೆ ಏನೋ ಗುಸುಗುಸು ನಡೆಯುತ್ತಿತ್ತು. ತಾಯಿ ಬೇಗನೆ ಬಾಯಿ ಬಿಡಲಿಲ್ಲ; ಬರೀ ಬಿಕ್ಕತೊಡಗಿದಳು. +ಜನ ಮೈಯೆಲ್ಲ ಕಿವಿಯಾದರು. ಆಶ್ಚರ್ಯವೆಂದರೆ ಗುಡಸೀಕರ ಕೂಡ ಬಸವರಾಜನೊಂದಿಗೆ ಕಾರಣಿಕ ಕೇಳಲು ಬಂದಿದ್ದ. ಒಳಗೊಳಗೇ ದೇವಿ ತನ್ನ ಎಲೆಕ್ಷನ್ ಪರವಾಗಿಯೇ ಕಾರಣಿಕ ಹೇಳಿಯಾಳೆಂಬ ನಂಬಿಕೆಯಿತ್ತು. ಬಸವರಾಜು ಅವನ ಪಕ್ಕದಲ್ಲೇ ನಿಂತು ಹೆಂಗಸರ ಕಡೆ ಕುಡಿನೋಟ ಬೀರುತ್ತ ನಿಂತಿದ್ದ. ಗುಡಸೀಕರನ ಕಿವಿಯಲ್ಲಿ ಏನೋ ಹೇಳುತ್ತಿದ್ದಂತೆ ಬಾಯಿ ಮುಚ್ಚಲಿಕ್ಕೆ ಸನ್ನೆ ಮಾಡಿ ಕಾರಣಿಕಕ್ಕೆ ಕಿವಿಕೊಟ್ಟ. ಹೆಂಗಸರಲ್ಲಿದ್ದ ಗಿರಿಜಳಿಗೆ ಕಾರಣಿಕದ ಬಗ್ಗೆ ಕಾಳಜಿಯಿದ್ದಂತಿರಲಿಲ್ಲ. ಬಸವರಾಜೂನನ್ನು ಕಣ್ಣಿನಿಂದಿರಿಯುತ್ತ, ಹಲ್ಲು ಕಿಸಿಯುತ್ತ ನಿಂತಿದ್ದಳು. ಈಗಲೂ ತಾಯಿಗೆ ಬಾಯಿ ಬಂದಿರಲಿಲ್ಲ. ಬರೀ ಬಿಕ್ಕುತ್ತಿದ್ದಳು. +ಗೌಡನ ಎದೆ ಡವಡವ ಹೊಡೆದುಕೊಳ್ಳುತ್ತಿತ್ತು. ತಾಯಿಯ ವಾಣಿ ಏನಾಗುತ್ತದೋ, ಬಾಯಿ ಕೂಡ ಬರದಾಗಿತ್ತು. ನಿಂಗೂ ಹೆಂಗಸರಲ್ಲೇ ನಿಂತಿದ್ದವನು ಬಸವರಾಜುವಿನ ಕಣ್ಣ ಬೇಟಿ ಗಮನಿಸಿದ್ದ. ನೋಡಿ ಅಸೂಯೆಪಟ್ಟಿದ್ದ. ಹಿಂದೆ ನಿಂತಿದ್ದ ಸುಂದರಿ ನಿಧಾನವಾಗಿ ಬಿಕ್ಕತೊಡಗಿದಳು. ಕೂಡಲೇ ಹೆಂಗಸರು ಅವಳನ್ನು ಗದರಿಕೊಂಡು. ಒಂದು ಸಲ ಸುಮ್ಮನಾಗಿ ಮತ್ತೆ ಬಿಕ್ಕತೊಡಗಿದಳು. “ಈ ರಂಡಿಗೇನಾಗೈತ್ಯೊ ಬ್ಯಾನಿ” ಎಂದು ಹೆಂಗಸರಿಗೆ ಕೇಳಿಸುವಂತೇ ಲಗಮವ್ವ ಬೈದು ಮತ್ತೆ ಕಾರಣಿಕಕ್ಕೆ ಕಿವಿಯೊಡ್ಡಿದಳು. ನಿಂಗೂ ತಿರುಗಿ ನೋಡಿದಾಗ ಸುಂದರಿ ನಿಂತಲ್ಲೇ ಬಿಕ್ಕುತ್ತ ಕುಸಿದಿದ್ದಳು. ಬಿಕ್ಕುವಾಗ ಎದ್ದೆದ್ದು ಬೀಳುತ್ತಿದ್ದಳು. ಅಷ್ಟರಲ್ಲಿ ತಾಯಿ ಇನ್ನೊಮ್ಮೆ, +“ಏಽಽಽ” +ಎಂದು ಕಿರಿಚಿದಳು, ಜನ ಸ್ತಬ್ಧರಾದರು. ಗೌಡ ತಾಯಿಯ ಕಾಲನ್ನು ಇನ್ನೂ ಬಿಗಿಯಾಗಿ ಹಿಡಿದ. ಕಿವಿಯ ಮೇಲೆ ತಾಯಿಯ ಬೆಚ್ಚಗಿನ ಕಣ್ಣೀರ ಹನಿ ಬಿದ್ದಾಗ ಕಳವಳವಾಯ್ತು. ತಾಯಿಗೆ ಬಾಯಿ ಬಂತು; +ಆಸರದ ಆಲದ ಮರದ ಬೇರ +ನೀರಿಲ್ಲದ ಒಣಗ್ಯಾವು +ನೀರ ಹಾಕೋದ ಮರೀಬ್ಯಾಡ್ರಲೇ…. +ಕಾರಣಿಕ ಸ್ಪಷ್ಟವಾಗಿ ಚುನಾವಣೆಯ ಬಗ್ಗೆ ಇತ್ತೆಂಬ ಬಗ್ಗೆ ಯಾರಿಗೂ ಅನುಮಾನವಾಗಲಿಲ್ಲ. ಆಸರದ ಆಲದ ಮರದ ಬೇರಿಗೆ ನೀರು ಹಾಕುವುದೆಂದರೆ ಗೌಡನ ಪಾರ್ಟಿಗೆ ‘ಹೋಟು’ ಹಾಕಬೇಕೆಂಬುದಾಗಿ ಎಲ್ಲರೂ ಅರ್ಥೈಸಿಕೊಂಡರು. ಗಟ್ಟಿಮುಟ್ಟಾದ ನುಡಿಯೆಂದು ಜನ ಆಡಿಕೊಂಡರು ಕೂಡ, “ನಡೀಪಾ ಗುಡಸೀಕರಾ ಇನ್ನ” ಎಂದೊಬ್ಬ ಕುಸ್ತೀ ಹುಡುಗ ಕುಹಕವಾಡಿದ. ಗುಡಸೀಕರನಿಗೆ ನಿರಾಶೆಯಾಯ್ತು. ಬಸವರಾಜೂನ ಕಡೆ ನೋಡಿದ. ಅವನಿರಲಿಲ್ಲ. +ರಂಡಿ ಹುಣ್ಣಿವೆ ದಿನ ಆಗೋದು ಒಟ್ಟು ಮೂರು ನುಡಿಗಳು. ಊರುಗಾರಿಕೆಯ ಮೊದಲನೆಯ ನುಡಿಯಾದ ಮೇಲೆ ಎರಡನೆಯ ನುಡಿ ಗೌಡನ ಮನೆತನಕ್ಕೆ ನೇರವಾಗಿ ಸಂಬಂಧಪಡುವುದರಿಂದ ತನ್ನ ಕಳೆದ ಮಗನ ಬಗ್ಗೆ ತಾಯಿ ಏನು ಹೇಳುವಳೋ ಎಂದು ಗೌಡ ತವಕಗೊಂಡ. ಗಂಟಲಲ್ಲಿದ್ದ ಎರಡನೆಯ ನುಡಿ ಇನ್ನೇನು ದನಿಗೊಂಡು ಹೊರಬರಬೇಕು, ಅಷ್ಟರಲ್ಲಿ ಗುಡಿಯೊಳಗಿದ್ದ ಸುಂದರಿ ವೀರಾವೇಶದಿಂದ “ಏ” ಎಂದು ಥೇಟ್ ದೇವರೇಸಿಯಂತೆಯೇ ಕಿರಿಚಿದಳು. ಜನ ದಂಗಾದರು. +ಏನು, ಎತ್ತ, ಯಾಕೆ-ತಿಳಿಯುವ ಮುನ್ನವೇ, ಜನ ಹಿಂದಿರುಗಿ ಹೆಂಗಸರತ್ತ ನೋಡನೋಡುವುದರೊಳಗೆ ಸುಂದರಿ ಹೆಂಗಸರ ಮಧ್ಯದಿಂದ ನೆಗೆದು ಬಂದು ಗಂಡಸರ ಗುಂಪಿನಲ್ಲಿ ಹೊಕ್ಕು ಎರಡೂ ಕೈಯಲ್ಲಿದ್ದ ಬಂಡಾರವನ್ನು ರಭಸದಿಂದ ಮೇಲಕ್ಕೆರೆಚಿದಳು. ದೇವರೇಸಿ ಅವಾಕ್ಕಾಗಿ ನಡುಗಿದ. ಅವಳು ಒಲೆದಾಡುವ ಪರಿ ನೋಡಿ ದೇವೀ, ತನ್ನ ಬಿಟ್ಟು ಇವಳ ಮೈತುಂಬಿದಳೆಂಬ ದುಃಖ ಒಂದೆಡೆಗಾದರೆ ಎಲ್ಲಿ ತನ್ನ ಗುಟ್ಟು ರಟ್ಟುಮಾಡುವಳೋ ಎಂಬ ಭಯ ಇನ್ನೊಂದೆಡೆ, ಸುಂದರಿ ಓಡಿ ಬಂದು ದೇವರೇಸಿಯ ಹತ್ತಿರವೇ ನಿಂತು ತನ್ನ ಶಕ್ತಿಯನ್ನೆಲ್ಲ ಒಗ್ಗೂಡಿಸಿ ಇನ್ನೊಮ್ಮೆ ಕಿರಿಚಿದಳು. ಜನರ ಮನಸ್ಸು ಚೆಲ್ಲಾಪಿಲ್ಲಿಯಾಯಿತು. ಅವಳು ಒಲೆದಾಡುವ ಪರಿಯೋ ಥೇಟ್ ದೇವರೇಸಿಯಂತೆಯೇ ಇದ್ದುದರಿಂದ ಇವಳಿಗೂ ತಾಯಿ ಮೈತುಂಬಿರಬೇಕೆಂದು ಕೆಲವರಂದುಕೊಂಡರು. ಈ ಹುಚ್ಚರಂಡೆ ಹಗರಣಾ ಮಾಡುತ್ತಿದ್ದಾಳೆಂದು ಕೆಲವರಂದರು. ಮೈತುಂಬದಿದ್ದರೆ ಕೂಡಿದ ಭಕ್ತರಲ್ಲಿ ಹೀಗೆ ಒದರುವ ಧೈರ್ಯ ಬರುತ್ತಿತ್ತೇ? ಪಲ್ಲಕ್ಕಿಯ ಹತ್ತಿರ ನಿಲ್ಲುವ ಧೈರ್ಯವಾಗುತ್ತಿತ್ತೇ? ಹಗರಣಾ ಮಾಡಿದ್ದರೆ ನಾವ್ಯಾಕೆ, ದೇವಿ ಸುಮ್ಮನಿರುತ್ತಿದ್ದಳೆ? ನಿಂತಲ್ಲೇ ರಕ್ತ ಕಾರಿಬಿಡುತ್ತಿದ್ದಳು. ಅದೂ ಹೋಗಲಿ, ಅವಳ ದನಿಯಲ್ಲೇ ಏನೋ ಒಂದು ವಿಶೇಷವಿದೆ. ಹಲ್ಕಟ ಹೆಂಗಸೇನೋ ಹೌದು. ಆದರೆ ತಾಯಿಯ ಮನಸ್ಸಿಗೆ ಬಂದರೆ ಏನು ಮಾಡಲಾಗುತ್ತದೆ? ದೇವರೇಸಿ ಏನೋ ಮೈಲಿಗೆ ಮಾಡಿರಬೇಕು. ಇಲ್ಲದಿದ್ದರೆ ಅವನನ್ನು ಬಿಟ್ಟು ದೇವೀ ಇನ್ನೊಬ್ಬರನ್ನು ಯಾಕೆ ಆರಿಸಿಕೊಳ್ಳುತ್ತಿದ್ದಳು? ಗೌಡ ಅಪ್ರತಿಭನಾದ. ದತ್ತಪ್ಪನ ಚಿಂತಾಮಣಿಯ ಬುದ್ಧಿ ಮಸಳಿಸಿತು. ಏನು ಮಾಡಬೇಕೆಂದು ಯಾರಿಗೂ ತೋಚಲೊಲ್ಲದು. ಸುಂದರಿ ಕಿರಿಚಿ ಮತ್ತೆ ಬಿಕ್ಕತೊಡಗಿದಳು. ಇದು ದೇವರೇಸಿಯ ಬಿಕ್ಕಿನಂತೇ ಇತ್ತು. ನಂಬಲು ಸಿದ್ಧರಾದ ಕೆಲವು ಭಾವುಕರಿಗೆ ಸಂಶಯವೇ ಉಳಿಯಲಿಲ್ಲ. ಚರ್ಚಿಸುವ ಸಮಯವೂ ಅದಲ್ಲ. +ಎಲ್ಲೀ ಹೋದಳೆನ್ನಬೇಡಿರೇ +ಸುಂದರಿ ಕೈ ಎತ್ತಿ “ಚಿಗಿರಿಗೆ ನೀರ ಹಾಕ್ರಲೇ” ಎಂದು ಕಿರಿಚಿದಳು. ದೇವರೇಸಿಯ ಕೈಯ ಪಂಜು ಕಳಚಿ ಹಾಗೇ ಕೆಳಕ್ಕೆ ಬಿತ್ತು. ಹತ್ತಿರಿದ್ದವರಿಗೆ ಅವಳ ಮಾತು ಕೇಳಿಸಿತು. ದೂರಿದ್ದವರಿಗೆ ಕೇಳಿಸಲಿಲ್ಲ. ಏನು, ಏನೆಂದು ಅವರಿವರಿಂದ ತಿಳಿದುಕೊಂಡರು. ಕೂಡಲೇ ದತ್ತಪ್ಪ ಕೈ ಮೇಲೆತ್ತಿ “ಇದು ಗುಡಿಸ್ಯಾನ ದೇವರಪೋ” ಎಂದು ಕೂಗಿದ. ಜನ ದೇವಿಯೆಂದರು. ಹೊಯ್ಮಾಲಿಯೆಂದರು. ಹಾ ಎಂದರು, ಹೋ ಎಂದರು. ದೇವರೇಸಿ +“ದೇವೀ ನನ್ನ ಕೈಬಿಟ್ಟಳ್ರೋಽಽಽ” +-ಎಂದು ಕಿರಿಚುತ್ತ ಭೂತ ಕಂಡ ಮಗುವಿನಂತೆ ರಭಸದಿಂದ ಜನಗಳನ್ನು