90fda542c9c4f8c2a1c45bd321e6a1dadc54a462e6712e3e36e439abe71345fa
Browse files- eesanje/url_46_9_1.txt +4 -0
- eesanje/url_46_9_10.txt +10 -0
- eesanje/url_46_9_11.txt +7 -0
- eesanje/url_46_9_12.txt +5 -0
- eesanje/url_46_9_2.txt +4 -0
- eesanje/url_46_9_3.txt +6 -0
- eesanje/url_46_9_4.txt +6 -0
- eesanje/url_46_9_5.txt +7 -0
- eesanje/url_46_9_6.txt +4 -0
- eesanje/url_46_9_7.txt +6 -0
- eesanje/url_46_9_8.txt +6 -0
- eesanje/url_46_9_9.txt +6 -0
- eesanje/url_47_100_1.txt +8 -0
- eesanje/url_47_100_10.txt +10 -0
- eesanje/url_47_100_11.txt +11 -0
- eesanje/url_47_100_12.txt +10 -0
- eesanje/url_47_100_2.txt +5 -0
- eesanje/url_47_100_3.txt +5 -0
- eesanje/url_47_100_4.txt +6 -0
- eesanje/url_47_100_5.txt +5 -0
- eesanje/url_47_100_6.txt +7 -0
- eesanje/url_47_100_7.txt +10 -0
- eesanje/url_47_100_8.txt +9 -0
- eesanje/url_47_100_9.txt +8 -0
- eesanje/url_47_101_1.txt +10 -0
- eesanje/url_47_101_10.txt +7 -0
- eesanje/url_47_101_11.txt +8 -0
- eesanje/url_47_101_12.txt +5 -0
- eesanje/url_47_101_2.txt +6 -0
- eesanje/url_47_101_3.txt +5 -0
- eesanje/url_47_101_4.txt +6 -0
- eesanje/url_47_101_5.txt +5 -0
- eesanje/url_47_101_6.txt +5 -0
- eesanje/url_47_101_7.txt +4 -0
- eesanje/url_47_101_8.txt +5 -0
- eesanje/url_47_101_9.txt +6 -0
- eesanje/url_47_102_1.txt +7 -0
- eesanje/url_47_102_10.txt +8 -0
- eesanje/url_47_102_11.txt +5 -0
- eesanje/url_47_102_12.txt +5 -0
- eesanje/url_47_102_2.txt +6 -0
- eesanje/url_47_102_3.txt +5 -0
- eesanje/url_47_102_4.txt +11 -0
- eesanje/url_47_102_5.txt +4 -0
- eesanje/url_47_102_6.txt +10 -0
- eesanje/url_47_102_7.txt +5 -0
- eesanje/url_47_102_8.txt +5 -0
- eesanje/url_47_102_9.txt +9 -0
- eesanje/url_47_103_1.txt +4 -0
- eesanje/url_47_103_10.txt +5 -0
eesanje/url_46_9_1.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಯಾವುದೇ ಕಾರಣಕ್ಕೂ ಸಿಎಂ ರಾಜೀನಾಮೆ ಕೊಡಲ್ಲ : ಡಿಕೆಶಿ
|
2 |
+
ಬೆಂಗಳೂರು, ಸೆ.26- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುದಿಲ್ಲವೆಂದು ಸ್ಪಷ್ಟಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಸಂಪುಟದಲ್ಲಿರುವ ಕಳಂಕಿತ ಸಚಿವರು ಮೊದಲು ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷನಾಗಿ ನಾನು ಸ್ಪಷ್ಟವಾಗಿ ಹೇಳುತ್ತಿದ್ದೇನೆ. ದೆಹಲಿಯಿಂದ ಇಲ್ಲಿಯ ವರೆಗೂ ಪ್ರತಿಯೊಬ್ಬ ಕಾಂಗ್ರೆಸ್ಸಿಗರು ಸಿದ್ದರಾಮಯ್ಯ ಅವರ ಬೆಂಬಲಕ್ಕೆ ಇದ್ದಾರೆ. ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿ ಸುವುದಿಲ್ಲ ಎಂದರು.
|
3 |
+
ಜೆಡಿಎಸ್ ಮತ್ತು ಬಿಜೆಪಿ ನಾಯಕರು ರಾಜಕೀಯವಾಗಿ ನಡೆಸುತ್ತಿರುವ ಷಢ್ಯಂತ್ರ ಎಲ್ಲರಿಗೂ ಗೊತ್ತಿದೆ. ಈ ಹಂತದಲ್ಲಿ ರಾಜೀನಾಮೆ ಎಂಬುದೇ ಅಪ್ರಸ್ತುತ. ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚಖಾತ್ರಿ ಯೋಜನೆಗಳಿಂದ ಜನರಿಗೆ ಆಗುತ್ತಿರುವ ಅನೂಕೂಲಗಳನ್ನು ಸಹಿಸಿಕೊಳ್ಳಲು ವಿರೋಧ ಪಕ್ಷದವರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದರು.
|
4 |
+
ಪ್ರಧಾನಿ ನರೇಂದ್ರ ಮೋದಿ ಅವರ ಸಂಪುಟದಲ್ಲಿರುವ ಹಲವು ಮಂದಿ ಸಚಿವರುಗಳ ಮೇಲೆ ಎಫ್ಐಆರ್ಗಳು ದಾಖಲಾಗಿವೆ. ವಿಚಾರಣೆಗಳು ನಡೆಯುತ್ತಿವೆ. ಅಂತಹವರಿಂದ ಮೊದಲು ರಾಜೀನಾಮೆ ಪಡೆಯಲಿ ಎಂದು ಡಿಕೆ ಶಿವಕುಮಾರ್ ಸವಾಲು ಹಾಕಿದರು.
|
eesanje/url_46_9_10.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಮಹಾಲಕ್ಷ್ಮಿಗೆ ಮುಳುವಾಯ್ತೇ ಅನ್ಯಕೋಮಿನ ಯುವಕನ ಸಹವಾಸ..?
|
2 |
+
' : - '
|
3 |
+
ಬೆಂಗಳೂರು,ಸೆ.25-ಅನ್ಯಕೋಮಿನ ಯುವಕನ ಜೊತೆ ಸಲುಗೆಯಿಂದ ಇದ್ದದ್ದೇ ಮಹಾಲಕ್ಷ್ಮಿ ಕೊಲೆಗೆ ಕಾರಣವಾಯಿತೇ..! ಕೊಲೆ ಪ್ರಕರಣ ದಾಖಲಿಸಿಕೊಂಡಿ ರುವ ವಯ್ಯಾಲಿಕಾವಲ್ ಠಾಣೆ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಈ ನಿಟ್ಟಿನಲ್ಲಿ ಒಂದು ತಂಡ ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದೆ.
|
4 |
+
ತನ್ನ ಪತಿಯಿಂದ ದೂರವಾದ ಮೇಲೆ ವಯ್ಯಾಲಿಕಾವಲ್ನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಒಂಟಿಯಾಗಿ ವಾಸವಾಗಿದ್ದ ಮಹಾಲಕ್ಷ್ಮಿ ಮಾಲ್ವೊಂದರಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅನ್ಯಕೋಮಿನ ಯುವಕ ಸೇರಿದಂತೆ ಮೂವರು ಯುವಕರ ಜೊತೆ ಮಹಾಲಕ್ಷ್ಮಿ ಸ್ನೇಹ ಬೆಳೆಸಿಕೊಂಡಿದ್ದಳು.
|
5 |
+
ಒಬ್ಬಾತ ಈಕೆಯನ್ನು ಪಿಕಪ್, ಡ್ರಾಪ್ ಮಾಡುತ್ತಿದ್ದನು. ಮತ್ತೊಬ್ಬನ ಜೊತೆ ಸಲುಗೆಯಿಂದ ಇದ್ದಳು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಆಕೆ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.ಈ ಕೊಲೆ ಪ್ರಕರಣದಲ್ಲಿ ಆರೋಪಿಯ ಕೆಲವು ಪ್ರಮುಖ ಸಾಕ್ಷ್ಯಾಧಾರಗಳು ಪೊಲೀಸರಿಗೆ ಲಭಿಸಿವೆ. ಮಹಾಲಕ್ಷ್ಮಿ ವಾಸವಾಗಿದ್ದ ಮನೆಯ ಬಾಗಿಲು, ಗೋಡೆ, ಫ್ರಿಡ್್ಜ ಮೇಲೆ ಆರೋಪಿಯ ಬೆರಳಚ್ಚು ಪತ್ತೆಯಾಗಿವೆ. ಅವುಗಳನ್ನೆಲ್ಲ ಬೆರಳಚ್ಚು ತಜ್ಞರು ಸಂಗ್ರಹಿಸಿ ಈ ಬಗ್ಗೆ ಉಪಯುಕ್ತ ಮಾಹಿತಿಯನ್ನು ತನಿಖಾಧಿಕಾರಿಗಳಿಗೆ ನೀಡಿದ್ದಾರೆಂಬುದು ಗೊತ್ತಾಗಿದೆ.
|
6 |
+
ಮಹಾಲಕ್ಷ್ಮಿ ಯನ್ನು ಕೊಲೆ ಮಾಡಿದ ಸಂದರ್ಭದಲ್ಲಿ ಆರೋಪಿ ಗೋಡೆ ಮುಟ್ಟಿರುವುದು, ನಂತರ ದೇಹವನ್ನು ಪೈಶಾಚಿಕವಾಗಿ ತುಂಡು ತುಂಡಾಗಿ ಕತ್ತರಿಸಿ ಫ್ರಿಡ್ಜ್ ನಲ್ಲಿ ಜೋಡಿಸುವಾಗ ಫ್ರಿಡ್ಜ್ ನ್ನು ಕೈಗಳಿಂದ ಮುಟ್ಟಿರುವುದರಿಂದ ಆತನ ಬೆರಳು ಮುದ್ರೆಗಳು ಪತ್ತೆಯಾಗಿವೆ.
|
7 |
+
ವಾರದ ರಜೆ ದಿನವೇ ಕೊಲೆ:ಸೆಪ್ಟೆಂಬರ್ 2ರಂದು ಮಹಾಲಕ್ಷ್ಮಿಗೆ ವಾರದ ರಜೆ. ಹಾಗಾಗಿ ಆಕೆ ಮಾಲ್ಗೆ ಹೋಗಿರಲಿಲ್ಲ. ಸೆ.3ರಿಂದಲೂ ಸಹ ಕೆಲಸಕ್ಕೆ ಹೋಗಿರಲಿಲ್ಲ. ಹಾಗಾಗಿ ದುಷ್ಕರ್ಮಿ ಆಕೆಯನ್ನು ಸೆ.2ರಂದೇ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂಬುದು ಇದುವರೆಗಿನ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.
|
8 |
+
ಆರೋಪಿ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಲೆ ಮಾಡಿ ದೇಹವನ್ನು ತುಂಡಾಗಿ ಕತ್ತರಿಸಿ ಅವುಗಳಿಗೆಲ್ಲ ಯಾವುದೋ ರಾಸಾಯನಿಕ ಸಿಂಪಡಿಸಿ, ಮನೆಯನ್ನೆಲ್ಲ ಸ್ವಚ್ಚಗೊಳಿಸಿ ಯಾರಿಗೂ ಅನುಮಾನ ಬಾರದಂತೆ ಮನೆಗೆ ಬೀಗಿ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದಾನೆ.ತದನಂತರ ತನ್ನ ಅಣ್ಣನಿಗೆ ನಡೆದ ವಿಷಯವನ್ನು ತಿಳಿಸಿ ಊರಿಗೆ ಹೋಗುವುದಾಗಿ ಹೇಳಿ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಊರಿಗೂ ಹೋಗದೆ ಈಶಾನ್ಯ ರಾಜ್ಯಗಳಿಗೆ ಹೋಗಿ ತಲೆಮರೆಸಿಕೊಂಡಿದ್ದಾನೆ.
|
9 |
+
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಚಿಸಲಾಗಿದ್ದ ಆರು ವಿಶೇಷ ತಂಡಗಳ ಪೈಕಿ ಒಂದು ತಂಡ ಪಶ್ಚಿಮ ಬಂಗಾಳಕ್ಕೆ ಹೋಗಿ ಆರೋಪಿಗಾಗಿ ಹುಡುಕಾಟ ನ��ೆಸುತ್ತಿದ್ದರೆ ಮತ್ತೊಂದು ತಂಡ ಒರಿಸ್ಸಾಗೆ ಹೋಗಿ ಶೋಧ ನಡೆಸುತ್ತಿದೆ.
|
10 |
+
ಆರೋಪಿ ಆಗಾಗ ಸ್ಥಳ ಬದಲಾವಣೆ ಮಾಡುತ್ತಿರುವುದಲ್ಲದೆ, ಮೊಬೈಲ್ ಬಳಸುತ್ತಿಲ್ಲ. ಬೇರೆಯವರ ಮೊಬೈಲ್ನಿಂದ ತನ್ನ ಕುಟುಂಬವನ್ನು ಸಂಪರ್ಕಿಸುತ್ತಿದ್ದಾನೆ. ಹಾಗಾಗಿ ಈತನ ಬಂಧನ ಕಾರ್ಯ ಪೊಲೀಸರಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಒಟ್ಟಾರೆ ಈ ಪ್ರಕರಣವನ್ನು ಸವಾಲಾಗಿ ಪರಿಗಣಿಸಿರುವ ನಗರ ಪೊಲೀಸರು ಶತಾಯಗತಾಯ ದುಷ್ಕರ್ಮಿಯನ್ನು ಬಂಧಿಸಲು ಹಗರಲಿರುಳು ಶ್ರಮಿಸುತ್ತಿದ್ದಾರೆ.
|
eesanje/url_46_9_11.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ 75 ವರ್ಷದ ವೃದ್ಧ ದಂಪತಿ
|
2 |
+
75--
|
3 |
+
ಅಲಹಾಬಾದ್(ಗುಜರಾತ್),ಸೆ.26-ಜೀವನಾಂಶಕ್ಕಾಗಿ 75ರಿಂದ 80 ವರ್ಷ ವಯಸ್ಸಿನ ದಂಪತಿ, ಸುದೀರ್ಘ ದಾಂಪತ್ಯದ ನಂತರ ವಿಚ್ಛೇಧನ ಕೋರಿ ಕಾನೂನು ಹೋರಾಟ ನಡೆಸುತ್ತಿರುವ ಅಪರೂಪದ ಘಟನೆಗೆ ಅಲಹಾಬಾದ್ ಹೈಕೋರ್ಟ್ ಸಾಕ್ಷಿ ಆಗಿದೆ.
|
4 |
+
ಕೆಲ ದಿನಗಳ ಹಿಂದೆಯಷ್ಟೇ ರಾಜ್ಯದ ಪ್ರಕರಣವೊಂದರಲ್ಲಿ ವಿಚ್ಛೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ಸ್ವಾಮೀಜಿ ಬಳಿ ಹೋಗಿ ಸಮಾಲೋಚಿಸಿ ಎಂದು ನ್ಯಾಯಾಧೀಶರು ಸಲಹೆ ನೀಡಿದ ವಿಡಿಯೋ ವೈರಲ್ ಆಗಿತ್ತು.
|
5 |
+
ಅಂತಹದ್ದೇ ಘಟನೆ ಈಗ ಗುಜರಾತ್ನಲ್ಲಿ ನಡೆದಿದೆ. 75 ವರ್ಷ ದಾಟಿದ ದಂಪತಿ ಅಲ್ಲದೆ ದೀರ್ಘ ಕಾಲ ದಾಂಪತ್ಯ ಅನುಭವಿಸಿದವರಲ್ಲಿ ವೈಮನಸ್ಸು ಉಂಟಾಗಿರುವುದು, ಅದಕ್ಕಾಗಿ ಜೀವನಾಂಶ ಕೋರುತ್ತಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿ, ಕಲಿಯುಗ ಬಂದಂತೆ ತೋರುತ್ತಿದೆ ಎಂದು ವಿಷಾಧಿಸಿದ್ದಾರೆ.
|
6 |
+
ಪತ್ನಿ ಪರವಾಗಿ ಕೌಟುಂಬಿಕ ನ್ಯಾಯಾಲಯ ನೀಡಿರುವ ಆದೇಶದ ವಿರುದ್ಧ ಪತಿ ಅಲಿಘರ್ನ ಮುನೇಶ್ ಕುಮಾರ್ ಗುಪ್ತಾ ಸಲ್ಲಿಸಿದ ಅರ್ಜಿಯನ್ನು ಆಲಿಸಿದ ನ್ಯಾಯಮೂರ್ತಿ ಸೌರಭ್ ಶ್ಯಾಮ್ ಶಂಶೇರಿ, ನಿಮ ಕಾನೂನು ಹೋರಾಟದ ಕಳವಳಕಾರಿ ವಿಷಯ ಎಂದು ದಂಪತಿಗೆ ಸಲಹೆ ನೀಡಲು ಪ್ರಯತ್ನಿಸಿದರು.
|
7 |
+
ಪತಿಯಿಂದ ವೃದ್ಧೆ ಪತ್ನಿ ಜೀವನಾಂಶ ಕೋರಿದ್ದು, ಕೌಟುಂಬಿಕ ನ್ಯಾಯಾಲಯವು ಅವರ ಪರವಾಗಿ ತೀರ್ಪು ನೀಡಿತ್ತು. ಪತಿ ಮುನೇಶ್ಕುಮಾರ್ ಆದೇಶವನ್ನು ಪ್ರಶ್ನಿಸಿದ್ದು, ಪತ್ನಿಗೆ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ ವಿಚಾರಣೆಯ ದಿನಾಂಕದೊಳಗೆ ಅವರು ಒಪ್ಪಂದಕ್ಕೆ ಬರುತ್ತಾರೆ ಎಂದು ಭಾವಿಸುವುದಾಗಿ ಹೈಕೋರ್ಟ್ ಹೇಳಿದೆ.
|
eesanje/url_46_9_12.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಮಹಾಲಕ್ಷ್ಮಿ ಹಂತಕನಿಗಾಗಿ ಒಡಿಶಾದಲ್ಲಿ ಪೊಲೀಸರ ಶೋಧ
|
2 |
+
'
|
3 |
+
ಬೆಂಗಳೂರು,ಸೆ.25– ನಗರದಲ್ಲಿ ನಡೆದ ಮಹಾಲಕ್ಷ್ಮಿ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಮೂರ್ನಾಲ್ಕು ಮಂದಿ ವಿಚಾರಣೆ ಬಳಿಕ ಮಹತ್ವದ ಮಾಹಿತಿಗಳು ದೊರೆತಿದ್ದು, ಆರೋಪಿಯ ಬಂಧನಕ್ಕೆ ಒಡಿಸ್ಸಾ ಸೇರಿದಂತೆ ಹಲವು ಕಡೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
|
4 |
+
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರನ್ನೇ ಬೆಚ್ಚಿಬೀಳಿಸಿದ್ದ ಈ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಕೊಲೆ ಮಾಡಿದ್ದಾನೆ ಎಂದು ಶಂಕಿಸಲಾದ ವ್ಯಕ್ತಿ ಒಡಿಸ್ಸಾದಲ್ಲಿರುವ ಮಾಹಿತಿ ಇದ್ದು, ಆತನನ್ನು ಬಂಧಿಸಲು ನಾಲ್ಕು ತಂಡಗಳನ್ನು ಕಳುಹಿಸಲಾಗಿದೆ.
|
5 |
+
ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು-ಮೂರು ಮಂದಿಯನ್ನು ವಶಕ್ಕೆ ಪಡೆಯಲು ವಿಚಾರಣೆ ನಡೆಸಲಾಗಿತ್ತು. ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ಒಡಿಸ್ಸಾದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂದು ಹೇಳಲಾದ ವ್ಯಕ್ತಿಯೇ ಕೊಲೆ ಮಾಡಿರಬಹುದು ಎಂಬ ಅನುಮಾನ ಬಂದಿದೆ. ಹೀಗಾಗಿ ಆತನನ್ನು ಬಂಧಿಸಲು ಕಾರ್ಯಾಚರಣೆಯನ್ನು ತೀವ್ರಗೊಳಿಸಲಾಗಿದೆ ಎಂದು ತಿಳಿಸಿದರು.
|
eesanje/url_46_9_2.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಪ್ರತಿಭಟನೆಯತ್ತ ಸುಳಿಯದ ಬಿಜೆಪಿ ಭಿನ್ನಮತೀಯರು
|
2 |
+
ಬೆಂಗಳೂರು,ಸೆ.26- ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ಬಿಜೆಪಿ ಕರೆ ಕೊಟ್ಟಿದ್ದ ಪ್ರತಿಭಟನೆಯಲ್ಲೂ ಭಿನ್ನಮತ ಸ್ಪೋಟಗೊಂಡಿದೆ. ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಗುರುವಾರ ಬೆಳಗ್ಗೆ 10.30ಕ್ಕೆ ನಡೆಯಲಿರುವ ಪ್ರತಿಭಟನೆಗೆ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ಪದಾಧಿಕಾರಿಗಳು ಕಡ್ಡಾಯವಾಗಿ ಬರಬೇಕೆಂದು ಖುದ್ದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಸೂಚನೆ ಕೊಟ್ಟಿದ್ದರು.
|
3 |
+
ಅದರಂತೆ ಪ್ರತಿಭಟನೆಗೆ ಶಾಸಕರು ಆಗಮಿಸಿದ್ದರಾದರೂ ವಿಜಯೇಂದ್ರ ವಿರೋಧಿ ಬಣದವರು ಅಪ್ಪಿತಪ್ಪಿಯೂ ಪ್ರತಿಭಟನೆ ಕಡೆ ತಲೆ ಹಾಕಲಿಲ್ಲ. ಬಿಜೆಪಿಯ ಖಾಯಂ ಭಿನ್ನಮತೀಯ ನಾಯಕರೆಂದೇ ಗುರುತಿಸಿಕೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಪ್ರತಾಪ್ ಸಿಂಹ, ಅರವಿಂದ್ ಲಿಂಬಾವಳಿ ಸೇರಿದಂತೆ ಮತ್ತಿತರರು ಗೈರು ಹಾಜರಾಗಿದ್ದರು.ವಿಜಯೇಂದ್ರ ಮತ್ತು ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಶೋಕ್ ಕರೆಕೊಟ್ಟ ಪ್ರತಿಭಟನೆಗೆ ನಾವೇಕೆ? ಹೋಗಬೇಕೆಂದು ಇವರೆಲ್ಲರೂ ದೂರ ಉಳಿದಿದ್ದರು.
|
4 |
+
ಕೆಲ ದಿನಗಳ ಹಿಂದೆ ಭಿನ್ನಮತೀಯರು ಮತ್ತು ವಿಜಯೇಂದ್ರ ನಡುವೆ ಆರ್ಎಸ್ಎಸ್ ನಾಯಕ ಸಂಧಾನ ಸಭೆ ನಡೆಸಿ ಬರುವ ದಿನಗಳಲ್ಲಿ ಭಿನ್ನಮತಕ್ಕೆ ಅವಕಾಶ ಇಲ್ಲದಂತೆ ಪಕ್ಷ ಮುನ್ನಡೆಸಬೇಕೆಂದು ಸೂಚನೆ ಕೊಟ್ಟಿದ್ದರು. ಸಭೆಯಲ್ಲಿ ಭಾಗಿಯಾಗಿದ್ದ ಬಹುತೇಕರು ಭಿನ್ನಮತಕ್ಕೆ ಅವಕಾಶವಿಲ್ಲದಂತೆ ಪಕ್ಷದ ನಿರ್ದೇಶನವನ್ನು ಪಾಲನೆ ಮಾಡುವುದಾಗಿ ಹೇಳಿದ್ದರು. ಆದರೆ ಕೆಲವೇ ದಿನಗಳಲ್ಲಿ ವಿಜಯೇಂದ್ರ ಟೀಂಗೆ ತಾವು ಬೆಂಬಲಿಸುವುದಿಲ್ಲ ಎಂಬುದನ್ನು ಮತ್ತೊಮೆ ಸಾಬೀತು ಮಾಡಿದಂತಾಗಿದೆ.
|
eesanje/url_46_9_3.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಸಿಎಂ ರಾಜೀನಾಮೆ ಆಗ್ರಹಿಸಿ ಬಿಜೆಪಿ ನಾಯಕರು ವಿಧಾನಸೌಧದೊಳಗೆ ನುಗ್ಗಲು ಯತ್ನ
|
2 |
+
ಬೆಂಗಳೂರು,ಸೆ.26-ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿತು. ವಿಧಾನಸೌಧ ಹಾಗೂ ವಿಕಾಸಸೌಧದ ಮಧ್ಯಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್, ಉಪನಾಯಕ ಅರವಿಂದ್ ಬೆಲ್ಲದ್, ವಿಧಾನಪರಿಷತ್ನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದ ಗೋವಿಂದ ಕಾರಜೋಳ, ಶಾಸಕರಾದ ಅರಗ ಜ್ಞಾನೇಂದ್ರ, ಸುನೀಲ್ಕುಮಾರ್, ಜನಾರ್ಧನ ರೆಡ್ಡಿ, ಗೋಪಾಲಯ್ಯ, ಸಿದ್ದು ಸವದಿ, ಬಿ.ಸಿ.ಪಾಟೀಲ್ ಸೇರಿದಂತೆ ಬಹುತೇಕ ಎಲ್ಲಾ ಶಾಸಕರು ಭಾಗಿಯಾಗಿದ್ದರು.
|
3 |
+
ಅನಾರೋಗ್ಯದ ಹಿನ್ನಲೆಯಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಗೈರು ಹಾಜರಾಗಿದ್ದರು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬಹುತೇಕ ಶಾಸಕರು ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ಸಿದ್ದರಾಮಯ್ಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ರಾಜೀನಾಮೆಗೆ ಒತ್ತಾಯಿಸಿದರು. ಬೇಕೇ ಬೇಕು ರಾಜೀನಾಮೆ ಬೇಕು. ಕೊಡಬೇಕು, ಕೊಡಬೇಕು ರಾಜೀನಾಮೆ ಕೊಡಬೇಕು, ಮುಡಾ ಸೈಟು ಹೊಡೆದ ಸಿದ್ದರಾಮಯ್ಯ, ಭ್ರಷ್ಟ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕೂಗಿ ರಾಜೀನಾಮೆಗೆ ಆಗ್ರಹಿಸಿದರು.
|
4 |
+
ಪ್ರತಿಭಟನೆಯಲ್ಲಿ ಮಾತನಾಡಿದ ಬಹುತೇಕ ನಾಯಕರು ನ್ಯಾಯಾಲಯವೇ ಎಫ್ಐಆರ್ ದಾಖಲಿಸಲು ಸಿದ್ದರಾಮಯ್ಯ ವಿರುದ್ಧ ಆದೇಶ ನೀಡಿದೆ. ಇನ್ಯಾವ ಮುಖ ಹೊತ್ತು ಸಿಎಂ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎಂದು ಪ್ರಶ್ನೆ ಮಾಡಿದರು. ಇನ್ನೊಬ್ಬರ ನೈತಿಕತೆ ಬಗ್ಗೆ ಮಾತನಾಡುವ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಮುಂದುವರೆಯಲು ಭಂಡತನ ತೋರಬಾರದು. 40 ವರ್ಷ ರಾಜಕೀಯ ಜೀವನದಲ್ಲಿ ನನ್ನ ವಿರುದ್ಧ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎನ್ನುತ್ತಿದ್ದ ಅವರ ಮುಖಕ್ಕೆ ಈಗ ಅಳಿಸಲಾಗದ ದೊಡ್ಡ ಕಪ್ಪುಚುಕ್ಕೆ ಅಂಟಿಕೊಂಡಿದೆ. ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾನಿರತರು ವಾಗ್ದಾಳಿ ನಡೆಸಿದರು.
|
5 |
+
ಸಿದ್ದರಾಮಯ್ಯನವರಿಗೆ ದೇಶದ ಕಾನೂನು ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ತಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ಪ್ರಕರಣದಲ್ಲಿ ಅವರ ಪಾತ್ರ ಏನೂ ಇಲ್ಲ ಎಂದು ಸಾಬೀತಾದರೆ ಪುನಃ ಅವರೇ ಅಧಿಕಾರದಲ್ಲಿ ಮುಂದುವರೆಯಲಿ. ಅವರು ಅಧಿಕಾರದಲ್ಲಿರುವಾಗ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಹೀಗಾಗಿ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ನೀಡಲಿ. ಇಲ್ಲದಿದ್ದರೆ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕೆಂದು ಆಗ್ರಹಿಸಿದರು.
|
6 |
+
ಪ್ರತಿಭಟನೆ ಬಳಿಕ ಶಾಸಕರು ವಿಧಾನಸೌಧದೊಳಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ���ೆಂಗಲ್ ಗೇಟ್ ಬಳಿಯೇ ಪ್ರತಿಭಟನಾಕಾರರನ್ನು ತಡೆದರು. ಈ ವೇಳೆ ಬಿಜೆಪಿ ನಾಯಕರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರಲ್ಲದೆ, ತೀವ್ರ ಪ್ರತಿಭಟನೆಗಿಳಿದ ಅಶೋಕ್, ಛಲವಾದಿ, ಸಿಟಿ ರವಿ, ಸುನೀಲ್ ಕುಮಾರ್ ಸೇರಿ ಹಲವು ನಾಯಕರನ್ನು ಹೊತ್ತೊಯ್ದ ಬಸ್ನೊಳಗೆ ಬಲವಂತವಾಗಿ ನುಗ್ಗಿಸಿದರು.
|
eesanje/url_46_9_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಚೂರಿ ಇರಿದು ಪರಾರಿಯಾಗಲು ಯತ್ನಿಸಿದವನಿಗೆ ಪೊಲೀಸರ ಗುಂಡೇಟು..
|
2 |
+
ಹುಬ್ಬಳ್ಳಿ,ಸೆ.26- ತಾನು ಪ್ರೀತಿಸುತ್ತಿದ್ದ ಯುವತಿ ತಾಯಿಗೆ ಚಾಕುವಿನಿಂದ ಇರಿದಿದ್ದ ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಯನ್ನು ಸ್ಥಳ ಮಹಜರಿಗೆ ಕರೆದೊಯ್ಯುತ್ತಿದ್ದಾಗ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಸಿಕ್ಕಿ ಬಿದಿದ್ದಾನೆ. ಆರೋಪಿ ಮಹೇಶ ಮೇಟಿ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
|
3 |
+
ಲೋಹಿಯಾ ನಗರದ ನಿವಾಸಿ ನೀಲಾ ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದು, ಒಬ್ಬ ಮಗಳನ್ನು ಆರೋಪಿ ಪ್ರೀತಿಸುತ್ತಿದ್ದನು. ಆದರೆ ಯುವತಿ ಹಾಗೂ ಆಕೆಯ ತಾಯಿಗೂ ಇಷ್ಟವಿರಲಿಲ್ಲ. ಆದರೂ ಆರೋಪಿ ಮಹೇಶ ಇವರ ಮನೆಗೆ ಹೋಗಿ ತಮ ಮಗಳನ್ನು ಮದುವೆ ಮಾಡಿಕೊಡುವಂತೆ ನೀಲಾ ಅವರನ್ನು ಪೀಡಿಸಿದ್ದಾನೆ. ಮಹೇಶನಿಗೆ ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಯುವತಿಯ ತಾಯಿ ನೀಲಾ ಅವರಿಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದನು.
|
4 |
+
ಚಾಕು ಇರಿತದಿಂದ ಗಂಭೀರ ಗಾಯಗೊಂಡಿರುವ ನೀಲಾ ಅವರನ್ನು ಕಿಮ್ಸೌ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಹಿರಿಯ ಪೊಲೀಸರು ಭೇಟಿ ನೀಡಿ ಮಾಹಿತಿ ಪಡೆದಿದಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದು ಆರೋಪಿಯ ಬಂಧನಕ್ಕೆ ಬಲೆ ಬೀಸಿ ನಿನ್ನೆ ಸಂಜೆ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
|
5 |
+
ವಿಚಾರಣೆ ವೇಳೆ ಈ ಕೃತ್ಯ ಎಸಗಿ ಪರಾರಿಯಾಗಲು ಸ್ನೇಹಿತರ ಬಳಿ ಹಣ ಪಡೆದಿರುವುದಾಗಿ ಆರೋಪಿ ಪೊಲೀಸರಿಗೆ ತಿಳಿಸಿದ್ದು, ನಂತರ ಸ್ನೇಹಿತರನ್ನು ತೋರಿಸುವುದಾಗಿ ಹೇಳಿದ್ದಾನೆ. ಪೊಲೀಸರು ಆತನನ್ನು ಸ್ಥಳ ಮಹಜರಿಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
|
6 |
+
ಆ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸುರೇಶ ಯಳ್ಳೂರು ಅವರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಸಿದರಾದರೂ ಪೊಲೀಸರ ಮಾತಿಗೆ ಕಿವಿಗೊಡದೆ ಮತ್ತೆ ಹಲ್ಲೆಗೆ ಯತ್ನಿಸಿದಾಗ ಇನ್ಸ್ಪೆಕ್ಟರ್ ಹಾರಿಸಿದ ಗುಂಡು ಆರೋಪಿ ಕಾಲಿಗೆ ತಗುಲಿ ಕುಸಿದುಬಿದಿದ್ದಾನೆ. ತಕ್ಷಣ ಪೊಲೀಸರು ಆತನನ್ನು ಸುತ್ತುವರೆದು ವಶಕ್ಕೆ ಪಡೆದು ಚಿಕಿತ್ಸೆಗೆ ದಾಖಲಿಸಿದ್ದಾರೆ.ಕಾರ್ಯಾಚರಣೆ ವೇಳೆ ಹಳೇ ಹುಬ್ಬಳ್ಳಿ ಇನ್ಸ್ಪೆಕ್ಟರ್ ಸುರೇಶ ಹಾಗೂ ಸಿಬ್ಬಂದಿ ಗಾಯಗೊಂಡಿದ್ದು ಅವರು ಸಹ ಕಿಮ್ಸೌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
|
eesanje/url_46_9_5.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಮಹಾಲಕ್ಷ್ಮಿ ವರ್ತನೆಗೆ ಬೇಸತ್ತು ಬರ್ಬರ ಕೊಲೆ..
|
2 |
+
ಬೆಂಗಳೂರು, ಸೆ.26- ಆಕೆಯ ವರ್ತನೆಯಿಂದ ಬೇಸತ್ತು ವೈಯಾಲಿಕಾವಲ್ನಲ್ಲಿ ಮಹಾಲಕ್ಷ್ಮಿಯನ್ನು ಆರೋಪಿ ಕೊಲೆ ಮಾಡಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಬಂಧನದ ಭೀತಿಯಿಂದ ಆರೋಪಿ ಮುಕ್ತಿ ರಂಜನ್ ರಾಯ್ ತನ್ನ ಊರಾದ ಒಡಿಶಾಗೆ ಹೋಗಿ ಆತಹತ್ಯೆಗೆ ಶರಣಾಗಿದ್ದು, ಆತಹತ್ಯೆಗೂ ಮುನ್ನ ಆರೋಪಿ ಬರೆದಿರುವ ಡೆತ್ನೋಟ್ನಲ್ಲಿ ಈ ಅಂಶ ಕಂಡು ಬಂದಿದೆ.
|
3 |
+
ಸೆ. 2ರಂದು ಮಹಾಲಕ್ಷ್ಮೀಗೆ ವಾರದ ರಜೆ ಇದ್ದ ಕಾರಣ ಮನೆಯಲ್ಲೇ ಇದ್ದರು. ಆ ಸಂದರ್ಭದಲ್ಲಿ ಮುಕ್ತಿ ರಂಜನ್ ಆಕೆಯ ಮನೆಗೆ ಹೋಗಿದ್ದಾನೆ. ಯಾವುದೋ ವಿಚಾರಕ್ಕೆ ಅವರಿಬ್ಬರ ನಡುವೆ ಜಗಳವಾಗಿದ್ದು, ಆ ವೇಳೆ ಮಹಾಲಕ್ಷ್ಮೀ ಆತನ ಮೇಲೆ ಹಲ್ಲೆ ಮಾಡಿದ್ದಾಳೆ.ಇದರಿಂದ ಕೋಪಕೊಂಡ ಮುಕ್ತಿ ರಂಜನ್ ಚಾಕು ತೆಗೆದುಕೊಂಡು ಮಹಾಲಕ್ಷ್ಮೀಯ ಕತ್ತು ಕೊಯ್ದು ಕೊಲೆ ಮಾಡಿ ನಂತರ ಸ್ನಾನದ ಮನೆಗೆ ಶವವನ್ನು ಎಳೆದೊಯ್ದು ಆಕ್ಸಲ್ ಬ್ಲೇಡ್ನಿಂದ ಬರೋಬ್ಬರಿ 59 ತುಂಡುಗಳಾಗಿ ಕೊಯ್ದು ವಾಸನೆ ಬಾರದಂತೆ ಯಾವುದೋ ರಾಸಾಯನಿಕ ಸಿಂಪಡಿಸಿ ಫ್ರಿಡ್್ಜನಲ್ಲಿ ತರಕಾರಿ ಜೋಡಿಸುವಂತೆ ಜೋಡಿಸಿ ಮನೆಯನ್ನೆಲ್ಲಾ ರಾಸಾಯನಿಕದಿಂದ ಸ್ವಚ್ಛಗೊಳಿಸಿ ಬೀಗ ಹಾಕಿಕೊಂಡು ಸ್ಥಳದಿಂದ ಕಾಲ್ಕಿತ್ತಿದ್ದ.
|
4 |
+
ಘಟನೆ ಬೆಳಕಿಗೆ ಬರುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡ ವೈಯ್ಯಾಲಿಕಾವಲ್ ಠಾಣೆ ಪೊಲೀಸರು ಆರೋಪಿ ಬಂಧನಕ್ಕೆ ಆರು ತಂಡಗಳನ್ನು ರಚಿಸಿ ತನಿಖೆ ಕೈಗೊಂಡು ವಿವಿಧ ಆಯಾಮಗಳಲ್ಲಿ ಮಾಹಿತಿ ಕಲೆಹಾಕಿ ಕಾರ್ಯಾನುಖರಾಗಿದ್ದರು. ಆರೋಪಿಯು ಹೊರರಾಜ್ಯದಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಒಂದು ತಂಡ ಒಡಿಶಾಗೆ ಹೋಗಿ ಹುಡುಕಾಟ ನಡೆಸುತ್ತಿರುವಾಗಲೇ ಆತ ಆತಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ.
|
5 |
+
ಒಡಿಶಾದ ಫಂಡಿ ಗ್ರಾಮದ ನಿವಾಸಿಯಾದ ಮುಕ್ತಿ ರಂಜನ್ ರಾಯ್ ಮೊನ್ನೆ ತನ್ನ ಮನೆಗೆ ಹೋಗಿ ಕೆಲ ಹೊತ್ತು ಅಲ್ಲೇ ಇದ್ದು, ರಾತ್ರಿ ತನ್ನ ಲ್ಯಾಪ್ಟಾಪ್ ಸಮೇತ ಸ್ಕೂಟಿ ದ್ವಿಚಕ್ರ ವಾಹನ ತೆಗೆದುಕೊಂಡು ಹೊರಗೆ ಹೋಗಿದ್ದನು. ಆದರೆ ಈತ ಎಲ್ಲಿಗೆ ಹೋದ ಎಂಬುವುದು ಕುಟುಂಬದವರ್ಯಾರಿಗೂ ಗೊತ್ತಾಗಿಲ್ಲ.
|
6 |
+
ಈ ನಡುವೆ ನಿನ್ನೆ ಕುಳೆಪಾದ ಎಂಬ ಸಶಾನದಲ್ಲಿ ಆರೋಪಿ ಮುಕ್ತಿ ರಂಜನ್ ರಾಯ್ ಶವ ಮರದ ಕೊಂಬೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಂಬಂಧ ಅಲ್ಲಿನ ದುಶಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಬಂಧನಕ್ಕಾಗಿ ಒಡಿಶಾಕ್ಕೆ ತೆರಳಿದ್ದ ನಗರ ಪೊಲೀಸ್ ತಂಡಕ್ಕೆ ಸ್ಥಳೀಯ ಪೊಲೀಸರಿಂದ ಮಾಹಿತಿ ಗೊತ್ತಾಗಿದೆ. ಆರೋಪಿ ಆತಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಸಿಕ್ಕಿರುವ ಡೈರಿಯಲ್ಲಿ ಡೆತ್ನೋಟ್ ಪತ್ತೆಯಾಗಿದೆ.
|
7 |
+
ಡೆತ್ನೋಟ್ ಸಾರಾಂಶ:ಸೆ. 2ರಂದು ನಾನು ಆಕೆಯ ಮನೆಗೆ ಹೋದಾಗ ವೈಯಕ್ತಿಕ ವಿಚಾರಗಳಿಗೆ ಆಕೆ ಜೊತೆ ಜಗಳವಾಯಿತು. ಆಗ ನನ್ನ ಮೇಲೆ ಆ���ೆ ಹಲ್ಲೆ ನಡೆಸಿದಳು. ಇದರಿಂದ ನಾನು ಕೋಪಗೊಂಡು ಆಕೆಯನ್ನು ಕೊಂದೆ. ಆ ಬಳಿಕ 59 ಪೀಸ್ಗಳನ್ನಾಗಿ ಮಾಡಿ ಫ್ರಿಡ್್ಜನಲ್ಲಿರಿಸಿದೆ. ಆಕೆಯ ವರ್ತನೆಯಿಂದ ಬೇಸತ್ತು ಕೃತ್ಯ ಎಸಗಿದ್ದೇನೆ ಎಂದು ಡೆತ್ನೋಟ್ನಲ್ಲಿ ಕೊಲೆ ಮಾಡಲು ಕಾರಣವೇನೆಂಬುವುದನ್ನು ಆರೋಪಿ ಬಹಿರಂಗ ಪಡಿಸಿದ್ದಾನೆ. ಇನ್ನು ಮುಕ್ತಿ ರಂಜನ್ ರಾಯ್ ಊರಿನಲ್ಲಿ ಬೆಂಗಳೂರು ಪೊಲೀಸರ ತಂಡ ಬೀಡುಬಿಟ್ಟಿದ್ದು, ಸ್ಥಳೀಯ ಪೊಲೀಸರಿಂದ ಆರೋಪಿಯ ಬೆರಳಚ್ಚು ಹಾಗೂ ಡೆತ್ನೋಟ್ ಪ್ರತಿಯನ್ನು ಪಡೆಯಲಿದ್ದಾರೆ.
|
eesanje/url_46_9_6.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಭೀಕರ ಕಾರು ಅಪಘಾತದಲ್ಲಿ ನಾಲ್ವರ ದುರ್ಮರಣ
|
2 |
+
ಬಾಗಲಕೋಟೆ, ಸೆ.26- ಕ್ಯಾಂಟರ್ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಹುನಗುಂದ ತಾಲೂಕಿನ ಧನ್ನೂರು ಗ್ರಾಮದ ಬಳಿ ತಡರಾತ್ರಿ ನಡೆದಿದೆ. ವಿಜಯಪುರ ಜಿಲ್ಲೆಯ ಬಿದರಕುಂದಿ ಗ್ರಾಮದ ನಿವಾಸಿಗಳಾದ ಲಕ್ಷ್ಮಣ ವಡ್ಡರ್(55), ಬೈಲಪ್ಪ ಬಿರದಾರ್(45), ರಾಮಣ್ಣ ನಾಯಕ(50), ಚಾಲಕ ರಫಿಕ್ ಮುಲ್ಲಾ(25) ಮೃತಪಟ್ಟ ದುರ್ದೈವಿಗಳೆಂದು ತಿಳಿದುಬಂದಿದೆ.
|
3 |
+
ಮೃತರು ಹೊಸಪೇಟೆ ಬಳಿಯ ಹುಲಿಗೆಮ ದೇವಾಲಯಕ್ಕೆ ತೆರಳಿ ದರ್ಶನ ಮುಗಿಸಿಕೊಂಡು ತಡರಾತ್ರಿ 2 ಗಂಟೆ ಸುಮಾರಿನಲ್ಲಿ ವಾಪಸ್ ಬರುತ್ತಿದ್ದಾಗ ಮುದ್ದೆಬಿಹಾಳದಿಂದ ಹುನಗುಂದ ಕಡೆಗೆ ತೆರಳುತ್ತಿದ್ದ ಕ್ಯಾಂಟರ್ಗೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ತಡರಾತ್ರಿವರೆಗೂ ನಿರಂತರವಾಗಿ ಕಾರು ಚಾಲನೆ ಮಾಡಿಕೊಂಡು ಬಂದಿದ್ದು, ಒಂದು ಕ್ಷಣ ನಿದ್ದೆ ಮಂಪರಿಗೆ ಚಾಲಕ ಜಾರಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ತಿಳಿದು ಬಂದಿದೆ.
|
4 |
+
ಡಿಕ್ಕಿ ಹೊಡೆದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಸುದ್ದಿ ತಿಳಿದ ಕೂಡಲೇ ಹುನಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
|
eesanje/url_46_9_7.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ರಾಜೀನಾಮೆಗೆ ಒತ್ತಾಯಿಸುವುದು ಅವರ ಕರ್ತವ್ಯ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ : ಗೃಹ ಸಚಿವ ಡಾ. ಜಿ.ಪರಮೇಶ್ವರ
|
2 |
+
ಬೆಂಗಳೂರು, ಸೆ.26- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಸೂಚಿಸಿರುವಂತೆ ಸಿಆರ್ಪಿಸಿ ಅಡಿ ಪ್ರಕರಣ ದಾಖಲಿಸಲು ಸಾಧ್ಯವಾಗುತ್ತಿಲ್ಲ. ಹೊಸದಾಗಿ ಜಾರಿಯಲ್ಲಿರುವ ಬಿಎನ್ಎಸ್ಎಸ್ ನಿಯಮಗಳ ಅಡಿ ಪ್ರಕರಣ ದಾಖಲಿಸಲು ಆದೇಶಿಸಿದ್ದರೆ ಸೂಕ್ತವಾಗುತ್ತಿತ್ತು ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಹೇಳಿದ್ದಾರೆ.
|
3 |
+
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಜನಪ್ರತಿನಿಧಿಗಳ ನ್ಯಾಯಾಲಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮೈಸೂರು ಲೋಕಾಯುಕ್ತದಲ್ಲಿ ಸಿಆರ್ಪಿಸಿ 156/3ರ ಅಡಿಯಲ್ಲಿ ಪ್ರಕರಣ ದಾಖಲಿಸಲು ಆದೇಶಿಸಿದೆ. ಆದರೆ ಈಗ ಸಿಆರ್ಪಿಸಿ ಅಸ್ತಿತ್ವದಲ್ಲಿ ಇಲ್ಲ ಎಂದು ಹೇಳಿದರು. ಬಿಎನ್ಎಸ್ಎಸ್ ನಿಯಮಗಳು 2024ರ ಜುಲೈ 1 ರಿಂದಲೂ ಚಾಲ್ತಿಯಲ್ಲಿದೆ. ಅದರ ಅಡಿ ಪ್ರಕರಣ ದಾಖಲಿಸಿ ಕಾನೂನು ಪ್ರಕ್ರಿಯೆ ಮುಂದುವರಿಸಲು ಅವಕಾಶವಿದೆ. ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪಿನ ಕುರಿತು ಚರ್ಚೆಗಳು ನಡೆಯುತ್ತಿವೆ. ಕಾನೂನು ತಜ್ಞರ ತಂಡ ಪರಿಶೀಲನೆ ನಡೆಸಿ ಯಾವ ರೀತಿಯ ವರದಿ ನೀಡಲಿದೆ ಎಂದು ಕಾಯುತ್ತಿದ್ದೇವೆ. ವರದಿಯ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
|
4 |
+
ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ನ ವಿಭಾಗೀಯ ಪೀಠ, ಸುಪ್ರೀಂ ಕೋರ್ಟ್ ಸೇರಿ ಬೇರೆ ಬೇರೆ ಹಂತಗಳಲ್ಲಿ ಪ್ರಶ್ನಿಸಲು ಅವಕಾಶ ಇದೆ ಎಂದು ಹೇಳಿದರು. ಬಿಜೆಪಿಯವರು ಟೀಕೆಗಳು ಹಾಗೂ ರಾಜೀನಾಮೆಯ ಒತ್ತಡಗಳ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವರು, ದೇಶದಲ್ಲಿ ಕಾನೂನು ಎಂಬುದು ಅಸ್ತಿತ್ವದಲ್ಲಿದೆ.
|
5 |
+
ಯಾರು ಏನೇ ಹೇಳಿದರೂ ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಬಿಜೆಪಿಯವರು ಹೇಳಿದಾಕ್ಷಣ ಅದೇ ರೀತಿ ಮಾಡಲಾಗುವುದಿಲ್ಲ. ಯಾರೆ ಏನೇ ಅಭಿಪ್ರಾಯ ಹೇಳಿದರೂ ಕಾನೂನು ಮೀರಿ ಜರುಗುವುದಿಲ್ಲ. ವಿರೋಧಪಕ್ಷವಾಗಿ ಬಿಜೆಪಿಯವರು ಪ್ರತಿಭಟನೆ ಮಾಡುವುದು, ರಾಜೀನಾಮೆಗೆ ಒತ್ತಾಯಿಸುವುದು ಅವರ ಕರ್ತವ್ಯ ಅದಕ್ಕೆ ನಮ್ಮ ಆಕ್ಷೇಪಣೆ ಇಲ್ಲ ಎಂದರು.
|
6 |
+
ಹೈಕೋರ್ಟ್ನ ತೀರ್ಪಿನಿಂದ ನಮಗೆ ಸಮಾಧಾನವಾಗಿಲ್ಲ. ನಾವು ನೀಡಿದ ಸಾಕ್ಷ್ಯಗಳು, ಪುರಾವೆಗಳನ್ನು ತೀರ್ಪು ನೀಡುವ ವೇಳೆ ಪರಿಗಣಿಸಲಾಗಿಲ್ಲ. ಹೀಗಾಗಿ ತೀರ್ಪನ್ನು ಉನ್ನತ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗುವುದು ಎಂದು ತಿಳಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪ್ರತಿನಿತ್ಯ ಕ್ಷುಲ್ಲಕ ವಿಚಾರಗಳಿಗೂ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದರೆ, ಎಲ್ಲದ್ದಕ್ಕೂ ಉತ್ತರ ನೀಡಲು ಸಾಧ್ಯವಿಲ್ಲ. ಸಾಂವಿಧಾನಿಕ ಬಾಧ್ಯತೆಯನ್ನು ಹೊಂದಿರುವ ರಾಜ್ಯಪಾಲರು ಪ್ರಸ್ತಾಪಿಸುವ ಗಂಭೀರ ವಿಚಾರಗಳಿಗೆ ಸರ್ಕಾರ ಪ್ರತಿಕ್ರಿಯಿಸಲಿದೆ ಎಂದು ಹೇಳಿದರು.
|
eesanje/url_46_9_8.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಸಿದ್ದರಾಮಯ್ಯ ರಾಜೀನಾಮೆಗೆ ಸ್ವಪಕ್ಷೀಯರ ಆಗ್ರಹ
|
2 |
+
ಬೆಂಗಳೂರು, ಸೆ.26- ಸದ್ಯದಲ್ಲಿ ನಡೆಯುತ್ತಿರುವ ಹರಿಯಾಣ, ಜಮು ಕಾಶೀರ ಸೇರಿದಂತೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮುಜುಗರವಾಗುವುದನ್ನು ತಪ್ಪಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಾತ್ಕಾಲಿಕವಾಗಿ ತಮ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಚಾರಣೆ ಎದುರಿಸಬೇಕೆಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಬಿ. ಕೋಳಿವಾಡ ಹೇಳಿದ್ದಾರೆ.
|
3 |
+
ಈ ಹೇಳಿಕೆಯ ಮೂಲಕ ಇತ್ತೀಚಿನ ಬೆಳವಣಿಗೆ ನಂತರ ಕಾಂಗ್ರೆಸ್ ಪಕ್ಷದಲ್ಲಿ ಮೊಟ್ಟಮೊದಲ ಬಾರಿಗೆ ಸ್ವಪಕ್ಷೀಯರಲ್ಲಿ ಸಿದ್ದರಾಮಯ್ಯ ಅವರ ವಿರುದ್ಧ ಕೆ.ಬಿ.ಕೋಳಿವಾಡ ಧ್ವನಿ ಎತ್ತಿದ್ದಂತಾಗಿದೆ. ಮುಡಾ ಪ್ರಕರಣದಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್, ಸಚಿವರು, ಶಾಸಕರಾದಿಯಾಗಿ ಎಲ್ಲರೂ ಸಿದ್ದರಾಮಯ್ಯ ಅವರ ಪರವಾಗಿ ಬೆಂಬಲ ವ್ಯಕ್ತಪಡಿಸಿದ್ದು, ಕೆ.ಬಿ.ಕೋಳಿವಾರ ಅಪಸ್ವರ ಹೊಸ ಬೆಳವಣಿಗೆಗಳಿಗೆ ನಾಂದಿಹಾಡಿದೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಬಿ. ಕೋಳಿವಾಡ ಅವರು 40 ವರ್ಷಗಳ ರಾಜಕೀಯ ಜೀವನದಲ್ಲಿ ಸಿದ್ದರಾಮಯ್ಯ ಕಪ್ಪುಚುಕ್ಕಿ ಇಲ್ಲದ್ದಂತೆ ಕಳಂಕರಹಿತವಾಗಿ ನಡೆದುಕೊಂಡಿದ್ದಾರೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಬಡವರ ಪರವಾಗಿ ಆಡಳಿತ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
|
4 |
+
ಸಿದ್ದರಾಮಯ್ಯ ಅವರಿಗೆ ಹೈಕಮಾಂಡ್ ಸೇರಿದಂತೆ ಎಲ್ಲರ ಹಾಗೂ 136 ಶಾಸಕರ ಸಂಪೂರ್ಣ ಬೆಂಬಲವಿದೆ. ಅವರು ನಿರ್ದೋಷಿ ಎಂಬುದರಲ್ಲಿ ಎರಡು ಮಾತಿಲ್ಲ. ಜೆಡಿಎಸ್, ಬಿಜೆಪಿಯವರ ರಾಜಕೀಯ ಪಿತೂರಿಯಿಂದಾಗಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿಗಳಿಂದ ದೂರು ಕೊಡಿಸಿದ್ದಾರೆ.
|
5 |
+
ಆ ಪ್ರಕರಣ ರಾಜ್ಯಪಾಲರು, ಅಲ್ಲಿಂದ ನ್ಯಾಯಾಲಯದವರೆಗೂ ತಲುಪಿದೆ. ಇದೆಲ್ಲವೂ ಕಣ್ಣುದುರಿಗೆ ಇದೆ. ಈಗ ಹರಿಯಾಣ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಅವರ ಪ್ರಕರಣವನ್ನೇ ಬಹು ಮುಖ್ಯವಾಗಿ ಪ್ರಸ್ತಾಪಿಸಿದ್ದಾರೆ. ಇದರಿಂದ ಕಾಂಗ್ರೆಸ್ಗೆ ಮುಜುಗರವಾಗಿದೆ ಎಂದು ಹೇಳಿದರು. ಸದ್ಯದ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರು ತಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿರುವ ಮುಜುಗರವನ್ನು ತಪ್ಪಿಸಬೇಕು. ವಿಚಾರಣೆ ನಡೆದ ಬಳಿಕ ಅವರು ನಿರ್ದೋಷಿಯಾಗಿ ಹೊರಬರುತ್ತಾರೆಂಬ ವಿಶ್ವಾಸ ತಮಗಿದೆ. ಹಾಗೂ ವಿಧಾನಸಭೆಗಳ ಚುನಾವಣೆಗಳ ಬಳಿಕ ಮತ್ತೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಯಾಗಬೇಕೆಂದು ಕೋಳಿವಾಡ ಪ್ರತಿಪಾದಿಸಿದರು.
|
6 |
+
ಸಿದ್ದರಾಮಯ್ಯ ಅವರು ಹಿಂದುಳಿದ, ದಲಿತ ಹಾಗೂ ಎಲ್ಲಾ ವರ್ಗಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮರ್ಥ ಆಡಳಿತ ನಡೆಸಲು ಸೂಕ್ತವ್ಯಕ್ತಿ. ನನ್ನ 50 ವರ್ಷಗಳ ರಾಜಕೀಯ ಅನುಭವದಲ್ಲಿ ಸಿದ್ದರಾಮಯ್ಯ ಅವರೇ ಕಾಂಗ್ರೆಸ್ನಲ್ಲಿ ಮುಖ್ಯಮಂತ��ರಿ ಆಗಬೇಕೆಂಬ ನಿಲುವನ್ನು ಹೊಂದಿದ್ದೇನೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ರಾಜೀನಾಮೆ ನೀಡುವುದು ಸೂಕ್ತ ಎಂದರು.
|
eesanje/url_46_9_9.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಕಲ್ಯಾಣ ಕರ್ನಾಟಕಕ್ಕೆ ನೇಮಕಾತಿಯಲ್ಲಿ ಪಾಲು ನೀಡುವ ಕುರಿತು ಮಹತ್ವದ ಸಭೆ
|
2 |
+
|
3 |
+
ಬೆಂಗಳೂರು,ಸೆ.25-ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನದಡಿ ಅಗತ್ಯ ಪಾಲು ನೀಡುವ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿಂದು ಮಹತ್ವದ ಸಭೆ ನಡೆಯಿತು.
|
4 |
+
ಸಚಿವರಾದ ಡಾ. ಜಿ. ಪರಮೇಶ್ವರ, ಹೆಚ್.ಕೆ. ಪಾಟೀಲ, ಈಶ್ವರ್ಖಂಡ್ರೆ, ಕೆ. ಸುಧಾಕರ್, ಡಾ. ಎಂ.ಸಿ. ಸುಧಾಕರ್, ಎನ್.ಎಸ್. ಬೋಸರಾಜು, ಪ್ರಿಯಾಂಕ ಖರ್ಗೆ, ಡಿ.ಸುಧಾಕರ್ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹಾಗೂ ಸರ್ಕಾರದ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
|
5 |
+
ಪಿಎಸ್ಐ ಸೇರಿದಂತೆ ಹಲವಾರು ಹುದ್ದೆಗಳ ನೇಮಕಾತಿ ಚಾಲ್ತಿಯಲ್ಲಿದೆ. ಅದರ ಕುರಿತು ಪ್ರಗತಿಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು ನೇಮಕಾತಿ ಪ್ರಕ್ರಿಯೆಗಳು ಚುರುಕುಗೊಳ್ಳಬೇಕು. ಅದೇ ಸಂದರ್ಭದಲ್ಲಿ 371 ಜೆ ಸ್ಥಾನಮಾನದ ಅಡಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನೇಮಕಾತಿಯಲ್ಲಿ ಸೂಕ್ತ ಪಾಲು ನೀಡಬೇಕು ಎಂದು ಸೂಚಿಸಿದರು.
|
6 |
+
ಇತ್ತೀಚೆಗೆ ನಡೆದಿರುವ ಪಿಎಸ್ಐ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರ್ದಿಷ್ಟ ಸ್ಥಾನಗಳ ನಿಗದಿಯಲ್ಲಿ ಅನ್ಯಾಯವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಸಂಭವನೀಯ ನೇಮಕಾತಿ ಪಟ್ಟಿಯನ್ನು ತಡೆಹಿಡಿಯುವಂತೆ ಪತ್ರ ಬರೆದಿದ್ದರು.ಈ ಹಿನ್ನೆಲೆಯಲ್ಲಿ ಇಂದು ಮಹತ್ವದ ಸಭೆ ನಡೆಸಲಾಗಿದೆ.
|
eesanje/url_47_100_1.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಉತ್ತರಪ್ರದೇಶದಲ್ಲಿ ಗುಂಡಿಕ್ಕಿ ಪತ್ರಕರ್ತನ ಹತ್ಯೆ
|
2 |
+
ಜೌನ್ಪುರ (ಯುಪಿ), ಮೇ 13– ಪತ್ರಕರ್ತನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿರುವ ಘಟನೆ ಜೌನ್ಪುರ ಜಿಲ್ಲೆಯ ಶಹಗಂಜ್ ಪ್ರದೇಶದಲ್ಲಿ ನಡೆದಿದೆ. ಸಬರ್ಹಾದ್ ಗ್ರಾಮದ ಅಶುತೋಷ್ ಶ್ರೀವಾಸ್ತವ (43)ಕೊಲೆಯಾದ ಪತ್ರಕರ್ತ.
|
3 |
+
ಇಂದು ಬೆಳಿಗ್ಗೆ 9.30 ರ ಸುಮಾರಿಗೆ ಇಮ್ರಂಗಂಜ್ ಮಾರುಕಟ್ಟೆಗೆ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಜೌನ್ಪುರ್-ಶಾಹ್ಗಂಜ್ ರಸ್ತೆಯ ಸಮೀಪವಿರುವ ಛೇದಕದಲ್ಲಿ ಗುಂಡು ಹಾರಿಸಿದ್ದಾರೆ ಎಂದು ಸರ್ಕಲ್ ಇನ್ಸ್ ಪೆಕ್ಟರ್ ಅಜಿತ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ.
|
4 |
+
ಶ್ರೀವಾಸ್ತವ ಅವರು ಒಂದು ತಿಂಗಳ ಹಿಂದೆ ಶಹಗಂಜ್ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ಪತ್ರ ಬರೆದು ರಕ್ಷಣೆಗಾಗಿ ವಿನಂತಿಸಿದ್ದರು ಆದರೆ ಪೊಲೀಸರು ಅವರ ಮನವಿಗೆ ಗಮನ ಕೊಡಲಿಲ್ಲ ಎಂದು ಕುಟುಂಬದ ಮೂಲಗಳು ಆರೋಪಿಸಿದೆ.
|
5 |
+
ಪತ್ರಕರ್ತನ ಹತ್ಯೆ ಹಿನ್ನೆಲೆಯಲ್ಲಿ ಸ್ಥಳೀಯ ಜನರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಈ ಬಗ್ಗೆ ಕಠಿಣ ಕ್ರಮದ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
|
6 |
+
ಶ್ರೀವಾಸ್ತವ ಅವರು ಈ ಪ್ರದೇಶದಲ್ಲಿ ನಡೆಯುತ್ತಿದ್ದ ಗೋಹತ್ಯೆ ವಿರುದ್ಧ ಲೇಖನ ಬರೆಯುತ್ತಿದ್ದರು ಎಂದು ಸ್ಥಳೀಯ ಪತ್ರಕರ್ತರು ಹೇಳಿದ್ದಾರೆ. ಕಳ್ಳಸಾಗಾಣಿಕೆದಾರರಿಂದ ಹಲವು ಬಾರಿ ಬೆದರಿಕೆಗಳು ಬಂದಿದ್ದು, ಈ ಬಗ್ಗೆ ಪೊಲೀಸರಿಗೆ ಲಿಖಿತವಾಗಿ ತಿಳಿಸಿದ್ದರು. ಈ ಸಂಭಂದ ದಾಳಿಕೋರರನ್ನು ಬಂಧಿಸಲು ತಂಡವನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಪಾಲ್ ಶರ್ಮಾ ತಿಳಿಸಿದ್ದಾರೆ.
|
7 |
+
ಜೌನಪುರ ಪತ್ರಕರ್ತರ ಸಂಘವು ಹತ್ಯೆಯನ್ನು ಖಂಡಿಸಿದ್ದು, ಆದಷ್ಟು ಬೇಗ ಹಂತಕರನ್ನು ಬಂಧಿಸಬೇಕು ಎಂದು ಒತ್ತಾಯಿಸಿದೆ. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
|
8 |
+
ಪೊಲೀಸರ ಅಸಡ್ಡೆ ಕಾರ್ಯವೈಖರಿಯಿಂದ ಶ್ರೀವಾಸ್ತವ್ ಹತ್ಯೆಯಾಗಿದೆ. ಇದಕ್ಕೆ ಕಾರಣರಾದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪತ್ರಕರ್ತರ ಸಂಘ ಒತ್ತಾಯಿಸಿದೆ.
|
eesanje/url_47_100_10.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
1 ಮತ ಹಾಕಿದರೆ ವರ್ಷಕ್ಕೆ 1 ಲಕ್ಷ ರೂ. ಕೊಡ್ತೀವಿ : ಮಹಿಳೆಯರಿಗೆ ಸೋನಿಯಾ ಗ್ಯಾರಂಟಿ
|
2 |
+
ನವದೆಹಲಿ, ಮೇ 13-ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಪಕ್ಷವು ಪಟ್ಟಿ ಮಾಡಿರುವ ಖಾತರಿಗಳು ಈ ಕಷ್ಟದ ಸಮಯದಲ್ಲಿ ತಮ್ಮ ಪರಿಸ್ಥಿತಿಗಳನ್ನು ಬದಲಾಯಿಸುತ್ತವೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಇಂದು ಜನರಿಗೆ ಭರವಸೆ ನೀಡಿದ್ದಾರೆ.