ಆ ಕಡೆ ಈ ಕಡೆ ತಳ್ಳಿ ಹೊರಗೋಡಿಬಿಟ್ಟ. ಜನ ಹೋ ಎಂದು ಗಾಬರಿಯಲ್ಲಿ ಕಿರಿಚುತ್ತಿದ್ದಂತೆ ಗೌಡ “ಸತ್ತಗಿತ್ತಾನ ಬಾರೋ ದತ್ತೂ” ಎಂದು ಕಿರಿಚಿ ದೇವರೇಸಿಯ ಬೆನ್ನು ಹತ್ತಿದ. ದತ್ತಪ್ಪನೂ ಓಡಿದ. ಅವರ ಹಿಂದಿನಿಂದ ಕೆಲವು ಕುಸ್ತೀ ಹುಡುಗರೂ, ಇನ್ನೂ ಕೆಲವರು ಓಡಿದರು. ಬಸವರಾಜು ಯಾವುದೋ ಪರಿಯಿಂದ ಗರ್ಭಗುಡಿ ಸೇರಿದವನು ಯಾರಿಗೂ ಗೊತ್ತಾಗದಂತೆ ಹೆಜ್ಜೇನಿನ ಮೂರು ಹುಟ್ಟುಗಳಿಗೆ ಉದ್ದ ಕೋಲಿನಿಂದ ಬೀಸಿ ಹೊಡೆದ. ಒಂದೊಂದೇ ಏಟಿಗೆ ಮೂರು ಹುಟ್ಟುಗಳು ಕತ್ತರಿಸಿ ನೆಲಕ್ಕೆ ರೊಪ್ಪೆಂದು ಬಿದ್ದವು. ಬಿದ್ದ ಹುಟ್ಟುಗಳ ಸುತ್ತ ಹಸಿನೆತ್ತರಿನಂತೆ- ಜೇನುತುಪ್ಪ ಹುಳು ಸಮೇತ ಚಿಲ್ಲೆಂದು ಸಿಡಿಯಿತು. ಆಘಾತದಿಂದ ತತ್ತರಿಸಿದ ಹುಳುಗಳು ಗೊಯೆಂದು ಭಗ್ಗನೆ ಹೊಗೆಯೆದ್ದಂತೆ-ಹೊರಬಿದ್ದು ಸಿಕ್ಕಸಿಕ್ಕವರನ್ನು ಸಿಕ್ಕಸಿಕ್ಕಲ್ಲಿ ಕಚ್ಚತೊಡಗಿದವು. +ಕಿರಿಚಾಟ, ಕೂಗಾಟ, ಒದರಾಟ, ಅಯ್ಯೋ, ಅಪ್ಪಾ, ಅವ್ವಾ, ತಾಯೀ, ಕರಿಮಾಯೀ ಎಂದು ಜನ ಮರೆ ಎಲ್ಲಿದ್ದರಲ್ಲಿಗೆ ಹೋ ಎಂದು ಓಡತೊಡಗಿದರು. ಬಿದ್ದರೋ, ಎದ್ದರೋ, ತುಳಿದರೋ, ತುಳಿಸಿಕೊಂಡರೋ- ಬಟ್ಟೆ ಕಿತ್ತೆಸೆದರು, ಸೀರೆ ಬಿಚ್ಚಿ ಎಸೆದರು, ಹೊಯ್ಕೊಂಡರೂ, ಹೊಡಕೊಂಡರೂ ಹುಳು ಬಿಡದೆ ಅಟ್ಟಿಸಿಕೊಂಡು ಹೋಗಿ ಎಲ್ಲೆಂದರಲ್ಲಿ, ಒಬ್ಬೊಬರಿಗೆ ಸಾವಿರ ಸಾವಿರ ಮುತ್ತಿ, ಒಂದನ್ನು ಒರೆದರೆ ಅದರ ನೆತ್ತರಿನಿಂದ ಸಾವಿರ ಹುಟ್ಟಿ, ಜೀವದ ಪರಿವೆಯಿಲ್ಲದೆ ಹೆಂಗಸರು ಮಕ್ಕಳೆನ್ನದೆ, ಬಿದ್ದವರೆದ್ದವರೆನ್ನದೆ, ಹೊಕ್ಕಲ್ಲಿ ಬಿಡದೆ, ಬಿದ್ದಲ್ಲಿ ಸೋಲದೆ ಗೊಯೆಂದು, ಹುಯ್ಯೆಂದು ಕಚ್ಚಿದವು. +ಒಂದೆರಡು ಗಳಿಗೆಯಲ್ಲಿ ಗುಡಿ ಇದ್ದಕ್ಕಿದ್ದಂತೆ ಖಾಲಿಯಾಗಿ ದೂರದಲ್ಲಿ ಮಕ್ಕಳ ಅಳುವಿನ ದನಿ, ಊರನಾಯಿಗಳ ವಿಕಾರವಾಗಿ ಊಳಿಡುವ ದನಿ ಮಾತ್ರ ಕೇಳಿಸುತ್ತಿತ್ತು. +ಶಿಶು ಮಕ್ಕಳು ಕಡಿದಷ್ಟು ಕಡಿಯಲೆಂದು ಅಲ್ಲೇ ಕಂಬಳಿಗಳಲ್ಲಿ ಮುದ್ದೆಯಾಗಿ ಬಿದ್ದಿದ್ದರು. ಗುಡಸೀಕರನೂ ಒಬ್ಬನ ಕಂಬಳಿಯಲ್ಲಿ ಹಾಗೇ ಅವಿತಿದ್ದವನು ದೈವವಶಾತ್ ಎಂಬಂತೆ ದೇವಿಯ ಬಂಗಾರದ ಮುಖದ ನೆನಪಾಯಿತು. ಹುಳು ಇನ್ನೂ ಕಡಿಮೆಯಾಗಿರಲಿಲ್ಲ. ಕಡಿಮೆಯಾಗುವ ಲಕ್ಷಣಗಳೂ ಕಾಣಲಿಲ್ಲ. ಗೌಡ, ದತ್ತಪ್ಪ ಇವರೂ ಯಾರಿರಲಿಲ್ಲ. ಬಿದ್ದುಕೊಂಡೇ ಶಿಶುಮಕ್ಕಳನ್ನು ಉದ್ದೇಶಿಸಿ ದೇವಿಯ ಬಂಗಾರದ ಮುಖದ ಬಗ್ಗೆ ಹೇಳಿದ. ಆಗ ಅವರಿಗೂ ನೆನಪಾಯಿತು. ಏಳಿರೆಂದು ಒಂದಿಬ್ಬರನ್ನು ಎಬ್ಬಿಸಿ ಕಚ್ಚುತ್ತಿದ್ದ ಹುಳ ಗಮನಿಸದೆ ಗರ್ಭಗುಡಿಯೊಳಗೆ ಓಡಿಹೋಗಿ ತಾಯಿಯ ಬಂಗಾರದ ಮುಖವನ್ನು ಜೋರಿನಿಂದ ಕಿತ್ತುಕೊಂಡ. ಕಿತ್ತ ರಭಸಕ್ಕೆ, ತಾಯಿಯ ಇಡೀ ಮೂರ್ತಿ ರುಂಡವಿಲ್ಲದೆ ಬರೀ ಮುಂಡ ಮಾತ್ರ ಧೊಪ್ಪನೆ ನೆಲಕ್ಕೆ, ಬೆನ್ನು ಮೇಲಾಗಿ ಕೈಕಾಲೂರಿ ಬಿದ್ದುಬಿಟ್ಟಿತು. ಗುಡಿಯಲ್ಲಿದ್ದ ಫಲ ಚೆಲ್ಲಾಪಿಲ್ಲಿಯಾಗಿ ಬಿದ್ದವು. ಅಲ್ಲಿದ್ದವರ ಜೀವ ಹಾರಿಹೋದಂತಾಯ್ತು. ನಾಳೆ ಸರಿಪಡಿಸಿದರಾಯ್ತೆಂದು ಉಟ್ಟ ಧೋತ್ರದಲ್ಲಿ ತಾಯಿಯ ಮೂರ್ತಿ ಬಚ್ಚಿಟ್ಟುಕೊಂಡು ಆಭರಣಗಳನ್ನಾಯ್ದುಕೊಂಡು ಶಿಶು ಮಕ್ಕಳೊಂದಿಗೆ ಮನೆಗೆ ಓಡಿದ. ಓಡಿ ಬಂದವರಲ್ಲಿ ಬಸವರಾಜೂ ಕೂಡ ಒಬ್ಬನಾದದ್ದು ಮನೆಗೆ ಬಂದ ಮೇಲೆ ತಿಳಿಯಿತು. +ಎಲ್ಲರ ಮುಖ ಬಾತುಹೋಗಿ ಗುರುತು ಸಿಗದಾಗಿತ್ತು. ಬಸವರಾಜೂನ ಕಣ್ಣು, ಸೊಂಡಿ, ಕಿವಿ, ಎಲ್ಲಾ ಉಬ್ಬಿ ಬಾಯಿ ತೆರೆದಾಗ ಲಗಮವ್ವನ ಹಾಡಿನ ದೈತ್ಯನಂತೆ ಕಾಣುತ್ತಿದ್ದ. ಈಗ ಮಾತಾಡಿ ಪ್ರಯೋಜನವಿರಲಿಲ್ಲ. ಒಬ್ಬೊಬ್ಬರೂ ಮೈ ಪರಚಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದರು. ಒಳಗೆ ಗಿರಿಜಾ ಸಣ್ಣಗೆ ಅಳುತ್ತಿದ್ದಳು. ದೂರದಲ್ಲಿನ್ನೂ ಜನರ ನರಳಾಟ ಕೇಳಿಸುತ್ತಿತ್ತು. ನಾಯಿಗಳು ಊಳಿಡುತ್ತಿದ್ದವು. ಗೌಡ, ದತ್ತಪ್ಪ ಈಗ ಬಂದಾರು ಆಗ ಬಂದಾರೆಂದು ಬಂದೊಡನೆ ಈ ಮುಖ, ಆಭರಣಗಳನ್ನು ಅವರಿಗೊಪ್ಪಿಸಿ ಜವಾಬ್ದಾರಿ ತೀರಿಸಿಕೊಳ್ಳಬೇಕೆಂದು ದಾರಿನೋಡುತ್ತ, ಮೈಪರಚಿಕೊಳ್ಳುತ್ತ ಗುಡಸೀಕರ ಕೂತ. ಬಹಳ ಹೊತ್ತಾದರೂ ಯಾರೂ ಬರುವ ಸುಳಿವು ಕಾಣಲಿಲ್ಲ. ತಾವೆಲ್ಲಾ ಇಲ್ಲಿದ್ದರೆ ಅವರಿಗೆ ದೇವಿಯ ಮುಖ ಇಲ್ಲಿದ್ದುದು ತಿಳಿಯುವುದಾದರೂ ಹ್ಯಾಗೆ? ಬಂದಿದ್ದ ಶಿಶು ಮಕ್ಕಳನ್ನು ಗೌಡ, ದತ್ತಪ್ಪರ ಮನೆಗೆ ಕಳುಹಿಸಿದ. ಅವರ ಅಳುಮುಖ ನೋಡಿ ಗುಡಸೀಕರನ ಕರುಳು ಕಿತ್ತು ಬಾಯಿಗೆ ಬಂದಂತೆ ಗಂಟಲು ತುಂಬಿ ಬಂತು. ಬಸವರಾಜ ಇಲ್ಲದಿದ್ದರೆ ಅತ್ತುಬಿಡುತ್ತಿದ್ದನೋ ಏನೋ! ಅವ ಮಿಕಿಮಿಕಿ ಇವನನ್ನೇ ನೋಡುತ್ತಿದ್ದ. ಅವನಿಗೂ ಅನಿರೀಕ್ಷಿತ ಆಘಾತವಾದಂತಿತ್ತು. +ಒಂದು ತಾಸು ಹಾದಿ ನೋಡಿದ. ಯಾರೂ ತನ್ನ ಮನೆ ಕಡೆ ಬರುವ ಲಕ್ಷಣ ಕಾಣಿಸಲಿಲ್ಲ. ಗಡಿಯಾರ ನೋಡಿಕೊಂಡ. ಆಗಲೇ ಮೂರು ಗಂಟೆಯಾಗಿತ್ತು. ಬಸವರಾಜು ಕೂತಲ್ಲೇ ಮಲಗಿ ಗೊರಕೆಹೊಡೆಯುತ್ತಿದ್ದ. ದೇವಿಯ ಮುಖ ಕಣ್ಣು ತೆರೆದುಕೊಂಡು ಪಲ್ಲಂಗದ ಮೇಲೆ ಹಾಗೇ ಕೂತಿತ್ತು. ತಗೊಂಡು ಹೋಗಿ ತನ್ನ ದೇವರ ಮನೆಯ ತಿಜೋರಿಯಲ್ಲಿಟ್ಟು ಬೀಗ ಹಾಕಿಬಂದ. ಇನ್ನೂ ಯಾರೂ ಬರಲಿಲ್ಲ. +ಒತ್ತೊತ್ತಿ ಉಕ್ಕಿಬರುವ ಆಲೋಚನೆಗಳಿಂದ, ಚಿಂತೆಗಳಿಂದ ಅಳು ಬಂತು. ಗಳಗಳ ಕಣ್ಣೀರು ಸುರಿಸಿದ. ಸುಂದರಿ ಮಾಡಿದ್ದು ಬಸವರಾಜೂನ ಕುತಂತ್ರದಿಂದಲೇ ಎಂದು ಖಾತ್ರಿಯಾಗಿತ್ತು. ಅದೆಲ್ಲ ತನಗಾಗಿ ಇದ್ದೀತು. ಆದರೆ ಹಾಗೆ ಮಾಡಿದ್ದು ಸರಿಯಲ್ಲವೆಂದು ಅವನ ಅಭಿಪ್ರಾಯವಾಗಿತ್ತು. ತನ್ನೊಬ್ಬನ ಅಧಿಕಾರ ದಾಹಕ್ಕಾಗಿ ಇಡೀ ಹಳ್ಳಿಯ ಪುರಾಣವನ್ನು ಬಲಿಕೊಡುವುದೂ ಅವನಿಗೆ ಬೇಕಿರಲಿಲ್ಲ. ಆದರೆ ಎಲ್ಲ ಅನಿರೀಕ್ಷಿತವಾಗಿ ಘಟಿಸಿಬಿಟ್ಟಿತ್ತು. ಗೌಡ ತನಗಿಂತ ಬಹಳ ದೊಡ್ಡವನೆನ್ನಿಸಿತು. ಬೆಳಿಗ್ಗೆ ದೇವಿಯ ಮುಖ ಒಪ್ಪಿಸಿ ಕ್ಷಮಾಪಣೆ ಕೇಳಬೇಕೆಂದುಕೊಂಡ. ತಾನು ಎಲ್ ಎಲ್. ಬಿ. ಪಾಸಾದಾಗ ಅವ ಸಕ್ಕರೆ ಹಂಚಿದ್ದನ್ನು, ಎಲೆಕ್ಷನ್ ಇಲ್ಲದೆ ಪಂಚಾಯ್ತಿ ತನ್ನ ಕೈಗಿತ್ತದ್ದನ್ನು, ಇತ್ತೀಚೆಗೆ ತೋಟದಲ್ಲಿ ತನ್ನನ್ನು ಕಂಡು ಅಂಗಲಾಚಿದ್ದನ್ನು ನೆನೆದುಕೊಂಡ. ಗುಡಿಯಲ್ಲಿ ನಡೆದ ಇಂದಿನ ಗೊಂದಲ ನೆನಪಿಸಿಕೊಂಡ. ದೇವಿಯ ಆಳು ಮಕ್ಕಳ ಅಳುಮುಖ ನೆನಪಿಸಿಕೊಂಡ. ಜನ ತನ್ನನ್ನು ಕ್ಷಮಿಸಲಾರರೆನ್ನಿಸಿತು. ಪಶ್ಚತ್ತಾಪದಿಂದ ಸುಟ್ಟು ಸುಣ್ಣವಾದ. ಬಹುಶಃ ಪಶ್ಚತ್ತಾಪಂದಿಂದಲೋ ಏನೋ ಎದೆ ಸ್ವಲ್ಪ ಹಗುರವಾಯ್ತು. ಅವನಿಗೇ ಗೊತ್ತಿಲ್ಲದಂತೆ ಕಣ್ಣುಮುಚ್ಚಿ ನಿದ್ರೆಹೋದ. +ಬೆಳಿಗ್ಗೆ ಯಾರೋ ಚಿಟ್ಟನೆ ಚೀರಿದ್ದು ಕೇಳಿಸಿತು. ಎಚ್ಚರವಾಗಿ ಕಣ್ಣು ತೆರೆದ. ಕೆಳಗೆ ತನ್ನ ತಾಯಿ ಕಿರಿಚುತ್ತಿದ್ದಳು. ತಬ್ಬಿಬ್ಬಾಗಿ ಕೆಳಗಿಳಿದುಹೋದ. ಮುದುಕಿ ದೇವರ ಮನೆಕಡೆ ಕೈ ತೋರಿಸುತ್ತ ಎದೆ ಎದೆ ಬಡಿದುಕೊಂಡು ಅಳುತ್ತಿತ್ತು. ನೋಡಿದರೆ ತಿಜೋರಿಯ ಬಾಗಿಲು ತೆರೆದಿತ್ತು. ಒಳಗೆಲ್ಲ ಖಾಲಿ. +ಬಸವರಾಜು ಕರಿಮಾಯಿಯ ಬಂಗಾರದ ಮುಖದೊಂದಿಗೆ ಆಭರಣ, ಹಣ ತಗೊಂಡು ಗಿರಿಜೆಯನ್ನು ಓಡಿಸಿಕೊಂಡು ಪರಾರಿಯಾಗಿದ್ದ. +*** +ಅದಾಗಿ ಸರಿಯಾಗಿ ಒಂದು ತಿಂಗಳಾಯಿತು. ಇಂದು ಮುತ್ತೈದೆ ಹುಣ್ಣಿವೆ. ರಂಡಿ ಹುಣ್ಣಿವೆಯಂದು ವಿಧವೆಯಾದ ತಾಯಿ ಕರಿಮಾಯಿ ಒಂದು ತಿಂಗಳ ಅವಧಿಯಲ್ಲಿ ಏಳೇಳು ಶಿರದ ಈರೇಳು ಭುಜಗಳ ದೈತ್ಯರನ್ನೂ, ದೇವತೆಗಳನ್ನೂ ಸಂಹರಿಸಿ ಮಕ್ಕಳ ಹಾಗೂ ಗಂಡನ ಜೀವ ಮರಳಿ ಪಡೆದುಕೊಂಡು ಹಿಂದಿರುಗಿ ಬರುವ ದಿನ ಇಂದು. ತಾಯಿ ಬರಲೇ ಇಲ್ಲ. +ಧರಣಿಗೆ ದೊಡ್ಡವಳಾದ ಕರಿಮಾಯಿ ಆಡುವ ಮಕ್ಕಳಿಗೆ ತೂಗು ತೊಟ್ಟಿಲವಾದಳು. ಮುತ್ತೈದೆಯರಿಗೆ ಬಾಗಿನದ ಮರವಾದಳು. ಹಣ್ಣು ಮುದುಕರಿಗೆ ಊರುವ ಕೋಲಾದಳು. ಅನಾಥರಿಗೆ ಆಧಾರವಾದಳು. ಅವಳನ್ನು ನೆನೆದು ಕೈಲಿ ಹಿಡಿದ ಕೆಂಡ ಕೆಂದಾವರೆಯಾಯ್ತು. ಮಣ್ಣು ಚಿನ್ನವಾಯಿತು. ಹಿಟ್ಟು ಬೆಲ್ಲವಾಯಿತು. ಅಂಬಲಿ ಪಾಯಸವಾಯಿತು. ಜೋಪಡಿ ಅರಮನೆಯಾಯಿತು. ಇಂಥ ಮೂರು ಲೋಕಕ್ಕೆ ಅಧಿಕವಾದ ತಾಯಿ ಬರಲೇ ಇಲ್ಲ. +ಆಕಾಶ ಪಾತಾಳ ಒಂದು ಮಾಡಿ ಹುಡುಕಿಸಿದರೂ ಬಸವರಾಜು ಸಿಕ್ಕಲಿಲ್ಲ. ಪೋಲೀಸರಿಗೆ ಹೇಳಿ ಬಂದಿದ್ದರು. ಅವರಿಂದ ಈ ತನಕ ಯಾವ ಬಾತಮಿಯೂ ಬಂದಿರಲಿಲ್ಲ. ಆ ದಿನ ಗುಡಸೀಕರ ಬಂಗಾರದ ಮುಖ ತೆಗೆದಾಗ ರುಂಡವಿಲ್ಲದ ತಾಯಿಯ ಮೂರ್ತಿ ಬಕ್ಕ ಬರಲು ಕೈಕಾಲೂರಿ ಬಿದ್ದಿತ್ತು. ಅದನ್ನೆತ್ತಿ ಮುಂಡಕ್ಕೆ ಕಟ್ಟಿಗೆಯ ಮುಖವನ್ನಾದರೂ ಜೋಡಿಸಬೇಕಿತ್ತು. ಶುದ್ಧ ಮಾಡಿಲ್ಲದೆ ಅದಾಗದು. ತಾಯಿಯೇ ಬರದಿದ್ದರೆ ಶುದ್ಧ ಮಾಡಿಯಾದರೂ ಏನು ಪ್ರಯೋಜನ? ಹೆದರಿಕೆಯಲ್ಲಿ ಲಗಮವ್ವನೂ ಗುಡಿಯ ಕಡೆ ಸುಳಿದಿರಲಿಲ್ಲ. ಅವಳೇನಾದರೂ ಈ ಪರಿಯಲ್ಲಿರುವ ತಾಯಿಯನ್ನು ಕಂಡಿದ್ದರೆ, ದೈತ್ಯರು ತಾಯಿಯ ರುಂಡ ಚೆಂಡಾಡಿದರೆಂದು ಅತ್ತುಕೊಂಡು ಹಾಡುತ್ತಿದ್ದಳೋ ಏನೋ! ರಾತ್ರಿಯಾದೊಡನೆ ಒಬ್ಬಳೇ ಗುಡಿಸಲಲ್ಲಿ ಕೂತುಕೊಂಡು +ಎಲ್ಲೀ ಹೋದಳೆನ್ನಬ್ಯಾಡಿರೇ +ಕರಿಮಾಯಿ ನಿಮ್ಮ ಮನಸೀನಾಗ ಐದಾಳೆನ್ನಿರೇ! +ಎತ್ತ ಹೋದಳೆನ್ನಬ್ಯಾಡಿರೇ +ಕರಿಮಾಯಿ ನಿಮ್ಮ|ಚಿತ್ತದೊಳಗೈದಾಳೆನ್ನಿರೇ || +ಎಂದೇನೋ ಹಾಡುತ್ತಿದ್ದಳು, ಬಹುಶಃ ತನ್ನ ಸಮಾಧಾನಕ್ಕಾಗಿ. ಆದರೆ ಅವಳ ದನಿ ವಿಕಾರವಾಗಿ ದೂರದಲ್ಲಿದ್ದವರಿಗೆ ಅದೊಂದು ನೊಂದ ಪ್ರಾಣಿಯ ಆಳಾಪದಂತೆ ಕೇಳಿಸುತ್ತಿತ್ತು. +ದೇವರೇಸಿ ಆ ದಿನ ಎಲ್ಲರನ್ನೂ ತಪ್ಪಿಸಿ ಕಾಡಿನಲ್ಲಿ ಮಾಯವಾದ. ಮೂರು ದಿನಗಳ ತರುವಾಯ ನೇಣು ಹಾಕಿಕೊಂಡ ಅವನ ಹೆಣ ಸಿಕ್ಕಿತ್ತಷ್ಟೆ. ತಾಯಿ ಇನ್ನೊಬ್ಬ ದೇವರೇಸಿಯನ್ನಾರಿಸಿಕೊಂಡು ಅವನ ಮುಖಾಂತರ ಬಂಗಾರದ ಮುಖದ ಸುಳಿವು ಕೊಟ್ಟಾಳು. ಇಲ್ಲವೆ ಬಸವರಾಜನಿಗೆ ನೆತ್ತರು ಕಕ್ಕಿಸಿ ಅವ ಓಡಿಬಂದು ವಾಪಸ್ಸು ಕೊಡುವಂತೆ ಮಾಡ್ಯಾಳೆಂದು ಎಲ್ಲರ ನಂಬಿಕೆಯಾಗಿತ್ತು. ಅಂಥ ಸುದ್ದಿ ಈಗ ಬಂದೀತು, ಆಗ ಬಂದೀತು, ನಾಳೆ ಬಂದೀತೆಂದು ಕಾದರು. ಬೆಳಗಾವಿಯ ಪತ್ರಿಕೆಗಳಲ್ಲಿ “ಶಿವಾಪುರದಲ್ಲಿ ಭಾರೀ ದರೋಡೆ, ಚಿನ್ನದ ಮೂರ್ತಿಯ ನಾಪತ್ತೆ” ಎಂಬ ತಲೆಬರಹದಡಿಯಲ್ಲಿ ಸುದ್ದಿ ಪ್ರಕಟವಾಗಿತ್ತಷ್ಟೆ. ಇದನ್ನು ನೋಡಿ ಜನ ತಮ್ಮ ಆಪ್ತರು ಸತ್ತ ಸುದ್ದಿ ಕೇಳಿದಂತೆ ಹೋ ಎಂದು ಅತ್ತರು. ಊರಿಗೆ ಊರೇ ಸತ್ತವರ ಮನೆಯಂತೆ ಬಿಕೋ ಎನ್ನುತ್ತಿತ್ತು. +ಈಗ ಕರಿಮಾಯಿಯ ಹೆಸರು ಹೇಳುವುದಕ್ಕೇ ಹೆದರುತ್ತಿದ್ದರು. ಯಾರೊಬ್ಬರೂ ದನಿ ಎತ್ತರಿಸಿ ಮಾತಾಡುತ್ತಿರಲಿಲ್ಲ. ಊರ ಹೊರಗಿನಿಂದ ಯಾರು ಬಂದರೂ ಅವರನ್ನು ಮುತ್ತಿ ಸುದ್ದಿಯೇನೆಂದು ಕೇಳುತ್ತಿದ್ದರು. ಒಬ್ಬರ ಮುಖದಲ್ಲೂ ಕಳೆಯಿರಲಿಲ್ಲ. ಪ್ರತಿಯೊಬ್ಬರ ಹೊಕ್ಕಳ ಬಳಿ ದೊಡ್ಡ ಗಾಯವಾಗಿ ಅದರ ವೇದನೆಯಿಂದ ಅತ್ತು ಅತ್ತು ಈಗಷ್ಟೇ ಸುಮ್ಮನಾಗಿದ್ದವರಂತೆ ಅಥವಾ ಉಕ್ಕುವ ದುಃಖವನ್ನು ತುಟಿಕಚ್ಚಿ ತಡೆದಂತೆ ಕಾಣಿಸುತ್ತಿದ್ದರು. ಕಣ್ಣಂಚಿನಲ್ಲಿ ತಾಯಿ ಸಿಕ್ಕಳೆಂಬ ಆಸೆ ಮಾತ್ರ ಹೊಳೆಯುತ್ತಿತ್ತು. ದಿನೇ ದಿನೇ ಅದೂ ಬಾಡತೊಡಗಿತ್ತು. +ಗೌಡ ಈ ಒಂದು ತಿಂಗಳ ಅವಧಿಯಲ್ಲಿ ತೊಗಲು ಜೋತು ಹೆಗಲು ಬಿದ್ದ ಮೈ ಮೇಲಿನ ನೊಣಕ್ಕೂ ಬಾಲ ಎತ್ತಲಾಗದ ಮುದಿ ಎತ್ತಿನಂತಾಗಿದ್ದ. ಕೂತರೆ ಕೂತ, ನಿಂತರೆ ನಿಂತ, ದಾಡಿ ಮಾಡಿಸಿಕೊಂಡರೆ ಮಾಡಿಸಿಕೊಂಡ, ಇಲ್ಲದಿದ್ದರಿಲ್ಲ, ಮಾತುಕೊಟ್ಟ ಹೋದ ತಾಯಿ ಬಂದಿರಲಿಲ್ಲ. ಮಗ ಶಿವನಿಂಗ ಬಂದಿರಲಿಲ್ಲ. ಶಿವನಿಂಗನ ಸುದ್ದಿ ಬಂದಿರಲಿಲ್ಲ. ‘ಕರಿಮಾಯಿಗೆ ಬೇಡ, ಸಾವಿಗಾದರೂ ನನ್ನ ಮೇಲೆ ಕರುಣೆ ಬರಬಾರದೇ?’ ಎಂದುಕೊಂಡು ಕಾಲ ನೂಕುತ್ತಿದ್ದ. ಆದರೆ ಸಾವಿಗೆಲ್ಲಿಯ ಕರುಳು? ಇದ್ದೊಂದು ಜೊತೆ ಶಿವಸಾನಿಯೂ “ಶಿವನಿಂಗಾ” ಎಂದು ಕಣ್ಣುಮುಚ್ಚಿದಳು. ಇನ್ನು ತನ್ನ ಸರದಿ. ಈಗಲೋ ಆಗಲೋ “ತಾಯೀ” ಎನ್ನುವುದಕ್ಕೆ ಸಿದ್ಧನಾಗಿ ಕೂತ, ಮಗನ ತೋರುವ ತಾಯಿ ಕರಿಮಾಯಿ ಮುತ್ತೈದೆ ಹುಣ್ಣಿವೆಯಂದು ಉದ್ಭವಿಸುವಳೆಂಬ ನಂಬಿಕೆ ಮಾತ್ರ ಕಣ್ಣಲ್ಲಿತ್ತು. ಜೀವ ಕಣ್ಣಲ್ಲೇ ಇತ್ತು. ಸದಾ ಮೊಳಕಾಲಿಗೆ ಕೈಕಟ್ಟಿ ಗುಡಿಯ ದೀಪದ ಕಂಬದ ಕಟ್ಟೆಯ ಮೇಲೆ ಎದುರನ್ನೇ ನೋಡುತ್ತ ಕೂತಿರುತ್ತಿದ್ದ. ಅಗತ್ಯವಿದ್ದಾಗ ಮಾತ್ರ ಆಗೀಗ ಒಂದೆರಡು ಮಾತಾಡುತ್ತಿದ್ದ. ಮಾತಾಡಿದಾಗೊಮ್ಮೆ ಕಣ್ಣಿರು ಸುರಿಸುತ್ತಿದ್ದ. ಅವನನ್ನು ನೋಡಿದೊಡನೆ ಜನಕ್ಕೆ ಕಳೆದ ತಾಯಿಯ ನೆನಪಾಗಿ ದುಃಖ ಒತ್ತರಿಸಿ ಬರುತ್ತಿತ್ತು. ಅವನ ಗಂಟಲಲ್ಲಿ ಅನ್ನ ಇಳಿಸುವುದೇ ದತ್ತಪ್ಪನ ಸಮಸ್ಯೆಯಾಗಿತ್ತು. +ಈ ಒಂದು ತಿಂಗಳಲ್ಲಿ ಇನ್ನೂ ಏನೆಲ್ಲಾ ಆಯ್ತು ಊರಿನಲ್ಲಿ. ಈ ಮಧ್ಯೆ ಚಿಮಣಾ ತುಂಬು ಗರ್ಭಿಣಿಯಾಗಿ ಇದೇ ಊರಿಗೆ ಬಂದಿದ್ದಳು. ತಲೆ ಕೆದರಿ, ಮೈ ಸೊರಗಿ ಕಡ್ಡಿಯಾಗಿ ಬರೀ ಚಿಂದಿ ಬಟ್ಟೆಯ ಉಬ್ಬಿದ ಬಸುರು ಮಾತ್ರ ಮುಂಚಾಚಿ ತೋರುತ್ತಿದ್ದ ಅವಳನ್ನು ಗುರುತಿಸುವುದೇ ಕಷ್ಟವಾಗಿತ್ತು. ಗುರುತು ಸಿಕ್ಕೊಡನೆ ಊರವರೆಲ್ಲ ಅವಳ ಸುತ್ತು ಮುತ್ತಿದರು. ಅವಳಿಂದ ಪ್ರಯೋಜನವಾಗುವಂತಿರಲಿಲ್ಲ. ಬಾಯಿ ಹೋಗಿತ್ತು. ಸಾಲದ್ದಕ್ಕೆ ಹುಚ್ಚು ಬೇರೆ. ಬಸವರಾಜು ಅವಳಿಗೂ ಮೋಸ ಮಾಡಿದ್ದ. ಅವಳ ಮೇಲೆ ಸಿಡಿದೆದ್ದರೆ ಏನಾದೀತು? ತಾಯಿಯೇ ಅವಳಿಗೆ ಸರಿಯಾದ ಶಿಕ್ಷೆ ಕೊಟ್ಟಳೆಂದು ಸುಮ್ಮನಾದರು. ತನ್ನ ಗುಡಿಸಲ ಮುಂದೆ ಸುಮ್ಮನೆ ನಾಯಿಯಂತೆ ಊಳಿಡುತ್ತ ಕೂರುತ್ತಿದ್ದಳು. ಯಾರಾದರೂ ಧರ್ಮಾತ್ಮರು ತುತ್ತು ಕೊಟ್ಟರೆ ತಿನ್ನುತ್ತಿದ್ದಳು. ಇಲ್ಲದಿದ್ದರೆ ಅಲ್ಲೇ ಬಿದ್ದಿರುತ್ತಿದ್ದಳು. ಅವಳಿಗೆ ಕರುಣೆ ತೋರಿಸುವಷ್ಟು ನೆಮ್ಮದಿ ಜನಕ್ಕಿರಲಿಲ್ಲ. ಅವರಿಗ್ಯಾರು ಕರುಣೆ ತೋರಿಸುತ್ತಿದ್ದರು? +ಇದ್ದುದರಲ್ಲಿ ಈ ದಿನವೇ ಗೌಡ ಸ್ವಲ್ಪ ಲವಲವಿಕೆಯಿಂದಿದ್ದ. ಇಂದು ಮುತ್ತೈದೆ ಹುಣ್ಣಿವೆಯಾದ್ದರಿಂದ ತಾಯಿ ತಿರುಗಿ ಬಂದು ಗದ್ದಿದೆಗೊಳ್ಳುವ ದಿನ. ತಾಯಿ ಖಂಡಿತ ಈ ದಿನ ಬರುತ್ತಾಳೆ. ಇಲ್ಲವೆ ಯಾರದಾದರೂ ಮೈ ತುಂಬಿ ತಾನಿರುವ ಠಿಕಾಣವನ್ನಾದರೂ ತಿಳಿಸುತ್ತಾಳೆ. ಶಿವನಿಂಗನನ್ನೂ ಕರೆ ತರುತ್ತಾಳೆಂದು ಬಲವಂತವಾಗಿ ನಂಬಿದ್ದ. ಮುಂಜಾನೆಯಿಂದಲೇ ಗುಡಿಯ ದೀಪ ಕಂಬದ ಮೇಲೆ ಕೂತಿದ್ದ. ಅವನೊಟ್ಟಿಗೆ ದತ್ತಪ್ಪನೂ ಕೂತಿದ್ದ. +ಗುಡಿಯ ಕಡೆ ಯಾರು ಸುಳಿದರೂ ಇಲ್ಲ ಮೈ ತುಂಬಿ ಬರುತಾರೆ, ಇಲ್ಲ, ಮೈ ತುಂಬಿದ ಸುದ್ದಿಯನ್ನಾದರೂ ತರುತ್ತಾರೆಂದು ನೋಡುತ್ತಿದ್ದರು. ಕೂಳು, ನೀರು ಮರೆತು, ದಿಕ್ಕುದಿಕ್ಕುಗಳನ್ನು ಹಡ್ಡಿ ಹಡ್ಡಿ ನೋಡಿದರು. ಕಣ್ಣುಗಳಲ್ಲಿ ಆಸೆ ಹೊತ್ತಿಸಿಕೊಂಡು ಹುಡುಕಿದರು. ಸಂಜೆಯಾಗಿ ದನಕರು ಮನೆಗೆ ಬಂದವು. ಮುಳುಗುವ ಸೂರ್ಯನೊಂದಿಗೆ ಇವರ ಕಣ್ಣೊಳಗಿನ ಬಳಕೂ ನಂದಿ ಕಮ್ಮಿಯಾಯಿತು. ಮೂಡಣದಲ್ಲಿ ಚಂದ್ರ ಮೂಡಿದ. ತಾಯಿ ಬರುವ ಸಮಯ ಮೀರಿತು. ಬೆಳದಿಂಗಳು ಹೆಚ್ಚಾದಂತೆ ಬೂದಿ ಬಣ್ಣಕ್ಕೆ ತಿರುಗಿದ ಊರು ಬಿಳಚಿಕೊಂಡು ಕ್ಷಯರೋಗಿಯಂತೆ ಕಾಣುತ್ತಿತ್ತು. ದತ್ತಪ್ಪ ದೊಡ್ಡದಾಗಿ ನಿಟ್ಟುಸಿರು ಬಿಟ್ಟು +“ಏಳ ಗೌಡಾ” +ಎನ್ನುತ್ತ ಗೌಡನ ಭುಜದ ಮೇಲೆ ಕೈಯಿಟ್ಟ. ಗೌಡ ಸುಮ್ಮನೆ ಎದ್ದ. ಎಲ್ಲಿದ್ದರೂ ಯಾವುದೋ ಮಾಯೆಯಿಂದ ಮುತ್ತೈದೆ ಹುಣ್ಣಿವೆ ದಿನ ಅವತರಿಸಿ ಬರುತ್ತೇನೆಂದ ತಾಯಿ ಮಾತಿಗೆ ತಪ್ಪಿದಳು! +ಬರುತ್ತಿರುವಾಗ ದಾರಿಯಲ್ಲಿ ದತ್ತಪ್ಪ ಒಮ್ಮೆಲೆ ಸ್ಪೂರ್ತಿಗೊಂಡಂತೆ “ಅಂದ್ಹಾಂಗ ಗೌಡಾ, ಲಗಮಿ ಯಕೋ ಬರಲಿಲ್ಲಲ್ಲ” ಎಂದ. ತಕ್ಷಣ ಗೌಡನ ಕಣ್ಣುಗಳು ಹೊಳೆದವು. ಹೌಂದಲ್ಲ ಎನಿಸಿತು. ಯಾರಿಗೆ ಗೊತ್ತು, ಅವಳ ಕೇರಿಯಲ್ಲಿ ತಾಯಿ ಅವತರಿಸಿರಬಹುದು. “ಬಾ ನೋಡೋಣ”ವೆಂದು ಹೊಲಗೇರಿಯ ಕಡೆ ಧಾವಿಸಿದರು. +ಚಿಮಣಾಳ ಗುಡಿಸಲಲ್ಲಿ ಹೆಂಗಸರು ಕಿಕ್ಕಿರಿದು ನೆರೆದಿದ್ದರು. ತಡೆಯಲಾರದೆ ಇಬ್ಬರೂ ಓಡಿದರು. ಒಳಗೆ ಹೆಂಗಸರು ಸಡಗರ ಮಾಡುತ್ತಿದ್ದರು. ಲಗಮವ್ವನ ದನಿ ಕೇಳಿಸುತ್ತಿತ್ತು. ಹೆಂಗಸರು ಕಲಕಲ ಮಾತಾಡಿಕೊಳ್ಳುತ್ತಿದ್ದರು. ಏನೆಂದು ಕೇಳಿದರೆ ಒಬ್ಬಳಿಂದ ಚಿಮಣಾ ಹೆಣ್ಣು ಹಡೆದಿರುವಳೆಂದು ತಿಳಿಯಿತು. ಸಂಭ್ರಮದಲ್ಲಿದ್ದ ಒಳಗಿನವರಿಗೆ ಹೊರಗೆ ಗೌಡ, ದತ್ತಪ್ಪ ಬಂದದ್ದು ಗೊತ್ತಾಗಲೇ ಇಲ್ಲ. ಒಬ್ಬಳು “ಏ ಏ, ಇದರ ಮೂಗ ಥೇಟ್ ಗುಡಿಸ್ಯಾನ್ಹಾಂಗ ಐತಿ ನೋಡ” ಎಂದಳು. ಲಗಮವ್ವ “ಅಲ್ಲ ತಗಿ, ಇದರ ಮೂಗ, ಬಾಯಿ, ಚೇರಾಪಟ್ಟಿ ಎಲ್ಲಾ ಥೇಟ್ ಗೌಡನ್ಹಾಂಗ! ಗೌಡನ ರೂಪದಾಗ ಎದ್ದಿ ತೆಗಧಾಂಗೇತಿ” ಎಂದಳು. ಗೌಡ ನಿರಾಸೆಯಿಂದ ಮನೆ ಕಡೆ ಹೆಜ್ಜೆ ಹಾಕಿದ. ಆ ನಿರಾಸೆಯಲ್ಲೂ ದತ್ತಪ್ಪನ ತುಟಿಯಲ್ಲಿ ಮಂದಹಾಸ ಸುಳಿದಾಡಿತು. +ಇಲ್ಲೀಗಿ ಹರ ಹರ +ಇಲ್ಲೀಗಿ ಶಿವ ಶಿವ +ಇಲ್ಲೀಗಿ ನಮ ಕತಿ ಸಂಪೂರ್ಣವಾಯ್ತು || +ಇಲ್ಲೀಗಿ ಹರ ಹರ ಇಲ್ಲೀಗಿ ಶಿವ ಶಿವ +ಇಲ್ಲೀಗಿ ನಮ ಕತಿ ಸಂಪೂರ್ಣವಯ್ಯಾ || +***** +ಮುಗಿಯಿತು +ಪೋಸ್ಟ್‌ಮಾರ್ಟಂ ರಿಪೋರ್ಟ್ ಮೇಲೆ ಎರಡನೆಯ ಬಾರಿಗೆ ಕಣ್ಣಾಡಿಸಿದ ಸಬ್ ಇನ್ಸ್‌ಪೆಕ್ಟರ್ ಟೈಟಸ್. ಎಲ್ಲವೂ ತಾನು ಊಹಿಸಿದಂತೇ ಇತ್ತು. ದೇವಕಿಯ ಕೊಲೆ ಉಸಿರು ಕಟ್ಟಿಸುವಿಕೆಯಿಂದಾಗಿತ್ತು. ಕುತ್ತಿಗೆಯನ್ನು ನೈಲಾನ್ ಹುರಿಯಿಂದ ಬಿಗಿಯುವುದರ ಜತೆಗೇ ಮೂಗಿನ ಮೇಲೆ ಯಾವುದೋ […] +ಮಹಾ ರೂಪವತಿಯೆಂದರೆ ಚಂದ್ರಿ. ಈ ನೂರು ಮೆಲಿ ವಿಸ್ತೀರ್ಣದಲ್ಲಿ ಅಂಥದೊಂದು ಪುತ್ತಳಿಯನ್ನು ತೋರಿಸಿ. ಸೆ ಎಂದುಬಿಡುತ್ತೇನೆ. ದುರ್ಗಾಭಟ್ಟನಿಗೂ ಅಲ್ಪಸ್ವಲ್ಪ ರಸಿಕತೆ ಇಲ್ಲವೆಂದಲ್ಲ. ಆದರೆ ಅಲ್ಲೊಂದು ಇಲ್ಲೊಂದು ಶೆಟ್ಟರ ಹೆಂಗಸಿನ ಮೊಲೆಯ ಮೇಲೆ ಕೆಯಾಡಿಸೋದಕ್ಕಿಂತ ಹೆಚ್ಚಿನ […] +ಚನ್ನವೀರಯ್ಯ ಸುಮಾರು ಮುವ್ವತ್ತು ವರ್ಷ ವಯಸ್ಸಿನ ಶ್ರೀಮಂತ. ಅವನ ವೃತ್ತಿ ಕಂಟ್ರ್ಯಾಕ್ಟು. ಊರಿನ ಮುನಿಸಿಪಾಲಿಟಿಯ ಮೆಂಬರ್. ಪ್ರೆಸಿಡೆಂಟಾಗುವ ಸನ್ನಾಹದಲ್ಲಿದ್ದ. ಊರಿನ ರೋಟರಿ ಕ್ಲಬ್ಬಿನ ಸದಸ್ಯನೂ ಆಗಿದ್ದ ಅವನಿಗೆ ತಾನು ರೋಟರಿ ಗವರ್ನರ್ ಆಗಿ ಅಮೆರಿಕಾಕ್ಕೆ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_184.txt