|
3 |
+
ಸಾಮಾಜಿಕ ಮಾಧ್ಯಮದಲ್ಲಿ ಕಾಂಗ್ರೆಸ್ ಹಂಚಿಕೊಂಡಿರುವ ವೀಡಿಯೋ ಸಂದೇಶದಲ್ಲಿ, ತೀವ್ರ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ದೇಶದ ಮಹಿಳೆಯರು ಕಠಿಣ ಸಮಯವನ್ನು ಎದುರಿಸುತ್ತಿದ್ದಾರೆ. ಅವರಿಗಾಗಿ ಪಕ್ಷದ ಮಹಾಲಕ್ಷ್ಮಿ ಯೋಜನೆ ಅವರ ಜೀವನವನ್ನು ಬದಲಾಯಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
|
4 |
+
ನನ್ನ ಪ್ರೀತಿಯ ಸಹೋದರಿಯರೇ, ಸ್ವಾತಂತ್ರ್ಯ ಹೋರಾಟದಿಂದ ಆಧುನಿಕ ಭಾರತ ನಿರ್ಮಾಣದವರೆಗೆ ಮಹಿಳೆಯರು ಅಪಾರ ಕೊಡುಗೆ ನೀಡಿದ್ದಾರೆ. ಆದರೆ, ಇಂದು ನಮ್ಮ ಮಹಿಳೆಯರು ತೀವ್ರ ಹಣದುಬ್ಬರದ ನಡುವೆ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ಅವರ ಶ್ರಮ ಮತ್ತು ತಪಸ್ಸಿಗೆ ನ್ಯಾಯ ಸಲ್ಲಿಸಲು ಕ್ರಾಂತಿಕಾರಿ ಭರವಸೆಯೊಂದಿಗೆ, ಕಾಂಗ್ರೆಸ್ ಬಂದಿದೆ ಎಂದಿದ್ದಾರೆ.
|
5 |
+
’ ' . , 1 = 1 . 🇮🇳###Phase4pic../JGDTyHo5MI
|
6 |
+
ಕಾಂಗ್ರೆಸ್ನ ಮಹಾಲಕ್ಷ್ಮಿ ಯೋಜನೆಯು ಬಡ ಕುಟುಂಬದ ಮಹಿಳೆಗೆ ನಾವು ಪ್ರತಿ ವರ್ಷ 1 ಲಕ್ಷ ರೂಪಾಯಿಗಳನ್ನು ನೀಡುತ್ತೇವೆ ಎಂದು ಖಾತರಿಪಡಿಸುತ್ತದೆ. ಏಳು ಹಂತದ ಸಾರ್ವತ್ರಿಕ ಚುನಾವಣೆಯಲ್ಲಿ ನಡೆಯುತ್ತಿರುವ ನಾಲ್ಕನೇ ಸುತ್ತಿನಲ್ಲಿ ಕಾಂಗ್ರೆಸ್ ಬೆಂಬಲಿಸಬೇಕು ಎಂದು ಜನರಿಗೆ ಮನವಿ ಮಾಡಿದ್ದಾರೆ.
|
7 |
+
ಕಾಂಗ್ರೆಸ್ನ ಖಾತರಿ ಈಗಾಗಲೇ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಕೋಟ್ಯಂತರ ಕುಟುಂಬಗಳ ಜೀವನವನ್ನು ಬದಲಾಯಿಸಿದೆ. ಇದೇ ರೀತಿ ಮಾಹಿತಿ ಹಕ್ಕು, ಶಿಕ್ಷಣದ ಹಕ್ಕು ಅಥವಾ ಆಹಾರ ಭದ್ರತೆಯಂತಹ ಯೋಜನೆಗಳ ಮೂಲಕ ಕಾಂಗ್ರೆಸ್ ಪಕ್ಷವು ಲಕ್ಷಾಂತರ ಭಾರತೀಯರನ್ನು ಸಬಲೀಕರಣಗೊಳಿಸಿದೆ. ಮಹಾಲಕ್ಷ್ಮಿ ನಮ್ಮ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವ ಇತ್ತೀಚಿನ ಭರವಸೆಯಾಗಿದೆ ಎಂದು ತಿಳಿಸಿದ್ದಾರೆ.
|
8 |
+
ಈ ಕಷ್ಟದ ಸಮಯದಲ್ಲಿ, ಕಾಂಗ್ರೆಸ್ನ ಕೈ ನಿಮ್ಮೊಂದಿಗಿದೆ ಮತ್ತು ಈ ಕೈ ನಿಮ್ಮ ಪರಿಸ್ಥಿತಿಯನ್ನು ಬದಲಾಯಿಸುತ್ತದೆ ಎಂದು ನಾನು ನಿಮಗೆ ಭರವಸೆ ನೀಡಲು ಬಯಸುತ್ತೇನೆ. ಧನ್ಯವಾದಗಳು. ಜೈ ಹಿಂದ್ ಎಂದು ಎಐಸಿಸಿ ಮಾಜಿ ಅಧ್ಯಕ್ಷರು ತಮ್ಮ ಪಕ್ಷದ ಚಿಹ್ನೆಯನ್ನು ಉಲ್ಲೇಖಿಸಿ ಹೇಳಿದರು.
|
9 |
+
ಸೋನಿಯಾಗಾಂಧಿ ಅವರ ಮನವಿಯನ್ನು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮ ಎಕ್ಸ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.ರಾಹುಲ್ ಗಾಂಧಿ ಅವರು ಬಡ ಕುಟುಂಬದ ಮಹಿಳೆಯರು ನೆನಪಿಸಿಕೊಳ್ಳಿ – ನಿಮ್ಮ ಒಂದು ಮತವು ನಿಮ್ಮ ಖಾ���ೆಯಲ್ಲಿ ವಾರ್ಷಿಕ 1 ಲಕ್ಷ ರೂ. ತರಲಿದೆ.
|
10 |
+
ಕಾಂಗ್ರೆಸ್ನ ಮಹಾಲಕ್ಷ್ಮಿ ಯೋಜನೆಯು ಭೀಕರ ಹಣದುಬ್ಬರ ಮತ್ತು ನಿರುದ್ಯೋಗದ ನಡುವೆ ಹೋರಾಡುತ್ತಿರುವ ಮಹಿಳೆಯರಿಗೆ ಜೀವರಕ್ಷಕವಾಗಲಿದೆ. ಪ್ರತಿ ತಿಂಗಳು 8,500 ರೂ.ಗಳನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವುದರಿಂದ, ಭಾರತದ ಮಹಿಳೆಯರು ಆರ್ಥಿಕ ಅವಲಂಬನೆಯಿಂದ ಮುಕ್ತರಾಗುತ್ತಾರೆ ಮತ್ತು ಅವರ ಸ್ವಂತ ಕುಟುಂಬದ ಹಣೆಬರಹ. ಬರೆಯಲು ಸಾಧ್ಯವಾಗುತ್ತದೆ. ಹಾಗಾಗಿ ಮತ ಚಲಾಯಿಸಿ ಮತ್ತು ನಿಮ್ಮ ಪರಿಸ್ಥಿತಿಗಳನ್ನು ಬದಲಾಯಿಸಿ ಎಂದು ಸೋನಿಯಾ ಗಾಂಧಿ ಅವರ ಸಂದೇಶವನ್ನು ಹಂಚಿಕೊಳ್ಳುವ ಸಂದರ್ಭದಲ್ಲಿ ಹೇಳಿದ್ದಾರೆ.
|
eesanje/url_47_100_11.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
“ಚಾರ್ ಸೊ ಪಾರ್” ಬರೀ ಘೋಷಣೆಯಲ್ಲ, ಅದೇ ನಿಜವಾಗಲಿದೆ : ಪ್ರಧಾನಿ ಮೋದಿ
|
2 |
+
ನವದೆಹಲಿ,ಮೇ 13-ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಹಾದಿಯಲ್ಲಿದೆ. ಈ ಗುರಿಯು ಕೇವಲ ಘೋಷಣೆಯಾಗಿಲ್ಲ. ಮತದಾನದ ವೇಳೆ ಜನರ ಉತ್ಸಾಹವನ್ನು ಕಂಡು ಇದನ್ನು ಹೇಳುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
|
3 |
+
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ನಾನು ಬಹುತೇಕ ಎಲ್ಲ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ ಮತ್ತು ಬಿಜೆಪಿ ಮತ್ತು ಎನ್ಡಿಎ 400 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಸಾಧಿಸುವುದನ್ನು ಖಚಿತಪಡಿಸಿಕೊಳ್ಳಲು ದೇಶದಾದ್ಯಂತ ಬಲವಾದ ಸಂಕಲ್ಪವಿದೆ. ಈ ಚುನಾವಣೆಗಳಲ್ಲಿ ಎನ್ಡಿಎಯನ್ನು 400 ಸೀಟುಗಳ ಗಡಿ ಮೀರಿ ಕೊಂಡೊಯ್ಯಲು ದೇಶ ಸಂಕಲ್ಪ ಮಾಡಿದೆ ಎಂದು ಹೇಳಿದರು.
|
4 |
+
ನಾನು ಮತದಾನದ ಕೇಂದ್ರದಲ್ಲಿಲ್ಲ, 140 ಕೋಟಿ ಜನರಿದ್ದಾರೆ. ಮೊದಲ ಮೂರು ಹಂತಗಳಲ್ಲಿನ ಮತದಾನಕ್ಕೆ ಸಂಬಂಧಿಸಿದಂತೆ, 400 ಪಾರ್ ಎಂಬುದು ಕೇವಲ ಘೋಷಣೆಯಾಗಿಲ್ಲ ಮತ್ತು ವಾಸ್ತವವಾಗುತ್ತಿರುವುದನ್ನು ನಾನು ಸ್ಪಷ್ಟವಾಗಿ ನೋಡುತ್ತಿದ್ದೇನೆ. ಎನ್ಡಿಎಯಂತಹ ಬಲಿಷ್ಠ ಸರ್ಕಾರವನ್ನು ಆಯ್ಕೆ ಮಾಡಲು ಜನರು ಬದ್ಧರಾಗಿದ್ದಾರೆ. ದೇಶದ ಭವಿಷ್ಯವನ್ನು ಭದ್ರಪಡಿಸಲು ಜನರು ಬಿಸಿಗಾಳಿಯ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
|
5 |
+
ಎನ್ಡಿಎ 400 ಸ್ಥಾನಗಳನ್ನು ಗೆಲ್ಲುವುದಿಲ್ಲ ಎಂಬ ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ರಾಜ್ಯಸಭೆಗೆ ಆಯ್ಕೆಯಾದರು. ಅವರ ಪುತ್ರ ರಾಹುಲ್ ಗಾಂಧಿ ಅಮೇಥಿಯಿಂದ ಸ್ಪರ್ಧಿಸದ ಉದಾಹರಣೆಗಳನ್ನು ಉಲ್ಲೇಖ ಮಾಡಿದರು.
|
6 |
+
ಅವರ ದೊಡ್ಡ ನಾಯಕಿ ರಾಜ್ಯಸಭೆಗೆ ಹೋಗಿದ್ದಾರೆ. ಅವರು (ರಾಹುಲ್ ಗಾಂಧಿ ) ಎರಡನೇ ಸ್ಥಾನಕ್ಕೆ (ರಾಯಬರೇಲಿಯಲ್ಲಿ) ಸ್ಪರ್ಧಿಸಿದರೆ ಅವರು (ರಾಹುಲ್ ಗಾಂಧಿ ) ವಯನಾಡಿನಿಂದ ಓಡಿಹೋಗುತ್ತಾರೆ. ಅಮೇಥಿಯಲ್ಲಿ ಹೋರಾಡುವ ಧೈರ್ಯ ಅವರಿಗೆ ಇಲ್ಲ, ನಾನು ಇಲ್ಲಿಯವರೆಗೆ ಏನು ಹೇಳಿದ್ದೇನೆ ನಿಜವಾಗಲಿ ಎಂದು ಭವಿಷ್ಯ ನುಡಿದರು.
|
7 |
+
ಅವರಿಗೆ ಜನರ ಸೇವೆಯಲ್ಲಿ ಆಸಕ್ತಿ ಇಲ್ಲ, ಅವರು ತಮ್ಮ ಕುಟುಂಬದ ಬಗ್ಗೆ ಮಾತ್ರ ಆಸಕ್ತಿ ಹೊಂದಿದ್ದಾರೆ. ದೇಶದ ಬಗ್ಗೆ ಯೋಚಿಸುವುದಿಲ್ಲ. ಈ ದೇಶವು ಅತಿ ಹೆಚ್ಚು ಹಣದುಬ್ಬರವನ್ನು ಎದುರಿಸಿದ್ದು ಇಂದಿರಾಗಾಂಧಿ ಅವರ ಅಧಿ ಕಾರಾವಧಿಯಲ್ಲಿ. ಕೆಂಪು ಕೋಟೆಯ ಆವರಣದಿಂದ ಮಾಡಿದ ಭಾಷಣದಲ್ಲಿ, ಜವಾಹರಲಾಲ್ ನೆಹರು, ರಾಜೀವ್ ಗಾಂಧಿ ಮತ್ತು ಇಂದಿರಾ ಗಾಂಧಿಯವರು ನಮ್ಮ ಹಣದುಬ್ಬರ ದರವನ್ನು ಉತ್ತರ ಕೊರಿಯಾದ ದರದೊಂದಿಗೆ ಹೋಲಿಸಿದರು.
|
8 |
+
ಮಹಿಳೆಯರ ಸಬಲೀಕರಣ ನನ್ನ ಬದ್ಧತೆಯಾಗಿದೆ. ನಾನು ಜಿ-20 ಶೃಂಗಸಭೆಯಲ್ಲಿ ಮುನ್ನಡೆ ಸಾಧಿಸಿದ್ದೇನೆ. ಮಹಿಳೆಯರ ಅಭಿವೃದ್ಧಿಗಾಗಿ ನಾವು ಮಹಿಳೆಯರಿಗೆ ಅವಕಾಶಗಳನ್ನು ಒದಗಿಸಬೇಕು. ನಾವು ಸೇನೆಯಲ್ಲಿ ಮಹಿಳೆಯರಿಗಾಗಿ ಬಾಗಿಲು ತೆರೆದಿದ್ದೇವೆ. ಅವರನ್ನು ವಾಯುಪಡೆಯ ಪೈಲಟ್ಗಳನ್ನಾಗಿ ಮಾಡಿದೆವು. ನಾವು ಅವರನ್ನು ಗಡಿಗೆ ದೇಶ ಕಾಯಲು ಕಳುಹಿಸಿದ್ದೇವೆ, ಈಗ ನಮ್ಮ ಹೆಣ್ಣುಮಕ್ಕಳು ಸಿಯಾಚಿನ್ನಲ್ಲಿ ದೇಶವನ್ನು ರಕ್ಷಿಸುತ್ತಿದ್ದಾರೆ. ನಾನು ಮಹಿಳೆಯರಲ್ಲಿ ಮಾನಸಿಕ ಬದಲಾವಣೆಯನ್ನು ತರುವಲ್ಲಿ ಯಶಸ್ವಿಯಾಗಿದ್ದೇನೆ. ಮಹಿಳಾ ಶಕ್ತಿ ಹೆಚ್ಚಾಗುತ್ತದೆ. ದೇಶದ ಅಭಿವೃದ್ಧಿ ವೇಗವಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
|
9 |
+
ಪೂರ್ವ ಭಾರತದಲ್ಲಿ ಬಿಜೆಪಿಯ ಭವಿಷ್ಯದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ 2013ರ ಭಾಷಣವನ್ನು ಮೆಲುಕು ಹಾಕಿದರು. ಆಗ ನಾನು ಪ್ರಧಾನಿ ಅಭ್ಯರ್ಥಿಯಾಗಿರಲಿಲ್ಲ. ನಾವು ಭಾರತವನ್ನು ಅಭಿವೃದ್ಧಿಪಡಿಸಬೇಕಾದರೆ ನಾವು ಈಸ್್ಟ ಇಂಡಿಯಾವನ್ನು ಬೆಳವಣಿಗೆಯ ಎಂಜಿನ್ ಮಾಡಬೇಕು ಎಂದು ನಾನು ಹೇಳಿದ್ದೆ. ಕಳೆದ 10 ವರ್ಷಗಳಲ್ಲಿ ನಾನು ಮೂಲಸೌಕರ್ಯಕ್ಕೆ ಸಂಬಂಧಿಸಿದ ಪೂರ್ವ ಭಾರತದಲ್ಲಿನ ಯೋಜನೆಗಳಿಗೆ ಸತತವಾಗಿ ಒತ್ತು ನೀಡಿದ್ದೇನೆ. ನಾವು ಮೊದಲಿಗಿಂತ ಉತ್ತಮ ಫಲಿತಾಂಶಗಳನ್ನು ಪಡೆಯುತ್ತೇವೆ ಎಂಬ ನಂಬಿಕೆಯಿದೆ ಎಂದು ಅವರು ಹೇಳಿದ್ದಾರೆ.
|
10 |
+
2019ರ ಚುನಾವಣೆಯಲ್ಲಿ, ಬಿಜೆಪಿ, ಜೆಡಿಯು ಮತ್ತು ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ಜೆಪಿಯನ್ನು ಒಳಗೊಂಡಿರುವ ಎನ್ಡಿಎ ಮೈತ್ರಿಕೂಟವು ಬಿಹಾರದ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದಿತ್ತು. ನಾನು ನಮ್ಮ ಸ್ನೇಹಿತರ ಬಳಿ ಮಾತನಾಡಿದ್ದೇನೆ, ಕಳೆದ ಬಾರಿ ನಾವು 1 ಸ್ಥಾನವನ್ನು ಕಳೆದುಕೊಂಡಿದ್ದೇವೆ. ಈ ಬಾರಿ ನಾವು ಆ 1 ಸ್ಥಾನವನ್ನು ಸಹ ಕಳೆದುಕೊಳ್ಳುವುದಿಲ್ಲ ಎಂದು ಮೋದಿ ಹೇಳಿದ್ದಾರೆ.
|
11 |
+
ಬಿಹಾರದಲ್ಲಿ ಮೈತ್ರಿಗೆ ಕ್ಲೀನ್ ಸ್ವೀಪ್ ಎಂದು ಭವಿಷ್ಯ ನುಡಿದ ಮೋದಿ ಅವರು, ನಾನು ಬಿಹಾರದಲ್ಲಿ ನಮ್ಮ ಮಿತ್ರಪಕ್ಷಗಳೊಂದಿಗೆ ಮಾತನಾಡಿದ್ದೇನೆ. ನಾವು ಒಂದು ಸ್ಥಾನವನ್ನು (2019 ರಲ್ಲಿ) ಕಳೆದುಕೊಂಡಿದ್ದೇವೆ ಮತ್ತು ನಾವು ಇಲ್ಲದಿರಬಹುದು. ಈ ಬಾರಿ ಒಂದನ್ನು ಕಳೆದುಕೊಳ್ಳಬಹುದು. ನಾನು ಸಂಘಟನಾ ಕಾರ್ಯಕ್ಕಾಗಿ ಆಗಾಗ್ಗೆ ಇಲ್ಲಿಗೆ ಬಂದಿದ್ದೇನೆ ಮತ್ತು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೇನೆ. ನನಗೆ ಇಲ್ಲಿ ಹಳೆಯ ಸಂಪರ್ಕಗಳಿವೆ ಎಂದರು.
|
eesanje/url_47_100_12.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಭಾರತದ ರಾಜಕೀಯ ಪಕ್ಷಗಳು ಶಿಕ್ಷಣ ಕ್ಷೇತ್ರದತ್ತ ಗಮನಹರಿಸಬೇಕು: ವಿಶ್ವನಾಥನ್
|
2 |
+
ವಾಷಿಂಗ್ಟನ್, ಮೇ 13 (ಪಿಟಿಐ)– ದೇಶದ ಆರ್ಥಿಕತೆಯು ಶಿಕ್ಷಣದೊಂದಿಗೆ ನೇರವಾಗಿ ಸಂಬಂಧ ಹೊಂದಿರುವುದರಿಂದ ಭಾರತದ ರಾಜಕೀಯ ಪಕ್ಷಗಳು ಶಿಕ್ಷಣ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಪ್ರತಿಷ್ಠಿತ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಕುಲಪತಿ ಗೋವಿಂದಸ್ವಾಮಿ ವಿಶ್ವನಾಥನ್ ಹೇಳಿದ್ದಾರೆ.
|
3 |
+
ಪಿಟಿಐಗೆ ನೀಡಿದ ಸಂದರ್ಶನದಲ್ಲಿ, 2047 ರ ವೇಳೆಗೆ ಭಾರತವು ಅಭಿವದ್ಧಿ ಹೊಂದಿದ ರಾಷ್ಟ್ರ ಎಂಬ ಗುರಿಯನ್ನು ಸಾಧಿಸಲು ಶಿಕ್ಷಣ ಕ್ಷೇತ್ರಕ್ಕೆ ರಾಷ್ಟ್ರದ ಜಿಡಿಪಿಯ ಶೇ. 6 ರಷ್ಟು ಖರ್ಚು ಮಾಡುವ ಅವಶ್ಯಕತೆಯಿದೆ ಎಂದು ಹೇಳಿದರು.
|
4 |
+
2023 ರಲ್ಲಿ ಭಾರತದ ತಲಾ ಆದಾಯವು 2,600 ಬಿಲಿಯನ್ ಡಾಲರ್ ಆಗಿದೆ. ದಕ್ಷಿಣದ ರಾಜ್ಯಗಳು ಅಥವಾ ಪಾಶ್ಚಿಮಾತ್ಯ ರಾಜ್ಯಗಳಂತಹ ಶಿಕ್ಷಣದಲ್ಲಿ ಉತ್ತಮವಾಗಿರುವ ರಾಜ್ಯಗಳು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿವೆ ಎಂದು ಅವರು ತಿಳಿಸಿದರು. ದಕ್ಷಿಣ ರಾಜ್ಯಗಳಲ್ಲಿ, ಇದು 3,500 ಬಿಲಿಯನ್ ಡಾಲರ್ನಿಂದ 4,000 ಬಿಲಿಯನ್ ಡಾಲರ್ಗೆ ಬದಲಾಗುತ್ತದೆ.
|
5 |
+
ಕೇರಳ ಮೊದಲ ಸ್ಥಾನದಲ್ಲಿದೆ, ತೆಲಂಗಾಣ ಎರಡನೇ ಸ್ಥಾನದಲ್ಲಿದೆ ಮತ್ತು ತಮಿಳುನಾಡು ಮೂರನೇ ಸ್ಥಾನದಲ್ಲಿದೆ… ಇವೆಲ್ಲವೂ ಸುಮಾರು 4,000 ಬಿಲಿಯನ್ ಡಾಲರ್ ಇದ್ದರೆ ಬಿಹಾರ ಮತ್ತು ಉತ್ತರ ಪ್ರದೇಶಗಳು 1,000 ಕ್ಕಿಂತ ಕಡಿಮೆ ಇವೆ ಏಕೆಂದರೆ ಅವು ಶಿಕ್ಷಣದಲ್ಲಿ ಹಿಂದುಳಿದಿವೆ ಎಂದು ಅವರು ಹೇಳಿದರು.
|
6 |
+
ಇದು ಜನರಿಗೆ ತಿಳಿದಿಲ್ಲ. ಈ ಬಗ್ಗೆ ಜನರಿಗೆ ತಿಳಿಹೇಳಬೇಕು. ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಶಿಕ್ಷಣದತ್ತ ಗಮನ ಹರಿಸದ ಹೊರತು ಆರ್ಥಿಕವಾಗಿ ಮೇಲೇರಲು ಸಾಧ್ಯವಿಲ್ಲ. ಇದು ಕುಟುಂಬಗಳು, ಸಮಾಜ, ರಾಜ್ಯಗಳು ಮತ್ತು ದೇಶಕ್ಕೆ ಅನ್ವಯಿಸುತ್ತದೆ. ಅಲ್ಲಿ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರಗಳು ಒಟ್ಟಿಗೆ ಕುಳಿತು ಶಿಕ್ಷಣಕ್ಕಾಗಿ ಸಾಕಷ್ಟು ಹಣವನ್ನು ಮೀಸಲಿಡುವುದನ್ನು ನೋಡಬೇಕೆಂದು ನಾನು ತುಂಬಾ ಬಯಸುತ್ತೇನೆ ಎಂದು ಅವರು ಹೇಳಿದರು.
|
7 |
+
ವಿಐಟಿಯ ಸಂಸ್ಥಾಪಕರೂ ಆಗಿರುವ ವಿಶ್ವನಾಥನ್ ಅವರು ಅಂತರರಾಷ್ಟ್ರೀಯ ಉನ್ನತ ಶಿಕ್ಷಣಕ್ಕೆ ನೀಡಿದ ಕೊಡುಗೆಗಳಿಗಾಗಿ ಮೇ 10 ರಂದು ಬಿಂಗ್ಹ್ಯಾಮ್ಟನ್ನಲ್ಲಿರುವ ಸ್ಟೇಟ್ ಯೂನಿವರ್ಸಿಟಿ ಆಫ್ ನ್ಯೂಯಾರ್ಕ್ನಿಂದ ಗೌರವ ಡಾಕ್ಟರ್ ಆಫ್ ಲಾಸ್ ಪದವಿಯನ್ನು ಪಡೆದರು.
|
8 |
+
ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಶ್ವನಾಥನ್, ಶಿಕ್ಷಣಕ್ಕೆ ಜಿಡಿಪಿಯ ಶೇ 6ರಷ್ಟು ವೆಚ್ಚ ಮಾಡಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಇದೆ. ಆದರೆ ಕಳೆದ 76 ವರ್ಷಗಳ ಸ್ವಾತಂತ್ರ್ಯದಲ್ಲಿ ಇದು ಎಂದೂ ಶೇ.3 ದಾಟಿಲ್ಲ ಎಂದು ವಿಷಾದಿಸಿದರು.
|
9 |
+
ಈ ವರ್ಷ ಅದು ಕಡಿಮೆಯಾಗಿದೆ. ಕಳೆದ ವರ್ಷ ಶಿಕ್ಷಣಕ್ಕೆ ಆದ್ಯತೆ ನೀಡದ ಕಾರಣ ಈ ವರ್ಷ ಅದು 2.9 ಶೇಕಡಾವಾಗಿದೆ. ಇತರ ಪ್ರದೇಶಗಳಿಗೆ ಆದ್ಯತೆ ಸಿಗುತ್ತದೆ. ಇದು ಬದಲಾಗಬೇಕು ಮತ್ತು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡೂ ಒಟ್ಟಾಗಿ ಕುಳಿತು, ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗಬೇಕು ಎಂದು ನಿರ್ಧರಿಸುತ್ತದೆ ಎಂದು ಅವರು ಹೇಳಿದರು.
|
10 |
+
ಎಲ್ಲಾ ಮುಂದುವರಿದ ದೇಶಗಳು, ಇದು ಜಿಡಿಪಿಯ 5 ಪ್ರತಿಶತದಿಂದ 7 ಪ್ರತಿಶತದವರೆಗೆ ಬದಲಾಗುತ್ತದೆ. ನಾವು ಅವರೊಂದಿಗೆ ಸ್ಪರ್ಧಿಸಬೇಕಾಗಿದೆ. ಈಗ ಹೊಸ ಶಿಕ್ಷಣ ನೀತಿಯಲ್ಲಿ ಜಿಡಿಪಿಯ ಶೇ 6ರಷ್ಟನ್ನು ಶಿಕ್ಷಣಕ್ಕೆ ವಿನಿಯೋಗಿಸಬೇಕು ಇದು ಸಾಕಾಗುವುದಿಲ್ಲ. ನಾವು ಅದನ್ನು ಹೆಚ್ಚಿಸಬೇಕಾಗಿದೆ ಎಂದು ಸಲಹೆ ನೀಡಿದರು.
|
eesanje/url_47_100_2.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಸಿಬಿಎಸ್ಇ ತರಗತಿ 12ನೇ ತರಗತಿ ಫಲಿತಾಂಶ ಪ್ರಕಟ
|
2 |
+
ನವದೆಹಲಿ,ಮೇ 13– ಸಿಬಿಎಸ್ಇ 12ನೇ ತರಗತಿಯ ಬೋರ್ಡ್ ಪರೀಕ್ಷೆ ಪಲಿತಾಂಶ ಪ್ರಕಟಿಸಲಾಗಿದೆ. ಮತ್ತೆ ಬಾಲಕಿಯರೇ ಮುಂದಿದ್ದು, ಒಟ್ಟಾರೆ ಶೇಕಡಾ 87.98 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಆದರೆ ಪಲಿತಾಂಶದಲ್ಲಿ ಕಳೆದ ಸಾಲಿಗೆ ಹೊಲಿಸಿದರೆ ಸ್ವಲ್ಪ ಕುಸಿದಿದೆ.
|
3 |
+
ಒಟ್ಟು 24,068 ವಿದ್ಯಾರ್ಥಿಗಳು ಶೇಕಡಾ 95 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಮತ್ತು 1,16,145 ವಿದ್ಯಾರ್ಥಿಗಳು ಶೇಕಡಾ 90 ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
4 |
+
ಈ ಬಾರಿ 7,126 ಕೇಂದ್ರಗಳಲ್ಲಿ ನಡೆದ ಪರೀಕ್ಷೆಗೆ ದೇಶಾದಾದ್ಯಂತ 16,21000ಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಇದರಲ್ಲಿ 91.52 ರಷ್ಟು ಹುಡುಗಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ,
|
5 |
+
ಈ ನಡುವೆ 1.22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಪಲಿತಾಂಶ ತಡೆಹಿಡಿಯಲಾಗಿದೆ. ಕಳೆದ ವರ್ಷ ಒಟ್ಟು ತೇರ್ಗಡೆ ಪ್ರಮಾಣ ಶೇ.87.33 ಆಗಿತ್ತು.
|
eesanje/url_47_100_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಮುಂಬೈ ವಿಮಾನ ನಿಲ್ದಾಣದಲ್ಲಿ 13 ಕೋಟಿ ಮೌಲ್ಯದ ಚಿನ್ನ ವಶ
|
2 |
+
ಮುಂಬೈ, ಮೇ 13 (ಪಿಟಿಐ) –ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಪ್ರಯಾಣಿಕರು ಅಕ್ರಮವಾಗಿ ತಂದಿದ್ದ 13.56 ಕೋಟಿ ರೂಪಾಯಿ ಮೌಲ್ಯದ 22.14 ಕೆಜಿ ಚಿನ್ನವನ್ನು ಕಸ್ಟಮ್ಸ್ ಇಲಾಖೆ ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|
3 |
+
ಇಲ್ಲಿನ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಕಾರ್ಯಾಚರಣೆಯಲ್ಲಿ 20 ಚಿನ್ನ ಕಳ್ಳಸಾಗಣೆ ಪ್ರಕರಣಗಳಲ್ಲಿ 11 ಪ್ರಯಾಣಿಕರನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಪ್ರಯಾಣಿಕರು ಗುದನಾಳ, ಒಳ ಉಡುಪು, ದೇಹದ ಮೇಲೆ ಮತ್ತು ರಟ್ಟಿನ ಹಾಳೆಯಲ್ಲಿ ಬಚ್ಚಿಟ್ಟಿದ್ದ ಅಮೂಲ್ಯ ಲೋಹ ಪತ್ತೆಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
4 |
+
ಒಂದು ಪ್ರಕರಣದಲ್ಲಿ, ಪ್ರಯಾಣಿಕರೊಬ್ಬರು ಧರಿಸಿದ್ದ ಬುರ್ಖಾದ ಅಡಿಯಲ್ಲಿ ಚಿನ್ನಾಭರಣಗಳನ್ನು ಬಚ್ಚಿಡಲಾಗಿತ್ತು ಮತ್ತು ಇನ್ನೊಂದು ಪ್ರಕರಣದಲ್ಲಿ, ಬೆಲೆಬಾಳುವ ಲೋಹದ ಬಾರ್ಗಳನ್ನು ಒಳ ಉಡುಪುಗಳಲ್ಲಿ ಮರೆಮಾಡಲಾಗಿತ್ತು ಎನ್ನಲಾಗಿದೆ.
|
5 |
+
ಪ್ರಯಾಣಿಕರು ಬೆಲ್ಟ್ ಆಗಿ ಧರಿಸಿರುವ ಬಳೆ ಮತ್ತು ಬಕಲ್ ರೂಪದಲ್ಲಿ ಚಿನ್ನವನ್ನು ಕಳ್ಳಸಾಗಣೆ ಮಾಡಲಾಗುತ್ತಿತ್ತು, ಆದರ ಜತೆಗೆ ಮೇಣದ ರೂಪದಲ್ಲಿ ಚಿನ್ನದ ಧೂಳನ್ನು ಪ್ರಯಾಣಿಕರು ಗುದನಾಳದಲ್ಲಿ ಮರೆಮಾಡಿಕೊಂಡಿದ್ದರು ಎಂದು ಅವರು ಹೇಳಿದರು
|
eesanje/url_47_100_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ದಕ್ಷಿಣ ಭಾರತದಲ್ಲಿ ಈ ಬಾರಿ ಬಿಜೆಪಿಗೆ ಭರ್ಜರಿ ಗೆಲುವು ಸಿಗಲಿದೆ : ಶಾ ಭವಿಷ್ಯ
|
2 |
+
ನವದೆಹಲಿ,ಮೇ.13-ದಕ್ಷಿಣ ಭಾರತದಲ್ಲಿ ಈ ಬಾರಿ ಬಿಜೆಪಿಗೆ ಭರ್ಜರಿ ಗೆಲುವು ಸಿಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭವಿಷ್ಯ ನುಡಿದಿದ್ದಾರೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳಲ್ಲಿ ದೊಡ್ಡ ಗೆಲುವಿನತ್ತ ಬಿಜೆಪಿ ಸಾಗುತ್ತಿದೆ ಎಂದು ಶಾ ಮಾಧ್ಯಮವೊಂದಕ್ಕೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
|
3 |
+
ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡುಗಳ 109 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿ 29 ಸ್ಥಾನಗಳನ್ನು ಗೆದ್ದಿತ್ತು. ಕರ್ನಾಟಕದಿಂದ 25 ಮತ್ತು ತೆಲಂಗಾಣದಿಂದ ನಾಲ್ವರು. ಕೇರಳ, ಆಂಧ್ರಪ್ರದೇಶ ಮತ್ತು ತಮಿಳುನಾಡು ಎರಡರಲ್ಲೂ ಬಿಜೆಪಿ ಯಾವುದೇ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿರಲಿಲ್ಲ. ಆದರೆ, ಈ ಬಾರಿ ನಮಗೆ ಈ ರಾಜ್ಯಗಳಲ್ಲಿ ಭರ್ಜರಿ ಗೆಲುವು ಸಿಗಲಿದೆ ಎಂದು ಅವರು ಹೇಳಿದರು.
|
4 |
+
200 ಕ್ಕೂ ಹೆಚ್ಚು ಸ್ಥಾನಗಳನ್ನು ಹೊಂದಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ರಾಜಸ್ಥಾನ, ಹರಿಯಾಣ, ಮತ್ತು ಗುಜರಾತ್ ರಾಜ್ಯಗಳಲ್ಲೂ ಬಿಜೆಪಿಗೆ ಭರ್ಜರಿ ಗೆಲುವು ಗ್ಯಾರಂಟಿ ಎಂದಿದ್ದಾರೆ.
|
5 |
+
2019 ರಲ್ಲಿ ಪಕ್ಷವು ಈ ರಾಜ್ಯಗಳಲ್ಲಿ 190 ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದುಕೊಂಡಿತು, ಈ ಬಾರಿಯೂ ಅದೇ ಪ್ರಬಲ ಫಲಿತಾಂಶವನ್ನು ಪಡೆಯಬೇಕು ಮತ್ತು ಅದರ ಗುರಿಯನ್ನು ಮುಟ್ಟಲು ದಕ್ಷಿಣ (ಮತ್ತು ಪೂರ್ವ) ಭಾಗಗಳಿಂದ ಹೆಚ್ಚು ಸುಧಾರಿತ ಸ್ಕೋರ್ ಅಗತ್ಯವಿದೆ ಎಂದರು.
|
6 |
+
ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ನಾವು ಕಾಂಗ್ರೆಸ್ಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು. ಕರ್ನಾಟಕ ಮತ್ತು ತೆಲಂಗಾಣ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಮತ್ತು ಕೆ ಚಂದ್ರಶೇಖರ್ ರಾವ್ ಅವರ ಭಾರತ್ ರಾಷ್ಟ್ರ ಸಮಿತಿಯನ್ನು ಸೋಲಿಸುವ ಮೂಲಕ ಕಾಂಗ್ರೆಸ್ ಎರಡು ಭರ್ಜರಿ ಗೆಲುವುಗಳನ್ನು ಸಾಧಿಸಿದ ನಂತರ ದಕ್ಷಿಣ ಭಾರತದ ಕದನವು ಈ ಚುನಾವಣೆಯಲ್ಲಿ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾಗಿದೆ.
|
eesanje/url_47_100_5.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಸಿಎಂ ಸ್ಥಾನದಿಂದ ಕೇಜ್ರಿವಾಲ್ ವಜಾ ಕೋರಿ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ
|
2 |
+
ನವದೆಹಲಿ,ಮೇ 13-ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.
|
3 |
+
ದೆಹಲಿ ಲೆಪ್್ಟನೆಂಟ್ ಜನರಲ್ ಅವರು ಬಯಸಿದಲ್ಲಿ ಕಾರ್ಯನಿರ್ವಹಿಸಲು ಬಿಟ್ಟದ್ದು ಆದರೆ ನಾವು ಮಧ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಪೀಠ ಹೇಳಿತು.
|
4 |
+
ಇದು ಔಚಿತ್ಯದ ವಿಷಯವಾಗಿದೆ ಆದರೆ ಕೇಜ್ರಿವಾಲ್ ಅವರನ್ನು ಬಂಧಿಸಿದ ನಂತರ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲು ಯಾವುದೇ ಕಾನೂನು ಹಕ್ಕಿಲ್ಲ. ವಿಷಯವನ್ನು ಕೇಳಿದಾಗ ನಾವು ಅವರಿಗೆ ಅದೇ ಪ್ರಶ್ನೆಯನ್ನು ಕೇಳಿದ್ದೇವೆ. ಅಂತಿಮವಾಗಿ, ಇದು ಔಚಿತ್ಯದ ವಿಷಯವಾಗಿದೆ ಮತ್ತು ಯಾವುದೇ ಕಾನೂನು ಹಕ್ಕಿಲ್ಲ ಎಂದು ಪೀಠವು ಅರ್ಜಿದಾರರಿಗೆ ತಿಳಿಸಿದೆ.
|
5 |
+
ಏಪ್ರಿಲ್ 10 ರಂದು ದೆಹಲಿ ಹೈಕೋರ್ಟ್ ತನ್ನ ಮನವಿಯನ್ನು ವಜಾಗೊಳಿಸಿದ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ಕಾಂತ್ ಭಾಟಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.
|
eesanje/url_47_100_6.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಹೇಮಂತ್ ಸೊರೆನ್ ಮೇಲ್ಮನವಿ ಅರ್ಜಿ : ಮೇ.17ರೊಳಗೆ ಇಡಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ
|
2 |
+
ನವದೆಹಲಿ, ಮೇ 13-ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನ್ನ ಬಂಧನವನ್ನು ಪ್ರಶ್ನಿಸಿ ಜಾರ್ಖಂಡ್ ಮುಕ್ತಿ ಮೋರ್ಚಾ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಸಲ್ಲಿಸಿರುವ ಮೇಲ್ಮನವಿ ಅರ್ಜಿ ಸಂಬಂಧ ಮೇ 17 ರೊಳಗೆ ಜಾರಿ ನಿರ್ದೇಶನಾಲಯದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಇಂದು ಕೋರಿದೆ.
|
3 |
+
ಆರಂಭದಲ್ಲಿ ಮೇ 20 ರಂದು ಪ್ರಕರಣವನ್ನು ಪಟ್ಟಿ ಮಾಡಿದ್ದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ದೀಪಂಕರ್ ದತ್ತಾ ಅವರ ಪೀಠವು ಮೇ 17 ಕ್ಕೆ ದಿನಾಂಕವನ್ನು ಬದಲಾಯಿಸಬೇಕಾಗಿತ್ತು, ಹಿರಿಯ ವಕೀಲ ಕಪಿಲ್ ಸಿಬಲ್ ಆ ಹೊತ್ತಿಗೆ ಚುನಾವಣೆ ಮುಗಿಯುತ್ತದೆ ಮತ್ತು ದೀರ್ಘ ದಿನಾಂಕದ ವೇಳೆ ಅವರು ಪೂರ್ವಾಗ್ರಹಕ್ಕೆ ಒಳಗಾಗುತ್ತಾರೆ ಎಂದು ಹೇಳಿದರು.
|
4 |
+
ನಮ್ಮ ಪ್ರಕರಣ ಅರವಿಂದ್ ಕೇಜ್ರಿವಾಲ್ ಅವರ ಆದೇಶದ ವ್ಯಾಪ್ತಿಗೆ ಒಳಪಟ್ಟಿದ್ದು, ಚುನಾವಣಾ ಪ್ರಚಾರಕ್ಕಾಗಿ ನಮ್ಮ ಕಕ್ಷೀದಾರರಿಗೆ ಜಾಮೀನು ಬೇಕು ಎಂದು ಸಿಬಲ್ ಪೀಠಕ್ಕೆ ಮನವಿ ಮಾಡಿದರು.
|
5 |
+
ಈ ವಾರ ತುಂಬಾ ಕೆಲಸವಿದ್ದು, ಬಹಳಷ್ಟು ವಿಷಯಗಳನ್ನು ಪಟ್ಟಿ ಮಾಡಲಾಗಿದೆ ಎಂದು ಪೀಠ ಹೇಳಿದೆ.ಮೇ 20 ರಿಂದ ದಿನಾಂಕವನ್ನು ಬದಲಾಯಿಸಲು ಇಷ್ಟವಿಲ್ಲ ಎಂದು ಅದು ವ್ಯಕ್ತಪಡಿಸಿತು ಆದರೆ ಸಿಬಲ್ ಮತ್ತು ಹಿರಿಯ ವಕೀಲ ಅರುಣಾಭ್ ಚೌಧರಿ, ಸೊರೆನ್ ಪರವಾಗಿ ವಾದಿಸಿದ ನಂತರ, ದಿನಾಂಕವನ್ನು ಮೇ 17 ಕ್ಕೆ ಬದಲಾಯಿಸಲಾಯಿತು.
|
6 |
+
ನಾವು ವಿಷಯವನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆಯೇ ಎಂದು ನಮಗೆ ತಿಳಿದಿಲ್ಲ ಆದರೆ ನಾವು ಅದನ್ನು ಮೇ 17 ಕ್ಕೆ ಮುಂದೂಡುತ್ತಿದ್ದೇವೆ ಎಂದು ಪೀಠ ಹೇಳಿದೆ.ಬಂಧನದ ವಿರುದ್ಧದ ತನ್ನ ಅರ್ಜಿಯನ್ನು ವಜಾಗೊಳಿಸಿದ ಜಾರ್ಖಂಡ್ ಹೈಕೋರ್ಟ್ನ ಮೇ 3 ರ ಆದೇಶವನ್ನು ಸೋರೆನ್ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದಾರೆ. ಬಂಧನದ ವಿರುದ್ಧ ನ್ಯಾಯಾಲಯವು ತೀರ್ಪು ನೀಡುವವರೆಗೆ ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಅವರು ಮಧ್ಯಂತರ ಜಾಮೀನು ಕೋರಿದ್ದರು.
|
7 |
+
ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಕೇಜ್ರಿವಾಲ್ಗೆ ಮೇ 10 ರಂದು ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ದೆಹಲಿಯ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.
|
eesanje/url_47_100_7.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಇಂಡಿಯಾ ಮೈತ್ರಿಕೂಟದ ಹೇಡಿಗಳು ಪಾಕ್ ಪರಮಾಣು ಶಕ್ತಿಗೆ ಹೆದರಿದ್ದಾರೆ : ಮೋದಿ ವಾಗ್ದಾಳಿ
|
2 |
+
ಮುಜಾಫರ್ಪುರ/ಹಾಜಿಪುರ, ಮೇ 13– ಪ್ರತಿಪಕ್ಷ ಇಂಡಿಯಾ ಮೈತ್ರಿಕೂಟದ ನಾಯಕರು ಪಾಕಿಸ್ತಾನದ ಪರಮಾಣು ಶಕ್ತಿಗೆ ಹೆದರುವ ಹೇಡಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಳಿ ನಡೆಸಿದ್ದಾರೆ. ಬಿಹಾರದ ಮುಜಾಫರ್ಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಅವರ ಹೆಸರನ್ನು ಉಲ್ಲೇಖಿಸದೆ ಅವರ ಇತ್ತೀಚಿನ ಹೇಳಿಕೆಯನ್ನು ಸ್ಪಷ್ಟವಾಗಿ ಉಲ್ಲೇಖಿಸಿ, ಇಂಡಿಯಾ ಮೈತ್ರಿಕೂಟವು ಪಾಕಿಸ್ತಾನಕ್ಕೆ ಹೆದರುವ ಮತ್ತು ಅದರ ಪರಮಾಣು ಶಕ್ತಿಯ ದುಃಸ್ವಪ್ನಗಳನ್ನು ಹೊಂದಿರುವ ನಾಯಕರನ್ನು ಹೊಂದಿರುವಂತೆ ತೋರುತ್ತಿದೆ ಎಂದು ವ್ಯಂಗ್ಯವಾಡಿದರು.
|
3 |
+
ಪಾಕಿಸ್ತಾನದಲ್ಲಿ ಅಣುಬಾಂಬ್ಗಳಿವೆ ಮತ್ತು ಅವರು ಬಳೆಗಳನ್ನು ತೊಟ್ಟಿಲ್ಲ ಎಂಬ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರ ಹೇಳಿಕೆ ಹಿನ್ನೆಲೆಯಲ್ಲಿ ಮೋದಿ ಅವರು ತಮ್ಮದೇ ಆದ ಮಾತಿನಲ್ಲಿ ತಿರುಗೇಟು ನೀಡಿದರು.
|
4 |
+
ಪಾಕಿಸ್ತಾನವು ಬಳೆಗಳನ್ನು ಧರಿಸದಿದ್ದರೆ, ನಾವು ದೇಶವನ್ನು ಧರಿಸುವಂತೆ ಮಾಡುತ್ತೇವೆ. ಅವರ ಬಳಿ ಆಹಾರಧಾನ್ಯಗಳಿಲ್ಲ ಎಂಬುದು ನನಗೆ ಗೊತ್ತಿತ್ತು. ಅವರ ಬಳಿ ಸಾಕಷ್ಟು ಬೆಳೆಗಳ ಪೂರೈಕೆಯೂ ಇಲ್ಲ ಎಂದು ಈಗ ನನಗೆ ತಿಳಿದು ಬಂದಿದೆ. ಆದರೆ, ಭಯೋತ್ಪಾದನೆಯ ಬಗ್ಗೆ ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ನೀಡುವ, ಸರ್ಜಿಕಲ್ ಸೆ್ಟ್ರೖಕ್ಗಳ ಬಗ್ಗೆ ಅನುಮಾನಗಳನ್ನು ಎತ್ತುವ ಹೇಡಿಗಳು ಮತ್ತು ಅಂಜುಬುರುಕವಾಗಿರುವ ಜನರಿಂದ ತುಂಬಿರುವ ವಿರೋಧವನ್ನು ನಾವು ಎಚ್ಚರಿಕೆಯಿಂದ ನೋಡಬೇಕು … ಅವರ ಎಡ ಮಿತ್ರರು ನಮ್ಮ ಪರಮಾಣು ಶಸಾ್ತ್ರಗಾರವನ್ನು ಕಿತ್ತೊಗೆಯಬೇಕೆಂದು ಬಯಸುತ್ತಾರೆ ಅವರು ಹೇಳಿದರು.
|
5 |
+
ಇದಕ್ಕೂ ಮುನ್ನ ಹಾಜಿಪುರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ರಾಜಕಾರಣಿಗಳ ವಿರುದ್ಧದ ದಾಳಿಯಲ್ಲಿ ವಶಪಡಿಸಿಕೊಂಡ ಹಣ ದೇಶದ ಬಡವರಿಗೆ ಸೇರಿದ್ದು ಎಂದು ಸಮರ್ಥಿಸಿಕೊಂಡರು.
|
6 |
+
ಇಡಿ ಯಂತಹ ಸಂಸ್ಥೆಗಳ ಕ್ರಮದ ವಿರುದ್ಧ ಅವರು ಏಕೆ ಗಟ್ಟಿಯಾಗಿ ಅಳುತ್ತಿದ್ದಾರೆ ಎಂಬುದನ್ನು ನಾನು ನಿಮಗೆ ಹೇಳುತ್ತೇನೆ. ಹಿಂದಿನ ಕಾಂಗ್ರೆಸ್ ಆಡಳಿತದಲ್ಲಿ ಶಾಲಾ ಬ್ಯಾಗ್ನಲ್ಲಿ ಇಡಬಹುದಾದ 35 ಲಕ್ಷ ರೂಪಾಯಿಗಳನ್ನು ಮಾತ್ರ ಇಡಿ ವಶಪಡಿಸಿಕೊಂಡಿತ್ತು. ನಾವು ಅಧಿಕಾರ ವಹಿಸಿಕೊಂಡಾಗಿನಿಂದ, ಈ ಸಂಸ್ಥೆಯವರು 2,200 ಕೋಟಿ ರೂ.ಗಳನ್ನು ವಸೂಲಿ ಮಾಡಿದೆ, ಇದಕ್ಕೆ 70 ಸಣ್ಣ ಟ್ರಕ್ಗಳನ್ನು ಸಾಗಿಸಲು ಅಗತ್ಯವಿರುತ್ತದೆ ಎಂದು ಪ್ರಧಾನಿ ಮೋದಿ ಕೆಂಡಕಾರಿದರು.
|
7 |
+
ತಮ್ಮ ಸಂತತಿಯನ್ನು ಉತ್ತೇಜಿಸುವ ಬಗ್ಗೆ ಕಾಳಜಿ ವಹಿಸುವ ವಿರೋಧಿ ಗಳಂತಲ್ಲದೆ, ನನಗೆ ವಾರಿಸ್ (ಉತ್ತರಾಧಿ ಕಾರಿ). ಸಾಮಾನ್ಯ ಜನರೇ ನನ್ನ ವಾರಿಗಳು.ಅಧಿ ಕಾರದಲ್ಲಿದ್ದಾಗ ಸುಲಿಗೆ ಮತ್ತು ಅಪಹರಣವನ್ನು ಪ್ರವರ್ಧಮಾನಕ್ಕೆ ತರಲು ಅವಕಾಶ ಮಾಡಿಕೊಟ್ಟ ಕಾಂಗ್ರೆಸ್ ಮತ್ತು ಆರ್ಜೆಡಿಯಂತಹ ಪಕ್ಷಗಳು ಮುಸ್ಲಿಮರಿಗೆ ತಮ್ಮ ವೋಟ್ ಬ್ಯಾಂಕ್ ರಾಜಕೀಯವನ್ನು ಮುಂದುವರಿಸಲು ಮೀಸಲು ನೀಡುತ್ತವೆ ಆದರೆ ನಾನು ಎಲ್ಲಿಯವರೆಗೆ ನಾನು ಜೀವಂತವಾಗಿದ್ದೇನೆ, ಇದನ್ನು ಆಗಲು ನಾನು ಬಿಡುವುದಿಲ್ಲ ಎಂದು ತಮ್ಮ ವಿರೋಧಿ ಗಳಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದರು.
|
8 |
+
ಬಿಹಾರದಲ್ಲಿ ಆರ್ಜೆಡಿ ಆಳ್ವಿಕೆಯಲ್ಲಿ ಅಪಹರಣ ಮತ್ತು ಸುಲಿಗೆ ಪ್ರವರ್ಧಮಾನಕ್ಕೆ ಬಂದಿತ್ತು. ಸಾಮಾಜಿಕ ನ್ಯಾಯಕ್ಕಾಗಿ ಎನ್ಡಿಎ ಹೋರಾಡುತ್ತದೆ, ಒಬಿಸಿ/ಎಸ್ಸಿ/ಎಸ್ಟಿ ವರ್ಗಗಳಿಂದ ಶೇಕಡಾ 60 ರಷ್ಟು ಕೇಂದ್ರ ಸಚಿವರು ಎಂದು ಅವರು ಪ್ರತಿಪಾದಿಸಿದರು.ವಿರೋಧ ಪಕ್ಷಗಳು ಅಯೋಧ್ಯೆಯಲ್ಲಿ ರಾಮಮಂದಿರದ ಬಗ್ಗೆ ಅಸಹ್ಯಕರ ಹೇಳಿಕೆಗಳನ್ನು ನೀಡುವ ಮೂಲಕ ಜನರ ಭಾವನೆಗಳನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸುತ್ತಿವೆ ಎಂದು ಪ್ರಧಾನಿ ಆರೋಪಿಸಿದ್ದಾರೆ.
|
9 |
+
ಬಲಿಷ್ಠ ಸರ್ಕಾರ ರಚನೆಗೆ ಅನುವು ಮಾಡಿಕೊಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎನ್ಡಿಎಗೆ ಮತ ನೀಡಬೇಕು. ತಮ್ಮ ಸರ್ಕಾರದ ಅಭಿವೃದ್ಧಿಯ ದಾಖಲೆಯನ್ನು ಮುಟ್ಟಿದರು, ತ್ವರಿತ ದರದಲ್ಲಿ ಹೆದ್ದಾರಿಗಳ ನಿರ್ಮಾಣ ಮತ್ತು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಬದ್ಧತೆಯನ್ನು ಒತ್ತಿಹೇಳಿದರು.
|
10 |
+
ಆದರೆ ಮಹಿಳಾ ಮೀಸಲಾತಿಯಂತಹ ಕ್ರಮಗಳಿಗೆ ಪ್ರತಿಪಕ್ಷಗಳು ಅಡೆತಡೆಗಳನ್ನು ಹಾಕಲು ಪ್ರಯತ್ನಿಸುತ್ತಿವೆ. ಮಾಜಿ ಸಚಿವ ದಿ. ರಾಮ್ ವಿಲಾಸ್ ಪಾಸ್ವಾನ್, ಅವರ ಮಗ ಚಿರಾಗ್ ಹಾಜಿಪುರದಿಂದ ಸ್ಪರ್ಧಿಸುತ್ತಿರುವುದನ್ನು ನೆನಪಿಸಿಕೊಂಡ ಮೋದಿ, ಯುವ ನಾಯಕನಿಗೆ ಮತ ನೀಡಿ ಮತ್ತು ಅವರ ತಂದೆಯ ದಾಖಲೆ ಮುರಿಯುವ ಗೆಲುವನ್ನು ಸೋಲಿಸುವ ಅಂತರದಿಂದ ಗೆಲ್ಲುವಂತೆ ಜನರಿಗೆ ಕರೆ ನೀಡಿದರು.
|
eesanje/url_47_100_8.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
48 ಗಂಟೆಯೊಳಗೆ ಮತದಾನದ ಅಂಕಿಅಂಶ ಅಪ್ಲೋಡ್ ಮಾಡುವಂತೆ ಕೋರಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಸಮ್ಮತಿ
|
2 |
+
ನವದೆಹಲಿ,ಮೇ 13-ಮತದಾನ ಮುಗಿದ 48 ಗಂಟೆಗಳ ಒಳಗೆ ಮತದಾನ ಕೇಂದ್ರವಾರು ಮತದಾರರ ಅಂಕಿ ಅಂಶಗಳನ್ನು ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡುವಂತೆ ಕೋರಿ ಎನ್ಜಿಒ ಸಲ್ಲಿಸಿರುವ ಮನವಿಯನ್ನು ಮೇ 17ರಂದು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಇಂದು ಸಮ್ಮತಿಸಿದೆ.
|
3 |
+
ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾಮ್ರ್ಸೌ(ಎಡಿಆರ್) ಪರವಾಗಿ ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿಯನ್ನು ತುರ್ತು ಪಟ್ಟಿಗೆ ಕೋರಿದ ನಂತರ ಶುಕ್ರವಾರ ಈ ವಿಷಯವನ್ನು ಪಟ್ಟಿ ಮಾಡಲಾಗುವುದು ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರಿದ್ದ ದ್ವಿಸದಸ್ಯ ಪೀಠ ತಿಳಿಸಿದೆ.
|
4 |
+
ಕಳೆದ ವಾರ ಎಡಿಆರ್ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದು, ಎಲ್ಲಾ ಮತಗಟ್ಟೆಗಳ ಫಾರ್ಮ್ 17 ಫಾರಂ ಅನ್ನು ಮತದಾನದ ನಂತರ ತಕ್ಷಣವೇ ಅಪ್ಲೋಡ್ ಮಾಡುವಂತೆ ಚುನಾವಣಾ ಸಮಿತಿಗೆ ನಿರ್ದೇಶನಗಳನ್ನು ಕೋರಿ ಅರ್ಜಿ ಸಲ್ಲಿಸಿದೆ. 2024 ರ ಲೋಕಸಭಾ ಚುನಾವಣೆಯ ಪ್ರತಿ ಹಂತದ ಮತದಾನದ ನಂತರ ಫಾರ್ಮ್ 17ಅ ಭಾಗ-1 ರಲ್ಲಿ ದಾಖಲಾದ ಮತಗಳ ಸಂಖ್ಯೆಯ ಸಂಪೂರ್ಣ ಅಂಕಿಅಂಶಗಳಲ್ಲಿ ಮತಗಟ್ಟೆವಾರು ಅಂಕಿಅಂಶಗಳನ್ನು ಒದಗಿಸಲು ಚುನಾವಣಾ ಆಯೋಗಕ್ಕೆ ನಿರ್ದೇಶಿಸಿ ಮತ್ತು ಕ್ಷೇತ್ರವಾರು ಪಟ್ಟಿ ನಡೆಯುತ್ತಿರುವ 2024 ರ ಲೋಕಸಭಾ ಚುನಾವಣೆಯಲ್ಲಿ ಸಂಪೂರ್ಣ ಸಂಖ್ಯೆಯಲ್ಲಿ ಮತದಾರರ ಮತದಾನದ ಅಂಕಿಅಂಶಗಳು ಎಂದು ಎನ್ಜಿಒ ಹೇಳಿದೆ.
|
5 |
+
ಚುನಾವಣಾ ಅಕ್ರಮಗಳಿಂದ ಪ್ರಜಾಸತ್ತಾತ್ಮಕ ಪ್ರಕ್ರಿಯೆಗೆ ಧಕ್ಕೆಯಾಗದಂತೆ ನೋಡಿಕೊಳ್ಳಲು ಈ ಮನವಿ ಸಲ್ಲಿಸಲಾಗಿದೆ ಎಂದು ಅದು ಹೇಳಿದೆ. ಏಪ್ರಿಲ್ 30 ರಂದು ಭಾರತೀಯ ಚುನಾವಣಾ ಆಯೋಗ ಪ್ರಕಟಿಸಿದ 2024 ರ ಲೋಕಸಭಾ ಚುನಾವಣೆಯ ಮೊದಲ ಎರಡು ಹಂತಗಳ ಮತದಾರರ ಮತದಾನದ ಡೇಟಾವನ್ನು ಏಪ್ರಿಲ್ 19 ರಂದು ನಡೆದ ಮೊದಲ ಹಂತದ ಮತದಾನದ 11 ದಿನಗಳ ನಂತರ ಮತ್ತು ಏಪ್ರಿಲ್ನಲ್ಲಿ ನಡೆದ ಎರಡನೇ ಹಂತದ ಮತದಾನದ ನಾಲ್ಕು ದಿನಗಳ ನಂತರ ಪ್ರಕಟಿಸಲಾಗಿದೆ.
|
6 |
+
ಆಯೋಗ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ಏಪ್ರಿಲ್ 30, 2024 ರಂದು ಪ್ರಕಟಿಸಿದ ಮಾಹಿತಿಯು ಮತದಾನದ ದಿನದಂದು ಸಂಜೆ 7 ಗಂಟೆಗೆ ಘೋಷಿಸಿದ ಆರಂಭಿಕ ಶೇಕಡಾವಾರುಗಳಿಗೆ ಹೋಲಿಸಿದರೆ (ಸುಮಾರು 5-6% ರಷ್ಟು) ತೀವ್ರ ಹೆಚ್ಚಳವನ್ನು ತೋರಿಸುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖ ಮಾಡಲಾಗಿದೆ.
|
7 |
+
ಏಪ್ರಿಲ್ 30, 2024 ರ ಚುನಾವಣಾ ಸಮಿತಿಯ ಪತ್ರಿಕಾ ಟಿಪ್ಪಣಿಯಲ್ಲಿ ಅಸಾಧಾರಣವಾಗಿ ಶೇಕಡಾ ಐದಕ್ಕಿಂತ ಹೆಚ್ಚಿನ ಪರಿಷ್ಕರಣೆಯೊಂದಿಗೆ ಅಂತಿಮ ಮತದಾರರ ಮತದಾನದ ದತ್ತಾಂಶ ಬಿಡುಗಡೆಯಲ್ಲಿ ಅತಿಯಾದ ವಿಳಂಬವು ಕಳವಳ ಮತ್ತು ಸಾರ್ವಜನಿಕ ಅನುಮಾನಗಳನ್ನು ಹುಟ್ಟುಹಾಕಿದೆ ಎಂದು ಅರ್ಜಿ ಹೇಳಿದೆ.
|
8 |
+
ಮತದಾನದ ಸಂಪೂರ್ಣ ಸಂಖ್���ೆಯ ಮತಗಳನ್ನು ಬಿಡುಗಡೆ ಮಾಡದಿರುವುದು, ಮತದಾನದ ಮಾಹಿತಿಯ ಬಿಡುಗಡೆಯಲ್ಲಿ ಅಸಮಂಜಸ ವಿಳಂಬದೊಂದಿಗೆ, ಏಪ್ರಿಲ್ 30 ರಂದು ಬಿಡುಗಡೆಯಾದ ಆರಂಭಿಕ ಡೇಟಾ ಮತ್ತು ಡೇಟಾದ ನಡುವಿನ ತೀವ್ರ ಹೆಚ್ಚಳದ ಬಗ್ಗೆ ಮತದಾರರ ಮನಸ್ಸಿನಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆತಂಕಗಳನ್ನು ಪರಿಹರಿಸಬೇಕು ಮತ್ತು ವಿಶ್ರಾಂತಿ ಪಡೆಯಬೇಕು.
|
9 |
+
ಮತದಾರರ ವಿಶ್ವಾಸವನ್ನು ಎತ್ತಿಹಿಡಿಯಲು ಎಲ್ಲಾ ಮತದಾನದ ಫಾರ್ಮ್ 17 ಅನ್ನು ಸ್ಕ್ಯಾನ್ ಮಾಡಿದ ಸ್ಪಷ್ಟವಾದ ಪ್ರತಿಗಳನ್ನು ತನ್ನ ವೆಬ್ಸೈಟ್ನಲ್ಲಿ ಬಹಿರಂಗಪಡಿಸಲು ನಿರ್ದೇಶಿಸುವುದು ಅವಶ್ಯಕ. ಮತದಾನ ಮುಕ್ತಾಯವಾದ 48 ಗಂಟೆಗಳ ಒಳಗೆ ಮತದಾನದ ಮತಗಳ ದೃಢೀಕೃತ ಅಂಕಿಅಂಶಗಳನ್ನು ಹೊಂದಿರುವ ಕೇಂದ್ರಗಳು ಎಂದು ಎಡಿಆರ್ ಅರ್ಜಿಯಲ್ಲಿ ಹೇಳಿದೆ.
|
eesanje/url_47_100_9.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಆಮ್ ಆದ್ಮಿ ಪಕ್ಷದ ನಾಯಕಿ ಮೇಲೆ ಕೇಜ್ರಿವಾಲ್ ಆಪ್ತ ಸಹಾಯಕನಿಂದ ಹಲ್ಲೆ ಆರೋಪ
|
2 |
+
ನವದೆಹಲಿ,ಮೇ 13-ಆಮ್ ಆದ್ಮಿ ಪಕ್ಷದ ನಾಯಕಿ ಮತ್ತು ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಇಂದು ಆರೋಪಿಸಿದ್ದಾರೆ.
|
3 |
+
ಮೂಲಗಳ ಪ್ರಕಾರ, ಮುಖ್ಯಮಂತ್ರಿ ನಿವಾಸದಿಂದ ಬೆಳಗ್ಗೆ 10 ಗಂಟೆಗೆ ಮಲಿವಾಲ್ ಅವರಿಗೆ ಪಿಸಿಆರ್ ಕರೆ ಮಾಡಲಾಗಿತ್ತು. ಕರೆಯನ್ನು ಅನುಸರಿಸಿ, ದೆಹಲಿ ಪೊಲೀಸರು ಸಿವಿಲ್ ಲೈನ್ಸ್ ನಲ್ಲಿರುವ ಮುಖ್ಯಮಂತ್ರಿ ನಿವಾಸವನ್ನು ತಲುಪಿದರು. ಈ ಬಗ್ಗೆ ಪೊಲೀಸರು ಇನ್ನೂ ಅಧಿಕೃತ ದೂರು ಸ್ವೀಕರಿಸಿಲ್ಲ ಎನ್ನಲಾಗಿದೆ.