b/Kannada Sahitya/article_184.txt new file mode 100644 index 0000000000000000000000000000000000000000..34d5648da38ad2bbe0cd9ee2d72f5345a82ab837 --- /dev/null +++ b/Kannada Sahitya/article_184.txt @@ -0,0 +1,49 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ +ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ +ನೈರಾಶ್ಯದಭ್ರಂಗಳು; +ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ +ಬೆಳಕೆಲ್ಲಿ? ಬರಿಯ ಇರುಳು! +ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ +ಕಾಳುಗೆಟ್ಟೋಡಿಸುವವು; +ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು +ದಂಡೆಗಪ್ಪಳಿಸುತಿಹವು. +ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು +ತಾಂಡವಂಗೈಯುತಿಹವು, +ಎದೆಯಟ್ಟ ನಿರಿನಿಟಿಲು, ಹೂಗಿಡಕೆ ಬರಸಿಡಿಲು +ಬಡಿಯುತಿರೆ ಬಾಳ್ವುದೆಂತು? +೨ +ಸಂಜೆಯಾಗಸದಲ್ಲಿ ಹೊಂಬೆಳಕು ಚಿಮುಕಿರಲು +ಕಾರ್ಮೋಡ ಹೂವಾಗದೆ? +ಜೀವನದ ಕಣದಲ್ಲಿ ಆ ಬೆಳಕು ಮೂಡಿಬರೆ +ಹೆದ್ದಾರಿ ತೋರಬಹುದೆ? +ಉತ್ತಿಬಿತ್ತಿದ ಬೀಜ ಮೊಳಕೆಯಲಿ ಹೊರಬಂದು +ಚಿಗುರಾಗಿ ಚಲ್ವರಿದಿರೆ, +ಹೂವಾಗಿ ಮಿಡಿಯಾಗಿ ಪಾಡಾಗಿ ಹಣ್ಣಾಗೆ +ಕಷ್ಟವೆನಿತನುಭವಿಸಿರೆ! +೩ +ವಿಧಿಮಾಟದೇರಾಟ ಹೋರಾಟಗಳಿಗೆಲ್ಲ +ಎದೆಗೊಟ್ಟು ನಿಲ್ಲು ಜೀವ; +ಕಲ್ಲು ಕಲ್ಲಾಗಲೆದೆ ಸಂಕಷ್ಟ ಸಂತತಿಗೆ +ಅಣಿಗೊಂಡ ವಜ್ರಾಯುಧ. +ಕುದಿಕುದಿದು ಬೆಂದು ಬೇಗುದಿಗೊಂಡ ನಿನ್ನಾಸೆ +ಹೊರಚೆಲ್ಲಿ ಹರಿಯದಿರಲಿ; +ಬಂದಡರಿದೆಡರು ತೊಡರುಗಳೆಲ್ಲ ಹೊಸಹೊಸದು +ಬತ್ತಿಗೈ ಸೊಡರಾಗಲಿ. +ನಿನ್ನೊಡಲ ಕಡಲ ಕಡೆ, ಬರುವಮೃತ ವಿಷಗಳನು +ಜೊತೆಯಾಗಿ ಕುಡಿಯುತ್ತಿರಲು, +ಬರಿಯ ವಿಷ ಕಾರದಿರು, ಲೋಕ ತಲ್ಲಣಿಸೀತು- +ನಂಜುಂಡನಾಗಿ ಬಾಳು. +***** +ನಿನಗೆ ಇದು ತಿಳಿಯುವುದಿಲ್ಲ ಸುಮ್ಮನಿರು ನೀನು ಎಂದನ್ನುತ್ತಲೇ ಅಪ್ಪ ಸತ್ತ ಅಜ್ಜ ಸತ್ತ…… ನೀನಿನ್ನೂ ಮಗು ಅನ್ನುತ್ತಾ ಎಲ್ಲರೂ ಸತ್ತರು ನಾನೊಬ್ಬ ಉಳಿದೆ ನನಗದು ತಿಳಿಯಲಿಲ್ಲ. ಬೇಡವೇ ಬೇಡ ಎಂದು ನಾನೂ ಸಾಯಲಿಲ್ಲ… ತಪ್ಪಿ […] +ನೀನು ರಾಕ್ ಹಕ್ಕಿಯೆಂದು ನನಗೆ ಗೊತ್ತಾಗಿತ್ತು. ನಮ್ಮನ್ನು ಕೊಂಡೊಯ್ದು ಇತಿಹಾಸದ ಕುಹಕದೃಷ್ಟಿ ಬೀಳದಲ್ಲಿ ಜೋಪಾನ ಬಚ್ಚಿಟ್ಟು ಬಲಿತು ನಡೆವನಕೆ ಕಾಪಿಟ್ಟು ಕ್ಷಿತಿಜದ ಖಜಾನೆಗಳ ಯಜಮಾನರಾಗಿ ಹೊರಬರುವ ಪವಾಡ ಮಾಡುವಿಯೆಂದು ತಿಳಿದಿತ್ತು. ಹಳೆಜಿಡ್ಡು ಕಳೆದ ಹೊಸ […] +ಕಣ್ಣಂತೆ, ಅಲ್ಲೊಂದು ಹರಿಯೊ ನದಿಯಂತೆ ಬಣ್ಣ ಬಣ್ಣದ ಕನಸು ಮೀನಂತೆ ಕಪ್ಪು ನದಿಯ ಎದೆಯಲ್ಲಿ ಫಳ ಫಳ ನಕ್ಷತ್ರ ಜಾತ್ರೆ ತಾರೆ ಸಹಿತ ಧುಮುಕಿ ನದಿ ಸೇರಿದ್ದಾನೆ ಚಂದ್ರ ಆಕಾಶಕ್ಕೇ ಹುಟ್ಟು ಕೊಟ್ಟು ಚಂದ್ರನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_185.txt b/Kannada Sahitya/article_185.txt new file mode 100644 index 0000000000000000000000000000000000000000..f61adab7c7520728628a6318b6f0cde2a82e22e5 --- /dev/null +++ b/Kannada Sahitya/article_185.txt @@ -0,0 +1,31 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಉತ್ತರ ಕರ್ನಾಟಕದ ಖ್ಯಾತ ನಾಟಕಕಾರರಾದ ಜಿ.ಬಿ. ಜೋಶಿಯವರ ಆ ಊರು-ಈ ಊರು ನಾಟಕ ಓದಿದ್ದವರಿಗೆ, ನೋಡಿದ್ದವರಿಗೆ ಅದೇ ವಸ್ತುವನ್ನು ಪಾತ್ರಗಳನ್ನು ಒಳಗೊಂಡ ಮೂಕಬಲಿ ಅದಕ್ಕೂ ಹೆಚ್ಚು ಪ್ರಿಯವಾಗಿರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. +ಕದಡಿದ ನೀರು, ನಾನೇ ಬಿಜ್ಜಳ, ಸತ್ತವರ ನೆರಳು, ಪರಿವಾರದವರು, ಆ ಊರು ಈ ಊರು, ಮೂಕಬಲಿ ನಾಟಕಗಳ ಮುಖಾಂತರ ಕನ್ನಡ ನಾಟಕ ಲೋಕ ಶ್ರೀಮಂತ ಗೊಳಿಸಿದವರು ಜಿ.ಬಿ. +ಮನೋಹರ ಗ್ರಂಥಮಾಲೆಯ ರೂವಾರಿಗಳಾದ ಜಿಬಿ ನಮ್ಮನ್ನಗಲಿ ಡಿಸೆಂಬರ್‍ ತಿಂಗಳಿಗೆ ಎಂಟುವರ್ಷ ಸಲ್ಲುತ್ತದೆ. ಈ ಸಂದರ್ಭದಲ್ಲಿ (ಈ ಹಿರಿಯ ಲೇಖಕರಿಗೆ ತಮ್ಮ ನಮನ ಸೂಚಿಸಲು ಅಭಿನಯತರಂಗ ೨೦೦೨-೦೩ನೇ ಸಾಲಿನ ವಿದ್ಯಾರ್ಥಿಗಳ ಮೇಜರ್‍ ಪ್ರೊಡಕ್ಷನ್ ಆಗಿ ಮೂಕಬಲಿ ಆ.೨೨-೨೫ ರಂದು ಕಲಾಕ್ಷೇತ್ರದಲ್ಲಿ ಪ್ರಮೋದ ಶಿಗ್ಗಾಂವ್ ನಿರ್ದೇಶನದಲ್ಲಿ ರಂಗಕ್ಕೆ ಬರುತ್ತಿದೆ. ರಂಗಾಯಣದ ‘ಟಿಪ್ಪುವಿನ ಕನಸು’ಗಳಿಗೆ ಕಲಾತ್ಮಕ ಕುಸುರು ಮಿಂಚುವಂತೆ ಮಾಡಿ, ನಾಗಾಭರಣರ ‘ನೀಲ’ ಚಿತ್ರಕ್ಕೆ ಸೊಗಸಾದ ವಸ್ತ್ರವಿನ್ಯಾಸದಿಂದ ಹೆಸರಾದ ಪ್ರಮೋದ್ “ಸೆಜ್ಜುವಾನ್ ನಗರದ ಸಾಧ್ವಿ” ನಿರ್ದೇಶಿಸಿಯೂ ಹೆಸರಾದವರು. ಈಗ ಜಿ.ಬಿ. ಜೋಶಿಯವರ ಮೂಕಬಲಿ ವಿನ್ಯಾಸದ ಹಾಗೂ ನಿರ್ದೇಶನದ ಹೊಣೆ ಹೊತ್ತು ವಿಭಿನ್ನ ರೀತಿಯಲ್ಲಿ ವ್ಯಾಖ್ಯಾನಿಸ ಹೊರಟಿದ್ದಾರೆ. ಇದು ನಾಟಕದ ಸೀನ್… +ಈಗ ಸಿನಿಮಾ ಸೀನಿಗೆ ಬರೋಣ… ಈವರೆಗೆ ರೀಮೇಕ್ ಚಿತ್ರಗಳಿಂದಲೇ ತಮಗೆ ಮೋಕ್ಷ, ಅದೊಂದೇ ತಮ್ಮ ಅದೃಷ್ಟದ ಬಾಗಿಲು ತೆರೆಯುವ ಮಹಾದ್ವಾರ ಎಂದುಕೊಂಡಿದ್ದವರು ಈಗ ಕನ್ನಡ ಕತೆ, ಕಾದಂಬರಿ, ನಾಟಕಗಳತ್ತ ತಮ್ಮ ದೃಷ್ಟಿ ಹರಿಸುತ್ತಿದ್ದಾರೆ ಚಿತ್ರ ನಿರ್ಮಾಪಕ ನಿರ್ದೇಶಕರು ಎಂಬುದು ಶುಭ ಸೂಚನೆ. +ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕುಂ. ವೀರಭದ್ರಪ್ಪನವರ ‘ಬೇಲಿ ಮತ್ತು ಹೊಲ’ ಪೂರ್ಣಚಂದ್ರ ತೇಜಸ್ವಿಯವರ ‘ಜುಗಾರಿ ಕ್ರಾಸ್’, ಶಿವರಾಮ ಕಾರಂತರ ಕಾದಂಬರಿಗಳು ಚಿತ್ರವಾಗಲಿದೆ ಎಂಬ ಸುದ್ದಿ ಅಲೆಅಲೆಯಾಗಿ ತೇಲಿಬರುತ್ತಿದೆ. +ಗಿರೀಶ್ ಕಾಸರವಳ್ಳಿ, ನಾ. ಡಿಸೋಜರವರ ‘ದ್ವೀಪ’ ಚಿತ್ರೀಕರಣ ನಡೆಸಿದ್ದಾರೆ. ಜನಪ್ರಿಯ ನಟೀಮಣಿ ಸೌಂದರ್ಯ ಅದರ ನಿಮಾಪಕಿಯಾಗಿದ್ದಾರೆ. +ಕೆ.