|
4 |
+
ಅಕ್ರಮ ನೇಮಕಾತಿಯನ್ನು ಉಲ್ಲೇಖಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಸ್ಥಾನದಿಂದ ದೆಹಲಿ ವಿಜಿಲೆನ್್ಸ ಇಲಾಖೆ ಅವರನ್ನು ವಜಾಗೊಳಿಸಿತ್ತು.
|
5 |
+
2007ರಲ್ಲಿ ಸಾರ್ವಜನಿಕ ನೌಕರನೊಬ್ಬನ ಕರ್ತವ್ಯಕ್ಕೆ ಅಡ್ಡಿಪಡಿಸಲು ಕ್ರಿಮಿನಲ್ ಬಲವನ್ನು ಬಳಸಿ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಭವ್ ಕುಮಾರ್ ಅವರನ್ನು ವಜಾಗೊಳಿಸಲಾಗಿತ್ತು. ಏತನ್ಮಧ್ಯೆ, ಫೆಬ್ರವರಿಯಲ್ಲಿ, ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ನಿಂದ ಬಿಭವ್ಗೆ ಸಮನ್್ಸ ನೀಡಲಾಗಿತ್ತು.
|
6 |
+
ಬಿಜೆಪಿ ತಿರುಗೇಟು :ಮಲಿವಾಲ್ ಅವರ ಮೇಲಿನ ಹಲ್ಲೆ ಆರೋಪದ ಕುರಿತು ಎಎಪಿ ವಿರುದ್ಧ ಹರಿಹಾಯ್ದ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ, ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಬಂಧನದ ಬಗ್ಗೆ ಮಲಿವಾಲ್ ಮೌನ ವಹಿಸಿದ್ದಾರೆ ಮತ್ತು ಆಗ ಭಾರತದಲ್ಲಿ ಇರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
|
7 |
+
ದೆಹಲಿ ಸಿಎಂ ಪಿಎ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಎಎಪಿ ಆರ್ಎಸ್ ಸಂಸದ ಮತ್ತು ಮಾಜಿ ಡಿಸಿಡಬ್ಲ್ಯೂ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಆರೋಪಿಸಿದ್ದಾರೆ. ದೆಹಲಿ ಸಿಎಂ ಮನೆಯಿಂದ ಕರೆ ಮಾಡಲಾಗಿದೆ. ನೆನಪಿರಲಿ, ಕೇಜ್ರಿವಾಲ್ ಬಂಧನದ ಬಗ್ಗೆ ಸ್ವಾತಿ ಮಲಿವಾಲ್ ರೇಡಿಯೊ ಮೌನ ವಹಿಸಿದ್ದರು. ಆ ಸಮಯದಲ್ಲಿ ಅವಳು ಭಾರತದಲ್ಲಿ ಇರಲಿಲ್ಲ ಮತ್ತು ಬಹಳ ಸಮಯದವರೆಗೆ ಹಿಂತಿರುಗಲಿಲ್ಲ ಎಂದು ಮಾಲ್ವಿಯಾ ಎಕ್್ಸನಲ್ಲಿ ಬರೆದಿದ್ದಾರೆ.
|
8 |
+
ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಹೇಳಿದ್ದಾರೆ. ಕೇಜ್ರಿವಾಲ್ ಅವರ ಪಿಎ ಬಿಭವ್ ಸ್ವಾತಿ ಮಲಿವಾಲ್ ಅವರನ್ನು ಥಳಿಸಿದ್ದೀರಾ? ಮುಖ್ಯಮಂತ್ರಿಗಳ ಕಚೇರಿ ಸ್ಪಷ್ಟೀಕರಣ ನೀಡುವುದೇ? ರಾಜ್ಯಸಭಾ ಮಹಿಳಾ ಸಂಸದೆಯೊಬ್ಬರನ್ನು ಮುಖ್ಯಮಂತ್ರಿ ಮನೆಯಲ್ಲಿ ಥಳಿಸಿರುವ ಸುದ್ದಿ ಸುಳ್ಳು ಎಂದು ದೇವರು ದಯಪಾಲಿಸಲಿ ಎಂದರು.
|
eesanje/url_47_101_1.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಕೇಜ್ರಿವಾಲ್ ‘ವಿದ್ಯುತ್ ಬಿಲ್ ಮನ್ನಾ’ ಭರವಸೆಗೆ ಅಮಿತ್ ಶಾ ವ್ಯಂಗ್ಯ
|
2 |
+
ನವದೆಹಲಿ,ಮೇ.13-ಆಮ್ ಆದಿ ಪಕ್ಷದ (ಎಎಪಿ) ನಾಯಕ ಅರವಿಂದ್ ಕೇಜ್ರಿವಾಲ್ ಅವರು ಘೋಷಿಸಿದ 10 ಭರವಸೆಗಳ ಮೇಲೆ ವಾಗ್ದಾಳಿ ನಡೆಸಿರುವ ಕೇಂದ್ರ ಗಹ ಸಚಿವ ಅಮಿತ್ ಶಾ ಅವರು 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿರುವ ಪಕ್ಷವು ದೇಶಾದ್ಯಂತ ವಿದ್ಯುತ್ ಬಿಲ್ಗಳನ್ನು ಮನ್ನಾ ಮಾಡುವ ಭರವಸೆ ಹೇಗೆ ನೀಡಲು ಸಾಧ್ಯ ಎಂದು ವ್ಯಂಗ್ಯವಾಡಿದ್ದಾರೆ.
|
3 |
+
ಎಎಪಿ ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ? 22. ಸರ್ಕಾರ ರಚಿಸಲು ನಿಮಗೆ 270 ಕ್ಕಿಂತ ಹೆಚ್ಚು ಸಂಸದರು ಬೇಕು. ನೀವು ಏನು ಖಾತರಿ ನೀಡುತ್ತಿದ್ದೀರಿ? ನೀವು 22 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದೀರಿ ಮತ್ತು ನೀವು ದೇಶಾದ್ಯಂತ ವಿದ್ಯುತ್ ಬಿಲ್ಗಳನ್ನು ಮನ್ನಾ ಮಾಡುವುದಾಗಿ ಹೇಳುತ್ತಿದ್ದೀರಿ ಇದು ಹೇಗೆ ಸಾಧ್ಯ ಎಂದು ಶಾ ಪ್ರಶ್ನಿಸಿದ್ದಾರೆ.
|
4 |
+
ಎಎಪಿ ಘೋಷಿಸಿದ 10 ಖಾತರಿಗಳಲ್ಲಿ ದಿನದ 24 ಗಂಟೆ ವಿದ್ಯುತ್ ಸರಬರಾಜು, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಮತ್ತು ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳ ಸಷ್ಟಿ ಸೇರಿವೆ. ಅಗ್ನಿವೀರ್ ಯೋಜನೆಯನ್ನು ಕೊನೆಗೊಳಿಸುವುದಾಗಿ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ರೈತರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದಾಗಿ ಎಎಪಿ ಭರವಸೆ ನೀಡಿದೆ.
|
5 |
+
ಚೀನಾ ನಮ ಭೂಮಿಯನ್ನು ಆಕ್ರಮಿಸಿಕೊಂಡಿದೆ ಮತ್ತು ನಾವು ಅದನ್ನು ಅವರ ಆಕ್ರಮಣದಿಂದ ಮುಕ್ತಗೊಳಿಸುತ್ತೇವೆ ಎಂದು ಕೇಜ್ರಿವಾಲ್ ನಿನ್ನೆ ಹೇಳಿದ್ದರು ಹಾಗೂ ದೆಹಲಿಗೆ ಸಂಪೂರ್ಣ ರಾಜ್ಯತ್ವ ತಂದು ಕೊಡುವ ಗ್ಯಾರಂಟಿ ನೀಡಿದ್ದರು. ಎಎಪಿ ನಾಯಕ ಕಳೆದ ಚುನಾವಣೆಯಲ್ಲೂ ಇಂತಹ ಸಾಹಸಗಳನ್ನು ಮಾಡಿದ್ದರಿ ಆದರೆ ಅವರು ಕೇವಲ ಒಂದು ಸ್ಥಾನವನ್ನು ಗೆದ್ದಿದ್ದಾರೆ ಎಂದು ಶಾ ಹೇಳಿದರು.
|
6 |
+
ಕೇಂದ್ರೀಯ ಸಂಸ್ಥೆಗಳನ್ನು ಆಡಳಿತಾರೂಢ ಬಿಜೆಪಿ ದುರುಪಯೋಗಪಡಿಸಿಕೊಂಡಿದೆ ಎಂಬ ಪ್ರತಿಪಕ್ಷಗಳ ಆರೋಪದ ಕುರಿತು ಕೇಳಿದ ಪ್ರಶ್ನೆಗೆ, ಕೇಜ್ರಿವಾಲ್ ಅವರು ಇಂತಹ ಆರೋಪಗಳನ್ನು ಮಾಡುತ್ತಿದ್ದರೆ, ಅವರು ಒಂಬತ್ತು ಬಾರಿ ಸಮನ್್ಸ ಅನ್ನು ಧಿಕ್ಕರಿಸಿದ್ದಾರೆ. ಬಂಧನದ ಮತ್ತು ನಂತರ ಅವರನ್ನು ಚುನಾವಣಾ ಸಮಯದಲ್ಲಿ ನನ್ನನ್ನು ಬಂಧಿಸಲಾಗಿದೆ ಎಂದು ನಾಟಕವಾಡುತ್ತಿದ್ದಾರೆ ಎಂದು ಶಾ ತಿಳಿಸಿದರು.
|
7 |
+
ಕೇಜ್ರಿವಾಲ್ ಅವರಿಗೆ ಜಾಮೀನು ನೀಡಲಾಗಿಲ್ಲ, ಆದರೆ ಕೇವಲ ಮಧ್ಯಂತರ ಪರಿಹಾರವಾಗಿದೆ ಎಂದು ಶಾ ಹೇಳಿದರು. ತಮ ಬಂಧನ ತಪ್ಪು ಎಂಬುದು ಅವರ ಮನವಿಯಾಗಿತ್ತು. ಸುಪ್ರೀಂ ಕೋರ್ಟ್ ಅದನ್ನು ಸ್ವೀಕರಿಸಲಿಲ್ಲ. ನಂತರ ಅವರು ಜಾಮೀನು ಕೋರಿದರು. ನ್ಯಾಯಾಲಯ ಅದನ್ನೂ ಸ್ವೀಕರಿಸಲಿಲ್ಲ.
|
8 |
+
ನಂತರ ಅವರು ಪ್ರಚಾರಕ್ಕೆ ಅನುಮತಿ ಕೇಳಿದರು. ಸುಪ್ರೀಂ ಕೋರ್ಟ್ ಕೆಲವು ಷರತ್ತುಗಳನ್ನು ವಿಧಿಸಿ ಅವರಿಗೆ ರಜೆ ನೀಡಿದೆ ಜೂನ್ 1 ಅಥವಾ ಜೂನ್ 2 ರಂದು ತಿಹಾರ್ (ಜೈಲು) ಗೆ ಹಿಂತಿರುಗಬೇಕು. ಇದು ಅವರ ಪರವಾದ ತೀರ್ಪು ಎಂದು ಹೇಗೆ ಭಾವಿಸುವುದು ಎಂದು ಶಾ ಕೇಳಿದರು.
|
9 |
+
ದೆಹಲಿಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಬಿಜೆಪಿಯ ಚುನಾವಣಾ ಭವಿಷ್ಯಕ್ಕೆ ಹೊಡೆತ ನೀಡಲಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗಹ ಸಚಿವರು, ಕಳೆದ ಬಾರಿ ಬಿಜೆಪಿ ಪ್ರತಿ ಸ್ಥಾನದಲ್ಲೂ ಶೇ.50 ಕ್ಕಿಂತ ಹೆಚ್ಚು ಮತಗಳನ್ನು ಗಳಿಸಿದೆ, ಆದ್ದರಿಂದ ಎಷ್ಟು ಜನರು ಒಟ್ಟಿಗೆ ಸೇರುತ್ತಿದ್ದಾರೆ ಎಂಬುದು ಮುಖ್ಯವಲ್ಲ ಎಂದಿದ್ದಾರೆ.
|
10 |
+
ಪ್ರಧಾನಿ ನರೇಂದ್ರ ಮೋದಿ ಅವರು 75 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ಮುಂದಿನ ವರ್ಷ ನಿವತ್ತಿ ಆಗಲಿದ್ದಾರೆ ಎಂಬ ದೆಹಲಿ ಮುಖ್ಯಮಂತ್ರಿಯವರ ಹೇಳಿಕೆಗೆ ಶಾ, ಅವರನ್ನು ಅಷ್ಟು ಗಂಭೀರವಾಗಿ ಪರಿಗಣಿಸಬೇಡಿ, ಮೋದಿಜಿ ರಾಜಕೀಯದಲ್ಲಿ ಉಳಿಯಲು ಅವರು ಬಯಸುವುದಿಲ್ಲ. ಆದರೆ ನಾನು ಹೇಳಲು ಬಯಸುತ್ತೇನೆ. ನೀವು 2029 ರವರೆಗೆ ಪ್ರಧಾನಿಯಾಗಿರುತ್ತೀರಿ ಮತ್ತು ನಂತರವೂ ಅವರು ಬಿಜೆಪಿಯ ಚುನಾವಣಾ ಪ್ರಚಾರವನ್ನು ಮುನ್ನಡೆಸುತ್ತಾರೆ ಎಂದು ಭರವಸೆ ನೀಡಿದರು.
|
eesanje/url_47_101_10.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಪಿಓಕೆ ಅಲ್ಲೋಲ ಕಲ್ಲೊಲ
|
2 |
+
ಶ್ರೀನಗರ,ಮೇ.12- ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ನಾಗರಿಕ ಅಶಾಂತಿಗೆ ತುತ್ತಾಗಿದ್ದು, ಆಕ್ರಮಿತ ಪ್ರದೇಶದಾದ್ಯಂತ ಹರಡಿರುವ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಧಿಕಾರಿಗಳು ಭಾರಿ ದಬ್ಬಾಳಿಕೆ ನಡೆಸಿದ್ದಾರೆ.ನಿನ್ನೆ ನಡೆದ ಹೊಸ ಘರ್ಷಣೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ ಮತ್ತು 90 ಮಂದಿ ಗಾಯಗೊಂಡಿದ್ದಾರೆ.
|
3 |
+
ಹಣದುಬ್ಬರ, ಹೆಚ್ಚಿನ ತೆರಿಗೆ ಮತ್ತು ವಿದ್ಯುತ್ ಕೊರತೆಯ ವಿರುದ್ಧ ಪ್ರಾರಂಭವಾದ ಪ್ರತಿಭಟನೆಗಳು ಪಿಒಕೆಯಾದ್ಯಂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕಾಗಿ ಚಳುವಳಿಯಾಗಿ ಮಾರ್ಪಟ್ಟಿವೆ. ಪ್ರತಿಭಟನಾಕಾರರು ಆಜಾದಿ (ಸ್ವಾತಂತ್ರ್ಯ) ಘೋಷಣೆಗಳನ್ನು ಕೂಗುತ್ತಿದ್ದಾರೆ. ಅವರು ಮುಜಪರಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ಪೊಲೀಸರು ಮತ್ತು ಭದ್ರತಾ ಏಜೆನ್ಸಿಗಳೊಂದಿಗೆ ಘರ್ಷಣೆ ನಡೆಸಿದರು.
|
4 |
+
ಪ್ರತಿಭಟನೆಯ ನೇತೃತ್ವವನ್ನು ಜಮ್ಮು ಮತ್ತು ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿಯು ನಡೆಸುತ್ತಿದೆ, ವ್ಯಾಪಾರಿಗಳು ಮುಂಚೂಣಿಯಲ್ಲಿದ್ದಾರೆ. ಮುಷ್ಕರಕ್ಕೆ ಕರೆ ನೀಡಿದ ನಂತರ ಹತ್ತಾರು ನಾಯಕರು ಮತ್ತು ಕ್ರಿಯಾ ಸಮಿತಿಯ ಸದಸ್ಯರನ್ನು ಬಂಧಿಸಲಾಗಿದೆ.
|
5 |
+
ದಡ್ಯಾಲ್ನಲ್ಲಿ ನಮ್ಮ ಶಾಂತಿಯುತ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ದೌರ್ಜನ್ಯದ ವಿರುದ್ಧ ಪಿಒಕೆ ಮತ್ತು ನಿರ್ದಿಷ್ಟವಾಗಿ ಮುಜಾಫರಾಬಾದ್ನಲ್ಲಿ ಸಂಪೂರ್ಣ ಶಟರ್ಡೌನ್ ಮತ್ತು ವೀಲ-ಜಾಮ್ ಮುಷ್ಕರವನ್ನು ಆಚರಿಸಲಾಗುವುದು ಎಂದು ಮುಜಾಫರಾಬಾದ್ ವರ್ತಕರ ಸಂಘದ ಅಧ್ಯಕ್ಷ ಸೌಕತ್ ನವಾಜ್ ಮಿರ್ ಹೇಳಿದ್ದಾರೆ.
|
6 |
+
ಪಾಕಿಸ್ತಾನದ ಸ್ಥಾಪನೆಯಿಂದ ಸ್ವಾತಂತ್ರ್ಯವನ್ನು ಕೋರುವ ಸ್ಥಳೀಯರ ವೀಡಿಯೊಗಳು ವೈರಲ್ ಆಗುತ್ತಿದ್ದಂತೆ ಇಂದು ಎಲ್ಲರೂ ಹೊರಗೆ ಬನ್ನಿ ಮತ್ತು ನಿಮ್ಮ ಹಕ್ಕುಗಳಿಗಾಗಿ ನಿಮ್ಮ ಧ್ವನಿಯನ್ನು ಎತ್ತುವಂತೆ ನಾನು ಕರೆ ನೀಡುತ್ತೇನೆ ಎಂದು ಅವರು ಹೇಳಿದರು. ವಿದ್ಯುತ್ ಬಿಲ್ಗಳ ಮೇಲೆ ತೆರಿಗೆ ವಿಧಿಸುವುದನ್ನು ನಾವು ತಿರಸ್ಕರಿಸುತ್ತೇವೆ. ಬದಲಿಗೆ, ಈ ಪ್ರದೇಶದ ಜಲವಿದ್ಯುತ್ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ ಗ್ರಾಹಕರಿಗೆ ವಿದ್ಯುತ್ ನೀಡಬೇಕು ಎಂದು ನಾವು ಒತ್ತಾಯಿಸುತ್ತೇವೆ ಎಂದು ಶೌಕತ್ ನವಾಜ್ ಮಿರ್ ಹೇಳಿದರು.
|
7 |
+
ಮೇ 5 ರಂದು, ಪಿಒಕೆ ಯಾವಾಗಲೂ ಭಾರತದ ಭಾಗವಾಗಿದೆ ಎಂದು ಒತ್ತಿಹೇಳುತ್ತಾ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು, ಸ್ವಾತಂತ್ರ್ಯದ ನಂತರ ಪಾಕಿಸ್ತಾನವು ಈ ಪ್ರದೇಶವನ್ನು ಖಾಲಿ ಮಾಡುವುದನ್ನು ಹಿಂದಿನ ಸರ್ಕಾರಗಳು ಖಚಿತಪಡಿಸಿಕೊಳ್ಳದ ಕಾರಣ ವ್ಯವಹಾರಗಳ ಅತ್ಯಂತ ವಿಷಾದಕರ ಸ್ಥಿತಿ ಮುಂದುವರೆದಿದೆ ಎಂದು ಹೇಳಿದ್ದರು.
|
eesanje/url_47_101_11.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ನಾಳೆ ಆಂಧ್ರ ವಿಧಾನಸಬೆ, ಲೋಕಸಭೆಗಳಿಗೆ ಚುನಾವಣೆ
|
2 |
+
ಅಮರಾವತಿ, ಮೇ 12 (ಪಿಟಿಐ) ನಾಳೆ ಆಂಧ್ರ ಪ್ರದೇಶ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯುತ್ತಿದೆ. 175 ವಿಧಾನಸಭಾ ಕ್ಷೇತ್ರಗಳು ಮತ್ತು 25 ಲೋಕಸಭಾ ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿರುವುದು ಈ ಬಾರಿಯ ವಿಶೇಷವಾಗಿದೆ.
|
3 |
+
ವೈಎಸ್ಆರ್ಸಿಪಿ ಪಕ್ಷದ ಅಧ್ಯಕ್ಷ ಜಗನ್ (ಪುಲಿವೆಂದುಲ), ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು (ಕುಪ್ಪಂ) ಮತ್ತು ಜನಸೇನಾ ಮುಖ್ಯಸ್ಥ ಮತ್ತು ನಟ ಪವನ್ ಕಲ್ಯಾಣ್ (ಪಿಠಾಪುರಂ) ಮತ್ತಿತರ ಗಣ್ಯರು ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಸಿದ್ದರಾಗಿದ್ದಾರೆ. ಎಪಿ ಕಾಂಗ್ರೆಸ್ ಅಧ್ಯಕ್ಷ ಮತ್ತು ಜಗನ್ ಅವರ ಸಹೋದರಿ ವೈಎಸ್ ಶರ್ಮಿಳಾ (ಕಡಪ) ಮತ್ತು ಬಿಜೆಪಿ ರಾಜ್ಯ ಮುಖ್ಯಸ್ಥೆ ಪುರಂದೇಶ್ವರಿ (ರಾಜಮಹೇಂದ್ರವರಂ) ಇತರರು ಲೋಕಸಭೆ ಚುನಾವಣೆ ಕಣದಲ್ಲಿದ್ದಾರೆ.
|
4 |
+
ವೈಎಸ್ಆರ್ಸಿಪಿಯು ರಾಜ್ಯದ ಎಲ್ಲಾ 175 ವಿಧಾನಸಭಾ ಸ್ಥಾನಗಳು ಮತ್ತು 25 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಎನ್ಡಿಎ ಪಾಲುದಾರರ ನಡುವಿನ ಸೀಟು ಹಂಚಿಕೆ ಒಪ್ಪಂದದ ಭಾಗವಾಗಿ, ಟಿಡಿಪಿಗೆ 144 ಅಸೆಂಬ್ಲಿ ಮತ್ತು 17 ಲೋಕಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಬಿಜೆಪಿ ಆರು ಲೋಕಸಭೆ ಮತ್ತು 10 ವಿಧಾನಸಭೆ ಸ್ಥಾನಗಳಲ್ಲಿ ಸ್ಪರ್ಧಿಸಲಿದೆ.
|
5 |
+
ಪ್ರಧಾನಿ ಮೋದಿಯವರಲ್ಲದೆ, ರಾಜನಾಥ್ ಸಿಂಗ್ ಮತ್ತು ಅಮಿತ್ ಶಾ ಸೇರಿದಂತೆ ಹಲವಾರು ಕೇಂದ್ರ ಸಚಿವರು ಮತ್ತು ಕಾಂಗ್ರೆಸ್ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳಿಗಾಗಿ ಚುನಾವಣಾ ಪ್ರಚಾರವನ್ನು ಕೈಗೊಂಡಿದ್ದರು. ಚುನಾವಣೆಯನ್ನು ಸುಗಮವಾಗಿ ನಡೆಸಲು ಚುನಾವಣಾ ಆಯೋಗವು 1.06 ಲಕ್ಷ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿದ್ದು, ಇದರಲ್ಲಿ 3,500 ಕರ್ನಾಟಕ ಪೊಲೀಸರು, 4,500 ತಮಿಳುನಾಡು ಪೊಲೀಸರು, 1,614 ಮಾಜಿ ಸೈನಿಕರು ಮತ್ತು 246 ನಿವೃತ್ತ ಪೊಲೀಸ್ ಸಿಬ್ಬಂದಿಗಳು ಸೇರಿದ್ದಾರೆ.
|
6 |
+
ಈ ರಾಜ್ಯದಲ್ಲಿ ಒಟ್ಟು ಮತದಾರರ ಸಂಖ್ಯೆ 4.14 ಕೋಟಿ, ಇದರಲ್ಲಿ 2.02 ಕೋಟಿ ಪುರುಷ, 2.1 ಕೋಟಿ ಮಹಿಳೆ, 3,421 ತೃತೀಯ ಲಿಂಗ ಮತದಾರರು ಮತ್ತು 68,185 ಸೇವಾ ಮತದಾರರು ಇದ್ದಾರೆ. ಆಂಧ್ರಪ್ರದೇಶದ ಮುಖ್ಯ ಚುನಾವಣಾಧಿಕಾರಿ ಎಂಕೆ ಮೀನಾ ಪ್ರಕಾರ, ಲೋಕಸಭೆಗೆ 454 ಮತ್ತು ವಿಧಾನಸಭೆ ಚುನಾವಣೆಗೆ 2,387 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
|
7 |
+
ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸಿದ ವೈಎಸ್ಆರ್ಸಿಪಿ ಮುಖ್ಯಸ್ಥರು ವಿರೋಧ ಪಕ್ಷಗಳು ರೂಪಿಸಿರುವ ರಾಜಕೀಯ ಪಿತೂರಿಗಳಿಗೆ ಬಲಿಯಾಗಲು ತಾನು ಅಭಿಮನ್ಯು ಅಲ್ಲ ಎಂದು ಪ್ರತಿಪಾದಿಸಿದರು.ಎಕ್ಸ್ನಲ್ಲಿನ ಪೋಸ್ಟ್ನಲ್ಲಿ, ರೆಡ್ಡಿ ತನ್ನನ್ನು ಅರ್ಜುನ್ ಎಂದು ಕರೆದುಕೊಂಡರು, ಅವರು ವಿಜಯಶಾಲಿಯಾಗಿ ಹೊರಹೊಮ್ಮಲು ಶ್ರೀಕೃಷ್ಣನಂತಹ ಜನ ನನ್ನೊಂದಿಗೆ ಇದ್ದಾರೆ ಎಂದಿದ್ದಾರೆ. ವಿಪಕ್ಷ ನಾಯಕ ನಾಯ್ಡು ಅವರು ಎಕ್ಸ್ ಪೋಸ್ಟ್ನಲ್ಲಿ ಮೇ 13 ರಂದು ಆಂಧ್ರಪ್ರದೇಶದ ಭವಿಷ್ಯದ ದಿಕ್ಕಿಗೆ ನಿರ್ಣಾಯಕವಾಗಿರುವುದರಿಂದ ತಮ್ಮ ಹಕ್ಕು ಚಲಾಯಿಸುವಂತೆ ರಾಜ್ಯದ ಜನರಿಗೆ ಮನವಿ ಮಾಡಿದ್ದಾರೆ.
|
8 |
+
ಕಳೆದ ವಿಧಾನಸಭೆ ಚುನಾವಣೆಯಲ್ಲಿ ವೈಎಸ್ಆರ್ಸಿಪಿ 151, ಟಿಡಿಪಿ-23 ಮತ್ತು ಜನಸೇನಾ-1 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, 2019ರ ಚುನಾವಣೆಯಲ್ಲಿ ಆಡಳಿತ ಪಕ್ಷ 22 ಮತ್ತು ಚಂದ್ರಬಾಬು ನಾಯ್ಡು ನೇತೃತ್ವದ ಮೂರು ಲೋಕಸಭಾ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
|
eesanje/url_47_101_12.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಬದರಿನಾಥ ಧಾಮ ಸಾರ್ವಜನಿಕರಿಗೆ ಮುಕ್ತ
|
2 |
+
ನವದೆಹಲಿ,ಮೇ.12- ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮವು ಇಂದಿನಿಂದ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಿಗ್ಗೆ 6 ಗಂಟೆಗೆ ಆರ್ಮಿ ಬ್ಯಾಂಡ್ನ ಸುಮಧುರ ನಾದದ ನಡುವೆ ಸಂಪೂರ್ಣ ಧಾರ್ಮಿಕ ಕ್ರಿಯೆಗಳೊಂದಿಗೆ ಭಕ್ತರಿಗೆ ದೇವಾಲಯ ತನ್ನ ಬಾಗಿಲು ತೆರೆಯಿತು. ಭಕ್ತರನ್ನು ಸ್ವಾಗತಿಸುವಾಗ, ವೇದ ಘೋಷಗಳು ಮತ್ತು ಬದ್ರಿ ವಿಶಾಲ್ ಲಾಲ್ ಕೀ ಜೈ ಘೋಷಣೆಗಳು ದೇವಸ್ಥಾನದಾದ್ಯಂತ ಪ್ರತಿಧ್ವನಿಸಿದವು.
|
3 |
+
ನಿನ್ನೆ ಚಮೋಲಿ ಜಿಲ್ಲೆಯಲ್ಲಿ ಚಾರ್ ಧಾಮ್ ಯಾತ್ರೆಗಾಗಿ ಭಕ್ತರಿಗಾಗಿ ತನ್ನ ಪೋರ್ಟಲ್ಗಳನ್ನು ತೆರೆಯುವ ಮುನ್ನ ಅಲಂಕರಿಸಿದ ಬದರಿನಾಥ ದೇವಾಲಯದಲ್ಲಿ ಇಂದು ಬೆಳಗ್ಗೆ ನೂರಾರು ಭಕ್ತರು ಬದರಿನಾಥ ಧಾಮದ ಪ್ರವೇಶದ್ವಾರವನ್ನು ಹೂವಿನಿಂದ ಅಲಂಕರಿಸಿದರು.
|
4 |
+
ಆರು ತಿಂಗಳ ವಿರಾಮದ ನಂತರ ಬದರಿನಾಥ ಧಾಮ್ ತನ್ನ ದ್ವಾರಗಳನ್ನು ಭಕ್ತರಿಗಾಗಿ ತೆರೆಯಿತು. ನವೆಂಬರ್ 18 ರಿಂದ ಚಳಿಗಾಲದಲ್ಲಿ ದೇವಾಲಯದ ದ್ವಾರಗಳನ್ನು ಮುಚ್ಚಲಾಗಿತ್ತು.
|
5 |
+
ಉತ್ತರಾಖಂಡದ ನಾಲ್ಕು ಧಾಮಗಳ ಪೈಕಿ ಮೂರು ಧಾಮಗಳಾದ ಕೇದಾರನಾಥ, ಗಂಗೋತ್ರಿ, ಯಮುನೋತ್ರಿ ಧಾಮಗಳ ಬಾಗಿಲುಗಳನ್ನು ಕಳೆದ ಶುಕ್ರವಾರ ಅಕ್ಷಯ ತೃತೀಯ ಸಂದರ್ಭದಲ್ಲಿ ತೆರೆಯಲಾಗಿತ್ತು. ಬಾಗಿಲು ತೆರೆಯುವ ಸಿದ್ಧತೆಗಳನ್ನು ಬದರಿನಾಥ ಕೇದಾರನಾಥ ದೇವಾಲಯ ಸಮಿತಿ ಪೂರ್ಣಗೊಳಿಸಿದೆ.
|
eesanje/url_47_101_2.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಮೆಟ್ರೋ ನಿಲ್ದಾಣಗಳ ಕಂಬಗಳ ಮೇಲೆ ಖಲಿಸ್ತಾನ್ ಪರ ಗೀಚುಬರಹ
|
2 |
+
ನವದೆಹಲಿ, ಮೇ 12 (ಪಿಟಿಐ)ದೆಹಲಿಯ ಕರೋಲ್ ಬಾಗ್ ಮತ್ತು ಝಾಂಡೇವಾಲನ್ ಮೆಟ್ರೋ ನಿಲ್ದಾಣಗಳ ಕೆಲವು ಕಂಬಗಳಲ್ಲಿ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಸಿಕೊಂಡು ಖಲಿಸ್ತಾನ್ ಪರ ಗೀಚುಬರಹ ಮತ್ತು ಘೋಷಣೆಗಳು ಕಾಣಿಸಿಕೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
|
3 |
+
ಬೆಳ್ಳಂ ಬೆಳಿಗ್ಗೆ ಮೆಟ್ರೋ ನಿಲ್ದಾಣಗಳ ಕೆಲ ಕಂಬಗಳ ಮೇಲೆ ಖಲಿಸ್ತಾನ್ ಪರ ಗೀಚು ಬರಹಗಳು ಕಾಣಿಸಿಕೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಬರಹದಲ್ಲಿ ಮೋದಿ ಅವರ ಬಗ್ಗೆ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ತಿಳಿದುಬಂದಿದೆ.
|
4 |
+
ಗೋಡೆ ಬರಹ ಮತ್ತು ಘೋಷಣೆಗಳನ್ನು ತೆಗೆದುಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದು, ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
|
5 |
+
ನಾವು ವಿಷಯದ ತನಿಖೆಗಾಗಿ ತಂಡಗಳನ್ನು ರಚಿಸಿದ್ದೇವೆ. ಪೊಲೀಸ್ ತಂಡಗಳು ಅಪರಾಧಿಗಳನ್ನು ಗುರುತಿಸಲು ಮತ್ತು ಅವರನ್ನು ಹಿಡಿಯಲು ಪ್ರದೇಶ ಮತ್ತು ಮೆಟ್ರೋ ನಿಲ್ದಾಣಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
|
6 |
+
ಕಿಡಿಗೇಡಿಗಳು ಎಲ್ಲೇ ಇದ್ದರೂ ಅವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಇದೇ ಸಂದರ್ಭದಲ್ಲಿ ಭರವಸೆ ನೀಡಿದ್ದಾರೆ.
|
eesanje/url_47_101_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
4ನೇ ಹಂತದ ಚುನಾವಣೆ : ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮೋದಿ ಮನವಿ
|
2 |
+
ನವದೆಹಲಿ, ಮೇ 13-ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸುವುದು ಪ್ರತಿಯೊಬ್ಬರ ಕರ್ತವ್ಯಮಾಡೋಣ ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
|
3 |
+
ದೇಶದ 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 96 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ ಲೋಕಸಭೆ ಚುನಾವಣೆಯ ಜೊತೆಗೆ ಆಂಧ್ರಪ್ರದೇಶ ಮತ್ತು ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯೂ ನಡೆಯುತ್ತಿದ್ದು, ಮತದಾರರು ದಾಖಲೆ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುವಂತೆ ಮೋದಿ ಮನವಿ ಮಾಡಿದರು.
|
4 |
+
ಜನರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುತ್ತಾರೆ ಮತ್ತು ಯುವ ಮತದಾರರು ಮತ್ತು ಮಹಿಳಾ ಮತದಾರರು ಮತದಾನದಲ್ಲಿ ಈ ಉಲ್ಬಣವನ್ನು ಹೆಚ್ಚಿಸುತ್ತಾರೆ ಎಂದು ನನಗೆ ಖಾತ್ರಿಯಿದೆ. ಬನ್ನಿ, ಎಲ್ಲರೂ ನಮ ಕರ್ತವ್ಯವನ್ನು ಮಾಡೋಣ ಮತ್ತು ನಮ ಪ್ರಜಾಪ್ರಭುತ್ವವನ್ನು ಬಲಪಡಿಸೋಣ! ಎಂದು ಎಕ್ಸ್ ನಲ್ಲಿ ವಿನಂತಿಸಿದ್ದಾರೆ.
|
5 |
+
ಆಂಧ್ರಪ್ರದೇಶದ ಜನರು, ವಿಶೇಷವಾಗಿ ಮೊದಲ ಬಾರಿಗೆ ಮತದಾರರು, ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಒತ್ತಾಯಿಸುತ್ತಾರೆ. ಈ ಸಮೀಕ್ಷೆಗಳು ನಮ್ಮ ಪ್ರಜಾಪ್ರಭುತ್ವದ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿ.ಇದರ ಜೊತಡಗೆ ಒಡಿಶಾ ಮತದಾರರಿಗೆ, ನಿಮ ಮತ ನಿಮ ಧ್ವನಿ, ಅದನ್ನು ಜೋರಾಗಿ ಮತ್ತು ಸ್ಪಷ್ಟವಾಗಿ ಕೇಳಲಿ ಎಂದು ಪ್ರಧಾನಿ ಮತ್ತೊಂದು ಪೋಸ್ಟ್ನಲ್ಲಿ ಬರೆದಿದ್ದಾರೆ.
|
eesanje/url_47_101_4.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ನಾಳೆ ವಾರಣಾಸಿಯಲ್ಲಿ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ, ಭರ್ಜರಿ ರೋಡ್ ಶೋಗೆ ತಯಾರಿ
|
2 |
+
ನವದೆಹಲಿ,ಮೇ 13-ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ನಾಳೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾಲ ಭೈರವ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಾರೆ ಮತ್ತು ನಂತರ ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದು, ಪ್ರಧಾನಿ ಮೋದಿಯವರ ರೋಡ್ ಶೋ ಮತ್ತು ನಾಮನಿರ್ದೇಶನ ಪ್ರಕ್ರಿಯೆಯ ವ್ಯವಸ್ಥೆಗಳ ಮೇಲ್ವಿಚಾರಣೆಗಾಗಿ ಗೃಹ ಸಚಿವ ಅಮಿತ್ ಶಾ ವಾರಣಾಸಿಯಲ್ಲಿದ್ದಾರೆ.
|
3 |
+
ಬಿಜೆಪಿಯ ಹಿರಿಯ ನಾಯಕ ಸುನಿಲ್ ಬನ್ಸಾಲ್ ಕೂಡ ವಾರಣಾಸಿಯಲ್ಲಿ ಹಲವು ದಿನಗಳಿಂದ ಬೀಡು ಬಿಟ್ಟಿದ್ದಾರೆ. ವಾರಣಾಸಿಗೆ ಎರಡು ದಿನಗಳ ಭೇಟಿಯ ವೇಳೆ ಪ್ರಧಾನಿಗಳು ಕಾಶಿ ವಿಶ್ವನಾಥ ದೇವಾಲಯ ಮತ್ತು ಕಾಲ ಭೈರವ ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
|
4 |
+
ಮೋದಿಯವರನ್ನು ಸ್ವಾಗತಿಸಲು ಗುಜರಾತಿ, ಮರಾಠಿ, ತಮಿಳು, ಬೆಂಗಾಲಿ, ಪಂಜಾಬಿ ಮತ್ತು ಇತರ ಸಮುದಾಯಗಳ ಜನರು ಪ್ರಧಾನಿಯವರ ರೋಡ್ ಶೋ ಮಾರ್ಗದಲ್ಲಿ ಭಾರತದ ವೈವಿಧ್ಯತೆಯನ್ನು ವಿವಿಧ ಹಂತಗಳಲ್ಲಿ ಪ್ರದರ್ಶಿಸಲಾಗುತ್ತದೆ. ರೋಡ್ ಶೋ ಸಮಯದಲ್ಲಿ, ಪ್ರಧಾನಿಯವರು ಬನಾರಸ್ ಹಿಂದೂ ವಿಶ್ವವಿದ್ಯಾಲಯದ (ಬಿಎಚ್ಯು) ಗೇಟಿನಿಂದ ಕಾಶಿ ವಿಶ್ವನಾಥ ಕಾರಿಡಾರ್ವರೆಗಿನ ಐದು ಕಿಲೋಮೀಟರ್ ವ್ಯಾಪ್ತಿಯನ್ನು ಸರಿಸುಮಾರು ನಾಲ್ಕು ಗಂಟೆಗಳಲ್ಲಿ ಕ್ರಮಿಸಲಿದ್ದಾರೆ.
|
5 |
+
ರೋಡ್ ಶೋದಲ್ಲಿ ವಿವಿಧ ಕಲಾವಿದರು ಡಮರುಗ ಮತ್ತು ಶಂಖಗಳನ್ನು ನುಡಿಸಲಾಗುತ್ತದೆ. ಈ ರೋಡ್ ಶೋ ಕಾರ್ಯಕ್ರಮಕ್ಕಾಗಿ ಬಿಜೆಪಿ ಕ್ವಿಂಟಾಲ್ಗಟ್ಟಲೆ ಹೂವಿನ ದಳಗಳನ್ನು ಬಳಕೆ ಮಾಡಲಾಗಿದೆ. ಪ್ರಧಾನಿ ನಾಮನಿರ್ದೇಶನಕ್ಕೆ ಸಂಭಾವ್ಯ ಪ್ರಸ್ತಾಪಕರ ಪಟ್ಟಿಯನ್ನು ರಚಿಸಲಾಗಿದೆ ಮತ್ತು ಅದರಲ್ಲಿ ನಾಲ್ಕು ಹೆಸರುಗಳನ್ನು ಅಂತಿಮಗೊಳಿಸಲಾಗುತ್ತದೆ.
|
6 |
+
ಮೋದಿ ಅವರು 2014 ಮತ್ತು 2019ರಲ್ಲಿ ವಾರಣಾಸಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಸತತ 3ನೇ ಅವಧಿ ಗೆ ವಾರಣಾಸಿಯಿಂದಲೇ ಸ್ಪರ್ಧಿಸುತ್ತಿರುವ ಮೋದಿ ಹ್ಯಾಟ್ರಿಕ್ ಗೆಲುವಿನೊಂದಿಗೆ 3ನೇ ಬಾರಿಗೆ ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ದಾರೆ.
|
eesanje/url_47_101_5.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ತಮಿಳುನಾಡು ಸಂಸದ ಸೆಲ್ವರಾಜ್ ನಿಧನ
|
2 |
+
ಚೆನ್ನೈ,ಮೇ.13-ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದ ನಾಗಪಟ್ಟಿನಂ ಲೋಕಸಭಾ ಕ್ಷೇತ್ರದ ಸಂಸದ ಸೆಲ್ವರಾಜ್ (67) ಅವರು ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೂಲತಹ ತಿರುವರೂರ್ ಜಿಲ್ಲೆಯ ನೀದಮಂಗಳಮ್ನ ಕಪ್ಪಲುಡಯನ್ ಗ್ರಾಮದಲ್ಲಿ 1957ರ ಮಾರ್ಚ್ 16ರಂದು ಜನಿಸಿದ್ದ ಸೆಲ್ವರಾಜ್ ಅವರು ಶಾಲಾ ವಿದ್ಯಾಭ್ಯಾಸದ ವೇಲೆ ಬಾಲ್ಯದಲ್ಲೇ ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಆಕರ್ಷಿತರಾಗಿದ್ದರು ನಂತರದ ದಿನದಲ್ಲಿ ಕಾಲೇಜಿನಲ್ಲಿ ಓದುವಾಗಲೇ ಭಾರತೀಯ ಕಮ್ಯೂನಿಸ್ಟ್ ಪಕ್ಷ ಸೇರಿದ್ದರು.
|
3 |
+
ಹಲವು ಹೋರಾಟದಲ್ಲಿ ಬಾಗಿಯಾಗಿ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾದರು.1989ರಲ್ಲಿ ನೆಡೆದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಮೊದಲ ಬಾರಿಗೆ ನಾಗಪಟ್ಟಿನಂ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾದರು. ಕಮ್ಯುನಿಸ್ಟ್ ಪಕ್ಷದಿಂದ ಲೋಕಸಭಾ ಚುನಾವಣೆಗೆ 6 ಬಾರಿ ಸ್ಪರ್ಧಿಸಿರುವ ಸೆಲ್ವರಾಜ್, 3 ಬಾರಿ ಜಯ ಗಳಿಸಿದ್ದರು. ಭಾರತೀಯ ಕಮ್ಯೂನಿಸ್ಟ್ ಪಕ್ಷದ ರಾಷ್ಟ್ರೀಯ ಸದಸ್ಯನಾಗಿಯೂ ಇವರು ಕೆಲಸ ಮಾಡಿದ್ದಾರೆ.
|
4 |
+
ಇತ್ತೀಚೆಗೆ, ಉಸಿರಾಟದ ತೊಂದರೆ ಮತ್ತು ಕಿಡ್ನಿ ಸಮಸ್ಯೆಗಳಿಂದ ಬಳಲುತ್ತಿದ್ದರು. ಹೀಗಾಗಿ, ತಿರುವರೂರ್ ಸರ್ಕಾರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗಿತ್ತು. ಇಲ್ಲಿಂದ ಹೆಚ್ಚಿನ ಚಿಕಿತ್ಸೆಗೆ ಚೆನ್ನೃನ ಮಿಯಾಟ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು (ಸೋಮವಾರ) ನಸುಕಿನ ಜಾವ ಅಂದಾಜು 2 ಗಂಟೆಗೆ ಕೊನೆಯುಸಿರೆಳೆದಿದ್ದಾರೆ.
|
5 |
+
ಹುಟ್ಟೂರು ನಾಗಪಟ್ಟಿನಂಗೆ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ.ತಮಿಳು ನಾಡು ಸಿಎಂ ಸ್ಟಾಲಿನ್ ಸೇರಿದಂತೆ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
|
eesanje/url_47_101_6.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ರಾಜಸ್ತಾನದ ಜೈಪುರದಲ್ಲಿ ನಾಲ್ಕು ಶಾಲೆಗಳಿಗೆ ಬಾಂಬ್ ಬೆದರಿಕೆ
|
2 |
+
ಜೈಪುರ, ಮೇ 13-ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ನಾಲ್ಕು ಶಾಲೆಗಳಿಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬಂದು ಆತಮಕ ಸೃಷ್ಠಿಯಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
|
3 |
+
ಕೂಡಲೆ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ಶಾಲೆ ಪ್ರವೇಶ ಮಾಡಲು ಬಿಡದೆ ಬಾಂಬ್ ತಪಾಸಣಾ ಮತ್ತು ಶ್ವಾನ ದಳಗಳೊಂದಿಗೆ ಪೊಲೀಸ್ ತಂಡಗಳು ಆಗಮಿಸಿ ಪರಿಶೀಲನೆ ನಡೆಸಿದೆ.
|
4 |
+
ಪ್ರಾಥಮಿಕ ಮಾಹಿತಿ ಪ್ರಕಾರ 5 ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿದ್ದು, ತಪಾಸಣೆ ನಂತರ ಇದು ಹುಸಿ ಬೆದರಿಕೆ ಎಂದು ಗೊತ್ತಾಗಿದೆ ಎಮದು ಜೈಪುರ ಪೊಲೀಸ್ ಕಮಿಷನರ್ ಬಿಜು ಜಾರ್ಜ್ ಜೋಸೆಫ್ ತಿಳಿಸಿದ್ದಾರೆ.
|
5 |
+
ಇಮೇಲ್ ಮೂಲಕ ಬೆದರಿಕೆಯನ್ನುಕಳುಹಿಸುವವರನ್ನು ಗುರುತಿಸಲು ತಂಡ ಪ್ರಯತ್ನಿಸುತ್ತಿದೆ ,ಮಕ್ಕಳು ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
|
eesanje/url_47_101_7.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಕೇರಳ ಕರಾವಳಿಯಲ್ಲಿ ಮೀನುಗಾರಿಕೆ ದೋಣಿ ಮುಳುಗಿ ಇಬ್ಬರು ಸಾವು
|
2 |
+
ಮಲಪ್ಪುರಂ (ಕೇರಳ), ಮೇ 13-ಇಂದು ಮುಂಜಾನೆ ಕೇರಳ ಕರಾವಳಿಯಲ್ಲಿ ಮೀನುಗಾರಿಕಾ ದೋಣಿಗೆ ಹಡಗೊಂದು ಡಿಕ್ಕಿ ಹೊಡೆದ ಪರಿಣಾಮ ಅದು ಮುಳುಗಿ ಇಬ್ಬರು ಸಾವನ್ನಪ್ಪಿದ್ದಾರೆ.
|
3 |
+
ರಾಜ್ಯದ ಮೀನುಗಾರರು ಮೀನುಗಾರಿಕೆಗೆ ತೆರಳುತ್ತಿದ್ದಾಗ ತ್ರಿಶೂರ್ ಜಿಲ್ಲೆಯ ಮಣಕ್ಕಕಡವು ಕರಾವಳಿ ಪೊಲೀಸ್ ಠಾಣೆಯ ಮಿತಿಯಿಂದ 16 ನಾಟಿಕಲ್ ಮೈಲು ದೂರದಲ್ಲಿ ಈ ಅವಘಡ ಸಂಭವಿಸಿದೆ.
|
4 |
+
ಢಿಕ್ಕಿಯ ರಭಸಕ್ಕೆ ದೋಣಿ ಎರಡು ಭಾಗವಾಗಿ ನೀರಿನಲ್ಲಿ ಮುಳುಗಿದೆ. ಈ ದೋಣಿಯಲ್ಲಿ ಆರು ಮಂದಿ ಇದ್ದರು ಅದರಲ್ಲಿ ನಾಲ್ವರನ್ನು ಹಡಗಿನಲ್ಲಿದ್ದವರು ರಕ್ಷಿಸಿದ್ದಾರೆ. ಶೋಧ ಕಾರ್ಯಾಚರಣೆಯ ನಂತರ, ನಾಪತ್ತೆಯಾದ ಇಬ್ಬರು ಮೀನುಗಾರರ ಮೃತದೇಹಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
|
eesanje/url_47_101_8.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಕೇಜ್ರಿವಾಲ್ ಜೈಲು ಪಾಲಾದ ನಂತರ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ : ಚೌಹಾಣ್
|
2 |
+
ವಿದಿಶಾ, ಮೇ12- ಜೈಲು ಸೇರಿದ ನಂತರ ಅರವಿಂದ್ ಕೇಜ್ರಿವಾಲ್ ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಲೇವಡಿ ಮಾಡಿದ್ದಾರೆ. ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ ನಂತರ ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ. ಇದೀಗ ಅವರು ಜಾಮೀನಿನ ಮೇಲೆ ಇದ್ದಾರೆ ಮತ್ತು ಅದು ಕೂಡ ಚುನಾವಣೆಯವರೆಗೆ ಮಾತ್ರ. ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ರಾಜಕೀಯವು ಸ್ಥಾನ ಪಡೆಯಲು ಅಥವಾ ಸ್ವಹಿತಾಸಕ್ತಿಗಳನ್ನು ಸಾಧಿಸುವ ಮಾಧ್ಯಮವಲ್ಲ ಎಂದಿದ್ದಾರೆ.
|
3 |
+
ನಾವು ದೇಶಕ್ಕೆ ಸೇವೆ ಸಲ್ಲಿಸಲು ರಾಜಕೀಯ ಮಾಡಿ ಮತ್ತು ಜನರ ಕಲ್ಯಾಣ ಮತ್ತು ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತೇವೆ, ಪಕ್ಷವು ನಮಗೆ ಯಾವುದೇ ಕೆಲಸ ನೀಡಿದರೂ ಅದನ್ನು ನಾವು ಸಂಪೂರ್ಣ ಸಮರ್ಪಣೆ, ಕಠಿಣ ಪರಿಶ್ರಮ ಮತ್ತು ಪ್ರಾಮಾಣಿಕತೆಯಿಂದ ಮಾಡುತ್ತೇವೆ ಎಂದು ಚೌಹಾಣ್ ಹೇಳಿದರು.
|
4 |
+
ನನ್ನ ಸ್ಥಾನವನ್ನು ಹೊರತುಪಡಿಸಿ, ನಾನು ಮಧ್ಯಪ್ರದೇಶದ ಹಲವು ಲೋಕಸಭಾ ಕ್ಷೇತ್ರಗಳಿಗೆ ಹೋಗಿ ಪಕ್ಷದ ಪ್ರಚಾರ ಮಾಡಿದ್ದೇನೆ. ನಾವೆಲ್ಲರೂ ಪ್ರಧಾನಿ ನೇತೃತ್ವದಲ್ಲಿ ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಾಚಾರ ತೊಲಗಿಸುವ ಬಗ್ಗೆ ಮಾತನಾಡುವ ಮೂಲಕ ಅ„ಕಾರಕ್ಕೆ ಬಂದ ಕೇಜ್ರಿವಾಲ, ಇಂದು ಅವರೇ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅವರು ಹೇಳಿದರು.
|
5 |
+
ಇದಕ್ಕೂ ಮುನ್ನ ಎಎಪಿ ರಾಷ್ಟ್ರೀಯ ಸಂಚಾಲಕರು ಪ್ರಧಾನಿ ಮೋದಿ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಧಾನಿಯಾಗಿಸಲು ದಾರಿ ಮಾಡಿಕೊಡುತ್ತಿದ್ದಾರೆ ಎಂದು ಹೇಳಿದ್ದರು.ತಮ್ಮ ಸರ್ಕಾರ ರಚನೆಯಾದರೆ ಮೊದಲು ಯೋಗಿ ಆದಿತ್ಯನಾಥ್ ಅವರನ್ನು ಕಿತ್ತೊಗೆದು ನಂತರ ಅಮಿತ್ ಶಾ ಅವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುತ್ತಾರೆ. ಪ್ರಧಾನಿ ಮೋದಿ ಅಮಿತ್ ಶಾಗೆ ಮತ ಕೇಳುತ್ತಿದ್ದಾರೆ. ಅಮಿತ್ ಶಾ ಮೋದಿ ಭರವಸೆ ಈಡೇರಿಸುತ್ತಾರಾ? ಎಂದು ಪ್ರಶ್ನಿಸಿದ್ದರು.
|
eesanje/url_47_101_9.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ: ನಿಶಿಯಾಮಾ
|
2 |
+
ಬೆಂಗಳೂರು,ಮೇ.12- ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ. ಇಲ್ಲಿನ ವೈವಿಧ್ಯತೆಯಿಂದ ನಾನು ಆಶ್ಚರ್ಯಚಕಿತನಾಗಿದ್ದೇನೆ ಎಂದು ಟೆಕ್ ಜಪಾನ್ ಸಂಸ್ಥೆ ಸಂಸ್ಥಾಪಕ ನೌಟಾಕ ನಿಶಿಯಾಮಾ ತಿಳಿಸಿದ್ದಾರೆ.ಟೆಕ್ ಜಪಾನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಬೆಂಗಳೂರಿಗೆ ಬಂದಿಳಿದಿರುವ ನಿಶಿಯಾಮಾ ಅವರು ಭಾರತದ ಜಾಗತೀಕ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ.
|
3 |
+
ಜಗತ್ತಿಗೆ ಭಾರತೀಯ ನಾಯಕತ್ವದ ಅಗತ್ಯವಿದೆ, ನಾನು ಭಾರತಕ್ಕೆ ಬಂದು ಒಂದು ತಿಂಗಳಾಗಿದೆ, ಮತ್ತು ಭಾರತದಲ್ಲಿನ ಮೌಲ್ಯಗಳ ವೈವಿಧ್ಯತೆಯನ್ನು ಮತ್ತೊಮ್ಮೆ ನಾನು ಆಶ್ಚರ್ಯ ಪಡುತ್ತೇನೆ. ಭಾರತವು ವಿವಿಧ ಧರ್ಮಗಳು, ಜನಾಂಗಗಳನ್ನು ಹೊಂದಿರುವ ದೊಡ್ಡ ದೇಶವಾಗಿದ್ದರೂ ಒಂದೇ ದೇಶವಾಗಿರುವುದು ಅದ್ಭುತವಾಗಿದೆ. , ಮತ್ತು ಮೌಲ್ಯಗಳು ನಾಯಕತ್ವದ ಬಗ್ಗೆ ಯೋಚಿಸಲು ಇದು ಉತ್ತಮ ಅವಕಾಶವಾಗಿದೆ, ಏಕೆಂದರೆ ಭಾರತವು ಈಗ ಚುನಾವಣಾ ಋತುವಿನಲ್ಲಿದೆ ಎಂದು ಅವರು ಲಿಂಕ್ಡ್ಇನ್ ಪೋಸ್ಟ್ನಲ್ಲಿ ಅವರು ತಿಳಿಸಿದ್ದಾರೆ.
|
4 |
+
ನಿಶಿಯಾಮಾ ಅವರು ಸಾಮೂಹಿಕ ಪ್ರಯತ್ನದ ಪ್ರಾಮುಖ್ಯತೆಯನ್ನು ಚರ್ಚಿಸಿದರು, ಇದು ಹೊಸ ಮತ್ತು ವೈವಿಧ್ಯಮಯ ಆಲೋಚನೆಗಳನ್ನು ತರಲು ಸಹಾಯ ಮಾಡುತ್ತದೆ. ಸಮಾಜವಾದಿ ರಾಷ್ಟ್ರಗಳು ಮತ್ತು ಮಿಲಿಟರಿ-ತರಹದ ಸಂಸ್ಥೆಗಳಲ್ಲಿ, ಸಾಂಪ್ರದಾಯಿಕ ಟಾಪ್ಡೌನ್ ವಿಧಾನವು ಪರಿಣಾಮಕಾರಿಯಾಗಿದೆ. ಆದಾಗ್ಯೂ, ಇಂದಿನ ಅಸ್ಥಿರ ಮತ್ತು ಅನಿಶ್ಚಿತ ಸಮಾಜದಲ್ಲಿ, ವೈವಿಧ್ಯಮಯ ಆಲೋಚನೆಗಳ ಲಾಭವನ್ನು ಪಡೆದುಕೊಳ್ಳುವ ಮೂಲಕ ಸಹಕಾರಿ ರೀತಿಯಲ್ಲಿ ಮುಂದುವರಿಯುವುದು ಅವಶ್ಯಕ. ಯಾವಾಗ ಉನ್ನತ- ಡೌನ್ ಅಪ್ರೋಚ್ ಸರ್ವಾಧಿಕಾರಿಯ ಕಲ್ಪನೆಗಳನ್ನು ಆಧರಿಸಿದೆ, ಅನೇಕ ಕುರುಡು ಕಲೆಗಳು ಸಂಭವಿಸುತ್ತವೆ ಎಂದು ಅವರು ಹೇಳಿದರು.
|
5 |
+
ಜಪಾನ್ನಲ್ಲಿನ ನಿರ್ವಹಣೆಯು ಇತರ ಜನರನ್ನು ತಮ್ಮದೇ ಆದ ಆಲೋಚನಾ ವಿಧಾನದಲ್ಲಿ ಲಾಕ್ ಮಾಡುವ ಮತ್ತು ಅವರನ್ನು ನಿಯಂತ್ರಿಸುವ ಸೂಕ್ಷ್ಮವಾದ ಅರ್ಥವನ್ನು ಹೊಂದಿದೆ. ಅದೇ ಒಂದು ಸಣ್ಣ ಚೌಕಟ್ಟಿನೊಳಗೆ ಇರುತ್ತದೆ. ಭಾರತವು ನೆರೆಯ ದೇಶಗಳೊಂದಿಗೆ ಸಮಸ್ಯೆಗಳಿರುವ ದೊಡ್ಡ ದೇಶ, ಸ್ವಾತಂತ್ರ್ಯದ ಇತಿಹಾಸ ಮತ್ತು ವಿವಿಧ ಧರ್ಮಗಳು, ಜನಾಂಗಗಳು ಮತ್ತು ಮೌಲ್ಯಗಳನ್ನು ಕೇವಲ ಒಂದು ಸೆಟ್ಗೆ ಸೀಮಿತಗೊಳಿಸಲು ಪ್ರಯತ್ನಿಸುವುದು ಇಲ್ಲಿ ಕೆಲಸ ಮಾಡುವುದಿಲ್ಲ, ಅದಕ್ಕಾಗಿಯೇ ಅವರು ವಿಭಿನ್ನ ವಿಷಯಗಳನ್ನು ಹೊಂದಿಸುವ ಬದಲು ಸಾಧ್ಯವಾದಷ್ಟು ಎಲ್ಲವನ್ನೂ ಸೇರಿಸಲು ಪ್ರಯತ್ನಿಸುತ್ತಾರೆ ಅವರ ಒಂದು ಸಣ್ಣ ಚೌಕಟ್ಟಿನೊಳಗೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಪ್ರತ್ಯೇಕವಾಗಿ ಭಿನ್ನವಾಗಿದ್ದರೂ, ವ್ಯತ್ಯಾಸಗಳನ್ನು ಬಳಸಿಕೊಂಡು ಮುಂದುವರಿಯಲು ಸಾಧ್ಯವಾಗುತ್ತದೆ.
|
6 |
+
ಭಾರತದ ವೈವಿಧ್ಯಮಯ ಪರಿಸರ ವನ್ನು ಶ್ಲಾಸಿದ ನಿಶಿಯಾಮಾ ವಿಜಾತೀಯ ಮೌಲ್ಯಗಳನ್ನು ಒಳಗೊಂಡಿರ���ವ ದೊಡ್ಡ ಯೋಜನೆಯನ್ನು ರಚಿಸುವ ಮೂಲಕ ಮುಂದುವರಿಯಲು ಸಹಾಯ ಮಾಡುತ್ತದೆ ಎಂದು ಹೇಳಿದರು. ಸಮರೂಪದ ವಾತಾವರಣ ಇರುವ ಜಪಾನ್ನಲ್ಲಿ ಇದು ವಿಭಿನ್ನವಾಗಿದೆ ಎಂದು ಅವರು ಹೇಳಿದರು.
|
eesanje/url_47_102_1.txt
ADDED
@@ -0,0 +1,7 @@
|
|
|
|
|
|
|
|
|
|
|
|
|
|
|
|
|
1 |
+
ಭಾರತವೂ ಮಧ್ಯಸ್ಥಿಕೆ ಸ್ಥಳವಾಗಿ ಹೊರಹೊಮ್ಮುತ್ತಿದೆ; ಜೈಶಂಕರ್
|
2 |
+
ನವದೆಹಲಿ,ಮೇ.12- ಕಳೆದ ಕೆಲವು ದಶಕಗಳಲ್ಲಿ ಜಾಗತಿಕ ಕ್ರಮವು ತನ್ನ ಹೊಸ ದಿಕ್ಕುಗಳನ್ನು ರೂಪಿಸುವ ಮರು-ಸಮತೋಲನಕ್ಕೆ ಸಾಕ್ಷಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
|
3 |
+
ಆರ್ಬಿಟ್ರೇಷನ್ ಬಾರ್ ಆಫ್ಇಂಡಿಯಾದ ಉದ್ಘಾಟನಾ ಸಮಾರಂಭದಲ್ಲಿ ಇಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಜೈಶಂಕರ್, ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಸಮನ್ವಯಗೊಳಿಸುವ, ಮಧ್ಯಸ್ಥಿಕೆ ವಹಿಸುವ ಮತ್ತು ಇತ್ಯರ್ಥಪಡಿಸುವ ಅವಶ್ಯಕತೆಯು ನಾವು ವಿಕಸಿತ್ ಭಾರತ್ ಕಡೆಗೆ ಆ ಪ್ರಯಾಣದಲ್ಲಿ ಪ್ರಗತಿ ಹೊಂದುತ್ತಿರುವಾಗ ಇನ್ನಷ್ಟು ಹೆಚ್ಚಾಗಿರುತ್ತದೆ ಎಂದು ಹೇಳಿದರು. ಭಾರತವು ಮಧ್ಯಸ್ಥಿಕೆ ಸ್ಥಳವಾಗಿ ಹೊರಹೊಮ್ಮುವಲ್ಲಿ ಇದು ಅತ್ಯಂತ ಮಹತ್ವದ ಹೆಜ್ಜೆ ಎಂದು ಅವರು ಹೇಳಿದರು.
|
4 |
+
ನನಗಿಂತ ನೀವೆಲ್ಲರೂ ಅದರ ಪ್ರಾಮುಖ್ಯತೆಯನ್ನು ಮೆಚ್ಚುತ್ತೀರಿ ಎಂದು ನನಗೆ ತಿಳಿದಿದೆ. ಆದರೆ ವಿದೇಶಾಂಗ ಸಚಿವನಾಗಿ ನಾನು ಇಂದು ಅದನ್ನು ದೊಡ್ಡ ಸನ್ನಿವೇಶದಲ್ಲಿ ಇರಿಸುತ್ತೇನೆ ಮತ್ತು ಎಜಿ (ಅಟಾರ್ನಿ ಜನರಲï) ಅವರ ಉಲ್ಲೇಖದಿಂದ ನಾನು ಮತ್ತೊಮ್ಮೆ ಎರವಲು ಪಡೆಯುತ್ತೇನೆ ಎಂದಿದ್ದಾರೆ.
|
5 |
+
ಕಳೆದ ಕೆಲವು ದಶಕಗಳಲ್ಲಿ, ಜಾಗತಿಕ ಕ್ರಮವು ಅದರ ಹೊಸ ದಿಕ್ಕುಗಳನ್ನು ರೂಪಿಸುವ ಮರು-ಸಮತೋಲನಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು. ಅದರ ಒಂದು ಮುಖವು ಸಂಸ್ಥೆಗಳು ಮತ್ತು ಚಟುವಟಿಕೆಗಳ ಪ್ರಜಾಪ್ರಭುತ್ವೀಕರಣವಾಗಿದೆ. ಆರ್ಥಿಕ ಸಾಮಥ್ರ್ಯಗಳು ಹೊರಹೊಮ್ಮಿದಂತೆ ಅಥವಾ, ನಮ್ಮ ಸಂದರ್ಭದಲ್ಲಿ, ಮರು-ಹೊರಹೊಮ್ಮುತ್ತಿದ್ದಂತೆ, ಅದರ ಜೊತೆಗಿನ ಹಲವು ಆಯಾಮಗಳು ಸಹ ಜಗತ್ತಿನಲ್ಲಿ ಹೆಚ್ಚು ಹರಡಿರುವುದು ಸಹಜ. ಆ ಅರ್ಥದಲ್ಲಿ, ನಾವು ಬಂದಿರುವ ಘಟನೆಯು ಜಗತ್ತಿನಲ್ಲಿ ಅಧಿಕಾರ, ಪ್ರಭಾವ ಮತ್ತು ಸಾಮಥ್ರ್ಯಗಳ ದೊಡ್ಡ ಪುನರ್ವಿತರಣೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವರು ಹೇಳಿದರು.