ಸಿ.ಎನ್. ಚಂದ್ರು ಅವರಿಗೆ ಬಹುದಿನದಿಂದ ‘ಕಿಂಗ್ ಲಿಯರ್‍’ ಸಿನಿಮಾ ಮಾಡುವ ಕನಸಿತ್ತು. ಆದರೆ, ಸಿನಿರಂಗದ ಏಳುಬೀಳುಗಳನ್ನು, ಬಂದ ಬಹಳಷ್ಟು ನಿರೀಕ್ಷಿತ ಚಿತ್ರಗಳು ಅಡ್ರೆಸ್ಸಿಗಿಲ್ಲದೆ ಹೋದುದನ್ನು ಕಂಡದ್ದರಿಂದಲೋ ಏನೋ ಈ ವ್ಯವಹಾರ ಚತುರ ಅದನ್ನು ಟೀವಿ ಮೆಗಾ ಧಾರಾವಾಹಿ ಮಾಡುವ ಸಿದ್ಧತೆ ನಡೆಸಿದ್ದಾರೆ. +ಇವೆಲ್ಲ ಸದಭಿರುಚಿಗೆ ಕನ್ನಡಿ ಹಿಡಿವ ಪ್ರಯತ್ನಗಳು ಎಂಬ ಕಾರಣಕ್ಕೆ ಸಂತಸವೆ. ಆದರೆ, ದುಃಖವಾಗುವುದು ಎಲ್ಲಿ ಎಂದರೆ ಕತೆ, ಕಾದಂಬರಿ, ನಾಟಕಗಳನ್ನು ಚಿತ್ರ ಮಾಡುವಾಗ ಹಲವು ನಿರ್ಮಾಪಕ-ನಿರ್ದೇಶಕರು ನಾನಾ ಮಸಾಲೆಗಳನ್ನು ಸೇರಿಸಿ ಒಂದು ಡಬ್ಬಾ ಫಿಲಂ ತೆರೆಗರ್ಪಿಸಿ ಬಿಡುತ್ತಾರೆ. +ಅದಕ್ಕೊಂದು ಉದಾಹರಣೆ ಎಂದರೆ ‘ಅಮ್ಮ ರಿಟೈರಾಗ್ತಾಳೆ ನಾಟಕ’ ನೂರಾರು ಬಾರಿ ಬೇರೆ ಬೇರೆ ಭಾಷೆಗಳಲ್ಲಿ ಮಾತ್ರವಲ್ಲ ಕನ್ನಡ ರಂಗಭೂಮಿಯಲ್ಲೂ ಹೆಸರಾದ ನಾಟಕ ‘ಅಮ್ಮ’ ಎಂಬ ಹೆಸರಿನಲ್ಲಿ ತೆರೆಗೆ ಬರುತ್ತದೆ ಎಂದಾಗ ಹಿರಿಹಿರಿ ಹಿಗ್ಗಿದವರು ಬಹುಮಂದಿ. ಲಕ್ಷ್ಮಿ ಮತ್ತು ಅನಂತನಾಗ್ ಮತ್ತೆ ಈ ಚಿತ್ರದಲ್ಲಿ ಬಹಳ ವರ್ಷಗಳ ನಂತರ ಅಭಿನಯಿಸುತ್ತಿರುವರೆಂಬ ಅಂಶ ಭಾರೀ ಸುದ್ದಿಯಾಗದಾಗ ನಿರ್ದೇಶಕ ಡಿ.ರಾಜೇಂದ್ರಬಾಬು ಇದರಿಂದ ಮತ್ತಷ್ಟು ಹೆಸರಾದಾರೆಂದು ಆಶಿಸಿದರು ಚಿತ್ರರಸಿಕರು ಹಾಗೂ ರಂಗಾಭಿಮಾನಿಗಳು. ಆದರೆ, ಡಿ. ರಾಜೇಂದ್ರಬಾಬು ಆ ನಾಟಕದ ಹೊಳಹೂ ಸಿಗದಂತೆ ಮಾಡಿ, ಹಾಸ್ಯಕ್ಕೆ ತಿಲಾಂಜಲಿಯಿತ್ತು ನಾಟಕದಲ್ಲಿ ಇಲ್ಲದ ‘ಕಿಡ್ನಿ ದಾನ’ ದಿಂದ ಸೆಂಟಿಮೆಂಟನ್ನು ಪ್ಲೇಮಾಡಲು ಹೋಗಿ ಮುಗ್ಗರಿಸಿದರು. +ಈ ಮಾತನ್ನು ಮತ್ತೆ ಇಲ್ಲಿ ಹೇಳಲು ಕಾರಣವೂ ಉಂಟು. ಕಳೆದ ವಾರ ಬಾಬುಗೆ ಫೋನ್ ಮಾಡಿ ಈ ಬಾರಿ ಪ್ರಮೋದ್ ಶಿಗ್ಗಾಂವ್ ಜಿ.ಬಿ. ಜೋಶಿವರ ಆ ಊರು ಈ ಊರು ಅರ್ಥಾತ್ ಮೂಕಬಲಿ ನಿರ್ದೇಶನ ಮಾಡುತ್ತಿದ್ದಾರೆ ಎಂದ ಕೂಡಲೇ “ಅರೆರೇ ಅದನ್ನು ನಾನು ಫಿಲಂ ಮಾಡಬೇಕು ಅಂತ ಬಹಳ ಹಿಂದೆಯೇ ರೈಟ್ಸ್ ತೆಗೆದುಕೊಂಡಿರುವೆ. ಚಿತ್ರ ಮಾಡೇ ಮಾಡ್ತೀನಿ-ಖಂಡಿತಾ ನಾಟಕಕ್ಕೆ ಬರ್ತೇನೆ” ಎಂದರು. +ಆ ಕ್ಷಣಕ್ಕೆ ನನಗೂ ಸಂತೋಷವಾಯಿತು. ಆದರೆ, ನಾನಾಗ ಅಮ್ಮ ನೋಡಿರಲಿಲ್ಲ ‘ಅಮ್ಮ’ ನೋಡಿದ ನಂತರ ಮೂಕಬಲಿಯೂ ಹಾಗೆಲ್ಲಾದೀತೋ ಎಂದು ಗಾಬರಿಯಾಯಿತು. +ಇಂಥ ಕೃತಿ ಚಿತ್ರಮಾಡುವಾಗ ತುಂಬ ಎಚ್ಚರವಹಿಸಿ ಎಂಬ ಮಾತು ಹೇಳುತ್ತಾ, ಲೇಖಕ-ವಿಮರ್ಶಕ, ಪ್ರೊಫೆಸರ್‍ ಕಿ.ರಂ.ನಾಗರಾಜ್ ಆ ಊರು-ಈ ಊರು ಯಾವ್ಯಾವ ರೀತಿ ವ್ಯಾಖ್ಯಾನಿಸಬಹುದು ಎಂದು ಹೇಳಿದ ಅಂಶ ಟಿಪ್ಪಣಿಸುತ್ತಿರುವೆ. +ಒಳ್ಳೆಯವರು ಕೆಟ್ಟವರ ನಡುವಿನ ಆದಾನ-ಪ್ರದಾನ ಆ ಊರು-ಈ ಊರು ಒಂದು ಗ್ರಾಮದ ಕತೆಯೂ ಹೌದು. ಸಾಂಪ್ರದಾಯಿಕ ಕಥಾನಕವಾದರೂ ಹೇಳಿರುವ ಕ್ರಮದಿಂದ ನಾಟಕಕ್ಕೆ ಮಹತ್ವ ಬಂದಿದೆ. ನಾಟಕದಲ್ಲಿ ಗಾಂಭೀರ್ಯ ಮಾತ್ರವಲ್ಲ ಟ್ರಾಜಿಕ್ ಟೋನ್ ಸಹಾ ಇದೆ ಎಂಬುದು ಬಹು ಮುಖ್ಯ. +ಮಾನವೀಯತೆ ನಾಡವಾಗಿದೆ ಎಂಬುದನ್ನು ಕತೆ ಹೇಳುತ್ತದೆ. ಇಲ್ಲಿ ಸ್ತ್ರೀಪಾತ್ರಗಳ ಬಲಿ ಮೌನವಾಗಿ ನಡೆಯುತ್ತದೆ. ಇಲ್ಲಿರುವುದು ಒಂದು ಮುಗ್ದ ಜಗತ್ತು ಇನ್ನೊಂದು ಕಿಲಾಡಿ ಜಗತ್ತು. ದರ್ಪ ತೋರಲು ಮುಗ್ದ ಜನರ ಮೇಲೆ ಆಕ್ರಮಣ. ಹಾಗೆ ನೋಡಿದರೆ ಇದೊಂದು ರೀತಿ ಗಾಂಧಿಯನ್ ಪ್ಲೇ. ಪವರ್‍ ಪಾಲಿಟಿಕ್ಸ್‌ನಿಂದ ಏನೇನು ಅನಾಹುತವಾಗಬಹುದು ಎಂಬುದನ್ನು ನಾವಿಂದು ಪತ್ರಿಕೆಗಳಲ್ಲಿ ನೋಡುತ್ತಿದ್ದೇವೆ. ಒಂದೇ ದಿನದ ಒಂದು ರಾತ್ರಿಯ ಕಥೆಯಲ್ಲಿ ಸಮುದಾಯದ ಬದುಕಿನ ಚಿತ್ರವಣವಿದೆ. ಈ ನಾಟಕದಲ್ಲಿ ‘ಆ ಊರು-ಈ ಊರು’ಗೆ ಕೊಂಡಿಯಾಗಿರುವುದು ನದಿ. ಒಂದೆಡೆ ಹಾಲು-ಇನ್ನೊಂದೆಡೆ ವಿಷ. ಮಾತನಾಡದಿರುವ ಹೆಣ್ಣು ಇದರಲ್ಲಿ ಮೂಕಬಲಿಯಾಗುತ್ತಾಳೆ. ಪೀಳಿಗೆ ಕಮರಿ ಹೋಗುವುದನ್ನು ನಾಟಕ ಹೇಳುತ್ತೆ ಆದರಿಂದ ಇಂಥ ಕೃತಿಯನ್ನು ರಂಗಕ್ಕೆ ತರುವಾಗ ತುಂಬ ಸೂಕ್ಷ್ಮಗಳನ್ನು ಗಮನಿಸಬೇಕಾಗುತ್ತೆ. ನಿರ್ದೇಶಕ ನಾಟಕದ ಸಾಲುಗಳಲ್ಲಿ ಅಂತರ್ಗತವಾಗಿ ಹುದುಗಿರುವ ಅಂಶಗಳನ್ನು ಪ್ರಖರವಾಗಿ ತೋರುವುದಕ್ಕೆ ಚಿಂತನೆ ಮಾಡಬೇಕು. ಸಾಹಿತ್ಯದ ಸಾಲುಗಳಲ್ಲಿ ಗ್ರಾಮೀಣ ಸೊಗಡು ಇರುವಂತೆ ನೋಡಿಕೊಂಡು ತುಂಬ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಆಗ ಮಾತ್ರ ಕೃತಿಗೆ ನ್ಯಾಯ ಸಂದೀತು ಎಂದರು. +ಈ ಎಲ್ಲ ಅಂಶ ಗಮನದಲ್ಲಿಟ್ಟೇ ಪ್ರಮೋದ್ ಶಿಗ್ಗಾಂವ್ ರಂಗ ವ್ಯಾಖ್ಯಾನಕ್ಕೆ ಅಣಿಯಾಗುತ್ತಿದ್ದಾರೆ. ಇದನ್ನೊಂದು ಚಿತ್ರ ಮಾಡುವ ಕನಸು ಹೊತ್ತಿರುವ ಡಿ.ರಾಜೇಂದ್ರ ಬಾಬು ನಾಟಕ ಬಂದು ನೋಡುವುದು ಮಾತ್ರವಲ್ಲ ತೆರೆಗೆ ಅಳವಡಿಸುವಾಗ ಸೂಕ್ಷ್ಮತೆಗಳನ್ನು ಗಮನಿಸದಿದ್ದಲ್ಲಿ ಇದು ಇನ್ನೊಂದು ‘ಅಮ್ಮ’ ಆದೀತು. +ಡಿ. ರಾಜೇಂದ್ರಬಾಬು ಈ ಬಾರಿ ಹೆಚ್ಚು ಆಸ್ಥೆ ವಹಿಸುತ್ತಾರೆ ಎಂದು ಆಶಿಸೋಣ. +***** +(೧೨-೧೦-೨೦೦೧) +ನಮ್ಮಲ್ಲಿ ಚಲನಚಿತ್ರ ಪ್ರದರ್ಶನಕ್ಕಾಗಿ ಗೋಡೌನ್‌ನಂಥ ಚಿತ್ರಮಂದಿರಗಳು, ಇಲಿ-ಹೆಗ್ಗಣಗಳು ಧಾರಾಳವಾಗಿ ಓಡಾಡುವ ಥಿಯೇಟರ್‌ಗಳು, ಚಿತ್ರ ನೋಡಲು ಬಿಡುವೇ ಕೊಡದೆ ಸೊಳ್ಳೆಕಾಟದಿಂದ ಕಾಲುಕೆರೆದುಕೊಳ್ಳುವಂತೆ ಮಾಡುವ ವಿಚಿತ್ರ ಚಿತ್ರಮಂದಿರಗಳು, ಚಿತ್ರದ ಓಟಕ್ಕೆ ಏನೇನೂ ಸಂಬಂಧವಿಲ್ಲದ ಬ್ಲೂ ಫಿಲಂಸ್ ದಿಢೀರನೆ […] +ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು. […] +ಚಿತ್ರರಂಗ ಪ್ರವೇಶಿಸಬೇಕೆಂದಿರುವ ನಟ-ನಟಿಯರೆ, ನಿಮ್ಮಲ್ಲಿ ಬಹುಮಂದಿಗೆ ಚಿತ್ರ ನಟ-ನಟಿಯರಾಗುವ ಕನಸಿದೆ ಎಂದು ನನಗೆ ಗೊತ್ತು ಆದರೆ ಪಾಪ ನಿಮಗೆ ಗಾಡ್‌ಫಾದರ್‌ಗಳಿಲ್ಲ ಎಂದು ತಿಳಿದಾಗ ನನಗೆ “ಅಯ್ಯೋ” ಎನಿಸಿ ಕಣ್ಣೀರು ಬಂತು. ಅದರಿಂದಾಗಿ ನಾನು ನಡೆಸುತ್ತಿದ್ದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_186.txt b/Kannada Sahitya/article_186.txt new file mode 100644 index 0000000000000000000000000000000000000000..3d8273d6d36364c82ec23ea2b5cbf79188c3923c --- /dev/null +++ b/Kannada Sahitya/article_186.txt @@ -0,0 +1,39 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಹಾಗೆ ಪ್ರೀತಿಯ ಹುಡುಗ, +ಏನೇನೋ ಮಾತುಗಳು – ಬೇಕಾಬಿಟ್ಟಿ. +ಎಲ್ಲಿಲ್ಲದ ಕಾಳಜಿ ದೇಶದ ಬಗ್ಗೆ +ಅಡಿಗೆಯ ಉಪ್ಪು ಹುಳಿ ಖಾರದ ಬಗ್ಗೆ +ಅವನು ಹಾಗೇ! +ಭುಜಕ್ಕೆ ಭುಜ ತಾಗಿ ಮೈಯ್ಯೆಲ್ಲ ನಡುಗಿದರೂ +ಏನೂ ಆಗದಹಾಗೆ ಮತ್ತೂ ಹತ್ತಿರ ಸರಿದು +ಏನೂ ತಿಳಿಯದಹಾಗೆ ಗುಂಪಲ್ಲಿ ಮುತ್ತಿಟ್ಟು, +ಸಹಜ ಎನ್ನುವ ಹಾಗೆ ಕಿವಿಯೊಳಗೆ ಹೇಳಿದ್ದೇನೋ….. +(ಅದು ಅಲ್ಲೇ ಮರೆತಿತ್ತು) +ಕೆನ್ನೆಯಂಚಿನ ಮೇಲೆ +ಸುಳಿದ ಬೆಚ್ಚನೆ ಉಸಿರು +ಅಲ್ಲೇ ಹಾಗೇ ಜೀಕು ಹಾಕುತ್ತಾ +ರೋಮ ರೋಮದಲ್ಲೂ ಸುಯ್‌ಗುಡುತ್ತಾ….. +ಅದೊಂದು ಮಧುರ ನೆನಪು. +ಆಮೇಲೆ; +ಅವನು ಅಲ್ಲಿ ಹಾಗೇ ತಣ್ಣಗೆ. +ಮತ್ತೆ ಅರಳಿಸಲಾರ +ಮತ್ತೆ ಹೊರಳಿಸಲಾರ +ಅವನು ಹಾಗೇ! +‘ಪ್ರೀತಿಯ ಹುಡುಗ’ ಹಾಗೇ +ಮತ್ತೊಬ್ಬನೂ ಅವನ ಹಾಗೆ +‘ಪ್ರೀತಿಯ ಹುಡುಗ’. +ಅವನೂ ಹಾಗೇ! +ಪ್ರೀತಿಯ ಹುಡುಗನ ಹಾಗೆ. +***** +೧ ಓಡುತಿಹ ಕಾಲನನು ಹಿಡಿದು ನಿಲ್ಲಿಸಿ ತಲೆಯ ಚಾಣದಲಿ ಹೊಡೆದಂತೆ ಹತ್ತು ಗಂಟೆ ಬಾರಿಸಿತು ಗಡಿಯಾರ, ಮುಂದೆ ಸಾಗಿತು ಮುಳ್ಳು ಇರಲಿ ಬಿಡು, ನಮಗೇತಕದರ ತಂಟೆ ? ಮಂದ ಬೆಳಕ ತಂದ್ರಿಯಲ್ಲಿ ಇಂದ್ರಚಾಪದಂತೆ ಬಾಗಿ […] +ಬಂತು ಭಾರತ ಹುಣ್ಣಿವೆ! ತೆರೆದು ಲೋಕದ ಕಣ್ಣೆವೆ!! ಕನಸು ಮನಸೂ ಹೊಂದಿವೆ ಜೇನು ಬಟ್ಟಲು ತಂದಿವೆ ಇಂಥ ಸಮಯದಿ ಬಂಧವೆ? ಏನು ಗೈದರು ಚೆಂದವೆ! ಬಾನಿನುದ್ದಕು ಭೂಮಿಯಗಲಕು ಎಲ್ಲಿಯೂ ಸ್ವಚ್ಛಂದವೆ! …..ಬಂತು! ಗಾಳಿ ತಣ್ಣನೆ […] +ನಿನ್ನ ಕಿವಿಯಾಗೊಂದು ತುರ್ತು ಮಾತು ಹೇಳಿರತೀನಿ ಏನ ಮಾತು ತೆಗೆ ಅಂತ ಅನಬ್ಯಾಡಣ್ಣಾ. ಅಂದರೂ ಅನವೊಲ್ಲ್ಯಾಕೆ ಕಿವಿಬಾಗಲಾ ಕಾಯತಿರಲಿ ಬಿಟ್ಟು ಬಿಡು ಅಲ್ಲೇ ಅದನ್ನ ಅರ್ಧ ತಾಸ. ಜಾಸ್ತಿ ಹೊತ್ತು ಬಿಟ್ಟಿರಬ್ಯಾಡ ತೂಕಡಿಸೀತು ಏನ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_187.txt b/Kannada Sahitya/article_187.txt new file mode 100644 index 0000000000000000000000000000000000000000..d7fb4e97c050b1ca19c9d1f58879c1f645a32f87 --- /dev/null +++ b/Kannada Sahitya/article_187.txt @@ -0,0 +1,13 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +೧ – ಹೊಸ ಮದುಮಗಳ ನಾಚಿಕೆಯಬಡಾವಣೆಗಳಲ್ಲಿಒಮ್ಮೆ ಬಡಾವಣೆಗಳೆನಿಸಿ, ಈಗ ಗರತಿಗಳಾಗಿಪಳಗಿರುವ ಮೊಹಲ್ಲಗಳಲ್ಲಿಮಾಟಾದ ಸೌಧಗಳನೋಟದಾಮೋದಗಳನೀಟು ದಂತಾವಳಿಯ ನಡುವೆಕಣ್ಣನಿರಿಯುತ್ತವೆ ಧುತ್ತೆಂದು-ಅಲ್ಲೊಂದು ಇಲ್ಲೊಂದು ಹಲ್ಲಿರದ ಸಂದು;ಪಾರ್ಥೇನಿಯಮ್ಮಿನ ದಟ್ಟ ತೋಟಗಳುಬಾಡಿಗೆವಾಸಿಗಳ ಕಣ್ಣಿನ ಕಾಲಕೂಟಗಳುಸೆಟ್ಟರ, ಸೇಟುಗಳ,ನರಾಕೃತಿವೆತ್ತ ನೋಟುಗಳ,ಸುಲಭ ಕಮಾಯಿಯ ಬತ್ತದೂಟೆಗಳು;ದಿನೇ ದಿನೇ […] +೧ ಬಾನ ಸಾಣಿಗೆ ಹಿಟ್ಟು ಸಣ್ಣಿಸಿ- ದಂತೆ ಜಿನುಗಿದೆ ಸೋನೆಯು; ಬಿಳಿಯ ತೆಳು ಜವನಿಕೆಯನೆಳೆದಿಹ ಇಳೆಯು ಸುಂದರ ಮೇಣೆಯು! ಹುಲ್ಲು ಹಾಸಿದೆ, ಹೂವು ಸೂಸಿದೆ ಗಾಳಿ ಮೂಸಿದೆ ಕಂಪನು ಶ್ರಾವಣದ ಲಾವಣ್ಯ ಕುಣಿದಿದೆ ಮಳೆಯು […] +ಸವತಿ ಮಕ್ಕಳ ಹಾಗೆ ಕಾಣಬೇಡವ್ವ ಸವತಿ ಮಕ್ಕಳ ಹಾಗೆ ಕಾಣಬೇಡ. – ೧ – ಹಾಲನುಣಿಸಿದ ಮೊಲೆಯ ಕೊಯ್ಯುವರು ಎಂಬೆ ತಾಯ ಲಾಡಿಗೆ ಕೈಯ್ಯ ಹಚ್ಚುವರು ಎಂಬೆ ಮರುಧರೆಯ ಮರುಳರ ಕಡು ನೆಂಟರೆಂಬೆ ಪಕ್ಕದ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_188.txt b/Kannada Sahitya/article_188.txt new file mode 100644 index 0000000000000000000000000000000000000000..f420a5783e69f2386efa9415bd82692c30c90f52 --- /dev/null +++ b/Kannada Sahitya/article_188.txt @@ -0,0 +1,21 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ವಾಕ್ ಹೋಗಿ +ಬದುಕು ಕಲೆಯಂತೆ ಸಮಾನಾಂತರ ಸಾಗಿದ +ದೀಪದ ತಂತಿಗಳಲ್ಲೊಂದರಿಂದ +ಯಾವುದೋ ಅಪ್ರಖ್ಯಾತ ಪಕ್ಷಿಯ +ಅರ್ಧ ಮೀಟರಿನ ಶಬ್ದ ಕಿವಿ ಹೊಕ್ಕು +ಕುತೂಹಲಕ್ಕೆ ಕತ್ತೆತ್ತಿ ನೋಡಿದರೆ +ಬರೀ ಅನಾಥ ಸಂಜೆ. +***** +ಲೋಕವೇ, ನಿನಗಂಟಿಕೊಂಡಿರುವನಕ ನನ್ನ ಚಟುವಟಿಕೆ. ಬೇರ್ಪಟ್ಟೆನೆ? ನಿರರ್ಥಕ: ಕೆಟ್ಟು ಹೋದ ಬಲ್ಬಿನ ಥರ. ನಾನಿರಲಿ ಇರದಿರಲಿ ನಿನಗಾವ ಬಾಧಕ? ನಡೆಯುತ್ತಲೇ ಇರುವೆ ನಿನ್ನಷ್ಟಕ್ಕೆ ಸುಮ್ಮನೆ. ಆದರಿಷ್ಟೆ: ನಾನಿದ್ದರೆ ನಿನ್ನೊಂದಿಗೆ, ಮಂದಿಗೆ ನಿನ್ನ ಚಲನವಲನದ ಸೂಚಕ: […] +“ಅಲ್ಪಸಂಖ್ಯರ ಹಿತ ರಕ್ಷಣೆಯೆ ನಮ್ಮಯ ಪಕ್ಷದ ಧ್ಯೇಯ, ಆಗಲು ಬಿಡೆವು ನಾವೆಂದೆಂದಿಗು ಅವರಿಗೆ ಅನ್ಯಾಯ” -ಗೋಡೆಯ ಬರಹವ ಓದಿದ ಒಡನೆ ಮೂಡದೆ ಇರುವುದೆ ಪುಲಕ! ನೆನಪಿಸಿ ಆ ಸಾ-ಮಿಲ್ಲಿನ ಮೇಲಿನ ‘ಮರ ಬೆಳಸಿ ಫಲಕ’. […] +ವರ್ಷವಿಡೀ ಚಾಟಿಯ ಏಟಿನ, ದುಡಿತದ ಎತ್ತಿಗೆ ಸಂಕ್ರಾಂತಿಯ ದಿನ ಆಹ! ಎಂತಹ ಸಿಂಗಾರ; ಜ್ಞಾಪಿಸುವುದು ನನಗೀ ದೃಶ್ಯ, ನವೆಂಬರ್ ಒಂದರ ಸರಕಾರದ ಸಿರಿಗನ್ನಡದುದ್ಧಾರ. ***** +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_189.txt b/Kannada Sahitya/article_189.txt new file mode 100644 index 