|
6 |
+
ನಿಸ್ಸಂಶಯವಾಗಿ, ಇದು ತಾನಾಗಿಯೇ ಆಗುವುದಿಲ್ಲ ಮತ್ತು ಇದಕ್ಕೆ ನಾಯಕತ್ವದ ದೃಷ್ಟಿ ಮತ್ತು ಅದನ್ನು ಮಾಡಲು ಮಧ್ಯಸ್ಥಗಾರರ ಬದ್ಧತೆಯ ಅಗತ್ಯವಿರುತ್ತದೆ. ಮತ್ತು ಅದು ಇಂದು ದೇಶದಲ್ಲಿ ಸಾಕ್ಷಿಯಾಗುತ್ತಿದೆ ಎಂದು ಜೈಶಂಕರ್ ಹೇಳಿದರು.
|
7 |
+
ಭಾರತವು ಪ್ರಸ್ತುತ ಜಿಡಿಪಿಯಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿದೆ ಮತ್ತು ಶೀಘ್ರದಲ್ಲೇ ಮೂರನೇ ಅತಿದೊಡ್ಡ ಆರ್ಥಿಕತೆಯಾಗುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ಆರ್ಥಿಕತೆಗೆ ಮಧ್ಯಸ್ಥಿಕೆಯಷ್ಟೇ ನಿರ್ಣಾಯಕವಾದ ಡೊಮೇನ್ ಇಲ್ಲಿ ಸಾಕಷ್ಟು ಅಭಿವ್ಯಕ್ತಿಯನ್ನು ಕಂಡುಕೊಳ್ಳಬೇಕು ಎಂದು ನಿರೀಕ್ಷಿಸಬಹುದು ಎಂದು ಸಚಿವರು ಹೇಳಿದರು. ಅಷ್ಟೇ ಅಲ್ಲ, ಇತರ ಕ್ಷೇತ್ರಗಳಂತೆ, ನಾವು ಉತ್ತಮ ಗುಣಮಟ್ಟದ ಸಾಮಥ್ರ್ಯಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ, ಇದರಿಂದಾಗಿ ಭಾರತವೂ ಸ್ಪರ್ಧಾತ್ಮಕ ಜಗತ್ತಿನಲ್ಲಿ ���ದ್ದು ಕಾಣುತ್ತದೆ ಎಂದು ಅವರು ಹೇಳಿದರು.
|
eesanje/url_47_102_10.txt
ADDED
@@ -0,0 +1,8 @@
|
|
|
|
|
|
|
|
|
|
|
|
|
|
|
|
|
|
|
1 |
+
ಬಾಲಕೊಟ್ ವಾಯುದಾಳಿ ಬಗ್ಗೆ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ
|
2 |
+
ಹೈದರಾಬಾದ್,ಮೇ11-ಪಾಕ್ ಆಕ್ರಮಿತ ಬಾಲಕೊಟ್ ಮೇಲೆ ಭಾರತ ವಾಯುದಾಳಿ ನಡೆಸಿರುವ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಇಲ್ಲ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.
|
3 |
+
ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 2019ರಲ್ಲಿ ಉಗ್ರರು ಆರ್ಡಿಎಕ್ಸ್ ಬಾಂಬ್ ಬಳಸಿ 40 ಮಂದಿ ಸಿಆರ್ಪಿಎಫ್ ಯೋಧರನ್ನು ಹತ್ಯೆ ಮಾಡಿದ್ದರು. ಇದಕ್ಕೆ ಭಾರತ ಪ್ರತಿಯಾಗಿ ಪಿಒಕೆಯಲ್ಲಿರುವ ಬಾಲಕೋಟ್ನಲ್ಲಿ ವಾಯು ದಾಳಿ ನಡೆಸಿ ಪ್ರತೀಕಾರ ತೀರಿಸಿಕೊಂಡಿತ್ತು. ಈ ದಾಳಿಯಲ್ಲಿ ಅನೇಕ ಉಗ್ರರು ಸಾವನ್ನಪ್ಪಿದ್ದರು. ಈ ಬಗ್ಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಇದರ ಬಗ್ಗೆ ಅನುಮಾನವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದವು.
|
4 |
+
ಈ ದಾಳಿ ನಿಜವಾಗಿಯೂ ನಡೆದಿತ್ತೇ? ಎಷ್ಟು ಉಗ್ರರು ಸತ್ತಿದ್ದರು. ಅದಕ್ಕೆ ಸಾಕ್ಷಿ ಎಲ್ಲಿದೆ ಎಂಬ ಪ್ರಶ್ನೆಗಳನ್ನು ಮುಂದಿಡುತ್ತಲೇ ಬಂದಿದ್ದರು. ಇದೀಗ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಕೂಡ ದನಿಗೂಡಿಸಿದ್ದು, ಸಿಆರ್ಪಿಎಫ್ನ 40 ಸೈನಿಕರನ್ನು ಹತ್ಯೆಗೈದಿದ್ದಕ್ಕೆ ಪ್ರತಿಯಾಗಿ ಪುಲ್ವಾಮಾದಲ್ಲಿ ವಾಯುದಾಳಿ ನಡೆಸಲಾಗಿದೆ ಎಂದು ಹೇಳುತ್ತಾರೆ. ಇದರ ಬಗ್ಗೆ ಯಾರಿಗೂ ಖಚಿತವಾದ ಮಾಹಿತಿ ಇಲ್ಲ ಎಂದು ಅನುಮಾನವನ್ನು ಹೊರ ಹಾಕಿದ್ದಾರೆ.
|
5 |
+
ವಾಯುದಾಳಿ ಆದ ನಂತರ ಬಿಜೆಪಿ ಇದನ್ನು ರಾಜಕೀಯ ಲಾಭಕ್ಕೆ ಬಳಸಿಕೊಂಡಿತ್ತು. ಪ್ರಧಾನಿ ನರೇಂದ್ರಮೋದಿ ಅವರು ಪ್ರತಿಯೊಂದನ್ನು ರಾಜಕೀಯಗೊಳಿಸುವುದೇ ಅವರ ಉದ್ದೇಶವಾಗಿದೆ.
|
6 |
+
ಚುನಾವಣೆಯನ್ನು ಗೆಲ್ಲಲ್ಲು ಏನು ಬೇಕಾದರೂ ಮೋದಿ ಮತ್ತು ಅವರ ತಂಡ ಮಾಡುತ್ತದೆ. ಇದಕ್ಕೆ ಪುಲ್ವಾಮ ದಾಳಿ ಒಂದು ನಿದರ್ಶನ. ಸಿಆರ್ಪಿಎಫ್ ಯೋಧರ ಮೇಲೆ ಬಾಂಬ್ ಸ್ಪೋಟಕಗೊಂಡಾಗ ಕೇಂದ್ರದ ಗುಪ್ತಚರ ವಿಭಾಗ ಏನು ಮಾಡುತ್ತಿತ್ತು? ಇದು ಕೇಂದ್ರ ಸರ್ಕಾರದ ಅಧೀನದಲ್ಲಿದೆ ಅಲ್ಲವೆ? ಇದಕ್ಕೆ ಮೋದಿ ಸರ್ಕಾರವೇ ನೇರ ಹೊಣೆ ಎಂದು ಆರೋಪಿಸಿದರು.
|
7 |
+
ಪುಲ್ವಾಮ ದಾಳಿ ನಡೆದಿರುವುದರ ಬಗ್ಗೆಯೇ ಅನುಮಾನವಿದೆ. ಹೇಗೆ ನಡೆಯಿತು? ಯಾವಾಗ ನಡೆಯಿತು? ಯಾವ ಮಾಹಿತಿಯೂ ಇಲ್ಲ. ಯೋಧರನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡುತ್ತಾರೆ ಎಂದರೆ ಆಂತರಿಕ ಭದ್ರತಾ ವಿಭಾಗ ಏನು ಮಾಡುತ್ತಿತ್ತು? 320 ಕೆಜಿ ಆರ್ಡಿಎಕ್್ಸ ಬಾಂಬ್ ಬಳಸಲಾಗಿದೆ ಎಂದು ಹೇಳಲಾಗಿದೆ. ಇಷ್ಟು ದೊಡ್ಡ ಮಟ್ಟದಲ್ಲಿ ಇವು ದೇಶದೊಳಗೆ ಬರಲು ಹೇಗೆ ಸಾಧ್ಯವಾಯಿತು? ಗುಪ್ತಚರ ವಿಭಾಗ, ಸಂಚಾರ ಮತ್ತು ವಿಶ್ಲೇಷಣೆ ವಿಭಾಗ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದರು.
|
8 |
+
ರಾಮಮಂದಿರ ವಿಷಯದಲ್ಲೂ ಬಿಜೆಪಿ ರಾಜಕೀಯ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ. ನಾವು ಕೂಡ ರಾಮ ಭಕ್ತರೇ. ಮಂದಿರವನ್ನು ಕಟ್ಟಬೇಡಿ ಎಂದು ನಾವೇನು ಹೇಳಿದ್ದೇವಾ? ಎಂದು ರೇವಂತ್ ರೆಡ್ಡಿ ಪಿಎಂ ಮೋದಿಗೆ ಪ��ರಶ್ನೆ ಮಾಡಿದ್ದಾರೆ.
|
eesanje/url_47_102_11.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ದೆಹಲಿಯಲ್ಲಿ ಚಂಡಮಾರುತ, ಮಳೆಗೆ ಇಬ್ಬರು ಸಾವು, 23 ಮಂದಿಗೆ ಗಾಯ
|
2 |
+
ನವದೆಹಲಿ, ಮೇ 11-ತಡರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಧೂಳಿನ ಬಿರುಗಾಳಿ ಬೀಸಿದ್ದರಿಂದ ಹಲವು ಪ್ರದೇಶಗಳಲ್ಲಿ ಮರಗಳು, ವಿದ್ಯುತ್ ಕಂಬಗಳು ಉರುಳಿಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 23 ಜನರು ಗಾಯಗೊಂಡಿದ್ದಾರೆ,
|
3 |
+
ಬಲವಾದ ಗಾಳಿ ಮಳೆಗೆ ಹೋರ್ಡಿಂಗ್ಗಳು ಕೂಡು ಕಿತ್ತು ಬಂದಿದ್ದು,ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ದೆಹಲಿ ಅಗ್ನಿಶಾಮಕ ಠಾಣೆಗೆ 152 ಕರೆಗಳು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|
4 |
+
ಹಲವಡೆ ಮನೆಗಳಿಗೂ ಹಾನಿಯಾಗಿದ್ದು ಸಂಚಾರ ವ್ಯತ್ಯಯ ಉಂಟಾಗಿತ್ತು ಪ್ರತಿಕೂಲ ಹವಾಮಾನದ ಕಾರಣ ದೆಹಲಿ ವಿಮಾನ ನಿಲ್ದಾಣದಲ್ಲೂ ಕೂಡ ವಿಮಾನಗಳ ಸೇವೆ ವ್ಯತ್ಯಯವಾಗಿದ್ದು ಹಲವಾರು ವಿಮಾನಗಳನ್ನು ಬೇರೆಡಗೆ ತಿರುಗಿಸಲಾಗಿದೆ ಎಂದು ಹೇಳಿದರು.
|
5 |
+
ಗೋಡೆ ಕುಸಿತದಲ್ಲಿ ಇಬ್ಬರು ಸಾವನ್ನಪ್ಪಿದರೆ,ಮರ ಬಿದ್ದು ಹಲವರು ಗಾಯಗೊಂಡಿದ್ದಾರೆ. ಶುಕ್ರವಾರ ತಡರಾತ್ರಿ ರಾಷ್ಟ್ರ ರಾಜಧಾನಿಯಲ್ಲಿ ಧೂಳಿನ ಬಿರುಗಾಳಿ ಭಾರಿ ಅವಾಂತರ ಸೃಷ್ಠಿಸಿದೆ.ಇಂದು ಬೆಳಿಗ್ಗೆ ಅಗ್ನಿಶಾಮಕ ಸಿಬ್ಬಂಧಿ ಹಾಗು ತುರ್ತು ಪರಿಹಾರ ತಂಡ ಕಾರ್ಯಾಚರಣೆ ಆರಂಭಿಸಿದೆ.
|
eesanje/url_47_102_12.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಬಿಹಾರ : ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 13 ಮಂದಿ ಬಂಧನ
|
2 |
+
ಪಾಟ್ನಾ, ಮೇ. 11-ಕಳೆದ ಮೇ 5 ರಂದು ಇಲ್ಲಿ ನಡೆದ ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ 13 ಜನರನ್ನು ಬಿಹಾರ ಪೊಲೀಸರು ಬಂಧಿಸಿದ್ದಾರೆ.
|
3 |
+
ಪ್ರಶ್ನೆ ಪತ್ರಿಕೆ ಸೋರಿಕೆ ಕಾಗದ ಸೋರಿಕೆ ಬೆಳಕಿಗೆ ಬರುತ್ತಿದ್ದಂತೆ ತನಿಖೆಯನ್ನು ಸರ್ಕಾರ ಬಿಹಾರ ಪೊಲೀಸ್ನ ಆರ್ಥಿಕ ಅಪರಾಧಗಳ ಘಟಕಕ್ಕೆ (ಇಒಯು) ಹಸ್ತಾಂತರಿಸಲಾಗಿದೆ. ತನಿಖೆ ರಮಬಿಸುತ್ತಿದಂತೆ ಇದುವರೆಗೆ ನಾಲ್ವರು ಪರೀಕ್ಷಾರ್ಥಿಗಳು ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 13 ಜನರನ್ನು ಬಂಧಿಸಲಾಗಿದೆ. ಅಲ್ಲದೆ, ಬಂಧಿತ ಆರೋಪಿಗಳಲ್ಲಿ ಒಬ್ಬರು ಬಿಹಾರದಲ್ಲಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ.
|
4 |
+
ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ ಮತ್ತು ಪ್ರಮುಖ ಆರೋಪಿ ವಿಚಾರಣೆ ನಡೆದಿದ್ದು ಈಗಾಗಲೇ ಆರೋಪಿಗಳಿಂದ ದೋಷಾರೋಪಣೆ ದಾಖಲೆಗಳು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಳ್ಲಲಾಗಿದೆ.
|
5 |
+
ಇದುವರೆಗಿನ ತನಿಖೆಯಲ್ಲಿ ತಿಳಿದಿರುವುದೇನೆಂದರೆ ಮೇ 5 ರ ಪರೀಕ್ಷೆಯ ಮೊದಲು ಸುಮಾರು 35 ಆಕಾಂಕ್ಷಿಗಳಿಗೆ ಉತ್ತರ ಒದಗಿಸಲಾಗಿದೆ ಮತ್ತು ಇಂತದ್ದೇ ಪ್ರಶ್ನೆಗೆ ಇದೇ ಉತ್ತರ ಎಂದು ಪಾಠ ಮಾಡಲಾಗಿದೆ. ಘಟನೆ ಕುರಿತಂತೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ
|
eesanje/url_47_102_2.txt
ADDED
@@ -0,0 +1,6 @@
|
|
|
|
|
|
|
|
|
|
|
|
|
|
|
1 |
+
ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲು
|
2 |
+
ಹೈದರಾಬಾದ್,ಮೇ.12- ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಪುಷ್ಪ ಖ್ಯಾತಿಯ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ನಟ ಅಲ್ಲು ಅರ್ಜುನ್ ಮತ್ತು ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್ಆರ್ಸಿಪಿ) ಶಾಸಕ ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಪ್ರಕರಣ ದಾಖಲಾಗಿದೆ.
|
3 |
+
ರವಿಚಂದ್ರ ಅವರ ನಿವಾಸದಲ್ಲಿ ಯಾವುದೆ ಅನುಮತಿ ಪಡೆಯದೆ ಬೃಹತ್ ಸಾರ್ವಜನಿಕ ಸಭೆ ನಡೆಸಿದ ಆರೋಪದ ಮೇಲೆ ಚುನಾವಣಾಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಶಾಸಕ ರವಿಚಂದ್ರ ರೆಡ್ಡಿ ಅವರು ಈ ಸಭೆಗೆ ಅನುಮತಿ ಪಡೆಯದೇ ಅಲ್ಲು ಅರ್ಜುನ್ ಅವರನ್ನು ಆಹ್ವಾನಿಸಿದ್ದಾರೆ ಎಂದು ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ನಟ ಅಲ್ಲು ಅರ್ಜುನ್ ಮತ್ತು ರವಿಚಂದ್ರ ಕಿಶೋರ್ ರೆಡ್ಡಿ ವಿರುದ್ಧ ಐಪಿಸಿ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
|
4 |
+
ಆಂಧ್ರಪ್ರದೇಶದ ನಂದ್ಯಾಲ ಕ್ಷೇತ್ರದ ಚುನಾವಣಾ ಉಸ್ತುವಾರಿಗಾಗಿ ನಿಯೋಜಿಸಲಾದ ನಂದ್ಯಾಲ ಗ್ರಾಮಾಂತರದ ಉಪ ತಹಸೀಲ್ದಾರ್ ಪಿ ರಾಮಚಂದ್ರರಾವ್ ಅವರು ಪ್ರಕರಣ ದಾಖಲಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ನಾಳೆ ನಡೆಯಲಿರುವ ಮತದಾನಕ್ಕೆ ಸಜ್ಜಾಗುತ್ತಿರುವ ಸಂದರ್ಭದಲ್ಲಿ ಜಾರಿಯಲ್ಲಿರುವ ಸೆಕ್ಷನ್ 144 ಅನ್ನು ಉಲ್ಲಂಸಿದ್ದಕ್ಕಾಗಿ ದಾಖಲಿಸಲಾಗಿದೆ. ಅಲ್ಲು ಅರ್ಜುನ್ ಜೊತೆಗೆ, ಅವರ ಪತ್ನಿ ಸ್ನೇಹಾ ಕೂಡ ಬಂದಿದ್ದರು. ಸ್ಟಾರ್ ಹೀರೋ ತನ್ನ ಸ್ನೇಹಿತನಿಗಾಗಿ ಪ್ರಚಾರ ಮಾಡಿದ್ದು ನೋಡಿ ಅಭಿಮಾನಿಗಳು ಸೂಪರ್ ಥ್ರಿಲ್ ಆಗಿದ್ದಾರೆ.
|
5 |
+
ಅದರಲ್ಲೂ ತಮ್ಮ ಹತ್ತಿರದ ಸಂಬಂಧಿಯಾಗಿರುವ ಪವನ್ ಕಲ್ಯಾಣ್ ನೇತೃತ್ವದ ಪಕ್ಷದ ವಿರುದ್ದ ಮತ ಪ್ರಚಾರ ನಡೆಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಅಲ್ಲು ಅರ್ಜುನ್ ಅವರು ನನ್ನೆ ಸ್ನೇಹಿತರಿಗೆ ಸಹಾಯ ಮಾಡಲು ನಂದ್ಯಾಲಕ್ಕೆ ಭೇಟಿ ನೀಡಿದ್ದೇನೆ ಮತ್ತು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
|
6 |
+
ನಾನೊಬ್ಬನೇ ಇಲ್ಲಿಗೆ ಬಂದಿದ್ದೇನೆ. ನನ್ನ ಸ್ನೇಹಿತರಲ್ಲಿ ಅವರು ಯಾವುದೇ ಕ್ಷೇತ್ರದಲ್ಲಿದ್ದರೂ ಅವರಿಗೆ ನನ್ನ ಸಹಾಯ ಬೇಕಾದರೆ ನಾನು ಅವರಿಗೆ ಸಹಾಯ ಮಾಡುತ್ತೇನೆ. ಇದು ನಾನು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಅರ್ಥವಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
|
eesanje/url_47_102_3.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಮೋದಿ ನಾಯಕತ್ವಕ್ಕೆ ನಾವೆಲ್ಲಾ ಶರಣು; ಯೋಗಿ ಆದಿತ್ಯನಾಥ್
|
2 |
+
ಲಕ್ನೋ,ಮೇ.12- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ಅವರ 75 ನೇ ವಯಸ್ಸಿನಲ್ಲಿ ನಿವೃತ್ತಿ ಹೇಳಿಕೆಗೆ ವಾಗ್ದಾಳಿ ನಡೆಸಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಲೋಕಸಭೆ ಚುನಾವಣೆಯಲ್ಲಿ ತಮ್ಮ ಸೋಲು ತಿಳಿದ ಹತಾಶ ಪ್ರತಿಪಕ್ಷಗಳು ವ್ಯರ್ಥ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ದೂರಿದ್ದಾರೆ.
|
3 |
+
ಈ ಹಿಂದೆ, ಕೇಜ್ರಿವಾಲ್ ಅವರು ಮುಂದಿನ ವರ್ಷ 75 ನೇ ವರ್ಷಕ್ಕೆ ಕಾಲಿಟ್ಟ ನಂತರ ಪ್ರಧಾನಿ ಮೋದಿ ಗೃಹ ಸಚಿವ ಅಮಿತ್ ಶಾಗೆ ದಾರಿ ಮಾಡಿಕೊಡುತ್ತಾರೆ ಎಂದು ಹೇಳಿದ್ದರು ಮತ್ತು ಸಾರ್ವತ್ರಿಕ ಚುನಾವಣೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕಡೆಗಣಿಸಲಾಗುವುದು ಎಂದಿದ್ದರು.
|
4 |
+
ಎಕ್್ಸನಲ್ಲಿನ ತಮ್ಮ ಪೋಸ್ಟ್ನಲ್ಲಿ, ಸಿಎಂ ಯೋಗಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರು ಪೂರ್ವದಿಂದ ಪಶ್ಚಿಮಕ್ಕೆ ಮತ್ತು ಉತ್ತರದಿಂದ ದಕ್ಷಿಣಕ್ಕೆ ಪಡೆಯುತ್ತಿರುವ ಅಪಾರ ಜನಬೆಂಬಲದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಅಪಪ್ರಚಾರದಲ್ಲಿ ಮುಳುಗಿವೆ. ಲೋಕಸಭೆ ಚುನಾವಣೆಯಲ್ಲಿ ಸೋಲು ಖಚಿತ ಎಂದು ಗೊತ್ತಿದ್ದೂ ಹತಾಶರಾಗಿರುವ ಪ್ರತಿಪಕ್ಷಗಳು ಮೋದಿಯವರ ವಯೋಮಾನದ ನೆಪ ಹೇಳಿಕೊಂಡು ಹುಸಿ ದಾಳಿ ನಡೆಸಲು ವಿಫಲ ಯತ್ನ ನಡೆಸುತ್ತಿವೆ ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ, ಮೋದಿ ಜಿ ಅವರ ಪ್ರತಿ ಕ್ಷಣವೂ ಭಾರತಮಾತೆಯನ್ನು ಅಂತಿಮ ವೈಭವಕ್ಕೆ ಕೊಂಡೊಯ್ಯಲು ಸಮರ್ಪಿತವಾಗಿದೆ ಎಂದು ಭಾರತದ ಜನರಿಗೆ ತಿಳಿದಿದೆ ಎಂದು ಅವರು ಪ್ರತಿಪಾದಿಸಿದರು.
|
5 |
+
ಗೌರವಾನ್ವಿತ ಪ್ರಧಾನಿ ಮೋದಿ ಜಿಯವರ ಯಶಸ್ವಿ ನಾಯಕತ್ವದಲ್ಲಿ, ವಿಕಸಿತ್ ಭಾರತ್, ಆತನಿರ್ಭರ್ ಭಾರತ್ ಮತ್ತು ಏಕ್ ಭಾರತ್-ಶ್ರೇಷ್ಠ ಭಾರತದ ಪರಿಕಲ್ಪನೆಗಳು ಸಾಕಾರಗೊಳ್ಳುತ್ತಿವೆ. ಖಂಡಿತವಾಗಿಯೂ, ಮೋದಿ ಜಿಯವರ ಮೂರನೇ ಅವಧಿಯಲ್ಲಿ, ಭಾರತವು ಹೊಸ ಎತ್ತರವನ್ನು ಮುಟ್ಟಲಿದೆ. ಜಾಗತಿಕ ಸೂಪರ್ ಪವರ್ ಮೋದಿ ಜೀ 140 ಕೋಟಿ ಭಾರತೀಯರ ಸ್ವೀಕಾರಾರ್ಹ ನಾಯಕ ಮತ್ತು ನಾವು ಮೋದಿ ಜಿ ಅವರ ಕುಟುಂಬದ ಸದಸ್ಯರು ಎಂದು ನಾವು ಹೆಮ್ಮೆ ಪಡುತ್ತೇವೆ ಎಂದು ಹೇಳಿದ್ದಾರೆ.
|
eesanje/url_47_102_4.txt
ADDED
@@ -0,0 +1,11 @@
|
|
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಸೋಮವಾರ 4ನೇ ಹಂತದ ಚುನಾವಣೆ, 10 ರಾಜ್ಯಗಳ 96 ಕ್ಷೇತ್ರಗಳಲ್ಲಿ ಮತದಾನ
|
2 |
+
ನವದೆಹಲಿ,ಮೇ11-ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುವ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ 10 ರಾಜ್ಯಗಳ 96 ಕ್ಷೇತ್ರಗಳಿಗೆ ಸೋಮವಾರ ಮತದಾನ ನಡೆಯಲಿದ್ದು, ಇದೇ ಸಮಯದಲ್ಲಿ ಆಂಧ್ರಪ್ರದೇಶ ವಿಧಾನಸಭೆಗೂ ಚುನಾವಣೆ ನಡೆಯಲಿದೆ.
|
3 |
+
ನಾಲ್ಕನೇ ಹಂತದ ಲೋಕಸಭೆ ಹಾಗೂ ಚುನಾವಣೆ ನಡೆಯುವ ಕ್ಷೇತ್ರಗಳಿಗೆ ಇಂದು ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ. ಮೇ 13ರಂದು ಆಂಧ್ರಪ್ರದೇಶದ 25, ತೆಲಂಗಾಣದ 17 ಸೇರಿ 43 ಕ್ಷೇತ್ರಗಳಿಗೆ ಒಂದೇ ಅವಧಿಗೆ ಚುನಾವಣೆ ನಡೆಯಲಿದೆ.
|
4 |
+
ಬಿಹಾರದ 40 ಕ್ಷೇತ್ರಗಳ ಪೈಕಿ 5, ಜಾರ್ಖಂಡ್ನ 14 ಕ್ಷೇತ್ರಗಳ ಪೈಕಿ 4, ಮಧ್ಯಪ್ರದೇಶದ 29 ಕ್ಷೇತ್ರಗಳ ಪೈಕಿ 8, ಮಹಾರಾಷ್ಟ್ರದ 48 ಕ್ಷೇತ್ರಗಳ ಪೈಕಿ 11, ಒಡಿಶಾದ 21 ಕ್ಷೇತ್ರಗಳ ಪೈಕಿ 4, ಉತ್ತರ ಪ್ರದೇಶದ 80 ಕ್ಷೇತ್ರಗಳ ಪೈಕಿ 13, ಪಶ್ಚಿಮ ಬಂಗಾಳದ 42 ಕ್ಷೇತ್ರಗಳ ಪೈಕಿ 8, ಜಮ್ಮು ಕಾಶ್ಮೀರದ 5 ಕ್ಷೇತ್ರಗಳ ಪೈಕಿ 1 ಸೇರಿ ಒಟ್ಟು 96 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.
|
5 |
+
ಉತ್ತರಪ್ರದೇಶದ ಕನೂಜ್ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್, ಪಶ್ಚಿಮ ಬಂಗಾಳದ ಕೃಷ್ಣಾನಗರದಲ್ಲಿ ಟಿಎಂಸಿಯಿಂದ ಸಂಸದೆ ಮಹು ಮೋಹಿತ್ರಾ, ಬಿಹಾರದ ಬೇಗುಸರಾಯ್ ಕ್ಷೇತ್ರದಿಂದ ಗಿರಿರಾಜ ಸಿಂಗ್ ಬಿಜೆಪಿಯಿಂದ, ಆಂಧ್ರಪ್ರದೇಶದ ಕಡಪದಲ್ಲಿ ಕಾಂಗ್ರೆಸ್ನಿಂದ, ಹಾಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್.ಶರ್ಮಿಳಾ, ಪಶ್ಚಿಮ ಬಂಗಾಳದ ಅಸ್ನೋಲ್ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಿರಿಯ ನಟರೂ ಆದ ಶತ್ರುಘ್ನ ಸಿನ್ಹಾ , ತೆಲಂಗಾಣದ ಹೈದರಾಬಾದ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಮಾಧವಿ ಲತಾ ಕಣದಲ್ಲಿರುವ ಪ್ರಮುಖರಾಗಿದ್ದಾರೆ.
|
6 |
+
ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಏ.25ರವರೆಗೆ 4,264 ಉಮೇದುವಾರಿಕೆಗಳು ಸಲ್ಲಿಕೆಯಾಗಿದ್ದವು. ಪರಿಶೀಲನೆ ಬಳಿಕ 1970 ನಾಮಪತ್ರಗಳು ಊರ್ಜಿತಗೊಂಡಿದ್ದು, 1717 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
|
7 |
+
ಜಿದ್ದಾಜಿದ್ದಿನ ಕಣ:ಲೋಕಸಭೆಯ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಯುತ್ತಿರುವುದರಿಂದ ಆಂಧ್ರಪ್ರದೇಶ ಜಿದ್ದಾಜಿದ್ದಿನ ಕಣವಾಗಿದೆ. 175 ವಿಧಾನಸಭಾ ಕ್ಷೇತ್ರಗಳಿಗೆ ಏಕಕಾಲಕ್ಕೆ ಒಂದೇ ಅವಧಿಗೆ ಚುನಾವಣೆ ನಡೆಯುತ್ತಿದೆ. ದಕ್ಷಿಣ ಭಾರತದಲ್ಲಿ ಪ್ರಮುಖವಾಗಿರುವ ತೆಲಂಗಾಣ, ಆಂಧ್ರಪ್ರದೇಶದಲ್ಲಿ ತೆಲುಗು ನಾಡಿನ ಒಲವು ಗಳಿಸಬೇಕು ಎಂಬ ಕಾರಣಕ್ಕಾಗಿ ಪ್ರಾದೇಶಿಕ ಪಕ್ಷಗಳೊಂದಿಗೆ ರಾಷ್ಟ್ರೀಯ ಪಕ್ಷಗಳು ಜಿದ್ದಿಗೆ ಬಿದ್ದಿವೆ.
|
8 |
+
ವೈಎಸ್ಆರ್ ಕಾಂಗ್ರೆಸ್ನ ಆಡಳಿತವನ್ನು ಹತ್ತಿಕ್ಕಿ ವಿಧಾನಸಭೆಯನ್ನು ಗೆಲ್ಲಲು ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ನೇತೃತ್ವದ ತಾಲಿವುಡ್ನ ಪವರ್ ಸ್ಟಾರ್ ಪವನ್ ಕಲ್ಯಾಣ್ ಜನಸೇನಾ ಪಕ್ಷ ಬಿಜೆಪಿಯೊಂದಿಗೆ ಮೈ��್ರಿ ಮಾಡಿಕೊಂಡಿವೆ.
|
9 |
+
ಕಾಂಗ್ರೆಸ್ ಏಕಾಂಗಿಯಾಗಿ ಸ್ಪರ್ಧೆ ನಡೆಸಿದೆ. ಪ್ರಧಾನಿ ನರೇಂದ್ರಮೋದಿ, ಕೇಂದ್ರ ಗೃಹಸಚಿವ ಅಮಿತ್ ಷಾ ತಮ ಮಿತ್ರಕೂಟದ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.
|
10 |
+
ಕರ್ನಾಟಕದಿಂದ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯಾಗಿರುವ ಡಿ.ಕೆ.ಶಿವಕುಮಾರ್ ಅವರು ಆಂಧ್ರಪ್ರದೇಶಕ್ಕೆ ತೆರಳಿ ಪಕ್ಷದ ಅಭ್ಯರ್ಥಿ ಪರವಾಗಿ ಪ್ರಚಾರ ಮಾಡಿದ್ದಾರೆ.
|
11 |
+
4ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ, ಉತ್ತರಪ್ರದೇಶ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಬಹುತೇಕ ಕ್ಷೇತ್ರಗಳು ಜನಾಭಿಪ್ರಾಯ ಪಡೆಯಲಿವೆ. ಹೀಗಾಗಿ ಸೋಮವಾರ ನಡೆಯುವ ಮತದಾನ ತೀವ್ರ ಕುತೂಹಲ ಕೆರಳಿಸಿವೆ.
|
eesanje/url_47_102_5.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಹನುಮಾನ್ ದೇವಸ್ಥಾನದಲ್ಲಿ ಕೇಜ್ರಿವಾಲ್ ಪ್ರಾರ್ಥನೆ
|
2 |
+
ನವದೆಹಲಿ, ಮೇ 11 –ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಮತ್ತು ಭಗವಂತ್ ಮಾನ್ ಅವರೊಂದಿಗೆ ಕೇಂದ್ರ ದೆಹಲಿಯ ಕನ್ನಾಟ್ ಪ್ಲೇಸ್ನಲ್ಲಿರುವ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು.
|
3 |
+
ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಬಿಡುಗಡೆಯಾದ ಒಂದು ದಿನದ ನಂತರ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ತಮ್ಮ ನಮನ ಸಲ್ಲಿಸಲು ಐತಿಹಾಸಿಕ ದೇವಾಲಯವನ್ನು ತಲುಪಿದರು.
|
4 |
+
ಕೇಜ್ರಿವಾಲ್ ಅವರೊಂದಿಗೆ ದೆಹಲಿ ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಸೇರಿದಂತೆ ಎಎಪಿ ನಾಯಕರು ಇದ್ದರು.ಶುಕ್ರವಾರ, ಮಧ್ಯಂತರ ಜಾಮೀನಿನ ಮೇಲೆ ತಿಹಾರ್ ಜೈಲಿನಿಂದ ಹೊರಬಂದ ಹನುಮಂತನಿಗೆ ಮುಖ್ಯಮಂತ್ರಿ ಪ್ರಾರ್ಥನೆ ಸಲ್ಲಿಸಿದರು.
|
eesanje/url_47_102_6.txt
ADDED
@@ -0,0 +1,10 @@
|
|
|
|
|
|
|
|
|
|
|
|
|
|
|
|
|
|
|
|
|
|
|
1 |
+
ಉತ್ತರಪ್ರದೇಶದಲ್ಲಿ ಕಾರು ಅಪಘಾತ : ಮದುವೆ ವರ ಸೇರಿ ನಾಲ್ವರ ಸಾವು
|
2 |
+
ಝಾನ್ಸಿ (ಯುಪಿ), ಮೇ 11-ಇಲ್ಲಿನ ಪರಿಚ್ಚಾ ಪ್ರದೇಶದ ಬಳಿ ಕಾರು ಮತ್ತು ಟ್ರಕ್ ನಡುವೆ ಡಿಕ್ಕಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮದುವೆ ವರ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ವರನ ಜೊತೆ ಆರು ಮಂದಿ ಕಾರಿನಲ್ಲಿ ಮದುವೆ ಮಂಟಪ್ಪಕ್ಕೆ ತೆರಳುತ್ತಿದ್ದಾಗ ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ರಾತ್ರಿ ಈ ಅಪಘಾತ ಸಂಭವಿಸಿದೆ.
|
3 |
+
ಬಿಲಾಟಿ ಗ್ರಾಮದಿಂದ ಛಪ್ರಾ ಗ್ರಾಮಕ್ಕೆ ಮದುವೆಗೆ ಬರುತ್ತಿದ್ದಾಗ ಹಿಂದಿನಿಂದ ಕಾರಿಗೆ ಟ್ರಕ್ಡಿಕ್ಕಿ ಹೊಡೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ.
|
4 |
+
ಅಪಘಾತದ ನಂತರ ಕಾರಿನ ಸಿಎನ್ಜಿ ಟ್ಯಾಂಕ್ಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದರು. ಆದರೆ, ಆ ವೇಳೆಗಾಗಲೇ ವರ ಸೇರಿದಂತೆ ನಾಲ್ವರು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು ಎಂದು ಮಾಹಿತಿ ನೀಡಿದ್ದಾರೆ.
|
5 |
+
ಮೃತರನ್ನು ಆಕಾಶ್ ಅಹಿರ್ವಾರ್ (25), ಅವರ ಸಹೋದರ ಆಶಿಶ್ (20), ಸೋದರಳಿಯ ಮಯಾಂಕ್ (7) ಮತ್ತು ಕಾರು ಚಾಲಕ ಜೈಕಾರನ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಸಂಬಂಧಿಕರಾದ ರವಿ ಅಹಿರ್ವಾರ್ ಮತ್ತು ರಮೇಶ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
|
6 |
+
ಅಪಘಾತದ ನಂತರ ಟ್ರಕ್ ಚಾಲಕ ಸ್ಥಳದಿಂದ ಓಡಿಹೋಗಿದ್ದು ಆತನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ಹೇಳಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದರು. ಆದರೆ, ಆ ವೇಳೆಗಾಗಲೇ ವರ ಸೇರಿದಂತೆ ನಾಲ್ವರು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
|
7 |
+
ಮೃತರನ್ನು ಆಕಾಶ್ ಅಹಿರ್ವಾರ್ (25), ಅವರ ಸಹೋದರ ಆಶಿಶ್ (20), ಸೋದರಳಿಯ ಮಯಾಂಕ್ (7) ಮತ್ತು ಕಾರು ಚಾಲಕ ಜೈಕಾರನ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಸಂಬಂಧಿಕರಾದ ರವಿ ಅಹಿರ್ವಾರ್ ಮತ್ತು ರಮೇಶ್ ಗಾಯಗೊಂಡಿದ್ದು, ಅವರನ್ನು ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ನಂತರ ಸ್ಥಳದಿಂದ ಓಡಿಹೋದ ಟ್ರಕ್ ಚಾಲಕನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ಹೇಳಿದರು.
|
8 |
+
ಶುಕ್ರವಾರ ರಾತ್ರಿ ವರ ಸೇರಿದಂತೆ ಆರು ಮಂದಿ ಕಾರಿನಲ್ಲಿ ಮದುವೆ ಸ್ಥಳಕ್ಕೆ ತೆರಳುತ್ತಿದ್ದಾಗ ಝಾನ್ಸಿ-ಕಾನ್ಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ. ಬಿಲಾಟಿ ಗ್ರಾಮದಿಂದ ಛಪ್ರಾ ಗ್ರಾಮಕ್ಕೆ ಮದುವೆ ಮೆರವಣಿಗೆ ಬರುತ್ತಿದ್ದಾಗ ಹಿಂದಿನಿಂದ ಟ್ರಕ್ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜ್ಞಾನೇಂದ್ರ ಕುಮಾರ್ ತಿಳಿಸಿದ್ದಾರೆ.
|
9 |
+
ಅಪಘಾತದ ನಂತರ ಕಾರಿನ ಸಿಎನ್ಜಿ ಟ್ಯಾಂಕ್���ಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಿಸಿದರು. ಆದರೆ, ಆ ವೇಳೆಗಾಗಲೇ ವರ ಸೇರಿದಂತೆ ನಾಲ್ವರು ಸುಟ್ಟ ಗಾಯಗಳಿಂದ ಮೃತಪಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ.
|
10 |
+
ಮೃತರನ್ನು ಆಕಾಶ್ ಅಹಿರ್ವಾರ್ (25), ಅವರ ಸಹೋದರ ಆಶಿಶ್ (20), ಸೋದರಳಿಯ ಮಯಾಂಕ್ (7) ಮತ್ತು ಕಾರು ಚಾಲಕ ಜೈಕಾರನ್ ಎಂದು ಗುರುತಿಸಲಾಗಿದ್ದು, ಇನ್ನಿಬ್ಬರು ಸಂಬಂಧಿಕರಾದ ರವಿ ಅಹಿರ್ವಾರ್ ಮತ್ತು ರಮೇಶ್ ಗಾಯಗೊಂಡಿದ್ದು, ಅವರನ್ನು ಕರೆದೊಯ್ಯಲಾಗಿದೆ ಎಂದು ಅವರು ತಿಳಿಸಿದ್ದಾರೆ. ಸ್ಥಳೀಯ ಆಸ್ಪತ್ರೆಗೆ.ಅಪಘಾತದ ನಂತರ ಸ್ಥಳದಿಂದ ಓಡಿಹೋದ ಟ್ರಕ್ ಚಾಲಕನನ್ನು ಹಿಡಿಯಲು ಪ್ರಯತ್ನಿಸಲಾಗುತ್ತಿದೆ ಎಂದು ಎಸ್ಪಿ ಹೇಳಿದರು.
|
eesanje/url_47_102_7.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
30ಲಕ್ಷ ರೂ. ಹಣಕ್ಕಾಗಿ ತಾಯಿಯನ್ನೇ ಕೊಂದು ಸುಟ್ಟು ಹಾಕಿದ ದತ್ತು ಪುತ್ರ
|
2 |
+
ಭೂಪಾಲ್,ಮೇ11-ತಾಯಿ ಬ್ಯಾಂಕ್ನಲ್ಲಿಟ್ಟಿದ್ದ 30 ಲಕ್ಷ ರೂ.ಗಳಿಗಾಗಿ ದತ್ತು ಮಗನೇ ಆಕೆಯನ್ನು ಕೊಂದು ಬಾತ್ರೂಮ್ನಲ್ಲಿ ಸುಟ್ಟು ಹಾಕಿರುವ ಘಟನೆ ಮಧ್ಯಪ್ರದೇಶ ಶಿಯೋಪುರ್ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಉಷಾ(65) ಕೊಲೆಯಾದ ತಾಯಿ. ದೀಪಕ್ ಪಚೌರಿ(24) ಕೊಲೆ ಮಾಡಿರುವ ಮಗ.
|
3 |
+
ಬ್ಯಾಂಕ್ನಲ್ಲಿ ಉಷಾ ಅವರು ತನ್ನ ಬ್ಯಾಂಕ್ನ ಸ್ಥಿರ ಖಾತೆಯಲ್ಲಿ 30 ಲಕ್ಷ ರೂಗಳನ್ನು ಠೇವಣಿ ಇಟ್ಟಿದ್ದರು. ಈ ಹಣಕ್ಕಾಗಿ ಆಕೆಯನ್ನು ಕೊಲೆ ಮಾಡಿದ ದತ್ತುಪುತ್ರ ದೀಪಕ್, ಏನೂ ತಿಳಿಯದವನಂತೆ ಕೊತ್ವಾಲಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಆನಂದ್ ತಿಳಿಸಿದ್ದಾರೆ.
|
4 |
+
ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಾಗ, ಆತನ ಸಂಬಂಧಿಕರು ಮತ್ತು ನೆರೆಹೊರೆಯವರ ವಿಚಾರಣೆ ನಡೆಸಲಾಗಿತ್ತು. ಯಾವುದೆ ಸುಳಿವು ಸಿಕ್ಕಿರಲಿಲ್ಲ.ಈ ನಡುವೆ ಆರೋಪಿ ದೀಪಕ್ ವ್ಯತಿರಿಕ್ತ ಹೇಳಿಕೆಗಳನ್ನು ನೀಡಲಾರಂಭಿಸಿದಾಗ ಅನುಮಾನಗೊಂಡ ಪೊಲೀಸರು, ವಶಕ್ಕೆ ವಿಚಾರಣೆ ನಡೆಸಿದಾಗ, ಷೇರು ಮಾರುಕಟ್ಟೆಯಲ್ಲಿ 15 ಲಕ್ಷ ರೂ. ಕಳೆದುಕೊಂಡಿದ್ದು, ಹಣದ ಅಗತ್ಯವಿತ್ತು. ತನ್ನ ತಾಯಿ ಅವರ ಖಾತೆಯಲ್ಲಿ 30 ಲಕ್ಷ ಫಿಕ್ಸೆಡ್ ಡೆಪಾಸಿಟ್ ಮಾಡಿದ್ದರು. ಅದರಲ್ಲಿ ನನ್ನನ್ನು ನಾಮಿನಿ ಮಾಡಿದ್ದರು. ಹೀಗಾಗಿ ಅವರನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.
|
5 |
+
ಆರೋಪಿಯು ನೀಡಿದ ಮಾಹಿತಿ ಮೇರೆಗೆ ಮನೆಯ ಸ್ನಾನಗೃಹದಲ್ಲೇ ರೂಮ್ ಕೊರೆದಿರುವುದನ್ನು ಪೊಲೀಸ್ ತಂಡ ಪತ್ತೆ ಹಚ್ಚಿ, ಪ್ಲಾಸ್ಟರ್ ತೆಗೆದಾಗ ಮಹಿಳೆಯ ಶವ ಪತ್ತೆಯಾಗಿದೆ. ಸಂತ್ರಸ್ತೆ ಮತ್ತು ಆಕೆಯ ಪತಿ ಭುವೇಂದ್ರ ಪಚೌರಿ 23 ವರ್ಷಗಳ ಹಿಂದೆ ದೀಪಕ್ ಅನ್ನು ಅನಾಥಾಶ್ರಮದಿಂದ ದತ್ತು ಪಡೆದಿದ್ದರು ಎಂದು ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಅಭಿಷೇಕ್ ಆನಂದ್ ತಿಳಿಸಿದ್ದಾರೆ.
|
eesanje/url_47_102_8.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಕಾಂಗ್ರೆಸ್ 50 ಸ್ಥಾನಗಳನ್ನೂ ಗೆಲ್ಲಲ್ಲ : ಪ್ರಧಾನಿ ಮೋದಿ
|
2 |
+
ನವದೆಹಲಿ, ಮೇ 11-ಮತ್ತೆ ಕಾಂಗ್ರೆಸ್ ಪ್ರತಿಪಕ್ಷದ ಸ್ಥಾನದ ಅರ್ಹತೆ ಪಡೆಯುವುದಿಲ್ಲ. 50 ಸ್ಥಾನವನ್ನೂ ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಇಂದಿಲ್ಲಿ ಗುಡುಗಿದ್ದಾರೆ. ಒಡಿಶಾದಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶದ ಜನತೆ ಈಗಾಗಲೇ ಬಿಜೆಪಿಯ ಅಭಿವೃದ್ಧಿ ಆಡಳಿತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
|
3 |
+
ಕಾಂಗ್ರೆಸ್ನ ಯಾವುದೇ ಪೊಳ್ಳು ಆಶ್ವಾಸನೆಗಳಿಗೆ ಕಿವಿಗೊಡದೆ ದೇಶ ಕಟ್ಟುವ ಕಾಯಕಕ್ಕೆ ಕೈ ಜೋಡಿಸುತ್ತಾರೆ ಎಂಬ ನಂಬಿಕೆ ಇದೆ ಎಂದು ಅವರು ತಿಳಿಸಿದ್ದಾರೆ. ತುಷ್ಟೀಕರಣ ರಾಜಕಾರಣದಿಂದ ಮತ್ತು ದೇಶ ಒಡೆಯುವ ಕಾಯಕದಲ್ಲಿ ಈಗ ವಿರೋಧ ಪಕ್ಷಗಳು ಹುನ್ನಾರ ನಡೆಸುತ್ತಿವೆ.ಮೋದಿಯನ್ನು ಹೇಗಾದರೂ ಮಾಡಿ ಮಣಿಸಬೇಕು ಎಂಬ ತವಕದಲ್ಲಿ ಏನೆಲ್ಲಾ ಮಾಡಬೇಕೋ ಅದನ್ನು ನಡೆಸುತ್ತಿದೆ. ಆದರೆ, ದೇಶದ ಜನತೆ ನನ್ನ ಪರವಿದ್ದಾರೆ ಎಂದು ಅವರು ಹೇಳಿದ್ದಾರೆ.
|
4 |
+
ಭಾರತದ ಶಕ್ತಿಯನ್ನು ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಪೋಕ್ರಾನ್ ಅಣು ಪರೀಕ್ಷೆ ನಡೆಸುವ ಮೂಲಕ ಸಾಬೀತುಪಡಿಸಿದ್ದರು. ಅದಕ್ಕೆ ಈಗ 26 ವರ್ಷ ಘಟಿಸಿದೆ. 500 ವರ್ಷಗಳ ಕಾಲ ಕಾದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ನಿರ್ಮಿಸಲಾಗಿದೆ. ಇದು ಬಹಳಷ್ಟು ಭಾರತೀಯರ ಕನಸನ್ನು ನನಸು ಮಾಡಿದೆ ಎಂದು ತಿಳಿಸಿದರು.
|
5 |
+
ಒಡಿಶಾದಲ್ಲಿ ಈಗಾಗಲೇ ಬದಲಾವಣೆಯ ಗಾಳಿ ಬೀಸುತ್ತಿದೆ. ಹೊಸ ಇತಿಹಾಸ ಸೃಷ್ಟಿಯಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಡಬಲ್ ಇಂಜಿನ್ ಸರ್ಕಾರ ಅಸ್ತಿತ್ವದಲ್ಲಿ ಹೊಸ ಇತಿಹಾಸ ಸೃಷ್ಟಿಯಾಗಲಿದೆ ಎಂದು ಹೇಳಿದರು.
|
eesanje/url_47_102_9.txt
ADDED
@@ -0,0 +1,9 @@
|
|
|
|
|
|
|
|
|
|
|
|
|
|
|
|
|
|
|
|
|
1 |
+
ಓವೈಸಿ ಸಹೋದರರಿಗೆ ನವನೀತ್ ರಾಣಾ ಸವಾಲ್
|
2 |
+
ಮುಂಬೈ, ಮೇ11-ದೇಶದ ಮೂಲೆ ಮೂಲೆಯಲ್ಲೂ ಶ್ರೀರಾಮನ ಭಕ್ತರು ಇದ್ದಾರೆ. ತಾಕತ್ತಿದ್ದರೆ ಅಸಾದುದ್ದೀನ್ ಓವೈಸಿ ಸಹೋದರ ನಮನ್ನು ತಡೆದು ನೋಡಲಿ ಎಂದು ಬಿಜೆಪಿ ಫೈಯರ್ ಬ್ರ್ಯಾಂಡ್ ನಾಯಕಿ ನವನೀತ್ ರಾಣಾ ಬಹಿರಂಗ ಸವಾಲು ಹಾಕಿದ್ದಾರೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಹೋದರನಾಗಿರುವ ಅಕ್ಬರ್ ಉದ್ದೀನ್ ಓವೈಸಿ ನಮ್ಮ ಬಳಿ ಪಿರಂಗಿಗಿಗೆ ಎಂದು ಹೇಳಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಾಣಾ, ಅಂತಹ ಫಿರಂಗಿಗಳನ್ನು ತನ್ನ ಮನೆಯ ಹೊರಗೆ ಅಲಂಕಾರಕ್ಕಾಗಿ ಇಡಲಾಗಿದೆ ಎಂದು ಹೇಳಿದರು.
|
3 |
+
ತಾನು ಸೈನಿಕನ ಮಗಳು ಎಂದು ಪ್ರತಿಪಾದಿಸಿದ ಅವರು, ನಾವು ಅಲಂಕಾರಕ್ಕಾಗಿ ನಾವು ಫಿರಂಗಿಗಳನ್ನು ಇಡುತ್ತೇವೆ … ಓವೈಸಿ ಅವರು ತಮ್ಮ ಸಹೋದರನನ್ನು ಹಿಡಿತದಲ್ಲಿಟ್ಟಿದ್ದಾರೆ ಎಂದು ಹೇಳುತ್ತಾರೆ. ಅದು ಒಳ್ಳೆಯದು, ಇಲ್ಲದಿದ್ದರೆ ರಾಮಭಕ್ತರು ಮತ್ತು ಮೋದಿ ಜಿ ಸಿಂಹಗಳು ಅಡ್ಡಲಾಗಿರುವ ಪ್ರತಿಯೊಂದು ರಸ್ತೆಯಲ್ಲಿಯೂ ತಿರುಗಾಡುತ್ತಿವೆ. ನಾನು ಶೀಘ್ರದಲ್ಲೇ ಹೈದರಾಬಾದ್ಗೆ ಬರುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.
|
4 |
+
ನಾನು ಚೋಟ್ಟೆ (ಅಕ್ಬರುದ್ದೀನ್) ನಿಲ್ಲಿಸಿದ್ದೇನೆ. ಚೋಟ್ಟೆ ಯಾರೆಂದು ನಿಮಗೆ ತಿಳಿದಿಲ್ಲ. ಅವನು ಒಬ್ಬ ಕ್ಯಾನನ್. ಸಾಲರ್ ಮಗ. ನಿನಗೆ ಏನು ಬೇಕು? ನಾನು ಅವನನ್ನು ಸಡಿಲವಾಗಿ ಕತ್ತರಿಸಬೇಕೇ? ಎಂದು ಪ್ರಶ್ನಿಸಿದ್ದಾರೆ.
|
5 |
+
ಬಿಜೆಪಿಯ ಹೈದರಾಬಾದ್ ಲೋಕಸಭಾ ಅಭ್ಯರ್ಥಿ ಮಾಧವಿ ಲತಾ ಪರ ಪ್ರಚಾರ ನಡೆಸುತ್ತಿದ್ದ ರಾಣಾ, ಪೊಲೀಸರನ್ನು 15 ಸೆಕೆಂಡುಗಳ ಕಾಲ ಕರ್ತವ್ಯಯದಿಂದ ತೆಗೆದುಹಾಕಿದರೆ, ಓವೈಸಿ ಸಹೋದರರಿಗೆ ಅವರು ಎಲ್ಲಿಂದ ಬಂದರು ಮತ್ತು ಎಲ್ಲಿಗೆ ಹೋದರು ಎಂದು ತಿಳಿಯುವುದಿಲ್ಲ ಎಂದು ಹೇಳಿದ ಕೆಲವೇ ದಿನಗಳಲ್ಲಿ ಈ ಮಾತಿನ ಸಮರ ನಡೆಯಿತು.
|
6 |
+
ಎಐಎಂಐಎಂ ಶಾಸಕ ಅಕ್ಬರುದ್ದೀನ್ ಓವೈಸಿಯ 2013ರ ವಿವಾದಾತ್ಮಕ ಭಾಷಣಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕಿ, ಪೊಲೀಸರನ್ನು ತೆಗೆದುಹಾಕಿದರೆ ದೇಶದಲ್ಲಿ ಹಿಂದೂ-ಮುಸ್ಲಿಂ ಅನುಪಾತವನ್ನು ಸಮತೋಲನಗೊಳಿಸಲು ಕೇವಲ 15 ನಿಮಿಷಗಳು ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
|
7 |
+
15 ನಿಮಿಷಗಳ ಕಾಲ ಪೊಲೀಸರನ್ನು ತೆಗೆದುಹಾಕಿ, ನಂತರ ನಾವು ಏನು ಮಾಡಬಹುದೆಂದು ಅವರಿಗೆ ತೋರಿಸುತ್ತೇವೆ ಎಂದು ಅಕ್ಬರ್ ಉದ್ದೀನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ನಿಮಗೆ 15 ನಿಮಿಷಗಳನ್ನು ತೆಗೆದುಕೊಳ್ಳಬಹುದು, ಆದರೆ ಇದು ನಮಗೆ ಕೇವಲ 15 ಸೆಕೆಂಡು ಸಾಕು. 15 ಸೆಕೆಂಡುಗಳ ಕಾಲ ಪೊಲೀಸರನ್ನು ತೆಗೆದುಹಾಕಿದರೆ, ಸಹೋದರರಿಬ್ಬರಿಗೂ ಅವರು ಎಲ್ಲಿಂದ ಬಂದರು ಅಥವಾ ಎಲ್ಲಿಗೆ ಹೋದರು? ಎಂದು ತಿಳಿಯುವುದಿಲ್ಲ ಎಂದು ರಾಣಾ ಗುಡುಗಿದ್ದರು.
|
8 |
+
ರಾಣಾ ಅವರ ಟೀಕೆಗಳಿಗೆ ಪ್ರತಿಕ್ರಿಯಿಸಿದ್ದ ಅಸಾದುದ್ದೀನ್ ಓವೈಸಿ, ಪ್ರಧಾನಿ ನರೇಂದ್ರಮೋದಿ ಅವರಿಗೆ 15 ಸೆಕೆಂಡುಗಳ ಬದಲಿಗೆ ಒಂದು ಗಂಟೆ ನೀಡುವಂತೆ ಕೇಳಿದರು ಮತ್ತು ಬಿಜೆಪಿ ನಾಯಕರ ಬಗ್ಗೆ ನಾನು ಹೆದರುವುದಿಲ್ಲ ಎಂದು ಒತ್ತಿ ಹೇಳಿದರು.ನಾನು ಪ್ರಧಾನಿ ಮೋದಿಯವರಿಗೆ 15 ಸೆಕೆಂಡ್ ನೀಡುತ್ತೇನೆ. 15 ಸೆಕೆಂಡುಗಳಲ್ಲ, ಆದರೆ ಒಂದು ಗಂಟೆ ತೆಗೆದುಕೊಳ್ಳಿ.
|
9 |
+
ನಾವು ಹೆದರುವುದಿಲ್ಲ, ನಿಮಲ್ಲಿ ಎಷ್ಟು ಮಾನವೀಯತೆ ಉಳಿದಿದೆ ಎಂದು ನಾವು ನೋಡಬೇಕು ಎಂದು ಓವೈಸಿ ಹೇಳಿದ್ದರು. ನವನೀತ್ ರಾಣಾ ಅವರು ಕಾಂಗ್ರೆಸ್ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಎಂಬ ಹೇಳಿಕೆಗಾಗಿ ಪ್ರಕರಣ ದಾಖಲಿಸಲಾಗಿದೆ. ತೆಲಂಗಾಣ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
|
eesanje/url_47_103_1.txt
ADDED
@@ -0,0 +1,4 @@
|
|
|
|
|
|
|
|
|
|
|
1 |
+
ಪಾಕಿಸ್ತಾನದಿಂದ ಬಂದ ಡ್ರೋನ್ ಮೇಲೆ ಬಿಎಸ್ಎಫ್ ಯೋಧರಿಂದ ಗುಂಡಿನ ದಾಳಿ
|
2 |
+
ಜಮು, ಮೇ 11-ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯ ಬಳಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ಮೇಲೆ ಬಿಎಸ್ಎಫ್ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ.
|
3 |
+
ಗಡಿ ಭದ್ರತಾ ಪಡೆ ಪಡೆಗಳು ತಡರಾತ್ರಿ ಪಾಕಿಸ್ತಾನದ ಕಡೆಯಿಂದ ಬರುತ್ತಿದ್ದ ಡ್ರೋನ್ನ ಪತ್ತೆ ಹಚ್ಚಿ ನಮ್ಮ ಪ್ರದೇಶ ಬರುವುದಕ್ಕೆ ಮುಂಚೆಯೇ ಗುಂಡು ಹಾರಿಸಿದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
|
4 |
+
ನಂತರ ಡ್ರೋನ್ ಮತ್ತೆ ಪಾಕಿಸ್ತಾನದ ಕಡೆಗೆ ಹೋಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡ್ರೋನ್ ಯಾವುದೇ ಶಸಾ್ತ್ರಸ್ತ್ರಗಳು ಅಥವಾ ಮಾದಕ ದ್ರವ್ಯ ಬೀಳಿಸಿದ್ದೆ ಎಂದು ಖಚಿತಪಡಿಸಿಕೊಳ್ಳಲು ಗಡಿ ಔಟ್ಪೋಸ್ಟ್ ಪ್ರದೇಶವನ್ನು ತಪಾಸನೆ ಮಾಡಲಾಗಿದೆ ಇಂದು ಬೆಳಿಗ್ಗೆ ಕೂಡ ರಾಮಗಢ ವಲಯದ ನಾರಾಯಣಪುರದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು ಎಂದು ಅವರು ಹೇಳಿದರು.
|
eesanje/url_47_103_10.txt
ADDED
@@ -0,0 +1,5 @@
|
|
|
|
|
|
|
|
|
|
|
|
|
1 |
+
ಪಾಕಿಸ್ತಾನಕ್ಕೆ ಮರ್ಯಾದೆ ಕೊಡಿ, ಅವರ ಬಳಿ ಅಣುಬಾಂಬ್ ಇದೆ : ಮಣಿಶಂಕರ್ ಅಯ್ಯರ್
|
2 |
+
ನವದೆಹಲಿ,ಮೇ.10-ಪಾಕಿಸ್ತಾನದೊಂದಿಗೆ ಹುಡುಗಾಟಿಕೆ ಬೇಡ ಅವರು ಅಣುಬಾಂಬ್ ಹೊಂದಿದ್ದಾರೆ ಅವರೊಂದಿಗೆ ಭಾರತ ಮಾತುಕತೆಗೆ ಮುಂದಾಗಬೇಕು ಇಲ್ಲದಿದ್ದರೆ ಅವರು ನಮ್ಮ ಮೇಲೆ ಬಾಂಬ್ ಹಾಕಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
|
3 |
+
ನೀವು ಅವರೊಂದಿಗೆ ಮಾತನಾಡಬೇಕು. ಆದರೆ ಬದಲಿಗೆ, ನಾವು ನಮ ಮಿಲಿಟರಿ ಶಕ್ತಿಯನ್ನು ಬಗ್ಗಿಸುತ್ತಿದ್ದೇವೆ. ಮತ್ತು ಇದು ಉದ್ವಿಗ್ನತೆಯನ್ನು ಹೆಚ್ಚಿಸುತ್ತಿದೆ. ಮತ್ತು ಅವರ ಬಳಿ ಪರಮಾಣು ಬಾಂಬ್ಗಳಿವೆ. ಒಬ್ಬ ಹುಚ್ಚ ಬಾಂಬ್ಗಳನ್ನು (ಭಾರತದಲ್ಲಿ) ಉಡಾಯಿಸಲು ನಿರ್ಧರಿಸಿದರೆ ಏನಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ. ನಾವು ಅಂತವರನ್ನೂ ಹೊಂದಿದ್ದೇವೆ, ನಾವು ಲಾಹೋರ್ ಮೇಲೆ ಬಾಂಬ್ ಹಾಕಲು ನಿರ್ಧರಿಸಿದರೆ, ಅವರ ವಿಕಿರಣವು ಅಮತಸರವನ್ನು ತಲುಪಲು 8 ಸೆಕೆಂಡುಗಳನ್ನು ತೆಗೆದುಕೊಳ್ಳುವುದಿಲ್ಲ ಎಂದು ಅವರು ಹೇಳಿದ್ದಾರೆ.
|
4 |
+
ಭಾರತೀಯ ಜನತಾ ಪಕ್ಷ (ಬಿಜೆಪಿ) ಅಯ್ಯರ್ ಅವರ ಟೀಕೆಗಳಿಗಾಗಿ ಇದು ಕಾಂಗ್ರೆಸ್ನ ಭಾರತಕ್ಕಾಗಿ ಸಿದ್ಧಾಂತ ವನ್ನು ಪ್ರತಿಬಿಂಬಿಸುತ್ತದೆ ಎಂದು ಟೀಕಿಸಿದೆ.ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಅವರು ಎಕ್ಸ್ ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ರಾಹುಲ್ ಅವರ ಕಾಂಗ್ರೆಸ್ ಸಿದ್ಧಾಂತ ಈ ಚುನಾವಣೆಗಳಲ್ಲಿ ಸಂಪೂರ್ಣವಾಗಿ ಗೋಚರಿಸುತ್ತದೆ. ಸಿಯಾಚಿನ್ ಬಿಟ್ಟುಕೊಡಲು ಪಾಕಿಸ್ತಾನಕ್ಕೆ ಬೆಂಬಲ ನೀಡಿ, ಜನರನ್ನು ವಿಭಜಿಸುವುದು, ಸುಳ್ಳು, ನಿಂದನೆ ಮತ್ತು ಬಡವರನ್ನು ದಾರಿ ತಪ್ಪಿಸುವ ನಕಲಿ ಭರವಸೆಗಳು ಎಂದು ಕಿಡಿಕಾರಿದ್ದಾರೆ.
|
5 |
+
ಬಿಜೆಪಿ ನಾಯಕ ಮತ್ತು ಭೋಜ್ಪುರಿ ನಟ ರವಿ ಕಿಶನ್ ಕೂಡ ಅಯ್ಯರ್ ಅವರನ್ನು ತರಾಟೆಗೆ ತೆಗೆದುಕೊಂಡರು, ಪಾಕಿಸ್ತಾನವು ಪ್ರಸ್ತುತ ಆಹಾರಕ್ಕಾಗಿ ಹೆಣಗಾಡುತ್ತಿರುವ ಕಾರಣ ಕಾಂಗ್ರೆಸ್ ನಾಯಕನಿಗೆ ಎಲ್ಲಿಯಾದರೂ ಚಿಕಿತ್ಸೆ ನೀಡಬೇಕು ಎಂದು ಹೇಳಿದರು.ಯಾವುದೇ ಭಯೋತ್ಪಾದಕರು ತಪ್ಪಿಸಿಕೊಂಡು ಬಂದರೆ ಅವರನ್ನು ಕೊಲ್ಲಲು ಭಾರತೀಯ ಪಡೆಗಳು ಪಾಕಿಸ್ತಾನವನ್ನು ಪ್ರವೇಶಿಸುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವು ಬಿಜೆಪಿ ನಾಯಕರು ಎಚ್ಚರಿಸಿದ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ನಾಯಕನ ಈ ಹೇಳಿಕೆಗಳು ಬಂದಿವೆ.
|