0000000000000000000000000000000000000000..c1dd6f88c7e0e2b74f6cd790ce5ca6ca399745ad --- /dev/null +++ b/Kannada Sahitya/article_189.txt @@ -0,0 +1,28 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ನನ್ನ +ಹಗುರು ಕಣ್ಣುಗಳಿಂದ +ತಟತಟ +ಉದುರುವ ಕಂಬನಿಯೇ +ಮಂಡಿ ತರಚಿದಾಗೆಲ್ಲ ಬ್ಲೇಡು +ಕುಯ್ದಾಗೆಲ್ಲ ಧಳ್ಳೆಂದು ಚಿಮ್ಮುವ +ಕಡುರಕ್ತವೇ +ತೆಪ್ಪಗೆ ಜಿನುಗುವ ಬೆವರೇ +ಹೇಳಿ, +ನಿಮ್ಮ ನಡುವೆಯೂ +ಎಲ್ಲಿಗೆಲ್ಲಿಯ ಸಂಬಂಧ +ನಿಮ್ಮ ಮೇಲಿಲ್ಲವೆ +ನನಗೂ +ಒಂದಿಷ್ಟು ಅಧಿಕಾರ? +***** +ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು ಮುದ್ದೆಯಾಗಿದೆ ಜೀವ ನೋವನುಂಡು; ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ ಬೇಳುವೆನೊ-ಏನೊಂದನರಿಯೆ ನಾನು. ಬಾಂದಳದ ಪೆಂಪಿನಲಿ ಕಂಡ ನೀನು; ‘ಉದಯವಾಯಿತು’ ಎಂದುಕೊಂಡೆ ನಾನು. ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ […] +ನಿನ್ನ ಮೈ ತುಂಬ ಶಬ್ದಾಕ್ಷರ ಚಿನ್ಹ ಪ್ರಶ್ನಾರ್ಥಕ ಗಳ ಮುಳ್ಳು ಚುಚ್ಚಿ ಅರ್ಥಕ್ಕಾಗಿ ಕಾದು ಕೂತೆ ಏನೂ ಹೊರಡಲಿಲ್ಲ ತಾಳ್ಮೆಗೆಟ್ಟು ಎಲ್ಲ ಕಿತ್ತೊಗೆದು ನಿನ್ನ ಬೋಳು ಮೈ ತೊಳೆದು ಚೊಕ್ಕ ಒರೆಸಿ ಹಗುರಾಗಿ ಮೀಟಿದೆ […] +ಇಲ್ಲಿ! ಎರಡು ಬಂಡೆಗಳ ಬಿರುಕಲ್ಲಿ ನುಸುಳಿದರೆ ಮೆಲ್ಲಗೆ…. ಎಲ್ಲಿ ಕೊಂಡೊಯ್ಯುತ್ತದೋ ಈ ಕತ್ತಲು ತನ್ನೊಳಗೆ ಅವಿಸಿಕೊಂಡು ಹನಿ ಹನಿ ಹುಲ್ಲು ಹುಲ್ಲೆ ಜೀವ ಜಂತುಗಳ ವಾಸನೆಯ ಆಘ್ರಾಣ ತೆರೆಯ ಬಿಟ್ಟರೆ ಕಣ್ಣಿಗೆ ಕತ್ತಲ ಮೈದಡವುತ್ತಾ […] +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file diff --git a/Kannada Sahitya/article_19.txt b/Kannada Sahitya/article_19.txt new file mode 100644 index 0000000000000000000000000000000000000000..a3042f4281fae6911dcebba964258c567614255a --- /dev/null +++ b/Kannada Sahitya/article_19.txt @@ -0,0 +1,54 @@ +ಕನ್ನಡ ಸಾಹಿತ್ಯ.ಕಾಂ +ಕನ್ನಡದ ಕಣ್ಣಲ್ಲಿ ವಿಶ್ವದ ಕನಸು +ಉರಿದುರಿದು ಹಗಲು +ಆರಿ ಹೋಗಿಹ ಕೆಂಡವಾಯ್ತು ಮುಗಿಲು! +ನೇಸರನಿಗೂ ಬೇಸರಾಗುವದು ಸಹಜ +ನಿಜ- , +ರಜೆಯೆ ಸಿಗದಿರಲು ಅವನಿಗೆಲ್ಲಿಯದು ಮಜ? +ಅಂತೆಯೇ +ಅವನೆಂದಿನಂತೆಯೇ +ಕರಿಯ ಮೋಡದ ಬರಿಯ ಕಂಬಳಿಯ ಮುಖಕೆಳೆದು +ಹೊತ್ತೂಂಟ್ಲೆ ಮಲಗಿದನು ಗಪ್ಪುಗಡದು ! +ಮಗುವು ಕಿಟಕಿ ಹಚ್ಚಿ ಕೀಸರಿಟ್ಟಂತೆ +ಮಳೆಯು ಜಿಟಿ ಜಿಟಿ ಹತ್ತಿ ತೊಟ್ಟಿಕ್ಕಿದೆ; +ಮರದ ಎಲೆಗಳ ಸಂದಿಯಲ್ಲಿ ಮಾಸಿದ ಕಿರಣ +ಹರಿದು ಬರುತಿದೆ ಪಿಸಿಯ ನೂಲಿನಂತೆ. +ಆಗ ಕಣ್ಣಿಗೆ ಸ್ವಲ್ಪ ಬಣ್ಣವಾಗೆ +ಅಳುವ ಮಕ್ಕಳು ನಸುವೆ ನಕ್ಕಹಾಗೆ +ಬಳಿಯ ಹೊಂಡದ ದುಂಡುಮೇಜು ಪರಿಷತ್ತಿನಲಿ +ಕಪ್ಪೆಗಳು ಚಪ್ಪಾಳೆ ತಟ್ಟಿ ಜಿಗಿದಾಡುತಿವೆ +ತಮ್ಮ ಪಕ್ಷವೆ ಕೊನೆಗೆ ಗೆದ್ದ ಹಾಗೆ ! +ಜ್ವರವಿಳಿದು ಮೈ ಬೆವರು ಬಿಟ್ಟ ರೋಗಿಯತೆರದಿ +ಕಾದ ತಿರೆ ತೊಯ್ದಿಹುದು ಮೇಲೆ ಕೆಳಗೆ- +ಇಂಥ ಇಳಿಹೊತ್ತಿನೊಳಗೆ! +ಕಣ್ಣು ತಪ್ಪಿಸಿ ಬರುವ ಕಳ್ಳ ಬೆಕ್ಕಿನ ತೆರದಿ +ಮಬ್ಬುಗತ್ತಲೆ ಇಳೆಯ ಮೂಸುತಿಹುದು; +ಗಾಳಿ ಮೈಸೋಕಿಸದೆ ಮಡಿಯ ಮಾಡುವರಂತೆ +ದೂರ ದೂರವೆ ಹಾರಿ ಬೀಸುತಿಹುದು. +ಮಂಜು ಹಬ್ಬಿತು +ಪೃಥ್ವಿಗೇ ನಂಜೇರಿದಂತೆ! +ಸೇದಿ ಬೀಸಾಡಿರುವ ಸಿಗರೇಟು ತುಂಡಿನೋಲು +ದೂರದಲಿ ಕಾಣಿಸಿತು ಮಂಕು ಚಿಕ್ಕೆ! +ವಿರಹಿಗಾಯಿತು ಸಂಜೆ +ಸೊರಗಿ ಹೋದಂತೆಯೆ ಬಾನಬಂಜೆ- +ರಾಗ ವಿರಹಿತವಾಯ್ತು ಅವಳ ಕೆನ್ನೆ +ನಿಶೆಯು ಬರೆಯಿತು ದೊಡ್ಡದೊಂದು ಸೊನ್ನೆ! +***** +ಬಯಲಿನಲ್ಲಿ ನಿರ್‍ವಯಲನಾಗಿ ದಿಗ್ವಲಯ ಮೀರಿ ನಿಂದೆ ಗಗನ ಮಕುಟ ಭೂಲೋಕ ದೇಹ ಪಾತಾಳ ಪಾದದಿಂದೆ. ಸೂರ್ಯ ಚಂದ್ರ ಕಣ್ಣಾಲಿಯಾಗಿ ಆ ಮೂಡು ಪಡುವಲಿಂದೆ ವಿಶ್ವದಾಟವನು ನೋಡುತಿರುವೆ ನೀ ನಿರ್‍ನಿಮೇಷದಿಂದೆ. ಉದಯ ಪುಣ್ಯವನೆ ಹಗಲು ಜ್ಞಾನ, […] +೧ ಅಲ್ಲಿಯೇ ಕುಳಿತಿತ್ತು ಹಾವು! ಮೆತ್ತಗೆ ಸುರುಳಿ ಸುತ್ತಿ ಹೆಡೆಯೆತ್ತಿ ಆಡುತ್ತಿತ್ತು ಕೈ ಮಾಡಿ ಕರೆವಂತೆ ಮೋಹಬಂಧ ! ಜೋಡು ನಾಲಗೆ-ನಾ ಮುಂಚು ತಾ ಮುಂಚು ಮುಗಿಲ ಮೋಹರದಲ್ಲಿ ಸಳ ಸಳ ಮಿಂಚು ಹರಿದಾಡಿ, […] +೧ ನಿಮಿನಿಮಿಷಕೂ ಹಿಂಡುಹಿಂಡಾಗಿ ಬರುತಲಿವೆ ನೈರಾಶ್ಯದಭ್ರಂಗಳು; ಬಾಳ ಬಾಂದಳದಲ್ಲಿ ತೊತ್ತಳಂದುಳಿಯುತಿವೆ ಬೆಳಕೆಲ್ಲಿ? ಬರಿಯ ಇರುಳು! ಒಂದಾದರಿನ್ನೊಂದು ಮುಂಬರಿದು ಕಂಗೆಡಿಸಿ ಕಾಳುಗೆಟ್ಟೋಡಿಸುವವು; ಬೆಂದೊಡಲ ಕಡಲಾಳ ಹಿರಿಯಾಸೆ ವೀಚಿಗಳು ದಂಡೆಗಪ್ಪಳಿಸುತಿಹವು. ದನಿಯು ಮರುದನಿಗೊಂಡು ಸೋಲುಗಳು ಸಾಲ್ಗೊಂಡು ತಾಂಡವಂಗೈಯುತಿಹವು, […] +ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ +ಟಿಪ್ಪಣಿ * +ಹೆಸರು * +ಮಿಂಚೆ * +ಜಾಲತಾಣ +ಮುಂದಿನ ಬಾರಿ ನಾನು ಕಾಮೆಂಟ್ ಮಾಡಿದರೆ ಈ ಬ್ರೌಸರ್ನಲ್ಲಿ ನನ್ನ ಹೆಸರು, ಇಮೇಲ್ ಮತ್ತು ವೆಬ್ಸೈಟ್ ಉಳಿಸಿ. +This site uses Akismet to reduce spam. Learn how your comment data is processed. +ಬಿಟ್ಟ್ಯಾ +ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… +ಟಿಪ್ಸ್ ಸುತ್ತ ಮುತ್ತ +"ಕಾಫಿಗೆ ಬರ್‍ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… +ಮನ್ನಿ +ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… +ಬುಗುರಿ +ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… \ No newline at end of file